ಧಾರವಾಡ: ರಾಜ್ಯದಲ್ಲಿ ಸರ್ಕಾರಿ ಉದ್ಯೋಗದ ನಿರೀಕ್ಷೆಯಲ್ಲಿದ್ದ ಅಸಂಖ್ಯಾತ ಯುವಕರು ನೇಮಕಾತಿ ಪ್ರಕ್ರಿಯೆಗಳ ವಿಳಂಬದಿಂದಾಗಿ ತೀವ್ರ ಹತಾಶೆಗೆ ಒಳಗಾಗಿದ್ದಾರೆ. ಆಡಳಿತಾತ್ಮಕ ಅಸಮರ್ಥತೆ ಮತ್ತು ನೌಕರಿಯ ಕೊರತೆಯನ್ನು ಖಂಡಿಸಿ ಇತ್ತೀಚೆಗೆ ಧಾರವಾಡದಲ್ಲಿ ಸಾವಿರಾರು ಉದ್ಯೋಗಾಕಾಂಕ್ಷಿಗಳು ನಡೆಸಿದ ಬೃಹತ್ ಪ್ರತಿಭಟನೆ ಇದೀಗ ರಾಷ್ಟ್ರಮಟ್ಟದಲ್ಲಿ ಗಮನ ಸೆಳೆಯುತ್ತಿದೆ.ಈ ವಿದ್ಯಮಾನದ ಬೆನ್ನಲ್ಲೇ, ಹುಬ್ಬಳ್ಳಿ-ಧಾರವಾಡ ಪಶ್ಚಿಮ ಕ್ಷೇತ್ರದ ಶಾಸಕ ಹಾಗೂ ವಿಧಾನಸಭೆಯ ಪ್ರತಿಪಕ್ಷ ಉಪನಾಯಕ ಅರವಿಂದ
ಪ್ರತಿಭಟನೆ ವೇಳೆ ದಿಲ್ಲಿ ಪೊಲೀಸರ ಜೊತೆ ಘರ್ಷಣೆ: 14 ಮಂದಿ JNU ವಿದ್ಯಾರ್ಥಿಗಳ ಬಂಧನ
ಹೊಸದಿಲ್ಲಿ: ಶಿಕ್ಷಣ ಸಚಿವಾಲಯದ ಕಡೆಗೆ ಹೊರಟಿದ್ದ ವಿದ್ಯಾರ್ಥಿಗಳ ಮೆರವಣಿಗೆಯನ್ನು ತಡೆದ ಕೆಲವೇ ಗಂಟೆಗಳಲ್ಲಿ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ (ಜೆಎನ್ಯು) 14 ಮಂದಿ ವಿದ್ಯಾರ್ಥಿಗಳನ್ನು ದಿಲ್ಲಿ ಪೊಲೀಸರು ಬಂಧಿಸಿದ್ದಾರೆ. ಬಂಧಿತರಲ್ಲಿ ಜೆಎನ್ಯು ವಿದ್ಯಾರ್ಥಿ ಸಂಘದ ಮಾಜಿ ಅಧ್ಯಕ್ಷ ನಿತೀಶ್ ಕುಮಾರ್, ಹಾಲಿ ಅಧ್ಯಕ್ಷೆ ಅದಿತಿ ಮಿಶ್ರಾ, ದಾನಿಶ್ ಅಲಿ ಮತ್ತು ಗೋಪಿಕಾ ಬಾಬು ಸೇರಿದ್ದಾರೆ. ಜೆಎನ್ಯು ವಿದ್ಯಾರ್ಥಿಗಳ ಪ್ರತಿಭಟನಾ ಮೆರವಣಿಗೆ ಪೊಲೀಸರೊಂದಿಗೆ ಘರ್ಷಣೆಯಲ್ಲಿ ಕೊನೆಗೊಂಡಿತು. ನಾಲ್ವರು ಜೆಎನ್ಯು ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು ಸೇರಿದಂತೆ ಒಟ್ಟು 51 ಮಂದಿಯನ್ನು ವಶಕ್ಕೆ ಪಡೆಯಲಾಗಿತ್ತು. ಗುರುವಾರ ರಾತ್ರಿ ವಸಂತ್ ಕುಂಜ್ ಉತ್ತರ ಪೊಲೀಸರು ಪ್ರತಿಭಟನಾಕಾರರ ಮೇಲೆ ಭಾರತೀಯ ನ್ಯಾಯ ಸಂಹಿತೆಯ ವಿವಿಧ ಸೆಕ್ಷನ್ಗಳಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ದಿಲ್ಲಿ ಪೊಲೀಸರ ಪ್ರಕಾರ, ವಿಶ್ವವಿದ್ಯಾನಿಲಯದ ಆಡಳಿತವು ವಿದ್ಯಾರ್ಥಿಗಳಿಗೆ ಕ್ಯಾಂಪಸ್ ಹೊರಗೆ ಪ್ರತಿಭಟನೆಗೆ ಯಾವುದೇ ಅನುಮತಿ ನೀಡಿಲ್ಲ. ಇದರ ಹೊರತಾಗಿಯೂ, ಗುರುವಾರ ಮಧ್ಯಾಹ್ನ ಸುಮಾರು 400 ರಿಂದ 500 ವಿದ್ಯಾರ್ಥಿಗಳು ಮುಖ್ಯ ದ್ವಾರದ ಕಡೆಗೆ ಮೆರವಣಿಗೆ ನಡೆಸಲು ಪ್ರಾರಂಭಿಸಿದರು. ಬ್ಯಾರಿಕೇಡ್ಗಳಿಗೆ ಹಾನಿಗೊಳಿಸಿದರು. ಪ್ರತಿಭಟನೆ ಹಿಂಸಾತ್ಮಕವಾಗಿತ್ತು. ಪ್ರತಿಭಟನಾಕಾರರು ಬ್ಯಾನರ್ಗಳು, ಕೋಲುಗಳು ಮತ್ತು ಬೂಟುಗಳನ್ನು ಎಸೆದರು ಮತ್ತು ಕೆಲವರು ಪೊಲೀಸ್ ಸಿಬ್ಬಂದಿಯ ಮೇಲೆ ದೈಹಿಕವಾಗಿ ಹಲ್ಲೆ ನಡೆಸಿದ್ದಾರೆ. ಪ್ರತಿಭಟನೆಯ ವೇಳೆ ಹಲವು ಸಿಬ್ಬಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಾಜಿ ಮುಖ್ಯಮಂತ್ರಿ ಕೆ.ಸಿ.ರೆಡ್ಡಿಯವರ ಆದರ್ಶಗಳು ನಮಗೆ ಸ್ಪೂರ್ತಿ : ಸಿದ್ದರಾಮಯ್ಯ
ಬೆಂಗಳೂರು : ರಾಜ್ಯದ ಅಭಿವೃದ್ಧಿಗೆ ಮಹತ್ತರ ಕೊಡುಗೆ ನೀಡಿದ ಮಾಜಿ ಮುಖ್ಯಮಂತ್ರಿ ದಿವಂಗತ ಕೆ.ಸಿ.ರೆಡ್ಡಿಯವರ ಆದರ್ಶಗಳು ನಮಗೆ ಸ್ಪೂರ್ತಿ ಹಾಗೂ ಮಾರ್ಗದರ್ಶನ ನೀಡಿವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಅವರು ಇಂದು ಮಾಜಿ ಮುಖ್ಯಮಂತ್ರಿ ದಿವಂಗತ ಕೆ ಸಿ ರೆಡ್ಡಿ ಯವರ ಪುಣ್ಯ ತಿಥಿಯ ಅಂಗವಾಗಿ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು. ಮಾಜಿ ಮುಖ್ಯಮಂತ್ರಿ ದಿವಂಗತ ಕೆಸಿ ರೆಡ್ಡಿ ಯವರಿಗೆ ಇಂದು ಗೌರವ ಅರ್ಪಿಸಲಾಗಿದೆ. ಅವರು ಸ್ವತಂತ್ರ ಭಾರತದ ರಾಜ್ಯದ ಮೊದಲ ಮುಖ್ಯಮಂತ್ರಿ. ಸ್ವಾತಂತ್ರ್ಯ ಹೋರಾಟದಲ್ಲಿ ಸಕ್ರಿಯರಾಗಿದ್ದ ಅವರು ಅನೇಕ ಬಾರಿ ಜೈಲುವಾಸ ಅನುಭವಿಸಿದ್ದಾರೆ. ಮೈಸೂರು ಸಂಸ್ಥಾನವನ್ನು ಒಗ್ಗೂಡಿಸುವುದರಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಮುಖ್ಯಮಂತ್ರಿಯಾಗಿ, ಕೇಂದ್ರ ಸಚಿವರಾಗಿ, ರಾಜ್ಯಪಾಲರಾಗಿ ಜನಸೇವೆಯನ್ನು ಮಾಡಿದ್ದರು, ಕರ್ನಾಟಕದಲ್ಲಿ ಕಾರ್ಖಾನೆಗಳ ಸ್ಥಾಪನೆಗೆ ಶ್ರಮಿಸಿದ ಕೆ.ಸಿ.ರೆಡ್ಡಿಯವರು ರಾಜ್ಯ ಅಭಿವೃದ್ಧಿಗೆ ಮಹತ್ತರ ಕೊಡುಗೆ ನೀಡಿದ್ದಾರೆ. ಪ್ರಾಮಾಣಿಕ ರಾಜಕೀಯ ನಾಯಕರಾಗಿದ್ದರು. ಅವರ ಆತ್ಮಕ್ಕೆ ಭಗವಂತನು ಚಿರಶಾಂತಿಯನ್ನು ನೀಡಲಿ ಹಾಗೂ ಅವರ ಆದರ್ಶಗಳು ಸದಾ ನಮಗೆ ಮಾರ್ಗದರ್ಶನ ನೀಡಿದೆ ಎಂದು ತಿಳಿಸಿದರು.
ಮಂಗಳೂರಿನಲ್ಲಿ ನಾಳೆ ಎಸ್ಸಿ/ಎಸ್ಟಿ ವಿದ್ಯಾರ್ಥಿಗಳಿಗೆ ‘ಪ್ರೇರಣಾ ಉದ್ಯಮಶೀಲ’ ಸಮಾವೇಶ: ಕ್ಯಾ. ಬ್ರಿಜೇಶ್ ಚೌಟ
ಮಂಗಳೂರು: ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳನ್ನು ಉದ್ಯಮಶೀಲತೆಯತ್ತ ಸೆಳೆಯುವ ಹಾಗೂ ಅವರಿಗೆ ಭವಿಷ್ಯದಲ್ಲಿ ಸ್ವಂತ ಉದ್ಯಮ ಸ್ಥಾಪಿಸಲು ಅಗತ್ಯವಾದ ಮಾರ್ಗದರ್ಶನ ನೀಡುವ ಉದ್ದೇಶದಿಂದ ಮಂಗಳೂರಿನಲ್ಲಿ ಫೆ. 28ರಂದು ‘ಪ್ರೇರಣಾ–2026’ ಉದ್ಯಮಶೀಲತಾ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಸಂಸದ ಕ್ಯಾ. ಬ್ರಿಜೇಶ್ ಚೌಟ ತಿಳಿಸಿದ್ದಾರೆ. ಮಂಗಳೂರಿನ ಎಸ್ಡಿಎಂ ಕಾನೂನು ಪದವಿ ಕಾಲೇಜಿನಲ್ಲಿ ಈ ಸಮಾವೇಶ ನಡೆಯಲಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಎಸ್ಸಿ/ಎಸ್ಟಿ ಯುವ ಸಮುದಾಯದಲ್ಲಿ ಸ್ವಂತ ಉದ್ಯಮ ಸ್ಥಾಪಿಸುವ ಕನಸು, ಕೌಶಲ್ಯ ಹಾಗೂ ಸಾಮರ್ಥ್ಯ ಹೊಂದಿರುವ ಅನೇಕ ಐಟಿಐ, ಡಿಪ್ಲೊಮಾ ಮತ್ತು ಎಂಜಿನಿಯರಿಂಗ್ ವಿದ್ಯಾರ್ಥಿಗಳಿದ್ದಾರೆ. ಅಂಥವರಿಗೆ ಉದ್ಯಮ ಸ್ಥಾಪಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಂದ ಹಲವು ಯೋಜನೆಗಳು ಮತ್ತು ಸೌಲಭ್ಯಗಳು ಲಭ್ಯವಿವೆ. ಈ ಯೋಜನೆಗಳ ಕುರಿತು ಅಗತ್ಯ ಮಾಹಿತಿ ಹಾಗೂ ಬ್ಯಾಂಕ್ಗಳಿಂದ ದೊರೆಯುವ ಸಾಲ ಸೌಲಭ್ಯಗಳ ಬಗ್ಗೆ ‘ಪ್ರೇರಣಾ’ ಸಮಾವೇಶದಲ್ಲಿ ಮಾರ್ಗದರ್ಶನ ನೀಡಲಾಗುವುದು. ಈ ಹಿನ್ನೆಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಎಸ್ಸಿ/ಎಸ್ಟಿ ಸಮುದಾಯದ ವಿದ್ಯಾರ್ಥಿಗಳು ಸಮಾವೇಶದಲ್ಲಿ ಭಾಗವಹಿಸಬೇಕೆಂದು ಅವರು ಮನವಿ ಮಾಡಿದ್ದಾರೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ‘ಆತ್ಮನಿರ್ಭರ ಭಾರತ’ ಕನಸಿನಿಂದ ಪ್ರೇರಿತರಾಗಿ, ಸ್ಥಳೀಯ ಉದ್ಯಮಶೀಲತೆಯ ಉತ್ಸಾಹಕ್ಕೆ ಮರುಜೀವ ನೀಡುವ ಉದ್ದೇಶದಿಂದ ‘ಬೊಲ್ಪು’ ಹಾಗೂ ಎಸ್ಸಿ/ಎಸ್ಟಿ ಅಧ್ಯಯನ ಮತ್ತು ಅಭಿವೃದ್ಧಿ ಟ್ರಸ್ಟ್ ಸಹಯೋಗದಲ್ಲಿ ಈ ಸಮಾವೇಶ ಹಮ್ಮಿಕೊಳ್ಳಲಾಗಿದೆ. ನಮ್ಮ ಊರಿನ ಯುವಕರು ಉದ್ಯೋಗಾಕಾಂಕ್ಷಿಗಳಾಗುವುದಕ್ಕಿಂತ ಉದ್ಯೋಗದಾತರಾಗಬೇಕು ಎಂಬುದು ಸಮಾವೇಶದ ಪ್ರಮುಖ ಗುರಿಯಾಗಿದೆ. ಎಸ್ಸಿ/ಎಸ್ಟಿ ಸಮುದಾಯದ ವಿದ್ಯಾರ್ಥಿಗಳಲ್ಲಿ ಉದ್ಯಮಶೀಲ ಮನೋಭಾವ ಬೆಳೆಸಲು ಕೇಂದ್ರ ಸರ್ಕಾರವೂ ಹೆಚ್ಚಿನ ಆದ್ಯತೆ ನೀಡುತ್ತಿದೆ. ಅದರ ಆಶಯದಂತೆ ಈ ಸಮಾವೇಶ ಆಯೋಜಿಸಲಾಗಿದೆ ಎಂದು ಕ್ಯಾ. ಚೌಟ ತಿಳಿಸಿದ್ದಾರೆ. ಯುವ ಉದ್ಯಮಿಗಳ ಹೊಸ ಆಲೋಚನೆಗಳಿಗೆ ‘ಬೊಲ್ಪು’ ನೀಡುವ ಈ ಸಮಾವೇಶದ ಪ್ರಯೋಜನವನ್ನು ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಎಸ್ಸಿ/ಎಸ್ಟಿ ವಿದ್ಯಾರ್ಥಿಗಳು ಸದುಪಯೋಗಪಡಿಸಿಕೊಳ್ಳಬೇಕು. ಸರ್ಕಾರದ ಸೌಲಭ್ಯಗಳನ್ನು ಬಳಸಿಕೊಂಡು ಭವಿಷ್ಯದಲ್ಲಿ ಯಶಸ್ವಿ ಉದ್ಯಮಿಗಳಾಗಿ ಬೆಳೆಯಲು ಇದು ಅಮೂಲ್ಯ ಅವಕಾಶವಾಗಲಿದೆ ಎಂದು ಅವರು ಹೇಳಿದರು. ಈ ಸಮಾವೇಶವನ್ನು ಮಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಪಿ.ಎಲ್. ಧರ್ಮ ಉದ್ಘಾಟಿಸಲಿದ್ದಾರೆ. ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್, ಎಸ್ಡಿಎಂ ವಿದ್ಯಾಸಂಸ್ಥೆಯ ಸಿಇಒ ಪೂರಣ್ ವರ್ಮಾ, ಎಸ್ಸಿ/ಎಸ್ಟಿ ಅಧ್ಯಯನ ಮತ್ತು ಅಭಿವೃದ್ಧಿ ಟ್ರಸ್ಟ್ ಅಧ್ಯಕ್ಷ ಮೋಹನಾಂಗಯ್ಯ ಸ್ವಾಮಿ, ವಾದಿರಾಜ್ ಸಾಮರಸ್ಯ, ದಲಿತ ಉದ್ಯಮಿಗಳ ಸಂಘದ ಕಾರ್ಯಾಧ್ಯಕ್ಷ ಸಿ.ಜಿ. ಶ್ರೀನಿವಾಸ್ ಮುಂತಾದವರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು. ಹೆಚ್ಚಿನ ಮಾಹಿತಿಗಾಗಿ 91414 41144 ಅಥವಾ 97431 20044 ಸಂಖ್ಯೆಗಳನ್ನ ಸಂಪರ್ಕಿಸಬಹುದು.
ಅಕ್ರಮ ಮರಳು ದಂಧೆ ತಡೆಯುವಲ್ಲಿ ಜಿಲ್ಲಾಡಳಿತ ನಿರ್ಲಕ್ಷ್ಯ : ಸಾರ್ವಜನಿಕರ ಆರೋಪ
ಸಕಲೇಶಪುರ : ಹೇಮಾವತಿ ನದಿ ದಂಡೆ ಪ್ರದೇಶದಲ್ಲಿ ನಿರಂತರವಾಗಿ ನಡೆಯುತ್ತಿರುವ ಅಕ್ರಮ ಮರಳು ಗಣಿಗಾರಿಕೆ ಹಾಗೂ ಸಾಗಾಟ, ಸಂಬಂಧಿತ ಇಲಾಖೆಗಳ ಕಾರ್ಯ ದಕ್ಷತೆ ಮೇಲೆ ಗಂಭೀರ ಪ್ರಶ್ನೆಗಳು ಉದ್ಭವಿಸಿವೆ. ಪಟ್ಟಣ ಸಮೀಪದ ಮಳಲಿ ಲೇಔಟ್ ಪ್ರದೇಶದಲ್ಲಿ ಭಾರೀ ಪ್ರಮಾಣದಲ್ಲಿ ಅಕ್ರಮವಾಗಿ ಮರಳು ಶೇಖರಣೆ ಮಾಡಿರುವ ಕುರಿತು ಸ್ಥಳೀಯ ಕೆಲವು ಪತ್ರಕರ್ತರು ವೀಡಿಯೊ ಮತ್ತು ಛಾಯಾಚಿತ್ರ ಸಾಕ್ಷ್ಯಗಳೊಂದಿಗೆ ಕೆಲವು ವರದಿ ಪ್ರಕಟಿಸಿದ ಬೆನ್ನಲ್ಲೇ, ಮರಳು ಮಾಫಿಯಾ ಚಟುವಟಿಕೆಗಳು ಇನ್ನಷ್ಟು ತೀವ್ರಗೊಂಡಿರುವುದು ಬೆಳಕಿಗೆ ಬಂದಿದೆ. ಅಧಿಕಾರಿಗಳ ದಾಳಿ ಸಾಧ್ಯತೆಯನ್ನು ಮನಗಂಡ ಅಕ್ರಮ ಮರಳು ಸಾಗಾಟಗಾರರು ರಾತ್ರೋರಾತ್ರಿ ಸುಮಾರು 20ಕ್ಕೂ ಹೆಚ್ಚು ಟಿಪ್ಪರ್ ವಾಹನಗಳ ಮೂಲಕ ಸಂಗ್ರಹಿಸಿದ್ದ ಮರಳನ್ನು ಬೇರೆಡೆಗೆ ಸಾಗಿಸಲಾಗಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ಸರಕಾರಕ್ಕೆ ರಾಜಸ್ವ ನಷ್ಟ : ಹೇಮಾವತಿ ನದಿ ದಂಡೆ ವ್ಯಾಪ್ತಿಯಲ್ಲಿ ದೀರ್ಘಕಾಲದಿಂದ ಅಕ್ರಮ ಮರಳು ಗಣಿಗಾರಿಕೆ ನಡೆಯುತ್ತಿರುವುದರಿಂದ ಸರಕಾರಕ್ಕೆ ಕೋಟ್ಯಂತರ ರೂ.ರಾಜಸ್ವ ನಷ್ಟವಾಗುತ್ತಿರುವುದಾಗಿ ಅಂದಾಜಿಸಲಾಗಿದೆ. ಸಂಬಂಧಿತ ಇಲಾಖೆಗಳ ವಿರುದ್ಧ ಟೀಕೆ: ಭೂ ಮತ್ತು ಗಣಿ ಇಲಾಖೆ, ಪೊಲೀಸ್ ಇಲಾಖೆ ಹಾಗೂ ತಹಶೀಲ್ದಾರ್ ಕಚೇರಿ ಸಮನ್ವಯದ ಕೊರತೆಯಿಂದಲೇ ಅಕ್ರಮ ಮರಳು ದಂಧೆ ನಿಯಂತ್ರಣ ಸಾಧ್ಯವಾಗುತ್ತಿಲ್ಲ ಎಂಬ ಆರೋಪ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ. ದಾಳಿಗಳು ಕೇವಲ ಕಣ್ಣೋರಿಸುವ ತಂತ್ರವಾಗಿದೆ. ಪರಿಣಾಮಕಾರಿ ಕಾನೂನು ಕ್ರಮ ಕೈಗೊಳ್ಳಲಾಗುತ್ತಿಲ್ಲ. ಮರಳು ಮಾಫಿಯಾದಲ್ಲಿ ತೊಡಗಿರುವವರಿಗೆ ಯಾವುದೇ ಭಯವಿಲ್ಲದಿರುವುದಕ್ಕೆ ಪ್ರಮುಖ ಕಾರಣವಾಗಿದೆ. ಅಕ್ರಮ ಮರಳು ಗಣಿಗಾರಿಕೆ ಮತ್ತು ಸಾಗಾಟದಲ್ಲಿ ತೊಡಗಿರುವವರ ವಿರುದ್ಧ ತಕ್ಷಣ ಕಾನೂನು ಕ್ರಮ, ಮರಳು ಶೇಖರಣೆ ಮಾಡಿರುವ ಸೈಟ್ಗಳ ಸೀಝ್, ಸಂಬಂಧಿತ ಅಧಿಕಾರಿಗಳ ನಿರ್ಲಕ್ಷ್ಯ ಕುರಿತು ಇಲಾಖಾ ತನಿಖೆ, ನದಿ ದಂಡೆ ಪ್ರದೇಶದಲ್ಲಿ ಶಾಶ್ವತ ನಿಗಾ ವ್ಯವಸ್ಥೆ ಮಾಡುವಂತೆ ನಾಗರಿಕರು ಒತ್ತಾಯಿಸಿದ್ದಾರೆ. ಹೇಮಾವತಿ ನದಿ ಮಲೆನಾಡಿನ ಜೀವನಾಡಿಯಾಗಿದ್ದು, ಅದರ ಸಂರಕ್ಷಣೆ ಸರಕಾರ ಮತ್ತು ಸಮಾಜದ ಸಮೂಹ ಜವಾಬ್ದಾರಿಯಾಗಿದೆ. ಅಕ್ರಮ ಮರಳು ದಂಧೆಗೆ ತಡೆ ಹಾಕದಿದ್ದಲ್ಲಿ ಭವಿಷ್ಯದಲ್ಲಿ ಗಂಭೀರ ಪರಿಸರ ಹಾಗೂ ಸಾಮಾಜಿಕ ಸಮಸ್ಯೆಗಳು ಎದುರಾಗುವ ಸಾಧ್ಯತೆ ಇರುವುದರಿಂದ, ಜಿಲ್ಲಾಡಳಿತ ತುರ್ತು ಕ್ರಮ ಕೈಗೊಳ್ಳಬೇಕಾಗಿದೆ ಸಾರ್ವಜನಿಕರ ಅಭಿಪ್ರಾಯವಾಗಿದೆ. ಮಳಲಿ ಲೇಔಟ್ನಲ್ಲಿ ಅಕ್ರಮ ಮರಳು ಸಂಗ್ರಹ ಆರೋಪ ಅಕ್ರಮವಾಗಿ ತೆಗೆಯಲಾದ ಮರಳನ್ನು ಸಕಲೇಶಪುರದ ಮಳಲಿ ಲೇಔಟ್ ಪ್ರದೇಶದ ವಿವಿಧ ನಿರ್ಮಾಣ ಸೈಟ್ಗಳಲ್ಲಿ ಸಂಗ್ರಹಿಸಿ ಬಳಸಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಅಗತ್ಯ ಅನುಮತಿ ಪಡೆಯದೇ ಕಟ್ಟಡ ನಿರ್ಮಾಣ ಹಾಗೂ ಮರಳು ಬಳಕೆ ನಡೆಸಿರುವವರ ವಿರುದ್ಧ ಪ್ರಕರಣ ದಾಖಲಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ. ಅಕ್ರಮ ಮರಳು ದಂಧೆ ತಕ್ಷಣ ನಿಲ್ಲಿಸಿ, ಸಂಗ್ರಹಿಸಿರುವ ಸ್ಥಳಗಳನ್ನು ಸೀಝ್ಮಾಡಬೇಕು. ನಿರ್ಲಕ್ಷ್ಯತೋರಿದ ಅಧಿಕಾರಿಗಳ ವಿರುದ್ಧ ಇಲಾಖಾ ತನಿಖೆ ನಡೆಸಿ ಹೇಮಾವತಿ ನದಿ ದಂಡೆ ಪ್ರದೇಶದಲ್ಲಿ ಶಾಶ್ವತ ನಿಗಾ ವ್ಯವಸ್ಥೆ ಕಡ್ಡಾಯಗೊಳಿಸಬೇಕು. <ರವಿಕುಮಾರ್, ಅಧ್ಯಕ್ಷ, ನಾಗರಿಕ ಸಂರಕ್ಷಣಾ ಸಮಿತಿ, ಸಕಲೇಶಪುರ
ಬೆಂಗಳೂರು: ರಾಜ್ಯಾದ್ಯಂತ ನಾಳೆಯಿಂದ (ಫೆಬ್ರವರಿ 28) ವಿದ್ಯಾರ್ಥಿಗಳ ಭವಿಷ್ಯದ ನಿರ್ಧರಿಸುವ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ-1 ಶುರುವಾಗಲಿದೆ. ಮಾರ್ಚ್ 17ರವರೆಗೆ ನಡೆಯಲಿರುವ ಈ ಪರೀಕ್ಷೆಗೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ (KSEAB) ಸಕಲ ಸಿದ್ಧತೆಗಳನ್ನು ಪೂರ್ಣಗೊಳಿಸಿದೆ. ಈ ಬಾರಿ ಕಲಾ, ವಾಣಿಜ್ಯ ಮತ್ತು ವಿಜ್ಞಾನ ವಿಭಾಗಗಳಿಂದ ಒಟ್ಟು 7,10,363 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದು, ರಾಜ್ಯಾದ್ಯಂತ
ಹೈದರಾಬಾದ್: ವೃದ್ಧ ಪೋಷಕರನ್ನು ನೋಡಿಕೊಳ್ಳಲು ವಿಫಲರಾದ ಸರಕಾರಿ ನೌಕರರ ವೇತನದಿಂದ 10 ರಿಂದ 15 % ಕಡಿತಗೊಳಿಸಲು ರಾಜ್ಯ ಸರಕಾರ ಮುಂಬರುವ ವಿಧಾನಸಭಾ ಬಜೆಟ್ ಅಧಿವೇಶನದಲ್ಲಿ ಶಾಸನವನ್ನು ಪರಿಚಯಿಸಲಿದೆ ಎಂದು ತೆಲಂಗಾಣ ಮುಖ್ಯಮಂತ್ರಿ ಎ ರೇವಂತ್ ರೆಡ್ಡಿ ಗುರುವಾರ ಹೇಳಿದ್ದಾರೆ. ಹೊಸದಾಗಿ ನೇಮಕಗೊಂಡ ಗ್ರೂಪ್-1 ಮತ್ತು ಗ್ರೂಪ್-2 ಅಧಿಕಾರಿಗಳಿಗೆ ತರಬೇತಿ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಸಿಎಂ ಎ ರೇವಂತ್ ರೆಡ್ಡಿ, ರಾಜ್ಯ ಸರಕಾರಿ ಅಧಿಕಾರಿಗಳಿಗೆ ಕಾರ್ಯನಿರ್ವಹಣಾ ಶಿಕ್ಷಣವನ್ನು ನೀಡಲು ಹಾರ್ವರ್ಡ್ ವಿಶ್ವವಿದ್ಯಾಲಯ ಮತ್ತು MCR HRD Institute ಜೊತೆ ಒಪ್ಪಂದ ನಡೆಸಲಾಗುವುದು ಎಂದು ಹೇಳಿದ್ದಾರೆ. ಯುವ ಅಧಿಕಾರಿಗಳು ತಮ್ಮ ತಂದೆ-ತಾಯಿಗಳ ತ್ಯಾಗದ ಫಲವಾಗಿ ಈ ಅಪೇಕ್ಷಿತ ಉದ್ಯೋಗಗಳನ್ನು ಪಡೆದಿದ್ದಾರೆ. ಆದ್ದರಿಂದ ಅವರು ತಮ್ಮ ಪೋಷಕರನ್ನು ಸರಿಯಾಗಿ ನೋಡಿಕೊಳ್ಳಬೇಕು,” ಎಂದು ಹೇಳಿದರು. ಮುಂಬರುವ ವಿಧಾನಸಭಾ ಅಧಿವೇಶನದಲ್ಲಿ ತಮ್ಮ ಪೋಷಕರನ್ನು ನೋಡಿಕೊಳ್ಳಲು ವಿಫಲರಾದವರ ಸಂಬಳದ 10 ರಿಂದ 15 ಪ್ರತಿಶತವನ್ನು ಕಡಿತಗೊಳಿಸಿ ಪೋಷಕರ ಖಾತೆಗಳಿಗೆ ಜಮೆ ಮಾಡಲು ನಾವು ಶಾಸನವನ್ನು ಪರಿಚಯಿಸಲು ಯೋಜಿಸಿದ್ದೇವೆ ಎಂದು ರೇವಂತ್ ರೆಡ್ಡಿ ಹೇಳಿದರು.
ಬೇಡಿಕೆ ಈಡೇರಿಕೆಗೆ ಸರಕಾರಿ ವೈದ್ಯರ ಸಂಘದ ಆಗ್ರಹ ; ಮಾ.11ರಿಂದ 15ರವರೆಗೆ ಕಪ್ಪು ಪಟ್ಟಿ ಧರಿಸಿ ತುರ್ತು ಸೇವೆ
► ಸಮಸ್ಯೆ ಬಗೆಹರಿಯದಿದ್ದರೆ ತೀವ್ರ ರೀತಿಯ ಪ್ರತಿಭಟನೆ►ಮಾ.16ರಿಂದ ಸಂಪೂರ್ಣ ಬಂದ್ ಎಚ್ಚರಿಕೆ
ಜಾತಿ ನಿಂದನೆ ಪ್ರಕರಣ: ಆರೋಪಿಗೆ 1 ವರ್ಷ ಜೈಲು ಶಿಕ್ಷೆ, ದಂಡ
ವೇಣೂರು: ಜಾತಿ ನಿಂದನೆ ಮತ್ತು ಮಹಿಳೆಯ ಗೌರವಕ್ಕೆ ಧಕ್ಕೆ ತಂದ ಪ್ರಕರಣದ ವಿಚಾರಣೆ ನಡೆಸಿದ ಮಂಗಳೂರಿನ ನ್ಯಾಯಾಲಯವು ಆರೋಪಿಗೆ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ಖಾಲಿದ್ ಅಲಿಯಾಸ್ ಅಬ್ದುಲ್ ಖಾದರ್ ಶಿಕ್ಷೆಗೊಳಗಾದ ಆರೋಪಿ. ಈತನ ವಿರುದ್ಧ ವೇಣೂರು ಪೊಲೀಸ್ ಠಾಣೆಯಲ್ಲಿ 2021ರಲ್ಲಿ (ಅ.ಕ್ರ 15/2021) ಐಪಿಎಸಿ ಕಲಂ 452, 354(A), 506 ಹಾಗೂ ಎಸ್ಸಿ/ಎಸ್ಟಿ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು. ಅಂದಿನ ಬಂಟ್ವಾಳ ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ವ್ಯಾಲೆಂಟೈನ್ ಡಿ'ಸೋಜಾ ಅವರು ತನಿಖೆ ನಡೆಸಿ, ಅಗತ್ಯ ಸಾಕ್ಷ್ಯಗಳೊಂದಿಗೆ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಮಂಗಳೂರಿನ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆಯಿತು. ಮಾನ್ಯ ನ್ಯಾಯಾಧೀಶರಾದ ಜಗದೀಶ್ ವಿ.ಎನ್. ಅವರು ಫೆಬ್ರವರಿ 26, 2026ರಂದು ತೀರ್ಪು ಪ್ರಕಟಿಸಿದ್ದು, ಆರೋಪಿಗೆ ಐಪಿಸಿ ಕಲಂ 354-A ಹಾಗೂ ಎಸ್ಸಿ/ಎಸ್ಟಿ (ದೌರ್ಜನ್ಯ ತಡೆ) ಕಾಯ್ದೆ 1989ರ ಕಲಂ 3(1)(w)(i) ಅನ್ವಯ 1 ವರ್ಷದ ಸರಳ ಕಾರಾಗೃಹ ಶಿಕ್ಷೆ ಮತ್ತು ₹10,000 ದಂಡ ವಿಧಿಸಿದ್ದಾರೆ. ಸರಕಾರದ ಪರವಾಗಿ ಸರಕಾರಿ ಅಭಿಯೋಜಕಿ ಜ್ಯೋತಿ ನಾಯ್ಕ್ ಅವರು ಸಮರ್ಥವಾಗಿ ವಾದ ಮಂಡಿಸಿದ್ದರು.
ಜಾತಿ ನಿಂದನೆ ಪ್ರಕರಣ: ಆರೋಪಿಗೆ 1 ವರ್ಷ ಜೈಲು ಶಿಕ್ಷೆ, 10,000 ರೂ. ದಂಡ
ವೇಣೂರು: ಜಾತಿ ನಿಂದನೆ ಮತ್ತು ಮಹಿಳೆಯ ಗೌರವಕ್ಕೆ ಧಕ್ಕೆ ತಂದ ಪ್ರಕರಣದ ವಿಚಾರಣೆ ನಡೆಸಿದ ಮಂಗಳೂರಿನ ನ್ಯಾಯಾಲಯವು ಆರೋಪಿ ಖಾಲಿದ್ ಅಲಿಯಾಸ್ ಅಬ್ದುಲ್ ಖಾದರ್ ಎಂಬವರಿಗೆ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ವೇಣೂರು ಪೊಲೀಸ್ ಠಾಣೆಯಲ್ಲಿ 2021ರಲ್ಲಿ (ಅ.ಕ್ರ 15/2021) ಐಪಿಎಸಿ ಕಲಂ 452, 354(A), 506 ಹಾಗೂ ಎಸ್ಸಿ/ಎಸ್ಟಿ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು. ಅಂದಿನ ಬಂಟ್ವಾಳ ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ವ್ಯಾಲೆಂಟೈನ್ ಡಿ'ಸೋಜಾ ಅವರು ತನಿಖೆ ನಡೆಸಿ, ಅಗತ್ಯ ಸಾಕ್ಷ್ಯಗಳೊಂದಿಗೆ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಮಂಗಳೂರಿನ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆಯಿತು. ಮಾನ್ಯ ನ್ಯಾಯಾಧೀಶರಾದ ಜಗದೀಶ್ ವಿ.ಎನ್. ಅವರು ಫೆಬ್ರವರಿ 26, 2026ರಂದು ತೀರ್ಪು ಪ್ರಕಟಿಸಿದ್ದು, ಆರೋಪಿಗೆ ಐಪಿಸಿ ಕಲಂ 354-A ಹಾಗೂ ಎಸ್ಸಿ/ಎಸ್ಟಿ (ದೌರ್ಜನ್ಯ ತಡೆ) ಕಾಯ್ದೆ 1989ರ ಕಲಂ 3(1)(w)(i) ಅನ್ವಯ 1 ವರ್ಷದ ಸರಳ ಕಾರಾಗೃಹ ಶಿಕ್ಷೆ ಮತ್ತು ₹10,000 ದಂಡ ವಿಧಿಸಿದ್ದಾರೆ. ಸರಕಾರದ ಪರವಾಗಿ ಸರಕಾರಿ ಅಭಿಯೋಜಕಿ ಜ್ಯೋತಿ ನಾಯ್ಕ್ ಅವರು ಸಮರ್ಥವಾಗಿ ವಾದ ಮಂಡಿಸಿದ್ದರು.
ಅಹಿಂದ ಪಟ್ಟಕ್ಕೆ ಸಜ್ಜಾಗುತ್ತಿರುವ ಸಾಹುಕಾರ್: ಸತೀಶ್ ಜಾರಕಿಹೊಳಿ ನಾಯಕತ್ವಕ್ಕೆ ಇರುವ ಬಲವೇನು, ಅಡ್ಡಿಗಳೇನು?
ಸಿಎಂ ಸಿದ್ದರಾಮಯ್ಯ ಅವರು ಅಹಿಂದ ಸಮುದಾಯದ ಪ್ರಶ್ನಾತೀತ ನಾಯಕರಾಗಿದ್ದಾರೆ. ಆದರೆ ಸಿದ್ದರಾಮಯ್ಯ ಅವರ ಬಳಿಕ ಅಹಿಂದ ವರ್ಗಕ್ಕೆ ಯಾರು ನಾಯಕತ್ವ ನೀಡುತ್ತಾರೆ ಎಂಬ ಪ್ರಶ್ನೆ ಸಹಜವಾಗಿ ಉದ್ಭವವಾಗಿತ್ತು. ಆದರೆ ಹಿರಿಯ ಸಚಿವ ಸತೀಶ್ ಜಾರಕಿಹೊಳಿ ಅವರನ್ನು ಅಹಿಂದ ನಾಯಕರನ್ನಾಗಿ ಮಾಡುವ ಪ್ರಯತ್ನ ಶುರುವಾಗಿದೆ. ಸತೀಶ್ ಜಾರಕಿಹೊಳಿ ಕೂಡಾ ಇದಕ್ಕೆ ಪೂರಕ ಸಿದ್ದತೆ ಆರಂಭಿಸಿದ್ದಾರೆ. ಈಗಾಗಲೇ ರಾಜ್ಯಾದ್ಯಂತ ಪ್ರವಾಸ ಕೈಗೊಳ್ಳಲು ಮುಂದಾಗಿದ್ದಾರೆ. ದೆಹಲಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.
ಪೋಲಕಪಳ್ಳಿಯಲ್ಲಿ ಮಾರ್ಚ್ 1ರಂದು ವಿಶ್ವಗುರು ಬಸವಣ್ಣನವರ ಭವ್ಯ ಮೂರ್ತಿ ಅನಾವರಣ
ಚಿಂಚೋಳಿ: ತಾಲ್ಲೂಕಿನ ಪೋಲಕಪಳ್ಳಿ ಗ್ರಾಮದಲ್ಲಿ ಇದೇ ಬರುವ ಮಾರ್ಚ್ 1, ಭಾನುವಾರ ಬೆಳಿಗ್ಗೆ 11:00 ಗಂಟೆಗೆ ವಿಶ್ವಗುರು ಬಸವಣ್ಣನವರ ಭವ್ಯ 'ಅಭಯ ಹಸ್ತ' ಮೂರ್ತಿಯ ಅನಾವರಣ ಹಾಗೂ ಧಾರ್ಮಿಕ ಸಭೆ ನಡೆಯಲಿದೆ. ಗ್ರಾಮದ ಸಮಸ್ತ ನಾಗರಿಕರ ಸಹಯೋಗದೊಂದಿಗೆ ಹಮ್ಮಿಕೊಳ್ಳಲಾಗಿರುವ ಈ ಕಾರ್ಯಕ್ರಮದ ಅಂಗವಾಗಿ, ಮಾರ್ಚ್ 1ರ ಬೆಳಿಗ್ಗೆ 9:00 ಗಂಟೆಗೆ ಬಸವಣ್ಣನವರ ಭಾವಚಿತ್ರದ ಭವ್ಯ ಮೆರವಣಿಗೆ ನಡೆಯಲಿದೆ. ನಂತರ ಶರಣಜೀವಿ ಡಾ. ರೇವಣಸಿದ್ದಪ್ಪ ಪಾಟೀಲ ವೇದಿಕೆಯಲ್ಲಿ ಮುಖ್ಯ ಕಾರ್ಯಕ್ರಮಗಳು ನಡೆಯಲಿವೆ. ಪೋಲಕಪಳ್ಳಿಯ ಶಿವಶಂಕರ ಮಠದ ಪ.ಪೂ. ಶ್ರೀ ಶಿವಶಂಕರ ಶಿವಾಚಾರ್ಯರು ಮೂರ್ತಿ ಅನಾವರಣ ನೆರವೇರಿಸಲಿದ್ದಾರೆ. ಹುಲಸೂರಿನ ಸಂಸ್ಥಾನ ಮಠದ ಪೂಜ್ಯ ಶ್ರೀ ಶಿವಾನಂದ ಸ್ವಾಮಿಗಳು ಹಾಗೂ ಸುಕ್ಷೇತ್ರ ಉಳವಿಯ ಅಕ್ಕನಾಗಲಾಂಬಿಕಾ ಅನುಭವ ಪೀಠದ ಪೂಜ್ಯ ಶ್ರೀ ದಾನೇಶ್ವರಿ ಮಾತಾಜಿಯವರು ದಿವ್ಯ ಸಾನಿಧ್ಯ ವಹಿಸಲಿದ್ದಾರೆ. ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯ ಚಿಂಚೋಳಿ ಅಧ್ಯಕ್ಷರಾದ ಶರಣು ಪಾಟೀಲ ಮೋತಕಪಳ್ಳಿ ಅವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ರಾಷ್ಟ್ರೀಯ ಬಸವದಳದ ಮಕ್ಕಳಿಂದ ವಚನ ಗಾಯನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಫೆಬ್ರವರಿ 25ರಿಂದ ಮಾರ್ಚ್ 1ರವರೆಗೆ ಪ್ರತಿದಿನ ಸಾಯಂಕಾಲ 6:00 ಗಂಟೆಗೆ ಪ್ರವಚನ ಕಾರ್ಯಕ್ರಮಗಳು ನಡೆಯುತ್ತಿವೆ. ಮಾರ್ಚ್ 1ರ ಬೆಳಿಗ್ಗೆ 9:00 ಗಂಟೆಗೆ ಪೂಜ್ಯ ಶ್ರೀ ದಾನೇಶ್ವರಿ ಮಾತಾಜಿಯವರಿಂದ ಸಾಮೂಹಿಕ ಇಷ್ಟಲಿಂಗ ಪೂಜೆ ಜರುಗಲಿದೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಮದ ಹಿರಿಯ ಮುಖಂಡರಾದ ಶರಣ ಶಿವರಾಜ ಪಾಟೀಲರು ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಆರ್. ಜಿ. ಕೆಟಗಾರ, ಶರಣ ಜಗನ್ನಾಥ ಈದಲಾಯಿ, ಡಾ. ಜಗದೀಶಚಂದ್ರ ಬುಳ್ಳಾ ಸೇರಿದಂತೆ ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಶರಣ ಬಂಧುಗಳು ಭಾಗವಹಿಸಲಿದ್ದಾರೆ. ಈ ಭವ್ಯ ಕಾರ್ಯಕ್ರಮಕ್ಕೆ ಸುತ್ತಮುತ್ತಲಿನ ಗ್ರಾಮಸ್ಥರು ಹಾಗೂ ಬಸವಾನುಯಾಯಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಬಸವೇಶ್ವರ ಮೂರ್ತಿ ಅನಾವರಣ ಸಮಿತಿ ಹಾಗೂ ಪೋಲಕಪಳ್ಳಿ ಗ್ರಾಮಸ್ಥರು ಪ್ರಕಟಣೆಯಲ್ಲಿ ಕೋರಿದ್ದಾರೆ.
ಮಹಲ್ ರೋಜಾ ಮಲ್ಲಿಕಾರ್ಜುನ ಮುತ್ಯಾ ಯಾರು? ಅತಿಚಿಕ್ಕ ವಯಸ್ಸಿಗೆ ಮಠದ ಪೀಠಾಧಿಪತಿ ಆಗಿ ಅಪ್ಪಾಜಿ ಎನಿಸಿಕೊಂಡ 26ರ ಯುವಕ
ಬಾಲಕಿಯ ಜೊತೆಗಿನ ಅನುಚಿತ ವರ್ತನೆಯ ವಿಡಿಯೋ ವೈರಲ್ ಆದ ಬೆನ್ನಲ್ಲೇ ಮಲ್ಲಿಕಾರ್ಜುನ ಮುತ್ಯಾ ನಾಪತ್ತೆಯಾಗಿದ್ದಾರೆ. ಉತ್ತರ ಕರ್ನಾಟಕ ಕೆಲ ಜಿಲ್ಲೆಗಳಲ್ಲಿ ದೇವಮಾನವನ ಎನ್ನಿಸಿಕೊಂಡಿರುವ 26 ವರ್ಷದ ಈ ಯುವಕನ ಹಿನ್ನೆಲೆ ಏನು? ಇಷ್ಟು ದೊಡ್ಡಮಟ್ಟಕ್ಕೆ ಬೆಳೆದು ಬಂದಿದ್ದೇಗೆ? ಮಠದಿಂದ ಏನೆಲ್ಲಾ ಚಟುವಟಿಕೆ ನಡೆಸಲಾಗುತ್ತೆ? ಈ ಬಗ್ಗೆ ವಿವರ ಇಲ್ಲಿದೆ.
ಕೋಲ್ಕತ್ತಾದಲ್ಲಿ ಪ್ರಬಲ ಭೂಕಂಪನದ ಅನುಭವ; ಕಟ್ಟಡಗಳಿಂದ ಹೊರಗೋಡಿ ಬಂದ ಜನರು
ಕೋಲ್ಕತ್ತಾ: ಪಶ್ಚಿಮ ಬಂಗಾಳದ ರಾಜಧಾನಿ ಕೋಲ್ಕತ್ತಾ ನಗರದಲ್ಲಿ ಶುಕ್ರವಾರ ಮಧ್ಯಾಹ್ನ ಪ್ರಬಲ ಭೂಕಂಪನದ ಅನುಭವವಾಗಿದ್ದು, ಜನರು ಕೆಲಕಾಲ ಆತಂಕಗೊಂಡು ಮನೆಗಳು, ಕಚೇರಿಗಳು ಮತ್ತು ಶಾಲೆಗಳ ಕಟ್ಟಡಗಳಿಂದ ಹೊರಗೆ ಓಡಿಬಂದರು. ಮಧ್ಯಾಹ್ನ 1:22ರ ಸುಮಾರಿಗೆ ಕಂಪನ ಅನುಭವವಾಗಿದೆ ಎಂದು ನಿವಾಸಿಗಳು ತಿಳಿಸಿದ್ದಾರೆ. ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ NCS ಪ್ರಕಾರ, ರಿಕ್ಟರ್ ಮಾಪಕದಲ್ಲಿ ಭೂಕಂಪದ ತೀವ್ರತೆ 5.5 ದಾಖಲಾಗಿದೆ. ಭೂಕಂಪವು 10 ಕಿ.ಮೀ ಆಳದಲ್ಲಿ ಸಂಭವಿಸಿದ್ದು, ಕೇಂದ್ರ ಬಿಂದುವು ಬಾಂಗ್ಲಾದೇಶದಲ್ಲಿ 22.57°N ಅಕ್ಷಾಂಶ ಮತ್ತು 89.11°E ರೇಖಾಂಶದಲ್ಲಿದೆ ಎಂದು ತಿಳಿಸಿದೆ. ಇನ್ನೊಂದೆಡೆ, ಯುಎಸ್ ಜಿಯೋಲಾಜಿಕಲ್ ಸರ್ವೆ USGS 5.3 ತೀವ್ರತೆಯನ್ನು ದಾಖಲಿಸಿದ್ದು, ಕೇಂದ್ರ ಬಿಂದುವು ಪಶ್ಚಿಮ ಬಂಗಾಳದ ಟಕಿ ಪ್ರದೇಶದಿಂದ ಸುಮಾರು 26 ಕಿ.ಮೀ ಆಗ್ನೇಯಕ್ಕೆ ಇದೆ ಎಂದು ದೃಢಪಡಿಸಿದೆ. ಆರಂಭಿಕ ವರದಿಗಳಲ್ಲಿ 4.9 ತೀವ್ರತೆಯ ಭೂಕಂಪ ಎಂದು ಉಲ್ಲೇಖಿಸಲಾಗಿತ್ತು. ಬಾಂಗ್ಲಾದೇಶದಲ್ಲಿ ಮೊದಲು ಸಂಭವಿಸಿದ ಭೂಕಂಪನದ ಅಲೆಗಳು ಬಳಿಕ ಕೋಲ್ಕತ್ತಾಕ್ಕೆ ತಲುಪಿತು. ಬಳಿಕ ನಗರಾದ್ಯಂತ ಸೀಲಿಂಗ್ ಫ್ಯಾನ್ಗಳು ಒಮ್ಮೆಲೇ ಅಲುಗಾಡಿದವು. ಪೀಠೋಪಕರಣಗಳು ನಡುಗಿದವು ಹಾಗೂ ಕಿಟಕಿಗಳು ಅಲುಗಾಡಿ ಸದ್ದು ಮಾಡಿದವು ಎಂದು ಹಲವು ಪ್ರದೇಶಗಳ ನಿವಾಸಿಗಳು ತಿಳಿಸಿದ್ದಾರೆ. ಬಹುಮಹಡಿ ಕಟ್ಟಡಗಳಲ್ಲಿ ಕಂಪನದ ಪರಿಣಾಮ ಹೆಚ್ಚು ತೀವ್ರವಾಗಿ ಕಂಡುಬಂದಿದೆ. ಭಾರತ–ಬಾಂಗ್ಲಾದೇಶ ಗಡಿಯ ಸಮೀಪವಿರುವ ಜಿಲ್ಲೆಗಳಿಂದಲೂ ಕಂಪನದ ವರದಿಗಳು ಬಂದಿವೆ. ಮುಂಜಾಗ್ರತಾ ಕ್ರಮವಾಗಿ ಅನೇಕ ಕಚೇರಿಗಳನ್ನು ತಾತ್ಕಾಲಿಕವಾಗಿ ಖಾಲಿ ಮಾಡಲಾಗಿದ್ದು, ಅಪಾರ್ಟ್ಮೆಂಟ್ ಸಂಕೀರ್ಣಗಳ ನಿವಾಸಿಗಳು ತೆರೆದ ಪ್ರದೇಶಗಳಲ್ಲಿ ಜಮಾಯಿಸಿದರು. ಜನರು ತಮ್ಮ ಮೊಬೈಲ್ ಫೋನ್ಗಳಲ್ಲಿ ಸ್ವೀಕರಿಸಿದ ಭೂಕಂಪ ಎಚ್ಚರಿಕೆ ಸಂದೇಶಗಳ ಸ್ಕ್ರೀನ್ಶಾಟ್ಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡರು. Massive earthquake hits Kolkata, estimated around 5.0 magnitude Residents shaken pic.twitter.com/ffvM1spIBB — Surajit (@Surajit_) February 27, 2026 Very strong #tremors in #Kolkata . #earthquake pic.twitter.com/moQb3I77xq — Dhananjay Mandal (@dhananjaynews) February 27, 2026
ಕಾಸರಗೋಡು : ನೂತನ ಜಿಲ್ಲಾಧಿಕಾರಿಯಾಗಿ ಅರ್ಜುನ್ ಪಾಂಡ್ಯನ್ ನೇಮಕ
ಕಾಸರಗೋಡು: ಕಾಸರಗೋಡು ನೂತನ ಜಿಲ್ಲಾಧಿಕಾರಿಯಾಗಿ ಅರ್ಜುನ್ ಪಾಂಡ್ಯನ್ ರವರನ್ನು ನೇಮಿಸಲಾಗಿದೆ. ಹಾಲಿ ಜಿಲ್ಲಾಧಿಕಾರಿ ಕೆ. ಇಂಪಾ ಶೇಖರ್ ರವರ ಬದಲಿಗೆ ಅರ್ಜುನ್ ಪಾಂಡ್ಯನ್ ರವರನ್ನು ನಿಯುಕ್ತಗೊಳಿಸಲಾಗಿದೆ. ಪಾಂಡ್ಯನ್ ಅವರು ತ್ರಿಶೂರು ಜಿಲ್ಲಾಧಿಕಾರಿ ಆಗಿದ್ದರು.
ರಾಯಚೂರು : ಹಟ್ಟಿ ಚಿನ್ನದ ಗಣಿ ಕಂಪನಿ ಮುಖ್ಯದ್ವಾರದ ಬಳಿ ಸ್ಫೋಟಕಗಳು ಪತ್ತೆ
ಲಿಂಗಸುಗೂರು. ಫೆ.27- ಲಿಂಗಸುಗೂರು ತಾಲ್ಲೂಕಿನ ಹಟ್ಟಿ ಚಿನ್ನದ ಗಣಿ ಕಂಪನಿ ಮುಖ್ಯ ದ್ವಾರದ ಬಳಿ ಸ್ಫೋಟಕ ವಸ್ತುಗಳಾದ ಮದ್ದು ಗುಂಡುಗಳು ರಸ್ತೆ ಮೇಲೆ ಬಿದ್ದಿರುವ ಘಟನೆ ಶುಕ್ರವಾರ ಬೆಳಿಗ್ಗೆ ಬೆಳಕಿಗೆ ಬಂದಿದೆ. ಅಪರಿಚಿತರು ಅಕ್ರಮವಾಗಿ ಸಾಗಿಸುವ ವೇಳೆ ಈ ಮದ್ದು ಗುಂಡುಗಳು ಕೆಳಗೆ ಬಿದ್ದಿರುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಪ್ರಾಥಮಿಕ ಮಾಹಿತಿ ಪ್ರಕಾರ ಸ್ಫೋಟಕ ವಸ್ತುಗಳನ್ನು ಯಾರೋ ಅಕ್ರಮವಾಗಿ ಸಾಗಿಸುತ್ತಿದ್ದ ವೇಳೆ ಅವುಗಳು ವಾಹನದಿಂದ ಬಿದ್ದಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಸ್ಫೋಟಕ ವಸ್ತುಗಳ ಮೂಲ ಮತ್ತು ಸಾಗಾಣಿಕೆ ಕುರಿತು ಪೊಲೀಸರು ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಸ್ಫೋಟಕ ವಸ್ತುಗಳು ಪತ್ತೆಯಾದ ಹಿನ್ನಲೆಯಲ್ಲಿ ಜನರಲ್ಲಿ ಆತಂಕ ಹೆಚ್ಚಾಗಿದ್ದು, ಈ ಸಂಬಂಧ ಗಣಿ ಆಡಳಿತ ಮಂಡಳಿ ಗಣಿ ವ್ಯಾಪ್ತಿಯ ಸುತ್ತಮುತ್ತ ಬಿಗಿ ಭದ್ರತೆಯನ್ನು ಏರ್ಪಡಿಸಿದೆ.
Breaking: ಕೋಲ್ಕತ್ತಾದಲ್ಲಿ ಭೂಕಂಪ : ತೀವ್ರತೆಗೆ ನಡುಗಿದ ಭೂಮಿ, ಕಟ್ಟಡದಿಂದ ಹೊರಗೆ ಓಡಿ ಬಂದ ಜನ
ಕೋಲ್ಕತ್ತಾ: ಶುಕ್ರವಾರ ಮಧ್ಯಾಹ್ನದ ವೇಳೆಗೆ ಕೋಲ್ಕತ್ತಾ ಹಾಗೂ ಸುತ್ತಲಿನ ಪ್ರದೇಶದಲ್ಲಿ ಭೂಕಂಪನದ ಅನುಭವ ಉಂಟಾಗಿದ್ದು, ಜನ ಭಯಭೀತರಾದರು. ಭೂಕಂಪನದ ತೀವ್ರತೆ ರಿಕ್ಟರ್ ಮಾಪನದಲ್ಲಿ 5.0 ಮ್ಯಾಗ್ನಿಟ್ಯೂಡ್ ದಾಖಲಾಗಿದ್ದು, ಕೆಲ ಸೆಕೆಂಡ್ ಗಳ ಕಾಲ ಭೂಮಿ ಅಲ್ಲಾಡಿರುವ ಅನುಭವ ಆಗಿದೆ. ಕಚೇರಿಯಲ್ಲಿದ್ದವರು, ಮನೆಗಳಲ್ಲಿದ್ದವರು ಕಟ್ಟಡ ಅಲುಗಾಡಿದ ಹೆದರಿಕೆಗೆ ಓಡಿ ಹೊರಗೆ ಬಂದಿದ್ದಾರೆ .ಬಾಂಗ್ಲಾದೇಶದಲ್ಲಿ ಭೂಕಂಪದ ಬಳಿಕ ಪಶ್ಚಿಮ ಬಂಗಾಳ ರಾಜ್ಯದ ರಾಜಧಾನಿ ಕೋಲ್ಕತ್ತಾ ಸೇರಿದಂತೆ ಹಲವೆಡೆ ಅನುಭವ ಆಗಿದೆ. ಭಾರತ ಹಾಗೂ ಬಾಂಗ್ಲಾದೇಶ ಗಡಿಭಾಗದಲ್ಲಿ ಈ ಭೂಕಂಪ ಅನುಭವ ಉಂಟಾಗಿದೆ.ನ್ಯಾಷನಲ್ ಸೆಂಟರ್ ಫಾರ್ ಸಿಸ್ಮಾಲಜಿ ಪ್ರಕಾರ, 5.5 ತೀವ್ರತೆಯ ಭೂಕಂಪ, ಭೂಮಿಯ 10 ಕಿಮೀ ಆಳದಲ್ಲಿ ನೈರುತ್ಯ ಬಾಂಗ್ಲಾದೇಶದ ಭಾಗದಲ್ಲಿ ಪತ್ತೆಯಾಗಿದೆ. ಈ ಪ್ರದೇಶವು ಪಶ್ಚಿಮ ಬಂಗಾಳದ ಟಾಕಿಯಿಂದ 26 ಕಿಮೀ ದೂರದ ನೈರುತ್ಯ ಭಾಗದಲ್ಲಿದೆ. ಸಾಮಾಜಿಕ ಜಾಲತಾಣಗಳಲ್ಲಿ ಜನರು ಕಟ್ಟಡದಿಂದ ರಸ್ತೆಗಳಿಗೆ ಓಡಿಬಂದಿರುವ ಫೋಟೋ ಕಾಣಿಸುತ್ತಿವೆ. ಫ್ಯಾನ್ ಅಲುಗಾಡುವ ದೃಶ್ಯವನ್ನೂ ಶೇರ್ ಮಾಡಲಾಗಿದೆ.ಮುಂದುವರಿಯುವುದು..
ಪಾಕಿಸ್ತಾನ ಹಾಗೂ ಅಫ್ಘಾನಿಸ್ತಾನದ ನಡುವೆ ಮತ್ತೆ ಗಡಿ ಸಂಘರ್ಷ ತೀವ್ರ ಸ್ವರೂಪ ಪಡೆದಿದ್ದು, ಈಗಾಗಲೇ ತಾಲಿಬಾನಿಗಳ ವಿರುದ್ದ ಓಪನ್ ವಾರ್ ಮಾಡುತ್ತೇವೆ ಎಂದು ಪಾಕ್ ಘೋಷಿಸಿದೆ. ಈ ನಡುವೆ ವೈಮಾನಿಕ ದಾಳಿಗೆಂದು ಅಫ್ಘಾನ್ ವಾಯುಪ್ರದೇಶದಲ್ಲಿ ಪಾಕ್ ಹಾರಿಸಿದ F-16 ಫೈಟರ್ ಜೆಟ್ ಅನ್ನು ತಾಲಿಬಾನಿ ಪಡೆಗಳು ಹೊಡೆದುರುಳಿಸಿವೆ ಎಂದು ಅಫ್ಘಾನ್ ಮಾಧ್ಯಮಗಳು ವಿಡಿಯೋ ತೋರಿಸಿ ವರದಿ ಬಿತ್ತರಿಸುತ್ತಿವೆ. ಈ ವಿಡಿಯೋಗಳು ಸಹ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ. ಆದರೆ, ಈ ಕುರಿತಂತೆ ಪಾಕಿಸ್ತಾನ ಯಾವುದೇ ವಿಮಾನಗಳು ನಷ್ಟವಾಗಿಲ್ಲ ಎಂದು ತಿಳಿಸಿವೆ. ಹಾಗಾದ್ರೆ, ಪಾಕ್ F-16 ಫೈಟರ್ ಜೆಟ್ ಅನ್ನನು ಅಫ್ಘಾನ್ ನಿಜಕ್ಕೂ ಹೊಡೆದುರುಳಿಸಿದೆಯಾ? ಈ ವೈರಲ್ ವಿಡಿಯೋದ ಸತ್ಯತೆ ಏನು ಎಂಬುದರ ಕುರಿತ ವರದಿ ಇಲ್ಲಿದೆ..
ರಾಜ್ಯದಲ್ಲಿ 16 ವರ್ಷದೊಳಗಿನ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಮೊಬೈಲ್ ನಿಷೇಧ: ಸಚಿವ ಮಧು ಬಂಗಾರಪ್ಪ ಮಹತ್ವದ ಮಾಹಿತಿ
ಬೆಂಗಳೂರು, ಫೆಬ್ರವರಿ 27: ರಾಜ್ಯದಲ್ಲಿ 16 ವರ್ಷದ ಒಳಗಿನ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಮೊಬೈಲ್ ನಿಷೇಧ ಮಾಡಲು ಸರ್ಕಾರ ಚಿಂತನೆ ನಡೆಸಿದೆ ಎಂದು ಇತ್ತೀಚೆಗಷ್ಟೇ ಸಿಎಂ ಸಿದ್ದರಾಮಯ್ಯ ಅವರು ಹೇಳಿದ್ದರು. ಇದೀಗ ಈ ಕುರಿತು ಮಾಯನಾಡಿದ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಮಹತ್ವದ ಮಾಹಿತಿ ನೀಡಿದ್ದಾರೆ. ಹಾಗಾದ್ರೆ, ಅದೇನು ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಎಸ್.ಎನ್.ಸುಬ್ಬಾರೆಡ್ಡಿ ಶಾಸಕ ಸ್ಥಾನ ಅಸಿಂಧುಗೊಳಿಸಿ ಹೈಕೋರ್ಟ್ ನೀಡಿದ್ದ ಆದೇಶಕ್ಕೆ ಸುಪ್ರೀಂ ಮಧ್ಯಂತರ ತಡೆ
ಹೊಸದಿಲ್ಲಿ : ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಆಯ್ಕೆ ಅಸಿಂಧುಗೊಳಿಸಿ ಕರ್ನಾಟಕ ಹೈಕೋರ್ಟ್ ನೀಡಿದ್ದ ತೀರ್ಪಿಗೆ ಸುಪ್ರೀಂಕೋರ್ಟ್ ಮಧ್ಯಂತರ ತಡೆ ನೀಡಿದ್ದು, ಕಾಂಗ್ರೆಸ್ ಶಾಸಕನಿಗೆ ತಾತ್ಕಾಲಿಕ ರಿಲೀಫ್ ನೀಡಿದೆ. ಸುಬ್ಬಾರೆಡ್ಡಿ ಮೇಲ್ಮನವಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಹಾಗೂ ನ್ಯಾಯಮೂರ್ತಿ ಜಾಯ್ಮಲ್ಯ ಬಾಗ್ಚಿ ಪೀಠವು ನಡೆಸಿತು. ಚುನಾವಣಾ ಆಯೋಗ ಮತ್ತು ಸಂಬಂಧಪಟ್ಟ ವ್ಯಕ್ತಿಗಳಿಗೆ ಅಫಿಡವಿಟ್, ಕೌಂಟರ್ ಅಫಿಡವಿಟ್ ಸಲ್ಲಿಸಲು ಸುಪ್ರೀಂ ಕೋರ್ಟ್ 6 ವಾರಗಳ ಕಾಲಾವಕಾಶ ನೀಡಿದೆ. ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ (ಭಾಗ್ಯನಗರ) ವಿಧಾನಸಭಾ ಕ್ಷೇತ್ರದ ಶಾಸಕ ಸ್ಥಾನದಿಂದ ಅನರ್ಹಗೊಳಿಸಿದ ಹೈಕೋರ್ಟ್ ಆದೇಶ ಪ್ರಶ್ನಿಸಿ ಕಾಂಗ್ರೆಸ್ನ ಎಸ್.ಎನ್. ಸುಬ್ಬಾರೆಡ್ಡಿ ಅವರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು.
RSS @ 100 : ಮುಂದಿನ 25 ವರ್ಷಗಳ ಪಂಚ ಪರಿವರ್ತನೆ - 5 ಬದಲಾವಣೆಗಳ ಸಂಕಲ್ಪ
ಸಂಘಕ್ಕೆ ನೂರು ವರ್ಷ : ರಾಷ್ಟ್ರೀಯ ಸ್ವಯಂಸೇವಕ ಸಂಘವು ಶತಮಾನೋತ್ಸವವನ್ನು ಆಚರಿಸುತಿದೆ. ಶತಮಾನದ ದೇಶದ ಸೇವೆಯ ಈ ಸಂದರ್ಭದಲ್ಲಿ ಪಂಚ ಪರಿವರ್ತನೆಯ ಭಾಗವಾಗಿ ಐದು ಬದಲಾವಣೆಗಳ ಸಂಕಲ್ಪವನ್ನು ಮಾಡಲಾಗಿದೆ. ಸಾಮಾಜಿಕ ಸಾಮರಸ್ಯ ಮುಂತಾದವು ಈ ಬದಲಾವಣೆಯ ಭಾಗವಾಗಿದೆ. ಈ ಸಂದರ್ಭದಲ್ಲಿ ಉತ್ಕರ್ಷ್ ಕೆಎಸ್ ಅವರ ಲೇಖನ.
ಭಾರತೀಯ ವಾಯುಪಡೆ ಬಲದ ಬಿಕ್ಕಟ್ಟು ತೋರಿಸುತ್ತಿರುವ ಸ್ಥಳೀಯ ಯುದ್ಧವಿಮಾನಗಳ ವೈಫಲ್ಯ
ಮೋದಿ ಸರಕಾರದ ಅತಿದೊಡ್ಡ ವೈಫಲ್ಯವೆಂದರೆ, ತಾನು ದೇಶದ ಭದ್ರತೆಯನ್ನು ಪೂರ್ಣವಾಗಿ ಸಾಧಿಸಿದ್ದೇನೆ ಎಂದು ಭಾವಿಸಿದ್ದು. ಮೋದಿ ಸರಕಾರಕ್ಕೆ HAL ಅನ್ನು ಸುಧಾರಿಸಲು 12 ವರ್ಷಗಳಷ್ಟು ಸಮಯವಿತ್ತು. ಅಲ್ಲಿನ ಸಮಸ್ಯೆಗಳನ್ನು ಪರಿಹರಿಸಿದ್ದರೆ, ಇಂದು ಪರಿಸ್ಥಿತಿ ಇಷ್ಟೊಂದು ಕೆಟ್ಟದಾಗುತ್ತಿರಲಿಲ್ಲ. ಮೂರನೇ ತೇಜಸ್ ಫೈಟರ್ ಜೆಟ್ ಪತನಗೊಂಡ ಬಳಿಕ ಹಲವು ಪ್ರಶ್ನೆಗಳು ಎದ್ದಿವೆ. ಹೊಸ ರಫೇಲ್ ಒಪ್ಪಂದ ಭಾರತದ ೫ನೇ ತಲೆಮಾರಿನ ಫೈಟರ್ ಜೆಟ್ ಬಿಕ್ಕಟ್ಟನ್ನು ಪರಿಹರಿಸು ವುದೇ ಎಂಬ ಚರ್ಚೆಯೂ ಶುರುವಾಗಿದೆ. ಫೆಬ್ರವರಿ 7ರಂದು ತರಬೇತಿ ಹಾರಾಟದ ನಂತರ ಲ್ಯಾಂಡಿಂಗ್ ವೇಳೆ ಇದ್ದಕ್ಕಿದ್ದಂತೆ ತಾಂತ್ರಿಕ ವೈಫಲ್ಯ ದಿಂದಾಗಿ ತೇಜಸ್ ವಿಮಾನ ಅಪಘಾತ ಕ್ಕೀಡಾಯಿತು. ಈ ಅಪಘಾತದ ನಂತರ ಭಾರತೀಯ ವಾಯುಪಡೆ ತೇಜಸ್ ಫೈಟರ್ ಜೆಟ್ಗಳ ಸಂಪೂರ್ಣ ಫ್ಲಿಟ್ ಅನ್ನು ಸ್ಥಗಿತಗೊಳಿಸಿದೆ. ಈ ಘಟನೆಯ ವಿವರಗಳ ಬಗ್ಗೆ IAF ಮೌನವಾಗಿದ್ದರೂ, HAL ಇದೊಂದು ಸಣ್ಣ ಘಟನೆ ಎಂದು ಹೇಳುತ್ತಿದೆ. ಎರಡು ವರ್ಷಗಳಲ್ಲಿ ಇದು ಮೂರನೇ ತೇಜಸ್ ಪತನ. ಇದು ಸ್ಥಳೀಯ ಯುದ್ಧವಿಮಾನ ಮತ್ತು ಭಾರತೀಯ ವಾಯುಪಡೆಯ ಕ್ಷೀಣಿಸುತ್ತಿರುವ ಬಲದ ಬಗ್ಗೆ ಕಳವಳ ಹುಟ್ಟುಹಾಕುತ್ತದೆ. ಭಾರತ ಹತಾಶೆಯಿಂದ ಫ್ರಾನ್ಸ್ ಮತ್ತು ರಶ್ಯದ ಕಡೆಗೆ ತಿರುಗುವ ಸ್ಥಿತಿ ತಲೆದೋರಿದೆಯೇ? ನಮ್ಮದೇ ಆದ ಯುದ್ಧವಿಮಾನಕ್ಕಾಗಿ ಮೋದಿ ಸರಕಾರ ಸುಮಾರು 12 ವರ್ಷಗಳನ್ನು ವ್ಯರ್ಥ ಮಾಡಿದೆಯೇ? 2024ರಲ್ಲಿ ಮೊದಲ ಬಾರಿಗೆ ತೇಜಸ್ ಜೆಟ್ ಜೈಸಲ್ಮೇರ್ ಪ್ರದೇಶದಲ್ಲಿ ಅಪಘಾತಕ್ಕೀಡಾಗಿತ್ತು. ಆ ಸಮಯದಲ್ಲೂ ಪೈಲಟ್ ಸುರಕ್ಷಿತವಾಗಿ ಹೊರಗೆ ಹಾರಿದ್ದರು. ಅದಾದ ಬಳಿಕ ಕಳೆದ ವರ್ಷ ನವೆಂಬರ್ನಲ್ಲಿ ದುಬೈ ಏರ್ ಶೋನಲ್ಲಿ ನಡೆದ ಏರೋಬ್ಯಾಟಿಕ್ ಪ್ರದರ್ಶನದ ಸಮಯದಲ್ಲಿ ತಾಂತ್ರಿಕ ದೋಷದಿಂದಾಗಿ ತೇಜಸ್ ವಿಮಾನ ಪತನಗೊಂಡು, ಆ ದುರಂತದಲ್ಲಿ ಪೈಲಟ್ ಸಾವಿಗೀಡಾಗಿದ್ದರು. ಇದಾದ ಬಳಿಕ ಮತ್ತೆ ಫೆ.7ರಂದು ಇನ್ನೊಂದು ಅಪಘಾತ ಸಂಭವಿಸಿದೆ. ಇದರ ಬೆನ್ನಲ್ಲೇ ಎಚ್ಚೆತ್ತಿರುವ ಭಾರತೀಯ ವಾಯುಪಡೆ ಸುರಕ್ಷತಾ ದೃಷ್ಟಿಯಿಂದ ತೇಜಸ್ ವಿಮಾನಗಳ ತಾಂತ್ರಿಕ ಸ್ಥಿರತೆ ಹಾಗೂ ಸಾಮರ್ಥ್ಯದ ಪರಿಶೀಲನೆಗೆ ಮುಂದಾಗಿದೆ. ಮೊನ್ನೆಯದು ಅಪಘಾತವಲ್ಲ, ಸಣ್ಣ ತಾಂತ್ರಿಕ ದೋಷ ಎಂದು ಎಚ್ಎಎಲ್ ಹೇಳುತ್ತಿದೆ. ಆದರೂ, ಏರ್ಫ್ರೇಮ್ ನಷ್ಟದ ಸುದ್ದಿ ನಿಜವಾಗಿದ್ದರೆ, ಉಳಿದಿರುವ 38 ತೇಜಸ್ ವಿಮಾನಗಳಲ್ಲಿ ಮೂರು ಪತನಗೊಂಡ ಬಳಿಕ ಕೇವಲ 35 ತೇಜಸ್ ವಿಮಾನಗಳು ಮಾತ್ರ ಇದ್ದು, ಈಗ ಸಂಪೂರ್ಣ ಫ್ಲಿಟ್ ಬಳಕೆ ಸ್ಥಗಿತಗೊಳಿಸಲಾಗಿದೆ. ನಮ್ಮ ವಾಯುಪಡೆ ಈಗಾಗಲೇ ತನ್ನ ಅಗತ್ಯ ಬಲಕ್ಕಿಂತ ಕಡಿಮೆ ಸಂಖ್ಯೆಯ ವಿಮಾನಗಳೊಂದಿಗೆ ಕೆಲಸ ಮಾಡುತ್ತಿರುವಾಗ, ಇದು ಕಳವಳ ಹುಟ್ಟಿಸುವ ವಿಷಯವಾಗಿದೆ. ಭಾರತಕ್ಕೆ ೪೨ ಸ್ಕ್ವಾಡ್ರನ್ಗಳ ಅಗತ್ಯವಿದೆ ಮತ್ತು IAF ಇನ್ನೂ ಹೊಸ ತೇಜಸ್ MK1A ಆವೃತ್ತಿಗಾಗಿ ಕಾಯುತ್ತಿದೆ. HALನಿಂದ ೧೮೦ ಯುದ್ಧವಿಮಾನಗಳು ಬರುವುದು ಈಗಾಗಲೇ ಎರಡು ವರ್ಷಗಳ ಕಾಲ ವಿಳಂಬವಾಗಿದೆ. ನಿರಂತರವಾಗಿ ಪಾಕಿಸ್ತಾನ ಮತ್ತು ಚೀನಾದ ಬೆದರಿಕೆ ಇರುವಾಗ, ನಮ್ಮ ವಾಯುಪಡೆಗೆ ಇದು ಸವಾಲಿನ ಸಮಯವಾಗಿದೆ. ‘ಆಪರೇಷನ್ ಸಿಂಧೂರ’ದಲ್ಲಿ ಇದು ಸ್ಪಷ್ಟವಾಗಿತ್ತು. ಪಾಕಿಸ್ತಾನಕ್ಕೆ ಚೀನಾದ ಬೆಂಬಲ ಇದ್ದುದರಿಂದ ನಮಗೆ ಅದು ಹೆಚ್ಚು ಕಠಿಣ ಸಂದರ್ಭವಾಗಿತ್ತು ಎನ್ನಲಾಗುತ್ತದೆ. ನಂತರ ಭಾರತ ತನ್ನ ಕಾರ್ಯತಂತ್ರ ಬದಲಾಯಿಸಿ, ಬ್ರಹ್ಮೋಸ್ ಮೂಲಕ ಪಾಕಿಸ್ತಾನದಲ್ಲಿ ಧ್ವಂಸ ನಡೆಸಿತು. ಆದರೆ ನಿಜವಾಗಿಯೂ ನಮ್ಮ ಪಡೆಯ ವಾಸ್ತವವೇನು ಎಂಬುದನ್ನು ತಡವಾಗಿಯಾದರೂ ಮೋದಿ ಸರಕಾರ ಅರ್ಥ ಮಾಡಿಕೊಂಡಿತು. ಈಗ ಭಾರತ ಮತ್ತೊಮ್ಮೆ, ರಫೇಲ್ ಒಪ್ಪಂದ ಅಂತಿಮಗೊಳಿಸಲು ಫ್ರಾನ್ಸ್ ಕಡೆಗೆ ತಿರುಗುತ್ತಿದೆ. ಇದು ಯುಪಿಎ ಆಡಳಿತದ ಅವಧಿಯಲ್ಲಿ ನಡೆಯಬೇಕಿತ್ತು. ಮೋದಿ ಸರಕಾರ ಬಂದ ನಂತರ ಒಪ್ಪಂದ ರದ್ದುಗೊಳಿಸಲಾಯಿತು. ಸಮಸ್ಯೆಯೆಂದರೆ ರಫೇಲ್ 12 ವರ್ಷಗಳ ಹಿಂದೆ ೪.೫ ಪೀಳಿಗೆಯ ಯುದ್ಧವಿಮಾನವಾಗಿತ್ತು ಮತ್ತು ಇಂದಿಗೂ 4.5 ಪೀಳಿಗೆಯ ಯುದ್ಧವಿಮಾನವಾಗಿಯೇ ಉಳಿದಿದೆ. ಈ ನಡುವೆ, ಚೀನಾ ನಂತರ ಭಾರತ ಸರಕಾರ ರಶ್ಯದ SU-೫೭ ಜೆಟ್ ಅನ್ನು ಗಂಭೀರವಾಗಿ ಪರಿಗಣಿಸುತ್ತಿದೆ ಎಂಬ ಸುದ್ದಿಯಿದೆ. ಸುಖೋಯ್ನಂತೆ, ಭಾರತದಲ್ಲಿ SU-೫೭ ಅನ್ನು ತಯಾರಿಸುವ ಯೋಜನೆಗಳಿವೆ. ಮನಮೋಹನ್ ಸಿಂಗ್ 2007ರಲ್ಲಿ ರಶ್ಯದೊಂದಿಗೆ ಜಂಟಿಯಾಗಿ ಈ ವಿಮಾನ ಅಭಿವೃದ್ಧಿಪಡಿಸಲು ಪ್ರಸ್ತಾವಿಸಿದ್ದರು. ಈಗ ಸರಕಾರ ಅದೇ ಯುದ್ಧವಿಮಾನದ ಕಡೆ ಮತ್ತೆ ನೋಡುತ್ತಿದೆ. ಹಾಗಾದರೆ ಏನು ನಡೆಯುತ್ತಿದೆ? 12 ವರ್ಷಗಳಿಂದ ಯುದ್ಧವಿಮಾನ ಖರೀದಿಸಬೇಕೆಂದು ನಾವು ಏಕೆ ನಿರ್ಧರಿಸಲು ಸಾಧ್ಯವಾಗಲಿಲ್ಲ? ನಮ್ಮ ಯುದ್ಧವಿಮಾನ ಕಾರ್ಯಕ್ರಮಕ್ಕೆ 12 ವರ್ಷಗಳಿಂದಲೂ ಏನಾಯಿತು? ಎರಡು ವರ್ಷಗಳಿಗಿಂತ ಕಡಿಮೆ ಅವಧಿಯಲ್ಲಿನ ಮೂರು ಅಪಘಾತಗಳು ಈಗ ಇಡೀ ತೇಜಸ್ ವಿಶ್ವಾಸಾರ್ಹತೆಯನ್ನೇ ಪ್ರಶ್ನೆಗೆ ಈಡು ಮಾಡಿವೆ. ಹೆಚ್ಚಿನ ಎತ್ತರದಲ್ಲಿ ಇದರ ಇಂಜಿನ್ ಕಡಿಮೆ ಶಕ್ತಿಯದ್ದಾಗಿದೆ ಎಂದು ಹೇಳುತ್ತಲೇ ಬರಲಾಗಿದೆ. ಆದರೂ ಸರಕಾರ IAFಗೆ ಪದೇ ಪದೇ ಈ ಯುದ್ಧವಿಮಾನ ಮತ್ತು ಈ ಇಂಜಿನ್ ಅನ್ನು ಅವಲಂಬಿಸುವಂತೆ ಹೇಳುತ್ತದೆ. ಏಕೆಂದರೆ ಯಾವುದೇ ಪರ್ಯಾಯವಿಲ್ಲ. ಡಿಆರ್ಡಿಒ ೧೯೮೯ರಿಂದ ಸ್ಥಳೀಯ ಇಂಜಿನ್ ಅನ್ನು ಅಭಿವೃದ್ಧಿಪಡಿಸಲು ಪ್ರಯತ್ನಿಸುತ್ತಿದ್ದರೂ, ಇಲ್ಲಿಯವರೆಗೆ ಯಶಸ್ವಿಯಾಗಿಲ್ಲ. ನಾವು ಮಂಗಳ ಮತ್ತು ಚಂದ್ರನನ್ನು ತಲುಪಿದ್ದೇವೆ. ಆದರೆ ೪೦ ವರ್ಷಗಳ ನಂತರವೂ ನಾವು ಫೈಟರ್ ಜೆಟ್ ಇಂಜಿನ್ ಅನ್ನು ಅಭಿವೃದ್ಧಿಪಡಿಸಲು ಸಾಧ್ಯವಾಗಿಲ್ಲ. ಅಮೆರಿಕದ ಜನರಲ್ ಇಲೆಕ್ಟ್ರಿಕ್ ಕಂಪೆನಿ ಸಮಯಕ್ಕೆ ಸರಿಯಾಗಿ ಇಂಜಿನ್ಗಳನ್ನು ತಲುಪಿಸುತ್ತಿಲ್ಲ, ಆದ್ದರಿಂದ ವಾಯುಪಡೆಗೆ ಜೆಟ್ಗಳನ್ನು ಸಮಯಕ್ಕೆ ಸರಿಯಾಗಿ ತಲುಪಿಸಲು ಸಾಧ್ಯವಾಗುತ್ತಿಲ್ಲ ಎಂದು HAL ಹೇಳುತ್ತದೆ. ಇದರಿಂದಾಗಿ, ನಮ್ಮ ಸ್ಕ್ವಾಡ್ರನ್ ಬಲ ಕಡಿಮೆಯಾಗುತ್ತಿದೆ ಮತ್ತು ರಾಷ್ಟ್ರೀಯ ಭದ್ರತೆಯಲ್ಲಿ ದೊಡ್ಡ ಅಂತರವನ್ನು ಸೃಷ್ಟಿಸುತ್ತಿದೆ. ಹೊಸ ತೇಜಸ್ ವಿಮಾನಗಳು ಬರುವುದಿಲ್ಲ ಎಂಬುದು ಸ್ಪಷ್ಟವಾಗಿದೆ. ವಾಯುಪಡೆಯ ಬಲ ಕಾಪಾಡಿಕೊಳ್ಳಲು ಇತರ ಆಯ್ಕೆಗಳನ್ನು ಹುಡುಕಬೇಕಾಗುತ್ತದೆ. ಈಗ, ಸರಕಾರ ಮತ್ತೊಮ್ಮೆ ರಫೇಲ್ ವಿಮಾನದ ಬಗ್ಗೆ ಹೇಳಿದೆ. ಫ್ರಾನ್ಸ್ ನೊಂದಿಗೆ ೧೧೪ ರಫೇಲ್ ಯುದ್ಧ ವಿಮಾನಗಳಿಗಾಗಿ ಒಪ್ಪಂದವನ್ನು ಅನುಮೋದಿಸಿದೆ. ಈಗಿರುವ ಮಾಹಿತಿಯಂತೆ, 18 ಜೆಟ್ಗಳನ್ನು ಫ್ರಾನ್ಸ್ನಿಂದ ಭಾರತಕ್ಕೆ ಹಾರಾಟದ ಸ್ಥಿತಿಯಲ್ಲಿ ತಲುಪಿಸಲಾಗುತ್ತದೆ. ಉಳಿದ 96 ಜೆಟ್ಗಳನ್ನು ಭಾರತದಲ್ಲಿ ಜೋಡಿಸಲಾಗುತ್ತದೆ. ಈ ಕೆಲಸವನ್ನು ಡಸಾಲ್ಟ್ ಜೊತೆಗೆ ಭಾರತೀಯ ಪಾಲುದಾರ ಸಂಸ್ಥೆಗಳು ನಿರ್ವಹಿಸಬೇಕಾಗುತ್ತದೆ. ಟಾಟಾ ಅಡ್ವಾನ್ಸ್ಡ್ ಸಿಸ್ಟಮ್ಸ್ ಲಿಮಿಟೆಡ್ ಹೆಸರನ್ನು ಬಹಿರಂಗಪಡಿಸಲಾಗಿದೆ. ಫ್ರೆಂಚ್ ಏರೋಸ್ಪೇಸ್ ಕಂಪೆನಿ ಸಫ್ರಾನ್ ಮತ್ತು ಡಿಆರ್ಡಿಒ ಜಂಟಿಯಾಗಿ ಸ್ಥಳೀಯವಾಗಿ ಇಂಜಿನ್ ಅನ್ನು ಅಭಿವೃದ್ಧಿಪಡಿಸಲಿವೆ. ಮಾಧ್ಯಮಗಳು ಮತ್ತು ಸರಕಾರಿ ಪತ್ರಿಕಾ ಪ್ರಕಟಣೆ, ಈ ಒಪ್ಪಂದ ಭಾರತದ ಪಾಲಿಗೆ ಒಳ್ಳೆಯದು ಎಂದೇ ಬಿಂಬಿಸುತ್ತಿವೆ. ಆದರೆ ಈ ಒಪ್ಪಂದದೊಳಗೆ ಸರಕಾರ ಮತ್ತು ಮಾಧ್ಯಮಗಳು ಬಹಿರಂಗಪಡಿಸಲು ಬಯಸದ ಏನೋ ಇದೆ ಎಂಬ ಅನುಮಾನವೂ ವ್ಯಕ್ತವಾಗುತ್ತಿದೆ. ರಫೇಲ್ನ ಕೋರ್ ಇಲೆಕ್ಟ್ರಾನಿಕ್ ವ್ಯವಸ್ಥೆಗಳ ಮೂಲ ಕೋಡ್ ಅನ್ನು ಭಾರತಕ್ಕೆ ವರ್ಗಾಯಿಸಲಾಗುವುದಿಲ್ಲ ಎಂದು ಫ್ರೆಂಚ್ ಮಾಧ್ಯಮ ಹೇಳುತ್ತಿದೆಯೆಂದು ‘ದೇಶಭಕ್ತ್’ ಉಲ್ಲೇಖಿಸಿದೆ. ಫ್ರಾನ್ಸ್ ಈ ಮೂಲ ಕೋಡ್ ಅನ್ನು ಸಂಶೋಧಿಸಲು ಮತ್ತು ಅಭಿವೃದ್ಧಿಪಡಿಸಲು ದಶಕಗಳೇ ಹಿಡಿದಿವೆ ಎಂದು ಹೇಳುತ್ತದೆ. ಈ ಮೂಲ ಕೋಡ್ ಇಲ್ಲದೆ, ಭಾರತ ಈ ಜೆಟ್ಗಳಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಲು ಸಾಧ್ಯವಾಗುವುದಿಲ್ಲ. ನಾವು ಅಭಿವೃದ್ಧಿಪಡಿಸಿದ ಶಸ್ತ್ರಾಸ್ತ್ರಗಳನ್ನು ಈ ವಿಮಾನಕ್ಕೆ ಬಳಸಲು ಸಾಧ್ಯವಿಲ್ಲ. ಅದೆಲ್ಲದಕ್ಕೂ ನಾವು ಫ್ರಾನ್ಸ್ನಿಂದ ಅನುಮತಿ ಪಡೆಯಬೇಕು ಅಥವಾ ಬದಲಾವಣೆಗಳ ಅಳವಡಿಕೆಗಾಗಿ ವಿಮಾನವನ್ನೇ ಅಲ್ಲಿಗೆ ಕಳುಹಿಸಬೇಕು. ಆಗ, ನಮ್ಮ ಎಲ್ಲಾ ಶಸ್ತ್ರಾಸ್ತ್ರಗಳ ಕೋಡ್ ಅನ್ನು ಫ್ರಾನ್ಸ್ನೊಂದಿಗೆ ಹಂಚಿಕೊಳ್ಳಬೇಕಾಗುತ್ತದೆ. ಹೀಗಾಗಿ, ಎಲ್ಲವೂ ಫ್ರಾನ್ಸ್ನ ನಿಯಂತ್ರಣದಲ್ಲಿರುತ್ತದೆ. ಮೋದಿ ಸರಕಾರ ಭಾರೀ ಉತ್ಸಾಹದಿಂದ ಸಹಿ ಮಾಡಿದ 36 ಜೆಟ್ಗಳ 2016ರ ಒಪ್ಪಂದ ಫ್ರಾನ್ಸ್ ನಲ್ಲಿ ಇನ್ನೂ ತನಿಖೆಯಲ್ಲಿದೆ. 2021 ರಲ್ಲಿ ಫ್ರೆಂಚ್ ಎನ್ಜಿಒ ಈ ಒಪ್ಪಂದದಲ್ಲಿ ಭ್ರಷ್ಟಾಚಾರ ಮತ್ತು ಆರ್ಥಿಕ ಅಪರಾಧಗಳ ಗಂಭೀರ ಆರೋಪಗಳನ್ನು ಮಾಡಿದ ನಂತರ ನ್ಯಾಯಾಂಗ ತನಿಖೆ ನಡೆಯುತ್ತಿದೆ. ಭಾರತದಲ್ಲಿ ವಿರೋಧ ಪಕ್ಷಗಳು ಎತ್ತುತ್ತಿರುವ ಪ್ರಶ್ನೆಯೆಂದರೆ, ರಕ್ಷಣಾ ಉತ್ಪಾದನೆಯಲ್ಲಿ ಏನೂ ಕೆಲಸ ಮಾಡಿರದ ಅನಿಲ್ ಅಂಬಾನಿಯ ರಿಲಯನ್ಸ್ ಗ್ರೂಪ್ ಅನ್ನು ಡಸಾಲ್ಟ್ ಭಾರತೀಯ ಆಫ್ಸೆಟ್ ಪಾಲುದಾರನೆಂದು ಏಕೆ ಆಯ್ಕೆ ಮಾಡಲಾಯಿತು ಎಂಬುದು. ಫ್ರಾನ್ಸ್ನಲ್ಲಿ ಪ್ರಕರಣ ಇನ್ನೂ ತನಿಖೆಯಲ್ಲಿದ್ದರೂ, ಭಾರತದಲ್ಲಿ ತನಿಖೆ ಮುಂದುವರಿಸಲಾಗಿಲ್ಲ. ಹೊಸ ಒಪ್ಪಂದದ ಉತ್ಸಾಹದಲ್ಲಿ ಸರಕಾರ ಮತ್ತೊಮ್ಮೆ ಪ್ರಶ್ನೆಗಳನ್ನು ತಪ್ಪಿಸಲು ಪ್ರಯತ್ನಿಸುತ್ತಿದೆ. ಭಾರತ ಐದನೇ ತಲೆಮಾರಿನ ಯುದ್ಧ ವಿಮಾನಗಳ ಕೊರತೆ ಪರಿಹರಿಸಲು ಪ್ರಯತ್ನಿಸುತ್ತಿದೆ ಎಂಬ ಸುದ್ದಿ ಬಂದಿದೆ. ಭಾರತ ತನ್ನದೇ ಆದ ಅಡ್ವಾನ್ಸ್ ಮೀಡಿಯಂ ಕೊಂಬಾಟ್ ಏರ್ಕ್ರಾಪ್ಟ್ ಅನ್ನು (AMCA) ಅಭಿವೃದ್ಧಿಪಡಿಸುವವರೆಗೆ ರಶ್ಯದ ಐದನೇ ತಲೆಮಾರಿನ ಸ್ಟೆಲ್ತ್ ಫೈಟರ್ ಅನ್ನು ಬಳಸಲು ಯೋಜಿಸಿದೆ. ಇದು ೨೦೧೮ರಲ್ಲಿ ಭಾರತ ತಿರಸ್ಕರಿಸಿದ್ದ ಅದೇ SU-೫೭ ವಿಮಾನವಾಗಿದೆ. ಈ ಒಪ್ಪಂದವನ್ನು ಮೊದಲೇ ಜಾರಿಗೆ ತಂದಿದ್ದರೆ, ಭಾರತ ಈಗ ತನ್ನದೇ ಆದ ಐದನೇ ತಲೆಮಾರಿನ ಫೈಟರ್ ಅನ್ನು ಹೊಂದಿರುತ್ತಿತ್ತು. ಈಗ ರಶ್ಯದ SU-57e ಎಂಬ ಹೊಸ ಆವೃತ್ತಿಯ ಬಗ್ಗೆಯೂ ಹೇಳಲಾಗುತ್ತಿದೆ. ಭಾರತದಲ್ಲಿ ಸ್ಥಳೀಯ ಉತ್ಪಾದನೆ ಮತ್ತು ತಂತ್ರಜ್ಞಾನ ವರ್ಗಾವಣೆಯೊಂದಿಗೆ ಹೊಸ ಜಂಟಿ ಐದನೇ ತಲೆಮಾರಿನ ಫೈಟರ್ ಅಭಿವೃದ್ಧಿಪಡಿಸುವ ಪ್ರಸ್ತಾವವೂ ಇದೆ. ಆದರೆ SU-57 ವಿಷಯವಾಗಿ ಅವತ್ತು ಏನು ಸಮಸ್ಯೆಗಳಿದ್ದವೋ ಅವು ಇವತ್ತಿಗೂ ಇವೆ. ಇಲ್ಲಿಯವರೆಗೆ ವಿಶ್ವಾದ್ಯಂತ ೪೦ SU-57ಗಳನ್ನು ಮಾತ್ರ ನಿರ್ಮಿಸಲಾಗಿದೆ. ಇದನ್ನು ಯಾವುದೇ ವಿದೇಶಿ ವಾಯುಪಡೆಗೆ ಅಧಿಕೃತವಾಗಿ ಸೇರಿಸಲಾಗಿಲ್ಲ. ಇದರ ಯುದ್ಧಭೂಮಿ ಮಾನ್ಯತೆ ಕೂಡ ಪ್ರಾಯೋಗಿಕವಾಗಿ ಶೂನ್ಯವಾಗಿದೆ ಮತ್ತು ಇದನ್ನು ಸ್ವತಃ ರಶ್ಯ ಕೂಡ ಉಕ್ರೇನ್ ವಿರುದ್ಧ ಬಳಸಿಲ್ಲ. ಇಂದಿಗೂ, ನಾವು ಈ ವಿಮಾನವನ್ನು ಖರೀದಿಸಿದರೆ ರಾಜಿ ಮಾಡಿಕೊಂಡಂತೆಯೇ ಆಗುತ್ತದೆ. ಪ್ರಶ್ನೆಯೆಂದರೆ, ನಾವು ೨೦೧೮ರಲ್ಲಿ ಅದನ್ನು ತಿರಸ್ಕರಿಸದಿದ್ದರೆ, ನಮ್ಮ ವಾಯುಪಡೆಗೆ ಇಂದು ತನ್ನದೇ ಆದ ಯುದ್ಧವಿಮಾನವಿರುತ್ತಿತ್ತು. ನಾವು ನಮ್ಮದೇ ಆದ ತಂತ್ರಜ್ಞಾನದಿಂದ ಅದನ್ನು ಸುಧಾರಿಸಲು ಸಾಧ್ಯವಾಗುತ್ತಿತ್ತು. ಇನ್ನೂ ರಶ್ಯ ಅಥವಾ ಫ್ರಾನ್ಸ್ ಅಥವಾ ಅಮೆರಿಕದ ಇಂಜಿನ್ಗಳ ಮೇಲೆ ಅವಲಂಬಿತರಾಗುವ ಸ್ಥಿತಿ ಬಹುಶಃ ಇರುತ್ತಿರಲಿಲ್ಲ. ಲಘು ಯುದ್ಧವಿಮಾನ (LCA) ತೇಜಸ್ ಆಗಮನದೊಂದಿಗೆ ಭರವಸೆಯ ಕಿರಣ ಹೊಮ್ಮಿತ್ತು. LCA ಕಾರ್ಯಕ್ರಮಕ್ಕೆ 1984ರಲ್ಲಿ ಅನುಮೋದನೆ ನೀಡಿದ್ದರೂ, ಮೊದಲ ಮೂಲ ಮಾದರಿ ಅಭಿವೃದ್ಧಿಪಡಿಸಲು ೧೭ ವರ್ಷಗಳನ್ನು ತೆಗೆದುಕೊಂಡಿತು. LCA ಮೊದಲ ಬಾರಿಗೆ 1984ರಲ್ಲಿ ಹಾರಿತು. ಅಧಿಕೃತವಾಗಿ ೨೦೧೬ರಲ್ಲಿ ವಾಯುಪಡೆಗೆ ಸೇರಿಸಲಾಯಿತು. 2016ರಿಂದ 2025ರ ನಡುವಿನ ಒಂಭತ್ತು ವರ್ಷಗಳಲ್ಲಿ, ಎಚ್ಎಎಲ್ 40 ಜೆಟ್ಗಳನ್ನು ಸಹ ತಲುಪಿಸಲು ಸಾಧ್ಯವಾಗಲಿಲ್ಲ. ನಮ್ಮದೇ ಅಗತ್ಯ ಪೂರೈಸದೇ ಇದ್ದಾಗ, ತೇಜಸ್ ಅನ್ನು ಇತರ ದೇಶಗಳಿಗೆ ಮಾರಾಟ ಮಾಡುವ ಕನಸು ದೂರದ್ದೇ ಆಯಿತು. ಈ ಬಿಕ್ಕಟ್ಟಿಗೆ, ಯುಪಿಎ, ಎನ್ಡಿಎ, ಬಿಜೆಪಿ, ಕಾಂಗ್ರೆಸ್ ಎಲ್ಲರೂ ಕಾರಣವಾಗಿದ್ದರೂ, ಕಳೆದ 12 ವರ್ಷಗಳಲ್ಲಿ ಮೋದಿ ಸರಕಾರ ಅಧಿಕಾರದಲ್ಲಿದೆ. ಮೋದಿ ಸರಕಾರದ ಅತಿದೊಡ್ಡ ವೈಫಲ್ಯವೆಂದರೆ, ತಾನು ದೇಶದ ಭದ್ರತೆಯನ್ನು ಪೂರ್ಣವಾಗಿ ಸಾಧಿಸಿದ್ದೇನೆ ಎಂದು ಭಾವಿಸಿದ್ದು. ಮೋದಿ ಸರಕಾರಕ್ಕೆ HAL ಅನ್ನು ಸುಧಾರಿಸಲು ೧೨ ವರ್ಷಗಳಷ್ಟು ಸಮಯವಿತ್ತು. ಅಲ್ಲಿನ ಸಮಸ್ಯೆಗಳನ್ನು ಪರಿಹರಿಸಿದ್ದರೆ, ಇಂದು ಪರಿಸ್ಥಿತಿ ಇಷ್ಟೊಂದು ಕೆಟ್ಟದಾಗುತ್ತಿರಲಿಲ್ಲ. ಅದಾದ ನಂತರ, AMCA ಅಭಿವೃದ್ಧಿಗೆ ಬೇಕಿದ್ದ ಆದ್ಯತೆಯನ್ನು ನೀಡಲಿಲ್ಲ. ಇದೆಲ್ಲದರ ಪರಿಣಾಮವಾಗಿ ಇಂದು ವಾಯುಪಡೆಯ ಬಲ ತೀವ್ರವಾಗಿ ಕಡಿಮೆಯಾಗಿದೆ. ಮೊದಲು ಬಿಕ್ಕಟ್ಟು ಇದೆ ಎಂಬುದನ್ನು ಸರಕಾರ ಒಪ್ಪಿಕೊಳ್ಳಬೇಕು. ಸರಕಾರ ಅದನ್ನು ಒಪ್ಪಲು ಮತ್ತು ತಜ್ಞರ ಮಾತುಗಳನ್ನು ಕೇಳಲು ಸಿದ್ಧವಿದ್ದರೆ ಪರಿಹಾರವೂ ಸಾಧ್ಯ.
ತಮಿಳುನಾಡು ಚುನಾವಣೆ: ಡಿಎಂಕೆ ಪಕ್ಷ ಸೇರಿದ ಮಾಜಿ ಸಿಎಂ ಪನ್ನೀರ್ಸೆಲ್ವಂ- ಎಂಕೆ ಸ್ಟಾಲಿನ್ ಆಡಳಿತಕ್ಕೆ ಬಹುಪರಾಕ್!
ವಿಧಾನಸಭೆ ಚುನಾವಣೆಗೆ ಕೆಲವೇ ತಿಂಗಳು ಬಾಕಿ ಇರುವಾಗಲೇ , ದೊಡ್ಡ ಬೆಳವಣಿಗೆ ಆಗಿದ್ದು, ಡಿಎಂಕೆ ಪಕ್ಷಕ್ಕೆ ಹೊಸ ಬಲ ದೊರೆತಿದೆ. ತಮಿಳುನಾಡಿನಲ್ಲಿ 3 ಬಾರಿ ಸಿಎಂ ಆಗಿದ್ದ ಪನ್ನೀರ್ಸೆಲ್ವಂ ಆಡಳಿತ ಪಕ್ಷವಾದ ಡಿಎಂಕೆಗೆ ಸೇರುವ ಮೂಲಕ ಎನ್ಡಿಎ ಮೈತ್ರಿ ಪಡೆಗೆ ಶಾಕ್ ನೀಡಿದ್ದಾರೆ.
ಫೆಬ್ರವರಿ 27ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ
Petrol, Diesel Price: ಪೆಟ್ರೋಲ್, ಡೀಸೆಲ್ ದರದಲ್ಲಿ ಜಾಸ್ತಿ ಅಲ್ಲದಿದ್ದರೂ, ಸ್ವಲ್ಪ ಪ್ರಮಾಣದಲ್ಲಾದರೂ, ಏರಿಳಿತ ಆಗುತ್ತಿರುತ್ತದೆ. ಹಾಗಾದರೆ, ಇಂದು (ಫೆಬ್ರವರಿ 27) ಬೆಂಗಳೂರು ಸೇರಿದಂತೆ ರಾಜ್ಯದ ಉಳಿದ ಜಿಲ್ಲೆಗಳಲ್ಲಿ ಲೀಟರ್ ಪೆಟ್ರೋಲ್, ಡೀಸೆಲ್ ಬೆಲೆ ಎಷ್ಟಿದೆ ಎನ್ನುವ ಅಂಕಿಅಂಶಗಳನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ. ಶಕ್ತಿಯ ಮೂಲಗಳು ಎನಿಸಿಕೊಂಡಿರುವ ಪೆಟ್ರೋಲ್ ಮತ್ತು ಡೀಸೆಲ್ ಇಂಧನ ಅತ್ಯವಶ್ಯಕವಾಗಿ ಬೇಕಾಗುವ ಸಂಪನ್ಮೂಲಗಳಾಗಿವೆ.
ಮದ್ಯ ನೀತಿ ಪ್ರಕರಣದಲ್ಲಿ ಅರವಿಂದ್ ಕೇಜ್ರಿವಾಲ್, ಮನೀಶ್ ಸಿಸೋಡಿಯಾ ಖುಲಾಸೆ; ಕಣ್ಣೀರಿಟ್ಟ ದೆಹಲಿ ಮಾಜಿ ಸಿಎಂ!
ಮಹತ್ವದ ಬೆಳವಣಿಗೆಯೊಂದರಲ್ಲಿ ದೆಹಲಿ ಮದ್ಯ ನೀತಿ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ, ದೆಹಲಿ ಕೋರ್ಟ್ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರನ್ನು ಖುಲಾಸೆಗೊಳಿಸಿದೆ. ತಮ್ಮ ನಾಯಕರ ಬಿಡುಗಡೆಯಿಂದ ಆಪ್ ಪಾಳೆಯದಲ್ಲಿ ಸಂತಸ ಮನೆ ಮಾಡಿದ್ದು, ಅರವಿಂದ್ ಕೇಜ್ರಿವಾಲ್ ಅವರಿಗೆ ಅವರ ಮನೆಯಲ್ಲಿ ಭರ್ಜರಿ ಸ್ವಾಗತ ನೀಡಲಾಗಿದೆ. ಈ ಮಧ್ಯೆ ಮಾಧ್ಯಮಗಳೊಂದಿಗೆ ಮಾತನಾಡುತ್ತಾ, ಅರವಿಂದ್ ಕೇಜ್ರಿವಾಲ್ ಕಣ್ಣೀರಿಟಿದ್ದಾರೆ. ಕೇಜ್ರಿವಾಲ್ ತಮ್ಮನ್ನು ಖಟ್ಟರ್ ಪ್ರಾಮಾಣಿಕ ಎಂದು ಕರೆದುಕೊಂಡಿದ್ದಾರೆ.
ಕಲಬುರಗಿ: 55 ವಾರ್ಡ್ಗಳ ಅಭಿವೃದ್ಧಿಗಾಗಿ ಪಾಲಿಕೆ ಹತ್ತಿರ ಯೋಜನೆಯಿಲ್ಲ
►ಕಾಂಗ್ರೆಸ್ ಸದಸ್ಯರಿಗೆ ಅಧಿಕಾರದ ಮದಯೇರಿದೆ► ಠಿಕಾಣಿ ಹೂಡಿರುವ ಅಧಿಕಾರಿಗಳ ವರ್ಗಾಯಿಸಿದರೆ ಮಾತ್ರ ಅಭಿವೃದ್ಧಿ ಸಾಧ್ಯ
ಯೋಗೀಶ್ ಗೌಡ ಹತ್ಯೆ ಪ್ರಕರಣ | ಶಾಸಕ ವಿನಯ್ ಕುಲಕರ್ಣಿಗೆ ಸುಪ್ರೀಂಕೋರ್ಟ್ನಿಂದ ಜಾಮೀನು
ಹೊಸದಿಲ್ಲಿ : ಧಾರವಾಡ ಜಿಲ್ಲೆಯ ಹೆಬ್ಬಳ್ಳಿ ಜಿಲ್ಲಾ ಪಂಚಾಯಿತಿ ಕ್ಷೇತ್ರದ ಬಿಜೆಪಿ ಸದಸ್ಯರಾಗಿದ್ದ ಯೋಗೀಶ್ ಗೌಡ ಹತ್ಯೆ ಪ್ರಕರಣದಲ್ಲಿ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ಅವರಿಗೆ ಸುಪ್ರೀಂ ಕೋರ್ಟ್ ಜಾಮೀನು ಮಂಜೂರು ಮಾಡಿ ಆದೇಶ ಹೊರಡಿಸಿದೆ. ನ್ಯಾಯಮೂರ್ತಿ ಸಂಜಯ್ ಕರೋಲ್ ಅವರಿದ್ದ ಪೀಠವು ವಿನಯ್ ಕುಲಕರ್ಣಿ ಅವರಿಗೆ ಜಾಮೀನು ಮಂಜೂರು ಮಾಡಿದೆ. ಈ ಹಿಂದೆ ನೀಡಲಾಗಿದ್ದ ಜಾಮೀನು ರದ್ದಾದ ಹಿನ್ನೆಲೆಯಲ್ಲಿ ಶಾಸಕ ವಿನಯ್ ಕುಲಕರ್ಣಿ ಅವರು ಜನಪ್ರತಿನಿಧಿಗಳ ಕೋರ್ಟ್ಗೆ ಶರಣಾಗಿದ್ದರು. ಇತ್ತೀಚಿಗೆ ಹೈಕೋರ್ಟ್ ನಲ್ಲಿ ಜಾಮೀನು ಅರ್ಜಿ ವಜಾ ಆಗಿತ್ತು. ಬಳಿಕ ವಿನಯ್ ಕುಲಕರ್ಣಿ ಸುಪ್ರೀಂಕೋರ್ಟ್ ಮೊರೆ ಹೋಗಿದ್ದರು.
ಎಐ ಶೃಂಗ, ನಿರುದ್ಯೋಗ ಮತ್ತು ಶೈಕ್ಷಣಿಕ ವ್ಯವಸ್ಥೆ
ಕಳೆದ 10 ವರ್ಷಗಳಿಂದ ಎಐ ಕ್ಷೇತ್ರಕ್ಕೆ ಹಣ ಹರಿದಿದೆ; ಇದರಿಂದ ಉಳಿದ ಕ್ಷೇತ್ರಗಳಿಗೆ ಅನುದಾನ ಕೊರತೆಯಾಗಿದೆ ಹಾಗೂ ಎಐ ನೆಪದಲ್ಲಿ ಕಂಪೆನಿಗಳು ಉದ್ಯೋಗಿಗಳನ್ನು ತೆಗೆದುಹಾಕಿವೆ. ಶಿಕ್ಷಣ ವ್ಯವಸ್ಥೆಯ ದುರಸ್ತಿ, ಗುಣಮಟ್ಟ ಹೆಚ್ಚಳಕ್ಕೆ ಆದ್ಯತೆ, ಸಾರ್ವಜನಿಕ ಕ್ಷೇತ್ರದಲ್ಲಿ ಹೂಡಿಕೆಯಿಂದ ಉದ್ಯೋಗ ಸೃಷ್ಟಿ, ಯುವಜನರಿಗೆ ಸೂಕ್ತ ತರಬೇತಿ ನೀಡಿ ಅವರನ್ನು ಎಐ ಯುಗಕ್ಕೆ ಸನ್ನದ್ಧಗೊಳಿಸುವಿಕೆ ಯುದ್ಧೋಪಾದಿಯಲ್ಲಿ ನಡೆಯಬೇಕಿದೆ. ಇದಕ್ಕೆ ಸರಕಾರ ಯಾವ ಸಿದ್ಧತೆ ಮಾಡಿಕೊಂಡಿದೆ? ಗಲ್ಗೋಟಿಯಾ ವಿಶ್ವವಿದ್ಯಾನಿಲಯದ ರೋಬೊ ನಾಯಿ ‘ಒರಿಯಾನ್’, ನಮ್ಮ ಕುಲಗೆಟ್ಟ ವ್ಯವಸ್ಥೆಯ ಪ್ರತೀಕ. ದಿಲ್ಲಿಯಲ್ಲಿ ನಡೆದ ಎಐ ಶೃಂಗದಲ್ಲಿ ಅಮೆರಿಕ, ಇಂಗ್ಲೆಂಡ್, ಬ್ರೆಝಿಲ್, ಆಸ್ಟ್ರೇಲಿಯ, ಆಸ್ಟ್ರಿಯ, ಚೀನಾ, ಕೆನಡಾ, ಸ್ವಿಟ್ಸರ್ಲ್ಯಾಂಡ್ ಸೇರಿದಂತೆ 89 ರಾಷ್ಟ್ರಗಳು ಎಐ ಸಂಪನ್ಮೂಲಗಳ ಪ್ರಜಾಪ್ರಭುತ್ವೀಕರಣ, ರಾಷ್ಟ್ರೀಯ ಸಾರ್ವಭೌಮತ್ವಕ್ಕೆ ಗೌರವ, ಆರ್ಥಿಕ ಬೆಳವಣಿಗೆ ಮತ್ತು ಸಾಮಾಜಿಕ ಒಳಿತು, ಸುರಕ್ಷಿತ ಮತ್ತು ನಂಬಿಕಾರ್ಹ ಎಐ, ಸಾಮಾಜಿಕ ಪ್ರವೇಶಾವಕಾಶ, ಮಾನವ ಸಂಪನ್ಮೂಲದ ಪುನಶ್ಚೇತನ ಇತ್ಯಾದಿ ಒಳಗೊಂಡ ಒಪ್ಪಂದಕ್ಕೆ ಸಹಿ ಹಾಕಿವೆ. ಜತೆಗೆ, ಇಲೆಕ್ಟ್ರಾನಿಕ್ಸ್ ಮತ್ತು ಬಹುಮುಖ್ಯ ಖನಿಜಗಳ ಕೇಂದ್ರೀಕರಣದ ವಿರುದ್ಧದ ಅಮೆರಿಕ ನೇತೃತ್ವದ ‘ಪ್ಯಾಕ್ಸ್ ಸಿಲಿಕಾ ಇನಿಷಿಯೇಟಿವ್’ ಅನ್ನು ಭಾರತ ಸೇರಿದೆ. ಪ್ರಧಾನಿ ‘‘ಭಾರತ ಎಐ ಕ್ರಾಂತಿಯ ಭಾಗ ಮಾತ್ರವಲ್ಲ; ಅದರ ನಾಯಕ’’ ಎಂದು ಘೋಷಿಸಿದ್ದಾರೆ. ಆದರೆ, ಯುವ ಜನರ ನಿರುದ್ಯೋಗ ಸಮಸ್ಯೆ, ವಿಶ್ವವಿದ್ಯಾನಿಲಯಗಳ ಆರ್ಥಿಕ-ಬೌದ್ಧಿಕ ಪರಿಸ್ಥಿತಿ, ಶಿಕ್ಷಣದ ಗುಣಮಟ್ಟ, ಶೈಕ್ಷಣಿಕ ಮೂಲಸೌಲಭ್ಯಗಳ ಕೊರತೆ ಇತ್ಯಾದಿ ಬಗ್ಗೆ ಅವರು ಮಾತನ್ನಾಡಿಲ್ಲ. ಶೃಂಗದಲ್ಲಿ ಯುವ ಕಾಂಗ್ರೆಸ್ ಕಾರ್ಯಕರ್ತ(ಐವೈಸಿ)ರು ಪ್ರತಿಭಟನೆ ನಡೆಸಿದ್ದು, ‘‘ರಾಷ್ಟ್ರೀಯ ಕಾರ್ಯಕ್ರಮವನ್ನು ಕಾಂಗ್ರೆಸ್ ಕೊಳಕು ಮತ್ತು ನಾಚಿಕೆಗೇಡು ರಾಜಕೀಯಕ್ಕೆ ಬಳಸಿಕೊಂಡಿದೆ’’ ಎಂದು ಪ್ರಧಾನಿ ಹರಿಹಾಯ್ದಿದ್ದಾರೆ. ಪ್ರತಿಭಟಿಸಿದ ಐವರನ್ನು ದಿಲ್ಲಿ ಹೈಕೋರ್ಟಿಗೆ ಹಾಜರುಪಡಿಸಿದಾಗ, ‘ಪ್ರತಿಭಟನೆಯು ಸಾರ್ವಜನಿಕ ವ್ಯವಸ್ಥೆ ಮೇಲಿನ ಸ್ಪಷ್ಟ ದಾಳಿ’ ಎಂದು ನ್ಯಾಯಮೂರ್ತಿ ಅಭಿಪ್ರಾಯಪಟ್ಟಿದ್ದಾರೆ. ಆದರೆ, ಅಕ್ಟೋಬರ್ 3-14, 2010ರಂದು ದಿಲ್ಲಿಯಲ್ಲಿ ಕಾಮನ್ವೆಲ್ತ್ ಗೇಮ್ಸ್ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತರು ಪ್ರತಿಭಟಿಸಿದಾಗ, ‘ಘಟನೆಯಿಂದ ಅಂತರ್ರಾಷ್ಟ್ರೀಯ ಸಮುದಾಯದ ಎದುರು ದೇಶದ ಮಾನ ಹೋಗಿದೆ’ ಎಂದು ಪ್ರಧಾನಿ ಮನಮೋಹನ್ ಸಿಂಗ್ ಟೀಕಿಸಿರಲಿಲ್ಲ. ಶೃಂಗದ ಉದ್ದೇಶಗಳೇನು? ಎಐ ಕುರಿತ ಮೊದಲ ಸಭೆ 2023ರಲ್ಲಿ ಇಂಗ್ಲೆಂಡ್ನ ಬ್ಲೆಟ್ಚ್ಲೆ ಪಾರ್ಕ್ನಲ್ಲಿ ನಡೆಯಿತು. 2024ರಲ್ಲಿ ಸಿಯೋಲ್; ಇಮ್ಯಾನುಯೆಲ್ ಮ್ಯಾಕ್ರೋನ್ 2025ರಲ್ಲಿ ಪ್ಯಾರಿಸ್ನಲ್ಲಿ ನಡೆದ ಸಭೆಯ ಅಧ್ಯಕ್ಷತೆ ವಹಿಸಿದ್ದರು; ಸಹ ಅಧ್ಯಕ್ಷ ಪ್ರಧಾನಿ ನರೇಂದ್ರ ಮೋದಿ. ಎಐಗೆ ಸಂಬಂಧಿಸಿದಂತೆ ‘ಸುರಕ್ಷತೆ ಮೊದಲು’ ಕಾರ್ಯನೀತಿಯನ್ನು ಅಮೆರಿಕದ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ತಳ್ಳಿಹಾಕಿದರು; ಅನ್ವೇಷಣೆ, ಸಂಶೋಧನೆ ಹಾಗೂ ತಂತ್ರಜ್ಞಾನದ ವಾಣಿಜ್ಯೀಕರಣಕ್ಕೆ ಆದ್ಯತೆ ನೀಡಬೇಕೆಂದು ಹೇಳಿದ್ದರು. ಎಐ ಹೆಚ್ಚು ಜನರಿಗೆ ತಲುಪಬೇಕು; ಪಾಶ್ಚಿಮಾತ್ಯ ಎಲ್ಎಲ್ಎಂ(ಲಾರ್ಜ್ ಲ್ಯಾಂಗ್ವೇಜ್ ಮಾಡೆಲ್)ಗಳಲ್ಲಿ ದಕ್ಷಿಣದ ದೇಶಗಳ ಭಾಷೆಗಳ ಪ್ರಾತಿನಿಧಿತ್ವ ಕಡಿಮೆ ಇದ್ದು, ಅದನ್ನು ವಿಸ್ತರಿಸಬೇಕು ಮತ್ತು ಈ ತಂತ್ರಜ್ಞಾನ ‘ಸುರಕ್ಷಿತ ಹಾಗೂ ನಂಬಿಕಾರ್ಹ’ ಆಗಬೇಕು. ಎಐ ಮೂಲಸೌಲಭ್ಯ ನಿರ್ಮಾಣ-ಸಂಶೋಧನೆಗೆ ದೇಶ ಸೂಕ್ತ ಎಂದು ಬಿಂಬಿಸುವುದು, ಎಐನಲ್ಲಿ ಹೂಡಿಕೆಗೆ ದೇಶಿ ಉದ್ಯಮಿಗಳನ್ನು ಉತ್ತೇಜಿಸುವುದು ಮತ್ತು ದೇಶದಲ್ಲಿ ತಂತ್ರಜ್ಞಾನ ಅಳವಡಿಕೆಯನ್ನು ವಿಶೇಷವಾಗಿ, ಆರೋಗ್ಯ ರಕ್ಷಣೆ, ಕೃಷಿ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಪ್ರೋತ್ಸಾಹಿಸುವುದು ದಿಲ್ಲಿ ಶೃಂಗಸಭೆಯ ಉದ್ದೇಶವಾಗಿತ್ತು. ದೇಶದ ಮೊತ್ತಮೊದಲ ಎಲ್ಎಲ್ಎಂ ಸರ್ವಂ, ಇದೇ ವೇಳೆ ಅನಾವರಣಗೊಂಡಿತು. ರಿಲಯನ್ಸ್ ದೇಶಿ ಎಐಗೆ 10 ಲಕ್ಷ ಕೋಟಿ ರೂ. ಮತ್ತು ಗೂಗಲ್ ದತ್ತಾಂಶ ಉಗ್ರಾಣ/ಎಐ ಯೋಜನೆಗೆ 15 ಶತಕೋಟಿ ಡಾಲರ್ ಹೂಡಿಕೆ, ಓಪನ್ ಎಐ-ಟಾಟಾ ಗ್ರೂಪ್, ಆಂಥ್ರೋಪಿಕ್-ಇನ್ಫೋಸಿಸ್ ಹಾಗೂ ಯೊಟ್ಟ ಡೇಟಾ ಸರ್ವೀಸಸ್-ಎನ್ವಿಡಿಯಾ ಒಪ್ಪಂದ ಮಾಡಿಕೊಂಡವು. ಆಂಥ್ರೋಪಿಕ್ ಮಾರ್ಚ್ 2023ರಲ್ಲಿ ‘ಕ್ಲಾಡ್’ ಎಲ್ಎಲ್ಎಂ ಅನಾವರಣಗೊಳಿಸಿತು. ಫೆಬ್ರವರಿ 2026ರಲ್ಲಿ ಬಿಡುಗಡೆಗೊಳಿಸಿದ ‘ಕ್ಲಾಡ್ ಸಾನೆಟ್ 4.6’ ಐಟಿ ಲೋಕದಲ್ಲಿ ಕಂಪನ ಸೃಷ್ಟಿಸಿತ್ತು; ಓಪನ್ ಎಐ ಸೇರಿದಂತೆ ಹಲವು ಕಂಪೆನಿಗಳ ಸ್ಟಾಕ್ಗಳು ನೆಲ ಕಚ್ಚಿದವು. ವಿಶ್ವ ನಾಯಕ ಆಗುವುದು ಸಾಧ್ಯವೇ? ಎಐ ವ್ಯವಸ್ಥೆಗೆ 6 ಅಂಶಗಳು ಅಗತ್ಯ- ಹಾರ್ಡ್ವೇರ್, ಮೂಲಭೂತ ಸೌಕರ್ಯ, ತರಬೇತಾದ ಭಾರೀ ಪ್ರಮಾಣದ ಎಐ ಮಾದರಿ (ಫೌಂಡೇಷನಲ್ ಮಾಡೆಲ್; ಉದಾಹರಣೆಗೆ, ಜಿಪಿಟಿ 4, ಲಾಮಾ, ಜೆಮಿನಿ ಇತ್ಯಾದಿ), ದತ್ತಾಂಶ, ಐಡಿಪಿ(ಆಂತರಿಕ ಅಭಿವೃದ್ಧಿ ಚೌಕಟ್ಟು, ಇಂಟರ್ನಲ್ ಡೆವಲಪರ್ ಪ್ಲಾಟ್ಫಾರಂ) ಮತ್ತು ಅಪ್ಲಿಕೇಷನ್ ಲೇಯರ್(7ನೇ ಪದರ; ಒಎಸ್ಐ ಮತ್ತು ಟಿಸಿಪಿ/ಐಪಿ ಮಾದರಿಯಲ್ಲಿ ಮೇಲಿನ ಪದರ). ಸಮಸ್ಯೆಯೇನೆಂದರೆ, ದೇಶದಲ್ಲಿ ಉನ್ನತ ಶ್ರೇಣಿಯ ಚಿಪ್ ಉತ್ಪಾದನೆ ಆಗುತ್ತಿಲ್ಲ; ಅಮೆರಿಕ ಮತ್ತು ಚೀನದಲ್ಲಿ ಇರುವ ಮೂಲಭೂತ ಮಾದರಿಗಳು ಇಲ್ಲ; ದತ್ತಾಂಶ ಸಂಗ್ರಹಿಸಲು ವಿದೇಶದ ಕ್ಲೌಡ್ ವ್ಯವಸ್ಥೆಯನ್ನು ಆಧರಿಸಿದ್ದೇವೆ ಮತ್ತು ಉನ್ನತ ಸಂಶೋಧನೆ ಪರಿಸರ ಇಲ್ಲ. ಆದರೆ, ನಮ್ಮದು ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಓಪನ್ ಎಐ ಮಾರುಕಟ್ಟೆ. ಇದು ವಿದೇಶದ ಬಿಗ್ ಟೆಕ್ ಕಂಪೆನಿಗಳನ್ನು ಆಕರ್ಷಿಸುತ್ತಿದೆ. ನಿರುದ್ಯೋಗ ಸಮಸ್ಯೆ ಮತ್ತು ಪ್ರತಿಭಟನೆ ಪ್ರತಿಭಟಿಸಿದ ಯುವ ಕಾಂಗ್ರೆಸ್ ಕಾರ್ಯಕರ್ತರು ಕೇಳಿದ್ದು ಒಂದು ಸರಳ ಪ್ರಶ್ನೆ- ಉದ್ಯೋಗಗಳು ಎಲ್ಲಿವೆ? ನಿಶ್ಯಸ್ತ್ರರಾಗಿ, ಕಾನೂನನ್ನು ಉಲ್ಲಂಘಿಸದೆ ನಿರುದ್ಯೋಗ ಕುರಿತ ಅಂಕಿಅಂಶಗಳಿರುವ ಫಲಕಗಳನ್ನು ಪ್ರದರ್ಶಿಸಿದರು; ತಮ್ಮ ಆರ್ಥಿಕ ಭವಿಷ್ಯದ ಬಗ್ಗೆ ಕಾಳಜಿಯಿರುವ ಪ್ರತಿಯೊಬ್ಬರೂ ಶೃಂಗಸಭೆಯಿಂದ ಏನಾಗಲಿದೆ ಎಂಬುದನ್ನು ತಿಳಿದು ಕೊಳ್ಳುವ ಹಕ್ಕು ಹೊಂದಿರುತ್ತಾರೆ. ಉತ್ತರದಾಯಿತ್ವ ಇಲ್ಲದ ಸರಕಾರ ಜನರಿಂದ ಮಾಹಿತಿ-ಅಂಕಿಅಂಶಗಳನ್ನು ಮುಚ್ಚಿಡುತ್ತದೆ; ದೇಶದ ಶೇ.83ರಷ್ಟು ನಿರುದ್ಯೋಗಿಗಳು 15-29 ವರ್ಷ ವಯಸ್ಸಿನವರು. ಅಂದರೆ, ಆರರಲ್ಲಿ ಐವರಿಗೆ ಕೆಲಸವಿಲ್ಲ. ‘ಜನಸಂಖ್ಯಾ ಲಾಭಾಂಶ’(ಡೆಮಾಗ್ರಫಿಕ್ ಡಿವಿಡೆಂಡ್) ಇರುವ ದೇಶದಲ್ಲಿ ನಿರುದ್ಯೋಗವೇ ಲಾಭಾಂಶವಾಗಿದೆ (ಇಂಡಿಯಾ ಎಂಪ್ಲಾಯ್ಮೆಂಟ್ ರಿಪೋರ್ಟ್, ಅಂತರ್ರಾಷ್ಟ್ರೀಯ ಕಾರ್ಮಿಕ ಸಂಸ್ಥೆ ಮತ್ತು ಐಎಚ್ಡಿ, 2024). ಪದವೀಧರರಲ್ಲಿ ನಿರುದ್ಯೋಗ ಪ್ರಮಾಣ ಶೇ.29; ಹೆಚ್ಚು ಓದಿದವರಿಗೆ ಕೆಲಸ ಸಿಗುವ ಸಾಧ್ಯತೆ ಕಡಿಮೆ ಆಗಿದೆ. ಪ್ರತೀ ವರ್ಷ 12-15 ದಶಲಕ್ಷ ಯುವಜನರು ಕಾರ್ಮಿಕ ಬಲಕ್ಕೆ ಸೇರ್ಪಡೆಯಾಗುತ್ತಾರೆ. ಆದರೆ, ಆರ್ಥಿಕತೆ ವಾರ್ಷಿಕ 5ರಿಂದ 8 ದಶಲಕ್ಷ ಔಪಚಾರಿಕ ಉದ್ಯೋಗಗಳನ್ನು ಸೃಷ್ಟಿಸುತ್ತಿದೆ. ಉಳಿದವರು ಜೆಪ್ಟೋ, ಬ್ಲಿಂಕಿಟ್, ಬಿಗ್ಬ್ಯಾಸ್ಕೆಟ್ ಇತ್ಯಾದಿ ವಿಮೆ ಸೇರಿದಂತೆ ಯಾವುದೇ ಸಾಮಾಜಿಕ ಸುರಕ್ಷೆ ಇಲ್ಲದ ಗಿಗ್ ಕೆಲಸಕ್ಕೆ ಸೇರುತ್ತಾರೆ. ಹೀಗಿದ್ದರೂ, ಸರಕಾರ ಉದ್ಯೋಗ ಸೃಷ್ಟಿ ಬಗ್ಗೆ ಕೊಚ್ಚಿಕೊಳ್ಳುತ್ತದೆ! ಪ್ರತಿಭಟನೆ ಸಂವಿಧಾನ ವಿರೋಧಿಯಲ್ಲ ಜಾಗತಿಕ ಶೃಂಗಸಭೆಗಳ ಹೊರಗೆ ನಡೆಯುವ ಪ್ರತಿಭಟನೆಗಳು ಪ್ರಜಾಪ್ರಭುತ್ವದ ಲಕ್ಷಣ. 1999ರಲ್ಲಿ ಸಿಯಾಟಲ್ನಲ್ಲಿ ನಡೆದ ಡಬ್ಲ್ಯುಟಿಒ ಶೃಂಗದಲ್ಲಿ ಕಾರ್ಮಿಕ ಹಕ್ಕು ಉಲ್ಲಂಘನೆ ಮತ್ತು ಅಸಮಾನತೆ ವಿರೋಧಿಸಿ, 40,000 ಜನ ಮೆರವಣಿಗೆ ನಡೆಸಿದರು. ಇದನ್ನು ನಾಗರಿಕ ಸಮಾಜದ ನಿರ್ಣಾಯಕ ಕ್ಷಣವೆಂದು ಪರಿ ಗಣಿಸಲಾಗಿದೆ. ಜಿನೀವಾದ ಜಿ 8, ಲಂಡನ್ನ ಜಿ 20 ಸಮಾವೇಶ, ಕೋಪನ್ಹೇಗನ್, ಗ್ಲ್ಯಾಸ್ಗೋ ಮತ್ತಿತರ ಕಡೆ ನಡೆದ ಹವಾಮಾನ ಶೃಂಗಸಭೆಗಳು ಹಾಗೂ ದಾವೋಸ್ನ ವಿಶ್ವ ಆರ್ಥಿಕ ವೇದಿಕೆಯ ಸಮಾವೇಶದಲ್ಲಿ ಕಾರ್ಮಿಕ ಸಂಘಗಳ ಸದಸ್ಯರು ಮೆರವಣಿಗೆ ಮಾಡುತ್ತಾರೆ; ಇಂಥ ಪ್ರತಿಭಟನೆಗಳು ನೀತಿ ನಿರೂಪಣೆಗೆ ಮಹತ್ವದ ಕಾಣಿಕೆ ನೀಡಿವೆ. ಜೊತೆಗೆ, ಫ್ರೈಡೇಸ್ ಫಾರ್ ಫ್ಯೂಚರ್, ಆಕ್ಯುಪೈ ಮತ್ತಿತರ ಯುವಜನರ ನೇತೃತ್ವದ ಚಳವಳಿಗಳು ಹವಾಮಾನ ಬದಲಾವಣೆ, ಅಸಮಾನತೆ ಮತ್ತು ಉದ್ಯೋಗ ಕುರಿತ ಜಾಗತಿಕ ನೀತಿಗಳನ್ನು ಮರುರೂಪಿಸಿವೆ. ಇವರನ್ನು ಯಾರೂ ರಾಷ್ಟ್ರ ವಿರೋಧಿ, ಅಭಿವೃದ್ಧಿ ವಿರೋಧಿ ಎನ್ನುವುದಿಲ್ಲ. ಈ ಹಣೆಪಟ್ಟಿ ತಮ್ಮದೇ ಸರಕಾರವನ್ನು ಪ್ರಶ್ನಿಸುವ ಭಾರತೀಯ ನಾಗರಿಕರಿಗೆ ಮೀಸಲಾಗಿದೆ ಎನ್ನಿಸುತ್ತದೆ. ಯುವ ಕಾಂಗ್ರೆಸ್ ಮಾನ್ಯತೆ ಪಡೆದ ಸಂಘಟನೆ. ಅದರ ಸದಸ್ಯರು ಸಂವಿಧಾನದ 19ನೇ ವಿಧಿ ನೀಡಿದ ಹಕ್ಕನ್ನು ಚಲಾಯಿಸಿದರು. ಅವರನ್ನು ‘ರಾಷ್ಟ್ರವಿರೋಧಿ’ ಎನ್ನುವುದು ಗಣತಂತ್ರದ ಮೌಲ್ಯಗಳನ್ನು ದುರ್ಬಲಗೊಳಿಸುತ್ತದೆ. ತನ್ನ ಸಾಧನೆಗಳಲ್ಲಿ ವಿಶ್ವಾಸ ಹೊಂದಿರುವ ಸರಕಾರ, ಪ್ರಶ್ನೆಗಳನ್ನು ಸ್ವಾಗತಿಸಬೇಕೇ ಹೊರತು ಪ್ರಶ್ನಿಸುವವರನ್ನು ಹತ್ತಿಕ್ಕಬಾರದು. ಎಐ ಯಾರಿಗೆ ಲಾಭ? ‘‘ಎಐ ಒಟ್ಟು ಜಾಗತಿಕ ಉದ್ಯೋಗಗಳಲ್ಲಿ ಶೇ.40ರ ಮೇಲೆ ಪರಿಣಾಮ ಬೀರಬಹುದು. ಅದು ಹೆಚ್ಚಿನ ಸನ್ನಿವೇಶಗಳಲ್ಲಿ ಒಟ್ಟಾರೆ ಅಸಮಾನತೆಯನ್ನು ಇನ್ನಷ್ಟು ಹದಗೆಡಿಸುತ್ತದೆ’’ ಎಂದು ಅಂತರ್ರಾಷ್ಟ್ರೀಯ ಹಣಕಾಸು ನಿಧಿ(ಐಎಂಎಫ್)ಯ ಕಾರ್ಯನಿರ್ವಾಹಕ ನಿರ್ದೇಶಕಿ ಕ್ರಿಸ್ಟಲಿನಾ ಜಾರ್ಜಿವಾ ಅವರು ದಾವೋಸ್ನಲ್ಲಿ ಹೇಳಿದರು. 2030ರ ವೇಳೆಗೆ 92 ದಶಲಕ್ಷ ಉದ್ಯೋಗಗಳು ಜಾಗತಿಕವಾಗಿ ಸ್ಥಳಾಂತರಗೊಳ್ಳುತ್ತವೆ ಎಂದು ವಿಶ್ವ ಆರ್ಥಿಕ ವೇದಿಕೆಯ ವರದಿ 2025, ಜನರೇಟಿವ್ ಎಐ ಒಂದರಿಂದಲೇ 300 ದಶಲಕ್ಷ ಪೂರ್ಣಾವಧಿ ಉದ್ಯೋಗಗಳು ಯಾತ್ರೀಕರಣಗೊಳ್ಳಲಿವೆ ಎಂದು ಗೋಲ್ಡ್ಮನ್ ಸ್ಯಾಚ್ಸ್, 2030ರ ವೇಳೆಗೆ 12 ದಶಲಕ್ಷ ಭಾರತೀಯ ಕಾರ್ಮಿಕರು ಉದ್ಯೋಗವನ್ನು ಬದಲಿಸಬೇಕಾಗಬಹುದು ಎಂದು ಮೆಕಿನ್ಸೆ ಹಾಗೂ ದೇಶದಲ್ಲಿ ಮುಂದಿನ 3ರಿಂದ 5 ವರ್ಷದಲ್ಲಿ ಶೇ.20ರಷ್ಟು ಆರಂಭಿಕ ಮಟ್ಟದ ಐಟಿ ಉದ್ಯೋಗಗಳು ಸ್ವಯಂಚಾಲಿತ ಆಗಬಹುದು ಎಂದು ಅರ್ನ್ಟ್ಸ್ ಆಂಡ್ ಯೂಂಗ್-ನಾಸ್ಕಾಂ 2024 ವರದಿ ಹೇಳಿದೆ. ಇವು ಯುವಜನರಿಗೆ ಮೊದಲ ಸಂಬಳ ಮತ್ತು ಆರ್ಥಿಕ ಘನತೆ ನೀಡುವ ಉದ್ಯೋಗಗಳು. ನೊಬೆಲ್ ಪುರಸ್ಕೃತ, ಮಸಾಚುಸೆಟ್ಸ್ ತಾಂತ್ರಿಕ ಇನ್ಸ್ಟಿಟ್ಯೂಟ್ನ ಅರ್ಥಶಾಸ್ತ್ರಜ್ಞ ಡರೆನ್ ಅಸೆಮೊಗ್ಲು ಹೇಳುವುದು: ‘‘ಎಐಯಿಂದ ಆಗಬಹುದಾದ ಉತ್ಪಾದಕತೆಯನ್ನು ಉತ್ಪ್ರೇಕ್ಷಿಸಿ ಹೇಳಲಾಗುತ್ತದೆ; ಆದರೆ, ಉದ್ಯೋಗ ನಷ್ಟದ ಪರಿಣಾಮಗಳನ್ನು ಕುಗ್ಗಿಸಲಾಗಿದೆ’’. ಅರ್ಥಶಾಸ್ತ್ರಜ್ಞ ಜೋಸೆಫ್ ಸ್ಟಿಗ್ಲಿಟ್ಜ್, ‘‘ಅನಿಯಂತ್ರಿತ ಎಐ ಅಸಮಾನತೆಯನ್ನು ಇನ್ನಷ್ಟು ಹದಗೆಡಿಸುತ್ತದೆ’’ ಎನ್ನುತ್ತಾರೆ. ಕಾರ್ನೆಗಿ ಮೆಲ್ಲಾನ್ ವಿಶ್ವವಿದ್ಯಾನಿಲಯದ ಸಹಯೋಗದಲ್ಲಿ ಮೈಕ್ರೋಸಾಫ್ಟ್ನ ಸಂಶೋಧಕರು ನಡೆಸಿದ ಹೊಸ ಅಧ್ಯಯನದ ಪ್ರಕಾರ, ‘ವಿಮರ್ಶಾತ್ಮಕ ಚಿಂತನೆ ಅಗತ್ಯವಿರುವ ಸನ್ನಿವೇಶಗಳಲ್ಲಿ ತಮ್ಮ ಕೆಲಸದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಗೆಳೆಯರಿಗೆ ಹೋಲಿಸಿದರೆ, ಎಐ ಅವಲಂಬಿತರು ಸಮಸ್ಯೆಗಳನ್ನು ಪರಿಹರಿಸುವಲ್ಲಿ ಕಡಿಮೆ ಪರಿಣತಿ ಹೊಂದಿರುತ್ತಾರೆ’’. ಪ್ರತಿವರ್ಷ ನಮ್ಮ ವಿಶ್ವವಿದ್ಯಾನಿಲಯಗಳು ಚಾಟ್ ಜಿಪಿಟಿಯನ್ನು ಪ್ರಾಂಪ್ಟ್ ಮಾಡಬಲ್ಲ ಲಕ್ಷಗಟ್ಟಲೆ ಪದವೀಧರರನ್ನು ಉತ್ಪಾದಿಸುತ್ತವೆ; ಆದರೆ, ಅವರು ಸಂವಾದವನ್ನು ರೂಪಿಸಿ, ಮುನ್ನಡೆಸಲಾರರು. ಕೋಡ್ ರಚಿಸಬಹುದು; ಆದರೆ, ಸಮಸ್ಯೆಯನ್ನು ಪರಿಹರಿಸಲಾರರು. ಮಾಹಿತಿಯನ್ನು ಸಂಗ್ರಹಿಸಬಲ್ಲರು; ಆದರೆ, ಜ್ಞಾನವನ್ನು ಸಂಶ್ಲೇಷಿಸಲಾರರು. ನಮ್ಮ ಶಿಕ್ಷಣ ಕಾರ್ಯನೀತಿಯನ್ನು ರೂಪಿಸುವವರು ಉತ್ತರಿಸಬೇಕಾದ ಮುಖ್ಯ ಪ್ರಶ್ನೆಯೆಂದರೆ, ಕಾರ್ಮಿಕರನ್ನು ಅನಗತ್ಯವಾಗಿಸಬಲ್ಲ ಎಐ ವ್ಯವಸ್ಥೆಗೆ ನಮ್ಮ ಯುವಜನರು ಬೌದ್ಧಿಕ ದಾಸರಾಗದಂತೆ ತಡೆಯುವುದು ಹೇಗೆ? ಇದು ಉದ್ಯೋಗದ ಸಂಖ್ಯೆಯನ್ನು ಮೀರಿದ, ಗಂಭೀರ ಪ್ರಶ್ನೆ. ದಿಲ್ಲಿಯ ಶೃಂಗಕ್ಕೆ ಬಂದಿದ್ದ ಬಿಲ್ ಗೇಟ್ಸ್, ಸ್ಯಾಮ್ ಆಲ್ಟ್ಮನ್ ಮತ್ತಿತರರು ವ್ಯಾಪಾರಿಗಳಿಗೆ ದೇಶ ಚಾಟ್ ಜಿಪಿಟಿಯ 2ನೇ ದೊಡ್ಡ ಮಾರುಕಟ್ಟೆ ಮತ್ತು ಎಐ ಬಳಕೆಯಲ್ಲಿ ಮುಂಚೂಣಿಯಲ್ಲಿದೆ. ಈ ಮಾರುಕಟ್ಟೆ ಅವರಿಗೆ ಮುಖ್ಯ. ಶಿಕ್ಷಣ ಕ್ಷೇತ್ರಕ್ಕೆ ಕಾಯಕಲ್ಪ ಫಿನ್ಲ್ಯಾಂಡ್ ಮತ್ತು ಸಿಂಗಾಪುರಗಳು ಯಾಂತ್ರೀಕರಣದಿಂದ ಪ್ರಭಾವಿತವಾಗದ ಮತ್ತು ವಿಮರ್ಶಾತ್ಮಕ ಚಿಂತನೆ, ಸೃಜನಶೀಲತೆ ಹಾಗೂ ಹೊಂದಿಕೊಳ್ಳುವಿಕೆ ಕೌಶಲಗಳನ್ನು ಆಧರಿಸಿದ ಶಿಕ್ಷಣವನ್ನು ಪರಿಚಯಿಸಿವೆ. ನಮ್ಮ ರಾಷ್ಟ್ರೀಯ ಶಿಕ್ಷಣ ನೀತಿ 2020 ಇದನ್ನು ತಾತ್ವಿಕವಾಗಿ ಅಂಗೀಕರಿಸಿದೆ. ಆದರೆ, ಅನುಷ್ಠಾನದಲ್ಲಿ ವಿಳಂಬ, ಸಂಪನ್ಮೂಲ ಕೊರತೆ ಮತ್ತು ವಿದ್ಯೆಯನ್ನು ಕೊಳ್ಳಬಲ್ಲವರಿಗೆ ಸೇವೆ ಸಲ್ಲಿಸುವ ಸಂಸ್ಥೆಗಳಿಗೆ ಸೀಮಿತವಾಗಿದೆ. ‘‘ಭಾರತ ಎಐ ಕ್ರಾಂತಿಯ ಭಾಗ ಮಾತ್ರವಲ್ಲ; ಅದರ ನಾಯಕ ಮತ್ತು ಅದನ್ನು ರೂಪಿಸುತ್ತಿದೆ’’ ಎಂದು ಪ್ರಧಾನಿ ಘೋಷಿಸುತ್ತಾರೆ. ಆದರೆ, ಅಮೆರಿಕ 2025ರಲ್ಲಿ ಎಐಗೆ 400 ಶತಕೋಟಿ ಡಾಲರ್ ಖರ್ಚು ಮಾಡಿದೆ ಮತ್ತು 2026ರಲ್ಲಿ ಮೊತ್ತ 650 ಶತಕೋಟಿ ಡಾಲರ್ಗೆ ಏರಬಹುದು. ಚೀನಾ 125 ಶತಕೋಟಿ ಡಾಲರ್ ಖರ್ಚು ಮಾಡಿದೆ. ಆದರೆ, ನಾವು 13 ಶತ ಕೋಟಿ ಡಾಲರಿಗಿಂತ ಕಡಿಮೆ ವೆಚ್ಚ ಮಾಡಿದ್ದೇವೆ. ಶಿಕ್ಷಣ ಮತ್ತು ಸಂಶೋಧನೆಗೆ ಆಯ ವ್ಯಯದಲ್ಲಿ ನೀಡುವ ಅನುದಾನ ಕಡಿಮೆ ಇದೆ. ನಾವು ಐಟಿ ಕೂಲಿಗಳನ್ನು ಉತ್ಪಾದಿಸುತ್ತಿದ್ದಾಗ, ಚೀನಾ ತಾಂತ್ರಿಕ ಕ್ಷೇತ್ರದಲ್ಲಿ ಅದ್ಭುತ ಪ್ರಗತಿ ಸಾಧಿಸಿತು. ನಮ್ಮ ವಿಶ್ವವಿದ್ಯಾನಿಲಯಗಳ ಉಪಕುಲಪತಿಗಳು, ಪ್ರಾಧ್ಯಾಪಕರು ಮತ್ತು ಶಿಕ್ಷಕರ ಗುಣಮಟ್ಟದ ಸಾಮಾಜಿಕ ಲೆಕ್ಕಪರಿಶೋಧನೆ ನಡೆಸಿದರೆ, ಶಿಕ್ಷಣ ಕ್ಷೇತ್ರದ ಭಯಾನಕ ಸ್ಥಿತಿ ಅನಾವರಣಗೊಳ್ಳುತ್ತದೆ. ಯುಜಿಸಿ ಇತ್ತೀಚೆಗೆ 32 ನಕಲಿ ವಿಶ್ವವಿದ್ಯಾನಿಲಯಗಳ ಪಟ್ಟಿಯನ್ನು ಬಿಡುಗಡೆಗೊಳಿಸಿದೆ. ಹೆಚ್ಚಿನ ವಿವಿಗಳಲ್ಲಿ ಬೋಧಕರು-ಸಿಬ್ಬಂದಿ ಕೊರತೆ ಇದೆ; ಅನುದಾನ ಸಾಲುತ್ತಿಲ್ಲ; ಸಂಶೋಧನೆ ಗುಣ ಮಟ್ಟ ಪಾತಾಳ ತಲುಪಿದೆ. ರಾಜಕಾರಣಿಗಳು ಪಕ್ಷಾತೀತವಾಗಿ ಶೈಕ್ಷಣಿಕ ಸಂಸ್ಥೆಗಳನ್ನು ನಡೆಸುತ್ತಿದ್ದಾರೆ. 2021-22ರ ವರದಿ ಪ್ರಕಾರ, ಒಟ್ಟು ವಿಶ್ವವಿದ್ಯಾನಿಲಯಗಳಲ್ಲಿ ಸರಕಾರದ ಪಾಲು ಶೇ. 58.6 ಮತ್ತು ಇವುಗಳಲ್ಲಿ ಶೇ.73.7ರಷ್ಟು ದಾಖಲಾತಿಯಿದೆ. ಹೆಚ್ಚು ಶುಲ್ಕ ವಿಧಿಸುವ ಸ್ವಾಯತ್ತ ಖಾಸಗಿ ವಿಶ್ವವಿದ್ಯಾನಿಲಯಗಳಲ್ಲಿ ದಾಖಲಾತಿ ಪ್ರಮಾಣ ಶೇ.26.3 ಇದ್ದು, ಕ್ರಮೇಣ ಹೆಚ್ಚುತ್ತಿದೆ. ಒಟ್ಟು ಕಾಲೇಜುಗಳಲ್ಲಿ ಶೇ.78.5ರಷ್ಟು ಅನುದಾನರಹಿತ ಮತ್ತು ಖಾಸಗಿ ಅನುದಾನದಿಂದ ನಡೆಯುತ್ತಿವೆ. ದೇಶದ ಉನ್ನತ ಶಿಕ್ಷಣ ಖಾಸಗಿ ಕ್ಷೇತ್ರದ ಹಿಡಿತದಲ್ಲಿದೆ. ಇವು ‘ಮೆರಿಟ್’ ಹೆಸರಿನಲ್ಲಿ ಸಮಾಜದ ಬಹುಸಂಖ್ಯಾತರಿಗೆ ಬಾಗಿಲು ಮುಚ್ಚಿವೆ. ‘ಚೋರ ಗುರು, ದುಷ್ಟ ಶಿಷ್ಯ’ ಎಂಬ ಮಾತಿನಂತೆ ರಾಜಕಾರಣಿಗಳಿಂದ ಇತಿಹಾಸ ಕಲಿಯುವ ಯುವಜನರು, ‘2014ರಲ್ಲಿ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿತು’, ‘ಜವಾಹರಲಾಲ್ ನೆಹರೂ ದೇಶ ದ್ರೋಹಿ’ ಎಂದು ಹೇಳುತ್ತಾರೆ. ವಾಟ್ಸ್ಆ್ಯಪ್ ವಿಶ್ವವಿದ್ಯಾನಿಲಯ ಬೌದ್ಧಿಕ ವಿರೋಧಿ ವಾತಾವರಣವನ್ನು ಸೃಷ್ಟಿಸಿದೆ. ಸಾಮಾಜಿಕ ಮಾಧ್ಯಮದಲ್ಲಿ ಸುಳ್ಳು ಸುದ್ದಿ ಹಂಚಿಕೆ ಮತ್ತು ನಿಂದನೀಯ ಟ್ರೋಲ್ಗೆ ಯಾರು ಆದೇಶ ನೀಡುತ್ತಾರೆ? ರಾಮಮಂದಿರ ನಿರ್ಮಾಣ, ಕುಂಭ ಮೇಳ ಮತ್ತು ಸಂಸತ್ತಿನಲ್ಲಿ ಸೆಂಗೋಲ್ ಸ್ಥಾಪನೆಯಿಂದ ದೇಶದ ಉದ್ಧಾರವಾಗಲಿದೆ ಎಂದು ನಂಬಿಸಿದವರು ಯಾರು? ಎಐ ಶೃಂಗದಲ್ಲಿ ನಗೆಪಾಟಲಾದ ಗಲ್ಗೋಟಿಯಾ ವಿಶ್ವವಿದ್ಯಾನಿಲಯವನ್ನು ಪ್ರಧಾನಿ 2014ರಲ್ಲಿ ‘ಅತ್ಯುತ್ತಮ ಖಾಸಗಿ ವಿಶ್ವವಿದ್ಯಾನಿಲಯ’ ಎಂದು ಪ್ರಶಂಶಿಸಿದ್ದರು; ಇದೇ ಪಕ್ಷದವರು ಜವಾಹರಲಾಲ್ ನೆಹರೂ ವಿಶ್ವವಿದ್ಯಾನಿಲಯದ ಬೌದ್ಧಿಕ ವಾತಾವರಣವನ್ನು ನಾಶಮಾಡಲು ಯತ್ನಿಸಿದರು. ಶಿಕ್ಷಣ ಕ್ಷೇತ್ರದಲ್ಲಿ ಅಧಿಕಾರಸ್ಥರ ಓಲೈಸುವಿಕೆ ಜಾಡ್ಯದಂತೆ ಹರಡಿದೆ. ಪ್ರಧಾನಿ ಅವರ ‘ಮನ್ಕಿ ಬಾತ್’ನ ರಾಜಕೀಯ ಸಾಮಾಜಿಕೀಕರಣದ ಅಧ್ಯಯನಕ್ಕೆ ಬೆಂಗಳೂರಿನ ಜೈನ್ ವಿವಿ ಹಾಗೂ ದಿಲ್ಲಿಯ ಜವಾಹರಲಾಲ್ ವಿವಿಯ ಇಬ್ಬರು ಪ್ರಾಧ್ಯಾಪಕರಿಗೆ ಭಾರತೀಯ ಸಮಾಜ ವಿಜ್ಞಾನ ಸಂಶೋಧನೆ ಮಂಡಳಿ(ಐಸಿಎಸ್ಎಸ್ಆರ್) ಅನುದಾನ ನೀಡಿದೆ! ಮುಂದೊಂದು ದಿನ ಈ ಪ್ರಾಧ್ಯಾಪಕರು ಆಯಾ ವಿಶ್ವವಿದ್ಯಾನಿಲಯದ ಉಪಕುಲಪತಿಗಳಾದರೆ ಆಶ್ಚರ್ಯಪಡಬೇಕಿಲ್ಲ! ವೈಜ್ಞಾನಿಕ ಮನೋಭಾವವನ್ನು ಉತ್ತೇಜಿಸಿದ ನೆಹರೂ ಅವರ ಹೆಸರಿಗೆ ಮಸಿ ಬಳಿಯಲು ನಿರಂತರ ಪ್ರಯತ್ನ ನಡೆಯುತ್ತಿದೆ. ಬಿಜೆಪಿ ಸರಕಾರ ಹೇಳುವ ‘ನವಭಾರತ’(ನ್ಯೂಇಂಡಿಯಾ) ಎಂಬ ನುಡಿಗಟ್ಟನ್ನು ನೆಹರೂ ಮಾರ್ಚ್ 1952ರಲ್ಲಿ ಖರಗ್ಪುರದಲ್ಲಿ ಐಐಟಿಗೆ ಅಡಿಗಲ್ಲು ಹಾಕಿದಾಗ ಬಳಸಿದರು; ‘‘ಇವುಗಳ ಬುನಾದಿ ಮೇಲೆ ನವಭಾರತವನ್ನು ಕಟ್ಟಲಾಗುತ್ತದೆ’’ ಎಂದರು. ಮಾರ್ಚ್ 1959ರಲ್ಲಿ ಮುಂಬೈಯಲ್ಲಿ ಎರಡನೇ ಐಐಟಿಗೆ ಅಡಿಪಾಯ ಹಾಕುತ್ತ, ‘‘ತಾಂತ್ರಿಕ ತರಬೇತಿ ಮತ್ತು ಜ್ಞಾನ ನೀಡುವ ಸಂಸ್ಥೆಗಳ ಸ್ಥಾಪನೆ ವರ್ತಮಾನಕ್ಕೆ ಮಾತ್ರವಲ್ಲ, ಭವಿಷ್ಯಕ್ಕೂ ಅತ್ಯಂತ ಮುಖ್ಯ’’ ಎಂದು ಹೇಳಿದ್ದರು. ವೈಜ್ಞಾನಿಕ ಮತ್ತು ತಾಂತ್ರಿಕ ಮೂಲಸೌಕರ್ಯದೊಂದಿಗೆ ಲಲಿತಕಲೆ, ಸಾಹಿತ್ಯ, ಸಂಗೀತ, ನಾಟಕ, ಚಲನಚಿತ್ರ ಮತ್ತು ಸಂಸ್ಕೃತಿಯನ್ನು ಉತ್ತೇಜಿಸಲು ಹಲವು ಸ್ವತಂತ್ರ ಸಂಸ್ಥೆಗಳನ್ನು ಸ್ಥಾಪಿಸಿದರು. ಮೇಘನಾದ ಸಹಾ, ಪಿ.ಸಿ.ಮಹಾಲನೋಬಿಸ್, ಆಲ್ಬರ್ಟ್ ಐನ್ಸ್ಟೈನ್, ಬರ್ಟ್ರಾಂಡ್ ರಸ್ಸೆಲ್, ಹೆನ್ರಿ ಡೇಲ್, ಅಲೆಕ್ಸಾಂಡರ್ ಫ್ಲೆಮಿಂಗ್, ಎ.ವಿ. ಹಿಲ್ ಮತ್ತು ನೀಲ್ಸ್ ಬೋರ್ ಅವರಂಥ ವಿಜ್ಞಾನಿಗಳೊಂದಿಗೆ ವೈಯಕ್ತಿಕ ಬಾಂಧವ್ಯ ಹೊಂದಿದ್ದರು. ಆದರೆ, ಈಗ ಹಿರಿಯಣ್ಣನ ಚಾಳಿ ಮನೆಮಂದಿಗೆಲ್ಲ ಎನ್ನುವಂತೆ ಗಾಂಧಿ-ನೆಹರೂ ನಿಂದನೆ ವ್ಯಾಪಕವಾಗಿ ಹರಡಿಬಿಟ್ಟಿದೆ. ಎಐ ಉಬ್ಬರ ಎಷ್ಟು ನಿಜ ಮತ್ತು ಎಷ್ಟು ದಿನ ಇರಲಿದೆ? ಕಳೆದ 10 ವರ್ಷಗಳಿಂದ ಎಐ ಕ್ಷೇತ್ರಕ್ಕೆ ಹಣ ಹರಿದಿದೆ; ಇದರಿಂದ ಉಳಿದ ಕ್ಷೇತ್ರಗಳಿಗೆ ಅನುದಾನ ಕೊರತೆಯಾಗಿದೆ ಹಾಗೂ ಎಐ ನೆಪದಲ್ಲಿ ಕಂಪೆನಿಗಳು ಉದ್ಯೋಗಿಗಳನ್ನು ತೆಗೆದುಹಾಕಿವೆ. ಶಿಕ್ಷಣ ವ್ಯವಸ್ಥೆಯ ದುರಸ್ತಿ, ಗುಣಮಟ್ಟ ಹೆಚ್ಚಳಕ್ಕೆ ಆದ್ಯತೆ, ಸಾರ್ವಜನಿಕ ಕ್ಷೇತ್ರದಲ್ಲಿ ಹೂಡಿಕೆಯಿಂದ ಉದ್ಯೋಗ ಸೃಷ್ಟಿ, ಯುವಜನರಿಗೆ ಸೂಕ್ತ ತರಬೇತಿ ನೀಡಿ ಅವರನ್ನು ಎಐ ಯುಗಕ್ಕೆ ಸನ್ನದ್ಧಗೊಳಿಸುವಿಕೆ ಯುದ್ಧೋಪಾದಿಯಲ್ಲಿ ನಡೆಯಬೇಕಿದೆ. ಇದಕ್ಕೆ ಸರಕಾರ ಯಾವ ಸಿದ್ಧತೆ ಮಾಡಿಕೊಂಡಿದೆ? ಗಲ್ಗೋಟಿಯಾ ವಿಶ್ವವಿದ್ಯಾನಿಲಯದ ರೋಬೊ ನಾಯಿ ‘ಒರಿಯಾನ್’, ನಮ್ಮ ಕುಲಗೆಟ್ಟ ವ್ಯವಸ್ಥೆಯ ಪ್ರತೀಕ.
ಚಾಮರಾಜನಗರ: ಗುಂಡ್ಲುಪೇಟೆ ತಾಲೂಕಿನ ಆರು ದೇವಸ್ಥಾನಗಳಲ್ಲಿ ಕಳ್ಳತನ
ಚಾಮರಾಜನಗರ: ಗುಂಡ್ಲುಪೇಟೆ ತಾಲೂಕಿನ ಆರು ದೇವಸ್ಥಾನಗಳಲ್ಲಿ ಕಳ್ಳತನವಾಗಿರುವ ಘಟನೆ ಗುರುವಾರ ನಡೆದಿದೆ. ಗುಂಡ್ಲುಪೇಟೆ ತಾಲ್ಲೂಕಿನ ಬನ್ನಿತಾಳಪುರ ಗ್ರಾಮದಲ್ಲಿರುವ ಶ್ರೀ ಕಿಕ್ಕೇರಿ ಮಹಾಲಕ್ಷ್ಮಿ ದೇವಸ್ಥಾನ, ಸಾಗಡೆ ರಾಕಸಮ್ಮ ದೇವಸ್ಥಾನ, ಉತ್ತನಹಳ್ಳಿ ಮಾರಮ್ಮ ದೇವಸ್ಥಾನ, ಮಲೆಯೂರು ಮಾರಮ್ಮ ದೇವಸ್ಥಾನ, ಗೋನಳ್ಳಿ ದೇವಸ್ಥಾನ, ಹಿಮವದ್ ಗೋಪಾಲಸ್ವಾಮಿ ದೇವಸ್ಥಾನ ಸೇರಿ ಒಟ್ಟು ಆರು ದೇವಸ್ಥಾನಗಳಲ್ಲಿ ಸರಣಿ ಕಳ್ಳತನ ನಡೆದಿದೆ. ದೇವಸ್ಥಾನದ ಬೀಗಗಳನ್ನು ಒಡೆದು ಒಳಗೆ ಪ್ರವೇಶಿಸಿ ಚಿನ್ನದ ತಾಳಿಗಳು, ಬೆಳ್ಳಿ ಕೊಳಲು, ಚಿನ್ನದ ನಾಣ್ಯಗಳು, ಚಿನ್ನದ ಗುಂಡು ಗಳನ್ನು ಕಳ್ಳತನ ಮಾಡಿ ಹುಂಡಿಗಳನ್ನು ಒಡೆದು ಹಣವನ್ನು ತೆಗೆದುಕೊಂಡು ಹೋಗಿದ್ದಾರೆ ಎಂದು ತಿಳಿದು ಬಂದಿದೆ.
ರಾಯಚೂರು ಜಿಲ್ಲೆಯಲ್ಲಿ ಗಾಂಜಾ, ಮಾದಕ ವಸ್ತುಗಳಿಗಿಲ್ಲ ಕಡಿವಾಣ
55 ದಿನಗಳಲ್ಲಿ 40 ಪ್ರಕರಣಗಳು ದಾಖಲು ► ಪೆಡ್ಲರ್ಗಳ ಪತ್ತೆ ಹಚ್ಚುವುದೇ ಪೊಲೀಸರಿಗೆ ಸವಾಲು
Vinay Kulkarni: ಯೋಗೀಶ್ ಗೌಡ ಕೊಲೆ ಪ್ರಕರಣದಲ್ಲಿ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿಗೆ ಸುಪ್ರೀಂ ಕೋರ್ಟ್ ಜಾಮೀನು
Vinay Kulkarni: ಧಾರವಾಡ ಜಿಲ್ಲಾ ಪಂಚಾಯತ್ ಸದಸ್ಯ ಹಾಗೂ ಬಿಜೆಪಿ ಮುಖಂಡ ಯೋಗೀಶ್ ಗೌಡ ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿದ್ದ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿಗೆ ಸುಪ್ರೀಂ ಕೋರ್ಟ್ ಜಾಮೀನು ಮಂಜೂರು ಮಾಡಿ ಆದೇಶ ಹೊರಡಿಸಿದೆ.
ನಾಯಕತ್ವ ಗೊಂದಲದ ನಡುವೆ ಕುತೂಹಲ ಕೆರಳಿಸಿದೆ ಖಾಸಗಿ ಹೋಟೆಲ್ ನಲ್ಲಿ ಡಿಕೆಶಿ ಆಪ್ತರ ಗ್ರೂಪ್ ಫೋಟೋ!
ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಚರ್ಚೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದು, ಇತ್ತೀಚೆಗಷ್ಟೇ ಸಿದ್ದರಾಮಯ್ಯ ಬಣದಲ್ಲಿ ಗುರುತಿಸಿಕೊಂಡಿದ್ದ ಶಾಸಕರು ಫಾರಿನ್ ಟ್ರಿಪ್ ನೆಪದಲ್ಲಿ ಶಕ್ತಿ ಪ್ರದರ್ಶನ ಮಾಡಿದ್ದರು. ಸದ್ಯ ಈ ಬೆನ್ನಲ್ಲೆ, ಡಿಕೆ ಬಣವೂ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದು, ಶಾಸಕ ಎಚ್ ಸಿ ಬಾಲಕೃಷ್ಣ ಅವರ ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ಡಿಕೆ ಬಣದಲ್ಲಿ ಗುರುತಿಸಿಕೊಂಡಿರುವ 48 ಶಾಸಕರು ಒಟ್ಟಿಗೆ ಸೇರಿದ್ದಾರೆ ಎಂಬ ಸುದ್ದಿಗಳು ಕೇಳಿಬರುತ್ತಿವೆ. ಆದರೆ ಇದರಲ್ಲಿ ಸುಮಾರು 18 ಶಾಸಕರು ಗ್ರೂಪ್ ಫೋಟೋವನ್ನು ಸಹ ತೆಗೆಸಿಕೊಂಡಿದ್ದು ಈ ಫೋಟೋ ಸದ್ಯ ಸಾಕಷ್ಟು ವೈರಲ್ ಆಗುತ್ತಿದೆ. ಈ ಮೂಲಕ ನಾಯಕತ್ವ ಬದಲಾವಣೆ ಚರ್ಚೆಗಳು ಮತ್ತಷ್ಟು ತೀವ್ರಗೊಳ್ಳುವಂತಾಗಿದೆ.
ದೆಹಲಿ ಮದ್ಯ ನೀತಿ ಹಗರಣ: ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್, ಮನಿಶ್ ಸಿಸೋಡಿಯಾಗೆ ಕ್ಲೀನ್ಚಿಟ್
ದೆಹಲಿ ಮದ್ಯ ನೀತಿ ಹಗರಣದ ಭ್ರಷ್ಟಾಚಾರದ ಪ್ರಕರಣದಲ್ಲಿ ದೆಹಲಿಯ ಮಾಜಿ ಮುಖ್ಯಮಂತ್ರಿ, ಆಮ್ ಆದ್ಮಿ ಪಕ್ಷದ ಅರವಿಂದ್ ಕೇಜ್ರಿವಾಲ್ ಮತ್ತು ಅವರ ಉಪ ಮುಖ್ಯಮಂತ್ರಿ ಮನಿಶ್ ಸಿಸೋಡಿಯಾ ಅವರಿಗೆ ನ್ಯಾಯಾಲಯ ಕ್ಲೀನ್ ಚಿಟ್ ನೀಡಿದೆ. ಈ ಮೂಲಕ ರಾಷ್ಟ್ರ ರಾಜಕಾರಣದಲ್ಲಿ ಭಾರಿ ಸಂಚಲನ ಮೂಡಿಸುವಂತಹ ತೀರ್ಪು ಪ್ರಕಟವಾಗಿದೆ. ಮದ್ಯ ನೀತಿ ಹಗರಣಕ್ಕೆ ಸಂಬಂಧಿಸಿದ ಎಲ್ಲಾ ಭ್ರಷ್ಟಾಚಾರದ ಆರೋಪಗಳಿಂದ
ದಿಲ್ಲಿ ಅಬಕಾರಿ ನೀತಿ ಪ್ರಕರಣ | ಅರವಿಂದ್ ಕೇಜ್ರಿವಾಲ್, ಮನೀಶ್ ಸಿಸೋಡಿಯಾರನ್ನು ಖುಲಾಸೆಗೊಳಿಸಿದ ದಿಲ್ಲಿ ನ್ಯಾಯಾಲಯ
ಹೊಸದಿಲ್ಲಿ: ದಿಲ್ಲಿ ಅಬಕಾರಿ ನೀತಿ ಪ್ರಕರಣದಲ್ಲಿ ದಿಲ್ಲಿಯ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಮಾಜಿ ಡಿಸಿಎಂ ಮನೀಶ್ ಸಿಸೋಡಿಯಾ, ತೆಲಂಗಾಣ ಜಾಗೃತಿ ಅಧ್ಯಕ್ಷೆ ಕೆ. ಕವಿತಾ ಸೇರಿದಂತೆ 23 ಮಂದಿಯನ್ನು ಸಾಕ್ಷ್ಯಾಧಾರಗಳ ಕೊರತೆ ಉಲ್ಲೇಖಿಸಿ ದಿಲ್ಲಿ ನ್ಯಾಯಾಲಯ ಖುಲಾಸೆಗೊಳಿಸಿದೆ. ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಜಿತೇಂದ್ರ ಸಿಂಗ್ ಅವರು, ಆರೋಪಿಗಳ ವಿರುದ್ಧ ಸಿಬಿಐ ತನಿಖೆಯನ್ನು ಮುಕ್ತಾಯಗೊಳಿಸುವ ಆದೇಶವನ್ನು ಹೊರಡಿಸಿದ್ದಾರೆ. ನ್ಯಾಯಾಲಯವು ಅಬಕಾರಿ ನೀತಿಯಲ್ಲಿ ಯಾವುದೇ ವ್ಯಾಪಕ ಪಿತೂರಿ ಅಥವಾ ಅಪರಾಧ ಉದ್ದೇಶ ಇರಲಿಲ್ಲ ಎಂದು ತೀರ್ಪು ನೀಡಿದೆ. 23 ಆರೋಪಿಗಳ ವಿರುದ್ಧ ಪ್ರಾಥಮಿಕವಾಗಿ ಯಾವುದೇ ಆರೋಪವು ಸಾಬೀತಾಗಿಲ್ಲ ಎಂದು ನ್ಯಾಯಾಲಯ ಹೇಳಿದೆ.
ಉಡುಪಿ: ನಿಟ್ಟೂರು ಎಸ್ಟಿಪಿ ಘಟಕಕ್ಕೆ ಉಪ ಲೋಕಾಯುಕ್ತ ಭೇಟಿ; ಅಧಿಕಾರಿಗಳಿಗೆ ತರಾಟೆ
ಉಡುಪಿ: ನಿಟ್ಟೂರಿನ ಮಲಿನ ನೀರು ಶುದ್ಧೀಕರಣ ಘಟಕದ (STP) ನಿರ್ವಹಣೆಗೆ ಪ್ರತಿ ತಿಂಗಳು ಸುಮಾರು 3 ಲಕ್ಷ ರೂಪಾಯಿ ವೆಚ್ಚವಾಗುತ್ತಿದ್ದರೂ, ಅಲ್ಲಿನ ದುರ್ವಾಸನೆ ಮತ್ತು ಕಳಪೆ ನಿರ್ವಹಣೆಯನ್ನು ಕಂಡು ಕರ್ನಾಟಕ ಉಪ ಲೋಕಾಯುಕ್ತ ನ್ಯಾಯಮೂರ್ತಿ ಬಿ. ವೀರಪ್ಪ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಶುಕ್ರವಾರ ಬೆಳಿಗ್ಗೆ ಘಟಕಕ್ಕೆ ಹಠಾತ್ ಭೇಟಿ ನೀಡಿ ಅವರು ಪರಿಶೀಲನೆ ನಡೆಸಿದರು. ಆರು ಹಂತಗಳಲ್ಲಿ ನೀರು ಶುದ್ಧೀಕರಣಗೊಳ್ಳುತ್ತಿದೆ ಎಂದು ಅಧಿಕಾರಿಗಳು ಸಮರ್ಥಿಸಿಕೊಂಡರೂ, ಘಟಕದಿಂದ ಹೊರಬರುತ್ತಿರುವ ನೀರು ಕಪ್ಪು ಬಣ್ಣದಲ್ಲಿರುವುದನ್ನು ಗಮನಿಸಿದ ನ್ಯಾಯಮೂರ್ತಿಗಳು ಪರಿಸ್ಥಿತಿ ಗಂಭೀರವಾಗಿದೆ ಎಂದು ಅಭಿಪ್ರಾಯಪಟ್ಟರು. ಈ ಹಿನ್ನೆಲೆಯಲ್ಲಿ, ಕರ್ತವ್ಯ ಲೋಪ ಎಸಗಿದ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ (KSPCB) ಅಧಿಕಾರಿ ಕೀರ್ತಿ ಕುಮಾರ್ ವಿರುದ್ಧ ಪ್ರಕರಣ ದಾಖಲಿಸಲು ಸೂಚಿಸಿದರು. 2010ರಲ್ಲಿ ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮ (ಕೆಯುಐಡಿಎಫ್ಸಿ) ಮೂಲಕ ಸ್ಥಾಪಿಸಲ್ಪಟ್ಟ ಈ ಘಟಕವನ್ನು ರೂ. 30 ಕೋಟಿ ವೆಚ್ಚದಲ್ಲಿ ಮೇಲ್ದರ್ಜೆಗೆ ಏರಿಸಲು ಯೋಜಿಸಲಾಗಿದೆ. ಅನುದಾನ ಮಂಜೂರಾದರೂ ಮೇಲ್ದರ್ಜೆ ಕಾಮಗಾರಿ ಇನ್ನೂ ಆರಂಭವಾಗಿಲ್ಲ. ಆದರೆ ನಗರಸಭೆ ಅಧಿಕಾರಿಗಳು ಆರಂಭಿಕ ಕಾರ್ಯ ಶುರು ಆಗಿವೆ ಎಂದು ತಿಳಿಸಿದ್ದಾರೆ. ಅಧಿಕಾರಿಗಳ ಅಸ್ಪಷ್ಟ ಮಾಹಿತಿ ಮತ್ತು ಸಮನ್ವಯದ ಕೊರತೆ ಉಪ ಲೋಕಾಯುಕ್ತರ ಅಸಮಾಧಾನವನ್ನು ಮತ್ತಷ್ಟು ಹೆಚ್ಚಿಸಿತು. ಸಮರ್ಪಕವಾಗಿ ಶುದ್ಧೀಕರಿಸದ ನೀರನ್ನು ನೇರವಾಗಿ ಸಮುದ್ರಕ್ಕೆ ಬಿಡುತ್ತಿರುವುದನ್ನು ಕಂಡು, ನೀವು ಜನರಿಗೆ ಪರೋಕ್ಷವಾಗಿ ವಿಷವನ್ನೇ ಉಣಿಸುತ್ತಿದ್ದೀರಿ ಎಂದು ತರಾಟೆಗೆ ತೆಗೆದುಕೊಂಡರು. ರಾಜ್ಯದ ಸುಮಾರು 18 ಜಿಲ್ಲೆಗಳ ಎಸ್ಟಿಪಿಗಳನ್ನು ಪರಿಶೀಲಿಸಿದ್ದೇನೆ, ಆದರೆ ಉಡುಪಿಯಷ್ಟು ಕಳಪೆ ಸ್ಥಿತಿಯನ್ನು ನಾನು ಎಲ್ಲೂ ಕಂಡಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದರು. ಮಲ್ಪೆ ಕಡೆಗೆ ತೆರಳುವ ಮಾರ್ಗಮಧ್ಯೆ ಇಂದ್ರಾಣಿ ನದಿಯ ಮಾಲಿನ್ಯದಿಂದ ತೊಂದರೆ ಅನುಭವಿಸುತ್ತಿರುವ ನಿವಾಸಿಗಳ ಅಹವಾಲು ಆಲಿಸಿದರು. ಸ್ಥಳೀಯ ನಿವಾಸಿ ಇಂದಿರಾ ಎಂಬುವವರು ತಮ್ಮ ಕಷ್ಟ ತೋಡಿಕೊಳ್ಳುತ್ತಾ, ಹಲವು ವರ್ಷಗಳಿಂದ ಬಾವಿ ನೀರು ಬಳಸಲು ಸಾಧ್ಯವಾಗುತ್ತಿಲ್ಲ. ಹಿಂದೆ ಸ್ನಾನಕ್ಕೂ ಇದೇ ನೀರು ಬಳಸುತ್ತಿದ್ದೆವು. ಈಗ ನೀರು ರಾಸಾಯನಿಕಗಳಿಂದ ಕಲುಷಿತಗೊಂಡಿದ್ದು, ಮೀನುಗಳು ಸಹ ಬದುಕುತ್ತಿಲ್ಲ ಎಂದು ದೂರಿದರು. ದುರ್ವಾಸನೆಯಿಂದಾಗಿ ಸ್ಥಳೀಯರು ಆಸ್ತಮಾ ಮತ್ತು ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಸಂಜೆ ಹೊತ್ತಿಗೆ ವಾಸನೆ ತಡೆಯಲಾಗದೆ ಕಿಟಕಿ-ಬಾಗಿಲು ಮುಚ್ಚಿಕೊಳ್ಳಬೇಕಾದ ಪರಿಸ್ಥಿತಿ ಇದೆ ಎಂದು ತಿಳಿಸಿದರು. ಇಂತಹ ನಿರ್ಲಕ್ಷ್ಯವನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದ ನ್ಯಾಯಮೂರ್ತಿ ವೀರಪ್ಪ ಅವರು ಪರಿಶೀಲನೆಯನ್ನು ಮುಂದುವರಿಸಿದರು.
ವಿದೇಶಗಳಲ್ಲಿ ವಿದ್ಯಾಭ್ಯಾಸ ಮಾಡಲು ಬಯಸುವ ಭಾರತೀಯ ವಿದ್ಯಾರ್ಥಿಗಳಿಗೆ ಮೊದಲು ತಲೆಗೆ ಬರುವುದು ಯುಎಸ್, ಕೆನಡಾ, ಆಸ್ಟ್ರೇಲಿಯಾ, ಯುಕೆಯಂತಹ ಸಂಪ್ರದಾಯಿಕ ತಾಣಗಳು. ಅದರಲ್ಲೂ ಅಮೆರಿಕ ಎಂದರೆ, ಹೆಚ್ಚಿನ ಒಲವು. ಆದರೆ, ಇತ್ತೀಚಿನ ವಲಸೆ ನಿಯಮಗಳು, ರಾಜಕೀಯ ಹಾಗೂ ಆರ್ಥಿಕ ಅಸ್ಥಿರತೆಯಿಂದಾಗಿ ಇದರಲ್ಲಿ ಗಣನೀಯ ಇಳಿಕೆ ಕಂಡುಬರುತ್ತಿದ್ದು, US ನಲ್ಲಿ ಭಾರತೀಯ ವಿದ್ಯಾರ್ಥಿಗಳ ದಾಖಲಾತಿ 2025ರ ಆಗಸ್ಟ್ ವೇಳೆಗೆ 45% ಕುಸಿತ ಕಂಡಿದೆ. ಆದರೆ, ಯುರೋಪ್ ಸೇರಿದಂತೆ ಏಷ್ಯಾದ ಹಲವು ದೇಶಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಏರಿಕೆ ಕಂಡುಬರುತ್ತಿದೆ. ಜೊತೆಗೆ ಇತ್ತ ಭಾರತದ ವಿಶ್ವವಿದ್ಯಾಲಯಗಳಲ್ಲಿ ಅಂತರಾಷ್ಟ್ರೀಯ ವಿದ್ಯಾರ್ಥಿಗಳ ದಾಖಲಾತಿಯಲ್ಲಿ 25% ಹೆಚ್ಚಳ ಕಂಡಿದೆ. ಇದು ಸಂಪ್ರದಾಯಿಕ ತಾಣಗಳ ಹೊರತಾಗಿ ವಿದ್ಯಾರ್ಥಿಗಳು ಹೇಗೆ ಎಲ್ಲಾ ಅಂಶಗಳನ್ನು ಗಮನಿಸಿ ಸ್ಮಾರ್ಟ್ ಚಾಯ್ಸ್ ಗೆ ಮಾಡುತ್ತಿದ್ದಾರೆ ಎಂಬುದಕ್ಕೆ ಸಾಕ್ಷಿಯಂತಿದೆ. ಈ ಕುರಿತ ವರದಿ ಇಲ್ಲಿದೆ..
ಉಡುಪಿ: ಮಲ್ಪೆ ಬಂದರು ಸೇರಿದಂತೆ ವಿವಿಧ ಸ್ಥಳಗಳಿಗೆ ಉಪಲೋಕಾಯುಕ್ತ ಬಿ.ವೀರಪ್ಪ ದಿಢೀರ್ ಭೇಟಿ
ಉಡುಪಿ: ಉಡುಪಿಗೆ ಭೇಟಿ ನೀಡಿರುವ ಉಪ ಲೋಕಾಯುಕ್ತ ನ್ಯಾಯಮೂರ್ತಿ ಬಿ. ವೀರಪ್ಪ ಅವರು ಇಂದು ಮುಂಜಾನೆಯಿಂದಲೇ ವಿವಿಧ ಕಚೇರಿ ಹಾಗೂ ಸ್ಥಳಗಳಿಗೆ ಹಠಾತ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮೊದಲು ನಿಟ್ಟೂರಿನಲ್ಲಿರುವ ತ್ಯಾಜ್ಯ ನೀರು ಸಂಸ್ಕರಣಾ ಘಟಕಕ್ಕೆ ಭೇಟಿ ನೀಡಿದ ಅವರು, ಅಲ್ಲಿನ ಅವ್ಯವಸ್ಥೆಯನ್ನು ಕಂಡು ನಗರಸಭೆಯ ಪೌರಾಯುಕ್ತರು ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಘಟಕದ ನಿರ್ವಹಣೆಗೆ ಪ್ರತಿ ತಿಂಗಳು 3 ಲಕ್ಷ ರೂಪಾಯಿ ಪಡೆಯುವ ನೀವು, ತ್ಯಾಜ್ಯ ನೀರನ್ನು ಸಂಸ್ಕರಿಸದೇ ನೇರವಾಗಿ ಸಮುದ್ರಕ್ಕೆ ಬಿಡುತ್ತಿದ್ದೀರಿ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದರೊಂದಿಗೆ ಪರಿಸರ ಇಲಾಖೆಯ ಅಧಿಕಾರಿಗಳೂ ಅವರ ಕೆಂಗಣ್ಣಿಗೆ ಗುರಿಯಾದರು. ಅಲ್ಲಿಂದ ನೇರವಾಗಿ ಮಲ್ಪೆ ಬಂದರಿಗೆ ಭೇಟಿ ನೀಡಿದ ಅವರು, ಅಲ್ಲಿನ ಅಸ್ವಚ್ಛತೆ ಹಾಗೂ ಬಂದರು ಸುತ್ತಮುತ್ತ ಹರಿಯುತ್ತಿರುವ ತ್ಯಾಜ್ಯ ನೀರು ಮತ್ತು ಹರಡಿರುವ ದುರ್ವಾಸನೆಯ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ನಂತರ ಬನ್ನಂಜೆಯಲ್ಲಿರುವ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣಕ್ಕೆ ಭೇಟಿ ನೀಡಿದ ಅವರು, ಅಲ್ಲಿನ ಕ್ಯಾಂಟೀನ್ನ ಅಡುಗೆ ಕೋಣೆಗೆ ತೆರಳಿ ಸ್ವಚ್ಛತೆಯನ್ನು ಪರಿಶೀಲಿಸಿದರು. ಈ ವೇಳೆ ಅಲ್ಲಿನ ಸ್ವಚ್ಛತಾ ಕಾರ್ಯ ನಿರ್ವಹಿಸುವ ಮಹಿಳಾ ಸಿಬ್ಬಂದಿ, ತಮಗೆ ಇಎಸ್ಐ ಸೇರಿದಂತೆ ಯಾವುದೇ ಸೌಲಭ್ಯಗಳು ಸಿಗುತ್ತಿಲ್ಲ ಎಂದು ದೂರಿದರು. ತಕ್ಷಣವೇ ಗುತ್ತಿಗೆದಾರರನ್ನು ತರಾಟೆಗೆ ತೆಗೆದುಕೊಂಡ ನ್ಯಾಯಮೂರ್ತಿಗಳು, ಕಾರ್ಮಿಕರಿಗೆ ಕೂಡಲೇ ಇಎಸ್ಐ ಕಾರ್ಡ್ ನೀಡುವಂತೆ ಸೂಚಿಸಿದರು. ಈ ಬಗ್ಗೆ ಸುಮೋಟೋ ಪ್ರಕರಣ ದಾಖಲಿಸಿಕೊಳ್ಳುವುದಾಗಿ ತಿಳಿಸಿದರು.
Railway: 2027ಕ್ಕೆ ದಾವಣಗೆರೆ-ತುಮಕೂರು ರೈಲು ಮಾರ್ಗ ಪೂರ್ಣ: ಬೆಣ್ಣೆನಗರಿಯಿಂದ ಬೆಂಗಳೂರಿಗೆ ಕೇವಲ 2.5 ಗಂಟೆ ಪ್ರಯಾಣ
ದಾವಣಗೆರೆ: ಎರಡು ದಶಕಗಳ ಬಹುನಿರೀಕ್ಷಿತ 'ತುಮಕೂರು-ಚಿತ್ರದುರ್ಗ-ದಾವಣಗೆರೆ' ನೇರ ರೈಲು ಮಾರ್ಗದ ಕಾಮಗಾರಿಯನ್ನು 2027ರ ಡಿಸೆಂಬರ್ ಒಳಗಾಗಿ ಸಂಪೂರ್ಣವಾಗಿ ಮುಕ್ತಾಯಗೊಳಿಸಿ, ಸಾರ್ವಜನಿಕರ ಸಂಚಾರಕ್ಕೆ ಮುಕ್ತಗೊಳಿಸಲಾಗುವುದು ಎಂದು ಭಾರತೀಯ ರೈಲ್ವೆ ಇಲಾಖೆ ಸ್ಪಷ್ಟಪಡಿಸಿದೆ. ಈ ಮಹತ್ವದ ಘೋಷಣೆಯಿಂದ ದಾವಣಗೆರೆ, ಚಿತ್ರದುರ್ಗ ಸೇರಿದಂತೆ ಮಧ್ಯ ಕರ್ನಾಟಕದ ಲಕ್ಷಾಂತರ ಪ್ರಯಾಣಿಕರಲ್ಲಿ ಹರ್ಷ ಮುಗಿಲುಮುಟ್ಟಿದೆ. ಕೇಂದ್ರ ರೈಲ್ವೆ ಖಾತೆಯ ರಾಜ್ಯ ಸಚಿವ ವಿ. ಸೋಮಣ್ಣ
ಟಿ-20 ವಿಶ್ವಕಪ್ ಆಡುತ್ತಿರುವ ರಿಂಕು ಸಿಂಗ್ ತಂದೆ ನಿಧನ; ಕ್ಯಾನ್ಸರ್ ರೋಗಕ್ಕೆ ಬಲಿಯಾದ ಖಾನ್ಚಂದ್ ಸಿಂಗ್!
ಆಘಾತಕಾರಿ ಬೆಳವಣಿಗೆಯೊಂದರಲ್ಲಿ ಟೀಂ ಇಂಡಿಯಾದ ಆಲ್ರೌಂಡರ್ ರಿಂಕು ಸಿಂಗ್ ಅವರ ತಂದೆ ಖಾನ್ಚಂದ್ ಸಿಂಗ್ ನಿಧನರಾಗಿದ್ದಾರೆ. ದೀರ್ಘಕಾಲದಿಂದ ಯಕೃತ್ತಿನ ಕ್ಯಾನ್ಸರ್ನಿಂದ ಬಳಲುತ್ತಿದ್ದ ಅವರು, ಗ್ರೇಟರ್ ನೋಯ್ಡಾದ ಯಥಾರ್ಥ್ ಆಸ್ಪತ್ರೆಯಲ್ಲಿ ಇಂದು (ಫೆ.27-ಶುಕ್ರವಾರ) ಕೊನೆಯುಸಿರೆಳೆದರು. ಟಿ-20 ವಿಶ್ವಕಪ್ ಪಂದ್ಯಾವಳಿಯ ಭಾಗವಾಗಿರುವ ರಿಂಕು ಸಿಂಗ್, ಜಿಂಬಾಬ್ವೆ ವಿರುದ್ಧದ ಪಂದ್ಯಕ್ಕೂ ಮುನ್ನ ಆಸ್ಪತ್ರೆಗೆ ಭೇಟಿ ನೀಡಿ ತಮ್ಮ ತಂದೆಯ ಆರೋಗ್ಯ ವಿಚಾರಿಸಿದ್ದರು. ತಂದೆಯ ನಿಧನದ ಹಿನ್ನೆಲೆಯಲ್ಲಿ ರಿಂಕು ಸಿಂಗ್ ಅವರು ಮುಂಬರುವ ಪಂದ್ಯಗಳಲ್ಲಿ ಭಾರತ ತಂಡದ ಭಾಗವಾಗಲಿದ್ದಾರಾ ಎಂಬುದು ಖಚಿತವಾಗಿಲ್ಲ.
ತಮಿಳುನಾಡು ಮಾಜಿ ಸಿಎಂ, AIADMK ಉಚ್ಚಾಟಿತ ನಾಯಕ ಪನ್ನೀರ್ಸೆಲ್ವಂ ಡಿಎಂಕೆ ಪಕ್ಷಕ್ಕೆ ಸೇರ್ಪಡೆ
ಚೆನ್ನೈ: ತಮಿಳುನಾಡು ಮಾಜಿ ಮುಖ್ಯಮಂತ್ರಿ, ಎಐಎಡಿಎಂಕೆ ಉಚ್ಚಾಟಿತ ನಾಯಕ ಓ ಪನ್ನೀರ್ಸೆಲ್ವಂ ಶುಕ್ರವಾರ ಆಡಳಿತಾರೂಢ ದ್ರಾವಿಡ ಮುನ್ನೇತ್ರ ಕಳಗಂ(ಡಿಎಂಕೆ) ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ. ಮಾಜಿ ಸಿಎಂ ಪನ್ನೀರ್ಸೆಲ್ವಂ ಡಿಎಂಕೆ ಪಕ್ಷಕ್ಕೆ ಸೇರ್ಪಡೆ ತಮಿಳುನಾಡು ವಿಧಾನಸಭಾ ಚುನಾವಣೆಗೆ ಮುನ್ನ ರಾಜ್ಯದ ರಾಜಕೀಯದಲ್ಲಿ ಮಹತ್ವದ ತಿರುವು ನೀಡಿದೆ. ಎಐಎಡಿಎಂಕೆ ಮಾಜಿ ಮುಖ್ಯಸ್ಥೆ, ಮಾಜಿ ಸಿಎಂ ದಿವಂಗತ ಜಯಲಲಿತಾ ಅವರ ದೀರ್ಘಕಾಲದ ನಿಷ್ಠಾವಂತರಾಗಿದ್ದ ಓ ಪನ್ನೀರ್ಸೆಲ್ವಂ ಅವರು ಚೆನ್ನೈನಲ್ಲಿರುವ ಡಿಎಂಕೆ ಪಕ್ಷದ ಪ್ರಧಾನ ಕಚೇರಿಯಲ್ಲಿ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರ ಸಮ್ಮುಖದಲ್ಲಿ ಡಿಎಂಕೆ ಪಕ್ಷಕ್ಕೆ ಔಪಚಾರಿಕವಾಗಿ ಸೇರ್ಪಡೆಗೊಂಡಿದ್ದಾರೆ. ಮೂಲಗಳ ಪ್ರಕಾರ, ಮುಂಬರುವ ಚುನಾವಣೆಯಲ್ಲಿ ಒಪಿಎಸ್ ಅವರನ್ನು ಅವರ ತವರು ಕ್ಷೇತ್ರದಲ್ಲಿ ಡಿಎಂಕೆ ಸ್ಪರ್ಧೆಗೆ ಇಳಿಸುವ ಸಾಧ್ಯತೆ ಇದೆ.
Gold Rate Hike: ಚಿನ್ನದ ಬೆಲೆ ಮತ್ತೆ ಹೆಚ್ಚಳ: ಬೆಳ್ಳಿ ಬೆಲೆ 3 ದಿನದಿಂದ ತಟಸ್ಥ
ಅಮೆರಿಕ- ಇರಾನ್ ಮಾತುಕತೆ, ವಿವಿಧ ಜಾಗತಿಕ ಉದ್ವಿಗ್ನತೆ ಹಿನ್ನಲೆ ಚಿನ್ನದ ಬೆಲೆ ಏರುತ್ತಾ ಹೋಗುತ್ತಿದೆ. ಬೆಳ್ಳಿ ಬೆಲೆಯೂ ಮತ್ತೆ ಏರಿಕೆ ಆಗುವ ಸಂಭವ ಇದೆ.
ಮೊಬೈಲ್ ಉದ್ಯಮದಲ್ಲಿ ಹೊಸ ಕ್ರಾಂತಿ : ಮಹಿಳೆಯರು, ಯುವಕರಿಗೆ ತೆರೆದ ಉದ್ಯೋಗದ ಬಾಗಿಲು
Women and Youths : ದೇಶದಲ್ಲಿ ಮೊಬೈಲ್ ಉತ್ಪಾದನಾ ವಲಯ ವೇಗವಾಗಿ ಅಭಿವೃದ್ದಿ ಹೊಂದುತ್ತಿದ್ದು, ಆರ್ಥಿಕ ಅಭಿವೃದ್ದಿಗೆ ಕಾರಣವಾಗುತ್ತಿದೆ. ಇನ್ನೊಂದು ಕಡೆ, ಮಹಿಳೆಯರಿಗೆ ಮತ್ತು ಯುವ ಸಮುದಾಯಕ್ಕೆ ಹೇರಳವಾದ ಉದ್ಯೋಗವನ್ನು ಸೃಷ್ಟಿಸುತ್ತಿದೆ. ಸರ್ಕಾರ ಕೆಲಸ ಮಾತ್ರವಲ್ಲದೇ, ಖಾಸಗಿ ವಲಯದಲ್ಲೂ ಉದ್ಯೋಗ ಪರ್ವ ಸೃಷ್ಟಿಯಾಗುತ್ತಿದೆ.
ಅಫ್ಘಾನಿಸ್ತಾನದ ಜೊತೆ 'ಮುಕ್ತ ಯುದ್ಧ' ಆರಂಭ: ಪಾಕಿಸ್ತಾನ ಘೋಷಣೆ
ಗಡಿಯಲ್ಲಿ ಅಫ್ಘಾನಿಸ್ತಾನದ ಪಡೆಗಳು ದಾಳಿ ನಡೆಸಿದ ಬೆನ್ನಲ್ಲೆ ಬೆಳವಣಿಗೆ
ಅಮೆರಿಕ-ಇರಾನ್ ಜಿನಿವಾ ಪರಮಾಣು ಮಾತುಕತೆಯಲ್ಲಿ ʻಗಮನಾರ್ಹ ಪ್ರಗತಿʼ; ಆದರೂ ಯುದ್ಧದ ತೂಗುಗತ್ತಿ
ಯುದ್ಧದ ಹೊಸ್ತಿಲಲ್ಲಿ ನಿಂತಿರುವ ಅಮೆರಿಕ ಮತ್ತು ಇರಾನ್, ಅದಕ್ಕೆ ಸಮಾನಾಂತರವಾಗಿ ಅಣು ಒಪ್ಪಂದ ಮಾತುಕತೆಗಳನ್ನೂ ನಡೆಸುತ್ತಿದೆ. ಜಿನಿವಾದಲ್ಲಿ ನಡೆಯುತ್ತಿರುವ ಈ ಮಾತುಕತೆಗಳು ಫಲಪ್ರದವಾಗುವ ಮುನ್ಸೂಚನೆ ಕಂಡುಬರುತ್ತಿದೆ. ಹೊಸ ಸುತ್ತಿನ ಮಾತುಕತೆಗಳಲ್ಲಿ ಗಮನಾರ್ಹ ಪ್ರಗತಿ ಸಾಧಿಸಲಾಗಿದೆ ಎಂದು ಎರಡೂ ರಾಷ್ಟ್ರಗಳು ಪ್ರತಿಪಾದಿಸಿವೆಯಾದರೂ, ಯುದ್ಧದ ಭೀತಿ ಇನ್ನೂ ಕಡಿಮೆಯಾಗಿಲ್ಲ. ಜನಿವಾದಲ್ಲಿ ನಡೆದ ಮಾತುಕತೆಗಳು ಅಮೆರಿಕ ಮತ್ತು ಇರಾನ್ ಅಣು ಒಪ್ಪಂದ ಸಾಧ್ಯತೆಯನ್ನು ಹೆಚ್ಚಿಸಿದೆ. ಓಮಾನ್ ಈ ಮಾತುಕತೆಗಳ ಮಧ್ಯಸ್ಥಿಕೆಯನ್ನು ವಹಿಸಿದೆ. ಇಲ್ಲಿದೆ ಮಾಹಿತಿ.
ಸರ್ಕಾರದಿಂದ Guidance Value ಪರಿಷ್ಕರಣೆ : ಭಾರೀ ಹೊರೆಯಾಗಲಿದೆ ಸ್ಟ್ಯಾಂಪ್ ಡ್ಯೂಟಿ, ನೋಂದಣಿ ಶುಲ್ಕ?
Guidance Value : ನಿಗದಿತ ಗುರಿ ತಲುಪದ ಹಿನ್ನಲೆಯಲ್ಲಿ ಕರ್ನಾಟಕ ಸರ್ಕಾರದ ಕಂದಾಯ ಇಲಾಖೆ, ಮಾರ್ಗದರ್ಶಿ ಮೌಲ್ಯದ ಭಾರೀ ಪರಿಷ್ಕರಣೆಯನ್ನು ಮಾಡುವ ಸಾಧ್ಯತೆಯಿದೆ. ಏಪ್ರಿಲ್ ಒಂದರಿಂದ ಜಾರಿಗೆ ಬರುವಂತೆ, ಸ್ಟ್ಯಾಂಪ್ ಡ್ಯೂಟಿಯಲ್ಲಿ ಭಾರೀ ಬದಲಾವಣೆಯಾಗುವ ಸಾಧ್ಯತೆಯಿದ್ದು, ಅಂತಿಮ ನಿರ್ಧಾರವನ್ನು ಇನ್ನೂ ತೆಗೆದುಕೊಳ್ಳಲಾಗಿಲ್ಲ.
ಬಾಲವಾಡಿಗಳಿಗೂ ಸಿಗಲಿದೆ ಆಧುನಿಕ ಸೌಲಭ್ಯದ ಭಾಗ್ಯ : ಸರ್ಕಾರದಿಂದ 11.16 ಕೋಟಿ ಬಿಡುಗಡೆ, ಏನೆಲ್ಲಾ ಇರಲಿದೆ?
ರಾಜ್ಯದಲ್ಲಿನ ಬಾಲವಾಡಿಗಳಿಗೂ ಆಧುನಿಕ ರೂಪವನ್ನು ನೀಡುವ ಮೂಲಕ ಪೂರ್ವ ಪ್ರಾಥಮಿಕ ಶಾಲೆಗಳಲ್ಲಿ ಮಕ್ಕಳ ಸ್ನೇಹಿ ವಾತಾವರಣವನ್ನು ಸೃಷ್ಟಿಸಲು ಸರ್ಕಾರ ಮುಂದಾಗಿದೆ. ಈ ಹಿನ್ನಲೆಯಲ್ಲಿ ಸರ್ಕಾರದಿಂದ ಆಯ್ದ 1000ಕ್ಕೂ ಅಧಿಕ ಸರ್ಕಾರಿ ಬಾಲವಾಡಿಗಳಿಗೆ ತಲಾ 1ಲಕ್ಷದಂತೆ ಒಟ್ಟು 11.16 ಕೋಟಿ ರೂ ಅನುದಾನ ಬಿಡುಗಡೆ ಮಾಡಿದೆ. ಈ ಬಾಲವಾಡಿಗಳಲ್ಲಿ ಮಕ್ಕಳ ಸ್ನೇಹಿ ಪೀಠೋಪಕರಣ, ಹೊರಾಂಗಣ ಕ್ರೀಡಾ ಸಾಮಗ್ರಿ ಹಾಗೂ ಬಾಲಾ ಫೀಚರ್ಸ್ ಸಾಮಗ್ರಿಗಳು ಇರಲಿವೆ.
ನವದೆಹಲಿ: ನ್ಯಾಯಾಂಗ ವ್ಯವಸ್ಥೆಯಲ್ಲಿನ ಭ್ರಷ್ಟಾಚಾರದ ಕುರಿತು 8ನೇ ತರಗತಿಯ ಪಠ್ಯಪುಸ್ತಕದಲ್ಲಿ ವಿವಾದಾತ್ಮಕ ಅಧ್ಯಾಯವೊಂದನ್ನು ಸೇರಿಸಿರುವ ನ್ಯಾಷನಲ್ ಕೌನ್ಸಿಲ್ ಆಫ್ ಎಜುಕೇಷನಲ್ ರಿಸರ್ಚ್ ಅಂಡ್ ಟ್ರೈನಿಂಗ್ (NCERT) ಕ್ರಮ ಭಾರೀ ವಿವಾದಕ್ಕೆ ಕಾರಣವಾಗಿದೆ. ಈ ವಿಚಾರವಾಗಿ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರು, ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಪ್ರಸ್ತುತ ಇಸ್ರೇಲ್ ಪ್ರವಾಸದಲ್ಲಿರುವ
CBSE: 6ನೇ ತರಗತಿಗೆ 'ತ್ರಿಭಾಷಾ ಸೂತ್ರ' ಜಾರಿ, ಇಂಗ್ಲಿಷ್ ಇನ್ಮುಂದೆ ವಿದೇಶಿ ಭಾಷೆ
ನವದೆಹಲಿ: ರಾಷ್ಟ್ರೀಯ ಶಿಕ್ಷಣ ನೀತಿ (NEP) 2020ರ ಮಹತ್ವಾಕಾಂಕ್ಷಿ ಶಿಫಾರಸುಗಳ ಆಧಾರದ ಮೇಲೆ ಕೇಂದ್ರೀಯ ಪ್ರೌಢಶಿಕ್ಷಣ ಮಂಡಳಿ (CBSE) ಮಹತ್ವದ ಹೆಜ್ಜೆಯನ್ನಿಟ್ಟಿದೆ. 2026-27ನೇ ಶೈಕ್ಷಣಿಕ ವರ್ಷದಿಂದ 6ನೇ ತರಗತಿಯ ವಿದ್ಯಾರ್ಥಿಗಳಿಗೆ ಬಹುನಿರೀಕ್ಷಿತ 'ತ್ರಿಭಾಷಾ ಸೂತ್ರ'ವನ್ನು (Three-language formula) ಕಡ್ಡಾಯವಾಗಿ ಜಾರಿಗೊಳಿಸಲು ಸಿಬಿಎಸ್ಇ ಸಜ್ಜಾಗಿದೆ. ಶಾಲಾ ಶಿಕ್ಷಣದಲ್ಲಿ ಭಾಷಾ ಕಲಿಕೆಗೆ ಹೊಸ ಆಯಾಮ ನೀಡುವ ಈ ನಿರ್ಧಾರದಿಂದಾಗಿ ಭವಿಷ್ಯದಲ್ಲಿ
Priti Adani: ಮಹಿಳೆಯರಿಗೆ ಅವಕಾಶ ನೀಡಿ, ಅವರು ಭಾರತವನ್ನು ರೂಪಿಸುತ್ತಾರೆ: ಪ್ರೀತಿ ಅದಾನಿ ಕರೆ
ಭಾರತದ ಅಭಿವೃದ್ಧಿಯ ಮುಂದಿನ ಹಂತವನ್ನು ಮಹಿಳೆಯರು ಮುನ್ನಡೆಸಬೇಕು ಎಂದು ಅದಾನಿ ಫೌಂಡೇಶನ್ನ ಅಧ್ಯಕ್ಷೆ ಪ್ರೀತಿ ಅದಾನಿ ಕರೆ ನೀಡಿದ್ದಾರೆ. 2047ರ ವಿಕಸಿತ ಭಾರತದ ಕಡೆಗೆ ರಾಷ್ಟ್ರದ ಬೆಳವಣಿಗೆಯ ಕೇಂದ್ರ ವಾಸ್ತುಶಿಲ್ಪಿಗಳಾಗಿ ಮಹಿಳೆಯರನ್ನು ಗುರುತಿಸಬೇಕು ಎಂದು ನವದೆಹಲಿ ಮೂಲದ ಸಾರ್ವಜನಿಕ ನೀತಿ ಚಿಂತನಾ ಕೇಂದ್ರವಾದ ಚಿಂತನ್ ರಿಸರ್ಚ್ ಫೌಂಡೇಶನ್ (CRF) ಆಯೋಜಿಸಿದ್ದ ಸಶಕ್ತ ನಾರಿ, ವಿಕಸಿತ ಭಾರತ ಸಮ್ಮೇಳನವನ್ನು
ಭಾರತೀಯ ರೆಸ್ಟೋರೆಂಟ್ನಲ್ಲಿ ಬೆಂಜಮಿನ್-ಸಾರಾ ನೆತನ್ಯಾಹು ಮೊದಲ ಡೇಟ್; ಹೀಗಿತ್ತು ನರೇಂದ್ರ ಮೋದಿ ರಿಯಾಕ್ಷನ್
ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಎರಡು ದಿನಗಳ ಇಸ್ರೇಲ್ ಪ್ರವಾಸ ಅಂತ್ಯವಾಗಿದೆ. ಪ್ರಧಾನಿ ಮೋದಿ ಪ್ರವಾಸದ ಪರಿಣಾಮವಾಗಿ ಭಾರತ-ಇಸ್ರೇಲ್ ರಾಜತಾಂತ್ರಿಕ ಸಂಬಂಧ ಮತ್ತಷ್ಟು ಗಟ್ಟಿಗೊಂಡಿದೆ. ಈ ಮಧ್ಯೆ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ತಮ್ಮ ಪತ್ಮಿ ಸಾರಾ ನೆತನ್ಯಾಹು ಅವರೊಂದಿಗೆ ಭಾರತದಲ್ಲಿ ನಡೆಸಿದ ಮೊದಲ ಡೇಟ್ನ ಕ್ಷಣಗಳನ್ನು ಹಂಚಿಕೊಂಡಿದ್ದಾರೆ. ನನ್ನ ವೈವಾಹಿಕ ಜೀವನ ರೂಪಿಸಿದ ಭಾರತಕ್ಕೆ ಧನ್ಯವಾದ ಎಂದು ನೆತನ್ಯಾಹು ಹೇಳಿದ್ದಾರೆ. ಇಲ್ಲಿದೆ ಮಾಹಿತಿ.
ಮೊದಲ ಬಾರಿ ಭಾರತೀಯ ಮಾರುಕಟ್ಟೆಯಲ್ಲಿ ಚೀನಾ ಸ್ಮಾರ್ಟ್ಫೋನ್ ಮಾರಾಟ ಇಳಿಮುಖ
ಸ್ಮಾರ್ಟ್ಫೋನ್ ತಯಾರಿಕೆಯಲ್ಲಿ ಭಾರತದ ಪಾಲು ಹೆಚ್ಚಾಗುತ್ತಿದ್ದಂತೆ, ಜಿಎಸ್ಟಿ ಬೆಲೆ ಪರಿಷ್ಕರಣೆ ಮಾಡುತ್ತಿದ್ದಂತೆ ದೇಶದಲ್ಲಿ ಚೀನಾ ಸ್ಮಾರ್ಟ್ಫೋನ್ಗಳ ಬೇಡಿಕೆ ಕುಸಿತ ಆಗಿದೆ. 2023 ರಲ್ಲಿದ್ದ 54% ಬೇಡಿಕೆ ಈಗ 29% ನಷ್ಟು ಕುಸಿತ ಕಂಡಿದೆ.
ನ್ಯಾಯಾಂಗ ಭ್ರಷ್ಟಾಚಾರ ಕುರಿತ ಎನ್ ಸಿಇಆರ್ ಟಿ ಪುಸ್ತಕಕ್ಕೆ ಸುಪ್ರೀಂ ನಿಷೇಧ: ಕ್ಷಮೆ ಯಾಚಿಸಿದ ಸರ್ಕಾರ
ಹೊಸದಿಲ್ಲಿ: ಭಾರತದ ನ್ಯಾಯಾಂಗ ಭ್ರಷ್ಟಾಚಾರ ಎಂಬ ಅಧ್ಯಾಯ ಒಳಗೊಂಡ ಎನ್ಸಿಇಆರ್ಟಿ ಸಿದ್ಧಪಡಿಸಿದ ಎಂಟನೇ ತರಗತಿ ಸಮಾಜ ವಿಜ್ಞಾನ ಪುಸ್ತಕವನ್ನು ಸುಪ್ರೀಂಕೋರ್ಟ್ ಗುರುವಾರ ನಿಷೇಧಿಸಿದೆ. ಯಾವುದೇ ರೀತಿಯಲ್ಲಿ ಇದರ ಪ್ರಸರಣವನ್ನು ನಿರ್ಬಂಧಿಸಲಾಗಿದೆ. ಜತೆಗೆ ಈ ವಿಚಾರದಲ್ಲಿ ಕೇಂದ್ರ ಸರ್ಕಾರ ಬೇಷರತ್ ಕ್ಷಮೆ ಕೋರಿದ್ದರೂ, ಶಾಲಾ ಶಿಕ್ಷಣ ಕಾರ್ಯದರ್ಶಿ ಮತ್ತು ಎನ್ಸಿಇಆರ್ಟಿ ಅಧ್ಯಕ್ಷರ ವಿರುದ್ಧ ಏಕೆ ನ್ಯಾಯಾಲಯ ನಿಂದನೆ ಪ್ರಕ್ರಿಯೆ ಆರಂಭಿಸಬಾರದು ಎಂಬ ಬಗ್ಗೆ ಶೋಕಾಸ್ ನೋಟಿಸ್ ನೀಡಿದೆ. ಎರಡನೇ ದಿನದ ವಿಚಾರಣೆಯಲ್ಲಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು, ಇಬ್ಬರು ಮಾಡಿದ ಕ್ಷಮೆಗೆ ಅರ್ಹವಲ್ಲದ ಪ್ರಮಾದಕ್ಕಾಗಿ ಬೇಷರತ್ ಕ್ಷಮೆ ಯಾಚಿಸಿದರು. ಜತೆಗೆ ಈ ಇಬ್ಬರನ್ನು ಯಾವುದೇ ಬಗೆಯ ಪಠ್ಯಪುಸ್ತಕ ರಚನೆಯಲ್ಲಿ ಪಾಲ್ಗೊಳ್ಳದಂತೆ ಕಾಯಂ ನಿಷೇಧ ವಿಧಿಸಲು ಕೇಂದ್ರ ಸರ್ಕಾರ ಕ್ರಮ ಕೈಗೊಂಡಿದೆ ಎಂದು ವಿವರಿಸಿದರು. ಆದರೆ ಈ ಹಂತದಲ್ಲಿ ಕ್ಷಮೆಯನ್ನು ಒಪ್ಪಿಕೊಳ್ಳಲು ಅಸಾಧ್ಯ ಎಂದು ಸುಪ್ರೀಂಕೋರ್ಟ್ ಸ್ಪಷ್ಟಪಡಿಸಿತು. ಆದರೆ ಇದು ಸಂಸ್ಥೆಯ ಗೌರವವನ್ನು ಕೆಡಿಸಲು ಅಥವಾ ಘನತೆಗೆ ಧಕ್ಕೆ ತರಲು ನಡೆಸಿದ ಪ್ರಯತ್ನವೇ ಎಂಬ ಬಗ್ಗೆ ತನಿಖೆ ನಡೆಸಲಾಗುತ್ತದೆ ಎಂದು ಹೇಳಿತು. ಜತೆಗೆ ಪುಸ್ತಕದ ಹಾರ್ಡ್ಕಾಪಿ ಹಾಗೂ ಸಾಫ್ಟ್ಕಾಪಿ ಸೇರಿದಂತೆ ಎಲ್ಲವನ್ನೂ ಸಾರ್ವಜನಿಕರಿಗೆ ಲಭ್ಯವಾಗದಂತೆ ಕಿತ್ತುಹಾಕಬೇಕು ಎಂದು ಆದೇಶಿಸಿತು. ಅವಿವೇಕದಿಂದ ಗುಂಡು ಹೊಡೆಯಲಾಗಿದ್ದು, ನ್ಯಾಯಾಂಗದ ರಕ್ತ ಸೋರಿಕೆಯಾಗುತ್ತಿದೆ. ವಿದ್ಯಾರ್ಥಿಗಳಿಗೆ, ಅವರ ಪೋಷಕರಿಗೆ ಹಾಗೂ ಇಡೀ ಸಮಾಜಕ್ಕೆ ಭ್ರಷ್ಟಾಚಾರದ ಬಗ್ಗೆ ತಿಳಿಸುವ ಮೂಲಕ ನ್ಯಾಯಾಂಗದ ಘನತೆಗೆ ಧಕ್ಕೆ ತರುವ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದೆ. ಸಂಸ್ಥೆಯ ಮುಖ್ಯಸ್ಥರಾಗಿ ಸಂಸ್ಥೆಯನ್ನು ರಕ್ಷಿಸುವುದು ನನ್ನ ಕರ್ತವ್ಯ ಎಂದು ಸಿಜೆಐ ಸ್ಪಷ್ಟಪಡಿಸಿದರು.
ನಾಳೆಯಿಂದ (ಫೆ.28) ದ್ವಿತೀಯ ಪಿಯು ಎಕ್ಸಾಂ : ಪರೀಕ್ಷೆಗೆ ಮೊದಲೇ ಐದು ಮಾದರಿ ಪ್ರಶ್ನೆ ಪತ್ರಿಕೆ ಅಭ್ಯಾಸ!
ದೇಶದಲ್ಲೇ ಇತರ ರಾಜ್ಯಗಳಿಗೆ ಹೋಲಿಸಿದ್ರೆ ಕರ್ನಾಟಕದ ಪಿಯು ಉತ್ತೀರ್ಣತೆಯ ಸ್ಥಾನ 26 ರಲ್ಲಿದ್ದು, ಇದನ್ನು 10 ರೊಳಗೆ ತರುವ ಎಲ್ಲಾ ಪ್ರಯತ್ನ ನಡೆಸಲಾಗುತ್ತಿದೆ. ಮಾದರಿ ಪ್ರಶ್ನೆ ಪತ್ರಿಕೆಗಳನ್ನು ನೀಡಿ ಪೂರ್ವ ಸಿದ್ಧತಾ ಪರೀಕ್ಷೆಗಳನ್ನೂ ನಡೆಸಲಾಗಿದೆ.
ಸ್ಟ್ರೈಕ್ ರೇಟ್ ಸಮಸ್ಯೆ ಇನ್ನಿಲ್ಲ: ಝಿಂಬಾಬ್ವೆ ವಿರುದ್ಧ ಪಂದ್ಯದಲ್ಲಿ ದಾಖಲೆ ಪುಡಿಗಟ್ಟಿದ ಭಾರತ
ಹೊಸದಿಲ್ಲಿ: ಗುರುವಾರ ರಾತ್ರಿ ನಡೆದ ಜಿಂಬಾಬ್ವೆ ವಿರುದ್ಧದ ಪಂದ್ಯದಲ್ಲಿ ಭಾರತ ತಂಡ ಟಿ20 ವಿಶ್ವಕಪ್ ಇತಿಹಾಸದಲ್ಲೇ ಅತ್ಯುತ್ತಮ ಸರ್ವಾಂಗೀಣ ಪ್ರದರ್ಶನ ನೀಡಿದೆ. ಜಿಂಬಾಬ್ವೆ ವಿರುದ್ಧ ಗಳಿಸಿರುವ 256 ರನ್ಗಳು ಟೂರ್ನಿಯಲ್ಲಿ ಯಾವುದೇ ತಂಡ ಗಳಿಸಿದ ಗರಿಷ್ಠ ಮೊತ್ತವಾಗಿದೆ. 17 ಸಿಕ್ಸರ್ಗಳ ನೆರವಿನಿಂದ ಭಾರತ ಬೃಹತ್ ಮೊತ್ತ ಕಲೆಹಾಕಿತ್ತು. ಇದರಿಂದ 2025ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಗ್ರೋಸ್ ಇಸ್ಲೆಟ್ನಲ್ಲಿ ಗಳಿಸಿದ್ದ 17 ಸಿಕ್ಸರ್ಗಳ ದಾಖಲೆಯನ್ನು ಸರಿಗಟ್ಟಿದಂತಾಗಿದೆ. ಇತೆಗೆ ಭಾರತ ಈ ಟೂರ್ನಿಯಲ್ಲಿ 63 ಸಿಕ್ಸರ್ಗಳನ್ನು ಸಿಡಿಸಿದ್ದು, ಒಂದೇ ವಿಶ್ವಕಪ್ನಲ್ಲಿ ಭಾರತ ಸಿಡಿಸಿದ ಗರಿಷ್ಠ ಸಂಖ್ಯೆಯ ಸಿಕ್ಸರ್ ಇದಾಗಿದೆ. ಕೇವಲ ವೆಸ್ಟ್ಇಂಡೀಸ್ ಮಾತ್ರ 66 ಸಿಕ್ಸರ್ಗಳನ್ನು ಸಿಡಿಸಿ ಒಟ್ಟಾರೆಯಾಗಿ ಭಾರತದಿಂದ ಮುಂದಿದೆ. ಎಲ್ಲಕ್ಕಿಂತ ಹೆಚ್ಚಾಗಿ ಭಾರತ ತಂಡ ಸಂಘಟಿತ ಪ್ರದರ್ಶನ ನೀಡಿತು. ಎಲ್ಲ ಆರು ಮಂದಿ ಬ್ಯಾಟ್ಸ್ಮನ್ಗಳ ಸ್ಟ್ರೈಕ್ರೇಟ್ 150ಕ್ಕಿಂತ ಅಧಿಕವಾಗಿತ್ತು. ಟಿ20 ವಿಶ್ವಕಪ್ ಇತಿಹಾಸದಲ್ಲೇ ಮೊದಲ ಬಾರಿಗೆ ಆರು ಅಥವಾ ಆರಕ್ಕಿಂತ ಹೆಚ್ಚು ಆಟಗಾರರು 20ಕ್ಕೂ ಅಧಿಕ ರನ್ ಗಳಿಸಿ ವೇಗವನ್ನು ಕಾಯ್ದುಕೊಂಡರು. 20 ಓವರ್ಗಳಲ್ಲಿ ಕೇವಲ 26 ಡಾಟ್ಬಾಲ್ಗಳು ಮಾತ್ರ ಇದ್ದವು. ಇದು ಟೂರ್ನಿಯಲ್ಲಿ ಯಾವುದೇ ತಂಡದ ಕನಿಷ್ಠ ಡಾಟ್ಬಾಲ್ಗಳಾಗಿವೆ. ಆರಂಭದಿಂದ ಎದುರಾಳಿಗಳ ವಿರುದ್ಧದ ಒತ್ತಡವನ್ನು ಭಾರತ ಪಂದ್ಯದುದ್ದಕ್ಕೂ ಕಾಪಾಡಿಕೊಂಡು ಬಂದಿತು. ಅಭಿಷೇಕ್ ಶರ್ಮಾ ಆಟದ ಲಯ ಕಂಡುಕೊಂಡಿದ್ದಾರೆ. ಅನಾರೋಗ್ಯದಿಂದ ವಾಪಸ್ಸಾಗಿರುವ ಶರ್ಮಾ ಮೂರು ಬಾರಿ ಶೂನ್ಯ ಗಳಿಸಿದ ಬಳಿಕ ಮೊದಲ ಬಾರಿಗೆ 26 ಎಸೆತಗಳಲ್ಲಿ ಅರ್ಧಶತಕ ಸಿಡಿಸಿ ಭಾರತಕ್ಕೆ ಭರ್ಜರಿ ಆರಂಭ ಒದಗಿಸಿದರು. ಸಂಜು ಸ್ಯಾಮ್ಸನ್ ಕೂಡಾ ಸರಾಗವಾಗಿ ಬ್ಯಾಟ್ ಬೀಸಿದರು. ಇಷಾನ್ ಕಿಶನ್, ಹಾರ್ದಿಕ್ ಪಾಂಡ್ಯ ಮತ್ತು ತಿಲಕ್ ವರ್ಮಾ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಪಾಂಡ್ಯ ಅಜೇಯ ಅರ್ಧಶತಕ ದಾಖಲಿಸಿದರೆ, ಸ್ಟ್ರೈಕ್ ರೇಟ್ ಸಮಸ್ಯೆ ಎದುರಿಸುತ್ತಿದ್ದ ತಿಲಕ್ ವರ್ಮಾ 16 ಎಸೆತಗಳಲ್ಲಿ 44 ರನ್ ಗಳಿಸಿ 275 ಸ್ಟ್ರೈಕ್ರೇಟ್ ದಾಖಲಿಸಿದರು. ಕೊನೆಯ ಐದು ಓವರ್ಗಳಲ್ಲಿ 80 ರನ್ ಸಿಡಿಸುವ ಮೂಲಕ ಜಿಂಬಾಬ್ವೆ ತಂಡಕ್ಕೆ ನಿಲುಕಲು ಅಸಾಧ್ಯ ಎನಿಸಿದ ಗುರಿ ನಿಗದಿಪಡಿಸಿತು. ಪ್ರತ್ಯುತ್ತರ ನೀಡಿದ ಜಿಂಬಾಬ್ವೆ ಪರ ಬ್ರಿಯಾನ್ ಬೆನಟ್ (ಅಜೇಯ 97) ಏಕಾಂಗಿ ಹೋರಾಟ ನಡೆಸಿದರು.
Gold rate: ಮತ್ತೆ ಕುಸಿತ ಕಂಡ ಚಿನ್ನ, ಬೆಳ್ಳಿ ದರ; ಇಲ್ಲಿದೆ ಬೆಂಗಳೂರಿನಲ್ಲಿ ಫೆಬ್ರವರಿ 27ರ ದರ ವಿವರ
ಜಾಗತಿಕ ಮಾರುಕಟ್ಟೆಯ ಏರಿಳಿತಗಳು ಹಾಗೂ ಅಮೆರಿಕದ ಆರ್ಥಿಕ ನೀತಿಗಳ ಪರಿಣಾಮವಾಗಿ ಇಂದು (ಫೆಬ್ರವರಿ 27, 2026) ಹಳದಿ ಲೋಹದ ಬೆಲೆಯಲ್ಲಿ ಕೊಂಚ ಬದಲಾವಣೆಯಾಗಿದೆ. ಆಭರಣ ಪ್ರಿಯರು ಹಾಗೂ ಹೂಡಿಕೆದಾರರು ಪ್ರತಿದಿನ ಮಾರುಕಟ್ಟೆಯತ್ತ ಕಣ್ಣಿಟ್ಟಿರುತ್ತಾರೆ. ವಿಶೇಷವಾಗಿ, ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ ಇಂದು ಗ್ರಾಹಕರಿಗೆ ಕೊಂಚ ನಿರಾಳತೆ ತಂದಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಡಾಲರ್ ಮೌಲ್ಯ ಬಲಗೊಂಡಿರುವುದು ಹಾಗೂ ಎಂಸಿಎಕ್ಸ್
ಉತ್ತರ ಕನ್ನಡ: ಮಲೆನಾಡು ಹಾಗೂ ಉತ್ತರ ಕರ್ನಾಟಕ ಭಾಗಕ್ಕೆ ಪ್ರಮುಖ ಸಂಪರ್ಕ ಕೊಂಡಿಯಾದ ಉತ್ತರ ಕನ್ನಡ-ಶಿರಸಿ ರಸ್ತೆಯು ಈಗ ವಾಹನ ಸವಾರರ ಪಾಲಿಗೆ ನರಕಸದೃಶವಾಗಿ ಪರಿಣಮಿಸಿದೆ. ಸುಸಜ್ಜಿತವಾಗಿರಬೇಕಾದ ಈ ಹೆದ್ದಾರಿಯು ಸಂಪೂರ್ಣವಾಗಿ ಕೆಸರು ಗದ್ದೆಯಂತಾಗಿದ್ದು, ಸರ್ಕಾರದ ನಿರ್ಲಕ್ಷ್ಯದ ವಿರುದ್ಧ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಜಿಲ್ಲೆಯ ಶಿರಸಿ ಭಾಗದ
ಬೆಂಗಳೂರು ಮಗ್ಗುಲಲ್ಲೇ ಇರುವ ರಾಮನಗರದಲ್ಲಿ ಇತ್ತೀಚಿನ ವರ್ಷಗಳಲ್ಲಿ ಮಾದಕ ವಸ್ತಗಳ ಪೂರೈಕೆಯ ಕೇಂದ್ರವಾಗಿ, ಅಲ್ಲದೆ ಬೆಂಗಳೂರಿಂದ ಬರುವ ಪ್ರವಾಸಿಗರಿಗೆ ಡ್ರಗ್ಸ್ ಹಾಟ್ಸ್ಪಾಟ್ ಆಗಿ ಬದಲಾಗುತ್ತಿದೆ. ಪೊಲೀಸರು ಮಾದಕ ವಸ್ತುಗಳ ನಿಯಂತರಣಕ್ಕೆ ಹದ್ದಿನ ಕಣ್ಣಿಟ್ಟಿದ್ದಾರೆ.
Karnataka Rain: ಕೊಡಗು, ಮೈಸೂರು ಸೇರಿ ಈ ಜಿಲ್ಲೆಗಳಲ್ಲಿ ಇಂದು ಮಳೆ ಮುನ್ಸೂಚನೆ
ಬೆಂಗಳೂರು: ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಕಳೆದ 24 ಗಂಟೆಗಳಲ್ಲಿ ಸಾಧಾರಣ ಮಳೆಯಾಗಿದ್ದು, ಹವಾಮಾನದಲ್ಲಿ ಏರುಪೇರು ಕಂಡುಬಂದಿದೆ. ಪ್ರಮುಖವಾಗಿ ಮಲೆನಾಡು ಮತ್ತು ದಕ್ಷಿಣ ಒಳನಾಡಿನ ಕೆಲವು ಭಾಗಗಳಲ್ಲಿ ವರ್ಷಧಾರೆಯಾಗಿದೆ. ದಕ್ಷಿಣ ಒಳನಾಡಿನಲ್ಲಿ ಕಂಡುಬಂದಿರುವ ಚಂಡಮಾರುತದ ಸುಳಿಗಾಳಿ ಹಾಗೂ ಕರ್ನಾಟಕದಿಂದ ಮಹಾರಾಷ್ಟ್ರದವರೆಗಿನ ವಾಯುಭಾರ ಕುಸಿತದ ಪ್ರಭಾವದಿಂದಾಗಿ ಕೊಡಗು, ಮೈಸೂರು ಮತ್ತು ಹಾಸನ ಜಿಲ್ಲೆಗಳ ಕೆಲವು ಭಾಗಗಳಲ್ಲಿ ಇಂದು ಗುಡುಗು ಸಹಿತ
ಮತ್ತೆ ಪಾಕಿಸ್ತಾನ-ಅಫ್ಘಾನಿಸ್ತಾನ ಸಂಘರ್ಷ; ತಾಲಿಬಾನ್ ವಿರುದ್ಧ ಆಪರೇಷನ್ ಗಜಬ್-ಲಿಲ್-ಹಕ್ ಆರಂಭಿಸಿದ ಪಾಕ್ ಸೇನೆ!
ಒಂದು ಕಾಲದಲ್ಲಿ ಒಬ್ಬರನ್ನೊಬ್ಬರು ಬಿಟ್ಟಿರಲು ಆಗದಂತ ಸ್ನೇಹಿತರಾಗಿದ್ದ ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ಈಗ ಪರಸ್ಪರರನ್ನು ಕಂಡರಾಗದ ಪರಿಸ್ಥಿತಿಗೆ ತಲುಪಿವೆ. ಉಭಯ ರಾಷ್ಟ್ರಗಳ ನಡುವಿನ ಗಡಿ ಸಂಘರ್ಷ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದು, ಪಾಕಿಸ್ತಾನವು ಈಗ ತಾಲಿಬಾನ್ ವಿರುದ್ಧ ಓಪನ್ ವಾರ್ ಘೋಷಣೆ ಮಾಡಿದೆ. ಆಪರೇಷನ್ ಗಜಬ್-ಲಿಲ್-ಹಕ್ ಅಡಿ ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್ ಮೇಲೆ ಭಾರೀ ವೈಮಾನಿಕ ದಾಳಿ ನಡೆಸಲಾಗಿದೆ. ಏನಿದು ಆಪರೇಷನ್ ಗಜಬ್-ಲಿಲ್-ಹಕ್? ಹೊಸ ಘರ್ಷಣೆಗೆ ಕಾರಣಗಳೇನು? ಇಲ್ಲಿದೆ ಸಂಪೂರ್ಣ ಮಾಹಿತಿ.
ವಲಸೆ ಕಾರ್ಮಿಕರಿಗೆ ದೊಡ್ಡಬಳ್ಳಾಪುರದ ಶ್ರಮಿಕ ಭವನ ಆಸರೆ; ವಸತಿಗಾಗಿ ಏನೆಲ್ಲಾ ದಾಖಲೆಗಳು ಬೇಕು?
ದೇಶ ಕಟ್ಟುವ ಕಾಯಕದಲ್ಲಿ ನಿರತವಾಗಿರುವ ಕಾರ್ಮಿಕ ವರ್ಗ ಸ್ವಾಭಿಮಾನದ ಬದುಕನ್ನು ಇಷ್ಟಪಡುತ್ತದೆ. ದುಡಿಯುವ ಕೈಗಳನ್ನು ಬಲಪಡಿಸಲು ಸರ್ಕಾರಗಳು ಕೂಡ ಕಾರ್ಮಿಕರಿಗಾಗಿ ಅನೇಕ ಯೋಜನೆಗಳನ್ನು ಘೋಷಿಸುತ್ತವೆ. ಈ ಪೈಕಿ ಶ್ರಮಿಕ ಭವನ ಕೂಡ ವಲಸೆ ಕಾರ್ಮಿಕರಿಗೆ ಆಸರೆಯಾಗಿವೆ. ದೊಡ್ಡಬಳ್ಳಾಪುರದಲ್ಲಿರುವ ಶ್ರಮಿಕ ಭವನವು ಸುಮಾರು 1,320 ಕಾರ್ಮಿಕರಿಗೆ ವಸತಿ ಸೌಲಭ್ಯ ಕಲ್ಪಿಸುವ ಸಾಮರ್ಥ್ಯ ಹೊಂದಿದ್ದು, ಅನ್ಯ ರಾಜ್ಯಗಳಿಂದ ಸಾಕಷ್ಟು ಸಂಖ್ಯೆಯಲ್ಲಿ ಬಂದಿರುವ ಕಟ್ಟಡ ಕಾರ್ಮಕರಿಗೆ ವಸತಿ ಸೌಲಭ್ಯ ಒದಗಿಸಿದೆ. ಇಲ್ಲಿದೆ ಹೆಚ್ಚಿನ ಮಾಹಿತಿ.
Chamarajanagar | ವಿದ್ಯುತ್ ಸ್ಪರ್ಶಿಸಿ ಕೂಲಿ ಕಾರ್ಮಿಕ ಸ್ಥಳದಲ್ಲೇ ಮೃತ್ಯು; ಇಬ್ಬರಿಗೆ ಗಾಯ
ಚಾಮರಾಜನಗರ : ಕಟ್ಟಡ ಕಾಮಗಾರಿ ನಡೆಯುವ ವೇಳೆ ವಿದ್ಯುತ್ ತಂತಿ ತಗುಲಿ ಕಾರ್ಮಿಕನೊಬ್ಬ ಸಾವನ್ನಪ್ಪಿದ್ದು, ಇನ್ನಿಬ್ಬರು ಕಾರ್ಮಿಕರು ಗಾಯಗೊಂಡಿರುವ ಘಟನೆ ಚಾಮರಾಜನಗರ ಸಮೀಪದ ರಾಮಸಮುದ್ರದಲ್ಲಿ ವರದಿಯಾಗಿದೆ. ಚಾಮರಾಜನಗರ ರಾಮಸಮುದ್ರದ ಕುಲುಮೆ ರಸ್ತೆಯಲ್ಲಿ ಕಟ್ಟಡ ಕಾಮಗಾರಿ ನಡೆಯುವಾಗ ಕಾಲಾವಧಿ ಹಾಕಿಕೊಂಡು ಮೊದಲ ಮಹಡಿಗೆ ಗಾರೆ ಕೆಲಸ ಮಾಡುವಾಗ ನಾಗಣ್ಣ (40) ಎಂಬ ಕಾರ್ಮಿಕನಿಗೆ ಮನೆಯ ಮುಂದೆ ಹಾದು ಹೋಗಿದ್ದ ವಿದ್ಯುತ್ ತಂತಿಸ್ಪರ್ಶವಾಗಿ ಸ್ಥಳದಲ್ಲೇ ಮೃತಪಟ್ಟರು ಎಂದು ಗೊತ್ತಾಗಿದ್ದು, ನಾಗೇಂದ್ರ ಹಾಗೂ ವಿಷಕಂಠ ಎಂಬವರಿಗೆ ಗಾಯವಾಗಿದ್ದು, ಗಾಯಗೊಂಡ ಕಾರ್ಮಿಕರನ್ನು ಸಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸಿಮ್ಸ್ ಆಸ್ಪತ್ರೆಗೆ ಚೆಸ್ಕಾಂ ಅಧಿಕಾರಿಗಳು ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದರು. ಘಟನೆಗೆ ಸಂಬಂಧಪಟ್ಟಂತೆ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Khanapur | ಅನ್ನಭಾಗ್ಯ ಅಕ್ಕಿ ಅಕ್ರಮ ಸಾಗಣೆ: ಆರೋಪಿ ಬಂಧನ
ಖಾನಾಪುರ: ಸರಕಾರದ ಅನ್ನಭಾಗ್ಯ ಯೋಜನೆಯಡಿ ವಿತರಿಸಲಾದ 232 ಕೆ.ಜಿ ಅಕ್ಕಿಯನ್ನು ಅಕ್ರಮವಾಗಿ ಕಾಳಸಂತೆಗೆ ಸಾಗಣೆ ಮಾಡುತ್ತಿದ್ದ ಆರೋಪದ ಮೇಲೆ ಖಾನಾಪುರದ ಅಜಾಜ್ ಸಿಕಂದರ ಶಿರಸಂಗಿ (25) ಅವರನ್ನು ಪೊಲೀಸರು ಬಂಧಿಸಿದ್ದಾರೆ. ಪಟ್ಟಣದಿಂದ ಬೆಳಗಾವಿ ಕಡೆಗೆ ಅಕ್ಕಿ ಸಾಗಣೆ ಮಾಡಲಾಗುತ್ತಿತ್ತು. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು ಅಕ್ಕಿ ಮೂಟೆಗಳನ್ನು ವಶಕ್ಕೆ ಪಡೆದಿದ್ದಾರೆ.
NCERT ಅಧ್ಯಾಯ ತೆಗೆದರೂ ತಣ್ಣಗಾಗದ ಸುಪ್ರೀಂ ಕೋರ್ಟ್; 8ನೇ ತರಗತಿಯ ವಿವಾದಿತ ಪಠ್ಯಪುಸ್ತಕಕ್ಕೆ ಸಂಪೂರ್ಣ ನಿಷೇಧ
Supreme Court Of India On NCERT Controversial Text- ನ್ಯಾಯ ವ್ಯವಸ್ಥೆಯಲ್ಲಿ ಭ್ರಷ್ಟಾಚಾರದ ಉಲ್ಲೇಖವಿರುವ 8ನೇ ತರಗತಿಯ ಸಮಾಜ ವಿಜ್ಞಾನ ಪಠ್ಯಪುಸ್ತಕದ ವಿವಾದಿತ ಅಧ್ಯಾಯವನ್ನು ತೆಗೆದುಹಾಕುವುದಾಗಿ ರಾಷ್ಟ್ರೀಯ ಪ್ರೌಢ ಶಿಕ್ಷಣ ಮಂಡಳಿ ವಿನಂತಿಸಿದರೂ ಸುಪ್ರೀಂ ಕೋರ್ಟ್ ಸಮಾಧಾನಗೊಂಡಿಲ್ಲ. ಗುರುವಾರ ವಿಚಾರಣೆ ನಡೆಸಿದ ಸಿಜೆಐ ಸೂರ್ಯಕಾಂತ್ ಅವರು ವಿವಾದಿತ ಪಠ್ಯಪುಸ್ತಕವನ್ನೇ ಸಂಪೂರ್ಣವಾಗಿ ನಿಷೇಧಿಸಿದ್ದಾರೆ. ಈಗಾಗಲೇ ಮುದ್ರಿತವಾಗಿರುವ ಪಠ್ಯ ಪುಸ್ತಕವನ್ನು ಹಿಂದಕ್ಕೆ ಪಡೆಯುವಂತೆ, ಜೊತೆಗೆ ಸಾರ್ವಜನಿಕರಿಗೆ ಲಭ್ಯ ಆಗದಂತೆ ಕ್ರಮ ಕೈಗೊಳ್ಳಬೇಕು ಎಂದೂ ಆದೇಶಿಸಿದ್ದಾರೆ.
ಪಿಯುಸಿ ಪ್ರಶ್ನೆಪತ್ರಿಕೆ ಮಾರಾಟ ಆರೋಪ | ಸುಳ್ಳು ಸುದ್ದಿ ಹರಡುವವರ ವಿರುದ್ಧ ಕಾನೂನು ಕ್ರಮ : ಎಚ್ಚರಿಕೆ
ಬೆಂಗಳೂರು, ಫೆ.17 : ಸುದ್ದಿ ಮಾಧ್ಯಮಗಳಲ್ಲಿ ‘ದ್ವಿತೀಯ ಪಿಯುಸಿ ಪ್ರಶ್ನೆಪತ್ರಿಕೆ ಮಾರಾಟವಾಗುತ್ತಿದೆ’ ಎಂದು ಪ್ರಚುರಪಡಿಸಲಾಗಿದೆ. ಈ ಮಾಹಿತಿಯನ್ನು ಪರಿಶೀಲಿಸಲಾಗಿದ್ದು, ಯಾವುದೇ ಪೂರಕ ಪುರಾವೆಗಳು ಇರುವುದಿಲ್ಲ. ಇಂತಹ ಸುಳ್ಳು ಸುದ್ದಿ ಹರಡುವವರನ್ನು ಗುರುತಿಸಿ, ಕಾನೂನಾತ್ಮಕ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂದು ಕರ್ನಾಟಕ ಶಾಲಾ ಶಿಕ್ಷಣ ಮತ್ತು ಮೌಲ್ಯ ನಿರ್ಣಯ ಮಂಡಳಿ ಎಚ್ಚರಿಕೆ ನೀಡಿದೆ. ಪಿಯುಸಿ ಪ್ರಶ್ನೆಪತ್ರಿಕೆ ಮಾರಾಟ ಎಂಬುದು ತಪ್ಪು ಮಾಹಿತಿಯಾಗಿದ್ದು, ವಿದ್ಯಾರ್ಥಿಗಳನ್ನು ಸಾಮಾಜಿಕ ಜಾಲತಾಣಗಳ ಮೂಲಕ ದಾರಿ ತಪ್ಪಿಸುವ ಹುನ್ನಾರವಾಗಿದೆ. ಸಾರ್ವಜನಿಕರು, ಪಾಲಕ-ಪೋಷಕರು ಇಂತಹ ವದಂತಿಗಳಿಗೆ ಮಹತ್ವ ನೀಡದೆ, ತಮ್ಮ ಮಕ್ಕಳನ್ನು ಏಕಾಗ್ರತೆಯಿಂದ ಪರೀಕ್ಷಾ ಸಿದ್ಧತೆಗೆ ಪ್ರೋತ್ಸಾಹಿಸಬೇಕು ಎಂದು ತಿಳಿಸಿದೆ. ಈಗಾಗಲೇ ಮಂಡಳಿಯ ಜಾಲತಾಣ kseeb.karnataka.gov.in ನಲ್ಲಿ ಮಕ್ಕಳ ಪರೀಕ್ಷಾ ಸಿದ್ಧತೆಗಾಗಿ ಅಗತ್ಯವಾಗಿರುವ ಸಮಗ್ರ ಮಾಹಿತಿಯನ್ನು ವಿದ್ಯಾರ್ಥಿಗಳ ಅಂಕಣದಲ್ಲಿ ಒದಗಿಸಲಾಗಿದೆ. ಪ್ರಶ್ನೆಪತ್ರಿಕೆಯ ನೀಲಿನಕ್ಷೆ ಅಂದರೆ ವಿಷಯವಾರು, ಅಧ್ಯಾಯವಾರು ಅಂಕಗಳ ಹಂಚಿಕೆಯ ಮಾಹಿತಿ, ಮಾದರಿ ಪ್ರಶ್ನೆಪತ್ರಿಕೆ, ಹಿಂದಿನ ವರ್ಷದ ಪ್ರಶ್ನೆ ಪತ್ರಿಕೆ, ಮಾದರಿ ಉತ್ತರಗಳು, ಹಿಂದಿನ ವರ್ಷದಲ್ಲಿ ಶೇಕಡಾ 100 ಅಂಕ ಪಡೆದ ಉತ್ತರ ಪತ್ರಿಕೆಗಳನ್ನು ಜಾಲತಾಣದಲ್ಲಿ ಪ್ರಕಟಿಸಲಾಗಿದೆ. ಈ ಮೇಲಿನ ಮಾಹಿತಿಯನ್ನು ಸದುಪಯೋಗಪಡಿಸಿಕೊಳ್ಳಲು ಹಾಗೂ ಸುಳ್ಳು ಸುದ್ದಿಗಳ ಆಮಿಷಗಳಿಗೆ ಒಳಗಾಗಿ ತಪ್ಪು ದಾರಿ ಹಿಡಿದು ಮೋಸಹೋಗಬಾರದು ಎಂದು ಮಂಡಳಿಯು ಪ್ರಕಟನೆಯಲ್ಲಿ ತಿಳಿಸಿದೆ.
ಮಾ.2ರ ಸಾರಿಗೆ ಕಾರ್ಮಿಕರ ಧರಣಿ ಮುಂದೂಡಿಕೆ : ಸಾರಿಗೆ ಕಾರ್ಮಿಕರ ಜಂಟಿ ಕ್ರಿಯಾ ಸಮಿತಿ
ಬೆಂಗಳೂರು, ಫೆ.26 : ಮಾ.2ರಂದು ನಡೆಸಲು ನಿರ್ಧರಿಸಲಾಗಿದ್ದ ಸಾರಿಗೆ ಕಾರ್ಮಿಕರ ಧರಣಿಯನ್ನು ಮುಂದೂಡಲಾಗಿದೆ ಎಂದು ಕರ್ನಾಟಕ ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ತಿಳಿಸಿದೆ. ಗುರುವಾರ ಈ ಕುರಿತು ಪ್ರಕಟನೆ ನೀಡಿರುವ ಜಂಟಿ ಕ್ರಿಯಾ ಸಮಿತಿ, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರನ್ನು ಕೆಎಸ್ಸಾರ್ಟಿಸಿ ಕೇಂದ್ರ ಕಚೇರಿಯಲ್ಲಿ ಭೇಟಿ ಮಾಡಿ ಸಾರಿಗೆ ನಿಗಮಗಳ ನೌಕರರ ಬೇಡಿಕೆಗಳನ್ನು ಭಾಗಶಃ ಈಡೇರಿಸಿರುವ ಕಾರಣಕ್ಕೆ ಅಭಿನಂದಿಸಿ, ಉಳಿದ ಬಾಕಿ ಮೊತ್ತ ಹಾಗೂ 2024ರ ಜ.1ರಿಂದ ವೇತನ ಪರಿಷ್ಕರಣೆಯ ವಿಷಯದಲ್ಲಿ ಮನವಿ ಸಲ್ಲಿಸಲಾಯಿತು. ಹಾಗೂ ಕೆಎಸ್ಸಾರ್ಟಿಸಿ ವ್ಯವಸ್ಥಾಪಕ ನಿರ್ದೇಶಕರ ಅಧ್ಯಕ್ಷತೆಯಲ್ಲಿ ಸಭೆ ನಿಗದಿ ಪಡಿಸುವಂತೆ ವಿನಂತಿಸಿದ್ದು, ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿ, ಮಾ.2ರ ಮಧ್ಯಾಹ್ನ ಸಭೆ ನಿಗದಿಪಡಿಸಿದ್ದಾರೆ ಎಂದು ತಿಳಿಸಿದೆ. ಆದ್ದರಿಂದ ಗುರುವಾರ ಸಂಜೆ ನಡೆದ ಜಂಟಿ ಕ್ರಿಯಾ ಸಮಿತಿಯ ಸಭೆಯಲ್ಲಿ ಮಾ.2ರಿಂದ ಬೆಂಗಳೂರಿನಲ್ಲಿ ಪ್ರತಿ ಎರಡು ವಿಭಾಗಗಳ ಕಾರ್ಯಕರ್ತರು ಭಾಗವಹಿಸಿ ನಡೆಸಲು ಉದ್ದೇಶಿಸಿದ್ದ ಪ್ರತಿಭಟನಾ ಧರಣಿ ಸತ್ಯಾಗ್ರಹವನ್ನು ಮುಂದೂಡಲಾಗಿದೆ ಎಂದು ತಿಳಿಸಿದೆ.
Halebeedu | ʼಜೀತ ಪದ್ಧತಿʼ ಇನ್ನೂ ಜೀವಂತ; 18 ಕಾರ್ಮಿಕರ ರಕ್ಷಣೆ
ಬೇಲೂರು : ರಾಜ್ಯದಲ್ಲಿ ಅನಿಷ್ಟ ಜೀತ ಪದ್ಧತಿ ಇನ್ನೂ ಜೀವಂತವಾಗಿದೆ ಎಂಬುದಕ್ಕೆ ತಾಲೂಕಿನ ಹಳೇಬೀಡು ಹೋಬಳಿಯ ಚಟ್ಟಹಳ್ಳಿಯಲ್ಲಿ ಕಾರ್ಮಿಕರನ್ನು ಕೂಡಿಹಾಕಿದ್ದ ಘಟನೆ ಸಾಕ್ಷಿಯಾಗಿದೆ. ಸುದ್ದಿ ತಿಳಿದ ಪೊಲೀಸರು, 18ಕ್ಕೂ ಹೆಚ್ಚು ಕಾರ್ಮಿಕರನ್ನು ರಕ್ಷಿಸಿದ್ದಾರೆ. ಹೊರ ರಾಜ್ಯ ಹಾಗೂ ಹೊರ ಜಿಲ್ಲೆಗಳಿಂದ ಶುಂಠಿ ಕೆಲಸಕ್ಕೆಂದು ಕರೆತರಲಾಗಿದ್ದ ಈ ಕಾರ್ಮಿಕರನ್ನು ಮಾಲಕ ನಾಗರಾಜ್ ಎಂಬಾತ ಕೂಡಿಹಾಕಿ ದುಡಿಸಿಕೊಳ್ಳುತ್ತಿದ್ದ ಎನ್ನಲಾಗಿದೆ. ಇವರಿಗೆ ಯಾವುದೇ ಹಣ ನೀಡದೆ, ಕೆಲಸ ಮುಗಿದ ನಂತರ ಒಂದೇ ಜಾಗದಲ್ಲಿ ಲಾಕ್ ಮಾಡಲಾಗುತ್ತಿತ್ತು. ಹೊರಗಡೆ ಹೋಗಲು ಯಾವುದೇ ಅವಕಾಶ ಇರಲಿಲ್ಲ ಎನ್ನಲಾಗಿದೆ. ಪೊಲೀಸರು ದಾಳಿ ನಡೆಸಿದಾಗ, ಆರೋಪಿ ನಾಗರಾಜ್ ಸ್ಥಳದಿಂದ ತಪ್ಪಿಸಿಕೊಂಡಿದ್ದಾನೆ. ಆತನ ಪತ್ತೆಗಾಗಿ ಬಲೆ ಬೀಸಲಾಗಿದ್ದು, ರಕ್ಷಿಸಲ್ಪಟ್ಟ ಕಾರ್ಮಿಕರು ತಾವು ಅನುಭವಿಸಿದ ಕಷ್ಟಗಳನ್ನು ಬಿಚ್ಚಿಟ್ಟಿದ್ದಾರೆ
500ಕ್ಕೂ ಹೆಚ್ಚು ಒಬಿಸಿ ಅಭ್ಯರ್ಥಿಗಳಿಗೆ ಉಚಿತ ಯುಪಿಎಸ್ಸಿ ತರಬೇತಿ : ಸಚಿವ ಶಿವರಾಜ್ ಎಸ್.ತಂಗಡಗಿ
ಬೆಂಗಳೂರು: ಫೆ. 26 ಯುಪಿಎಸ್ಸಿ ಪರೀಕ್ಷೆಯಲ್ಲಿ ರಾಜ್ಯದ ಹಿಂದುಳಿದ ಸಮುದಾಯದ ಅಭ್ಯರ್ಥಿಗಳು ಉತ್ತಮ ಸಾಧನೆ ಮಾಡಿದರೆ ಭವಿಷ್ಯದಲ್ಲಿ 500ಕ್ಕಿಂತ ಹೆಚ್ಚು ಅಭ್ಯರ್ಥಿಗಳಿಗೆ ಇಲಾಖೆ ವತಿಯಿಂದ ಉಚಿತ ವಸತಿ ಸಹಿತ ತರಬೇತಿ ಕೊಡಿಸಲಾಗುವುದು ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಶಿವರಾಜ್ ಎಸ್.ತಂಗಡಗಿ ಭರವಸೆ ನೀಡಿದ್ದಾರೆ. ಗುರುವಾರ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ನಗರದಲ್ಲಿ ಹಿಂದುಳಿದ ಸಮುದಾಯದ ಅಭ್ಯರ್ಥಿಗಳಿಗೆ ನೀಡಲಾಗುವ ‘ಉಚಿತ ವಸತಿ ಸಹಿತ ಐಎಎಸ್ ಮತ್ತು ಕೆಎಎಸ್ ತರಬೇತಿ ಕೇಂದ್ರ’ವನ್ನು ಗುರುವಾರ ಉದ್ಘಾಟಿಸಿ ಮಾತನಾಡಿದ ಅವರು, ದಿಲ್ಲಿಯಲ್ಲಿ ತರಬೇತಿ ಕೇಂದ್ರ ತೆರೆಯಬೇಕೆಂದು ನಿರ್ಧಾರ ಮಾಡಲಾಗಿತ್ತು. ಆದರೆ ಸ್ಥಳ ಸಿಗದ ಕಾರಣ, ಬೆಂಗಳೂರಿನಲ್ಲಿ ತರಬೇತಿ ಕೇಂದ್ರ ತೆರೆಯಲಾಗಿದೆ. ಪ್ರಸ್ತುತ 150 ಮಂದಿ ಹಿಂದುಳಿದ ಸಮುದಾಯದ ಅಭ್ಯರ್ಥಿಗಳಿಗೆ ಉಚಿತ ಊಟ, ವಸತಿ ಸಹಿತ ಪರೀಕ್ಷೆಗೆ 10 ತಿಂಗಳು ತರಬೇತಿ ನೀಡಲಾಗುತ್ತಿದೆ ಎಂದರು. ನಾನು ಒಮ್ಮೆ ಖುದ್ದು ದಿಲ್ಲಿಯ ಯುಪಿಎಸ್ಸಿ ತರಬೇತಿ ಅಕಾಡಮಿ ಕೇಂದ್ರಕ್ಕೆ ಭೇಟಿ ನೀಡಿದ್ದೆ. ಮುದ್ದೇಬಿಹಾಳದ ಯುವಕನೊಬ್ಬ ಅಲ್ಲಿನ ತರಬೇತಿ ಕೇಂದ್ರದಲ್ಲಿಯೇ ಕೆಲಸ ಮಾಡುತ್ತಾ, ಪರೀಕ್ಷೆಗೆ ತಯಾರಿ ನಡೆಸಿದ್ದ. ದಿಲ್ಲಿಯಲ್ಲಿ ವಸತಿ ಮತ್ತು ಊಟದ ವೆಚ್ಚವೆ ದುಬಾರಿ ಎಂದು ಅಳಲು ತೊಡಿಕೊಂಡಿದ್ದ. ಅಂದೇ ಪರೀಕ್ಷೆಗೆ ಸಿದ್ಧತೆ ನಡೆಸುವ ಹಿಂದುಳಿದ ಸಮುದಾಯದ ಅಭ್ಯರ್ಥಿಗಳಿಗೆ ಅನುಕೂಲ ಮಾಡಿಕೊಡಬೇಕೆಂದು ನಿರ್ಧರಿಸಿದ್ದೆ. ಅದನ್ನು ಸಿಎಂ ಸಿದ್ದರಾಮಯ್ಯ ಅವರ ಗಮನಕ್ಕೆ ತಂದು ಈ ಯೋಜನೆಯನ್ನು ಬಜೆಟ್ನಲ್ಲೂ ಕೂಡ ಘೋಷಿಸಲಾಗಿತ್ತು ಎಂದು ಅವರು ತಿಳಿಸಿದರು. ದೇಶದಲ್ಲೇ ಉಚಿತವಾಗಿ ವಸತಿ ಸಹಿತ ಯುಪಿಎಸ್ಸಿ ಪರೀಕ್ಷೆಗೆ ಎರಡು ರಾಜ್ಯಗಳಲ್ಲಿ ಸರಕಾರದಿಂದ ತರಬೇತಿ ನೀಡಲಾಗುತ್ತಿದೆ. ಆ ರಾಜ್ಯಗಳ ಪಟ್ಟಿಗೆ ಇದೀಗ ಕರ್ನಾಟಕ ಕೂಡ ಸೇರಿದೆ. ಶ್ರಮ ಹಾಗೂ ತಪ್ಪಸ್ಸಿನಿಂದ ಯಾವುದೇ ಸಾಧನೆ ಸಾಧ್ಯ. ಇಲ್ಲಿರುವ ಪ್ರತಿಯೊಬ್ಬ ತಪ್ಪಸ್ಸಿನಿಂದ ಓದಿದರೆ ಯಶಸ್ಸು ಕಟ್ಟಿಟ್ಟ ಬುತ್ತಿ. ಏಕಾಗ್ರತೆಯಿಂದ ಓದಿ ಯಶಸ್ಸು ಪಡೆಯಿರಿ ಎಂದು ಸಚಿವರು ಅಭ್ಯರ್ಥಿಗಳಿಗೆ ಕಿವಿಮಾತು ಹೇಳಿದರು. ಈ ಸಂದರ್ಭದಲ್ಲಿ ಕೆಂಗೇರಿಯ ಒಕ್ಕಲಿಗರ ಮಹಾ ಸಂಸ್ಥಾನ ಮಠದ ನಿಶ್ಚಲಾನಂದನಾಥ ಸ್ವಾಮೀಜಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಕಾರ್ಯದರ್ಶಿ ತುಳಸಿ ಮದ್ದಿನೇನಿ, ಆಯುಕ್ತ ಕೆ.ಎ. ದಯಾನಂದ್, ಅಧಿಕಾರಿಗಳಾದ ಪ್ರದೀಪ್, ಜಗದೀಶ್, ಮಧುಸೂದನ್ ರೆಡ್ಡಿ, ಭವ್ಯ ಮತ್ತಿತರರು ಉಪಸ್ಥಿತರಿದ್ದರು.
ಅಪರೂಪದ ಕಾಯಿಲೆಗಳ ಬಗ್ಗೆ ಜಾಗೃತಿಗೆ ‘ರೇಸ್ ಫಾರ್-7' ರನ್ಗೆ ಸಚಿವ ದಿನೇಶ್ ಗುಂಡೂರಾವ್ ಚಾಲನೆ
ಬೆಂಗಳೂರು, ಫೆ. 26: ಅಪರೂಪದ ಕಾಯಿಲೆಗಳ ಬಗ್ಗೆ ಜಾಗೃತಿಗೆ ‘ನೋವೊ ನಾರ್ಡಿಸ್ಕ್ ಇಂಡಿಯಾ ಮತ್ತು ಆರ್ಗನೈಸೇಶನ್ ಫಾರ್ ರೇರ್ ಡಿಸೀಸ್ ಇನ್ ಇಂಡಿಯಾ ಸಂಸ್ಥೆಗಳ ಆಶ್ರಯದಲ್ಲಿ ‘ರೇಸ್ ಫಾರ್-7' ಓಟಕ್ಕೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಚಾಲನೆ ನೀಡಿದರು. ಗುರುವಾರ ನಗರದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ರೋಗಿಗಳು, ಆರೈಕೆದಾರರು ಮತ್ತು ವೈದ್ಯರು ಸೇರಿದಂತೆ ವಿವಿಧ ಕ್ಷೇತ್ರದ ಜನರು ಭಾಗವಹಿಸಿದ್ದರು. ಭಾರತದಲ್ಲಿ ಅಪರೂಪದ ಕಾಯಿಲೆಗಳೊಂದಿಗೆ ಬದುಕುತ್ತಿರುವವರಿಗೆ ಉತ್ತಮ ವೈದ್ಯಕೀಯ ಸೇವೆ ಮತ್ತು ಬೆಂಬಲವನ್ನು ಒದಗಿಸುವ ನಿಟ್ಟಿನಲ್ಲಿ ಎಲ್ಲರೂ ಒಗ್ಗೂಡಿ ಧ್ವನಿ ಎತ್ತಿದರು. ನೋವೊ ನಾರ್ಡಿಸ್ಕ್ ವ್ಯವಸ್ಥಾಪಕ ನಿರ್ದೇಶಕ ವಿಕ್ರಾಂತ್ ಶ್ರೋತ್ರಿಯ ಮಾತನಾಡಿ, ‘ಭಾರತದಲ್ಲಿ ಅಪರೂಪದ ಕಾಯಿಲೆಗಳ ನಿರ್ವಹಣೆಗೆ ತಡೆಗಟ್ಟುವಿಕೆ ಮತ್ತು ನಿರಂತರ ಚಿಕಿತ್ಸೆ ಒದಗಿಸುವುದರ ಕಡೆಗೆ ಹೆಚ್ಚಿನ ಗಮನ ಹರಿಸುವ ಅಗತ್ಯವಿದೆ. ವಿಜ್ಞಾನ ಮತ್ತು ಮಾನವೀಯತೆ ಒಂದಾಗಿ ಯಾವುದೇ ರೋಗಿಯು ಅಸಹಾಯಕನಾಗದಂತಹ ವೈದ್ಯಕೀಯ ವ್ಯವಸ್ಥೆಯನ್ನು ರೂಪಿಸುವುದು ನಮ್ಮ ಬದ್ಧತೆ’ ಎಂದು ಹೇಳಿದರು. ಈ ವೇಳೆ ಓಆರ್ಡಿಐ ಸಹ-ಸಂಸ್ಥಾಪಕ ಮತ್ತು ಕಾರ್ಯನಿರ್ವಾಹಕ ನಿರ್ದೇಶಕ ಪ್ರಸನ್ನ ಶಿರೋಳ್, ಸೆಂಟರ್ ಫಾರ್ ಹ್ಯೂಮನ್ ಜೆನೆಟಿಕ್ಸ್ನ ನಿರ್ದೇಶಕಿ ಡಾ.ಮೀನಾಕ್ಷಿ ಭಟ್ ಸೇರಿದಂತೆ ಇನ್ನಿತರರು ಹಾಜರಿದ್ದರು.
ಬೆಂಗಳೂರು : ಮದುವೆಯಾಗುವುದಾಗಿ ನಂಬಿಸಿ, ದೈಹಿಕ ಸಂಪರ್ಕ ಬೆಳೆಸಿದ ನಂತರ ವಂಚಿಸಿದ ಆರೋಪ ಎದುರಿಸುತ್ತಿರುವ ಆರೋಪಿಗಳನ್ನು ಬಂಧಿಸುವುದು ಕಡ್ಡಾಯವಿಲ್ಲದಿದ್ದರೂ ಪೊಲೀಸರು ಮಾತ್ರ ಆರೋಪಿಗಳನ್ನು ಬಂಧಿಸಿ ಜೈಲಿಗೆ ಕಳುಹಿಸುತ್ತಿರುವುದು ಏಕೆ ಎಂದು ಪ್ರಶ್ನಿಸಿರುವ ಹೈಕೋರ್ಟ್, ಇಂತಹ ಬೆಳವಣಿಗೆ ತಡೆಯಲು ಸೂಕ್ತ ಕ್ರಮ ಜರುಗಿಸುವಂತೆ ರಾಜ್ಯ ಸರಕಾರಕ್ಕೆ ಸೂಚಿಸಿದೆ. ಅತ್ಯಾಚಾರ ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕಾಯ್ದೆಯಡಿ ಚಿಕ್ಕಮಗಳೂರಿನ ಮೂಡಿಗೆರೆ ತಾಲೂಕಿನ ಬಣಕಲ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್ಐಆರ್ ರದ್ದು ಕೋರಿ ಹೊಕ್ಕಳ್ಳಿ ಗ್ರಾಮದ ನಿವಾಸಿ ಎಚ್.ಜಿ. ಗಂಗ (29) ಎಂಬಾತ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಪೊಲೀಸರ ಕಾರ್ಯವೈಖರಿಗೆ ಅತೃಪ್ತಿ ವ್ಯಕ್ತಪಡಿಸಿತು. ವಿಚಾರಣೆ ವೇಳೆ ಆರೋಪಿ ಪರ ವಕೀಲರು ವಾದ ಮಂಡಿಸಿ, ಪ್ರಕರಣ ಸಂಬಂಧ ಅರ್ಜಿದಾರರು ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ಆದರೆ, ಅರ್ಜಿದಾರರನ್ನು ಪೊಲೀಸರು ಬಂಧಿಸಿದ್ದಾರೆ. ವಿಚಾರಣಾ ನ್ಯಾಯಾಲಯ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ದೂರು ದಾಖಲಿಸುವಲ್ಲಿ ದೂರುದಾರೆ 1 ವರ್ಷ 3 ತಿಂಗಳು ವಿಳಂಬ ಮಾಡಿದ್ದಾರೆ ಎಂದು ನ್ಯಾಯಪೀಠದ ಗಮನಕ್ಕೆ ತಂದರು. ಆರೋಪಿಯನ್ನು ಏಕೆ ಬಂಧಿಸಲಾಗಿದೆ ಎಂಬ ನ್ಯಾಯಪೀಠದ ಪ್ರಶ್ನೆಗೆ ಉತ್ತರಿಸಿದ ವಕೀಲರು, ಅರ್ಜಿದಾರ ತಲೆಮರೆಸಿಕೊಂಡಿದ್ದರು. ಈಗ ಅವರನ್ನು ಬಂಧಿಸಲಾಗಿದೆ ಎಂದು ತಿಳಿಸಿದರು. ಆಗ ನ್ಯಾಯಪೀಠ ರಾಜ್ಯ ಹೆಚ್ಚುವರಿ ಸರ್ಕಾರಿ ಅಭಿಯೋಜಕ ಬಿ.ಎನ್. ಜಗದೀಶ್ ಅವರನ್ನು ಉದ್ದೇಶಿಸಿ, ಮದುವೆಯಾಗುವುದಾಗಿ ಭರವಸೆ ನೀಡಿ ದೈಹಿಕ ಸಂಪರ್ಕ ಬೆಳೆಸಿದ ಆರೋಪಕ್ಕೆ ಸಂಬಂಧಿಸಿದ ಪ್ರಕರಣ ಇದಾಗಿದೆ. ಇಂತಹ ಪ್ರಕರಣದಲ್ಲಿ ಆರೋಪಿಗಳನ್ನು ಪೊಲೀಸರು ಏಕೆ ಬಂಧಿಸುತ್ತಿದ್ದಾರೆ? ಎಂಬುದು ಅರ್ಥವಾಗುತ್ತಿಲ್ಲ. ಆರೋಪಿಯನ್ನು ಬಂಧಿಸುವುದು ಕಡ್ಡಾಯವೇನಿಲ್ಲ. 10 ವರ್ಷ ಜೈಲು ಶಿಕ್ಷೆ ವಿಧಿಸಲು ಅವಕಾಶವಿದೆ ಎಂಬ ಕಾರಣಕ್ಕೆ ಬಂಧಿಸಲಾಗುತ್ತಿದೆ. ಇಂಥ ಪ್ರಕರಣ ಎದುರಿಸುತ್ತಿರುವ ಎಲ್ಲ ಆರೋಪಿಗಳು ಜೈಲಿನೊಳಗಿದ್ದಾರೆ. ಬಂಧನ ಮಾಡಬಾರದು ಎಂದು ಕೋರ್ಟ್ ಹೇಳುತ್ತಲೇ ಇದೆ. ಪೊಲೀಸರು ಮಾತ್ರ ಬಂಧನ ಮಾಡುತ್ತಲೇ ಇದ್ದಾರೆ ಎಂದು ಹೇಳಿತು. ಮುಂದುವರಿದು, ಸಂತ್ರಸ್ತೆಯೊಂದಿಗೆ ಐದು, ಆರು ವರ್ಷ ಸಂಬಂಧ ಹೊಂದಿರುವ ಪ್ರಕರಣದಲ್ಲೂ ಆರೋಪಿಗಳನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗುತ್ತಿದೆ. ಈ ಪ್ರಕರಣದಲ್ಲಿ ಅರ್ಜಿದಾರ ಆರೋಪಿ, ದೂರುದಾರೆಯೊಂದಿಗೆ ಎರಡೂವರೆ ವರ್ಷ ಸಂಬಂಧ ಹೊಂದಿದ್ದರು. ಕಾನೂನು ದುರ್ಬಳಕೆಗೆ ಈ ಪ್ರಕರಣ ಮತ್ತೊಂದು ಸ್ಪಷ್ಟ ಉದಾಹರಣೆಯಾಗಿದೆ. ಈ ಅಪರಾಧ ಸಂಬಂಧ ಜಾರಿಗೆ ಬಂದಿರುವ ಹೊಸ ನಿಯಮ ಬಿಎನ್ಎಸ್ ಸೆಕ್ಷನ್ 69 ಅನ್ನು ಸಹ ದುರುಪಯೋಗ ಮಾಡಲಾಗುತ್ತಿದೆ. ಇಂತಹ ಬೆಳವಣಿಗೆಯನ್ನು ನಿಲ್ಲಿಸಲು ಏನಾದರೂ ಮಾಡಬೇಕು ಎಂದು ಸರಕಾರಿ ಅಭಿಯೋಜಕರಿಗೆ ನ್ಯಾಯಪೀಠ ಸೂಚಿಸಿತು. ಅರ್ಜಿದಾರರ ಪರ ವಕೀಲರನ್ನು ಉದ್ದೇಶಿಸಿ, ದೂರುದಾರೆಯನ್ನು ಅರ್ಜಿದಾರರು ಮದುವೆ ಆಗುತ್ತಾರಾ? ಮದುವೆಯಾಗಿ ನಿಮ್ಮ ಭರವಸೆ ಉಳಿಸಿಕೊಳ್ಳಿ. ಆರೋಪಿ ಜೈಲಿಗೆ ಹೋಗಿದ್ದಾನಾಲ್ಲವೇ? ಜೈಲಿಗೆ ಹೋಗಿರುವುದರಿಂದ ಮದುವೆ ಆಗುವುದಿಲ್ಲ ಎನ್ನುತ್ತೀರಾ? ಎಂದು ನ್ಯಾಯಪೀಠ ಪ್ರಶ್ನಿಸಿತು. ಸರ್ಕಾರಿ ಅಭಿಯೋಜಕರು, ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದಾರೆ. ಈಗಾಗಲೇ ಅರ್ಜಿದಾರರನ್ನು ಬಂಧಿಸಲಾಗಿದೆ. ಆದ್ದರಿಂದ, ಅರ್ಜಿ ಊರ್ಜಿತವಾಗುವುದಿಲ್ಲ. ಜಾಮೀನು ಕೋರಿ ಹೊಸದಾಗಿ ಅರ್ಜಿ ಸಲ್ಲಿಸಬಹುದು ಎಂದು ನ್ಯಾಯಪೀಠಕ್ಕೆ ತಿಳಿಸಿದರು. ಅರ್ಜಿದಾರರು ಪರ ವಕೀಲರು, ಎಫ್ಐಆರ್ ರದ್ದು ಕೋರಿ ಈ ಅರ್ಜಿ ಸಲ್ಲಿಸಲಾಗಿದೆ. ಜಾಮೀನು ಅರ್ಜಿ ಸಲ್ಲಿಸಲು ಸ್ವಲ್ಪ ಕಾಲಾವಕಾಶ ಬೇಕಾಗುತ್ತದೆ. ಅರ್ಜಿದಾರರು ಕೂಡಲೇ ಬಿಡುಗಡೆಯಾಗಬೇಕಿದೆ ಎಂದರು. ಅಂತಿಮವಾಗಿ ಅರ್ಜಿ ಹಿಂಪಡೆಯಲು ಅನುಮತಿ ನೀಡಿದ ನ್ಯಾಯಪೀಠ, ಹೊಸದಾಗಿ ಅರ್ಜಿ ಸಲ್ಲಿಸುವಂತೆ ಅರ್ಜಿದಾರರ ಪರ ವಕೀಲರಿಗೆ ಸೂಚಿಸಿತಲ್ಲದೆ, ಈ ಅರ್ಜಿದಾರ ಆರೋಪಿ ಜೈಲಿನಿಂದ ಹೊರಬರಬೇಕು ಎಂದು ಮೌಖಿಕವಾಗಿ ಹೇಳಿತು.
ಶಾಂತಿ ಮಾತುಕತೆ ಯಶಸ್ಸು ಕಂಡರೆ ಇರಾನ್ ಬಳಿ ಇರುವ ಅಮೆರಿಕ ಸೇನೆ ವಾಪಸ್ ಸಾಧ್ಯತೆ | USA And Iran
ಅಮೆರಿಕ ಮತ್ತು ಇರಾನ್ ಇದೀಗ ಶಾಂತಿ ಒಪ್ಪಂದಕ್ಕೆ ಕೂತಿದ್ದು, ಹೇಗಾದರೂ ಮಾಡಿ ಈಗ ಒಂದು ಹಂತಕ್ಕೆ ಬಂದು ನಿಲ್ಲಬೇಕು ಎಂದು ಒದ್ದಾಡುತ್ತಿದ್ದಾರೆ. ಒಂದು ಕಡೆ ಇರಾನ್ ದೇಶದ ವಿದೇಶಾಂಗ ಸಚಿವ ಹಾಗೂ ಅಮೆರಿಕ ಸರ್ಕಾರದ ಉನ್ನತ ಅಧಿಕಾರಿಗಳು ಹಾಗೂ ಸಚಿವರು ಬಂದು ಮಾತುಕತೆಗೆ ಕೂತಿದ್ದಾರೆ. ಕೆಲವೇ ಗಂಟೆಗಳಲ್ಲಿ ಮಾತುಕತೆ ಪೂರ್ಣಗೊಂಡು, ಅಮೆರಿಕ ಮತ್ತು ಇರಾನ್ ಪರಮಾಣು ಶಾಂತಿ
ಇನ್ನು 48 ಗಂಟೆಯೊಳಗೆ ವಿಮಾನ ಟಿಕೆಟ್ ರದ್ದುಪಡಿಸಿದರೂ ಹೆಚ್ಚುವರಿ ಶುಲ್ಕವಿಲ್ಲದೆ ಹಣ ವಾಪಸ್!
ಇದೀಗ ವಿಮಾ ಟಿಕೆಟ್ ಕಾಯ್ದಿರಿಸುವಿಕೆಯ ನಿಯಮಗಳಲ್ಲಿ ಕೆಲ ಪರಿಷ್ಕರಣೆಗಳನ್ನು ತರಲಾಗಿದೆ. ವಿಮಾನ ಟಿಕೆಟ್ ಬುಕ್ ಮಾಡಿದ 48 ಗಂಟೆಗಳೊಳಗೆ ರದ್ದುಗೊಳಿಸಿದರೆ ಯಾವುದೇ ಹೆಚ್ಚುವರಿ ಶುಲ್ಕವಿಲ್ಲದೆ ಪೂರ್ಣ ಹಣ ಮರುಪಾವತಿ ಪಡೆಯಬಹುದಾಗಿದೆ. ಈ ಸೌಲಭ್ಯವು ಪ್ರಯಾಣಕ್ಕೆ ಕನಿಷ್ಠ 7-15 ದಿನಗಳ ಮೊದಲು ಬುಕ್ ಮಾಡಿದವರಿಗೆ ಮಾತ್ರ ಅನ್ವಯವಾಗಲಿದೆ. ವೈದ್ಯಕೀಯ ತುರ್ತು ರದ್ದತಿಗೂ ಹಣ ವಾಪಸ್ ಸಿಗಲಿದ್ದು, ವಿಮಾನಯಾನ ಸಂಸ್ಥೆಗಳು ಮರುಪಾವತಿ ಪ್ರಕ್ರಿಯೆಯನ್ನು 14 ದಿನಗಳೊಳಗೆ ಪೂರ್ಣಗೊಳಿಸುವುದು ಕಡ್ಡಾಯವಾಗಿದೆ. ಈ ಹೊಸ ನಿಯಮ ಮಾರ್ಚ್ 26ರಿಂದ ಜಾರಿಗೆ ಬರಲಿದೆ ಎಂದು ನಾಗರಿಕ ವಿಮಾನಯಾನ ನಿರ್ದೇಶನಾಲಯ ತಿಳಿಸಿದೆ.
ಉತ್ತರ ಕೊರಿಯಾ ನೆಲದಲ್ಲಿ ಮತ್ತೆ ಅಧಿಕಾರಕ್ಕೆ ತಿಕ್ಕಾಟ ಶುರು, ಮಗಳನ್ನು ಮರೆಸುತ್ತಿರುವ ಸರ್ವಾಧಿಕಾರಿ | Kim Jong Un
ಉತ್ತರ ಕೊರಿಯಾ ಅಂದ್ರೆ ಸಖತ್ ವಿವಾದಗಳ ನಾಡು, ಅದರಲ್ಲೂ ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಪದೇ ಪದೇ ವಿವಾದಗಳ ಸುಳಿಯಲ್ಲಿ ಸಿಲುಕಿ ಸದ್ದು ಮಾಡುತ್ತಲೇ ಇರುತ್ತಾರೆ. ಈ ರೀತಿ ಇದ್ದಾಗ ಕಿಮ್ ಜಾಂಗ್ ಉನ್ ನಂತರ ಉತ್ತರ ಕೊರಿಯಾದ ಮುಂದಿನ ಅಧ್ಯಕ್ಷರು ಯಾರು? ಎಂಬ ಚರ್ಚೆ ನಡೆಯುತ್ತಲೇ ಇದೆ. ಇನ್ನೊಂದು ಕಡೆ ತನ್ನ ಮಗಳನ್ನೇ
ಇರಾನ್ ಮತ್ತು ಅಮೆರಿಕ ಪರಮಾಣು ಶಾಂತಿ ಒಪ್ಪಂದ ಹಿನ್ನೆಲೆ ಮಹತ್ವದ ಸಭೆ ಆರಂಭ | USA And Iran
ಇರಾನ್ ಬದುಕಬೇಕು ಅಂದ್ರೆ ತಕ್ಷಣಕ್ಕೆ ಅಮೆರಿಕ ಜೊತೆಗೆ ಒಪ್ಪಂದ ಮಾಡಿಕೊಳ್ಳಬೇಕು, ಇಲ್ಲವಾದರೆ ಯಾವಾಗ ಯುದ್ಧ ನಡೆದು ಹೋಗುತ್ತೋ ಅನ್ನೋದು ಕಾಡುತ್ತಿದೆ. ಹೀಗಿದ್ದಾಗ ಕೂಡಲೇ ಪರಮಾಣು ಶಾಂತಿ ಮಾತುಕತೆ ನಡೆಸಬೇಕು ಅಂತಾ ಒಮಾನ್ ದೇಶ ಮುಂದೆ ಬಂದಿದ್ದು, ದಿಢೀರ್ 3ನೇ ಸುತ್ತಿನಲ್ಲಿ ಸ್ವಿಝರ್ಲ್ಯಾಂಡ್ನ ಜಿನೇವಾದಲ್ಲಿ ಅಮೆರಿಕ &ಇರಾನ್ ನಡುವೆ ಇದೀಗ ಶಾಂತಿ ಮಾತುಕತೆ ಆರಂಭ ಆಗಿದೆ. ಈ
Kalaburagi | ಬೈಕ್ ಸವಾರರ ರಕ್ಷಣೆಗಾಗಿ ಮಾ.5 ರಿಂದ ಹೆಲ್ಮೆಟ್ ಕಡ್ಡಾಯ: ಡಿ.ಟಿ. ಪ್ರಭು
ಕಲಬುರಗಿ: ಸುಗಮ ಸಂಚಾರ ಹಾಗೂ ಅಪಘಾತಗಳಲ್ಲಿ ಹೆಚ್ಚಿನ ಜನ ತಲೆಗೆ ತೀವ್ರ ಪೆಟ್ಟಾಗಿ ಜೀವ ಕಳೆದುಕೊಳ್ಳುತ್ತಿರುವುದನ್ನು ಗಮನಿಸಿ ನಗರದಲ್ಲಿ ಮಾರ್ಚ್ 5ರಿಂದ ಬೈಕ್ ಸವಾರರಿಗೆ ಹೆಲ್ಮೆಟ್ ಕಡ್ಡಾಯಗೊಳಿಸಲು ಉದ್ದೇಶಿಸಲಾಗಿದೆ ಎಂದು ನಗರ ಸಂಚಾರ ವಿಭಾಗದ ನೂತನ ಸಹಾಯಕ ಆಯುಕ್ತ ಡಿ.ಟಿ.ಪ್ರಭು ಹೇಳಿದ್ದಾರೆ. ತಮ್ಮ ಕಚೇರಿಯಲ್ಲಿ ಹಮ್ಮಿಕೊಂಡ ಸಮಾಲೋಚನಾ ಸಭೆಯಲ್ಲಿ ಮಾತನಾಡಿದ ಅವರು, ಕಲಬುರಗಿ ಮಹಾನಗರ ಪೊಲೀಸ್ ಆಯುಕ್ತರಾದ ಡಾ. ಶರಣಪ್ಪ ಎಸ್.ಡಿ ಅವರು ಹೆಲ್ಮಟ್ ಕಡ್ಡಾಯಗೊಳಿಸುವ ನಿಟ್ಟಿನಲ್ಲಿ ಈಗಾಗಲೇ ಪೊಲೀಸ್ ಅಧಿಕಾರಿಗಳೊಂದಿಗೆ, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದ್ದಾರೆ. ಈ ನಿಟ್ಟಿನಲ್ಲಿ ಹಂತ ಹಂತವಾಗಿ ಸಂಚಾರಿ ನಿಯಮಗಳನ್ನು ಕಡ್ಡಾಯಗೊಳಿಸಲು ನಿರ್ಧರಿಸಲಾಗಿದೆ ಎಂದರು. ಈ ಭಾಗದಲ್ಲಿ ಬೇಸಿಗೆ ದಿನದಲ್ಲಿ ವಿಪರೀತ ಬಿಸಿಲು ಇರುವುದರಿಂದ ಹೆಲ್ಮಟ್ ನಿಂದ ರಿಯಾಯಿತಿ ಕೊಡಬೇಕೆಂಬ ಒತ್ತಾಯ ಇದ್ದರೂ ಬೇಸಿಗೆ ಆರಂಭದ ಮುಂಚೆಯೇ ಹೆಲ್ಮಟ್ ಜಾರಿಗೆ ತರಲು ನಿರ್ಧರಿಸಲಾಗಿದೆ. ಕಡು ಬೇಸಿಗೆಯಲ್ಲಿ ಬಿಸಿಲು ತಾಪಮಾನ ಹೆಚ್ಚಾದರೆ ಆ ಸಮಯದಲ್ಲಿ ಎರಡು ತಿಂಗಳು ಮಾತ್ರ ರಿಯಾಯಿತಿ ಕೊಡುವ ಕುರಿತಾಗಿಯೂ ಚರ್ಚೆ ನಡೆಸಲಾಗಿದೆ ಎಂದು ತಿಳಿಸಿದರು. ಮಾರ್ಚ್ 5ರಿಂದ ಹೆಲ್ಮಟ್ ಜಾರಿಯನ್ನು ಪೊಲೀಸ್ ಆಯುಕ್ತರು ಇನ್ನೊಮ್ಮೆ ಸಮಾಲೋಚನೆ ನಡೆಸಿ ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ. ಕಳೆದ ಒಂದು ವರ್ಷದಲ್ಲಿ ತಲೆಗೆ ತೀವ್ರ ಪೆಟ್ಟಾಗಿ 64 ಜನರು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ಹೀಗಾಗಿ ಬೈಕ್ ಸವಾರರ ಜೀವ ರಕ್ಷಣೆಗೆ ಹೆಲ್ಮಟ್ ಬಳಕೆಯೇ ಸೂಕ್ತ ಪರಿಹಾರವಾಗಿದೆ. ಸುಗಮ ಸಂಚಾರಕ್ಕೆ ಎಲ್ಲರೂ ಆದ್ಯತೆ ನೀಡಬೇಕು ಎಂದರು. ಸಂಚಾರಿ ನಿಯಮ ಉಲ್ಲಂಘನೆ ಮೇಲೆ ನಿಗಾ: ಸಂಚಾರಿ ನಿಯಮಗಳನ್ನು ಉಲ್ಲಂಘಿಸುವವರ ಮೇಲೆ ಈಗ ತೀವ್ರ ನಿಗಾ ಇಡಲಾಗಿದೆ. ವಾಹನಗಳನ್ನು ಸಂಚಾರ ನಿಯಮ ಉಲ್ಲಂಘಿಸಿದರೆ ಫೋಟೋ ತೆಗೆದು ಅವರ ಮನೆಗೆ ದಂಡ ವಿಧಿಸಿದ ನೋಟಿಸ್ ಕಳುಹಿಸುವುದನ್ನು ಈಗಾಗಲೇ ಆರೇಳು ತಿಂಗಳ ಹಿಂದೆಯೇ ಜಾರಿಗೆ ತರಲಾಗಿದೆ. ಈ ಚಲನ ಮೂಲಕ 1.50 ಕೋಟಿ ರೂ ದಂಡ ಹಾಕಲಾಗಿದ್ದು, ಇಲ್ಲಿಯವರೆಗೆ 56 ಲಕ್ಷ ರೂ ದಂಡ ವಸೂಲಾತಿಯಾಗಿದೆ ಎಂದು ಪ್ರಭು ಅವರು ತಿಳಿಸಿದರು. ನಂಬರ್ ಇಲ್ಲದ ಲಾರಿಗಳ ವಿರುದ್ದವೂ ಕಠಿಣ ಕ್ರಮ ಕೈಗೊಳ್ಳಲಾಗುವುದು. ಕಲಬುರಗಿ ನಗರದ ರಾಮ ಮಂದಿರ ವೃತ್ತದಲ್ಲಿ ನಂಬರ್ ಇಲ್ಲದ ಮರಳು ಲಾರಿಗಳೇ ಸಾಲು ಸಾಲಾಗಿ ನಿಲ್ಲುತ್ತವೆ ಎಂಬುದು ಗಮನಕ್ಕೆ ಬಂದಿದೆ. ಆದರೆ ಇದನ್ನು ಕಾರ್ಯಾಚರಣೆ ಮೂಲಕ ಹತ್ತಿಕ್ಕಲಾಗುವುದು ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು. ಮಹಾನಗರದಲ್ಲಿ ಪರ್ಮಿಟ್ ಇಲ್ಲದ ಆಟೋಗಳ ಸಂಚಾರಕ್ಕೆ ಕಡಿವಾಣ ಹಾಕಲಾಗುವುದು. ಪ್ರಮುಖವಾಗಿ ಸುಗಮ ಸಂಚಾರ ನಿಟ್ಟಿನಲ್ಲಿ ವ್ಯಾಪಾರಿಗಳ, ಆಟೋ ಚಾಲಕರ ಮತ್ತು ಸಂಘ ಸಂಸ್ಥೆಗಳ ಸಭೆ ಕರೆಯಲಾಗುವುದು ಎಂದರು. ಕುಡಿದು ವಾಹನ ಓಡಿಸುವವರ ಮೇಲೆ ನಿಗಾ ವಹಿಸಿ ಈಚೆಗೆ ಡ್ರಂಕ್ ಆ್ಯಂಡ್ ಡ್ರೈವ್ ಪ್ರಕರಣಗಳನ್ನು ಪತ್ತೆ ಹಚ್ಚಿ 28 ಜನರ ಡ್ರೈವಿಂಗ್ ಲೈಸೆನ್ಸ್ ರದ್ದತಿಗೆ ಕ್ರಮ ಕೈಗೊಳ್ಳಲಾಗಿದೆ. ಒಟ್ಟಾರೆ ಸಂಚಾರಿ ನಿಯಮ ಉಲ್ಲಂಘನೆ ಮೇಲೆ ಇನ್ಮುಂದೆ ತೀವ್ರ ನಿಗಾ ವಹಿಸಲಾಗುತ್ತದೆ ಎಂದರು. ಈ ಸಂದರ್ಭದಲ್ಲಿ ಟ್ರಾಫಿಕ್ ಇನ್ಸಪೆಕ್ಟರುಗಳಾದ ಶಕೀಲ್ ಅಂಗಡಿ, ಶಿವಾನಂದ ವಾಲೀಕಾರ ಉಪಸ್ಥಿತರಿದ್ದರು.
‘ದ್ವೇಷ ಭಾಷಣ’ ಆರೋಪ: ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾಗೆ ಗುವಾಹಟಿ ಹೈಕೋರ್ಟ್ ನೋಟಿಸ್
ಗುವಾಹಟಿ, ಫೆ. 26: ಮುಸ್ಲಿಮರನ್ನು ಗುರಿಯಾಗಿಸಿಕೊಂಡು ದ್ವೇಷ ಭಾಷಣ ಮಾಡಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರಿಗೆ ಗುವಾಹಟಿ ಹೈಕೋರ್ಟ್ ಗುರುವಾರ (ಫೆಬ್ರವರಿ 26, 2026) ನೋಟಿಸ್ ಜಾರಿ ಮಾಡಿದೆ. ಬಿಸ್ವ ಶರ್ಮ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಿ ಸಲ್ಲಿಸಲಾದ ಹಲವು ಅರ್ಜಿಗಳನ್ನು ವಿಚಾರಣೆಗೊಳಪಡಿಸಿದ ಬಳಿಕ ನ್ಯಾಯಾಲಯ ಈ ಆದೇಶ ಹೊರಡಿಸಿದೆ. ಮುಖ್ಯ ನ್ಯಾಯಮೂರ್ತಿ ಅಶುತೋಷ್ ಕುಮಾರ್ ಹಾಗೂ ನ್ಯಾಯಮೂರ್ತಿ ಅರುಣ್ ದೇವ್ ಚೌಧರಿ ಅವರನ್ನು ಒಳಗೊಂಡ ವಿಭಾಗೀಯ ಪೀಠವು ಅರ್ಜಿದಾರರನ್ನು ಪ್ರತಿನಿಧಿಸಿದ ಹಿರಿಯ ವಕೀಲರ ವಾದಗಳನ್ನು ಆಲಿಸಿ, ಮುಖ್ಯಮಂತ್ರಿ ಸೇರಿದಂತೆ ಕೇಂದ್ರ ಹಾಗೂ ಅಸ್ಸಾಂ ಸರ್ಕಾರಗಳಿಗೆ ನೋಟಿಸ್ ಜಾರಿ ಮಾಡುವಂತೆ ಸೂಚಿಸಿದೆ. ಪ್ರಕರಣದ ಮುಂದಿನ ವಿಚಾರಣೆಯನ್ನು ಏಪ್ರಿಲ್ 21ಕ್ಕೆ ನಿಗದಿಪಡಿಸಲಾಗಿದೆ. ಅರ್ಜಿದಾರರಲ್ಲಿ ಕಾಂಗ್ರೆಸ್ ಪಕ್ಷ, ಅಸ್ಸಾಮಿ ವಿದ್ವಾಂಸ ಹಿರೇನ್ ಗೋಹೈನ್ ಹಾಗೂ ಭಾರತೀಯ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್ವಾದಿ) ಸೇರಿದ್ದಾರೆ. ಆರಂಭದಲ್ಲಿ ಅರ್ಜಿದಾರರು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು. ಪೀಠವು ಹೈಕೋರ್ಟ್ಗೆ ತೆರಳುವಂತೆ ಸೂಚಿಸಲಾಗಿತ್ತು. ಅರ್ಜಿಯಲ್ಲಿ, “ಮಿಯಾ” ಎಂಬುದು ಅಸ್ಸಾಂನಲ್ಲಿ ಬಂಗಾಳಿ ಮಾತನಾಡುವ ಅಥವಾ ಬಂಗಾಳಿ ಮೂಲದ ಮುಸ್ಲಿಮರನ್ನು ಉಲ್ಲೇಖಿಸಲು ಸಾಮಾನ್ಯವಾಗಿ ಬಳಸುವ ಅವಹೇಳನಕಾರಿ ಪದವಾಗಿದ್ದು, ಅದರ ಅರ್ಥವನ್ನು “ಅಕ್ರಮ ವಲಸಿಗರು” ಎಂದು ಮುಖ್ಯಮಂತ್ರಿ ಹೇಳಿದ್ದಾರೆ ಎಂದು ಉಲ್ಲೇಖಿಸಲಾಗಿದೆ. ಅಭಿಷೇಕ್ ಮನು ಸಿಂಘ್ವಿ, ಚಂದರ್ ಉದಯ್ ಸಿಂಗ್ ಹಾಗೂ ಮೀನಾಕ್ಷಿ ಅರೋರಾ ಅವರು ಅರ್ಜಿದಾರರ ಪರವಾಗಿ ವಾದ ಮಂಡಿಸಿ, ಮುಖ್ಯಮಂತ್ರಿ ಶರ್ಮಾ ಅವರು ಅಸ್ಸಾಂನಲ್ಲಿ ಮುಸ್ಲಿಮರ ವಿರುದ್ಧ ಪ್ರಚೋದನಕಾರಿ ಮತ್ತು ಬೆದರಿಕೆ ಹೇಳಿಕೆಗಳನ್ನು ನೀಡಿದ್ದಾರೆ ಎಂದು ನ್ಯಾಯಾಲಯದ ಗಮನಕ್ಕೆ ತಂದರು. ಟೋಪಿ ಧರಿಸಿದ ಜನರ ಮೇಲೆ ಗುಂಡು ಹಾರಿಸುವುದನ್ನು ತೋರಿಸುವ (ಈಗ ಅಳಿಸಲಾದ) X ಸಾಮಾಜಿಕ ಜಾಲತಾಣದ ವೀಡಿಯೊವನ್ನೂ ಅವರು ಉಲ್ಲೇಖಿಸಿದರು. ಮತದಾರರ ಪಟ್ಟಿಯಲ್ಲಿ ಬದಲಾವಣೆ ಮಾಡುವ ಯೋಜನೆಗಳು, ಮತದಾನದ ಹಕ್ಕುಗಳನ್ನು ನಿರ್ಬಂಧಿಸುವ ಬೆದರಿಕೆಗಳು ಹಾಗೂ ಸಮುದಾಯದ ಆರ್ಥಿಕ ಬಹಿಷ್ಕಾರಕ್ಕೆ ಕರೆ ನೀಡಿರುವ ವಿಷಯಗಳನ್ನೂ ನ್ಯಾಯಾಲಯಕ್ಕೆ ತಿಳಿಸಲಾಯಿತು. ಮುಖ್ಯಮಂತ್ರಿಗಳ ಪುನರಾವರ್ತಿತ ಹೇಳಿಕೆಗಳು “ ಪ್ರಚೋದನೆಯ ಅಭ್ಯಾಸ ಮಾದರಿ”ಯನ್ನು ತೋರಿಸುತ್ತವೆ ಮತ್ತು ರಾಜ್ಯದ ಮುಖ್ಯಸ್ಥರಾಗಿ ಅವರ ಕರ್ತವ್ಯಗಳಿಗೆ ಹೊಂದಿಕೆಯಾಗುವುದಿಲ್ಲ ಎಂದು ವಕೀಲರು ವಾದಿಸಿದರು. ಹಿಮಂತ ಬಿಸ್ವ ಶರ್ಮ ಅವರ ಹೇಳಿಕೆಗಳು ಸಂವಿಧಾನದ ಜಾತ್ಯತೀತ ಆದೇಶ ಹಾಗೂ ಪೀಠಿಕೆಯಲ್ಲಿ ಪ್ರತಿಪಾದಿಸಲಾದ ಸಮಾನತೆಯ ತತ್ವಗಳನ್ನು ಉಲ್ಲಂಘಿಸುವ ಸಾಧ್ಯತೆಯಿದ್ದು, ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆಯಾಗಬಹುದು ಎಂದು ಅವರು ವಾದಿಸಿದರು. ವಿಚಾರಣೆ ವೇಳೆ ಅರ್ಜಿದಾರರು ಉಲ್ಲೇಖಿಸಿದ ಹೇಳಿಕೆಗಳು “ವಿಭಜನಾ ಪ್ರವೃತ್ತಿ”ಯನ್ನು ತೋರಿಸುತ್ತವೆ ಎಂದು ನ್ಯಾಯಾಲಯ ಗಮನಿಸಿದ್ದು, ಅಂತಿಮ ತೀರ್ಮಾನಕ್ಕೆ ಬರುವ ಮೊದಲು ಸಲ್ಲಿಕೆಯಾದ ಎಲ್ಲಾ ಅರ್ಜಿಗಳನ್ನು ಸಮಗ್ರವಾಗಿ ಪರಿಶೀಲಿಸುವುದಾಗಿ ತಿಳಿಸಿದೆ.
ಚೆನ್ನೈನಲ್ಲೊಂದು ರಮಝಾನ್ ಸೌಹಾರ್ದ ಸ್ಟೋರಿ; 40 ವರ್ಷಗಳಿಂದ ಮುಸ್ಲಿಮರಿಗೆ ದೇವಾಲಯದಿಂದಇಫ್ತಾರ್ ಆಯೋಜನೆ
ಚೆನ್ನೈ, ಫೆ. 26: ಚೆನ್ನೈ ನಗರದ ಮೈಲಾಪುರದಲ್ಲಿರುವ ಸೂಫಿದಾರ್ ದೇವಾಲಯವು ನಾಲ್ಕು ದಶಕಗಳಿಗೂ ಹೆಚ್ಚು ಕಾಲ ರಮಝಾನ್ ತಿಂಗಳಲ್ಲಿ ಮುಸ್ಲಿಮರಿಗೆ ಪ್ರತಿದಿನ ಇಫ್ತಾರ್ ಆಯೋಜಿಸುವ ಮೂಲಕ ಅಂತರಧರ್ಮೀಯ ಸಾಮರಸ್ಯದ ಮಾದರಿಯಾಗಿ ಹೊರಹೊಮ್ಮಿದೆ ಎಂದು madhyamamonline.com ವರದಿ ಮಾಡಿದೆ. 1980ರ ದಶಕದ ಆರಂಭದಲ್ಲಿ ದಾದಾ ರತನ್ಚಂದ್ ಅಥವಾ ದಾದಾಜಿ ಎಂದು ಕರೆಯಲ್ಪಟ್ಟ ದಾದಾ ರತನ್ಚಂದ್ ಸಾಹಿಬ್ ಈ ಸಂಪ್ರದಾಯಕ್ಕೆ ಚಾಲನೆ ನೀಡಿದರು. 1926ರ ನವೆಂಬರ್ 4ರಂದು ಸಿಂಧ್ ನ ಹೈದರಾಬಾದ್ ನಲ್ಲಿ (ಈಗಿನ ಪಾಕಿಸ್ತಾನ) ರುಕ್ಮಿಣಿ ದೇವಿ ಹಾಗೂ ಭಾಯಿ ಪೆಸುಮಲ್ ದೋಡಾನಿ ದಂಪತಿಗೆ ಜನಿಸಿದ ರತನ್ಚಂದ್, 1947ರ ಭಾರತ ವಿಭಜನೆಯ ಸಂದರ್ಭದಲ್ಲಿ ಹಿಂದೂ ನಿರಾಶ್ರಿತರಾಗಿ ಚೆನ್ನೈಗೆ ವಲಸೆ ಬಂದಿದ್ದರು. ನಗರದಲ್ಲಿ ಬದುಕನ್ನು ಮರುನಿರ್ಮಿಸಿಕೊಂಡ ಬಳಿಕ ಅವರು ಸೂಫಿ ಸಂತ ಶಹೇನ್ ಶಾ ಬಾಬಾ ನೆಭ್ರಾಝ್ ಸಾಹಿಬ್ ಅವರ ಶಿಷ್ಯರಾದರು. ಧರ್ಮಗಳ ಗಡಿಗಳನ್ನು ಮೀರಿ ಏಕತೆ, ಪ್ರೀತಿ ಮತ್ತು ಸೇವೆಯನ್ನು ಒತ್ತಿಹೇಳಿದ ಅವರ ಬೋಧನೆಗಳಿಂದ ಪ್ರೇರಿತರಾಗಿ, ರತನ್ಚಂದ್ ‘ಸೂಫಿದಾರ್ ಟ್ರಸ್ಟ್’ ಅನ್ನು ಸ್ಥಾಪಿಸಿದರು. ಆರಂಭದಲ್ಲಿ ವಾಲ್ಟ್ಯಾಕ್ಸ್ ರಸ್ತೆಯಲ್ಲಿ 30–40 ಭಕ್ತರೊಂದಿಗೆ ಸಣ್ಣ ಆಧ್ಯಾತ್ಮಿಕ ಸಭಾಸ್ಥಳವಾಗಿ ಆರಂಭವಾದ ಈ ಕೇಂದ್ರ, ನಂತರ ಮೈಲಾಪುರದ ಡಾ. ರಾಧಾಕೃಷ್ಣನ್ ರಸ್ತೆಗೆ ಸ್ಥಳಾಂತರಗೊಂಡು ಎಲ್ಲ ಧರ್ಮಗಳ ಜನರನ್ನು ಸ್ವಾಗತಿಸುವ ವಿಶಿಷ್ಟ ಆಧ್ಯಾತ್ಮಿಕ ಕೇಂದ್ರವಾಗಿ ಬೆಳೆದಿದೆ. ತಮ್ಮನ್ನು ಆಶ್ರಯಿಸಿದ ನಗರದ ಬಗ್ಗೆ ಕೃತಜ್ಞತೆಯಿಂದ ಮತ್ತು ಧಾರ್ಮಿಕ ವಿಭಜನೆಗಳನ್ನು ಮೀರುವ ತತ್ವಶಾಸ್ತ್ರದ ಮಾರ್ಗದರ್ಶನದಿಂದ ರತನ್ಚಂದ್ ರಮಝಾನ್ ಸಮಯದಲ್ಲಿ ಮುಸ್ಲಿಮರಿಗೆ ಸಸ್ಯಾಹಾರಿ ಇಫ್ತಾರ್ ಆಯೋಜಿಸುವ ಕಾರ್ಯಕ್ಕೆ ಮುಂದಾದರು. ವೈಯಕ್ತಿಕ ಕೃತಜ್ಞತೆಯ ಅಭಿವ್ಯಕ್ತಿಯಾಗಿ ಆರಂಭವಾದ ಈ ಕ್ರಮವು ಕ್ರಮೇಣ ವಾರ್ಷಿಕ ಸಂಪ್ರದಾಯವಾಗಿ ರೂಪಾಂತರಗೊಂಡು ನಾಲ್ಕು ದಶಕಗಳಿಗೂ ಹೆಚ್ಚು ಕಾಲ ನಿರಂತರವಾಗಿ ನಡೆಯುತ್ತಿದೆ. ಪ್ರತಿ ರಮಝಾನ್ ನಲ್ಲಿ ಸಿಂಧಿ ಸಮುದಾಯದವರು, ಹಿಂದೂಗಳು, ಮುಸ್ಲಿಮರು ಸೇರಿದಂತೆ ವಿವಿಧ ಹಿನ್ನೆಲೆಯ 100ಕ್ಕೂ ಹೆಚ್ಚು ಸ್ವಯಂಸೇವಕರು ಒಟ್ಟಾಗಿ ಪ್ರತಿದಿನ ಸುಮಾರು 1,000ರಿಂದ 1,200 ಉಪವಾಸ ವೃತಾಚರಣೆ ಮಾಡುವವರಿಗೆ ಇಫ್ತಾರ್ ಸಿದ್ಧಪಡಿಸುತ್ತಾರೆ. ಬೆಳಿಗ್ಗೆ 7.30ರಿಂದಲೇ ದೇವಾಲಯದ ಅಡುಗೆಮನೆಯಲ್ಲಿ ಸಿದ್ಧತೆಗಳು ಆರಂಭವಾಗುತ್ತವೆ. ತರಕಾರಿ ಬಿರಿಯಾನಿ, ಫ್ರೈಡ್ ರೈಸ್, ಚನ್ನಾ ರೈಸ್, ಪಲಾವ್, ತರಕಾರಿ, ಉಪ್ಪಿನಕಾಯಿ, ಸಿಹಿತಿಂಡಿಗಳು, ಖರ್ಜೂರ, ತಾಜಾ ಹಣ್ಣುಗಳು ಹಾಗೂ ಕೇಸರಿ ಹಾಲು ಸೇರಿದಂತೆ ಬೇರ ಬೇರೆ ಮೆನುಗಳನ್ನು ತಯಾರಿಸಲಾಗುತ್ತದೆ. ಸಂಜೆ 5.30ರ ಸುಮಾರಿಗೆ ಸಿದ್ಧಪಡಿಸಿದ ಆಹಾರವನ್ನು ವಾಹನಗಳಲ್ಲಿ ಪ್ಯಾಕ್ ಮಾಡಿ ಟ್ರಿಪ್ಲಿಕೇನ್ ನಲ್ಲಿರುವ ವಲ್ಲಾಜಾ ದೊಡ್ಡ ಮಸೀದಿಗೆ ಸಾಗಿಸಲಾಗುತ್ತದೆ. 18ನೇ ಶತಮಾನದ ಅಂತ್ಯದಲ್ಲಿ ಆರ್ಕಾಟ್ ರಾಜಮನೆತನದಿಂದ ನಿರ್ಮಿಸಲ್ಪಟ್ಟ ಈ ಐತಿಹಾಸಿಕ ಮಸೀದಿಯಲ್ಲಿ ಸ್ವಯಂಸೇವಕರು ಸ್ವತಃ ಆಹಾರವನ್ನು ಬಡಿಸುತ್ತಾರೆ. ಕೆಲವರು ಗೌರವ ಸೂಚಕವಾಗಿ ತಲೆಗೆ ಟೋಪಿಗಳನ್ನು ಧರಿಸುವುದು ಪರಸ್ಪರ ನಂಬಿಕೆ ಮತ್ತು ಸೌಹಾರ್ದತೆಯನ್ನು ಮತ್ತಷ್ಟು ಬಲಪಡಿಸುತ್ತದೆ. ಈ ಉಪಕ್ರಮಕ್ಕೆ ಸ್ಥಳೀಯ ಮುಸ್ಲಿಂ ನಾಯಕತ್ವದಿಂದಲೂ ಬೆಂಬಲ ದೊರೆತಿದೆ. ಆರ್ಕಾಟ್ ರಾಜಕುಮಾರ ನವಾಬ್ ಮೊಹಮ್ಮದ್ ಅಬ್ದುಲ್ ಅಲಿ ಅವರು ಇದನ್ನು ಹಿಂದೂ–ಮುಸ್ಲಿಂ ಏಕತೆ ಮತ್ತು ಪರಸ್ಪರ ಗೌರವದ ಜೀವಂತ ಉದಾಹರಣೆ ಎಂದು ಪ್ರಶಂಸಿಸಿದ್ದಾರೆ. ದಾದಾ ರತನ್ಚಂದ್ ಅವರ ನಿಧನದ ಬಳಿಕವೂ ರಾಮ್ ದೇವ್ ಸೇರಿದಂತೆ ಸಮುದಾಯದ ನಾಯಕರು ಹಾಗೂ ಸಮರ್ಪಿತ ಸ್ವಯಂಸೇವಕರ ತಂಡವು ಸ್ಥಾಪಕರ ಸೇವಾ ಮನೋಭಾವವನ್ನು ಮುಂದುವರಿಸುತ್ತಿದೆ. ಇತ್ತೀಚಿನ ವರ್ಷಗಳಲ್ಲಿ ಸಾಮಾಜಿಕ ಮಾಧ್ಯಮ ಹಾಗೂ ರಾಷ್ಟ್ರೀಯ ಮಾಧ್ಯಮಗಳಲ್ಲಿ ಈ ಸಂಪ್ರದಾಯವು ಹೆಚ್ಚಿನ ಗಮನ ಸೆಳೆದಿದೆ. ಧ್ರುವೀಕರಣ ಹೆಚ್ಚುತ್ತಿರುವ ಸಂದರ್ಭದಲ್ಲಿ ಇದು ಸಾಮರಸ್ಯದ ರಹದಾರಿಯಾಗಿ ಗುರುತಿಸಲ್ಪಡುತ್ತಿದೆ. ಸಾರ್ವತ್ರಿಕ ಪ್ರೀತಿ, ಕೃತಜ್ಞತೆ ಮತ್ತು ಸೇವೆಯು ಸೂಫಿ ಆದರ್ಶಗಳಲ್ಲಿ ಬೇರೂರಿರುವ ಈ ರಮಝಾನ್ ಇಫ್ತಾರ್ ಉಪಕ್ರಮವು ಧಾರ್ಮಿಕ ವಿಭಜನೆಗಳನ್ನು ದೂರ ಮಾಡಬಲ್ಲವು ಎಂಬ ಸಂದೇಶವನ್ನು ಸಾರುತ್ತಿದೆ.
ಕರ್ನಾಟಕ ರೈತ ಸುರಕ್ಷಾ ಫಸಲ್ ಬಿಮಾ ಯೋಜನೆ ಅನುಷ್ಠಾನಕ್ಕೆ ಸಂಪುಟ ಅಸ್ತು
ಮರ್ಯಾದೆಗೇಡು ಹತ್ಯೆಗೆ ಕಡಿವಾಣ, ರೋಹಿತ್ ವೇಮುಲಾ ವಿಧೇಯಕ ಕುರಿತು ಚರ್ಚೆ : ಎಚ್.ಕೆ.ಪಾಟೀಲ್
ಸರ್ಕಾರಿ ಉದ್ಯೋಗಕ್ಕೆ ಕಾದು ಕುಳಿತವರಿಗೆ ಕರ್ನಾಟಕ ಸರ್ಕಾರ ಭರ್ಜರಿ ಗುಡ್ನ್ಯೂಸ್ ನೀಡಿದೆ. ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ 56 ಸಾವಿರ ಹುದ್ದೆಗಳ ನೇಮಕಾತಿಗೆ ನಿರ್ಧಾರ ಮಾಡಲಾಗಿದೆ. ಮುಂದಿನ 30 ದಿನಗಳಲ್ಲಿ ನೇಮಕಾತಿ ಪ್ರಕ್ರಿಯೆ ಆರಂಭವಾಗಲಿದೆ. ಇದರ ಜತೆಗೆ ಕಾವೇರಿ 6 ನೇ ಹಂತ, ಯುವ ನಮ್ಮವ ಮಸೂದೆ ಜಾರಿ ಬಗ್ಗೆಯೂ ಚರ್ಚೆ ನಡೆಸಲಾಗಿದೆ. ಒಟ್ಟಾರೆ ಸಚಿವ ಸಂಪುಟ ಸಭೆಯ ಪ್ರಮುಖ ನಿರ್ಧಾರಗಳು ಇಲ್ಲಿದೆ.
ಬ್ಯಾಟಿಂಗ್, ಬೌಲಿಂಗ್ ಗಳೆರಡರಲ್ಲೂ ಉತ್ತಮ ಪ್ರದರ್ಶನ ತೋರಿದ ಭಾರತ ತಂಡ ಜಿಂಬಾಬ್ವೆಯ ವಿರುದ್ಧ 72 ರನ್ ಗಳ ಅಧಿಕಾರಯುತ ಗೆಲುವು ಪಡೆಯುವ ಮೂಲಕ ಸೆಮಿಫೈನಲ್ ಆಸೆ ಜೀವಂತವಾಗಿರಿಸಿಕೊಂಡಿದೆ. ಫೆಬ್ರವರಿ 1ರಂದು ವೆಸ್ಟ್ ಇಂಡೀಸ್ ವಿರುದ್ಧ ನಡೆಯಲಿರುವ ಸೂಪರ್ 8 ಹಂತದ ತನ್ನ ಕೊನೆಯ ಪಂದ್ಯದಲ್ಲಿ ಸೂರ್ಯಕುಮಾರ್ ಬಳಗ ಗೆಲುವು ಸಾಧಿಸಿದಲ್ಲಿ ಸೆಮಿಫೈನಲ್ ತಲುಪಲಿದೆ. ()ಚೆನ್ನೈನ ಚೆಪಾಕ್ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಸೂಪರ್ 8 ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ 4 ವಿಕೆಟ್ ಕಳೆದುಕೊಂಡು 256 ರನ್ ಗಳಿಸಿತು. ಇದಕ್ಕುತ್ತರವಾಗಿ ಜಿಂಬಾಬ್ವೆ ತಂಡ 20 ಓವರ್ ಗಳಲ್ಲಿ 6 ವಿಕೆಟ್ ಕಳೆದುಕೊಂಡು 184 ರನ್ ಗಳಿಸಲಷ್ಟೇ ಶಕ್ತವಾಯಿತು. ಆರಂಭಿಕ ಬ್ಯಾಟರ್ ಬ್ರಯಾನ್ ಬೆನ್ನೆಟ್ ಅದ್ಭುತ ಆಟ ಆಡಿದರೂ ತಂಡವನ್ನು ದಡ ತಲುಪಿಸುವುದರಿಂದ ಬಹಳ ದೂರ ಉಳಿದರು. ಕೇವಲ 59 ಎಸೆತಗಳಿಂದ 8 ಬೌಂಡರಿ ಮತ್ತು 6 ಸಿಕ್ಸರ್ ಗಳಿದ್ದ 97 ರನ್ ಬಾರಿಸಿದ ಅವರು ಕೊನೇವರೆಗೂ ನಾಟೌಟ್ ಆಗುಳಿದರು. ()ಇದಕ್ಕೂ ಮೊದಲು ಟಾಸ್ ಸೋತು ಬ್ಯಾಟಿಂಗ್ ಗೆ ಇಳಿಸಲ್ಪಟ್ಟ ಭಾರತ ತಂಡಕ್ಕೆ ಉತ್ತಮ ಆರಂಭ ನೀಡಿದರು. ಮೊದಲ ವಿಕೆಟ್ ಗೆ ಕೇವಲ 3.4 ಓವರ್ ಗಳಲ್ಲಿ 48 ರನ್ ಸೇರಿಸಿದರು. ಸಂಜು ಸ್ಯಾಮ್ಸನ್ ಔಟಾದ ಬಳಿಕ ಇಶಾನ್ ಕಿಶನ್(38) ಅವರ ಜೊತೆಗೂಡಿದ ಅಭಿಷೇಕ್ ಶರ್ಮಾ ಅರ್ಧಶತಕವನ್ನೂ ಪೂರೈಸಿಕೊಂಡರು. ಇವರಿಬ್ಬರ ಬ್ಯಾಟಿಂಗ್ ಅಬ್ಬರದಿಂದಾಗಿ ಭಾರತ 9.1 ಓವರ್ ನಲ್ಲಿ 100 ರನ್ ಗಡಿ ದಾಟಿತು. ಇಶಾನ್ ಕಿಶನ್ ಮತ್ತು ಅಭಿಷೇಕ್ ಶರ್ಮ ಅವರು ಔಟಾದ ಬಳಿಕ ಸೂರ್ಯಕುಮಾರ್ ಯಾದವ್(13 ಎಸೆತದಲ್ಲಿ 33), ಹಾರ್ದಿಕ್ ಪಾಂಡ್ಯ(23 ಎಸೆತದಲ್ಲಿ 50), ತಿಲಕ್ ವರ್ಮಾ(16 ಎಸೆತದಲ್ಲಿ 44) ಅದೇ ವೇಗದಲ್ಲಿ ಬ್ಯಾಟಿಂಗ್ ಮುಂದುವರಿಸಿದ್ದರಿಂದ ಭಾರತ ತಂಡ ಬೃಹತ್ ಮೊತ್ತ ಗಳಿಸಲು ಸಾಧ್ಯವಾಯಿತು. ಇದು ಟಿ20 ವಿಶ್ವಕಪ್ ಇತಿಹಾಸದಲ್ಲಿ ಯಾವುದೇ ತಂಡ ಗಳಿಸಿದ ಎರಡನೇ ಅತಿ ದೊಡ್ಡ ಮೊತ್ತವಾಗಿದೆ. ಅದೇ ಭಾರತ ಗಳಿಸಿದ ಅತಿ ದೊಡ್ಡ ಮೊತ್ತವಾಗಿದೆ. ಪಂದ್ಯದಲ್ಲಿ ಚುರುಕಿನ ಅರ್ಧಶತಕ ಗಳಿಸಿದ ಹಾರ್ದಿಕ್ ಪಾಂಡ್ಯ ಅವರು ಪಂದ್ಯಶ್ರೇಷ್ಠ ಪ್ರಶಸ್ತಿ ಗಳಿಸಿದರು. ಸಂಕ್ಷಿಪ್ತ ಸ್ಕೋರ್ ಭಾರತ 20 ಓವರ್ ಗಳಲ್ಲಿ 256/4, ಅಭಿಷೇಕ್ ಶರ್ಮಾ 55(30), ಹಾರ್ದಿಕ್ ಪಾಂಡ್ಯ ಅಜೇಯ 50(23), ತಿಲಕ್ ವರ್ಮಾ 44(16), ಸಿಕಂದರ್ ರಝಾ 29ಕ್ಕೆ1. ಜಿಂಬಾಬ್ವೆ 20 ಓವರ್ ಗಳಲ್ಲಿ 184/6. ಬ್ರಯಾನ್ ಬೆನೆಟ್ ಅಜೇಯ 97(59), ಸಿಕಂದರ್ ರಝಾ 31(21), ತಾಡಿಮನಶೆ ಮರುಮನಿ 20(20), ಅರ್ಶದೀಪ್ ಸಿಂಗ್ 24ಕ್ಕೆ 3, ಅಕ್ಷರ್ ಪಟೇಲ್ 35ಕ್ಕೆ 1, ವರುಣ್ ಚಕ್ರವರ್ತಿ 35ಕ್ಕೆ 1, ಶಿವಂ ದುಬೆ 46ಕ್ಕೆ 1.
2019 Easter attacks | ಶ್ರೀಲಂಕಾದ ಮಾಜಿ ಗುಪ್ತಚರ ಮುಖ್ಯಸ್ಥ ಸುರೇಶ್ ಸಲ್ಲೇ ಬಂಧನ
ಕೊಲಂಬೊ, ಫೆ. 26: 2019ರ ಈಸ್ಟರ್ ರವಿವಾರದ ಭೀಕರ ಸರಣಿ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಶ್ರೀಲಂಕಾದ ಮಾಜಿ ಗುಪ್ತಚರ ಮುಖ್ಯಸ್ಥ ನಿವೃತ್ತ ಮೇಜರ್ ಜನರಲ್ ಸುರೇಶ್ ಸಲ್ಲೇ ಅವರನ್ನು ಬಂಧಿಸಲಾಗಿದೆ. ದಾಳಿಗೆ ಪಿತೂರಿ ರೂಪಿಸಿದ್ದು ಹಾಗೂ ಸಹಕಾರ ನೀಡಿದ ಆರೋಪದ ಮೇರೆಗೆ ಅವರನ್ನು ಬಂಧಿಸಲಾಗಿದೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ. 2019ರ ಏಪ್ರಿಲ್ನಲ್ಲಿ ನಡೆದ ಈ ದಾಳಿಯಲ್ಲಿ 279 ಮಂದಿ ಮೃತಪಟ್ಟಿದ್ದು, 500ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಮೃತರಲ್ಲಿ 45 ವಿದೇಶಿ ಪ್ರಜೆಗಳೂ ಸೇರಿದ್ದರು. ದಾಳಿಯ ಪರಿಣಾಮವಾಗಿ ದೇಶದ ಪ್ರವಾಸೋದ್ಯಮ ಆರ್ಥಿಕತೆಗೆ ಭಾರೀ ಹೊಡೆತ ಬಿದ್ದಿತ್ತು. ರಾಜಧಾನಿ ಕೊಲಂಬೊ ಉಪನಗರದಲ್ಲಿ ಸಲ್ಲೇ ಅವರನ್ನು ಮುಂಜಾನೆ ಬಂಧಿಸಲಾಗಿದೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ. “ಈಸ್ಟರ್ ರವಿವಾರದ ದಾಳಿಗೆ ಪಿತೂರಿ ಹಾಗೂ ಸಹಕಾರ ನೀಡಿದ ಆರೋಪದ ಮೇರೆಗೆ ಅವರನ್ನು ಬಂಧಿಸಲಾಗಿದೆ” ಎಂದು ತನಿಖಾ ಅಧಿಕಾರಿಯೊಬ್ಬರು AFP ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ. ಗೋಟಬಯ ರಾಜಪಕ್ಸೆ ಅಧ್ಯಕ್ಷರಾದ ನಂತರ 2019ರಲ್ಲಿ ರಾಜ್ಯ ಗುಪ್ತಚರ ಸೇವೆ (SIS) ಮುಖ್ಯಸ್ಥರಾಗಿ ಬಡ್ತಿ ಪಡೆದಿದ್ದ ಸಲ್ಲೇ, ಸಂಘಟಿತ ಆತ್ಮಹತ್ಯಾ ಬಾಂಬ್ ದಾಳಿಯಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪ ಎದುರಿಸುತ್ತಿದ್ದಾರೆ. ಆದರೆ ಅವರು ಆರೋಪಗಳನ್ನು ನಿರಾಕರಿಸಿದ್ದಾರೆ. ಈಸ್ಟರ್ ದಿನ ಬೆಳಿಗ್ಗೆ ಪ್ರಾರ್ಥನಾ ಸಭೆಗಳ ವೇಳೆ ಮೂರು ಚರ್ಚ್ಗಳಲ್ಲಿ ಹಾಗೂ ಉಪಾಹಾರದ ಸಮಯದಲ್ಲಿ ಮೂರು ಐಷಾರಾಮಿ ಹೋಟೆಲ್ ಗಳಲ್ಲಿ ಏಕಕಾಲದಲ್ಲಿ ಆರು ಆತ್ಮಹತ್ಯಾ ಬಾಂಬ್ ಸ್ಫೋಟಗಳು ನಡೆದಿದ್ದವು. ಈ ದಾಳಿಗಳು ದೇಶದ ಪ್ರಮುಖ ಪ್ರವಾಸೋದ್ಯಮ ವಲಯವನ್ನು ಸಂಕಷ್ಟಕ್ಕೆ ತಳ್ಳಿದ್ದವು. ಆರಂಭದಲ್ಲಿ ಆತ್ಮಹತ್ಯಾ ದಾಳಿಗಳಿಗೆ ಸ್ಥಳೀಯ ಸಶಸ್ತ್ರ ಗುಂಪನ್ನು ಅಧಿಕಾರಿಗಳು ಹೊಣೆಗಾರರನ್ನಾಗಿ ಘೋಷಿಸಿದ್ದರು. ಆದರೆ ನಂತರ ಸಲ್ಲೇ ಅವರ ಮೇಲೂ ದಾಳಿ ಮಾಡಿದ ಆರೋಪಗಳು ಕೇಳಿಬಂದವು. 2023ರಲ್ಲಿ ಬ್ರಿಟಿಷ್ ಚಾನೆಲ್ 4 ಪ್ರಕಟಿಸಿದ ವರದಿಯಲ್ಲಿ ಸಲ್ಲೇ ದಾಳಿಕೋರರೊಂದಿಗೆ ಸಂಪರ್ಕ ಹೊಂದಿದ್ದು, ದಾಳಿಗೆ ಮುನ್ನ ಅವರನ್ನು ಭೇಟಿಯಾಗಿದ್ದರು ಎಂದು ಹೇಳಲಾಗಿದೆ. ರಾಜಪಕ್ಸೆ ಪರವಾಗಿ ಆ ವರ್ಷದ ಅಧ್ಯಕ್ಷೀಯ ಚುನಾವಣೆಯ ಮೇಲೆ ಪ್ರಭಾವ ಬೀರುವ ಉದ್ದೇಶದಿಂದ ದಾಳಿಗೆ ಅವಕಾಶ ನೀಡಲಾಗಿದೆ ಎಂದು ವಿಶಲ್ ಬ್ಲೋವರ್ ಒಬ್ಬರು ತಿಳಿಸಿದ್ದಾರೆ ಎಂದು ವರದಿ ಹೇಳಿತ್ತು. ಬಾಂಬ್ ಸ್ಫೋಟಗಳ ಎರಡು ದಿನಗಳ ಬಳಿಕ ಗೋಟಬಯ ರಾಜಪಕ್ಸೆ ತಮ್ಮ ಅಧ್ಯಕ್ಷೀಯ ಉಮೇದುವಾರಿಕೆಯನ್ನು ಘೋಷಿಸಿದ್ದರು. ಹಿಂಸಾಚಾರವನ್ನು ಕಠಿಣವಾಗಿ ಹತ್ತಿಕ್ಕುವುದಾಗಿ ಭರವಸೆ ನೀಡಿದ ಅವರು, ನವೆಂಬರ್ನಲ್ಲಿ ನಡೆದ ಚುನಾವಣೆಯಲ್ಲಿ ಭಾರೀ ಬಹುಮತದೊಂದಿಗೆ ಗೆದ್ದಿದ್ದರು. ರಾಜಪಕ್ಸೆ ವಿಜಯದ ನಂತರ ಶ್ರೀಲಂಕಾದ ಪ್ರಮುಖ ಗುಪ್ತಚರ ಸಂಸ್ಥೆಯಾದ SIS ಮುಖ್ಯಸ್ಥರಾಗಿ ಸಲ್ಲೇ ಅವರನ್ನು ನೇಮಕ ಮಾಡಲಾಗಿತ್ತು. ಆದರೆ 2024ರಲ್ಲಿ ಅನುರ ಕುಮಾರ ದಿಸಾನಾಯಕ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ನಂತರ ಸಲ್ಲೇ ಅವರನ್ನು ವಜಾಗೊಳಿಸಲಾಯಿತು. ದಾಳಿಯ ಹಿಂದಿರುವವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ದಿಸಾನಾಯಕ ಭರವಸೆ ನೀಡಿದ್ದರು. ಭಾರತೀಯ ಗುಪ್ತಚರ ಸಂಸ್ಥೆ ದಾಳಿ ಸನ್ನಿಹಿತವಾಗಿದೆ ಎಂಬ ಮುನ್ನೆಚ್ಚರಿಕೆ ನೀಡಿದ್ದರೂ, ಕ್ರಮ ಕೈಗೊಳ್ಳಲು ವಿಫಲವಾದ ಅಧಿಕಾರಿಗಳ ವಿರುದ್ಧ ಇತರ ತನಿಖೆಗಳು ಟೀಕೆ ವ್ಯಕ್ತಪಡಿಸಿವೆ. 2023ರಲ್ಲಿ ಶ್ರೀಲಂಕಾದ ಸುಪ್ರೀಂ ಕೋರ್ಟ್, ಮಾಜಿ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ಸೇರಿದಂತೆ ಇತರ ನಾಲ್ವರು ಹಿರಿಯ ಅಧಿಕಾರಿಗಳು ಬಾಂಬ್ ಸ್ಫೋಟಗಳನ್ನು ತಪ್ಪಿಸಲು ವಿಫಲರಾಗಿದ್ದಾರೆ ಎಂದು ತೀರ್ಪು ನೀಡಿತ್ತು. ಸಿವಿಲ್ ಮೊಕದ್ದಮೆ ದಾಖಲಿಸಿದ್ದ ಸಂತ್ರಸ್ತರ ಸಂಬಂಧಿಕರಿಗೆ ಸಿರಿಸೇನಾ ವೈಯಕ್ತಿಕವಾಗಿ 100 ಮಿಲಿಯನ್ ರೂಪಾಯಿಗಳನ್ನು (ಸುಮಾರು 273,300 ಡಾಲರ್) ಪರಿಹಾರವಾಗಿ ಪಾವತಿಸಲು ನ್ಯಾಯಾಲಯ ಆದೇಶಿಸಿತ್ತು. ಆಗಿನ ಪೊಲೀಸ್ ಮುಖ್ಯಸ್ಥ, ಇಬ್ಬರು ಹಿರಿಯ ಗುಪ್ತಚರ ಅಧಿಕಾರಿಗಳು ಹಾಗೂ ರಕ್ಷಣಾ ಸಚಿವಾಲಯದ ಕಾರ್ಯದರ್ಶಿ ಜಂಟಿಯಾಗಿ ಇನ್ನೂ 210 ಮಿಲಿಯನ್ ರೂಪಾಯಿಗಳನ್ನು (ಸುಮಾರು 574,000 ಡಾಲರ್) ಪಾವತಿಸಲು ಸೂಚಿಸಲಾಗಿತ್ತು. ಇದೇವೇಳೆ, ಸಾರ್ವಜನಿಕರಿಂದ ತಡೆಹಿಡಿಯಲಾದ ಹಿಂದಿನ ತನಿಖೆಗಳ ಭಾಗಗಳನ್ನು ಬಹಿರಂಗಪಡಿಸುವಂತೆ ವಿಶ್ವಸಂಸ್ಥೆ ಶ್ರೀಲಂಕಾ ಸರ್ಕಾರವನ್ನು ಆಗ್ರಹಿಸಿದೆ.
ಕುಲಶೇಖರ: ಬೈಬಲ್ ಅಧಿವೇಶನಕ್ಕೆ ಚಾಲನೆ
ಮಂಗಳೂರು, ಫೆ. 26: ಮಂಗಳೂರು ಧರ್ಮಪ್ರಾಂತ್ಯದ ಕಾರಿಸ್ಮಾತಿಕ್ ಸರ್ವಿಸ್ ಕಮ್ಯುನಿಯನ್ ಹಾಗೂ ಧರ್ಮಪ್ರಾಂತ್ಯದ ಬೈಬಲ್ ಆಯೋಗದ ಜಂಟಿ ಆಶ್ರಯದಲ್ಲಿ ಕುಲಶೇಖರದ ಕೊರ್ಡೆಲ್ ಹೋಲಿ ಕ್ರಾಸ್ ಚರ್ಚ್ನ ವಠಾರದಲ್ಲಿ ಆಯೋಜಿಸಲಾದ ನಾಲ್ಕು ದಿನಗಳ ‘ಬೃಹತ್ ಬೈಬಲ್ ಅಧಿವೇಶನ’ಕ್ಕೆ ಗುರುವಾರ ಭಕ್ತಿಪೂರ್ವಕವಾಗಿ ಚಾಲನೆ ನೀಡಲಾಯಿತು. ಪವಿತ್ರ ಬೈಬಲ್ನ ಭವ್ಯ ಮೆರವಣಿಗೆಯೊಂದಿಗೆ ಅಧಿವೇಶನವು ಆರಂಭವಾಯಿತು. ಬೈಬಲ್ ಮೆರವಣಿಗೆಯಲ್ಲಿ ಹೆಜ್ಜೆಹಾಕುವ ಮೂಲಕ ಮುಂದಿನ ಪೀಳಿಗೆಗೆ ನಂಬಿಕೆಯನ್ನು ಹಸ್ತಾಂತರಿಸುವ ಸುಂದರ ಸಂದೇಶವನ್ನು ಸಾರಿತು. ವಂ. ಮ್ಯಾಕ್ಸಿಂ ನೊರೋನ್ಹಾ ಅವರು ಧರ್ಮಗುರುಗಳು ಮತ್ತು ಕಾರಿಸ್ಮಾತಿಕ್ ಸಂಚಲನದ ಮುಂದಾಳು ಗಳೊಂದಿಗೆ ಅಧಿವೇಶನದ ಧ್ವಜಾರೋಹಣ ನೆರವೇರಿಸುವ ಮೂಲಕ ಕಾರ್ಯಕ್ರಮಕ್ಕೆ ಅಧಿಕೃತ ಚಾಲನೆ ನೀಡಿದರು. ಬಳಿಕ ಬಲಿಪೂಜೆಯನ್ನು ಅರ್ಪಿಸಲಾಯಿತು. ಬೋಂದೆಲ್ ಚರ್ಚ್ನ ಗಾಯನ ಮಂಡಳಿಯು ಸುಮಧುರ ಗಾಯನದ ಮೂಲಕ ಬಲಿಪೂಜೆಗೆ ಮೆರುಗು ನೀಡಿತು. ಅಧಿವೇಶನದ ಸ್ತುತಿ ಮತ್ತು ಆರಾಧನಾ ವಿಧಿಗಳನ್ನು ಬ್ರದರ್ ರೋನಿ ಡಿ ಸೋಜ ಮತ್ತು ಅವರ ತಂಡವು ಭಕ್ತಿಭಾವದಿಂದ ಮುನ್ನಡೆಸಿತು. ಹಳೆ ಒಡಂಬಡಿಕೆಯ ಹಿನ್ನೆಲೆ ಬಗ್ಗೆ ಮಡಂತ್ಯಾರು ಚರ್ಚ್ನ ಧರ್ಮಗುರು ವಂ. ಡಾ. ಸ್ಟ್ಯಾನಿ ಗೋವಿಯಸ್ ಮತ್ತು ಹೊಸ ಒಡಂಬಡಿಕೆಯ ಹಿನ್ನೆಲೆ ಬಗ್ಗೆ ಮುಲ್ಕಿಯ ಡಿವೈನ್ ಕಾಲ್ ಸೆಂಟರ್ನ ನಿರ್ದೇಶಕ ವಂ. ಅನಿಲ್ ಕಿರಣ್ ಫೆರ್ನಾಂಡಿಸ್ ಪ್ರವಚನ ನೀಡಿದರು. ಬಿಜೈ ಚರ್ಚ್ನ ಧರ್ಮಗುರು ಹಾಗೂ ಧರ್ಮಪ್ರಾಂತ್ಯದ ಸಾರ್ವಜನಿಕ ಸಂಪರ್ಕಾಧಿಕಾರಿ ವಂ..ಡಾ. ಜೆ.ಬಿ. ಸಲ್ಡಾನ್ಹಾ ಅವರು ದಿವ್ಯಸತ್ಪ್ರಸಾದದ ಆರಾಧನೆಯನ್ನು ಮುನ್ನಡೆಸಿದರು. ಉದ್ಘಾಟನಾ ಸಮಾರಂಭದಲ್ಲಿ ಕಾರಿಸ್ಮಾತಿಕ್ ಸರ್ವಿಸ್ ಕಮ್ಯುನಿಯನ್ನ ಆಧ್ಯಾತ್ಮಿಕ ನಿರ್ದೇಶಕ ವಂ. ಕ್ಲಿಫರ್ಡ್ ಫೆರ್ನಾಂಡಿಸ್, ಬೈಬಲ್ ಆಯೋಗದ ಕಾರ್ಯದರ್ಶಿ ವಂ. ಡಾ. ವಿನ್ಸೆಂಟ್ ಸಿಕ್ವೇರಾ, ಮಂಗಳ ಜ್ಯೋತಿ ನಿರ್ದೇಶಕ ವಂ. ರೋಹಿತ್ ಡಿಕೋಸ್ಟಾ, ಸಿಬಿಇ ಕಾರ್ಯದರ್ಶಿ ವಂ. ಡಾ. ಲಿಯೋ ಲಸ್ರಾದೋ, ಕೆನರಾ ಕಮ್ಯುನಿಕೇಷನ್ ಸೆಂಟರ್ ನಿರ್ದೇಶಕ ವಂ. ಅನಿಲ್ ಇವಾನ್ ಫೆರ್ನಾಂಡಿಸ್ ಮತ್ತು ಸಿಒಡಿಪಿ ನಿರ್ದೇಶಕ ವಂ. ವಿನ್ಸೆಂಟ್ ಡಿ’ಸೋಜ , ಮುಂದಾಳುಗಳಾದ ಸಂಚಾಲಕ ಡೊಲ್ಫಿ ಲೋಬೊ, ಬ್ರ. ಜೊಕಿಮ್ ಪಿಂಟೊ, ಸಿಸ್ಟರ್ ಮರ್ಸಿ ಮಿನೇಜಸ್, ಬ್ರ.ರೊನಾಲ್ಡ್ ಡಿ ಸೋಜಾ ಮತ್ತು ಬ್ರ. ಎಲಿಯಾಸ್ ಕುವೆಲ್ಲೊ ಉಪಸ್ಥಿತರಿದ್ದರು. ವಂ. ರೋಹಿತ್ ಡಿ ಕೋಸ್ಟಾ ಕಾರ್ಯಕ್ರಮ ನಿರೂಪಿಸಿದರು. ಬೈಬಲ್ ಅಧಿವೇಶನವು ಅಧಿವೇಶನವು ಮಾರ್ಚ್ 1 ರವರೆಗೆ ಪ್ರತಿದಿನ ಸಂಜೆ 4 ರಿಂದ 8:30ರವರೆಗೆ ನಡೆಯಲಿದೆ.
ʼವೈದ್ಯರ ಮುಷ್ಕರʼ | ಸಾರ್ವಜನಿಕರಿಗೆ ತೊಂದರೆ ಉಂಟಾದರೆ ತಪ್ಪಿತಸ್ಥರ ವಿರುದ್ಧ ಕ್ರಮ : ಆರೋಗ್ಯ ಇಲಾಖೆ ಎಚ್ಚರಿಕೆ
ಬೆಂಗಳೂರು : ಸರಕಾರಿ ಆಸ್ಪತ್ರೆಗಳ ವೈದ್ಯರು ಸೇರಿ ಇತರೆ ಸಿಬ್ಬಂದಿಗಳು ಮುಷ್ಕರ ಹೆಸರಿನಲ್ಲಿ ಕೆಲಸಕ್ಕೆ ಗೈರಾಗಿದರೆ, ಸಾರ್ವಜನಿಕರಿಗೆ ತೊಂದರೆ ಉಂಟಾಗಿದ್ದಲ್ಲಿ ತಪ್ಪಿತಸ್ಥ ಸಿಬ್ಬಂದಿಗಳ ವಿರುದ್ಧ ಕಾನೂನು ರೀತಿಯ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಆರೋಗ್ಯ ಇಲಾಖೆ ಎಚ್ಚರಿಕೆ ನೀಡಿದೆ. ಗುರುವಾರ ಈ ಸಂಬಂಧ ಇಲಾಖೆಯು ಪ್ರಕಟನೆ ಹೊರಡಿಸಿದ್ದು, ಕರ್ನಾಟಕ ಸರಕಾರಿ ವೈದ್ಯಾಧಿಕಾರಿಗಳ ಸಂಘ, ಕರ್ನಾಟಕ ರಾಜ್ಯ ಆರೋಗ್ಯ ಮತ್ತು ವೈದೈಕೀಯ ಶಿಕ್ಷಣ ಇಲಾಖೆ ನೌಕರರ ಕೇಂದ್ರ ಸಂಘ ಹಾಗೂ ಇಲಾಖೆಯ ಎಲ್ಲಾ ವೃಂದ ಸಂಘಗಳು ಸಲ್ಲಿಸಿರುವ ಬೇಡಿಕೆಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ತಿಳಿಸಿದೆ. ಬೇಡಿಕೆಗಳಂತೆ ವೃಂದ ಮತ್ತು ನೇಮಕಾತಿ ನಿಯಮಗಳ ತಿದ್ದುಪಡಿ ಮಾಡುವ ಕಾರ್ಯ ಪ್ರಗತಿಯಲ್ಲಿದೆ. ಎಲ್ಲಾ ವೃಂದಗಳ ಜೇಷ್ಠತಾ ಪಟ್ಟಿಯನ್ನು ಜಾಲತಾಣದಲ್ಲಿ ಪ್ರಕಟಿಸಲು ಕ್ರಮವಹಿಸಲಾಗುತ್ತದೆ. ಸಿಬ್ಬಂದಿಗಳಿಗೆ ಪದೋನ್ನತಿ ನೀಡಲು ಶೀಘ್ರವಾಗಿ ಕ್ರಮವಹಿಸಲಾಗುತ್ತದೆ. ಕರ್ತವ್ಯ ಅವಧಿ ನಂತರದ ಖಾಸಗಿ ವೈದ್ಯಕೀಯ ಸೇವೆ ಬಗ್ಗೆ ವೇತನ ಆಯೋಗದ ಪರಿಷ್ಕರಣೆ ಸಮಯದಲ್ಲಿ ಪ್ರಸ್ತಾವವನ್ನು ಸಲ್ಲಿಸಬಹುದಾಗಿದೆ ಎಂದು ಇಲಾಖೆಯು ಹೇಳಿದೆ. ಸಾರ್ವಜನಿಕ ಆರೋಗ್ಯ ಸೇವೆಯ ನಿರಂತರತೆ ಹಾಗೂ ರೋಗಿಗಳ ಆರೋಗ್ಯ ಕಾಪಾಡುವ ಮಹತ್ವದ ವೃತ್ತಿಪರ ಮತ್ತು ನೈತಿಕ ಜವಾಬ್ದಾರಿಯನ್ನು ಹೊಂದಿದೆ. ಹೀಗಾಗಿ ವೈದ್ಯರು ಸಾರ್ವಜನಿಕರಿಗೆ ತೊಂದರೆ ಉಂಟಾಗುವುದನ್ನು ಮನಗಂಡು ಮುಷ್ಕರದಿಂದ ಹಿಂದೆ ಸರಿದು ಕರ್ತವ್ಯಗಳನ್ನು ನಿರ್ವಹಿಸಬೇಕು ಎಂದು ಇಲಾಖೆಯು ತಿಳಿಸಿದೆ.
ಶೇ.50ರಷ್ಟು ಮೀಸಲಾತಿ ಅಡಿಯಲ್ಲೇ 56 ಸಾವಿರ ಹುದ್ದೆಗಳ ನೇಮಕಾತಿಗೆ ಚಾಲನೆ : ಸಚಿವ ಸಂಪುಟ ಮಹತ್ವದ ತೀರ್ಮಾನ
ಬೆಂಗಳೂರು, ಫೆ.26 : ಧಾರವಾಡದಲ್ಲಿ ಉದ್ಯೋಗಾಕಾಂಕ್ಷಿಗಳು ನಡೆಸಿದ ಬೃಹತ್ ಪ್ರತಿಭಟನೆಯ ಬೆನ್ನಲ್ಲೇ ರಾಜ್ಯ ಸಚಿವ ಸಂಪುಟವು ಶೇ.56ರ ಬದಲು, ಶೇ.50ರಷ್ಟು ಮೀಸಲಾತಿಯ ಆಧಾರದಲ್ಲೆ 56,432 ಹುದ್ದೆಗಳ ನೇಮಕಾತಿಗೆ ಚಾಲನೆ ನೀಡಲು ಹಸಿರು ನಿಶಾನೆ ತೋರಿಸಿದೆ. ಗುರುವಾರ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ್ ಈ ವಿಷಯವನ್ನು ತಿಳಿಸಿದರು. ರಾಜ್ಯದಲ್ಲಿ ಎಸ್ಸಿ, ಎಸ್ಟಿ ಮೀಸಲಾತಿ ಪ್ರಮಾಣ, ಒಳ ಮೀಸಲಾತಿ ಆಧಾರದಲ್ಲಿ ನೇಮಕಾತಿ ಪ್ರಕ್ರಿಯೆ ಕುರಿತು ಸಚಿವ ಸಂಪುಟ ಸಭೆಯಲ್ಲಿ ಸುದೀರ್ಘ ಚರ್ಚೆ ಮಾಡಿದ್ದೇವೆ. ಹೈಕೋರ್ಟ್ನಲ್ಲಿ ಹಲವು ಪ್ರಕರಣಗಳಲ್ಲಿ ಶೇ.56ಕ್ಕೆ ಹೆಚ್ಚಿಸಲ್ಪಟ್ಟಿದ್ದ 2022ರ ಮೀಸಲಾತಿ ಕಾಯ್ದೆಗೆ ತಡೆಯಾಜ್ಞೆ ಇದೆ. ಈ ಹಿನ್ನೆಲೆಯಲ್ಲಿ 56,432 ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ಸ್ಥಗಿತಗೊಂಡಿತ್ತು ಎಂದು ಅವರು ಹೇಳಿದರು. ನೇಮಕಾತಿ ಪ್ರಕ್ರಿಯೆಯನ್ನು ತುರ್ತಾಗಿ ಮುಂದುವರೆಸಬೇಕಿದೆ. ಆದುದರಿಂದ, ಹೈಕೋರ್ಟ್ನ ಮಧ್ಯಂತರ ಆದೇಶದ ಹಿನ್ನೆಲೆಯಲ್ಲಿ 2022ರ ಡಿ.28ರ ಪೂರ್ವದಲ್ಲಿ ಜಾರಿಯಲ್ಲಿದ್ದ ಮೀಸಲಾತಿ ಆದೇಶದಂತೆಯೆ ಶೇ.50ರಷ್ಟು ಮೀಸಲಾತಿ ಅಡಿಯಲ್ಲಿ ಹೊಸ ನೇಮಕಾತಿ ಅಧಿಸೂಚನೆ ಹೊರಡಿಸಲಾಗುವುದು ಎಂದು ಎಚ್.ಕೆ.ಪಾಟೀಲ್ ಹೇಳಿದರು. ಅಲ್ಲದೇ, ಹೈಕೋರ್ಟ್ ಈ ಪ್ರಕರಣಗಳಲ್ಲಿ ನೀಡುವ ಅಂತಿಮ ಆದೇಶಕ್ಕೆ ಒಳಪಟ್ಟು, ಆಯಾ ಇಲಾಖೆಯ ಶೇ.6ರಷ್ಟು ಹುದ್ದೆಗಳು(ಎಸ್ಸಿ-ಶೇ.2, ಎಸ್ಟಿ-ಶೇ.4)ಕಾಯ್ದಿರಿಸಿ ಆದೇಶಿಸಲಾಗುವುದು. ಎಸ್ಸಿ, ಎಸ್ಟಿ ಮೀಸಲಾತಿ ಹೆಚ್ಚಳದಿಂದ ಈ ಪ್ರಮಾಣ ಶೇ.56 ಆಗಿತ್ತು. ಆದರೆ, 2022ರ ಕಾಯ್ದೆಗೆ ಹೈಕೋರ್ಟ್ ತಡೆಯಾಜ್ಞೆ ನೀಡಿರುವುದರಿಂದ ಅಂತಿಮ ಆದೇಶಕ್ಕೆ ಒಳಪಟ್ಟು ಆಯಾ ಇಲಾಖೆಯ ಮುಂದಿನ ಅಧಿಸೂಚನೆಗಳಲ್ಲಿ ಶೇ.6ರಷ್ಟು ಹುದ್ದೆಗಳನ್ನು ಎಸ್ಸಿ, ಎಸ್ಟಿಗೆ ಕಾಯ್ದಿರಿಸಲು ಸೂಚಿಸಲಾಗಿದೆ ಎಂದು ಅವರು ಹೇಳಿದರು.
ರಣಜಿ ಟ್ರೋಫಿ: ಮಯಾಂಕ್ ಅಗರ್ವಾಲ್ ಶತಕ: ಕರ್ನಾಟಕದ ತಂಡಕ್ಕೆ ದೊಡ್ಡ ಸವಾಲು
Mayank Agarwal: ಹುಬ್ಬಳ್ಳಿಯಲ್ಲಿನ ರಾಜನಗರದಲ್ಲಿರುವ ಕೆಎಸ್ಸಿಎ ಮೈದಾನದಲ್ಲಿ ನಡೆಯುತ್ತಿರುವ ರಣಜಿ ಟ್ರೋಫಿ 2026ರ ಫೈನಲ್ ಪಂದ್ಯದಲ್ಲಿ ಕರ್ನಾಟಕ ತಂಡ ತೀವ್ರ ಒತ್ತಡದಲ್ಲಿದೆ. ಇನ್ನೂ ಜಮ್ಮು ಕಾಶ್ಮೀರ ತಂಡ ಮೊದಲ ಇನ್ನಿಂಗ್ಸ್ನಲ್ಲಿ ಬೃಹತ್ ಮೊತ್ತ ಕಲೆಹಾಕಿದ ಹಿನ್ನೆಲೆ, ಕರ್ನಾಟಕದ ತಂಡಕ್ಕೆ ದೊಡ್ಡ ಸವಾಲು ಎದುರಾಗಿದೆ. ಮೂರನೇ ದಿನದ ಆಟದ ಅಂತ್ಯಕ್ಕೆ ಕರ್ನಾಟಕವು 69 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ
ಅಜಿತ್ ಪವಾರ್ ವಿಮಾನ ಅಪಘಾತ | ನ್ಯಾಯಾಲಯ ಮೇಲ್ವಿಚಾರಣೆಯ ತನಿಖೆ ಆಗ್ರಹಿಸಿ ಬಾಂಬೆ ಹೈಕೋರ್ಟ್ ಗೆ ಪಿಐಎಲ್
ಮುಂಬೈ, ಫೆ. 26: ಮಹಾರಾಷ್ಟ್ರದ ಮುಖ್ಯಮಂತ್ರಿ ಅಜಿತ್ ಪವಾರ್ ಹಾಗೂ ಇತರರು ಸಾವನ್ನಪ್ಪಲು ಕಾರಣವಾದ ವಿಮಾನ ಅಪಘಾತದ ಕುರಿತಂತೆ ನ್ಯಾಯಾಲಯದ ಮೇಲ್ವಿಚಾರಣೆಯ ತನಿಖೆ ಕೋರಿ ಬಾಂಬೆ ಉಚ್ಚ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ಸಲ್ಲಿಕೆಯಾಗಿದೆ. ಸಾಮಾಜಿಕ ಹೋರಾಟಗಾರ ಕೇತನ್ ತಿರೋಡ್ಕರ್ ಈ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ಸಲ್ಲಿಸಿದ್ದಾರೆ. ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಅವರ ‘ಆಕಸ್ಮಿಕ ಸಾವು’ ಕುರಿತು ತನಿಖೆ ನಡೆಸಲು ಸಿಐಡಿಗೆ ನಿರ್ದೇಶನ ನೀಡುವಂತೆ ಅವರು ಅರ್ಜಿಯಲ್ಲಿ ಕೋರಿದ್ದಾರೆ. ಇದರೊಂದಿಗೆ ನಿವೃತ್ತ ಡಿಜಿಸಿಎ ನಿರ್ದೇಶಕರು ಹಾಗೂ ವಾಣಿಜ್ಯ ವಿಮಾನಯಾನ ಸಂಸ್ಥೆಯ ಮುಖ್ಯ ನಿರ್ವಹಣಾ ಎಂಜಿನಿಯರ್ ಸೇರಿದಂತೆ ವಿಮಾನಯಾನ ತಜ್ಞರನ್ನು ಒಳಗೊಂಡು, ಬಾಂಬೆ ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ನ್ಯಾಯಾಂಗ ಆಯೋಗವನ್ನು ರಚಿಸುವಂತೆ ಅವರು ಕೋರಿದ್ದಾರೆ. ವಿಮಾನ ಅಪಘಾತದ ಕುರಿತು ಸಿಐಡಿ ತನಿಖೆ ನಡೆಸುವಂತೆ ಕೋರಿ ಮುಖ್ಯಮಂತ್ರಿ ದೇವೇಂದ್ರ ಫಡ್ನಾವಿಸ್ ಅವರಿಗೆ ಫೆಬ್ರವರಿ 20ರಂದು ಪತ್ರ ಬರೆಯಲಾಗಿದೆ ಎಂದು ಕೂಡ ತಿರೋಡ್ಕರ್ ಪಿಐಎಲ್ನಲ್ಲಿ ತಿಳಿಸಿದ್ದಾರೆ.
T20 ವಿಶ್ವಕಪ್ ನಲ್ಲಿ ತನ್ನ ಗರಿಷ್ಠ ಮೊತ್ತ ಗಳಿಸಿದ ಭಾರತ ಕ್ರಿಕೆಟ್ ತಂಡ
ಚೆನ್ನೈ, ಫೆ. 26: ಭಾರತ ಕ್ರಿಕೆಟ್ ತಂಡವು ಝಿಂಬಾಬ್ವೆ ವಿರುದ್ಧ ಗುರುವಾರ ನಡೆದ ಸೂಪರ್-8 ಪಂದ್ಯದಲ್ಲಿ T20 ವಿಶ್ವಕಪ್ ಇತಿಹಾಸದಲ್ಲಿ ತನ್ನ ಗರಿಷ್ಠ ಮೊತ್ತವನ್ನು ದಾಖಲಿಸಿದೆ. ಭಾರತ ತಂಡವು 4 ವಿಕೆಟ್ ಗಳ ನಷ್ಟಕ್ಕೆ 256 ರನ್ ಗಳಿಸಿದ್ದು, 2007ರಲ್ಲಿ ನಡೆದ ಮೊದಲ ಆವೃತ್ತಿಯ ಪಂದ್ಯಾವಳಿಯಲ್ಲಿ ಇಂಗ್ಲೆಂಡ್ ವಿರುದ್ಧ ದಾಖಲಿಸಿದ್ದ ತನ್ನದೇ ಹಿಂದಿನ ಶ್ರೇಷ್ಠ ಸ್ಕೋರ್ (218/4) ಅನ್ನು ಉತ್ತಮಪಡಿಸಿಕೊಂಡಿದೆ. ಇದು T20 ವಿಶ್ವಕಪ್ ಇತಿಹಾಸದಲ್ಲಿ ದಾಖಲಾದ ಎರಡನೇ ಗರಿಷ್ಠ ಸ್ಕೋರ್ ಆಗಿದೆ. ಕಳೆದ ವಾರ ಝಿಂಬಾಬ್ವೆ ವಿರುದ್ಧವೇ ವೆಸ್ಟ್ ಇಂಡೀಸ್ ತಂಡ ಗಳಿಸಿದ್ದ 254 ರನ್ಗಳ ದಾಖಲೆಯನ್ನು ಭಾರತ ಇಂದು ಹಿಂದಿಕ್ಕಿದೆ. 2007ರಲ್ಲಿ ಕೀನ್ಯಾ ವಿರುದ್ಧ T20 ವಿಶ್ವಕಪ್ ನಲ್ಲಿ ಶ್ರೀಲಂಕಾ ತಂಡವು 6 ವಿಕೆಟ್ ಗಳ ನಷ್ಟಕ್ಕೆ 260 ರನ್ ಗಳಿಸಿದ್ದು, ಇದು T20 ವಿಶ್ವಕಪ್ ಇತಿಹಾಸದ ಗರಿಷ್ಠ ಮೊತ್ತವಾಗಿದೆ. T20 ವಿಶ್ವಕಪ್ ನಲ್ಲಿ ಭಾರತದ ಗರಿಷ್ಠ ಮೊತ್ತಗಳು 1. 256/4: ಝಿಂಬಾಬ್ವೆ ವಿರುದ್ಧ, 2026 2. 218/4: ಇಂಗ್ಲೆಂಡ್ ವಿರುದ್ಧ, 2007 3. 210/2: ಅಫ್ಘಾನಿಸ್ತಾನ ವಿರುದ್ಧ, 2021 4. 209/9: ನಮೀಬಿಯಾ ವಿರುದ್ಧ, 2026 5. 205/5: ಆಸ್ಟ್ರೇಲಿಯಾ ವಿರುದ್ಧ, 2024
ಜಾಗತಿಕ ನಿರ್ಲಕ್ಷ್ಯ ಪಶ್ಚಿಮ ದಂಡೆಯ ಅಕ್ರಮ ವಶಕ್ಕೆ ಉತ್ತೇಜನ ನೀಡುತ್ತದೆ: ಆ್ಯಮ್ನೆಸ್ಟಿ ಇಂಟರ್ ನ್ಯಾಶನಲ್
ಲಂಡನ್, ಫೆ. 26: ಆಕ್ರಮಿತ ಪಶ್ಚಿಮ ದಂಡೆಯಲ್ಲಿ ಇಸ್ರೇಲ್ ನಡೆಸುತ್ತಿರುವ ಅಂತರರಾಷ್ಟ್ರೀಯ ಕಾನೂನು ಉಲ್ಲಂಘನೆಗಳ ಬಗ್ಗೆ ಅದರ ವಿರುದ್ಧ ದಂಡನಾ ಕ್ರಮಗಳನ್ನು ಕೈಗೊಳ್ಳಲು ಅಂತರರಾಷ್ಟ್ರೀಯ ಸಮುದಾಯ ವಿಫಲವಾಗಿರುವುದಕ್ಕೆ ಮಾನವಹಕ್ಕುಗಳ ಸಂಘಟನೆ ಆ್ಯಮ್ನೆಸ್ಟಿ ಇಂಟರ್ ನ್ಯಾಶನಲ್ ಕಳವಳ ವ್ಯಕ್ತಪಡಿಸಿದೆ. ಇದು ಫೆಲೆಸ್ತೀನ್ ಭೂಭಾಗವನ್ನು ವಶಪಡಿಸಿಕೊಳ್ಳುವ ಇಸ್ರೇಲ್ ನ ನಿರ್ಧಾರವನ್ನು ‘‘ಬದಲಾಯಿಸಲು ಸಾಧ್ಯವಾಗದ’’ ವಾಸ್ತವವನ್ನಾಗಿಸಿದೆ ಎಂದು ಅದು ಹೇಳಿದೆ. ಜಾಗತಿಕ ಶಕ್ತಿಗಳು ಇಸ್ರೇಲ್ ಗೆ ನೀಡಿರುವ ವಿನಾಯಿತಿಯಿಂದ ಕಡುಬಲಪಂಥೀಯ ಬೆಂಜಮಿನ್ ನೆತನ್ಯಾಹು ಸರಕಾರ ಮತ್ತಷ್ಟು ಉತ್ತೇಜನಗೊಂಡಿದ್ದು, ಇದು ಪಶ್ಚಿಮ ದಂಡೆಯಾದ್ಯಂತ ಫೆಲೆಸ್ತೀನೀಯರನ್ನು ಹೊರದಬ್ಬುವ ಪ್ರಯತ್ನಗಳಿಗೆ ಬಲ ತುಂಬಿದೆ ಎಂದು ಗುರುವಾರ ಬಿಡುಗಡೆಗೊಳಿಸಿದ ಹೇಳಿಕೆಯಲ್ಲಿ ಆ್ಯಮ್ನೆಸ್ಟಿ ಇಂಟರ್ ನ್ಯಾಶನಲ್ ತಿಳಿಸಿದೆ. ‘‘ಅಮೆರಿಕ ಸರಕಾರದ ನಿಶ್ಶರ್ತ ಬೆಂಬಲ ಹಾಗೂ ಗಾಝಾದಲ್ಲಿ ಫೆಲೆಸ್ತೀನೀಯರ ವಿರುದ್ಧ ಇಸ್ರೇಲ್ ನಡೆಸುತ್ತಿರುವ ಜನಾಂಗೀಯ ಹತ್ಯೆ, ಅಂತರರಾಷ್ಟ್ರೀಯ ಕಾನೂನು ಉಲ್ಲಂಘಿಸಿ ದಶಕಗಳ ಕಾಲ ನಡೆದ ಕಾನೂನುಬಾಹಿರ ಆಕ್ರಮಣದ ಅವಧಿಯ ಅಪರಾಧಗಳು ಮತ್ತು ಅದರ ವರ್ಣಭೇದ ವ್ಯವಸ್ಥೆಗೆ ಅಂತರರಾಷ್ಟ್ರೀಯ ಉತ್ತರದಾಯಿತ್ವದ ಕೊರತೆಯು ತನ್ನ ಅಕ್ರಮ ಚಟುವಟಿಕೆಗಳನ್ನು ಹೆಚ್ಚಿಸಲು ಇಸ್ರೇಲ್ ಗೆ ಉತ್ತೇಜನ ನೀಡಿವೆ’’ ಎಂದು ಆ್ಯಮ್ನೆಸ್ಟಿ ಇಂಟರ್ ನ್ಯಾಶನಲ್ ನ ಹಿರಿಯ ಸಂಶೋಧನಾ, ನೀತಿ ಮತ್ತು ಅಭಿಯಾನ ನಿರ್ದೇಶಕಿ ಗೆವಾರಾ ರೊಸಾಸ್ ಹೇಳಿದ್ದಾರೆ.
ಅಜಿತ್ ಪವಾರ್ ವಿಮಾನ ಅಪಘಾತ | ವಿಎಸ್ಆರ್ ವೆಂಚರ್ಸ್ ವಿರುದ್ಧ ದೂರು ದಾಖಲಿಸಿದ ರೋಹಿತ್ ಪವಾರ್
ಪುಣೆ, ಫೆ. 26: ತಮ್ಮ ಚಿಕ್ಕಪ್ಪ ಹಾಗೂ ಮಹಾರಾಷ್ಟ್ರದ ಆಗಿನ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಅವರ ಸಾವಿಗೆ ಕಾರಣವಾದ ಜನವರಿ 28ರಂದು ಸಂಭವಿಸಿದ ವಿಮಾನ ಅಪಘಾತದ ಕುರಿತಂತೆ ವಿಎಸ್ಆರ್ ವೆಂಚರ್ಸ್ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಕೋರಿ ಎನ್ಸಿಪಿ (ಎಸ್ಪಿ) ಶಾಸಕ ರೋಹಿತ್ ಪವಾರ್ ಹಾಗೂ ಅವರ ಸೋದರ ಸಂಬಂಧಿ ಯುಗೇಂದ್ರ ಪವಾರ್ ಅವರು ಗುರುವಾರ ಬಾರಾಮತಿ ಪೊಲೀಸರನ್ನು ಸಂಪರ್ಕಿಸಿದ್ದಾರೆ. ವಿಎಸ್ಆರ್ ವೆಂಚರ್ಸ್ ಹಾಗೂ ಅದರ ನಿರ್ದೇಶಕರ ವಿರುದ್ಧ ಮುಂಬೈನ ಮರೈನ್ ಡ್ರೈವ್ ಪೊಲೀಸ್ ಠಾಣೆಯಲ್ಲಿ ರೋಹಿತ್ ಪವಾರ್ ಅವರು ದೂರು ದಾಖಲಿಸಿದ ದಿನದ ಬಳಿಕ ಈ ಬೆಳವಣಿಗೆ ನಡೆದಿದೆ. ಅಜಿತ್ ಪವಾರ್ ಹಾಗೂ ಇತರ ನಾಲ್ವರು ಇದ್ದ ಲಿಯರ್ಜೆಟ್-45 ವಿಮಾನವು ಪುಣೆ ಜಿಲ್ಲೆಯ ಬಾರಾಮತಿಯಲ್ಲಿ ಅಪಘಾತಕ್ಕೀಡಾಗಿತ್ತು. ಈ ವಿಮಾನವನ್ನು ವಿಎಸ್ಆರ್ ವೆಂಚರ್ಸ್ ನಿರ್ವಹಿಸುತ್ತಿತ್ತು. ಅಜಿತ್ ಪವಾರ್ ಅವರಿಗೆ ನ್ಯಾಯ ನೀಡುವಂತೆ ಆಗ್ರಹಿಸಿದ ಫಲಕಗಳನ್ನು ಹಿಡಿದುಕೊಂಡ ದೊಡ್ಡ ಸಂಖ್ಯೆಯ ಬೆಂಬಲಿಗರೊಂದಿಗೆ ಗುರುವಾರ ಬೆಳಿಗ್ಗೆ ಆಗಮಿಸಿದ ರೋಹಿತ್ ಪವಾರ್ ಹಾಗೂ ಯುಗೇಂದ್ರ ಪವಾರ್ ಬಾರಾಮತಿ ತಾಲೂಕು ಪೊಲೀಸ್ ಠಾಣೆಯಲ್ಲಿ ಲಿಖಿತ ದೂರು ದಾಖಲಿಸಿದರು. ‘‘ವಿಎಸ್ಆರ್ ವೆಂಚರ್ಸ್ ವಿರುದ್ಧ ಎಫ್ಐಆರ್ ದಾಖಲಿಸುವಂತೆ ನಾವು ಆಗ್ರಹಿಸುತ್ತೇವೆ. ಈ ಪ್ರಕರಣದಲ್ಲಿ ರೋಹಿತ್ ದಾದಾ ಅವರಿಗೆ ಬೆಂಬಲ ನೀಡಲು ನಾವು ಇಲ್ಲಿಗೆ ಆಗಮಿಸಿದ್ದೇವೆ. ಅಜಿತ್ ದಾದಾಗೆ ನ್ಯಾಯ ಸಿಗಬೇಕು. ವಿಮಾನ ಅಪಘಾತದ ತನಿಖೆಯನ್ನು ತ್ವರಿತಗೊಳಿಸಬೇಕು ಎಂಬುದು ನಮ್ಮ ಬೇಡಿಕೆ’’ ಎಂದು ಯುಗೇಂದ್ರ ಪವಾರ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
ರಾಜಿ ಪ್ರಕ್ರಿಯೆ ಕುರಿತು ಎಚ್ಡಿಕೆ ಮೊದಲು ಲಿಖಿತ ವಿವರಣೆ ನೀಡಲಿ; ಲೋಕಾಯುಕ್ತ ಎಡಿಜಿಪಿ ಚಂದ್ರಶೇಖರ್ ಪರ ವಕೀಲರ ವಾದ
ಬೆಂಗಳೂರು : ಲೋಕಾಯುಕ್ತ ಎಡಿಜಿಪಿ ಮತ್ತು ಎಸ್ಐಟಿ ಮುಖ್ಯಸ್ಥ ಎಂ.ಚಂದ್ರಶೇಖರ್ ಮತ್ತವರ ಕುಟುಂಬಕ್ಕೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಬೆದರಿಕೆ ಹಾಕಿದ್ದಾರೆ. ಮಾಧ್ಯಮಗಳ ಮುಂದೆ ಚಂದ್ರಶೇಖರ್ ಹಾಗೂ ಲೋಕಾಯುಕ್ತ ಸಂಸ್ಥೆಯ ಘನತೆಗೆ ಧಕ್ಕೆ ತಂದಿದ್ದಾರೆ. ಆದ್ದರಿಂದ, ರಾಜಿ ಸಂಧಾನ ಪ್ರಕ್ರಿಯೆಗೆ ಮೊದಲು ಕುಮಾರಸ್ವಾಮಿ ಅವರೇ ನ್ಯಾಯಾಲಯಕ್ಕೆ ಲಿಖಿತ ವಿವರಣೆ ನೀಡಲಿ ಎಂದು ಚಂದ್ರಶೇಖರ್ ಪರ ವಕೀಲರು ಹೈಕೋರ್ಟ್ಗೆ ತಿಳಿಸಿದರು. ಚಂದ್ರಶೇಖರ್ ಅವರಿಗೆ ಬೆದರಿಕೆ ಹಾಕಿದ ಆರೋಪದಲ್ಲಿ ಬೆಂಗಳೂರಿನ ಸಂಜಯನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್ಐಆರ್ ಹಾಗೂ ನಗರದ 42ನೇ ಎಸಿಎಂಎಂ ನ್ಯಾಯಾಲಯದ (ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ) ವಿಚಾರಣೆ ರದ್ದು ಕೋರಿ ಎಚ್.ಡಿ. ಕುಮಾರಸ್ವಾಮಿ, ನಿಖಿಲ್ ಕುಮಾರಸ್ವಾಮಿ ಹಾಗೂ ಸುರೇಶ್ ಬಾಬು ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಸುನೀಲ್ ದತ್ ಯಾದವ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿತು. ಚಂದ್ರಶೇಖರ್ ಪರ ವಕೀಲ ಎಂ.ಎಚ್. ಹಿದಾಯತ್ ಉಲ್ಲಾ ವಾದ ಮಂಡಿಸಿ, ಕುಮಾರಸ್ವಾಮಿ ಅವರು ಮೊದಲು ಲಿಖಿತ ವಿವರಣೆ ನೀಡಲಿ, ನಂತರ ನಮ್ಮ ಕಕ್ಷಿದಾರರು ಅದನ್ನು ಪರಿಶೀಲಿಸಿ ಮುಂದಡಿ ಇಡಲಿದ್ದಾರೆ ಎಂದರು. ಕುಮಾರಸ್ವಾಮಿ ಪರ ಹಾಜರಿದ್ದ ಹಿರಿಯ ವಕೀಲ ಹಷ್ಮತ್ ಪಾಷ, ರಾಜಿ ಪ್ರಕ್ರಿಯೆಗೆ ನಾವು ಸಿದ್ಧರಿದ್ದು, ಮುಂದಿನದನ್ನು ಕೋರ್ಟ್ ನಿರ್ಧಾರಕ್ಕೆ ಬಿಡಲು ಸಿದ್ಧರಿದ್ದೇವೆ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಇಬ್ಬರೂ ಕೂತು ಪರಸ್ಪರ ಚರ್ಚಿಸಿ ನಂತರ ಒಂದು ತೀರ್ಮಾನಕ್ಕೆ ಬನ್ನಿ. ನಂತರ ಕೋರ್ಟ್ ತನ್ನ ವಿವೇಚನಾಯುಕ್ತ ನಿರ್ಧಾರ ಪ್ರಕಟಿಸಲಿದೆ ಎಂದು ತಿಳಿಸಿ, ವಿಚಾರಣೆಯನ್ನು ಮಾರ್ಚ್ 5ಕ್ಕೆ ಮುಂದೂಡಿತು. ಪ್ರಕರಣವೇನು? ಅಕ್ರಮ ಗಣಿಗಾರಿಕೆ ಪ್ರಕರಣದ ತನಿಖೆಯ ಮೇಲೆ ಪ್ರಭಾವ ಬೀರುವ ಉದ್ದೇಶದಿಂದ ಎಚ್.ಡಿ. ಕುಮಾರಸ್ವಾಮಿ ಅವರು ಮಾಧ್ಯಮಗೋಷ್ಠಿಯಲ್ಲಿ ನನ್ನ ವಿರುದ್ಧ ಮಾನಹಾನಿ ಹೇಳಿಕೆ ನೀಡುವುದರ ಜತೆಗೆ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ಲೋಕಾಯುಕ್ತದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಹಾಗೂ ವಿಶೇಷ ಪೊಲೀಸ್ ತನಿಖಾ ದಳದ ಮುಖ್ಯಸ್ಥರಾದ ಎಂ. ಚಂದ್ರಶೇಖರ್ 2024ರಲ್ಲಿ ದೂರು ದಾಖಲಿಸಿದ್ದರು. ಈ ದೂರು ಆಧರಿಸಿ ಬೆಂಗಳೂರಿನ ಸಂಜಯ್ನಗರ ಪೊಲೀಸ್ ಠಾಣೆಯಲ್ಲಿ ಬಿಎನ್ಎಸ್ ಸೆಕ್ಷನ್ 224 (ಸರ್ಕಾರಿ ನೌಕರರಿಗೆ ಅವರ ಅಧಿಕೃತ ಕರ್ತವ್ಯಗಳ ಮೇಲೆ ಪ್ರಭಾವ ಬೀರಲು ಬೆದರಿಕೆ ಹಾಕಿದೆ) ಆರೋಪದಲ್ಲಿ ಎಫ್ಐಆರ್ ದಾಖಲಾಗಿತ್ತು. ಪ್ರಕರಣವನ್ನು ನಗರದ 42ನೇ ಎಸಿಎಂಎಂ ನ್ಯಾಯಾಲು ವಿಚಾರಣೆ ನಡೆಸುತ್ತಿದೆ. ಇದರಿಂದ, ಎಫ್ಐಆರ್ ಮತ್ತು ವಿಚಾರಣಾ ನ್ಯಾಯಾಲಯದ ಪ್ರಕ್ರಿಯೆ ರದ್ದು ಕೋರಿ ಕುಮಾರಸ್ವಾಮಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ.
ಪಣಂಬೂರು| ಲಾರಿ ಢಿಕ್ಕಿ: ದ್ವಿಚಕ್ರ ವಾಹನ ಸವಾರ ಸ್ಥಳದಲ್ಲೇ ಮೃತ್ಯು
ಪಣಂಬೂರು: ಲಾರಿ ಢಿಕ್ಕಿ ಹೊಡೆದ ಪರಿಣಾಮ ದ್ವಿಚಕ್ರ ವಾಹನ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಇಂದು ಸಂಜೆ ಪಣಂಬೂರು ಇಂಡಿಯನ್ ಆಯಿಲ್ ಪೆಟ್ರೋಲ್ ಪಂಪ್ ಮುಂಭಾಗ ನಡೆದಿದೆ. ಮೃತ ಬೈಕ್ ಸವಾರನನ್ನು ಮೂಲತಃ ಉತ್ತರ ಕನ್ನಡ ಜಿಲ್ಲೆಯ ಅಂಕೋಲ ತಾಲೂಕು ನಿವಾಸಿ ಸದ್ಯ ಮಂಗಳೂರು ಬಿಜೈಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಿರುವ ಶಿವದಾಸ್ ಗಣಪತಿ ನಾಯ್ಕ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಶಿವದಾಸ್ ಗಣಪತಿ ನಾಯ್ಕ ಅವರು ಬೈಕಂಪಾಡಿಯ ಔಷಧಿ ತಯಾರಕ ಸಂಸ್ಥೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದರು ಎನ್ನಲಾಗಿದ್ದು, ಕೆಲಸ ಮುಗಿಸಿಕೊಂಡು ಬಿಜೈಯಲ್ಲಿರುವ ತಮ್ಮ ಮನೆಗೆ ತೆರಳುತ್ತಿದ್ದ ವೇಳೆ ಲಾರಿಯೊಂದು ಹಿಂದಿನಿಂದ ಬಂದು ಢಿಕ್ಕಿ ಹೊಡೆದಿದೆ ಎಂದು ತಿಳಿದುಬಂದಿದೆ. ಢಿಕ್ಕಿಯ ರಭಸಕ್ಕೆ ಅವರು ಲಾರಿಯ ಹಿಂಭಾಗದ ಚಕ್ರಕ್ಕೆ ಸಿಲುಕಿ ಸ್ಥಳದಲ್ಲೇ ಮೃತಪಟ್ಟರೆಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಘಟನಾ ಸ್ಥಳಕ್ಕೆ ಮಂಗಳೂರು ಉತ್ತರ ಸಂಚಾರ ಪೊಲೀಸ್ ನಿರೀಕ್ಷಕ ಶಿವಕುಮಾರ್ ಎಂ. ಮತ್ತು ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮುಂದಿನ ಕಾನೂನು ಕ್ರಮಗಳನ್ನು ಕೈಗೊಂಡಿದ್ದಾರೆ.

30 C