ಬೆಳ್ತಂಗಡಿ : ನೇತ್ರಾವತಿ ನದಿ ಕಿನಾರೆಯಿಂದ ಮರಳು ಕಳ್ಳತನ ಆರೋಪ; ಪ್ರಕರಣ ದಾಖಲು
ಬೆಳ್ತಂಗಡಿ : ಕಡಿರುದ್ಯಾವರ ಗ್ರಾಮದ ಅಲೆಂಜಿಕಟ್ಟ ಎಂಬಲ್ಲಿ ನೇತ್ರಾವತಿ ನದಿ ಕಿನಾರೆಯಿಂದ ಮರಳು ಕಳ್ಳತನ ಆರೋಪದಲ್ಲಿ ದಾಳಿ ನಡೆಸಿದ ಬೆಳ್ತಂಗಡಿ ಪೊಲೀಸರು ಸೊತ್ತುಗಳನ್ನು ವಶಕ್ಕೆ ಪಡೆದು ಇಬ್ಬರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಬೆಳ್ತಂಗಡಿ ತಾಲೂಕಿನ ಇಂದಬೆಟ್ಟು ಗ್ರಾಮದ ಬೆದ್ರಬೆಟ್ಟು ಚರ್ಚ್ ಗುಡ್ಡೆ ನಿವಾಸಿ ನಿಝಾಮುದ್ದೀನ್ (47) ಮತ್ತು ಬೆಳ್ತಂಗಡಿ ತಾಲೂಕಿನ ಮಿತ್ತಬಾಗಿಲು ಗ್ರಾಮದ ಕಿಲ್ಲೂರು ನಿವಾಸಿ ಹನೀಫ್ (44) ಎಂಬವರು ಟಿಪ್ಪರ್ ಲಾರಿಯಲ್ಲಿ ಯಾವುದೇ ಸರಕಾರದ ಅನುಮತಿ ಇಲ್ಲದೆ ಅಕ್ರಮವಾಗಿ ಮರಳು ಸಂಗ್ರಹಿಸಿ ಸಾಗಾಟ ಮಾಡಲು ಯತ್ನಿಸುತ್ತಿದ್ದರು ಎಂದು ದೂರಲಾಗಿದೆ. ಅಕ್ರಮ ಮರಳು ತೆಗೆಯುತ್ತಿದ್ದ ಸ್ಥಳದಿಂದ 3 ಲಕ್ಷದ 50 ರೂಪಾಯಿ ಮೌಲ್ಯದ ಒಂದು ಲಾರಿ, 6,500 ರೂಪಾಯಿ ಮೌಲ್ಯದ ಮರಳು, ಮರಳನ್ನು ಲಾರಿಗೆ ತುಂಬಿಸಲು ಉಪಯೋಗಿಸಿದ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ. ಇಬ್ಬರು ಆರೋಪಿಗಳಾದ ನಿಝಾಮುದ್ದೀನ್ ಮತ್ತು ಹನೀಫ್ ವಿರುದ್ಧ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಎಎಸ್ಐ ಕುಶಾಲಪ್ಪ ನಾಯ್ಕ್ ಅವರು ಮಾ.4 ರಂದು ನೀಡಿದ ದೂರಿನಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ
ಮಾ.10: ಮದರ್ ತೆರೇಸಾ ವಿಚಾರ ವೇದಿಕೆಯಿಂದ ಸೌಹಾರ್ದ ಇಫ್ತಾರ್ ಕೂಟ
ಮಂಗಳೂರು, ಮಾ.5: ಸಂತ ಮದರ್ ತೆರೇಸಾ ವಿಚಾರ ವೇದಿಕೆಯ ಆಶ್ರಯದಲ್ಲಿ ಪ್ರೀತಿ ಹರಡಲಿ ಎಲ್ಲೆಡೆ ಎಂಬ ಘೋಷವಾಕ್ಯದೊಂದಿಗೆ, ಸರ್ವ ಧರ್ಮದ ಹಬ್ಬಗಳು ಸರ್ವ ಜನತೆಯ ಹಬ್ಬವಾಗಲಿ ಎಂಬ ಆಶಯದೊಂದಿಗೆ, ರಮಝಾನ್ ಪ್ರಯುಕ್ತ ಸೌಹಾರ್ದ ಇಫ್ತಾರ್ ಕೂಟವನ್ನು ಮಾ.10ರಂದು ಸಂಜೆ 5:15ಕ್ಕೆ ಬಾವುಟಗುಡ್ಡದಲ್ಲಿರುವ ಸಂತ ಅಲೋಶಿಯಸ್ ಕಾಲೇಜಿನ ಸಹೋದಯ ಸಭಾಂಗಣದಲ್ಲಿ ಆಯೋಜಿಸಲಾಗಿದೆ ಎಂದು ವೇದಿಕೆಯ ಅಧ್ಯಕ್ಷ ರೋಯ್ ಕ್ಯಾಸ್ಟಲಿನೋ ತಿಳಿಸಿದ್ದಾರೆ. ಅತಿಥಿಗಳಾಗಿ ಚೊಕ್ಕಬೆಟ್ಟು ಮಸೀದಿಯ ಖತೀಬ್ ಮೌಲಾನಾ ಯು.ಕೆ. ಅಬ್ದುಲ್ ಅಝೀಝ್ ದಾರಿಮಿ, ಸಂತ ಅಲೋಶಿಯಸ್ ಶಿಕ್ಷಣ ಸಂಸ್ಥೆಯ ಸಹ ಉಪಕುಲಪತಿ ಡಾ.ಮೆಲ್ವಿನ್ ಡಿಕುನ್ನಾ, ಹಿರಿಯ ಲೇಖಕಿ ಬಿ.ಎಂ. ರೋಹಿಣಿ, ಝೀನತ್ ಭಕ್ಷ್ ಜುಮಾ ಮಸ್ಜಿದ್ನ ಉಪಾಧ್ಯಕ್ಷ ಕೆ. ಆಶ್ರಫ್ ಭಾಗವಹಿಸಲಿದ್ದಾರೆ. ವೇದಿಕೆಯ ಅಧ್ಯಕ್ಷ ರೋಯ್ ಕ್ಯಾಸ್ಟಲಿನೋ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.
ಮಂಗಳೂರು| ಲೈಂಗಿಕ ಕಿರುಕುಳ ಆರೋಪ: ನೈರ್ಮಲ್ಯ ನಿರೀಕ್ಷಕನ ವಿರುದ್ಧ ಪ್ರಕರಣ ದಾಖಲು
ಮಂಗಳೂರು, ಮಾ.5: ಮಂಗಳೂರು ಮಹಾನಗರ ಪಾಲಿಕೆಯ ಪೌರಕಾರ್ಮಿಕೆಗೆ ನೈರ್ಮಲ್ಯ ನಿರೀಕ್ಷಕ ಲೈಂಗಿಕ ಕಿರುಕುಳ ಮಾಡಿದ್ದಾನೆ ಎಂದು ಆರೋಪಿಸಲಾಗಿದ್ದು, ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತಾನು ಕಂಕನಾಡಿಯ ವಾರ್ಡ್ನಲ್ಲಿ ಖಾಯಂ ಪೌರ ಕಾರ್ಮಿಕೆಯಾಗಿದ್ದು, 10 ದಿನ ರಜೆ ಬೇಕು ಎಂದು ಮನಪಾ ನೈರ್ಮಲ್ಯ ನಿರೀಕ್ಷಕ ಭಾಸ್ಕರ ಎಂಬಾತನ ಬಳಿ ಕೇಳಿದಾಗ 2025ರ ಜೂ.22ರಂದು ಬೆಳಗ್ಗೆ 10ಕ್ಕೆ ಕಚೇರಿಗೆ ಬರಲು ತಿಳಿಸಿದ್ದು, ಅದರಂತೆ ಆ ದಿನ ತಾನು ಕಚೇರಿಗೆ ಹೋದಾಗ ನನ್ನ ಕೈಗೆ 1 ಸಾವಿರ ರೂ. ತುರುಕಿ ಲೈಂಗಿಕ ಕಿರುಕುಳ ನೀಡಿದ್ದಾರೆ. ಈ ವೇಳೆ ಸಂತು ನಾಯ್ಕ ಎಂಬಾತ ನೋಡಿದ ಕೂಡಲೆ ತನ್ನನ್ನು ಬಿಟ್ಟಿದ್ದಾನೆ. ಆ ಬಳಿಕ ತನ್ನನ್ನು ಬೇರೆ ಬೇರೆ ಕಡೆ ಕರೆದಿದ್ದು, ಕೆಲಸ ಮಾಡುವಲ್ಲಿಗೂ ಬಂದು ಕಿರುಕುಳ ನೀಡಿದ್ದಾನೆ. ನಂತರ ಇತರ ಕಾರ್ಮಿಕರ ಸಮ್ಮುಖ ನನಗೆ ಅವಾಚ್ಯ ಶಬ್ದದಿಂದ ಬೈದು, ರಜೆ ಮಾಡಿದರೆ ಕೆಲಸದಿಂದ ತೆಗೆದುಹಾಕುವುದಾಗಿ ಬೆದರಿಸಿದ್ದಾನೆ ಎಂದು 38ರ ಹರೆಯದ ಪೌರ ಕಾರ್ಮಿಕೆ ಮಹಿಳಾ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಅದರಂತೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
Finn Allen: ಆರ್ಸಿಬಿಯಲ್ಲಿ ಅವಕಾಶ ವಂಚಿತರಾಗಿ ಬೆಂಚ್ ಕಾದಿದ್ದ ಫಿನ್ ಅಲೆನ್ ವಿಶ್ವದಾಖಲೆ
Finn Allen RCB: ಟಿ20 ವಿಶ್ವಕಪ್ 2026ರ ಸೆಮಿಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನ್ಯೂಜಿಲೆಂಡ್ ಅಬ್ಬರದ ಬ್ಯಾಟಿಂಗ್ ಮಾಡಿ ತಂಡ ಫೈನಲ್ ಪ್ರವೇಶಿಸಲು ಪ್ರಮುಖ ಪಾತ್ರವಹಿಸಿದರು. ಅಷ್ಟೇ ಅಲ್ಲದೆ, ಹೊಸ ದಾಖಲೆಯೊಂದನ್ನು ಸಹ ಮಾಡಿದರು. ಕೇವಲ 33 ಎಸೆತಗಳಲ್ಲಿ ಶತಕ ಸಿಡಿಸಿ ಕ್ರಿಕೆಟ್ ಲೋಕದಲ್ಲಿ ಹೊಸ ಸಂಚಲನ ಮೂಡಿಸಿದರು. ಇದರ ಬೆನ್ನಲ್ಲೇ ಆರ್ಸಿಬಿ ಹೆಸರು ಮುನ್ನೆಲೆಗೆ
War 6 Day Update: ಅಣುಬಾಂಬ್ ದಾಳಿ ಎಚ್ಚರಿಕೆ ನೀಡಿದ ಟ್ರಂಪ್; ಶಾಂತಿ ಸಂಧಾನಕ್ಕೆ ಮುಂದಾದ ಇರಾನ್, 10 ಪ್ರಮುಖಾಂಶಗಳು
ಇರಾನ್ ಮೇಲೆ ದಾಳಿ ನಡೆಸಿದ ಇಸ್ರೇಲ್ ಮತ್ತು ಯುಎಸ್ ರಾಷ್ಟ್ರಗಳ ಪೈಕಿ ಅಮೆರಿಕಾಗೆ ಉಕ್ರೇನ್ ದೇಶ ತನ್ನ ಬೆಂಬಲ ನೀಡುವುದಾಗಿ ಘೋಷಿಸಿದೆ. ಎರಡು ದೇಶಗಳ ನಿರಂತರ ಕ್ಷಿಪಣಿ ದಾಳಿಗೆ ಇರಾನ್ ನೆಲ ಸ್ಮಶಾನವಾಗಿ ಮಾರ್ಪಟ್ಟಿದೆ. ಯುಎಸ್ ಜಲಾಂತರ್ಗಾಮಿ ನೌಕೆಯು ಇರಾನ್ ಯುದ್ಧನೌಕೆಯನ್ನು ಮುಳುಗಿಸಿತ್ತು. ಇದನ್ನು ಖಂಡಿಸಿದ ಇರಾನ್ ಪ್ರತೀಕಾರ ಎಂಬಂತೆ ಕೊಲ್ಲಿಯಲ್ಲಿ ಯುಎಸ್ನ ತೈಲ ಹಡಗುಗಳ ಮೇಲೆ
ಬೆಂಗಳೂರು: ಚೆಕ್ ಬೌನ್ಸ್ ಪ್ರಕರಣದಲ್ಲಿ ಮೂಡಿಗೆರೆಯ ಮಾಜಿ ಶಾಸಕ ಎಂ.ಪಿ. ಕುಮಾರಸ್ವಾಮಿ ಅವರನ್ನು ಅಪರಾಧಿ ಎಂದು ಘೋಷಿಸಿ ವಿಚಾರಣಾ ನ್ಯಾಯಾಲಯ ಹೊರಡಿಸಿದ್ದ ಆದೇಶವನ್ನು ಹೈಕೋರ್ಟ್ ಎತ್ತಿ ಹಿಡಿದಿದೆ. ಪ್ರಕರಣದಲ್ಲಿ ದೋಷಿ ಎಂದು ಘೋಷಿಸಿದ್ದ ಬೆಂಗಳೂರಿನ ಎಸಿಎಂಎಂ ನ್ಯಾಯಾಲಯದ ಆದೇಶ ಹಾಗೂ ಆ ಆದೇಶವನ್ನು ಎತ್ತಿಹಿಡಿದಿದ್ದ ಸೆಷನ್ಸ್ ನ್ಯಾಯಾಲಯದ ಆದೇಶ ರದ್ದುಕೋರಿ ಮಾಜಿ ಶಾಸಕ ಎಂ.ಪಿ. ಕುಮಾರಸ್ವಾಮಿ ಸಲ್ಲಿಸಿದ್ದ ಕ್ರಿಮಿನಲ್ ಮರುಪರಿಶೀಲನಾ ಅರ್ಜಿಯನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ವಜಾಗೊಳಿಸಿದೆ. ವಿಸ್ತೃತ ತೀರ್ಪು ಇನ್ನಷ್ಟೇ ಪ್ರಕಟವಾಗಬೇಕಿದೆ. ಪ್ರಕರಣದ ಹಿನ್ನೆಲೆ: ದೂರುದಾರ ಹೂವಪ್ಪ ಗೌಡ ಮತ್ತು ಕುಮಾರಸ್ವಾಮಿ ಪರಿಚಿತರಾಗಿದ್ದು, ಬೇರೆ ಬೇರೆ ದಿನಾಂಕಗಳಂದು ಕುಮಾರಸ್ವಾಮಿ ಅವರು ವೈಯಕ್ತಿಕ ತುರ್ತಿಗಾಗಿ ಒಟ್ಟು 1,66,70,000 ರೂ. ಸಾಲ ಪಡೆದಿದ್ದರು. ಇದಕ್ಕಾಗಿ 2017ರ ಸೆಪ್ಟೆಂಬರ್ 8 (80 ಲಕ್ಷ ರೂ.), ಸೆಪ್ಟೆಂಬರ್ 12 (85 ಲಕ್ಷ ರೂ.) ಹಾಗೂ ಸೆಪ್ಟೆಂಬರ್ 15 (1.7 ಲಕ್ಷ ರೂ.) ಚೆಕ್ಗಳನ್ನು ಹೂವಪ್ಪ ಗೌಡರಿಗೆ ನೀಡಿದ್ದರು. ನಿರ್ದಿಷ್ಟ ದಿನಾಂಕದಂದು ನಗದು ಮಾಡಲು ಚೆಕ್ಗಳನ್ನು ಬ್ಯಾಂಕ್ಗೆ ಹಾಕಿದಾಗ ಅವು ಅಮಾನ್ಯಗೊಂಡಿದ್ದವು. ಇದರಿಂದ, ಹೂವಪ್ಪ ಗೌಡ ಅವರು ಕುಮಾರಸ್ವಾಮಿ ಅವರಿಗೆ ಡಿಮ್ಯಾಂಡ್ ನೋಟಿಸ್ ನೀಡಿದ್ದರು. ಕುಮಾರಸ್ವಾಮಿ ಅವರು ಹಣ ಹಿಂದಿರುಗಿಸಲು ಸಿದ್ಧವಾಗಿರುವುದಾಗಿ ತಿಳಿಸಿದ್ದರಾದರೂ ಹಣ ಹಿಂದಿರುಗಿಸದ ಹಿನ್ನೆಲೆಯಲ್ಲಿ ಅವರ ವಿರುದ್ಧ ಹೂವಪ್ಪ ಗೌಡ ಮೂರು ಖಾಸಗಿ ದೂರು ದಾಖಲಿಸಿದ್ದರು. ಈ ಸಂದರ್ಭದಲ್ಲಿ ಕುಮಾರಸ್ವಾಮಿ ಅವರು ಮಾಜಿ ಶಾಸಕರಾಗಿದ್ದರು. ಇದೇ ವೇಳೆಗೆ 2018ರ ವಿಧಾನಸಭೆ ಚುನಾವಣೆ ಬಂದ ಹಿನ್ನೆಲೆಯಲ್ಲಿ ಪ್ರಕರಣ ಇತ್ಯರ್ಥಪಡಿಸಿಕೊಳ್ಳಲು ಕುಮಾರಸ್ವಾಮಿ ಮುಂದಾಗಿ, ಸದ್ಯ 1.40 ಕೋಟಿ ರೂ. ಪಾವತಿಸಲಾಗುವುದು. ಉಳಿದ ಹಣವನ್ನು ಬಳಿಕ ನೀಡುವುದಾಗಿ ತಿಳಿಸಿ ಹಣ ಪಾವತಿ ಮಾಡಿದ್ದರು. ಆದ್ದರಿಂದ, ಹೂವಪ್ಪ ಗೌಡ ತಾವು ಹೂಡಿದ್ದ ದಾವೆಗಳನ್ನು ಹಿಂಪಡೆದಿದ್ದರು. ಆನಂತರ, ಕುಮಾರಸ್ವಾಮಿ ಅವರು ಹೂವಪ್ಪ ಗೌಡರನ್ನು ಸಂಪರ್ಕಿಸಿ, ನನಗೆ ತುರ್ತು ಹಣದ ಅಗತ್ಯವಿದ್ದು 68 ಲಕ್ಷ ರೂ. ಸಾಲ ನೀಡುವಂತೆ ಕೋರಿದ್ದರಲ್ಲದೆ, ಸಾಲದ ಹಣಕ್ಕೆ ಮಾಸಿಕ ಶೇ. 2 ಬಡ್ಡಿ ಪಾವತಿಸುವುದಾಗಿ ತಿಳಿಸಿದ್ದರು. ಜತೆಗೆ, ಹಿಂದಿನ ಬಾಕಿ 26.70 ಲಕ್ಷ ರೂ.ಗಳನ್ನು ಪಾವತಿಸುವುದಾಗಿ ತಿಳಿಸಿದ್ದರು. ಇದನ್ನು ನಂಬಿದ ಹೂವಪ್ಪ ಗೌಡ 68 ಲಕ್ಷ ರೂ.ಗಳನ್ನು ಚೆಕ್ ಮೂಲಕ ಕುಮಾರಸ್ವಾಮಿಗೆ ಸಂದಾಯ ಮಾಡಿದ್ದರು. ಬಳಿಕ ಎರಡೂ ಬಾಕಿಗಳನ್ನು ಪಾವತಿಸುವಂತೆ ಹೂವಪ್ಪ ಗೌಡ ಸೂಚಿಸಿದ್ದ ಹಿನ್ನೆಲೆಯಲ್ಲಿ ಆರೋಪಿ ಕುಮಾರಸ್ವಾಮಿ ಅವರು 47 ಲಕ್ಷ, 2.50 ಲಕ್ಷ, 2 ಲಕ್ಷ, 2.50 ಲಕ್ಷ, 30 ಲಕ್ಷ, 2.5 ಲಕ್ಷ, 2 ಲಕ್ಷ, 48 ಲಕ್ಷ ರೂ. ಮೊತ್ತ ಉಲ್ಲೇಖಿಸಿ ಪ್ರತ್ಯೇಕವಾಗಿ ಎಂಟು ಚೆಕ್ಗಳನ್ನು ವಿಭಿನ್ನ ದಿನಾಂಕ ಉಲ್ಲೇಖಿಸಿ ನೀಡಿದ್ದರು. ಕುಮಾರಸ್ವಾಮಿ ಖಾತೆಯಲ್ಲಿ ಹಣದ ಕೊರತೆಯಾಗಿ ಚೆಕ್ಗಳು ಬೌನ್ಸ್ ಆಗಿದ್ದವು. ಈ ಹಿನ್ನೆಲೆಯಲ್ಲಿ ಹೂವಪ್ಪ ಗೌಡ ಬೆಂಗಳೂರಿನ 42ನೇ ಎಸಿಎಂಎಂ ನ್ಯಾಯಾಲಯದಲ್ಲಿ 8 ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿದ್ದರು. ದೋಷಿ ಎಂದು ತೀರ್ಮಾನಿಸಿದ್ದ ಕೋರ್ಟ್: ಪ್ರಕರಣದ ವಿಚಾರಣೆ ನಡೆಸಿದ್ದ ಮ್ಯಾಜಿಸ್ಟ್ರೇಟ್ ನ್ಯಾಯಾಲಯ, ಕುಮಾರಸ್ವಾಮಿ ಅವರನ್ನು ದೋಷಿ ಎಂದು ತೀರ್ಮಾನಿಸಿತ್ತಲ್ಲದೆ, ಪ್ರತ್ಯೇಕ ಎಂಟು ಪ್ರಕರಣಗಳಲ್ಲಿ ಒಟ್ಟು 1.38 ಕೋಟಿ ರೂ.ಗಳನ್ನು ದೂರುದಾರ ಹೂವಪ್ಪ ಪಾವತಿಸಬೇಕು. ಇಲ್ಲವಾದಲ್ಲಿ ಪ್ರತಿ ಪ್ರಕರಣಕ್ಕೆ ತಲಾ 6 ತಿಂಗಳು ಜೈಲು ಶಿಕ್ಷೆ ಅನುಭವಿಸಬೇಕು ಎಂದು 2023ರ ಫೆಬ್ರವರಿ 13ರಂದು ಆದೇಶಿಸಿತ್ತು. ಪ್ರತ್ಯೇಕ ಆದೇಶಗಳಲ್ಲಿ 47.30 ಲಕ್ಷ, 2.75 ಲಕ್ಷ, 2.25 ಲಕ್ಷ, 2.75 ಲಕ್ಷ, 30.25 ಲಕ್ಷ, 2.75 ಲಕ್ಷ, 2.30 ಲಕ್ಷ, 48.30 ಲಕ್ಷ ರೂ. ಪಾವತಿಸುವಂತೆ ನ್ಯಾಯಾಲಯ ಕುಮಾರಸ್ವಾಮಿ ಅವರಿಗೆ ಆದೇಶಿಸಿತ್ತು. ಇದರಲ್ಲಿ ಪ್ರತಿ ಪ್ರಕರಣದಲ್ಲಿ ತಲಾ 5 ಸಾವಿರ ರೂ.ಗಳಂತೆ ಸರ್ಕಾರಕ್ಕೆ ವೆಚ್ಚದ ರೂಪದಲ್ಲಿ ಒಟ್ಟು 40 ಸಾವಿರ ರೂ. ಪಾವತಿಸಬೇಕು ಎಂದು ನ್ಯಾಯಾಲಯ ಆದೇಶ ಮಾಡಿತ್ತು. ಇದರಲ್ಲಿ ಹೂವಪ್ಪ ಗೌಡ ಅವರಿಗೆ ಕುಮಾರಸ್ವಾಮಿ ಅವರು 1,38,25,000 ರೂ. ಪಾವತಿಸಬೇಕಿತ್ತು. ಈ ತೀರ್ಪನ್ನು ಜನಪ್ರತಿನಿಧಿಗಳ ವಿಶೇಷ ಸೆಷನ್ಸ್ ನ್ಯಾಯಾಲಯ 2023ರ ಜುಲೈ 19ರಂದು ಎತ್ತಿಹಿಡಿದಿತ್ತು. ಇದರಿಂದ, ಕುಮಾರಸ್ವಾಮಿ ಹೈಕೋರ್ಟ್ ಮೆಟ್ಟಿಲೇರಿದ್ದರು.
ಕಲಬುರಗಿ ಐಟಿಎಫ್ ಮಹಿಳಾ ಟೆನಿಸ್ ಟೂರ್ನಿ : ಕ್ವಾರ್ಟರ್ ಫೈನಲ್ಗೆ ವೈಷ್ಣವಿ ಅಡ್ಕರ್, ಅಂಕಿತಾ ರೈನಾ
ಸೋಹಾ ಸಾದಿಕ್, ಆಕಾಂಕ್ಷಾ ದಿಲೀಪ್ ನಿಟ್ಟುರೆ ಜೋಡಿಗೆ ಜಯ; ಸ್ನಿಗ್ಧ ಕಾಂತಾ, ಹರ್ಷಿಣಿ ನಾಗರಾಜ್ ಜೋಡಿಗೆ ನಿರಾಶೆ
ಮತದಾರರ ಪಟ್ಟಿಗಳಿಂದ ಸಾವಿರಾರು ಹೆಸರುಗಳು ಮಾಯ: ಕೇಂದ್ರಕ್ಕೆ ಮಮತಾ ಬ್ಯಾನರ್ಜಿ ತರಾಟೆ
ಕೋಲ್ಕತಾ: ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್ಐಆರ್)ಯ ವೇಳೆ, ಪಶ್ಚಿಮ ಬಂಗಾಳದಾದ್ಯಂತ ಮುಖ್ಯವಾಗಿ ಮತುವಾ ಸಮುದಾಯಕ್ಕೆ ಸೇರಿದ ಸಾವಿರಾರು ಮತದಾರರ ಹೆಸರುಗಳನ್ನು ಅಳಿಸಿಹಾಕಿರುವುದರ ವಿರುದ್ಧ ರಾಜ್ಯದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ ಕೇಂದ್ರದ ಬಿಜೆಪಿ ಸರಕಾರದ ವಿರುದ್ಧ ಕೆಂಡ ಕಾರಿದ್ದಾರೆ. ಮತುವಾ ಸಮುದಾಯದ ಮಾತೆ ಬಿನಪಾನಿ ದೇವಿಯ ಪುಣ್ಯತಿಥಿಯ ಸಂದರ್ಭದಲ್ಲಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದ ಮಮತಾ, ದೇಶದ ಪೌರತ್ವವನ್ನು ಕೊಡುವ ನೆವದಲ್ಲಿ ಬಿಜೆಪಿಯು ಮತುವಾ ಜನರನ್ನು ‘‘ಅನಿಶ್ಚಿತತೆ ಮತ್ತು ಗೊಂದಲದಲ್ಲಿ ಕೆಡವಿದೆ’’ ಎಂದು ಆರೋಪಿಸಿದರು. ಉತ್ತರ 24 ಪರಗಣ, ನಾದಿಯ, ಜಲ್ಪಾಯಿಗುರಿ ಮತ್ತು ಬರ್ದಮಾನ್ ಜಿಲ್ಲೆಗಳ ಸಾವಿರಾರು ಮತುವಾ ಜನರ ಹೆಸರುಗಳನ್ನು ವಿಶೇಷ ತೀವ್ರ ಪರಿಷ್ಕರಣೆಯ ಬಳಿಕ ಫೆಬ್ರವರಿ 28ರಂದು ಪ್ರಕಟಿಸಲಾದ ಅಂತಿಮ ಮತದಾರರ ಪಟ್ಟಿಯಿಂದ ಕೈಬಿಡಲಾಗಿದೆ. ‘‘ಈ ಸಮುದಾಯದ ಜನರ ಗುರುತಿಗೆ ಸಂಬಂಧಿಸಿ ಪ್ರಶ್ನೆಗಳನ್ನು ಕೇಳಲಾಗುತ್ತಿದೆ. ಎಸ್ಐಆರ್ ಹೆಸರಿನಲ್ಲಿ ಮತದಾರರ ಪಟ್ಟಿಗಳಿಂದ ಅವರ ಹೆಸರುಗಳನ್ನು ಉದ್ದೇಶಪೂರ್ವಕವಾಗಿ ಅಳಿಸಿಹಾಕಲಾಗುತ್ತಿದೆ. ಈ ಜನರು ತಲೆಮಾರುಗಳಿಂದ ಭಾರತದ ನಾಗರಿಕರಾಗಿದ್ದಾರೆ. ಅವರ ಮತಗಳಿಂದ ಸರಕಾರಗಳು ರಚನೆಯಾಗುತ್ತಿವೆ. ಈಗ ಅವರನ್ನು ಅನಿಶ್ಚಿತತೆ ಮತ್ತು ಗೊಂದಲಕ್ಕೆ ಕೆಡವಲಾಗುತ್ತಿದೆ’’ ಎಂದು ಅವರು ಆರೋಪಿಸಿದರು.
ನಾಳೆ ದಾಖಲೆಯ 17ನೇ ಬಜೆಟ್ ಮಂಡನೆ ಮಾಡಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ
ʼಮೊದಲ ಬಾರಿಗೆ ಬಸ್ ನಿಲ್ದಾಣಗಳಲ್ಲಿ ಬಜೆಟ್ ನೇರ ಪ್ರಸಾರʼ
ಬೆಳ್ತಂಗಡಿ: ನ್ಯಾಯಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿ ಸೆರೆ
ಬೆಳ್ತಂಗಡಿ: ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಕಳ್ಳತನ ಪ್ರಕರಣದಲ್ಲಿ ಬೆಳ್ತಂಗಡಿ ನ್ಯಾಯಲಯಕ್ಕೆ ಹಾಜರಾಗದೆ ಸುಮಾರು ಆರು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬೆಂಗಳೂರು ಕುಂಬಳಗೋಡು, ಗೇರುಪಾಳ್ಯ ನಿವಾಸಿ ವೆಂಕಟೇಶ್ ಡಾಬರ್ ವೆಂಕಟೇಶ್ (38) ಎಂಬಾತನನ್ನು ಧರ್ಮಸ್ಥಳ ಪೊಲೀಸರು ಬಂಧಿಸಿದ್ದಾರೆ. ಆರೋಪಿಯನ್ನು ತುಮಕೂರು ಜಿಲ್ಲೆಯ ತಿಪಟೂರ್ ಎಂಬಲ್ಲಿಂದ ಮಾ.4 ರಂದು ಬಂಧಿಸಿ ಬೆಳ್ತಂಗಡಿ ನ್ಯಾಯಾಲಯಕ್ಕೆ ಮಾ.5 ರಂದು ಹಾಜರುಪಡಿಸಲಾಗಿದ್ದು, ನ್ಯಾಯಾಲಯ ಸೂಕ್ತ ಜಾಮೀನಿನ ಮೇಲೆ ಬಿಡುಗಡೆ ಮಾಡಿದೆ.
ಮಧ್ಯ ಪ್ರಾಚ್ಯದಲ್ಲಿನ ಬಿಕ್ಕಟ್ಟು | ಕೊನೆಗೂ ಸ್ವದೇಶಕ್ಕೆ ಪ್ರಯಾಣ ಬೆಳೆಸಿದ ಝಿಂಬಾಬ್ವೆ ಕ್ರಿಕೆಟ್ ತಂಡ
ಹೊಸದಿಲ್ಲಿ: ಐಸಿಸಿ ಆಯೋಜಿತ ಪುರುಷರ ಟಿ-20 ವಿಶ್ವಕಪ್ ಟೂರ್ನಿಯಲ್ಲಿ ಭಾಗವಹಿಸಿದ ನಂತರ ಭಾರತದಲ್ಲೇ ಸಿಲುಕಿಕೊಂಡಿದ್ದ ಝಿಂಬಾಬ್ವೆ ಕ್ರಿಕೆಟ್ ತಂಡವು ಕೊನೆಗೂ ಸ್ವದೇಶಕ್ಕೆ ಪ್ರಯಾಣ ಬೆಳೆಸಿದೆ. ಸ್ವತಃ ಝಿಂಬಾಬ್ವೆ ಕ್ರಿಕೆಟ್ ಮಂಡಳಿಯು ಬುಧವಾರ ಇದನ್ನು ಖಚಿತಪಡಿಸಿದೆ. ಪಶ್ಚಿಮ ಏಶ್ಯದಲ್ಲಿನ ಬಿಕ್ಕಟ್ಟಿನಿಂದಾಗಿ ವಾಯುಪ್ರದೇಶದಲ್ಲಿ ನಿರ್ಬಂಧ ಹೇರಿದ ಕಾರಣ ಝಿಂಬಾಬ್ವೆ ತಂಡ ಸ್ವದೇಶಕ್ಕೆ ವಾಪಸಾಗಲು ಸಾಧ್ಯವಾಗಿರಲಿಲ್ಲ. ಇದೀಗ ಅಂತರ್ರಾಷ್ಟ್ರೀಯ ಕ್ರಿಕೆಟ್ ಸಂಸ್ಥೆಯು(ಐಸಿಸಿ)ಝಿಂಬಾಬ್ವೆ ಕ್ರಿಕೆಟ್ ತಂಡ ವಾಪಸಾಗಲು ಪರ್ಯಾಯ ವಿಮಾನಗಳ ವ್ಯವಸ್ಥೆ ಮಾಡಿದೆ. ‘ಇತ್ತೀಚೆಗೆ ವಿಮಾನ ಪ್ರಯಾಣದಲ್ಲಿ ಉಂಟಾದ ಅಡೆತಡೆಯ ನಂತರ ಅಂತರ್ರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ಪರ್ಯಾಯ ಪ್ರಯಾಣದ ವ್ಯವಸ್ಥೆಗಳನ್ನು ಮಾಡಿದ್ದು, ಐಸಿಸಿ ಆಯೋಜಿತ ಪುರುಷರ ಟಿ-20 ವಿಶ್ವಕಪ್ನಲ್ಲಿ ಭಾಗವಹಿಸಿದ್ದ ಝಿಂಬಾಬ್ವೆಯ ಹಿರಿಯರ ಪುರುಷರ ತಂಡವು ಭಾರತದಿಂದ ಸ್ವದೇಶಕ್ಕೆ ವಾಪಸಾಗುತ್ತಿದೆ’ ಎಂದು ಝಿಂಬಾಬ್ವೆ ಕ್ರಿಕೆಟ್ ಎಕ್ಸ್ನಲ್ಲಿ ದೃಢಪಡಿಸಿದೆ. ವಿಮಾನ ಲಭ್ಯವಾದ ಕಾರಣ, ಪರಿಷ್ಕೃತ ಮಾರ್ಗದಲ್ಲಿ ತಂಡವು ಬೇರೆ ಬೇರೆ ಗುಂಪುಗಳಾಗಿ ಹರಾರೆಗೆ ವಾಪಸಾಗುತ್ತಿವೆ. ಆಟಗಾರರ ಮೊದಲ ಗುಂಪು ಬುಧವಾರ ನಿರ್ಗಮಿಸಿದೆ. ಕೊನೆಯ ಗುಂಪು ಶುಕ್ರವಾರ ಮಧ್ಯಾಹ್ನ ಹೊರಡಲಿದೆ. ಅಗತ್ಯವಿದ್ದರೆ ಹೆಚ್ಚಿನ ಮಾಹಿತಿ ನೀಡಲಾಗುತ್ತದೆ ಎಂದು ಝಿಂಬಾಬ್ವೆ ಕ್ರಿಕೆಟ್ ಮಂಡಳಿಯು ಪ್ರಕಟನೆಯಲ್ಲಿ ತಿಳಿಸಿದೆ. ಝಿಂಬಾಬ್ವೆ ಕ್ರಿಕೆಟ್ ತಂಡವು ರವಿವಾರ ದಕ್ಷಿಣ ಆಫ್ರಿಕಾ ತಂಡದ ವಿರುದ್ಧ ಪಂದ್ಯಾವಳಿಯಲ್ಲಿ ತನ್ನ ಕೊನೆಯ ಪಂದ್ಯವನ್ನು ಆಡಿತ್ತು. ತಂಡವು ಸೋಮವಾರದಂದು ದುಬೈ ಮೂಲಕ ಹರಾರೆಗೆ ವಾಪಸಾಗಲು ಈ ಮೊದಲು ಯೋಜಿಸಿತ್ತು. ಆಟಗಾರರು ಹಾಗೂ ಸಿಬ್ಬಂದಿ ದಿಲ್ಲಿಯಿಂದ ದುಬೈಗೆ, ಆ ನಂತರ ಹರಾರೆಗೆ ತೆರಳಲು ಎಮಿರೇಟ್ಸ್ ವಿಮಾನಗಳನ್ನು ಬುಕ್ ಮಾಡಿದ್ದರು. ಪಶ್ಚಿಮ ಏಶ್ಯದಲ್ಲಿ ಉದ್ವಿಗ್ನ ಪರಿಸ್ಥಿತಿ ತಲೆದೋರಿದ ನಂತರ ಹಲವಾರು ದೇಶಗಳು ತಮ್ಮ ವಾಯು ಪ್ರದೇಶಗಳನ್ನು ಮುಚ್ಚಿದ ಕಾರಣ ಏರ್ಲೈನ್ಸ್ಗಳು ತಮ ವಿಮಾನಗಳನ್ನು ರದ್ದುಪಡಿಸಿದವು, ಕೆಲವು ಮಾರ್ಗಗಳನ್ನು ಬದಲಿಸಿದವು. ಇದರಿಂದ ಝಿಂಬಾಬ್ವೆ ತಂಡದ ಯೋಜನೆಯು ಬದಲಾಗಿದೆ. ಅಮೆರಿಕ, ಇಸ್ರೇಲ್ ಹಾಗೂ ಇರಾನ್ ನಡುವೆ ಕ್ಷಿಪಣಿ ದಾಳಿ ಹೆಚ್ಚಾದ ನಂತರ ವಿಮಾನ ಹಾರಾಟ ವ್ಯತ್ಯಯವಾಯಿತು. ಈ ಪರಿಸ್ಥಿತಿಯಿಂದಾಗಿ ದುಬೈ ಮೂಲಕ ಪ್ರಯಾಣಿಸುವ ಹಲವಾರು ಅಂತರ್ರಾಷ್ಟ್ರೀಯ ವಿಮಾನಗಳ ಸಂಚಾರದ ಮೇಲೆ ಪರಿಣಾಮಬೀರಿವೆ.
ಹಾರ್ಮುಜ್ ಜಲಸಂಧಿಯಲ್ಲಿ ಟ್ಯಾಂಕರ್ ಗಳಿಗೆ ಬೆಂಗಾವಲು ನೀಡಲು ಅಮೆರಿಕ ನೌಕಾಪಡೆ ಸಿದ್ಧ: ಶ್ವೇತಭವನ
ವಾಷಿಂಗ್ಟನ್: ಅಗತ್ಯವಿದ್ದರೆ ಹಾರ್ಮುಜ್ ಜಲಸಂಧಿಯ ಮೂಲಕ ಸಾಗುವ ತೈಲ ಟ್ಯಾಂಕರ್ ಗಳಿಗೆ ಅಮೆರಿಕ ನೌಕಾಪಡೆ ಬೆಂಗಾವಲು ನೀಡಲು ಸಿದ್ಧವಾಗಿದೆ ಎಂದು ಶ್ವೇತಭವನ ತಿಳಿಸಿದೆ. ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಅಗತ್ಯವಿದ್ದಲ್ಲಿ ಹಾರ್ಮುಜ್ ಜಲಸಂಧಿಯ ಮೂಲಕ ಸಾಗುವ ಟ್ಯಾಂಕರ್ಗಳಿಗೆ ಸುರಕ್ಷತಾ ಬೆಂಗಾವಲು ಒದಗಿಸುವ ಕಾರ್ಯವನ್ನು ಅಮೆರಿಕ ನೌಕಾಪಡೆಗೆ ವಹಿಸುವುದಾಗಿ ಹೇಳಿದ್ದಾರೆ ಎಂದು ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಕ್ಯಾರೋಲಿನ್ ಲೀವಿಟ್ ತಿಳಿಸಿದ್ದಾರೆ. ಯುದ್ಧದ ಪರಿಸ್ಥಿತಿಯಲ್ಲಿ ಇರಾನ್ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (ಐಆರ್ಜಿಸಿ) ಈ ಆಯಕಟ್ಟಿನ ಜಲಮಾರ್ಗವನ್ನು ಮುಚ್ಚಲಾಗಿದೆ ಎಂದು ಘೋಷಿಸಿದೆ. ಅಲ್ಲಿಂದ ಹಾದುಹೋಗುವ ಹಡಗುಗಳ ಮೇಲೆ ದಾಳಿ ನಡೆಸುವುದಾಗಿ ಬೆದರಿಕೆ ಹಾಕಿದೆ. ಗಲ್ಫ್ ಪ್ರದೇಶದಲ್ಲಿ ಅಥವಾ ಅದರ ಸಮೀಪ ಸಂಚರಿಸುವ ಕಚ್ಚಾ ತೈಲ ಸಾಗಣೆ ಟ್ಯಾಂಕರ್ಗಳು ಮತ್ತು ಸರಕು ಹಡಗುಗಳಿಗೆ ಯುನೈಟೆಡ್ ಸ್ಟೇಟ್ಸ್ ಡೆವಲಪ್ಮೆಂಟ್ ಫೈನಾನ್ಸ್ ಕಾರ್ಪೊರೇಷನ್ ಮೂಲಕ ‘ಬಹಳ ಸಮಂಜಸವಾದ ಬೆಲೆಯಲ್ಲಿ’ ರಾಜಕೀಯ ಅಪಾಯ ವಿಮೆ ಪಡೆಯುವ ಅವಕಾಶ ಲಭ್ಯವಾಗಲಿದೆ ಎಂದು ಅಧ್ಯಕ್ಷ ಟ್ರಂಪ್ ಘೋಷಿಸಿದ್ದಾರೆ ಎಂದು ಲೀವಿಟ್ ತಿಳಿಸಿದ್ದಾರೆ.
ಉಡುಪಿ ಜಿಲ್ಲೆಯ 93 ಗ್ರಾಪಂ, 24 ವಾರ್ಡ್ಗಳಲ್ಲಿ ನೀರಿನ ಸಮಸ್ಯೆ ಸಾಧ್ಯತೆ: ಉಡುಪಿ ಡಿಸಿ
► ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಸಭೆ ► ಸದ್ಯಕ್ಕೆ ನೀರಿಗಿಲ್ಲ ಸಮಸ್ಯೆ; ನೀರಿನ ಮೂಲದ ವರದಿ ನೀಡಲು ಸೂಚನೆ
ಕಲಬುರಗಿ | 24.96 ಲಕ್ಷ ರೂ. ಮೌಲ್ಯದ ಸ್ವತ್ತು ವಶ; 7 ಆರೋಪಿಗಳ ಬಂಧನ: ಡಾ.ಶರಣಪ್ಪ ಎಸ್.ಡಿ.
ಕಲಬುರಗಿ : ನಗರದ ನಾಲ್ಕು ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ನಡೆದ ಮನೆಗಳ್ಳತನ, ಬೈಕ್ ಕಳ್ಳತನ ಹಾಗೂ ಸುಲಿಗೆ ಪ್ರಕರಣಗಳನ್ನು ಪತ್ತೆ ಹಚ್ಚಿ ಒಟ್ಟು 7 ಮಂದಿ ಆರೋಪಿಗಳನ್ನು ಬಂಧಿಸಿ 24.96 ಲಕ್ಷ ರೂ. ಮೌಲ್ಯದ ಸ್ವತ್ತನ್ನು ಜಪ್ತಿ ಮಾಡಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಡಾ. ಶರಣಪ್ಪ ಎಸ್.ಡಿ ತಿಳಿಸಿದ್ದಾರೆ. ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆರ್.ಜಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 2022ರಲ್ಲಿ ನಡೆದ ಮನೆಗಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರದ ಅಕ್ಕಲಕೋಟೆ ತಾಲೂಕಿನ ಮೈಂದರ್ಗಿ ನಿವಾಸಿ ಸುರೇಶ್ ಅಲಿಯಾಸ್ ಗಂಗಾರಾಮ ಡೌಲತ್ ಚವ್ಹಾಣನನ್ನು ಬಂಧಿಸಿ 6.75 ಲಕ್ಷ ರೂ. ಮೌಲ್ಯದ 45 ಗ್ರಾಂ ಬಂಗಾರದ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದರು. ಚೌಕ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವಿವಿಧ ಸ್ಥಳಗಳಲ್ಲಿ ಕಳ್ಳತನವಾಗಿದ್ದ ಬೈಕ್ಗಳನ್ನು ಪತ್ತೆ ಹಚ್ಚಲಾಗಿದ್ದು, ಅಂತಾರಾಜ್ಯ ಹಾಗೂ ಅಂತರ್ ಜಿಲ್ಲಾ ಅಪರಾಧಿಯಾಗಿದ್ದ ಶೇಖ್ ನಿಸಾರ್ ಅಹಮದ್ನನ್ನು ಬಂಧಿಸಿ ₹3.90 ಲಕ್ಷ ಮೌಲ್ಯದ 8 ಬೈಕ್ಗಳನ್ನು ಜಪ್ತಿ ಮಾಡಲಾಗಿದೆ. ಅದೇ ರೀತಿ ಸ್ಟೇಷನ್ ಬಝಾರ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 8.20 ಲಕ್ಷ ರೂ. ಮೌಲ್ಯದ 14 ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆದು, ಕಾಳಗಿ ತಾಲೂಕಿನ ಕೋರವಾರ ನಿವಾಸಿ ರಾಮಚಂದ್ರ ಹೊಸಮನಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಇನ್ನೂ ಎಂ.ಬಿ.ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದಾಖಲಾಗಿದ್ದ 5 ಸುಲಿಗೆ ಪ್ರಕರಣಗಳಲ್ಲಿ ಭಾಗಿಯಾಗಿದ್ದ ನಾಲ್ವರು ಕುಖ್ಯಾತ ದರೋಡೆಕೋರರನ್ನು ಬಂಧಿಸಲಾಗಿದೆ. ಆರೋಪಿಗಳಿಂದ 6.11 ಲಕ್ಷ ರೂ. ಮೌಲ್ಯದ ಮೊಬೈಲ್ ಫೋನ್ಗಳು, ಬಂಗಾರದ ಆಭರಣಗಳು, ಬೈಕ್, ವ್ಯಾನಿಟಿ ಬ್ಯಾಗ್ ಸೇರಿದಂತೆ ಇತರೆ ಸ್ವತ್ತುಗಳನ್ನು ಜಪ್ತಿ ಮಾಡಲಾಗಿದೆ. ಈ ಪ್ರಕರಣಗಳಿಗೆ ಸಂಬಂಧಿಸಿದಂತೆ ಅಜಾದಪುರದ ಅಬ್ಬು ಶೇಖ್, ಬಿಲಾಲಬಾದ ಕಾಲೋನಿಯ ಮಾಜಿದ್ ಅಲಿಯಾಸ್ ಮಟಕಾ ಮಾಜೀದ್, ಸೋನಿಯಾ ಗಾಂಧಿ ಕಾಲೋನಿಯ ಶೇಖ್ ಹುಸೇನ್ ಹಾಗೂ ಮಿಲ್ಲತ್ ನಗರದ ಮಹಮದ್ ಆರೀಫ್ ಅವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಸುದ್ದಿಗೋಷ್ಠಿಯಲ್ಲಿ ಡಿಸಿಪಿ ಪ್ರವೀಣ್ ನಾಯಕ, ಎಸಿಪಿಗಳಾದ ಶಿವನಗೌಡ ಪಾಟೀಲ್, ಶರಣಬಸಪ್ಪ ಸುಬೇದಾರ್, ವಾಜೀದ್ ಪಟೇಲ್ ಸೇರಿದಂತೆ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.
ಕಲಬುರಗಿ | ʼಆನ್ಲೈನ್ ಎಂಪಿʼ ಎಂದು ರಾಧಾಕೃಷ್ಣ ದೊಡ್ಡಮನಿಗೆ ಉಮೇಶ್ ಜಾಧವ್ ಟೀಕೆ
ಕಲಬುರಗಿ : ಲೋಕಸಭಾ ಸದಸ್ಯ ರಾಧಾಕೃಷ್ಣ ದೊಡ್ಡಮನಿ ಅವರು ಕಳೆದ ಎರಡುವರೆ ವರ್ಷಗಳಲ್ಲಿ ಒಂದೇ ಒಂದು ಸಭೆ ನಡೆಸದೆ, ಇತ್ತೀಚೆಗೆ ದಿಶಾ ಸಭೆಯನ್ನು ಆನ್ಲೈನ್ ಮೂಲಕ ನಡೆಸಿ “ಕಲಬುರಗಿಯ ಆನ್ಲೈನ್ ಎಂಪಿ” ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ ಎಂದು ಮಾಜಿ ಸಂಸದ ಡಾ. ಉಮೇಶ್ ಜಾಧವ್ ಲೇವಡಿ ಮಾಡಿದ್ದಾರೆ. ನಗರದ ಪತ್ರಿಕಾ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಪುರಸ್ಕೃತ ಯೋಜನೆಗಳ ಪ್ರಗತಿಗಾಗಿ ಫೆಬ್ರವರಿ 28ರಂದು ತರಾತುರಿಯಲ್ಲಿ ದಿಶಾ ಸಭೆ ಕರೆಯಲಾಗಿದ್ದು, ಸ್ವತಃ ಲೋಕಸಭಾ ಸದಸ್ಯರು ಗೈರು ಹಾಜರಾಗಿ ವೀಡಿಯೋ ಕಾನ್ಫರೆನ್ಸ್ ಮೂಲಕ ಪಾಲ್ಗೊಂಡಿದ್ದಾರೆ ಎಂದು ಆರೋಪಿಸಿದರು. ದಿಶಾ ಸಭೆಯನ್ನು ಆನ್ಲೈನ್ ಮೂಲಕ ನಡೆಸಿರುವುದು ಭಾರತದ ಇತಿಹಾಸದಲ್ಲೇ ಪ್ರಥಮ ಎಂದು ಟೀಕಿಸಿದರು. ಕೇಂದ್ರ ಸರ್ಕಾರದ ಯೋಜನೆಗಳನ್ನು ಸಮರ್ಪಕವಾಗಿ ಜಾರಿ ಮಾಡಿ ಕ್ಷೇತ್ರದ ಅಭಿವೃದ್ಧಿ ಕೈಗೊಳ್ಳಬೇಕಾದ ಎಂಪಿ ಮತದಾರರಿಗೆ ಲಭ್ಯವಾಗದ ಪರಿಸ್ಥಿತಿ ಉಂಟಾಗಿದೆ. ತಾನು ಎಂಪಿ ಆಗಿದ್ದಾಗ ಸುಳ್ಳು ಹೇಳಿ ಆಯ್ಕೆಯಾಗಿದ್ದಾರೆ ಎಂದು ಆರೋಪಿಸಿ, ಈಗ ಅವರ ಸ್ಥಿತಿ ಹುಡುಕಬೇಕಾಗಿದೆ ಎಂದರು. ಎಂಪಿ, ಎಂಎಲ್ಎ ಹಾಗೂ ಸಚಿವ ಸ್ಥಾನಗಳು ಖರ್ಗೆ ಮನೆತನದಲ್ಲೇ ಇರಬೇಕು ಎಂಬ ಸ್ವಾರ್ಥ ರಾಜಕಾರಣದಿಂದ ಕಲಬುರಗಿಯ ಪರಿಸ್ಥಿತಿ ಹದಗೆಟ್ಟಿದೆ ಎಂದು ಅವರು ಕಟುವಾಗಿ ಆರೋಪಿಸಿದರು. ಕಲಬುರಗಿ ವಿಮಾನ ನಿಲ್ದಾಣ ಬಂದ್ ಆದರೂ ಲೋಕಸಭಾ ಸದಸ್ಯರು ಕೇಂದ್ರಕ್ಕೆ ಕೇವಲ ಒಂದು ಪತ್ರ ಬರೆದು ಮೌನವಾಗಿರುವುದು ವಿಷಾದಕರ ಸಂಗತಿ ಎಂದು ಹೇಳಿದರು. ಕೊರೋನಾ ಅವಧಿಯಲ್ಲಿ ವಿಮಾನ ಹಾರಾಟ ನಡೆದಿದ್ದರೂ, ಈಗ ಶ್ರೀಮಂತರ ವಿಮಾನ ಮಾತ್ರ ಇಳಿಯುವ ನಿಲ್ದಾಣವಾಗಿ ಮಾರ್ಪಟ್ಟಿದೆ ಎಂದು ಆರೋಪಿಸಿದರು. ಪ್ರತಿ ಮೂರು ತಿಂಗಳಿಗೊಮ್ಮೆ ನಡೆಯಬೇಕಾದ ಬ್ಯಾಂಕರ್ಸ್ ಸಭೆಯನ್ನೂ ನಡೆಸದೆ ಅಭಿವೃದ್ಧಿ ಯೋಜನೆಗಳ ಬಗ್ಗೆ ನಿರಾಸಕ್ತಿ ತೋರಿದ್ದಾರೆ. ಪ್ರಸ್ತುತ ಲೋಕಸಭಾ ಸದಸ್ಯರ ವಿರುದ್ಧ ತೀವ್ರ ಜನಾಕ್ರೋಶ ವ್ಯಕ್ತವಾಗುತ್ತಿದೆ ಎಂದು ಡಾ. ಉಮೇಶ್ ಜಾಧವ್ ದೂರಿದರು. ಎಂಎಲ್ಸಿ ಶಶಿಲ್ ಜಿ ನಮೋಶಿ, ಶಾಸಕ ಬಸವರಾಜ ಮತ್ತಿಮಡು , ರಾಜಕುಮಾರ್ ಪಾಟೀಲ್ ತೆಲ್ಕೂರ, ಅಶೋಕ್ ಬಗಲಿ, ಶರಣಪ್ಪ ತಳವಾರ, ಶಿವರಾಜ್ ಪಾಟೀಲ್ ರದ್ದೇವಾಡಗಿ, ಮಹೇಂದ್ರ ಪೂಜಾರಿ ಚಂದ್ರಶೇಖರ ಪರಸರೆಡ್ಡಿ, ನರಸಪ್ಪಗೌಡ, ಬಾಬುರಾವ್ ಹಾಗರಗುಂಡಗಿ, ಸೇರಿದಂತೆ ಹಲವರು ಇದ್ದರು. ಬಾಕ್ಸ್... ದಲಿತರ ಹಣ ಗ್ಯಾರಂಟಿ ಯೋಜನೆಗಳ ಪಾಲು: ತೆಲ್ಕೂರ್ ಕಾಂಗ್ರೆಸ್ ರಾಜ್ಯದಲ್ಲಿ ಅಧಿಕಾರ ಬಂದಾಗಿನಿಂದಲೂ ದಲಿತರ ಹಣವನ್ನು ಲೂಟಿಯಾಡುತ್ತಿದೆ. ಎರಡೂವರೆ ವರ್ಷದಲ್ಲಿ 38,859 ಕೋಟಿ ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಸಿಕೊಂಡಿದೆ. ಇದರಿಂದ ಅಂಬೇಡ್ಕರ್, ಅಡಿಜಾಂಬವ, ವಾಲ್ಮೀಕಿ, ತಾಂಡಾ, ಲಿಡ್ಕರ್ ಅಭಿವೃದ್ಧಿ ನಿಗಮಗಳು ಹಣವಿಲ್ಲದೆ ಸೊರಗಿವೆ. ಇತ್ತ ವಿದ್ಯಾರ್ಥಿಗಳ ಸ್ಕಾಲರ್ ಶಿಪ್ ಕೂಡ ಕೊಡುತ್ತಿಲ್ಲ ಎಂದು ಮಾಜಿ ಶಾಸಕ ರಾಜಕುಮಾರ್ ಪಾಟೀಲ್ ತೆಲ್ಕೂರ್ ಆರೋಪಿಸಿದರು.
ತಮಿಳುನಾಡು: ಕಾಂಗ್ರೆಸ್ಗೆ 28, ಒಂದು ರಾಜ್ಯಸಭಾ ಸ್ಥಾನ
ಚೆನ್ನೈ: ಆಡಳಿತಾರೂಢ ದ್ರಾವಿಡ ಮುನ್ನೇತ್ರ ಕಳಗಮ್ (ಡಿಎಮ್ಕೆ) ಮತ್ತು ಕಾಂಗ್ರೆಸ್ ತಮಿಳುನಾಡು ವಿಧಾನಸಭಾ ಚುನಾವಣೆಗೆ ಸ್ಥಾನ ಹೊಂದಾಣಿಕೆ ಒಪ್ಪಂದಕ್ಕೆ ಸಹಿ ಹಾಕಿವೆ. ಈ ಒಪ್ಪಂದದ ಪ್ರಕಾರ, ಕಾಂಗ್ರೆಸ್ಗೆ 28 ವಿಧಾನಸಭಾ ಸ್ಥಾನಗಳನ್ನು ನೀಡಲಾಗಿದೆ. ಇದು 2021ರಲ್ಲಿ ಅದು ಪಡೆದ ಸ್ಥಾನಗಳಿಗಿಂತ ಮೂರು ಅಧಿಕವಾಗಿದೆ. ಜೊತೆಗೆ, ಮುಂಬರುವ ರಾಜ್ಯಸಭೆಯ ದ್ವೈವಾರ್ಷಿಕ ಚುನಾವಣೆಯಲ್ಲಿ ಅದು ಒಂದು ಸ್ಥಾನವನ್ನೂ ಪಡೆಯಲಿದೆ. ಒಪ್ಪಂದಕ್ಕೆ ಚೆನ್ನೈನಲ್ಲಿರುವ ಡಿಎಮ್ಕೆ ಪ್ರಧಾನ ಕಚೇರಿಯಲ್ಲಿ ತಮಿಳುನಾಡು ಮುಖ್ಯಮಂತ್ರಿ ಎಮ್.ಕೆ. ಸ್ಟಾಲಿನ್ ಮತ್ತು ತಮಿಳುನಾಡು ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಕೆ. ಸೆಲ್ವಪೆರುಂತಗೈ ಸಹಿ ಹಾಕಿದರು.
ಮಕ್ಕಳಿಗೆ ಸಾಮಾಜಿಕ ಜಾಲತಾಣದ ಬಳಕೆ ನಿರ್ಬಂಧಿಸುವ ಕುರಿತು ಸರಕಾರ ಚಿಂತನೆ ನಡೆಸಿದೆ : ದಿನೇಶ್ ಗುಂಡೂರಾವ್
‘ಕ್ಲಿನಿಕಲ್ ನ್ಯೂರೋ ಸೈಕೋಲಾಜಿ ಮತ್ತು ಕಾಗ್ನಿಟಿವ್ ನ್ಯೂರೋ ವಿಜ್ಞಾನ ಅಂತರಾಷ್ಟ್ರೀಯ ಸಮ್ಮೇಳನʼ
ಕಲಬುರಗಿ | ಎಸೆಸೆಲ್ಸಿ ಪರೀಕ್ಷೆ: ಮಾ.6ರಂದು ಫೋನ್-ಇನ್-ಕಾರ್ಯಕ್ರಮ
ಕಲಬುರಗಿ: ಕಲಬುರಗಿ ಆಕಾಶವಾಣಿ ವತಿಯಿಂದ ಪ್ರಸಾರವಾಗುವ ಜನಪ್ರಿಯ ‘ಕಲ್ಯಾಣ ವಾಣಿ’ ಕಾರ್ಯಕ್ರಮದಲ್ಲಿ ಎಸೆಸೆಲ್ಸಿ ವಿದ್ಯಾರ್ಥಿಗಳ ಪರೀಕ್ಷಾ ಸಿದ್ಧತೆಗೆ ಸಹಾಯಕವಾಗುವ ವಿಶೇಷ ನೇರ ಫೋನ್-ಇನ್ ಕಾರ್ಯಕ್ರಮವು ಇದೇ ಮಾ.6 ರಂದು ಬೆಳಿಗ್ಗೆ 11ಕ್ಕೆ ನಡೆಯಲಿದ್ದು, ಎಸೆಸೆಲ್ಸಿ ಪರೀಕ್ಷೆಗೆ ಹಾಜರಾಗುತ್ತಿರುವ ಎಲ್ಲಾ ವಿದ್ಯಾರ್ಥಿಗಳು ಇದರ ಸದುಪಯೋಗಪಡಿಸಿಕೊಳ್ಳಬೇಕೆಂದು ಕಲಬುರಗಿ ಆಕಾಶವಾಣಿಯ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ವಿದ್ಯಾರ್ಥಿಗಳು ಹಾಗೂ ಪೋಷಕರು ಪರೀಕ್ಷಾ ಸಿದ್ಧತೆ, ಪ್ರಶ್ನಾಪತ್ರಿಕೆಯ ಮಾದರಿ, ಸಮಯ ನಿರ್ವಹಣೆ ಹಾಗೂ ಅಂಕ ಗಳಿಸುವ ಸೂತ್ರಗಳು ಸೇರಿದಂತೆ ವಿವಿಧ ವಿಷಯಗಳ ಕುರಿತು ತಜ್ಞರಿಂದ ನೇರವಾಗಿ ಮಾರ್ಗದರ್ಶನ ಪಡೆಯಬಹುದು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕಲಬುರಗಿ ಜಿಲ್ಲಾಧಿಕಾರಿ ಬಿ. ಫೌಝಿಯಾ ತರನ್ನುಮ್ ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭಂವರ್ ಸಿಂಗ್ ಮೀನಾ ಅವರು ಭಾಗವಹಿಸಿ ವಿದ್ಯಾರ್ಥಿಗಳಿಗೆ ಪ್ರೇರಣಾದಾಯಕ ಸಂದೇಶ ನೀಡಲಿದ್ದಾರೆ.
Abhishek Sharma: ಟೀಂ ಇಂಡಿಯಾ ಟಿ20 ಸ್ಪೆಷಲಿಸ್ಟ್ ಮತ್ತೆ ಫ್ಲಾಪ್: ಆಂಗ್ಲರಿಗೆ ಶರಣಾದ ಅಭಿಷೇಕ್ ಶರ್ಮಾ
Abhishek Sharma: ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಬಹುನಿರೀಕ್ಷಿತ ಐಸಿಸಿ ಟಿ20 ವಿಶ್ವಕಪ್ 2026 ಸೆಮಿಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ಹಾಗೂ ಭಾರತ ಮುಖಾಮುಖಿಯಾಗಿವೆ. ಟಾಸ್ ಸೋತು ಮೊದಲು ಬ್ಯಾಟ್ ಬೀಸಿದ ಟೀಂ ಇಂಡಿಯಾಗೆ ಆರಂಭದಲ್ಲೇ ಆಘಾತ ಎದುರಾಗಿದೆ. ಓಪನರ್ ಆಗಿ ಕಣಕ್ಕಳಿದ ಅಭಿಷೇಕ್ ಶರ್ಮಾ ಕೇವಲ 9 ರನ್ಗಳಿಗೆ ಕ್ಯಾಚ್ ನೀಡಿ ಪೆವಿಲಿಯನ್ನತ್ತ ನಡೆದರು. ಟಾಸ್ ಸೋತ
ಎಐಸಿಸಿ ಕರ್ನಾಟಕ ರಾಜ್ಯ ಕ್ಷಿಪ್ರ ಪ್ರತಿಕ್ರಿಯೆ ಪಡೆಯ ಸದಸ್ಯರಾಗಿ ಆಸೀಫ್ ಅಲಿ ಎಸ್. ನೇಮಕ
ನವದೆಹಲಿ : ಎಐಸಿಸಿ ಕಾನೂನು, ಮಾನವ ಹಕ್ಕುಗಳು ಮತ್ತು ಆರ್ಟಿಐ ಇಲಾಖೆಯ ಆಶ್ರಯದಲ್ಲಿ ಕರ್ನಾಟಕ ರಾಜ್ಯಕ್ಕಾಗಿ ಕ್ಷಿಪ್ರ ಪ್ರತಿಕ್ರಿಯೆ ಪಡೆಯ ಹಿರಿಯ ಸದಸ್ಯರಾಗಿ ಎಸ್. ಆಸೀಫ್ ಅಲಿ ಅವರನ್ನು ನೇಮಕ ಮಾಡಲಾಗಿದೆ. ಈ ಕುರಿತು ಆದೇಶ ಹೊರಡಿಸಿರುವ ಎಐಸಿಸಿ ಕಾನೂನು, ಮಾನವ ಹಕ್ಕುಗಳು ಮತ್ತು ಆರ್ಟಿಐ ಇಲಾಖೆಯ ಅಧ್ಯಕ್ಷ ಅಭಿಷೇಕ್ ಸಿಂಘ್ವಿ ಅವರು, ಕರ್ನಾಟಕದಲ್ಲಿ ಅಗತ್ಯವಿರುವ ಸಂದರ್ಭದಲ್ಲಿ ಕಾನೂನು ಬೆಂಬಲ ಒದಗಿಸಿ, ರಾಜ್ಯ-ನಿರ್ದಿಷ್ಟ ಅವಶ್ಯಕತೆಗಳನ್ನು ಪರಿಹರಿಸಬೇಕೆಂದು ಸೂಚಿಸಿದ್ದಾರೆ. ಎಸ್. ಆಸೀಪ್ ಅಲಿ ಅವರು ರಾಷ್ಟ್ರೀಯ ಸಂಯೋಜಕರಾದ ಒಮರ್ ಹೊಡಾ ಹಾಗೂ ಕರ್ನಾಟಕ ರಾಜ್ಯ ಕಾನೂನು, ಮಾನವ ಹಕ್ಕುಗಳು ಮತ್ತು ಆರ್ಟಿಐ ಇಲಾಖೆಯ ಅಧ್ಯಕ್ಷರಾದ ಸಿ.ಎಂ. ಧನಂಜಯ ಅವರಿಗೆ ವರದಿ ಮಾಡಬೇಕೆಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ. “ನೀವು ನಿಮ್ಮ ಪಾತ್ರವನ್ನು ಅತ್ಯಂತ ವೃತ್ತಿಪರತೆ ಮತ್ತು ಸಮರ್ಪಣೆಯೊಂದಿಗೆ ನಿರ್ವಹಿಸುವಿರಿ ಎಂಬ ವಿಶ್ವಾಸವಿದೆ” ಎಂದು ಆದೇಶ ಪತ್ರದಲ್ಲಿ ಅಭಿಷೇಕ್ ಸಿಂಘ್ವಿ ತಿಳಿಸಿದ್ದಾರೆ.
ಬೆಂಗಳೂರು : ಮಾದಕ ಪದಾರ್ಥಗಳ ಮಾರಾಟ ಮತ್ತು ಸೇವನೆಯ ವಿರುದ್ಧದ ಜಾಗೃತಿ ಕಾರ್ಯಕ್ರಮದ ಅಂಗವಾಗಿ ಬೆಂಗಳೂರು ಪಶ್ಚಿಮ ವಿಭಾಗದ ಆರು ಶಿಕ್ಷಣ ಸಂಸ್ಥೆಗಳು ಹಾಗೂ ಎರಡು ವಸತಿ ನಿಲಯಗಳಲ್ಲಿ ಗುರುವಾರ ಪೊಲೀಸರು ದಿಢೀರ್ ತಪಾಸಣೆ ನಡೆಸಿದರು. ಶಿಕ್ಷಣ ಸಂಸ್ಥೆಗಳು ಹಾಗೂ ವಸತಿ ನಿಲಯಗಳ ವ್ಯವಸ್ಥಾಪಕರ ಅನುಮತಿಯೊಂದಿಗೆ 1,200 ವಿದ್ಯಾರ್ಥಿಗಳಿಂದ ಸ್ಯಾಂಪಲ್ಸ್ ಪಡೆಯಲಾಗಿದ್ದು, 585 ವಿದ್ಯಾರ್ಥಿಗಳ ಸ್ಯಾಂಪಲ್ಸ್ ಪರಿಶೀಲನೆ ನಡೆಸಿದಾಗ 31 ವಿದ್ಯಾರ್ಥಿಗಳು ಮಾದಕ ಪದಾರ್ಥ ಸೇವಿಸಿರುವುದು ದೃಢಪಟ್ಟಿದೆ ಎಂದು ಬೆಂಗಳೂರು ಪೊಲೀಸರು ತಿಳಿಸಿದ್ದಾರೆ ಮಾದಕ ವಸ್ತು ಸೇವನೆ ದೃಢಪಟ್ಟ ವಿದ್ಯಾರ್ಥಿಗಳನ್ನು ವ್ಯಸನ ಮುಕ್ತಗೊಳಿಸಲು ‘ಸನ್ಮಿತ್ರ’ ಯೋಜನೆಯಡಿ ಪೋಷಕರಿಗೆ ನೆರವು ನೀಡಲಾಗುವುದು. ವ್ಯಸನಿಗಳನ್ನು ಸಮಾಲೋಚನೆಗೆ ಒಳಪಡಿಸಿ, ಅವರು ಯಾವ ಕಾರಣದಿಂದ ಮಾದಕ ಪದಾರ್ಥಗಳಿಗೆ ದಾಸರಾಗಿದ್ದಾರೆ? ಮಾದಕ ಪದಾರ್ಥಗಳು ಸಿಗುತ್ತಿರುವುದು ಹೇಗೆ? ಎಂಬುದನ್ನು ತಿಳಿದುಕೊಳ್ಳಲಾಗುತ್ತದೆ. ಅವರನ್ನು ಮಾದಕ ವ್ಯಸನದಿಂದ ಮುಕ್ತಗೊಳಿಸಲು ಪ್ರಯತ್ನಿಸಲಾಗುತ್ತದೆ. ವಿದ್ಯಾರ್ಥಿಗಳ ಮೇಲೆ ನಿರಂತರವಾಗಿ ನಿಗಾವಹಿಸಲಾಗುವುದು ಮತ್ತು ಅವರ ಗೌಪ್ಯತೆಯನ್ನು ಕಾಪಾಡಲಾಗುತ್ತದೆ ಎಂದು ಬೆಂಗಳೂರು ಪೊಲೀಸರು ಮಾಹಿತಿ ನೀಡಿದ್ದಾರೆ. ಈ ಜಾಗೃತಿ ಕಾರ್ಯಕ್ರಮದ ತಪಾಸಣೆಗೆ ಆರು ಪ್ರತಿಷ್ಠಿತ ಶಿಕ್ಷಣ ಸಂಸ್ಥೆ, ಎರಡು ವಸತಿ ನಿಲಯಗಳ ಆಡಳಿತ ಮಂಡಳಿಗಳು ಹಾಗೂ ನಗರದ ಪುಣ್ಯ ಆಸ್ಪತ್ರೆ, ಪದ್ಮದೇವಯ್ಯ ಆಸ್ಪತ್ರೆ, ಕಾಡೆ ಆಸ್ಪತ್ರೆ, ಶರಾವತಿ ಆಸ್ಪತ್ರೆ, ಶ್ರೀಲಕ್ಷ್ಮೀ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ, ಕಾಂಗರೂ ಕೇರ್ ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿ ಸಹಕಾರ ಒದಗಿಸಿದ್ದಾರೆ. ಮಾದಕ ಪದಾರ್ಥಗಳ ಸೇವನೆಯ ದುಷ್ಪರಿಣಾಮಗಳ ಬಗ್ಗೆ ಕಾಲೇಜು ಆಡಳಿತ ಮಂಡಳಿಗೆ ಮನವರಿಕೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಮೆರಿಕಾ - ಇರಾನ್ ಯುದ್ಧ: ಹೊರ್ಮುಜ್ ಜಲಸಂಧಿ ಎಂದರೇನು, ಜಾಗತಿಕವಾಗಿ ಇದರ ಮಹತ್ವವೇನು?
ಅಮೆರಿಕಾ - ಇರಾನ್ ಯುದ್ಧದ ಸಂದರ್ಭದಲ್ಲಿ ಹೊರ್ಮುಜ್ ಜಲಸಂಧಿ ಸಾಕಷ್ಟು ಚರ್ಚೆಗೆ ಬರುತ್ತಿದೆ. ಹೊರ್ಮುಜ್ ಜಲಸಂಧಿ ಬಿಕ್ಕಟ್ಟು ಮುಂದುವರಿದರೆ ಮುಂದಿನ ದಿನಗಳಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ತೈಲ ಬೆಲೆ ಗಗನಕ್ಕೆ ಏರುವ ಸಾಧ್ಯತೆ ಇದೆ. ಹಾಗಾಗಿ ಈ ಜಲಸಂಧಿ ಬಿಕ್ಕಟ್ಟು ಜಾಗತಿಕವಾಗಿ ಮಹತ್ವ ಪಡೆದುಕೊಂಡಿದೆ. ಸದ್ಯ ಇದರ ಸಂಪೂರ್ಣ ನಿಯಂತ್ರಣ ತನ್ನ ಬಳಿಯೇ ಇದೆ ಎಂದು ಇರಾನ್ ಹೇಳಿಕೊಂಡಿದೆ. ಆದರೆ ಅಮೆರಿಕಾ ಮತ್ತು ಇಸ್ರೇಲ್ ಸೇನೆ ತನ್ನ ಪ್ರಾಬಲ್ಯ ಸಾಧಿಸಲು ಪ್ರಯತ್ನ ನಡೆಸುತ್ತಿದೆ.
ಕನಕಗಿರಿ | ಪತ್ರಕರ್ತರ ಮೇಲೆ ಹಲ್ಲೆ ಆರೋಪ : ತಪ್ಪಿತಸ್ಥರ ವಿರುದ್ದ ಕ್ರಮಕ್ಕೆ ಆಗ್ರಹ
ಕನಕಗಿರಿ: ಪಟ್ಟಣ ಪಂಚಾಯಿತಿ ಸದಸ್ಯ ಅನಿಲಕುಮಾರ ಬಿಜ್ಜಳ ಹಾಗೂ ಪಟ್ಟಣ ಪಂಚಾಯಿತಿ ಅಧ್ಯಕ್ಷೆಯ ಪತಿ ಟಿ.ಜೆ. ರಾಮಚಂದ್ರ ಮತ್ತು ಅವರ ಬೆಂಬಲಿಗರ ಮಧ್ಯೆ ನಡೆದ ಗಲಾಟೆಯನ್ನು ವರದಿ ಮಾಡಲು ತೆರಳಿದ್ದ ಪತ್ರಕರ್ತರ ಮೇಲೆ ಹಲ್ಲೆ ನಡೆದಿರುವುದು ಖಂಡನೀಯ. ತಮ್ಮ ಮೊಬೈಲ್ ನಲ್ಲಿ ವಿಡಿಯೋ, ಪೋಟೋ ತೆಗೆಯುವ ಸಮಯದಲ್ಲಿ ಗಲಾಟೆಯ ನಿರತ ಗುಂಪಿನವರು ಪತ್ರಕರ್ತರ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಸಂಘದ ಅಧ್ಯಕ್ಷ ಸೋಮಶೇಖರಯ್ಯ ಎಂ.ಹಿರೇಮಠ ಅವರು ತಿಳಿಸಿದರು. ಹಲ್ಲೆ ಘಟನೆಯನ್ನು ಖಂಡಿಸಿ ಇಲ್ಲಿನ ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯರು ತಹಶೀಲ್ದಾರ್ ಕಚೇರಿಯ ಶಿರಸ್ತೇದಾರ ಅನಿತಾ ಇಂಡಿ ಅವರಿಗೆ ಮನವಿ ಸಲ್ಲಿಸಿದ ನಂತರ ಅವರು ಮಾತನಾಡಿದರು. ಗಲಾಟೆ ನಡೆಯುತ್ತಿದ್ದ ಘಟನೆಯನ್ನು ಮೊಬೈಲ್ನಲ್ಲಿ ವಿಡಿಯೋ ಹಾಗೂ ಪೋಟೋ ತೆಗೆಯುವಾಗ ಗಲಾಟೆ ನಿರತರು ಪತ್ರಕರ್ತರಾದ ಮಧುಸೂದನರೆಡ್ಡಿ, ಪ್ರಹ್ಲಾದರೆಡ್ಡಿ ಹಾಗೂ ಶ್ರೀನಿವಾಸ ಪೂಜಾರ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿ ಹಲ್ಲೆ ಮಾಡಿದ್ದಾರೆ. ಅಲ್ಲದೆ ಮೊಬೈಲ್ ಕಸಿದುಕೊಂಡು ಪೋಟೋ, ವಿಡಿಯೋ ಅಳಿಸಿಹಾಕಿದ್ದಾರೆ. ಇದು ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಿದಂತಾಗಿದೆ. ಅಲ್ಲದೆ ಪತ್ರಿಕಾ ಸ್ವಾತಂತ್ರ್ಯ ವನ್ನು ಹತ್ತಿಕ್ಕುವ ಕುತಂತ್ರ ಅಡಗಿದೆ ಎಂದು ದೂರಿದರು. ಘಟನೆಯ ಸ್ಥಳದಲ್ಲಿ ಪೊಲೀಸರು ಇದ್ದರೂ ಪತ್ರಕರ್ತರ ಮೇಲೆ ಹಲ್ಲೆ ನಡೆದಿರುವುದು ತೀವ್ರ ಖಂಡನೀಯ ಎಂದರು. ಘಟನೆಯನ್ನು ಸೂಕ್ತ ರೀತಿಯಲ್ಲಿ ತನಿಖೆ ನಡೆಸಿ ಹಲ್ಲೆ ಮತ್ತು ದೌರ್ಜನ್ಯಕ್ಕೆ ಒಳಗಾದ ಪತ್ರಕರ್ತರಿಗೆ ನ್ಯಾಯ ಕೊಡಿಸಬೇಕೆಂದು ಎಂದು ಆಗ್ರಹಿಸಿದ್ದಾರೆ. ಪತ್ರಕರ್ತರಾದ ವಿಜಯಭಾಸ್ಕರರೆಡ್ಡಿ, ಪ್ರಹ್ಲಾದರೆಡ್ಡಿ ಮಾದಿನಾಳ, ಮಧುಸೂದನರೆಡ್ಡಿ, ಶ್ರೀನಿವಾಸ ಪೂಜಾರ, ಹೊನ್ನೂರುಹುಸೇನ ಬೇಲ್ದಾರ್, ಹುಲಗಪ್ಪ ಉಪ್ಪಾರ, ಚೇತನ ಯಾದವ,ಮಹಾಂತೇಶ, ಅಯ್ಯಪ್ಪ ಇತರರು ಇದ್ದರು.
ಇರಾನ್-ಇಸ್ರೇಲ್ ಯುದ್ಧವು ಭಾರತೀಯ ಆರ್ಥಿಕತೆಗೆ ಅಲ್ಪಾವಧಿ ಸವಾಲುಗಳನ್ನೊಡ್ಡಿದೆ: ಆರ್ಬಿಐ
ಹೊಸದಿಲ್ಲಿ: ಪಶ್ಚಿಮ ಏಶ್ಯಾದಲ್ಲಿಯ ಸಂಘರ್ಷವು ಭಾರತೀಯ ಆರ್ಥಿಕತೆಗೆ ಕೆಲವು ತಕ್ಷಣದ ಸವಾಲುಗಳನ್ನು ಒಡ್ಡಿದೆ,ಆದರೆ ದೀರ್ಘಾವಧಿಯ ಆರ್ಥಿಕ ಬೆಳವಣಿಗೆಯನ್ನು ಕುಂಠಿತಗೊಳಿಸುವ ಸಾಧ್ಯತೆಯಿಲ್ಲ ಎಂದು ಆರ್ಬಿಐನ ಹಣಕಾಸು ನೀತಿ ಸಮಿತಿಯ (ಎಂಪಿಸಿ) ಬಾಹ್ಯ ಸದಸ್ಯ ನಾಗೇಶ್ ಕುಮಾರ್ ಹೇಳಿದ್ದಾರೆ. ಒಟ್ಟು ದೇಶಿಯ ಉತ್ಪನ್ನದ (ಜಿಡಿಪಿ) ಬೆಳವಣಿಗೆಯನ್ನು ಹೆಚ್ಚಿಸಲು ಆರ್ಥಿಕ ಮತ್ತು ಹಣಕಾಸು ನೀತಿಗಳು ಸಂಘಟಿತವಾಗಿ ಕಾರ್ಯ ನಿರ್ವಹಿಸುವ ಅಗತ್ಯವಿದೆ ಎಂದು ಅವರು PTI ಸುದ್ದಿಸಂಸ್ಥೆಗೆ ನೀಡಿದ ಇ-ಮೇಲ್ ಸಂದರ್ಶನದಲ್ಲಿ ತಿಳಿಸಿದ್ದಾರೆ. ಪ್ರಸಕ್ತ ಸನ್ನಿವೇಶದಲ್ಲಿ ತೈಲ ಬೆಲೆಗಳಲ್ಲಿ ಏರಿಕೆ, ರಫ್ತು ವ್ಯತ್ಯಯಗಳು ಮತ್ತು ಹಣರವಾನೆ ಮೇಲೆ ಪರಿಣಾಮಗಳನ್ನು ಬೆಳವಣಿಗೆಗೆ ಎದುರಾಗಿರುವ ತಕ್ಷಣದ ಸವಾಲುಗಳು ಎಂದು ಗುರುತಿಸಲಾಗಿದೆ. ಅಲ್ಲದೆ ಈ ಸಂಘರ್ಷವು ಪ್ರದೇಶದಲ್ಲಿನ ಭಾರತೀಯ ಸಮುದಾಯದ ಸುರಕ್ಷತೆಗೆ ಬೆದರಿಕೆಗಳನ್ನೂ ಒಡ್ಡಿದೆ ಎಂದ ಅವರು,ಅಮೆರಿಕ-ಇಸ್ರೇಲ್ ದಾಳಿಗಳು ಹೆಚ್ಚುತ್ತಿದ್ದು,ಸದ್ಯವೇ ತೈಲ ಬೆಲೆಗಳು ಇನ್ನಷ್ಟು ಹೆಚ್ಚುವ ಸಾಧ್ಯತೆಯಿದೆ. ಈ ಪ್ರದೇಶದಲ್ಲಿ ಜಗತ್ತು ಹೊಂದಿರುವ ಹೆಚ್ಚಿನ ಹಿತಾಸಕ್ತಿಗಳನ್ನು ಪರಿಗಣಿಸಿದರೆ ಬಿಕ್ಕಟ್ಟು ಶೀಘ್ರವೇ ಬಗೆಹರಿಯುವ ಭರವಸೆಯಿದೆ ಎಂದರು. ತೈಲ ಮೂಲಗಳ ವೈವಿಧ್ಯೀಕರಣವು ಅಪಾಯವನ್ನು ಕಡಿಮೆ ಮಾಡಲು ನೆರವಾಗಬಹುದು ಎಂದ ಅವರು,ಭಾರತಕ್ಕೆ ವೆನೆಜುವೆಲಾದಿಂದ ತೈಲ ಪೂರೈಕೆ ಆರಂಭಗೊಳ್ಳುತ್ತಿರುವುದು ಸಹ ನೆರವಾಗಬಹುದು. ಮಧ್ಯಪ್ರಾಚ್ಯದ ಬಿಕ್ಕಟ್ಟು ಶೀಘ್ರವೇ ಕೊನೆಗೊಂಡರೆ ಮತ್ತು ಇರಾನ್ ಮೇಲಿನ ನಿರ್ಬಂಧಗಳು ಹಿಂದೆಗೆಯಲ್ಪಟ್ಟರೆ ಅಗ್ಗದ ತೈಲ ಪೂರೈಕೆಯಿಂದ ಭಾರತಕ್ಕೆ ಲಾಭವಾಗಬಹುದು ಎಂದು ಹೇಳಿದರು. ಭೂರಾಜಕೀಯ ಉದ್ವಿಗ್ನತೆಗಳ ಹೊರತಾಗಿಯೂ ಹಣದುಬ್ಬರದ ಮುನ್ನೋಟವು ಮಿತಿಯಲ್ಲಿದೆ ಎಂದು ಪ್ರತಿಪಾದಿಸಿದ ಅವರು,ಮುಖ್ಯ ಗ್ರಾಹಕ ಬೆಲೆ ಸೂಚ್ಯಂಕವು ಡಿ.2025ರಲ್ಲಿ ಶೇ.1.3ರಷ್ಟಿತ್ತು ಮತ್ತು ಹೊಸ ಸರಣಿ ದತ್ತಾಂಶಗಳ ಅಡಿಯಲ್ಲಿಯೂ ಅದು ವಿತ್ತವರ್ಷ 2026ರಲ್ಲಿ ಸುಮಾರು ಶೇ.2.5ರಷ್ಟಿರಬಹುದು ಎಂದು ಅಂದಾಜಿಸಲಾಗಿದೆ ಎಂದರು.
ಮಹಿಳೆಯ ಮಾನಹಾನಿ ಪ್ರಕರಣ: ದ್ವಿಚಕ್ರ ವಾಹನ ಸವಾರನಿಗೆ ಶಿಕ್ಷೆ
ಮಂಗಳೂರು, ಮಾ.5:ಮಹಿಳೆಯನ್ನು ದ್ವಿಚಕ್ರ ವಾಹನದಲ್ಲಿ ಹಿಂಬಾಲಿಸಿಕೊಂಡು ಹೋಗಿ ಮಾನಹಾನಿ ಮಾಡಿದ ಆರೋಪಿ ಸವಾರ ಪ್ರವೀಣ್ ಯಾನೆ ಸಂತೋಷ್ ಎಂಬಾತನಿಗೆ 7ನೇ ಜೆಎಂಎಫ್ಸಿ ನ್ಯಾಯಾಲಯವು 1 ವರ್ಷ ಜೈಲು ಶಿಕ್ಷೆ ಮತ್ತು 5 ಸಾವಿರ ರೂ. ದಂಡ ವಿಧಿಸಿದೆ. ಉಳ್ಳಾಲ ತಾಲೂಕಿನ ಕೋಟೆಕಾರು ಗ್ರಾಮದ ಪನೀರ್ ಚರ್ಚ್ ಬಳಿ ಪ್ರವೀಣ್ ಯಾನೆ ಸಂತೋಷ್ ಎಂಬಾತ ಮಹಿಳೆಯನ್ನು ಹಿಂಬಾಲಿಸಿಕೊಂಡು ಹೋಗಿ ಅವಾಚ್ಯ ಶಬ್ಧಗಳಿಂದ ಬೈದು, ಕೈ ಹಿಡಿದು ಎಳೆದು ಮಾನಹಾನಿ ಮಾಡಿದ್ದಾನೆ ಎಂದು ಆರೋಪಿಸಿ ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ವಾದ-ಪ್ರತಿವಾದಗಳನ್ನು ಆಲಿಸಿದ 7ನೇ ಜೆಎಂಎಫ್ಸಿ ನ್ಯಾಯಾಲಯದ ಪ್ರಭಾರ ನ್ಯಾಯಾಧೀಶ ಚಿರಾಗ್ ಸಿ. ಈ ತೀರ್ಪು ನೀಡಿದ್ದಾರೆ. ಸರಕಾರದ ಪರವಾಗಿ 9 ಮಂದಿ ಸಾಕ್ಷಿ ನುಡಿದಿದ್ದರು. 6 ದಾಖಲೆಗಳನ್ನು ಗುರುತಿಸಲಾಗಿತ್ತು. ಸರಕಾರದ ಪರವಾಗಿ ಸಹಾಯಕ ಸರಕಾರಿ ಅಭಿಯೋಜಕ ಇಬ್ರಾಹಿಂ ಬಾತಿಷ ಯು.ಕೆ. ವಾದ ಮಂಡಿಸಿದ್ದಾರೆ.
ಕೊಪ್ಪಳ | ಕ್ರೀಡೆಗಳ ಮೂಲಕ ಬೆಳೆಕಿಗೆ ಬನ್ನಿ : ಅಬ್ದುಲ್ ರಜಾಕ್
ಕೊಪ್ಪಳ: ಕ್ರೀಡೆಗಳ ಮೂಲಕ ವಿದ್ಯಾರ್ಥಿಗಳು ಬೆಳಕಿಗೆ ಬರಬೇಕು ಎಂದು ಭಾರತೀಯ ಪೆಂಕಾಕ್ ಸೀಲಾತ್ ಸಂಸ್ಥೆಯ ತಾಂತ್ರಿಕ ನಿರ್ದೇಶಕರಾದ ಅಬ್ದುಲ್ ರಾಜಾಕ್ ಹೇಳಿದರು. ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಗುರುವಾರ, ಕೊಪ್ಪಳದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಹಾಗೂ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯ ಇವರ ಸಹಯೋಗದಲ್ಲಿ 2025-26ನೇ ಸಾಲಿನ ಅಂತರ ಮಹಾವಿದ್ಯಾನಿಲಯಗಳ ಪೆಂಕಾಕ್ ಸೀಲಾತ್ ಪಂದ್ಯಾವಳಿ ಮತ್ತು ವಿಶ್ವವಿದ್ಯಾಲಯ ತಂಡದ ಆಯ್ಕೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಇಂದು ಕ್ರೀಡಾ ಕ್ಷೇತ್ರದಲ್ಲಿ ಹೆಚ್ಚಿನ ಸ್ಪರ್ಧೆ ಇದ್ದರೂ ಪೆಂಕಾಕ್ ಸೀಲಾತ್ ಕ್ರೀಡೆಯಲ್ಲಿ ಸ್ಪರ್ಧೆ ಕಡಿಮೆ ಇದೆ. ಉತ್ತಮ ಪ್ರದರ್ಶನ ನೀಡಿದರೆ ಬಹುಮಾನ ಗಳಿಸುವ ಅವಕಾಶಗಳು ಹೆಚ್ಚು. ಸರ್ಕಾರದಿಂದ ಕ್ರೀಡೆಗಳಿಗೆ ದೊರೆಯುವ ಅನುದಾನವನ್ನು ಸದುಪಯೋಗಪಡಿಸಿಕೊಂಡು ಕ್ರೀಡೆಗಳ ಮೂಲಕ ಬೆಳವಣಿಗೆ ಸಾಧಿಸಬೇಕು ಎಂದು ಅವರು ಸಲಹೆ ನೀಡಿದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ ಪ್ರೊ. ಅಲ್ಲಮ ಪ್ರಭು ಬೆಟ್ಟದೂರು ಮಾತನಾಡಿ, ಗ್ರಾಮೀಣ ಕ್ರೀಡೆಗಳನ್ನು ಉಳಿಸಿ ಬೆಳೆಸುವ ಅಗತ್ಯವಿದೆ. ಗೆಲುವು-ಸೋಲು ಮುಖ್ಯವಲ್ಲ, ಕ್ರೀಡೆಯಲ್ಲಿ ಪಾಲ್ಗೊಳ್ಳುವುದೇ ಮುಖ್ಯ. ವಿದ್ಯಾರ್ಥಿಗಳು ಕಲೆ, ಸಾಹಿತ್ಯ, ಸಂಗೀತ ಮತ್ತು ಕ್ರೀಡೆಗಳತ್ತ ಆಸಕ್ತಿ ಬೆಳೆಸಿಕೊಳ್ಳಬೇಕು ಎಂದು ಹೇಳಿದರು. ಸಂಘಟನಾ ಕಾರ್ಯದರ್ಶಿ ಹಾಗೂ ದೈಹಿಕ ಶಿಕ್ಷಣ ಉಪನ್ಯಾಸಕರಾದ ಪ್ರದೀಪ್ ಕುಮಾರ ಮಾತನಾಡಿ, ಕ್ರೀಡೆಗಳಲ್ಲಿ ಭಾಗವಹಿಸುವ ಮೂಲಕ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಸಿಗುತ್ತದೆ. ಸರ್ಕಾರಿ ಹುದ್ದೆಗಳಲ್ಲಿ ಕ್ರೀಡಾ ಮೀಸಲಾತಿ ಸೌಲಭ್ಯ ಇರುವುದರಿಂದ ಅದನ್ನು ವಿದ್ಯಾರ್ಥಿಗಳು ಸದುಪಯೋಗಪಡಿಸಿಕೊಳ್ಳಬೇಕು. ಕ್ರೀಡೆಗಳು ಮಾನಸಿಕ, ದೈಹಿಕ ಮತ್ತು ಆರ್ಥಿಕ ಸದೃಢತೆಗೆ ಸಹಕಾರಿಯಾಗುತ್ತವೆ ಎಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಡಾ. ಗಣಪತಿ ಲಮಾಣಿ ಮಾತನಾಡಿ, ವಿದ್ಯಾರ್ಥಿಗಳು ಹೊಸ ಕ್ರೀಡೆಗಳಲ್ಲಿ ಆಸಕ್ತಿಯಿಂದ ಪಾಲ್ಗೊಳ್ಳಬೇಕು. ಆಧುನಿಕ ಕಾಲದಲ್ಲಿ ಕ್ರೀಡೆಗಳು ಆರೋಗ್ಯ ವೃದ್ಧಿಗೆ ಅತ್ಯಂತ ಅಗತ್ಯವೆಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಬಿ. ಜಿ ಕರಿಗಾರ, ವಿಠಲ ಬಿ ಜಾಬ ಗೌಡರ್, ಎ ಬಸವರಾಜ, ಮಂಜುನಾಥ್ ಅರೇಂಟುನೂರು, ಗವಿಸಿದ್ದಪ್ಪ ಮುತ್ತಾಳ, ಮಂಜುನಾಥ್ ಗೊಂಡಬಾಳು, ವಿನೋದು, ವಿಶ್ವನಾಥ್ ನಡುಕಟ್ಟಿ, ಶುಭ, ಸುಮಿತ್ರಾ ಹಾಗೂ ಸುಮಯ್ಯ ಇತರರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಡಾ. ಹುಲಿಗೆಮ್ಮ ಅವರು ನಿರೂಪಿಸಿದರು. ಡಾ. ನರಸಿಂಹ ಸ್ವಾಗತಿಸಿ ವಂದಿಸಿದರು. ಕಾಲೇಜಿನ ವಿದ್ಯಾರ್ಥಿನಿಯರು ಪ್ರಾರ್ಥನೆ ಗೀತೆ ಹಾಡಿದರು.
ಉಡುಪಿ: ಮಾ.11ರಿಂದ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ವೈದ್ಯರು ಸೇರಿ ಆರೋಗ್ಯ ಇಲಾಖೆ ನೌಕರರ ಮುಷ್ಕರದ ಎಚ್ಚರಿಕೆ
ಮಾ.16ರಿಂದ ಆಸ್ಪತ್ರೆ ಸೇರಿ ಎಲ್ಲವೂ ಸಂಪೂರ್ಣ ಬಂದ್
ರಾಜ್ಯದಲ್ಲಿ ‘ಯುವಜನ ಆಯೋಗ ಸ್ಥಾಪನೆ’ಗಾಗಿ ಯುವಜನ ಸಂಘಟನೆಗಳಿಂದ ನಿರ್ಣಯ
ಬೆಂಗಳೂರು : ಕರ್ನಾಟಕದಲ್ಲಿ ರಾಜ್ಯ ಯುವಜನ ಆಯೋಗ ಸ್ಥಾಪನೆ ಮಾಡಬೇಕು ಎಂದು ವಿವಿಧ ಯುವಜನ ಸಂಘಟನೆಗಳಿಂದ ನಿರ್ಣಯ ಕೈಗೊಳ್ಳಲಾಯಿತು. ಗುರುವಾರ ಶಿವಾಜಿನಗರದಲ್ಲಿರುವ ಖಾಸಗಿ ಹೋಟೆಲ್ನಲ್ಲಿ ನಡೆದ ಸಭೆಯಲ್ಲಿ ಭಾಗವಹಿಸಿದ್ದ ರಾಜ್ಯದ ವಿವಿಧ ಯುವಜನ ಸಂಘಟನೆಗಳ ಮುಖಂಡರು ಸಂಯುಕ್ತ ನಿರ್ಣಯ ಕೈಗೊಂಡರು. ರಾಜ್ಯದ ಒಟ್ಟು ಜನಸಂಖ್ಯೆಯ ದೊಡ್ಡ ಭಾಗ ಯುವಜನರಿಂದ ಕೂಡಿದ್ದು, ಅವರು ಶಿಕ್ಷಣ, ಉದ್ಯೋಗ, ಕೌಶಲ್ಯಾಭಿವೃದ್ಧಿ, ಮಾನಸಿಕ ಆರೋಗ್ಯ ಮತ್ತು ಸಾಮಾಜಿಕ ಪ್ರಾತಿನಿಧ್ಯ ಸೇರಿದಂತೆ ಹಲವು ಸವಾಲುಗಳನ್ನು ಎದುರಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಯುವಜನರ ಸಮಸ್ಯೆಗಳಿಗೆ ಸಮಗ್ರ ಮತ್ತು ವ್ಯವಸ್ಥಿತ ಪರಿಹಾರ ಒದಗಿಸಲು ಕರ್ನಾಟಕ ರಾಜ್ಯ ಯುವ ಆಯೋಗದ ಸ್ಥಾಪನೆ ಅನಿವಾರ್ಯವಾಗಿದೆ ಎಂದು ಯುವಜನ ಸಂಘಟನೆಗಳ ಮುಖಂಡರು ತಿಳಿಸಿದರು. ಸಭೆಯಲ್ಲಿ ಬಹು ಜನ ವಿದ್ಯಾರ್ಥಿ ಸಂಘಟನೆಯ ಭೀಮ್ರಾವ್, ಸೋಲಿಡಾರಿಟಿ ಯೂಥ್ ಮೂವ್ಮೆಂಟ್ನ ಡಾ.ನಸೀಮ್ ಅಹ್ಮದ್, ಸಾಮಾಜಿಕ ಕಾರ್ಯಕರ್ತ ಜನಾರ್ಧನ್ ಕೆಸರಗದ್ದೆ, ಆಲ್ ಇಂಡಿಯಾ ಸ್ಟೂಡೆಂಟ್ಸ್ ಅಸೋಸಿಯೇಷನ್ನ ಅರಾತ್ರಿಕಾ, ಸಾಮಾಜಿಕ ಕಾರ್ಯಕರ್ತ ಡಾ.ಹಕೀಮ್, ಎಸ್ಐಒನ ಮಹಮ್ಮದ್ ಹಯ್ಯಾನ್, ಮಹಮ್ಮದ್ ಪೀರ್ ಮತ್ತಿತರರು ಭಾಗವಹಿಸಿದ್ದರು. ಪ್ರಮುಖ ನಿರ್ಣಯಗಳು: ಮುಂದಿನ ಬಜೆಟ್ ಅಧಿವೇಶನದಲ್ಲಿ ಯುವ ಆಯೋಗ ಸ್ಥಾಪನೆಗೆ ಸಂಬಂಧಿಸಿದ ಸರಕಾರಿ ಅಧಿಸೂಚನೆ ಹೊರಡಿಸಲಾಗದಿದ್ದರೆ ರಾಜ್ಯವ್ಯಾಪಿ ಪ್ರತಿಭಟನೆ, ಮೆರವಣಿಗೆ ಮತ್ತು ಧರಣಿ ಕೈಗೊಳ್ಳಲಾಗುವುದು. ರಾಜ್ಯವ್ಯಾಪಿ ಜಾಗೃತಿ ಅಭಿಯಾನಗಳು ನಡೆಯಲಿದ್ದು, ಸಹಿ ಸಂಗ್ರಹ ಅಭಿಯಾನ, ಸಿಎಂಗೆ ಪತ್ರ ಕಳುಹಿಸುವ ಅಭಿಯಾನ, ಉಪಮುಖ್ಯಮಂತ್ರಿಗೆ ಮನವಿ ಸಲ್ಲಿಕೆ, ಸಾಮಾಜಿಕ ಜಾಲತಾಣ ಅಭಿಯಾನ ಹಾಗೂ ವಿದ್ಯಾರ್ಥಿ-ಯುವ ಸಮಾವೇಶಗಳ ಆಯೋಜನೆ. ಎಲ್ಲಾ ರಾಜಕೀಯ ಪಕ್ಷಗಳ ಜನಪ್ರತಿನಿಧಿಗಳನ್ನು ಭೇಟಿ ಮಾಡಿ ಯುವ ಆಯೋಗದ ವಿಷಯವನ್ನು ವಿಧಾನಸಭೆಯಲ್ಲಿ ಪ್ರಸ್ತಾಪಿಸುವಂತೆ ಒತ್ತಾಯಿಸುವುದು ಸೇರಿ ಅನೇಕ ನಿರ್ಣಯಗಳನ್ನು ಕೈಗೊಳ್ಳಲಾಯಿತು.
Ind Vs Eng Highlights- ಅಭಿಷೇಕ್ ಶರ್ಮಾ ಮತ್ತೆ ವಿಫಲ: ಆಂಗ್ಲರ ಬಲೆಗೆ ಸುಲಭದಲ್ಲಿ ಬಿದ್ದ ಭಾರತದ ಓಪನರ್!
ICC T20
ಸಿಎಂ, ಡಿಸಿಎಂ ಇಬ್ಬರು ಪಕ್ಷದ ನಾಯಕತ್ವಕ್ಕೆ ಬದ್ದ : ಡಿ.ಕೆ.ಸುರೇಶ್
ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಒಟ್ಟಾಗಿಲ್ಲ ಎಂದು ಎಲ್ಲಿಯೂ ಹೇಳಿಲ್ಲ. ಇಬ್ಬರೂ ಪಕ್ಷದಲ್ಲಿದ್ದು ಸಿದ್ಧಾಂತ-ನಾಯಕತ್ವಕ್ಕೆ ಬದ್ಧರಾಗಿದ್ದಾರೆ ಎಂದು ಬಮೂಲ್ ಅಧ್ಯಕ್ಷ ಡಿ.ಕೆ.ಸುರೇಶ್ ತಿಳಿಸಿದ್ದಾರೆ. ಗುರುವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಇಬ್ಬರು ನಾಯಕರೂ ಒಗ್ಗಟ್ಟು ಪ್ರದರ್ಶಿಸುತ್ತಿರುವ ಬಗ್ಗೆ ನನಗೆ ಹೆಚ್ಚಿನ ಮಾಹಿತಿಯಿಲ್ಲ. ಆದರೆ ಇಬ್ಬರೂ ನಾಯಕರು ಒಟ್ಟಾಗಿಯೇ ಕೆಲಸ ಮಾಡುತ್ತಿದ್ದಾರೆ. ಈ ಮೊದಲು ವಿಪಕ್ಷದಲ್ಲಿ ಇದ್ದಾಗಿನಿಂದಲೂ ಜೊತೆಯಾಗಿಯೇ ಕೆಲಸ ಮಾಡಿದ್ದಾರೆ, ಚುನಾವಣೆಗಳಲ್ಲಿ ಒಟ್ಟಾಗಿ ದುಡಿದಿದ್ದಾರೆ ಎಂದರು. ತಾವು ಮತ್ತು ಡಿ.ಕೆ.ಶಿವಕುಮಾರ್ ಹಾಲು-ಜೇನಿನಂತೆ ಇದ್ದೇವೆಂದು ಸಿದ್ದರಾಮಯ್ಯ ಹೇಳಿರುವ ಬಗ್ಗೆ ನನಗೆ ಗೊತ್ತಿಲ್ಲ. ಹಾಲು ಬೇಕಾದರೆ ಡೈರಿ ಸರ್ಕಲ್ಗೆ ಬನ್ನಿ. ಜೇನಿನ ಬಗ್ಗೆ ನನಗೆ ಮಾಹಿತಿಯಿಲ್ಲ. ಅದು ಕೊಡಗು ಹಾಗೂ ಮಳೆನಾಡು ಭಾಗದಲ್ಲಿ ದೊರೆಯುತ್ತದೆ. ಮೈಸೂರು ಪಾಕ್ ಅಥವಾ ಇನ್ಯಾವುದಾದರೂ ಸಿಹಿ ಬೇಕಾದರೆ ಕೆಎಂಎಫ್ಗೆ ಬನ್ನಿ ತಿನ್ನಿಸುತ್ತೇನೆ ಎಂದು ನುಡಿದರು.
ದ್ವಿತೀಯ ಪಿಯುಸಿ: ಇತಿಹಾಸ ಪರೀಕ್ಷೆಗೆ 41 ಮಂದಿ ಗೈರು
ಉಡುಪಿ: ಉಡುಪಿ ಜಿಲ್ಲೆಯಲ್ಲಿ ಗುರುವಾರ ನಡೆದ ದ್ವಿತೀಯ ಪಿಯುಸಿಯ ಇತಿಹಾಸ ಪರೀಕ್ಷೆಯಲ್ಲಿ ಒಟ್ಟು 41 ಮಂದಿ ಗೈರುಹಾಜರಾ ಗಿದ್ದರು. ಪರೀಕ್ಷೆಗಾಗಿ ನೊಂದಾಯಿಸಿಕೊಂಡಿದ್ದ 3298 ಮಂದಿ ವಿದ್ಯಾರ್ಥಿ ಗಳಲ್ಲಿ ಇಂದು 3257 ಮಂದಿ ಹಾಜರಾಗಿದ್ದರು ಎಂದು ಡಿಡಿಪಿಯು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಬುಧವಾರ ನಡೆದ ತಮಿಳು, ತೆಲುಗು, ಮಲಯಾಳಂ, ಮರಾಠಿ, ಉರ್ದು, ಸಂಸ್ಕೃತ ಹಾಗೂ ಫ್ರೆಂಚ್ ಭಾಷಾ ಪರೀಕ್ಷೆಯಲ್ಲಿ ಹೆಸರು ನೊಂದಾಯಿಸಿಕೊಂಡಿದ್ದ 2393 ವಿದ್ಯಾರ್ಥಿಗಳ ಪೈಕಿ 2392 ಮಂದಿ ಪರೀಕ್ಷೆ ಬರೆದಿದ್ದು, ಓರ್ವ ಮಾತ್ರ ಗೈರುಹಾಜರಾಗಿದ್ದಾರೆ ಎಂದು ಡಿಡಿಪಿಯು ತಿಳಿಸಿದ್ದಾರೆ. ಜಿಲ್ಲಾಧಿಕಾರಿ ಭೇಟಿ: ಈ ನಡುವೆ ಉಡುಪಿ ಜಿಲ್ಲಾಧಿಕಾರಿ ಸ್ವರೂಪ ಕೆ.ಟಿ. ಹಾಗೂ ಕುಂದಾಪುರದ ಸಹಾಯಕ ಕಮಿಷನರ್ ರಶ್ಮಿ ಅವರು ಇಂದು ಕಾರ್ಕಳದಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ ನಡೆಯುವ ಕೆಲವು ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕಾರ್ಕಳದ ಸರಕಾರಿ ಪದವಿ ಪೂರ್ವ ಕಾಲೇಜಿನ ಕೇಂದ್ರಕ್ಕೆ ಭೇಟಿ ನೀಡಿದ ಡಿಸಿ, ದೋಷರಹಿತವಾಗಿ ಯಾವುದೇ ಅಡಚಣೆಗಳಿಲ್ಲದೇ ಪರೀಕ್ಷೆ ನಡೆಸುವಂತೆ ಅಧಿಕಾರಿಗಳಿಗೆ ಸೂಚನೆಗಳನ್ನು ನೀಡಿದರು.
`ಬ್ರೊ ಸ್ವಲ್ಪವಾದರೂ ನಗಿ, ಇದು ನಿಮ್ಮದೇ ಮದುವೆ': ಗಂಭೀರ ವದನದ ಅರ್ಜುನ್ ತೆಂಡೂಲ್ಕರ್ ಗೆ ನೆಟ್ಟಿಗರ ಮನವಿ
Arjun Tendulkar- Saaniya Chandok Wedding- ಸದಾ ಗಂಭೀರವಾಗಿರುವ ಅರ್ಜುನ್ ತೆಂಡೂಲ್ಕರ್ ನಗುವುದು ಸ್ವಲ್ಪ ಕಡಿಮೆಯೇ. ಇದೀಗ ಮದುವೆ ಮಂಟಪದಲ್ಲೂ ಅವರು ಗಂಭೀರ ವದನರಾಗಿ ನಿಂತಿರುವ ವಿಡಿಯೋ ಮತ್ತು ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಅವರ ಮೆಹೆಂದಿ ಕಾರ್ಯಕ್ರಮದಲ್ಲಿ ಅತಿಥಿಯೊಬ್ಬರು ಹಾಡುತ್ತಿದ್ದ ವೇಳೆ ಸಾನಿಯಾ ಮುಗುಳ್ನಗುತ್ತಾ ಸಂತಸ ವ್ಯಕ್ತಪಡಿಸಿದ್ದರೆ, ಅರ್ಜುನ್ ಮಾತ್ರ ಗಂಭೀರ ವದನರಾಗಿ ನಿಂತಿದ್ದರು. ಈ ಬಗ್ಗೆ ನೆಟ್ಚಿಗರು ಇದು ನಿಮ್ಮದೇ ಮದುವೆ, ಇಂದಾದರೂ ಸ್ಲಲ್ಪ ನಗಿ ಎಂದು ಕಾಲೆಳೆದಿದ್ದಾರೆ.
Karnataka Budget 2026: ಮಾ.6 ಸಿದ್ದರಾಮಯ್ಯ 17ನೇ ಬಜೆಟ್ ಮಂಡನೆ, ಸಮಯ, ನೇರ ಪ್ರಸಾರದ ವಿವರ
ಬೆಂಗಳೂರು: ಕರ್ನಾಟಕ ರಾಜ್ಯದ ಜನರ ಚಿತ್ತ ಪ್ರಸಕ್ತ ಸಾಲಿನ 'ಕರ್ನಾಟಕ ಬಜೆಟ್ 2026-27' (Karnataka Budget 2026) ಮೇಲೆ ನೆಟ್ಟಿದೆ. ಮಾರ್ಚ್ 06ರಿಂದ ಮಾರ್ಚ್ 27ರವರೆಗೆ ಕರ್ನಾಟಕ ಬಜೆಟ್ ಅಧಿವೇಶನ ನಡೆಯಲಿದೆ. ನಾಳೆ ಶುಕ್ರವಾರ ಬೆಳಗ್ಗೆ 11ಗಂಟೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಧಾನಸೌಧದಲ್ಲಿ 17ನೇ ಐತಿಹಾಸಿಕ ರಾಜ್ಯ ಬಜೆಟ್ ಮಂಡಿಸಲಿದ್ದಾರೆ. ಗ್ಯಾರಂಟಿ ಯೋಜನೆಗಳ ಜಾರಿಯಿಂದ ಯಶಸ್ಸು ಸಿಕ್ಕಿದೆ
ಮಾರ್ಚ್ 5ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ
Petrol, Diesel Price: ಪೆಟ್ರೋಲ್, ಡೀಸೆಲ್ ದರದಲ್ಲಿ ಜಾಸ್ತಿ ಅಲ್ಲದಿದ್ದರೂ, ಸ್ವಲ್ಪ ಪ್ರಮಾಣದಲ್ಲಾದರೂ, ಏರಿಳಿತ ಆಗುತ್ತಿರುತ್ತದೆ. ಹಾಗಾದರೆ, ಇಂದು (ಮಾರ್ಚ್ 5) ಬೆಂಗಳೂರು ಸೇರಿದಂತೆ ರಾಜ್ಯದ ಉಳಿದ ಜಿಲ್ಲೆಗಳಲ್ಲಿ ಲೀಟರ್ ಪೆಟ್ರೋಲ್, ಡೀಸೆಲ್ ಬೆಲೆ ಎಷ್ಟಿದೆ ಎನ್ನುವ ಅಂಕಿಅಂಶಗಳನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ. ಶಕ್ತಿಯ ಮೂಲಗಳು ಎನಿಸಿಕೊಂಡಿರುವ ಪೆಟ್ರೋಲ್ ಮತ್ತು ಡೀಸೆಲ್ ಇಂಧನ ಅತ್ಯವಶ್ಯಕವಾಗಿ ಬೇಕಾಗುವ ಸಂಪನ್ಮೂಲಗಳಾಗಿವೆ.
ಬೆಂಗಳೂರು : 2023ರ ವಿಧಾನಸಭಾ ಚುನಾವಣೆಗೆ ಮೂರು ತಿಂಗಳು ಮೊದಲು ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಿದ್ದ ಎರಡು ಕಾರ್ಯಕ್ರಮಗಳಿಗೆ ಕರ್ನಾಟಕದ ಬಸವರಾಜ ಬೊಮ್ಮಾಯಿ ನೃತೃತ್ವದ ಆಗಿನ ಬಿಜೆಪಿ ಸರಕಾರ 33 ಕೋಟಿ ರೂ.ಗೂ ಹೆಚ್ಚು ವೆಚ್ಚ ಮಾಡಿದ್ದುದಾಗಿ ಆರ್ಟಿಐ ಅಡಿಯಲ್ಲಿ ಲಭ್ಯವಾದ ದಾಖಲೆಗಳು ಬಹಿರಂಗಪಡಿಸಿವೆ ಎಂದು deccanherald.com ವರದಿ ಮಾಡಿದೆ. ಈ ಕಾರ್ಯಕ್ರಮಗಳಿಗೆ ಜನರನ್ನು ಕರೆದೊಯ್ಯಲು ಮಾತ್ರ ಸುಮಾರು 6.5 ಕೋಟಿ ರೂ. ವೆಚ್ಚ ಮಾಡಲಾಗಿದೆ ಎಂದು ತಿಳಿದು ಬಂದಿದೆ. ʼಲಂಚಮುಕ್ತ ಕರ್ನಾಟಕʼದ ಮಂಜುನಾಥ ಹಿರೇಚೌಟಿ ಅವರು ಸಲ್ಲಿಸಿದ್ದ ಆರ್ಟಿಐ ಅರ್ಜಿಯಿಂದ ಈ ಮಾಹಿತಿ ಹೊರಬಂದಿದೆ. ದಾಖಲೆಗಳ ಪ್ರಕಾರ, ಫೆಬ್ರವರಿ 27, 2023ರಂದು ಶಿವಮೊಗ್ಗ ವಿಮಾನ ನಿಲ್ದಾಣದ ಉದ್ಘಾಟನಾ ಕಾರ್ಯಕ್ರಮಕ್ಕಾಗಿ ಸರಕಾರ 18.81 ಕೋಟಿ ರೂ. ವೆಚ್ಚ ಮಾಡಿದೆ. ಈ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ, “ಭವಿಷ್ಯದಲ್ಲಿಯೂ ಡಬಲ್ ಎಂಜಿನ್ ಸರಕಾರಕ್ಕಾಗಿ ಮತ ಚಲಾಯಿಸಿ” ಎಂದು ಜನರನ್ನು ಕೋರಿದ್ದರು. ಈ ಕಾರ್ಯಕ್ರಮಕ್ಕೆ ವಿವಿಧ ಭಾಗಗಳಿಂದ ಜನರನ್ನು ತರಲು 4.11 ಕೋಟಿ ರೂ. ವೆಚ್ಚದಲ್ಲಿ 1,800 ಬಸ್ಗಳನ್ನು ಬಾಡಿಗೆಗೆ ಪಡೆದಿತ್ತು. ಜೊತೆಗೆ ಮುಖ್ಯ ವೇದಿಕೆಯ ನಿರ್ಮಾಣ, ಗ್ರೀನ್ ರೂಂ ಜರ್ಮನ್ ರಚನೆಯ ಟ್ರಸ್ ಪೆಂಡಲ್, ಮಾದರಿ ಪ್ರದರ್ಶನ ಮಳಿಗೆಗಳು ಹಾಗೂ ಪ್ರಧಾನಿ, ರಾಜ್ಯಪಾಲರು, ಮುಖ್ಯಮಂತ್ರಿ ಮತ್ತು ಇತರ ಗಣ್ಯರಿಗೆ ಹೂವಿನ ಅಲಂಕಾರ ಸೇರಿದಂತೆ ಎರಡು ಪ್ರಮುಖ ಕಾಮಗಾರಿಗಳಿಗೆ 1.8 ಕೋಟಿ ರೂ.ಗೂ ಹೆಚ್ಚು ವೆಚ್ಚ ಮಾಡಲಾಗಿದೆ. ದಾಖಲೆಗಳ ಪ್ರಕಾರ, ಈ ವೆಚ್ಚಗಳಿಗೆ ಕರ್ನಾಟಕ ಸಾರ್ವಜನಿಕ ಸಂಗ್ರಹಣೆಯಲ್ಲಿ ಪಾರದರ್ಶಕತೆ (ಕೆಟಿಪಿಪಿ) ಕಾಯ್ದೆಯ ಸೆಕ್ಷನ್ 4(ಜಿ) ಅಡಿಯಲ್ಲಿ ವಿನಾಯಿತಿ ನೀಡಲಾಗಿದೆ. ಶಿವಮೊಗ್ಗ ಕಾರ್ಯಕ್ರಮದ ಬಳಿಕ ಪ್ರಧಾನಿ ಮೋದಿ ವಿಶೇಷ ವಿಮಾನದ ಮೂಲಕ ಬೆಳಗಾವಿಗೆ ತೆರಳಿ ಮಧ್ಯಾಹ್ನ 2.45ರ ವೇಳೆಗೆ ರೋಡ್ಶೋ ಆರಂಭಿಸಿದರು. ವಿಮಾನ ಪ್ರಯಾಣದ ವೆಚ್ಚದ ವಿವರಗಳು ಲಭ್ಯವಿಲ್ಲದಿದ್ದರೂ, ಆರ್ಟಿಐ ಅಡಿಯಲ್ಲಿ ಲಭ್ಯವಾದ ಮತ್ತೊಂದು ದಾಖಲೆಯ ಪ್ರಕಾರ ಬೆಳಗಾವಿಯ ಕಾರ್ಯಕ್ರಮಕ್ಕೆ ಲೋಕೋಪಯೋಗಿ ಇಲಾಖೆಯು 14.35 ಕೋಟಿ ರೂ. ವೆಚ್ಚ ಮಾಡಲು ಸರಕಾರದಿಂದ ಅನುಮೋದನೆ ಪಡೆದಿದೆ. ಇದರಲ್ಲಿ ಜನರನ್ನು ಸಾಗಿಸಲು ಬಸ್ ಗಳಿಗೆ 2.5 ಕೋಟಿ ರೂ. ವೆಚ್ಚ ಮಾಡಲಾಗಿದೆ. ಶಿವಮೊಗ್ಗ ಕಾರ್ಯಕ್ರಮದ ವೆಚ್ಚದ ಕುರಿತು ಹಿರೇಚೌಟಿ ಅವರು ಮಾರ್ಚ್ 2023ರಲ್ಲಿ ಆರ್ಟಿಐ ಅರ್ಜಿ ಸಲ್ಲಿಸಿದ್ದರು. ಆದರೆ ಕರ್ನಾಟಕ ಮಾಹಿತಿ ಆಯೋಗದಿಂದ ಆದೇಶ ದೊರೆತ ನಂತರವೇ ಜನವರಿ 2026ರಲ್ಲಿ ಈ ದಾಖಲೆಗಳನ್ನು ಪಡೆಯಲು ಸಾಧ್ಯವಾಯಿತು. ಈ ಕುರಿತು ಪ್ರತಿಕ್ರಿಯಿಸಿದ ಹಿರೇಚೌಟಿ ಅವರು, ಸಾರ್ವಜನಿಕ ಹಣದ ಬಳಕೆಯಲ್ಲಿ ಪಾರದರ್ಶಕತೆ ಮತ್ತು ಹೊಣೆಗಾರಿಕೆಯ ಕೊರತೆಯ ಬಗ್ಗೆ ಆತಂಕ ವ್ಯಕ್ತಪಡಿಸಿದರು. “ಸಾರ್ವಜನಿಕ ಹಣವು ರಾಜಕೀಯ ಪ್ರಚಾರದ ಸಂಪನ್ಮೂಲವಾಗಬಾರದು. ಚುನಾವಣೆಗಳಿಗೆ ಮುಂಚಿನ ತಿಂಗಳುಗಳಲ್ಲಿ ಅಭಿವೃದ್ಧಿ ಯೋಜನೆಗಳು ರಾಜಕೀಯ ಪ್ರದರ್ಶನದ ವೇದಿಕೆಯಾಗಬಾರದು. ಮಾದರಿ ನೀತಿ ಸಂಹಿತೆ ಜಾರಿಗೆ ಬರುವ ಮೊದಲು ಯಾವುದೇ ಹಣಕಾಸಿನ ನಿರ್ಬಂಧಗಳಿಲ್ಲದ ಕಾರಣ, ಚುನಾವಣಾ ಪೂರ್ವ ವೆಚ್ಚ ನಿಯಂತ್ರಣಕ್ಕೆ ಭಾರತದಲ್ಲಿ ಶಾಸನಬದ್ಧ ವ್ಯವಸ್ಥೆ ಅಗತ್ಯವಿದೆ. ಸುಧಾರಣೆಗಳಿಲ್ಲದೆ ತೆರಿಗೆದಾರರು ರಾಜಕೀಯವಾಗಿ ಸಮಯದ ದುಂದುವೆಚ್ಚದ ಹೊರೆ ಹೊರುತ್ತಲೇ ಇರುತ್ತಾರೆ” ಎಂದು ಅವರು ಹೇಳಿದರು. ಈ ಕುರಿತು ಪ್ರಶ್ನಿಸಿದಾಗ ಆಗಿನ ಲೋಕೋಪಯೋಗಿ ಸಚಿವ ಸಿ.ಸಿ. ಪಾಟೀಲ್, “ಈ ವಿಷಯದಲ್ಲಿ ಮಾಹಿತಿ ಪಡೆದುಕೊಂಡು ಪ್ರತಿಕ್ರಿಯಿಸುತ್ತೇನೆ” ಎಂದು ಅವರು ಹೇಳಿದ್ದಾರೆ. ಇದೇ ವಿಷಯಕ್ಕೆ ಪ್ರತಿಕ್ರಿಯಿಸಿದ ಪ್ರಸ್ತುತ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರು, ಇಂತಹ ವೆಚ್ಚಗಳನ್ನು ಮಿತಿಗೊಳಿಸುವ ಸಾಧ್ಯತೆಯನ್ನು ಪರಿಶೀಲಿಸುವುದಾಗಿ ಹೇಳಿದರು. “ನಾನು ಅಧಿಕಾರ ವಹಿಸಿಕೊಂಡ ನಂತರ ಕೆಟಿಪಿಪಿ ಕಾಯ್ದೆಯ ವಿನಾಯಿತಿಗಳನ್ನು ಕೊನೆಗೊಳಿಸಿದ್ದೇನೆ. ಆದರೆ ಪ್ರಧಾನ ಮಂತ್ರಿಗಳ ಕಾರ್ಯಕ್ರಮಗಳ ಸಂದರ್ಭದಲ್ಲಿ ವೆಚ್ಚವನ್ನು ಮಿತಿಗೊಳಿಸುವುದು ಸುಲಭವಲ್ಲ. ಖರ್ಚಿನ ಕಡತಗಳನ್ನು ಪರಿಶೀಲಿಸಿ ಈ ವಿಷಯದ ಬಗ್ಗೆ ನಿರ್ಧಾರ ಕೈಗೊಳ್ಳುತ್ತೇನೆ” ಎಂದು ಅವರು ಹೇಳಿದ್ದಾರೆ
ಮಂಗಳೂರು: ಕೊಲೆ ಪ್ರಕರಣದ ಆರೋಪಿಗೆ ಜೀವಾವಧಿ ಶಿಕ್ಷೆ, ದಂಡ
ಮಂಗಳೂರು, ಮಾ.5: ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಕೊಲೆ ಪ್ರಕರಣದ ಆರೋಪಿ ಮುರುಗನ್ ಎಂಬಾತನಿಗೆ 2ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶ ಜಗದೀಶ್ ವಿ.ಎನ್. ಜೀವಾವಧಿ ಶಿಕ್ಷೆ ಹಾಗೂ 10,000 ರೂ. ದಂಡ ವಿಧಿಸಿದ್ದಾರೆ. 2022ರ ಮಾ.19ರಂದು ರಾತ್ರಿ 9:45ಕ್ಕೆ ಬಪ್ಪನಾಡು ಗ್ರಾಮದ ಮುಲ್ಕಿ ಪೇಟೆಯಲ್ಲಿ ಉಲ್ಲಂಜೆ ಎಂಬಲ್ಲಿನ ಹರೀಶ್ ಸಾಲ್ಯಾನ್ (47) ಎಂಬಾತನನ್ನು ಹಣಕಾಸಿನ ದ್ವೇಷದಿಂದ ಮುರುಗನ್ ಕೆಂಪುಕಲ್ಲಿನಿಂದ ಜಜ್ಜಿ ಕೊಲೆ ಮಾಡಿದ್ದ. ಈ ಬಗ್ಗೆ ಮುಲ್ಕಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ತನಿಖೆ ನಡೆಸಿದ ಸಿಐ ಕುಸುಮಧರ್ ನ್ಯಾಯಾಲಯಕ್ಕೆ ದೋಷರೋಪಣ ಪಟ್ಟಿ ಸಲ್ಲಿಸಿದ್ದರು. ತನಿಖಾ ಸಹಾಯಕರಾಗಿ ಎಸ್ಸೈ ಸಂಜೀವ್ ಸಹಕರಿಸಿದ್ದರು. ಸರಕಾರದ ಪರವಾಗಿ ಜ್ಯೋತಿ ಪ್ರಮೋದ್ ನಾಯಕ್ ವಾದಿಸಿದ್ದರು.
Bidar | ನಿಜಗುಣಾನಂದ್ ಸ್ವಾಮಿ ಅವರಿಗೆ ಸರ್ಕಾರ ರಕ್ಷಣೆ ನೀಡಲಿ : ಬಾಬುರಾವ್ ಹೊನ್ನಾ
ಬೀದರ್ : ನಿಜಗುಣಾನಂದ ಸ್ವಾಮಿ ಅವರು ಬಸವಧರ್ಮ ಮತ್ತು ಲಿಂಗಾಯತ ಧರ್ಮದ ಕುರಿತು ವೈಜ್ಞಾನಿಕ ಚಿಂತನೆ ಮಾಡುತ್ತಿರುವ ಹಿನ್ನೆಲೆಯಲ್ಲಿ ಅವರ ವಿರುದ್ಧ ವಿರೋಧ ವ್ಯಕ್ತವಾಗುತ್ತಿದೆ. ಅವರ ಮೇಲೆ ದಾಳಿ ನಡೆಯುವ ಸಾಧ್ಯತೆ ಇರುವುದರಿಂದ ಸರ್ಕಾರ ರಕ್ಷಣೆ ಒದಗಿಸಬೇಕು ಎಂದು ಬಾಬುರಾವ್ ಹೊನ್ನಾ ಒತ್ತಾಯಿಸಿದರು. ನಗರದ ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಲಿಂಗಾಯತವನ್ನು ಸ್ವತಂತ್ರ ಧರ್ಮವೆಂದು ಪ್ರತಿಪಾದಿಸಿದ್ದ ಎಂ.ಎಂ. ಕಲಬುರ್ಗಿ ಅವರ ಹತ್ಯೆ ನಡೆದಿತ್ತು. ಅದೇ ರೀತಿ ಗೌರಿ ಲಂಕೇಶ್, ನರೇಂದ್ರ ದಾಭೋಲ್ಕರ್ ಮತ್ತು ಗೋವಿಂದ ಪಾನ್ಸಾರೆ ಅವರ ಹತ್ಯೆಗಳನ್ನೂ ಉಲ್ಲೇಖಿಸಿದರು. ಪ್ರಗತಿಪರ ಚಿಂತಕರ ವಿರುದ್ಧ ಬೆದರಿಕೆಗಳು ನಡೆದಿರುವ ಉದಾಹರಣೆಗಳು ಇವೆ ಎಂದು ಹೇಳಿದರು. ಗೌರಿ ಲಂಕೇಶ್ ಅವರ ನಂತರ ಕೆ.ಎಸ್. ಭಗವಾನ್ ಅವರ ಮೇಲೂ ಹತ್ಯೆ ಯತ್ನದ ಮಾಹಿತಿ ಇತ್ತು. ಈ ಹಿನ್ನೆಲೆಯಲ್ಲಿ ನಿಜಗುಣಾನಂದ ಸ್ವಾಮಿಯವರ ಮೇಲೂ ದಾಳಿ ಸಾಧ್ಯತೆ ಇರುವುದರಿಂದ ರಾಜ್ಯ ಸರ್ಕಾರ ತಕ್ಷಣ ರಕ್ಷಣೆ ನೀಡಬೇಕು ಎಂದು ಮನವಿ ಮಾಡಿದರು. ದೇಶವು ಪ್ರಜಾಪ್ರಭುತ್ವ ಸಂವಿಧಾನ ಹೊಂದಿದ್ದು, ಧರ್ಮ ಮತ್ತು ರಾಜಕೀಯವನ್ನು ಬೆರೆಸಿ ಪ್ರಚೋದನಾತ್ಮಕ ಭಾಷಣ ಮಾಡುತ್ತಿರುವವರ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಓಂಪ್ರಕಾಶ್ ರೊಟ್ಟೆ ಮಾತನಾಡಿ, ಕನ್ನೇರಿ ಸ್ವಾಮಿಯವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಸಂಘ ಪರಿವಾರದ ಮುಖ್ಯಸ್ಥ ಮೋಹನ್ ಭಾಗವತ್ ಅವರ ಹೆಸರು ಉಲ್ಲೇಖಿಸಿ ರಾಜಕೀಯ ಉದ್ದೇಶಗಳ ಬಗ್ಗೆ ಟೀಕಿಸಿದರು. ಬಸವಾದಿ ಶರಣರ ಹಿಂದೂ ಸಮಾವೇಶದ ನೇತೃತ್ವ ವಹಿಸಿಕೊಂಡಿರುವ ಕನ್ನೇರಿ ಸ್ವಾಮಿ ಅಶಾಂತಿಯ ಬೀಜ ಬಿತ್ತುತ್ತಿದ್ದಾರೆ ಎಂದು ಆರೋಪಿಸಿದರು. ಹಾಗೆಯೇ ಬಸನಗೌಡ ಪಾಟೀಲ್ ಯತ್ನಾಳ್ ಹಾಗೂ ಕೆ.ಎಸ್. ಈಶ್ವರಪ್ಪ ಅವರ ಹೆಸರುಗಳನ್ನೂ ಉಲ್ಲೇಖಿಸಿದರು. ಒಟ್ಟಿನಲ್ಲಿ, ನಿಜಗುಣಾನಂದ ಸ್ವಾಮಿಗೆ ಸರ್ಕಾರದಿಂದ ಭದ್ರತೆ ಒದಗಿಸಿ, ಪ್ರಚೋದನಾತ್ಮಕ ಹೇಳಿಕೆಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಸಂತೋಷ್ ಜೋಳದಾಪಗೆ, ಜಗದೀಶ್ವರ್ ಬಿರಾದಾರ್, ಮಹೇಶ್ ಗೋರನಾಳಕರ್, ಸಿದ್ದು ಫುಲಾರೆ, ರಾಜಕುಮಾರ್ ಪಾಟೀಲ್, ಪ್ರಕಾಶ್ ಇದ್ದರು.
ರಾಜ್ಯ ಮಟ್ಟದ ಪವರ್ಲಿಫ್ಟಿಂಗ್:ವಿನೋದ್ ಕುಮಾರ್ಗೆ ಚಿನ್ನದ ಪದಕ
ಮಂಗಳೂರು, ಮಾ.5: ನಗರದ ಕೂಳೂರಿನ ಕಿಟ್ಟ ಮೊಗೇರ ವೇದಿಕೆಯಲ್ಲಿ ಇತ್ತೀಚೆಗೆ ನಡೆದ ಕರ್ನಾಟಕ ರಾಜ್ಯ ಮಟ್ಟದ ಮಾಸ್ಟರ್ಸ್ ಪವರ್ ಲಿಫ್ಟಿಂಗ್ ಚಾಂಪಿಯನ್ಶಿಪ್ನಲ್ಲಿ ವಿನೋದ ಕುಮಾರ್ ಎಂ. ಉತ್ತಮ ಸಾಧನೆ ಮಾಡಿದ್ದಾರೆ. ’ಕ್ಲಾಸಿಕ್’ ಮತ್ತು ’ಎಕ್ವಿಪ್ಡ್’ ಎಂಬ ಎರಡೂ ವಿಭಾಗಗಳಲ್ಲಿ ಪ್ರಥಮ ಸ್ಥಾನ ಗಳಿಸಿ ಎರಡು ಚಿನ್ನದ ಪದಕಗಳನ್ನು ಗೆದ್ದಿದ್ದಾರೆ. ಎಲ್ಐಸಿ ನಿವೃತ್ತ ಅಭಿವೃದ್ಧಿ ಅಧಿಕಾರಿಯಾಗಿರುವ ವಿನೋದ ಕುಮಾರ್ ಮಂಗಳೂರಿನ ಬಾಲಾಂಜನೇಯ ಜಿಮ್ನಾಷಿಯಂನಲ್ಲಿ ಏಕಲವ್ಯ ಪ್ರಶಸ್ತಿ ಪುರಸ್ಕೃತ ಸತೀಶ್ ಕುಮಾರ್ ಕುದ್ರೋಳಿ ಅವರಿಂದ ತರಬೇತಿ ಪಡೆಯುತ್ತಿದ್ದಾರೆ.
Vijayanagara | ಯುವಕನ ಭೀಕರ ಕೊಲೆ : ದೇಹವನ್ನು ತುಂಡರಿಸಿ ಚೀಲದಲ್ಲಿ ಎಸೆದ ದುಷ್ಕರ್ಮಿಗಳು
ಹೂವಿನಹಡಗಲಿ : ವಿಜಯನಗರ ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಬೀರಬ್ಬಿ ಗ್ರಾಮದಲ್ಲಿ ಯುವಕನೊಬ್ಬನನ್ನು ಭೀಕರವಾಗಿ ಕೊಲೆ ಮಾಡಿ, ದೇಹದ ಭಾಗಗಳನ್ನು ತುಂಡರಿಸಿ ಪ್ಲಾಸ್ಟಿಕ್ ಚೀಲದಲ್ಲಿ ತುಂಬಿ ಎಸೆದಿರುವ ಘಟನೆ ಬೆಳಕಿಗೆ ಬಂದಿದೆ. ಮೃತರನ್ನು ಬೀರಬ್ಬಿ ಗ್ರಾಮದ ಬೀರೇಶ (25) ಎಂದು ಗುರುತಿಸಲಾಗಿದೆ. ಕಳೆದ ಸುಮಾರು 15 ದಿನಗಳಿಂದ ಅವರು ಕಾಣೆಯಾಗಿದ್ದರು. ಕುಟುಂಬಸ್ಥರು ಹಲವು ಕಡೆ ಹುಡುಕಾಟ ನಡೆಸಿದರೂ ಯಾವುದೇ ಸುಳಿವು ಸಿಕ್ಕಿರಲಿಲ್ಲ. ನಿನ್ನೆ ಸಂಜೆ ಬೀರೇಶನ ಮನೆಯ ಹಿಂಭಾಗದಲ್ಲಿ ದುರ್ವಾಸನೆ ಬರುತ್ತಿರುವುದನ್ನು ಗಮನಿಸಿದ ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಪರಿಶೀಲನೆ ನಡೆಸಿದಾಗ ಪ್ಲಾಸ್ಟಿಕ್ ಚೀಲದಲ್ಲಿ ತುಂಬಲಾಗಿದ್ದ ಮಾನವ ಮೃತದೇಹ ಪತ್ತೆಯಾಯಿತು. ನಂತರ ಅದು ಕಾಣೆಯಾಗಿದ್ದ ಬೀರೇಶನದ್ದೇ ಎಂದು ದೃಢಪಟ್ಟಿದೆ ಎಂದು ತಿಳಿದು ಬಂದಿದೆ. ದುಷ್ಕರ್ಮಿಗಳು ಬೀರೇಶನನ್ನು ಕೊಲೆ ಮಾಡಿದ ಬಳಿಕ ದೇಹವನ್ನು ತುಂಡರಿಸಿ ಮನೆಯ ಹಿಂಭಾಗದಲ್ಲೇ ಎಸೆದಿರುವುದು ತಿಳಿದುಬಂದಿದೆ. ಮೃತದೇಹ ಹಲವು ದಿನಗಳಾಗಿರುವುದರಿಂದ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಘಟನೆಯ ಮಾಹಿತಿ ತಿಳಿದು ವಿಜಯನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಾಹ್ನವಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ತಿಳಿದು ಬಂದಿದೆ. ಈ ಕುರಿತು ಹಗರಿಬೊಮ್ಮನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳನ್ನು ಪತ್ತೆಹಚ್ಚಲು ವಿಶೇಷ ತಂಡ ರಚಿಸಿ ತನಿಖೆ ಆರಂಭಿಸಲಾಗಿದೆ. ಈ ಭೀಕರ ಘಟನೆ ಹಿನ್ನೆಲೆಯಲ್ಲಿ ಬೀರಬ್ಬಿ ಗ್ರಾಮ ಸೇರಿದಂತೆ ಸುತ್ತಮುತ್ತಲಿನ ಪ್ರದೇಶದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.
Saaniya Chandok: ಕ್ರಿಕೆಟ್ ದೇವರು ಸಚಿನ್ ತೆಂಡ್ಯೂಲ್ಕರ್ ಕುಟುಂಬಕ್ಕೆ ಸೊಸೆಯಾಗಿ ಬಂದ ಸಾನಿಯಾ ಚಾಂದೋಕ್ ಯಾರು?
Saaniya Chandok: ಅರ್ಜುನ್ ತೆಂಡ್ಯೂಲ್ಕರ್ ಅವರು ಗುರುವಾರ (ಮಾರ್ಚ್ 5) ಮುಂಬೈನಲ್ಲಿ ಸಾನಿಯಾ ಚಾಂದೋಕ್ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ಅದ್ಧೂರಿ ವಿವಾಹದ ನಂತರ, ಸಾನಿಯಾ ಅವರು ಗೂಗಲ್ನಲ್ಲಿ ಅತೀ ಹೆಚ್ಚು ಹುಡುಕಲ್ಪಟ್ಟ ಉದ್ಯಮಿಗಳಲ್ಲಿ ಒಬ್ಬರಾಗಿದ್ದಾರೆ. ಭಾರತೀಯ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರ ಸೊಸೆಯಾಗಿರುವುದರ ಹೊರತಾಗಿಯೂ, ಅವರು ವೈಯಕ್ತಿಕ ವಿಚಾರಗಳಿಂದ ಸುದ್ದಿಯಲ್ಲಿದ್ದಾರೆ. ಹಾಗಾದ್ರೆ, ಇವರ
ಸಕಲೇಶಪುರ : ಅಪ್ರಾಪ್ತ ಬಾಲಕನನ್ನು ಮನೆಗೆ ಕರೆದುಕೊಂಡು ಹೋಗಿ ಸುಮಾರು ಎರಡು ತಿಂಗಳ ಕಾಲ ಜೀತ ಮಾಡಿಸಿಕೊಂಡ ಆರೋಪದ ಮೇಲೆ ಪಟ್ಟಣ ಪೊಲೀಸ್ ಠಾಣೆಯಲ್ಲಿ ಇಬ್ಬರ ವಿರುದ್ಧ ಪ್ರಕರಣ ದಾಖಲಾಗಿದೆ. ಹಾಸನ ತಾಲ್ಲೂಕಿನ ಸಂತ್ರಸ್ತ ಬಾಲಕ ನೀಡಿದ ದೂರಿನ ಮೇರೆಗೆ ಜಾನೆಕೆರೆ ಗ್ರಾಮದ ಶ್ರೀರಾಮಸೇನೆಯ ರಾಜ್ಯ ಸಹ ಕಾರ್ಯದರ್ಶಿ ಹೇಮಂತ್ ಕುಮಾರ್ (A1) ಮತ್ತು ಅವರ ತಾಯಿ ಮಾದಮ್ಮ (A2) ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಈ ಸಂಬಂಧ ಪಟ್ಟಣ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದ್ದು, ಭಾರತೀಯ ನ್ಯಾಯ ಸಂಹಿತೆಯ (BNS) 127, 137(2), 352 ಸೆಕ್ಷನ್ಗಳು ಹಾಗೂ ಮಕ್ಕಳ ಕಾರ್ಮಿಕ ಕಾಯ್ದೆ 14ನೇ ವಿಧಿ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಪ್ರಕರಣದ ವಿವರ: ಬಾಲಕ ಶಾಲೆಯಲ್ಲಿ ಐದನೇ ತರಗತಿಯವರೆಗೆ ವಿದ್ಯಾಭ್ಯಾಸ ಮಾಡಿದ್ದಾನೆ. ಜನವರಿ 6ರಂದು ಶಾಲೆಯಿಂದ ಹೊರಬಂದ ಬಳಿಕ ಹಾಸನ ಹೊಸ ಬಸ್ ನಿಲ್ದಾಣದಲ್ಲಿ ತನ್ನ ಊರಿಗೆ ಹೋಗಲು ಬಸ್ ಕಾಯುತ್ತಿದ್ದಾಗ, ಅಲ್ಲಿಗೆ ಬಂದ ಹೇಮಂತ್ ಎಂಬ ವ್ಯಕ್ತಿ ಮಾತನಾಡಿಸಿ ತನ್ನ ಕಾಫಿ ತೋಟದಲ್ಲಿ ಕೆಲಸ ನೀಡುವುದಾಗಿ ಹೇಳಿ ಬಾಲಕನನ್ನು ಕರೆದುಕೊಂಡು ಹೋಗಿದ್ದಾನೆ ಎನ್ನಲಾಗಿದೆ. ಜಾನೆಕೆರೆ ಗ್ರಾಮದಲ್ಲಿರುವ ತಮ್ಮ ಮನೆಯಲ್ಲಿ ಬಾಲಕನನ್ನು ಇರಿಸಿಕೊಂಡು ದನಗಳಿಗೆ ಆಹಾರ ಹಾಕುವುದು, ಸಗಣಿ ಸ್ವಚ್ಛಗೊಳಿಸುವುದು ಸೇರಿದಂತೆ ವಿವಿಧ ಕೆಲಸಗಳನ್ನು ಮಾಡಿಸುತ್ತಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಅಲ್ಲದೆ, ತೋಟದಲ್ಲಿ ಪೈಪ್ ಜೋಡಿಸುವ ಕೆಲಸ ಸೇರಿದಂತೆ ವಿವಿಧ ಕೆಲಸಗಳನ್ನು ಮಾಡಿಸುತ್ತಿದ್ದು, ಕೆಲಸ ಮಾಡದಿದ್ದರೆ ಹೇಮಂತ್ ಮತ್ತು ಅವರ ತಾಯಿ ಮಾದಮ್ಮ ಬೈಯುತ್ತಿದ್ದರು ಎಂದು ಬಾಲಕ ಹೇಳಿಕೆಯಲ್ಲಿ ಆರೋಪಿಸಿದ್ದಾನೆ. ಸುಮಾರು ಎರಡು ತಿಂಗಳ ಕಾಲ ಬಾಲಕನನ್ನು ಹೊರಗೆ ಹೋಗದಂತೆ ಇಟ್ಟುಕೊಂಡು ಕೆಲಸ ಮಾಡಿಸಿಕೊಂಡಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ. ಮಾರ್ಚ್ 4ರಂದು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಹಾಗೂ ಒಡನಾಡಿ ಸಂಸ್ಥೆ ಅಧಿಕಾರಿಗಳು ಜಾನೆಕೆರೆ ಗ್ರಾಮದಲ್ಲಿರುವ ಹೇಮಂತ್ ಅವರ ಮನೆಯಿಂದ ಬಾಲಕನನ್ನು ರಕ್ಷಿಸಿ ಮಕ್ಕಳ ಕಲ್ಯಾಣ ಸಮಿತಿಗೆ ಒಪ್ಪಿಸಿದ್ದಾರೆ. ಈ ಸಂಬಂಧ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಹೇಮಂತ್ ನನ್ನು ಪೋಲಿಸರು ಬಂಧಿಸಿ ನ್ಯಾಯಾಲಯಕ್ಕೆ ಒಪ್ಪಿಸಿದ್ದು, ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.
ಅಮೆರಿಕಾ- ಇರಾನ್ ಯುದ್ಧ: ಅಯತೊಲ್ಲಾ ಅಲಿ ಖಮೇನಿ ನಿಧನಕ್ಕೆ ಭಾರತ ಸಂತಾಪ
ಅಮೆರಿಕಾ- ಇಸ್ರೇಲ್ ಹಾಗೂ ಇರಾನ್ ನಡುವಿನ ಯುದ್ಧ ತೀವ್ರಗೊಂಡಿದೆ. ಅಮೆರಿಕಾ ಮತ್ತು ಇಸ್ರೇಲ್ ಸೇನೆ ಜಂಟಿಯಾಗಿ ನಡೆಸಿದ ಕಾರ್ಯಾಚರಣೆಯಲ್ಲಿ ಇರಾನ್ ಸುಪ್ರೀಂ ಲೀಡರ್ ಅಯತೊಲ್ಲಾ ಅಲಿ ಖಮೇನಿ ಹತ್ಯೆಯಾಗಿತ್ತು. ಅಯತೊಲ್ಲಾ ಅಲಿ ಖಮೇನಿ ಹತ್ಯೆಗೆ ಭಾರತ ಸಂತಾಪ ಸೂಚಿಸಿರಲಿಲ್ಲ. ಇದನ್ನು ವಿರೋಧ ಪಕ್ಷಗಳು ಪ್ರಶ್ನಿಸಿದ್ದವು. ಆದರೆ ಇದೀಗ ಭಾರತದ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ ಅವರು ಖಮೇನಿ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ಈ ಬೆಳವಣಿಗೆ ಕುರಿತಾದ ಮತ್ತಷ್ಟು ಮಾಹಿತಿ ಇಲ್ಲಿದೆ.
`ಗೆಸ್ಟ್ ಆಫ್ ಇಂಡಿಯಾ' ಎಂದು ಇರಾನ್ ಕರೆದಿದ್ದೇಕೆ? ಇಸ್ರೇಲ್ ದಾಳಿ ಕುರಿತಂತೆ ಭಾರತ ಹೇಳಿಕೆ ನೀಡಲು ಈ ತಂತ್ರವೇ?
Middle East Conflict- 'ಐರಿಸ್ ಡೆನಾ' ಯುದ್ಧನೌಕೆಯನ್ನು ಅಮೆರಿಕದ ಜಲಾಂತಾರ್ಗಾಮಿಯು ಮುಳುಗಿಸಿರುವುದಕ್ಕೆ ಇರಾನ್ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದು ಸಮುದ್ರ ದೌರ್ಜನ್ಯ ಎಂದು ಕರೆದಿದೆ. ಮಾತ್ರವಲ್ಲದೆ ಐರಿಸ್ ಡೆನಾವನ್ನು ಭಾರತದ ಅತಿಥಿ ಎಂದು ಹೇಳುವ ಮೂಲಕ ಭಾರತವು ಇರಾನ್ ಪರವಾಗಿ ಪ್ರತಿಕ್ರಿಯೆ ನೀಡುತ್ತದೋ ಎಂಬ ತಂತ್ರಕ್ಕೆ ಮೊರೆ ಹೋಗಿದೆ. ಈ ನೌಕೆಯು ಈ ಹಿಂದೆ ಭಾರತದಲ್ಲಿ ನೌಕಾ ತಾಲೀಮಿನಲ್ಲಿ ಭಾಗವಹಿಸಿತ್ತು. ಜೊತೆಗೆ ದುರ್ಘಟನೆ ನಡೆದಿರುವುದು ಭಾರತ ಮತ್ತು ಶ್ರೀಲಂಕಾಗೆ ಸಮೀಪದ ಅಂತಾರಾಶ್ಟ್ರೀಯ ಜಲದಲ್ಲಾಗಿರುವ ಕಾರಣ ಭಾರತ ಪ್ರತಿಕ್ರಿಯಿಸಲಿ ಎಂಬುದು ಇರಾನ್ ನಿಲುವಿದ್ದಂತೆ ತೋರುತ್ತಿದೆ.
ಮಂಗಳೂರು: ಬಿಲಿಯರ್ಡ್ಸ್ನಲ್ಲಿ ಮನುದೇವ್ ಚಾಂಪಿಯನ್, ಸ್ನೂಕರ್ನಲ್ಲಿ ಸೀನ್ ಡೇವಿಸ್ಗೆ ಪ್ರಶಸ್ತಿ
ಮಂಗಳೂರು: ನಗರದ ಕಾಸ್ಮೋಪಾ ಲಿಟನ್ ಕ್ಲಬ್ (ರಿ) ವತಿಯಿಂದ ಫೆಬ್ರವರಿ 20ರಿಂದ ಮಾರ್ಚ್ 1ರವರೆಗೆ ಆಯೋಜಿಸ ಲಾದ ‘ಸ್ನೂಕರ್ & ಬಿಲಿಯರ್ಡ್ಸ್ ಇನ್ವಿಟೇಶನಲ್ ಟೂರ್ನಮೆಂಟ್’ನಲ್ಲಿ ಬಿಲಿಯರ್ಡ್ಸ್ ವಿಭಾಗದಲ್ಲಿ ಐ.ಎಚ್. ಮನುದೇವ್ 400-242 ಅಂತರದಿಂದ ಕ್ಷಿತಿಜ್ ಗಾರ್ಗ್ ಅವರನ್ನು ಮಣಿಸಿ ಚಾಂಪಿಯನ್ ಪಟ್ಟ ಅಲಂಕರಿಸಿದರು. ಫೈನಲ್ನಲ್ಲಿ ಮನುದೇವ್ 101 ಅಂಕ ಗಳಿಸಿದರು.ಕ್ಷಿತಿಜ್ ಗಾರ್ಗ್ ರನ್ನರ್-ಅಪ್ ಪಟ್ಟಿಗೆ ತೃಪ್ತಿಪಟ್ಟರು. ಅದೇ ಟೂರ್ನಿಯ ‘ಬೆಸ್ಟ್ ಆಫ್ 7’ ಸ್ನೂಕರ್ ಫೈನಲ್ನಲ್ಲಿ ಸೀನ್ ಡೇವಿಸ್ 4-3 ಅಂತರದಿಂದ ಎಂ. ಯೋಗೇಶ್ ಕುಮಾರ್ ಅವರನ್ನು ಸೋಲಿಸಿ ಪ್ರಶಸ್ತಿ ತಮ್ಮದಾಗಿಸಿ ಕೊಂಡರು. ಆರಂಭದಿಂದ ಅಂತ್ಯವರೆಗೆ ಕುತೂಹಲ ಮೂಡಿಸಿದ ಈ ಹಣಾಹಣಿಯಲ್ಲಿ ಸೀನ್ 62 ಅಂಕಗಳ ಅತ್ಯುನ್ನತ ಬ್ರೇಕ್ ಸಾಧಿಸಿದ್ದು ವಿಶೇಷ. ಅವರಿಂದ 53 ಅಂಕಗಳ ಮತ್ತೊಂದು ಗಮನಾರ್ಹ ಬ್ರೇಕ್ ಕೂಡ ದಾಖಲಾಗಿದೆ. ಇತ್ತ ಯೋಗೇಶ್ ಕುಮಾರ್ 61 ಅಂಕಗಳ ಉತ್ತಮ ಬ್ರೇಕ್ ಹೊಡೆದು ಪೈಪೋಟಿ ನೀಡಿದರು. ಫ್ರೇಮ್ಗಳ ವಿವರ: 28-88(56), 70(62)-24, 16-70, 55-30, 75(62)-23, 39-65, 66-33. ಮಂಗಳೂರಿನ ಕಾಸ್ಮೋಪಾಲಿಟನ್ ಕ್ಲಬ್ನಲ್ಲಿ ನಡೆದ ಈ ರಾಜ್ಯ ಮಟ್ಟದ ಸ್ಪರ್ಧೆ ಕ್ಯೂ ಸ್ಪೋರ್ಟ್ಸ್ ಯಶಸ್ವಿಯಾಗಿ ಆಯೋ ಜಿಸಿತ್ತು.ಬಿಲಿಯರ್ಡ್ಸ್ ವಿಭಾಗದಲ್ಲಿ ಮನುದೇವ್ ಅವರ ಸಮತೋಲನದ ಹಾಗೂ ತಂತ್ರಜ್ಞಾನದ ಆಟ ಗಮನಸೆಳೆದರೆ, ಸ್ನೂಕರ್ ವಿಭಾಗದಲ್ಲಿ ಸೀನ್ ಡೇವಿಸ್ ಮತ್ತು ಯೋಗೇಶ್ ಕುಮಾರ್ ನಡುವಿನ ಸಮ ಬಲದ ಪೈಪೋಟಿ ಪ್ರೇಕ್ಷಕರನ್ನು ಕುತೂಹಲದಲ್ಲಿಟ್ಟಿತು. ಸ್ನೂಕರ್ ಫೈನಲ್ ಆರಂಭದಲ್ಲೇ ಯೋಗೇಶ್ ಕುಮಾರ್ 56 ಅಂಕಗಳ ಬ್ರೇಕ್ ಹೊಡೆದು ಬಲಿಷ್ಠ ಮುನ್ನಡೆ ಸಾಧಿಸಿದರೂ, ಸೀನ್ ಡೇವಿಸ್ ಮಧ್ಯಂತರದಲ್ಲಿ ಲೆಕ್ಕಾಚಾರದ ಆಟದಿಂದ ಪಂದ್ಯವನ್ನು ತಿರುಗಿಸಿಕೊಂಡರು. ನಿರ್ಣಾಯಕ ಕ್ಷಣಗಳಲ್ಲಿ ಆತ್ಮವಿಶ್ವಾಸ ಕಾಪಾಡಿಕೊಂಡ ಸೀನ್ ಕೊನೆಯ ಫ್ರೇಮ್ನಲ್ಲಿ 66-33 ಅಂತರದ ಜಯ ಸಾಧಿಸಿ ಪ್ರಶಸ್ತಿಯನ್ನು ಖಚಿತಪಡಿಸಿಕೊಂಡರು. ಬಹುಮಾನ ವಿತರಣಾ ಸಮಾರಂಭದಲ್ಲಿ ಅದಾನಿ ಗ್ರೂಪ್ ದಕ್ಷಿಣ ಭಾರತ ಅಧ್ಯಕ್ಷ ಕಿಶೋರ್ ಕುಮಾರ್ ಆಳ್ವ, ಗಣ್ಯರಾದ ಡಾ. ಎ ಸದಾನಂದ ಶೆಟ್ಟಿ, ಮಾಜಿ ಲೋಕಾಯುಕ್ತ ನ್ಯಾ. ಸಂತೋಷ್ ಹೆಗ್ಡೆ, ಕ್ಲಬ್ನ ಉಪಾಧ್ಯಕ್ಷರಾದ ಸುರೇಶ್ ಚಂದ್ರ ಶೆಟ್ಟಿ, ರಾಜಗೋಪಾಲ್ ರೈ, ಕಾರ್ಯದರ್ಶಿ ಎಂ.ಸಿ ಶೆಟ್ಟಿ, ಜತೆ ಕಾರ್ಯದರ್ಶಿ ನಾರಾಯಣ ಶೆಟ್ಟಿ, ಕೋಶಾಧಿಕಾರಿ ದೇವಿಚರಣ್ ಶೆಟ್ಟಿ, ಕ್ರೀಡಾ ಕಾರ್ಯದರ್ಶಿ ಯೋಗೀಶ್ ಕುಮಾರ್, ಸಂಚಾಲಕ- ಪ್ರಸಾದ್ ರೈ ಕಲ್ಲಿಮಾರ್, ಕಾರ್ಯಕಾರಿ ಸಮಿತಿ ಸದಸ್ಯ ಸಿ ಮನೋಜ್ ಕುಮಾರ್, ಉದಯಶಂಕರ್ ರೈ, ಪ್ರದೀಪ್ ರೈ, ಪುಷ್ಪರಾಜ್ ಶೆಟ್ಟಿ ಉಪಸ್ಥಿತರಿದ್ದರು. ಕ್ರೀಡಾಕೂಟದ ಅಧ್ಯಕ್ಷರಾದ ರಾಜ ಗೋಪಾಲ್ ರೈ ಮತ್ತು ಕಾರ್ಯದರ್ಶಿ ಯೋಗೀಶ್ ಕುಮಾರ್ ಕಾರ್ಯಕ್ರಮ ನಿರ್ವಹಿಸಿದರು.
Bidar | ಬೌದ್ಧ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಲಿ : ಮಹೇಶ್ ಗೋರನಾಳಕರ್
ಬೀದರ್: ಬೌದ್ಧ ಅಭಿವೃದ್ಧಿ ನಿಗಮವನ್ನು ತಕ್ಷಣ ಸ್ಥಾಪಿಸಿ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ (ಅಂಬೇಡ್ಕರ್) ರಾಜ್ಯ ಸಂಯೋಜಕ ಮಹೇಶ್ ಗೋರನಾಳಕರ್ ಒತ್ತಾಯಿಸಿದರು. ನಗರದ ಪತ್ರಿಕಾ ಭವನದಲ್ಲಿ ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಸಮುದಾಯಗಳ ಸರ್ವಾಂಗೀಣ ಅಭಿವೃದ್ಧಿಗಾಗಿ ಶೇ.24ರಷ್ಟು ಅನುದಾನವನ್ನು ಮೀಸಲಿಟ್ಟು, ಅದನ್ನು ಬೇರೆ ಕಾರ್ಯಗಳಿಗೆ ಬಳಸದೇ ಸಮುದಾಯಗಳ ಅಭಿವೃದ್ಧಿಗಾಗಿಯೇ ಬಳಸಬೇಕು ಎಂದು ಹೇಳಿದರು. ರಾಜ್ಯದ ಪ್ರತಿ ಹಳ್ಳಿಯಲ್ಲಿ ದಲಿತರಿಗೆ ಸ್ಮಶಾನ ಭೂಮಿ ಮಂಜೂರು ಮಾಡಬೇಕು. ಪ್ರತಿ ಜಿಲ್ಲೆ, ತಾಲೂಕು ಮತ್ತು ಹೋಬಳಿ ಮಟ್ಟದಲ್ಲಿ ಸುಸಜ್ಜಿತ ಡಾ. ಅಂಬೇಡ್ಕರ್ ಭವನಗಳನ್ನು ನಿರ್ಮಿಸಬೇಕು. ಫಾರ್ಮ್ ನಂ. 50, 53 ಮತ್ತು 57ರಡಿ ಬಗರ್ ಹುಕುಂ ಸಾಗುವಳಿ ಮಾಡುತ್ತಿರುವ ರೈತರಿಗೆ ಅರಣ್ಯ ಇಲಾಖೆ ಅನ್ಯಾಯ ಮಾಡುತ್ತಿರುವುದನ್ನು ನಿಲ್ಲಿಸಿ, ಎಲ್ಲಾ ಅರ್ಹ ರೈತರಿಗೆ ಸಿ-ಫಾರ್ಮ್ ಮಂಜೂರು ಮಾಡಬೇಕು ಎಂದು ಒತ್ತಾಯಿಸಿದರು. ಬೀದರ್ನಲ್ಲಿ ಸ್ಲಂ ಬೋರ್ಡ್ ಮೂಲಕ ಪ್ರಧಾನ ಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ ನಿರ್ಮಾಣವಾಗುತ್ತಿರುವ 750 ಮನೆಗಳ ಕಾಮಗಾರಿಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿ, ಸಂಬಂಧಿತ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಿ, ಉನ್ನತ ಮಟ್ಟದ ತನಿಖೆ ನಡೆಸಿ ತಪ್ಪಿತಸ್ಥ ಅಧಿಕಾರಿಗಳನ್ನು ವಜಾಗೊಳಿಸಬೇಕು ಎಂದು ಆಗ್ರಹಿಸಿದರು. ಮನೆ ಇಲ್ಲದೆ ಬಾಡಿಗೆ ಮನೆಯಲ್ಲಿ ವಾಸಿಸುವ ಎಲ್ಲಾ ವರ್ಗದವರಿಗೆ ನಿವೇಶನ ಮತ್ತು ಮನೆ ಮಂಜೂರು ಮಾಡಬೇಕು. ಆಶಾ ಕಾರ್ಯಕರ್ತೆಯರನ್ನು ಖಾಯಂ ನೌಕರರಾಗಿ ಪರಿಗಣಿಸಿ 18 ಸಾವಿರ ರೂ. ವೇತನ ನಿಗದಿ ಮಾಡಬೇಕು. ಸರ್ಕಾರಿ ಶಾಲೆಗಳನ್ನು ಮುಚ್ಚುವುದನ್ನು ತಡೆಯಬೇಕು. ಕಲ್ಯಾಣ ಕರ್ನಾಟಕದಲ್ಲಿ ನಿರುದ್ಯೋಗ ನಿವಾರಣೆಗೆ ಕೈಗಾರಿಕೆಗಳನ್ನು ಸ್ಥಾಪಿಸಬೇಕು ಎಂದು ಹೇಳಿದರು. ಅಂತರ್ಜಾತಿ, ಒಳಪಂಗಡ ಮತ್ತು ಸರಳ ಸಾಮೂಹಿಕ ವಿವಾಹಗಳಿಗೆ ನೀಡುವ ಪ್ರೋತ್ಸಾಹ ಧನವನ್ನು ತಕ್ಷಣ ಮಂಜೂರು ಮಾಡಿ ಅದರ ಮೊತ್ತವನ್ನು ಹೆಚ್ಚಿಸಬೇಕು. ಉದ್ಯೋಗಿನಿ ಸ್ವಯಂ ಉದ್ಯೋಗ ಸಾಲದ ಪ್ರೋತ್ಸಾಹಧನ ಹೆಚ್ಚಳ ಮಾಡಬೇಕು. ಅಸ್ಪೃಶ್ಯತೆ ನಿವಾರಣೆಗೆ ಕಾರ್ಯಯೋಜನೆ ರೂಪಿಸಿ, ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಓಣಿಗಳಲ್ಲಿ ಮೂಲಭೂತ ಸೌಲಭ್ಯ ಒದಗಿಸಬೇಕು ಎಂದು ಅವರು ಆಗ್ರಹಿಸಿದರು ಈ ಸಂದರ್ಭದಲ್ಲಿ ಆರ್ ಪಿ ಐ (ಅಂಬೇಡ್ಕರ್) ಪಕ್ಷದ ಜಿಲ್ಲಾಧ್ಯಕ್ಷ ಪ್ರಕಾಶ್ ರಾವಣ, ರಾಜ್ಯ ಸಮಿತಿ ಸದಸ್ಯ ಗಂಗಮ್ಮಾ ಫುಲೆ, ಕಲಬುರಗಿ ವಿಭಾಗೀಯ ಮಹಿಳಾ ಕಾರ್ಯಾಧ್ಯಕ್ಷೆ ಉಷಾಬಾಯಿ ಬನ್ಸುಡೆ, ಜಿಲ್ಲಾ ಮಹಿಳಾ ಪ್ರಧಾನ ಕಾರ್ಯದರ್ಶಿ ಶೆಶಿಕಲಾ ಶರ್ಮಾ, ಬೀದರ ಮಹಿಳಾ ತಾಲೂಕು ಅಧ್ಯಕ್ಷೆ ಸೊನಮ್ಮಾ ಕಸ್ತೂರೆ ಇದ್ದರು.
ಬೆಂಗಳೂರು : ಇರಾನ್ ಮೇಲೆ ನಡೆಯುತ್ತಿರುವ ಆಕ್ರಮಣವನ್ನು ಖಂಡಿಸದ ಭಾರತ ಸರಕಾರದ ನಿಲುವನ್ನು ಮತ್ತೊಮ್ಮೆ ಕಟುವಾಗಿ ಟೀಕಿಸಿರುವ ಬಹುಭಾಷ ನಟ ಕಿಶೋರ್ ಕುಮಾರ್, ಶಾಂತಿ ಪ್ರೀತಿಯ ಹರಿಕಾರನಾಗಿ, ಪ್ರಪಂಚದ ಯಾವ ಶಕ್ತಿಗೂ ಹೆದರದೇ ನಿಲ್ಲುವ ದೇಶದ ಕನಸು ಕಂಡು ನನಸಾಗಿಸಿದ ಗಾಂಧಿ, ನೆಹರೂ, ಬುದ್ಧರು ಗೋರಿಯಲ್ಲಿ ಚಡಪಡಿಸುತ್ತಿರಬಹುದು ಎಂದು ಹೇಳಿದ್ದಾರೆ. ಈ ಬಗ್ಗೆ ತನ್ನ ಫೇಸ್ ಬುಕ್ ಖಾತೆಯಲ್ಲಿ ಪೋಸ್ಟ್ ವೊಂದನ್ನು ಹಾಕಿರುವ ಅವರು, ಪ್ರಚೋದನೆಯಿಲ್ಲದೇ ದುರುದ್ದೇಶದಿಂದ ಆಕ್ರಮಣ ಮಾಡಿ ಇಡೀ ಮಧ್ಯಪೂರ್ವದ ಒಂದು ವಿಧದಲ್ಲಿ ಇಡೀ ವಿಶ್ವದ ವರ್ತಮಾನ ಭವಿಷ್ಯವನ್ನು ಹಾಳುಗೆಡವಿದ್ದು ಒಂದೆಡೆಯಾದರೆ, ತನ್ನ ಪ್ರಜೆಗಳ ಮೇಲಿನ ಖಾಮಿನೈಯ ದಮನಕಾರಿ ನಿಲುವನ್ನು ಖಂಡಿಸುತ್ತಲೇ ಇರಾನ್ ( ಯಾವುದೇ ದೇಶದ)ನ ಸಾರ್ವಭೌಮತ್ವದ ಪರವಾಗಿಯೂ ನಿಂತ ಭಾರತ ತನ್ನ ಎಂದಿನ ದಿಟ್ಟ ನಿಲುವನ್ನು ಬಿಟ್ಟು, ನಮ್ಮ ಮಿತ್ರ ರಾಷ್ಟ್ರದ ಪ್ರಮುಖನ ಕೊಲೆ, ಅಮಾಯಕ ಶಾಲಾ ಮಕ್ಕಳ ಸಾವಲ್ಲದೇ, ನಮ್ಮ ಆಹ್ವಾನವನ್ನು ಗೌರವಿಸಿ ಬಂದ ಇರಾನಿನ ಯುದ್ಧ ನೌಕೆಯನ್ನು ನಾಚಿಕೆಯಿಲ್ಲದೇ ಅಂತಾರಾಷ್ಟ್ರೀಯ ಸಮುದ್ರದಲ್ಲಿ ಅದರ 100 ಸಿಬ್ಬಂದಿಯೊಂದಿಗೆ ಹೊಡೆದು ಮುಳುಗಿಸಿದ್ದನ್ನು ಖಂಡಿಸಲೂ ಸಾಧ್ಯವಾಗದೆ ಅದ್ಯಾವುದೋ ಮಾಯೆಗೆ ಶರಣಾಗಿರುವುದು ನಾಚಿಕೆಗೇಡು ಎಂದು ಹೇಳಿದ್ದಾರೆ. 'ಭಾರತವನ್ನು ದಿಟ್ಟ ನಿಲುವಿಲ್ಲದ ನೈತಿಕತೆಯಿಲ್ಲದ ಢೋಂಗಿ ವ್ಯವಹಾರಿಕ ಜ್ಞಾನದ ಜಾಣ ಹೇಡಿ ವಿಶ್ವ ಗುರುವನ್ನಾಗಿಸಿದ್ದಕ್ಕೆ ಮಿ.ನಾನ್ ಬಯಲಾಜಿಕಲ್ ನಿಗೆ ಧನ್ಯವಾದಗಳು. ಭಾರತವನ್ನು ಅಮೆರಿಕದ ಗುಲಾಮ ದೇಶವಾಗಿಸಿದ ಸಂಪೂರ್ಣ ಶ್ರೇಯ ನಿಮಗೇ ಸಲ್ಲಬೇಕು' ಎಂದು ವ್ಯಂಗ್ಯವಾಡಿದ್ದಾರೆ.
ಮದ್ರಸ ಪಬ್ಲಿಕ್ ಪರೀಕ್ಷೆ: ಕುಡುಪಾಡಿ ಹಯಾತುಲ್ ಇಸ್ಲಾಮ್ ಮದ್ರಸಕ್ಕೆ 100 ಶೇ. ಫಲಿತಾಂಶ
ಮಂಗಳೂರು: ಸಮಸ್ತ ಕೇರಳ ಇಸ್ಲಾಂ ಮತ ವಿದ್ಯಾಭ್ಯಾಸ ಬೋರ್ಡ್ ನಡೆಸಿದ 2025-26ನೇ ಸಾಲಿನ ಐದು ಮತ್ತು ಏಳನೇ ತರಗತಿಯ ಮದ್ರಸ ಪಬ್ಲಿಕ್ ಪರೀಕ್ಷೆಯಲ್ಲಿ ಜೆಪ್ಪು ಕುಡ್ಪಾಡಿಯ ಬದ್ರಿಯ ಜುಮಾ ಮಸೀದಿ ಅಧೀನದ ಹಯಾತುಲ್ ಇಸ್ಲಾಮ್ ಮದ್ರಸವು 100 ಶೇ. ಫಲಿತಾಂಶ ದಾಖಲಿಸಿದೆ. 5ನೇ ತರಗತಿಯಲ್ಲಿ ಪರೀಕ್ಷೆ ಬರೆದ ಒಟ್ಟು 24 ವಿದ್ಯಾರ್ಥಿಗಳ ಪೈಕಿ 10 ಮಂದಿ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದರೆ, 10 ಮಂದಿ ಪ್ರಥಮ ದರ್ಜೆ, ಓರ್ವ ದ್ವಿತೀಯ ದರ್ಜೆಯಲ್ಲಿ ತೇರ್ಗಡೆಯಾಗಿದ್ದಾನೆ. ಅದೇ ರೀತಿ 7ನೇ ತರಗತಿಯಲ್ಲಿ ಪರೀಕ್ಷೆ ಬರೆದ ಒಟ್ಟು 14 ವಿದ್ಯಾರ್ಥಿಗಳ ಪೈಕಿ ಓರ್ವ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದರೆ, ಒಂಭತ್ತು ಮಂದಿ ಪ್ರಥಮ ದರ್ಜೆ, ನಾಲ್ವರು ದ್ವಿತೀಯ ದರ್ಜೆಯಲ್ಲಿ ತೇರ್ಗಡೆಯಾಗಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.
ಶಿವಮೊಗ್ಗ ಏರ್ಪೋರ್ಟ್: ನೈಟ್ ಲ್ಯಾಂಡಿಂಗ್ಗಾಗಿ ಉಪಕರಣ ಅಳವಡಿಕೆಗೆ ಮಣ್ಣು ಪೂರಕ, ಸಮೀಕ್ಷೆ ವರದಿ
ಶಿವಮೊಗ್ಗ: ಜಿಲ್ಲೆಯ ಸೋಗಾನೆಯಲ್ಲಿರುವ ವಿಮಾನ ನಿಲ್ದಾಣದಲ್ಲಿ ಬಹುನಿರೀಕ್ಷಿತ ವಿಮಾನಗಳ ನೈಟ್ ಲ್ಯಾಂಡಿಂಗ್ ಸೌಲಭ್ಯಕ್ಕೆ ಅಗತ್ಯವಿರುವ ಪ್ರಕ್ರಿಯೆಗಳು ವೇಗ ಪಡೆದುಕೊಂಡಿವೆ. ಈ ಸಂಬಂಧ ಕೈಗೊಳ್ಳಲಾಗಿದ್ದ ಮಣ್ಣು ಪರೀಕ್ಷೆಯ ವರದಿ ಬಂದಿದ್ದು, ವರದಿಯಲ್ಲಿ ಸಕರಾತ್ಮಕ ಅಂಶಗಳನ್ನು ತಿಳಿಸಲಾಗಿದೆ. ಅವುಗಳ ವಿವರ ಇಲ್ಲಿದೆ. ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಮೂಲಸೌಲಭ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಸ್.ಜಿ. ನಂಜಯ್ಯನಮಠ ಅವರು ಈ ಕುರಿತು
BTS ಬಹುನಿರೀಕ್ಷಿತ ಕಂಬ್ಯಾಕ್ ಲೈವ್ ನ ಟ್ರೇಲರ್ ರಿಲೀಸ್: ಮಾ.20ರಿಂದ BTS ಹವಾ ಶುರು!ಹೇಗಿದೆ ನೋಡಿ ಟ್ರೇಲರ್..
BTS ತಂಡ ಮಾ.20ರಂದು ತಮ್ಮ ಆಲ್ಬಂ Arirang ಮೂಲಕ ಕಂಬ್ಯಾಕ್ ಮಾಡುತ್ತಿದ್ದು, ಬಳಿಕ ಮಾ.21ರಂದು ಗ್ವಾಂಗ್ಹುವಾಮುನ್ ಸ್ಕ್ವೇರ್ನಲ್ಲಿ ಪ್ರಿ ವರ್ಲ್ಡ್ ಟೂರ್ ಕಾನ್ಸರ್ಟ್ ಮೂಲಕ ತಮ್ಮ ಕಂಬ್ಯಾಕ್ ನ ಕಾರ್ಯಕ್ರಮಗಳನ್ನು ಆರಂಭಿಸಲಿದೆ. ಇದಕ್ಕೆ BTS ಗೆ ನೆಟ್ ಫ್ಲಿಕ್ಸ್ ಸಾಥ್ ನೀಡಲಿದ್ದು, BTS ಕಂಬ್ಯಾಕ್ ಲೈವ್ ನ ಟ್ರೇಲರ್ ಅನ್ನು ಬಿಡುಗಡೆ ಮಾಡಿದೆ. ಈ ಟ್ರೇಲರ್ ಸಾಕಷ್ಟು ಕುತೂಹಲಕಾರಿಯಾಗಿದ್ದು, ಹೇಗಿದೆ ನೋಡಿ..
ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ಅಭ್ಯರ್ಥಿ ಆಯ್ಕೆಯಲ್ಲಿ ಗೊಂದಲ ತೀವ್ರಗೊಂಡಿದೆ. ಬಿಜೆಪಿ ಬಣಗಳ ನಡುವೆ ಸಂಘರ್ಷ ಜೋರಾಗಿದ್ದು ರಾಜ್ಯ ಬಿಜೆಪಿ ಉಸ್ತುವಾರಿ ರಾಧಾ ಮೋಹನ್ ಅಗರವಾಲ್ ಅವರು ಸಮಸ್ಯೆ ಬಗೆಹರಿಸ್ತಾರಾ? ಎಂಬ ಕುತೂಹಲ ಇದೀಗ ಕೆರಳಿಸಿದೆ. ಈ ನಡುವೆ ದಾವಣಗೆರೆಯಲ್ಲಿ ಪಕ್ಷದ ನಾಯಕರ ಜೊತೆಗೆ ಸಭೆ ನಡೆಸಿದ ಬಿವೈ ವಿಜಯೇಂದ್ರ, ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಗೆಲ್ಲಲೇ ಬೇಕೆಂಬ ಪಣ ತೊಟ್ಟು ನಾವೆಲ್ಲ ಹೊರಟಿದ್ದೇವೆ. ಈ ಕ್ಷೇತ್ರದಲ್ಲಿ ಬಿಜೆಪಿ ಗೆಲುವಿಗೆ ಪ್ರಯತ್ನವನ್ನು ನಾವು ನಿಶ್ಚಿತವಾಗಿ ಮಾಡಲಿದ್ದೇವೆ ಎಂದು ತಿಳಿಸಿದ್ದಾರೆ. ಈ ಕುರಿತಾದ ಮತ್ತಷ್ಟು ವಿವರ ಇಲ್ಲಿದೆ.
ರಾಜ್ಯದ ಅಲ್ಪಸಂಖ್ಯಾತ ಸಮುದಾಯದ ಯುವಕ-ಯುವತಿಯರಿಗೆ ಉಚಿತ UPSC ತರಬೇತಿಗೆ ಅರ್ಜಿ ಆಹ್ವಾನ
2025-26ನೇ ಸಾಲಿನ ‘ಯುಪಿಎಸ್ಸಿ ಪೂರ್ವಭಾವಿ ಪರೀಕ್ಷೆ’ ಬರೆಯಲು ಬಯಸುವ ಪ್ರತಿಭಾವಂತ ಅಭ್ಯರ್ಥಿಗಳಿಗೆ ನುರಿತ ಸಂಸ್ಥೆಯ ಮೂಲಕ ಪ್ರತಿಷ್ಠಿತ ಉಚಿತ ವಸತಿಯುಕ್ತ ತರಬೇತಿ ನೀಡಲು ಅಧಿಕೃತ ಅಧಿಸೂಚನೆಯನ್ನು ಸರ್ಕಾರ ಹೊರಡಿಸಿದೆ. ಕೇಂದ್ರ ಲೋಕಸೇವಾ ಆಯೋಗದ (UPSC) ಪರೀಕ್ಷೆ ಬರೆಯಲು ಬಯಸುವ ರಾಜ್ಯದ ಅಲ್ಪಸಂಖ್ಯಾತ ಸಮುದಾಯದ ಯುವಕ-ಯುವತಿಯರಿಗೆ ರಾಜ್ಯ ಸರ್ಕಾರ ಉತ್ತಮ ಅವಕಾಶ ಕಲ್ಪಿಸಿದೆ. ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಹಾಗೂ ನಿರ್ದೇಶನಾಲಯದ ವತಿಯಿಂದ 2025-26ನೇ ಸಾಲಿನ ‘ಯುಪಿಎಸ್ಸಿ ಪೂರ್ವಭಾವಿ ಪರೀಕ್ಷೆ’ ಬರೆಯಲು ಬಯಸುವ ಪ್ರತಿಭಾವಂತ ಅಭ್ಯರ್ಥಿಗಳಿಗೆ ನುರಿತ ಸಂಸ್ಥೆಯ ಮೂಲಕ ಪ್ರತಿಷ್ಠಿತ ಉಚಿತ ವಸತಿಯುಕ್ತ ತರಬೇತಿ ನೀಡಲು ಅಧಿಕೃತ ಅಧಿಸೂಚನೆ ಹೊರಡಿಸಿದೆ. ಆಸಕ್ತರು ಆನ್ಲೈನ್ ಮೂಲಕ ಈ ಕೆಳಗಿನ ಲಿಂಕ್ ಬಳಸಿ ಅರ್ಜಿ ಸಲ್ಲಿಸಬಹುದಾಗಿದೆ: https://docs.google.com/forms/d/e/1FAIpQLScCKNk8qK9sXOUgM8XDAoBcN51vR-SZ6HaBKgtn7pZklcJMiQ/viewform ಪ್ರಮುಖ ದಿನಾಂಕಗಳು ಈ ತರಬೇತಿ ಕಾರ್ಯಕ್ರಮಕ್ಕೆ ಅರ್ಜಿ ಸಲ್ಲಿಸಲು ಇಲಾಖೆಯು ಅತ್ಯಂತ ಕಡಿಮೆ ಕಾಲಾವಕಾಶ ನೀಡಿದ್ದು, ಅರ್ಜಿ ಸಲ್ಲಿಕೆ ಪ್ರಕ್ರಿಯೆ 2026 ಮಾರ್ಚ್ 04ರಿಂದಲೇ ಆರಂಭವಾಗಿದೆ: * ಆನ್ಲೈನ್ ಅರ್ಜಿ ಸಲ್ಲಿಕೆ ಆರಂಭದ ದಿನಾಂಕ: 04-03-2026. * ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 09-03-2026. ಏನಿದು ಉಚಿತ ತರಬೇತಿ ಯೋಜನೆ? ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ದುಬಾರಿ ಶುಲ್ಕ ತೆತ್ತು ಕೋಚಿಂಗ್ ಪಡೆಯಲು ಸಾಧ್ಯವಾಗದ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗಾಗಿ ಸರ್ಕಾರವೇ ಈ ವ್ಯವಸ್ಥೆ ಮಾಡಿದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ಬೆಂಗಳೂರಿನ ‘ಹಜ್ ಭವನ’ದಲ್ಲಿ ಸತತ 04 ತಿಂಗಳ ಕಾಲ ಉಚಿತ ಊಟ, ವಸತಿ ಸೌಲಭ್ಯದೊಂದಿಗೆ ಯುಪಿಎಸ್ಸಿ ಪೂರ್ವಭಾವಿ ಪರೀಕ್ಷೆಗೆ (Prelims) ಅತ್ಯುತ್ತಮ ಗುಣಮಟ್ಟದ ತರಬೇತಿ ನೀಡಲಾಗುತ್ತದೆ. UPSC ಉಚಿತ ತರಬೇತಿ 2026 ಅರ್ಹತೆಗಳು: ಈ ಉಚಿತ ತರಬೇತಿ ಪಡೆಯಲು ಅಭ್ಯರ್ಥಿಗಳು ಈ ಕೆಳಗಿನ ಮಾನದಂಡಗಳನ್ನು ಕಡ್ಡಾಯವಾಗಿ ಪೂರೈಸಿರಬೇಕು: * ಸಮುದಾಯ : ಅಭ್ಯರ್ಥಿಯು ಕರ್ನಾಟಕ ರಾಜ್ಯದ ಖಾಯಂ ನಿವಾಸಿಯಾಗಿರಬೇಕು ಹಾಗೂ ಅಲ್ಪಸಂಖ್ಯಾತ ಸಮುದಾಯಕ್ಕೆ (ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಬೌದ್ಧ, ಸಿಖ್ ಮತ್ತು ಪಾರ್ಸಿ) ಸೇರಿರಬೇಕು. * ವಯೋಮಿತಿ : ಅರ್ಜಿ ಸಲ್ಲಿಸುವ ಕೊನೆಯ ದಿನಾಂಕಕ್ಕೆ ಅನ್ವಯವಾಗುವಂತೆ ಅಭ್ಯರ್ಥಿಯ ವಯಸ್ಸು ಕನಿಷ್ಠ 21 ವರ್ಷ ಆಗಿರಬೇಕು ಹಾಗೂ ಗರಿಷ್ಠ 35 ವರ್ಷ ಮೀರಿರಬಾರದು. * ಶೈಕ್ಷಣಿಕ ಅರ್ಹತೆ : ಅಭ್ಯರ್ಥಿಯು ಈ ಹಿಂದಿನ ಅಧಿಸೂಚನೆಗಳಲ್ಲಿ UPSC ಅಥವಾ KAS ಪೂರ್ವಭಾವಿ ಪರೀಕ್ಷೆಯಲ್ಲಿ (Prelims Exam) ಉತ್ತೀರ್ಣರಾಗಿರಬೇಕು ಎಂಬ ವಿಶೇಷ ಷರತ್ತನ್ನು ಇಲಾಖೆ ವಿಧಿಸಿದೆ. UPSC ಉಚಿತ ತರಬೇತಿ 2026 ಅರ್ಜಿ ಸಲ್ಲಿಸುವುದು ಹೇಗೆ? ಅರ್ಹ ಅಭ್ಯರ್ಥಿಗಳು ಅಲ್ಪಸಂಖ್ಯಾತರ ನಿರ್ದೇಶನಾಲಯದ ಅಧಿಕೃತ ಜಾಲತಾಣ https://dom.karnataka.gov.in/ ಇಲ್ಲಿಗೆ ಭೇಟಿ ನೀಡಿ, ಅಲ್ಲಿ ಲಭ್ಯವಿರುವ ಮಾರ್ಗಸೂಚಿಗಳನ್ವಯ ಆನ್ಲೈನ್ ಅರ್ಜಿ ನಮೂನೆಯನ್ನು ಭರ್ತಿ ಮಾಡಬೇಕು. ಹೆಚ್ಚಿನ ಮಾಹಿತಿ ಅಥವಾ ಗೊಂದಲಗಳಿದ್ದರೆ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಸಹಾಯವಾಣಿ ಸಂಖ್ಯೆ 8277799990 ಗೆ ಕರೆ ಮಾಡಬಹುದು.
ಇರಾನ್ ಸರ್ವೋಚ್ಚ ನಾಯಕ ಖಾಮಿನೈ ನಿಧನಕ್ಕೆ ಭಾರತ ಸಂತಾಪ
ಇರಾನ್ ರಾಯಭಾರ ಕಚೇರಿಗೆ ಭೇಟಿ ನೀಡಿದ ವಿದೇಶಾಂಗ ಕಾರ್ಯದರ್ಶಿ
ಆನೆಗಳು ಮತ್ತು ಫ್ಲೆಮಿಂಗೊಗಳು ನಿಂತೇ ನಿದ್ರೆ ಮಾಡುವುದೇಕೆ?
ಪರಭಕ್ಷಕಗಳ ಬಗ್ಗೆ ಎಚ್ಚರವಾಗಿರಲು, ಹಿಂಡಿನಲ್ಲಿ ಸಮತೋಲನವನ್ನು ಕಾಯ್ದುಕೊಳ್ಳಲು ಅಥವಾ ಮಲಗುವುದು ತುಂಬಾ ಅಪಾಯಕಾರಿ ಅಥವಾ ಶಕ್ತಿಯನ್ನು ಬರಿದಾಗಿಸುತ್ತದೆ ಎಂದು ಅನಿಸಿದಾಗ ನಿಂತುಕೊಂಡೇ ನಿದ್ರೆ ತೂಗುವುದು ಈ ಜೀವಿಗಳಿಗೆ ಅಭ್ಯಾಸವಾಗಿ ಹೋಗಿದೆ. ಜೀವಿಗಳು ತಮ್ಮ ಕಾಲ ಮೇಲೆ ಮಲಗುವುದು ನೋಡಿದ್ದೀರಾ? ಬಹಳಷ್ಟು ಜೀವಿಗಳಿಗೆ ಕಾಲಿನ ಮೇಲೆ ನಿಂತೇ ನಿದ್ರೆ ತೂಗುವುದು ಅಭ್ಯಾಸ ಮಾತ್ರವಲ್ಲ ಬದುಕುಳಿಯುವ ಒಂದು ತಂತ್ರವೂ ಆಗಿದೆ. ಪರಭಕ್ಷಕಗಳ ಬಗ್ಗೆ ಎಚ್ಚರವಾಗಿರಲು, ಹಿಂಡಿನಲ್ಲಿ ಸಮತೋಲನವನ್ನು ಕಾಯ್ದುಕೊಳ್ಳಲು ಅಥವಾ ಮಲಗುವುದು ತುಂಬಾ ಅಪಾಯಕಾರಿ ಅಥವಾ ಶಕ್ತಿಯನ್ನು ಬರಿದಾಗಿಸುತ್ತದೆ ಎಂದು ಅನಿಸಿದಾಗ ನಿಂತುಕೊಂಡೇ ನಿದ್ರೆ ತೂಗುವುದು ಈ ಜೀವಿಗಳಿಗೆ ಅಭ್ಯಾಸವಾಗಿ ಹೋಗಿದೆ. ಈ ಜೀವಿಗಳು ನಿದ್ರೆಯ ಕುರಿತ ನಮ್ಮ ಅರ್ಥೈಸಿಕೊಳ್ಳುವಿಕೆಯನ್ನೇ ಬದಲಿಸಿವೆ ಎಂದರೆ ತಪ್ಪಾಗದು. ಹೀಗೆ ನಿಂತೇ ನಿದ್ರಿಸುವ 5 ಪ್ರಾಣಿಗಳ ವಿವರ ಇಲ್ಲಿದೆ; ಕುದುರೆಗಳು Photo ; chatgpt.com ಕುದುರೆಗಳು ತಮ್ಮ ಕಾಲುಗಳಲ್ಲಿ ‘ಸ್ಟೇ ಅಪರಟಸ್’ ಅನ್ನು ಹೊಂದಿರುತ್ತವೆ. ಈ ಸ್ಟೇ ಅಪರಟಸ್ ಸ್ನಾಯು ರಜ್ಜುಗಳು ಮತ್ತು ಅಸ್ಥಿರಜ್ಜುಗಳ ವ್ಯವಸ್ಥೆಯಾಗಿದ್ದು, ಕೀಲುಗಳನ್ನು ಲಾಕ್ ಮಾಡಲು ಮತ್ತು ಬೀಳದೆ ನಿಂತೇ ಮಲಗಲು ಅನುವು ಮಾಡಿಕೊಡುತ್ತದೆ. “ಕುದುರೆಗಳು ಮಲಗಿದರೆ ಏಳಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ. ಇದರಿಂದ ಪರಭಕ್ಷಕಗಳ ದಾಳಿಗೆ ಸುಲಭವಾಗಿ ಗುರಿಯಾಗುತ್ತವೆ. ತಮ್ಮನ್ನು ರಕ್ಷಿಸಿಕೊಳ್ಳಲು ಕುದುರೆಗಳು ನಿಂತೇ ನಿದ್ರಿಸುತ್ತವೆ” ಎಂದು ಬ್ರಿಟಾನಿಕದಲ್ಲಿ ವಿವರವಿದೆ. ಆನೆಗಳು Photo Credit : PTI ಆನೆಗಳು ಮಲಗಿ ದೀರ್ಘನಿದ್ರೆ ಮಾಡುವುದು ಅಪರೂಪ. ನಿಂತೇ ನಿದ್ರೆ ಮಾಡುತ್ತಿರುತ್ತವೆ. ಮುಖ್ಯವಾಗಿ ಕಾಡಾನೆಗಳು ಕಾಡಿನಲ್ಲಿರುವಾಗ ನಿಂತೇ ನಿದ್ರಿಸುತ್ತವೆ. ಕಾಡಿನಲ್ಲಿ ಅವುಗಳು ಅಪಾಯಗಳಿಗೆ ಪ್ರತಿಕ್ರಿಯಿಸಲು ಸಿದ್ಧವಾಗಿರಬೇಕು. ಬೃಹತ್ ಗಾತ್ರದಿಂದಾಗಿ ಮಲಗುವುದು ಮತ್ತು ಏಳುವುದಕ್ಕೆ ಬಹಳ ಶಕ್ತಿಯ ನಷ್ಟವಾಗುತ್ತದೆ ಮತ್ತು ಅಪಾಯಗಳಿಗೆ ತಕ್ಷಣವೇ ಪ್ರತಿಕ್ರಿಯಿಸಲು ಸಾಧ್ಯವಾಗುವುದಿಲ್ಲ. ಮುಖ್ಯವಾಗಿ ನೆಲ ಸಮತಟ್ಟಾಗಿಲ್ಲದೆ ಇದ್ದರೆ ಏಳುವುದು ಇನ್ನಷ್ಟು ಕಷ್ಟವಾಗಿಬಿಡುತ್ತದೆ. ಜಿರಾಫೆಗಳು Photo Credit : PTI ಜಿರಾಫೆಗಳೂ ಆನೆಗಳಂತೆಯೇ ಯಾವುದೇ ಅಪಾಯವಿಲ್ಲದ ಸಂದರ್ಭದಲ್ಲಿ ಮಲಗಿರುತ್ತವೆ. ತಮ್ಮ ತಲೆಯನ್ನು ಆರಾಮವಾಗಿ ತಮ್ಮ ಕಾಲುಗಳ ಮೇಲೆ ಒರಗಿಸಿ ಮಲಗುತ್ತವೆ. ಜಿರಾಫೆಗಳು ಅಲ್ಪಾವಧಿಗೆ ಮಾತ್ರ ನಿಂತು ಮಲಗುತ್ತವೆ. ಕೆಲವೊಮ್ಮೆ ನಿಂತು ದೀರ್ಘವಾಗಿ ಮಲಗುವುದೂ ಇದೆ. ನಿಂತೇ ನಿದ್ರೆ ಮಾಡುವುದರಿಂದ ಪರಭಕ್ಷಕಗಳಿಂದ ತಪ್ಪಿಸಿಕೊಳ್ಳುವುದು ಮತ್ತು ಜಾಗೃತವಾಗಿರುವುದು ಸರಳವಾಗುತ್ತದೆ. ದನಗಳು Photo Credit : PTI ದನಗಳು ನಿಂತಿರುವಾಗ ಲಘುವಾಗಿ ನಿದ್ರೆಗೆ ಜಾರುತ್ತವೆ. ಆದರೆ ದೀರ್ಘವಾಗಿ ನಿದ್ರೆಗೆ ಜಾರಬೇಕೆಂದರೆ ಅವುಗಳು ನೆಲಕ್ಕೆ ಒರಗಿ ಮಲಗಿಬಿಡುತ್ತವೆ. ನಿಂತು ನಿದ್ರೆಗೆ ಜಾರುವ ಅವುಗಳ ಸಾಮರ್ಥ್ಯವು ಹಿಂಡಿನ ಪರಿಸರದಲ್ಲಿ ಅರ್ಧ ಎಚ್ಚರವಾಗಿರಲು ಸಹಾಯ ಮಾಡುತ್ತವೆ. ಫ್ಲೆಮಿಂಗೊಗಳು Photo Credit : PTI ಫ್ಲೆಮಿಂಗೊ ಪಕ್ಷಿಗಳು ಒಂದು ಕಾಲಿನ ಮೇಲೆ ನಿದ್ರೆಗೆ ಜಾರುವುದಕ್ಕೆ ಪ್ರಸಿದ್ಧಿಪಡೆದಿವೆ. ಹೀಗೆ ಒಂದು ಕಾಲಿನಲ್ಲಿ ನಿಲ್ಲುವುದರಿಂದ ದೇಹದ ಉಷ್ಣತೆಯನ್ನು ನಿಯಂತ್ರಿಸಲು ಅವುಗಳಿಗೆ ಸಹಾಯವಾಗುತ್ತದೆ. “ಪಕ್ಷಿಗಳು ತಮ್ಮ ಕಾಲುಗಳು ಮತ್ತು ಪಾದಗಳ ಮೂಲಕ ಹೆಚ್ಚಿನ ಶಾಖವನ್ನು ಕಳೆದುಕೊಳ್ಳುವುದರಿಂದ ಒಂದು ಕಾಲನ್ನು ದೇಹಕ್ಕೆ ಹತ್ತಿರವಾಗಿ ಹಿಡಿದಿಟ್ಟುಕೊಳ್ಳುವುದರಿಂದ ಅವು ಬೆಚ್ಚಗಿರಲು ಸಹಾಯವಾಗುತ್ತದೆ” ಎಂದು ಬ್ರಿಟಾನಿಕದಲ್ಲಿ ವಿವರಗಳಿವೆ. ಅವುಗಳ ಕಾಲಿನ ಸ್ನಾಯುಗಳು ದೇಹಕ್ಕೆ ಅಂಟಿಕೊಂಡು ಲಾಕ್ ಆಗಿಬಿಡುತ್ತವೆ, ಹೀಗಾಗಿ ಸಮತೋಲನ ಸಾಧಿಸುವುದು ಮತ್ತು ಶ್ರಮವಿಲ್ಲದೆ ವಿಶ್ರಾಂತಿ ಪಡೆಯಲು ಸಾಧ್ಯವಾಗುತ್ತದೆ. ಕೃಪೆ: indianexpress.com
ನಮಗೆ ಹಣ ಬೇಡ, ಗುಣಮಟ್ಟದ ಶಾಲೆ ಮತ್ತು ಆಸ್ಪತ್ರೆ ಕೊಡಿ: ಸಾರ್ವಜನಿಕರ ಆಗ್ರಹ
ಬೆಂಗಳೂರು:ಸಿಎಂ ಸಿದ್ದರಾಮಯ್ಯ ಶುಕ್ರವಾರ 2026-27ನೇ ಸಾಲಿನ ಕರ್ನಾಟಕ ಬಜೆಟ್ ಮಂಡನೆಗೆ ಸಜ್ಜಾಗಿದ್ದಾರೆ. ಇದು ಅವರ ದಾಖಲೆಯ 17ನೇ ಬಜೆಟ್ ಆಗಲಿದೆ. ಆದರೆ ಈ ಬಾರಿಯ ಬಜೆಟ್ನಿಂದ ಜನಸಾಮಾನ್ಯರು ಕೇವಲ ಉಚಿತ ಯೋಜನೆಗಳನ್ನಷ್ಟೇ ನಿರೀಕ್ಷಿಸುತ್ತಿಲ್ಲ, ಬದಲಾಗಿ ದೀರ್ಘಕಾಲದ ಅಭಿವೃದ್ಧಿ ಮತ್ತು ಆಡಳಿತ ವ್ಯವಸ್ಥೆಯ ಸುಧಾರಣೆಗೆ ಒತ್ತಾಯಿಸಿದ್ದಾರೆ. 1. ಗ್ಯಾರಂಟಿ ಯೋಜನೆಗಳ ಬಗ್ಗೆ ಹೆಚ್ಚುತ್ತಿರುವ ಅಸಮಾಧಾನ ಸರ್ಕಾರದ 5 ಪ್ರಮುಖ
ಹೊಸದಿಲ್ಲಿ: ಸಂಭಲ್ನ ಶಾಹಿ ಜಾಮಾ ಮಸೀದಿಯನ್ನು ಯಾವುದೇ ಕಟ್ಟಡವನ್ನು ನೆಲಸಮಗೊಳಿಸಿದ ಬಳಿಕ ಅಥವಾ ಖಾಲಿ ಜಾಗದಲ್ಲಿ ನಿರ್ಮಿಸಲಾಗಿತ್ತೇ ಎಂಬ ಬಗ್ಗೆ ತನ್ನ ಬಳಿ ಯಾವುದೇ ದಾಖಲೆಗಳಿಲ್ಲ ಎಂದು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯು (ಎಎಸ್ಐ) ಮೇಲ್ಮನವಿಯೊಂದರ ವಿಚಾರಣೆ ಸಂದರ್ಭದಲ್ಲಿ ಕೇಂದ್ರ ಮಾಹಿತಿ ಆಯೋಗಕ್ಕೆ ತಿಳಿಸಿದೆ. ಮಸೀದಿ ನಿರ್ಮಾಣ ಸಮಯದಲ್ಲಿನ ಭೂಮಾಲೀಕರನ್ನು ಗುರುತಿಸುವ ದಾಖಲೆಗಳೂ ತನ್ನ ಬಳಿಯಲ್ಲಿಲ್ಲ ಎಂದು ಅದು ಹೇಳಿದೆ ಎಂದು ವರದಿಯಾಗಿದೆ. ನ್ಯಾಯಾಲಯದ ಆದೇಶದ ಮೇರೆಗೆ ನವಂಬರ್ 2024ರಲ್ಲಿ ಎಎಸ್ಐನಿಂದ ಮಸೀದಿಯ ಸಮೀಕ್ಷೆಯು ಸ್ಥಳೀಯರು ಮತ್ತು ಪೋಲಿಸರ ನಡುವೆ ಹಿಂಸಾತ್ಮಕ ಘರ್ಷಣೆಗೆ ಕಾರಣವಾಗಿದ್ದು, ಗುಂಡೇಟಿನಿಂದ ನಾಲ್ವರು ಮೃತಪಟ್ಟಿದ್ದರು. ಮುಘಲ್ ಚಕ್ರವರ್ತಿ ಔರಂಗಜೇಬ್ ಆಳ್ವಿಕೆಯಲ್ಲಿ ಶಿವ ದೇವಸ್ಥಾನನ್ನು ನೆಲಸಮಗೊಳಿಸಿ ಮಸೀದಿಯನ್ನು ನಿರ್ಮಿಸಲಾಗಿತ್ತು ಎಂದು ಪ್ರತಿಪಾದಿಸಿ ಹಿಂದೂಗಳು ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಾಲಯವು ಕೈಗೆತ್ತಿಕೊಂಡಿತ್ತು. ಸಮೀಕ್ಷೆ ತಂಡದ ಜೊತೆಯಲ್ಲಿದ್ದ ಕೆಲವರು ‘ಜೈ ಶ್ರೀರಾಮ್’ ಘೋಷಣೆಗಳನ್ನು ಕೂಗುತ್ತಿದ್ದರು ಮತ್ತು ಇದು ಪ್ರದೇಶದಲ್ಲಿಯ ಅಲ್ಪಸಂಖ್ಯಾತ ಸಮುದಾಯಕ್ಕೆ ಅಸಮಾಧಾನವನ್ನುಂಟು ಮಾಡಿತ್ತು ಎಂಬ ಆರೋಪಗಳು ಕೇಳಿಬಂದಿದ್ದವು. ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಹಲವಾರು ಜನರು ಈಗಲೂ ಜೈಲಿನಲ್ಲಿದ್ದಾರೆ. ಸಂಭಲ್ ನಿವಾಸಿ ಸತ್ಯಪ್ರಕಾಶ್ ಯಾದವ್ ಅವರು ತನ್ನ ಆರ್ಟಿಐ ಅರ್ಜಿಯಲ್ಲಿ ಮುಘಲ್ ಯುಗದ ಮಸೀದಿಯನ್ನು ಯಾವುದೇ ಅವಶೇಷಗಳನ್ನು ನೆಲಸಮಗೊಳಿಸಿದ ಬಳಿಕ ಅಥವಾ ಖಾಲಿಯಿದ್ದ ಜಾಗದಲ್ಲಿ ನಿರ್ಮಿಸಲಾಗಿದೆಯೇ ಎಂಬ ಕುರಿತು ಮಾಹಿತಿಯನ್ನು ಕೋರಿದ್ದರು. ಆ ಸಮಯದಲ್ಲಿ ಭೂಮಾಲಿಕರ ಹೆಸರು ಮತ್ತು ಮಾಲಿಕತ್ವದ ಹಕ್ಕಿನ ದಾಖಲೆಗಳನ್ನೂ ಅವರು ಕೇಳಿದ್ದರು. ಎಎಸ್ಐ ತನ್ನ ಉತ್ತರದಲ್ಲಿ ಇಂತಹ ಯಾವುದೇ ಮಾಹಿತಿಯು ತನ್ನ ಬಳಿಯಲ್ಲಿ ಇಲ್ಲ ಎಂದು ತಿಳಿಸಿತ್ತು. ಬಳಿಕ ಯಾದವ ಕೇಂದ್ರ ಮಾಹಿತಿ ಆಯೋಗಕ್ಕೆ ಮೇಲ್ಮನವಿ ಸಲ್ಲಿಸಿದ್ದರು.
ಹೊಸದಿಲ್ಲಿ : ಹಿಂದೂ ಮಹಾಸಾಗರದಲ್ಲಿ ಇರಾನ್ ನ ಯುದ್ಧ ನೌಕೆ ಐರಿಸ್ ದೇನಾವನ್ನು ಅಮೆರಿಕ ಮುಳುಗಿಸಿರುವ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮೌನವಹಿಸಿರುವುದನ್ನು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಪ್ರಶ್ನಿಸಿದ್ದಾರೆ. ಈ ಕುರಿತು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ರಾಹುಲ್ ಗಾಂಧಿ, ಜಗತ್ತು ಈಗ ಅಸ್ಥಿರ ಹಂತಕ್ಕೆ ತಲುಪಿದೆ. ಮುಂದೆ ಸವಾಲುಗಳು ಕಾದಿವೆ. ಭಾರತದ ತೈಲ ಸರಬರಾಜು ಅಪಾಯದಲ್ಲಿದೆ. ನಮ್ಮ ಆಮದುಗಳ 40% ಕ್ಕಿಂತ ಹೆಚ್ಚು ಹಾರ್ಮುಝ್ ಮೂಲಕ ಸಾಗುತ್ತದೆ. ಎಲ್ಪಿಜಿ ಮತ್ತು ಎಲ್ಎನ್ಜಿ ವಿಷಯದಲ್ಲಿ ಪರಿಸ್ಥಿತಿ ಮತ್ತಷ್ಟು ಗಂಭೀರವಾಗಿದೆ ಎಂದು ಹೇಳಿದ್ದಾರೆ. ಸಂಘರ್ಷವು ನಮ್ಮ ಹಿತ್ತಲನ್ನು ತಲುಪಿದೆ. ಇರಾನಿನ ಯುದ್ಧನೌಕೆ ಹಿಂದೂ ಮಹಾಸಾಗರದಲ್ಲಿ ಮುಳುಗಿಸಿರುವ ಬಗ್ಗೆ ವರದಿಯಾಗಿದೆ. ಆದರೂ ಪ್ರಧಾನಮಂತ್ರಿ ಈ ಬಗ್ಗೆ ಮೌನವಾಗಿದ್ದಾರೆ. ಇಂತಹ ಸಂದರ್ಭದಲ್ಲಿ ದೇಶಕ್ಕೆ ಸ್ಥಿರ ಹಾಗೂ ದಿಟ್ಟ ನಾಯಕತ್ವದ ಅಗತ್ಯವಿದೆ. ಆದರೆ, ನಾವು ಕಾರ್ಯತಂತ್ರದ ಸ್ವಾಯುತ್ತತೆಯನ್ನು ಬಿಟ್ಟುಕೊಟ್ಟ ರಾಜಿ ಮಾಡಿಕೊಂಡ ಪ್ರಧಾನಿಯನ್ನು ಹೊಂದಿದ್ದೇವೆ ಎಂದು ರಾಹುಲ್ ಗಾಂಧಿ ಟೀಕಿಸಿದ್ದಾರೆ.
ನೀವು ಬಳಸುವ ಬೆಲ್ಲ ಶುದ್ಧವೆ? FSSAI ನೀಡಿದ ಎಚ್ಚರಿಕೆಯೇನು?
ಬೆಲ್ಲದ ಶುದ್ಧತೆ ಪರೀಕ್ಷಿಸಲು ಭಾರತೀಯ ಆಹಾರ ಸುರಕ್ಷತೆ ಮತ್ತು ಮಾನದಂಡಗಳ ಪ್ರಾಧಿಕಾರ (FSSAI) ಕೆಲವು ಸರಳ ಮನೆ ಪರೀಕ್ಷೆಗಳನ್ನು ಹಂಚಿಕೊಂಡಿದೆ. ಭಾರತೀಯ ಮನೆಗಳಲ್ಲಿ ಬೆಲ್ಲವನ್ನು ವರ್ಷವಿಡೀ ವ್ಯಾಪಕವಾಗಿ ಬಳಸುತ್ತೇವೆ. ಸಾಂಪ್ರದಾಯಿಕ ಸಿಹಿತಿನಿಸುಗಳಿಗೆ ಬಳಸುವುದರಿಂದ ತೊಡಗಿ ಆಯುರ್ವೇದದಲ್ಲೂ ಬಳಕೆಯಾಗುತ್ತದೆ. ನೈಸರ್ಗಿಕವಾದ ಸಿಹಿಯು ಆರೋಗ್ಯದ ಲಾಭಗಳಿಗೆ ಜನಪ್ರಿಯವಾಗಿದೆ. ಆದರೆ ಜನಪ್ರಿಯತೆಯ ಜೊತೆಗೆ ಕಲಬೆರಕೆಯ ಆತಂಕಕ್ಕೂ ಕಾರಣವಾಗಿದೆ. ಬೆಲ್ಲವನ್ನು ಹೆಚ್ಚಾಗಿ ಸಕ್ಕರೆ, ಸೀಮೆಸುಣ್ಣದ ಪುಟಿ ಅಥವಾ ಅಡುಗೆ ಸೋಡಾಗಳೊಂದಿಗೆ ಬೆರೆಸಲಾಗುತ್ತದೆ. ಹೀಗಾಗಿ ಬೆಲ್ಲದ ಶುದ್ಧತೆ ಕಡಿಮೆಯಾಗಿ ಗುಣಮಟ್ಟವೂ ಕುಸಿಯುತ್ತದೆ. ಇದೀಗ ಬೆಲ್ಲದ ಶುದ್ಧತೆ ಪರೀಕ್ಷಿಸಲು ಭಾರತೀಯ ಆಹಾರ ಸುರಕ್ಷತೆ ಮತ್ತು ಮಾನದಂಡಗಳ ಪ್ರಾಧಿಕಾರ (FSSAI) ಕೆಲವು ಸರಳ ಮನೆ ಪರೀಕ್ಷೆಗಳನ್ನು ಹಂಚಿಕೊಂಡಿದೆ. ಬೆಲ್ಲ ಕಲಬೆರಕೆ ಮಾಡುವುದೇಕೆ? ಬೆಲ್ಲದ ಬೆಲೆ ಹೆಚ್ಚಿರುವ ಕಾರಣದಿಂದ ಮತ್ತು ಹಬ್ಬದ ಋತುವಿನಲ್ಲಿ ಬೇಡಿಕೆ ಹೆಚ್ಚಾಗುವುದರಿಂದ ಕಲಬೆರಕೆ ಮಾಡಲಾಗುತ್ತದೆ. ರಚನೆ, ಬಣ್ಣ ಮತ್ತು ತೂಕ ಹೆಚ್ಚಿಸಲು ಅಗ್ಗದ ವಸ್ತುಗಳೊಂದಿಗೆ ಕಲಬೆರಕೆಯಾಗುವ ಸಾಧ್ಯತೆ ಹೆಚ್ಚಿರುತ್ತದೆ. ಮುಖ್ಯವಾಗಿ ಅಡುಗೆ ಸೋಡಾವನ್ನು (ಸೋಡಿಯಂ ಬೈಕಾರ್ಬೋನೇಟ್) ಕಲಬೆರಕೆ ಮಾಡಲಾಗುತ್ತದೆ. ಅಡುಗೆ ಸೋಡ ಬೆಲ್ಲದ ಚೂರುಗಳ ಹೊಳಪನ್ನು ಹೆಚ್ಚಿಸುತ್ತದೆ. ಆದರೆ ಬೆಲ್ಲದ ಪರಿಪೂರ್ಣತೆ ಮತ್ತು ರುಚಿಯನ್ನು ಬದಲಿಸುತ್ತದೆ. ಅಡುಗೆ ಸೋಡಾವನ್ನು ಬೆಲ್ಲದಲ್ಲಿ ಬೆರೆಸಿದ್ದಾರೆಯೇ ಎಂದು ತಿಳಿದುಕೊಳ್ಳಲು FSSAI ಸರಳವಾದ ಪರೀಕ್ಷೆಯನ್ನು ತಿಳಿಸಿದೆ. ಪರೀಕ್ಷೆಯ ವೀಡಿಯೋವನ್ನು FSSAI ‘ಎಕ್ಸ್’ ಸಾಮಾಜಿಕ ಜಾಲತಾಣದ ತನ್ನ ಖಾತೆಯಲ್ಲಿ ಪ್ರಕಟಿಸಿದೆ. ಪರೀಕ್ಷೆ ಮಾಡುವುದು ಹೇಗೆ? 1. ಕಾಲು ಚಮಚ ಪುಡಿ ಮಾಡಿದ ಬೆಲ್ಲವನ್ನು ಸಣ್ಣ ಗ್ಲಾಸ್ ಅಥವಾ ಟೆಸ್ಟ್ ಟ್ಯೂಬ್ಗೆ ಹಾಕಿ. 2. 3 ಮಿಲೀ ಹೈಡ್ರೋಕ್ಲೋರಿಕ್ ಆಮ್ಲವನ್ನು ಅದೇ ಟೆಸ್ಟ್ ಟ್ಯೂಬ್ಗೆ ಸೇರಿಸಿ. 3. ರಾಸಾಯನಿಕ ಕ್ರಿಯೆಯನ್ನು ಗಮನಿಸಿ. ಫಲಿತಾಂಶವಾಗಿ ಯಾವುದೇ ನೊರೆಗಳು ಬರದೆ ಇದ್ದರೆ ಬೆಲ್ಲ ಶುದ್ಧವೆಂದು ಭಾವಿಸಬೇಕು. ಫಲಿತಾಂಶವಾಗಿ ನೊರೆಗಳು ಕಂಡುಬಂದಲ್ಲಿ ಬೆಲ್ಲ ಕಲಬೆರಕೆಯಾಗಿದೆ ಎಂದು ತಿಳಿಯಬೇಕು. ಬೆಲ್ಲದಲ್ಲಿ ನೊರೆಗಳು ಬರುವುದೇಕೆ? ಬೆಲ್ಲದಲ್ಲಿ ಸೋಡಿಯಂ ಬೈಕಾರ್ಬೋನೇಟ್ ಇದ್ದಾಗ ನೊರೆಗಳು ಕಂಡುಬರುತ್ತವೆ. ಅದು ಹೈಡ್ರೋಕ್ಲೋರಿಕ್ ಆಮ್ಲದ ಜೊತೆಗೆ ರಾಸಾಯನಿಕ ಕ್ರಿಯೆಯಾಗಿ ಕಾರ್ಬನ್ ಡೈ ಆಕ್ಸೈಡ್ ಅನಿಲ ಬಿಡುಗಡೆಯಾಗಿ ನೊರೆಗಳು ಕಂಡುಬರುತ್ತವೆ. ಹೀಗೆ ನೊರೆಗಳು ಬಂದರೆ ಬೆಲ್ಲಕ್ಕೆ ಕಲಬೆರಕೆ ಮಾಡಲಾಗಿದೆ ಎಂದು ತಿಳಿದು ಬರಲಿದೆ. ವೀಡಿಯೋ ಜೊತೆಗೆ FSSAI ಎಚ್ಚರಿಕೆಯನ್ನೂ ಸೂಚಿಸಿದೆ. ಹಬ್ಬದ ಸಂದರ್ಭದಲ್ಲಿ ಬೆಲ್ಲಕ್ಕೆ ಬೇಡಿಕೆ ಏರುವಾಗ ಹೆಚ್ಚು ಜಾಗೃತರಾಗಿ ಪರೀಕ್ಷೆ ನಡೆಸಿ ಬೆಲ್ಲ ಶುದ್ಧವೇ ಎಂದು ಗಮನಿಸಬೇಕು ಎಂದು ಹೇಳಿದೆ. ಅಡುಗೆ ಸೋಡ ಸಣ್ಣ ಪ್ರಮಾಣದಲ್ಲಿದ್ದರೆ ಅಪಾಯಕಾರಿಯಲ್ಲ ಎಂದು ನಿಮಗೆ ಅನಿಸಬಹುದು. ಆದರೆ ಇದು ಬೆಲ್ಲದ ಸ್ವಾಭಾವಿಕ ಸಂಯೋಜನೆಯನ್ನು ಬದಲಿಸುತ್ತದೆ. ಜೀರ್ಣಕ್ರಿಯೆ ಮತ್ತು ಪೋಷಕಾಂಶಗಳ ಹೀರುವಿಕೆಯ ಮೇಲೆ ಪರಿಣಾಮ ಬೀರುತ್ತದ. ಕಲಬೆರಕೆ ಬೆಲ್ಲವನ್ನು ನಿತ್ಯವೂ ಸೇವಿಸುವುದರಿಂದ ಅದರ ಶುದ್ಧ ಲಾಭಗಳು ಸಿಗದಂತೆ ಮಾಡಬಹುದು. ಅಂದರೆ ಜೀರ್ಣಕ್ರಿಯೆಗೆ ಸಹಾಯ ಮಾಡುವುದು, ರೋಗ ನಿರೋಧಕ ಶಕ್ತಿ ಸುಧಾರಿಸುವುದು ಮತ್ತು ಶಕ್ತಿಯ ಮಟ್ಟವನ್ನು ಸುಧಾರಿಸುವಂತಹ ಲಾಭಗಳು ಸಿಗದೆ ಇರಬಹುದು. FSSAI ಏನನ್ನು ಶಿಫಾರಸು ಮಾಡಿದೆ? ಪ್ರಯೋಗಾಲಯದ ಪರೀಕ್ಷೆಗಳಿಗೆ ಹೋಲಿಸಿದರೆ ಮನೆಯಲ್ಲಿ ಮಾಡುವ ಪರೀಕ್ಷೆಗಳಲ್ಲಿ ಸಂಪೂರ್ಣವಾದ ಕಲಬೆರಕೆಯ ವಿವರಗಳು ಸಿಗದೆ ಇರಬಹುದು. ಆದರೆ ಜಾಗೃತರಾಗಿರಲು ಮತ್ತು ಉತ್ತಮ ಖರೀದಿ ಆಯ್ಕೆಗಳನ್ನು ಮಾಡಲು ಮನೆ ಪರೀಕ್ಷೆಗಳು ನೆರವಾಗಬಹುದು ಎಂದು FSSAI ಹೇಳಿದೆ. ಕಲಬೆರಕೆಯ ಬೆಲ್ಲದಿಂದ ಪಾರಾಗುವುದು ಹೇಗೆ? ಪ್ಯಾಕ್ ಮಾಡಿದ ಬೆಲ್ಲ ಖರೀದಿಸುವ ಮೊದಲು FSSAI ಲೈಸೆನ್ಸ್ ಸಂಖ್ಯೆಯನ್ನು ಗಮನಿಸಿ. ಹೆಚ್ಚು ಹೊಳೆಯುವ ಮತ್ತು ಪ್ರಕಾಶಮಾನವಾಗಿರುವ ಬೆಲ್ಲ ಖರೀದಿಸಬೇಡಿ. ಅದರಲ್ಲಿ ಕೃತಕ ಬಣ್ಣ ಅಥವಾ ಸೇರ್ಪಡೆಗಳಿರಬಹುದು. ವಿಶ್ವಾಸಾರ್ಹ ಬ್ರಾಂಡ್ಗಳು ಅಥವಾ ವ್ಯಾಪಾರಿಗಳಿಂದಲೇ ಗುಣಮಟ್ಟದ ಬೆಲ್ಲ ಖರೀದಿಸಿ. ಕಡು ಬಣ್ಣವಿರುವ ಕಡಿಮೆ ಸಂಸ್ಕರಿಸಿದ ಬೆಲ್ಲವನ್ನು ಆರಿಸಿಕೊಳ್ಳಿ. ಅಗ್ಗದ ಬೆಲ್ಲ ಖರೀದಿಸಬೇಡಿ. ಕಡಿಮೆ ಬೆಲೆಯೆಂದರೆ ಕಲಬೆರಕೆಯಾಗಿರುವ ಸಾಧ್ಯತೆ ಹೆಚ್ಚಿರುತ್ತದೆ. ಕಲಬೆರಕೆ ಕಂಡುಬಂದಲ್ಲಿ ಏನು ಮಾಡಬೇಕು? ಕಲಬೆರಕೆಯ ಬೆಲ್ಲ ಕಂಡುಬಂದಲ್ಲಿ ನೀವು ನೇರವಾಗಿ FSSAI ಆನ್ಲೈನ್ ಪೋರ್ಟಲ್ನಲ್ಲಿ ಅಥವಾ ಮೊಬೈಲ್ ಆ್ಯಪ್ನಲ್ಲಿ ದೂರು ಸಲ್ಲಿಸಬಹುದು. ಸ್ಥಳೀಯ ಆಹಾರ ಸುರಕ್ಷಾ ಇಲಾಖೆಯನ್ನೂ ಸಂಪರ್ಕಿಸಬಹುದು. ಇಂತಹ ಪ್ರಕರಣಗಳನ್ನು ವರದಿ ಮಾಡುವುದರಿಂದ ಅಧಿಕಾರಿಗಳು ಕಠಿಣ ಕ್ರಮ ಕೈಗೊಳ್ಳಲು ಮತ್ತು ಆಹಾರದ ಗುಣಮಟ್ಟ ನಿರ್ವಹಿಸಲು ಸಾಧ್ಯವಾಗುತ್ತದೆ.
ಗಣಿತದಲ್ಲಿ ಹಿಂದೆ ಬೀಳುವ ಮಕ್ಕಳು; ಸಂಶೋಧಕರು ಹೇಳುವುದೇನು?
ನಿಮ್ಮ ಮಕ್ಕಳು ಗಣಿತದ ಸಂಖ್ಯೆಗಳನ್ನು ಮತ್ತು ಸಣ್ಣ ಲೆಕ್ಕಗಳನ್ನು ಅರ್ಥ ಮಾಡಿಕೊಳ್ಳುವಲ್ಲಿ ಹಿಂದೆ ಬಿದ್ದಿದ್ದಾರೆಯೆ? ಸಮಸ್ಯೆ ಮೆದುಳಿನಲ್ಲಿದೆಯೇ ವಿನಾ ಮಕ್ಕಳ ಶೈಕ್ಷಣಿಕ ಪ್ರಯತ್ನದಲ್ಲಲ್ಲ! ಅನೇಕ ಮಕ್ಕಳಿಗೆ ಗಣಿತ ಎನ್ನುವುದು ಕಬ್ಬಿಣದ ಕಡಲೆ. ತಮ್ಮ ಸಮಕಾಲೀನ ಮಕ್ಕಳ ಸಮಕ್ಕೆ ಬರಲು ಹೆಣಗಾಡುತ್ತಾರೆ. ಅಜಾಗರೂಕತೆಯಿಂದ ತಪ್ಪುಗಳನ್ನು ಮಾಡುವುದು ಮತ್ತು ಒತ್ತಡದಲ್ಲಿ ತಪ್ಪು ಮಾಡುವುದು ಸಾಮಾನ್ಯವಾಗಿರುತ್ತದೆ. ಸಂಖ್ಯೆಗಳ ನಡುವಿನ ವ್ಯತ್ಯಾಸವನ್ನು ಕಂಡುಹಿಡಿಯುವುದು ಕೆಲವೊಮ್ಮೆ ವೈಯಕ್ತಿಕ ಸಮಸ್ಯೆ ಎಂದು ಕಂಡುಬರಬಹುದು. ಆದರೆ ಗಣಿತವನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗದ ಸಮಸ್ಯೆ ನಾವು ಯೋಚಿಸಿರುವುದಕ್ಕಿಂತ ಹೆಚ್ಚು ಸೂಕ್ಷ್ಮವಾಗಿರಬಹುದು ಮತ್ತು ಮೆದುಳಿನ ಆಳದಲ್ಲಿ ಅಡಗಿರಬಹುದು. ಮಕ್ಕಳು ಸಂಖ್ಯೆ ಮತ್ತು ಚಿಹ್ನೆಗಳ ಸಮಸ್ಯೆ ಏಕೆ ಎದುರಿಸುತ್ತಾರೆ? ಜರ್ನಲ್ ಆಫ್ ನ್ಯೂರೋಸೈನ್ಸ್ನಲ್ಲಿ ಪ್ರಕಟವಾದ ಹೊಸ ಅಧ್ಯಯನದಲ್ಲಿ ಬಹಿರಂಗವಾಗಿರುವ ಪ್ರಕಾರ, ಸರಳ ಗಣಿತದ ಲೆಕ್ಕಗಳನ್ನು ಕೊಟ್ಟಾಗ ಕಲಿಕೆಯ ಸಮಸ್ಯೆಯನ್ನು ಎದುರಿಸುವ ಮಕ್ಕಳು ತಮ್ಮ ಉತ್ತರದ ಬಗ್ಗೆ ಹೆಚ್ಚು ಜಾಗರೂಕರಾಗಿರುವುದಿಲ್ಲ ಮತ್ತು ದೋಷಗಳನ್ನು ಮಾಡಿದ ನಂತರವೂ ಗಣಿತದ ಸಮಸ್ಯೆ ಬಿಡಿಸುವುದನ್ನು ನಿಧಾನಗೊಳಿಸಲಿಲ್ಲ. ಗಣಿತದಲ್ಲಿ ಉತ್ತಮ ಕೌಶಲ್ಯವಿರುವ ಮಕ್ಕಳಲ್ಲಿ ಭಿನ್ನ ವರ್ತನೆ ಕಂಡುಬಂದಿದೆ. ಆದರೆ ಪರಿಮಾಣಗಳನ್ನು ಅರೆಬಿಕ್ ಸಂಖ್ಯೆಯ ಚಿಹ್ನೆಗಳಿಗೆ ಬದಲಾಗಿ ಚುಕ್ಕೆಗಳಲ್ಲಿ ಪ್ರತಿನಿಧಿಸಿದಾಗ ಮಕ್ಕಳಲ್ಲಿರುವ ವ್ಯತ್ಯಾಸ ಕಣ್ಮರೆಯಾಗಿರುವುದು ಕಂಡುಬಂದಿದೆ. ಈ ಸಂಶೋಧನೆಯು ವಿಜ್ಞಾನಿಗಳು ಬಹಳ ಹಿಂದಿನಿಂದಲೇ ಸಂಶಯಪಡುತ್ತಿದ್ದ ವಿಷಯವನ್ನು ಸಾಬೀತುಮಾಡಿದೆ. ಗಣಿತ ಕಲಿಕೆಯಲ್ಲಿ ಅಸಮರ್ಥತೆ ಹೊಂದಿರುವ ಮಕ್ಕಳು ಚಿಹ್ನೆಗಳನ್ನು ಪ್ರಕ್ರಿಯೆಗೊಳಿಸುವಲ್ಲಿ ವಿಫಲರಾಗುತ್ತಾರೆ. ಅಂದರೆ ಪರಿಮಾಣಗಳನ್ನು ಅರ್ಥಮಾಡಿಕೊಳ್ಳುವಲ್ಲಿ ಸಮಸ್ಯೆ ಇರುವುದಿಲ್ಲ. ಬದಲಾಗಿ ಲಿಖಿತ ಸಂಖ್ಯೆಗಳೊಂದಿಗೆ ವ್ಯವಹರಿಸುವುದು ಸಮಸ್ಯೆಯಾಗಿರುತ್ತದೆ. ಮೆದುಳಿನ ಸ್ಕ್ಯಾನ್ನಲ್ಲಿ ತಿಳಿದು ಬಂದಿರುವುದೇನು? ಎಂಆರ್ಐ ಸ್ಕ್ಯಾನಿಂಗ್ಗೆ ಒಳಪಡಿಸಿದಾಗ ತಿಳಿದು ಬಂದಿರುವ ಪ್ರಕಾರ ಗಣಿತದಲ್ಲಿ ಹಿಂದೆ ಇರುವ ಮಕ್ಕಳ ವೈಫಲ್ಯಕ್ಕೆ ಮಿಡಲ್ ಫ್ರಂಟಲ್ ಗೈರಸ್ನಲ್ಲಿ ಕಡಿಮೆ ಚಟುವಟಿಕೆಗೆ ತಳಕು ಹಾಕಿಕೊಂಡಿರುವುದು ತಿಳಿದುಬಂದಿದೆ. ಗಣಿತದ ಕಲಿಕೆಯಲ್ಲಿ ಮಿಡಲ್ ಫ್ರಂಟಲ್ ಗೈರಸ್ ಎನ್ನುವ ಭಾಗವು ಸಂಖ್ಯೆಗಳನ್ನು ಪ್ರಕ್ರಿಯೆಗೊಳಿಸುವುದು, ಗಮನ, ಪ್ರಚೋದನೆ ನಿಯಂತ್ರಣ ಮತ್ತು ಹೊಸ ಸನ್ನಿವೇಶಗಳಿಗೆ ಹೊಂದಿಕೊಳ್ಳುವಿಕೆಗೆ ಸಂಬಂಧಿಸಿದ ಮೆದುಳಿನ ಪ್ರದೇಶವಾಗಿದೆ. ಇದಲ್ಲದೆ ದೋಷಗಳ ನಂತರವೂ ನಿಧಾನಗೊಳಿಸದೆ ಇರುವುದಕ್ಕೂ ಕಾರಣವಿದೆ. ತಪ್ಪುಗಳನ್ನು ಪತ್ತೆ ಮಾಡುವ ಮತ್ತು ಕಾರ್ಯಕ್ಷಮತೆ ಮೇಲ್ವಿಚಾರಣೆ ಮಾಡುವ ಮೆದುಳಿನ ಭಾಗವಾಗಿರುವ ಮುಂಭಾಗದ ಸಿಂಗ್ಯುಲೇಟ್ ಕಾರ್ಟೆಕ್ಸ್ನಲ್ಲಿನ ಚಟುವಟಿಕೆಯ ಕೊರತೆಯಿಂದಾಗಿ, ದೋಷದ ಹೊರತಾಗಿಯೂ ಮಕ್ಕಳು ಸಮಸ್ಯೆ ಪರಿಹಾರವನ್ನು ನಿಧಾನಿಸುವುದಿಲ್ಲ. ಮಕ್ಕಳನ್ನು ಸಂಖ್ಯೆಯ ಚಿಹ್ನೆಗಳ ಬದಲಿಗೆ ಚುಕ್ಕೆಗಳೊಂದಿಗೆ ಪರೀಕ್ಷಿಸಿದಾಗ ಮೆದುಳಿನ ಚಟುವಟಿಕೆಯಲ್ಲಿನ ವ್ಯತ್ಯಾಸಗಳು ಸಂಪೂರ್ಣವಾಗಿ ಮರೆಯಾಯಿತು. ಅಂದರೆ ಗಣಿತ ಕಲಿಕೆಯಲ್ಲಿ ಕಡಿಮೆ ಸಾಮರ್ಥ್ಯ ಹೊಂದಿರುವ ಮಕ್ಕಳೂ ತಮ್ಮ ಸಮಕಾಲೀನರಂತೆ ಉತ್ತಮ ಪ್ರದರ್ಶನ ತೋರಿದರು. ಹಾಗಿದ್ದರೆ ಗಣಿತವನ್ನು ಭಿನ್ನವಾಗಿ ಕಲಿಸಬೇಕೆ? ಸಂಶೋಧಕರ ಪ್ರಕಾರ, ಮೆದುಳಿನಲ್ಲಿ ಒಂದು ಗಣಿತದ ಪ್ರದೇಶ ವಿಫಲಗೊಳ್ಳುವುದರಲ್ಲಿ ಗಣಿತದಲ್ಲಿನ ಮಕ್ಕಳ ವೈಫಲ್ಯವನ್ನು ವಿವರಿಸಲು ಸಾಧ್ಯವಿಲ್ಲ. ಬದಲಾಗಿ ಮಾಹಿತಿಯನ್ನು ಪ್ರಕ್ರಿಯೆಗೊಳಿಸುವ ಮತ್ತು ದೋಷಗಳನ್ನು ಪತ್ತೆ ಮಾಡುವ ಮೆದುಳಿನ ಪ್ರದೇಶಗಳು ಸಮಸ್ಯೆಯ ಕೇಂದ್ರವಾಗಿವೆ. ಹೀಗಾಗಿ ಗಣಿತದಲ್ಲಿ ಹಿಂದೆ ಬಿದ್ದಿರುವ ಮಕ್ಕಳಿಗೆ ಹೇಳಿಕೊಡುವ ನಿಟ್ಟಿನಲ್ಲಿ ಶಿಕ್ಷಣ ತಜ್ಞರು ಮತ್ತು ವಿಶೇಷಜ್ಞರಿಗೆ ಹೊಸ ಬಾಗಿಲು ತೆರೆದಂತಾಗಿದೆ. ಅಧ್ಯಯನವನ್ನು ನಡೆಸಿದ ಸಂಶೋಧಕರ ಪ್ರಕಾರ ಮಕ್ಕಳು ಸಮಸ್ಯೆಯನ್ನು ಹೇಗೆ ಪರಿಹರಿಸುತ್ತಿದ್ದಾರೆ ಎಂಬುದರ ಬಗ್ಗೆ ಸಕ್ರಿಯವಾಗಿ ಚಿಂತಿಸುವುದನ್ನು ಕಲಿಸುವುದು ಮತ್ತು ವಿಭಿನ್ನ ಸಮಸ್ಯೆ ಪರಿಹಾರ ತಂತ್ರಗಳನ್ನು ಅವರಿಗೆ ಪರಿಚಯಿಸುವುದು ಮಾಡಬೇಕಾಗುತ್ತದೆ. ಅಂದರೆ ಆಲೋಚನೆ ಮಾಡುವುದು ಮತ್ತು ಸ್ವಯಂ ಮೇಲ್ವಿಚಾರಣೆ ಎರಡರ ಬಗ್ಗೆಯೂ ತರಬೇತಿ ನೀಡುವುದನ್ನು ಒಳಗೊಂಡಿರುತ್ತದೆ. ಈ ನಿಟ್ಟಿನಲ್ಲಿ ಕಲಿಕೆಯು ಅಭಿವೃದ್ಧಿ ಹೊಂದಿಲ್ಲ ಎಂದು ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ. ಎರಡನೇ ಮತ್ತು ಮೂರನೇ ತರಗತಿಯ ಮಕ್ಕಳನ್ನು ಅಧ್ಯಯನ ಮಾಡಿ ಸಂಶೋಧನೆ ನಡೆಸಲಾಗಿದೆ. ಮಕ್ಕಳು ಹೇಗೆ ಗಣಿತದ ಸಮಸ್ಯೆಗಳನ್ನು ಹೇಗೆ ಪರಿಹರಿಸುತ್ತಿದ್ದಾರೆ ಎನ್ನುವ ಬಗ್ಗೆ ವಿವರವಾದ ಗಣಿತದ ವಿಶ್ಲೇಷಣೆ ಮಾಡಲಾಗಿತ್ತು. ಮಕ್ಕಳು ಸರಿಯಾದ ಉತ್ತರ ನೀಡಿದ್ದಾರೆಯೇ ಎನ್ನುವುದರ ಮೇಲೆ ಅಧ್ಯಯನದ ಗಮನವಿರಲಿಲ್ಲ. ಅವರು ಗಣಿತದ ಸಮಸ್ಯೆ ಪರಿಹರಿಸಲು ಯಾವ ವರ್ತನೆಯನ್ನು ತೋರಿಸಿದರು ಎಂದು ಗಮನಿಸಲಾಗಿತ್ತು. ಫಲಿತಾಂಶವನ್ನು ಅರ್ಥ ಮಾಡಿಕೊಳ್ಳುವುದರ ಜೊತೆಗೆ, ಗಣಿತದಲ್ಲಿ ಹಿಂದಿರುವ ಮತ್ತು ಮುಂದಿರುವ ಮಕ್ಕಳು ಸಮಸ್ಯೆಯನ್ನು ಹೇಗೆ ಭಿನ್ನವಾಗಿ ಬಿಡಿಸಿದರು ಎಂದು ಅರಿತುಕೊಳ್ಳುವುದು ಉದ್ದೇಶವಾಗಿತ್ತು. ಕೃಪೆ: indiatoday.in
''ತೆರಿಗೆ ಹೇರುವ ರಾಮಯ್ಯನಿಂದ ರಾಜ್ಯದಲ್ಲಿ 1.15 ಲಕ್ಷ ಕೋಟಿ ಸಾಲದ ಬಜೆಟ್ ಮಂಡನೆ''
ಬೆಂಗಳೂರು: ಕರ್ನಾಟಕ ಸರ್ಕಾರದ ಸಾಲದ ಬಗ್ಗೆ ಸ್ಪಷ್ಟನೆ ನೀಡಿದ್ದ ಸಿದ್ದರಾಮಯ್ಯ ಅವರು ವಿತ್ತೀಯ ಕೊರತೆ, ಕೇಂದ್ರದ ಅನುದಾನ ಅಸಹಕಾರ ಸೇರಿದಂತೆ ಹಲವು ಅಂಶಗಳನ್ನು ಬುಧವಾರ ವಿವರಿಸಿದ್ದರು. ಇದರ ಬೆನ್ನಲ್ಲೆ ಮುಖ್ಯಮಂತ್ರಿಗಳು 1.15 ಲಕ್ಷ ಕೋಟಿ ರೂ. ಸಾಲ ಮಾಡಿ ಕರ್ನಾಟಕ ಬಜೆಟ್ (Karnataka Budget 2026) ಮಂಡಿಸಲಿದ್ದಾರೆ. ಜನರಿಗೆ ಮತ್ತಷ್ಟು ತೆರಿಗೆ ಹೊರೆ ಹಾಕಲಾಗುತ್ತದೆ ಎಂದು ವಿಪಕ್ಷ
ತೊಕ್ಕೊಟ್ಟು | ಅರಣ್ಯಾಧಿಕಾರಿ ಮನೆಗೆ ಕನ್ನ: ಬೈಕ್ ಸಹಿತ ಲಕ್ಷಾಂತರ ರೂ. ಮೌಲ್ಯದ ನಗ-ನಗದು ಕಳವು
ಉಳ್ಳಾಲ: ಅರಣ್ಯಾಧಿಕಾರಿಯೋರ್ವರು ನೆಲೆಸಿದ್ದ ಬಾಡಿಗೆ ಮನೆಗೆ ಕನ್ನ ಹಾಕಿದ ಕಳ್ಳರು, ಅಂಗಳದಲ್ಲಿ ನಿಲ್ಲಿಸಿದ್ದ ಬೈಕ್ ಸಹಿತ ಹತ್ತೂವರೆ ಲಕ್ಷ ರೂಪಾಯಿ ನಗದು, 181 ಗ್ರಾಂ ಚಿನ್ನ ಮತ್ತು ಬೆಳ್ಳಿಯನ್ನು ದೋಚಿದ ಘಟನೆ ಉಳ್ಳಾಲ ಠಾಣಾ ವ್ಯಾಪ್ತಿಯ ಕಾಪಿಕಾಡುವಿನ ಅಂಬಿಕಾ ರೋಡ್ ಎಂಬಲ್ಲಿ ನಡೆದಿರುವುದು ವರದಿಯಾಗಿದೆ. ಕೋಟೆಕಾರು ಉಪವಲಯ ಅರಣ್ಯಾಧಿಕಾರಿ ಮೆಹಬೂಬ್ ಸಾಬ್ ಗುಡಿಹೊಲ ವಾಸವಿದ್ದ ಅಂಬಿಕಾ ರೋಡ್ ನಲ್ಲಿರುವ ಬಾಡಿಗೆ ಮನೆಯಲ್ಲಿ ಈ ಕಳ್ಳತನ ನಡೆದಿದೆ. ಮೆಹಬೂಬ್ ಸಾಬ್ ತನ್ನ ಪತ್ನಿ ಮತ್ತು ಪುಟ್ಟ ಮಗುವಿನೊಂದಿಗೆ ಅಂಬಿಕಾ ರೋಡ್ ನ ಬಾಡಿಗೆ ಮನೆಯಲ್ಲಿ ಕಳೆದ ಆರು ತಿಂಗಳುಗಳಿಂದ ವಾಸವಿದ್ದರು. ಕಳೆದ ಶುಕ್ರವಾರ ಮಧ್ಯಾಹ್ನ ಮೆಹಬೂಬ್ ಕುಟುಂಬದೊಂದಿಗೆ ತನ್ನ ಊರಾದ ಕೊಪ್ಪಳಕ್ಕೆ ತೆರಳಿದ್ದರು. ಇಂದು ಬೆಳಗ್ಗೆ ಊರಿಂದ ಮರಳಿದಾಗ ಈ ಕಳವು ಕೃತ್ಯ ಬೆಳಕಿಗೆ ಬಂದಿದೆ. ಮನೆಯೊಳಗೆ ನುಗ್ಗಿದ ಕಳ್ಳರು ಹಾಲ್ ಮತ್ತು ಎರಡು ಕೋಣೆಯೊಳಗಿನ ಕಪಾಟುಗಳನ್ನು ಜಾಲಾಡಿದ್ದು ,ಲಾಕರ್ ಗಳಲ್ಲಿದ್ದ 181 ಗ್ರಾಂ ಚಿನ್ನ, ಮಗುವಿನ ಬೆಳ್ಳಿಯ ಆಭರಣಗಳು ಹಾಗೂ ಮೆಹಬೂಬ್ ಬ್ಯಾಂಕಿಂದ ಸಾಲ ಪಡೆದಿದ್ದ ಹತ್ತೂವರೆ ಲಕ್ಷ ರೂ. ನಗದನ್ನ ದೋಚಿದ್ದಾರೆ ಎಂದು ಪೊಲೀಸ್ ದೂರಿನಲ್ಲಿ ತಿಳಿಸಲಾಗಿದೆ. ಘಟನಾ ಸ್ಥಳಕ್ಕೆ ಉಳ್ಳಾಲ ಪೊಲೀಸರು,ಶ್ವಾನದಳ,ಬೆರಳಚ್ಚು ತಜ್ನರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಪ್ರಕರಣ ದಾಖಲಿಸಿ ತನಿಖೆ ಕೈಗೆತ್ತಿಕೊಂಡಿದ್ದಾರೆ.
ಟೇಪ್ ಬಾಲ್ ಚಾಂಪಿಯನ್ ಶಿಪ್ | ಅದ್ಭುತ ಕ್ಯಾಚ್ ಹಿಡಿದ ಪ್ರೇಕ್ಷಕನಿಗೆ 20 ಸಾವಿರ ರೂ. ಬಹುಮಾನ!
ವಿಡಿಯೊ ವೈರಲ್
ಚಿಕ್ಕಮಗಳೂರು : ಇರಾನ್ಗೆ ತೆರಳಿದ್ದ ಯುವಕ ಸಂಪರ್ಕಕ್ಕೆ ಸಿಗದೆ ಪೋಷಕರು ಕಂಗಾಲು
ಇಸ್ರೇಲ್- ಇರಾನ್ ನಡುವಿನ ಬಿಕ್ಕಟ್ಟಿನಿಂದ ಮಧ್ಯಪ್ರಾಚ್ಯ ದೇಶಗಳಲ್ಲಿ ಉದ್ವಿಗ್ನತೆ ಉಂಟಾಗಿದೆ. ದುಬೈಗೆ ಪ್ರವಾಸಕ್ಕೆಂದು ತೆರಳಿರುವ ಕನ್ನಡಿಗರು ಸಿಲುಕಿದ್ದಾರೆ. ಕೆಲವರು ವಾಪಸ್ ಬೆಂಗಳೂರಿಗೆ ಬಂದಿದ್ದರೆ, ಇನ್ನು ಕೆಲವರ ಸಂಪರ್ಕವೇ ಸಿಗುತ್ತಿಲ್ಲ. ಮರ್ಚೆಂಟ್ ನೇವಿಯಿಂದ ಕೆಲಸದ ನಿಮಿತ್ತ ಇರಾನ್ಗೆ ತೆರಳಿದ್ದ ಯುವಕ ಸಂಪರ್ಕಕ್ಕೆ ಸಿಗದೆ ಪೋಷಕರು ಕಂಗಾಲಾಗಿದ್ದಾರೆ. ಕೊಪ್ಪ ತಾಲೂಕಿನ ಹಿರೇಕೊಡಿಗೆ ಗ್ರಾ.ಪಂ. ವ್ಯಾಪ್ತಿಯ ಗಡಿಕಲ್ ಗಣಪತಿ ಕಟ್ಟೆಯ ಯುವಕ.
ಗುರುತ್ವಾಕರ್ಷಣೆ ಇಲ್ಲದ ಸ್ಥಳದಲ್ಲಿ 24 ಗಂಟೆಗಳು ಕಳೆದರೆ ನಿಮ್ಮ ದೇಹದಲ್ಲಿ ಏನಾಗುತ್ತದೆ?
ಆರೋಗ್ಯವಂತ ವ್ಯಕ್ತಿಗಳಿಗೆ 24 ಗಂಟೆಗಳ ಕಾಲ ಗುರುತ್ವವಿಲ್ಲದ ಕೋಣೆಯಲ್ಲಿರುವುದರಿಂದ ಹೆಚ್ಚು ಹಾನಿಯಾಗುವುದಿಲ್ಲ. ಆದರೆ ರಕ್ತಪರಿಚಲನೆ, ಸಮತೋಲನ ಮತ್ತು ಮೆದುಳಿನ ಕಾರ್ಯದಲ್ಲಿ ಗಣನೀಯ ಬದಲಾವಣೆ ಆಗುತ್ತದೆ. ಗುರುತ್ವವೇ ಇಲ್ಲದ ಕೋಣೆಗೆ ಹೋಗುವುದನ್ನು ಊಹಿಸಿ ನೋಡಿ. ಅಲ್ಲಿ ನಿಮ್ಮ ದೇಹ ತೇಲಾಡುತ್ತಿದೆ ಮತ್ತು ತೂಕರಹಿತವಾಗಿರುತ್ತದೆ. ಆದರೆ ದೇಹದ ಒಳಗೆ ಎಲ್ಲವೂ ವೇಗವಾಗಿ ಬದಲಾಗುತ್ತವೆ. ಆರೋಗ್ಯವಂತ ವ್ಯಕ್ತಿಗಳಿಗೆ 24 ಗಂಟೆಗಳ ಕಾಲ ಗುರುತ್ವವಿಲ್ಲದ ಕೋಣೆಯಲ್ಲಿರುವುದರಿಂದ ಹೆಚ್ಚು ಹಾನಿಯಾಗುವುದಿಲ್ಲ. ಆದರೆ ರಕ್ತಪರಿಚಲನೆ, ಸಮತೋಲನ ಮತ್ತು ಮೆದುಳಿನ ಕಾರ್ಯದಲ್ಲಿ ಗಣನೀಯ ಬದಲಾವಣೆ ಆಗುತ್ತದೆ. 24 ಗಂಟೆಗಳಲ್ಲಿ ದೇಹದಲ್ಲಿ ಆಗುವ ಬದಲಾವಣೆ ಆರೋಗ್ಯವಂತ ವ್ಯಕ್ತಿ 24 ಗಂಟೆಗಳ ಕಾಲ ಶೂನ್ಯ ಗುರುತ್ವದಲ್ಲಿ ಇದ್ದರೆ ಕೆಲವೇ ನಿಮಿಷಗಳಲ್ಲಿ ದೇಹ ಹೊಸ ಪರಿಸರಕ್ಕೆ ಹೊಂದಿಕೊಳ್ಳುತ್ತದೆ ಎನ್ನುತ್ತಾರೆ ಗುರುಗ್ರಾಮ್ನ ಪಾರಸ್ ಹೆಲ್ತ್ನ ಇಂಟರ್ನಲ್ ಮೆಡಿಸಿನ್ ಮುಖ್ಯಸ್ಥರಾದ ಡಾ ಆರ್ ಆರ್ ದತ್ತಾ. ಭೂಮಿಯ ಮೇಲಿರುವಾಗ ಗುರುತ್ವಾಕರ್ಷಣೆಯು ರಕ್ತವನ್ನು ಕಾಲುಗಳ ಕಡೆಗೆ ಎಳೆಯುತ್ತದೆ. ತೂಕವಿಲ್ಲದಿರುವಾಗ ಭೂಮಿಯ ಕಡೆಗಿನ ಸೆಳೆತ ಕಡಿಮೆಯಾಗುತ್ತದೆ. ರಕ್ತ ಮತ್ತು ಇತರ ದ್ರವಗಳು ಎದೆ ಮತ್ತು ತಲೆಯ ಕಡೆಗೆ ಚಲಿಸುತ್ತವೆ ಮತ್ತು ಮುಖದಲ್ಲಿ ಊತ ಕಾಣಿಸಿಕೊಳ್ಳುವುದು, ಮೂಗಿನಲ್ಲಿ ದಟ್ಟಣೆ ಮತ್ತು ಕೆಲವೊಮ್ಮೆ ಸಣ್ಣ ತಲೆನೋವು ಕಾಣಿಸಿಕೊಳ್ಳಬಹುದು. “ಆರಂಭಿಕ ಸಮಯದಲ್ಲಿ ಕೆಳಗಿನ ಅಂಗಗಳಲ್ಲಿ ಸಂಗ್ರಹವಾಗುವ ರಕ್ತವು ಗುರುತ್ವಾಕರ್ಷಣೆ ಇಲ್ಲದ ಕಾರಣ ಎದೆ ಮತ್ತು ತಲೆಯ ಕಡೆಗೆ ಚಲಿಸುತ್ತದೆ. ದೇಹ ಇದನ್ನು ಹೆಚ್ಚುವರಿ ದ್ರವ ಎಂದು ತಿಳಿದುಕೊಂಡು ಮೂತ್ರ ವಿಸರ್ಜನೆಯನ್ನು ಹೆಚ್ಚಿಸುವ ಮೂಲಕ ಪ್ರತಿಕ್ರಿಯಿಸುತ್ತದೆ. ಪರಿಣಾಮವಾಗಿ ಪ್ಲಾಸ್ಮಾ ಪ್ರಮಾಣವು ಮೊದಲ 24 ಗಂಟೆಗಳಲ್ಲಿ ಕಡಿಮೆಯಾಗಲು ಪ್ರಾರಂಭವಾಗುತ್ತದೆ. ಹೃದಯ ಮತ್ತು ರಕ್ತದೊತ್ತಡದಲ್ಲಿ ಬದಲಾವಣೆ ಗುರುತ್ವವಿಲ್ಲದೆ ಇದ್ದಾಗ ಹೃದಯವು ರಕ್ತವನ್ನು ಮೇಲಕ್ಕೆ ಪಂಪ್ ಮಾಡಲು ಹೆಚ್ಚು ಶ್ರಮಪಡುವ ಅಗತ್ಯವಿರುವುದಿಲ್ಲ. ತೂಕವಿಲ್ಲದ ಸ್ಥಿತಿಯಲ್ಲಿ ಸುಗಮವಾಗಿ ಹೃದಯದಿಂದ ರಕ್ತವು ಮೆದುಳಿಗೆ ಮತ್ತು ದೇಹಕ್ಕೆ ಪಂಪ್ ಆಗುತ್ತದೆ. ಆರಂಭದಲ್ಲಿ ರಕ್ತದೊತ್ತಡದಲ್ಲಿ ಸೌಮ್ಯ ಏರಿಳಿತಗಳು ಇರಬಹುದು, ಆದರೆ ಪ್ಲಾಸ್ಮಾ ಪ್ರಮಾಣ ಕಡಿಮೆಯಾದಂತೆ ರಕ್ತದೊತ್ತಡ ಕಡಿಮೆಯಾಗಬಹುದು. 24 ಗಂಟೆಗಳಲ್ಲಿ ಈ ಹೃದಯ ಸಂಬಂಧಿ ಬದಲಾವಣೆಗಳು ಸೂಕ್ಷ್ಮವಾಗಿರುತ್ತವೆ ಮತ್ತು ಸಾಮಾನ್ಯವಾಗಿ ಆರೋಗ್ಯವಂತ ವ್ಯಕ್ತಿಗಳು ಈ ಬದಲಾವಣೆಯನ್ನು ಸಹಿಸಿಕೊಳ್ಳುವ ಸಾಮರ್ಥ್ಯ ಹೊಂದಿರುತ್ತಾರೆ. ಮುಖ್ಯವಾಗಿ ಒಂದು ದಿನದಲ್ಲಿ ಸ್ನಾಯು ಕ್ಷೀಣತೆ ಅಥವಾ ಮೂಳೆ ನಷ್ಟವಾಗುವುದಿಲ್ಲ. ವಾರಗಳವರೆಗೆ ಅಥವಾ ದಿನಗಟ್ಟಲೆ ಗುರುತ್ವರಹಿತ ಪರಿಸರದಲ್ಲಿ ಇದ್ದಲ್ಲಿ ಸ್ನಾಯು ಕ್ಷೀಣತೆ ಮತ್ತು ಮೂಳೆ ವಿಖನಿಜೀಕರಣ (ಖನಿಜ ಪದಾರ್ಥಗಳಾದ ಲವಣಗಳು ಮೊದಲಾದವು ತೆಗೆಯುವುದು) ಕಂಡುಬರಬಹುದು. ಹೀಗಾಗಿ 24 ಗಂಟೆಗಳಲ್ಲಿ ಹೆಚ್ಚು ದೌರ್ಬಲ್ಯಗಳು ಕಂಡುಬರುವುದಿಲ್ಲ. ಪಾರಸ್ ಹೆಲ್ತ್ನಲ್ಲಿ ನರವಿಜ್ಞಾನಿಯಾಗಿರುವ ಪೂಜಾ ಆನಂದ್ ಹೇಳುವ ಪ್ರಕಾರ, ನರವೈಜ್ಞಾನಿಕ ದೃಷ್ಟಿಕೋನದಿಂದ, ಶೂನ್ಯ ಗುರುತ್ವಾಕರ್ಷಣೆಯ ಬಹಳ ಭ್ರಾಂತಿಗೆ ಒಳಪಡುವಂತಹದು. ಭಂಗಿ ಮತ್ತು ದೃಷ್ಟಿಕೋನಕ್ಕಾಗಿ ಮೆದುಳು ನಿರಂತರವಾಗಿ ಕಿವಿ, ಕಣ್ಣು, ಸ್ನಾಯು ಮತ್ತು ಕೀಲುಗಳಿಂದ ವಿವರಗಳನ್ನು ಪಡೆದುಕೊಳ್ಳುತ್ತದೆ. ಗುರುತ್ವದ ಕೊರತೆಯಲ್ಲಿ ಈ ಸಂಘಟಿತ ವ್ಯವಸ್ಥೆಗೆ ಅಡ್ಡಿಯಾಗಿರುತ್ತದೆ. ಒಳಗಿನ ಕಿವಿಯ ವೆಸ್ಟಿಬ್ಯುಲರ್ ಅಪರಟಸ್ ಎನ್ನುವ ಗುರುತ್ವಾಕರ್ಷಣೆಯನ್ನು ಗ್ರಹಿಸುವ ಒಟೋಲಿತ್ ಅಂಗಗಳು ಸಾಮಾನ್ಯವಾಗಿ ಕಾರ್ಯನಿರ್ವಹಣೆ ಮಾಡುವುದಿಲ್ಲ. ಹೀಗಾಗಿ ದೃಶ್ಯ ಸೂಚನೆಗಳು ಮತ್ತು ಸಮತೋಲನದ ನಡುವಿನ ಸಂಕೇತಗಳ ಹೊಂದಾಣಿಕೆ ತಪ್ಪುತ್ತದೆ. ಮೆದುಳಿಗೆ ಸೂಕ್ತ ಮಾಹಿತಿ ಹೋಗದೆ ಗೊಂದಲಗೊಳ್ಳುತ್ತದೆ. ಕೆಲವೊಮ್ಮೆ ವಾಖರಿಕೆ, ತಲೆತಿರುಗುವುದು ಮತ್ತು ವಾಂತಿಯಾಗುತ್ತದೆ. ಸಾಮಾನ್ಯವಾಗಿ ಇದನ್ನು ಬಾಹ್ಯಾಕಾಶ ಚಲನೆಯ ಕಾಯಿಲೆ ಎಂದು ಕರೆಯಲಾಗುತ್ತದೆ. ಮೆದುಳು ಮರಳಿ ಎಲ್ಲವನ್ನೂ ಹೊಂದಿಸಿಕೊಳ್ಳುವ ಕಾರಣದಿಂದ 24ರಿಂದ 48 ಗಂಟೆಗಳಲ್ಲಿ ಈ ಸಮಸ್ಯೆ ಸುಧಾರಿಸುತ್ತದೆ.” ಮರಳಿ ಗುರುತ್ವಕ್ಕೆ ಬರುವ ಸಮಸ್ಯೆ ಅಚ್ಚರಿಯೆಂದರೆ ಗುರುತ್ವವನ್ನು ಬಿಡುವುದಕ್ಕಿಂತ ಹೆಚ್ಚಾಗಿ ಮರಳಿ ಬರುವುದು ದೊಡ್ಡ ಸಮಸ್ಯೆಯಾಗಿರುತ್ತದೆ. ಶೂನ್ಯ ಗುರುತ್ವಕ್ಕೆ ಒಮ್ಮೆ ದ್ರವದ ಮಟ್ಟಗಳು ಹೊಂದಿಕೆಯಾದ ಮೇಲೆ ಗುರುತ್ವಕ್ಕೆ ಬಂದಾಗ ಮತ್ತೆ ರಕ್ತ ಕಾಲುಗಳ ಕಡೆಗೆ ಹರಿಯಲಾರಂಭಿಸುತ್ತದೆ. ಹೀಗಾಗಿ ತಾತ್ಕಾಲಿಕವಾಗಿ ಮೆದುಳಿಗೆ ರಕ್ತದ ಹರಿವು ಕಡಿಮೆಯಾಗುತ್ತದೆ. ಹೀಗಾಗಿ ತಲೆತಿರುಗುವಿಕೆ ಮತ್ತು ಪ್ರಜ್ಞೆ ತಪ್ಪುವ ಸಾಧ್ಯತೆಯೂ ಹೆಚ್ಚಾಗಿರುತ್ತದೆ. ಈ ಸ್ಥಿತಿಯನ್ನು ಆರ್ತೊಸ್ಟಾಟಿಕ್ ಇನ್ಟಾಲರೆನ್ಸ್ ಎಂದು ಕರೆಯಲಾಗುತ್ತದೆ. ವೆಸ್ಟಿಬ್ಯುಲರ್ ವ್ಯವಸ್ಥೆ ಮತ್ತೆ ಗುರುತ್ವಕ್ಕೆ ಹೊಂದಿಕೊಳ್ಳಬೇಕಾಗುತ್ತದೆ. ಹೀಗಾಗಿ ಸ್ವಲ್ಪ ಸಮಯದವವರೆಗೆ ತಲೆ ಹಗುರವಾಗುವುದು ಅಥವಾ ಅಸಮತೋಲನದ ಅನುಭವವಾಗಬಹುದು. 24 ಗಂಟೆಗಳು ಅಪಾಯಕಾರಿಯೆ? ಆರೋಗ್ಯಕರ ವ್ಯಕ್ತಿಗೆ ಶೂನ್ಯ ಗುರುತ್ವದಲ್ಲಿ ಒಂದು ದಿನ ಕಳೆಯುವುದು ಅಹಿತಕರವೆನಿಸಬಹುದು ಆದರೆ ಹಾನಿಕರವಲ್ಲ. ಮುಖ ಊದಿಕೊಳ್ಳಬಹುದು, ವಾಕರಿಕೆ, ತಲೆತಿರುಗುವಿಕೆ ಮತ್ತು ತಾತ್ಕಾಲಿಕ ಸಮನ್ವಯದ ಬದಲಾವಣೆಯನ್ನು ಎದುರಿಸಬಹುದು. ಆದರೆ, ಶಾಶ್ವತವಾದ ಸ್ನಾಯು ಅಥವಾ ಮೂಳೆ ಹಾನಿಯಾಗುವುದಿಲ್ಲ. ಗುರುತ್ವಾಕರ್ಷಣೆ ಇಲ್ಲದೆ ಇದ್ದಾಗಲೂ ಮಾನವ ದೇಹ ಬೇಗನೇ ಹೊಂದಿಕೊಳ್ಳುತ್ತದೆ. ಕೃಪೆ: indianexpress.com
ಇರಾನ್-ಅಮೆರಿಕಾ ನಡುವೆ ಉದ್ವಿಗ್ನತೆ ಹೆಚ್ಚಾಗುತ್ತಿದ್ದು, ಇದು ಹಿಂದೂಮಹಾಸಾಗರದವರೆಗೂ ವ್ಯಾಪಿಸಿದೆ. ಭಾರತದಿಂದ ಇರಾನ್ ನತ್ತ ಹೊರಟ್ಟಿದ್ದ ಇರಾನ್ ನ ಐರಿಸ್ ದೆನಾ ಯುದ್ಧ ನೌಕೆಯನ್ನು ಅಮೆರಿಕಾ ಹಿಂದೂಮಹಾಸಾಗರದಲ್ಲಿ ಹೊಡೆದುರುಳಿಸುವ ಹಂತಕ್ಕೆ ತಲುಪಿತ್ತು. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಇರಾನ್ ಸದ್ಯ ಉತ್ತರ ಪರ್ಶಿಯನ್ ಕೊಲ್ಲಿಯಲ್ಲಿದ್ದ ಅಮೆರಿಕಾದ ಟ್ಯಾಂಕರ್ ಮೇಲೆ ದಾಳಿ ಮಾಡಿದೆ. ಇನ್ನು, ಹಿಂದೂ ಮಹಾಸಾಗರದಲ್ಲಿ ಮತ್ತೊಂದು ಇರಾನ್ ನ ನೌಕೆಯಿದ್ದು, ಇದೀಗ ಶ್ರೀಲಂಕಾದ ಕರಾಳಿಯತ್ತ ನುಗ್ಗುತ್ತಿದ್ದು, ಅಮೆರಿಕಾದಿಂದ ದಾಳಿಯ ಆತಂಕದಲ್ಲಿ ಶ್ರೀಲಂಕಾ ಇದೆ. ಈ ಕುರಿತ ವರದಿ ಇಲ್ಲಿದೆ..
ಸಚಿನ್ ಪುತ್ರ ಅರ್ಜುನ್ ತೆಂಡೂಲ್ಕರ್-ಸಾನಿಯಾ ಚಾಂದೋಕ್ ಅದ್ಧೂರಿ ವಿವಾಹ
Arjun Tendulkar-Saaniya Chandhok Wedding: ಭಾರತೀಯ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರ ಪುತ್ರ ಅರ್ಜುನ್ ತೆಂಡೂಲ್ಕರ್ ಇಂದು (ಮಾರ್ಚ್ 5) ಮುಂಬೈನಲ್ಲಿ ಸಾನಿಯಾ ಚಾಂದೋಕ್ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಅದ್ಧೂರಿಯಾಗಿ ನಡೆದ ಈ ಮದುವೆ ಸಮಾರಂಭದಲ್ಲಿ ಕುಟುಂಬಸ್ಥರು, ಆಪ್ತ ಸ್ನೇಹಿತರು, ಕ್ರೀಡಾ ಮತ್ತು ರಾಜಕೀಯ ಕ್ಷೇತ್ರದ ಗಣ್ಯರು ಪಾಲ್ಗೊಂಡು ನವದಂಪತಿಗಳಿಗೆ ಶುಭಕೋರಿದರು. ಸಾಮಾಜಿಕ ಮಾಧ್ಯಮದಲ್ಲಿ
ಅಮೆರಿಕಾ- ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧ ದಿನದಿಂದ ದಿನಕ್ಕೆ ಭೀಕರ ಸ್ಥಿತಿಗೆ ಹೋಗುತ್ತಿದೆ. ಈ ನಡುವೆ ಇರಾನ್ ಗಲ್ಫ್ ರಾಷ್ಟ್ರಗಳಲ್ಲಿ ಇರುವ ಅಮೆರಿಕಾ ಸೇನಾ ನೆಲೆಗಳ ಮೇಲೆ ದಾಳಿ ನಡೆಸುತ್ತಿದೆ. ಹೀಗಾಗಿ ಅರಬ್ ರಾಷ್ಟ್ರಗಳಲ್ಲಿ ಆತಂಕದ ಸ್ಥಿತಿ ನಿರ್ಮಾಣವಾಗಿದೆ. ಈ ವಿಚಾರವಾಗಿ ಅನಿವಾಸಿ ಭಾರತೀಯ ಕೋಶದ ಮಾಜಿ ಉಪಾಧ್ಯಕ್ಷೆ ಹಾಗೂ ವಿಧಾನಪರಿಷತ್ ಸದಸ್ಯರಾದ ಡಾ. ಆರತಿ ಕೃಷ್ಣ ಅವರು ವಿಜಯ ಕರ್ನಾಟಕ ವೆಬ್ ಜೊತೆಗೆ ಮಾತುಕತೆ ನಡೆಸಿದ್ದಾರೆ. ಗಲ್ಫ್ ಕನ್ನಡಿಗರೇ ಆತಂಕ ಬೇಡ: ಸಂಕಷ್ಟದಲ್ಲಿರುವವರ ರಕ್ಷಣೆಗೆ ಸರ್ಕಾರ ಬದ್ಧವಾಗಿದೆ ಎಂದು ಹೇಳಿದ್ದಾರೆ.
ಹಾಸನ | ಲೋಕಾಯುಕ್ತ ದಾಳಿ: ಮನೆ ಬಾಗಿಲು ತೆರೆಯದೆ ನಾಲ್ಕು ಗಂಟೆ ಸತಾಯಿಸಿದ ಮನಪಾ ಎಇಇ!
ಬಾಗಿಲು ತೆರೆಯುವಂತೆ ಮಾಡಿದ ನಿರಂತರ ಮನವಿಗೆ ಸ್ಪಂದಿಸದ ಅಧಿಕಾರಿ
Shiva rajkumar: ಹೆಣ್ಣು ಮಕ್ಕಳು, ನಟಿಯರ ಗೌರವಕ್ಕೆ ಚ್ಯುತಿ ತರಬೇಡಿ ಎಂದ ಶಿವಣ್ಣ: ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್
Shiva rajkumar: ಕನ್ನಡ ಚಿತ್ರರಂಗದಲ್ಲಿ #ActorsNotObjects (ನಟಿಯರು ವಸ್ತುಗಳಲ್ಲ) ಎನ್ನುವ ಅಭಿಯಾನವು ಮುಂದುವರಿದಿದೆ. ಇದೀಗ ಈ ವಿಚಾರವಾಗಿ ಸೋಷಿಯಲ್ ಮೀಡಿಯಾ ಎಕ್ಸ್ನಲ್ಲಿ ನಟ ಶಿವರಾಜ್ ಕುಮಾರ್ ಅವರು ಟ್ವೀಟ್ವೊಂದನ್ನು ಮಾಡಿದ್ದು, ಈ ಟ್ವೀಟ್ಗೆ ಕನ್ನಡಿಗರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ನಟ ಶಿವರಾಜ್ ಕುಮಾರ್ ಅವರ ಟ್ವೀಟ್ಗೆ ಹಲವರು ಬೆಂಬಲ ಸೂಚಿಸಿದ್ದರೆ, ಈ ಕಾಲದಲ್ಲೂ ಹೆಣ್ಣು ಮಕ್ಕಳನ್ನು ಗೌರವಿಸಿ
ರಾಜ್ಯಸಭಾ ಚುನಾವಣೆ | ನಾಮಪತ್ರ ಸಲ್ಲಿಸಿದ ನಿತೀಶ್ ಕುಮಾರ್
ಪಾಟ್ನಾ: ರಾಜ್ಯಸಭೆ ಚುನಾವಣೆಗೆ ಬಿಹಾರ ಸಿಎಂ, ಜೆಡಿಯು ಮುಖ್ಯಸ್ಥ ನಿತೀಶ್ ಕುಮಾರ್ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ, ಉಪಮುಖ್ಯಮಂತ್ರಿ ಸಾಮ್ರಾಟ್ ಚೌಧರಿ ಅವರ ಸಮ್ಮುಖದಲ್ಲಿ ನಿತೀಶ್ ಕುಮಾರ್ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಬಿಹಾರದ ಮುಖ್ಯಮಂತ್ರಿಯಾಗಿ ನಿತೀಶ್ ಕುಮಾರ್ ದಾಖಲೆಯ 10ನೇ ಅವಧಿಗೆ ಪ್ರಮಾಣ ವಚನ ಸ್ವೀಕರಿಸಿದ್ದರು. ಇದಾದ ಕೇವಲ ನಾಲ್ಕು ತಿಂಗಳಲ್ಲಿ ಬಿಹಾರದಲ್ಲಿ ಮಹತ್ವದ ರಾಜಕೀಯ ಬೆಳವಣಿಗೆ ನಡೆದಿದೆ. ಬಿಹಾರದ ಮುಂದಿನ ಸಿಎಂ ಯಾರಾಗಲಿದ್ದಾರೆ ಎಂಬ ಕುತೂಹಲ ಮೂಡಿದೆ.
ನೂತನ ತಾಲೂಕಾದರೂ ಇಲ್ಲ ಸೌಲಭ್ಯ; ಆಲಮೇಲಕ್ಕೆ ಬೇಕಿದೆ ಬಸ್ ಡಿಪೊ
ಆಲಮೇಲ: ವಿಜಯಪುರ ಜಿಲ್ಲೆಯ ಪ್ರಮುಖ ವಾಣಿಜ್ಯ ಮತ್ತು ಶೈಕ್ಷಣಿಕ ಕೇಂದ್ರವಾಗಿ ಬೆಳೆಯುತ್ತಿರುವ ಆಲಮೇಲ ಪಟ್ಟಣವು ತಾಲೂಕು ಕೇಂದ್ರವಾಗಿ ಘೋಷಣೆಯಾಗಿ ವರ್ಷಗಳೇ ಕಳೆದರೂ, ಇಲ್ಲಿಯವರೆಗೆ ಸ್ವಂತ ಬಸ್ ಡಿಪೊ ಹೊಂದಿಲ್ಲದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಸುತ್ತಮುತ್ತಲ ನೂರಾರು ಹಳ್ಳಿಗಳ ಸಂಪರ್ಕ ಕೊಂಡಿಯಾಗಿರುವ ಈ ಭಾಗಕ್ಕೆ ಪ್ರತ್ಯೇಕ ಡಿಪೊ ಮಂಜೂರಾತಿ ಈಗ ಅನಿವಾರ್ಯವಾಗಿದೆ. ಆಲಮೇಲವು ಭೌಗೋಳಿಕವಾಗಿ ಮಹಾರಾಷ್ಟ್ರದ ಗಡಿಗೆ ಹತ್ತಿರದಲ್ಲಿದೆ. ಪ್ರತಿನಿತ್ಯ ಇಲ್ಲಿಂದ ಸಾವಿರಾರು ವಿದ್ಯಾರ್ಥಿಗಳು, ನೌಕರರು ಮತ್ತು ವ್ಯಾಪಾರಸ್ಥರು ವಿಜಯಪುರ, ಸಿಂದಗಿ, ಕಲ್ಬುರ್ಗಿ ಹಾಗೂ ಸೊಲ್ಲಾಪುರಕ್ಕೆ ಸಂಚರಿಸುತ್ತಾರೆ. ಆದರೆ, ಇಲ್ಲಿ ಬಸ್ ಡಿಪೊ ಇಲ್ಲದ ಕಾರಣ ಪಕ್ಕದ ಸಿಂದಗಿ ಅಥವಾ ಇಂಡಿ ಡಿಪೊಗಳಿಂದ ಬರುವ ಬಸ್ಗಳನ್ನೇ ಅವಲಂಬಿಸಬೇಕಾದ ಅನಿವಾರ್ಯತೆ ಇದೆ. ಇದರಿಂದಾಗಿ ಸರಿಯಾದ ಸಮಯಕ್ಕೆ ಬಸ್ಗಳು ಲಭ್ಯವಾಗದೆ ಜನರು ಪರದಾಡುವಂತಾಗಿದೆ. ಸರಕಾರಿ ಜಮೀನು ಲಭ್ಯ: ಯಾವುದೇ ಒಂದು ಬಸ್ ಡಿಪೊ ನಿರ್ಮಾಣಕ್ಕೆ ವಿಶಾಲವಾದ ಜಾಗದ ಅಗತ್ಯವಿರುತ್ತದೆ. ಆಲಮೇಲ ಪಟ್ಟಣದ ವ್ಯಾಪ್ತಿಯಲ್ಲಿ ಡಿಪೊ ನಿರ್ಮಾಣಕ್ಕೆ ಪೂರಕವಾದ ಸಾಕಷ್ಟು ಸರಕಾರಿ ಜಮೀನು ಲಭ್ಯವಿದೆ. ಜಾಗದ ಕೊರತೆಯ ನೆಪ ಹೇಳಲು ಇಲ್ಲಿ ಅವಕಾಶವಿಲ್ಲದಿದ್ದರೂ, ಸಂಬಂಧಪಟ್ಟ ಇಲಾಖೆ ಹಾಗೂ ಜನಪ್ರತಿನಿಧಿಗಳು ಜಮೀನು ಮಂಜೂರಾತಿ ಪ್ರಕ್ರಿಯೆಗೆ ಚಾಲನೆ ನೀಡುತ್ತಿಲ್ಲ ಎಂಬುದು ಸಾರ್ವಜನಿಕರ ದೂರು. ಲಭ್ಯವಿರುವ ಸರಕಾರಿ ಜಮೀನನ್ನೇ ಬಳಸಿಕೊಂಡು ಡಿಪೊ ನಿರ್ಮಿಸಿದರೆ ಸರಕಾರಕ್ಕೆ ಭೂಸ್ವಾಧೀನದ ಹೊರೆಯೂ ತಪ್ಪಲಿದೆ. ತಾಲೂಕಿನ ಮೂಲೆ ಮೂಲೆಗಳಿಂದ ನೂರಾರು ವಿದ್ಯಾರ್ಥಿಗಳು ಇಲ್ಲಿನ ಕಾಲೇಜುಗಳಿಗೆ ಬರುತ್ತಾರೆ. ಸಂಜೆ ವೇಳೆಗೆ ಹಳ್ಳಿಗಳಿಗೆ ಹೋಗಲು ಸರಿಯಾದ ಬಸ್ ವ್ಯವಸ್ಥೆ ಇಲ್ಲದೆ ವಿದ್ಯಾರ್ಥಿನಿಯರು ಮತ್ತು ಪೋಷಕರು ಆತಂಕ ಎದುರಿಸುತ್ತಿದ್ದಾರೆ. ನಮ್ಮದೇ ಡಿಪೊ ಇದ್ದರೆ ಗ್ರಾಮೀಣ ಭಾಗದ ರೂಟ್ಗಳಿಗೆ ಹೆಚ್ಚಿನ ಆದ್ಯತೆ ನೀಡಲು ಸಾಧ್ಯವಾಗುತ್ತದೆ ಎಂಬುದು ಸ್ಥಳೀಯರ ಅಭಿಪ್ರಾಯ. ಸಾರ್ವಜನಿಕರು ಮತ್ತು ಸಂಘ-ಸಂಸ್ಥೆಗಳು ಈಗಾಗಲೇ ಈ ಕುರಿತು ಸರಕಾರದ ಮೇಲೆ ಒತ್ತಡ ಹೇರುತ್ತಿವೆ. ಲಭ್ಯವಿರುವ ಸರಕಾರಿ ಜಮೀನನ್ನು ಗುರುತಿಸಿ, ಡಿಪೊ ನಿರ್ಮಾಣಕ್ಕೆ ತಕ್ಷಣವೇ ಪ್ರಸ್ತಾವನೆ ಸಲ್ಲಿಸಬೇಕಿದೆ. ಈ ಭಾಗದ ಶಾಸಕರು ಮತ್ತು ಜಿಲ್ಲಾ ಉಸ್ತುವಾರಿ ಸಚಿವರು ಸಾರಿಗೆ ಇಲಾಖೆಯ ಮೇಲೆ ಒತ್ತಡ ತಂದು ಈ ಯೋಜನೆಗೆ ಚಾಲನೆ ನೀಡಬೇಕಿದೆ. ಬೇಡಿಕೆಗಳು ಏನು? <ರಾತ್ರಿ ವಾಸ್ತವ್ಯದ ಬಸ್ಗಳು: ಹಳ್ಳಿಗಳಿಂದ ಆಲಮೇಲಕ್ಕೆ ಬರುವ ಬಸ್ಗಳು ರಾತ್ರಿ ಅಲ್ಲಿಯೇ ವಾಸ್ತವ್ಯ ಹೂಡುವಂತಾಗಬೇಕು. <ಹೊಸ ಬಸ್ ನಿಲ್ದಾಣದ ನವೀಕರಣ: ಡಿಪೊ ಜೊತೆಗೆ ಹಳೆಯ ಬಸ್ ನಿಲ್ದಾಣವನ್ನು ಹೈಟೆಕ್ ಮಾದರಿಯಲ್ಲಿ ಅಭಿವೃದ್ಧಿಪಡಿಸಬೇಕು. <ದೂರದ ಊರುಗಳಿಗೆ ನೇರ ಸಂಪರ್ಕ: ಬೆಂಗಳೂರು, ಮಂಗಳೂರು, ಮುಂಬೈ ಮತ್ತು ಹೈದ್ರಾಬಾದ್ನಂತಹ ನಗರಗಳಿಗೆ ಆಲಮೇಲದಿಂದಲೇ ನೇರ ಬಸ್ ಸಂಚಾರ ಆರಂಭವಾಗಬೇಕು. ಆಲಮೇಲ ತಾಲೂಕಾದ ನಂತರ ವಾಹನಗಳ ಒತ್ತಡ ಹೆಚ್ಚಿದೆ. ಪಟ್ಟಣದಲ್ಲಿ ಡಿಪೊ ನಿರ್ಮಾಣಕ್ಕೆ ಬೇಕಾದ ಸರಕಾರಿ ಜಮೀನು ಲಭ್ಯವಿದ್ದರೂ ವಿಳಂಬ ಮಾಡುತ್ತಿರುವುದು ಸರಿಯಲ್ಲ. ನಮಗೆ ಪ್ರತ್ಯೇಕ ಡಿಪೊ ಮಂಜೂರಾದರೆ ಸಾರಿಗೆ ವ್ಯವಸ್ಥೆ ಸುಧಾರಿಸುವುದಲ್ಲದೆ, ಸ್ಥಳೀಯವಾಗಿ ಉದ್ಯೋಗಾವಕಾಶಗಳೂ ಸೃಷ್ಟಿಯಾಗುತ್ತವೆ. ವಿಜಯಕುಮಾರ ಅಕ್ಕಲಕೋಟ, ಸ್ಥಳೀಯ ನಿವಾಸಿ ಆಲಮೇಲಕ್ಕೆ ಬಸ್ ಡಿಪೊ ಮಂಜೂರು ಮಾಡುವಂತೆ ಈಗಾಗಲೇ ಹಲವು ಬಾರಿ ವಿವಿಧ ಕನ್ನಡಪರ ಸಂಘಟನೆಗಳು ಹಾಗೂ ಸಾರ್ವಜನಿಕ ಹಿತರಕ್ಷಣಾ ಸಮಿತಿಗಳ ವತಿಯಿಂದ ಸರ್ಕಾರಕ್ಕೆ ಮತ್ತು ಸಾರಿಗೆ ಇಲಾಖೆಗೆ ಅಧಿಕೃತ ಮನವಿ ಸಲ್ಲಿಸಲಾಗಿದೆ. ಪಟ್ಟಣದಲ್ಲಿ ಡಿಪೊ ನಿರ್ಮಾಣಕ್ಕೆ ಬೇಕಾದಷ್ಟು ಸರಕಾರಿ ಜಮೀನು ಲಭ್ಯವಿದ್ದರೂ ಅಧಿಕಾರಿಗಳು ಗಮನಹರಿಸುತ್ತಿಲ್ಲ. ಮಹಾದೇವ ಬಿರಾದಾರ, ರಾಜ್ಯಾಧ್ಯಕ್ಷರು, ಅಖಿಲ ಕರ್ನಾಟಕ ಸೇವಾ ಸಮಿತಿ
ಕನ್ನಡ ಗೆಳೆಯರ ಬಳಗದ ಸಂಚಾಲಕ ಬಾ.ಹ.ಉಪೇಂದ್ರ ನಿಧನ
ಬೆಂಗಳೂರು, ಮಾ. 5: ಕನ್ನಡ ಗೆಳೆಯರ ಬಳಗದ ಸಂಚಾಲಕ, ಎಚ್.ಎ.ಎಲ್.ನ ನಿವೃತ್ತ ಡಿಜಿಎಂ ಬಾಣಾಸಂದ್ರ ಹನುಮಂತರಾಯ ಉಪೇಂದ್ರ (66) ಅವರು ಗುರುವಾರ ಬೆಳಗ್ಗೆ ಹೃದಯಾಘಾತದಿಂದ ನಿಧನರಾಗಿದ್ದಾರೆ. ಎಚ್ಎಎಲ್ ನಲ್ಲಿ ಉನ್ನತ ಅಧಿಕಾರಿಯಾಗಿದ್ದ ಉಪೇಂದ್ರ ಅವರು ಅಪ್ರತಿಮ ಕನ್ನಡ ಹೋರಾಟಗಾರರಾಗಿದ್ದರು. ಕನ್ನಡ ಚಳವಳಿಗೆ ಹೊಸ ಆಯಾಮ ನೀಡಿದ ಡಾ ಎಂ. ಚಿದಾನಂದಮೂರ್ತಿ ಅವರ ನೇತೃತ್ವದ ಸಾಹಿತಿಗಳ ಕಲಾವಿದರ ಬಳಗವು 1986ಲ್ಲಿ ನಡೆಸಿದ ‘ಕನ್ನಡ ದೂರದರ್ಶನ’ ಹೋರಾಟದ ಮೂಲಕ ಕನ್ನಡ ಹೋರಾಟಕ್ಕೆ ಪ್ರವೇಶಿಸಿದರು. ಅಂದಿನಿಂದ ಇಂದಿನವರೆಗೆ ನಡೆದಿರುವ ಎಲ್ಲ ಕನ್ನಡಪರ ಹೋರಾಟಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದರು. ಕನ್ನಡ ಶಕ್ತಿ ಕೇಂದ್ರದ ಸಹ ಕಾರ್ಯದರ್ಶಿ, ಕನ್ನಡ ಗೆಳೆಯರ ಬಳಗದ ಸಂಚಾಲಕರಾಗಿ ಕಾರ್ಯ ನಿರ್ವಹಿಸಿದ್ದರು. ಬರವಣಿಗೆಯಲ್ಲೂ ಪರಿಣಿತರಾಗಿದ್ದ ಅವರು ಕಥೆ, ಕವನ, ಲೇಖನಗಳನ್ನು ಬರೆದಿದ್ದು, ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಅನುವಾದದಲ್ಲಿ ಪರಣಿತರಾಗಿದ್ದ ಅವರು ರಾಜ್ಯ ಸರ್ಕಾರಕ್ಕೆ ಕೆಲವು ತಾಂತ್ರಿಕ ವಿಷಯವನ್ನು ಅನುವಾದಿಸಿಕೊಟ್ಟಿದ್ದಾರೆ. ತಾಂತ್ರಿಕ ಸಾಹಿತ್ಯ ರಚನೆ, ಅನುವಾದದಲ್ಲಿ ಕನ್ನಡ ಸಾಹಿತ್ಯ ಲೋಕದ ದಿಗ್ಗಜರ ಮೆಚ್ಚುಗೆ ಗಳಿಸಿದ್ದರು. ಹಲವು ತಾಂತ್ರಿಕ ಪುಸ್ತಕಗಳನ್ನು ಕನ್ನಡಕ್ಕೆ ತಂದಿದ್ದರು. ‘ಕನ್ನಡ ಕಿಸೆಗನ್ನಡಿ’ಯಂತ ಅನನ್ಯ ಕೃತಿಯನ್ನು ಸಂಪಾದಿಸಿದ್ದರು. ಮೃತರು ಪತ್ನಿ , ಪುತ್ರ ಸಹಿತ ಅಪಾರ ಬಂಧುಗಳನ್ನು ಅಗಲಿದ್ದಾರೆ. ಸಾವಿನಲ್ಲೂ ಸಾರ್ಥಕತೆ ಮೆರೆದ ಉಪೇಂದ್ರ ಅವರ ದೇಹವನ್ನು ತುಮಕೂರಿನ ಸಿದ್ದಗಂಗಾ ಅಸ್ಪತ್ರೆಗೆ ದಾನ ಮಾಡಲಾಗಿದೆ. ಕನ್ನಡದ ವಿಚಾರದಲ್ಲಿ ಬಾಣಾಸಂದ್ರ ಹನುಮಂತರಾಯ ಉಪೇಂದ್ರ ಅವರದು ಹನುಮನ ನಿಷ್ಟೆ; ಬುದ್ಧನ ತ್ಯಾಗ’. ನಾಲ್ಕು ದಶಕಗಳು ಕನ್ನಡದ ಹಿತರಕ್ಷಣೆಗೆ ತನು, ಮನ, ಧನ ಸಮರ್ಪಿಸಿದ ತ್ಯಾಗ ಜೀವಿಯಾಗಿದ್ದರು. ಅವರ ನಿಧನ ಕನ್ನಡ ಗೆಳೆಯರ ಬಳಗದ ಚೇತನ ಶಕ್ತಿಯನ್ನು ಕಳೆದುಕೊಂಡಂತಾಗಿದೆ. ಅವರ ನಿಧನವು ಕನ್ನಡ ಹೋರಾಟಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಕನ್ನಡ ಗೆೆಯ ಬಳಗದ ಸಂಚಾಲಕ ರಾ.ನಂ. ಚಂದ್ರಶೇಖರ ಸಂತಾಪ ವ್ಯಕ್ತಡಿಸಿದ್ದಾರೆ.
ʼಟಾಕ್ಸಿಕ್ʼ ಸ್ಥಾನದಲ್ಲಿ ಬಿಡುಗಡೆಯಾಗುತ್ತಿದೆ ‘ಲವ್ ಮಾಕ್ಟೇಲ್- 3’ ಸಿನಿಮಾ
ಟಾಕ್ಸಿಕ್’ ಬಿಡುಗಡೆಗೊಳ್ಳದೆ ಇದ್ದರೂ, ಅದೇ ದಿನ ‘ಲವ್ ಮಾಕ್ಟೇಲ್-3’ ಬಿಡುಗಡೆ ಮಾಡುವ ಮೂಲಕ ಲಾಭ ಮಾಡಿಕೊಳ್ಳಲು ಕೆವಿಎನ್ ಸಂಸ್ಥೆ ತೀರ್ಮಾನಿಸಿದೆ. ಯಶ್ ನಟನೆಯ ‘ಟಾಕ್ಸಿಕ್’ ಬಿಡುಗಡೆ ಮುಂದೆ ಹೋದ ಕಾರಣ ‘ಲವ್ ಮಾಕ್ಟೇಲ್-3’ ಪಾಲಿಗೆ ಅದೃಷ್ಟ ಖುಲಾಯಿಸಿದೆ. ಇದೀಗ ಮಾರ್ಚ್ 19ರಂದು ಯುಗಾದಿಯಂದು ಡಾರ್ಲಿಂಗ್ ಕೃಷ್ಣ ನಟಿಸಿರುವ ‘ಲವ್ ಮಾಕ್ಟೇಲ್- 3’ ಸಿನಿಮಾ ಬಿಡುಗಡೆಗೆ ಕೆವಿಎನ್ ಸಂಸ್ಥೆ ನಿರ್ಧರಿಸಿದೆ. ಯುಗಾದಿ, ಈದ್ ಹಬ್ಬಗಳು ಸೇರಿದಂತೆ ಸಾಲು ಸಾಲು ರಜೆಗಳು ಬಂದಿರುವ ಕಾರಣ ಪ್ರೇಕ್ಷಕರು ಚಿತ್ರಮಂದಿರಗಳತ್ತ ಸಾಗುವ ನಿರೀಕ್ಷೆಯಿದೆ. ಸಿನಿಮಾವೊಂದು ಬಾಕ್ಸ್ ಆಫೀಸ್ ನಲ್ಲಿ ಗಳಿಕೆ ಮಾಡಲು ಇದು ಪ್ರಸಕ್ತ ಸಮಯ. ಹೀಗಾಗಿ ‘ಟಾಕ್ಸಿಕ್’ ಬಿಡುಗಡೆಗೊಳ್ಳದೆ ಇದ್ದರೂ, ಅದೇ ದಿನ ‘ಲವ್ ಮಾಕ್ಟೇಲ್-3’ ಬಿಡುಗಡೆ ಮಾಡುವ ಮೂಲಕ ಲಾಭ ಮಾಡಿಕೊಳ್ಳಲು ಕೆವಿಎನ್ ಸಂಸ್ಥೆ ತೀರ್ಮಾನಿಸಿದೆ. ‘ಲವ್ ಮಾಕ್ಟೇಲ್-3’ ಚಿತ್ರವು ಏಪ್ರಿಲ್ 10ರಂದು ಬಿಡುಗಡೆಗೆ ಸಜ್ಜಾಗಿತ್ತು. ಆದರೆ ಬದಲಾದ ಸನ್ನಿವೇಶದಲ್ಲಿ, ಯುಗಾದಿ ರಜೆಯಂತೇ ತೆರೆ ಕಾಣಲಿದೆ. ‘ಲವ್ ಮಾಕ್ಟೇಲ್’ ಮತ್ತು ‘ಲವ್ ಮಾಕ್ಟೇಲ್ 2’ ಈಗಾಗಲೇ ಯಶಸ್ವೀ ಸಿನಿಮಾಗಳಾಗಿರುವ ಕಾರಣದಿಂದ ಮೂರನೇ ಸಿನಿಮಾ ಮೇಲೂ ನಿರೀಕ್ಷೆ ಬೆಳೆದಿದೆ. ಈಗಾಗಲೇ ಹಾಡುಗಳು ಬಿಡುಗಡೆಯಾಗಿ ಗಮನ ಸೆಳೆದಿವೆ. ಸಿನಿಮಾವನ್ನು ಕ್ರಿಸ್ಮಿ ಬ್ಯಾನರ್ ಅಡಿಯಲ್ಲಿ ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್ ನಿರ್ಮಾಣ ಮಾಡಿದ್ದಾರೆ. ಡಾರ್ಲಿಂಗ್ ಕೃಷ್ಣ, ಮಿಲನಾ ನಾಗರಾಜ್, ಸಂವೃತ, ಅಮೃತಾ ಅಯ್ಯಂಗಾರ್, ರಚೆಲ್ ಡೇವಿಡ್, ಅಭಿಲಾಶ್ ದಳಪತಿ ಮುಂತಾದವರು ತಾರಾಗಣದಲ್ಲಿದ್ದಾರೆ. #KVNProductions #LoveMocktail3 pic.twitter.com/nFRGBHkPcz — KVN Productions (@KvnProductions) March 5, 2026
ರಾಜ್ಯದಿಂದ ಮಹಿಳಾ ಪರ ಬಜೆಟ್ ನಿರೀಕ್ಷೆ: ಡಾ.ನಾಗಲಕ್ಷ್ಮಿ ಚೌಧರಿ
ಮಂಗಳೂರು, ಮಾ.5: ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಲಿರುವ ರಾಜ್ಯ ಬಜೆಟ್ ಮಹಿಳಾ ಪರವಾಗಿರಬೇಕು. ತಾಯಿ ಮಕ್ಕಳ ಆಸ್ಪತ್ರೆ ಹೆಚ್ಚಾಗಬೇಕು. ಆಸ್ಪತ್ರೆಗಳಲ್ಲಿ ಎಲ್ಲ ವೈದ್ಯರ ಸಹಿತ ಮೂಲಸೌಲಭ್ಯ ಇರಬೇಕು ಎಂಬ ನಿರೀಕ್ಷೆಯಲ್ಲಿದ್ದೇವೆ ಎಂದು ಕರ್ನಾಟಕ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮೀ ಚೌಧರಿ ಹೇಳಿದರು. ದ.ಕ. ಜಿಲ್ಲಾ ಭೇಟಿಯಲ್ಲಿರುವ ಅವರು ಗುರುವಾರ ಸುದ್ದಿಗಾರರ ಪ್ರಶ್ನೆಗೆ ಈ ಪ್ರತಿಕ್ರಿಯೆ ನೀಡಿದರು. ಹಿಂದುಳಿದ ಜಿಲ್ಲೆಗಳಲ್ಲಿ ಮಹಿಳಾ ಹಾಸ್ಟೆಲ್, ಸುರಕ್ಷಣೆ, ಭದ್ರತೆ, ಬಸ್ ಸೌಲಭ್ಯಗಳನ್ನು ಒದಗಿಸಬೇಕೆಂಬ ಬೇಡಿಕೆ ಆಯೋಗದ್ದು ಎಂದರು. ರಾಜ್ಯಾದ್ಯಂತ ಪ್ರವಾಸ ಮಾಡುತ್ತಿದ್ದು, ಇದು 26ನೇ ಜಿಲ್ಲಾ ಭೇಟಿ. ಎಲ್ಲ ಕಡೆ ಮಹಿಳೆಯರು, ವಿದ್ಯಾರ್ಥಿನಿಯರಿಗೆ ಕಾನೂನಿನ ಅರಿವು, ಜಾಗೃತಿ ಮೂಡಿಸಿ, ಅಲ್ಲಿಂದ ಸಂಗ್ರಹಿಸಿ ಮಾಹಿತಿ, ಸಮಸ್ಯೆಗಳ ವರದಿಯನ್ನು ಸಿಎಂ ಮತ್ತು ಮುಖ್ಯ ಕಾರ್ಯದರ್ಶಿಗೆ ಸಲ್ಲಿಸುತ್ತೇನೆ. ಸೂಕ್ಷ್ಮ ವಿಚಾರಗಳ ಬಗ್ಗೆ ಸಿಎಂ ಜತೆ ಖುದ್ದು ಚರ್ಚಿಸಿ, ಡಿಸಿಗಳಿಗೆ ಕರೆ ಮಾಡಿಸಿ ಸಮಸ್ಯೆ ಪರಿಹಾರ ಮಾಡಿಸುತ್ತೇನೆ ಎಂದು ನಗರದಲ್ಲಿ ಗುರುವಾರ ಸುದ್ದಿಗಾರರ ಪ್ರಶ್ನೆಗೆ ಉತ್ತರವಾಗಿ ಅವರು ತಿಳಿಸಿದರು. 10ಕ್ಕಿಂತ ಹೆಚ್ಚು ಮಹಿಳೆಯರ ಕೆಲಸದ ಸ್ಥಳಗಳಲ್ಲಿ ಆಂತರಿಕ ದೂರು ನಿವಾರಣಾ ಸಮಿತಿ ರಚನೆಯಲ್ಲಿ ದೇಶದಲ್ಲಿ ಕರ್ನಾಟಕ ಮೊದಲ ಸ್ಥಾನದಲ್ಲಿದೆ. 78 ಸಾವಿರ ಮಂದಿ ‘ಶೀ ಬಾಕ್ಸ್’ ಪೋರ್ಟಲ್ನಲ್ಲಿ ಸಮಿತಿ ರಚಿಸಿರುವ ಬಗ್ಗೆ ಅಪ್ಲೋಡ್ ಮಾಡಿದ್ದಾರೆ. ಸಮಿತಿ ಮಾಡಿದ ಬಳಿಕ ಅನುಷ್ಠಾನವಾಗಬೇಕು. ಮಹಿಳಾ ದೌರ್ಜನ್ಯ ನಡೆದರೆ ಶಿಕ್ಷೆ ಆಗಬೇಕು ಎಂದು ಅವರು ಹೇಳಿದರು. ರಾಜ್ಯದಲ್ಲಿ ಲೈಂಗಿಕ ದೌರ್ಜನ್ಯ ಹೆಚ್ಚಳಕ್ಕೆ ಸ್ಮಾರ್ಟ್ ಫೋನ್ಗಳೂ, ಮಾದಕ ದ್ರವ್ಯ, ಮದ್ಯಪಾನ ಸಹಿತ ಹಲವು ಕಾರಣಗಳಿವೆ. ನಮ್ಮ ಕಾನೂನು ಬಿಗಿಯಾಗಿದ್ದರೂ, ಪುಟ್ಟ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆಯುತ್ತಿದೆ. ಪ್ರತೀ ಪ್ರೇಮದ ಹೆಸರಿನಲ್ಲಿ ಕೊಲೆಗಳು ನಡೆಯುತ್ತಿವೆ. ಧಾರವಾಡದಲ್ಲಿ ಅನ್ಯ ಜಾತಿಯ ಹುಡುಗನ ಜತೆ ಮದುವೆಯಾದ ಕಾರಣಕ್ಕೆ ಹೆತ್ತ ಮಗಳನ್ನೇ ಅಪ್ಪನೇ ಕೊಲ್ಲುತ್ತಾನೆ. ಜಾತಿ, ಧರ್ಮಕ್ಕಿಂತ ಮನುಷ್ಯತ್ವ ಬೆಳೆಯಬೇಕು ಎಂದರು. ಬುಧವಾರ ರಾತ್ರಿ ಮಂಗಳೂರು ಕೆಎಸ್ಆರ್ಟಿಸಿ ಬಸ್ ನಿಲ್ದಾಣಕ್ಕೆ ಭೇಟಿ ನೀಡಿದ್ದು, ಅಲ್ಲಿ ಶೌಚಾಲಯಗಳು ಹೈಟೆಕ್ ಆಗಿವೆ. ಕುಡಿಯುವ ನೀರು, ಪೊಲೀಸ್ ಗಸ್ತು, ಚೆಕ್ ಪೋಸ್ಟ್ ಎಲ್ಲವೂ ಚೆನ್ನಾಗಿವೆ. 21 ಸಿಸಿ ಕ್ಯಾಮೆರಗಳೂ ಕಾರ್ಯಾಚರಿಸುತ್ತಿವೆ. ತಾಯಿ ಮಗು ಕೊಠಡಿಯಿಂದ ತೆಗೆದಿರುವ ತೊಟ್ಟಿಲು ಮತ್ತೆ ಹಾಕಲು, ಇಲ್ಲಿಂದ ಹೊರಡುವ ಎಲ್ಲ ಬಸ್ಗಳಲ್ಲೂ ಸಹಾಯವಾಣಿ ಸಂಖ್ಯೆ ಅಳವಡಿಸಲು ಸಲಹೆ ಮಾಡಿದ್ದೇನೆ ಎಂದರು. ಧರ್ಮಸ್ಥಳ ಗ್ರಾಮದಲ್ಲಿ ಹೆಣ್ಣು ಮಕ್ಕಳ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿಂದಿನ ಉಗ್ರಪ್ಪ ವರದಿ, ಜಯಮಾಲ ವರದಿ ಹಾಗೂ ಈಗಿನ ಎಸ್ಐಟಿ ತನಿಖೆ ಹಿನ್ನೆಲೆಯಲ್ಲಿ ವರದಿ ಕೊಡಲು ಪತ್ರ ಬರೆದಿದ್ದೆ. ಪ್ರಕರಣ ಕೋರ್ಟ್ನಲ್ಲಿ ಇರುವುದರಿಂದ ತೀರ್ಪು ಬಂದ ಬಳಿಕ ವರದಿ ಕೊಡಲಿದ್ದಾರೆ. ಅಲ್ಲಿಯವರೆಗೆ ಕಾಯೋಣ ಎಂದು ಸುದ್ದಿಗಾರರ ಪ್ರಶ್ನೆಗೆ ಡಾ.ನಾಗಲಕ್ಷ್ಮೀ ಚೌಧರಿ ಉತ್ತರಿಸಿದರು.
Assam | ಚುನಾವಣೆಗೂ ಮುನ್ನ ಬಿಜೆಪಿ ಸೇರ್ಪಡೆಯಾದ ಮೂವರು ಕಾಂಗ್ರೆಸ್ ಶಾಸಕರು
ಗುವಾಹಟಿ: ಅಸ್ಸಾಂ ವಿಧಾನಸಭಾ ಚುನಾವಣೆಗೂ ಮುನ್ನ, ಕಾಂಗ್ರೆಸ್ ಪಕ್ಷದ ಶಾಸಕರಾದ ಕಮಲಾಖ್ಯ ಡೇ ಪುರಕಾಯಸ್ತ, ಶಶಿಕಾಂತ ದಾಸ್ ಹಾಗೂ ಬಸಂತ ದಾಸ್ ಅವರು ಇನ್ನಿಬ್ಬರೊಂದಿಗೆ ಗುರುವಾರ ಆಡಳಿತಾರೂಢ ಬಿಜೆಪಿಗೆ ಸೇರ್ಪಡೆಯಾದರು. ಇಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮವೊಂದರಲ್ಲಿ ಕೇಂದ್ರ ಸಚಿವ ಪಬಿತ್ರ ಮಾರ್ಗೆರಿಟಾ ಸಮ್ಮುಖದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ದಿಲೀಪ್ ಸೈಕಿಯಾ ಅವರನ್ನೆಲ್ಲ ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡರು. ಬಿಜೆಪಿ ಪಕ್ಷಕ್ಕೆ ಅಸ್ಸಾಂ ಕಾಂಗ್ರೆಸ್ ಘಟಕದ ಮಾಜಿ ಅಧ್ಯಕ್ಷ ಭೂಪೇನ್ ಬೋರಾ ಸೇರ್ಪಡೆಯಾದ ಬೆನ್ನಿಗೇ, ಈ ಬೆಳವಣಿಗೆ ನಡೆದಿದೆ. 126 ಸದಸ್ಯ ಬಲದ ಅಸ್ಸಾಂ ವಿಧಾನಸಭೆಗೆ ಎಪ್ರಿಲ್ ನಲ್ಲಿ ಚುನಾವಣೆ ನಡೆಯುವ ಸಾಧ್ಯತೆ ಇದೆ.
ಮಧ್ಯಪ್ರಾಚ್ಯದಲ್ಲಿ ಯುದ್ಧವನ್ನು ಕೆಲ ಸೋಶಿಯಲ್ ಮೀಡಿಯಾ ಬಳಕೆದಾರರ AI ನಿರ್ಮಿತ ನಕಲಿ ಪೋಸ್ಟ್ ಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಅಂತಯೇ ಪಾಕಿಸ್ತಾನದ ವ್ಯಕ್ತಿಯೊಬ್ಬ ಬರೋಬ್ಬರಿ 31 X ಖಾತೆಗಳನ್ನು ಹ್ಯಾಕ್ ಮಾಡಿ ಅವುಗಳಿಗೆ ʼಇರಾನ್ ವಾರ್ ಮಾನಿಟರ್ʼ ಹೀಗೆ ವಿವಿಧ ಹೆಸರುಗಳನ್ನು ನೀಡಿ ಇರಾನ್ ಪರವಾದ ಸಂದೇಶಗಳಿರುವ ನಕಲಿ ಪೋಸ್ಟ್ ಗಳನ್ನು ಹಂಚಿಕೊಂಡಿದ್ದು ಬೆಳಕಿಗೆ ಬಂದಿದೆ ಎಂದು X ಪ್ರಾಡಕ್ಟ್ ಟೀಂ ಮುಖ್ಯಸ್ಥ ನಿಕಿತಾ ಬಿಯರ್ ಮಾಹಿತಿ ನೀಡಿದ್ದು, ಇಂತವರ ಎಡೆಮುರಿ ಕಟ್ಟಲು ಮುಂದಾಗಿದ್ದಾರೆ. ಇನ್ನು, ಹೀಗೆ ಯುದ್ದ ಸಂಬಂಧಿತ AI ವಿಡಿಯೋ ಹಂಚಿಕೊಂಡವರು AI ಎಂದು ಟ್ಯಾಗ್ ಮಾಡದೇ ಹೋದಲ್ಲಿ ಅವರಿಗೆ ನೀಡಲಾಗುವ ಆದಾಯವನ್ನು ಸ್ಥಗಿತಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಜ್ಞಾನ ಭರಿತ ಶಿಕ್ಷಣ ಹೆಣ್ಣು ಮಕ್ಕಳ ಅಸ್ತ್ರ: ಡಾ. ನಾಗಲಕ್ಷ್ಮಿ ಚೌಧರಿ
ಮಂಗಳೂರು, ಮಾ.5: ಹೆಣ್ಣು ಮಕ್ಕಳು ತಮ್ಮ ಮೇಲಿನ ದೌರ್ಜನ್ಯ, ಅನ್ಯಾಯದ ಸಂದರ್ಭ ಎದ್ದು ನಿಂತು ಹೋರಾಡುವಲ್ಲಿ ಅರಿವಿನಿಂದ ಕೂಡಿದ ಶಿಕ್ಷಣ ಅಸ್ತ್ರವಾಗಿರುತ್ತದೆ. ಶಿಕ್ಷಣ ಪಡೆಯುವ ಜತೆಗೆ ಹೆಣ್ಣು ಮಕ್ಕಳು ತಮ್ಮ ಹಕ್ಕು, ಕಾನೂನುಗಳನ್ನು ತಿಳಿದುಕೊಳ್ಳಬೇಕು ಎಂದು ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮಿ ಚೌಧರಿ ಯುವ ವಿದ್ಯಾರ್ಥಿನಿಯರಿಗೆ ಕರೆ ನೀಡಿದರು. ಬಲ್ಮಠದ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಗುರುವಾರ ಕಾಲೇಜಿನ ಆಂತರಿಕ ಗುಣಮಟ್ಟ ಭರವಸಾ ಕೋಶ, ಆಂತರಿಕ ದೂರು ನಿವಾರಣಾ ಸಮಿತಿ ಸಹಯೋಗದಲ್ಲಿ ವಿದ್ಯಾರ್ಥಿನಿಯರ ಜತೆಗಿನ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಶಿಕ್ಷಣ ಮತ್ತು ಸಂವಿಧಾನ ಮಹಿಳೆಯರಿಗೆ ಸ್ವಾವಲಂಬಿ ಬದುಕನ್ನು ನೀಡುತ್ತದೆ. ಸವಾಲುಗಳನ್ನು ಮೆಟ್ಟಿ ನಿಲ್ಲುವ ಧೈರ್ಯ ತುಂಬುತ್ತದೆ. ಹೆಣ್ಣು ಅನ್ಯಾಯ, ದೌಜನ್ಯಗಳ ವಿರುದ್ಧ ಸಿಡಿದೇಳುವ ಶಕ್ತಿಯಾಗಿದ್ದು, ಆಕೆಯ ಹಕ್ಕು, ಕಾನೂನುಗಳನ್ನು ತಿಳಿಸುವ ನಿಟ್ಟಿನಲ್ಲಿ ಮಹಿಳಾ ಆಯೋಗ ಕಾರ್ಯ ನಿರ್ವಹಿಸುತ್ತಿದೆ ಎಂದರು. ಆನ್ಲೈನ್, ಸೈಬರ್ ವಂಚನೆ ಮೂಲಕ ಹೆಣ್ಣು ಮಕ್ಕಳು ದೌರ್ಜನ್ಯಕ್ಕೊಳಗಾಗುತ್ತಿರುವ ಬಗ್ಗೆ ನೈಜ ಘಟನೆಯನ್ನು ವಿವರಿಸುವ ಮೂಲಕ ವಿದ್ಯಾರ್ಥಿನಿಯರಿಗೆ ಮನವರಿಕೆ ಮಾಡಿದ ಅವರು, ಯಾವುದೇ ರೀತಿಯ ಅನ್ಯಾಯ ನಡೆದಾಗ ಆತ್ಮಸ್ಥೈರ್ಯ ಕಳೆದುಕೊಳ್ಳದೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸಹಾಯವನ್ನು ಪಡೆಯುವಂತೆ ಪ್ರೇರೇಪಿಸಿದರು. ಯಶಸ್ಸಿಗೆ ಯಾವುದೇ ಅಡ್ಡದಾರಿ ಇಲ್ಲ. ಕಠಿಣ ಪರಿಶ್ರಮದಿಂದ ಸೋಲನ್ನು ಜಯಿಸಬಹುದು. ಅವಮಾನ, ಸೋಲುಗಳನ್ನು ಮೆಟ್ಟಿ ನಿಲ್ಲುವ ಧೈರ್ಯ ಮಹಿಳೆಯರಲ್ಲಿರಬೇಕು ಎಂದು ತಮ್ಮ ಜೀವನದ ಸೋಲು ಗೆಲುವುಗಳನ್ನು ಡಾ. ನಾಗಲಕ್ಷ್ಮಿ ಚೌಧರಿ ಮೆಲುಕು ಹಾಕಿದರು. ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಜಿಲ್ಲಾ ನ್ಯಾಯಾಧೀಶರಾದ ಜೈಬುನ್ನಿಸಾ, ಡಿಡಿಪಿಯು ರಾಜಲಕ್ಷ್ಮಿ, ಕಾಲೇಜಿನ ಪ್ರಾಂಶುಪಾಲ ಗೋಪಾಲಕೃಷ್ಣ, ಗ್ರಂಥಪಾಲಕಿ ಶಿಲ್ಪಾ, ಆಂತರಿಕ ಗುಣಮಟ್ಟ ಭರವಸಾ ಕೋಶದ ಡಾ. ಮಂಜುಳಾ ಮಲ್ಯ ಮೊದಲಾದವರು ಉಪಸ್ಥಿತರಿದ್ದರು. ಉಪನ್ಯಾಸಕಿ ಡಾ. ಜಯಶ್ರೀ ಸ್ವಾಗತಿಸಿದರು. ವಿಜಯಲಕ್ಷ್ಮಿ ಕಾರ್ಯಕ್ರಮ ನಿರೂಪಿಸಿದರು. ಮೀನಾಕ್ಷಿ ವಂದಿಸಿದರು. ಮಂಗಳೂರಿನ ಹೆಣ್ಣು ಮಕ್ಕಳಲ್ಲಿ ಅರಿವಿನ ಬೆಳಕು ಹೆಚ್ಚಿದೆ ಮಹಿಳಾ ಸಹಾಯವಾಣಿ, ಪೊಲೀಸ್ ಸಹಾಯವಾಣಿ ಸಂಖ್ಯೆಗಳ ಬಗ್ಗೆ ಪ್ರಶ್ನಿಸುವ ಸಂದರ್ಭ ವಿದ್ಯಾರ್ಥಿನಿಯರು ಥಟ್ಟನೆ ಉತ್ತರಿಸಿದಾಗ ಡಾ. ನಾಗಲಕ್ಷ್ಮಿ ಚೌಧರಿ ಮೆಚ್ಚುಗೆ ವ್ಯಕ್ತಪಡಿಸಿದರು. ಮಂಗಳೂರಿನ ಮಕ್ಕಳಲ್ಲಿ ಅರಿವಿನ ಬೆಳಕು ಹೆಚ್ಚಿದೆ. ಇನ್ನಷ್ಟು ಕಾನೂನು ತಿಳುವಳಿಕೆ ಪಡೆಯಬೇಕು ಎಂದು ಅವರು ಹೇಳಿದರು.
ಮ್ಯಾಕ್ಸ್ವೆಲ್, ಗೇಲ್ ರೆಕಾರ್ಡ್ ಬ್ರೇಕ್: ವಿಶ್ವದಾಖಲೆ ಮಾಡಿದ ಫಿನ್ ಅಲೆಲ್ಗೆ ಸಚಿನ್ ತೆಂಡೂಲ್ಕರ್ ವಿಶೇಷ ಸಂದೇಶ
Sachin Tendulkar: ಟಿ20 ವಿಶ್ವಕಪ್ 2026 ಅತ್ಯಂತ ನಿರ್ಣಾಯಕ ಪಂದ್ಯವಾದ ಸೆಮಿಫೈನಲ್ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನ್ಯೂಜಿಲೆಂಡ್ ಪರ ಫಿನ್ ಅಲೆನ್ ಸ್ಫೋಟಕ ಶತಕ ಸಿಡಿಸಿ ಹೊಸ ದಾಖಲೆ ಮಾಡಿದರು. ಅವರ ಈ ಅಮೋಘ ಇನಿಂಗ್ಸ್ ಈಗ ಕ್ರಿಕೆಟ್ ಲೋಕದಲ್ಲಿ ಹೊಸ ಸಂಚಲನ ಮೂಡಿಸಿದೆ. ಈ ಕುರಿತು ಭಾರತೀಯ ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ ಟ್ವೀಟ್ ಮಾಡಿ
ಅಬುಧಾಬಿಯಲ್ಲಿ ಸೀಮಿತ ವಿಮಾನ ಕಾರ್ಯಾಚರಣೆ ಪುನರಾರಂಭ: ವರದಿ
ಅಬುಧಾಬಿ: ಅಬುಧಾಬಿಯ ಝಾಯೆದ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸೀಮಿತ ಪ್ರಮಾಣದಲ್ಲಿ ವಿಮಾನ ಕಾರ್ಯಾಚರಣೆಗಳನ್ನು ಪುನರಾರಂಭಿಸಲಾಗಿದೆ ಎಂದು ಅಬುಧಾಬಿ ಮಾಧ್ಯಮ ಕಚೇರಿ ತಿಳಿಸಿದೆ ಎಂದು aljazeera.com ವರದಿ ಮಾಡಿದೆ. ಮದ್ಯಪ್ರಾಚ್ಯದಲ್ಲಿನ ಇತ್ತೀಚಿನ ಸಂಘರ್ಷದ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ವ್ಯತ್ಯಯಗೊಂಡಿದ್ದ ವಿಮಾನ ಸಂಚಾರವನ್ನು ಹಂತ ಹಂತವಾಗಿ ಪುನರಾರಂಭಿಸುವ ಕ್ರಮ ಕೈಗೊಳ್ಳಲಾಗಿದ್ದು, ಪ್ರಸ್ತುತ ಸೀಮಿತ ಸಂಖ್ಯೆಯಲ್ಲಿ ಮಾತ್ರ ವಿಮಾನಗಳ ಸಂಚಾರಕ್ಕೆ ಅವಕಾಶ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಯುನೈಟೆಡ್ ಅರಬ್ ಎಮಿರೇಟ್ಸ್ನ ಎರಡು ಪ್ರಮುಖ ವಿಮಾನಯಾನ ಸಂಸ್ಥೆಗಳಾದ ಎಮಿರೇಟ್ಸ್ ಮತ್ತು ಎತಿಹಾದ್ ಏರ್ವೇಸ್ಗಳು ನಿರ್ದಿಷ್ಟಪಡಿಸಿರುವ ಸುರಕ್ಷಿತ ವಾಯು ಕಾರಿಡಾರ್ಗಳ ಮೂಲಕ ಸೀಮಿತ ಸಂಖ್ಯೆಯಲ್ಲಿ ವಿಮಾನಗಳ ಹಾರಾಟ ನಡೆಸಲಿವೆ ಎಂದು ತಿಳಿಸಿದೆ.
ಗುಂಡಿಗಳ ಗೂಡಾದ ರಾಷ್ಟ್ರೀಯ ಹೆದ್ದಾರಿ
ವಿಜಯಪುರ-ಇಂಡಿ ರಸ್ತೆಯಲ್ಲಿ ಜೀವ ಕೈಯಲ್ಲಿ ಹಿಡಿದು ಸಂಚಾರ
ಖಮೇನಿ ಹತ್ಯೆಗೆ AI ತಂತ್ರಜ್ಞಾನ ಬಳಸಿದ ಇಸ್ರೇಲ್; ಟೆಹ್ರಾನ್ ಟ್ರಾಫಿಕ್ ಕ್ಯಾಮರಾಗಳ ಮೇಲೆ ಮೊಸಾದ್ ನಿಯಂತ್ರಣ!
ಭಾರತದ ನೆರೆಯಲ್ಲಿ ಪಾಕಿಸ್ತಾನ ಮತ್ತು ಚೀನಾಗಳ ರೂಪದಲ್ಲಿ ಅಣ್ವಸ್ತ್ರ ಹೊಂದಿರುವ ದೇಶಗಳಿವೆ. ಅವುಗಳು ಭಾರತದೊಡನೆ ಸ್ನೇಹದಿಂದೇನೂ ಇರುವುದಿಲ್ಲ. ಟೆಹರಾನ್ನಲ್ಲಿ ನಡೆದ ಘಟನೆ ಒಂದು ಸ್ಪಷ್ಟವಾದ ಪಾಠ. ಆಧುನಿಕ ಯುದ್ಧಗಳು ಯುದ್ಧ ಭೂಮಿಯಲ್ಲಿ ಗೆಲ್ಲುವ ಯುದ್ಧಗಳಲ್ಲ. ಅವುಗಳನ್ನು ಮೊದಲು ಕಣ್ಣಿಗೆ ಕಾಣದ ಮಾಹಿತಿಗಳ, ಕಣ್ಗಾವಲು, ಉಪಗ್ರಹ ಮತ್ತು ಸೈಬರ್ ಕಾರ್ಯಾಚರಣೆಗಳ ಜಗತ್ತಿನಲ್ಲಿ ಗೆಲ್ಲಬೇಕಾಗುತ್ತದೆ.
ಅರ್ಧಕ್ಕೆ ನಿಂತ ಕೊಳಗೇರಿ ಅಭಿವೃದ್ಧಿ ಮಂಡಳಿಯ ಮನೆಗಳು
ಸಂಕಷ್ಟಕ್ಕೆ ಸಿಲುಕಿದ ಫಲಾನುಭವಿಗಳು
ಇರಾನ್ ಮೇಲಿನ ದಾಳಿ ಖಂಡಿಸಿ ಪ್ರತಿಭಟನೆ: ಅಮೆರಿಕ ಸೆನೆಟ್ನಿಂದ ಮಾಜಿ ನೌಕಾಪಡೆಯ ಅಧಿಕಾರಿ ಹೊರಕ್ಕೆ
ವಾಷಿಂಗ್ಟನ್ : ಇರಾನ್ ವಿರುದ್ಧ ಅಮೆರಿಕ ಹಾಗೂ ಇಸ್ರೇಲ್ ನಡೆಸುತ್ತಿರುವ ಜಂಟಿ ದಾಳಿಯನ್ನು ಖಂಡಿಸಿ ಬುಧವಾರ ಸಶಸ್ತ್ರ ಸೇವೆಗಳ ಉಪಸಮಿತಿಯ ಅಧಿವೇಶನದ ಸಮಯದಲ್ಲಿ ಕಲಾಪಕ್ಕೆ ಅಡ್ಡಿಪಡಿಸಿದ ಪ್ರತಿಭಟನಾಕಾರರೊಬ್ಬರನ್ನು ಯುಎಸ್ ಸೆನೆಟ್ ನಿಂದ ಹೊರ ಹಾಕಲಾಗಿದೆ. ಪ್ರತಿಭಟನಾಕಾರರನ್ನು ಬ್ರಿಯಾನ್ ಮೆಕ್ ಗಿನ್ನಿಸ್ ಎಂದು ಗುರುತಿಸಲಾಗಿದೆ. ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ನಲ್ಲಿ ಅವರನ್ನು ಉತ್ತರ ಕೆರೊಲಿನಾದಲ್ಲಿ ಸೆನೆಟ್ಗೆ ಸ್ಪರ್ಧಿಸುತ್ತಿರುವ ಗ್ರೀನ್ ಪಾರ್ಟಿ ಅಭ್ಯರ್ಥಿ ಎಂದು ಹೇಳಿಕೊಂಡಿರುವುದು ಕಂಡು ಬಂದಿದೆ. ಮೆಕ್ ಗಿನ್ನಿಸ್ ಅಮೆರಿಕ ನೌಕಾಪಡೆಯ ಅಧಿಕಾರಿಯಂತೆ ಸಮವಸ್ತ್ರವನ್ನು ಧರಿಸಿರುವಂತೆ ಕಾಣುತ್ತಿದೆ ಎಂದು ವರದಿಯಾಗಿದೆ. ವೀಡಿಯೊದಲ್ಲಿ ಮೆಕ್ ಗಿನ್ನಿಸ್ ಅವರನ್ನು ಕೊಠಡಿಯಿಂದ ಹೊರಗೆ ಕರೆದೊಯ್ಯಲು ಅಧಿಕಾರಿಗಳು ಪ್ರಯತ್ನಿಸುತ್ತಿರುವಾಗ ಅವರು ಕೂಗುಡುತ್ತಿರುವುದು ಕಂಡು ಬಂದಿದೆ. ಇಸ್ರೇಲ್ಗಾಗಿ ಯಾರೂ ಹೋರಾಡಲು ಬಯಸುವುದಿಲ್ಲ ಎಂದು ಹೇಳುವುದು ಕೇಳಿಸಿದೆ. ಸಶಸ್ತ್ರ ಸೇವೆಗಳ ಸಮಿತಿಯ ಸದಸ್ಯ, ಮೊಂಟಾನಾ ಸೆನೆಟರ್ ಟಿಮ್ ಶೀಹಿ, ಮೆಕ್ ಗಿನ್ನಿಸ್ಸ್ ಅವರ ಕೈ ಸಿಲುಕಿಕೊಂಡಿದೆ ಎಂದು ಇತರ ಪ್ರತಿಭಟನಾಕಾರರು ಕೂಗಿದಾಗ, ಸಹಾಯ ಮಾಡುವುದು ಕೂಡ ವೀಡಿಯೊದಲ್ಲಿ ಕಂಡು ಬಂದಿದೆ. #BREAKING : Watch Former Marine Sgt. Brian McGuinness stood up in Congress to say that we don’t want to fight a war with Iran for Israel while being removed by the Capitol police #Washington | #DC Watch As Former Marine Sgt. Brian McGuinness stood up during a Senate… pic.twitter.com/8mAyO2gz9q — R A W S A L E R T S (@rawsalerts) March 4, 2026
ಉತ್ತರ ಕೊಲ್ಲಿಯಲ್ಲಿ ಅಮೆರಿಕದ ತೈಲ ಟ್ಯಾಂಕರ್ ಮೇಲೆ ದಾಳಿ: IRGC ಹೇಳಿಕೆ
ಟೆಹ್ರಾನ್: ಉತ್ತರ ಕೊಲ್ಲಿಯಲ್ಲಿ ಗುರುವಾರ ಬೆಳಿಗ್ಗೆ ತನ್ನ ನೌಕಾಪಡೆಯು ಅಮೆರಿಕದ ಟ್ಯಾಂಕರ್ ಮೇಲೆ ದಾಳಿ ಮಾಡಿದೆ ಎಂದು ಇರಾನಿನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ IRGC ಹೇಳಿಕೊಂಡಿದೆ ಎಂದು ಇರಾನ್ ನ ತಸ್ನಿಮ್ ನ್ಯೂಸ್ ಏಜೆನ್ಸಿ ಉಲ್ಲೇಖಿಸಿ aljazeera.com ವರದಿ ಮಾಡಿದೆ. ಅಮೆರಿಕ, ಇಸ್ರೇಲ್ ಹಾಗೂ ಯುರೋಪಿಯನ್ ದೇಶಗಳನ್ನು ಬೆಂಬಲಿಸುವ ರಾಷ್ಟ್ರಗಳಿಗೆ ಸೇರಿದ ಮಿಲಿಟರಿ ಮತ್ತು ವಾಣಿಜ್ಯ ಹಡಗುಗಳನ್ನು ಹಾರ್ಮುಜ್ ಜಲಸಂಧಿಯ ಮೂಲಕ ಹಾದುಹೋಗಲು ಅನುಮತಿಸಲಾಗುವುದಿಲ್ಲ. ಅಂತಹ ಹಡಗುಗಳು ಗಮನಕ್ಕೆ ಬಂದರೆ ಅವುಗಳಿಗೆ ಖಂಡಿತವಾಗಿಯೂ ಹೊಡೆತ ಬೀಳುತ್ತದೆ ಎಂದು IRGC ಎಚ್ಚರಿಕೆ ನೀಡಿದೆ. “ಯುದ್ಧದ ಸಂದರ್ಭದಲ್ಲಿ ಅಂತರರಾಷ್ಟ್ರೀಯ ಕಾನೂನುಗಳು ಮತ್ತು ನಿರ್ಣಯಗಳ ಆಧಾರದ ಮೇಲೆ, ಇಸ್ಲಾಮಿಕ್ ಗಣರಾಜ್ಯ ಇರಾನ್ಗೆ ಹಾರ್ಮುಜ್ ಜಲಸಂಧಿಯ ಮೂಲಕ ಹಾದುಹೋಗುವ ಹಡಗುಗಳನ್ನು ನಿಯಂತ್ರಿಸುವ ಹಕ್ಕು ಇದೆ ಎಂದು ನಾವು ಈ ಹಿಂದೆಯೇ ತಿಳಿಸಿದ್ದೇವೆ,” ಎಂದು IRGC ಹೇಳಿದೆ. ಈ ಕುರಿತು ಇರಾನ್ ನ ತಸ್ನಿಮ್ ನ್ಯೂಸ್ ಏಜೆನ್ಸಿ ವರದಿ ಮಾಡಿದೆ.
ನೇತ್ರಾವತಿ ನದಿ ತೀರದಲ್ಲಿ ಆಧಾರ್ ಕಾರ್ಡ್ಗಳ ರಾಶಿ ಪತ್ತೆ ; ತನಿಖೆಗೆ ಆಗ್ರಹ
ರಾಶಿ ರಾಶಿ ಆಧಾರ್ ಕಾರ್ಡ್ಗಳು ನೇತ್ರಾವತಿ ನದಿ ತೀರದಲ್ಲಿ ಪತ್ತೆಯಾಗಿದ್ದು, ಅನುಮಾನ ಮೂಡಿಸಿದೆ. ಇಷ್ಟೊಂದು ಆಧಾರ್ ಕಾರ್ಡ್ಗಳು ಹೇಗೆ ತೇಲಿ ಬಂದವು ಎಂಬ ಕುತೂಹಲ ಮೂಡಿಸಿದೆ. ಈ ಬಗ್ಗೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕಾರಣ ಪತ್ತೆ ಹಚ್ಚಲು ಸ್ಪೀಕರ್ ಯು.ಟಿ. ಖಾದರ್ ಅವರು ಯುಐಡಿಎಐ ಯೋಜನಾ ವ್ಯವಸ್ಥಾಪಕರಿಗೆ ಪತ್ರ ಬರೆದು ಸೂಚನೆ ನೀಡಿದ್ದಾರೆ.
ಮೀನುಗಾರ ಮಹಿಳೆಯರ ಸಮಸ್ಯೆ ಸರಕಾರದ ಗಮನಕ್ಕೆ: ಡಾ.ನಾಗಲಕ್ಷ್ಮಿ ಚೌಧರಿ
ಮಂಗಳೂರು ಸ್ಟೇಟ್ ಬ್ಯಾಂಕ್ ಮೀನು ಮಾರುಕಟ್ಟೆಗೆ ಭೇಟಿ, ಸಮಸ್ಯೆ ಆಲಿಕೆ
ಇರಾನ್ ಮುಂದೆ US ಸೋಲು ಖಚಿತ: ಚೀನಾದ ನಾಸ್ಟ್ರಾಡಾಮಸ್ ಭವಿಷ್ಯವಾಣಿ! ಯಾರೀ ಪ್ರೊಫೆಸರ್ Jiang Xueqin?
ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾಗಿದೆ. ದಾಳಿ - ಪ್ರತಿದಾಳಿ ಹೆಚ್ಚಾಗುತ್ತಿರುವಾಗಲೇ ಇರಾನ್ ವಿರುದ್ಧದ ಯುದ್ಧದಲ್ಲಿ ಯುನೈಟೆಡ್ ಸ್ಟೇಟ್ಸ್ ಸೋಲು ಅನುಭವಿಸುತ್ತದೆ ಎಂದು ಚೀನಾದ ಪ್ರೊಫೆಸರ್ ಜಿಯಾಂಗ್ ಭವಿಷ್ಯ ನುಡಿದಿದ್ದ ವಿಡಿಯೋ ವೈರಲ್ ಆಗಿದೆ. ಅಂದ್ಹಾಗೆ, 2024ರಲ್ಲೇ ಜಿಯಾಂಗ್ ಈ ಭವಿಷ್ಯವಾಣಿ ನುಡಿದಿದ್ದರು. ಅದೀಗ ನಿಜವಾಗುತ್ತಾ?
BENGALURU | ಜಿಲ್ಲಾಧಿಕಾರಿ ಕಚೇರಿಯಲ್ಲಿ ಕೇಕ್ ಪಾರ್ಟಿ: ಆರೋಪಿ ಶಿರಸ್ತೇದಾರ ವಿರುದ್ಧ ದೂರು
ಬೆಂಗಳೂರು, ಮಾ.5: ಬೆಂಗಳೂರು ನಗರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸರಕಾರಿ ಅಧಿಕಾರಿಯೊಬ್ಬರು ಜನ್ಮದಿನ ಆಚರಿಸಿಕೊಂಡಿರುವುದು ತಡವಾಗಿ ಬೆಳಕಿಗೆ ಬಂದಿದ್ದು, ಈ ಸಂಬಂಧ ರಾಷ್ಟ್ರೀಯ ಅಂಬೇಡ್ಕರ್ ಸೇನೆ ಕಂದಾಯ ಸಚಿವರಿಗೆ ದೂರು ಸಲ್ಲಿಸಿದೆ. ಶಿರಸ್ತೇದಾರ ಎಚ್.ಆರ್.ಅನಿಲ್ ಕುಮಾರ್ ಎಂಬವರು, ಸಹಪಾಠಿಗಳ ಜೊತೆ ಟೇಬಲ್ ಮೇಲೆ 10 ಕೇಕ್ ಗಳನ್ನು ಕತ್ತರಿಸಿ ಹುಟ್ಟುಹಬ್ಬ ಆಚರಿಸಿಕೊಂಡಿರುವ ಭಾವಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಸರಕಾರಿ ಕಚೇರಿಗಳಲ್ಲಿ ಸರಕಾರಿ ಸಿಬ್ಬಂದಿ ಮತ್ತು ಅಧಿಕಾರಿಗಳು ಜನ್ಮದಿನ ಆಚರಿಸಬಾರದು ಎಂಬ ನಿಯಮ ಇದೆ. ಆದರೆ, ಈ ನಿಯಮ ಉಲ್ಲಂಘಿಸಿ ಬೆಂಗಳೂರು ನಗರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಅಧಿಕಾರಿ ಹುಟ್ಟಹಬ್ಬ ಆಚರಿಸಿದ್ದರೂ ಕಂದಾಯ ಇಲಾಖೆ ಈವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಇತ್ತೀಚಿಗಷ್ಟೇ ಲೋಕೋಪಯೋಗಿ ಇಲಾಖೆಯಲ್ಲಿ ಜನ್ಮದಿನ ಆಚರಿಸಿಕೊಂಡಿದ್ದವರನ್ನು ಅಮಾನತುಗೊಳಿಸಿ ಸರಕಾರಿ ಆದೇಶ ಹೊರಡಿಸಿತ್ತು. ಶಿರಸ್ತೇದಾರ ತನ್ನ ಹುಟ್ಟುಹಬ್ಬ ಆಚರಣೆಗೆ ಕಚೇರಿ ಸ್ಥಳವನ್ನು ದುರುಪಯೋಗ ಪಡಿಸಿಕೊಂಡಿರುವುದನ್ನು ವಿರೋಧಿಸಿ ರಾಷ್ಟ್ರೀಯ ಅಂಬೇಡ್ಕರ್ ಸೇನೆ ಕಂದಾಯ ಸಚಿವರಿಗೆ ದೂರು ಸಲ್ಲಿಸಿ ತಕ್ಷಣ ಅಧಿಕಾರಿ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದೆ.
BENGALURU | ಜಿಲ್ಲಾಧಿಕಾರಿ ಕಚೇರಿಯಲ್ಲಿ ಕೇಕ್ ಪಾರ್ಟಿ: ಆರೋಪಿ ಶಿರಸ್ತೇದಾರ ವಿರುದ್ಧ ಎಫ್ಐಆರ್
ಬೆಂಗಳೂರು, ಮಾ.5: ಬೆಂಗಳೂರು ನಗರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸರಕಾರಿ ಅಧಿಕಾರಿಯೊಬ್ಬರು ಜನ್ಮದಿನ ಆಚರಿಸಿಕೊಂಡಿರುವುದು ತಡವಾಗಿ ಬೆಳಕಿಗೆ ಬಂದಿದ್ದು, ಈ ಸಂಬಂಧ ರಾಷ್ಟ್ರೀಯ ಅಂಬೇಡ್ಕರ್ ಸೇನೆ ಕಂದಾಯ ಸಚಿವರಿಗೆ ದೂರು ಸಲ್ಲಿಸಿದೆ. ಶಿರಸ್ತೇದಾರ ಎಚ್.ಆರ್.ಅನಿಲ್ ಕುಮಾರ್ ಎಂಬವರು, ಸಹಪಾಠಿಗಳ ಜೊತೆ ಟೇಬಲ್ ಮೇಲೆ 10 ಕೇಕ್ ಗಳನ್ನು ಕತ್ತರಿಸಿ ಹುಟ್ಟುಹಬ್ಬ ಆಚರಿಸಿಕೊಂಡಿರುವ ಭಾವಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಸರಕಾರಿ ಕಚೇರಿಗಳಲ್ಲಿ ಸರಕಾರಿ ಸಿಬ್ಬಂದಿ ಮತ್ತು ಅಧಿಕಾರಿಗಳು ಜನ್ಮದಿನ ಆಚರಿಸಬಾರದು ಎಂಬ ನಿಯಮ ಇದೆ. ಆದರೆ, ಈ ನಿಯಮ ಉಲ್ಲಂಘಿಸಿ ಬೆಂಗಳೂರು ನಗರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಅಧಿಕಾರಿ ಹುಟ್ಟಹಬ್ಬ ಆಚರಿಸಿದ್ದರೂ ಕಂದಾಯ ಇಲಾಖೆ ಈವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಇತ್ತೀಚಿಗಷ್ಟೇ ಲೋಕೋಪಯೋಗಿ ಇಲಾಖೆಯಲ್ಲಿ ಜನ್ಮದಿನ ಆಚರಿಸಿಕೊಂಡಿದ್ದವರನ್ನು ಅಮಾನತುಗೊಳಿಸಿ ಸರಕಾರಿ ಆದೇಶ ಹೊರಡಿಸಿತ್ತು. ಶಿರಸ್ತೇದಾರ ತನ್ನ ಹುಟ್ಟುಹಬ್ಬ ಆಚರಣೆಗೆ ಕಚೇರಿ ಸ್ಥಳವನ್ನು ದುರುಪಯೋಗ ಪಡಿಸಿಕೊಂಡಿರುವುದನ್ನು ವಿರೋಧಿಸಿ ರಾಷ್ಟ್ರೀಯ ಅಂಬೇಡ್ಕರ್ ಸೇನೆ ಕಂದಾಯ ಸಚಿವರಿಗೆ ದೂರು ಸಲ್ಲಿಸಿ ತಕ್ಷಣ ಅಧಿಕಾರಿ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದೆ.
Kalaburagi | ಹೋಳಿ ಹಬ್ಬದಲ್ಲಿ ಬುರ್ಖಾ ಧರಿಸಿ ಅವಹೇಳನ: ಐವರ ವಿರುದ್ಧ ಪ್ರಕರಣ ದಾಖಲು
ಕಲಬುರಗಿ: ಹೋಳಿ ಹಬ್ಬದ ಸಂದರ್ಭ ಬುರ್ಖಾ ಧರಿಸಿ ಕೋಮು ಭಾವನೆಗೆ ಧಕ್ಕೆ ತಂದಿರುವ ಆರೋಪದಲ್ಲಿ ಐವರು ವಿರುದ್ಧ ಪ್ರಕರಣ ದಾಖಲಾಗಿದೆ. ನಿಂಬರ್ಗಾ ಗ್ರಾಮದ ನಿವಾಸಿಗಳಾದ ಪ್ರಜ್ವಲ್ ಬೆಳಮಗಿ, ಶಾಂತಪ್ಪ ಮಠಪತಿ, ನಾಗರಾಜ್ ಗೋವಣಗೊಳ, ಅನಿಲ್ ನಾಡಗಡಿ ಮತ್ತು ಚನ್ನು ದುಗೊಂಡ ಎಂಬವರು ಸೇರಿದಂತೆ ಇತರರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ಕಲಬುರಗಿ ದಕ್ಷಿಣ ಮತ ಕ್ಷೇತ್ರದ ದಲಿತ ಸೇನೆಯ ಅಧ್ಯಕ್ಷ ಸಮೀರ್ ಅವಂಟಿ ನೀಡಿರುವ ದೂರಿನಂತೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ. ಇನ್ನು, ಕೋಮು ಸೌಹಾರ್ಧಕ್ಕೆ ಧಕ್ಕೆ ತಂದಿರುವ ಆರೋಪಿಗಳನ್ನು ಕೂಡಲೇ ಬಂಧಿಸಿ, ಅವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಮತ್ತೆ ಕುಸಿದ ಚಿನ್ನದ ದರ, ಸ್ಥಿರವಾದ ಬೆಳ್ಳಿ
ಮಾರ್ಚ್ 18ರಂದು ನಡೆಯುವ ಸಭೆಯಲ್ಲಿ ಅಮೆರಿಕದ ಕೇಂದ್ರೀಯ ಬ್ಯಾಂಕ್ ಫೆಡರಲ್ ರಿಸರ್ವ್ ದೀರ್ಘ ಸಮಯದವರೆಗೆ ಬಡ್ಡಿದರವನ್ನು ಸ್ಥಿರವಾಗಿಡಲಿದೆ ಎಂದು ಹೂಡಿಕೆದಾರರು ನಿರೀಕ್ಷಿಸುತ್ತಿದ್ದಾರೆ. ಫೆಬ್ರವರಿ 23 ಸೋಮವಾರದಿಂದ ಚಿನ್ನದ ಬೆಲೆ ತುಸು ಏರು ಹಾದಿಯಲ್ಲಿತ್ತು. ಕಳೆದ ಶನಿವಾರ ಗ್ರಾಂಗೆ 300 ರೂ. ಮೀರಿ ಏರಿದ ನಂತರ ರವಿವಾರವೂ ಗ್ರಾಂಗೆ 437 ರೂ. ಏರಿಕೆಯಾಗಿ 17 ಸಾವಿರದ ಗಡಿ ದಾಟಿತ್ತು. ಆದರೆ, ಸೋಮವಾರದಿಂದ ಚಿನ್ನದ ಬೆಲೆ ಕುಸಿತದ ಹಾದಿಯಲ್ಲಿದೆ. ಸೋಮವಾರ ದಿಢೀರ್ ಕುಸಿತ ಕಂಡ ಚಿನ್ನದ ಬೆಲೆ ಗ್ರಾಂಗೆ 16,980 ರೂ.ಗೆ ಬಂದು ನಿಂತಿತ್ತು, ನಂತರ ಸಂಜೆ ವೇಳೆ ತುಸು ಚೇತರಿಸಿಕೊಂಡ ಬೆಲೆ ಮಂಗಳವಾರ ಮತ್ತೆ ತುಸು ಕುಸಿದಿದೆ. ಬುಧವಾರ ಚಿನ್ನ-ಬೆಳ್ಳಿಯ ಬೆಲೆ ತೀವ್ರವಾಗಿ ಕುಸಿದ ನಂತರ ಗುರುವಾರವೂ ಬೆಲೆಯಲ್ಲಿ ಸ್ವಲ್ಪ ಕುಸಿತ ಕಂಡುಬಂದಿದೆ. ಚಿನ್ನ-ಬೆಳ್ಳಿ ಬೆಲೆ ಕುಸಿತಕ್ಕೆ ಕಾರಣವೇನು? ಅಮೆರಿಕ ಮತ್ತು ಇಸ್ರೇಲ್ ಜೊತೆಗೂಡಿ ಇರಾನ್ ಮೇಲೆ ದಾಳಿ ಮಾಡಿರುವುದು, ಜಾಗತಿಕ ಭೌಗೋಳಿಕ ರಾಜಕೀಯದ ಉದ್ವಿಗ್ನತೆ ಮತ್ತು ಮಧ್ಯಪ್ರಾಚ್ಯದಲ್ಲಿ ಸಂಘರ್ಷದ ವಾತಾವರಣದ ನಡುವೆಯೂ ಚಿನ್ನ ಮತ್ತು ಬೆಳ್ಳಿಯ ಬೆಲೆಗಳು ಕುಸಿದಿವೆ. ಪ್ರಸ್ತುತ ಮಾರುಕಟ್ಟೆಯ ಗಮನವು ಅಮೆರಿಕದ ಕೇಂದ್ರೀಯ ಬ್ಯಾಂಕ್ ಫೆಡರಲ್ ರಿಸರ್ವ್ ಕೈಗೊಂಡ ನೀತಿ ನಿರೂಪಣೆಗೆ ಸಂಬಂಧಿಸಿದ ನಿರ್ಧಾರಗಳ ಕಡೆಗೆ ಹೋಗಿದೆ. ಅಮೆರಿಕನ್ ಡಾಲರ್ ಬೆಲೆಯು ಉತ್ತಮ ಸ್ಥಿತಿಗೆ ತಲುಪಿದೆ. ಹೀಗಾಗಿ ವಿದೇಶಿ ಖರೀದಿದಾರರಿಗೆ ಚಿನ್ನ-ಬೆಳ್ಳಿ ದುಬಾರಿಯಾಗಿಸಿದೆ. ಪ್ರಬಲವಾಗಿರುವ ಅಮೆರಿಕನ್ ಡಾಲರ್ ಕಾರಣದಿಂದ ಲೋಹಗಳ ಬೇಡಿಕೆ ಕಡಿಮೆಯಾಗಿದೆ. ಮಾರ್ಚ್ 18ರಂದು ನಡೆಯುವ ಸಭೆಯಲ್ಲಿ ಫೆಡರಲ್ ರಿಸರ್ವ್ ದೀರ್ಘ ಸಮಯದವರೆಗೆ ಬಡ್ಡಿದರವನ್ನು ಸ್ಥಿರವಾಗಿಡಲಿದೆ ಎಂದು ಹೂಡಿಕೆದಾರರು ನಿರೀಕ್ಷಿಸುತ್ತಿದ್ದಾರೆ. ಈ ನಡುವೆ ಶುಕ್ರವಾರ ಬಿಡುಗಡೆಯಾಗಲಿರುವ ಉದ್ಯೋಗ ವರದಿಯ ಮೇಲಿನ ನಿರೀಕ್ಷೆಯೂ ಹೂಡಿಕೆದಾರರನ್ನು ಚಿನ್ನದಿಂದ ದೂರವಿಟ್ಟಿದೆ. ಇಂದಿನ ಚಿನ್ನದ ದರ ಹೇಗಿದೆ? ಮಾರ್ಚ್ 05ರಂದು ಗುರುವಾರ ಬೆಂಗಳೂರಿನ ಮಾರುಕಟ್ಟೆಗಳಲ್ಲಿ 24 ಕ್ಯಾರೆಟ್ ಶುದ್ಧ ಚಿನ್ನದ ಬೆಲೆ ಬುಧವಾರ ಸಂಜೆಯ ಬೆಲೆಗೆ ಹೋಲಿಸಿದರೆ ಪ್ರತಿ ಗ್ರಾಂಗೆ 98 ರೂ. ಕುಸಿತ ಕಂಡು ಹತ್ತು ಗ್ರಾಂ ಬೆಲೆ 1,63,530 ರೂ. ಗೆ ಬಂದು ನಿಂತಿದೆ. ಆಭರಣ ಚಿನ್ನವಾದ 22 ಕ್ಯಾರೆಟ್ ಬೆಲೆಯು ಗ್ರಾಂಗೆ 90 ರೂ. ಇಳಿದು ಹತ್ತು ಗ್ರಾಂಗೆ 1,49,900 ರೂ. ಗೆ ತಲುಪಿದೆ. 18 ಕ್ಯಾರೆಟ್ ಚಿನ್ನವು ಪ್ರತಿ ಗ್ರಾಂಗೆ 73 ರೂ. ಇಳಿಕೆಯಾಗಿ ಹತ್ತು ಗ್ರಾಂಗೆ 1,22,650 ರೂ. ಗೆ ತಲುಪಿದೆ. ಮಂಗಳೂರಿನಲ್ಲಿ ಚಿನ್ನದ ದರವೆಷ್ಟಿದೆ? ಮಾರ್ಚ್ 05ರಂದು ಗುರುವಾರ ಬೆಳಗಿನ 11 ಗಂಟೆಯ ವಹಿವಾಟಿನಲ್ಲಿ ಮಂಗಳೂರಿನಲ್ಲಿ ಚಿನ್ನದ ಬೆಲೆ ಮತ್ತೆ ಸ್ವಲ್ಪ ಕುಸಿತ ಕಂಡಿದೆ. ಒಂದು ಗ್ರಾಂ 24 ಕ್ಯಾರೆಟ್ ಚಿನ್ನದ ದರ 16,353 (-98) ರೂ. ನಷ್ಟಿದೆ. ಒಂದು ಗ್ರಾಂ 22 ಕ್ಯಾರೆಟ್ ಚಿನ್ನದ ದರ 14,990 (-90) ರೂ. ಮತ್ತು ಒಂದು ಗ್ರಾಂ 18 ಕ್ಯಾರೆಟ್ ಚಿನ್ನದ ದರ 12,265 (-73) ರೂ. ಬೆಲೆಗೆ ತಲುಪಿದೆ. ಸ್ಥಿರವಾದ ಬೆಳ್ಳಿ ದರ ಫೆಬ್ರವರಿ ಆರಂಭದಿಂದಲೇ ಸತತ ಕುಸಿತ ಕಂಡಿದ್ದ ಬೆಳ್ಳಿ ಫೆಬ್ರವರಿ ಮಧ್ಯಭಾಗದಲ್ಲಿ ಏರು ಹಾದಿಯಲ್ಲಿತ್ತು. ಕಳೆದ ವಾರದಲ್ಲಿ ಬುಧವಾರ, ಗುರುವಾರ ಮತ್ತು ಶುಕ್ರವಾರ ಸ್ಥಿರವಾಗಿದ್ದ ಬೆಳ್ಳಿಯ ಬೆಲೆ, ಶನಿವಾರ ಗ್ರಾಂಗೆ ರೂ 10 ಏರಿಕೆಯಾಗಿ ಒಂದು ಕೆಜಿ ಬೆಳ್ಳಿ ಬೆಲೆ 2,95,000 ರೂ. ಗೆ ಬಂದು ನಿಂತಿತ್ತು. ಮಾರ್ಚ್ 1ರಂದು ಭಾನುವಾರವೂ ಇದೇ ಬೆಲೆಯಲ್ಲಿ ಸ್ಥಿರವಾಗಿ ನಿಂತಿತ್ತು. ಆದರೆ ಈ ವಾರದ ಆರಂಭದಲ್ಲಿ ಸೋಮವಾರ ಬರೋಬ್ಬರಿ ಗ್ರಾಂಗೆ 35 ರೂ. ಏರಿಕೆಯಾಗಿ ಒಂದು ಕೆಜಿ ಬೆಳ್ಳಿ ಬೆಲೆಯು 3,30,000 ರೂ. ಗೆ ತಲುಪಿತ್ತು. ಮಂಗಳವಾರದಿಂದ ಬೆಳ್ಳಿಯ ಬೆಲೆ ಕುಸಿತದ ಹಾದಿಯಲ್ಲಿದೆ. ಮಾರ್ಚ್ 02ರಂದು ಬೆಳ್ಳಿಯ ಬೆಲೆಯಲ್ಲಿ ಮತ್ತೆ ಕುಸಿತ ಕಂಡುಬಂದಿದೆ. ಗ್ರಾಂಗೆ 20 ರೂ. ಕುಸಿತ ಕಂಡು ಒಂದು ಕೆಜಿ ಬೆಳ್ಳಿ ಬೆಲೆಯು 2,95,000 ರೂ. ಗೆ ಬಂದು ನಿಂತಿತ್ತು. ಬುಧವಾರ ಮತ್ತೆ ಪ್ರತಿ ಗ್ರಾಂಗೆ 10 ರೂ. ಕುಸಿದ ಬೆಳ್ಳಿಯ ಬೆಲೆ ಪ್ರತಿ ಕೆಜಿಗೆ 2,85,000 ರೂ. ಗೆ ಬಂದು ನಿಂತಿದೆ. ಇದೀಗ ಗುರುವಾರ ಇದೇ ಬೆಲೆಗೆ ಸ್ಥಿರವಾಗಿ ನಿಂತಿದೆ. ವಿವಿಧ ನಗರಗಳಲ್ಲಿ 1 ಗ್ರಾಮ್ ಚಿನ್ನದ ದರ (ಬೆಳಗಿನ ವಹಿವಾಟು) ಹೇಗಿದೆ? ದಿಲ್ಲಿ: 24 ಕ್ಯಾರೆಟ್ ಚಿನ್ನದ ದರ 16,368 (-98) ರೂ., 22 ಕ್ಯಾರೆಟ್ ಚಿನ್ನದ ದರ 15,005 (-90) ರೂ. ಮುಂಬೈ: 24 ಕ್ಯಾರೆಟ್ ಚಿನ್ನದ ದರ 16,353 (-98) ರೂ., 22 ಕ್ಯಾರೆಟ್ ಚಿನ್ನದ ದರ 14,990 (-90) ರೂ. ಅಹಮದಾಬಾದ್: 24 ಕ್ಯಾರೆಟ್ ಚಿನ್ನದ ದರ 16,358 (-98) ರೂ., 22 ಕ್ಯಾರೆಟ್ ಚಿನ್ನದ ದರ 14,995 (-90) ರೂ. ಚೆನ್ನೈ: 24 ಕ್ಯಾರೆಟ್ ಚಿನ್ನದ ದರ 16,495 (-87) ರೂ., 22 ಕ್ಯಾರೆಟ್ ಚಿನ್ನದ ದರ 15,120 (-80) ರೂ. ಕೋಲ್ಕತ್ತಾ: 24 ಕ್ಯಾರೆಟ್ ಚಿನ್ನದ ದರ 16,353 (-98) ರೂ., 22 ಕ್ಯಾರೆಟ್ ಚಿನ್ನದ ದರ 14,990 (-90) ರೂ. ಹೈದರಾಬಾದ್: 24 ಕ್ಯಾರೆಟ್ ಚಿನ್ನದ ದರ 16,353 (-98) ರೂ., 22 ಕ್ಯಾರೆಟ್ ಚಿನ್ನದ ದರ 14,990 (-90) ರೂ. ಜೈಪುರ: 24 ಕ್ಯಾರೆಟ್ ಚಿನ್ನದ ದರ 16,368 (-98) ರೂ., 22 ಕ್ಯಾರೆಟ್ ಚಿನ್ನದ ದರ 15,005 (-90) ರೂ. ಚಂಡೀಗಢ: 24 ಕ್ಯಾರೆಟ್ ಚಿನ್ನದ ದರ 16,368 (-98) ರೂ., 22 ಕ್ಯಾರೆಟ್ ಚಿನ್ನದ ದರ 15,005 (-90) ರೂ. ಲಕ್ನೋ: 24 ಕ್ಯಾರೆಟ್ ಚಿನ್ನದ ದರ 16,368 (-98) ರೂ., 22 ಕ್ಯಾರೆಟ್ ಚಿನ್ನದ ದರ 15,005 (-90) ರೂ.

29 C