ಶಿರಹಟ್ಟಿ | ಡಾ.ಚಂದ್ರು ಲಮಾಣಿ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ
ಗದಗ: ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಶಿರಹಟ್ಟಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಡಾ.ಚಂದ್ರು ಲಮಾಣಿ ವಿರುದ್ಧ ಶಿರಹಟ್ಟಿ ಬ್ಲಾಕ್ ಕಾಂಗ್ರೆಸ್ ಸಮಿತಿಯಿಂದ ವತಿಯಿಂದ ಶಿರಹಟ್ಟಿಯಲ್ಲಿ ಇಂದು ಪ್ರತಿಭಟನೆ ನಡೆಯಿತು. ಡಾ. ಚಂದ್ರುರನ್ನು ಶಾಸಕ ಸ್ಥಾನದಿಂದ ಅಮಾನತುಗೊಳಿಸಬೇಕು ಎಂದು ಆಗ್ರಹಿಸಿದ ಪ್ರತಿಭಟನಾಕಾರರು ಶಿರಹಟ್ಟಿ ಪೇಟೆ ಆಂಜನೇಯ ದೇವಸ್ಥಾನದಿಂದ ತಹಶಿಲ್ದಾರ್ ಕಚೇರಿಯ ವರೆಗೆ ಪ್ರತಿಭಟನಾ ಜಾಥಾ ನಡೆಸಿದರು. ಬಳಿಕ ಡಾ.ಚಂದ್ರುರನ್ನು ಅಮಾನತುಗೊಳಿಸುವಂತೆ ಆಗ್ರಹಿಸಿ ತಹಶೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು. ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ, ರಾಮಣ್ಣ ಲಮಾಣಿ, ಸುಜಾತ ದೊಡ್ಡಮನಿ ಸೇರಿದಂತೆ ಕಾಂಗ್ರೆಸ್ ಮುಖಂಡರು, ನೂರಾರು ಕಾಂಗ್ರೇಸ್ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಕಾಂಗ್ರೆಸ್ ಸರಕಾರದಿಂದ ಬಂಜಾರ ಸಮಾಜದ ವಿರುದ್ಧ ದ್ವೇಷದ ರಾಜಕಾರಣ: ಬಿ.ವೈ.ವಿಜಯೇಂದ್ರ ಆರೋಪ
ಬೆಂಗಳೂರು: ರಾಜ್ಯದ ಕಾಂಗ್ರೆಸ್ ಸರಕಾರವು ಬಂಜಾರ ಸಮಾಜದ ವಿರುದ್ಧ ದ್ವೇಷದ ರಾಜಕಾರಣ ಮಾಡುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ಆಕ್ಷೇಪಿಸಿದ್ದಾರೆ. ಇಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರ ಕಚೇರಿಯಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಕಾಂಗ್ರೆಸ್ಸಿನವರು ಯಾವ ನೈತಿಕತೆ ಇಟ್ಟುಕೊಂಡು ಭ್ರಷ್ಟಾಚಾರದ ಕುರಿತು ಮಾತನಾಡುತ್ತಾರೆ. ಭ್ರಷ್ಟಾಚಾರದ ಬಗ್ಗೆ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ, ಪ್ರಿಯಾಂಕ್ ಖರ್ಗೆಯವರು ಮಾತನಾಡುತ್ತಿದ್ದಾರೆ. ಭ್ರಷ್ಟಾಚಾರದ ಕುರಿತು ಮಾತನಾಡುವ ಯೋಗ್ಯತೆ ಕಾಂಗ್ರೆಸ್ಸಿನವರಿಗೆ ಇದೆಯೇ ಎಂದು ಪ್ರಶ್ನಿಸಿದರು. ಇದೇ ಸರಕಾರದ ಅವಧಿಯಲ್ಲಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ ನಡೆಯಿತು. ಪ್ರಾಮಾಣಿಕ ಅಧಿಕಾರಿ ಆತ್ಮಹತ್ಯೆ ಮಾಡಿಕೊಂಡರಲ್ಲವೇ? ಸಿದ್ದರಾಮಯ್ಯನವರ ಸಂಪುಟದ ಸಚಿವರು ರಾಜೀನಾಮೆ ಕೊಟ್ಟರಲ್ಲವೇ? ಪರಿಶಿಷ್ಟ ಪಂಗಡಕ್ಕೆ ಮೀಸಲಿಟ್ಟ ನೂರಾರು ಕೋಟಿ ಹಣವನ್ನು ತೆಲಂಗಾಣಕ್ಕೆ ತೆಗೆದುಕೊಂಡು ಹೋಗಿ ಚುನಾವಣೆಗೆ ಬಳಸಲಿಲ್ಲವೇ? ಎಂದು ಸರಣಿ ಪ್ರಶ್ನೆಗಳನ್ನು ಮುಂದಿಟ್ಟರು. ಹಾಗಿದ್ದರೆ ಪ್ರಿಯಾಂಕ್ ಖರ್ಗೆಯವರು ಇಲ್ಲವೆಂದು ಹೇಳಲಿ ಎಂದು ಸವಾಲೆಸೆದರು. ಹಿಂದೆ ಸಿದ್ದರಾಮಯ್ಯನವರು ಮುಖ್ಯಮಂತ್ರಿ ಆಗಿದ್ದಾಗ ಆಂಜನೇಯ ಅವರು ಸಚಿವರಾಗಿದ್ದಾಗ ಏನಾಗಿದೆ ಎಂಬುದು ಎಲ್ಲರಿಗೂ ಗೊತ್ತಿದೆ. ಎಲ್ಲೋ ಒಂದು ಕಡೆ ಕಾಂಗ್ರೆಸ್ ಸರಕಾರವು ಬಂಜಾರ ಸಮಾಜವನ್ನು ಟಾರ್ಗೆಟ್ ಮಾಡುತ್ತಿದೆ ಎಂದು ಅವರು ಆರೋಪಿಸಿದರು. ಇದರ ಬಗ್ಗೆ ಯಾವುದೇ ಅನುಮಾನಗಳು ಬೇಡ. ಬಂಜಾರ ಸಮಾಜದ ಬಗ್ಗೆ ತಾತ್ಸಾರ, ಅಲಕ್ಷ್ಯ ತೋರುವ ಇವರು ಅಹಿಂದ ಹೆಸರು ಹೇಳಿಕೊಂಡು ಮೆರೆಯುತ್ತಿದ್ದಾರೆ ಎಂದು ಟೀಕಿಸಿದರು. ಕಾಂಗ್ರೆಸ್ ಸರಕಾರವು ಅಧಿಕಾರಕ್ಕೆ ಬಂದಾಗಿನಿಂದ ಬಂಜಾರ ಸಮಾಜವನ್ನು ಟಾರ್ಗೆಟ್ ಮಾಡುತ್ತಿರುವುದು ಜಗಜ್ಜಾಹೀರಾಗಿದೆ. ಈ ಸಮಾಜವು ಕಳೆದ 30-40 ವರ್ಷಗಳಿಂದ ಬಿಜೆಪಿ ಜೊತೆ ಗಟ್ಟಿಯಾಗಿ ಗುರುತಿಸಿಕೊಂಡಿದೆ. ಬಿಜೆಪಿಯನ್ನು ರಾಜ್ಯದಲ್ಲಿ ಶೇ ನೂರಕ್ಕೆ ನೂರು ಬೆಂಬಲಿಸುತ್ತಿದೆ. ಇದರ ಪರಿಣಾಮವಾಗಿ ಸಿದ್ದರಾಮಯ್ಯನವರ ಸರಕಾರದಿಂದ ಕಳೆದ ಎರಡೂವರೆ ವರ್ಷಗಳಲ್ಲಿ ಈ ಸಮಾಜಕ್ಕೆ ಅನ್ಯಾಯವೂ ಆಗಿದೆ. ಮತ್ತೊಂದು ಕಡೆ ಈ ಸಮಾಜ ಟಾರ್ಗೆಟ್ ಆಗುತ್ತಿದೆ ಎಂದು ವಿಶ್ಲೇಷಿಸಿದರು. ಸೂರಗುಂಡನಕೊಪ್ಪದಲ್ಲಿ ಈಚೆಗೆ ಕಾರ್ಯಕ್ರಮ ನಡೆಯುತ್ತಿತ್ತು. ಉಪ ಮುಖ್ಯಮಂತ್ರಿ ಶಿವಕುಮಾರ್ ಅವರು ಆ ಕಾರ್ಯಕ್ರಮಕ್ಕೆ ಬಂದಿದ್ದರು. ಅಲ್ಲಿದ್ದ ಬಂಜಾರ ಸಮಾಜದ ಯುವಕರು ಸಹಜವಾಗಿ ಕಾಂಗ್ರೆಸ್ ವಿರುದ್ಧ ಹರಿಹಾಯ್ದಿದ್ದಾರೆ. ತಮ್ಮ ನ್ಯಾಯಯುತ ಬೇಡಿಕೆ ಮುಂದಿಟ್ಟಿದ್ದಾರೆ. ಇದ್ಯಾವುದಕ್ಕೂ ಉತ್ತರ ಕೊಡದೇ ಶಿವಕುಮಾರ್ ಅವರು ಓಡಿಹೋಗಿದ್ದನ್ನು ನೋಡಿದ್ದೇವೆ. ಆ ಬಂಜಾರ ಸಮಾಜದ ಯುವಕರ ವಿರುದ್ಧ ಎಫ್ಐಆರ್ ದಾಖಲಿಸಿದ್ದನ್ನೂ ನೋಡಿದ್ದೇವೆ ಎಂದು ಗಮನ ಸೆಳೆದರು. ಚಂದ್ರು ಲಮಾಣಿಯವರ ವಿಚಾರ ಕೋರ್ಟಿನಲ್ಲಿದ್ದು, ಅದರ ಬಗ್ಗೆ ಹೆಚ್ಚೇನೂ ಹೇಳಲು ಹೋಗುವುದಿಲ್ಲ . ಆಡಿಯೋ ಲೀಕ್ ಆಗಿದೆ. ಏನೇನು ಚರ್ಚೆ ಆಗಿದೆ? ಯಾವ ರೀತಿ ರಾಜಕೀಯವಾಗಿ ಟಾರ್ಗೆಟ್ ಆಗಿದ್ದಾರೆ; ಇವೆಲ್ಲವೂ ಬಹಿರಂಗ ಆಗಿದೆ ಎಂದು ತಿಳಿಸಿದರು. ಹಿಂದುಳಿದ ಸಮುದಾಯ, ಪರಿಶಿಷ್ಟ ಜಾತಿ, ಪಂಗಡದವರಿಗೆ ಹೆಚ್ಚು ಅನುದಾನ ಕೊಡಿ ಸಿದ್ದರಾಮಯ್ಯನವರನ್ನು ಯಾರೋ ಅವರ ಪಕ್ಷದಲ್ಲೇ ಕಾಲೆಳೆಯುತ್ತಿದ್ದು, ಅವರಿಗೆ ಹರಿಹಾಯ್ದಿರಬೇಕು ಎಂದು ಅವರು ಇನ್ನೊಂದು ಪ್ರಶ್ನೆಗೆ ಉತ್ತರ ನೀಡಿದರು. ಕುರಿ ಕಾಯುವ ಸಮುದಾಯದವರು ರಾಜ್ಯದ ಮುಖ್ಯಮಂತ್ರಿ ಆಗಿರುವುದು ಸಂತೋಷದ ವಿಚಾರ. ಸಿದ್ದರಾಮಯ್ಯನವರು ಅಹಿಂದ ಹೆಸರು ಹೇಳಿಕೊಂಡು ಮುಖ್ಯಮಂತ್ರಿ ಸ್ಥಾನ ಪಡೆದುಕೊಂಡಿದ್ದಾರೆ. ಯಡಿಯೂರಪ್ಪ ಅವರು ಬಿಜೆಪಿ ಮುಖ್ಯಮಂತ್ರಿ ಆಗಿದ್ದಾಗ ಹಿಂದುಳಿದ ಸಮುದಾಯ, ಪರಿಶಿಷ್ಟ ಜಾತಿ, ಪಂಗಡದವರಿಗೆ 550 ಕೋಟಿ ಅನುದಾನ ನೀಡಿದ್ದರು. ಈ ಬಜೆಟ್ನಲ್ಲಾದರೂ, ಹಿಂದುಳಿದ ಸಮುದಾಯ, ಪರಿಶಿಷ್ಟ ಜಾತಿ, ಪಂಗಡದವರಿಗೆ ಕನಿಷ್ಠ 2500- 3000 ಕೋಟಿ ಅನುದಾನ ಕೊಡಬೇಕು ಎಂದು ಆ ಸಮುದಾಯಗಳ ಪರವಾಗಿ ಹಕ್ಕೊತ್ತಾಯ ಮುಂದಿಟ್ಟರು. ಅಷ್ಟೊಂದು ದಿವಾಳಿ ಆಗಿದೆಯೇ ರಾಜ್ಯ ಸರಕಾರ? ಕುರಿಗಳ ಆಕಸ್ಮಿಕ ಸಾವಿನ ಸಂಬಂಧ 48 ಕೋಟಿಯನ್ನು ಅನುಗ್ರಹ ಯೋಜನೆಯಡಿ ಇವತ್ತಿಗೂ ಬಾಕಿ ಉಳಿಸಿಕೊಂಡಿದ್ದಾರೆ. ಅಷ್ಟೊಂದು ದಿವಾಳಿ ಆಗಿದೆಯೇ ರಾಜ್ಯ ಸರಕಾರ? ಖಜಾನೆ ಖಾಲಿ ಆಗಿದೆಯೇ? ಎಂದು ಕೇಳಿದರು. ಒಂದು ತಿಂಗಳಿಂದ ನಾವು ತಿಳಿಸಿದರೂ ಆ ಬಡ ಕುಟುಂಬಗಳಿಗೆ ಹಣ ಬಿಡುಗಡೆ ಮಾಡಿಲ್ಲವೇಕೆ ಮುಖ್ಯಮಂತ್ರಿಗಳೇ ಎಂದು ಪ್ರಶ್ನಿಸಿದರು. 90 ಸಾವಿರ ಕುರಿ, ಮೇಕೆಗಳು ಸತ್ತಿವೆ. ಕೇವಲ 30 ಸಾವಿರ ಕುರಿ, ಮೇಕೆಗಳಿಗೆ ಪರಿಹಾರ ಕೊಟ್ಟಿದ್ದಾರೆ ಎಂದು ವಿವರಿಸಿದರು. ತಮ್ಮ ಸಿಎಂ ಕುರ್ಚಿ ಅಲ್ಲಾಡುವಾಗ ಸಮಾಜ ನೆನಪಾಗುತ್ತದೆ. ಸಮಾಜದ ಬಡವರು ತೊಂದರೆಯಲ್ಲಿದ್ದಾರೆ. ಅವರ ಸಮಸ್ಯೆಗೆ ಪರಿಹಾರ ನೀಡಲು ನೀವು ತಯಾರಿಲ್ಲ ಎಂದು ಆಕ್ಷೇಪಿಸಿದರು. ಇದನ್ನು ತಮ್ಮ ಸಮಾಜ ಪ್ರಶ್ನಿಸುತ್ತಿದೆ ಎಂದು ಹೇಳಿದರು.
Mahika Sharma Video Viral: ಟಿ20 ವಿಶ್ವಕಪ್ 2026 ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ಔಟ್ ಆದ ಬಳಿಕ ಅವರ ಪ್ರೇಯಸಿ ಮಹಿಕಾ ಶರ್ಮಾ ಎದ್ದುನಿಂತು ಚಪ್ಪಾಳೆ ಹೊಡೆದ ದೃಶ್ಯ ಗಮನ ಸೆಳೆದಿದೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಭಾರೀ ಚರ್ಚೆಗೆ ಗ್ರಾಸವಾಗಿದೆ. ಹಾಗಾದ್ರೆ ಈ ಬಗ್ಗೆ ನೆಟ್ಟಿಗರು
ಸಿಎಂ ಸಿದ್ದರಾಮಯ್ಯ ಅವರು ಮೊದಲಿಂದಲೂ ಸಾಮಾಜಿಕ ನ್ಯಾಯದ ಪರ : ಗೃಹ ಸಚಿವ ಡಾ. ಜಿ.ಪರಮೇಶ್ವರ
ಶಾಲಾ-ಕಾಲೇಜುಗಳಲ್ಲಿ ಮೊಬೈಲ್ ಬ್ಯಾನ್ ಮಾಡುವ ಬಗ್ಗೆ ಚಿಂತನೆ
ಕರ್ನಾಟಕದಲ್ಲಿ ರೈಲು ಕ್ರಾಂತಿ: 1864ರ ಮೊದಲ ಹಳಿಯಿಂದ ಸಾಗಿ ಬಂದ ಪಯಣ, ರಾಜ್ಯದ ಸಂಪೂರ್ಣ ರೈಲು ಚಿತ್ರಣ ಇಲ್ಲಿದೆ
Karnataka Railway Network: ನೈಋತ್ಯ ರೈಲ್ವೆ ವ್ಯಾಪ್ತಿಗೆ ಒಳಪಡುವ (SWR) ಕರ್ನಾಟಕದಲ್ಲಿ ರೈಲು ಸಾರಿಗೆ ಅತ್ಯುತ್ತಮ ಹಾಗೂ ಅಗ್ಗದ ಸೇವೆಯಾಗಿದೆ. 1864ರಲ್ಲಿ ಆರಂಭವಾದ ರೈಲು ಜಾಲ ಇಂದು ರಾಜಧಾನಿ ಬೆಂಗಳೂರಿನಂತಹ ಮಹಾನಗರದಿಂದ ಹಿಡಿದು, ಗುಡ್ಡಗಾಡು, ಬೆಟ್ಟಗಳ ಮಧ್ಯ ಹಾದು ಗ್ರಾಮೀಣ ಭಾಗದವರೆಗೂ ಸುಲಲಿತ ಸಂಪರ್ಕ ಕಲ್ಪಿಸಿದೆ. ರಾಜ್ಯದಲ್ಲಿ ರೈಲು ಜಾಲ ವಿಸ್ತರಣೆ ಆಗುತ್ತಲೇ ಇದೆ. ನಿಲ್ದಾಣಗಳು ಪುನರಾಭಿವೃದ್ಧಿಗೊಳ್ಳುತ್ತಿವೆ.
ಕಾಡಾನೆ ಹಾವಳಿ, ಲಾಠಿಚಾರ್ಜ್ ಖಂಡಿಸಿ ಶೃಂಗೇರಿ ಬಂದ್
ಚಿಕ್ಕಮಗಳೂರು: ಕಾಡಾನೆ ದಾಳಿಗೆ ಕಾರ್ಮಿಕ ಮಹಿಳೆ ಬಲಿ ಮತ್ತು ಇದನ್ನು ಖಂಡಿಸಿ ನಡೆದ ಪ್ರತಿಭಟನೆಯ ವೇಳೆ ಪ್ರತಿಭಟನಾಕಾರರ ಮೇಲೆ ನಡೆದ ಪೊಲೀಸ್ ಲಾಠಿಚಾರ್ಜ್ ಖಂಡಿಸಿ ವ್ಯಾಪಕ ಪ್ರತಿಭಟನೆಗಳು ನಡೆಯುತ್ತಿವೆ. ಶೃಂಗೇರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಸೋಮವಾರ ಬೆಳಗ್ಗೆಯಿಂದ ಸಂಪೂರ್ಣ ಬಂದ್ ಆಚರಿಸಲಾಗುತ್ತಿದೆ. ಶೃಂಗೇರಿ, ಎನ್.ಆರ್. ಪುರ, ಕೊಪ್ಪ ತಾಲೂಕುಗಳು ಸೇರಿದಂತೆ ಚಿಕ್ಕಮಗಳೂರು ತಾಲೂಕಿನ ಖಾಂಡ್ಯ ಹೋಬಳಿಯಲ್ಲಿ ಬೆಳಗ್ಗೆ 8ರಿಂದ ಸಂಜೆ 5ರ ವರೆಗೆ ಬಂದ್ ಗೆ ಕರೆ ನೀಡಲಾಗಿದೆ. ಈ ಹೋರಾಟಕ್ಕೆ ರೈತ ಸಂಘಟನೆಗಳು, ನಾಗರಿಕ ಹಿತರಕ್ಷಣಾ ವೇದಿಕೆ, ರೈತ ಒಕ್ಕೂಟ, ಆಟೋ ಚಾಲಕರು ಹಾಗೂ ಬಿಜೆಪಿ ಬೆಂಬಲ ಸೂಚಿಸಿದೆ. ಅಗತ್ಯ ಸೇವೆಗಳನ್ನು ಹೊರತುಪಡಿಸಿ ಉಳಿದೆಲ್ಲಾ ವ್ಯಾಪಾರ-ವಹಿವಾಟುಗಳು ಸ್ಥಗಿತಗೊಂಡಿವೆ. ಸರಕಾರಿ, ಖಾಸಗಿ ಬಸ್ ಸೇವೆ ಸಂಪೂರ್ಣ ಸ್ಥಗಿತಗೊಂಡಿದೆ. ಪ್ರತಿಭಟನೆಯ ಹಿನ್ನೆಲೆಯಲ್ಲಿ ಜಿಲ್ಲಾಡಳಿತವು ಮುಂಜಾಗ್ರತಾ ಕ್ರಮವಾಗಿ ಎಲ್ಲೆಡೆ ಬಿಗಿ ಪೊಲೀಸ್ ಭದ್ರತೆ ಕಲ್ಪಿಸಿದೆ.
ಬೆಂಗಳೂರಿನ ಪ್ರತಿಷ್ಠಿತ ಲುಲು ಮಾಲ್ ಬಳಿ ಇರುವ ಹಚ್ಚಹಸಿರಿನ ಪ್ರದೇಶದಲ್ಲಿ ರೇಷ್ಮೆ ಭವನ ನಿರ್ಮಾಣಕ್ಕೆ ರೇಷ್ಮೆ ಇಲಾಖೆ ಯೋಜನೆ ರೂಪಿಸುತ್ತಿದ್ದು, ಇದಕ್ಕಾಗಿ ಅಲ್ಲಿನ ಸುಮಾರು 575 ಮರಗಳನ್ನು ಕಡಿಯುವ ಮೂಲಕ ಜಾಗವನ್ನು ತೆರವು ಮಾಡಲು ಮುಂದಾಗಿದೆ. ಈ ಕುರಿತ ಪ್ರಸ್ತಾವನೆ ಸದ್ಯ GBA ಪರಿಶೀಲನೆಯಲ್ಲಿದ್ದು, ಇದಕ್ಕೆ ಅನುಮೋದನೆ ಸಿಕ್ಕರೆ, ಓಕಳಿಪುರಂ ಪ್ರಾಂತ್ಯದಲ್ಲಿರುವ ಕೊನೆಯ ಮುಕ್ತ ಪ್ರದೇಶ ಸಹ ಶೀಘ್ರದಲ್ಲೇ ಕಣ್ಮರೆಯಾಗಲಿದೆ. ಇನ್ನು, ಇದಕ್ಕೆ ಪರಿಸರ ಕಾರ್ಯಕರ್ತರಿಂದ ವಿರೋಧ ಕೇಳಿ ಬರುತ್ತಿದ್ದು, ರೇಷ್ಮೆ ಭವನವನ್ನು ಇಲ್ಲೇ ನಿರ್ಮಿಸುವ ಅಗತ್ಯತೆ ಕುರಿತು ಪ್ರಶ್ನೆ ಎತ್ತಿದ್ದಾರೆ. ಈ ಕುರಿತ ವರದಿ ಇಲ್ಲಿದೆ..
ಬಾಂಗ್ಲಾದೇಶ ಸೇನೆಯಲ್ಲಿ ತಾರಿಕ್ ರೆಹಮಾನ್ ಭಾರೀ ಬದಲಾವಣೆ; ಭಾರತದಲ್ಲಿದ್ದ ರಕ್ಷಣಾ ಸಲಹೆಗಾರ ವಾಪಸ್!
ನಾನೇ ಬೇರೆ, ನನ್ನ ಸ್ಟೈಲೇ ಬೇರೆ ಎಂದಿರುವ ಬಾಂಗ್ಲಾದೇಶ ನೂತನ ಪ್ರದಾನಮಂತ್ರಿ ತಾರಿಕ್ ರೆಹಮಾನ್, ಆಡಳಿತ ಆರಂಭಿಸಿ ಕೆಲವೇ ದಿನಗಳಲ್ಲಿ ದೇಶದ ಸೇನೆಯಲ್ಲಿ ಭಾರೀ ಬದಲಾವಣೆಯನ್ನು ಘೋಷಿಸಿದ್ದಾರೆ. ಸೈನ್ಯದ ಮುಖ್ಯಸ್ಥರನ್ನೇ ಬದಲಾಯಿಸಿರುವ ಅವರು, ಭಾರತಕ್ಕೆ ನಿಯೋಜನೆಗೊಂಡಿದ್ದ ರಕ್ಷಣಾ ಸಲಹಗಾರರನ್ನೂ ವಾಪಸ್ ಕರೆಸಿಕೊಂಡಿದ್ದಾರೆ. ಈ ಕ್ಷಿಪ್ರ ಬದಲಾವಣೆಗಳು ಭಾರತದ ಗಮನ ಸೆಳೆದಿದ್ದು, ತಾರಿಕ್ ರೆಹಮಾನ್ ಅವರ ನಿರ್ಧಾರಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ. ಅಷ್ಟಕ್ಕೂ ಬಾಂಗ್ಲಾದೇಶದ ನೂತನ ಪ್ರಧಾನಿ ಇಂತಹ ನಿರ್ಧಾರಗಳನ್ನು ಘೋಷಿಸಲು ಕಾರಣವೇನು? ಇಲ್ಲಿದೆ ಮಾಹಿತಿ.
ರಭಸದಲ್ಲಿರುವ ಮಾಧ್ಯಮ ಕ್ಷೇತ್ರಕ್ಕೆ ‘ಪಿಟ್ ಸ್ಟಾಪ್ಸ್’ ಅಗತ್ಯ: ಕೆ.ವಿ.ಪ್ರಭಾಕರ್ ಅಭಿಮತ
40ನೇ ಪತ್ರಕರ್ತರ ಸಮ್ಮೇಳನದಲ್ಲಿ ತಾಂತ್ರಿಕ ಮತ್ತು ನೈತಿಕ ಸವಾಲುಗಳ ಬಗ್ಗೆ ಅರ್ಥಪೂರ್ಣ ಚರ್ಚೆಯಾಗಲಿ
ದಲಿತ ಸಿಎಂ ಬೇಡಿಕೆಯ ನಡುವೆ ಎಚ್ ಡಿ ಕೆಯನ್ನು ಭೇಟಿಯಾದ ಪರಮೇಶ್ವರ್: ಕುತೂಹಲ ಕೆರಳಿಸಿದ ಮಾತುಕತೆ
ರಾಜ್ಯದಲ್ಲಿ ನಾಯಕತ್ವ ಬದಲಾವಣೆ, ದಲಿತ ಸಿಎಂ ಕೂಗಿನ ನಡುವೆ ಗೃಹ ಸಚಿವ ಡಾ ಜಿ ಪರಮೇಶ್ವರ್ ಮತ್ತು ಕೇಂದ್ರ ಸಚಿವ ಎಚ್ಡಿ ಕುಮಾರಸ್ವಾಮಿ ಅವರು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಭೇಟಿ ಮತ್ತು ಮಾತುಕತೆ ನಡೆದಿದೆ. ಸದ್ಯದ ರಾಜಕೀಯ ವಿದ್ಯಮಾನಗಳ ಹಿನ್ನೆಲೆಯಲ್ಲಿ ಈ ಭೇಟಿ ಮತ್ತು ಮಾತುಕತೆ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ. ಹಾಗಾದರೆ ಭೇಟಿಯ ಉದ್ದೇಶ ಏನು? ಉಭಯ ನಾಯಕರ ನಡುವೆ ನಡೆದ ಮಾತುಕತೆಗಳೇನು? ಇಲ್ಲಿದೆ ಮಾಹಿತಿ.
Rajasthan | ಮಹಿಳೆ ಮುಸ್ಲಿಂ ಎಂದು ತಿಳಿದ ನಂತರ ಆಕೆಗೆ ನೀಡಿದ್ದ ಕಂಬಳಿ ಹಿಂಪಡೆದ ಬಿಜೆಪಿ ನಾಯಕ; ಆರೋಪ
ಮೋದಿಯನ್ನು ನಿಂದಿಸುವವರಿಗೆ ಕಂಬಳಿ ತೆಗೆದುಕೊಳ್ಳುವ ಹಕ್ಕಿಲ್ಲ ಎಂದ ಮಾಜಿ ಸಂಸದ
ಕಾಂಗ್ರೆಸ್ ಸರ್ಕಾರದಿಂದ ಇನ್ನೂ ಐದು ಗ್ಯಾರಂಟಿ: ಕರಾವಳಿ ಭಾಗಕ್ಕೂ ಸಿಹಿಸುದ್ದಿ ಕೊಟ್ಟ ಡಿ.ಕೆ.ಶಿವಕುಮಾರ್
ಪಂಚ ಗ್ಯಾರಂಟಿ ಜೊತೆಗೆ ಭೂಮಿ ಆರನೇ ಗ್ಯಾರಂಟಿ, ನೀರು 7ನೇ ಗ್ಯಾರಂಟಿ, ಮನೆಗಳನ್ನು ನೀಡುವುದು 8ನೇ ಗ್ಯಾರಂಟಿ, ಇ ಖಾತಾ ನೀಡುವುದು 9ನೇ ಗ್ಯಾರಂಟಿ, 10ನೇ ಗ್ಯಾರಂಟಿಯಾಗಿ ಉಚಿತವಾಗಿ ಆರೋಗ್ಯ ನೀಡುವುದು ನಮ್ಮ ಸರ್ಕಾರದ ಸಂಕಲ್ಪ. ಇದನ್ನು ನಮ್ಮ ಸರ್ಕಾರ ಕಾರ್ಯರೂಪಕ್ಕೆ ತರಲಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಭರವಸೆ ನೀಡಿದರು. ಗಂಗಾವಳಿ ನದಿಗೆ ಅಡ್ಡಲಾಗಿ
Mangaluru : ವಿದ್ಯುತ್ ಆಘಾತ; ಯುವಕ ಮೃತ್ಯು
ನೂತನ ವಸ್ತ್ರಮಳಿಗೆಯ ಉದ್ಘಾಟನೆಗೆ ಸಿದ್ಧತೆ ನಡೆಸುತ್ತಿದ್ದ ವೇಳೆ ಘಟನೆ
ದಾವಣಗೆರೆ | ಹೃದಯಾಘಾತದಿಂದ 9 ನೇ ತರಗತಿ ವಿದ್ಯಾರ್ಥಿ ಮೃತ್ಯು
ದಾವಣಗೆರೆ: 9ನೇ ತರಗತಿ ವಿದ್ಯಾರ್ಥಿಯೊಬ್ಬ ಹೃದಯಘಾತದಿಂದ ಮೃತಪಟ್ಟಿರುವ ಘಟನೆ ಜಗಳೂರು ತಾಲೂಕಿನ ಗೋಗುದ್ದು ಗ್ರಾಮದಲ್ಲಿ ಸೋಮವಾರ ನಡೆದಿದೆ. ಚಮನ್ ಸಾಬ್ ಮತ್ತು ಫಾತಿಮಾ ದಂಪತಿಯ ಮೂರು ಮಕ್ಕಳಲ್ಲಿ ದ್ವಿತೀಯ ಪುತ್ರನಾಗಿದ್ದ ಮುಝಮ್ಮಿಲ್ ಎಂಬಾತ ಮೃತ ಬಾಲಕ. ಈತ ತಾಲೂಕಿನ ಹನುಮಂತಪುರ ಗ್ರಾಮದ ರಾಜೀವ್ ಗಾಂಧಿ ವಸತಿ ಪ್ರೌಢಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ. ಸೋಮವಾರ ಮುಂಜಾನೆ ಸುಮಾರು ಮೂರು ಗಂಟೆ ವೇಳೆಗೆ ಮೂತ್ರ ವಿಸರ್ಜನೆ ಮಾಡಿ ಮನೆ ಒಳಗೆ ಬಂದು ಕುಸಿದು ಬಿದ್ದಿದ್ದಾನೆ. ತಕ್ಷಣ ಪೋಷಕರು ಆತನನ್ನು ಆಸ್ಪತ್ರೆಗೆ ತೆಗೆದುಕೊಂಡು ಹೋಗುವ ಕರೆದುಕೊಂಡು ಹೋಗುವ ಮಾರ್ಗ ಮಧ್ಯದಲ್ಲಿಯೇ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ. ಮುಝಮ್ಮಿಲ್ ಕಲಿಯುತ್ತಿದ್ದ ಜ್ಞಾನಜ್ಯೋತಿ ವಿದ್ಯಾ ಸಂಸ್ಥೆಯ ಕಾರ್ಯದರ್ಶಿ ತಿಪ್ಪೇಸ್ವಾಮಿ ಮತ್ತು ರಾಜೀವ್ ಗಾಂಧಿ ವಸತಿ ಪ್ರೌಢಶಾಲೆಯ ಶಾಲೆಯ ಮುಖ್ಯಶಿಕ್ಷಕರು ,ಶಿಕ್ಷಕರು , ಗೋಗುದ್ದು ಗ್ರಾಮದ ಮುಖಂಡರು ಸಂತಪ ಸೂಚಿಸಿದ್ದಾರೆ.
ಮತ್ತೆ 16 ಸಾವಿರ ರೂ. ಗಡಿ ದಾಟಿದ ಚಿನ್ನ; ಇಂದಿನ ದರವೆಷ್ಟು?
3 ಲಕ್ಷ ರೂ. ತಲುಪಿದ ಕೆಜಿ ಬೆಳ್ಳಿ
ಮಾಜಿ ರೈಲ್ವೆ ಸಚಿವ, ಟಿಎಂಸಿ ನಾಯಕ ಮುಕುಲ್ ರಾಯ್ ನಿಧನ
ಕೋಲ್ಕತ್ತಾ: ಮಾಜಿ ರೈಲ್ವೆ ಸಚಿವ, ತೃಣಮೂಲ ಕಾಂಗ್ರೆಸ್ ನಾಯಕ ಮುಕುಲ್ ರಾಯ್ ಅವರು ಕೋಲ್ಕತ್ತಾದ ಸಾಲ್ಟ್ ಲೇಕ್ನಲ್ಲಿರುವ ಅಪೋಲೋ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಮುಕುಲ್ ರಾಯ್ ನಿಧನರಾಗಿರುವ ಬಗ್ಗೆ ಅವರ ಪುತ್ರ ಸುಭ್ರಂಶು ರಾಯ್ ದೃಢಪಡಿಸಿದ್ದಾರೆ. ಕಳೆದ ಎರಡು ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಮುಕುಲ್ ರಾಯ್ ಚಿಕಿತ್ಸೆಯನ್ನು ಪಡೆಯುತ್ತಿದ್ದರು. ಆದರೆ, ರವಿವಾರ ಮೃತಪಟ್ಟಿದ್ದಾರೆ. ಸೋಮವಾರ ಅವರ ಅಂತ್ಯಕ್ರಿಯೆ ನಡೆಯಲಿದೆ ಎಂದು ತಿಳಿದು ಬಂದಿದೆ. ಒಂದು ಕಾಲದಲ್ಲಿ ಮಮತಾ ಬ್ಯಾನರ್ಜಿಯವರ ಆಪ್ತರಾಗಿದ್ದ ಮುಕುಲ್ ರಾಯ್, ತೃಣಮೂಲ ಕಾಂಗ್ರೆಸ್ನ ಎರಡನೇ ತಲೆಮಾರಿನ ನಾಯಕ ಎಂದು ಪರಿಗಣಿಸಲ್ಪಟ್ಟಿದ್ದರು. 2019ರ ಲೋಕಸಭಾ ಚುನಾವಣೆಗೆ ಬಿಜೆಪಿಗೆ ಸೇರ್ಪಡೆಗೊಂಡಿದ್ದ ಅವರು ಬಂಗಾಳ ಬಿಜೆಪಿಗೆ ತಳಮಟ್ಟದ ನೆಲೆಯನ್ನು ನಿರ್ಮಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದರು. ಆ ಬಳಿಕ ಅವರು ಮತ್ತೆ ಟಿಎಂಸಿಗೆ ಸೇರ್ಪಡೆಗೊಂಡಿದ್ದರು.
ಬೆಳದಿಂಗಳನ್ನುಕಡೆದ ಕಾವ್ಯ ‘ಏಶ್ಯದ ಬೆಳಕು’
ಮಹಾಕಾವ್ಯದ ಪ್ರತೀ ಸಾಲುಗಳು ಒಬ್ಬರಿಗೆ ಮಾತ್ರ ಸೀಮಿತವಾದುದಲ್ಲ. ಪ್ರತಿಯೊಬ್ಬರೂ ಆಲಿಸುವಂತಹದ್ದು. ಮನುಷ್ಯನಿಗೆ ಎಷ್ಟೇ ಆಸ್ತಿ, ಅಂತಸ್ತು, ಅಧಿಕಾರವಿದ್ದರೂ ಮತ್ತು ದ್ವೇಷದ ಮನೋಭಾವನೆ ಇದ್ದರೂ ಕೊನೆಗಳಿಗೆಯಲ್ಲಿ ಆತ ಬಯಸುವುದು ಹಿಡಿಯಷ್ಟು ನಿಷ್ಕಲ್ಮಶ ಪ್ರೀತಿಯಷ್ಟೇ. ಬುದ್ಧನಾಗುವುದೆಂದರೆ ಅಷ್ಟು ಸುಲಭವಲ್ಲ, ಸರಳವಲ್ಲ ಅದೊಂದು ತಪಸ್ಸು! ಹಾಗಾಗಿ ನಾವು ಬುದ್ಧನ ತತ್ವಗಳನ್ನು ಅಳವಡಿಸಿಕೊಂಡು ನಡೆದರೆ ನಮ್ಮ ಮನಸ್ಸಿನೊಂದಿಗೆ ನಮ್ಮ ಸುತ್ತಮುತ್ತಲಿನ ಪರಿಸರ, ಸಮಾಜ ಎಲ್ಲವೂ ಸುಂದರವಾಗಿರುತ್ತದೆ. ಪವಿತ್ರವಾದ ಅವನ ತುಟಿಗಳಿಂದ ಸೂಸುತ್ತಿದ್ದ ಕರುಣಾಮಯ ಚಿತ್ತಾಕರ್ಷಕ. ಶ್ರೇಷ್ಠ. ಶುದ್ಧ ಜ್ಞಾನದಾಯಕ ಅವನ ಮಾತುಗಳಲ್ಲಿ ಮುಳುಗಿ ಹೋದರು -ಡಾ. ಮಹಾದೇವ್ ಅವರು ಕನ್ನಡಕ್ಕೆ ಅನುವಾದಿಸಿರುವ ಸರ್ ಎಡ್ವಿನ್ ಆರ್ನಾಲ್ಡ್ ರವರ ‘ದಿ ಲೈಟ್ ಆಫ್ ಏಶ್ಯ’ ಮಹಾಕಾವ್ಯವನ್ನು ಓದುತ್ತಿರುವ ಹೊತ್ತಿನಲ್ಲಿ ಕೋಲ್ಕೊತಾದ ಬೀದಿಗಳಲ್ಲಿ ಓಡಾಡಿಕೊಂಡಿದ್ದ ಪುಟ್ಟ ಬೀದಿ ನಾಯಿಯೊಂದು ಬೌದ್ಧ ಬಿಕ್ಕುವಿನ ಮನಸೆಳೆದು, ಬೆಳೆದು ಅಮೆರಿಕದಲ್ಲಿ ಜಗತ್ತಿನ ಶಾಂತಿಗಾಗಿ ಬೌದ್ಧ ಬಿಕ್ಕುಗಳೊಡನೆ ಹೆಜ್ಜೆ ಹಾಕಿದ್ದು ಬುದ್ಧ ಗುರುಗಳು ಹೇಳಿದ ‘ಮೈತ್ರಿ, ಕರುಣೆ, ಭ್ರಾತೃತ್ವ’ವನ್ನು ನೆನಪಿಸುತ್ತದೆ ಮತ್ತು ಸಕಲ ಜೀವಗಳ ಲೇಸು ಬಯಸಿದ ಈ ಶಬ್ದಗಳು ಬರೀ ಶಬ್ದಗಳಲ್ಲದೆ ನೂರಾರು ಕೋಟಿ ಜನರ ಬೆಳಕಾಗಿರುವಂತೆ ತೋರುತ್ತದೆ. ‘ಅಲೋಕ ಎಂದರೆ ಬೆಳಕು’. ಈ ಬೆಳಕಿಗೆ ಪ್ರತಿಜೀವವೂ ಹಂಬಲಿಸುತ್ತದೆ. ಹಾಗಂತ ಕತ್ತಲೆಯನ್ನು ಆರೋಪಿಸುತ್ತಿಲ್ಲ. ಕತ್ತಲೆ ಕೂಡ ಈ ಜಗದ ಅವಿಭಾಜ್ಯ ಅಂಗವೇ ಆಗಿದೆ. ಈ ಅಲೋಕದ ಬಗ್ಗೆ ಈಗಾಗಲೇ ನೀವು ಓದಿ ನೋಡಿ ತಿಳಿದುಕೊಂಡಿರುತ್ತೀರಿ. ಈ ಅಲೋಕನನ್ನು ನೋಡುತ್ತಿದ್ದರೆ ಇದು ನಮ್ಮ ಸಂಬಂಧಿಯೇ ಎನ್ನುವಷ್ಟು ಆಪ್ತ ಅದರ ಕಣ್ಣುಗಳು. ಇವನು ಇಡೀ ಜಗತ್ತಿನ ಕಣ್ಮಣಿಯಾಗಿ ಸೂಜಿಗಲ್ಲಿನಂತೆ ಎಲ್ಲರನ್ನು ಸೆಳೆದುಬಿಟ್ಟ. ಈ ಹೊತ್ತು ಜಗತ್ತಿನಲ್ಲಿ ವ್ಯಕ್ತಿ ದ್ವೇಷದಿಂದ ಹಿಡಿದು ದೇಶ-ದೇಶಗಳ ನಡುವೆ ದೊಡ್ಡ ಯುದ್ಧಗಳು ನಡೆಯುತ್ತಿವೆೆ. ಸಕಲವನ್ನು ಕೊಟ್ಟ ಈ ಭೂಮಿಯನ್ನು ಬೆಂಗಾಡಾಗಿಸುತ್ತಿರುವ ಮನುಷ್ಯನ ಕ್ರೌರ್ಯಕ್ಕೆ ಮಿತಿಯಿಲ್ಲದಂತಾಗಿದೆ. ಹೀಗೆ ಎಲ್ಲರೂ ಮಾತನಾಡುತ್ತಲೇ... ಬರೆಯುತ್ತಲೇ... ಓದುತ್ತಲೇ... ನಮ್ಮೊಳಗಿನ ತಮಸ್ಸು ನಮ್ಮ ನಮ್ಮ ನೆತ್ತಿಗೇರುತ್ತಲೇ ಇದೆ. ಇದೆಲ್ಲದರ ಶಮನಕ್ಕಾಗಿ ಬುದ್ಧ ಗುರುಗಳು ನಿರಂತರವಾಗಿ ಹಲವು ವರ್ಷಗಳ ಕಠಿಣವಾದ ತಪಸ್ಸು, ಜ್ಞಾನದಿಂದ ತನ್ನನ್ನು ತಾನು ಅರಿತುಕೊಳ್ಳುವ ಮಾರ್ಗವನ್ನು ಹುಡುಕಿಕೊಟ್ಟು ಹೋಗಿದ್ದಾರೆ. ಮನುಷ್ಯನ ಅಗತ್ಯಗಳನ್ನು ಪೂರೈಸುವುದಕ್ಕೆ ಪ್ರಕೃತಿ ನಿರಂತರವಾಗಿ ಏನೆಲ್ಲಾ ಕೊಡಬೇಕು ಅದನ್ನೆಲ್ಲಾ ನೀಡುತ್ತಲೇ ಬಂದಿದೆ. ಆದರೆ ಮನುಷ್ಯನಿಗೆ ತನ್ನ ಆಸೆಯನ್ನು ಮೀರುವುದಕ್ಕಾಗಲಿಲ್ಲ. ಈ ಆಸೆಯ ಮೂಲ ದುಃಖ ಎನ್ನುವುದನ್ನು ಬೆಟ್ಟು ಮಾಡಿ ಬುದ್ಧಗುರುಗಳು ತೋರಿದ್ದಾರೆ. ಇಂತಹ ಬುದ್ಧ ಗುರುಗಳ ಬಗ್ಗೆ ಹೇಳುವಾಗ ಅವರ ಕುರಿತ ಬರವಣಿಗೆಗಳು, ಪುಸ್ತಕಗಳು ಲೆಕ್ಕವಿಲ್ಲದಷ್ಟು. ಬುದ್ಧ ಎಲ್ಲವನ್ನೂ ಅರಗಿಸಿಕೊಂಡು ಅತ್ಯಂತ ಸರಳವಾಗಿ ಬದುಕುವುದನ್ನು ಹೇಳಿ ಕೊಟ್ಟಿದ್ದಾರೆ. ನಾವು ಮತ್ತೆ ಮತ್ತೆ ಕಲಿಯುತ್ತಲೇ ಇದ್ದೇವೆ. ಮತ್ತೆ ಮತ್ತೆ ಓದುತ್ತೇವೆ, ಧ್ಯಾನಿಸುತ್ತೇವೆ ಆದರೂ ಪರಿಪೂರ್ಣವಾಗುವಲ್ಲಿ ಎಡವುತ್ತೇವೆ. ಮನುಷ್ಯ ಮನುಷ್ಯನಾಗುವುದಕ್ಕೆ ಎಷ್ಟೆಲ್ಲಾ ಕಷ್ಟಗಳು. ಯಾರ್ಯಾರು ಎಲ್ಲಿಂದೆಲ್ಲಿಂದಲೋ ಬಂದು ಒಳ್ಳೆಯದನ್ನು ಹೇಳಿ ಹೋಗಿದ್ದಾರೆ. ಬುದ್ಧನನ್ನು ಅರ್ಥಮಾಡಿಕೊಳ್ಳುವುದೆಂದರೆ ಮೈ ಮನಸ್ಸುಗಳೆಲ್ಲಾ ಹಗುರವಾದಂತೆ. ಹಾಗೇ ಹಗುರಾದವರು ತುಂಬ ಒಳ್ಳೆಯದನ್ನು ಹೇಳಿ ಹೋಗಿದ್ದಾರೆ. ಅಂತಹವರಲ್ಲಿ ಒಬ್ಬರಾದ ‘ಎಡ್ವಿನ್ ಆರ್ನಾಲ್ಡ್’ ಅವರ ಬಗ್ಗೆ ಓದುವ, ಕೇಳುವ ತಿಳುವಳಿಕೆಯನ್ನು ಮೂಡಿಸಿಕೊಳ್ಳುತ್ತಿದ್ದೇನೆ. ವಿಶೇಷವಾಗಿ ಬುದ್ಧನ ಕುರಿತು ಯಾರಾದರು ಮಾತನಾಡುತ್ತಿದ್ದರೆ, ಪುಸ್ತಕಗಳಿದ್ದರೆ ಆ ಕಡೆ ನನ್ನ ಮನಸ್ಸು ಕೇಂದ್ರೀಕರಿಸುತ್ತದೆ. ಕೆಲವು ಸಂದರ್ಭಗಳಲ್ಲಿ ಬುದ್ಧನ ಕುರಿತು ಇಂತಹ ಪುಸ್ತಕ ಬಂದಿದೆ ಅಂದಾಗ ಸ್ವಲ್ಪ ನನ್ನ ಕಿವಿ ಮತ್ತು ಮನಸ್ಸು ಸಹಜವಾಗಿ ಆ ಕಡೆ ವಾಲುತ್ತದೆ. ಈಗ ನಾನು ಹೇಳುತ್ತಿರುವ ಪುಸ್ತಕದ ಹೆಸರು ‘ದಿ ಲೈಟ್ ಆಫ್ ಏಶ್ಯ’ ಬಗ್ಗೆ ಅಲ್ಲಲ್ಲಿ ಕೇಳಿದ ನೆನಪಿತ್ತು. ‘ನಮ್ಮ ನಾಡಿನ ಹೆಸರಾಂತ ಕವಿಗಳು ಕೇಂದ್ರ ಸಾಹಿತ್ಯ ಅಕಾಡಮಿ ಪುರಸ್ಕೃತರು, ಬುದ್ಧನ ಅನುಯಾಯಿಗಳು ಆದ ಡಾ. ಮೂಡ್ನಾಕೂಡು ಚಿನ್ನಸ್ವಾಮಿ ಅವರು ಈ ಕಾವ್ಯದ ಕುರಿತು ನನಗೆ ಹೇಳಿದ್ದು ನೆನಪಿದೆ. ನಾನು ಇಂಗ್ಲಿಷ್ನಲ್ಲಿ ಓದಿ ಅರ್ಥ ಮಾಡಿಕೊಳ್ಳಲು ತುಸು ಕಷ್ಟವಾದ್ದರಿಂದ ಕನ್ನಡದಲ್ಲಿ ಇದ್ದಿದ್ದರೆ ಎಂದು ಹುಡುಕುತ್ತಿದ್ದೆ. ಇದ್ದಕ್ಕಿದ್ದ ಹಾಗೇ ಡಾ. ಮಹಾದೇವ್ ಸರ್ ಫೋನ್ ಮಾಡಿ ನಾನು ಈ ತರಹದ ‘ದಿ ಲೈಟ್ ಆಫ್ ಏಶ್ಯ’ ಕಾವ್ಯವನ್ನು ಕನ್ನಡಕ್ಕೆ ಅನುವಾದಿಸಿದ್ದೇನೆ. ಒಮ್ಮೆ ಗಮನಿಸಿ ಪ್ರತಿಗಳನ್ನು ಕಳಿಸಿಕೊಡುವೆ ಎಂದು ವಿಳಾಸ ಕೇಳಿದರು. ನಾನು ಸ್ವಲ್ಪ ಭಾವುಕ. ಒಮ್ಮೆಲೆ ಸಂತೋಷದಿಂದ ಪ್ಲೀಸ್ ಕಳಿಸಿ ಅಣ್ಣ ಬಹಳ ದಿನಗಳಿಂದ ಕಾಯುತ್ತಿದ್ದೆ ಎಂದು ಹೇಳಿದೆನು. ಅವರು ಎರಡು ದಿನಗಳೊಳಗೆ ಎರಡು ಪ್ರತಿಗಳನ್ನು ಕಳಿಸಿಕೊಟ್ಟರು. ಬುದ್ಧನ ಮುಖಭಾವದ ಹಾಗೇ ಅಭಿವ್ಯಕ್ತಿಸುವ ಮುಖಪುಟ ದಮ್ಮ ಚಕ್ರವನ್ನು ಒಳಗೊಂಡಿದೆ. ಇದರೊಳಗಿರುವ ಮಹಾಕಾವ್ಯದ ಸತ್ವವನ್ನೇ ಹೇಳುತ್ತಿತ್ತು. ಸರ್ ಎಡ್ವಿನ್ ಆರ್ನಾಲ್ಡ್ ಅವರ ಮುನ್ನುಡಿ ಮತ್ತು ಡಿ.ಎ. ಶಂಕರ್ ರವರ ಇನ್ನೊಂದು ಮುನ್ನುಡಿ, ಡಾ. ಸಿ. ನಾಗಣ್ಣ ರವರ ಅನನ್ಯ ಅಪರೂಪದ ಆಪ್ತವಾದ ಬರವಣಿಗೆ ಮತ್ತು ಅನುವಾದಕರ ನುಡಿ ಇದಿಷ್ಟೇ ಓದುಗರ ಪ್ರವೇಶಕ್ಕೆ ಕಾವ್ಯವು ಹೂರಣದಂತೆ ಹಿಡಿದಿಡಿಯುತ್ತದೆ. ಓದುವ ಸವಿಯನ್ನು ಸವಿಯುವಂತೆ ಮಾಡುತ್ತದೆ. ಈ ಬೆಳಕಿನಲ್ಲಿ ಮೊದಲ ಹೊತ್ತಿಗೆಯಿಂದ ಅರ್ಥಾತ್ ರಾಜಕುವರ ಸಿದ್ಧಾರ್ಥನ ಜನನ ಮತ್ತು ಬಾಲ್ಯದಿಂದ ಪ್ರಾರಂಭವಾಗಿ ಶುದ್ಧೋಧನನ ಮತ್ತು ಮಡದಿ ಯಶೋದಳ ಧರ್ಮಪಥ ಸೇರ್ಪಡೆ ಬುದ್ಧನ ಜೀವನಕಾವ್ಯ ಅನಾವರಣಗೊಳ್ಳುತ್ತಾ ಹೋಗುತ್ತದೆ. ಈ ಬೆಳಕಿನ ಕಾವ್ಯದ ಕುರಿತು ನನ್ನಂತಹವರು ಮಾತನಾಡುವುದು ಅಲ್ಪ ಅನ್ನಿಸಬಹುದು. ಕಾವ್ಯ ಓದುವ ಪ್ರಾರಂಭದ ಘಳಿಗೆ ಧ್ಯಾನಸ್ಥ ಸ್ಥಿತಿಯಲ್ಲಿ ಓದಬೇಕು. ಆ ಕಾವ್ಯದ ಸೊಬಗೇ ಅತ್ಯಮೂಲ್ಯವಾದುದು. ಪ್ರತಿ ಪದ, ಶಬ್ದ, ವಾಕ್ಯ, ಹೆಸರು, ಭಾವನೆ, ಅಭಿವ್ಯಕ್ತಿ ಆರ್ನಾಲ್ಡ್ ರವರ ಕಲ್ಪನೆ ಒಂದು ಅದ್ಭುತವಾದ ಬೆಳದಿಂಗಳ ಲೋಕವನ್ನೇ ತೆರೆಯುತ್ತದೆ. ಬುದ್ಧನ ತ್ಯಾಗಮಯ ಜೀವನ ಒಂದು ರೀತಿಯ ನಮ್ಮೊಳಗೆ ಕರುಣೆಯನ್ನು ಹುಟ್ಟಿಸಿದರೂ ಈ ಜಗದ ಉದ್ಧಾರಕ್ಕೆ ಬುದ್ಧನ ಕೊಡುಗೆ ಅಗಾಧ ಮತ್ತು ಅಪಾರ. ಅವನ ಸೈರಣೆಯನ್ನು ಕಾವ್ಯದಲ್ಲಿ ಹಿಡಿದಿಡುವುದು ತುಸು ಕಷ್ಟವೇ. ಆರ್ನಾಲ್ಡ್ ರವರ ಸತತವಾದ ಶ್ರಮ ಅದಕ್ಕಾಗಿ ತನ್ನ ದೇಹ-ಮನಸ್ಸನ್ನು ಒಗ್ಗಿಕೊಳ್ಳುವುದಿದೆಯಲ್ಲ ಅದು ಕಲ್ಪನೆಗೂ ನಿಲುಕದ್ದು. ಡಾ. ಸಿ. ನಾಗಣ್ಣ ಅವರು ಈ ಕೃತಿಯ ಮುನ್ನುಡಿಯ ಮಾತು ಎನ್ನುವುದಕ್ಕಿಂತ ಹೃದಯದ ಮಾತು ಎನ್ನುವ ಹಾಗೇ ಪ್ರಸ್ತುತ ಪಡಿಸಿದ್ದಾರೆ. ಇದುವರೆಗಿನ ತನ್ನ ಜ್ಞಾನ ಮತ್ತು ಅರಿವನ್ನು ಬಸಿದ ಹಾಗೇ ಈ ಕೃತಿಯ ಪ್ರತೀ ಪದ್ಯಗಳ ಬಗ್ಗೆ ಆಳವಾಗಿ ಧ್ಯಾನಿಸಿದ್ದಾರೆ. ಈ ಕಾವ್ಯದ ಸಾಲುಗಳನ್ನು ಗಮನಿಸಿ; ಜೀವಿಸಲಿರುವ ಮಣಿದಿರುವವರೆ ಜೀವಿಸಿದ್ದು ಮಡಿದಿರುವವರೆ ಎದ್ದೇಳಿ. ಕೇಳಿ. ಭರವಸೆಯಿಂದಿರಿ ಬುದ್ಧ ಬಂದಿದ್ದಾನೆ. ಬುದ್ಧ ಬಂದಿದ್ದಾನೆ ಎಂಬ ಘೋಷಕ್ಕೆ ಪೂರಕವಾಗಿ ಒದಗಿ ಬರುವುದು ಈ ಮಾತು. ಬುದ್ಧ ಧರೆಗೆ ಮತ್ತೆ ಬಂದುದನರಿತು ಸ್ವರ್ಗವು ಆನಂದದಲಿ ತೇಲುತ್ತಿರುವುದು ಲೋಕದ ಜನರಿಗೆ ತಿಳಿದಿರಲಿಲ್ಲ. ಮುಂದುವರಿದಂತೆ ಬುದ್ಧನ ಜನನವಾದಾಗ ಅಸಿತ ಮುನಿಗಳು ಭವಿಷ್ಯ ನುಡಿಯುತ್ತಾರೆ. ಕೋಟಿ ಕೋಟಿ ವರುಷಗಳಿಗೊಮ್ಮೆ ವೃಕ್ಷದಲ್ಲರಳುವ ಹೂವಿದು. ಅರಳಿ ಜಗಕ್ಕೆಲ್ಲಾ ಜ್ಞಾನ ಸೌರಭವ ತುಂಬುತ್ತದೆ. ದಯೆಯ ಜೇನಿನ ಹನಿಯನ್ನು ಸ್ಪುರಿಸುತ್ತದೆ. -ಇಂತಹ ಸಾಲುಗಳು ಇಡೀ ಈ ಕಾವ್ಯದ ಪ್ರತೀ ಪುಟಗಳಲ್ಲಿ ಅರಳಿಮರದಲ್ಲರಳಿದ ಚಿಗುರೋ ಎಲೆಯೋ ಘಮಘಮಿಸುತ್ತವೆ. ನಾವು ಒಂದು ಕಾವ್ಯದ ಕುರಿತು ಮಾತನಾಡುವಾಗ ಗಂಧದ ಪರಿಮಳದಂತೆ ಭಾಸವಾಗುತ್ತದೆ. ಸಿದ್ಧಾರ್ಥನ ಬಾಲ್ಯ, ಅರಮನೆ, ತಂದೆ-ತಾಯಿ, ಯೌವನ ಹೀಗೆ ಇಡೀ ಜೀವನವನ್ನು ಈ ಕಾವ್ಯದ ಬೆಳಕು ಮಿಣುಕು ಹುಳದಂತೆ, ಪುಟ್ಟ ಹಣತೆಯಂತೆ, ಬೀದಿ ಬೆಳಕಂತೆ ಎಲ್ಲಾ ಬೆಳಕುಗಳ ಮಹಾ ಬೆಳಕನ್ನು ಹೊದ್ದು ಹೊರಟ ಬುದ್ಧನ ಪರಿಪೂರ್ಣ ಜೀವನವನ್ನು ಈ ಕಾವ್ಯ ಒಂದೊಂದಾಗಿ ತೆರೆದಿಡುತ್ತದೆ. ಅವನು ಅರಮನೆ ತೊರೆಯುವಾಗಲಿ, ತಂದೆ-ತಾಯಿ, ಹೆಂಡತಿ, ಮಗನ ಸಂಬಂಧಗಳ ಕೊಂಡಿ ಕಳಚಿಕೊಳ್ಳುವಾಗಲಿ ಸುದೀರ್ಘ ಪಯಣದ ಅನೇಕ ಏರಿಳಿತಗಳ ಕ್ಷಣಗಳು, ಗಳಿಗೆಗಳು, ಗಂಟೆ, ದಿನಗಳು, ವರ್ಷಗಳು ಎಲ್ಲವೂ ಓದುವ ಮನಸ್ಸನ್ನು ಕದಡುತ್ತಲೇ ನಿರಂತರವಾಗಿ ಚಲನೆಯಲ್ಲಿಡುತ್ತವೆ. ದುಃಖ ತಿಳಿದಾಗಲೂ, ಸಂತೋಷ ಪಡುವಾಗಲೂ ಕಾವ್ಯದ ಹದ ಎಲ್ಲೂ ಅಲುಗಾಡದ ಹಾಗೇ ಸರಳ ರೇಖೆಯಂತೆ ಒಂದೇ ಸಮವಾಗಿರುತ್ತದೆ. ಒಮ್ಮೊಮ್ಮೆ ಈ ಕಾವ್ಯ ಓದುವ ಹುಚ್ಚಿನಂತೆ ಆಗಿರದೆ ಸಂಮೋಹಗೊಳಿಸದೆ ಬುದ್ಧ ಹೇಳಿದ ನಮ್ಮ ಮಧ್ಯಮ ಮನಸ್ಥಿತಿಯಲ್ಲಿಯೇ ಸಾಗುತ್ತದೆ. ಹೀಗೆ ಓದುವಾಗಲು ಗಮನಿಸಿದಾಗ; ಗಾಳಿಯಂತೆಯೇ ನರರ ಬದುಕು ಕೂಡ ಒಂದು ಗೋಳು. ನಿಟ್ಟುಸಿರು. ಅಳು. ಬಿರುಗಾಳಿ. ಹೋರಾಟ. ಎಲ್ಲಾ ಸುಖಗಳ ಅಂತ್ಯ ನೋವು. ಯೌವನದ ಕೊನೆ ಮುಪ್ಪು ನನ್ನನ್ನು ಕುರುಡಾಗಿಸಿದ್ದ ಪರದೆ ಈಗ ಹರಿದು ಬಿದ್ದಿದೆ -ಹೀಗೆ ಕಾವ್ಯದ ಓದಿನ ಪ್ರಯಾಣ ನಮ್ಮ ಮನಸ್ಸನ್ನು ಮುದಗೊಳಿಸುತ್ತದೆ. ಈ ಕೃತಿಯನ್ನು ಕನ್ನಡಕ್ಕೆ ತಂದ ಡಾ. ಮಹಾದೇವ್ ಮೊದಲ ಪ್ರಯತ್ನದಲ್ಲೇ ಅತ್ಯುನ್ನತವಾದ ಕಾವ್ಯವನ್ನು ಕನ್ನಡಕ್ಕೆ ಕೊಟ್ಟಿದ್ದಾರೆ. ಅವರು ಮೂಲತಃ ಉಪನ್ಯಾಸಕರು. ಜೊತೆಗೆ ಕಾವ್ಯದ ಬಗ್ಗೆ ಅಪಾರ ಆಸಕ್ತಿ ಉಳ್ಳವರಾಗಿದ್ದರು. ಅವರ ಈ ಬೆಳವಣಿಗೆ ನಿಜಕ್ಕೂ ಬೆರಗು ಹಟ್ಟಿಸುವಂತಹದ್ದು. ಬುದ್ಧ ಎನ್ನುವ ಹೆಸರೇ ಈ ಲೋಕ ಅಪರಿಮಿತವಾದ ಗೌರವವನ್ನು ಹೊಂದಿದೆ. ಅವರ ಮೇಲೆ ಬರೆದ ಈ ಕೃತಿ ಆ ಕಾಲಕ್ಕೆ ದೊಡ್ಡ ಇತಿಹಾಸವನ್ನು ಮೂಡಿಸಿದೆ. ಇದು ಪ್ರಕಟವಾದಾಗ ಇಂಗ್ಲೆಂಡ್ನಲ್ಲಿ 60 ಆವೃತ್ತಿಗಳು, ಅಮೆರಿಕದಲ್ಲಿ 80 ಆವೃತ್ತಿಗಳು ಪ್ರಕಟಗೊಂಡಿದ್ದಷ್ಟೇ ಅಲ್ಲ, ಇದು ಸರಿಸುಮಾರು 5 ಲಕ್ಷಕ್ಕೂ ಮೀರಿದ ಪ್ರತಿಗಳು ಪ್ರಕಟವಾದ ಕೆಲವೇ ಕಾಲದಲ್ಲಿ ಮಾರಾಟವಾದವು. ಇದು ಈ ಕೃತಿಗೆ ಇರುವ ಹೆಗ್ಗಳಿಕೆ. ಸಾಹಿತ್ಯದಲ್ಲಿ ಎಲ್ಲಾ ಪ್ರಕಾರವೂ ಒಂದಲ್ಲ ಒಂದು ಕಾರಣಕ್ಕೆ ಶ್ರೇಷ್ಠವಾಗಿರುತ್ತವೆ. ಕಾವ್ಯಕ್ಕಿರುವ ಮಹತ್ವ ಬಹಳ ದೊಡ್ಡದು. ಈ ಬೆಳಕನ್ನು ಅನುಸರಿಸುತ್ತಾ ಹೋದಾಗ ಇದು ಜಗತ್ತಿನ ಬೆಳಕು ಹೌದು! ಏಶ್ಯದ ಬೆಳಕು ಹೌದು! ಓದುತ್ತಾ ಓದುತ್ತಾ ಇದು ನಮ್ಮದೇ ಬೆಳಕಾಗಿದೆ ಎನ್ನುವಷ್ಟು ನಮ್ಮೊಳಗೆ ಅನನ್ಯವಾದ ಅನುಭೂತಿಯನ್ನು ಹುಟ್ಟಿಸುತ್ತದೆ. ವೈಯಕ್ತಿಕವಾಗಿ ನಾನು ಕಾವ್ಯದ ಮೊದಲ ತರಗತಿಯ ವಿದ್ಯಾರ್ಥಿ. ದಲಿತ, ಬಂಡಾಯ ಇತ್ಯಾದಿ ಓದುತ್ತಾ ಸಿದ್ಧಲಿಂಗಯ್ಯ ನನ್ನ ದನಿಯಾದರೆ, ದೇವನೂರು ಬರವಣಿಗೆ ನನಗೆ ಉಸಿರಾಗಿದೆ. ಆ ನಂತರದ ಓದು ‘ಕುವೆಂಪು, ಲಂಕೇಶ್, ತೇಜಸ್ವಿ. ‘ಪಾಶ್ಚಿಮಾತ್ಯರಲ್ಲಿ ನನಗಿಷ್ಟವಾದವರು ನೆರೋಡಾ, ಬ್ರೆಕ್ಟ್, ಓಲೆಸೋಯೆಂಕಾ’ ಹೀಗೆ ನನ್ನ ಓದನ್ನು ಹಿಗ್ಗಿಸಿಕೊಳ್ಳುವಾಗ ಏಶ್ಯದ ಬೆಳಕು ನನ್ನೊಳಗೆ ಪುಟ್ಟ ಹಣತೆಯಂತೆ ಮತ್ತೆ ಮತ್ತೆ ಕಾಡಿಸುತ್ತದೆ. ಓದಿಸಿಕೊಳ್ಳುತ್ತಿದೆ.. ಕವಿಯ ಕೊನೆಯ ಸಾಲುಗಳು ಹೀಗೆ; ಹಾ ಧನ್ಯ ದೊರೆಯೇ! ಪರಮ ಮೋಕ್ಷಧಾತನೆ! ನನ್ನೀ ದುರ್ಬಲ ಬರಹ ಕ್ಷಮಿಸು, ನಿನಗೆ ಅಪಚಾರವೆಸಗಿರಬಹುದು. ನಿನ್ನ ಅತ್ಯುನ್ನತ ದಯೆಯನ್ನು ತಿಳುವಳಿಕೆಯಿಲ್ಲದೆ ಅಳೆಯುವುದರಿಂದ. ಇದು ಕವಿ ಬುದ್ಧನ ಮುಂದೆ ಅತ್ಯಂತ ವಿನೂತ ಭಾವದಿಂದ ಹೇಳಿಕೊಂಡಿರುವ ಸಾಲುಗಳು. ಸಕಲ ಜೀವಿಗಳಿಗೂ, ಮಾತನಾಡದ, ಭರವಸೆಯಿಲ್ಲದ, ಭರವಸೆಯ ಕೇಳಲು ತಿಳುವಳಿಕೆಯಿಲ್ಲದ ನಮ್ಮ ನೋವುಗಳಲ್ಲಿ ಭಾಗಿಯಾಗುವ ಸಕಲ/ಜೀವಿಗಳಿಗೂ. -ಈ ಮಹಾಕಾವ್ಯದ ಪ್ರತೀ ಸಾಲುಗಳು ಒಬ್ಬರಿಗೆ ಮಾತ್ರ ಸೀಮಿತವಾದುದಲ್ಲ. ಪ್ರತಿಯೊಬ್ಬರೂ ಆಲಿಸುವಂತಹದ್ದು. ಮನುಷ್ಯನಿಗೆ ಎಷ್ಟೇ ಆಸ್ತಿ, ಅಂತಸ್ತು, ಅಧಿಕಾರವಿದ್ದರೂ ಮತ್ತು ದ್ವೇಷದ ಮನೋಭಾವನೆ ಇದ್ದರೂ ಕೊನೆಗಳಿಗೆಯಲ್ಲಿ ಆತ ಬಯಸುವುದು ಹಿಡಿಯಷ್ಟು ನಿಷ್ಕಲ್ಮಶ ಪ್ರೀತಿಯಷ್ಟೇ. ಬುದ್ಧನಾಗುವುದೆಂದರೆ ಅಷ್ಟು ಸುಲಭವಲ್ಲ, ಸರಳವಲ್ಲ ಅದೊಂದು ತಪಸ್ಸು! ಹಾಗಾಗಿ ನಾವು ಬುದ್ಧನ ತತ್ವಗಳನ್ನು ಅಳವಡಿಸಿಕೊಂಡು ನಡೆದರೆ ನಮ್ಮ ಮನಸ್ಸಿನೊಂದಿಗೆ ನಮ್ಮ ಸುತ್ತಮುತ್ತಲಿನ ಪರಿಸರ, ಸಮಾಜ ಎಲ್ಲವೂ ಸುಂದರವಾಗಿರುತ್ತದೆ. ಹೇಗೆಂದರೆ ಸರ್ವಜನಾಂಗದ ಶಾಂತಿಯ ತೋಟದಂತೆ. ಪ್ರತಿಯೊಬ್ಬರ ಸಕಾರಾತ್ಮಕ ಚಿಂತನೆಗಳು ಕೂಡ ಬೆಳಕಿನಂತೆ. ಆ ಎಲ್ಲಾ ಬೆಳಕು ಒಟ್ಟಾದರೆ ಬೆಳಗು. ನಮಗೆಲ್ಲರಿಗೂ ಬೆಳಕು ಮತ್ತು ಬೆಳಗು ಬೇಕೆಂದರೆ ಮೊದಲು ಈ ಪುಸ್ತಕವನ್ನು ಎಲ್ಲರೂ ಓದಬೇಕು. ಓದಿ ಅರಿತಾಗ ಮಾತ್ರ ಈ ಪ್ರಖರ ಬೆಳಕಿನ ಬೆಳಗು ಮೂಡುತ್ತದೆ. ಒಟ್ಟಿನಲ್ಲಿ ಕನ್ನಡದಲ್ಲಿ ಅನುವಾದಗೊಂಡ ಈ ಪುಸ್ತಕ ಕನ್ನಡ ಸಾಹಿತ್ಯ ಲೋಕಕ್ಕೆ ಬೆಳ್ಗಿರಣದ ಕೊಡುಗೆಯಾಗಿದೆ. ಅನುವಾದ ಮಾಡಿದಂತಹ ಡಾ. ಮಹಾದೇವ್ ರವರಿಗೆ ಸಹೃದಯಗಳ ಕಡೆಯಿಂದ ಧನ್ಯವಾದಗಳು. ಇಂತಹ ಮಹಾಕಾವ್ಯದಲ್ಲಿ ದೋಷಗಳು ಅಥವಾ ಅನ್ಯಧರ್ಮೀಯ ದೇವರ ಹೆಸರುಗಳು ಉಲ್ಲೇಖಿಸಿರುವುದು ಸರಿಯಷ್ಟೇ. ಅದು ಹೆಸರಿನ ಮೇಲೆ ಉಳಿಯುವಂತಹದ್ದಲ್ಲ. ಒಳ್ಳೆಯದರ ಮೇಲೆ ಉಳಿಯುವಂತಹದ್ದು. ಹೀಗಾಗಿ ಬುದ್ಧ, ಬುದ್ಧ ಕಾವ್ಯ ಎಲ್ಲವನ್ನು ಒಳಗೊಳ್ಳುವುದರಲ್ಲೇ ಬೆಳಕಿನ ಸಾರ್ಥಕ್ಯವಿದೆ.
ಮಾತೃಭೂಮಿಯ ಒಡನಾಟ, ಕರ್ಮಭೂಮಿಗೆ ನಿಯತ್ತು: ವಿದೇಶಿ ಕ್ರಿಕೆಟ್ ತಂಡಗಳಲ್ಲಿರುವ ಭಾರತೀಯರಿಗೆ ಪ್ರಧಾನಿ ಮೋದಿ ಮೆಚ್ಚುಗೆ
Indian-origin cricketers in foreign: ಟಿ20 ವಿಶ್ವಕಪ್ 2026 ಕ್ರಿಕೆಟ್ ಟೂರ್ನಿಯಲ್ಲಿ ಭಾರತ ಮೂಲದ ಹಲವು ಆಟಗಾರರು ಬೇರೆ ದೇಶಗಳನ್ನು ಪ್ರತಿನಿಧಿಸಿ ಅವರ ಜೆರ್ಸಿಯಲ್ಲಿ ಕಣಕ್ಕಿಳಿದು ಅದ್ಭುತ ಪ್ರದರ್ಶನ ತೋರುತ್ತಿರುವುದು ಗಮನ ಸೆಳೆದಿದೆ. ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು 'ಮನ್ ಕಿ ಬಾತ್' ಕಾರ್ಯಕ್ರಮದಲ್ಲಿ ಮಾತನಾಡಿ, ಅವರ ಆಟವನ್ನು ಶ್ಲಾಘಿಸಿದ್ದಾರೆ. ಇದೇ ವೇಳೆ ಯಾವೆಲ್ಲಾ
ಈಶಾನ್ಯ ಭಾರತದ ವಿಮಾನಯಾನಕ್ಕೆ ವೇಗ: ಗುವಾಹಟಿ ಏರ್ಪೋರ್ಟ್ನ ನೂತನ ಟರ್ಮಿನಲ್ ಕಾರ್ಯಾಚರಣೆ ಶುರು
ಗುವಾಹಟಿ: ಅಸ್ಸಾಂನ ಗುವಾಹಟಿಯಲ್ಲಿರುವ 'ಲೋಕಪ್ರಿಯ ಗೋಪಿನಾಥ್ ಬೋರ್ಡೊಲಾಯ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ'ದ ಬಹುನಿರೀಕ್ಷಿತ ನೂತನ ಟರ್ಮಿನಲ್ ಭಾನುವಾರದಿಂದ ತನ್ನ ವಾಣಿಜ್ಯ ಕಾರ್ಯಾಚರಣೆಯನ್ನು ಅಧಿಕೃತವಾಗಿ ಆರಂಭಿಸಿದೆ. ಇದರಿಂದಾಗಿ ಅಸ್ಸಾಂನ ವಿಮಾನಯಾನ ಸಾಮರ್ಥ್ಯ ಗಣನೀಯವಾಗಿ ಹೆಚ್ಚಾಗಿದ್ದು, ಈಶಾನ್ಯ ಭಾರತ ಮತ್ತು ನೆರೆಯ ಅಂತರಾಷ್ಟ್ರೀಯ ತಾಣಗಳೊಂದಿಗಿನ ಸಂಪರ್ಕ ಮತ್ತಷ್ಟು ಬಲಗೊಂಡಿದೆ. ಹೊಸ ಮತ್ತು ಅತ್ಯಾಧುನಿಕ ಸೌಲಭ್ಯಗಳ ಸೇರ್ಪಡೆಯಿಂದಾಗಿ, ಗುವಾಹಟಿ ವಿಮಾನ ನಿಲ್ದಾಣದ
ತೀರ್ಥಹಳ್ಳಿಯಲ್ಲಿ ಹೆಚ್ಚಿದ ವನ್ಯಜೀವಿಗಳ ಹಾವಳಿ: ಚಿರತೆ ದಾಳಿಗೆ 3 ಹಸು ಬಲಿ, ಅರಣ್ಯ ಇಲಾಖೆ ವಿರುದ್ಧ ರೈತರ ಆಕ್ರೋಶ
ತೀರ್ಥಹಳ್ಳಿ: ಮಲೆನಾಡು ಭಾಗದಲ್ಲಿ ವನ್ಯಜೀವಿಗಳ ಹಾವಳಿ ಮಿತಿಮೀರುತ್ತಿದ್ದು, ತೀರ್ಥಹಳ್ಳಿ ತಾಲೂಕಿನ ರೈತರು ಅಕ್ಷರಶಃ ಕಂಗಾಲಾಗಿದ್ದಾರೆ. ಒಂದೆಡೆ ರೈತರ ಜಾನುವಾರುಗಳ ಮೇಲೆ ಚಿರತೆಗಳು ಸರಣಿ ದಾಳಿ ನಡೆಸುತ್ತಿದ್ದರೆ, ಮತ್ತೊಂದೆಡೆ ಮಂಗ ಹಾಗೂ ಕಾಡುಕೋಣಗಳ ಹಾವಳಿಯಿಂದ ಬೆಳೆಗಳು ನಾಶವಾಗುತ್ತಿದೆ. ಅರಣ್ಯ ಇಲಾಖೆಯ ನಿರ್ಲಕ್ಷ್ಯವೇ ಈ ಎಲ್ಲ ಅನಾಹುತಗಳಿಗೆ ಕಾರಣ ಎಂದು ಆರೋಪಿಸಿರುವ ಗ್ರಾಮಸ್ಥರು, ಅಧಿಕಾರಿಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪೂರ್ವ ಭಾರತದಲ್ಲಿ ವಿದ್ಯುತ್ ಕ್ರಾಂತಿ: ಜಾರ್ಖಂಡ್–ಬಿಹಾರದ ಯೋಜನಾ ಸ್ಥಳಗಳಿಗೆ ಗೌತಮ್ ಆದಾನಿ ಭೇಟಿ
ಗೌತಮ್ ಅದಾನಿ ಭಾನುವಾರ ಜಾರ್ಖಂಡ್ ಮತ್ತು ಬಿಹಾರದ ಪ್ರಮುಖ ಯೋಜನಾ ಸ್ಥಳಗಳಿಗೆ ಭೇಟಿ ನೀಡಿ ಪ್ರಮುಖ ವಿದ್ಯುತ್ ಮೂಲಸೌಕರ್ಯ ಅಭಿವೃದ್ಧಿಯನ್ನು ಪರಿಶೀಲಿಸಿದರು. ಪೂರ್ವ ಭಾರತದಲ್ಲಿ ನೈಸರ್ಗಿಕ ಸಂಪನ್ಮೂಲಗಳಿಂದ ಸಮೃದ್ಧವಾಗಿರುವ ಆದರೆ ಐತಿಹಾಸಿಕವಾಗಿ ಕೈಗಾರಿಕೀಕರಣಗೊಂಡಿಲ್ಲದ ಪ್ರದೇಶ ಎಂದು ಅದಾನಿ ಗ್ರೂಪ್ನ ಬೆಳೆಯುತ್ತಿರುವ ಹೂಡಿಕೆ ಹೆಜ್ಜೆಗುರುತನ್ನು ಉಲ್ಲೇಖಿಸಿದರು. ಸಾವಿರಾರು ಉದ್ಯೋಗ ಸೃಷ್ಟಿ ಜಾರ್ಖಂಡ್ನ ಬುಡಕಟ್ಟು ಜನಾಂಗದವರ ಪ್ರಾಬಲ್ಯವಿರುವ ಗೊಡ್ಡಾ ಜಿಲ್ಲೆಯಲ್ಲಿ,
ಸೂರ್ಯನಗರಿಯಲ್ಲಿ ಫಲಪುಷ್ಪ ಪ್ರದರ್ಶನ
ಹೂವಿನಲ್ಲಿ ಅರಳಿದ ಭಾರತದ ಸಂವಿಧಾನ | ಕಲ್ಲಂಗಡಿಯಲ್ಲಿ ಬುದ್ಧ, ಬಸವ, ಅಂಬೇಡ್ಕರ್
ಎಸ್ಸಿ ಒಳ ಮೀಸಲಾತಿ: ಸಮಾನತೆಯ ಭರವಸೆಗೆ ರೋಸ್ಟರ್ ವ್ಯವಸ್ಥೆಯ ಅಗತ್ಯ
ಭಾರತದ ಸುಪ್ರೀಂ ಕೋರ್ಟ್ ಎತ್ತಿಹಿಡಿದ ಪೋಸ್ಟ್-ಆಧಾರಿತ ಮೀಸಲಾತಿ ತತ್ವಗಳ ಆಧಾರದ ಮೇಲೆ ಸಿಬ್ಬಂದಿ ಮತ್ತು ತರಬೇತಿ ಇಲಾಖೆಯು ಸೂಚಿಸಿದಂತೆ ಸರಕಾರಿ ಉದ್ಯೋಗಗಳಲ್ಲಿ ಕೇಡರ್ ಬಲ ಹೆಚ್ಚಿರುವಲ್ಲಿ, ಮೀಸಲಾತಿ ನಿಯಮಗಳ ಪ್ರಕಾರ ಪ.ಜಾ.,/ಪ.ವ., ಹಿಂದುಳಿದ ವರ್ಗ ಮತ್ತು ಇಡಬ್ಲ್ಯುಎಸ್ಗಳ ಸರಿಯಾದ ಪ್ರಾತಿನಿಧ್ಯವನ್ನು ಖಚಿತಪಡಿಸಿಕೊಳ್ಳಲು 200-ಪಾಯಿಂಟ್ ರೋಸ್ಟರ್ ಅನ್ನು ನೇರ ನೇಮಕಾತಿಗಾಗಿ ಬಳಸಲಾಗುತ್ತದೆ, ಇದು ಮೀಸಲಾತಿ ಬಿಂದುಗಳ ವಿವರವಾದ ಚಕ್ರವನ್ನು ಒದಗಿಸುತ್ತದೆ. ಆದರೆ ಕರ್ನಾಟಕ ಸರಕಾರ ಇಡಬ್ಲ್ಯುಎಸ್ ಮೀಸಲಾತಿಯನ್ನು ಅಳವಡಿಸಿಕೊಂಡಿಲ್ಲ. 100-ಪಾಯಿಂಟ್ ರೋಸ್ಟರ್ ಅನ್ನು ಮುಖ್ಯವಾಗಿ ಭಡ್ತಿಗಳಿಗೆ ಅಥವಾ ಕಡಿಮೆ ಮಂಜೂರಾದ ಬಲವನ್ನು ಹೊಂದಿರುವ ಕೇಡರ್ಗಳಲ್ಲಿ ಬಳಸಲಾಗುತ್ತದೆ. ಇದರಲ್ಲಿ ಮಹಿಳಾ ಕೋಟಾವನ್ನು ಶೇ. 33 (ಎಲ್ಲಾ ಎ.ಬಿ.ಸಿ. ವರ್ಗಗಳಿಗೂ ಅನ್ವಯ) ಗಮನದಲ್ಲಿಸಿಕೊಳ್ಳಬೇಕು. ಈ ರೋಸ್ಟರ್ ವ್ಯವಸ್ಥೆಯ ಮೂಲಕ ಜಾರಿಗೆ ತರಲಾದ ಈ ವರ್ಗೀಕರಣವು ಐತಿಹಾಸಿಕ ಅಸಮತೋಲನವನ್ನು ಸರಿಪಡಿಸುವ ಮತ್ತು ಅತ್ಯಂತ ಅಂಚಿನಲ್ಲಿರುವ ಸಮುದಾಯಗಳಿಗೆ ಮೀಸಲಾತಿ ಪ್ರಯೋಜನಗಳನ್ನು ವಿಸ್ತರಿಸುವ ಮೂಲಕ ಸಾಮಾಜಿಕ ನ್ಯಾಯವನ್ನು ಖಚಿತಪಡಿಸಿಕೊಳ್ಳುವ ಗುರಿಯನ್ನು ಹೊಂದಿದೆ. ಇದು ಕೇವಲ ಆಡಳಿತಾತ್ಮಕ ಕ್ರಮವಲ್ಲ, ಸಾಮಾಜಿಕ ನ್ಯಾಯದತ್ತ ಮಹತ್ವದ ಹೆಜ್ಜೆ. ಆದರೆ ಒಳ ಮೀಸಲಾತಿಯ ಘೋಷಣೆ ಮಾತ್ರ ಸಾಕಾಗುವುದಿಲ್ಲ. ಅದರ ಪರಿಣಾಮಕಾರಿ ಜಾರಿಗೆ ರೋಸ್ಟರ್ ವ್ಯವಸ್ಥೆ ಕಡ್ಡಾಯ. ರೋಸ್ಟರ್ ಎಂದರೆ ನೇಮಕಾತಿಯ ಕ್ರಮದಲ್ಲಿ ಯಾವ ಹುದ್ದೆ ಯಾವ ಗುಂಪಿಗೆ ಮೀಸಲಾಗಬೇಕು ಎಂಬುದನ್ನು ನಿರ್ಧರಿಸುವ ವ್ಯವಸ್ಥೆ. ಉದಾಹರಣೆಗೆ, 100 ಹುದ್ದೆಗಳ ನೇಮಕಾತಿಯಲ್ಲಿ 17 ಹುದ್ದೆಗಳು ಎಸ್ಸಿ ಸಮುದಾಯಕ್ಕೆ ಮೀಸಲಾಗಿದ್ದರೆ, ಅವುಗಳನ್ನು ಮೂರು ಗುಂಪುಗಳಿಗೆ ಹಂಚಬೇಕು. ಈ ಹಂಚಿಕೆಯನ್ನು ರೋಸ್ಟರ್ ಮೂಲಕ ಮಾತ್ರ ಸಮರ್ಥವಾಗಿ ಜಾರಿಗೆ ತರಬಹುದು. ಇಲ್ಲಿ ಪ್ರಮುಖ ಕಾನೂನು ಬೆಂಬಲವೂ ಇದೆ. ಇದು ರಾಜ್ಯಗಳಿಗೆ ಒಳ ಮೀಸಲಾತಿ ಜಾರಿಗೆ ಕಾನೂನು ಮಾನ್ಯತೆ ನೀಡಿದೆ. ಸಮಾನರಲ್ಲಿ ಸಮಾನತೆ ಮಾತ್ರವಲ್ಲ, ಅಸಮಾನರಲ್ಲಿ ಸಮಾನತೆ ಸಾಧಿಸುವುದೇ ನಿಜವಾದ ನ್ಯಾಯ. ಕರ್ನಾಟಕದಲ್ಲಿ ಒಳ ಮೀಸಲಾತಿ ಜಾರಿಯಾದರೆ, ಇದು ಸಾವಿರಾರು ಯುವಕರ ಭವಿಷ್ಯವನ್ನು ಬದಲಾಯಿಸಬಹುದು. ಇದುವರೆಗೆ ಅವಕಾಶಗಳಿಂದ ವಂಚಿತರಾಗಿದ್ದ ಸಮುದಾಯಗಳಿಗೆ ಹೊಸ ಅವಕಾಶಗಳು ದೊರೆಯಬಹುದು. ಆದರೆ ಈ ನೀತಿ ಯಶಸ್ವಿಯಾಗಲು ಮೂರು ಅಂಶಗಳು ಮುಖ್ಯ. ಮೊದಲನೆಯದು, ಸರಕಾರ ಸ್ಪಷ್ಟವಾದ ರೋಸ್ಟರ್ ಪ್ರಕಟಿಸಬೇಕು. ಎರಡನೆಯದು, ಅದನ್ನು ಕಟ್ಟುನಿಟ್ಟಾಗಿ ಜಾರಿಗೆ ತರಬೇಕು. ಮೂರನೆಯದು, ಪಾರದರ್ಶಕತೆ ಖಚಿತಪಡಿಸಬೇಕು. ಇಲ್ಲದಿದ್ದರೆ ಒಳ ಮೀಸಲಾತಿ ಕೇವಲ ಕಾಗದದಲ್ಲೇ ಉಳಿಯುವ ಅಪಾಯವಿದೆ. ಸಾಮಾಜಿಕ ನ್ಯಾಯ ಕೇವಲ ಘೋಷಣೆಗಳಿಂದ ಸಾಧ್ಯವಿಲ್ಲ. ಅದು ಸಮರ್ಥ ಜಾರಿಗೆ ಅವಲಂಬಿತವಾಗಿದೆ. ಈ ಹಿನ್ನೆಲೆಯಲ್ಲಿ, ಒಳ ಮೀಸಲಾತಿ ಮತ್ತು ರೋಸ್ಟರ್ ವ್ಯವಸ್ಥೆ ಕರ್ನಾಟಕದ ಸಾಮಾಜಿಕ ಇತಿಹಾಸದಲ್ಲಿ ಮಹತ್ವದ ಹೆಜ್ಜೆಯಾಗಬಹುದು. ರೋಸ್ಟರ್ ಪಾಯಿಂಟ್ಗಳು ಗುಂಪು (ಎ) 17, 34, 50, 67, 84, 100, ಗುಂಪು (ಬಿ) 8, 25, 42, 58, 75, 92 ಮತ್ತು ಗುಂಪು (ಸಿ)20, 40, 60, 80, 90. ಆದರೆ, ಈ ನೀತಿ ಯಶಸ್ವಿಯಾಗಬೇಕಾದರೆ, ರೋಸ್ಟರ್ ವ್ಯವಸ್ಥೆಯನ್ನು ಪಾರದರ್ಶಕವಾಗಿ ಮತ್ತು ಕಟ್ಟುನಿಟ್ಟಾಗಿ ಜಾರಿಗೆ ತರಬೇಕು. ಯಾವುದೇ ಗೊಂದಲ ಅಥವಾ ಅನುಮಾನಕ್ಕೆ ಅವಕಾಶ ನೀಡಬಾರದು. ಸರಕಾರ ಸ್ಪಷ್ಟವಾದ ಮಾರ್ಗಸೂಚಿಗಳನ್ನು ಪ್ರಕಟಿಸಿ, ಎಲ್ಲಾ ನೇಮಕಾತಿ ಪ್ರಾಧಿಕಾರಗಳು ಅದನ್ನು ಅನುಸರಿಸುವಂತೆ ನೋಡಿಕೊಳ್ಳಬೇಕು. ಒಟ್ಟಿನಲ್ಲಿ, ಎಸ್ಸಿ ಒಳ ಮೀಸಲಾತಿ ಮತ್ತು ರೋಸ್ಟರ್ ವ್ಯವಸ್ಥೆ ಮೀಸಲಾತಿಯ ತತ್ವವನ್ನು ಇನ್ನಷ್ಟು ಸಮಾನತೆಯತ್ತ ಕೊಂಡೊಯ್ಯುವ ಪ್ರಯತ್ನವಾಗಿದೆ. ಇದು ಕೇವಲ ಆಡಳಿತಾತ್ಮಕ ಕ್ರಮವಲ್ಲ, ಸಾಮಾಜಿಕ ನ್ಯಾಯದ ಬದ್ಧತೆಯ ಸಂಕೇತವಾಗಿದೆ. ಸರಕಾರ ಈ ಕ್ರಮವನ್ನು ಸಮರ್ಥವಾಗಿ ಜಾರಿಗೆ ತಂದರೆ, ಅನುಸೂಚಿತ ಜಾತಿಗಳ ಒಳಗಿನ ಅಸಮಾನತೆ ಕಡಿಮೆಯಾಗುವ ಜೊತೆಗೆ, ಸಮಾನ ಅವಕಾಶಗಳ ಕನಸು ಇನ್ನಷ್ಟು ವಾಸ್ತವಿಕವಾಗಲಿದೆ. ಭಾರತದಲ್ಲಿ ಉನ್ನತ ಶಿಕ್ಷಣದಲ್ಲಿ ಮೀಸಲಾತಿ ಎಂಬುದು ಕೇವಲ ಆಡಳಿತಾತ್ಮಕ ನೀತಿ ಅಲ್ಲ; ಅದು ಶತಮಾನಗಳ ಕಾಲ ಅನುಭವಿಸಿದ ಜಾತಿ ಆಧಾರಿತ ಅನ್ಯಾಯವನ್ನು ಸರಿಪಡಿಸುವ ಸಂವಿಧಾನಾತ್ಮಕ ಬದ್ಧತೆ. ಆದರೆ ಇತ್ತೀಚಿನ ವರ್ಷಗಳಲ್ಲಿ ವಿಶ್ವವಿದ್ಯಾಲಯಗಳಲ್ಲಿ ಮೀಸಲಾತಿ ಜಾರಿಗೆ ಸಂಬಂಧಿಸಿದಂತೆ ಘಟಕ ಎಂಬ ಪ್ರಶ್ನೆ ಗಂಭೀರ ಚರ್ಚೆಗೆ ಕಾರಣವಾಗಿದೆ. ಮೀಸಲಾತಿಯನ್ನು ವಿಭಾಗವನ್ನು ಘಟಕವಾಗಿ ಪರಿಗಣಿಸಿ ಜಾರಿಗೊಳಿಸಬೇಕೇ ಅಥವಾ ಸಂಪೂರ್ಣ ವಿಶ್ವವಿದ್ಯಾನಿಲಯವನ್ನು ಘಟಕವಾಗಿ ಪರಿಗಣಿಸಬೇಕೇ ಎಂಬ ಪ್ರಶ್ನೆ, ಸಾಮಾಜಿಕ ನ್ಯಾಯದ ಅರ್ಥವನ್ನೇ ನಿರ್ಧರಿಸುವಂತಾಗಿದೆ. ಮೀಸಲಾತಿಯ ಮೂಲ ಆಧಾರ ಭಾರತದ ಸಂವಿಧಾನ. ಅದರ ಕಲಂ 15(4), 16(4) ಮತ್ತು 46 ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡ ಸಮುದಾಯಗಳ ಶೈಕ್ಷಣಿಕ ಮತ್ತು ಉದ್ಯೋಗದ ಹಿತಾಸಕ್ತಿಯನ್ನು ರಕ್ಷಿಸುವ ಜವಾಬ್ದಾರಿಯನ್ನು ರಾಜ್ಯದ ಮೇಲೆ ವಿಧಿಸುತ್ತವೆ. ಇದರ ಉದ್ದೇಶ ಕೇವಲ ಸಮಾನತೆ ಘೋಷಿಸುವುದಲ್ಲ; ಇತಿಹಾಸದ ಅನ್ಯಾಯವನ್ನು ಸರಿಪಡಿಸುವುದು. ಆದರೆ, ವಿಶ್ವವಿದ್ಯಾನಿಲಯವನ್ನೇ ಒಂದು ಘಟಕವಾಗಿ ಪರಿಗಣಿಸಿ ಮೀಸಲಾತಿ ಜಾರಿಗೊಳಿಸಿದಾಗ, ಈ ಉದ್ದೇಶವೇ ದುರ್ಬಲಗೊಳ್ಳುತ್ತದೆ. ಉದಾಹರಣೆಗೆ, ಒಂದು ವಿಶ್ವವಿದ್ಯಾನಿಲಯದಲ್ಲಿ ಒಟ್ಟಾರೆ ಪ್ರಮಾಣದಲ್ಲಿ ಪ.ಜಾ.,/ಪ.ವ., ಮೀಸಲಾತಿ ಪೂರೈಸಲಾಗಿದೆ ಎಂದು ತೋರಿಸಬಹುದು. ಆದರೆ ವಾಸ್ತವದಲ್ಲಿ, ಅರ್ಥಶಾಸ್ತ್ರ, ಭೌತಶಾಸ್ತ್ರ, ಕಾನೂನು ಅಥವಾ ನಿರ್ವಹಣೆ ಮುಂತಾದ ಪ್ರಮುಖ ವಿಭಾಗಗಳಲ್ಲಿ ಪ.ಜಾ.,/ಪ.ವ.ಗಳ ಶಿಕ್ಷಕರೇ ಇಲ್ಲದ ಪರಿಸ್ಥಿತಿ ಉಂಟಾಗಬಹುದು. ಇದರ ಪರಿಣಾಮವಾಗಿ, ಮೀಸಲಾತಿ ಕೇವಲ ಸಂಖ್ಯೆಗಳ ಮಟ್ಟದಲ್ಲಿ ಉಳಿದು, ನೈಜ ಪ್ರತಿನಿಧಿತ್ವ ಕಾಣೆಯಾಗುತ್ತದೆ. ಈ ವಿಷಯವು 2017ರಲ್ಲಿ ಅಲಹಾಬಾದ್ ಹೈಕೋರ್ಟ್ ನೀಡಿದ ತೀರ್ಪಿನ ನಂತರ ರಾಷ್ಟ್ರಮಟ್ಟದಲ್ಲಿ ಚರ್ಚೆಗೆ ಬಂದಿತು. ಆ ತೀರ್ಪಿನಲ್ಲಿ ವಿಶ್ವವಿದ್ಯಾನಿಲಯವನ್ನೇ ಘಟಕವಾಗಿ ಪರಿಗಣಿಸಬಹುದು ಎಂದು ಹೇಳಲಾಗಿತ್ತು. ನಂತರ ಭಾರತದ ಸುಪ್ರೀಂ ಕೋರ್ಟ್ ಕೂಡ ಈ ವಿಚಾರದಲ್ಲಿ ತಕ್ಷಣದ ಬದಲಾವಣೆ ಮಾಡದ ಕಾರಣ, ಅನೇಕ ವಿಶ್ವವಿದ್ಯಾನಿಲಯಗಳಲ್ಲಿ ಇದೇ ವಿಧಾನ ಅನುಸರಿಸಲಾಯಿತು. ಇದರ ಪರಿಣಾಮ ಗಂಭೀರವಾಗಿತ್ತು. ಕೆಲವು ವಿಭಾಗಗಳಲ್ಲಿ ಮಾತ್ರ ಮೀಸಲಾತಿ ಸೀಮಿತಗೊಂಡು, ಉಳಿದ ವಿಭಾಗಗಳು ಸಾಮಾಜಿಕವಾಗಿ ಏಕಪಕ್ಷೀಯವಾಗಿಯೇ ಉಳಿದವು. ಇದರ ಪರಿಣಾಮವಾಗಿ, ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿನ ವಿವಿಧತೆ ಕುಸಿಯಿತು. ಸುಪ್ರೀಂ ಕೋರ್ಟ್ ತನ್ನ ಪ್ರಸಿದ್ಧ ಆರ್.ಕೆ. ಸಬರ್ವಾಲ್ ಪ್ರಕರಣದಲ್ಲಿ ಮೀಸಲಾತಿಯ ಉದ್ದೇಶ ನೈಜ ಪ್ರತಿನಿಧಿತ್ವವನ್ನು ಖಚಿತಪಡಿಸುವುದೆಂದು ಸ್ಪಷ್ಟಪಡಿಸಿದೆ. ಅಂದರೆ, ಮೀಸಲಾತಿ ಕೇವಲ ಕಾಗದದ ಮೇಲೆ ಇರಬಾರದು; ಅದು ವಾಸ್ತವಿಕ ಹುದ್ದೆಗಳಲ್ಲಿ ಕಾಣಿಸಬೇಕು. ವಿಭಾಗದ ಬದಲು ವಿಶ್ವವಿದ್ಯಾನಿಲಯವನ್ನು ಘಟಕವಾಗಿ ಪರಿಗಣಿಸಿದಾಗ, ಆಡಳಿತವು ಒಟ್ಟಾರೆ ಸಂಖ್ಯೆಯನ್ನು ತೋರಿಸಿ ಮೀಸಲಾತಿ ಪಾಲಿಸಲಾಗಿದೆ ಎಂದು ಹೇಳಬಹುದು. ಆದರೆ ಕೆಲವು ವಿಭಾಗಗಳಲ್ಲಿ ಸಂಪೂರ್ಣವಾಗಿ ಪ.ಜಾ.,/ಪ.ವ., ಪ್ರಾಧ್ಯಾಪಕರ ಕೊರತೆ ಮುಂದುವರಿಯಬಹುದು. ಇದು ಸಾಮಾಜಿಕ ನ್ಯಾಯದ ಆತ್ಮಕ್ಕೆ ವಿರುದ್ಧವಾಗಿದೆ. ಇದರ ಪರಿಣಾಮ ವಿದ್ಯಾರ್ಥಿಗಳ ಮೇಲೂ ಬೀಳುತ್ತದೆ. ಶಿಕ್ಷಕರಲ್ಲಿ ವಿವಿಧತೆ ಇಲ್ಲದಿದ್ದರೆ, ಅಂಚಿನ ಸಮುದಾಯದ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮತ್ತು ಪ್ರೇರಣೆ ಕಡಿಮೆಯಾಗುತ್ತದೆ. ಇದರಿಂದ ಅವರು ಶಿಕ್ಷಣ ವ್ಯವಸ್ಥೆಯಲ್ಲಿ ತಮ್ಮನ್ನು ತಾವು ಅಳಿವಿನ ಅಂಚಿನಲ್ಲಿ ಇದ್ದಂತೆ ಅನುಭವಿಸಬಹುದು. ಈ ಗಂಭೀರ ಸಮಸ್ಯೆಯನ್ನು ಗಮನಿಸಿದ ಸಂಸತ್ತು 2019ರಲ್ಲಿ ಹೊಸ ಕಾಯ್ದೆ ತಂದು, ವಿಭಾಗವನ್ನೇ ಘಟಕವಾಗಿ ಪರಿಗಣಿಸುವ ವ್ಯವಸ್ಥೆಯನ್ನು ಮರುಸ್ಥಾಪಿಸಿತು. ಇದು ಸಾಮಾಜಿಕನ್ಯಾಯವನ್ನು ರಕ್ಷಿಸುವ ಮಹತ್ವದ ಹೆಜ್ಜೆಯಾಗಿದೆ. ವಿಶ್ವವಿದ್ಯಾನಿಲಯಗಳು ಕೇವಲ ಶಿಕ್ಷಣ ನೀಡುವ ಸಂಸ್ಥೆಗಳಲ್ಲ; ಅವು ಜ್ಞಾನ ಮತ್ತು ಅಧಿಕಾರ ನಿರ್ಮಾಣವಾಗುವ ಸ್ಥಳಗಳು. ಈ ಸ್ಥಳಗಳಲ್ಲಿ ಎಲ್ಲಾ ಸಮುದಾಯಗಳಿಗೂ ಸಮಾನ ಅವಕಾಶ ದೊರೆಯಬೇಕು. ಇಲ್ಲದಿದ್ದರೆ, ಉನ್ನತ ಶಿಕ್ಷಣವು ಅಸಮಾನತೆಯನ್ನು ಕಡಿಮೆ ಮಾಡುವ ಬದಲು ಅದನ್ನು ಮುಂದುವರಿಸುವ ಸಾಧನವಾಗುತ್ತದೆ. ಮೀಸಲಾತಿಯನ್ನು ಕೇವಲ ವಿಶ್ವವಿದ್ಯಾನಿಲಯ ಮಟ್ಟದಲ್ಲಿ ಲೆಕ್ಕ ಹಾಕುವುದು ಸಂಖ್ಯೆಯ ನ್ಯಾಯವಾಗಬಹುದು. ಆದರೆ ವಿಭಾಗ ಮಟ್ಟದಲ್ಲಿ ಜಾರಿಗೊಳಿಸುವುದೇ ನೈಜ ನ್ಯಾಯ. ಭಾರತದ ಉನ್ನತ ಶಿಕ್ಷಣ ವ್ಯವಸ್ಥೆ ಇನ್ನೂ ಸಾಮಾಜಿಕವಾಗಿ ಸಮಾನವಾಗಿಲ್ಲ. ಈ ಸಂದರ್ಭದಲ್ಲಿ, ಮೀಸಲಾತಿಯ ಸರಿಯಾದ ಜಾರಿ ಅತ್ಯಗತ್ಯ. ಇದು ಪ್ರವೇಶಾತಿ ಮತ್ತು ಸಂಶೋಧನಾ ಕಾರ್ಯಗಳಿಗೂ ಅನ್ವಯವಾಗುವಂತೆ ನೋಡಿಕೊಳ್ಳುವುದು ಸಂಬಂಧ ಪಟ್ಟ ಇಲಾಖೆ ಮತ್ತು ವಿವಿಗಳ ಆದ್ಯ ಕರ್ತವ್ಯವಾಗಬೇಕು. ಭಾರತದ ಪ್ರಜಾಸತ್ತಾತ್ಮಕ ವ್ಯವಸ್ಥೆಯ ಬಲವು ಅದರ ಸಮಾನತೆಯ ಬದ್ಧತೆಯಲ್ಲಿ ಇದೆ. ವಿಶ್ವವಿದ್ಯಾನಿಲಯಗಳು ಈ ಬದ್ಧತೆಯನ್ನು ಪ್ರತಿಬಿಂಬಿಸಬೇಕು. ಮೀಸಲಾತಿಯ ಸರಿಯಾದ ಜಾರಿ ಇಲ್ಲದೆ, ಸಾಮಾಜಿಕ ನ್ಯಾಯ ಅಪೂರ್ಣವಾಗಿಯೇ ಉಳಿಯುತ್ತದೆ. ಸಂಖ್ಯೆಗಳು ನ್ಯಾಯವನ್ನು ತೋರಿಸಬಹುದು. ಆದರೆ ಪ್ರತಿನಿಧಿತ್ವ ಮಾತ್ರ ನ್ಯಾಯವನ್ನು ಸಾಬೀತುಪಡಿಸುತ್ತದೆ. ವಿಭಾಗ ಮಟ್ಟದಲ್ಲಿ ಮೀಸಲಾತಿಯನ್ನು ಜಾರಿಗೊಳಿಸುವುದರಿಂದ ಮಾತ್ರ ವಿಶ್ವವಿದ್ಯಾನಿಲಯಗಳು ನಿಜವಾದ ಅರ್ಥದಲ್ಲಿ ಪ್ರಜಾಸತ್ತಾತ್ಮಕ ಮತ್ತು ಸಮಾನತೆಯ ಕೇಂದ್ರಗಳಾಗಬಹುದು.
El Mencho Killed: ಮೆಕ್ಸಿಕೋದಲ್ಲಿ ಭುಗಿಲೆದ್ದ ಹಿಂಸಾಚಾರ, ಹೊರಬರಬೇಡಿ ಎಂದು ಭಾರತೀಯರಿಗೆ ರಾಯಭಾರ ಕಚೇರಿ ಎಚ್ಚರಿಕೆ!
ಮೆಕ್ಸಿಕೋದಲ್ಲಿ ಮಾದಕಜಾಲದ ನಿರ್ಮೂಲನೆಗೆ ಮೆಕ್ಸಿಕೋ ಸೇನೆ ನಡೆಸಿದ ದಾಳಿ ಕಾರ್ಯಾಚರಣೆಯಲ್ಲಿ ಮೆಕ್ಸಿಕೋದ ಡ್ರಗ್ ಕಾರ್ಟೆಲ್ ನ ಕುಖ್ಯಾತ ದೊರೆ ಎಲ್ ಮೆಂಚೊನನ್ನು ಎನ್ ಕೌಂಟರ್ ಮಾಡಿ ಹತ್ಯೆಮಾಡಿದ್ದು, ಸದ್ಯ ಮೆಕ್ಸಿಕೋದಲ್ಲಿ ಹಿಂಸಾಚಾರ ಭುಗಿಲೆಳುವಂತೆ ಮಾಡಿದೆ. ಈ ಹಿನ್ನೆಲೆಯಲ್ಲಿ ಮೆಕ್ಸಿಕೋದಲ್ಲಿನ ಭಾರತೀಯ ಪ್ರಜೆಗಳು ಸುರಕ್ಷಿತವಾಗಿರುವಂತೆ ಆಶ್ರಯಗಳನ್ನು ಪಡೆದುಕೊಂಡು ಮುನ್ನೆಚ್ಚರಿಕೆ ವಹಿಸಿ ಎಂದು ಮೆಕ್ಸಿಕೋದಲ್ಲಿನ ಭಾರತೀಯ ರಾಯಭಾರ ಕಚೇರಿ ಎಚ್ಚರಿಕೆ ನೀಡಿದೆ. ಇದರೊಂದಿಗೆ ಹಲವು ಮುನ್ನೆಚ್ಚರಿಕಾ ಕ್ರಮಗಳನ್ನು ತಿಳಿಸಿದೆ.
CM Change : 'ಯುಗಾದಿ ನಂತರ ಅವರಾಗಿಯೇ ಬಿಟ್ಟುಕೊಟ್ಟರೆ’ - ಕೋಡಿಶ್ರೀಗಳ ಭವಿಷ್ಯದ ಒಳಾರ್ಥವೇ ನಿಗೂಢ
Kodi Mutt Swamiji Prediction : ಕಳೆದ ಕೆಲವು ತಿಂಗಳಿನಿಂದ ಕರ್ನಾಟಕದಲ್ಲಿ ಮುಖ್ಯಮಂತ್ರಿ ಬದಲಾವಣೆ ವಿಚಾರ, ಕಾಂಗ್ರೆಸ್ ವಲಯದಲ್ಲಿ ಮಾತ್ರವಲ್ಲದೇ, ರಾಜ್ಯದ ಜನತೆಗೂ ಕುತೂಹಲಕ್ಕೆ ಕಾರಣವಾಗಿ ಕೂತಿದೆ. ಈ ವಿಚಾರದ ಬಗ್ಗೆ ಕೋಡಿಮಠದ ಶ್ರೀಗಳು ಭವಿಷ್ಯವನ್ನು ನುಡಿದಿದ್ದರು. ಸಿದ್ದರಾಮಯ್ಯನವರು ಅವರಾಗಿಯೇ ಬಿಟ್ಟರೆ, ಸಿಎಂ ಬದಲಾವಣೆ ಎನ್ನುವ ಅವರ ಭವಿಷ್ಯ ಚರ್ಚೆಗೆ ಗ್ರಾಸವಾಗಿದೆ.
ಹಾಸನ | ಬೈಕ್ ಅಪಘಾತ: ಯುವತಿ ಮೃತ್ಯು, ಇನ್ನೋರ್ವೆ ಗಂಭೀರ
ಹಾಸನ: ಬೈಕೊಂದು ರಸ್ತೆ ಹಂಪ್ಸ್ ನಲ್ಲಿ ನಿಯಂತ್ರಣ ತಪ್ಪಿ ಉರುಳಿ ಬಿದ್ದ ಪರಿಣಾಮ ಓರ್ವ ಯುವತಿ ಸ್ಥಳದಲ್ಲೇ ಮೃತಪಟ್ಟು, ಇನ್ನೊಬ್ಬಳು ಗಂಭೀರವಾಗಿ ಗಾಯಗೊಂಡ ರ್ಘಟನೆ ನಗರದ ಕೈಗಾರಿಕಾ ಪ್ರದೇಶದಲ್ಲಿ ರವಿವಾರ ರಾತ್ರಿ ನಡೆದಿದೆ. ಹಾಸನದ ಸತ್ಯಮಂಗಲ ಬಡಾವಣೆಯ ಪ್ರಿಯಾ(23) ಮೃತಪಟ್ಟವರು. ಜೊತೆಗಿದ್ದ ಸ್ವಾತಿ (24) ಎಂಬವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಆಸ್ಪತ್ರೆಗೆ ರವಾನಿಸಲಾಗಿದೆ. ಅವರ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದುಬಂದಿದೆ. ಇವರಿಬ್ಬರು ಕಳೆದ ರಾತ್ರಿ ಬುಲೆಟ್ ಬೈಕ್ ನಲ್ಲಿ ಸಂಚರಿಸುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ. ಕೈಗಾರಿಕಾ ಪ್ರದೇಶದ ರಸ್ತೆಯಲ್ಲಿದ್ದ ಹಂಪ್ಸ್ ಗಮನಕ್ಕೆ ಬಾರದ ಹಿನ್ನೆಲೆಯಲ್ಲಿ ಬೈಕ್ ನಿಯಂತ್ರಣ ತಪ್ಪಿ ಉರುಳಿಬಿದ್ದಿದೆ. ಇದರಿಂದ ರಸ್ತೆಗೆ ಎಸೆಯಲ್ಪಟ್ಟ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದರು. ಸ್ಥಳೀಯವರು ಅವರನ್ನು ಆಸ್ಪತ್ರೆಗೆ ದಾಖಲಿಸಿದರೂ ಅಷ್ಟರಲ್ಲಿ ಪ್ರಿಯಾ ಕೊನೆಯುಸಿರೆಳೆದಿದ್ದರು. ಪ್ರಿಯಾ ಖಾಸಗಿ ಕಾಲೇಜಿನಲ್ಲಿ ಎಂಸಿಎ ಅಂತಿಮ ವರ್ಷದ ವಿದ್ಯಾರ್ಥಿನಿಯಾಗಿದ್ದರು. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
CBSE 10ನೇ ತರಗತಿ ಬೋರ್ಡ್ ಪರೀಕ್ಷೆ: ವಿಜ್ಞಾನದ 'ಆವರ್ತಕ ಕೋಷ್ಟಕ' ಸುಲಭವಾಗಿ ನೆನಪಿಟ್ಟುಕೊಳ್ಳಲು ಇಲ್ಲಿದೆ ಟ್ರಿಕ್ಸ್
10ನೇ ತರಗತಿಯ ವಿಜ್ಞಾನ ಬೋರ್ಡ್ ಪರೀಕ್ಷೆಗಳು ಹತ್ತಿರವಾಗುತ್ತಿರುವಂತೆಯೇ, ದೇಶಾದ್ಯಂತ ವಿದ್ಯಾರ್ಥಿಗಳಲ್ಲಿ ಪರೀಕ್ಷಾ ಭಯದ ಜೊತೆಗೆ ಸಿದ್ಧತೆ ಜೋರಾಗಿ ಶುರುವಾಗಿದೆ. ಅದರಲ್ಲೂ ವಿಜ್ಞಾನ ವಿಷಯದಲ್ಲಿನ ಮೂಲಭೂತ ಪರಿಕಲ್ಪನೆಗಳನ್ನು, ವಿಶೇಷವಾಗಿ ರಸಾಯನಶಾಸ್ತ್ರದ 'ಆವರ್ತಕ ಕೋಷ್ಟಕ' (Periodic Table) ವನ್ನು ಅರ್ಥಮಾಡಿಕೊಳ್ಳುವುದು ಮತ್ತು ನೆನಪಿಟ್ಟುಕೊಳ್ಳುವುದು ಬಹುತೇಕ ವಿದ್ಯಾರ್ಥಿಗಳಿಗೆ ದೊಡ್ಡ ಸವಾಲಾಗಿ ಪರಿಣಮಿಸುತ್ತದೆ. ಡಿಮಿಟ್ರಿ ಮೆಂಡಲೀವ್ ಅವರ ಆವರ್ತಕ ಕೋಷ್ಟಕ (Periodic Table)
ಮೆಕ್ಸಿಕೋ: ಎಲ್ ಮೆಂಚೊ ಎಂದೇ ಪರಿಚಿತನಾಗಿದ್ದ ಕುಖ್ಯಾತ ಮಾದಕವಸ್ತು ಕಳ್ಳಸಾಗಾಣಿಕೆದಾರ ನೆಮೆಸಿಯೊ ಹತ್ಯೆ ಬಳಿಕ ಆತನ ಸಹಚರರು ನಡೆಸಿದ ಪ್ರತಿದಾಳಿಯಿಂದ ಮೆಕ್ಸಿಕೊದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಎಚ್ಚರಿಕೆಯಿಂದಿರುವಂತೆ ಮೆಕ್ಸಿಕೊದಲ್ಲಿನ ಭಾರತೀಯರಿಗೆ ರಾಯಭಾರಿ ಕಚೇರಿಯು ಸಲಹೆಯನ್ನು ನೀಡಿದೆ. ಈ ಕುರಿತು ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಮೆಕ್ಸಿಕೊದಲ್ಲಿನ ಭಾರತೀಯ ರಾಯಭಾರಿ ಕಚೇರಿ, ಮೆಕ್ಸಿಕೋದಲ್ಲಿರುವ ಭಾರತೀಯರು ತಾತ್ಕಾಲಿಕವಾಗಿ ಮನೆಗಳಲ್ಲೇ ಉಳಿಯಬೇಕು, ಅನಗತ್ಯವಾಗಿ ಹೊರಗೆ ಓಡಾಡುವುದನ್ನು ತಪ್ಪಿಸಬೇಕು. ಸುತ್ತಮುತ್ತಲಿನ ಪರಿಸ್ಥಿತಿಯ ಬಗ್ಗೆ ಎಚ್ಚರಿಕೆಯಿಂದಿರಬೇಕು ಎಂದು ಸಲಹೆ ನೀಡಿದ್ದಾರೆ. ಭದ್ರತಾ ಕಾರ್ಯಾಚರಣೆಗಳು, ರಸ್ತೆ ತಡೆಗಳು ಮತ್ತು ಹಿಂಸಾಚಾರ ಘಟನೆಗಳ ಹಿನ್ನೆಲೆ ಜಲಿಸ್ಕೊ , ತಮೌಲಿಪಾಸ್, ಮೈಕೋಕನ, ಗೆರೆರೊ ಮತ್ತು ನ್ಯೂಯೆವೊ ಲಿಯಾನ್ ರಾಜ್ಯಗಳಲ್ಲಿರುವ ಭಾರತೀಯ ಪ್ರಜೆಗಳು ಮುಂದಿನ ಸೂಚನೆವರೆಗೆ ಮನೆಯಲ್ಲೇ ಇರಬೇಕು ಎಂದು ಎಕ್ಸ್ನಲ್ಲಿನ ಪೋಸ್ಟ್ ನಲ್ಲಿ ಭಾರತೀಯ ರಾಯಭಾರಿ ಕಚೇರಿಯು ತಿಳಿಸಿದೆ. ಕಾನೂನು ಜಾರಿಗೆ ಸಂಬಂಧಿಸಿದ ಕಾರ್ಯಾಚರಣೆ ನಡೆಯುವ ಪ್ರದೇಶಗಳಲ್ಲಿ ಓಡಾಡುವುದನ್ನು ತಪ್ಪಿಸಿಕೊಳ್ಳಿ, ನಿಮ್ಮ ಸುತ್ತಮುತ್ತಲಿನ ಪರಿಸ್ಥಿತಿಯನ್ನು ಗಮನದಲ್ಲಿಡಿ, ಸುರಕ್ಷಿತ ಸ್ಥಳದಲ್ಲಿ ಆಶ್ರಯ ಪಡೆದು ಹೊರಗೆ ಅನಗತ್ಯ ಸಂಚಾರ ಕಡಿಮೆ ಮಾಡಿ. ಸ್ಥಳೀಯ ಮಾಧ್ಯಮಗಳನ್ನು ಗಮನಿಸಿ. ಸ್ಥಳೀಯ ಅಧಿಕಾರಿಗಳ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ. ತುರ್ತು ಪರಿಸ್ಥಿತಿಯಲ್ಲಿ 911ಕ್ಕೆ ಕರೆಮಾಡಿ. ಕುಟುಂಬಸ್ಥರು ಮತ್ತು ಸ್ನೇಹಿತರೊಂದಿಗೆ ನಿಮ್ಮ ಸ್ಥಳ ಹಾಗೂ ಆರೋಗ್ಯದ ಬಗ್ಗೆ ಮಾಹಿತಿ ಯನ್ನು ಹಂಚಿಕೊಳ್ಳಿ ಎಂದು ರಾಯಭಾರಿ ಕಚೇರಿಯು ಮಾಹಿತಿ ನೀಡಿದೆ.
ಉಕ್ರೇನ್ ಡ್ರೋನ್ ದಾಳಿಗೆ ರಷ್ಯಾ ತತ್ತರ: ಮಾಸ್ಕೋದ 4 ಇಂಟರ್ನ್ಯಾಷನಲ್ ಏರ್ಪೋರ್ಟ್ ತಾತ್ಕಾಲಿಕ ಸ್ಥಗಿತ!
ರಷ್ಯಾ-ಉಕ್ರೇನ್ ಯುದ್ದಕ್ಕೆ ಬರೋಬ್ಬರಿ 4 ವರ್ಷಗಳು ತುಂಬಲಿದ್ದು, ಈ ಉಭಯರ ನಡುವೆ ಶಾಂತಿ ಮಾತುಕತೆಗಳು ಚಾಲ್ತಿಯಲ್ಲಿದ್ದರೂ ದ್ವೇಷದ ಜ್ವಾಲೆ ಮಾತ್ರ ಇನ್ನೂ ಶಮನವಾಗಿಲ್ಲ. ಮಾತುಕತೆಗಳು ಒಂದೆಡೆ ನಡೆಯುತ್ತಿದ್ದರೂ ಇನ್ನೊಂದೆಡೆ ರಣರಂಗದಲ್ಲಿ ಉಭಯರು ಪರಸ್ಪರ ವೈಮಾನಿಕ ದಾಳಿಗಳನ್ನು ಮಾಡಿಕೊಳ್ಳುತ್ತಿದ್ದ ಉಕ್ರೇನ್ ನ ಡ್ರೋನ್ ದಾಳಿಗೆ ರಷ್ಯಾ ಮಾಸ್ಕೋ ಸುತ್ತಮುತ್ತಲು ಇರುವ ತನ್ನ ಎಲ್ಲಾ 4 ಪ್ರಮುಖ ಅಂತರಾಷ್ಟ್ರೀಯ ವಿಮಾನ ನಿಲ್ದಾಣಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ. ಇನ್ನು, ಇತ್ತ ರಷ್ಯಾ ಸಹ ಉಕ್ರೇನ್ ಮೇಲೆ ವೈಮಾನಿಕ ದಾಳಿ ನಡೆಸಿದ್ದು, ಇದರಿಂದಾಗಿ ಕೀವ್ ನಗರಲ್ಲಿ ಒಬ್ಬ ವ್ಯಕ್ತಿ ಬಲಿಯಾಗಿದ್ದಾರೆ ಎಂದು ಉಕ್ರೇನ್ ತಿಳಿಸಿದೆ.
ದಲಿತ ವೃದ್ಧೆಗೆ ಸೂರು ಕಲ್ಪಿಸಿದ ಮುಸ್ಲಿಮ್ ಯುವಕರು
ಸೌಹಾರ್ದಕ್ಕೆ ಸಾಕ್ಷಿಯಾದ ಸುಳ್ಯದ ಐವತ್ತೊಕ್ಲು
Analysis : ’ಸುಂಕಾಸ್ತ್ರ’ ಬಳಸಿ ಅಶ್ವಮೇಧಕ್ಕೆ ಹೊರಟಿದ್ದ ಟ್ರಂಪ್ - ಕುದುರೆ ಕಟ್ಟಿ ಹಾಕಿದ್ರೂ ನಿಲ್ಲದ ಮೊಂಡಾಟ
Donald Trump Vs US Supreme Court : ಟಾರಿಫ್ ಟಾರಿಫ್ ಎನ್ನುವ ಅಸ್ತ್ರವನ್ನು ಇಟ್ಟುಕೊಂಡು, ವಿಶ್ವವನ್ನು ತನ್ನ ಅಂಕೆಯಲ್ಲಿ ಇಟ್ಟುಕೊಳ್ಳಲು ಹೊರಟಿದ್ದ ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್’ಗೆ ಅಲ್ಲಿನ ಸರ್ವೋಚ್ಚ ನ್ಯಾಯಾಲಯ ಬಿಗಿಯಾದ ಹೊಡೆತವನ್ನು ನೀಡಿದೆ. ಸುಂಕ ವಿಧಿಸುವುದು ನಿಮ್ಮ ಲಿಮಿಟ್’ನಲ್ಲಿ ಬರುವುದಿಲ್ಲ ಎಂದಿರುವ ಕೋರ್ಟ್, ಹೊಸದಾಗಿ ಜಾರಿಗೆ ತಂದ ಎಲ್ಲಾ ಸುಂಕದ ಪ್ರಮಾಣವನ್ನು ರದ್ದುಗೊಳಿಸಿದೆ. ಟ್ರಂಪ್ ಟಾರಿಫ್ ಅಸ್ತ್ರದ ಇದುವರೆಗಿನ ಇತಿಹಾಸವನ್ನು ಈ ಲೇಖನದಲ್ಲಿ ಕಟ್ಟಿಕೊಡುವ ಪ್ರಯತ್ನವನ್ನು ಮಾಡಲಾಗಿದೆ.
ಮೆಕ್ಸಿಕೋದ ಡ್ರಗ್ ದೊರೆ ಎಲ್ ಮೆಂಚೊ ಹತ್ಯೆ ಖಂಡಿಸಿ ಹಿಂಸಾತ್ಮಕ ಪ್ರತಿಭಟನೆ; ಕುಖ್ಯಾತರೇಕೆ ಇಷ್ಟು ಖ್ಯಾತಿ?
ಕುಖ್ಯಾತ ಡ್ರಗ್ ಕಾರ್ಟೆಲ್ಗಳಿಗೆ ಹೆಸರುವಾಸಿಯಾಗಿರುವ ಮೆಕ್ಸಿಕೋ, ಈ ಕಾರ್ಟೆಲ್ಗಳ್ನನು ಮುನ್ನಡೆಸುವ ಡ್ರಗ್ ದೊರೆಗಳ ಕಪಿಮುಷ್ಠಿಯಲ್ಲಿ ಸಿಕ್ಕು ನರಳುತ್ತಿದೆ. ಮೆಕ್ಸಿಕೋದ ಡ್ರಗ್ ಕಾರ್ಟೆಲ್ಗಳೆಂದರೆ ಅಮೆರಿಕದ ನಿದ್ದೆ ಕೂಡ ಹಾರಿ ಹೋಗುತ್ತದೆ. ಅದರಂತೆ ಮೆಕ್ಸಿಕೋದ ಶಾಂತಿಯ ಶತ್ರುವಾಗಿದ್ದ ಕುಖ್ಯಾತ ಡ್ರಗ್ ದೊರೆ ಎಲ್ ಮೆಂಚೊನನ್ನು ಮೆಕ್ಸಿಕನ್ ಸೇನೆ ಕೊಂದು ಹಾಕಿದೆ. ಟಪಾಲ್ಪಾ ನಗರದಲ್ಲಿ ನಡೆದ ಎನ್ಕೌಂಟರ್ನಲ್ಲಿ ನೆಮೆಸಿಯೊ ಎಲ್ ಮೆಂಚೊ ಒಸೆಗುರಾನನ್ನು ಸೇನೆ ಹೊಡೆದುರುಳಿಸಿದ್ದು, ದೇಶಾದ್ಯಂತ ಹಿಂಸಾಚಾರ ಭುಗಿಲೆದ್ದಿದೆ. ಇಲ್ಲಿದೆ ಹೆಚ್ಚಿನ ಮಾಹಿತಿ.
ನ್ಯಾಯಾಲಯಗಳು ಮತ್ತು ಗ್ಯಾರಂಟಿ ಯೋಜನೆಗಳು
ಜನರಿಗೆ ಉದ್ಯೋಗ, ವಸತಿ, ಆಹಾರ, ಶಿಕ್ಷಣ, ಆಸ್ಪತ್ರೆ ಮತ್ತಿತರ ಸೌಕರ್ಯಗಳನ್ನು ಒದಗಿಸಬೇಕಾಗಿರುವುದು ಚುನಾಯಿತ ಸರಕಾರದ ಸಾಂವಿಧಾನಿಕ ಕರ್ತವ್ಯ. ಈ ಕರ್ತವ್ಯ ನಿರ್ವಹಣೆಯಲ್ಲಿ ಅಡ್ಡಿಯಾಗುವುದು ಸರಿಯಲ್ಲ. ಸರಕಾರ ಅಂದರೆ ವ್ಯಾಪಾರ ಅಲ್ಲ. ಅದು ಶಾಲೆ, ಕಾಲೇಜುಗಳನ್ನು, ಆಸ್ಪತ್ರೆಗಳನ್ನು ಪ್ರಜೆಗಳಿಗೆ ಉಚಿತವಾಗಿ ಇಲ್ಲವೇ ರಿಯಾಯಿತಿ ದರದಲ್ಲಿ ನೀಡಬೇಕಾಗುತ್ತದೆ. ಇಲ್ಲಿ ಲಾಭ ನಷ್ಟದ ಪ್ರಶ್ನೆ ಬರುವುದಿಲ್ಲ. ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗಗಳನ್ನು ಪ್ರಜಾಪ್ರಭುತ್ವದ ಆಧಾರ ಸ್ತಂಭಗಳೆಂದು ಅಧಿಕೃತವಾಗಿ ಕರೆಯಲಾಗುತ್ತದೆ. ಈಗ ಮಾಧ್ಯಮ ಎಂದು ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಂಡ ಪತ್ರಿಕಾರಂಗವನ್ನು ಕೂಡ ಜನತಂತ್ರದ ನಾಲ್ಕನೇ ಸ್ತಂಭ ಎಂದು ಅನಧಿಕೃತವಾಗಿ ಹೆಸರಿಸಲಾಗಿದೆ. ಉಳಿದೆರಡು ಅಂಗಗಳಲ್ಲಿ ನಾಗರಿಕರು ತಮಗೆ ಅನ್ಯಾಯವಾದರೆ, ನ್ಯಾಯ ಸಿಗದಿದ್ದರೆ ನ್ಯಾಯಾಂಗದ ಮೊರೆ ಹೋಗುವುದು ಸಹಜವಾಗಿ ನಡೆದುಬಂದ ಪ್ರಕ್ರಿಯೆ. ನ್ಯಾಯಾಲಯದ ಕಟ್ಟೆ ಹತ್ತಿ ನ್ಯಾಯ ಪಡೆದ ಹಲವಾರು ಉದಾಹರಣೆಗಳು ಇವೆ. ಆದರೆ ಇತ್ತೀಚಿನ ವರ್ಷಗಳಲ್ಲಿ ವಿಶೇಷವಾಗಿ ಕಳೆದ ಹನ್ನೊಂದು ವರ್ಷಗಳ ಕಾಲಾವಧಿಯಲ್ಲಿ ನ್ಯಾಯಾಲಯಗಳಿಂದ ಬರುತ್ತಿರುವ ತೀರ್ಪುಗಳು ಅನಿರೀಕ್ಷಿತವಾಗಿ ಅಚ್ಚರಿಯನ್ನು ಉಂಟು ಮಾಡುತ್ತಿವೆ. ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳನ್ನು ಒಳಗೊಂಡ ಪೀಠ ಕಳೆದ ವಾರ ಏಕಾಏಕಿ ಬಡವರಿಗೆ ಉಚಿತ ಆಹಾರ ಮತ್ತು ಉಚಿತ ವಿದ್ಯುತ್ ಸೇರಿದಂತೆ ಉಚಿತ ಕೊಡುಗೆಗಳನ್ನು ಕೊಡುತ್ತಿರುವ ಬಗ್ಗೆ ಅಸಮಾಧಾನವನ್ನು ವ್ಯಕ್ತಪಡಿಸಿತು. ದೇಶದ ಬಹುತೇಕ ರಾಜ್ಯಗಳು ವಿತ್ತೀಯ ಕೊರತೆಯನ್ನು ಎದುರಿಸುತ್ತಿರುವಾಗ ಉಚಿತ ಕೊಡುಗೆಗಳನ್ನು ನೀಡುವುದು ಸರಿಯಲ್ಲ ಎಂದು ಸದರಿ ಪೀಠ ಹೇಳಿತು. ಒಂದೆರಡು ತಿಂಗಳಲ್ಲಿ ವಿಧಾನಸಭಾ ಚುನಾವಣೆ ನಡೆಯಲಿರುವ ತಮಿಳುನಾಡಿನ ಡಿಎಂಕೆ ಸರಕಾರ ಉಚಿತವಾಗಿ ವಿದ್ಯುತ್ ನೀಡುವ ಭರವಸೆಯನ್ನು ನೀಡಿರುವುದನ್ನು ಉಲ್ಲೇಖಿಸಿ ಸರ್ವೋಚ್ಚ ನ್ಯಾಯಾಲಯ ಈ ಬಗ್ಗೆ ತರಾಟೆಗೆ ತೆಗೆದುಕೊಂಡಿತು. ಒಂದು ತಿಂಗಳ ಹಿಂದೆ ಇದೇ ಸರ್ವೋಚ್ಚ ನ್ಯಾಯಾಲಯವು ದೇಶದ ಆರ್ಥಿಕ ಅಭಿವೃದ್ಧಿಗೆ ಪದೇ ಪದೇ ಮುಷ್ಕರಕ್ಕೆ ಕರೆ ಕೊಡುವ ಕಾರ್ಮಿಕ ಸಂಘಟನೆಗಳಿಂದ ಪೆಟ್ಟು ಬೀಳುತ್ತದೆ ಎಂದು ಕೆಂಡ ಕಾರಿತ್ತು. ಆದರೆ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಇಂಥ ಉಚಿತ ಕೊಡುಗೆಗಳನ್ನು ಘೋಷಿಸುವ ಮೂಲಕ ಜಯಶಾಲಿಯಾಯಿತು ಎಂದು ಹಿರಿಯ ನ್ಯಾಯವಾದಿ ಪ್ರಶಾಂತ್ ಭೂಷಣ್ ಅವರು ಸಲ್ಲಿಸಿದ ಅರ್ಜಿಯನ್ನು ಇದೇ ಸರ್ವೋಚ್ಚ ನ್ಯಾಯಾಲಯ ತಿರಸ್ಕರಿಸಿತ್ತು. ಇಂಥ ಉಚಿತ ಯೋಜನೆಗಳಿಂದ ಬಡವರು ಸೋಮಾರಿಗಳಾಗುತ್ತಾರೆಂದು ಸರ್ವೋಚ್ಚ ನ್ಯಾಯಾಲಯ ಕಳೆದ ವರ್ಷವೂ ಹೇಳಿತ್ತು. ಹಸಿದವರಿಗೆ ಅನ್ನ ಕೊಟ್ಟರೆ ಅವರು ಸೋಮಾರಿಗಳಾಗುತ್ತಾರೆ ಎಂಬ ಟೀಕೆ ಹೊಸದಲ್ಲ. ಸರಕಾರಗಳು ಜನ ಕಲ್ಯಾಣ ಕಾರ್ಯಕ್ರಮಗಳನ್ನು ರೂಪಿಸಿದಾಗೆಲ್ಲ ಅಪಸ್ವರ ಬರುತ್ತಲೇ ಇರುತ್ತದೆ. ಇನ್ಫೋಸಿಸ್ ನಾರಾಯಣಮೂರ್ತಿ ಅಂಥವರು ಕೂಡ ಜನರಿಗೆ ದಿನಕ್ಕೆ 18 ತಾಸು ದುಡಿಯಲು ಕರೆ ನೀಡುತ್ತಾರೆ. ಅಗತ್ಯವಿದ್ದವರಿಗೆ ಕೊಡಬೇಕು ಎಂಬ ನ್ಯಾಯಾಧೀಶರ ಮಾತುಗಳನ್ನು ಒಪ್ಪಬಹುದು. ಉದಾಹರಣೆಗೆ ಉಚಿತ ಬಸ್ ಪ್ರಯಾಣ ಕಡುಬಡತನದ ದುಡಿಯುವ ಮಹಿಳೆಯರಿಗೆ ಕೊಡಲು ತಕರಾರಿಲ್ಲ, ಆದರೆ ಎಲ್ಲ ಮಹಿಳೆಯರಿಗೂ ಇದನ್ನು ಅನ್ವಯಿಸುವ ಬದಲಿಗೆ ಅನುಕೂಲಸ್ಥ ಕುಟುಂಬಗಳ ಮಹಿಳೆಯರಿಗೆ ಟಿಕೆಟ್ ದರದ ಅರ್ಧದಷ್ಟು ನಿಗದಿ ಪಡಿಸಬೇಕಾಗಿತ್ತು. ಗೃಹ ಲಕ್ಷ್ಮಿ ಹಣ ಕೂಡ ಅಗತ್ಯವಿದ್ದವರಿಗೆ ಸೀಮಿತಗೊಳಿಸಬೇಕಾಗಿತ್ತು ಎಂಬ ಅಭಿಪ್ರಾಯವೂ ಕೇಳಿ ಬರುತ್ತಿದೆ. ಉಚಿತ ಪ್ರಯಾಣದ ಸೌಕರ್ಯವನ್ನು ಪಡೆಯುವ ಶ್ರೀಮಂತ ಮಹಿಳೆಯರು ಮುಖ್ಯಮಂತ್ರಿ ಸಿದ್ಧರಾಮಯ್ಯನವರನ್ನು ಟೀಕಿಸುವುದನ್ನು ನಾನು ಕೇಳಿರುವೆ. ದುಡಿಯುವ ಬಡವರಿಗೆ ಸರಕಾರ ಅನುಕೂಲ ಮಾಡಿಕೊಟ್ಟರೆ ಟೀಕಿಸುವ ನ್ಯಾಯಾಲಯಗಳು ಕಾರ್ಪೊರೇಟ್ ಉದ್ಯಮಿಗಳ 16 ಲಕ್ಷ ಕೋಟಿ ರೂ. ಬ್ಯಾಂಕ್ ಸಾಲವನ್ನು ಮೋದಿ ಸರಕಾರ ಮನ್ನಾ ಮಾಡಿರುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ಉದಾಹರಣೆಗಳಿಲ್ಲ. ಕೋಟ್ಯಧೀಶರಿಂದ ವಸೂಲು ಮಾಡದ 20 ಲಕ್ಷ ಕೋಟಿ ರೂ. ಸಾಲದ ಬಾಕಿ (ಎನ್ಪಿಎ) ಕುರಿತೂ ನ್ಯಾಯಾಲಯಗಳಿಂದ ಆಕ್ಷೇಪ ಬಂದಿಲ್ಲ. ಈ ಹಿಂದೆ 500 ಕೋಟಿ ರೂ.ಗೂ ಹೆಚ್ಚು ಸಾಲ ಪಡೆದು ಅದನ್ನು ಮನ್ನಾ ಮಾಡಿಸಿಕೊಂಡ ಉದ್ಯಮಿಗಳ ಪಟ್ಟಿ ನೀಡುವಂತೆ ಸುಪ್ರೀಂ ಕೋರ್ಟ್ ಸರಕಾರವನ್ನು ಕೇಳಿತ್ತು. ಆದರೆ ಮೋದಿ ನೇತೃತ್ವದ ಬಿಜೆಪಿ ಸರಕಾರ ಸಾಲ ಮನ್ನಾ ಮಾಡಲ್ಪಟ್ಟ ಉದ್ಯಮಿಗಳ ಪಟ್ಟಿ ನೀಡಲು ನಿರಾಕರಿಸಿತ್ತು. ಹಸಿದವರಿಗೆ ಅನ್ನ ನೀಡುವ ಅನ್ನಭಾಗ್ಯದಂಥ ಯೋಜನೆಗಳು ಮಾತ್ರ ಎಲ್ಲೆಡೆ ಎದ್ದು ಕಾಣುತ್ತವೆ. ಆದರೆ ದೇಶ, ವಿದೇಶದ ಕಾರ್ಪೊರೇಟ್ ಉದ್ಯಮಪತಿಗಳಿಗೆ ಸರಕಾರ ಸಾಲ ಮನ್ನಾ ಮಾಡುವುದು ಮಾತ್ರವಲ್ಲ, ಅವರಿಗೆ ಉದ್ಯಮ ಸ್ಥಾಪಿಸಲು ರಿಯಾಯಿತಿ ದರದಲ್ಲಿ ನೂರಾರು ಏಕರೆ ಭೂಮಿ, ಅತ್ಯಂತ ಕಡಿಮೆ ದರದಲ್ಲಿ ನೀರು ಮತ್ತು ವಿದ್ಯುತ್ನ್ನು ಒದಗಿಸುತ್ತದೆ. ಬ್ಯಾಂಕುಗಳಿಗೆ ತಿರುಪತಿ ನಾಮ ಹಾಕಿದ ಮಿತ್ತಲ್, ಮಲ್ಯ ಅವರಂಥ ಕೋಟ್ಯಧೀಶರು ಬೇರೆ ದೇಶಗಳಿಗೆ ಪಲಾಯನ ಮಾಡುತ್ತಾರೆ.ಇಂಥವರ ಬಗ್ಗೆ ಯಾರೂ ಮಾತಾಡುವುದಿಲ್ಲ. ಆದರೆ ಹಸಿದವರ ಹೊಟ್ಟೆ ತುಂಬಿಸುವ ಅನ್ನಭಾಗ್ಯ ಯೋಜನೆಯನ್ನು ಬಾಯಿಗೆ ಬಂದಂತೆ ಟೀಕಿಸುತ್ತಾರೆ. ದುಡಿಯುವ ಜನರನ್ನು ಬಡವರು ಎಂದು ಕರೆಯುವುದನ್ನು ಹಿರಿಯ ಕಮ್ಯುನಿಸ್ಟ್ ನಾಯಕ ಶ್ರೀಪಾದ ಅಮೃತ ಡಾಂಗೆಯವರು ಈ ಹಿಂದೆ ಆಕ್ಷೇಪಿಸಿದ್ದರು. ನಮ್ಮ ಮೈ ಬೆವರಿನಿಂದ ದೇಶದ ಸಂಪತ್ತನ್ನು ಸೃಷ್ಟಿಸುವ ದುಡಿಯುವ ನಾವು ಬಡವರು ಹೇಗಾಗುತ್ತೇವೆ ಎಂದು ಪ್ರಶ್ನಿಸಿದ್ದರು. ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಒಪ್ಪಿಕೊಂಡ ಭಾರತದಲ್ಲಿ ಅಸಮಾನತೆ ತುಂಬಿ ತುಳುಕುತ್ತಿದೆ. ಒಂದೆಡೆ ಹಸಿವು, ಯಾತನೆಗಳು ಆಕ್ರಂದನ ಕೇಳುತ್ತಿದ್ದರೆ. ಇನ್ನೊಂದೆಡೆ ಸಂಪತ್ತಿನ ಅಸಹ್ಯ ಅಟ್ಟಹಾಸ ನಡೆಯುತ್ತಿದೆ. ಮುಕೇಶ್ ಅಂಬಾನಿ 8 ಲಕ್ಷ ಕೋಟಿ ರೂ. ಸಂಪತ್ತನ್ನು ಹೊಂದಿದ್ದರೆ. ಸಂಪತ್ತಿನ ಗಳಿಕೆಯಲ್ಲಿ ಅವರ ಜೊತೆಗೆ ಪೈಪೋಟಿ ನಡೆಸಿರುವ ಗೌತಮ್ ಅದಾನಿಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಆಶೀರ್ವಾದವಿದೆ. ಸರಕಾರಿ ಒಡೆತನದ ಮುಂಬೈ, ಮಂಗಳೂರು ಸೇರಿದಂತೆ ಸರಕಾರಿ ಒಡೆತನದ ಪ್ರಮುಖ ವಿಮಾನ ನಿಲ್ದಾಣಗಳನ್ನು ಮತ್ತು ಕೆಲವು ಬಂದರುಗಳನ್ನು ಅದಾನಿ ಮಡಿಲಿಗೆ ಹಾಕಲಾಗಿದೆ. ಭಾರತದ 139 ಕೋಟಿ ಜನರಿಗೆ ಸಂಪತ್ತಿನ ಮೇಲೆ ಅಂಬಾನಿ, ಅದಾನಿ ಸೇರಿದಂತೆ ಕೆಲವೇ ಬಂಡವಾಳಗಾರರು ಹಿಡಿತ ಸಾಧಿಸಿದ್ದಾರೆ. ಇಂಥ ವಿಷಯಗಳು ಸಂಸತ್ತಿನಲ್ಲಾಗಲಿ, ನ್ಯಾಯಾಲಯಗಳಲ್ಲಾಗಲಿ ಚರ್ಚೆಗೆ ಬರುವುದಿಲ್ಲ. ಉದ್ಯಮಪತಿಗಳಿಗೆ ಉಚಿತವಾಗಿ, ಇಲ್ಲವೇ ರಿಯಾಯಿತಿ ದರದಲ್ಲಿ ಭೂಮಿ, ನೀರು ಮತ್ತು ವಿದ್ಯುತ್ ಕೊಡುವುದನ್ನು ಸಮರ್ಥಿಸುವವರು ಅದು ಅಭಿವೃದ್ಧಿಗೆ ನೀಡುವ ಕೊಡುಗೆ, ಇದರಿಂದ ಉದ್ಯೋಗಾವಕಾಶಗಳ ಸೃಷ್ಟಿಯಾಗುತ್ತವೆ ಎಂದು ಹೇಳುತ್ತಾರೆ. ಆದರೆ ಸರಕಾರದಿಂದ ಅವಶ್ಯಕತೆಗಿಂತ ಹೆಚ್ಚು ಭೂಮಿಯನ್ನು ಪಡೆಯುವ ಉದ್ಯಮಿಗಳು ಅದನ್ನು ರಿಯಲ್ ಎಸ್ಟೆಟ್ಗೆ ದುರ್ಬಳಕೆ ಮಾಡಿಕೊಂಡ ಉದಾಹರಣೆಗಳು ಸಾಕಷ್ಟಿವೆ. ಇದಲ್ಲದೆ ಹಲವಾರು ಉದ್ದಿಮೆಗಳಿಂದ ಪರಿಸರಕ್ಕೆ ಧಕ್ಕೆಯಾಗುತ್ತಿರುವುದು ಕೂಡ ಸಾಮಾನ್ಯವಾಗಿದೆ. ಕೊಪ್ಪಳದಲ್ಲಿ ತಲೆ ಎತ್ತಿರುವ ಪರಿಸರ ಮಾರಕ ಉದ್ಯಮಗಳ ವಿರುದ್ಧ ಅಲ್ಲಿನ ಜನರು ಕಳೆದ 114 ದಿನಗಳಿಂದ ಹೋರಾಟ ನಡೆಸಿದ್ದಾರೆ. ನ್ಯಾಯಾಲಯಗಳು ಇಂಥ ವಿಷಯಗಳಲ್ಲಿ ಮಧ್ಯಪ್ರವೇಶ ಮಾಡಿ ನೊಂದ ಜನರಿಗೆ ನ್ಯಾಯವನ್ನು ಒದಗಿಸಬೇಕಾಗಿದೆ. ಜನರಿಗೆ ಉದ್ಯೋಗ, ವಸತಿ, ಆಹಾರ, ಶಿಕ್ಷಣ, ಆಸ್ಪತ್ರೆ ಮತ್ತಿತರ ಸೌಕರ್ಯಗಳನ್ನು ಒದಗಿಸಬೇಕಾಗಿರುವುದು ಚುನಾಯಿತ ಸರಕಾರದ ಸಾಂವಿಧಾನಿಕ ಕರ್ತವ್ಯ. ಈ ಕರ್ತವ್ಯ ನಿರ್ವಹಣೆಯಲ್ಲಿ ಅಡ್ಡಿಯಾಗುವುದು ಸರಿಯಲ್ಲ. ಸರಕಾರ ಅಂದರೆ ವ್ಯಾಪಾರ ಅಲ್ಲ. ಅದು ಶಾಲೆ, ಕಾಲೇಜುಗಳನ್ನು, ಆಸ್ಪತ್ರೆಗಳನ್ನು ಪ್ರಜೆಗಳಿಗೆ ಉಚಿತವಾಗಿ ಇಲ್ಲವೇ ರಿಯಾಯಿತಿ ದರದಲ್ಲಿ ನೀಡಬೇಕಾಗುತ್ತದೆ. ಇಲ್ಲಿ ಲಾಭ ನಷ್ಟದ ಪ್ರಶ್ನೆ ಬರುವುದಿಲ್ಲ. ಅಭಿವೃದ್ಧಿ ಅಂದರೆ ಉಳ್ಳವರನ್ನು ಇನ್ನಷ್ಟು ಹಣವಂತರನ್ನಾಗಿ ಮಾಡುವುದಲ್ಲ. ಮಾನವಾಭಿವೃದ್ಧಿಯನ್ನು ಕಡೆಗಣಿಸುವ ಯಾವುದೇ ಅಭಿವೃದ್ಧಿಗೆ ಅರ್ಥವಿಲ್ಲ.
ಬೆಳ್ತಂಗಡಿ | ಆಂಬುಲೆನ್ಸ್ ನಲ್ಲಿ ಮಗುವಿಗೆ ಜನ್ಮ ನೀಡಿದ ಮಹಿಳೆ
ಬೆಳ್ತಂಗಡಿ: ಗರ್ಭಿಣಿಯೊಬ್ಬರನ್ನು ಹೆರಿಗೆಗೆಂದು ಆಂಬುಲೆನ್ಸ್ ನಲ್ಲಿ ಮಂಗಳೂರಿನ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದ ವೇಳೆ ದಾರಿಮಧ್ಯೆ ಆಂಬುಲೆನ್ಸ್ ನಲ್ಲೇ ಮಗುವಿನ ಜನ್ಮ ನೀಡಿದ ಘಟನೆ ಇಂದು ಬೆಳಗ್ಗಿನ ಜಾವ ನಡೆದಿದೆ. ಬೆಳ್ತಂಗಡಿ ನಗರ ಪಂಚಾಯತ್ ವ್ಯಾಪ್ತಿಯ ಸುದೆಮುಗೇರು ನಿವಾಸಿ ಲೀಲಾವತಿ ಆಂಬುಲೆನ್ಸ್ ನಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ ಮಹಿಳೆ. ಲೀಲಾವತಿಯನ್ನು ಇಂದು ಬೆಳಗ್ಗಿನ ಜಾವ ಬೆಳ್ತಂಗಡಿ ತಾಲೂಕು ಆಸ್ಪತ್ರೆಗೆ ಹೆರಿಗೆಗೆಂದು ದಾಖಲಿಸಲಾಗಿತ್ತು. ಅಲ್ಲಿನ ವೈದ್ಯರು ಪರಿಶೀಲಿಸಿ ಲೀಲಾವತಿಯನ್ನು ಮಂಗಳೂರಿನ ಲೇಡಿಗೋಷನ್ ಆಸ್ಪತ್ರೆಗೆ ಕರೆದೊಯ್ಯಲು ಸೂಚಿಸಿದ್ದಾರೆ. ಅದರಂತೆ ಲೀಲಾವತಿಯನ್ನು ಇಬ್ಬರು ಶುಶ್ರೂಶಕಿಯರ ಜೊತೆಗೆ ಆಸ್ಪತ್ರೆಯ ತುರ್ತು ವಾಹನದಲ್ಲಿ ಮಂಗಳೂರಿಗೆ ಕಳುಹಿಸಿದ್ದರು. ಆಂಬುಲೆನ್ಸ್ ಬಂಟ್ವಾಳ ತಾಲೂಕಿನ ಫರಂಗಿಪೇಟೆ ಸಮೀಪಿಸುತ್ತಿದ್ದಂತೆ ಲೀಲಾವತಿಗೆ ವಿಪರೀತ ಹೆರಿಗೆ ನೋವು ಕಾಣಿಸಿಕೊಂಡಿದೆ. ತಕ್ಷಣ ಕಾರ್ಯಪ್ರವರ್ತರಾದ ಶುಶ್ರೂಶಕಿಯರಾದ ಸಿಸ್ಟರ್ ಕುಮುದಾ ಹಾಗೂ ಸಿಸ್ಟರ್ ಸೌಮ್ಯಾ ಎಸ್. ಆಂಬುಲೆನ್ಸ್ ವಾಹನದಲ್ಲೇ ಲೀಲಾವತಿಗೆ ಹೆರಿಗೆ ಮಾಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ತಾಯಿ ಹಾಗೂ ಗಂಡು ಮಗು ಆರೋಗ್ಯವಾಗಿದ್ದಾರೆ ಎಂದು ತಿಳಿದುಬಂದಿದೆ. ಆಂಬುಲೆನ್ಸ್ ಚಾಲಕ ದಿನೇಶ್ ಗೌಡರ ಸಮಯಪ್ರಜ್ಞೆಯಿಂದ ಅತ್ಯಂತ ಕಡಿಮೆ ಸಮಯದಿಂದ ಲೇಡಿಗೋಶನ್ ಆಸ್ಪತ್ರೆಗೆ ತಲುಪಿಸಿ ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾಗಿದ್ದಾರೆ.
’ಒಕ್ಕಲಿಗರ ಮೇಲೆ ಪ್ರೀತಿ ಪ್ರದರ್ಶನಕ್ಕೆ ಸಿಎಂಗೆ ಇದುವೇ ಸಕಾಲ’ : HDK ಸುತ್ತಿ ಬಳಸಿ ಬಂದಿದ್ದು ಯಾವ ವಿಚಾರಕ್ಕೆ?
Siddaramaiah Vs HD Kumaraswamy : ಸಾಮಾಜಿಕ ನ್ಯಾಯ ದಿನಾಚರಣೆಯ ದಿನದಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಾಡಿರುವ ಟ್ವೀಟ್ ಒಂದು ಸಿಎಂ ಮತ್ತು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ನಡುವೆ, ವಾಕ್ಸಮರಕ್ಕೆ ಕಾರಣವಾಗಿದೆ. ತಮ್ಮ ಟ್ವೀಟ್’ನಲ್ಲಿ ಕುಮಾರಸ್ವಾಮಿ ಉಲ್ಲೇಖಿಸಿದಂತೆ, ಒಕ್ಕಲಿಗ ಸಮುದಾಯದ ಬೆನ್ನಿಗೆ ನಿಲ್ಲುತ್ತೀರಾ ಎಂದು ಕುಮಾರಸ್ವಾಮಿ, ಸಿಎಂ ಕಾಲೆಳೆದಿದ್ದಾರೆ.
ಟ್ರಂಪ್ ಸರ್ವಾಧಿಕಾರಕ್ಕೆ ಸುಪ್ರೀಂಕೋರ್ಟ್ ಬರೆ
ಭಾರತವು ಸೇರಿದಂತೆ ವಿವಿಧ ದೇಶಗಳಿಗೆ ತನ್ನ ಆಡಳಿತವು ವಿಧಿಸಿರುವ ಸುಂಕಗಳು ಕಾನೂನು ಬಾಹಿರವೆಂದು ಅಮೆರಿಕ ಸುಪ್ರೀಂಕೋರ್ಟ್ ಘೋಷಿಸಿದೆ. ಟ್ರಂಪ್ ಇತ್ತೀಚೆಗೆ ವಿಧಿಸಿದ್ದ ಈ ಸುಂಕವು ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಶೀತಲ ಸಂಘರ್ಷಕ್ಕೆ ಕಾರಣವಾಗಿತ್ತು. ಯಾವ ದೇಶಗಳು ಯಾವ ದೇಶಗಳ ಜೊತೆಗೆ ವ್ಯಾಪಾರ ಮಾಡಬೇಕು, ಮಾಡಬಾರದು ಎನ್ನುವುದು ತನ್ನ ಮೂಗಿನ ನೇರಕ್ಕಿರಬೇಕು ಎನ್ನುವ ಅಮೆರಿಕದ ಏಕಮುಖ ಸರ್ವಾಧಿಕಾರಿ ಮನಸ್ಥಿತಿಯು ಈ ಸುಂಕ ಹೇರಿಕೆಯ ಹಿಂದೆ ಕೆಲಸ ಮಾಡಿತ್ತು. ಅಮೆರಿಕವನ್ನು ಆವರೆಗೆ ನೆಚ್ಚಿ ಕೊಂಡಿದ್ದ ಅಭಿವೃದ್ಧಿಶೀಲ ದೇಶಗಳೂ ಮೊದಲ ಬಾರಿಗೆ ಅಮೆರಿಕವನ್ನು ಹೊರಗಿಟ್ಟು ತನ್ನ ಆರ್ಥಿಕ ಹಿತಾಸಕ್ತಿಯನ್ನು ರಕ್ಷಿಸಿಕೊಳ್ಳುವ ಬಗೆ ಹೇಗೆ ಎನ್ನುವುದನ್ನು ಚಿಂತಿಸುವಂತೆ ಮಾಡಿತ್ತು. ಅಮೆರಿಕದ ಹೇರಿಕೆಯ ಮುಂದೆ ಭಾರತವು ಅಕ್ಷರಶಃ ಅಸಹಾಯಕವಾಗಿತ್ತು. ಅಮೆರಿಕದ ಬಹುತೇಕ ಶರತ್ತುಗಳಿಗೆ ತಲೆಬಾಗುವುದರೊಂದಿಗೆ ಸುಂಕ ಶೇ. 18ಕ್ಕೆ ಇಳಿಯಿತಾದರೂ, ಇಲ್ಲೂ ಭಾರತದ ಉತ್ಪನ್ನಗಳಿಗೆ ಭಾರೀ ಅನ್ಯಾಯವಾಗಿತ್ತು. ಇಷ್ಟಾದರೂ ಅಮೆರಿಕದ ವಿರುದ್ಧ ಭಾರತ ಸರಕಾರ ತುಟಿ ಬಿಚ್ಚುವ ಸ್ಥಿತಿಯಲ್ಲಿರಲಿಲ್ಲ. ಇಂತಹ ಸಂದರ್ಭದಲ್ಲಿ ಅಮೆರಿಕದ ಸುಪ್ರೀಂಕೋರ್ಟ್ ನೀಡಿರುವ ತೀರ್ಪು ಜಾಗತಿಕ ಮಟ್ಟದಲ್ಲಿ ವ್ಯಾಪಾರ ವಲಯದಲ್ಲಿ ಸಣ್ಣದೊಂದು ನಿರಾಳತೆಯನ್ನು ಸೃಷ್ಟಿಸಿದೆ. ಸುಪ್ರೀಂಕೋರ್ಟ್ನ ತೀರ್ಪು ಹೊರ ಬಿದ್ದ ಬೆನ್ನಿಗೇ ಟ್ರಂಪ್ 1974ರ ವ್ಯಾಪಾರ ಒಪ್ಪಂದದ ಸೆಕ್ಷನ್ 122ರಡಿ ಶೇಕಡಾ 15ರಷ್ಟು ಸುಂಕಗಳನ್ನು ಘೋಷಿಸಿದ್ದಾರೆ. ತೀರ್ಪು ಹೊರ ಬಿದ್ದ ಬೆನ್ನಿಗೇ ಟ್ರಂಪ್ ಅವರು ಸುಪ್ರೀಂಕೋರ್ಟ್ನ ಮೇಲೆಯೇ ಎಗರಿ ಬಿದ್ದಿದ್ದಾರೆ. ಸುಪ್ರೀಂಕೋರ್ಟ್ ತೀರ್ಪು ಅಮೆರಿಕದ ವಿರುದ್ಧವಿದೆ ಎಂದು ಅವರು ಟೀಕಿಸಿದ್ದಾರೆ. ಸುಪ್ರೀಂಕೋರ್ಟ್ ತೀರ್ಪು ಎರಡು ರೀತಿಯಲ್ಲಿ ಅಮೆರಿಕದ ಹಿತಾಸಕ್ತಿಯನ್ನು ಕಾಪಾಡಿದೆ. ಅದು ಟ್ರಂಪ್ರ ಸರ್ವಾಧಿಕಾರದ ತಲೆಗೆ ಜೋರಾಗಿ ಮೊಟಕಿದೆ. ಅಮೆರಿಕ ಎಂದರೆ ಟ್ರಂಪ್ ಅಲ್ಲ ಎನ್ನುವುದನ್ನು ಅದು ಜಗತ್ತಿಗೆ ತಿಳಿಸುವ ಪ್ರಯತ್ನವನ್ನು ಮಾಡಿದೆ. ವ್ಯಾಪಾರ ಒಪ್ಪಂದವೆಂದರೆ ಎರಡು ದೇಶಗಳ ನಡುವಿನ ಕೊಡು-ಕೊಳ್ಳು ಸಂಬಂಧವಾಗಿದೆ. ದುರ್ಬಲ ದೇಶವನ್ನು ದೋಚುವುದಕ್ಕೆ ಅಮೆರಿಕಕ್ಕೆ ಇರುವ ಪರವಾನಿಗೆಯಲ್ಲ. ಟ್ರಂಪ್ನ ಸುಂಕ ನೀತಿಯು ಅಭಿವೃದ್ಧಿ ಶೀಲ ದೇಶಗಳನ್ನು ‘ಬ್ಲ್ಯಾಕ್ಮೇಲ್’ ಮಾಡುವ ದುರುದ್ದೇಶವನ್ನು ಹೊಂದಿತ್ತು. ಅಮೆರಿಕದ ವಿರುದ್ಧ ಜಗತ್ತಿನಾದ್ಯಂತ ಸೃಷ್ಟಿಯಾಗುತ್ತಿರುವ ಅಸಹನೆಯನ್ನು ಕೂಡ ಸುಪ್ರೀಂಕೋರ್ಟ್ ಗಮನಿಸಿದಂತಿದೆ. ಜಾಗತಿಕವಾಗಿ ಅಮೆರಿಕದ ಪ್ರತಿಷ್ಠೆಯನ್ನು ಉಳಿಸಿಕೊಳ್ಳುವ ಭಾಗವಾಗಿಯೂ ಅಲ್ಲಿನ ಸುಪ್ರೀಂಕೋರ್ಟ್ನ ತೀರ್ಪು ಮಹತ್ವದ್ದು. ಟ್ರಂಪ್ ವಿಧಿಸಿದ ಸುಂಕಗಳ ವಿರುದ್ಧ ಅಮೆರಿಕದೊಳಗೇ ಅಸಮಾಧಾನವಿತ್ತು. ಇದನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ನ ಮೆಟ್ಟಿಲೇರಿದ್ದು ಭಾರತೀಯ ಮೂಲದ ವಕೀಲ ನೀಲ್ ಕತ್ಯಾಲ್. ಅವರು ಅಲ್ಲಿನ ಸಣ್ಣ ಉದ್ದಿಮೆದಾರರ ಪರವಾಗಿ ಕೋರ್ಟ್ನಲ್ಲಿ ವಾದಿಸಿದರು. ವಾದ ವಿವಾದದ ಬಳಿಕ ಅಂತಿಮವಾಗಿ ನಿರ್ಧಾರವಾದದ್ದು ಏನು ಎಂದರೆ, ಅಮೆರಿಕದ ಅಧ್ಯಕ್ಷರಿಗಿಂತ ಅಲ್ಲಿನ ಸಂವಿಧಾನ ಶಕ್ತಿಶಾಲಿಯಾಗಿದೆ. ಆದುದರಿಂದಲೇ ಇಂದು ಭಾರತಕ್ಕೂ ಅಲ್ಪಪ್ರಮಾಣದ ನ್ಯಾಯ ಒದಗಿತು. ಪ್ರಧಾನಿ ನರೇಂದ್ರ ಮೋದಿಯವರ ಭಾಷೆಯಲ್ಲೇ ಟ್ರಂಪ್ ಸುಪ್ರೀಂಕೋರ್ಟ್ ತೀರ್ಪಿಗೆ ಪ್ರತಿಕ್ರಿಯಿಸಿದ್ದಾರೆ. ‘‘ಅಮೆರಿಕದ ನ್ಯಾಯಾಲಯವು ವಿದೇಶಿ ಹಿತಾಸಕ್ತಿಗಳಿಂದ ಪ್ರಭಾವಿತಗೊಂಡಿದೆ’’ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನ್ಯಾಯಾಲಯದ ಕೆಲವು ಸದಸ್ಯರಿಗೆ ನಮ್ಮ ದೇಶಕ್ಕೆ ಒಳಿತನ್ನು ಮಾಡುವ ಧೈರ್ಯವಿಲ್ಲದೆ ಇರುವುದು ಲಜ್ಜೆಗೇಡಿನ ಸಂಗತಿಯಾಗಿದೆ ಎಂದು ಅವರು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ. ಇಂದು ದೇಶವು ಭಾರತೀಯ ಮೂಲದ ವಕೀಲ ನೀಲ್ ಕತ್ಯಾಲ್ ಅವರನ್ನು ಹೊಗಳುತ್ತಿದೆ. ಅಲ್ಲಿನ ಸುಪ್ರೀಂಕೋರ್ಟ್ನ ನ್ಯಾಯಪರತೆಯನ್ನು ಶ್ಲಾಘಿಸುತ್ತಿದೆ. ಒಂದು ವೇಳೆ ಭಾರತದ ಸುಪ್ರೀಂಕೋರ್ಟ್ ಇಂತಹದೊಂದು ತೀರ್ಪನ್ನು ನೆರೆಯ ದೇಶಕ್ಕೆ ಸಹಾಯವಾಗುವಂತೆ ಪ್ರಧಾನಿ ಮೋದಿಯ ನಿಲುವಿನ ವಿರುದ್ಧ ನೀಡಿದ್ದರೆ ಅದರ ಪರಿಣಾಮ ಏನಾಗುತ್ತಿತ್ತು? ಈ ಪ್ರಶ್ನೆಯನ್ನು ನಮಗೆ ನಾವೇ ಕೇಳಿ ಕೊಳ್ಳಬೇಕಾಗಿದೆ. ಇತ್ತೀಚೆಗೆ ಅಮೆರಿಕ-ಭಾರತದ ನಡುವಿನ ಒಪ್ಪಂದದ ವಿರುದ್ಧ ವಿರೋಧ ಪಕ್ಷಗಳು ತೀವ್ರವಾಗಿ ಟೀಕೆ ಮಾಡಿದಾಗ ಬಿಜೆಪಿಯು ಅದನ್ನು ದಮನಿಸಿತ್ತು. ಈ ಒಪ್ಪಂದದಿಂದ ಭಾರತದ ರೈತರಿಗೆ ಯಾವೆಲ್ಲ ರೀತಿಯಲ್ಲಿ ಅನ್ಯಾಯವಾಗುತ್ತಿದೆ ಎನ್ನುವುದನ್ನು ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರು ಸಂಸತ್ನಲ್ಲಿ ಎಳೆ ಎಳೆಯಾಗಿ ವಿವರಿಸಿದ್ದರು. ಆದರೆ ಭಾರತದ ಪರವಾಗಿ ಮಾತನಾಡಿದ ರಾಹುಲ್ ಗಾಂಧಿಯವರನ್ನು ಬಿಜೆಪಿಯು ‘ದೇಶ ವಿರೋಧಿ’ ಎಂಬಂತೆ ಟೀಕೆ ಮಾಡಿತ್ತು. ಅದಾನಿಯ ಅಕ್ರಮಗಳನ್ನು ಮಾಧ್ಯಮಗಳು ಬಯಲಿಗೆಳೆದಾಗಲೂ ‘ವಿದೇಶಿ ಹಿತಾಸಕ್ತಿಗಳ ಕೈವಾಡ’ ಎಂದು ಸರಕಾರ ತನ್ನನ್ನು ತಾನು ರಕ್ಷಿಸಿಕೊಳ್ಳುವ ಪ್ರಯತ್ನ ಮಾಡಿತ್ತು. ಪ್ರಧಾನಿ ನರೇಂದ್ರ ಮೋದಿಯವರನ್ನು ಪ್ರಶ್ನೆ ಮಾಡುವುದೆಂದರೆ ದೇಶವನ್ನು ಪ್ರಶ್ನೆ ಮಾಡಿದಂತೆ ಎಂದು ಬಿಜೆಪಿ ನಾಯಕರು ವಾದಿಸುತ್ತಾರೆ. ಇದೀಗ ಅಮೆರಿಕದ ಉದ್ಯಮಿಗಳಿಗೆ ಲಾಭವಾಗುವಂತೆ ಟ್ರಂಪ್ ಹೇರಿದ ಸುಂಕಾಸ್ತ್ರದ ವಿರುದ್ಧ ಅಲ್ಲಿನ ಸುಪ್ರೀಂಕೋರ್ಟ್ ತೀರ್ಪು ನೀಡಿದೆ. ಭಾರತೀಯ ಮೂಲದ ವಕೀಲನ ವಾದಗಳನ್ನು ಅಲ್ಲಿನ ನ್ಯಾಯಾಲಯ ಯಾವುದೇ ಪೂರ್ವಾಗ್ರಹವಿಲ್ಲದೆ ಮನ್ನಿಸಿದೆ. ಟ್ರಂಪ್ಗಿಂತ ಸಂವಿಧಾನ ಮುಖ್ಯ ಎಂದು ತನ್ನ ತೀರ್ಪಿನಲ್ಲಿ ಹೇಳಿದೆ. ಇದು ಅಲ್ಲಿನ ಸಂವಿಧಾನದ ಹೆಗ್ಗಳಿಕೆಯಾಗಿದೆ. ಒಂದು ವೇಳೆ ಭಾರತದ ಪ್ರಧಾನಿಯ ನೀತಿಯ ವಿರುದ್ಧ ಇಲ್ಲಿ ವಿದೇಶಿ ಮೂಲದ ವಕೀಲನೊಬ್ಬ ವಾದಿಸಲು ಮುಂದಾಗಿದ್ದರೆ ಆತನ ಸ್ಥಿತಿ ಏನಾಗುತ್ತಿತ್ತು? ಭಾರತದ ಸಂವಿಧಾನಕ್ಕಿಂತ ದೇಶದ ಪ್ರಧಾನಿ ದೊಡ್ಡವರು ಎಂದು ಬಿಂಬಿಸಲು ಯತ್ನಿಸುತ್ತಿರುವ ಭಾರತದ ರಾಜಕೀಯ ನಾಯಕರಿಗೆ ಅಮೆರಿಕದ ಸುಪ್ರೀಂಕೋರ್ಟ್ ತೀರ್ಪನ್ನು ಸಂಭ್ರಮಿಸುವ ಯಾವ ನೈತಿಕತೆಯೂ ಇಲ್ಲ. ಇನ್ನೊಂದು ಅಂಶವನ್ನೂ ನಾವಿಲ್ಲಿ ಗಮನಿಸಬೇಕು. ಟ್ರಂಪ್ ಸುಂಕಾಸ್ತ್ರದ ವಿರುದ್ಧದ ವಿಚಾರಣೆ ಅಮೆರಿಕದಲ್ಲಿ ತ್ವರಿತವಾಗಿ ನಡೆಯಿತು. ಒಂದು ಅಥವಾ ಎರಡು ವರ್ಷ ಕಳೆದು ಈ ತೀರ್ಪನ್ನು ನೀಡಿದ್ದರೆ ಅದು ಭಾರತದ ಪಾಲಿಗೆ ಸಾಕಷ್ಟು ನಷ್ಟಗಳನ್ನುಂಟು ಮಾಡುತ್ತಿತ್ತು ಮಾತ್ರವಲ್ಲ, ಟ್ರಂಪ್ರ ಸರ್ವಾಧಿಕಾರದ ರೆಕ್ಕೆಗೆ ಇನ್ನಷ್ಟು ಬಲ ಬಂದು ಬಿಡುತ್ತಿತ್ತು. ಅಂತಾರಾಷ್ಟ್ರೀಯ ಸಂಬಂಧಗಳ ಮೇಲೆ ಭಾರೀ ದುಷ್ಪರಿಣಾಮ ಬೀರಿ ಆಗಿ ಬಿಡುತ್ತಿತ್ತು. ಆದರೆ ಭಾರತದ ಸುಪ್ರೀಂಕೋರ್ಟ್ನ ಸ್ಥಿತಿಯನ್ನು ಗಮನಿಸೋಣ. ಭಾರತ ಸರಕಾರದ ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ ಇಡೀ ದೇಶ ಒಂದಾಗಿ ಪ್ರತಿಭಟನೆ ಮಾಡಿತ್ತು. ಇದರ ವಿರುದ್ಧ ಧ್ವನಿಯೆತ್ತಿದ ಕಾರಣಕ್ಕಾಗಿಯೇ ಹಲವು ಅಮಾಯಕರು ಹಲವು ವರ್ಷಗಳಿಂದ ಜೈಲು ಕಂಬಿ ಎಣಿಸುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಸಂವಿಧಾನ ಬದ್ಧವಾಗಿ ಈ ಕಾಯ್ದೆಯನ್ನು ಪ್ರಶ್ನಿಸಲು ಹಲವರು ಸುಪ್ರೀಂಕೋರ್ಟ್ ಮೊರೆ ಹೋದರು. ಆದರೆ ಈವರೆಗೆ ಇನ್ನೂ ಈ ಅರ್ಜಿಗಳನ್ನು ಸುಪ್ರೀಂಕೋರ್ಟ್ ಕೈಗೆತ್ತಿಕೊಂಡಿಲ್ಲ. 2024ರ ಮಾರ್ಚ್ ತಿಂಗಳಲ್ಲಿ ಪಟ್ಟಿ ಮಾಡಲಾದ ಅರ್ಜಿಗಳನ್ನು ಇದೀಗ ಮುಂದಿನ ತಿಂಗಳ ಮೇ 5ರಿಂದ ಆರಂಭಿಸುವುದಾಗಿ ಸುಪ್ರೀಂಕೋರ್ಟ್ ತಿಳಿಸಿದೆ. ಕಾಶ್ಮೀರದ ಕುರಿತಂತೆ , ಎಸ್ಐಆರ್ನ ಕುರಿತಂತೆ ಸುಪ್ರೀಂಕೋರ್ಟ್ಗೆ ಸಲ್ಲಿಸಿದ ಅರ್ಜಿಗಳ ಗತಿ ಏನಾಯಿತು ಎನ್ನುವುದನ್ನು ನಾವು ನೋಡಿದ್ದೇವೆ. ಇಂದು ನ್ಯಾಯಾಲಯದ ತೀರ್ಪಿನಲ್ಲಿ ಸಾರ್ವಜನಿಕ ಒತ್ತಡಗಳು ಪರಿಣಾಮ ಬೀರುತ್ತಿವೆ. ಅವುಗಳ ಮುಂದೆ ಸಂವಿಧಾನಕ್ಕೆ ಹಿನ್ನಡೆಯಾಗುತ್ತಿದೆ. ಇಂತಹ ಸಂದರ್ಭದಲ್ಲಿ ಅಮೆರಿಕದ ಸುಪ್ರೀಂಕೋರ್ಟ್ ನೀಡಿರುವ ತೀರ್ಪು ನಮಗೆ ಮಾದರಿಯಾಗಬೇಕಾಗಿದೆ. ಇದೇ ಸಂದರ್ಭದಲ್ಲಿ ಅಮೆರಿಕದ ಸುಪ್ರೀಂಕೋರ್ಟ್ ತೀರ್ಪಿನಿಂದ ಎಲ್ಲ ಸರಿಯಾಗಿದೆ ಎಂದು ಅರ್ಥವಲ್ಲ. ಇದಾದ ಬಳಿಕವೂ ಶೇ. 15ರ ಸುಂಕವನ್ನು ಟ್ರಂಪ್ ಉಳಿಸಿಕೊಂಡಿದ್ದಾರೆ. ಇದೇ ಸಂದರ್ಭದಲ್ಲಿ ಅಮೆರಿಕದ ಉತ್ಪನ್ನಗಳು ಯಥೇಚ್ಛವಾಗಿ ಭಾರತದ ಮಾರುಕಟ್ಟೆಗೆ ದಾಳಿ ಮಾಡಲು ಅವಕಾಶಗಳಿವೆ. ಅಮೆರಿಕದ ಸುಪ್ರೀಂಕೋರ್ಟ್ ತೀರ್ಪಿನ ಬೆಳಕಿನಲ್ಲಿ ಭಾರತ-ಅಮೆರಿಕ ನಡುವಿನ ಒಪ್ಪಂದ ಮತ್ತೆ ಪರಿಶೀಲನೆಗೆ ಒಳಪಡಬೇಕಾಗಿದೆ. ಪ್ರಧಾನಿ ಮೋದಿಯವರು ಟ್ರಂಪ್ ಒತ್ತಡಗಳಿಗೆ ಮಣಿಯದೆ ಭಾರತದ ಹಿತಾಸಕ್ತಿಯನ್ನು ಎತ್ತಿ ಹಿಡಿಯಲು ಇನ್ನಾದರೂ ಧೈರ್ಯವನ್ನು ಪ್ರದರ್ಶಿಸ ಬೇಕಾಗಿದೆ.
ಪಶ್ಚಿಮ ಬಂಗಾಳದ ʻರಾಜಕೀಯ ಚಾಣಕ್ಯʼ ಖ್ಯಾತಿಯ ಮುಕುಲ್ ರಾಯ್ ಇನ್ನಿಲ್ಲ; ವಿಧಾನಸಭೆ ಚುನಾವಣೆಗೂ ಮುನ್ನ ದೀದಿ ಏಕಾಂಗಿ!
ಕೋಲ್ಕತ್ತಾ: ಮಾಜಿ ರೈಲ್ವೆ ಸಚಿವ ಮತ್ತು ಒಂದು ಕಾಲದಲ್ಲಿ ತೃಣಮೂಲ ಕಾಂಗ್ರೆಸ್ನ ಎರಡನೇ ಕಮಾಂಡರ್ ಆಗಿದ್ದ ಮುಕುಲ್ ರಾಯ್ ಅವರು 71 ನೇ ವಯಸ್ಸಿನಲ್ಲಿ ಹೃದಯಾಘಾತದಿಂದ ನಿಧನರಾದರು.ರಾಯ್ ಅವರನ್ನು ಕೋಲ್ಕತ್ತಾದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಯಿತು ಮತ್ತು ಬೆಳಗಿನ ಜಾವ 1.30 ರ ಸುಮಾರಿಗೆ ನಿಧನರಾದರು.ಅವರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ನಿನ್ನೆ ರಾತ್ರಿ ಸುಮಾರು 1.30 ರ ಸುಮಾರಿಗೆ ಅವರಿಗೆ ತೀವ್ರ ಹೃದಯಾಘಾತವಾಯಿತು, ವೈದ್ಯರ ಪ್ರಯತ್ನಗಳ ಹೊರತಾಗಿಯೂ ಅವರು ಬದುಕುಳಿಯಲು ಸಾಧ್ಯವಾಗಲಿಲ್ಲ ಎಂದು ಅವರ ಮಗ ಸುಭ್ರಂಗ್ಶು ರಾಯ್ ಹೇಳಿದರು. ಒಂದು ಕಾಲದಲ್ಲಿ 'ಬಂಗಾಳ ರಾಜಕೀಯದ ಚಾಣಕ್ಯ' ಎಂದು ಕರೆಯಲಾಗಿದ್ದ ಅವರು ಮೂತ್ರಪಿಂಡದ ಸಮಸ್ಯೆಗಳು ಸೇರಿದಂತೆ ಬಹು ದೈಹಿಕ ಸಮಸ್ಯೆಗಳಿಂದ ದೀರ್ಘಕಾಲದಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಅವರನ್ನು ಕಾಲಕಾಲಕ್ಕೆ ಆಸ್ಪತ್ರೆಗೆ ದಾಖಲಿಸಬೇಕಾಗಿತ್ತು. ಕೋಲ್ಕತ್ತಾದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಭಾನುವಾರ ತಡರಾತ್ರಿ ಅವರು ಕೊನೆಯುಸಿರೆಳೆದರು.ರಾಯ್ ತೃಣಮೂಲ ಕಾಂಗ್ರೆಸ್ ಪಕ್ಷದ ಸ್ಥಾಪಕ ಸದಸ್ಯರಲ್ಲಿ ಒಬ್ಬರಾಗಿದ್ದರು. ಮಮತಾ ಬ್ಯಾನರ್ಜಿ ಅವರ ಆಪ್ತ ಮಿತ್ರರು ಅವರ ಜೀವನದಲ್ಲಿ ಮತ್ತು ಅವರ ರಾಜಕೀಯ ಜೀವನದಲ್ಲಿ ಅನೇಕ ಏರಿಳಿತಗಳನ್ನು ಕಂಡಿದ್ದಾರೆ.ಎರಡನೇ ಯುಪಿಎ ಸರ್ಕಾರದ ಅವಧಿಯಲ್ಲಿ ಅವರು ಹಡಗು ಸಚಿವಾಲಯ ಮತ್ತು ನಂತರ ರೈಲ್ವೆ ಸಚಿವಾಲಯದಲ್ಲಿ ರಾಜ್ಯ ಸಚಿವರಾಗಿಯೂ ಸೇವೆ ಸಲ್ಲಿಸಿದ್ದಾರೆ. ತೃಣಮೂಲ ಕಾಂಗ್ರೆಸ್ ರಚನೆಯಾಗುವ ಮೊದಲು, ಅವರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸದಸ್ಯರಾಗಿದ್ದರು. 2017 ಮತ್ತು 2021 ರ ನಡುವೆ, ರಾಯ್ ತೃಣಮೂಲ ಕಾಂಗ್ರೆಸ್ ತೊರೆದು ಭಾರತೀಯ ಜನತಾ ಪಕ್ಷವನ್ನು ಸೇರಿದರು.ಪಕ್ಷದ ಹೊಸ ಕಾರ್ಯಕರ್ತರೊಂದಿಗಿನ ಅಂತರದಿಂದಾಗಿ 2021 ರ ವಿಧಾನಸಭಾ ಚುನಾವಣೆಗೆ ಮೊದಲು ತೃಣಮೂಲ ಪಕ್ಷದಿಂದ ಬಿಜೆಪಿಗೆ ಪಕ್ಷ ಬದಲಾಯಿಸಿದ ನಂತರ, ರಾಯ್ ಬಿಜೆಪಿಯಲ್ಲಿ ಪ್ರಮುಖ ಪಾತ್ರ ವಹಿಸಿದರು. ಮುಕುಲ್ 2021 ರಲ್ಲಿ ಕೃಷ್ಣನಗರ ಉತ್ತರ ಕ್ಷೇತ್ರದಿಂದ ಬಿಜೆಪಿ ಟಿಕೆಟ್ನಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸಿದರು. ಅವರು ಗೆದ್ದು ಶಾಸಕರಾಗಿ ಆಯ್ಕೆಯಾದರು. ನಂತರ, ಅವರು ಮತ್ತೆ ತೃಣಮೂಲ ಪಕ್ಷಕ್ಕೆ ಸೇರಿದರು. ಆದಾಗ್ಯೂ, ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲಿಲ್ಲ.ಅವರು ದೀರ್ಘಕಾಲದವರೆಗೆ ಅನಾರೋಗ್ಯದಿಂದ ಬಳಲುತ್ತಿದ್ದರು ಮತ್ತು ಮುಖ್ಯವಾಹಿನಿಯ ರಾಜಕೀಯದಿಂದ ದೂರವಿದ್ದರು.
Hardik Pandya: ಮೊದಲ ಪತ್ನಿಗೆ 4,00,00,000 ರೂಪಾಯಿ ಕಾರು ಗಿಫ್ಟ್ ನೀಡಿದ ಹಾರ್ದಿಕ್ ಪಾಂಡ್ಯ: ವಿಡಿಯೋ ವೈರಲ್
Hardik Pandya: ಸಾಮಾನ್ಯವಾಗಿ ಬಹುತೇಕ ಸೆಲೆಬ್ರೆಟಿಗಳು ದಾಂಪತ್ಯ ಜೀವನವನ್ನು ಒಮ್ಮೆ ಮುರಿದುಕೊಂಡರೆ ಅವರು ಮತ್ತೆ ತಮ್ಮ ಮಕ್ಕಳ ಭವಿಷ್ಯವನ್ನು ಲೆಕ್ಕಿಸದೇ ದೂರ ದೂರವಾಗಿಬಿಡುತ್ತಾರೆ. ಆದರೆ, ಇದೀಗ ಭಾರತ ಕ್ರಿಕೆಟ್ ತಂಡದ ಆಲ್ರೌಂಡರ್ ಹಾರ್ದಿಪ್ ಪಾಂಡ್ಯ ಮತ್ತು ನಟಿ ನತಾಶಾ ಸ್ಟಾಂಕೋವಿಕ್ ದಾಂಪತ್ಯ ಜೀವನದಲ್ಲಿ ದೂರವಾಗಿದ್ದರೂ, ತಮ್ಮ ಪುತ್ರ ಅಗಸ್ತ್ಯನ ಪೋಷಣೆಯಲ್ಲಿ ಮಾದರಿಯಾಗಿದ್ದಾರೆ. ಇಬ್ಬರೂ ಬೇರ್ಪಟ್ಟ ಬಳಿಕವೂ ಮಗನ
ಫೆಬ್ರವರಿ 23ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ
Petrol, Diesel Price: ಪೆಟ್ರೋಲ್, ಡೀಸೆಲ್ ದರದಲ್ಲಿ ಜಾಸ್ತಿ ಅಲ್ಲದಿದ್ದರೂ, ಸ್ವಲ್ಪ ಪ್ರಮಾಣದಲ್ಲಾದರೂ, ಏರಿಳಿತ ಆಗುತ್ತಿರುತ್ತದೆ. ಹಾಗಾದರೆ, ಇಂದು (ಫೆಬ್ರವರಿ 23) ಬೆಂಗಳೂರು ಸೇರಿದಂತೆ ರಾಜ್ಯದ ಉಳಿದ ಜಿಲ್ಲೆಗಳಲ್ಲಿ ಲೀಟರ್ ಪೆಟ್ರೋಲ್, ಡೀಸೆಲ್ ಬೆಲೆ ಎಷ್ಟಿದೆ ಎನ್ನುವ ಅಂಕಿಅಂಶಗಳನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ. ಶಕ್ತಿಯ ಮೂಲಗಳು ಎನಿಸಿಕೊಂಡಿರುವ ಪೆಟ್ರೋಲ್ ಮತ್ತು ಡೀಸೆಲ್ ಇಂಧನ ಅತ್ಯವಶ್ಯಕವಾಗಿ ಬೇಕಾಗುವ ಸಂಪನ್ಮೂಲಗಳಾಗಿವೆ.
ಆಫ್ರಿಕಾ ವಿರುದ್ಧ ಸೋಲು: ಭಾರತದ ಸೆಮೀಸ್ ಹಾದಿ ಕಠಿಣ
ಅಹ್ಮದಾಬಾದ್: ವಿಶ್ವಕಪ್ ಟಿ20 ಪಂದ್ಯಾವಳಿಯ ಸೂಪರ್ 8 ಹಂತದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಹೀನಾಯ ಸೋಲು ಅನುಭವಿಸಿದ ಸೂರ್ಯಕುಮಾರ್ ಯಾದವ್ ನೇತೃತ್ವದ ಭಾರತೀಯ ತಂಡ ಸೆಮಿಫೈನಲ್ ತಲುಪುವ ಆಸೆಗೆ ಭಾರೀ ಹೊಡೆತ ನೀಡಿದೆ. ಡೇವಿಡ್ ಮಿಲ್ಲರ್ (63) ಮತ್ತು ಡೆವಾಲ್ಡ್ ಬ್ರೇವಿಸ್ ಅವರ ಸ್ಫೋಟಕ ಬ್ಯಾಟಿಂಗ್ನಿಂದಾಗಿ ದಕ್ಷಿಣ ಆಫ್ರಿಕಾ ತಂಡ 187 ರನ್ ಗಳಿಸಿದರೆ, ಮಾರ್ಕೊ ಜೇಸನ್ (4 ವಿಕೆಟ್) ನೇತೃತ್ವದ ಮೊನಚಿನ ಬೌಲಿಂಗ್ ದಾಳಿಗೆ ತತ್ತರಿಸಿ 111 ರನ್ಗಳಿಗೆ ಆಲೌಟ್ ಆಗುವ ಮೂಲಕ ಭಾರತ 76 ರನ್ಗಳ ಸೋಲು ಅನುಭವಿಸಿತ್ತು. ಆಡಿದ ಒಂದು ಪಂದ್ಯವನ್ನು ಗೆಲ್ಲುವ ಮೂಲಕ ದಕ್ಷಿಣ ಆಫ್ರಿಕಾ 2 ಅಂಕ ಪಡೆದಿದ್ದು, 3.8 ನಿವ್ವಳರನ್ ರೇಟ್ನೊಂದಿಗೆ ಸೆಮಿಫೈನಲ್ ಹಾದಿಯಲ್ಲಿ ಮುಂಚೂಣಿಯಲ್ಲಿದೆ. ಇದರಿಂದಾಗಿ ಭಾರತ ಅಂತಿಮ ನಾಲ್ಕರ ಘಟ್ಟ ತಲುಪಬೇಕಿದ್ದರೆ ವೆಸ್ಟ್ಇಂಡೀಸ್ ಮತ್ತು ಜಿಂಬಾಬ್ವೆ ವಿರುದ್ಧದ ಪಂದ್ಯಗಳನ್ನು ಭಾರಿ ಅಂತರದಿಂದ ಗೆಲ್ಲಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಒಂದು ವೇಳೆ ಭಾರತ ಒಂದೇ ಪಂದ್ಯ ಗೆದ್ದಲ್ಲಿ ಭಾರತದ ಸೆಮಿಫೈನಲ್ ಅವಕಾಶ, ಇತರ ಫಲಿತಾಂಶಗಳು ಮತ್ತು ನಿವ್ವಳ ರನ್ರೇಟ್ ಮೇಲೆ ಅವಲಂಬಿತರವಾಗಿರುತ್ತದೆ. ಭಾರತ ಉಳಿದ ಎರಡೂ ಪಂದ್ಯಗಳನ್ನು ಗೆದ್ದಲ್ಲಿ ಮಾತ್ರ 4 ಅಂಕಗಳೊಂದಿಗೆ ನಿರಾಯಾಸವಾಗಿ ಸೆಮಿಫೈನಲ್ ತಲುಪಬಹುದು. ಆದರೆ ಇಲ್ಲೂ ಇತರ ಎರಡು ತಂಡಗಳು ನಾಲ್ಕು ಅಂಕ ಗಳಿಸಬಾರದು. ಅಂದರೆ ದಕ್ಷಿಣ ಆಫ್ರಿಕಾ ಕೇವಲ ಒಂದು ಪಂದ್ಯವನ್ನು ಮಾತ್ರ ಗೆದ್ದು, ವೆಸ್ಟ್ಇಂಡೀಸ್ ಮತ್ತು ಜಿಂಬಾಬ್ವೆ ನಡುವಿನ ಪಂದ್ಯದ ವಿಜೇತ ತಂಡ ದಕ್ಷಿಣ ಆಫ್ರಿಕಾ ವಿರುದ್ಧವೂ ಗೆದ್ದರೆ ನಿವ್ವಳ ರನ್ರೇಟ್ ಆಧಾರದಲ್ಲಿ ಮುಂದಿನ ಹಂತಕ್ಕೆ ತೇರ್ಗಡೆಯಾಗುತ್ತವೆ. ಭಾರತ ಉಳಿದ ಪಂದ್ಯಗಳ ಪೈಕಿ ಒಂದನ್ನು ಮಾತ್ರ ಗೆದ್ದಲ್ಲಿ, ದಕ್ಷಿಣ ಆಫ್ರಿಕಾ ಉಳಿದ ಎರಡೂ ಪಂದ್ಯಗಳಲ್ಲಿ ಗೆಲ್ಲುವುದು ಭಾರತದ ಪಾಲಿಗೆ ಅನಿವಾರ್ಯ. ಇಂಥ ಪರಿಸ್ಥಿತಿಯಲ್ಲೂ ಭಾರತ ತಂಡ ವೆಸ್ಟ್ಇಂಡೀಸ್-ಜಿಂಬಾಬ್ವೆ ನಡುವಿನ ವಿಜೇತ ತಂಡದ ವಿರುದ್ಧವೇ ಗೆಲುವು ಸಾಧಿಸಬೇಕು. ಆಗ ದಕ್ಷಿಣ ಆಫ್ರಿಕಾ 6 ಅಂಕ ಹಾಗೂ ಉಳಿದ ಮೂರು ತಂಡಗಳು ತಲಾ 2 ಅಂಕ ಪಡೆಯುತ್ತವೆ. ಆಗ ಭಾರತದ ಸೆಮಿಫೈನಲ್ ಆಸೆ ನಿವ್ವಳ ರನ್ರೇಟ್ ಆಧರಿಸಿರುತ್ತದೆ. ಸೋಮವಾರ ನಡೆಯುವ ಪಂದ್ಯದಲ್ಲಿ ವೆಸ್ಟ್ಇಂಡೀಸ್ ತಂಡ ಜಿಂಬಾಬ್ವೆ ವಿರುದ್ಧ ಸೆಣೆಸಲಿದ್ದು, ಈ ತಿಂಗಳ 26ರಂದು ದಕ್ಷಿಣ ಆಫ್ರಿಕಾ ವಿರುದ್ಧ ಹೋರಾಡಲಿದೆ. ಅದೇ ದಿನ ಭಾರತ ತಂಡ ಜಿಂಬಾಬ್ವೆ ವಿರುದ್ಧ ಆಡಲಿದೆ. ಮಾರ್ಚ್ 1ರಂದು ದಕ್ಷಿಣ ಆಫ್ರಿಕಾ ತಂಡ ದೆಹಲಿಯಲ್ಲಿ ಜಿಂಬಾಬ್ವೆ ಸವಾಲು ಎದುರಿಸಿದರೆ, ಕೊಲ್ಕತ್ತಾದಲ್ಲಿ ಭಾರತಕ್ಕೆ ವೆಸ್ಟ್ಇಂಡೀಸ್ ಎದುರಾಳಿ.
ಕರುನಾಡಿಗೆ ಕಾದಿದೆ ಬಿಸಿಲ ಕಾವು: ರಾಜ್ಯದಲ್ಲಿ ಈ ವರ್ಷ ವಾಡಿಕೆಗಿಂತ ಅಧಿಕ ಬಿಸಿಲು ಸಾಧ್ಯತೆ
ಬೆಂಗಳೂರು: ರಾಜ್ಯದಲ್ಲಿ ಈ ವರ್ಷ ಬೇಸಿಗೆ ಆರಂಭಕ್ಕೂ ಮುನ್ನವೇ ಬಿಸಿಲಿನ ಝಳ ಹೆಚ್ಚಾಗಿದ್ದು, ಮುಂಬರುವ ದಿನಗಳಲ್ಲಿ ವಾಡಿಕೆಗಿಂತ ಅಧಿಕ ತಾಪಮಾನ ವರದಿಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಮುನ್ಸೂಚನೆ ನೀಡಿದೆ. ಏಪ್ರಿಲ್ ಮತ್ತು ಮೇ ತಿಂಗಳಿನಲ್ಲಿ ಬಿಸಿಲಿನ ತೀವ್ರತೆ ವಿಪರೀತವಾಗಿರಲಿದ್ದು, ಸಾರ್ವಜನಿಕರು ಮುಂಜಾಗ್ರತೆ ವಹಿಸುವಂತೆ ಸೂಚಿಸಲಾಗಿದೆ. ಈಗಾಗಲೇ ಹೆಚ್ಚಾದ ತಾಪಮಾನ ಫೆಬ್ರವರಿ ಅಂತ್ಯದ ಸುಮಾರಿಗೆ
El Mencho: ಮೆಕ್ಸಿಕೋ ಡ್ರಗ್ ದೊರೆ ಎಲ್ ಮೆಂಚೋ ಹತ್ಯೆ; ವಿಮಾನ ನಿಲ್ದಾಣಗಳ ಮೇಲೆ ದಾಳಿ, ಭುಗಿಲೆದ್ದ ಹಿಂಸಾಚಾರ
ಮೆಕ್ಸಿಕೋದ ಡ್ರಗ್ ದೊರೆ ಎನಿಸಿಕೊಂಡಿದ್ದ ನೆಮೆಸಿಯೋ ಒಸೆಗ್ವೆರಾ ಅಲಿಯಾಸ್ ಎಲ್ ಮೆಂಚೋ (El Mencho) ಸೈನಿಕ ಕಾರ್ಯಾಚರಣೆಯಲ್ಲಿ ಸಾವನ್ನಪ್ಪಿರುವುದಾಗಿ ಮೆಕ್ಸಿಕೋ ಮಾಧ್ಯಮಗಳು ವರದಿ ಮಾಡಿವೆ. ಈ ಸುದ್ದಿಯ ಬೆನ್ನಲ್ಲೇ ಜಾಲಿಸ್ಕೋ ರಾಜ್ಯದ ಹಲವು ಭಾಗಗಳಲ್ಲಿ ಹಿಂಸಾಚಾರ ಭುಗಿಲೆದ್ದಿದೆ. ಮೆಕ್ಸಿಕೋದ ಅತಿ ಪ್ರಭಾವಿ ಡ್ರಗ್ ಕಾರ್ಟೆಲ್ ನಾಯಕನಾಗಿ ಗುರುತಿಸಿಕೊಂಡಿದ್ದ ನೆಮೆಸಿಯೋ ರುಬೇನ್ ಒಸೆಗ್ವೆರಾ ಸರ್ವಾಂಟೆಸ್ ಅಲಿಯಾಸ್ ‘ಎಲ್ ಮೆಂಚೋ'
ಕಿರಿಯರ ವಿಶ್ವಕಪ್ ಹೀರೊ ಸೂರ್ಯವಂಶಿಗೆ ಬಿಹಾರ ಸಿಎಂ ಸನ್ಮಾನ
ಹೊಸದಿಲ್ಲಿ: ಇತ್ತೀಚೆಗೆ ನಡೆದ 19ರ ವಯೋಮಿತಿಯ ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಅದ್ಭುತ ಪ್ರದರ್ಶನ ನೀಡಿದ ಭಾರತದ ಯುವಪ್ರತಿಭೆ 14 ವರ್ಷದ ವೈಭವ್ ಸೂರ್ಯವಂಶಿಯವರನ್ನು ಬಿಹಾರ ಮುಖ್ಯಮಂತ್ರಿ ನಿತೀಶ್ ಸಿಂಗ್ ಅವರು ಸನ್ಮಾನಿಸಿ 50 ಲಕ್ಷ ರೂಪಾಯಿ ಬಹುಮಾನ ನೀಡಿದರು. ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಸಮರ್ಥ್ ಚೌಧರಿ ಹಾಗೂ ಕ್ರೀಡಾ ಸಚಿವ ಶ್ರೇಯಸಿ ಸಿಂಗ್ ಅವರನ್ನು ಸಿಎಂ ನಿವಾಸದಲ್ಲಿ ಭೇಟಿಯಾದ ಯುವ ಕ್ರಿಕೆಟರ್ನ ಅದ್ಭುತ ಸಾಧನೆಯನ್ನು ಗೌರವಿಸಲಾಯಿತು. ಫೈನಲ್ನಲ್ಲಿ ಇಂಗ್ಲೆಂಡ್ ತಂಡವನ್ನು ಸೋಲಿಸಿ ಪ್ರಶಸ್ತಿ ಗೆದ್ದ ಭಾರತದ ಕಿರಿಯರ ತಂಡಕ್ಕೆ ಬಿಸಿಸಿಐ ಇತ್ತೀಚೆಗೆ 7.5 ಕೋಟಿ ರೂಪಾಯಿ ಬಹುಮಾನ ಘೋಷಿಸಿತ್ತು. ಪ್ರಶಸ್ತಿ ಗೆಲ್ಲುವಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದ ಸೂರ್ಯವಂಶಿ ಕೇವಲ 80 ಎಸೆತಗಳಲ್ಲಿ 175 ರನ್ ಸಿಡಿಸಿದ್ದರು. 15 ಬೌಂಡರಿ ಹಾಗೂ ಆರು ಸಿಕ್ಸರ್ಗಳನ್ನು ಅವರ ಇನಿಂಗ್ಸ್ ಒಳಗೊಂಡಿತ್ತು. ಕಿರಿಯರ ವಿಶ್ವಕಪ್ ಇತಿಹಾಸದಲ್ಲೇ ಅತಿವೇಗದ ಶತಕ ದಾಖಲಿಸಿದ ಕೀರ್ತಿಗೆ ಪಾತ್ರರಾದ ಅವರು 55 ಎಸೆತಗಳಲ್ಲಿ ಈ ಸಾಧನೆ ಮಾಡಿದ್ದರು. ಏಳು ಪಂದ್ಯಗಳಲ್ಲಿ 439 ರನ್ ಕಲೆಹಾಕಿದ್ದ ಅವರು ಪಂದ್ಯಶ್ರೇಷ್ಠ ಮತ್ತು ಸರಣಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದರು. ಸಣ್ಣ ವಯಸ್ಸಿನಲ್ಲೇ ದಾಖಲೆಗಳನ್ನು ಸೃಷ್ಟಿಸಿರುವ ಎಡಗೈ ಆಟಗಾರ ಐಪಿಎಲ್ನಲ್ಲಿ ಆಡಿತ ಅತ್ಯಂತ ಕಿರಿಯ ಆಟಗಾರ ಹಾಗೂ ಶತಕ ಗಳಿಸಿದ ಆಟಗಾರ ಎನಿಸಿಕೊಂಡಿದ್ದಾರೆ. ಟ20 ಶತಕ ಗಳಿಸಿದ ಕಿರಿಯ ಆಟಗಾರ ಎನಿಸಿಕೊಂಡಿರುವ ಅವರು ಐಪಿಎಲ್ನಲ್ಲಿ ಅತಿವೇಗದ ಅರ್ಧಶತಕ ಗಳಿಸಿದ ದಾಖಲೆಯನ್ನೂ ಹೊಂದಿದ್ದಾರೆ. ಐಪಿಎಲ್ ಹರಾಜಿನಲ್ಲಿ ರಾಜಸ್ಥಾನ ರಾಯಲ್ಸ್ 1.1 ಕೋಟಿ ರೂಪಾಯಿಗೆ ಅವರನ್ನು ಖರೀದಿಸಿತ್ತು.
ಕೈ ಮುಗಿತಿನಿ ಇಂಡಿ ಒಕ್ಕೂಟದ ನಾಯಕತ್ವ ಬಿಡಿ; ಮಣಿಶಂಕರ್ ಅಯ್ಯರ್ ಎಂಬ ರಾಹುಲ್ ಗಾಂಧಿ ಪಾಲಿನ ಬಿಸಿತುಪ್ಪ!
ಮಣಿಶಂಕರ್ ಅಯ್ಯರ್ ಎಂಬ ಹಿರಿಯ ಕಾಂಗ್ರೆಸ್ ನಾಯಕ, ರಾಹುಲ್ ಗಾಂಧಿ ಅವರ ಪಾಲಿಗೆ ಬಿಸಿತುಪ್ಪವಾಗಿ ಪರಿಣಮಿಸಿದ್ದಾರೆ. ಅಯ್ಯರ್ ವಿಪಕ್ಷಗಳ ಇಂಡಿಯಾ ಮೈತ್ರಿಕೂಟಕ್ಕೆ ರಾಹುಲ್ ಗಾಂಧಿ ಅವರ ನಾಯಕತ್ವವನ್ನು ಟೀಕಿಸುತ್ತಿದ್ದು, ನಾಯಕತ್ವವನ್ನು ಪ್ರಾದೇಶಿಕ ಪಕ್ಷಗಳ ನಾಯಕರು ವಹಿಸಿಕೊಳ್ಳಬೇಕು ಎಂದು ಒತ್ತಾಯಿಸುತ್ತಿದ್ದಾರೆ. ಸದ್ಯ ಪಶ್ಚಿಮ ಬಂಗಾಳ ಪ್ರವಾಸದಲ್ಲಿರುವ ಅಯ್ಯರ್, ಇಂಡಿ ಬ್ಲಾಕ್ ನಾಯಕತ್ವಕ್ಕೆ ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ಅವರೇ ಸೂಕ್ತ ಎಂದು ಹೇಳಿಕೆ ನೀಡಿದ್ದಾರೆ. ಈ ಕುರಿತು ಇಲ್ಲಿದೆ ಹೆಚ್ಚಿನ ಮಾಹಿತಿ.
ರಾಜ್ಯದಲ್ಲಿ ತಮಿಳುನಾಡು ಮಾದರಿ ಶಿಕ್ಷಕರ ನೇಮಕ ವ್ಯವಸ್ಥೆ ಬರಲಿ: ಬಸವರಾಜ ಬೊಮ್ಮಾಯಿ
ಹಾವೇರಿ: ಒಬ್ಬ ಶಿಕ್ಷಕರು ನಿವೃತ್ತರಾಗುವ ಮುಂಚಿನ ವರ್ಷ ಇನ್ನೊಬ್ಬ ಶಿಕ್ಷಕರ ನೇಮಕ ಮಾಡುವ ತಮಿಳು ನಾಡು ಮಾದರಿಯಲ್ಲಿ ರಾಜ್ಯದಲ್ಲಿಯೂ ಶಿಕ್ಷಕರ ನೇಮಕಾತಿ ವ್ಯವಸ್ಥೆ ಜಾರಿಗೆ ಬಂದರೆ ಶಿಕ್ಷಕರ ಹುದ್ದೆ ಖಾಲಿ ಇರುವುದನ್ನು ತಪ್ಪಿಸಲು ಸಾಧ್ಯ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು. ಇಂದು ಹಾವೇರಿ ಜಿಲ್ಲೆಯ ಹಾವೇರಿ ತಾಲೂಕಿನ ಕಾಟೇನಹಳ್ಳಿ ಗ್ರಾಮದ ಡಾ:
Karnataka Weather: ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಮುಂದಿನ ಎರಡು ದಿನ ಮಳೆ ಸಾಧ್ಯತೆ
ಬೆಂಗಳೂರು: ರಾಜ್ಯದ ವಿವಿಧ ಭಾಗಗಳಲ್ಲಿ ಕಳೆದ 24 ಗಂಟೆಗಳಲ್ಲಿ ಅಲ್ಲಲ್ಲಿ ಮಳೆಯಾಗಿದೆ. ಕೆಲವೆಡೆ ಕನಿಷ್ಠ ತಾಪಮಾನದಲ್ಲಿ ಏರಿಳಿತ ಕಂಡುಬಂದಿದೆ. ಹವಾಮಾನ ಇಲಾಖೆ ಮಾಹಿತಿಯಂತೆ, ಮಂಡ್ಯ ಜಿಲ್ಲೆಯ ಕೃಷ್ಣರಾಜಸಾಗರದಲ್ಲಿ 5 ಸೆಂ.ಮೀ. ಮಳೆಯಾದರೆ, ಮೈಸೂರು ಜಿಲ್ಲೆಯ ನಂಜನಗೂಡಿನಲ್ಲಿ 2 ಸೆಂ.ಮೀ. ಮಳೆಯಾಗಿದೆ. ಕೊಡಗು ಜಿಲ್ಲೆಯ ಭಾಗಮಂಡಲ ಮತ್ತು ಪೊನ್ನಂಪೇಟೆಯಲ್ಲಿ ತಲಾ 1 ಸೆಂ.ಮೀ, ಹಾಸನ ಜಿಲ್ಲೆಯ ಕೊಣನೂರಿನಲ್ಲಿ 1
ಅಮೆರಿಕ ಅಧ್ಯಕ್ಷ ಗಾದಿ ಮೇಲೆ ಕುಳಿತುಕೊಳ್ಳುವುದು ಎಂದರೆ ಜೀವಭಯ ಬಿಟ್ಟು ಕೆಲಸ ಮಾಡುವುದು ಎಂಬ ಡೊನಾಲ್ಡ್ ಟ್ರಂಪ್ ಹೇಳಿಕೆ ನಿಜ ಎನಿಸುತ್ತಿದೆ. ಏಕೆಂದರೆ ಡೊನಾಲ್ಡ್ ಟ್ರಂಪ್ ಹತ್ಯಾ ಪ್ರಯತ್ನಗಳು ಅಥವಾ ಆ ರೀತಿ ಕಾಣುವಂತಹ ಘಟನೆಗಳು ನಿರಂತರವಾಗಿ ನಡೆಯುತ್ತಲೇ ಇವೆ. ಇದಕ್ಕೆ ಪುಷ್ಠಿ ಎಂಬಂತೆ, ಫ್ಲೋರಿಡಾದಲ್ಲಿರುವ ಅಮೆರಿಕ ಅಧ್ಯಕ್ಷರ ಐಷಾರಾಮಿ ಮಾರ್-ಎ-ಲಾಗೊ ಎಸ್ಟೇಟ್ನಲ್ಲಿ, ಸಿಕ್ರೇಟ್ ಸರ್ವೀಸ್ ಏಜೆಂಟರು ಅಪರಚಿತ ಬಂದೂಕುಧಾರಿಯನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಇಡೀ ಘಟನೆಯ ವಿವರ ಇಲ್ಲಿದೆ.
ಕರ್ನಾಟಕದಲ್ಲಿ ಬಿಸಿಲ ಬೇಗೆ : ಮಾರ್ಚ್-ಏಪ್ರಿಲ್ನಲ್ಲಿ ವಾಡಿಕೆಗಿಂತ ಹೆಚ್ಚು ಉಷ್ಣಾಂಶ ದಾಖಲು
ಕರ್ನಾಟಕದಲ್ಲಿ ಬೇಸಿಗೆ ಆರಂಭಕ್ಕೆ ಮುನ್ನೇ ಹಲವು ಜಿಲ್ಲೆಗಳಲ್ಲಿ ಬಿಸಿಲ ಧಗೆ ಹೆಚ್ಚಾಗಿದ್ದು, ಮುಂಬರುವ ದಿನಗಳಲ್ಲಿ ಇದು ಗರಿಷ್ಠಕೆ ಏರುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ನೀವೇಕೆ ಕಾಂಗ್ರೆಸ್ನ್ನು ರಕ್ಷಿಸುತ್ತಿದ್ದೀರಿ? ತುಂಬಿದ ಸಭೆಯಲ್ಲಿ ಮಾಧ್ಯಮಗಳಿಗೆ ನರೇಂದ್ರ ಮೋದಿ ಖಡಕ್ ಪ್ರಶ್ನೆ!
ಇತ್ತೀಚೆಗೆ ಮುಕ್ತಾಯಗೊಂಡ ಎಐ ಇಂಪ್ಯಾಕ್ಟ್ ಶೃಂಗಸಭೆಯಲ್ಲಿ ಯುವ ಕಾಂಗ್ರೆಸ್ ನಡೆಸಿದ ಪ್ರತಿಭಟನೆ ಮತ್ತು ಸಂಸತ್ತಿನಲ್ಲಿ ಉಂಟಾದ ಅಸ್ತವ್ಯಸ್ತತೆಯ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರು ಕಾಂಗ್ರೆಸ್ ಮೇಲೆ ತಮ್ಮ ಕಟುವಾದ ದಾಳಿಯನ್ನು ನಡೆಸಿದ್ದಾರೆ. ಯುವ ಕಾಂಗ್ರೆಸ್ ಅರೆನಗ್ನ ಪ್ರತಿಭಟನೆಯನ್ನು ಸಂಸ್ಕೃತಿಹೀನ ಎಂದು ಕರೆದಿರುವ ಪ್ರಧಾನಿ ಮೋದಿ, ಮಾಧ್ಯಮಗಳು ಇದನ್ನು ಕಾಂಗ್ರೆಸ್ ಪ್ರತಿಭಟನೆ ಎಂದು ಕರೆಯದೇ, ವಿಪಕ್ಷಗಳ ಪ್ರತಿಭಟನೆ ಎಂದು ಉಲ್ಲೇಖಿಉತ್ತಿವೆ. ಮಾಧ್ಯಮಗಳೇಕೆ ಕಾಂಗ್ರೆಸ್ನ್ನು ರಕ್ಷಿಸುತ್ತಿವೆ ತಿಳಿಯುತ್ತಿಲ್ಲ ಎಂದು ಹರಿಹಾಯ್ದಿದ್ದಾರೆ. ಇಲ್ಲಿದೆ ಮಾಹಿತಿ.
Explained- ದಕ್ಷಿಣ ಆಫ್ರಿಕಾ ವಿರುದ್ಧ ಉತ್ತಮ ಆರಂಭ ಪಡೆದ ಭಾರತ ಎಡವಿದ್ದೆಲ್ಲಿ? ಅಹ್ಮದಾಬಾದ್ ಸೋಲಿಗೆ 7 ಕಾರಣ
India Vs South Africa- ಗೆಲ್ಲಬಹುದಾಗಿದ್ದ ಪಂದ್ಯವನ್ನು ಭಾರತ ಕೆಟ್ಟದಾಗಿ ಸೋತಿದೆ. ಎರಡು ಅತ್ಯುತ್ತಮ ತಂಡಗಳ ಜಟಾಪಟಿಯಲ್ಲಿ ಜಾಣ್ಮೆ ತೋರಿದ ದಕ್ಷಿಣ ಆಫ್ರಿಕಾ ತಂಡ ಪಂದ್ಯವನ್ನು ಸುಲಭವಾಗಿ ಗೆದ್ದಿತು. ಈಗ ಪಂದ್ಯವನ್ನು ಸೂಕ್ಷ್ಮವಾಗಿ ಅವಲೋಕಿಸಿದಾಗ ಭಾರತಕ್ಕೆ ಪಂದ್ಯಕ್ಕೆ ಮರಳಲು ಹಲವು ಅವಕಾಶಗಳಿದ್ದವು ಎಂಬುದು ಸ್ಪಷ್ಟ. ಆದರೆ ಯಾವ ಹಂತದಲ್ಲೂ ಭಾರತದ ಆಟಗಾರರು ಈ ನಿಟ್ಟಿನಲ್ಲಿ ಯಶಸ್ವಿಯಾಗದ್ದು ದಕ್ಷಿಣ ಆಪ್ರಿಕಾ ತಂಡಕ್ಕೆ ಗೆಲುವಿನ ಹಾದಿಯನ್ನು ಸುಗಮಗೊಳಿಸಿತು. ಹಾಗಿದ್ದರೆ ಭಾರತ ತಂಡ ಎಡವಿದ್ದೆಲ್ಲಿ? ಇಲ್ಲಿದೆ ಈ ಬಗ್ಗೆ ವಿಶ್ಲೇಷಣೆ
ಅಧಿಕಾರ ಹಿಂದೂಗಳ ಕೈಯಲ್ಲಿದ್ದರೂ, ಮುಸ್ಲಿಮ್ ರಾಷ್ಟ್ರದ ಸುಳ್ಳು ಹುಟ್ಟುಹಾಕಿದ್ದಾರೆ : ಎಂ.ಜಿ.ಹೆಗಡೆ
ಬೆಂಗಳೂರು : ಇಡೀ ದೇಶದ ಚುಕ್ಕಾಣಿ ಹಿಂದೂಗಳ ಕೈಯಲ್ಲಿದೆ. ಅದರಲ್ಲೂ ಬಿಜೆಪಿ ಪಕ್ಷವೇ ಹೆಚ್ಚಿನ ರಾಜ್ಯಗಳಲ್ಲಿ ಅಧಿಕಾರ ನಡೆಸುತ್ತಿದೆ. ಆದರೂ, ಈ ಆರೆಸ್ಸೆಸ್ ‘ಭಾರತ ಮುಸ್ಲಿಮ್ ರಾಷ್ಟ್ರವಾಗುತ್ತದೆ’ ಎನ್ನುವ ಸುಳ್ಳುಗಳನ್ನು ಹುಟ್ಟುಹಾಕಿದೆ ಎಂದು ಲೇಖಕ ಎಂ.ಜಿ.ಹೆಗಡೆ ಆತಂಕ ವ್ಯಕ್ತಪಡಿಸಿದರು. ಶನಿವಾರ ನಗರದ ಗಾಂಧಿ ಭವನದ ವಿನೋಭಾ ಕೇಂದ್ರದಲ್ಲಿ ಆಯೋಜಿಸಿದ್ದ ತಮ್ಮ ‘ಭಾರತ ಮುಸ್ಲಿಮ್ ರಾಷ್ಟ್ರ ಆಗುವುದೇ?’ ಹೊಸ ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಪ್ರಾಸ್ತವಿಕ ಮಾತುಗಳನ್ನಾಡಿದ ಅವರು, ಸಾಮಾಜಿಕ ಜಾಲತಾಣಗಳ ಮೂಲಕ ಮುಸ್ಲಿಮರು ಈ ದೇಶವನ್ನು ಇಸ್ಲಾಮ್ ರಾಷ್ಟ್ರವಾಗಿ ಪರಿವರ್ತನೆ ಮಾಡುತ್ತಾರೆ. ಅದು 2047ರಲ್ಲಿಯೇ ಆಗುತ್ತದೆ ಎಂಬ ಸುಳ್ಳನ್ನು ಸತ್ಯದಂತೆ ಬಿಂಬಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು 1986ರ ನಂತರ ದೇಶದಲ್ಲಿ ಬಿಜೆಪಿ ಹಿಂದುತ್ವ, ಮತೀಯವಾದ ಮುಂದಿಟ್ಟು ರಾಜಕಾರಣ ಮಾಡಿ ಯಶಸ್ವಿಯಾಯಿತು, ಇದಕ್ಕೆ ನಾನೂ ಸಹ ಸಾಕ್ಷಿ. ಘರ್ಷಣೆಯಿಂದ ಮತಗಳು ಕೇಂದ್ರೀಕೃತವಾಗುತ್ತವೆ. ಘರ್ಷಣೆಯಾಗಲು ಸಂಘಟನೆಬೇಕು. ಬಲವಾದ ಸಂಘಟನೆ ರೂಪುಗೊಳ್ಳಲು ಸಂಕಥನ ಸೃಷ್ಟಿಯಾಗಬೇಕು. ಅದಕ್ಕಾಗಿಯೇ, ಲವ್ ಜಿಹಾದ್, ಮತಾಂತರ, ಹಲಾಲ್ ಕುರಿತ ವಿವಾದ ಸೃಷ್ಟಿಸಲಾಯಿತು. ಇದರಲ್ಲಿ ಕೆಲವು ಕೆಲಸ ನಾನೂ ಮಾಡಿದ್ದೇನೆ. ಧೈರ್ಯವಿದ್ದವರು ಸೂಕ್ತ ದಾಖಲೆ ಸಹಿತ ನನ್ನ ಬಳಿ ಕ್ಯಾಮೆರಾ ಮುಂದೆ ಚರ್ಚೆಗೆ ಬನ್ನಿ ಎಂದು ಸವಾಲೆದರು. ಲವ್ ಜಿಹಾದ್ ಎನ್ನುವ ಶಬ್ದ ಸೃಷ್ಟಿಸಿ ಮತ್ತಷ್ಟು ಗೊಂದಲ ಹುಟ್ಟು ಹಾಕುವ ಕೆಲಸ ಸಂಘ ಪರಿವಾರ ಮಾಡುತ್ತಿದೆ. ರಾಜ್ಯದಲ್ಲಿಯೇ ಎಷ್ಟು ಲವ್ ಜಿಹಾದ್ ಪ್ರಕರಣಗಳು ಆಗಿವೆ. ಅದರ ಸತ್ಯತೆ ಏನಾಗಿದೆ ಎಂಬುವುದರ ಕುರಿತು ಶೀಘ್ರದಲ್ಲಿಯೇ ಮತ್ತೊಂದು ದಾಖಲೆ ಜನರ ಮುಂದೆ ಇಡಲಾಗುವುದು. ಆದರೆ, ನಾವು ಇವರ ಷಡ್ಯಂತ್ರಗಳಿಗೆ ಬಲಿಯಾಗದೆ, ನೇರವಾಗಿ ಉತ್ತರಿಸುವ ಕೆಲಸ ಮಾಡಬೇಕಾಗಿದೆ ಎಂದು ಅವರು ಉಲ್ಲೇಖಿಸಿದರು.
ತಳ ಸಮುದಾಯಗಳ ಗುರುತಿಸಿ ಅವಕಾಶಕೊಡುವ ಪ್ರಯತ್ನ ನಡೆಯಬೇಕು : ನಿಕೇತ್ರಾಜ್ ಮೌರ್ಯ
‘ಜಾನಪದ ಸುಗ್ಗಿ ಸಂಭ್ರಮ’ ಕಾರ್ಯಕ್ರಮ
ಅಮೆರಿಕ ಮತ್ತು ಇರಾನ್ ನಡುವೆ ಮತ್ತೊಂದು ಸುತ್ತಿನ ಮಾತುಕತೆ, ಅಂತಿಮ ಒಪ್ಪಂದಕ್ಕೆ ಸಹಿ ಸಾಧ್ಯತೆ | US Military
ಅಮೆರಿಕ ಹಾಗೂ ಇರಾನ್ ವಿಚಾರವೇ ಇದೀಗ ಜಗತ್ತಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದ್ದು, ಈ ಇಬ್ಬರ ನಡುವೆ ಯುದ್ಧ ನಡೆಯದಂತೆ ತಡೆಯಲು ಎಲ್ಲಾ ರೀತಿಯ ಪ್ರಯತ್ನ ಮಾಡಲಾಗುತ್ತಿದೆ. ಆ ಎಲ್ಲಾ ಪ್ರಯತ್ನಗಳು ಈವರೆಗೂ ವಿಫಲವಾಗಿದ್ದು, ಮಧ್ಯಪ್ರಾಚ್ಯ ಬೂದಿ ಮುಚ್ಚಿದ ಕೆಂಡವಾಗಿದೆ. ಹೀಗೆ ಇದ್ದಾಗ ಏನಾದರೂ ಮಾಡಿ ಅಮೆರಿಕ ಹಾಗೂ ಇರಾನ್ ನಡುವೆ ಶಾಂತಿ ಒಪ್ಪಂದ ಮಾಡಿಸಬೇಕೆಂದು ಪಣತೊಟ್ಟಿರುವ ಮಧ್ಯಪ್ರಾಚ್ಯದ
ಬಳ್ಳಾರಿ | ಗೋಶಾಲೆಯಿಂದ ಸಮಾಧಾನ, ನೆಮ್ಮದಿ ಸಿಗುತ್ತದೆ : ಸಂಸದ ಇ.ತುಕಾರಾಂ
ಬಳ್ಳಾರಿ / ಕಂಪ್ಲಿ : ಗೋಶಾಲೆಯಿಂದ ಮನಸ್ಸಿಗೆ ಸಮಾಧಾನ ಹಾಗೂ ಜೀವನದಲ್ಲಿ ನೆಮ್ಮದಿ ದೊರೆಯುತ್ತದೆ ಎಂದು ಸಂಸದ ಇ.ತುಕಾರಾಂ ಹೇಳಿದರು. ತಾಲೂಕಿನ ದೇವಸಮುದ್ರ ಕ್ರಾಸ್ ಹೊರವಲಯದಲ್ಲಿರುವ ಕಲ್ಯಾಣಚೌಕಿ ಮಠ ಕಾಮಧೇನು ಗೋಶಾಲ ಸೇವಾ ಟ್ರಸ್ಟ್ ಆಶ್ರಯದಲ್ಲಿ ನಡೆಯುತ್ತಿರುವ ಗೋಶಾಲೆ, ಕಲ್ಯಾಣ ಕೃಷಿ ಆಶ್ರಮ ಹಾಗೂ ಗುರುಕುಲ ಶಿಕ್ಷಣ ಉದ್ಘಾಟನಾ ಕಾರ್ಯಕ್ರಮದ ಅಂಗವಾಗಿ ಭಾನುವಾರ ನಡೆದ ವಿಶೇಷ ಪೂಜೆ ಹಾಗೂ ಹೋಮ–ಹವನದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಬಾಲ್ಯದಿಂದಲೂ ಕೃಷಿ ಕಾರ್ಯಗಳ ಜೊತೆಗೆ ಗೋಮಾತೆಯ ಪೂಜೆ ಮಾಡುತ್ತಾ ದಿನನಿತ್ಯದ ಜೀವನ ಸಾಗಿಸುತ್ತಿದ್ದೇವೆ. ಗೋಶಾಲೆ, ಕೃಷಿ ಆಶ್ರಮ ಮತ್ತು ಗುರುಕುಲ ಶಿಕ್ಷಣವು ಪವಿತ್ರ ಕಾರ್ಯಗಳಾಗಿವೆ. ಮನೆಯಲ್ಲಿ ಗೋವುಗಳಿದ್ದರೆ ಆಕ್ಸಿಜನ್ ದೊರೆಯುತ್ತದೆ, ರೋಗಗಳು ಹತ್ತಿರ ಬರುವುದಿಲ್ಲ ಎಂಬ ನಂಬಿಕೆ ಇದೆ ಎಂದು ಹೇಳಿದರು. ವಿಜಯನಗರ ಸೇರಿ ಬಳ್ಳಾರಿ ಲೋಕಸಭಾ ಕ್ಷೇತ್ರದ ಅಭಿವೃದ್ಧಿಗೆ ಈಗಾಗಲೇ ಸುಮಾರು 4600 ಕೋಟಿ ರೂ. ಅನುದಾನ ತಂದು ವಿನಿಯೋಗಿಸಲಾಗಿದೆ. ತಮ್ಮ 5 ಕೋಟಿ ರೂ. ಅನುದಾನದಲ್ಲಿ ಅಂಗವಿಕಲಚೇತನರಿಗೆ ಸೌಲಭ್ಯಗಳು, ಡಿಜಿಟಲ್ ಗ್ರಂಥಾಲಯ ಸೇರಿದಂತೆ ವಿವಿಧ ಸೌಕರ್ಯಗಳನ್ನು ಒದಗಿಸಲಾಗಿದೆ. ರೈಲ್ವೆ ಕ್ಷೇತ್ರದಲ್ಲೂ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ಕೈಗೊಳ್ಳಲಾಗಿದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಶ್ರೀಕಲ್ಯಾಣಚೌಕಿ ಮಠ ಕಾಮಧೇನು ಗೋಶಾಲಾ ಸೇವಾ ಟ್ರಸ್ಟ್ ಸಂಸ್ಥಾಪಕ ಕೆ.ಎಂ. ಬಸವರಾಜ ಸ್ವಾಮಿ ಅವರು ಸಂಸದ ತುಕಾರಾಂ ಅವರಿಗೆ ಸನ್ಮಾನಿಸಿದರು. ಸಾವಯವ ದವಸ–ಧಾನ್ಯ ಹಾಗೂ ಇತರ ವಸ್ತುಗಳ ಪ್ರದರ್ಶನವನ್ನು ವೀಕ್ಷಿಸಿದ ಸಂಸದರು ಕೆಲವು ವಸ್ತುಗಳನ್ನು ಖರೀದಿ ಮಾಡಿ ವ್ಯಾಪಾರಸ್ಥರಿಗೆ ಪ್ರೋತ್ಸಾಹ ನೀಡಿದರು. ಕಾರ್ಯಕ್ರಮದಲ್ಲಿ ಅಪೆಕ್ಸ್ ಬ್ಯಾಂಕ್ ನಿರ್ದೇಶಕ ಪಿ. ಮೂಕಯ್ಯಸ್ವಾಮಿ, ಪುರಸಭೆ ಮಾಜಿ ಅಧ್ಯಕ್ಷ ಎಂ. ಸುಧೀರ್, ಮುಖಂಡರಾದ ಬಿ. ನಾರಾಯಣಪ್ಪ, ಹೊನ್ನಳ್ಳಿ ಗಂಗಾಧರ, ನಾಯಕರ ವೆಂಕೋಬ, ದೊಡ್ಡಬಸಪ್ಪ, ಹನುಮಂತಪ್ಪ, ಜಿ. ಮರೇಗೌಡ, ಸಿದ್ದಯ್ಯ, ಎನ್.ಎಂ. ಪತ್ರಯ್ಯಸ್ವಾಮಿ, ಅಕ್ಕಿ ಜಿಲಾನ್, ಬಳೆ ಮಲ್ಲಿಕಾರ್ಜುನ ಸೇರಿದಂತೆ ಸ್ವಾಮೀಜಿ, ಭಕ್ತರು ಹಾಗೂ ಹಲವರು ಉಪಸ್ಥಿತರಿದ್ದರು.
ಕೋವಿಡ್ ಲಸಿಕೆ ಸರ್ಕಾರಗಳ ಕೈ ಕಚ್ಚಲಾರಂಭಿಸಿದಂತಿದೆ: ರಾಜಾರಾಂ ತಲ್ಲೂರು ಬರಹ
ಕೋವಿಡ್ ಲಸಿಕೆ ಸರ್ಕಾರಗಳ ಕೈ ಕಚ್ಚಲಾರಂಭಿಸಿದಂತಿದೆ: ಹಿರಿಯ ಪತ್ರಕರ್ತ ರಾಜಾರಾಂ ತಲ್ಲೂರು ಅವರ ಬರಹ ಇಲ್ಲಿದೆ. ಇಂಗ್ಲಂಡಿಗಿಂತ ಕರ್ನಾಟಕವು ಗಾತ್ರದಲ್ಲಿ ಒಂದೂವರೆ ಪಾಲು ದೊಡ್ಡದು. ಅಷ್ಟು ಸಣ್ಣ ದೇಶ ಇಂಗ್ಲಂಡಿನಲ್ಲಿ ಡಿಸೆಂಬರ್ 2025ರ ಹೊತ್ತಿಗೆ 22,819 ಮಂದಿ, ತಮಗೆ ಕೋವಿಡ್ ಲಸಿಕೆಯಿಂದ ಗಂಭೀರ ಹಾನಿ/ಜೀವಹಾನಿ ಆಗಿರುವ ಬಗ್ಗೆ ಪರಿಹಾರ ನೀಡಬೇಕೆಂದು ಕೋರಿ ಅಲ್ಲಿನ ಸರ್ಕಾರದ ಮುಂದೆ ಅರ್ಜಿ
Ballari | ಧರ್ಮಸ್ಥಳ ಯೋಜನೆಯಿಂದ ಮೆಟ್ರಿ ಗ್ರಾಮದಲ್ಲಿ ಕೆರೆ ಅಭಿವೃದ್ಧಿಗೆ 10 ಲಕ್ಷ ರೂ. ಮಂಜೂರು
ಬಳ್ಳಾರಿ / ಕಂಪ್ಲಿ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ರಾಜ್ಯದಲ್ಲಿ ಈಗಾಗಲೇ ಸುಮಾರು 1043 ಕೆರೆಗಳನ್ನು ಹೂಳು ತೆಗೆಯಿಸಿ ಗ್ರಾಮಗಳಿಗೆ ಹಸ್ತಾಂತರ ಮಾಡಲಾಗಿದೆ. ಇದರ ಕುಡಿಯುವ ನೀರಿನ ಲಭ್ಯತೆ ಹೆಚ್ಚುವುದರ ಜೊತೆಗೆ ಪ್ರಾಣಿ–ಪಕ್ಷಿಗಳಿಗೆ ಅನುಕೂಲವಾಗಿದ್ದು, ಭಾವಿ ಮತ್ತು ಬೋರ್ವೆಲ್ಗಳ ರಿಚಾರ್ಜ್ ಆಗಿ ಅಂತರ್ಜಲ ಮಟ್ಟ ಹೆಚ್ಚಿಸಿ ರೈತರಿಗೆ ಸಹಕಾರಿಯಾಗಿದೆ. ಇದೀಗ ಕಂಪ್ಲಿ ತಾಲೂಕಿನ ಮೆಟ್ರಿ ಗ್ರಾಮದಲ್ಲಿನ ಊಟಿಕೊಳ್ಳದ ಕೆರೆಯನ್ನು ಅಭಿವೃದ್ಧಿಪಡಿಸಲು ಗ್ರಾಮಸ್ಥರು ಹಾಗೂ ಗ್ರಾಮ ಪಂಚಾಯತ್ ವತಿಯಿಂದ ಮನವಿ ಸಲ್ಲಿಸಲಾಗಿತ್ತು. ಈ ಮನವಿಯನ್ನು ಪರಿಶೀಲಿಸಿದ ವೀರೇಂದ್ರ ಹೆಗ್ಗಡೆ ಅವರು ಕೆರೆ ಅಭಿವೃದ್ಧಿಗಾಗಿ ಸುಮಾರು 10 ಲಕ್ಷ ರೂ. ಮಂಜೂರು ಮಾಡಿದ್ದಾರೆ. ಕೆರೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಹೂಳು ತೆಗೆಯುವ ಕಾರ್ಯಕ್ಕೆ ಚಾಲನೆ ನೀಡಲಾಯಿತು. ಬಳ್ಳಾರಿ ಜಿಲ್ಲಾ ನಿರ್ದೇಶಕ ರೋಹಿತಾಕ್ಷ ಮಾತನಾಡಿ, “ನಮ್ಮೂರು ನಮ್ಮ ಕೆರೆ” ಕಾರ್ಯಕ್ರಮದಡಿ ರಾಜ್ಯಾದ್ಯಂತ ಕೆರೆಗಳ ಪುನರುಜ್ಜೀವನ ಕಾರ್ಯ ನಡೆಯುತ್ತಿದ್ದು, ಮೆಟ್ರಿ ಗ್ರಾಮಸ್ಥರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಮೆಟ್ರಿ ಗ್ರಾಮ ಪಂಚಾಯತ್ ಅಧ್ಯಕ್ಷೆ ನಾಗಮ್ಮ, ಊಟಿಕೊಳ್ಳದ ಕೆರೆ ಸಮಿತಿ ಅಧ್ಯಕ್ಷ ಗಿರೀಶ್, ಉಪಾಧ್ಯಕ್ಷ ಜಡೆಗೌಡ, ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಬೀರಲಿಂಗಪ್ಪ, ಜಿಲ್ಲಾ ಜನಜಾಗೃತಿ ವೇದಿಕೆ ಕೋಶಾಧಿಕಾರಿ ಡಾ. ವೆಂಕಟೇಶ್ ಬರಮಕ್ಕನವರ್, ತಾಲೂಕು ಯೋಜನಾಧಿಕಾರಿ ರಾಘವೇಂದ್ರ, ಕೃಷಿ ಅಧಿಕಾರಿ ಸಂಜುಕುಮಾರ್, ವಲಯ ಮೇಲ್ವಿಚಾರಕ ಅವಿನಾಶ್ ಹಾಗೂ ಸೇವಾ ಪ್ರತಿನಿಧಿಗಳು ಭಾಗವಹಿಸಿದ್ದರು.
Bidar | ರೈತರ ವಿವಿಧ ಬೇಡಿಕೆ ಈಡೇರಿಸಲು ರಾಜ್ಯ ಸರಕಾರಕ್ಕೆ ಪತ್ರ
ಬೀದರ್ : ಸಹಕಾರ ಸಕ್ಕರೆ ಕಾರ್ಖಾನೆಯನ್ನು ಸರ್ಕಾರ ವಹಿಸಿಕೊಂಡು ಪುನರಾರಂಭಿಸಬೇಕು. ಹಾಗೆಯೇ ರೈತರ ಎಲ್ಲ ಸಾಲಗಳು ಸಂಪೂರ್ಣ ಮನ್ನಾ ಮಾಡಬೇಕು ಎಂದು ಒತ್ತಾಯಿಸಿ ಸಂಯುಕ್ತ ಕಿಸಾನ್ ಮೋರ್ಚಾ (ಎಸ್ ಕೆ ಎಂ) ವತಿಯಿಂದ ರಾಜ್ಯ ಸರ್ಕಾರಕ್ಕೆ ಬಹಿರಂಗ ಪತ್ರ ಬಿಡುಗಡೆ ಮಾಡಲಾಯಿತು. ನಗರದ ಲಾಡ್ಜ್ ಆವರಣವೊಂದರಲ್ಲಿ ರವಿವಾರ ಸಂಯುಕ್ತ ಕಿಸಾನ್ ಮೋರ್ಚಾದ ಪದಾಧಿಕಾರಿಗಳು ಸಭೆ ಸೇರಿ ಬಿಡುಗಡೆ ಮಾಡಿದ ಬಹಿರಂಗ ಪತ್ರದಲ್ಲಿ, ಬೀದರ್ ಸಹಕಾರ ಸಕ್ಕರೆ ಕಾರ್ಖಾನೆ ಜಿಲ್ಲೆಯ ರೈತರ ಜೀವನಾಡಿಯಾಗಿದ್ದು, ಸುಮಾರು 25 ಸಾವಿರಕ್ಕೂ ಹೆಚ್ಚು ರೈತರು ಷೇರು ಪಡೆದಿದ್ದಾರೆ. ಕಾರ್ಖಾನೆ ಮುಚ್ಚಿರುವುದರಿಂದ ರೈತರು, ಕಾರ್ಮಿಕರು ಹಾಗೂ ಅವರ ಕುಟುಂಬಗಳು ಆರ್ಥಿಕ ಸಂಕಷ್ಟಕ್ಕೆ ಒಳಗಾಗಿವೆ. ಸಾವಿರಾರು ಕಾರ್ಮಿಕರು ಉದ್ಯೋಗ ಕಳೆದುಕೊಂಡಿದ್ದಾರೆ. ಸುಮಾರು 32.99 ಕೋಟಿ ರೂ. ಕಾರ್ಮಿಕರ ಸಂಬಳ ಬಾಕಿ ಇದೆ. ಹಾಗೆಯೇ 2 ಕೋಟಿ ರೂ. ಉಪದಾನ ಹಣ ಪಾವತಿಸಬೇಕಿದೆ ಎಂದು ಆರೋಪಿಸಲಾಗಿದೆ. 2024ರ ಡಿಸೆಂಬರ್ನಲ್ಲಿ ನಡೆದ ಸಭೆಯಲ್ಲಿ 2025-26 ಹಂಗಾಮಿ ಸಾಲಿನಲ್ಲಿ ಕಾರ್ಖಾನೆ ಪ್ರಾರಂಭಿಸುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದರು. ಆದರೆ ಯಾವುದೇ ಕ್ರಮ ಕೈಗೊಂಡಿಲ್ಲ. ದೇಶ ಕೃಷಿ ಪ್ರಧಾನವಾಗಿದ್ದರೂ ರೈತರಿಗೆ ಸಮರ್ಪಕ ಬೆಲೆ ದೊರೆಯುತ್ತಿಲ್ಲ. ಕನಿಷ್ಠ ಬೆಂಬಲ ಬೆಲೆ ಕುರಿತು ಕಾನೂನು ತರಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ ಮೋರ್ಚಾದ ಪದಾಧಿಕಾರಿಗಳು ಬ್ಯಾಂಕುಗಳು ರೈತರಿಂದ ದಬ್ಬಾಳಿಕೆ ಮೂಲಕ ಸಾಲ ವಸೂಲಿ ಮಾಡುತ್ತಿರುವುದು ಖಂಡಿಸಿದ್ದಾರೆ. ಬೀದರ್ ಸಹಕಾರ ಸಕ್ಕರೆ ಕಾರ್ಖಾನೆಯನ್ನು ಸರ್ಕಾರ ವಹಿಸಿಕೊಂಡು 2026-27 ಹಂಗಾಮಿನಲ್ಲಿ (ಅಕ್ಟೋಬರ್ 2026) ಪ್ರಾರಂಭಿಸಲು ಬಜೆಟ್ನಲ್ಲಿ ಹಣ ಕಾಯ್ದಿರಿಸಬೇಕು. ಕರ್ನಾಟಕದ ಎಲ್ಲಾ ರೈತರ ಎಲ್ಲಾ ತರಹದ ಸಾಲಗಳನ್ನು ಸಂಪೂರ್ಣ ಮನ್ನಾ ಮಾಡಬೇಕು ಎಂದು ತಮ್ಮ ಬೇಡಿಕೆಗಳು ಮುಂದಿಟ್ಟಿದ್ದಾರೆ. ಈ ಸಂದರ್ಭದಲ್ಲಿ ಎಸ್ ಕೆ ಎಂ ನ ಗೌರವಾಧ್ಯಕ್ಷ ಶಿವರಾಯ ಮುದಾಳೆ, ಮಲ್ಲಿಕಾರ್ಜುನ್ ಸ್ವಾಮಿ, ಎಸ್ ಕೆ ಎಂ ನ ಸಂಚಾಲಕ ಬಾಬುರಾವ್ ಹೊನ್ನಾ, ನಾಗಶೆಟ್ಟಿ ಲಂಜವಾಡ್, ಬಸವರಾಜ್ ಅಷ್ಟೂರೆ, ವಿಠಲ್ ರೆಡ್ಡಿ, ಅರುಣ್ ಪಾಟೀಲ್, ಶಾಂತಮ್ಮ ಮೂಲಗೆ, ವೀರಶೆಟ್ಟಿ ವಟಂಬೆ, ಮಹೇಶ್ ನಾಡಗೌಡ, ನಜೀದ್ ಅಹ್ಮದ್, ಎಂ.ಡಿ. ಖಮರ್ ಪಟೇಲ್, ನನ್ನೆಸಾಬ್, ಎಂ.ಡಿ. ಶಫಾಯತ್ ಅಲಿ, ಜಯಶೀಲಕುಮಾರ್ , ಸೂರ್ಯಕಾಂತ್ ಹಾಗೂ ಕೋಂಡಿಬಾ ಪಾಂಡ್ರೆ ಇದ್ದರು.
ಕೃಷಿ ಲಾಭದಾಯಕ ಕ್ಷೇತ್ರವಾಗಲು ಸಂಶೋಧನೆ–ಮಾರುಕಟ್ಟೆ ಸಂಪರ್ಕ ಅಗತ್ಯ : ಸಚಿವ ಈಶ್ವರ್ ಖಂಡ್ರೆ
ಬೀದರ್ : ಕೃಷಿ ಲಾಭದಾಯಕ ಕ್ಷೇತ್ರವಾಗಲು ಚರ್ಚೆ, ಸಂಶೋಧನೆ, ಮಾರುಕಟ್ಟೆ ಲಭ್ಯತೆ ಹಾಗೂ ಸರ್ಕಾರದ ಯೋಜನೆಗಳು ರೈತರ ಮನೆಬಾಗಿಲಿಗೆ ತಲುಪುವಂತಾಗಬೇಕು ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ ಹೇಳಿದರು. ನಗರದ ನೆಹರು ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಕೃಷಿ, ತೋಟಗಾರಿಕೆ ಹಾಗೂ ಮೀನುಗಾರಿಕೆ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ ಉದ್ಯೋಗ ಮೇಳ, ಸಿರಿಧಾನ್ಯ ಮೇಳ, ಫಲ–ಪುಷ್ಪ ಪ್ರದರ್ಶನ ಮತ್ತು ಮತ್ಸ್ಯ ಮೇಳವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಜಿಲ್ಲೆಯಲ್ಲಿ ಕೈಗಾರಿಕೆಗಳ ಕೊರತೆಯಿಂದ ಶೇ.75ರಷ್ಟು ಜನ ಕೃಷಿಯ ಮೇಲೆ ಅವಲಂಬಿತರಾಗಿದ್ದಾರೆ. ಪ್ರತಿ ವರ್ಷ ಸುಮಾರು 10 ಲಕ್ಷ ಎಕರೆ ಭೂಮಿಯಲ್ಲಿ ಬಿತ್ತಣೆ ನಡೆಯುತ್ತಿದ್ದು, ಅದರಲ್ಲಿ ಶೇ.50 ಸೋಯಾ, ಶೇ.25 ತೊಗರಿ ಹಾಗೂ ಉಳಿದ ಶೇ.25 ಇತರೆ ಬೆಳೆಗಳು ಬೆಳೆಯಲಾಗುತ್ತಿವೆ. ರೈತರು ಒಂದೇ ಬೆಳೆಗೆ ಸೀಮಿತವಾಗದೆ ಸಿರಿಧಾನ್ಯಗಳಂತಹ ಬೇರೆ ಬೆಳೆಗಳನ್ನು ಬೆಳೆಸಬೇಕು ಎಂದು ಸಲಹೆ ನೀಡಿದರು. ಸಿರಿಧಾನ್ಯಗಳು ಕಡಿಮೆ ನೀರಿನಲ್ಲಿ ಬೆಳೆಯುವ ಶಾಶ್ವತ ಬೆಳೆಗಳಾಗಿದ್ದು, ಹವಾಮಾನ ಬದಲಾವಣೆಯ ಸಂದರ್ಭದಲ್ಲಿಯೂ ಭದ್ರ ಆದಾಯ ನೀಡುತ್ತವೆ. ಜನರು ದೈನಂದಿನ ಆಹಾರದಲ್ಲಿ ಸಿರಿಧಾನ್ಯಗಳನ್ನು ಅಳವಡಿಸಿಕೊಳ್ಳಬೇಕು. ರೈತರು ಮೌಲ್ಯವರ್ಧಿತ ಉತ್ಪನ್ನಗಳತ್ತ ಗಮನಹರಿಸಬೇಕು. ಸರ್ಕಾರದ ಯೋಜನೆಗಳು ಹಾಗೂ ಮಾರುಕಟ್ಟೆಯಲ್ಲಿ ಬೆಂಬಲ ಬೆಲೆ ರೈತರಿಗೆ ಸಿಗುವಂತೆ ಈ ಮೇಳದ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಹೇಳಿದರು. ಕಳೆದ ವರ್ಷದ ಅತೀವೃಷ್ಟಿಯಿಂದ 1.65 ಲಕ್ಷ ಹೆಕ್ಟೇರ್ ಬೆಳೆ ಹಾನಿಯಾಗಿದ್ದು, 1.92 ಲಕ್ಷ ರೂ. ರೈತರಿಗೆ ಒಟ್ಟು 288 ಕೋಟಿ ರೂ. ನೇರವಾಗಿ ಖಾತೆಗೆ ಜಮೆಯಾಗಿದೆ. ಬೆಳೆ ಕಟಾವು ಪ್ರಯೋಗದ ಆಧಾರದ ಮೇಲೆ 100 ಕೋಟಿ ರೂ. ವಿಮೆ ಹಣ ಜಮೆಯಾಗಿದ್ದು, ಇನ್ನೂ 50 ಕೋಟಿ ರೂ. ಬರಲಿದೆ. ಒಟ್ಟು 450 ಕೋಟಿ ರೂ. ರೈತರ ಖಾತೆಗೆ ಜಮೆಯಾಗಿದೆ ಎಂದು ಮಾಹಿತಿ ನೀಡಿದರು. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಗಿರೀಶ್ ಬದೋಲೆ ಮಾತನಾಡಿ, ಉದ್ಯೋಗ ಮೇಳದಲ್ಲಿ 32 ಕಂಪನಿಗಳು ಭಾಗವಹಿಸಿದ್ದು, ಎನ್ಆರ್ಎಲ್ಎಮ್ ಯೋಜನೆಯಡಿ ಜಿ.ಪಿ.ಎಲ್.ಎಫ್ಗಳ ಮೂಲಕ ಗ್ರಾಮಗಳಲ್ಲಿ ಪ್ರಚಾರ ನಡೆಸಿ ಆನ್ಲೈನ್ ನೋಂದಣಿ ಅವಕಾಶ ಕಲ್ಪಿಸಲಾಗಿದೆ ಎಂದು ಹೇಳಿದರು. ಕಾರ್ಯಕ್ರಮಕ್ಕೂ ಮುನ್ನ ನಗರದ ಛತ್ರಪತಿ ಶಿವಾಜಿ ವೃತ್ತದಿಂದ ನೆಹರು ಕ್ರೀಡಾಂಗಣದವರೆಗೆ ನಡೆದ ಸಿರಿಧಾನ್ಯ ನಡಿಗೆಗೆ ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ ಚಾಲನೆ ನೀಡಿದರು. ಮೆರವಣಿಗೆಯಲ್ಲಿ ಸಿರಿಧಾನ್ಯ ಹೊತ್ತ ಮಹಿಳೆಯರು ಗಮನ ಸೆಳೆದರು. ಈ ಸಂದರ್ಭದಲ್ಲಿ ಸಚಿವ ರಹೀಂ ಖಾನ್, ಕರ್ನಾಟಕ ಮೀನುಗಾರಿಕೆ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಾಲಾ ನಾರಾಯಣರಾವ್, ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ, ಮಹಾನಗರ ಪಾಲಿಕೆ ಆಯುಕ್ತ ಮುಕುಲ್ ಜೈನ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಮೇಳದ ಅಂಗವಾಗಿ ವಿವಿಧ ಸರ್ಕಾರಿ ಇಲಾಖೆ ಮತ್ತು ಖಾಸಗಿ ಸಂಸ್ಥೆಗಳ ಮಳಿಗೆಗಳು ಸ್ಥಾಪಿಸಲಾಗಿತ್ತು. ಉದ್ಯೋಗ ಮೇಳದಲ್ಲಿ ನೂರಾರು ನಿರುದ್ಯೋಗಿಗಳು ಅರ್ಜಿ ಸಲ್ಲಿಸಿದರು. ವಿವಿಧ ಮೀನಿನ ತಳಿಗಳು, ಹೂ–ಹಣ್ಣು–ತರಕಾರಿಗಳ ಕಲಾಕೃತಿಗಳು ಹಾಗೂ ಕೃಷಿ ಸಂಬಂಧಿತ ವಸ್ತುಗಳ ಪ್ರದರ್ಶನ ಜನರನ್ನು ಆಕರ್ಷಿಸಿತು. ಸಾವಿರಾರು ಮಂದಿ ಮೇಳವನ್ನು ವೀಕ್ಷಿಸಿದರು.
ಬೆದರಿಕೆ ಪತ್ರ ಕಳುಹಿಸಿದ ಆರೋಪ; ಸ್ನೇಹಮಯಿ ಕೃಷ್ಣ ವಿರುದ್ಧ ಎಫ್ಐಆರ್
ಬೆಂಗಳೂರು : ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ವಿರುದ್ಧ ಆರೋಪ ಮಾಡಿ ಬಳಿಕ ಕ್ಷಮೆಯಾಚಿಸಿದ್ದ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ವಿರುದ್ಧ ಬೆಂಗಳೂರಿನಲ್ಲಿ ಮತ್ತೊಂದು ಎಫ್ಐಆರ್ ದಾಖಲಾಗಿದೆ. ಪವಿತ್ರಾ ಎಂಬುವರ ಮನೆಗೆ ಬೆದರಿಕೆ ಪತ್ರ ಕಳುಹಿಸಿದ ಆರೋಪದಡಿ ಬಸವೇಶ್ವರ ನಗರ ಠಾಣೆಯಲ್ಲಿ ಸ್ನೇಹಮಯಿ ಕೃಷ್ಣ ವಿರುದ್ಧ ಪ್ರಕರಣ ದಾಖಲಾಗಿದೆ. ಮೈಲಾರಪ್ಪ ಎಂಬವರ ಮೇಲೆ ನೀಡಿರುವ ದೂರು ವಾಪಸ್ ತೆಗೆದುಕೊಳ್ಳಲು ಒತ್ತಡ ಹೇರಿದ್ದಾರೆ ಎಂದು ಆರೋಪಿಸಲಾಗಿದೆ.. ಈ ಬಗ್ಗೆ ಕಳೆದೆರಡು ತಿಂಗಳ ಹಿಂದೆ ದೂರು ಕೊಟ್ಟಿದ್ದು, ಎನ್ಸಿಆರ್ ಕೂಡ ದಾಖಲಾಗಿತ್ತು. ಇದೀಗ ಕೋರ್ಟ್ ಅನುಮತಿ ಪಡೆದು ಸ್ನೇಹಮಯಿ ಕೃಷ್ಣ ವಿರುದ್ಧ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲು ಮಾಡಲಾಗಿದೆ.
ಒಳ ಮೀಸಲಾತಿ ವರದಿ ತಿರಸ್ಕರಿಸಲು ಆಗ್ರಹಿಸಲು ಫೆ.23 ರಂದು ಹುಮನಾಬಾದ್ ಬಂದ್ ಗೆ ಕರೆ
ಹುಮನಾಬಾದ್ : ಒಳ ಮೀಸಲಾತಿ ಕುರಿತು ಎಚ್.ಎನ್.ನಾಗಮೋಹನ್ ದಾಸ್ ವರದಿಯಲ್ಲಿ ದಲಿತ ಬಲಗೈ ಸಮುದಾಯಕ್ಕೆ ಅನ್ಯಾಯವಾಗಿದೆ ಎಂದು ಆರೋಪಿಸಿ, ರಾಜ್ಯಪಾಲರು ವರದಿಯನ್ನು ತಿರಸ್ಕರಿಸಬೇಕು ಎಂದು ಒತ್ತಾಯಿಸಿ ಫೆ.23ರಂದು ಹೊಲೆಯ ಹೋರಾಟ ಸಮಿತಿಯಿಂದ ಹುಮನಾಬಾದ್ ಬಂದ್ಗೆ ಕರೆ ನೀಡಲಾಗಿದೆ. ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ನಡೆದ ಸಭೆಯಲ್ಲಿ ಮಾತನಾಡಿದ ದಲಿತ ಮುಖಂಡ ಬಾಬು ಟೈಗರ್, ಈ ಹೋರಾಟ ಯಾವುದೇ ಜಾತಿ ಸಮುದಾಯದ ವಿರುದ್ಧವಲ್ಲ. ನಮ್ಮ ಸಮುದಾಯದ ಮೇಲೆ ಆಗಿರುವ ಅನ್ಯಾಯದ ವಿರುದ್ಧವಾಗಿದೆ. ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಈ ಹೋರಾಟ ನಡೆಸಲಾಗುತ್ತಿದೆ ಎಂದು ಹೇಳಿದರು. ರಾಜ್ಯ ಸರ್ಕಾರದಲ್ಲಿರುವ ನಮ್ಮ ಸಮಾಜದ ಶಾಸಕರು ಮತ್ತು ಸಚಿವರಿಗೆ ವರದಿಯಲ್ಲಿನ ಅನ್ಯಾಯ ಕಾಣುತ್ತಿಲ್ಲ ಎಂದು ಕಿಡಿಕಾರಿದರು. ಅಂಕುಶ್ ಗೋಖಲೆ ಮಾತನಾಡಿ, ಒಳ ಮೀಸಲಾತಿಯಿಂದ ಸಣ್ಣ ಪ್ರಮಾಣದಲ್ಲಿ ದೊರೆಯುವ ಸರ್ಕಾರಿ ಉದ್ಯೋಗಗಳಲ್ಲಿ ಮೊದಲ ಆದ್ಯತೆ ಎಡಗೈ ಸಮುದಾಯಕ್ಕೆ ಸಿಗುತ್ತದೆ. ಇದರಿಂದ ಶಿಕ್ಷಣ ಪಡೆದ ನಮ್ಮ ಸಮುದಾಯದ ಯುವಕರಿಗೆ ಅನ್ಯಾಯವಾಗುತ್ತದೆ. ಉದ್ಯೋಗ ವಂಚಿತರಾಗುವ ಪರಿಸ್ಥಿತಿ ನಿರ್ಮಾಣವಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು. ಬ್ರಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದ್ದು, ಸಮಾಜದ ನೌಕರರು, ಮಹಿಳೆಯರು, ಕಾರ್ಮಿಕರು ಹಾಗೂ ಯುವಕರು ಹಳ್ಳಿ ಹಳ್ಳಿಗಳಿಂದ ಭಾಗವಹಿಸಬೇಕು ಎಂದು ಕರೆ ನೀಡಿದರು. ಗಜೇಂದ್ರ ಕನಕಟ್ಕರ್ ಮಾತನಾಡಿ, ನಾಗಮೋಹನ ದಾಸ್ ವರದಿ ಜಾರಿಗೆ ಬಂದರೆ ಮುಂದಿನ 40 ವರ್ಷಗಳವರೆಗೆ ನಮ್ಮ ಸಮುದಾಯದವರಿಗೆ ಸರ್ಕಾರಿ ಉದ್ಯೋಗ ಸಿಗುವುದಿಲ್ಲ. ನಾವು ಅತ್ಯಂತ ಕಷ್ಟಪಟ್ಟು ಮುಂದೆ ಬಂದ ಸಮಾಜ. ಯಾವುದೇ ಕುಲ ಕಸುಬು ಇಲ್ಲದೆ ಬಿ. ಆರ್. ಅಂಬೇಡ್ಕರ್ ಅವರಂತೆ ಪರಿಶ್ರಮದಿಂದ ಬೆಳೆಯುತ್ತಿದ್ದೇವೆ. ಪ್ರತಿಯೊಬ್ಬರೂ ಜವಾಬ್ದಾರಿಯುತವಾಗಿ ಪ್ರತಿಭಟನೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು. ಈ ಸಂದರ್ಭದಲ್ಲಿ ಲಕ್ಷ್ಮಿ ಪುತ್ರ ಮಾಳಗೆ, ವೀರಪ್ಪ ಧೂಮ್ಮನಸೂರ್, ಸುರೇಶ್ ಘಾಂಗ್ರೆ, ರವಿ ಹೊಸಳ್ಳಿ, ರಾಹುಲ್ ಉದ್ದಾ, ಗೌತಮ್ ಚೌವ್ಹಾಣ್ ಹಾಗೂ ಶಿವಾನಂದ್ ಹುಣಸಗೇರಾ ಸೇರಿದಂತೆ ಹಲವರು ಉಪಸ್ಥಿತರಿದ್ದರು.
Bidar | ಸಹಕಾರಿ ಸಂಸ್ಥೆಗಳಲ್ಲಿ ಪಾರದರ್ಶಕತೆ ಅಗತ್ಯ : ಗುರುನಾಥ ಜ್ಯಾಂತಿಕರ್
ಬೀದರ್ : ಸಹಕಾರಿ ಸಂಸ್ಥೆಗಳು ಲಾಭದಾಯಕವಾಗಬೇಕಾದರೆ ದುಂದು ವೆಚ್ಚಕ್ಕೆ ಕಡಿವಾಣ ಹಾಕುವುದು, ಪಾರದರ್ಶಕ ಆಡಳಿತ ಮತ್ತು ಆಡಳಿತ ಮಂಡಳಿ ದಿನನಿತ್ಯದ ವ್ಯವಹಾರಗಳ ಮೇಲೆ ನಿಗಾ ವಹಿಸುವುದು ಅತ್ಯವಶ್ಯಕ ಎಂದು ಸಂಯುಕ್ತ ಸಹಕಾರಿಯ ನಿರ್ದೇಶಕ ಗುರುನಾಥ್ ಜ್ಯಾಂತಿಕರ್ ಹೇಳಿದರು. ನಗರದ ಕಲ್ಯಾಣ ಪತ್ತಿನ ಸೌಹಾರ್ದ ಸಹಕಾರಿ ಸಾಮರ್ಥ್ಯ ತರಬೇತಿ ಕೇಂದ್ರದಲ್ಲಿ ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿ., ಕಲಬುರಗಿ ಪ್ರಾಂತ ಹಾಗೂ ಬೀದರ್ ಜಿಲ್ಲಾ ಸಂಪರ್ಕ ಕಛೇರಿ ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ ಜಿಲ್ಲೆಯ ನಷ್ಟದಲ್ಲಿರುವ ಸೌಹಾರ್ದ ಸಹಕಾರಿಗಳಿಗಾಗಿ ವ್ಯವಹಾರ ಅಭಿವೃದ್ಧಿ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಗುಣಾತ್ಮಕ ಸಹಕಾರಿಗಳಿಂದ ಮಾತ್ರ ಸದೃಢ ಮತ್ತು ಸಮರ್ಥ ಭಾರತದ ಅಭಿವೃದ್ಧಿ ಸಾಧ್ಯವಿದೆ ಎಂದು ಅವರು ಅಭಿಪ್ರಾಯಪಟ್ಟರು. ವಿವಿಧ ಉದಾಹರಣೆಗಳ ಮೂಲಕ ಮಾಹಿತಿ ನೀಡಿ, ಸಮಸ್ಯೆಗಳಿಗೆ ಬಲಿಯಾಗದಂತೆ ಮುನ್ನೆಚ್ಚರಿಕೆ ವಹಿಸುವಂತೆ ಕರೆ ನೀಡಿದರು. ಜಿಲ್ಲಾ ಸೌಹಾರ್ದ ಸಹಕಾರಿಗಳ ಒಕ್ಕೂಟದ ನಿರ್ದೇಶಕ ನಾಗಶೆಟ್ಟಿ ಪಾಟೀಲ್ ಮಾತನಾಡಿ, ಸಹಕಾರಿಗಳ ವ್ಯವಹಾರ ಅಭಿವೃದ್ಧಿಗೆ ಅನುಕೂಲವಾಗುವ ಉದ್ದೇಶದಿಂದ ತರಬೇತಿ ಆಯೋಜಿಸಲಾಗಿದ್ದು, ಎಲ್ಲರೂ ಇದರ ಸದುಪಯೋಗ ಪಡೆಯಬೇಕು ಎಂದು ಹೇಳಿದರು. ಜಿಲ್ಲೆಯ 30 ಸೌಹಾರ್ದ ಸಹಕಾರಿಗಳಿಂದ ಸುಮಾರು 60 ಪ್ರತಿನಿಧಿಗಳು ಹಾಗೂ ಸಿಬ್ಬಂದಿ ಭಾಗವಹಿಸಿ ತರಬೇತಿಯ ಪ್ರಯೋಜನ ಪಡೆದರು. ಈ ಸಂದರ್ಭದಲ್ಲಿ ಶ್ರೀಕಾಂತ್ ಸ್ವಾಮಿ, ಜಿಲ್ಲಾ ಸೌಹಾರ್ದ ಅಭಿವೃದ್ಧಿ ಅಧಿಕಾರಿ ರಾಜೇಶ್ ಕೆ.ಎಂ., ಸಂಜಯ್ ಕ್ಯಾಸಾ, ಶಶಿಧರ್ ಎಲೆ ಹಾಗೂ ಡಾ. ಪೃಥ್ವೀರಾಜ್ ಲಕ್ಕಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಕಲಬುರಗಿ | 13ನೆಯ ಕಲಬುರಗಿ ಚಿತ್ರಸಂತೆಗೆ ಅದ್ಧೂರಿ ಚಾಲನೆ
ಕಲಬುರಗಿ: ಕಲೆ ಎಂಬುದು ಬದುಕಿನ ಅಭಿವ್ಯಕ್ತಿ. ಜಿಲ್ಲೆಯಲ್ಲಿ ನಾಟಕೋತ್ಸವ ಮತ್ತು ಚಿತ್ರಸಂತೆಗಳು ಏಕಕಾಲದಲ್ಲಿ ನಡೆಯುತ್ತಿರುವುದು ಕಲಾ ಪ್ರೇಮಿಗಳಿಗೆ ಹಬ್ಬದಂತಾಗಿದೆ ಎಂದು ಜಿಲ್ಲಾಧಿಕಾರಿ ಬಿ.ಫೌಝಿಯಾ ತರನ್ನುಮ್ ಹೇಳಿದರು. ನಗರದಲ್ಲಿ ರವಿವಾರ ಕನ್ನಡ ಭವನದ ಆವರಣದಲ್ಲಿರುವ ಬಾಪೂಗೌಡ ದರ್ಶನಾಪುರ ರಂಗಮಂದಿರದಲ್ಲಿ ದೃಶ್ಯಬೆಳಕು ಸಾಂಸ್ಕೃತಿಕ ಸಂಸ್ಥೆ, ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರುಗಳ ಸಹಯೋಗದೊಂದಿಗೆ ಆಯೋಜಿಸಲಾಗಿದ್ದ 13ನೇ ಕಲಬುರಗಿ ಚಿತ್ರ ಸಂತೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಜಿಲ್ಲೆಯು ಪ್ರತಿಭೆಗಳ ಗಣಿಯಾಗಿದ್ದು, ಇಲ್ಲಿನ ಕಲಾವಿದರಲ್ಲಿ ಅದ್ಭುತವಾದ ಹುಮ್ಮಸ್ಸು ಮತ್ತು ಕಲಾ ನೈಪುಣ್ಯತೆ ಇದೆ. ಇಂತಹ ವೇದಿಕೆಗಳು ಕಲಾವಿದರ ಪ್ರತಿಭೆಯನ್ನು ಜಗತ್ತಿಗೆ ಪರಿಚಯಿಸಲು ಸಹಕಾರಿಯಾಗುತ್ತವೆ ಎಂದರು. ಹಿರಿಯ ಚಿತ್ರಕಲಾವಿದರು ಮತ್ತು ಚೈತನ್ಯಮಯ ಟ್ರಸ್ಟ್ ನಿರ್ದೇಶಕ ಎ.ಎಸ್ ಪಾಟೀಲ, ಕಲ್ಯಾಣ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಅಧ್ಯಕ್ಷ ಶರಣಬಸಪ್ಪ ಪಪ್ಪಾ, ಬಿಸಿಲು ಆರ್ಟ ಗ್ಯಾಲರಿ ಮುಖ್ಯಸ್ಥ ವಿ. ಬಿ. ಬಿರಾದಾರ ಮಾತನಾಡಿದರು. ಈ ಸಂದರ್ಭದಲ್ಲಿ ಹಿರಿಯ ಕಲಾವಿದರು ಮತ್ತು ಕರ್ನಾಟಕ ಲಲಿತಕಲ ಅಕಾಡೆಮಿ ಸದಸ್ಯ ಬಸವರಾಜ್ ಎಲ್. ಜಾನೆ, ರೋಟರಿ ಕ್ಲಬ್ ಆಫ್ ಗುಲಬರ್ಗಾ ನಾರ್ಥ ಅಧ್ಯಕ್ಷ ಆನಂದ ದಂಡೋತಿ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷ ವಿಜಯಕುಮಾರ ಪಾಟೀಲ್ ತೇಗಲತಿಪ್ಪಿ, ಖ್ಯಾತ ವಾಣಿಜ್ಯೋದ್ಯಮಿ ರಾಧೇಶ್ಯಾಮ ಠಾಕೂರ, ದಿ ಆರ್ಟ್ ಇಂಟ್ರಿಗೇಶನ್ ಫೈನ್ ಆರ್ಟ್ ಕಾಲೇಜ್ ಪ್ರಾಚಾರ್ಯ ಎಮ್.ಎಚ್ ಬೆಳಮಗಿ, ಸಂಯೋಜಕ ಡಾ. ಪರಶುರಾಮ್ ಪಿ. ಉಪಸ್ಥಿತರಿದ್ದರು.
ಭಾರತದ ಬಗ್ಗೆ ಹೆಮ್ಮೆಯ ಮಾತುಗಳನ್ನಾಡಿದ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು | Israel Prime Minister
ಭಾರತ ಹಾಗೂ ಇಸ್ರೇಲ್ ಸಂಬಂಧ ಅತ್ಯುತ್ತಮ ಹಂತದಲ್ಲಿ ಇದ್ದು, ಎರಡೂ ದೇಶಗಳು ಹಲವಾರು ವಿಚಾರಗಳಲ್ಲಿ ಒಟ್ಟಾಗಿ ಸಾಗುತ್ತಿವೆ. ವ್ಯಾಪಾರ &ವಹಿವಾಟು ಜೊತೆಗೆ, ಇಸ್ರೇಲ್ ಜೊತೆಗೆ ಭಾರತವು ಅವಿನಾಭಾವ ನಂಟು ಹೊಂದಿದೆ. ಅದರಲ್ಲೂ ಮಧ್ಯಪ್ರಾಚ್ಯ ಭಾಗದಲ್ಲಿ ಇಸ್ರೇಲ್ ಮತ್ತು ಇತರ ದೇಶಗಳ ನಡುವೆ ತಿಕ್ಕಾಟ ನಡೆಯುವಾಗ ಕೂಡ, ಭಾರತ ಸೂಕ್ತವಾದ ಹೆಜ್ಜೆ ಇಟ್ಟು ಇಸ್ರೇಲ್ ಜೊತೆಗಿನ ಸ್ನೇಹ
ಜೇವರ್ಗಿ | ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಅನಿರ್ದಿಷ್ಟಾವಧಿ ಧರಣಿ
ತಾಲೂಕಿನ ಹರನೂರು ಗ್ರಾಮ ಪಂಚಾಯತ್ ಕಚೇರಿ ಮುಂದೆ ರೈತರ ವಿವಿಧ ಜನಪರ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕಳೆದ 10 ದಿನಗಳಿಂದ ಹಗಲು–ರಾತ್ರಿ ಅನಿರ್ದಿಷ್ಟ ಕಾಲ ಧರಣಿ ಸತ್ಯಾಗ್ರಹ ಮುಂದುವರಿದಿದೆ. ಕರ್ನಾಟಕ ಪ್ರಾಂತ ರೈತ ಸಂಘದ ಹರನೂರು ಹಾಗೂ ರೇವನೂರು ಗ್ರಾಮ ಘಟಕಗಳ ನೇತೃತ್ವದಲ್ಲಿ ನಡೆಯುತ್ತಿರುವ ಈ ಪ್ರತಿಭಟನೆಯಲ್ಲಿ, ಬೆಳೆ ಪರಿಹಾರ ಸಿಗದೆ ಸಂಕಷ್ಟದಲ್ಲಿರುವ ರೈತರಿಗೆ ತಕ್ಷಣ ಪರಿಹಾರ ಧನ ವಿತರಿಸಬೇಕು ಹಾಗೂ ಬಾಕಿ ಉಳಿದಿರುವ ವಿಮೆ ಹಣ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಲಾಗಿದೆ. ಇತ್ತೀಚೆಗೆ ತೊಗರಿ ಬೆಳೆಗಳಿಗೆ ನಟೆ ರೋಗ, ಗೊಡ್ಡು ರೋಗ ಸೇರಿದಂತೆ ವಿವಿಧ ರೋಗಬಾಧೆಗಳು ಕಾಣಿಸಿಕೊಂಡಿದ್ದು, ರೈತರು ಭಾರೀ ಆರ್ಥಿಕ ನಷ್ಟ ಅನುಭವಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಉತ್ತಮ ಗುಣಮಟ್ಟದ ಸಂಸ್ಕರಿತ ತೊಗರಿ ಬೀಜವನ್ನು ಜೂನ್–ಜುಲೈ ತಿಂಗಳಲ್ಲಿ ಸರ್ಕಾರದಿಂದ ವಿತರಿಸಬೇಕು ಎಂದು ಹೋರಾಟಗಾರರು ಒತ್ತಾಯಿಸಿದ್ದಾರೆ. ರೈತರು ಬೆಳೆಯುವ ಎಲ್ಲಾ ಬೆಳೆಗಳಿಗೆ ನ್ಯಾಯಸಮ್ಮತ ಬೆಂಬಲ ಬೆಲೆ ನಿಗದಿಪಡಿಸಬೇಕು ಹಾಗೂ ಎಂ.ಎಸ್.ಸ್ವಾಮಿನಾಥನ್ ವರದಿ ಜಾರಿಗೆ ತರಬೇಕು. ಕೃಷಿ ಉತ್ಪಾದನಾ ವೆಚ್ಚದ ಆಧಾರದ ಮೇಲೆ ಲಾಭದಾಯಕ ಬೆಲೆ ನೀಡಲು ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಲಾಗಿದೆ. 2005ರ ಉದ್ಯೋಗ ಖಾತ್ರಿ ಕಾಯ್ದೆಯನ್ನು ಬಲಪಡಿಸಿ, ಒಂದು ದಿನದ ಕೂಲಿಯನ್ನು 700 ರೂ. ಗೆ ಹೆಚ್ಚಿಸಿ ವರ್ಷಕ್ಕೆ ಕನಿಷ್ಠ 250 ದಿನಗಳ ಕೆಲಸದ ಅವಕಾಶ ಒದಗಿಸಬೇಕು. ಇತ್ತೀಚೆಗೆ ಜಾರಿಗೆ ತಂದಿರುವ ಹೊಸ ಯೋಜನೆಗೆ ಸಂಬಂಧಿಸಿದ ಬದಲಾವಣೆಗಳನ್ನು ಹಿಂಪಡೆಯಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಸುಭಾಷ್ ಹೊಸಮನಿ, ಮಲ್ಕಪ್ಪ ಹರನೂರು, ಶಂಕ್ರಪ್ಪ ಮ್ಯಾಗೇರಿ, ಶ್ರೀಕಾಂತ್ ದಾಸರ್, ಸತೀಶ್ ರಾಜು, ಸಾತ್ ಕೇಡ (ರೇವನೂರು), ಬಸಮ್ಮ ಮ್ಯಾಗೇರಿ, ನಾಗಮ್ಮ ಅನ್ನೂರ್, ಮಲ್ಲಮ್ಮ ಕಟ್ಟಿಮನಿ, ಶಶಿಕಲಾ ಕಟ್ಟಿಮನಿ, ಮಾನಪ್ಪ ಚಳಗೇರಿ, ಉಸ್ಮಾನ್ ಅಲಿ ಇನಾಮ್ದಾರ್ ಸೇರಿದಂತೆ ಹಲವರು ಭಾಗವಹಿಸಿದ್ದರು.
Ind Vs Sa Highlights- ಹರಿಣಗಳ ಎದುರು ಪರದಾಡಿದ ಟೀಂ ಇಂಡಿಯಾ; ಇನ್ನು ಸೆಮಿಫೈನಲ್ ತಲುಪಲು ದಾರಿ ಯಾವುದಯ್ಯಾ?
ಅಹ್ಮದಾಬಾದ್: ಐಸಿಸಿ ನಲ್ಲಿ ಭಾರತದ ಅಜೇಯ ಓಟಕ್ಕೆ ದಕ್ಷಿಣ ಆಫ್ರಿಕಾ ಬ್ರೇಕ್ ಹಾಕಿದೆ. ಈ ಮೂಲಕ 2024ರ ಆವೃತ್ತಿಯ ಫೈನಲ್ ನಲ್ಲಾದ ಸೋಲಿಗೆ ಸೇಡು ತೀರಿಸಿಕೊಂಡಿದೆ. ಪಂದ್ಯದ ಆರಂಭದಲ್ಲಿ ಸಿಕ್ಕ ಯಶಸ್ಸನ್ನು ಗೆಲುವನ್ನಾಗಿ ಪರಿವರ್ತಿಸಲು ಸಾಧ್ಯವಾಗದ ಭಾರತ ತಂಡ 76 ರನ್ ಗಳಷ್ಟು ದೊಡ್ಡ ಅಂತರದಿಂದ ಸೋಲುವ ಮೂಲಕ ಇದೀಗ ಸೆಮಿಫೈನಲ್ ಹಾದಿಯನ್ನು ಕಠಿಣ ಮಾಡಿಕೊಂಡಿದೆ. ಸದ್ಯಕ್ಕೆ ಮುಂದಿನ ಪಂದ್ಯಗಳಲ್ಲಿ ಜಿಂಬಾಬ್ವೆ ಮತ್ತು ವೆಸ್ಟ್ ಇಂಡೀಸ್ ವಿರುದ್ಧ ದೊಡ್ಡ ಗೆಲುವು ಮಾತ್ರ ಭಾರತವನ್ನು ಅಂಕಪಟ್ಟಿಯಲ್ಲಿ ಸುರಕ್ಷಿತವಾಗಿಡಬಹುದು. ಯಾಕೆಂದರೆ ದಕ್ಷಿಣ ಆಪ್ರಿಕಾ ವಿರುದ್ಧ ಭಾರತ ತಂಡ ದೊಡ್ಡ ಅಂತರದಿಂದ ಸೋತಿರುವುದರಿಂದ ರನ್ ರೇಟ್ ಸಹ ಕುಸಿದಿದೆ. ಇದು ಅಂಕಪಟ್ಟಿಯಲ್ಲಿ ದೊಡ್ಡ ವ್ಯತ್ಯಾಸ ತರಬಲ್ಲುದು. ಇನ್ನು ಯಾವುದಾದರೊಂದು ಪಂದ್ಯ ಮಳೆಗೆ ಆಹುತಿಯಾದಲ್ಲಿ ತಂಡ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಲಿದೆ.(ಅಂಕಪಟ್ಟಿ)ಅಹ್ಮದಾಬಾದ್ ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಸೂಪರ್ ಸಿಕ್ಸ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ದಕ್ಷಿಣ ಆಫ್ರಿಕಾ ತಂಡ ನಿಗದಿತ 20 ಓವರ್ ಗಳಲ್ಲಿ 7 ವಿಕೆಟ್ ಕಳೆದುಕೊಂಡು 187 ರನ್ ಗಳಿಸಿತು. ಇದಕ್ಕುತ್ತರವಾಗಿ ಭಾರತ ತಂಡ 18.5 ಓವರ್ ಗಳಲ್ಲಿ 111 ರನ್ ಗಳಿಗೆ ಆಲೌಟ್ ಆಯಿತು. ಮಧ್ಯಮ ಕ್ರಮಾಂಕದಲ್ಲಿ ಶಿವಂ ದುಬೆ ಉತ್ತಮ ಪ್ರಯತ್ನವನ್ನೇ ನಡೆಸಿದರೂ ಉಳಿದ ಬ್ಯಾಟರ್ ಗಳು ವಿಫಲರಾಗಿದ್ದರಿಂದ ಯಾವುದೇ ರೀತಿಯ ಪ್ರಯೋಜನವಾಗಲಿಲ್ಲ. (). ಇದಕ್ಕೂ ಮೊದಲು ಟಾಸ್ ಸೋತು ಬ್ಯಾಟಿಂಗ್ ಆಯ್ದುಕೊಂಡ ದಕ್ಷಿಣ ಆಫ್ರಿಕಾ ತಂಡ ಭಾರತದ ವೇಗಿಗಳಾದ ಅರ್ಶದೀಪ್ ಸಿಂಗ್ ಮತ್ತು ಜಸ್ಪ್ರೀತ್ ಬುಮ್ರಾ ಅವರು ವಿಪರೀತ ಕಾಟ ನೀಡಿದರು. ಪರಿಣಾಮ 20 ರನ್ ಆಗುವಷ್ಟರಲ್ಲಿಯೇ ದಕ್ಷಿಣ ಆಫ್ರಿಕಾ ತಂಡ 3 ವಿಕೆಟ್ ಗಳನ್ನು ಕಳೆದುಕೊಂಡು ತೀವ್ರ ಸಂಕಷ್ಟಕ್ಕೆ ಸಿಲುಕಿತ್ತು. ಆದರೆ ಡಿವಾಲ್ಡ್ ಬ್ರೇವಿಸ್ ಮತ್ತು ಡೇವಿಡ್ ಮಿಲ್ಲರ್ ಅವರು 4ನೇ ವಿಕೆಟ್ ಗೆ 97 ರನ್ ಗಳ ಜೊತೆಯಾಟವಾಡಿದ್ದು ಪಂದ್ಯದ ಚಿತ್ರಣವನ್ನೇ ಬದಲಿಸಿತು. ಸಂಕ್ಷಿಪ್ತ ಸ್ಕೋರ್ ದಕ್ಷಿಣ ಆಫ್ರಿಕಾ 20 ಓವರ್ ಗಳಲ್ಲಿ 187/7, ಡಿವಾಲ್ಡ್ ಬ್ರೆವಿಸ್ 45(29), ಡೇವಿಡ್ ಮಿಲ್ಲರ್ (63), ತ್ರಿಸ್ಟನ್ ಸ್ಟಬ್ಸ್ 44(24), ಜಸ್ಪ್ರೀತ್ ಬುಮ್ರಾ 15ಕ್ಕೆ 3, ಅರ್ಶದೀಪ್ ಸಿಂಗ್ 28ಕ್ಕೆ 2 ಭಾರತ 18.5 ಓವರ್ ಗಳಲ್ಲಿ 111ಕ್ಕೆ ಆಲೌಟ್, ಶಿವಂ ದುಬೆ42(37), ಸೂರ್ಯಕುಮಾರ್ ಯಾದವ್ 18(22), ಹಾರ್ದಿಕ್ ಪಾಂಡ್ಯ 18(17), ಮಾರ್ಕೋ ಯಾನ್ಸನ್ 22ಕ್ಕೆ 4, ಕೇಶವ್ ಮಹಾರಾಜ್ 24ಕ್ಕೆ 3, ಕಾರ್ಬಿನ್ ಬಾಷ್ 12ಕ್ಕೆ 2.
Kalaburagi | ಕಲಿಕಾ ಸಾಮರ್ಥ್ಯದೊಂದಿಗೆ ಸಾಧನೆಗೆ ಪ್ರೋತ್ಸಾಹಿಸಿ: ಪ್ರೊ. ರಮೇಶ್ ಲಂಡನಕರ್
ಕಲಬುರಗಿ: ಮಕ್ಕಳಲ್ಲಿ ಕಲಿಕಾ ಸಾಮರ್ಥ್ಯದ ಜೊತೆಗೆ ಗುರಿ ಸಾಧನೆಗೆ ಪ್ರೋತ್ಸಾಹ ನೀಡುವುದು ಶಿಕ್ಷಕರ ಕರ್ತವ್ಯ. ಪಾಠದ ಜೊತೆಗೆ ಓದುವ ಆಸಕ್ತಿ ಮತ್ತು ಆತ್ಮವಿಶ್ವಾಸ ಬೆಳೆಸಬೇಕು ಎಂದು ಗುಲ್ಬರ್ಗಾ ವಿಶ್ವವಿದ್ಯಾಲಯದ ಕುಲಸಚಿವ ಪ್ರೊ.ರಮೇಶ ಲಂಡನಕರ್ ಹೇಳಿದರು. ಗುಲ್ಬರ್ಗಾ ವಿಶ್ವವಿದ್ಯಾಲಯದ ಕನ್ನಡ ಪೂರ್ವ ಪ್ರಾಥಮಿಕ, ಹಿರಿಯ ಪ್ರಾಥಮಿಕ ಮತ್ತು ಪ್ರೌಢ ಶಾಲೆ ಮಹಾತ್ಮ ಗಾಂಧಿ ಸಭಾಂಗಣದಲ್ಲಿ ಆಯೋಜಿಸಿದ ಶಾಲಾ ವಾರ್ಷಿಕೋತ್ಸವ ಸಮಾರಂಭವನ್ನು ಸಸಿಗೆ ನೀರು ಹಾಕುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಪೋಷಕರು ಮನೆಯಲ್ಲಿ ಮಕ್ಕಳ ಕಲಿಕೆ ಮತ್ತು ಅಭ್ಯಾಸದ ಕಡೆಗೆ ಗಮನಹರಿಸಬೇಕು. ಓದಿನಲ್ಲಿ ಆಸಕ್ತಿ, ಕಲಿಕೆಯಲ್ಲಿ ಏಕಾಗ್ರತೆ, ಪರೀಕ್ಷಾ ಸಿದ್ಧತೆ ಕುರಿತು ಮಾರ್ಗದರ್ಶನ ಮಾಡಬೇಕು. ಉತ್ತಮ ಆಲೋಚನೆ ಮೂಲಕ ಶಿಕ್ಷಣದ ಮಹತ್ವವನ್ನು ತಿಳಿಸಬೇಕು ಎಂದರು. ಸಿಂಡಿಕೇಟ್ ಸದಸ್ಯ ಎಸ್.ಪಿ.ಸುಳ್ಳದ ಮಾತನಾಡಿ, ಮಕ್ಕಳು ಕಲಿಕೆ ಸಾಧನೆಯಲ್ಲಿ ಶಿಕ್ಷಕರು ಕಾಳಜಿ ತೋರಿಸಬೇಕು. ಬಡ ಮಕ್ಕಳು ಸರ್ಕಾರಿ ಶಾಲೆಗಳನ್ನೇ ಅವಲಂಬಿಸಿದ್ದಾರೆ. ಅವರ ಉಜ್ವಲ ಭವಿಷ್ಯ ಶಿಕ್ಷಕರ ಕೈಲಿದೆ. ಅಗತ್ಯವಿರುವ ಸೌಲಭ್ಯಗಳನ್ನು ನೀಡುವ ಮೂಲಕ ಶಿಕ್ಷಕರು ಪ್ರೋತ್ಸಾಹ ನೀಡುವ ಮೂಲಕ ಶಾಲಾ ಅಭಿವೃದ್ಧಿ ಕಡೆಗೂ ಆಸಕ್ತಿ ವಹಿಸಬೇಕು ಎಂದರು. ಪ್ರಾಥಮಿಕ ಶಾಲೆಯ ಮುಖ್ಯೋಪಧ್ಯಾಯರಾದ ಪಿ.ಚಂದ್ರಕಲಾ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪ್ರೌಢಶಾಲೆ ಮುಖ್ಯೋಪಧ್ಯಾಯ ಸೂರ್ಯಕಾಂತ ಅಮರೆ ಅತಿಥಿ ಗಣ್ಯರನ್ನು ಸ್ವಾಗತಿಸಿ ವಾರ್ಷಿಕ ವರದಿ ಮಂಡಿಸಿದರು. ಹಣಕಾಸು ಅಧಿಕಾರಿ ಜಯಾಂಬಿಕಾ, ಶಾಲಾ ಸುಧಾರಣಾ ಸಮಿತಿ ಸದಸ್ಯರಾದ ಪ್ರೊ. ದೇವಿದಾಸ ಮಾಲೆ ಬಿ.ಎಂ. ರುದ್ರವಾಡಿ, ಪ್ರಾಥಮಿಕ ಮತ್ತು ಪ್ರೌಢ ಶಾಲೆ ಮೇಲುಸ್ತುವಾರಿಗಳಾದ ಡಾ. ಚಂದ್ರಕಾoತ ಬಿರಾದಾರ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಸಿಂಡಿಕೇಟ ಸದಸ್ಯರು, ವಿದ್ಯಾವಿಷಯಕ ಪರಿಷತ್ ಸದಸ್ಯರು, ಶಾಲಾ ಸುಧಾರಣಾ ಸಮಿತಿಯ ಸದಸ್ಯರು, ಶಿಕ್ಷಕ ಮತ್ತು ಶಿಕ್ಷಕೇತರ ಸಿಬ್ಬಂದಿ, ವಿದ್ಯಾರ್ಥಿ, ವಿದ್ಯಾರ್ಥಿನಿಯರು, ಪಾಲಕರು, ಪೋಷಕರು, ವಿಶ್ವವಿದ್ಯಾಲಯದ ಶಿಕ್ಷಕ ಮತ್ತು ಶಿಕ್ಷಕೇತರ ಸಿಬ್ಬಂದಿಗಳು ಹಾಗೂ ನಾಗರಿಕರು ಭಾಗವಹಿಸಿದ್ದರು. ಶಿವಕುಮಾರ್ ಸಾವಳಗಿ ಹಾಗೂ ಜಗದೇವಿ ಬಿರಾದಾರ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು. ವಿದ್ಯಾರ್ಥಿಗಳು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರದರ್ಶಿಸಿದರು. ಅಮೃತಾ ಪ್ರಾರ್ಥಿಸಿದರು. ಶಿಕ್ಷಕ ಸೂರ್ಯಕಾಂತ್ ಹದಗಲ್ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.
Kalaburagi | ಕಷ್ಟಗಳನ್ನು ಜಯಿಸಿ ಐಪಿಎಸ್ ಆಗಿದ್ದೇನೆ: ಪೊಲೀಸ್ ಆಯುಕ್ತ ಡಾ.ಶರಣಪ್ಪ ಢಗೆ
ಹಾಗರಗುಂಡಿಗಿಯ ಸರಕಾರಿ ಶಾಲೆಯಲ್ಲಿ ವಾರ್ಷಿಕ ಸ್ನೇಹ ಸಮ್ಮೇಳನ
ಆಳಂದ | ಬಾಹ್ಯಾಕಾಶ-ಏರೋಸ್ಪೇಸ್ ಕ್ಷೇತ್ರದಲ್ಲಿ ಅಪಾರ ಅವಕಾಶ : ಇಸ್ರೋ ವಿಜ್ಞಾನಿ ಡಾ.ಪುನೀತ್
ಆಳಂದ : ಬಾಹ್ಯಾಕಾಶ ತಂತ್ರಜ್ಞಾನ ಮತ್ತು ಏರೋಸ್ಪೇಸ್ ಎಂಜಿನಿಯರಿಂಗ್ ಕ್ಷೇತ್ರಗಳಲ್ಲಿ ಅಪಾರ ಅವಕಾಶಗಳಿದ್ದು, ವಿದ್ಯಾರ್ಥಿಗಳು ಬಾಹ್ಯಾಕಾಶ ಸಂಶೋಧನೆ ಮತ್ತು ನಾವೀನ್ಯತೆಯಲ್ಲಿ ವೃತ್ತಿಜೀವನವನ್ನು ಸಕ್ರಿಯವಾಗಿ ಮುಂದುವರಿಸಿ, ಭಾರತದ ಬಾಹ್ಯಾಕಾಶ ವಿಸ್ತರಣೆಯ ಭಾಗವಾಗಬೇಕು ಎಂದು ಇಸ್ರೋ ವಿಜ್ಞಾನಿ ಹಾಗೂ ಐಇಇಇ ಏರೋಸ್ಪೇಸ್ ಮತ್ತು ಎಲೆಕ್ಟ್ರಾನಿಕ್ ಸಿಸ್ಟಮ್ಸ್ ಸೊಸೈಟಿಯ (ಎಇಎಸ್ಎಸ್) ಜಾಗತಿಕ ಉಪಾಧ್ಯಕ್ಷ ಡಾ.ಪುನೀತ್ ಕುಮಾರ್ ಮಿಶ್ರಾ ಹೇಳಿದರು. ತಾಲೂಕಿನ ಕಡಗಂಚಿ ಬಳಿಯ ಸಿಯುಕೆ (ಸೆಂಟ್ರಲ್ ಯುನಿವರ್ಸಿಟಿ ಆಫ್ ಕರ್ನಾಟಕ) ಆವರಣದಲ್ಲಿ ಆಯೋಜಿಸಿದ್ದ ಐಇಇಇ ಏರೋಸ್ಪೇಸ್ ಮತ್ತು ಎಲೆಕ್ಟ್ರಾನಿಕ್ ಸಿಸ್ಟಮ್ಸ್ ಸೊಸೈಟಿ (ಎಇಎಸ್ಎಸ್) ವಿದ್ಯಾರ್ಥಿ ಶಾಖೆಯ ಉದ್ಘಾಟನಾ ಸಮಾರಂಭ ಹಾಗೂ “ರೇಡಿಯೋ ಫ್ರೀಕ್ವೆನ್ಸಿ ಮತ್ತು ಮೈಕ್ರೋವೇವ್ ಸಿಸ್ಟಮ್ ವಿನ್ಯಾಸ: ಸಿಮ್ಯುಲೇಶನ್ನಿಂದ ಮಾಪನದವರೆಗೆ” ಎಂಬ ವಿಷಯದ ಐದು ದಿನಗಳ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಬಾಹ್ಯಾಕಾಶ ಸಂಶೋಧನೆ, ಉಪಗ್ರಹ ತಂತ್ರಜ್ಞಾನ, ಸಂವಹನ ವ್ಯವಸ್ಥೆಗಳು ಹಾಗೂ ನವೀನ ಸಂಶೋಧನಾ ಕ್ಷೇತ್ರಗಳಲ್ಲಿ ದೇಶದ ಯುವ ಪ್ರತಿಭೆಗಳಿಗೆ ವಿಶಾಲ ಅವಕಾಶಗಳಿದ್ದು, ಪ್ರಾಯೋಗಿಕ ಜ್ಞಾನ ಹಾಗೂ ಕೈಗಾರಿಕಾ ಅನುಭವವನ್ನು ಹೊಂದಿಕೊಳ್ಳುವ ಮೂಲಕ ವಿದ್ಯಾರ್ಥಿಗಳು ಜಾಗತಿಕ ಮಟ್ಟದಲ್ಲಿ ತಮ್ಮ ಗುರುತನ್ನು ಮೂಡಿಸಬಹುದು ಎಂದು ಅವರು ಸಲಹೆ ನೀಡಿದರು. ಅತಿಥಿಗಳಾಗಿ ಭಾಗವಹಿಸಿದ್ದ ಟ್ರೆಲ್ಲಿಸೈನ್ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ನ ಸ್ಥಾಪಕ ಹಾಗೂ ನಿರ್ದೇಶಕ ಮೆಹ್ತಾ ಎಸ್.ಡಿ. ಮಾತನಾಡಿದರು. ಸಿಯುಕೆಯ ಕುಲಪತಿ ಪ್ರೊ.ಬಟ್ಟು ಸತ್ಯನಾರಾಯಣ ಅವರು ಅಧ್ಯಕ್ಷತೆ ವಹಿಸಿ, ಇಂಜಿನಿಯರಿಂಗ್ ನಿಕಾಯದ ಶೈಕ್ಷಣಿಕ ಹಾಗೂ ಸಂಶೋಧನಾ ಕೊಡುಗೆಗಳನ್ನು ಶ್ಲಾಘಿಸಿದರು. ವಿದ್ಯಾರ್ಥಿಗಳು ‘ವಿಕಸಿತ ಭಾರತ’ ಹಾಗೂ ರಾಷ್ಟ್ರ ನಿರ್ಮಾಣದ ರಾಷ್ಟ್ರೀಯ ದೃಷ್ಟಿಕೋನಕ್ಕೆ ಅನುಗುಣವಾಗಿ ನಾವೀನ್ಯತೆ ಮತ್ತು ಸಂಶೋಧನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು ಎಂದು ಅವರು ಕರೆ ನೀಡಿದರು. ಡಾ.ನೃಸಿಂಘ ಪ್ರಧಾನ್ ಕಾರ್ಯಕ್ರಮಕ್ಕೆ ಸ್ವಾಗತಿಸಿ ಉದ್ದೇಶವನ್ನು ವಿವರಿಸಿದರು. ಈ ಸಂದರ್ಭದಲ್ಲಿ ಪ್ರೊ.ಪ್ರಮೋದ್ ಕುಮಾರ್, ಪ್ರೊ.ರಾಜೀವ್ ಜೋಶಿ ಸೇರಿದಂತೆ ಇತರ ಅಧ್ಯಾಪಕರು, ಸಂಶೋಧಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲೆಯಲ್ಲಿ ಮತ್ತೆ ಕಾಡಾನೆ ದಾಳಿಗೆ ಮಹಿಳೆಯೊಬ್ಬರು ಬಲಿಯಾಗಿದ್ದಾರೆ. ಅಲ್ಲದೆ ಕಾಡಾನೆ ದಾಳಿಯಿಂದ ಬಲಿಯಾದ ಮಹಿಳೆಯ ಮೃತದೇಹವನ್ನು ಇರಿಸಿ ಪ್ರತಿಭಟನೆ ನಡೆಸಿದ ವೇಳೆ ಪರಿಸ್ಥಿತಿ ಉದ್ವಿಗ್ನಗೊಂಡಿದೆ. ಪ್ರತಿಭಟನಾಕಾರರ ಮೇಲೆ ಪೊಲೀಸರು ಲಘು ಲಾಠಿ ಚಾರ್ಜ್ ನಡೆಸಿದ್ದಾರೆ. ಈ ಘಟನೆ ಇದೀಗ ಜಿಲ್ಲೆಯಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಪ್ರತಿಭಟನೆ ವೇಳೆ ರೈತರು ಹಾಗೂ ಕಾರ್ಮಿಕರ ಮೇಲೆ ಲಘು
ಆಪರೇಶನ್ ಡೆಮಾಲಿಶ್ಮೆಂಟ್: ಭದ್ರತಾಪಡೆಗಳಿಂದ 200ಕ್ಕೂ ಅಧಿಕ ನಕ್ಸಲ್ ಸ್ಮಾರಕಗಳ ಧ್ವಂಸ
ಹೊಸದಿಲ್ಲಿ,ಫೆ.22: ನಕ್ಸಲ್ ಚಟುವಟಿಕೆಗಳ ವಿರುದ್ಧ ಕಾರ್ಯಾಚರಣೆ ನಿರ್ಣಾಯಕ ಹಂತ ತಲುಪಿರುವುದಾಗಿ ಭದ್ರತಾಪಡೆಗಳು ಘೋಷಿಸಿವೆ. ನಕ್ಸಲೀಯರು ತಮ್ಮ ನಾಯಕರ ಸ್ಮರಣಾರ್ಥವಾಗಿ ಹಾಗೂ ನಕ್ಸಲ್ ಸಿದ್ಧಾಂತಗಳನ್ನು ಪ್ರಚಾರ ಮಾಡಲು ಸ್ಥಾಪಿಸಿದ ಸ್ಮಾರಕಗಳನ್ನು ಧ್ವಂಸಗೊಳಿಸುವ ಕಾರ್ಯಾಚರಣೆಯನ್ನು ಭದ್ರತಾ ಪಡೆಗಳು ಇದೀಗ ಆರಂಭಿಸಿರುವುದಾಗಿ ತಿಳಿದುಬಂದಿದೆ. ‘ಆಪರೇಶನ್ ಡೆಮಾಲಿಶ್ಮೆಂಟ್’ ಎಂಬ ಹೆಸರಿನ ಈ ಕಾರ್ಯಾಚರಣೆಯಡಿ ಮಹಾರಾಷ್ಟ್ರ ಹಾಗೂ ಗಡಚಿರೋಳಿ ಜಿಲ್ಲೆಗಳಲ್ಲಿ ಈವರೆಗೆ ಸುಮಾರು 203 ನಕ್ಸಲ್ ಸ್ಮಾರಕಗಳನ್ನು ನಾಶಪಡಿಸಲಾಗಿದೆಯೆಂದು ಭದ್ರತಾಪಡೆಗಳ ಅಧಿಕಾರಿಗಳು ತಿಳಿಸಿದ್ದಾರೆ. ನಕ್ಸಲ್ ಚಟುವಟಿಕೆಗಳಿಂದ ಪೀಡಿತವಾದ ಈ ಎರಡು ರಾಜ್ಯಗಳಲ್ಲಿ ನಕ್ಸಲೀಯರ ಸ್ಮಾರಕಗಳ ಧ್ವಂಸ ಕಾರ್ಯಾಚರಣೆಯು ಅಭೂತಪೂರ್ವ ವೇಗವನ್ನು ಪಡೆದುಕೊಂಡಿತೆಂದು ಅಧಿಕಾರಿಗಳು ತಿಳಿಸಿದ್ದಾರೆ. ಚತ್ತೀಸ್ಗಡದಲ್ಲಿ 2024ರಲ್ಲಿ 8 ಹಾಗೂ 2025ರಲ್ಲಿ 11 ನಕ್ಸಲೀಯ ಸ್ಮಾರಕಗಳನ್ನು ನಾಶಪಡಿಸಲಾಗಿದೆ. ಆದರೆ 2026ನೇ ಇಸವಿಯಲ್ಲಿ ಸುಮಾರು 130 ಸ್ಮಾರಕಗಳನ್ನು ಧ್ವಂಸಗೊಳಿಸಲಾಗಿದ್ದು ಇದರೊಂದಿಗೆ ಕಳೆದ 3 ವರ್ಷಗಳಲ್ಲಿ ನೆಲಸಮಗೊಳಿಸಲಾದ ನಕ್ಸಲ್ ಸ್ಮಾರಕಗಳ ಸಂಖ್ಯೆ 149ಕ್ಕೇರಿದೆ. ಮಹಾರಾಷ್ಟ್ರದಲ್ಲಿ 2023ರಲ್ಲಿ ಒಂದು ಸ್ಮಾರಕವನ್ನು ಧ್ವಂಸಪಡಿಸಲಾಗಿದ್ದರೆ, 2024ರಲ್ಲಿ ಎರಡು ಹಾಗೂ 2025ರಲ್ಲಿ ಏಳು ಸ್ಮಾರಕಗಳನ್ನು ನಾಶಪಡಿಸಲಾಗಿದೆ. 2026ರಲ್ಲಿ ಅಧಿಕಾರಿಗಳು ಇಂತಹ 45 ನಿರ್ಮಾಣಗಳನ್ನು ತೆರವುಗೊಳಿಸಿದ್ದಾರೆ. ಇದರೊಂದಿಗೆ ಮಹಾರಾಷ್ಟ್ರದಲ್ಲಿ ನಾಶಪಡಿಸಲಾದ ನಕ್ಸಲ್ ಸ್ಮಾರಕಗಳ ಸಂಖ್ಯೆ 55ಕ್ಕೇರಿದೆ.
ಇರಾನ್ ಏಕೆ ಶರಣಾಗಿಲ್ಲ ಎಂದು ಟ್ರಂಪ್ ಪ್ರಶ್ನಿಸಿದ್ದಾರೆ: ಅಮೆರಿಕಾದ ರಾಯಭಾರಿ ಸ್ಟೀವ್ ವಿಟ್ಕಾಫ್
ವಾಷಿಂಗ್ಟನ್, ಫೆ.22: ಪರಮಾಣು ಒಪ್ಪಂದ ಮಾಡಿಕೊಳ್ಳುವಂತೆ ಒತ್ತಡ ಹೇರುವ ಉದ್ದೇಶದ ಮಿಲಿಟರಿ ಜಮಾವಣೆಯ ಹೊರತಾಗಿಯೂ ಇರಾನ್ ಏಕೆ ಶರಣಾಗಿಲ್ಲ ಎಂದು ಅಧ್ಯಕ್ಷ ಟ್ರಂಪ್ ಪ್ರಶ್ನಿಸಿದ್ದಾರೆ ಎಂದು ಅಮೆರಿಕಾದ ರಾಯಭಾರಿ ಸ್ಟೀವ್ ವಿಟ್ಕಾಫ್ ಶನಿವಾರ ಹೇಳಿದ್ದಾರೆ. ಪರಮಾಣು ಒಪ್ಪಂದ ಮಾಡಿಕೊಳ್ಳದಿದ್ದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ ನಂತರ ಇರಾನ್ನ ನಿಲುವಿನ ಬಗ್ಗೆ ತಿಳಿದುಕೊಳ್ಳಲು ಟ್ರಂಪ್ ಕುತೂಹಲ ಹೊಂದಿದ್ದರು. ಇದಕ್ಕೆ `ಹತಾಶೆ' ಎಂಬ ಪದ ಬಳಸಲು ನಾನು ಇಚ್ಛಿಸುವುದಿಲ್ಲ. ಯಾಕೆಂದರೆ ಅಧ್ಯಕ್ಷರಿಗೆ ಹಲವು ಪರ್ಯಾಯ ಆಯ್ಕೆಗಳಿವೆ. ಆದರೆ ಇರಾನ್ ಯಾಕೆ ಶರಣಾಗಿಲ್ಲ ಎಂಬ ಬಗ್ಗೆ ಅವರು ಕುತೂಹಲಗೊಂಡಿದ್ದರು. `ಶರಣಾಗತಿ' ಎಂಬ ಪದವನ್ನು ಬಳಸಲು ನಾನು ಇಚ್ಚಿಸುವುದಿಲ್ಲ. ಆದರೆ ಇರಾನ್ ಏಕೆ ಶರಣಾಗಿಲ್ಲ. ಇಂತಹ ಒತ್ತಡ, ಅಲ್ಲಿ ಜಮಾವಣೆಗೊಂಡಿರುವ ಸಮರ ನೌಕೆಗಳು, ನೌಕಾಪಡೆಗಳ ಶಕ್ತಿಯನ್ನು ಗಮನಿಸಿಯೂ ಅವರು ನಮ್ಮ ಬಳಿ ಬಂದು `ನಮಗೆ ಪರಮಾಣು ಶಸ್ತ್ರಾಸ್ತ್ರ ಬೇಕಿಲ್ಲ ಎಂದು ಪ್ರತಿಪಾದಿಸುತ್ತೇವೆ' ಎಂದು ಏಕೆ ಹೇಳಿಲ್ಲ ಎಂದು ನನಗೂ ಕುತೂಹಲವಿದೆ ' ಎಂದು ವಿಟ್ಕಾಫ್ ಹೇಳಿರುವುದಾಗಿ ವರದಿಯಾಗಿದೆ.
ಫೆ.25ರಂದು ಪ್ರಧಾನಿ ಮೋದಿ ಇಸ್ರೇಲ್ಗೆ ಭೇಟಿ: ಬೆಂಜಮಿನ್ ನೆತನ್ಯಾಹು ಘೋಷಣೆ
ಜೆರುಸಲೇಂ, ಫೆ.22: ಭಾರತದ ಪ್ರಧಾನಿ ನರೇಂದ್ರ ಮೋದಿ ಎರಡು ದಿನಗಳ ಭೇಟಿಗಾಗಿ ಫೆಬ್ರವರಿ 25ರಂದು ಇಸ್ರೇಲ್ಗೆ ಆಗಮಿಸುವ ನಿರೀಕ್ಷೆಯಿದೆ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ರವಿವಾರ ಹೇಳಿದ್ದಾರೆ. ಎರಡು ದಿನಗಳ ಅಧಿಕೃತ ಕಾರ್ಯಕ್ರಮದಲ್ಲಿ ಅವರು ಇಸ್ರೇಲ್ನ ಸಂಸತ್ತನ್ನು ಉದ್ದೇಶಿಸಿ ಮಾತನಾಡುತ್ತಾರೆ. ಅಲ್ಲದೆ ಪ್ರಧಾನಿ ನೆತನ್ಯಾಹು ಮತ್ತು ಅಧ್ಯಕ್ಷ ಇಸಾಕ್ ಹೆರ್ಝಾಗ್ರನ್ನು ಭೇಟಿಯಾಗಿ ಮಾತುಕತೆ ನಡೆಸಲಿದ್ದಾರೆ ಎಂದು ಇಸ್ರೇಲ್ ಸರಕಾರದ ಮೂಲಗಳು ಹೇಳಿವೆ.
ಜಮ್ಮುಕಾಶ್ಮೀರ| ಎನ್ಕೌಂಟರ್ನಲ್ಲಿ ಇಬ್ಬರು ಭಯೋತ್ಪಾದಕರ ಹತ್ಯೆ
ಶ್ರೀನಗರ,ಫೆ.22: ಜಮ್ಮುಕಾಶ್ಮೀರದ ಗುಡ್ಡಗಾಡು ಜಿಲ್ಲೆಯಾದ ಕಿಶ್ತವಾರ್ನಲ್ಲಿ ರವಿವಾರ ಭದ್ರತಾಪಡೆಗಳು ನಡೆಸಿದ ಎನ್ಕೌಂಟರ್ನಲ್ಲಿ ಇಬ್ಬರು ಭಯೋತ್ಪಾದಕರನ್ನು ಹತ್ಯೆ ಮಾಡಲಾಗಿದೆ. ಎನ್ಕೌಂಟರ್ಗೆ ಬಲಿಯಾದ ಇಬ್ಬರು ಭಯೋತ್ಪಾದಕರ ಪೈಕಿ ಒಬ್ಬಾತ ಜೈಶೆ ಮೊಹಮ್ಮದ್ ಗುಂಪಿನ ಕಮಾಂಡರ್ ಸೈಫುಲ್ಲಾನೆಂದು ಶಂಕಿಸಲಾಗಿದೆ. ಭಯೋತ್ಪಾದಕರು ಅವಿತಿರುವ ಬಗ್ಗೆ ಜಮ್ಮುಕಾಶ್ಮೀರ ಪೊಲೀಸರು, ಗುಪ್ತಚರ ದಳ ಹಾಗೂ ಇತರ ಬೇಹುಗಾರಿಕಾ ಮೂಲಗಳಿಂದ ಲಭಿಸಿದ ಗುಪ್ತಚರ ಮಾಹಿತಿಗಳ ಆಧಾರದಲ್ಲಿ ಚಟ್ರೂ ಅರಣ್ಯ ಪ್ರದೇಶದಲ್ಲಿ ಸೇನೆ, ಪೊಲೀಸ್ ಹಾಗೂ ಸಿಆರ್ಪಿಎಫ್ ಪಡೆಗಳು ಆಪರೇಶನ್ ‘ಟ್ರಾಶಿ-I' ಹೆಸರಿನಲ್ಲಿ ಜಂಟಿ ಕಾರ್ಯಾಚರಣೆಯನ್ನು ಆರಂಭಿಸಿದವು ಎಂದು ವಕ್ತಾರರು ತಿಳಿಸಿದ್ದಾರೆ. ಈ ಸಂದರ್ಭ ನಡೆದ ಎನ್ಕೌಂಟರ್ನಲ್ಲಿ ಇಬ್ಬರು ಭಯೋತ್ಪಾದಕರನ್ನು ಹತ್ಯೆಗೈಯಲಾಗಿದೆ ಹಾಗೂ ಸ್ಥಳದಿಂದ ಎರಡು ಎಕೆ47 ರೈಫಲ್ಗಳು ಹಾಗೂ ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ರಕ್ಷಣಾ ವಕ್ತಾರರೊಬ್ಬರು ತಿಳಿಸಿದ್ದಾರೆ. ಎನ್ಕೌಂಟರ್ನಲ್ಲಿ ಬಲಿಯಾಗಿದ್ದಾನೆಂದು ಶಂಕಿಸಲಾದ ಸೈಫುಲ್ಲಾ ಜಮ್ಮುಕಾಶ್ಮೀರದ ಮೋಸ್ಟ್ ವಾಂಟೆಡ್ ಲಿಸ್ಟ್ ನಲ್ಲಿದ್ದ. ಕಳೆದ ಕೆಲವು ವರ್ಷಗಳಿಂದ ಈ ಪ್ರದೇಶದಲ್ಲಿ ಸಕ್ರಿಯನಾಗಿದ್ದ ಆತ, ಭದ್ರತಾ ಪಡೆಗಳ ವಿರುದ್ಧದ ಹಲವಾರು ದಾಳಿಗಳಲ್ಲಿ ಭಾಗಿಯಾಗಿದ್ದನೆನ್ನಲಾಗಿದೆ ಮತ್ತು ಈ ಹಿಂದೆ ಹಲವಾರು ಕಾರ್ಯಾಚರಣೆಗಳ ಸಂದರ್ಭ ತಪ್ಪಿಸಿಕೊಂಡಿದ್ದನೆನ್ನಲಾಗಿದೆ.
ಟಿ-20 ವಿಶ್ವಕಪ್| ಶ್ರೀಲಂಕಾ ವಿರುದ್ಧ ಇಂಗ್ಲೆಂಡ್ಗೆ ಭರ್ಜರಿ ಜಯ
ಕ್ಯಾಂಡಿ, ಫೆ.22: ಆರಂಭಿಕ ಆಟಗಾರ ಫಿಲ್ ಸಾಲ್ಟ್ ಏಕಾಂಗಿ ಹೋರಾಟ(62 ರನ್, 40 ಎಸೆತ, 6 ಬೌಂಡರಿ,2 ಸಿಕ್ಸರ್), ವಿಲ್ ಜಾಕ್ಸ್ (3-22)ಹಾಗೂ ಜೋಫ್ರಾ ಆರ್ಚರ್(2-20) ಮುಂದಾಳತ್ವದ ಶಿಸ್ತುಬದ್ಧ ಬೌಲಿಂಗ್ ದಾಳಿಯ ಬಲದಿಂದ ಇಂಗ್ಲೆಂಡ್ ಕ್ರಿಕೆಟ್ ತಂಡವು ಟಿ-20 ವಿಶ್ವಕಪ್ ಟೂರ್ನಿಯ ಸೂಪರ್-8 ಪಂದ್ಯದಲ್ಲಿ ಆತಿಥೇಯ ಶ್ರೀಲಂಕಾ ತಂಡವನ್ನು 51 ರನ್ಗಳ ಅಂತರದಿಂದ ಮಣಿಸಿದೆ. ಭರ್ಜರಿ ಗೆಲುವಿನೊಂದಿಗೆ ನೆಟ್ ರನ್ರೇಟ್ ಹೆಚ್ಚಿಸಿಕೊಂಡಿರುವ ಇಂಗ್ಲೆಂಡ್ ತಂಡವು ಸೂಪರ್-8ರ ಗ್ರೂಪ್-2ರ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನ ತಲುಪಿದೆ. ಪಲ್ಲೆಕೆಲೆ ಇಂಟರ್ನ್ಯಾಶನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ರವಿವಾರ ನಡೆದ ಪಂದ್ಯದಲ್ಲಿ ಟಾಸ್ ಜಯಿಸಿದ ಶ್ರೀಲಂಕಾ ತಂಡವು ಇಂಗ್ಲೆಂಡ್ ತಂಡವನ್ನು ಬ್ಯಾಟಿಂಗ್ಗೆ ಇಳಿಸಿತು. ಲೆಗ್ ಸ್ಪಿನ್ನರ್ ದುನಿತ್ ವೆಲ್ಲಲಗೆ(3-26), ಮಹೀಶ್ ತೀಕ್ಷಣ (2-21)ಹಾಗೂ ದಿಲ್ಶನ್ ಮದುಶಂಕ (2-25)ಅವರು ಇಂಗ್ಲೆಂಡ್ ತಂಡವನ್ನು ನಿಗದಿತ 20 ಓವರ್ಗಳಲ್ಲಿ 9 ವಿಕೆಟ್ಗಳ ನಷ್ಟಕ್ಕೆ 146 ರನ್ಗೆ ನಿಯಂತ್ರಿಸಿದರು. ಗೆಲ್ಲಲು ಸುಲಭ ಸವಾಲು ಪಡೆದಿದ್ದ ಶ್ರೀಲಂಕಾ ತಂಡವು 16.4 ಓವರ್ಗಳಲ್ಲಿ ಕೇವಲ 95 ರನ್ಗೆ ಗಂಟುಮೂಟೆ ಕಟ್ಟಿತು. ನಿರಂತರವಾಗಿ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿದ ಶ್ರೀಲಂಕಾದ ಪರ ನಾಯಕ ದಸುನ್ ಶನಕ(30 ರನ್, 24 ಎಸೆತ, 1 ಬೌಂಡರಿ, 2 ಸಿಕ್ಸರ್)ಸರ್ವಾಧಿಕ ಸ್ಕೋರ್ ಗಳಿಸಿದರು. ಇಂಗ್ಲೆಂಡ್ ವಿರುದ್ಧ ಸತತ 12ನೇ ಪಂದ್ಯವನ್ನು ಸೋತಿರುವ ಲಂಕಾ ತಂಡ ಕಳಪೆ ಪ್ರದರ್ಶನ ಮುಂದುವರಿಸಿದೆ. ಎಂಟನೇ ಕ್ರಮಾಂಕದ ಬ್ಯಾಟರ್ ದುಶನ್ ಹೇಮಂತ(5 ರನ್)ಹಿಟ್ ವಿಕೆಟ್ನಿಂದ ಔಟಾಗಿರುವುದು ಶ್ರೀಲಂಕಾ ತಂಡ ಪಂದ್ಯದಲ್ಲಿ ಪರದಾಟ ನಡೆಸುತ್ತಿರುವುದರ ದ್ಯೋತಕವಾಗಿತ್ತು. ಶ್ರೀಲಂಕಾ ತಂಡ 5.5 ಓವರ್ಗಳಲ್ಲಿ 34 ರನ್ ಗಳಿಸುವಷ್ಟರಲ್ಲಿ ಅಗ್ರ ಕ್ರಮಾಂಕದ ಐವರು ಬ್ಯಾಟರ್ಗಳನ್ನು ಕಳೆದುಕೊಂಡು ಕಳಪೆ ಆರಂಭ ಪಡೆಯಿತು. ಪಥುಮ್ ನಿಸ್ಸಾಂಕ(9 ರನ್), ಕುಶಾಲ್ ಮೆಂಡಿಸ್(4 ರನ್), ಪವನ್ ರತ್ನನಾಯಕೆ(0), ಕಮಿಲ್ ಮಿಶಾರಾ(6 ರನ್)ಹಾಗೂ ದುನಿತ್ ವೆಲ್ಲಲಗೆ(10 ರನ್)ಪೆವಿಲಿಯನ್ಗೆ ಪರೇಡ್ ನಡೆಸಿದರು. ಲಿಯಾಮ್ ಡೌಸನ್ಗೆ ರಿಟರ್ನ್ ಕ್ಯಾಚ್ ನೀಡಿದ ಕಮಿಂದು ಮೆಂಡಿಸ್(13 ರನ್)ನಾಯಕ ಶನಕರೊಂದಿಗೆ ಆರನೇ ವಿಕೆಟ್ಗೆ 18 ರನ್ ಜೊತೆಯಾಟ ನಡೆಸಿದರು. ಇದು ಲಂಕಾ ಇನಿಂಗ್ಸ್ನಲ್ಲಿ ದಾಖಲಾದ ಗರಿಷ್ಠ ಜೊತೆಯಾಟವಾಗಿತ್ತು. ಇಂಗ್ಲೆಂಡ್ ತಂಡದ ಪರವಾಗಿ ಜಾಕ್ಸ್ ಆಲ್ರೌಂಡ್ ಪ್ರದರ್ಶನ(21 ರನ್, 3/22) ನೀಡಿ ಪಂದ್ಯಶ್ರೇಷ್ಠ ಪ್ರಶಸ್ತಿ ಗಿಟ್ಟಿಸಿಕೊಂಡರು. ಆದಿಲ್ ರಶೀದ್(2-13), ಜೋಫ್ರಾ ಆರ್ಚರ್ (2-20)ಹಾಗೂ ಲಿಯಾಮ್ ಡೌಸನ್(2-27)ತಲಾ ಎರಡು ವಿಕೆಟ್ಗಳನ್ನು ಪಡೆದರು. ಇಂಗ್ಲೆಂಡ್ 146/9: ಇದಕ್ಕೂ ಮೊದಲು ಅಮೋಘ ಬೌಲಿಂಗ್ ಸಂಘಟಿಸಿದ ಶ್ರೀಲಂಕಾದ ಬೌಲರ್ಗಳು ಇಂಗ್ಲೆಂಡ್ ತಂಡವನ್ನು 9 ವಿಕೆಟ್ಗಳ ನಷ್ಟಕ್ಕೆ 146 ರನ್ಗೆ ನಿಯಂತ್ರಿಸುವಲ್ಲಿ ಶಕ್ತರಾದರು. ಎಡಗೈ ಸ್ಪಿನ್ನರ್ ವೆಲ್ಲಲಗೆ ಯಶಸ್ವಿ ಪ್ರದರ್ಶನ ನೀಡಿದರೆ, ತೀಕ್ಷಣ ಹಾಗೂ ಮದುಶಂಕ ಪ್ರಮುಖ ವಿಕೆಟ್ಗಳನ್ನು ಕಬಳಿಸಿದರು. ಆರಂಭದಲ್ಲಿ ಪರದಾಟ ನಡೆಸಿದ ಇಂಗ್ಲೆಂಡ್ ತಂಡವು ಪವರ್ಪ್ಲೇ ನಂತರ ಕೇವಲ 37 ರನ್ಗೆ ಎರಡು ವಿಕೆಟ್ಗಳನ್ನು ಕಳೆದುಕೊಂಡಿತು. ಜೋಸ್ ಬಟ್ಲರ್(7 ರನ್) ಹಾಗೂ ಹ್ಯಾರಿ ಬ್ರೂಕ್(14 ರನ್) ಅಲ್ಪ ಮೊತ್ತಕ್ಕೆ ವೆಲ್ಲಲಗೆಗೆ ವಿಕೆಟ್ ಒಪ್ಪಿಸಿದರು. ಇತರ ಬ್ಯಾಟರ್ಗಳಾದ ಟಾಮ್ ಬಾಂಟನ್(6 ರನ್) ಹಾಗೂ ಸ್ಯಾಮ್ ಕರ್ರನ್(11 ರನ್) ಕೂಡ ವೈಫಲ್ಯ ಕಂಡರು. ಆಗ ಫಿಲ್ ಸಾಲ್ಟ್ ಇನಿಂಗ್ಸ್ ಆಧರಿಸಿದರು. ಸಾಲ್ಟ್ ಪ್ರಸಕ್ತ ವಿಶ್ವಕಪ್ನಲ್ಲಿ ಮೊದಲ ಅರ್ಧಶತಕ ಹಾಗೂ ಟಿ-20 ಕ್ರಿಕೆಟ್ನಲ್ಲಿ ಎರಡನೇ ಅರ್ಧಶತಕ ಗಳಿಸಿದರು. 40 ಎಸೆತಗಳಲ್ಲಿ ಏಳು ಬೌಂಡರಿ, 2 ಸಿಕ್ಸರ್ಗಳ ಸಹಿತ 62 ರನ್ ಗಳಿಸಿದ್ದ ಸಾಲ್ಟ್ಗೆ ಸಹ ಆಟಗಾರರಿಂದ ಸರಿಯಾದ ಬೆಂಬಲ ಸಿಗಲಿಲ್ಲ. ಸಾಲ್ಟ್ ಔಟಾದ ನಂತರ ಮತ್ತಷ್ಟು ಹಿನ್ನಡೆ ಕಂಡ ಇಂಗ್ಲೆಂಡ್ ಸಾಧಾರಣ ಮೊತ್ತ ಕಲೆ ಹಾಕಿತು. ಶ್ರೀಲಂಕಾದ ಬ್ಯಾಟರ್ ಹೇಮಂತ್ ಹಿಟ್ವಿಕೆಟ್! ಶ್ರೀಲಂಕಾದಾ ಆಟಗಾರ ದುಶನ್ ಹೇಮಂತ್ ಅವರು ಅಸಾಮಾನ್ಯ ಹಾಗೂ ನಾಟಕೀಯ ರೀತಿಯಲ್ಲಿ ಔಟಾಗುವ ಮೂಲಕ ನೆರೆದಿದ್ದ ತವರು ಪ್ರೇಕ್ಷಕರನ್ನು ದಂಗಾಗಿಸಿದರು. ಇಂಗ್ಲೆಂಡ್ ವಿರುದ್ದ ನಡೆದ ಟಿ-20 ವಿಶ್ವಕಪ್ನ ಸೂಪರ್-8 ಪಂದ್ಯದಲ್ಲಿ ಲಂಕಾ ತಂಡ ಗೆಲುವಿಗೆ 147 ರನ ಗುರಿ ಬೆನ್ನಟ್ಟುತ್ತಿದ್ದಾಗ ಜಮೀ ಓವರ್ಟನ್ ಓವರ್ನಲ್ಲಿ ಹೊಡೆತ ಬಾರಿಸುವ ಭರದಲ್ಲಿ ತನ್ನ ಬ್ಯಾಟ್ ಮೇಲಿನ ಹಿಡಿತವನ್ನು ಕಳೆದುಕೊಂಡ ಹೇಮಂತ್ ಆಕಸ್ಮಿಕವಾಗಿ ತನ್ನದೇ ಸ್ಟಂಪ್ಗೆ ಬಡಿದರು. ಅಪರೂಪದ ಈ ಘಟನೆಯ ವೀಡಿಯೊವು ಸಾಮಾಜಿಕ ಮಾಧ್ಯಮದಲ್ಲಿ ತಕ್ಷಣವೇ ವೈರಲ್ ಆಯಿತು.
ಹೊಸದಿಲ್ಲಿ ಮ್ಯಾರಥಾನ್ | ಮುಂಬೈ ಕನ್ನಡಿಗ ಕಾರ್ತಿಕ್ ಕರ್ಕೇರ ವಿನ್ನರ್
ಹೊಸದಿಲ್ಲಿ, ಫೆ.22: ರಾಷ್ಟ್ರ ರಾಜಧಾನಿಯಲ್ಲಿ ರವಿವಾರ ನಡೆದ 11ನೇ ಆವೃತ್ತಿಯ ಹೊಸದಿಲ್ಲಿ ಮ್ಯಾರಥಾನ್ನಲ್ಲಿ ವೃತ್ತಿಯಲ್ಲಿ ವೈದ್ಯರಾಗಿರುವ, ಮುಂಬೈ ಕನ್ನಡಿಗ ಕಾರ್ತಿಕ್ ಜಯರಾಜ್ ಕರ್ಕೇರ ಅವರು ಪುರುಷರ ವಿಭಾಗದ ಪೂರ್ಣ ಮ್ಯಾರಥಾನ್ನಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. ಮಾತ್ರವಲ್ಲ ತನ್ನ ದೇಶದ ಇತರ ಇಬ್ಬರು ರನ್ನರ್ಗಳೊಂದಿಗೆ ಈ ವರ್ಷದ ಏಶ್ಯನ್ ಗೇಮ್ಸ್ ಅರ್ಹತಾ ಮಾನದಂಡವನ್ನು ಮೀರಿದ್ದಾರೆ. ಕಾರ್ತಿಕ್ ಅವರು 42.2 ಕಿಲೋಮೀಟರ್ ದೂರವನ್ನು ಎರಡು ಗಂಟೆ ಹಾಗೂ 13 ನಿಮಿಷಗಳಲ್ಲಿ (02.13.10)ಪೂರ್ಣಗೊಳಿಸಿದರು. ಈ ಮೂಲಕ ಈ ವರ್ಷಾಂತ್ಯದಲ್ಲಿ ಜಪಾನ್ನಲ್ಲಿ ನಡೆಯಲಿರುವ ಏಶ್ಯನ್ ಗೇಮ್ಸ್ ಅರ್ಹತಾ ಸಮಯವನ್ನು ಮೀರಿ ನಿಂತರು. 28ರ ಹರೆಯದ ಕಾರ್ತಿಕ್ ಅವರು ಗೋಪಿ ಥೋನಾಕಲ್(02.13:12)ಹಾಗೂ ಮಾನ್ ಸಿಂಗ್(02.13:15)ರನ್ನು ಹಿಂದಿಕ್ಕಿ ಮೊದಲ ಸ್ಥಾನ ಪಡೆದರು. ಸೆಪ್ಟಂಬರ್ನಲ್ಲಿ ನಡೆಯಲಿರುವ ಏಶ್ಯನ್ ಗೇಮ್ಸ್ನಲ್ಲಿ ಸ್ಪರ್ಧಿಸಲು ಅರ್ಹತೆ ಪಡೆಯಲು 2:15.04 ಸೆಕೆಂಡ್ನಲ್ಲಿ ಗುರಿ ತಲುಪುವ ಅಗತ್ಯವಿತ್ತು. ಮಹಿಳೆಯರ ವಿಭಾಗದ ಮ್ಯಾರಥಾನ್ನಲ್ಲಿ ಥಾಕೋರ್ ನಿರ್ಮಾಬೆನ್(02:41:15)ಮೊದಲ ಸ್ಥಾನ ಪಡೆದರೆ, ಭಾಗೀರಥಿ(02:43:28)ಹಾಗೂ ಅಶ್ವಿನಿ ಜಾಧವ್(02:56:59)ಕ್ರಮವಾಗಿ ಎರಡನೇ, ಮೂರನೇ ಸ್ಥಾನ ಪಡೆದರು. ಹಾಫ್ ಮ್ಯಾರಥಾನ್ನಲ್ಲಿ ಕುಲದೀಪ್ ಕುಮಾರ್(01:08:51)ಮೊದಲ ಸ್ಥಾನ ಪಡೆದರೆ, ರವಿ ಬುಂಬಕ್(01:09:33)ಹಾಗೂ ಮುಹಮ್ಮದ್ ಸಾಹಿಲ್ ಅಣ್ಣಿಗೇರಿ(01:09:41)ಎರಡನೇ ಹಾಗೂ ಮೂರನೇ ಸ್ಥಾನ ಪಡೆದರು. ಮುಂಬೈನಲ್ಲಿ ಹುಟ್ಟಿ ಬೆಳೆದಿರುವ ಕಾರ್ತಿಕ್ ಸದ್ಯ ನಾಸಿಕ್ನ ಡಾ.ವಸಂತರಾವ್ ಪವಾರ್ ಆಸ್ಪತ್ರೆಯಲ್ಲಿ ವೈದ್ಯರಾಗಿ ಕೆಲಸ ಮಾಡುತ್ತಿದ್ದಾರೆ. ‘‘ನನ್ನ ದೇಹ ಬೇಗನೆ ಚೇತರಿಸಿಕೊಳ್ಳಲು ಏನು ಮಾಡಬೇಕೆಂದು ತಿಳಿದುಕೊಳ್ಳುವಲ್ಲಿ ನನ್ನ ಅಧ್ಯಯನವು ನನಗೆ ಸಾಕಷ್ಟು ಸಹಾಯ ಮಾಡಿದೆ. ನಾನು ವೃತ್ತಿಯಲ್ಲಿ ವೈದ್ಯನಾಗಿರುವ ಕಾರಣ ಯಾವುದೇ ಒತ್ತಡವಿಲ್ಲ. ನಾನು ಮೋಜಿಗಾಗಿ ಓಡುತ್ತೇನೆ. ಓಟವನ್ನು ಆನಂದಿಸುತ್ತೇನೆ. ನಿಮ್ಮ ಮಕ್ಕಳು ಒಂದೇ ಸಮಯದಲ್ಲಿ ಶಿಕ್ಷಣ ಹಾಗೂ ಕ್ರೀಡೆ ಎರಡನ್ನೂ ನಿರ್ವಹಿಸಬಹುದು ಎಂದು ಪೋಷಕರಿಗೆ ತಿಳಿಸಲು ಬಯಸುತ್ತೇನೆ’’ ಎಂದು ಕಾರ್ತಿಕ್ ಹೇಳಿದ್ದಾರೆ. ಎಎಫ್ಐ ಪ್ರಮಾಣೀಕೃತ ದೇಶದ ರಾಷ್ಟ್ರೀಯ ಮ್ಯಾರಥಾನ್ ಆಗಿರುವ ಹೊಸದಿಲ್ಲಿ ಮ್ಯಾರಥಾನ್ನಲ್ಲಿ 31 ದೇಶಗಳು, 490 ನಗರಗಳಿಂದ 30,000ಕ್ಕೂ ಹೆಚ್ಚು ಓಟಗಾರರು ಭಾಗವಹಿಸುವುದರೊಂದಿಗೆ ಅತ್ಯಂತ ಯಶಸ್ವಿ ಓಟವೆಂದು ಸಾಬೀತಾಗಿದೆ.
ಬೆಂಗಳೂರಿನಲ್ಲಿ ಫುಟ್ಪಾತ್ ವಾಕ್ ಕಾರ್ಯಕ್ರಮಕ್ಕೆ ಕೃಷ್ಣ ಬೈರೇಗೌಡ ಚಾಲನೆ
ಬೆಂಗಳೂರು, ಫೆ.22: ರವಿವಾರ ಇಲ್ಲಿನ ಕೋಡಿಗೆಹಳ್ಳಿಯಲ್ಲಿ ಪ್ರಾಜೆಕ್ಟ್ ವಾಕಲೂರು ವತಿಯಿಂದ ಆಯೋಜಿಸಿದ್ದ 10ನೇ ಫುಟ್ಪಾತ್ ವಾಕ್ ಕಾರ್ಯಕ್ರಮಕ್ಕೆ ಕಂದಾಯ ಸಚಿವ ಹಾಗೂ ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದ ಶಾಸಕ ಕೃಷ್ಣ ಬೈರೇಗೌಡ ಚಾಲನೆ ನೀಡಿದರು. ಬೆಂಗಳೂರು ಉತ್ತರ ನಗರ ಪಾಲಿಕೆಯ ಆಯುಕ್ತ ಪೊಮ್ಮಲ ಸುನಿಲ್ ಕುಮಾರ್ ಹಾಗೂ ಜಂಟಿ ಆಯುಕ್ತರಾದ ಮುಹಮ್ಮದ್ ನಯೀಮ್ ಮೊಮಿನ್ ಸೇರಿದಂತೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಸೇರಿ 120ಕ್ಕೂ ಹೆಚ್ಚು ನಾಗರಿಕರು ಭಾಗವಹಿಸಿದ್ದರು. ವಾಕ್ ಮಾರ್ಗವು ರೈಲ್ವೇ ಪ್ಯಾರಲೆಲ್ ರಸ್ತೆ ಜಂಕ್ಷನ್ನಿಂದ ಆರಂಭವಾಗಿ ಸಹಕಾರನಗರ ಹಾಗೂ ಕೋಡಿಗೆಹಳ್ಳಿ ಮುಖ್ಯರಸ್ತೆಗಳ ಭಾಗಗಳನ್ನು ಒಳಗೊಂಡಂತೆ ಸುಮಾರು 6 ಕಿ.ಮೀ ನಿರಂತರ ಪಾದಚಾರಿ ಮಾರ್ಗವನ್ನು ಒಳಗೊಂಡಿತ್ತು. ನಿಗದಿತ ಮಾರ್ಗದಲ್ಲಿ ನಾಗರಿಕರು ಪಾದಚಾರಿ ಮಾರ್ಗದಲ್ಲಿ ನಡೆದು ಪ್ರಮುಖ ಅಡೆತಡೆಗಳನ್ನು ಗುರುತಿಸುವುದು. ಪಾದಚಾರಿ ಮಾರ್ಗದಿಂದ ರಸ್ತೆ ಮೇಲೆ ಇಳಿಯುವಂತೆ ಮಾಡುವ ಅಡೆತಡೆಗಳನ್ನು ದಾಖಲಿಸಿ ಫೋಟೋ ತೆಗೆದುಕೊಳ್ಳುವಂತೆ ಭಾಗವಹಿಸಿದವರಿಗೆ ಸೂಚಿಸಲಾಯಿತು. ಒಟ್ಟು 6–8 ಸಣ್ಣ ಅಡೆತಡೆಗಳು ಮಾತ್ರ ಕಂಡುಬಂದಿದ್ದು, ಕಸ, ಮೂತ್ರ ವಿಸರ್ಜನೆ ಅಥವಾ ಹಾಳಾದ ಪಾದಚಾರಿ ಮಾರ್ಗಗಳಂತಹ ಸಮಸ್ಯೆಗಳು ಕಂಡುಬರಲಿಲ್ಲ. ಪಾದಚಾರಿ ಮಾರ್ಗಗಳು ಸ್ವಚ್ಛ, ಹಸಿರಿನಿಂದ ಕೂಡಿದ್ದು, ಸುಗಮವಾಗಿ ನಡೆಯಲು ಅನುಕೂಲಕರವಾಗಿವೆ ಎಂದು ಭಾಗವಹಿಸಿದವರು ಅಭಿಪ್ರಾಯಪಟ್ಟರು.
ಖತರ್ ಓಪನ್ ಟೆನಿಸ್ ಟೂರ್ನಿ : ಪ್ರಶಸ್ತಿ ಗೆದ್ದ ಕಾರ್ಲೊಸ್ ಅಲ್ಕರಾಝ್
ದೋಹಾ, ಫೆ.22: ಅರ್ಥರ್ ಫಿಲ್ಸ್ರನ್ನು ನೇರ ಸೆಟ್ಗಳ ಅಂತರದಿಂದ ಮಣಿಸಿರುವ ಸ್ಪೇನ್ ಯುವ ಆಟಗಾರ ಕಾರ್ಲೊಸ್ ಅಲ್ಕರಾಝ್ ಖತರ್ ಓಪನ್ ಟೆನಿಸ್ ಟೂರ್ನಿಯಲ್ಲಿ ಪುರುಷರ ಸಿಂಗಲ್ಸ್ ಪ್ರಶಸ್ತಿಯನ್ನು ಎತ್ತಿ ಹಿಡಿದಿದ್ದಾರೆ. ಶನಿವಾರ ನಡೆದ ಫೈನಲ್ ಪಂದ್ಯದಲ್ಲಿ ಏಳು ಬಾರಿಯ ಗ್ರ್ಯಾನ್ಸ್ಲಾಮ್ ಚಾಂಪಿಯನ್ ಅಲ್ಕರಾಝ್ ಅವರು ಕೇವಲ 50 ನಿಮಿಷದೊಳಗೆ ಫ್ರೆಂಚ್ ಎದುರಾಳಿ ಫಿಲ್ಸ್ರನ್ನು 6-2, 6-1 ನೇರ ಸೆಟ್ಗಳ ಅಂತರದಿಂದ ಮಣಿಸಿದರು. ಈ ಮೂಲಕ ತನ್ನ ವೃತ್ತಿಜೀವನದಲ್ಲಿ 26ನೇ ಪ್ರಶಸ್ತಿಯನ್ನು ಜಯಿಸಿದರು. ಈ ತಿಂಗಳಾರಂಭದಲ್ಲಿ ಆಸ್ಟ್ರೇಲಿಯನ್ ಓಪನ್ ಟ್ರೋಫಿ ಜಯಿಸಿ ಕೇವಲ 22ನೇ ವಯಸ್ಸಿನಲ್ಲಿ ವೃತ್ತಿಜೀವನದ ಎಲ್ಲ ನಾಲ್ಕೂ ಗ್ರ್ಯಾನ್ಸ್ಲಾಮ್ ಪ್ರಶಸ್ತಿ ಗೆದ್ದ ಸಾಧನೆ ಮಾಡಿರುವ ವಿಶ್ವದ ನಂ.1 ಆಟಗಾರ ಅಲ್ಕರಾಝ್ ದೋಹಾದಲ್ಲಿ ನಡೆದಿದ್ದ ಟೂರ್ನಮೆಂಟ್ನಲ್ಲಿ ಪ್ರಶಸ್ತಿ ಜಯಿಸಿ ಸತತ ಗೆಲುವಿನ ಸಂಖ್ಯೆಯನ್ನು 12ಕ್ಕೆ ವಿಸ್ತರಿಸಿದರು.
ಟ್ರಂಪ್ ಅವರ ಫ್ಲೋರಿಡಾದ ರೆಸಾರ್ಟ್ಗೆ ಪ್ರವೇಶಿಸಲು ಯತ್ನಿಸಿದ ವ್ಯಕ್ತಿಯನ್ನು ಗುಂಡಿಕ್ಕಿ ಹತ್ಯೆ
ನ್ಯೂಯಾರ್ಕ್, ಫೆ.22: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಫ್ಲೋರಿಡಾದ ಮಾರ್-ಎ-ಲಾಗೊ ರೆಸಾರ್ಟ್ಗೆ ರವಿವಾರ ಅಕ್ರಮವಾಗಿ ಪ್ರವೇಶಿಸಲು ಪ್ರಯತ್ನಿಸಿದ ಸಶಸ್ತ್ರದಾರಿ ವ್ಯಕ್ತಿಯನ್ನು ಅಮೆರಿಕದ ಗುಪ್ತಚರ ಸೇವೆಯ ಅಧಿಕಾರಿಗಳು ಗುಂಡಿಕ್ಕಿ ಹತ್ಯೆ ನಡೆಸಿರುವುದಾಗಿ ವರದಿಯಾಗಿದೆ. ಸ್ಥಳೀಯ ಕಾಲಮಾನ ರವಿವಾರ ಬೆಳಿಗ್ಗೆ 1:30ಕ್ಕೆ ಘಟನೆ ನಡೆದಿದೆ. ರೆಸಾರ್ಟ್ನ ಉತ್ತರ ಗೇಟ್ನ ಬಳಿ ಸುಮಾರು 20 ವರ್ಷದ ವ್ಯಕ್ತಿಯನ್ನು ಗನ್ ಮತ್ತು ಪೆಟ್ರೋಲ್ ತುಂಬಿದ್ದ ಕ್ಯಾನ್ನೊಂದಿಗೆ ಪತ್ತೆಹಚ್ಚಲಾಗಿದೆ. ಶರಣಾಗುವಂತೆ ಅಧಿಕಾರಿಗಳು ನೀಡಿದ್ದ ಸೂಚನೆಯನ್ನು ಆತ ನಿರ್ಲಕ್ಷಿಸಿದಾಗ ಗುಂಡಿನ ಚಕಮಕಿ ನಡೆದಿದ್ದು ಶಂಕಿತ ವ್ಯಕ್ತಿ ಸ್ಥಳದಲ್ಲೇ ಗಾಯಗೊಂಡಿದ್ದಾನೆ. ಯಾವುದೇ ಅಧಿಕಾರಿಗಳು ಗಾಯಗೊಂಡಿಲ್ಲ ಎಂದು ಗುಪ್ತಚರ ಸೇವಾ ಇಲಾಖೆಯ ಹೇಳಿಕೆ ತಿಳಿಸಿದೆ.
ಉಕ್ರೇನ್ ಮೇಲೆ ರಶ್ಯದಿಂದ ಡ್ರೋನ್ ದಾಳಿ: ಇಂಧನ, ರೈಲ್ವೆ ಮೂಲಸೌಕರ್ಯಕ್ಕೆ ವ್ಯಾಪಕ ಹಾನಿ
ಕೀವ್, ಫೆ.22: ಉಕ್ರೇನ್ನಾದ್ಯಂತ ರಶ್ಯ ರವಿವಾರ ನಡೆಸಿದ ಡ್ರೋನ್ ಮತ್ತು ಕ್ಷಿಪಣಿ ದಾಳಿಯಲ್ಲಿ ಇಂಧನ ಮತ್ತು ಮೂಲಸೌಕರ್ಯಕ್ಕೆ ವ್ಯಾಪಕ ಹಾನಿಯಾಗಿದೆ. ಹಲವು ವಸತಿ ಕಟ್ಟಡಗಳು ಧ್ವಂಸಗೊಂಡಿದ್ದು ಮಹಿಳಾ ಪೊಲೀಸರು ಮೃತಪಟ್ಟಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ರವಿವಾರ ಬೆಳಿಗ್ಗೆ 4 ಗಂಟೆಗೆ(ಸ್ಥಳೀಯ ಕಾಲಮಾನ) ರಾಜಧಾನಿ ಕೀವ್ನಲ್ಲಿ ವಾಯುದಾಳಿ ಮುನ್ನೆಚ್ಚರಿಕೆ ಮೊಳಗಿದ ಬೆನ್ನಲ್ಲೇ ಸರಣಿ ಸ್ಫೋಟ ಸಂಭವಿಸಿದೆ. ದಾಳಿಯನ್ನು ದೃಢಪಡಿಸಿರುವ ಉಕ್ರೇನ್ ಅಧ್ಯಕ್ಷ ವೊಲೊದಿಮಿರ್ ಝೆಲೆನ್ಸ್ಕಿ `ರಶ್ಯ ಶನಿವಾರ ತಡರಾತ್ರಿಯಿಂದ 300ಕ್ಕೂ ಹೆಚ್ಚು ಡ್ರೋನ್ಗಳು ಮತ್ತು ಸುಮಾರು 50 ಕ್ಷಿಪಣಿಗಳನ್ನು ಪ್ರಯೋಗಿಸಿದೆ. ಇಂಧನ ಕ್ಷೇತ್ರವು ದಾಳಿಯ ಪ್ರಧಾನ ಗುರಿಯಾಗಿತ್ತು. ವಸತಿ ಕಟ್ಟಡಗಳು, ರೈಲ್ವೇ ವ್ಯವಸ್ಥೆಗೂ ಹಾನಿಯಾಗಿದೆ. ರಶ್ಯವು ರಾಜತಾಂತ್ರಿಕತೆಯ ಬದಲು ದಾಳಿಗೆ ಹೆಚ್ಚಿನ ಗಮನ ನೀಡುತ್ತಿದೆ' ಎಂದು `ಎಕ್ಸ್'ನಲ್ಲಿ ಪೋಸ್ಟ್ ಮಾಡಿದ್ದಾರೆ. 23 ವರ್ಷದ ಮಹಿಳಾ ಪೊಲೀಸ್ ಮೃತಪಟ್ಟಿದ್ದು, 4 ಮಕ್ಕಳ ಸಹಿತ 12ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವುದಾಗಿ ಪೊಲೀಸರು ಹೇಳಿದ್ದಾರೆ. ಈ ಮಧ್ಯೆ, ರಶ್ಯದ ಸೂಚನೆಯಂತೆ ಉಕ್ರೇನ್ನ ಹಿರಿಯ ನಾಯಕರನ್ನು ಹತ್ಯೆ ನಡೆಸಲು ಸಂಚು ನಡೆಸುತ್ತಿದ್ದ ಶಂಕೆಯಲ್ಲಿ ಉಕ್ರೇನ್ ಮತ್ತು ಮೊಲ್ದೊವಾದಲ್ಲಿ 10 ಮಂದಿಯನ್ನು ಬಂಧಿಸಿರುವುದಾಗಿ ಉಕ್ರೇನ್ ಅಧಿಕಾರಿಗಳು ಹೇಳಿದ್ದಾರೆ.
ಮದುವೆ ದಿನವೇ ದುರಂತ: ಜೋಧ್ಪುರದಲ್ಲಿ ಇಬ್ಬರು ಸಹೋದರಿಯರ ಅನುಮಾನಾಸ್ಪದ ಸಾವು
ಜೋಧ್ಪುರ: ಮದುವೆ ಸಂಭ್ರಮದಿಂದ ಕಂಗೊಳಿಸಬೇಕಿದ್ದ ಮನೆ ಕ್ಷಣಾರ್ಧದಲ್ಲಿ ಶೋಕಸಾಗರದಲ್ಲಿ ಮುಳುಗಿರುವ ದುರಂತ ಘಟನೆ ರಾಜಸ್ಥಾನದ ಜೋಧ್ಪುರ ಜಿಲ್ಲೆಯ ಮನೈ ಗ್ರಾಮದಲ್ಲಿ ನಡೆದಿದೆ. ಮದುವೆಗೆ ಸಿದ್ಧರಾಗಿದ್ದ ಇಬ್ಬರು ಸಹೋದರಿಯರು ಸಾವನ್ನಪ್ಪಿರುವ ಘಟನೆ ಕುಟುಂಬಸ್ಥರನ್ನು ಹಾಗೂ ಗ್ರಾಮಸ್ಥರನ್ನು ಬೆಚ್ಚಿಬೀಳಿಸಿದೆ. ಮದುವೆ ದಿನವೇ ಇಬ್ಬರೂ ಸಹೋದರಿಯರ ಈ ಸಾವಿನ ಹಿಂದೆ ಹಲವು ಅನುಮಾನಗಳು ವ್ಯಕ್ತವಾಗಿವೆ. ಶೋಭಾ (25) ಮತ್ತು ವಿಮಲಾ (23)
ಈಡಿಯಿಂದ ಪ್ರಸಕ್ತ ವಿತ್ತವರ್ಷದಲ್ಲಿ 500 ದೋಷಾರೋಪ ಪಟ್ಟಿಗಳ ಸಲ್ಲಿಕೆಗೆ ಗುರಿ ನಿಗದಿ
ಹೊಸದಿಲ್ಲಿ,ಫೆ.22: ಜಾರಿ ನಿರ್ದೇಶನಾಲಯವು ಪ್ರಸಕ್ತ ವಿತ್ತವರ್ಷದಲ್ಲಿ ಅಕ್ರಮ ಹಣ ವರ್ಗಾವಣೆ ಪ್ರಕರಣಗಳಲ್ಲಿ 500 ದೋಷಾರೋಪ ಪಟ್ಟಿಗಳನ್ನು ಸಲ್ಲಿಸುವ ಗುರಿಯನ್ನು ನಿಗದಿಗೊಳಿಸಿದೆ. ಪ್ರಕರಣವು ದಾಖಲಾದ ಬಳಿಕ ‘ಸಂಕೀರ್ಣ’ ವಿಷಯಗಳಲ್ಲಿ ಹೊರತುಪಡಿಸಿ ಒಂದೆರಡು ವರ್ಷಗಳಲ್ಲಿ ತನಿಖೆಯನ್ನು ಪೂರ್ಣಗೊಳಿಸಬೇಕು ಎಂದು ತನಿಖಾಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ಈ.ಡಿ.ರವಿವಾರ ತಿಳಿಸಿದೆ. ಕಳೆದ ವರ್ಷದ ಡಿಸೆಂಬರ್ 19ರಿಂದ 21ರವರೆಗೆ ಗುವಾಹಟಿಯಲ್ಲಿ ಸಂಸ್ಥೆಯ ನಿರ್ದೇಶಕ ರಾಹುಲ್ ನವೀನ್ ಅಧ್ಯಕ್ಷತೆಯಲ್ಲಿ ನಡೆದಿದ್ದ ಈ.ಡಿ.ಯ 34ನೇ ವಲಯಾಧಿಕಾರಿಗಳ ತ್ರೈಮಾಸಿಕ ಸಮ್ಮೇಳನದಲ್ಲಿ ಈ ಕ್ರಮಗಳನ್ನು ಚರ್ಚಿಸಿ ಅಂತಿಮಗೊಳಿಸಲಾಗಿದೆ ಎಂದು ಹೇಳಿಕೆಯು ತಿಳಿಸಿದೆ. ಈ.ಡಿ.ಕಳೆದ ವರ್ಷದಿಂದ ದಿಲ್ಲಿಯ ಹೊರಗೆ ಈ ತ್ರೈಮಾಸಿಕ ಸಮ್ಮೇಳನಗಳನ್ನು ನಡೆಸುತ್ತಿದೆ. ಹಿಂದಿನ ಎರಡು ಸಮ್ಮೇಳನಗಳು ಗುಜರಾತಿನ ಕೇವಡಿಯಾ ಮತ್ತು ಜಮ್ಮುಕಾಶ್ಮೀರದ ಶ್ರೀನಗರದಲ್ಲಿ ನಡೆದಿದ್ದವು. ಈಶಾನ್ಯ ಭಾರತದಲ್ಲಿ ಸಮ್ಮೇಳನವನ್ನು ನಡೆಸುವ ನಿರ್ಧಾರವು ಈ ಪ್ರದೇಶದ ವ್ಯೆಹಾತ್ಮಕ ಮತ್ತು ಕಾರ್ಯಾಚರಣೆ ಪ್ರಾಮುಖ್ಯವನ್ನು ಈ.ಡಿ.ಗುರುತಿಸಿದೆ ಎನ್ನುವುದನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿರುವ ಈ.ಡಿ.,ಇದು ಪ್ರಸಕ್ತ ವಿತ್ತವರ್ಷದ ಕೊನೆಯ ತ್ರೈಮಾಸಿಕ ಸಭೆಯಾಗಿದ್ದರಿಂದ ಮಹತ್ವದ್ದಾಗಿತ್ತು. ಗುರಿಗಳ ಅರ್ಥಪೂರ್ಣ ಸಾಧನೆ,ತನಿಖೆಗಳ ತಾರ್ಕಿಕ ಮುಕ್ತಾಯ,ಸಕಾಲದಲ್ಲಿ ಪ್ರಾಸಿಕ್ಯೂಷನ್ ದೂರುಗಳ ಸಲ್ಲಿಕೆ ಮತ್ತು ಜಪ್ತಿಗಳು ಹಾಗೂ ದಂಡಗಳು ಕಾನೂನುಬದ್ಧವಾಗಿರುವಂತೆ ಮತ್ತು ಕಾರ್ಯಗತಗೊಳ್ಳುವಂತೆ ನೋಡಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದೆ.
ವಾಷಿಂಗ್ಟನ್, ಫೆ.22: ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ‘ಟ್ರಂಪ್ 2.0’ ಅವಧಿಯಲ್ಲಿ ಜಾರಿಗೊಂಡ ಜಾಗತಿಕ ಸುಂಕಗಳಿಗೆ ಅಮೆರಿಕದ ಸುಪ್ರೀಂ ಕೋರ್ಟ್ 6–3 ಬಹುಮತದ ತೀರ್ಪಿನ ಮೂಲಕ ತಡೆ ನೀಡಿದೆ. ಸುಂಕ ವಿಧಿಸುವ ಅಧಿಕಾರವು ಕಾಂಗ್ರೆಸ್ ಗೆ ಮಾತ್ರ ಸೇರಿದೆ ಎಂದು ಸ್ಪಷ್ಟಪಡಿಸಿದ ನ್ಯಾಯಪೀಠ, ಅಧ್ಯಕ್ಷೀಯ ಅಧಿಕಾರದ ಮಿತಿಗಳ ಕುರಿತು ಮಹತ್ವದ ನಿರ್ಧಾರ ಪ್ರಕಟಿಸಿದೆ. ಆದರೆ ಈ ತೀರ್ಪಿನ ಕೇಂದ್ರಬಿಂದುವಾಗಿ ಹೊರಹೊಮ್ಮಿದ್ದು ಭಾರತೀಯ ಮೂಲದ ಅಮೆರಿಕನ್ ವಕೀಲ ನೀಲ್ ಕಟ್ಯಾಲ್ ಅವರ ಸಾಂವಿಧಾನಿಕ ವಾದ. ಸುಂಕಗಳಿಂದ ಪ್ರಭಾವಿತ ಸಣ್ಣ ಉದ್ಯಮಗಳನ್ನು ಸಹ-ಸಲಹೆಗಾರ ಸಾರಾ ಆಲ್ಬ್ರೆಕ್ಟ್ ಜೊತೆ ಪ್ರತಿನಿಧಿಸಿದ ಕಟ್ಯಾಲ್, ಸುಂಕಗಳು ಮೂಲತಃ ತೆರಿಗೆಯ ಸ್ವರೂಪದ್ದಾಗಿದ್ದು, ತೆರಿಗೆ ವಿಧಿಸುವ ಅಧಿಕಾರವು ಅಮೆರಿಕ ಕಾಂಗ್ರೆಸ್ಗೆ ಮಾತ್ರ ಸೇರಿದೆ ಎಂದು ನ್ಯಾಯಾಲಯದ ಮುಂದೆ ಸ್ಪಷ್ಟವಾಗಿ ಮಂಡಿಸಿದರು. ವಿದೇಶಾಂಗ ನೀತಿ ಅಥವಾ ಆರ್ಥಿಕ ಕ್ರಮದ ಹೆಸರಿನಲ್ಲಿ ಅಧ್ಯಕ್ಷರು ಸುಂಕಗಳನ್ನು ವಿಧಿಸುವ ಮೂಲಕ ತಮ್ಮ ಸಾಂವಿಧಾನಿಕ ಮಿತಿಗಳನ್ನು ಮೀರಿ ಕಾರ್ಯನಿರ್ವಹಿಸಿದ್ದಾರೆ ಎಂಬುದು ಅವರ ಪ್ರಮುಖ ವಾದವಾಗಿತ್ತು. ತೀರ್ಪಿನ ಬಳಿಕ ಸಾಮಾಜಿಕ ಜಾಲತಾಣ Xನಲ್ಲಿ ಪ್ರತಿಕ್ರಿಯಿಸಿದ ಕಟ್ಯಾಲ್, “ಇಂದು ಅಮೆರಿಕದ ಸುಪ್ರೀಂ ಕೋರ್ಟ್ ಕಾನೂನಿನ ಆಳ್ವಿಕೆ ಮತ್ತು ಅಮೆರಿಕನ್ನರ ಪರವಾಗಿ ನಿಂತಿದೆ. ಅಧ್ಯಕ್ಷರು ಶಕ್ತಿಶಾಲಿಗಳು, ಆದರೆ ನಮ್ಮ ಸಂವಿಧಾನ ಇನ್ನಷ್ಟು ಶಕ್ತಿಶಾಲಿಯಾಗಿದೆ. ಅಮೆರಿಕಾದಲ್ಲಿ ಕಾಂಗ್ರೆಸ್ ಮಾತ್ರ ಜನರ ಮೇಲೆ ತೆರಿಗೆ ವಿಧಿಸಬಹುದು. ಈ ಪ್ರಕರಣವು ಯಾವುದೇ ಒಬ್ಬ ಅಧ್ಯಕ್ಷರ ಬಗ್ಗೆ ಅಲ್ಲ; ಅದು ಅಧ್ಯಕ್ಷೀಯ ಸ್ಥಾನ ಮತ್ತು ಅಧಿಕಾರಗಳ ಪ್ರತ್ಯೇಕತೆಯ ಬಗ್ಗೆ” ಎಂದು ಪೋಸ್ಟ್ ಮಾಡಿದ್ದರು. ►ಸಾಂವಿಧಾನಿಕ ಕಾನೂನು ಕ್ಷೇತ್ರದ ಪ್ರಮುಖ ಧ್ವನಿ ನೀಲ್ ಕಟ್ಯಾಲ್ 1970ರ ಮಾರ್ಚ್ 12ರಂದು ಚಿಕಾಗೋದಲ್ಲಿ ಭಾರತೀಯ ಮೂಲದ ವಲಸಿಗರ ಕುಟುಂಬದಲ್ಲಿ ನೀಲ್ ಕಟ್ಯಾಲ್ ಜನಿಸಿದರು. ಅವರ ತಾಯಿ ಪ್ರತಿಭಾ ಮಕ್ಕಳ ವೈದ್ಯೆ. ತಂದೆ ಸುರೇಂದರ್ ಇಂಜಿನಿಯರ್. ಡಾರ್ಟ್ಮೌತ್ ಕಾಲೇಜು ಮತ್ತು ಯೇಲ್ ಲಾ ಸ್ಕೂಲ್ ನಲ್ಲಿ ಪದವೀಧರರಾದರು. 1990ರ ದಶಕದಲ್ಲಿ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಸ್ಟೀಫನ್ ಬ್ರೇಯರ್ ಅವರ ಕಚೇರಿಯಲ್ಲಿ ನೀಲ್ ಕಟ್ಯಾಲ್ ಅವರು ಲಾ ಕ್ಲರ್ಕ್ ಆಗಿ ಸೇವೆ ಸಲ್ಲಿಸಿದರು. ಬಳಿಕ ಹೊಗನ್ & ಹಾರ್ಟ್ಸನ್ ಸಂಸ್ಥೆಯಲ್ಲಿ ಕೆಲಸ ಮಾಡುವಾಗ ಆಗಿನ ವಕೀಲ ಜಾನ್ ರಾಬರ್ಟ್ಸ್ ಅವರೊಂದಿಗೆ ಸಹ ಕಾರ್ಯನಿರ್ವಹಿಸಿದರು. ರಾಬರ್ಟ್ಸ್ ಪ್ರಸ್ತುತ ಅಮೆರಿಕದ ಮುಖ್ಯ ನ್ಯಾಯಮೂರ್ತಿಯಾಗಿದ್ದಾರೆ. 2010ರಲ್ಲಿ ಅಧ್ಯಕ್ಷ ಬರಾಕ್ ಒಬಾಮಾ ಅವರು ನೀಲ್ ಕಟ್ಯಾಲ್ ಅವರನ್ನು ಆಕ್ಟಿಂಗ್ ಸಾಲಿಸಿಟರ್ ಜನರಲ್ ಆಗಿ ನೇಮಿಸಿದರು. ಈ ಹುದ್ದೆಯಲ್ಲಿ ಸೇವೆ ಸಲ್ಲಿಸಿದ ಬಳಿಕ ಅವರು ರಾಷ್ಟ್ರಮಟ್ಟದಲ್ಲಿ ಖ್ಯಾತಿ ಗಳಿಸಿದರು. ಇತ್ತಿಚೆಗೆ ಸುಪ್ರೀಂ ಕೋರ್ಟ್ ನಲ್ಲಿ 50ಕ್ಕೂ ಹೆಚ್ಚು ಪ್ರಕರಣಗಳನ್ನು ವಾದಿಸಿರುವ ಅವರು, ಅಲ್ಪಸಂಖ್ಯಾತ ವಕೀಲರ ಪೈಕಿ ಅತ್ಯಧಿಕ ಪ್ರಕರಣಗಳನ್ನು ವಾದಿಸಿದ ದಾಖಲೆಯನ್ನು ನಿರ್ಮಿಸಿದ್ದಾರೆ. ಈ ಮೂಲಕ 1965ರಲ್ಲಿ ಸಾಲಿಸಿಟರ್ ಜನರಲ್ ಆಗಿ ಸೇವೆ ಸಲ್ಲಿಸಿದ್ದ ಹಾಗೂ ನಂತರ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯಾದ ಥರ್ಗುಡ್ ಮಾರ್ಷಲ್ ಅವರ ದಾಖಲೆಯನ್ನು ಮೀರಿದ್ದಾರೆ. ಪ್ರಸ್ತುತ ನೀಲ್ ಕಟ್ಯಾಲ್ ಅವರು ಮಿಲ್ಬ್ಯಾಂಕ್ ಎಲ್ಎಲ್ಪಿ ಸಂಸ್ಥೆಯಲ್ಲಿ ಪಾಲುದಾರರಾಗಿದ್ದು, ಜಾರ್ಜ್ಟೌನ್ ವಿಶ್ವವಿದ್ಯಾಲಯದಲ್ಲಿ ಕಾನೂನು ಪ್ರಾಧ್ಯಾಪಕರಾಗಿದ್ದಾರೆ. ►ನೀಲ್ ಕಟ್ಯಾಲ್ ವಾದಿಸಿದ ಪ್ರಮುಖ ಪ್ರಕರಣಗಳು ಟ್ರಂಪ್ ಅವರ 2017ರ ಪ್ರಯಾಣ ನಿಷೇಧ (“ಮುಸ್ಲಿಮರ ಪ್ರಯಾಣ ನಿಷೇಧ”ಎಂದೇ ಕುಖ್ಯಾತ) ಪ್ರಕರಣ, 1965ರ ಮತದಾನದ ಹಕ್ಕು ಕಾಯ್ದೆಯ ಸಾಂವಿಧಾನಿಕತೆಯ ಸಮರ್ಥನೆ ಸೇರಿದಂತೆ ಹಲವು ರಾಷ್ಟ್ರೀಯ ಮಟ್ಟದ ಪ್ರಕರಣಗಳಲ್ಲಿ ಕಟ್ಯಾಲ್ ವಾದಿಸಿದ್ದಾರೆ. ಜಾರ್ಜ್ ಫ್ಲಾಯ್ಡ್ ಹತ್ಯೆ ಪ್ರಕರಣದಲ್ಲಿ ವಿಶೇಷ ಪ್ರಾಸಿಕ್ಯೂಟರ್ ಆಗಿ ಕಾರ್ಯನಿರ್ವಹಿಸಿ, ಪೊಲೀಸ್ ಅಧಿಕಾರಿ ಡೆರೆಕ್ ಚೌವಿನ್ ಅವರಿಗೆ ಶಿಕ್ಷೆಯಾಗುವಂತೆ ಮಾಡುವಲ್ಲಿ ನೀಲ್ ಕಟ್ಯಾಲ್ ಪಾತ್ರ ದೊಡ್ಡದು. 2011ರಲ್ಲಿ ಅವರಿಗೆ ಯುಎಸ್ ನ್ಯಾಯ ಇಲಾಖೆಯಿಂದ ನಾಗರಿಕರಿಗೆ ನೀಡಲಾಗುವ ಅತ್ಯುನ್ನತ ಗೌರವವಾದ ಎಡ್ಮಂಡ್ ಜೆ. ರಾಂಡೋಲ್ಫ್ ಪ್ರಶಸ್ತಿ ಲಭಿಸಿದೆ. 2019ರಲ್ಲಿ ‘ಇಂಪೀಚ್: ದಿ ಕೇಸ್ ಅಗೇನ್ಸ್ಟ್ ಡೊನಾಲ್ಡ್ ಟ್ರಂಪ್’ ಕೃತಿಯನ್ನು ಸಹ ಲೇಖಕರಾಗಿಯೂ ಕೆಲಸ ಮಾಡಿದ್ದಾರೆ. 2024 ಮತ್ತು 2025ರಲ್ಲಿ ಫೋರ್ಬ್ಸ್ ಪ್ರಕಟಿಸಿದ ಅಮೆರಿಕದ ಟಾಪ್ 200 ವಕೀಲರ ಪಟ್ಟಿಯಲ್ಲೂ ಅವರು ಸ್ಥಾನ ಪಡೆದಿದ್ದಾರೆ. ಸೌಜನ್ಯ: indianexpress.com
ಸಿಇಟಿ: ಅರ್ಜಿ ಸಲ್ಲಿಸಲು ಫೆ.27ರವರೆಗೆ ಅವಕಾಶ
ಬೆಂಗಳೂರು : ಇಂಜಿನಿಯರಿಂಗ್ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸ್ ಗಳ ಪ್ರವೇಶಕ್ಕೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ನಡೆಸಲಿದ್ದು, ಪರೀಕ್ಷೆಗೆ ಅರ್ಜಿ ಸಲ್ಲಿಸುವ ಕೊನೆ ದಿನಾಂಕವನ್ನು ಫೆ.27ರವರೆಗೆ ವಿಸ್ತರಿಸಲಾಗಿದೆ. ಈ ಸಂಬಂಧ ಪ್ರಾಧಿಕಾರದ ಆಡಳಿತಾಧಿಕಾರಿ ಇಸ್ಲಾವುದ್ದೀನ್ ಗದ್ಯಾಳ ಪ್ರಕಟನೆ ಹೊರಡಿಸಿದ್ದು, ಇದು ಕೊನೆಯ ಅವಕಾಶವಾಗಿದ್ದು, ಈ ಅವಧಿ ನಂತರ ಪುನಃ ದಿನಾಂಕ ವಿಸ್ತರಣೆ ಇರುವುದಿಲ್ಲ. ಹೀಗಾಗಿ ಅಭ್ಯರ್ಥಿಗಳು ನಿಗದಿತ ಅವಧಿಯೊಳಗೆ ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಬೇಕು ಎಂದಿದ್ದಾರೆ. ಇದುವರೆಗೂ 3 ಲಕ್ಷಕ್ಕೂ ಹೆಚ್ಚಿನ ಮಂದಿ ಶುಲ್ಕ ಪಾವತಿಸಿ ಅರ್ಜಿ ಸಲ್ಲಿಸಿದ್ದು, ಇನ್ನೂ ಅನೇಕರು ಫೆ.22ರ ಕೊನೆ ದಿನಾಂಕವನ್ನು ವಿಸ್ತರಿಸುವಂತೆ ಕೋರಿದ್ದಾರೆ. ಆ ಪ್ರಕಾರ ಅರ್ಜಿ ಸಲ್ಲಿಸಲು ಫೆ.27 ಹಾಗೂ ಶುಲ್ಕ ಪಾವತಿಗೆ ಮಾ.3ರವರೆಗೆ ಅವಕಾಶ ನೀಡಲಾಗಿದೆ. ಅರ್ಜಿ ಸಲ್ಲಿಸಿರುವವರ ಪೈಕಿ 2.18 ಲಕ್ಷ ಅಭ್ಯರ್ಥಿಗಳ ದಾಖಲೆಗಳ ಪರಿಶೀಲನೆ ಸ್ಯಾಟ್ಸ್ ಮೂಲಕ ಆನ್ಲೈನ್ ನಲ್ಲಿ ಆಗಿದೆ. ಕಾಲೇಜು ಹಂತದಲ್ಲಿ 1.08 ಲಕ್ಷ ಅಭ್ಯರ್ಥಿಗಳ ದಾಖಲೆ ಪರಿಶೀಲನೆ ಮಾಡಲಾಗಿದೆ ಎಂದು ಅವರು ವಿವರಿಸಿದ್ದಾರೆ.
‘ಸಾಮಾಜಿಕ ನ್ಯಾಯ’ದ ಪರ ಯಾವ ನಾಯಕನೂ ಇಲ್ಲ : ವಿ.ಎಸ್.ಉಗ್ರಪ್ಪ
ಎಂ.ಜಿ.ಹೆಗಡೆ ಅವರ ‘ಭಾರತ ಮುಸ್ಲಿಮ್ ರಾಷ್ಟ್ರ ಆಗುವುದೇ?’ ಕೃತಿ ಬಿಡುಗಡೆ
Bengaluru | ಸುಗಂಧ ದ್ರವ್ಯ ಗೋದಾಮಿಗೆ ಬೆಂಕಿ: ಅಪಾರ ನಷ್ಟ
ಬೆಂಗಳೂರು : ಬೆಂಗಳೂರು ಹೊರವಲಯದಲ್ಲಿನ ನೆಲಮಂಗಲ ತಾಲೂಕಿನ ಮಾಕಳಿ ಬಳಿಯ ಸುಗಂಧ ದ್ರವ್ಯಗಳನ್ನು ಸಂಗ್ರಹಿಸಿದ್ದ ಗೋದಾಮಿನಲ್ಲಿ ವಿದ್ಯುತ್ ಶಾರ್ಟ್ ಸಕ್ರ್ಯೂಟ್ನಿಂದ ಬೆಂಕಿ ಅವಘಡ ಸಂಭಿಸಿದ್ದು, ಭಾರಿ ಪ್ರಮಾಣದ ಆಸ್ತಿಪಾಸ್ತಿ ನಷ್ಟವಾಗಿದೆ. ರವಿವಾರ ಬೆಳಗ್ಗೆ 11:30ರ ಸುಮಾರಿಗೆ ಸಂಭವಿಸಿದ ಅಗ್ನಿ ದುರಂತದಿಂದ ಸಂಗ್ರಹಿಸಿದ್ದ ಸುಗಂಧ ದ್ರವ್ಯಗಳು ನಾಶವಾಗಿವೆ. ವೇಗವಾಗಿ ಹರಡಿದ ಬೆಂಕಿ ಕೇವಲ ಒಂದು ಗಂಟೆಯೊಳಗೆ ಅಕ್ಕ ಪಕ್ಕದ ಮೂರರಿಂದ ನಾಲ್ಕು ಗೋದಾಮುಗಳಿಗೆ ವ್ಯಾಪಿಸಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ವರದಿಯಾಗಿದ್ದು, ಬೆಂಕಿಯನ್ನು ನಂದಿಸಲು ಅಗ್ನಿಶಾಮಕ ದಳ ಸಿಬ್ಬಂದಿ ಹರಸಾಹಸ ಪಟ್ಟಿದ್ದಾರೆ. ಅಗ್ನಿ ಅವಘಡದಿಂದಾಗಿ ಯಾವುದೇ ಪ್ರಾಣಹಾನಿ ಸಂಭವಿಸಲಿಲ್ಲವಾದರೂ ಕಾರ್ಮಿಕರಿಗೆ ಗಾಯಗಳಾಗಿವೆ. ವೇರ್ ಹೌಸ್ನಲ್ಲಿ ಕೆಲಸ ಮಾಡುತ್ತಿದ್ದ ನಾಲ್ವರು ಕಾರ್ಮಿಕರಿಗೆ ಸುಟ್ಟ ಗಾಯಗಳಾಗಿದ್ದು, ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಗಾಯಗೊಂಡ ಕಾರ್ಮಿಕರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಸ್ಥಳೀಯರೊಬ್ಬರು ಮಾಹಿತಿ ನೀಡಿದ್ದಾರೆ. ಈ ಗೋದಾಮುಗಳಲ್ಲಿ ನಾಯಿಗಳ ಆಹಾರ ಸಂಗ್ರಹಿಸುವ ಪೆಡಿಗ್ರಿ ಗೋದಾಮು ಸೇರಿವೆ ಎನ್ನಲಾಗಿದೆ. ಬೆಂಕಿಯ ಕೆನ್ನಾಲಿಗೆಗೆ ಒಟ್ಟು ಕೋಟ್ಯಂತರ ರೂಪಾಯಿ ಮೌಲ್ಯದ ವಸ್ತುಗಳು ಸುಟ್ಟು ಕರಕಲಾಗಿವೆ. ವಿಶೇಷವಾಗಿ, ಅಗ್ನಿ ಅವಘಡ ಸಂಭವಿಸಿದ ಸ್ಥಳದ ಪಕ್ಕದಲ್ಲೇ ಎಚ್ಪಿ ಗ್ಯಾಸ್ ಸಿಲಿಂಡರ್ ಸಂಗ್ರಹವಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಅವುಗಳನ್ನು ತಕ್ಷಣವೇ ಸ್ಥಳಾಂತರಿಸಲಾಗಿದೆ. ಈ ಸಂಬಂಧ ಮಾದಕನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆಳಂದ |ವಿದ್ಯಾರ್ಥಿಗಳು ನವೋದ್ಯಮಗಳ ಆರಂಭದತ್ತ ಗಮನ ಹರಿಸಿ : ಪ್ರೊ.ಎಸ್.ರಘುನಾಥ ರೆಡ್ಡಿ
ಆಳಂದ: ಉನ್ನತ ಶಿಕ್ಷಣದಲ್ಲಿ ಉದ್ಯಮಶೀಲತಾ ಚಿಂತನೆ ಇಂದಿನ ಅತ್ಯಾವಶ್ಯಕತೆಯಾಗಿದೆ. ವಿದ್ಯಾರ್ಥಿಗಳು ಸಾಂಪ್ರದಾಯಿಕ ವೃತ್ತಿ ಮಾರ್ಗಗಳನ್ನು ಮೀರಿ ನವೋದ್ಯಮಗಳ ಆರಂಭದತ್ತ ಗಮನ ಹರಿಸಿ, ಅದನ್ನು ಪ್ರಭಾವಶಾಲಿ ಮತ್ತು ಗೌರವಾನ್ವಿತ ವೃತ್ತಿಯಾಗಿ ಆಯ್ಕೆ ಮಾಡಿಕೊಳ್ಳಬೇಕು ಎಂದು ಆಂಧ್ರಪ್ರದೇಶದ ಯೋಗಿ ವೇಮನ ವಿಶ್ವವಿದ್ಯಾಲಯದ ವಾಣಿಜ್ಯ ವಿಭಾಗದ ಮುಖ್ಯಸ್ಥ ಪ್ರೊ.ಎಸ್.ರಘುನಾಥ ರೆಡ್ಡಿ ಹೇಳಿದರು. ತಾಲೂಕಿನ ಕಡಗಂಚಿ ಬಳಿಯ ಕರ್ನಾಟಕ ಕೇಂದ್ರ ವಿಶ್ವವಿದ್ಯಾಲಯದ ವಾಣಿಜ್ಯ ಅಧ್ಯಯನ ನಿಕಾಯದ ವಾಣಿಜ್ಯ ವಿಭಾಗವು ಆಯೋಜಿಸಿದ್ದ ‘ನವೋದ್ಯಮ ಪರಿಸರ ವ್ಯವಸ್ಥೆ’ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಉದ್ಯಮಶೀಲತೆ ಕೇವಲ ಆರ್ಥಿಕ ಲಾಭದ ಸಾಧನವಲ್ಲ, ಅದು ಸಮಾಜ ಪರಿವರ್ತನೆಗೆ ಶಕ್ತಿಯಾದ ವೇದಿಕೆಯಾಗಬೇಕೆಂದು ಅಭಿಪ್ರಾಯಪಟ್ಟರು. ಯುವಜನತೆ ಹೊಸ ಆಲೋಚನೆಗಳು, ತಂತ್ರಜ್ಞಾನ ಮತ್ತು ನಾವೀನ್ಯತೆಯ ಮೂಲಕ ಉದ್ಯೋಗ ಸೃಷ್ಟಿಕರ್ತರಾಗಬೇಕೆಂದು ಕರೆ ನೀಡಿದರು. ಸಿಯುಕೆಯ ಇನ್ಕ್ಯುಬೇಷನ್ ಸೆಂಟರ್ನ ನಿರ್ದೇಶಕ ಡಾ.ರಾಜೀವ ಜೋಶಿ ಮಾತನಾಡಿ, ವಿದ್ಯಾರ್ಥಿ ಉದ್ಯಮಿಗಳಿಗೆ ಸೂಕ್ತ ಮಾರ್ಗದರ್ಶನ, ಹಣಕಾಸು ಬೆಂಬಲ ಮತ್ತು ಉದ್ಯಮ ಸಂಪರ್ಕಗಳನ್ನು ಒದಗಿಸುವ ಉದ್ದೇಶದಿಂದ ವಿಶ್ವವಿದ್ಯಾಲಯದಲ್ಲಿ ಇನ್ಕ್ಯುಬೇಷನ್ ಸೆಂಟರ್ ಸ್ಥಾಪಿಸಲಾಗಿದೆ. ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದು ತಮ್ಮ ಆಲೋಚನೆಗಳನ್ನು ಯಶಸ್ವಿ ಉದ್ಯಮಗಳಾಗಿ ರೂಪಿಸಿಕೊಳ್ಳಬೇಕು ಎಂದರು. ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ (ಕೆಇಡಿಎಂ) ಕಲಬುರಗಿ ಕ್ಲಸ್ಟರ್ನ ಮುಖ್ಯಸ್ಥ ಸುಜಯ ಮುದ್ಗಲ್ ಮಾತನಾಡಿದರು. ಕಲಬುರಗಿಯ ಇಮೈಲ್ ಏಜ್ ಇನಿಶಿಯೇಟಿವ್ ಪ್ರೈವೇಟ್ ಲಿಮಿಟೆಡ್ನ ಸಂಸ್ಥಾಪಕ ಹಾಗೂ ಸಿಇಒ ಶ್ರೀ.ಬಸವರೆಡ್ಡಿ ಎಸ್.ಎಂ. ತಮ್ಮ ಉದ್ಯಮಶೀಲತಾ ಅನುಭವವನ್ನು ಹಂಚಿಕೊಂಡರು. ಅಧ್ಯಕ್ಷತೆಯನ್ನು ಸ್ಕೂಲ್ ಆಫ್ ಬಿಸಿನೆಸ್ ಸ್ಟಡೀಸ್ನ ಡೀನ್ ಪ್ರೊ.ಪಾಂಡುರoಗ ವಿ. ವಹಿಸಿದ್ದರು. ಸಂಯೋಜಕ ಡಾ.ಜಿ.ರಂಗನಾಥಮ ನಿರೂಪಿಸಿ, ಸ್ವಾಗತಿಸಿದರು. ಪ್ರೊ.ಪದ್ಮಶ್ರೀ, ಪ್ರೊ.ಎಂ.ಎ.ಅಸ್ಲಾಂ, ಡಾ.ಮಹೇಂದ್ರ, ಡಾ. ರಾಜಲಿಂಗ, ಅಧ್ಯಾಪಕ ವೃಂದ, ಸಂಶೋಧನಾ ವಿದ್ವಾಂಸರು ಹಾಗೂ ವಿದ್ಯಾರ್ಥಿಗಳು ಭಾರಿ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
ಲಂಚ ಪ್ರಕರಣದಲ್ಲಿ ಬಿಜೆಪಿ ಶಾಸಕ ಚಂದ್ರು ಲಮಾಣಿಗೆ ನ್ಯಾಯಾಂಗ ಬಂಧನ; ಪರಪ್ಪನ ಅಗ್ರಹಾರ ಜೈಲಿಗೆ ಶಿಫ್ಟ್
ಲಂಚ ಸ್ವೀಕಾರ ಆರೋಪದಲ್ಲಿ ಲೋಕಾಯುಕ್ತ ಬಲೆಗೆ ಬಿದ್ದ ಶಿರಹಟ್ಟಿ ಕ್ಷೇತ್ರದ ಬಿಜೆಪಿ ಶಾಸಕ ಚಂದ್ರು ಲಮಾಣಿ ಅವರಿಗೆ ಮಾರ್ಚ್ 3ರವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಈ ಆದೇಶ ಹೊರಡಿಸಿದೆ. ಶಾಸಕ ಲಮಾಣಿ ಹಾಗೂ ಅವರ ಅಧಿಕೃತ ವೈಯಕ್ತಿಕ ಸಹಾಯಕ ಮಂಜುನಾಥ್ ಸೇರಿದಂತೆ ಇನ್ನೋರ್ವ ಸಹಾಯಕನನ್ನು ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಶಿಫ್ಟ್
Beef: ಪರೋಟ ಇಲ್ಲದೆ ಬೀಫ್ ಸೇವಿಸುವುದು ಹೇಗೆ; ಕೇರಳ 2 ಸ್ಟೋರಿ ದೃಶ್ಯಕ್ಕೆ ಸೋಷಿಯಲ್ ಮೀಡಿಯಾ ಟ್ರೋಲ್
The Kerala Story 2 Teaser: ದಿ ಕೇರಳ: ಸ್ಟೋರಿ 2: ಗೋಸ್ ಬಿಯಾಂಡ್ ಇದೀಗ ಕೇರಳ ಸೇರಿದಂತೆ ಭಾರತದಾದ್ಯಂತ ಭಾರೀ ಚರ್ಚೆಗೆ ಕಾರಣವಾಗಿದೆ. ಮುಖ್ಯವಾಗಿ ಈ ಸಿನಿಮಾದ ಟ್ರೇಲರ್ನಲ್ಲಿ ಒತ್ತಾಯಪೂರ್ವಕವಾಗಿ ಬೀಫ್ ತಿನ್ನಿಸುತ್ತಿರುವ ದೃಶ್ಯವು ಇದೀಗ ವಿವಾದ ಸ್ವರೂಪವನ್ನು ಪಡೆದುಕೊಂಡಿದೆ. ದಿ ಕೇರಳ ಸ್ಟೋರಿ 2ನ ಟೀಸರ್ನಲ್ಲಿ ಗೋಮಾಂಸ ತಿನ್ನುವ ದೃಶ್ಯವು ಕೇರಳಿಗರಿಂದ ತೀವ್ರ ಆಕ್ಷೇಪ

29 C