ರಾಮನಗರ ಜಿಲ್ಲೆಯಲ್ಲಿ ಶೇ.50 ರಷ್ಟು ಮಾವು ಫಸಲು ಕುಂಠಿತ ; ಡಿಸಿಎಂ ಭೇಟಿಗೆ ಮುಂದಾದ ಮಾವು ಬೆಳೆಗಾರರು
ಈ ವರ್ಷ ಹವಾಮಾನ ವೈಪರೀತ್ಯವು ಮಾವು ಬೆಳೆಗಾರರ ಮೇಲೆ ಗಂಭೀರ ಪರಿಣಾಮ ಬೀರಿದೆ. ಸಾಧಾರಣವಾಗಿ ಈ ವೇಳೆಗೆ ಮಾರುಕಟ್ಟೆಗೆ ಬರಬೇಕಿದ್ದ ಫಸಲು ಅರ್ಧದಷ್ಟು ಕಡಿಮೆಯಾಗಿದೆ. ಜಿಲ್ಲೆಯ ಒಟ್ಟಾರೆ ಇಳುವರಿಯಲ್ಲಿ ಸುಮಾರು ಶೇ. 50 ರಷ್ಟು ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ.
ಕದನ ವಿರಾಮ ವಿಸ್ತರಣೆ; ಇರಾನ್ ವಿರುದ್ಧ ದಿಗ್ಬಂಧನ ಮುಂದುವರಿಸಲು ಮಿಲಿಟರಿಗೆ ಟ್ರಂಪ್ ಆದೇಶ
ವಾಷಿಂಗ್ಟನ್: ಮಧ್ಯಪ್ರಾಚ್ಯದಲ್ಲಿನ ಉದ್ವಿಗ್ನ ಪರಿಸ್ಥಿತಿಯ ನಡುವೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಕದನ ವಿರಾಮವನ್ನು ವಿಸ್ತರಿಸುವುದಾಗಿ ಘೋಷಿಸಿದ್ದಾರೆ. ಜೊತೆಗೆ, ಇರಾನ್ ಮೇಲೆ ದಿಗ್ಬಂಧನವನ್ನು ಮುಂದುವರಿಸಲು ಅವರು ಮಿಲಿಟರಿಗೆ ನಿರ್ದೇಶನ ನೀಡಿದ್ದಾರೆ. ಟ್ರುತ್ ಸೋಶಿಯಲ್ ನಲ್ಲಿ ನೀಡಿದ ಹೇಳಿಕೆಯಲ್ಲಿ ಅವರು, “ಇರಾನ್ ಸರ್ಕಾರವು ಗಂಭೀರವಾಗಿ ದುರ್ಬಲಗೊಂಡಿದೆ ಎಂಬ ಅಂಶವನ್ನು ಪರಿಗಣಿಸಿ, ಪಾಕಿಸ್ತಾನದ ಫೀಲ್ಡ್ ಮಾರ್ಷಲ್ ಅಸಿಮ್ ಮುನೀರ್ ಹಾಗೂ ಪ್ರಧಾನಿ ಶಹಬಾಝ್ ಶರೀಫ್ ಅವರ ಕೋರಿಕೆಯ ಮೇರೆಗೆ, ಅವರ ನಾಯಕರು ಮತ್ತು ಪ್ರತಿನಿಧಿಗಳು ಸಂಯುಕ್ತ ಪ್ರಸ್ತಾಪವನ್ನು ಮಂಡಿಸುವವರೆಗೆ ಇರಾನ್ ಮೇಲಿನ ದಾಳಿಯನ್ನು ತಾತ್ಕಾಲಿಕವಾಗಿ ತಡೆಹಿಡಿಯುವಂತೆ ನಮಗೆ ವಿನಂತಿಸಲಾಗಿದೆ,” ಎಂದು ತಿಳಿಸಿದ್ದಾರೆ. “ದಿಗ್ಬಂಧನ ಮುಂದುವರಿಸಲು ಮಿಲಿಟರಿಗೆ ಸೂಚಿಸಿದ್ದೇನೆ. ಪ್ರಸ್ತಾವನೆ ಸಲ್ಲಿಕೆಯಾಗುವವರೆಗೆ ಹಾಗೂ ಮಾತುಕತೆಗಳು ಮುಗಿಯುವವರೆಗೆ ಕದನ ವಿರಾಮ ವಿಸ್ತರಿಸಲಾಗುತ್ತದೆ,” ಎಂದು ಅವರು ಹೇಳಿದ್ದಾರೆ. “ನನ್ನ ಹಾಗೂ ಫೀಲ್ಡ್ ಮಾರ್ಷಲ್ ಅಸಿಮ್ ಮುನೀರ್ ಪರವಾಗಿ, ಕದನ ವಿರಾಮ ವಿಸ್ತರಣೆಗಾಗಿ ಸಲ್ಲಿಸಿದ ನಮ್ಮ ವಿನಂತಿಯನ್ನು ಸ್ವೀಕರಿಸಿದಕ್ಕಾಗಿ ಅಮೆರಿಕ ಅಧ್ಯಕ್ಷ ಟ್ರಂಪ್ ಅವರಿಗೆ ಧನ್ಯವಾದಗಳು,” ಎಂದು ಶಹಬಾಜ್ ಶರೀಫ್ ಹೇಳಿದ್ದಾರೆ. “ಇದರಿಂದ ರಾಜತಾಂತ್ರಿಕ ಪ್ರಯತ್ನಗಳು ಮುಂದುವರಿಯಲು ಅವಕಾಶ ಸಿಗಲಿದೆ,” ಎಂದು ಅವರು ತಿಳಿಸಿದ್ದಾರೆ. “ಸಂಘರ್ಷಕ್ಕೆ ಶಾಶ್ವತ ಅಂತ್ಯ ಕಂಡುಕೊಳ್ಳಲು ಇಸ್ಲಾಮಾಬಾದ್ ನಲ್ಲಿ ನಿಗದಿಯಾಗಿರುವ ಎರಡನೇ ಸುತ್ತಿನ ಮಾತುಕತೆಯಲ್ಲಿ ಎರಡೂ ದೇಶಗಳಿಗೆ ಕದನ ವಿರಾಮವನ್ನು ಪಾಲಿಸುವುದನ್ನು ಮುಂದುವರಿಸುತ್ತವೆ. ಸಮಗ್ರ ‘ಶಾಂತಿ ಒಪ್ಪಂದ’ ಸಾಧಿಸಲು ಸಾಧ್ಯವಾಗುತ್ತದೆ ಎಂಬ ವಿಶ್ವಾಸವಿದೆ,” ಎಂದು ಅವರು ಹೇಳಿದ್ದಾರೆ.
Karnataka Weather: ಮುಂದಿನ ಐದು ದಿನ ಕರ್ನಾಟಕದ 20 ಜಿಲ್ಲೆಗಳಲ್ಲಿ ಮಳೆ, ವಾಡಿಕೆಗಿಂತ 3 ಡಿಗ್ರಿ ಹೆಚ್ಚಲಿದೆ ತಾಪಮಾನ
ರಾಜ್ಯದ ಕರಾವಳಿ ಮತ್ತು ಒಳನಾಡಿನ ಹಲವು ಜಿಲ್ಲೆಗಳಲ್ಲಿ ಇಂದು ಮತ್ತು ನಾಳೆವರೆಗೆ ಹಗುರದಿಂದ ಕೂಡಿದ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕರಾವಳಿ ಭಾಗದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಹಗುರವಾದ ಮಳೆ ಅಥವಾ ಗುಡುಗು ಸಹಿತ ಮಳೆಯಾಗುವ ನಿರೀಕ್ಷೆಯಿದೆ. ಉತ್ತರ ಒಳನಾಡಿನ ಬೆಳಗಾವಿ, ಧಾರವಾಡ, ಗದಗ, ಹಾವೇರಿ, ರಾಯಚೂರು,
ಮಧ್ಯಪ್ರಾಷ್ಯ ಯುದ್ಧದಿಂದ ರಫ್ತು ನಿಂತಿದೆ. ದೇಶದಲ್ಲೂ ಗ್ಯಾಸ್ ಸಮಸ್ಯೆಯಿಂದ ಹೋಟೆಲ್ ಉದ್ಯಮದಲ್ಲಿ ಮೆನುಗಳು ಕಡಿತಗೊಂಡಿವೆ. ಇದರಿಂದಾಗಿ ಈರುಳ್ಳಿ ಬೆಳ್ಳುಳ್ಳಿ ಬೆಳೆಗಳು ಪಾತಾಳಕ್ಕೆ ಕುಸಿಯುತ್ತಿವೆ.
ಬೆಂಗಳೂರಲ್ಲಿ ಸೈಟ್ಗಾಗಿ ಮದ್ಯಮವರ್ಗದವರ ಚಿತ್ತ ಬಿಬಿಸಿಯತ್ತ: ಪಿಆರ್ಆರ್ ಅನುಷ್ಠಾನದಿಂದ ಸೂರು ಸಿಗುವ ಭರವಸೆ
ಪಿಆರ್ಆರ್ ರಸ್ತೆ 1 ಕ್ಕೆ ಹೊಮದಿಕೊಂಡಂತೆ 5 ಬಡಾವಣೆಗಳು ಹಾಗೂ ಪಿಆರ್ಆರ್ ರಸ್ತೆ 2 ಕ್ಕೆ ಹೊಂದಿಕೊಂಡಂತೆ ನಿರ್ಮಾಣ ಆಗಲಿರುವ 6 ಬಡಾವಣೆಗಳು, ಸಾಮಾನ್ಯ ಜನರ ನಿವೇಶನದ ಕನಸನ್ನು ನನಸು ಮಾಡುವ ನಿರೀಕ್ಷೆ ಇದೆ. ಆದ್ರೆ ಭೂಮಾಲೀಕರ ವಿವಾದಗಳಿಂದ ಹೈಕೋರ್ಟ್ನಲ್ಲಿ ಪ್ರಕರಣಗಳಿದ್ದು, ಯೋಜನೆ ಬೇಗ ಅನುಷ್ಠಾನವಾಗಲು ಜನ ಕಾಯುವಂತಾಗಿದೆ.
ಹುಲಿಕಲ್ ಘಾಟ್ನಲ್ಲಿ ಮತ್ತೆ ಸಂಕಷ್ಟ: ಗುಡ್ಡ ಕುಸಿತ, ಸಂಚಾರ ನಿಷೇಧ, ಚಂಡಿಕಾಂಬ ದೇವಸ್ಥಾನ ದರ್ಶನಕ್ಕೂ ತೊಂದರೆ
ಮಲೆನಾಡಿಂದ ಕುಂದಾಪುರಕ್ಕೆ ಸಂಪರ್ಕಿಸುತ್ತಿದ್ದ ಹುಲಿಕಲ್ ಘಾಟ್ ಹೆದ್ದಾರಿ ಪದೇ ಪದೇ ಸ್ಥಗಿತಗೊಳ್ಳುತ್ತಿದ್ದು, ಕುಂದಾಪುರ ಭಾಗದ ಜನರಿಗೆ ಸಮಸ್ಯೆಯಾಗಿದೆ. ಅಲ್ಲದೆ ಹೊಸಂಗಡಿ ಪೇಟೆಯ ವ್ಯವಹಾರಕ್ಕೆ ಗ್ರಹಣ ಹಿಡಿದಂತಾಗಿದೆ. ಬೆಂಗಳೂರು-ಶಿವಮೊಗ್ಗ-ಕುಂದಾಪುರ ಬಸ್ಗಳೂ ಬೇರೆ ಮಾರ್ಗದಲ್ಲಿ ಸಂಚರಿಸುತ್ತಿವೆ.
ಕಾಂಗ್ರೆಸ್ನಿಂದ ಮಹಿಳೆಯರ ಸಮಾನ ಹಕ್ಕಿನ ಅವಕಾಶ ತಪ್ಪಿದೆ: ಸಂಸದ ಕೋಟ ಶ್ರೀನಿವಾಸ ಪೂಜಾರಿ ಟೀಕೆ
ಉಡುಪಿ: ಕೇಂದ್ರ ಸರಕಾರ ಲೋಕಸಭೆಯಲ್ಲಿ ಮಂಡಿಸಿದ ನಾರಿ ಶಕ್ತಿ ಮಸೂದೆ ಮಹಿಳೆಯರಿಗೆ ನ್ಯಾಯಯುತ ಪ್ರಾತಿನಿಧ್ಯ ನೀಡುವ ಮಹತ್ವದ ಮಸೂದೆಯಾಗಿದ್ದು, ರಾಜಕೀಯ ಕಾರಣಕ್ಕಾಗಿ ಕಾಂಗ್ರೆಸ್ ಸಹಿತ ವಿರೋಧಪಕ್ಷಗಳು ವಿರೋಧಿಸಿದ ಕಾರಣದಿಂದ ಸರ್ವಾನುಮತದಿಂದ ಅಂಗೀಕರಿಸುವ ನಿರೀಕ್ಷೆ ಹುಸಿಯಾಗಿದೆ. ಇದರಿಂದ ಮಹಿಳೆಯರಿಗೆ ಸಮಾನ ಹಕ್ಕು ನೀಡುವ ಅವಕಾಶ ತಪ್ಪಿಹೋಗಿದೆ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಟೀಕಿಸಿದ್ದಾರೆ. ಉಡುಪಿ ಜಿಲ್ಲಾ ಬಿಜೆಪಿ ಕಚೇರಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ವಾಸ್ತವಿಕ ಸ್ಥಿತಿಯನ್ನು ಅರಿತುಕೊಳ್ಳದೆ ವಿರೋಧಿಸುತ್ತಿದೆ. ಈ ಬಾರಿಯ ಜನಗಣತಿಯನ್ನು ಪರಿಗಣಿಸಿದರೆ ಮಹಿಳಾ ಮೀಸಲಾತಿ 2034ರಲ್ಲಿ ಜಾರಿಯಾಗುವ ಸಂಭವವಿದೆ. ಹೀಗಾಗಿ 2011ರ ಜನಗಣತಿ ಪರಿಗಣಿಸಲಾಗಿದೆ. ಪ್ರಸ್ತುತ ದೇಶದಲ್ಲಿ 1973ರಲ್ಲಿ ಜಾರಿಗೆ ಬಂದಿರುವ ಲೋಕಸಭಾ ಸ್ಥಾನಗಳಿದ್ದು, ಅಂದಿನ ಜನಸಂಖ್ಯೆ 55 ಕೋಟಿಯಾಗಿತ್ತು. ಪ್ರಸ್ತುತ ಇದಕ್ಕಿಂತ ಮೂರು ಪಟ್ಟು ಜನಸಂಖ್ಯೆ ಹೆಚ್ಚಾಗಿದ್ದು, ಲೋಕಸಭಾ ಸ್ಥಾನಗಳಲ್ಲಿ ಹೆಚ್ಚಳ ಅನಿವಾರ್ಯವಾಗಿದೆ ಎಂದರು. ಮಸೂದೆ ಜಾರಿಗೆ ಚುನಾವಣೆಯೊಂದಿಗೆ ಯಾವುದೇ ಸಂಬಂಧ ಇಲ್ಲ. ಮುಂದಿನ ದಿನಗಳಲ್ಲಿ ಈ ಮಸೂದೆ ಜಾರಿಗೆ ಬರಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು. ಸುದ್ದಿಗೋಷ್ಠಿಯಲ್ಲಿ ಮಹಿಳಾ ಮೋರ್ಚಾ ರಾಜ್ಯ ಕಾರ್ಯದರ್ಶಿ ಶ್ಯಾಮಲಾ ಕುಂದರ್, ಜಿಪಂ ಮಾಜಿ ಸದಸ್ಯರಾದ ಶಿಲ್ಪಾ ಸುವರ್ಣ, ಗೀತಾಂಜಲಿ ಸುವರ್ಣ, ಪ್ರಮುಖರಾದ ವೀಣಾ ಶೆಟ್ಟಿ, ಸಂಧ್ಯಾ ರಮೇಶ್, ಪ್ರಿಯದರ್ಶಿನಿ, ಅನಿತಾ ಉಪಸ್ಥಿತರಿದ್ದರು.
ಮಣಿಪಾಲ | ಬಸ್ ನಿಲ್ದಾಣಕ್ಕೆ ಕಾರು ಢಿಕ್ಕಿ: ಓರ್ವ ಮೃತ್ಯು
ಮಣಿಪಾಲ: ಕಾರೊಂದು ಬಸ್ ನಿಲ್ದಾಣಕ್ಕೆ ಡಿಕ್ಕಿ ಹೊಡೆದ ಪರಿಣಾಮ ಓರ್ವ ಮೃತಪಟ್ಟು, ಇನ್ನೋರ್ವ ತೀವ್ರವಾಗಿ ಗಾಯಗೊಂಡ ಘಟನೆ ಮಣಿಪಾಲ ಟೈಗರ್ ಸರ್ಕಲ್ ಬಳಿ ಎ.20ರಂದು ತಡರಾತ್ರಿ ವೇಳೆ ನಡೆದಿದೆ. ಮೃತರನ್ನು ಕಾರ್ತಿಕೇಯ್ ಶರ್ಮಾ(21) ಎಂದು ಗುರುತಿಸಲಾಗಿದೆ. ಕಾರಿನಲ್ಲಿದ್ದ ಹೆರ್ಶ್ ಹಾರ್ಡಿಂಗ್ ಎಂಬವರು ತೀವ್ರವಾಗಿ ಗಾಯಗೊಂಡು ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಣಿಪಾಲ ಈಶ್ವರ ನಗರದಿಂದ ಸಿಂಡಿಕೇಟ್ ಸರ್ಕಲ್ ಕಡೆಗೆ ಅತೀವೇಗದಿಂದ ಚಲಾಯಿಸಿಕೊಂಡು ಬಂದ ಕಾರು, ಮಣಿಪಾಲ ಬಸ್ ನಿಲ್ದಾಣಕ್ಕೆ ಡಿಕ್ಕಿ ಹೊಡೆಯಿತ್ತೆನ್ನಲಾಗಿದೆ. ಇದರಿಂದ ಕಾರು ರಸ್ತೆಗೆ ಬಿದ್ದು ಚಾಲಕ ಕಾರ್ತಿಕೇಯ್ ಶರ್ಮಾ ಸ್ಥಳದಲ್ಲಿಯೇ ಮೃತಪಟ್ಟರು ಎಂದು ತಿಳಿದುಬಂದಿದೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Udupi | ಬಾವಿಯಲ್ಲಿ ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆ
ಉಡುಪಿ: ಆದಿ ಉಡುಪಿ ಎಪಿಎಂಸಿ ಮಾರ್ಕೆಟ್ ಹಿಂಭಾಗದಲ್ಲಿ ಪಾಳು ಬಿದ್ದ ಬಾವಿಯಲ್ಲಿ ಸುಮಾರು 40-50 ವರ್ಷ ಪ್ರಾಯದ ಅಪರಿಚಿತ ಗಂಡಸಿನ ಮೃತದೇಹ ಕೊಳೆತ ಸ್ಥಿತಿಯಲ್ಲಿ ಎ.21ರಂದು ಬೆಳಗ್ಗೆ ಪತ್ತೆಯಾಗಿದೆ. ಇವರು ಸುಮಾರು 3-4 ದಿನಗಳ ಹಿಂದೆ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಅಥವಾ ಬಾವಿಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟಿದ್ದಾರೆ ಎಂದು ಶಂಕಿಸಲಾಗಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಯುವಕಾಂಗ್ರೆಸ್ನಿಂದ 'ಕಿಸಾನ್ ನ್ಯಾಯ ಸತ್ಯಾಗ್ರಹ'
ಬೆಂಗಳೂರು : ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಸಮಿತಿ ರಾಜ್ಯಾಧ್ಯಕ್ಷ ಎಚ್.ಎಸ್.ಮಂಜುನಾಥ್ ಗೌಡ ನೇತೃತ್ವದಲ್ಲಿ ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ 'ಕಿಸಾನ್ ನ್ಯಾಯ ಸತ್ಯಾಗ್ರಹ' ನಡೆಯಿತು. ಧರಣಿಯನ್ನು ರಾಷ್ಟ್ರೀಯ ಅಧ್ಯಕ್ಷ ಉದಯ್ ಭಾನು ಚಿಬ್ ಅವರ ಮುಂದಾಳತ್ವದಲ್ಲಿ ಆಯೋಜಿಸಲಾಗಿತ್ತು. ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಅಧ್ಯಕ್ಷ ವಿ.ಎಸ್.ಆರಾಧ್ಯ ಅವರು ಧರಣಿಯಲ್ಲಿ ಉಪಸ್ಥಿತರಿದ್ದು ಯುವ ಕಾಂಗ್ರೆಸ್ ಕಾರ್ಯಕರ್ತರಿಗೆ ಬೆಂಬಲ ಸೂಚಿಸಿದರು. ಕೇಂದ್ರ ಸರಕಾರದ ರೈತ ವಿರೋಧಿ ಅಮೆರಿಕ ವ್ಯಾಪಾರ ಒಪ್ಪಂದವನ್ನು ರದ್ದುಗೊಳಿಸಬೇಕು ಮತ್ತು ರೈತರಿಗೆ ಕನಿಷ್ಠ ಬೆಂಬಲ ಬೆಲೆ ಖಾತ್ರಿಪಡಿಸಬೇಕು ಎಂದು ಯುವ ಕಾಂಗ್ರೆಸ್ ಕಾರ್ಯಕರ್ತರು ಆಗ್ರಹಿಸಿದರು. ಧರಣಿಯಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಬಾಹುಬಲಿ, ಯುವ ಕಾಂಗ್ರೆಸ್ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಪಾಲ್ಗೊಂಡಿದ್ದರು.
ದಲಿತರ ಉದ್ದಾರಕ್ಕೆ ದುಡಿದ ಏಕೈಕ ನಾಯಕ ಬಿ.ಬಸವಲಿಂಗಪ್ಪ : ಸಭಾಪತಿ ಬಸವರಾಜ ಹೊರಟ್ಟಿ
ಬೆಂಗಳೂರು : ರಾಜ್ಯದ ದಲಿತ ಸಮುದಾಯದ ಉದ್ದಾರಕ್ಕಾಗಿ ಯಾರಾದರೂ ಪ್ರಾಮಾಣಿಕವಾಗಿ ದುಡಿದ ನಾಯಕ ಎಂದರೆ ಅದು ಕ್ರಾಂತಿಕಾರಿ ಸಮಾಜ ಸುಧಾರಕ, ಮಾಜಿ ಸಚಿವ ಬಿ.ಬಸವಲಿಂಗಪ್ಪ ಅವರು ಮಾತ್ರ ಎಂದು ವಿಧಾನ ಪರಿಷತ್ತಿನ ಸಭಾಪತಿ ಬಸವರಾಜ ಹೊರಟ್ಟಿ ಬಣ್ಣಿಸಿದ್ದಾರೆ. ಮಂಗಳವಾರ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ‘ಬಸವಲಿಂಗಪ್ಪ ಜನ ಶತಮಾನೋತ್ಸವ ಸಮಿತಿ’, ಬಸವಲಿಂಗಪ್ಪ ಅಭಿವೃದ್ಧಿ ಅಧ್ಯಯನ ಸಂಸ್ಥೆ’ ಜಂಟಿಯಾಗಿ ಆಯೋಜಿಸಿದ್ದ ಬಿ.ಬಸವಲಿಂಗಪ್ಪ ಜನ್ಮ ಶತಮಾನೋತ್ಸವ ಸಮಾರಂಭವನ್ನುದ್ದೇಶಿಸಿ ಮಾತನಾಡಿದ ಅವರು, ಡಾ.ಅಂಬೇಡ್ಕರ್ ಅವರ ತತ್ವಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಕರ್ನಾಟಕದಲ್ಲಿ ಶೋಷಿತ ಸಮುದಾಯಕ್ಕೆ ಸ್ವಾಭಿಮಾನದ ಬದುಕು ಕಲ್ಪಿಸಿಕೊಡಲು ನಿರಂತರವಾಗಿ ಶ್ರಮಿಸಿದ ಏಕೈಕ ನಾಯಕ ಬಿ.ಬಸವಲಿಂಗಪ್ಪ ಮಾತ್ರವೇ ಎಂದರು. ಈಗ ಶಾಸನ ಸಭೆಗೆ ಬರುವ ಅನೇಕ ಪ್ರತಿನಿಧಿಗಳಿಗೆ ಬಸವಲಿಂಗಪ್ಪ ಅವರ ವ್ಯಕ್ತಿತ್ವ, ಹೋರಾಟದ ಹಾದಿಯೇ ಗೊತ್ತಿಲ್ಲ. ಅನೇಕರನ್ನು ನಾನು ಪ್ರಶ್ನೆ ಮಾಡಿದರೂ, ಮಾಹಿತಿಯೇ ಇಲ್ಲದಂತೆ ಹೇಳುತ್ತಾರೆ. ಆದರೆ, ರಾಜಕೀಯಕ್ಕೆ ಬರುವ ಹೊಸಬರು ಮೊದಲು ಗ್ರಂಥಾಲಯಗಳಿಗೆ ತೆರಳಿ ಬಸವಲಿಂಗಪ್ಪ ಅವರ ಬಗ್ಗೆ ತಿಳಿವಳಿಕೆ ಹೊಂದಬೇಕು. ಜತೆಗೆ, ಅವರ ಸಾಧನೆಯನ್ನು ನೆನೆಯುವ ಕೆಲಸ ಆಗಬೇಕು ಎಂದು ಅವರು ನುಡಿದರು. ಮಾಜಿ ಸ್ಪೀಕರ್ ಕೆ.ಆರ್.ರಮೇಶ್ ಕುಮಾರ್ ಮಾತನಾಡಿ, ಪೌರಾಡಳಿತ ಸಚಿವರಾಗಿದ್ದ ಬಸವಲಿಂಗಪ್ಪ ಅವರು ಮಲಹೊರುವ ಪದ್ಧತಿಯನ್ನು ನಿಷೇಧಿಸುವ ಕ್ರಾಂತಿಕಾರಕ ಕಾರ್ಯವನ್ನು ಮಾಡಿದ್ದಾರೆ. ಭೂ ಸುಧಾರಣೆ, ಭೂ ರಹಿತರಿಗೆ ಭೂಮಿ ಹಂಚಿಕೆ, ಪರಿಷ್ಟರ ಭೂಮಿ ರದ್ದತಿ ಕಾನೂನು, ಜೀತಮುಕ್ತಿ ಕಾನೂನು ಸೇರಿದಂತೆ ಅನೇಕ ಜನಪರ ಕಾರ್ಯಗಳನ್ನು ಮಾಡಿದ್ದಾರೆ. ದಲಿತರಲ್ಲಿ ವೈಚಾರಿಕತೆ ಮೂಡಿಸುವಲ್ಲಿ ಸಾಕಷ್ಟು ಶ್ರಮಿಸಿದ್ದಾರೆ. ಅವರ ಮಾರ್ಗದಲ್ಲಿ ದಲಿತರು ಮಾತ್ರವಲ್ಲದ ಎಲ್ಲ ವರ್ಗದವರು ಸಾಗಬೇಕಾಗಿದೆಯೆಂದು ಕರೆ ನೀಡಿದರು. ಹಿರಿಯ ಸಾಹಿತಿ ಅಗ್ರಹಾರ ಕೃಷ್ಣಮೂರ್ತಿ ಮಾತನಾಡಿ, ಕನ್ನಡ ಸಾಹಿತ್ಯದಲ್ಲಿರುವುದೆಲ್ಲವೂ ಬೂಸಾ ಸಾಹಿತ್ಯ ಎಂಬ ಹೇಳಿಕೆಯ ಮೂಲಕ, ಸಾಹಿತ್ಯ ಲೋಕದಲ್ಲಿ ಶೋಷಿತರ ಕಡೆಗಣನೆ ಹಾಗೂ ರಾಜಕೀಯವನ್ನು ನೇರವಾಗಿ ವಿರೋಧಿಸಿದರು. ವೈಚಾರಿಕ ಕಿಡಿ ಹೊತ್ತಿಸಿದ ತಮ್ಮ ಹೇಳಿಕೆಯಿಂದಾಗಿ, ಸಚಿವ ಸ್ಥಾನ ಕಳೆದುಕೊಂಡ ಅವರು, ಬಳಿಕ ದಲಿತ ಚಳವಳಿಯನ್ನು ಕಟ್ಟುವಲ್ಲಿ ತೊಡಗಿಸಿಕೊಂಡರು. ಅವರ ಹೋರಾಟದಿಂದಾಗಿ, ನೂರಾರು ಯುವಕರು ದಲಿತ ಚಳವಳಿಗೆ ಧುಮುಕಿದರು ಎಂದು ಸ್ಮರಿಸಿದರು. ದಲಿತ ಮುಖಂಡ ಮಾವಳ್ಳಿ ಶಂಕರ್ ಮಾತನಾಡಿ, ಸಂವಿಧಾನ ಶಿಲ್ಫಿ ಡಾ.ಅಂಬೇಡ್ಕರ್ ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಡೆದ ಅವರು, 70ರ ದಶಕದಲ್ಲಿ ಭದ್ರಾವತಿಯಲ್ಲಿ ಮೊಳಕೆಯೊಡೆದ ದಲಿತ ಸಂಘರ್ಷ ಸಮಿತಿಯನ್ನು ರಾಜ್ಯದ ಮೂಲೆ ಮೂಲೆಗಳಿಗೆ ತಲುಪಿಸುವ ಕೆಲಸ ಮಾಡಿದರು. ಆ ಮೂಲಕ, ದಲಿತರ ದೌರ್ಜನ್ಯದ ವಿರುದ್ಧ ಎಲ್ಲಾ ಕಡೆಯಿಂದಲೂ ದನಿ ಮೊಳಗಲು ಕಾರಣರಾದರು ಎಂದು ಹೇಳಿದರು. ಇದಕ್ಕೂ ಮೊದಲು ಪ್ರಾಸ್ತಾವಿಕ ಮಾತುಗಳನ್ನಾಡಿದ ವಿಧಾನ ಪರಿಷತ್ತಿನ ಸದಸ್ಯ ಎಫ್.ಎಚ್.ಜಕ್ಕಪ್ಪನವರ್, ಮಾಜಿ ಸಚಿವ ಬಿ.ಬಸವಲಿಂಗಪ್ಪ ಅವರ ಹೋರಾಟ, ಜೀವನದ ಹಾದಿ ಸೇರಿದಂತೆ ಅವರ ವೈಚಾರಿಕತೆ ಮತ್ತಷ್ಟು ಹಬ್ಬಲು ರಾಜ್ಯ ಸರಕಾರ ಬಸವಲಿಂಗಪ್ಪ ಅಭಿವೃದ್ಧಿ ಅಧ್ಯಯನ ಸಂಸ್ಥೆಗೆ ಅನುದಾನ ನೀಡಬೇಕು. ಜತೆಗೆ, ಬಸವಲಿಂಗಪ್ಪ ಪ್ರತಿಮೆ ಸ್ಥಾಪನೆಗೆ ಮುಂದಾಗಬೇಕು ಎಂದು ಒತ್ತಾಯಿಸಿದರು. ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ್, ಬಿ.ಬಸವಲಿಂಗಪ್ಪ ಅವರು ಈ ರಾಜ್ಯ ಕಂಡ ನೇರ-ನಿಷ್ಟುರ ನಡೆಯ ಪ್ರಾಮಾಣಿಕ ರಾಜಕಾರಣಿಯಾಗಿದ್ದರು. ರಾಜ್ಯಕ್ಕೆ ಅವರ ಕೊಡುಗೆ ಸ್ಮರಣೀಯವಾದದ್ದು. ಸದಾ ಸಾಮಾಜಿಕ ಪರಿವರ್ತನೆಯನ್ನು ಬಯಸಿದ್ದ ಅವರು, ಒಬ್ಬ ಶಾಸಕ ಮತ್ತು ಮಂತ್ರಿ ಹೇಗಿರಬೇಕೆಂದು ತೋರಿಸಿದ್ದರು ಎಂದು ಸ್ಮರಿಸಿದರು. ಕಾರ್ಯಕ್ರಮದಲ್ಲಿ ಬೂಸಾ ಚಳವಳಿ ಸೇನಾನಿಗಳಾದ ಅಗ್ರಹಾರ ಕೃಷ್ಣಮೂರ್ತಿ, ಕಲ್ಲೂರು ಮೇಘರಾಜ, ಕರೀಗೌಡ ಬೀಚನಹಳ್ಳಿ, ಗಂಗಣ್ಣಾ ಕೆಂಚೇನಹಳ್ಳಿ ಅವರನ್ನು ಸನ್ಮಾನಿಸಲಾಯಿತು. ಪರಿಷತ್ತಿನ ಸದಸ್ಯ ಎಂ.ಆರ್.ಸೀತಾರಾಮ್, ಮಾಜಿ ಸಂಸದ ಡಾ.ಎಲ್.ಹನುಮಂತಯ್ಯ ಸೇರಿದಂತೆ ಪ್ರಮುಖರಿದ್ದರು.
ಅಭಿಷೇಕ್ ಶರ್ಮಾ ಸ್ಫೋಟಕ ಶತಕ, ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಎಸ್ಆರ್ಎಚ್ ಭರ್ಜರಿ ಗೆಲುವು
SRH VS DC IPL 2026: ಹೈದರಾಬಾದ್ನ ರಾಜೀವ್ ಗಾಂಧಿ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ಮಂಗಳವಾರ (ಏಪ್ರಿಲ್ 21) ರಾತ್ರಿ ನಡೆದ ಐಪಿಎಲ್ ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ ತಂಡವು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 47 ರನ್ಗಳ ಭರ್ಜರಿ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ ಎಸ್ಆರ್ಎಚ್ ಅಂಕಪಟ್ಟಿಯಲ್ಲಿ 8 ಪಾಯಿಂಟ್ಸ್ ಪಡೆದು ಮೂರನೇ ಸ್ಥಾನಕ್ಕೆ ಏರಿದೆ.
Udupi | ಪ್ರವಾಸಕ್ಕೆ ಮಲ್ಪೆಗೆ ಬಂದಿದ್ದ ವ್ಯಕ್ತಿ ರೂಮಿನಲ್ಲಿ ಮಲಗಿದ್ದಲ್ಲಿಯೇ ಮೃತ್ಯು
ಮಲ್ಪೆ: ಪ್ರವಾಸಕ್ಕೆ ಮಲ್ಪೆಗೆ ಬಂದಿದ್ದ ವ್ಯಕ್ತಿಯೊಬ್ಬರು ರೂಮಿನಲ್ಲಿ ಮಲಗಿದ್ದಲ್ಲಿಯೇ ಮೃತಪಟ್ಟ ಬಗ್ಗೆ ವರದಿಯಾಗಿದೆ. ಮೃತರನ್ನು ಬೆಂಗಳೂರು ಆನೇಕಲ್ ನಿವಾಸಿ ಧನಂಜಯ್ ಕೆ.ಎನ್.(37) ಎಂದು ಗುರುತಿಸಲಾಗಿದೆ. ಇವರು ಸುಮಾರು 4 ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು ಎನ್ನಲಾಗಿದೆ. ಎ.19ರಂದು ಸಂಜೆ ಸ್ನೇಹಿತರೊಂದಿಗೆ ಮಲ್ಪೆಗೆ ಪ್ರವಾಸಕ್ಕೆ ಬಂದು ರೂಮಿನಲ್ಲಿ ಮಲಗಿದ್ದರು. ಎ.20ರಂದು ಮಧ್ಯಾಹ್ನ ಮಲಗಿದ್ದ ಇವರು ತೀವ್ರವಾಗಿ ಅಸ್ವಸ್ಥಗೊಂಡು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಂಗಳೂರು : ಐಷಾರಾಮಿ ಲ್ಯಾಂಬೊರ್ಗಿನಿ ಹುರಕಾನ್ ಕಾರ್ಗೆ ನಕಲಿ ಫ್ಯಾನ್ಸಿ ನಂಬರ್ ಪ್ಲೇಟ್ ಅಳವಡಿಸಿದ ಆರೋಪದಲ್ಲಿ ದಾಖಲಾಗಿರುವ ಪ್ರಕರಣದಲ್ಲಿ ಮುತ್ತಪ್ಪ ರೈ ಪುತ್ರ ರಿಕ್ಕಿ ರೈ ವಿರುದ್ದ ಆತುರದ ಕ್ರಮಕೈಗೊಳ್ಳದಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶಿಸಿದೆ. ಬೆಂಗಳೂರಿನ ಕಬ್ಬನ್ ಪಾರ್ಕ್ ಠಾಣೆಯಲ್ಲಿ ದಾಖಲಾಗಿರುವ ದೂರು ಮತ್ತು ಎಫ್ಐಆರ್ ರದ್ದು ಕೋರಿ ರಿಕ್ಕಿ ರೈ ಸಲ್ಲಿಸಿದ್ದ ಅರ್ಜಿಯನ್ನು ಇತ್ತೀಚೆಗೆ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಮಧ್ಯಂತರ ಆದೇಶ ಮಾಡಿದೆ. ವಿಚಾರಣೆ ವೇಳೆ ವಾದ ಮಂಡಿಸಿದ ಅರ್ಜಿದಾರರ ಪರ ಹಿರಿಯ ವಕೀಲೆ ಲಕ್ಷ್ಮೀ ಐಯಂಗಾರ್, ಸಾರಿಗೆ ಪ್ರಾಧಿಕಾರ ಫ್ಯಾನ್ಸಿ ನಂಬರ್ ನೀಡಿರುವುದು ಮತ್ತು ಅದಕ್ಕೆ ರಿಕ್ಕಿ ಹಣ ಪಾವತಿಸಿರುವುದಕ್ಕೆ ಸಂಬಂಧಿಸಿದಂತೆ ದಾಖಲೆ ಇದೆ. ಆದ್ದರಿಂದ, ನಕಲಿ ಫ್ಯಾನ್ಸಿ ನಂಬರ್ ಪ್ಲೇಟ್ ಹಾಕಲಾಗಿದೆ ಎಂಬ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಫ್ಯಾನ್ಸಿ ನಂಬರ್ಗೆ ಅರ್ಜಿದಾರರು 4 ಲಕ್ಷ ರೂ. ಪಾವತಿಸಿದ್ದಾರೆ. ಅರ್ಜಿದಾರರಿಗೆ ಅನ್ವಯಿಸಿರುವ ಸೆಕ್ಷನ್ಗಳು ಊರ್ಜಿತವಾಗದು ಎಂದರು. ಮುಂದುವರಿದು, ರಸ್ತೆಯಲ್ಲಿ ಲ್ಯಾಂಬೊರ್ಗಿನಿ ಸದ್ದು ಮಾಡಿ ಹೋಗುತ್ತಿರುವಾಗ ಕಿರಿಕಿರಿಗೆ ಒಳಗಾದ ವ್ಯಕ್ತಿಯೊಬ್ಬರು ವಿಡಿಯೊ ರೆಕಾರ್ಡ್ ಮಾಡಿದ್ದಾರೆ. ಮೋಟಾರು ವಾಹನ (ಎಂವಿ) ಕಾಯ್ದೆ ಅಡಿ ಪ್ರಕರಣ ದಾಖಲಿಸಲಾಗಿದ್ದು, ನ್ಯಾಯಾಲಯಕ್ಕೆ ಹೋಗಿ ಅವರು ದಂಡ ಕಟ್ಟಲಿದ್ದಾರೆ. ಹೀಗಿರುವಾಗ, ಎರಡನೇ ಎಫ್ಐಆರ್ ದಾಖಲಿಸುವ ಅವಶ್ಯಕತೆ ಏನಿತ್ತು ಎಂದು ಆಕ್ಷೇಪಿಸಿದರು. ರಾಜ್ಯ ಹೆಚ್ಚುವರಿ ಸರ್ಕಾರಿ ಅಭಿಯೋಜಕ ಬಿ.ಎನ್. ಜಗದೀಶ್ ವಾದ ಮಂಡಿಸಿ, ಪ್ರಶ್ನಾರ್ಹ ಫ್ಯಾನ್ಸಿ ನಂಬರ್ ಅನ್ನು ಅರ್ಜಿದಾರರು ಖರೀದಿಸಿರುವ ವಾಹನಕ್ಕೆ ಅಧಿಕೃತವಾಗಿ ಹಂಚಿಕೆ ಮಾಡಲಾಗಿಲ್ಲ. ದೆಹಲಿಯಲ್ಲಿ ವಾಹನ ಖರೀದಿಸಿದ ಬಳಿಕ ಪುನಃ ನೋಂದಣಿ ಪ್ರಕ್ರಿಯೆಯನ್ನು ರಿಕ್ಕಿ ಬೆಂಗಳೂರಿನಲ್ಲಿ ಮಾಡಿಲ್ಲ. ಇಂಥ ನಂಬರ್ ಪ್ಲೇಟ್ಗಳ ಬಳಕೆಯು ವಂಚನೆ ಮತ್ತು ದಾಖಲೆ ತಿರುಚಿದ ಆರೋಪದ ಪ್ರಕರಣವಾಗುತ್ತದೆ ಎಂದರು. ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ, ಅರ್ಜಿದಾರರು ತನಿಖೆಗೆ ಸಹಕರಿಸಬೇಕು ಎಂಬ ಷರತ್ತಿಗೆ ಒಳಪಟ್ಟು ತನಿಖೆಯ ನೆಪದಲ್ಲಿ ಪೊಲೀಸರು ಅವರ ವಿರುದ್ಧ ಆತುರದ ಕ್ರಮಕೈಗೊಳ್ಳಬಾರದು ಎಂದು ಆದೇಶಿಸಿತಲ್ಲದೆ, ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿಗೊಳಿಸಿ, ತನಿಖಾ ದಾಖಲೆಗಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸುವಂತೆ ನಿರ್ದೇಶಿಸಿ, ವಿಚಾರಣೆ ಮುಂದೂಡಿತು.
ಮುಸ್ಲಿಮರ ಮೇಲೆ ಹಗೆ ಸಾಧನೆ ಆರೋಪ ಸುಳ್ಳು: ಡಿ.ಕೆ.ಶಿವಕುಮಾರ್
ಬೆಂಗಳೂರು : ‘ರಾಜ್ಯದಲ್ಲಿನ ಮುಸ್ಲಿಮ್ ಸಮುದಾಯದ ಮುಖಂಡರು ಹೈಕಮಾಂಡ್ ನಾಯಕರಿಗೆ ಪತ್ರ ಬರೆದು ‘ಸಮುದಾಯದ ಮೇಲೆ ಹಗೆ ಸಾಧಿಸಲಾಗುತ್ತಿದೆ’ ಎಂಬ ಆರೋಪದಲ್ಲಿ ಯಾವುದೇ ಹುರುಳಿಲ್ಲ. ಹಗೆ ಸಾಧಿಸಲಾಗುತ್ತಿದೆ ಎಂಬುದೆಲ್ಲ ಸುಳ್ಳು. ಯಾರೂ ಹಗೆ ಸಾಧಿಸುತ್ತಿಲ್ಲ. ಪಕ್ಷವು ಶಿಸ್ತು ಪಾಲನೆಗೆ ಆದ್ಯತೆ ನೀಡುತ್ತಿದೆ. ಎಲ್ಲರೂ ಶಿಸ್ತು ಅಳವಡಿಸಿಕೊಳ್ಳಬೇಕು’ ಎಂದು ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಿಸಿಎಂ ಡಿ.ಕೆ.ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ. ಮಂಗಳವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಬೇಸಿಗೆ ಹಿನ್ನೆಲೆಯಲ್ಲಿ ಬೆಂಗಳೂರು ನಗರದಲ್ಲಿ ನೀರಿನ ಸಮಸ್ಯೆ ನಿರ್ವಹಣೆ ವಿಚಾರವಾಗಿ ಈಗಾಗಲೇ ಬಿಡಬ್ಲ್ಯೂಎಸ್ಎಸ್ಬಿ ಅಧಿಕಾರಿಗಳ ಜತೆ ಚರ್ಚೆ ನಡೆಸಲಾಗಿದೆ. ಅಂತರ್ಜಲ ಹೆಚ್ಚಳದ ಬಗ್ಗೆ ಮಾತನಾಡಿದ್ದು, ಏನೇ ಸಮಸ್ಯೆ ಬಂದರೂ ನಾವು ಅದನ್ನು ಸಮರ್ಥವಾಗಿ ನಿಭಾಯಿಸುತ್ತೇವೆ ಎಂದು ಪ್ರಶ್ನೆಯೊಂದಕ್ಕೆ ಉತ್ತರ ನೀಡಿದರು.
ಸರಕಾರಿ ಆಸ್ಪತ್ರೆಯನ್ನು ಖಾಸಗಿಯವರಿಗೆ ನೀಡುವುದಾದರೆ ಆರೋಗ್ಯ ಇಲಾಖೆ ಯಾಕೆ: ಮುನೀರ್ ಕಾಟಿಪಳ್ಳ ಪ್ರಶ್ನೆ
ಮೂಡುಬಿದಿರೆ: ಸರಕಾರಿ ಆಸ್ಪತ್ರೆಯನ್ನು ಖಾಸಗಿ ಮೆಡಿಕಲ್ ಕಾಲೇಜಿಗಳಿಗೆ ಕೊಟ್ಟ ಬಳಿಕ ಸರಕಾರಿ ಆಸ್ಪತ್ರೆಯಲ್ಲಿ ಖಾಸಗಿ ಆಸ್ಪತ್ರೆಯಂತಹ ವ್ಯವಸ್ಥೆ ಸಿಗುತ್ತಿದೆ ಎಂದು ಸರಕಾರ ಹೇಳುತ್ತದೆ. ಸರಕಾರಿ ಆಸ್ಪತ್ರೆಯಲ್ಲಿ ಸುವ್ಯವಸ್ಥೆ ಮಾಡಲು ಸಾಧ್ಯವಾಗದೆ, ಖಾಸಗಿಯವರಿಗೆ ಕೊಡುವುದಾದರೆ ಆರೋಗ್ಯ ಇಲಾಖೆ ಯಾಕೆ, ಅದಕ್ಕೊಂದು ಸಚಿವರು ಇರುವುದು ಯಾಕೆ ಎಂದು ಸಿಪಿಐಎಂ ಪಕ್ಷದ ಜಿಲ್ಲಾ ಕಾರ್ಯದರ್ಶಿ ಮುನೀರ್ ಕಾಟಿಪಳ್ಳ ಪ್ರಶ್ನಿಸಿದ್ದಾರೆ. ಅವರು ಸುಸಜ್ಜಿತ ಸರ್ಕಾರಿ ಆಸ್ಪತ್ರೆ ಸ್ಥಾಪಿಸಬೇಕು ಮತ್ತು ಖಾಸಗಿ ಆಸ್ಪತ್ರೆಗಳೊಂದಿಗಿನ ಒಪ್ಪಂದವನ್ನು ರದ್ದುಪಡಿಸಬೇಕು ಎಂಬ ಪ್ರಮುಖ ಬೇಡಿಕೆಗಳೊಂದಿಗೆ ಭಾರತ ಕಮ್ಯುನಿಸ್ಟ್ ಪಕ್ಷ (ಸಿಪಿಐಎಂ) ನೇತೃತ್ವದಲ್ಲಿ ಮಂಗಳವಾರ ತಾಲೂಕು ಆಡಳಿತ ಸೌಧದ ಮುಂಭಾಗ ನಡೆಸಿದ ಬೃಹತ್ ಸಾಮೂಹಿಕ ಧರಣಿ ಸತ್ಯಾಗ್ರಹದಲ್ಲಿ ಅತಿಥಿಯಾಗಿ ಭಾಗವಹಿಸಿ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡುತ್ತಿದ್ದರು. ಮೂಡುಬಿದಿರೆ ತಾಲೂಕು ಎಂದು ಘೋಷಣೆಯಾಗಿ ಐದು ವರ್ಷಗಳು ಕಳೆದಿದ್ದರೂ, ಸುಸಜ್ಜಿತ ಸರ್ಕಾರಿ ಆಸ್ಪತ್ರೆಯ ಕೊರತೆ ಎದ್ದು ಕಾಣುತ್ತಿದೆ. ತಾಲೂಕು ಕೇಂದ್ರಕ್ಕೆ ಅಗತ್ಯವಿರುವ ಎಲ್ಲ ಸೌಲಭ್ಯಗಳು ಜನರಿಗೆ ಸಿಗಬೇಕಾದರೆ ಆರೋಗ್ಯ ಸೇವೆಯೂ ಅಷ್ಟೇ ಮುಖ್ಯವಾಗಿದೆ. ಈ ನಿಟ್ಟಿನಲ್ಲಿ ಸರ್ಕಾರ ಕೂಡಲೇ ಗಮನಹರಿಸಿ ತಾಲೂಕು ಮಟ್ಟದ ಆಸ್ಪತ್ರೆಯನ್ನು ಮಂಜೂರು ಮಾಡಬೇಕು. ಖಾಸಗಿಯವರಿಗೆ ಸರ್ಕಾರಿ ಆಸ್ಪತ್ರೆಯ ಜವಾಬ್ದಾರಿ ಕೊಡುವುದನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದರು. ಸ್ಥಳೀಯರು, ಮಹಿಳೆಯರು ಹಾಗೂ ವಿವಿಧ ಸಂಘಟನೆಗಳ ಪ್ರತಿನಿಧಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿ, ತಾಲೂಕಿನಲ್ಲಿ ಸಮರ್ಪಕ ವೈದ್ಯಕೀಯ ಸೌಲಭ್ಯಗಳ ಕೊರತೆಯಿಂದ ಜನರು ಎದುರಿಸುತ್ತಿರುವ ಸಂಕಷ್ಟವನ್ನು ಒತ್ತಿ ಹೇಳಿದರು. ಸಿಪಿಐ(ಎಂ) ಮುಖಂಡ ಯಾದವ ಶೆಟ್ಟಿ ಮಾತನಾಡಿ, ಮೂಡುಬಿದಿರೆ ತಾಲೂಕಾಗಿದ್ದರೂ ಜನರಿಗೆ ಮೂಲಭೂತ ಆರೋಗ್ಯ ಸೇವೆಗಳೇ ದೊರೆಯುತ್ತಿಲ್ಲ. ಸರ್ಕಾರ ತಕ್ಷಣ ಕ್ರಮ ಕೈಗೊಂಡು ಮುಂದಿನ ಬಜೆಟ್ನಲ್ಲಿ ಸಂಪೂರ್ಣ ಸೌಲಭ್ಯಗಳೊಂದಿಗೆ ಸರ್ಕಾರಿ ಆಸ್ಪತ್ರೆ ಘೋಷಿಸಬೇಕು ಎಂದು ಒತ್ತಾಯಿಸಿದರು. ಧರಣಿಯಲ್ಲಿ ತಾಲೂಕು ಸಮಿತಿ ಕಾರ್ಯದರ್ಶಿ ರಮಣಿ, ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯ ವಸಂತ ಆಚಾರಿ, ಸದಸ್ಯೆ ರಾಧಾ ಹಾಗೂ ಸಮಿತಿ ಸದಸ್ಯರಾದ ಗಿರಿಜಾ, ಶಂಕರ, ಲಕ್ಷ್ಮೀ, ಆದಿವಾಸಿ ಬುಡಕಟ್ಟು ಸಮುದಾಯದ ಅಧ್ಯಕ್ಷ ಕರಿಯ, ಮುಖಂಡ ಕೃಷ್ಣಪ್ಪ ಕೊಣಾಜೆ, ವಿವಿಧ ವಿಭಾಗಗಳ ಮುಖಂಡರು, ಕಾರ್ಯಕರ್ತರು ಭಾಗವಹಿಸಿದ್ದರು. ಧರಣಿಗೂ ಮುನ್ನ ಹಳೆ ಪೊಲೀಸ್ ಠಾಣೆ ಬಳಿಯಿಂದ ಮಿನಿ ವಿಧಾನ ಸೌಧದವರೆಗೆ ನಡೆದ ಮೆರವಣಿಗೆಯಲ್ಲಿ ನೂರಾರು ಮಂದಿ ಭಾಗವಹಿಸಿ ಘೋಷಣೆಗಳನ್ನು ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಬೇಸಿಗೆಯಲ್ಲೂ ಕೆರೆಗಳಲ್ಲಿ ನೀರಿನ ಸಂಗ್ರಹ | ರೈತರಿಗೆ ಆಶಾದಾಯಕ ಜಲ ಭದ್ರತೆ : ಸಚಿವ ಭೋಸರಾಜು
ಬೆಂಗಳೂರು : ರಾಜ್ಯಾದ್ಯಂತ ಇರುವ ಸಣ್ಣ ನೀರಾವರಿ ಇಲಾಖೆಯ ಕೆರೆಗಳಲ್ಲಿ ಉತ್ತಮ ನೀರಿನ ಸಂಗ್ರಹವಿದ್ದು, ಇಲಾಖೆಯ ವ್ಯಾಪ್ತಿಯಲ್ಲಿರುವ 3,788 ಕೆರೆಗಳ ಮೂಲಕ ಸುಮಾರು 445,009, ಹೆಕ್ಟೇರ್ಗಳಷ್ಟು ಬೃಹತ್ ಕೃಷಿ ಅಚ್ಚುಕಟ್ಟು ಪ್ರದೇಶಕ್ಕೆ ಜೀವಜಲ ಒದಗಿಸುತ್ತಿವೆ ಎಂದು ಸಣ್ಣ ನೀರಾವರಿ, ಸಚಿವ ಎನ್.ಎಸ್.ಭೋಸರಾಜು ತಿಳಿಸಿದ್ದಾರೆ. ಮಂಗಳವಾರ ಈ ಕುರಿತು ಪ್ರಕಟಣೆಯನ್ನು ನೀಡಿರುವ ಅವರು, ಇಲಾಖೆಯ ಇತ್ತೀಚಿನ ದತ್ತಾಂಶಗಳ ಪ್ರಕಾರ, ರಾಜ್ಯದಲ್ಲಿರುವ ಒಟ್ಟು 3,788 ಸಣ್ಣ ನೀರಾವರಿ ಕೆರೆಗಳ ಪೈಕಿ ಬಹುಪಾಲು ಕೆರೆಗಳು ಈಗಲೂ ಉತ್ತಮ ನೀರಿನ ಮಟ್ಟವನ್ನು ಕಾಯ್ದುಕೊಂಡಿವೆ. ನೀರಿನ ಸಂಗ್ರಹಣಾ ಸಾಮರ್ಥ್ಯವನ್ನು ವಿವರಿಸಿರುವ ವರದಿಯ ಪ್ರಕಾರ, ಬೇಸಿಗೆಯಲ್ಲೂ ರಾಜ್ಯದ 165 ಕೆರೆಗಳು ಭರ್ತಿಯಾಗಿಯೇ. ಇದಲ್ಲದೆ, 1,355 ಕೆರೆಗಳು ಸುಮಾರು ಶೇ.51ಕ್ಕೂ ಹೆಚ್ಚು. ಹಾಗೆಯೇ 1,143 ಕೆರೆಗಳು ಸುಮಾರು ಶೇ.50ರ ವರೆಗೆ ನೀರಿನ ಮಟ್ಟವನ್ನು ಕಾಯ್ದುಕೊಂಡಿವೆ. 959 ಕೆರೆಗಳಲ್ಲಿ ಸುಮಾರು ಶೇ.30 ರಷ್ಟು ಸಾಮರ್ಥ್ಯದ ಸಂಗ್ರಹವಾಗಿದೆ. ಜಿಲ್ಲಾವಾರು ಸಾಧನೆಯನ್ನು ವಿಶ್ಲೇಷಿಸು ವುದಾದರೆ, ದಾವಣಗೆರೆ ಜಿಲ್ಲೆಯು ಅತ್ಯುತ್ತಮ ನೀರಿನ ಸಂಗ್ರಹದೊಂದಿಗೆ ರಾಜ್ಯದಲ್ಲೇ ಮುಂಚೂಣಿಲ್ಲಿದ್ದು, ಬೇಸಿಗೆಯಲ್ಲೂ ಜಿಲ್ಲೆಯ 27 ಕೆರೆಗಳು ಭರ್ತಿಯಾಗಿವೆ. ಇದರ ಬೆನ್ನಲ್ಲೇ ಚಿಕ್ಕಮಗಳೂರು ಜಿಲ್ಲೆಯ 46 ಕೆರೆಗಳು ಭರ್ತಿಯಾಗಿದ್ದು ಅತ್ಯುತ್ತಮ ಜಲ ಸಂಗ್ರಹವನ್ನು ಕಾಯ್ದುಕೊಂಡಿವೆ. ಇತರ ಉತ್ತಮ ಸಾಧನೆ ತೋರಿದ ಜಿಲ್ಲೆಗಳಲ್ಲಿ ಹಾಸನ, ತುಮಕೂರು, ಮತ್ತು ಕೋಲಾರ ಸೇರಿವೆ ಎಂದು ಅವರು ತಿಳಿಸಿದ್ದಾರೆ. ಕೆರೆಗಳಿಗೆ ಏತ ನೀರಾವರಿ ಯೋಜನೆಗಳ ಮೂಲಕ ಶುದ್ದ ನೀರು ಹಾಗೂ ಬಯಲುಸೀಮೆಯ ಜಿಲ್ಲೆಗಳಲ್ಲಿ ಸಂಸ್ಕರಿಸಿದ ಮತ್ತು ಮೇಲ್ಮೈ ನೀರಿನ ನಿರಂತರ ಹರಿವನ್ನು ಖಚಿತಪಡಿಸುವ ಮೂಲಕ, ಬೇಸಿಗೆಯ ತಿಂಗಳುಗಳಲ್ಲಿ ಅವು ಬತ್ತಿಹೋಗದಂತೆ ಕ್ರಮಗಳನ್ನು ಕೈಗೊಂಡಿದ್ದೇವೆ. ಜಲ-ಸುರಕ್ಷಿತ ಕರ್ನಾಟಕವನ್ನು ನಿರ್ಮಿಸುವ ನಮ್ಮ ಸಮಗ್ರ ಪ್ರಯತ್ನಗಳು ತಳಮಟ್ಟದಲ್ಲಿ ಅತ್ಯುತ್ತಮ ಫಲಿತಾಂಶಗಳನ್ನು ನೀಡುತ್ತಿವೆ ಎನ್ನುವುದನ್ನು ಈ ದತ್ತಾಂಶಗಳು ಪುಷ್ಟಿಕರಿಸುತ್ತವೆ. ಕೆರೆಗಳಲ್ಲಿ ಈಗಲೂ ಉಳಿದುಕೊಂಡಿರುವ ಈ ಜಲಸಂಪತ್ತು ನಮ್ಮ 4.45ಲಕ್ಷ ಹೆಕ್ಟೇರ್ ಅಚ್ಚುಕಟ್ಟು ಪ್ರದೇಶದ ಲಕ್ಷಾಂತರ ರೈತರಿಗೆ ನೇರ ಪ್ರಯೋಜನ ಆಗಲಿದೆ ಎಂದು ಅವರು ವಿಶ್ವಾಸವ್ಯಕ್ತಪಡಿಸಿದ್ದಾರೆ.
LPG Gas: ಎಲ್ಪಿಜಿ ಕೊರತೆ ನೀಗಿಸಲು ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ; ಗ್ರಾಹಕರಿಗೆ ಸಿಗ್ತು ಭರ್ಜರಿ ಗುಡ್ ನ್ಯೂಸ್
PNG Gas: ಪಶ್ಚಿಮ ಏಷ್ಯಾದಲ್ಲಿನ ಭೌಗೋಳಿಕ ರಾಜಕೀಯ ಬಿಕ್ಕಟ್ಟಿನಿಂದಾಗಿ ಎಲ್ಪಿಜಿ ಪೂರೈಕೆಯಲ್ಲಿ ಉಂಟಾಗಿರುವ ವ್ಯತ್ಯಯವನ್ನು ಸರಿದೂಗಿಸಲು ಕೇಂದ್ರ ಸರ್ಕಾರವು ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ಭಾರತವು ಪೈಪ್ ಲೈನ್ ಮೂಲಕ ನೈಸರ್ಗಿಕ ಅನಿಲ (ಪಿಎನ್ಜಿ) ಪೂರೈಕೆ ವ್ಯವಸ್ಥೆಗೆ ಹೆಚ್ಚಿನ ವೇಗ ನೀಡಿದೆ. ಮಾರ್ಚ್ ತಿಂಗಳಿನಿಂದ ಈವರೆಗೆ 5.01 ಲಕ್ಷಕ್ಕೂ ಹೆಚ್ಚು ಮನೆಗಳಿಗೆ ಗ್ಯಾಸ್ ಸಂಪರ್ಕ ಕಲ್ಪಿಸಲಾಗಿದೆ. 5.68 ಲಕ್ಷಕ್ಕೂ
Hanur | ಕೆಸರಿನಲ್ಲಿ ಸಿಲುಕಿಕೊಂಡ ಆನೆ: ಸ್ಥಿತಿ ಗಂಭೀರ
ಹನೂರು, : ನೀರು ಕುಡಿಯಲು ಬಂದು ಕೆಸರಿನಲ್ಲಿ ಸಿಲುಕಿಕೊಂಡಿದ್ದ ಕಾಡಾನೆಗಳ ಪೈಕಿ ಒಂದು ಹೆಣ್ಣಾನೆ ಗಂಭೀರ ಸ್ಥಿತಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಎರಡು ದಿನಗಳಿಂದ ಚಿಕಿತ್ಸೆಗೆ ಸ್ಪಂದಿಸದೆ ನಿತ್ರಾಣಗೊಂಡಿದೆ. ಮಲೆ ಮಹದೇಶ್ವರ ವನ್ಯಜೀವಿಧಾಮ ಬಫರ್ ವಲಯದ ಉಡುತೊರೆ ಹಳ್ಳ ಜಲಾಶಯಕ್ಕೆ ಶನಿವಾರ ಸಂಜೆ ನಾಲ್ಕು ಕಾಡಾನೆಗಳು ಎಂದಿನಂತೆ ನೀರು ಕುಡಿಯಲು ಬಂದಿದ್ದವು. ಈ ವೇಳೆ ಅವುಗಳಲ್ಲಿ ಮೂರು ಆನೆಗಳು ಕೆಸರಿನಲ್ಲಿ ಸಿಲುಕಿಕೊಂಡಿದ್ದವು. ಮಾಹಿತಿ ತಿಳಿದ ತಕ್ಷಣ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿ, ಅಗ್ನಿಶಾಮಕ ದಳ ಹಾಗೂ ಅರಣ್ಯ ಸಿಬ್ಬಂದಿಗಳ ಸಹಕಾರದೊಂದಿಗೆ ರಕ್ಷಣಾ ಕಾರ್ಯಾಚರಣೆ ಕೈಗೊಂಡರು. ಸಿಲುಕಿಕೊಂಡಿದ್ದ ಮೂರು ಆನೆಗಳ ಪೈಕಿ ಎರಡು ಆನೆಗಳು ಚೇತರಿಸಿಕೊಂಡು ಕಾಡಿನತ್ತ ಮರಳಿವೆ. ಆದರೆ ಇನ್ನೊಂದು ಹೆಣ್ಣಾನೆ ತೀವ್ರವಾಗಿ ಅಸ್ವಸ್ಥಗೊಂಡಿದ್ದು, ನಾಗರಹೊಳೆ ಅರಣ್ಯ ಪ್ರದೇಶದ ಪಶುವೈದ್ಯಾಧಿಕಾರಿ ಡಾ. ರಮೇಶ್ ಅವರಿಂದ ನಿರಂತರ ಚಿಕಿತ್ಸೆ ನೀಡಲಾಗುತ್ತಿದೆ. ಸಾಕಾನೆ ‘ಮಹೇಂದ್ರ’ನ ಸಹಾಯದಿಂದ ಆನೆಯನ್ನು ಮೇಲೆಳಿಸಲು ಸಿಬ್ಬಂದಿಗಳು ಪ್ರಯತ್ನಿಸುತ್ತಿದ್ದಾರೆ.ಆನೆಗೆ ಇಷ್ಟವಾದ ಕಬ್ಬು, ಕಲ್ಲಂಗಡಿ ಸೇರಿದಂತೆ ವಿವಿಧ ಆಹಾರಗಳನ್ನು ಒದಗಿಸಲಾಗಿದ್ದರೂ, ಅದು ಸ್ಪಂದಿಸದೇ ಇರುವುದರಿಂದ ಆತಂಕ ಹೆಚ್ಚಾಗಿದೆ. ಬಿಸಿಲಿನ ತಾಪಮಾನ ಹೆಚ್ಚಿರುವ ಹಿನ್ನೆಲೆಯಲ್ಲಿ ಆನೆಗೆ ತೊಂದರೆಯಾಗದಂತೆ ಶಾಮಿಯಾನ ಹಾಕಿ ನೆರಳಿನ ವ್ಯವಸ್ಥೆಯನ್ನೂ ಮಾಡಲಾಗಿದೆ.ಅರಣ್ಯ ಇಲಾಖೆಯ ವಲಯ ಅರಣ್ಯಾಧಿಕಾರಿ ಜಿತೇಂದ್ರ, ಉಪವಲಯ ಅರಣ್ಯಾಧಿಕಾರಿಗಳಾದ ವಿನಾಯಕ, ದಿನೇಶ್ ಸೇರಿದಂತೆ ಅರಣ್ಯ ರಕ್ಷಕರು ಹಾಗೂ ಸಿಬ್ಬಂದಿಗಳು ಸ್ಥಳದಲ್ಲೇ ತಂಗಿ ಆನೆಯನ್ನು ರಕ್ಷಿಸಲು ನಿರಂತರ ಪ್ರಯತ್ನ ಮುಂದುವರಿಸಿದ್ದಾರೆ.
ಎ.24ಕ್ಕೆ ‘ದೇವದಾಸ ನ ಲೀಲಾ’ ತುಳು ಚಿತ್ರ ಬಿಡುಗಡೆ
ಉಡುಪಿ: ತೇಜೇಶ್ ಪೂಜಾರಿ ಅವರ ನಿರ್ದೇಶನದ ಎರಡನೇ ತುಳು ಚಲನಚಿತ್ರ ‘ದೇವದಾಸ್ ನ ಲೀಲಾ’ ಇದೇ ಎ.24ರಂದು ತುಳು ನಾಡಿನಾದ್ಯಂತ ಚಿತ್ರಮಂದಿರ ಹಾಗೂ ಮಾಲ್ಗಳಲ್ಲಿ ಬಿಡುಗಡೆಗೊಳ್ಳಲಿದೆ ಎಂದು ಚಿತ್ರದ ನಾಯಕ ನಟ ಎಲ್ಟನ್ ಜೆಫ್ ತಿಳಿಸಿದ್ದಾರೆ. ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಚಿತ್ರದಲ್ಲಿ ತೆಲಿಕೆದ ಬೊಳ್ಳಿ ದೇವದಾಸ್ ಕಾಪಿಕಾಡ್, ಅರವಿಂದ ಬೋಳಾರ್, ನವೀನ್ ಡಿ. ಪಡೀಲ್ ಅಭಿನಯಿಸಿದ್ದಾರೆ. ಅದ್ವಿತಿ ಶೆಟ್ಟಿ ಚಿತ್ರದ ನಾಯಕಿ. ಅಲ್ಲದೇ ಅನೂಪ್ ಸಾಗರ್, ಅನುಷಾ ರಾಜ್, ವಿನಾಯಕ್ ಜಪ್ಪು, ಶೈಲಶ್ರಿ ಮುಲ್ಕಿ, ರಾಧೇಶ್ ಶೆಣೈ, ತಿಮ್ಮಪ್ಪ ಕುಲಾಲ್ ಅಭಿನಯಿಸಿದ್ದಾರೆ ಎಂದರು. ಜಯಂತಿ ಪ್ರೊಡೆಕ್ಷನ್ ಪುಣೆ, ಡಿ.ಎಸ್.ಎಂಟರ್ಟೈನ್ಮೆಂಟ್, ಅಪ್ಸರಾ ಎಂಟರ್ಟೈನ್ಮೆಂಟ್ಸ್ನ ಸಹಭಾಗಿತ್ವದಲ್ಲಿ ತೇಜೇಶ್ ಪೂಜಾರಿ, ದೀಪಕ್ ಸಿಂಗ್ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಚಿತ್ರದ ಛಾಯಾಗ್ರಾಹಕರಾಗಿ ಸಂತೋಷ್ ಆಚಾರ್ಯ ಗುಂಪಲಾಂಜ್, ಸಂಕಲನಕಾರರಾಗಿ ಗಣೇಶ್ ನಿರ್ಚಲ್, ಸಂಗೀತ ನಿರ್ದೇಶಕರಾಗಿ ಸಾಯಿಷ್ ಭಾರದ್ವಾಜ್ ಹಾಗೂ ಪ್ಯಾಟ್ಸನ್ ಪಿರೇರಾ ಕಾರ್ಯನಿರ್ವಹಿಸಿದ್ದಾರೆ ಎಂದರು. ಚಿತ್ರಕ್ಕೆ ಮಂಗಳೂರು, ಮುಡಿಪು, ಬಜ್ವೆ ಹಾಗೂ ಬೆಂಗಳೂರಿನಲ್ಲಿ ಒಟ್ಟು 35 ದಿನಗಳ ಕಾಲ ಚಿತ್ರೀಕರಣ ನಡೆಸಲಾಗಿದೆ. ಮೊದಲ ಬಾರಿ ಶಾನ್ ಅವರು ತುಳುವಿನಲ್ಲಿ ಹಾಡು ಹಾಡಿದ್ದಾರೆ. ಇದೇ ಎ.24ಕ್ಕೆ ‘ದೇವ್ದಾಸ್ ನ ಲೀಲಾ’ ಜಿಲ್ಲೆಯ ಚಿತ್ರ ಮಂದಿರಗಳಲ್ಲಿ ಬಿಡುಗಡೆಗೊಳ್ಳಲಿದೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ನಿರ್ಮಾಪಕರಾದ ತೇಜೇಶ್ ಪೂಜಾರಿ, ದೀಪಕ್ ಸಿಂಗ್, ಅದ್ವಿತಿ ಶೆಟ್ಟಿ ಉಪಸ್ಥಿತರಿದ್ದರು.
Mysuru | ಕಬ್ಬಿನ ಹೆಚ್ಚುವರಿ ಹಣ ನೀಡುವಂತೆ ಒತ್ತಾಯಿಸಿ ಜಿಲ್ಲಾಧಿಕಾರಿ ಕಚೇರಿಗೆ ರೈತರಿಂದ ಮುತ್ತಿಗೆ
ಮೈಸೂರು : ರಾಜ್ಯ ಸರಕಾರ ನಿಗದಿ ಮಾಡಿರುವ ಕಬ್ಬು ಹೆಚ್ಚುವರಿ ಹಣವನ್ನು ರೈತರಿಗೆ ನೀಡಿಲ್ಲ ಎಂದು ಆರೋಪಿಸಿ ರೈತ ಮುಖಂಡರು ಮೈಸೂರು ಜಿಲ್ಲಾಧಿಕಾರಿ ಕಚೇರಿಗೆ ಮಂಗಳವಾರ ಮುತ್ತಿಗೆ ಹಾಕಿ ಪ್ರತಿಭಟನೆಗೆ ಯತ್ನಿಸಿದ್ದು ಪೊಲೀಸರು ತಡೆಯೊಡ್ಡಿದ್ದಾರೆ. ರಾಜ್ಯ ಸರಕಾರ ನಿಗದಿ ಮಾಡಿರುವ ಹೆಚ್ಚುವರಿ ಹಣ ನೂರು ರೂಪಾಯಿ ಕಬ್ಬು ಬೆಳೆಗಾರರಿಗೆ ಪಾವತಿ ಮಾಡಿಲ್ಲ ಎಂದು ಆರೋಪಿಸಿ ನೂರಾರು ರೈತರು ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ ರೈತರು ಒಳನುಗ್ಗಲು ಯತ್ನಿಸಿದಾಗ ಪೊಲೀಸರು ತಡೆದರು. ರೈತರು ಪೊಲೀಸರ ನಡುವೆ ತಳ್ಳಾಟ ನೂಕಾಟ ನಡೆಯಿತು. ನಂತರ ರೈತರು ಧರಣಿ ಮುಂದುವರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ರಾಜ್ಯ ಕಬ್ಬು ಬೆಳೆಗಾರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತ ಕುಮಾರ್ ಮಾತನಾಡಿದರು. ಚಳವಳಿಯಲ್ಲಿ ಅತ್ತಹಳ್ಳಿ ದೇವರಾಜ್, ಬರಡನಪುರ ನಾಗರಾಜ್, ಕಿರಗಸೂರು ಶಂಕರ್, ಮೂಕಳ್ಳಿ ಮಹದೇವಸ್ವಾಮಿ, ಪಟೇಲ್ ಶಿವಮೂರ್ತಿ, ಉಡಿಗಾಲ ರೇವಣ್ಣ, ಸೋಮಶೇಖರ್, ಮಾರ್ಬಳ್ಳಿ ನೀಲಕಂಠಪ್ಪ, ವರಕೋಡು ನಾಗೇಶ್, ಲಕ್ಷ್ಮೀಪುರ ವೆಂಕಟೇಶ್,, ಕುರುಬೂರು ಸಿದ್ದೇಶ್, ದೇವನೂರು ವಿಜಯೇಂದ್ರ, ಮಹದೇವಸ್ವಾಮಿ, ಕೆಂಡಗಣ್ಣಪ್ಪ, ನಾಗೇಶ್, ಕುರುಬೂರು ಪ್ರದೀಪ್, ಪ್ರಸಾದ್ ನಾಯಕ, ಗೌರಿಶಂಕರ್, ಗುರುಸ್ವಾಮಿ, ಅಂಬಳೆ ಮಂಜುನಾಥ್, ಪರಶಿವಮೂರ್ತಿ, ಸಾತಗಳ್ಳಿ ಬಸವರಾಜ, ಸುಂದರಪ್ಪ, ಸತೀಶ್, ದೇವನೂರು ಮಹಾದೇವಪ್ಪ, ರಂಗರಾಜು, ಕೆಂಡಗಣಸ್ವಾಮಿ, ಶಿವಸ್ವಾಮಿ, ರವಿಕುಮಾರ್, ನಂಜುಂಡಸ್ವಾಮಿ, ನಾಗೇಂದ್ರ, ಕಮಲಮ್ಮ ಮತ್ತಿತರ ರೈತರು ಭಾಗವಹಿಸಿದ್ದರು.
ಎ.25 ರಂದು ಮಲ್ಪೆಯಲ್ಲಿ ಆಳ್ವಾಸ್ ಕಾಲೇಜಿನಿಂದ ‘ಆಳ್ವಾಸ್ ರೀಚ್’
ಉಡುಪಿ: ಮೂಡಬಿದರೆಯ ಆಳ್ವಾಸ್ ಕಾಲೇಜಿನ ಸಮಾಜ ಕಾರ್ಯ ವಿಭಾಗವು, ಮಲ್ಪೆಯ ಟೀಮ್ ಈಶ್ವರ ಮಲ್ಪೆ ತಂಡದ ಸಹಯೋಗ ಹಾಗೂ ಸಮಾಜಕಾರ್ಯ ವಿಭಾಗದ ಹಳೆವಿದ್ಯಾರ್ಥಿ ಸಂಘದ ಸಹಕಾರದೊಂದಿಗೆ ಇದೇ ಎ.25ರಂದು ಶನಿವಾರ ಮಲ್ಪೆ ಕಡಲಕಿನಾರೆಯಲ್ಲಿ ‘ಆಳ್ವಾಸ್ ರೀಚ್-2026’ ಎಂಬ ರಾಷ್ಟ್ರೀಯ ಸಮಾವೇಶವನ್ನು ಆಯೋಜಿಸಿದೆ ಎಂದು ಸಮಾವೇಶದ ಸಂಯೋಜಕ ಸಮಾಜಕಾರ್ಯ ವಿಭಾಗದ ಪ್ರಾದ್ಯಾಪಕ ಕೃಷ್ಣಮೂರ್ತಿ ಬಿ. ತಿಳಿಸಿದ್ದಾರೆ. ಉಡುಪಿ ಪ್ರೆಸ್ಕ್ಲಬ್ನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ‘ಸೋಶಿಯಲ್ ವರ್ಕ್ ಫಾರ್ ಅಡ್ರೆಸಿಂಗ್ ಯೂತ್ ಎಟ್ ರಸ್ಕ್’ (ಅಪಾಯದಲ್ಲಿರುವ ಯುವಜನತೆಯ ಸಮಸ್ಯೆಗೆ ಸ್ಪಂಧಿಸುವಲ್ಲಿ ಸಮಾಜಕಾರ್ಯ) ಘೋಷವಾಕ್ಯದೊಂದಿಗೆ ಈ ಸಮಾವೇಶ ನಡೆಯಲಿದೆ ಎಂದರು. ಈ ಸಮಾವೇಶಕ್ಕೆ ಪೂರ್ವಭಾವಿಯಾಗಿ ಸಮಾಜಕಾರ್ಯ ವಿಭಾಗ ತನ್ನ ಬೆಳ್ಳಿಹಬ್ಬ ವರ್ಷಾಚರಣೆಯ ಪ್ರಯುಕ್ತ ಟೀಮ್ ಈಶ್ವರ್ ಮಲ್ಪೆ ತಂಡ ಮುಖ್ಯಸ್ಥರಾದ ಈಶ್ವರ ಮಲ್ಪೆ ಅವರನ್ನು ತನ್ನ ಬ್ರಾಂಡ್ ಅಂಬಾಸಿಡರ್ ಆಗಿ ನಿಯೋಜಿಸಿದೆ. ಎ.25ರಂದು ಬೆಳಗ್ಗೆ ರಾಜ್ಯದ ವಿವಿಧ ಪದವಿ ಕಾಲೇಜುಗಳ ವಿದ್ಯಾರ್ಥಿಗಳಿಗಾಗಿ ವಿವಿಧ ಸ್ಪರ್ಧೆಗಳು, ವಿಚಾರಗೋಷ್ಠಿ, ಜಾಗೃತಿ ಜಾಥಾ, ಸಾಧಕರಿಗೆ ಸನ್ಮಾನ ಹಾಗೂ ಸಾಂಸ್ಕೃತಿಕ ವೈವಿಧ್ಯ ಕಾರ್ಯಕ್ರಮಗಳನ್ನು ಆಯೋಜಿಸಿದೆ ಎಂದರು. ಸಮಾವೇಶದ ಉದ್ಘಾಟನೆ ಎ.25ರಂದು ಬೆಳಗ್ಗೆ 10:30ಕ್ಕೆ ಮಲ್ಪೆಯ ಸರಕಾರಿ ಪದವಿ ಪೂರ್ವ ಕಾಲೇಜಿನ ಸಭಾಂಗಣದಲ್ಲಿ ನಡೆಯಲಿದೆ. ಸಮಾರಂಭದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಕುರಿಯನ್, ಆಡಳಿತಾಧಿಕಾರಿ ಬಾಲಕೃಷ್ಣ ಶೆಟ್ಟಿ, ಈಶ್ವರ ಮಲ್ಪೆ ಹಾಗೂ ಇತರ ಗಣ್ಯರು ಉಪಸ್ಥಿತರಿರುವರು ಎಂದು ವಿವರಿಸಿದರು. ಬಳಿಕ ವಿವಿಧ ವಿಷಯಾಧಾರಿತ ವಿವಿಧ ಸ್ಪರ್ಧೆಗಳು ಕಾಲೇಜು ವಿದ್ಯಾರ್ಥಿ ಗಳಿಗಾಗಿ ನಡೆಯಲಿವೆ. ಸಂಜೆ 4:00ಗಂಟೆಗೆ ಜಾಗೃತಿ ಜಾಥಾ ಮಲ್ಪೆ ಜೂನಿಯರ್ ಕಾಲೇಜಿನಿಂದ ಮಲ್ಪೆ ಕಿನಾರೆಯ ಗಾಂಧಿ ಪ್ರತಿಮೆಯವರೆಗೆ ನಡೆಯಲಿದೆ. 5ಗಂಟೆಗೆ ಕಲಾವತಿ ದಯಾನಂದ ತಂಡದಿಂದ ಸುಗಮ ಸಂಗೀತ ಕಾರ್ಯಕ್ರಮವಿರುತ್ತದೆ ಎಂದರು. ಸಂಜೆ 6:30ರಿಂದ ಸಮಾರೋಪ ಸಮಾರಂಭ ಮಲ್ಪೆ ಕಡಲ ಕಿನಾರೆಯಲ್ಲಿ ನಡೆಯಲಿದೆ. ಇದರಲ್ಲಿ ನೂತನ ಅಂಬುಲೆನ್ಸ್ ವಾಹನವನ್ನು ಈಶ್ವರ ಮಲ್ಪೆ ತಂಡಕ್ಕೆ ಹಸ್ತಾಂತರ, ಸನ್ಮಾನ, ಸಮಾರೋಪ ನಂತರ ಗೋಳಿಯಂಗಡಿಯ ಕಲಾಶ್ರಿ ನಾಟ್ಯಾಲಯದಿಂದ ಸಾಂಸ್ಕೃತಿಕ ವೈವಿಧ್ಯ ನಡೆಯಲಿದೆ ಎಂದು ಕೃಷ್ಣಮೂತಿ ತಿಳಿಸಿದರು. ಸಮಾರೋಪ ಸಮಾರಂಭವು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಡಳಿತ ಟ್ರಸ್ಟಿ ವಿವೇಕ್ ಆಳ್ವ ಅಧ್ಯಕ್ಷತೆಯಲ್ಲಿ ನಡೆಯಲಿದೆ.ಇದರಲ್ಲಿ ಶಾಸಕ ಯಶಪಾಲ್ ಸುವರ್ಣ, ಉದ್ಯಮಿಗಳಾದ ಆನಂದ ಸಿ.ಕುಂದರ್, ಪ್ರಸಾದ್ರಾಜ್ ಕಾಂಚನ್, ರಘುಪತಿ ಭಟ್, ಸಾಮಾಜಿಕ ಕಾರ್ಯಕರ್ತ ಕೃಷ್ಣಮೂರ್ತಿ ಆಚಾರ್ ಹಾಗೂ ಇತರರು ಭಾಗವಹಿಸಲಿದ್ದಾರೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಆಳ್ವಾಸ್ ಕಾಲೇಜಿನ ಸಮಾಜಕಾರ್ಯ ವಿಭಾಗದ ಮುಖ್ಯಸ್ಥೆ ಡಾ.ಮಧುಮಾಲಾ ಕೆ., ಈಶ್ವರ ಮಲ್ಪೆ ಉಪಸ್ಥಿತರಿದ್ದರು.
ಹೈದರಾಬಾದ್ ನಲ್ಲಿ ಅಭಿಷೇಕ್ ಶರ್ಮಾ ಒನ್ ಮ್ಯಾನ್ ಶೋ; ಅತ್ಯದ್ಭುತ ಇನ್ನಿಂಗ್ಸ್ ಗೆ ಕಂಗೆಟ್ಟ ಡೆಲ್ಲಿ ಕ್ಯಾಪಿಟಲ್ಸ್
ಅಭಿಷೇಕ್ ಶರ್ಮಾ ಅವರ ಅಜೇಯ ಶತಕ ಮತ್ತು ಇಶಾನ್ ಮಾಲಿಂಗ ಅವರ ಮಾರಕ ಬೌಲಿಂಗ್ ಸಹಾಯದಿಂದ ಸನ್ ರೈಸರ್ಸ್ ತಂಡ ನಿರಂತರ ಮೂರನೇ ಜಯ ದಾಖಲಿಸಿದೆ. ಬ್ಯಾಟರ್ ಗಳ ಮೇಲಾಟ ಕಂಡ ಪಂದ್ಯದಲ್ಲಿ ಇಶಾನ್ ಕಿಶನ್ ಬಳಗ ಅಕ್ಷರ್ ಪಟೇಲ್ ನೇತೃತ್ವದ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 47 ರನ್ ಗಳ ಭರ್ಜರಿ ಜಯ ದಾಖಲಿಸಿತು. ಈ ಗೆಲುವಿನೊಂದಿಗೆ ಸನ್ ರೈರರ್ಸ್ ಪಡೆ ಆಢಿದ 7 ಪಂದ್ಯಗಳಿಂದ 4 ಪಂದ್ಯ ಗೆದ್ದು 8 ಅಂಕಗಳನ್ನು ಕಲೆ ಹಾಕಿದ್ದು, ಯಲ್ಲಿ 3ನೇ ಸ್ಥಾನಕ್ಕೇರಿದೆ. ಹೈದರಾಬಾದ್ ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಏಪ್ರಿಲ್ 21ರ ಸೋಮವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಸನ್ ರೈಸರ್ಸ್ ಹೈದರಾಬಾದ್ ತಂಡ ನಿಗದಿತ 20 ಓವರ್ ಗಳಲ್ಲಿ 2 ವಿಕೆಟ್ ನಷ್ಟಕ್ಕೆ 242 ರನ್ ಗಳ ಬೃಹತ್ ಮೊತ್ತವನ್ನು ಪೇರಿಸಿತು. ಇದಕ್ಕೆ ಉತ್ತರವಾಗಿ ಸನ್ ರೈಸರ್ಸ್ ತಂಡ ಅಷ್ಟೇ ಓವರ್ ಗಳಲ್ಲಿ 9 ವಿಕೆಟ್ ಕಳೆದುಕೊಂಡು 195 ರನ್ ಗಳಿಸಲಷ್ಟೇ ಶಕ್ತವಾಯಿತು. ()
ಲೇಖಕಿ ವೈದೇಹಿಗೆ ‘ಕರ್ತೃತ್ವ ಸಮಗ್ರ ಸಮ್ಮಾನ್’ ಪ್ರಶಸ್ತಿ
ಉಡುಪಿ: ಸೂಕ್ಷ್ಮ ಸಂವೇದನೆಯ ಲೇಖಕರಿಗೆ ಕೋಲ್ಕತ್ತಾದ ಭಾರತೀಯ ಭಾಷಾ ಪರಿಷತ್ ನೀಡುವ ಪ್ರತಿಷ್ಠಿತ ‘ಕರ್ತೃತ್ವ ಸಮಗ್ರ ಸಮ್ಮಾನ್’ ಪ್ರಶಸ್ತಿಗೆ ಕನ್ನಡದ ಹಿರಿಯ ಲೇಖಕಿ ಹಾಗೂ ಸಾಹಿತಿ ವೈದೇಹಿ ಭಾಜನರಾಗಿದ್ದಾರೆ. ಪ್ರಶಸ್ತಿಯು ಒಂದು ಲಕ್ಷ ರೂ. ಗೌರವ ಧನದೊಂದಿಗೆ ಪದಕವನ್ನು ಒಳಗೊಂಡಿದೆ. ಪ್ರಶಸ್ತಿಯನ್ನು ಇದೇ ಮೇ ಒಂದರಂದು ಪ್ರಸಿದ್ಧ ಬಂಗಾಳಿ ಲೇಖಕ ರಾಮ್ಕುಮಾರ್ ಮುಖೋಪಾಧ್ಯಾಯ ಪ್ರದಾನ ಮಾಡಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
ಹೊಸಪೇಟೆಯಲ್ಲಿ ಬಸವಣ್ಣನವರ 893ನೇ ಜಯಂತಿ ಅರ್ಥಪೂರ್ಣ ಆಚರಣೆ
ಹೊಸಪೇಟೆ/ವಿಜಯನಗರ : ನಾಡಿನ ಸಾಂಸ್ಕೃತಿಕ ನಾಯಕ, ವಿಶ್ವಗುರು ಜಗಜ್ಯೋತಿ ಬಸವಣ್ಣನವರ 893ನೇ ಜಯಂತಿಯನ್ನು ಹೊಸಪೇಟೆಯ ಬಸವೇಶ್ವರ ವೃತ್ತದಲ್ಲಿ ಭಕ್ತಿಭಾವದಿಂದ ಹಾಗೂ ಅರ್ಥಪೂರ್ಣವಾಗಿ ಆಚರಿಸಲಾಯಿತು. ಬಸವಣ್ಣನವರ ಪುತ್ಥಳಿಗೆ ಹೂಮಾಲೆಗಳನ್ನು ಅರ್ಪಿಸಿ ಗೌರವ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಬಸವಣ್ಣನವರ ತತ್ವಗಳು, ವಚನಗಳು ಮತ್ತು ಸಮಾಜ ಪರಿವರ್ತನೆಗೆ ನೀಡಿದ ಮಹತ್ವದ ಕೊಡುಗೆಗಳನ್ನು ಸ್ಮರಿಸಲಾಯಿತು. ಅವರ ಆತ್ಮಪರಿಶೀಲನೆ, ನೈತಿಕತೆ ಮತ್ತು ಒಳಗಿನ ಶುದ್ಧತೆಯನ್ನು ಪ್ರತಿಬಿಂಬಿಸುವ ಭಾವಪೂರ್ಣ ವಿಚಾರಗಳನ್ನು ವಕ್ತಾರರು ವಿವರಿಸಿದರು. “ಕಾಯಕವೇ ಕೈಲಾಸ” ಮತ್ತು ದಾಸೋಹ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಂಡ ಬಸವಣ್ಣನವರು ಆದರ್ಶ ಬದುಕು ನಡೆಸಿದ ಮಹಾನ್ ಚಿಂತಕರಾಗಿದ್ದರು. ಜಾತಿ-ವರ್ಣ ವ್ಯವಸ್ಥೆಯನ್ನು ಖಂಡಿಸಿ ಸಮಾನತೆಯ ಸಂದೇಶ ಸಾರಿದ ಅವರು “ದಯೆಯೇ ಧರ್ಮದ ಮೂಲವಯ್ಯ” ಎಂಬ ಅಮರ ವಚನದ ಮೂಲಕ ಮಾನವೀಯತೆಯ ಮೌಲ್ಯವನ್ನು ಜಗತ್ತಿಗೆ ಪರಿಚಯಿಸಿದರು ಎಂದು ಹೇಳಿದರು. ಇದೇ ವೇಳೆ, “ಸಪ್ತಧಾತು ಸಮಂ ಪಿಂಡಂ…” ಎಂಬ ವಚನವನ್ನು ಉಲ್ಲೇಖಿಸಿ ಎಲ್ಲ ಮಾನವರೂ ಸಮಾನರು ಎಂಬ ಬಸವಣ್ಣನವರ ಮಹತ್ವದ ಸಂದೇಶವನ್ನು ವಿವರಿಸಲಾಯಿತು. ಬಸವಣ್ಣನವರು ಲಕ್ಷಾಂತರ ಶರಣರನ್ನು ರೂಪಿಸಿ, ನೂರಾರು ವಚನಕಾರರು ಹಾಗೂ ವಚನಕಾರ್ತಿಯರನ್ನು ಪ್ರೇರೇಪಿಸಿ ಕನ್ನಡ ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಸಮಾಜದ ಅಂಚಿನಲ್ಲಿದ್ದವರನ್ನು ಮುಖ್ಯವಾಹಿನಿಗೆ ತಂದು ಸಮಾನತೆಯ ಬದುಕಿಗೆ ದಾರಿತೋರಿಸಿದ ಮಹಾನ್ ಸಮಾಜ ಸುಧಾರಕರಾಗಿದ್ದರು ಎಂದು ಅಭಿಪ್ರಾಯಪಟ್ಟರು. ಜಾನಪದದಲ್ಲಿಯೂ ಬಸವಣ್ಣನವರ ಕೀರ್ತಿ ಪ್ರತಿಧ್ವನಿಸಿದ್ದು, “ಎಲ್ಲರವ ನಮ್ಮಣ್ಣ ಕಲ್ಯಾಣ ಬಸವಣ್ಣ” ಎಂಬ ಸಾಲುಗಳನ್ನು ಸ್ಮರಿಸಿ, ಅವರು ಜನಮನಗಳಲ್ಲಿ ಶಾಶ್ವತ ಸ್ಥಾನ ಪಡೆದಿದ್ದಾರೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಕನ್ನಡ ವಿಶ್ವವಿದ್ಯಾಲಯದ ಕುಲಸಚಿವ ವಿರೂಪಾಕ್ಷ ಪೂಜಾರಳ್ಳಿ, ವಿಜಯನಗರ ಜಿಲ್ಲಾ ಬಾಬಾಸಾಹೇಬ್ ಅಂಬೇಡ್ಕರ್ ಸಂಘದ ಪ್ರಧಾನ ಕಾರ್ಯದರ್ಶಿ ಸೋಮಶೇಖರ್ ಬಣ್ಣದಮನೆ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಕಾರ್ಯಕ್ರಮವು ಬಸವ ತತ್ವಗಳ ಮಹತ್ವವನ್ನು ಪುನರುಚ್ಚರಿಸುವುದರ ಜೊತೆಗೆ ಸಮಾನತೆ, ದಯೆ ಮತ್ತು ಮಾನವೀಯ ಮೌಲ್ಯಗಳನ್ನು ಸಮಾಜದಲ್ಲಿ ಬಲಪಡಿಸುವ ಸಂದೇಶ ನೀಡಿತು.
ಕ್ರಿಮಿನಲ್ ಪ್ರಕರಣ ಇರುವ ಕುಲಪತಿಯೊಂದಿಗೆ ವೇದಿಕೆ ಹಂಚಿಕೊಳ್ಳಬಾರದು: ಉಪರಾಷ್ಟ್ರಪತಿಗೆ ಬಿ.ಆರ್.ಪಾಟೀಲ್ ಆಗ್ರಹ
ಕಲಬುರಗಿ: ಕ್ರಿಮಿನಲ್ ಪ್ರಕರಣ ಇರುವ ಹಿನ್ನೆಲೆಯಲ್ಲಿ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಬಟ್ಟು ಸತ್ಯನಾರಾಯಣ ಅವರ ಜೊತೆ ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ ಅವರು ವೇದಿಕೆ ಹಂಚಿಕೊಳ್ಳಬಾರದು ಎಂದು ರಾಜ್ಯ ನೀತಿ ಮತ್ತು ಯೋಜನಾ ಆಯೋಗದ ಉಪಾಧ್ಯಕ್ಷ ಹಾಗೂ ಆಳಂದ ಶಾಸಕ ಬಿ.ಆರ್. ಪಾಟೀಲ್ ಆಗ್ರಹಿಸಿದ್ದಾರೆ. ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರೊ. ಬಟ್ಟು ಸತ್ಯನಾರಾಯಣ ವಿರುದ್ಧ ನರೋಣಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ದೋಷಾರೋಪಣಾ ಪಟ್ಟಿ ಸಹ ಸಲ್ಲಿಕೆಯಾಗಿದೆ. ಪ್ರಕರಣ ವಿಚಾರಣೆಯ ಹಂತದಲ್ಲಿರುವುದರಿಂದ ಇಂತಹ ವ್ಯಕ್ತಿಯೊಂದಿಗೆ ಉಪರಾಷ್ಟ್ರಪತಿಗಳು ವೇದಿಕೆ ಹಂಚಿಕೊಂಡರೆ ತಪ್ಪು ಸಂದೇಶ ಹೋಗಲಿದೆ ಎಂದು ಹೇಳಿದರು. ಸಿಯುಕೆ (ಕೇಂದ್ರೀಯ ವಿಶ್ವವಿದ್ಯಾಲಯ)ದಲ್ಲಿ ಸಿಬ್ಬಂದಿ, ಉಪನ್ಯಾಸಕರು ಹಾಗೂ ಪಿಆರ್ಒ ಸೇರಿದಂತೆ ವಿವಿಧ ಹುದ್ದೆಗಳ ನೇಮಕಾತಿಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪಗಳಿವೆ. ಮೆರಿಟ್ ಮತ್ತು ನಿಯಮಗಳನ್ನು ಪಾಲಿಸದೇ ನೇಮಕಾತಿ ನಡೆದಿದೆ. ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ನೇಮಕಾತಿ ಕುರಿತು ವರದಿ ನೀಡಲು ಸೂಚಿಸಿದ್ದರೂ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಅವರು ಆರೋಪಿಸಿದರು. ನೇಮಕಾತಿಯಲ್ಲಿ ಸಂವಿಧಾನದ 371(ಜೆ) ವಿಧಿಯನ್ನು ಪಾಲಿಸದೇ ಕನ್ನಡಿಗರು, ವಿಶೇಷವಾಗಿ ಕಲ್ಯಾಣ ಕರ್ನಾಟಕದವರಿಗೆ ಅವಕಾಶ ನೀಡಲಾಗುತ್ತಿಲ್ಲ. ಈ ಬಗ್ಗೆ ಹಲವಾರು ಬಾರಿ ಗಮನ ಸೆಳೆದರೂ ವಿಶ್ವವಿದ್ಯಾಲಯ ತನ್ನ ನಡೆ ಬದಲಿಸಿಕೊಳ್ಳದೇ ಅನ್ಯಾಯ ಮುಂದುವರಿಸಿದೆ ಎಂದು ಬಿ.ಆರ್. ಪಾಟೀಲ್ ಅಸಮಾಧಾನ ವ್ಯಕ್ತಪಡಿಸಿದರು. ಶಿಷ್ಟಾಚಾರ ಉಲ್ಲಂಘನೆ ಆರೋಪ : ಬುಧವಾರ ನಡೆಯಲಿರುವ ಸಿಯುಕೆ ಘಟಿಕೋತ್ಸವದ ಆಹ್ವಾನ ಪತ್ರಿಕೆಯಲ್ಲಿ ಶಿಷ್ಟಾಚಾರ ಉಲ್ಲಂಘನೆಯಾಗಿದೆ. ಬೀದರ್ ಸಂಸದ ಸಾಗರ ಖಂಡ್ರೆ, ಸ್ಥಳೀಯ ಶಾಸಕ ಹಾಗೂ ರಾಜ್ಯಸಭಾ ಸದಸ್ಯ ಮಲ್ಲಿಕಾರ್ಜುನ ಖರ್ಗೆ ಅವರ ಹೆಸರುಗಳನ್ನು ಸೇರಿಸದೇ, ನಿಯಮಗಳಿಗೆ ವಿರುದ್ಧವಾಗಿ ಆಹ್ವಾನ ಪತ್ರಿಕೆ ಮುದ್ರಿಸಲಾಗಿದೆ ಎಂದು ಅವರು ಖಂಡಿಸಿದರು.
ಅಬ್ದುಲ್ ಜಬ್ಬಾರ್, ನಸೀರ್ ಅಹ್ಮದ್ ವಿರುದ್ಧ ಕ್ರಮ; ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಹೇಳಿದ್ದೇನು?
ದಾವಣಗೆರೆ : ಒಂದು ಪಕ್ಷದಲ್ಲಿ ಒಂದು ಸಿದ್ಧಾಂತ, ನೈತಿಕತೆ ಇರುತ್ತದೆ. ಪಕ್ಷ ಒಂದು ನಿರ್ಧಾರ ತೆಗೆದುಕೊಂಡರೆ ಅದಕ್ಕೆ ಒಂದು ಕಾರಣವಿರುತ್ತದೆ ಎಂದು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ತಿಳಿಸಿದ್ದಾರೆ. ಮಂಗಳವಾರ ಸುದ್ದಿಗೋಷ್ಠಿಯಲ್ಲಿ, ಪರಿಷತ್ ಸದಸ್ಯ ಅಬ್ದುಲ್ ಜಬ್ಬಾರ್ ಮತ್ತು ಮುಖ್ಯಮಂತ್ರಿ ಕಾರ್ಯದರ್ಶಿ ನಸೀರ್ ಅಹ್ಮದ್ ವಿರುದ್ಧದ ಪಕ್ಷದ ಕ್ರಮಕ್ಕೆ ಅವರು ಪ್ರತಿಕ್ರಿಯೆ ನೀಡಿದರು. ಕೆಪಿಸಿಸಿ, ಎಐಸಿಸಿ ಮಟ್ಟದಲ್ಲಿ ಎಲ್ಲ ರೀತಿಯ ಪ್ರತಿಕ್ರಿಯೆ ತೆಗೆದುಕೊಂಡು, ಚುನಾವಣೆಯಲ್ಲಿ ಯಾರು ಯಾವ ರೀತಿ ಕೆಲಸ ಮಾಡಿದ್ದಾರೆ, ಇಷ್ಟು ವರ್ಷ ಏನೇನಾಗಿದೆ ಎಂದು ಕೂಲಂಕಷವಾಗಿ ಪರಿಶೀಲಿಸಿ ಒಂದು ನಿರ್ಧಾರ ತೆಗೆದುಕೊಳ್ಳುತ್ತಿದ್ದಾರೆ. ಆದ್ದರಿಂದ ಕಾಂಗ್ರೆಸ್ ಒಂದು ಶಿಸ್ತುಬದ್ಧವಾದ ಪಕ್ಷ ಅಂತ ಎಲ್ಲರಿಗೂ ಈಗ ಗೊತ್ತಾಗುತ್ತದೆ ಎಂದರು. ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ ಅವರನ್ನು ಗೆಲ್ಲಿಸಿ ಎಂದು ಶಾಮನೂರು ಶಿವಶಂಕರಪ್ಪ ಹೇಳಿದ್ದರು, ಆದರೆ ಪಕ್ಷ ಅವರ ವಿರುದ್ಧ ಕ್ರಮ ತೆಗೆದುಕೊಳ್ಳಲಿಲ್ಲ, ನಾವು ಟಿಕೆಟ್ ಕೇಳಿದ್ದಕ್ಕೆ ಕ್ರಮ ಏಕೆ ಎಂದು ಮುಸ್ಲಿಮ್ ನಾಯಕರು ಪ್ರಶ್ನಿಸಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ಪ್ರಭಾ, ‘ಶಾಮನೂರು ಶಿವಶಂಕರಪ್ಪ ಅವರು ಶಿವಮೊಗ್ಗದಲ್ಲಿ ನಡೆದ ಅಖಿಲ ಭಾರತ ಮಹಾಸಭಾ ಸಭೆಯಲ್ಲಿ ಪಾಲ್ಗೊಂಡಿದ್ದರು. ಬಿ.ವೈ.ರಾಘವೇಂದ್ರ ಅವರು ಉಪಸ್ಥಿತರಿದ್ದರು. ರಾಘವೇಂದ್ರ ಅವರು ಒಳ್ಳೆಯ ಕೆಲಸ ಮಾಡಿದ್ದಾರೆ ಎಂದು ಅಷ್ಟೇ ಹೇಳಿದ್ದಾರೆ. ಅಪ್ಪಾಜಿಯವರು ಅಥವಾ ನಾನು ಮಾತನಾಡಿರುವುದಿರಬಹುದು. ಎಲ್ಲವನ್ನೂ ಪರಿಶೀಲಿಸಿ ಒಂದು ನಿರ್ಧಾರ ತೆಗೆದುಕೊಳ್ಳುತ್ತಾರೆ’ ಎಂದು ತಿಳಿಸಿದರು. ಸಮರ್ಥ್ ಗೆಲುವು ನಿಶ್ಚಿತ : ನಮಗೆ ಏನೂ ಒತ್ತಡ ಇಲ್ಲ. ಜನರು ಯಾವತ್ತೂ ಕಾಂಗ್ರೆಸ್ ಪಕ್ಷದ ಪರವಾಗಿದ್ದಾರೆ. ಒಳ್ಳೆಯ ಬಹುಮತದಿಂದ ಸಮರ್ಥ್ ಗೆಲ್ಲುತ್ತಾರೆ. ಮೇ 4ರಂದು ಗೊತ್ತಾಗಲಿದ್ದು, ಸಮರ್ಥ್ ಗೆದ್ದೇ ಗೆಲ್ಲುತ್ತಾರೆ ಅಂತ ನಮಗೆ ಸಂಪೂರ್ಣ ವಿಶ್ವಾಸವಿದೆ ಎಂದು ಸಂಸದೆ ಪ್ರಭಾ ತಿಳಿಸಿದರು.
ಬಸವಣ್ಣ ಸಾಮಾಜಿಕ ಕ್ರಾಂತಿಯ ಹರಿಕಾರರು: ನಿಂಗಣ್ಣ ಹುಳಗೋಳಕರ್
ಹೊಸಪೇಟೆ | ಬಿ ಖಾತವನ್ನು ಏ ಖಾತಾ ಮಾಡಲು ವಿಳಂಬ: ಜಿಲ್ಲಾ ಪ್ರಜಾ ಜಾಗೃತಿ ವೇದಿಕೆಯಿಂದ ಮನವಿ
ಹೊಸಪೇಟೆ : ನಗರದಲ್ಲಿ ವಿಜಯನಗರ ಜಿಲ್ಲಾ ಪ್ರಜಾ ಜಾಗೃತಿ ವೇದಿಕೆ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿ, ಅದನ್ನು ಮುಖ್ಯಮಂತ್ರಿ, ಕಂದಾಯ ಸಚಿವರು ಹಾಗೂ ನಗರಾಭಿವೃದ್ಧಿ ಸಚಿವರಿಗೆ ರವಾನಿಸಲು ಒತ್ತಾಯಿಸಲಾಯಿತು. ಕರ್ನಾಟಕ ರಾಜ್ಯದ ನಗರ ಪ್ರದೇಶಗಳಲ್ಲಿನ ನಿವೇಶನಗಳಿಗೆ ಒಂದು ಬಾರಿ ದುಪ್ಪಟ್ಟು ತೆರಿಗೆ ಪಾವತಿಸಿಕೊಂಡು ಈಗಾಗಲೇ ಫಾರ್ಮ್ ನಂ.3 (ಬಿ ಖಾತ) ನೀಡಿರುವುದು ತಿಳಿದ ಸಂಗತಿಯಾಗಿದೆ. ಇತ್ತೀಚೆಗೆ ರಾಜ್ಯ ಸರ್ಕಾರ ಬಿ ಖಾತವನ್ನು ಏ ಖಾತಾ ಮಾಡಿಕೊಡುವ ಕುರಿತು ಮಹತ್ವದ ಆದೇಶ ಹೊರಡಿಸಿತ್ತು. ಆದರೆ, ನಗರದಲ್ಲಿ ಈ ಆದೇಶ ಸಮರ್ಪಕವಾಗಿ ಜಾರಿಯಾಗಿಲ್ಲ ಎಂದು ವೇದಿಕೆ ಆರೋಪಿಸಿದೆ. ಹೊಸಪೇಟೆ ಶಾಸಕ ಗವಿಯಪ್ಪ ಹಾಗೂ ನಗರಸಭೆ ಆಯುಕ್ತರು ಈ ಯೋಜನೆಗೆ ಚಾಲನೆ ನೀಡಿದರೂ, ಮೂರು-ನಾಲ್ಕು ತಿಂಗಳು ಕಳೆದರೂ ಬಿ ಖಾತವನ್ನು ಏ ಖಾತಾ ಮಾಡುವ ಪ್ರಕ್ರಿಯೆ ಆರಂಭವಾಗಿಲ್ಲ. ಮೇಲಾಗಿ, ಸಾರ್ವಜನಿಕರಿಂದ ಅನಗತ್ಯ ದಾಖಲೆಗಳನ್ನು ಕೇಳಿ ತೊಂದರೆ ನೀಡಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಹೊರಡಿಸಿದ ಆದೇಶದ ಪ್ರಕಾರ, ಪ್ರಸ್ತುತ ಇರುವ ಫಾರ್ಮ್ ನಂ.3 ಅನ್ನು ಆಸ್ತಿ ತೆರಿಗೆ ಪಾವತಿ ಮಾಡಿದ ಕೂಡಲೇ ನವೀಕರಿಸಿ, ನಿವೇಶನದಾರರ ಮೊಬೈಲ್ಗೆ ಕಳುಹಿಸುವ ವ್ಯವಸ್ಥೆ ಇರಬೇಕು. ಜೊತೆಗೆ, ಹಾರ್ಡ್ ಕಾಪಿಯನ್ನು ಪೋಸ್ಟ್ ಮೂಲಕ ಮನೆ ವಿಳಾಸಕ್ಕೆ ತಲುಪಿಸುವ ವ್ಯವಸ್ಥೆಯನ್ನು ಕೂಡ ತಕ್ಷಣ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು. ಆದ್ದರಿಂದ, ಬಿ ಖಾತ ಹೊಂದಿರುವ ಎಲ್ಲಾ ನಿವೇಶನದಾರರಿಗೆ ತಕ್ಷಣವೇ ಏ ಖಾತಾದ ಫಾರ್ಮ್ ನಂ.3 ನೀಡಬೇಕು. ಇಲ್ಲದಿದ್ದರೆ, ಒಂದು ವಾರದೊಳಗೆ ಕ್ರಮ ಕೈಗೊಳ್ಳದಿದ್ದಲ್ಲಿ ಉಗ್ರ ಹೋರಾಟಕ್ಕೆ ಮುಂದಾಗುವುದಾಗಿ ವೇದಿಕೆ ಎಚ್ಚರಿಸಿದೆ. ಈ ಸಂದರ್ಭದಲ್ಲಿ ವೇದಿಕೆಯ ಅಧ್ಯಕ್ಷ ಯು.ಆಂಜನೇಯಲು, ಕಾರ್ಯದರ್ಶಿಗಳಾದ ಯಮುನೇಶ್, ಉಮಾಮಹೇಶ್ವರ, ಎಸ್.ಎಂ.ಬಾಷಾ, ನಾಗಲಿಂಗಪ್ಪ, ಶಂಕ್ರಪ್ಪ, ಪಂಪಣ್ಣ, ರಾಮಲಿ, ನಜೀರ್ ಅಹ್ಮದ್, ಲಕ್ಷ್ಮಣ, ರಾಜಶೇಖರ್, ನೀಲಕಂಠಪ್ಪ, ಪ್ರಶಾಂತ್, ಎಸ್. ತಿಪ್ಪೇಸ್ವಾಮಿ, ಹಳ್ಳೂರ, ಸಂಘಟನಾ ಕಾರ್ಯದರ್ಶಿ ಎ.ಎಂ. ಬಸವರಾಜ್, ಕೆ.ಎಂ.ಕೊಟ್ರಯ್ಯ ಸೇರಿದಂತೆ ಹಲವರು ಉಪಸ್ಥಿತರಿದ್ದರು.
Kotturu | ಅದ್ದೂರಿಯಾಗಿ ಜರುಗಿದ ಮರಳುಸಿದ್ದೇಶ್ವರ ಮಹಾ ರಥೋತ್ಸವ
ಕೊಟ್ಟೂರು : ಭಾವೈಕ್ಯತೆ, ಸಹಿಷ್ಣುತೆ ಮತ್ತು ಸೌಹಾರ್ದವನ್ನು ಸಾರುವ ಉಜ್ಜಯನಿ ಸ್ವಾಮಿಯ ಮಹಾ ರಥೋತ್ಸವ ಎ. 21ರಂದು ಸಂಜೆ 5 ಗಂಟೆಯ ನಂತರ ಲಕ್ಷಾಂತರ ಭಕ್ತರ ಭಾಗವಹಿಸುವಿಕೆಯಲ್ಲಿ ವೈಭವದಿಂದ ನೆರವೇರಿತು. 50ಕ್ಕೂ ಹೆಚ್ಚು ಅಡಿ ಎತ್ತರದ ವರ್ಣರಂಜಿತ ಭವ್ಯ ರಥೋತ್ಸವಕ್ಕೆ ವಿವಿಧ ಕಲಾ ಮೇಳಗಳು ಮತ್ತಷ್ಟು ಕಳೆ ತಂದವು. ನಾಡಿನೆಲ್ಲೆಡೆಯಿಂದ ಭಕ್ತರು ಪಾದಯಾತ್ರೆ ಹಾಗೂ ವಾಹನಗಳ ಮೂಲಕ ಉಜ್ಜಯನಿ ಗ್ರಾಮಕ್ಕೆ ಆಗಮಿಸುತ್ತಿದ್ದಾರೆ. ರಥೋತ್ಸವದ ಎರಡನೇ ದಿನವಾದ ಎ.22ರಂದು ಶಿಖರ ತೈಲಾಭಿಷೇಕ ಕಾರ್ಯಕ್ರಮ ನಡೆಯಲಿದೆ. ಭಕ್ತರ ಸೌಕರ್ಯಕ್ಕಾಗಿ ಪೀಠದಿಂದ ಹೈಸ್ಕೂಲ್ ಮೈದಾನದಲ್ಲಿ 25ಕ್ಕೂ ಹೆಚ್ಚು ಪ್ರಸಾದ ಕೌಂಟರ್ಗಳನ್ನು ತೆರೆಯಲಾಗಿದ್ದು, ಸಾವಿರಾರು ಜನರಿಗೆ ನಿರಂತರ ಅನ್ನದಾನ ವ್ಯವಸ್ಥೆ ಕಲ್ಪಿಸಲಾಗಿದೆ. ಮಹಾರಥೋತ್ಸವದ ಹಿನ್ನೆಲೆ ಭಾರೀ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದ್ದು, ಇಬ್ಬರು ಡಿವೈಎಸ್ಪಿ, 10 ಸಿಪಿಐ, 20 ಪಿಎಸ್ಐ, 300ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ಹಾಗೂ 200ಕ್ಕೂ ಹೆಚ್ಚು ಹೋಂಗಾರ್ಡ್ಸ್ ನಿಯೋಜಿಸಲಾಗಿದೆ ಎಂದು ತಿಳಿದುಬಂದಿದೆ. ಉಜ್ಜಯನಿ ಸದ್ಧರ್ಮ ಪೀಠದ ಜಗದ್ಗುರು ಸಿದ್ದಲಿಂಗ ರಾಜದೇಶೀಕೇಂದ್ರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಜಾತ್ರೆಯು ಧಾರ್ಮಿಕ ಹಾಗೂ ಸಾಮಾಜಿಕ ಮೌಲ್ಯಗಳನ್ನು ಬಲಪಡಿಸುವ ಉದ್ದೇಶದಿಂದ ಆಯೋಜಿಸಲಾಗುತ್ತಿದ್ದು, ಲಕ್ಷಾಂತರ ಭಕ್ತರ ಆಗಮನಕ್ಕೆ ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ ಎಂದರು. ಪ್ರಸಾದ ಸೇವನೆ ಮಂಗಳವಾರ ಬೆಳಗ್ಗೆ 9 ಗಂಟೆಯಿಂದ ಆರಂಭಗೊಂಡಿದ್ದು, ಬೂಂದಿ ಲಾಡು, ರೊಟ್ಟಿ, ವಿವಿಧ ಪಲ್ಯಗಳು ಮತ್ತು ಚಟ್ನಿಗಳ ವ್ಯವಸ್ಥೆ ಮಾಡಲಾಗಿದೆ. ಹರಪನಹಳ್ಳಿ ಭಕ್ತರು 1 ಟನ್ ಬೂಂದಿ ಲಾಡುಗಳನ್ನು ಪೀಠಕ್ಕೆ ಸಮರ್ಪಿಸಿದ್ದು, 25 ಸಾವಿರಕ್ಕೂ ಹೆಚ್ಚು ರೊಟ್ಟೆಗಳನ್ನು ಗ್ರಾಮೀಣ ಮಹಿಳೆಯರು ಸಿದ್ಧಗೊಳಿಸಿ ಅರ್ಪಿಸಿದ್ದಾರೆ.
Devadurga | ದೇವರಗುಡ್ಡದಲ್ಲಿ ಸಿಡಿಲಿಗೆ ಹತ್ತಿ-ಹುಲ್ಲಿನ ಬಣವೆ ಬೆಂಕಿಗಾಹುತಿ
ದೇವದುರ್ಗ: ತಾಲ್ಲೂಕಿನ ದೇವರಗುಡ್ಡ ಗ್ರಾಮದಲ್ಲಿ ಮಂಗಳವಾರ ಸಂಜೆ ಗುಡುಗು-ಸಿಡಿಲಿನ ಅಬ್ಬರ ನಡುವೆ ಸಿಡಿಲು ಬಡಿದು ಹತ್ತಿ ಹಾಗೂ ಹುಲ್ಲಿನ ಬಣವೆ ಬೆಂಕಿಗಾಹುತಿಯಾದ ಘಟನೆ ನಡೆದಿದೆ. ಮುದುಕಪ್ಪ ಗೌಡ ಹಾಗೂ ಶಿವರಾಜಪ್ಪ ಗೌಡ ಅವರ ಮನೆಯ ಮುಂದೆ ಸಂಗ್ರಹಿಸಿದ್ದ ಹತ್ತಿ ಮತ್ತು ಹುಲ್ಲಿನ ಬಣವೆಗೆ ರಾತ್ರಿ ಸುಮಾರು 8 ಗಂಟೆಯ ವೇಳೆ ಸಿಡಿಲು ಬಡಿದು ಬೆಂಕಿ ಹೊತ್ತಿಕೊಂಡಿದ್ದು, ಉರಿಯುತ್ತಿರುವ ದೃಶ್ಯವನ್ನು ಗ್ರಾಮಸ್ಥರು ತಮ್ಮ ಮೊಬೈಲ್ಗಳಲ್ಲಿ ಸೆರೆ ಹಿಡಿದಿದ್ದಾರೆ. ಘಟನೆ ತಿಳಿದ ತಕ್ಷಣ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ನಂದಿಸಿ, ಸಂಭವಿಸಬಹುದಾದ ದೊಡ್ಡ ಅನಾಹುತವನ್ನು ತಪ್ಪಿಸಿದ್ದಾರೆ ಎಂದು ತಿಳಿದುಬಂದಿದೆ. ಸುಡುಬಿಸಿಲಿನಿಂದ ತತ್ತರಿಸಿದ್ದ ತಾಲ್ಲೂಕಿನ ಜನರು, ಆಕಸ್ಮಿಕವಾಗಿ ಸುರಿದ ಗುಡುಗು-ಮಳೆಯ ದೃಶ್ಯ ಕಂಡು ದಂಗಾಗಿದ್ದಾರೆ. ಮಳೆಯ ಪರಿಣಾಮವಾಗಿ ಬಿಸಿಲಿನ ತಾಪ ಕಡಿಮೆಯಾಗಿ ಜನರಿಗೆ ತುಸು ತಂಪಿನ ಅನುಭವ ದೊರೆತಿದೆ.
ಮುಸ್ಲಿಮರ ಕಡೆಗಣನೆ: ಕಾಂಗ್ರೆಸ್ ವಿರುದ್ಧ ಸುನ್ನಿ ಸಮನ್ವಯ ಸಮಿತಿ ಅಸಮಾಧಾನ
ಮಡಿಕೇರಿ : ಜಾತ್ಯತೀತ ನೆಲೆಗಟ್ಟಿನಲ್ಲಿ ಉತ್ತಮ ಸಮಾಜ ಸ್ಥಾಪಿಸಬೇಕೆನ್ನುವ ಉದ್ದೇಶದಿಂದ 2023ರ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದ ಮುಸ್ಲಿಮರು ಒಗ್ಗಟ್ಟಿನಿಂದ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿದ ಪರಿಣಾಮ ಅದು ಭರ್ಜರಿ ಬಹುಮತದಿಂದ ಅಧಿಕಾರಕ್ಕೆ ಬಂತು. ಆದರೆ, ಅಧಿಕಾರಕ್ಕೆ ಬಂದ ನಂತರ ಕಾಂಗ್ರೆಸ್ ಸರಕಾರ ಮುಸ್ಲಿಮರ ದಮನಕ್ಕೆ ಮುಂದಾಗಿದೆ ಎಂದು ಸುನ್ನಿ ಸಮನ್ವಯ ಸಮಿತಿಯ ಕೊಡಗು ಜಿಲ್ಲಾ ಘಟಕ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸುನ್ನಿ ಸಮನ್ವಯ ಸಮಿತಿಯ ಜಿಲ್ಲಾ ಮಾಧ್ಯಮ ಪ್ರತಿನಿಧಿ ಸಿ.ಎಂ.ಅಬ್ದುಲ್ ಹಮೀದ್ ಮೌಲವಿ, ಕಾಂಗ್ರೆಸ್ ಪಕ್ಷ ಇತ್ತೀಚಿನ ದಿನಗಳಲ್ಲಿ ಮುಸ್ಲಿಮರನ್ನು ಕಡೆಗಣಿಸುತ್ತಿದ್ದು, ಈ ಬೆಳವಣಿಗೆ ಅತ್ಯಂತ ನೋವನ್ನುಂಟು ಮಾಡಿದೆ ಎಂದರು. ಕಾಂಗ್ರೆಸ್ ಪಕ್ಷವು ಕರ್ನಾಟಕದ ಮುಸ್ಲಿಮ್ ಸಮುದಾಯ ಮತ್ತು ಅದರ ನಾಯಕರೊಂದಿಗೆ ನಡೆದುಕೊಳ್ಳುತ್ತಿರುವ ರೀತಿಯನ್ನು ಕೊಡಗು ಜಿಲ್ಲೆಯ ಪ್ರಮುಖ ಮುಸ್ಲಿಮ್ ಸಂಘಟನೆಗಳಾದ ಎಸ್ಕೆಎಸ್ಸೆಸ್ಸೆಫ್, ಎಸ್ಸೆಸ್ಸೆಫ್, ಮುಸ್ಲಿಮ್ ಸಂಘ ಸಂಸ್ಥೆಗಳು ಹಾಗೂ ಒಕ್ಕೂಟಗಳು ತೀವ್ರವಾಗಿ ಖಂಡಿಸುತ್ತವೆ ಎಂದು ತಿಳಿಸಿದರು. ಕೊಡಗಿನಲ್ಲೂ ಪ್ರಾತಿನಿಧ್ಯ ನೀಡಿ: ಕೊಡಗು ಜಿಲ್ಲೆಯ ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷ ಗೆಲುವು ಸಾಧಿಸಲು ಮುಸಲ್ಮಾನರು ನಿರ್ಣಾಯಕ ಪಾತ್ರ ವಹಿಸಿದ್ದಾರೆ. ಶೇ.95ರಷ್ಟು ಮುಸ್ಲಿಮ್ ಮತಗಳು ಕಾಂಗ್ರೆಸ್ ಪಾಲಾಗಿದೆ. ಜಿಲ್ಲೆಯ ಇಬ್ಬರು ಶಾಸಕರು ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ. ಆದರೆ, ಪಕ್ಷದ ಗೆಲುವಿಗಾಗಿ ಶ್ರಮಿಸಿದ ಮುಸ್ಲಿಮ್ ಮುಖಂಡರಿಗೆ ಯಾವುದೇ ಅಧಿಕಾರ ನೀಡದೆ ಕಡೆಗಣಿಸಲಾಗಿದೆ. ನಮ್ಮ ಬೇಡಿಕೆಗಳ ಬಗ್ಗೆ ಶಾಸಕರು ಹಾಗೂ ಮುಖ್ಯಮಂತ್ರಿ ಗಮನ ಸೆಳೆಯಲಾಗಿದೆ. ಮುಂದಿನ ದಿನಗಳಲ್ಲಿ ಮುಸ್ಲಿಮರಿಗೆ ಅಧಿಕಾರ ನೀಡುತ್ತಾರೆ ಎನ್ನುವ ವಿಶ್ವಾಸವಿದೆ ಎಂದು ಹಮೀದ್ ಮೌಲವಿ ಹೇಳಿದರು. ಸುನ್ನಿ ಸಮನ್ವಯ ಸಮಿತಿಯ ಜಿಲ್ಲಾ ಕಾರ್ಯದರ್ಶಿ ಎಂ.ವೈ.ಅಬ್ದುಲ್ ಹಫೀಳ್ ಸಅದಿ ಮಾತನಾಡಿ, ಕಾಂಗ್ರೆಸ್ ನಡೆಯನ್ನು ರಾಜ್ಯವ್ಯಾಪಿ ಉಲಮಾಗಳು ಒಗ್ಗಟ್ಟಿನಿಂದ ವಿರೋಧಿಸಿದ್ದಾರೆ. ನಮ್ಮ ಸಂಘಟನೆಗಳು ಯಾವುದೇ ರಾಜಕೀಯ ಪಕ್ಷಗಳ ಪರವಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ಮುಂದಿನ ದಿನಗಳಲ್ಲಿ ಕಾಂಗ್ರೆಸ್ ತನ್ನ ತಪ್ಪನ್ನು ತಿದ್ದಿಕೊಳ್ಳದಿದ್ದಲ್ಲಿ ಮುಸ್ಲಿಮರು ಪರ್ಯಾಯ ವ್ಯವಸ್ಥೆಯನ್ನು ಕಂಡುಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಸುದ್ದಿಗೋಷ್ಠಿಯಲ್ಲಿ ಸಮಿತಿಯ ಕಾರ್ಯದರ್ಶಿ ವೈ.ಎಂ.ಉಮ್ಮರ್ ಫೈಝಿ, ಸದಸ್ಯರಾದ ಎನ್.ಎನ್.ಇಕ್ಬಾಲ್ ಮೌಲವಿ, ಅಬ್ದುಲ್ ಹಮೀದ್ ಮದನಿ ಹಾಗೂ ಮಡಿಕೇರಿಯ ಮಕ್ಕಾ ಮಸೀದಿಯ ಮೌಲಾನಾ ಅಬ್ದುಲ್ ಹಕೀಂ ಉಪಸ್ಥಿತರಿದ್ದರು.
IPL 2026 | ಅಭಿಷೇಕ್ ಶರ್ಮಾ ಅಬ್ಬರದ ಬ್ಯಾಟಿಂಗ್ : ಡೆಲ್ಲಿ ವಿರುದ್ಧ ಹೈದರಾಬಾದ್ ಜಯಭೇರಿ
ಹೈದರಾಬಾದ್, ಎ.21: ಆರಂಭಿಕ ಬ್ಯಾಟರ್ ಅಭಿಷೇಕ್ ಶರ್ಮಾರ(ಔಟಾಗದೆ 135, 68 ಎಸೆತ, 10 ಬೌಂಡರಿ, 10 ಸಿಕ್ಸರ್)ಅಬ್ಬರದ ಬ್ಯಾಟಿಂಗ್ ಹಾಗೂ ಇಶಾನ್ ಮಾಲಿಂಗ(4-32) ನೇತೃತ್ವದಲ್ಲಿ ಶಿಸ್ತುಬದ್ಧ ಬೌಲಿಂಗ್ ದಾಳಿಯ ಬಲದಿಂದ ಆತಿಥೇಯ ಸನ್ರೈಸರ್ಸ್ ಹೈದರಾಬಾದ್ ತಂಡ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು 47 ರನ್ಗಳ ಅಂತರದಿಂದ ಮಣಿಸಿದೆ. ಈ ಗೆಲುವಿನ ಮೂಲಕ ಎಸ್ಆರ್ಎಚ್ ತಂಡ ಏಳನೇ ಪಂದ್ಯದಲ್ಲಿ ನಾಲ್ಕನೇ ಜಯದೊಂದಿಗೆ ಎಂಟು ಅಂಕದೊಂದಿಗೆ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ಭಡ್ತಿ ಪಡೆದಿದೆ. ರಾಜೀವ್ ಗಾಂಧಿ ಇಂಟರ್ನ್ಯಾಶನಲ್ ಸ್ಟೇಡಿಯಂನಲ್ಲಿ ಮಂಗಳವಾರ ನಡೆದ 31ನೇ ಐಪಿಎಲ್ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ಗೆ ಇಳಿಸಲ್ಪಟ್ಟ ಹೈದರಾಬಾದ್ ತಂಡವು ನಿಗದಿತ 20 ಓವರ್ಗಳಲ್ಲಿ 2 ವಿಕೆಟ್ಗಳ ನಷ್ಟಕ್ಕೆ 242 ರನ್ ಗಳಿಸಿದೆ. ಗೆಲ್ಲಲು ಕಠಿಣ ಗುರಿ ಪಡೆದ ಡೆಲ್ಲಿ ತಂಡವು ನಿತೀಶ್ ರಾಣಾ ಅವರ ಅರ್ಧಶತಕದ(57 ರನ್, 30 ಎಸೆತ, 7 ಬೌಂಡರಿ,3 ಸಿಕ್ಸರ್)ಕೊಡುಗೆಯ ಹೊರತಾಗಿಯೂ 20 ಓವರ್ಗಳಲ್ಲಿ 9 ವಿಕೆಟ್ಗಳ ನಷ್ಟಕ್ಕೆ 195 ರನ್ ಗಳಿಸಿ ಸೋಲೊಪ್ಪಿಕೊಂಡಿದೆ. ಡೆಲ್ಲಿ ಪರ ಸಮೀರ್ ರಿಝ್ವಿ(41, 28 ಎಸೆತ, 2 ಬೌಂಡರಿ, 2 ಸಿಕ್ಸರ್), ಕೆ.ಎಲ್.ರಾಹುಲ್(37 ರನ್, 23 ಎಸೆತ)ಹಾಗೂ ಟ್ರಿಸ್ಟನ್ ಸ್ಟಬ್ಸ್(27 ರನ್, 16 ಎಸೆತ)ಎರಡಂಕೆಯ ಸ್ಕೋರ್ ಗಳಿಸಿದರು. ಹೈದರಾಬಾದ್ ಪರ ಮಾಲಿಂಗ ಯಶಸ್ವಿ ಪ್ರದರ್ಸನ ನೀಡಿದರು. ಹರ್ಷ ದುಬೆ(3-12) ಮಾಲಿಂಗಗೆ ಉತ್ತಮ ಸಾಥ್ ನೀಡಿದರು. ಇದಕ್ಕೂ ಮೊದಲು ಟ್ರಾವಿಸ್ ಹೆಡ್(37 ರನ್, 26 ಎಸೆತ, 2 ಬೌಂಡರಿ, 2 ಸಿಕ್ಸರ್)ಅವರೊಂದಿಗೆ ಇನಿಂಗ್ಸ್ ಆರಂಭಿಸಿದ ಅಭಿಷೇಕ್ 53 ಎಸೆತಗಳಲ್ಲಿ 97 ರನ್ ಗಳಿಸಿ ಭದ್ರ ಬುನಾದಿ ಹಾಕಿಕೊಟ್ಟರು. ಹೆಡ್ ಔಟಾದ ನಂತರ ನಾಯಕ ಇಶಾನ್ ಕಿಶನ್(25 ರನ್, 13 ಎಸೆತ)ಅವರೊಂದಿಗೆ ಕೈಜೋಡಿಸಿದ ಅಭಿಷೇಕ್ ಎರಡನೇ ವಿಕೆಟ್ಗೆ ಕೇವಲ 35 ಎಸೆತಗಳಲ್ಲಿ ಇನ್ನೂ 79 ರನ್ ಜೊತೆಯಾಟದಲ್ಲಿ ಭಾಗಿಯಾದರು. ಕಿಶನ್ 15ನೇ ಓವರ್ನಲ್ಲಿ ರಾಣಾರಿಂದ ರನೌಟಾದರು. ನಿತೀಶ್ ರಾಣಾ ಅವರ 15ನೇ ಓವರ್ನಲ್ಲಿ ಸತತ ಎರಡು ಸಿಕ್ಸರ್ಗಳನ್ನು ಸಿಡಿಸಿದ ಅಭಿಷೇಕ್ 47 ಎಸೆತಗಳಲ್ಲಿ ಐಪಿಎಲ್ ಟೂರ್ನಿಯಲ್ಲಿ ತನ್ನ ಎರಡನೇ ಶತಕವನ್ನು ಪೂರೈಸಿದರು. ಅಭಿಷೇಕ್ ಟಿ-20 ಕ್ರಿಕೆಟ್ನಲ್ಲಿ 9ನೇ ಶತಕ ದಾಖಲಿಸಿದರು. ಇದರಲ್ಲಿ 8 ಶತಕಗಳನ್ನು 50 ಎಸೆತದೊಳಗೆ ಗಳಿಸಿದ್ದಾರೆ. 2021ರಲ್ಲಿ ತನ್ನ ಮೊದಲ ಶತಕ ಗಳಿಸಲು 50ಕ್ಕೂ ಅಧಿಕ ಎಸೆತ ಎದುರಿಸಿದ್ದರು. 184 ಇನಿಂಗ್ಸ್ಗಳಲ್ಲಿ 9ನೇ ಶತಕ ಗಳಿಸಿದ ಅಭಿಷೇಕ್ ಅವರು ವಿರಾಟ್ ಕೊಹ್ಲಿ (9 ಶತಕ, 403 ಇನಿಂಗ್ಸ್) ಸಾಧನೆ ಸರಿಗಟ್ಟಿದರು. ಕ್ರಿಸ್ ಗೇಲ್, ಬಾಬರ್ ಆಝಮ್ ಹಾಗೂ ಡೇವಿಡ್ ವಾರ್ನರ್ ಮಾತ್ರ ಅಭಿಷೇಕ್ಗಿಂತ ಹೆಚ್ಚು ಶತಕಗಳನ್ನು ಗಳಿಸಿದ್ದಾರೆ. ಅಭಿಷೇಕ್ ಹಾಗೂ ಹೆನ್ರಿಕ್ ಕ್ಲಾಸೆನ್(ಔಟಾಗದೆ 37, 13 ಎಸೆತ, 3 ಬೌಂಡರಿ, 3 ಸಿಕ್ಸರ್)ಮೂರನೇ ವಿಕೆಟ್ಗೆ ಮುರಿಯದ ಜೊತೆಯಾಟದಲ್ಲಿ 66 ರನ್ ಸೇರಿಸಿ ತಂಡದ ಮೊತ್ತವನ್ನು 242 ರನ್ಗಳಿಗೆ ತಲುಪಿಸಿದರು. ಅಭಿಷೇಕ್ ಹಾಗೂ ಕ್ಲಾಸೆನ್ ಅವರು ಮುಕೇಶ್ ಕುಮಾರ್ ಅವರ ಕೊನೆಯ ಓವರ್ನಲ್ಲಿ 20 ರನ್ ಸೇರಿಸಿದರು. ಬ್ಯಾಟಿಂಗ್ ಸ್ನೇಹಿ ಪಿಚ್ನಲ್ಲಿ ಬೌಲಿಂಗ್ ಆಯ್ದುಕೊಂಡಿರುವ ಡೆಲ್ಲಿ ಪರ ನಾಯಕ ಅಕ್ಷರ್ ಪಟೇಲ್(1-23)ಮಾತ್ರ ವಿಕೆಟ್ ಪಡೆದರು. ನಿತೀಶ್ ರಾಣಾ 4 ಓವರ್ಗಳಲ್ಲಿ 55 ರನ್ ನೀಡಿ ದುಬಾರಿ ಬೌಲರ್ ಎನಿಸಿಕೊಂಡರು.
ದಿಲ್ಲಿ| ಗ್ರೆನೇಡ್ ದಾಳಿ, ಹತ್ಯೆಗೆ ಸಂಚು: ಇಬ್ಬರು ಆರೋಪಿಗಳ ಬಂಧನ
ಹೊಸದಿಲ್ಲಿ, ಎ. 21: ಪಾಕಿಸ್ತಾನದ ಮೂಲದ ಭೂಗತ ಪಾತಕಿ ಹಾಗೂ ಐಎಸ್ಐ ಪರ ಕೆಲಸ ಮಾಡುತ್ತಿರುವ ಶಹಝಾದ್ ಭಟ್ಟಿ ಆಣತಿಯಂತೆ ಕಾರ್ಯ ನಿರ್ವಹಿಸುತ್ತಿದ್ದ ಇಬ್ಬರನ್ನು ದಿಲ್ಲಿ ಪೊಲೀಸ್ನ ವಿಶೇಷ ಘಟಕ ಬಂಧಿಸಿದೆ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ. ಇದರೊಂದಿಗೆ ದಿಲ್ಲಿ-ಎನ್ಸಿಆರ್ ವಲಯದಲ್ಲಿ ಗುಂಡಿನ ದಾಳಿ, ಗ್ರೆನೇಡ್ ದಾಳಿ ಮತ್ತು ನಿರ್ದಿಷ್ಟ ವ್ಯಕ್ತಿಗಳನ್ನು ಗುರಿಯಾಗಿರಿಸಿ ಹತ್ಯೆಗೈಯುವ ಕ್ರಿಮಿನಲ್ ಪಿತೂರಿಯನ್ನು ಪೊಲೀಸರು ಬಯಲಿಗೆಳೆದಿದ್ದಾರೆ. ಬಂಧಿತ ಆರೋಪಿಗಳನ್ನು ರಾಜ್ವೀರ್ (21) ಹಾಗೂ ವಿವೇಕ್ ಬಂಜಾರ (19) ಎಂದು ಗುರುತಿಸಲಾಗಿದೆ. ಇಬ್ಬರೂ ಮಧ್ಯಪ್ರದೇಶದ ಗ್ವಾಲಿಯರ್ನ ನಿವಾಸಿಗಳು. ‘‘ಇವರ ಬಂಧನ ದಿಲ್ಲಿ ಹಾಗೂ ಸಮೀಪದ ಪ್ರದೇಶಗಳಲ್ಲಿ ದಾಳಿಯ ಯೋಜನೆಯನ್ನು ವಿಫಲಗೊಳಿಸಿದೆ. ಈ ಬಂಧನಗಳಿಂದ ಭಟ್ಟಿ ರೂಪಿಸಿದ್ದ ಅತಿ ದೊಡ್ಡ ಸಂಚು ಬಹಿರಂಗಗೊಂಡಿದೆ. ಭಟ್ಟಿ ಐಎಸ್ಐಗೆ ಸಂಪರ್ಕ ಹೊಂದಿರುವವರೊಂದಿಗೆ ಸೇರಿ ಸಾಮಾಜಿಕ ಜಾಲತಾಣಗಳ ಮೂಲಕ ಯುವಕರನ್ನು ನೇಮಕ ಮಾಡಿಕೊಳ್ಳುತ್ತಿದ್ದ. ಅವರನ್ನು ದಿಲ್ಲಿ-ಎನ್ಸಿಆರ್ನಲ್ಲಿ ಹಿಂಸಾಚಾರದ ಕೃತ್ಯಗಳಿಗೆ ಬಳಸಿಕೊಳ್ಳುತ್ತಿದ್ದ’’ ಎಂದು ಪೊಲೀಸ್ ಉಪ ಆಯುಕ್ತ (ವಿಶೇಷ ಘಟಕ) ಪ್ರವೀಣ್ ಕುಮಾರ್ ತ್ರಿಪಾಠಿ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಈ ಪ್ರದೇಶದಲ್ಲಿ ಗ್ರೆನೇಡ್ ದಾಳಿ ಮತ್ತು ಹತ್ಯೆಗಳನ್ನು ನಡೆಸುವ ಬಗ್ಗೆ ಮಾಹಿತಿ ಬಂದ ನಂತರ ಮಾರ್ಚ್ 31ರಂದು ಪ್ರಕರಣ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ತ್ರಿಶೂರ್| ಪಟಾಕಿ ತಯಾರಿಕಾ ಘಟಕದಲ್ಲಿ ಭೀಕರ ಸ್ಫೋಟ: ಮೃತರ ಸಂಖ್ಯೆ 13ಕ್ಕೆ ಏರಿಕೆ, ಐವರಿಗೆ ಗಂಭೀರ ಗಾಯ
ತ್ರಿಶೂರ್, ಎ.21: ಕೇರಳದ ತ್ರಿಶೂರ್ ಜಿಲ್ಲೆಯ ಮುಂಡತಿಕೋಡ್ನಲ್ಲಿ ಪಟಾಕಿ ತಯಾರಿಕಾ ಕಟ್ಟಡವೊಂದರಲ್ಲಿ ಮಂಗಳವಾರ ಸಂಭವಿಸಿದ ಸ್ಫೋಟದಲ್ಲಿ 13 ಮಂದಿ ಮೃತಪಟ್ಟಿದ್ದಾರೆ ಹಾಗೂ ಐವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಸ್ಫೋಟದ ಸಂದರ್ಭದಲ್ಲಿ ಕಾರ್ಖಾನೆಯಲ್ಲಿ ಸುಮಾರು 70 ಮಂದಿ ಇದ್ದರೆಂದು ಹೇಳಲಾಗಿದೆ. ಅವರೆಲ್ಲರಿಗೂ ಸುಟ್ಟ ಗಾಯಗಳಾಗಿದ್ದು, ಹಲವರ ಪರಿಸ್ಥಿತಿ ಗಂಭೀರವಾಗಿದೆ. ತಿರುವಂಬಾಡಿ ದೇವಸ್ಥಾನದಲ್ಲಿ ಕೆಲವೇ ದಿನಗಳಲ್ಲಿ ನಡೆಯಬೇಕಾಗಿದ್ದ ಉತ್ಸವಕ್ಕಾಗಿ ಪಟಾಕಿಗಳನ್ನು ತಯಾರಿಸುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ. ದೇವಸ್ಥಾನದಲ್ಲಿ ‘ತ್ರಿಶೂರ್ ಪೂರಂ’ ಎಂಬ ಹೆಸರಿನ ಜಾತ್ರೆ ಎಪ್ರಿಲ್ 26ರಂದು ನಡೆಯಲಿದೆ. ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗಳಿಗೆ ಸೇರಿಸಲಾಗಿದೆ. ಸ್ಫೋಟವು ಅಪರಾಹ್ನ ಸುಮಾರು 3:30ಕ್ಕೆ ಸಂಭವಿಸಿತು ಹಾಗೂ ದಟ್ಟ ಹೊಗೆ ಆ ಪ್ರದೇಶವನ್ನು ಆವರಿಸಿತು. ಅಲ್ಲಿ ಬಳಿಕ ಹಲವು ಸಣ್ಣ ಸ್ಫೋಟಗಳ ಸದ್ದು ಕೇಳಿತು. ಇದರಿಂದ ರಕ್ಷಣಾ ಕಾರ್ಯಾಚರಣೆಗೆ ಅಡಚಣೆಯಾಯಿತು. ಮೃತಪಟ್ಟವರ ಸಮೀಪದ ಬಂಧುಗಳಿಗೆ ತಲಾ 2 ಲಕ್ಷ ರೂ. ಪರಿಹಾರವನ್ನು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದಾರೆ. ಗಾಯಾಳುಗಳು ತಲಾ 50,000 ರೂ. ಪರಿಹಾರ ಸ್ವೀಕರಿಸಲಿದ್ದಾರೆ. ಗಾಯಗೊಂಡವರಿಗೆ ಎಲ್ಲಾ ಅಗತ್ಯ ವೈದ್ಯಕೀಯ ನೆರವನ್ನು ಒದಗಿಸುವಂತೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಗಂಭೀರ ಸುಟ್ಟ ಗಾಯಗಳಿಗೊಳಗಾದವರ ಚಿಕಿತ್ಸೆಗೆ ಅಗತ್ಯವಿದ್ದರೆ ರಾಜ್ಯದ ಹೊರಗಿನ ಪರಿಣತ ವೈದ್ಯರ ಸೇವೆಗಳನ್ನು ಬಳಸಿಕೊಳ್ಳಬೇಕು ಎಂಬ ಸೂಚನೆಯನ್ನು ಅವರು ರಾಜ್ಯದ ಮುಖ್ಯ ಕಾರ್ಯದರ್ಶಿಗೆ ನೀಡಿದ್ದಾರೆ. ಮೃತರ ಕುಟುಂಬಗಳಿಗೆ ಸಂತಾಪವನ್ನು ವ್ಯಕ್ತಪಡಿಸಿದ್ದಾರೆ. ಭತ್ತದ ಗದ್ದೆಗಳಲ್ಲಿ ಪಟಾಕಿ ತಯಾರಿಕೆ: ಭತ್ತದ ಗದ್ದೆಗಳ ನಡುವಿನ ಸ್ಥಳವೊಂದರಲ್ಲಿ ನಿರ್ಮಿಸಲಾಗಿರುವ ಹಲವು ತಾತ್ಕಾಲಿಕ ಶೆಡ್ಗಳಲ್ಲಿ ದೇವಸ್ಥಾನಕ್ಕಾಗಿ ಪಟಾಕಿಗಳನ್ನು ತಯಾರಿಸಲಾಗುತ್ತಿತ್ತು. ಸ್ಫೋಟ ಸಂಭವಿಸಿದ ಕಟ್ಟಡದಲ್ಲಿ ಸುಮಾರು 2,000 ಕೆಜಿ ಸ್ಫೋಟಕ ವಸ್ತುಗಳನ್ನು ದಾಸ್ತಾನಿಡಲಾಗಿತ್ತು ಎನ್ನಲಾಗಿದೆ. ಬೃಹತ್ ಸ್ಫೋಟದ ಬಳಿಕ, ಸಣ್ಣ ಸ್ಫೋಟಗಳು ಆಗಾಗ ನಡೆದಿವೆ ಹಾಗೂ ಇದರಿಂದಾಗಿ ಗಾಯಾಳುಗಳನ್ನು ರಕ್ಷಿಸುವ ಕಾರ್ಯಾಚರಣೆಗೆ ಅಡ್ಡಿಯಾಯಿತು ಎಂದು ವಡಕಂಚೇರಿ ಮುನ್ಸಿಪಾಲಿಟಿ ಅಧ್ಯಕ್ಷ ಪಿ.ಎನ್. ಸುರೇಂದ್ರನ್ ತಿಳಿಸಿದರು. ‘‘ಶೆಡ್ನಲ್ಲಿ ಎಷ್ಟು ಮಂದಿ ಇದ್ದರು ಮತ್ತು ಎಷ್ಟು ಮಂದಿ ಗಾಯಗೊಂಡಿದ್ದಾರೆ ಎನ್ನುವ ಬಗ್ಗೆ ಇನ್ನೂ ಸ್ಪಷ್ಟತೆ ಇಲ್ಲ. ತೀವ್ರ ಬಿಸಿಲು ಈ ಘಟನೆಗೆ ಒಂದು ಕಾರಣ ಆಗಿರಬಹುದು ಎಂದು ಭಾವಿಸಲಾಗಿದೆ’’ ಎಂದು ಅವರು ಹೇಳಿದರು. ಸ್ಫೋಟದ ಸದ್ದು ಹಲವು ಕಿಲೋಮೀಟರ್ ದೂರದಲ್ಲೂ ಕೇಳಿಸಿದೆ ಎಂದು ಹೇಳಿದ ಅವರು, ಸಮೀಪದ ಹಲವು ಮನೆಗಳಿಗೆ ಹಾನಿಯಾಗಿದೆ ಎಂದರು.
ಪಹಲ್ಗಾಮ್ ಭಯೋತ್ಪಾದಕ ದಾಳಿ: ವರ್ಷ ಕಳೆದರೂ ಮಾಸದ ನೋವು
ಹೊಸದಿಲ್ಲಿ,ಎ.21: 2025ರ ಎಪ್ರಿಲ್ 22ರಂದು ದಕ್ಷಿಣ ಕಾಶ್ಮೀರದ ಪಹಲ್ಗಾಮ್ನ ಬೈಸರನ್ ಹುಲ್ಲುಗಾವಲಿನಲ್ಲಿ ನಡೆದಿದ್ದ ಭಯೋತ್ಪಾದಕರ ಗುಂಡಿನ ದಾಳಿಯಲ್ಲಿ 25 ಪ್ರವಾಸಿಗರು ಮತ್ತು ಓರ್ವ ಸ್ಥಳೀಯ ಕುದುರೆ ಸವಾರ ಸೇರಿದಂತೆ 26 ಜನರು ಮೃತಪಟ್ಟಿದ್ದರು. ಬುಧವಾರ ಈ ದುರಂತಕ್ಕೆ ಒಂದು ವರ್ಷ ತುಂಬುತ್ತಿದ್ದು, ಸಂತ್ರಸ್ತ ಕುಟುಂಬಗಳು ಇಂದಿಗೂ ಆಘಾತ ಮತ್ತು ಆರ್ಥಿಕ ಸಂಕಷ್ಟದೊಂದಿಗೆ ಬದುಕು ಸಾಗಿಸುತ್ತಿವೆ. ಭಾರತೀಯ ವಾಯುಪಡೆಯಲ್ಲಿ (ಐಎಎಫ್) ಕಾರ್ಪೊರಲ್ ಆಗಿದ್ದ ತಾಗೆ ಹೈಲ್ಯಾಂಗ್ ಅವರ ಕುಟುಂಬವು ಬುಧವಾರ ಅವರ ಸ್ಮಾರಕದ ಉದ್ಘಾಟನೆಗೆ ಸಜ್ಜಾಗುತ್ತಿದೆ. 30ರ ಹರೆಯದ ಹೈಲ್ಯಾಂಗ್ ಭಯೋತ್ಪಾದಕ ದಾಳಿಯಲ್ಲಿ ಮೃತಪಟ್ಟವರಲ್ಲಿ ಓರ್ವರಾಗಿದ್ದಾರೆ. ಅವರ ನೆನಪಿನಲ್ಲಿ ಕುಟುಂಬವು ಅರುಣಾಚಲ ಪ್ರದೇಶದ ಲೋವರ್ ಸುಬನ್ಸಿರಿ ಜಿಲ್ಲೆಯ ತಮ್ಮ ಗ್ರಾಮ ತಜಂಗ್ನಲ್ಲಿ ಕಂಚಿನ ಪುತ್ಥಳಿಯನ್ನೊಳಗೊಂಡ ಸ್ಮಾರಕವನ್ನು ನಿರ್ಮಿಸಿದೆ. 2017ರಲ್ಲಿ ಐಎಎಫ್ ಸೇರಿದ್ದ ಹೈಲ್ಯಾಂಗ್ ಶ್ರೀನಗರ ವಾಯುನೆಲೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ದಾಳಿಗೆ ಕೇವಲ ನಾಲ್ಕು ತಿಂಗಳು ಮೊದಲು ಮದುವೆಯಾಗಿದ್ದ ಅವರು ಅಸ್ಸಾಮಿನ ದಿಬ್ರುಗಡದಲ್ಲಿ ಹೊಸ ಹುದ್ದೆಯನ್ನು ವಹಿಸಿಕೊಳ್ಳುವ ಮುನ್ನ ರಜೆಯಲ್ಲಿ ಪತ್ನಿಯೊಂದಿಗೆ ಪಹಲ್ಗಾಮ್ನಲ್ಲಿದ್ದರು. ‘ತನ್ನ ಪ್ರೀತಿಪಾತ್ರನನ್ನು ಕಳೆದುಕೊಂಡಿರುವ ಕುಟುಂಬದ ನೋವು ಇನ್ನೂ ಮಾಸಿಲ್ಲ. ನಮ್ಮ ತಾಯಿ ಇನ್ನೂ ಆಘಾತದಿಂದ ಚೇತರಿಸಿಕೊಂಡಿಲ್ಲ. ಅವರ ಮನಸ್ಸಿಗೆ ಆಗಿರುವ ಗಾಯಗಳು ಈಗಲೂ ಹಸಿಯಾಗಿವೆ ’ಎಂದು ಹೈಲ್ಯಾಂಗ್ ಸೋದರ ತಾಗೆ ತಾಕಾ ಸುದ್ದಿಸಂಸ್ಥೆಗೆ ತಿಳಿಸಿದರು. ಅತ್ತ ಪುಣೆಯ ಜಗದಾಳೆ ಕುಟುಂಬದ್ದೂ ಇದೇ ಸ್ಥಿತಿ. ವ್ಯಾಪಾರಿ ವೃತ್ತಿಯ ಸಂತೋಷ ಜಗದಾಳೆ (50) ತನ್ನ ಪತ್ನಿ ಮತ್ತು ಪುತ್ರಿಯೊಂದಿಗೆ ಪಹಲ್ಗಾಮ್ಗೆ ತೆರಳಿದ್ದಾಗ ಭಯೋತ್ಪಾದಕರ ಗುಂಡಿಗೆ ಬಲಿಯಾಗಿದ್ದರು. ಖಾಸಗಿ ಕಂಪೆನಿಯಲ್ಲಿ ಎಚ್ಆರ್ ವಿಭಾಗದಲ್ಲಿ ಕೆಲಸದಲ್ಲಿದ್ದ ಪುತ್ರಿ ಅಸಾವರಿ(27) ಆಘಾತಕ್ಕೊಳಗಾಗಿದ್ದ ತಾಯಿಯನ್ನು ನೋಡಿಕೊಳ್ಳಲು ಉದ್ಯೋಗವನ್ನೂ ತೊರೆದಿದ್ದರು. ‘ನಾವು ನಿದ್ರೆಯಿಲ್ಲದ ರಾತ್ರಿಗಳನ್ನು ಕಳೆದಿದ್ದೇವೆ. ನಮ್ಮ ಕಣ್ಣೆದುರೇ ನಡೆದಿದ್ದ ಆ ಘಟನೆ ನಮ್ಮ ಮನಸ್ಸಿನಲ್ಲಿ ಈಗಲೂ ಅಚ್ಚಳಿಯದೆ ಉಳಿದುಕೊಂಡಿದೆ. ಇದು ನಮ್ಮ ಬದುಕಿನ ಅತ್ಯಂತ ಕಠಿಣ ವರ್ಷವಾಗಿತ್ತು’ ಎಂದು ಅಸಾವರಿ ತಿಳಿಸಿದರು. ಅಸಾವರಿಗೆ ಸರಕಾರಿ ಕೆಲಸದ ಭರವಸೆ ಸಿಕ್ಕಿತ್ತಾದರೂ ಅದನ್ನು ಪಡೆಯಲು ಅವರು ಸಾಕಷ್ಟು ಹೋರಾಟವನ್ನು ಮಾಡಬೇಕಾಯಿತು. ಪ್ರಸ್ತುತ ಅವರು ಪುಣೆ ಮಹಾನಗರ ಪಾಲಿಕೆಯಲ್ಲಿ ಆಡಳಿತಾಧಿಕಾರಿಯಾಗಿ ನೇಮಕಗೊಂಡಿದ್ದು, ತರಬೇತಿ ಪಡೆಯುತ್ತಿದ್ದಾರೆ. ಕಾಶ್ಮೀರದಲ್ಲಿ ಬಿಗಿಭದ್ರತೆ ಪಹಲ್ಗಾಮ್ ದಾಳಿಗೆ ಒಂದು ವರ್ಷ ತುಂಬುತ್ತಿರುವ ಹಿನ್ನೆಲೆಯಲ್ಲಿ ಕಾಶ್ಮೀರದ ಪ್ರವಾಸಿ ತಾಣಗಳಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ. ಲಷ್ಕರೆ ತೈಬಾದ ಭಯೋತ್ಪಾದಕರ ದಾಳಿಯ ಬಳಿಕ ಎಲ್ಲಾ ಪ್ರವಾಸಿ ತಾಣಗಳಲ್ಲಿ ಬಿಗಿ ಪೋಲಿಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಹೊಸ ಸುರಕ್ಷತಾ ಕ್ರಮಗಳನ್ನೂ ಕೈಗೊಳ್ಳಲಾಗಿದೆ. ಪ್ರವಾಸಿಗರಿಗೆ ಸೇವೆ ಒದಗಿಸುವ ಕುದುರೆ ಸವಾರರು ಮತ್ತು ವ್ಯಾಪಾರಿಗಳಿಗಾಗಿ ಕ್ಯೂಆರ್ ಕೋಡ್ ಆಧಾರಿತ ಗುರುತು ಚೀಟಿ ವ್ಯವಸ್ಥೆಯನ್ನು ಜಾರಿಗೊಳಿಸಲಾಗಿದೆ. ಕ್ಯೂಆರ್ ಕೋಡ್ಗಳು ಅವರ ಹೆಸರು, ವಿಳಾಸ, ಮೊಬೈಲ್ ಸಂಖ್ಯೆ, ಆಧಾರ್ ಮಾಹಿತಿ, ನೋಂದಣಿ ವಿವರಗಳು ಮತ್ತು ಪೋಲಿಸ್ ಪರಿಶೀಲನೆ ಸ್ಥಿತಿಗತಿಯಂತಹ ವಿವರಗಳನ್ನು ಒಳಗೊಂಡಿರುತ್ತವೆ. ಇವುಗಳನ್ನು ಪ್ರವಾಸಿಗರು ತಮ್ಮ ಮೊಬೈಲ್ ಫೋನ್ಗಳಲ್ಲಿ ಪರಿಶೀಲಿಸಬಹುದು.
ಗಾಂಧಿನಗರ: ‘ಲವ್ ಜಿಹಾದ್’ ಪ್ರಕರಣದಲ್ಲಿ ಸಿಲುಕಿಸುವುದಾಗಿ ಬೆದರಿಕೆ ಹಾಕಿ ಹಣ ಸುಲಿಗೆ ಮಾಡಿದ ಆರೋಪದ ಮೇಲೆ ಗುಜರಾತ್ ಭ್ರಷ್ಟಾಚಾರ ನಿಗ್ರಹ ದಳ (ACB) ಒಬ್ಬ ಪೊಲೀಸ್ ಇನ್ಸ್ಪೆಕ್ಟರ್ ವಿರುದ್ಧ ಪ್ರಕರಣ ದಾಖಲಿಸಿದೆ. ಲಂಚದ ಹಣ ಸ್ವೀಕರಿಸುತ್ತಿದ್ದ ವೇಳೆ ಅವರ ಸಹಾಯಕ, ಮಧ್ಯವರ್ತಿಯನ್ನು ಬಂಧಿಸಲಾಗಿದೆ. ವಡೋದರಾ ಗ್ರಾಮೀಣದ ಪದ್ರಾ ಪೊಲೀಸ್ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಇನ್ಸ್ಪೆಕ್ಟರ್ ವಿ.ಎ. ಚರಣ್ ಹಾಗೂ ಸಹಾಯಕ ಸಾಜಿದ್ ಅಲಿ ಗುಲಾಮ್ರಸುಲ್ ಸೈಯ್ಯದ್ ಆರೋಪಿಗಳಾಗಿದ್ದಾರೆ ಎಂದು ACB ಮೂಲಗಳು ತಿಳಿಸಿವೆ. ಲಿವ್-ಇನ್ ಸಂಬಂಧದಲ್ಲಿದ್ದ ದಂಪತಿಯ ನಡುವೆ ಉಂಟಾದ ಕಲಹದ ಬಳಿಕ ಪ್ರಕರಣ ಆರಂಭವಾಗಿದೆ. ಮಹಿಳೆ 112 ಸಹಾಯವಾಣಿಗೆ ಕರೆ ಮಾಡಿದ ಹಿನ್ನೆಲೆಯಲ್ಲಿ ಇಬ್ಬರನ್ನೂ ಠಾಣೆಗೆ ಕರೆತರಲಾಗಿತ್ತು. ಮಹಿಳೆಯ ದೂರಿನ ಮೇರೆಗೆ ವ್ಯಕ್ತಿಯನ್ನು ಮುನ್ನೆಚ್ಚರಿಕಾ ಕ್ರಮವಾಗಿ 24 ಗಂಟೆಗಳ ಕಾಲ ವಶದಲ್ಲಿರಿಸಲಾಗಿತ್ತು. ನಂತರ ದಂಪತಿ ರಾಜಿ ಮಾಡಿಕೊಂಡಿದ್ದು, ವ್ಯಕ್ತಿಯನ್ನು ಬಿಡುಗಡೆ ಮಾಡಲು ಮಹಿಳೆ ಪೊಲೀಸರಿಗೆ ತಿಳಿಸಿದ್ದರು. ಈ ವೇಳೆ ಇನ್ಸ್ಪೆಕ್ಟರ್ ಚರಣ್, ‘ಲವ್ ಜಿಹಾದ್’ ಪ್ರಕರಣ ದಾಖಲಿಸುವುದಾಗಿ ಬೆದರಿಸಿ 6 ಲಕ್ಷ ರೂ. ನೀಡುವಂತೆ ಬೇಡಿಕೆ ಇಟ್ಟಿದ್ದರು ಎಂದು ACB ಹೇಳಿದೆ. ಹಣ ಒದಗಿಸಲು ಸಾಧ್ಯವಿಲ್ಲವೆಂದು ವ್ಯಕ್ತಿ ತಿಳಿಸಿದ ನಂತರ, ಮಧ್ಯವರ್ತಿಯಾಗಿ ಸಾಜಿದ್ ಅಲಿ ಸೈಯ್ಯದ್ ಮೂಲಕ ಮಾತುಕತೆ ನಡೆಸಿ ಬೇಡಿಕೆಯನ್ನು 2 ಲಕ್ಷ ರೂ ಇಳಿಸಲಾಗಿದೆ. ಎಪ್ರಿಲ್ 12ರಿಂದ 15ರವರೆಗೆ ಆರೋಪಿಗಳು ಹಣ ನೀಡುವಂತೆ ನಿರಂತರ ಒತ್ತಡ ಹಾಕಿದ್ದರು ಎಂದು ತಿಳಿದುಬಂದಿದೆ. ಬಂಧನದಿಂದ ಬಿಡುಗಡೆಯಾದ ಬಳಿಕ ವ್ಯಕ್ತಿ ತನ್ನ ಸಂಗಾತಿಯೊಂದಿಗೆ ಮನೆಗೆ ಮರಳಿದ್ದು, ಹಣ ಒದಗಿಸಲು ಚಿನ್ನಾಭರಣಗಳನ್ನು ಅಡಮಾನ ಇಡುವ ಯೋಚನೆ ಮಾಡಿಕೊಂಡಿದ್ದರು. ನಂತರ ACBಯನ್ನು ಸಂಪರ್ಕಿಸಿದ್ದರು ಎನ್ನಲಾಗಿದೆ. ಬಿಡುಗಡೆಯಾದ ವ್ಯಕ್ತಿ ನೀಡಿದ ದೂರು ಆಧರಿಸಿ ಎಪ್ರಿಲ್ 16ರಂದು ವಡೋದರಾದ ಅಕ್ಷರ್ ಚೌಕ್ ನಲ್ಲಿ ACB ಕಾರ್ಯಾಚರಣೆ ನಡೆಸಿದೆ. ಈ ವೇಳೆ 2 ಲಕ್ಷ ರೂ. ಲಂಚದ ಹಣ ಸ್ವೀಕರಿಸುತ್ತಿದ್ದ ವೇಳೆ ಸೈಯ್ಯದ್ ಅವರನ್ನು ರೆಡ್ ಹ್ಯಾಂಡ್ ಆಗಿ ಬಂಧಿಸಿದೆ. ಬಂಧಿಸಲಾದ ಅಧಿಕಾರಿಯ ಮೊಬೈಲ್ ಫೋನ್ ವಶಪಡಿಸಿಕೊಂಡಿದ್ದು, ಅದರಲ್ಲಿ ಇನ್ಸ್ಪೆಕ್ಟರ್ ಚರಣ್ ಜೊತೆಗಿನ ಸಂಭಾಷಣೆಯ ಧ್ವನಿಮುದ್ರಣಗಳು ಲಭ್ಯವಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪ್ರಾಥಮಿಕ ತನಿಖೆಯ ಆಧಾರದ ಮೇಲೆ ಇಬ್ಬರ ವಿರುದ್ಧ ಪ್ರಕರಣ ದಾಖಲಾಗಿದ್ದು, ಸೈಯ್ಯದ್ ಬಂಧನಕ್ಕೊಳಗಾಗಿದ್ದಾರೆ. ಇನ್ಸ್ಪೆಕ್ಟರ್ ಚರಣ್ ಪರಾರಿಯಾಗಿದ್ದು, ಪತ್ತೆಗೆ ಶೋಧ ಕಾರ್ಯಾಚರಣೆ ಮುಂದುವರೆದಿದೆ.
ಮಂಗಳೂರಿನಲ್ಲಿ ಹೈಕೋರ್ಟ್ ಪೀಠ ಸ್ಥಾಪಿಸಲು ಹೈಕೋರ್ಟ್ ಮುಖ್ಯ ನ್ಯಾಯಾಧೀಶರಿಗೆ ಸ್ಪೀಕರ್ ಯು.ಟಿ.ಖಾದರ್ ಪತ್ರ
ಮಂಗಳೂರು: ಮಂಗಳೂರಿನಲ್ಲಿ ಹೈಕೋರ್ಟ್ ಪೀಠ ಸ್ಥಾಪಿಸಬೇಕು ಎಂದು ರಾಜ್ಯ ಹೈಕೋರ್ಟ್ ಮುಖ್ಯ ನ್ಯಾಯಾಧೀಶರಿಗೆ ಸ್ಪೀಕರ್ ಯು.ಟಿ. ಖಾದರ್ ಪತ್ರಬರೆದಿದ್ದಾರೆ. ಮಂಗಳೂರಿನಲ್ಲಿ ಹೈಕೋರ್ಟ್ ಪೀಠ ಸ್ಥಾಪಿಸಬೇಕು ಎಂಬುದು ಹಲವು ವರ್ಷಗಳ ಬೇಡಿಕೆಯಾಗಿದೆ. ಮಂಗಳೂರು ವಕೀಲರ ಸಂಘ, ಜನಪ್ರತಿನಿಧಿಗಳು ಈ ನಿಟ್ಟಿನಲ್ಲಿ ಹಲವು ಬಾರಿ ಮನವಿ ಸಲ್ಲಿಸಿದ್ದಾರೆ. ರಾಜ್ಯ ಹೈಕೋರ್ಟ್ನ ಪೀಠವನ್ನು ಮಂಗಳೂರಿನಲ್ಲಿ ಸ್ಥಾಪಿಸಿದರೆ ದ.ಕ., ಉಡುಪಿ, ಚಿಕ್ಕಮಗಳೂರು, ಶಿವಮೊಗ್ಗ, ಕೊಡಗು ಜಿಲ್ಲೆಯ ಜನರಿಗೆ ಅನುಕೂಲವಾಗಲಿದೆ. ಈ ಜಿಲ್ಲೆಗಳಲ್ಲಿ ಹೆಚ್ಚಿನ ಸಂಖ್ಯೆಯಿದ್ದು, ವೈದ್ಯಕೀಯ, ಆರೋಗ್ಯ, ಶಿಕ್ಷಣ, ಬ್ಯಾಂಕಿಂಗ್, ಕೈಗಾರಿಕಾ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿದೆ. ನಾನಾ ಪ್ರಕರಣಗಳಿಗೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿರುವ ಹೈಕೋರ್ಟ್ಗೆ ಹೋಗಿ ಬರುತ್ತಿದ್ದಾರೆ. ಇದರಿಂದ ಆರ್ಥಿಕ ಹೊರೆ ಮಾತ್ರವಲ್ಲದೆ ಜನಸಾಮಾನ್ಯರಿಗೆ ಸಂಕಷ್ಟವೂ ಆಗುತ್ತಿದೆ. ಹಾಗಾಗಿ ಮಂಗಳೂರಿನಲ್ಲಿ ಹೈಕೋರ್ಟ್ ಪೀಠ ಸ್ಥಾಪಿಸಲು ಮುಂದಾಗಬೇಕು ಎಂದು ಸ್ಪೀಕರ್ ಖಾದರ್ ತನ್ನ ಪತ್ರದಲ್ಲಿ ತಿಳಿಸಿದ್ದಾರೆ.
ವಿಶ್ವಾಸಮತ ಪರೀಕ್ಷೆಯಲ್ಲಿ ಗೆದ್ದ ನ್ಯೂಝಿಲ್ಯಾಂಡ್ ಪ್ರಧಾನಿ ಕ್ರಿಸ್ಟೋಫರ್ ಲುಕ್ಸನ್
ವೆಲಿಂಗ್ಟನ್, ಎ.21: ತನ್ನ ನಾಯಕತ್ವದ ಬಗ್ಗೆ ಪಕ್ಷದ ಸಂಸದರು ವಿಶ್ವಾಸ ವ್ಯಕ್ತಪಡಿಸಿ ಬೆಂಬಲಿಸಿರುವುದರಿಂದ ತಾನು ವಿಶ್ವಾಸಮತ ಪರೀಕ್ಷೆಯಲ್ಲಿ ಗೆದ್ದಿರುವುದಾಗಿ ನ್ಯೂಝಿಲ್ಯಾಂಡ್ ಪ್ರಧಾನಿ ಕ್ರಿಸ್ಟೋಫರ್ ಲುಕ್ಸನ್ ಮಂಗಳವಾರ ಹೇಳಿದ್ದಾರೆ. ಲುಕ್ಸನ್ ಮತ್ತು ಅವರ ಪಕ್ಷ `ನ್ಯಾಷನಲ್ ಪಾರ್ಟಿ'ಯ ಜನಪ್ರಿಯತೆ ಕುಸಿದಿದೆ. ನ್ಯಾಷನಲ್ ಪಕ್ಷದ ಬೆಂಬಲ 30%ಕ್ಕೆ ಕುಸಿದಿದೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಲುಕ್ಸನ್, ಪಕ್ಷದ ಸಂಸದರು ತನ್ನನ್ನು ಬಹುಮತದಿಂದ ಬೆಂಬಲಿಸುತ್ತಾರೆಯೇ ಎಂಬುದನ್ನು ನಿರ್ಧರಿಸಲು ವಿಶ್ವಾಸಮತ ನಿರ್ಣಯ ಮಂಡಿಸಿದ್ದರು. ನಾನು ನನ್ನ ನಾಯಕತ್ವದಲ್ಲಿ ಔಪಚಾರಿಕ ವಿಶ್ವಾಸದ ನಿರ್ಣಯವನ್ನು ಮಂಡಿಸಿದೆ ಮತ್ತು ಆ ನಿರ್ಣಯವನ್ನು ಅಂಗೀಕರಿಸಲಾಗಿದೆ. ಪಕ್ಷದ ಸದಸ್ಯರು ನನ್ನ ನಾಯಕತ್ವದಲ್ಲಿ ಸ್ಪಷ್ಟವಾಗಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ ಎಂದು ಲುಕ್ಸನ್ ಸುದ್ದಿಗೋಷ್ಟಿಯಲ್ಲಿ ಹೇಳಿದ್ದಾರೆ.
Bengaluru | ಬಿಎಂಟಿಸಿ ಬಸ್ ಢಿಕ್ಕಿ ಹೊಡೆದು ದ್ವಿಚಕ್ರ ವಾಹನ ಸವಾರ ಮೃತ್ಯು
ಬೆಂಗಳೂರು : ಬಿಎಂಟಿಸಿ ಬಸ್ ಢಿಕ್ಕಿ ಹೊಡೆದು ದ್ವಿಚಕ್ರ ವಾಹನ ಸವಾರ ಮೃತಪಟ್ಟಿರುವ ಘಟನೆ ನಗರದ ಚಿಕ್ಕಬಾಣವಾರ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮಂಗಳವಾರ ನಡೆದಿದೆ. ಬಸವೇಶ್ವರ ನಗರದ ನಾಗರಾಜು(61) ಮೃತಪಟ್ಟ ಸವಾರ ಎಂದು ಗುರುತಿಸಲಾಗಿದೆ. ಈತ ನಂದಿನಿ ಮಿಲ್ಕ್ ಪಾರ್ಲರ್ ನಡೆಸುತ್ತಿದ್ದ. ಮಂಗಳವಾರ ಬೆಳಗ್ಗೆ 10.15ರ ಸುಮಾರಿಗೆ ದ್ವಿಚಕ್ರ ವಾಹನದಲ್ಲಿ ನಾಗರಾಜು ಕನ್ನಮಂಗಲದಲ್ಲಿರುವ ತನ್ನ ಮಗಳ ಮನೆಗೆ ಹೋಗುತ್ತಿದ್ದರು. ಈ ವೇಳೆ, ನೆಲಮಂಗಲದಿಂದ ಯಲಹಂಕಕ್ಕೆ ಹೋಗುತ್ತಿದ್ದ ಬಿಎಂಟಿಸಿ ಬಸ್ ಮಧುರೆ ರಸ್ತೆಯ ಬೆನಕ ಕಲ್ಯಾಣ ಮಂಟಪದ ಬಳಿ ದ್ವಿಚಕ್ರ ವಾಹನಕ್ಕೆ ಢಿಕ್ಕಿ ಹೊಡೆದ ಪರಿಣಾಮ ನಾಗರಾಜು ಗಂಭೀರ ಗಾಯಗೊಂಡಿದ್ದಾರೆ. ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಾಗ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಈ ಬಗ್ಗೆ ಮಾಹಿತಿ ತಿಳಿದು ಚಿಕ್ಕಬಾಣವಾರ ಸಂಚಾರಿ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ, ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿರುವುದಾಗಿ ತಿಳಿಸಿದ್ದಾರೆ.
ಶಾಂತಿಪಾಲನಾ ಸಹಕಾರ: ವಿಶ್ವಸಂಸ್ಥೆ ಅಧಿಕಾರಿಗಳೊಂದಿಗೆ ಭಾರತ ಚರ್ಚೆ
ನ್ಯೂಯಾರ್ಕ್, ಎ.21: ವಿಶ್ವಸಂಸ್ಥೆಯ ಶಾಂತಿಪಾಲನಾ ಪಡೆಗಳಿಗೆ ಸಂಬಂಧಿಸಿದ ವಿಷಯದ ಕುರಿತು ವಿಶ್ವಸಂಸ್ಥೆ ಮತ್ತು ಭಾರತದ ಉನ್ನತ ಅಧಿಕಾರಿಗಳು ಮಂಗಳವಾರ ನ್ಯೂಯಾರ್ಕ್ನಲ್ಲಿ ಚರ್ಚೆ ನಡೆಸಿರುವುದಾಗಿ ವರದಿಯಾಗಿದೆ. ವಿದೇಶಾಂಗ ವ್ಯವಹಾರ ಇಲಾಖೆಯ ಕಾರ್ಯದರ್ಶಿ(ಪಶ್ಚಿಮ) ಸಿಬಿ ಜಾರ್ಜ್, ರಾಜಕೀಯ ಮತ್ತು ಶಾಂತಿ ನಿರ್ಮಾಣ ವ್ಯವಹಾರಗಳು ಮತ್ತು ಶಾಂತಿ ಕಾರ್ಯಾಚರಣೆಗಳ ಇಲಾಖೆಗಳಲ್ಲಿ ಮಧ್ಯಪ್ರಾಚ್ಯ, ಏಷ್ಯಾ ಮತ್ತು ಪೆಸಿಫಿಕ್ನ ಸಹಾಯಕ ಕಾರ್ಯದರ್ಶಿ ಖಲೀದ್ ಖಿಯಾರಿ ಉಪಸ್ಥಿತಿಯಲ್ಲಿ ಮಾತುಕತೆ ನಡೆದಿದೆ. ವಿಶ್ವಸಂಸ್ಥೆಯ ಶಾಂತಿ ಪಾಲನಾ ಪಡೆಗೆ ಸಂಬಂಧಿಸಿದ ವಿಷಯಗಳನ್ನು ಕೇಂದ್ರೀಕರಿಸಿ ಫಲಪ್ರದ ಮಾತುಕತೆ ನಡೆಸಲಾಗಿದೆ ಎಂದು ವಿಶ್ವಸಂಸ್ಥೆಯ ಮೂಲಗಳು ಹೇಳಿವೆ. ವಿಶ್ವಸಂಸ್ಥೆಯ ಶಾಂತಿಪಾಲನಾ ಕಾರ್ಯಾಚರಣೆಗಳಿಗೆ ಅತ್ಯಧಿಕ ಕೊಡುಗೆ ನೀಡುವ ದೇಶಗಳಲ್ಲಿ ಭಾರತವೂ ಸೇರಿದೆ. 1948ರಿಂದ ವಿಶ್ವಸಂಸ್ಥೆಯ ಧ್ವಜದಡಿ ವಿಶ್ವದಾದ್ಯಂತ ನಡೆಯುವ ಶಾಂತಿಪಾಲನಾ ಕಾರ್ಯಾಚರಣೆಗಳಲ್ಲಿ ಭಾರತದ ಸುಮಾರು 2,75,000 ಯೋಧರು ಪಾಲ್ಗೊಂಡಿದ್ದಾರೆ. ಪ್ರಸ್ತುತ ವಿಶ್ವಸಂಸ್ಥೆಯ 12 ಶಾಂತಿಪಾಲನಾ ಕಾರ್ಯಾಚರಣೆಯಲ್ಲಿ ಭಾರತದ ಸುಮಾರು 5,900 ಸೈನಿಕರು ಪಾಲ್ಗೊಂಡಿದ್ದಾರೆ.
Mangaluru | ಕಾರಿನಲ್ಲಿ ಪ್ರಯಾಣಿಸುವಾಗ ಸೈಡ್ ಕೊಡುವ ವಿಚಾರದಲ್ಲಿ ಹಲ್ಲೆ: ಆರೋಪಿಗಳಿಗೆ ಜೈಲು ಶಿಕ್ಷೆ
ಮಂಗಳೂರು: ಕಾರಿನಲ್ಲಿ ಪ್ರಯಾಣಿಸುವಾಗ ಸೈಡ್ ಕೊಡುವ ವಿಚಾರದಲ್ಲಿ ವ್ಯಕ್ತಿಯೊಬ್ಬರ ಮೇಲೆ ತಂಡವೊಂದು ಹಲ್ಲೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಎಫ್ಟಿಎಸ್ಸಿ-1 ತ್ವರಿತಗತಿ ನ್ಯಾಯಾಲಯವು ಆರೋಪಿಗಳಿಗೆ 3 ವರ್ಷ ಕಠಿಣ ಶಿಕ್ಷೆ ಮತ್ತು 1.34 ಲಕ್ಷ ರೂ. ದಂಡ ವಿಧಿಸಿ ತೀರ್ಪು ನೀಡಿದೆ. ಬಂಟ್ವಾಳ ಕಾವಳಪಡೂರು ನಿವಾಸಿ ದಿನೇಶ್ ಶೆಟ್ಟಿ (27), ಅರ್ಕುಳ ನಿವಾಸಿ ಧನ್ರಾಜ್ ಪೂಜಾರಿ ಯಾನೆ ವಳಚ್ಚಿಲ್ ಧನು (22), ಎಡಪದವು ನಿವಾಸಿ ನವೀನ್ (21), ಕಾರ್ಸ್ಟ್ರೀಟ್ ನಿವಾಸಿ ಪ್ರಜ್ವಲ್ ಪೂಜಾರಿ (20), ತಡಂಬೈಲ್ ನಿವಾಸಿ ವಸಂತ್ ಬಾಳ (53) ಶಿಕ್ಷೆಗೊಳಗಾದ ಆರೋಪಿಗಳಾಗಿದ್ದಾರೆ. ಆರೋಪಿ ವಸಂತ ಬಾಳ ಎಂಬಾತ ಕಿಶನ್ ರಾವ್ರನ್ನು ಕೊಲೆ ಮಾಡುವ ಉದ್ದೇಶದಿಂದ ತನ್ನ ಕಾರನ್ನು ಉಳಿದ ಆರೋಪಿಗಳಿಗೆ ನೀಡಿದ್ದ. ಅದರಂತೆ ಅ.22ರಂದು ಆರೋಪಿಗಳು ಮಾರಕಾಯುಧದೊಂದಿಗೆ ಹೊರಟು ಕಾರಿನಲ್ಲಿ ಕುಳಾಯಿ ಹೊಸಬೆಟ್ಟು ಗ್ರಾಮದ ವಿನಾಯಕ ಮೊಸಾಯಿಕ ರಸ್ತೆಯಲ್ಲಿ ಕಾದು ಕುಳಿತ್ತಿದ್ದರು. ಕಿಶನ್ ರಾವ್ ಸ್ಕೂಟರ್ನಲ್ಲಿ ತೆರಳುತ್ತಿದ್ದಾಗ ದಿನೇಶ್ ಶೆಟ್ಟಿ ಕಾರನ್ನು ಕಿಶನ್ ಮುಂದಿನಿಂದ ಚಲಾಯಿಸಿಕೊಂಡು ಬಂದು ಅಡ್ಡಗಟ್ಟಿ ಢಿಕ್ಕಿಪಡಿಸಿದ್ದ. ಬಳಿಕ ಕಿಶನ್ ರಾವ್ಗೆ ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಿದ್ದರು ಎಂದು ಆರೋಪಿಸಲಾಗಿತ್ತು. ಈ ಕೃತ್ಯಕ್ಕೆ ಎರಡು 2 ದಿನ ಮುಂಚಿತವಾಗಿ ದಿನೇಶ್, ವಸಂತ್ ಹಾಗೂ ಕಿಶನ್ ರಾವ್ ನಡುವೆ ಕಾರಿನಲ್ಲಿ ಸೈಡ್ ಕೊಡುವ ವಿಚಾರದಲ್ಲಿ ಗಲಾಟೆ ನಡೆದಿದ್ದು, ಆ ದ್ವೇಷದಿಂದ 5ನೇ ಆರೋಪಿ ವಸಂತ್ ಬಾಳ ಉಳಿದ ನಾಲ್ವರು ಆರೋಪಿಗಳ ಮೂಲಕ ಕೃತ್ಯವೆಸಗಿದ್ದ ಎಂದು ಆರೋಪಿಸಲಾಗಿತ್ತು. ಈ ಬಗ್ಗೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಎಫ್ಟಿಎಸ್ಸಿ-1 ತ್ವರಿತಗತಿ ನ್ಯಾಯಾಲಯದ ನ್ಯಾಯಾಧೀಶ ಮೋಹನ ಜೆ.ಎಸ್. ವಿಚಾರಣೆ ನಡೆಸಿ ತೀರ್ಪು ನೀಡಿದ್ದಾರೆ. ಸರಕಾರಿ ಅಭಿಯೋಜಕ ಹರಿಶ್ಚಂದ್ರ ಉದ್ಯಾವರ್ ಮತ್ತು ಕೆ. ಬದರಿನಾಥ ನಾಯರಿ ವಾದ ಮಂಡಿಸಿದ್ದರು.
Belagavi | ವಿದ್ಯುತ್ ಅವಘಡ: ಇಬ್ಬರು ಕಾರ್ಮಿಕರು ಮೃತ್ಯು
ಬೆಳಗಾವಿ : ಸವದತ್ತಿ ತಾಲೂಕಿನ ನವೀಲುತೀರ್ಥ ಜಲಾಶಯ ಸಮೀಪದ ಗೊರವನಕೊಳ್ಳ–ವಟ್ನಾಳ ಹದ್ದಿಯಲ್ಲಿ ಎಂ-ಸ್ಯಾಂಡ್ ಗಣಿಗಾರಿಕೆ ವೇಳೆ ಸಂಭವಿಸಿದ ವಿದ್ಯುತ್ ಅವಘಡದಲ್ಲಿ ಇಬ್ಬರು ಕಾರ್ಮಿಕರು ಮಂಗಳವಾರ ಮೃತಪಟ್ಟಿದ್ದಾರೆ. ಮೃತರನ್ನು ಜಾರ್ಖಂಡ್ ರಾಜ್ಯದ ಹಜಾರಿಭಾಗ ಜಿಲ್ಲೆಯ ಪಂಟುರಕಿಯ ನಿವಾಸಿಗಳಾದ ಹಿಟಾಚಿ ಆಪರೇಟರ್ ರವಿಕುಮಾರಸಿಂಗ್ ದುಪಾಲಸಿಂಗ್ ಸಿಂಗ್ (18) ಹಾಗೂ ಸಹಾಯಕ ಸುಭಾಕುಮಾರ ರೂಪನಸಿಂಗ್ (18) ಎಂದು ಗುರುತಿಸಲಾಗಿದೆ. 11 ಕೆವಿ ವಿದ್ಯುತ್ ಸಂಪರ್ಕದ ಸಮೀಪ ಹಿಟಾಚಿ ಯಂತ್ರದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಯಂತ್ರದ ಬಕೆಟ್ ಹೈಟೆನ್ಷನ್ ತಂತಿಗೆ ತಗುಲಿದ ಪರಿಣಾಮ ವಿದ್ಯುತ್ ಹರಿದು ಅವಘಡ ಸಂಭವಿಸಿದೆ ಎಂದು ತಿಳಿದುಬಂದಿದೆ. ವಿದ್ಯುತ್ ತಗುಲುತ್ತಿದ್ದಂತೆಯೇ ಪ್ರಾಣ ಉಳಿಸಿಕೊಳ್ಳಲು ಇಬ್ಬರು ಹಿಟಾಚಿಯಿಂದ ಕೆಳಗೆ ಜಿಗಿದಾಗ ಹತ್ತಿರದಲ್ಲಿದ್ದ ನೀರಿನ ಗುಂಡಿಯಲ್ಲಿ ಬಿದ್ದಿದ್ದಾರೆ. ಆದರೆ ನೀರಿನಲ್ಲೂ ವಿದ್ಯುತ್ ಹರಿದ ಪರಿಣಾಮ ಇಬ್ಬರೂ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಈ ಕುರಿತು ಸವದತ್ತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.
ಕ್ಷೇತ್ರ ಪುನರ್ವಿಂಗಡಣೆಗೆ ಇರುವ ಸಂವಿಧಾನ ತಿದ್ದುಪಡಿ ಮಸೂದೆಗೆ ಸೋಲು; ಮೋದಿ ಸರ್ಕಾರ ಇದರಿಂದ ಏನೇನು ಕಳೆದುಕೊಂಡಿತು?
ಮುಂದಿನ ಸುತ್ತಿನ ಕ್ಷೇತ್ರ ಪುನರ್ವಿಂಗಡಣೆಗೆ ಹೊಸ ನಿಯಮಗಳನ್ನು ಪಡೆಯಲು ಮತ್ತು ಲೋಕಸಭಾ ಸ್ಥಾನಗಳನ್ನು 850 ಸ್ಥಾನಗಳಿಗೆ ಹೆಚ್ಚಿಸುವ ಮೂಲಕ ಪ್ರಮುಖ ಬದಲಾವಣೆಗಳನ್ನು ಮಾಡಲು ಸಂವಿಧಾನ ತಿದ್ದುಪಡಿ ಮಸೂದೆಗಳಿಗೆ ಲೋಕಸಭೆಯಲ್ಲಿ ಸೋಲಾಗಿದೆ. ಈ ಸೋಲಿನಿಂದ ನರೇಂದ್ರ ಮೋದಿ ಸರ್ಕಾರಕ್ಕೆ ಮುಖಭಂಗವಾಗಿದ್ದು, ಇದು ಮಹತ್ವದ ರಾಜಕೀಯ ಫಲಿತಾಂಶಗಳನ್ನು ಹೊಂದಿದೆ ಎಂದು The Wire ವರದಿ ಮಾಡಿದೆ. ►ಲೋಕಸಭೆಯಲ್ಲಿ ಮಸೂದೆಗೆ ಸೋಲು ಬಿಜೆಪಿಗೆ ಹೊಡೆತ 2014ರಲ್ಲಿ ದಿಲ್ಲಿಯಲ್ಲಿ 282 ಸ್ಥಾನಗಳೊಂದಿಗೆ ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದ ಲೋಕಸಭೆಯಲ್ಲಿನ ಬಿಜೆಪಿಗೆ ಯೋಚಿಸಲಾಗದ ಸೋಲು ಮಹತ್ವದ್ದಾಗಿದೆ. ರಾಜ್ಯಸಭೆಯು ಸರ್ಕಾರಕ್ಕೆ ಪ್ರತಿರೋಧದ ತಾಣವಾಗಿದೆ. 2015 ಮಾರ್ಚ್ ನಲ್ಲಿ, ವಿರೋಧ ಪಕ್ಷವು ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯಕ್ಕೆ ತಿದ್ದುಪಡಿಯನ್ನು ಯಶಸ್ವಿಯಾಗಿ ಅಂಗೀಕರಿಸಿತು, ಇದು ಆಡಳಿತ ಪಕ್ಷಕ್ಕೆ ಅಪರೂಪದ ಕಾರ್ಯವಿಧಾನದ ಹಿನ್ನಡೆಯನ್ನು ಸೂಚಿಸುತ್ತದೆ. ಪರಿಶೀಲನೆಯಿಂದ ತಪ್ಪಿಸಿಕೊಳ್ಳಲು ಬಿಜೆಪಿ ಮಸೂದೆಗಳನ್ನು 'Money Bill' ಎಂದು ಕರೆಯಲು ಪ್ರಾರಂಭಿಸಿತು. 2002ರ ನಂತರ ಈ ಶತಮಾನದಲ್ಲಿ ಎರಡನೇ ಬಾರಿಗೆ ಮಾತ್ರ, ಈ ರೀತಿಯ ಸರ್ಕಾರದ ಮಸೂದೆಗೆ ಸೋಲಾಗಿದೆ. ►ಮೋದಿ ಸರ್ಕಾರದ ಪ್ರಭಾವಕ್ಕೆ ಹೊಡೆತ ಮೋದಿ ಸರ್ಕಾರವು ನ್ಯಾಯಾಲಯದಲ್ಲಿ ಮತ್ತು ಇತರೆಡೆಗಳಲ್ಲಿ ವಾದಿಸಲು ಇಷ್ಟಪಡುತ್ತದೆ. ಆದರೆ ನ್ಯಾಯಾಂಗದ ಮೂಲಕ ಸಂವಿಧಾನದ ಮೂಲಭೂತ ಅಂಶಗಳನ್ನು ಪುನರ್ರಚಿಸಲು ಪ್ರಯತ್ನಿಸುತ್ತದೆ; ಸಂಸತ್ತು ಮಾತ್ರ 'ಜನರ ಇಚ್ಛೆ'ಯನ್ನು ಪ್ರತಿನಿಧಿಸುತ್ತದೆ ಎಂದು ಹೇಳುತ್ತದೆ. ಅದನ್ನು 'ಸಾಂವಿಧಾನಿಕ ಮೌಲ್ಯಗಳ'ಲ್ಲ, ಸರ್ವೋಚ್ಚವೆಂದು ಪರಿಗಣಿಸಬೇಕು. ಇದು ಅದರ ಲೋಕಸಭಾ ಸಂಖ್ಯಾಬಲದ ಆಧಾರದ ಮೇಲೆ ನಿಂತಿದೆ. 2024ರ ಚುನಾವಣೆಯ ನಂತರ ಬಿಜೆಪಿ ಸ್ಪಷ್ಟ ಬಹುಮತವನ್ನು ಕಳೆದುಕೊಂಡಿತು. ಮೋದಿ ಅವರು ಅಜೇಯ ನಾಯಕ ಎಂಬ ತಮ್ಮ ಇಮೇಜ್ ಅನ್ನು ಪುನಃಸ್ಥಾಪಿಸಲು ಪ್ರಯತ್ನಿಸಿದ್ದಾರೆ. ಅವರು ಅದೇ ತಂಡವನ್ನು (ಸಂಪುಟ) ಇಟ್ಟುಕೊಳ್ಳುವ ಮೂಲಕ ಮತ್ತು ತಮ್ಮ ಅಧಿಕಾರದ ಮೇಲೆ ನಿಯಂತ್ರಣ ಮತ್ತು ಸಮತೋಲನಗಳಾಗಿ ಕಾರ್ಯನಿರ್ವಹಿಸಬೇಕಾದ ಸರ್ಕಾರಿ ಸಂಸ್ಥೆಗಳ ಮೇಲೆ ತಮ್ಮ ನಿಯಂತ್ರಣವನ್ನು ಬಲಪಡಿಸುವ ಮೂಲಕ ಇದನ್ನು ಮಾಡಿದರು. ಕಳೆದ ವಾರದ ಬೆಳವಣಿಗೆಗಳು ಮೋದಿ ಸರ್ಕಾರದ ಎಚ್ಚರಿಕೆಯಿಂದ ಬೆಳೆಸಿದ ಪ್ರಭಾವಕ್ಕೆ ಹೊಡೆತ ನೀಡಿವೆ. ►ವಿರೋಧ ಪಕ್ಷಗಳೂ ಮುಖ್ಯ ಬಿಜೆಪಿ ಕೇವಲ 240 ಸ್ಥಾನಗಳನ್ನು ಹೊಂದಿದ್ದರೂ ವಿರೋಧ ಪಕ್ಷಗಳು ಮುಖ್ಯವಲ್ಲ ಎಂಬ ನಂಬಿಕೆ ಇತ್ತು. ಸ್ಪಷ್ಟವಾಗಿ ಪಕ್ಷಪಾತದ ಸ್ಪೀಕರ್ ಮೂಲಕ ಅಥವಾ ವಿವಿಧ ಪಕ್ಷಗಳೊಂದಿಗೆ ಪ್ರತ್ಯೇಕವಾಗಿ ಮಾತನಾಡುವ ಮೂಲಕ ಮತ್ತು ಯಾವುದೇ ಸರ್ವಪಕ್ಷ ಸಭೆಗಳನ್ನು ನಡೆಸದೆ ವಿರೋಧ ಪಕ್ಷಗಳನ್ನು 'ನಿರ್ವಹಿಸಬಹುದು' ಎಂಬ ಕಲ್ಪನೆಯೂ ಇಲ್ಲಿ ಮುರಿದುಹೋಯಿತು. ಏಕೆಂದರೆ ಪ್ರಸ್ತಾವಿತ ಲೋಕಸಭೆಯ ಆತುರದ ವಿಸ್ತರಣೆಯಿಂದ ಲಾಭ ಪಡೆಯುವ ಸಾಧ್ಯತೆ ಇರುವ ಹಿಂದಿ ಭಾಷೆಯ ಪ್ರದೇಶದ ಪಕ್ಷಗಳು ಸೇರಿದಂತೆ ವಿರೋಧ ಪಕ್ಷಗಳು ತಮ್ಮ ನಿಲುವನ್ನು ಉಳಿಸಿಕೊಂಡವು. ►ಅಮಿತ್ ಶಾ ಅವರ ಚಾಣಕ್ಯಗಿರಿ ಇದು ಅಮಿತ್ ಶಾ ಅವರ ರೇಟಿಂಗ್ ಗಳನ್ನು ಕಡಿಮೆ ಮಾಡಿತು. ಶಾ ಅವರ ನಡೆಗಳು ಸಾಮಾನ್ಯವಾಗಿ ಲೋಕಸಭೆಯನ್ನು ಗೊಂದಲಗೊಳಿಸುವಲ್ಲಿ ಯಶಸ್ವಿಯಾಗಿವೆ. ಮೊದಲು 2019 ಆಗಸ್ಟ್ 5ರಂದು 'ರಾಷ್ಟ್ರೀಯ ಭದ್ರತೆ'ಯ ನೆಪದಲ್ಲಿ ಯಾವುದೇ ಚರ್ಚೆಯಿಲ್ಲದೆ, ಮಾಹಿತಿಯಿಲ್ಲದೆ ರಾಜ್ಯವನ್ನು ವಿಭಜಿಸಿ ಅದನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ಪರಿವರ್ತಿಸಲು ಸಾಧ್ಯವಾಯಿತು. ಲೋಕಸಭೆಯಲ್ಲಿ ಅಲ್ಪಸಂಖ್ಯಾತ ಸ್ಥಾನಕ್ಕೆ ಕುಸಿದ ನಂತರ, ಸರ್ಕಾರವು 'ಭ್ರಷ್ಟಾಚಾರ' ಆರೋಪದ ಆಧಾರದ ಮೇಲೆ ಮುಖ್ಯಮಂತ್ರಿಗಳನ್ನು ಪದಚ್ಯುತಗೊಳಿಸಲು ಮತ್ತು ಬಂಧಿಸಲು ಅನುವು ಮಾಡಿಕೊಡುವ ಮಸೂದೆಯನ್ನು ತರಲು ಮತ್ತೆ ಪ್ರಯತ್ನಿಸಿತು. ಆದರೆ ಆ ಪ್ರಯತ್ನವು ಯಶಸ್ವಿಯಾಗಲಿಲ್ಲ. ಮಸೂದೆಯನ್ನು ಸಮಿತಿಗೆ ಕಳುಹಿಸಲಾಯಿತು. ಈ ಬಾರಿ, ಮಸೂದೆಯನ್ನು ಸೋಲಿಸಲಾಯಿತು. ►ಭಾರತದ ಇಬ್ಬರು ಅತ್ಯಂತ ಶಕ್ತಿಶಾಲಿ ನಾಯಕರ ವೈಯಕ್ತಿಕ ರಾಜಕೀಯ ವಿಶ್ವಾಸಾರ್ಹತೆಗೆ ಪೆಟ್ಟು ನರೇಂದ್ರ ಮೋದಿ ಮತ್ತು ಅಮಿತ್ ಶಾ ಇಬ್ಬರೂ ರಾಜ್ಯಗಳ ಹಿತಾಸಕ್ತಿಗಳಿಗೆ ಧಕ್ಕೆ ತರುವುದಿಲ್ಲ ಎಂದು ಸದನಕ್ಕೆ ಭರವಸೆ ನೀಡಿದ್ದರು. ಆದರೆ ಆ ಮಾತುಗಳಿಗೆ ಯಾವುದೇ ಮಹತ್ವವಿರಲಿಲ್ಲ. ಬಿಜೆಪಿ ತನ್ನ ಗುರಿಯನ್ನು ತಲುಪದಿರುವ ಕಾರಣ ಮೋದಿ ಮತ್ತೆ 30 ನಿಮಿಷಗಳ 'ಭಾಷಣ'ದಲ್ಲಿ 59 ಬಾರಿ ಕಾಂಗ್ರೆಸ್ ಪಕ್ಷವನ್ನು ಉಲ್ಲೇಖಿಸಿದ್ದರು. ►ನಿಯಮಗಳು ಮತ್ತು ಕಾರ್ಯವಿಧಾನಗಳನ್ನು ತಿರುಚುವುದು ಯಾವಾಗಲೂ ಸಾಧ್ಯವಿಲ್ಲ ಬಿಜೆಪಿ ತನ್ನ ಇಚ್ಛೆಯಂತೆ ಸಂಸದೀಯ ಕಾರ್ಯವಿಧಾನದಲ್ಲಿ ಹಸ್ತಕ್ಷೇಪ ಮಾಡಬಹುದು ಮತ್ತು ತಪ್ಪಿಸಿಕೊಳ್ಳಬಹುದು ಎಂಬ ದೃಢನಿಶ್ಚಯವು ಭಗ್ನಗೊಂಡಿತು. ಸಂಸತ್ತನ್ನು ಕಾರ್ಯಾಂಗದ ವಿಸ್ತರಣೆಗೆ ಇಳಿಸುವ ಪ್ರಯತ್ನ ಸ್ಪಷ್ಟವಾಗಿದೆ. 2019ರಿಂದ ಲೋಕಸಭೆಯಲ್ಲಿ ಯಾವುದೇ ಉಪ ಸ್ಪೀಕರ್ ಇಲ್ಲ, ಇದು ಭಾರತೀಯ ಇತಿಹಾಸದಲ್ಲಿ ಮೊದಲನೆಯದು. 2020ರಲ್ಲಿ ಮೂರು ಕೃಷಿ ಮಸೂದೆಗಳ ಸಂದರ್ಭದಲ್ಲಿ ಏನಾಯಿತು ಎಂಬುದನ್ನು ನೋಡಿದರೆ ಸಂಸದೀಯ ಕಾರ್ಯವಿಧಾನಗಳು ಮತ್ತು ಮಾನದಂಡಗಳ ಉಲ್ಲಂಘನೆ ಸ್ಪಷ್ಟವಾಗುತ್ತದೆ. ಇತ್ತೀಚೆಗೆ, ಸರ್ಕಾರವು ನಿಯಮ 116 ಅನ್ನು ಬಿಟ್ಟು CAPF (ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳು) ಮಸೂದೆಗಳನ್ನು ತ್ವರಿತವಾಗಿ ಜಾರಿಗೆ ತರಲು ಪ್ರಯತ್ನಿಸಿತು. ಈ ನಿಯಮಕ್ಕೆ ಸಾಮಾನ್ಯವಾಗಿ ಅಧ್ಯಯನ ಮತ್ತು ಚರ್ಚೆಗೆ ಸಮಯ ಬೇಕಾಗುತ್ತದೆ. ಆದರೆ, ಸದನದಲ್ಲಿನ ವಿರೋಧ ಪಕ್ಷಗಳು ಒಟ್ಟಾಗಿ ನಿಂತು ಅದನ್ನು ಮಾಡಲು ನಿರಾಕರಿಸಿದ್ದರಿಂದ ಅವರಿಗೆ ಈ ಶಾರ್ಟ್ ಕಟ್ ತೆಗೆದುಕೊಳ್ಳಲು ಸಾಧ್ಯವಾಗಲಿಲ್ಲ. ►ಸೈದ್ಧಾಂತಿಕ ಹಿನ್ನಡೆ ಈ ಪ್ರಕ್ರಿಯೆಯ ಉದ್ದೇಶ ಬಿಜೆಪಿಗೆ ಸ್ಥಾನಗಳ ತ್ವರಿತ ವಿಸ್ತರಣೆಯನ್ನು ಉಡುಗೊರೆಯಾಗಿ ನೀಡುವುದು ಮತ್ತು ಇತರ ಪ್ರದೇಶಗಳಿಗೆ ಅದು ಹೇಗೆ ಹಾನಿ ಮಾಡುತ್ತದೆ ಎಂಬುದರ ಕುರಿತು ಚರ್ಚಿಸದೆ ತನ್ನ ರಾಜಕೀಯ ಪ್ರಾಬಲ್ಯವನ್ನು ಸ್ಥಾಪಿಸುವುದಾಗಿತ್ತು. ಆದರೆ 'ಮಹಿಳಾ ಮೀಸಲಾತಿ ತ್ವರಿತಗೊಳಿಸುವಿಕೆ' ಎಂಬ ಹೆಡ್ಡಿಂಗ್ ಸಹಾಯ ಮಾಡಲಿಲ್ಲ. ಇತರ ಪ್ರದೇಶಗಳಿಗೆ ಹಾನಿ ಮಾಡಲು ಬಯಸಿದ್ದಕ್ಕಾಗಿ ಬಿಜೆಪಿಯನ್ನು ಹೊರಗಿಡಲಾಯಿತು. ಭಾರತೀಯ ರಾಜಕೀಯವನ್ನು ವ್ಯವಸ್ಥಿತವಾಗಿ ಪುನರ್ರಚಿಸುವುದು, ಹಿಂದಿ, ಹಿಂದೂ, ಹಿಂದೂಸ್ತಾನ್ ವಿಷಯಗಳ ಯೋಜನೆಯಡಿಯಲ್ಲಿ ತನ್ನ ಆಡಳಿತವನ್ನು ಶಾಶ್ವತಗೊಳಿಸುವುದು ಮತ್ತು ಅಸಮಾಧಾನಗಳನ್ನು ವ್ಯಕ್ತಪಡಿಸುವುದನ್ನು ತಡೆಯಲು ಅದರ ಬಗ್ಗೆ ಯಾವುದೇ ಚರ್ಚೆಯಿಲ್ಲದೆ ಒಳಗೊಂಡ ಭವಿಷ್ಯದ ನೀಲನಕ್ಷೆಯು ಗಂಭೀರ ಹಿನ್ನಡೆಯನ್ನು ಅನುಭವಿಸಿತು. ಇದು ಕೇವಲ ತಂತ್ರವಾಗಿ ಮಾತ್ರವಲ್ಲದೆ ರಾಜ್ಯಗಳನ್ನು ಕುಗ್ಗಿಸುವ ದೊಡ್ಡ ಗುರಿಯನ್ನು ಪೂರೈಸಲು ಉದ್ದೇಶಿಸಲಾಗಿತ್ತು. ಅದು ಸಾಧ್ಯವಾಗಿಲ್ಲ. ►ಪ್ರದೇಶ ಮತ್ತು ಭಾಷೆ ಜಾತಿಯನ್ನು ಒಳಗೊಳ್ಳಲು ಬಿಜೆಪಿಯ ಹೋರಾಟಗಳ ಹೊರತಾಗಿಯೂ, ಧರ್ಮ ಮತ್ತು ಜಾತಿಯು ಸ್ಪರ್ಧಾತ್ಮಕ ವಿಷಯಗಳಾಗಿ ಉಳಿದಿವೆ. ಭಾಷೆ, ಪ್ರದೇಶ ಮತ್ತು ವೈವಿಧ್ಯತೆಯ ಬಗ್ಗೆ ಮೂರನೇ ವಿಷಯವು ಈ ಚರ್ಚೆಯ ಮೂಲಕ ಹೊತ್ತಿಕೊಂಡಿರಬಹುದು. ಇದು ಬಿಜೆಪಿ ಹೊಸ ಪ್ರದೇಶಗಳನ್ನು ಗೆಲ್ಲಲು ಹೆಣಗಾಡುತ್ತಿರುವಾಗ ಭವಿಷ್ಯದ ಎಲ್ಲಾ ಚರ್ಚೆಗಳಲ್ಲಿ ಕಾಣಿಸುವ ಸಾಮರ್ಥ್ಯವನ್ನು ಹೊಂದಿದೆ. ವಿರೋಧಾಭಾಸವೆಂದರೆ 2014 ಮತ್ತು 2023ರ ನಡುವೆ ಗೋವುಗಳಿಗೆ ಪ್ರಾಧಾನ್ಯತೆ ನೀಡುವ ರಾಜ್ಯಗಳ ಮೇಲೆ ಹಿಡಿತ ಸಾಧಿಸಿದ್ದರೂ, 2024ರಲ್ಲಿ ಉತ್ತರ ಪ್ರದೇಶ, ರಾಜಸ್ಥಾನ, ಹಿಮಾಚಲ ಪ್ರದೇಶ ಮತ್ತು ಪಂಜಾಬ್ನಲ್ಲಿ ಬಿಜೆಪಿ ಗಂಭೀರ ಹಿನ್ನಡೆ ಅನುಭವಿಸಿತು. 1950ರ ದಶಕದ ಭಾಷಾ ಆಧಾರಿತ ಸಂಘರ್ಷಗಳು ಪ್ರಾಚೀನ ಇತಿಹಾಸದಂತೆ ಕಾಣಿಸಬಹುದು, ಆದರೆ ಆ ಆಳವಾದ ಸಾಮಾಜಿಕ ವಿಭಜನೆಗಳನ್ನು ಆಧುನಿಕ ರಾಜಕೀಯವು ಉದ್ದೇಶಪೂರ್ವಕವಾಗಿ ಪ್ರಚೋದಿಸಿದರೆ ಅಥವಾ ಬಳಸಿಕೊಳ್ಳುತ್ತಿದ್ದರೆ ಅವು ಸುಲಭವಾಗಿ ಮತ್ತೆ ಕಾಣಿಸಿಕೊಳ್ಳಬಹುದು. ►ನಿರೂಪಣೆಯನ್ನು ನಿಯಂತ್ರಿಸಲು/ಪ್ರಾಬಲ್ಯ ಸಾಧಿಸಲು ಅಸಮರ್ಥತೆ 'ನಿರೂಪಣಾ ಯುದ್ಧ' ಮೂಲಕ ಬಿಜೆಪಿ ಯಾವಾಗಲೂ ಗೆಲ್ಲುವ ಬಗ್ಗೆ ತೃಪ್ತಿ ಹೊಂದಿದೆ ಎಂದು ತೋರುತ್ತದೆ, ಆದರೆ ಬಿಜೆಪಿಯ ಏಕೈಕ ಮಹಿಳಾ ಮುಖ್ಯಮಂತ್ರಿ ರೇಖಾ ಗುಪ್ತಾ ಸೇರಿದಂತೆ ಬಿಜೆಪಿ ಮಹಿಳಾ ಕಾರ್ಯಕರ್ತರನ್ನು ರಾಹುಲ್ ಗಾಂಧಿಯವರ ಮನೆಗೆ ಕಳುಹಿಸುವುದು ಸರಿಯಾದ ನಿರ್ಧಾರವಾಗಿರಲಿಲ್ಲ. ಆನ್ಲೈನ್ ಮೀಮ್ಸ್, ಖಿ-ಖಿ ಜೋಕ್ಗಳು ಮತ್ತು ಕಾರ್ಟೂನ್ ಗಳನ್ನು ನಿಗ್ರಹಿಸಲು, ವಿಶ್ವಗುರು ಮತ್ತು ಇತರ ವಿದೇಶಾಂಗ ನೀತಿ ದುಸ್ಸಾಹಸಗಳಿಗಾಗಿ ಮೋದಿಯವರನ್ನು ವೈಯಕ್ತಿಕವಾಗಿ ಅಪಹಾಸ್ಯ ಮಾಡುವುದನ್ನು ಎದುರಿಸಲು ಬಿಜೆಪಿ ತೀವ್ರ ಪ್ರಯತ್ನಗಳನ್ನು ಮಾಡಬೇಕಾಗಿದೆಯೆಂಬಂತೆ, ಈ ಬಾರಿಯೂ ನಿರೂಪಣಾ ಆಟವನ್ನು ಹೇಗಾದರೂ ಆಡಲು ಬಿಜೆಪಿ ಮತ್ತೆ ಕಠಿಣ ಕ್ರಮಗಳನ್ನು ಆಶ್ರಯಿಸಬಹುದು. ಶನಿವಾರ ರಾತ್ರಿ ಮೋದಿ ಮಾತನಾಡುತ್ತಿದ್ದಾಗ ವಿಡಿಯೊಗೆ ಬಂದ ಲೈವ್ ಕಮೆಂಟ್ ಗಳು ಎನ್ ಡಿ ಎ ಗೆ ದೊಡ್ಡ ಎಚ್ಚರಿಕೆಯಾಗಬೇಕು. 2024ಕ್ಕಿಂತ ಮೊದಲು ಅದು ಮಹಿಳಾ ಮೀಸಲಾತಿಯನ್ನು ಏಕೆ ಜಾರಿಗೆ ತರಲಿಲ್ಲ? ಅದು ಕಡಿಮೆ ಮಹಿಳಾ ಸಂಸದರನ್ನು ಹೊಂದಿರುವ ಪಕ್ಷ ಏಕೆ? ಪ್ರಧಾನಿ ಮತ್ತು ಗೃಹ ಸಚಿವರು ಸಂಸತ್ತಿನಲ್ಲಿ ಹೇಳಿದ್ದು ಮಸೂದೆಗಳ ಪಠ್ಯಕ್ಕೆ ಏಕೆ ಹೊಂದಿಕೆಯಾಗಲಿಲ್ಲ? ಹೀಗೆ ಬಿಜೆಪಿಗೆ ಉತ್ತರಿಸಲು ಸಾಧ್ಯವಾಗದ ಕೆಲವು ಮೂಲಭೂತ ಪ್ರಶ್ನೆಗಳು ಇನ್ನೂ ಇವೆ. ಟಿವಿ ಮತ್ತು ಹೆಚ್ಚಿನ ಪತ್ರಿಕೆಗಳೆರಡರಲ್ಲೂ ತನ್ನ ಹಿಡಿತದ ಹೊರತಾಗಿಯೂ, ಈ ಪ್ರಶ್ನೆಗಳನ್ನು ಮೌನಗೊಳಿಸಲು ಬಿಜೆಪಿಗೆ ಸಾಧ್ಯವಾಗಿಲ್ಲ.
ಮಡಗಾಂವ್ ಬಳಿ ಓವರ್ಬ್ರಿಡ್ಜ್ ಕಾಮಗಾರಿ: ಕೆಲವು ರೈಲುಗಳ ಸಂಚಾರ ವೇಳೆಯಲ್ಲಿ ವ್ಯತ್ಯಯ
ಉಡುಪಿ: ಮಡಗಾಂವ್ನ ರಾವನ್ಫಾಂಡದಲ್ಲಿ ರಸ್ತೆಗೆ ಓವರ್ ಬ್ರಿಡ್ಜ್ ನಿರ್ಮಾಣಕ್ಕಾಗಿ ಗಿರ್ಡರ್ ಕಾಮಗಾರಿ ಎ.21ರಿಂದ 24ರವರೆಗೆ ನಡೆಯಲಿರುವ ಹಿನ್ನೆಲೆಯಲ್ಲಿ ಕೊಂಕಣ ರೈಲು ಮಾರ್ಗದಲ್ಲಿ ಸಂಚರಿಸುವ ಹಲವು ರೈಲುಗಳ ವೇಳಾಪಟ್ಟಿಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಕೊಂಕಣ ರೈಲ್ವೆ ಪ್ರಕಟಣೆ ತಿಳಿಸಿದೆ. ಲೋಕಮಾನ್ಯ ತಿಲಕ್ ಹಾಗೂ ಮಂಗಳೂರು ಸೆಂಟ್ರಲ್ ನಡುವೆ ಸಂಚರಿಸುವ ಎಕ್ಸ್ಪ್ರೆಸ್ ರೈಲಿನ ಸಂಚಾರವನ್ನು ಎ.22ರಂದು ಮಡಗಾಂವ್ ಜಂಕ್ಷನ್ ನಿಲ್ದಾಣದಲ್ಲಿ ಸುಮಾರು 20ನಿಮಿಷ ತಡೆ ಹಿಡಿಯಲಾಗುವುದು. ಇಂದೋರ್ ಹಾಗೂ ತಿರುವನಂತಪುರಂ ನಡುವೆ ಸಂಚರಿಸುವ ಎಕ್ಸ್ಪ್ರೆಸ್ ರೈಲಿನ ಸಂಚಾರವನ್ನು ಎ.22ರಂದು ಮಡಗಾಂವ್ ಜಂಕ್ಷನ್ನಲ್ಲಿ 35 ನಿಮಿಷ ತಡೆಹಿಡಿಯಲಾಗುವುದು. ಎರ್ನಾಕುಲಂ ಜಂಕ್ಷನ್- ಓಖಾ ಎಕ್ಸ್ಪ್ರೆಸ್ ರೈಲಿನ ಎ.23ರ ಸಂಚಾರ ವನ್ನು ಬಾಲಿ ನಿಲ್ದಾಣದಲ್ಲಿ 20 ನಿಮಿಷ ವಿಳಂಬಿಸಲಾಗುವುದು ಎಂದು ಕೊಂಕಣ ರೈಲ್ವೆ ಪ್ರಕಟಣೆ ತಿಳಿಸಿದೆ.
ಬೆದರಿಕೆಯ ನೆರಳಿನಲ್ಲಿ ಮಾತುಕತೆಗೆ ಒಪ್ಪುವುದಿಲ್ಲ, ಯಾವುದೇ ಪರಿಸ್ಥಿತಿ ಎದುರಿಸಲು ಸಿದ್ಧ: ಇರಾನ್
ಟೆಹರಾನ್, ಎ.21: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇರಾನ್ನ ಮೇಲೆ ಒತ್ತಡ ಹೇರಲು ಪ್ರಯತ್ನಿಸುತ್ತಿದ್ದಾರೆ ಎಂದು ಇರಾನ್ ಸಂಸತ್ತಿನ ಸ್ಪೀಕರ್ ಮುಹಮ್ಮದ್ ಬಾಘೆರ್ ಘಾಲಿಬಾಫ್ ಆರೋಪಿಸಿದ್ದು, ಬೆದರಿಕೆಯ ನೆರಳಿನಡಿ ಮಾತುಕತೆ ನಡೆಯುವುದಾದರೆ ಇರಾನ್ ಯಾವುದೇ ಪರಿಸ್ಥಿತಿ ಎದುರಿಸಲೂ ಸಿದ್ಧವಾಗಿದೆ ಎಂದು ಘೋಷಿಸಿದ್ದಾರೆ. ಎರಡು ವಾರಗಳ ತಾತ್ಕಾಲಿಕ ಕದನ ವಿರಾಮ ಬುಧವಾರ (ಎಪ್ರಿಲ್ 22) ಕೊನೆಗೊಳ್ಳುವುದಕ್ಕೂ ಮುನ್ನ ಅಮೆರಿಕ-ಇರಾನ್ ನಡುವಿನ ಎರಡನೇ ಸುತ್ತಿನ ಸಂಭಾವ್ಯ ಮಾತುಕತೆಯ ಕುರಿತ ಅನಿಶ್ಚಿತತೆ ಹೆಚ್ಚಿರುವ ನಡುವೆಯೇ ಇರಾನ್ ನಾಯಕರ ಈ ಹೇಳಿಕೆ ಹೊರಬಿದ್ದಿದೆ. ದಿಗ್ಬಂಧನ, ಕದನ ವಿರಾಮದ ಉಲ್ಲಂಘನೆಯ ಮೂಲಕ ಟ್ರಂಪ್ ಮಾತುಕತೆಯ ಮೇಜನ್ನು ತಮ್ಮತ್ತ ತಿರುಗಿಸಲು ಪ್ರಯತ್ನಿಸುತ್ತಿದ್ದಾರೆ. ಬೆದರಿಕೆಯ ಮೂಲಕ ತಮ್ಮ ಇಚ್ಛೆಯನ್ನು ಸಾಧಿಸಬಹುದು ಎಂಬ ಕನಸು ಕಾಣುತ್ತಿದ್ದಾರೆ. ಆದರೆ ಬೆದರಿಕೆಯ ನೆರಳಿನಡಿಯ ಮಾತುಕತೆಯನ್ನು ನಾವು ಒಪ್ಪುವುದಿಲ್ಲ ಮತ್ತು ಎರಡು ವಾರಗಳ ತಾತ್ಕಾಲಿಕ ಕದನ ವಿರಾಮದ ಅವಧಿಯಲ್ಲಿ ನಾವು ನಮ್ಮ ಹೊಸ ಕಾರ್ಡ್ಗಳನ್ನು ಯುದ್ಧರಂಗದಲ್ಲಿ ಬಹಿರಂಗಪಡಿಸಲು ಸಿದ್ಧತೆ ನಡೆಸಿದ್ದೇವೆ ಎಂದು ಘಾಲಿಬಾಫ್ `ಎಕ್ಸ್'ನಲ್ಲಿ ಎಚ್ಚರಿಕೆ ನೀಡಿದ್ದಾರೆ.
ದೇಶದ ಆಧ್ಯಾತ್ಮ ಲೋಕಕ್ಕೆ ಹೊಸ ಚೈತನ್ಯ ನೀಡಿದ ಶಂಕರಾಚಾರ್ಯರು: ಡಾ.ಜಯಶಂಕರ ಕಂಗಣ್ಣಾರು
ಉಡುಪಿ: ಭಾರತದ ಆಧ್ಯಾತ್ಮ ಲೋಕಕ್ಕೆ ಹೊಸ ಚೈತನ್ಯ ನೀಡಿದ ಆದಿಗುರು ಶ್ರೀ ಶಂಕರಾಚಾರ್ಯರು ಭಾರತದ ಆಧ್ಯಾತ್ಮಿಕ ಪರಂಪರೆಯಲ್ಲಿ ಉನ್ನತ ಸ್ಥಾನ ಪಡೆದಿದ್ದಾರೆ ಎಂದು ಅದಮಾರು ಪೂರ್ಣಪ್ರಜ್ಞ ಪದವಿ ಪೂರ್ವ ಕಾಲೇಜಿನ ಸಂಸ್ಕೃತ ಉಪನ್ಯಾಸಕ ಡಾ.ಜಯಶಂಕರ ಕಂಗಣ್ಣಾರು ಹೇಳಿದ್ದಾರೆ. ಮಣಿಪಾಲದ ಜಿಲ್ಲಾಧಿಕಾರಿ ಕಛೇರಿಯ ಕೋರ್ಟ್ ಹಾಲ್ನಲ್ಲಿ ಮಂಗಳವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವುಗಳ ಸಂಯುಕ್ತ ಆಶ್ರಯದಲ್ಲಿ ನಡೆದ ಶ್ರೀ ಶಂಕರಾಚಾರ್ಯ ಜಯಂತಿ ಕಾರ್ಯಕ್ರಮದಲ್ಲಿ ಶಂಕರಾಚಾರ್ಯರ ಕುರಿತು ವಿಶೇಷ ಉಪನ್ಯಾಸ ನೀಡಿ ಮಾತನಾಡುತಿದ್ದರು. ಕೇರಳದ ಕಾಲಡಿಯಲ್ಲಿ ಜನಿಸಿದ ಶಂಕರರು, ವೇದ, ಉಪನಿಷತ್ತು, ಪುರಾಣ ಅಧ್ಯಯನಗಳನ್ನು ತಮ್ಮ ಚಿಕ್ಕ ವಯಸ್ಸಿನಲ್ಲಿಯೇ ಮೈಗೂಡಿಸಿ ಕೊಂಡಿದ್ದರು. ತಮ್ಮ ಅತ್ಯಲ್ಪ ಜೀತಾವಧಿಯಲ್ಲಿ ಹಲವಾರು ಗ್ರಂಥರಚನೆ ಮಾಡಿ ಸಾಹಿತ್ಯಲೋಕಕ್ಕೆ ಅಸಾಧಾರಣ ಕೊಡುಗೆ ನೀಡಿದ್ದಾರೆ. ಅದ್ವೈತ ಮತವನ್ನು ಬೋಧಿಸುವುದರೊಂದಿಗೆ ಆಗ ಪ್ರಚಲಿತದಲ್ಲಿದ್ದ ಎಲ್ಲ ಮತ ಗಳಿಗೂ ಮಾರ್ಗದರ್ಶಕರಾಗಿದ್ದ ಮಹಾನ್ ತತ್ವಜ್ಞಾನಿಗಳಾಗಿದ್ದರು. ಉಪನಿಷತ್, ಬ್ರಹ್ಮಸೂತ್ರ ಮತ್ತು ಭಗವದ್ಗೀತೆಗೂ ಅವರು ಭಾಷ್ಯ ಬರೆದಿದ್ದರು ಎಂದರು. ಕಾರ್ಯಕ್ರಮವನ್ನು ದೀಪ ಬೆಳಗಿಸಿ, ಶಂಕರಾಚಾರ್ಯರ ಭಾವಚಿತ್ರಕ್ಕೆ ಪುಷ್ಪಾಂಜಲಿ ಸಲ್ಲಿಸಿ ಮಾತನಾಡಿದ ಉಡುಪಿ ಚಿಕ್ಕಮಗಳೂರು ಲೋಕಸಭಾ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ, ಸನಾತನ ಧರ್ಮ ನಶಿಸಿ ಹೋಗುತ್ತಿರುವ ಸಂದರ್ಭದಲ್ಲಿ ದೇಶದೆಲ್ಲೆಡೆ ಕಾಲ್ನಡಿಗೆಯಲ್ಲಿ ಸಂಚರಿಸಿ, ಅದ್ವೈತ ಸಿದ್ಧಾಂತದ ಸಾರವನ್ನು ಜಗತ್ತಿಗೆ ಸಾರಿದವರು ಶಂಕರಾಚಾರ್ಯರು. ಅವರ ಆದರ್ಶ, ಚಿಂತನೆ ಹಾಗೂ ವಿವೇಚನೆಗಳು ಮನುಕುಲದ ಒಳಿತಿಗೆ ದಾರಿದೀಪವಾಗಿದೆ ಎಂದರು. ಹಿಂದೂ ಧರ್ಮದ ಅವನತಿಯ ಕಾಲದಲ್ಲಿ ಸನಾತನ ಧರ್ಮ ಹಾಗೂ ಸಂಸ್ಕೃತಿ ಉಳಿಸುವ ನಿಟ್ಟಿನಲ್ಲಿ ದೇಶದೆಲ್ಲೆಡೆ ಕಾಲ್ನಡಿಗೆಯಲ್ಲಿ ಸಂಚರಿಸಿ, ಹಿಂದೂ ಧರ್ಮದ ಆದರ್ಶ, ಆಚಾರ, ವಿಚಾರಗಳನ್ನು ಪಸರಿಸುತ್ತಾ, ಉತ್ತರದ ಬದರಿ, ದಕ್ಷಿಣದ ಶೃಂಗೇರಿ ಶಾರದಾ ಪೀಠ, ಪೂರ್ವದ ಪುರಿ, ಪಶ್ಚಿಮದ ದ್ವಾರಕಾ ಪೀಠ ಈ ನಾಲ್ಕು ಕಡೆ ಶಕ್ತಿಪೀಠಗಳನ್ನು ಸ್ಥಾಪಿಸಿದ್ದಾರೆ. ಶಂಕರಾಚಾರ್ಯರೆಂಬ ಜ್ಞಾನದ ಗಣಿ ಕೇವಲ 32 ವರ್ಷಗಳ ಕಾಲ ಬದುಕಿದ್ದರೂ ಸಹ, ತಮ್ಮ ಜೀತಾವಧಿಯಲ್ಲಿ ಶ್ರೇಷ್ಠ ಸಾಧನೆ ಮಾಡಿದ್ದಾರೆ ಎಂದರು. ಮಂಗಳೂರು ಕರಾವಳಿ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಎಂ.ಎ ಗಫೂರ್ ಮಾತನಾಡಿ, ಸಮಾಜದಲ್ಲಿ ಸಾಮರಸ್ಯದಿಂದ ಜೀವನ ನಡೆಸುವುದರೊಂದಿಗೆ ಸನ್ಮಾರ್ಗದಲ್ಲಿ ನಡೆಯಲು ಹಲವಾರು ಮಹನೀಯರು ಮಾರ್ಗ ತೋರಿದ್ದು, ಅವರುಗಳ ಜಯಂತಿಯನ್ನು ಸರಕಾರದ ವತಿಯಿಂದ ಆಚರಿಸಲಾಗುತ್ತಿದೆ. ಇಂತಹ ಆಚರಣೆಗಳು ಸಂಸ್ಕೃತಿ, ಪರಂಪರೆ, ಆಚಾರ-ವಿಚಾರ, ವೇದ- ಉಪನಿಷತ್ತುಗಳನ್ನು ಉಳಿಸಲು ಸಹಕಾರಿಯಾಗಲಿವೆ ಎಂದರು. ಕಾರ್ಯಕ್ರಮದಲ್ಲಿ ಉಡುಪಿ ನಗರಾಭಿವೃಧ್ದಿ ಪ್ರಾಧಿಕಾರದ ಅಧ್ಯಕ್ಷ ದಿನಕರ ಹೇರೂರು, ಎಎಸ್ಪಿ ಸುಧಾಕರ್ ನಾಯಕ್, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಸುಬ್ರಹ್ಮಣ್ಯ, ವಿವಿಧ ಜಿಲ್ಲಾ ಮಟ್ಟದ ಅಧಿಕಾರಿಗಳು, ಹಾಗೂ ಇತರರು ಉಪಸ್ಥಿತರಿದ್ದರು. ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಪೂರ್ಣಿಮಾ ಅತಿಥಿಗಳನ್ನು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರೆ, ಉಡುಪಿ ಶಂಕರಾಚಾರ್ಯ ಸಮಿತಿ ಸದಸ್ಯ ವಿಶ್ವನಾಥ ಶಾನುಭಾಗ್ ವಂದಿಸಿದರು.
ಕಬ್ಬಡ್ಡಿ ಪಂದ್ಯದ ವೇಳೆ ಬೆಟ್ಟಿಂಗ್: ಗೃಹ ಸಚಿವ ಪರಮೇಶ್ವರ್, ತುಮಕೂರು DC ವಿರುದ್ಧ FIR ದಾಖಲಿಸಲು ಕೋರ್ಟ್ ಆದೇಶ!
ತುಮಕೂರಿನ ಕಬಡ್ಡಿ ಪಂದ್ಯಾವಳಿಯಲ್ಲಿ ₹500 ಬೆಟ್ಟಿಂಗ್ ಕಟ್ಟಿದ ಆರೋಪದ ಮೇಲೆ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಮತ್ತು ತುಮಕೂರು ಜಿಲ್ಲಾಧಿಕಾರಿ ಶುಭಾ ಕಲ್ಯಾಣ್ ವಿರುದ್ಧ ಎಫ್ಐಆರ್ ದಾಖಲಿಸಿ ತನಿಖೆ ನಡೆಸುವಂತೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಆದೇಶಿಸಿದೆ. ಸಾಮಾಜಿಕ ಕಾರ್ಯಕರ್ತ ಎಚ್.ಆರ್. ನಾಗಭೂಷಣ್ ದೂರಿನ ಮೇರೆಗೆ ಈ ಆದೇಶ ನೀಡಲಾಗಿದ್ದು, ಇದು ಅಧಿಕೃತ ಕರ್ತವ್ಯವಲ್ಲದ ಕಾರಣ ಸರ್ಕಾರದ ಪೂರ್ವಾನುಮತಿ ಅಗತ್ಯವಿಲ್ಲ ಎಂದು ಕೋರ್ಟ್ ಸ್ಪಷ್ಟಪಡಿಸಿದೆ.
Udupi | ಎ.22ರಿಂದ ಸಾಗರ ಕವಚ ಅಣಕು ಕಾರ್ಯಾಚರಣೆ
ಉಡುಪಿ: 2026ನೇ ಸಾಲಿನ ಸಾಗರ ಕವಚ ಅಣುಕು ಕಾರ್ಯಾಚರಣೆಯ ಮೊದಲ ಆವೃತ್ತಿ ಎ.22ರ 6:00 ಗಂಟೆಯಿಂದ ಎ.23ರ ಸಂಜೆ 6:00 ಗಂಟೆಯವರೆಗೆ ನಡೆಯಲಿದೆ. ಈ ಕಾರ್ಯಾಚರಣೆಯನ್ನು ಭಾರತೀಯ ತಟ ರಕ್ಷಣಾ ಪಡೆ (ಇಂಡಿಯನ್ ಕೋಸ್ಟ್ ಗಾರ್ಡ್) ನಡೆಸಲಿದೆ. ಇದರಲ್ಲಿ ಪಾಲುದಾರರಾದ ಕರಾವಳಿ ಕಾವಲು ಪೊಲೀಸ್, ಇಂಡಿಯನ್ ನೇವಿ, ಕಸ್ಟಮ್ಸ್, ಸಿ.ಐ.ಎಸ್.ಎಫ್. ಮೀನುಗಾರಿಕೆ ಇಲಾ̧ಖೆ ಬಂದರು ಇಲಾಖೆ, ಜಿಲ್ಲಾ ಪೊಲೀಸ್ ಇಲಾಖೆಯು ಭಾಗವಹಿಸಲಿವೆ. ಈ ಕಾರ್ಯಾಚರಣೆಯ ಭಾಗವಾಗಿ ವಿಧ್ವಂಸಕ ಕೃತ್ಯದ ಆಣುಕು ಪ್ರದರ್ಶನ ನಡೆಸಲು, ಪ್ರಯತ್ನಿಸುವ ಹಾಗೂ ಅದನ್ನು ತಡೆಗಟ್ಟುವಲ್ಲ ಕರಾವಳಿ ತೀರದ ಸಾರ್ವಜನಿಕರು ಹಾಗೂ ಮೀನುಗಾರರು ಎಲ್ಲಾ ಇಲಾಖೆಗಳೊಂದಿಗೆ ಸಹಕರಿಸುವಂತೆ ಕೋರಲಾಗಿದೆ. ಕಾರ್ಯಾಚರಣೆಯು ಕರ್ನಾಟಕ ಕರಾವಳಿ ತೀರ ಪ್ರದೇಶದ ರಕ್ಷಣಾ ವ್ಯವಸ್ಥೆಯನ್ನು ಇನ್ನಷ್ಟು ಸದೃಡಗೊಳಿಸಲು ಸಹಕಾರಿಯಾಗಿದ್ದು ಸಾರ್ವಜನಿಕರು ಆತಂಕಕ್ಕೆ ಒಳಗಾಗದಂತೆ ಕೋರಲಾಗಿದೆ. ಈ ಕಾರ್ಯಾಚರಣೆಯಲ್ಲಿ ಇಂಡಿಯನ್ ಕೋಸ್ಟ ಗಾರ್ಡ್ ಮತ್ತು ಕರಾವಳಿ ಕಾವಲು ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳು ನಿರಂತರವಾಗಿ 36 ಗಂಟೆಗಳ ಕಾಲ ಗಸ್ತು ಕಾರ್ಯಾಚರಣೆಯನ್ನು ಬೋಟುಗಳ ಮೂಲಕ ಕರ್ನಾಟಕ ಕರಾವಳಿ ತೀರದ ಉದ್ದಕ್ಕೂ ನಿರ್ವಹಿಸಲಿದ್ದು ಈ ಬಗ್ಗೆ ವಿವರವನ್ನು ಕರಾವಳಿ ತೀರದ ಸಾರ್ವಜನಿಕರ ಹಾಗೂ ಮೀನುಗಾರರ ಗಮನಕ್ಕೆ ತರಲಾಗಿದೆ. ಜಿಲ್ಲಾ ಪೊಲೀಸ್ ಇಲಾಖೆ ಮತ್ತು ಇತರೆ ಇಲಾಖೆಗಳು ಕೂಡ ಸೂಕ್ತ ಬಂದೋಬಸ್ತ್ ವ್ಯವಸ್ಥೆಯನ್ನು ನಿರ್ವಹಿಸಲಿರುವರು. ಎಂದು ಮಲ್ಪೆ ಕರಾವಳಿ ಕಾವಲು ಪೊಲೀಸ್ನ ಪೊಲೀಸ್ ಅಧೀಕ್ಷಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಮೋದಿ ಭಾಷಣದ ವಿರುದ್ಧ ಹಕ್ಕುಚ್ಯುತಿ ನೋಟಿಸ್ ಸಲ್ಲಿಸಿದ ಕಾಂಗ್ರೆಸ್
ಹೊಸದಿಲ್ಲಿ,ಎ. 21: ಕಾಂಗ್ರೆಸ್ ಸಂಸದ ಕೆ.ಸಿ. ವೇಣುಗೋಪಾಲ್ ಮಂಗಳವಾರ ಲೋಕಸಭಾ ಸ್ಪೀಕರ್ ಓಂ ಬಿರ್ಲಾರಿಗೆ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಹಕ್ಕುಚ್ಯುತಿ ನೋಟಿಸ್ ಸಲ್ಲಿಸಿದರು. ಕಳೆದ ವಾರ ದೇಶವನ್ನುದ್ದೇಶಿಸಿ ಟೆಲಿವಿಶನ್ನಲ್ಲಿ ಮಾಡಿದ ಭಾಷಣದಲ್ಲಿ, ಲೋಕಸಭಾ ಸದಸ್ಯರ ಮೇಲೆ ಸುಳ್ಳು ಅಪವಾದಗಳನ್ನು ಹಾಕುವ ಮೂಲಕ ಅವರ ಸಂಸದೀಯ ಹಕ್ಕಿಗೆ ಮೋದಿ ಚ್ಯುತಿ ತಂದಿದ್ದಾರೆ ಎಂದು ವೇಣುಗೋಪಾಲ್ ಆರೋಪಿಸಿದರು. ‘‘ಲೋಕಸಭೆಯ ಕಲಾಪಗಳ ವಿಧಾನ ಮತ್ತು ನಿರ್ವಹಣೆ ನಿಯಮಗಳ 222ನೇ ನಿಯಮದ ಅಡಿಯಲ್ಲಿ ನಾನು ಈ ಮೂಲಕ ಭಾರತದ ಪ್ರಧಾನಿ ವಿರುದ್ಧ ಹಕ್ಕುಚ್ಯುತಿ ನೋಟಿಸ್ ನೀಡುತ್ತೇನೆ. ಎಪ್ರಿಲ್ 18ರಂದು ಟೆಲಿವಿಶನ್ನಲ್ಲಿ ದೇಶವನ್ನುದ್ದೇಶಿಸಿ ಮಾಡಿದ ಭಾಷಣದಲ್ಲಿ ಅವರು ಲೋಕಸಭಾ ಸದಸ್ಯರ ಮೇಲೆ ಸುಳ್ಳು ಅಪವಾದಗಳನ್ನು ಹೊರಿಸಿದ್ದಾರೆ’’ ಎಂದು ತನ್ನ ಪತ್ರದಲ್ಲಿ ವೇಣುಗೋಪಾಲ್ ಹೇಳಿದ್ದಾರೆ. ದೇಶವನ್ನುದ್ದೇಶಿಸಿ ಮಾಡುವ ಭಾಷಣ ಎಂಬುದಾಗಿ ಬಣ್ಣಿಸಲ್ಪಟ್ಟಿರುವ 29 ನಿಮಿಷಗಳ ಭಾಷಣದಲ್ಲಿ, ಕ್ಷೇತ್ರ ಪುನರ್ವಿಂಗಡಣೆ ಕೋರುವ ಸಂವಿಧಾನ ತಿದ್ದುಪಡಿ ಮಸೂದೆಯನ್ನು ಸೋಲಿಸಿರುವುದಕ್ಕಾಗಿ ಪ್ರಧಾನಿಯವರು ಪ್ರತಿಪಕ್ಷಗಳ ವಿರುದ್ಧ ಹರಿಹಾಯ್ದಿದ್ದಾರೆ ಹಾಗೂ ಪ್ರತಿಪಕ್ಷ ಸದಸ್ಯರ ಮತದಾನ ಮಾದರಿಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎಂದು ಕಾಂಗ್ರೆಸ್ ನಾಯಕ ಆರೋಪಿಸಿದ್ದಾರೆ.
ಮಹಿಳಾ ಮೀಸಲಾತಿಯಲ್ಲಿ ಒಬಿಸಿ, ಮುಸ್ಲಿಮರಿಗೆ ಮೀಸಲಾತಿ ಕೋರಿ ಖಾಸಗಿ ಮಸೂದೆ ಮಂಡನೆ: ಎಸ್ಪಿ ಸಂಸದ ಧರ್ಮೇಂದ್ರ ಯಾದವ್
ಹೊಸದಿಲ್ಲಿ, ಎ. 21: ಮಹಿಳಾ ಮೀಸಲಾತಿ ಕೋಟದೊಳಗೆ ಇತರ ಹಿಂದುಳಿದ ವರ್ಗಗಳು (ಒಬಿಸಿ) ಮತ್ತು ಮುಸ್ಲಿಂ ಮಹಿಳೆಯರಿಗೆ ಪ್ರತ್ಯೇಕ ಮೀಸಲಾತಿಯನ್ನು ಕೋರುವ ಖಾಸಗಿ ಮಸೂದೆಯನ್ನು ಸಮಾಜವಾದಿ ಪಕ್ಷವು ಸಂಸತ್ನಲ್ಲಿ ಮಂಡಿಸುವುದಾಗಿ ಅಝಮ್ಗಢ ಸಂಸದ ಧರ್ಮೇಂದ್ರ ಯಾದವ್ ಸೋಮವಾರ ಹೇಳಿದ್ದಾರೆ. 2023ರಲ್ಲಿ ಸಂಸತ್ನಲ್ಲಿ ಅಂಗೀಕರಿಸಲ್ಪಟ್ಟಿರುವ ಹಾಲಿ ಕಾನೂನು ಒಬಿಸಿ ಮತ್ತು ಮುಸ್ಲಿಮ್ ಮಹಿಳೆಯರಿಗೆ ಪ್ರಾತಿನಿಧ್ಯ ನೀಡುವ ಬಗ್ಗೆ ಸ್ಪಷ್ಟವಾಗಿ ಏನೂ ಹೇಳುವುದಿಲ್ಲ ಎಂದು ಪಕ್ಷದ ಮುಖ್ಯ ಸಚೇತಕರೂ ಆಗಿರುವ ಯಾದವ್ ಹೇಳಿದರು. ‘‘ಇದು ಕಾನೂನಿನ ಅತಿ ದೊಡ್ಡ ವೈಫಲ್ಯ’’ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ‘‘ಒಬಿಸಿ ಮತ್ತು ಮುಸ್ಲಿಮ್ ಮಹಿಳೆಯರ ಪಾಲ್ಗೊಳ್ಳೂವಿಕೆಗೆ ಸಂಬಂಧಿಸಿ ಮಹಿಳಾ ಮೀಸಲಾತಿ ಕಾನೂನಿನಲ್ಲಿ ಸ್ಪಷ್ಟತೆಯಿಲ್ಲ. ಇದು ಅತ್ಯಂತ ದೊಡ್ಡ ಲೋಪ. ಇದನ್ನು ಸರಿಪಡಿಸುವುದಕ್ಕಾಗಿ, ಸಂಸತ್ನಲ್ಲಿ ಖಾಸಗಿ ಮಸೂದೆಯೊಂದನ್ನು ಮಂಡಿಸಲು ಸಮಾಜವಾದಿ ಪಕ್ಷವು ಸಿದ್ಧತೆ ನಡೆಸಿಕೊಳ್ಳುತ್ತಿದೆ’’ ಎಂದು ಧರ್ಮೇಂದ್ರ ಯಾದವ್ ಹೇಳಿರುವುದಾಗಿ ಪಿಟಿಐ ವರದಿ ಮಾಡಿದೆ. ಆಡಳಿತ ಪಕ್ಷದವರಾಗಿರಲಿ ಪ್ರತಿಪಕ್ಷದವರಾಗಿರಲಿ, ಸಚಿವ ಸ್ಥಾನ ಹೊಂದಿರದ ಯಾವುದೇ ಸಂಸದ ಖಾಸಗಿ ಮಸೂದೆಯನ್ನು ಮಂಡಿಸಬಹುದಾಗಿದೆ. 2023ರಲ್ಲಿ ಅಂಗೀಕಾರಗೊಂಡಿರುವ ಮಹಿಳಾ ಮೀಸಲಾತಿ ಕಾನೂನಿನ ಜಾರಿಯನ್ನು ವಿಳಂಬಿಸುತ್ತಿರುವುದಕ್ಕಾಗಿ ಧರ್ಮೇಂದ್ರ ಯಾದವ್ ಬಿಜೆಪಿ ನೇತೃತ್ವದ ಕೇಂದ್ರ ಸರಕಾರವನ್ನು ಟೀಕಿಸಿದರು.
ತಮಿಳುನಾಡಿಗೆ ವಂಚಿಸುವವರಿಗೆ ನಾನು ‘ಅಪಾಯಕಾರಿ’: ಎಂ.ಕೆ.ಸ್ಟಾಲಿನ್
ಚೆನ್ನೈ,ಎ.21: ತಮಿಳುನಾಡಿಗೆ ವಿಶ್ವಾಸದ್ರೋಹ ಮಾಡಲು ಅಥವಾ ಅದರ ಅಭಿವೃದ್ಧಿಗೆ ಅಡ್ಡಿಪಡಿಸಲು ಪ್ರಯತ್ನಿಸುವ ಯಾರಿಗೇ ಆದರೂ ತಾನು ‘‘ಅಪಾಯಕಾರಿ’’ಯೇ ಆಗಿರುತ್ತೇನೆ ಎಂದು ರಾಜ್ಯದ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಮಂಗಳವಾರ ಹೇಳಿದ್ದಾರೆ. ಕೇಂದ್ರ ಸರಕಾರವು ಪ್ರಗತಿ ಸಾಧಿಸಿರುವ ರಾಜ್ಯಗಳನ್ನು ಕ್ಷೇತ್ರ ಮರುವಿಂಗಡಣೆ ಮೂಲಕ ಶಿಕ್ಷಿಸಲು ಹೊರಟಿದೆ ಎಂದು ಅವರು ಆರೋಪಿಸಿದರು. ತಾನು ‘‘ಕಲೈನಾರ್ (ಕರುಣಾನಿಧಿ)ಗಿಂತಲೂ ಹೆಚ್ಚು ಅಪಾಯಕಾರಿ’’ ಎಂಬುದಾಗಿ 2021ರ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಕೇಳಿಬಂದ ಟೀಕೆಯನ್ನು ಉಲ್ಲೇಖಿಸುವ ವೀಡಿಯೊವೊಂದನ್ನು ಸ್ಟಾಲಿನ್ ಸಾಮಾಜಿಕ ಮಾಧ್ಯಮ ‘ಎಕ್ಸ್’ನಲ್ಲಿ ಹಂಚಿಕೊಂಡಿದ್ದಾರೆ. ಹೋಲಿಕೆಗೆ ಪ್ರತಿಕ್ರಿಯಿಸಿದ ಸ್ಟಾಲಿನ್, ಎಂ. ಕರುಣಾನಿಧಿಯವರ ಎತ್ತರಕ್ಕೆ ನಾನು ಏರಲು ಸಾಧ್ಯವಿಲ್ಲ ಎಂದರು. ‘2021ರ ವಿಧಾನಸಭಾ ಚುನಾವಣೆಯ ಅವಧಿಯಲ್ಲಿ, ‘ಸ್ಟಾಲಿನ್ ಕಲೈನಾರ್ಗಿಂತಲೂ ಹೆಚ್ಚು ಅಪಾಯಕಾರಿ’ ಎಂಬುದಾಗಿ ಜನರು ಹೇಳಿದರು. ನನ್ನನ್ನು ಅವರೊಂದಿಗೆ ಯಾವತ್ತೂ ಹೋಲಿಸಲು ಸಾಧ್ಯವಿಲ್ಲ. ನಾನು ಅವರನ್ನು ತಂದೆ ಎಂಬುದಾಗಿ ಕರೆದಿರುವುದಕ್ಕಿಂತ ಹೆಚ್ಚಾಗಿ ನಾಯಕ ಎಂಬುದಾಗಿ ಸಂಬೋಧಿಸಿದ್ದೇನೆ. ತಮಿಳುನಾಡಿಗೆ ವಂಚಿಸಲು ಮತ್ತು ಅದರ ಬೆಳವಣಿಗೆಗೆ ಅಡ್ಡಹಾಕಲು ಬಯಸುವ ಎಲ್ಲರಿಗೂ ನಾನು ಅಪಾಯಕಾರಿಯೇ’’ ಎಂದು ಹೇಳಿದ್ದಾರೆ.
ಹೊಸದಿಲ್ಲಿ, ಎ. 21: ಹುಟ್ಟು ಅಥವಾ ಸ್ಥಾನಮಾನದ ಕಾರಣಕ್ಕಾಗಿ ದೇವರ ವಿಗ್ರಹವನ್ನು ಮುಟ್ಟುವುದರಿಂದ ನಿಷೇಧಿಸಲ್ಪಟ್ಟಿರುವ ಭಕ್ತನೋರ್ವ ಸಂವಿಧಾನದ ಅಡಿಯಲ್ಲಿ ಹಾಗೆ ಮಾಡಲು ಅವಕಾಶ ಕೋರಬಹುದೇ ಎಂಬುದಾಗಿ ಸುಪ್ರೀಂ ಕೋರ್ಟ್ ಮಂಗಳವಾರ ಶಬರಿಮಲೆ ಅಯ್ಯಪ್ಪ ದೇವಸ್ಥಾನದ ಮುಖ್ಯ ಅರ್ಚಕರನ್ನು ಪ್ರಶ್ನಿಸಿದೆ. ಶಬರಿಮಲೆ ದೇವಸ್ಥಾನದ ಆಚರಣೆಗಳಲ್ಲಿ ಇದೆ ಎನ್ನಲಾದ ಭೇದಭಾವಗಳಿಗೆ ಸಂಬಂಧಿಸಿದ ಅರ್ಜಿಯ ವಿಚಾರಣೆ ನಡೆಸಿದ ಒಂಭತ್ತು ನ್ಯಾಯಾಧೀಶರ ಸಂವಿಧಾನ ಪೀಠವು ಈ ಪ್ರಶ್ನೆಯನ್ನು ಕೇಳಿತು. ಧಾರ್ಮಿಕ ಸ್ವಾತಂತ್ರ್ಯದ ವ್ಯಾಪ್ತಿ ಹಾಗೂ ಸಾಂಪ್ರದಾಯಿಕ ಆಚರಣೆಗಳನ್ನು ಎಷ್ಟರ ಮಟ್ಟಿಗೆ ಉಳಿಸಿಕೊಳ್ಳಬೇಕು ಎಂಬ ಬಗ್ಗೆ ನ್ಯಾಯಾಲಯವು ಪರಿಶೀಲನೆ ನಡೆಸುತ್ತಿದೆ. ದೇವಾಲಯದ ಪ್ರಧಾನ ಅರ್ಚಕರ ಪರವಾಗಿ ವಾದ ಮಂಡಿಸಿದ ವಕೀಲರು, ಆಚರಣೆಗಳು ಮತ್ತು ಉತ್ಸವಗಳು ಧರ್ಮವೊಂದರ ಸಮಗ್ರ ಭಾಗವಾಗುತ್ತವೆ ಹಾಗೂ ಅವುಗಳು ದೇವರ ಅಂತರ್ಗತ ಗುಣಲಕ್ಷಣಗಳೊಂದಿಗೆ ಹೊಂದಿಕೊಳ್ಳಬೇಕು ಎಂದು ಹೇಳಿದರು. ಈ ಭಕ್ತರು ನಿರ್ಣಾಯಕ ಗುಣಲಕ್ಷಣಗಳನ್ನು ತಮ್ಮ ಧರ್ಮ ಮತ್ತು ಆಚರಣೆಯ ಭಾಗವಾಗಿ ಒಪ್ಪಿಕೊಳ್ಳಬೇಕೆಂದು ನಿರೀಕ್ಷಿಸಲಾಗುತ್ತದೆ ಎಂದು ವಕೀಲರು ನುಡಿದರು. ಆಗ ನ್ಯಾಯಾಲಯವು ಮೇಲಿನ ಪ್ರಶ್ನೆಯನ್ನು ಕೇಳಿತು. ಇಂಥ ಆಚರಣೆಗಳು ಹುಟ್ಟು ಮತ್ತು ಇತರ ಕಾರಣಗಳ ಆಧಾರದಲ್ಲಿ ಭಕ್ತರನ್ನು ಹೊರಗಿಡುವಾಗ ಅವರ ಮೂಲಭೂತ ಹಕ್ಕುಗಳು ನಿರಾಕರಣೆಯಾಗುವುದಿಲ್ಲವೇ ಎಂದು ಅದು ಪ್ರಶ್ನಿಸಿತು. ದೇವರಲ್ಲಿ ಅಪಾರ ನಂಬಿಕೆ ಹೊಂದಿರುವ ಭಕ್ತನೋರ್ವನಿಗೆ ದೇವರ ಮೂರ್ತಿಯ ಸಮೀಪ ಹೋಗುವ ಅವಕಾಶ ನಿರಾಕರಿಸಲ್ಪಟ್ಟಾಗ, ಅದು ಸಮಾನತೆ ಮತ್ತು ಸಾಂವಿಧಾನಿಕ ರಕ್ಷಣೆ ಬಗ್ಗೆ ಕಳವಳಗಳನ್ನು ಹುಟ್ಟುಹಾಕುತ್ತದೆ ಎಂದು ನ್ಯಾಯಾಲಯ ಹೇಳಿತು. ಪ್ರಮುಖ ಧಾರ್ಮಿಕ ಆಚರಣೆಗಳಿಗೆ ಸಂಬಂಧಿಸಿದ ನಿರ್ಬಂಧಗಳು ಮುಂದುವರಿಯಬಹುದಾಗಿದೆ, ಆದರೆ ಜಾತಿಯ ಏಕೈಕ ಕಾರಣಕ್ಕಾಗಿ ಅರ್ಚಕ ಮುಂತಾದ ಹುದ್ದೆಗಳ ಸಂಪೂರ್ಣ ನಿರಾಕರಣೆಯನ್ನು ಕಾನೂನುಗಳು ಅಥವಾ ಸಂವಿಧಾನದ ವಿಧಿಗಳ ಆಧಾರದಲ್ಲಿ ಸರಕಾರಿ ಮಧ್ಯಪ್ರವೇಶದ ಮೂಲಕ ಇತ್ಯರ್ಥಪಡಿಸಬಹುದಾಗಿದೆ ಎಂದು ಶಬರಿಮಲೆ ಮುಖ್ಯ ಅರ್ಚಕರ ಪರ ವಕೀಲರು ಹೇಳಿದರು.
Aland | ಐಟಿಐನಲ್ಲಿ ಶಿಶಿಕ್ಷಾ ಮೇಳ: 180ರಲ್ಲಿ 150 ಮಂದಿಗೆ ಉದ್ಯೋಗ ಅವಕಾಶ
ಆಳಂದ: ಪಟ್ಟಣದ ಹಳೆಯ ತಹಸೀಲ್ದಾರ ಕಚೇರಿ ಆವರಣದಲ್ಲಿರುವ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ (ಐಟಿಐ)ಯಲ್ಲಿ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ಸಹಯೋಗದಲ್ಲಿ ಹಮ್ಮಿಕೊಳ್ಳಲಾದ ಪ್ರಧಾನ ಮಂತ್ರಿ ರಾಷ್ಟ್ರೀಯ ಶಿಶಿಕ್ಷಾ (ಅಪ್ರೆಂಟಿಸ್) ಮೇಳ ಗ್ರಾಮೀಣ ಯುವಜನತೆಗೆ ಹೊಸ ದಿಕ್ಕು ತೋರಿಸಿದ ಮಹತ್ವದ ಕಾರ್ಯಕ್ರಮವಾಗಿ ಗುರುತಿಸಿಕೊಂಡಿತು. ಮೇಳವನ್ನು ಪುರಸಭೆ ಮುಖ್ಯಾಧಿಕಾರಿ ಸಂಗಮೇಶ ಪನಶೆಟ್ಟಿ ಉದ್ಘಾಟಿಸಿ ಮಾತನಾಡಿ, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಕೌಶಲ್ಯಾಧಾರಿತ ಶಿಕ್ಷಣದ ಅಗತ್ಯತೆಯನ್ನು ಒತ್ತಿಹೇಳಿದರು. “ಯುವಕರು ಕೇವಲ ಪದವಿಗಳ ಹಿಂದೆ ಓಡದೆ ಕೈಗಾರಿಕಾ ಕೌಶಲ್ಯಗಳನ್ನು ಬೆಳೆಸಿಕೊಳ್ಳಬೇಕು. ಇಂತಹ ಮೇಳಗಳು ಗ್ರಾಮೀಣ ವಿದ್ಯಾರ್ಥಿಗಳಿಗೆ ನೇರವಾಗಿ ಉದ್ಯೋಗದ ಅವಕಾಶಗಳನ್ನು ನೀಡುತ್ತವೆ” ಎಂದು ಹೇಳಿದರು. ಕ್ಷೇತ್ರ ಶಿಕ್ಷಣಾಧಿಕಾರಿ ವಿ. ರಂಗಸ್ವಾಮಿ ಶೆಟ್ಟಿ ಮಾತನಾಡಿ, ಶಿಶಿಕ್ಷಾ ಯೋಜನೆ ಯುವಜನರಿಗೆ ತರಬೇತಿಯೊಂದಿಗೆ ಉದ್ಯೋಗ ಅನುಭವವನ್ನು ನೀಡುವ ಪ್ರಮುಖ ಯೋಜನೆ ಎಂದು ವಿವರಿಸಿದರು. ಗಾಣಗಾಪೂರ ಐಟಿಐ ಪ್ರಾಚಾರ್ಯ ಶರಣಬಸಪ್ಪ ಸಡ್ಡು ಹಾಗೂ ಚೌಡಾಪೂರ ಐಟಿಐ ಪ್ರಾಚಾರ್ಯ ಸುಭಾಷ ಯವಳೆ ಕೂಡ ವಿದ್ಯಾರ್ಥಿಗಳಿಗೆ ತಾಂತ್ರಿಕ ಶಿಕ್ಷಣದ ಮಹತ್ವವನ್ನು ವಿವರಿಸಿ, ಅದನ್ನು ಸಮರ್ಪಕವಾಗಿ ಬಳಸಿಕೊಳ್ಳುವಂತೆ ಕರೆ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸ್ಥಳೀಯ ಐಟಿಐ ಪ್ರಾಚಾರ್ಯ ಸಿದ್ಧಪ್ಪ ಜಮಾದಾರ ಮೇಳದ ಉದ್ದೇಶವನ್ನು ವಿವರಿಸಿ, ಗ್ರಾಮೀಣ ವಿದ್ಯಾರ್ಥಿಗಳಿಗೆ ದೊಡ್ಡ ಕಂಪನಿಗಳೊಂದಿಗೆ ನೇರ ಸಂಪರ್ಕ ಸಾಧಿಸುವ ಅವಕಾಶ ಕಲ್ಪಿಸಿರುವುದು ವಿಶೇಷ ಎಂದರು. ಈ ಮೇಳದಲ್ಲಿ ಟೊಯೋಟಾ ಕಿರ್ಲೋಸ್ಕರ್, ಟಾಟಾ ಪವಾರ ಸೋಲಾರ್ ಬೆಂಗಳೂರು, ಮಹೀಂದ್ರ ತೋಶಿಬಾ ಸೇರಿದಂತೆ ಸುಮಾರು 15 ಪ್ರಮುಖ ಕಂಪನಿಗಳು ಭಾಗವಹಿಸಿ, ವಿದ್ಯಾರ್ಥಿಗಳ ಸಂದರ್ಶನ ನಡೆಸಿದವು. ಒಟ್ಟು 180ಕ್ಕೂ ಹೆಚ್ಚು ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದು, ಅದರಲ್ಲಿ ಸುಮಾರು 150 ಮಂದಿಗೆ ಸ್ಥಳದಲ್ಲೇ ಆಯ್ಕೆ ಮಾಡಲಾಗಿರುವುದು ಮೇಳದ ಯಶಸ್ಸಿಗೆ ಸಾಕ್ಷಿಯಾಯಿತು. ಕಿರಿಯ ತಾಂತ್ರಿಕ ಅಧಿಕಾರಿ ಲಾಡಪ್ಪ ಸಕ್ಕರಗಿ, ದೈಹಿಕ ಶಿಕ್ಷಣಾಧಿಕಾರಿ ಅರವಿಂದ ಭಾಸಗಿ, ಪುಸ್ತಕ್ ನೋಡಲ್ ಅಧಿಕಾರಿ ಶ್ರೀಮಂತ ಪಾಟೀಲ, ಯಶ್ವಂತರಾಯ ಮಡ್ಡಿತೋಟ, ಪಿರಪ್ಪ ಪೂಜಾರಿ, ರಮೇಶ್ ಲಿಂಬಿತೋಟ, ಸಂತೋಷ ವಾಲಿ, ಅಣ್ಣಪ್ಪ ಅಣಕಲ್ ಸೇರಿದಂತೆ ಅನೇಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಲಾಡಪ್ಪ ಮುಲಗೆ ಸಕ್ಕರಗಿ ಸ್ವಾಗತಿಸಿ, ಸುಧಾಕರ ಖಂಡೇಕರ್ ವಂದಿಸಿದರು.
ಕಳಪೆ ಬ್ಯಾಟರ್ ಪಟ್ಟಕ್ಕಾಗಿ ರಿಯಾನ್ ಪರಾಗ್- ಅಜಿಂಕ್ಯ ರಹಾನೆ ಪೈಪೋಟಿ: ಶ್ರೀಕಾಂತ್ ಅಸಮಾಧಾನಕ್ಕೆ ಇದೆ ಕಾರಣ!
K Srikkanth On Riyan Parag And Ajinkya Rahane- ಐಪಿಎಲ್ 2026ರಲ್ಲಿ ಕೆಕೆಆರ್ ನಾಯಕ ಅಜಿಂಕ್ಯ ರಹಾನೆ ಮತ್ತು ಆರ್ಆರ್ ನಾಯಕ ರಿಯಾನ್ ಪರಾಗ್ ಅವರ ಕಳಪೆ ಬ್ಯಾಟಿಂಗ್ ಪ್ರದರ್ಶನವನ್ನು ಮಾಜಿ ಕ್ರಿಕೆಟಿಗ ಕೆ. ಶ್ರೀಕಾಂತ್ ತೀವ್ರವಾಗಿ ಟೀಕಿಸಿದ್ದಾರೆ. ರಹಾನೆ (152 ರನ್) ಮತ್ತು ಪರಾಗ್ (61 ರನ್) ಇಬ್ಬರೂ ಅತ್ಯಂತ ಕಳಪೆ ಬ್ಯಾಟರ್ ಪಟ್ಟಕ್ಕಾಗಿ ಸ್ಪರ್ಧಿಸುತ್ತಿರುವಂತಿದೆ ಎಂದು ವ್ಯಂಗ್ಯವಾಡಿರುವ ಅವರು, ಪರಾಗ್ ಅವರ ನಾಯಕತ್ವದ ನಿರ್ಧಾರಗಳನ್ನು 'ಅಸಂಬದ್ಧ' ಎಂದು ಕರೆದಿದ್ದಾರೆ. ಹಿರಿಯ ಆಟಗಾರರ ಈ ವೈಫಲ್ಯವು ಸೋಷಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದ್ದು, ಶ್ರೀಕಾಂತ್ ಮಾತುಗಳು ವೈರಲ್ ಆಗಿವೆ.
Kalaburagi | ಎ.24 ರಂದು ಡಾ.ರಾಜಕುಮಾರ ಜನ್ಮ ದಿನಾಚರಣೆಗೆ ನಿರ್ಧಾರ
ಕಲಬುರಗಿ: ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಜಿಲ್ಲಾಡಳಿತದ ವತಿಯಿಂದ ಏಪ್ರಿಲ್ 24ರಂದು ವರನಟ ಡಾ. ರಾಜಕುಮಾರ ಅವರ 97ನೇ ಜನ್ಮ ದಿನಾಚರಣೆಯನ್ನು ಜಿಲ್ಲಾ ಮಟ್ಟದಲ್ಲಿ ಅರ್ಥಪೂರ್ಣವಾಗಿ ಆಚರಿಸಲು ತೀರ್ಮಾನಿಸಲಾಗಿದೆ. ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ ಅವರ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು. ಅಂದು ಬೆಳಿಗ್ಗೆ 10 ಗಂಟೆಗೆ ನಗರದ ಕನ್ನಡ ಭವನದ ಸುವರ್ಣ ಭವನದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದ್ದು, ಡಾ. ರಾಜ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವುದರ ಜೊತೆಗೆ ಅವರ ಚಿತ್ರಗಳ ಗೀತಗಾಯನ ಕಾರ್ಯಕ್ರಮ ನಡೆಸಲು ನಿರ್ಧರಿಸಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರು ಸೇರಿದಂತೆ ಜನಪ್ರತಿನಿಧಿಗಳನ್ನು ಆಹ್ವಾನಿಸುವುದು, ಕಲಾ ತಂಡಗಳನ್ನು ಅಂತಿಮಗೊಳಿಸುವುದು ಹಾಗೂ ಗಣ್ಯರಿಗೆ ಮುಂಚಿತವಾಗಿ ಆಹ್ವಾನ ಪತ್ರಿಕೆ ಕಳುಹಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಯಿತು. ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು, ಸಾಹಿತಿಗಳು, ಕನ್ನಡಪರ ಸಂಘಟನೆಗಳು ಹಾಗೂ ಅಭಿಮಾನಿಗಳು ಆಗಮಿಸುವ ಹಿನ್ನೆಲೆಯಲ್ಲಿ ಆಸನ ವ್ಯವಸ್ಥೆ, ಕುಡಿಯುವ ನೀರಿನ ಸೌಲಭ್ಯ, ಕನ್ನಡ ಭವನದ ಸ್ವಚ್ಛತೆ ಸೇರಿದಂತೆ ಅಗತ್ಯ ವ್ಯವಸ್ಥೆಗಳನ್ನು ಕಲ್ಪಿಸಲು ನಿರ್ದೇಶನ ನೀಡಲಾಗಿದೆ. ಕಾರ್ಯಕ್ರಮದ ವೇಳೆ ವಿದ್ಯುತ್ ವ್ಯತ್ಯಯವಾಗದಂತೆ ಕ್ರಮ ಕೈಗೊಳ್ಳಬೇಕು ಹಾಗೂ ಪೊಲೀಸ್ ಇಲಾಖೆ ಸೂಕ್ತ ಬಂದೋಬಸ್ತ್ ಒದಗಿಸಬೇಕು ಎಂದು ತಿಳಿಸಲಾಗಿದೆ. ಸಭೆಯಲ್ಲಿ ಮಾತನಾಡಿದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ವಿಜಯಕುಮಾರ ತೇಗಲತಿಪ್ಪಿ, ಡಾ. ರಾಜಕುಮಾರ ಅಭಿಮಾನಿಗಳ ಸಂಘದ ಜಿಲ್ಲಾಧ್ಯಕ್ಷ ರಾಘವೇಂದ್ರ ವಿ. ಕುಲಕರ್ಣಿ, ಸಾಹಿತಿ ಭೀಮಪ್ಪ ಬೋನಾಳ ಸೇರಿದಂತೆ ಹಲವರು, ಡಾ. ರಾಜ್ ಅವರ ಚಿತ್ರಗಳು ಕೇವಲ ಮನರಂಜನೆಗೆ ಸೀಮಿತವಾಗದೇ ಜೀವನದ ಮೌಲ್ಯಗಳನ್ನು ಸಾರುವಂತಿವೆ ಎಂದು ಹೇಳಿದರು. ನಗರದಲ್ಲಿ ಡಾ. ರಾಜಕುಮಾರ ಅವರ ಪುತ್ಥಳಿ ಸ್ಥಾಪನೆಗೆ ಈ ಹಿಂದೆ ನಿರ್ಧಾರ ಕೈಗೊಂಡಿದ್ದರೂ ಅದು ಇನ್ನೂ ಜಾರಿಗೆ ಬಂದಿಲ್ಲ. ಶ್ರೇಷ್ಠ ಕಲಾವಿದನ ಗೌರವಾರ್ಥವಾಗಿ ಪುತ್ಥಳಿ ಸ್ಥಾಪನೆ, ರಸ್ತೆ ಹೆಸರಿಡುವುದು ಹಾಗೂ ಅವರ ಹೆಸರಿನಲ್ಲಿ ಪ್ರಶಸ್ತಿ ನೀಡುವಂತೆ ಮನವಿ ಮಾಡಿದರು. ಈ ವೇಳೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಉಪನಿರ್ದೇಶಕ ಜಡಿಯಪ್ಪ ಗೆದ್ಲಗಟ್ಟಿ ಅವರು ಡಾ.ರಾಜಕುಮಾರ್ ಅವರ ಜನ್ಮ ದಿನಾಚರಣೆಗೆ ಕೈಗೊಳ್ಳಲಾಗಿರುವ ಸಿದ್ಧತೆಗಳ ಕುರಿತು ಸಭೆಗೆ ವಿವರಿಸಿದರು. ಸಭೆಯಲ್ಲಿ ಸಿ.ಸಿ.ಆರ್.ಬಿ ವಿಭಾಗದ ಎ.ಸಿ.ಪಿ ಸುಧಾ ಆದಿ, ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ವಿಜಯಕುಮಾರ ತೇಗಲತಿಪ್ಪಿ ಸೇರಿದಂತೆ ಕಾಲೇಜು ಶಿಕ್ಷಣ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ತೋಟಗಾರಿಕೆ ಇಲಾಖೆ, ಜೆಸ್ಕಾಂ, ಮಹಾನಗರ ಪಾಲಿಕೆಯ ಅಧಿಕಾರಿಗಳು ಸೇರಿದಂತೆ ಅನೇಕ ಸಂಘ-ಸಂಸ್ಥೆಗಳು ಮುಖಂಡರು, ಡಾ.ರಾಜ್ ಅಭಿಮಾನಿಗಳು ಭಾಗವಹಿಸಿದ್ದರು.
ಇಖ್ರಾ ಅರಬಿಕ್ ಸ್ಕೂಲ್ನಲ್ಲಿ ನಾಯಕತ್ವದ ಗುಣ ಕಲಿಸಲು ಆದ್ಯತೆ: ಸೈಯದ್ ಮುಹಮ್ಮದ್ ಬ್ಯಾರಿ
ಇಖ್ರಾ ಅರಬಿಕ್ ಸ್ಕೂಲ್ನ ವಾರ್ಷಿಕ ಮತ್ತು ಹಾಫಿಝ್ (ಕುರಾನ್ ಕಂಠಪಾಠ) ವಿದ್ಯಾರ್ಥಿಗಳಿಗೆ ಅಭಿನಂದನಾ ಕಾರ್ಯಕ್ರಮ
ಜೇವರ್ಗಿ | ದಲಿತ ಬಾಲಕಿಯರ ಸಂಶಯಾಸ್ಪದ ಸಾವು: ಸಿಐಡಿ ತನಿಖೆಗೆ ಆಗ್ರಹಿಸಿ ಬೃಹತ್ ಪ್ರತಿಭಟನೆ
ಜೇವರ್ಗಿ: ತಾಲ್ಲೂಕಿನ ಇಜೇರಿ ಗ್ರಾಮದ ಹೊರವಲಯದಲ್ಲಿ ಇಬ್ಬರು ದಲಿತ ಬಡ ಕುಟುಂಬದ ಅಪ್ರಾಪ್ತ ಸಹೋದರಿಯರು ಸಂಶಯಾಸ್ಪದ ರೀತಿಯಲ್ಲಿ ಬಾವಿಯಲ್ಲಿ ಮೃತ ಸ್ಥಿತಿಯಲ್ಲಿ ಪತ್ತೆಯಾಗಿರುವ ಪ್ರಕರಣವನ್ನು ಸಿಐಡಿಗೆ ವಹಿಸಬೇಕೆಂದು ಆಗ್ರಹಿಸಿ ಬೋವಿ ಹಾಗೂ ವಡ್ಡರ ಸಮಾಜದ ಮುಖಂಡರು ಪಟ್ಟಣದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು. ಮೃತದೇಹಗಳು ಸಂಶಯಾಸ್ಪದ ಪರಿಸ್ಥಿತಿಯಲ್ಲಿ ಪತ್ತೆಯಾಗಿರುವುದರ ಜೊತೆಗೆ, ಅವರ ಕೈಗಳು ಕಟ್ಟಿದ ಸ್ಥಿತಿಯಲ್ಲಿ ಕಂಡುಬಂದಿರುವುದು ಪ್ರಕರಣದ ಗಂಭೀರತೆಯನ್ನು ಹೆಚ್ಚಿಸಿದೆ. ಈ ಹಿನ್ನೆಲೆಯಲ್ಲಿ ಪ್ರಕರಣವನ್ನು ಸಿಐಡಿ ತನಿಖೆಗೆ ಒಪ್ಪಿಸಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದರು. ಪ್ರಕರಣವನ್ನು ಖಂಡಿಸಿ ರಿಲಯನ್ಸ್ ಪಂಪ್ನಿಂದ ಮಿನಿ ವಿಧಾನಸೌಧದವರೆಗೆ ಮೆರವಣಿಗೆ ನಡೆಸಿ, ತಹಶೀಲ್ದಾರ್ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು. ಈ ವೇಳೆ ಮಾತನಾಡಿದ ಹೋರಾಟಗಾರ ರವಿಚಂದ್ರ ಗುತ್ತೇದಾರ್, “ಇದು ಸಾಮಾನ್ಯ ಘಟನೆ ಅಲ್ಲ. ಬಾಲಕಿಯರ ಸಾವಿನ ಹಿಂದೆ ನಿಜವಾದ ಕಾರಣ ಹೊರಬರಬೇಕಾದರೆ ಸಿಐಡಿ ತನಿಖೆ ಅಗತ್ಯ” ಎಂದು ಹೇಳಿದರು. ಜೊತೆಗೆ ಮೃತರ ಕುಟುಂಬಗಳಿಗೆ ತಲಾ 25 ಲಕ್ಷ ರೂ. ಪರಿಹಾರ ನೀಡಬೇಕೆಂದೂ ಆಗ್ರಹಿಸಿದರು. ಈ ಸಂಬಂಧ ಜೇವರ್ಗಿ ಪೊಲೀಸ್ ಠಾಣೆಯಲ್ಲಿ ಸಂಶಯಾಸ್ಪದ ಸಾವು ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ಈ ಘಟನೆ ಗ್ರಾಮೀಣ ಪ್ರದೇಶಗಳಲ್ಲಿ ಮಹಿಳೆಯರು ಮತ್ತು ಬಾಲಕಿಯರ ಸುರಕ್ಷತೆ ಕುರಿತು ಮತ್ತೆ ಗಂಭೀರ ಪ್ರಶ್ನೆಗಳನ್ನು ಎಬ್ಬಿಸಿದ್ದು, ಪ್ರಕರಣದ ಸಂಪೂರ್ಣ ಸತ್ಯಾಂಶ ಹೊರಬರಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ. ಈ ಸಂದರ್ಭದಲ್ಲಿ ಸಮಾಜದ ಹಿರಿಯ ಮುಖಂಡರಾದ ಭೀಮಶಂಕರ್ ಯಲಗೋಡ್, ಭೋವಿ ವಡ್ಡರ ಸಮಾಜದ ಮಾಜಿ ಅಧ್ಯಕ್ಷರಾದ ಶಿವಕುಮಾರ್ ಗುತ್ತೇದಾರ್, ಭೋವಿ ಸಮಾಜದ ಅಧ್ಯಕ್ಷ ಶರಣು ಗುತ್ತೇದಾರ್, ಹನುಮಂತ ದಾಂಡೂಲ್ಕರ್, ಹನುಮಂತ ಮಂಜಲ್ಕರ್, ಸಾಯಿಬಣ್ಣ ಬಂಜೆಪಲ್ಲಿ, ಮಲ್ಲಿಕಾರ್ಜುನ್ ದಂಡೂಲ್ಕರ್, ಬಿಜೆಪಿ ಜಿಲ್ಲಾ ಉಪಾಧ್ಯಕ್ಷರಾದ ಸಿದ್ದು ಸಾಹು ಗೋಗಿ, ಕಲ್ಯಾಣ ಕರ್ನಾಟಕ ಸೇನೆ ಸಂಸ್ಥಾಪಕ ಅಧ್ಯಕ್ಷ ಶಿವಲಿಂಗ ಹಳ್ಳಿ, ಜೈ ಕರ್ನಾಟಕ ತಾಲೂಕ ಅಧ್ಯಕ್ಷ ಭೀಮಾಶಂಕರ್, ಯುವ ಮುಖಂಡರಾದ ಭೀಮು ಖಾಧ್ಯಪುರ್, ಈಶ್ವರ ಹಿಪ್ಪರಗಿ ಸೇರಿದಂತೆ ಅನೇಕರಿದ್ದರು.
ಇಂದಿನ ಭಾರತೀಯ ರಾಜಕೀಯ ಚರ್ಚೆಯಲ್ಲಿ ಜಾರ್ಜ್ ಸೊರೊಸ್ ಹೆಸರು ಆಗಾಗ್ಗೆ ಕೇಳಿಬರುತ್ತದೆ. ಬಿಜೆಪಿ ನಾಯಕರು ಸೊರೊಸ್ ಅವರನ್ನು ಭಾರತದ ಶತ್ರು ಮತ್ತು ಆರ್ಥಿಕ ಯುದ್ಧ ಅಪರಾಧಿ ಎಂದು ಕರೆದಿದ್ದಾರೆ. ಸೊರೊಸ್ ಕಾಂಗ್ರೆಸ್ ಪಕ್ಷದೊಂದಿಗೆ ನಂಟು ಹೊಂದಿದ್ದಾರೆ ಎಂದು ಆರೋಪಿಸಿ ಬಿಜೆಪಿ ನಾಯಕರು ಫಲಕಗಳನ್ನು ಹಿಡಿದು ಸಂಸತ್ತಿನ ಆವರಣದಲ್ಲಿ ಮೆರವಣಿಗೆ ನಡೆಸಿದ್ದರು. ಕೇಂದ್ರ ತನಿಖಾ ಸಂಸ್ಥೆಗಳು ಸೊರೊಸ್ ಅವರ ಓಪನ್ ಸೊಸೈಟಿ ಫೌಂಡೇಶನ್ಸ್ (OSF) ನಿಂದ ಹಣವನ್ನು ಪಡೆದ ನಾಗರಿಕ ಸಮಾಜ ಸಂಸ್ಥೆಗಳ ಮೇಲೆ ದಾಳಿ ಮಾಡಿವೆ. ಸೊರೊಸ್ ಭಾರತದ ವ್ಯವಹಾರಗಳಲ್ಲಿ ಅಪಾಯಕಾರಿ ವಿದೇಶಿ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂದು ಆಡಳಿತಾರೂಢ ಬಿಜೆಪಿ ಹೇಳಿಕೊಂಡೇ ಬಂದಿದೆ. Newslaundry, ಯುಎಸ್ ಕಾರ್ಪೊರೇಟ್ ಫೈಲಿಂಗ್ ಗಳು ಮತ್ತು ಕೇಮನ್ ದ್ವೀಪಗಳ ನೋಂದಣಿ ದಾಖಲೆಗಳಲ್ಲಿ ಕಂಡುಕೊಂಡ ವಿಷಯಗಳು ಅಚ್ಚರಿ ಮೂಡಿಸಿವೆ. Newslaundry ಆ ದಾಖಲೆಗಳಲ್ಲಿ ಕಂಡಿದ್ದೇನು ಎಂಬುದರ ಬಗ್ಗೆ ಆಸ್ಥಾ ಸವ್ಯಸಾಚಿ ವರದಿ ಮಾಡಿದ್ದು, ಅದು ಇಲ್ಲಿದೆ. ಕೇಂದ್ರ ಪೆಟ್ರೋಲಿಯಂ ಸಚಿವ ಹರ್ದೀಪ್ ಸಿಂಗ್ ಪುರಿ ಅವರ ಮಗಳು ಹಿಮಾಯಾನಿ ಪುರಿ ಸೊರೊಸ್ ಹೂಡಿಕೆ ಕಂಪೆನಿಯೊಂದರ ಸಹ ಸಂಸ್ಥಾಪಕಿ ಆಗಿದ್ದಾರೆ. ಜಾರ್ಜ್ ಸೊರೊಸ್ ಅವರ ಪ್ರಮುಖ ಹೂಡಿಕೆ ಸಂಸ್ಥೆಯು ಆಕೆಯ ಕಂಪೆನಿಗೆ ತಮ್ಮ ಪರವಾಗಿ ನಿರ್ವಹಿಸಲು 200 ಮಿಲಿಯನ್ ಡಾಲರ್ ನೀಡಿತ್ತು. ಸೊರೊಸ್ ವಿರೋಧಿ ಅಭಿಯಾನ ಪ್ರಾರಂಭವಾಗುವ ವರ್ಷಗಳ ಮೊದಲು ಇದು ಸಂಭವಿಸಿದೆ. ಪುರಿ, ಅವರ ಪಕ್ಷ ಅಥವಾ ಅವರ ಮಗಳು ಈ ಸಂಪರ್ಕವನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಿಲ್ಲ. ಮಾರ್ಚ್ ನಲ್ಲಿ, ರಾಹುಲ್ ಗಾಂಧಿಯವರು ಲೋಕಸಭೆಯಲ್ಲಿ ಈ ಬಗ್ಗೆ ದಾಖಲೆಗಳನ್ನು ಮಂಡಿಸಲು ಪ್ರಯತ್ನಿಸಿದಾಗ, ಖಜಾನೆ ಪೀಠಗಳಿಂದ ಪ್ರತಿಭಟನೆಗಳು ಎದುರಾಯಿತು. ಆಗ ಸ್ಪೀಕರ್ ರಾಹುಲ್ ಭಾಷಣವನ್ನು ಮೊಟಕುಗೊಳಿಸಿದರು. ಅಂದಿನಿಂದ ಪುರಿ ಅಥವಾ ಬಿಜೆಪಿ ಈ ವಿಷಯವನ್ನು ಪ್ರಸ್ತಾಪಿಸಿಲ್ಲ. ಯಾರ ಕಡೆಯಿಂದ ತಪ್ಪು ನಡೆದಿದೆ ಎಂಬ ಯಾವುದೇ ಸೂಚನೆಯಿಲ್ಲ. ಈ ರೀತಿಯ ವ್ಯವಹಾರ ಸಂಬಂಧಗಳು ಆರ್ಥಿಕ ಜಗತ್ತಿನಲ್ಲಿ ಸಾಮಾನ್ಯವಾಗಿದೆ. ಇದು ಸೊರೊಸ್ ವಿರುದ್ಧ ಬಿಜೆಪಿಯ ಅಭಿಯಾನಕ್ಕೂ ಮುಂಚೆಯೇ ಬಂದಿದೆ. ಆದರೆ ಈ ವಿಷಯದ ಬಗ್ಗೆ ಬಿಜೆಪಿ ಮೌನವಾಗಿದೆ. ►ಸೊರೊಸ್ ವಿರುದ್ಧ ಬಿಜೆಪಿಯ ಯುದ್ಧ ಸೊರೊಸ್-ಸಂಬಂಧಿತ ಸಂಸ್ಥೆಗಳ ವಿರುದ್ಧ ಬಿಜೆಪಿ ಸರ್ಕಾರದ ಸಾಂಸ್ಥಿಕ ಅಭಿಯಾನವು 2015 ರಲ್ಲಿ ಗೃಹ ಸಚಿವಾಲಯವು ಓಪನ್ ಸೊಸೈಟಿ ಫೌಂಡೇಶನ್ಸ್ ಅನ್ನು ವಾಚ್ ಲಿಸ್ಟ್ ನಲ್ಲಿ ಇರಿಸಿದಾಗ ಪ್ರಾರಂಭವಾಯಿತು. ಓಪನ್ ಸೊಸೈಟಿ ಫೌಂಡೇಶನ್ಸ್ನಿಂದ ಭಾರತೀಯ ಎನ್ಜಿಒಗಳಿಗೆ ಯಾವುದೇ ನಿಧಿ ವರ್ಗಾವಣೆಗೆ ಮಾಡುವ ಮೊದಲು ಈಗ ಸಚಿವಾಲಯದ ಅನುಮತಿ ಅಗತ್ಯವಿರುತ್ತದೆ. 2016 ರ ಮಧ್ಯಭಾಗದಿಂದ, ಭಾರತದಲ್ಲಿ ತನ್ನ ಅನುದಾನ ನೀಡುವಿಕೆಯು ಸರ್ಕಾರದ ನಿರ್ಬಂಧಗಳಿಂದ ಸೀಮಿತವಾಗಿದೆ ಎಂದು ಗಮನಿಸಿದ ಓಪನ್ ಸೊಸೈಟಿ ಫೌಂಡೇಶನ್ಸ್ ದೆಹಲಿ ಹೈಕೋರ್ಟ್ನಲ್ಲಿ ಆದೇಶವನ್ನು ಪ್ರಶ್ನಿಸಿತು. ನಂತರ ಓಎಸ್ಎಫ್ ನಿಧಿಯನ್ನು ಪಡೆದ ಸಂಸ್ಥೆಗಳ ಮೇಲೆ ವರ್ಷಗಳ ಒತ್ತಡವಿತ್ತು. ಸೆಪ್ಟೆಂಬರ್ 2022 ರಲ್ಲಿ, ಆದಾಯ ತೆರಿಗೆ ಇಲಾಖೆಯು ಸೆಂಟರ್ ಫಾರ್ ಪಾಲಿಸಿ ರಿಸರ್ಚ್ (CPR), ಆಕ್ಸ್ಫ್ಯಾಮ್ ಇಂಡಿಯಾ ಮತ್ತು ಇಂಡಿಪೆಂಡೆಂಟ್ ಆಂಡ್ ಪಬ್ಲಿಕ್-ಸ್ಪಿರಿಟೆಡ್ ಮೀಡಿಯಾ ಫೌಂಡೇಶನ್ ನಲ್ಲಿ ಸರ್ವೆ ನಡೆಸಿತು. ಹಣಕಾಸಿನ ಮಾನದಂಡಗಳ ಉಲ್ಲಂಘನೆಯ ಆರೋಪದ ಮೂಲಕ ಈ ಕ್ರಮವನ್ನು ಪ್ರಾಥಮಿಕವಾಗಿ ವಿವರಿಸಲಾಗಿದ್ದರೂ, ಈ ಲಾಭರಹಿತ ಸಂಸ್ಥೆಗಳಿಗೆ ಭಾರತದ ವಿರುದ್ಧ ಕಾರ್ಯನಿರ್ವಹಿಸಲು ಸೊರೊಸ್ ಹಣಕಾಸು ಒದಗಿಸಿದ್ದಾರೆ ಎಂದು ಹೇಳಿತ್ತು. ಫೆಬ್ರವರಿ 2023 ರಲ್ಲಿ ಮ್ಯೂನಿಚ್ ಭದ್ರತಾ ಸಮ್ಮೇಳನದಲ್ಲಿ ಸೊರೊಸ್ ಮೋದಿ ಮತ್ತು ಉದ್ಯಮಿ ಅದಾನಿ ನಿಕಟ ಮಿತ್ರರು, ಅವರ ಭವಿಷ್ಯ ಪರಸ್ಪರ ಹೆಣೆದುಕೊಂಡಿದೆ ಮತ್ತು ಅದಾನಿಯ ತೊಂದರೆಗಳು ಭಾರತದ ಫೆಡರಲ್ ಸರ್ಕಾರದ ಮೇಲಿನ ಮೋದಿಯವರ ಹಿಡಿತವನ್ನು ಗಮನಾರ್ಹವಾಗಿ ದುರ್ಬಲಗೊಳಿಸುತ್ತವೆ ಎಂದು ಹೇಳಿದ ನಂತರ ಬಿಜೆಪಿಯ ಸಾರ್ವಜನಿಕ ವಾಗ್ದಾಳಿ ತೀವ್ರವಾಗಿ ಹೆಚ್ಚಾಯಿತು. ಇದಕ್ಕೆ ಸರ್ಕಾರ ತ್ವರಿತವಾಗಿ ಮತ್ತು ತೀಕ್ಷ್ಣವಾಗಿ ಪ್ರತಿಕ್ರಿಯಿಸಿತು. ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ಸೊರೊಸ್ ಅವರನ್ನು ವಯಸ್ಸಾದ, ಶ್ರೀಮಂತ, ಆತ್ಮವಿಶ್ವಾಸದ ಮತ್ತು ಅಪಾಯಕಾರಿ ವ್ಯಕ್ತಿ ಎಂದು ಕರೆದರು. ಮಾಜಿ ಸಚಿವೆ ಸ್ಮೃತಿ ಇರಾನಿ ಬಿಜೆಪಿ ಪತ್ರಿಕಾಗೋಷ್ಠಿಯಲ್ಲಿ ಸೊರೊಸ್ ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಗೆ ಹಾನಿ ಮಾಡುವುದಾಗಿ ಹೇಳಿದ್ದಾರೆ ಎಂದರು. ಸೊರೊಸ್ ಅವರಿಗೆ ಪ್ರಧಾನಿಯೇ ಮುಖ್ಯ ಗುರಿ. ಆತ ನಿಯೋಜಿತ ಆರ್ಥಿಕ ಯುದ್ಧ ಅಪರಾಧಿ ಎಂದಿದ್ದರು ಸ್ಮೃತಿ. ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಸೊರೊಸ್ ಅವರು ಒಂದು ಟ್ರಿಲಿಯನ್ ಡಾಲರ್ ನೊಂದಿಗೆ ಭಾರತ ಸರ್ಕಾರವನ್ನು ಅಸ್ಥಿರಗೊಳಿಸಲು ಪಿತೂರಿ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು. ಅದೇ ವೇಳೆ ರಾಜೀವ್ ಗಾಂಧಿ ಫೌಂಡೇಶನ್ ಸೊರೊಸ್ ಹಣವನ್ನು ಪಡೆದಿದೆಯೇ ಎಂಬ ಬಗ್ಗೆ ಸರ್ಕಾರಿ ತನಿಖೆ ನಡೆಸಬೇಕೆಂದು ಒತ್ತಾಯಿಸಿದರು. ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವಿಯಾ ಸೊರೊಸ್ ಅವರನ್ನು ವಿರೋಧ ಪಕ್ಷದ ನಾಯಕರು ಉಲ್ಲೇಖಿಸಿದ ಐಫೋನ್ ಹ್ಯಾಕಿಂಗ್ ವಿವಾದಕ್ಕೆ ಲಿಂಕ್ ಮಾಡಿದರು. ಅಭಿಯಾನವು ಎಷ್ಟು ತೀವ್ರತೆಯನ್ನು ತಲುಪಿತೆಂದರೆ, 2024 ರ ಅಂತ್ಯದ ವೇಳೆಗೆ ಬಿಜೆಪಿ ನಾಯಕರು ಸೊರೊಸ್ ಕಾಂಗ್ರೆಸ್ ಪಕ್ಷದ ಜತೆ ನಂಟು ಹೊಂದಿದ್ದಾರೆ ಎಂದು ಆರೋಪಿಸಿ ಫಲಕಗಳನ್ನು ಹಿಡಿದು ಸಂಸತ್ತಿನ ಆವರಣದಲ್ಲಿ ಮೆರವಣಿಗೆ ನಡೆಸಿದ್ದರು. 2025 ಮಾರ್ಚ್ನಲ್ಲಿ ಒಎಸ್ಎಫ್ ಫಲಾನುಭವಿ ಘಟಕಗಳಿಗೆ ಸಂಬಂಧಿಸಿದ ಬೆಂಗಳೂರಿನ ಎಂಟು ಸ್ಥಳಗಳ ಮೇಲೆ ಇಡಿ ದಾಳಿ ನಡೆಸಿತ್ತು. ವಿದೇಶಿ ವಿನಿಮಯ ನಿಯಮಗಳನ್ನು ಉಲ್ಲಂಘಿಸಿ ಸೊರೊಸ್ ಆರ್ಥಿಕ ಅಭಿವೃದ್ಧಿ ನಿಧಿಯು 2020–21 ಮತ್ತು 2023–24 ರ ನಡುವೆ ಈ ಕಂಪೆನಿಗಳಿಗೆ ಸುಮಾರು 25 ಕೋಟಿ ರೂ.ಗಳನ್ನು ವರ್ಗಾಯಿಸಿದೆ ಎಂದು ಸಂಸ್ಥೆ ಆರೋಪಿಸಿದೆ. ಹಿಮಾಯಾನಿ ಪುರಿ ಅವರ ಹೆಡ್ಜ್ ಫಂಡ್ ಸೊರೊಸ್ ಪೋರ್ಟ್ಫೋಲಿಯೊದ ಒಂದು ಭಾಗವನ್ನು ಈಗಾಗಲೇ ನಿರ್ವಹಿಸುತ್ತಿದ್ದ ವರ್ಷಗಳ ನಂತರ ಇದೆಲ್ಲವೂ ಬಹಿರಂಗವಾಯಿತು. ಹಿಮಾಯಾನಿ ಪುರಿ ಅವರ ಹೆಡ್ಜ್ ಫಂಡ್, 441 ಮಿಲಿಯನ್ ಡಾಲರ್ ಮತ್ತು ಸೊರೊಸ್ ʼನ್ಯೂಸ್ಲಾಂಡ್ರಿʼ ಕಂಡುಕೊಂಡದ್ದನ್ನು ಅರ್ಥಮಾಡಿಕೊಳ್ಳಲು, ದೊಡ್ಡ ಹೂಡಿಕೆ ಸಂಸ್ಥೆಗಳು ಹೇಗೆ ಕಾರ್ಯನಿರ್ವಹಿಸುತ್ತವೆ ಎಂಬುದರ ಕುರಿತು ತಿಳಿಯುವುದು ಮುಖ್ಯ. ಸೊರೊಸ್ ಫಂಡ್ ಮ್ಯಾನೇಜ್ಮೆಂಟ್ ನಂತಹ ದೊಡ್ಡ ಹಣ ವ್ಯವಸ್ಥಾಪಕರು ಯಾವಾಗಲೂ ಎಲ್ಲವನ್ನೂ ಸ್ವತಃ ಹೂಡಿಕೆ ಮಾಡುವುದಿಲ್ಲ. ಅವರು ಕೆಲವೊಮ್ಮೆ ತಮ್ಮ ಪೋರ್ಟ್ಫೋಲಿಯೊದ ಭಾಗಗಳನ್ನು ಸಣ್ಣ, ವಿಶೇಷ ಬಾಹ್ಯ ಸಂಸ್ಥೆಗಳಿಗೆ ಹಸ್ತಾಂತರಿಸುತ್ತಾರೆ. ಇವರು ತಮ್ಮ ಪರವಾಗಿ ಹೂಡಿಕೆ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ. ಅಂತಹ ಆದೇಶಕ್ಕೆ ಆಯ್ಕೆಯಾಗುವುದು ಗಮನಾರ್ಹ ವೃತ್ತಿಪರ ಅನುಮೋದನೆಯಾಗಿದೆ. ಇದರರ್ಥ ದೊಡ್ಡ ಸಂಸ್ಥೆಯು ನಿಮ್ಮನ್ನು ನಂಬುತ್ತದೆ ಎಂದರ್ಥ. 2009 ಜನವರಿಯಲ್ಲಿ ಆರ್ಥಿಕ ಕುಸಿತಕ್ಕೊಳಗಾದ ಲೆಹ್ಮನ್ ಬ್ರದರ್ಸ್ ನ ಮೂವರು ಮಾಜಿ ಉದ್ಯೋಗಿಗಳಾದ ರಾಬರ್ಟ್ ಮಿಲ್ಲಾರ್ಡ್, ಹಿಮಾಯಾನಿ ಪುರಿ ಮತ್ತು ಆಂಥೋನಿ ಸ್ಟೋನ್ ರಿಯಲ್ಮ್ ಪಾರ್ಟ್ನರ್ಸ್ ಎಂಬ ಹೆಡ್ಜ್ ಫಂಡ್ ಅನ್ನು ಪ್ರಾರಂಭಿಸಿದರು. ಈ ನಿಧಿಯನ್ನು ಡೆಲವೇರ್ ಮತ್ತು ಕೇಮನ್ ದ್ವೀಪಗಳಾದ್ಯಂತ ರಚಿಸಲಾಗಿದೆ. ಇದು ಉದ್ಯಮದಲ್ಲಿ ಸಾಮಾನ್ಯ ವ್ಯವಸ್ಥೆಯಾಗಿದೆ. ಕೇಮನ್ ದ್ವೀಪಗಳು, ಕಡಲಾಚೆಯ ನ್ಯಾಯವ್ಯಾಪ್ತಿಯಾಗಿ, ಸಾಂಸ್ಥಿಕ ಹೂಡಿಕೆದಾರರು ಹೆಚ್ಚಾಗಿ ಬಯಸುವ ಕೆಲವು ತೆರಿಗೆ ದಕ್ಷತೆ ಮತ್ತು ಗೌಪ್ಯತೆ ರಕ್ಷಣೆಗಳನ್ನು ಒದಗಿಸುತ್ತದೆ. ಈ ನಿಧಿಯು ಅರ್ಹ ಖರೀದಿದಾರರಿಗೆ ಮಾತ್ರ ಮುಕ್ತವಾಗಿತ್ತು. ಕನಿಷ್ಠ 5 ಮಿಲಿಯನ್ ಡಾಲರ್ ಹೂಡಿಕೆ ಅಗತ್ಯವಿರುವ ಅಮೆರಿಕ ಕಾನೂನು ವರ್ಗದ ಅಡಿಯಲ್ಲಿ ವರ್ಗೀಕರಿಸಲಾದ ಈ ನಿಧಿಯನ್ನು ಸಾಮಾನ್ಯ ಚಿಲ್ಲರೆ ಹೂಡಿಕೆದಾರರಿಗಿಂತ ಹೆಚ್ಚಾಗಿ ಹೆಚ್ಚಿನ ನಿವ್ವಳ ಮೌಲ್ಯದ ಘಟಕಗಳಿಗಾಗಿ ನಿರ್ದಿಷ್ಟವಾಗಿ ರಚಿಸಲಾಗಿದೆ. ಮಿಲ್ಲಾರ್ಡ್, ಪುರಿ ಮತ್ತು ಸ್ಟೋನ್ ಪ್ರತಿಯೊಬ್ಬರೂ 25-50 ಪ್ರತಿಶತದಷ್ಟು ಮಾಲೀಕತ್ವವನ್ನು ಹೊಂದಿದ್ದರು. 2009 ಜನವರಿಯಿಂದ ಅವರು ಕಾರ್ಯನಿರ್ವಾಹಕ ಅಧಿಕಾರಿಗಳು ಮತ್ತು ನಿರ್ದೇಶಕರಾಗಿ ಸೇವೆ ಸಲ್ಲಿಸಿದರು. ನಿಧಿಯು ಹೂಡಿಕೆದಾರ ಡೊನಾಲ್ಡ್ ಸುಸ್ಮಾನ್ ಅವರ ಪಲೋಮಾ ಇಂಟರ್ನ್ಯಾಷನಲ್ ಎಲ್ ಪಿಯ ಅಂಗಸಂಸ್ಥೆಯಾದ ಸನ್ರೈಸ್ ಪಾರ್ಟ್ನರ್ಸ್ ಲಿಮಿಟೆಡ್ ಪಾರ್ಟ್ನರ್ಶಿಪ್ ಅನ್ನು ಪೋರ್ಟ್ಫೋಲಿಯೊದ ಸಹ-ವ್ಯವಸ್ಥಾಪಕರಾಗಿ ತೋರಿಸಿದೆ. ರಿಯಲ್ಮ್ ಪಾರ್ಟ್ನರ್ಸ್ 74 ಹೂಡಿಕೆದಾರರಿಂದ 441 ಮಿಲಿಯನ್ ಡಾಲರ್ ಗಿಂತಲೂ ಹೆಚ್ಚು ಹಣವನ್ನು ಸಂಗ್ರಹಿಸಿತು. ಇದರಲ್ಲಿ ಸರಿಸುಮಾರು ಮೂರನೇ ಎರಡರಷ್ಟು ಬಂಡವಾಳವು ಸಾಗರೋತ್ತರ ಖಾತೆಗಳಿಂದ ಬಂದಿತು. ಅದರ ಉತ್ತುಂಗದಲ್ಲಿ, ನಿಧಿಯು ಅಮೆರಿಕ ಪಟ್ಟಿಮಾಡಿದ ಕಂಪೆನಿಗಳಲ್ಲಿ ಸುಮಾರು 667.6 ಮಿಲಿಯನ್ ಡಾಲರ್ ಮೌಲ್ಯದ ಭದ್ರತೆಗಳನ್ನು ಹೊಂದಿತ್ತು. 2013 ಫೆಬ್ರವರಿ ನಂತರ ಹೊಸ ಹೂಡಿಕೆದಾರರ ಬದ್ಧತೆಗಳು ನಿಂತುಹೋದವು. ಈ ಕಂಪೆನಿ 2015 ರಲ್ಲಿ ಮುಚ್ಚಲ್ಪಟ್ಟಿತು. ►ಸೊರೊಸ್ ಸಂಪರ್ಕವು ಬರುವುದು ಇಲ್ಲಿಯೇ ನ್ಯೂಸ್ ಲಾಂಡ್ರಿ ಯುಎಸ್ ಸೆಕ್ಯುರಿಟೀಸ್ ಮತ್ತು ಎಕ್ಸ್ಚೇಂಜ್ ಕಮಿಷನ್ (SEC) ನೊಂದಿಗೆ ಸಲ್ಲಿಸಿದ ಫೈಲಿಂಗ್ ಗಳನ್ನು ಪರಿಶೀಲಿಸಿದೆ. ದೊಡ್ಡ ಪೋರ್ಟ್ಫೋಲಿಯೊಗಳನ್ನು ನಿರ್ವಹಿಸುವ ಹೂಡಿಕೆ ಸಲಹೆಗಾರರು ಸಲ್ಲಿಸಬೇಕಾದ ಸಾರ್ವಜನಿಕ ನಿಯಂತ್ರಕ ದಾಖಲೆಗಳಾಗಿವೆ ಅವು. 2010 ಮತ್ತು 2011 ವರ್ಷಗಳ ಈ ಫೈಲಿಂಗ್ ಗಳು, ಆ ಸಮಯದಲ್ಲಿ 8.75 ಬಿಲಿಯನ್ ಡಾಲರ್ ಗೆ ತಲುಪಿದ ಪೋರ್ಟ್ಫೋಲಿಯೊವನ್ನು ನಿರ್ವಹಿಸುತ್ತಿದ್ದ ಸೊರೊಸ್ ಫಂಡ್ ಮ್ಯಾನೇಜ್ಮೆಂಟ್ LLC - ತನ್ನ ಆಸ್ತಿಗಳ ಭಾಗಗಳ ಮೇಲೆ ಹೂಡಿಕೆ ನಿರ್ಧಾರಗಳನ್ನು ಚಲಾಯಿಸಲು 13 ಬಾಹ್ಯ ಸಂಸ್ಥೆಗಳನ್ನು ಆಯ್ಕೆ ಮಾಡಿದೆ ಎಂದು ತೋರಿಸುತ್ತದೆ. ರಿಯಲ್ಮ್ ಪಾರ್ಟ್ನರ್ಸ್ LLC ಆ ಪಟ್ಟಿಯಲ್ಲಿತ್ತು. ಇದು ಆ ಎರಡು ವರ್ಷಗಳವರೆಗೆ ಲಭ್ಯವಿರುವ ಪ್ರತಿಯೊಂದು ತ್ರೈಮಾಸಿಕ ಫೈಲಿಂಗ್ನಲ್ಲಿ ಸ್ಥಿರವಾಗಿ ಕಾಣಿಸಿಕೊಂಡಿತು. SEC ಫೈಲಿಂಗ್ ಗಳು ರಿಯಲ್ಮ್ ಪಾರ್ಟ್ ನರ್ಸ್ LLC ನಿರ್ವಹಿಸುವ ಸೊರೊಸ್ ಪೋರ್ಟ್ಫೋಲಿಯೊದ ಭಾಗವನ್ನು ನಿರ್ದಿಷ್ಟಪಡಿಸುವುದಿಲ್ಲ. ನಮ್ಮ ದತ್ತಾಂಶವು ಫೆಬ್ರವರಿ 2010 ರಿಂದ ಸೆಪ್ಟೆಂಬರ್ 2012 ರವರೆಗೆ ನಮ್ಮನ್ನು ರಿಯಲ್ಮ್ ಪಾರ್ಟ್ನರ್ಸ್ (ಹೆಡ್ಜ್ ಫಂಡ್) ಗೆ ಹಂಚಿಕೆ ಮಾಡಲಾಗಿದೆ ಎಂದು ತೋರಿಸುತ್ತದೆ. ಆರಂಭಿಕ ಹಂಚಿಕೆ 200 ಮಿಲಿಯನ್ ಡಾಲರ್ ಆಗಿದ್ದು, ನಮ್ಮ ಡೇಟಾಬೇಸ್ ತೋರಿಸುವಂತೆ ಫೆಬ್ರವರಿ 2010 ರಲ್ಲಿ ಹಂಚಿಕೆಯಾಗಿದೆ. ನಾವು 2012 ರ ಎರಡನೇ ಭಾಗದಲ್ಲಿ ಹಂಚಿಕೆಯನ್ನು ಪುನಃ ಪಡೆದುಕೊಂಡಿದ್ದೇವೆ ಎಂದು ಜಾರ್ಜ್ ಸೊರೊಸ್ ವಕ್ತಾರ ಮೈಕೆಲ್ ವಾಚನ್ ʼನ್ಯೂಸ್ಲಾಂಡ್ರಿʼಗೆ ಹೇಳಿದ್ದಾರೆ. ಪ್ರಸ್ತುತ ಇದನ್ನು ರೂಪಾಯಿಗೆ ಬದಲಿಸಿದರೆ ಅದರ ಮೌಲ್ಯ 1,867 ಕೋಟಿ ರೂ.ಗಳಿಗಿಂತ ಹೆಚ್ಚಾಗಿರುತ್ತದೆ. ಹರ್ದೀಪ್ ಸಿಂಗ್ ಪುರಿ ಅವರು ಜಾರ್ಜ್ ಸೊರೊಸ್ ಅವರನ್ನು ಒಮ್ಮೆ ಭೇಟಿಯಾಗಿದ್ದಾರೆ. ಅದು 2009 ಅಕ್ಟೋಬರ್ ನಲ್ಲಿ ನ್ಯೂಯಾರ್ಕ್ ನಲ್ಲಿ ನಡೆದ ಭೋಜನಕೂಟದಲ್ಲಾಗಿತ್ತು ಎಂದು ಸಾರ್ವಜನಿಕವಾಗಿ ಹೇಳಿದ್ದಾರೆ. ಆ ಭೋಜನಕೂಟದಲ್ಲಿ ಅವರ ಆಹ್ವಾನಿತರ ಪಟ್ಟಿಯನ್ನು ಆಗಿನ ಸಚಿವ ಶಶಿ ತರೂರ್ ನಿರ್ಧರಿಸಿದ್ದಾರೆ ಎಂದು ಅವರು ಹೇಳಿದ್ದಾರೆ. ಆದರೆ ತರೂರ್, ಪುರಿ ಹೇಳಿಕೆಯನ್ನು ನಿರಾಕರಿಸಿದ್ದಾರೆ. SEC ಫೈಲಿಂಗ್ ಗಳ ಪ್ರಕಾರ, ಆ ಭೋಜನದ ಸರಿಸುಮಾರು ಎರಡು ತಿಂಗಳ ನಂತರ, ಹಿಮಾಯಾನಿ ಪುರಿ ಅವರ ಸಂಸ್ಥೆಯನ್ನು ಸೊರೊಸ್ ಫಂಡ್ ಮ್ಯಾನೇಜ್ಮೆಂಟ್ ಅವರ ಪೋರ್ಟ್ಫೋಲಿಯೊದ ಒಂದು ಭಾಗವನ್ನು ನಿರ್ವಹಿಸಲು ಆಯ್ಕೆ ಮಾಡಿದೆ. ಹರ್ದೀಪ್ ಪುರಿ ಅವರ ಭೋಜನ ಮತ್ತು ಅವರ ಮಗಳ ಸೊರೊಸ್ ಫಂಡ್ ಮ್ಯಾನೇಜ್ ಮೆಂಟ್ನೊಂದಿಗಿನ ವ್ಯವಹಾರ ಸಂಬಂಧದ ನಡುವೆ ಯಾವುದೇ ಸಂಬಂಧವಿದೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ. ಆದರೆ ಸಮಯ ಕಾಕತಾಳೀಯವಾಗಿರಬಹುದು. ರಿಯಲ್ಮ್ ಪಾರ್ಟ್ನರ್ಸ್ ಎಲ್ಎಲ್ಸಿಯನ್ನು ಆಯ್ಕೆ ಮಾಡಲು ಅನುಸರಿಸಿದ ಆಯ್ಕೆ ಪ್ರಕ್ರಿಯೆಯ ಕುರಿತಾದ ಪ್ರಶ್ನೆಗೆ ನ್ಯೂಸ್ಲಾಂಡ್ರಿ ಇನ್ನೂ ಯಾವುದೇ ಪ್ರತಿಕ್ರಿಯೆಯನ್ನು ಸ್ವೀಕರಿಸಿಲ್ಲ. ►ರಾಬರ್ಟ್ ಮಿಲ್ಲಾರ್ಡ್ ಅವರ ಕುರಿತು ಒಂದು ಟಿಪ್ಪಣಿ ರಿಯಲ್ಮ್ ಪಾರ್ಟ್ನರ್ಸ್ ನಲ್ಲಿ ಹಿಮಾಯಾನಿ ಪುರಿ ಅವರ ಜತೆ ಸಹ-ಸಂಸ್ಥಾಪಕರಲ್ಲಿ ಒಬ್ಬರಾದ ರಾಬರ್ಟ್ ಮಿಲ್ಲಾರ್ಡ್, ಅಮೆರಿಕದ ಲೈಂಗಿಕ ಅಪರಾಧಿ ಜೆಫ್ರಿ ಎಪ್ಸ್ಟೀನ್ ನೊಂದಿಗೆ ವೃತ್ತಿಪರ ಪರಿಚಯವನ್ನು ಹೊಂದಿದ್ದಾರೆಂದು ಪ್ರತ್ಯೇಕವಾಗಿ ದಾಖಲಿಸಲಾಗಿದೆ. ಮಿಲ್ಲಾರ್ಡ್ ಮತ್ತು ಎಪ್ಸ್ಟೀನ್ ಇಬ್ಬರೂ 2002 ರಿಂದ 2009 ರವರೆಗೆ ಪ್ರಭಾವಿ ವಿದೇಶಾಂಗ ನೀತಿ ಸಂಸ್ಥೆಯಾದ ಕೌನ್ಸಿಲ್ ಆನ್ ಫಾರಿನ್ ರಿಲೇಶನ್ಸ್ ನ ಸದಸ್ಯರಾಗಿದ್ದರು ಎಂದು ದಾಖಲೆಗಳು ತೋರಿಸುತ್ತವೆ. ನಂತರ, ಮಿಲ್ಲಾರ್ಡ್ MIT ಯ ಮಂಡಳಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾಗ, ಎಪ್ಸ್ಟೀನ್ ಕನಿಷ್ಠ ಐದು ಬಾರಿ ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಿ ದೇಣಿಗೆಗಳನ್ನು ನೀಡಿದರು. ಅವುಗಳಲ್ಲಿ ಕೆಲವು ಅನಾಮಧೇಯವಾಗಿ ರವಾನೆಯಾದವು. ಕಾನೂನು ಸಂಸ್ಥೆ ಗುಡ್ವಿನ್ ಪ್ರಾಕ್ಟರ್ನ ನಂತರದ ಸತ್ಯಶೋಧನಾ ವರದಿಯು ಮಿಲ್ಲಾರ್ಡ್, ಎಪ್ಸ್ಟೀನ್ ಸುತ್ತಮುತ್ತಲಿನ ಸಮಸ್ಯೆಗಳ ಬಗ್ಗೆ ತಿಳಿದಿದ್ದರು, ಆದರೆ ಅವರಿಗೆ ರಹಸ್ಯ ದೇಣಿಗೆ ನೀಡಲು ಅವಕಾಶ ಮಾಡಿಕೊಟ್ಟರು. MIT ಹಿಂದೆಂದೂ ಹಾಗೆ ಮಾಡಿರಲಿಲ್ಲ ಮತ್ತು ಅವರಿಂದ ದೂರವಿರಲು ಹೇಳಲಾಗಿತ್ತು. ಇಬ್ಬರೂ ಸ್ನೇಹಿತರಾಗಿದ್ದರು ಎಂಬುದಕ್ಕೆ ಯಾವುದೇ ಪುರಾವೆಗಳು ವರದಿಯಲ್ಲಿ ಕಂಡುಬಂದಿಲ್ಲ. ಈ ಘಟನೆಗೆ ಹಿಮಾಯಾನಿ ಪುರಿಯವರ ದಾಖಲಿತ ಸಂಪರ್ಕವು ಮಿಲ್ಲಾರ್ಡ್ ಅವರೊಂದಿಗೆ ಒಂದು ಕಂಪೆನಿ ಸ್ಥಾಪಿಸಿದ್ದಕ್ಕೆ ಮಾತ್ರ ಸೀಮಿತವಾಗಿದೆ. ಆ ಸಂಪರ್ಕವು ಹಿಮಾಯಾನಿ ಪುರಿಗೆ ಜೆಫ್ರಿ ಎಪ್ಸ್ಟೀನ್ ಬಗ್ಗೆ ಗೊತ್ತಿತ್ತು ಅಥವಾ ಅವರ ಸಂಪರ್ಕವಿತ್ತು ಎಂಬುದರ ಸೂಚನೆಯಲ್ಲ. ಹಿಮಾಯಾನಿ ಪುರಿ ಮಿಲ್ಲಾರ್ಡ್ ಅವರೊಂದಿಗೆ ಕಂಪೆನಿ ನಡೆಸುತ್ತಿದ್ದಾಗ, ಆಕೆಯ ತಂದೆ ಎಪ್ಸ್ಟೀನ್ ಅವರೊಂದಿಗೆ ತಮ್ಮದೇ ಆದ ಸಂಬಂಧವನ್ನು ಬೆಳೆಸಿಕೊಳ್ಳುತ್ತಿದ್ದರು. ಇದು ಯುಎಸ್ ನ್ಯಾಯ ಇಲಾಖೆ ಬಿಡುಗಡೆ ಮಾಡಿದ ಇಮೇಲ್ಗಳಲ್ಲಿ ಕಂಡುಬಂದಿದೆ. ►ಹರ್ದೀಪ್ ಪುರಿ, ಜೆಫ್ರಿ ಎಪ್ಸ್ಟೀನ್ ಹರ್ದೀಪ್ ಪುರಿ 2009 ರಿಂದ 2013 ರವರೆಗೆ ವಿಶ್ವಸಂಸ್ಥೆಯಲ್ಲಿ ಭಾರತದ ಖಾಯಂ ಪ್ರತಿನಿಧಿಯಾಗಿ ಸೇವೆ ಸಲ್ಲಿಸಿದರು. ನಂತರ ಅವರು ನ್ಯೂಯಾರ್ಕ್ ಮೂಲದ ಚಿಂತಕರ ಚಾವಡಿಯಾದ ಇಂಟರ್ನ್ಯಾಷನಲ್ ಪೀಸ್ ಇನ್ಸ್ಟಿಟ್ಯೂಟ್ (IPI) ಗೆ ಸೇರಿದರು. ಅಲ್ಲಿ ಅವರು ಮಾರ್ಚ್ 2016 ರವರೆಗೆ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಐಪಿಐ ಎಪ್ಸ್ಟೀನ್-ಸಂಬಂಧಿತ ಸಂಸ್ಥೆಗಳಿಂದ 650,000 ಡಾಲರ್ ಪಡೆದಿದೆ ಎಂದು ದಾಖಲಿಸಲಾಗಿದೆ. ಪುರಿ ಅವರ ಅಧಿಕಾರಾವಧಿಯಲ್ಲಿನ ಸ್ವಲ್ಪ ಭಾಗದಲ್ಲಿ ಇದು ನಡೆದಿತ್ತು. ಬಿಜೆಪಿಗೆ ಸೇರಿದ ತಿಂಗಳುಗಳಲ್ಲಿ, ಪುರಿ ತಮ್ಮ ಮೊದಲ ರೆಕಾರ್ಡ್ ಸಂವಹನವನ್ನು ಎಪ್ಸ್ಟೀನ್ ಗೆ ಕಳುಹಿಸಿದ್ದಾರೆ ಎಂದು ನ್ಯಾಯ ಇಲಾಖೆ ಬಿಡುಗಡೆ ಮಾಡಿದ ಇಮೇಲ್ ಗಳು ತೋರಿಸುತ್ತವೆ. ಎಪ್ಸ್ಟೀನ್ ಆಗಲೇ ಶಿಕ್ಷೆಗೊಳಗಾದ ಲೈಂಗಿಕ ಅಪರಾಧಿಯಾಗಿದ್ದರು. ಇಮೇಲ್ ನಲ್ಲಿ, ಎಪ್ಸ್ಟೀನ್ ಪುರಿಯನ್ನು ರೀಡ್ ಹಾಫ್ಮನ್ ಮತ್ತು ಲಾರೆನ್ಸ್ ಸಮ್ಮರ್ಸ್ ಸೇರಿದಂತೆ ಪ್ರಭಾವಿ ವ್ಯಕ್ತಿಗಳಿಗೆ ಪರಿಚಯಿಸಿದರು. 2014 ಜೂನ್ ತಿಂಗಳಲ್ಲಿ ಎಪ್ಸ್ಟೀನ್ ಪುರಿಗೆ ಅವರ ಮ್ಯಾನ್ಹ್ಯಾಟನ್ ನಿವಾಸದಲ್ಲಿ ಆತಿಥ್ಯ ನೀಡಿದ್ದರು. ಅವರು ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಹಾಫ್ಮನ್ ಅವರೊಂದಿಗಿನ ಭೇಟಿಗೆ ಸಹ ಮಧ್ಯವರ್ತಿಯಾಗಿದ್ದರು. ಇಮೇಲ್ ನಲ್ಲಿ ಹಾಫ್ಮನ್, ಜೆಫ್ರಿಗೆ ಜನರ ಬಗ್ಗೆ ಅತ್ಯುತ್ತಮ ಅಭಿರುಚಿ ಇದೆ ಎಂದು ಹೇಳಿದರು, ಅದಕ್ಕೆ ಪುರಿ, ಜೆಫ್ರಿಯ ಜನರ ಅಭಿರುಚಿಯ ಬಗ್ಗೆ ನನಗೆ ಯಾವುದೇ ಸಂದೇಹವಿಲ್ಲ. ಅವರ ಪ್ರವೃತ್ತಿ ಇನ್ನೂ ಉತ್ತಮವಾಗಿದೆ ಎಂದು ಪ್ರತಿಕ್ರಿಯಿಸಿದ್ದರು. ಎಪ್ಸ್ಟೀನ್ ಅವರ ಭೇಟಿಯನ್ನು ನಿಕಟವಾಗಿ ಮೇಲ್ವಿಚಾರಣೆ ಮಾಡಿದರು ಮತ್ತು ಅಪ್ಡೇಟ್ಸ್ ಕೇಳಿದರು. ಎಪ್ಸ್ಟೀನ್, ಹಾಫ್ಮನ್ ಅವರೊಂದಿಗೆ ಏರ್ಪಡಿಸಿದ ಸಭೆಯ ನಂತರ, ಪುರಿ ಎಪ್ಸ್ಟೀನ್ ಗೆ ಬರೆದ ಇಮೇಲ್ ನಲ್ಲಿ ಹೀಗಿದೆ: ನೀನು, ನನ್ನ ಸ್ನೇಹಿತ, ಕಾರ್ಯವನ್ನು ನಡೆಸಿಕೊಡು. ಎಪ್ಸ್ಟೀನ್ ಅವರ ಸಲಹೆಯ ಮೇರೆಗೆ, ಅವರು ಹಾಫ್ ಮನ್ಗಾಗಿ ಭಾರತಕ್ಕೆ ಭೇಟಿಯನ್ನು ಆಯೋಜಿಸಲು ಪ್ರಸ್ತಾಪಿಸಿದರು. ಇದು ದೇಶದ ವಿಜ್ಞಾನ, ತಂತ್ರಜ್ಞಾನ ಮತ್ತು ಸಾಮಾಜಿಕ ಮಾಧ್ಯಮ ಇನ್ಫ್ಲೂಯೆನ್ಸರ್ಸ್ ಜತೆಗೆ ಉನ್ನತ ಮಟ್ಟದ ನೆಟ್ ವರ್ಕಿಂಗ್ ಅನ್ನು ಕೇಂದ್ರೀಕರಿಸಿದೆ. ಹಾಫ್ಮನ್ ಸಭೆಯ ನಂತರ, ಪುರಿ ಎಪ್ಸ್ಟೀನ್ ಅವರ ಮ್ಯಾನ್ ಹ್ಯಾಟನ್ ಟೌನ್ ಹೌಸ್ ನಲ್ಲಿ ಮಾತುಕತೆಗೆ ಪ್ರಸ್ತಾಪಿಸಿದರು. ಫೆಡರಲ್ ದೋಷಾರೋಪಣೆಗಳ ಪ್ರಕಾರ, ಎಪ್ಸ್ಟೀನ್ ಅಪ್ರಾಪ್ತ ವಯಸ್ಸಿನ ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವುದು ಅದೇ ಮ್ಯಾನ್ ಹ್ಯಾಟನ್ ಟೌನ್ ಹೌಸ್ ನಲ್ಲಿ. ಪುರಿ ಎಪ್ಸ್ಟೀನ್ ಸಹಾಯಕರಿಗೆ ವೀಸಾವನ್ನು ತ್ವರಿತಗೊಳಿಸಲು ಸಹಾಯ ಮಾಡಿದರು. ಈ ಕಾರ್ಯಕ್ಕಾಗಿ ಆದ್ಯತೆಯ ಆಧಾರದ ಮೇಲೆ ಇಬ್ಬರು ಸರ್ಕಾರಿ ಅಧಿಕಾರಿಗಳನ್ನು ಸಂಪರ್ಕಿಸಿದರು. ನವೆಂಬರ್ 13 ರಂದು ಪುರಿ ಅವರು ಡಿಜಿಟಲ್ ಇಂಡಿಯಾವನ್ನು ಹಾಫ್ ಮನ್ ಮತ್ತು ಎಪ್ಸ್ಟೀನ್ಗೆ ಪ್ರಸ್ತಾಪಿಸುವಾಗ, ಅವರ ಪುತ್ರಿಯರಾದ ಹಿಮಾಯಾನಿ ಮತ್ತು ತಿಲೋತ್ತಮ ಅವರನ್ನು ಸಹ ಇಮೇಲ್ನಲ್ಲಿ ಉಲ್ಲೇಖಿಸಲಾಗಿದೆ. ತಮ್ಮ ಪುಸ್ತಕಗಳ ಹಸ್ತಾಕ್ಷರವಿರುವ ಪ್ರತಿಗಳನ್ನು ಕಳುಹಿಸಿದ್ದಕ್ಕಾಗಿ ಹಾಫ್ಮನ್ಗೆ ಅವರು ಧನ್ಯವಾದಗಳನ್ನು ಅರ್ಪಿಸಿದರು. ಕ್ರಿಸ್ಮಸ್ ಮುನ್ನಾದಿನದಂದು, ನೀವು ನಿಮ್ಮ ಐಷಾರಾಮಿ ದ್ವೀಪ ದಿಂದ ಯಾವಾಗ ಹಿಂತಿರುಗುತ್ತೀರಿ ಎಂದು ಪುರಿ ಕೇಳಿದರು. ಅದರ ಜೊತೆಗೆ ಆನಂದಿಸಿ. ಅದಕ್ಕಾಗಿ ನಿಮಗೆ ಇತರರಿಂದ ಪ್ರೋತ್ಸಾಹದ ಅಗತ್ಯವಿಲ್ಲ ಎಂಬ ಸಾಲು ಕೂಡಾ ಇಮೇಲ್ ನಲ್ಲಿ ಇದೆ. ಅವರ ಇಮೇಲ್ ವಿನಿಮಯ ಮತ್ತು ಎಪ್ಸ್ಟೀನ್ ನ ನಿವಾಸದಲ್ಲಿ ಮುಂದಿನ ಸಭೆಗಳು ಮುಂದುವರೆದವು. 2026 ಫೆಬ್ರವರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಬಿಜೆಪಿ, ಪುರಿ ಅವರು ಜೆಫ್ರಿ ಎಪ್ಸ್ಟೀನ್ ಅವರನ್ನು ಮೂರು ಅಥವಾ ಗರಿಷ್ಠ ನಾಲ್ಕು ಬಾರಿ ಭೇಟಿಯಾದರು. ಅವರು ಕೇವಲ ಒಂದು ಇಮೇಲ್ ಅನ್ನು ವಿನಿಮಯ ಮಾಡಿಕೊಂಡರು, ಇದೆಲ್ಲವೂ ಅವರ ಐಪಿಐ ಮುಖ್ಯಸ್ಥ ಟೆರ್ಜೆ ರೋಡ್-ಲಾರ್ಸೆನ್ಗೆ ಸಂಬಂಧಿಸಿದ ವಿಷಯಗಳಿಗಾಗಿತ್ತು ಎಂದಿತ್ತು. ಆದರೆ ಅಮೆರಿಕದ ಡಿಒಜೆ ದಾಖಲೆಗಳು ಜೂನ್ 2014 ರಿಂದ ಜೂನ್ 2017 ರವರೆಗೆ ಇಬ್ಬರ ನಡುವೆ ಕನಿಷ್ಠ 62 ಇಮೇಲ್ ವಿನಿಮಯ ನಡೆದಿದೆ ಎಂದು ತೋರಿಸುತ್ತವೆ.
ಜೇವರ್ಗಿ | ಪ್ರಥಮ ದರ್ಜೆ ಕಾಲೇಜಿನಲ್ಲಿ ಬಸವ ಜಯಂತಿ ಆಚರಣೆ
ಜೇವರ್ಗಿ: ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಹಾನ್ ಮಾನವತಾವಾದಿ ಹಾಗೂ ಸಾಂಸ್ಕೃತಿಕ ನಾಯಕ ಬಸವಣ್ಣನವರ 893ನೇ ಜಯಂತಿಯನ್ನು ಸಡಗರದಿಂದ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಬಸವಣ್ಣನವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು. ಬಳಿಕ ಪ್ರಾಂಶುಪಾಲೆ ಡಾ. ಶಾಂತಾ ಅಸ್ಟಿಗೆ ಮಾತನಾಡಿ, ಬಸವಣ್ಣನು ವರ್ಣಭೇದ, ವರ್ಗಭೇದ ಹಾಗೂ ಲಿಂಗಭೇದಗಳನ್ನು ವಿರೋಧಿಸಿ ಸಮಾನತೆಯ ಸಂದೇಶ ಸಾರಿದ ಮಹಾನ್ ಚಿಂತಕ ಎಂದು ಹೇಳಿದರು. ಮನುಷ್ಯನು ಸತ್ಯನಿಷ್ಠೆಯಿಂದ ಶುದ್ಧ ಕಾಯಕ ಮಾಡಬೇಕು ಎಂಬ ಅವರ ತತ್ವಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು. ಸಾಂಸ್ಕೃತಿಕ ಸಮಿತಿ ಸಂಚಾಲಕ ಡಾ. ಖಾಜಾವಲಿ ಈಚನಾಳ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ, ಬಸವಣ್ಣನು ಸಮಾನ ಸಮಾಜ ನಿರ್ಮಾಣಕ್ಕೆ ಶ್ರಮಿಸಿದ ಕ್ರಾಂತಿಕಾರಿ ನಾಯಕರು. ಅವರ ವಚನಗಳಲ್ಲಿ ವ್ಯಕ್ತವಾದ ತತ್ವಗಳು ಭಾರತೀಯ ಸಂವಿಧಾನದಲ್ಲಿಯೂ ಪ್ರತಿಬಿಂಬಿತವಾಗಿವೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಐಕ್ಯೂಎಸಿ ಸಂಯೋಜಕ ಡಾ. ಸಂದೀಪ್ ತಿವಾರಿ, ಸಹ ಸಂಯೋಜಕ ಡಾ.ರವೀಂದ್ರ, ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಶಿವಕುಮಾರ್, ಅತಿಥಿ ಉಪನ್ಯಾಸಕ ಡಾ.ನಾಗನಗೌಡ, ಜಯಪ್ರಕಾಶ್ ಬಿರಾದಾರ್ ಉಪಸ್ಥಿತರಿದ್ದರು. ಇತಿಹಾಸ ವಿಭಾಗದ ಮುಖ್ಯಸ್ಥ ಡಾ. ಶರಣಪ್ಪ ಗುಂಡಗುರ್ತಿ ವಂದಿಸಿದರು. ಈ ಸಂದರ್ಭದಲ್ಲಿ ವಿವಿಧ ವಿಭಾಗಗಳ ಅಧ್ಯಾಪಕರು, ಅತಿಥಿ ಉಪನ್ಯಾಸಕರು ಹಾಗೂ ಬೋಧಕೇತರ ಸಿಬ್ಬಂದಿ ಭಾಗವಹಿಸಿದ್ದರು.
Kalaburagi | ಮಹಿಳಾ ಮೀಸಲಾತಿ ಮಸೂದೆ ವಿಫಲಕ್ಕೆ ಕಾಂಗ್ರೆಸ್ ಕಾರಣ: ಬಸವರಾಜ ಮತ್ತಿಮಡು ಆರೋಪ
ಕಲಬುರಗಿ: ಕೇಂದ್ರ ಸರ್ಕಾರದ ಬಹುನಿರೀಕ್ಷಿತ ಮಹಿಳಾ ಮೀಸಲಾತಿ (ನಾರಿಶಕ್ತಿ ವಂದನ್) ಮಸೂದೆ ಲೋಕಸಭೆಯಲ್ಲಿ ಬಹುಮತ ಪಡೆಯಲು ವಿಫಲವಾಗಿರುವುದಕ್ಕೆ ಪ್ರತಿಪಕ್ಷ ಕಾಂಗ್ರೆಸ್ ಕಾರಣ ಎಂದು ಕಲಬುರಗಿ ಗ್ರಾಮೀಣ ಶಾಸಕ ಬಸವರಾಜ ಮತ್ತಿಮಡು ಆರೋಪಿಸಿದರು. ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ನ ಷಡ್ಯಂತ್ರದ ಕಾರಣದಿಂದಲೇ ಏಪ್ರಿಲ್ 17ರಂದು ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ಸಂಬಂಧಿತ ಮಸೂದೆ ಅಂಗೀಕಾರವಾಗಿಲ್ಲ ಎಂದರು. ಮಹತ್ವಾಕಾಂಕ್ಷಿ ಮಸೂದೆಗೆ ಅಗತ್ಯವಾದ ಮೂರನೇ ಎರಡರಷ್ಟು ಬಹುಮತ ಸಿಗದ ಹಿನ್ನೆಲೆಯಲ್ಲಿ ಅದು ಸೋತಿದ್ದು, ಕ್ಷೇತ್ರ ಪುನರ್ವಿಂಗಡಣೆ ಪ್ರಕ್ರಿಯೆಯೂ ಅಸಾಧ್ಯವಾಗಿದೆ ಎಂದು ಹೇಳಿದರು. ಕಾಂಗ್ರೆಸ್ ಪಕ್ಷ ಮೊದಲಿನಿಂದಲೂ ಮಹಿಳಾ ವಿರೋಧಿ ಧೋರಣೆ ಅನುಸರಿಸುತ್ತಿದ್ದು, ಮಹಿಳೆಯರ ರಾಜಕೀಯ ಹಕ್ಕುಗಳನ್ನು ಅಡ್ಡಿಪಡಿಸುವ ಕೆಲಸ ಮಾಡುತ್ತಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಬಿಜೆಪಿ ವಕ್ತಾರೆ ಡಾ. ಸುಧಾ ಹಾಲಕಾಯಿ ಮಾತನಾಡಿ, ಮಹಿಳೆಯರಿಗೆ ನ್ಯಾಯಯುತ ಹಕ್ಕುಗಳನ್ನು ಒದಗಿಸಬೇಕೆಂಬ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಸದುದ್ದೇಶಕ್ಕೆ ಕಾಂಗ್ರೆಸ್ ಅಡ್ಡಿಯಾಗುತ್ತಿದೆ ಎಂದು ಟೀಕಿಸಿದರು. ಸಂವಿಧಾನದ ಆಶಯ ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳನ್ನು ಕಾಂಗ್ರೆಸ್ ಪಕ್ಷವು ಪದೇಪದೇ ಉಲ್ಲಂಘಿಸುತ್ತಿದೆ. ಸ್ವಾತಂತ್ರ್ಯಾನಂತರದಿಂದಲೂ ಸರ್ವಾಧಿಕಾರ ಧೋರಣೆ ಪ್ರದರ್ಶಿಸುತ್ತಿದ್ದು, ಜನರ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುತ್ತಿದೆ ಎಂದು ಆರೋಪಿಸಿದರು. ದಶಕಗಳಿಂದ ಮಹಿಳಾ ಮೀಸಲಾತಿ ಮಸೂದೆಯನ್ನು ಮುಂದೂಡುತ್ತಿದ್ದ ಕಾಂಗ್ರೆಸ್, ಇದೀಗ ಬಿಜೆಪಿ ಸರ್ಕಾರ ಅದನ್ನು ಜಾರಿಗೆ ತರಲು ಮುಂದಾದಾಗಲೂ ಅಡ್ಡಿಪಡಿಸುತ್ತಿರುವುದು ಮಹಿಳಾ ವಿರೋಧಿ ನಿಲುವನ್ನು ತೋರಿಸುತ್ತದೆ ಎಂದು ಅವರು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಸುಶೀಲಾಬಾಯಿ, ಗೌರಿ ಚಿಚ್ಚಕೋಟಿ, ಭಾರತಿ ಇದ್ದರು.
Abhishek Sharma: ಡಿಸಿ ವಿರುದ್ಧ ಎಸ್ಆರ್ಎಚ್ ಪರ ಅಜೇಯ 135 ರನ್ ಸಿಡಿಸಿ ಮಿಂಚಿದ ಅಭಿಷೇಕ್ ಶರ್ಮಾ
SRH Vs DC IPL 2026: ಹೈದರಾಬಾದ್ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಮಂಗಳವಾರ (ಏಪ್ರಿಲ್ 21) ನಡೆಯುತ್ತಿರುವ ಐಪಿಎಲ್ 2026ರ 31ನೇ ಪಂದ್ಯದಲ್ಲಿ ಎಸ್ಆರ್ಎಚ್ ತಂಡವು ಡೆಲ್ಲಿ ಕ್ಯಾಪಿಟಲ್ಸ್ ಮುಖಾಮುಖಿಯಾಗಿವೆ. ಟಾಸ್ ಸೋತು ಮೊದಲು ಬ್ಯಾಟ್ ಬೀಸಿದ ಹೈದರಾಬಾದ್ ನಿಗದಿತ 20 ಓವರ್ಗಳಲ್ಲಿ ಅಭಿಷೇಕ್ ಶರ್ಮಾ ಸಿಡಿಸಿದ ಅಜೇಯ 135 ರನ್ಗಳ ನೆರವಿನಿಂದ 242
ಉಡುಪಿ ಜಿಲ್ಲಾ ಪೊಲೀಸ್ ಅಧಿಕಾರಿಗಳ ಸಭೆ
ಸುರಪುರದಲ್ಲಿ ಬಸವ ಜಯಂತಿ: ಭವ್ಯ ಮೆರವಣಿಗೆ
ಸುರಪುರ: ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣನವರ 893ನೇ ಜಯಂತಿ ಅಂಗವಾಗಿ ನಗರದಲ್ಲಿ ಬಸವಣ್ಣನವರ ಭಾವಚಿತ್ರದ ಭವ್ಯ ಮೆರವಣಿಗೆ ವಿಜೃಂಭಣೆಯಿಂದ ನಡೆಯಿತು. ನಗರದ ಪಂಚಾಂಗ ಮಠದಿಂದ 103ನೇ ವರ್ಷದ ಬಸವ ಜಯಂತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಜಯಂತಿ ಅಂಗವಾಗಿ ಬೆಳಿಗ್ಗೆ ಸಿದ್ದಯ್ಯ ಸ್ವಾಮಿ ಬಳುಂಡಗಿಮಠ ಅವರ ಮೂಲಕ ಪೂಜಾ ರುದ್ರಾಭಿಷೇಕ ನೆರವೇರಿಸಲಾಯಿತು. ಸುರಪುರ ಅರಸು ಮನೆತನದ ರಾಜಾ ಲಕ್ಷ್ಮೀನಾರಾಯಣ ನಾಯಕ ಅವರು ಷಟಸ್ಥಲ ಧ್ವಜಾರೋಹಣ ನೆರವೇರಿಸಿದರು. ಬಳಿಕ ಬಸವ ಜಯಂತ್ಯೋತ್ಸವ ಸಮಿತಿ ಅಧ್ಯಕ್ಷ ಸುನೀಲ್ ಸರಪಟ್ಪಣಶೆಟ್ಟಿ ನೇತೃತ್ವದಲ್ಲಿ ಪ್ರಸಾದ ವಿತರಣೆ ನಡೆಯಿತು. ಸಾಯಂಕಾಲ ನಡೆದ ಭವ್ಯ ಮೆರವಣಿಗೆಗೆ ಕಡ್ಲೆಪ್ಪನವರ ನಿಷ್ಠಿ ವಿರಕ್ತ ಮಠದ ಶ್ರೀ ಪ್ರಭುಲಿಂಗ ಮಹಾಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸಿದ್ದರು. ಶಾಸಕ ರಾಜಾ ವೇಣುಗೋಪಾಲ ನಾಯಕ ಅವರು ಮೆರವಣಿಗೆಗೆ ಚಾಲನೆ ನೀಡಿದರು. ಪಂಚಾಂಗ ಮಠದಿಂದ ಆರಂಭವಾದ ಮೆರವಣಿಗೆ ದರಬಾರ ರಸ್ತೆ, ಮಹಾತ್ಮ ಗಾಂಧಿ ವೃತ್ತ, ಹನುಮಾನ ಟಾಕೀಸ್, ಶ್ರೀ ವೇಣುಗೋಪಾಲ ಸ್ವಾಮಿ ದೇವಸ್ಥಾನ ಬಳಿಯಿಂದ ಸರ್ದಾರ್ ವಲ್ಲಭಭಾಯ್ ಪಟೇಲ್ ವೃತ್ತ, ಕಬಾಡಗೇರ ಮಾರ್ಗವಾಗಿ ಸಾಗಿ ಮರಳಿ ಪಂಚಾಂಗ ಮಠ ತಲುಪಿತು. ಈ ಎಲ್ಲ ಕಾರ್ಯಕ್ರಮದ ನೇತೃತ್ವ ವಿರೇಶ ಪಂಚಾಂಗಮಠ ವಹಿಸಿದ್ದರು. ಮೆರವಣಿಗೆಯಲ್ಲಿ ಮುಖಂಡರಾದ ತಾಲೂಕು ವೀರಶೈವ ಲಿಂಗಾಯತ ಸಮಿತಿ ಅಧ್ಯಕ್ಷ ಸುರೇಶ್ ಆರ್.ಸಜ್ಜನ್,ಮಲ್ಲಣ್ಣ ಸಾಹುಕಾರ ನರಸಿಂಗಪೇಟ, ಸುರೇಶ್ ತಂಬಾಕೆ, ಬಸವರಾಜ ಜಾಲಹಳ್ಳಿ, ಮಹೇಶ ಯಾದವ್, ಪ್ರಕಾಶ ಅಂಗಡಿ ಕನ್ನೆಳ್ಳಿ, ದೇವಿಂದ್ರಪ್ಪ ಕಳ್ಳಿಮನಿ, ಶರಣಯ್ಯ ಸ್ವಾಮಿ ಲಕ್ಷ್ಮೀಪುರ,ಸಿದ್ದಯ್ಯ ಸ್ವಾಮಿ, ಪರಶುರಾಮ ಗೋಡಿಹಾಳ, ವಿರೇಶ ನಿಷ್ಠಿ ದೇಶಮುಖ,ಮಲ್ಲಿಕಾರ್ಜುನ ರಡ್ಡಿ ಅಮ್ಮಾಪುರ, ಮಂಜುನಾಥ ಜಾಲಹಳ್ಳಿ, ಶರಣು ಮುಧೋಳ ನರಸಿಂಗಪೇಟ, ಶರಣು ಕಳ್ಳಿಮನಿ, ಮಂಜುನಾಥ ಗಚ್ಚಿನಮನಿ, ಚಂದ್ರಶೇಖರ ಕುಂಬಾರ ಮಲ್ಯ, ಮಹಾಂತೇಶ ಶಿರವಾಳ ಸೇರಿದಂತೆ ನೂರಾರು ಜನ ಭಾಗವಹಿಸಿದ್ದರು.
Maski | ಅಕಾಲಿಕ ಮಳೆ : ತೆಂಗಿನ ಮರಕ್ಕೆ ಸಿಡಿಲು ಬಡಿದು ಮರಕ್ಕೆ ಬೆಂಕಿ
ಮಸ್ಕಿ: ಬಿಸಿಲಿನ ತಾಪ ದಿನೇ ದಿನೇ ಏರಿಕೆಯಾಗುತ್ತಿದ್ದು, ಬಿರುಬಿಸಿಲಿನಿಂದ ಜನರು ಬೇಸತ್ತು ಹೋಗಿದ್ದಾರೆ. ಮಂಗಳವಾರ ಸಾಯಂಕಾಲ ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಸುರಿದ ಅಕಾಲಿಕ ಮಳೆ ತುಸು ತಂಪು ನೀಡಿದ್ದು, ಜನರು ನಿಟ್ಟುಸಿರು ಬಿಟ್ಟಿದ್ದಾರೆ. ಆದರೆ ಈ ಮಳೆಯ ಜೊತೆಗೆ ಸಂಭವಿಸಿದ ಸಿಡಿಲಿನ ಅಬ್ಬರದಿಂದ ಮಸ್ಕಿ ತಾಲೂಕಿನ ಹಿರೇದಿನ್ನಿ ಗ್ರಾಮದಲ್ಲಿ ತೆಂಗಿನ ಮರಕ್ಕೆ ಸಿಡಿಲು ಬಡಿದು, ಮರ ಬೆಂಕಿಗಾಹುತಿಯಾದ ಘಟನೆ ನಡೆದಿದೆ.
'ಪುರುಷ ರಾಜಕಾರಣಿ ಕೋಣೆಯಿಂದಲೇ ಮಹಿಳೆಯರ ರಾಜಕೀಯ ಪ್ರವೇಶ' - ಸಂಸದ ಪಪ್ಪು ಯಾದವ್ ವಿವಾದಾತ್ಮಕ ಹೇಳಿಕೆ!
ಬಿಹಾರದ ಪಕ್ಷೇತರ ಎಂಪಿ ಪಪ್ಪು ಯಾದವ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಪುರುಷ ರಾಜಕಾರಣಿಯ ನಾಯಕರ ಕೋಣೆಗೆ ಹೋಗದೆ ಯಾವ ಮಹಿಳೆಯೂ ರಾಜಕೀಯ ಪ್ರವೇಶ ಸಾಧ್ಯವಾಗುವುದಿಲ್ಲ ಎಂದು ಹೇಳಿದ್ದಾರೆ. ಈ ಬಗ್ಗೆ ಸಾಕಷ್ಟು ವಿರೋಧ ವ್ಯಕ್ತವಾಗಿದ್ದು, ಬಿಹಾರ ರಾಜ್ಯ ಮಹಿಳಾ ಆಯೋಗವೂ ಕೂಡ ಕಿಡಿಕಾರಿದೆ.
ಮೇ 16, 17ರಂದು ಕನಕಗಿರಿ ಉತ್ಸವ | ಉತ್ಸವಕ್ಕೆ ಅಗತ್ಯ ಸಿದ್ಧತೆಯಾಗಲಿ: ಸಚಿವ ತಂಗಡಗಿ
ಕೊಪ್ಪಳ : ನಡೆಯುತ್ತೋ ಇಲ್ಲವೋ ಎಂಬ ಅನುಮಾನಕ್ಕೆ ತೆರೆ ಬಿದ್ದಿದ್ದು, ಕನಕಗಿರಿ ಉತ್ಸವ–2026ನ್ನು ಮೇ 16 ಮತ್ತು 17ರಂದು ನಡೆಸಲು ತೀರ್ಮಾನಿಸಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ಎಸ್.ತಂಗಡಗಿ ಅವರ ಅಧ್ಯಕ್ಷತೆಯಲ್ಲಿ ಶ್ರೀ ಕನಕಾಚಲಪತಿ ದೇವಸ್ಥಾನದ ಆವರಣದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು. ಉತ್ಸವದ ದಿನಾಂಕ ಕುರಿತು ಸಾರ್ವಜನಿಕರಿಂದ ಸಲಹೆಗಳನ್ನು ಪಡೆದ ಸಚಿವರು, ಸ್ಥಳೀಯ ಜಾತ್ರೆಯೊಂದಿಗೆ ಉತ್ಸವ ಆಯೋಜಿಸಿದರೆ ಜನತೆಗೆ ಅನುಕೂಲವಾಗುತ್ತದೆ ಎಂದು ತಿಳಿಸಿದರು. ಈ ಹಿನ್ನೆಲೆಯಲ್ಲಿ ಮೇ 9 ಮತ್ತು 10ರ ಬದಲಿಗೆ ಮೇ 16 ಮತ್ತು 17ರಂದು ಉತ್ಸವ ನಡೆಸಲು ನಿರ್ಧರಿಸಲಾಯಿತು. ಈ ಬಾರಿಯ ಉತ್ಸವವನ್ನು ಇನ್ನಷ್ಟು ಅದ್ದೂರಿಯಾಗಿ ಆಚರಿಸಲು ವಿವಿಧ ಕಾರ್ಯಕ್ರಮಗಳನ್ನು ರೂಪಿಸಲಾಗಿದ್ದು, ಎರಡು ದಿನಗಳ ಕಾಲ ಹೆಲಿಕ್ಯಾಪ್ಟರ್ ರೈಡ್ ವ್ಯವಸ್ಥೆ ಮಾಡಲಾಗುವುದು. ಮೇ 14 ಮತ್ತು 15ರಂದು ಕ್ರೀಡಾಕೂಟ ಆಯೋಜನೆ ಮಾಡುವುದಾಗಿ ತಿಳಿಸಿದರು. ಬೇಸಿಗೆ ಹಿನ್ನೆಲೆಯಲ್ಲಿ ಮೆರವಣಿಗೆಗಳನ್ನು ಬೆಳಗಿನ ಅವಧಿಯಲ್ಲಿ ನಡೆಸುವಂತೆ ಸೂಚನೆ ನೀಡಲಾಗಿದ್ದು, ಕವಿಗೋಷ್ಠಿ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಎರಡೂ ದಿನ ನಡೆಯಲಿವೆ. ಕನಕಗಿರಿಯಲ್ಲಿ ಮೈಸೂರು ಮಾದರಿಯಲ್ಲಿ ಲೈಟಿಂಗ್ ವ್ಯವಸ್ಥೆ ಕಲ್ಪಿಸುವುದಾಗಿ ತಿಳಿಸಲಾಗಿದೆ. ಸಾರ್ವಜನಿಕರ ಸಲಹೆಯಂತೆ ಕುಡಿಯುವ ನೀರಿನ ವ್ಯವಸ್ಥೆ, ದೇವಾಲಯ ಹಾಗೂ ಕೋಟೆ ದುರಸ್ತಿ ಸೇರಿದಂತೆ ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಲಾಗುವುದು. ಉತ್ಸವದ ಯಶಸ್ಸಿಗಾಗಿ 18 ಸಮಿತಿಗಳನ್ನು ರಚಿಸಿ, ಕಾರ್ಯ ಹಂಚಿಕೆ ಮಾಡಲಾಗಿದೆ. ಸಂಜೆ ವೇಳೆಯಲ್ಲಿ ಕೊಪ್ಪಳದಿಂದ ಕನಕಗಿರಿಗೆ ವಿಶೇಷ ಬಸ್ ವ್ಯವಸ್ಥೆ ಕಲ್ಪಿಸಲು ಕೆಎಸ್ಆರ್ಟಿಸಿ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಜಿಲ್ಲಾಧಿಕಾರಿ ಡಾ. ಸುರೇಶ ಬಿ. ಇಟ್ನಾಳ ಅವರು ಮಾತನಾಡಿ, ಉತ್ಸವಕ್ಕಾಗಿ ಸುಮಾರು 6 ಕೋಟಿ ರೂ. ಅನುದಾನ ನಿಗದಿಪಡಿಸಲಾಗಿದ್ದು, ಎರಡು ವೇದಿಕೆಗಳ ನಿರ್ಮಾಣ ಹಾಗೂ ಕಲಾವಿದರ ಆಹ್ವಾನಕ್ಕೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು. ಉತ್ಸವದಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಸಚಿವರು ಮನವಿ ಮಾಡಿದರು. ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ರಾಮ್ ಎಲ್ ಅರಸಿದ್ದಿ, ಪಟ್ಟಣ ಪಂಚಾಯತ್ ಅಧ್ಯಕ್ಷರಾದ ತನುಶ್ರೀ ರಾಮಚಂದ್ರ, ಉಪಾಧ್ಯಕ್ಷರಾದ ಕಂಠೀರಾವ್, ಅಪರ ಜಿಲ್ಲಾಧಿಕಾರಿಗಳಾದ ಸಿದ್ರಾಮೇಶ್ವರ, ಸಹಾಯಕ ಆಯುಕ್ತರಾದ ಕ್ಯಾಪ್ಟನ್ ಮಹೇಶ ಮಾಲಗಿತ್ತಿ, ಡಿವೈಎಸ್ಪಿ ನ್ಯಾಮಗೌಡರ ಹಾಗೂ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ವರ್ಗಾವಣೆ ಆದೇಶ ಪಡೆದ ಪೊಲೀಸ್ ಕಾನ್ಸ್ಟೇಬಲ್ಗಳ ಬಿಡುಗಡೆಗೆ ಸರಕಾರಿ ನಿಯಮ ಅಡ್ಡಿ: ಪೊಲೀಸ್ ಕಮಿಷನರ್ ಸ್ಪಷ್ಟನೆ
Kuknoor | ಅಂಗಡಿಗಳಿಗೆ ಮರುಸ್ಥಾಪನೆಗೆ ಅವಕಾಶ ನೀಡುವಂತೆ ವ್ಯಾಪಾರಿಗಳ ಮನವಿ
ಕುಕನೂರು: ಪಟ್ಟಣದ ಹಳೆ ನಾಡ ಕಾರ್ಯಾಲಯ ಮುಂಭಾಗದಲ್ಲಿ ಇತ್ತೀಚೆಗೆ ತೆರವುಗೊಳಿಸಲಾದ ಅಂಗಡಿಗಳ ವ್ಯಾಪಾರಿಗಳು ತಮ್ಮ ಜೀವನೋಪಾಯದ ಹಿತದೃಷ್ಟಿಯಿಂದ ಅದೇ ಸ್ಥಳದಲ್ಲಿ ಚಿಕ್ಕದಾಗಿ ಅಂಗಡಿಗಳನ್ನು ಪುನಃ ಸ್ಥಾಪಿಸಲು ಅವಕಾಶ ನೀಡುವಂತೆ ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿಗೆ ಮಂಗಳವಾರ ಮನವಿ ಪತ್ರ ಸಲ್ಲಿಸಿದರು. ಹಲವಾರು ವರ್ಷಗಳಿಂದ ಅದೇ ಸ್ಥಳದಲ್ಲಿ ವ್ಯಾಪಾರ ನಡೆಸಿಕೊಂಡು ಕುಟುಂಬವನ್ನು ನಿರ್ವಹಿಸುತ್ತಿದ್ದೇವೆ. ಅಚಾನಕ್ ನಡೆದ ತೆರವು ಕಾರ್ಯದಿಂದ ಸಂಕಷ್ಟಕ್ಕೆ ಸಿಲುಕಿದ್ದೇವೆ ಎಂದು ವ್ಯಾಪಾರಿಗಳು ತಿಳಿಸಿದ್ದಾರೆ. ಅಧಿಕಾರಿಗಳ ಸೂಚನೆ ಮೇರೆಗೆ ಅಂಗಡಿಗಳನ್ನು ತೆರವುಗೊಳಿಸಿದರೂ, ಪರ್ಯಾಯ ವ್ಯವಸ್ಥೆ ಇಲ್ಲದ ಕಾರಣ ಬದುಕು ಸಾಗಿಸುವುದು ಕಷ್ಟಕರವಾಗಿದೆ. “ನಾವು ದಿನಗೂಲಿ ರೀತಿಯಲ್ಲಿ ವ್ಯಾಪಾರ ಮಾಡುವವರು. ಅಂಗಡಿಗಳೇ ನಮ್ಮ ಜೀವನಾಧಾರವಾಗಿದ್ದು, ತಕ್ಷಣ ಪರ್ಯಾಯ ಸ್ಥಳ ನೀಡದಿದ್ದರೆ ಕುಟುಂಬ ನಿರ್ವಹಣೆ ಅಸಾಧ್ಯವಾಗುತ್ತದೆ” ಎಂದು ಮನವರಿಕೆ ಮಾಡಿಕೊಂಡಿದ್ದಾರೆ. ಯಲಬುರ್ಗಾ ಪಟ್ಟಣದ ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಮುಂದೆ ಇರುವಂತೆ ಅವಕಾಶ ಕಲ್ಪಿಸಿ, ಹಳೆಯ ಸ್ಥಳದಲ್ಲಿಯೇ ಸಣ್ಣ ಪ್ರಮಾಣದಲ್ಲಿ ಅಂಗಡಿಗಳನ್ನು ನಡೆಸಲು ಅನುಮತಿ ನೀಡಬೇಕು ಎಂದು ಆಗ್ರಹಿಸಿದ್ದಾರೆ. ಪಟ್ಟಣದ ಸೌಂದರ್ಯ ಹಾಗೂ ಸಂಚಾರಕ್ಕೆ ಅಡ್ಡಿಯಾಗದ ರೀತಿಯಲ್ಲಿ ನಿಯಮಬದ್ಧವಾಗಿ ಅಂಗಡಿಗಳನ್ನು ನಡೆಸಲು ನಾವು ಸಿದ್ಧರಿದ್ದೇವೆ ಎಂದು ವ್ಯಾಪಾರಿಗಳು ಭರವಸೆ ನೀಡಿದ್ದಾರೆ. ಈ ಸಂದರ್ಭದಲ್ಲಿ ಪ್ರವೀಣದಾಸ್, ಜೆ.ಕೆ.ಟೈಲರ್, ರಾಜಾಸಾಬ್, ಬಸವರೆಡ್ಡಿ, ಪವಿತ್ರಾ, ಪ್ರವೀಣ, ಸಿಕಾಂದರ್, ನವೀನ್, ಸಂಗಯ್ಯ ದ್ಯಾಂಪೂರು, ಹುಸೇನಸಾಬ್, ಮಹೆಬೂಬಸಾಬ್ ಗುಡಿಹಿಂದಲ್, ಸುಭಾಷ ಸದರಿ, ವಿರಾಜ್ ಹಡಪದ, ಹುಸೆನಬಾಷಾ ಕೊಪ್ಪದ, ಮಂಜುನಾಥ ಮಾಲಗಿತ್ತಿ, ಶಿವಪ್ಪ, ಮುತ್ತಪ್ಪ ಸಂಗನಾಳ, ವೀರಯ್ಯ ಬಂಡಿ, ಶೇಖಪ್ಪ ದ್ಯಾಂಪೂರು, ಮದರಷಾ ಮಕಾಂದರ್ ಸೇರಿದಂತೆ ಅನೇಕ ವ್ಯಾಪಾರಿಗಳು ಉಪಸ್ಥಿತರಿದ್ದರು.
Shahabad | ಗುಡುಗು-ಮಿಂಚು ಸಹಿತ ಸುರಿದ ಸಾಧಾರಣ ಮಳೆ
ಶಹಾಬಾದ್ : ನಗರದಲ್ಲಿ ಮಂಗಳವಾರ ಗುಡುಗು-ಮಿಂಚು ಸಹಿತ ಸುರಿದ ಸಾಧಾರಣ ಮಳೆಯಿಂದ ಬಿಸಿಲಿನಿಂದ ಬಸವಳಿದ ಜನರಿಗೆ ವರುಣ ತಂಪು ನೀಡಿದ್ದಾನೆ. ನಗರದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆಯಾಗಿದ್ದು, ಕಳೆದ ಒಂದು ವಾರದಿಂದ ಗರಿಷ್ಠ 44 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದ್ದರಿಂದ ಜನರು ತೀವ್ರ ಬಿಸಿಲಿನಿಂದ ಬಳಲುತ್ತಿದ್ದರು. ಮಳೆಯಾಗುತ್ತಿದ್ದಂತೆ ಜನರಲ್ಲಿ ಹರ್ಷ ವ್ಯಕ್ತವಾಗಿದೆ. ಇನ್ನೂ ಮೋಡ ಕವಿದ ವಾತಾವರಣ ಮುಂದುವರಿದಿದ್ದು, ಮುಂದಿನ ಸಮಯದಲ್ಲಿ ಹೆಚ್ಚಿನ ಮಳೆಯ ಸಾಧ್ಯತೆ ಇದೆ. ಮಳೆಯ ಜೊತೆಗೆ ಗಾಳಿಯೂ ಜೋರಾಗಿ ಬೀಸಿದ ಪರಿಣಾಮ ಟೆರಸ್ ಮೇಲಿದ್ದ ವಸ್ತುಗಳು ಚೆಲ್ಲಾಪಿಲ್ಲಿಯಾಗಿದ್ದರೂ ಯಾವುದೇ ಹಾನಿ ಸಂಭವಿಸಿಲ್ಲ. ತುಂತುರು ಮಳೆಯಲ್ಲಿ ಮಕ್ಕಳು ಹಾಗೂ ಮಹಿಳೆಯರು ಕೊಡೆ ಹಿಡಿದು ಸಂಚರಿಸುತ್ತಿದ್ದ ದೃಶ್ಯಗಳು ನಗರದಲ್ಲಿ ಕಂಡುಬಂದವು. ಕಳೆದ ಕೆಲ ದಿನಗಳಿಂದ ಹೊರಗೆ ಕಾಲಿಡಲು ಸಹ ಅಸಾಧ್ಯವಾಗಿದ್ದ ಬಿಸಿಲಿನ ತೀವ್ರತೆ ಮಳೆಯೊಂದಿಗೆ ತಗ್ಗಿ, ವಾತಾವರಣ ತಂಪಾಗಿರುವುದು ಜನರಲ್ಲಿ ನೆಮ್ಮದಿ ಮೂಡಿಸಿದೆ.
ಮಣಿಪುರ| ಪಂಜಿನ ಮೆರವಣಿಗೆ ವೇಳೆ ಭದ್ರತಾ ಪಡೆ ಹಾಗೂ ಪ್ರತಿಭಟನಾಕಾರರ ನಡುವೆ ಘರ್ಷಣೆ
ಇಂಫಾಲ, ಎ. 21: ಮಣಿಪುರದಲ್ಲಿ ಇತ್ತೀಚೆಗೆ ಬಾಂಬ್ ಸ್ಫೋಟದಲ್ಲಿ ಇಬ್ಬರು ಮಕ್ಕಳು ಮೃತಪಟ್ಟಿರುವ ಘಟನೆಯನ್ನು ಪ್ರತಿಭಟಿಸಿ ಇಂಫಾಲದಲ್ಲಿ ನಡೆದ ಪಂಜಿನ ಮೆರವಣಿಗೆಯಲ್ಲಿ ಭದ್ರತಾ ಪಡೆ ಹಾಗೂ ಜನರ ನಡುವೆ ಘರ್ಷಣೆ ನಡೆದಿದೆ. ಬಿಷ್ಣುಪುರದ ಟ್ರೋಂಗ್ಲಾಓಬಿಯಲ್ಲಿ ಎಪ್ರಿಲ್ 7ರಂದು ನಡೆದ ಬಾಂಬ್ ಸ್ಫೋಟದಲ್ಲಿ ಇಬ್ಬರು ಮಕ್ಕಳು ಮೃತಪಟ್ಟಿದ್ದರು. ಇದು ಕಣಿವೆ ಜಿಲ್ಲೆಗಳಲ್ಲಿ ನಿರಂತರ ಪ್ರತಿಭಟನೆಗೆ ಕಾರಣವಾಗಿದೆ. ಮಯಾಯಿ ಲಂಬಿಯಿಂದ ಕೈಶಾಮ್ಥೋಂಗ್ಗೆ ನಡೆದ 7 ಕಿ.ಮೀ. ಪಂಜಿನ ಮೆರವಣಿಗೆಯಲ್ಲಿ ಭಾಗವಹಿಸಿದವರು ಅನುಮತಿಸಲಾದ ಮಿತಿಗಳನ್ನು ಮೀರಿ ಮೆರವಣಿಗೆ ನಡೆಸಲು ಪ್ರಯತ್ನಿಸಿದ ಸಂದರ್ಭ ಈ ಘರ್ಷಣೆ ನಡೆಯಿತು. ಪ್ರತಿಭಟನಕಾರರು ಕರ್ಫ್ಯೂ ನಿರ್ಬಂಧಗಳನ್ನು ಉಲ್ಲಂಘಿಸಿ ಲೋಕ ಭವನ ಹಾಗೂ ಬಿಜೆಪಿ ರಾಜ್ಯ ಕಚೇರಿ ಸೇರಿದಂತೆ ಪ್ರಮುಖ ಸರಕಾರಿ ಕಟ್ಟಡಗಳ ಸಮೀಪ ಇರುವ ಕೈಸಂಪತ್ನತ್ತ ಮುಂದುವರಿಯಲು ಪ್ರಯತ್ನಿಸಿದರು ಎಂದು ಪೊಲೀಸರು ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಭದ್ರತಾ ಸಿಬ್ಬಂದಿ ಅಶ್ರುವಾಯು ಸೆಲ್ಗಳನ್ನು ಸಿಡಿಸಿದರು. ಪ್ರತಿಭಟನಕಾರರೊಂದಿಗೆ ಘರ್ಷಣೆ ನಡೆದ ಸಂದರ್ಭ ಅತಿ ಹೆಚ್ಚಿನ ಸಂಖ್ಯೆಯ ಸಿಬ್ಬಂದಿ ಇದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಕಣಿವೆಯ ಎಲ್ಲಾ 5 ಜಿಲ್ಲೆಗಳಲ್ಲಿ ಸಂಜೆ 5 ಗಂಟೆಯಿಂದ ಬೆಳಗ್ಗೆ 5 ಗಂಟೆ ವರೆಗೆ ಕರ್ಫ್ಯೂ ಜಾರಿಯಲ್ಲಿದೆ. ಈ ಅವಧಿಯಲ್ಲಿ ಮನೆಯಿಂದ ಹೊರಗಿಳಿಯುವುದನ್ನು ನಿರ್ಬಂಧಿಸಲಾಗಿದೆ. ಈ ನಡುವೆ ಕರ್ಫ್ಯೂ ಉಲ್ಲಂಘನೆ ಮತ್ತು ರಸ್ತೆ ತಡೆ, ಸಾರ್ವಜನಿಕ ಸೊತ್ತಿಗೆ ಹಾನಿಯಂತಹ ಕೃತ್ಯಗಳಲ್ಲಿ ತೊಡಗಿದ ಆರೋಪದಲ್ಲಿ ಇಂಫಾಲ ಪಶ್ಚಿಮ ಜಿಲ್ಲೆಯ ವಿವಿಧ ಭಾಗಗಳಿಂದ 19 ಮಂದಿಯನ್ನು ಮಣಿಪುರ ಪೊಲೀಸರು ಬಂಧಿಸಿದ್ದಾರೆ.
ಪ್ರಧಾನಿ ಮೋದಿ ಕುರಿತು ಮಲ್ಲಿಕಾರ್ಜುನ ಖರ್ಗೆ ಹೇಳಿಕೆ: ಪ್ರಜಾಪ್ರಭುತ್ವದ ಘನತೆಗೆ ಅವಮಾನ : ವಿಜಯೇಂದ್ರ
ಬೆಂಗಳೂರು : ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು, ಪ್ರಧಾನಿ ಮೋದಿಯವರನ್ನು ಟೀಕಿಸುವ ಭರದಲ್ಲಿ ದೇಶದ 140 ಕೋಟಿ ಜನರನ್ನು ಹಾಗೂ ನಮ್ಮ ಪ್ರಜಾಪ್ರಭುತ್ವದ ಘನತೆಯನ್ನು ಅಪಮಾನಿಸಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆಕ್ಷೇಪಿಸಿದ್ದಾರೆ. ಮಂಗಳವಾರ ಎಕ್ಸ್ ನಲ್ಲಿ ಪೋಸ್ಟ್ ಹಾಕಿರುವ ಅವರು, ಇದು ಸತತ ಮೂರನೇ ಬಾರಿಗೆ ಮೋದಿ ಪ್ರಧಾನಿ ಸ್ಥಾನದಲ್ಲಿ ಕೂರಿಸಿರುವ ದೇಶದ ಜನತೆಯ ತೀರ್ಪಿಗೆ ನೀವು ನೀಡುತ್ತಿರುವ ಗೌರವವೇ?. ವಿಶ್ವದ 32ಕ್ಕೂ ಹೆಚ್ಚು ದೇಶಗಳ ಅತ್ಯುನ್ನತ ಗೌರವಗಳಿಗೆ ಪಾತ್ರರಾಗಿ, ಭಾರತದ ಕೀರ್ತಿಯನ್ನು ಜಗತ್ತಿನ ಶಿಖರಕ್ಕೇರಿಸಿದ ಕೋಟ್ಯಂತರ ಭಾರತೀಯರ ಹೆಮ್ಮೆಯ ನಾಯಕನ ಬಗ್ಗೆ ಇಂತಹ ನಂಜಿನ ಮಾತುಗಳು, ನಿಮ್ಮ ವಿಕೃತ ಮನಸ್ಥಿತಿಗೆ ಸಾಕ್ಷಿ ಎಂದು ಟೀಕಿಸಿದ್ದಾರೆ. ಸರ್ಜಿಕಲ್ ಸ್ಟ್ರೈಕ್, ಬಾಲಕೋಟ್ ಏರ್ ಸ್ಟ್ರೈಕ್ ಮತ್ತು ಇತ್ತೀಚಿನ ‘ಆಪರೇಷನ್ ಸಿಂಧೂರ್' ಮೂಲಕ ಭಯೋತ್ಪಾದಕರ ಹೆಡೆಮುರಿ ಕಟ್ಟಿದ ನಾಯಕನ ಬಗ್ಗೆ, ನಕ್ಸಲಿಸಂ ಅನ್ನು ನಿರ್ನಾಮ ಮಾಡಿದ ಅದ್ವಿತೀಯ ನೇತಾರನ ಬಗ್ಗೆ, ಶತ್ರು ರಾಷ್ಟ್ರದ ಒಳಗೆ ನುಗ್ಗಿ ಹೊಡೆಯುವ ದಿಟ್ಟತನದ ಪ್ರಧಾನಿ ಬಗ್ಗೆ, ತಾಯಂದಿರ ಸೌಭಾಗ್ಯವನ್ನು ಅಳಿಸಲು ಬಂದವರ ವಿರುದ್ಧ ಆಪರೇಷನ್ ಸಿಂಧೂರ್ ಕಾರ್ಯಾಚರಣೆ ನಡೆಸಿ, ಅವರ ಅಡಗುದಾಣಗಳನ್ನೇ ಧೂಳೀಪಟ ಮಾಡಿದ ನಮ್ಮ ಮೋದಿ ಅವರ ನಿಮ್ಮ ಅವಹೇಳನ, ನಿಮ್ಮ ನೈಜ ಮುಖವನ್ನು ಬಯಲು ಮಾಡಿದೆ ಎಂದು ಅವರು ವಾಗ್ದಾಳಿ ನಡೆಸಿದ್ದಾರೆ. ಮೋದಿ ಅವರ ವಿರುದ್ಧ ಎಐಸಿಸಿ ಕಾರುತ್ತಿರುವ ವೈಷಮ್ಯ, ದ್ವೇಷ, ಅಸೂಯೆಗಳು ಹೊಸದೇನಲ್ಲ. ಈ ಮನಸ್ಥಿತಿಯಿಂದಲೇ ದೇಶದ ಹಾಗೂ ಪ್ರಧಾನಿ ಹುದ್ದೆಯ ಘನತೆಯನ್ನು ಕುಗ್ಗಿಸುವ ಮಟ್ಟಕ್ಕೆ ಕಾಂಗ್ರೆಸ್ ಕುಸಿದಿರುವುದನ್ನೂ ದೇಶದ ಜನ ಕಂಡಿದ್ದಾರೆ. ಮೋದಿ ಅವರನ್ನು ವಿರೋಧಿಸುವ ಭರದಲ್ಲಿ ನೀವು ಭಾರತದ ಗೌರವವನ್ನು ಕುಗ್ಗಿಸುತ್ತಿದ್ದೀರಿ. ಈ ಹಿಂದೆ, ‘ಚಾಯ್ ವಾಲಾ' ಎಂದವರನ್ನು ಜನತೆ ಹೇಗೆ ಮೂಲೆಗುಂಪು ಮಾಡಿದ್ದಾರೆ ಎನ್ನುವುದು ನಿಮಗೆ ನೆನಪಿರಲಿ ಎಂದು ಅವರು ಎಚ್ಚರಿಸಿದ್ದಾರೆ. ಎಐಸಿಸಿ ರಾಷ್ಟ್ರೀಯ ಅಧ್ಯಕ್ಷರಾದ ಶ್ರೀ @kharge ಅವರೇ, ಭಾರತದ ಹೆಮ್ಮೆಯ ಪ್ರಧಾನಮಂತ್ರಿಗಳಾದ ಆದರಣೀಯ ಶ್ರೀ @narendramodi ಜೀ ರವರನ್ನು ಟೀಕಿಸುವ ಭರದಲ್ಲಿ ನೀವು ಇಂದು ದೇಶದ 140 ಕೋಟಿ ಜನರನ್ನು ಹಾಗೂ ನಮ್ಮ ಪ್ರಜಾಪ್ರಭುತ್ವದ ಘನತೆಯನ್ನು ಅಪಮಾನಿಸಿದ್ದೀರಿ. ಇದು ಸತತ ಮೂರನೇ ಬಾರಿಗೆ ಶ್ರೀ ಮೋದಿಜೀ ರವರನ್ನು ಭಾರತದ ಪ್ರಧಾನಮಂತ್ರಿಗಳ… — Vijayendra Yediyurappa (@BYVijayendra) April 21, 2026 ‘ಹಿರಿಯರಾಗಿ, ಹಲವು ದಶಕಗಳ ಕಾಲ ರಾಜಕಾರಣದಲ್ಲಿದ್ದರೂ, ರಾಜ್ಯಸಭೆಯಲ್ಲಿ ವಿಪಕ್ಷ ನಾಯಕರಾಗಿದ್ದರೂ, ನಿಮ್ಮ ಪಕ್ಷದ ವರಿಷ್ಠರನ್ನು ತೃಪ್ತಿಪಡಿಸಲು ನೀವು ಇಷ್ಟು ಕೀಳುಮಟ್ಟಕ್ಕೆ ಇಳಿಯುತ್ತೀರಿ ಎಂದು ಜನ ನಿರೀಕ್ಷಿಸಿರಲಿಲ್ಲ. ನಿಮ್ಮ ಈ ಅವಹೇಳನಕಾರಿ ರಾಜಕೀಯಕ್ಕೆ ಮುಂಬರುವ ದಿನಗಳಲ್ಲಿ ನಾಡಿನ ಜನರೇ ತಕ್ಕ ಉತ್ತರ ನೀಡಲಿದ್ದಾರೆ’ -ಬಿ.ವೈ.ವಿಜಯೇಂದ್ರ ಬಿಜೆಪಿ ರಾಜ್ಯಾಧ್ಯಕ್ಷ
Gujarat | ಮದುವೆಯೂಟ ಸೇವಿಸಿ 400ಕ್ಕೂ ಹೆಚ್ಚು ಅತಿಥಿಗಳು ಅಸ್ವಸ್ಥ: ವಿಷಪೂರಿತ ಆಹಾರ ಸೇವನೆಯ ಶಂಕೆ
ಅಹಮದಾಬಾದ್: ಮದುವೆಯೂಟ ಸೇವಿಸಿದ ಬಳಿಕ 400ಕ್ಕೂ ಹೆಚ್ಚು ಅತಿಥಿಗಳು ಅಸ್ವಸ್ಥಗೊಂಡಿರುವ ಘಟನೆ ಗುಜರಾತ್ ನ ದಾಹೋಡ್ ಜಿಲ್ಲೆಯಲ್ಲಿ ನಡೆದಿದೆ. ವಿಷಪೂರಿತ ಆಹಾರ ಸೇವನೆ ಇದಕ್ಕೆ ಕಾರಣವಿರಬಹುದು ಎಂದು ಶಂಕಿಸಲಾಗಿದೆ. ಪ್ರಾಥಮಿಕ ವಿವರಗಳ ಪ್ರಕಾರ, ಮದುವೆಯೂಟಕ್ಕೆ ಸುಮಾರು 1,000 ಅತಿಥಿಗಳು ಹಾಜರಾಗಿದ್ದರು. ಈ ವೇಳೆ ಅತಿಥಿಗಳಿಗೆ ಬೇಳೆ ಅನ್ನ, ತರಕಾರಿ ಪೂರಿ, ಹಪ್ಪಳ, ಮಾವಿನ ಶರಬತ್ತು ಹಾಗೂ ಪನೀರ್ ಸಬ್ಜಿಯನ್ನು ಬಡಿಸಲಾಗಿತ್ತು ಎನ್ನಲಾಗಿದೆ. ಭೋಜನ ಮುಗಿದ ಕೆಲವೇ ಗಂಟೆಗಳಲ್ಲಿ ಅತಿಥಿಗಳಲ್ಲಿ ತೀವ್ರ ಹೊಟ್ಟೆ ನೋವು ಕಾಣಿಸಿಕೊಂಡಿದ್ದು, ವಾಂತಿ ಹಾಗೂ ಭೇದಿ ಕಂಡುಬಂದಿದೆ. ಇದರಿಂದ ಆತಂಕಗೊಂಡ ಕುಟುಂಬಸ್ಥರು ಅತಿಥಿಗಳನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಸಾಗಿಸಿದ್ದಾರೆ. ರೋಗಿಗಳ ಸಂಖ್ಯೆ ತೀವ್ರವಾಗಿ ಏರಿಕೆಯಾಗುತ್ತಿದ್ದಂತೆಯೇ ಕುಟುಂಬದ ಸದಸ್ಯರು ನೆರವಿಗಾಗಿ ಮೊರೆ ಇಟ್ಟಿದ್ದಾರೆ. ಇದರ ಬೆನ್ನಿಗೇ ಯುದ್ಧೋಪಾದಿಯಲ್ಲಿ ತುರ್ತು ರಕ್ಷಣಾ ಕಾರ್ಯಗಳನ್ನು ಕೈಗೊಳ್ಳಲಾಗಿದೆ. ಅಸ್ವಸ್ಥಗೊಂಡ ಅತಿಥಿಗಳನ್ನು ಆಸ್ಪತ್ರೆ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಸಾಗಿಸಲು 108 ಆಂಬುಲೆನ್ಸ್ಗಳು, ಖಾಸಗಿ ವಾಹನಗಳು ಹಾಗೂ ಸ್ಥಳೀಯ ಸಾರಿಗೆಯನ್ನು ಬಳಸಿಕೊಳ್ಳಲಾಗಿದೆ. ಭೋಜನ ಮುಗಿದ ತಕ್ಷಣ ಇಬ್ಬರು-ಮೂರು ಮಕ್ಕಳಲ್ಲಿ ಮೊದಲಿಗೆ ಅಸ್ವಸ್ಥತೆಯ ಲಕ್ಷಣಗಳು ಕಾಣಿಸಿಕೊಂಡಿವೆ. ಇದಾದ ಬಳಿಕ ಇನ್ನಷ್ಟು ಜನರ ಆರೋಗ್ಯ ಸ್ಥಿತಿ ಕ್ರಮೇಣ ಹದಗೆಟ್ಟಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ಉದಯ್ ತಿಲಾವತ್ ತಿಳಿಸಿದ್ದಾರೆ. “ಮಧ್ಯರಾತ್ರಿಗೂ ಮುನ್ನ 58 ಜನರಿಗೆ ಚಿಕಿತ್ಸೆ ಪ್ರಾರಂಭಿಸಲಾಗಿದೆ. ಎಲ್ಲ ವೈದ್ಯರೂ ಆಸ್ಪತ್ರೆಯಲ್ಲಿದ್ದು, ಕೆಲವು ರೋಗಿಗಳನ್ನು ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಇಲ್ಲಿಯವರೆಗೆ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ 232 ರೋಗಿಗಳನ್ನು ದಾಖಲಿಸಿಕೊಳ್ಳಲಾಗಿದೆ. ಈ ಪೈಕಿ 137 ಮಂದಿಯನ್ನು ಆಸ್ಪತ್ರೆಯಿಂದ ಬಿಡುಗಡೆಗೊಳಿಸಲಾಗಿದೆ. ಉಳಿದ 85 ಮಂದಿ ವೈದ್ಯಕೀಯ ನಿಗಾವಣೆಯಲ್ಲಿದ್ದು, ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ. ಪರಿಸ್ಥಿತಿ ಈಗ ನಿಯಂತ್ರಣದಲ್ಲಿದೆ” ಎಂದು ಅವರು ಹೇಳಿದ್ದಾರೆ. ಈ ಘಟನೆಯ ಪ್ರಮಾಣದಿಂದ ಅಬೋಲೋದ್ ನಾದ್ಯಂತ ಆತಂಕ ಸೃಷ್ಟಿಯಾಗಿದೆ ಎಂದು ಗ್ರಾಮಸ್ಥ ಜಿತೇಂದ್ರ ಪಾಂಚಾಲ್ ತಿಳಿಸಿದ್ದಾರೆ. “ಭೋಜನಕ್ಕೆ ಸುಮಾರು 1,000 ಮಂದಿ ಹಾಜರಾಗಿದ್ದರು. ಈ ಪೈಕಿ ಸುಮಾರು 250 ಗ್ರಾಮಸ್ಥರಿಗೆ ತೊಂದರೆಯಾಗಿದ್ದು, ಎಲ್ಲರನ್ನೂ ಚಿಕಿತ್ಸೆಗಾಗಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ” ಎಂದು ಅವರು ಹೇಳಿದ್ದಾರೆ. ಇಲ್ಲಿಯವರೆಗೆ ಯಾವುದೇ ಸಾವಿನ ವರದಿಯಾಗದಿದ್ದರೂ, ಆಸ್ಪತ್ರೆಗೆ ಕರೆ ತಂದಾಗ ಕೆಲವು ರೋಗಿಗಳ ಸ್ಥಿತಿ ಗಂಭೀರವಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದರಿಂದ ಕಲುಷಿತಗೊಳ್ಳುವಿಕೆಯ ಪ್ರಮಾಣದ ಬಗ್ಗೆ ಆತಂಕ ಮತ್ತಷ್ಟು ಹೆಚ್ಚಿದೆ. ಘಟನಾ ಸ್ಥಳದಿಂದ ಶಂಕಿತ ಆಹಾರ ಪದಾರ್ಥಗಳ ಮಾದರಿಯನ್ನು ಸಂಗ್ರಹಿಸಲಾಗಿದ್ದು, ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ರವಾನಿಸಲಾಗಿದೆ. ತನಿಖಾ ವರದಿ ಬಂದ ಬಳಿಕ ಆಹಾರ ಸರಬರಾಜುದಾರರು ಹಾಗೂ ಸಂಘಟಕರು ಸೇರಿದಂತೆ ಈ ಘಟನೆಗೆ ಕಾರಣರಾದ ಎಲ್ಲರ ವಿರುದ್ಧ ಕಟ್ಟುನಿಟ್ಟಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಧಾನಿ ಮೋದಿ ವಿರುದ್ಧ ಖರ್ಗೆ ವಿವಾದಾತ್ಮಕ ಹೇಳಿಕೆ; ಬಳಿಕ ಸ್ಪಷ್ಟನೆ, ಬಿಜೆಪಿಯಿಂದ ತೀವ್ರ ಖಂಡನೆ
ಹೊಸದಿಲ್ಲಿ, ಎ.21: ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಪ್ರಧಾನಿ ನರೇಂದ್ರ ಮೋದಿಯನ್ನು ಉದ್ದೇಶಿಸಿ “ಭಯೋತ್ಪಾದಕ” ಎಂಬ ಪದ ಬಳಸಿರುವುದು ರಾಜಕೀಯ ವಲಯದಲ್ಲಿ ತೀವ್ರ ವಿವಾದಕ್ಕೆ ಕಾರಣವಾಗಿದೆ. ಬಳಿಕ ತಮ್ಮ ಹೇಳಿಕೆಗೆ ಸ್ಪಷ್ಟನೆ ನೀಡಿದ ಖರ್ಗೆ, “ಪ್ರಧಾನಿಯನ್ನು ಭಯೋತ್ಪಾದಕ ಎಂದು ನಾನು ಎಂದಿಗೂ ಕರೆಯಲಿಲ್ಲ; ಅವರು ಜನರನ್ನು ಮತ್ತು ರಾಜಕೀಯ ಪಕ್ಷಗಳನ್ನು ಭಯಭೀತಗೊಳಿಸುತ್ತಿದ್ದಾರೆ ಎಂಬ ಅರ್ಥದಲ್ಲಿ ಆ ಪದ ಬಳಸಲಾಗಿದೆ” ಎಂದು ಹೇಳಿದ್ದಾರೆ. ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ತಮಿಳುನಾಡು ಚುನಾವಣೆಯ ರಾಜಕೀಯ ಮೈತ್ರಿ ವಿಚಾರವಾಗಿ ಮಾತನಾಡುತ್ತಿದ್ದ ವೇಳೆ ಖರ್ಗೆ ಈ ಹೇಳಿಕೆಯನ್ನು ನೀಡಿದರು. ಎಐಎಡಿಎಂಕೆ ಮತ್ತು ಭಾರತೀಯ ಜನತಾ ಪಕ್ಷ ನಡುವಿನ ಮೈತ್ರಿಯನ್ನು ಪ್ರಶ್ನಿಸಿದ ಅವರು, “ಅಣ್ಣಾದೊರೈ ಅವರ ಚಿತ್ರವನ್ನು ಪ್ರದರ್ಶಿಸುವ ಎಐಎಡಿಎಂಕೆ, ಮೋದಿ ಅವರೊಂದಿಗೆ ಹೇಗೆ ಕೈಜೋಡಿಸಬಹುದು? ಅವರ ಪಕ್ಷ ಸಮಾನತೆ ಮತ್ತು ನ್ಯಾಯದ ಮೌಲ್ಯಗಳಲ್ಲಿ ನಂಬಿಕೆ ಇಡುವುದಿಲ್ಲ. ಈ ಮೈತ್ರಿ ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸುವುದರ ಜೊತೆಗೆ ಅಣ್ಣಾದೊರೈ, ಕಾಮರಾಜ್, ಪೆರಿಯಾರ್, ಕಲೈಙ್ಞರ್ ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ಅವರ ತತ್ವಗಳನ್ನು ದುರ್ಬಲಗೊಳಿಸುತ್ತದೆ” ಎಂದು ಖರ್ಗೆ ಹೇಳಿದ್ದಾರೆ. ಇದೇ ವೇಳೆ ಕಾಂಗ್ರೆಸ್-ಡಿಎಂಕೆ ಮೈತ್ರಿಕೂಟದ ಪರವಾಗಿ ಮಾತನಾಡಿದ ಅವರು, “ಎಲ್ಲರನ್ನೂ ಒಳಗೊಂಡ ಬೆಳವಣಿಗೆ, ಏಳಿಗೆ, ಗುಣಮಟ್ಟದ ಶಿಕ್ಷಣ ಮತ್ತು ಸುಲಭ ಆರೋಗ್ಯ ಸೇವೆಗಳನ್ನು ಒದಗಿಸುವಲ್ಲಿ ನಾವು ಬದ್ಧರಾಗಿದ್ದೇವೆ” ಎಂದು ತಿಳಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ವರದಿಗಾರರೊಬ್ಬರು ಹೇಳಿಕೆಯ ಹಿನ್ನೆಲೆ ಕುರಿತು ಪ್ರಶ್ನಿಸಿದಾಗ ಖರ್ಗೆ ಸ್ಪಷ್ಟನೆ ನೀಡಿದರು. “ಪ್ರಧಾನಿ ಮೋದಿ ಜನರನ್ನು ಮತ್ತು ರಾಜಕೀಯ ಪಕ್ಷಗಳನ್ನು ಭಯಭೀತಗೊಳಿಸುತ್ತಿದ್ದಾರೆ. ED, ಐಟಿ ಮತ್ತು ಸಿಬಿಐಂತಹ ಸಂಸ್ಥೆಗಳು ಅವರ ಕೈಯಲ್ಲಿವೆ. ಕ್ಷೇತ್ರ ಪುನರ್ವಿಂಗಡಣೆಯನ್ನೂ ತಮ್ಮ ಹಿಡಿತಕ್ಕೆ ತೆಗೆದುಕೊಳ್ಳಲು ಅವರು ಯತ್ನಿಸುತ್ತಿದ್ದಾರೆ. ಈ ಅರ್ಥದಲ್ಲಿ ನಾನು ಹೇಳಿದ್ದೇನೆ; ಆದರೆ ಅವರನ್ನು ಭಯೋತ್ಪಾದಕ ಎಂದು ಕರೆಯಲಿಲ್ಲ” ಎಂದು ಅವರು ಹೇಳಿದ್ದಾರೆ. ಖರ್ಗೆ ಹೇಳಿಕೆಗೆ ಬಿಜೆಪಿ ತೀವ್ರ ಪ್ರತಿಕ್ರಿಯೆ ನೀಡಿದೆ. ಬಿಜೆಪಿ ವಕ್ತಾರ ಪ್ರದೀಪ್ ಭಂಡಾರಿ, “ಕಾಂಗ್ರೆಸ್ ‘ನಗರ ನಕ್ಸಲ್’ ಪಕ್ಷವಾಗಿದೆ. ಪ್ರಧಾನಿಯ ವಿರುದ್ಧ ನಿಂದನೀಯ ಭಾಷೆ ಬಳಸುವುದು ಇದೇ ಮೊದಲಲ್ಲ. ವಿಷಪೂರಿತ ವಾಕ್ಚಾತುರ್ಯದ ಮರುಕಳಿಕೆ ಕಾಂಗ್ರೆಸ್ನ ನಿಜ ಸ್ವಭಾವವನ್ನು ತೋರಿಸುತ್ತದೆ” ಎಂದು ಆರೋಪಿಸಿದ್ದಾರೆ. ಕೇಂದ್ರ ಸಚಿವ ಪಿಯೂಷ್ ಗೋಯಲ್ ಈ ಹೇಳಿಕೆಯನ್ನು ಖಂಡಿಸಿ, “ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾದ ಪ್ರಧಾನಿಯನ್ನು ಭಯೋತ್ಪಾದಕ ಎಂದು ಕರೆಯುವ ಮಟ್ಟಕ್ಕೆ ಕಾಂಗ್ರೆಸ್ ಮತ್ತು ಡಿಎಂಕೆ ಇಳಿದಿರುವುದು ನಾಚಿಕೆಗೇಡಿನ ಸಂಗತಿ. ಪ್ರಧಾನಿ ಮತ್ತು ದೇಶದ ಜನರಿಗೆ ಅವಮಾನ ಮಾಡಿದ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿ ಹಾಗೂ ಎಂ.ಕೆ. ಸ್ಟಾಲಿನ್ ಕ್ಷಮೆಯಾಚಿಸಬೇಕು” ಎಂದು ಒತ್ತಾಯಿಸಿದ್ದಾರೆ. “ಈ ಹೇಳಿಕೆ ದೇಶದ 140 ಕೋಟಿ ಜನರನ್ನು ಅವಮಾನಿಸಿದೆ. ತಮಿಳುನಾಡಿನ ಜನರನ್ನು ಸೇರಿ ಎಲ್ಲ ಭಾರತೀಯರ ಗೌರವಕ್ಕೆ ಧಕ್ಕೆ ತಂದಿದೆ. ಪ್ರಧಾನಿಯನ್ನು ಗುರಿಯಾಗಿಸಿಕೊಂಡು ಮಾಡಲಾಗುತ್ತಿರುವ ವೈಯಕ್ತಿಕ ದಾಳಿಗಳು ಕಾಂಗ್ರೆಸ್ ಮೈತ್ರಿಕೂಟದ ಚುನಾವಣಾ ಭವಿಷ್ಯವನ್ನು ಉಳಿಸುವುದಿಲ್ಲ” ಎಂದು ಗೋಯಲ್ ಹೇಳಿದರು. ಪ್ರಧಾನಿ ಮೋದಿ ಇತ್ತೀಚೆಗೆ ರಾಷ್ಟ್ರವನ್ನುದ್ದೇಶಿಸಿ ಭಾಷಣ ಮಾಡಿದ್ದರು. ಆ ಭಾಷಣದಲ್ಲಿ ಮಹಿಳಾ ಮೀಸಲಾತಿ ಮಸೂದೆಯನ್ನು ಸೋಲಿಸಿದ್ದಕ್ಕಾಗಿ ಕಾಂಗ್ರೆಸ್ ಹಾಗೂ ಇತರ ವಿರೋಧ ಪಕ್ಷಗಳನ್ನು ತೀವ್ರವಾಗಿ ಟೀಕಿಸಿದ್ದರು.
‘ನನ್ನ ತಂದೆಗೆ ಮಂತ್ರಿ ಸ್ಥಾನ ಸಿಗುತ್ತದೆ’ ಎಂದು ಈಡಿ ತೊಂದರೆ : ಮೊಹಮ್ಮದ್ ನಲಪಾಡ್
ಬೆಂಗಳೂರು : ನನ್ನ ತಂದೆಗೆ ಮಂತ್ರಿ ಸ್ಥಾನ ಸಿಗುತ್ತದೆ ಎಂಬ ಕಾರಣದಿಂದ ಜಾರಿ ನಿರ್ದೇಶನಾಲಯ (ಈಡಿ) ಅಧಿಕಾರಿಗಳು ನನಗೆ ತೊಂದರೆ ಕೊಡಲು ದಾಳಿ ನಡೆಸಿದ್ದಾರೆ ಎಂದು ಕಾಂಗ್ರೆಸ್ ಶಾಸಕರೂ ಆಗಿರುವ ಬಿಡಿಎ ಅಧ್ಯಕ್ಷ ಎನ್.ಎ.ಹಾರಿಸ್ ಪುತ್ರ ಮೊಹಮ್ಮದ್ ನಲಪಾಡ್ ಆರೋಪಿಸಿದ್ದಾರೆ. ಮಂಗಳವಾರ ನಗರದಲ್ಲಿ ಈಡಿ ದಾಳಿ ಸಂಬಂಧ ಮಾಧ್ಯಮ ಪ್ರತಿನಿಧಿಗಳೊಂದಿಗೆ ಪ್ರತಿಕ್ರಿಯಿಸಿದ ಅವರು, 2021ರಲ್ಲಿ ದಾಖಲಾಗಿದ್ದ ಪ್ರಕರಣಕ್ಕೆ ಈಗ ಬಂದು ಈ.ಡಿ. ದಾಳಿ ಮಾಡಿರುವುದು ನೋಡಿದರೆ ಇದು ರಾಜಕೀಯ ಪ್ರೇರಿತ ಎಂದು ತೋರುತ್ತಿದೆ. ಈ ಬಾರಿ ನಮ್ಮ ತಂದೆಗೆ ಮಂತ್ರಿ ಸ್ಥಾನ ಸಿಗುತ್ತೆ ಎಂಬ ಕಾರಣದಿಂದ ತೊಂದರೆ ಕೊಡುತ್ತಿದ್ದಾರೆ ಎಂದು ದೂರಿದರು. ಬಿಟ್ ಕಾಯಿನ್ ಪ್ರಕರಣ ಸಂಬಂಧ ಈ.ಡಿ. ದಾಳಿಗೂ ನಮ್ಮ ತಂದೆಗೂ ಯಾವುದೇ ಸಂಬಂಧವಿಲ್ಲ. ನಾನು ಹಾಗೂ ನನ್ನ ಸಹೋದರ ತಪ್ಪು ಮಾಡಿಲ್ಲ. ಅಧಿಕಾರಿಗಳ ವಿಚಾರಣೆ ವೇಳೆ ಬಿಟ್ ಕಾಯಿನ್ ಹಗರಣದ ಆರೋಪಿ ಶ್ರೀಕಿ ಗೊತ್ತಿಲ್ಲ ಎಂದು ಹೇಳಿಲ್ಲ, ಹಲವರೊಂದಿಗೆ ಸ್ನೇಹವಿತ್ತು ಎಂದು ಹೇಳಿದ್ದೇನೆ ಎಂದು ಮೊಹಮ್ಮದ್ ನಲಪಾಡ್ ತಿಳಿಸಿದರು. ದಾಳಿ ವೇಳೆ ಹಣ ಸಿಕ್ಕಿಲ್ಲ. ಎರಡು ಮೊಬೈಲ್ಗಳನ್ನು ಅಧಿಕಾರಿಗಳು ತೆಗೆದುಕೊಂಡು ಬಂದಿದ್ದಾರೆ. ನ್ಯಾಯಾಲಯದಲ್ಲಿ ಈ ಪ್ರಕರಣದ ಕುರಿತು ಹೋರಾಟ ಮಾಡುತ್ತೇನೆ. ಹಗರಣ ಮಾಡುವ ಅಗತ್ಯ ನಮ್ಮ ಕುಟುಂಬಕ್ಕಿಲ್ಲ. ಈ ಹಿಂದೆ ಈ.ಡಿ. ಒಮ್ಮೆ ನೋಟಿಸ್ ನೀಡಿತ್ತು. ವಿಚಾರಣೆಗೆ ಹಾಜರಾಗಿ ಹೇಳಿಕೆ ನೀಡಿದ್ದೆ ಎಂದು ಮೊಹಮ್ಮದ್ ನಲಪಾಡ್ ಹೇಳಿದರು. ಬಿಜೆಪಿಯವರು ಸತ್ಯಹರಿಶ್ಚಂದ್ರರಾ?: ಝಮೀರ್ ಮಂಗಳವಾರ ನಗರದಲ್ಲಿರುವ ಶಾಸಕ ಹಾರಿಸ್ ಮನೆಗೆ ಭೇಟಿ ನೀಡಿದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ವಸತಿ ಸಚಿವ ಝಮೀರ್ ಅಹ್ಮದ್, ಕಾಂಗ್ರೆಸ್ ನಾಯಕರನ್ನು ಗುರಿಯಾಗಿಸಿ ಈ ದಾಳಿ ನಡೆದಿದೆ. ಇದುವರೆಗೂ ಬಿಜೆಪಿ ನಾಯಕರ ಮೇಲೆ ಯಾಕೆ ಈ.ಡಿ. ದಾಳಿ ನಡೆಸಿಲ್ಲ? ಬಿಜೆಪಿಯವರು ಸತ್ಯಹರಿಶ್ಚಂದ್ರರಾ? 2020ರಲ್ಲಿ ಬಿಜೆಪಿ ಸರಕಾರವಿದ್ದಾಗ ದಾಖಲಾದ ಪ್ರಕರಣ ಇದು. ಆಗ ಸದನದಲ್ಲಿ ಬಿಜೆಪಿ ಹೇಳಿತ್ತು. ಪ್ರಕರಣದಲ್ಲಿ ಭಾಗಿಯಾಗಿದ್ದರೆ ನಲಪಾಡ್ ವಿರುದ್ಧ ಕ್ರಮ ಕೈಗೊಳ್ಳಬೇಕಿತ್ತು. ಸದ್ಯ ಪ್ರಕರಣ ತನಿಖೆ ಹಂತದಲ್ಲಿದ್ದು, ಇನ್ನೂ ಚಾರ್ಜ್ಶೀಟ್ ಸಲ್ಲಿಸಿಲ್ಲ ಎಂದು ಹೇಳಿದರು.
ಉತ್ತರಾಖಂಡ| ಕನಿಷ್ಠ ವೇತನಕ್ಕೆ ಆಗ್ರಹಿಸಿ ಕಾರ್ಮಿಕರಿಂದ ಧರಣಿ
ಡೆಹ್ರಾಡೂನ್, ಎ. 21: ತಿಂಗಳಿಗೆ ಕನಿಷ್ಠ 20 ಸಾವಿರ ವೇತನ ಹಾಗೂ 8 ಗಂಟೆ ಕೆಲಸದ ಪಾಳಿಗೆ ಆಗ್ರಹಿಸಿ ಉತ್ತರಾಖಂಡದ ನೈನಿತಾಲ್ ಜಿಲ್ಲೆಯ ಹಲ್ದ್ವಾನಿಯ ಮೋಟಹಾಲ್ಡು ಪ್ರದೇಶದಲ್ಲಿ ಖಾಸಗಿ ಕೈಗಾರಿಕಾ ಘಟಕದ ನೂರಾರು ಕಾರ್ಮಿಕರು ಸೋಮವಾರ ಧರಣಿ ನಡೆಸಿದ್ದಾರೆ. ಕಾರ್ಖಾನೆಯ ಗೇಟಿನ ಮುಂದೆ ಕಾರ್ಮಿಕರು ಧರಣಿ ಆರಂಭಿಸಿದ ಹಿನ್ನೆಲೆಯಲ್ಲಿ ಭಾರೀ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿತ್ತು. ಈ ಸಂದರ್ಭ ಧರಣಿಯನ್ನು ಬೆಂಬಲಿಸುವ ಯುವ ನಾಯಕರು ಹಾಗೂ ಪೊಲೀಸರ ನಡುವೆ ವಾಗ್ವಾದ ನಡೆಯಿತು. ಅದು ಘರ್ಷಣೆಗೆ ತಿರುಗಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಉದ್ವಿಗ್ನತೆ ಭುಗಿಲೆದ್ದ ಬಳಿಕ ಪ್ರತಿಭಟನಕಾರರನ್ನು ಚುದುರಿಸಲು ಹಾಗೂ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳಲು ಪೊಲೀಸರು ಲಘು ಬಲ ಪ್ರಯೋಗ ಮಾಡಿದರು. ಆಡಳಿತ ಮಂಡಳಿ ನಿಗದಿತ ಅವಧಿಗಿಂತ ಹೆಚ್ಚು ಕೆಲಸ ಮಾಡುವಂತೆ ಒತ್ತಾಯಿಸುತ್ತಿದೆ. ಆದರೆ, ಇದಕ್ಕೆ ಹೆಚ್ಚುವರಿ ವೇತನ ನೀಡುತ್ತಿಲ್ಲ. ಇದು ಕಾರ್ಮಿಕರ ಶೋಷಣೆ ಎಂದು ಕಾರ್ಮಿಕರು ಆರೋಪಿಸಿದ್ದಾರೆ. ಅಧಿಕಾರಿಗಳು ನಿಂದನೆಯ ಭಾಷೆ ಬಳಸುತ್ತಾರೆ. ಕುಡಿಯುವ ನೀರು, ಶೌಚಾಲಯಕ್ಕೆ ಹೋಗಲು ವಿರಾಮ ನೀಡದೆ ಅಮಾನವೀಯವಾಗಿ ನಡೆಸಿಕೊಳ್ಳುತ್ತಿದ್ದಾರೆ ಎಂದು ಮಹಿಳಾ ಕಾರ್ಮಿಕರು ಆರೋಪಿಸಿದ್ದಾರೆ. ತಮ್ಮ ಸಹೋದ್ಯೋಗಿಗಳನ್ನು ಸ್ಪಷ್ಟ ಕಾರಣ ನೀಡದೆ ವಜಾಗೊಳಿಸಲಾಗಿದೆ. ಅವರನ್ನು ಮತ್ತೆ ಕೆಲಸಕ್ಕೆ ನೇಮಕ ಮಾಡಿಕೊಳ್ಳುವಂತೆ ಕಾರ್ಮಿಕರು ಆಗ್ರಹಿಸಿದ್ದಾರೆ. ಕಂಪೆನಿಯ ಸಾರಿಗೆ ವ್ಯವಸ್ಥೆ ಕುರಿತು ಕಳವಳ ವ್ಯಕ್ತಪಡಿಸಿರುವ ಕಾರ್ಮಿಕರು ಬಸ್ಗಳ ಕಳಪೆ ನಿರ್ವಹಣೆ, ಚಾಲಕರ ದುರ್ವರ್ತನೆ ನಮ್ಮ ಸುರಕ್ಷತೆಗೆ ಅಪಾಯವನ್ನುಂಟುಮಾಡಿದೆ ಎಂದು ಆರೋಪಿಸಿದ್ದಾರೆ.
ಬಿಜೆಪಿಯ ಅಪಪ್ರಚಾರಕ್ಕೆ ಅಭಿವೃದ್ದಿ ಕಾರ್ಯಗಳ ಮೂಲಕವೇ ಉತ್ತರ : ಸಿಎಂ ಸಿದ್ದರಾಮಯ್ಯ
ಪಿರಿಯಾಪಟ್ಟಣ : ಬಿಜೆಪಿಯ ಅಪಪ್ರಚಾರಕ್ಕೆ ಅಭಿವೃದ್ದಿ ಕಾರ್ಯಗಳ ಮೂಲಕವೇ ಉತ್ತರ ನೀಡುತ್ತಿದ್ದೇವೆ. ನಮ್ಮ ಅಭಿವೃದ್ಧಿ ಕಾರ್ಯಗಳು ಜನರಿಗೆ ಮುಟ್ಟಿವೆ. ಜನ ನಮ್ಮ ಪರವಾಗಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದರು. ಅವರು ಇಂದು ಮೈಸೂರು ಜಿಲ್ಲಾಡಳಿತ ಮತ್ತು ಜಿಲ್ಲಾಪಂಚಾಯತ್ ವತಿಯಿಂದ ಪಿರಿಯಾಪಟ್ಟಣದ ಪಾರೆಕೊಪ್ಪಲಿನಲ್ಲಿ ಆಯೋಜಿಸಲಾಗಿದ್ದಕಾರ್ಯಕ್ರಮದಲ್ಲಿ ಶಕ್ತಿ ದೇವತೆ ಶ್ರೀ ಮಸಣಿಕಮ್ಮ ದೇವಸ್ಥಾನ ನಿರ್ಮಾಣ, ಒಕ್ಕಲಿಗ ಸಂಘದ ಸಹಯೋಗದೊಂದಿಗೆ ನಿರ್ಮಿಸುತ್ತಿರುವ ಕುವೆಂಪು ಭವನ ಹಾಗೂ ಬೆಟ್ಟದ ಪುರ ಗ್ರಾಮದ ಶ್ರೀ ಸಿಡಿಲು ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನ ಬೆಟ್ಟಕ್ಕೆ ಹೋಗುವ ರಸ್ತೆ ನಿರ್ಮಾಣ ಸೇರಿದಂತೆ ವಿವಿಧ ಇಲಾಖೆಗಳ 419.78 ಕೋಟಿಗಳ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಮತ್ತು ಉದ್ಘಾಟನೆ ನೆರವೇರಿಸಿ ಮಾತನಾಡಿದರು. ರಾಜ್ಯದ ಎಲ್ಲ ಕ್ಷೇತ್ರಗಳಲ್ಲೂ ಅಭಿವೃದ್ಧಿ ಕಾಮಗಾರಿಗಳು ಆಗುತ್ತಿದ್ದು ಈ ಬಾರಿಯ ಆಯವ್ಯಯದಲ್ಲಿ ಸುಮಾರು 82 ಸಾವಿರ ಕೋಟಿ ರೂಗಳನ್ನು ಅಭಿವೃದ್ಧಿ ಕೆಲಸಗಳಿಗೆ ಮೀಸಲಿರಿಸಿದೆ ಎಂದರು. ವಿಶ್ವಮಾನವ ಕುವೆಂಪು ಆಶಯ ನಮ್ಮದು : ಕುವೆಂಪು ಅವರು ವಿಶ್ವಮಾನವರಾಗುವ ಪ್ರಯತ್ನವನ್ನು ಮಾಡಿದ್ದರು. ಕರ್ನಾಟಕವನ್ನು ಸರ್ವ ಜನಾಂಗದ ಶಾಂತಿಯ ತೋಟವಾಗಿಸಬೇಕು ಎಂದು ಬಯಸಿದ್ದರು. ಎಲ್ಲರೂ ಮನುಷ್ಯರಾಗಿ ಬಾಳಬೇಕೆನ್ನುವ ಆಶಯವನ್ನು ಹೊಂದಿದ್ದ ಕುವೆಂಪು ಅವರ ಭವನ ಇಲ್ಲಿ ನಿರ್ಮಾಣವಾಗುತ್ತಿರುವುದು ಸ್ವಾಗತಾರ್ಹ ಎಂದರು. 50 ಕೋಟಿ ರೂ ವೆಚ್ಚದಲ್ಲಿ ರಸ್ತೆ ಕಾಮಗಾರಿ : ಬೆಟ್ಟದಪುರ ಗ್ರಾಮದ ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನ ಬೆಟ್ಟಕ್ಕೆ ಹೋಗುವ ರಸ್ತೆ ನಿರ್ಮಾಣ ಕಾಮಗಾರಿಯನ್ನು 50 ಕೋಟಿ ರೂ ವೆಚ್ಚದಲ್ಲಿ ಕೈಗೊಳ್ಳಲಾಗಿದ್ದು ಇದರಿಂದ ಜನರಿಗೆ ಅನುಕೂಲವಾಗಲಿದೆ ಎಂದರು. ಸಚಿವರಾದ ವೆಂಕಟೇಶ್ ಅವರು ಪಿರಿಯಾಪಟ್ಟಣದ ಶಾಸಕರಾದ ನಂತರ ಹೆಚ್ಚಿನ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದಾರೆ ಎಂದು ಮುಖ್ಯಮಂತ್ರಿಗಳು ಶ್ಲಾಘಿಸಿದರು. ನುಡಿದಂತೆ ನಡೆಯುವ ಸರಕಾರ ನಮ್ಮದು : ನಮ್ಮ ಸರ್ಕಾರ ನುಡಿದಂತೆ ನಡೆಯುತ್ತಿದ್ದು ಕೊಟ್ಟ ಭರವಸೆಗಳನ್ನು ಈಡೇರಿಸಿದ್ದೇವೆ. ಮೂರು ವರ್ಷಗಳಲ್ಲಿ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿದ್ದು ಮುಂದೆಯೂ ಈ ಯೋಜನೆಗಳನ್ನು ಮುಂದುವರೆಸಲಾಗುವುದು. ಗ್ಯಾರಂಟಿ ಯೋಜನೆಗಳನ್ನು ಟೀಕಿಸುತ್ತಿದ್ದ ವಿರೋಧ ಪಕ್ಷ ಪ್ರಸ್ತುತ ಚುನಾವಣೆ ನಡೆಯುತ್ತಿರುವ ರಾಜ್ಯಗಳಲ್ಲಿ ಗ್ಯಾರಂಟಿ ಯೋಜನೆಗಳನ್ನು ನಕಲು ಮಾಡುತ್ತಿದ್ದಾರೆ. ನಮ್ಮ ಸರ್ಕಾರ ಅಭಿವೃದ್ಧಿಗೂ ಹಣವನ್ನು ಮೀಸಲಿರಿಸಿದೆ ಎನ್ನಲು ಇಂದು ಶಂಕು ಸ್ಥಾಪನೆಯಾಗಿರುವ 419.78 ಕೋಟಿ ರೂ ಗಳ ಅಭಿವೃದ್ಧಿ ಕಾಮಗಾರಿಗಳೇ ಸಾಕ್ಷಿ ಎಂದರು. ವಿರೋಧ ಪಕ್ಷಗಳು ಅನಗತ್ಯವಾಗಿ ಟೀಕೆ ಮಾಡುತ್ತಿವೆ : ವಿರೋಧ ಪಕ್ಷಗಳು ಅನಗತ್ಯವಾಗಿ ಟೀಕೆ ಮಾಡುತ್ತಿದ್ದು ಅದರಲ್ಲಿ ಸತ್ಯಾಂಶವಿಲ್ಲ. ಟೀಕೆಗಳು ವಾಸ್ತವದ ನೆಲೆಗಟ್ಟಿನಲ್ಲಿರಬೇಕು. ಸುಳ್ಳು ಹೇಳುವುದನ್ನೇ ಕಸಬು ಮಾಡಿಕೊಳ್ಳದೆ ಕೈಗೊಂಡಿರುವ ಕೆಲಸಗಳ ಬಗ್ಗೆ ಮಾತನಾಡಬೇಕು. ಅವರು ಅಧಿಕಾರದಲ್ಲಿದ್ದಾಗ ನಾಲ್ಕು ವರ್ಷಗಳ ಕಾಲ ಏನು ಮಾಡಿದ್ದಾರೆಂದು ಜನರ ಮುಂದಿಡಬೇಕು. ನಾವು ಅಭಿವೃದ್ಧಿ ಕಾರ್ಯಗಳ ಮೂಲಕವೇ ಬಿಜೆಪಿಯ ಅಪಪ್ರಚಾರಕ್ಕೆ ಉತ್ತರ ಕೊಡುತ್ತಿದ್ದೇವೆ ಎಂದರು. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವರಾದ ವೆಂಕಟೇಶ್, ಹೆಚ್. ಸಿ ಮಹದೇವಪ್ಪ, ಸತೀಶ್ ಜಾರಕಿಹೊಳಿ, ಕೃಷ್ಣ ಬೈರೇಗೌಡ, ಶಾಸಕರಾದ ಹರೀಶ್ ಗೌಡ ರವಿಶಂಕರ್, ದರ್ಶನ್ ಧ್ರುವ ನಾರಾಯಣ್, ಮೊದಲಾದವರು ಉಪಸ್ಥಿತರಿದ್ದರು. ಇಂದು ಮೈಸೂರು ಜಿಲ್ಲೆಯ ಪಿರಿಯಾಪಟ್ಟಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ, ವಿವಿಧ ಇಲಾಖೆಗಳ ಒಟ್ಟು 419.78 ಕೋಟಿ ವೆಚ್ಚದ ಕಾಮಗಾರಿಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಿ, ಬಳಿಕ, ಶಕ್ತಿ ದೇವತೆ ಶ್ರೀಮಸಣಿಕಮ್ಮ ದೇವಸ್ಥಾನ ನಿರ್ಮಾಣ, ಕುವೆಂಪು ಭವನ ನಿರ್ಮಾಣ, ಸಿಡಿಲು ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನ, ಬೆಟ್ಟಕ್ಕೆ ಹೋಗುವ… pic.twitter.com/0TCoYv4co2 — Siddaramaiah (@siddaramaiah) April 21, 2026
ಬಾಲಾಪರಾಧಿಯನ್ನು ತಕ್ಷಣ ವೀಕ್ಷಣಾ ಗೃಹಕ್ಕೆ ಕಳುಹಿಸದಿದ್ದರೆ ಸಂವಿಧಾನದ ಉಲ್ಲಂಘನೆ: ಸುಪ್ರೀಂ ಕೋರ್ಟ್
ಹೊಸದಿಲ್ಲಿ: ಘೋಷಿತ ಬಾಲಾಪರಾಧಿಯನ್ನು ತಕ್ಷಣವೇ ವೀಕ್ಷಣಾ ಗೃಹಕ್ಕೆ ಸ್ಥಳಾಂತರಿಸುವುದನ್ನು ಖಾತರಿಪಡಿಸುವಲ್ಲಿ ಲೋಪ ತೋರಿದರೆ, ಅದು ಸಂವಿಧಾನದ ವಿಧಿ 21ರ ಗಂಭೀರ ಉಲ್ಲಂಘನೆಯಾಗುತ್ತದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಬಾಲಾಪರಾಧ ಕಾಯ್ದೆಯ ಶಾಸನಾತ್ಮಕ ಕಡ್ಡಾಯವು ಕೇವಲ ನಿಯಮ ಮಾತ್ರವಲ್ಲ; ಅದು ಸಂವಿಧಾನದ ವಿಧಿ 21ರ ಅಡಿ ನೀಡಲಾಗಿರುವ ಖಾತರಿಯನ್ನು ಮುಂದುವರಿಸುವುದಾಗಿದೆ ಎಂದು ನ್ಯಾ. ಜೆ.ಕೆ. ಮಾಹೇಶ್ವರಿ ಮತ್ತು ನ್ಯಾ. ಅತುಲ್ ಎಸ್. ಚಂದ್ರುಕರ್ ಅವರನ್ನೊಳಗೊಂಡ ನ್ಯಾಯಪೀಠ ಅಭಿಪ್ರಾಯಪಟ್ಟಿತು. “ಘೋಷಿತ ಬಾಲಾಪರಾಧಿಯನ್ನು ಸಾಮಾನ್ಯ ಜೈಲಿನಿಂದ ವೀಕ್ಷಣಾ ಗೃಹಕ್ಕೆ ತಕ್ಷಣವೇ ಸ್ಥಳಾಂತರಿಸುವುದನ್ನು ಖಾತರಿಪಡಿಸುವಲ್ಲಿ ತೋರುವ ಯಾವುದೇ ಬಗೆಯ ಲೋಪವು ಕೇವಲ ಶಾಸನದ ಉದ್ದೇಶವನ್ನಷ್ಟೇ ಉಲ್ಲಂಘಿಸುವುದಲ್ಲ; ಅದು ಬಾಲಾಪರಾಧಿಯ ಜೀವಿಸುವ ಹಕ್ಕಿನ ಗಂಭೀರ ಉಲ್ಲಂಘನೆಯಲ್ಲಿ ಅಂತ್ಯಗೊಳ್ಳುತ್ತದೆ” ಎಂದು ನ್ಯಾಯಪೀಠ ಹೇಳಿತು. ಅವಳಿ ಕೊಲೆ ಪ್ರಕರಣದಲ್ಲಿ ಅಪರಾಧಿ ಎಂದು ಘೋಷಿತಗೊಂಡಿರುವ ಬಾಲಾಪರಾಧಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಪೀಠ ನಡೆಸಿತು. ಈ ವೇಳೆ ಅರ್ಜಿದಾರನ ವಯಸ್ಸು 16ರಿಂದ 18 ವರ್ಷದೊಳಗಿದ್ದರೂ ಹಾಗೂ ಆತನನ್ನು ಬಾಲಾಪರಾಧಿ ಎಂದು ಘೋಷಿಸಿದ್ದರೂ, ಆತನನ್ನು ಸಾಮಾನ್ಯ ಜೈಲಿನಲ್ಲಿ ಇರಿಸಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿತು. ಅರ್ಜಿದಾರನು ಬಾಲಾಪರಾಧಿಯಾಗಿದ್ದರೂ, ಆತನನ್ನು ಎರಡೂವರೆ ವರ್ಷಗಳಿಗಿಂತ ಹೆಚ್ಚು ಕಾಲ ಸಾಮಾನ್ಯ ಜೈಲಿನಲ್ಲಿ ಇರಿಸಿರುವುದಕ್ಕೆ ನ್ಯಾಯಾಲಯ ತೀವ್ರ ಅಸಮಾಧಾನ ವ್ಯಕ್ತಪಡಿಸಿತು. ಈ ತಪ್ಪಿಗಾಗಿ ಅರ್ಜಿದಾರ ಬಾಲಾಪರಾಧಿಗೆ 5 ಲಕ್ಷ ರೂ. ಪರಿಹಾರ ನೀಡಲು ರಾಜ್ಯ ಸರ್ಕಾರ ಸಮ್ಮತಿಸಿತು.
ದಿವಂಗತ ಕಾಂಗ್ರೆಸ್ ನಾಯಕ ಮುಹಮ್ಮದ್ ನಂದರಬೆಟ್ಟು ನಿವಾಸಕ್ಕೆ ಎಂಎಲ್ಸಿ ಮಂಜುನಾಥ್ ಭಂಡಾರಿ ಭೇಟಿ
ಬಂಟ್ವಾಳ: ಇತ್ತೀಚೆಗೆ ನಿಧನರಾದ ಕಾಂಗ್ರೆಸ್ ನಾಯಕ ಮುಹಮ್ಮದ್ ನಂದರಬೆಟ್ಟು ಅವರ ನಿವಾಸಕ್ಕೆ ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ವಿಧಾನಪರಿಷತ್ ಸದಸ್ಯರಾದ ಮಂಜುನಾಥ್ ಭಂಡಾರಿ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿದರು. ಈ ವೇಳೆ ಅವರು ಮುಹಮ್ಮದ್ ಅವರೊಂದಿಗೆ ಬಾಲ್ಯದ ಆತ್ಮೀಯ ನೆನಪುಗಳನ್ನು ಕುಟುಂಬ ಸದಸ್ಯರೊಂದಿಗೆ ಹಂಚಿಕೊಂಡು ಭಾವುಕ ಕ್ಷಣಗಳನ್ನು ಮೆಲುಕು ಹಾಕಿದರು. ಈ ಸಂದರ್ಭದಲ್ಲಿ ಪುರಸಭೆಯ ನಿಕಟಪೂರ್ವ ಸದಸ್ಯರಾದ ಲುಕ್ಮಾನ್ ಬಂಟ್ವಾಳ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷರಾದ ಬೋಂಡಾಲ ಚಿತ್ತರಂಜನ್ ಶೆಟ್ಟಿ, ಹಸನ್ ಫಲ್ನಿರ್, ಮುನವರ್, ಸಗೀರ್ ನಂದರಬೆಟ್ಟು, ಫಹಾದ್ ದರ್ಬೆ ಸೇರಿದಂತೆ ಸ್ಥಳೀಯ ಮುಖಂಡರು ಉಪಸ್ಥಿತರಿದ್ದು, ಮೃತರ ಆತ್ಮಕ್ಕೆ ಶಾಂತಿ ಕೋರಿದರು.
ಭಾರತದಲ್ಲಿ ಪೆಟ್ರೋಲ್- ಡೀಸೆಲ್ ಕೊರತೆ ಇಲ್ಲವೇ ಇಲ್ಲ, ವದಂತಿಗೆ ಯಾರೂ ಕಿವಿಗೊಡಬೇಕಿಲ್ಲ: IOCL ಸ್ಪಷ್ಚನೆ
Petrol- Diesel Supply- ಮಧ್ಯಪ್ರಾಚ್ಯದ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ದೇಶದಲ್ಲಿ ಇಂಧನ ಕೊರತೆಯಾಗಲಿದೆ ಎಂಬ ವದಂತಿಗಳಿಗೆ ಭಾರತೀಯ ತೈಲ ನಿಗಮ (IOCL) ತೆರೆ ಎಳೆದಿದೆ. ದೇಶಾದ್ಯಂತ ಪೆಟ್ರೋಲ್, ಡೀಸೆಲ್ ಮತ್ತು ಎಲ್ಪಿಜಿ ಸಾಕಷ್ಟು ದಾಸ್ತಾನು ಇದ್ದು, ಪೂರೈಕೆಯಲ್ಲಿ ಯಾವುದೇ ವ್ಯತ್ಯಯವಿಲ್ಲ ಎಂದು ಕಂಪನಿ ಸ್ಪಷ್ಟಪಡಿಸಿದೆ. ವಿವಿಧ ಮೂಲಗಳಿಂದ ತೈಲ ಆಮದು ಮಾಡಿಕೊಳ್ಳುತ್ತಿರುವುದರಿಂದ ಪೂರೈಕೆ ವ್ಯವಸ್ಥೆ ಸುಭದ್ರವಾಗಿದೆ. ಸಾರ್ವಜನಿಕರು ಆತಂಕದಿಂದ ಇಂಧನ ಖರೀದಿಸದೆ (Panic Buying), ಸುಳ್ಳು ಸುದ್ದಿಗಳಿಗೆ ಕಿವಿಗೊಡಬಾರದು ಎಂದು ಮನವಿ ಮಾಡಿವೆ.
ಅಮೆರಿಕ ಇರಾನ್ನೊಂದಿಗೆ ಅದ್ಭುತ ಒಪ್ಪಂದ ಮಾಡಿಕೊಳ್ಳಲಿದೆ; ಕದನ ವಿರಾಮ ವಿಸ್ತರಿಸಲು ಬಯಸುವುದಿಲ್ಲ: ಟ್ರಂಪ್
ವಾಷಿಂಗ್ಟನ್: ಅಮೆರಿಕ ಪ್ರಬಲ ಸಂಧಾನ ಸ್ಥಾನದಲ್ಲಿದ್ದು, ಇರಾನ್ ನೊಂದಿಗೆ ಅದ್ಭುತ ಒಪ್ಪಂದ ಮಾಡಿಕೊಳ್ಳಲಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಮಂಗಳವಾರ CNBC ಸುದ್ದಿ ಸಂಸ್ಥೆಗೆ ಸಂದರ್ಶನ ನೀಡಿರುವ ಡೊನಾಲ್ಡ್ ಟ್ರಂಪ್, ಬುಧವಾರ ಅಂತ್ಯಗೊಳ್ಳಲಿರುವ ಕದನ ವಿರಾಮವನ್ನು ವಿಸ್ತರಿಸುವ ಬಯಕೆ ನನಗಿಲ್ಲ. ಇರಾನ್ ಬಂದರುಗಳಿಗೆ ಅಮೆರಿಕ ದಿಗ್ಬಂಧನ ಹಾಕಿರುವುದು ದೊಡ್ಡ ಯಶಸ್ಸು ಕಂಡಿದೆ ಎಂದು ಹೇಳಿದ್ದಾರೆ. ಕದನ ವಿರಾಮ ವಿಸ್ತರಣೆ ಸಾಧ್ಯತೆಯ ಕುರಿತು ಪ್ರಶ್ನಿಸಿದಾಗ, “ಅದನ್ನು ಮಾಡುವುದು ನನಗೆ ಬೇಕಿಲ್ಲ. ನನ್ನ ಬಳಿ ಅಷ್ಟು ಸಮಯವಿಲ್ಲ” ಎಂದು ಹೇಳಿರುವ ಡೊನಾಲ್ಡ್ ಟ್ರಂಪ್, ಕದನ ವಿರಾಮ ವಿಸ್ತರಣೆ ಸಾಧ್ಯತೆಯನ್ನು ತಳ್ಳಿ ಹಾಕಿದ್ದಾರೆ.
ಟ್ರಂಪ್ ಬೆಂಬಲಿಸಿದ್ದಕ್ಕೆ ಪಶ್ಚಾತ್ತಾಪವಿದೆ: ಸಾರ್ವಜನಿಕವಾಗಿ ಕ್ಷಮೆಯಾಚಿಸಿದ ಟಕರ್ ಕಾರ್ಲ್ಸನ್
“ಟ್ರಂಪ್ ಪರ ಪ್ರಚಾರ ಮಾಡಿ ತಿಳಿಯದೆ ಜನರನ್ನು ದಾರಿ ತಪ್ಪಿಸಿದ್ದೇನೆ”
Kalaburagi | ಬಾಲಕಿಯ ಮೇಲೆ ಅತ್ಯಾಚಾರ ಯತ್ನ ಆರೋಪ : ಮಹಿಳಾ ಸಂಘಟನೆ ಆಕ್ರೋಶ
ಕಲಬುರಗಿ: ಶಹಾಪುರ ತಾಲೂಕಿನ ಗ್ರಾಮವೊಂದರಲ್ಲಿ ಬಾಲಕಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿರುವ ಘಟನೆ ಖಂಡಿಸಿ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ ಜಿಲ್ಲಾ ಸಮಿತಿ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಏಪ್ರಿಲ್ 19ರಂದು ನಡೆದ ಘಟನೆಯಲ್ಲಿ, ಬಾಲಕಿ ಬಹಿರ್ದೆಸೆಗೆ ತೆರಳಿದ್ದ ವೇಳೆ ದುಷ್ಕರ್ಮಿಗಳು ಆಕೆಯನ್ನು ಹಿಡಿದು ಅತ್ಯಾಚಾರಕ್ಕೆ ಯತ್ನಿಸಿ, ಕೈ-ಕಾಲುಗಳನ್ನು ಕಟ್ಟಿ ಬಿಟ್ಟು ಹೋಗಿರುವುದು ಅಮಾನವೀಯ ಕೃತ್ಯವಾಗಿದೆ ಎಂದು ಸಂಘಟನೆ ಆರೋಪಿಸಿದೆ. ಜಿಲ್ಲೆಯಲ್ಲಿ ನಿರಂತರವಾಗಿ ಅತ್ಯಾಚಾರ, ದೌರ್ಜನ್ಯ ಮತ್ತು ಕೊಲೆ ಪ್ರಕರಣಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಮಹಿಳೆಯರು ಹಾಗೂ ಬಾಲಕಿಯರ ಸುರಕ್ಷತೆ ಪ್ರಶ್ನಾರ್ಥಕವಾಗಿದೆ. ಶಾಲೆ, ಕಾಲೇಜು, ಉದ್ಯೋಗ ಸ್ಥಳಗಳು ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿಯೂ ಭದ್ರತೆ ಕೊರತೆ ಕಾಣಿಸುತ್ತಿದೆ ಎಂದು ಸಂಘಟನೆ ಆತಂಕ ವ್ಯಕ್ತಪಡಿಸಿದೆ. ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಬಯಲು ಶೌಚದ ಸಮಸ್ಯೆಯಿಂದ ಹೆಣ್ಣುಮಕ್ಕಳು ಹೆಚ್ಚಿನ ಅಪಾಯಕ್ಕೆ ಒಳಗಾಗುತ್ತಿದ್ದಾರೆ ಎಂದು ತಿಳಿಸಿದ್ದು, ಆಳಂದ ತಾಲೂಕಿನಲ್ಲಿ ನಡೆದ ಹೋಲುವ ಪ್ರಕರಣಗಳನ್ನು ಉಲ್ಲೇಖಿಸಿ ಇಂತಹ ಘಟನೆಗಳು ಮರುಕಳಿಸುತ್ತಿರುವುದು ಗಂಭೀರ ವಿಷಯವೆಂದು ಅಭಿಪ್ರಾಯಪಟ್ಟಿದೆ. ಜೊತೆಗೆ, ಯಡ್ರಾಮಿ ತಾಲೂಕಿನ ಇಜೇರಿ ಹೊರವಲಯದಲ್ಲಿ ಇಬ್ಬರು ಬಾಲಕಿಯರು ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಘಟನೆಗಳನ್ನೂ ಪ್ರಸ್ತಾಪಿಸಿದೆ. ಈ ಹಿನ್ನೆಲೆಯಲ್ಲಿ ಆರೋಪಿಗಳನ್ನು ಶೀಘ್ರ ಪತ್ತೆಹಚ್ಚಿ ಕಠಿಣ ಶಿಕ್ಷೆಗೆ ಒಳಪಡಿಸಬೇಕು. ಪೀಡಿತ ಬಾಲಕಿಗೆ ಉಚಿತ ಮತ್ತು ಉತ್ತಮ ಚಿಕಿತ್ಸೆ ಒದಗಿಸಬೇಕು ಎಂದು ಸಂಘಟನೆಯ ಜಿಲ್ಲಾಧ್ಯಕ್ಷೆ ಪದ್ಮಿನಿ ಕಿರಣಗಿ ಆಗ್ರಹಿಸಿದ್ದಾರೆ. ಶಾಲೆ-ಕಾಲೇಜುಗಳಲ್ಲಿ ಜಾಗೃತಿ ಮೂಡಿಸಲು ಗೋಡೆ ಬರಹಗಳ ಮೂಲಕ ಪ್ರಚಾರ ನಡೆಸುವಂತೆ ಜಿಲ್ಲಾಡಳಿತಕ್ಕೆ ಹಿಂದೆ ಮನವಿ ಸಲ್ಲಿಸಿದ್ದರೂ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಸಂಘಟನೆಯ ಅಧ್ಯಕ್ಷೆ ಪದ್ಮಿನಿ ಕಿರಣಗಿ ಹಾಗೂ ಕಾರ್ಯದರ್ಶಿ ಶಾಂತಾ ಸರಡಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬೆಟ್ಟಿಂಗ್ ಆರೋಪ; ಗೃಹ ಸಚಿವ ಜಿ.ಪರಮೇಶ್ವರ್, ತುಮಕೂರು ಡಿಸಿ ವಿರುದ್ಧ ತನಿಖೆಗೆ ಜನಪ್ರತಿನಿಧಿಗಳ ಕೋರ್ಟ್ ಆದೇಶ
ಬೆಂಗಳೂರು: ತುಮಕೂರು ನಗರದಲ್ಲಿ ಕಳೆದ ವರ್ಷ ಅಕ್ಟೋಬರ್ನಲ್ಲಿ ನಡೆದಿದ್ದ ಕಬಡ್ಡಿ ಪಂದ್ಯಾವಳಿಯಲ್ಲಿ ಕಾನೂನುಬಾಹಿರ ಬೆಟ್ಟಿಂಗ್ನಲ್ಲಿ ತೊಡಗಿಸಿಕೊಂಡ ಆರೋಪಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ಜಿ.ಪರಮೇಶ್ವರ್ ಹಾಗೂ ತುಮಕೂರು ಜಿಲ್ಲಾಧಿಕಾರಿಗಳ ವಿರುದ್ಧ ಎಫ್ಐಆರ್ ದಾಖಲಿಸಿ ತನಿಖೆ ನಡೆಸುವಂತೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಆದೇಶಿಸಿದೆ. ಈ ಸಂಬಂಧ ಎಚ್.ಆರ್. ನಾಗಭೂಷಣ್ ಎಂಬುವವರು ಸಲ್ಲಿಸಿದ್ದ ಖಾಸಗಿ ದೂರನ್ನು ಮಂಗಳವಾರ ವಿಚಾರಣೆ ನಡೆಸಿದ ಬೆಂಗಳೂರಿನ 42ನೇ ಹೆಚ್ಚುವರಿ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ (ಎಸಿಜೆಎಂ) ಕೆ.ಎನ್. ಶಿವಕುಮಾರ್ ಅವರು ಪ್ರಕರಣದ ಸಂಬಂಧ ಎಫ್ಐಆರ್ ದಾಖಲಿಸಿ ತನಿಖೆ ನಡೆಸುವಂತೆ ತುಮಕೂರಿನ ಕೊರಟಗೆರೆ ತಾಲೂಕಿನ ಕೊಡಿಗೇಹಳ್ಳಿ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ಗೆ ನಿರ್ದೇಶಿಸಿ, ವಿಚಾರಣೆಯನ್ನು ಏಪ್ರಿಲ್ 30ಕ್ಕೆ ಮುಂದೂಡಿದ್ದಾರೆ. ಪ್ರಕರಣದ ದಾಖಲೆಗಳನ್ನು ಗಮನಿಸಿದರೆ, ಮೇಲ್ನೋಟಕ್ಕೆ ಇದೊಂದು ತನಿಖೆಗೆ ಅರ್ಹವಾದ ಪ್ರಕರಣವಾಗಿದೆ. ದೂರುದಾರರು ಒದಗಿಸಿರುವ ಪತ್ರಿಕಾ ವರದಿಗಳನ್ನು ಗಮನಿಸದೆ ಅಥವಾ ದೂರುದಾರರಿಂದ ಯಾವುದೇ ಸಾಕ್ಷ್ಯಗಳನ್ನು ಪಡೆಯದೆ ಪೊಲೀಸರು ದೂರನ್ನು ಮುಕ್ತಾಯಗೊಳಿಸಿದ್ದಾರೆ. ದೂರುದಾರರು ಆರೋಪಿಗಳ ವಿರುದ್ಧ ಬೆಟ್ಟಿಂಗ್ನಲ್ಲಿ ತೊಡಗಿದ ಆರೋಪ ಮಾಡಿದ್ದಾರೆ. ಇದು ಶಾಸಕರ ಅಥವಾ ಜಿಲ್ಲಾಧಿಕಾರಿಗಳ ಅಧಿಕೃತ ಕರ್ತವ್ಯದ ಭಾಗವಲ್ಲ. ಆದ್ದರಿಂದ, ಅವರ ವಿರುದ್ಧ ಕಾನೂನು ಕ್ರಮ ಜರುಗಿಸಲು ಸಂಬಂಧಪಟ್ಟ ಪ್ರಾಧಿಕಾರ ಅಥವಾ ಸರ್ಕಾರದ ಪೂರ್ವಾನುಮತಿಯ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿರುವ ನ್ಯಾಯಾಲಯ, ಆರೋಪಿಗಳ ವಿರುದ್ಧ ಬಿಎನ್ಎಸ್ಎಸ್ ಸೆಕ್ಷನ್ 175(3) ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ನಡೆಸುವಂತೆ ಪೊಲೀಸರಿಗೆ ನಿರ್ದೇಶಿಸಿದೆ. ಜತೆಗೆ, ಕೈಗೊಂಡ ಕ್ರಮದ ಬಗ್ಗೆ ಮುಂದಿನ ವಿಚಾರಣೆ ವೇಳೆ ಈ ಸಂಬಂಧ ವರದಿ ಸಲ್ಲಿಸುವಂತೆ ಪೊಲೀಸರಿಗೆ ಸೂಚಿಸಿದೆ. ದೂರುದಾರರ ಆರೋಪವೇನು? ಕಳೆದ ವರ್ಷ ಅಕ್ಟೋಬರ್ 19ರಂದು ತುಮಕೂರು ನಗರದಲ್ಲಿ ನಡೆದ ಕಬಡ್ಡಿ ಪಂದ್ಯದ ವೇಳೆ ಕೊರಟೆಗೆರೆ ಶಾಸಕರೂ ಆದ ಗೃಹ ಸಚಿವ ಜಿ. ಪರಮೇಶ್ವರ್ ಹಾಗೂ ತುಮಕೂರು ಜಿಲ್ಲಾಧಿಕಾರಿಗಳು ಗೆದ್ದ ತಂಡವಾದ ದಕ್ಷಿಣ ಕನ್ನಡ ತಂಡದ ವಿರುದ್ಧ 500 ರೂ. ಬೆಟ್ಟಿಂಗ್ ಕಟ್ಟಿದ್ದಾರೆ ಹಾಗೂ ಈ ಬಗ್ಗೆ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ. ಈ ಮೂಲಕ ದೊಡ್ಡ ಮಟ್ಟದಲ್ಲಿ ಸಾರ್ವಜನಿಕರನ್ನು ಬೆಟ್ಟಿಂಗ್ಗೆ ಪ್ರೇರೇಪಿಸಿದ್ದಾರೆ ಎಂದು ಖಾಸಗಿ ದೂರಿನಲ್ಲಿ ಆರೋಪಿಸಿದ್ದ ನಾಗಭೂಷಣ್, ಪ್ರಕರಣಕ್ಕೆ ಸಂಬಂಧಿಸಿದ ಪತ್ರಿಕಾ ವರದಿಗಳ ಪ್ರತಿ ಹಾಗೂ ಆರೋಪಿಗಳ ವಿರುದ್ಧ ಕ್ರಮ ಜರುಗಿಸುವಂತೆ ಕೋರಿ ಸಲ್ಲಿಸಲಾಗಿದ್ದ ದೂರನ್ನು 'ಆಧಾರರಹಿತ' ಎಂಬ ಕಾರಣ ನೀಡಿ ಮುಕ್ತಾಯಗೊಳಿಸಿ 2025ರ ಅಕ್ಟೋಬರ್ 29ರಂದು ಕೊಡಿಗೇಹಳ್ಳಿ ಪೊಲೀಸರು ನೀಡಿದ್ದ ಹಿಂಬರಹದ ಪ್ರತಿಗಳನ್ನೂ ನ್ಯಾಯಾಲಯಕ್ಕೆ ಸಲ್ಲಿಸಿದ್ದರು.
ಕಳೆದ ಒಂದು ವರ್ಷದಿಂದ ಮಂಗಳೂರಿನಲ್ಲಿ ಕಾನೂನು ಸುವ್ಯವಸ್ಥೆ ಉತ್ತಮವಾಗಿದೆ: ರಾಜ್ಯ ಪೊಲೀಸ್ ಮಹಾನಿರ್ದೇಶಕ ಸಲೀಂ
ಮಂಗಳೂರು:ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಕಳೆದೊಂದು ವರ್ಷದಿಂದ ಕಾನೂನು ಸುವ್ಯವಸ್ಥೆ ತುಂಬಾ ಉತ್ತಮವಾಗಿದೆ. ಅದನ್ನು ಮುಂದುವರಿಸಿಕೊಂಡು ಹೋಗಬೇಕು ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕ ಡಾ.ಎಂ.ಎ. ಸಲೀಂ ಸೂಚಿಸಿದ್ದಾರೆ. ಮಂಗಳವಾರ ಮಂಗಳೂರಿಗೆ ಭೇಟಿ ನೀಡಿ ಪೊಲೀಸ್ ಕಮಿಷನರ್ ಕಚೇರಿಯಲ್ಲಿ ಜಿಲ್ಲೆಯ ಪೊಲೀಸ್ ಇಲಾಖೆಯ ಪ್ರಗತಿ ಪರಿಶೀಲನೆ ಸಭೆ ನಡೆಸಿದ ಬಳಿಕ ಸುದ್ದಿಗಾರರ ಜೊತೆ ಅವರು ಮಾತನಾಡಿದರು. ಒಂದು ವರ್ಷದಿಂದ ಇಲ್ಲಿ ಕಾನೂನು ಸುವ್ಯವಸ್ಥೆ ಉತ್ತಮವಾಗಿದೆ. ಅದನ್ನೇ ಮುಂದುವರೆಸಿಕೊಂಡು ಹೋಗುವಂತೆ ನಿರ್ದೇಶನ ನೀಡಿದ್ದೇನೆ. ಉತ್ತರ ಕರ್ನಾಟಕ ಭಾಗದ ಪೊಲೀಸ್ ಸಿಬ್ಬಂದಿ ಮತ್ತವರ ಕುಟುಂಬದವರು ವರ್ಗಾವಣೆ ವಿಚಾರದಲ್ಲಿ ಮನವಿ ಸಲ್ಲಿಸಿದ್ದಾರೆ. ಈ ಬಗ್ಗೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಚರ್ಚೆ ಮಾಡಲಾಗಿದೆ ಎಂದು ಡಾ.ಎಂ.ಎ. ಸಲೀಂ ತಿಳಿಸಿದ್ದಾರೆ. ಹಂತ ಹಂತವಾಗಿ ವರ್ಗಾವಣೆಗೆ ಕ್ರಮ ವಹಿಸಲಾಗುವುದು ಎಂದ ಡಾ.ಎಂ.ಎ. ಸಲೀಂ ಮಂಗಳೂರು ನಗರ ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ವಿರುದ್ಧ ಬೆಂಗಳೂರಿನ ಜಾರಿ ನಿದೇರ್ಶನಾಲಯದ ಎಸ್ಪಿಎಸ್.ಎಸ್.ಕಾಶಿ ನೀಡಿದ ದೂರಿನ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಲು ನಿರಾಕರಿಸಿದರು.
Kalaburagi | ಎ.23ರಿಂದ ಉಚಿತ ಕಾಲು-ಬಾಯಿ ರೋಗ ಲಸಿಕಾ ಅಭಿಯಾನ: ಡಿಸಿ ಫೌಝಿಯಾ ತರನ್ನುಮ್
ಕಲಬುರಗಿ: 2026-27ನೇ ಸಾಲಿನ ರಾಷ್ಟ್ರೀಯ ಜಾನುವಾರು ರೋಗ ನಿಯಂತ್ರಣ ಕಾರ್ಯಕ್ರಮ (NADCP-FMD) ಅಡಿಯಲ್ಲಿ 9ನೇ ಸುತ್ತಿನ ಕಾಲು-ಬಾಯಿ ರೋಗ ಲಸಿಕಾ ಅಭಿಯಾನವನ್ನು ಏಪ್ರಿಲ್ 23ರಿಂದ ಮೇ 24ರವರೆಗೆ ಹಮ್ಮಿಕೊಳ್ಳಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಫೌಝಿಯಾ ತರನ್ನುಮ್ ತಿಳಿಸಿದ್ದಾರೆ. ಮಂಗಳವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಮೇಲ್ವಿಚಾರಣಾ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ಎಲ್ಲಾ ಹಳ್ಳಿಗಳ ರೈತರ ಮನೆಬಾಗಿಲಿಗೆ ತೆರಳಿ ಜಾನುವಾರುಗಳಿಗೆ ಉಚಿತ ಲಸಿಕೆ ನೀಡಲಾಗುವುದು ಎಂದು ಹೇಳಿದರು. ಲಸಿಕೆ ನೀಡುವ ವೇಳೆ ರೈತರ ಮೊಬೈಲ್ ಸಂಖ್ಯೆ ಸೇರಿದಂತೆ ಎಲ್ಲಾ ಮಾಹಿತಿಯನ್ನು ಆನ್ಲೈನ್ನಲ್ಲಿ ದಾಖಲಿಸಲಾಗುತ್ತದೆ ಎಂದು ತಿಳಿಸಿದರು. ಜಿಲ್ಲೆಯಾದ್ಯಂತ ಪಶುಪಾಲನಾ ಇಲಾಖೆಯ ಅಧಿಕಾರಿಗಳು ಹಾಗೂ ಲಸಿಕಾದಾರರು ಸೇರಿ 426 ತಂಡಗಳನ್ನು ರಚಿಸಲಾಗಿದ್ದು, ಸುಮಾರು 3,74,700 ದನ, ಎಮ್ಮೆ ಮತ್ತು ಕರುಗಳಿಗೆ ಲಸಿಕೆ ನೀಡುವ ಗುರಿ ಹೊಂದಲಾಗಿದೆ. ಗ್ರಾಮ ಪಂಚಾಯತ್ಗಳು, ರೈತರ ಸಂಪರ್ಕ ಕೇಂದ್ರಗಳು, ಬಸ್ ನಿಲ್ದಾಣಗಳು ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಪೋಸ್ಟರ್ಗಳ ಮೂಲಕ ಜಾಗೃತಿ ಮೂಡಿಸಲು ಸೂಚಿಸಲಾಗಿದೆ. ರೋಗ ಹರಡುವಿಕೆ ತಡೆಯಲು ಪ್ರತಿ ಜಾನುವಾರಿಗೆ ಪ್ರತ್ಯೇಕ ಸಿರಿಂಜ್ ಮತ್ತು ನೀಡಲ್ ಬಳಸಲಾಗುತ್ತದೆ. ಲಸಿಕೆಗಳ ಗುಣಮಟ್ಟ ಕಾಪಾಡಲು ಶೀತಲೀಕರಣ ವ್ಯವಸ್ಥೆ ಕಲ್ಪಿಸಲಾಗಿದ್ದು, ಅಧಿಕಾರಿಗಳು ಈಗಾಗಲೇ ಪರಿಶೀಲನೆ ನಡೆಸಿದ್ದಾರೆ ಎಂದು ಹೇಳಿದರು. ಬೀದಿ ನಾಯಿಗಳ ನಿಯಂತ್ರಣಕ್ಕಾಗಿ ಎಬಿಸಿ (Animal Birth Control) ಕಾರ್ಯಕ್ರಮವನ್ನು ಶಾಲಾ-ಕಾಲೇಜು ಹಾಗೂ ಸಾರ್ವಜನಿಕ ಪ್ರದೇಶಗಳಲ್ಲಿ ಕಟ್ಟುನಿಟ್ಟಾಗಿ ಜಾರಿಗೊಳಿಸಲು ಸ್ಥಳೀಯ ಸಂಸ್ಥೆಗಳಿಗೆ ಸೂಚಿಸಲಾಗಿದೆ. ಕಾಲು-ಬಾಯಿ ರೋಗ ಲಸಿಕಾ ಕಾರ್ಯಕ್ರಮವನ್ನು ವರ್ಷಕ್ಕೆ ಎರಡು ಬಾರಿ ಹಮ್ಮಿಕೊಳ್ಳಲಾಗುತ್ತಿದ್ದು, ಪ್ರತಿದಿನದ ಮಾಹಿತಿಯನ್ನು ‘ಭಾರತ ಪಶು ಧನ’ ತಂತ್ರಾಂಶದಲ್ಲಿ ದಾಖಲಿಸಲಾಗುತ್ತದೆ. ರಾಜ್ಯವನ್ನು ಕಾಲು-ಬಾಯಿ ರೋಗಮುಕ್ತ ವಲಯವನ್ನಾಗಿಸಲು ನಾಲ್ಕು ತಿಂಗಳ ಮೇಲ್ಪಟ್ಟ ಎಲ್ಲಾ ಜಾನುವಾರುಗಳಿಗೆ ಕಡ್ಡಾಯವಾಗಿ ಲಸಿಕೆ ಹಾಕಿಸಿಕೊಳ್ಳುವಂತೆ ಜಿಲ್ಲಾಧಿಕಾರಿ ರೈತರಿಗೆ ಮನವಿ ಮಾಡಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ತಾಲ್ಲೂಕಿನ ಮುಖ್ಯ ಪಶುವೈದ್ಯಾಧಿಕಾರಿಗಳು ಅಥವಾ ಸಮೀಪದ ಪಶು ಆಸ್ಪತ್ರೆಗಳನ್ನು ಸಂಪರ್ಕಿಸಬಹುದು. ತುರ್ತು ಚಿಕಿತ್ಸೆಗೆ 1962 ಸಹಾಯವಾಣಿ ಲಭ್ಯವಿದೆ ಎಂದು ತಿಳಿಸಿದ್ದಾರೆ. ಸಭೆಯಲ್ಲಿ ಜಿಲ್ಲಾ ಪಂಚಾಯತ್ ಸಿಇಒ ಭಂವರ ಸಿಂಗ್ ಮೀನಾ, ಮಹಾನಗರ ಪಾಲಿಕೆ ಅಧಿಕಾರಿಗಳು ಡಾ. ರಾಜೇಂದ್ರ, ಉಪನಿರ್ದೇಶಕ ಡಾ. ಸಂಜಯ ರಡ್ಡಿ, ಕಲಬುರಗಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಉಪನಿರ್ದೇಶಕ ಡಾ. ಜಿ. ಗುರುಶಾಂತಪ್ಪ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಎಲ್ಲಾ ತಾಲ್ಲೂಕಿನ ಮುಖ್ಯ ಪಶುವೈದ್ಯಾಧಿಕಾರಿಗಳು ಉಪಸ್ಥಿತರಿದ್ದರು.
Raichur | ಪಿಂಜಾರ್ ನದಾಫ್ ಸಮಾಜಕ್ಕೆ ಪ್ರತ್ಯೇಕ ನಿಗಮ ಮಂಡಳಿ ಸ್ಥಾಪನೆಗೆ ಆಗ್ರಹಿಸಿ ಪ್ರತಿಭಟನೆ
ರಾಯಚೂರು: ಪಿಂಜಾರ್ ನದಾಫ್ ಸಮಾಜಕ್ಕೆ ಪ್ರತ್ಯೇಕ ಅಭಿವೃದ್ಧಿ ನಿಗಮ ಮಂಡಳಿ ಸ್ಥಾಪಿಸಬೇಕೆಂದು ಆಗ್ರಹಿಸಿ ಅಖಿಲ ಕರ್ನಾಟಕ ಪಿಂಜಾರ್ ನದಾಫ್ ಮನ್ಸೂರಿ ಹಕ್ಕುಗಳ ಸಂಘದ ಪದಾಧಿಕಾರಿಗಳು ಮಂಗಳವಾರ ಜಿಲ್ಲಾಡಳಿತ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ರಾಜ್ಯದಾದ್ಯಂತ ಸುಮಾರು 35ರಿಂದ 40 ಲಕ್ಷ ಜನಸಂಖ್ಯೆ ಹೊಂದಿರುವ ಪಿಂಜಾರ್ ನದಾಫ್ ಸಮುದಾಯವು ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಹಾಗೂ ರಾಜಕೀಯವಾಗಿ ಹಿಂದುಳಿದಿದ್ದು, ಬಡತನದಲ್ಲಿ ಜೀವನ ಸಾಗಿಸುತ್ತಿದೆ ಎಂದು ಪ್ರತಿಭಟನಾಕಾರರು ತಿಳಿಸಿದ್ದಾರೆ. ಪಾರಂಪರಿಕವಾಗಿ ಹತ್ತಿ ಹಾಗೂ ಅರಳೆಯಿಂದ ಗಾದಿ, ದಿಂಬು, ಜಮಖಾನ ಹಾಗೂ ಹಗ್ಗ ತಯಾರಿಸುವ ವೃತ್ತಿಯಲ್ಲಿ ತೊಡಗಿದ್ದ ಈ ಸಮುದಾಯವು ಆಧುನಿಕ ಯುಗದಲ್ಲಿ ಉದ್ಯೋಗ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ. 1994ರಲ್ಲಿ ಹಿಂದುಳಿದ ಪ್ರವರ್ಗ-1ಕ್ಕೆ ಸೇರಿಸಲಾದರೂ, ಸರ್ಕಾರದ ಸೌಲಭ್ಯಗಳನ್ನು ಪಡೆಯುವಲ್ಲಿ ಗೊಂದಲ ಉಂಟಾಗಿ ವಿವಿಧ ಇಲಾಖೆಗಳ ನಡುವೆ ಅಲೆದಾಡುವ ಪರಿಸ್ಥಿತಿ ಎದುರಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಕಳೆದ 30 ವರ್ಷಗಳಿಂದ ಪ್ರತ್ಯೇಕ ನಿಗಮ ಮಂಡಳಿಗಾಗಿ ಹೋರಾಟ ನಡೆಸುತ್ತಿರುವ ಸಮುದಾಯಕ್ಕೆ, ಮುಖ್ಯಮಂತ್ರಿಗಳು ತಕ್ಷಣ ಪಿಂಜಾರ್ ನದಾಫ್ ಅಭಿವೃದ್ಧಿ ನಿಗಮವನ್ನು ಸ್ಥಾಪಿಸಿ ಸಮಗ್ರ ಅಭಿವೃದ್ಧಿಗೆ ಅಗತ್ಯ ಅನುದಾನ ನೀಡಬೇಕು ಎಂದು ಒತ್ತಾಯಿಸಿದರು. ಈ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬರೆದ ಮನವಿ ಪತ್ರವನ್ನು ಜಿಲ್ಲಾಧಿಕಾರಿಗಳ ಮುಖಾಂತರ ಸಲ್ಲಿಸಲಾಯಿತು. ಪ್ರತಿಭಟನೆಯಲ್ಲಿ ಸಂಘದ ರಾಜ್ಯ ಘಟಕದ ಅಧ್ಯಕ್ಷ ಇಮ್ರಾನ್ ಬಡೇಸಾಬ್, ಜಿಲ್ಲಾ ಅಧ್ಯಕ್ಷೆ ಖಾಸಿಂಬಿ, ಅಲ್ಲಾವುದ್ದೀನ್, ಎಂ.ಡಿ. ಜಾವೀದ್, ಹಸೀನಾ, ಹಾಜಿಸಾಬ್, ಶಫಿ ಗುಂಜಳ್ಳಿ ಸೇರಿದಂತೆ ಅನೇಕರು ಭಾಗವಹಿಸಿದರು.
2026ರಲ್ಲಿ ಭಾರತದ ತಲಾ ಆದಾಯ ಬಾಂಗ್ಲಾದೇಶಕ್ಕಿಂತ ಕಡಿಮೆ: ಐಎಂಎಫ್ ಅಂದಾಜು
ಹೊಸದಿಲ್ಲಿ,ಎ.21: ಅಂತರರಾಷ್ಟ್ರೀಯ ಹಣಕಾಸು ನಿಧಿಯ (ಐಎಂಎಫ್) ಎಪ್ರಿಲ್ 2026 ಮುನ್ನೋಟವು ಬಾಂಗ್ಲಾದೇಶದ ತಲಾವಾರು ಜಿಡಿಪಿ ಅಥವಾ ತಲಾದಾಯವು ಭಾರತಕ್ಕಿಂತ ಹೆಚ್ಚಿರಲಿದೆ ಎಂದು ಅಂದಾಜಿಸಿದೆ. ಎ.14ರಂದು ಪ್ರಕಟಗೊಂಡ ಐಎಂಎಫ್ನ ವಿಶ್ವ ಆರ್ಥಿಕ ಮುನ್ನೋಟದಲ್ಲಿನ ದತ್ತಾಂಶಗಳ ಪ್ರಕಾರ ಪ್ರಸಕ್ತ ಬೆಲೆಗಳಲ್ಲಿ ಬಾಂಗ್ಲಾದೇಶದ ತಲಾದಾಯ 2,911 ಡಾ. ಮತ್ತು ಭಾರತದ ತಲಾದಾಯ 2,812 ಡಾ.ಆಗಿರಲಿದೆ ಎಂದು ಅಂದಾಜಿಸಲಾಗಿದೆ. ತಲಾದಾಯವು ಒಂದು ದೇಶದ ಒಟ್ಟು ಜಿಡಿಪಿಯನ್ನು ಅಲ್ಲಿಯ ಜನಸಂಖ್ಯೆಯಿಂದ ಭಾಗಿಸಿದಾಗ ಬರುವ ಅಳತೆಯಾಗಿದ್ದು, ಇದು ಓರ್ವ ವ್ಯಕ್ತಿಯ ಸರಾಸರಿ ಆರ್ಥಿಕ ಪಾಲನ್ನು ಸೂಚಿಸುತ್ತದೆ. ಅಭಿವೃದ್ಧಿಶೀಲ ದೇಶಗಳ ತಲಾದಾಯ ಸುಮಾರು 7,500 ಡಾ.ಆಗಿದ್ದರೆ ಜಾಗತಿಕ ಸರಾಸರಿಯು ಸುಮಾರು 15,600 ಡಾ.ಗಳಷ್ಟಿದೆ. 2025ರಲ್ಲಿ ಭಾರತದ ತಲಾದಾಯವು 2,675 ಡಾ.ಗಳಿದ್ದರೆ ಬಾಂಗ್ಲಾದೇಶದ್ದು ಕೊಂಚ ಕಡಿಮೆ,ಅಂದರೆ 2,635 ಡಾ.ಆಗಿತ್ತು. ಆದಾಗ್ಯೂ 2023 ಮತ್ತು 2024ರಲ್ಲಿ ಬಾಂಗ್ಲಾದೇಶವು ಭಾರತಕ್ಕಿಂತ ಮುಂದಿತ್ತು ಎನ್ನುವುದನ್ನು ದತ್ತಾಂಶಗಳು ತೋರಿಸಿವೆ. 2027ರಲ್ಲಿ ಭಾರತದ ತಲಾದಾಯವು 3,074 ಡಾ.ಗೆ ಹೆಚ್ಚಲಿದ್ದು,ಬಾಂಗ್ಲಾದೇಶವನ್ನು (3,048 ಡಾ.) ಮೀರಿಸಲಿದೆ ಮತ್ತು 2031ರವರೆಗೆ ಭಾರತವೇ ಮುನ್ನಡೆ ಕಾಯ್ದುಕೊಳ್ಳಲಿದೆ ಎಂದು ಐಎಂಎಫ್ ಅಂದಾಜಿಸಿದೆ. ತಲಾದಾಯದಲ್ಲಿ ವ್ಯತ್ಯಾಸವಿದ್ದರೂ ದೇಶದ ಒಟ್ಟು ಆರ್ಥಿಕ ಗಾತ್ರದಲ್ಲಿ ಭಾರತವು ಬಾಂಗ್ಲಾದೇಶಕ್ಕಿಂತ ಬಹಳ ಮುಂದಿದೆ. 2026ರಲ್ಲಿ ಭಾರತದ ಒಟ್ಟು ಜಿಡಿಪಿ 4.1 ಲಕ್ಷ ಕೋಟಿ ಡಾ. ಮತ್ತು ಬಾಂಗ್ಲಾದೇಶದ್ದು 510 ಶತಕೋಟಿ ಡಾ.ಇರಲಿದೆ ಎಂದು ಅಂದಾಜಿಸಲಾಗಿದೆ. ತಲಾದಾಯವು ಕೇವಲ ಜನಸಂಖ್ಯೆಯ ಅನುಪಾತವನ್ನು ಅವಲಂಬಿಸಿರುತ್ತದೆ. ಹೀಗಾಗಿ ದೊಡ್ಡ ಜನಸಂಖ್ಯೆ ಹೊಂದಿರುವ ಭಾರತದಂತಹ ದೊಡ್ಡ ದೇಶಗಳಲ್ಲಿ ಒಟ್ಟು ಜಿಡಿಪಿ ಹೆಚ್ಚಿದ್ದರೂ ತಲಾದಾಯವು ಕೆಲವೊಮ್ಮೆ ಸಣ್ಣದೇಶಗಳಿಗಿಂತ ಕಡಿಮೆ ಇರಬಹುದು ಎನ್ನುವುದು ಇಲ್ಲಿ ಗಮನಾರ್ಹವಾಗಿದೆ.
Raichur | ಸಾರ್ವಜನಿಕ ಸ್ಥಳಗಳಲ್ಲಿ ಮಲ–ಮೂತ್ರ ವಿಸರ್ಜನೆಗೆ ನಿಷೇಧ: ಜುಬಿನ್ ಮೊಹೊಪಾತ್ರ
ರಾಯಚೂರು: ರಾಯಚೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಸಾರ್ವಜನಿಕ ಸ್ಥಳಗಳಲ್ಲಿ ಯಾವುದೇ ಕಾರಣಕ್ಕೂ ಮಲ ಹಾಗೂ ಮೂತ್ರ ವಿಸರ್ಜನೆ ಮಾಡುವುದನ್ನು ನಿಷೇಧಿಸಲಾಗಿದೆ ಎಂದು ಪಾಲಿಕೆ ಆಯುಕ್ತ ಜುಬಿನ್ ಮೊಹೊಪಾತ್ರ ತಿಳಿಸಿದ್ದಾರೆ. ಸ್ವಚ್ಚ ಭಾರತ್ ಮಿಷನ್ ಯೋಜನೆಯ ಮಾರ್ಗಸೂಚಿಗಳನ್ವಯ, ಪಾಲಿಕೆ ವ್ಯಾಪ್ತಿಯ 35 ವಾರ್ಡ್ಗಳನ್ನು ಓಪನ್ ಡಿಫೆಕೇಶನ್ ಫ್ರೀ (ಒಡಿಎಫ್) ನಗರವೆಂದು ಘೋಷಿಸಿ ಪ್ರಮಾಣಪತ್ರ ಪಡೆದಿದ್ದು, ನಂತರ ಓಡಿಎಫ್+ ಮರು ಪ್ರಮಾಣೀಕರಣವೂ ಪಡೆದಿದೆ. ಇದರ ಹಿನ್ನೆಲೆಯಲ್ಲಿ ಸಾರ್ವಜನಿಕ ಸ್ವಚ್ಛತೆ ಕಾಪಾಡುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಮಲ ಅಥವಾ ಮೂತ್ರ ವಿಸರ್ಜನೆ ಮಾಡಿದರೆ, ಮೂತ್ರ ವಿಸರ್ಜನೆಗೆ 500 ರೂ. ಹಾಗೂ ಮಲ ವಿಸರ್ಜನೆಗೆ 1,000 ರೂ. ದಂಡ ವಿಧಿಸಲಾಗುವುದು ಎಂದು ತಿಳಿಸಲಾಗಿದೆ. ಸಾರ್ವಜನಿಕರು ನಗರದಲ್ಲಿರುವ ಸಾರ್ವಜನಿಕ ಶೌಚಾಲಯಗಳು, ಹೋಟೆಲ್ಗಳು ಹಾಗೂ ಪೆಟ್ರೋಲ್ ಬಂಕ್ಗಳ ಶೌಚಾಲಯಗಳನ್ನು ಉಚಿತವಾಗಿ ಬಳಸಬಹುದಾಗಿದೆ. ಈ ಕುರಿತು ಸಾರ್ವಜನಿಕರಿಂದ ಸಲಹೆ, ಸೂಚನೆ ಹಾಗೂ ಆಕ್ಷೇಪಣೆಗಳನ್ನು ಪ್ರಕಟಣೆ ಹೊರಬಂದ ದಿನದಿಂದ 7 ದಿನಗಳೊಳಗೆ ಸಂಬಂಧಿತ ದಾಖಲೆಗಳೊಂದಿಗೆ ಲಿಖಿತವಾಗಿ ಸಲ್ಲಿಸಬಹುದು ಎಂದು ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಗೋವಧೆ ಅನಿರೀಕ್ಷಿತ ಹಿಂಸಾಚಾರಕ್ಕೆ ಕಾರಣವಾಗುತ್ತದೆ: ಎನ್ಸ್ಎ ಅಡಿ ಆರೋಪಿಯ ಬಂಧನ ಎತ್ತಿಹಿಡಿದ ಹೈಕೋರ್ಟ್
ಪ್ರಯಾಗ್ರಾಜ್ (ಉ.ಪ್ರ)ಎ.21: ಒಂದು ಹಸು ಮತ್ತು ಎರಡು ಕರುಗಳನ್ನು ವಧಿಸಿದ ಆರೋಪದಲ್ಲಿ ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ(ಎನ್ಎಸ್ಎ) ವ್ಯಕ್ತಿಯೋರ್ವನ ಬಂಧನವನ್ನು ಅಲಹಾಬಾದ್ ಉಚ್ಚ ನ್ಯಾಯಾಲಯವು ಎತ್ತಿ ಹಿಡಿದಿದೆ. ಗೋಹತ್ಯೆಯು ಸಮಾಜದ ಒಂದು ದೊಡ್ಡ ವರ್ಗದ ಧಾರ್ಮಿಕ ನಂಬಿಕೆಗಳಿಗೆ ಹಾನಿಯನ್ನುಂಟು ಮಾಡುತ್ತದೆ. ಇದು ತಕ್ಷಣದ ತೀವ್ರ ಭಾವನೆಗಳನ್ನು ಮತ್ತು ಹಿಂಸಾತ್ಮಕ ಪ್ರತಿಕ್ರಿಯೆಗಳನ್ನು ಪ್ರಚೋದಿಸುತ್ತದೆ ಎಂದು ನ್ಯಾಯಮೂರ್ತಿಗಳಾದ ಜೆ.ಜೆ.ಮುನೀರ್ ಮತ್ತು ಸಂಜೀವ್ ಕುಮಾರ್ ಅವರ ಪೀಠವು ಇತ್ತೀಚಿನ ತನ್ನ ಆದೇಶದಲ್ಲಿ ಹೇಳಿದೆ. ಇಂತಹ ಕೃತ್ಯಗಳು ಸಮಾಜದಲ್ಲಿ ವ್ಯಾಪಕ ಅಶಾಂತಿಯನ್ನು ಸೃಷ್ಟಿಸುವ ‘ಅಂತರ್ಗತ ಸಾಮರ್ಥ್ಯವನ್ನು’ ಹೊಂದಿರುತ್ತವೆ,ಇದು ಸಾಮಾನ್ಯ ಜನಜೀವನದ ಮೇಲೆ ಪ್ರತಿಕೂಲ ಪರಿಣಾಮವನ್ನು ಬೀರುತ್ತದೆ ಎಂದು ಅದು ಹೇಳಿದೆ. ಮಾ.15,2025ರಂದು ಉತ್ತರ ಪ್ರದೇಶದ ಶಾಮ್ಲಿ ಜಿಲ್ಲೆಯ ಗ್ರಾಮವೊಂದರಲ್ಲಿ ಕರುವಿನ ಅವಶೇಷಗಳು ಪತ್ತೆಯಾಗಿದ್ದವು. ಅದು ಹೋಳಿ ಹಬ್ಬದ ಸಂದರ್ಭವಾಗಿದ್ದರಿಂದ ಈ ಘಟನೆಯು ಹಿಂದು ಸಮುದಾಯದಲ್ಲಿ ತೀವ್ರ ಆಕ್ರೋಶವನ್ನು ಹುಟ್ಟುಹಾಕಿತ್ತು. ಸ್ಥಳದಲ್ಲಿ ಸೇರಿದ್ದ ಗ್ರಾಮಸ್ಥರು ಮತ್ತು ಹಿಂದುತ್ವ ಸಂಘಟನೆಗಳ ಸದಸ್ಯರು ಪ್ರತಿಭಟನೆಯನ್ನು ನಡೆಸಿ ಆರೋಪಿಗಳ ಬಂಧನಕ್ಕೆ ಆಗ್ರಹಿಸಿದ್ದರು, ರಸ್ತೆ ತಡೆಯನ್ನೂ ನಡೆಸಿದ್ದರು. ತನಿಖೆಯ ಬಳಿಕ ಪೊಲೀಸರು ಅರ್ಜಿದಾರ ಮತ್ತು ಆತನ ಇಬ್ಬರು ಸಹಚರರನ್ನುಬಂಧಿಸಿದ್ದರು. ಕಾಡಿನಲ್ಲಿ ಒಂದು ಹಸು ಮತ್ತು ಎರಡು ಕರುಗಳನ್ನು ವಧಿಸಿದ್ದನ್ನು ಆರೋಪಿಗಳು ಒಪ್ಪಿಕೊಂಡಿದ್ದಾರೆ ಎಂದು ಪೋಲಿಸರು ತಿಳಿಸಿದ್ದರು. ಜಾಮೀನಿಗಾಗಿ ಪ್ರಯತ್ನಿಸುತ್ತಿದ್ದ ಅರ್ಜಿದಾರ ತಾನು ಬಿಡುಗಡೆಗೊಂಡ ಬಳಿಕ ಮತ್ತೆ ಗೋವಧೆಯನ್ನು ಮಾಡುವುದಾಗಿ ಜೈಲಿನಿಂದ ಸಂದೇಶಗಳನ್ನು ರವಾನಿಸಿದ್ದ ಎಂದು ಪೋಲಿಸರು ಆರೋಪಿಸಿದ್ದರು. ಈ ಹಿನ್ನೆಲೆಯಲ್ಲಿ ಎನ್ಎಸ್ಎ ಅಡಿ ಆತನ ಬಂಧನಕ್ಕೆ ಆದೇಶ ಹೊರಡಿಸಲಾಗಿತ್ತು. ಅರ್ಜಿದಾರನು ಜೈಲಿನಿಂದ ಹೊರಬಂದ ಬಳಿಕ ಸಾರ್ವಜನಿಕ ಸುವ್ಯವಸ್ಥೆಗೆ ಧಕ್ಕೆಯನ್ನುಂಟು ಮಾಡುವ ಚಟುವಟಿಕೆಗಳಲ್ಲಿ ತೊಡಗಬಹುದು ಎಂಬ ಅಧಿಕಾರಿಗಳ ಆತಂಕವು ಸಮರ್ಥನೀಯವಾಗಿದೆ ಎಂದು ಗುರುವಾರ ಉಚ್ಚ ನ್ಯಾಯಾಲಯವು ಎತ್ತಿ ಹಿಡಿದಿದೆ. ಎನ್ಎಸ್ಎ ಭಾರತದ ರಕ್ಷಣೆ, ವಿದೇಶಿ ಸಂಬಂಧಗಳು ಮತ್ತು ದೇಶದ ಭದ್ರತೆಗೆ ಧಕ್ಕೆಯನ್ನುಂಟು ಮಾಡಬಹುದಾದ ಯಾವುದೇ ವ್ಯಕ್ತಿಯನ್ನು ಮುನ್ನೆಚ್ಚರಿಕೆ ಕ್ರಮವಾಗಿ ಬಂಧಿಸಲು ಕೇಂದ್ರ ಮತ್ತು ರಾಜ್ಯ ಸರಕಾರಕ್ಕೆ ಸರಕಾರಗಳಿಗೆ ಅಧಿಕಾರ ನೀಡುತ್ತದೆ.

25 C