SENSEX
NIFTY
GOLD
USD/INR

Weather

26    C
...

ಸುರಕ್ಷಿತ ವಾಯು ಮಾರ್ಗಗಳನ್ನು ತೆರೆದ UAE; ಗಂಟೆಗೆ 48 ವಿಮಾನಯಾನಗಳನ್ನು ನಿರ್ವಹಿಸುವ ಸಾಮರ್ಥ್ಯ: ಸಚಿವ ಅಲ್ ಮರ್ರಿ

ಅಬುಧಾಬಿ: ಇರಾನ್ ವಿರುದ್ಧ ಅಮೆರಿಕ–ಇಸ್ರೇಲ್ ಸಂಘರ್ಷದಿಂದ ಗಲ್ಫ್ ಪ್ರದೇಶದಲ್ಲಿ ಉಂಟಾದ ಉದ್ವಿಗ್ನತೆಯ ನಡುವೆಯೂ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಸುರಕ್ಷಿತ ವಾಯು ಮಾರ್ಗ ತೆರೆದಿದೆ ಎಂದು ಆರ್ಥಿಕ ಮತ್ತು ಪ್ರವಾಸೋದ್ಯಮ ಸಚಿವ ಅಬ್ದುಲ್ಲಾ ಬಿನ್ ತೌಕ್ ಅಲ್ ಮರ್ರಿ ಮಂಗಳವಾರ ತಿಳಿಸಿದ್ದಾರೆ ಎಂದು gulfnews.com ವರದಿ ಮಾಡಿದೆ. ಪ್ರಸ್ತುತ ಈ ಮಾರ್ಗಗಳ ಮೂಲಕ ಗಂಟೆಗೆ 48 ವಿಮಾನಯಾನಗಳನ್ನು ನಿರ್ವಹಿಸುವ ಸಾಮರ್ಥ್ಯವಿದೆ ಎಂದು ಅವರು ಸುದ್ದಿಗೋಷ್ಠಿಯಲ್ಲಿ ಹೇಳಿದರು. ಗಲ್ಫ್ ರಾಷ್ಟ್ರಗಳೊಂದಿಗೆ ಸಮನ್ವಯ ಸಾಧಿಸಿ ಈ ಕ್ರಮ ಕೈಗೊಳ್ಳಲಾಗಿದೆ. ಆರ್ಥಿಕ ಮತ್ತು ಪ್ರವಾಸೋದ್ಯಮ ಚಟುವಟಿಕೆಗಳಿಗೆ ಬೆಂಬಲ ನೀಡುವುದು ಇದರ ಉದ್ದೇಶ ಎಂದು ಸಚಿವರು ಸ್ಪಷ್ಟಪಡಿಸಿದರು. ಇರಾನ್‌ನೊಂದಿಗಿನ ಅಮೆರಿಕ –ಇಸ್ರೇಲ್ ಸಂಘರ್ಷ ನಾಲ್ಕನೇ ದಿನಕ್ಕೆ ಕಾಲಿಟ್ಟಿರುವ ಹಿನ್ನೆಲೆಯಲ್ಲಿ, ಪ್ರಾದೇಶಿಕ ಪರಿಣಾಮಗಳನ್ನು ಮನಗಂಡು ಸರ್ಕಾರ ಕ್ರಮೇಣ ಕಾರ್ಯಾಚರಣೆಗಳನ್ನು ಪುನರಾರಂಭಿಸುತ್ತಿದೆ. ಮಾರ್ಚ್ 1ರಿಂದ ಮಾರ್ಚ್ 3ರವರೆಗೆ 60 ವಿಮಾನಗಳ ಮೂಲಕ 17,498 ಪ್ರಯಾಣಿಕರು ಸಂಚರಿಸಿದ್ದಾರೆ. ಮುಂದಿನ ಹಂತದಲ್ಲಿ ರಾಷ್ಟ್ರೀಯ ವಿಮಾನಯಾನ ಸಂಸ್ಥೆಗಳೊಂದಿಗೆ 80 ವಿಮಾನಗಳನ್ನು ನಿಗದಿಪಡಿಸಲಾಗಿದ್ದು, 27,000 ಪ್ರಯಾಣಿಕರಿಗೆ ಸೇವೆ ನೀಡುವ ಯೋಜನೆ ಇದೆ ಎಂದು ಅಲ್ ಮರ್ರಿ ಮಾಹಿತಿ ನೀಡಿದರು.

ವಾರ್ತಾ ಭಾರತಿ 3 Mar 2026 9:31 pm

ಮಸ್ಕಿ | ಸಂಘಟನಾ ಸ್ಫೂರ್ತಿ ಪ್ರಶಸ್ತಿ; ಹುಸೇನ್ ಸಾಬ್ ಗುರಿಕಾರರಿಗೆ ರಾಜ್ಯ ಮಟ್ಟದ ಸನ್ಮಾನ

ಮಸ್ಕಿ : ಶಾಲಾ ಶಿಕ್ಷಣ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಹುಸೇನ್ ಸಾಬ್ ಗುರಿಕಾರ ಅವರು ಸಂಘಟನಾ ಕ್ಷೇತ್ರದಲ್ಲಿ ತೋರಿದ ವಿಶಿಷ್ಟ ಸೇವೆ ಹಾಗೂ ನಿಸ್ವಾರ್ಥ ಸಮರ್ಪಣೆಯ ಹಿನ್ನೆಲೆ ಅವರಿಗೆ ರಾಜ್ಯ ಮಟ್ಟದ “ಸಂಘಟನಾ ಸ್ಫೂರ್ತಿ ಪ್ರಶಸ್ತಿ” ಪ್ರದಾನ ಮಾಡಿ ಸನ್ಮಾನಿಸಲಾಯಿತು. ಕರ್ನಾಟಕ ರಾಜ್ಯ ಶಾಲಾ ಶಿಕ್ಷಣ ಇಲಾಖೆ ನೌಕರರ ಸಂಘ (ರಿ.), ಬೆಂಗಳೂರು ವತಿಯಿಂದ ನಡೆದ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಇಲಾಖೆಯ ನೌಕರರ ಕಷ್ಟ-ಕಾರ್ಪಣ್ಯಗಳಿಗೆ ಸ್ಪಂದಿಸುವ ಹೃದಯವಂತಿಕೆಯೊಂದಿಗೆ ಸಂಘಟನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು, ತಮ್ಮ ಸಮಯ, ಪರಿಶ್ರಮ ಹಾಗೂ ಸೇವಾ ಮನೋಭಾವದ ಮೂಲಕ ಸಂಘದ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿರುವುದನ್ನು ಸಂಘದ ಪದಾಧಿಕಾರಿಗಳು ಪ್ರಶಂಸಿಸಿದರು. ಹುಸೇನ್ ಸಾಬ್ ಗುರಿಕಾರ ಅವರು ಸಂಘದ ಕಾರ್ಯಚಟುವಟಿಕೆಗಳಲ್ಲಿ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕಾರ್ಯನಿರ್ವಹಿಸಿದ ರೀತಿ ಗಮನಾರ್ಹವಾಗಿದ್ದು, ಅವರ ಶೈಕ್ಷಣಿಕ ಸಾಧನೆ ಹಾಗೂ ಸಂಘಟನಾ ಕೊಡುಗೆಯನ್ನು ಪರಿಗಣಿಸಿ ಈ ರಾಜ್ಯ ಮಟ್ಟದ ಪ್ರಶಸ್ತಿ ನೀಡಿ ಅಭಿನಂದಿಸಲಾಗಿದೆ ಎಂದು ಸಂಘದ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಸಮಾರಂಭದಲ್ಲಿ ಸಭಾಪತಿ ಯುಟಿ ಖಾದರ್, ರಾಜ್ಯಾಧ್ಯಕ್ಷ ಚೌಡಪ್ಪ, ಪ್ರಧಾನ ಕಾರ್ಯದರ್ಶಿ ರವಿ ಪ್ರಕಾಶ, ರಾಜ್ಯ ಉಪಾಧ್ಯಕ್ಷ ರಾಜೇಂದ್ರ ಕುಮಾರ್, ಜಿಲ್ಲಾಧ್ಯಕ್ಷ ನಾಗೇಶ ಗೌಡ್ ಸಂಘದ ಪದಾಧಿಕಾರಿಗಳು, ಸದಸ್ಯರು ಹಾಗೂ ಗಣ್ಯರು ಉಪಸ್ಥಿತರಿದ್ದರು.

ವಾರ್ತಾ ಭಾರತಿ 3 Mar 2026 9:30 pm

ಔರಾದ್ | ನಾಯಿಗಳ ದಾಳಿಯಿಂದ ಜಿಂಕೆ ರಕ್ಷಣೆ

ಔರಾದ್ : ತಾಲೂಕಿನ ಡೊಂಗರಗಾಂವ್ ಗ್ರಾಮದ ಸಮೀಪ ಮಂಗಳವಾರ ಜಿಂಕೆಯೊಂದನ್ನು ನಾಯಿಗಳು ದಾಳಿ ಮಾಡುತ್ತಿದ್ದ ವೇಳೆ ಸ್ಥಳೀಯರು ಹಾಗೂ ಪೊಲೀಸರು ತಕ್ಷಣ ಧಾವಿಸಿ ರಕ್ಷಿಸಿದ ಘಟನೆ ನಡೆದಿದೆ. ರಸ್ತೆಯಲ್ಲಿ ಸಾಗುತ್ತಿದ್ದ ಆಕಾಶ್ ಕಡೆಮನಿ ಮತ್ತು ರವಿ ದರಬಾರೆ ಅವರು ಜಿಂಕೆಯ ಮೇಲೆ ನಾಯಿಗಳು ದಾಳಿ ನಡೆಸುತ್ತಿರುವುದನ್ನು ಗಮನಿಸಿ ನಾಯಿಗಳನ್ನು ಓಡಿಸಿದ್ದಾರೆ. ಅದೇ ವೇಳೆ ಅಲ್ಲಿಂದ ತೆರಳುತ್ತಿದ್ದ ಹೊಕ್ರಾಣಾ ಪೊಲೀಸ್ ಠಾಣೆಯ ಮುಖ್ಯ ಪೆದೆ ಸಾಯಿಲು ಗೌಡ ಹಾಗೂ ಉಮಾಕಾಂತ್ ಕಾಂಬೆಳೆ ಘಟನೆ ಗಮನಿಸಿ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಇದೇವೇಳೆ ಆ ಮಾರ್ಗದಿಂದ ಸಾಗುತ್ತಿದ್ದ ವೈದ್ಯ ಡಾ.ಯುನುಸ್ ಖಾನ್ ಅವರು ತಕ್ಷಣ ಧಾವಿಸಿ ಗಾಯಗೊಂಡ ಜಿಂಕೆಯ ಕಾಲಿಗೆ ಪ್ರಥಮ ಚಿಕಿತ್ಸೆ ನೀಡಿದರು. ನಂತರ ಅರಣ್ಯ ಗಸ್ತು ಪಾಲಕ ಬಸವರಾಜ್ ಕುಂಬಾರ್ ಸ್ಥಳಕ್ಕೆ ಆಗಮಿಸಿ ಜಿಂಕೆಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ವ್ಯವಸ್ಥೆ ಮಾಡಿದರು. ಅರಣ್ಯ ಇಲಾಖೆ ಸಿಬ್ಬಂದಿಗಳಾದ ನರಸಿಂಗ್, ಸುಭಾಷ್, ವಸಂತ್ ಸೇರಿದಂತೆ ಸ್ಥಳೀಯರು ಸಹಕರಿಸಿದರು. ಮಾನವೀಯತೆ ಮೆರೆದ ನಾಗರಿಕರು ಹಾಗೂ ಪೊಲೀಸರ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ವಾರ್ತಾ ಭಾರತಿ 3 Mar 2026 9:28 pm

ಗಲ್ಫ್ ಯುದ್ಧ: ದುಬೈಯಲ್ಲಿ ಸಿಲುಕಿರುವ ಪ್ರವಾಸಿಗರು

ಮಂಗಳೂರು, ಮಾ.3: ಗಲ್ಫ್ ಯುದ್ಧದಿಂದ ವಿಮಾನ ಹಾರಾಟ ರದ್ದಾದ ಕಾರಣ 8 ಮಂದಿ ಪ್ರವಾಸಿಗರು ದುಬೈಯಲ್ಲಿ ಮತ್ತು ಉಮ್ರಾ ಯಾತ್ರೆ ಕೈಗೊಂಡಿರುವ ಓರ್ವ ವ್ಯಕ್ತಿ ಸೌದಿ ಅರೇಬಿಯಾದಲ್ಲಿ ಸಿಲುಕಿದ್ದಾರೆ ಎಂದು ದ.ಕ.ಜಿಲ್ಲಾಡಳಿತ ತಿಳಿಸಿದೆ. ಮಂಗಳೂರಿನ ಶ್ರೀನಾಥ್ ಪಿ. ಶೆಟ್ಟಿ, ಸಾಧಿಕಾ ಶೆಟ್ಟಿ ಮತ್ತವರ ಪುತ್ರಿ ಶ್ರಿಯಾ, ಸುರತ್ಕಲ್‌ನ ಕಸ್ತೂರಿ ಸದಾಶಿವ ಪೈ, ಕಸ್ತೂರಿ ಸಂಧ್ಯಾಪೈ, ಕಸ್ತೂರಿ ಸುಬ್ರಹ್ಮಣ್ಯ ಪೈ, ಮಂಗಳೂರಿನ ಕೆ. ಪ್ರತಿಭಾ ನಾಯಕ್ ಮತ್ತು ಶಶಾಂಕ್ ಶಶಿಧರ ನಾಯಕ್ ದುಬೈನಲ್ಲಿ ಸಿಲುಕಿರುವ ಬಗ್ಗೆ ದ.ಕ.ಜಿಲ್ಲಾಡಳಿತ ಮಾಹಿತಿ ನೀಡಿದೆ. ಸುರತ್ಕಲ್‌ನ ಕಸ್ತೂರಿ ಸದಾಶಿವ ಪೈ ಕುಟುಂಬ, ಪ್ರತಿಭಾ ನಾಯಕ್ ಮತ್ತು ಶಶಾಂಕ್ ನಾಯಕ್ ಮಾ.5ರಂದು ಊರಿಗೆ ಮರಳಬೇಕಿತ್ತು. ಉಮ್ರಾ ಯಾತ್ರೆಗೆ ತೆರಳಿದ್ದ 28ರ ಹರೆಯದ ಮುಹಮ್ಮದ್ ಅತೀಕ್ ಕುರ್ಲೊಟ್ಟು ಅಬ್ದುಲ್ ಕೂಡ ಸೌದಿ ಅರೇಬಿಯಾ ದಲ್ಲಿ ಸಿಲುಕಿದ್ದಾರೆ. ಎಲ್ಲರೂ ಸುರಕ್ಷಿತರಾಗಿದ್ದು, ಊರಿಗೆ ಮರಳಲು ನೆರವಾಗುವಂತೆ ಕೋರಿರುವುದಾಗಿ ದ.ಕ. ಜಿಲ್ಲಾಡಳಿತದ ಮೂಲಗಳು ತಿಳಿಸಿವೆ.

ವಾರ್ತಾ ಭಾರತಿ 3 Mar 2026 9:26 pm

Bengaluru | ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ; ತಾಯ್ನಾಡಿಗೆ ಮರಳಿದ 700ಕ್ಕೂ ಅಧಿಕ ಮಂದಿ

ಬೆಂಗಳೂರು : ಮಧ್ಯಪ್ರಾಚ್ಯ ದೇಶಗಳಲ್ಲಿನ ಯುದ್ಧದ ಹಿನ್ನೆಲೆ ಅಬುಧಾಬಿಯಲ್ಲಿ ಸಿಲುಕಿದ್ದ ಸುಮಾರು 220 ಕನ್ನಡಿಗರು ಸೇರಿದಂತೆ 700 ಮಂದಿ ರಾಜಧಾನಿ ಬೆಂಗಳೂರಿಗೆ ವಾಪಸ್ಸಾಗಿದ್ದಾರೆ. ಯುದ್ದಪೀಡಿತ ಮಧ್ಯಪ್ರಾಚ್ಯದಲ್ಲಿ ಸಿಲುಕಿದ್ದ ಕನ್ನಡಿಗರು ಸೇರಿದಂತೆ ಹಲವು ಭಾರತೀಯರನ್ನು ತಾಯ್ನಾಡಿಗೆ ಸುರಕ್ಷಿತವಾಗಿ ಕರೆತರಲು ನಡೆಸಿದ ಕಾರ್ಯಚರಣೆಯಲ್ಲಿ 2 ವಿಶೇಷ ವಿಮಾನಗಳ ಮೂಲಕ ಸುಮಾರು 700 ಮಂದಿಯನ್ನು ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕರೆತರಲಾಗಿದೆ. ಮೊದಲ ವಿಮಾನದಲ್ಲಿ 213 ಪ್ರಯಾಣಿಕರು ಆಗಮಿಸಿದರೆ, 2ನೆ ವಿಮಾನದಲ್ಲಿ 490 ಜನರು ಮರಳಿದ್ದಾರೆ. ಅಬುಧಾಬಿಯಿಂದ ಸುರಕ್ಷಿತವಾಗಿ ಬೆಂಗಳೂರುಗೆ ಆಗಮಿಸಿದ ಪ್ರಯಾಣಿಕ ಗಿರಿಮಲ್ಲಪ್ಪ ಮಾತನಾಡಿ, ಯುದ್ಧದಿಂದಾಗಿ ವಿಮಾನಯಾನ ಬಂದ್ ಆಗಿತ್ತು. ಸಹಜವಾಗಿ ನಾವು ಆತಂಕಗೊಂಡೆವು. ಸುರಕ್ಷಿತವಾಗಿ ಹೊಟೇಲ್‍ನಲ್ಲಿ ಇದ್ದೆವು. ಬಳಿಕ ವಿಮಾನಯಾನ ಪ್ರಾರಂಭವಾಯಿತು ಎಂದು ಹೇಳಿದರು. ಎರಡು ದಿನಗಳ ಹಿಂದೆ ನಾವು ಅಬುಧಾಬಿಗೆ ಬಂದಾಗ ಕ್ಷೀಪಣಿ ದಾಳಿ ನಡೆಯುತ್ತಿತ್ತು. ನಾವಿದ್ದ ಹೋಟೆಲ್ ಸುತ್ತಮುತ್ತ ಹಲವು ಸ್ಫೋಟಗಳು ಆಗುತ್ತಿರುವ ಶಬ್ದ ಕೇಳುತ್ತಿತ್ತು. ಜೊತೆಗೆ ವಿಮಾನ ನಿಲ್ದಾಣದ ಮೇಲಿಂದ ಯುದ್ಧ ವಿಮಾನಗಳು ಹಾರಾಟ ನಡೆಸುತ್ತಿದ್ದವು. ಇದರಿಂದ ತುಂಬಾ ಭಯವಾಗಿತ್ತು. ಕೊನೆಗೂ ದೇಶಕ್ಕೆ ಬಂದಿರುವುದು ತುಂಬಾ ಖುಷಿಯಾಗುತ್ತಿದೆ ಎಂದು ಮತ್ತೋರ್ವ ಪ್ರಯಾಣಿಕ ಯೋಗನಂದ್ ತಿಳಿಸಿದರು. ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ.ಸಿಂಧು ಸೇರಿದಂತೆ ಜೆಡಿಎಸ್ ವಿಧಾನ ಪರಿಷತ್ತಿನ ಸದಸ್ಯ ಭೋಜೇಗೌಡ ಹಾಗೂ ಅವರ ಕುಟುಂಬದವರು ಸಹ ಬೆಂಗಳೂರಿಗೆ ಸುರಕ್ಷಿತವಾಗಿ ಬಂದಿಳಿದ್ದಾರೆ.

ವಾರ್ತಾ ಭಾರತಿ 3 Mar 2026 9:26 pm

ಹುಲಸೂರು | ಸಾಲಬಾಧೆ ತಾಳದೆ ವಿಷ ಸೇವಿಸಿದ್ದ ರೈತ ಚಿಕಿತ್ಸೆ ಫಲಕಾರಿಯಾಗದೆ ಮೃತ್ಯು

ಹುಲಸೂರು: ಭಾಲ್ಕಿ ತಾಲೂಕಿನ ಮೆಹಕರ್ ಗ್ರಾಮದ ರೈತರೊಬ್ಬರು ಸಾಲಬಾಧೆ ತಾಳದೆ ವಿಷ ಸೇವಿಸಿ ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ ಮೃತಪಟ್ಟ ಘಟನೆ ನಡೆದಿದೆ. ಮೆಹಕರ್ ಗ್ರಾಮದ ನಿವಾಸಿ ವಿಷ್ಣುಕಾಂತ್ ಹಿಲಾಪೂರೆ (40) ಮೃತ ರೈತರು. ಫೆಬ್ರವರಿ 28ರಂದು ಬೆಳಿಗ್ಗೆ ಹೊಲಕ್ಕೆ ತೆರಳಿದ್ದ ಅವರು, ಸಂಜೆ ವೇಳೆಗೆ ಹೊಲದಲ್ಲಿನ ಶೆಡ್‌ನಲ್ಲಿ ಕೀಟನಾಶಕ ಸೇವಿಸಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ತಕ್ಷಣ ಅವರನ್ನು ಹುಲಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ, ಬಳಿಕ ಬೀದರ್ ನಗರದ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ (ಮಾ.3)ರಂದು ಮೃತಪಟ್ಟಿದ್ದಾರೆ. ವಿಷ್ಣುಕಾಂತ್ ತಮ್ಮ ಜಮೀನಿನಲ್ಲಿ ಕೃಷಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ವಿವಿಧ ಬ್ಯಾಂಕ್‌ಗಳು ಮತ್ತು ಖಾಸಗಿ ಸಂಘಗಳಿಂದ ಪಡೆದಿದ್ದ ಕೃಷಿ ಸಾಲ ತೀರಿಸಲು ಸಾಧ್ಯವಾಗದೇ ಬಡ್ಡಿ ಹೆಚ್ಚಾಗುತ್ತಿತ್ತು. ಬೆಳೆ ಸರಿಯಾಗಿ ಬಾರದ ಕಾರಣ ಸಾಲದ ಒತ್ತಡ ಹೆಚ್ಚಾಗಿ ಮನನೊಂದು ಆತಂಕದಲ್ಲಿದ್ದರು ಎಂದು ತಿಳಿದು ಬಂದಿದೆ. ಈ ಕುರಿತು ಮೆಹಕರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ. ಆತ್ಮಹತ್ಯೆಯ ಯೋಚನೆ ಬಂದಾಗ ಅದನ್ನು ನಿಗ್ರಹಿಸಲು ರಾಜ್ಯ ಸರಕಾರದ ಅರೋಗ್ಯ ಇಲಾಖೆಯ ಹೆಲ್ಪ್ ಲೈನ್ 104 ಸಹಾಯ ಮಾಡುತ್ತದೆ. ಅದರ ಜೊತೆಗೆ Tele-MANAS ನ 14416 ಅನ್ನೂ ಸಂಪರ್ಕಿಸಬಹುದು.

ವಾರ್ತಾ ಭಾರತಿ 3 Mar 2026 9:24 pm

ನನ್ನ ಹೋರಾಟ ಅಧಿಕಾರಕ್ಕಾಗಿ ಅಲ್ಲ; ಪಕ್ಷದ ಒಳಗಲ್ಲ, ನನ್ನ ಹೋರಾಟ ಪಕ್ಷದ ಹೊರಗೆ : ಡಿ.ಕೆ.ಶಿವಕುಮಾರ್

► ನಾನು ಸುಮ್ಮನಾಗಿದ್ದೇನೆ ಎಂದು ಭಾವಿಸಿದರೆ ಅದು ಅವರಿಗೆ ಬಿಟ್ಟ ವಿಚಾರ► ‘ಕೆಪಿಸಿಸಿ ಅಧ್ಯಕ್ಷಗಿರಿ: ಹೊಸ ರಕ್ತ, ಹೊಸ ಆಲೋಚನೆ ಪಕ್ಷಕ್ಕೆ ಬೇಕು’

ವಾರ್ತಾ ಭಾರತಿ 3 Mar 2026 9:19 pm

ಇರಾನ್ ನೆಲದಲ್ಲಿ ವಿದ್ಯಾರ್ಥಿಗಳ ಸಾಮೂಹಿಕ ಅಂತ್ಯಕ್ರಿಯೆ, ಮಧ್ಯಪ್ರಾಚ್ಯ ಭಾಗದಲ್ಲಿ ಶಾಂತಿ ಮರೀಚಿಕೆ | Operation Roaring Lion

ಮಧ್ಯಪ್ರಾಚ್ಯ ಒಂದು ರೀತಿಯಲ್ಲಿ ಕುಲುಮೆಯಲ್ಲಿ ಬೇಯುತ್ತಿದ್ದು, ಇದೇ ಸ್ಥಿತಿ ಮುಂದುವರಿದರೆ ಇನ್ನೇನು ಇಡೀ ಮಿಡಲ್ ಈಸ್ಟ್ ಭವಿಷ್ಯವೇ ನಾಶವಾಗಿ ಹೋಗುವ ಹಂತಕ್ಕೆ ಬಂದು ನಿಂತಿದೆ. ಜಗತ್ತಿನ ಶೇಕಡಾ 20ಕ್ಕೂ ಹೆಚ್ಚು ಭಾಗ ಕಚ್ಚಾ ತೈಲ ಪೂರೈಕೆ ಮಾಡುವ ಹರ್ಮುಜ್ ಜಲಸಂಧಿ ಬಂದ್ ಆಗಿಬಿಟ್ಟಿದೆ, ಇನ್ನೊಂದು ಕಡೆ ಕುವೈತ್, ಯುಎಇ, ಕತಾರ್ ಸೇರಿ ಅಮೆರಿಕದ ಸೇನಾ ನೆಲೆಗಳು ಇರುವ

ಒನ್ ಇ೦ಡಿಯ 3 Mar 2026 9:19 pm

ವಿವಿಧ ಬೇಡಿಕೆಗಾಗಿ ದಲಿತ ಹಕ್ಕುಗಳ ಸಮಿತಿಯಿಂದ ಧರಣಿ

ಉಡುಪಿ: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ದಲಿತ ಹಕ್ಕುಗಳ ಸಮಿತಿ ಕರ್ನಾಟಕ ಉಡುಪಿ ಜಿಲ್ಲಾ ಸಮಿತಿಯ ವತಿಯಿಂದ ಉಡುಪಿ ಜಿಲ್ಲಾಧಿಕಾರಿ ಕಚೇರಿ ಎದುರು ಮಂಗಳವಾರ ಧರಣಿ ನಡೆಸಲಾಯಿತು. ದಲಿತ ಹಕ್ಕುಗಳ ಸಮಿತಿಯ ಜಿಲ್ಲಾಧ್ಯಕ್ಷ ಸಂಜೀವ ಬಳ್ಕೂರು ಮಾತನಾಡಿ, ದಲಿತರಿಗೆ ದೇವಸ್ಥಾನ ಪ್ರವೇಶ ತಡೆ, ಅಸ್ಪೃಶ್ಯತೆ ಆಚರಣೆ ಮತ್ತು ಜಾತಿ ತಾರತಮ್ಯ ತಡೆಗಟ್ಟಲು ಜಿಲ್ಲೆಗೊಂದು ತ್ವರಿತ ನ್ಯಾಯಾಲಯ ಸ್ಥಾಪಿಸಬೇಕು. ಎಸ್.ಸಿ.ಎಸ್.ಪಿ./ಟಿ.ಎಸ್.ಪಿ. ಉಪಯೋಜನೆಯ ಸಾಧಕ- ಬಾಧಕ ಕುರಿತು ವಿಧಾನ ಸಭೆಯ ವಿಶೇಷ ಅಧಿವೇಶನ ಕರೆದು ಚರ್ಚೆ ನಡೆಸಬೇಕು ಎಂದು ಒತ್ತಾಯಿಸಿದರು. ದೇಶದ ಒಟ್ಟು ಜನಸಂಖ್ಯೆಯಲ್ಲಿ ಶೇ.28ರಷ್ಟಿರುವ ದಲಿತ ಸಮುದಾಯ ಇಂದಿಗೂ ಅಪಮಾನ, ದೌರ್ಜನ್ಯ, ದಬ್ಬಾಳಿಕೆಗೆ ಬಲಿಯಾಗುತ್ತಿವೆ. ರಾಜ್ಯದಲ್ಲಿರುವ ಒಟ್ಟು ದಲಿತ ಕುಂಟುಂಬಗಳಲ್ಲಿ ಶೇ.9ರಷ್ಟು ಕುಟುಂಬಗಳು ಮಾತ್ರ ಕೃಷಿಭೂಮಿ ಹೊಂದಿವೆ. ಉಳಿದ ಶೇ.91ರಷ್ಟು ಕುಟುಂಬಗಳು ಕೃಷಿಕೂಲಿಕಾರರಾಗಿ ಮತ್ತು ಅಸಂಘಟಿತರಾಗಿ ಕೂಲಿ ಕೆಲಸಗಳಲ್ಲಿ ತೊಡಗಿಸಿ ಕೊಂಡಿದ್ದಾರೆ. ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಂಡಿಸುವ ಬಜೆಟ್ ಬಡವರ ಮನೆಗಳಿಗೆ ತಲುಪುವಂತಾಗಬೇಕು ಎಂದರು. ಧರಣಿಯಲ್ಲಿ ಸಮಿತಿಯ ಮುಖಂಡರಾದ ರವಿ ವಿ.ಎಂ., ನಾಗರತ್ನ ನಾಡಾ, ಕೃಷ್ಣ ಇನ್ನಾ, ಸುಶೀಲಾ ಬಳ್ಕೂರು ಮೊದಲಾದವರು ಉಪಸ್ಥಿತರಿದ್ದರು.

ವಾರ್ತಾ ಭಾರತಿ 3 Mar 2026 9:19 pm

ನಾಪತ್ತೆಯಾಗಿದ್ದ ವ್ಯಕ್ತಿಯ ಮೃತದೇಹ ಪತ್ತೆ

ಮಲ್ಪೆ, ಮಾ.3: ಕೆಲವು ದಿನಗಳ ಹಿಂದೆ ನಾಪತ್ತೆಯಾಗಿದ್ದ ವ್ಯಕ್ತಿಯ ಮೃತದೇಹ ನದಿ ನೀರಿನಲ್ಲಿ ಪತ್ತೆಯಾಗಿರುವ ಘಟನೆ ಮಲ್ಪೆ ಕಲ್ಮಾಡಿ ಸಮೀಪ ನಡೆದಿದೆ. ಮೃತರನ್ನು ಅಂಬಾಗಿಲು ಸುಬ್ರಹ್ಮಣ್ಯ ನಗರ ನಿವಾಸಿ ಸುರೇಶ ಪೂಜಾರಿ (55) ಎಂದು ಗುರುತಿಸಲಾಗಿದೆ. ಉಡುಪಿ ಕಾರು ಶೋ ರೂಮ್‌ನಲ್ಲಿ ಸೆಕ್ಯೂರಿಟಿಯಾಗಿ ಕೆಲಸ ಮಾಡಿಕೊಂಡಿದ್ದ ಇವರು, ಮಾನಸಿಕ ಮಾನಸಿಕ ಖಿನ್ನತೆಯಿಂದ ಫೆ.21ರಂದು ಮನೆಯಿಂದ ನಾಪತ್ತೆಯಾಗಿದ್ದರು. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಮಾ.2ರಂದು ಮಧ್ಯಾಹ್ನ ಮಲ್ಪೆಯ ಕಲ್ಮಾಡಿಯ ಸೇತುವೆ ಹತ್ತಿರ ಪಾಪ ನಾಶಿನಿ ನದಿಯ ನೀರಿನಲ್ಲಿ ಇವರ ಮೃತದೇಹ ಪತ್ತೆಯಾಗಿದೆ. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಾರ್ತಾ ಭಾರತಿ 3 Mar 2026 9:17 pm

ಇರಾನ್: 200ಕ್ಕೂ ಅಧಿಕ ಭಾರತೀಯ ವಿದ್ಯಾರ್ಥಿಗಳು ಟೆಹರಾನ್‌ನಿಂದ ಕೋಮ್‌ಗೆ ಸ್ಥಳಾಂತರ‌

ಹೊಸದಿಲ್ಲಿ: ಅಮೆರಿಕ ಮತ್ತು ಇಸ್ರೇಲ್ ಇರಾನ್ ವಿರುದ್ಧ ನಡೆಸುತ್ತಿರುವ ಜಂಟಿ ಆಕ್ರಮಣದ ಹಿನ್ನೆಲೆಯಲ್ಲಿ ಟೆಹರಾನ್‌ನ ವಿವಿಧ ವಿಶ್ವವಿದ್ಯಾಲಯಗಳ 200ಕ್ಕೂ ಅಧಿಕ ಭಾರತೀಯ ವಿದ್ಯಾರ್ಥಿಗಳನ್ನು ಕೋಮ್ ನಗರಕ್ಕೆ ಸ್ಥಳಾಂತರಿಸಲಾಗಿದೆ. ರಾಜಧಾನಿ ಟೆಹರಾನ್‌ನಿಂದ ದಕ್ಷಿಣಕ್ಕೆ ಸುಮಾರು 140 ಕಿ.ಮೀ. ದೂರದಲ್ಲಿರುವ ಕೋಮ್ ಇರಾನ್‌ನ ಇತರ ನಗರಗಳಿಗೆ ಹೋಲಿಸಿದರೆ ಸುರಕ್ಷಿತ ನಗರವಾಗಿದೆ. ಈ ವಿದ್ಯಾರ್ಥಿಗಳನ್ನು ಮಂಗಳವಾರ ಬೆಳಗ್ಗೆ ಬಸ್‌ಗಳಲ್ಲಿ ಕೋಮ್ ನಗರಕ್ಕೆ ಸಾಗಿಸಲಾಯಿತು. ವಿದ್ಯಾರ್ಥಿಗಳ ಪೈಕಿ ಹೆಚ್ಚಿನವರು ಜಮ್ಮು ಮತ್ತು ಕಾಶ್ಮೀರದವರು. ಅವರು ಟೆಹರಾನ್‌ನ ವೈದ್ಯಕೀಯ ವಿಜ್ಞಾನಗಳ ವಿಶ್ವವಿದ್ಯಾನಿಲಯ, ಶಾಹಿದ್ ಬಹೇಷ್ಟಿ ವೈದ್ಯಕೀಯ ವಿಜ್ಞಾನಗಳ ವಿಶ್ವವಿದ್ಯಾನಿಲಯ ಮತ್ತು ಟೆಹರಾನ್‌ನ ಇರಾನ್ ವೈದ್ಯಕೀಯ ವಿಜ್ಞಾನಗಳ ವಿಶ್ವವಿದ್ಯಾನಿಲಯದಲ್ಲಿ ಅಧ್ಯಯನ ಮಾಡುತ್ತಿದ್ದರು. ಕೆಲವು ಇಂಜಿನಿಯರಿಂಗ್ ವಿದ್ಯಾರ್ಥಿಗಳೂ ಇರಾನ್‌ನಲ್ಲಿ ಕಲಿಯುತ್ತಿದ್ದಾರೆ. ‘‘ಟೆಹರಾನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ವಿದ್ಯಾರ್ಥಿಗಳ ಸ್ಥಳಾಂತರಕ್ಕೆ ವ್ಯವಸ್ಥೆಗಳನ್ನು ಮಾಡಿದೆ. ವಿದ್ಯಾರ್ಥಿಗಳನ್ನು ಐದು ಬಸ್‌ಗಳಲ್ಲಿ ಸಾಗಿಸಲಾಯಿತು. ಅವರು ಕೋಮ್ ನಗರವನ್ನು ಕ್ಷೇಮವಾಗಿ ತಲುಪಿದ್ದಾರೆ. ಇರಾನ್‌ನ ಇತರ ನಗರಗಳಲ್ಲಿರುವ ವಿದ್ಯಾರ್ಥಿಗಳನ್ನು ಸ್ಥಳಾಂತರಿಸಲು ಪ್ರಯತ್ನಗಳನ್ನು ಮಾಡಲಾಗುತ್ತಿದೆ’’ ಎಂದು ಅಖಿಲ ಭಾರತ ವೈದ್ಯಕೀಯ ವಿದ್ಯಾರ್ಥಿಗಳ ಸಂಘದ ರಾಷ್ಟ್ರೀಯ ಪ್ರತಿನಿಧಿ ಡಾ. ಮುಹಮ್ಮದ್ ಮುಮಿನ್ ಖಾನ್ ತಿಳಿಸಿದರು. ‘‘ಟೆಹರಾನ್‌ನಲ್ಲಿ ನಮಗೆ ನಿರಂತರವಾಗಿ ಸ್ಫೋಟಗಳ ಸದ್ದು ಕೇಳುತ್ತಿತ್ತು. ನಾವು ಕೋಮ್ ತಲುಪಿದ್ದೇವೆ. ಈಗ ನಮಗೆ ಸುರಕ್ಷತೆಯ ಭಾವನೆ ಬರುತ್ತಿದೆ’’ ಎಂದು ಸ್ಥಳಾಂತರಗೊಂಡವರ ಪೈಕಿ ಒಬ್ಬನಾಗಿರುವ ಇಂಜಿನಿಯರಿಂಗ್ ವಿದ್ಯಾರ್ಥಿ ಸೈಯದ್ ಫಾಝಿಲ್ ಹೇಳಿದ್ದಾರೆ. ಭಾರತ ಸರಕಾರ ಮಧ್ಯಪ್ರವೇಶ ಮಾಡಬೇಕೆಂದು ಸಂಘವು ಪದೇ ಪದೇ ಮನವಿ ಮಾಡಿತ್ತು. ಈಗ ಹೇಳಿಕೆಯೊಂದರಲ್ಲಿ, ಅದು ಭಾರತೀಯ ರಾಯಭಾರ ಕಚೇರಿಗೆ ಕೃತಜ್ಞತೆ ಸಲ್ಲಿಸಿದೆ.

ವಾರ್ತಾ ಭಾರತಿ 3 Mar 2026 9:17 pm

ಶಹಾಪುರ | ಹಳ್ಳಕ್ಕೆ ವಿಷ ಮಿಶ್ರಣ : ನೂರಾರು ಮೀನು ಸಾವು, ಗ್ರಾಮಸ್ಥರಲ್ಲಿ ಆತಂಕ

ಶಹಾಪುರ ತಾಲ್ಲೂಕಿನ ಮುನಮುಟಗಿ ಗ್ರಾಮದಲ್ಲಿ ಹರಿಯುವ ಹಳ್ಳಕ್ಕೆ ವಿಷ ಅನಿಲ/ವಿಷಕಾರಿ ಪದಾರ್ಥ ಮಿಶ್ರಣ ಮಾಡಿದ ಪರಿಣಾಮ ನೂರಾರು ಮೀನುಗಳು ಹಾಗೂ ನೀರು ಕುಡಿದ ಮೇಕೆಗಳು ಸಾವನ್ನಪ್ಪಿರುವ ಘಟನೆ ಬೆಳಕಿಗೆ ಬಂದಿದೆ. ಕನ್ಯಾಕೋಳೂರಿನಿಂದ ಹರಿದು ಬರುವ ಈ ಹಳ್ಳವು ಮುನಮುಟಗಿ ಗ್ರಾಮದ ಮೂಲಕ ಹರಿದು ಹೋಗುತ್ತದೆ. ಹಳ್ಳದಲ್ಲಿ ವಿಷ ಮಿಶ್ರಣ ಮಾಡಿರುವ ಕಾರಣ ಮೀನುಗಳು ತೇಲಿಬಂದು ಸತ್ತಿರುವುದಾಗಿ ಗ್ರಾಮದ ಮುಖಂಡ ಸುರೇಶಗೌಡ ನಾಡಗೌಡರ್ ತಿಳಿಸಿದ್ದಾರೆ. ನೀರು ಕುಡಿದ ಮೂರ್ನಾಲ್ಕು ಮೇಕೆಗಳೂ ಮೃತಪಟ್ಟಿವೆ ಎಂದು ಅವರು ಮಾಹಿತಿ ನೀಡಿದ್ದಾರೆ. ಗ್ರಾಮಸ್ಥರು ಹಾಗೂ ಜಾನುವಾರುಗಳು ಪ್ರತಿದಿನ ಇದೇ ಹಳ್ಳದ ನೀರನ್ನು ಉಪಯೋಗಿಸುತ್ತಿದ್ದು, ಕೆಲವರು ಅವಧಿ ಮೀರಿದ ಕೀಟನಾಶಕ ಔಷಧಿಗಳನ್ನು ಹಳ್ಳದಲ್ಲಿ ಬಿಸಾಡಿರುವ ಶಂಕೆ ವ್ಯಕ್ತವಾಗಿದೆ. ಇದರಿಂದ ಗ್ರಾಮದಲ್ಲಿ ಕುಡಿಯುವ ನೀರಿನ ಭದ್ರತೆ ಕುರಿತು ಭೀತಿ ಉಂಟಾಗಿದೆ ಎಂದು ಅವರು ಹೇಳಿದ್ದಾರೆ. ಘಟನೆ ಕುರಿತು ವಡಗೇರಾ ತಾಲ್ಲೂಕು ತಹಶೀಲ್ದಾರರಿಗೆ ಮಾಹಿತಿ ನೀಡಲಾಗಿದ್ದು, ನೀರಿನ ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಿ ಮುಂದಿನ ಕ್ರಮ ಕೈಗೊಳ್ಳುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಜಿಲ್ಲಾಡಳಿತ ತ್ವರಿತ ಕ್ರಮ ಕೈಗೊಂಡು ವಿಷ ಮಿಶ್ರಣ ಮಾಡಿದವರನ್ನು ಬಂಧಿಸಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ವಾರ್ತಾ ಭಾರತಿ 3 Mar 2026 9:16 pm

ಬೋಟಿನಿಂದ ಸಮುದ್ರಕ್ಕೆ ಬಿದ್ದು ಮೀನುಗಾರ ಮೃತ್ಯು

ಮಲ್ಪೆ, ಮಾ.3: ಮೀನುಗಾರಿಕಾ ಬೋಟಿನಿಂದ ಸಮುದ್ರಕ್ಕೆ ಬಿದ್ದು ತಮಿಳುನಾಡಿನ ಮೀನುಗಾರರೊಬ್ಬರು ಮೃತಪಟ್ಟ ಬಗ್ಗೆ ವರದಿಯಾಗಿದೆ. ಮೃತರನ್ನು ತಮಿಳುನಾಡಿನ ಪುದಿಯತುರ ಗ್ರಾಮದ ಉರಿಯರಿಕುನ್ನು ನಿವಾಸಿ ಥದೈಸ್ ಎಂ.(45) ಎಂದು ಗುರುತಿಸಲಾಗಿದೆ. ಇವರು ತಮಿಳುನಾಡಿನ ಜರೀನ ಬಿನೇಶ ಎಂಬವರ ಸೈಂಟ್ ಅಂಥೋನಿ ಹೆಸರಿನ ಮೀನುಗಾರಿಕಾ ಬೋಟಿನಲ್ಲಿ ಕೆಲಸ ಮಾಡಿಕೊಂಡಿದ್ದು, ಮಾ.1ರಂದು ಮಧ್ಯಾಹ್ನ ಬೋಟಿನಲ್ಲಿ ಮೀನುಗಾರಿಕೆ ಕೆಲಸ ಮಾಡುತ್ತಿದ್ದಾಗ ಆಕಸ್ಮಿಕವಾಗಿ ನೀರಿಗೆ ಬಿದ್ದರೆನ್ನಲಾಗಿದೆ. ಕೂಡಲೇ ಇತರ ಮೀನುಗಾರರು ನೀರಿಗೆ ಹಾರಿ ಅವರನ್ನು ಮೇಲಕ್ಕೆ ತಂದಿದ್ದು, ತೀವ್ರವಾಗಿ ಅಸ್ವಸ್ಥಗೊಂಡಿದ್ದ ಥದೈಸ್, ಉಡುಪಿ ಜಿಲ್ಲಾ ಸರಕಾರಿ ಆಸ್ಪತ್ರಗೆ ಕರೆದುಕೊಂಡು ಹೋಗುವ ದಾರಿ ಮಧ್ಯೆ ಮೃತಪಟ್ಟರೆಂದು ತಿಳಿದು ಬಂದಿದೆ. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಾರ್ತಾ ಭಾರತಿ 3 Mar 2026 9:14 pm

ಇರಾನ್ ನಿಂದ ಇಸ್ರೇಲ್ ಮೇಲೆ ಕ್ಷಿಪಣಿ ದಾಳಿ; ಕನಿಷ್ಠ ಏಳು ಮಂದಿಗೆ ಗಾಯ

ಟೆಲ್ ಅವೀವ್: ಮಧ್ಯ ಇಸ್ರೇಲ್‌ ನ ಹಲವು ಪ್ರದೇಶಗಳ ಮೇಲೆ ಇರಾನ್ ಕ್ಷಿಪಣಿ ದಾಳಿ ನಡೆಸಿದ್ದು, ಇದರಿಂದ ಕನಿಷ್ಠ ಏಳು ಮಂದಿ ಗಾಯಗೊಂಡಿದ್ದಾರೆ ಎಂದು ಇಸ್ರೇಲ್ ಮಾಧ್ಯಮಗಳು ವರದಿ ಮಾಡಿವೆ. ದಾಳಿಯಿಂದ ಕಟ್ಟಡಗಳು, ವಾಹನಗಳು ಹಾಗೂ ರಸ್ತೆಗಳಿಗೆ ಹಾನಿಯಾಗಿದೆ ಎಂದು ತಿಳಿದುಬಂದಿದೆ. ಟೆಲ್ ಅವೀವ್ ನಗರದ ಪೂರ್ವ ಭಾಗದಲ್ಲಿರುವ ಬ್ನೀ ಬ್ರಾಕ್ ಮತ್ತು ರೋಶ್ ಹಾಯಿನ್ ನಗರಗಳಲ್ಲಿ ಈ ದಾಳಿ ಸಂಭವಿಸಿದೆ. ಕ್ಷಿಪಣಿಗಳ ಸ್ಫೋಟ ಮತ್ತು ಅವುಗಳ ಚೂರುಗಳಿಂದ ಅನೇಕ ಕಟ್ಟಡಗಳಿಗೆ ಭಾರೀ ಹಾನಿಯಾಗಿದ್ದು, ಕೆಲವು ಸ್ಥಳಗಳಲ್ಲಿ ಬೆಂಕಿ ಹೊತ್ತಿಕೊಂಡಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಸ್ಥಳಕ್ಕೆ ಅಗ್ನಿಶಾಮಕ ದಳ ಮತ್ತು ತುರ್ತುಸೇವಾ ಸಿಬ್ಬಂದಿ ಧಾವಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿದರು. ಗಾಯಗೊಂಡ ಏಳು ಮಂದಿಯನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಅವರಲ್ಲಿ ಕೆಲವರ ಸ್ಥಿತಿ ಗಂಭೀರವಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ವಾರ್ತಾ ಭಾರತಿ 3 Mar 2026 9:12 pm

ಬಿಜೆಪಿ ದ. ಕ. ಜಿಲ್ಲಾ ವಕ್ತಾರ ಸತೀಶ್ ಪ್ರಭು ನಿಧನ

ಮಂಗಳೂರು, ಮಾ.3: ಬಿಜೆಪಿ ದ. ಕ. ಜಿಲ್ಲಾ ವಕ್ತಾರ ಸತೀಶ್ ಎಂ.ಪ್ರಭು (60) ಮಂಗಳವಾರ ನಿಧನರಾದರು. ಸಂಘನಿಕೇತನ ಸಮೀಪದ ತನ್ನ ಮನೆಯಲ್ಲಿದ್ದಾಗ ಕುಸಿದು ಬಿದ್ದ ಅವರನ್ನು ತಕ್ಷಣ ಯೆನಪೋಯ ಆಸ್ಪತ್ರೆಗೆ ಒಯ್ಯಲಾಗಿತ್ತು. ವೈದ್ಯರು ಪರೀಕ್ಷಿಸಿ ಬ್ರೇನ್ ಹೇಮರೇಜ್ ಆಗಿರುವುದಾಗಿ ಹೇಳಿದ ಕೆಲವೇ ಹೊತ್ತಿನಲ್ಲೇ ಸಾವನ್ನಪ್ಪಿದ್ದಾರೆ ಎಂದು ಮೂಲಗಳು ತಿಳಿಸಿವೆ. ಪತ್ನಿ ಮತ್ತು ಒಬ್ಬ ಪುತ್ರ ಹಾಗೂ ಅಪಾರ ಬಂಧುಬಳಗವನ್ನು ಮೃತರು ಅಗಲಿದ್ದಾರೆ. ರಥಬೀದಿ ಶ್ರೀ ವೆಂಕಟರಮಣ ದೇವಸ್ಥಾನದ ಮೊಕ್ತೇಸರ, ಮಂಗಳೂರು ನಗರ ದಕ್ಷಿಣ ಮಂಡಲದ ಮಾಜಿ ಅಧ್ಯಕ್ಷ, ಸಾರ್ವಜನಿಕ ಗಣೇಶೋತ್ಸವ ಸಮಿತಿ ಸಂಘನಿಕೇತನ ಉಪಾಧ್ಯಕ್ಷ, ಬಿಜೆಪಿ ಯುವ ಮೋರ್ಚಾ ಪದಾಧಿಕಾರಿ, ಅಖಿಲ ಭಾರತೀಯ ವಿಧ್ಯಾರ್ಥಿ ಪರಿಷತ್‌ನ ಸಕ್ರಿಯ ಕಾರ್ಯಕರ್ತ ಸಹಿತ ಹಲವು ಸಂಘ ಸಂಸ್ಥೆಗಳಲ್ಲಿ ಸಕ್ರಿಯರಾಗಿದ್ದರು.

ವಾರ್ತಾ ಭಾರತಿ 3 Mar 2026 9:01 pm

ಕರ್ನಾಟಕ ಸೌಹಾರ್ದ ಸಹಕಾರಿ ತಿದ್ದುಪಡಿ ಕಾಯ್ದೆ ಪ್ರಶ್ನಿಸಿ ರಿಟ್; ಸರಕಾರಕ್ಕೆ ಹೈಕೋರ್ಟ್ ನೋಟಿಸ್

ಬೆಂಗಳೂರು: ಸೌಹಾರ್ದ ಸಹಕಾರಿ ಬ್ಯಾಂಕ್‌ಗಳು ತಮ್ಮ ಠೇವಣಿಯ ಶೇ. 20 ಪ್ರಮಾಣದ ಮೊತ್ತವನ್ನು ಪ್ರತಿ 3 ತಿಂಗಳಿಗೊಮ್ಮೆ ಅಪೆಕ್ಸ್ ಅಥವಾ ಡಿಸಿಸಿ ಬ್ಯಾಂಕ್‌ಗಳಲ್ಲಿ ಇರಿಸುವುದು, ಬ್ಯಾಂಕ್‌ಗಳ ಅಧ್ಯಕ್ಷರು, ಪದಾಧಿಕಾರಿಗಳು ಪ್ರತಿ ವರ್ಷ ತಮ್ಮ ಆಸ್ತಿ ಘೋಷಿಸುವುದು ಸೇರಿ ಹಲವು ಷರತ್ತುಗಳನ್ನು ಒಳಗೊಂಡ ಕರ್ನಾಟಕ ಸೌಹಾರ್ದ ಸಹಕಾರಿ (ತಿದ್ದುಪಡಿ) ಕಾಯ್ದೆ-2025ರ ಸಿಂಧುತ್ವ ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿ ಸಂಬಂಧ ರಾಜ್ಯ ಸರಕಾರಕ್ಕೆ ಹೈಕೋರ್ಟ್ ನೋಟಿಸ್ ಜಾರಿಗೊಳಿಸಿದೆ. ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಯಮಿತದ ಅಧ್ಯಕ್ಷ ಜಿ. ನಂಜನಗೌಡ ಹಾಗೂ ನಿಯಮಿತದ ಸದಸ್ಯ ಸಂಸ್ಥೆಗಳಾಗಿರುವ ರಾಜ್ಯದ ವಿವಿಧ 12 ಸೌಹಾರ್ದ ಸಹಕಾರಿ ಸಂಘಗಳ ಸಿಇಒಗಳು ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಇ.ಎಸ್. ಇಂದಿರೇಶ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು. ಕೆಲ ಕಾಲ ಅರ್ಜಿ ಆಲಿಸಿದ ನ್ಯಾಯಪೀಠ ಪ್ರತಿವಾದಿಗಳಾದ ರಾ‍ಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ, ಕಾನೂನು ಇಲಾಖೆ, ಸಹಕಾರ ಇಲಾಖೆ ಹಾಗೂ ಸಹಕಾರ ಸಂಘಗಳ ನಿಬಂಧಕರಿಗೆ ನೋಟಿಸ್ ಜಾರಿಗೊಳಿಸಿ, ಎರಡು ವಾರಗಳಲ್ಲಿ ಆಕ್ಷೇಪಣೆ ಸಲ್ಲಿಸುವಂತೆ ಸೂಚಿಸಿತು. ಒಂದೊಮ್ಮೆ ಎರಡು ವಾರಗಳಲ್ಲಿ ಆಕ್ಷೇಪಣೆ ಸಲ್ಲಿಸದಿದ್ದರೆ ಕಾಯ್ದೆ ಜಾರಿಗೆ ತಡೆ ನೀಡಬೇಕು ಎಂಬ ಅರ್ಜಿದಾರರ ಮಧ್ಯಂತರ ಮನವಿಯನ್ನು ಪರಿಗಣಿಸಲಾಗುವುದು ಎಂದು ಇದೇ ವೇಳೆ ನ್ಯಾಯಪೀಠ ಹೇಳಿದೆ. ಮನವಿ ಏನು? ತಿದ್ದುಪಡಿ ಕಾಯ್ದೆಯು ಸಹಕಾರ ತತ್ವಕ್ಕೆ ವಿರುದ್ಧವಾಗಿದ್ದು, ಸಹಕಾರ ಸಂಘಗಳ ಮೂಲಭೂತ ಹಕ್ಕುಗಳನ್ನು ಕಿತ್ತುಕೊಳ್ಳಲಿದೆ. ಅಲ್ಲದೆ, ತಿದ್ದುಪಡಿಯು ಸಹಕಾರ ಸಂಘಗಳ ಸ್ವಾಯತ್ತತೆ ಮತ್ತು ಸ್ವತಂತ್ರ ನಿರ್ವಹಣೆಗೆ ಅಡ್ಡಿ ಉಂಟು ಮಾಡಲಿದೆ. ಆದ್ದರಿಂದ, ತಿದ್ದುಪಡಿ ಕಾಯ್ದೆಯನ್ನು ಸಂವಿಧಾನಬಾಹಿರವೆಂದು ಘೋಷಿಸುವಂತೆ ಅರ್ಜಿಯಲ್ಲಿ ಮನವಿ ಮಾಡಲಾಗಿದ್ದು, ಅರ್ಜಿ ಇತ್ಯರ್ಥವಾಗುವವರೆಗೆ 2025ರ ಸೆಪ್ಟೆಂಬರ್ 12ರಂದು ಜಾರಿಗೆ ಬಂದಿರುವ ಕಾಯ್ದೆಗೆ ತಡೆ ನೀಡಬೇಕು ಎಂದು ಮಧ್ಯಂತರ ಮನವಿ ಮಾಡಲಾಗಿದೆ.

ವಾರ್ತಾ ಭಾರತಿ 3 Mar 2026 8:59 pm

ಅಭಿವೃದ್ಧಿ ವಿಚಾರದಲ್ಲಿ ಕಾಂಗ್ರೆಸ್ ರಾಜಕೀಯ: ಶಾಸಕ ವೇದವ್ಯಾಸ್ ಕಾಮತ್ ಆರೋಪ

ಮಂಗಳೂರು, ಮಾ.3: ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಎರಡು ಕಾಮಗಾರಿಗೆ ಬಿಜೆಪಿ ಆಡಳಿತದಲ್ಲಿ ಅನುದಾನ ನೀಡಿದ್ದು, ಅದನ್ನು ಕಾಂಗ್ರೆಸ್ ಅವಧಿಯಲ್ಲಿ ಮಂಜೂರುಗೊಳಿಸಲಾಗಿದೆ ಎಂದು ಜನತೆಯ ಹಾದಿ ತಪ್ಪಿಸುವ ಕೆಲಸ ನಡೆಯುತ್ತಿದೆ. ಈ ಮೂಲಕ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಅಭಿವೃದ್ಧಿಯಲ್ಲಿ ರಾಜಕೀಯ ಮಾಡುತ್ತಿದ್ದಾರೆ ಎಂದು ಶಾಸಕ ವೇದವ್ಯಾಸ್ ಕಾಮತ್ ಆರೋಪಿಸಿದ್ದಾರೆ. ನಗರದ ಅಟಲ್ ಸೇವಾ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಪಾಲಿಕೆಯ ಬಿಜೆಪಿ ಆಡಳಿತ ಅವಧಿಯಲ್ಲಿ ನಗರದ ಕೊಡಿಯಾಲ್‌ಗುತ್ತು ವೆಟ್‌ವೆಲ್‌ನಿಂದ ಕುದ್ರೋಳಿ ವೆಟ್‌ವೆಲ್ ಸಂಪರ್ಕಿಸುವ ಪಂಪಿಂಗ್ ಕೊಳವೆಯನ್ನು ಕೊಡಿಯಾಲ್‌ಗುತ್ತಿನಿಂದ ಹಾಲ್‌ಮಾರ್ಕ್ ಅಪಾರ್ಟ್‌ಮಂಟ್‌ವರೆಗೆ ಬದಲಾಯಿಸಲು 3.42 ಕೋ.ರೂ.ಗೆ ಆಡಳಿತಾತ್ಮಕ ಅನುಮೋದನೆ ಸಿಕ್ಕಿತ್ತು. ಈಗ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ತಾನೇ ಮಂಜೂರುಗೊಳಿಸಿದ್ದು ಎಂದು ತಪ್ಪುಮಾಹಿತಿ ನೀಡಿ ಜಿಲ್ಲಾ ಉಸ್ತುವಾರಿ ಸಚಿವರನ್ನು ಸ್ಥಳ ಪರಿಶೀಲನೆ ಕರೆಸುತ್ತಿದ್ದಾರೆ. ಕಾಮಗಾರಿಗೆ ಅನುಮೋದನೆ ಲಭಿಸಿದ ಬಳಿಕ ಪರಿಶೀಲಿಸುವ ವಿಚಾರ ಏನಿದೆ ಎಂದು ಪ್ರಶ್ನಿಸಿದರು. ಪಾಲಿಕೆ ವ್ಯಾಪ್ತಿಯ ಎಂ.ಜಿ.ರಸ್ತೆಯ ಬಲ್ಲಾಳ್‌ಬಾಗ್ ಸೇತುವೆ ಅಭಿವೃದ್ಧಿಗೆ 2 ಕೋ.ರೂ. ಮೀಸಲಿರಿಸಿದ್ದೆ. ಇದು ಕೂಡ ಪಾಲಿಕೆ ಬಿಜೆಪಿ ಆಡಳಿತದ ಅವಧಿಯಲ್ಲೇ ಮಂಜೂರುಗೊಂಡಿದೆ. ಆದರೆ ಇಲ್ಲಿ ಸೇತುವೆಯ ಅಗತ್ಯ ಇಲ್ಲ ಎಂದು ಉಸ್ತುವಾರಿ ಸಚಿವರು ದಿಢೀರ್ ತೀರ್ಮಾನಿಸಿ ಆ ಮೊತ್ತವನ್ನು ಪಡೀಲಿನ ಡಿಸಿ ಕಚೇರಿ ಸಂಕೀರ್ಣ ಪೂರ್ಣಗೊಳಿ ಸಲು ವರ್ಗಾಯಿಸಿದ್ದಾರೆ ಎಂದು ವೇದವ್ಯಾಸ್ ಕಾಮತ್ ಆರೋಪಿಸಿದರು. ಉಸ್ತುವಾರಿ ಸಚಿವರಿಗೆ ಜಿಲ್ಲೆಯ ಶಾಸಕರನ್ನು ಕರೆಸಿ ಸಭೆ ನಡೆಸಿ ಸಮಸ್ಯೆಗಳನ್ನು ಆಲಿಸಲು ಸಮಯವಿಲ್ಲ. ಆದರೆ ಕಾಂಗ್ರೆಸ್‌ನ ರಾಜಕೀಯ ಕಾರ್ಯಕ್ರಮ ಇದ್ದರೆ ಬಿಡುವು ಮಾಡಿಕೊಂಡು ಬರುತ್ತಾರೆ. ಹಾಗಾಗಿ ಇಲ್ಲಿಗೆ ಅವರು ಗೆಸ್ಟ್ ಉಸ್ತುವಾರಿ ಸಚಿವರಾಗಿದ್ದಾರೆ ಎಂದು ವ್ಯಂಗ್ಯವಾಡಿದರು. ಮಂಗಳೂರು ನಗರ ವ್ಯಾಪ್ತಿಯಲ್ಲಿ ಲೋಕೋಪಯೋಗಿ ಇಲಾಖೆ ರಸ್ತೆ ಇಲ್ಲದಿದ್ದರೂ ನನ್ನ ಪ್ರಯತ್ನದಿಂದ ಅನುದಾನ ಬಿಡುಗಡೆಯಾಗಿದೆ. ಸಚಿವ ಸತೀಶ್ ಜಾರಕಿಹೊಳಿ ಬಾಕಿಯಾಗಿದ್ದ ಅನುದಾನ ಬಿಡುಗಡೆಗೊಳಿಸಿದ್ದರು. ಹಿಂದಿನ ಬಿಜೆಪಿ ಸರಕಾರ ಅನುಮೋದಿಸಿದ ಕಾಮಗಾರಿ ಹೊರತುಪಡಿಸಿದರೆ ಕಾಂಗ್ರೆಸ್ ಸರಕಾರ ಯಾವುದೇ ಕಾಮಗಾರಿಗೆ ಅನುದಾನ ಬಿಡುಗಡೆಗೊಳಿಸಿಲ್ಲ ಎಂದರು. ಸುದ್ದಿಗೋಷ್ಠಿಯಲ್ಲಿ ಮಾಜಿ ಮೇಯರ್‌ಗಳಾದ ಪ್ರೇಮಾನಂದ ಶೆಟ್ಟಿ, ಸುಧೀರ್ ಶೆಟ್ಟಿ ಕಣ್ಣೂರು, ದಿವಾಕರ್ ಪಾಂಡೇಶ್ವರ, ಮಾಜಿ ಉಪಮೇಯರ್ ಶಕೀಲಾ ಕಾವ, ಬಿಜೆಪಿ ಮುಖಂಡರಾದ ಮನೋಹರ್ ಕದ್ರಿ, ಮೋಹನ ಪೂಜಾರಿ, ಅಶ್ವಿತ್ ಕೊಟ್ಟಾರಿ, ಪ್ರವೀಣ್ ನಿಡ್ಡೋಡಿ, ಲಲ್ಲೇಶ್ ಉಪಸ್ಥಿತರಿದ್ದರು.

ವಾರ್ತಾ ಭಾರತಿ 3 Mar 2026 8:58 pm

ಎಸೆಸ್ಸೆಲ್ಸಿ ಸಹಾಯವಾಣಿ ಸ್ಥಾಪನೆ

ಮಂಗಳೂರು,ಮಾ.3: ಎಸೆಸ್ಸೆಲ್ಸಿ ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳಿಗೆ ಮತ್ತವರ ಪೋಷಕರಿಗೆ ಪರೀಕ್ಷಾ ಸಂಬಂಧಿ ಯಾವುದೇ ಸಮಸ್ಯೆ, ಸಿದ್ಧತೆ ಬಗ್ಗೆ ಭಯ, ಆತಂಕ, ಗೊಂದಲಗಳಿದ್ದರೆ ದೂ.ಸಂ: 0824-2451239ಕ್ಕೆ ಸೋಮವಾರದಿಂದ ಶನಿವಾರದವರೆಗೆ ಬೆಳಗ್ಗೆ 10:30 ರಿಂದ ಸಂಜೆ 5 ಮತ್ತು ರವಿವಾರ ಬೆಳಗ್ಗೆ 10:30ರಿಂದ ಮಧ್ಯಾಹ್ನ 1ರೊಳಗೆ ಕರೆ ಮಾಡಿ ಪರಿಹಾರ ಪಡೆಯಬಹುದು. ಆರೋಗ್ಯ ಇಲಾಖೆಯ ಸಹಯೋಗದಲ್ಲಿ ಈ ಸಹಾಯವಾಣಿ ವ್ಯವಸ್ಥೆಗೊಳಿಸಲಾಗಿದ್ದು ತಜ್ಞರ ನೆರವಿನಲ್ಲಿ ಪರಿಹಾರ ತಿಳಿಸಲಾಗುತ್ತದೆ ಎಂದು ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ವಾರ್ತಾ ಭಾರತಿ 3 Mar 2026 8:55 pm

ಸ್ಪರ್ಧಾತ್ಮಕ ಪರೀಕ್ಷೆ ತಯಾರಿ ಕಾರ್ಯಾಗಾರ

ಉಡುಪಿ, ಮಾ.3: ಉಡುಪಿ ಎಂಜಿಎಂ ಕಾಲೇಜಿನ ಪತ್ರಿಕೋದ್ಯಮ ವಿಭಾಗ, ರಾಷ್ಟ್ರೀಯ ಸೇವಾ ಯೋಜನೆ ಘಟಕಗಳು ಜೆಸಿಐ ಉಡುಪಿ ಸಿಟಿಯ ಆಶ್ರಯದಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ತಯಾರಿ ಕಾರ್ಯಾಗಾರ ನಡೆಸಲಾಯಿತು. ಪುತ್ತೂರಿನ ವಿದ್ಯಾಮಾತಾ ಅಕಾಡೆಮಿಯ ನಿರ್ದೇಶಕ ಜೇಸಿ ಭಾಗ್ಯೇಶ್ ರೈ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿ ವಿವಿಧ ಪರೀಕ್ಷೆಗಳ ಮಾಹಿತಿ, ತಯಾರಿ ಕ್ರಮದ ಕುರಿತು ಸಮಗ್ರ ಮಾಹಿತಿ ನೀಡಿದರು. ಕಾಲೇಜಿನ ಪ್ರಾಂಶುಪಾಲ ಪ್ರೊ.ವನಿತ ಮಯ್ಯ ಅಧ್ಯಕ್ಷತೆ ವಹಿಸಿದ್ದರು. ಉಪಪ್ರಾಂಶುಪಾಲ ಡಾ.ಎಂ.ವಿಶ್ವನಾಥ ಪೈ, ಜೆಸಿಐ ಉಡುಪಿ ಸಿಟಿ ಅಧ್ಯಕ್ಷೆ ಜೇಸಿ ಪಲ್ಲವಿ ಕೊಡಗು, ಪತ್ರಿಕೋದ್ಯಮ ವಿಭಾಗ ಮುಖ್ಯಸ್ಥ ಹಾಗೂ ಎನ್‌ಎಸ್‌ಎಸ್ ಅಧಿಕಾರಿ ಸುಚಿತ್ ಕೋಟ್ಯಾನ್, ಎರಡನೇ ಘಟಕದ ಅಧಿಕಾರಿ ಡಾ.ರೇಖಾ ಎನ್.ಚಂದ್ರ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ತ್ರಿವೇಣಿ ಶೆಟ್ಟಿ ನಿರೂಪಿಸಿದರು.

ವಾರ್ತಾ ಭಾರತಿ 3 Mar 2026 8:54 pm

ಮಾದಕ ವಸ್ತುಗಳ ಬಳಕೆಯಿಂದ ದುಷ್ಪರಿಣಾಮಗಳ ಬಗ್ಗೆ ಮಾಹಿತಿ ಶಿಬಿರ

ಉಡುಪಿ : ಜನಸಂಖ್ಯಾ ಸ್ಫೋಟದಂತೆ ಅನೇಕ ಸಮಸ್ಯೆ ಎದುರಿಸುತ್ತಿರುವ ಭಾರತದಲ್ಲೂ ಮಾದಕ ವಸ್ತುಗಳ ಹಾವಳಿ ಕಳವಳ ಉಂಟುಮಾಡುತ್ತಿದೆ. ಡ್ರಗ್ಸ್ ಚಟಕ್ಕೆ ಅಂಟಿದವರನ್ನು ಸಾಮಾನ್ಯ ಮನುಷ್ಯರಂತೆ ಮಾಡುವುದು ಅಷ್ಟು ಸುಲಭವಲ್ಲ ಎಂದು ಕುಂದಾಪುರ ರೋಟರಿ ಕ್ಲಬ್, ಸನ್‌ರೈಸ್ ಅಧ್ಯಕ್ಷ ಗುರುರಾಜ ಕೋತ್ವಾಲ್ ಹೇಳಿದ್ದಾರೆ. ಬಾಳ್ಕುದ್ರು ಹಂಗಾರಕಟ್ಟೆ ಅಭಿವೃದ್ಧಿ ಸಂಸ್ಥೆ, ಕುಂದಾಪುರ ರೋಟರಿ ಕ್ಲಬ್, ಸನ್‌ರೈಸ್ ಹಾಗೂ ಕೋಟೇಶ್ವರ ಕರ್ನಾಟಕ ಪಬ್ಲಿಕ್ ಸ್ಕೂಲ್ ಪ್ರೌಢಶಾಲಾ ವಿಭಾಗ ರಾಷ್ಟ್ರೀಯ ಸೇವಾ ಯೋಜನೆ ಹಾಗೂ ಶಾಲಾಭಿವೃದ್ಧಿ ಮತ್ತು ಮೇಲು ಸ್ತುವಾರಿ ಸಮಿತಿಗಳ ಸಂಯುಕ್ತ ಆಶ್ರಯದಲ್ಲಿ ಇತ್ತೀಚೆಗೆ ಶಾಲೆಯಲ್ಲಿ ಆಯೋಜಿಸಲಾದ ಮಾದಕ ವಸ್ತುಗಳ ಬಳಕೆಯಿಂದಾಗುವ ದುಷ್ಪರಿಣಾಮ ಗಳ ಕುರಿತ ಮಾಹಿತಿ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು. ಸಂಪನ್ಮೂಲ ವ್ಯಕ್ತಿಯಾಗಿ ಸುಜ್ಞಾನ ಶಿಕ್ಷಣ ಸಂಸ್ಥೆಯ ಉಪನ್ಯಾಸಕಿ, ಜೇಸಿಐ ತರಬೇತಿದಾರರಾದ ಅನಿತಾ ನರೇಂದ್ರ ಕುಮಾರ್ ಮಾತನಾಡಿ, ಆಫೀಮು, ಗಾಂಜ, ಕೊಕೇನ್ ಮುಂತಾದ ವಸ್ತುಗಳನ್ನು ಅತೀ ಚಿಕ್ಕ ವಯಸ್ಸಿ ನಲ್ಲಿ ಬಳಸುತ್ತ ತಮ್ಮ ಅಮ್ಯೂಲ್ಯ ಜೀವನವನ್ನು ಹಾಳುಮಾಡಿಕೊಳ್ಳುತ್ತಿರುವುದು ನಮ್ಮ ದೇಶದ ದೌರ್ಭಾಗ್ಯ. ಮಾದಕ ವಸ್ತುಗಳು ನಮ್ಮನ್ನು ಅಪೋಶನಗೈಯುವ ಮಟ್ಟಿಗೆ ಬೆಳೆದುಬಿಟ್ಟಿವೆ. ಅವುಗಳ ಕದಂಬ ಬಾಹುಗಳಿಂದ ನಾವು ಹೊರಬರಬೇಕಾಗಿದೆ ಎಂದು ತಿಳಿಸಿದರು. ಅಧ್ಯಕ್ಷತೆಯನ್ನು ಕರ್ನಾಟಕ ಪಬ್ಲಿಕ್ ಸ್ಕೂಲ್ ಪ್ರೌಢ ಶಾಲಾ ವಿಭಾಗದ ಉಪಪ್ರಾಂಶುಪಾಲ ಚಂದ್ರಶೇಖರ ಶೆಟ್ಟಿ ಮಾದಕ ದ್ರವ್ಯ ವ್ಯಸನದ ವಿರುದ್ಧ ಪ್ರತಿಜ್ಞೆ ಭೋದಿಸಿದರು. ವೇದಿಕೆಯಲ್ಲಿ ರೋಟರಿ ಕ್ಲಬ್ ಕುಂದಾಪುರ ಸನ್‌ರೈಸ್ ಕಾರ್ಯದರ್ಶಿ ಭವಾನಿ ಶಂಕರ್, ಕೋಟೇಶ್ವರ ಪಂಚಾಯತ್ ಅಭಿವೃದ್ಧಿ ಅಧಿಕಾರಿ ದಿನೇಶ್ ನಾಯ್ಕ ಉಪಸ್ಥಿತರಿದ್ದರು. ರಾಷ್ಟ್ರೀಯ ಸೇವಾ ಯೋಜನೆಯ ಕಾರ್ಯಕ್ರಮ ಅಧಿಕಾರಿ ರಮಾನಂದ ನಾಯಕ್ ಸ್ವಾಗತಿಸಿದರು. ಧನ್ಯ ಬೆಳ್ಮಣ್ ಕಾರ್ಯಕ್ರಮ ನಿರೂಪಿಸಿ, ರಮೇಶ್ ವಕ್ವಾಡಿ ಪ್ರಾಸ್ತಾವಿಕ ಮಾತನಾಡಿ ವಂದಿಸಿದರು.

ವಾರ್ತಾ ಭಾರತಿ 3 Mar 2026 8:52 pm

ಮಲ್ಲಿಕಾರ್ಜುನ ಮುತ್ಯಾ ಪ್ರಕರಣಕ್ಕೆ ಸಂಬಂಧಿಸಿದ ಪೋಟೊ, ವಿಡಿಯೊ ಹಂಚಿಕೊಂಡರೆ ಕಾನೂನು ಕ್ರಮ: ಎಸ್‌ಪಿ ಪೃಥ್ವಿಕ್ ಶಂಕ‌ರ್

ಯಾದಗಿರಿ : ಮಹಲ್ ರೋಜಾ ಮಠದ ಮಲ್ಲಿಕಾರ್ಜುನ ಮುತ್ಯಾ ವಿರುದ್ಧ ಬಾಲಕಿಯೊಂದಿಗೆ ಅನುಚಿತ ವರ್ತನೆ ಆರೋಪದಡಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ಫೋಟೊ ಅಥವಾ ವಿಡಿಯೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಬಾರದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪೃಥ್ವಿಕ್ ಶಂಕರ್ ತಿಳಿಸಿದ್ದಾರೆ. ಬಾಲಕಿಯನ್ನು ಗುರುತಿಸಬಹುದಾದ ಯಾವುದೇ ಮಾಹಿತಿ, ಕುಟುಂಬ ಸದಸ್ಯರ ಫೋಟೊಗಳು ಹಾಗೂ ಸಂಗ್ರಹಿತ ವಿಡಿಯೊ ಕ್ಲಿಪ್‌ಗಳನ್ನು ವಾಟ್ಸ್‌ಆ್ಯಪ್, ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಸೇರಿದಂತೆ ಇತರೆ ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್ ಮಾಡುವುದು ಅಥವಾ ಶೇರ್ ಮಾಡುವುದು ಕಾನೂನುಬಾಹಿರ. ಇಂತಹ ಕೃತ್ಯಗಳಲ್ಲಿ ತೊಡಗಿದವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದ್ದಾರೆ. ಈ ಸಂಬಂಧ ಗೋಗಿ ಪೊಲೀಸ್ ಠಾಣೆಯಲ್ಲಿ ಗುನ್ನೆ ನಂ. 20/25/2026 ದಾಖಲಿಸಲಾಗಿದ್ದು, ಭಾರತೀಯ ನ್ಯಾಯ ಸಂಹಿತೆ-2023ರ ಕಲಂ 75(2) ಹಾಗೂ ಪೋಕ್ಸೋ ಕಾಯ್ದೆ-2012ರ ಕಲಂ 12ರಡಿ ಪ್ರಕರಣ ದಾಖಲಾಗಿದೆ. ಪ್ರಕರಣದ ತನಿಖೆ ನಡೆಯುತ್ತಿರುವುದರಿಂದ ಸಾರ್ವಜನಿಕರು ಜವಾಬ್ದಾರಿಯಿಂದ ವರ್ತಿಸಿ, ಬಾಲಕಿಯ ಗೌಪ್ಯತೆ ಕಾಪಾಡಲು ಸಹಕರಿಸಬೇಕು ಎಂದು ಎಸ್‌ಪಿ ಮನವಿ ಮಾಡಿದ್ದಾರೆ.

ವಾರ್ತಾ ಭಾರತಿ 3 Mar 2026 8:52 pm

ಕಂಬಳದ ಭೂಮಿಗಾಗಿ ಪೈಪೋಟಿ ನಡೆಸುತ್ತಿರುವುದು ನಾಚಿಕೆಗೇಡು: ಸುಂದರ್ ಮಾಸ್ತರ್ ಟೀಕೆ

ಉಡುಪಿ, ಮಾ.3: ಉಡುಪಿ ಜಿಲ್ಲೆಯಲ್ಲಿ ನಿವೇಶನ ರಹಿತ ಬಡವರು ನೂರಾರು ವರ್ಷಗಳಿಂದ ನೋವಿನ ಬದುಕು ಸಾಗಿಸುತ್ತಿರುವ ಬಗ್ಗೆ ಚಕಾರವೆತ್ತದ ಜನಪ್ರತಿನಿಧಿಗಳು ಈಗ ಉಡುಪಿ ಕಂಬಳಕ್ಕಾಗಿ ಭೂಮಿಗೆ ಪೈಪೋಟಿ ನಡೆಸು ತ್ತಿರುವುದು ನಾಚಿಕೆಗೇಡು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಘಟನಾ ಸಂಚಾಲಕ ಸುಂದರ ಮಾಸ್ತರ್ ಟೀಕಿಸಿದ್ದಾರೆ. ಕಂಬಳ ಎನ್ನುವುದು ಕೆಲವೊಂದು ಕುಟುಂಬಗಳ ಸ್ವಂತ ಆಚರಣೆಯೇ ಹೊರತು ಅದು ಜಿಲ್ಲಾಡಳಿತದ ಅನಿವಾರ್ಯ ಕಾರ್ಯಕ್ರಮ ಅಲ್ಲ. ತಮ್ಮ ಸ್ವಪ್ರತಿಷ್ಟೆಯ ಪ್ರದರ್ಶನದ ಪ್ರತೀಕವಾದ ಕಂಬಳಕ್ಕೆ ಈಗ ಜಿಲ್ಲಾಡಳಿತದ ಶಿರೋನಾಮೆ ಕೊಟ್ಟು ಕೋಟ್ಯಾಂತರ ರೂಪಾಯಿ ಖರ್ಚು ಮಾಡುವ ವ್ಯವಸ್ಥಿತ ಸಂಚು ನಡೆಸುತ್ತಿದೆ. ಕಂಬಳಕ್ಕೆ ಜಾಗ ಕಾಯ್ದಿರಿಸಿ ಆಮೇಲೆ ರೆಸಾರ್ಟ್ ತೆರೆಯುವ ಹುನ್ನಾರ ಇದರ ಹಿಂದೆ ಇದೆ ಎಂದು ಅವರು ಆರೋಪಿಸಿದ್ದಾರೆ. ಕಂಬಳಕ್ಕೆ 6.30 ಎಕರೆ ಭೂಮಿ ಕಾದಿರಿಸಿದಂತೆ ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ಎಲ್ಲಾ ಬಬ್ಬುಸ್ವಾಮಿ ದೈವಸ್ಥಾನಗಳಿಗೆ ಕೋಲ, ನೇಮೋತ್ಸವ ನಡೆಸಲು ಒಂದೊಂದು ಎಕರೆ ಸರಕಾರಿ ಭೂಮಿಯನ್ನು ಮಂಜೂರು ಮಾಡಿಸಲು ಈಗ ಗುದ್ದಲಿ ಪೂಜೆ ನಡೆಸಿದ ಜನಪ್ರತಿನಿದಿನಗಳು ಹೋರಾಟ ನಡೆಸುತ್ತಾರೆಯೇ? 80 ಬಡಗುಬೆಟ್ಟು ಗ್ರಾಮದ 6.30 ಎಕರೆ ಭೂಮಿಯನ್ನು ಕಂಬಳಕ್ಕಾಗಿ ಕಾದಿರಿಸಿರುವುದು ಜನವಿರೋಧಿ ನೀತಿ. ಲಕ್ಷಾಂತರ ಬಡವರು ಉಡುಪಿ ಜಿಲ್ಲೆಯಲ್ಲಿ ಸ್ವಂತ ನಿವೇಶನವಿಲ್ಲದೇ ಕಣ್ಣೀರಿನ ಜೀವನ ನಡೆಸುತ್ತಿರುವಾಗ ಮೋಜು ಮಸ್ತಿಗಾಗಿ ಸರಕಾರಿ ಜಾಗವನ್ನು ಕಾದಿರಿಸಿರುವುದು ಅಕ್ಷಮ್ಯ ಎಂದು ಅವರು ಪ್ರಕಟಣೆಯಲ್ಲಿ ಟೀಕಿಸಿದ್ದಾರೆ.  ‘ಜನಪ್ರತಿನಿದಿನಗಳ ನೈತಿಕ ಅಧಃಪತನ’ ಉಡುಪಿ ಜಿಲ್ಲೆಯಲ್ಲಿ ಸ್ವಂತ ನಿವೇಶನ, ಸ್ವಂತ ಮನೆ, ಸ್ವಂತ ಬಾವಿ, ಉದ್ಯೋಗ ಇಲ್ಲದೇ ಲಕ್ಷಾಂತರ ಮೂಲ ನಿವಾಸಿಗಳು, ಬಡವರು ದಯನೀಯ ಪರಿಸ್ಥಿತಿಯಲ್ಲಿ ಜೀವನ ಸಾಗಿಸುತ್ತಿದ್ದಾರೆ. ಈ ಎಲ್ಲಾ ವಿಷಯಕ್ಕೆ ಕಿವುಡರಾಗಿ, ಕುರುಡರಾಗಿರುವ ಜನಪ್ರತಿನಿಧಿಗಳು ಈಗ ಕಂಬಳಕ್ಕೆ ಜಾಗ ಕೊಡಿ ಎಂದು ಕೂಗಾಡುವುದು, ನಿಷೇಧಾಜ್ಞೆಯನ್ನೂ ಉಲ್ಲಂಘಿಸಿ ಗುದ್ದಲಿ ಪೂಜೆ ನೆರವೇರಿಸುತ್ತಿದ್ದಾರೆ. ಇದು ಜನಪ್ರತಿನಿದಿನಗಳ ನೈತಿಕ ಅಧಃಪತನ, ಯೋಗ್ಯತೆಗೆ ಹಿಡಿದ ಕನ್ನಡಿಯಾಗಿದೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ಮೈಸೂರು ವಿಭಾಗೀಯ ಸಂಘಟನಾ ಸಂಚಾಲಕ ಶ್ಯಾಮ್‌ರಾಜ್ ಬಿರ್ತಿ ತಿಳಿಸಿದ್ದಾರೆ. ದಲಿತರು ನೂರಾರು ವರ್ಷಗಳಿಂದ ಸ್ವಂತ ಸೂರಿಲ್ಲದೇ, ಸ್ವಂತ ನಿವೇಶನ ಇಲ್ಲದೇ, ತಮ್ಮ ಪೂರ್ವಜರ ಮನೆ ಯೊಳಗೆ ಹಲವಾರು ಕುಟುಂಬಗಳು ಒಟ್ಟಿಗೆ ಟಾರ್ಪಾಲು ಹಾಸಿಕೊಂಡು ಬದುಕುತಿದ್ದಾರೆ. ಇದನ್ನು ಈ ಜನಪ್ರತಿ ನಿಧಿಗಳಿಗೆ ಕಣ್ಣಾರೆ ಕಂಡರೂ 80 ಬಡಗುಬೆಟ್ಟು ಪಂಚಾಯತ್ ವ್ಯಾಪ್ತಿಯಲ್ಲಿ ಸುಮಾರು 13 ಎಕರೆ ಸರಕಾರಿ ಜಾಗದಲ್ಲಿ ಉಡುಪಿ ಕಂಬಳ ಎಂಬ ಒಂದು ಹೊಸ ಸಂಪ್ರಾದಾಯ ಹುಟ್ಟುಹಾಕಿ, ಪೈಪೋಟಿಗೆ ಬಿದ್ದಿದ್ದಾರೆ ಎಂದು ಅವರು ಟೀಕಿಸಿದ್ದಾರೆ. ಜಿಲ್ಲಾಡಳಿತ ಬಡವರಿಗೆ ನಿವೇಶನ ಕೊಡುವ ಬಗ್ಗೆ ಗಮನಹರಿಸಿ ಕಾಂಗ್ರೆಸ್, ಬಿಜೆಪಿಯವರ ಕೆಸರೆರಚಾಟದ ಕಂಬಳಕ್ಕೆ ಆದ್ಯತೆ ಕೊಡಬಾರದು. ಮೊದಲು ಜನರ ಮೂಲಭೂತ ಸಮಸ್ಯೆಗಳ ಬಗ್ಗೆ ಆಧ್ಯತೆ ನೀಡಬೇಕೆಂದು ಅವರು ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.

ವಾರ್ತಾ ಭಾರತಿ 3 Mar 2026 8:50 pm

ಕುರಿ/ಮೇಕೆ ಘಟಕ ಸ್ಥಾಪನೆಗೆ ಸಹಾಯಧನ: ಅರ್ಜಿ ಆಹ್ವಾನ

ಉಡುಪಿ, ಮಾ.3: ಕರ್ನಾಟಕ ಕುರಿ ಮತ್ತು ಎಣ್ಣೆ ಅಭಿವೃದ್ಧಿ ನಿಗಮ ನಿಯಮಿತ ಚಿಕ್ಕಮಗಳೂರು ವತಿಯಿಂದ ಪ್ರಸಕ್ತ ಸಾಲಿನಲ್ಲಿ ಜಿಲ್ಲೆಯಲ್ಲಿ ವಿಶೇಷ ಘಟಕ ಯೋಜನೆ ಮತ್ತು ಗಿರಿಜನ ಉಪಯೋಜನೆಯಡಿ (10+1) ಕುರಿ/ಮೇಕೆ ಘಟಕಗಳ ಸ್ಥಾಪನೆಗೆ ಸಹಾಯಧನ ಸೌಲಭ್ಯ ಪಡೆಯಲು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಕೂಲಿ ಕಾರ್ಮಿಕರು, ಕೃಷಿ ಕಾರ್ಮಿಕರು ಮತ್ತು ಪಶುಸಂಗೋಪನೆಯಲ್ಲಿ ತೊಡಗಿಸಿಕೊಂಡಿರುವ 18 ರಿಂದ 60 ವರ್ಷ ವಯೋಮಿತಿಯ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಮಾರ್ಚ್ 12 ಕೊನೆಯ ದಿನ. ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಮುಖ್ಯ ಪಶು ವೈದ್ಯಾಧಿಕಾರಿ (ಆಡಳಿತ) ಉಡುಪಿ ತಾಲೂಕು ಮೊ.ನಂ: 9448134852, ಕಾಪು ತಾಲೂಕು ಮೊ.ನಂ: 8217389838, ಬ್ರಹ್ಮಾವರ ತಾಲೂಕು ಮೊ.ನಂ: 9448623690, ಕುಂದಾಪುರ ತಾಲೂಕು ಮೊ.ನಂ: 9448163237, ಬೈಂದೂರು ತಾಲೂಕು ಮೊ.ನಂ: 9741993045, ಕಾರ್ಕಳ ತಾಲೂಕು ಮೊ.ನಂ: 9845753062 ಹಾಗೂ ಹೆಬ್ರಿ ತಾಲೂಕು ಮೊ.ನಂ: 9986764615 ಅನ್ನು ಅಥವಾ ಜಿಲ್ಲಾ ಅನುಷ್ಠಾನಾಧಿಕಾರಿ ಗಳು, ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ದಿ ನಿಗಮ ನಿಯಮಿತ, ಚಿಕ್ಕಮಗಳೂರು ದೂರವಾಣಿ ಸಂಖ್ಯೆ: 9448157129 ಅನ್ನು ಸಂಪರ್ಕಿಸಬಹುದು ಎಂದು ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ಉಪನಿರ್ದೇಶಕರ ಕಚೇರಿ ಪ್ರಕಟಣೆ ತಿಳಿಸಿದೆ.

ವಾರ್ತಾ ಭಾರತಿ 3 Mar 2026 8:48 pm

ಇರಾನ್‌ ಮೇಲೆ ಇಸ್ರೇಲ್‌ ದಾಳಿಗೆ ಮುಂದಾಗಿದ್ದರಿಂದ ಅಮೆರಿಕ ಕೈಜೋಡಿಸುವಂತಾಯಿತು: ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ರುಬಿಯೊ

ವಾಷಿಂಗ್ಟನ್: ಇರಾನ್ ಮೇಲೆ ಇಸ್ರೇಲ್ ಮೊದಲು ದಾಳಿ ನಡೆಸಲು ಮುಂದಾಗಿದ್ದರಿಂದ ಅಮೆರಿಕ ಕೈಜೋಡಿಸುವಂತಾಯಿತು ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ ಹೇಳಿದ್ದಾರೆ. ಈ ಹೇಳಿಕೆ ಅಮೆರಿಕದ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ಸೋಮವಾರ ಕ್ಯಾಪಿಟಲ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರುಬಿಯೊ, “ಇಸ್ರೇಲ್ ದಾಳಿ ನಡೆಯಲಿದೆ ಎಂಬುದು ನಮಗೆ ಮುಂಚಿತವಾಗಿ ತಿಳಿದಿತ್ತು. ಆ ದಾಳಿ ಅಮೆರಿಕದ ಪಡೆಗಳ ವಿರುದ್ಧ ಪ್ರತೀಕಾರಕ್ಕೆ ಕಾರಣವಾಗಬಹುದು ಎಂಬ ಅಂದಾಜೂ ಇತ್ತು. ನಾವು ಮುಂಚಿತ ಕ್ರಮ ಕೈಗೊಳ್ಳದಿದ್ದರೆ ಹೆಚ್ಚಿನ ಅಮೆರಿಕನ್ ಸೈನಿಕರು ಸಾವಿಗೀಡಾಗುತ್ತಿದ್ದರು” ಎಂದು ಹೇಳಿದ್ದಾರೆ. ಶನಿವಾರ ನಡೆದ ಅಮೆರಿಕ–ಇಸ್ರೇಲ್ ಜಂಟಿ ದಾಳಿಗಳ ಬಳಿಕ ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಗರಿಷ್ಠ ಮಟ್ಟಕ್ಕೆ ಏರಿದೆ. ಗಲ್ಫ್ ಪ್ರದೇಶದ ಹಲವು ರಾಷ್ಟ್ರಗಳು ಇರಾನಿನ ಪ್ರತೀಕಾರ ದಾಳಿಗಳಿಗೆ ತುತ್ತಾಗಿವೆ. ಯುದ್ಧ ಆರಂಭವಾದ ಬಳಿಕ ಇರಾನ್‌ನಲ್ಲಿ ಕನಿಷ್ಠ 787 ಮಂದಿ ಸಾವನ್ನಪ್ಪಿರುವುದಾಗಿ ವರದಿಯಾಗಿದ್ದು, ಅಮೆರಿಕದ ಆರು ಸೇನಾ ಸಿಬ್ಬಂದಿ ಪ್ರಾಣ ಕಳೆದುಕೊಂಡಿದ್ದಾರೆ. ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಪೂರ್ವಭಾವಿ ಕ್ರಮ ಕೈಗೊಳ್ಳಲು ಒತ್ತಾಯಿಸಲಾಯಿತು ಎಂದು ರುಬಿಯೊ ಹೇಳಿದ್ದಾರೆ. “ಇರಾನ್ ಯಾರೇ ದಾಳಿ ಮಾಡಿದರೂ ಪ್ರತಿಕ್ರಿಯಿಸಲಿದೆ ಎಂಬುದು ಸ್ಪಷ್ಟವಾಗಿತ್ತು. ಅಮೆರಿಕದ ಪಡೆಗಳ ಮೇಲೆ ದಾಳಿ ನಡೆಯುವ ಮುನ್ನವೇ ನಾವು ಕ್ರಮ ಕೈಗೊಂಡೆವು,” ಎಂದು ಅವರು ವಿವರಿಸಿದ್ದಾರೆ. ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು, “ಇರಾನ್ ವಿರುದ್ಧದ ಈ ಹೋರಾಟ ಜಾಗತಿಕ ಭದ್ರತೆಗೆ ಅಗತ್ಯ. ಅಮೆರಿಕ–ಇಸ್ರೇಲ್ ಸಹಕಾರವು ಜಗತ್ತನ್ನು ರಕ್ಷಿಸುವ ಪ್ರಯತ್ನ,” ಎಂದು ಹೇಳಿದ್ದಾರೆ. ಆದರೆ ವಿರೋಧ ಪಕ್ಷದ ನಾಯಕರು ಟ್ರಂಪ್ ಆಡಳಿತದ ನಿರ್ಧಾರವನ್ನು ಪ್ರಶ್ನಿಸಿದ್ದಾರೆ. ಸೆನೆಟ್ ಗುಪ್ತಚರ ಸಮಿತಿಯ ಡೆಮಾಕ್ರಟಿಕ್ ಉಪಾಧ್ಯಕ್ಷ ಮಾರ್ಕ್ ವಾರ್ನರ್, “ಇರಾನಿನಿಂದ ಅಮೆರಿಕಕ್ಕೆ ಯಾವುದೇ ಸನ್ನಿಹಿತ ಬೆದರಿಕೆ ಇರಲಿಲ್ಲ. ಇಸ್ರೇಲ್‌ಗೆ ಇದ್ದ ಅಪಾಯವನ್ನು ಅಮೆರಿಕದ ತುರ್ತು ಅಪಾಯವೆಂದು ಪರಿಗಣಿಸುವುದು ಅಪಾಯಕಾರಿ,” ಎಂದು ಹೇಳಿದ್ದಾರೆ. ಡೆಮಾಕ್ರಟಿಕ್ ಕಾಂಗ್ರೆಸ್ ಸದಸ್ಯ ಜೋಕ್ವಿನ್ ಕ್ಯಾಸ್ಟ್ರೋ, “ಇಸ್ರೇಲ್ ದಾಳಿಯ ಪರಿಣಾಮವಾಗಿ ಅಮೆರಿಕದ ಪಡೆಗಳು ಅಪಾಯಕ್ಕೆ ಸಿಲುಕಿವೆ. ಆಡಳಿತವು ಅವರನ್ನು ತಡೆಯುವ ಬದಲು ಯುದ್ಧದಲ್ಲಿ ಪಾಲ್ಗೊಂಡಿದೆ,” ಎಂದು ಟೀಕಿಸಿದ್ದಾರೆ. ಇದಕ್ಕೂ ಮಧ್ಯೆ, CNN ನಡೆಸಿದ ಸಮೀಕ್ಷೆಯ ಪ್ರಕಾರ ಶೇಕಡಾ 60 ಮಂದಿ ಅಮೆರಿಕನ್ನರು ಟ್ರಂಪ್ ಅವರ ಬಳಿ ಸ್ಪಷ್ಟ ಯೋಜನೆ ಇಲ್ಲವೆಂದು ಭಾವಿಸಿದ್ದಾರೆ. ಶೇಕಡಾ 62 ಮಂದಿ ಯಾವುದೇ ಮುಂದಿನ ಸೈನಿಕ ಕ್ರಮಕ್ಕೆ ಕಾಂಗ್ರೆಸ್ ಅನುಮೋದನೆ ಪಡೆಯಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ. ಅಮೆರಿಕದ ರಕ್ಷಣಾ ಕಾರ್ಯದರ್ಶಿ ಪೀಟ್ ಹೆಗ್ಸೆತ್, “ನಾವು ಈ ಯುದ್ಧವನ್ನು ಪ್ರಾರಂಭಿಸಲಿಲ್ಲ. ಆದರೆ ಅದನ್ನು ಕೊನೆಗೊಳಿಸಲು ಬದ್ಧರಾಗಿದ್ದೇವೆ. ಗೆಲುವೇ ನಮ್ಮ ಗುರಿ,” ಎಂದು ಹೇಳಿದ್ದಾರೆ.

ವಾರ್ತಾ ಭಾರತಿ 3 Mar 2026 8:48 pm

ಹಿರಿಯರ ತತ್ವಾದರ್ಶ ಪಾಲನೆಯಿಂದ ಮೌಲ್ಯಯುತ ಸಮಾಜ ನಿರ್ಮಾಣ: ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ

ಉಡುಪಿ, ಮಾ.3: ಶ್ರೀರೇಣುಕಾಚಾರ್ಯ, ಯೋಗಿ ನಾರೇಯಣ ಯತೀಂದ್ರ ಸೇರಿದಂತೆ ವಿವಿಧ ದಾರ್ಶನಿಕರು ಸರಳವಾಗಿ ಬದುಕಿ, ಸಮಾಜದ ಅಂಕುಡೊಂಕುಗಳನ್ನು ತಿದ್ದಿ, ಸಮಾಜ ಸುಧಾರಣೆಗೆ ಮಾರ್ಗದರ್ಶನವನ್ನು ನೀಡಿದ್ದಾರೆ. ಇಂತಹ ಮಹನೀಯರ ತತ್ವ, ಆದರ್ಶಗಳನ್ನು ಪ್ರತಿಯೊಬ್ಬರೂ ಪಾಲಿಸಿದಲ್ಲಿ ಮೌಲ್ಯಯುತ ಸಮಾಜ ನಿರ್ಮಾಣ ಸಾಧ್ಯ ಎಂದು ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ ಹೇಳಿದ್ದಾರೆ. ಮಂಗಳವಾರ ಮಣಿಪಾಲ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ನಡೆದ ಶ್ರೀ ರೇಣುಕಾಚಾರ್ಯ ಜಯಂತಿ ಮತ್ತು ಯೋಗಿ ನಾರೇಯಣ ಯತೀಂದ್ರ ಜಯಂತಿ (ಕೈವಾರ ತಾತಯ್ಯ) ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಶ್ರೀರೇಣುಕಾಚಾರ್ಯ, ಯೋಗಿ ಯತೀಂದ್ರ ಸೇರಿದಂತೆ ವಿವಿಧ ದಾರ್ಶನಿಕರು ಸಮಾಜ ಸುಧಾರಣೆಗೆ ಶ್ರಮಿಸಿ ದ್ದಾರೆ.ಇಂಥವರು ಸಮಾಜಕ್ಕೆ ನೀಡಿರುವ ಕೊಡುಗೆ ಹಾಗೂ ಜೀವನಾದರ್ಶಗಳನ್ನು ಮುಂದಿನ ಪೀಳಿಗೆಗೆ ತಿಳಿಸುವ ಸಲುವಾಗಿ ಇಂಥ ಜಯಂತಿ ಕಾರ್ಯಕ್ರಮಗಳನ್ನು ಆಚರಿಸ ಲಾಗುತ್ತಿದೆ ಎಂದರು. ಇಬ್ಬರು ದಾರ್ಶನಿಕರ ಬಗ್ಗೆ ವಿಶೇಷ ಉಪನ್ಯಾಸ ನೀಡಿ ಮಾತನಾಡಿದ ಕಾರ್ಕಳ ಭುವನೇಂದ್ರ ಕಾಲೇಜಿನ ಉಪನ್ಯಾಸಕಿ ಸುಲೋಚನ ಪಚ್ಚಿನಡ್ಕ, 18ನೇ ಶತಮಾನದ ಕಾಲಜ್ಞಾನಿಗಳಾದ ಯೋಗಿ ನಾರೇಯಣ ಯತೀಂದ್ರರು, ತಮ್ಮ ಸಾಂಸಾರಿಕ ಜೀವನದಲ್ಲಿ ನಡೆದ ಕಹಿ ಘಟನೆಯಿಂದ ಬೇಸತ್ತು ಕುಟುಂಬವನ್ನು ತೊರೆದು, ಭಗವಂತನ ಇರುವಿಕೆಯನ್ನು ಕಂಡುಕೊಳ್ಳಲು ಆಧ್ಯಾತ್ಮದತ್ತ ಮುಖಮಾಡುತ್ತಾರೆ. ಕನ್ನಡ ಮತ್ತು ತೆಲುಗಿನಲ್ಲಿ ಭಕ್ತಿ ಗೀತೆಗಳು, ತತ್ವಪದಗಳು ಮತ್ತು ಭವಿಷ್ಯವಾಣಿಗಳನ್ನು(ಕಾಲಜ್ಞಾನ) ರಚಿಸುವುದರೊಂದಿಗೆ ಸುದೀರ್ಘ 110 ವರ್ಷಗಳ ಕಾಲ ಬದುಕಿ ಕೈವಾರ ತಾತಯ್ಯನಾಗಿ ಸಮಾಜಕ್ಕೆ ಭಕ್ತಿ ಮತ್ತು ಮಾನವೀಯತೆಯನ್ನು ಬೋಧಿಸಿದ್ದರು ಎಂದರು. ವೀರಶೈವ ಧರ್ಮದ ಮಹಾನ್ ಶರಣ ಮತ್ತು ಗುರುಗಳಲ್ಲಿ ಒಬ್ಬರಾದ ಜಗದ್ಗುರು ರೇಣುಕಾಚಾರ್ಯರು ಸುಮಾರು 900-1000 ವರ್ಷಗಳ ಹಿಂದೆ ಬದುಕಿದ್ದರು ಎಂದು ದಾಖಲೆಗಳು ತಿಳಿಸುತ್ತವೆ. ಅವರ ತತ್ವ, ಬದುಕಿನ ಚರಿತ್ರೆ ಮತ್ತು ಧಾರ್ಮಿಕ ಸಾಧನೆಗಳು ಭಾರತೀಯ ಸಾಮಾಜಿಕ ಮತ್ತು ಧಾರ್ಮಿಕ ಚರಿತ್ರೆಯಲ್ಲಿ ಮಹತ್ವಪೂರ್ಣ ಸ್ಥಾನ ಪಡೆದಿವೆ. ಲಿಂಗಾಯತ ಧರ್ಮದ ಸಿದ್ಧಾಂತಗಳನ್ನು ಪ್ರತಿಪಾದಿಸಲು ಮತ್ತು ಶೈವ ಪರಂಪರೆಯನ್ನು ಬಲಪಡಿಸಲು ಅವರು ತಮ್ಮ ಜೀವನವನ್ನು ಮೀಸಲಿರಿಸಿದ್ದರು ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಉಪ ತಹಶೀಲ್ದಾರ್‌ಗಳಾದ ನವನೀತ್ ಹಾಗೂ ಜಯಲಕ್ಷ್ಮೀ, ಸಮುದಾಯದ ಸದಸ್ಯರು ಹಾಗೂ ಇತರರು ಉಪಸ್ಥಿತರಿದ್ದರು. ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರೆ, ವರ್ಷಾ ಬಿ ಕೋಟ್ಯಾನ್ ಕಾರ್ಯಕ್ರಮ ನಿರೂಪಿಸಿದರು. ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗದ ಜಿಲ್ಲಾ ಅಧ್ಯಕ್ಷ ಸಿದ್ಧಬಸಯ್ಯ ಚಿಕ್ಕಮಠ ವಂದಿಸಿದರು.  

ವಾರ್ತಾ ಭಾರತಿ 3 Mar 2026 8:47 pm

ಭಾರತಕ್ಕೆ ಇಲ್ಲ ಪೆಟ್ರೋಲ್ ಮತ್ತು ಡೀಸೆಲ್ ಟೆನ್ಷನ್, 74 ದಿನಗಳಿಗೆ ಬೇಕಾದಷ್ಟು ತೈಲ ಸಂಗ್ರಹ | Operation Roaring Lion

ಇರಾನ್ ವಿರುದ್ಧ ಅಮೆರಿಕ ಹಾಗೂ ಇಸ್ರೇಲ್ ದೊಡ್ಡ ಮಟ್ಟದಲ್ಲಿ ಸೇನಾ ಕಾರ್ಯಾಚರಣೆ ಶುರು ಮಾಡಿದ ನಂತರ ತೈಲ ಸರಬರಾಜು ವ್ಯತ್ಯಯವಾಗಿದೆ. ಅದರಲ್ಲೂ ಭಾರತ ಸೇರಿ ಯುರೋಪ್ ದೇಶಗಳಿಗೆ ಇದೀಗ ಮಧ್ಯಪ್ರಾಚ್ಯ ಭಾಗದಿಂದ ಪ್ರತಿನಿತ್ಯ ಸಪ್ಲೈ ಆಗಬೇಕಿದ್ದ ತೈಲ ನಿಂತು ಹೋಗಿದೆ. ಇದರ ಪರಿಣಾಮ, ಜಗತ್ತಿನ ಹಲವು ದೇಶಗಳಲ್ಲಿ ತೈಲದ ಬೆಲೆ ಭಾರಿ ಏರಿಕೆ ಕಾಣುತ್ತಿದೆ. ಅರಬ್ &

ಒನ್ ಇ೦ಡಿಯ 3 Mar 2026 8:46 pm

ಉಡುಪಿ: ಮಾ.4ಕ್ಕೆ ರಂಗಭೂಮಿ ರಂಗೋತ್ಸವ ಉದ್ಘಾಟನೆ; ಪ್ರಸನ್ನರಿಗೆ ‘ರಂಗಭೂಮಿ ಪ್ರಶಸ್ತಿ’ ಪ್ರದಾನ

ಉಡುಪಿ, ಮಾ.3: ಉಡುಪಿಯ ರಂಗಭೂಮಿ ಸಂಸ್ಥೆಯ ಈ ವರ್ಷದ ರಂಗಭೂಮಿ ರಂಗೋತ್ಸವ ಕಾರ್ಯಕ್ರಮ ಮಾ.4ಕ್ಕೆ ಪ್ರಾರಂಭಗೊಳ್ಳಲಿದೆ. ರಂಗಭೂಮಿ ಪ್ರತಿವರ್ಷ ನಾಡಿನ ರಂಗಕರ್ಮಿಯೊಬ್ಬರಿಗೆ ನೀಡುವ ‘ರಂಗಭೂಮಿ ಪ್ರಶಸ್ತಿ-2026’ಕ್ಕೆ ನಾಡಿನ ಹಿರಿಯ ರಂಗಕರ್ಮಿ, ನಾಟಕಕಾರ ಹಾಗೂ ಚಿಂತಕ ಪ್ರಸನ್ನ ಆಯ್ಕೆಯಾಗಿದ್ದಾರೆ ಎಂದು ಸಂಸ್ಥೆಯ ಅಧ್ಯಕ್ಷ ತಲ್ಲೂರು ಶಿವರಾಮ ಶೆಟ್ಟಿ ತಿಳಿಸಿದ್ದಾರೆ. ಉಡುಪಿ ಪ್ರೆಸ್‌ಕ್ಲಬ್‌ನಲ್ಲಿ ಇಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಾರಿಯ ರಂಗಭೂಮಿ ರಂಗೋತ್ಸವ ಕಾರ್ಯಕ್ರಮ ಉಡುಪಿ ಎಂಜಿಎಂ ಕಾಲೇಜಿನ ಮುದ್ದಣ ಬಯಲು ರಂಗಮಂದಿರದಲ್ಲಿ ನಡೆಯಲಿದೆ. ಬುಧವಾರ ಸಂಜೆ 6:00ಗಂಟೆಗೆ ಅಂಬಲಪಾಡಿಯ ಡಾ.ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್‌ನ ಪ್ರವರ್ತಕ ಡಾ.ಜಿ.ಶಂಕರ್ ರಂಗೋತ್ಸವನ್ನು ಉದ್ಘಾಟಿಸಲಿದ್ದಾರೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಣಿಪಾಲ ಮಾಹೆಯ ಸಹ ಕುಲಾಧಿಪತಿ ಡಾ.ಎಚ್.ಎಸ್.ಬಲ್ಲಾಳ್ ವಹಿಸಲಿ ದ್ದಾರೆ. ದೇಸಿ ಚಿಂತನೆಗಳ ರಾಯಭಾರಿಯಾಗಿರುವ ಹಿರಿಯ ರಂಗಕರ್ಮಿ, ನಾಟಕಕಾರ, ನಿರ್ದೇಶಕ ಪ್ರಸನ್ನ ಅವರಿಗೆ 20,000ರೂ. ನಗದನ್ನು ಹೊಂದಿರುವ ರಂಗಭೂಮಿ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದರು. ಹಿರಿಯ ಪತ್ರಕರ್ತ ರಾಜನ್ ಹುಣಸವಾಡಿ ಅವರು ಅಭಿನಂದನಾ ನುಡಿಯನ್ನು ಆಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮಾಜಿ ಶಾಸಕ ಕೆ.ರಘುಪತಿ ಭಟ್ ಹಾಗೂ ಎಂಜಿಎಂ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ವನಿತಾ ಮಯ್ಯ ಉಪಸ್ಥಿತರಿರುವರು. ಸಭಾ ಕಾರ್ಯಕ್ರಮದ ಬಳಿಕ ಈಗಾಗಲೇ ಅಪಾರ ಜನಮನ್ನಣೆ ಪಡೆದಿರುವ ಕೇರಳದ ಲಿಟ್ಲ್ ಅರ್ಥ್ ಸ್ಕೂಲ್ ಆಫ್ ಥಿಯೇಟರ್‌ನ ಕಲಾವಿದರಿಂದ ಮಲಯಾಳಂ ನಾಟಕ ‘ಕುಹೂ...’ ಅರುಣ್‌ಲಾಲ್ ಅವರ ನಿರ್ದೇಶನದಲ್ಲಿ ಪ್ರದರ್ಶನಗೊಳ್ಳಲಿದೆ. ಮರುದಿನ ಮಾ.5ರಂದು ಗುರುವಾರ ರಂಗಭೂಮಿ ಕಳೆದ 46 ವರ್ಷಗಳಿಂದ ನಿರಂತರವಾಗಿ ನಡೆಸಿಕೊಂಡು ಬಂದಿರುವ ರಾಜ್ಯಮಟ್ಟದ ಕನ್ನಡ ನಾಟಕ ಸ್ಪರ್ಧೆಯ ಈ ಬಾರಿಯ ವಿಜೇತ ತಂಡಕ್ಕೆ ಹಾಗೂ ವೈಯಕ್ತಿಕ ಪ್ರಶಸ್ತಿ ಪಡೆದಿರುವ ಕಲಾವಿದರಿಗೆ ಪ್ರಶಸ್ತಿ ವಿತರಣಾ ಸಮಾರಂಭ ಸಂಜೆ 6 ಗಂಟೆಗೆ ನಡೆಯಲಿದೆ. ಕಾರ್ಯಕ್ರಮದಲ್ಲಿ ತಲ್ಲೂರು ಶಿವರಾಮ ಶೆಟ್ಟಿ, ಅದಾನಿ ಗ್ರೂಪ್‌ನ ಕಿಶೋರ್ ಆಳ್ವ, ನಿವೃತ್ತ ಪ್ರಾಂಶುಪಾಲರಾದ ರಂಗಕರ್ಮಿ ನಟರಾಜ ದೀಕ್ಷಿತ್, ಉದ್ಯಮಿ ಮನೋಹರ ಎಸ್.ಶೆಟ್ಟಿ, ಎಂಜಿಎಂ ಕಾಲೇಜಿನ ಡಾ.ವಿಶ್ವನಾಥ ಪೈ ಉಪಸ್ಥಿತರಿರುವರು. ಕೊನೆಯಲ್ಲಿ ಈ ಬಾರಿಯ ನಾಟಕ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದಿರುವ ಸುಮನಸಾ ಕೊಡವೂರು ತಂಡದ ‘ಈದಿ’ ನಾಟಕದ ಮರು ಪ್ರದರ್ಶನ ನಡೆಯಲಿದೆ ಎಂದು ರಂಗಭೂಮಿಯ ಪ್ರಧಾನ ಕಾರ್ಯದರ್ಶಿ ಪ್ರದೀಪ್‌ಚಂದ್ರ ಕುತ್ಪಾಡಿ ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ರಂಗಭೂಮಿಯ ಉಪಾಧ್ಯಕ್ಷ ಎನ್.ರಾಜಗೋಪಾಲ ಬಲ್ಲಾಳ್, ಕೋಶಾಧಿಕಾರಿ ಭೋಜ ಯು. ಹಾಗೂ ಕಾರ್ಯಕಾರಿ ಸಮಿತಿ ಸದಸ್ಯ ಸುಬ್ರಹ್ಮಣ್ಯ ಶೇರಿಗಾರ್ ಉಪಸ್ಥಿತರಿದ್ದರು.

ವಾರ್ತಾ ಭಾರತಿ 3 Mar 2026 8:46 pm

ಗಲ್ಫ್ ಉದ್ವಿಗ್ನತೆ| ಮಂಗಳೂರು - ಗಲ್ಫ್ ರಾಷ್ಟ್ರಗಳ ನಡುವಿನ ಮತ್ತಷ್ಟು ವಿಮಾನಗಳ ಸಂಚಾರ ರದ್ದು

ಮಂಗಳೂರು, ಮಾ.3: ಮಂಗಳೂರು ಮತ್ತು ಗಲ್ಫ್ ರಾಷ್ಟ್ರಗಳ ನಡುವಿನ ಮತ್ತಷ್ಟು ವಿಮಾನಗಳ ಸಂಚಾರ ರದ್ದುಗೊಂಡಿವೆ ಎಂದು ವಿಮಾನ ನಿಲ್ದಾಣದ ವಕ್ತಾರರು ಪ್ರಕಟನೆಯಲ್ಲಿ ತಿಳಿಸಿದ್ದಾರೆ. ಮಾ.4ರ ಮಂಗಳೂರು-ಜೆದ್ದಾ (ಐಎಕ್ಸ್ 845), ಜೆದ್ದಾ-ಮಂಗಳೂರು (ಐಎಕ್ಸ್ 846), ಮಂಗಳೂರು-ದುಬೈ (ಐಎಕ್ಸ್ 831), ಮಾ.5ರ ದುಬೈ-ಮಂಗಳೂರು (ಐಎಕ್ಸ್ 832), ಮಾ.4ರ ಮಂಗಳೂರು-ದುಬೈ (ಐಎಕ್ಸ್ 813), ಮಾ.5ರ ದುಬೈ-ಮಂಗಳೂರು (ಐಎಕ್ಸ್ 814), ಮಾ.4ರ ಮಂಗಳೂರು-ಕುವೈತ್ (ಐಎಕ್ಸ್ 851), ಮಂಗಳೂರು-ದಮ್ಮಾಮ್ (ಐಎಕ್ಸ್ 847), ಮಾ.5ರ ದಮ್ಮಾಮ್-ಮಂಗಳೂರು (ಐಎಕ್ಸ್ 848), ಮಾ.4ರ ಮಂಗಳೂರು-ಅಬುಧಾಬಿ (ಐಎಕ್ಸ್ 815), ಮಾ.5ರ ಅಬುಧಾಬಿ- ಮಂಗಳೂರು (ಐಎಕ್ಸ್ 816) ವಿಮಾನಗಳ ಸಂಚಾರ ರದ್ದಾಗಿವೆ ಎಂದು ತಿಳಿಸಿದ್ದಾರೆ.

ವಾರ್ತಾ ಭಾರತಿ 3 Mar 2026 8:40 pm

‘ಜನತೆಗೆ ಬೇಕಿರುವುದು ಪಾರದರ್ಶಕತೆಯೇ ಹೊರತು, ರಾಜಕೀಯ ನಾಟಕವಲ್ಲ’: ಸಿದ್ದರಾಮಯ್ಯಗೆ ಆರ್.ಅಶೋಕ್ ತಿರುಗೇಟು

ಬೆಂಗಳೂರು : ‘ಮಾಧ್ಯಮ ವರದಿಯ ಆಧಾರದ ಮೇಲೆ ಉತ್ತರದಾಯಿತ್ವವನ್ನು ಪ್ರಶ್ನಿಸುವುದು ಹತಾಶೆಯಲ್ಲ. ಅದು ಪ್ರಜಾಪ್ರಭುತ್ವದಲ್ಲಿ ಜವಾಬ್ದಾರಿಯುತ ವಿಪಕ್ಷದ ಕರ್ತವ್ಯ. ನನ್ನ ಪ್ರಶ್ನೆಗಳು ತಮ್ಮನ್ನು ಮುಜುಗರಕ್ಕೀಡು ಮಾಡಿದರೆ, ಅದಕ್ಕೆ ನಾನು ಜವಾಬ್ದಾರನಲ್ಲ. ಕರ್ನಾಟಕದ ಜನತೆಗೆ ಬೇಕಿರುವುದು ಪಾರದರ್ಶಕತೆಯೇ ಹೊರತು ರಾಜಕೀಯ ನಾಟಕವಲ್ಲ’ ಎಂದು ವಿಪಕ್ಷ ನಾಯಕ ಆರ್.ಅಶೋಕ್, ಸಿಎಂ ಪ್ರತಿಕ್ರಿಯೆಗೆ ತಿರುಗೇಟು ನೀಡಿದ್ದಾರೆ. ಮಂಗಳವಾರ ಎಕ್ಸ್‌ನಲ್ಲಿ ಪೋಸ್ಟ್ ಹಾಕಿರುವ ಅಶೋಕ್, ‘ಸಿಎಂ ಸಿದ್ದರಾಮಯ್ಯನವರೇ, ಗುಪ್ತಚರ ಇಲಾಖೆಯ ದುರ್ಬಳಕೆ ಆಗುತ್ತಿದೆ ಎನ್ನುವುದು ನನ್ನ ವೈಯಕ್ತಿಕ ಆರೋಪವಲ್ಲ. ಪ್ರತಿಷ್ಠಿತ ಮಾಧ್ಯಮ ಸಂಸ್ಥೆಯೊಂದು ತನ್ನ ಮೂಲಗಳಿಂದ ಸಂಗ್ರಹಿಸಿದ ಮಾಹಿತಿಯ ಆಧಾರದ ಮೇಲೆ ಪ್ರಕಟಿಸಿದೆ. ತಮಗೆ ಈ ವರದಿಯ ಬಗ್ಗೆ ಆಕ್ಷೇಪವಿದ್ದರೆ, ವರದಿ ಪ್ರಕಟಿಸಿದ ಸಂಸ್ಥೆಯ ವಿರುದ್ಧ ಕ್ರಮ ಕೈಗೊಳ್ಳಬೇಕೇ ಹೊರತು, ಆ ವರದಿಗೆ ಪ್ರತಿಕ್ರಿಯಿಸಿದ ವಿಪಕ್ಷದ ವಿರುದ್ಧವಲ್ಲ’ ಎಂದು ಹೇಳಿದ್ದಾರೆ. ‘ವರದಿಯಲ್ಲಿರುವ ಗಂಭೀರ ಅಂಶಗಳಿಗೆ ನೇರವಾಗಿ ಉತ್ತರಿಸುವ ಬದಲು, ತಾವು ಕ್ಷುಲ್ಲಕ, ಅಸಂಬದ್ಧ ರಾಜಕೀಯ ವಾಗ್ದಾಳಿ ನಡೆಸಲು ಮುಂದಾಗಿದ್ದೀರಿ. ನಿಮ್ಮ ಈ ಪ್ರತಿಕ್ರಿಯೆಯೇ ಹಲವು ಅನುಮಾನಗಳಿಗೆ ಎಡೆಮಾಡಿಕೊಡುತ್ತಿದೆ. ಒಂದು ವೇಳೆ ವರದಿ ಸುಳ್ಳಾಗಿದ್ದರೆ, ಅದನ್ನು ಸ್ಪಷ್ಟವಾಗಿ ನಿರಾಕರಿಸಿ ಪತ್ರಿಕೆಯಿಂದ ಸ್ಪಷ್ಟೀಕರಣ ಕೇಳಿ. ಅದನ್ನು ಬಿಟ್ಟು, ವಿಷಯಕ್ಕೆ ಸಂಬಂಧವೇ ಇಲ್ಲದಂತೆ ವಿರೋಧ ಪಕ್ಷದ ಮೇಲೆ ಹರಿಹಾಯುವುದು ಸಂಶಯವನ್ನು ಇನ್ನಷ್ಟು ಹೆಚ್ಚಿಸುತ್ತದೆ ಎಂದು ಅಶೋಕ್ ತಿಳಿಸಿದ್ದಾರೆ. ‘ಶಾಸಕರ ಚಟುವಟಿಕೆಗಳ ಬಗ್ಗೆ ನಿರಂತರ ಮಾಹಿತಿ ನೀಡುವಂತೆ ರಾಜ್ಯ ಗುಪ್ತಚರ ಇಲಾಖೆಗೆ ಸೂಚಿಸಲಾಗಿದೆ ಎಂದು ಆ ವರದಿಯಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ಈ ಪದಗಳು ನಮ್ಮ ಸೃಷ್ಟಿಯಲ್ಲ, ಇವು ಸಾರ್ವಜನಿಕ ವಲಯದಲ್ಲಿರುವ ಮಾಧ್ಯಮ ವರದಿಯ ಭಾಗವಾಗಿದೆ. ಇಂತಹ ಗಂಭೀರ ವಿಷಯಗಳು ಮುನ್ನೆಲೆಗೆ ಬಂದಾಗ, ವಿಪಕ್ಷ ನಾಯಕನಾಗಿ ಅದರ ಬಗ್ಗೆ ಸ್ಪಷ್ಟತೆ ಕೇಳುವುದು ನನ್ನ ಸಾಂವಿಧಾನಿಕ ಜವಾಬ್ದಾರಿ. ಜನರ ಮುಂದೆ ಸತ್ಯಾಂಶಗಳನ್ನು ಇಡುವ ಬದಲು, ತಾವು ಯಾವುದೋ ಹಳೆಯ ಇತಿಹಾಸವನ್ನು ಕೆದಕಿ, ಸಂಬಂಧವಿಲ್ಲದ ರಾಷ್ಟ್ರೀಯ ನಾಯಕರನ್ನು ಎಳೆದು ತರುವ ಮೂಲಕ ವಿಷಯಾಂತರ ಮಾಡಲು ಯತ್ನಿಸುತ್ತಿರುವುದು ತಾವು ವರದಿಯಿಂದ ಗಲಿಬಿಲಿಗೊಂಡಿರುವುದನ್ನ ಸ್ಪಷ್ಟವಾಗಿ ತೋರಿಸುತ್ತದೆ’ ಎಂದು ಅಶೋಕ್ ಟೀಕಿಸಿದ್ದಾರೆ. ‘ಕರ್ನಾಟಕವು ಇಂದು ಡ್ರಗ್ಸ್ ಜಾಲ, ಕೋಮುದಳ್ಳುರಿಗಳು, ನಿರುದ್ಯೋಗದ ವಿರುದ್ಧ ಯುವಕರ ಹೋರಾಟ, ಸಾರಿಗೆ ನೌಕರರು, ಆರೋಗ್ಯ ಇಲಾಖೆ ಸಿಬ್ಬಂದಿಗಳು, ಆಶಾ ಕಾರ್ಯಕರ್ತೆಯರ ಮುಷ್ಕರ ಸೇರಿದಂತೆ ಅನೇಕ ಸವಾಲುಗಳನ್ನು ಎದುರಿಸುತ್ತಿರುವಾಗ, ಸರಕಾರದ ಮುಖ್ಯಸ್ಥರಾದ ತಮ್ಮ ಆದ್ಯತೆ ಆಡಳಿತದ ಮೇಲಿರಬೇಕೇ ಹೊರತು ಆಂತರಿಕ ಕಚ್ಚಾಟ, ರಾಜಕೀಯ ಮೇಲಾಟದ ಮೇಲಲ್ಲ ಎಂದು ಅವರು ವಾಗ್ದಾಳಿ ನಡೆಸಿದ್ದಾರೆ. ‘ನನ್ನ ಪ್ರಶ್ನೆ ನೇರ ಮತ್ತು ಸರಳವಾಗಿದೆ. ಗುಪ್ತಚರ ಇಲಾಖೆಯನ್ನು ಕೇವಲ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಬಳಸಲಾಗುತ್ತಿದೆಯೇ ಅಥವಾ ಕಾಂಗ್ರೆಸ್ ಪಕ್ಷದ ಆಂತರಿಕ ಬಣ ರಾಜಕೀಯವನ್ನು ನಿಭಾಯಿಸಲು ಬಳಸಿಕೊಳ್ಳಲಾಗುತ್ತಿದೆಯೇ? ಕರ್ನಾಟಕದ ಜನತೆಗೆ ಇದಕ್ಕೆ ನೇರ ಮತ್ತು ಪ್ರಾಮಾಣಿಕ ಉತ್ತರ ಬೇಕಿದೆ’ -ಆರ್.ಅಶೋಕ್, ಪ್ರತಿಪಕ್ಷ ನಾಯಕ

ವಾರ್ತಾ ಭಾರತಿ 3 Mar 2026 8:40 pm

ಕಲಬುರಗಿ ಐಟಿಎಫ್ ಮಹಿಳಾ ಟೆನಿಸ್ ಟೂರ್ನಿ : ಮುಖ್ಯ ಪಂದ್ಯಾವಳಿಗೆ ಸಚಿವ ಪ್ರಿಯಾಂಕ್ ಖರ್ಗೆ ಚಾಲನೆ

ಕಲಬುರಗಿ: ನಗರದ ಚಂದ್ರಶೇಖರ್ ಪಾಟೀಲ್ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಕಲಬುರಗಿ ಐಟಿಎಫ್ ಮಹಿಳಾ ಟೆನಿಸ್ ಟೂರ್ನಿಯ ಮುಖ್ಯ ಸುತ್ತಿನ ಪಂದ್ಯಾವಳಿಗಳಿಗೆ ಮಂಗಳವಾರ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಮಾಹಿತಿ ಮತ್ತು ಜೈವಿಕ ತಂತ್ರಜ್ಞಾನ ಇಲಾಖೆ ಸಚಿವರಾದ ಪ್ರಿಯಾಂಕ್ ಖರ್ಗೆ, ಮತ್ತು ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ ಇಲಾಖೆ ಸಚಿವ ಡಾ.ಶರಣಪ್ರಕಾಶ ಪಾಟೀಲ್ ಅವರು ಬಲೂನ್ ಹಾರಿ ಬಿಡುವ ಮೂಲಕ ಚಾಲನೆ ನೀಡಿದರು. ಮುಖ್ಯ ಪಂದ್ಯಾವಳಿಗಳ ಚಾಲನೆ ಕಾರ್ಯಕ್ರಮದಲ್ಲಿ ಇಂದು ಜಿಲ್ಲಾ ಉಸ್ತುವಾರಿ ಸಚಿವರಾದ ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಹಾಗೂ ಮಾಹಿತಿ ಮತ್ತು ಜೈವಿಕ ತಂತ್ರಜ್ಞಾನ ಇಲಾಖೆ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರಾದ ಸಚಿವ ಪ್ರಿಯಾಂಕ್ ಖರ್ಗೆ, ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವವೃದ್ಧಿ ಇಲಾಖೆ ಸಚಿವರಾದ ಡಾ.ಶರಣಪ್ರಕಾಶ್‌ ಪಾಟೀಲ್, ಹಾಗೂ ವಿಧಾನ ಪರಿಷತ್ ಸದಸ್ಯರಾಧ ಶಶೀಲ್ ಜಿ.ನಮೋಶಿ ಅವರು ಟೆನಿಸ್ ಆಡುವ ಮೂಲಕ ಅಧಿಕೃತವಾಗಿ ಮುಖ್ಯ ಪಂದ್ಯಾವಳಿಗಳಿಗೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯರಾದ ಜಗದೇವ ಗುತ್ತೇದಾರ್, ತಿಪ್ಪಣ್ಣಪ್ಪ ಕಮಕನೂರ, ಕಲಬುರಗಿ ನಗರಾಭಿವೃದ್ಧಿ ನಗರದ ಪ್ರಾಧಿಕಾರದ ಅಧ್ಯಕ್ಷರಾದ ಮಜಹರ್ ಆಲಂ ಖಾನ್, ಜಿಲ್ಲಾಧಿಕಾರಿ ಫೌಝಿಯಾ ತರನ್ನುಮ್, ಸಿಇಓ ಭವಂರಸಿಂಗ್ ಮೀನಾ, ಮಹಾನಗರ ಪಾಲಿಕೆ ಪೂಜ್ಯ ಮಹಾಪೌರರಾದ ವರ್ಷಾ ಜಾನೆ, ಪಾಲಿಕೆ ಆಯುಕ್ತರಾದ ಅವಿನಾಶ ಸಿಂಧೆ, ಪೊಲೀಸ್ ಆಯುಕ್ತರಾದ ಡಾ. ಶರಣಪ್ಪ ಎಸ್.ಡಿ, ಎಸ್ಪಿ ಅಡ್ಡೂರು ಶ್ರೀನಿವಾಸುಲು, ಸಹಾಯಕ ಆಯುಕ್ತೆ ಸಾಹಿತ್ಯ, ಆಲದಕಟ್ಟಿ, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಸಮದ್ ಪಟೇಲ್ ಅವರು ಸೇರಿದಂತೆ ಐಟಿಎಫ್ ಪಂದ್ಯ ಆಯೋಜಕರು, ಆಟಗಾರರು, ಪ್ರೇಕ್ಷಕರು ಸೇರಿದಂತೆ ಹಲವರು ಇದ್ದರು.

ವಾರ್ತಾ ಭಾರತಿ 3 Mar 2026 8:33 pm

ಕಲಬುರಗಿ | ಇರಾನ್ ಮೇಲೆ ಅಮೆರಿಕಾ, ಇಸ್ರೇಲ್ ದಾಳಿ ಖಂಡಿಸಿ ಪ್ರತಿಭಟನೆ

ಮಾರುಕಟ್ಟೆಗಾಗಿ ಪ್ರಪಂಚವನ್ನು ಸ್ಮಶಾನ ಮಾಡುತ್ತಿರುವ ಅಮೆರಿಕ-ಇಸ್ರೇಲ್ : ಎಂ.ಶಶಿಧರ ಆಕ್ರೋಶ

ವಾರ್ತಾ ಭಾರತಿ 3 Mar 2026 8:29 pm

ಜುಬೈಲ್| ಇಫ್ತಾರ್ ಕೂಟವು ಐಕ್ಯತೆ, ದಾನಶೀಲತೆ ಮತ್ತು ಭಕ್ತಿಯ ಮಹೋತ್ಸವ: ಸೈಯದ್‌ ಹಬೀಬುಲ್ಲಾ ಪೂಕೋಯ ತಂಙಳ್

ಜುಬೈಲ್:‌ ಇಫ್ತಾರ್ ಕೂಟವು ಐಕ್ಯತೆ, ದಾನಶೀಲತೆ ಮತ್ತು ಭಕ್ತಿಯ ಮಹೋತ್ಸವ ಎಂದು ಸೈಯದ್‌ ಹಬೀಬುಲ್ಲಾ ಪೂಕೋಯ ತಂಙಳ್ ಅಲ್ ಹಾದಿ ಅವರು ತಿಳಿಸಿದರು. ಉದ್ಯಮಿ, ಮುಝೈನ್ ಸಂಸ್ಥಾಪಕ ಹಾಗೂ ರಾಜ್ಯೋತ್ಸವ ಪ್ರಶಸ್ತಿ ವಿಜೇತರಾದ ಝಕರಿಯಾ ಹಾಜಿ ಜೋಕಟ್ಟೆ ಅವರ ನೇತೃತ್ವದಲ್ಲಿ ಜುಬೈಲ್ ಅಬೂ ಹದರಿಯ್ಯದಲ್ಲಿ ನಡೆದ ಇಫ್ತಾರ್ ಕೂಟದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಸುಮಾರು ನಾಲ್ಕು ಸಾವಿರ ಮಂದಿ ಒಂದೇ ವೇದಿಕೆಯಲ್ಲಿ ಸೇರಿ ಉಪವಾಸ ಮುರಿದ ಆ ಕ್ಷಣಗಳು ನಿಜಕ್ಕೂ ಮನಸ್ಸನ್ನು ಸ್ಪರ್ಶಿಸಿದವು. ಧರ್ಮ, ಸಮಾಜ, ಸಹೋದರತ್ವ ಮತ್ತು ಮಾನವೀಯ ಮೌಲ್ಯಗಳ ಸಮ್ಮಿಲನವಾಗಿದ್ದ ಈ ಕಾರ್ಯಕ್ರಮವು ಸಮುದಾಯದ ಐಕ್ಯತೆಯ ಶಕ್ತಿಯನ್ನು ಮತ್ತೊಮ್ಮೆ ಸಾಬೀತುಪಡಿಸಿತು ಎಂದು ತಂಙಳ್‌ ಹೇಳಿದರು. ಸಾವಿರಾರು ಜನರನ್ನು ಒಂದೇ ವೇದಿಕೆಯಲ್ಲಿ ಸೇರಿಸಿ, ಶಾಂತಿ, ಪ್ರೀತಿ ಮತ್ತು ಭ್ರಾತೃತ್ವದ ಸಂದೇಶ ಸಾರುವುದು ಸುಲಭವಲ್ಲ. ಆದರೆ ಸಮರ್ಪಣೆಯ ಮನೋಭಾವ ಮತ್ತು ಉತ್ತಮ ಸಂಘಟನೆಯಿಂದ ಇದು ಸಾಧ್ಯವಾಯಿತು. ಇಫ್ತಾರ್ ಕೇವಲ ಉಪವಾಸ ಮುರಿಯುವ ಸಮಯವಲ್ಲ, ಅದು ಕೃತಜ್ಞತೆಯ ಕ್ಷಣ, ದಾನಧರ್ಮದ ಸನ್ನಿವೇಶ, ಪರಸ್ಪರ ಗೌರವ ಮತ್ತು ಸಹಾನುಭೂತಿಯ ಪಾಠ. ಈ ಕಾರ್ಯಕ್ರಮದಲ್ಲಿ ಕಂಡುಬಂದ ಶಿಸ್ತಿನ ವಾತಾವರಣ, ಸ್ವಯಂಸೇವಕರ ಶ್ರಮ ಮತ್ತು ಭಾಗವಹಿಸಿದ ಜನರ ಒಗ್ಗಟ್ಟು ಎಲ್ಲರಿಗೂ ಪ್ರೇರಣೆ ಎಂದು ಹೇಳಿದರು. ಈ ಇಫ್ತಾರ್ ಕೂಟವು ಕೇವಲ ಒಂದು ಕಾರ್ಯಕ್ರಮವಲ್ಲ, ಇದು ಸಮುದಾಯದ ಒಗ್ಗಟ್ಟಿನ ಪ್ರತೀಕ. ಮುಂದೆಯೂ ಇಂತಹ ಸೇವಾ ಮನೋಭಾವದ ಕಾರ್ಯಕ್ರಮಗಳು ಇನ್ನಷ್ಟು ಯಶಸ್ವಿಯಾಗಿ ನಡೆಯಲಿ ಎಂದು ಅವರು ಹಾರೈಸಿದರು.

ವಾರ್ತಾ ಭಾರತಿ 3 Mar 2026 8:27 pm

RCB ಅಭಿಮಾನಿಗಳಿಗೆ ಗುಡ್‌ನ್ಯೂಸ್‌ | ಆರ್‌ಸಿಬಿಯ ಐದು ಪಂದ್ಯಗಳಿಗೆ ಚಿನ್ನಸ್ವಾಮಿ ಸ್ಟೇಡಿಯಂ ಆತಿಥ್ಯ

ಬೆಂಗಳೂರು: ಎಂ. ಚಿನ್ನಸ್ವಾಮಿ ಸ್ಟೇಡಿಯಂ 2026ರ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಐದು ಪಂದ್ಯಗಳ ಆತಿಥ್ಯವಹಿಸುವುದು ದೃಢಪಟ್ಟಿದೆ. ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಶನ್(ಕೆಎಸ್‌ಸಿಎ)ಹಾಗೂ ಆರ್‌ಸಿಬಿ ಅಧಿಕಾರಿಗಳು ಸೋಮವಾರ ಬಿರುಸಿನ ಚರ್ಚೆ ನಡೆಸಿದ ನಂತರ ಈ ಬೆಳವಣಿಗೆ ನಡೆದಿದೆ. ಮಾರ್ಚ್ 28ರಂದು ಆರ್‌ಸಿಬಿ ಆಡಲಿರುವ ಈ ವರ್ಷದ ಮೊದಲ ಪಂದ್ಯಕ್ಕೆ ಚಿನ್ನಸ್ವಾಮಿ ಸ್ಟೇಡಿಯಂ ಆತಿಥ್ಯವಹಿಸುವ ಎಲ್ಲ ಸಾಧ್ಯತೆ ಇದೆ. ಆರ್‌ಸಿಬಿಯ ಇನ್ನೆರಡು ತವರು ಪಂದ್ಯಗಳು ಈ ಹಿಂದಿನ ಬದ್ಧತೆಯ ಪ್ರಕಾರ ರಾಯ್ಪುರದ ಶಾಹೀದ್ ವೀರ್ ನಾರಾಯಣ್ ಸ್ಟೇಡಿಯಂನಲ್ಲಿ ನಡೆಯಲಿದೆ ಎಂದು ಫ್ರಾಂಚೈಸಿ ದೃಢಪಡಿಸಿದೆ. ಜನವರಿಯಲ್ಲಿ ಆರ್‌ಸಿಬಿ ಸಿಇಒ ರಾಜೇಶ್ ಮೆನನ್ ಅವರು ಛತ್ತೀಸ್‌ಗಡದ ಸರಕಾರದ ಅಧಿಕಾರಿಗಳನ್ನು ಭೇಟಿಯಾಗಿ ತನ್ನ ಕೆಲವು ತವರು ಪಂದ್ಯಗಳನ್ನು ಆಡುವ ಸಾಧ್ಯತೆ ಕುರಿತು ಚರ್ಚಿಸಿದ್ದರು. ಛತ್ತೀಸ್‌ಗಡದ ಸಿಎಂ ವಿಷ್ಣು ದೇವೊ ಸಾಯಿ ಅವರು ನಿರ್ದಿಷ್ಟ ತೆರಿಗೆ ವಿನಾಯಿತಿ ಸಹಿತ ಸಂಪೂರ್ಣ ಬೆಂಬಲ ನೀಡುವುದಾಗಿ ಭರವಸೆ ನೀಡಿದ್ದರು.

ವಾರ್ತಾ ಭಾರತಿ 3 Mar 2026 8:26 pm

ವಾಡಿ | 6 ಮಂದಿ ಸಾಧಕರಿಗೆ ಬಸವ ಶ್ರೀ ಪ್ರಶಸ್ತಿ ಘೋಷಣೆ

ವಾಡಿ: ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಚಿತ್ತಾಪುರ ತಾಲೂಕಿನ ಆರು ಮಂದಿ ಸಾಧಕರನ್ನು 2025-26ನೇ ಸಾಲಿನ ಬಸವ ಶ್ರೀ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ವಾಡಿ ಪಟ್ಟಣದ ಶ್ರೀಬಸವ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಜಗದೀಶ ಪಾಟೀಲ ತಿಳಿಸಿದ್ದಾರೆ. ಈ ಕುರಿತು ಸೋಮವಾರ ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಪೊಲೀಸ್ ಅಧಿಕಾರಿಯಾಗಿ ದಕ್ಷ ಆಡಳಿತ ನೀಡುತ್ತಿರುವ ಶಹಾಬಾದ್ ಉಪ ವಿಭಾಗದ ಡಿವೈಎಸ್ಪಿ ಶಂಕರಗೌಡ ಪಾಟೀಲ್, ಜನಪರ ವರದಿಗಳ ಮೂಲಕ ಮಾಧ್ಯಮ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ಮಡಿವಾಳಪ್ಪ ಹೇರೂರ, ಶೈಕ್ಷಣಿಕ ಕಲಿಕಾ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಡಾ.ಜ್ಯೋತಿ ಆರ್.ತೆಗನೂರ, ವೈದ್ಯಕೀಯ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ಸೇವೆ ಮಾಡುತ್ತಿರುವ ಅರ್ಚನಾ ಡಾ.ಮಲ್ಲಿಕಾರ್ಜುನ ಹಿರೇಮಠ, ಮಹಿಳಾ ಸಬಲೀಕರಣ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ಚಂದ್ರಕಲಾ ಶೀತಲ್ ಜೈನ್ ಹಾಗೂ ಸಾಮಾಜಿಕ ಸೇವೆಯಲ್ಲಿರುವ ಸಿದ್ದಣ್ಣ ನಾಗಣ್ಣ ಮುಗುಟಿ ಅವರನ್ನು ಬಸವ ಶ್ರೀ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಮಾ.7 ರಂದು ಸಾಯಂಕಾಲ 6 ಗಂಟೆಗೆ ವಾಡಿ ಪಟ್ಟಣದ ಶ್ರೀ ಬಸವ ಶಾಲೆಯ ಮೈದಾನದಲ್ಲಿ ನಡೆಯಲಿರುವ ಬಸವ ಮಹೋತ್ಸವ ಸಮಾರಂಭದಲ್ಲಿ ಗಣ್ಯರಿಗೆ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

ವಾರ್ತಾ ಭಾರತಿ 3 Mar 2026 8:23 pm

ವಾಡಿ | 6 ಮಂದಿ ಸಾಧಕರಿಗೆ ಬಸವ ಶ್ರೀ ಪ್ರಶಸ್ತಿ ಘೋಷಣೆ

ವಾಡಿ: ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಚಿತ್ತಾಪುರ ತಾಲೂಕಿನ ಆರು ಮಂದಿ ಸಾಧಕರನ್ನು 2025-26ನೇ ಸಾಲಿನ ಬಸವ ಶ್ರೀ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ವಾಡಿ ಪಟ್ಟಣದ ಶ್ರೀಬಸವ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಜಗದೀಶ ಪಾಟೀಲ ತಿಳಿಸಿದ್ದಾರೆ. ಈ ಕುರಿತು ಸೋಮವಾರ ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಪೊಲೀಸ್ ಅಧಿಕಾರಿಯಾಗಿ ದಕ್ಷ ಆಡಳಿತ ನೀಡುತ್ತಿರುವ ಶಹಾಬಾದ್ ಉಪ ವಿಭಾಗದ ಡಿವೈಎಸ್ಪಿ ಶಂಕರಗೌಡ ಪಾಟೀಲ್, ಜನಪರ ವರದಿಗಳ ಮೂಲಕ ಮಾಧ್ಯಮ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ಮಡಿವಾಳಪ್ಪ ಹೇರೂರ, ಶೈಕ್ಷಣಿಕ ಕಲಿಕಾ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಡಾ.ಜ್ಯೋತಿ ಆರ್.ತೆಗನೂರ, ವೈದ್ಯಕೀಯ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ಸೇವೆ ಮಾಡುತ್ತಿರುವ ಅರ್ಚನಾ ಡಾ.ಮಲ್ಲಿಕಾರ್ಜುನ ಹಿರೇಮಠ, ಮಹಿಳಾ ಸಬಲೀಕರಣ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ಚಂದ್ರಕಲಾ ಶೀತಲ್ ಜೈನ್ ಹಾಗೂ ಸಾಮಾಜಿಕ ಸೇವೆಯಲ್ಲಿರುವ ಸಿದ್ದಣ್ಣ ನಾಗಣ್ಣ ಮುಗುಟಿ ಅವರನ್ನು ಬಸವ ಶ್ರೀ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಮಾ.7 ರಂದು ಸಾಯಂಕಾಲ 6 ಗಂಟೆಗೆ ವಾಡಿ ಪಟ್ಟಣದ ಶ್ರೀ ಬಸವ ಶಾಲೆಯ ಮೈದಾನದಲ್ಲಿ ನಡೆಯಲಿರುವ ಬಸವ ಮಹೋತ್ಸವ ಸಮಾರಂಭದಲ್ಲಿ ಗಣ್ಯರಿಗೆ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

ವಾರ್ತಾ ಭಾರತಿ 3 Mar 2026 8:23 pm

ಕಲಬುರಗಿ | ಗೋರಸೇನಾ ರಾಷ್ಟ್ರೀಯ ಸಂಘಟನೆ ಪದಾಧಿಕಾರಿಗಳ ನೇಮಕ

ಕಲಬುರಗಿ: ಗೋರಸೇನಾ ರಾಷ್ಟ್ರೀಯ ಸಂಘಟನೆಯ ರಾಷ್ಟ್ರೀಯ ಅಧ್ಯಕ್ಷರಾದ ಪ್ರೊ.ಸಂದೇಶ್ ಚೌಹಾಣ್ ರವರ ಮಾರ್ಗದರ್ಶನದಂತೆ ಮತ್ತು ಗೋರಸೇನಾ ಯುವ ರಾಜ್ಯಾಧ್ಯಕ್ಷ ಶ್ರೀಧರ್ (ರಾಜು)ಚವಾಣ್ ಅವರ ನೇತೃತ್ವದಲ್ಲಿ ಸಂಘಟನೆಯ ಪದಾಧಿಕಾರಿಗಳನ್ನು ನೇಮಕ ಮಾಡಲಾಯಿತು. ಕಲಬುರಗಿ ನಗರ ಅಧ್ಯಕ್ಷರಾಗಿ ರಾಹುಲ ರಾಠೋಡ್, ನಗರ ಉಪಾಧ್ಯಕ್ಷರಾಗಿ ಶಿವಕುಮಾರ ಪವಾರ, ಚಂದ್ರಕಾoತ್ (ನಾಥು) ಚವಾಣ್, ನಗರ ಕಾರ್ಯದರ್ಶಿಯಾಗಿ ಸಚಿನ್ ಆಡೇ, ಚಿತಾಪುರ ಮಂಡಳ ಅಧ್ಯಕ್ಷರಾಗಿ ವಿಜಯಕುಮಾರ ಚೌಹಾಣ್, ಕಮಲಾಪುರ ಮಂಡಲದ ಅಧ್ಯಕ್ಷರಾಗಿ ಸುನಿಲ್ ರಾಠೋಡ್, ಯಡ್ರಾಮಿ ಮಂಡಲದ ಅಧ್ಯಕ್ಷರಾಗಿ ತೇಜು ಪವಾರ್ ಅವರನ್ನು ನೇಮಕ ಮಾಡಲಾಯಿತು. ಕೂಡಲೇ ಸಮಾಜ ಮತ್ತು ಸಂಘಟನೆಯ ಕೆಲಸದಲ್ಲಿ ತೊಡಗಬೇಕೆಂದು ಆದೇಶ ಮಾಡಲಾಯಿತು.

ವಾರ್ತಾ ಭಾರತಿ 3 Mar 2026 8:18 pm

ಕಲಬುರಗಿ | ಗೋರಸೇನಾ ರಾಷ್ಟ್ರೀಯ ಸಂಘಟನೆ ಪದಾಧಿಕಾರಿಗಳ ನೇಮಕ

ಕಲಬುರಗಿ: ಗೋರಸೇನಾ ರಾಷ್ಟ್ರೀಯ ಸಂಘಟನೆಯ ರಾಷ್ಟ್ರೀಯ ಅಧ್ಯಕ್ಷರಾದ ಪ್ರೊ.ಸಂದೇಶ್ ಚೌಹಾಣ್ ರವರ ಮಾರ್ಗದರ್ಶನದಂತೆ ಮತ್ತು ಗೋರಸೇನಾ ಯುವ ರಾಜ್ಯಾಧ್ಯಕ್ಷ ಶ್ರೀಧರ್ (ರಾಜು)ಚವಾಣ್ ಅವರ ನೇತೃತ್ವದಲ್ಲಿ ಸಂಘಟನೆಯ ಪದಾಧಿಕಾರಿಗಳನ್ನು ನೇಮಕ ಮಾಡಲಾಯಿತು. ಕಲಬುರಗಿ ನಗರ ಅಧ್ಯಕ್ಷರಾಗಿ ರಾಹುಲ ರಾಠೋಡ್, ನಗರ ಉಪಾಧ್ಯಕ್ಷರಾಗಿ ಶಿವಕುಮಾರ ಪವಾರ, ಚಂದ್ರಕಾoತ್ (ನಾಥು) ಚವಾಣ್, ನಗರ ಕಾರ್ಯದರ್ಶಿಯಾಗಿ ಸಚಿನ್ ಆಡೇ, ಚಿತಾಪುರ ಮಂಡಳ ಅಧ್ಯಕ್ಷರಾಗಿ ವಿಜಯಕುಮಾರ ಚೌಹಾಣ್, ಕಮಲಾಪುರ ಮಂಡಲದ ಅಧ್ಯಕ್ಷರಾಗಿ ಸುನಿಲ್ ರಾಠೋಡ್, ಯಡ್ರಾಮಿ ಮಂಡಲದ ಅಧ್ಯಕ್ಷರಾಗಿ ತೇಜು ಪವಾರ್ ಅವರನ್ನು ನೇಮಕ ಮಾಡಲಾಯಿತು. ಕೂಡಲೇ ಸಮಾಜ ಮತ್ತು ಸಂಘಟನೆಯ ಕೆಲಸದಲ್ಲಿ ತೊಡಗಬೇಕೆಂದು ಆದೇಶ ಮಾಡಲಾಯಿತು.

ವಾರ್ತಾ ಭಾರತಿ 3 Mar 2026 8:18 pm

ಶರಣರ ವಚನ ಸಾಹಿತ್ಯದ ಕೊಡುಗೆ ದೊಡ್ದದು : ಸಚಿವ ಡಾ.ಶರಣಪ್ರಕಾಶ್‌ ಪಾಟೀಲ್‌

ಸೇಡಂನಲ್ಲಿ ನಿಜಶರಣ ಅಂಬಿಗರ ಚೌಡಯ್ಯ ಜಯಂತಿ

ವಾರ್ತಾ ಭಾರತಿ 3 Mar 2026 8:16 pm

ಶರಣರ ವಚನ ಸಾಹಿತ್ಯದ ಕೊಡುಗೆ ದೊಡ್ದದು : ಸಚಿವ ಡಾ.ಶರಣಪ್ರಕಾಶ್‌ ಪಾಟೀಲ್‌

ಸೇಡಂನಲ್ಲಿ ನಿಜಶರಣ ಅಂಬಿಗರ ಚೌಡಯ್ಯ ಜಯಂತಿ

ವಾರ್ತಾ ಭಾರತಿ 3 Mar 2026 8:16 pm

Bengaluru | 10 ಕೋಟಿ ರೂ. ಮೌಲ್ಯದ ಮಾದಕ ದ್ರವ್ಯ ವಶಕ್ಕೆ ಪಡೆದ ಸಿಸಿಬಿ: ಇಬ್ಬರ ಬಂಧನ

ಬೆಂಗಳೂರು : ಸಿಸಿಬಿ ನಾರ್ಕೋಟಿಕ್ಸ್ ವಿಭಾಗದ ಅಧಿಕಾರಿಗಳು ಭರ್ಜರಿ ಕಾರ್ಯಾಚರಣೆ ನಡೆಸಿ ಸುಮಾರು 10 ಕೋಟಿ ರೂ. ಮೌಲ್ಯದ ಮಾದಕ ದ್ರವ್ಯವನ್ನು ವಶಪಡಿಸಿಕೊಂಡಿದ್ದು, ಓರ್ವ ಮಹಿಳೆ ಸಹಿತ ಇಬ್ಬರು ಆರೋಪಿಗಳನ್ನು ಬಂಧಿಸಿರುವ ಘಟನೆ ಬಾಗಲೂರಿನಲ್ಲಿ ವರದಿಯಾಗಿದೆ. ಮಾ.2ರಂದು ಬಾಗಲೂರಿನ ಪ್ರೆಸ್ಟೀಜ್ ಫೈನ್ ಬೇಕರಿ ಪಾರ್ಕ್‍ನ ಫ್ಲಾಟ್‍ವೊಂದರಲ್ಲಿ 10 ಕೋಟಿ ರೂ. ಮೌಲ್ಯದ ಡ್ರಗ್ಸ್ (ಎಲ್‍ಎಸ್‍ಡಿ, ಹೈಡ್ರೋ ಗಾಂಜಾ, ಚರಸ್) ಜಪ್ತಿ ಮಾಡಿದ್ದು, ಜೊತೆಗೆ ಕೇರಳ ಮೂಲದ ಅಶ್ವಿನ್(27) ಹಾಗೂ ಮೊಬಿನಾ(25) ಎಂಬ ಇಬ್ಬರನ್ನು ಸಿಸಿಬಿ ಅಧಿಕಾರಿಗಳು ಬಂಧಿಸಿರುವುದಾಗಿ ಮೂಲಗಳು ತಿಳಿಸಿವೆ. ಡ್ರಗ್ಸ್ ಮಾರಾಟವನ್ನೇ ವೃತ್ತಿ ಮಾಡಿಕೊಂಡಿದ್ದ ಇಬ್ಬರು ಆರೋಪಿಗಳು, ಥೈಲ್ಯಾಂಡ್ ಮೂಲದ ವಿನ್ಸೆಂಟ್ ಎಂಬಾತ ಆಗಾಗ್ಗೆ ಕಳುಹಿಸಿ ಕೊಡುತ್ತಿದ್ದ ಡ್ರಗ್ಸ್ ಅನ್ನು ಮಾರಾಟ ಮಾಡುತ್ತಿದ್ದರು. ವಿಮಾನದ ಮೂಲಕ ಕಳುಹಿಸಿದ ಡ್ರಗ್ಸ್ ಅನ್ನು ವಿನ್ಸೆಂಟ್ ಸೂಚಿಸಿದ ಜಾಗದಲ್ಲಿ ಅಶ್ವಿನ್ ಹಾಗೂ ಮೊಬಿನಾ ಇಡುತ್ತಿದ್ದರು ಎನ್ನಲಾಗಿದೆ. ಇನ್ನು ಈ ಪ್ರಕರಣದಲ್ಲಿ ಮೊದಲ ಬಾರಿಗೆ ಕರ್ನಾಟಕದಲ್ಲಿ 8,335 ಎಲ್‍ಎಸ್‍ಡಿ ಸ್ಕ್ರಿಪ್ಸ್ ಜಪ್ತಿ ಮಾಡಲಾಗಿದ್ದು, ಒಂದು ಎಲ್‍ಎಸ್‍ಡಿ ಸ್ಕ್ರಿಪ್ಸ್ ಬೆಲೆ 6 ಸಾವಿರ ರೂ. ಎಂದು ಅಂದಾಜಿಸಲಾಗಿದೆ. ದೇವರ ಚಿತ್ರ ಸೇರಿದಂತೆ ವಿವಿಧ ಚಿತ್ರಕಲಾ ರೂಪದಲ್ಲಿ ಎಲ್‍ಎಸ್‍ಡಿ ಸ್ಕ್ರಿಪ್ಸ್ ಮಾರಾಟ ಮಾಡಲಾಗುತ್ತಿತ್ತು. ಜತೆಗೆ ಚರಸ್ 534 ಗ್ರಾಂ, 5 ಕೆ.ಜಿ. ಹೈಡ್ರೋ ಗಾಂಜಾವನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಸಿಸಿಬಿ ಮೂಲಗಳು ತಿಳಿದುಬಂದಿದೆ. ಸದ್ಯ, ಇಬ್ಬರು ಆರೋಪಿಗಳನ್ನು ಬಂಧಿಸಿರುವ ಸಿಸಿಬಿ ಅಧಿಕಾರಿಗಳು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ ಎಂದು ಮೂಲಗಳು ಹೇಳಿವೆ.

ವಾರ್ತಾ ಭಾರತಿ 3 Mar 2026 8:13 pm

Bengaluru | 10 ಕೋಟಿ ರೂ. ಮೌಲ್ಯದ ಮಾದಕ ದ್ರವ್ಯ ವಶಕ್ಕೆ ಪಡೆದ ಸಿಸಿಬಿ: ಇಬ್ಬರ ಬಂಧನ

ಬೆಂಗಳೂರು : ಸಿಸಿಬಿ ನಾರ್ಕೋಟಿಕ್ಸ್ ವಿಭಾಗದ ಅಧಿಕಾರಿಗಳು ಭರ್ಜರಿ ಕಾರ್ಯಾಚರಣೆ ನಡೆಸಿ ಸುಮಾರು 10 ಕೋಟಿ ರೂ. ಮೌಲ್ಯದ ಮಾದಕ ದ್ರವ್ಯವನ್ನು ವಶಪಡಿಸಿಕೊಂಡಿದ್ದು, ಓರ್ವ ಮಹಿಳೆ ಸಹಿತ ಇಬ್ಬರು ಆರೋಪಿಗಳನ್ನು ಬಂಧಿಸಿರುವ ಘಟನೆ ಬಾಗಲೂರಿನಲ್ಲಿ ವರದಿಯಾಗಿದೆ. ಮಾ.2ರಂದು ಬಾಗಲೂರಿನ ಪ್ರೆಸ್ಟೀಜ್ ಫೈನ್ ಬೇಕರಿ ಪಾರ್ಕ್‍ನ ಫ್ಲಾಟ್‍ವೊಂದರಲ್ಲಿ 10 ಕೋಟಿ ರೂ. ಮೌಲ್ಯದ ಡ್ರಗ್ಸ್ (ಎಲ್‍ಎಸ್‍ಡಿ, ಹೈಡ್ರೋ ಗಾಂಜಾ, ಚರಸ್) ಜಪ್ತಿ ಮಾಡಿದ್ದು, ಜೊತೆಗೆ ಕೇರಳ ಮೂಲದ ಅಶ್ವಿನ್(27) ಹಾಗೂ ಮೊಬಿನಾ(25) ಎಂಬ ಇಬ್ಬರನ್ನು ಸಿಸಿಬಿ ಅಧಿಕಾರಿಗಳು ಬಂಧಿಸಿರುವುದಾಗಿ ಮೂಲಗಳು ತಿಳಿಸಿವೆ. ಡ್ರಗ್ಸ್ ಮಾರಾಟವನ್ನೇ ವೃತ್ತಿ ಮಾಡಿಕೊಂಡಿದ್ದ ಇಬ್ಬರು ಆರೋಪಿಗಳು, ಥೈಲ್ಯಾಂಡ್ ಮೂಲದ ವಿನ್ಸೆಂಟ್ ಎಂಬಾತ ಆಗಾಗ್ಗೆ ಕಳುಹಿಸಿ ಕೊಡುತ್ತಿದ್ದ ಡ್ರಗ್ಸ್ ಅನ್ನು ಮಾರಾಟ ಮಾಡುತ್ತಿದ್ದರು. ವಿಮಾನದ ಮೂಲಕ ಕಳುಹಿಸಿದ ಡ್ರಗ್ಸ್ ಅನ್ನು ವಿನ್ಸೆಂಟ್ ಸೂಚಿಸಿದ ಜಾಗದಲ್ಲಿ ಅಶ್ವಿನ್ ಹಾಗೂ ಮೊಬಿನಾ ಇಡುತ್ತಿದ್ದರು ಎನ್ನಲಾಗಿದೆ. ಇನ್ನು ಈ ಪ್ರಕರಣದಲ್ಲಿ ಮೊದಲ ಬಾರಿಗೆ ಕರ್ನಾಟಕದಲ್ಲಿ 8,335 ಎಲ್‍ಎಸ್‍ಡಿ ಸ್ಕ್ರಿಪ್ಸ್ ಜಪ್ತಿ ಮಾಡಲಾಗಿದ್ದು, ಒಂದು ಎಲ್‍ಎಸ್‍ಡಿ ಸ್ಕ್ರಿಪ್ಸ್ ಬೆಲೆ 6 ಸಾವಿರ ರೂ. ಎಂದು ಅಂದಾಜಿಸಲಾಗಿದೆ. ದೇವರ ಚಿತ್ರ ಸೇರಿದಂತೆ ವಿವಿಧ ಚಿತ್ರಕಲಾ ರೂಪದಲ್ಲಿ ಎಲ್‍ಎಸ್‍ಡಿ ಸ್ಕ್ರಿಪ್ಸ್ ಮಾರಾಟ ಮಾಡಲಾಗುತ್ತಿತ್ತು. ಜತೆಗೆ ಚರಸ್ 534 ಗ್ರಾಂ, 5 ಕೆ.ಜಿ. ಹೈಡ್ರೋ ಗಾಂಜಾವನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಸಿಸಿಬಿ ಮೂಲಗಳು ತಿಳಿದುಬಂದಿದೆ. ಸದ್ಯ, ಇಬ್ಬರು ಆರೋಪಿಗಳನ್ನು ಬಂಧಿಸಿರುವ ಸಿಸಿಬಿ ಅಧಿಕಾರಿಗಳು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ ಎಂದು ಮೂಲಗಳು ಹೇಳಿವೆ.

ವಾರ್ತಾ ಭಾರತಿ 3 Mar 2026 8:13 pm

ಕಲಬುರಗಿ | ಕೋವಿಡ್ ನಲ್ಲಿ ಸಿಬ್ಬಂದಿ ನಿಧನ: ಕುಟುಂಬಕ್ಕೆ 30 ಲಕ್ಷ ರೂ. ಪರಿಹಾರದ ಚೆಕ್ ವಿತರಣೆ

ಕಲಬುರಗಿ : ಕೋವಿಡ್-19 ನಿಯಂತ್ರಣ ಕಾರ್ಯಕ್ರಮದಡಿ ಗ್ರಾಮ ಪಂಚಾಯತಿಯಿಂದ ನಿಯೋಜನೆಗೊಂಡು ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಸೋಂಕಿಗೆ ಒಳಗಾಗಿ ಮೃತಪಟ್ಟ ಸರಡಗಿ (ಬಿ) ಗ್ರಾಮ ಪಂಚಾಯತಿಯ ಪಂಪ್ ಆಪರೇಟರ್ ಈರಣ್ಣ ತಂದೆ ಶರಣಪ್ಪ ದಂಡೋತಿ ಅವರ ಕುಟುಂಬಕ್ಕೆ ರೂ.30 ಲಕ್ಷ ಪರಿಹಾರದ ಚೆಕ್ ವಿತರಿಸಲಾಯಿತು. ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಮಂಗಳವಾರ ಪರಿಹಾರದ ಚೆಕ್ ಹಸ್ತಾಂತರಿಸಿದರು. ಈರಣ್ಣ ಅವರಿಗೆ ಕೋವಿಡ್-19 ಸೋಂಕು ತಗುಲಿದ ಹಿನ್ನೆಲೆ 10.05.2021ರಂದು ಗುಲ್ಬರ್ಗ ವೈದ್ಯಕೀಯ ವಿಜ್ಞಾನ ಸಂಸ್ಥೆ (ಜಿಮ್ಸ್) ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಅವರು ಮೃತಪಟ್ಟಿದ್ದರು. ಜಿಲ್ಲಾ ವೈದ್ಯಕೀಯ ಮಂಡಳಿಯು ಕೋವಿಡ್-19ರಿಂದ ಮರಣ ಹೊಂದಿರುವುದಾಗಿ ಧೃಡೀಕರಿಸಿದ ಹಿನ್ನೆಲೆಯಲ್ಲಿ ಜಿಲ್ಲಾ ಪಂಚಾಯತ್ ಆಶ್ವಾಸನೆ ನಿಧಿಯಿಂದ ರೂ.30 ಲಕ್ಷ ಪರಿಹಾರ ಮಂಜೂರಾಗಿದೆ. ಮೃತರ ಪತ್ನಿ ಶಾಂತಾಬಾಯಿ ಅವರು ಸಚಿವರಿಂದ ಚೆಕ್ ಸ್ವೀಕರಿಸಿದರು. ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರ, ಜೆಸ್ಕಾಂ ಅಧ್ಯಕ್ಷ ಪ್ರವೀಣ ಹರವಾಳ, ಜೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಕೃಷ್ಣ ಬಾಜಪೇಯಿ, ಜಿಲ್ಲಾಧಿಕಾರಿ ಫೌಝಿಯಾ ತರನ್ನುಮ್, ಸಿಇಒ ಭಂವರಸಿಂಗ್ ಮೀನಾ, ಲೆಕ್ಕಾಧಿಕಾರಿ ವಿಕಾಸ ಸಜ್ಜನ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

ವಾರ್ತಾ ಭಾರತಿ 3 Mar 2026 8:11 pm

ಕಲಬುರಗಿ | ಕೋವಿಡ್ ನಲ್ಲಿ ಸಿಬ್ಬಂದಿ ನಿಧನ: ಕುಟುಂಬಕ್ಕೆ 30 ಲಕ್ಷ ರೂ. ಪರಿಹಾರದ ಚೆಕ್ ವಿತರಣೆ

ಕಲಬುರಗಿ : ಕೋವಿಡ್-19 ನಿಯಂತ್ರಣ ಕಾರ್ಯಕ್ರಮದಡಿ ಗ್ರಾಮ ಪಂಚಾಯತಿಯಿಂದ ನಿಯೋಜನೆಗೊಂಡು ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಸೋಂಕಿಗೆ ಒಳಗಾಗಿ ಮೃತಪಟ್ಟ ಸರಡಗಿ (ಬಿ) ಗ್ರಾಮ ಪಂಚಾಯತಿಯ ಪಂಪ್ ಆಪರೇಟರ್ ಈರಣ್ಣ ತಂದೆ ಶರಣಪ್ಪ ದಂಡೋತಿ ಅವರ ಕುಟುಂಬಕ್ಕೆ ರೂ.30 ಲಕ್ಷ ಪರಿಹಾರದ ಚೆಕ್ ವಿತರಿಸಲಾಯಿತು. ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಮಂಗಳವಾರ ಪರಿಹಾರದ ಚೆಕ್ ಹಸ್ತಾಂತರಿಸಿದರು. ಈರಣ್ಣ ಅವರಿಗೆ ಕೋವಿಡ್-19 ಸೋಂಕು ತಗುಲಿದ ಹಿನ್ನೆಲೆ 10.05.2021ರಂದು ಗುಲ್ಬರ್ಗ ವೈದ್ಯಕೀಯ ವಿಜ್ಞಾನ ಸಂಸ್ಥೆ (ಜಿಮ್ಸ್) ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಅವರು ಮೃತಪಟ್ಟಿದ್ದರು. ಜಿಲ್ಲಾ ವೈದ್ಯಕೀಯ ಮಂಡಳಿಯು ಕೋವಿಡ್-19ರಿಂದ ಮರಣ ಹೊಂದಿರುವುದಾಗಿ ಧೃಡೀಕರಿಸಿದ ಹಿನ್ನೆಲೆಯಲ್ಲಿ ಜಿಲ್ಲಾ ಪಂಚಾಯತ್ ಆಶ್ವಾಸನೆ ನಿಧಿಯಿಂದ ರೂ.30 ಲಕ್ಷ ಪರಿಹಾರ ಮಂಜೂರಾಗಿದೆ. ಮೃತರ ಪತ್ನಿ ಶಾಂತಾಬಾಯಿ ಅವರು ಸಚಿವರಿಂದ ಚೆಕ್ ಸ್ವೀಕರಿಸಿದರು. ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರ, ಜೆಸ್ಕಾಂ ಅಧ್ಯಕ್ಷ ಪ್ರವೀಣ ಹರವಾಳ, ಜೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಕೃಷ್ಣ ಬಾಜಪೇಯಿ, ಜಿಲ್ಲಾಧಿಕಾರಿ ಫೌಝಿಯಾ ತರನ್ನುಮ್, ಸಿಇಒ ಭಂವರಸಿಂಗ್ ಮೀನಾ, ಲೆಕ್ಕಾಧಿಕಾರಿ ವಿಕಾಸ ಸಜ್ಜನ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

ವಾರ್ತಾ ಭಾರತಿ 3 Mar 2026 8:11 pm

ಕಲಬುರಗಿ | ಶರಣಬಸವೇಶ್ವರ ಕೆರೆ ಟೆಂಡರ್ ಪ್ರಕ್ರಿಯೆ ಪಾರದರ್ಶಕ : ನೋಡಲ್ ಅಧಿಕಾರಿಗಳ ಸ್ಪಷ್ಟನೆ

ಕಲಬುರಗಿ : ನಗರದ ಹೃದಯಭಾಗದಲ್ಲಿರುವ ಶ್ರೀ ಶರಣಬಸವೇಶ್ವರ ಕೆರೆ ಆವರಣ ಹಾಗೂ ಜಗತ್ ವೃತ್ತದಲ್ಲಿನ ಫುಡ್ ಕೋರ್ಟ್, ಶೌಚಾಲಯ, ಮನರಂಜನಾ ಹಾಗೂ ಬೋಟಿಂಗ್ ಚಟುವಟಿಕೆಗಳ ನಿರ್ವಹಣೆಗೆ ಕೆ.ಟಿ.ಟಿ.ಪಿ ನಿಯಮಾವಳಿಯಂತೆ ಪಾರದರ್ಶಕ ಟೆಂಡರ್ ಪ್ರಕ್ರಿಯೆ ನಡೆಸಲಾಗಿದೆ ಎಂದು ಕೆರೆ ನಿರ್ವಹಣಾ ಪ್ರಾಧಿಕಾರದ ನೋಡಲ್ ಅಧಿಕಾರಿ ಸ್ಪಷ್ಟಪಡಿಸಿದ್ದಾರೆ. ಕೊವೀಡ್-19 ಹಿನ್ನೆಲೆ ಕೆರೆ ಹಾಗೂ ಉದ್ಯಾನವನ ಸಂಪೂರ್ಣ ಸ್ಥಗಿತಗೊಂಡು ಹಾಳಾಗಿತ್ತು. ಇದನ್ನು ಪುನರುಜ್ಜೀವಗೊಳಿಸಲು 18.08.2023ರಂದು ಮಹಾನಗರ ಪಾಲಿಕೆಗೆ ಟೆಂಡರ್ ಕರೆಯುವಂತೆ ಪತ್ರ ಬರೆದಿದ್ದು, ಅದರಂತೆ 02.09.2023ರಂದು ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳ ಪೋರ್ಟಲ್ ಮೂಲಕ ಅಲ್ಪಾವಧಿ ಟೆಂಡರ್ ಪ್ರಕಟಣೆ ಹೊರಡಿಸಲಾಗಿದೆ. 05.09.2023ರಂದು ವಿಜಯ ವಾಣಿ, ವಿಜಯ ಕರ್ನಾಟಕ ಹಾಗೂ ಡೆಕ್ಕನ್ ಹೆರಾಲ್ಡ್ ದಿನಪತ್ರಿಕೆಗಳಲ್ಲಿ ಪ್ರಕಟಣೆ ನೀಡಲಾಗಿದೆ. ಮೊದಲ ಟೆಂಡರ್‌ನಲ್ಲಿ ಭಾಗವಹಿಸಿದ ಗುತ್ತಿಗೆದಾರರು ಅನರ್ಹರಾಗಿದ್ದರಿಂದ, 12.10.2023ರಂದು ಕೆ.ಪಿ.ಪಿ.ಪಿ ಮೂಲಕ ಮೂರು ವರ್ಷಗಳ ಅವಧಿಗೆ (ಸೇವೆ ತೃಪ್ತಿದಾಯಕವಾಗಿದ್ದರೆ ಇನ್ನೂ ಎರಡು ವರ್ಷ ವಿಸ್ತರಣೆ ಷರತ್ತು) ಎರಡನೇ ಬಾರಿ ಟೆಂಡರ್ ಕರೆಯಲಾಗಿದೆ. ತಾಂತ್ರಿಕ ಮೌಲ್ಯಮಾಪನದಲ್ಲಿ ಭಾಗವಹಿಸಿದ ಇಬ್ಬರ ಪೈಕಿ ಸಿಡ್ಕೋ ಬಳ್ಳಾರಿ ಸಂಸ್ಥೆ ಮಾತ್ರ ಅರ್ಹತೆ ಪಡೆದಿದ್ದು, ಆರ್ಥಿಕ ಬಿಡ್‌ನಲ್ಲಿಯೂ ಅರ್ಹಗೊಂಡ ಕಾರಣ 19.01.2024ರಂದು ಪ್ರಾದೇಶಿಕ ಆಯುಕ್ತರಿಂದ ಕಾರ್ಯಾದೇಶ ನೀಡಲಾಗಿದೆ. ಸಂಸ್ಥೆಯು ಟೆಂಡರ್ ಷರತ್ತುಗಳಂತೆ ಜಂಟಿ ಉದ್ಯಮಿಗಳೊಂದಿಗೆ ಒಪ್ಪಂದ ಮಾಡಿಕೊಂಡು 19.01.2024ರಿಂದಲೇ ಕೆರೆ ಉದ್ಯಾನವನದಲ್ಲಿರುವ ಮೂರು ಆಹಾರ ಮಳಿಗೆಗಳನ್ನು ಆರಂಭಿಸಿದೆ. ಮಹಾನಗರ ಪಾಲಿಕೆ ಎದುರಿನ ಆಹಾರ ಮಳಿಗೆ ಕಟ್ಟಡ ಸುಸ್ಥಿತಿಯಲ್ಲಿರದ ಕಾರಣ ದುರಸ್ತಿ ವಿಳಂಬವಾಗಿ, ಫೆಬ್ರವರಿ 1ರಿಂದ ಫುಡ್ ಕೋರ್ಟ್ ಪ್ರಾರಂಭಿಸಲಾಗಿದೆ. ಕೆರೆ ಆವರಣದ ಸೌಕರ್ಯಗಳ ನಿರ್ವಹಣೆ ಟೆಂಡರ್ ಷರತ್ತುಗಳಂತೆ ನಡೆಯುತ್ತಿದೆ. ಪ್ರಾಧಿಕಾರದ ವಿರುದ್ಧ ಕೆಲವರು ಮಾಡುತ್ತಿರುವ ಆರೋಪಗಳು ಸತ್ಯಕ್ಕೆ ದೂರವಾಗಿದ್ದು, ತಪ್ಪು ಮಾಹಿತಿ ಹಬ್ಬಿಸಿದವರ ವಿರುದ್ಧ ಕಾನೂನಾತ್ಮಕ ಕ್ರಮ ಕೈಗೊಳ್ಳಲಾಗುವುದು ಎಂದು ನೋಡಲ್ ಅಧಿಕಾರಿಗಳು ಎಚ್ಚರಿಸಿದ್ದಾರೆ.

ವಾರ್ತಾ ಭಾರತಿ 3 Mar 2026 8:08 pm

ಕಲಬುರಗಿ | ಶರಣಬಸವೇಶ್ವರ ಕೆರೆ ಟೆಂಡರ್ ಪ್ರಕ್ರಿಯೆ ಪಾರದರ್ಶಕ : ನೋಡಲ್ ಅಧಿಕಾರಿಗಳ ಸ್ಪಷ್ಟನೆ

ಕಲಬುರಗಿ : ನಗರದ ಹೃದಯಭಾಗದಲ್ಲಿರುವ ಶ್ರೀ ಶರಣಬಸವೇಶ್ವರ ಕೆರೆ ಆವರಣ ಹಾಗೂ ಜಗತ್ ವೃತ್ತದಲ್ಲಿನ ಫುಡ್ ಕೋರ್ಟ್, ಶೌಚಾಲಯ, ಮನರಂಜನಾ ಹಾಗೂ ಬೋಟಿಂಗ್ ಚಟುವಟಿಕೆಗಳ ನಿರ್ವಹಣೆಗೆ ಕೆ.ಟಿ.ಟಿ.ಪಿ ನಿಯಮಾವಳಿಯಂತೆ ಪಾರದರ್ಶಕ ಟೆಂಡರ್ ಪ್ರಕ್ರಿಯೆ ನಡೆಸಲಾಗಿದೆ ಎಂದು ಕೆರೆ ನಿರ್ವಹಣಾ ಪ್ರಾಧಿಕಾರದ ನೋಡಲ್ ಅಧಿಕಾರಿ ಸ್ಪಷ್ಟಪಡಿಸಿದ್ದಾರೆ. ಕೊವೀಡ್-19 ಹಿನ್ನೆಲೆ ಕೆರೆ ಹಾಗೂ ಉದ್ಯಾನವನ ಸಂಪೂರ್ಣ ಸ್ಥಗಿತಗೊಂಡು ಹಾಳಾಗಿತ್ತು. ಇದನ್ನು ಪುನರುಜ್ಜೀವಗೊಳಿಸಲು 18.08.2023ರಂದು ಮಹಾನಗರ ಪಾಲಿಕೆಗೆ ಟೆಂಡರ್ ಕರೆಯುವಂತೆ ಪತ್ರ ಬರೆದಿದ್ದು, ಅದರಂತೆ 02.09.2023ರಂದು ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳ ಪೋರ್ಟಲ್ ಮೂಲಕ ಅಲ್ಪಾವಧಿ ಟೆಂಡರ್ ಪ್ರಕಟಣೆ ಹೊರಡಿಸಲಾಗಿದೆ. 05.09.2023ರಂದು ವಿಜಯ ವಾಣಿ, ವಿಜಯ ಕರ್ನಾಟಕ ಹಾಗೂ ಡೆಕ್ಕನ್ ಹೆರಾಲ್ಡ್ ದಿನಪತ್ರಿಕೆಗಳಲ್ಲಿ ಪ್ರಕಟಣೆ ನೀಡಲಾಗಿದೆ. ಮೊದಲ ಟೆಂಡರ್‌ನಲ್ಲಿ ಭಾಗವಹಿಸಿದ ಗುತ್ತಿಗೆದಾರರು ಅನರ್ಹರಾಗಿದ್ದರಿಂದ, 12.10.2023ರಂದು ಕೆ.ಪಿ.ಪಿ.ಪಿ ಮೂಲಕ ಮೂರು ವರ್ಷಗಳ ಅವಧಿಗೆ (ಸೇವೆ ತೃಪ್ತಿದಾಯಕವಾಗಿದ್ದರೆ ಇನ್ನೂ ಎರಡು ವರ್ಷ ವಿಸ್ತರಣೆ ಷರತ್ತು) ಎರಡನೇ ಬಾರಿ ಟೆಂಡರ್ ಕರೆಯಲಾಗಿದೆ. ತಾಂತ್ರಿಕ ಮೌಲ್ಯಮಾಪನದಲ್ಲಿ ಭಾಗವಹಿಸಿದ ಇಬ್ಬರ ಪೈಕಿ ಸಿಡ್ಕೋ ಬಳ್ಳಾರಿ ಸಂಸ್ಥೆ ಮಾತ್ರ ಅರ್ಹತೆ ಪಡೆದಿದ್ದು, ಆರ್ಥಿಕ ಬಿಡ್‌ನಲ್ಲಿಯೂ ಅರ್ಹಗೊಂಡ ಕಾರಣ 19.01.2024ರಂದು ಪ್ರಾದೇಶಿಕ ಆಯುಕ್ತರಿಂದ ಕಾರ್ಯಾದೇಶ ನೀಡಲಾಗಿದೆ. ಸಂಸ್ಥೆಯು ಟೆಂಡರ್ ಷರತ್ತುಗಳಂತೆ ಜಂಟಿ ಉದ್ಯಮಿಗಳೊಂದಿಗೆ ಒಪ್ಪಂದ ಮಾಡಿಕೊಂಡು 19.01.2024ರಿಂದಲೇ ಕೆರೆ ಉದ್ಯಾನವನದಲ್ಲಿರುವ ಮೂರು ಆಹಾರ ಮಳಿಗೆಗಳನ್ನು ಆರಂಭಿಸಿದೆ. ಮಹಾನಗರ ಪಾಲಿಕೆ ಎದುರಿನ ಆಹಾರ ಮಳಿಗೆ ಕಟ್ಟಡ ಸುಸ್ಥಿತಿಯಲ್ಲಿರದ ಕಾರಣ ದುರಸ್ತಿ ವಿಳಂಬವಾಗಿ, ಫೆಬ್ರವರಿ 1ರಿಂದ ಫುಡ್ ಕೋರ್ಟ್ ಪ್ರಾರಂಭಿಸಲಾಗಿದೆ. ಕೆರೆ ಆವರಣದ ಸೌಕರ್ಯಗಳ ನಿರ್ವಹಣೆ ಟೆಂಡರ್ ಷರತ್ತುಗಳಂತೆ ನಡೆಯುತ್ತಿದೆ. ಪ್ರಾಧಿಕಾರದ ವಿರುದ್ಧ ಕೆಲವರು ಮಾಡುತ್ತಿರುವ ಆರೋಪಗಳು ಸತ್ಯಕ್ಕೆ ದೂರವಾಗಿದ್ದು, ತಪ್ಪು ಮಾಹಿತಿ ಹಬ್ಬಿಸಿದವರ ವಿರುದ್ಧ ಕಾನೂನಾತ್ಮಕ ಕ್ರಮ ಕೈಗೊಳ್ಳಲಾಗುವುದು ಎಂದು ನೋಡಲ್ ಅಧಿಕಾರಿಗಳು ಎಚ್ಚರಿಸಿದ್ದಾರೆ.

ವಾರ್ತಾ ಭಾರತಿ 3 Mar 2026 8:08 pm

ಮಂಗಳೂರು| ಸಾಮಾಜಿಕ ಜಾಲತಾಣದಲ್ಲಿ ಬಾಂಬ್ ಸ್ಪೋಟದ ಸಂದೇಶ ಪ್ರಕರಣ; ಆರೋಪಿ ಶಂಕರ್‌ ಬಂಧನ

ಮಂಗಳೂರು: ಸಾಮಾಜಿಕ ಜಾಲತಾಣದಲ್ಲಿ ಬಾಂಬ್ ಸ್ಪೋಟದ ಕಾಮೆಂಟ್ ಮಾಡಿ ವೈರಲ್ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ ಬಂಧಿತ ಆರೋಪಿಯನ್ನು ಭಟ್ಕಳ ‌ದೇವಿನಗರ ನಿವಾಸಿ ಶಂಕರ್‌ ಮಸ್ತಪ್ಪ ಮೊಗೆರ್ (35)‌ ಎಂದು ಪೊಲೀಸರು ತಿಳಿಸಿದ್ದಾರೆ. ಈತ ʼshankar11916ʼ ಎಂಬ Instagram ಖಾತೆಯಲ್ಲಿ Support maadi bro ullal masjid hatra bomb blast madthini ಎಂದು ಪೋಸ್ಟ್‌ ಮಾಡಿದ್ದು, ಇದು ವೈರಲ್‌ ಆಗಿತ್ತು. ಇದನ್ನು ಸಾಮಾಜಿಕ ಜಾಲತಾಣದ ಮೋನಿಟರಿಂಗ್ ಕರ್ತವ್ಯ ನಿರ್ವಹಿಸುತ್ತಿದ್ದ ಸಂತೋಷ್ ದೊಡ್ಡಮನಿ ಅವರು ಗಮನಿಸಿದ್ದು, ಅವರು ಈ ಬಗ್ಗೆ ಉಳ್ಳಾಲ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.  

ವಾರ್ತಾ ಭಾರತಿ 3 Mar 2026 8:05 pm

ಮಂಗಳೂರು| ಸಾಮಾಜಿಕ ಜಾಲತಾಣದಲ್ಲಿ ಬಾಂಬ್ ಸ್ಪೋಟದ ಸಂದೇಶ ಪ್ರಕರಣ; ಆರೋಪಿ ಶಂಕರ್‌ ಬಂಧನ

ಮಂಗಳೂರು: ಸಾಮಾಜಿಕ ಜಾಲತಾಣದಲ್ಲಿ ಬಾಂಬ್ ಸ್ಪೋಟದ ಕಾಮೆಂಟ್ ಮಾಡಿ ವೈರಲ್ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ ಬಂಧಿತ ಆರೋಪಿಯನ್ನು ಭಟ್ಕಳ ‌ದೇವಿನಗರ ನಿವಾಸಿ ಶಂಕರ್‌ ಮಸ್ತಪ್ಪ ಮೊಗೆರ್ (35)‌ ಎಂದು ಪೊಲೀಸರು ತಿಳಿಸಿದ್ದಾರೆ. ಈತ ʼshankar11916ʼ ಎಂಬ Instagram ಖಾತೆಯಲ್ಲಿ Support maadi bro ullal masjid hatra bomb blast madthini ಎಂದು ಪೋಸ್ಟ್‌ ಮಾಡಿದ್ದು, ಇದು ವೈರಲ್‌ ಆಗಿತ್ತು. ಇದನ್ನು ಸಾಮಾಜಿಕ ಜಾಲತಾಣದ ಮೋನಿಟರಿಂಗ್ ಕರ್ತವ್ಯ ನಿರ್ವಹಿಸುತ್ತಿದ್ದ ಸಂತೋಷ್ ದೊಡ್ಡಮನಿ ಅವರು ಗಮನಿಸಿದ್ದು, ಅವರು ಈ ಬಗ್ಗೆ ಉಳ್ಳಾಲ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.  

ವಾರ್ತಾ ಭಾರತಿ 3 Mar 2026 8:05 pm

‘ಇರಾನ್ ಮಾತುಕತೆಗೆ ಸಿದ್ಧವಾಗಿದೆ, ಆದರೆ ಈಗ ತುಂಬಾ ತಡವಾಗಿದೆ’: ಟ್ರಂಪ್

ವಾಷಿಂಗ್ಟನ್: ಇರಾನ್ ಈಗ ಮಾತುಕತೆಗೆ ಸಿದ್ಧವಾಗಿದೆ. ಆದರೆ ತಾನು ಇರಾನ್ ಕುರಿತು ಕಠಿಣ ನಿಲುವನ್ನು ತಾಳಿದ್ದು, ಈಗ ತುಂಬಾ ತಡವಾಗಿದೆ ಎಂದು ಸ್ಪಷ್ಟಪಡಿಸಿರುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಅಮೆರಿಕ ಮತ್ತು ಇಸ್ರೇಲ್ ಟೆಹ್ರಾನ್ ಮೇಲೆ ಜಂಟಿಯಾಗಿ ಮಿಲಿಟರಿ ದಾಳಿಗಳನ್ನು ಮುಂದುವರಿಸುತ್ತಿರುವ ಸಂದರ್ಭದಲ್ಲಿ ಮಾತನಾಡಿದ ಅವರು, ಇರಾನ್‌ ನ ಮಿಲಿಟರಿ ಸಾಮರ್ಥ್ಯವನ್ನು ಗಂಭೀರವಾಗಿ ಕುಗ್ಗಿಸಲಾಗಿದೆ ಎಂದು ಹೇಳಿದ್ದಾರೆ. “ಇರಾನ್ ಈಗ ಮಾತುಕತೆಗೆ ಸಿದ್ಧವಾಗಿದೆ. ನಾವು ಮೊದಲೇ ಅವಕಾಶ ನೀಡಿದ್ದೇವೆ. ಆದರೆ ಅವರು ಸ್ಪಂದಿಸಲಿಲ್ಲ. ಈಗ ತುಂಬಾ ತಡವಾಗಿದೆ,” ಎಂದು ಟ್ರಂಪ್ ಹೇಳಿದ್ದಾರೆ. ಇರಾನ್‌ ನ ವಾಯು ರಕ್ಷಣಾ ವ್ಯವಸ್ಥೆ, ವಾಯುಪಡೆ, ನೌಕಾಪಡೆಯ ಹಾಗೂ ಪ್ರಮುಖ ನಾಯಕತ್ವವನ್ನು ತೆಗೆದುಹಾಕಲಾಗಿದೆ ಎಂದು ಅವರು ಹೇಳಿದ್ದಾರೆ. ಅಮೆರಿಕ ಇರಾನ್ ವಿರುದ್ಧ ಕೈಗೊಂಡಿರುವ ಮಿಲಿಟರಿ ಕಾರ್ಯಾಚರಣೆಗಳು ಆರಂಭದಲ್ಲಿ ನಿರ್ಧರಿಸಿದ ನಾಲ್ಕು ರಿಂದ ಐದು ವಾರಗಳ ಅವಧಿಯನ್ನು ಮೀರಿ ಮುಂದುವರಿಯುವ ಸಾಮರ್ಥ್ಯ ಹೊಂದಿವೆ ಎಂದು ಟ್ರಂಪ್ ಅವರು ಈ ಮೊದಲು ಸೂಚಿಸಿದ್ದರು.

ವಾರ್ತಾ ಭಾರತಿ 3 Mar 2026 8:00 pm

Chikkamagaluru | ಚಲಿಸುತ್ತಿದ್ದ ಬಸ್‍ನಲ್ಲಿ ಕಾಣಿಸಿಕೊಂಡ ಬೆಂಕಿ; ಪ್ರಯಾಣಿಕರು ಅಪಾಯದಿಂದ ಪಾರು

ಚಿಕ್ಕಮಗಳೂರು : ನಗರದಿಂದ ಬೇಲೂರು ಮಾರ್ಗವಾಗಿ ಚಲಿಸುತ್ತಿದ್ದ ರಾಜ್ಯ ರಸ್ತೆ ಸಾರಿಗೆ ನಿಗಮಕ್ಕೆ ಸೇರಿದ (ಕೆಎಸ್ಸಾರ್ಟಿಸಿ) ಬಸ್‍ನಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡಿದ್ದು, ಚಾಲಕ ಮತ್ತು ನಿರ್ವಹಕನ ಸಮಯಪ್ರಜ್ಞೆಯಿಂದ ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ. ಕೆಎಸ್ಸಾರ್ಟಿಸಿ ಬಸ್ ನಗರದ ಬಸ್ ನಿಲ್ದಾಣದಿಂದ ಬೇಲೂರು ಮಾರ್ಗವಾಗಿ ಚಲಿಸುತ್ತಿದ್ದ ವೇಳೆ ನಗರದ ಜೂನಿಯರ್ ಕಾಲೇಜು ಸಮೀಪ ಬಸ್‍ನಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿದೆ. ಇದನ್ನು ಗಮನಿಸಿದ ಚಾಲಕ ಮತ್ತು ನಿವಾರ್ಹಕ ಬಸ್‍ನಲ್ಲಿದ್ದ ಪ್ರಯಾಣಿಕರನ್ನು ಕೆಳಗಿಳಿಸಿದ್ದಾರೆ. ಕೂಡಲೇ ಅಗ್ನಿಶಾಮಕ ದಳದ ಸಿಬ್ಬಂದಿಗಳು ಘಟನಾ ಸ್ಥಳಕ್ಕೆ ಆಗಮಿಸಿ ಬಸ್ಸಿಗೆ ವ್ಯಾಪಿಸಿದ್ದ ಬೆಂಕಿಯನ್ನು ನಂದಿಸಿದ್ದಾರೆ. ಬಸ್‍ನಲ್ಲಿ ಸಾಕಷ್ಟು ಪ್ರಯಾಣಿಕರಿದ್ದು, ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಬಸ್‍ನಿಂದ ಡಿಸೇಲ್ ಸೋರಿಕೆಯಾಗಿದ್ದರಿಂದ ಬಸ್‍ಗೆ ಬೆಂಕಿ ತಗುಲಿದೆ ಎಂದು ಹೇಳಲಾಗುತ್ತಿದೆ.

ವಾರ್ತಾ ಭಾರತಿ 3 Mar 2026 7:51 pm

ಫ್ಯಾಷನ್, ಟ್ರಾವೆಲ್‌ನಂತೆ ಕೃಷಿ ಇನ್‌ಫ್ಲುಯೆನ್ಸರ್‌ಗಳು ಯಾಕಿಲ್ಲಾ? ಚರ್ಚೆ ಹುಟ್ಟುಹಾಕಿದ ಶ್ರೀಪಡ್ರೆ ಪೋಸ್ಟ್

ಬೆಂಗಳೂರು: ಪ್ರಚಲಿತದಲ್ಲಿರುವ ಹಾಗೂ ಹೆಚ್ಚು ಪರಿಣಾಮಕಾರಿಯಾದ ಸಾಮಾಜಿಕ ಜಾಲತಾಣದಲ್ಲಿ 'ಸೋಷಿಯಲ್ ಮೀಡಿಯಾ ಇನ್ಫ್ಲುಯೆನ್ಸರ್', 'ಟ್ರಾವೆಲ್ ಇನ್ಫ್ಲುಯೆನ್ಸರ್' ಸೇರಿ ಅನೇಕರನ್ನು ನೋಡುತ್ತೇವೆ. ಅನೇಕ ವಿಷಯಗಳ ಮೇಲೂ ವಿಡಿಯೋ, ರೀಲ್ಸ್ ಮಾಡಿ ವಿಷಯ ಪ್ರಸಾರ ಮಾಡುವ, ಮಾಹಿತಿ ನೀಡುವ ಇನ್ಫ್ಲುಯೆನ್ಸರ್‌ಗಳು ಇದ್ದಾರೆ. ಆದರೆ ನಿತ್ಯ ಅಗತ್ಯವಾಗಿರುವ ಆಹಾರದ ಸುರಕ್ಷತೆ, ಗುಣಮಟ್ಟದ ಆಹಾರ, ಅದನ್ನು ಬೆಳೆಯುವ ಕೃಷಿ ಬಗ್ಗೆ ಅದೆಷ್ಟು ಜನರು

ಒನ್ ಇ೦ಡಿಯ 3 Mar 2026 7:50 pm

ಕುಂದಾಪುರ| ವಾರಾಹಿ ಯೋಜನೆಯ ತ್ವರಿತ ಅನುಷ್ಠಾನಕ್ಕೆ ಒತ್ತಾಯಿಸಿ ಪಾದಯಾತ್ರೆ ಪ್ರಾರಂಭ

ಮಾಜಿ ಶಾಸಕ ಗೋಪಾಲ ಪೂಜಾರಿ ನೇತೃತ್ವ

ವಾರ್ತಾ ಭಾರತಿ 3 Mar 2026 7:48 pm

ಕೆಲಸ ಮಾಡದ ಅಧಿಕಾರಿಗಳಿಗೆ ತರಾಟೆ, ಜನಸೇವೆ ಮಾಡಿದವರಿಗೆ ಶಹಬ್ಬಾಸ್ ಗಿರಿ: ಗಮನ ಸೆಳೆದ ಕೃಷ್ಣ ಬೈರೇಗೌಡ ನಡೆ

ಭೂ ಸುರಕ್ಷಾ ಅಭಿಯಾನದ ಅಡಿಯಲ್ಲಿ ಈವರೆಗೆ 71.19 ಕೋಟಿ ಪುಟಗಳನ್ನು ಸ್ಕ್ಯಾನ್ ಮಾಡಿ ಡಿಜಿಟಲೀಕರಿಸಲಾಗಿದೆ. ಇನ್ನೂ 30 ಕೋಟಿ ಪುಟಗಳ ಸ್ಕ್ಯಾನ್ ಮಾಡುವ ಕೆಲಸ ಬಾಕಿ ಇದ್ದು, ಪ್ರತಿ ದಿನ ಸುಮಾರು 17,500 ಲಕ್ಷ ಪುಟ ಸ್ಕ್ಯಾನ್ ಮಾಡಲಾಗುತ್ತಿದೆ. ಈ ವರ್ಷದ ಏಪ್ರಿಲ್ ಕೊನೆಯ ಒಳಗೆ ಈ ಕೆಲಸವನ್ನು ಮುಗಿಸಬೇಕು. ಈಗಾಗಲೇ ಜನ ಸಾಮಾನ್ಯರಿಗೆ 52,70 ಲಕ್ಷ ಪುಟಗಳನ್ನು ಆನ್ಲೈನ್ ಮೂಲಕ ವಿತರಿಸಲಾಗಿದ್ದು, ಶೀಘ್ರದಲ್ಲಿ ಎಲ್ಲಾ ಭೂ ದಾಖಲೆಗಳೂ ಆನ್ಲೈನ್ ಮೂಲಕ ವಿತರಿಸುವಂತಾಗಬೇಕು ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಅಧಿಕಾರಿಗಳಿಗೆ ತಾಕೀತು ಮಾಡಿದರು.

ವಿಜಯ ಕರ್ನಾಟಕ 3 Mar 2026 7:35 pm

ಇರಾನ್‌ ಉದ್ವಿಗ್ನ: ಹಾರ್ಮುಜ್ ಜಲಸಂಧಿಯಲ್ಲಿ ಸಿಲುಕಿದ 27 ಭಾರತೀಯ ಹಡಗು, ಅಪಾಯದಲ್ಲಿ ₹10,000 ಕೋಟಿ ಮೌಲ್ಯದ ಸರಕು

ಮಧ್ಯಪ್ರಾಚ್ಯದ ಯುದ್ಧದ ವಾತಾವರಣದಿಂದಾಗಿ ಹಾರ್ಮುಜ್ ಜಲಸಂಧಿ ಬಂದ್ ಆಗಿರುವುದು ಭಾರತೀಯ ಸರಕು ಸಾಗಣೆ ವಲಯಕ್ಕೆ ಆರ್ಥಿಕ ಅಪಾಯ ತಂದೊಡ್ಡಿದೆ. 27 ಭಾರತೀಯ ಹಡಗುಗಳು ಆ ಪ್ರದೇಶದಲ್ಲಿ ಸಿಲುಕಿಕೊಂಡಿದ್ದು, ₹10,000 ಕೋಟಿಗೂ ಅಧಿಕ ಮೌಲ್ಯದ ಸರಕು ರಿಸ್ಕ್‌ನಲ್ಲಿದೆ.

ವಿಜಯ ಕರ್ನಾಟಕ 3 Mar 2026 7:19 pm

ಇರಾನ್ ವಿರುದ್ಧದ ಯುದ್ಧಕ್ಕೆ ಅಮೆರಿಕ ಮಾಡಿದ ಖರ್ಚು ಎಷ್ಟು? ಇರಾನ್ ಯುದ್ಧದಲ್ಲಿ ಯಾವ ಶಸ್ತ್ರಾಸ್ತ್ರ ಬಳಸಲಾಗುತ್ತಿದೆ?; ಇಲ್ಲಿದೆ ವಿವರ..

ಈ ಶನಿವಾರ ಅಮೆರಿಕ-ಇಸ್ರೇಲ್ ಜಂಟಿ ವೈಮಾನಿಕ ದಾಳಿಗಳು ಇರಾನಿನ ಗುರಿಗಳ ಮೇಲೆ ದಾಳಿ ಮಾಡಿದ್ದರಿಂದ ಭೌಗೋಳಿಕ ರಾಜಕೀಯ ಚಿತ್ರಣ ನಾಟಕೀಯವಾಗಿ ಬದಲಾಯಿತು. ಈ ಕಾರ್ಯಾಚರಣೆಗಳು ನಾಲ್ಕರಿಂದ ಐದು ವಾರಗಳವರೆಗೆ ಇರಬಹುದು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದು, ಸಂಘರ್ಷದಲ್ಲಿ ತೊಡಗಿರುವ ಅಮೆರಿಕದ ಸಾಮರ್ಥ್ಯ ಮತ್ತು ಸಂಭಾವ್ಯ ಪರಿಣಾಮಗಳ ವಿವರ ಇಲ್ಲಿದೆ. ಆಪರೇಷನ್ ಎಪಿಕ್ ಫ್ಯೂರಿ ಎಂದರೇನು? ಫೆಬ್ರವರಿ 28 ರಂದು ಟ್ರೂತ್ ಸೋಶಿಯಲ್‌ನಲ್ಲಿ ಹಂಚಿಕೊಂಡ ಎಂಟು ನಿಮಿಷಗಳ ವಿಡಿಯೊದಲ್ಲಿ ಅಧ್ಯಕ್ಷ ಟ್ರಂಪ್ , ಇರಾನಿನ ಗಡಿಗಳಲ್ಲಿ ಪ್ರಮುಖ ಯುದ್ಧ ಕಾರ್ಯಾಚರಣೆಯಲ್ಲಿ ಅಮೆರಿಕದ ಪಾಲ್ಗೊಳ್ಳುವಿಕೆಯನ್ನು ದೃಢಪಡಿಸಿದರು. ನಂತರ ಪೆಂಟಗನ್ ಈ ಕಾರ್ಯಾಚರಣೆಯನ್ನು ʼಆಪರೇಷನ್ ಎಪಿಕ್ ಫ್ಯೂರಿʼ ಎಂದು ಗುರುತಿಸಿತು. ಅಧ್ಯಕ್ಷರ ಪ್ರಕಾರ, ಪ್ರಾಥಮಿಕ ಕಾರ್ಯಾಚರಣೆಯ ಉದ್ದೇಶವೆಂದರೆ ಅವರ ಮಿಲಿಟರಿ ಮೂಲಸೌಕರ್ಯವನ್ನು ವ್ಯವಸ್ಥಿತವಾಗಿ ನಾಶಪಡಿಸುವ ಮೂಲಕ ಇರಾನಿನ ಪರಮಾಣು ಸಾಮರ್ಥ್ಯಗಳನ್ನು ಸಂಪೂರ್ಣವಾಗಿ ತಡೆಗಟ್ಟುವುದು. ಶನಿವಾರ ಕಾರ್ಯಾಚರಣೆಗಳು ಪ್ರಾರಂಭವಾದಾಗಿನಿಂದ ಇರಾನ್‌ನಲ್ಲಿ 1,250 ಕ್ಕೂ ಹೆಚ್ಚು ಗುರಿಗಳನ್ನು ದಾಳಿ ಮಾಡಲಾಗಿದೆ ಎಂದು ಯುಎಸ್ ಮಿಲಿಟರಿ ಹೇಳಿದೆ. ಪ್ರತ್ಯೇಕ ಹೇಳಿಕೆಯೊಂದರಲ್ಲಿ ಯುಎಸ್ ಮಿಲಿಟರಿಯ ಸೆಂಟ್ರಲ್ ಕಮಾಂಡ್ (CENTCOM) 11 ಇರಾನಿನ ಹಡಗುಗಳನ್ನು ನಾಶಪಡಿಸಿರುವುದಾಗಿ ಹೇಳಿದೆ. ಈ ಕಾರ್ಯಾಚರಣೆಯಲ್ಲಿ ವೈಮಾನಿಕ ದಾಳಿ , ಸಮುದ್ರದಿಂದ ಉಡಾವಣೆ ಮಾಡುವ ಕ್ರೂಸ್ ಕ್ಷಿಪಣಿಗಳು ಮತ್ತು ಪರಮಾಣು ಸಂಬಂಧಿತ ಸೌಲಭ್ಯಗಳ ಮೇಲೆ ಸಂಘಟಿತ ದಾಳಿಗಳು ಹಾಗೂ ಇರಾನ್‌ನ ರಕ್ಷಣಾ ಸ್ಥಾಪನೆಗೆ ಸಂಬಂಧಿಸಿದ ಹಿರಿಯ ವ್ಯಕ್ತಿಗಳ ಮೇಲೆ ದಾಳಿಗಳು ನಡೆದಿವೆ ಎಂದು ವರದಿಯಾಗಿದೆ. ಅಮೆರಿಕ-ಇಸ್ರೇಲಿ ಜಂಟಿ ಕಾರ್ಯಾಚರಣೆಯ ಆರಂಭಿಕ ಅಲೆಯು 1989 ರಿಂದ ಅಧಿಕಾರದಲ್ಲಿದ್ದ ಇರಾನ್‌ನ ಪರಮೋಚ್ಚ ನಾಯಕ ಆಯತುಲ್ಲಾ ಅಲಿ ಖಾಮಿನೈ ಅವರ ಹತ್ಯೆಯನ್ನು ದೃಢಪಡಿಸಿತು. ಸೋಮವಾರ, ಟ್ರಂಪ್ ಈ ಯುದ್ಧವನ್ನು ಅಗತ್ಯವಿರುವಷ್ಟು ಕಾಲ ಮುಂದುವರಿಸುವುದಾಗಿ ಹೇಳಿದ್ದು ಇದು ಹಲವಾರು ವಾರಗಳವರೆಗೆ ವಿಸ್ತರಿಸಬಹುದು ಎಂದು ಹೇಳಿದ್ದಾರೆ. ಸೋಮವಾರದ ಹೊತ್ತಿಗೆ, ಇರಾನ್‌ನ 130 ಸ್ಥಳಗಳಲ್ಲಿ 555 ಜನರು ಸಾವಿಗೀಡಾಗಿದ್ದಾರೆ ಎಂದು ಇರಾನಿನ ರೆಡ್ ಕ್ರೆಸೆಂಟ್ ಹೇಳಿದೆ. 2023 ರಿಂದ ಅಮೆರಿಕವು ಇಸ್ರೇಲ್ ಮತ್ತು ಮಧ್ಯಪ್ರಾಚ್ಯದಲ್ಲಿ ಎಷ್ಟು ಖರ್ಚು ಮಾಡಿದೆ? ಬ್ರೌನ್ ವಿಶ್ವವಿದ್ಯಾಲಯದ 2025 ರ ಯುದ್ಧ ವೆಚ್ಚಗಳ ವರದಿಯ ಪ್ರಕಾರ, 2023 ಅಕ್ಟೋಬರ್ 7 ರಿಂದ ಅಮೆರಿಕವು ಇಸ್ರೇಲ್‌ಗೆ ಸುಮಾರು 21.7 ಬಿಲಿಯನ್ ಡಾಲರ್ ಮಿಲಿಟರಿ ಸಹಾಯವನ್ನು ನೀಡಿದೆ. ಇದರ ಜೊತೆಗೆ ಅಮೆರಿಕದ ತೆರಿಗೆದಾರರು ಯೆಮೆನ್, ಇರಾನ್ ಮತ್ತು ವಿಶಾಲ ಮಧ್ಯಪ್ರಾಚ್ಯದಲ್ಲಿ ಇಸ್ರೇಲ್ ಅನ್ನು ಬೆಂಬಲಿಸುವ ಅಮೆರಿಕದ ಕಾರ್ಯಾಚರಣೆಗಳಿಗೆ 9.65 ಬಿಲಿಯನ್ ಡಾಲರ್ ನಿಂದ 12.07 ಬಿಲಿಯನ್ ಡಾಲರ್ ಹಣವನ್ನು ನೀಡಿದ್ದಾರೆ. ಇದು ಸಂಘರ್ಷಕ್ಕೆ ಸಂಬಂಧಿಸಿದ ಒಟ್ಟು ಅಮೆರಿಕದ ವೆಚ್ಚ 31.35 ಬಿಲಿಯನ್ ಡಾಲರ್ ಮತ್ತು 33.77 ಬಿಲಿಯನ್ ಡಾಲರ್ ನಡುವೆ ಆಗಿರಬಹುದು ಎಂದು ಅಂದಾಜಿಸಲಾಗಿದೆ .ಈ ಬಗ್ಗೆ ಲೆಕ್ಕಾಚಾರ ಮಾಡಲಾಗುತ್ತಿದೆ. ಇರಾನ್ ಯುದ್ಧದಲ್ಲಿ ಯಾವ ಶಸ್ತ್ರಾಸ್ತ್ರ ಬಳಸಲಾಗುತ್ತಿದೆ? CENTCOM ಪ್ರಕಾರ, ಆಪರೇಷನ್ ಎಪಿಕ್ ಫ್ಯೂರಿ ವಾಯು, ಸಮುದ್ರ, ಭೂಮಿ ಮತ್ತು ಕ್ಷಿಪಣಿ ರಕ್ಷಣಾ ಪಡೆಗಳಲ್ಲಿ 20 ಕ್ಕೂ ಹೆಚ್ಚು ಶಸ್ತ್ರಾಸ್ತ್ರ ವ್ಯವಸ್ಥೆಗಳನ್ನು ಒಳಗೊಂಡಿದೆ. ಇರಾನ್‌ನೊಳಗಿನ 1,000 ಕ್ಕೂ ಹೆಚ್ಚು ಗುರಿಗಳನ್ನು ದಾಳಿ ಮಾಡಲಾಗಿದೆ ಎಂದು CENTCOM ಹೇಳುತ್ತದೆ. ಇವುಗಳಿಗೆ ವಾಯು, ಸಮುದ್ರ ಮತ್ತು ಭೂಪ್ರದೇಶದಾದ್ಯಂತ 20 ಕ್ಕೂ ಹೆಚ್ಚು ವಿಭಿನ್ನ ವ್ಯವಸ್ಥೆಗಳು ಹಾಗೂ ಕ್ಷಿಪಣಿ ರಕ್ಷಣಾ ಪಡೆಗಳನ್ನು ಬಳಸಲಾಗಿದೆ. ಯುಎಸ್ ಸೆಂಟ್ರಲ್ ಕಮಾಂಡ್ (CENTCOM) ನ ಮಾಜಿ ಕಾರ್ಯಾಚರಣೆ ನಿರ್ದೇಶಕ ಕೆವಿನ್ ಡೊನೆಗನ್, ಪ್ರಸ್ತುತ ಯುಎಸ್-ಇಸ್ರೇಲಿ ಕಾರ್ಯಾಚರಣೆಯ ಪ್ರಾಥಮಿಕ ಕಾರ್ಯತಂತ್ರದ ಗುರಿಗಳ ಕುರಿತು ʼಅಲ್ ಜಝೀರಾʼ ಸುದ್ದಿಸಂಸ್ಥೆ ಜೊತೆ ಮಾತನಾಡಿದ್ದಾರೆ. ಈ ಕಾರ್ಯಾಚರಣೆಯು ಇರಾನ್‌ನ ಶಕ್ತಿಯನ್ನು ಪ್ರಕ್ಷೇಪಿಸುವ ಮತ್ತು ಪ್ರಾದೇಶಿಕ ಸ್ಥಿರತೆಯನ್ನು ಅಡ್ಡಿಪಡಿಸುವ ಸಾಮರ್ಥ್ಯವನ್ನು ತಟಸ್ಥಗೊಳಿಸುವ ತ್ವರಿತ, ಹೆಚ್ಚಿನ ತೀವ್ರತೆಯ ಪ್ರಯತ್ನದ ಮೇಲೆ ಕೇಂದ್ರೀಕೃತವಾಗಿದೆ ಎಂದು ಅವರು ಹೇಳಿದ್ದಾರೆ. ► ಶಸ್ತ್ರಾಸ್ತ್ರಗಳು B-1 ಬಾಂಬರ್‌ಗಳು B-2 ಸ್ಟೆಲ್ತ್ ಬಾಂಬರ್‌ಗಳು: ಪ್ರಮುಖ ಪರಮಾಣು ಮತ್ತು ಮಿಲಿಟರಿ ಮೂಲಸೌಕರ್ಯವನ್ನು ದಾಳಿ ಮಾಡಲು ಬಳಸಲಾಗುತ್ತದೆ. F-35 ಲೈಟ್ನಿಂಗ್ II & F-22 ರಾಪ್ಟರ್: ಸುಧಾರಿತ ಸ್ಟೆಲ್ತ್ ಫೈಟರ್‌ಗಳು F-15 ಫೈಟರ್ ಜೆಟ್‌ಗಳು: ವ್ಯಾಪಕವಾಗಿ ಬಳಸಲಾಗಿದ್ದು ಮಾರ್ಚ್ 1 ರಂದು ಕುವೈತ್‌ನಲ್ಲಿ ನಡೆದ ಘಟನೆಯಲ್ಲಿ ಮೂರು ಕಳೆದುಹೋಗಿವೆ F-16 ಫೈಟಿಂಗ್ ಫಾಲ್ಕನ್, F/A-18 ಸೂಪರ್ ಹಾರ್ನೆಟ್ ಮತ್ತು A-10 ಅಟ್ಯಾಕರ್ ಜೆಟ್‌ಗಳು: ವೈಮಾನಿಕ ದಾಳಿಗೆ ಬಳಸಲಾಗಿದೆ EA-18G ಗ್ರೋಲರ್: ಎಲೆಕ್ಟ್ರಾನಿಕ್ ದಾಳಿ ಮತ್ತು ಶತ್ರು ವಾಯು ರಕ್ಷಣೆಯನ್ನು ನಿಗ್ರಹಿಸಲು ಬಳಸಲಾಗುತ್ತದೆ ವಾಯುಗಾಮಿ ಮುಂಚಿನ ಎಚ್ಚರಿಕೆ ಮತ್ತು ನಿಯಂತ್ರಣ ವಿಮಾನ (AWACS): ಆಜ್ಞೆ, ನಿಯಂತ್ರಣ ಮತ್ತು ಯುದ್ಧ-ಸ್ಥಳ ನಿರ್ವಹಣೆಯನ್ನು ಒದಗಿಸುತ್ತದೆ ► ಡ್ರೋನ್‌ಗಳು ಮತ್ತು ದೀರ್ಘ-ಶ್ರೇಣಿಯ ದಾಳಿ ವ್ಯವಸ್ಥೆಗಳು ಮಾನವರಹಿತ ವ್ಯವಸ್ಥೆಗಳು ಮತ್ತು ರಾಕೆಟ್ ಫಿರಂಗಿಗಳು ಸಹ ಈ ಕಾರ್ಯಾಚರಣೆಯ ಭಾಗವಾಗಿದೆ. LUCAS ಡ್ರೋನ್‌ಗಳು: ಈ ಕಾರ್ಯಾಚರಣೆಯು ಕಡಿಮೆ-ವೆಚ್ಚದ ಮಾನವರಹಿತ ಯುದ್ಧ ದಾಳಿ ವ್ಯವಸ್ಥೆ ಏಕಮುಖ ಡ್ರೋನ್‌ಗಳ ಮೊದಲ ಯುದ್ಧ ಬಳಕೆಯನ್ನು ಗುರುತಿಸುತ್ತದೆ. MQ-9 ರೀಪರ್ ಡ್ರೋನ್‌ಗಳು: ಕಣ್ಗಾವಲು ಮತ್ತು ನಿಖರವಾದ ದಾಳಿ ಪಾತ್ರಗಳಲ್ಲಿ ಸಕ್ರಿಯವಾಗಿದೆ M-142 ಹೈ ಮೊಬಿಲಿಟಿ ಆರ್ಟಿಲರಿ ರಾಕೆಟ್ ಸಿಸ್ಟಮ್ಸ್ (HIMARS): ನೆಲ-ಆಧಾರಿತ ರಾಕೆಟ್ ಫಿರಂಗಿ ಟೊಮಾಹಾಕ್ ಕ್ರೂಸ್ ಕ್ಷಿಪಣಿಗಳು: ನೌಕೆಯಿಂದ ಉಡಾವಣೆ ಮಾಡಲಾಗಿದೆ. ► ಕ್ಷಿಪಣಿ ರಕ್ಷಣಾ ವ್ಯವಸ್ಥೆಗಳು ಪೇಟ್ರಿಯಾಟ್ ಇಂಟರ್‌ಸೆಪ್ಟರ್ ಕ್ಷಿಪಣಿ ವ್ಯವಸ್ಥೆಗಳು ಮತ್ತು THAAD (ಟರ್ಮಿನಲ್ ಹೈ ಆಲ್ಟಿಟ್ಯೂಡ್ ಏರಿಯಾ ಡಿಫೆನ್ಸ್): ಇರಾನಿನ ಬ್ಯಾಲಿಸ್ಟಿಕ್ ಕ್ಷಿಪಣಿಗಳು ಮತ್ತು ಡ್ರೋನ್‌ಗಳನ್ನು ಪ್ರತಿಬಂಧಿಸಲು ಬಳಸಲಾಗುತ್ತದೆ ► ನೌಕಾ ಶಕ್ತಿ ಯುಎಸ್ಎಸ್ ಜೆರಾಲ್ಡ್ ಆರ್ ಫೋರ್ಡ್ ಮತ್ತು ಯುಎಸ್ಎಸ್ ಅಬ್ರಹಾಂ ಲಿಂಕನ್ ನೇತೃತ್ವದ ಎರಡು ವಾಹಕ ದಾಳಿ ಗುಂಪುಗಳು: ಬೃಹತ್ ಸಮುದ್ರ ಆಧಾರಿತ ಶಕ್ತಿಯನ್ನು ಒದಗಿಸುತ್ತವೆ ಪಿ -8 ಪೋಸಿಡಾನ್: ಕಡಲ ಗಸ್ತು ಮತ್ತು ವಿಚಕ್ಷಣ ನಡೆಸುವುದು ಸರಕು ಮತ್ತು ಟ್ಯಾಂಕರ್‌ಗಳು: ಸಿ -17 ಗ್ಲೋಬ್‌ಮಾಸ್ಟರ್, ಸಿ -130 ಹರ್ಕ್ಯುಲಸ್, ಮತ್ತು ವಿವಿಧ ವೈಮಾನಿಕ ಇಂಧನ ತುಂಬುವ ಟ್ಯಾಂಕರ್‌ಗಳು ಲಾಜಿಸ್ಟಿಕ್ಸ್ ಹರಿವನ್ನು ನಿರ್ವಹಿಸುತ್ತಿವೆ. ► ಇರಾನ್ ಯುದ್ಧಕ್ಕೆ ಯುಎಸ್‌ ಎಷ್ಟು ಖರ್ಚು ಮಾಡಿದೆ? ನಡೆಯುತ್ತಿರುವ ಮಿಲಿಟರಿ ಕಾರ್ಯಾಚರಣೆಯ ಒಟ್ಟು ವೆಚ್ಚವನ್ನು ಊಹಿಸುವುದು ಕಷ್ಟ. ಪೆಂಟಗನ್ ಆ ಮಾಹಿತಿಯನ್ನು ಪ್ರಕಟಿಸಿಲ್ಲ, ಆದ್ದರಿಂದ ನಾವು ಅದನ್ನು ಅಂದಾಜಿಸಬಹುದು ಅಷ್ಟೇ. ನಾವು ವೈಯಕ್ತಿಕ ಶಸ್ತ್ರಾಸ್ತ್ರಗಳ ವೆಚ್ಚವನ್ನು ಊಹಿಸಬಹುದು, ಕಾರ್ಯಾಚರಣೆಗಳ ವೆಚ್ಚ, ನೌಕಾ ಕಾರ್ಯಾಚರಣೆಗಳ ಬಗ್ಗೆ ನಾವು ಊಹಿಸಬಹುದು ಎಂದು ಸ್ಟಿಮ್ಸನ್ ಸೆಂಟರ್‌ನ ಹಿರಿಯ ಸಹೋದ್ಯೋಗಿ ಕ್ರಿಸ್ಟೋಫರ್ ಪ್ರೆಬಲ್ ಅಲ್ ಜಜೀರಾಗೆ ತಿಳಿಸಿದ್ದಾರೆ. ಆಪರೇಷನ್ ಎಪಿಕ್ ಫ್ಯೂರಿಯ ಮೊದಲ 24 ಗಂಟೆಗಳಲ್ಲಿ ಅಮೆರಿಕ ಸುಮಾರು 779 ಮಿಲಿಯನ್ ಡಾಲರ್ ಖರ್ಚು ಮಾಡಿರಬಹುದು ಎಂದು ʼಅನಡೋಲೋʼ ಸುದ್ದಿ ಸಂಸ್ಥೆಯ ವರದಿಗಳು ಅಂದಾಜಿಸಿವೆ. ವಿಮಾನಗಳನ್ನು ಮರುಸ್ಥಾಪಿಸುವುದು, ಒಂದು ಡಝನ್‌ಗಿಂತಲೂ ಹೆಚ್ಚು ನೌಕಾ ಹಡಗುಗಳನ್ನು ನಿಯೋಜಿಸುವುದು ಮತ್ತು ಪ್ರಾದೇಶಿಕ ಸ್ವತ್ತುಗಳನ್ನು ಸಜ್ಜುಗೊಳಿಸುವುದು ಸೇರಿದಂತೆ ದಾಳಿ ಪೂರ್ವ ಮಿಲಿಟರಿ ನಿರ್ಮಾಣಕ್ಕೆ ಹೆಚ್ಚುವರಿಯಾಗಿ 630 ಮಿಲಿಯನ್ ಡಾಲರ್ ವೆಚ್ಚವಾಗಿದೆ ಎಂದು ಅಂದಾಜಿಸಲಾಗಿದೆ. ಸೆಂಟರ್ ಫಾರ್ ನ್ಯೂ ಅಮೇರಿಕನ್ ಸೆಕ್ಯುರಿಟಿ ಪ್ರಕಾರ, ಯುಎಸ್‌ಎಸ್ ಜೆರಾಲ್ಡ್ ಆರ್ ಫೋರ್ಡ್‌ನಂತಹ ವಾಹಕ ದಾಳಿ ಗುಂಪನ್ನು ನಿರ್ವಹಿಸಲು ದಿನಕ್ಕೆ ಸುಮಾರು 6.5 ಮಿಲಿಯನ್ ಡಾಲರ್ ವೆಚ್ಚವಾಗುತ್ತದೆ. ಇಲ್ಲಿ ಉಪಕರಣಗಳ ನಷ್ಟಕ್ಕೆ ಸಂಬಂಧಿಸಿದ ವೆಚ್ಚಗಳೂ ಇವೆ. ಕುವೈತ್‌ನಲ್ಲಿ ಕನಿಷ್ಠ ಮೂರು ಯುಎಸ್ ಫೈಟರ್ ಜೆಟ್‌ಗಳು ಪತನಗೊಂಡಿದೆ. ಹಿರಿಯ ವಿದೇಶಾಂಗ ನೀತಿ ವಿಶ್ಲೇಷಕ ಕ್ರಿಸ್ಟೋಫರ್ ಪ್ರೆಬಲ್, ಯುನೈಟೆಡ್ ಸ್ಟೇಟ್ಸ್ ಸಂಘರ್ಷವನ್ನು ಆರ್ಥಿಕವಾಗಿ ತಡೆದುಕೊಳ್ಳಬಹುದಾದರೂ, ನಿಜವಾದ ಅಡಚಣೆಯು ಫೆಡರಲ್ ಬಜೆಟ್‌ಗಿಂತ ಭೌತಿಕ ಯುದ್ಧಸಾಮಗ್ರಿಗಳು ಮತ್ತು ರಕ್ಷಣಾ ದಾಸ್ತಾನುಗಳಲ್ಲಿದೆ ಎಂದಿದ್ದಾರೆ. ಪ್ರೆಬಲ್ ಪ್ರಕಾರ, ಯುಎಸ್ ರಕ್ಷಣಾ ಬಜೆಟ್‌ನ ಸಂಪೂರ್ಣ ಪ್ರಮಾಣ ಪ್ರಸ್ತುತ 1 ಟ್ರಿಲಿಯನ್ ಡಾಲರ್ ಆಗಿದ್ದು 1.5 ಟ್ರಿಲಿಯನ್ ಡಾಲರ್ ತಲುಪುವ ಪ್ರಸ್ತಾಪಗಳಿವೆ. ಅಂತಹ ಖರ್ಚು ಮಟ್ಟಗಳು ವಿವಾದಾತ್ಮಕವಾಗಿದ್ದರೂ ಸಹ, ಹಣಕಾಸಿನ ಸುಸ್ಥಿರತೆಯನ್ನು ಖಚಿತಪಡಿಸುತ್ತದೆ. ಆದಾಗ್ಯೂ, ಕಾರ್ಯಾಚರಣೆಯ ಮಿತಿಯನ್ನು ಹೈಟೆಕ್ ಇಂಟರ್‌ಸೆಪ್ಟರ್‌ಗಳ ಲಭ್ಯತೆಯಿಂದ ನಿರ್ಧರಿಸಲಾಗುತ್ತದೆ. ನಿಜವಾದ ಸಮಸ್ಯೆ ಇರುವುದು ಭೌತಿಕ ದಾಸ್ತಾನು ಬಗ್ಗೆ. ನಾವು ಅಮೆರಿಕದ ಶಸ್ತ್ರಾಗಾರದಲ್ಲಿರುವ ಶಸ್ತ್ರಾಸ್ತ್ರಗಳ ನಿಜವಾದ ಸಂಖ್ಯೆಯನ್ನು ನೋಡಬೇಕು. ನಿರ್ದಿಷ್ಟವಾಗಿ ಪೇಟ್ರಿಯಾಟ್ ಅಥವಾ SM-6 ಕ್ಷಿಪಣಿಗಳಂತಹ ಉನ್ನತ-ಮಟ್ಟದ ಪ್ರತಿಬಂಧಕಗಳು, ಬ್ಯಾಲಿಸ್ಟಿಕ್ ಕ್ಷಿಪಣಿ ದಾಳಿಯನ್ನು ನಿಲ್ಲಿಸಲು ಅಗತ್ಯವಾದ ನಿರ್ಣಾಯಕ ಸಾಧನಗಳಾಗಿವೆ . ಹೆಚ್ಚಿನ ಪ್ರತಿಬಂಧಕ ದರಗಳು ಅನಿರ್ದಿಷ್ಟವಾಗಿ ಮುಂದುವರಿಯಲು ಸಾಧ್ಯವಿಲ್ಲ ಎಂದು ಪ್ರೆಬಲ್ ಎಚ್ಚರಿಸಿದ್ದಾರೆ.

ವಾರ್ತಾ ಭಾರತಿ 3 Mar 2026 7:19 pm

ಇರಾನ್ ಪರವಾಗಿ ರಾಜ್ಯದಲ್ಲಿ ಪ್ರತಿಭಟನಾ ಪ್ರದರ್ಶನ: ನಿಗಾ ಇಡಲು ಕೇಂದ್ರ ಸರ್ಕಾರದಿಂದ ಸೂಚನೆ ಬಂದಿಲ್ಲ: ಪರಮೇಶ್ವರ್ ಸ್ಪಷ್ಟನೆ

ಇರಾನ್ ಪರವಾಗಿ ರಾಜ್ಯದಲ್ಲಿ ಪ್ರತಿಭಟನಾ ಪ್ರದರ್ಶನ ನಡೆಯದಂತೆ ನಿಗಾ ಇಡಲು ಕೇಂದ್ರ ಸರ್ಕಾರದಿಂದ ಸೂಚನೆ ಬಂದಿಲ್ಲ ಎಂದು ಗೃಹ ಸಚಿವ ಡಾ.ಜಿ ಪರಮೇಶ್ವರ್ ಸ್ಪಷ್ಟನೆ ನೀಡಿದ್ದಾರೆ. ಈ ಕುರಿತಾಗಿ ಅವರು ಮಾತನಾಡಿದ್ದು, ಕೇಂದ್ರ ಗೃಹ ಇಲಾಖೆಯಿಂದ ಈ ಬಗ್ಗೆ ಯಾವ ಸೂಚನೆಯೂ ಸಿಕ್ಕಿಲ್ಲ ಎಂದು ತಿಳಿಸಿದರು. ಕೊಲ್ಲಿ ರಾಷ್ಟ್ರಗಳಲ್ಲಿ ಯುದ್ಧದ ಪರಿಸ್ಥಿತಿ ಹಿನ್ನೆಲೆಯಲ್ಲಿ ಹಲವು ಕನ್ನಡಿಗರು ಸಿಕ್ಕಿಹಾಕೊಂಡಿದ್ದಾರೆ. ಅವರನ್ನು ರಕ್ಷಣೆ ಮಾಡುವ ನಿಟ್ಟಿನಲ್ಲಿ ಸಿಎಂ ಸಿದ್ದರಾಮಯ್ಯ ಅವರು ಈಗಾಗಲೇ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ ಎಂದು ತಿಳಿಸಿದರು.

ವಿಜಯ ಕರ್ನಾಟಕ 3 Mar 2026 7:17 pm

IPL 2026- ತವರು ಮೈದಾನದಲ್ಲಿ ಆಡಲು RCB ಸಜ್ಜು; ಚಿನ್ನಸ್ವಾಮಿ ಕ್ರೀಡಾಂಗಣದಲ್ಲೇ ಪ್ಲೇ ಆಫ್, ಫೈನಲ್!

RCB Playing At Chinnaswamy Stadium- ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಇದೀಗ ತನ್ನ ತವರು ಮೈದಾನವಾದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಡುವುದು ಪಕ್ಕಾ ಆಗಿದೆ. ಈ ಬಗ್ಗೆ ತಂಡದಿಂದಲೇ ಅಧಿಕೃತ ಹೇಳಿಕೆ ಹೊರಬಿದ್ದಿದ್ದು ಚಿನ್ನಸ್ವಾಮಿಯಲ್ಲಿ ತವರಿನ 5 ಪಂದ್ಯಗಳನ್ನು ಆಡಲಿದ್ದು ಇನ್ನುಳಿದ 2 ಪಂದ್ಯಗಳನ್ನು ರಾಯ್ಪುರದಲ್ಲಿ ಆಡಲಿದೆ.ಮತ್ತೊಂದು ಮಹತ್ವದ ಸಂಗತಿಯೆಂದರೆ ಈ ಸೀಸನ್ ನ ಪ್ಲೇ ಆಫ್ ಮತ್ತ ಫೈನಲ್ ಪಂದ್ಯಗಳು ಚಿನ್ನಸ್ವಾಮಿಯಲ್ಲೇ ನಡೆಯಲಿದ್ದು ಇದು ಟೂರ್ನಿಯನ್ನು ಬೆಂಗಳೂರು ಕೇಂದ್ರಿತವನ್ನಾಗಿ ಮಾಡಲಿದೆ.

ವಿಜಯ ಕರ್ನಾಟಕ 3 Mar 2026 6:58 pm

ಇರಾನ್ ನೆಲದಲ್ಲಿ ದಿಢೀರ್ ಭೂಕಂಪನ, 4.3 ತೀವ್ರತೆಯ ಭೂಕಂಪನಕ್ಕೆ ಕಾರಣ ನಿಗೂಢ | Operation Roaring Lion

ಅಮೆರಿಕ ಮತ್ತು ಇರಾನ್ ನಡುವೆ ಘೋರವಾದ ಯುದ್ಧ ಆರಂಭವಾದ ನಂತರ ತಲ್ಲಣ ಸೃಷ್ಟಿಯಾಗಿ ಭಾರಿ ದೊಡ್ಡ ಕಲಹದ ವಾತಾವರಣ ಜಗತ್ತಿನಾದ್ಯಂತ ಸೃಷ್ಟಿಯಾಗಿದೆ. ಜಾಗತಿಕ ಆರ್ಥಿಕ ಪರಿಸ್ಥಿತಿಗೆ ದೊಡ್ಡ ಪೆಟ್ಟು ಕೊಡಲಿದೆ ಈ ಯುದ್ಧ ಎಂಬ ಭಯ ಕೂಡ ಆವರಿಸಿದೆ. ಕುವೈತ್, ಯುಎಇ, ಕತಾರ್ ಸೇರಿದಂತೆ ಅಮೆರಿಕದ ಸೇನಾ ನೆಲೆಗಳು ಇರುವ ಮಧ್ಯಪ್ರಾಚ್ಯದ ದೇಶಗಳ ಮೇಲೆ ಇರಾನ್ ಮಿಲಿಟರಿ

ಒನ್ ಇ೦ಡಿಯ 3 Mar 2026 6:50 pm

ಮಕ್ಕಳ 1 ನೇ ತರಗತಿ ಪ್ರವೇಶಕ್ಕೆ ವಯಸ್ಸಿನ ಮಿತಿ: 90 ದಿನ ವಿನಾಯಿತಿ ಕೊಡಿ ಪ್ಲೀಸ್‌! ರಾಜ್ಯ ಸರ್ಕಾರಕ್ಕೆ ಪೋಷಕರು ದುಂಬಾಲು

1 ನೇ ತರಗತಿಗೆ ಮಕ್ಕಳ ವಯೋಮಿತಿ ನಿಗದಿ ಮಾಡಿರುವ ಸರ್ಕಾರ 2025 - 26 ರಿಂದ ಕಟ್ಟುನಿಟ್ಟಾಗಿ ಜಾರಿಗೆ ಮುಂದಾಗಿದೆ. ಆದರೆ, ಬೆಂಗಳೂರಿನಲ್ಲಿ ಪೋಷಕರು ಈ ವರ್ಷವೂ ವಿನಾಯಿತಿ ನೀಡುವಂತೆ ಒತ್ತಾಯಿಸಿದ್ದಾರೆ. ಪ್ರಮುಖವಾಗಿ 90 ದಿನ ವಿನಾಯಿತಿಗೆ ಬೇಡಿಕೆ ಇಟ್ಟಿದ್ದು, 2020 ಆಗಸ್ಟ್‌ ಒಳಗೆ ಜನಿಸಿದ ಮಕ್ಕಳ ದಾಖಲಿಸಲು ಅವಕಾಶ ಮಾಡಿಕೊಂಡಿ ಎಂದಿದ್ದಾರೆ.

ವಿಜಯ ಕರ್ನಾಟಕ 3 Mar 2026 6:46 pm

Bidar | ಮಾದಕ ವಸ್ತು ಜಪ್ತಿ: ಮೂವರು ಬಂಧನ

ಬೀದರ್: ನಾರ್ಕೋಟಿಕ್ ಮಾದಕ ದ್ರವ್ಯ ಅಂಶಗಳಿರುವ ಸುಮಾರು 59,511 ರೂ. ಮೌಲ್ಯದ ಗುಳಿಗೆಗಳು ಹಾಗೂ ಸಿರಪ್ ಬಾಟಲಿಗಳನ್ನು ಜಪ್ತಿ ಮಾಡಲಾಗಿದ್ದು, ಜೊತೆಗೆ ಸುಮಾರು 75 ಸಾವಿರ ರೂ. ಮೌಲ್ಯದ ಎರಡು ಬೈಕ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಪ್ರಕರಣ ಸಂಬಂಧ ಮೂವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೈದರಾಬಾದ್‌ನಿಂದ ಮಾದಕ ಅಂಶ ಹೊಂದಿರುವ ಸಿರಪ್ ಬಾಟಲಿಗಳು ಮತ್ತು ಪೇನ್‌ಕಿಲ್ಲರ್ ಗುಳಿಗೆಗಳನ್ನು ಬೀದರ್ ನಗರದ ಯುವಕರಿಗೆ ಮಾರಾಟ ಮಾಡುವ ಉದ್ದೇಶದಿಂದ ಇಬ್ಬರು ಬೈಕ್‌ಗಳಲ್ಲಿ ಸಾಗಣೆ ಮಾಡುತ್ತಿದ್ದ ವೇಳೆ ಪೊಲೀಸರು ಅವರನ್ನು ಬಂಧಿಸಿದ್ದಾರೆ ಎಂದು ತಿಳಿಸಿದರು. ಪೊಲೀಸರು ಸುಮಾರು 4,800 ಗುಳಿಗೆಗಳು ಹಾಗೂ 100 ಸಿರಪ್ ಬಾಟಲಿಗಳನ್ನು ಜಪ್ತಿ ಮಾಡಿದ್ದಾರೆ. ಆರೋಪಿಗಳನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿದೆ. ಇಂತಹ ಕಾನೂನುಬಾಹಿರ ಚಟುವಟಿಕೆಗಳಲ್ಲಿ ಪದೇ ಪದೇ ತೊಡಗುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಂಡು ರೌಡಿಶೀಟ್ ತೆರೆಯುವುದಲ್ಲದೆ ಗಡಿಪಾರು ಕ್ರಮ ಜರುಗಿಸಲಾಗುವುದು ಎಂದು ಎಸ್‌ಪಿ ಎಚ್ಚರಿಸಿದ್ದಾರೆ. ಈ ಸಂಬಂಧ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಾರ್ತಾ ಭಾರತಿ 3 Mar 2026 6:36 pm

ಆಳಂದ | ವಿದ್ಯಾರ್ಥಿಗಳು ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳಲಿ : ಪ್ರಾಧ್ಯಾಪಕ ಹನುಮೇಗೌಡ

ಆಳಂದ : ನಮ್ಮ ಸುತ್ತಲಿನ ಘಟನೆಗಳು ಹಾಗೂ ಆಗುಹೋಗುಗಳ ಕುರಿತು ಸಹಜ ಕುತೂಹಲ ಮತ್ತು ಜಿಜ್ಞಾಸೆ ಹೊಂದಿರುವ ವಿದ್ಯಾರ್ಥಿಗಳು ಅವುಗಳ ಕಾರ್ಯ–ಕಾರಣ ಸಂಬಂಧಗಳನ್ನು ಸ್ವಯಂ ಆಲೋಚನೆ ಮೂಲಕ ಅರಿಯಲು ಪ್ರಯತ್ನಿಸಬೇಕು ಎಂದು ಕರ್ನಾಟಕ ಕೇಂದ್ರೀಯ ವಿವಿಯ ಪ್ರಾಧ್ಯಾಪಕ ಕೆ.ಹನುಮೇಗೌಡ ಹೇಳಿದರು. ಪಟ್ಟಣದ ಸಂಬುದ್ಧ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಪದವಿ ಕಾಲೇಜಿನಲ್ಲಿ ಸೋಮವಾರ ನಡೆದ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಈ ವರ್ಷದ ವಿಜ್ಞಾನ ದಿನಾಚರಣೆಯ ಘೋಷವಾಕ್ಯ “ಹೆಣ್ಣು ಮಕ್ಕಳಿಗಾಗಿ ವಿಜ್ಞಾನ ಮತ್ತು ವಿಕಸಿತ ಭಾರತ ಹಾಗೂ ವೈಜ್ಞಾನಿಕ ಮನೋಭಾವ”ವಾಗಿದೆ. ಹೆಣ್ಣುಮಕ್ಕಳು ವಿಶೇಷವಾಗಿ ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳಬೇಕು. ಸಿ.ವಿ. ರಾಮನ್, ಸಿ.ಎನ್.ಆರ್. ರಾವ್, ಕಿರಣ್ ಮಜುಂದಾರ್-ಶಾ ಹಾಗೂ ಮೇರಿ ಕ್ಯೂರಿ ಅವರ ಸಾಧನೆಗಳಿಂದ ಪ್ರೇರಣೆ ಪಡೆಯಬೇಕು ಎಂದು ತಿಳಿಸಿದರು. ವಿವೇಕ ವರ್ಧನಿ ಪಬ್ಲಿಕ್ ಶಾಲೆಯ ಪ್ರಾಚಾರ್ಯ ಸಂತೋಷ ಪಾಟೀಲ ಮಾತನಾಡಿ, ವಿಜ್ಞಾನ ನಮ್ಮ ದೈನಂದಿನ ಜೀವನದ ಅವಿಭಾಜ್ಯ ಅಂಗವಾಗಿದೆ. ಮನುಷ್ಯನ ಬೆಳವಣಿಗೆಯಲ್ಲಿ ವಿಜ್ಞಾನದ ಕೊಡುಗೆ ಮಹತ್ತರವಾಗಿದೆ. ಶಿಸ್ತು, ಸಮರ್ಪಣೆ, ಅನ್ವೇಷಣಾ ಮನೋಭಾವ ಹಾಗೂ ಸತತ ಅಧ್ಯಯನ ವಿಜ್ಞಾನ ವಿದ್ಯಾರ್ಥಿಗಳಿಗೆ ಅತ್ಯಗತ್ಯ ಗುಣಗಳಾಗಿವೆ ಎಂದರು. ಸಂಸ್ಥೆಯ ಆಡಳಿತಾಧಿಕಾರಿ ಮಹಾದೇವಪ್ಪ ಪಾಟೀಲ ಕಾರ್ಯಕ್ರಮವನ್ನು ಉದ್ಘಾಟಿಸಿ, ಪ್ರತಿಯೊಬ್ಬರಲ್ಲೂ ಪ್ರತಿಭೆ ಹುದುಗಿದೆ. ಕ್ರಿಯಾಶೀಲತೆ ಹಾಗೂ ಪ್ರಯೋಗಗಳ ಮೂಲಕ ಅದು ಹೊರಹೊಮ್ಮುತ್ತದೆ ಎಂದು ಹೇಳಿದರು. ಜೆಪಿ ಪ್ರೌಢಶಾಲೆ ಮುಖ್ಯಶಿಕ್ಷಕ ಎಲ್.ಎಸ್.ಬೀದಿ ಅವರು ವಿಜ್ಞಾನ ದಿನಾಚರಣೆ ಪ್ರತಿಜ್ಞಾವಿಧಿ ಬೋಧಿಸಿದರು. ಪ್ರಾಚಾರ್ಯ ಸಂಜಯ ಪಾಟೀಲ ಅಧ್ಯಕ್ಷತೆ ವಹಿಸಿದರು. ಉಪನ್ಯಾಸಕಿ ಶಹಗುಫ್ತಾ ನಾಜ್, ಮಹಾದೇವಿ ಮುನ್ನೋಳ್ಳಿ, ಆಯೇಷಾ ಸಿದ್ಧಕ್ಕಿ, ರೋಹಿಣಿ ತಾಟಿ, ಭಾಗ್ಯಶ್ರೀ ಫುಲಾರೆ ಮಾಣಿಕೇಶ್ವರಿ ಜಮಾದಾರ, ಸಚಿನ ಮೋರೆ, ವೈಜುನಾಥ ಜಿಡಗೆ, ಸಿದ್ದಾರ್ಥ ಹಸೂರೆ, ದೇವರಾಯ ನಾಯಕ ಉಪಸ್ಥಿತರಿದ್ದರು. ವಿಜ್ಞಾನ ದಿನಾಚರಣೆ ಅಂಗವಾಗಿ ಏರ್ಪಡಿಸಿದ ವಿಜ್ಞಾನ ರಂಗೋಲಿ ಸ್ಪರ್ಧೆ, ಚರ್ಚಾ ಸ್ಪರ್ಧೆ, ರಸಪ್ರಶ್ನೆ ಮತ್ತು ವಿಜ್ಞಾನ ಮಹೆಂದಿ ಸ್ಪರ್ಧೆಯಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ವರ್ಷಾ ಹಿರೇಮಠ ನಿರೂಪಿಸಿದರು. ಭಾಗ್ಯಶ್ರೀ ಫುಲಾರೆ ಸ್ವಾಗತಿಸಿದರು ಅಲ್ಫೀಯಾ ಬೇಗಂ ವಂದಿಸಿದರು.

ವಾರ್ತಾ ಭಾರತಿ 3 Mar 2026 6:31 pm

ಸಿಂಧನೂರು | ಹಳೆಬಜಾರ್ ರಸ್ತೆ ಅತಿಕ್ರಮಣ ತೆರವುಗೊಳಿಸಲು ಆಗ್ರಹ

ಸಿಂಧನೂರು: ನಗರದ ಚನ್ನಮ್ಮ ಸರ್ಕಲ್ (ಹಳೆಬಜಾರ್)ದಿಂದ ಟಿಪ್ಪು ಸುಲ್ತಾನ್ ಸರ್ಕಲ್‌ವರೆಗೆ ಎಡ ಮತ್ತು ಬಲಭಾಗದಲ್ಲಿ ರಸ್ತೆ ಅತಿಕ್ರಮಿಸಿ ನಿರ್ಮಿಸಿರುವ ಕಟ್ಟಡಗಳನ್ನು ತೆರವುಗೊಳಿಸಿ ಸಾರ್ವಜನಿಕರ ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸಬೇಕೆಂದು ಕರ್ನಾಟಕ ರೈತ ಸಂಘ (ಎಐಯುಕೆಎಸ್) ವತಿಯಿಂದ ಮಂಗಳವಾರ ಮನವಿಪತ್ರ ಸಲ್ಲಿಸಲಾಯಿತು. ತಹಸೀಲ್ದಾರ ಅರುಣ್ ದೇಸಾಯಿ ಅವರ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ರವಾನಿಸಿ, ನಗರ ವೇಗವಾಗಿ ವಿಸ್ತರಿಸುತ್ತಿರುವ ಹಿನ್ನೆಲೆಯಲ್ಲಿ ಹಳೆಬಜಾರ್ ಪ್ರದೇಶದಲ್ಲಿ ಜನಸಂದಣಿ ಹೆಚ್ಚಾಗಿದೆ. ಪ್ರಮುಖ ವಾಣಿಜ್ಯ ಪ್ರದೇಶವಾಗಿರುವ ಈ ಭಾಗದಲ್ಲಿ ರಸ್ತೆ ಸಣ್ಣದಾಗಿರುವುದರಿಂದ ಜನರು ದಿನನಿತ್ಯ ಸಂಚಾರಕ್ಕೆ ತೊಂದರೆ ಅನುಭವಿಸುತ್ತಿದ್ದಾರೆ ಎಂದು ಸಂಘಟಕರು ತಿಳಿಸಿದ್ದಾರೆ. ರಸ್ತೆಯ ಎರಡೂ ಬದಿಗಳಲ್ಲಿ ಅತಿಕ್ರಮಿಸಿ ನಿರ್ಮಿಸಿರುವ ಕಟ್ಟಡಗಳನ್ನು ಕೂಡಲೇ ತೆರವುಗೊಳಿಸಿ ರಸ್ತೆ ಅಗಲೀಕರಣ ಕೈಗೊಳ್ಳಬೇಕು. ಯಾವುದೇ ರಾಜಕೀಯ ಪ್ರಭಾವಕ್ಕೆ ಒಳಗಾಗದೆ ನಿರ್ದಾಕ್ಷಿಣ್ಯ ಕ್ರಮ ಜರುಗಿಸಿ, ಅತಿಕ್ರಮಿಸಿದ ಕಟ್ಟಡ ಮಾಲೀಕರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು ಎಂದು ಒತ್ತಾಯಿಸಲಾಗಿದೆ. ಹಳೆಬಜಾರ್ ರಸ್ತೆ ಇಳುವರಿಯಾಗಿರುವುದರಿಂದ ಆಂಬ್ಯುಲೆನ್ಸ್ ಸಂಚಾರ, ಸಾರ್ವಜನಿಕ ವಾಹನಗಳ ಓಡಾಟ ಹಾಗೂ ಜನಸಂಚಾರಕ್ಕೆ ತೀವ್ರ ಅಡಚಣೆ ಉಂಟಾಗಿದೆ. ತುರ್ತುವಾಗಿ ತೆರವು ಕಾರ್ಯಾಚರಣೆ ನಡೆಸಿ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಬೇಕೆಂದು ಮನವಿಯಲ್ಲಿ ಆಗ್ರಹಿಸಲಾಗಿದೆ. ಈ ಸಂದರ್ಭದಲ್ಲಿ ಕೆಆರ್ ಎಸ್ ಜಿಲ್ಲಾ ಕಾರ್ಯದರ್ಶಿ ಚಿಟ್ಟಿಬಾಬು, ಟಿಯುಸಿಐ ಜಿಲ್ಲಾಧ್ಯಕ್ಷ ಬಿ.ಎನ್.ಯರದಿಹಾಳ, ಕೆಆರ್ ಎಸ್ ತಾಲ್ಲೂಕು ಅಧ್ಯಕ್ಷ ರಮೇಶ ಪಾಟೀಲ್ ಬೇರಗಿ ಇತರರು ಇದ್ದರು.

ವಾರ್ತಾ ಭಾರತಿ 3 Mar 2026 6:26 pm

ಅಂಬೇಡ್ಕರ್‌ರದ್ದು ಸಮಸಮಾಜದ ಅಭಿವೃದ್ಧಿಯ ಪರಿಕಲ್ಪನೆಯಾಗಿತ್ತು: ಪ್ರೊ.ಎ.ಎಂ.ಖಾನ್

ಮಂಗಳೂರು ವಿವಿ: ವಿಚಾರಸಂಕಿರಣ ಉದ್ಘಾಟನೆ

ವಾರ್ತಾ ಭಾರತಿ 3 Mar 2026 6:23 pm

ಕೊಪ್ಪಳ | ತಳುವಗೇರಾ ಜಾತ್ರೆಯಲ್ಲಿ ನಡೆದ ಹತ್ಯೆ ಪ್ರಕರಣ :15 ಆರೋಪಿಗಳಿಗೆ 7 ವರ್ಷ ಕಠಿಣ ಕಾರಾಗೃಹ ಶಿಕ್ಷೆ

ಕೊಪ್ಪಳ: 2019ರಲ್ಲಿ ಜಿಲ್ಲೆಯ ಕುಷ್ಟಗಿ ತಾಲೂಕಿನ ತಳುವಗೇರಾ ಗ್ರಾಮದಲ್ಲಿ ಜಾತ್ರೆ ವೇಳೆ ನಡೆದ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಕೊಪ್ಪಳದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು 15 ಅಪರಾಧಿಗಳಿಗೆ ತಲಾ 7 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಹಾಗೂ ದಂಡ ವಿಧಿಸಿ ತೀರ್ಪು ಪ್ರಕಟಿಸಿದೆ. ಪ್ರಕರಣದಲ್ಲಿ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ನ್ಯಾಯಾಧೀಶ ಸಿ. ಚಂದ್ರಶೇಖರ ಅವರು ಫೆ.28, 2026ರಂದು ತೀರ್ಪು ನೀಡಿದ್ದಾರೆ. ಕಳಕಪ್ಪ, ದೊಡ್ಡಪ್ಪ, ನಾಗಪ್ಪ, ರಮೇಶ್ @ ಕೆಂಪಣ್ಣ, ಕೃಷ್ಣ, ಚಿದಾನಂದ, ಶರಣಪ್ಪ, ಬಸವರಾಜ, ಮಂಜುನಾಥ, ಅಮರಪ್ಪ, ನೀಲಪ್ಪ, ಚಂದ್ರಶೇಖರ, ಯಮನೂರಪ್ಪ, ತಿಪ್ಪಣ್ಣ ಹಾಗೂ ಮುತ್ತಪ್ಪ ಸೇರಿ ಒಟ್ಟು 15 ಮಂದಿಗೆ ಶಿಕ್ಷೆ ವಿಧಿಸಲಾಗಿದೆ. ನ್ಯಾಯಾಲಯವು ಭಾ.ದಂ.ಸಂ ಕಲಂ 143, 147, 148, 323, 324, 335, 506, 304(1) ಹಾಗೂ 149 ಅಡಿಯಲ್ಲಿ 7 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಮತ್ತು ಒಟ್ಟು 4,12,500 ರೂ. ದಂಡ ವಿಧಿಸಿದೆ. ದಂಡದ ಮೊತ್ತದಲ್ಲಿ 40% ಅಂದರೆ 1,65,000 ರೂ. ಅನ್ನು ಮೃತ ಮಲ್ಲಪ್ಪ ಅವರ ತಂದೆ-ತಾಯಿಗೆ ಪರಿಹಾರವಾಗಿ ನೀಡಲು ಹಾಗೂ ತೀವ್ರ ಗಾಯಗೊಂಡ ಶಿವಪ್ಪ ಕಂದಕೂರ ಅವರಿಗೆ 15% ಅಂದರೆ 62,000 ರೂ. ನೀಡಲು ಆದೇಶಿಸಲಾಗಿದೆ. ಇದೇ ಪ್ರಕರಣದಲ್ಲಿ ಆರೋಪಿತರಾಗಿದ್ದ ಕೊಂತವ್ವ ಮತ್ತು ರೇಣವ್ವ ವಿರುದ್ಧದ ಆರೋಪ ಸಾಬೀತಾಗದ ಕಾರಣ ಅವರನ್ನು ಬಿಡುಗಡೆಗೊಳಿಸಲಾಗಿದೆ. ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕ ಎಂ.ಎ. ಪಾಟೀಲ್ ವಾದ ಮಂಡಿಸಿದರು. ಸಾಕ್ಷಿದಾರರನ್ನು ಸಮಯಕ್ಕೆ ಸರಿಯಾಗಿ ಹಾಜರುಪಡಿಸುವಲ್ಲಿ ಕುಷ್ಟಗಿ ಪೊಲೀಸ್ ಠಾಣೆಯ ಹೆಡ್ ಕಾನ್ಸ್ಟೇಬಲ್ ಹನುಮೇಶ ಜಗ್ಗಲ್ ಸಹಕರಿಸಿದ್ದಾರೆ ಎಂದು ಕೊಪ್ಪಳ ಪ್ರಧಾನ ಜಿಲ್ಲಾ ಹಾಗೂ ಸತ್ರ ನ್ಯಾಯಾಲಯ ವಿಶೇಷ ಸರ್ಕಾರಿ ಅಭಿಯೋಜಕರಾದ ಎಂ ಎ ಪಾಟೀಲ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಪ್ರಕರಣದ ಹಿನ್ನೆಲೆ: ಮಾ.27ರ, 2019ರಂದು ಕುಷ್ಟಗಿ ಪೊಲೀಸ್ ಠಾಣಾ ವ್ಯಾಪ್ತಿಯ ತಳುವಗೇರಾ ಗ್ರಾಮದಲ್ಲಿ ಶರಣಬಸವೇಶ್ವರ ಜಾತ್ರೆ ಸಂದರ್ಭದಲ್ಲಿ ಜಗದೀಶ ಹವಾಲ್ದಾರ ಮತ್ತು ಸ್ನೇಹಿತರು ಪಿಪಿ ಹಾಗೂ ಬಲೂನ ಖರೀದಿಸಿಕೊಂಡು ದುರುಗಮ್ಮ ಗುಡಿಯ ಹತ್ತಿರ ಸಾಗುತ್ತಿದ್ದ ವೇಳೆ, ಆರೋಪಿಗಳು ಅಕ್ರಮ ಕೂಟ ರಚಿಸಿ ದಾಳಿ ನಡೆಸಿದ್ದರು. ಕ್ರಿಕೆಟ್ ಸ್ಟಂಪ್ ಮತ್ತು ಕಲ್ಲಿನಿಂದ ಮಲ್ಲಪ್ಪ ಕಂದಕೂರ ಅವರ ತಲೆಗೆ ಹೊಡೆದ ಪರಿಣಾಮ ಅವರು ಸ್ಥಳದಲ್ಲೇ ಮೃತಪಟ್ಟಿದ್ದರು. ಇತರರಿಗೆ ತೀವ್ರ ಹಾಗೂ ಸಾಮಾನ್ಯ ಗಾಯಗಳಾಗಿದ್ದವು. ಈ ಕುರಿತು ಕುಷ್ಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆಯನ್ನು ವೃತ್ತ ನಿರೀಕ್ಷಕ ಸುರೇಶ್ ತಳವಾರ ನಡೆಸಿ ಆರೋಪಪಟ್ಟಿ ನ್ಯಾಯಾಲಯಕ್ಕೆ ಸಲ್ಲಿಸಿದ್ದರು.

ವಾರ್ತಾ ಭಾರತಿ 3 Mar 2026 6:22 pm

ಕೆಎಂಕೆ ಮಂಜನಾಡಿಗೆ ಸಂಘಟನಾ ಸ್ಫೂರ್ತಿ ಪ್ರಶಸ್ತಿ

ಮಂಗಳೂರು, ಮಾ.3: ಸೈಯದ್ ಮದನಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಹಳೆಕೋಟೆಯಲ್ಲಿ ನಡೆಸಲ್ಪಡುತ್ತಿರುವ ಸೈಯದ್ ಮದನಿ ವಿದ್ಯಾಸಂಸ್ಥೆಗಳ ಮುಖ್ಯ ಶಿಕ್ಷಕ ಕೆಎಂಕೆ ಮಂಜುನಾಡಿಗೆ ಸಂಘಟನಾ ಸ್ಫೂರ್ತಿ ಪ್ರಶಸ್ತಿ-2026 ನೀಡಿ ಗೌರವಿಸಲಾಗಿದೆ. ಕಳೆದ 35 ವರ್ಷಗಳಿಂದ ಶಿಕ್ಷಕರ ಸಂಘಟನೆ ಸಮೇತ ತಾಲೂಕು, ಜಿಲ್ಲೆ, ರಾಜ್ಯದ ವಿವಿಧ ಸಂಘಟನೆಗಳಲ್ಲಿ ತೊಡಗಿಸಿಕೊಂಡಿರುವ ಕೆಎಂಕೆ ಮಂಜನಾಡಿಯವರ ಸಂಘಟನಾ ಚಾತುರ್ಯವನ್ನು ಪರಿಗಣಿಸಿ ಕರ್ನಾಟಕ ರಾಜ್ಯ ಶಾಲಾ ಶಿಕ್ಷಣ ಇಲಾಖೆಯ ನೌಕರರ ಸಂಘವು ಈ ಪ್ರಶಸ್ತಿಯನ್ನು ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರದಾನಿಸಲಾಯಿತು. ರಾಜ್ಯ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಉಪಸ್ಥಿತಿಯಲ್ಲಿ ಸ್ಪೀಕರ್ ಯು.ಟಿ. ಖಾದರ್ ಫರೀದ್ ಪ್ರಶಸ್ತಿ ಪ್ರದಾನ ಮಾಡಿದರು. ಈ ಸಂದರ್ಭ ವಿಧಾನ ಪರಿಷತ್ ಶಿಕ್ಷಕರ ಕ್ಷೇತ್ರದ ಶಾಸಕರು ಹಾಗೂ ರಾಜ್ಯದ ವಿವಿಧ ಶಿಕ್ಷಣ ಸಂಘಟನೆಗಳ ಪದಾಧಿಕಾರಿಗಳು ಮತ್ತು ಸದಸ್ಯರುಗಳು ಉಪಸ್ಥಿತರಿದ್ದರು.

ವಾರ್ತಾ ಭಾರತಿ 3 Mar 2026 6:15 pm

ಕನಕಗಿರಿ | ಚದುರಂಗ ಸ್ಪರ್ಧೆಯಲ್ಲಿ ಲಕ್ಷ್ಮಣ್ ನಾಯಕ ಜಿಲ್ಲೆಗೆ ಪ್ರಥಮ ಸ್ಥಾನ

ಕನಕಗಿರಿ: ಜಿಲ್ಲಾ ಪಂಚಾಯತ್‌ ಕೊಪ್ಪಳ ಹಾಗೂ ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್ ಇಲಾಖೆಯ ಎಲ್ಲಾ ವೃಂದ ಸಂಘಗಳ ಸಹಯೋಗದಲ್ಲಿ ಈಚೆಗೆ ನಡೆದ 2025-26ನೇ ಸಾಲಿನ ಕೊಪ್ಪಳ ಜಿಲ್ಲೆಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ತಾಲೂಕಿನ ಸುಳೇಕಲ್ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಲಕ್ಷ್ಮಣ್ ನಾಯಕ ಅವರು ಚದುರಂಗ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ. ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ಉತ್ತಮ ಪ್ರದರ್ಶನ ನೀಡಿದ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಅವರ ಸಾಧನೆಗೆ ತಾಪಂ ಇಒ ಕೆ. ರಾಜಶೇಖರ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

ವಾರ್ತಾ ಭಾರತಿ 3 Mar 2026 6:13 pm

ಅಕ್ರಮ ಚಟುವಟಿಕೆಗಳ ಕೇಂದ್ರವಾಗಿ ಮಾರ್ಪಟ್ಟ ಮುದೂರು ಕೊರಗರ ಸಭಾಭವನ!

ಭವನದ ನಿರ್ವಹಣೆ ಸ್ಥಳೀಯ ಗ್ರಾಪಂಗೆ ವಹಿಸುವಂತೆ ಒತ್ತಾಯ

ವಾರ್ತಾ ಭಾರತಿ 3 Mar 2026 6:12 pm

ಕೇಂದ್ರ ಸರಕಾರದ ಕಾರ್ಮಿಕ ಸಂಹಿತೆ ವಿರೋಧಿಸಿ ಪ್ರತಿಭಟನೆ; ರಾಜ್ಯ ಸರಕಾರದ ಕರಡು ನಿಯಮಗಳ ಕುರಿತು ಆಕ್ಷೇಪಣೆ ಸಲ್ಲಿಕೆ

ಉಡುಪಿ, ಮಾ.3: ಕೇಂದ್ರ ಸರಕಾರದ ನಾಲ್ಕು ಕಾರ್ಮಿಕ ಸಂಹಿತೆಯನ್ನು ವಿರೋಧಿಸಿ ಸೆಂಟರ್ ಆಫ್ ಇಂಡಿಯಾನ್ ಟ್ರೇಡ್ ಯೂನಿಯನ್ (ಸಿಐಟಿಯು) ನೇತೃತ್ವದಲ್ಲಿ ಮಂಗಳವಾರ ಉಡುಪಿ ಜಿಲ್ಲೆಯಾದ್ಯಂತ ಪ್ರತಿಭಟನೆ ನಡೆಸಲಾಯಿತು. ಉಡುಪಿ ಜಿಲ್ಲಾ ಕಟ್ಟಡ ಕಾರ್ಮಿಕ ಸಂಘ, ಬೀಡಿ ಎಂಡ್ ಟೋಬ್ಯಾಕೋ ಲೇಬರ್ ಯೂನಿಯನ್ ಮತ್ತು ಜನರಲ್ ವರ್ಕರ್ಸ್ ಯೂನಿಯನ್ ಸಂಘಗಳು ಮಣಿಪಾಲದ ಜಿಲ್ಲಾಧಿಕಾರಿ ಕಛೇರಿ ಮುಂದೆ ಪ್ರತಿಭಟನೆ ನಡೆಸಿ ನಂತರ ಕಾರ್ಮಿಕ ಅಧಿಕಾರಿಗಳು ಮತ್ತು ಅಪಾರ ಜಿಲ್ಲಾಧಿಕಾರಿ ಮೂಲಕ ರಾಜ್ಯದ ಮುಖ್ಯಮಂತ್ರಿ ಮತ್ತು ಕಾರ್ಮಿಕ ಕಾರ್ಯದರ್ಶಿ(ವಿಕಾಸಸೌಧ) ಬೆಂಗಳೂರು ಅವರಿಗೆ ರಾಜ್ಯ ಸರಕಾರದ ಕರಡು ನಿಯಮಗಳು 2026 ಕುರಿತು ಕಾರ್ಮಿಕ ಸಂಘಗಳ ಆಕ್ಷೇಪಣೆಗಳು ಮತ್ತು ಸಲಹೆಗಳನ್ನು ಸಲ್ಲಿಸಲಾಯಿತು. ಪ್ರಮುಖ ಅಂಶಗಳು: ಕಾರ್ಮಿಕ ಸಂಹಿತೆಗಳನ್ನು ರದ್ದು ಪಡಿಸಬೇಕು. ಒಕ್ಕೂಟ ವ್ಯವಸ್ಥೆ ವಿರುದ್ಧ ವಾದ ಸಮವರ್ತಿ ಪಟ್ಟಿಯ ಕಾರ್ಮಿಕರ ಕುರಿತು ಅಧಿಕಾರವನ್ನು ಕೇಂದ್ರ ಸರಕಾರಕ್ಕೆ ಸಿಮೀತ ಗೊಳಿಸುವ ಪ್ರಯತ್ನ ವನ್ನು ರಾಜ್ಯ ಸರಕಾರ ವಿರೋಧಿಸಬೇಕು. ರಾಜ್ಯ ಸರಕಾರ ತನ್ನ ಅಧಿಕಾರವನ್ನು ಚಲಾಯಿಸಿ ಮೂಲ ಸಂಹಿತೆಗಳಿಗೆ ತಿದ್ದುಪಡಿಗಳನ್ನು ತಂದು ನಂತರ ನಿಯಮಾವಳಿ ರೂಪಿಸಬೇಕು. ಕರಡು ನಿಯಮಗಳನ್ನು ಕನ್ನಡದಲ್ಲಿ ಪ್ರಕಟಿಸಿ ನಂತರ ಆಕ್ಷೇಪಣೆ ಸಲ್ಲಿಸಲು ಸಮಯಾವಕಾಶ ನೀಡಬೇಕು. ರಾಜ್ಯ ಸರಕಾರ ಕೂಡಲೇ ಕನಿಷ್ಠ ವೇತನ ಆಧಿಸೂಚನೆ ಹೋರಾಡಿಸಬೇಕು ಪ್ರತಿಭಟನೆಯಲ್ಲಿ ಸಿಐಟಿಯು ರಾಜ್ಯ ಕಾರ್ಯದರ್ಶಿ ಸುರೇಶ್ ಕಲ್ಲಾಗಾರ, ಉಡುಪಿ ಬೀಡಿ ಎಂಡ್ ಟೋಬ್ಯಾಕೋ ಲೇಬರ್ ಯೂನಿಯನ್ ಅಧ್ಯಕ್ಷ ನಳಿನಿ ಎಸ್., ಪ್ರಧಾನ ಕಾರ್ಯದರ್ಶಿ ಉಮೇಶ್ ಕುಂದರ್, ಮುಖಂಡರಾದ ವಸಂತಿ, ಉಡುಪಿ ಜಿಲ್ಲಾ ಕಟ್ಟಡ ಮತ್ತು ನಿರ್ಮಾಣ ಕಾರ್ಮಿಕರ ಸಂಘದ ಅಧ್ಯಕ್ಷ ಸುಭಾಸ್ ನಾಯಕ್, ಪ್ರಧಾನ ಕಾರ್ಯದರ್ಶಿ ಶಶಿಧರ್ ಗೊಲ್ಲ, ಉಪಾಧ್ಯಕ್ಷ ದಯಾನಂದ ಕೊಟ್ಯಾನ್, ಕೋಶಾಧಿಕಾರಿ ವಾಮನ ಬಂಗೇರ ಮುಖಂಡರಾದ ಸರೋಜ ಎಸ್., ದಯಾನಂದ ಅಮೀನ್, ರಾಮ ಕಾರ್ಕಡ, ನಾಗರಾಜ ಸಾಲಿಗ್ರಾಮ, ಮುರಳಿ, ರಮೇಶ್, ಶ್ರೀಧರ ಶೆಟ್ಟಿ, ಅಶೋಕ, ರಂಗನಾಥ, ಚಂದ್ರಯ್ಯ ಪೂಜಾರಿ, ಸಿಐಟಿಯು ಉಡುಪಿ ಮುಖಂಡರಾದ ಮೋಹನ್ ಉಪಸ್ಥಿತರಿದ್ದರು. ಕಾರ್ಕಳದಲ್ಲಿ ಕಾರ್ಮಿಕರ ಪ್ರತಿಭಟನೆ ಕಾರ್ಕಳ ತಾಲೂಕು ಬೀಡಿ ಕಾರ್ಮಿಕರ ಸಂಘ ಮತ್ತು ಲೆಮಿನಾ ಫೌಂಡ್ರಿಸ್ ಕಾರ್ಮಿಕರ ಸಂಘ ಕಾರ್ಕಳದಲ್ಲಿ ಪ್ರತಿಭಟನೆ ನಡೆಸಿ, ಕಾರ್ಮಿಕ ನಿರೀಕ್ಷಕ ನವೀನ್ ಅವರ ಮೂಲಕ ರಾಜ್ಯದ ಮುಖ್ಯಮಂತ್ರಿ ಹಾಗೂ ಕಾರ್ಮಿಕ ಕಾರ್ಯದರ್ಶಿ(ವಿಕಾಸ ಸೌಧ) ಅವರಿಗೆ ಆಕ್ಷೇಪಣೆ ಪತ್ರವನ್ನು ಸಲ್ಲಿಸಿತು. ಪ್ರತಿಭಟನೆಯಲ್ಲಿ ಕಾರ್ಕಳ ತಾಲೂಕು ಬೀಡಿ ಕಾರ್ಮಿಕ ಸಂಘದ ಪ್ರಧಾನ ಕಾರ್ಯದರ್ಶಿ ಕವಿರಾಜ್ ಎಸ್.ಕಾಂಚನ್, ಬೀಡಿ ಮುಖಂಡ ರಾದ ಜಯಂತಿ, ಶಕುಂತಲಾ ಲೆಮಿನಾ ಫೌಂಡ್ರಿಸ್ ಕಾರ್ಮಿಕ ಸಂಘದ ಅಧ್ಯಕ್ಷ ಮೋಹನ್ ಚಂದ್ರ, ಪ್ರಧಾನ ಕಾರ್ಯದರ್ಶಿ ನಾಗೇಶ್, ಕಾರ್ಕಳ ಕಟ್ಟಡ ಸಂಘದ ಮುಖಂಡರಾದ ಪುಷ್ಪ, ನಾಗೇಶ್ ಉಪಸ್ಥಿತರಿದ್ದರು. ಕುಂದಾಪುರದಲ್ಲಿ ಪ್ರತಿಭಟಿಸಿ ಆಕ್ಷೇಪಣೆ ಸಲ್ಲಿಕೆ ಕೇಂದ್ರ ಸರಕಾರ ಜಾರಿಗೆ ತಂದಿರುವ ನಾಲ್ಕು ಕಾರ್ಮಿಕ ಸಂಹಿತೆಗಳನ್ನು ವಿರೋಧಿಸಿ ಕುಂದಾಪುರ ಕಾರ್ಮಿಕ ನಿರೀಕ್ಷಕರ ಕಚೇರಿ ಎದುರು ಇಂದು ವಿವಿಧ ಸಂಘಗಳ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಅಕ್ಷೇಪಣೆಗಳನ್ನು ಕಾರ್ಮಿಕ ನಿರೀಕ್ಷಕರ ಮುಖಾಂತರ ಕಾರ್ಮಿಕ ಇಲಾಖೆಯ ರಾಜ್ಯ ಕಾರ್ಯದರ್ಶಿಗಳಿಗೆ ಸಲ್ಲಿಸಿತು. ಉಡುಪಿ ಜಿಲ್ಲಾ ಹಂಚು ಕಾರ್ಮಿಕರ ಸಂಘ, ಕುಂದಾಪುರ ತಾಲೂಕು ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘ, ಕುಂದಾಪುರ ತಾಲೂಕು ಆಟೋರಿಕ್ಷಾ ಮತ್ತು ವಾಹನ ಚಾಲಕರ ಸಂಘ, ಕುಂದಾಪುರ ಕೆಲಸಗಾರರ ಸಂಘ ಬೀಡಿ ವರ್ಕರ್ಸ್ ಯೂನಿಯನ್ ಕುಂದಾಪುರ, ಸಿಐಟಿಯು ಕುಂದಾಪುರ ಸಂಚಾಲನ ಸಮಿತಿ ವತಿಯಿಂದ ಕೈಗಾರಿಕಾ ಸಂಬಂಧಗಳ ಸಂಹಿತೆ 2020 ಔದ್ಯೋಗಿಕ ಸುರಕ್ಷತೆ ಮತ್ತು ಕಾರ್ಯಸ್ಥಳಗಳ ಪರಿಸ್ಥಿತಿ ಸಂಹಿತೆ, ವೇತನ ಸಂಹಿತೆಗಳಿಗೆ ರಾಜ್ಯ ಕರಡು ನಿಯಮಾವಳಿಗಳಿಗೆ ಅಕ್ಷೇಪಣೆ ಸಲ್ಲಿಸಿತು. ಈ ಸಂದರ್ಭದಲ್ಲಿ ಜಿಲ್ಲಾ ಸಿಐಟಿಯು ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ವಿ., ಉಡುಪಿ ಜಿಲ್ಲಾ ಹಂಚು ಕಾರ್ಮಿಕರ ಸಂಘದ ಪ್ರಧಾನ ಕಾರ್ಯದರ್ಶಿ ಎಚ್.ನರಸಿಂಹ, ಹಂಚು ಸಂಘದ ಮುಖಂಡರಾದ ಜಿ.ಡಿ.ಪಂಜು, ಚಂದ್ರ ಪೂಜಾರಿ, ಸುರೇಂದ್ರ ಲಕ್ಷ್ಮಣ ಡಿ., ಕಟ್ಟಡ ಸಂಘದ ಅಧ್ಯಕ್ಷ ಚಿಕ್ಕ ಮೊಗವೀರ, ಪದಾಧಿಕಾರಿಗಳಾದ ಕೃಷ್ಣ ಹಂಗ್ಳೂರು, ರೆಹಮಾನ್, ಅಣ್ಣಪ್ಪ ಸುಧೀರ, ರತ್ನಾಕರ್ ಆಚಾರ್ಯ, ನರಸಿಂಹ ದೇವಾಡಿಗ, ಬೀಡಿ ಸಂಘದ ಮಹಾಬಲ ವಡೇರಹೋಬಳಿ, ಆಟೋ ಸಂಘದ ಅಧ್ಯಕ್ಷ ರಮೇಶ್, ಪ್ರಧಾನ ಕಾರ್ಯದರ್ಶಿ ರಾಜು ದೇವಾಡಿಗ, ಪದಾಧಿಕಾರಿ ಗಳಾದ ಕೇಶವ, ಕೃಷ್ಣ ಬಿಸಿ ರಸ್ತೆ, ಜನವಾದಿ ಮಹಿಳಾ ಸಂಘಟನೆಯ ಶೀಲಾವತಿ ಉಪಸ್ಥಿತರಿದ್ದರು.

ವಾರ್ತಾ ಭಾರತಿ 3 Mar 2026 6:10 pm

Bengaluru | ಮನೆಯಲ್ಲಿ ಬೆಂಕಿ ಅವಘಡ: ಮಹಿಳೆ ಸಜೀವ ದಹನ, ಮೂವರ ರಕ್ಷಣೆ

ಬೆಂಗಳೂರು, ಮಾ.3: ಗುತ್ತಿಗೆದಾರರೊಬ್ಬರ ಮನೆಯಲ್ಲಿ ಬೆಂಕಿ ಅವಘಡ ಸಂಭವಿಸಿದ ಪರಿಣಾಮ ಮಹಿಳೆ ಸಜೀವ ದಹನವಾಗಿರುವ ಘಟನೆ ಇಲ್ಲಿನ ಸುಬ್ರಮಣ್ಯನಗರ ಪೊಲೀಸ್ ಠಾಣೆ ವ್ಯಾಪ್ತಿಯ ಗಾಯತ್ರಿ ನಗರದಲ್ಲಿ ವರದಿಯಾಗಿದೆ. ಗುತ್ತಿಗೆದಾರ ರಮೇಶ್‍ಬಾಬು ಎಂಬುವರ ಪತ್ನಿ ಸವಿತಾ(53) ಮೃತಪಟ್ಟ ಮಹಿಳೆ ಎಂದು ಗುರುತಿಸಲಾಗಿದೆ. ಮಾ.2ರ ಸೋಮವಾರ ರಾತ್ರಿ 10 ಗಂಟೆಯ ಸುಮಾರಿಗೆ ಈ ಘಟನೆ ನಡೆದಿದೆ. ಗಾಯತ್ರಿ ನಗರದಲ್ಲಿ ರಮೇಶ್ ಬಾಬು ಅವರಿಗೆ ಸೇರಿದ ನಾಲ್ಕು ಅಂತಸ್ತಿನ ಮನೆ ಇದ್ದು ಮೊದಲ ಹಾಗೂ ಎರಡನೇ ಮಹಡಿಯನ್ನು ಬಾಡಿಗೆಗೆ ಕೊಟ್ಟಿದ್ದಾರೆ. ಮೂರು ಮತ್ತು ನಾಲ್ಕನೇ ಮಹಡಿಯಲ್ಲಿ ರಮೇಶ್‍ಬಾಬು, ಅವರ ಪತ್ನಿ ಸವಿತಾ, ತಾಯಿ ಸಣ್ಣಮ್ಮ ಹಾಗೂ ಮಗ ವಾಸವಾಗಿದ್ದರು. ಮಾ.2ರ ರಾತ್ರಿ 10 ಗಂಟೆ ಸುಮಾರಿನಲ್ಲಿ ಮೂರನೇ ಮಹಡಿಯ ಅಡಿಗೆ ಮನೆಯಲ್ಲಿ ಸವಿತಾ ಅವರು ಅಡಿಗೆ ಮಾಡುತ್ತಿದ್ದಾಗ ದಿಢೀರನೆ ಬೆಂಕಿ ಕಾಣಿಸಿಕೊಂಡಿದೆ ಎನ್ನಲಾಗಿದೆ. ಆ ಸಂದರ್ಭದಲ್ಲಿ ಕುಟುಂಬ ಸದಸ್ಯರೆಲ್ಲರೂ ಮನೆಯಲ್ಲಿದ್ದರು. ನೋಡ ನೋಡುತ್ತಿದ್ದಂತೆ ಬೆಂಕಿಯ ತೀವ್ರತೆ ಹೆಚ್ಚಾಗಿ ಮನೆ ಪೂರ್ತಿ ಆವರಿಸಿಕೊಂಡಿದ್ದು ಮನೆಯವರೆಲ್ಲರೂ ಸಹಾಯಕ್ಕಾಗಿ ಕಿರುಚಾಡಿದ್ದಾರೆ. ಇದನ್ನು ನೆರೆಹೊರೆಯವರು ಗಮನಿಸಿ ತಕ್ಷಣ ಅಗ್ನಿಶಾಮಕ ದಳಕ್ಕೆ ವಿಷಯ ತಿಳಿಸಿದ್ದಾರೆ. ಅಗ್ನಿಶಾಮಕ ಸಿಬ್ಬಂದಿ ವಾಹನದೊಂದಿಗೆ ಸ್ಥಳಕ್ಕೆ ಆಗಮಿಸಿ ಮೂವರನ್ನು ರಕ್ಷಿಸಿದರಾದರೂ ಅಡಿಗೆ ಮನೆಯಲ್ಲಿದ್ದ ಸವಿತಾ ಅವರು ಸಜೀವ ದಹನವಾಗಿದ್ದಾರೆ. ಮೂವರು ಗಾಯಾಳುಗಳನ್ನು ನಗರದ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಬೆಂಕಿ ಅವಘಡಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ. ಘಟನಾ ಸ್ಥಳಕ್ಕೆ ಸುಬ್ರಹಣ್ಯ ನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವಾರ್ತಾ ಭಾರತಿ 3 Mar 2026 6:09 pm

ಟ್ರಾಫಿಕ್ ಚಲನ್ ವಂಚನೆಗಳ ಬಗ್ಗೆ ಗ್ರಾಹಕರನ್ನು ಎಚ್ಚರಿಸಿದ ಐಸಿಐಸಿಐ ಬ್ಯಾಂಕ್

ಇತ್ತೀಚೆಗೆ ದೇಶಾದ್ಯಂತ ಟ್ರಾಫಿಕ್ ಚಲನ್ಗಳ ಮೂಲಕ ವಂಚಕರು ಗ್ರಾಹಕರನ್ನು ಮೋಸಗೊಳಿಸುತ್ತಿರುವ ಬಗ್ಗೆ ಐಸಿಐಸಿಐ ಬ್ಯಾಂಕ್ ಎಚ್ಚರಿಕೆ ನೀಡಿದೆ. ಐಸಿಐಸಿಐ ಬ್ಯಾಂಕ್ ಇತ್ತೀಚೆಗೆ ತನ್ನ ಗ್ರಾಹಕರಿಗೆ ನಕಲಿ ಟ್ರಾಫಿಕ್ ಚಲನ್ ವಂಚನೆಗಳ ವಿರುದ್ಧ ಎಚ್ಚರವಹಿಸುವಂತೆ ಇಮೇಲ್ಗಳನ್ನು ಕಳುಹಿಸಿದೆ. “ವಂಚಕರು ನಿಮ್ಮ ವಾಹನದ ವಿರುದ್ಧ ಟ್ರಾಫಿಕ್ ಚಲನ್ ಬಾಕಿ ಇದೆ ಎಂದು ಹೇಳಿಕೊಂಡು ತಕ್ಷಣವೇ ಹಣ ಪಾವತಿಸುವಂತೆ ಒತ್ತಾಯಿಸುತ್ತಾರೆ. ಈ ಸಂದೇಶಗಳು ಭಯಭೀತರಾಗಲು ಮತ್ತು ದುರುದ್ದೇಶಪೂರಿತ ಲಿಂಕ್ಗಳನ್ನು ಕ್ಲಿಕ್ ಮಾಡಲು ಅಥವಾ ಅನಧಿಕೃತ ಪಾವತಿಗಳನ್ನು ಮಾಡಲು ಮೋಸಗೊಳಿಸುವಂತೆ ವಿನ್ಯಾಸಗೊಳಿಸಲಾಗಿದೆ” ಎಂದು ಇಮೇಲ್ನಲ್ಲಿ ವಿವರವಿದೆ. ಅಲ್ಲದೆ ವಿವರವಾದ ಎಚ್ಚರಿಕೆಯನ್ನೂ ಇಮೇಲ್ ನೀಡಿದೆ. ಗ್ರಾಹಕರು ಯಾವುದೇ ಲಿಂಕ್ಗಳನ್ನು ಕ್ಲಿಕ್ ಮಾಡುವ ಮೊದಲು ಎಚ್ಚರವಹಿಸುವಂತೆ ಸೂಚಿಸಿದೆ. ಇಮೇಲ್ ವಿವರ ಈ ಕೆಳಗಿನಂತಿದೆ: ನಂಬಿಕೆಯನ್ನು ಗಳಿಸಲು ನಿಜವಾದಂತೆ ತೋರುವ ಸಣ್ಣ ಪಾವತಿಸಬಹುದಾದ ಮೊತ್ತವನ್ನು ಪ್ರದರ್ಶಿಸುತ್ತದೆ. ಹಾಗಿದ್ದರೂ, ಕಾರ್ಡ್ ವಿವರಗಳು ಮತ್ತು ಒಟಿಪಿ ನಮೂದಿಸಿದ ನಂತರ ನಿಜವಾದ ವಹಿವಾಟನ್ನು ಗಮನಾರ್ಹವಾಗಿ ಹೆಚ್ಚಿನ ಮೊತ್ತಕ್ಕೆ ಪ್ರಕ್ರಿಯೆಗೊಳಿಸಲಾಗುತ್ತದೆ. ಹೀಗೆ ದೊಡ್ಡ ಮೊತ್ತವನ್ನು ಕಳೆದುಕೊಳ್ಳುವ ಸಾಧ್ಯತೆ ಹೆಚ್ಚಾಗಿರುತ್ತದೆ, ಟ್ರಾಫಿಕ್ ಚಲನ್ ಸಂದೇಶಗಳ ಬಗ್ಗೆ ಎಚ್ಚರವಾಗಿರಿ! ಈ ಚಲನ್ ವಂಚನೆ ಲಿಂಕ್ಗಳ ಮೇಲೆ ಕ್ಲಿಕ್ ಮಾಡುವುದು ಅಥವಾ ಅವುಗಳ ಮೂಲಕ ಹಣ ಪಾವತಿ ಮಾಡುವುದು ಈ ಕೆಳಗಿನ ಸಮಸ್ಯೆಗಳಿಗೆ ಕಾರಣವಾಗಬಹುದು: • ವ್ಯಕ್ತಿಗತ ವಿವರ ಮತ್ತು ಕಾರ್ಡ್ ವಿವರಗಳ ಕಳ್ಳತನ • ಅನಧಿಕೃತ ಡೆಬಿಟ್ ವ್ಯವಹಾರಗಳು • ನಿಮ್ಮ ಮೊಬೈಲ್ನಲ್ಲಿ ಮಾಲ್ವರೆ ಸ್ಥಾಪನೆಯಾಗಬಹುದು • ಅಧಿಕೃತ ಚಲನ್ಗಳನ್ನು ಅಧಿಕೃತ ಸರ್ಕಾರಿ ಪೋರ್ಟಲ್ಗಳು ಮತ್ತು ಅಧಿಕೃತ ಸಂವಹನ ಮೂಲಗಳ ಮೂಲಕವೇ ವಿಧಿಸಲಾಗುತ್ತದೆ. ರಕ್ಷಣೆ ಪಡೆಯುವುದು ಹೇಗೆ? • ಟ್ರಾಫಿಕ್ ಚಲನ್ಗಳನ್ನು ಕ್ಲೇಮ್ ಮಾಡಲು ಬಾಕಿ ಇರುವ ಎಸ್ಎಂಎಸ್ ಸಂದೇಶಗಳ ಮೂಲಕ ಸ್ವೀಕರಿಸಿದ ಲಿಂಕ್ಗಳ ಮೇಲೆ ಕ್ಲಿಕ್ ಮಾಡಬೇಡಿ. • ಕಾನೂನು ಕ್ರಮದ ಒತ್ತಡ ಅಥವಾ ಬೆದರಿಕೆಗಳಿಗಾಗಿ ಹಣ ಪಾವತಿಸಲು ಹೋಗಬೇಡಿ. • ಅಧಿಕೃತ ಸರ್ಕಾರಿ ವೆಬ್ತಾಣಗಳು ಅಥವಾ ಅಪ್ಲಿಕೇಶನ್ಗಳ ಮೂಲಕ ಚಲನ್ ಅನ್ನು ಪರಿಶೀಲಿಸಿ. • ಕಾರ್ಡ್ ವಿವರಗಳು, ಒಟಿಪಿಗಳು, ಸಿವಿವಿ ಅಥವಾ ವೈಯಕ್ತಿಕ ಮಾಹಿತಿಯನ್ನು ಎಂದಿಗೂ ಹಂಚಿಕೊಳ್ಳಬೇಡಿ. • ಸಂಕ್ಷಿಪ್ತ ಲಿಂಕ್ಗಳು ಅಥವಾ ತುರ್ತು ಪಾವತಿ ಗಡುವನ್ನು ಹೊಂದಿರುವ ಸಂದೇಶಗಳನ್ನು ನಿರ್ಲಕ್ಷಿಸಿ ವಂಚನೆಯ ಬಗ್ಗೆ ವರದಿ ಮಾಡಿ ನೀವು ಆನ್ಲೈನ್ ವಂಚನೆಗೆ ಸಿಲುಕಿದ ಸಂತ್ರಸ್ತರಾಗಿದ್ದಲ್ಲಿ, ರಾಷ್ಟ್ರೀಯ ಸೈಬರ್ ಕ್ರೈಮ್ ಪೋರ್ಟಲ್ಗೆ cybercrime.gov.in ವರದಿ ಮಾಡಿ. ರಾಷ್ಟ್ರೀಯ ಸಹಾಯವಾಣಿಗಾಗಿ 1930 ಗೆ ಕರೆ ಮಾಡಿ ಮತ್ತು ಐಸಿಐಸಿಐ ಬ್ಯಾಂಕ್ ಸಹಾಯವಾಣಿಗಾಗಿ 1800 2662 ಗೆ ಕರೆಮಾಡಿ. ಇದನ್ನು ನೆನಪಿಡಬೇಕು • ಅಪರಿಚಿತ ವ್ಯಕ್ತಿಯಿಂದ ಸ್ವೀಕರಿಸಿದ ಯಾವುದೇ ಲಿಂಕ್ಗಳನ್ನು ಕ್ಲಿಕ್ ಮಾಡಬೇಡಿ. • ಯಾವುದೇ ರಹಸ್ಯ/ಸೂಕ್ಷ್ಮ ಮಾಹಿತಿಯನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ. • ನೀವು ಯಾವುದೇ ಶಂಕಿತ ಎಸ್ಎಂಎಸ್, ಇಮೇಲ್ ಅಥವಾ ಕರೆಯನ್ನು ಸ್ವೀಕರಿಸಿದಲ್ಲಿ sancharsaathi.gov.in ವೆಬ್ತಾಣಕ್ಕೆ ಹೋಗಿ ದಯವಿಟ್ಟು ಸಂಚಾರ್ ಸಾಥಿಯಲ್ಲಿ ದೂರು ಸಲ್ಲಿಸಬೇಕು. ಅಥವಾ ಐಸಿಐಸಿಐ ಬ್ಯಾಂಕ್ಗೆ ದೂರು ನೀಡುವುದಾದಲ್ಲಿ antiphishing@icicibank.com ಗೆ ದೂರು ಸಲ್ಲಿಸಬೇಕು, • ವಂಚನೆಗಳ ಬಗ್ಗೆ ಮಾಹಿತಿ ಹೊಂದಿರಿ ಮತ್ತು ಪ್ರೀತಿಪಾತ್ರರಿಗೆ ವಂಚನೆಯ ಬಗ್ಗೆ ಎಚ್ಚರಿಕೆ ನೀಡಿ.

ವಾರ್ತಾ ಭಾರತಿ 3 Mar 2026 6:04 pm

ಕನಕಗಿರಿ | ಕನಕಾಚಲಪತಿ ರಥೋತ್ಸವಕ್ಕೆ ಮೂಲ ಸೌಲಭ್ಯಕ್ಕೆ ಆದ್ಯತೆ ನೀಡಲು ಸೂಚನೆ

ಕನಕಗಿರಿ: ಮಾ.11ರಂದು ನಡೆಯಲಿರುವ ಕನಕಾಚಲಪತಿ ರಥೋತ್ಸವದ ಹಿನ್ನೆಲೆಯಲ್ಲಿ ಕುಡಿಯುವ ನೀರು, ಬೀದಿ ದೀಪ ಹಾಗೂ ಸ್ವಚ್ಛತೆಗೆ ಆದ್ಯತೆ ನೀಡುವಂತೆ ಪಟ್ಟಣ ಪಂಚಾಯಿತಿ ಸದಸ್ಯರು ಮುಖ್ಯಾಧಿಕಾರಿ ಲಕ್ಷ್ಮಣ ಕಟ್ಟಿಮನಿ ಅವರಿಗೆ ಸೂಚಿಸಿದರು. ಪಟ್ಟಣ ಪಂಚಾಯಿತಿ ಅಧ್ಯಕ್ಷೆ ತನುಶ್ರೀ ಟಿ.ಜೆ. ರಾಮಚಂದ್ರ ಅವರ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ಸಾಮಾನ್ಯ ಸಭೆಯಲ್ಲಿ ಸದಸ್ಯರಾದ ಶರಣೆಗೌಡ ಪಾಟೀಲ, ನೂರುಸಾಬ್ ಗಡ್ಡಿಗಾಲ, ರಾಜಾಸಾಬ್ ನಂದಾಪುರ ಅವರು ಭಕ್ತರಿಗೆ ಅಗತ್ಯ ಮೂಲಸೌಲಭ್ಯ ಕಲ್ಪಿಸಬೇಕೆಂದು ಆಗ್ರಹಿಸಿದರು. ಪುಷ್ಕರಣಿ, ಎಪಿಎಂಸಿ ಆವರಣ, ಪೊಲೀಸ್ ವಸತಿ ಗೃಹ, ಚಿದಾನಂದ ಮಠ ಸೇರಿದಂತೆ ಭಕ್ತರು ತಂಗುವ ಸ್ಥಳಗಳಲ್ಲಿ ಕುಡಿಯುವ ನೀರು, ಬೆಳಕು ಹಾಗೂ ಸ್ವಚ್ಛತೆ ವ್ಯವಸ್ಥೆ ಮಾಡಬೇಕು. ತಾಪಂ ಇಒ ಹಾಗೂ ತಹಶೀಲ್ದಾರ್ ಸೇರಿದಂತೆ ಸಂಬಂಧಿತ ಅಧಿಕಾರಿಗಳ ಸಹಕಾರ ಪಡೆದು ಜನರಿಗೆ ಅನುಕೂಲ ಕಲ್ಪಿಸಬೇಕೆಂದು ಹೇಳಿದರು. ರಥೋತ್ಸವದ ನಿಮಿತ್ತ ಪ್ರತಿದಿನ ಉತ್ಸವ ಮೆರವಣಿಗೆ ನಡೆಯುತ್ತಿರುವುದರಿಂದ ರಾಜಬೀದಿಯಲ್ಲಿ ಆಯಾ ಸಮಯಕ್ಕೆ ನೀರು ಹರಿಸಿ ಧೂಳು ನಿಯಂತ್ರಿಸಬೇಕೆಂದು ತಿಳಿಸಿದರು. ಕೆಲ ವಾರ್ಡ್‌ಗಳಲ್ಲಿ ಕುಡಿಯುವ ನೀರು ಪೋಲಾಗುತ್ತಿರುವ ಬಗ್ಗೆ ಸದಸ್ಯರು ಆಕ್ರೋಶ ವ್ಯಕ್ತಪಡಿಸಿ, ನೀರು ವ್ಯರ್ಥ ಮಾಡುವ ಮನೆ ಮಾಲೀಕರಿಗೆ ನೋಟಿಸ್ ನೀಡುವಂತೆ ಸೂಚಿಸಿದರು. ಸಂಘ-ಸಂಸ್ಥೆ ಹಾಗೂ ಸಮಾಜಗಳಿಗೆ ಸಿಎ ನಿವೇಶನ ನೀಡಲು ಸಭೆ ಒಪ್ಪಿಗೆ ಸೂಚಿಸಿತು. ಅಮೃತ ಯೋಜನೆ ಕಾಮಗಾರಿಗೆ ಗುತ್ತಿಗೆದಾರ ತರಾಟೆ : ಪಟ್ಟಣದಲ್ಲಿ 202 ಕೋಟಿ ರೂ. ವೆಚ್ಚದಲ್ಲಿ ನಡೆಯುತ್ತಿರುವ ಅಮೃತ ನಗರೋತ್ಥಾನ ಯೋಜನೆಯ ಶುದ್ಧ ಕುಡಿಯುವ ನೀರಿನ ಕಾಮಗಾರಿ ಸಮರ್ಪಕವಾಗಿ ನಡೆಯುತ್ತಿಲ್ಲವೆಂದು ಸದಸ್ಯರು ಆರೋಪಿಸಿದರು. ಪೈಪ್‌ಲೈನ್ ಕೆಲಸ ಮುಗಿದ ಸ್ಥಳಗಳಲ್ಲಿ ಕಾಂಕ್ರೀಟ್ ಮತ್ತು ಫೇವರ್ಸ್ ಅಳವಡಿಸುವುದಾಗಿ ಹೇಳಿದ ಅಧಿಕಾರಿಗಳು ಕಾಣಿಸಿಕೊಳ್ಳುತ್ತಿಲ್ಲ. ತೆಗ್ಗು-ಉಬ್ಬು ಪ್ರದೇಶಗಳಲ್ಲಿ ಜನರು ಬಿದ್ದು ಗಾಯಗೊಂಡಿದ್ದಾರೆ. ಇದಕ್ಕೆ ಯಾರು ಹೊಣೆ ಎಂದು ನಾಮನಿರ್ದೇಶಕ ಸದಸ್ಯ ಗಂಗಾಧರ ಚೌಡ್ಕಿ ಸೇರಿದಂತೆ ಇತರರು ಪ್ರಶ್ನಿಸಿದರು. ಕಾಮಗಾರಿ ಆರಂಭದಲ್ಲಿ ತೋರಿದ ಉತ್ಸಾಹ ಈಗ ಕಾಣುತ್ತಿಲ್ಲ. ಕಾಮಗಾರಿ ಅವಧಿ ಸಮೀಪಿಸುತ್ತಿದ್ದರೂ ವೇಗ ಪಡೆಯುತ್ತಿಲ್ಲ ಎಂದು ಸದಸ್ಯ ರಾಜಾಸಾಬ್ ನಂದಾಪುರ ಆಕ್ರೋಶ ವ್ಯಕ್ತಪಡಿಸಿದರು. ಜಾತ್ರೆ ನಿಮಿತ್ತ ಕೆಲಸ ಸ್ಥಗಿತಗೊಳಿಸಲಾಗಿದೆ ಎಂದು ಗುತ್ತಿಗೆದಾರರು ಉತ್ತರಿಸಿದರು. ಈ ವೇಳೆ ಎಂಜಿನಿಯರ್ ಹಾಗೂ ಗುತ್ತಿಗೆದಾರರ ಮಧ್ಯೆ ಚರ್ಚೆ ನಡೆಯಿತು. ಕುಡಿಯುವ ನೀರು ಸರಬರಾಜು ಇಲಾಖೆಯ ಅಧಿಕಾರಿಗಳ ಗೈರುಹಾಜರಿಯಲ್ಲಿ ಗುತ್ತಿಗೆದಾರ ಉತ್ತರ ನೀಡಿದುದು ಸದಸ್ಯರ ಅಸಮಾಧಾನಕ್ಕೆ ಕಾರಣವಾಯಿತು. ಮುಖ್ಯಾಧಿಕಾರಿ ಲಕ್ಷ್ಮಣ ಕಟ್ಟಿಮನಿ ಅವರು ಸದಸ್ಯರ ಸಲಹೆಗಳನ್ನು ಸ್ವೀಕರಿಸಿ ಜಾತ್ರೆ ಯಶಸ್ವಿಗೊಳಿಸಲು ಎಲ್ಲರ ಸಹಕಾರ ಕೋರಿದರು. ಸಭೆಯಲ್ಲಿ ಅಧ್ಯಕ್ಷೆ ತನುಶ್ರೀ ಟಿ.ಜೆ. ರಾಮಚಂದ್ರ, ಸದಸ್ಯರಾದ ಹುಸೇನಬೀ ಚಳ್ಳಮರದ, ಸೈನಾಜಬೇಗಂ ಹಾಗೂ ನಾಮನಿರ್ದೇಶಕ ಸದಸ್ಯ ಹನುಮೇಶ ಹಡಪದ ಉಪಸ್ಥಿತರಿದ್ದರು. ಕೋರ್ಂ ಕೊರತೆ – ಎರಡು ಗಂಟೆ ವಿಳಂಬ ಹಿಂದಿನ ಸಭೆಯಲ್ಲಿ ಕೋರ್ಂ ಕೊರತೆಯಿಂದ ಸಭೆ ಮುಂದೂಡಲಾಗಿತ್ತು. ಈ ಸಲವೂ ಬೆಳಿಗ್ಗೆ 11 ಗಂಟೆಗೆ ನಿಗದಿಯಾಗಿದ್ದ ಸಭೆ 12.30ರವರೆಗೆ ಆರಂಭವಾಗಲಿಲ್ಲ. ಅಧ್ಯಕ್ಷೆ ಸೇರಿದಂತೆ ಐವರು ಮಾತ್ರ ಹಾಜರಾಗಿದ್ದರಿಂದ ಸಭೆ ನಡೆಯಲು ಅಗತ್ಯವಿದ್ದ ಆರು ಸದಸ್ಯರ ಸಂಖ್ಯೆಯ ಕೊರತೆ ಉಂಟಾಯಿತು. ನಂತರ ಬೆಂಬಲಿಗ ಸದಸ್ಯರೊಬ್ಬರು ಸದಸ್ಯೆ ಹುಸೇನಬೀ ಅವರ ಮನೆಯಲ್ಲಿ ತೆರಳಿ ಅವರನ್ನು ಸಭೆಗೆ ಕರೆತಂದ ಬಳಿಕ ಸಭೆ ಆರಂಭವಾಯಿತು.

ವಾರ್ತಾ ಭಾರತಿ 3 Mar 2026 6:03 pm

ನಿಮ್ಮ ನಡಿಗೆ ಕೊಬ್ಬು ಕರಗಿಸುತ್ತಿದೆಯೆ? ತಿಳಿದುಕೊಳ್ಳುವುದು ಹೇಗೆ?

ಸಕ್ರಿಯವಾಗಿರಲು ಇರುವ ಮೂಲಭೂತ ಆರೈಕೆ ನಡಿಗೆ ಎನ್ನುವ ಕಾರಣಕ್ಕೆ ಒಂದರ ಮೇಲೆ ಮತ್ತೊಂದು ಹೆಜ್ಜೆ ಇಡುವುದರಿಂದ ನೀವು ಕ್ಯಾಲರಿ ಕಡಿತಗೊಳಿಸಲು ಸಾಧ್ಯವಿಲ್ಲ! ಜಡವಾಗಿ ಕುಳಿತ ಜೀವನಶೈಲಿಯಲ್ಲಿ ಸಕ್ರಿಯವಾಗಿರಲು ಮೂಲಭೂತ ವ್ಯಾಯಾಮವೆಂದರೆ ನಡಿಗೆ. ಗುರಿ ಇರಿಸಿರುವ ಸಂಖ್ಯೆಯ ಹೆಜ್ಜೆಗಳನ್ನು ಸಾಧಿಸುವುದು ಫಿಟ್ನೆಸ್ ಕಾಪಾಡುವ ಗುರಿಯಾಗಿರುತ್ತದೆ. ಆದರೆ ನಡಿಗೆಯಿಂದ ನೀವು ನಿಜವಾಗಿಯೂ ತೂಕ ಇಳಿಸಿಕೊಳ್ಳುತ್ತಿದ್ದೀರಾ? ಫಿಟ್ನೆಸ್ ತಜ್ಞರು ನಡಿಗೆ ಮುಖ್ಯವಾದ ವ್ಯಾಯಾಮವೆಂದು ಶಿಫಾರಸು ಮಾಡುತ್ತಾರೆ ಮತ್ತು ಸಕ್ರಿಯವಾಗಿರಲು ಇರುವ ಮೂಲಭೂತ ಆರೈಕೆ ನಡಿಗೆ ಎನ್ನುವ ಕಾರಣಕ್ಕೆ ಒಂದರ ಮೇಲೆ ಮತ್ತೊಂದು ಹೆಜ್ಜೆ ಇಡುವುದರಿಂದ ನೀವು ಕ್ಯಾಲರಿ ಕಡಿತಗೊಳಿಸಲು ಸಾಧ್ಯವಿಲ್ಲ! ಫೆಬ್ರವರಿ 25ರ ಪೋಸ್ಟ್ನಲ್ಲಿ ಫಿಟ್ನೆಸ್ ತರಬೇತುದಾರ ಬಾಬಿ ಹೇಳಿರುವ ಪ್ರಕಾರ, ಬಹಳಷ್ಟು ಮಂದಿ ನಡಿಗೆಯಲ್ಲಿ ವೇಗ ಮತ್ತು ತೀವ್ರತೆಯನ್ನು ಕೈಬಿಟ್ಟು ನಡೆಯುವಾಗ ನಿಜವಾಗಿಯೂ ಕೊಬ್ಬನ್ನು ಕರಗಿಸುತ್ತಾರೆಯೇ ಎನ್ನುವ ಸಂಶಯ ಬರುತ್ತದೆ. ನಡಿಗೆಯಿಂದ ಕೊಬ್ಬನ್ನು ಕಳೆದುಕೊಳ್ಳುವ ವಿಷಯಕ್ಕೆ ಬಂದಾಗ ಜನರು ಮರೆತುಬಿಡುವ ಎರಡು ವಿಷಯಗಳಿವು. https://www.instagram.com/reel/DVH3XgMjMDd/?utm_source=ig_web_copy_link ನಡಿಗೆ ಮಾತ್ರದಿಂದ ಕೊಬ್ಬು ಏಕೆ ಕರಗುವುದಿಲ್ಲ? ಬಾಬಿ ಅವರು ಹೇಳುವ ಪ್ರಕಾರ ನಡಿಗೆ ಮಾತ್ರ ಸಾಕಾಗುವುದಿಲ್ಲ. ಮುಖ್ಯವಾಗಿ ವೇಗ ಮುಖ್ಯವಾಗುತ್ತದೆ. “ಬಹಳಷ್ಟು ಮಂದಿ ನಿತ್ಯವೂ ನಡೆಯುತ್ತಾರೆ. ಆದರೆ ಕೊಬ್ಬು ಕರಗುವುದಿಲ್ಲ. ಏಕೆಂದರೆ ಅವರು ಬಹಳ ಮೆಲ್ಲಗೆ ನಡೆಯುತ್ತಾರೆ. ಹೃದಯದ ದರ ಏರಿಕೆಯಾಗುವುದಿಲ್ಲ. ಕೊಬ್ಬನ್ನು ಪರಿಣಾಮಕಾರಿಯಾಗಿ ಕರಗಿಸಲು ನೀವು ವಲಯ 2ಗೆ ಹೋಗಬೇಕು. ಅದೆಂದರೆ ಹೆಚ್ಚುವರಿ ಕೊಬ್ಬು ಕಳೆಯುವ ವಲಯ. ನಿಮ್ಮ ನಡಿಗೆ ಸರಳವಾದ ನಡಿಗೆಯಾಗಿದ್ದಲ್ಲಿ, ಹೃದಯದ ದರ ಕಡಿಮೆಯಾಗಿರುತ್ತದೆ. ಹೀಗಾಗಿ ಸಂಗ್ರಹಿತವಾಗಿರುವ ಕೊಬ್ಬನ್ನು ಕರಗಿಸಲು ನಿಮಗೆ ಸಾಧ್ಯವಾಗುವುದಿಲ್ಲ.” ವಲಯ 2 ಎಂದರೇನು? ವಲಯ 2ರಲ್ಲಿ ಕೊಬ್ಬು ಸಂಗ್ರಹವಾಗಿರುತ್ತದೆ. ಅದನ್ನು ತೆಗೆಯಲು ನಿಮ್ಮ ಹೃದಯದ ದರ ನಿರ್ದಿಷ್ಟ ಘಟ್ಟದಲ್ಲಿರುವಂತೆ ನೀವು ವೇಗದ ನಡಿಗೆ ನಡೆಯಬೇಕು. ಆದರೆ ಸುಮ್ಮನೆ ಅಡ್ಡಾಡಿದರೆ ಹೃದಯದ ದರ ಕೊಬ್ಬಿನ ವಲಯವನ್ನು ತೆಗೆಯುವಂತಹ ಮಟ್ಟಕ್ಕೆ ತಲುಪುವುದಿಲ್ಲ. ಬಹಳಷ್ಟು ಮಂದಿ ಹೆಜ್ಜೆಯ ಲೆಕ್ಕಾಚಾರವನ್ನು ಇಡುತ್ತಾರೆಯೇ ವಿನಾ ಹಾಕಿದ ಹೆಜ್ಜೆಯ ವೇಗವನ್ನು ಲೆಕ್ಕ ಹಾಕುವುದಿಲ್ಲ. ನಿಮ್ಮ ದೇಹಕ್ಕೆ ಬೆಚ್ಚನೆಯ ಅನುಭವವಾಗುವುದು ಅಥವಾ ಉಸಿರಾಟ ಭಾರವಾದಾಗ ನಿಜವಾಗಿಯೂ ಕೊಬ್ಬು ಕರಗಿಸುವ ವಲಯಕ್ಕೆ ಬಂದಿದ್ದೀರಿ ಎಂದು ಅರ್ಥ ಮಾಡಿಕೊಳ್ಳಬೇಕು. ಕೊಬ್ಬು ಕರಗಿಸುವ ನಡಿಗೆ ಹೇಗಿರುತ್ತದೆ? ನಿತ್ಯದ ಸಾಮಾನ್ಯ ನಡಿಗೆ ಮತ್ತು ಕೊಬ್ಬು ಕರಗಿಸುವ ನಡಿಗೆಯ ನಡುವೆ ವ್ಯತ್ಯಾಸವಿದೆ. ವೇಗದ ನಡಿಗೆಯ ನಡುವೆ ನೀವು ಮಾತನಾಡಬಹುದು ಆದರೆ ಹಾಡಲು ಸಾಧ್ಯವಾಗುವುದಿಲ್ಲ. ಅಂದರೆ ನಿಮ್ಮ ದೇಹಕ್ಕೆ ಬೆಚ್ಚನೆಯ ಅನುಭವವಾಗುವುದು ಅಥವಾ ಉಸಿರಾಟ ಭಾರವಾದಾಗ ನಿಜವಾಗಿಯೂ ಕೊಬ್ಬು ಕರಗಿಸುವ ವಲಯಕ್ಕೆ ಬಂದಿದ್ದೀರಿ. ಮಾತು ಮತ್ತು ಹಾಡು ನಡುವೆ ವ್ಯತ್ಯಾಸ ಮುಖ್ಯವಾಗುತ್ತದೆ. ಶಿಫಾರಸು ಮಾಡಲಾಗಿರುವ ವೇಗವೆಷ್ಟು? ಸರಾಸರಿ ವ್ಯಕ್ತಿಗೆ ಶಿಫಾರಸು ಮಾಡಿದ ವೇಗವು ಗಂಟೆಗೆ 2.8ರಿಂದ 3.8 ಮೈಲಿಯಷ್ಟಿರುತ್ತದೆ. ಆದರೆ ನಿಮ್ಮ ಹೃದಯದ ದರ ನಿಜವಾಗಿಯೂ ಸ್ಪಷ್ಟ ಸೂಚಕವಾಗಿರುತ್ತದೆ. ಸಾಮಾನ್ಯವಾಗಿ ನಡೆಯುವ ವೇಗಕ್ಕಿಂತ ಸ್ವಲ್ಪ ಹೆಚ್ಚು ವೇಗದಲ್ಲಿ ನಡೆದು ನೋಡಿದರೆ ನಿಮಗೆ ಸವಾಲು ಎದುರಾಗುವ ಅನುಭವವಾಗುತ್ತದೆ. ಅಂದರೆ ನೀವು ಸಾಮಾನ್ಯ ವೇಗದಲ್ಲಿ ನಡೆಯುತ್ತಿದ್ದರೆ ದೇಹವನ್ನು ಕೊಬ್ಬು ಕರಗಿಸುವ ವಲಯಕ್ಕೆ ತಂದಿಲ್ಲ ಎಂದುಕೊಳ್ಳಬೇಕು. ನಡಿಗೆಯಲ್ಲಿ ಸ್ವತಃ ಸವಾಲು ಎದುರಿಸಬೇಕು. ಉದ್ಯಾನವನದಲ್ಲಿ ನಿಧಾನವಾಗಿ ನಡೆದಲ್ಲಿ 10,000 ಹೆಜ್ಜೆ ಹಾಕಿದರೂ ಪ್ರಯೋಜನಕ್ಕೆ ಬಾರದು ಎನ್ನುತ್ತಾರೆ ಬಾಬಿ.

ವಾರ್ತಾ ಭಾರತಿ 3 Mar 2026 5:57 pm

Bengaluru | ತಪಾಸಣೆ ನಡೆಸದೆ 10,210 ವಾಹನಗಳಿಗೆ ಎಫ್‍ಸಿ ನೀಡಿದ ಆರೋಪ: ನಿವೃತ್ತ ಮೋಟಾರ್ ವಾಹನ ನಿರೀಕ್ಷಕನ ವಿರುದ್ಧ ಎಫ್‍ಐಆರ್ ದಾಖಲು

ಬೆಂಗಳೂರು : ತಪಾಸಣೆ ನಡೆಸದೆ ಮಹಾರಾಷ್ಟ್ರ ಹಾಗೂ ಗುಜರಾತ್ ಸೇರಿದಂತೆ ರಾಜ್ಯದ 10,210 ವಾಹನಗಳಿಗೆ ಅರ್ಹತಾ ಪತ್ರ(ಫಿಟ್‍ನೆಸ್ ಸರ್ಟಿಫಿಕೇಟ್) ನೀಡಿದ ಆರೋಪದಡಿ ನಿವೃತ್ತ ಮೋಟಾರ್ ವಾಹನ ನಿರೀಕ್ಷಕನ ವಿರುದ್ಧ ಎಚ್‍ಎಸ್‍ಆರ್ ಲೇಔಟ್ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದೆ. ಬೆಂಗಳೂರು ಕೇಂದ್ರ ಪ್ರಾದೇಶಿಕ ಸಾರಿಗೆ ಇಲಾಖೆ ಅಧಿಕಾರಿ ಎಲ್.ದೀಪಕ್ ಎಂಬುವರು ನೀಡಿದ ದೂರಿನನ್ವಯ ನಿವೃತ್ತ ಅಧಿಕಾರಿ ನಿಸಾರ್ ಅಹ್ಮದ್ ವಿರುದ್ಧ ಎಚ್‍ಎಸ್‍ಆರ್ ಲೇಔಟ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿರುವುದಾಗಿ ತಿಳಿಸಿದ್ದಾರೆ. ದೂರಿನ ವಿವರ: ಎಂಟು ವರ್ಷಗಳಿಂದ ಮೋಟಾರು ವಾಹನ ನಿರೀಕ್ಷಕರಾಗಿ ಕೆಲಸ ಮಾಡುತ್ತಿರುವ ನಿಸಾರ್ ಅಹ್ಮದ್ ಅವರು ವಯೋ ಸಹಜದಿಂದ 2026ರ ಜ.31ರಂದು ನಿವೃತ್ತಿ ಹೊಂದಿದ್ದರು. 2025ರ ಆಗಸ್ಟ್ 1ರಿಂದ 2026ರ ಜ.31ರವರೆಗೆ ಹೊರರಾಜ್ಯದ ಸುಮಾರು 10,210 ವಾಹನಗಳನ್ನು ಭೌತಿಕವಾಗಿ ಖುದ್ದು ತೆರಳಿ ತಪಾಸಣೆ ನಡೆಸದೆ ವಾಹನಗಳಿಗೆ ಎಫ್‍ಸಿ ನೀಡಿರುವುದಾಗಿ ವಕೀಲ ನಟರಾಜ್ ಶರ್ಮಾ ದೂರು ನೀಡಿದ್ದರು ಎಂದು ಎಫ್‍ಐಆರ್‍ನಲ್ಲಿ ದೀಪಕ್ ಅವರು ಉಲ್ಲೇಖಿಸಿದ್ದಾರೆ. ಈ ದೂರು ಆಧರಿಸಿ ಸಾರಿಗೆ ಆಯುಕ್ತರು ವಾಹನ್ ತಂತ್ರಾಂಶದಲ್ಲಿ ಲಭ್ಯವಿರುವ 10,210 ವಾಹನಗಳ ಮಾಹಿತಿ ಪರಿಶೀಲಿಸಿದಾಗ ತಪಾಸಣೆ ನಡೆಸದೆ ನಿಸಾರ್ ಅಹ್ಮದ್ ಅವರು ಎಫ್‍ಸಿ ನೀಡಿರುವುದು ಕಂಡುಬಂದಿದೆ. ಈ ರೀತಿ ವಾಹನಗಳನ್ನು ಭೌತಿಕವಾಗಿ ಪರಿಶೀಲಿಸದೆ ಎಫ್‍ಸಿ ನೀಡಿ ಇಲಾಖೆಗೆ ನಂಬಿಕೆದ್ರೋಹ ಹಾಗೂ ವಾಹನ ಮಾಲಕರೊಂದಿಗೆ ಸೇರಿ ಮೋಸ ಮಾಡಿರುವ ಹಿನ್ನೆಲೆಯಲ್ಲಿ ನಿಸಾರ್ ಅಹ್ಮದ್ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ವಾರ್ತಾ ಭಾರತಿ 3 Mar 2026 5:55 pm

ಸೋಮೇಶ್ವರದ ಯುವಕ ಒಮಾನ್‌ನಲ್ಲಿ ಆತ್ಮಹತ್ಯೆ

ಉಳ್ಳಾಲ: ಒಮಾನ್ ನಲ್ಲಿ ಉದ್ಯೋಗದಲ್ಲಿದ್ದ ಸೋಮೇಶ್ವರ ನಿವಾಸಿ ಯುವಕನೋರ್ವ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಿಗ್ಗೆ ನಡೆದಿದೆ. ಸೋಮೇಶ್ವರ ನಿವಾಸಿಗಳಾದ ಚಂದ್ರ ಮತ್ತು ದೀಪಾ ದಂಪತಿಯ ಪುತ್ರ ಪುನೀತ್ ಪೂಜಾರಿ (32) ಆತ್ಮಹತ್ಯೆ ಮಾಡಿಕೊಂಡ ಯುವಕ ಎಂದು ಗುರುತಿಸಲಾಗಿದೆ. ಪುನೀತ್ ಕಳೆದ ಒಂದೂವರೆ ವರ್ಷಗಳಿಂದ ಒಮಾನ್ ನಲ್ಲಿ ಲಿಫ್ಟ್ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಕಳೆದ ಒಂದೂವರೆ ತಿಂಗಳ ಹಿಂದಷ್ಟೆ ಊರಿಗೆ ಬಂದಿದ್ದ ಪುನೀತ್ ಮತ್ತೆ ಒಮಾನ್‌ಗೆ ಮರಳಿದ್ದರು. ಇವರು ಕಳೆದ ನಾಲ್ಕು ವರ್ಷಗಳಿಂದ ನಗರದ ಉರ್ವಾ ನಿವಾಸಿ ಯುವತಿಯನ್ನು ಪ್ರೀತಿಸುತ್ತಿದ್ದರು. ಇತ್ತೀಚಿನ ದಿನಗಳಲ್ಲಿ ಯುವತಿ ಪುನೀತ್ ನ ಫೋನ್ ಕರೆಗಳನ್ನು ಸ್ವೀಕರಿಸದೇ, ಸಂದೇಶಗಳಿಗೂ ಪ್ರತಿಕ್ರಿಯೆ ನೀಡದೇ ಪ್ರೀತಿಯನ್ನು ನಿರಾಕರಿಸುತ್ತಿದ್ದಳು ಎನ್ನಲಾಗಿದೆ. ಇದರಿಂದ ನೊಂದ ಪುನೀತ್ ಸಾಮಾಜಿಕ ಜಾಲತಾಣದಲ್ಲಿ ಲೈವ್ ವಿಡಿಯೋ ನಡೆಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ತಿಳಿದುಬಂದಿದೆ. ಮೃತ ಪುನೀತ್ ತಂದೆ-ತಾಯಿ, ಸಹೋದರ ಹಾಗೂ ಸಹೋದರಿಯನ್ನು ಅಗಲಿದ್ದಾರೆ.

ವಾರ್ತಾ ಭಾರತಿ 3 Mar 2026 5:54 pm

ಭಾರತ ಮೂಲದ 100 ಪೈಲಟ್‌ಗಳ ರಕ್ಷಣೆ, ತಾಯ್ನಾಡಿಗೆ ಮರಳುತ್ತಿರುವ ವಿಮಾನ ಚಾಲಕರು | Operation Roaring Lion

ಇಂಧನ ಪೂರೈಕೆ ಮೂಲಕ ಭಾರಿ ಪ್ರಮಾಣದಲ್ಲಿ ಹಣ ಸಂಪಾದನೆ ಮಾಡಿ ಶ್ರೀಮಂತ ಪ್ರದೇಶವಾಗಿರುವ ಮಧ್ಯಪ್ರಾಚ್ಯ ಇದೀಗ ಯುದ್ಧದ ಕುಲುಮೆಗೆ ಬಿದ್ದು ಒದ್ದಾಡುತ್ತಿದೆ. ಮಧ್ಯಪ್ರಾಚ್ಯ ಭಾಗದಲ್ಲಿ ಇದೀಗ ಇರಾನ್ ಮತ್ತು ಇಸ್ರೇಲ್ ನಡುವೆ ಬೆಂಕಿ ಹೊತ್ತಿಕೊಂಡು, ಅಮೆರಿಕ ಜೊತೆಗೂಡಿ ಇಸ್ರೇಲ್ ಬೃಹತ್ ಸೇನಾ ಕಾರ್ಯಾಚರಣೆ ನಡೆಸುತ್ತಿದೆ. ಈ ಮೂಲಕ ಇರಾನ್ ವಿರುದ್ಧ ದೊಡ್ಡ ದೊಡ್ಡ ಯುದ್ಧ ವಿಮಾನ ಹಾಗೂ

ಒನ್ ಇ೦ಡಿಯ 3 Mar 2026 5:52 pm

ಔರಾದ್ | ಶಿಕ್ಷಣದ ಜೊತೆ ಸಾಂಸ್ಕೃತಿಕ ಚಟುವಟಿಕೆಗಳಿಗೆ ಮಹತ್ವ ನೀಡಿ : ಶಾಸಕ ಪ್ರಭು ಚವ್ಹಾಣ

ಔರಾದ್ : ವಿದ್ಯಾರ್ಥಿಗಳ ಸಮಗ್ರ ವ್ಯಕ್ತಿತ್ವ ವಿಕಾಸಕ್ಕೆ ಶಿಕ್ಷಣದ ಜೊತೆಗೆ ಸಾಂಸ್ಕೃತಿಕ ಚಟುವಟಿಕೆಗಳಿಗೂ ಮಹತ್ವ ನೀಡಬೇಕು ಎಂದು ಶಾಸಕ ಪ್ರಭು ಚವ್ಹಾಣ ಹೇಳಿದರು. ಕಮಲನಗರ್ ತಾಲ್ಲೂಕಿನ ಠಾಣಾ ಕುಶನೂರ್ ಗ್ರಾಮದಲ್ಲಿ ಸೋಮವಾರ ಕರ್ನಾಟಕ ಪಬ್ಲಿಕ್ ಶಾಲೆಯ ಶಾಲಾ ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಪಾಠದೊಂದಿಗೆ ಕ್ರೀಡೆ, ಕಲೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಸಮಾನ ಮಹತ್ವ ನೀಡಿದಾಗ ಮಾತ್ರ ಮಕ್ಕಳಲ್ಲಿ ಆತ್ಮವಿಶ್ವಾಸ ಮತ್ತು ಪ್ರತಿಭೆ ಬೆಳೆಸಬಹುದು. ಈ ದಿಶೆಯಲ್ಲಿ ಶಿಕ್ಷಕರು ಮತ್ತು ಪಾಲಕರು ಮಹತ್ವ ಕೊಡಬೇಕು ಎಂದರು. ಇಂದಿನ ದಿನಗಳಲ್ಲಿ ಮೊಬೈಲ್ ಗೀಳು ವಿದ್ಯಾರ್ಥಿಗಳ ಭವಿಷ್ಯಕ್ಕೆ ಹಾನಿಕಾರಕವಾಗುತ್ತಿದೆ. ಪಾಲಕರು ಈ ಕುರಿತು ಜಾಗೃತಿ ವಹಿಸಿ, ಮಕ್ಕಳು ಶಾಲೆಯಿಂದ ಮನೆಗೆ ಬಂದ ಬಳಿಕ ಅವರು ಏನು ಕಲಿತಿದ್ದಾರೆಂದು ವಿಚಾರಿಸುವ ಅಭ್ಯಾಸ ಬೆಳೆಸಿಕೊಳ್ಳಬೇಕು. ಪ್ರತಿದಿನ ಕನಿಷ್ಠ ಒಂದು ಗಂಟೆಯಾದರೂ ಮಕ್ಕಳಿಗೆ ಸಮಯ ನೀಡಿದರೆ ಅವರ ಭವಿಷ್ಯ ಉಜ್ವಲವಾಗುತ್ತದೆ ಎಂದು ಅವರು ಕಿವಿಮಾತು ಹೇಳಿದರು. ಕಾರ್ಯಕ್ರಮದಲ್ಲಿ ದಯಾನಂದ್ ಗಡ್ಡೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ಠಾಣಾ ಕುಶನೂರ್ ವಿರಕ್ತ ಮಠದ ಸಿದ್ದಲಿಂಗ ಮಹಾಸ್ವಾನಿ ದಿವ್ಯ ಸಾನಿಧ್ಯ ವಹಿಸಿದ್ದರು. ಪ್ರಾಚಾರ್ಯ ವಿಜಯಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಮುಖಂಡರಾದ ರಾಮಶೆಟ್ಟಿ ಪನ್ನಾಳೆ, ಗಿರೀಶ್ ವಡೆಯರ್, ಕಾಶಿನಾಥ್ ಜೀರ್ಗೆ, ಶಿವಾಜಿರಾವ್ ಪಾಟೀಲ್ ಮುಂಗನಾಳ್, ಸತೀಷ ಜೀರ್ಗೆ, ಓಂಕಾರ್ ಸ್ವಾಮಿ, ಸಚಿನ್ ರಾಠೋಡ್ ಹಾಗೂ ಸಿ ಆರ್ ಸಿ ನೌನಾಥ್ ಸೇರಿದಂತೆ ಇತರರು ಉಪಸ್ಥಿತರಿದ್ದರು. ಸುನೀಲ್ ರಂಡ್ಯಾಳೆ ಸ್ವಾಗತಿಸಿದರು. ವಾಮನರಾವ್ ಕಾಮತೆಕರ್ ವಂದಿಸಿದರು.

ವಾರ್ತಾ ಭಾರತಿ 3 Mar 2026 5:49 pm

ಹುಮನಾಬಾದ್ | ನಾಲ್ಕು ಲೇಬರ್ ಕೋಡ್ ತಿದ್ದುಪಡಿ ಮಾಡಿ BOCW ಕಾಯ್ದೆ ಮರುಸ್ಥಾಪನೆಗೆ ಆಗ್ರಹ

ಹುಮನಾಬಾದ್ : ಕೇಂದ್ರ ಸರ್ಕಾರ ಘೋಷಿಸಿರುವ ನಾಲ್ಕು ಲೇಬರ್ ಕೋಡ್‌ಗಳನ್ನು ತಿದ್ದುಪಡಿ ಮಾಡಿ ಕಟ್ಟಡ ಕಾರ್ಮಿಕ ಕಾನೂನು-1996 ಹಾಗೂ ಸೆಸ್ ಕಾಯ್ದೆಗಳನ್ನು ಮರುಸ್ಥಾಪಿಸಬೇಕು ಎಂದು ಆಗ್ರಹಿಸಿ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘದ ವತಿಯಿಂದ ಮಂಗಳವಾರ ಮನವಿ ಸಲ್ಲಿಸಲಾಯಿತು. ಹುಮನಾಬಾದ್‌ನ ಕಾರ್ಮಿಕ ನಿರೀಕ್ಷಕರ ಮೂಲಕ ಕಾರ್ಮಿಕ ಸಚಿವರಿಗೆ ಸಲ್ಲಿಸಿದ ಮನವಿ ಪತ್ರದಲ್ಲಿ, ಕೇಂದ್ರ ಸರ್ಕಾರ ಜಾರಿಗೊಳಿಸುತ್ತಿರುವ ಕಾರ್ಮಿಕ ಸಂಹಿತೆಗಳು ಅಸ್ತಿತ್ವದಲ್ಲಿದ್ದ ಹಲವು ಕಾರ್ಮಿಕ ಹಕ್ಕುಗಳನ್ನು ರದ್ದುಗೊಳಿಸಿವೆ ಎಂದು ಆರೋಪಿಸಲಾಗಿದೆ. ಕಟ್ಟಡ ಮತ್ತು ಇತರೆ ನಿರ್ಮಾಣ (BOCW) ವಲಯದ ಕಾರ್ಮಿಕರು ಅಸಂಘಟಿತ ಹಾಗೂ ಅಸುರಕ್ಷಿತ ಪರಿಸ್ಥಿತಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ದೇಶದಲ್ಲಿ ಅಧಿಕೃತ ಅಂಕಿಅಂಶಗಳ ಪ್ರಕಾರ ಸುಮಾರು 5.1 ಕೋಟಿ ನಿರ್ಮಾಣ ಕಾರ್ಮಿಕರಿದ್ದು, ಜಿಡಿಪಿಯಲ್ಲಿ ಶೇ.9 ರಷ್ಟು ಪಾಲು ಈ ವಲಯದದ್ದಾಗಿದೆ. ಆದರೂ ಕಾರ್ಮಿಕರಿಗೆ ಸಮರ್ಪಕ ರಕ್ಷಣೆ ಸಿಗುತ್ತಿಲ್ಲ ಎಂದು ಸಂಘದವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. 2020ರಲ್ಲಿ ಜಾರಿಗೊಂಡ ವೃತ್ತಿ ಸುರಕ್ಷತೆ, ಆರೋಗ್ಯ ಮತ್ತು ಕೆಲಸದ ಪರಿಸ್ಥಿತಿಗಳ ಸಂಹಿತೆ ಹಾಗೂ ಸಾಮಾಜಿಕ ಸುರಕ್ಷತಾ ಸಂಹಿತೆಗಳಲ್ಲಿ 1996ರ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ (ಉದ್ಯೋಗ ನಿಯಂತ್ರಣ ಮತ್ತು ಸೇವಾ ಷರತ್ತುಗಳು) ಕಾಯ್ದೆ ಹಾಗೂ ಸೆಸ್ ಕಾಯ್ದೆಗಳನ್ನು ವಿಲೀನಗೊಳಿಸಲಾಗಿದೆ. ಇದರಿಂದ BOCW ಅಡಿಯಲ್ಲಿ ಕಾರ್ಮಿಕರಿಗೆ ಸಿಗುತ್ತಿದ್ದ ಸೌಲಭ್ಯಗಳಿಗೆ ಹಾನಿಯಾಗಿದೆ. ಹೀಗಾಗಿ 1996ರ ಕಾಯ್ದೆಗಳನ್ನು ಪುನರ್‌ಸ್ಥಾಪಿಸಬೇಕು ಎಂದು ಆಗ್ರಹಿಸಲಾಗಿದೆ. ಈ ಸಂದರ್ಭದಲ್ಲಿ ಅಕ್ಷರ ದಾಸೋಹ ಕಾರ್ಮಿಕ ಸಂಘದ ಜಿಲ್ಲಾಧ್ಯಕ್ಷೆ ರೇಖಾ ಮಾತನಾಡಿ, ರಾಜ್ಯ ಸರ್ಕಾರ ಬಜೆಟ್‌ನಲ್ಲಿ ಅಕ್ಷರ ದಾಸೋಹ ನೌಕರರ ಸಂಬಳ ಹೆಚ್ಚಿಸಬೇಕು. ಪ್ರಸ್ತುತ ನೀಡುತ್ತಿರುವ 4,500 ರೂ. ಸಂಬಳ ಬೆಲೆ ಏರಿಕೆಯ ಸಂದರ್ಭದಲ್ಲಿ ಸಾಕಾಗುವುದಿಲ್ಲ. ಕುಟುಂಬ ನಿರ್ವಹಣೆಗೆ ಅನುಗುಣವಾಗಿ ವೇತನ ಹೆಚ್ಚಿಸಬೇಕು ಎಂದು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಸಿಐಟಿಯು ನ ಜಿಲ್ಲಾಧ್ಯಕ್ಷ ಬಸವರಾಜ್ ಮಾಳ್ಗೆ, ತಾಲೂಕಾಧ್ಯಕ್ಷ ಗೌಸೋದ್ದೀನ್, ಕಾರ್ಯದರ್ಶಿ ಶಶಿಕಾಂತ್ ಡಾಂಗೆ, ಶ್ರೀಮಂತ್ ಮೈತ್ರಿ, ಸೀಮನ್ ಹಾಗೂ ಪ್ರಭು ಸಂತೋಷಕರ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ವಾರ್ತಾ ಭಾರತಿ 3 Mar 2026 5:46 pm

ಔರಾದ್ | ಪರೀಕ್ಷೆ ಜೀವನದ ಅಂತಿಮ ಗುರಿಯಲ್ಲ: ತಹಶೀಲ್ದಾರ್ ಮಹೇಶ್ ಪಾಟೀಲ್

ಔರಾದ್: ಪರೀಕ್ಷೆ ಜೀವನದ ಅಂತಿಮ ಗುರಿಯಲ್ಲ. ಅದು ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ಒಂದು ಹಂತ ಮಾತ್ರ ಎಂಬ ಮನೋಭಾವ ಮಕ್ಕಳಲ್ಲಿ ಬೆಳೆಸಬೇಕು ಎಂದು ತಹಶೀಲ್ದಾರ್ ಮಹೇಶ್ ಪಾಟೀಲ್ ಹೇಳಿದರು. ಪಟ್ಟಣದ ಆದರ್ಶ ವಿದ್ಯಾಲಯದಲ್ಲಿ ಸೋಮವಾರ ನಡೆದ ತಾಲೂಕಿನ ಪ್ರೌಢಶಾಲಾ ಮುಖ್ಯಗುರುಗಳ ಸಭೆಯಲ್ಲಿ ಮಾತನಾಡಿದ ಅವರು, ಎಸ್ಸೆಸ್ಸೆಲ್ಸಿ ಪರೀಕ್ಷೆಗಳು ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಲ್ಲಿ ಕಾಣಿಸಿಕೊಳ್ಳುವ ಆತಂಕ ಮತ್ತು ಭಯವನ್ನು ದೂರ ಮಾಡುವುದು ಅತ್ಯಂತ ಮುಖ್ಯವಾಗಿದೆ ಎಂದು ತಿಳಿಸಿದರು. ಶೇ.40ರ ಒಳಗೆ ಅಂಕ ಪಡೆಯುವ ಅಥವಾ ಅನುತ್ತೀರ್ಣರಾಗುವ ಸಾಧ್ಯತೆ ಇರುವ ವಿದ್ಯಾರ್ಥಿಗಳನ್ನು ಗುರುತಿಸಿ ಅವರಿಗೆ ವಿಶೇಷ ತರಗತಿ, ಮರುಪಾಠ ಹಾಗೂ ವೈಯಕ್ತಿಕ ಮಾರ್ಗದರ್ಶನ ನೀಡಬೇಕು. ವಾರಂವಾರ ಪ್ರಗತಿ ಪರಿಶೀಲನೆ ನಡೆಸಿ ದುರ್ಬಲ ವಿಷಯಗಳ ಮೇಲೆ ಹೆಚ್ಚಿನ ಗಮನ ಹರಿಸಬೇಕು ಎಂದು ಸೂಚಿಸಿದರು. ತಾಪಂ ಇಒ ಕಿರಣ್ ಪಾಟೀಲ್ ಮಾತನಾಡಿ, ಜಿಪಂ ಸಿಇಒ ಮಾರ್ಗದರ್ಶನದಲ್ಲಿ ಫಲಿತಾಂಶ ಸುಧಾರಣೆಗೆ ಹಲವು ಯೋಜನೆಗಳು ಜಾರಿಯಲ್ಲಿವೆ. ಮಾದರಿ ಪರೀಕ್ಷೆ, ವಿಷಯವಾರು ಕಾರ್ಯಾಗಾರ ಹಾಗೂ ಶಿಕ್ಷಕರ ತರಬೇತಿ ಕಾರ್ಯಕ್ರಮಗಳು ನಡೆಯುತ್ತಿವೆ. ಈ ವರ್ಷ ಉತ್ತಮ ಸಾಧನೆ ಮಾಡುವ ಸಂಕಲ್ಪ ಕೈಗೊಳ್ಳಬೇಕು ಎಂದರು. ಪಾಲಕರ ಪಾತ್ರವೂ ಮಹತ್ವದ್ದಾಗಿದೆ. ಫಲಿತಾಂಶ ಪ್ರಕಟವಾಗುವವರೆಗೆ ಮನೆಯಲ್ಲಿ ಟಿವಿ, ಮೊಬೈಲ್ ಸೇರಿದಂತೆ ಮನರಂಜನಾ ಸಾಧನಗಳ ಬಳಕೆ ನಿಯಂತ್ರಿಸಿ ಮಕ್ಕಳ ಅಧ್ಯಯನಕ್ಕೆ ಉತ್ತೇಜನ ನೀಡಬೇಕು. ಒತ್ತಡ ಹೆಚ್ಚಿಸುವ ಬದಲು ಪ್ರೋತ್ಸಾಹದ ಮಾತುಗಳಿಂದ ಆತ್ಮಸ್ಥೈರ್ಯ ತುಂಬಬೇಕು ಎಂದು ತಿಳಿಸಿದರು. ಸಭೆಯಲ್ಲಿ ಬಿಇಒ ಬಿಜಿ ರಂಗೇಶ್, ರಾಜಕುಮಾರ್, ಸುನಿಲ್ ವಾಘಮಾರೆ ಸೇರಿದಂತೆ ಇತರರು ಉಪಸ್ಥಿತರಿದ್ದರು. ಬಾಲ್ಯ ವಿವಾಹ ತಡೆಯಲು ಎಚ್ಚರಿಕೆ : ಶಾಲೆಗೆ ಬರುವ ಮಕ್ಕಳ ಸ್ಥಿತಿ–ಪರಿಸ್ಥಿತಿಗಳ ಬಗ್ಗೆ ಶಿಕ್ಷಕರಿಗೆ ಸಮಗ್ರ ಮಾಹಿತಿ ಇರುತ್ತದೆ. ಬಾಲ್ಯ ವಿವಾಹದ ಸುಳಿವು ದೊರೆತರೆ ತಕ್ಷಣ ಸಂಬಂಧಿತ ಅಧಿಕಾರಿಗಳ ಗಮನಕ್ಕೆ ತರಬೇಕು. ಮಕ್ಕಳ ಭವಿಷ್ಯ ಹಾಳಾಗದಂತೆ ಕಾನೂನುಬದ್ಧ ಕ್ರಮ ಕೈಗೊಳ್ಳುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ಟಿಎಚ್ಒ ಡಾ. ಗಾಯತ್ರಿ ತಿಳಿಸಿದರು. ಬಿಸಿಯೂಟ ವಿತರಣೆಗೆ ಕಟ್ಟುನಿಟ್ಟಿನ ನಿಗಾ : ತಾಲೂಕಿನ ಶಾಲೆಗಳಲ್ಲಿ ಬಿಸಿಯೂಟ ವಿತರಣೆಯಲ್ಲಿ ಯಾವುದೇ ಲೋಪ ಉಂಟಾಗದಂತೆ ಮುಖ್ಯಗುರುಗಳು ಜಾಗ್ರತೆ ವಹಿಸಬೇಕು. ಜಮಾಲಪುರ ಗ್ರಾಮದಲ್ಲಿ ನಡೆದ ಘಟನೆಯಂತಹ ಪರಿಸ್ಥಿತಿ ಮರುಕಳಿಸದಂತೆ ಕ್ರಮ ಕೈಗೊಳ್ಳಬೇಕು. ಆಹಾರದ ಗುಣಮಟ್ಟ, ಸ್ವಚ್ಛತೆ ಹಾಗೂ ಸಂಗ್ರಹಣೆ ಕ್ರಮಗಳನ್ನು ನಿಯಮಿತವಾಗಿ ಪರಿಶೀಲಿಸಿ, ದೂರುಗಳು ಬಂದಲ್ಲಿ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ತಹಸೀಲ್ದಾರ್ ಮಹೇಶ್ ಪಾಟೀಲ್ ಹಾಗೂ ಇಒ ಕಿರಣ್ ಪಾಟೀಲ್ ಸೂಚಿಸಿದರು.

ವಾರ್ತಾ ಭಾರತಿ 3 Mar 2026 5:41 pm

ಇರಾನ್ ಡ್ರೋನ್ ತಡೆಯಲು ಮಧ್ಯಪ್ರಾಚ್ಯಕ್ಕೆ ತಜ್ಞರನ್ನು ಕಳುಹಿಸಲು ಸಿದ್ಧ: ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ

ಕೀವ್/ಅಬುಧಾಬಿ: ಇಸ್ರೇಲ್–ಇರಾನ್–ಅಮೆರಿಕ ನಡುವಿನ ಸಂಘರ್ಷದಿಂದ ಪಶ್ಚಿಮ ಏಷ್ಯಾದಲ್ಲಿ ಉದ್ವಿಗ್ನತೆ ಗರಿಗೆದರಿರುವ ನಡುವೆ, ಗಲ್ಫ್ ರಾಷ್ಟ್ರಗಳು ಉಕ್ರೇನ್–ರಷ್ಯಾ ನಡುವಿನ ಕದನ ವಿರಾಮ ಸಾಧಿಸಲು ನೆರವಾದರೆ, ಪಶ್ಚಿಮ ಏಷ್ಯಾ ದೇಶಗಳಿಗೆ ಇರಾನ್ ಡ್ರೋನ್ ತಡೆಯಲು ರಕ್ಷಣಾ ತಜ್ಞರನ್ನು ಕಳುಹಿಸಲು ಸಿದ್ಧವಿದ್ದೇವೆ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಮಹತ್ವದ ಪ್ರಸ್ತಾಪವನ್ನು ಮುಂದಿಟ್ಟಿದ್ದಾರೆ. ಇರಾನ್ ಮೇಲಿನ ಜಂಟಿ ಇಸ್ರೇಲಿ–ಅಮೆರಿಕ ದಾಳಿಗೆ ಪ್ರತಿಕ್ರಿಯೆಯಾಗಿ ಯುನೈಟೆಡ್ ಅರಬ್ ಎಮಿರೇಟ್ಸ್ ಹಾಗೂ ಅದರ ರಾಜಧಾನಿ ಅಬುಧಾಬಿಯು ಶನಿವಾರದಿಂದ ಇರಾನಿನ ದಾಳಿಗೆ ತುತ್ತಾಗಿರುವ ನಡುವೆಯೇ ಈ ಹೇಳಿಕೆ ಹೊರಬಿದ್ದಿದೆ. ರಷ್ಯಾದೊಂದಿಗೆ ಅಬುಧಾಬಿಯಲ್ಲಿ ನಡೆಯಲಿರುವ ಶಾಂತಿ ಮಾತುಕತೆಗಳು ಎಂದಿನಂತೆ ಮುಂದುವರಿಯಬೇಕು ಎಂದು ಝೆಲೆನ್ಸ್ಕಿ ಆಗ್ರಹಿಸಿದ್ದಾರೆ. ಉಕ್ರೇನ್ ಮೇಲಿನ ರಷ್ಯಾದ ಆಕ್ರಮಣ ಅಂತ್ಯಗೊಳಿಸುವ ಉದ್ದೇಶದಿಂದ ಅಮೆರಿಕದ ಮಧ್ಯಸ್ಥಿಕೆಯಲ್ಲಿ ಅಬುಧಾಬಿಯಲ್ಲಿ ಮಾತುಕತೆಗಳನ್ನು ಆಯೋಜಿಸಿತ್ತು. ಮಾರ್ಚ್ 5 ಮತ್ತು 8ರ ನಡುವೆ ಹೊಸ ಸುತ್ತಿನ ಮಾತುಕತೆಗಳು ನಿಗದಿಯಾಗಿವೆ ಎಂದು ಅವರು ತಿಳಿಸಿದ್ದಾರೆ. ಸಭೆ ನಡೆಯಬೇಕು. ಇದು ನಮಗೆ ಮುಖ್ಯವಾಗಿದೆ. ನಾವು ಈ ಸಭೆಯನ್ನು ಬೆಂಬಲಿಸುತ್ತೇವೆ,” ಎಂದು ಝೆಲೆನ್ಸ್ಕಿ ವರದಿಗಾರರಿಗೆ ತಿಳಿಸಿದ್ದಾರೆ. ಅಬುಧಾಬಿಯಲ್ಲಿ ಕ್ಷಿಪಣಿ ಮತ್ತು ಡ್ರೋನ್ ದಾಳಿಗಳಿಂದ ಭದ್ರತಾ ತೊಂದರೆ ಉಂಟಾದರೆ, ಪರ್ಯಾಯ ಸ್ಥಳಗಳನ್ನು ಪರಿಗಣಿಸುವುದಾಗಿ ಅವರು ಹೇಳಿದರು. “ಅಬುಧಾಬಿಯಲ್ಲಿ ಭದ್ರತಾ ತೊಂದರೆಗಳಿದ್ದರೆ, ನಮಗೆ ಟರ್ಕಿ ಇದೆ, ನಮಗೆ ಸ್ವಿಟ್ಜರ್ಲೆಂಡ್ ಇದೆ. ಸಭೆಗಾಗಿ ಈ ಮೂರು ಸ್ಥಳಗಳಲ್ಲಿ ಯಾವುದನ್ನಾದರೂ ನಾವು ಖಂಡಿತವಾಗಿಯೂ ಬೆಂಬಲಿಸುತ್ತೇವೆ,” ಎಂದು ಅವರು ಸ್ಪಷ್ಟಪಡಿಸಿದರು. ನಿರಂತರ ಸಂವಾದದ ಪರವಾಗಿ ಮಾಸ್ಕೋ ಕೂಡ ಕದನ ವಿರಾಮದ ನಿಲುವು ತಾಳಿದೆ. ಯುಎಸ್–ಇರಾನ್ ಮಾತುಕತೆಗಳು ವಿಫಲವಾದ ನಂತರ ರಷ್ಯಾದ ನಿಲುವು ಬದಲಾಗಿದೆಯೇ ಎಂಬ ಪ್ರಶ್ನೆಗೆ ಕ್ರೆಮ್ಲಿನ್ ವಕ್ತಾರ ಡಿಮಿಟ್ರಿ ಪೆಸ್ಕೋವ್ ಪ್ರತಿಕ್ರಿಯಿಸಿ, “ರಾಜಕೀಯ ಮತ್ತು ರಾಜತಾಂತ್ರಿಕ ಕದನವಿರಾಮವು ರಷ್ಯಾಕ್ಕೆ ಆದ್ಯತೆಯಾಗಿ ಉಳಿದಿದೆ,” ಎಂದು ಹೇಳಿದ್ದಾರೆ. ಇನ್ನೊಂದೆಡೆ, ಮಧ್ಯಪ್ರಾಚ್ಯದಲ್ಲಿ ದೀರ್ಘಕಾಲದ ಯುದ್ಧ ಮುಂದುವರಿದರೆ, ಉಕ್ರೇನ್ ರಷ್ಯಾದ ದಾಳಿಗಳನ್ನು ತಡೆಯಲು ಬಳಸುತ್ತಿರುವ ಪ್ರಮುಖ ವಾಯು ರಕ್ಷಣಾ ವ್ಯವಸ್ಥೆಗಳ ಪೂರೈಕೆಗೆ ಧಕ್ಕೆಯಾಗುವ ಸಾಧ್ಯತೆ ಇದೆ ಎಂದು ಝೆಲೆನ್ಸ್ಕಿ ಎಚ್ಚರಿಸಿದ್ದಾರೆ. ಅಮೆರಿಕ ನಿರ್ಮಿತ ಪೇಟ್ರಿಯಾಟ್ ಬ್ಯಾಟರಿಗಳೂ ಇದರಲ್ಲಿ ಸೇರಿವೆ.

ವಾರ್ತಾ ಭಾರತಿ 3 Mar 2026 5:37 pm

ಸ್ಟಾರ್‌ ಪ್ಲಾನೆಟ್‌ ಫೆಬ್ರವರಿ ಐಡಲ್‌ ರ‍್ಯಾಂಕಿಂಗ್‌ ನಲ್ಲಿ BTS ಜಿನ್‌ ಗೆ ಅಗ್ರಸ್ಥಾನ:‌ ಸತತ 2 ತಿಂಗಳು ಟಾಪ್‌ ಸ್ಥಾನಕ್ಕೇರಿದ ಹೆಗ್ಗಳಿಕೆ

BTS ಜಿನ್‌ ಪ್ರತಿ ತಿಂಗಳು ಸ್ಟಾರ್‌ ಪ್ಲಾನೆಟ್‌ ಆಯೋಜಿಸುವ ಕೆ-ಪಾಪ್‌ ಐಡಲ್‌ ರ‍್ಯಾಂಕಿಂಗ್‌ ಪಟ್ಟಿಯಲ್ಲಿ ಫೆಬ್ರವರಿಯಲ್ಲಿ ಅಗ್ರಸ್ಥಾನ ಪಡೆಯುವ ಮೂಲಕ ಈ ವರ್ಷದ ಜನವರಿ ಹಾಗೂ ಫೆಬ್ರವರಿಯಲ್ಲಿ ಸತತ 2 ತಿಂಗಳು ಟಾಪ್‌ ಕೆ-ಪಾಪ್‌ ಐಡಲ್‌ ಆಗಿದ್ದಾರೆ. ಇದು ಕೆ-ಪಾಪ್‌ ಜಗತ್ತಿನಲ್ಲಿ ಜಿನ್‌ ಪ್ರಭಾವ ಹಾಗೂ ಅವರ ಜನಪ್ರಿಯತೆಯನ್ನು ತೋರಿಸುವಂತಿದೆ. ಇದರ ಜೊತೆಗೆ ಜಿನ್‌ ಸದ್ಯ BTS ಕಂಬ್ಯಾಕ್‌ ಆಲ್ಬಂ ಕೆಲಸಗಳಲ್ಲಿ ನಿರತರಾಗಿದ್ದಾರೆ.

ವಿಜಯ ಕರ್ನಾಟಕ 3 Mar 2026 5:34 pm

Bidar | ನರಸಿಂಗರಾವ್ ಕಾಂಬಳೆ ಯುವಜನತೆಗೆ ದಾರಿದೀಪ : ಡಾ.ಕೆ.ಎಸ್‌ ಬಂಧು

ನರಸಿಂಗರಾವ್ ಕಾಂಬಳೆ ನುಡಿನಮನ ಕಾರ್ಯಕ್ರಮ

ವಾರ್ತಾ ಭಾರತಿ 3 Mar 2026 5:33 pm

Sourav Ganguly: ಟಿ20 ವಿಶ್ವಕಪ್ 2026; ಸಂಜು ಆಟಕ್ಕೆ ಮನಸೋತು ಬಿಸಿಸಿಐಗೆ ಬಿಸಿ ಮುಟ್ಟಿಸಿದ 'ದಾದಾ' ಸೌರವ್ ಗಂಗೂಲಿ

Sourav Ganguly: ಟಿ20 ವಿಶ್ವಕಪ್‌ 2026ರ ಸೂಪರ್ 8 ಹಂತದ ನಿರ್ಣಾಯಕ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಸಂಜು ಸ್ಯಾಮ್ಸನ್ ಅಬ್ಬರದ ಬ್ಯಾಟಿಂಗ್ ಮಾಡಿ ಭಾರತದ ಗೆಲುವಿಗೆ ಪ್ರಮುಖ ಪಾತ್ರವಹಿಸಿದರು. ಕೇವಲ 50 ಎಸೆತಗಳಲ್ಲಿ ಅಜೇಯ 97 ರನ್ ಸಿಡಿಸಿ ತಂಡವನ್ನು ಗೆಲುವಿನ ದಡ ಸೇರಿಸಿ ಗಮನ ಸೆಳೆದರು. ಇದರ ಬೆನ್ನಲ್ಲೇ ಅವರಿಗೆ ಮೆಚ್ಚುಗೆಗಳ ಸುರಿಮಳೆಯೇ ಹರಿದುಬರುತ್ತಿದೆ.

ಒನ್ ಇ೦ಡಿಯ 3 Mar 2026 5:30 pm

ಹಿಂದೂ ರುದ್ರಭೂಮಿಯಿಂದ ಮುಸ್ಲಿಂ ವ್ಯಕ್ತಿಯ ಮೃತದೇಹ ಹೊರತೆಗೆಯಲು ಬಾಂಬೆ ಹೈಕೋರ್ಟ್ ಆದೇಶ

ಸಾವಿನ ನಂತರವೂ ಘನತೆಯ ಹಕ್ಕು ಅಬಾಧಿತ ಎಂದ ನ್ಯಾಯಾಲಯ

ವಾರ್ತಾ ಭಾರತಿ 3 Mar 2026 5:29 pm

Middle East Conflict- ರಾಷ್ಟ್ರಗೀತೆ ಹಾಡಲೊಲ್ಲದ ಇರಾನ್ ಮಹಿಳಾ ತಂಡ: ಫುಟ್ಬಾಲ್ ಮೈದಾನದಲ್ಲೀಗ `ಮೌನ' ಪ್ರತಿಭಟನೆ!

Iran Womens Football Team- ಯಾವುದೇ ದೇಶವನ್ನು ಪ್ರತಿನಿಧಿಸುವ ಕ್ರೀಡಾಪಟುಗಳೂ ತಮ್ಮ ರಾಷ್ಟ್ರಗೀತೆ ಮೊಳಗುವಾಗ ಎದೆಯುಬ್ಬಿಸಿ ನಿಲ್ಲುತ್ತಾರೆ. ಗಾಯನಕ್ಕೆ ಧ್ವನಿಗೂಡಿಸುತ್ತಾರೆ. ಆದರೆ ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ 2026ರ ಎಎಫ್‌ಸಿ ಮಹಿಳಾ ಏಷ್ಯಾ ಕಪ್ ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಕಂಡದ್ದು ಇದಕ್ಕೆ ತದ್ವಿರುದ್ಧವಾದ ಸನ್ನಿವೇಶ. ಇರಾನ್ ತಂಡದ ಆಟಗಾರ್ತಿಯರು ರಾಷ್ಟ್ರಗೀತೆ ಆಗುತ್ತಿರುವಾಗ ಮೌನವಾಗಿದ್ದರು. ಒಬ್ಬರೂ ಧ್ವನಿಗೂಡಿಸುವ ಗೋಜಿಗೆ ಹೋಗಲಿಲ್ಲ. ಈ ಬೆಳವಣಿಗೆ ಕ್ರೀಡಾಲೋಕದಲ್ಲಿ ಅಚ್ಚರಿಯನ್ನು ಉಂಟುಮಾಡಿದೆ. ಇನ್ನು ತಂಡದ ಮ್ಯಾನೇಜ್ ಮೆಂಟ್ ಆಗಲಿ, ಕೋಚ್ ಆಗಲಿ ಈ ಬಗ್ಗೆ ಯಾವುದೇ ಪ್ರತಿಕ್ರಿಯೆಯನ್ನು ನೀಡಿಲ್ಲ.

ವಿಜಯ ಕರ್ನಾಟಕ 3 Mar 2026 5:26 pm

ಕರುಳಿನಲ್ಲಿ ಉತ್ತಮ ಬ್ಯಾಕ್ಟೀರಿಯ ಪೋಷಿಸುವ 5 ಆಹಾರಗಳ ಬಗ್ಗೆ ಗೊತ್ತೇ?

ಕರುಳಿನಲ್ಲಿರುವ ಉತ್ತಮ ಬ್ಯಾಕ್ಟೀರಿಯದ ಸೂಕ್ಷ್ಮ ಸಮತೋಲನ ತಪ್ಪಿದಾಗ ಇಡೀ ದೇಹದ ಮೇಲೆ ಪರಿಣಾಮ ಬೀರುವ ರೋಗ ಲಕ್ಷಣಗಳ ಸರಣಿಯನ್ನು ಪ್ರಚೋದಿಸಬಹುದು. ಒಟ್ಟು ಆರೋಗ್ಯದ ಪ್ರಮುಖ ಆಧಾರ ಸ್ತಂಭವಾಗಿ ಕರುಳಿನ ಆರೋಗ್ಯವು ಇತ್ತೀಚೆಗಿನ ದಿನಗಳಲ್ಲಿ ಪ್ರಾಮುಖ್ಯತೆ ಪಡೆದುಕೊಂಡಿದೆ. ಜೀರ್ಣಕ್ರಿಯೆಯನ್ನು ಮೀರಿ ಕರುಳಿನ ಮೈಕ್ರೋಬಯಾಮ್ (ಸೂಕ್ಷ್ಮಜೀವಿ) ರೋಗನಿರೋಧಕ ಶಕ್ತಿ ಮತ್ತು ಚಯಾಪಚಯ ಕ್ರಿಯೆಯಿಂದ ತೊಡಗಿ ಮನೋಸ್ಥಿತಿ, ಶಕ್ತಿಯ ಮಟ್ಟ ಮತ್ತು ತೂಕ ನಿಯಂತ್ರಣದವರೆಗೆ ಎಲ್ಲದರ ಮೇಲೆ ಪ್ರಭಾವ ಬೀರುತ್ತದೆ. ಕರುಳಿನಲ್ಲಿರುವ ಉತ್ತಮ ಬ್ಯಾಕ್ಟೀರಿಯದ ಸೂಕ್ಷ್ಮ ಸಮತೋಲನ ತಪ್ಪಿದಾಗ ಇಡೀ ದೇಹದ ಮೇಲೆ ಪರಿಣಾಮ ಬೀರುವ ರೋಗ ಲಕ್ಷಣಗಳ ಸರಣಿಯನ್ನು ಪ್ರಚೋದಿಸಬಹುದು. ಆಂತರಿಕ ವ್ಯವಸ್ಥೆಯನ್ನು ಫೋಷಿಸಲು ಆಹಾರಗಳನ್ನು ನಿರ್ಬಂಧಿಸುವುದಕ್ಕಿಂತ ಹೆಚ್ಚಾಗಿ ಒಳಗಿನಿಂದ ಸಾಮರಸ್ಯವನ್ನು ಮರುಸ್ಥಾಪಿಸಲು ನಿರಂತರವಾಗಿ ಸೂಕ್ತ ಸೂಕ್ಷ್ಮಜೀವಿಯನ್ನು (ಮೈಕ್ರೋಬ್) ಪೋಷಿಸುವುದು ಅಗತ್ಯವಾಗಿದೆ. ಚೆನ್ನೈನ ಅಪೋಲೊ ಸ್ಪೆಕ್ಟ್ರಾ ಆಸ್ಪತ್ರೆಗಳ ಲೆಪ್ರೋಸ್ಕೋಪಿಕ್ ಮತ್ತು ಬ್ಯಾರಿಯಾಟ್ರಿಕ್ ಶಸ್ತ್ರಚಿಕಿತ್ಸಕರಾದ ಡಾ ಪ್ರೀತಿ ಮೃಣಾಲಿನಿ ಹೇಳುವ ಪ್ರಕಾರ ನಿಮ್ಮ ಕರುಳನ್ನು ನೈಸರ್ಗಿಕವಾಗಿ ಬೆಂಬಲಿರುವ ಮತ್ತು ಶಮನಗೊಳಿಸುವ ಐದು ಆಹಾರಗಳನ್ನು ನಿತ್ಯವೂ ಸೇವಿಸುವುದು ಅಗತ್ಯ. ಫೆಬ್ರವರಿ 21ರಂದು ಅವರು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡ ವೀಡಿಯೋದಲ್ಲಿ ಕರುಳಿನ ಸೂಕ್ಷ್ಮಜೀವಿಯನ್ನು ಬಲಪಡಿಸುವ ಮತ್ತು ಜೀರ್ಣಕ್ರಿಯೆಯನ್ನು ಸುಧಾರಿಸುವ ಮೂಲಕ ಒಟ್ಟು ಆರೋಗ್ಯವನ್ನು ಸುಧಾರಿಸುವ ಸರಳ ಆಹಾರ ಸೇರ್ಪಡೆಗಳ ಬಗ್ಗೆ ವಿವರಿಸಿದ್ದಾರೆ. ಆರೋಗ್ಯಕರ ಕರುಳಿನ ಅಗತ್ಯ ವೈದ್ಯೆ ಮೃಣಾಲಿನಿ ಅವರ ಪ್ರಕಾರ ಕರುಳು ಆಹಾರವನ್ನು ಸಂಸ್ಕರಿಸುವುದಕ್ಕಿಂತ ಹೆಚ್ಚಿನದನ್ನು ಮಾಡುತ್ತದೆ. ರೋಗನಿರೋಧಕ ಶಕ್ತಿ, ಚಯಾಚಪಯ, ಮನೋಸ್ಥಿತಿ ಮತ್ತು ತೂಕ ನಿರ್ವಹಣೆ ನಿಯಂತ್ರಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಕರುಳಿನ ಸೂಕ್ಷ್ಮಜೀವಿ ಅಸಮತೋಲನಗೊಂಡಲ್ಲಿ ಈ ಕೆಳಗಿನ ಸಮಸ್ಯೆಗಳು ಕಂಡುಬರಬಹುದು. * ಉಬ್ಬುವಿಕೆ * ಮಲಬದ್ಧತೆ * ಸಕ್ಕರೆ ಕಡುಬಯಕೆಗಳು * ಕಡಿಮೆ ಶಕ್ತಿ * ತೂಕದ ಸಮಸ್ಯೆ ಆದರೆ, ಕರುಳಿನ ಆರೋಗ್ಯವನ್ನು ಪುನಃಸ್ಥಾಪಿಸಲು ದುಬಾರಿ ಡಿಟಾಕ್ಸ್ ಅಥವಾ ಶುದ್ಧೀಕರಣಗಳ ಅಗತ್ಯವಿಲ್ಲ. ಬದಲಾಗಿ ಮನೆಯಲ್ಲಿ ಸುಲಭವಾಗಿ ಲಭ್ಯವಿರುವ ಸರಳ, ದೈನಂದಿನ ಆಹಾರಗಳೇ ಕರುಳಿನ ಬ್ಯಾಕ್ಟೀರಿಯವನ್ನು ಪೋಷಿಸಿ ಮರುಸಮತೋಲನಗೊಳಿಸಬಹುದು. ಮೊಸರು, ಹುದುಗಿಸಿದ ಹಿಟ್ಟುಗಳು, ಫೈಬರ್ ಅಂಶ ಹೆಚ್ಚಾಗಿರುವ ತರಕಾರಿಗಳು, ಬೆಳ್ಳುಳ್ಳಿ ಮತ್ತು ಈರುಳ್ಳಿಗಳು ಕರುಳಿನಲ್ಲಿ ಉತ್ತಮ ಬ್ಯಾಕ್ಟೀರಿಯ ಪೋಷಿಸಲು ನೆರವಾಗುತ್ತವೆ. ಕರುಳನ್ನು ಶಮನಗೊಳಿಸುವುದೆಂದರೆ ಆಹಾರಕ್ಕೆ ಮಿತಿ ಹೇರುವುದಲ್ಲ. ಸೂಕ್ತ ಮೈಕ್ರೋಬ್ ಗಳನ್ನು ಪೋಷಿಸುವುದು. ನಿತ್ಯದ ಸಣ್ಣ ಬದಲಾವಣೆಗಳಿಂದ ದೀರ್ಘಕಾಲೀನ ಸಮತೋಲನ ಸಾಧಿಸಬಹುದು. ನಿಮ್ಮ ಜಠರದ ಆರೋಗ್ಯ ಕಾಪಾಡಬಲ್ಲ ಕೆಲವು ಆಹಾರಗಳ ವಿವರ ಹೀಗಿದೆ: ►ಮೊಸರು ಅಥವಾ ಯೋಗಾರ್ಟ್ ಮೃಣಾಲಿನಿ ಅವರು ಹೇಳುವ ಪ್ರಕಾರ ಮೊಸರಿನಲ್ಲಿ ಸಹಜವಾಗಿ ಪ್ರೊಬಯಾಟಿಕ್, ಲಾಭಕರ ಬ್ಯಾಕ್ಟೀರಿಯಗಳು ಇರುತ್ತವೆ. ಹೀಗಾಗಿ ಆರೋಗ್ಯಕರ ಕರುಳಿಗೆ ನೆರವು ನೀಡುತ್ತದೆ. ಮೊಸರು ಜಠರದ ಮೈಕ್ರೋಬಯಾಮ್ ಸಮತೋಲನ ಕಾಪಾಡುತ್ತದೆ. ಹೊಟ್ಟೆ ಉಬ್ಬುವುದನ್ನು ನಿಯಂತ್ರಿಸುತ್ತದೆ. ಜೀರ್ಣಕ್ರಿಯೆಗೆ ಬೆಂಬಲ ನೀಡುತ್ತದೆ. ಆದರೆ ರುಚಿ ಬೆರೆಸಿದ ಅಥವಾ ಸಿಹಿ ಮಾಡಿರುವುದಕ್ಕಿಂತ ತಾಜಾ ಮನೆಯಲ್ಲಿ ತಯಾರಿಸಿದ ಮೊಸರು ಉತ್ತಮ. ► ಹುದುಗಿಸಿದ ಆಹಾರಗಳು ಇಡ್ಲಿ ಮತ್ತು ದೋಸೆ ಹಿಟ್ಟಿನಂತಹ ಹುದುಗಿಸಿದ ಆಹಾರಗಳ ಜೊತೆಗೆ ಮಜ್ಜಿಗೆ ಕರುಳಿಗೆ ಉತ್ತಮ. ಇವು ನೈಸರ್ಗಿಕವಾಗಿ ಹುದುಗಿಸುವಿಕೆಯಿಂದ ಸಿಗುವ ಆಹಾರಗಳಾದ ಕಾರಣ ಆರೋಗ್ಯಕರ ಕರುಳಿನ ಬ್ಯಾಕ್ಟೀರಿಯವನ್ನು ಪೋಷಿಸುತ್ತವೆ. * ಕರುಳಿನಲ್ಲಿ ವೈವಿಧ್ಯತೆಯನ್ನು ಸುಧಾರಿಸುತ್ತದೆ. * ಪೋಷಕಾಂಶಗಳ ಹೀರುವಿಕೆ ವೃದ್ಧಿಸುತ್ತದೆ. * ಉರಿಯೂತ ಕಡಿಮೆ ಮಾಡುತ್ತದೆ. ಭಾರತೀಯ ಆಹಾರಕ್ರಮಗಳು ಕರುಳಿಗೆ ಅನುಕೂಲಕರವಾಗಿವೆ ಎಂದು ಮೃಣಾಲಿನಿ ಹೇಳುತ್ತಾರೆ. - ಫೈಬರ್ ಹೆಚ್ಚಾಗಿರುವ ಆಹಾರಗಳು ಫೈಬರ್ ಹೆಚ್ಚಾಗಿರುವ ಓಟ್ಸ್, ಸಿರಿಧಾನ್ಯಗಳು ಮತ್ತು ವೈವಿಧ್ಯಮಯ ತರಕಾರಿಗಳು ನೈಸರ್ಗಿಕ ಪ್ರಿಬಯಾಟಿಕ್ಸ್ ಹೊಂದಿರುತ್ತವೆ ಇವು ಆರೋಗ್ಯಕರ ಕರುಳಿನ ಬ್ಯಾಕ್ಟೀರಿಯವನ್ನು ಪೋಷಿಸುತ್ತವೆ. * ನಿಯಮಿತ ಕರುಳಿನ ಚಲನೆ ಸುಧಾರಿಸುತ್ತದೆ * ಮಲಬದ್ಧತೆ ಕಡಿಮೆ ಮಾಡುತ್ತದೆ. * ರಕ್ತದಲ್ಲಿನ ಸಕ್ಕರೆ ನಿಯಂತ್ರಣವನ್ನು ಸುಧಾರಿಸುತ್ತದೆ. ನಿತ್ಯವೂ 25ರಿಂದ 30 ಗ್ರಾಂಗಳಷ್ಟು ಫೈಬರ್ ಸೇವನೆ ಉತ್ತಮ ಎನ್ನುತ್ತಾರೆ ಮೃಣಾಲಿನಿ. -ಚಿಯಾ ಬೀಜಗಳು ಮತ್ತು ಪ್ಲ್ಯಾಕ್ಸ್ ಬೀಜಗಳು ಚಿಯಾ ಮತ್ತು ಪ್ಲ್ಯಾಕ್ಸ್ ಬೀಜಗಳು ಕರಗುವ ಫೈಬರ್ಗಳನ್ನು ಮತ್ತು ಆರೋಗ್ಯಕರ ಕೊಬ್ಬಾಗಿರುವ ಒಮೆಗಾ-3ಯನ್ನು ಸಮೃದ್ಧವಾಗಿ ಹೊಂದಿರುತ್ತವೆ. ಇವು ಕರುಳಿನಲ್ಲಿ ಜೆಲ್ನಂತರ ರಚನೆಯನ್ನು ಬೆಳೆಸುತ್ತವೆ. * ಮಲದ ಸ್ಥಿರತೆಯನ್ನು ಸುಧಾರಿಸುತ್ತದೆ. * ಕರುಳಿನ ಉರಿಯೂತವನ್ನು ಕಡಿಮೆ ಮಾಡುತ್ತದೆ. * ಚಯಾಪಚಯ ಆರೋಗ್ಯವನ್ನು ಬೆಂಬಲಿಸುತ್ತದೆ. ಉತ್ತಮ ಆರೋಗ್ಯಕ್ಕಾಗಿ ಸೇವಿಸುವ ಮೊದಲು ಅವುಗಳನ್ನು ನೆನೆಸಿಟ್ಟು ಬಳಸುವುದು ಉತ್ತಮ. -ಬೆಳ್ಳುಳ್ಳಿ ಮತ್ತು ಈರುಳ್ಳಿಗಳು ಮೃಣಾಲಿನಿ ಪ್ರಕಾರ ಬೆಳ್ಳುಳ್ಳಿ ಮತ್ತು ಈರುಳ್ಳಿಗಳಲ್ಲಿ ನೈಸರ್ಗಿಕವಾಗಿ ಪ್ರಿಬಯಾಟಿಕ್ಸ್ಗಳು ಇರುತ್ತವೆ. * ಗ್ಯಾಸ್ಟ್ರಿಕ್ ಸಮಸ್ಯೆ ಕಡಿಮೆ ಮಾಡುತ್ತದೆ. * ರೋಗನಿರೋಧಕ ಶಕ್ತಿ ಸುಧಾರಿಸುತ್ತದೆ. * ಆರೋಗ್ಯಕರ ಜೀರ್ಣಕ್ರಿಯೆಯನ್ನು ಪ್ರೋತ್ಸಾಹಿಸುತ್ತದೆ. ಇವುಗಳಲ್ಲಿ ಉತ್ತಮ ಬ್ಯಾಕ್ಟೀರಿಯವನ್ನು ಪೋಷಿಸುವ ಇನ್ಸುಲಿನ್ ಇರುತ್ತದೆ.

ವಾರ್ತಾ ಭಾರತಿ 3 Mar 2026 5:20 pm

Bantwal | ಬ್ರಹ್ಮರಕೊಟ್ಲು ಟೋಲ್ ಗೇಟ್ ತೆರವಿಗೆ ಆಗ್ರಹಿಸಿ ರಮಾನಾಥ ರೈ ನೇತೃತ್ವದಲ್ಲಿ ಧರಣಿ

ಬಂಟ್ವಾಳ : ತಾಲೂಕಿನ ಬ್ರಹ್ಮರಕೂಟ್ಲುವಿನಲ್ಲಿ ಕಾರ್ಯಾಚರಿಸುತ್ತಿರುವ ಟೋಲ್ ಗೇಟ್ ತೆರವಿಗೆ ಆಗ್ರಹಿಸಿ ಮಾಜಿ ಸಚಿವ ಬಿ.ರಮಾನಾಥ್ ರೈ ನೇತೃತ್ವದಲ್ಲಿ ಬ್ರಹ್ಮರಕೂಟ್ಲು ಟೋಲ್ ಗೇಟ್ ತೆರವು ಹೋರಾಟ ಸಮಿತಿಯ ವತಿಯಿಂದ ಸಮಾನ ಮನಸ್ಕ ಸಂಘಟನೆಗಳಿಂದ ಸಾಮೂಹಿಕ ಧರಣಿ ಮಂಗಳವಾರ ಟೋಲ್ ಗೇಟ್ ಬಳಿ ನಡೆಯಿತು. ಧರಣಿಯನ್ನು‌ ಉದ್ದೇಶಿಸಿ ಮಾತನಾಡಿ ರಮಾನಾಥ ರೈ ಅವರು, ಅವೈಜ್ಞಾನಿಕ ಮತ್ತು ಅಸಮರ್ಪಕವಾಗಿ ಕಾರ್ಯಾಚರಣೆ ನಡೆಸುತ್ತಿರುವ ಈ ಟೋಲ್ ಗೇಟ್ ಅನ್ನು ಕೂಡಲೇ ತೆರವು ಗೊಳಿಸಬೇಕು ಎಂದು ಆಗ್ರಹಿಸಿದರು. ಬ್ರಹ್ಮರಕೊಟ್ಲು ಟೋಲ್ ಪ್ಲಾಜಾ ಕಳೆದ 13 ವರ್ಷಗಳಿಂದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ನಿಯಮಗಳ ವಿರುದ್ಧವಾಗಿ ಟೋಲ್ ಸಂಗ್ರಹಿಸುತ್ತಿದ್ದು, ಇದು ಜನತೆಗೆ ಮಾಡುವ ಮಹಾಮೋಸ ಮತ್ತು ಹಗಲು ದರೋಡೆ ಆಗಿದೆ. ಇದರ ವಿರುದ್ಧ ಪಕ್ಷಾತೀತವಾಗಿ ಸಂಘಟಿತವಾಗಿ ಸಕ್ರಿಯ ಹೋರಾಟಗಳನ್ನು ನಿರಂತರ ಮಾಡುವ ಮೂಲಕ ಬ್ರಹ್ಮರಕೋಟ್ಲು ಟೋಲ್ ಅನ್ನು ಶಾಶ್ವತವಾಗಿ ರದ್ದುಗೊಳಿಸಬಹುದು‌. ಇಂದು ಧರಣಿ ಆರಂಭ ಅಷ್ಟೇ, ಮುಂದಿನ ದಿನಗಳಲ್ಲಿ ಈ ಬಗ್ಗೆ ಅವಿರತವಾಗಿ ಹೋರಾಟ ನಡೆಸಲಾಗುವುದು. ಪ್ರತೀ ಹಂತದಲ್ಲೂ ನೀವೆಲ್ಲರೂ ಸಹಕರಿಸಬೇಕು ಎಂದು ಕರೆ ನೀಡಿದರು. ವಿವಿಧ ಸಂಘ ಸಂಸ್ಥೆಗಳ ಪ್ರಮುಖರಾದ ಮುನೀರ್ ಕಾಟಿಪಳ್ಳ, ಎಂ.ಜಿ.ಹೆಗ್ಡೆ, ಸುಹೈಲ್ ಖಂದಕ್, ನ್ಯಾಯವಾದಿ ಸುರೇಶ್, ಅಶ್ವಿನಿ ಕುಮಾರ್ ರೈ, ಎಂ.ಎಸ್.ಮಹಮ್ಮದ್, ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಸದಾಶಿವ ಪಡುಬಿದ್ರಿ, ಸುನಿಲ್ ಕುಮಾರ್ ಬಜಾಲ್, ಮಂಜುಳಾ ನಾಯಕ್, ಮಮತಾ ಗಟ್ಟಿ, ಎ.ರಾಮಣ್ಣ ವಿಟ್ಲ, ಬಿ.ಎಂ.ಭಟ್, ಹೇಮನಾಥ ಶೆಟ್ಟಿ ಕಾವು ಮೊದಲಾದವರು ಧರಣಿಯನ್ನು ಉದ್ದೇಶಿಸಿ ಮಾತನಾಡಿದರು. ಸಮಿತಿಯ ಸಂಚಾಲಕರಾದ ಬಿ.ಶೇಖರ್ ಸ್ವಾಗತಿಸಿ, ಮೋಹನ್ ಶೆಟ್ಟಿ ವಂದಿಸಿದರು.

ವಾರ್ತಾ ಭಾರತಿ 3 Mar 2026 5:04 pm

Fruits-e-Kyc-Karnataka: ಮನೆಯಲ್ಲೇ ಕುಳಿತು ಮೊಬೈಲ್ನಲ್ಲಿ ಇಕೆವೈಸಿ ಮಾಡಿ

ನೀವು ಈಗಾಗಲೇ Fruits ಖಾತೆಯನ್ನು ಹೊಂದಿದ್ದರೆ ಪೋರ್ಟಲ್ನಲ್ಲಿ ನೇರವಾಗಿ ಲಾಗಿನ್ ಮಾಡಬಹುದು. ಆದರೆ Fruits ಐಡಿ ಹೊಂದಿಲ್ಲದಿದ್ದರೆ ನಿಮ್ಮದೇ ಆದ ಒಂದು ಖಾತೆಯನ್ನು ಸೃಜಿಸಿಕೊಳ್ಳಬೇಕು: ಪಿಎಂ ಕಿಸಾನ್ ಸೇರಿದಂತೆ ಸರ್ಕಾರದ ಕೃಷಿ ಯೋಜನೆಗಳ ಲಾಭ ಪಡೆಯಲು ಮತ್ತು ಹೊಸದಾಗಿ ಸೆಂಟ್ರಲ್ ಫಾರ್ಮರ್ ಐಡಿ ಸೃಜಿಸಲು ರೈತರು ‘ಫ್ರೂಟ್ಸ್’ (Fruits-e-kyc-Karnataka) ತಂತ್ರಾಂಶದಲ್ಲಿ ಇ-ಕೆವೈಸಿ ಮಾಡುವುದು ಕಡ್ಡಾಯವಾಗಿದೆ. ಆದರೆ, ಇದಕ್ಕಾಗಿ ರೈತರು ತಮ್ಮ ಕೆಲಸ-ಕಾರ್ಯ ಬಿಟ್ಟು ರೈತ ಸಂಪರ್ಕ ಕೇಂದ್ರ ಅಥವಾ ಸೈಬರ್ ಸೆಂಟರ್ಗಳ ಮುಂದೆ ಗಂಟೆಗಟ್ಟಲೆ ಕಾಯುವ ಅಗತ್ಯವಿಲ್ಲ. ಸ್ವತಃ ರೈತರೇ ‘ಸಿಟಿಜನ್ ಲಾಗಿನ್’ ಮೂಲಕ ತಮ್ಮ ಕೈಯಲ್ಲಿರುವ ಸ್ಮಾರ್ಟ್ಫೋನ್ ಬಳಸಿ ಕೇವಲ 5 ನಿಮಿಷಗಳಲ್ಲಿ ಈ ಪ್ರಕ್ರಿಯೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಬಹುದು. ವಿವರ ಈ ಕೆಳಗಿನಂತಿದೆ: ಖಾತೆ ಸೃಷ್ಟಿಸುವುದು ಹೇಗೆ? ನೀವು ಈಗಾಗಲೇ Fruits ಖಾತೆಯನ್ನು ಹೊಂದಿದ್ದರೆ ಪೋರ್ಟಲ್ನಲ್ಲಿ ನೇರವಾಗಿ ಲಾಗಿನ್ ಮಾಡಬಹುದು. ಆದರೆ Fruits ಐಡಿ ಹೊಂದಿಲ್ಲದಿದ್ದರೆ ಈ ಕೆಳಗಿನಂತೆ ನಿಮ್ಮದೇ ಆದ ಒಂದು ಖಾತೆಯನ್ನು ಸೃಜಿಸಿಕೊಳ್ಳಬೇಕು: 1. ಮೊಬೈಲ್ನ ಗೂಗಲ್ ಕ್ರೋಮ್ನಲ್ಲಿ/ಅಥವಾ ಸಫಾರಿಯಲ್ಲಿ https://fruits.karnataka.gov.in/ ಎಂದು ಸರ್ಚ್ ಮಾಡಿ ಕರ್ನಾಟಕ ಸರ್ಕಾರದ ಅಧಿಕೃತ ವೆಬ್ಸೈಟ್ ತೆರೆಯಿರಿ. 2. ಮುಖಪುಟದಲ್ಲಿರುವ ‘ಸಿಟಿಜನ್ ಲಾಗಿನ್’ ಆಯ್ಕೆಯ ಮೇಲೆ ಕ್ಲಿಕ್ ಮಾಡಿ. 3. ಕೆಳಗೆ ‘ಸಿಟಿಜನ್ ರಿಜಿಸ್ಟ್ರೇಶನ್’ (ನಾಗರಿಕ ನೋಂದಣಿ) ಎಂಬ ಲಿಂಕ್ ಇರುತ್ತದೆ. ಅದರ ಮೇಲೆ ಕ್ಲಿಕ್ ಮಾಡಿ. 4. ನಿಮ್ಮ ಆಧಾರ್ ಕಾರ್ಡ್ ಸಂಖ್ಯೆಯನ್ನು ನಮೂದಿಸಿ. ಒಪ್ಪಿಗೆ ಬಾಕ್ಸ್ಗೆ ಟಿಕ್ ಮಾಡಿ, ‘ಒಟಿಪಿ’ ಆಯ್ಕೆಯನ್ನು ಆರಿಸಿಕೊಂಡು ‘ಸಬ್ಮಿಟ್’ ಬಟನ್ ಒತ್ತಿ. 5. ನಿಮ್ಮ ಆಧಾರ್ಗೆ ಲಿಂಕ್ ಆಗಿರುವ ಮೊಬೈಲ್ ನಂಬರ್ಗೆ ಬರುವ ಒಟಿಪಿಯನ್ನು ಹಾಕಿ ದೃಢೀಕರಿಸಿ. 6. ಕೊನೆಯದಾಗಿ, ನಿಮಗೆ ಸುಲಭವಾಗಿ ನೆನಪಿನಲ್ಲಿರುವಂತಹ ಹೊಸ ‘ಪಾಸ್ವರ್ಡ್’ ಅನ್ನು ಎರಡು ಬಾರಿ ಟೈಪ್ ಮಾಡಿ ‘ಕ್ರಿಯೇಟ್ ಪಾಸ್ವರ್ಡ್’ ಮೇಲೆ ಕ್ಲಿಕ್ ಮಾಡಿದರೆ, ನಿಮ್ಮ ಖಾತೆ ಯಶಸ್ವಿಯಾಗಿ ಸೃಷ್ಟಿಯಾಗುತ್ತದೆ. Fruits-e-Kyc-Karnataka ಮಾಡುವುದು ಹೇಗೆ? ನಿಮ್ಮ ಅಕೌಂಟ್ ಸೃಷ್ಟಿಯಾದ ನಂತರ ಮತ್ತೆ ‘ಸಿಟಿಜನ್ ಲಾಗಿನ್’ ಮುಖಪುಟಕ್ಕೆ ಬನ್ನಿ: 1. ನಿಮ್ಮ ಮೊಬೈಲ್ ಸಂಖ್ಯೆ, ಈಗಷ್ಟೆ ನೀವು ಸೆಟ್ ಮಾಡಿದ ಪಾಸ್ವರ್ಡ್ ಮತ್ತು ಅಲ್ಲಿ ಕಾಣುವ ಕ್ಯಾಪ್ಚಾ ಕೋಡ್ ಹಾಕಿ ಲಾಗಿನ್ ಆಗಿ. (ಲಾಗಿನ್ ಆಗುವಾಗಲೂ ನಿಮ್ಮ ಭದ್ರತೆಗಾಗಿ ಒಂದು ಒಟಿಪಿ ಬರುತ್ತದೆ.) ಅದನ್ನು ನಮೂದಿಸಿ. 2. ಲಾಗಿನ್ ಆದ ಕೂಡಲೇ ನಿಮ್ಮ ಡ್ಯಾಷ್ಬೋರ್ಡ್ನಲ್ಲಿ ‘ಇ-ಕೆವೈಸಿ’ ಮತ್ತು ‘ಫಾರ್ಮರ್ ಕನ್ಸೆಂಟ್’ ಎಂಬ ಎರಡು ಪ್ರಮುಖ ಆಯ್ಕೆಗಳು ಕಾಣಿಸುತ್ತವೆ. 3. ಮೊದಲು ಇ-ಕೆವೈಸಿ ಮೇಲೆ ಕ್ಲಿಕ್ ಮಾಡಿ. ಅಲ್ಲಿ ನಿಮ್ಮ ಆಧಾರ್ ಸಂಖ್ಯೆ ನಮೂದಿಸಿ. ಆಧಾರ್ ಒಟಿಪಿ ಮೂಲಕ ದೃಢೀಕರಿಸಿದರೆ ‘ಇ-ಕೆವೈಸಿ ಸಕ್ಸೆಸ್ಫುಲೀ ಅಪ್ಡೇಟೆಡ್’ ಎಂಬ ಸಂದೇಶ ಬರುತ್ತದೆ. ಅಲ್ಲಿಗೆ ಇ-ಕೆವೈಸಿ ಮುಗಿಯಿತು. ರೈತ ಸಹಮತಿ ಪತ್ರ ಇ-ಕೆವೈಸಿ ಮುಗಿದ ತಕ್ಷಣ ಮಾಡಬೇಕಾದ ಅತಿ ಮುಖ್ಯವಾದ ಕೆಲಸವಿದು. ಇದನ್ನು ಮಾಡದೆ ಇದ್ದರೆ, ನಿಮ್ಮ ಸೆಂಟ್ರಲ್ ಐಡಿ ರಚನೆಯಾಗುವುದಿಲ್ಲ: 1. ಪೋರ್ಟಲ್ನಲ್ಲಿರುವ ‘ಫಾರ್ಮರ್ ಕನ್ಸೆಂಟ್’ (ರೈತ ಸಹಮತಿ ಪತ್ರ) ಆಯ್ಕೆಯ ಮೇಲೆ ಕ್ಲಿಕ್ ಮಾಡಿ. 2. ಕೃಷಿ ಇಲಾಖೆಯ ಯೋಜನೆಗಳಿಗೆ ನಿಮ್ಮ ಆಧಾರ್ ಮಾಹಿತಿಯನ್ನು ಬಳಸಲು ಒಪ್ಪಿಗೆ ಸೂಚಿಸುವ ಅಧಿಕೃತ ಡಿಕ್ಲರೇಶನ್ ಅಲ್ಲಿರುತ್ತದೆ. 3. ನಂತರ ಅಲ್ಲಿಯೇ ಇರುವ ಇ-ಸೈನ್ ಎಂಬ ಬಟನ್ ಮೇಲೆ ಕ್ಲಿಕ್ ಮಾಡಿ. 4. ಇದು ನಿಮ್ಮನ್ನು ಇ-ಸೈನ್ ವೆಬ್ಪುಟಕ್ಕೆ ಕೊಂಡೊಯ್ಯುತ್ತದೆ. ಅಲ್ಲಿ ಮತ್ತೆ ನಿಮ್ಮ ಆಧಾರ್ ಸಂಖ್ಯೆ ಹಾಕಿ, ಒಟಿಪಿ ನಮೂದಿಸಿ ಸಬ್ಮಿಟ್ ಮಾಡಿದರೆ, ‘ಇ-ಸೈನ್ಡ್ ಫಾರ್ಮರ್ ಕನ್ಸೆಂಟ್ ಸೇವ್ಡ್ ಸಕ್ಸೆಸ್ಫುಲೀ’ (ಇಸಮ್ಮತಿ ರೈತರ ಒಪ್ಪಿಗೆಯನ್ನು ಯಶಸ್ವಿಯಾಗಿ ಉಳಿಸಲಾಗಿದದೆ) ಎಂಬ ಸಂದೇಶ ಬರುತ್ತದೆ. ಕೇಂದ್ರ ಸರ್ಕಾರದ ‘ಸೆಂಟ್ರಲ್ ಫಾರ್ಮರ್ ಐಡಿ’ ಯಶಸ್ವಿಯಾಗಿ ಜನರೇಟ್ ಆಗಲು ಮುಖ್ಯವಾಗಿ ಬೇಕಿರುವುದು ಈ ‘ಇ-ಕೆವೈಸಿ’ ಮತ್ತು “ಫಾರ್ಮರ್ ಕನ್ಸೆಂಟ್’ ಮಾತ್ರ. ಈ ಎರಡು ಹಂತಗಳನ್ನು ನೀವು ಸರಿಯಾಗಿ ಮುಗಿಸಿದರೆ ನಿಮ್ಮ ಕೆಲಸ ಶೇ 100 ಪೂರ್ಣಗೊಂಡಂತೆ ಸರಿ. ಜೊತೆಗೆ ಇದೇ ಸಿಟಿಜನ್ ಲಾಗಿನ್ ಪೋರ್ಟಲ್ನಲ್ಲಿ ನೀವು ನಿಮ್ಮ ಹಳೆಯ ಮೊಬೈಲ್ ನಂಬರ್ ಬದಲಿಸಿ ಹೊಸ ನಂಬರ್ ಅನ್ನು ಅಪ್ಡೇಟ್ ಮಾಡಿಕೊಳ್ಳುವ ಅಗತ್ಯವಿದೆ.

ವಾರ್ತಾ ಭಾರತಿ 3 Mar 2026 5:04 pm

ಮೈಸೂರು: ಮಾ.22ಕ್ಕೆ ಡಿವಿಜಿ ಮತ್ತು ಬಿಜಿಎಲ್ ಸ್ವಾಮಿ ಪ್ರಶಸ್ತಿ ಪ್ರಧಾನ ಸಮಾರಂಭ, ಪುರಸ್ಕೃತರ ವಿವರ

ಮೈಸೂರು: ಇಲ್ಲಿನ 'ಡಿವಿಜಿ ಬಳಗ ಪ್ರತಿಷ್ಠಾನ'ದ ವತಿಯಿಂದ 'ಡಿಜಿವಿ ಪ್ರಶಸ್ತಿ' ಹಾಗೂ 'ಬಿಜಿಎಲ್ ಸ್ವಾಮಿ ಪ್ರಶಸ್ತಿ' ಪ್ರಧಾನ ಸಮಾರಂಭ-2026ವು ಮೈಸೂರಿನ ಮಾರ್ಚ್ 22ರಂದು ಬೆಳಗ್ಗೆ 10 ಗಂಟೆಗೆ ಬಿಎಸ್‌ಎಸ್ ವಿದ್ಯೋದಯ ಕೃಷ್ಣಮೂರ್ತಿಪುರಂ ನಲ್ಲಿ ಜರುಗಲಿದೆ. ಕಾರ್ಯಕ್ರಮಕ್ಕೆ ಕೆಲವು ಮಹನೀಯರು ಅತಿಥಿಗಳಾಗಿ ಆಗಮಿಸಲಿದ್ದಾರೆ. ಪ್ರಮುಖ ಪ್ರಶಸ್ತಿ ಪುರಸ್ಕೃತರ ಕಿರು ಪರಿಚಯ ಇಲ್ಲಿದೆ. ಡಿವಿಜಿ ಪ್ರಶಸ್ತಿ ಪ್ರಧಾನ ಸಮಾರಂಭಕ್ಕೆ ಮುಖ್ಯ

ಒನ್ ಇ೦ಡಿಯ 3 Mar 2026 5:00 pm

ಅನಿಲ್ ಅಂಬಾನಿ ಸಮೂಹ ಸಂಸ್ಥೆಗಳಿಂದ ಬ್ಯಾಂಕ್ ವಂಚನೆ ಪ್ರಕರಣ : SIT ರಚಿಸಲು EDಗೆ ಸುಪ್ರೀಂ ಕೋರ್ಟ್ ಸಲಹೆ

ಹೊಸದಿಲ್ಲಿ: ಉದ್ಯಮಿ ಅನಿಲ್ ಅಂಬಾನಿಗೆ ಸಂಬಂಧಿಸಿದ ಕಂಪನಿಗಳ ಬ್ಯಾಂಕ್ ವಂಚನೆ ಆರೋಪದ ತನಿಖೆಗೆ ವಿಶೇಷ ತನಿಖಾ ತಂಡ (SIT) ರಚಿಸುವಂತೆ ಸುಪ್ರೀಂ ಕೋರ್ಟ್ ಜಾರಿ ನಿರ್ದೇಶನಾಲಯಕ್ಕೆ ಸಲಹೆ ನೀಡಿದೆ. ಪ್ರಕರಣವು ರಿಲಯನ್ಸ್ ಕಮ್ಯುನಿಕೇಷನ್ಸ್ ಲಿಮಿಟೆಡ್, ರಿಲಯನ್ಸ್ ಕಮರ್ಷಿಯಲ್ ಫೈನಾನ್ಸ್ ಲಿಮಿಟೆಡ್, ರಿಲಯನ್ಸ್ ಹೋಮ್ ಫೈನಾನ್ಸ್ ಲಿಮಿಟೆಡ್ ಹಾಗೂ ರಿಲಯನ್ಸ್ ಪವರ್ ಲಿಮಿಟೆಡ್‌ಗೆ ಸಂಬಂಧಿಸಿದೆ. ರಿಲಯನ್ಸ್ ಹೋಮ್ ಫೈನಾನ್ಸ್ 33 ಬ್ಯಾಂಕ್‌ಗಳಿಂದ ಪಡೆದ ಸಾಲದಲ್ಲಿ 7,523.46 ಕೋಟಿ ರೂ. ಸುಸ್ತಿ ಉಳಿದಿದ್ದು, 2,116.28 ಕೋಟಿ ರೂ. ವಸೂಲಾಗಿದೆ. ನಿವ್ವಳ ಸುಸ್ತಿ 5,407.18 ಕೋಟಿ ರೂ. ಆಗಿದೆ. ರಿಲಯನ್ಸ್ ಕಮರ್ಷಿಯಲ್ ಫೈನಾನ್ಸ್‌ಗೆ 6,280.57 ಕೋಟಿ ರೂ. ಹಾಗೂ ರಿಲಯನ್ಸ್ ಕಮ್ಯುನಿಕೇಷನ್ಸ್‌ಗೆ 40,185.55 ಕೋಟಿ ರೂ. ಸುಸ್ತಿ ಉಳಿದಿದೆ. ರಿಲಯನ್ಸ್ ಪವರ್ ಸಂಬಂಧಿತವಾಗಿ 105.98 ಕೋಟಿ ರೂ. ನಷ್ಟ ಉಂಟಾಗಿದೆ. 46 ಸ್ಥಳಗಳಲ್ಲಿ ಶೋಧ ನಡೆಸಿ, 12,012.45 ಕೋಟಿ ರೂ. ಮೌಲ್ಯದ ಸ್ವತ್ತುಗಳನ್ನು ಮುಟ್ಟುಗೋಲು ಹಾಕಲಾಗಿದೆ. ಸುಪ್ರೀಂ ಕೋರ್ಟ್, ನಿಧಿಗಳ ದುರ್ಬಳಕೆ ಕುರಿತು ಸಂಪೂರ್ಣ ಪರಿಶೀಲನೆ ನಡೆಸಿ ಅಪರಾಧ ಪ್ರಕ್ರಿಯೆಯ ಅಂದಾಜು ಮೌಲ್ಯ ನಿರ್ಧರಿಸಲು EDಗೆ ಸೂಚಿಸಿದೆ.

ವಾರ್ತಾ ಭಾರತಿ 3 Mar 2026 4:53 pm