ಕಟ್ಟಾ ಕಾಂಗ್ರೆಸಿಗರು ಯಜಮಾನನ ಋಣ ತೀರಿಸುವ ನಿಯತ್ತಿನ ನಾಯಿಗಳು: ಎಚ್ಸಿ ಮಹದೇವಪ್ಪಗೆ ಡಿಕೆ ಸುರೇಶ್ ತಿರುಗೇಟು
ಕಟ್ಟಾ ಕಾಂಗ್ರೆಸಿಗರು ಯಜಮಾನನ ಋಣ ತೀರಿಸುವ ನಿಯತ್ತಿನ ನಾಯಿಗಳು ಎಂದು ಸಚಿವ ಡಾ. ಎಚ್ಸಿ ಮಹದೇವಪ್ಪ ಅವರಿಗೆ ಮಾಜಿ ಸಂಸದ ಡಿಕೆ ಸುರೇಶ್ ತಿರುಗೇಟು ನೀಡಿದ್ದಾರೆ. ಬೆಂಗಳೂರಿನಲ್ಲಿ ಮಂಗಳವಾರ ಮಾತನಾಡಿದ ಅವರು, ನಾಯಿ ಮತ್ತು ಬಾಲದ ಕುರಿತಾಗಿ ನೀಡಿದ್ದ ಹೇಳಿಕೆಗೆ ತೀಕ್ಷ್ಣವಾಗಿ ತಿರುಗೇಟು ನೀಡಿದರು. ನಾಯಿಗಳು ಬೀದಿ ನಾಯಿಗಳೇ ಆಗಿರಲಿ ಅಥವಾ ಸಾಕಿದ ನಾಯಿಗಳೇ ಆಗಿರಲಿ, ಯಜಮಾನನ ಋಣ ತೀರಿಸುತ್ತವೆ. ಅದರ ಹೊರತಾಗಿ ಬೇರೆ ರೀತಿ ಮಾಡುವುದಿಲ್ಲ ಎಂದು ತಿರುಗೇಟು ನೀಡಿದರು.
ಅಕ್ಕಪಡೆ ಶೀಘ್ರವೇ ತಾಲೂಕು ಮಟ್ಟಕ್ಕೂ ವಿಸ್ತರಣೆ : ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್
ಬೆಳಗಾವಿಯಲ್ಲಿ ಅಕ್ಕಪಡೆಗೆ ಚಾಲನೆ
ಮಂಗಳೂರು : ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ತಮ್ಮ ಗ್ರಾಹಕರಿಗೆ ಪ್ರಸ್ತುತ ಅವಶ್ಯಕತೆಗೆ ಅನುಗುಣವಾಗಿ ಡಿಜಿಟಲ್ ಬ್ಯಾಂಕಿಂಗ್ ಸೌಲಭ್ಯವನ್ನು ಕೂಡಾ ಅಳವಡಿಸಿಕೊಂಡು ವಿಸ್ತರಿಸಿದೆ. ಯುಪಿಐ ಮತ್ತು ಐಎಂಪಿಎಸ್ ಡಿಜಿಟಲ್ ಬ್ಯಾಂಕಿಂಗ್ ವಿಸ್ತರಿತ ಸೌಲಭ್ಯಕ್ಕೆ ಈಗಾಗಲೇ ಚಾಲನೆ ನೀಡಲಾಗಿದೆ. ಈ ಸೌಲಭ್ಯ ಬ್ಯಾಂಕಿನ ಎಲ್ಲಾ ಶಾಖೆಗಳಿಗೂ ವಿಸ್ತರಣೆ ಮಾಡಲಾಗುವುದು ಎಂದು ಎಸ್ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ.ಎಂ.ಎನ್.ರಾಜೇಂದ್ರ ಕುಮಾರ್ ತಿಳಿಸಿದ್ದಾರೆ. ಬ್ಯಾಂಕಿನ ಗ್ರಾಹಕರಿಗೆ ಡಿಜಿಟಲ್ ಬ್ಯಾಂಕಿಂಗ್ ಸೇವೆಗಳಾದ ಯುಪಿಐ ಮತ್ತು ಐಎಂಪಿಎಸ್ ಸೌಲಭ್ಯಗಳಿಗೆ ಮಂಗಳವಾರ ಬ್ಯಾಂಕ್ ನ ಸಭಾಂಗಣದಲ್ಲಿ ಅಧಿಕೃತ ಚಾಲನೆ ನೀಡಿ ಮಾತನಾಡಿದ ಅವರು, ನಮ್ಮ ಬ್ಯಾಂಕ್ ಕೂಡಾ ಇತರ ಬ್ಯಾಂಕ್ ಗಳಿಗಿಂತ ಹಿಂದೆ ಉಳಿಯಬಾರದು. ಗ್ರಾಹಕರಿಗೆ ಆಧುನಿಕ ಎಂಬ ಉದ್ದೇಶದಿಂದ ಈ ಆಧುನಿಕ ಬ್ಯಾಂಕಿಂಗ್ ಸೌಲಭ್ಯಗಳನ್ನು ಅಳವಡಿಸಿಕೊಳ್ಳಲಾಗಿದೆ. ನಮ್ಮ ಶಾಖೆಯಲ್ಲಿ ಬಹುತೇಕ ಎಲ್ಲ ಡಿಜಿಟಲ್ ಸೇವೆಗಳನ್ನು ಸುಮಾರು 20 ವರ್ಷಗಳ ಹಿಂದೆಯೇ ಅಳವಡಿಸಿಕೊಂಡುಗಳು ಗ್ರಾಹಕ ಸ್ನೇಹಿಯಾಗಿ ಮುನ್ನಡೆಯುತ್ತಿದೆ. ಯುಪಿಐ ಮತ್ತು ಐಎಂಪಿಎಸ್ ಸೌಲಭ್ಯದ ಮೂಲಕ ಗ್ರಾಹಕರು ಬ್ಯಾಂಕ್ಗೆ ಭೇಟಿ ನೀಡುವ ಅವಶ್ಯಕತೆ ಇಲ್ಲದೆ ಎಲ್ಲಿಂದ ಬೇಕಾದರೂ 24x7 ಸಮಯದಲ್ಲಿ ಹಣ ವರ್ಗಾವಣೆ ಮಾಡಬಹುದು. ಇದು ವೇಗವಾದ, ಸುರಕ್ಷಿತ ಹಾಗೂ ಸುಲಭವಾದ ಡಿಜಿಟಲ್ ಪಾವತಿ ವಿಧಾನವಾಗಿದೆ. ಯುಪಿಐ ಮೂಲಕ ಗ್ರಾಹಕರು ತಕ್ಷಣ ಹಣ ಕಳುಹಿಸಬಹುದು ಹಾಗೂ ಸ್ವೀಕರಿಸಬಹುದು. ಬ್ಯಾಂಕಿನ ಎಲ್ಲಾ ಸಹಕಾರಿ, ಕೃಷಿ ಪತ್ತಿನ ಶಾಖೆಗಳಿಗೂ ಹೊಸ ತಂತ್ರ ಜ್ಞಾನವನ್ನು ವಿಸ್ತರಿಸುವ ಗುರಿ ಇದೆ ಎಂದರು. ಸಮಾರಂಭದಲ್ಲಿ ಸಾಪ್ಟ್ ವೇರ್ ತಂತ್ರಜ್ಞ ನಂದಕುಮಾರ್ ಐಎಂಪಿಎಸ್ ಬಗ್ಗೆ ತಾಂತ್ರಿಕ ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಉಪಾಧ್ಯಕ್ಷರಾದ ವಿನಯ್ ಕುಮಾರ್ ಸೂರಿಂಜೆ, ನಿರ್ದೇಶಕರುಗಳಾದ ಭಾಸ್ಕರ್ ಎಸ್. ಕೋಟ್ಯಾನ್ , ಎಸ್.ಬಿ.ಜಯರಾಮ್ ರೈ , ಸದಾಶಿವ ಉಳ್ಳಾಲ್, ಜೈರಾಜ್ ಬಿ.ರೈ , ಮೋನಪ್ಪ ಶೆಟ್ಟಿ ಎಕ್ಕಾರು, ವಾದಿರಾಜ ಶೆಟ್ಟಿ, ಮನ್ಮಥ ಸಹಕಾರ ಸಂಘಗಳ ಉಪ ನಿಬಂಧಕರಾದ ರಮೇಶ್ ಎಚ್.ಎನ್, ಮುಖ್ಯ ಕಾರ್ಯನಿರ್ವ ಹಣಾಧಿಕಾರಿ ಗೋಪಾಲಕೃಷ್ಣ ಭಟ್ ಮೊದಲಾದವರು ಉಪಸ್ಥಿತರಿದ್ದರು. ಬ್ಯಾಂಕಿನ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟು ಸ್ವಾಗತಿಸಿದರು. ಚಿತ್ರಲೇಖ ಪ್ರಾರ್ಥಿಸಿದರು. ರಾಜೀವ್ ಕಕ್ಕೆ ಪದವು ಕಾರ್ಯಕ್ರಮ ನಿರೂಪಿಸಿದರು.
ಡಾ. ಯತೀಂದ್ರಗೆ ಸಿಎಂ ಕುರ್ಚಿಯ ಬಗ್ಗೆ ಮಾತನಾಡದಂತೆ ತಾಕೀತು ಮಾಡಿದ್ರಾ ಸಿಎಂ ಸಿದ್ದರಾಮಯ್ಯ?
ಸಿಎಂ ಕುರ್ಚಿ ಬದಲಾವಣೆ, ನಾಯಕತ್ವ ಬದಲಾವಣೆ ವಿಚಾರ ಪ್ರಸ್ತಾಪವಾಗುತ್ತಿದ್ದಂತೆ ಮಾಧ್ಯಮದವರು ಡಾ. ಯತೀಂದ್ರ ಸಿದ್ದರಾಮಯ್ಯನವರಿಗೆ ಈ ಬಗ್ಗೆ ಕೇಳುವುದು ಸಾಮಾನ್ಯವಾಗಿದೆ. ಆದರೆ ಈ ಬಾರಿ ಇಂತಹ ಪ್ರಶ್ನೆಗಳಿಂದ ಯತೀಂದ್ರ ಅವರು ಅಂತರ ಕಾಯ್ದುಕೊಂಡಿದ್ದಾರೆ. ಈ ಬಗ್ಗೆ ಮಾತನಾಡದಂತೆ ಸಿಎಂ ಸಿದ್ದರಾಮಯ್ಯನವರು ಮಗನಿಗೆ ತಾಕೀತು ಮಾಡಿದ್ದಾರಾ ಎನ್ನುವ ಪ್ರಶ್ನೆ ಎದ್ದಿದೆ.
ಅಲಹಾಬಾದ್: ಮುಹಮ್ಮದ್ಗಂಜ್ ಗ್ರಾಮದ ಖಾಸಗಿ ಮನೆಯೊಂದರಲ್ಲಿ ಮುಸ್ಲಿಮರು ನಮಾಝ್ ಮಾಡುವುದನ್ನು ತಡೆದಿದ್ದಕ್ಕಾಗಿ ಬರೇಲಿ ಜಿಲ್ಲಾಧಿಕಾರಿ ಅವಿನಾಶ ಸಿಂಗ್ ಮತ್ತು ಹಿರಿಯ ಎಸ್ಪಿ ಅನುರಾಗ ಆರ್ಯ ಅವರಿಗೆ ಅಲಹಾಬಾದ್ ಉಚ್ಚ ನ್ಯಾಯಾಲಯವು ನ್ಯಾಯಾಂಗ ನಿಂದನೆ ನೋಟಿಸ್ಗಳನ್ನು ಹೊರಡಿಸಿದೆ. ಅರ್ಜಿದಾರ ತಾರಿಖ್ ಖಾನ್ ವಿರುದ್ಧ ಬಲವಂತದ ಕ್ರಮಕ್ಕೆ ತಡೆಯನ್ನು ನೀಡಿರುವ ನ್ಯಾಯಾಲಯವು,ಮುಂದಿನ ವಿಚಾರಣಾ ದಿನವಾದ ಮಾ.11ರೊಳಗೆ ನೋಟಿಸ್ಗಳಿಗೆ ಉತ್ತರಿಸುವಂತೆ ಉಭಯ ಅಧಿಕಾರಿಗಳಿಗೆ ಸೂಚಿಸಿದೆ. ಜ.16ರಂದು ರೇಷ್ಮಾ ಖಾನ್ ಎಂಬ ಮಹಿಳೆಗೆ ಸೇರಿದ ಖಾಲಿ ಮನೆಯಲ್ಲಿ ಮುಸ್ಲಿಮರ ಗುಂಪೊಂದು ನಮಾಝ್ ಮಾಡಿದ್ದಕ್ಕೆ ಪೋಲಿಸರು ಸಾರ್ವಜನಿಕ ಸುವ್ಯವಸ್ಥೆಗೆ ಭಂಗವನ್ನುಂಟು ಮಾಡಿದ ಆರೋಪದಲ್ಲಿ ಹಲವರನ್ನು ವಶಕ್ಕೆ ತೆಗೆದುಕೊಂಡಿದ್ದರು ಮತ್ತು ನಾಲ್ವರನ್ನು ಬಂಧಿಸಿದ್ದರು. ನಂತರ ಎಲ್ಲರನ್ನೂ ಬಿಡುಗಡೆ ಮಾಡಲಾಗಿತ್ತು. ತನ್ನ ಮನೆಯಲ್ಲಿ ನಮಾಝ್ ನಡೆಸಲು ತಾನು ಅನುಮತಿ ನೀಡಿದ್ದೆ ಎಂದು ರೇಷ್ಮಾ ಖಾನ್ ಹೇಳಿದ್ದರು. ಉಚ್ಚ ನ್ಯಾಯಾಲಯದ ಮೊರೆ ಹೋಗಿದ್ದ ತಾರಿಕ್ ಖಾನ್, ರಾಜ್ಯದಲ್ಲಿ ಖಾಸಗಿ ಆಸ್ತಿಯಲ್ಲಿ ಧಾರ್ಮಿಕ ಪ್ರಾರ್ಥನಾ ಸಭೆಯನ್ನು ನಡೆಸಲು ಅನುಮತಿಯ ಅಗತ್ಯವಿಲ್ಲ ಎಂದು ಅದು ಪ್ರತ್ಯೇಕ ಪ್ರಕರಣದಲ್ಲಿ ಜ.27ರಂದು ನೀಡಿದ್ದ ತೀರ್ಪನ್ನು ಉಲ್ಲೇಖಿಸಿದ್ದರು. ಖಾಸಗಿ ಆವರಣಗಳಲ್ಲಿ ಪ್ರಾರ್ಥನಾ ಸಭೆಗಳನ್ನು ನಡೆಸಲು ಅನುಮತಿ ಕೋರಿ ಕೈಸ್ತ ಸಂಘಟನೆಗಳನ್ನು ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಜ.27ರ ತೀರ್ಪು ಹೊರಬಿದ್ದಿತ್ತು. ಪ್ರಾರ್ಥನಾ ಸಭೆಗಳು ಸಾರ್ವಜನಿಕ ರಸ್ತೆ ಅಥವಾ ಸಾರ್ವಜನಿಕ ಆಸ್ತಿಯಲ್ಲಿ ನಡೆಯುತ್ತಿದ್ದರೆ ಪೋಲಿಸರಿಗೆ ಮಾಹಿತಿ ನೀಡಬೇಕು ಮತ್ತು ಅಗತ್ಯವಿದ್ದರೆ ಅನುಮತಿಯನ್ನು ಪಡೆದುಕೊಳ್ಳಬೇಕು ಎಂದು ನ್ಯಾಯಾಲಯವು ತಿಳಿಸಿತ್ತು. ‘ಖಾಸಗಿ ಆಸ್ತಿಯಲ್ಲಿ ಪ್ರಾರ್ಥನೆ ಸಲ್ಲಿಸಬಹುದು ಎಂದು ಜ.27ರ ತೀರ್ಪು ಸ್ಪಷ್ಟಪಡಿಸಿದೆ. ನಾವೂ ಅಲ್ಪಸಂಖ್ಯಾತರಾಗಿರುವುದರಿಂದ ಇದೇ ನಿಯಮ ನಮಗೂ ಅನ್ವಯವಾಗಬೇಕು’ ಎಂದು ಖಾನ್ ತನ್ನ ಅರ್ಜಿಯಲ್ಲಿ ಪ್ರತಿಪಾದಿಸಿದ್ದಾರೆ.
SSLC, PUC ಪರೀಕ್ಷೆ 2026 ಫಲಿತಾಂಶ ದಿನಾಂಕ ಘೋಷಿಸಿದ ಸಚಿವ ಮಧು ಬಂಗಾರಪ್ಪ; ಪರೀಕ್ಷೆ 2 ರ ವೇಳಾಪಟ್ಟಿಯು ಪ್ರಕಟ
ಬೆಂಗಳೂರು 2026ನೇ ಸಾಲಿನ ದ್ವಿತೀಯ ಪಿಯುಸಿ ಮತ್ತು ಎಸ್ಎಸ್ಎಲ್ಸಿ ಪರೀಕ್ಷೆಗಳ ಕುರಿತು ಶಿಕ್ಷಣ ಸಚಿವ ಮಧು ಬಂಗಾರಪ್ಪ ಅಧ್ಯಕ್ಷತೆಯಲ್ಲಿ ಮಹತ್ವದ ಸಭೆ ನಡೆದಿದೆ. ಫಲಿತಾಂಶ ದಿನಾಂಕ ಹಾಗೂ ಪರೀಕ್ಷೆ 2 ರ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ. ಜತೆಗೆ ಪ್ರಮುಖ ಮಾರ್ಗಸೂಚಿಗಳನ್ನು ಸಹ ತಿಳಿಸಲಾಗಿದೆ. ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
Gold Price Feb 17: ಚಿನ್ನದ ಬೆಲೆ 15,300 ರೂ., ಬೆಳ್ಳಿ ಬೆಲೆ 8,000 ರೂ. ಭರ್ಜರಿ ಇಳಿಕೆ, ಬಂಗಾರ ಪ್ರಿಯರು ಖುಷ್
Gold Price Feb 17: ಚಿನ್ನದ ಬೆಲೆಯು ಫೆಬ್ರವರಿ 17ರ ಮಂಗಳವಾರ ಭರ್ಜರಿ ಇಳಿಕೆಯಾಗಿದೆ. ಈ ಮೂಲಕ ಸತತ ಮೂರನೇ ದಿನ ಚಿನ್ನ ಮತ್ತು ಬೆಳ್ಳಿ ಬೆಲೆಯು ಭರ್ಜರಿ ಇಳಿಕೆಯಾದಂತೆ ಆಗಿದೆ. ಗಗನಮುಖಿಯಾಗಿದ್ದ ಚಿನ್ನದ ಬೆಲೆಯು ಇಳಿಯಲು ಪ್ರಾರಂಭಿಸಿದೆ. ಅಮೆರಿಕದ ಫೆಡರಲ್ ರಿಸರ್ವ್ಗೆ ಸಂಬಂಧಿಸಿದ ಬೆಳವಣಿಗೆಯ ನಂತರ ಚಿನ್ನದ ಬೆಲೆಯು ನಿರಂತರವಾಗಿ ಇಳಿಕೆಯಾಗುತ್ತಿದೆ. ಕಳೆದ 10 ದಿನಗಳಿಂದಲೂ
Kolar | ಡಿವೈಡರ್ಗೆ ಢಿಕ್ಕಿ ಹೊಡೆದು ಪಲ್ಟಿಯಾದ ಬಸ್; 40ಕ್ಕೂ ಹೆಚ್ಚು ಮಂದಿಗೆ ಗಾಯ
ಕೋಲಾರ : ಕೋಲಾರ ಹೊರವಲಯದಲ್ಲಿ ಬೆಳಗಿನ ಜಾವ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಖಾಸಗಿ ಬಸ್ ಡಿವೈಡರ್ಗೆ ಢಿಕ್ಕಿ ಹೊಡೆದು ಪಲ್ಟಿಯಾದ ಪರಿಣಾಮ ಇಬ್ಬರು ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿದ್ದು, 40ಕ್ಕೂ ಹೆಚ್ಚು ಮಂದಿಗೆ ಗಾಯಗಳಾಗಿವೆ. ಕೋಲಾರ ನಗರ ಹೊರವಲಯದ ರಾಷ್ಟ್ರೀಯ ಹೆದ್ದಾರಿ 75ರ ಪವನ್ ಕಾಲೇಜು ಮೈದಾನ ಸಮೀಪ ಈ ಘಟನೆ ನಡೆದಿದೆ. ಆಂಧ್ರಪ್ರದೇಶದ ನಲ್ಲೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದ ಖಾಸಗಿ ಬಸ್ ಬೆಳಗಿನ ಜಾವ ಸುಮಾರು 4.30ರ ವೇಳೆಗೆ ಅಪಘಾತಕ್ಕೀಡಾಗಿದೆ. ಪೊಲೀಸರ ಪ್ರಕಾರ, ಬಸ್ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಮಧ್ಯದ ಡಿವೈಡರ್ಗೆ ಢಿಕ್ಕಿ ಹೊಡೆದಿದ್ದು, ಪರಿಣಾಮ ಬಸ್ ಪಲ್ಟಿಯಾಗಿದೆ. ಅಪಘಾತದ ತೀವ್ರತೆಯಿಂದ ಬಸ್ನೊಳಗಿದ್ದ ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ. ಬಸ್ನಲ್ಲಿ ಸುಮಾರು 40ಕ್ಕೂ ಹೆಚ್ಚು ಪ್ರಯಾಣಿಕರು ಇದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅಪಘಾತದ ಸುದ್ದಿ ತಿಳಿದ ತಕ್ಷಣ ಅಗ್ನಿಶಾಮಕ ದಳ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿದರು. ಬಸ್ನ ಗಾಜುಗಳನ್ನು ಒಡೆದು ಒಳಗಿದ್ದ ಪ್ರಯಾಣಿಕರನ್ನು ಹೊರತಂದು ಸುರಕ್ಷಿತವಾಗಿ ರಕ್ಷಿಸಿದರು. ಗಾಯಗೊಂಡವರನ್ನು ತಕ್ಷಣ ಕೋಲಾರದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇಬ್ಬರ ಸ್ಥಿತಿ ಗಂಭೀರವಾಗಿದ್ದು, ವೈದ್ಯರ ಮೇಲ್ವಿಚಾರಣೆಯಲ್ಲಿದ್ದಾರೆ.
ಇಡ್ಯಾ ಗಲ್ಫ್ ಫಾರಂ ವತಿಯಿಂದ ರಂಝಾನ್ ಕಿಟ್ ವಿತರಣೆ
ಮಂಗಳೂರು: ಇಡ್ಯಾ ಗಲ್ಫ್ ಫಾರಂ ವತಿಯಿಂದ ರಂಝಾನ್ ಕಿಟ್ ವಿತರಣೆ-2026 ಕಾರ್ಯಕ್ರಮ ಫೆಬ್ರವರಿ 15ರಂದು ನಡೆಯಿತು. ಖಿಲಿರಿಯಾ ಮಸೀದಿ ಇಮಾಮರು ದುವಾ ನೆರವೇರಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಇಡ್ಯಾ ಪರಿಸರದ ಅರ್ಹ ಕುಟುಂಬಗಳು ಹಾಗೂ ಜಮಾಅತ್ ಅಧೀನದಲ್ಲಿರುವ ಮಸೀದಿಗಳ ಉಸ್ತಾದರನ್ನು ಒಳಗೊಂಡಂತೆ ಒಟ್ಟು 100 ರಂಝಾನ್ ಕಿಟ್ಗಳನ್ನು ವಿತರಿಸಲಾಯಿತು. ರಂಝಾನ್ ಕಿಟ್ಗೆ ಸಹಾಯ ನೀಡಿದ IGF ಸದಸ್ಯರು ಹಾಗೂ ವಿತರಣೆಯಲ್ಲಿ ಸಹಕರಿಸಿದ ಊರಿನ ಸಹೋದರರಿಗೆ ಇಡ್ಯಾ ಗಲ್ಫ್ ಫಾರಂ ಪರವಾಗಿ ಧನ್ಯವಾದ ಸಲ್ಲಿಸಲಾಗಿದೆ ಎಂದು ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಹಿದಾಯತುಲ್ಲಾ ಇಡ್ಯಾ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬಿಜೆಪಿ ವಿರುದ್ಧ ಆಕ್ಷೇಪಾರ್ಹ ಜಾಹೀರಾತು; ರಾಹುಲ್ ಗಾಂಧಿ ವಿರುದ್ಧದ ಮಾನಹಾನಿ ಪ್ರಕರಣ ರದ್ದುಪಡಿಸಿದ ಹೈಕೋರ್ಟ್
ಬೆಂಗಳೂರು : ಕಳೆದ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ರಾಜ್ಯದ ಪ್ರಮುಖ ದಿನಪತ್ರಿಕೆಗಳ ಮುಖಪುಟದಲ್ಲಿ ಅಂದಿನ ಬಿಜೆಪಿ ಸರಕಾರದ ವಿರುದ್ಧ ಸರಣಿ ಆರೋಪಗಳನ್ನು ಮಾಡಿ ಕಾಂಗ್ರೆಸ್ ಪಕ್ಷ ನೀಡಿದ್ದ ಜಾಹೀರಾತನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಆರೋಪದಲ್ಲಿ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿದ್ದ ಮಾನಹಾನಿ ಪ್ರಕರಣವನ್ನು ಹೈಕೋರ್ಟ್ ರದ್ದುಪಡಿಸಿದೆ. ಬಿಜೆಪಿ ಹೂಡಿದ್ದ ಮಾನಹಾನಿ ಪ್ರಕರಣ ರದ್ದು ಕೋರಿ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ಪೂರ್ಣಗೊಳಿಸಿ ಕಾಯ್ದಿರಿಸಿದ್ದ ತೀರ್ಪನ್ನು ನ್ಯಾಯಮೂರ್ತಿ ಎಸ್. ಸುನೀಲ್ ದತ್ ಯಾದವ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಮಂಗಳವಾರ ಪ್ರಕಟಿಸಿತು. ಅರ್ಜಿ ಮಾನ್ಯ ಮಾಡಿರುವ ನ್ಯಾಯಪೀಠ, ವಿಚಾರಣಾ ನ್ಯಾಯಾಲಯದಲ್ಲಿನ ಪ್ರಕ್ರಿಯೆ ಮುಂದುವರಿಕೆಯು ಕಾನೂನು ಪ್ರಕ್ರಿಯೆಯ ದುರ್ಬಳಕೆಯಾಗಲಿದೆ. ಆದ್ದರಿಂದ, ಪ್ರಕರಣದ 4ನೇ ಆರೋಪಿ ರಾಹುಲ್ ಗಾಂಧಿ ವಿರುದ್ಧದ ಪ್ರಕ್ರಿಯೆ ರದ್ದುಪಡಿಸಲಾಗಿದೆ ಎಂದು ನ್ಯಾಯಾಲಯ ಆದೇಶಿಸಿತು. ವಿಸ್ತೃತ ತೀರ್ಪು ಇನ್ನಷ್ಟೇ ಬಿಡುಗಡೆಯಾಬೇಕಿದೆ.
ಈಗಾಗಲೇ ವಲಸೆ ವಿರೋಧಿ ನೀತಿಯನ್ನು ಅನುಸರಿಸುತ್ತಾ ಹಲವು ವಲಸಿಗರನ್ನು ಮಟ್ಟಹಾಕುತ್ತಿರುವ ಅಮೆರಿಕಾ ಸದ್ಯ ವಲಸಿಗರಿಗೆ ಮತ್ತೊಂದು ವಾರ್ನಿಂಗ್ ನೀಡಿದೆ. ಅಮೆರಿಕಾದ ವೀಸಾಗಳು ಯಾವುದೇ ರೀತಿಯ ಹಕ್ಕಲ್ಲ. ಬದಲಿಗೆ ಅಮೆರಿಕಾವನ್ನು ಪ್ರವೇಶಿಸಲು ನಾವು ಸಂದರ್ಶಕರಿಗೆ ನೀಡುತ್ತಿರುವ ಅನುಮತಿಯಷ್ಟೇ.. ಒಂದು ವೇಳೆ ವೀಸಾ ಪಡೆದ ಸಂದರ್ಶಕರೇನಾದರೂ ಅಮೆರಿಕಾದ ರಾಷ್ಟ್ರೀಯ ಹಿತಾಸಕ್ತಿಗೆ ಧಕ್ಕೆ ತರುವಂತಹ ಕೆಲಸಗಳನ್ನು ತೊಡಗಿಸಿಕೊಂಡರೆ ಅವರ ವೀಸಾವನ್ನು ರದ್ದುಗೊಳಿಸಲಾಗುತ್ತದೆ ಎಂದು ಅಮೆರಿಕಾದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಬೆಳ್ಳಿ ಬೆಲೆ ಪಾತಾಳಕ್ಕೆ: ಸಾರ್ವಕಾಲಿಕ ಗರಿಷ್ಠ ಮಟ್ಟದಿಂದ ಭಾರಿ ಕುಸಿತ; ಹೂಡಿಕೆದಾರರಲ್ಲಿ ಹೆಚ್ಚಿದ ಆತಂಕ
ಕಳೆದ ಕೆಲವು ವಾರಗಳಿಂದ ಬೆಳ್ಳಿ ಮಾರುಕಟ್ಟೆಯಲ್ಲಿ (Silver Market) ಕಂಡುಬರುತ್ತಿರುವ ಏರಿಳಿತಗಳು ಹೂಡಿಕೆದಾರರನ್ನು ಬೆರಗುಗೊಳಿಸಿವೆ. ಜನವರಿ ತಿಂಗಳಿನ ಅಂತ್ಯದಲ್ಲಿ ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ತಲುಪಿದ್ದ ಬೆಳ್ಳಿಯ ಬೆಲೆ, ಇದೀಗ ಭಾರಿ ಕುಸಿತ ಕಂಡಿದೆ. ಸದ್ಯ ಮಾರುಕಟ್ಟೆಯಲ್ಲಿ ಅಸ್ಥಿರತೆ ಮುಂದುವರಿದಿದ್ದು, ಹೊಸದಾಗಿ ಬೆಳ್ಳಿ ಖರೀದಿಸಲು ಹಾಗೂ ಮಾರಾಟ ಮಾಡಲು ಹೂಡಿಕೆದಾರರು ಹಿಂದೇಟು ಹಾಕುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇಂದು (ಫೆಬ್ರವರಿ
ಜಗತ್ತನ್ನೇ ನಿಬ್ಬೆರಗಾಗಿಸಿದ ಚೀನಾದ ಹ್ಯುಮನಾಯ್ಡ್ ರೋಬೋಟ್ ಗಳು!
ಚೀನಾದ ಸ್ಪ್ರಿಂಗ್ ಫೆಸ್ಟಿವಲ್ ಕಾರ್ಯಕ್ರಮದಲ್ಲಿ ಹ್ಯುಮನಾಯ್ಡ್ ರೋಬೋಟ್ ಗಳ ನೃತ್ಯ ಮತ್ತು ಸಮರ ಕಲೆ ಪ್ರದರ್ಶನದ ವೀಡಿಯೋಗಳು ವೈರಲ್ ಆಗಿವೆ. ಚೀನಾ ಸರ್ಕಾರದ ಅಧಿಕೃತ ಮಾಧ್ಯಮ ಸಂಸ್ಥೆಯಾಗಿರುವ ಸಿಸಿಟಿವಿ ಇತ್ತೀಚೆಗೆ ಆಯೋಜಿಸಿದ್ದ 2026ರ ಸ್ಪ್ರಿಂಗ್ ಫೆಸ್ಟಿವಲ್ ಗಾಲಾ ಕಾರ್ಯಕ್ರಮವು ವೈರಲ್ ಆಗಿದೆ. ಅದಕ್ಕೆ ಮುಖ್ಯ ಕಾರಣ ಕಾರ್ಯಕ್ರಮದಲ್ಲಿ ಚೀನೀ ಕಂಪನಿಗಳು ತಮ್ಮ ಅತ್ಯುತ್ತಮ ಹ್ಯೂಮನಾಯ್ಡ್ ರೋಬೋಟ್ಗಳನ್ನು ಪ್ರದರ್ಶಿಸಿರುವುದು. ಸಮರ ಕಲೆಗಳಿಂದ ಸಂಕೀರ್ಣ ನೃತ್ಯ ಚಲನೆಗಳವರೆಗೆ ಇಡೀ ಕಾರ್ಯಕ್ರಮವು ರೋಬೋಟ್ಗಳೊಂದಿಗೆ ಭವಿಷ್ಯ ಹೇಗಿರಬಹುದು ಎಂಬುದನ್ನು ಪ್ರದರ್ಶಿಸಿದೆ. 2 ದಶಲಕ್ಷಕ್ಕೂ ಕಡಿಮೆ ಜನರು ಇರುವ ಯಿವು ಪಟ್ಟಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮ್ಯಾಜಿಕ್ ಲ್ಯಾಬ್ಸ್, ಯುನಿಟ್ರೀ ರೋಬೋಟಿಕ್ಸ್, ನೋಯೆಟಿಕ್ಸ್ ರೋಬೋಟಿಕ್ಸ್ ಮತ್ತು ಬೀಜಿಂಗ್ ಗಾಲ್ಬೋಟ್ಗಳಂತಹ ದೊಡ್ಡ ರೊಬೋಟಿಕ್ಸ್ ಕಂಪನಿಗಳು ಹ್ಯುಮನಾಯ್ಡ್ ಸಂಶೋಧನೆಯಲ್ಲಿ ತಮ್ಮ ಇತ್ತೀಚೆಗಿನ ತಂತ್ರಜ್ಞಾನವನ್ನು ಪ್ರದರ್ಶಿಸಿವೆ. ► ಸಮರ ಕಲೆ ಪ್ರದರ್ಶಿಸಿದ ರೋಬೋಟ್ಗಳು ಯುನಿಟ್ರೀ ರೋಬೋಟಿಕ್ಸ್ ಇದೀಗ ಸತತವಾಗಿ ಮೂರನೇ ಬಾರಿ ಸ್ಪ್ರಿಂಗ್ ಫೆಸ್ಟಿವಲ್ ಕಾರ್ಯಕ್ರಮದಲ್ಲಿ ಭಾಗವಹಿಸಿದೆ. ಕಂಪನಿಯ G1 ಮತ್ತು H2 ಹ್ಯುಮನಾಯ್ಡ್ ರೋಬೋಟ್ಗಳು WuBOT ಎನ್ನುವ ಸಮರ ಕಲೆಗಳ-ವಿಷಯದ ಪ್ರದರ್ಶನದಲ್ಲಿ ಭಾಗವಹಿಸಿದ್ದವು. ಈ ರೋಬೋಟ್ಗಳು ಸಮರ ಕಲೆಯ ಕಲಾವಿದರ ಜೊತೆಗೂಡಿ ಅನೇಕ ನೃತ್ಯ ಕಲೆಗಳನ್ನು ಪ್ರದರ್ಶಿಸಿವೆ. ಜೊತೆಗೆ ಕುದುರೆಯ ಭಂಗಿಗಳು ಮತ್ತು ಪಲ್ಟಿ ಹೊಡೆದು ತೋರಿಸುವುದು ಮತ್ತು ಇತರ ಕಷ್ಟಕರವಾದ ಕಲೆಗಳನ್ನು ಪ್ರದರ್ಶಿಸಿವೆ. ► ಅತ್ಯಾಧುನಿಕ ತಂತ್ರಜ್ಞಾನದ ಪ್ರದರ್ಶನ ಪ್ರದರ್ಶನವು 4 ನಿಮಿಷಕ್ಕಿಂತ ಹೆಚ್ಚು ಸಮಯ ಸಾಗಿತ್ತು. ಎಲ್ಲಾ ರೋಬೋಟ್ಗಳು ಸರಾಗವಾಗಿ ಚಲಿಸಿವೆ. ಚೀನಾದಲ್ಲಿ ತಂತ್ರಜ್ಞಾನ ಎಷ್ಟು ಮುಂದುವರಿದಿದೆ ಎನ್ನುವುದನ್ನು ಈ ಕಾರ್ಯಕ್ರಮ ಪ್ರಸ್ತುತಪಡಿಸಿದೆ. ಚಲನೆಗೆ ಮಾತ್ರವಲ್ಲ, ಸಮತೋಲನ ಮತ್ತು ಸಮನ್ವಯದಲ್ಲೂ ಈ ರೋಬೋಟ್ಗಳು ಚೆನ್ನಾಗಿ ಪ್ರದರ್ಶನ ನೀಡಿವೆ. ಇದೊಂದು ಪ್ರದರ್ಶನ ಮಾತ್ರವಾಗಿರಲಿಲ್ಲ. ಇನ್ನೂ ಹೆಚ್ಚಿನ ರೋಬೋಟ್ಗಳು ಇದ್ದವು. ಮ್ಯಾಜಿಕ್ ಲ್ಯಾಬ್ ನ MagicBot Z1 ರೋಬೋಟ್ ಸಂಪೂರ್ಣವಾಗಿ 360 ಡಿಗ್ರಿ ತಿರುಗುವುದನ್ನು ಪೂರ್ಣಗೊಳಿಸುವಲ್ಲಿ ಯಶಸ್ವಿಯಾಗಿದೆ. ನೋಯೆಟಿಕ್ಸ್ ರೋಬೋಟಿಕ್ಸ್ ಹಾಸ್ಯ ರೇಖಾ ಚಿತ್ರದಲ್ಲಿ ಭಾಗವಹಿಸಿದೆ. ರೋಬೋಟ್ಗಳು 12 ಚದರ ಮೀಟರ್ ಒಳಗೆ ಸೈಡ್ ಫ್ಲಿಪ್ಗಳು ಮತ್ತು ಬ್ಯಾಕ್ ಫ್ಲಿಪ್ಗಳಂತಹ ಚಲನೆಗಳನ್ನು ಪ್ರದರ್ಶಿಸಿವೆ. ಕಾರ್ಯಕ್ರಮದಲ್ಲಿ ಹ್ಯುಮನಾಯ್ಡ್ ರೋಬೋಟ್ಗಳ ಕ್ಲಸ್ಟರ್ಡ್ ಡಿಸ್ಪ್ಲೇ ಮೂಲಕ ಚೀನಾ ಚಲನೆಯ ನಿಯಂತ್ರಣ, ಸಮತೋಲನ ಆಲ್ಗಾರಿದಂಗಳು ಮತ್ತು ನೈಜ ಜಗತ್ತಿನ ಮಾನವ-ರೋಬೋಟ್ ಸಂವಹನದಲ್ಲಿ ವ್ಯಾಪಕರ ಪ್ರಗತಿಯನ್ನು ಪ್ರದರ್ಶಿಸಿದೆ. ಪಾಶ್ಚಾತ್ಯ ಕಂಪನಿಗಳಾದ ಟೆಸ್ಲಾದ ಆಪ್ಟಿಮಸ್ ಮತ್ತು ನಿಯೊ ಇನ್ನೂ ಅಭಿವೃದ್ಧಿಯ ಹಂತದಲ್ಲಷ್ಟೇ ಇವೆ. ಅದೇ ಸಂದರ್ಭದಲ್ಲಿ ಚೀನಾ ವ್ಯಾಪಕ ಅತ್ಯಾಧುನಿಕ ಹ್ಯುಮನಾಯ್ಡ್ ರೋಬೋಟ್ಗಳ ನಿರ್ಮಾಣಕ್ಕೆ ಇಳಿದಿರುವುದನ್ನು ಈ ಕಾರ್ಯಕ್ರಮ ತೋರಿಸಿದೆ.
ನಟ ದರ್ಶನ್ ತೂಗುದೀಪ ಜಾಮೀನಿನ ಬಗ್ಗೆ ಖ್ಯಾತ ಜ್ಯೋತಿಷಿ ಭವಿಷ್ಯ! ಯಾವಾಗ ಜೈಲಿನಿಂದ ಹೊರ ಬರ್ತಾರಂತೆ?
ನಟ ದರ್ಶನ್ ತೂಗುದೀಪ ಹುಟ್ಟುಹಬ್ಬ ಬೆನ್ನಲ್ಲೆ ಖ್ಯಾತ ಜೋಷಿತಿಯೊಬ್ಬರು ಜಾಮೀನಿನ ಬಗ್ಗೆ ಭವಿಷ್ಯ ನುಡಿದಿದ್ದಾರೆ. ನಟನಿಗೆ ಜೂನ್ನಲ್ಲಿ ಜಾಮೀನು ನೂರಕ್ಕೆ ನೂರರಷ್ಟು ಸಿಗಲಿದೆ ಎಂದು ಜ್ಯೋತಿಷಿ ಪ್ರಶಾಂತ್ ಕಿಣಿ ಹೇಳಿದ್ದಾರೆ. ಇದೇ ಜ್ಯೋತಿಷಿಯು ರಾಜಕಾರಣಿಗಳ ಸಾವಿನ ಬಗ್ಗೆ ಹೇಳಿದ್ದ ಭವಿಷ್ಯನುಡಿ ನಿಜವಾಗಿತ್ತು. ಈ ಹಿನ್ನೆಲೆ ನಟ ದರ್ಶನ್ ಕುರಿತ ಭವಿಷ್ಯವು ವೈರಲ್ ಆಗಿದೆ.
ಎಸ್ ಸಿ ಎಸ್ ಪಿ - ಟಿಎಸ್ಪಿ ಹಣವನ್ನು ಅನ್ಯ ಉದ್ದೇಶಕ್ಕೆ ಬಳಸದಿರಿ: ಸಿದ್ದರಾಮಯ್ಯಗೆ ದಲಿತ ಶಾಸಕರ ಮನವಿ
ಎಸ್ ಸಿ ಎಸ್ ಪಿ - ಟಿಎಸ್ಪಿ ಹಣವನ್ನು ಇತರ ಉದ್ದೇಶಕ್ಕಾಗಿ ಬಳಕೆ ಮಾಡಬಾರದು ಎಂದು ಸಿಎಂ ಸಿದ್ದರಾಮಯ್ಯ ಅವರಿಗೆ ಪರಿಶಿಷ್ಟ ಶಾಸಕರು ಮನವಿ ಮಾಡಿದ್ದಾರೆ. ಸೋಮವಾರ ನಡೆದ ಬಜೆಟ್ ಪೂರ್ವಭಾವಿ ಸಭೆಯಲ್ಲಿ ಈ ಮನವಿ ಹಾಗೂ ಬೇಡಿಕೆಗಳನ್ನು ಇಟ್ಟಿದ್ದಾರೆ. ಪರಿಶಿಷ್ಟ ಸಮುದಾಯದ ಜನರ ಅಭಿವೃದ್ದಿಗಾಗಿ 42 ಸಾವಿರ ಕೋಟಿ ಹಣವನ್ನು ಮೀಸಲು ಇಡಲಾಗಿತ್ತು. ಆದರೆ ಈ ಹಣವನ್ನು ಅನ್ಯ ಉದ್ದೇಶಕ್ಕಾಗಿ ಬಳಕೆ ಮಾಡಲಾಗುತ್ತಿದೆ ಎಂಭ ಆರೋಪ ಇದೆ. ಹಾಗಾಗಿ ಶಾಸಕರು ಈ ಸಂಬಂಧಿಸಿದಂತೆ ಮನವಿ ಸಲ್ಲಿಸಿದ್ದಾರೆ.
ಬಂಟ್ವಾಳ | ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಕುರಿತು ವಿಚಾರ ಸಂಕಿರಣ
ಬಂಟ್ವಾಳ: ಬಂಟ್ವಾಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬಂಟ್ವಾಳ ಮತ್ತು ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ವತಿಯಿಂದ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಕುರಿತು ವಿಚಾರ ಸಂಕಿರಣ ಮಂಗಳವಾರ ಬಿ.ಸಿ.ರೋಡ್ನ ಸ್ಪರ್ಶ ಕಲಾ ಮಂದಿರದಲ್ಲಿ ನಡೆಯಿತು. ವಿಧಾನಸಭಾ ಕ್ಷೇತ್ರದ ಪ್ರತಿ ಬೂತ್ ಮಟ್ಟದ ಏಜೆಂಟ್ಗಳು ಹಾಗೂ ವಲಯ ಕಾಂಗ್ರೆಸ್ ಅಧ್ಯಕ್ಷರಿಗಾಗಿ ಆಯೋಜಿಸಲಾದ ಕಾರ್ಯಕ್ರಮವನ್ನು ಮಾಜಿ ಸಚಿವ ಬಿ. ರಮಾನಾಥ ರೈ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಕಾರ್ಯಕ್ರಮದಲ್ಲಿ ಭಾಗವಹಿಸಿದವರು ಸಂಪೂರ್ಣ ಮಾಹಿತಿಯನ್ನು ಪಡೆದು ತಮ್ಮ ತಮ್ಮ ಬೂತ್ಗಳಲ್ಲಿ ಪರಿಣಾಮಕಾರಿಯಾಗಿ ಕಾರ್ಯಗತಗೊಳಿಸಬೇಕು ಎಂದು ಕರೆ ನೀಡಿದರು. ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಜಾಗೃತ ಕರ್ನಾಟಕದ ಡಾ. ವಾಸು ಎಚ್.ವಿ. ಮಾಹಿತಿ ಕಾರ್ಯಾಗಾರ ನಡೆಸಿಕೊಟ್ಟರು. ಜಾಗೃತ ಕರ್ನಾಟಕದ ಸದಸ್ಯರಾದ ರಜನೀಕಾಂತ್, ಸಂತೋಷ್, ಮೋಹನ್ ಜಿ.ಕೆ. ಸಹಕರಿಸಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಪ್ರಚಾರ ಸಮಿತಿ ಉಸ್ತುವಾರಿ ದುರ್ಗಾ ಪ್ರಸಾದ್, ದ.ಕ. ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಡೆನ್ನಿಸ್ ಡಿ.ಸಿಲ್ವ, ಜಿಲ್ಲಾ ಲೀಗಲ್ ಸೆಲ್ ಅಧ್ಯಕ್ಷ ಮನೋರಾಜ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಚಂದ್ರಶೇಖರ್ ಭಂಡಾರಿ, ಬಾಲಕೃಷ್ಣ ಅಂಚನ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಐಡಾ ಸುರೇಶ್, ನಿವೃತ್ತ ಎಸಿಎಫ್ ಮುಹಮ್ಮದ್, ಪಕ್ಷ ಪ್ರಮುಖರಾದ ಸುದೀಪ್ ಕುಮಾರ್ ಶೆಟ್ಟಿ, ಬೇಬಿ ಕುಂದರ್, ಅಬ್ಬಾಸ್ ಅಲಿ, ಕೆ. ಪದ್ಮನಾಭ ರೈ, ಶೈಲಜಾ ರಾಜೇಶ್, ಜಯಂತಿ ಪೂಜಾರಿ ಉಪಸ್ಥಿತರಿದ್ದರು. ಮಾಣಿ ವಲಯ ಕಾಂಗ್ರೆಸ್ ಅಧ್ಯಕ್ಷ ಬಾಲಕೃಷ್ಣ ಆಳ್ವ ಕೊಡಾಜೆ ಕಾರ್ಯಕ್ರಮ ನಿರೂಪಿಸಿದರು.
US And Iran: ಪರಮಾಣು ಮಾತುಕತೆಗೆ ಅಮೆರಿಕ ಮತ್ತು ಇರಾನ್ ಸಿದ್ಧ, ಸ್ವಿಝರ್ಲ್ಯಾಂಡ್ನ ಜಿನೆವಾದಲ್ಲಿ ಚರ್ಚೆ
ಅಮೆರಿಕ ಹಾಗೂ ಇರಾನ್ ನಡುವೆ ಭುಗಿಲೆದ್ದ ದ್ವೇಷದ ಬೆಂಕಿ ಕೊನೆಗೂ ತಣ್ಣಗಾಗುವ ಸಮಯ ಈಗ ಬಂದಿದೆ. ಪರಮಾಣು ವಿಚಾರವಾಗಿ ಅಮೆರಿಕ &ಇರಾನ್ ಮಧ್ಯೆ ದೊಡ್ಡ ಗಲಾಟೆಯೇ ಶುರುವಾಗುವ ಆತಂಕ ಮೂಡಿತ್ತು. ಈ ಪೈಕಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ತಮ್ಮ ಸೇನೆಗೆ ಆದೇಶ ನೀಡಿ, ಅಮೆರಿಕ ಸೇನೆಯ ಬೃಹತ್ ಯುದ್ಧ ನೌಕೆಗಳನ್ನು ಇರಾನ್ ಜಲಗಡಿ
ಅರ್ಕುಳ | ಇನಾಯತ್ ಅಲಿ ನೇತೃತ್ವದಲ್ಲಿ ಬೃಹತ್ ಜನಸ್ಪಂದನಾ ಕಾರ್ಯಕ್ರಮ
ಮಂಗಳೂರು: ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಗುರುಪುರ ಬ್ಲಾಕ್ ವ್ಯಾಪ್ತಿಯ ಅರ್ಕುಳ ಗ್ರಾಮ ಕಾಂಗ್ರೆಸ್ ಹಾಗೂ ಯುವ ಕಾಂಗ್ರೆಸ್ ಸಮಿತಿ ವತಿಯಿಂದ ಅರ್ಕುಳ ವಳಚ್ಚಿಲ್ನ ಯಶಸ್ವಿ ಹಾಲ್ನಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ ಅವರ ನೇತೃತ್ವದಲ್ಲಿ ಬೃಹತ್ ಜನಸ್ಪಂದನಾ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು. ಕಾರ್ಯಕ್ರಮವನ್ನು ಇನಾಯತ್ ಅಲಿ ಉದ್ಘಾಟಿಸಿ, ಜನಸೇವೆ ಹಾಗೂ ಸಂಘಟನಾ ಬಲವರ್ಧನೆಗೆ ಕಾರ್ಯಕರ್ತರು ಮುಂದಾಗಬೇಕು ಎಂದು ಕರೆ ನೀಡಿದರು. ಕಾರ್ಯಕ್ರಮದ ಅಂಗವಾಗಿ ಉಚಿತ ಆರೋಗ್ಯ ತಪಾಸಣಾ ಶಿಬಿರ, ಕಣ್ಣಿನ ತಪಾಸಣೆ ಮತ್ತು ಉಚಿತ ಕನ್ನಡಕ ವಿತರಣೆ, ಮತದಾರರ ಚೀಟಿ ಹಾಗೂ ಆಧಾರ್ ಕಾರ್ಡ್ ಸೇವೆಗಳು, ವಿವಿಧ ಸರ್ಕಾರಿ ಯೋಜನೆಗಳ ಮಾಹಿತಿ-ಸೌಲಭ್ಯ, ರಕ್ತದಾನ ಶಿಬಿರ ಹಾಗೂ ಗ್ರಾಮದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಗ್ರಾಮಸ್ಥರು ಅಪಾರ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಮಾಜಿ ಸಚಿವ ರಾಮನಾಥ ರೈ, ಗುರುಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪದ್ಮನಾಭ ಕೋಟ್ಯಾನ್, ಯುವ ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ. ತೌಫೀಕ್, ಮಂಗಳೂರು ತಾಲೂಕು ಗ್ಯಾರೆಂಟಿ ಸಮಿತಿ ಅಧ್ಯಕ್ಷ ಸುರೇಂದ್ರ ಕಂಬಳಿ, ಯುವ ಕಾಂಗ್ರೆಸ್ ಜಿಲ್ಲಾ ಉಸ್ತುವಾರಿ ಗಿರೀಶ್ ಆಳ್ವ, ಯುವ ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ಇಬ್ರಾಹೀಂ ನವಾಝ್, ಮಂಗಳೂರು ಉತ್ತರ ಕ್ಷೇತ್ರ ಯುವ ಕಾಂಗ್ರೆಸ್ ಅಧ್ಯಕ್ಷ ರೂಪೇಶ್ ರೈ, ಅಡ್ಯಾರ್ ವಲಯ ಕಾಂಗ್ರೆಸ್ ಅಧ್ಯಕ್ಷ ರೋನಾಲ್ಡ್ ಸಲ್ಡಾನಾ, ಗುರುಪುರ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಮುಫೀದ್, ಅಶ್ರಫ್ ಅಡ್ಯಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಜನಸೇವೆಗೆ ಕಾಂಗ್ರೆಸ್ ಸದಾ ಬದ್ಧವಾಗಿದೆ ಎಂಬ ಸಂದೇಶದೊಂದಿಗೆ ಕಾರ್ಯಕ್ರಮ ಸಮಾರೋಪಗೊಂಡಿತು.
ಕಾರವಾರ | ಸಮುದ್ರದಲ್ಲಿ ಮುಳುಗಿ ಬಾಲಕ ಸಾವು
ಕಾರವಾರ: ಶಿವರಾತ್ರಿ ಹಿನ್ನೆಲೆಯಲ್ಲಿ ಸಮುದ್ರ ಸ್ನಾನಕ್ಕೆ ಇಳಿದ ಬಾಲಕನೊಬ್ಬ ಮುಳುಗಿ ಮೃತಪಟ್ಟ ಘಟನೆ ಮಂಗಳವಾರ ನಡೆದಿದೆ. ಗಾಂವಗೇರಿ ನಿವಾಸಿ ಯಶ್ (17) ಮೃತ ಬಾಲಕ ಎಂದು ಗುರುತಿಸಲಾಗಿದೆ. ಶಿವರಾತ್ರಿ ಪ್ರಯುಕ್ತ ಮಾಜಾಳಿ ಸಮುದ್ರಕ್ಕೆ ಸುತ್ತಮುತ್ತಲಿನ ಊರಿನ ದೇವತೆಗಳ ಪಲ್ಲಕ್ಕಿಗಳನ್ನು ತಂದು ಸಮುದ್ರ ಸ್ನಾನ ಮಾಡಿಸುವ ಸಂಪ್ರದಾಯವಿದೆ. ಈ ಹಿನ್ನೆಲೆಯಲ್ಲಿ ಸಾವಿರಾರು ಭಕ್ತರು ಸಮುದ್ರ ಸ್ನಾನಕ್ಕಾಗಿ ಆಗಮಿಸಿದ್ದರು. ಈ ವೇಳೆ ಸ್ನಾನಕ್ಕಾಗಿ ಸಮುದ್ರಕ್ಕೆ ಇಳಿದ ಯಶ್ ಅಲೆಗಳ ನಡುವೆ ಸಿಲುಕಿಕೊಂಡು ಮುಳುಗಿದ್ದಾನೆ ಎಂದು ತಿಳಿದುಬಂದಿದೆ.
ಎಸ್ಎಸ್ಎಲ್ಸಿ (SSLC Exam) ಮತ್ತು ಪಿಯುಸಿ ಪರೀಕ್ಷೆಗಳಿಗೆ (PUC Exam) ಇನ್ನೇನು ಕೆಲವೇ ದಿನಗಳು ಬಾಕಿ ಇದೆ. ಇದೀಗ ಈ ಬಗ್ಗೆ ಶಿಕ್ಷಣ ಸಚಿವ ಮಧುಬಂಗಾರಪ್ಪ (Madhu Bangarappa) ಸುದ್ದಿಗೋಷ್ಠಿ (Press Meet) ನಡೆಸಿ 2026ರ ದ್ವಿತೀಯ ಪಿಯುಸಿ ಮತ್ತು ಎಸ್ಎಸ್ಎಲ್ಸಿ ಪರೀಕ್ಷೆಯ ವೇಳಾಪಟ್ಟಿ ಮತ್ತು ಇತರ ವಿವರಗಳನ್ನು ಪ್ರಕಟಿಸಿದ್ದಾರೆ. ಈ ಬಾರಿ ದ್ವಿತೀಯ ಪಿಯುಸಿ ಪರೀಕ್ಷೆಗೆ
ದ.ಕ. ಜಿಲ್ಲಾ 28ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಚಿದಂಬರ ಬೈಕಂಪಾಡಿ ಆಯ್ಕೆ
ಮಂಗಳೂರು: ಮಾರ್ಚ್ 27 ಮತ್ತು 28ರಂದು ಬಂಟ್ವಾಳ ಬಿಸಿ ರೋಡ್ನ ಸ್ಪರ್ಶಾ ಕಲಾ ಮಂದಿರದಲ್ಲಿ ನಡೆಯಲಿರುವ ದಕ್ಷಿಣ ಕನ್ನಡ ಜಿಲ್ಲಾ 28ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಹಿರಿಯ ಸಾಹಿತಿ ಹಾಗೂ ಪತ್ರಕರ್ತ ಚಿದಂಬರ ಬೈಕಂಪಾಡಿ ಆಯ್ಕೆಯಾಗಿದ್ದಾರೆ. ಜಿಲ್ಲಾ ಕಾರ್ಯಕಾರಿ ಸಮಿತಿಯ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಎಂ.ಪಿ. ಶ್ರೀನಾಥ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಚಿದಂಬರ ಬೈಕಂಪಾಡಿ ಅವರು ಪತ್ರಕರ್ತ ಹಾಗೂ ಲೇಖಕರಾಗಿ ದೀರ್ಘಕಾಲ ಸೇವೆ ಸಲ್ಲಿಸಿದ್ದು, ಮುಂಗಾರು ಹಾಗೂ ಕನ್ನಡಪ್ರಭ ಪತ್ರಿಕೆಗಳಲ್ಲಿ ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ. ಕನ್ನಡದ ಪ್ರಮುಖ ಕವಿಗಳಲ್ಲಿ ಒಬ್ಬರಾಗಿರುವ ಅವರು ‘ಬೇಗುದಿ’, ‘ವಾಸ್ತವದ ಲೆಕ್ಕಾಚಾರ’, ‘ಕಪ್ಪು ಹುಡುಗ’ ಸೇರಿದಂತೆ ಹಲವು ಕವನ ಸಂಕಲನಗಳನ್ನು ಪ್ರಕಟಿಸಿದ್ದಾರೆ. ‘ತುಳು ಪ್ರೇಮಗೀತೆಗಳು’ ಅವರ ಧ್ವನಿ ಸುರುಳಿಯಾಗಿ ಹೊರಬಂದಿದೆ. ಮಂಗಳೂರು ವಿಶ್ವವಿದ್ಯಾನಿಲಯದ ಸೆನೆಟ್ ಸದಸ್ಯರಾಗಿ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಸದಸ್ಯರಾಗಿ ಅವರು ಸೇವೆ ಸಲ್ಲಿಸಿದ್ದಾರೆ. ‘ಇದು ಮುಂಗಾರು’ ಕೃತಿ ಪತ್ರಿಕೋದ್ಯಮ ಕುರಿತಾದ ಅವರ ಪ್ರಮುಖ ಕೃತಿಯಾಗಿದೆ. ಹಿರಿಯ ಪತ್ರಕರ್ತ ವಡ್ಡರ್ಸೆಯವರೊಂದಿಗೆ ಹತ್ತು ವರ್ಷಗಳ ಕಾಲ ಮುಂಗಾರು ಪತ್ರಿಕೆಯಲ್ಲಿ ಸೇವೆ ಸಲ್ಲಿಸಿದ್ದರು. ಪತ್ರಿಕೋದ್ಯಮ ಕ್ಷೇತ್ರದಲ್ಲಿ ಅಮೃತ ವಾರಪತ್ರಿಕೆ, ದಿವ್ಯವಾಣಿ ವಾರಪತ್ರಿಕೆ, ಮುಂಗಾರು ದಿನಪತ್ರಿಕೆ ಹಾಗೂ ಕನ್ನಡಪ್ರಭ ದಿನಪತ್ರಿಕೆಯಲ್ಲಿ ಪ್ರಮುಖ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿ, ‘ಬಿಂಬದ್ವನಿ’ ಪತ್ರಿಕೆಯ ಪ್ರಧಾನ ಸಂಪಾದಕರಾಗಿಯೂ ಸೇವೆ ಸಲ್ಲಿಸಿದ್ದಾರೆ. ವೈಚಾರಿಕ ಹಾಗೂ ಸಾಮಾಜಿಕ ಕಳಕಳಿಯ ವರದಿ-ಲೇಖನಗಳ ಮೂಲಕ ಕನ್ನಡ ಮಾಧ್ಯಮ ಲೋಕವನ್ನು ಶ್ರೀಮಂತಗೊಳಿಸಿದ್ದಾರೆ. ‘ಮುಂಗಾರು’, ‘ಪ.ಗೋ. ಪ್ರಪಂಚ’, ‘ರಾಜಕೀಯ ಒಳಸುಳಿಗಳು’ ಸೇರಿದಂತೆ ಹಲವು ಕೃತಿಗಳನ್ನು ಪ್ರಕಟಿಸಿರುವ ಅವರು ದ.ಕ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಅನೇಕ ಗೌರವಗಳಿಗೆ ಪಾತ್ರರಾಗಿದ್ದಾರೆ. ಕರ್ನಾಟಕ ಪತ್ರಕರ್ತರ ಸಂಘದ ಅತ್ಯುತ್ತಮ ತನಿಖಾ ಪತ್ರಕರ್ತ ಪ್ರಶಸ್ತಿ, ಅಖಿಲ ಭಾರತ ಆಕಾಶವಾಣಿ ವಾರ್ಷಿಕ ಪ್ರಶಸ್ತಿ (‘ಬೆಂಗರೆ’ ಬಾನುಲಿ ಸಾಕ್ಷರೂಪಕ), ಬನ್ನಂಜೆ ರಾಮಾಚಾರ್ಯ ಪತ್ರಿಕೋದ್ಯಮ ಪ್ರಶಸ್ತಿ, ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ, ಡಾ. ಕೋಟ ಶಿವರಾಮ ಕಾರಂತ ಪ್ರಶಸ್ತಿ ಸೇರಿದಂತೆ ಹಲವು ಸನ್ಮಾನಗಳನ್ನು ಪಡೆದಿದ್ದಾರೆ. 2025ನೇ ಸಾಲಿನ ವಡ್ಡರ್ಸೆ ರಘುರಾಮ ಶೆಟ್ಟಿ ಪತ್ರಿಕೋದ್ಯಮ ಪ್ರಶಸ್ತಿಗೂ ಅವರು ಭಾಜನರಾಗಿದ್ದಾರೆ.
ಕರಾವಳಿ ಬಗ್ಗೆ ಪ್ರಿಯಾಂಕ್ ಖರ್ಗೆ ಹೇಳಿಕೆ : ಕಡಲ ತಟದ ಮಣ್ಣಿನ ಮಹಿಮೆ ವಿವರಿಸಿದ ಸಿಟಿ ರವಿ
Priyank Kharge Vs CT Ravi : ಕರಾವಳಿ ಕರ್ನಾಟಕದ ಬಗ್ಗೆ ಐಟಿಬಿಟಿ ಇಲಾಖೆಯ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ ಮಾತಿಗೆ, ಬಿಜೆಪಿ ನಾಯಕರು ತಿರುಗಿ ಬೀಳುತ್ತಿದ್ದಾರೆ. ಬೆಂಗಳೂರಿನ ನಂತರ, ರಾಜ್ಯದ ಎರಡನೇ ಅತಿಹೆಚ್ಚು ಜಿಡಿಪಿಯನ್ನು ಹೊಂದಿರುವ ಪ್ರದೇಶದ ಬಗ್ಗೆ ಖರ್ಗೆ ಅವರು ಆಡಿರುವ ಮಾತು, ಅವರ ಅಪ್ರಬುದ್ದತೆಯನ್ನು ತೋರಿಸುತ್ತದೆ ಎಂದು ಬಿಜೆಪಿ ನಾಯಕ ಸಿಟಿ ರವಿ ಹೇಳಿದ್ದಾರೆ.
ಕೊಪ್ಪಳ: 'ಗ್ಯಾರಂಟಿ ಉತ್ಸವ' ಕಾರ್ಯಕ್ರಮದಲ್ಲಿ ಕೂದಲೆಳೆ ಅಂತರದಲ್ಲಿ ತಪ್ಪಿತು ಅನಾಹುತ
ರಾಜ್ಯ ಸರಕಾರ ಜಾರಿಗೆ ತಂದಿರುವ ಪಂಚ ಗ್ಯಾರಂಟಿ ಯೋಜನೆಗಳು ಸಮರ್ಪಕವಾಗಿ ಅನುಷ್ಠಾನಗಳ್ಳುವ ನಿಟ್ಟಿನಲ್ಲಿ ಕೊಪ್ಪಳದ ಹೊಸಪೇಟೆ ರಸ್ತೆಯಲ್ಲಿರುವ ಮಧುಶ್ರೀ ಗಾರ್ಡನ ಮುಂಭಾಗದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಗ್ಯಾರಂಟಿ ಉತ್ಸವ ಕಾರ್ಯಕ್ರಮ ಹಮ್ಮಿಕೊಂಡಿದೆ. ಕಾರ್ಯಕ್ರಮದ ಬೃಹತ್ ಸ್ವಾಗತ ಕೋರುವ ಬೋರ್ಡ್ ಏಕಾಏಕಿ ನೆಲಕ್ಕುರುಳಿದೆ. ಕೆಳಗೆ ನಿಂತಿದ್ದ ಹಲವು ಜನರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕೂದಲೆಳೆ ಅಂತರದಲ್ಲಿ ಅನಾಹುತ ತಪ್ಪಿದೆ.
ಕ್ರಿಕೆಟ್ ಮೈದಾನ ಅಚ್ಚರಿಗಳ ಆಗರ. ಯಾವ ಆಟಗಾರ ಯಾವ ಕ್ಷಣದಲ್ಲಿ ಅದ್ಭುತ ಪ್ರದರ್ಶನ ತೋರಬಲ್ಲ ಎಂಬುದು ಯಾರಿಗೂ ಗೊತ್ತಿರುವುದಿಲ್ಲ. ಇಂತದ್ದೇ ಅದ್ಭುತ ಪ್ರದರ್ಶನವನ್ನು ನಿನ್ನೆ (ಫೆ.16-ಸೋಮವಾರ) ನಡೆದ ಆಸ್ಟ್ರೇಲಿಯಾ vs ಶ್ರೀಲಂಕಾ ನಡುವಿನ ಪಂದ್ಯದಲ್ಲಿ ಪಾಥುಮ್ ನಿಸ್ಸಾಂಕಾ ನೀಡಿದ್ದಾರೆ. ಪಂದ್ಯದಲ್ಲಿ ಗ್ಲೆನ್ ಮ್ಯಾಕ್ಸ್ವೆಲ್ ಅವರ ಅದ್ಭುತ ಕ್ಯಾಚ್ ಹಿಡಿದಿರುವ ಪಾಥುಮ್ ನಿಸ್ಸಾಂಕಾ, ಟಿ-20 2026 ಪಂದ್ಯಾವಳಿಯ ಅದ್ಭುತ ಕ್ಯಾಚ್ ಹಿಡಿದ ಶ್ರೇಯಸ್ಸಿಗೆ ಪಾತ್ರರಾಗಿದ್ದಾರೆ. ಈ ಕುರಿತು ಇಲ್ಲಿದೆ ಹೆಚ್ಚಿನ ಮಾಹಿತಿ.
ನಾವು AI ಯುಗದಲ್ಲಿದ್ದೇವೆ: ಸೋನಮ್ ವಾಂಗ್ಚುಕ್ ಭಾಷಣದ ಅನುವಾದಗಳ ಬಗ್ಗೆ ಕೇಂದ್ರ ಸರಕಾರಕ್ಕೆ ಸುಪ್ರೀಂ ಕೋರ್ಟ್ ತರಾಟೆ
ಹೊಸದಿಲ್ಲಿ: ಹವಾಮಾನ ಹೋರಾಟಗಾರ ಸೋನಮ್ ವಾಂಗ್ಚುಕ್ ವಿರುದ್ಧ ಸಲ್ಲಿಸಿದ ವೀಡಿಯೊ ಸಂಭಾಷಣೆಯ ನಿಖರತೆ ಕುರಿತು ಸುಪ್ರೀಂ ಕೋರ್ಟ್ ಕೇಂದ್ರ ಸರಕಾರವನ್ನು ಪ್ರಶ್ನಿಸಿದೆ. ವಿಶೇಷವಾಗಿ ಕೃತಕ ಬುದ್ಧಿಮತ್ತೆಯ ಯುಗದಲ್ಲಿ ಅನುವಾದಗಳು ಖಚಿತವಾಗಿರಬೇಕು ಎಂದು ಅಭಿಪ್ರಾಯಪಟ್ಟಿದೆ. ವಾಂಗ್ಚುಕ್ ಅವರ ಪತ್ನಿ ಗೀತಾಂಜಲಿ ಅಂಗ್ಮೋ ಪರ ವಾದ ಮಂಡಿಸಿದ ಹಿರಿಯ ವಕೀಲ ಕಪಿಲ್ ಸಿಬಲ್, ವಾಂಗ್ಚುಕ್ ಹೇಳಿದ್ದಾರೆ ಎನ್ನಲಾದ ಮಾತುಗಳನ್ನು ಅವರು ಆಡಿಲ್ಲ ಎಂದು ವಾದಿಸಿದರು. ಈ ವೇಳೆ ನ್ಯಾಯಮೂರ್ತಿಗಳಾದ ಅರವಿಂದ್ ಕುಮಾರ್ ಮತ್ತು ಪಿ.ಬಿ. ವರಾಳೆ ಅವರ ಪೀಠವು, ವಾಂಗ್ಚುಕ್ ಅವರು ನೀಡಿದ ಹೇಳಿಕೆಗಳ ನಿಜವಾದ ಪ್ರತಿಗಳನ್ನು ಸಲ್ಲಿಸುವಂತೆ ಹೆಚ್ಚುವರಿ ಸಾಲಿಸಿಟರ್ ಜನರಲ್ ಕೆ.ಎಂ. ನಟರಾಜ್ ಅವರಿಗೆ ಸೂಚಿಸಿದರು. ವಾಂಗ್ಚುಕ್ ಏನೇ ಹೇಳಿದರೂ, ಅದರ ನಿಜವಾದ ಅನುವಾದ ಇರಬೇಕು. ಭಾಷಣ 3 ನಿಮಿಷಗಳಷ್ಟಿದೆ. ಆದರೆ ನಿಮ್ಮ ಅನುವಾದ 7ರಿಂದ 8 ನಿಮಿಷಗಳಷ್ಟಿದೆ. ಆದರೆ, ನಾವು ಕೃತಕ ಬುದ್ಧಿಮತ್ತೆಯ ಯುಗದಲ್ಲಿದ್ದು, ಅನುವಾದದ ನಿಖರವಾಗಿರಬೇಕು ಎಂದು ಪೀಠವು ಹೇಳಿದೆ. ಈ ವೇಳೆ ಹೆಚ್ಚುವರಿ ಸಾಲಿಸಿಟರ್ ಜನರಲ್ ಅವರು, ಒಂದು ಇಲಾಖೆ ಅನುವಾದ ಸಿದ್ಧಪಡಿಸಿದೆ ಮತ್ತು ನಾವು ಅದರಲ್ಲಿ ಪರಿಣತರಲ್ಲ ಎಂದು ಸಮರ್ಥನೆ ನೀಡಿದರು. ಈ ವೇಳೆ ನ್ಯಾಯಾಲಯವು, ನಾವು AI ಯುಗದಲ್ಲಿದ್ದೇವೆ. ನಿಖರತೆ ಶೇಕಡಾ 98 ರಷ್ಟಿರಬೇಕು ಎಂದು ಹೇಳಿದೆ.
ಟ್ರಂಪ್ ನೇತೃತ್ವದ ಅಮೆರಿಕಾ ಆಡಳಿತದಲ್ಲಿ ವಲಸೆ ವಿರೋಧಿ ನೀತಿ ಹೆಚ್ಚುತ್ತಿದೆ. ಅದರಲ್ಲೂ ಪ್ರಮುಖವಾಗಿ ಅಕ್ರಮ ವಲಸಿಗರನ್ನು ದೇಶದಿಂದ ಹೊರಹಾಕಲು ರಣಬೇಟೆಗಳಿದಿರುವ ಅಮೆರಿಕಾದ ವಲಸೆ ಅಧಿಕಾರಿಗಳು ಸದ್ಯ ಮತ್ತೊಬ್ಬ ಭಾರತೀಯ ಮೂಲದ ವ್ಯಕ್ತಿಯನ್ನು ಬಂಧಿಸಿದ್ದು, ಈತನ ಅಕ್ರಮವಾಗಿ ಯುಎಸ್ ನಲ್ಲಿ ನೆಲೆಸಿದ್ದು, ಅಪ್ರಾಪ್ತ ಹೆಣ್ಣುಮಗುವಿನ ಮೇಲೆ ಲೈಂಗಿಕ ದೌರ್ಜನ್ಯ ವೆಸಗಿದ ಆರೋಪದ ಜೊತೆಗೆ ಇನ್ನೂ ಕೆಲ ಆರೋಪಗಳನ್ನು ಮಾಡಿದ್ದು, ಈತನನ್ನು ಮಕ್ಕಳ ಅತ್ಯಾಚಾರಿ ಎಂದು ಕರೆದಿದೆ. ಇನ್ನು, ಈತನನ್ನು ICE ಅಧಿಕಾರಿಗಳು ಬಂಧಿಸಿದ್ದು, ಗಡೀಪಾರು ಮಾಡಲಿದ್ದೇವೆ ಎಂದು ತಿಳಿಸಿದ್ದಾರೆ.
Kalaburagi | ಬಸ್-ಬೈಕ್ ಮಧ್ಯೆ ಢಿಕ್ಕಿ; ಸವಾರ ಗಂಭೀರ
ಕಲಬುರಗಿ : ಕೆಕೆಆರ್ಟಿಸಿ ಬಸ್ ಹಾಗೂ ಬೈಕ್ ಮಧ್ಯೆ ಢಿಕ್ಕಿ ಸಂಭವಿಸಿ ಬೈಕ್ ಸವಾರರೊಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಸೇಡಂ ತಾಲೂಕಿನ ಬೀರನಳ್ಳಿ ಗ್ರಾಮದ ಸಮೀಪ ಮಂಗಳವಾರ ನಡೆದಿದೆ. ಗಾಯಗೊಂಡಿರುವ ಬೈಕ್ ಸವಾರನನ್ನು ಸೇಡಂ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ. ಘಟನೆ ಮಳಖೇಡ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದೆ.
Vaibhav Suryavanshi: ಅಂಡರ್ 19 ವಿಶ್ವಕಪ್ ಹೀರೋ ವೈಭವ್ ಸೂರ್ಯವಂಶಿ ಎಸ್ಎಸ್ಎಲ್ಸಿ ಪರೀಕ್ಷೆಗೆ ಗೈರು
Vaibhav Suryavanshi: ಅಂಡರ್ 19 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಭಾರತ ತಂಡವು ಇಂಗ್ಲೆಂಡ್ ವಿರುದ್ಧ ಭರ್ಜರಿ ಗೆಲುವು ಸಾಧಿಸಿ 6ನೇ ಟ್ರೊಫಿಗೆ ಮುತ್ತಿಟ್ಟಿತು. ಈ ಗೆಲುವಿನ ಪ್ರಮುಖ ರುವಾರಿ 14 ವರ್ಷದ ವೈಭವ್ ಸೂರ್ಯವಂಶಿ ಅವರು ಇದೀಗ ಭಾರೀ ಸುದ್ದಿಯಲ್ಲಿದ್ದಾರೆ. ಇತ್ತೀಚೆಗಷ್ಟೇ ಅವರು ಸಿಬಿಎಸ್ಇ ಎಸ್ಎಸ್ಎಲ್ ಪರೀಕ್ಷೆ ಬರೆಯಲು ಪ್ರವೇಶ ಪತ್ರವನ್ನು ಪಡೆದುಕೊಂಡಿದ್ದರು. ಆದರೆ, ಇದೀಗ ಅವರು
ರಣಜಿ ಟ್ರೋಫಿ ಸೆಮಿಫೈನಲ್ | ಎಂಟು ವಿಕೆಟ್ ಕಿತ್ತ ಮುಹಮ್ಮದ್ ಶಮಿ; ಬಿಸಿಸಿಐ ಸೆಲೆಕ್ಟರ್ಸ್ ಗೆ ʼಡೈರೆಕ್ಟ್ ಹಿಟ್ʼ!
ಕೋಲ್ಕತ್ತಾ: ಕಲ್ಯಾಣಿಯ ಬಂಗಾಳ ಕ್ರಿಕೆಟ್ ಅಕಾಡೆಮಿ ಮೈದಾನದಲ್ಲಿ ನಡೆಯುತ್ತಿರುವ ಪಶ್ಚಿಮ ಬಂಗಾಳ ಹಾಗೂ ಜಮ್ಮು ಮತ್ತು ಕಾಶ್ಮೀಷರ ನಡುವಿನ ಸೆಮಿಫೈನಲ್ ಪಂದ್ಯದಲ್ಲಿ ಪಶ್ಚಿಮ ಬಂಗಾಳ ತಂಡದ ಪರ ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿದ ವೇಗಿ ಮುಹಮ್ಮದ್ ಶಮಿ, 90 ರನ್ ಗಳಿಗೆ 8 ವಿಕೆಟ್ ಕಿತ್ತಿದ್ದಾರೆ. ಆ ಮೂಲಕ, ತಮ್ಮನ್ನು ರಾಷ್ಟ್ರೀಯ ತಂಡಕ್ಕೆ ಪರಿಗಣಿಸಲು ಬಿಸಿಸಿಐ ಆಯ್ಕೆದಾರರಿಗೆ ದಿಟ್ಟ ಸಂದೇಶ ರವಾನಿಸಿದ್ದಾರೆ. ತಮ್ಮ ಹಿಂದಿನ ಲಯಕ್ಕೆ ಮರಳಿರುವ ಮುಹಮ್ಮದ್ ಶಮಿ, ಜಮ್ಮು ಮತ್ತು ಕಾಶ್ಮೀರ ತಂಡದ ಬ್ಯಾಟರ್ ಗಳನ್ನು ಅಕ್ಷರಶಃ ಕಾಡಿದರು. ಮುಹಮ್ಮದ್ ಶಮಿಯ ಮಾರಕ ಬೌಲಿಂಗ್ ದಾಳಿಗೆ ಜಮ್ಮು ಮತ್ತು ಕಾಶ್ಮೀರ ತಂಡ 302 ರನ್ ಗಳಿಗೆ ಆಲೌಟ್ ಆಯಿತು. ಇದಕ್ಕೂ ಮುನ್ನ, ಸುದೀಪ್ ಕುಮಾರ್ ಘರಮಿ(146)ಯ ಅಮೋಘ ಶತಕದ ನೆರವಿನಿಂದ ಪಶ್ಚಿ ಮ ಬಂಗಾಳ ತಂಡವು 328 ರನ್ ಗಳ ಉತ್ತಮ ಮೊತ್ತವನ್ನು ಪೇರಿಸಿತ್ತು. ಈ ಮೊತ್ತವನ್ನು ಬೆನ್ನತ್ತಿದ ಜಮ್ಮು ಮತ್ತು ಕಾಶ್ಮೀರ ತಂಡ, ನಿನ್ನೆ ದಿನದಾಟದ ಅಂತ್ಯಕ್ಕೆ ಮೂರು ವಿಕೆಟ್ ನಷ್ಟಕ್ಕೆ ಕೇವಲ 13 ರನ್ ಗಳಿಸಿತ್ತು. ಆದರೆ, ಮಧ್ಯಮ ಕ್ರಮಾಂಕದ ಅಬ್ದುಲ್ ಸಮದ್ (82) ಹಾಗೂ ನಾಯಕ ಪಾರಸ್ ದೊಗ್ರಾ (58) ಪಶ್ಚಿಮ ಬಂಗಾಳ ತಂಡಕ್ಕೆ ತಮ್ಮ ಬ್ಯಾಟ್ ನಿಂದ ತಿರುಗೇಟು ನೀಡಿದರು. ಹೀಗಾಗಿ ಅಲ್ಪ ಮೊತ್ತಕ್ಕೆ ಕುಸಿಯುವ ಭೀತಿಯಲ್ಲಿದ್ದ ಜಮ್ಮು ಮತ್ತು ಕಾಶ್ಮೀರ ತಂಡ 302 ರನ್ ಗಳ ಗೌರವಯುತ ಮೊತ್ತ ಗಳಿಸಿತು. ಮುಹಮ್ಮದ್ ಶಮಿಯವರ ಈ ಅದ್ಭುತ ಪ್ರದರ್ಶನ ಸಂಕೀರ್ಣ ಕಾಲಘಟ್ಟದಲ್ಲಿ ಬಂದಿದೆ. ತಮ್ಮನ್ನು ರಾಷ್ಟ್ರೀಯ ತಂಡದಿಂದ ಬದಿಗೆ ಸರಿಸಿದಂದಿನಿಂದ ಉತ್ತಮ ಪ್ರದರ್ಶನ ನೀಡುತ್ತಾ ಬಂದಿರುವ ಮುಹಮ್ಮದ್ ಶಮಿ, ಇಂದಿನ ಪ್ರದರ್ಶನದ ಮೂಲಕ, ತಮ್ಮನ್ನು ರಾಷ್ಟ್ರೀಯ ತಂಡಕ್ಕೆ ಪರಿಗಣಿಸುವಂತೆ ಅಜಿತ್ ಅಗರ್ಕರ್ ನೇತೃತ್ವದ ಬಿಸಿಸಿಐ ಆಯ್ಕೆದಾರರ ಮೇಲೆ ಬಲವಾದ ಒತ್ತಡವನ್ನೇ ಹೇರಿದ್ದಾರೆ.
ಚಿಕ್ಕಮಗಳೂರು : ಒಂದು ಸಮುದಾಯದವರ ಮನೆಗಳ ಮೇಲೆ ಇನ್ನೊಂದು ಸಮುದಾಯಕ್ಕೆ ಸೇರಿದ ಯುವಕರು ಕಲ್ಲು ತೂರಾಟ ನಡೆಸಿದ್ದಾರೆ ಎನ್ನುವ ಆರೋಪ ಜಿಲ್ಲಾ ಕೇಂದ್ರ ಚಿಕ್ಕಮಗಳೂರಿನಲ್ಲಿ ಸೋಮವಾರ ರಾತ್ರಿ ಆತಂಕಕ್ಕೆ ಎಡೆ ಮಾಡಿತ್ತು. ಇಲ್ಲಿನ ವಿಜಯಪುರ ಬಡಾವಣೆಯಲ್ಲಿ 5-6 ಯುವಕರಿಂದ ಮನೆಗಳ ಮೇಲೆ ಕಲ್ಲು-ತೂರಾಟ ನಡೆದಿದೆ ಎಂಬ ಆರೋಪ ಕೇಳಿಬಂದಿದೆ. ಕಳೆದ ಮೂರು ದಿನಗಳಿಂದ ಕಲ್ಲು ಹೊಡೆಯೋದು ಈ ರೀತಿಯ ಕೃತ್ಯವನ್ನು ಯುವಕರ ಗುಂಪೊಂದು ಮಾಡುತ್ತಿತ್ತು ಎಂದು ಆರೋಪಿಸಲಾಗಿದೆ. ಘಟನೆ ಹಿನ್ನೆಲೆಯಲ್ಲಿ ಇಬ್ಬರಿಗೆ ಹಿಂದುತ್ವ ಸಂಘಟನೆ ಕಾರ್ಯಕರ್ತರು ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದರು. ಇದು ನೈತಿಕ ಪೊಲೀಸ್ ಗಿರಿ ಎನ್ನುವ ಆರೋಪವೂ ವ್ಯಕ್ತವಾಗಿದೆ. ಬಸವನಹಳ್ಳಿ ಪೊಲೀಸ್ ಠಾಣೆ ಮುಂದೆ ಎರಡೂ ಎರಡು ಸಮುದಾಯದ ನೂರಾರು ಯುವಕರು ಜಮಾವಣೆ ಆಗಿದ್ದರು. ಕಲ್ಲು ಹೊಡೆದವರು ಅವರಲ್ಲ ಎಂದು ಒಂದು ಸಮುದಾಯದವರ ವಾದವಾದರೆ, ಕಲ್ಲು ತೂರಾಟ ನೆಡಸಿದವರ ಮೇಲೂ ಕ್ರಮವಾಗಬೇಕೆಂದು ಇನ್ನೊಂದು ಸಮುದಾಯದವರ ವಾದವಾಗಿತ್ತು. ಹಲ್ಲೆಗೊಳಗಾಗದ ಯುವಕರ ಪರ ಆಸ್ಪತ್ರೆ ಮುಂದೆ ನೂರಾರು ಯುವಕರು ಸೇರಿದ್ದರು. ಮಧ್ಯರಾತ್ರಿ ಬಸವನಹಳ್ಳಿ ಪೊಲೀಸ್ ಠಾಣೆ, ಆಸ್ಪತ್ರೆ ಬಳಿ ಪ್ರಕ್ಷುಬ್ಧ ವಾತಾವರಣ ಉಂಟಾಗಿದ್ದು, ತಕ್ಷಣ ಪೊಲೀಸ್ ಠಾಣೆ-ಆಸ್ಪತ್ರೆ ಬಳಿ ಗುಂಪು ಸೇರದಂತೆ ಪೊಲೀಸರು ಎಚ್ಚರವಹಿಸಿದ್ದರು. ಹಲ್ಲೆಗೊಳಗಾದವರಿಗೆ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಚಿಕಿತ್ಸೆ ನೀಡಲಾಗುತ್ತಿದೆ. ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಹಲ್ಲೆಗೊಳಗಾದವರು ಇಬ್ಬರೂ ಅಪ್ರಾಪ್ತರಾಗಿದ್ದು, ಅವರ ಹೇಳಿಕೆ ಆಧರಿಸಿ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ. ಘಟನೆ ಸಂಬಂಧ ದೂರು-ಪ್ರತಿದೂರು ದಾಖಲಾಗಿದೆ.
Mangaluru | ಕಿನ್ಯದಲ್ಲಿ ವಿದ್ಯುತ್ ಕಂಬಕ್ಕೆ ಸ್ಕೂಟರ್ ಢಿಕ್ಕಿ; ಇಬ್ಬರು ವಿದ್ಯಾರ್ಥಿಗಳಿಗೆ ಗಾಯ
ಉಳ್ಳಾಲ: ಉಳ್ಳಾಲ ತಾಲೂಕಿನ ಕಿನ್ಯ ಸಮೀಪ ಸೋಮವಾರ ಸಂಜೆ ಸ್ಕೂಟರ್ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದ ಪರಿಣಾಮ ಇಬ್ಬರು ವಿದ್ಯಾರ್ಥಿಗಳು ಗಾಯಗೊಂಡ ಘಟನೆ ನಡೆದಿದೆ. ಗಾಯಾಳುಗಳು ವಿಜಯಪುರ ಮತ್ತು ಬಾಗಲಕೋಟೆ ಮೂಲದವರಾಗಿದ್ದು, ಇಬ್ಬರೂ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿಗಳೆಂದು ಗುರುತಿಸಲಾಗಿದೆ. ಢಿಕ್ಕಿಯ ರಭಸಕ್ಕೆ ವಿದ್ಯುತ್ ಕಂಬ ಮುರಿದು ಬಿದ್ದಿದೆ ಎನ್ನಲಾಗಿದ್ದು, ಸವಾರ ಹಾಗೂ ಸಹಸವಾರನಿಗೆ ಗಾಯಗಳಾಗಿವೆ. ಈ ಸಂಬಂಧ ಪ್ರಕರಣ ದಾಖಲಾಗಿಲ್ಲ ಎಂದು ತಿಳಿದು ಬಂದಿದೆ.
ಸರ್ಕಾರಿ ಶಾಲಾ-ಕಾಲೇಜುಗಳಿಗೆ ಹೊಸ ರೂಲ್ಸ್: ಶಿಕ್ಷಕರು, ವಿದ್ಯಾರ್ಥಿಗಳಿಗೆ ಎಐ ಆಧಾರಿತ ಇ-ಹಾಜರಾತಿ ಕಡ್ಡಾಯ
ಬೆಂಗಳೂರು: ರಾಜ್ಯದ ಶಾಲಾ ಶಿಕ್ಷಣ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆಯಾಗಲಿದ್ದು, ಸರ್ಕಾರಿ ಹಾಗೂ ಅನುದಾನಿತ ಪ್ರಾಥಮಿಕ, ಪ್ರೌಢಶಾಲೆ ಮತ್ತು ಪದವಿಪೂರ್ವ ಕಾಲೇಜುಗಳಲ್ಲಿ 2026-27ನೇ ಶೈಕ್ಷಣಿಕ ಸಾಲಿನಿಂದ ವಿದ್ಯಾರ್ಥಿಗಳು ಹಾಗೂ ಶಿಕ್ಷಕರಿಗೆ 'ಇ-ಹಾಜರಾತಿ' (E-Attendance) ವ್ಯವಸ್ಥೆಯನ್ನು ಕಡ್ಡಾಯಗೊಳಿಸಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಮರು ಆದೇಶ ಹೊರಡಿಸಿದೆ. ತಂತ್ರಜ್ಞಾನದ ಬಳಕೆಯೊಂದಿಗೆ ಶಿಕ್ಷಣ ವ್ಯವಸ್ಥೆಯಲ್ಲಿ ಪಾರದರ್ಶಕತೆ ತರಲು ಈ ಕೃತಕ
ಆಸ್ತಿ ಗಲಾಟೆ : ಬೇಸ್ಬಾಲ್ ಬ್ಯಾಟ್ನಿಂದ ಹಲ್ಲೆ ನಡೆಸಿ ಮಗನಿಂದಲೇ ತಂದೆಯ ಕೊಲೆ
ಮನೆಯ ಕೌಟುಂಬಿಕ ಕಲಹ ಹಾಗೂ ಆಸ್ತಿ ಗಲಾಟೆ ತಂದೆಯ ಹತ್ಯೆಯಲ್ಲಿ ಅಂತ್ಯವಾಗಿದೆ. ಮಗ ಬೇಸ್ಬಾಲ್ ಬ್ಯಾಟ್ನಿಂದ ತಂದೆಯ ಮೇಲೆ ಹಲ್ಲೆ ನಡೆಸಿದ್ದಾನೆ. ತೀವ್ರ ಗಾಯಗೊಂಡಿದ್ದ ತಂದೆ ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಸಾವನ್ನಪ್ಪಿದ್ದಾರೆ. ದೂಪನಹಳ್ಳಿ ನಿವಾಸಿ ಮುನಿಕೃಷ್ಣಪ್ಪ (71) ಎಂದು ಗುರುತಿಸಲಾಗಿದೆ.
ದಿಲ್ಲಿಯಲ್ಲಿ ಇಂಡಿಯಾ AI ಇಂಪ್ಯಾಕ್ಟ್ ಶೃಂಗಸಭೆ| ಮೊದಲ ದಿನವೇ ಅವ್ಯವಸ್ಥೆ, ಕಳ್ಳತನ ಆರೋಪ
AI wearable ಕಳ್ಳತನವಾಗಿದೆ ಎಂದು ಆರೋಪಿಸಿದ ಬೆಂಗಳೂರು ಮೂಲದ ಉದ್ಯಮಿ
ರಾಜ್ಯ ರಾಜಕಾರಣಕ್ಕೆ ಮಾಜಿ ಸಚಿವ ಕೆ ಎನ್ ರಾಜಣ್ಣ ಅವರ ಪುತ್ರಿ ಎಂಟ್ರಿ ಕೊಡಲಿದ್ದಾರೆ. ಮಹಿಳಾ ಮೀಸಲಾತಿ 2028 ರಲ್ಲಿ ಜಾರಿಯಾದರೆ ಮಗಳನ್ನೇ ಚುನಾವಣೆಗೆ ನಿಲ್ಲಿಸ್ತೇನೆ ಎಂದು ಮಾಜಿ ಸಚಿವ ಕೆ ಎನ್ ರಾಜಣ್ಣ ಅವರು ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ಮಂಗಳವಾರ ಮಾತನಾಡಿದ ಅವರು, ಮುಂದಿನ ಚುನಾವಣೆಯಲ್ಲಿ ಪುತ್ರ ರಶ್ಮಿ ಅವರ ರಾಜಕೀಯ ಎಂಟ್ರಿ ಕುರಿತಾಗಿ ಸುಳಿವು ನೀಡಿದರು. ಇದೇ ಸಂದರ್ಭದಲ್ಲಿ ಶಾಸಕರ ವಿದೇಶ ಪ್ರವಾಸವನ್ನು ಸಮರ್ಥಿಸಿಕೊಂಡ ಅವರು, ತಮ್ಮ ಸ್ವಂತ ಖರ್ಚಿನಲ್ಲಿ ವಿದೇಶಕ್ಕೆ ಹೋದರೆ ತಪ್ಪೇನು? ಎಂದು ಪ್ರಶ್ನಿಸಿದರು.
ಸೈಬೀರಿಯಾ ಹಾಗೂ ಮಂಗೋಲಿಯಾದಿಂದ ವಲಸೆ ಬಂದಿರುವ ಪುರಾಣ ಪ್ರಸಿದ್ದ ಕ್ರೌಂಚ ಪಕ್ಷಿಗಳ ಸಾಲು ಈ ಪ್ರದೇಶದಲ್ಲಿ ವಿಜಯನಗರದ ಮಾಲವಿ ಜಲಾಶಯದ ಪ್ರದೇಶದಲ್ಲಿ ಬೀಡುಬಿಟ್ಟಿದೆ. ಈ ಹಿಂದೆ 2020ರಲ್ಲಿ ಕೇವಲ 8 ಹಕ್ಕಿಗಳು ಮಾತ್ರ ಈ ಪ್ರದೇಶಕ್ಕೆ ವಲಸೆ ಬಂದಿದ್ದವು.ಆದರೆ, ಕಾಲ ಕ್ರಮೇಣ ಈ ಪ್ರದೇಶಕ್ಕೆ ವಲಸೆ ಬರುವ ಕ್ರೌಂಚ ಪಕ್ಷಿಗಳ ಸಂಖ್ಯೆಯಲ್ಲಿ ಹೆಚ್ಚಳ ಕಂಡಿದ್ದು, ಕೇವಲ 6 ವರ್ಷಗಳ ಅಂತರದಲ್ಲಿ 8ರಿಂದ ಸುಮಾರು 1500ಕ್ಕೂ ಅಧಿಕ ಪಕ್ಷಿಗಳು ವಲಸೆ ಬಂದಿದೆ. ಈ ಮೂಲಕ ದಕ್ಷಿಣ ಭಾರತದಲ್ಲೇ ಅಧಿಕ ಸಂಖ್ಯೆಯಲ್ಲಿ ಕ್ರೌಂಚ ಪಕ್ಷಿಗಳು ಕರ್ನಾಟಕದಲ್ಲಿ ಕಂಡು ಬರುವಂತೆ ಆಗಿದೆ. ಇನ್ನು, ಈ ಕ್ರೌಂಚ ಪಕ್ಷಿಗಳು ಪುರಾಣಗಳಲ್ಲಿ ಸಾಕಷ್ಟು ಮಹತ್ವವನ್ನು ಪಡೆದುಕೊಂಡಿದ್ದು, ಅದು ಹೇಗೆ ಎಂದು ತಿಳಿಯಿರಿ..
ವಾರಾಹಿಯಲ್ಲಿ ನೀರಿನ ಮಟ್ಟ ಕುಸಿತ ಅವಧಿಗೆ ಮೊದಲೇ ಕ್ಷೀಣಗೊಂಡ ನದಿ ಹರಿವು
ಬೇಸಿಗೆ ಆರಂಭವಾಗಿದೆ. ನದಿಗಳಲ್ಲಿ ನೀರಿನ ಮಟ್ಟ ಕ್ಷೀಣಿಸಲು ಶುರುವಾಗಿದೆ. ವಾರಾಹಿ ನದಿಯಲ್ಲಿ ನೀರಿನಮಟ್ಟ ಕಡಿಮೆಯಾಗುತ್ತಿದೆ. ಹಾಲಾಡಿಯಿಂದ ಜಪ್ತಿವರೆಗಿನ ಪ್ರದೇಶದಲ್ಲಿ ಸಾವಿರಕ್ಕೂ ಹೆಚ್ಚು ರೈತರ ಪಂಪ್ಸೆಟ್ಗಳು ವಾರಾಹಿ ನದಿನೀರನ್ನೇ ನಂಬಿಕೊಂಡಿದೆ.
ರಣಜಿ ಟ್ರೋಫಿ | ಬೃಹತ್ ಮೊತ್ತ ಕಲೆ ಹಾಕಿದ ಕರ್ನಾಟಕ; 736ಕ್ಕೆ ಆಲೌಟ್
ಉತ್ತರಾಖಂಡಕ್ಕೆ ಆರಂಭಿಕ ಆಘಾತ
CBSE 10ನೇ ತರಗತಿ ವಿದ್ಯಾರ್ಥಿಗಳೇ ಗಮನಿಸಿ: ಮೊದಲ ಬೋರ್ಡ್ ಪರೀಕ್ಷೆಗೆ ಹಾಜರಾತಿ ಕಡ್ಡಾಯ
ಸಿಬಿಎಸ್ಇ 10ನೇ ತರಗತಿಯ ವಿದ್ಯಾರ್ಥಿಗಳಿಗೆ ಕೇಂದ್ರೀಯ ಪ್ರೌಢಶಿಕ್ಷಣ ಮಂಡಳಿಯು ಮಹತ್ವದ ಹಾಗೂ ಕಟ್ಟುನಿಟ್ಟಿನ ಸೂಚನೆಯೊಂದನ್ನು ನೀಡಿದೆ. 2026ನೇ ಸಾಲಿನಿಂದ ರಾಷ್ಟ್ರೀಯ ಶಿಕ್ಷಣ ನೀತಿ (NEP 2020) ಅಡಿಯಲ್ಲಿ ಜಾರಿಗೆ ತರಲಾಗಿರುವ ಎರಡು ಬೋರ್ಡ್ ಪರೀಕ್ಷೆಗಳ (Two-board exam system) ನಿಯಮಗಳ ಕುರಿತು ಮಂಡಳಿಯು ಸ್ಪಷ್ಟನೆ ನೀಡಿದೆ. ಈ ಹೊಸ ನಿಯಮದ ಪ್ರಕಾರ, 10ನೇ ತರಗತಿಯ ಎಲ್ಲಾ ವಿದ್ಯಾರ್ಥಿಗಳಿಗೆ
ಕೊಪ್ಪಳ | ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಸಿಬ್ಬಂದಿ ಆತ್ಮಹತ್ಯೆ
ತಾವರಗೇರಾ (ಕೊಪ್ಪಳ ಜಿಲ್ಲೆ): ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಜುಮಲಾಪೂರ ಗ್ರಾಮ ಪಂಚಾಯಿತಿ ಕಾರ್ಯಾಲಯದಲ್ಲಿ ಸಿಬ್ಬಂದಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವರದಿಯಾಗಿದೆ. ರಮೇಶ ಹಿರೇಕರಿಯಪ್ಪ (38) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಆಸ್ತಿ ವಿಚಾರವಾಗಿ ನಡೆದ ಜಗಳದ ಹಿನ್ನೆಲೆ ಮನೆಯಲ್ಲಿ ಕಿರುಕುಳ ನೀಡಿದ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಈ ಸಂಬಂಧ ಎಂಟು ಮಂದಿಯ ವಿರುದ್ಧ ಸೋಮವಾರ ರಾತ್ರಿ ತಾವರಗೇರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿದು ಬಂದಿದೆ.
80,000 ಕೋಟಿ ರೂ. ವೆಚ್ಚದ ವಿವಾದಾತ್ಮಕ ಗ್ರೇಟ್ ನಿಕೋಬಾರ್ ಯೋಜನೆಗೆ ಎನ್ಜಿಟಿ ಹಸಿರು ನಿಶಾನೆ
ಹೊಸದಿಲ್ಲಿ: ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್ಜಿಟಿ) ಸೋಮವಾರ ರೂ. 80,000 ಕೋಟಿ ವೆಚ್ಚದ ವಿವಾದಾತ್ಮಕ ಗ್ರೇಟ್ ನಿಕೋಬಾರ್ ಯೋಜನೆಗೆ ಅನುಮೋದನೆ ನೀಡಿದೆ. ಯೋಜನೆ ವಿರುದ್ಧ ಸಲ್ಲಿಸಲಾದ ಅರ್ಜಿಗಳನ್ನು ತಳ್ಳಿ ಹಾಕಿದೆ. ಎನ್ಜಿಟಿಯ ಆರು ಸದಸ್ಯರ ವಿಶೇಷ ಪೀಠವು ಈ ಮೂಲಸೌಕರ್ಯ ಯೋಜನೆಯಲ್ಲಿ ಹಸ್ತಕ್ಷೇಪ ಮಾಡಲು ಯಾವುದೇ ಪ್ರಮುಖ ಕಾರಣಗಳು ಕಂಡುಬಂದಿಲ್ಲವೆಂದು ಹೇಳಿದೆ. ಯೋಜನೆಗೆ ನೀಡಿದ ಪರಿಸರ ಅನುಮೋದನೆಯಲ್ಲಿ ಅಗತ್ಯ ಭದ್ರತಾ ಕ್ರಮಗಳು ಒಳಗೊಂಡಿರುವುದಾಗಿ ಪೀಠವು ಗಮನಿಸಿದೆ. ಪರಿಸರ ಸಂರಕ್ಷಣಾವಾದಿಗಳು ಈ ಯೋಜನೆಗೆ ವಿರೋಧ ವ್ಯಕ್ತಪಡಿಸಿ ಭಾರೀ ಪರಿಸರ ಹಾನಿ ಉಂಟಾಗಬಹುದು ಹಾಗೂ ದ್ವೀಪದ ಆದಿವಾಸಿ ಸಮುದಾಯಗಳ ಜೀವನಕ್ಕೆ ಬೆದರಿಕೆ ಉಂಟಾಗುತ್ತದೆ ಎಂದು ಕಳವಳ ವ್ಯಕ್ತಪಡಿಸಿದ್ದರು. ಗ್ರೇಟ್ ನಿಕೋಬಾರ್ ಯೋಜನೆಗೆ ಅನುಮೋದನೆ ನೀಡಿರುವ ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ ಕ್ರಮವು ತೀವ್ರ ನಿರಾಶೆಯನ್ನುಂಟು ಮಾಡಿದೆ ಎಂದು ಕಾಂಗ್ರೆಸ್ ಹೇಳಿದೆ. ಈ ಯೋಜನೆಗೆ ಅನುಮೋದನೆ ನೀಡಿದರೆ ದ್ವೀಪದ ಮೂಲ ನಿವಾಸಿ ಸಮುದಾಯಗಳ ಅಸ್ತಿತ್ವಕ್ಕೆ ಅಪಾಯ ಉಂಟುಮಾಡಬಹುದು ಎಂದು ಈ ಮೊದಲು ಸೋನಿಯಾ ಗಾಂಧಿ ಎಚ್ಚರಿಕೆಯನ್ನು ನೀಡಿದ್ದರು.
ಸಾಧನೆಗೆ ಶಾರ್ಟ್ಕಟ್ ಇರುವುದಿಲ್ಲ. ಕಠಿಣ ಪರಿಶ್ರಮ, ಶ್ರದ್ಧೆ ಮತ್ತು ಪ್ರಾಮಾಣಿಕತೆಯಿಂದ ಮಾತ್ರ ಸಾಧನೆ ಸಾಧ್ಯ. ಜೀವನದಲ್ಲಿ ತಾವು ಅಂದುಕೊಂಡಿದ್ದ ಗುರಿ ತಲುಪಲು ವ್ಯಕ್ತಿಯೋರ್ವ ಅನೇಕ ತ್ಯಾಗಗಳನ್ನು ಮಾಡಬೇಕಾಗುತ್ತದೆ. ವೈಯಕ್ತಿಕ ಆಸೆ-ಆಕಾಂಕ್ಷೆಗಳನ್ನು ಬಲಿಕೊಟ್ಟು ತಪಸ್ಸು ಮಾಡಿದಾಗ ಮಾತ್ರ ಸಾಧನೆಗೊಂದು ಬೆಲೆ. ಇಂತದ್ದೇ ಸಾಧನೆ ಮಾಡಿರುವ ದೆಹಲಿಯ 17 ವರ್ಷದ ಪೋರ ಶ್ರೇಯಸ್ ಮಿಶ್ರಾ, ಜೆಇಇ ಮೇನ್ 2026 ಸೆಷನ್-1 ಪರೀಕ್ಷೆಯಲ್ಲಿ ಇಡೀ ದೇಶಕ್ಕೆ ಮೊದಲ ರ್ಯಾಂಕ್ ಪಡೆದುಕೊಂಡಿದ್ದಾನೆ. ಶ್ರೇಯಸ್ ಮಿಶ್ರಾ ಪರೀಕ್ಷಾ ತಯಾರಿಯ ಬಗ್ಗೆ ಇಲ್ಲಿದೆ ಮಾಹಿತಿ.
ತೆಕ್ಕಟ್ಟೆ | ಶಾರ್ಟ್ ಸರ್ಕ್ಯೂಟ್ನಿಂದ ಆನ್ಲೈನ್ ಸರ್ವೀಸ್ ಸೆಂಟರ್ಗೆ ಬೆಂಕಿ; ಲಕ್ಷಾಂತರ ರೂ. ನಷ್ಟ
ಕುಂದಾಪುರ: ತೆಕ್ಕಟ್ಟೆ ರಾಷ್ಟ್ರೀಯ ಹೆದ್ದಾರಿ–66ರ ಕನ್ನುಕೆರೆ ಸಮೀಪದ ಶ್ರೀನವಶಕ್ತಿ ಕಲ್ಯಾಣ ಮಂಟಪದಲ್ಲಿ ಕಾರ್ಯನಿರ್ವಹಿಸುತ್ತಿದ್ದ ‘ಆಶ್ಲೇಷ ಆನ್ಲೈನ್ ಸರ್ವೀಸ್ ಸೆಂಟರ್’ನಲ್ಲಿ ಸೋಮವಾರ ರಾತ್ರಿ ಸಂಭವಿಸಿದ ವಿದ್ಯುತ್ ಶಾರ್ಟ್ ಸರ್ಕ್ಯೂಟ್ನಿಂದ ಅಂಗಡಿ ಸಂಪೂರ್ಣ ಬೆಂಕಿಗೆ ಆಹುತಿಯಾದ ಘಟನೆ ನಡೆದಿದೆ. ಅಂಗಡಿ ಮಾಲೀಕ ಫಣಿರಾಜ್ ಹತ್ವಾರ್ ಕೊರವಡಿ ಅವರು ನಿತ್ಯದಂತೆ ಅಂಗಡಿ ಮುಚ್ಚಿ ಮನೆಗೆ ತೆರಳಿದ ಬಳಿಕ ಘಟನೆ ಸಂಭವಿಸಿರುವುದಾಗಿ ತಿಳಿದುಬಂದಿದೆ. ಅಗ್ನಿ ಅವಘಡದಲ್ಲಿ ಕಂಪ್ಯೂಟರ್ಗಳು, ಪ್ರಿಂಟರ್ಗಳು, ಸ್ಟೇಷನರಿ ಸಾಮಗ್ರಿಗಳು, ಇನ್ವರ್ಟರ್ ಬ್ಯಾಟರಿ, ಕುರ್ಚಿ, ಟೇಬಲ್ ಸೇರಿದಂತೆ ವಿವಿಧ ಉಪಕರಣಗಳು ಸುಟ್ಟು ಭಸ್ಮವಾಗಿವೆ. ಘಟನೆಯಿಂದ ಲಕ್ಷಾಂತರ ರೂ.ಗಳ ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ. ಬೆಂಕಿ ಕಾಣಿಸಿಕೊಂಡ ತಕ್ಷಣ ಸ್ಥಳೀಯ ಯುವಕರು ಆಗಮಿಸಿ ಬೆಂಕಿ ನಂದಿಸಲು ಪ್ರಯತ್ನಿಸಿದರು. ನಂತರ ಕುಂದಾಪುರ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ಬೆಂಕಿಯನ್ನು ನಿಯಂತ್ರಣಕ್ಕೆ ತಂದರು. ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ನಂದಿನಿ ಉತ್ಪನ್ನಗಳ ವಿರುದ್ದ ಆಧಾರರಹಿತ ಆರೋಪ; ಕಾನೂನು ಕ್ರಮದ ಎಚ್ಚರಿಕೆ ನೀಡಿದ ಕೆಎಂಎಫ್
ಬೆಂಗಳೂರು: ನಂದಿನಿ ಬ್ರಾಂಡ್ನ ಕೆಲವು ಉತ್ಪನ್ನಗಳ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಆಧಾರರಹಿತ ಆರೋಪಗಳು ಹರಿದಾಡುತ್ತಿರುವ ಹಿನ್ನೆಲೆಯಲ್ಲಿ, ಕರ್ನಾಟಕ ಹಾಲು ಮಹಾಮಂಡಳಿ (KMF) ಸ್ಪಷ್ಟನೆ ನೀಡಿದೆ. ನಂದಿನಿ ಉತ್ಪನ್ನಗಳನ್ನು ಸೇವನೆಗೆ ಅಸುರಕ್ಷಿತವೆಂದು ತಪ್ಪಾಗಿ ಪ್ರಚಾರ ಮಾಡಲಾಗುತ್ತಿದ್ದು, ಇದರಿಂದ ಕೋಟ್ಯಾಂತರ ಗ್ರಾಹಕರಲ್ಲಿ ಅನಗತ್ಯ ಗೊಂದಲ ಉಂಟಾಗಿದೆ ಎಂದು KMF ಪ್ರಕಟಣೆಯಲ್ಲಿ ತಿಳಿಸಿದೆ. ಭಾರತೀಯ ಆಹಾರ ಸುರಕ್ಷತಾ ಮತ್ತು ಮಾನದಂಡ ಪ್ರಾಧಿಕಾರ (FSSAI) ಸೇರಿದಂತೆ ಕಾನೂನುಬದ್ಧ ಸಂಸ್ಥೆಗಳು ನಿಗದಿಪಡಿಸಿರುವ ಎಲ್ಲಾ ಸುರಕ್ಷತಾ ಮಾನದಂಡಗಳು ಹಾಗೂ ಅನುಮೋದಿತ ವಿಧಾನಗಳನ್ನು ಕಟ್ಟುನಿಟ್ಟಾಗಿ ಅನುಸರಿಸಲಾಗುತ್ತಿದೆ. ನಂದಿನಿ ಹಾಲು ಹಾಗೂ ಉತ್ಪನ್ನಗಳೆಲ್ಲವೂ ಸೇವನೆಗೆ ಸಂಪೂರ್ಣ ಸುರಕ್ಷಿತವಾಗಿವೆ. ಗ್ರಾಹಕರು ಯಾವುದೇ ರೀತಿಯ ಆತಂಕಪಡಬೇಕಾಗಿಲ್ಲ ಎಂದು KMF ಭರವಸೆ ನೀಡಿದೆ. ಆಧಾರರಹಿತ ಹಾಗೂ ಮಾನಹಾನಿಕರ ಹೇಳಿಕೆಗಳನ್ನು KMF ತೀವ್ರವಾಗಿ ಖಂಡಿಸಿದ್ದು, ಇಂತಹ ದುರುದ್ದೇಶಪೂರಿತ ಕೃತ್ಯಗಳಲ್ಲಿ ತೊಡಗಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಕಟಣೆ ಎಚ್ಚರಿಸಿದೆ.
ಚೀನಾ ಹಾಗೂ ಅಮೆರಿಕಾ ನಡುವಿನ ದ್ವಿಪಕ್ಷೀಯ ಸಂಬಂಧಕ್ಕೆ ಪ್ರಮುಖ ಅಡ್ಡಿ ತೈವಾನ್ ಕುರಿತು ಯುಎಸ್ ಹೊಂದಿರುವ ನಿಲುವು. ತೈವಾನ್ ಗೆ ಅಮೆರಿಕಾ ಭಾರಿ ಪ್ರಮಾಣದ ಶಸ್ತ್ರಾಸ್ತ್ರ ಮಾರಾಟ ಮಾಡಲು ಮುಂದಾಗಿದೆ ಆದ್ರೆ, ಸದ್ಯ ಈ ನಿಲುವು ಟ್ರಂಪ್ ಏಪ್ರಿಲ್ ನಲ್ಲಿ ನಡೆಸಲಿರುವ ಚೀನಾ ಭೇಟಿಗೆ ಅಡ್ಡಗಾಲು ಹಾಕುವಂತಿದ್ದು, ಕಳೆದ ವಾರ ಚೀನಾ ಅಧ್ಯಕ್ಷ ಕ್ಸಿ ಹಾಗೂ ಟ್ರಂಪ್ ನಡುವೆ ನಡೆದ ಫೋನ್ ಕಾಲ್ ಸಂಭಾಷಣೆಯಲ್ಲಿ ಈ ಒಪ್ಪಂದಕ್ಕೆ ಸಹಿ ಹಾಕದಂತೆ ಚೀನಾ ಒತ್ತಾಯಿಸಿದೆ ಎಂದು ತಿಳಿದುಬಂದಿದೆ. ಈ ಬೆನ್ನಲ್ಲೆ, ಟ್ರಂಪ್ ಈಗ ತೈವಾನ್ ರಕ್ಷಣಾ ಒಪ್ಪಂದಕ್ಕೆ ಸಹಿ ಹಾಕುವ ಕುರಿತು ಮರು ಆಲೋಚಿಸುವುದಾಗಿ ಹೇಳಿದ್ದು, ಚೀನಾ ಭೇಟಿಗಾಗಿ ತೈವಾನ್ ನಿಲುವಿನಿಂದ ಟ್ರಂಪ್ ಯೂಟರ್ನ್ ಹೊಡೆದಿದ್ದಾರಾ ಎಂಬ ಸಂಶಯ ಮೂಡುತ್ತಿದೆ.
ಸತತ ಕುಸಿತ ಕಾಣುತ್ತಿರುವ ಚಿನ್ನ- ಬೆಳ್ಳಿ; ಇಂದಿನ ದರವೆಷ್ಟು?
ಜನವರಿಯಲ್ಲಿ ಗರಿಷ್ಠ ಏರಿಕೆಯ ನಂತರ ಫೆಬ್ರವರಿಯಲ್ಲಿ ಚಿನ್ನದ ಬೆಲೆ ಕುಸಿತದ ಕಡೆಗೆ ಸಾಗುತ್ತಿದೆ. ಫೆಬ್ರವರಿ ಮೊದಲೆರಡು ವಾರದಲ್ಲಿ ಚಿನ್ನ ವಿಪರೀತ ಏರಿಳಿತ ಕಾಣದೆ ಪ್ರತಿ ಗ್ರಾಂಗೆ 15 ಸಾವಿರದಿಂದ 16 ಸಾವಿರದ ನಡುವೆ ಸ್ಥಿರವಾಗಿ ನಿಂತಿದೆ. ಕಳೆದ ಶನಿವಾರ ಅಲ್ಪ ಏರಿಕೆ ಕಂಡಿದ್ದ ಚಿನ್ನದ ಬೆಲೆ ಸೋಮವಾರ ಫೆಬ್ರವರಿ 16ರಂದು ಅಲ್ಪ ಕುಸಿತ ಕಂಡಿದೆ. ಮಂಗಳವಾರ ಇನ್ನಷ್ಟು ಕುಸಿತ ಕಂಡಿದೆ. ಅಮೆರಿಕದ ಹಣದುಬ್ಬರದ ದರ ನಿರೀಕ್ಷೆಗಿಂತ ಕಡಿಮೆಯಾಗಿರುವುದು ಮತ್ತು ಡಾಲರ್ ಬೆಲೆ ಸಬಲವಾಗಿರುವುದು ಚಿನ್ನದ ಬೆಲೆಯ ಮೇಲೆ ಪರಿಣಾಮ ಬೀರುತ್ತಿದೆ. ಫೆಬ್ರವರಿ 17ರಂದು ಮಂಗಳವಾರ ಮಾರುಕಟ್ಟೆಗಳಲ್ಲಿ 24 ಕ್ಯಾರೆಟ್ ಶುದ್ಧ ಚಿನ್ನದ ಬೆಲೆ ಗ್ರಾಂಗೆ 153 ರೂ. ಕುಸಿದು ಹತ್ತು ಗ್ರಾಂ ಬೆಲೆ 1,54910 ಕ್ಕೆ ಬಂದು ನಿಂತಿದೆ. ಆಭರಣ ಚಿನ್ನವಾದ 22 ಕ್ಯಾರೆಟ್ ಬೆಲೆಯು ಗ್ರಾಂಗೆ 140 ರೂ. ಕುಸಿದು ಹತ್ತು ಗ್ರಾಂಗೆ 1,42,000 ರೂ.ಗೆ ತಲುಪಿದೆ. 18 ಕ್ಯಾರೆಟ್ ಚಿನ್ನವು ಪ್ರತಿ ಗ್ರಾಂಗೆ 115 ರೂ. ಕುಸಿದು ಹತ್ತು ಗ್ರಾಂಗೆ 1,16,180ರೂ. ಗೆ ಕುಸಿದಿದೆ. ಮಂಗಳೂರಿನಲ್ಲಿ ಇಂದಿನ ಚಿನ್ನದ ದರವೆಷ್ಟು? ಫೆಬ್ರವರಿ 17ರಂದು ಮಂಗಳವಾರ ಬೆಳಗಿನ 11 ಗಂಟೆಯ ವಹಿವಾಟಿನಲ್ಲಿ ಮಂಗಳೂರಿನಲ್ಲಿ ಚಿನ್ನದ ಬೆಲೆ ಮತ್ತೆ ಕುಸಿತ ಕಂಡಿದೆ. ಬೆಳಗಿನ ವಹಿವಾಟಿನಲ್ಲಿ ಒಂದು ಗ್ರಾಂ 24 ಕ್ಯಾರೆಟ್ ಚಿನ್ನದ ದರ 15,491 (-153) ರೂ. ನಷ್ಟಿದೆ. ಒಂದು ಗ್ರಾಂ 22 ಕ್ಯಾರೆಟ್ ಚಿನ್ನದ ದರ 14,200 (-140) ರೂ. ಮತ್ತು ಒಂದು ಗ್ರಾಂ 18 ಕ್ಯಾರೆಟ್ ಚಿನ್ನದ ದರ 11,618 (-115) ರೂ. ಬೆಲೆಗೆ ತಲುಪಿದೆ. ಸತತ ಕುಸಿಯುತ್ತಿರುವ ಬೆಳ್ಳಿ ಫೆಬ್ರವರಿ ಆರಂಭದಲ್ಲಿ ಸತತ ಕುಸಿತ ಕಂಡಿದ್ದ ಬೆಳ್ಳಿ ಕಳೆದ ವಾರದ ಆರಂಭದಲ್ಲಿ ಅಲ್ಪ ಏರಿಕೆ ಕಂಡಿತ್ತು. ಆದರೆ ಫೆಬ್ರವರಿ 10ರಿಂದ ಸತತ ಕುಸಿತ ಕಾಣುತ್ತಾ ಬಂದಿದೆ. ಕಳೆದ ಶುಕ್ರವಾರ ಮತ್ತು ಶನಿವಾರ ಸತತ ಕುಸಿತ ಕಂಡಿದ್ದ ಚಿನ್ನ ಪ್ರತಿ ಕೆಜಿಗೆ 2,75,000 ರೂ.ಗೆ ಬಂದು ನಿಂತಿತ್ತು. ಫೆಬ್ರವರಿ 16ರಂದು ಸೋಮವಾರವೂ ಪ್ರತಿ ಗ್ರಾಂಗೆ 7 ರೂ. ಕುಸಿತ ಕಂಡು ಕೆಜಿಗೆ 2,68,000 ರೂ. ಗೆ ಬಂದು ನಿಂತಿತ್ತು. ಇದೀಗ ಮಂಗಳವಾರ ಮಾರುಕಟ್ಟೆ ತೆರೆದ ತಕ್ಷಣ ಪ್ರತಿ ಗ್ರಾಂಗೆ 8 ರೂ. ಕುಸಿತ ಕಂಡಿರುವ ಬೆಳ್ಳಿ ಕೆಜಿಗೆ 2,60,000 ರೂ. ಗೆ ಬಂದು ನಿಂತಿದೆ. ವಿವಿಧ ನಗರಗಳಲ್ಲಿ 1 ಗ್ರಾಮ್ ಚಿನ್ನದ ದರ (ಬೆಳಗಿನ ವಹಿವಾಟು) ಹೇಗಿದೆ? ದಿಲ್ಲಿ: 24 ಕ್ಯಾರೆಟ್ ಚಿನ್ನದ ದರ 15,506 (-153) ರೂ., 22 ಕ್ಯಾರೆಟ್ ಚಿನ್ನದ ದರ 14,215 (-140) ರೂ. ಮುಂಬೈ: 24 ಕ್ಯಾರೆಟ್ ಚಿನ್ನದ ದರ 15,491(-153) ರೂ., 22 ಕ್ಯಾರೆಟ್ ಚಿನ್ನದ ದರ 14,200 (-140) ರೂ. ಅಹಮದಾಬಾದ್: 24 ಕ್ಯಾರೆಟ್ ಚಿನ್ನದ ದರ 15,496 (-153) ರೂ., 22 ಕ್ಯಾರೆಟ್ ಚಿನ್ನದ ದರ 14,205 (-140) ರೂ. ಚೆನ್ನೈ: 24 ಕ್ಯಾರೆಟ್ ಚಿನ್ನದ ದರ 15,622 (-131) ರೂ., 22 ಕ್ಯಾರೆಟ್ ಚಿನ್ನದ ದರ 14,320 (-120) ರೂ. ಕೋಲ್ಕತ್ತಾ: 24 ಕ್ಯಾರೆಟ್ ಚಿನ್ನದ ದರ 15,491 (-153) ರೂ., 22 ಕ್ಯಾರೆಟ್ ಚಿನ್ನದ ದರ 14,200 (-140) ರೂ. ಹೈದರಾಬಾದ್: 24 ಕ್ಯಾರೆಟ್ ಚಿನ್ನದ ದರ 15,491(-153) ರೂ., 22 ಕ್ಯಾರೆಟ್ ಚಿನ್ನದ ದರ 14,200 (-140) ರೂ. ಜೈಪುರ: 24 ಕ್ಯಾರೆಟ್ ಚಿನ್ನದ ದರ 15,506 (-153) ರೂ., 22 ಕ್ಯಾರೆಟ್ ಚಿನ್ನದ ದರ 14,215 (-140) ರೂ. ಚಂಡೀಗಢ: 24 ಕ್ಯಾರೆಟ್ ಚಿನ್ನದ ದರ 15,658 (-1) ರೂ., 22 ಕ್ಯಾರೆಟ್ ಚಿನ್ನದ ದರ 14,354 (-1) ರೂ. ಲಕ್ನೋ: 24 ಕ್ಯಾರೆಟ್ ಚಿನ್ನದ ದರ 15,506 (-153) ರೂ., 22 ಕ್ಯಾರೆಟ್ ಚಿನ್ನದ ದರ 14,215 (-140) ರೂ.
ನಾಯಕತ್ವ ಬದಲಾವಣೆ ಬಗ್ಗೆ ಎಚ್ ಸಿ ಮಹದೇವಪ್ಪ ಮಾರ್ಮಿಕ ಮಾತು: ನಾಯಿ ಯಾರು, ಬಾಲ ಯಾರು ಪ್ರಶ್ನಿಸಿ ಕಾಲೆಳೆದ ಬಿಜೆಪಿ
ನಾಯಕತ್ವ ಬದಲಾವಣೆ ವಿಚಾರವಾಗಿ ಸಚಿವ ಎಚ್ ಸಿ ಮಹದೇವಪ್ಪ ಆಡಿರುವ ಮಾರ್ಮಿಕ ಮಾತು ಇದೀಗ ಸಾಕಷ್ಟು ಚರ್ಚೆಗೆ ಗ್ರಾಸವಾಗುತ್ತಿದೆ. ಬೆಂಗಳೂರಿನಲ್ಲಿ ಸೋಮವಾರ ಮಾತನಾಡಿದ್ದ ಅವರು, ಬೀದಿ ನಾಯಿಗಳ ಕುರಿತಾಗಿ ಹೈಕೋರ್ಟ್ ಆದೇಶವನ್ನು ಉಲ್ಲೇಖಿಸಿ ಕುತೂಹಲಕಾರಿ ಹೇಳಿಕೆಯನ್ನು ನೀಡಿದ್ದರು. ಇದನ್ನೇ ಪ್ರಸ್ತಾಪ ಮಾಡಿರುವ ವಿಪಕ್ಷ ನಾಯಕ ಆರ್ ಅಶೋಕ್ ಹಾಗಾದರೆ ನಾಯಿ ಯಾರು, ಬಾಲ ಯಾರು ಪ್ರಶ್ನಿಸಿ ಕಾಲೆಳೆದಿದ್ದಾರೆ. ಅಷ್ಟಕ್ಕೂ ಎಚ್ ಸಿ ಮಹದೇವಪ್ಪ ಹೇಳಿಕೆ ಹಿಂದಿನ ಮರ್ಮ ಏನು ಎಂಬುವುದು ಸಹಜವಾಗಿ ಕುತೂಹಲ ಕೆರಳಿಸಿದೆ.
ಹೊಸದಿಲ್ಲಿ: ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ(FEMA) ಉಲ್ಲಂಘನೆ ಆರೋಪದಲ್ಲಿ ನ್ಯೂಸ್ಕ್ಲಿಕ್ ನ್ಯೂಸ್ ಪೋರ್ಟಲ್ ಮತ್ತು ಅದರ ಸಂಸ್ಥಾಪಕ ಪ್ರಬೀರ್ ಪುರಕಾಯಸ್ಥ ಅವರಿಗೆ ಜಾರಿ ನಿರ್ದೇಶನಾಲಯ 184 ಕೋಟಿ ರೂ. ದಂಡ ವಿಧಿಸಿದೆ. 184 ಕೋಟಿಯಲ್ಲಿ 120 ಕೋಟಿ ದಂಡವು ನ್ಯೂಸ್ಕ್ಲಿಕ್ ಮೇಲೆ ವಿಧಿಸಿದರೆ, ಪ್ರಬೀರ್ ಪುರಕಾಯಸ್ಥ ಅವರ ಮೇಲೆ 64 ಕೋಟಿ ರೂ. ದಂಡ ವಿಧಿಸಲಾಗಿದೆ ಎಂದು ಈಡಿ ಮೂಲಗಳು ತಿಳಿಸಿದೆ. ರಾಷ್ಟ್ರ ವಿರೋಧಿ ಚಟುವಟಿಕೆ, ಅಕ್ರಮ ಹಣ ವರ್ಗಾವಣೆ, ವಿದೇಶಿ ಕೊಡುಗೆ ನಿಯಂತ್ರಣ ಕಾಯ್ದೆ ಉಲ್ಲಂಘನೆ ಸೇರಿಂದಂತೆ ವಿವಿಧ ಆರೋಪಗಳಡಿ ನ್ಯೂಸ್ಕ್ಲಿಕ್ ಮತ್ತು ಅದರ ಸಂಸ್ಥಾಪಕ ಪ್ರಬೀರ್ ಪುರಕಾಯಸ್ಥ ವಿರುದ್ಧ ಜಾರಿ ನಿರ್ದೇಶನಾಲಯ, ಸಿಬಿಐ, ದಿಲ್ಲಿ ಪೊಲೀಸ್ ಮತ್ತು ಆದಾಯ ತೆರಿಗೆ ಇಲಾಖೆ ತನಿಖೆ ನಡೆಸುತ್ತಿದೆ. ದಿಲ್ಲಿ ಪೊಲೀಸರು 2023ರ ಅಕ್ಟೋಬರ್ನಲ್ಲಿ ಪ್ರಬೀರ್ ಪುರ್ಕಾಯಸ್ಥ ಅವರನ್ನು ಬಂಧಿಸಿದ್ದರು. ಅವರು ಪ್ರಸ್ತುತ ಜಾಮೀನಿನ ಮೇಲೆ ಹೊರಗಿದ್ದಾರೆ. ನ್ಯೂಯಾರ್ಕ್ ಟೈಮ್ಸ್ ಪತ್ರಿಕೆಯ ವರದಿಯನ್ನು ಉಲ್ಲೇಖಿಸಿ ನ್ಯೂಸ್ಕ್ಲಿಕ್ ಪೋರ್ಟಲ್ ಮತ್ತು ಅದರ ಮಾಲಕರು ಅಕ್ರಮ ಎಸಗಿದ್ದಾರೆ ಎಂದು ಬಿಜೆಪಿಯು ಆರೋಪಿಸಿತ್ತು. ‘ನ್ಯೂಯಾರ್ಕ್ ಟೈಮ್ಸ್’ ವರದಿಯ ಪ್ರಕಾರ, ಈ ಪೋರ್ಟಲ್ ಅಮೆರಿಕದ ಉದ್ಯಮಿ ನೆವಿಲ್ಲೆ ರಾಯ್ ಸಿಂಘಮ್ ಅವರಿಂದ ಹಣಕಾಸಿನ ನೆರವು ಪಡೆದಿದೆ. ಸಿಂಘಮ್ ಚೀನಾ ಸರಕಾರದ ಮಾಧ್ಯಮ ಪ್ರಚಾರದ ವಿಭಾಗದೊಂದಿಗೆ ನಿಕಟವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಲಾಗಿತ್ತು.
Explained: ಆಗುಂಬೆ ಹೃದಯಕ್ಕೆ ಸರ್ಜರಿ: ಸುರಂಗ ಯೋಜನೆ ಅಭಿವೃದ್ಧಿಯೋ, ಪಶ್ಚಿಮಘಟ್ಟಕ್ಕೆ ಮಾರಕವೋ?
ವಿಶ್ವ ಪಾರಂಪರಿಕ ಪಟ್ಟಿಯಲ್ಲಿರುವ ಪಶ್ಚಿಮಘಟ್ಟದ ಆಗುಂಬೆಯ ಹೃದಯದಲ್ಲಿ ನೋವು ಕಾಣಿಸಿಕೊಂಡಿದೆ. ರಂಧ್ರ ಕೊರೆಯಬೇಕೋ, ಓಪನ್ ಹಾರ್ಟ್ ಸರ್ಜರಿ ಮಾಡಬೇಕೋ ಎಂದು ಪರಿಶೀಲಿಸಲು ಕೇಂದ್ರ ಸರಕಾರ 2.33 ಕೋಟಿ ರೂ. ಮೀಸಲಿಟ್ಟಿದೆ. ‘ಪಶ್ಚಿಮಘಟ್ಟದ ಹೃದಯವೇ ಆಗಿರುವ ಆಗುಂಬೆಯನ್ನು ಮುಟ್ಟಬೇಡಿ. ಒಂದೊಮ್ಮೆ ನೀವು ಈ ಹೃದಯಕ್ಕೆ ಗಾಯ ಮಾಡಿದರೆ ಪಶ್ಚಿಮಘಟ್ಟ ಮಾತ್ರವಲ್ಲ; ಇಡೀ ಜೀವ ಜಗತ್ತೇ ಪಶ್ಚಾತ್ತಾಪ ಪಡಬೇಕಾಗುತ್ತದೆ’ ಎಂದು ಪರಿಸರ ತಜ್ಞರು ಎಚ್ಚರಿಸುತ್ತಿದ್ದಾರೆ.
ಜಯಂತಿಗಳ ಆಚರಣೆ: ಜಾತಿ ಪ್ರಾಬಲ್ಯದ ಮೆರವಣಿಗೆಯ ಪರಾಕಾಷ್ಠೆ
ಸರಕಾರ ಶಿವಶರಣರ, ಸಮಾಜ ಸುಧಾರಕರ ಹಲವು ಜಯಂತಿಗಳನ್ನು ಆಚರಿಸುತ್ತಿದೆ. ಜನಪ್ರತಿನಿಧಿಗಳು ಪ್ರಬಲವಾದ ಸಮುದಾಯದ ಅಥವಾ ಜನಸಂಖ್ಯೆ ಹೆಚ್ಚಿರುವ ಸಮಾಜ ಸುಧಾರಕರ ಜಯಂತಿಗಳಿಗೆ ಹಾಜರಿರುತ್ತಾರೆ. ಆದರೆ ಜನಸಂಖ್ಯೆ ಕಡಿಮೆ ಇರುವ ತಳ ಸಮುದಾಯದ ಜಯಂತಿಗಳಿಗೆ ಜನ ಪ್ರತಿನಿಧಿಗಳು ಭಾಗವಹಿಸುವುದಿಲ್ಲ ಏಕೆ ಎಂಬ ಪ್ರಶ್ನೆ ಎದುರಾಗಿದೆ. ಜಯಂತಿಗಳ ಹೆಸರಲ್ಲಿ ರಾಜಕಾರಣ ಮಾಡುವುದು ಯಾವ ನ್ಯಾಯ? ತಳ ಸಮುದಾಯದ ಜನರ ಕಷ್ಟ ಸಂಕಟಗಳನ್ನು ಆಲಿಸುವುದಕ್ಕಾಗಿಯೇ ಜಯಂತಿಯನ್ನು ಸರಕಾರ ಆಚರಣೆ ಮಾಡುತ್ತಿದೆ. ಅದರ ಅರಿವು ಜನಪ್ರತಿನಿಧಿಗಳಿಗಿಲ್ಲ, ಅಧಿಕಾರಿಗಳಿಗೂ ಇಲ್ಲ. ಹೆಚ್ಚು ಜನಸಂಖ್ಯೆ ಇರುವ ಜನರು ಆರ್ಥಿಕ ಬಲದಿಂದ ಅದ್ದೂರಿಯಾಗಿ ಭಿತ್ತಿ ಚಿತ್ರಗಳಲ್ಲಿ ಜನಪ್ರತಿನಿಧಿಗಳನ್ನು ವೈಭವೀಕರಣಗೊಳಿಸಿ ಮೋಡಿ ಮಾಡುತ್ತಾರೆ. ಆರ್ಥಿಕ ಹಿನ್ನಡೆ ಅನುಭವಿಸುತ್ತಿರುವ ಸಮುದಾಯ ಯಾವುದೇ ಆಡಂಬರವನ್ನು ಮಾಡುವುದಿಲ್ಲ. ಹಾಗಾಗಿ ಜನಪ್ರತಿನಿಧಿಗಳು ಭಾಗವಹಿಸುವುದಿಲ್ಲ ಎಂಬ ಅನುಮಾನ ಬೆಳದಿದೆ. ಬಹಳಷ್ಟು ಜಯಂತಿಗಳು, ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಕೆಲವೇ ಜನರೊಂದಿಗೆ ಆಚರಣೆಗೊಳ್ಳುತ್ತವೆ. ಸರಕಾರದ ಕಟ್ಟಪ್ಪಣೆಯ ಪ್ರಕಾರ ಆಚರಿಸಲಾಗುತ್ತದೆ ವಿನಹ ಸಮುದಾಯದ ಕಷ್ಟ ಸಂಕಟಗಳನ್ನು ಆಲಿಸುವವರಿಲ್ಲ. ಭರವಸೆಯ ಬೆಳಕು ಕಡಿಮೆ ಜನಸಂಖ್ಯೆ ಇರುವ ಸಮುದಾಯದ ಶರಣರ ಜಯಂತಿಗಳಿಗೆ ಇಲ್ಲದಂತಾಗಿದೆ. ಜಾತಿ ಬಲವನ್ನು ತೋರಿಸುವುದಕ್ಕಾಗಿಯೇ ಜಯಂತಿಗಳು ಆಚರಣೆಯಾಗುತ್ತಿರುವುದು ದುರದೃಷ್ಟಕರ. ಪ್ರಬಲ ಜಾತಿಗಳ ಫ್ಲೆಕ್ಸ್ಗಳ ಹಾವಳಿ, ಬೈಕ್, ಟ್ರ್ಯಾಕ್ಟರ್, ಜಾತಿ ಧ್ವಜ ಸಂಕೇತಗಳ ರ್ಯಾಲಿಯ ಆರ್ಭಟಕ್ಕೆ ಸಣ್ಣ ಸಮುದಾಯಗಳು ಮಾನಸಿಕ ಹಿಂಸೆ ಅನುಭವಿಸುತ್ತಿವೆ.ಇದರಿಂದ ಶ್ರೇಷ್ಠ-ಕನಿಷ್ಠವೆಂಬ ಬೀಜ ಮೊಳಕೆ ಒಡೆಯುತ್ತಲೇ ಇರುವುದು ಅಪಾಯಕಾರಿ ಬೆಳವಣಿಗೆ. 20 ವರ್ಷಗಳ ಹಿಂದೆ ಯಾವ ಹಳ್ಳಿಗಳಲ್ಲೂ ಶಿವಶರಣರ ಕಟ್ಟೆಗಳಿರಲಿಲ್ಲ. ಇಂದು ಅವು ಜಾತಿ ಕಟ್ಟೆಗಳಾಗಿ ಮಾರ್ಪಟ್ಟಿವೆ. ಶರಣರ ಸಮಾಜ ಸುಧಾರಕರ ಹೆಸರುಗಳು ಇಂದು ಜಾತಿ ಸೂಚಕಗಳಾಗಿವೆ. ಆಯಾ ಜಾತಿಯ ಜನರು ತಮ್ಮ ವಾಹನಗಳ ಮೇಲೆ ಜಾತಿ ಸಂಕೇತಗಳನ್ನು ಪ್ರತಿನಿಧಿಸುತ್ತಿರುವುದು ವಿಷಾದನೀಯ. ಶಾಲಾ ಶಿಕ್ಷಣದಲ್ಲಿ ಕಲಿತ ಮೌಲ್ಯಗಳು ಕಾಲೇಜು, ವಿಶ್ವವಿದ್ಯಾನಿಲಯ ಹಂತಕ್ಕೆ ಬರುವಾಗಲೇ ಅಪಮೌಲ್ಯಗಳಾಗಿ ಬಿಟ್ಟಿರುತ್ತವೆ. ಏಕೆ ಹೀಗಾಗುತ್ತದೆ ಎಂದು ಗ್ರಹಿಸಿದಾಗ ಜಾತಿ ರಾಜಕಾರಣದ ಮೋಹಕ್ಕೆ ಯುವಕರು ಒಳಗಾಗುತ್ತಿದ್ದಾರೆ. ಪದವಿ ಪೂರ್ವ, ಪದವಿ, ವಿಶ್ವವಿದ್ಯಾನಿಲಯ ಮಟ್ಟದಲ್ಲಿ ನೈತಿಕ ಮೌಲ್ಯ ಕುಸಿಯುತ್ತಿದೆ. ನೈತಿಕತೆಯಿಂದ ಇರಬೇಕಾದ ಶೈಕ್ಷಣಿಕ ವ್ಯವಸ್ಥೆಗೆ ಕಾಯಕಲ್ಪದ ಅವಶ್ಯಕತೆ ಇದೆ. ಇನ್ನು ವಿದ್ಯಾವಂತರಾಗಿ ನೌಕರಿ ಹಿಡಿದ ಮೇಲೆ ಆಯಾ ಸಮಾಜದ ನೌಕರರು ಜಾತಿ ಸಂಘಟನೆಗಳನ್ನು ಮಾಡಿಕೊಳ್ಳುತ್ತಾರೆ. ಆಯಾ ಜಾತಿಯ ಸ್ನೇಹಿತರೇ ಗುಂಪು ಕಟ್ಟಿಕೊಂಡು ವ್ಯವಹಾರ ನಡೆಸುವುದನ್ನು ಕಾಣುತ್ತಿದ್ದೇವೆ. ಇತ್ತೀಚೆಗೆ ಶಾಸಕರ ಗುಂಪೊಂದು ಜಾತಿಯ ಹೆಸರಿನಲ್ಲಿ ವ್ಯಾಪಾರದ ಸಭೆ ನಡೆಸಿದ್ದು ಕಣ್ಮುಂದೆ ಇದೆ. ಸಂವಿಧಾನದ ಆಶಯಗಳ ಅಡಿಯಲ್ಲಿ ಶಾಸಕರು ವರ್ತಿಸಬೇಕೇ ವಿನಹ ಜಾತಿ ಕಟ್ಟಿಕೊಂಡು ವ್ಯಾಪಾರ, ರಾಜಕಾರಣ ಮಾಡಬಾರದು. ಜನಪ್ರತಿನಿಧಿಯಾಗುವವನು ಆಯಾ ಜಾತಿಯ ಜನರು ಮತದಾನ ಮಾಡಿದ ತಕ್ಷಣ ಗೆದ್ದು ಬರುವುದಿಲ್ಲ. ಒಂದು ವೇಳೆ ಗೆದ್ದು ಬಂದರೂ ನ್ಯಾಯ ಒದಗಿಸುವುದಂತೂ ದೂರದ ಮಾತು. ನಿಮ್ಮ ಊರಿನಿಂದ ನನ್ನ ಪಕ್ಷಕ್ಕೆ, ನನಗೆ ಮತದಾನವೇ ಆಗಿಲ್ಲ.ಹಾಗಾಗಿ ನಿಮ್ಮೂರಿಗೆ ಏಕೆ ಅನುದಾನ ಕೊಡಬೇಕೆಂಬ ಆಲೋಚನೆಯ ಶಾಸಕರಿದ್ದಾರೆ. ಮತ ಕೇಂದ್ರಗಳ ಮತದಾನ ಎಣಿಕೆ ವ್ಯವಸ್ಥೆ ಗುಪ್ತವಾಗಿ ಉಳಿಯುವುದೇ ಇಲ್ಲ. ಒಂದು ಮತ ಕೇಂದ್ರದಲ್ಲಿ ಎಲ್ಲಾ ಜನರು ಮತದಾನ ಮಾಡಿರುವಾಗ ಪಕ್ಷಭೇದ ಮರೆತು ಆ ಊರಿಗೆ ನ್ಯಾಯ ಒದಗಿಸುವುದು ಜನಪ್ರತಿನಿಧಿಯ ಕರ್ತವ್ಯ. ‘ಊರು ಕೋಳಿ ಜೊತೆ ನೀರು ಕೋಳಿ ಸತ್ತಂತಾಗಿದೆ’ ಎಂಬ ಅಳಲು ಜನರಲ್ಲಿ ಮನೆ ಮಾಡಿದೆ. ಈ ಎಲ್ಲಾ ಸಮಸ್ಯೆಗಳಿಂದ ಹೊರ ಬರಬೇಕಾದರೆ ಪ್ರಜ್ಞಾವಂತ ಸಮಾಜ ಮಾತಾಡಬೇಕು. ಮೊಬೈಲ್ ರೀಲ್ಸ್ ಗಳ ನಡುವೆ ಯುವ ಜನತೆ ಕಳೆದು ಹೋಗಿದ್ದಾರೆ. ಅನಗತ್ಯ ವಿಚಾರಗಳ ಭರಾಟೆಯ ನಡುವೆ ಯುವ ಮನಸ್ಸುಗಳು ಮೌನವಾಗಿವೆ. ಏಕೆ ಹೀಗಾಗುತ್ತಿದೆ ಎಂಬ ಅರಿವು ಕೂಡ ಹತ್ತಿರ ಸುಳಿಯುತ್ತಿಲ್ಲ. ‘ಏನೇ ಬರಲಿ ಒಗ್ಗಟ್ಟಿರಲಿ’, ‘ನಾವೆಲ್ಲ ಒಂದೇ ನಮ್ಮ ದೇಶ ಒಂದೇ’ ಶಾಲಾ ಮಕ್ಕಳು ಸ್ವಾತಂತ್ರ್ಯ ದಿನಾಚರಣೆಯಂದು ಕೂಗುವ ಘೋಷಣೆಗಳು ಕರಗಿ ಹೋಗಿವೆ. ಕುವೆಂಪು ಅವರು ಹೇಳಿದಂತೆ ಮನುಜ ಮತ ವಿಶ್ವ ಪಥದ ಹಾದಿ ಗುರುತು ಹಾಕಿ ಕೊಳ್ಳಬೇಕಲ್ಲವೇ? ವೈಜ್ಞಾನಿಕತೆ, ವೈಚಾರಿಕತೆ ಮನೋಭಾವ ಬೆಳೆಯಬೇಕೆಂಬ ಸರಕಾರದ ಆಶಾಭಾವನೆ ಭಂಗವಾಗುತ್ತಿದೆ. ಸರಕಾರ ಎಲ್ಲಾ ಜಯಂತಿಗಳನ್ನು ಒಂದೇ ವೇದಿಕೆಯಲ್ಲಿ ಆಚರಿಸಿ ಜಾತ್ಯತೀತ ಮನೋಭಾವ ಮೂಡಿಸುವಂತಹ ದಿಟ್ಟ ಹೆಜ್ಜೆ ಇಟ್ಟು ಜನರ ಹಣ ಪೋಲಾಗದಂತೆ ಎಚ್ಚರವಹಿಸಲಿ.
ತ್ರಿಷಾ ಮನೆಯಿಂದ ವಿಜಯ್ ಹೊರಬರಬೇಕು; ವಿವಾದಾತ್ಮಕ ಹೇಳಿಕೆಗೆ ಕ್ಷಮೆಯಾಚಿಸಿದ ತಮಿಳುನಾಡು ಬಿಜೆಪಿ ಮುಖ್ಯಸ್ಥ!
ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷ ಸ್ಥಾಪನೆಯ ಮೂಲಕ ತಮಿಳುನಾಡು ರಾಜಕಾರಣಕ್ಕೆ ಎಂಟ್ರಿ ಕೊಟ್ಟಿರುವ ನಟ ವಿಜಯ್ ಬಗ್ಗೆ, ತಮಿಳುನಾಡು ಬಿಜೆಪಿ ಮುಖ್ಯಸ್ಥ ನೈನಾರ್ ನಾಗೇಂದ್ರನ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ವಿಜಯ್ ಅವರಿಗೆ ರಾಜಕೀಯ ಅನುಭವ ಕಡಿಮೆ ಇದ್ದು, ನಟಿ ತ್ರಿಷಾ ಮನೆಯಿಂದ ಹೊರಬಂದರೆ ಸಾಮಾಜಿಕ ಅನುಭವ ಗಳಿಸಲು ಸಾಧ್ಯ ಎಂಬ ನೈನಾರ್ ನಾಗೇಂದ್ರನ್ ಹೇಳಿಕೆ ವ್ಯಾಪಕ ಆಕ್ರೋಶಕ್ಕೆ ತುತ್ತಾಗಿದೆ. ತಮ್ಮ ಹೇಳಿಕೆಗೆ ಇದೀಗ ನಾಗೇಂದ್ರನ್ ಕ್ಷಮೆ ಕೂಡ ಕೇಳಿದ್ದಾರೆ.
ನುಸುಳುಕೋರರ ನೆಪದಲ್ಲಿ ಒಂದು ಸಮುದಾಯವನ್ನೇ ಅನುಮಾನಿಸುವುದು ಎಷ್ಟು ಸರಿ?
ಬಿಜೆಪಿ ನೇತೃತ್ವದ ಸರಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ನಂತರ ದೇಶದಲ್ಲಿ ಸಾಮರಸ್ಯದ ಜೀವನಕ್ಕೆ ಪೆಟ್ಟು ನೀಡಲು ನಿರಂತರ ಪ್ರಯತ್ನ ಮಾಡಲಾಗುತ್ತಿದೆ. ಇಂತಹ ಸಾವಿರಾರು ಪ್ರಯತ್ನಗಳ ಭಾಗವಾಗಿ ಬಿಜೆಪಿ ಸರಕಾರದ ಶಾಸಕರು, ಸಂಸದರು, ಸಚಿವರು ಹಾಗೂ ಕೆಲವು ಸಂದರ್ಭದಲ್ಲಿ ಪ್ರಧಾನ ಮಂತ್ರಿಯೇ ಸಾಮರಸ್ಯದ ವಿರುದ್ಧ ಮಾತನಾಡಿದ್ದಾರೆ. ಅವರಿಗೆ ಇದರಿಂದ ಹಲವು ರಾಜ್ಯಗಳಲ್ಲಿ ಚುನಾವಣೆಗಳಲ್ಲಿ ಗೆಲುವು ಸಾಧಿಸಲು ಸಾದ್ಯವಾಗಿರಬಹುದು, ಆದರೆ ದೇಶದಲ್ಲಿ ಸಾವಿರಾರು ವರ್ಷಗಳಿಂದ ಆಳವಾಗಿ ಬೇರೂರಿರುವ ಸಾಮರಸ್ಯದ ಬಂಧ ಅಷ್ಟು ಸರಳವಾಗಿ ಬಿಡಿಸಲು ಸಾಧ್ಯವಾಗುವುದಿಲ್ಲ ಎನ್ನುವುದು ಬಿಜೆಪಿ ನಾಯಕರಿಗೆ ಅರ್ಥವಾಗುವುದಿಲ್ಲ ಅಥವಾ ಅರ್ಥವಾಗಿಯೂ ಅಧಿಕಾರ ಸಿಗಬಹುದು ಎನ್ನುವ ಏಕೈಕ ಕಾರಣದಿಂದ ದ್ವೇಷದ ಮಾತು ಆಡುತ್ತಿದ್ದಾರೆ. ಕೇವಲ ಅಧಿಕಾರಕ್ಕಾಗಿ ಇಷ್ಟೊಂದು ಕೆಳಮಟ್ಟಕ್ಕೆ ಇಳಿಯಬಹುದಾದ ಯಾವುದೇ ನಾಯಕರು ಸ್ವತಂತ್ರ ಭಾರತದ ಇತಿಹಾಸದಲ್ಲಿ ಸಿಗಲಾರರು. ‘‘ಮುಸ್ಲಿಮ್ ರಿಕ್ಷಾ ಚಾಲಕರು ಐದು ರೂಪಾಯಿ ಕೇಳಿದರೆ, ಕೇವಲ ನಾಲ್ಕು ರೂಪಾಯಿ ಕೊಟ್ಟು ಅವರಿಗೆ ತೊಂದರೆ ಕೊಡಿ’’ ಎಂದು ಇತ್ತೀಚೆಗೆ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ಮುಸ್ಲಿಮರ ವಿರುದ್ಧ ಅಸ್ಸಾಂ ಜನರಿಗೆ ಕರೆ ಕೊಟ್ಟಿದ್ದಾರೆ. ಅಲ್ಲದೆ, ಅಸ್ಸಾಂ ಬಿಜೆಪಿ ಸಾಮಾಜಿಕ ಜಾಲತಾಣದ ಮೂಲಕ ಒಂದು ವೀಡಿಯೊ ಬಿಡುಗಡೆಗೊಳಿಸಲಾಯಿತು, ಅದು ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಮುಸ್ಲಿಮರ ಕಡೆಗೆ ಬಂದೂಕು ಇಟ್ಟು ಹೆದರಿಸುವ ವೀಡಿಯೊ. ಭಾರೀ ವಿರೋಧದ ನಂತರ ಅದನ್ನು ಸಾಮಾಜಿಕ ಜಾಲತಾಣದಿಂದ ತೆಗೆದು ಹಾಕಲಾಯಿತು. ಅಸ್ಸಾಂ ರಾಜ್ಯದಲ್ಲಿ ಮುಂದಿನ ಎರಡು ತಿಂಗಳಲ್ಲಿ ಚುನಾವಣೆ ನಡೆಯಲಿದೆ, ಅಸ್ಸಾಂ ರಾಜ್ಯದಲ್ಲಿ ಇರುವ ಶೇ. 38ರಷ್ಟಿರುವ ಜನಸಂಖ್ಯೆಗೆ ವಿರುದ್ಧವಾಗಿ ಎಲ್ಲಾ ಮುಸ್ಲಿಮೇತರರನ್ನು ಒಂದು ಕಡೆ ಮಾಡಿ ಮತಬ್ಯಾಂಕ್ ರಾಜಕೀಯ ಲಾಭ ಮಾಡಿಕೊಳ್ಳಲು ಮುಸ್ಲಿಮರ ವಿರುದ್ಧ ಮಾತನಾಡುತ್ತಿದ್ದಾರೆ ಎನ್ನುವುದು ಸ್ಪಷ್ಟವಾಗಿದೆ. ಅಸ್ಸಾಂ ರಾಜ್ಯದಲ್ಲಿ ಇರುವ ಎಲ್ಲಾ ಮುಸ್ಲಿಮರನ್ನು ಬಾಂಗ್ಲಾ ದೇಶದ ಮುಸ್ಲಿಮರು ಎನ್ನುವ ರೀತಿ ಚಿತ್ರೀಕರಿಸುವ ಪ್ರಯತ್ನ ಮಾಡಲಾಗುತ್ತಿದೆ. ದೇಶದಲ್ಲಿ ಇತ್ತೀಚೆಗೆ ಬಂಗಾಳಿ ಭಾಷೆ ಮಾತನಾಡುವ ಎಲ್ಲಾ ಜಾತಿ, ಜನಾಂಗಗಳನ್ನು ವಿರೋಧಿಸುವ, ಅವರನ್ನು ಕೇವಲ ಬಂಗಾಳಿ ಭಾಷೆಯನ್ನು ಮಾತನಾಡುತ್ತಿದ್ದಾರೆ ಎನ್ನುವ ಏಕೈಕ ಕಾರಣಕ್ಕೆ ಬಾಂಗ್ಲಾ ದೇಶದಿಂದ ಬಂದಿದ್ದಾರೆ ಎನ್ನುವ ರೀತಿ ನಡೆದುಕೊಳ್ಳಲಾಗುತ್ತಿದೆ. ಪ್ರಪಂಚದಲ್ಲಿ ಸುಮಾರು 27 ಕೋಟಿ ಜನ ಬಂಗಾಳಿ ಭಾಷೆ ಮಾತನಾಡುತ್ತಾರೆ, ಅದರಲ್ಲಿ 16 ಕೋಟಿ ಜನ ಬಾಂಗ್ಲಾದೇಶದಲ್ಲಿದ್ದಾರೆ. ಅದರಲ್ಲೂ ಭಾರತ ದೇಶದಲ್ಲಿ 10 ಕೋಟಿ ಜನ ಬಂಗಾಳಿ ಭಾಷೆಯನ್ನು ಮಾತನಾಡುತ್ತಾರೆ ಎನ್ನುವ ಕನಿಷ್ಠ ತಿಳುವಳಿಕೆ ಈ ಬಿಜೆಪಿ ನಾಯಕರಿಗೆ ಇಲ್ಲದಿರುವುದು ದುರದೃಷ್ಟಕರ. ಇತ್ತೀಚೆಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಂಗಾಳಿ ಮಾತನಾಡುತ್ತಾರೆ ಎನ್ನುವ ಕಾರಣಕ್ಕೆ ಒಬ್ಬ ಯುವಕನನ್ನು ಥಳಿಸಲಾಗಿತ್ತು. ಅದೇ ರೀತಿ ಬಂಗಾಳಿ ಮಾತನಾಡುವ ಕಾರಣಕ್ಕೆ ದಿಲ್ಲಿಯ ಒಂದು ಬಡಾವಣೆಯನ್ನೇ ತೆರುವುಗೊಳಿಸಲಾಯಿತು. ಇತ್ತೀಚೆಗೆ ದಿಲ್ಲಿಯಿಂದ ಗರ್ಭಿಣಿಯೊಬ್ಬಳನ್ನು ಬಾಂಗ್ಲಾ ದೇಶಕ್ಕೆ ಗಡಿಪಾರು ಮಾಡಲಾಯಿತು, ನಂತರ ಸುಪ್ರೀಂ ಕೋರ್ಟ್ ಮಧ್ಯಪ್ರವೇಶದ ಕಾರಣಕ್ಕೆ ಆ ಮಹಿಳೆಯನ್ನು ವಾಪಸ್ ಭಾರತಕ್ಕೆ ಕರೆತರಲಾಯಿತು. ತನ್ನದೇ ದೇಶದ ಒಬ್ಬ ಪ್ರಜೆಯನ್ನು ಕೇವಲ ಬಂಗಾಳಿ ಮಾತನಾಡುತ್ತಿರುವ ಕಾರಣಕ್ಕೆ ಅವರ ಅಸ್ತಿತ್ವವನ್ನೇ ಪ್ರಶ್ನೆ ಮಾಡಲಾಯಿತು. ದಿಲ್ಲಿಯಲ್ಲಿ ಬಂಗಾಳಿ ಮಾತನಾಡುವ ಒಂದು ಬಡಾವಣೆಗೆ ಹೋಗಿ ಪೊಲೀಸರು ಬೆದರಿಸಿದರು. ಬೆಂಗಳೂರಿನಲ್ಲಿ ಒಬ್ಬ ಕೊಲೆ ಆರೋಪಿ ಒಂದು ಬಡಾವಣೆಗೆ ಹೋಗಿ ಅಲ್ಲಿರುವ ಜನರ ದಾಖಲೆ ಪರಿಶೀಲನೆ ಮಾಡುತ್ತಾ, ಇವರೆಲ್ಲರೂ ಬಾಂಗ್ಲಾದೇಶದಿಂದ ಬಂದಿದ್ದಾರೆ ಎಂದು ವೀಡಿಯೊ ಮಾಡಿ ಗಲಾಟೆ ಮಾಡುವ ಹಂತಕ್ಕೆ ಈ ಬೆಳವಣಿಗೆಗಳು ದೇಶದಲ್ಲಿ ಬಂದು ನಿಂತಿದೆ. ಬಂಗಾಳಿ ಭಾಷೆ ಮಾತನಾಡುವ ಜನ ಒಂದು ವೇಳೆ ಮುಸ್ಲಿಮರಾಗಿದ್ದರೆ ಖಂಡಿತವಾಗಿಯೂ ಅವರು ಬಾಂಗ್ಲಾದೇಶದಿಂದ ಬಂದಿದ್ದಾರೆ ಎಂದು ಪ್ರಮಾಣ ಪತ್ರ ನೀಡುವ ಪುಢಾರಿಗಳು ದೇಶದಲ್ಲಿ ಇರುವುದು ದುರಂತ. ಉತ್ತರ ಭಾರತ ಹಾಗೂ ಪೂರ್ವ ಭಾರತದ ರಾಜ್ಯಗಳಲ್ಲಿ ಬಿಜೆಪಿ ನಾಯಕರ ಒಂದೇ ಅಜೆಂಡಾ ಎಂದರೆ ಅದು ನುಸುಳುಕೋರರನ್ನು ಹೊರಹಾಕುತ್ತೇವೆ. ಛತ್ತೀಸಗಡ, ಬಿಹಾರ ಚುನಾವಣೆಗಳಲ್ಲಿ ಇದೇ ಮಾತನ್ನು ಹೇಳಿದರು. ವಿರೋಧ ಪಕ್ಷಗಳು ನುಸುಳುಕೋರರ ಪರ ಇವೆ, ಅವರು ನುಸುಳುಕೋರರನ್ನು ಮತಬ್ಯಾಂಕ್ಮಾಡಿಕೊಂಡಿದ್ದಾರೆ ಎಂದು ಭಾಷಣ ಮಾಡುತ್ತಾರೆ. ಸಾಮಾನ್ಯ ತಿಳುವಳಿಕೆ ಇರುವ ಯಾವುದೇ ವ್ಯಕ್ತಿ ಅಥವಾ ಪಕ್ಷ ದೇಶದಲ್ಲಿ ಇರುವ 145 ಕೋಟಿ ಜನರನ್ನು ಬಿಟ್ಟು ಪರದೇಶದ ನುಸುಳುಕೋರರನ್ನು ನಂಬಿ ಪಕ್ಷ ನಡೆಸುತ್ತಾರೆಯೇ? ಅದರಿಂದ ಯಾವುದೇ ಪಕ್ಷಕ್ಕೆ ರಾಜಕೀಯ ಲಾಭವಾಗಬಹುದೇ? ಬಿಜೆಪಿಯವರು ಹೇಳುವ ಪ್ರಕಾರ ಭಾರತದ ಎಲ್ಲಾ ರಾಜ್ಯಗಳಲ್ಲಿ ಬಾಂಗ್ಲಾದೇಶದಿಂದ ಬಂದವರಿದ್ದಾರೆಯೇ? ಅಷ್ಟೊಂದು ಜನ ಬಾಂಗ್ಲಾದೇಶದಿಂದ ಇಲ್ಲಿಗೆ ಬರಲು ಸಾಧ್ಯವೇ? ಗಡಿ ಪ್ರದೇಶದಲ್ಲಿ ಇರುವ ನಮ್ಮ ಸೈನಿಕರ ಮೇಲೆ ಇವರಿಗೆ ನಂಬಿಕೆ ಇಲ್ಲವೇ? ಇದು ಯಾವ ಲಾಜಿಕ್ ಎಂದು ಅರ್ಥ ಆಗದಷ್ಟು ಭಾರತದ ಜನ ಮೂರ್ಖರಲ್ಲ. ಇದೇ ಸರಕಾರ 2015ರಲ್ಲಿ ಸಂವಿಧಾನ ತಿದ್ದುಪಡಿಯ ಮೂಲಕ ಬಾಂಗ್ಲಾದೇಶ ಮತ್ತು ಭಾರತದ ನಡುವೆ 162 ಒಳಪ್ರದೇಶಗಳನ್ನು, ಅದರಲ್ಲಿ 111 ಒಳಪ್ರದೇಶಗಳು ಭಾರತಕ್ಕೆ ಒಳಪಟ್ಟಿದ್ದು, ಬಾಂಗ್ಲಾದೇಶದ ಒಳಗಡೆ ಇರುವ ಕಾರಣಕ್ಕೆ ಬಾಂಗ್ಲಾದೇಶಕ್ಕೆ ಬಿಟ್ಟುಕೊಡಲಾಗಿದೆ. 51 ಒಳಪ್ರದೇಶಗಳು ಬಾಂಗ್ಲಾದೇಶಕ್ಕೆ ಒಳಪಟ್ಟಿದ್ದು, ಭಾರತದ ಗಡಿಯೊಳಗೆ ಇರುವ ಕಾರಣಕ್ಕೆ ಭಾರತ ಪಡೆದುಕೊಂಡಿದೆ, ಈ ರೀತಿ ಹಂಚಿಕೊಂಡು ಅಲ್ಲಿ ವಾಸಿಸುತ್ತಿರುವ ನಾಗರಿಕರಿಗೆ ಅವರ ಇಚ್ಛಾನುಸಾರ ದೇಶದ ನಾಗರಿಕತ್ವ ನೀಡಲಾಗಿದೆ. ಬಾಂಗ್ಲಾದೇಶ ಮತ್ತು ಭಾರತದ ನಡುವೆ ಒಟ್ಟು 4,096 ಕಿ.ಮೀ. ಉದ್ದದ ಗಡಿ ಹಂಚಿಕೊಂಡಿವೆ. ಇದರಲ್ಲಿ 2,216 ಕಿ.ಮೀ. ಪಶ್ಚಿಮ ಬಂಗಾಳ ರಾಜ್ಯದೊಂದಿಗೆ, 263 ಕಿ.ಮೀ. ಅಸ್ಸಾಂ, 443 ಕಿ.ಮೀ. ಮೇಘಾಲಯ, 856 ಕಿ.ಮೀ. ತ್ರಿಪುರಾ ಹಾಗೂ 318 ಕಿ.ಮೀ. ಮಿಜೋರಾಂ ರಾಜ್ಯದೊಂದಿಗೆ ಗಡಿ ಹಂಚಿಕೊಂಡಿದೆ. ಇದರಲ್ಲಿ ಸುಮಾರು 3,300 ಕಿ.ಮೀ. ಗಡಿ ಪ್ರದೇಶಕ್ಕೆ ತಂತಿ ಬೇಲಿ ಹಾಕಲಾಗಿದೆ, ಇನ್ನುಳಿದ ಪ್ರದೇಶಗಳಿಗೆ ಬೇಲಿ ಹಾಕಲು ಸಾದ್ಯವಾಗಿಲ್ಲ, ಯಾಕೆಂದರೆ ಅದು ನದಿ ಪ್ರದೇಶ, ಗಾಢವಾದ ಅರಣ್ಯ, ಗುಡ್ಡಗಾಡು ಪ್ರದೇಶ ಹಾಗೂ ಸ್ಥಳೀಯ ಜಮೀನು ವಿವಾದದಿಂದಾಗಿ ಗಡಿಗೆ ತಂತಿ ಬೇಲಿ ಹಾಕಲು ಸಾಧ್ಯವಾಗಿಲ್ಲ. 2010ರವರೆಗೆ ಸುಮಾರು 2,700 ಕಿ.ಮೀ. ಬೇಲಿ ಹಾಕಲಾಗಿತ್ತು. ಈ ಸರಕಾರ ಬಂದ ಮೇಲೆ ಬೇಲಿ ಹಾಕಿರುವುದು ಕೇವಲ 600 ಕಿ.ಮೀ. ಮಾತ್ರ. ಪಶ್ಚಿಮ ಬಂಗಾಳ ರಾಜ್ಯದಲ್ಲಿಯೇ ಸುಮಾರು 2,000 ಕಿ.ಮೀ. ಬೇಲಿ ಹಾಕಲಾಗಿದೆ, ಅಲ್ಲಿ ಕೇವಲ 216 ಕಿ.ಮೀ. ಮಾತ್ರ ಬಾಕಿ ಉಳಿದಿದೆ, ಅಸ್ಸಾಮಿನಲ್ಲಿ ಇರುವ 263 ಕಿ.ಮೀ.ಗಳಲ್ಲಿ 80 ಕಿ.ಮೀ. ಬೇಲಿ ಹಾಕುವುದು ಬಾಕಿ ಉಳಿದಿದೆ. ಆದರೆ ಬಿಜೆಪಿ ನಾಯಕರು ಕೇವಲ ಪಶ್ಚಿಮ ಬಂಗಾಳ ರಾಜ್ಯದಲ್ಲಿ ಮಾತ್ರ ಮಮತಾ ಬ್ಯಾನರ್ಜಿ ಸರಕಾರ ಬೇಲಿ ಹಾಕಲು ಬಿಡುತ್ತಿಲ್ಲ ಎಂದು ಸುಳ್ಳು ಹೇಳಿಕೊಂಡು ಸಾಗುತ್ತಿದ್ದಾರೆ. ತಮ್ಮದೇ ದೇಶದ ನಾಗರಿಕರನ್ನು ಕೇವಲ ಬಂಗಾಳಿ ಮಾತನಾಡುತ್ತಾರೆ ಎನ್ನುವ ಏಕೈಕ ಕಾರಣಕ್ಕೆ ವಿದೇಶಿಗರು ಎಂದು ಅವಮಾನ ಮಾಡುವುದು ಎಷ್ಟೊಂದು ಸರಿ ಎನ್ನುವುದು ಪ್ರಜ್ಞಾವಂತ ನಾಗರಿಕರು ವಿಚಾರ ಮಾಡಬೇಕು. ದೇಶದ ಪ್ರಜೆಗಳಲ್ಲಿ ನಾವು ಭಾರತದವರು ಎನ್ನುವುದಕ್ಕೆ ಇರುವ ದಾಖಲೆಗಳು ಏನೆಂದು ಸಾಮಾನ್ಯವಾಗಿ ಒಂದು ಮನೆಯಲ್ಲಿ ದಾಖಲೆ ಕೇಳಿದರೆ ಅವರು ನೀಡುವುದು ಪಡಿತರ ಚೀಟಿ, ಮತದಾರರ ಗುರುತಿನ ಚೀಟಿ, ಆಧಾರ ಕಾರ್ಡ್, ಶಾಲಾ ದಾಖಲಾತಿ, ಸ್ಥಿತಿವಂತರಿದ್ದರೆ ಆಸ್ತಿ ದಾಖಲೆ, ಪಾಸ್ಪೋರ್ಟ್ ಪ್ರತಿ, ಇದು ಬಿಟ್ಟರೆ ನಾಗರಿಕರು ಎನ್ನಲು ಸರಕಾರ ಯಾವ ದಾಖಲೆ ನಮ್ಮ ದೇಶದ ನಾಗರಿಕರಿಗೆ ನೀಡಿದೆ? ದೇಶದಲ್ಲಿ 80 ಕೋಟಿ ಜನ ಬಡವರಿದ್ದಾರೆ, ಅವರಿಗೆ ಸರಕಾರ ಪಡಿತರ ಚೀಟಿ ನೀಡಿದೆ, ಅದರ ಮೂಲಕ ಪ್ರತೀ ತಿಂಗಳು ಆಹಾರ ನೀಡಲಾಗುತ್ತದೆ. ಅವರಲ್ಲಿ ಅರ್ಧದಷ್ಟು ಜನರ ಹತ್ತಿರ ಯಾವುದೇ ಆಸ್ತಿ ಇರಲಿಕ್ಕಿಲ್ಲ. ದೇಶದಲ್ಲಿ ಬಹುತೇಕ ಬಡವರು ಒಂದು ಜಿಲ್ಲೆಯಿಂದ ಇನ್ನೊಂದು ಜಿಲ್ಲೆಗೆ, ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ಹೊಟ್ಟೆಪಾಡಿಗಾಗಿ ವಲಸೆ ಹೋಗುತ್ತಾರೆ. ಇವರ ಹತ್ತಿರ ಯಾವುದೇ ದಾಖಲೆ ಇರುವುದಿಲ್ಲ. ಅವರನ್ನೇ ನುಸುಳುಕೋರರು ಎನ್ನಲು ಸಾಧ್ಯವೇ? ಈ ರೀತಿ ದೇಶದ ನಾಗರಿಕರನ್ನು ಅನುಮಾನದಿಂದ ನೋಡುವುದು ಎಷ್ಟರಮಟ್ಟಿಗೆ ಸರಿ ಎನ್ನುವ ಪ್ರಶ್ನೆ ಪ್ರಜ್ಞಾವಂತ ನಾಗರಿಕರಲ್ಲಿ ಬರಬೇಕು. ಭಾರತ ದೊಡ್ಡ ದೇಶ, ಇದರ ಸುರಕ್ಷತೆ ಮೊದಲ ಆದ್ಯತೆಯಾಗಬೇಕು, ಅದು ಗಡಿಯಿಂದ ಪ್ರಾರಂಭವಾಗಬೇಕು. ಯಾವುದೇ ಕಾರಣಕ್ಕೂ ಯಾವುದೇ ಸರಕಾರ ಬೇರೆ ದೇಶದಿಂದ ಯಾರನ್ನೂ ಒಳಗಡೆ ಅಕ್ರಮವಾಗಿ ಪ್ರವೇಶ ಮಾಡಲು ಅವಕಾಶ ನೀಡಬಾರದು. ಒಂದು ವೇಳೆ ಅಕ್ರಮವಾಗಿ ಬಂದರೆ ದೇಶದ ಸಮಗ್ರತೆಗೆ ಅಪಾಯವಾಗುತ್ತದೆ ಎನ್ನುವುದು ಸ್ಪಷ್ಟ. ಆದರೆ ಅದನ್ನೇ ನೆಪವಾಗಿಟ್ಟುಕೊಂಡು ಇಡೀ ದೇಶದ ಜನರನ್ನು ಅನುಮಾನದಿಂದ ನೋಡುವುದು ಸರಿಯಲ್ಲ. ಗಡಿಯನ್ನು ಭದ್ರಗೊಳಿಸಬೇಕು, ಅಲ್ಲಿ ಸಾಕಷ್ಟು ಗಡಿಭದ್ರತಾ ಪಡೆಗಳನ್ನು ನಿಯೋಜಿಸಬೇಕು, ಅವರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿ, ನುಸುಳುಕೋರರು ಬರದಂತೆ ಸರಕಾರ ತಡೆಯಬೇಕು. ಒಂದು ಭಾಷೆಯ ಆಧಾರದಲ್ಲಿ, ಧರ್ಮದ ಆಧಾರದಲ್ಲಿ ನುಸುಳುಕೋರರು ಎಂದು ಸಾಬೀತುಪಡಿಸಲು ಹರಸಾಹಸ ಪಡುವುದನ್ನು, ನಮ್ಮದೇ ದೇಶದ ಬಡವರನ್ನು ಅವಮಾನ ಮಾಡುವುದನ್ನು ಕೇಂದ್ರ ಸರಕಾರ ಮತ್ತು ಅದರ ಅಂಗಸಂಸ್ಥೆಗಳು ಬಿಡಬೇಕು. ಒಂದು ವೇಳೆ ನುಸುಳುಕೋರರು ದೇಶದ ಗಡಿಯೊಳಗೆ ನುಸುಳಿದ್ದರೆ, ಅಂತಹವರನ್ನು ಹುಡುಕಿ ಕಾನೂನುಬದ್ಧವಾಗಿ ಹೊರಹಾಕಬೇಕು. ಭಾರತದ ಪ್ರತಿಯೊಬ್ಬ ನಾಗರಿಕರಿಗೂ ದೇಶ ಮೊದಲು ಎನ್ನುವುದು ರಕ್ತದಲ್ಲೇ ಇದೆ. ಆದರೆ ಕೆಲವರು ಮತಗಳ ಧ್ರುವೀಕರಣಕ್ಕಾಗಿ ಒಂದು ಸಮುದಾಯವನ್ನು, ಒಂದು ಭಾಷೆಯನ್ನು ಅವಮಾನ ಮಾಡುವ ಚಾಳಿ ಬೆಳೆಸಿಕೊಂಡಿರುವುದು ದುರದೃಷ್ಟಕರ.
ಜನಚಳವಳಿಯ ಬದ್ಧತೆಯ ಕಾರ್ಯಕರ್ತ ಕರಿಯಪ್ಪ ಗುಡಿಮನಿ
ಕರಿಯಪ್ಪ ಗುಡಿಮನಿ ಅವರು ರಾಜ್ಯದ ಹಿರಿಯ ಹೋರಾಟಗಾರರ ಸಂಗಾತಿಯಾದಂತೆ ಹೊಸ ತಲೆಮಾರಿನ ಅಚ್ಚುಮೆಚ್ಚಿನ ನಾಯಕ ಕೂಡ. ಸಂಘಟನೆಗಳಲ್ಲಿ ನಾಯಕ ಸ್ಥಾನಕ್ಕೆ ಸ್ಪರ್ಧಿಸದೆ, ಒಬ್ಬ ನಿಷ್ಠಾವಂತ ಪ್ರಾಮಾಣಿಕ ಕಾರ್ಯಕರ್ತನಾಗಿರುವುದೇ ಅವರ ಗುರುತಾಗಿದೆ. ವರ್ಗಹೋರಾಟದ ನೆಲೆಯ ಎಡಪಂಥೀಯ ಚಳವಳಿಗಳ ಜತೆಗಿದ್ದೂ, ಜಾತಿ ನೆಲೆಯ ಶೋಷಣೆಯ ವಿರುದ್ಧದ ಹೋರಾಟದ ಅಗತ್ಯತೆಯ ಖಚಿತತೆ ಇಂತಹ ಕರಿಯಪ್ಪ ಗುಡಿಮನಿ ಅವರ ದಪ್ಪ ಮೀಸೆಯ ಮುಖದಲ್ಲಿ ಹೋರಾಟದ ಕಿಚ್ಚಿನ ಜತೆ ಮುಗುಳ್ನಗೆ ಎಂದೂ ಮಾಸದಿರಲಿ. ನಾನು ಹೊಸಪೇಟೆ ತಾಲೂಕಿನ ಕಮಲಾಪುರದ ಹಂಪಿಯಿಂದ ಬರುವಾಗ ಸಿಗುವ ಮೊದಲ ಬಸ್ ಸ್ಟಾಂಡಿನಲ್ಲಿ ದಪ್ಪ ಪೊದೆ ಮೀಸೆಯ ವ್ಯಕ್ತಿ ತನ್ನ ಮಗಳನ್ನು ಕಾಲೇಜಿಗೆ ಕಳಿಸಲು ಬಸ್ ಹತ್ತಿಸಲು ಬೈಕಲ್ಲಿ ಕರೆತರುತ್ತಿದ್ದುದನ್ನು ನೋಡುತ್ತಿದ್ದೆ. ಈ ವ್ಯಕ್ತಿಯ ದಪ್ಪನಾದ ಮೀಸೆ, ಮುಖದಲ್ಲಿ ಕಾಣುತ್ತಿದ್ದ ಗಡುಸುತನ ನೋಡಿ ಈ ವ್ಯಕ್ತಿಯ ಬಗ್ಗೆ ಕುತೂಹಲ ಮೂಡಿತು. ಆದರೆ ಏಕಾಏಕಿ ಮಾತನಾಡಿಸಲು ಭಯ ಪಟ್ಟಿದ್ದೆ. ಹೀಗೆ ಕಾಲೇಜಿಗೆ ಮಗಳನ್ನು ಬಿಡಲು ಬರುತ್ತಿದ್ದ ಈ ವ್ಯಕ್ತಿಯನ್ನು ಹಲವು ಬಾರಿ ನೋಡಿದಾಗ ಮಗಳ ಶಿಕ್ಷಣದ ಬಗ್ಗೆ ಈ ವ್ಯಕ್ತಿಗೆ ಅದೆಷ್ಟು ಅಕ್ಕರೆ, ಕಾಳಜಿ ಇದೆಯಲ್ಲ ಅನ್ನಿಸಿತ್ತು. ಆ ದಿನ ಹಾಸ್ಟೆಲ್ನಲ್ಲಿ ಪತ್ರಿಕೆ ಓದುವಾಗ ಇದೇ ವ್ಯಕ್ತಿ ಬಳ್ಳಾರಿಯ ಭೂ ಹೋರಾಟದ ನಾಯಕತ್ವ ವಹಿಸಿದ ಕಾರಣಕ್ಕೆ ಹಲ್ಲೆಗೊಳಗಾದ ವರದಿಯನ್ನು ನೋಡಿದೆ. ಮೊದಲಿಗೆ ಈ ವ್ಯಕ್ತಿಯ ಹೆಸರು ಕರಿಯಪ್ಪ ಗುಡಿಮನಿ ಎಂದು ತಿಳಿಯಿತು. ಈ ವ್ಯಕ್ತಿಯ ಬಗ್ಗೆ ಮತ್ತಷ್ಟು ಕುತೂಹಲ ಮೂಡಿ ಆತನ ಬಗ್ಗೆ ಒಂದಷ್ಟು ಮಾಹಿತಿ ಕಲೆಹಾಕಿದೆ. ಒಂದು ದಿನ ಕಮಲಾಪುರದಲ್ಲಿ ಕರಿಯಪ್ಪ ಗುಡಿಮನೆ ಅವರ ಮನೆ ಹುಡುಕಿಕೊಂಡು ಹೋದೆ. ಅವರು ಆ ದಿನ ಪ್ರಯಾಣದಿಂದ ಬಳಲಿದ್ದರು. ಕಾರಣ ಹಿಂದಿನ ದಿನ ಬೆಂಗಳೂರಿನ ಟೌನ್ ಹಾಲ್ ಮುಂದೆ ತನ್ನ ಮೇಲಿನ ಕೊಲೆಯ ಯತ್ನ ವಿರೋಧಿಸಿ ಪ್ರಗತಿಪರರ ಪ್ರತಿಭಟನೆಯಲ್ಲಿ ಪಾಲ್ಗೊಂಡು ಬಂದಿದ್ದರು. ಇದರ ಹಿನ್ನೆಲೆ ನೋಡಿದರೆ, ಬಳ್ಳಾರಿ ಭಾಗದ ದಲಿತ ಕೆಳಜಾತಿಗಳೇ ಹೆಚ್ಚಿರುವ ಬಂಡೆಟ್ಟಿ ಮತ್ತು ದಾನಪ್ಪ ಬೀದಿಯ ಪೌರಕಾರ್ಮಿಕರಿರುವ ಫಲಾನುಭವಿಗಳಿಗೆ ೧೯೭೦-೮೦ರ ಸುಮಾರಿಗೆ ಭೂನ್ಯಾಯ ಮಂಡಳಿಯಿಂದ ಸುಮಾರು ೧೪೦ ಎಕರೆ ಜಮೀನು ಮುಂಜೂರಾಗಿತ್ತು. ಈ ಎಲ್ಲಾ ಭೂಮಿ ಇಂದು ಎಲ್. ಪ್ರತಾಪ್ ರೆಡ್ಡಿ ಎಂಬ ಜಮೀನ್ದಾರನ ವಶದಲ್ಲಿದೆ. ಇದನ್ನು ಮೂಲ ಫಲಾನುಭವಿಗಳಿಗೆ ಕೊಡಿಸುವ ಹೋರಾಟ ರೂಪಿಸುತ್ತಿರುವ ಕರಿಯಪ್ಪನ ಮೇಲೆ ಬಳ್ಳಾರಿಯ ಎ.ಸಿ. ಆಪೀಸು ಮುಂದೆ ಪ್ರತಾಪರೆಡ್ಡಿ ಕಡೆಯವರು ಮಾರಣಾಂತಿಕ ಹಲ್ಲೆ ಮಾಡಿದ್ದರು. ಈ ಕುರಿತು ಪ್ರಗತಿಪರರಿಂದ ಸಾಕಷ್ಟು ಪ್ರತಿರೋಧವೂ ಬಂದಿತ್ತು. ಇಂದು ಭೂಮಿ ರಿಯಲ್ ಎಸ್ಟೇಟ್ ದಂಧೆಗೆ ಒಳಗಾಗಿ ಒಂದು ಮಾಫಿಯಾವೇ ಸೃಷ್ಟಿಯಾಗಿರುವ ಸಂದರ್ಭದಲ್ಲಿ ಕರಿಯಪ್ಪರ ಮೇಲಿನ ಹಲ್ಲೆ ಭೂಚಳವಳಿಯ ಬಿಕ್ಕಟ್ಟಿನ ಒಂದು ಮುಖವನ್ನು ತೋರುತ್ತಿದೆ. ಹೀಗೆ ಕರಿಯಪ್ಪ ಗುಡಿಮನೆ ಅವರ ಜತೆ ಮಾತನಾಡುತ್ತಾ, ಒಡನಾಡುತ್ತಾ ಹೋದಂತೆ ಈ ದಪ್ಪ ಮೀಸೆಯ ಮನುಷ್ಯನೊಳಗೆ ಅಡಗಿರುವ ಅಂತಃಕರಣ ಮತ್ತು ಹೋರಾಟದ ಬದ್ಧತೆಯಿಂದ ಆಪ್ತರಾದರು. ಕಂಪ್ಲಿ ಸಮೀಪದ ಶ್ರೀರಾಮರಂಗಾಪುರದಲ್ಲಿ (ಎಸ್.ಆರ್.ಪುರ) ನಡೆದ ರೈತ ಹೋರಾಟದ ಬಗ್ಗೆ ಅಲ್ಲಿನ ರೈತರನ್ನು ಭೇಟಿಯಾಗಿ ಸಂವಾದ ಪತ್ರಿಕೆಗೆ ಜನಕಥನ ಕಾಲಂನಲ್ಲಿ ಬರೆದಿದ್ದೆ. ಆ ಸಂದರ್ಭದಲ್ಲಿ ಭೂಮಿ ಪಡೆದ ಎಸ್.ಆರ್. ಪುರದ ರೈತರು ಕರಿಯಪ್ಪ ಗುಡಿಮನಿ ಅವರು ನಮ್ಮ ಪಾಲಿನ ದೇವರು ಎಂದು ನೆನೆದರು. ಹೀಗೆ ಎಪ್ಪತ್ತರ ದಶಕದಿಂದಲೂ ಕರ್ನಾಟಕದ ಎಲ್ಲಾ ಜನಪರ ಹೋರಾಟಗಳ ಸಂಗಾತಿಯಾಗಿರುವ ಕರಿಯಪ್ಪ ಗುಡಿಮನಿ ಅನ್ಯಾಯ, ಶೋಷಣೆ ಎಲ್ಲಿಯೇ ನಡೆಯಲಿ ಅದರ ವಿರುದ್ಧ ಗಟ್ಟಿ ದನಿ ಎತ್ತುವ ಬದ್ಧತೆಯ ಪ್ರಾಮಾಣಿಕ ಕಾರ್ಯಕರ್ತ. ಕರಿಯಪ್ಪರ ಬದುಕಿನ ಪಯಣ ಹಲವು ಏಳುಬೀಳುಗಳನ್ನು ದಾಟಿಕೊಂಡು ಬಂದಿದೆ. ಬಳ್ಳಾರಿ ತಾಲೂಕಿನ ಗಡಿಗ್ರಾಮ ಬಳ್ಳಾಪುರದ ಮಾನಸಿಕ ಅಸ್ವಸ್ಥ ಸ್ಥಿತಿಯ ದೇವದಾಸಿ ಈರಮ್ಮನ ಮಗನೀತ. ಬಾಲ್ಯದಿಂದಲೂ ಅಜ್ಜಿ ಲಚ್ಚಮ್ಮನ ಆರೈಕೆಯಲ್ಲಿ ಬೆಳೆದಾತ. ಅಕ್ಕ ಲಕ್ಷ್ಮಿ, ಅಣ್ಣ ಗೋವಿಂದ, ತಮ್ಮಂದಿರಾದ ಹುಲುಗಪ್ಪ ಮತ್ತು ಸಣ್ಣ ಕರಿಯಪ್ಪರ ಜತೆಗೂಡಿ ಬೆಳೆದವರು. ಕಂಪ್ಲಿಯಲ್ಲಿದ್ದ ದೊಡ್ಡಮ್ಮ ಸಿದ್ದಮ್ಮ ಮತ್ತು ಭೀಮಪ್ಪ ಗುಡಿಮನೆ ಅವರು ಕರಿಯಪ್ಪನನ್ನು ಸಲಹುತ್ತಾರೆ. ತಡವಾದರೂ ಶಾಲೆಗೆ ಸೇರುತ್ತಾರೆ. ಒಂದರಿಂದ ನಾಲ್ಕನೇ ತರಗತಿಯನ್ನು ಕಂಪ್ಲಿಯಲ್ಲಿ ಓದಿ, ಐದನೇ ತರಗತಿಗೆ ಹಿರೇಜಂತಕಲ್ನಲ್ಲಿ ಹಾಸ್ಟೆಲ್ ಸೇರಿ ಓದುತ್ತಾರೆ. ಇದೇ ಸಂದರ್ಭದಲ್ಲಿ ರಾಯಚೂರಿನಿಂದ ಶಿವಪುತ್ರ ಭೇರಿ ಎನ್ನುವವರು ದಲಿತ ಸಂಘರ್ಷ ಸಮಿತಿಯನ್ನು ಕಟ್ಟಲು ಹಾಸ್ಟೆಲಿಗೆ ಬಂದಾಗ ಕರಿಯಪ್ಪನಿಗೆ ಸಂಘಟನೆ ಪರಿಚಯವಾಗುತ್ತದೆ. ೧೯೭೫-೭೬ರ ಹೊತ್ತಿಗೆ ದಸಂಸದ ಸಕ್ರಿಯ ಕಾರ್ಯಕರ್ತನಾಗಿ ಕಂಪ್ಲಿ ಭಾಗದ ದಲಿತರ ಶೋಷಣೆಯ ವಿರುದ್ಧದ ಚಳವಳಿಗಳಲ್ಲಿ ಭಾಗವಹಿಸುತ್ತಾರೆ. ದಸಂಸದಲ್ಲಿ ಸಕ್ರಿಯವಾದ ಕಾರಣ ಎಸೆಸೆಲ್ಸಿಯಲ್ಲಿ ಕರಿಯಪ್ಪ ಫೇಲ್ ಆಗುತ್ತಾರೆ. ಮುಂದಿನ ವರ್ಷ ಪಾಸ್ ಮಾಡಿಕೊಂಡು ೧೯೮೫ರ ಹೊತ್ತಿಗೆ ಹೊಸಪೇಟೆಯ ವಿಜಯನಗರ ಕಾಲೇಜಿಗೆ ಪಿಯುಸಿಗೆ ದಾಖಲಾಗುತ್ತಾರೆ. ಇದೇ ಸಂದರ್ಭದಲ್ಲಿ ಬೆಳಗಾಂವ ಜಿಲ್ಲೆಯ ಬೆಂಡಿಗೇರಿಯಲ್ಲಿ ದಲಿತ ಜೀತಗಾರನಿಗೆ ಮಲ ತಿನ್ನಿಸಿದ ಪ್ರಕರಣ ರಾಜ್ಯವ್ಯಾಪಿ ಕಿಚ್ಚು ಹಚ್ಚುತ್ತದೆ. ಕರಿಯಪ್ಪ ಈ ಹೋರಾಟದಲ್ಲಿ ಪಾಲ್ಗೊಂಡು ಶಿಕ್ಷಣಕ್ಕೆ ವಿದಾಯ ಹೇಳುತ್ತಾರೆ. ಮುಂದೆ ಚಳವಳಿಯ ಜತೆಗೆ ಬದುಕಿಗೆ ಹಲವು ಉದ್ಯೋಗಗಳಲ್ಲಿ ತೊಡಗುತ್ತಾರೆ. ೧೯೮೯ರಲ್ಲಿ ಕಮಲಾಪುರದ ದೇವದಾಸಿಯ ಮಗಳಾದ ಈರಮ್ಮನ ಜತೆ ಮದುವೆಯಾಗುತ್ತದೆ. ಈರಮ್ಮ ಅಂಗನವಾಡಿ ಕಾರ್ಯಕರ್ತೆ ಆದ ಕಾರಣ ಬದುಕಿಗೆ ಒಂದು ಆಸರೆಯಾಗುತ್ತದೆ. ಮುಂದೆ ಮಕ್ಕಳಾದ ಸಂತೋಷಮ್ಮ, ವೆನ್ನಲಾ, ಶ್ವೇತಾ ಕಿರಣ, ಮಗ ವಿಪ್ಲನ ಪೃಥ್ವಿಯರನ್ನು ಒಳಗೊಂಡ ತುಂಬು ಕುಟುಂಬವಾಗುತ್ತದೆ. ಹೋರಾಟ ಚಳವಳಿಯ ಮಧ್ಯೆಯೂ ಸಂತೋಷಮ್ಮ ಮತ್ತು ವೆನ್ನಲಾರನ್ನು ಎಂಟೆಕ್ ಸ್ನಾತಕೋತ್ತರ ಪದವಿವರೆಗೆ ಓದಿಸುತ್ತಾರೆ. ಎಂಭತ್ತರ ದಶಕದಿಂದಲೇ ಕರಿಯಪ್ಪ ದಸಂಸದ ಸಕ್ರಿಯ ಕಾರ್ಯಕರ್ತನಾಗಿ ಎಲ್ಲಾ ಬಗೆಯ ಅನ್ಯಾಯಗಳ ವಿರುದ್ಧದ ದನಿಯಾಗುತ್ತಾರೆ. ಬಿ.ಕೃಷ್ಣಪ್ಪ, ಎನ್.ವೆಂಕಟೇಶ್, ಮುನಿಸ್ವಾಮಿ, ಚಂದ್ರಪ್ರಸಾದ್ ತ್ಯಾಗಿ, ನಾರಾಯಣಸ್ವಾಮಿ, ಶಿವಪುತ್ರ ಭೇರಿ ಮೊದಲಾದ ದಸಂಸದ ನಾಯಕರುಗಳ ಜತೆ ಒಡನಾಟ ಬೆಳೆಯುತ್ತದೆ. ಕರ್ನಾಟಕದ ಬೇರೆ ಬೇರೆ ಕಡೆಗಳಲ್ಲಿ ನಡೆಯುವ ಹೋರಾಟಗಳಲ್ಲಿ ಪಾಲ್ಗೊಳ್ಳುತ್ತಾರೆ. ಪ್ರಾಮಾಣಿಕ ಹೋರಾಟಗಾರರ ಜತೆ ಗುರುತಿಸಿಕೊಳ್ಳುತ್ತಾ, ಸ್ವಾರ್ಥಕ್ಕಾಗಿ ಹೋರಾಟ ಮಾಡುವವರ ಜತೆ ಸಂಪರ್ಕ ಕಡಿದುಕೊಳ್ಳುತ್ತಾ ಗಂಗಾವತಿ ಕಂಪ್ಲಿ ಭಾಗದಲ್ಲಿ ದಸಂಸ ಕಟ್ಟಲು ಶ್ರಮಿಸುತ್ತಾರೆ. ಬಾಬಾ ಸಾಹೇಬ್ ಅಂಬೇಡ್ಕರ್ ಕಣ್ಣೋಟದ ದಲಿತ ಹೋರಾಟದ ಜತೆ ಮಾರ್ಕ್ಸ್ವಾದಿ ಎಡಪಂಥೀಯ ಸಂಘಟನೆಗಳಲ್ಲಿಯೂ ಕೆಲಸ ಮಾಡುತ್ತಾರೆ. ದಸಂಸ ಸಂಘಟನೆಯು ಸಕ್ರಿಯ ರಾಜಕಾರಣಕ್ಕೆ ಬರುವ ನಿರ್ಧಾರ ಮಾಡಿ ಜನತಾದಳದೊಂದಿಗೆ ಹೊಂದಾಣಿಕೆ ಮಾಡಿಕೊಂಡು ಚುನಾವಣೆಯಲ್ಲಿ ಸ್ಪರ್ಧಿಸುತ್ತಾರೆ. ಈ ಸಂದರ್ಭದಲ್ಲಿ ಕರಿಯಪ್ಪ ಗುಡಿಮನಿ ದಸಂಸದಿಂದ ಹೊರಬಂದು ತಟಸ್ಥರಾಗುತ್ತಾರೆ. ಮುಂದೆ ಬಾಬಾ ಸಾಹೇಬ ಅಂಬೇಡ್ಕರರ ತತ್ವ ಸಿದ್ಧಾಂತಗಳ ನೆಲೆಯಲ್ಲಿ ರಾಜಕಾರಣ ಕಟ್ಟಿದ ಬಹುಜನ ಸಮಾಜವಾದಿ (ಬಿಎಸ್ಪಿ) ಪಕ್ಷವನ್ನು ಸೇರುತ್ತಾರೆ. ದಸಂಸದ ಬಿ.ಕೃಷ್ಣಪ್ಪ ಅವರ ಬಣ ಬಿಎಸ್ಪಿಯನ್ನು ಬೆಂಬಲಿಸುತ್ತದೆ. ಕರಿಯಪ್ಪ ಅವರು ಬಿಎಸ್ಪಿಯಿಂದ ಹೊಸಪೇಟೆ ಕ್ಷೇತ್ರದ ಶಾಸಕ ಸ್ಥಾನಕ್ಕೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಾರೆ. ಮುಂದೆ ಉತ್ತರ ಪ್ರದೇಶದಲ್ಲಿ ನಡೆದ ರಾಜಕೀಯ ಬದಲಾವಣೆಯಲ್ಲಿ ಬಿಎಸ್ಪಿಯು ಬಿಜೆಪಿಯ ಜತೆ ಹೊಂದಾಣಿಕೆ ಮಾಡಿಕೊಳ್ಳುತ್ತದೆ. ಈ ಕಾರಣದಿಂದ ಕರಿಯಪ್ಪ ಬಿಎಸ್ಪಿಯಿಂದಲೂ ಹೊರಬರುತ್ತಾರೆ. ಮುಂದೆ ಎಡಪಂಥೀಯ ತೀವ್ರವಾದಿ ಸಂಘಟನೆಗಳಲ್ಲಿಯೂ ಕೆಲವು ವರ್ಷಗಳ ಕಾಲ ಕೆಲಸ ಮಾಡುತ್ತಾರೆ. ಜನರ ಸಮಸ್ಯೆಗಳ ಮಧ್ಯೆಯೇ ಹೋರಾಟ ಕಟ್ಟಬೇಕೆಂಬ ನಿಲುವಿನಿಂದ ತೀವ್ರವಾದಿ ಸಂಘಟನೆಗಳಿಂದಲೂ ಹೊರಬರುತ್ತಾರೆ. ೨೦೦೮ರಿಂದ ಕರ್ನಾಟಕ ಕೋಮು ಸೌಹಾರ್ದ ವೇದಿಕೆಯಲ್ಲಿ ಸಕ್ರಿಯವಾಗಿ ಕೆಲಸ ಮಾಡುತ್ತಾರೆ. ೨೦೧೦ರಿಂದ ತಮ್ಮದೇ ಆದ ‘ಕರ್ನಾಟಕ ಮಾದಿಗ ಹಿತರಕ್ಷಣ ಹೋರಾಟ ಸಮಿತಿ’ಯನ್ನು ಕಟ್ಟಿಕೊಂಡು ವಿಶೇಷವಾಗಿ ಮಾದಿಗ ಸಮುದಾಯದ ಶೋಷಣೆಯ ವಿರುದ್ಧವೂ ಕೆಲಸ ಮಾಡುತ್ತಿದ್ದಾರೆ. ಮುಂದುವರಿದು ಜನಪರ ಸಂಘಟನೆಗಳು ಒಗ್ಗೂಡಿ ಕಟ್ಟಿದ ಕರ್ನಾಟಕ ಜನಶಕ್ತಿ ಸಂಘಟನೆಯಲ್ಲಿಯೂ ಕೆಲಸ ಮಾಡುತ್ತಿದ್ದಾರೆ. ಕರಿಯಪ್ಪ ಗುಡಿಮನಿ ಅವರು ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳಲ್ಲಿ ನಡೆಸಿದ ದಲಿತ ಕೆಳಜಾತಿಗಳ ಭೂವಂಚಿತರ ಪರವಾಗಿ ಕಟ್ಟಿದ ಭೂ ಹೋರಾಟಗಳು ಮುಖ್ಯವಾಗಿವೆ. ಪ್ರಬಲ ಜಮೀನ್ದಾರರ ವಿರುದ್ಧ ಗಟ್ಟಿ ಧ್ವನಿಯಾಗಿ ಭೂ ವಂಚಿತರಿಗೆ ನ್ಯಾಯ ಒದಗಿಸಲು ಶ್ರಮಿಸಿದ್ದಾರೆ. ಹೊಸಪೇಟೆ ತಾಲೂಕಿನ ವೆಂಕಟಾಪುರ-೭೬ ಗ್ರಾಮದಲ್ಲಿ ದಲಿತರ ೩ ಎಕರೆ ಸ್ಮಶಾನ ಭೂಮಿಗಾಗಿನ ಹೋರಾಟ, ಆರಂಭಕ್ಕೆ ಉಲ್ಲೇಖಿಸಿದ ಎಸ್.ಆರ್.ಪುರದ ಭೂ ಹೋರಾಟದ ಯಶಸ್ಸಿನಿಂದ ೧೩೪ ಎಕರೆ ಭೂಮಿಯು ಭೂಹೀನ ದಲಿತರಿಗೆ ದಕ್ಕಿದ್ದು, ಕಡ್ಡಿರಾಂಪುರದ ಲಂಬಾಣಿ ಸಮುದಾಯದ ಎಂಟು ಎಕರೆ ಜಮೀನನ್ನು ಕೊಡಿಸಲು ಹಂಪಿಯ ವಿದ್ಯಾರಣ್ಯ ಸ್ವಾಮಿಯ ವಿರುದ್ಧವೇ ಹೋರಾಟ ನಡೆಸಿದ್ದು, ಬಳ್ಳಾರಿ ಭಾಗದ ದಲಿತ ಕೆಳಜಾತಿಗಳೇ ಹೆಚ್ಚಿರುವ ಬಂಡೆಟ್ಟಿ ಮತ್ತು ದಾನಪ್ಪ ಬೀದಿಯ ಪೌರಕಾರ್ಮಿಕರ ಸುಮಾರು ೧೪೦ ಎಕರೆ ಜಮೀನಿಗಾಗಿ ಎಲ್. ಪ್ರತಾಪ್ ರೆಡ್ಡಿ ವಿರುದ್ಧ ಹೋರಾಟ ಮಾಡಿ ಮಾರಣಾಂತಿಕ ಹಲ್ಲೆಗೆ ಒಳಗಾದದ್ದು, ಬಳ್ಳಾಪುರದ ದಲಿತರಿಗೆ ಸೇರಿದ ೧೫೦ ಎಕರೆ ಭೂಮಿಗಾಗಿಯೂ ಹೋರಾಟ ನಡೆಸಿದ್ದು, ಹೀಗೆ ದಲಿತ ದಮನಿತರಿಗೆ ಸೇರಬೇಕಾದ ಪ್ರಬಲ ಜಾತಿಯ ಜಮೀನ್ದಾರರು ವಶಪಡಿಸಿಕೊಂಡ ಭೂಮಿಯ ವಿರುದ್ಧ ಕರಿಯಪ್ಪ ಗುಡಿಮನೆ ಹೋರಾಟ ಈಗಲೂ ಮುಂದುವರಿಸಿದ್ದಾರೆ. ಇದೀಗ ನೂರಾರು ವರ್ಷಗಳಿಂದ ಉಳುಮೆ ಮಾಡುತ್ತಿದ್ದ ರೈತರ ಸಾವಿರಾರು ಎಕರೆ ಭೂಮಿಯನ್ನು ವಶಪಡಿಸಿಕೊಳ್ಳುತ್ತಿರುವ ಅರಣ್ಯ ಇಲಾಖೆಯ ವಿರುದ್ಧವೂ ಕಾನೂನು ಹೋರಾಟ ನಡೆಸುತ್ತಿದ್ದಾರೆ. ರಾಜ್ಯದ ಭೂಮಿ ವಸತಿ ಹಕ್ಕು ವಂಚಿತ ಹೋರಾಟ ಸಮಿತಿಯ ಸಕ್ರಿಯ ಸದಸ್ಯರಾಗಿಯೂ ದುಡಿಯುತ್ತಿದ್ದಾರೆ. ಕರಿಯಪ್ಪ ಗುಡಿಮನಿ ಅವರು ಮತ್ತೊಂದು ಹೋರಾಟದ ಆಯಾಮವೆಂದರೆ, ಒಳಮೀಸಲಾತಿಗಾಗಿ ನಡೆದ ಹೋರಾಟವಾಗಿದೆ. ಕಳೆದ ಮೂವತ್ತು ವರ್ಷಗಳಿಂದಲೂ ಮಾದಿಗ ಸಮುದಾಯದ ದನಿಯಾಗಿ ನ್ಯಾಯಯುತ ಒಳಮೀಸಲಾತಿಗಾಗಿ ಹೋರಾಟ ನಡೆಸಿದ್ದಾರೆ. ಕೇಂದ್ರ ಸರಕಾರ ಒಳಮೀಸಲಾತಿ ಕುರಿತ ನಿರ್ಧಾರವನ್ನು ರಾಜ್ಯ ಸರಕಾರಗಳಿಗೆ ವಹಿಸಿದ ನಂತರ ಕರ್ನಾಟಕದಲ್ಲಿ ತೀವ್ರಗೊಂಡ ಒಳಮೀಸಲಾತಿ ಹೋರಾಟದಲ್ಲಿ ಕರಿಯಪ್ಪ ಅವರದು ಬದ್ಧತೆಯ ಹೋರಾಟ. ಹಾಗಾಗಿ ಕರ್ನಾಟಕದ ಒಳಮೀಸಲಾತಿ ಹೋರಾಟದ ಚರಿತ್ರೆಯಲ್ಲಿ ಹಿರಿಯ ಹೋರಾಟಗಾರರ ಜತೆ ಕರಿಯಪ್ಪ ಗುಡಿಮನಿ ಅವರದೂ ಮರೆಯಲಾರದ ಹೆಸರು. ಕರಿಯಪ್ಪ ಅವರು ಚಳವಳಿಯ ತತ್ವ ಸಿದ್ಧಾಂತಗಳನ್ನು ಓದಿ ತಿಳಿದವರಲ್ಲ. ಹೋರಾಟ ಚಳವಳಿಗಳ ಜತೆ ಜತೆಗೇ ಸಾಮಾಜಿಕ ನ್ಯಾಯದ ಸಮತೆಯ ದೃಷ್ಟಿಕೋನವನ್ನು ಕಂಡುಕೊಂಡವರು. ಹಾಗಾಗಿ ಸಿದ್ಧಾಂತಗಳಾಚೆ ಒಬ್ಬ ಮನುಷ್ಯನಾಗಿ ಸ್ಪಂದಿಸುವ ಗುಣ ಗುಡಿಮನಿ ಅವರ ವಿಶಿಷ್ಟತೆಯಾಗಿದೆ. ಒಳಮೀಸಲಾತಿಯ ಹಂಚಿಕೆಯಲ್ಲಿ ಅಲೆಮಾರಿ ಸಮುದಾಯಗಳಿಗೆ ಆದ ಅನ್ಯಾಯವನ್ನು ವಿರೋಧಿಸಿ ದಿಲ್ಲಿಯಲ್ಲಿ ನಡೆದ ಹೋರಾಟದಲ್ಲಿ ಪಾಲ್ಗೊಂಡದ್ದು ಮನುಷ್ಯತ್ವದ ನಡೆಯಾಗಿದೆ. ಚಿಂತಕ ಬಿ. ಪೀರ್ಬಾಷ ಅವರು ‘‘ಕರಿಯಪ್ಪ ಗುಡಿಮನಿ ಅವರು ಚಳವಳಿಗಾರರಾಗಿ ನನಗೆ ಮುಖ್ಯವಾಗುವುದು ಅವರ ಮುಗ್ಧತೆ ಮತ್ತು ಬದ್ಧತೆ. ಯಾವುದೇ ಸಂಘಟನೆಗಳು ಹೋರಾಟಗಳನ್ನು ಆಯೋಜಿಸಲಿ ಅನ್ಯಾಯ ನಡೆದಿದೆ ಅಂತ ಗೊತ್ತಾದರೆ ಸಾಕು ಅದರ ವಿರುದ್ಧ ದನಿ ಎತ್ತುವುದು. ಒಮ್ಮೆ ಯಾವುದೇ ಹೋರಾಟಕ್ಕೆ ಧುಮುಕಿದರೆ ಆ ಹೋರಾಟ ಗೆಲ್ಲುವ ತನಕ ಗಟ್ಟಿಯಾಗಿ ನಿಲ್ಲುವ ಬದ್ಧತೆ ಇರುವುದು. ಹಾಗಾಗಿ ಬಲಾಢ್ಯ ಜಮೀನ್ದಾರಿ ಶಕ್ತಿಗಳನ್ನು ಎದುರು ಹಾಕಿಕೊಂಡು ದಲಿತ ದಮನಿತರ ಪರವಾಗಿ ನಿಲ್ಲಲು ಸಾಧ್ಯವಾಗಿದೆ’’ ಎನ್ನುತ್ತಾರೆ. ಕರಿಯಪ್ಪ ಗುಡಿಮನಿ ಅವರು ರಾಜ್ಯದ ಹಿರಿಯ ಹೋರಾಟಗಾರರ ಸಂಗಾತಿಯಾದಂತೆ ಹೊಸ ತಲೆಮಾರಿನ ಅಚ್ಚುಮೆಚ್ಚಿನ ನಾಯಕ ಕೂಡ. ಸಂಘಟನೆಗಳಲ್ಲಿ ನಾಯಕ ಸ್ಥಾನಕ್ಕೆ ಸ್ಪರ್ಧಿಸದೆ, ಒಬ್ಬ ನಿಷ್ಠಾವಂತ ಪ್ರಾಮಾಣಿಕ ಕಾರ್ಯಕರ್ತನಾಗಿರುವುದೇ ಅವರ ಗುರುತಾಗಿದೆ. ವರ್ಗಹೋರಾಟದ ನೆಲೆಯ ಎಡಪಂಥೀಯ ಚಳವಳಿಗಳ ಜತೆಗಿದ್ದೂ, ಜಾತಿ ನೆಲೆಯ ಶೋಷಣೆಯ ವಿರುದ್ಧದ ಹೋರಾಟದ ಅಗತ್ಯತೆಯ ಖಚಿತತೆ ಇಂತಹ ಕರಿಯಪ್ಪ ಗುಡಿಮನಿ ಅವರ ದಪ್ಪ ಮೀಸೆಯ ಮುಖದಲ್ಲಿ ಹೋರಾಟದ ಕಿಚ್ಚಿನ ಜತೆ ಮುಗುಳ್ನಗೆ ಎಂದೂ ಮಾಸದಿರಲಿ.
ಪಾಕ್ ಕ್ರಿಕೆಟ್’ನಲ್ಲಿ ಮಹಾ ಭೂಕಂಪ: ಇಬ್ಬರು ಹಿರಿಯ ಆಟಗಾರರ ವಿಶ್ವಕಪ್ ಅಭಿಯಾನಕ್ಕೆ ಬಹುತೇಕ ತೆರೆ?
Pakistan T20 Matches : ಭಾರತದ ಎದುರಿನ ಪಂದ್ಯವನ್ನು ಪೈಪೋಟಿ ನೀಡದೇ ಸೋತಿದ್ದಕ್ಕಾಗಿ, ಪಾಕಿಸ್ತಾನದ ಜನತೆ ಮತ್ತು ಪಿಸಿಬಿಯಿಂದ, ಆಟಗಾರರು ತೀವ್ರ ಒತ್ತಡಕ್ಕೆ ಒಳಗಾಗಿದ್ದಾರೆ. ಅತ್ಯುತ್ತಮ ಪ್ರದರ್ಶನವನ್ನು ನೀಡದೇ ಇರುವ ಇಬ್ಬರು ಹಿರಿಯ ಆಟಗಾರರನ್ನು, ನಮೀಬಿಯಾ ಜೊತೆಗಿನ ನಿರ್ಣಾಯಕ ಪಂದ್ಯದಿಂದ ಕೈಬಿಡುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.
ಕುಕಿ- ನಾಗಾ ಸಂಘರ್ಷ: ಮಣಿಪುರ ಶಾಲೆಯಿಂದ 51 ಮಕ್ಕಳ ಸ್ಥಳಾಂತರ
ಗುವಾಹತಿ: ಮಣಿಪುರದ ಉಖ್ರುಲ್ ಜಿಲ್ಲೆಯಲ್ಲಿ ಕುಕಿ ಮತ್ತು ನಾಗಾ ಜನಾಂಗಗಳ ನಡುವೆ ಸಂಘರ್ಷ ಆರಂಭವಾಗಿರುವ ನಡುವೆಯೇ ಭದ್ರತಾ ಆತಂಕದ ಹಿನ್ನೆಲೆಯಲ್ಲಿ ಭದ್ರತಾ ಪಡೆಗಳು ರಾಮ್ವಾ ಜವಾಹರ್ ನವೋದಯ ವಿದ್ಯಾಲಯದಿಂದ 51 ಕುಕಿ ವಿದ್ಯಾರ್ಥಿಗಳನ್ನು ಸುರಕ್ಷಿತ ತಾಣಗಳಿಗೆ ಸ್ಥಳಾಂತರಿಸಿವೆ. ಉಖ್ರೂಲ್ ಜಿಲ್ಲಾ ಪೊಲೀಸರು ವಿದ್ಯಾರ್ಥಿಗಳನ್ನು ಶಾಲೆಯಿಂದ ತೆರವುಗೊಳಿಸಿ, ಕಂಗ್ಪೋಕ್ಪಿ ಜಿಲ್ಲೆಗೆ ಸ್ಥಳಾಂತರಿಸುವ ಸಲುವಾಗಿ ಸೈಕುಲ್ ಪೊಲೀಸ್ ತಂಡಕ್ಕೆ ಹಸ್ತಾಂತರಿಸಿದ್ದಾರೆ. ಇದರಲ್ಲಿ 20 ಬಾಲಕಿಯರು ಮತ್ತು 31 ಬಾಲಕರು ಸೇರಿದ್ದಾರೆ. ನಾಗಾ ವಿದ್ಯಾರ್ಥಿಗಳ ಪ್ರಾಬಲ್ಯ ಇರುವ ಸ್ಥಳದಿಂದ ತೆರವುಗೊಳಿಸಿರುವ ವಿದ್ಯಾರ್ಥಿಗಳ ತಂಡವನ್ನು ಸದ್ಯಕ್ಕೆ ಅಸ್ಸಾಂ ರೈಫಲ್ಸ್ ರಕ್ಷಣೆಯಲ್ಲಿ ಇಡಲಾಗಿದೆ ಎಂದು ಮೂಲಗಳು ಹೇಳಿವೆ. ಜಿಲ್ಲೆಯಲ್ಲಿ ಪ್ರಸ್ತುತ ಇರುವ ಕಾನೂನು ಪರಿಸ್ಥಿತಿ ಹಿನ್ನೆಲೆಯಲ್ಲಿ 10 ಮತ್ತು 12ನೇ ತರಗತಿಯ 18 ವಿದ್ಯಾರ್ಥಿಗಳ ಪರೀಕ್ಷಾ ಕೇಂದ್ರವನ್ನು ಜೆಎನ್ ವಿ ಕಾಂಗ್ಪೊಕ್ಪಿಗೆ ಸ್ಥಳಾಂತರಿಸಲಾಗಿದೆ. ಇವರ ಜತೆಗೆ ರಾಮ್ವಾ ಜೆವಿಎನ್ ನಲ್ಲಿ ಇದ್ದ ಕುಕಿ ಸಮುದಾಯಕ್ಕೆ ಸೇರಿದ ಇತರ ವಿದ್ಯಾರ್ಥಿಗಳನ್ನು ಕೂಡಾ ಮುನ್ನೆಚ್ಚರಿಕೆ ಕ್ರಮವಾಗಿ ತೆರವುಗೊಳಿಸಲಾಗಿದೆ ಎಂದು ಮಣಿಪುರ ಪೊಲೀಸರು ಎಕ್ಸ್ ಪೋಸ್ಟ್ ನಲ್ಲಿ ವಿವರಿಸಿದ್ದಾರೆ. ಕೆಲ ಸಾರ್ವಜನಿಕರು ಈ ಸ್ಥಳಾಂತರವನ್ನು ಕಿಡಿಗೇಡಿಗಳ ಕ್ರಮ ಎಂದು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ ಎಂದು ಪೊಲೀಸರು ಸ್ಪಷ್ಟನೆ ನೀಡಿದ್ದಾರೆ. ಉದ್ವಿಗ್ನ ಪರಿಸ್ಥಿತಿ ಶಮನಗೊಳಿಸುವ ನಿಟ್ಟಿನಲ್ಲಿ ಟಿಕೆಎಸ್ ಹಾಗೂ ಅದರ ವಲಯ ಘಟಕಗಳು, ಕಥೋ ಕಟಮನೋವ್ ಲಾಂಗ್ ಅಧ್ಯಕ್ಷರ ಸಹಕಾರ ಅಗತ್ಯ. ವಿದ್ಯಾರ್ಥಿಗಳನ್ನು ಸುರಕ್ಷಿತ ತೆರವುಗೊಳಿಸುವಿಕೆಗೆ ಗ್ರಾಮಸ್ಥರನ್ನು ಮನವೊಲಿಸುವ ನಿಟ್ಟಿನಲ್ಲಿ ಅವರ ಸಹಕಾರ ಪಡೆಯಲಾಗಿದೆ ಎಂದು ಹೇಳಿದ್ದಾರೆ.
ಇರಾನ್ ಹಾಗೂ ಅಮೆರಿಕಾ ನಡುವೆ ಉದ್ವಿಗ್ನತೆ ಹೆಚ್ಚಾಗುತ್ತಿದ್ದು, ಈ ನಡುವೆ ಜಿನಿವಾದಲ್ಲಿ ಮಾತುಕತೆ ಆರಂಭವಾಗಲಿದೆ. ಆದರೆ, ಈ ನಡುವೆ ಇರಾನ್ ಕರಾವಳಿ ಪ್ರದೇಶದಲ್ಲಿ ಮಾತು ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದ್ದು, ಅಮೆರಿಕಾ ತನ್ನ 2ನೇ ಬೃಹತ್ ಯುದ್ದನೌಕೆಯನ್ನು ಇರಾನ್ ನತ್ತ ನುಗ್ಗಿಸುತ್ತಿದೆ, ಇದಕ್ಕೆ ಟಕ್ಕರ್ ಕೊಟ್ಟು ಇರಾನ್ ಸಹ ಹೊರ್ಮುಜ್ ಜಲಸಂಧಿಯಲ್ಲಿ ಸಮರಾಭ್ಯಾಸ ನಡೆಸುತ್ತಿದೆ. ಈ ನಡುವೆ ಈಗಾಗಲೇ ಉಭಯದೇಶದ ಅಧಿಕಾರಿಗಳು ಮಾತುಕತೆ ವಿಫಲವಾದರೆ ಯುದ್ದ ನಡೆಉವೆಯುವ ಸಂಭವನೀಯತೆ ಹೆಚ್ಚಿದ್ದು, ಇದಕ್ಕೆ ಸಿದ್ದತೆ ಮಾಡಿಕೊಳ್ಳುತ್ತಿದ್ದೇವೆ ಎಂದು ಬಹಿರಂಗವಾಗಿಯೇ ಹೇಳಿಕೆಗಳನ್ನು ನೀಡುತ್ತಿರುವುದು ಮಾತುಕತೆಯ ಸಫಲವಾಗುವಲ್ಲಿ ಉಭಯರಲ್ಲೇ ಇರುವ ಅನುಮಾನಗಳನ್ನು ಎತ್ತಿ ತೋರಿಸುವಂತಿದೆ.
ಆಕಾಶದಲ್ಲಿ ಸೂರ್ಯ ಇಂದು ದಿಢೀರ್ ನಾಪತ್ತೆ, ಯಾವ ಯಾವ ದೇಶಗಳಲ್ಲಿ ತಿಳಿಯಿರಿ... Solar Eclipse
ಸೂರ್ಯಗ್ರಹಣ ಎಂದರೆ ಸಾವಿರಾರು ವರ್ಷಗಳಿಂದಲೂ ಮನುಷ್ಯರಿಗೆ ಅದೇನೋ ಕುತೂಹಲ &ಅಷ್ಟೇ ಆತಂಕ. ಒಂದು ಕಡೆ ಸೂರ್ಯ ದಿಢೀರ್ ಮಾಯ ಆಗುವುದು ಏಕೆ? ಎಂಬುದು ಕುತೂಹಲ ಕೆರಳಿಸಿ ಅದರ ಬಗ್ಗೆ ತಿಳಿಯಲು ಮನುಷ್ಯರಿಗೆ ಪ್ರೇರೇಪಣೆ ನೀಡಿತ್ತು. ಆದರೆ ಇಡೀ ಭೂಮಿಗೆ ಬೆಳಕು ನೀಡುವ ಇದೇ ಸೂರ್ಯ ಇದ್ದಕ್ಕಿದ್ದಂತೆ ಕಾಣೆ ಆಗುವ ಘಟನೆ ಮನುಷ್ಯರಿಗೆ ಭಯ ಕೂಡ ತರಿಸಿತ್ತು.
ಮಂಗಳೂರಿಗೆ ರೈಲು ಬರಲ್ಲ ಕೇರಳ ಲಾಬಿ ಜೊತೆಗೆ ಸುಳ್ಳು ಭರವಸೆ: ಸುರತ್ಕಲ್, ಮೂಲ್ಕಿ, ಉಡುಪಿ, ಕಾರವಾರ ಜನರಿಗೆ ಅನ್ಯಾಯ
No Train to Mangaluru Row: ಮಂಗಳೂರಿಗೆ ರೈಲು ಬರುವುದಿಲ್ಲ ಎನ್ನುವ ಕೇರಳ ಲಾಬಿ ಹಾಗೂ ಸುಳ್ಳುಗಳಿಂದ ಕರ್ನಾಟಕದ ಕರಾವಳಿ ಜನರಿಗೆ ಅನ್ಯಾಯವಾಗುತ್ತಿರುವ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ನಡೆದಿದೆ. ಮುಖ್ಯವಾಗಿ ಕೇರಳದ ಲಾಭಿ ಮತ್ತು ಸುಳ್ಳುಗಳಿಂದ ಸುರತ್ಕಲ್, ಮೂಲ್ಕಿ, ಉಡುಪಿ, ಕಾರವಾರ ಜನರಿಗೆ ಅನ್ಯಾಯವಾಗುತ್ತಿದೆ ಎನ್ನುವ ಮಾತು ಕೇಳಿ ಬಂದಿದೆ. ಮಂಗಳೂರಿಗೆ ರೈಲು ಬರಲ್ಲ ಎಂಬ
‘ನಮ್ ಸಾಲಿ’: ಕಲ್ಯಾಣ ಕರ್ನಾಟಕ ಭಾಗದ ಸಾರ್ವಜನಿಕ ಶಿಕ್ಷಣ ವ್ಯವಸ್ಥೆಗೆ ಹಿಡಿದ ಕನ್ನಡಿ
‘ನಮ್ ಸಾಲಿ’ ಚಿತ್ರದ ಯಶಸ್ಸಿಗೆ ಚಿತ್ರದ ವಸ್ತು ಪ್ರಧಾನ ಕಾರಣವಾಗಿದೆ. ಶಂಕರಯ್ಯ ಘಂಟಿಯವರು ಈ ಭಾಗದ ಗಮನಾರ್ಹ ಕಥಾಗಾರರು. ಅವರ ಹಲವು ಅತ್ಯುತ್ತಮ ಕಥೆಗಳಲ್ಲಿ ನಮ್ ಸಾಲಿಯೂ ಒಂದಾಗಿದೆ. ಕಥೆಯ ಜೀವಧ್ವನಿಯನ್ನು ನಿರ್ದೇಶಕರು ಸಮರ್ಥವಾಗಿ ಹಿಡಿದಿಡುವಲ್ಲಿ ಬಹುತರವಾಗಿ ಯಶಸ್ಸು ಸಾಧಿಸಿದ್ದಾರೆ. ನಿರ್ಮಾಪಕ, ನಿರ್ದೇಶಕರಿಬ್ಬರಿಗೂ ಒಡಲ ಬೆಂಕಿಯಾಗಿರುವ ಸ್ವಾನುಭವವನ್ನು ಚಿತ್ರವಾಗಿ ಪಡಿಮೂಡಿಸುವಲ್ಲಿ ತಾಳಿದ ಶ್ರದ್ಧೆ ಮತ್ತು ವಿನಿಯೋಗಿಸಿದ ಶ್ರಮ ಎರಡೂ ಎದ್ದು ಕಾಣಿಸುತ್ತಿವೆ. ಇದೇ ಜನವರಿ 30ರಿಂದ ಫೆಬ್ರವರಿ 6ರವರೆಗೆ ಬೆಂಗಳೂರಿನ ಲುಲು ಮಾಲ್ನಲ್ಲಿ 17ನೇ ಅಂತರ್ರಾಷ್ಟ್ರೀಯ ಚಲನ ಚಿತ್ರೋತ್ಸವ ಹಲವು ಅಸಮಾಧಾನಗಳೊಂದಿಗೆ ಸಂಪನ್ನಗೊಂಡಿದೆ. ಅಂತರ್ರಾಷ್ಟ್ರೀಯ ಮಟ್ಟದಲ್ಲಿ ನಡೆಯುವ ಸಿನೆಮಾ ಹಬ್ಬಗಳ ಸರಣಿಯಲ್ಲಿ ಭಾರತದ ಬೆಂಗಳೂರಿನಲ್ಲಿ ನಿರಂತರವಾಗಿ ಕಳೆದ 17 ವರ್ಷಗಳಿಂದಲೂ ನಡೆದುಕೊಂಡು ಬರುತ್ತಿರುವ ಸಿನಿ ಹಬ್ಬಕ್ಕೆ ತನ್ನದೇ ಮಹತ್ವವಿದೆ. ಸಿನಿ ರಸಿಕರ ಅತ್ಯಾಪ್ತ ಸುಸಂಧಿಯಾಗಿರುವ ಇದು ಜಗತ್ತಿನಲ್ಲಿ ಕಾಲಕಾಲಕ್ಕೂ ಸಂಭವಿಸುತ್ತಿರುವ ವಿದ್ಯಮಾನಗಳನ್ನು ಕಲಾತ್ಮಕವಾಗಿ ನಿರೂಪಿಸುವ ಚಾರಿತ್ರಿಕ ಪ್ರಸಂಗವಾಗಿಯೂ ನೆಲೆ ಕಂಡುಕೊಳ್ಳುತ್ತಿದೆ. ಕಲೆ ಎನ್ನುವುದು ನಿರಾಮಯ ಎನ್ನುವಾಗಲೂ ಆಳುವ ಪ್ರಭುತ್ವಗಳ ಕರಿ ನೆರಳು ಸಿನೆಮೋತ್ಸವದಂಥ ಜಾಗತಿಕ ವಿದ್ಯಮಾನಗಳನ್ನು ಪ್ರಭಾವಿಸದೆ ಬಿಟ್ಟಿಲ್ಲ. ಈ ಬಾರಿ ಬೆಂಗಳೂರಿನಲ್ಲಿ ನಡೆದ 17ನೇ ಚಲನ ಚಿತ್ರೋತ್ಸವದ ಮೇಲೆ ತುಸು ಹೆಚ್ಚೇ ಇದು ಪರಿಣಾಮ ಬೀರಿದೆ. ಕೇಂದ್ರದಲ್ಲಿ ಫ್ಯಾಶಿಸ್ಟ್ ಸರಕಾರವಿದ್ದು ಸಹಜವಾಗಿಯೇ ಅದು ತನ್ನ ಕೋಮುವಾದಿ ದುರುದ್ದೇಶವನ್ನು ಮುಂದೂಡದೆ ಇರದು. ಆದರೆ ಕೇಂದ್ರ ಸರಕಾರದಲ್ಲಿ ವಿರೋಧ ಪಕ್ಷವಾಗಿರುವ ಕಾಂಗ್ರೆಸ್ ಆಡಳಿತವೇ ಕರ್ನಾಟಕದಲ್ಲಿ ಇರುವಾಗಲೂ ಈ ಬಾರಿಯ ಚಲನಚಿತ್ರೋತ್ಸವದಲ್ಲಿ ಫೆಲೆಸ್ತೀನ್ ಚಿತ್ರ ಪ್ರದರ್ಶನಕ್ಕೆ ಕಡಿವಾಣ ಹಾಕಲಾಯಿತು. ಕರ್ನಾಟಕ ಸರಕಾರದ ಈ ಜನ ವಿರೋಧಿ ನಡೆಯನ್ನು 17 ನೇ ಅಂತರ್ರಾಷ್ಟ್ರೀಯ ಚಿತ್ರ ಹಬ್ಬದ ಅಧಿಕೃತ ರಾಯಭಾರಿಯಾಗಿದ್ದ ಪ್ರಸಿದ್ಧ ಚಿತ್ರ ನಟರಾದ ಪ್ರಕಾಶ ರಾಜ್ ತಮ್ಮ ಉದ್ಘಾಟನಾ ಭಾಷಣದಲ್ಲಿಯೇ ಉಗ್ರವಾಗಿ ಖಂಡಿಸಿದ್ದರು. ಸರಕಾರದ ಈ ಫ್ಯಾಶಿಸ್ಟ್ ನಡೆಯನ್ನು ಸಕಾರಣವಾಗಿ ಟೀಕಿಸಿ ‘‘ಕಲೆಯ ಮೇಲೆ ಸರ್ವಾಧಿಕಾರಿ ಹಿಡಿತ ಸಲ್ಲದು. ಪ್ರಜಾಪ್ರಭುತ್ವವನ್ನು ಒಪ್ಪಿಕೊಂಡಿರುವ ಭಾರತದಂಥ ದೇಶಗಳಿಗೆ ಈ ತೆರನ ನಿರ್ಬಂಧ ಶೋಭಿಸವು’’ ಎಂದು ಸ್ಪಷ್ಟವಾಗಿಯೇ ತಮ್ಮ ಬೇಸರವನ್ನು ವ್ಯಕ್ತಪಡಿಸಿದರು. ಸರಕಾರದ ಈ ನಡೆಯನ್ನು ಖಂಡಿಸಿ ಅನೇಕ ಪ್ರಗತಿಪರರು ಪ್ರಾರಂಭದಲ್ಲಿಯೇ ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದರು. ಕಾಂಗ್ರೆಸ್ ಸರಕಾರ ಮಾತ್ರ ಪ್ರಕಾಶರಾಜ್ ಅವರ ಮಾತುಗಳಿಗಾಗಲಿ, ಪ್ರಗತಿಪರರ ಪ್ರತಿಭಟನೆಗಾಗಲಿ ಕ್ಯಾರೆ ಎನ್ನದೆ ತನ್ನ ಮೊಂಡುತನಕ್ಕೆ ಜೋತು ಬಿದ್ದು ಪಾಲಿಸಿ ವಿಷಯಗಳಲ್ಲಿ ತಾನೂ ಕೇಂದ್ರದ ಬಿಜೆಪಿ ಸರಕಾರಕ್ಕಿಂತ ಭಿನ್ನವಾಗಿಲ್ಲ ಎಂಬುದನ್ನು ಜಗಜ್ಜಾಹೀರುಗೊಳಿಸಿತು. ಎರಡನೆಯದಾಗಿ ಈ ಸಲದ ಚಿತ್ರೋತ್ಸವವು ಸಿನಿರಸಿಕರು, ಸಿನಿ ವಿದ್ವಾಂಸರ ವಿರೋಧದ ನಡುವೆಯೂ ಲುಲು ಮಾಲ್ನಲ್ಲಿ ನಡೆದು ಪ್ರೇಕ್ಷಕರು ಉದ್ದಕ್ಕೂ ಗೋಳಾಡುವಂತಾಯಿತು. ಲುಲು ಮಾಲ್ನಲ್ಲಿ ಅಂತರ್ರಾಷ್ಟ್ರೀಯ ಚಿತ್ರೋತ್ಸವ ನಡೆಸಲು ಅವಶ್ಯವಿದ್ದಷ್ಟು ಸ್ಥಳಾವಕಾಶ, ಅಲ್ಲಿಗೆ ತಲುಪಲು ಬೇಕಾದ ಸಂಚಾರ ವ್ಯವಸ್ಥೆ, ಜನಸಾಮಾನ್ಯರಿಗೆ ಒದಗಿ ಬರಬಹುದಾದ ಉಟೋಪಚಾರದ ಲಭ್ಯತೆ ಇತ್ಯಾದಿ ಅನಾನುಕೂಲಗಳಿವೆ ಎಂದು ಸಿನಿ ಆಸಕ್ತರು ಗಂಟಲು ಹರಿದುಕೊಂಡು ಹೇಳಿದಾಗಲೂ ಸರಕಾರ ತಲೆಗೆ ಹಾಕಿಕೊಳ್ಳಲೇ ಇಲ್ಲ. ಇದರಿಂದಾಗಿ ಪ್ರೇಕ್ಷಕರಿಗೆ ತಾವು ಇಷ್ಟಪಟ್ಟ ಹಲವಾರು ಸಿನೆಮಾಗಳನ್ನು ಹರಸಾಹಸ ಪಟ್ಟರೂ ನೋಡಲು ಸಾಧ್ಯವಾಗಲಿಲ್ಲ. ಸ್ಕ್ರೀನ್ಗಳ ಮುಂದೆ ಗಂಟೆಗಟ್ಟಲೆ ಸಾಲಿನಲ್ಲಿ ನಿಂತು ಕೊನೆಗೂ ಸೀಟ್ ಸಿಗದೆ ವಾಪಸಾಗಬೇಕಾಯಿತು. ಯಾರೋ ರಾಜಕಾರಣಿಯನ್ನು ಮೆಚ್ಚಿಸಲೆಂದು ಇಂಥದ್ದೊಂದು ಅವಘಡಕ್ಕೆ ಜನರನ್ನು ತಳ್ಳಲಾಯಿತು ಎಂಬ ಪಿಸುಮಾತು ಉದ್ದಕ್ಕೂ ಅನುರಣಿಸಿತ್ತು. ಎಲ್ಲ ರಸಿಕರು ದಂಡಿ ದಂಡಿಯಾಗಿ ರಾಜಕಾರಣಿಗಳಿಗೆ ಶಾಪ ಹಾಕುತ್ತಲೇ ಚಿತ್ರ ವೀಕ್ಷಿಸಿದರು. ಜನರು ಹಾಕುವ ಹತಾಷೆ, ಶಾಪಗಳಿಗೆ ನಿಜವಾಗಿಯೂ ಕ್ರಿಯಾತ್ಮಕವಾಗುವ ತಾಕತ್ತು ಇದ್ದಿದ್ದರೆ ಖಂಡಿತ ಆಳುವ ಪ್ರಭುಗಳ ಸಿಂಹಾಸನ ಉರಿದು ಹೋಗದೆ ಇರುತ್ತಿರಲಿಲ್ಲ. ಆದರೆ ಅಂಥ ಯಾವ ಶಕ್ತಿಯು ಜನರ ಹತಾಶೆ, ಶಾಪಗಳಿಗೆ ಇಲ್ಲ ಎಂಬುದು ರಾಜಕಾರಣಿಗಳಿಗೆ ಸ್ಪಷ್ಟವಾಗಿ ಗೊತ್ತಿದೆ. ಈ ಎಲ್ಲ ಅವಾಂತರಗಳ ನಡುವೆಯೂ ಆಸಕ್ತರು ಅನೇಕ ಅಡ್ಡಿ ಆತಂಕಗಳನ್ನು ಸಹಿಸಿಕೊಳ್ಳುತ್ತಲೇ ಸಿನೆಮಾ ನೋಡುವುದನ್ನು ಬಿಡಲಿಲ್ಲ. ರಾಜ್ಯದ ಮೂಲೆ ಮೂಲೆಗಳಿಂದ ಬಂದಿದ್ದ ರಸಿಕರು ತುಸು ಜಾಸ್ತಿಯೇ ಹಣ ವ್ಯಯಿಸಿ ಸಿನೆಮಾ ನೋಡಬೇಕಾಯಿತು. ಸಿನಿ ರಸಿಕರ ಉತ್ಸಾಹ ಮಾತ್ರ ನಿಜಕ್ಕೂ ಕನ್ನಡಿಗರ ಕಲಾಭಿಮಾನಕ್ಕೆ ಸಾಕ್ಷಿಯಾಗಿತ್ತು. ಇಡೀ ಹಬ್ಬದಲ್ಲಿ ಕೆಲವೇ ಒಳ್ಳೆಯ ಚಿತ್ರಗಳಿದ್ದವು ಎಂಬುದು ಬಹುತೇಕರ ಅಭಿಪ್ರಾಯವಾಗಿತ್ತು. ಅದರಲ್ಲಿ ಕನ್ನಡದ ‘ನಮ್ ಸಾಲಿ’ ಚಿತ್ರವು ಒಂದಾಗಿತ್ತು. ಕನ್ನಡ ಸಿನೆಮಾ ವಿಭಾಗದ ಸ್ಪರ್ಧೆಯಲ್ಲಿ ಇದು ದ್ವಿತೀಯ ಬಹುಮಾನ ಪಡೆದು ಕಲ್ಯಾಣ ಕರ್ನಾಟಕ ಭಾಗದ ಪತಾಕೆಯನ್ನು ಎತ್ತಿ ಹಿಡಿಯಿತು. ಏಕೆಂದರೆ ‘ನಮ್ ಸಾಲಿ’ ಚಿತ್ರದ ನಿರ್ಮಾಪಕ, ನಿರ್ದೇಶಕರಿಬ್ಬರೂ ಕಲ್ಯಾಣ ಕರ್ನಾಟಕದ ಕಲಬುರಗಿ ಜಿಲ್ಲೆಯಿಂದ ಬಂದವರು. ಯುವ ನಿರ್ದೇಶಕ ಅನಿಲ ರೇವೂರ್, ಕಥೆ ಬರೆದು ನಿರ್ಮಾಣದ ಜವಾಬ್ದಾರಿ ಹೊತ್ತುಕೊಂಡಿದ್ದ ಶಂಕರಯ್ಯ ಘಂಟಿ ಇಬ್ಬರೂ ಕಲ್ಯಾಣ ಕರ್ನಾಟಕ ಭಾಗದ ಕಪ್ಪು ನೆಲ, ಸೊಕ್ಕಿದ ಸೂರ್ಯನ ನೆಲೆವನೆಯಾಗಿರುವ ಕಲಬುರಗಿ ಜಿಲ್ಲೆಯಿಂದ ಬಂದವರು. ಶಂಕರಯ್ಯ ಘಂಟಿ ಮೂಲತಃ ಬಿಜಾಪುರ ಜಿಲ್ಲೆಗೆ ಸೇರಿದವರಾದರೂ ಕಾರ್ಯಕ್ಷೇತ್ರವಾಗಿ ಕಲಬುರಗಿಯನ್ನು ಆಯ್ಕೆ ಮಾಡಿಕೊಂಡಿದ್ದು ಅಲ್ಲಿಯೇ ತಮ್ಮ ಕಲಾಪಯಣವನ್ನು ಸಮೃದ್ಧವಾಗಿಸಿಕೊಂಡವರು. ಕಲಬುರಗಿ ವಿಶ್ವವಿದ್ಯಾನಿಲಯದಲ್ಲಿ ಕಾರ್ಯನಿರ್ವಹಿಸಿ ನಿವೃತ್ತಿಯಾಗಿದ್ದು ಇದೀಗ ಪೂರ್ಣ ಪ್ರಮಾಣದಲ್ಲಿ ಕಲೆಗಾಗಿಯೇ ಮುಡಿಪಾಗಿದ್ದಾರೆ. ಅನಿಲ ರೇವೂರ್ ಅವರಂತೂ ತೀರ ಚಿಕ್ಕಂದಿನಿಂದಲೂ ಬೀದಿ ನಾಟಕ ಮತ್ತು ರಂಗಭೂಮಿಯೊಂದಿಗೆ ಗುರುತಿಸಿಕೊಂಡು ಸ್ವಯಂ ಪ್ರತಿಭೆಯಿಂದಲೇ ಸಂಕೀರ್ಣವೂ, ಅಸಾಧ್ಯ ಪೈಪೋಟಿಯೂ ಇರುವ ಕಲಾಕ್ಷೇತ್ರದಲ್ಲಿ ಏಕಲವ್ಯನಂತೆ ನೆಲೆ ಕಂಡು ಕೊಂಡವರು. ಈ ಇಬ್ಬರೂ ಅಭಿಜಾತ ಕಲಾವಿದರ ಸತತ ಪರಿಶ್ರಮ ಮತ್ತು ಛಲ ಬಿಡದ ಪ್ರಯತ್ನದ ಫಲವಾಗಿಯೇ ‘ನಮ್ ಸಾಲಿ’ಯಂಥ ಸೋಪಜ್ಞತೆಯುಳ್ಳ ಸಿನೆಮಾ ತೆರೆ ಕಂಡಿದೆ. ನಮಗೆಲ್ಲ ಗೊತ್ತಿರುವಂತೆ ಚಲನ ಚಿತ್ರ ಲೋಕದ ಹಾಲಿವುಡ್, ಬಾಲಿವುಡ್, ಸ್ಯಾಂಡಲ್ವುಡ್ ಕ್ಷೇತ್ರಗಳು ಬಡಬಗ್ಗರ ಕೈಗೆ ನಿಲುಕುವಂಥವುಗಳಲ್ಲ. ಆಧುನಿಕ, ಆಧುನಿಕೋತ್ತರ ಕಾಲಘಟ್ಟದ ಎಲ್ಲ ಸಂವಹನ ಮಾಧ್ಯಮಗಳು ರಾಜಧಾನಿ ಬೆಂಗಳೂರಿನ ಸುತ್ತಲೂ ಕೇಂದ್ರೀಕರಿಸಿಕೊಂಡಿದ್ದರಿಂದ 600 ಕಿ.ಮೀ.ನಷ್ಟು ದೂರವಿರುವ ಕಲಬುರಗಿಯಂಥ ಅಭಿವೃದ್ಧಿಹೀನ ಜಿಲ್ಲೆಗಳ ಜನರ ಕೈಗೆ ಈ ಮಾಯಾವಿ ಲೋಕ ಸಿಗುವುದು ಅತ್ಯಂತ ದುರ್ಲಭ. ಇದು ಉತ್ಪ್ರೇಕ್ಷೆಯ ಮಾತಲ್ಲ. ಈವರೆಗೂ ಕಲ್ಯಾಣ ಕರ್ನಾಟಕ ಭಾಗದಿಂದ ಕನ್ನಡದ ಚಿತ್ರ ಜಗತ್ತಿನಲ್ಲಿ ಒಬ್ಬ ನಿರ್ದೇಶಕರು, ಕಲಾವಿದರು (ಒಬ್ಬಿಬ್ಬರು ಹಾಸ್ಯ ಕಲಾವಿದರು, ಸಹಾಯಕ ಕಲಾವಿದರು ಹೊರತು ಪಡಿಸಿ), ಸಂಗೀತ ನಿರ್ದೇಶಕರು ಅಥವಾ ತಂತ್ರಜ್ಞರು ಒಟ್ಟಾರೆ ಚಲನ ಚಿತ್ರ ಕ್ಷೇತ್ರದಲ್ಲಿ ತೊಡಗಿಸಿಕೊಂಡು ಹೆಸರು ಮಾಡಿದವರು ಕಾಣಿಸಿಕೊಂಡಿಲ್ಲ. ಹಾಗಾದರೆ ಇಲ್ಲಿನವರಲ್ಲಿ ಚಲನಚಿತ್ರ ಲೋಕಕ್ಕೆ ಬೇಕಾದ ಪ್ರತಿಭೆ ಇಲ್ಲವೆ? ಚಿತ್ರ ತಯಾರಿಸಲು ಬೇಕಾದ ಚಾಕಚಕ್ಯತೆ, ಪರಿಣತಿ ಇಲ್ಲವೆಂತಲ್ಲ. ಖಂಡಿತ ಆ ಎಲ್ಲ ಪ್ರತಿಭೆ, ಪರಿಣತಿಗಳು ಇವೆಯಾದರೂ ಅವಶ್ಯವಿದ್ದ ಅವಕಾಶಗಳನ್ನು ಪಡೆದುಕೊಳ್ಳಲು ಸಾಧ್ಯವಾಗುತಿಲ್ಲ ಎಂಬುದನ್ನು ಗಮನಿಸಬೇಕು. ಚಲನಚಿತ್ರ ಲೋಕದಲ್ಲಿನ ಕ್ಲಿಷ್ಟ ರಾಜಕಾರಣ, ಅಪಾರ ಹೂಡಿಕೆ ಬಯಸುವ ಅದರ ಸ್ವರೂಪ, ಎಲ್ಲಕ್ಕಿಂತ ಹೆಚ್ಚಾಗಿ ಚಿತ್ರಲೋಕದಲ್ಲಿನ ಮೊನೋಪೊಲಿಯತೆಗಳು ನಮ್ಮ ಭಾಗದವರು ಅಲ್ಲಿ ಕಾಲೂರಲು ಸಾಧ್ಯವಾಗದಂತೆ ಮಾಡಿವೆ. ಈ ಎಲ್ಲ ಸವಾಲುಗಳನ್ನು ಎದುರಿಸಿ ಅನಿಲ್ ರೇವೂರ್ ಮತ್ತು ಶಂಕರಯ್ಯ ಘಂಟಿಯವರ ತಂಡ ಯಶಸ್ವಿ ಚಿತ್ರವೊಂದನ್ನು ನಿರ್ಮಿಸಿದ್ದು ಅಭಿನಂದನಾರ್ಹ. ಅದೂ ಹಿಂದುಳಿಸಲ್ಪಟ್ಟ ಗ್ರಾಮೀಣ ಭಾಗದ ಬವಣೆಯ ಬದುಕನ್ನು ಚಿತ್ರದಲ್ಲಿ ಯಾವ ಅಬ್ಬರವಿಲ್ಲದೆ ಕಟ್ಟಿಕೊಟ್ಟದ್ದು ಇದೆಯಲ್ಲ; ಇದು ಪ್ರಧಾನವಾಗಿ ಗಮನಿಸಬೇಕಾದ ಅಂಶ. ಆಧುನಿಕೋತ್ತರ ತಂತ್ರಜ್ಞಾನದ ಸುನಾಮಿಯಲ್ಲಿ ಇಂದು ಚಲನಚಿತ್ರ ಲೋಕ ದೇದಿಪ್ಯಮಾನವಾಗಿ ಊಹಿಸಲು ಸಾಧ್ಯವಾಗದಷ್ಟು ಉತ್ಕರ್ಷಕ್ಕೇರುತ್ತಿದೆ. ಸಾಮಾನ್ಯರ ಕೈಗೆ ಎಟುಕದಷ್ಟು ನಭೋಸ್ಪರ್ಶಿಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಆಧುನಿಕೋತ್ತರ ಕಾಲಮಾನದ ತಾಂತ್ರಿಕತೆಯ ಮಾನದಂಡಗಳನ್ನಿಟ್ಟುಕೊಂಡು ‘ನಮ್ ಸಾಲಿ’ ಚಿತ್ರದ ದೌರ್ಬಲ್ಯಗಳನ್ನು ಪಟ್ಟಿ ಮಾಡುವುದು ಸುಲಭ. ಸಿನೆಮಾಟೋಗ್ರಾಫಿ, ಎಡಿಟಿಂಗ್ ಇತ್ಯಾದಿಗಳು ಇನ್ನೂ ಚೆನ್ನಾಗಿ ನಿರ್ವಹಿಸಬಹುದಿತ್ತು ಎನ್ನುವುದೇನೊ ಸರಿಯಾದರೂ ಆದರೆ ಅತ್ಯಂತ ಕಡಿಮೆ ಬಜೆಟ್ನಲ್ಲಿ ಸ್ಥಳೀಯರನ್ನೇ ಹೆಚ್ಚು ಬಳಸಿಕೊಂಡು ಇವೆಲ್ಲವನ್ನೂ ನಿಭಾಯಿಸುವುದು ತುಸು ಕಷ್ಟಸಾಧ್ಯವೇ ಸೈ. ಸಿನೆಮಾ ಲೋಕದಲ್ಲಿ ನೆಲೆಯೂರಲು ಒದ್ದಾಡುತ್ತಿರುವ ಕಲ್ಯಾಣ ಕರ್ನಾಟಕ ಭಾಗದವರಿಗೆ ಸಿನೆಮಾ ಛಂದಸ್ಸಿನ ಎಲ್ಲ ಅಂಶಗಳಲ್ಲಿ ಪರ್ಫೆಕ್ಟ್ನೆಸ್ ಸಾಧಿಸಲು ಸಿನಿಮಂದಿಯ ಪ್ರೋತ್ಸಾಹ, ಪ್ರೇರಣೆ ಮತ್ತು ಒಳಗೊಳ್ಳುವಿಕೆಯ ಅವಶ್ಯಕತೆ ಇದೆ. ಅದೇನೇ ಇರಲಿ ಕಥಾವಸ್ತುವನ್ನು ಪರಿಣಾಮಕಾರಿಯಾಗಿ ದಾಟಿಸುವಲ್ಲಿ ಚಿತ್ರ ಬಹುತರವಾಗಿ ಯಶಸ್ಸು ಕಂಡಿದೆ ಎಂಬುದು ಸಿನಿ ವಿಮರ್ಶಕರ ಅಂಬೋಣವಾಗಿತ್ತು. ಕಲಬುರಗಿ ಜಿಲ್ಲೆಯಲ್ಲಿ ಒಂದಷ್ಟು ಹಸಿರು ನೋಡಬೇಕೆಂದರೆ ನೀವು ಚಿಂಚೋಳಿ ತಾಲೂಕಿನ ಗೊಟ್ಟಂಗೊಟ್ಟಿ ಸೆರಗಿಗೆ ಆತುಕೊಳ್ಳಬೇಕು. ಚಿತ್ರ ತಂಡ ಅದಕ್ಕೆಂದೇ ಚಿಂಚೋಳಿ (ಈಗ ಕಾಳಗಿ) ತಾಲೂಕಿನ ಅಲ್ಲಾಪೂರ ಹಳ್ಳಿಯನ್ನೇ ಚಿತ್ರೀಕರಣಕ್ಕೆ ಆಯ್ಕೆ ಮಾಡಿಕೊಂಡದ್ದು ಸೂಕ್ತವೇ ಆಗಿದೆ. ಸಮಾಜೋ ಆರ್ಥಿಕ ದೃಷ್ಟಿಯಿಂದಲೂ ಇದು ಗಮನ ಸೆಳೆಯುತ್ತದೆ. ‘ನಮ್ ಸಾಲಿ’ ಚಿತ್ರದ ಯಶಸ್ಸಿಗೆ ಚಿತ್ರದ ವಸ್ತು ಪ್ರಧಾನ ಕಾರಣವಾಗಿದೆ. ಶಂಕರಯ್ಯ ಘಂಟಿಯವರು ಈ ಭಾಗದ ಗಮನಾರ್ಹ ಕಥಾಗಾರರು. ಅವರ ಹಲವು ಅತ್ಯುತ್ತಮ ಕಥೆಗಳಲ್ಲಿ ನಮ್ ಸಾಲಿಯೂ ಒಂದಾಗಿದೆ. ಕಥೆಯ ಜೀವಧ್ವನಿಯನ್ನು ನಿರ್ದೇಶಕರು ಸಮರ್ಥವಾಗಿ ಹಿಡಿದಿಡುವಲ್ಲಿ ಬಹುತರವಾಗಿ ಯಶಸ್ಸು ಸಾಧಿಸಿದ್ದಾರೆ. ನಿರ್ಮಾಪಕ, ನಿರ್ದೇಶಕರಿಬ್ಬರಿಗೂ ಒಡಲ ಬೆಂಕಿಯಾಗಿರುವ ಸ್ವಾನುಭವವನ್ನು ಚಿತ್ರವಾಗಿ ಪಡಿಮೂಡಿಸುವಲ್ಲಿ ತಾಳಿದ ಶ್ರದ್ಧೆ ಮತ್ತು ವಿನಿಯೋಗಿಸಿದ ಶ್ರಮ ಎರಡೂ ಎದ್ದು ಕಾಣಿಸುತ್ತಿವೆ. ಅಭಿವೃದ್ಧಿಯಲ್ಲಿ ಯಥೇಚ್ಛವಾಗಿ ಹಿಂದುಳಿದಿರುವ ಹಳ್ಳಿಯೊಂದರ ಅವ್ಯವಸ್ಥೆಯ ಆಗರವಾಗಿರುವ ಸರಕಾರಿ ಶಾಲೆಯೊಂದರ ದೃಶ್ಯದೊಂದಿಗೆ ಸಿನೆಮಾ ತೆರೆಯ ಮೇಲೆ ಮೂಡುತ್ತ ಹೋಗುತ್ತದೆ. ಶಿಥಿಲಾವಸ್ಥೆಯಲ್ಲಿರುವ ಎರಡು ಖೋಲಿಯ ಶಾಲೆ. ಕಿತ್ತು ಹೋಗಿರುವ ಕಿಟಕಿ, ಮುರಿದ ಬಾಗಿಲು, ಬಿದ್ದು ಹೋಗಿರುವ ಮೂಲೆ, ಹರಿದು ಹಂಚಾಗಿರುವ ನೆಲಹಾಸು, ಕಂಪೌಂಡಿನ ಖೂನವಿಲ್ಲದ ಆವರಣ, ಎಲ್ಲೆಂದರೆಲ್ಲಿ ಯಥೇಚ್ಛ ನಾಯಿ, ಹಂದಿಗಳ ಸಂಚಾರ. ಹೇಳಿ ಕೇಳಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ. ರೈತ, ಕೃಷಿ ಕೂಲಿ ಕಾರ್ಮಿಕರ ಮಕ್ಕಳೇ ತುಂಬಿರುವ ಶಾಲೆಯ ನಾಲ್ಕು ಕ್ಲಾಸುಗಳಿಗೆ ಒಬ್ಬರೇ ಮಾಸ್ತರ. ಅದಕ್ಕೆ ಏಕೋಪಾಧ್ಯಾಯ ಶಾಲೆ ಎಂಬ ಚಂದದ ಹಣೆ ಪಟ್ಟಿ. ವಿದ್ಯಾರ್ಥಿಗಳಿಗೆ ಶಿಕ್ಷಕರು ತಮ್ಮ ಶಾಲೆಯ ಕುರಿತು ಪ್ರಬಂಧ ಬರೆದುಕೊಂಡು ಬರಲು ಹೇಳಿದ್ದಾರೆ. ವಿದ್ಯಾರ್ಥಿನಿಯೊಬ್ಬಳು ಅಚ್ಚುಕಟ್ಟಾಗಿ ತನ್ನ ಶಾಲೆಯನ್ನು ಹೊಗಳಿ ಅದು ಸುಂದರವಾಗಿದೆ ಎಂದು ಬರೆದುಕೊಂಡು ಬಂದಿದ್ದ ಪ್ರಬಂಧ ಓದುತ್ತಾಳೆ. ಮಾಸ್ತರ ಖುಷಿಯಿಂದ ಶಾಭಾಷ್ಗಿರಿ ಕೊಡುತ್ತಾರೆ. ಎರಡನೆಯದಾಗಿ ತುಸು ಚೂಟಿಯಾಗಿದ್ದ ಗಂಗ್ಯಾ ಎಂಬ ಹುಡುಗನಿಗೆ ಪ್ರಬಂಧ ಓದಲು ಹೇಳುತ್ತಾರೆ. ಆತ ಪ್ರಬಂಧದಲ್ಲಿ ಬರೆದುಕೊಂಡು ಬಂದಿದ್ದ ಶಾಲೆ ಅವ್ಯವಸ್ಥೆಯನ್ನು ಅಂದರೆ ಮುರಿದ ಕಿಟಕಿ, ಕಿತ್ತು ಹೋದ ಬಾಗಿಲು, ಶೌಚಾಲಯವಿಲ್ಲದ್ದು, ಮೂಲಿ ಬಿದ್ದು ಹೋದದ್ದು ಎಲ್ಲವನ್ನು ಹೂಬಾಹೂಬ್ ವಿವರಿಸಲು ಹೋಗುತ್ತಾನೆ. ಮಾಸ್ತರರಿಗೆ ಸಿಟ್ಟು ಬಂದು ಗಂಗ್ಯಾನಿಗೆ ಹೊಡೆಯುತ್ತಾರೆ. ಮಾಸ್ತರನ ಚಾಬೂಕಿನ ನೋವಿಗೆ ಗಂಗ್ಯಾ ಅಡ್ರಾಸಿ ಅಳಲು ಸುರುವಿಟ್ಟುಕೊಳ್ಳುತ್ತಾನೆ. ಅಷ್ಟರಲ್ಲಿ ಗಂಗ್ಯಾನ ಆಯಿ (ಅಜ್ಜಿ) ಬಂದು ಮಾಸ್ತರನಿಗೆ ಬಯ್ದು ಮೊಮ್ಮಗನನ್ನು ಕರೆದುಕೊಂಡು ಹೋಗುತ್ತಾಳೆ. ಎಷ್ಟು ರಮಿಸಿದರೂ ಗಂಗ್ಯಾ ಅಳುವುದನ್ನು ನಿಲ್ಲಿಸುವುದಿಲ್ಲ. ತಾನು ಶಾಲೆಗೆ ಹೋಗಲಾರೆ ಎಂಬ ಒಂದೇ ಹಟ ಅವನದು. ಈ ಕಡೆ ಗಂಗ್ಯಾನ ಅವ್ವ ಅಪ್ಪರ ಮುಗಿಯದ ಜಗಳ. ಎಷ್ಟು ದುಡಿದರೂ ಮನೆ ವೆಚ್ಚ ನಡೆಯದ ಸಂಕಟ. ಎರಡು ಎಕರೆ ಹೊಲದಿಂದ ಲಾಭ ಬಂದುದಕ್ಕಿಂತ ಅದಕ್ಕೆ ಖರ್ಚು ಮಾಡಿದ್ದೇ ಹೆಚ್ಚು. ಗಂಗ್ಯಾನ ಅವ್ವನಿಗೆ ದುಡಿಯಲು ಷಹರಕ್ಕೆ ಹೋಗುವ ತವಕ. ಆದರೆ ಗಂಗ್ಯಾನ ಅಪ್ಪ ಹಳ್ಳಿ ಬಿಟ್ಟು ಹೋಗಲು ಸಿದ್ಧವಿಲ್ಲ. ಏಕೆಂದರೆ ಅವನ ಅವ್ವ ಮುದುಕಿ. ಇವಳನ್ನು ಬಿಟ್ಟು ಹೋಗಲು ಮನಸ್ಸಿಲ್ಲ. ಮುದುಕಿಯನ್ನು ಸಂಗಡ ಕರೆದುಕೊಂಡು ಹೋಗಬೇಕೆಂದರೆ ಅವಳು ಆಕಳೊಂದನ್ನು ಸಾಕಿದ್ದಾಳೆ. ಅದರ ಹಯನದ ಮೇಲೆ ಅವಳ ಜೀವನ. ಹಾಲು ಮಾರಿ ಅಷ್ಟು ಇಷ್ಟು ಮನೆ ಖರ್ಚು ನಿಭಾಯಿಸುತ್ತಿರುವ ಅವಳು ತನ್ನೂರು ಬಿಡಲು ಸಿದ್ಧವಿಲ್ಲ. ಹೀಗಾಗಿ ಅವ್ವ ಅಪ್ಪರಿಬ್ಬರಿಗೂ ಜಗಳ ನಿತ್ಯ ನಿರಂತರ. ಇದ್ದೊಂದು ಖೋಲಿಯಲ್ಲಿ ಜಗಳದ ಗದ್ದಲದಲ್ಲಿಯೇ ಗಂಗ್ಯಾ ಓದಿಕೊಳ್ಳಬೇಕು. ಆದರೂ ಗಂಗ್ಯಾ ಆಯಿಯ ಅಚ್ಚುಮೆಚ್ಚಿನ ಮೊಮ್ಮಗ. ಊರಿಗೆಲ್ಲ ಹಾಲು ಹಾಕುವ ಕೆಲಸ ಗಂಗ್ಯಾನದೆ. ಅಂತೂ ಅವನ ಅಪ್ಪ ಒಂದು ದಿನ ಗಂಗ್ಯಾನ ಮೇಲೆ ಹೆಚ್ಚು ಪ್ರೀತಿ ತೋರಿಸಿ ಸಂತೆಗೆ ಕರೆದುಕೊಂಡು ಹೋಗುತ್ತಾನೆ. ಮಗ ಬೇಡಿದ್ದೆಲ್ಲ ಅದರಲ್ಲಿಯೂ ಇಷ್ಟದ ಬಣ್ಣದ ಚಸ್ಮಾ (ಕನ್ನಡಕ) ಕೊಡಿಸುತ್ತಾನೆ. ತನ್ನ ಬಣ್ಣದ ಚಸ್ಮಾ ಹಾಕಿಕೊಂಡು ಬೀಗುವ ಗೆಳೆಯರಿಗೆಲ್ಲ ತೋರಿಸುತ್ತಾನೆ. ಹಗಲು ರಾತ್ರಿ ಹಾಕಿದ ಚಾಳೀಸು ತೆಗೆಯುವುದೇ ಇಲ್ಲ. ಖುಷಿಯಲ್ಲಿ ಅಂದಿನ ರಾತ್ರಿ ಕಳೆಯುವಲ್ಲಿ ಗಂಗ್ಯಾನ ಪಾಲಕರು ಅವನಿಗೆ ಹೇಳದಂತೆ ಹೊತ್ತು ಮೂಡುವುದರಲ್ಲಿ ನೆರೆ ಮನೆಯ ಮುಸ್ಲಿಮ್ ಗೆಳೆಯನ ಲಾರಿಯಲ್ಲಿ ದುಡಿಯಲು ಪಟ್ಟಣಕ್ಕೆ ಗುಳೆ ಹೋಗುತ್ತಾರೆ. ಎದ್ದ ಗಂಗ್ಯಾ ಅಳಲು ಸುರು ಮಾಡುತ್ತಾನೆ. ಅಜ್ಜಿ ಎಷ್ಟು ರಮಿಸಿದರೂ ಅಳು ನಿಲ್ಲಿಸುವುದಿಲ್ಲ. ಅಂದಿನ ರಾತ್ರಿ ಅಜ್ಜಿ ಗಾಢ ನಿದ್ರೆಯಲ್ಲಿರುವಾಗ ಎದ್ದ ಗಂಗ್ಯಾ ಆಕಳನ್ನು ಹೊಡೆದುಕೊಂಡು ದೂರ ಹೋಗಿ ಬಿಟ್ಟು ಬರುತ್ತಾನೆ. ಏಕೆಂದರೆ ಆಕಳಿರುವುದರಿಂದಲೇ ತನ್ನ ಆಯಿ ಷಹರಕ್ಕೆ ಬರುತ್ತಿಲ್ಲ. ಆಕಳೇ ಇಲ್ಲವಾದರೆ ಅವಳೂ ಷಹರಕ್ಕೆ ಬರುತ್ತಾಳೆ. ಆಗ ಅಪ್ಪ ಅವ್ವ ತನ್ನನ್ನು ಕರೆದುಕೊಂಡು ಹೋದಾರು ಎಂಬ ಆಸೆ ಅವನದು. ವ್ಯಂಗ್ಯವೆಂದರೆ ಹೊತ್ತು ಮೂಡುವುದರಲ್ಲಿ ಆಕಳು ಬಂದು ಗಂಗ್ಯಾನ ಅಂಗಳಲ್ಲಿ ನಿಂತಿದೆ. ಆಯಿ ಹಾಲು ಕರೆಯುವ ಸದ್ದಿನಿಂದ ಎಚ್ಚರವಾಗುತ್ತದೆ. ಅಸಹಾಯಕನಾದ ಗಂಗ್ಯಾ ಮತ್ತೆ ಶಾಲೆಗೆ ಹೋಗುತ್ತಾನೆ. ಇನ್ನೊಬ್ಬ ಶಿಕ್ಷಕರನ್ನು ಕರೆ ತರಬೇಕೆಂದು ಒದ್ದಾಡುತ್ತಿದ್ದ ಮಾಸ್ತರನಿಗೆ ಮೇಲಿನ ಆಫೀಸಿಗೆ ಎಡತಾಕಿ ಸಾಕಾಗಿದೆ. ಇನ್ನೊಬ್ಬ ಹೊಸ ಮಾಸ್ತರ್ ಬರುತ್ತಾರೆ ಎಂದು ಮಕ್ಕಳಿಗೇನೊ ಹೇಳುತ್ತಾನೆ. ಆದರೆ ಅದು ಸಾಕಾರವಾದೀತೆ? ಎಂಬ ಸಂಶಯ ಸ್ವತಃ ಮಾಸ್ತರನ ಕಣ್ಣಲ್ಲಿ ಕಾಲೂರಿ ನಿಂತಿದೆ. ಎಂದಿನಂತೆ ಮಾಸ್ತರ್ ಮಕ್ಕಳಿಗೆ ನಮ್ ಸಾಲಿ ಕುರಿತು ಬರೆದುಕೊಂಡು ಬಂದಿದ್ದ ಪ್ರಬಂಧ ಓದಲು ಹೇಳುತ್ತಾನೆ. ಏಟು ತಿಂದು ಪಾಠ ಕಲಿತಿದ್ದ ಗಂಗ್ಯಾ ಈ ಸಲ ಮೊದಲಿನ ತಪ್ಪು ಮಾಡದೆ ತನ್ನ ಸಾಲಿ ಸುಂದರವಾಗಿದೆ, ಕಾಂಪೌಂಡ್ ಇದೆ, ಹೂದೋಟವಿದೆ, ಶೌಚಾಲಯವಿದೆ, ಉತ್ತಮ ಶಿಕ್ಷಕರಿದ್ದಾರೆ ಎಂದೆಲ್ಲಾ ಹೊಗಳಿ ಪ್ರಬಂಧ ಓದುತ್ತಾನೆ. ಇದರಿಂದ ಮಾಸ್ತರ ಸಂಪ್ರೀತನಾಗಿ ಶಾಭಾಷಗಿರಿ ನೀಡುತ್ತಾನೆ. ಅಸಲಿಗೆ ನೋಟ್ಬುಕ್ನಲ್ಲಿ ಗಂಗ್ಯಾ ಪ್ರಬಂಧ ಬರೆದಿರುವುದೇ ಇಲ್ಲ. ಖಾಲಿ ಹಾಳೆಯನ್ನು ಓದುವಂತೆ ನಟನೆ ಮಾಡಿ ಬಾಯಿಪಾಠ ಸುಳ್ಳು ವರದಿ ಒಪ್ಪಿಸಿರುತ್ತಾನೆ. ಖಾಲಿ ಹಾಳೆಯ ಪಂಚಿಂಗ್ ದೃಶ್ಯದೊಂದಿಗೆ ಸಿನೆಮಾ ಅನಂತ ವಿಷಾದ ಮೂಡಿಸಿ ವ್ಯವಸ್ಥೆಯನ್ನು ಅಣಕಿಸುತ್ತ ವಿರಮಿಸುತ್ತದೆ. ಇವಿಷ್ಟು ಕಥಾ ಹಂದರವಾದರೆ ಅದನ್ನು ಹಿಡಿದಿಟ್ಟ ದೃಶ್ಯಾವಳಿ ಗಮನ ಸೆಳೆಯುತ್ತವೆ. ಗಂಗ್ಯಾ ಓಡುವ ಭರದಲ್ಲಿ ಚೆಲ್ಲಿದ ಹಾಲು, ಹೊಡೆದು ಅಟ್ಟಿದರೂ ಮರಳಿ ಮನೆಗೆ ಬರುವ ಆಕಳು, ಹಗಲು ರಾತ್ರಿ ಹಾಕಿದ ಚಸ್ಮಾ ತೆಗೆಯದ ಗಂಗ್ಯಾನ ಸಡಗರ, ಮುಸ್ಲಿಮ್ ಕುಟುಂಬದೊಂದಿಗೆ ಇರುವ ಗಂಗ್ಯಾನ ಆಯಿಯ ಅನ್ಯೋನ್ಯ ಸಂಬಂಧ, ಊರ ಮುಂದಿನ ಗುಡಿ ಫೌಳಿಯಲ್ಲಿ ನಡೆಯುವ ಭಜನೆ, ಅಲ್ಲಿನ ಊರಂಗಡಿ ಇತ್ಯಾದಿಗಳು ಕಥಾವಸ್ತುವಿನೊಂದಿಗೆ ಸಾವಯವ ಸಂಬಂಧ ಪಡೆದುಕೊಂಡು ಕಲ್ಯಾಣ ಕರ್ನಾಟಕ ಭಾಗದ ಸಮಾಜೋ ಶೈಕ್ಷಣಿಕ ಅವ್ಯವಸ್ಥೆಯನ್ನು ರಾಚುತ್ತದೆ. ಗಂಗ್ಯಾನ ನಿಲ್ಲದ ಅಳುವು ಇಡೀ ವ್ಯವಸ್ಥೆಯ ದುರಂತಕ್ಕೆ ಸಾಂಕೇತಿಕ ಶ್ರುತಿ ಹಿಡಿದಿದೆ. ವಿಶೇಷವಾಗಿ ಇಲ್ಲಿನ ಹಳ್ಳಿಗಳ ದುರವಸ್ಥೆ, ಬಡತನ, ದಿವಾಳಿಯೆದ್ದ ಒಕ್ಕಲುತನ, ನಿಲ್ಲದ ಗುಳೆ, ತೀರ ಹದಗೆಟ್ಟ ಸರಕಾರಿ ಶಿಕ್ಷಣ. ಇದೆಲ್ಲಕ್ಕೂ ಕಾರಣವಾದ ಆಳುವವರ ಅವಜ್ಞೆ ಮುಖಕ್ಕೆ ರಾಚುತ್ತವೆ. ಪ್ರತೀ ವರ್ಷದ ಎಸೆಸೆಲ್ಸಿ ಮತ್ತು ಪಿಯುಸಿ ಫಲಿತಾಂಶದಲ್ಲಿ ರಾಜ್ಯದಲ್ಲಿ ಕಲ್ಯಾಣ ಕರ್ನಾಟಕ ಭಾಗದ ಕಲಬುರಗಿ, ಯಾದಗಿರಿ, ರಾಯಚೂರು, ಕೊಪ್ಪಳ, ಬೀದರ ಜಿಲ್ಲೆಗಳು ಕೊನೆಯ ಸಾಲಿನಲ್ಲಿಯೇ ನಿಲ್ಲುತ್ತವೆ. ಈ ಜಿಲ್ಲೆಗಳು ಯಾವತ್ತೂ ಮೊದಲ ಸ್ಥಾನದಲ್ಲಿ ಹೋಗಲಿ ಮಧ್ಯದಲ್ಲಿ ಬರಲು ಸಾಧ್ಯವಾಗಿಲ್ಲ ಏಕೆ? ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ. ನಿರ್ದೇಶಕರು ಕ.ಕ. ಭಾಗದ ಶೈಕ್ಷಣಿಕ ಸೋಲನ್ನು ಧ್ವನಿ ಪೂರ್ಣವಾಗಿ ದಿಗ್ದರ್ಶಿಸಲು ಪ್ರಯತ್ನಿಸಿ ತುಸು ಮಟ್ಟದಲ್ಲಿ ಯಶಸ್ವಿಯೂ ಆಗಿದ್ದಾರೆ. ಆದರೂ ಇಲ್ಲಿನ ಹುಡುಗಿಯರ ಡ್ರಾಪೌಟ್ಸ್, ಭೀಕರ ವಲಸೆ, ಮೊಗಲಾಯಿ ಮಂದಿಯ ಸ್ವಘಾತುಕವಾಗಿರುವ ಪ್ರತಿಷ್ಠೆ ಇತ್ಯಾದಿಗಳನ್ನು ಕ್ಲುಪ್ತವಾಗಿ ಒಳಗೊಳ್ಳಲು ಸಾಧ್ಯವಿತ್ತೇನೋ ಎನಿಸದಿರದು. ಇವುಗಳ ನಡುವೆಯೂ ಗಮನಿಸಬೇಕಾದ ಇನ್ನೊಂದು ಅಂಶವೆಂದರೆ ಕಲಬುರಗಿ ಭಾಗದ ಭಾಷಾ ಪ್ರಯೋಗ ಮತ್ತು ಮಕ್ಕಳ ನಟನೆ. ಗಂಗ್ಯಾನ ಪಾತ್ರ ಮಾಡಿದ ಮಗುವಂತೂ ಸಹಜವಾಗಿ ನಟಿಸಿ ತಾನೊಬ್ಬ ಉತ್ತಮ ನಟನಾಗಬಲ್ಲ ಎಂಬುದನ್ನು ಮೊದಲ ಚಿತ್ರದಲ್ಲಿಯೇ ಸಾಬೀತು ಪಡಿಸಿದ್ದಾನೆ. ಉಳಿದಂತೆ ಅಜ್ಜಿ ಪಾತ್ರ ಮಾಡಿದ ಹನುಮಕ್ಕ, ಮಹಾದೇವ ಹಡಪದ, ಶಂಕರಯ್ಯ ಘಂಟಿ ಇವರೆಲ್ಲರೂ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ನಡುವೆ ಸುಮ್ಮನೆ ಸುಳಿದಾಡುವ ಕಪ್ಪು ಕನ್ನಡಕಧಾರಿ ಮುಸ್ಲಿಮ್ ಸಾಬಿ ಪಾತ್ರಧಾರಿಗೆ ಏನೂ ಕೆಲಸವೇ ಇಲ್ಲ. ಅಲ್ಲಾಪೂರಿನ ಸೌಂದರ್ಯವನ್ನು ತುಸುವಾದರೂ ಹಿಡಿದಿಡುವಲ್ಲಿ ಕ್ಯಾಮರಾ ಕಣ್ಣು ಶ್ರಮಿಸಿದೆಯಾದರೂ ಬಯಲ ಭೂಮಿಗೂ ತನ್ನದೆ ಚೆಲುವಿದೆ (ಈ ನೆಲದ ಆಡುನುಡಿಗಿರುವಂತೆ) ಎಂಬುದನ್ನು ತೋರಿಸಲು ಸಾಕಷ್ಟು ಅವಕಾಶವಿತ್ತು. ಒಟ್ಟಾರೆ ‘ನಮ್ ಸಾಲಿ’ ಒಂದು ಯಶಸ್ವಿ ಚಿತ್ರ ಎಂಬುದರಲ್ಲಿ ಎರಡು ಮಾತಿಲ್ಲ. ಇಡೀ ತಂಡ ಶಕ್ತಿ ಮೀರಿ ಶ್ರಮಿಸಿದ್ದು ಸಾರ್ಥಕವಾಗಿದೆ.
Epstein Files: ಮೈಕ್ರೋಸಾಫ್ಟ್ ಸ್ಥಾಪಕ ಬಿಲ್ ಗೇಟ್ಸ್ ಆಂಧ್ರಪ್ರದೇಶಕ್ಕೆ ಭೇಟಿ ನೀಡಿದ್ದು ಭಾರೀ ಚರ್ಚೆಗೆ ಕಾರಣವಾಗಿದೆ. ಜೆಫ್ರಿ ಎಪ್ಸ್ಟೀನ್ ಫೈಲ್ನಲ್ಲಿ ಬಿಲ್ ಗೇಟ್ಸ್ ಹೆಸರು ಕೇಳಿ ಬಂದಿತ್ತು. ಮೈಕ್ರೋಸಾಫ್ಟ್ ಸ್ಥಾಪಕರಾದ ಬಿಲ್ ಗೇಟ್ಸ್ ರಷ್ಯಾದ ಮಹಿಳೆಯೊಬ್ಬರೊಂದಿಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿ, ರೋಗಕ್ಕೆ ತುತ್ತಾಗಿದ್ದರು ಎಂಬ ಆರೋಪ ಜೆಫ್ರಿ ಎಪ್ಸ್ಟೀನ್ ಫೈಲ್ನಲ್ಲಿ ಉಲ್ಲೇಖವಾಗಿದೆ ಎಂದು ಹೇಳಲಾಗಿತ್ತು. ಆದರೆ ಈ
ಹುಲಿ ಎಂದುಕೊಂಡವ ಇಲಿಯಾದ ಕತೆ ಇದು. ನಿನ್ನೆಯಷ್ಟೇ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಮುಖ್ಯಸ್ಥ ಮೊಹ್ಸಿನ್ ನಖ್ವಿ ಅವರನ್ನು ಅಸಮರ್ಥ, ಅನಕ್ಷರಸ್ಥ ಎಂದೆಲ್ಲಾ ಜರಿದಿದ್ದ ಮಾಜಿ ವೇಗಿ ಶೋಯೆಬ್ ಅಖ್ತರ್, ಕೇವಲ 24 ಗಂಟೆಯೊಳಗೆ ತಮ್ಮ ಹೇಳಿಕೆಯನ್ನು ವಾಪಸ್ ಪಡೆದಿದ್ದಾರೆ. ಭಾರತದ ಮಾಧ್ಯಮಕ್ಕೆ ನೀಡಿದ್ದ ಸಂದರ್ಶನದಲ್ಲಿ ಮೊಹ್ಸಿನ್ ನಖ್ವಿ ಅವರನ್ನು ಬೈದಿದ್ದ ಶೋಯೆಬ್ ಅಖ್ತರ್, ಪಾಕಿಸ್ತಾನ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ತಮ್ಮ ಹೇಳಿಕೆಗೆ ವಿಷಾದ ವ್ಯಕ್ತಪಡಿಸಿದ್ದರೆ. ಇಲ್ಲಿದೆ ಹೆಚ್ಚಿನ ಮಾಹಿತಿ.
ಅಮೆರಿಕ ನಿರ್ಬಂಧ ಹೇರಿದ 3 ಇರಾನ್ ತೈಲ ಟ್ಯಾಂಕರ್ಗಳನ್ನು ವಶಕ್ಕೆ ಪಡೆದ ಭಾರತೀಯ ಅಧಿಕಾರಿಗಳು!
ಹೊಸದಿಲ್ಲಿ: ಅಮೆರಿಕ ನಿರ್ಬಂಧ ಹೇರಿರುವ ಇರಾನ್ ತೈಲ ಟ್ಯಾಂಕರ್ ಗಳನ್ನು ಭಾರತೀಯ ಕರಾವಳಿ ಕಾವಲು ಪಡೆ ಅಧಿಕಾರಿಗಳು ವಶಪಡಿಸಿಕೊಂಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಭಾರತದ ಮೇಲೆ ವಿಧಿಸಿದ್ದ ಸುಂಕವನ್ನು ಅಮೆರಿಕ ಶೇಕಡ 50 ರಿಂದ 18ಕ್ಕೆ ಇಳಿಸಿದ ಬಳಿಕ ಉಭಯ ದೇಶಗಳ ನಡುವಿನ ಸಂಬಂಧ ಸುಧಾರಿಸಿರುವ ಬೆನ್ನಲ್ಲೇ ಈ ಬೆಳವಣಿಗೆ ವಿಶೇಷ ಮಹತ್ವ ಪಡೆದಿದೆ. ಇನ್ನೊಂದು ಸಂಬಂಧಿತ ಪ್ರಕರಣದಲ್ಲಿ ಅಮೆರಿಕದ ಮಿಲಿಟರಿ ಪಡೆಗಳು ಹಿಂದೂ ಮಹಾಸಾಗರದಲ್ಲಿ ಮತ್ತೊಂದು ನಿರ್ಬಂಧಿತ ತೈಲ ಟ್ಯಾಂಕರ್ ಮೇಲೆ ದಾಳಿ ಮಾಡಿವೆ. ಕೆರಿಬಿಯನ್ ಸಮುದ್ರದಿಂದ ಹಡಗಿನ ಮೇಲೆ ನಿಗಾ ವಹಿಸಿದ್ದ ಅಮೆರಿಕ ಪಡೆಗಳು ಹಿಂದೂ ಮಹಾಸಾಗರದಲ್ಲಿ ಟ್ಯಾಂಕರ್ ಬೆನ್ನಟ್ಟಿ ವಶಕ್ಕೆ ಪಡೆದಿದ್ದಾರೆ. ವೆನೆಜುವೆಲಾಗೆ ಸಂಬಂಧಿಸಿದಂತೆ ಅಕ್ರಮವಾಗಿ ತೈಲ ಮಾರಾಟವನ್ನು ತಡೆಯುವ ಪ್ರಯತ್ನವಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಪೆಂಟಗಾನ್ ಹೇಳಿದೆ. ಸ್ಟೆಲ್ಲರ್ ರೂಬಿ, ಅಸ್ಪಾಟ್ ಸ್ಟಾರ್ ಹಾಗೂ ಎಐ ಜಫ್ಝಿಯಾ ಹೆಸರಿನ ಶ್ಯಾಡೋ ಫ್ಲೀಟ್ ಹಡಗುಗಳು ನಿರ್ಬಂಧಿತ ಇರಾನ್ ತೈಲವನ್ನು ಸಾಗಾಟ ಮಾಡುತ್ತಿತ್ತು ಎನ್ನಲಾಗಿದ್ದು, ಇದನ್ನು ಫೆಬ್ರುವರಿ 6ರಂದು ಭಾರತದ ಕರಾವಳಿ ಪಡೆ ವಶಪಡಿಸಿಕೊಂಡಿದೆ. ಭಾರತ ಹಾಗೂ ಅಮೆರಿಕ ದ್ವಿಪಕ್ಷೀಯ ವ್ಯಾಪಾರ ಒಪ್ಪಂದದ ಚೌಕಟ್ಟು ಘೋಷಿಸಿದ ದಿನವೇ ಈ ಬೆಳವಣಿಗೆ ನಡೆದಿದೆ ಎಂದು ಉನ್ನತ ಮೂಲಗಳು ಹೇಳಿವೆ. ಮುಂಬೈನಿಂದ ಪಶ್ಚಿಮಕ್ಕೆ 100 ನಾಟಿಕಲ್ ಮೈಲು ದೂರದಲ್ಲಿ ಮೂರು ಹಡಗುಗಳನ್ನು ಬೆನ್ನಟ್ಟಿ ವಶಕ್ಕೆ ಪಡೆದಿರುವುದಾಗಿ ಕರಾವಳಿ ಕಾವಲು ಪಡೆ ಫೆಬ್ರುವರಿ 6ರಂದು ಎಕ್ಸ್ ಪೋಸ್ಟ್ನಲ್ಲಿ ಹೇಳಿತ್ತು. ಭಾರತದ ವಿಶೇಷ ವಿತ್ತ ವಲಯದಲ್ಲಿ ಅನುಮಾನಾಸ್ಪದ ಚಟುವಟಿಕೆಯಲ್ಲಿ ತೊಡಗಿದ್ದ ಹಿನ್ನೆಲೆಯಲ್ಲಿ ವಶಕ್ಕೆ ಪಡೆಯಲಾಗಿದೆ ಎಂದು ವಿವರಿಸಿತ್ತು. ಆದರೆ ಆ ಬಳಿಕ ಇದನ್ನು ಡಿಲೀಟ್ ಮಾಡಲಾಗಿತ್ತು. ಕರಾವಳಿ ದೇಶಗಳು ಕ್ರಮ ಕೈಗೊಳ್ಳದಂತೆ ತಪ್ಪಿಸಿಕೊಳ್ಳುವ ಸಲುವಾಗಿ ಈ ಮೂರು ಹಡಗುಗಳು ತಮ್ಮ ಗುರುತನ್ನು ಮರೆಮಾಚಿದ್ದವು ಎಂದು ತಿಳಿದುಬಂದಿದೆ.
ನಾಳಿನ ನಾಗರಿಕರೆಂದು ಕರೆಯಲಾಗುವ ಪುಟ್ಟ ಮಕ್ಕಳು ನಾಪತ್ತೆಯಾಗುತ್ತಿರುವ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಸರ್ವೋಚ್ಚ ನ್ಯಾಯಾಲಯ ಕೂಡ ಈ ಬಗ್ಗೆ ತೀವ್ರ ಕಳವಳವನ್ನು ವ್ಯಕ್ತಪಡಿಸಿದೆ. ಮಕ್ಕಳ ಹಿತರಕ್ಷಣೆಗಾಗಿ ಕೈಗೊಂಡ ಕ್ರಮಗಳ ಬಗ್ಗೆ ಸರಕಾರಗಳು ಏನನ್ನೇ ಹೇಳಿಕೊಳ್ಳಲಿ ಮಕ್ಕಳ ಕಣ್ಮರೆಯ ಇಂಥ ಪ್ರಕರಣಗಳನ್ನು ತಡೆಯಲು ಸಾಧ್ಯವಾಗಿಲ್ಲ. ಇದಕ್ಕೆ ಸಂಬಂಧಿಸಿದಂತೆ ಸರ್ವೋಚ್ಚ ನ್ಯಾಯಾಲಯ ನೀಡಿರುವ ಕೆಲವು ಸೂಚನೆಗಳು ಉಪಯುಕ್ತಕರವಾಗಿವೆ. ‘ದೇಶವ್ಯಾಪಿಯಾಗಿ ಮಕ್ಕಳು ನಾಪತ್ತೆಯಾಗುತ್ತಿರುವುದು ಕಾಕತಾಳೀಯವಲ್ಲ. ಇದರ ಹಿಂದೆ ರಾಷ್ಟ್ರ ಮಟ್ಟದ ಅತ್ಯಂತ ವ್ಯವಸ್ಥಿತವಾದ ಜಾಲವಿರುವ ಸಾಧ್ಯತೆಯಿದೆ’ ಎಂದು ಸುಪ್ರೀಂ ಕೋರ್ಟ್ ಹೇಳಿರುವುದನ್ನು ಕಡೆಗಣಿಸಲಾಗುವುದಿಲ್ಲ. ನಾವು ಬದುಕುತ್ತಿರುವ ಸಮಾಜ ದಿನದಿಂದ ದಿನಕ್ಕೆ ಕ್ರೂರವಾಗುತ್ತಿದೆ. ದೇವರು, ಧರ್ಮ, ಸಂಸ್ಕೃತಿ ಎಂದು ಏನೇ ಬಡಾಯಿ ಕೊಚ್ಚಿಕೊಳ್ಳಲಿ ಅದರ ಒಳಗೆ ಕ್ರೌರ್ಯ ತುಂಬಿಕೊಂಡಿದೆ ಎಂಬುದು ಮಕ್ಕಳ ನಾಪತ್ತೆಯಂಥ ಪ್ರಕರಣಗಳಿಂದ ಬಯಲಿಗೆ ಬಂದಂತಾಗಿದೆ. ಇಂಥ ಮಕ್ಕಳ ಅಪಹರಣ ಪ್ರಕರಣಗಳು ನಡೆದಾಗ ಇದು ಸಣ್ಣಪುಟ್ಟ ಗ್ಯಾಂಗುಗಳ ಹಾವಳಿಯೆಂದು ನಿರ್ಲಕ್ಷ್ಯ ಮಾಡುವಂತಿಲ್ಲ. ಇದರ ಹಿಂದೆ ಅತ್ಯಂತ ಬಲಿಷ್ಠವಾದ ಅಂತರ್ರಾಜ್ಯ ಮಾಫಿಯಾಗಳ ಕೈವಾಡ ಇರುವ ಸಂದೇಹ ಬರುತ್ತದೆ. ಹಾಗಾಗಿ ಈ ಬಗ್ಗೆ ಸಮಗ್ರ ಉನ್ನತ ಮಟ್ಟದ ತನಿಖೆ ನಡೆಯುವುದು ಅತ್ಯಗತ್ಯವಾಗಿದೆ. ಮನೆ ಮುಂದೆ ಆಟವಾಡುವ, ಅಂಗನವಾಡಿ, ಶಾಲೆಗೆ ಹೋದ ಮಕ್ಕಳು ಇದ್ದಕ್ಕಿದ್ದಂತೆ ನಾಪತ್ತೆಯಾಗುತ್ತಿರುವುದು ಕೇವಲ ಸಣ್ಣಪುಟ್ಟ ಅಪರಾಧ ಎಂದು ಕಡೆಗಣಿಸುವಂತಿಲ್ಲ. ಮಕ್ಕಳ ಕಳ್ಳ ಸಾಗಣೆ ಒಂದು ಅತ್ಯಂತ ಕರಾಳ ಉದ್ಯಮವಾಗಿ ಬೆಳೆಯುತ್ತಿದೆ ಎಂಬುದು ಅಂಕಿ ಅಂಶಗಳಿಂದ ಸ್ಪಷ್ಟವಾಗುತ್ತದೆ. ಇದು ಕೇವಲ ಒಂದೆರಡು ಕಡೆ ನಡೆಯುವ ಘಟನೆಯಲ್ಲ. ಪ್ರತಿದಿನ ಒಂದಿಲ್ಲೊಂದು ಊರಿನಲ್ಲಿ ನೂರಾರು ಪೋಷಕರು ತಮ್ಮ ಮಕ್ಕಳನ್ನು ಕಳೆದುಕೊಂಡು ಕಣ್ಣೀರಿಡುತ್ತಿದ್ದಾರೆ. ನಾಪತ್ತೆಯಾದ ಮಕ್ಕಳು ಪತ್ತೆಯಾದ ಪ್ರಕರಣಗಳಲ್ಲಿ ಈ ಮಕ್ಕಳು ದೈಹಿಕ ಮತ್ತು ಮಾನಸಿಕ ಹಿಂಸೆಗೆ ಒಳಗಾಗಿರುವುದು ಕಂಡು ಬರುತ್ತಿದೆ. ಅದರಲ್ಲೂ ಹೆಣ್ಣು ಮಕ್ಕಳ ಪರಿಸ್ಥಿತಿ ಇನ್ನೂ ದಾರುಣವಾಗಿದೆ. ಈ ಹೆಣ್ಣು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣಗಳು ನಡೆದಿರುವುದು ಅತ್ಯಂತ ಕಳವಳಕಾರಿ ಸಂಗತಿಯಾಗಿದೆ. ಸುಪ್ರೀಂ ಕೋರ್ಟ್ ಸೂಚನೆ ನೀಡಿರುವಂತೆ ಅಪಹರಣಕಾರರಿಂದ ರಕ್ಷಿಸಲ್ಪಟ್ಟ ಅಥವಾ ಪತ್ತೆಯಾದ ಮಕ್ಕಳನ್ನು ಸರಿಯಾದ ರೀತಿಯಲ್ಲಿ ವಿಚಾರಿಸಿ ಅಪಹರಣದ ಕುರಿತು ಮಾಹಿತಿಯನ್ನು ಪಡೆಯುವುದು ಅಗತ್ಯವಾಗಿದೆ. ಇಂಥ ವಿಚಾರಣೆಯಲ್ಲಿ ಮಕ್ಕಳು ನೀಡುವ ಸಣ್ಣ ಸುಳಿವುಗಳು ಕೂಡ ಮಕ್ಕಳ ಕಳ್ಳಸಾಗಣೆಯ ದೊಡ್ಡ ಮಟ್ಟದ ಜಾಲವನ್ನು ಭೇದಿಸಲು ನೆರವಾಗುವ ಸಾಧ್ಯತೆಯಿದೆ. ಇಂಥ ಮಕ್ಕಳಿಂದ ಮಾಫಿಯಾಗಳ ಕಾರ್ಯಾಚರಣೆಯ ರೀತಿಯನ್ನು ಪತ್ತೆ ಹಚ್ಚಿ ಅವರನ್ನು ಸದೆ ಬಡಿಯಲು ನೆರವಾಗಬಹುದು. ಮಕ್ಕಳು ಒಮ್ಮಿಂದೊಮ್ಮೆಲೇ ನಾಪತ್ತೆಯಾಗುತ್ತಿರುವ ಪ್ರಕರಣಗಳು ವರದಿಯಾಗುತ್ತಲೇ ಇದ್ದರೂ ಕೇಂದ್ರ ಮತ್ತು ರಾಜ್ಯ ಸರಕಾರಗಳಿಂದ ಇದನ್ನು ತಡೆಯಲು ಸಾಧ್ಯವಾಗದಿರುವುದಕ್ಕೆ ಕಾರಣವೇನು? ಕೇಂದ್ರ ಮತ್ತು ರಾಜ್ಯ ಸರಕಾರಗಳ ನಡುವೆ ಸಮನ್ವಯದ ಕೊರತೆಯಿರುವುದು ಮಕ್ಕಳನ್ನು ಅಪಹರಿಸುವ ಮಾಫಿಯಾಗಳಿಗೆ ಅನುಕೂಲ ಮಾಡಿಕೊಟ್ಟಂತಾಗಿದೆ. ದೇಶವನ್ನು ಕಾಂಗ್ರೆಸ್ ಮುಕ್ತ ಮತ್ತು ಕಮ್ಯುನಿಸ್ಟ್ ಮುಕ್ತ ಭಾರತವನ್ನಾಗಿ ಮಾಡುವುದಾಗಿ ಮತ್ತೆ ಮತ್ತೆ ಹೇಳುತ್ತಿರುವ ಕೇಂದ್ರ ಗೃಹ ಮಂತ್ರಿ ಅಮಿತ್ ಶಾ ಮಕ್ಕಳ ಅಪಹರಣ ಮುಕ್ತ ಭಾರತ ಮಾಡುವುದಾಗಿ ಎಂದೂ ಹೇಳಿಲ್ಲ.ಮಕ್ಕಳ ಅಪಹರಣದಂಥ ವಿಷಯಗಳು ಅವರ ಆದ್ಯತೆಯ ಪಟ್ಟಿಯಲ್ಲಿ ಇಲ್ಲ. ಕೆಲವು ರಾಜ್ಯ ಸರಕಾರಗಳು ಇದರ ಬಗ್ಗೆ ಎಷ್ಟು ಬೇಜವಾಬ್ದಾರಿಯಾಗಿ ನಡೆದುಕೊಳ್ಳುತ್ತವೆಯೆಂದರೆ ನಾಪತ್ತೆಯಾದ ಮಕ್ಕಳ ಕುರಿತ ಸಮಗ್ರವಾದ ದತ್ತಾಂಶವನ್ನು ನೀಡಲು ಹಿಂದೇಟು ಹಾಕುತ್ತಿವೆ. ಇದು ಅತ್ಯಂತ ವಿಷಾದದ ಸಂಗತಿ. ಈ ಹಿನ್ನೆಲೆಯಲ್ಲಿ ದತ್ತಾಂಶ ನೀಡದ ರಾಜ್ಯಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಸುಪ್ರೀಂ ಕೋರ್ಟ್ ನೀಡಿರುವ ಎಚ್ಚರಿಕೆ ಸೂಕ್ತವಾಗಿದೆ. ಮಕ್ಕಳ ಅಪಹರಣದ ಜಾಲ ಭೇದಿಸುವಲ್ಲಿ ರಾಜ್ಯಗಳ ನಡುವಿನ ಗಡಿಗಳು ಅಡ್ಡಿಯಾಗಬಾರದು. ಸಣ್ಣಪುಟ್ಟ ಮಕ್ಕಳು ನಾಪತ್ತೆಯಾಗುತ್ತಿರುವುದಕ್ಕೆ ಸಂಬಂಧಿಸಿದಂತೆ ಪೊಲೀಸ್ ಠಾಣೆಗಳಲ್ಲಿ ಕಾಟಾಚಾರಕ್ಕೆ ದೂರು ದಾಖಲಿಸಿಕೊಂಡು ಕೈ ತೊಳೆದುಕೊಳ್ಳುವ ಮನೋಭಾವ ಸರಿಯಲ್ಲ. ಪೊಲೀಸ್ ವ್ಯವಸ್ಥೆಯಲ್ಲಿ ಮಕ್ಕಳ ಘಟಕಗಳು ಇನ್ನಷ್ಟು ಬಲಗೊಳ್ಳಬೇಕಿದೆ. ಪ್ರತೀ ಜಿಲ್ಲೆಯಲ್ಲೂ ನೋಡಲ್ ಅಧಿಕಾರಿಗಳ ನೇಮಕ ಮತ್ತು ಅವರ ಕಾರ್ಯ ವೈಖರಿಯ ಬಗ್ಗೆ ನಿರಂತರವಾಗಿ ಕಣ್ಣಿಡುವುದು ಅಗತ್ಯವಾಗಿದೆ. ಸರಕಾರಗಳು ಕೂಡ ಈ ಸೂಕ್ಷ್ಮ ವಿಷಯವನ್ನು ರಾಜಕೀಯ ಹಿತಾಸಕ್ತಿಗಿಂತ ಮಿಗಿಲಾಗಿ ಮಾನವೀಯ ನೆಲೆಯಲ್ಲಿ ನೋಡಬೇಕಾಗಿದೆ. ಈಗ ಸುಪ್ರೀಂ ಕೋರ್ಟ್ ನೀಡಿರುವ ಗಡುವಿನೊಳಗೆ ಕೇಂದ್ರ ಸರಕಾರ ಒಂದು ಸ್ಪಷ್ಟವಾದ ರಾಷ್ಟ್ರಮಟ್ಟದ ಕಾರ್ಯ ವಿಧಾನವನ್ನು ರೂಪಿಸಬೇಕಾಗಿದೆ. ಈ ಅಪಾಯಕಾರಿಯಾದ ಸಾಮಾಜಿಕ ಪಿಡುಗನ್ನು ಬೇರು ಸಹಿತವಾಗಿ ಕಿತ್ತು ಬಿಸಾಡುವ ಸಂಕಲ್ಪ ಮಾಡಬೇಕಾಗಿದೆ. ಪ್ರತಿಯೊಂದು ಮಗುವಿನ ನಾಪತ್ತೆಯ ಹಿಂದೆ ಆಯಾ ಕುಟುಂಬಗಳ ನೋವು ಕಣ್ಣೀರಿನ ದಾರುಣ ಕಥೆ ಇದೆ. ಮಕ್ಕಳ ದಿನಾಚರಣೆ ಮಾಡಿ ಮಕ್ಕಳು ದೇಶದ ಭವಿಷ್ಯ ಎಂದು ಹೇಳಿದರೆ ಸಾಲದು ಅವರ ಸುರಕ್ಷತೆಯನ್ನು ಖಾತರಿ ಪಡಿಸುವುದು ಸರಕಾರಗಳ ಕರ್ತವ್ಯ ವಾಗಬೇಕಾಗಿದೆ. ಯಾವಾಗಲೂ ತಮ್ಮ ಧರ್ಮ ಅಪಾಯದಲ್ಲಿದೆ ಎಂದು ಬೊಬ್ಬಿಡುವ ಮಠಾಧೀಶರು, ಧರ್ಮ ಗುರುಗಳು ಮಕ್ಕಳ ಈ ದಾರುಣ ಸ್ಥಿತಿಯ ಬಗ್ಗೆ ಸ್ಪಂದಿಸುವುದು ಯಾವಾಗ? ಇದು ಅವರ ನೈತಿಕ ಹೊಣೆಗಾರಿಕೆಯಲ್ಲವೇ? ಸಾಮಾನ್ಯವಾಗಿ ರಾಜಕೀಯ ಪಕ್ಷಗಳು ಎಲ್ಲವನ್ನೂ ವೋಟಿನ ದೃಷ್ಟಿಯಿಂದ ನೋಡುವುದರಿಂದ ಮಕ್ಕಳ ಅಪಹರಣದಂಥ ಸೂಕ್ಷ್ಮ, ಮಾನವೀಯ ವಿಷಯಗಳು ಅವುಗಳಿಗೆ ಆದ್ಯತೆಯ ವಿಷಯವಾಗುವುದಿಲ್ಲ. ಯಾಕೆಂದರೆ ಮಕ್ಕಳು ಮತದಾರರಲ್ಲ. ಇನ್ನು ಮುಂದಾದರೂ ಹೀಗಾಗದಂತೆ ನೋಡಿಕೊಳ್ಳುವುದು ಎಲ್ಲ ರಾಜಕೀಯ ಪಕ್ಷಗಳ, ಸಂಘ-ಸಂಸ್ಥೆಗಳ ಹೊಣೆಗಾರಿಕೆಯಾಗಿದೆ. ಸಣ್ಣಪುಟ್ಟ ಮಕ್ಕಳ ಅಪಹರಣ ಮತ್ತು ನಾಪತ್ತೆ ಪ್ರಕರಣಗಳ ತಡೆಗೆ ಸರಕಾರಗಳು ಕಟ್ಟುನಿಟ್ಟಿನ ಕ್ರಮಕೈಗೊಳ್ಳಬೇಕಾಗಿದೆ.
ಮದುವೆಗೂ ಮುನ್ನ ದೈಹಿಕ ಸಂಬಂಧ : ’ಯಾರನ್ನೂ ಸುಲಭವಾಗಿ ನಂಬಬೇಡಿ’ - ಸುಪ್ರೀಂಕೋರ್ಟ್ ಎಚ್ಚರಿಕೆ
SC on Relationships before Marriage : ಮದುವೆಗೆ ಮುಂಚೆ ದೈಹಿಕ ಸಂಪರ್ಕದ ಬಗ್ಗೆ ಸರ್ವೋಚ್ಚ ನ್ಯಾಯಾಲಯ ಮಹತ್ವದ ಸಲಹೆಯನ್ನು ನೀಡಿದೆ. ವ್ಯಕ್ತಿಯೊಬ್ಬನ ಜಾಮೀನು ಅರ್ಜಿಯ ವಿಚಾರಣೆಯ ವೇಳೆ, ಸುಪ್ರೀಂಕೋರ್ಟ್ ನ್ಯಾಯಪೀಠ, ಮದುವೆಗೆ ಮುನ್ನ ಒಬ್ಬರು ಇನ್ನೊಬ್ಬರಿಗೆ ಅಪರಿಚರಂತೆ ಇರುವುದು ಸೂಕ್ತ ಎಂದು ಹೇಳಿದೆ.
Bengaluru Second Airport: ಹೊಸೂರಿನಲ್ಲಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ತಮಿಳುನಾಡು ಸರ್ಕಾರದಿಂದ ಹೊಸ ಡಿಮ್ಯಾಂಡ್
Bengaluru Second Airport: ಬೆಂಗಳೂರಿನ ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣ ಪ್ರಕ್ರಿಯೆಯಲ್ಲಿ ಯಾವುದೇ ಬದಲಾವಣೆ ಆಗುತ್ತಿಲ್ಲ. ಅಲ್ಲದೆ ಬೆಂಗಳೂರಿನ ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣವನ್ನು 2033ರ ವರೆಗೆ ಮಾಡಲು ಸಾಧ್ಯವಿಲ್ಲ ಎಂದು ಕೇಂದ್ರ ಸರ್ಕಾರವು ಹೇಳಿದೆ. ಇದು ಬೆಂಗಳೂರಿನ ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣ ಪ್ರಕ್ರಿಯೆಯಲ್ಲಿ ಕರ್ನಾಟಕಕ್ಕೆ ಆಗಿರುವ ಬಹುದೊಡ್ಡ ಹಿನ್ನಡೆ ಆಗಿದೆ.
ಎರಡೇ ನಿಮಿಷಕ್ಕೆ ವಿಧಾನಸಭೆಯಲ್ಲಿ ಭಾಷಣ ಮುಗಿಸಿದ ಹಿಮಾಚಲ ರಾಜ್ಯಪಾಲ
ಶಿಮ್ಲಾ: ಅನುದಾನ ಆದಾಯ ಕೊರತೆ (ಆರ್ಡಿಜಿ) ವಿವಾದದ ಹಿನ್ನೆಲೆಯಲ್ಲಿ ಹಿಮಾಚಲ ಪ್ರದೇಶ ಸರ್ಕಾರ ಮತ್ತು ರಾಜ್ಯಪಾಲ ಶಿವಪ್ರತಾಪ್ ಶುಕ್ಲಾ ನಡುವಿನ ಭಿನ್ನಾಭಿಪ್ರಾಯ ಮುಂದುವರಿದಿದ್ದು, ಬಜೆಟ್ ಅಧಿವೇಶನದ ಆರಂಭ ದಿನವಾದ ಸೋಮವಾರ ರಾಜ್ಯಪಾಲರು ತಮ್ಮ ಭಾಷಣವನ್ನು ಎರಡು ನಿಮಿಷಕ್ಕೇ ಮೊಟಕುಗೊಳಿಸಿದ ಸ್ವಾರಸ್ಯಕರ ಪ್ರಸಂಗ ನಡೆಯಿತು. ಸರ್ಕಾರದ ವಿಸ್ತೃತವಾದ ನೀತಿ ನೀಲಿನಕಾಶೆಯನ್ನು ಮೊಟಕುಗೊಳಿಸಿ ಕೇವಲ 2 ನಿಮಿಷ 1 ಸೆಕೆಂಡ್ನಲ್ಲಿ ರಾಜ್ಯಪಾಲರು ತಮ್ಮ ಭಾಷಣವನ್ನು ಮುಕ್ತಾಯಗೊಳಿಸಿದರು. ರಾಜ್ಯ ಸರ್ಕಾರ ಸಿದ್ಧಪಡಿಸಿದ ಭಾಷಣದಲ್ಲಿ ಕೇಂದ್ರ ಸರ್ಕಾರ ಹಾಗೂ ಕೆಲ ಸಂವಿಧಾನಾತ್ಮಕ ಸಂಸ್ಥೆಗಳ ಕಾರ್ಯ ನಿರ್ವಹಣೆಯನ್ನು ಕಟುವಾಗಿ ಟೀಕಿಸಲಾಗಿತ್ತು ಎಂದು ಹೇಳಲಾಗಿದೆ. ಈ ಭಾಗಕ್ಕೆ ರಾಜ್ಯಪಾಲರು ಆಕ್ಷೇಪ ಸೂಚಿಸಿದ್ದು, ಭಾಷಣದ ಒಂದನೇ ಪುಟದಿಂದ 16ನೇ ಪುಟದವರೆಗಿನ ಭಾಗವು ಸಂವಿಧಾನಾತ್ಮಕ ಚೌಕಟ್ಟಿಗೆ ವಿರುದ್ಧವಾಗಿವೆ ಎಂದು ರಾಜ್ಯಪಾಲರು ಅಭಿಪ್ರಾಯಪಟ್ಟಿದ್ದಾರೆ. ಸಂವಿಧಾನಾತ್ಮಕ ಸಂಸ್ಥೆಗಳ ಘನತೆಗೆ ಕುಂದು ತರುವ ಅಭಿಪ್ರಾಯಗಳನ್ನು ಓದುವುದಿಲ್ಲ ಎಂಬ ನಿಲುವಿಗೆ ಅಂಟಿಕೊಂಡ ರಾಜ್ಯಪಾಲರು ಆರಂಭದ ಎರಡು ಪ್ಯಾರಾ ಹಾಗೂ ಉಪಸಂಹಾರ ಭಾಗವನ್ನಷ್ಟೇ ಓದುವ ಮೂಲಕ ಭಾಷಣ ಮುಗಿಸಿದರು. 3ನೇ ಪ್ಯಾರದಿಂದ 16ನೇ ಪ್ಯಾರಾ ವರೆಗಿನ ಭಾಗವನ್ನು ರಾಜ್ಯಪಾಲರು ಓದಲಿಲ್ಲ. ಈ ಭಾಗದಲ್ಲಿ ಆರ್ಡಿಜಿ ಹಾಗೂ ರಾಜ್ಯದ ಹಣಕಾಸು ಆತಂಕದ ಬಗ್ಗೆ ವಿವರಿಸಲಾಗಿತ್ತು. ಸದನದಿಂದ ನಿರ್ಗಮಿಸುವ ಮುನ್ನ ರಾಜ್ಯಪಾಲರು, ಉಳಿಕೆ ಭಾಗವನ್ನು ಸದಸ್ಯರು ತಾವೇ ಓದಿಕೊಳ್ಳುವಂತೆ ಕೇಳಿಕೊಂಡರ. ಇದು ತೀಕ್ಷ್ಣ ರಾಜಕೀಯ ಪ್ರತಿಕ್ರಿಯೆಗಳಿಗೆ ಕಾರಣವಾಗಿದೆ.
ದುಬೈ | ಫೆ.28ರಂದು ‘ಗ್ರ್ಯಾಂಡ್ BCF ಇಫ್ತಾರ್ ಮೀಟ್ 2026’
ದುಬೈ: ಬ್ಯಾರೀಸ್ ಕಲ್ಚರಲ್ ಫೋರಮ್ (BCF) ವತಿಯಿಂದ “ಗ್ರ್ಯಾಂಡ್ BCF ಇಫ್ತಾರ್ ಮೀಟ್ 2026” ಕಾರ್ಯಕ್ರಮವು ಫೆ.28ರಂದು ದುಬೈಯ ಮಮ್ಜಾರ್ ಪ್ರದೇಶದಲ್ಲಿರುವ ಝಹಿಯಾ ಸಭಾಂಗಣದಲ್ಲಿ ನಡೆಯಲಿದೆ. BCF ಅಧ್ಯಕ್ಷ ಡಾ. ಬಿ.ಕೆ. ಯೂಸುಫ್ ಅವರ ಮುಂದಾಳುತ್ವದಲ್ಲಿ, ಸಂಸ್ಥೆಯ ಸ್ಥಾಪಕ ಗೌರವ ಪೋಷಕ ಡಾ. ತುಂಬೆ ಮೊಯ್ದಿನ್ ಅವರ ಸಹಯೋಗದೊಂದಿಗೆ ಕಾರ್ಯಕ್ರಮ ಆಯೋಜಿಸಲಾಗಿದೆ. BCF ಗೌರವ ಸಲಹೆಗಾರರಾದ ಜನಾಬ್ ಇಬ್ರಾಹಿಂ ಗಡಿಯಾರ್, ಜನಾಬ್ ಅಬೂಸಾಲಿಹ್ ಸೇರಿದಂತೆ ಸಂಘಟನೆಯ ಇತರ ನಾಯಕರು ಮತ್ತು ಹಿತೈಷಿಗಳು ಕಾರ್ಯಕ್ರಮದ ಯಶಸ್ಸಿಗೆ ಕೈಜೋಡಿಸಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ. ಯುಎಇಯಿಂದ ಹಾಗೂ ಇತರ GCC ರಾಷ್ಟ್ರಗಳಿಂದ, ಜೊತೆಗೆ ಕರ್ನಾಟಕದಿಂದಲೂ ಅನೇಕ ವಿಶೇಷ ಆಹ್ವಾನಿತರು, ಉಲಮಾಗಳು, ವಿವಿಧ ಇಲಾಖೆಗಳ ಪ್ರತಿನಿಧಿಗಳು ಮತ್ತು ಗಣ್ಯರು ಭಾಗವಹಿಸಲಿದ್ದಾರೆ. ಇಫ್ತಾರ್ಗೆ ಮುನ್ನ ಧಾರ್ಮಿಕ ಪಂಡಿತರಿಂದ ದೀನೀ ಉಪನ್ಯಾಸ, ದುಆ ಕಾರ್ಯಕ್ರಮ ನಡೆಯಲಿದೆ. ಮಕ್ಕಳಿಗೆ ಹಾಗೂ ಇತರರಿಗೆ ಇಸ್ಲಾಮಿಕ್ ರಸಪ್ರಶ್ನೆ ಮತ್ತು ಕಿರಾಅತ್ ಸ್ಪರ್ಧೆಗಳನ್ನೂ ಏರ್ಪಡಿಸಲಾಗಿದೆ. ಸ್ಪರ್ಧಾವಳಿಯಲ್ಲಿ ಭಾಗವಹಿಸಲು ಅಥವಾ ವೀಕ್ಷಿಸಲು ಆಗಮಿಸುವವರು ಸಂಜೆ 4.30ಕ್ಕೆ ಸ್ಥಳದಲ್ಲಿರಬೇಕೆಂದು BCF ಇಫ್ತಾರ್ ಸಮಿತಿ ಚೇರ್ಮನ್ ಅಬ್ದುಲ್ ಲತೀಫ್ ಮುಲ್ಕಿ ಹಾಗೂ ವೈಸ್ ಚೇರ್ಮನ್ ಅಫೀಕ್ ಹುಸೈನ್ ಕಾರ್ಯಕಾರಿ ಸಮಿತಿಯ ಪರವಾಗಿ ಮನವಿ ಮಾಡಿದ್ದಾರೆ. ಸ್ತ್ರೀಯರಿಗಾಗಿ ಪ್ರತ್ಯೇಕ ಆಸನ ವ್ಯವಸ್ಥೆ ಹಾಗೂ ನಮಾಜ್ಗೆ ಪ್ರತ್ಯೇಕ ಸ್ಥಳ ಕಲ್ಪಿಸಲಾಗಿದೆ. ಪುರುಷರಿಗಾಗಿ ನಮಾಜ್ ಮತ್ತು ತಾರಾವೀಹ್ ನಮಾಜ್ ನೆರವೇರಿಸಲು ಸ್ಥಳದಲ್ಲೇ ವ್ಯವಸ್ಥೆ ಮಾಡಲಾಗಿದೆ. ಕಾರ್ಯಕ್ರಮಕ್ಕೆ ಆಗಮಿಸುವವರಿಗಾಗಿ ಕಾರ್ ಪಾರ್ಕಿಂಗ್ ಸೌಲಭ್ಯವೂ ಲಭ್ಯವಿರಲಿದೆ ಎಂದು ಪ್ರಕಟಣೆ ತಿಳಿಸಿದೆ.
ಬರೋಬ್ಬರಿ 18 ತಿಂಗಳುಗಳ ಕಾಲ ಬಾಂಗ್ಲಾದೇಶವನ್ನು ಆಳಿದ ಮಧ್ಯಂತರ ಸರ್ಕಾರದ ಮುಖ್ಯ ಸಲಹೆಗಾರ ಮುಹಮ್ಮದ್ ಯೂನಸ್, ಈಗ ತೆರೆಗೆ ಸರಿಯಲಿದ್ದಾರೆ. ಇಂದು (ಫೆ.17-ಮಂಗಳವಾರ) ಬಿಎನ್ಪಿ ಮುಖ್ಯಸ್ಥ ತಾರಿಕೆ ರೆಹಮಾನ್ ಅವರು ಬಾಂಗ್ಲಾದೇಶದ ನೂತನ ಪ್ರಧಾನಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಬಾಂಗ್ಲಾದೇಶದ ರಾಜಕೀಯ ಮತ್ತು ಆಡಳಿತದಲ್ಲಿ ಮುಹಮ್ಮದ್ ಯೂನಸ್ ಅವರ ಭವಿಷ್ಯವೇನು? ಎಂಬ ಪ್ರಶ್ನೆ ಇದೀಗ ಎದುರಾಗಿದೆ. ಯೂನಸ್ ನಿವೃತ್ತಿಯ ಜೀವನ ನಡೆಸಲಿದ್ದಾರಾ? ಅಥವಾ ತಾರಿಕ್ ರೆಹಮಾನ್ ಸರ್ಕಾರದಲ್ಲಿ ಸಾಂವಿಧಾನಿ ಹುದ್ದೆ ಅಲಂಕರಿಸಲಿದ್ದಾರಾ? ಇಲ್ಲಿದೆ ಮಾಹಿತಿ.
ಶ್ರೀಲಂಕಾ ವಿರುದ್ಧ ಸೋಲು: ಆಸೀಸ್ ಭವಿಷ್ಯ ತೂಗುಯ್ಯಾಲೆ
ಹೊಸದಿಲ್ಲಿ: ಟಿ20 ವಿಶ್ವಕಪ್ ಟೂರ್ನಿಯ ಸೋಮವಾರದ ಪಂದ್ಯದಲ್ಲಿ ಬಲಿಷ್ಠ ಆಸ್ಟ್ರೇಲಿಯಾ ತಂಡವನ್ನು ಬಗ್ಗು ಬಡಿದ ಶ್ರೀಲಂಕಾ ತಂಡ ಸೂಪರ್-8 ಹಂತಕ್ಕೆ ತೇರ್ಗಡೆಯಾಗಿದೆ. ಏತನ್ಮಧ್ಯೆ ಬಿ ಗುಂಪಿನಲ್ಲಿ ಎರಡು ಪಂದ್ಯಗಳನ್ನು ಸೋತಿರುವ ಆಸ್ಟ್ರೇಲಿಯಾ ತಂಡ ಟೂರ್ನಿಯಿಂದ ನಿರ್ಗಮಿಸುವ ಭೀತಿಯಲ್ಲಿದೆ. ಮಂಗಳವಾರ ನಡೆಯುವ ಪಂದ್ಯದಲ್ಲಿ ಜಿಂಬಾಬ್ವೆ ತಂಡ ಐರ್ಲೆಂಡ್ ತಂಡವನ್ನು ಮಣಿಸಿದಲ್ಲಿ ಆಸೀಸ್ ಸೂಪರ್ 8 ಹಂತಕ್ಕೆ ತೇರ್ಗಡೆಯಾಗುವ ಅವಕಾಶ ಕೈತಪ್ಪಲಿದೆ. ಬಿ ಗುಂಪಿನಲ್ಲಿ ಆಡಿದ ಮೂರೂ ಪಂದ್ಯಗಳನ್ನು ಗೆದ್ದಿರುವ ಶ್ರೀಲಂಕಾ ಅಗ್ರಸ್ಥಾನಿಯಾಗಿದ್ದರೆ ಎರಡನೇ ಸ್ಥಾನಿಯಾಗಿ ಸೂಪರ್-8 ಹಂತ ತಲುಪಲು ಜಿಂಬಾಬ್ವೆ ಮತ್ತು ಆಸ್ಟ್ರೇಲಿಯಾ ನಡುವೆ ಸ್ಪರ್ಧೆ ಇದೆ. ಜಿಂಬಾಬ್ವೆ ಆಡಿದ ಎರಡೂ ಪಂದ್ಯಗಳನ್ನು ಗೆದ್ದು ನಾಲ್ಕು ಅಂಕ ಸಂಪಾದಿಸಿದ್ದು, ಆಸ್ಟ್ರೇಲಿಯಾ ಒಂದು ಗೆಲುವಿನೊಂದಿಗೆ ಎರಡು ಅಂಕ ಗಳಿಸಿದ್ದು, ಮೂರನೇ ಸ್ಥಾನದಲ್ಲಿದೆ. ಐರ್ಲೆಂಡ್ ಕೂಡಾ 2 ಅಂಕ ಗಳಿಸಿದ್ದರೂ, ರನ್ ರೇಟ್ ಆಧಾರದಲ್ಲಿ ನಾಲ್ಕನೇ ಸ್ಥಾನಿಯಾಗಿದೆ. ಸೋಮವಾರದ ಪಂದ್ಯದಲ್ಲಿ ಆರಂಭಿಕ ಆಟಗಾರ ಪಥುಮ್ ನಿಸ್ಸಾಂಕಾ ಕೇವಲ 52 ಎಸೆತಗಳಲ್ಲಿ ಅಜೇಯ ಶತಕ ಸಾಧಿಸುವ ಮೂಲಕ ಆಸ್ಟ್ರೇಲಿಯಾ ವಿರುದ್ಧ 8 ವಿಕೆಟ್ಗಳ ಸುಲಭ ಜಯಕ್ಕೆ ಕಾರಣರಾದರು. ಆರಂಭಿಕ ಪಂದ್ಯದಲ್ಲಿ ಜಿಂಬಾಬ್ವೆ ಎದುರು ಆಘಾತ ಅನುಭವಿಸಿದ್ದ ಆಸ್ಟ್ರೇಲಿಯಾ ತಂಡದ ಸೂಪರ್-8 ಹಾದಿ ಇದೀಗ ಕಠಿಣವಾಗಿದೆ. ಎ ಗುಂಪಿನಿಂದ ಭಾರತ, ಬಿ ಗುಂಪಿನಿಂದ ಶ್ರೀಲಂಕಾ, ಸಿ ಗುಂಪಿನಿಂದ ವೆಸ್ಟ್ಇಂಡೀಸ್ ಹಾಗೂ ಇಂಗ್ಲೆಂಡ್ ಮತ್ತು ಡಿ ಗುಂಪಿನಿಂದ ದಕ್ಷಿಣ ಆಫ್ರಿಕಾ ಈಗಾಗಲೇ ಸೂಪರ್-8 ಹಂತ ತಲುಪಿವೆ. ಎ ಗುಂಪಿನಲ್ಲಿ ಅಮೆರಿಕ ಹಾಗೂ ಪಾಕಿಸ್ತಾನ, ಬಿ ಗುಂಪಿನಲ್ಲಿ ಜಿಂಬಾಬ್ವೆ ಮತ್ತು ಆಸ್ಟ್ರೇಲಿಯಾ, ಡಿ ಗುಂಪಿನಲ್ಲಿ ನ್ಯೂಜಿಲೆಂಡ್ ಮತ್ತು ಅಫ್ಘಾನಿಸ್ತಾನ ಮುಂದಿನ ಹಂತಕ್ಕೇರಲು ಪೈಪೋಟಿ ನಡೆಸಿವೆ.
ಇಂದಿನಿಂದ ಸಿಬಿಎಸ್ಸಿ 10 ಹಾಗೂ 12 ನೇ ತರಗತಿಗಳ ಬೋರ್ಡ್ ಎಕ್ಸಾಂ ಗಳು ನಡೆಯಲಿದೆ. ಸಮಯಕ್ಕೆ ಸರಿಯಾಗಿ ಪರೀಕ್ಷಾ ಕೇಂದ್ರ ತಲುಪಿ, ಮೇಲ್ವಿಚಾರಕರ ಸೂಚನೆಯಂತೆ ಓಎಂಆರ್ ಶೀಟ್ ಭರ್ತಿ ಮಾಡಬೇಕು. ಪರೀಕ್ಷಾ ದಿನಗಳಲ್ಲಿ ಶಿಕ್ಷಕರು, ಪೋಷಕರ ಸಹಾಯ ಮಾರ್ಗದರ್ಶನ ಅತ್ಯಗತ್ಯವಾಗಿದೆ.
ಶಿವಮೊಗ್ಗ ಏರ್ಪೋರ್ಟ್ನಲ್ಲಿ 7 ತಿಂಗಳಲ್ಲಿ ರಾತ್ರಿ ವಿಮಾನ ಸಂಚಾರ: ಮುಂಬಯಿ, ಹೊಸದಿಲ್ಲಿಗೆ ಹೊಸ ಸಂಪರ್ಕ
ಶಿವಮೊಗ್ಗ ವಿಮಾನ ಪ್ರಯಾಣಿಕರಿಗೆ ಸಿಹಿಸುದ್ದಿ ಸಿಕ್ಕಿದ್ದು, ಶೀಘ್ರದಲ್ಲೇ ಹೆಚ್ಚುವರಿ ನಗರಗಳಿಗೆ ಹೊಸ ಸಂಪರ್ಕ ಸಿಗಲಿದೆ. ರಾತ್ರಿ ವೇಳೆ ವಿಮಾನ ಸಂಚಾರ ಆರಂಭ ಆಗಲಿದೆ.
ಕರ್ನಾಟಕ ಬಜೆಟ್ 2026-27: ನಾಡಿನ ನೂರು ನಿರೀಕ್ಷೆಗಳು, ಅಭಿವೃದ್ಧಿಯೇ ಹೊಸ ಗ್ಯಾರಂಟಿ ?
ಕರ್ನಾಟಕದಲ್ಲಿ ಕಾಂಗ್ರೆಸ್ ಸರಕಾರ ಜಾರಿಗೊಳಿಸಿದ 5 ಗ್ಯಾರಂಟಿ ಯೋಜನೆಗಳಿಂದ ಜನರ ಬಳಿ ಹಣ ಓಡಾಡುವಂತೆ ಆಗಿದೆ. ಹಸಿವು ಮುಕ್ತ ಕರ್ನಾಟಕ, ಗೃಹಲಕ್ಷ್ಮೀ ಯೋಜನೆ, ಶಕ್ತಿ ಯೋಜನೆಗಳಿಂದ ಜನರ ಶಕ್ತಿ ಹೆಚ್ಚಾಘಿದ್ದರೂ, ಇಡೀ ರಾಜ್ಯದ ಅಭಿವೃದ್ಧಿ ದೃಷ್ಟಿಯಿಂದ ಈ ವರ್ಷದ ಬಜೆಟ್ ಬಹಳ ಮುಖ್ಯವಾಗಿದೆ. ನೀರಾವರಿ ಯೋಜನೆಗಳು, ವಿವಿಧ ಅಭಿವೃದ್ಧಿ ಯೋಜನೆಗಳ ಜೊತೆ ರಾಜ್ಯಕ್ಕೆ ಬಂಡವಾಳ ಆಕರ್ಷಣೆಯೂ ಮುಖ್ಯವಾಗಿದೆ.
ಆಸ್ಟ್ರೇಲಿಯಾದ ಸೂಪರ್ 8 ಹಂತದ ಕನಸಿಗೆ ಕೊಳ್ಳಿ ಇಟ್ಟ ಶ್ರೀಲಂಕಾ; ತಲೆಕೆಳಗಾದ ಕಾಂಗರೂ ಪಡೆ ಲೆಕ್ಕಾಚಾರ!
ಶ್ರೀಲಂಕಾದಲ್ಲಿ ಆಯೋಜನೆಗೊಂಡಿರುವ ಈ ಬಾರಿಯ ಐಸಿಸಿ ಟಿ-20 ವಿಶ್ವಕಪ್ ಪಂದ್ಯಾವಳಿ, ಹಲವು ಅಚ್ಚರಿಗಳಿಗೆ ಸಾಕ್ಷಿಯಾಗುತ್ತಿದೆ. ಇತ್ತೀಚಿಗಷ್ಟೇ ಜಿಂಬಾಬ್ವೆ ವಿರುದ್ಧ ಸೋತಿದ್ದ ಆಸ್ಟ್ರೇಲಿಯಾ ಇದೀಗ ಸಹ-ಅತಿಥೇಯ ಶ್ರೀಲಂಕಾ ವಿರುದ್ಧವೂ ಹೀನಾಯ ಸೋಲು ಕಂಡಿದೆ. ಯಾರೂ ನಿರೀಕ್ಷಿಸದ ರೀತಿಯಲ್ಲಿ ಆಸೀಸ್ ತಂಡ ಕಳಪೆ ಪ್ರದರ್ಶನ ನೀಡುತ್ತಿದ್ದು, ಅದು ಸೂಪರ್ 8 ಹಂತ ತಲುಪುವುದು ಬಹಳ ಕಷ್ಟವಾಗಿದೆ. ಆಡಿದ ಮೂರು ಪಂದ್ಯಗಳಲ್ಲಿ ಕೇವಲ ಒಂದರಲ್ಲಿ ಮಾತ್ರ ಜಯಗಳಿಸಿರುವ ಆಸ್ಟ್ರೇಲಿಯಾ, ಸೂಪರ್ 8 ಹಂತ ತಲುಪಲು ಏನು ಮಾಡಬೇಕು? ಇಲ್ಲಿದೆ ಮಾಹಿತಿ.
ರಾಜಧಾನಿಯಲ್ಲಿ ಹೆಚ್ಚಿದ ತ್ಯಾಜ್ಯ ನೀರಿನ ಮರುಬಳಕೆ; ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ
ಬೇಸಿಗೆ ಆರಂಭಕ್ಕೂ ಮುನ್ನ ನೀರಿನ ಕೊರತೆ ಎದುರಾಗದಂತೆ ಸರ್ವ ಸನ್ನದ್ಧವಾಗುತ್ತಿರುವ ಬೆಂಗಳೂರು ಜಲಮಂಡಳಿ, ತ್ಯಾಜ್ಯ ನೀರಿನ ಮರುಬಳಕೆ, ಸಂಸ್ಕರಿಸಿದ ನೀರು ಪೂರೈಕೆಯಂತಹ ಕ್ರಮಗಳಿಗೆ ಚಾಲನೆ ನೀಡಿದೆ. ರಾಜಧಾನಿಯಲ್ಲಿ ಒಂದು ದಿನಕ್ಕೆ ಬರೋಬ್ಬರಿ 1 ಸಾವಿರ ದಶಲಕ್ಷ ಲೀಟರ್ ತ್ಯಾಜ್ಯ ನೀರಿನ ಮರುಬಳಕೆ ಆಗುತ್ತಿದ್ದು, ಕೈಗಾರಿಕಾ ಪ್ರದೇಶಗಳನ್ನೂ ಒಳಗೊಂಡಂತೆ ಇತರೆಡೆ ಸಂಸ್ಕರಿಸಿದ ನೀರು ಪೂರೈಕೆಗೆ ಆದ್ಯತೆ ನೀಡಲಾಗಿದೆ. ಅಲ್ಲದೇ ತ್ಯಾಜ್ಯ ನೀರಿನ ಸಂಸ್ಕರಣಾ ಘಟಕಗಳ ಮೇಲೆ ಭಾರತೀಯ ವಿಜ್ಞಾನ ಸಂಸ್ಥೆಯು ನಿರಂತರವಾಗಿ ನಿಗಾ ಇರಿಸಿದೆ.
ನಗರದ ಪಿಜಿಗಳಿಂದ ನಿಯಮ ಪಾಲನೆ ಬಗ್ಗೆ ವರದಿ ಸಲ್ಲಿಸುವಂತೆ ಜಿಬಿಎಗೆ ಹೈಕೋರ್ಟ್ ನಿರ್ದೇಶನ
ಬೆಂಗಳೂರು: ನಗರದಲ್ಲಿನ ಪೇಯಿಂಗ್ ಗೆಸ್ಟ್ (ಪಿಜಿ) ಹೌಸ್ಗಳು ನಿಯಮಗಳನ್ನು ಪಾಲನೆ ಮಾಡುತ್ತಿವೆಯೇ ಇಲ್ಲವೇ ಎಂಬ ಬಗ್ಗೆ ಫೆಬ್ರವರಿ 18ರಿಂದ 2 ವಾರಗಳ ಕಾಲ ಪರಿಶೀಲನೆ ನಡೆಸಿ ವರದಿ ನೀಡುವಂತೆ ಗ್ರೇಟರ್ ಬೆಂಗಳೂರು ಪ್ರಾಧಿಕಾರಕ್ಕೆ (ಜಿಬಿಎ) ಹೈಕೋರ್ಟ್ ನಿರ್ದೇಶಿಸಿದೆ. ಸ್ವಚ್ಛತೆ, ಸುರಕ್ಷತೆ, ಸಿಸಿ ಕ್ಯಾಮರಾ ಸೌಲಭ್ಯಗಳ ಕುರಿತು ಇತ್ತೀಚೆಗೆ ರೂಪಿಸಲಾಗಿರುವ ನಿಯಮಗಳನ್ನು ಪಾಲಿಸದ ಪಿ.ಜಿ.ಗಳಿಗೆ ಜಿಬಿಎ ಹಾಗೂ ಪಾಲಿಕೆಗಳು ನೀಡಿದ್ದ ನೋಟಿಸ್ಗಳನ್ನು ಪ್ರಶ್ನಿಸಿ ಪೇಯಿಂಗ್ ಗೆಸ್ಟ್ ಅಕಾಮಡೇಷನ್ ವೆಲ್ಫೇರ್ ಅಸೋಸಿಯೇಷನ್ ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಆದೇಶ ಮಾಡಿದೆ. ಪಿಜಿಗಳನ್ನು ನಡೆಸುತ್ತಿರುವ ಕಟ್ಟಡಗಳು ನಕ್ಷೆ ಅನುಮೋದಿಸಿರುವಂತೆ ನಿರ್ಮಾಣ ಮಾಡಲಾಗಿದೆಯೇ, ಸಿಸಿಟಿವಿ ಅಳವಡಿಕೆ ಮಾಡಲಾಗಿದೆಯೇ ಎನ್ನುವುದೂ ಸೇರಿದಂತೆ ಎಲ್ಲ ಅಂಶಗಳನ್ನು ಜಿಬಿಎ ವೈದ್ಯಾಧಿಕಾರಿ, ನಗರ ಯೋಜನಾಧಿಕಾರಿ ಅವರನ್ನು ಒಳಗೊಂಡ ತಂಡ ಎರಡು ವಾರಗಳ ಕಾಲ ಪರಿಶೀಲನೆ ನಡೆಸಿ ವರದಿ ನೀಡಬೇಕು ಎಂದು ನ್ಯಾಯಾಲಯ ನಿರ್ದೇಶಿಸಿದೆ. ಜಿಬಿಎ ಅಧಿಕಾರಿಗಳು ಪಿಜಿಗಳ ತಪಾಸಣೆ ನಡೆಸುವ ವೇಳೆ ಅರ್ಜಿದಾರರು ಭಾಗವಹಿಸಬಹುದು. ಇಲ್ಲವೇ ತಮ್ಮ ಪ್ರತಿನಿಧಿಗಳನ್ನು ಕಳುಹಿಸಬಹುದು, ಒಂದು ವೇಳೆ ಅವರು ಪರಿಶೀಲನೆ ವೇಳೆ ಹಾಜರಿರದಿದ್ದರೆ ಅಥವಾ ಸಹಕಾರ ನೀಡದಿದ್ದರೆ ಅವರು ನಂತರ ಯಾವುದೇ ಆಕ್ಷೇಪವನ್ನು ಎತ್ತಲು ಅವಕಾಶವಿಲ್ಲ ಎಂದು ನ್ಯಾಯಪೀಠ ಆದೇಶದಲ್ಲಿ ಸ್ಪಷ್ಟಪಡಿಸಿದೆ. ಹಿಂದಿನ ಬಿಬಿಎಂಪಿ ಮುಖ್ಯ ಆಯುಕ್ತರು 2024ರ ಆಗಸ್ಟ್ 7ರಂದು ನಗರದಲ್ಲಿನ ಪಿಜಿ ಗೆಸ್ಟ್ ಹೌಸ್ಗಳು ಪಾಲನೆ ಮಾಡಬೇಕಾದ ಕಡ್ಡಾಯ ನಿಯಮಗಳನ್ನು ಹೊರಡಿಸಿದ್ದಾರೆ. ಆ ನಿಯಮಗಳನ್ನು ವಿವೇಚನೆ ಬಳಸದೆ ರೂಪಿಸಲಾಗಿದೆ. ಜತೆಗೆ ವಲಯವಾರು ನಿಯಮಗಳನ್ನೂ ಸಹ ಉಲ್ಲಂಘಿಸಲಾಗಿದೆ. ಹಾಗಾಗಿ ಮೊದಲು ಅಧಿಕಾರಿ ಎಲ್ಲಾಪಿಜಿಗಳನ್ನು ಪರಿಶೀಲನೆ ನಡೆಸಿ ವರದಿ ಸಿದ್ಧಪಡಿಸಿದ ನಂತರ ಯಾವುದಾದರೂ ನಿರ್ಣಯ ಕೈಗೊಳ್ಳಬಹುದಾಗಿದೆ. ಆದ್ದರಿಂದ ಮೊದಲು ಅಧಿಕಾರಿಗಳು ಪಿಜಿಗಳನ್ನು ಪರಿಶೀಲನೆ ನಡೆಸಿ ಎಂದು ಆದೇಶಿಸಿದೆ. ಅರ್ಜಿದಾರರ ಪರ ವಕೀಲರು, ಜಿಬಿಎ ಟ್ರೇಡ್ ಲೈಸನ್ಸ್ಗೆ ಜಾರಿಗೊಳಿಸಿದ್ದ ನಿಯಮಗಳನ್ನು ಉಲ್ಲಂಘಿಸಿ ಏಕಪಕ್ಷೀಯವಾಗಿ ಪಿಜಿಗಳಿಗೆ ನಿಯಮಗಳನ್ನು ರೂಪಿಸಿದೆ. ಹಾಗಾಗಿ ಅವುಗಳನ್ನು ರದ್ದುಗೊಳಿಸಬೇಕು ಎಂದು ಕೋರಿದ್ದರು. 2020ರ ಬಿಬಿಎಂಪಿ ಕಾಯ್ದೆ ಸೆಕ್ಷನ್ 305ರಡಿ ಬಿಬಿಎಂಪಿ ವ್ಯಾಪ್ತಿಯಲ್ಲಿರುವ ಎಲ್ಲ ಪಿಜಿ ಗೆಸ್ಟ್ ಹೌಸ್ಗಳು ಟ್ರೇಡ್ ಲೈಸೆನ್ಸ್ ನಿಯಮಾವಳಿಗಳನ್ನು ಪಾಲನೆ ಮಾಡಬೇಕು. ಜತೆಗೆ ಗೆಸ್ಟ್ ಹೌಸ್ ಪ್ರವೇಶ ಮತ್ತು ನಿರ್ಗಮನದಲ್ಲಿ ಸಿಸಿ ಕ್ಯಾಮರಾ ಅಳವಡಿಸಬೇಕು. ಕ್ಯಾಮರಾ ದೃಶ್ಯಾವಳಿಯನ್ನು 90 ದಿನಗಳ ಕಾಲ ಸಂಗ್ರಹಿಸಿಡಬೇಕು. ಪ್ರತಿಯೊಬ್ಬ ವಾಸಿಗೂ ಕನಿಷ್ಠ 70 ಚದರ ಅಡಿ ಜಾಗ ಒದಗಿಸಬೇಕು, ಕೋಣೆಗಳಲ್ಲಿ, ಶೌಚಾಲಯಗಳಲ್ಲಿಸ್ವಚ್ಛತೆಗೆ ಆದ್ಯತೆ ನೀಡಬೇಕು. ಶುದ್ಧ ಕುಡಿಯುವ ನೀರು ಒದಗಿಸಬೇಕು ಎಂಬ ಷರತ್ತುಗಳನ್ನು ಮುಖ್ಯ ಆಯುಕ್ತರು ವಿಧಿಸಿದ್ದರು. ಜತೆಗೆ, ಅಡುಗೆ ಕೋಣೆಗಳಿಗೆ ಎಫ್ಎಸ್ಎಸ್ಎಐನಿಂದ ಪ್ರತ್ಯೇಕ ಪರವಾನಗಿ ಪಡೆದುಕೊಳ್ಳಬೇಕು. ಕಟ್ಟಡದಕ್ಕೆ ದಿನದ 24 ಗಂಟೆಯೂ ಭದ್ರತೆ ಒದಗಿಸಲು ಸೆಕ್ಯೂರಿಟಿ ಗಾರ್ಡ್ಗಳಿರಬೇಕು. ಒಂದು ವೇಳೆ ಕಟ್ಟಡದಲ್ಲಿಆಗ್ನಿ ಆಕಸ್ಮಿಕ ಸಂಭವಿಸಿದರೆ ಆಗ ಅಗ್ನಿ ಶಾಮಕ ವಾಹನ ಕಟ್ಟಡದ ಬಳಿ ಸುಲಭವಾಗಿ ಬಂದು ಕಾರ್ಯನಿರ್ವಹಿಸುವ ಅನುಕೂಲವಿರಬೇಕು, ಬಿಬಿಎಂಪಿ ಹಾಗೂ ಪೊಲೀಸ್ ಸಹಾಯವಾಣಿ ಸಂಖ್ಯೆಯ ಬೋರ್ಡ್ ಹಾಕಿರಬೇಕು ಎಂದು ಹಲವು ಷರತ್ತುಗಳನ್ನು ವಿಧಿಸಲಾಗಿತ್ತು. ಈ ಎಲ್ಲ ನಿಯಮಗಳನ್ನು 6 ತಿಂಗಳಲ್ಲಿ ಪಾಲಿಸಬೇಕು, ಒಂದು ವೇಳೆ ಅವುಗಳನ್ನು ಉಲ್ಲಂಘಿಸಿದರೆ ಕಠಿಣ ಕ್ರಮ ಎದುರಿಸಬೇಕಾಗುತ್ತದೆ ಎಂದು ಆದೇಶದಲ್ಲಿ ಹೇಳಲಾಗಿತ್ತು.
ಜಮ್ಕೊ : ಜಾಗತಿಕ ಪ್ರಮುಖ ಕಂಪೆನಿಯಿಂದ ರಾಜ್ಯದಲ್ಲಿ ವಹಿವಾಟು ವಿಸ್ತರಣೆ
ಬೆಂಗಳೂರು : ವಿಮಾನ ಕ್ಯಾಬಿನ್ ಒಳಾಂಗಣ ಕ್ಷೇತ್ರದ ಜಾಗತಿಕ ಮುಂಚೂಣಿ ಸಂಸ್ಥೆ ಜಮ್ಕೊ (Jamco) ಬೆಂಗಳೂರಿನಲ್ಲಿ ತನ್ನ ಉತ್ಪನ್ನ ಎಂಜಿನಿಯರಿಂಗ್ ಕೇಂದ್ರ ಸ್ಥಾಪಿಸುವುದಾಗಿ ಪ್ರಕಟಿಸಿದೆ. ಈ ಪೂರ್ಣ ಪ್ರಮಾಣದ ಉತ್ಪನ್ನ ಎಂಜಿನಿಯರಿಂಗ್ ಕೇಂದ್ರ ಸ್ಥಾಪಿಸುವ ಮೂಲಕ ಜಮ್ಕೊ, ಕರ್ನಾಟಕದಲ್ಲಿ ತನ್ನ ಎಂಜಿನಿಯರಿಂಗ್ ವಹಿವಾಟನ್ನು ಬಲಪಡಿಸಲಿದೆ. ‘ರಾಜ್ಯದಲ್ಲಿ ವಿಪುಲ ಪ್ರಮಾಣದಲ್ಲಿ ಲಭ್ಯರಿರುವ ಪರಿಣತ ಎಂಜಿನಿಯರಿಂಗ್ ಉದ್ಯೋಗಿಗಳು ಮತ್ತು ಭದ್ರವಾಗಿ ನೆಲೆವೂರಿರುವ ವೈಮಾಂತರಿಕ್ಷ ವಲಯವು ಜಾಗತಿಕ ಹೂಡಿಕೆ ಆಕರ್ಷಿಸುತ್ತಿರುವುದಕ್ಕೆ ಜಮ್ಕೊದ ಹೂಡಿಕೆಯು ಮತ್ತೊಂದು ನಿದರ್ಶನವಾಗಿದೆ’ ಎಂದು ಕೈಗಾರಿಕಾ ಆಯುಕ್ತೆ ಗುಂಜನ್ ಕೃಷ್ಣ ತಿಳಿಸಿದ್ದಾರೆ. ಕಂಪೆನಿಯ ಸಿಒಒ ಸಂಜೀವ್ ಸೆನ್ ಮತ್ತು ನಿರ್ದೇಶಕ ಮಂಡಳಿ ಅಧ್ಯಕ್ಷೆ ಕೇಟ್ ಷೆಫರ್ ನೇತೃತ್ವದ ತಂಡ ಆಯುಕ್ತರನ್ನು ಭೇಟಿ ಮಾಡಿ ಹೂಡಿಕೆ ಬಗ್ಗೆ ಮಾಹಿತಿ ನೀಡಿದರು. ಭೇಟಿ ಬಳಿಕ ಬೆಂಗಳೂರಿನಲ್ಲಿ ಕಂಪೆನಿಯ ಉತ್ಪನ್ನ ಎಂಜಿನಿಯರಿಂಗ್ ಕೇಂದ್ರ ಸ್ಥಾಪಿಸುವ ನಿರ್ಧಾರವನ್ನು ಆಯುಕ್ತರು ಪ್ರಕಟಿಸಿದ್ದಾರೆ. ಬೆಂಗಳೂರಿನ ಈ ಎಂಜಿನಿಯರಿಂಗ್ ಕೇಂದ್ರವು ಬೋಯಿಂಗ್, ಏರ್ಬಸ್ ಮತ್ತು ಇತರ ಜಾಗತಿಕ ವಿಮಾನಯಾನ ಸಂಸ್ಥೆಗಳ ವಿಮಾನಗಳ ಒಳಾಂಗಣದಲ್ಲಿ ಬಳಕೆಯಾಗುವ ಪರಿಕರಗಳನ್ನು ಪೂರ್ಣ ಪ್ರಮಾಣದಲ್ಲಿ ತಯಾರಿಸಲಿದೆ. ‘ಜಾಗತಿಕವಾಗಿ ಪ್ರಮಾಣಿಕೃತ ವೈಮಾಂತರಿಕ್ಷ ಉತ್ಪನ್ನ ತಯಾರಿಸುವ ಸಾಮಥ್ರ್ಯ ವೃದ್ಧಿಸಲು ರಾಜ್ಯದಲ್ಲಿ ಮಾಡುತ್ತಿರುವ ಈ ಹೂಡಿಕೆಯು ಕರ್ನಾಟಕದ ಬಗೆಗಿನ ನಮ್ಮ ದೀರ್ಘಕಾಲೀನ ಬದ್ಧತೆಗೆ ನಿದರ್ಶನವಾಗಿದೆ. ಭಾರತದ ವಿಮಾನಯಾನ ಮಾರುಕಟ್ಟೆ ಕ್ಷಿಪ್ರಗತಿಯಲ್ಲಿ ವಿಸ್ತರಣೆಯಾಗುತ್ತಿದೆ. ಕರ್ನಾಟಕವು ಈ ಪ್ರಗತಿಗೆ ಗಮನಾರ್ಹ ಕೊಡುಗೆ ನೀಡುತ್ತಿದೆ. ಜಮ್ಕೊದ ನೆರವಿನಿಂದ ವಿಮಾನಗಳಲ್ಲಿ ಹೊಸ ತಲೆಮಾರಿನ ಕ್ಯಾಬಿನ್ ನಾವೀನ್ಯತೆ ರೂಪಿಸಲು ನೆರವಾಗುತ್ತಿದೆ. ಜೊತೆಗೆ ವಿಶ್ವದ ಅತ್ಯಾಧುನಿಕ ವೈಮಾಂತರಿಕ್ಷ ಎಂಜಿನಿಯರಿಂಗ್ ಕೇಂದ್ರವಾಗಿ ತನ್ನ ಸ್ಥಾನ ಭದ್ರಪಡಿಸಿಕೊಳ್ಳುತ್ತಿದೆ’ ಎಂದು ಅವರು ಹೇಳಿದ್ದಾರೆ. ಕರ್ನಾಟಕ ಸರಕಾರವು ನೀಡುತ್ತಿರುವ ಬೆಂಬಲ ಮತ್ತು ವೈಮಾಂತರಿಕ್ಷ ಕ್ಷೇತ್ರದಲ್ಲಿನ ರಾಜ್ಯದ ನಾಯಕತ್ವವನ್ನು ಕೇಟ್ ಷೆಫರ್ ಅವರು ಶ್ಲಾಘಿಸಿದ್ದಾರೆ.
ರಾಜ್ಯದಲ್ಲಿ ರಾಜಕೀಯ ನಾಯಕತ್ವ ಗಟ್ಟಿಯಾಗಿದೆ : ಸಚಿವ ಮಹದೇವಪ್ಪ
ಬೆಂಗಳೂರು : ನಾಯಕತ್ವ ಬದಲಾವಣೆ ಸಂಬಂಧ ಸಮಾಜ ಕಲ್ಯಾಣ ಇಲಾಖೆ ಸಚಿವ ಡಾ. ಎಚ್.ಸಿ. ಮಹದೇವಪ್ಪ ಅವರು ಹೈಕೋರ್ಟ್ ತೀರ್ಪುನ್ನು ಉಲ್ಲೇಖಿಸಿ ನೀಡಿದ ಹೇಳಿಕೆ ಇದೀಗ ಚರ್ಚೆಗೆ ಗ್ರಾಸವಾಗಿದೆ. ಸೋಮವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಚಿವ ಮಹದೇವಪ್ಪ, ‘ಇಲ್ಲಿ ನಾಯಕತ್ವದ ಚರ್ಚೆ ಎಲ್ಲಿದೆ?. ಹೈಕೋರ್ಟ್ ಬೀದಿ ನಾಯಿಗಳನ್ನೆಲ್ಲ ಹಿಡಿದು ಒಳಗೆ ಹಾಕಿ ಎಂದು ಪದೇ ಪದೆ ಹೇಳುತ್ತಿದೆ. ರಾಜ್ಯದಲ್ಲಿ ರಾಜಕೀಯ ನಾಯಕತ್ವ ಗಟ್ಟಿಯಾಗಿದೆ’ ಎಂದು ಉಲ್ಲೇಖಿಸಿದ್ದು, ಈ ಕುರಿತು ಆಕ್ಷೇಪಕ್ಕೆ ಕಾರಣವಾಗಿದೆ. ಹೈಕೋರ್ಟ್ ಹೇಳಿದ್ದನ್ನು ನಾನು ಉಲ್ಲೇಖಿಸಿದೆ. ನಾನು ಯಾರನ್ನು ಉದ್ದೇಶಿಸಿ ಹೇಳಿಕೆ ನೀಡಿಲ್ಲ. ಹೈಕಮಾಂಡ್ಗೆ ನಿರ್ದೇಶನ ನೀಡಲು ಸಾಧ್ಯವಿಲ್ಲ. ಬಾಲವೇ ಶ್ವಾನವನ್ನು ಅಲ್ಲಾಡಿಸಿದರೆ ಹೇಗೇ?. ಹೈಕಮಾಂಡ್ನವರನ್ನು ಅಲ್ಲಾಡಿಸಲು ಸಾಧ್ಯವೇ? ಎಂದು ಮಹದೇವಪ್ಪ ವಿವರಣೆ ನೀಡಿದರು. ಎಸ್ಸಿಪಿ-ಟಿಎಸ್ಪಿ ಯೋಜನೆಯಡಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ಕಲ್ಯಾಣಕ್ಕೆ ಮೀಸಲಿಟ್ಟ ಅನುದಾನವನ್ನು ಅನ್ಯ ಉದ್ದೇಶಕ್ಕೆ ಬಳಕೆಗೆ ಅವಕಾಶ ಕಲ್ಪಿಸುವ ‘ಸೆಕ್ಷನ್ 7 ಡಿ’ ತೆಗೆದು ಹಾಕಲಾಗಿದೆ ಎಂದ ಅವರು, ಅಧ್ಯಯನ ನಿಮಿತ್ತ ಪಕ್ಷದ ಕೆಲ ಶಾಸಕರು ವಿದೇಶಿ ಪ್ರವಾಸ ತೆರಳುತ್ತಿದ್ದಾರೆ. ಇದರಲ್ಲಿ ವಿಶೇಷವೇನು ಇಲ್ಲ ಎಂದು ಸ್ಪಷ್ಟಪಡಿಸಿದರು.
400 ಕೋಟಿ ರೂ. ದರೋಡೆ ಪ್ರಕರಣ | ಎಸ್ಐಟಿ ತನಿಖೆ ಪಾರದರ್ಶಕವಾಗಿಲ್ಲ : ಎಸ್ಪಿಗೆ ದೂರುದಾರನ ಪತ್ರ
ಬೆಳಗಾವಿ : ಖಾನಾಪುರ ತಾಲೂಕಿನ ಚೋರ್ಲಾ ಘಾಟ್ನಲ್ಲಿ ನಡೆದಿದೆ ಎನ್ನಲಾದ 400 ಕೋಟಿ ರೂ. ದರೋಡೆ ಪ್ರಕರಣಕ್ಕೆ ಸಂಬಂಧಿಸಿ ಮತ್ತೊಂದು ತಿರುವು ಸಿಕ್ಕಿದೆ. ಪ್ರಕರಣದ ದೂರುದಾರ ಸಂದೀಪ್ ದತ್ತಾ ಪಾಟೀಲ್ ಬೆಳಗಾವಿಯಲ್ಲಿ ಎಫ್ಐಆರ್ ದಾಖಲಿಸುವಂತೆ ಜಿಲ್ಲಾ ಪೊಲೀಸ್ ಅಧೀಕ್ಷಕ ಕೆ. ರಾಮರಾಜನ್ ಅವರಿಗೆ ಪತ್ರ ಬರೆದಿದ್ದಾರೆ. ಮಹಾರಾಷ್ಟ್ರದ ಎಸ್ಐಟಿ ತನಿಖೆ ಪಾರದರ್ಶಕವಾಗಿಲ್ಲ ಎಂದು ಆರೋಪಿಸಿರುವ ಸಂದೀಪ್ ಪಾಟೀಲ್, ಘಟನೆಗೆ ಸಂಬಂಧಿಸಿದ ಕೆಲವು ಆಡಿಯೊ ದಾಖಲೆಗಳು ನಮ್ಮ ಬಳಿ ಇರುವುದಾಗಿ ತಿಳಿಸಿದ್ದಾರೆ. ಆ ದಾಖಲೆಗಳ ಆಧಾರದ ಮೇಲೆ ಬೆಳಗಾವಿ ಪೊಲೀಸರು ಎಫ್ಐಆರ್ ದಾಖಲಿಸಿ ಸಮಗ್ರ ತನಿಖೆ ನಡೆಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ವಿಜಯನಗರ | ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಆರೋಪ: ಆರೋಪಿಗಳಿಗೆ 2 ವರ್ಷ ಜೈಲು ಶಿಕ್ಷೆ
ವಿಜಯನಗರ/ಹೊಸಪೇಟೆ : ಪೊಲೀಸರ ಕರ್ತವ್ಯ ನಿರ್ವಹಣೆಗೆ ಅಡ್ಡಿಪಡಿಸಿದ ಪ್ರಕರಣದಲ್ಲಿ ಆರೋಪಿಗಳು ತಪ್ಪಿತಸ್ಥರೆಂದು ಸಾಬೀತಾದ ಹಿನ್ನೆಲೆಯಲ್ಲಿ ನ್ಯಾಯಾಲಯವು 2 ವರ್ಷಗಳ ಜೈಲು ಶಿಕ್ಷೆ ಹಾಗೂ 10,000 ರೂ. ದಂಡ ವಿಧಿಸಿದೆ. 2022ರ ಜನವರಿ 19ರಂದು ಹೊಸಪೇಟೆ ಪಟ್ಟಣದಲ್ಲಿ ನಡೆದ ಘಟನೆಯ ವೇಳೆ ಪೊಲೀಸ್ ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ಕೆಲವರು ಅಡ್ಡಿಪಡಿಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿ ಬೆದರಿಕೆ ಹಾಕಿದ ಆರೋಪ ಕೇಳಿಬಂದಿತ್ತು. ಈ ಕುರಿತು ಹೊಸಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ಪೂರ್ಣಗೊಂಡ ನಂತರ ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆಯ ಕಲಂ 353, 341, 504, 506 ಸೇರಿದಂತೆ ವಿವಿಧ ವಿಧಿಗಳಡಿ ಆರೋಪಪಟ್ಟಿ ಸಲ್ಲಿಸಲಾಗಿತ್ತು. ಪ್ರಕರಣದ ವಿಚಾರಣೆಯಲ್ಲಿ ಸಲ್ಲಿಸಲಾದ ಸಾಕ್ಷ್ಯಾಧಾರಗಳು ಹಾಗೂ ಸಾಕ್ಷಿದಾರರ ಹೇಳಿಕೆಗಳನ್ನು ಪರಿಗಣಿಸಿದ ನ್ಯಾಯಾಲಯ ಆರೋಪಿಗಳನ್ನು ತಪ್ಪಿತಸ್ಥರೆಂದು ತೀರ್ಪು ನೀಡಿದೆ. ಕರ್ತವ್ಯ ನಿರ್ವಹಿಸುತ್ತಿದ್ದ ಸರ್ಕಾರಿ ಸಿಬ್ಬಂದಿಗೆ ಅಡ್ಡಿಪಡಿಸುವುದು ಗಂಭೀರ ಅಪರಾಧವಾಗಿದ್ದು, ಇಂತಹ ಕೃತ್ಯಗಳಿಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತದೆ ಎಂಬ ಸಂದೇಶವನ್ನು ಈ ತೀರ್ಪು ನೀಡಿದೆ ಎಂದು ಪೊಲೀಸ್ ವಲಯದ ಅಧಿಕಾರಿಗಳು ತಿಳಿಸಿದ್ದಾರೆ.
ಬೆಳಗಾವಿ, ಫೆ.16: ಕೋಮುವಾದದ ಕಾರಣ ಕರಾವಳಿಯಲ್ಲಿ ಐಟಿ-ಬಿಟಿ ಕಂಪೆನಿಗಳು ಬಂಡವಾಳ ಹಾಕಲು ಹೆದರುತ್ತಿವೆ ಎಂಬ ಪ್ರಿಯಾಂಕ್ ಖರ್ಗೆ ಅವರ ಅಭಿಪ್ರಾಯವನ್ನು ದಕ್ಷಿಣ ಕನ್ನಡ ಜಿಲ್ಲೆಯ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಸಮರ್ಥಿಸಿಕೊಂಡಿದ್ದಾರೆ. ಬೈಲಹೊಂಗಲದಲ್ಲಿ 50 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆಯನ್ನು ಸೋಮವಾರ ಉದ್ಘಾಟಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋಮು ಸೌಹಾರ್ದವನ್ನು ಕಾಪಾಡುವ ಉದ್ದೇಶದಿಂದ ರಾಜ್ಯ ಸರಕಾರದ ಹಲವು ಕ್ರಮಗಳ ನಂತರ ಪರಿಸ್ಥಿತಿ ಸುಧಾರಿಕೊಂಡಿವೆ, ಪ್ರಿಯಾಂಕ್ ಖರ್ಗೆ ಅವರು ಹೇಳಿದ್ದು ಸರಿಯಿದೆ. ಪರಿಸ್ಥಿತಿ ಸುಧಾರಿಸಿದರೆ ದಕ್ಷಿಣ ಕನ್ನಡ ಜಿಲ್ಲೆಗೆ ಹೆಚ್ಚು ಜನ ಬರುತ್ತಾರೆ ಎಂದು ಹೇಳಿದರು. ಸರಕಾರವು ಕಾನೂನು ಸುವ್ಯವಸ್ಥೆಯ ಬಗ್ಗೆ ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳಲಿದೆ, ಕಾಂಗ್ರೆಸ್ ಸರಕಾರವು ಯಾರ ಪರವಾಗಿಯೂ ಇಲ್ಲ, ಯಾರ ವಿರುದ್ಧವೂ ಇಲ್ಲ. ಯಾರೇ ಆಗಲಿ ಕಾನೂನಿನ ವಿರುದ್ದ ಕೆಲಸ ಮಾಡಿದರೆ ಅಂತವರ ಮೇಲೆ ಕೂಡಲೇ ಕ್ರಮ ಕೈಗೊಳ್ಳಲಾಗುವುದು ಹಾಗು ಇದರಿಂದಾಗಿ ಕೆಲವು ಸುಧಾರಣೆಗಳು ಯಾಗಿವೆ, ಇನ್ನು ಪ್ರವಾಸೋದ್ಯಮದ ಬಗ್ಗೆ ಮಾತನಾಡಿದ ಅವರು, ರಾಜ್ಯ ಸರಕಾರ ಇದರ ಬಗ್ಗೆ ಹೆಚ್ಚಿನ ಮಟ್ಟದಲ್ಲಿ ಒತ್ತು ನೀಡಲಾಗುತ್ತದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಕರಾವಳಿ ಕರ್ನಾಟಕಕ್ಕೆ ಭೇಟಿ ನೀಡಿ ಒಂದು ದಿನದ ಕಾರ್ಯಾಗಾರವನ್ನು ಉದ್ಘಾಟಿಸಿದ್ದರು. ಮಂಗಳೂರಿನಲ್ಲಿ ಫೈವ್ ಸ್ಟಾರ್ ಹೋಟೆಲ್ ನಿರ್ಮಾಣಕ್ಕೆ ಅನುಮತಿ ನೀಡಲಾಗಿದೆ. ಕರಾವಳಿ ಭಾಗದ ಮಂಗಳೂರಿನಲ್ಲಿ ಹೂಡಿಕೆಯಿಂದ ಸಾಕಷ್ಟು ಆಕರ್ಷಿಸಿಸುವ ಪ್ರಯತ್ನ ಮಾಡಬಹುದಾಗಿದೆ. ಆದರೆ ಇಲ್ಲಿ ಕೋಮವಾದ ವಾತಾವರಣ ಇರುವುದರಿಂದ ಈ ಪ್ರದೇಶವು ಸ್ವಲ್ಪಮಟ್ಟಿಗೆ ಹಿಂದುಳಿದಿರುವುದಕ್ಕೆ ಕಾರಣವಾಗಿದೆ. ಇದರ ಬಗ್ಗೆ ಜನತೆಯಲ್ಲಿ ಅರಿವು ಮೂಡಿಸುವ ಕೆಲಸ ಮೊದಲು ಮಾಡಬೇಕಾಗಿದೆ ಎಂದು ಅವರು ಹೇಳಿದರು.
ವಿಜಯನಗರ | ಕಳಪೆ ಕಿಟ್ ವಿತರಣೆ ಆರೋಪ: ಎಐಸಿಸಿಟಿಯು ಕಾರ್ಯಕರ್ತರಿಂದ ಪ್ರತಿಭಟನೆ
ವಿಜಯನಗರ / ಹರಪನಹಳ್ಳಿ: ಕಾರ್ಮಿಕರ ಇಲಾಖೆಯಿಂದ ವಿತರಿಸಲಾದ ಸುರಕ್ಷತಾ ಕಿಟ್ಗಳು ಕಳಪೆ ಗುಣಮಟ್ಟದ್ದಾಗಿದ್ದು, ಈ ಕುರಿತು ಲೋಕಾಯುಕ್ತ ತನಿಖೆ ನಡೆಸಬೇಕು ಎಂದು ಆಗ್ರಹಿಸಿ ಎಐಸಿಸಿಟಿಯು ಕಾರ್ಯಕರ್ತರು ಕಿಟ್ಗೆ ಬೆಂಕಿ ಹಚ್ಚಿ ಸೋಮವಾರ ಆಕ್ರೋಶ ವ್ಯಕ್ತಪಡಿಸಿದರು. ನಗರದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದ ಬಳಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಕಾರ್ಯಕರ್ತರು, ತಾಲೂಕಿನಲ್ಲಿ 25 ಸಾವಿರಕ್ಕೂ ಅಧಿಕ ನೋಂದಾಯಿತ ಕಾರ್ಮಿಕರಿದ್ದರೂ, ಇತ್ತೀಚೆಗೆ ಕೇವಲ 898 ಕಾರ್ಮಿಕರಿಗೆ ಮಾತ್ರ ರಕ್ಷಣಾ ಕಿಟ್ಗಳನ್ನು ವಿತರಿಸಲಾಗಿದೆ ಎಂದು ಆರೋಪಿಸಿದರು. ಶಾಸಕಿ ಎಂ.ಪಿ.ಲತಾ ಮಲ್ಲಿಕಾರ್ಜುನ ಅವರ ಸಮ್ಮುಖದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬೆರಳೆಣಿಕೆಯಷ್ಟು ಕಾರ್ಮಿಕರಿಗೆ ಮಾತ್ರ ಕಿಟ್ ನೀಡಲಾಗಿದೆ ಎಂದು ದೂರಿದರು. ವಿತರಿಸಲಾದ ಕಿಟ್ಗಳು ತೀವ್ರ ಕಳಪೆ ಗುಣಮಟ್ಟದ್ದಾಗಿದ್ದು, ಮಾರುಕಟ್ಟೆ ಬೆಲೆ ಸುಮಾರು 700 ರೂ. ಮಾತ್ರವಿದೆ. ಆದರೆ ಸರ್ಕಾರದ ದಾಖಲೆಗಳಲ್ಲಿ 15,000 ರೂ. ಎಂದು ನಮೂದಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದ್ದು, ಕೋಟ್ಯಾಂತರ ರೂಪಾಯಿ ಅವ್ಯವಹಾರ ನಡೆದಿದೆ ಎಂಬ ಶಂಕೆ ವ್ಯಕ್ತವಾಗಿದೆ ಎಂದು ಹೇಳಿದರು. ಕಾರ್ಮಿಕರಿಗೆ ಕಿಟ್ ಬದಲಾಗಿ ನೇರ ನಗದು ಪಾವತಿ, ನಿವೇಶನ ಹಾಗೂ ಆಶ್ರಯ ಮನೆಗಳನ್ನು ನೀಡುವ ಮೂಲಕ ಅವರ ಸಂಕಷ್ಟ ನಿವಾರಣೆಗೆ ಸರ್ಕಾರ ಮುಂದಾಗಬೇಕು ಎಂದು ಒತ್ತಾಯಿಸಿದರು. ಶಾಸಕಿ ಎಂ.ಪಿ. ಲತಾ ಮಲ್ಲಿಕಾರ್ಜುನ ಅವರು ಕ್ಷೇತ್ರದ ಕಾರ್ಮಿಕರಿಗಾಗಿ ಕಾರ್ಮಿಕ ಆಸ್ಪತ್ರೆ ಹಾಗೂ ಲೇಬರ್ ಕಾಲೋನಿ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಸ್ವಯಂಪ್ರೇರಿತ ರಾಜೀನಾಮೆ ನೀಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು. ಹರಪನಹಳ್ಳಿ ಉಪ ವಿಭಾಗಾಧಿಕಾರಿ ಸುರೇಶ್ ಕುಮಾರ್ ಮನವಿ ಸ್ವೀಕರಿಸಿ, ವಿಷಯವನ್ನು ಸರ್ಕಾರದ ಗಮನಕ್ಕೆ ತರಲಾಗುವುದು ಎಂದು ಭರವಸೆ ನೀಡಿದರು. ಪ್ರತಿಭಟನೆಯಲ್ಲಿ ಸಂದೇರ್ ಪರಶುರಾಮ್, ಸಂತೋಷ್ ಗುಳೇದಟ್ಟಿ, ಮೊಹಮ್ಮದ್ ರಫಿ, ಕಲೀಮುಲ್ಲಾ, ಬಾಬು ಬಾಣಗೆರೆ, ಜೋಗಿನ ನಾಗರಾಜ್, ಬಿಎಸ್ ಪ್ರಕಾಶ್, ಇಬ್ರಾಹಿಂ ಸಾಹೇಬ್, ಅನ್ಸರ್ ಭಾಷಾ, ರಾಮಪ್ಪ ಸಂಡೂರಿಗೇರಿ, ಮಂಜುನಾಥ, ಕುಮಾರ ಮ್ಯಾಸರಗೇರಿ, ರಿಯಾಜ್ ಗುಣಿಕೇರಿ, ಶುಕ್ರೂ, ಕಲ್ಲುಕುಟುಗರ ರಾಘು, ಐಸಾ ವಿದ್ಯಾರ್ಥಿ ಮೋಹನ್ ಕುಮಾರ್, ಕೃಷ್ಣ ಯಾದವ್, ಇಮ್ರಾನ್ ಸೇರಿದಂತೆ ಹಲವರು ಭಾಗವಹಿಸಿದ್ದರು.
ಬಳ್ಳಾರಿ | ಬೇಸಿಗೆಯಲ್ಲಿ ವಾಂತಿ-ಬೇಧಿ ತಡೆಗೆ ಕುದಿಸಿ ಆರಿಸಿದ ನೀರು ಕುಡಿಯಿರಿ: ಡಾ. ಯಲ್ಲಾ ರಮೇಶ್ಬಾಬು
ಬಳ್ಳಾರಿ : ಸಾರ್ವಜನಿಕರು ಕುದಿಸಿ ಆರಿಸಿ ಸೋಸಿದ ನೀರನ್ನು ಮಾತ್ರ ಕುಡಿಯಬೇಕು. ಇದರಿಂದ ಸಂಭಾವ್ಯ ವಾಂತಿ-ಬೇಧಿ ಪ್ರಕರಣಗಳನ್ನು ತಡೆಗಟ್ಟಬಹುದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಯಲ್ಲಾ ರಮೇಶ್ಬಾಬು ತಿಳಿಸಿದ್ದಾರೆ. ಈ ಕುರಿತು ಪ್ರಕಟಣೆ ಹೊರಡಿಸಿರುವ ಅವರು, ಬೇಸಿಗೆ ಆರಂಭವಾಗಿರುವ ಹಿನ್ನೆಲೆಯಲ್ಲಿ ಜಾತ್ರೆ ಹಾಗೂ ಉತ್ಸವಗಳ ಸಂದರ್ಭದಲ್ಲಿ ಕಲುಷಿತ ನೀರು ಮತ್ತು ಆಹಾರ ಸೇವನೆಯಿಂದ ವಾಂತಿ-ಬೇಧಿ, ಟೈಫಾಯಿಡ್, ಕಾಲರಾ ಸೇರಿದಂತೆ ವಿವಿಧ ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆಗಳಿವೆ ಎಂದು ಎಚ್ಚರಿಸಿದ್ದಾರೆ. ವಾಂತಿ-ಬೇಧಿ ಲಕ್ಷಣಗಳು ಕಂಡುಬಂದಲ್ಲಿ ಕುದಿಸಿ ಆರಿಸಿದ ನೀರನ್ನು ಕುಡಿಯಬೇಕು. ಓಆರ್ಎಸ್ (ಜೀವಜಲ) ತಯಾರಿಸುವಾಗ 1 ಲೀಟರ್ ನೀರಿಗೆ ಆರೋಗ್ಯ ಇಲಾಖೆಯಿಂದ ನೀಡುವ ಸಂಪೂರ್ಣ ಪೊಟ್ಟಣದ ಪುಡಿಯನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಬೇಕು. ಈ ದ್ರಾವಣವನ್ನು 24 ಗಂಟೆಗಳೊಳಗೆ ಬಳಸಬೇಕು ಎಂದು ತಿಳಿಸಿದ್ದಾರೆ. ಕಲುಷಿತ ನೀರಿನಿಂದ ವಾಂತಿ-ಬೇಧಿ, ಕಾಲರಾ, ಟೈಫಾಯಿಡ್, ಹೆಪಟೈಟಿಸ್-ಎ, ಗಿಯಾರ್ಡಿಯಾ, ಸಾಲ್ಮೋನೆಲ್ಲಾ, ಶಿಗೆಲ್ಲೋಸಿಸ್, ಅಮೀಬಿಯಾಸಿಸ್, ಇ-ಕೋಲಿ ಮುಂತಾದ ರೋಗಗಳು ಹರಡುತ್ತವೆ. ಸಾರ್ವಜನಿಕರು ಶುದ್ಧೀಕರಿಸಿದ ನೀರನ್ನೇ ಬಳಸಬೇಕು ಎಂದು ಸೂಚಿಸಿದ್ದಾರೆ. ಮಲ-ಮೂತ್ರ ವಿಸರ್ಜನೆಗಾಗಿ ಶೌಚಾಲಯಗಳನ್ನೇ ಬಳಸಬೇಕು. ತಾಜಾ ಆಹಾರವನ್ನು ಮಾತ್ರ ಸೇವಿಸಬೇಕು. ತಯಾರಿಸಿದ ಆಹಾರವನ್ನು ಮುಚ್ಚಿ ಇಡಬೇಕು. ಕುಡಿಯುವ ನೀರಿನ ಪಾತ್ರೆಗಳಿಗೆ ಮುಚ್ಚಳ ಹಾಕಿ, ನಳ ಇರುವ ಪಾತ್ರೆಗಳನ್ನು ಬಳಸಬೇಕು. ನೀರಿನಲ್ಲಿ ಕೈ ಅದ್ದುವುದನ್ನು ತಪ್ಪಿಸಬೇಕು ಎಂದು ತಿಳಿಸಿದ್ದಾರೆ. ರಸ್ತೆ ಬದಿಯಲ್ಲಿ ತೆರೆದಿಟ್ಟ ಅಥವಾ ಕತ್ತರಿಸಿದ ಹಣ್ಣುಗಳನ್ನು ತಿನ್ನಬಾರದು. ವಾಂತಿ-ಬೇಧಿ ಅಥವಾ ಕಾಲರಾ ಸೋಂಕಿತರಿಗೆ ಗಂಜಿ, ಬೇಳೆ ತಳಿ, ನಿಂಬು ಪಾನಕ ಹಾಗೂ ಎಳೆನೀರು ನೀಡುವುದು ಒಳಿತು. ಊಟದ ಮೊದಲು ಹಾಗೂ ಶೌಚದ ನಂತರ ಕೈಗಳನ್ನು ಸಾಬೂನು ಮತ್ತು ನೀರಿನಿಂದ ತೊಳೆಯಬೇಕು ಎಂದು ಅವರು ಹೇಳಿದ್ದಾರೆ. ಮೇಲ್ಕಂಡ ಮುಂಜಾಗ್ರತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಮೂಲಕ ಸಾರ್ವಜನಿಕರು ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದು ಡಾ. ಯಲ್ಲಾ ರಮೇಶ್ಬಾಬು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಶಾಸಕರ ಪ್ರವಾಸದಲ್ಲಿ ತಪ್ಪಿಲ್ಲ, ನಾವು ಒಂದಾಗಿದ್ದೇವೆ : ದಿನೇಶ್ ಗುಂಡೂರಾವ್
ಬೆಳಗಾವಿ : ‘ನಮ್ಮ ಶಾಸಕರು ‘‘ಹಾಲಿಡೇ’’ ಪ್ರವಾಸಕ್ಕೆ ಹೋದರೆ ತಪ್ಪೇನು? ಅದು ಅವರವರ ಇಷ್ಟದ ಪ್ರವಾಸ. ನಾವೆಲ್ಲ ಒಂದಾಗಿದ್ದೇವೆ’ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ. ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಬದಲಾವಣೆ ಕುರಿತು ಪಕ್ಷದಲ್ಲಿ ಯಾವುದೇ ಗೊಂದಲ ಇಲ್ಲ ಎಂದು ಸ್ಪಷ್ಟಪಡಿಸಿದರು. ‘ಸಾವಿರ ದಿನ ಪೂರೈಸಿದ ಕಾರ್ಯಕ್ರಮವನ್ನು ಹಾವೇರಿಯಲ್ಲಿ ಎಲ್ಲರೂ ಒಗ್ಗಟ್ಟಾಗಿ ನಡೆಸಿದ್ದೇವೆ. ಅದೇ ನಮ್ಮ ಏಕತೆಯ ಸಾಕ್ಷಿ’ ಎಂದರು. ಯತೀಂದ್ರ ಅವರ ಹೇಳಿಕೆ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ಮೈಕ್ ಮುಂದೆ ಬಂದಾಗ ಕೆಲವೊಮ್ಮೆ ಅನಿರೀಕ್ಷಿತವಾಗಿ ಕೆಲವು ಮಾತುಗಳು ಬರುತ್ತವೆ. ಅದೇ ರೀತಿಯ ಹೇಳಿಕೆಯನ್ನು ಯತೀಂದ್ರ ನೀಡಿರಬಹುದು. ಈ ವಿಚಾರದಲ್ಲಿ ಸಿಎಂ ಹಾಗೂ ಡಿಸಿಎಂ ಅವರೇ ಅಂತಿಮವಾಗಿ ಹೇಳಿಕೆ ನೀಡಿದ್ದಾರೆ’ ಎಂದು ತಿಳಿಸಿದರು. ಕರಾವಳಿಯಲ್ಲಿ ಕೋಮು ಸಂಘರ್ಷ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಬಂಡವಾಳ ಹೂಡಿಕೆಗೆ ಕಂಪನಿಗಳು ಹಿಂದೇಟು ಹಾಕುತ್ತಿವೆ ಎಂಬ ಸಚಿವ ಪ್ರಿಯಾಂಕ್ ಖರ್ಗೆ ಅವರ ಆರೋಪದ ಕುರಿತು ಪ್ರಶ್ನಿಸಿದಾಗ, ‘ನಮ್ಮ ಸರಕಾರ ಬಂದ ನಂತರ ಹಲವು ಸುಧಾರಣಾ ಕ್ರಮಗಳನ್ನು ಕೈಗೊಂಡಿದ್ದೇವೆ. ಈಗ ಅಲ್ಲಿ ಶಾಂತಿಯ ವಾತಾವರಣ ನಿರ್ಮಾಣವಾಗಿದೆ. ಹೆಚ್ಚಿನ ಬಂಡವಾಳ ಹೂಡಿಕೆ ಆಗುವಂತೆ ಪ್ರಯತ್ನಿಸುತ್ತಿದ್ದೇವೆ’ ಎಂದರು. ‘ಆರೆಸ್ಸೆಸ್ ದೆವ್ವ ಇದ್ದಂತೆ’ ಎಂಬ ಪ್ರಿಯಾಂಕ್ ಖರ್ಗೆ ಹೇಳಿಕೆ ಕುರಿತು ಕೇಳಿದಾಗ, ‘ಆ ವಿಷಯದ ಬಗ್ಗೆ ಅವರನ್ನೇ ಕೇಳಿ. ನನಗೆ ಪೂರ್ಣ ಮಾಹಿತಿ ಇಲ್ಲ’ ಎಂದು ಪ್ರತಿಕ್ರಿಯಿಸಿದರು.
ವಿಜಯನಗರ | ಹಂಪಿ ಉತ್ಸವದ ಯಶಸ್ಸಿಗೆ ಶ್ರಮಿಸಿದ 134 ಪೌರಕಾರ್ಮಿಕರಿಗೆ ಹೆಲಿಕಾಪ್ಟರ್ ಸವಾರಿ
ವಿಜಯನಗರ / ಹಂಪಿ: ವಿಶ್ವಪ್ರಸಿದ್ಧ ಹಂಪಿ ಉತ್ಸವದ ಯಶಸ್ಸಿಗೆ ಮಹತ್ವದ ಪಾತ್ರವಹಿಸಿದ 134 ಪೌರಕಾರ್ಮಿಕರಿಗೆ ವಿಶೇಷ ಗೌರವವಾಗಿ ಹೆಲಿಕಾಪ್ಟರ್ ಸವಾರಿ ವ್ಯವಸ್ಥೆ ಮಾಡಲಾಗಿದ್ದು, ಈ ಕಾರ್ಯಕ್ರಮ ಎಲ್ಲರ ಗಮನಸೆಳೆಯಿತು. ಉತ್ಸವದ ಅವಧಿಯಲ್ಲಿ ಹಂಪಿ ಪ್ರದೇಶವನ್ನು ಸ್ವಚ್ಛವಾಗಿಡಲು ದಿನರಾತ್ರಿ ಶ್ರಮಿಸಿ ಕಸ ವಿಲೇವಾರಿ ಸೇರಿದಂತೆ ವಿವಿಧ ಸ್ವಚ್ಛತಾ ಕಾರ್ಯಗಳನ್ನು ನಿಭಾಯಿಸಿದ ಪೌರಕಾರ್ಮಿಕರ ಸೇವೆಯನ್ನು ಮೆಚ್ಚಿ ಈ ಗೌರವ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಕ್ಷೇತ್ರದ ಶಾಸಕ ಎಚ್.ಆರ್. ಗವಿಯಪ್ಪ ಅವರ ಪ್ರೇರಣೆಯಲ್ಲಿ ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೆರೆ, ಜಿಲ್ಲಾ ನಗರಾಭಿವೃದ್ಧಿ ಕೋಶದ ವ್ಯವಸ್ಥಾಪಕ ನಿರ್ದೇಶಕ ಮನೋಹರ್ ಹಾಗೂ ನಗರಸಭೆ ಪೌರಾಯುಕ್ತ ಶಿವಕುಮಾರ್ ಅವರ ನೇತೃತ್ವದಲ್ಲಿ ಈ ವಿಶೇಷ ಗೌರವ ನೀಡಲಾಯಿತು. ಹಂಪಿ ಉತ್ಸವದಲ್ಲಿ ಸೇವೆ ಸಲ್ಲಿಸಿದ 134 ಪೌರಕಾರ್ಮಿಕರಿಗೆ ಹೆಲಿಕಾಪ್ಟರ್ ಮೂಲಕ ಹಂಪಿ ಸುತ್ತಮುತ್ತಲಿನ ಪ್ರದೇಶಗಳ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದ್ದು, ಇದು ಅವರ ಜೀವನದಲ್ಲಿ ಮರೆಯಲಾಗದ ಅನುಭವವಾಗಿ ಪರಿಣಮಿಸಿತು. ಪೌರಕಾರ್ಮಿಕರ ಪರಿಶ್ರಮಕ್ಕೆ ಸಮಾಜ ಕೃತಜ್ಞತೆ ಸಲ್ಲಿಸುವ ಸಂದೇಶವನ್ನು ಈ ಕಾರ್ಯಕ್ರಮ ನೀಡಿತು. ಈ ಸಂದರ್ಭದಲ್ಲಿ ಮಾತನಾಡಿದ ಅಧಿಕಾರಿಗಳು, ಉತ್ಸವದ ಯಶಸ್ಸಿಗೆ ಪೌರಕಾರ್ಮಿಕರ ಸೇವೆ ಅನನ್ಯವಾಗಿದ್ದು, ಅವರ ಶ್ರಮವನ್ನು ಗುರುತಿಸಿ ಗೌರವಿಸುವುದು ಎಲ್ಲರ ಕರ್ತವ್ಯ ಎಂದು ತಿಳಿಸಿದರು. ಹೆಲಿಕಾಪ್ಟರ್ ಸವಾರಿ ಅವಕಾಶ ಪಡೆದ ಪೌರಕಾರ್ಮಿಕರು ಸಂತಸ ವ್ಯಕ್ತಪಡಿಸಿ, ತಮ್ಮ ಸೇವೆಯನ್ನು ಮತ್ತಷ್ಟು ನಿಷ್ಠೆಯಿಂದ ಮುಂದುವರಿಸುವುದಾಗಿ ಹೇಳಿದರು. ಹಂಪಿ ಉತ್ಸವದಲ್ಲಿ ಪೌರಕಾರ್ಮಿಕರಿಗೆ ನೀಡಿದ ಈ ವಿಶಿಷ್ಟ ಗೌರವ ಕಾರ್ಯಕ್ರಮ ಸಾರ್ವಜನಿಕರಿಂದ ಮೆಚ್ಚುಗೆಗೆ ಪಾತ್ರವಾಯಿತು.
ಬಳ್ಳಾರಿ | ಯಾದಗಿರಿ ಜಿಲ್ಲಾ ರೈತ ಸಂಘದ ಅಧ್ಯಕ್ಷರಾಗಿ ವಿಜಯ್ ಭರತ್ ನೇಮಕ
ಬಳ್ಳಾರಿ: ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಯಾದಗಿರಿ ಜಿಲ್ಲೆಗೆ ಅಧ್ಯಕ್ಷರಾಗಿ ವಿಜಯ್ ಭರತ್ ಅವರನ್ನು ನೇಮಕ ಮಾಡಲಾಗಿದೆ. ವಿಜಯ್ ಭರತ್ ಅವರು ಹಲವು ವರ್ಷಗಳಿಂದ ರೈತ ಪರ ಹೋರಾಟಗಳಲ್ಲಿ ಸಕ್ರಿಯರಾಗಿದ್ದು, ರೈತರ ಸಮಸ್ಯೆಗಳ ಕುರಿತು ಧ್ವನಿ ಎತ್ತುತ್ತಿದ್ದಾರೆ. ಕಳಪೆ ಬೀಜ ಮತ್ತು ಗೊಬ್ಬರದಿಂದ ರೈತರು ಅನುಭವಿಸುತ್ತಿರುವ ನಷ್ಟ, ಅತಿವೃಷ್ಟಿ ಮತ್ತು ಅನಾವೃಷ್ಟಿಯಿಂದ ಉಂಟಾಗುತ್ತಿರುವ ಸಂಕಷ್ಟಗಳ ಬಗ್ಗೆ ಸರ್ಕಾರದ ಗಮನ ಸೆಳೆಯುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ. ತೊಗರಿ, ಕಬ್ಬು, ಸೇಂಗಾ ಸೇರಿದಂತೆ ವಿವಿಧ ಆಹಾರ ಮತ್ತು ವಾಣಿಜ್ಯ ಬೆಳೆಗಳಿಗೆ ಸೂಕ್ತ ಬೆಂಬಲ ಬೆಲೆ ನಿಗದಿಪಡಿಸುವಂತೆ ಒತ್ತಾಯಿಸಿ ಹೋರಾಟಗಳನ್ನು ಹಮ್ಮಿಕೊಳ್ಳುವ ಉದ್ದೇಶ ಹೊಂದಿದ್ದಾರೆ. ವಿಜಯ್ ಭರತ್ ಅವರ ರೈತ ಪರ ಕಾಳಜಿಯನ್ನು ಗಮನಿಸಿ ಅವರನ್ನು ಯಾದಗಿರಿ ಜಿಲ್ಲಾಧ್ಯಕ್ಷರಾಗಿ ನೇಮಿಸಲಾಗಿದೆ ಎಂದು ಸಂಘದ ಅಧ್ವರ್ಯರು ತಿಳಿಸಿದ್ದಾರೆ. ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕು ವರುಣ ಮತಕ್ಷೇತ್ರದ ತಾಂಡವಪುರ ಗ್ರಾಮದಲ್ಲಿ ಪ್ರೊ. ಎಂ.ಡಿ. ನಂಜುಂಡಸ್ವಾಮಿ ಅವರ 90ನೇ ಜನ್ಮದಿನ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ವಿಜಯ್ ಭರತ್ ಅವರಿಗೆ ಈ ಜವಾಬ್ದಾರಿ ನೀಡಲಾಯಿತು. ಈ ಸಂದರ್ಭದಲ್ಲಿ ರಾಜ್ಯಾಧ್ಯಕ್ಷ ಚೂನಪ್ಪ ಪೂಜೇರಿ, ರಾಜ್ಯ ಕಾರ್ಯಾಧ್ಯಕ್ಷ ಮಹೇಶಗೌಡ ಎಂ. ಸುಬೇದಾರ ಸಗರ, ರಾಜ್ಯ ಉಪಾಧ್ಯಕ್ಷ ಶಿವಾನಂದ ಮುಗಳಿಹಾಳ, ರಾಜ್ಯ ಉಪಾಧ್ಯಕ್ಷ ವಿದ್ಯಾಸಾಗರ ರಾಮೇಗೌಡ ಇಮ್ಮಾವು, ರಾಜ್ಯ ಪ್ರಧಾನ ಕಾರ್ಯದರ್ಶಿ ಶರಣಪ್ಪ ಮರಳಿ ಸೇರಿದಂತೆ ವಿವಿಧ ಜಿಲ್ಲೆ ಹಾಗೂ ತಾಲೂಕುಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಕೊಟ್ಟೂರು | ಸಂತ ಸೇವಾಲಾಲ್ ಜಯಂತಿ ಆಚರಣೆ
ವಿಜಯನಗರ/ಕೊಟ್ಟೂರು: ತಾಲೂಕು ಕಚೇರಿಯ ಮಹಾತ್ಮ ಗಾಂಧೀಜಿ ಸಭಾಂಗಣದಲ್ಲಿ “ಶ್ರೀ ಸಂತ ಸೇವಾಲಾಲ್ ಜಯಂತಿ” ಕಾರ್ಯಕ್ರಮವನ್ನು ಆಚರಿಸಲಾಯಿತು. ಸಂತ ಸೇವಾಲಾಲ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ತಹಶೀಲ್ದಾರ್ ಅಮರೇಶ್ ಜಿ.ಕೆ. ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಸಮಾಜದ ಮುಖಂಡರು ಹಾಗೂ ಅಧಿಕಾರಿಗಳು ಭಾಗವಹಿಸಿ ಸಂತ ಸೇವಾಲಾಲ್ ಅವರ ಸಮಾಜ ಸೇವೆ ಮತ್ತು ತತ್ವಗಳನ್ನು ಸ್ಮರಿಸಿದರು. ಈ ಸಂದರ್ಭದಲ್ಲಿ ದೂಪದಹಳ್ಳಿ ಹಟ್ಟಿ ನಾಯ್ಕ ಸೋಮ್ಲನಾಯ್ಕ, ಕೊಟ್ಟೂರಿನ ದೇವೇಂದ್ರನಾಯ್ಕ, ತಿಮ್ಮಲಾಪುರ ತಾಂಡದ ಶೇಖರನಾಯ್ಕ, ಕೃಷ್ಣನಾಯ್ಕ, ಬಾಲಾನಾಯ್ಕ, ರಮೇಶನಾಯ್ಕ, ಶಿರಸ್ತೇದಾರ್ ಚಂದ್ರನಾಯ್ಕ, ಉಪ ತಹಶೀಲ್ದಾರ್ ಅನ್ನದಾನೇಶ ಬಿ. ಪತ್ತಾರ್, ಕಂದಾಯ ನಿರೀಕ್ಷಕ ಡಿ. ಶಿವಕುಮಾರ್, ಗ್ರಾಮ ಆಡಳಿತಾಧಿಕಾರಿ ಹರೀಶ್, ಭೂಮಾಪನ ಸಿಬ್ಬಂದಿ ಬಸವರಾಜ, ನಾಗರಾಜ, ಗೌರಮ್ಮ ಪ್ರದಸ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಸಿ.ಎಂ. ಗುರುಬಸವರಾಜ ಸ್ವಾಗತಿಸಿ ನಿರೂಪಿಸಿದರು.
ಕೇಂದ್ರ ಸರ್ಕಾರ ಗುರುವಾರ ಸಂಸತ್ತಿನ ಮುಂದೆ ಅನುಮೋದಿತ ಹುದ್ದೆ, ಹುದ್ದೆಯಲ್ಲಿರುವ ಅಧಿಕಾರಿಗಳ ಸಂಖ್ಯೆ ಮತ್ತು ವರ್ಗವಾರು ನೇರ ನೇಮಕಾತಿಯ ನವೀಕರಿಸಿದ ಡೇಟಾವನ್ನು ಮಂಡಿಸಿದೆ. ಕೇಂದ್ರ ರಾಜ್ಯ ಸಚಿವ ಡಾ. ಜಿತೇಂದ್ರ ಸಿಂಗ್ ಅವರು ರಾಜ್ಯಸಭೆಯಲ್ಲಿ ಲಿಖಿತ ಉತ್ತರದಲ್ಲಿ ಈ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಜನವರಿ 1, 2025 ರಂದು ಸಂಗ್ರಹಿಸಲಾದ ನಾಗರಿಕ ಪಟ್ಟಿಯ ಪ್ರಕಾರ ಭಾರತದ ನಾಗರಿಕ ಸೇವೆಗಳಲ್ಲಿ ಪ್ರಸ್ತುತ ಒಟ್ಟು 2,834 ಹುದ್ದೆಗಳು ಖಾಲಿ ಇವೆ. ಇಲಾಖೆವಾರು ವಿವರ ಹೀಗಿದೆ: ಐಎಎಸ್ - 1,300 ಹುದ್ದೆಗಳು , ಐಎಫ್ಎಸ್ - 1,029 ಹುದ್ದೆಗಳು, ಐಪಿಎಸ್ - 505 ಹುದ್ದೆಗಳು ಅನುಬಂಧ A ಪ್ರಕಾರ 6,877 ಐಎಎಸ್ ಹುದ್ದೆಗಳಲ್ಲಿ 5,577 ಭರ್ತಿಯಾಗಿವೆ. 5,099 ಐಪಿಎಸ್ ಹುದ್ದೆಗಳಲ್ಲಿ 4,594 ಭರ್ತಿಯಾಗಿದೆ ಮತ್ತು ಐಎಫ್ಎಸ್ 3,193 ಹುದ್ದೆಗಳಲ್ಲಿ 2,164 ಭರ್ತಿಯಾಗಿವೆ. ಇದು ಸೇವೆಗಳು ಮತ್ತು ರಾಜ್ಯಗಳಲ್ಲಿ ಮಂಜೂರಾದ ಮತ್ತು ಭರ್ತಿಯಾದ ಹುದ್ದೆಗಳ ನಡುವಿನ ಒಟ್ಟಾರೆ ಅಂತರವನ್ನು ತೋರಿಸುತ್ತವೆ. ಉತ್ತರ ಪ್ರದೇಶ, ಮಧ್ಯಪ್ರದೇಶ, ಮಹಾರಾಷ್ಟ್ರ, ತಮಿಳುನಾಡು ಮತ್ತು AGMUT ಕೇಡರ್ (ಅರುಣಾಚಲ ಪ್ರದೇಶ-ಗೋವಾ-ಮಿಜೋರಾಂ-ಕೇಂದ್ರಾಡಳಿತ ಪ್ರದೇಶಗಳು) ಐಎಎಸ್ ಮತ್ತು ಐಪಿಎಸ್ಗಳಲ್ಲಿ ಅತಿ ಹೆಚ್ಚು ಅನುಮೋದಿತ ಹುದ್ದೆಗಳನ್ನು ಹೊಂದಿವೆ. ಐಎಫ್ಎಸ್ನಲ್ಲಿ, ಮಧ್ಯಪ್ರದೇಶ, ಛತ್ತೀಸ್ಗಢ ಮತ್ತು AGMUT ಹಲವಾರು ಇತರ ಕೇಡರ್ಗಳಿಗೆ ಹೋಲಿಸಿದರೆ ತುಲನಾತ್ಮಕವಾಗಿ ಹೆಚ್ಚಿನ ಹುದ್ದೆಗಳನ್ನು ತೋರಿಸುತ್ತವೆ. https://docs.google.com/spreadsheets/d/1sSYWHo7kGA6H9jbXb_bbPkoFa0SUNy-BZ-M5m7gJ0Gw/edit?usp=sharing ► ಮೀಸಲು ವರ್ಗಗಳಿಂದ ನೇರ ನೇಮಕಾತಿ CSE 2020 ರಿಂದ CSE 2024 ರವರೆಗೆ ನಾಗರಿಕ ಸೇವಾ ಪರೀಕ್ಷೆಯ ಮೂಲಕ IAS, IPS ಮತ್ತು IFS ಗೆ ನೇರ ನೇಮಕಾತಿಗಳಾಗಿ ನೇಮಕಗೊಂಡ ಪರಿಶಿಷ್ಟ ಜಾತಿ (SC), ಪರಿಶಿಷ್ಟ ಪಂಗಡ (ST) ಮತ್ತು ಇತರ ಹಿಂದುಳಿದ ವರ್ಗಗಳ (OBC) ಅಭ್ಯರ್ಥಿಗಳ ಡೇಟಾವನ್ನು ಅನುಬಂಧ B ಒದಗಿಸುತ್ತದೆ. ಇದರ ಪ್ರಕಾರ ಐಎಎಸ್ನಲ್ಲಿ 245 ಒಬಿಸಿ, 135 ಎಸ್ಸಿ ಮತ್ತು 67 ಎಸ್ಟಿ ಅಭ್ಯರ್ಥಿಗಳನ್ನು ನೇಮಿಸಲಾಯಿತು. ಐಪಿಎಸ್ನಲ್ಲಿ255 ಒಬಿಸಿ, 141 ಎಸ್ಸಿ ಮತ್ತು 71 ಎಸ್ಟಿ ಅಭ್ಯರ್ಥಿಗಳು ಮತ್ತು ಐಎಫ್ಎಸ್ನಲ್ಲಿ 231 ಒಬಿಸಿ, 95 ಎಸ್ಸಿ ಮತ್ತು 48 ಎಸ್ಟಿ ಅಭ್ಯರ್ಥಿಗಳನ್ನು ನೇಮಕ ಮಾಡಲಾಗಿದೆ. ► 66% ನೈರ್ಮಲ್ಯ ಕಾರ್ಮಿಕರು ಎಸ್ಸಿ, ಎಸ್ಟಿ, ಒಬಿಸಿ ವರ್ಗದವರು ಕೇಂದ್ರ ಸರ್ಕಾರದಾದ್ಯಂತ ನೇಮಕಗೊಂಡಿರುವ ಗ್ರೂಪ್ ಸಿ ಸಫಾಯಿ ಕರ್ಮಚಾರಿಗಳಲ್ಲಿ ಶೇ.66 ಕ್ಕಿಂತ ಹೆಚ್ಚು ಜನರು ಪರಿಶಿಷ್ಟ ಜಾತಿ (SC), ಪರಿಶಿಷ್ಟ ಪಂಗಡ (ST) ಅಥವಾ ಇತರ ಹಿಂದುಳಿದ ವರ್ಗದವರು (OBC) ಎಂದು ಸಿಬ್ಬಂದಿ ಮತ್ತು ತರಬೇತಿ ಇಲಾಖೆಯ (DoPT) 2024-25ರ ವಾರ್ಷಿಕ ವರದಿಯ ಮೀಸಲಾತಿ ದತ್ತಾಂಶ ತೋರಿಸಿದೆ. ಕೇಂದ್ರ ಸರ್ಕಾರದ ಎಲ್ಲಾ ಗುಂಪುಗಳ ಹುದ್ದೆಗಳಿಗೆ ನೇರ ನೇಮಕಾತಿಯ ಕುರಿತಾದ ಡಿಒಪಿಟಿ ನಿಯಮಗಳ ಪ್ರಕಾರ ಎಸ್ಸಿಗಳಿಗೆ 15%, ಎಸ್ಟಿಗಳಿಗೆ 7.5%, ಒಬಿಸಿಗಳಿಗೆ 27% ಮತ್ತು ಆರ್ಥಿಕವಾಗಿ ದುರ್ಬಲ ವರ್ಗಗಳಿಗೆ 10% ಸ್ಥಾನಗಳನ್ನು ಮೀಸಲಿಡಬೇಕಾಗುತ್ತದೆ. 2026 ಜನವರಿಯಲ್ಲಿ ಬಿಡುಗಡೆಯಾದ ವರದಿಯಲ್ಲಿ ಕೇಂದ್ರ ಸರ್ಕಾರದ ಸಚಿವಾಲಯಗಳು ಮತ್ತು ಇಲಾಖೆಗಳಲ್ಲಿನ ಎಲ್ಲಾ ಗ್ರೂಪ್ ಎ ಹುದ್ದೆಗಳಲ್ಲಿ 14.20% ಎಸ್ಸಿಗಳು, 6.54% ಎಸ್ಟಿಗಳು ಮತ್ತು 19.14% ಒಬಿಸಿಗಳು ಇದ್ದಾರೆ ಎಂದು ಇದು ತೋರಿಸಿದೆ. ಕೇಂದ್ರ ಸರ್ಕಾರದಲ್ಲಿ ಎಸ್ಸಿ, ಎಸ್ಟಿ ಮತ್ತು ಒಬಿಸಿ ನೌಕರರ ಪ್ರಾತಿನಿಧ್ಯದ ಕುರಿತಾದ 2024-25 ರ ಡಿಒಪಿಟಿ ವಾರ್ಷಿಕ ವರದಿಯ ದತ್ತಾಂಶವು, ಗ್ರೂಪ್ ಸಿ ಹುದ್ದೆಗಳಲ್ಲಿ (ಸಫಾಯಿ ಕರ್ಮಚಾರಿಗಳನ್ನು ಹೊರತುಪಡಿಸಿ) 16.75% ಎಸ್ಸಿಗಳು, 8.94% ಎಸ್ಟಿಗಳು ಮತ್ತು 27.29% ಒಬಿಸಿಗಳು ಎಂದು ತೋರಿಸಿದೆ. ಗ್ರೂಪ್ ಬಿ ಹುದ್ದೆಗಳಲ್ಲಿ, ಎಸ್ಸಿಗಳು 16.20%, ಎಸ್ಟಿಗಳು 7.63% ಮತ್ತು ಒಬಿಸಿಗಳು 21.95% ಇದ್ದಾರೆ. ಒಟ್ಟಾರೆಯಾಗಿ, ಇತ್ತೀಚಿನ ವರದಿಯು 80 ಸಚಿವಾಲಯಗಳು ಮತ್ತು ಇಲಾಖೆಗಳಲ್ಲಿ 32.52 ಲಕ್ಷ ಕೇಂದ್ರ ಸರ್ಕಾರಿ ನೌಕರರಲ್ಲಿ, ಎಸ್ಸಿಗಳ ಪ್ರಾತಿನಿಧ್ಯ 16.84%, ಎಸ್ಟಿಗಳ ಪ್ರಾತಿನಿಧ್ಯ 8.70% ಮತ್ತು ಒಬಿಸಿಗಳ ಪ್ರಾತಿನಿಧ್ಯ 26.32% ಇದೆ ಎಂದು ತೋರಿಸಿದೆ. ಆದಾಗ್ಯೂ, ಕೇಂದ್ರ ಸರ್ಕಾರದಲ್ಲಿ ಇಡಬ್ಲ್ಯೂಎಸ್ ಉದ್ಯೋಗಿಗಳ ಪ್ರಾತಿನಿಧ್ಯದ ಕುರಿತು ವರದಿಯು ಯಾವುದೇ ಡೇಟಾವನ್ನು ಒದಗಿಸಿಲ್ಲ. 2018-19ರ ವಾರ್ಷಿಕ ವರದಿಯ ನಂತರ ಇದೇ ಮೊದಲ ಬಾರಿಗೆ ಡಿಒಪಿಟಿ ತನ್ನ ಹೆಚ್ಚಿನ ಸಚಿವಾಲಯಗಳು ಮತ್ತು ಇಲಾಖೆಗಳಲ್ಲಿ ಎಸ್ಸಿ, ಎಸ್ಟಿ ಮತ್ತು ಒಬಿಸಿಗಳ ಪ್ರಾತಿನಿಧ್ಯದ ಡೇಟಾವನ್ನು ಬಿಡುಗಡೆ ಮಾಡಿದೆ. 2019 ರಿಂದ ವಾರ್ಷಿಕ ವರದಿಗಳಲ್ಲಿ, ಡಿಒಪಿಟಿ ಕೇಂದ್ರ ಸರ್ಕಾರಿ ನೌಕರರ ಭಾಗಶಃ ಡೇಟಾವನ್ನು ಲೆಕ್ಕ ಹಾಕುತ್ತಿದೆ. ಇದು ಒಟ್ಟು 19-20 ಲಕ್ಷ ಉದ್ಯೋಗಿಗಳ ಪ್ರಾತಿನಿಧ್ಯ ಅಂಕಿಅಂಶಗಳನ್ನು ತೋರಿಸುತ್ತದೆ. ಸಂಸದೀಯ ಸಮಿತಿಗಳಿಗೆ ನೀಡಿದ ಹೇಳಿಕೆಗಳಲ್ಲಿ, ಎಲ್ಲಾ ಸಚಿವಾಲಯಗಳು ಮತ್ತು ಇಲಾಖೆಗಳು ಸಮಯಕ್ಕೆ ಸರಿಯಾಗಿ ಡೇಟಾವನ್ನು ಒದಗಿಸಲು ಸಾಧ್ಯವಾಗದ ಕಾರಣ ಈ ಕೊರತೆ ಉಂಟಾಗುತ್ತಿದೆ ಎಂದು ಡಿಒಪಿಟಿ ಹೇಳಿದೆ. ಇತ್ತೀಚಿನ ವರ್ಷಗಳಲ್ಲಿ, 2018-19ರ ದತ್ತಾಂಶಕ್ಕೆ ಹೋಲಿಸಿದರೆ ಕೇಂದ್ರ ಸರ್ಕಾರದಲ್ಲಿ ವಿವಿಧ ಸಾಮಾಜಿಕ ಗುಂಪುಗಳ ಪ್ರಾತಿನಿಧ್ಯ ಬದಲಾಗಿದೆ. 78 ಸಚಿವಾಲಯಗಳಲ್ಲಿ 3.2 ಮಿಲಿಯನ್ ಉದ್ಯೋಗಿಗಳ ಸಂಖ್ಯೆ ದೊಡ್ಡದಾಗಿದ್ದರೂ, ಸಿಬ್ಬಂದಿಗಳ ಶೇಕಡಾವಾರು ಪ್ರಮಾಣವು ಈ ಕೆಳಗಿನಂತೆ ಬದಲಾಗಿದೆ: ಎಸ್ಸಿ ಪ್ರಾತಿನಿಧ್ಯ: 17.49% ರಿಂದ 16.84% ಕ್ಕೆ ಇಳಿದಿದೆ. ಎಸ್ಟಿ ಪ್ರಾತಿನಿಧ್ಯ: 8.47% ರಿಂದ 8.94% ಕ್ಕೆ ಸ್ವಲ್ಪ ಹೆಚ್ಚಾಗಿದೆ. ಒಬಿಸಿ ಪ್ರಾತಿನಿಧ್ಯ: 21.57% ರಿಂದ 26.32% ಕ್ಕೆ ಏರಿದೆ ಕೇಂದ್ರ ಸರ್ಕಾರದ ಎಲ್ಲಾ ಗುಂಪುಗಳ ಹುದ್ದೆಗಳಿಗೆ ನೇರ ನೇಮಕಾತಿ ಕುರಿತಾದ DoPT ನಿಯಮಗಳ ಪ್ರಕಾರ, SC ಗಳಿಗೆ 15%, ST ಗಳಿಗೆ 7.5%, OBC ಗಳಿಗೆ 27% ಮತ್ತು ಆರ್ಥಿಕವಾಗಿ ದುರ್ಬಲ ವರ್ಗಗಳಿಗೆ 10% ಸೀಟುಗಳನ್ನು ಮೀಸಲಿಡಬೇಕು ಈ ಹಿಂದೆ ಶೌಚಗುಂಡಿ ಕೆಲಸದಲ್ಲಿ ತೊಡಗಿರುವ ಶೇ. 97 ರಷ್ಟು ಜನರು ಪರಿಶಿಷ್ಟ ಜಾತಿಗಳಿಂದ ಬಂದವರು ಎಂದು ಸರ್ಕಾರ ಸಂಸತ್ತಿಗೆ ತಿಳಿಸಿತ್ತು. 2021 ಡಿಸೆಂಬರ್ ನಲ್ಲಿ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವ ರಾಮದಾಸ್ ಅಠಾವಳೆ ರಾಜ್ಯಸಭೆಯಲ್ಲಿ ನೀಡಿದ ಉತ್ತರದಲ್ಲಿಕೈಯಿಂದ ಶೌಚಗುಂಡಿಗಳನ್ನು ಸ್ವಚ್ಛಗೊಳಿಸುವ ಕೆಲಸದಲ್ಲಿ ತೊಡಗಿರುವವರ ಧರ್ಮ ಮತ್ತು ಜಾತಿ ಹಿನ್ನೆಲೆಯ ಬಗ್ಗೆ ಸರ್ಕಾರ ಯಾವುದೇ ನಿರ್ದಿಷ್ಟ ಅಧ್ಯಯನವನ್ನು ನಡೆಸಿಲ್ಲವಾದರೂ ಕೈಯಿಂದ ಶೌಚಗುಂಡಿಗಳ ಕೆಲಸ ಮಾಡುವುದನ್ನು ನಿಷೇಧಿಸುವ ಮತ್ತು ಅವರ ಪುನರ್ವಸತಿ ಕಾಯ್ದೆ, 2013 ರ ನಿಬಂಧನೆಗಳ ಅಡಿಯಲ್ಲಿ ಕೈಯಿಂದ ಶೌಚಗುಂಡಿ ಸ್ವಚ್ಛ ಮಾಡುವ 58,098 ಕಾರ್ಮಿಕರನ್ನು ಗುರುತಿಸಲಾಗಿದೆ ಎಂದು ಹೇಳಿದ್ದರು. ಈ ಪೈಕಿ 43,797 ವ್ಯಕ್ತಿಗಳ ಜಾತಿ ದತ್ತಾಂಶ ಲಭ್ಯವಿದ್ದು, ಅವರಲ್ಲಿ 42,594 ಎಸ್ಸಿಗಳು, 421 ಎಸ್ಟಿಗಳು, 431 ಒಬಿಸಿಗಳು ಮತ್ತು 351 ಇತರರು ಸೇರಿದ್ದಾರೆ. ►ಕೇಂದ್ರದಲ್ಲಿ ಕಾರ್ಯದರ್ಶಿ, ಜಂಟಿ ಕಾರ್ಯದರ್ಶಿ ಮಟ್ಟದಲ್ಲಿ ಎಸ್ಸಿ/ಎಸ್ಟಿ ಪ್ರಾತಿನಿಧ್ಯ 2022ರಲ್ಲಿ ಸಿಬ್ಬಂದಿ ಮತ್ತು ತರಬೇತಿ ಇಲಾಖೆ (ಡಿಒಪಿಟಿ) ಡೇಟಾ ಪ್ರಕಾರ ಭಾರತ ಸರ್ಕಾರದಲ್ಲಿ ಜಂಟಿ ಕಾರ್ಯದರ್ಶಿ ಮತ್ತು ಕಾರ್ಯದರ್ಶಿ ಹುದ್ದೆಯಲ್ಲಿರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಅಧಿಕಾರಿಗಳ ಪ್ರಾತಿನಿಧ್ಯ ಕ್ರಮವಾಗಿ ಶೇ. 4 ಮತ್ತು ಶೇ. 4.9 ರಷ್ಟಿದೆ. ವಿವಿಧ ಸಚಿವಾಲಯಗಳು/ಇಲಾಖೆಗಳಲ್ಲಿ ಕೇಂದ್ರ ಸಿಬ್ಬಂದಿ ಯೋಜನೆಯಡಿ ಜಂಟಿ ಕಾರ್ಯದರ್ಶಿಗಳು ಮತ್ತು ಕಾರ್ಯದರ್ಶಿಗಳ ಹುದ್ದೆಗಳನ್ನು ಹೊಂದಿರುವ ಒಟ್ಟು 322 ಅಧಿಕಾರಿಗಳಲ್ಲಿ ಎಸ್ಸಿ 16, ಎಸ್ಟಿ 13, ಇತರ ಹಿಂದುಳಿದ ವರ್ಗಗಳು (ಒಬಿಸಿ )39 ಮತ್ತು ಸಾಮಾನ್ಯ ವರ್ಗಕ್ಕೆ ಸೇರಿದವರು 254 ಅಧಿಕಾರಿಗಳು ಇದ್ದಾರೆ. 75 ಸಚಿವಾಲಯಗಳು ಮತ್ತು ಇಲಾಖೆಗಳಿಂದ ಬಂದ ಮಾಹಿತಿಯ ಪ್ರಕಾರ, ಗ್ರೂಪ್ ಎ ಹುದ್ದೆಗಳಲ್ಲಿ ಎಸ್ಸಿ, ಎಸ್ಟಿ ಮತ್ತು ಒಬಿಸಿ ಅಧಿಕಾರಿಗಳ ಶೇಕಡಾವಾರು ಪ್ರಮಾಣ ಕ್ರಮವಾಗಿ 13.21%, 6.01% ಮತ್ತು 18.07% ಇದೆ.
ಸಾಮಾಜಿಕ ನ್ಯಾಯದ ಹಾದಿಯಲ್ಲಿ ಕಾಂಗ್ರೆಸ್ ಸರಕಾರ: ಸಚಿವ ಶರಣಬಸಪ್ಪಗೌಡ ದರ್ಶನಾಪುರ
ಕೆಂಭಾವಿಯಲ್ಲಿ 6ಕೋಟಿ ರೂ. ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ಸಚಿವರಿಂದ ಚಾಲನೆ
Kalaburagi | ಶುಕ್ಲಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಾರ್ಷಿಕೋತ್ಸವ
ಕಲಬುರಗಿ : ನಗರದ ಶಹಬಜಾರ್ ನಾಕದಲ್ಲಿರುವ ಶುಕ್ಲಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಒಂಬತ್ತನೇ ವರ್ಷದ ಶಾಲಾ ವಾರ್ಷಿಕೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು. ಈ ಸಂದರ್ಭದಲ್ಲಿ ಶಾಲೆಯ ಮಕ್ಕಳು ಹಾಗೂ ಶಿಕ್ಷಕಿಯರು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟು ಎಲ್ಲರ ಮೆಚ್ಚುಗೆಗೆ ಪಾತ್ರರಾದರು. ಕಾರ್ಯಕ್ರಮದಲ್ಲಿ ಹೆಚ್ಚಿನ ಅಂಕಗಳನ್ನು ಗಳಿಸಿದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ಮತ್ತು ಪರಿತೋಷಕ ನೀಡಿ ಸತ್ಕರಿಸಲಾಯಿತು. ಸಂಸ್ಥೆಯ ಅಧ್ಯಕ್ಷರಾದ ವಿನಯ್ ಶುಕ್ಲಾ, ಸಂಸ್ಥೆಯ ಕಾರ್ಯದರ್ಶಿ ವರ್ಷಾ ಶುಕ್ಲಾ ಮಾತನಾಡಿದರು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ರಜಪೂತ ಸಮಾಜದ ಜಿಲ್ಲಾ ಅಧ್ಯಕ್ಷ ಸಂಜಯ್ ಸಿಂಗ್, ಇಂದಿನ ಮಕ್ಕಳಲ್ಲಿ ಮೊಬೈಲ್ ವ್ಯಾಮೋಹ ಹೆಚ್ಚುತ್ತಿರುವುದರಿಂದ ಓದಿನಲ್ಲಿ ಹಿನ್ನಡೆಯಾಗುತ್ತಿದೆ. ಪಾಲಕರು ಮಕ್ಕಳ ಮೊಬೈಲ್ ಬಳಕೆಯ ಮೇಲೆ ಗಮನಹರಿಸಬೇಕು ಎಂದು ಸಲಹೆ ನೀಡಿದರು. ಅತಿಥಿಗಳಾಗಿ ಪ್ರಮೋದ್ ತಿವಾರಿ, ರಾಜೇಶ್ ಪಾಂಡೆ, ಮುಖ್ಯಗುರು ವಸಂತರಾವ ಹಾಗೂ ಶಾಲೆಯ ಸಿಬ್ಬಂದಿಗಳಾದ ಸ್ವರೂಪ ರಾಣಿ, ಕವಿತಾ ಘನಾತೆ, ಅಶ್ವಿನಿ, ಸಂಗೀತಾ, ಶಿವಾನಿ, ಪೂಜಾ ಪಾಟೀಲ್, ಸ್ನೇಹ, ಸುಷ್ಮಾ, ಭಾಗ್ಯಶ್ರೀ, ಸೌಮ್ಯ, ಗಿರಿಜಾ, ಶೀತಲ್, ಶೀಲಾ ಸೇರಿದಂತೆ ಹಲವಾರು ಪಾಲಕರು ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ಅಫಜಲಪುರ | ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ ಮುಖಂಡರು
ಅಫಜಲಪುರ: ಅಫಜಲಪುರ ಮತಕ್ಷೇತ್ರದಲ್ಲಿ ಮಹತ್ವದ ರಾಜಕೀಯ ಬೆಳವಣಿಗೆ ನಡೆದಿದ್ದು, ನೂರಾರು ಯುವಕರು ಭಾರತೀಯ ಜನತಾ ಪಕ್ಷವನ್ನು ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೋಮವಾರ ಅಧಿಕೃತವಾಗಿ ಸೇರ್ಪಡೆಯಾದರು. ಶಾಸಕ ಎಂ. ವೈ. ಪಾಟೀಲ ಅವರ ಅಭಿವೃದ್ಧಿಪರ ನಾಯಕತ್ವ ಮತ್ತು ಕಲ್ಯಾಣ ಕರ್ನಾಟಕ ಸಾರಿಗೆ ನಿಗಮದ ಅಧ್ಯಕ್ಷ ಅರುಣಕುಮಾರ ಎಂ. ವೈ. ಪಾಟೀಲ ಅವರ ನೇತೃತ್ವದಲ್ಲಿ ದಣ್ಣೂರ ಗ್ರಾಮದಲ್ಲಿ ಕಾಂಗ್ರೆಸ್ ಪಕ್ಷದ ಸೇರ್ಪಡೆಯ ಕಾರ್ಯಕ್ರಮ ನಡೆಯಿತು. ದಣ್ಣೂರ, ಗೌಡಗಾಂವ, ದಿಕ್ಸಂಗಾ (ಬಿ), ಮದರಾ (ಬಿ), ಇಂಗಳಗಿ (ಬಿ), ಚೌಡಾಪೂರ ಗ್ರಾಮಗಳ ನೂರಾರು ಯುವ ಮುಖಂಡರು ಪಕ್ಷದ ಧ್ವಜ ಸ್ವೀಕರಿಸಿ ಕಾಂಗ್ರೆಸ್ ಸೇರ್ಪಡೆಯಾದರು. ಯಲ್ಲಣ್ಣಗೌಡ ಪಾಟೀಲ, ರಾಜುಗೌಡ ಅವರಳ್ಳಿ, ದತ್ತಣ್ಣ ಜಮಶೆಟ್ಟಿ, ಉಗ್ರರ ಮೂರ್ತಿ, ಶರಣಗೌಡ ಪಾಟೀಲ, ವಿಜಯಕುಮಾರ್ ಮಾಸ್ಟರ್, NSUI ಅಧ್ಯಕ್ಷ ಗುರುಕಿರಣ್ ಮಾಸ್ಟರ್, ರಾಚಪ್ಪ ಹುಮನಾಬಾದಿ, ರಾಜಕುಮಾರ್ ಪಿಸ್ತಿ, ಬಸವರಾಜ ಭಟ್ಟರಕಿ, ಜೆಟ್ಟೆಪ್ಪ ಪೂಜಾರಿ, ಪ್ರಭುಲಿಂಗ ಪಾಟೀಲ, ರಾಮ ಮಿಂಚನ್, ಸಚಿನ್ ಲಿಂಗಶೆಟ್ಟಿ, ಸುಧಾಕರ ಕಾಂಬ್ಳೆ, ರಾಮಗೌಡ ಪಾಟೀಲ, ಸಂಗಯ್ಯ ಸ್ವಾಮಿ ಸೇರಿದಂತೆ ಹಲವರು ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ಆತನೂರ ಜಿಲ್ಲಾ ಪಂಚಾಯತ್ ವ್ಯಾಪ್ತಿಯಲ್ಲಿ ಕಮಲಾಕರ್ ದೊಡ್ಮನಿ, ಮಲ್ಲು ನಾಯಿಕೋಡಿ, ಸಾಗರ ನಾಯಿಕೋಡಿ, ಮಲ್ಲಿನಾಥ ಪಾಟೀಲ, ಪ್ರಭುಲಿಂಗ ಪಾಟೀಲ, ಮಲ್ಲು ದಿಕಸಂಗಿ, ರಾಜು ವಾಡಿ ಸೇರಿದಂತೆ ಅನೇಕ ಯುವಕರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.

29 C