SENSEX
NIFTY
GOLD
USD/INR

Weather

29    C
...

ನಿರ್ಮಾಣ ನಿರ್ನಾಮಗಳ ನಡುವೆ ಉಳಿವೆಲ್ಲಿ?

ದೇಶದ ಸಮಕಾಲೀನ ಸಂಕಟಗಳು ಬದುಕಿನ ಎಲ್ಲ ಕ್ಷೇತ್ರಗಳನ್ನೂ ವ್ಯಾಪಿಸಿವೆ. ಪಾಲನೆಯೆಂಬುದು ಆರತಿ ಎತ್ತಿ, ಗಂಟೆ ಬಡಿದು, ದೀಪವನ್ನು ಆರಿಸಿ ನಡೆಸುವ ಕೆಲಸವಲ್ಲ. ಕಡುಬಡತನವನ್ನು ಕೆಲ ಶ್ರೀಮಂತರ ಆದಾಯದೊಂದಿಗೆ ಸರಾಸರಿ ಲೆಕ್ಕಾಚಾರ ಹಾಕಿ ದೇಶದ ಶ್ರೀಮಂತಿಕೆಯನ್ನು ನಿರ್ಧರಿಸುವಲ್ಲಿ, ದೇಶದ ಸಂಸದರ ಸಂಖ್ಯೆಯನ್ನು ಐನೂರು ಚಿಲ್ಲರೆಯಿಂದ ಎಂಟುನೂರು ಚಿಲ್ಲರೆಗೆ ಏರಿಸುವುದೇ ಸಾಧನೆಯೆಂದು ಬಿಂಬಿಸುವಲ್ಲಿ, ಅನಧಿಕೃತ ಜನಪ್ರತಿನಿಧಿಗಳೆಂದು ಯಾವನೋ ಎಂದೋ ಹೇಳಿದ ವಾಕ್ಯವನ್ನು ಸ್ವಹಿತಕ್ಕಾಗಿ ಬಳಸುವ ಸಾಹಿತಿಗಳೂ, ಚಿಂತಕರೂ, ಪ್ರಗತಿಪರರೂ ತಮ್ಮ ತಮ್ಮ ವೈಯಕ್ತಿಕ ಆಸೆ-ಆಕಾಂಕ್ಷೆಗಳ ಈಡೇರಿಕೆಗಳಿಗೆ ವ್ಯವಸ್ಥೆಗಳನ್ನು ಬಳಸಿಕೊಳ್ಳುವಲ್ಲಿ ಕಲುಷಿತ ಸ್ಥಿತಿ ಮುಂದುವರಿಯುವುದು ಅನಿವಾರ್ಯ. ಗೆಳೆಯರೊಬ್ಬರು ನನಗೆ ‘‘ನೀವು ರಾಜಕೀಯದ ಇಲ್ಲವೇ ಭ್ರಷ್ಟ ಅಧಿಕಾರಶಾಹಿಯ (ಅರ್ಥಾತ್ ಶಾಸಕಾಂಗ ಮತ್ತು ಕಾರ್ಯಾಂಗಗಳ ಅಧಿಕಾರ ರಾಜಕಾರಣದ) ಬಗ್ಗೆ ಬರೆಯುತ್ತೀರಿ; ನಿಮ್ಮ ವೃತ್ತಿಯ ಕ್ಷೇತ್ರವಾದ ನ್ಯಾಯಾಂಗದ ಇಲ್ಲವೇ ನಿಮ್ಮ ಪ್ರವೃತ್ತಿ ಕ್ಷೇತ್ರವಾದ ಸಾಹಿತ್ಯದ ಕುರಿತೇ ಬರೆಯಿರಿ’’ ಎಂದು ಸಲಹೆ ನೀಡಿದರು. ‘‘ಹೀಗೇ ಬರೆಯಿರಿ ಎಂದು ಹೇಳುವುದಕ್ಕೆ ನೀವು ಯಾರು?’’ ಎಂಬ ಒಂದೇ ಪ್ರಶ್ನೆಯಲ್ಲಿ ಅವರನ್ನು ಬದಿಗೆ ಸರಿಸಬಹುದಾದರೂ ಅದು ನಮ್ಮ ಸಾಮಾಜಿಕ ಮಾಧ್ಯಮಗಳ ಪ್ರಶ್ನೋತ್ತರ ಅಥವಾ ವಾಗ್ವಾದವಾಗುತ್ತದೆಯೇ ಹೊರತು ಅರ್ಥಪೂರ್ಣ ವಿನಿಮಯವಾಗುವುದಿಲ್ಲ. ಅವರು ಹೇಳಿದ ಮಾತು ಈ ಹಿನ್ನೆಲೆಯಲ್ಲಿ ನನ್ನನ್ನು ಜಿಜ್ಞಾಸೆಗೊಡ್ಡಿದೆ. ಕಳೆದ ಸುಮಾರು 11 ವರ್ಷಗಳಿಂದ (2016 ಜನವರಿಯಿಂದ) ಈ ಅಂಕಣದಲ್ಲಿ ತತ್ಪರನಾಗಿದ್ದೇನೆ. ಅದಕ್ಕೆ ಮೊದಲು ಇತರ ಪತ್ರಿಕೆಗಳಲ್ಲಿ (ಕನ್ನಡ ಪ್ರಭ, ವಿಜಯ ಕರ್ನಾಟಕ ಇತ್ಯಾದಿ) 90ರ ಮತ್ತು ಈ ಸಹಸ್ರಮಾನದ ಮೊದಲ ದಶಕಾರ್ಧದಲ್ಲಿ ಪುಸ್ತಕ ವಿಮರ್ಶೆ ಮತ್ತು ಸಾಹಿತ್ಯ, ಸಾಮಾಜಿಕ, ಕಾನೂನು ಹಾಗೂ ರಾಜಕಾರಣದ ಕುರಿತು ಅಂಕಣ ಲೇಖನಗಳನ್ನು ಬರೆಯುತ್ತಿದ್ದೆ. ಪತ್ರಿಕೆಯ ಒಲವು ನಿಲುವುಗಳನ್ನು ನಿರ್ಣಯಿಸುವವರು ಬದಲಾದಾಗ ಬರೆಹಗಾರರೂ ನಿವೃತ್ತಿಯಾಗಬೇಕಾಗುತ್ತದೆ. ಅದು ವಿರಸದಿಂದಲ್ಲ. ಈಗ ಸದ್ಯ ನನ್ನ ವ್ಯಾಪ್ತಿಗೆ ವೃತ್ತಿ, ಪ್ರವೃತ್ತಿ ಹಾಗೂ ಸಮಕಾಲೀನ ಸಂಕಟಗಳ ಕುರಿತು ಬರೆಯುವ ಸ್ವಾತಂತ್ರ್ಯವಿದೆ. ಅವರು ಹೇಳಿದ್ದು ಒಂದರ್ಥದಲ್ಲಿ ಹೌದಾದರೂ ಅವರು ಇಚ್ಛಿಸಿದ ಮತ್ತು ಪರೋಕ್ಷವಾಗಿ ಅಪೇಕ್ಷಿಸಿದ ಕ್ಷೇತ್ರಗಳು ರಾಜಕಾರಣಕ್ಕಿಂತ ಕಡಿಮೆ ಕಲುಷಿತವೇನಲ್ಲ. ಅವೆರಡನ್ನೂ ನಾನು ಸಮೀಪದಿಂದ ಬಲ್ಲೆ. ಗೋಮುಖವ್ಯಾಘ್ರಕ್ಕಿಂತ ವ್ಯಾಘ್ರಮುಖವ್ಯಾಘ್ರವನ್ನೇ ಹೆಚ್ಚು ನಂಬಬಹುದು. ಕಳ್ಳನ ಧಿರುಸಿನಲ್ಲಿ ಬಂದ ಕಳ್ಳನನ್ನು ಗುರುತಿಸಬಹುದು; ಅಲ್ಲಿ ನಾವು ಹೆಚ್ಚು ಎಚ್ಚರದಿಂದಿರಬಹುದು. ಪೊಲೀಸ್ ಧಿರುಸಿನಲ್ಲಿ ಬಂದ ಕಳ್ಳನನ್ನು ನಾವು ಗುರುತಿಸುವುದು ಕಷ್ಟ. ಸಾಹಿತ್ಯ ಮತ್ತು ನ್ಯಾಯಾಂಗ ನಮಗೆ ಇಂಥದ್ದೊಂದು ಸಮಸ್ಯೆಯನ್ನು ಒಡ್ಡುತ್ತದೆ. ಒಳ್ಳೆಯ ಕೃತಿಗಳು ಸಂತೋಷ ಕೊಡುತ್ತವೆ; ಆದರೆ ಇದು ಸಹಜವಾಗಿಯೇ ಪ್ರಚಾರಯುಗ; ಜಾಹೀರಾತಿನ ಯುಗ. ಆದ್ದರಿಂದ ಬರೆಹಗಾರರೂ, ಪ್ರಕಾಶಕರೂ ಕೃತಿಯನ್ನು ಹೇಗೆ ಓದುಗನಿಗೆ ದಾಟಿಸಿ ನಗದಾಗಿ ಪರಿವರ್ತಿಸುವುದೆಂಬ ತದೇಕ ಧ್ಯಾನದಲ್ಲಿರುತ್ತಾರೆ. ಸಾಹಿತ್ಯದ ವರ್ತುಲದಲ್ಲಿ ತನ್ನ ಗುಣಮಟ್ಟದಿಂದಲೇ ಪ್ರಚಾರ, ಪ್ರಸಿದ್ಧಿಗಳನ್ನು ಪಡೆಯುವ ಕೃತಿಗಳು ಕಡಿಮೆಯಾಗುತ್ತಲೇ ಇವೆ. ಪಟ್ಟಭದ್ರ ಹಿತಾಸಕ್ತಿಗಳು ಮಾರುಕಟ್ಟೆಯ ನಿಯಮಗಳು ಸಾಹಿತ್ಯವೆಂಬ ನವಿರು ರೇಷ್ಮೆಯನ್ನು ಸೆಣಬಿನ ನಾರಾಗಿ, ಸರಕಾಗಿ ಪರಿವರ್ತಿಸಿವೆ. ‘ಓದಲೇಬೇಕಾದ’ ಮತ್ತು ‘ನಿಮ್ಮ ಸಂಗ್ರಹದಲ್ಲಿ ಇರಲೇಬೇಕಾದ’ ಕೃತಿಗಳ ಪಟ್ಟಿಯನ್ನು ಮಾಧ್ಯಮಗಳಲ್ಲಿ ನೋಡಿ, ಓದಿ, ಸಾಕಾಗುತ್ತದೆ. ತನ್ನ ಕಾವ್ಯಕೆ ತಾಂ ಮಣಿಯುವ ಮಹಾಕವಿಗಳು ಹೆಚ್ಚಾಗಿದ್ದಾರೆ. ಈಗ ನಾನು ಮಾಧ್ಯಮದಲ್ಲಿ ಪ್ರಕಟವಾಗುವ ವಿಮರ್ಶೆಗಳನ್ನು ಗಮನಿಸಿದ ಮೇಲೆ ಯಾವ ಕೃತಿಯನ್ನಾದರೂ ತುಸು ಸಂಶಯದಿಂದಲೇ ಗಮನಿಸುತ್ತೇನೆ. ವಿಮರ್ಶೆಯ ಹೆಸರಿನಲ್ಲಿ ಪ್ರಕಟವಾಗುವ ಬಹುತೇಕ ಬರೆಹಗಳು ಏಕಮುಖವಾಗಿ ಜಾಹೀರಾತಿನಂತೆ, ಅಭಿನಂದನಾಗ್ರಂಥಗಳ ಬರೆಹಗಳಂತೆೆ, ಇಷ್ಟಕಾಣಿಕೆಗಳಂತೆ ಕಾಣುವುದರಿಂದ ಅವುಗಳಿಗಿಂತ ಸಾಕಷ್ಟು ದೂರವಿರುವುದು ಕ್ಷೇಮವೆನಿಸುತ್ತದೆ. ಹಾಗೆಂದು ಬಹಳ ದೂರವಿದ್ದರೆ ಹೊಸ ಕೃತಿಗಳ ಪರಿಚಯವೇ ಆಗುವುದಿಲ್ಲ. ಅತೀವ ಬಿಸಿ ತಾಗದಷ್ಟು ಮತ್ತು ಚಳಿಯಾಗದಷ್ಟು ಅಂತರವನ್ನು ಕಾಪಾಡಿಕೊಳ್ಳುವುದು ಒಳ್ಳೆಯದೆನ್ನಿಸುತ್ತದೆ. ಸಮಸ್ಯೆಯಿರುವುದು ನಾವು ಬರೆದರೂ ಇದೇ ಪರಿಣಾಮ, ಫಲಿತಾಂಶ ಎಂದಾದಾಗ. ಯಾವುದಾದರೊಂದು ಕೃತಿಯನ್ನು ಚೆನ್ನಾಗಿದೆ ಅಥವಾ ಚೆನ್ನಾಗಿಲ್ಲವೆಂದು ಅಭಿವ್ಯಕ್ತಿಸಿದರೆ ಅದರ ಹಿಂದೆ ನಾನೀಗಾಗಲೇ ಗುರುತಿಸಿದ ಪೂರ್ವಾಗ್ರಹದೋಷವನ್ನು ಇತರರು ಆರೋಪಿಸಿದರೆ ಅದರಿಂದ ಹೊರಬರುವುದಾದರೂ ಹೇಗೆ? ಮುಂದಿನ ತಲೆಮಾರು ಬಿಡಿ, ತತ್ಕಾಲೀನ ಭವಿಷ್ಯದಲ್ಲಿ ತಮ್ಮ ಕೃತಿಗಳಿಗೆ ಯಾವ ಮನ್ನಣೆ ಸಿಗುತ್ತದೆಂಬ ಬಗ್ಗೆ ಯೋಚಿಸಿದಂತಿಲ್ಲ. ಬದಲಾಗಿ ಇಂದು, ಕೊನೆಗೆ ಇಂದಿನ ಪತ್ರಿಕೆಗಳಲ್ಲಿ, ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಚಾರ, ಪ್ರಸಿದ್ಧಿ ಮತ್ತು ಅವಕಾಶವಾದರೆ ಪ್ರಶಸ್ತಿ ಸಿಗಬೇಕೆಂಬುದೇ ಉದ್ದೇಶವಾಗಿ ಆ ದಿಕ್ಕಿನಲ್ಲಿ ಎಲ್ಲ ಮಾರ್ಗಗಳ ಸರ್ವ ಪ್ರಯತ್ನ ನಡೆಯುತ್ತದೆ. ಹೊಗಳಿಕೆಯೇ ವಿಮರ್ಶೆಯೆಂದಾಗಿದೆ. ವಿಮರ್ಶಕರೆಂಬ ಮೈಡಾಸ್ ರಾಜನ ಜಗತ್ತಿನಲ್ಲಿ ನಾಳಿನ ತಲೆಮಾರಿನೆದುರು ನಾವೆಷ್ಟು ಹಗುರಾಗುತ್ತೇವೆಂಬ ಬಗ್ಗೆ ಪರಿವೆಯೇ ಇಲ್ಲ. ನಾವು ಗೌರವಿಸುವ ಅನೇಕ ಸಾಹಿತಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ಆತ್ಮಖ್ಯಾತಿಯ ಸಲಕರಣೆಗಳೊಂದಿಗೆ ನಾರ್ಸಿಸಸ್‌ನಂತೆ ವರ್ತಿಸುತ್ತಾರೆ. ಈಗ ಗೂಗಲ್ ಮಾತ್ರವಲ್ಲ ‘ಎಐ’ಯ ಸಹಾಯದಿಂದ ಏನನ್ನೂ ಸೃಷ್ಟಿಸಬಹುದಾದ್ದರಿಂದ ಅಸಲು-ನಕಲು ಯಾವುದೆಂಬುದೇ ಅರಿಯದಾಗಿದೆ. ಅಂದರೆ ಪಾಲನೆ ಯಾರಿಗೂ ಬೇಡ. ಆರಂಭ ಮತ್ತು ಅಂತ್ಯ ಇಷ್ಟೇ: ಪುಸ್ತಕಗಳಂತೆ ಬದುಕಿನಲ್ಲೂ ಮುಖಪುಟದ ಅಧಾರದಂತೆ ಅಳತೆ ನಡೆಯುತ್ತಿದೆ. ಒಳಗಿನ ಪುಟಗಳು ಅಳುತ್ತವೆ. ಇದು ಸಕ್ರಿಯ ರಾಜಕಾರಣಕ್ಕಿಂತ ಬೇರೆಯಲ್ಲ ಅನ್ನಿಸಿದ್ದರಿಂದ ಓದಬೇಕು, ಆದರೆ ಬರೆಯುವುದನ್ನು ಕಡಿಮೆಮಾಡಬೇಕೆಂದು ನನಗೆ ನಾನೇ ಸದ್ಯಕ್ಕೆ ಅಂದುಕೊಂಡಿದ್ದೇನೆ. ಇದೇನೂ ಹಿಂಪಡೆಯದ ಅಥವಾ ಹಿಂಪಡೆಯಲಾಗದ ನಿರ್ಧಾರವೇನಲ್ಲ; ನಾನೂ ಬರೆಯಬಹುದು. ಆಗ ಎದುರಾಗುವ ಸಂಕಟ-ಸಂಘರ್ಷಗಳನ್ನು ಎದುರಿಸೋಣ. ಸಂವಿಧಾನದ ಮತ್ತು ಪ್ರಗತಿಪರತೆಯ, ಹೆಸರಿನಲ್ಲಿ ಅನೇಕರು ತಮ್ಮ ಬೇಳೆ ಬೇಯಿಸತೊಡಗಿದ್ದಾರೆ. ಸಂವಿಧಾನದಡಿ ಕಾನೂನಿನ ವ್ಯಾಪ್ತಿಯ ಕುರಿತು ಬಹುತೇಕರಿಗೆ ಪರಿಜ್ಞಾನವೇ ಇಲ್ಲ. ಸರಿ-ತಪ್ಪುಗಳು ನಮಗೆ ಮತ್ತು ನಾವು ಅಂಟಿಕೊಂಡ ರಾಜಕೀಯ ಬೇಕುಬೇಡಗಳಿಗೆ, ಸೌಕರ್ಯ-ಅನುಕೂಲಗಳಿಗೆ ಶರಣಾಗಿದೆ. ನ್ಯಾಯಾಂಗದ ಕುರಿತು ಎಲ್ಲರೂ ಬರೆಯುವವರೇ; ಮಾತನಾಡುವವರೇ. ಇಂದು ಒಬ್ಬ ನ್ಯಾಯಾಧೀಶ/ನ್ಯಾಯಮೂರ್ತಿ ನೀಡಿದ ತೀರ್ಪು ಸರಿಯೆಂದು ಅನ್ನಿಸಿದರೆ ನಾಳೆ ಅದೇ ನ್ಯಾಯಾಧೀಶ/ನ್ಯಾಯಮೂರ್ತಿ ನೀಡಿದ ತೀರ್ಪು ತಪ್ಪೆಂದು ಅನ್ನಿಸುತ್ತದೆ. ಯಾವ ಪ್ರಕರಣದಲ್ಲಿ ನಾವು ಯಾವ ಬದಿಯಲ್ಲಿದ್ದೇವೆಂಬುದು ಈ ನಿರ್ಣಯಗಳನ್ನು ನಿರ್ಧರಿಸುತ್ತದೆ. ಇದಕ್ಕೆ ಸರಿಯಾಗಿ ಅಧೀನ ನ್ಯಾಯಾಂಗದಿಂದ ಸರ್ವೋಚ್ಚ ನ್ಯಾಯಾಲಯದವರೆಗೆ ತೀರ್ಪುಗಳು ಬದಲಾಗುತ್ತಲೇ ಇರುತ್ತವೆ. ಇವುಗಳ ಟೀಕೆ ಮತ್ತು ಹೊಗಳಿಕೆಗಳಿಗೆ ತರ್ಕವೇ ಇಲ್ಲದಾಗಿದೆ. ಇದಕ್ಕೆ ನ್ಯಾಯಾಲಯ ನಿಂದನೆಯ ಕಾನೂನಿನ ಭಯ ಕಾರಣವಲ್ಲ. ಎದುರಿಸಿ ಅಗ್ನಿದಿವ್ಯವನ್ನು ದಾಟಿದವರಿದ್ದಾರೆ. ಕಾನೂನಿನಡಿ ನೀಡಿದ ಎಲ್ಲ ತೀರ್ಪುಗಳು ಕಾನೂನಿನನ್ವಯ ಸರಿಯಾಗಿವೆಯಷ್ಟೇ ಹೊರತು ನ್ಯಾಯಬದ್ಧವೆಂದೇನಲ್ಲ. ನ್ಯಾಯಕ್ಕೂ ಕಾನೂನಿಗೂ ಭಾರೀ ಕಂದರವಿದೆ; ಆದರೆ ಇದು ಅನಿವಾರ್ಯ. ಸಂವಿಧಾನದ ಹೆಸರಿನಲ್ಲಿ ಎಲ್ಲವನ್ನೂ ಅಗ್ಗವಾಗಿಸಲಾಗಿದೆ. ಅಂಬೇಡ್ಕರ್ ಅವರ ಅವಿಶ್ರಾಂತ ಶ್ರಮ ಮಾತೇ ಮಾಣಿಕ್ಯದ ಬೃಹನ್ನಳೆಯ, ಸೋಮಾರಿಗಳ ಕೈಯ ಆಟಿಕೆಯಾಗುತ್ತಿದೆ. ಈಗೀಗ ಪ್ರಕಟವಾಗುತ್ತಿರುವ ಪ್ರತಿಕ್ರಿಯೆಗಳು ಈ ಚಂಚಲ ತೀರ್ಪುಗಳಿಗಿಂತಲೂ ಆಘಾತಕಾರಿಯಾಗಿವೆ. ರಾಜಕಾರಣಿಗಳು ತಮ್ಮ ಪರವಾಗಿ ಬಂದ ತೀರ್ಪಿಗೆ ಸ್ವಾಗತ ಕೋರುವುದು ಸಹಜ; ಸತ್ಯದ ಅನಾವರಣವಾಗಿದೆ; ನ್ಯಾಯದೇವತೆ ಸೂಕ್ತ ತೀರ್ಪನ್ನು ನೀಡಿದ್ದಾಳೆ ಎಂದೆಲ್ಲ ಬೊಗಳೆ ಬಿಡುತ್ತಾರೆ. ಈಚೆಗೆ ಅರವಿಂದ ಕೇಜ್ರಿವಾಲ್ ಮತ್ತಿತರರ ವಿರುದ್ಧ ಇದ್ದ ಪ್ರಕರಣದಲ್ಲಿ ವಿಚಾರಣಾ ನ್ಯಾಯಾಲಯವೊಂದು ಅವರನ್ನು ವಿಚಾರಣಾಪೂರ್ವವಾಗಿ ಬೇಷರತ್ತಾಗಿ ಬಿಡುಗಡೆ ಮಾಡಿದಾಗ ಅದು ಭಾರೀ ಗೆಲುವೆಂಬಂತೆ ಅವರ ಬೆಂಬಲಿಗರು ಆಡಿಕೊಂಡರು. ಅದೀಗ ಉಚ್ಚನ್ಯಾಯಮೂರ್ತಿಯವರ ಮುಂದೆ ಬಂದಾಗ ಆ ನ್ಯಾಯಮೂರ್ತಿಯವರ ಹಿನ್ನೆಲೆಯ ನೆಪವೊಡ್ಡಿ ಅವರು ಈ ಪ್ರಕರಣವನ್ನು ಆಲಿಸಿ ತೀರ್ಮಾನಿಸದಂತೆ ಸ್ವತಃ ಕೇಜ್ರಿವಾಲ್ ಅವರೇ ವಾದಿಸುತ್ತಿದ್ದಾರೆ. ವಿಶೇಷವೆಂದರೆ ಇಲ್ಲಿ ಯಾವ ವಕೀಲರೂ ಇಲ್ಲ; ಕೇಜ್ರಿವಾಲ್ ವರ್ಸಸ್ ಮೋದಿಯವರ ಖಾಸಾ ಬೆಂಬಲಿಗರಾದ ಸೊಲಿಸಿಟರ್‌ಜನರಲ್ ತುಷಾರ್ ಮೆಹ್ತಾ. ಪ್ರಾಯಃ ವಕೀಲರೊಬ್ಬರು ಕೇಜ್ರಿವಾಲ್ ಅವರ ಪರವಾಗಿದ್ದಿದ್ದರೆ ನ್ಯಾಯಮೂರ್ತಿಯವರ ಹಿನ್ನೆಲೆಯನ್ನು ಕಡೆಗಣಿಸಿ ಪ್ರಕರಣದ ಕುರಿತೇ ವಾದಿಸುತ್ತಿದ್ದರೇನೋ? ವ್ಯಕ್ತಿ ಮತ್ತು ವಸ್ತು ನಿಷ್ಠೆಗಳ ನಡುವಣ ವ್ಯತ್ಯಾಸವು ಇದೇ. ಪಕ್ಷರಾಜಕೀಯವನ್ನನುಸರಿಸಿ ವಿದ್ವಾಂಸರು, ನಿವೃತ್ತ ಅಧಿಕಾರಿಗಳು ಸಾಮೂಹಿಕ ಪ್ರತಿಕ್ರಿಯೆಗಳನ್ನು ನೀಡುತ್ತಾರೆ. ಇವು ಬಹುತೇಕ ರಾಜಕೀಯ ಕುಮ್ಮಕ್ಕಿನಿಂದಲೇ ನಡೆಯುತ್ತವೆಯೆಂಬುದು ಸ್ಪಷ್ಟ. ಈ ಅಂಶವನ್ನು ನಮ್ಮ ಮಾಧ್ಯಮಗಳು ಚರ್ಚಿಸುವುದೇ ಇಲ್ಲ. ಬದಲಾಗಿ ‘ನೂರಕ್ಕೂ ಮಿಕ್ಕಿ’ ಅಥವಾ ಯಾವುದಾದರೊಂದು ಸಂಖ್ಯೆಯ ವಿದ್ವಾಂಸರು ಮತ್ತು ಹಿರಿಯ ಅಧಿಕಾರಿಗಳು ಹೀಗೆ ಪ್ರತಿಕ್ರಿಯಿಸಿದ್ದಾರೆ ಎಂದೋ, ಜಂಟಿ ಹೇಳಿಕೆ ನೀಡಿದ್ದಾರೆಂದೋ ವರದಿ ಮಾಡುತ್ತಾರೆ. ಸಂವಿಧಾನದ ನಾಲ್ಕನೇ ಅಂಗವೆಂಬ ಹೆಗ್ಗಳಿಕೆಯ ಮಾಧ್ಯಮವು ತನ್ನ ಕೆಲಸವನ್ನು ಮಾಡುವುದೇ ಇಲ್ಲ. ಪ್ರತೀ ಬಾರಿಯೂ ಮಧ್ಯಮ ಸಮಾವೇಶದಲ್ಲಿ ಮಾತನಾಡಿದವರೆಲ್ಲ ಮಾಧ್ಯಮಗಳು ಹೋಗುತ್ತಿರುವ, ಸಾಗುತ್ತಿರುವ ದಾರಿಯ ದೋಷಗಳನ್ನು ಹೇಳಿದರೂ ಅವು ಸರಿಯಾಗುತ್ತವೆಂಬ ಭರವಸೆಯಿಲ್ಲ. ಹಣ ಕೂಡಿಟ್ಟಲ್ಲಿ ಪ್ರಶಸ್ತಿಗಳು ಅನಿವಾರ್ಯ. ಅದನ್ನು ನೀಡುತ್ತವೆ; ಪಡೆಯುತ್ತಾರೆ. ಅಂದರೆ ಸಾಹಿತ್ಯದಲ್ಲಿ ಹೇಗೆ ವಿಮರ್ಶೆಯ ವಿವೇಕವು ಅಳಿಸಿಹೋಗುತ್ತಿದೆಯೋ ಹಾಗೆಯೇ ಕಾನೂನು ಅಥವಾ ನ್ಯಾಯದ ಪಾಲನೆಯಲ್ಲೂ. ಇನ್ನು ಅಧಿಕಾರಶಾಹಿಯ ಕುರಿತು ಬರೆಯುವಂತೆಯೇ ಇಲ್ಲ; ಏಕೆಂದರೆ ಅಲ್ಲಿ ತಾಂಡವವಾಡುವ ಭ್ರಷ್ಟತೆಯು ಯಾರ ನಿಯಂತ್ರಣದಲ್ಲೂ ಇಲ್ಲ. ಭಾರತೀಯ ಆಡಳಿತ ಸೇವೆಯ, ಪೊಲೀಸ್ ಸೇವೆಯ ಅಧಿಕಾರಿಗಳನ್ನು ಜಿಲ್ಲಾಮಟ್ಟದ ಮತ್ತು ಅದಕ್ಕೆ ಮೇಲಿನ ಅಧಿಕಾರಿಯರನ್ನಾಗಿ ನೇಮಿಸುತ್ತಾರೆ. ಅವರು ಸೇವೆಗೆ ಸೇರುವಾಗ ದೇಶದ ಆಡಳಿತವನ್ನು ಹಸನುಮಾಡುವ ಪೌರುಷವನ್ನು ಹೇಳುತ್ತಾರೆಯೇ ಹೊರತು ಆನಂತರ ಅದಕ್ಕೆ ದೀರ್ಘ ತಿಲಾಂಜಲಿಯನ್ನು ಬಿಡುತ್ತಾರೆ. ಒಂದು ಜಿಲ್ಲೆಯಲ್ಲಿ ತನ್ನ ಕೈಕೆಳಗೆ ಭ್ರಷ್ಟತೆ, ಕುರುಡು ಕಾಂಚಾಣ ಕುಣಿಯುತ್ತಿರುವಾಗ ನಿಷ್ಠಾವಂತನಾದ, ಪ್ರಾಮಾಣಿಕನಾದ, ದಕ್ಷನಾದ ಒಬ್ಬ ಅಧಿಕಾರಿ ಏನು ಮಾಡಬಹುದೋ ಅದನ್ನು ಮಾಡಿದ್ದರೆ ದೇಶ ಈ ಸ್ಥಿತಿಗೆ ಇಳಿಯುತ್ತಿರಲಿಲ್ಲ. ಈ ತರ್ಕದಂತೆ ಪ್ರಾಯಃ ಎಲ್ಲ ಇಂತಹ ಸೇವಾಕರ್ತರೂ ಭ್ರಷ್ಟರೇ ಆಗಿರುವುದರಿಂದ ಅವರಿಗೆ ತಮ್ಮ ತಮ್ಮ ಜಿಲ್ಲೆಗಳಲ್ಲಿ ಭ್ರಷ್ಟಾಚಾರವನ್ನು ನಿರ್ಮೂಲನಮಾಡುವುದು ಹೋಗಲಿ, ನಿಯಂತ್ರಿಸಲೂ ಸಾಧ್ಯವಾಗುತ್ತಿಲ್ಲ. ಸೂಕ್ಷ್ಮವಾಗಿ ಒಂದು ಉದಾಹರಣೆಯೊಂದಿಗೆ ಇಂದಿನ ಸ್ಥಿತಿಯನ್ನು ಹೇಳಬಯಸುತ್ತೇನೆ: ಸರಕಾರಕ್ಕೆ ಸೇರಿದ ನರ್ಸರಿ ತೋಟವೊಂದರಲ್ಲಿ ಮೂವರು ಕಾರ್ಮಿಕರನ್ನು ನೇಮಿಸಲಾಗಿತ್ತು. ಒಬ್ಬನಿಗೆ ಗುಂಡಿ ತೋಡುವುದು ಕೆಲಸವಾದರೆ ಎರಡನೆಯವನಿಗೆ ಅಲ್ಲಿ ಗಿಡವನ್ನು ನೆಡುವ ಕೆಲಸ ಹಾಗೂ ಮೂರನೆ ಯವನಿಗೆ ಗುಂಡಿಯನ್ನು ಮುಚ್ಚುವ ಕೆಲಸ. ಒಂದು ದಿನ ಅಲ್ಲಿ ಪರಿಶೀಲನೆಗೆ ಮೇಲಧಿಕಾರಿಗಳು ಬಂದಾಗ ಅಲ್ಲಿ ಇಬ್ಬರಿದ್ದರು: ಒಬ್ಬ ಗುಂಡಿ ತೋಡುತ್ತಿದ್ದ, ಇನ್ನೊಬ್ಬ ಮುಚ್ಚುತ್ತಿದ್ದ. ‘‘ಹೀಗೆ ಯಾಕೆ ಮಾಡ್ತೀರಿ’’ ಎಂದು ಪ್ರಶ್ನಿಸಿದಾಗ ಅವರು ‘‘ಸರ್, ಇವತ್ತು ಗಿಡ ನೆಡುವವನು ಬಂದಿಲ್ಲ..’’ ಎಂದರು. ಇದು ಸರಕಾರದ ಯೋಜನೆ, ಯೋಚನೆಗೆ ಹಿಡಿದ ಕೈಗನ್ನಡಿ. ಇದು ಗಿಡ ನೆಡುವುದಕ್ಕೆ ಮಾತ್ರವಲ್ಲ, ಸಾರ್ವಜನಿಕ ಬದುಕಿಗೆ ಸಂಬಂಧಿಸಿದಂತೆ ಬಹುತೇಕ ನಿಜ. ಸಾಮಾಜಿಕ ಉಪಯುಕ್ತತೆಯ ಕುರಿತು ಯಾರಿಗೂ ಚಿಂತೆಯಿಲ್ಲ. ಹಿಂದೂ ಪುರಾಣಗಳಲ್ಲಿ ಈ ಕೆಲಸದ ಹಂಚಿಕೆಯ ಕುರಿತು ಪ್ರಸ್ತಾವವಿದೆ. ಸೃಷ್ಟಿ-ಸ್ಥಿತಿ-ಲಯವೆಂದರೆ ತ್ರಿಮೂರ್ತಿಗಳ ಕೆಲಸ. ಬ್ರಹ್ಮನಿಗೆ ಸೃಷ್ಟಿಯದೇ ಹೊಣೆ; ವಿಷ್ಣುವಿಗೆ ಪಾಲನೆ; ಶಿವನಿಗೆ ಲಯದ ಕರ್ತವ್ಯ. ಒಮ್ಮೆ ಸೃಷ್ಟಿಯಾದ ಬಳಿಕ ಅದು ಲೋಕಾರ್ಪಣೆಗೊಂಡ ಕೃತಿಯಂತೆ. ಈಗ ಕೃತಿಯ ಮಾರಾಟದಲ್ಲಿ ಸೃಷ್ಟಿಕಾರನ ಪ್ರಯತ್ನ ಪ್ರಚಲಿತವಿದೆ. ಆದರೆ ಬ್ರಹ್ಮ ಅದರ ಗೊಡವೆಗೆ ಹೋಗಿರಲಿಲ್ಲ. ಅದನ್ನು ಉಳಿಸಿ ಬೆಳೆಸುವ ಗೊಡವೆ ವಿಷ್ಣುವಿಗೆ. ನಿರ್ನಾಮಕ್ಕೆ ಕಾದು ಕುಳಿತವ ಶಿವ. ಇಂದಿನ ಜಗತ್ತಿನಲ್ಲಿ ಈ ಮೂವರಲ್ಲಿ ಬ್ರಹ್ಮ ಮತ್ತು ಈಶ್ವರರ ಅಬ್ಬರ ಜಾಸ್ತಿಯಿದೆ. ಪಾಲಿಸಬೇಕಾದ ವಿಷ್ಣು ಎಲ್ಲಿ ಅಡಗಿದ್ದಾನೋ ಗೊತ್ತಿಲ್ಲ. ಅದರಲ್ಲೂ ಬ್ರಹ್ಮ ಭಾರೀ ಪರಿಶ್ರಮ ಹಾಕಿ ತಯಾರಿಸಿದ್ದನ್ನು, ನಿರ್ಮಿಸಿದ್ದನ್ನು ಶಿವ ನಿರ್ದಾಕ್ಷಿಣ್ಯವಾಗಿ ತರಿದು ಹಾಕಬಲ್ಲ. ಮಕ್ಕಳು ಬೇಕೆಂದು ವರಬೇಡಿದವರ್ಯಾರೂ ಶಿವನಲ್ಲಿ ಈ ಮಕ್ಕಳನ್ನು ಅಳಿಸು ಎಂದು ಬೇಡುವುದಿಲ್ಲ. ಬದಲಾಗಿ ಉಳಿಸು ಎಂದೇ ಬೇಡುತ್ತಾರೆ. ಅದಕ್ಕಾಗಿಯೇ ‘ಓಂ ತ್ರಯಂಬಕಂ ಯಜಾಮಹೇ..’ ಎಂಬ ಮಂತ್ರ ಸೃಷ್ಟಿಯಾದದ್ದು. ಕಟ್ಟುವುದು ಕಷ್ಟ; ಕುಟ್ಟಿ ಮುರಿಯುವುದು ಸುಲಭ. ಕುಂಬಾರ ಮತ್ತು ಮಡಿಕೆಯ ಗಾದೆ ಎಲ್ಲ ಕಾಲಕ್ಕೂ ಸತ್ಯ. ಒಟ್ಟಾರೆ ದೇಶದ ಸಮಕಾಲೀನ ಸಂಕಟಗಳು ಬದುಕಿನ ಎಲ್ಲ ಕ್ಷೇತ್ರಗಳನ್ನೂ ವ್ಯಾಪಿಸಿವೆ. ಪಾಲನೆಯೆಂಬುದು ಆರತಿ ಎತ್ತಿ, ಗಂಟೆ ಬಡಿದು, ದೀಪವನ್ನು ಆರಿಸಿ ನಡೆಸುವ ಕೆಲಸವಲ್ಲ. ಕಡುಬಡತನವನ್ನು ಕೆಲ ಶ್ರೀಮಂತರ ಆದಾಯದೊಂದಿಗೆ ಸರಾಸರಿ ಲೆಕ್ಕಾಚಾರ ಹಾಕಿ ದೇಶದ ಶ್ರೀಮಂತಿಕೆಯನ್ನು ನಿರ್ಧರಿಸುವಲ್ಲಿ, ದೇಶದ ಸಂಸದರ ಸಂಖ್ಯೆಯನ್ನು ಐನೂರು ಚಿಲ್ಲರೆಯಿಂದ ಎಂಟುನೂರು ಚಿಲ್ಲರೆಗೆ ಏರಿಸುವುದೇ ಸಾಧನೆಯೆಂದು ಬಿಂಬಿಸುವಲ್ಲಿ, ಅನಧಿಕೃತ ಜನಪ್ರತಿನಿಧಿಗಳೆಂದು ಯಾವನೋ ಎಂದೋ ಹೇಳಿದ ವಾಕ್ಯವನ್ನು ಸ್ವಹಿತಕ್ಕಾಗಿ ಬಳಸುವ ಸಾಹಿತಿಗಳೂ, ಚಿಂತಕರೂ, ಪ್ರಗತಿಪರರೂ ತಮ್ಮ ತಮ್ಮ ವೈಯಕ್ತಿಕ ಆಸೆ-ಆಕಾಂಕ್ಷೆಗಳ ಈಡೇರಿಕೆಗಳಿಗೆ ವ್ಯವಸ್ಥೆಗಳನ್ನು ಬಳಸಿಕೊಳ್ಳುವಲ್ಲಿ ಕಲುಷಿತ ಸ್ಥಿತಿ ಮುಂದುವರಿಯುವುದು ಅನಿವಾರ್ಯ. ಪಾಲಿಸುವ ಪಿತನೂ ಇಲ್ಲ; ಬದುಕಿರುವಾಗ ತಲುಪುವ ಸ್ವರ್ಗವೂ ಇಲ್ಲ. ಹುಟ್ಟು ಸಾವುಗಳ ನಡುವಣ ಬದುಕೇ ಯಾರಿಗೂ ಬೇಕಾಗಿಲ್ಲ. ನಿರ್ಮಾಣ-ನಿರ್ನಾಮಗಳ ನಡುವೆ ಇರುವ ಪಾಲನೆಗೆ ಯಾರಿಗೂ ಆಸಕ್ತಿಯಿಲ್ಲ. ಆದರೂ ನೆನಪಿಡಬೇಕಾದ್ದು: ವ್ಯವಸ್ಥೆಯ ಅವ್ಯವಸ್ಥೆಯನ್ನು ಟೀಕಿಸುವವರದ್ದು ಅರಣ್ಯ ರೋದನವೇ ಆಗಿದ್ದರೂ ಬೇರೆ ದಾರಿಯಿಲ್ಲ!

ವಾರ್ತಾ ಭಾರತಿ 16 Apr 2026 10:02 am

Shivamogga | ಗಲಾಟೆ ತಪ್ಪಿಸಲು ಹೋದ ಯುವಕನಿಗೆ ಚೂರಿ ಇರಿತ

ಶಿವಮೊಗ್ಗ: ವೈನ್ ಶಾಪ್ ನಲ್ಲಿ ನಡೆಯುತ್ತಿದ್ದ ಗಲಾಟೆ ತಪ್ಪಿಸಲು ಹೋದ ಯುವಕನೊಬ್ಬನ ಮೇಲೆ ದುಷ್ಕರ್ಮಿಗಳು ಚೂರಿಯಿಂದ ಇರಿದು ಗಂಭೀರವಾಗಿ ಗಾಯಗೊಳಿಸಿದ ಘಟನೆ ರಾಗಿಗುಡ್ಡದ ಸಮೀಪ ಹೊನ್ನಾಳಿ ರಸ್ತೆಯಲ್ಲಿ ನಡೆದಿದೆ. ರಾಗಿಗುಡ್ಡದ ನಿವಾಸಿ ಸುನೀಲ್ ಕುಮಾರ್ (27) ಚೂರಿ ಇರಿತಕ್ಕೆ ಒಳಗಾದ ಯುವಕ ಎಂದು ತಿಳಿದುಬಂದಿದೆ. ಸುನೀಲ್ ಕುಮಾರ್ ತನ್ನ ಸ್ನೇಹಿತ ರಘು ಎಂಬವರ ಜೊತೆಗೂಡಿ ಹೊನ್ನಾಳಿ ರಸ್ತೆಯಲ್ಲಿರುವ ವೈನ್ ಶಾಪ್ ಗೆ ತೆರಳಿದ್ದರು. ಈ ವೇಳೆ ಅದೇ ಮದ್ಯದಂಗಡಿಯಲ್ಲಿ ಕುಳಿತಿದ್ದ ಅಪರಿಚಿತ ವ್ಯಕ್ತಿಯೊಬ್ಬ ತನ್ನ ಸ್ನೇಹಿತರ ಗುಂಪಿನೊಂದಿಗೆ ಯಾವುದೋ ವಿಚಾರಕ್ಕೆ ವಾಗ್ವಾದಕ್ಕಿಳಿದು ಜಗಳವಾಡುತ್ತಿದ್ದ. ಇದನ್ನು ಗಮನಿಸಿದ ಸುನೀಲ್ ಕುಮಾರ್ ಪರಿಸ್ಥಿತಿಯನ್ನು ತಿಳಿಗೊಳಿಸುವ ಉದ್ದೇಶದಿಂದ ಅಲ್ಲಿಗೆ ತೆರಳಿ ಜಗಳ ಬಿಡಿಸಲು ಮುಂದಾಗಿದ್ದಾರೆ. ಈ ವೇಳೆ ಅಲ್ಲಿ ಜಗಳವಾಡುತ್ತಿದ್ದ ವ್ಯಕ್ತಿ ಚಾಕುವಿನಿಂದ ಸುನೀಲ್ ಮೇಲೆ ದಾಳಿ ಮಾಡಿದ್ದಾನೆ. ಇದರಿಂದ ಸುನಿಲ್ ಕುಮಾರ್ ತಲೆ, ಕುತ್ತಿಗೆ ಹಾಗೂ ಮುಖದ ಭಾಗಗಳಿಗೆ ತೀವ್ರ ಸ್ವರೂಪದ ಗಾಯಗಳಾಗಿವೆ ಎಂದು ತಿಳಿದುಬಂದಿದೆ. ಗಾಯಾಳುವನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಾರ್ತಾ ಭಾರತಿ 16 Apr 2026 9:57 am

ತಮಿಳುನಾಡು ವಿಧಾನಸಭಾ ಚುನಾವಣೆ : ದಕ್ಷಿಣದಲ್ಲಿ ಸ್ಥಾನ ವೃದ್ಧಿಗೆ ಬಿಜೆಪಿ ಸ್ಕೆಚ್

ತಮಿಳುನಾಡಿನ ದ್ರಾವಿಡ ರಾಜಕಾರಣದ ಭದ್ರಕೋಟೆಯ ನಡುವೆಯೂ ಕನ್ಯಾಕುಮಾರಿ ಜಿಲ್ಲೆಯು ಬಿಜೆಪಿ ಪಾಲಿಗೆ ಅತ್ಯಂತ ಪ್ರಮುಖ ರಾಜಕೀಯ ಪ್ರಯೋಗಶಾಲೆಯಾಗಿ ಹೊರಹೊಮ್ಮಿದೆ. ಆರ್‌ಎಸ್‌ಎಸ್ ರಾಜ್ಯದಲ್ಲಿ ಮೊಟ್ಟಮೊದಲ ಬಾರಿಗೆ ತನ್ನ ಅಸ್ತಿತ್ವವನ್ನು ಕಂಡುಕೊಂಡಿದ್ದು ಇದೇ ಜಿಲ್ಲೆಯಲ್ಲಿ ಎಂಬುದು ವಿಶೇಷ. ಪ್ರಸ್ತುತ ತಮಿಳುನಾಡಿನಲ್ಲಿ ಬಿಜೆಪಿ ಪರವಾಗಿ ಶಾಸಕರು ಮತ್ತು ಸಂಸದರು ಇಬ್ಬರನ್ನೂ ಹೊಂದಿರುವ ಏಕೈಕ ಜಿಲ್ಲೆ ಎಂಬ ಹೆಗ್ಗಳಿಕೆಯೂ ಕುಮರಿ ನಾಡಿಗಿದೆ.

ವಿಜಯ ಕರ್ನಾಟಕ 16 Apr 2026 9:53 am

‘ಮಹಿಳಾ ಮೀಸಲು ಮೂಲಕ ಚರಿತ್ರೆ ಬರೆಯಲು ಸಂಸತ್‌ ಸಜ್ಜು’; ಇಂದಿನಿಂದ ವಿಶೇಷ ಅಧಿವೇಶನ

ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ 33% ಮೀಸಲಾತಿಯನ್ನು ಶೀಘ್ರವಾಗಿ ಜಾರಿಗೆ ತರುವ ಉದ್ದೇಶದಿಂದ ಕೇಂದ್ರ ಸರ್ಕಾರವು ಮೂರು ದಿನಗಳ ವಿಶೇಷ ಸಂಸತ್ ಅಧಿವೇಶನವನ್ನು ಆಯೋಜಿಸಿದೆ. ಈ ಐತಿಹಾಸಿಕ ಬದಲಾವಣೆಗಾಗಿ ಸರ್ಕಾರವು ಲೋಕಸಭೆಯ ಒಟ್ಟು ಸ್ಥಾನಗಳ ಸಂಖ್ಯೆಯನ್ನು 850 ಕ್ಕೆ ಏರಿಸುವ ಮತ್ತು 2011 ರ ಜನಗಣತಿಯ ಆಧಾರದ ಮೇಲೆ ಕ್ಷೇತ್ರಗಳ ಮರುವಿಂಗಡಣೆ ಮಾಡುವ ಪ್ರಮುಖ ವಿಧೇಯಕಗಳನ್ನು ಮಂಡಿಸಿ ಅನುಮೋದನೆ ಪಡೆಯಲು ಯೋಜಿಸಿದೆ.

ವಿಜಯ ಕರ್ನಾಟಕ 16 Apr 2026 9:24 am

ಮಂತ್ರಾಲಯಕ್ಕೆ ಹೊರಟಿದ್ದ ಚಿಕ್ಕಮಗಳೂರಿನ 8 ಮಂದಿ ಸಾವು, 13 ಮಂದಿಗೆ ಗಾಯ: ಭೀಕರ ರಸ್ತೆ ಅಪಘಾತ

5 ವರ್ಷದ ಬಾಲಕಿ ಬೆಳ್ಳಿ ಸೇರಿ ಚಿಕ್ಕಮಗಳೂರಿನ ಮಂತ್ರಾಲಯಕ್ಕೆ ಹೊರಟಿದ್ದ 8 ಮಂದಿ ದುರ್ಮರಕ್ಕೀಡಾಗಿದ್ದಾರೆ.

ವಿಜಯ ಕರ್ನಾಟಕ 16 Apr 2026 9:03 am

ರಾಯಚೂರು : ಮಂತ್ರಾಲಯದ ಬಳಿ ಭೀಕರ ರಸ್ತೆ ಅಪಘಾತ; 3 ವರ್ಷದ ಮಗು ಸೇರಿ 8 ಮಂದಿ ಮೃತ್ಯು

ರಾಯಚೂರು: ರಾಯಚೂರು ಗಡಿಭಾಗದ ಮಂತ್ರಾಲಯದ ಬಳಿ ಬೊಲೆರೋ ವಾಹನ ಮತ್ತು ಟ್ಯಾಂಕರ್ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ 3 ವರ್ಷದ ಮಗು ಸೇರಿ 8 ಜನರು ಮೃತಪಟ್ಟ ಘಟನೆ ಗುರುವಾರ ಬೆಳಗಿನ ಜಾವ ಸುಮಾರು 4 ಗಂಟೆ ವೇಳೆಗೆ ನಡೆದಿದೆ. ಮೃತರನ್ನು ಕುಮಾರ್ (50), ದೀಪಿಕಾ (42), ಸುನಿಲ್ (40), ಯಶೋಧಮ್ಮ (60), ಪುಟ್ಟಮ್ಮ (55), ಬೆಳ್ಳಿ (3), ಲೋಲಾಕ್ಷಿ ಮತ್ತು ಮೀನಾಕ್ಷಿ ಎಂದು ಗುರುತಿಸಲಾಗಿದೆ. ಆಂಧ್ರ ಪ್ರದೇಶದ ಕರ್ನೂಲ್ ಜಿಲ್ಲೆಯ ಮಂತ್ರಾಲಯದ ಸಮೀಪದ ಚಿಲಕನಡೋಣ ಹತ್ತಿರ ಈ ಅಪಘಾತ ಸಂಭವಿಸಿದೆ. ಚಿಕ್ಕಮಗಳೂರಿನಿಂದ ರಾಘವೇಂದ್ರ ಸ್ವಾಮಿ ಮಠಕ್ಕೆ ರಾಯರ ದರ್ಶನಕ್ಕೆ ತೆರಳುತ್ತಿದ್ದ ಬೊಲೆರೋ ವಾಹನಕ್ಕೆ ಬೀದರ್‌ನಿಂದ ತುಮಕೂರಿಗೆ ತೆರಳುತ್ತಿದ್ದ ಫ್ಲೈಆಶ್ ಟ್ಯಾಂಕರ್ ಢಿಕ್ಕಿ ಹೊಡೆದ ಪರಿಣಾಮ ಈ ಘಟನೆ ನಡೆದಿದೆ ಎಂದು ತಿಳಿದುಬಂದಿದೆ. ಅಪಘಾತದಲ್ಲಿ ಗಾಯಗೊಂಡವರನ್ನು ಕರ್ನೂಲ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.  

ವಾರ್ತಾ ಭಾರತಿ 16 Apr 2026 8:59 am

ಜಸ್ಟ್ 10 ದಿನದ ಹಿಂದೆ ಅಟ್ಟಕ್ಕೇರಿಸಿದ್ದ ಹೈಕಮಾಂಡ್ : ಜಮೀರ್ ಅಹ್ಮದ್ ಭವಿಷ್ಯ ತೂಗೊಯ್ಯಾಲೆಯಲ್ಲಿ?

Is Zameer Ahmed in trouble : ದಾವಣಗೆರೆ ದಕ್ಷಿಣ ವಿಧಾನಸಭಾ ಚುನಾವಣೆಯ ಕಾಂಗ್ರೆಸ್ ಟಿಕೆಟ್ ಹಂಚಿಕೆ ವಿಚಾರ, ದೊಡ್ಡ ಸಮಸ್ಯೆಯಾಗಿ ಪರಿಣಮಿಸುತ್ತಿದೆ. ಈ ವಿದ್ಯಮಾನ, ಕಾಂಗ್ರೆಸ್ಸಿನ ಅಲ್ಪಸಂಖ್ಯಾತ ಸಮುದಾಯದಲ್ಲಿ ದೊಡ್ಡ ಕಂದಕವನ್ನು ಹುಟ್ಟಿಹಾಕಿದೆ. ಕಾಂಗ್ರೆಸ್ ಮುಸ್ಲಿಂ ನಾಯಕರು ನೇರವಾಗಿ ಸಚಿವ ಜಮೀರ್ ಅಹ್ಮದ್ ಖಾನ್ ವಿರುದ್ದ ತಿರುಗಿಬಿದ್ದಿದ್ದಾರೆ. ಈಗಾಗಲೇ ಇಬ್ಬರು ನಾಯಕರ ತಲೆದಂಡವಾಗಿದೆ. ಜಮೀರ್ ಅಹ್ಮದ್ ಕೂಡಾ ಟ್ರಬಲ್’ನಲ್ಲಿದ್ದಾರೆ ಎಂದು ಹೇಳಲಾಗುತ್ತಿದೆ.

ವಿಜಯ ಕರ್ನಾಟಕ 16 Apr 2026 8:29 am

ದೇವರ ಹುಂಡಿಗೆ ಕನ್ನ ; ಸಿ-ದರ್ಜೆ ದೇವಸ್ಥಾನಗಳ ಮೇಲೆ ಇಡಬೇಕಿದೆ ಹದ್ದಿನ ಕಣ್ಣು

ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಗೆ ಬರುವ ಜಿಲ್ಲೆಯ ಹಲವು ದೇವಾಲಯಗಳಲ್ಲಿ ಭ್ರಷ್ಟಾಚಾರದ ದೂರುಗಳು ಕೇಳಿಬರುತ್ತಿವೆ. ಭಕ್ತರು ಶ್ರದ್ಧೆಯಿಂದ ಬರುವ ಪವಿತ್ರ ಸ್ಥಳಗಳಲ್ಲಿಯೇ ಅಕ್ರಮಗಳು ನಡೆಯುತ್ತಿರುವುದು ಆತಂಕಕಾರಿ ವಿಷಯವಾಗಿದೆ. ದೇವಾಲಯಕ್ಕೆ ಬರುವ ಭಕ್ತರಿಂದ ನಿಗದಿತ ಶುಲ್ಕಕ್ಕಿಂತ ಹೆಚ್ಚಿನ ಹಣವನ್ನು ಮನಸೋ ಇಚ್ಛೆ ವಸೂಲಿ ಮಾಡಲಾಗುತ್ತಿದೆ ಎಂಬ ಗಂಭೀರ ಆರೋಪಗಳಿವೆ.

ವಿಜಯ ಕರ್ನಾಟಕ 16 Apr 2026 8:18 am

Delhi High Court | ನ್ಯಾ. ಸ್ವರ್ಣ ಕಾಂತ ಶರ್ಮಾ ಅವರ ಮುಂದೆ ಕೇಜ್ರಿವಾಲ್ ವಾದಿಸುತ್ತಿರುವ ವೀಡಿಯೊ ವೈರಲ್; ತೆಗೆದುಹಾಕಲು ಪೊಲೀಸರಿಗೆ ಹೈಕೋರ್ಟ್ ಸೂಚನೆ

ಹೊಸದಿಲ್ಲಿ, ಎ.16: ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಮೂರ್ತಿ ಸ್ವರ್ಣ ಕಾಂತ ಶರ್ಮಾ ಅವರ ಮುಂದೆ ವಾದಿಸುತ್ತಿರುವ ದಿಲ್ಲಿಯ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ವೀಡಿಯೊಗಳನ್ನು ತಕ್ಷಣ ತೆಗೆದುಹಾಕುವಂತೆ ದೆಹಲಿ ಹೈಕೋರ್ಟ್ ದಿಲ್ಲಿ ಪೊಲೀಸರಿಗೆ ಸೂಚಿಸಿದೆ ಎಂದು barandbench ವರದಿ ಮಾಡಿದೆ. ಎ. 13ರಂದು ಹೈಕೋರ್ಟ್‌ ನಲ್ಲಿ ಕೇಜ್ರಿವಾಲ್ ಅವರು ಸಲ್ಲಿಸಿದ್ದ ನಿರಾಕರಣೆ ಅರ್ಜಿಯ ವಿಚಾರಣೆ ನಡೆದಿತ್ತು. ಈ ವೇಳೆ ಅವರು ಸ್ವತಃ ಹಾಜರಾಗಿ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ವಾದ ಮಂಡಿಸಿದ್ದರು. ವಿಚಾರಣೆಯ ನಂತರ ಅವರ ವಾದಗಳ ವೀಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ನ್ಯಾಯಾಲಯದ ಗಮನಕ್ಕೂ ಬಂದಿದೆ. ಈ ಕುರಿತು ಪ್ರತಿಕ್ರಿಯಿಸಿದ ಹೈಕೋರ್ಟ್‌ ನ ಅಧಿಕಾರಿಯೊಬ್ಬರು, ನ್ಯಾಯಾಲಯದ ಪ್ರಕ್ರಿಯೆಗಳ ಅನಧಿಕೃತ ಚಿತ್ರೀಕರಣ ಮತ್ತು ಪ್ರಸಾರವನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಆನ್‌ ಲೈನ್ ವಿಚಾರಣೆಗಳಿಗೆ ಸಂಬಂಧಿಸಿದ ನಿಯಮಗಳ ಪ್ರಕಾರ, ನ್ಯಾಯಾಲಯದ ವೀಡಿಯೊಗಳನ್ನು ರೆಕಾರ್ಡ್ ಮಾಡುವುದು ಅಥವಾ ಪ್ರಕಟಿಸುವುದು ಅನುಮತಿಸಲಾಗುವುದಿಲ್ಲ ಎಂದೂ ಅವರು ಹೇಳಿದರು. ಅಂತಹ ವೀಡಿಯೊಗಳನ್ನು ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿದ ಎಲ್ಲರ ವಿರುದ್ಧ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ. “ಈ ರೀತಿಯ ಪ್ರಕರಣಗಳು ನಮ್ಮ ಗಮನಕ್ಕೆ ಬಂದಾಗಲೆಲ್ಲಾ, ಕಾನೂನು ಜಾರಿ ಸಂಸ್ಥೆಗಳಿಗೆ ಕ್ರಮ ಕೈಗೊಳ್ಳುವಂತೆ ತಿಳಿಸುತ್ತೇವೆ. ಕೇಜ್ರಿವಾಲ್ ಅವರ ವೀಡಿಯೊವೂ ಅಂತಹ ಪ್ರಕರಣಗಳಲ್ಲಿ ಒಂದಾಗಿದೆ,” ಎಂದು ಅಧಿಕಾರಿ ಹೇಳಿದ್ದಾರೆ. ವಿಚಾರಣೆಯ ವೇಳೆ ಕೇಜ್ರಿವಾಲ್ ಅವರು ನ್ಯಾಯಮೂರ್ತಿ ಶರ್ಮಾ ಅವರು ಈ ಪ್ರಕರಣದಿಂದ ಹಿಂದೆ ಸರಿಯಬೇಕು ಎಂದು ಕೋರಿ ಸಲ್ಲಿಸಿದ ಅರ್ಜಿಯನ್ನು ವಾದಿಸಿದ್ದರು. ಬಳಿಕ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಕೇಜ್ರಿವಾಲ್ ಅವರ ಮನವಿಗೆ ವಿರೋಧ ವ್ಯಕ್ತಪಡಿಸಿದರು. ಈ ಪ್ರಕರಣವು 2021-22ರ ದಿಲ್ಲಿ ಅಬಕಾರಿ ನೀತಿಗೆ ಸಂಬಂಧಿಸಿದೆ. ಮದ್ಯ ವ್ಯಾಪಾರದಲ್ಲಿ ಏಕಸ್ವಾಮ್ಯ ಮತ್ತು ಕಾರ್ಟೆ ಲೈಸೇಶನ್‌ ಗೆ ಅವಕಾಶ ಕಲ್ಪಿಸುವಂತೆ ನೀತಿಯನ್ನು ರೂಪಿಸಲಾಗಿದೆ ಎಂಬ ಆರೋಪದ ಮೇರೆಗೆ 2022ರಲ್ಲಿ ಸಿಬಿಐ ಎಫ್‌ಐಆರ್ ದಾಖಲಿಸಿತ್ತು. ಅಂದಿನ ಲೆಫ್ಟಿನೆಂಟ್ ಗವರ್ನರ್ ವಿ.ಕೆ. ಸಕ್ಸೇನಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿದೆ. ತನಿಖಾ ಸಂಸ್ಥೆಗಳ ಪ್ರಕಾರ, ನೀತಿಯ ದುರುಪಯೋಗದ ಮೂಲಕ ಆಮ್ ಆದ್ಮಿ ಪಕ್ಷ ಹಾಗೂ ಅದರ ನಾಯಕರು ಮದ್ಯ ತಯಾರಕರಿಂದ ಲಂಚ ಪಡೆದಿದ್ದಾರೆ ಎಂಬ ಆರೋಪವಿದೆ. ಬಳಿಕ ಜಾರಿ ನಿರ್ದೇಶನಾಲಯವೂ ಹಣ ವರ್ಗಾವಣೆ ತಡೆ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿದೆ. ಆದರೆ ಫೆಬ್ರವರಿ 27ರಂದು ವಿಚಾರಣಾ ನ್ಯಾಯಾಲಯವು ಕೇಜ್ರಿವಾಲ್ ಸೇರಿದಂತೆ 22 ಮಂದಿಯನ್ನು ಪ್ರಕರಣದಿಂದ ಬಿಡುಗಡೆ ಮಾಡಿದ್ದು, ಯಾವುದೇ ಆರೋಪಗಳಿಗೆ ಸಾಕ್ಷ್ಯಗಳಿಲ್ಲವೆಂದು ಹೇಳಿ ಪ್ರಕರಣವನ್ನು ಮುಕ್ತಾಯಗೊಳಿಸಿತು. ಈ ಆದೇಶವನ್ನು ಸಿಬಿಐ ದೆಹಲಿ ಹೈಕೋರ್ಟ್‌ ನಲ್ಲಿ ಪ್ರಶ್ನಿಸಿದ್ದು, ಪ್ರಸ್ತುತ ನ್ಯಾಯಮೂರ್ತಿ ಶರ್ಮಾ ಅವರು ವಿಚಾರಣೆ ನಡೆಸುತ್ತಿದ್ದಾರೆ. ಮಾರ್ಚ್ 9ರಂದು ಅವರು ನೋಟಿಸ್ ಜಾರಿಗೊಳಿಸಿ, ತನಿಖೆ ನಡೆಸಿದ ಸಿಬಿಐ ಅಧಿಕಾರಿಯ ವಿರುದ್ಧ ಇಲಾಖಾ ಕ್ರಮ ಕೈಗೊಳ್ಳುವಂತೆ ವಿಚಾರಣಾ ನ್ಯಾಯಾಲಯ ನೀಡಿದ್ದ ನಿರ್ದೇಶನವನ್ನು ತಾತ್ಕಾಲಿಕವಾಗಿ ತಡೆಹಿಡಿದರು. ವಿಚಾರಣಾ ನ್ಯಾಯಾಲಯದ ಕೆಲವು ಅವಲೋಕನಗಳು ಪ್ರಾಥಮಿಕವಾಗಿ ತಪ್ಪಾಗಿವೆ ಎಂಬ ಅಭಿಪ್ರಾಯವನ್ನೂ ಅವರು ವ್ಯಕ್ತಪಡಿಸಿದರು. ಈ ನಡುವೆ, ಕೇಜ್ರಿವಾಲ್, ಮನೀಶ್ ಸಿಸೋಡಿಯಾ, ದುರ್ಗೇಶ್ ಪಾಠಕ್, ವಿಜಯ್ ನಾಯರ್, ಅರುಣ್ ಪಿಳ್ಳೈ ಹಾಗೂ ಚಾನ್‌ಪ್ರೀತ್ ಸಿಂಗ್ ರಾಯತ್ ಅವರು ನ್ಯಾಯಮೂರ್ತಿ ಶರ್ಮಾ ಅವರ ಪ್ರಕರಣದಿಂದ ಹಿಂದೆ ಸರಿಯಬೇಕು ಎಂದು ಮನವಿ ಸಲ್ಲಿಸಿದ್ದಾರೆ. ನ್ಯಾಯಮೂರ್ತಿ ಶರ್ಮಾ ಅವರ ಹಿಂದಿನ ಆದೇಶಗಳು ಹಾಗೂ ವಿಚಾರಣೆಯ ವಿಧಾನವು ಪಕ್ಷಪಾತದ ಸೂಚನೆ ನೀಡುತ್ತದೆ ಎಂದು ಅವರು ವಾದಿಸಿದ್ದಾರೆ. ಇದಲ್ಲದೆ, ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾನೂನು ವಿಭಾಗವಾದ ಅಖಿಲ ಭಾರತೀಯ ಅಧಿವಕ್ತ ಪರಿಷತ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನ್ಯಾಯಮೂರ್ತಿ ಶರ್ಮಾ ಭಾಗವಹಿಸಿದ್ದನ್ನು ಅವರು ಉಲ್ಲೇಖಿಸಿದ್ದಾರೆ. ಆದರೆ ಸಿಬಿಐ ಈ ಆರೋಪಗಳನ್ನು ತಳ್ಳಿಹಾಕಿದ್ದು, ಯಾವುದೇ ಸೈದ್ಧಾಂತಿಕ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದೆ. ವಿಚಾರ ಸಂಕಿರಣದಲ್ಲಿ ಭಾಗವಹಿಸುವುದರಿಂದ ಪಕ್ಷಪಾತ ಸಾಬೀತಾಗುವುದಿಲ್ಲ ಎಂದು ತನ್ನ ಅಫಿಡವಿಟ್‌ನಲ್ಲಿ ತಿಳಿಸಿದೆ. ಜೊತೆಗೆ, ಇದೇ ಪ್ರಕರಣದಲ್ಲಿ ಕೆಲವು ಆರೋಪಿಗಳಿಗೆ ನ್ಯಾಯಮೂರ್ತಿ ಶರ್ಮಾ ಅನುಕೂಲಕರ ಆದೇಶಗಳನ್ನು ನೀಡಿರುವುದನ್ನೂ ಉಲ್ಲೇಖಿಸಿದೆ.

ವಾರ್ತಾ ಭಾರತಿ 16 Apr 2026 8:07 am

CBSE 10ನೇ ತರಗತಿ ಎರಡನೇ ಬೋರ್ಡ್ ಪರೀಕ್ಷೆಗೆ ಬೇಕಾಗಿರುವ ಅರ್ಹತಾ ಮಾನದಂಡಗಳೇನು? ಇಲ್ಲಿದೆ ಮಾಹಿತಿ

ನವದೆಹಲಿ: 2026ನೇ ಸಾಲಿನ ಸಿಬಿಎಸ್ಇ 10ನೇ ತರಗತಿಯ ವಾರ್ಷಿಕ ಪರೀಕ್ಷೆಯ ಫಲಿತಾಂಶಗಳು ಪ್ರಕಟಗೊಂಡ ಬೆನ್ನಲ್ಲೇ, ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯದ ದೃಷ್ಟಿಯಿಂದ ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (CBSE) ಮತ್ತೊಂದು ಮಹತ್ವದ ಹೆಜ್ಜೆ ಇಟ್ಟಿದೆ. ರಾಷ್ಟ್ರೀಯ ಶಿಕ್ಷಣ ನೀತಿ (NEP) 2020 ರ ಶಿಫಾರಸುಗಳ ಅನ್ವಯ, ಇದೇ ಮೊದಲ ಬಾರಿಗೆ ಪರಿಚಯಿಸಲಾಗಿರುವ ವಿನೂತನ 'ಎರಡನೇ ಬೋರ್ಡ್ ಪರೀಕ್ಷೆ'ಗೆ

ಒನ್ ಇ೦ಡಿಯ 16 Apr 2026 8:00 am

ಗಾಝಾದಲ್ಲಿ ಮುಂದುವರಿದ ಆಕ್ರಮಣ | ಇಸ್ರೇಲ್‌ ಗೆ ಬುಲ್ಡೋಝರ್ ಮಾರಾಟ ವಿರೋಧಕ್ಕೆ ಅಮೆರಿಕದಲ್ಲಿ ಹೆಚ್ಚಿದ ಬೆಂಬಲ

ವಾಷಿಂಗ್ಟನ್, ಎ.16: ಫೆಲೆಸ್ತೀನ್‌ ನ ಗಾಝಾ, ವೆಸ್ಟ್ ಬ್ಯಾಂಕ್ ಹಾಗೂ ಲೆಬನಾನ್ ಪ್ರದೇಶಗಳಲ್ಲಿ ನಾಗರಿಕ ಹಾನಿಯನ್ನು ಉಲ್ಲೇಖಿಸಿ ಇಸ್ರೇಲ್‌ ಗೆ ಕ್ಯಾಟರ್ಪಿಲ್ಲರ್ ಡಿ–9 ಬುಲ್ಡೋಝರ್‌ ಗಳ ಮಾರಾಟವನ್ನು ತಡೆಯಲು ಅಮೆರಿಕದ ಸೆನೆಟ್‌ ನಲ್ಲಿ ನಡೆದ ಮತದಾನದಲ್ಲಿ 40 ಮಂದಿ ಸೆನೆಟರ್‌ಗಳು ಬೆಂಬಲ ಸೂಚಿಸಿದ್ದಾರೆ. ಈ ನಡೆಯನ್ನು ‘ಐತಿಹಾಸಿಕ’ ಬೆಳವಣಿಗೆ ಎಂದು ಶ್ಲಾಘಿಸಲಾಗಿದೆ. ತಹ್ರೀರ್ ಇನ್‌ಸ್ಟಿಟ್ಯೂಟ್ ಫಾರ್ ಮಿಡಲ್ ಈಸ್ಟ್ ಪಾಲಿಸಿಯ ಕಾರ್ಯನಿರ್ವಾಹಕ ನಿರ್ದೇಶಕಿ ಮೈ ಎಲ್-ಸದನಿ ಅವರು, ಈ ಮತದಾನವು ಅಮೆರಿಕದ ರಾಜಕೀಯ ವಾತಾವರಣದಲ್ಲಿ ಮಹತ್ವದ ಬದಲಾವಣೆಯ ಸೂಚನೆ ನೀಡುತ್ತದೆ ಎಂದು ಹೇಳಿದ್ದಾರೆ. “ಗಾಝಾ, ವೆಸ್ಟ್ ಬ್ಯಾಂಕ್ ಮತ್ತು ಲೆಬನಾನ್ ಪ್ರದೇಶಗಳಲ್ಲಿ ನಾಗರಿಕ ಹಾನಿಯನ್ನು ಉಲ್ಲೇಖಿಸಿ ಇಸ್ರೇಲ್‌ ಗೆ ಕ್ಯಾಟರ್ಪಿಲ್ಲರ್ ಡಿ–9 ಬುಲ್ಡೋಝರ್‌ ಗಳ ಮಾರಾಟವನ್ನು ತಡೆಯಲು 40 ಮಂದಿ ಸೆನೆಟರ್‌ ಗಳು ಮತ ಚಲಾಯಿಸಿರುವುದು ಸಂಪೂರ್ಣವಾಗಿ ಐತಿಹಾಸಿಕ,” ಎಂದು ಅವರು ಹೇಳಿದರು. ಈ ನಿರ್ಣಯವು ನಿರೀಕ್ಷಿತ ರೀತಿಯಲ್ಲಿ ಸೋತಿದ್ದರೂ, ಅಮೆರಿಕದ ರಾಜಕೀಯದಲ್ಲಿ ಬದಲಾವಣೆಯ ಅಲೆ ಮೂಡುತ್ತಿದೆ ಎಂಬುದನ್ನು ಇದು ಸೂಚಿಸುತ್ತದೆ ಎಂದು ಅವರು ಅಭಿಪ್ರಾಯಪಟ್ಟರು. “ಕಳೆದ ವರ್ಷ ಇದೇ ವಿಷಯದಲ್ಲಿ ಕೇವಲ 27 ಮಂದಿ ಮಾತ್ರ ಬೆಂಬಲಿಸಿದ್ದರು. ಈಗ ಆ ಸಂಖ್ಯೆ 40ಕ್ಕೆ ಏರಿಕೆಯಾಗಿದೆ,” ಎಂದು ಅವರು ವಿವರಿಸಿದರು. ಇದೇ ವೇಳೆ, ಇಸ್ರೇಲ್‌ ಗೆ 1,000 ಪೌಂಡ್ ತೂಕದ ಬಾಂಬ್‌ ಗಳ ಮಾರಾಟವನ್ನು ತಡೆಯಲು 36 ಮಂದಿ ಸೆನೆಟರ್‌ ಗಳು ಬೆಂಬಲ ಸೂಚಿಸಿರುವುದೂ ಗಮನಾರ್ಹ ಬೆಳವಣಿಗೆ ಎಂದು ಅವರು ಹೇಳಿದ್ದಾರೆ. “ಈ ಸಂಖ್ಯೆಗಳು ಕ್ರಾಂತಿಕಾರಿಯಾಗಿದ್ದು, ಈ ವಿಷಯಗಳ ಕುರಿತು ಅಮೆರಿಕದ ಮತದಾರರು ಹಾಗೂ ಅವರ ಪ್ರತಿನಿಧಿಗಳ ಮನೋಭಾವದಲ್ಲಿ ಉಂಟಾಗುತ್ತಿರುವ ಮಹತ್ತರ ಬದಲಾವಣೆಯನ್ನು ಪ್ರತಿಬಿಂಬಿಸುತ್ತವೆ,” ಎಂದು ಅವರು ಹೇಳಿದರು. ವಾಷಿಂಗ್ಟನ್‌ ಮೂಲದ ಈ ಸಂಸ್ಥೆಯು ಈ ಮತದಾನಕ್ಕೆ ಮುನ್ನ ಸೆನೆಟರ್‌ಗಳನ್ನು ಬೆಂಬಲಿಸಲು ಒತ್ತಾಯಿಸಿತ್ತು ಎಂಬುದೂ ತಿಳಿದುಬಂದಿದೆ ಎಂದು Aljazeera ವರದಿ ಮಾಡಿದೆ.

ವಾರ್ತಾ ಭಾರತಿ 16 Apr 2026 7:59 am

Karnataka Weather Alert: ರಾಜ್ಯದಲ್ಲಿ ಬಿಸಿಲಿನ ಶಾಖ ಏರಿಕೆ, 12 ಜಿಲ್ಲೆಗೆ ಉಷ್ಣಅಲೆ, ಮಳೆ ಮುನ್ಸೂಚನೆ

ಬೆಂಗಳೂರು: ಕರ್ನಾಟಕದಲ್ಲಿ ಬಿಸಿಲಿನ ಪ್ರಮಾಣದಲ್ಲಿ ಏರಿಕೆ ಆಗುತ್ತಿದ್ದು, ಜನರು ಸೆಕೆ, ತೀವ್ರ ತಾಪಮಾನದ ಝಳಕ್ಕೆ ಪರದಾಡುತ್ತಿದ್ದಾರೆ. ಒಳನಾಡು ಜಿಲ್ಲೆಗಳಲ್ಲಿ ಗರಿಷ್ಠ ತಾಪಮಾನ 1.6 ರಿಂದ 3 ಡಿಗ್ರಿ ಸೆಲ್ಸಿಯಸ್‌ವರೆಗೆ ಹೆಚ್ಚಾಗಿದೆ. ಮುಂದಿನ 5 ದಿನ ಕರಾವಳಿ ಹಾಗೂ ಉತ್ತರ ಒಳನಾಡಿನಲ್ಲಿ ಬಿಸಿಲಿನ ಪ್ರಮಾಣ ಹೆಚ್ಚಲಿವೆ ಎಂಬ ಮುನ್ಸೂಚನೆ ನೀಡಲಾಗಿದೆ. 12ಜಿಲ್ಲೆಗಳಿಗೆ ಉಷ್ಣ ಅಲೆ ಕಂಡು ಬರಲಿದ್ದು 'ಯೆಲ್ಲೋ

ಒನ್ ಇ೦ಡಿಯ 16 Apr 2026 7:44 am

ಗಡೀಪಾರು ವಿರುದ್ಧ ಮಾನವಹಕ್ಕು ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ ನೀರವ್ ಮೋದಿ

ಲಂಡನ್: ಬಹುಕೋಟಿ ವಂಚನೆ ಆರೋಪಿ ನೀರವ್ ಮೋದಿಯ ಗಡೀಪಾರು ಪ್ರಕ್ರಿಯೆ ವಿಧಿವಿಧಾನಗಳನ್ನು ಅಂತಿಮಪಡಿಸಲು ಸಿಬಿಐ ಅಧಿಕಾರಿಗಳ ತಂಡ ಲಂಡನ್ ಗೆ ಆಗಮಿಸಿದ ಬೆನ್ನಲ್ಲೇ, ಲಂಡನ್ ನಿಂದ ತೆರವುಗೊಳಿಸುವ ಕ್ರಮದ ವಿರುದ್ಧ ನೀರವ್ ಮೋದಿ ಫ್ರಾನ್ಸ್ ನಲ್ಲಿರುವ ಯೂರೋಪಿಯನ್ ಕೋರ್ಟ್ ಆಫ್ ಹ್ಯೂಮನ್ ರೈಟ್ಸ್ ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ನೀರವ್ ಮೋದಿ ಗಡೀಪಾರು ಕಾಲ ಸನ್ನಿಹಿತವಾಗಿದೆ. ಆದರೆ ಆತ 39ನೇ ನಿಯಮದಡಿ ಲಂಡನ್ ನಿಂದ ತೆರವುಗೊಳಿಸುವ ವಿರುದ್ಧ ಮಾನವಹಕ್ಕು ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಆದಾಗ್ಯೂ ನಾವು ಆ ಪ್ರಕರಣದಲ್ಲಿ ಸೇರಿಲ್ಲ ಎಂದು ಕ್ರೌನ್ ಪ್ರಾಸಿಕ್ಯೂಶನ್ ಸರ್ವೀಸ್ ವಕ್ತಾರರು ಪ್ರಕಟಿಸಿದ್ದಾರೆ. ಪಂಜಾಬ್ ನ್ಯಾಷನಲ್ ಬ್ಯಾಂಕಿಗೆ 100 ಕೋಟಿ ಡಾಲರ್ಗೂ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ 55 ವರ್ಷದ ವಜ್ರದ ವ್ಯಾಪಾರಿಯ ಗಡೀಪಾರು ಆದೇಶವನ್ನು ಪ್ರಶ್ನಿಸಿ ಲಂಡನ್ ಹೈಕೋರ್ಟ್ ನಲ್ಲಿ ಸಲ್ಲಿಸಿದ್ದ ಅರ್ಜಿ ಮಾರ್ಚ್ 25ರಂದು ವಜಾಗೊಂಡಿತ್ತು. ಗಡೀಪಾರು ವಿರುದ್ಧ ತಾವು ಸಲ್ಲಿಸಿದ್ದ ಮೂಲ ಅರ್ಜಿಯ ಮರು ವಿಚಾರಣೆ ನಡೆಸುವಂತೆ ನೀರವ್ ಅರ್ಜಿ ಸಲ್ಲಿಸಿದ್ದರು. ಮಾರ್ಚ್ 15ರಿಂದ 28 ದಿನಗಳ ಒಳಗಾಗಿ ಸಿಬಿಐಗೆ ಆರೋಪಿಯನ್ನು ವಶಕ್ಕೆ ಪಡೆಯಲು ಅವಕಾಶ ಮಾಡಿಕೊಡಲಾಗಿತ್ತು. ಆದರೆ 39ನೇ ನಿಯಮದ ಅಡಿ ಸಲ್ಲಿಸಿದ ಅರ್ಜಿ ಪರಿಗಣನೆ ಹಂತದಲ್ಲಿರುವುದರಿಂದ ಆರೋಪಿಯನ್ನು ಕರೆದೊಯ್ಯಲು ಸಾಧ್ಯವಿಲ್ಲ. ನೀರವ್ ಮೋದಿಗೆ ಗಡೀಪಾರು ವಿರುದ್ಧ ಇದ್ದ ಏಕೈಕ ಅವಕಾಶ ಇದಾಗಿತ್ತು. ಈ ಅರ್ಜಿಯ ವಿಚಾರಣೆ ಇರುವುದಿಲ್ಲ. ಎಲ್ಲವೂ ಲಿಖಿತವಾಗಿ ನಡೆಯುತ್ತದೆ. ಮಾನವಹಕ್ಕು ನ್ಯಾಯಾಲಯದ ನ್ಯಾಯಾಧೀಶರ ಮುಂದೆ ಹಾಜರಾದ ತಕ್ಷಣ ಸಾಮಾನ್ಯವಾಗಿ 48 ಗಂಟೆಗಳ ಒಳಗಾಗಿ ನಿರ್ಧಾರ ಬರುತ್ತದೆ ಎಂದು ಗಡೀಪಾರು ಬ್ಯಾರಿಸ್ಟರ್ ಬೆನ್ ಕೀತ್ ಸ್ಪಷ್ಟಪಡಿಸಿದ್ದಾರೆ.

ವಾರ್ತಾ ಭಾರತಿ 16 Apr 2026 7:34 am

CBSE 10ನೇ ತರಗತಿಯ ಎರಡನೇ ಬೋರ್ಡ್ ಪರೀಕ್ಷೆಗೆ ಏಪ್ರಿಲ್ 20ರೊಳಗೆ ಅರ್ಜಿ ಸಲ್ಲಿಸಲು ಮಂಡಳಿ ಸೂಚನೆ

ನವದೆಹಲಿ: 2026ನೇ ಸಾಲಿನ ಸಿಬಿಎಸ್ಇ 10ನೇ ತರಗತಿ ಬೋರ್ಡ್ ಪರೀಕ್ಷೆಯ ಫಲಿತಾಂಶಗಳು ಬುಧವಾರ ಯಶಸ್ವಿಯಾಗಿ ಪ್ರಕಟಗೊಂಡಿವೆ. ಉತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳು ಸಂಭ್ರಮಾಚರಣೆಯಲ್ಲಿದ್ದರೆ, ಇನ್ನೊಂದೆಡೆ ನಿರೀಕ್ಷಿತ ಮಟ್ಟದಲ್ಲಿ ಅಂಕ ಗಳಿಸದ ಅಥವಾ ಕೆಲವು ವಿಷಯಗಳಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (CBSE) ಭರ್ಜರಿ ಸಿಹಿಸುದ್ದಿ ನೀಡಿದೆ. ವಿದ್ಯಾರ್ಥಿಗಳು ತಮ್ಮ ಅಂಕಗಳನ್ನು ಸುಧಾರಿಸಿಕೊಳ್ಳಲು ಹಾಗೂ

ಒನ್ ಇ೦ಡಿಯ 16 Apr 2026 7:30 am

ಹೋಟೆಲ್‌ ಬಂದ್‌, ದರ ಕುಸಿತ ; ಈರುಳ್ಳಿಗೂ ತಟ್ಟಿದ ಯುದ್ಧದ ಬಿಸಿ

ಅಮೆರಿಕ-ಇಸ್ರೇಲ್-ಇರಾನ್ ನಡುವಿನ ಯುದ್ಧದ ಜಾಗತಿಕ ಬಿಕ್ಕಟ್ಟು ಈಗ ಈರುಳ್ಳಿ ಬೆಳೆಗಾರರ ಮೇಲೆ ನೇರ ಪರಿಣಾಮ ಬೀರಿದೆ. ಗ್ಯಾಸ್ ಕೊರತೆಯಿಂದಾಗಿ ಹೆಚ್ಚಿನ ಸಂಖ್ಯೆಯ ಹೋಟೆಲ್‌ಗಳು ಮತ್ತು ಉಪಹಾರ ಮಂದಿರಗಳು ಅನಿವಾರ್ಯವಾಗಿ ಬಾಗಿಲು ಮುಚ್ಚಿವೆ. ಹೋಟೆಲ್‌ ಉದ್ಯಮವು ಈರುಳ್ಳಿಯ ಅತಿದೊಡ್ಡ ಗ್ರಾಹಕನಾಗಿತ್ತು. ಹೋಟೆಲ್‌ಗಳು ಸ್ಥಗಿತಗೊಂಡಿರುವುದರಿಂದ ಈರುಳ್ಳಿಗೆ ಇದ್ದ ಬೇಡಿಕೆ ದಿಢೀರನೆ ಕುಸಿದಿದೆ. ಬೇಡಿಕೆ ಇಲ್ಲದ ಕಾರಣ ಮಾರುಕಟ್ಟೆಯಲ್ಲಿ ಈರುಳ್ಳಿ ಬೆಲೆ ತೀವ್ರವಾಗಿ ಇಳಿಕೆಯಾಗಿದೆ.

ವಿಜಯ ಕರ್ನಾಟಕ 16 Apr 2026 7:16 am

ಕರ್ನಾಟಕ ಸರ್ಕಾರ: ಕಲೆ, ಸಾಹಿತ್ಯ ಗಣ್ಯರಿಗೆ ಗೌರವ, ಸಾಂಸ್ಕೃತಿಕ ಪ್ರಶಸ್ತಿಗಳ ಆಯ್ಕೆ ಪಟ್ಟಿ ಪ್ರಕಟ

ಬೆಂಗಳೂರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ನೀಡಲಾಗುವ 2025 26 ನೇ ಸಾಲಿನ ವಿವಿಧ ಪ್ರಶಸ್ತಿಗಳಿಗೆ ಗಣ್ಯರನ್ನು ಆಯ್ಕೆ ಮಾಡಲಾಗಿದೆ. 'ಪಂಪ ಪ್ರಶಸ್ತಿ, ಡಾ ಗುಬ್ಬಿ ವೀರಣ್ಣ ಪ್ರಶಸ್ತಿ, ಬಿ ವಿ ಕಾರಂತ ಪ್ರಶಸ್ತಿ, ಸಾಹಿತ್ಯ ಪ್ರಶಸ್ತಿ, ಜಕಣಾಚಾರಿ ಪ್ರಶಸ್ತಿ, ಜಾನಪದ ಶ್ರೀ ಪ್ರಶಸ್ತಿಗಳು' ಸೇರಿದಂತೆ ಹಲವು ಪ್ರಶಸ್ತಿಗಳಿಗೆ ನಾಡಿನ ಸಾಧಕರನ್ನು ಪುರಸ್ಕರಿಸಲಾಗುವುದು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ

ಒನ್ ಇ೦ಡಿಯ 16 Apr 2026 6:10 am

CBSE Result: ಕರಾವಳಿಯಲ್ಲಿಉತ್ತಮ ಫಲಿತಾಂಶ, ಗಣಿತದಲ್ಲಿ ಬಹಳಷ್ಟು ವಿದ್ಯಾರ್ಥಿಗಳ ಅಂಕ ಇಳಿಕೆ , ಬಹುತೇಕ ಶಾಲೆಗಳು ಶೇ.100

ರಾಜ್ಯ ಪಠ್ಯದ ಫಲಿತಾಂಶದಂತೆಯೇ ಸಿಬಿಎಸ್‌ಇ ಬೋರ್ಡ್ ಪರೀಕ್ಷೆಯಲ್ಲೂ ಕರಾವಳಿ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ.

ವಿಜಯ ಕರ್ನಾಟಕ 16 Apr 2026 5:55 am

ಬಿಸಿಲ ತಾಪ ಏರಿಕೆ: ಬೆಂಗಳೂರಲ್ಲಿ ಸಂಚಾರಿ ಕಾವೇರಿ ಟ್ಯಾಂಕರ್‌ಗೆ ಹೆಚ್ಚಿದ ಬೇಡಿಕೆ, ಜಲಮಂಡಳಿಗೆ ಭರ್ಜರಿ ಆದಾಯ

ಬೆಂಗಳೂರಿನ ನಾನಾ ಬಡಾವಣೆಗಳಲ್ಲಿ ನೀರಿನ ಹಾಹಾಕಾರ ಹೆಚ್ಚುತ್ತಿದ್ದು, ಸಂಚಾರಿ ಟ್ಯಾಂಕರ್‌ಗೆ ಬೇಡಿಕೆ ಹೆಚ್ಚಾಗಿದೆ. ಕೊಳವೆ ಬಾವಿಗಳು ಬತ್ತುತ್ತಿರುವ ಹಿನ್ನಲೆಯಲ್ಲಿ ಜಲಮಂಡಳಿಯ ಟ್ಯಾಂಕರ್ ಗೆ ಬೇಡಿಕೆ ಹೆಚ್ಚಾಗಿದೆ.

ವಿಜಯ ಕರ್ನಾಟಕ 16 Apr 2026 5:33 am

ಕಾಂಗ್ರೆಸ್‌ನಿಂದ ಅಬ್ದುಲ್ ಜಬ್ಬಾರ್ ಅಮಾನತು ವಿರೋಧಿಸಿ ಪ್ರತಿಭಟನೆ

ದಾವಣಗೆರೆ: ವಿಧಾನ ಪರಿಷತ್ ಸದಸ್ಯ ಅಬ್ದುಲ್ ಜಬ್ಬಾರ್ ಅವರನ್ನು ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಅಮಾನತುಗೊಳಿಸಿರುವುದನ್ನು ವಿರೋಧಿಸಿ ಅಭಿಮಾನಿಗಳು, ಅಲ್ಪಸಂಖ್ಯಾತ ಸಮಾಜ ಮುಖಂಡರು ಬುಧವಾರ ಪ್ರತಿಭಟನೆ ನಡೆಸಿದರು. ನಗರದ ಅಖ್ತರ್ ರಝಾ ಸರ್ಕಲ್ ಬಳಿ ಜಮಾಯಿಸಿದ ಪ್ರತಿಭಟನಾಕಾರರು, ಅಬ್ದುಲ್ ಜಬ್ಬಾರ್ ಅವರ ಭಾವಚಿತ್ರ ಹಿಡಿದುಕೊಂಡು ಪಕ್ಷ ತೆಗೆದುಕೊಂಡಿರುವ ನಿರ್ಧಾರದಿಂದ ಹಿಂದೆ ಸರಿಯಬೇಕೆಂದು ಒತ್ತಾಯಿಸಿದರು. ಅಬ್ದುಲ್ ಜಬ್ಬಾರ್ ಅವರು ಕಳೆದ 40 ವರ್ಷಗಳಿಂದ ಪಕ್ಷಕ್ಕಾಗಿ ಹಗಲು-ಇರಳು ದುಡಿದಿದ್ದಾರೆ. ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಟಿಕೆಟ್ ಕೇಳಿದ್ದೇ ತಪ್ಪಾಯಿತಾ? ಶಾಮನೂರು ಶಿವಶಂಕರಪ್ಪ ಅವರು ಕಳೆದ ಲೋಕಸಭಾ ಚುನಾವಣೆಯಲ್ಲಿ ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ ಅವರನ್ನು ಗೆಲ್ಲಿಸಿ ಎಂದು ಹೇಳಿದಾಗ ಅವರ ವಿರುದ್ಧ ಪಕ್ಷ ಯಾವುದೇ ಕ್ರಮ ತೆಗೆದುಕೊಳ್ಳಲಿಲ್ಲ. ಆದರೆ, ಉಪ ಚುನಾವಣೆಯಲ್ಲಿ ಟಿಕೆಟ್ ಕೇಳಿರುವುದಕ್ಕೆ ಜಬ್ಬಾರ್ ಅವರನ್ನು ಪಕ್ಷದ ಸದಸ್ಯತ್ವದಿಂದ ಅಮಾನತುಗೊಳಿಸುವುದು ಯಾವ ನ್ಯಾಯ ಎಂದು ಪ್ರಶ್ನಿಸಿದರು. ಅಲ್ಪಸಂಖ್ಯಾತರು ಹಿಂದಿನಿಂದಲೂ ಕಾಂಗ್ರೆಸ್ ಪಕ್ಷವನ್ನೇ ಬೆಂಬಲಿಸಿಕೊಂಡು ಬಂದಿದ್ದಾರೆ. ಪಕ್ಷಕ್ಕಾಗಿ ಹಗಲು-ಇರಳು ಅಲ್ಪಸಂಖ್ಯಾತ ನಾಯಕರು ಶ್ರಮಿಸಿದ್ದಾರೆ. ದಾವಣಗೆರೆ ದಕ್ಷಿನ ಉಪ ಚುನಾವಣೆಯಲ್ಲಿ ಟಿಕೆಟ್ ಕೇಳಿದರು ಎಂಬ ಒಂದೇ ಕಾರಣಕ್ಕೆ ಮುಸ್ಲಿಮ್ ಸಮಾಜದ ನಾಯಕರಾದ ಅಬ್ದುಲ್ ಜಬ್ಬಾರ್ ಅವರನ್ನು ಪಕ್ಷದ ಸದಸ್ಯತ್ವದಿಂದ ಅಮಾನತು, ನಸೀರ್ ಅಹ್ಮದ್ ಅವರನ್ನು ಮುಖ್ಯಮಂತ್ರಿ ಕಾರ್ಯದರ್ಶಿ ಹುದ್ದೆಯಿಂದ ಬಿಡುಗಡೆ ಮಾಡಿರುವುದು ಸರಿಯಲ್ಲ. ಕೂಡಲೇ ಪಕ್ಷದ ಹೈಕಮಾಂಡ್ ತೆಗೆದುಕೊಂಡಿರುವ ನಿರ್ಧಾರದಿಂದ ಹಿಂದೆ ಸರಿದು ಪುನಃ ಅವರನ್ನು ಪಕ್ಷಕ್ಕೆ ಸೇರ್ಪಡೆಗೊಳಿಸಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ಪ್ರಮುಖರಾದ ಮುಹಮ್ಮದ್ ಸಿರಾಜ್, ಘನಿ ತಾಹೀರ್, ಎಸ್.ಕೆ.ಅಮ್ಜದ್ ವುಲ್ಲಾ, ಹುಲಿಮನಿ ರಹಮತುಲ್ಲಾ, ಎ.ಜಬ್ಬಾರ್, ಖಾದರ್ ಬಾಷಾ, ವಾಸೀಮ್ ಹಾಗೂ ಮುಸ್ಲಿಮ್ ಮುಖಂಡರು ಭಾಗವಹಿಸಿದ್ದರು.

ವಾರ್ತಾ ಭಾರತಿ 16 Apr 2026 1:16 am

ಕಾಂಗ್ರೆಸ್ ಪಕ್ಷದಲ್ಲಿ ಶಿಸ್ತು ಕ್ರಮ ಜರುಗಿಸುವ ಸಂದರ್ಭದಲ್ಲಿ ದೊರೆ, ಸೇವಕ ಎಂಬಂತಾಗಿದೆ : ಕೆ.ಎನ್.ರಾಜಣ್ಣ

ತುಮಕೂರು : ʼಕಾಂಗ್ರೆಸ್ ಪಕ್ಷದಲ್ಲಿ ಶಿಸ್ತು ಕ್ರಮ ಜರುಗಿಸುವ ಸಂದರ್ಭದಲ್ಲಿ ದೊರೆ, ಸೇವಕ ಎಂಬಂತಾಗಿದೆʼ ಎಂದು ಎಂದು ಮಾಜಿ ಸಚಿವ ಹಾಗೂ ಮಧುಗಿರಿ ಶಾಸಕ ಕೆ.ಎನ್.ರಾಜಣ್ಣ ಹೇಳಿದ್ದಾರೆ. ಮಧುಗಿರಿಯಲ್ಲಿ ನಡೆದ ಉದ್ಯೋಗ ಮೇಳದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ʼಈ ಹಿಂದೆ ಸದ್ಗುರು ಅವರು ಯಾರು ರಾಹುಲ್‍ಗಾಂಧಿ ಕೇಳಿದ್ದರು, ಆದರೆ ಕೆಲವರು ಅವರ ಜೊತೆಯಲ್ಲಿ ವೇದಿಕೆಯ ಮೇಲೆ ಕುಳಿತ ಕಾರ್ಯಕ್ರಮ ನಡೆಸಿದರು. ಇದು ಶಿಸ್ತು ಮೀರುವುದಿಲ್ಲವೇ ? ಎಂದು ಪ್ರಶ್ನಿಸಿದರು. ಮಹಿಳಾ ಮೀಸಲಾತಿ ಜಾರಿಗಾಗಿ ವಿಶೇಷ ಅಧಿವೇಶನ ಕರೆದಿರುವುದನ್ನು ನಾನು ಸ್ವಾಗತಿಸುತ್ತೇನೆ. 20 ವರ್ಷಗಳ ಹಿಂದೆಯೇ ಪ್ರಧಾನಿ ಮನಮೋಹನ್‍ಸಿಂಗ್ ಕಾಲದಲ್ಲಿಯೇ ಮಸೂದೆ ಮಂಡನೆಗೆ ಕಾಂಗ್ರೆಸ್ ಪಕ್ಷ ಮುಂದಾಗಿತ್ತು. ಆಗ ಜೆಡಿಯು ಮುಖಂಡರಾಗಿದ್ದ ಶರದ ಯಾದವ್, ಬಿಲ್ ಮಂಡನೆಯಾದರೆ ಗಂಡಸರೆಲ್ಲಾ ವಿಷ ತೆಗೆದುಕೊಳ್ಳಬೇಕಾಗುತ್ತದೆ ಎಂದು ಹೋರಾಟ ಮಾಡಿದ್ದರು ಎಂದು ತಿಳಿಸಿದ್ದಾರೆ. ಲೋಕಸಭೆ ಮತ್ತು ವಿಧಾನ ಸಭಾ ಕ್ಷೇತ್ರಗಳ ಪುನರ್ ವಿಂಗಡನೆಯಲ್ಲಿ 2 ಲಕ್ಷ ಮತದಾರರಿಗೆ ಒಂದು ವಿಧಾನಸಭೆ, ಹಾಗೆಯೇ 10 ಲಕ್ಷ ಮತದಾರರಿಗೆ ಒಂದು ಲೋಕಸಭಾ ಕ್ಷೇತ್ರದ ರೀತಿ ವಿಂಗಡನೆಗೆ ಮುಂದಾಗಿದ್ದಾರೆ. ಅಲ್ಲದೆ , ಮಹಿಳಾ ಮೀಸಲಾತಿಯೂ ಚರ್ಚೆಗೆ ಬರಲಿದೆ. ಇದರಿಂದ ಎಸ್ಸಿ, ಎಸ್ಟಿ, ಓಬಿಸಿ ಸೇರಿದಂತೆ ಎಲ್ಲಾ ವರ್ಗದ ಮಹಿಳೆಯರಿಗೂ ಅನುಕೂಲವಾಗಲಿದೆ.ಹಾಗಾಗಿ ಇದನ್ನು ನಾನು ಸ್ವಾಗತಿಸುತ್ತೇನೆ ಎಂದು ಕೆ.ಎನ್.ರಾಜಣ್ಣ ನುಡಿದರು.

ವಾರ್ತಾ ಭಾರತಿ 16 Apr 2026 1:14 am

ನಾವು ಯಾಮಾರಿದರೆ ದೇಶ ಇಪ್ಪತ್ತನೇ ಶತಮಾನಕ್ಕೆ ಹೋಗುತ್ತೆ : ಪ್ರೊ.ಶಿವರಾಮಯ್ಯ

ಬೆಂಗಳೂರು : ನಾವು ಯಾಮಾರಿದರೆ ಇಡೀ ದೇಶ 20ನೇ ಶತಮಾನಕ್ಕೆ ಹೋಗುತ್ತದೆ. 100 ವರ್ಷದಿಂದ ಕಟ್ಟಿರುವ ಸಂಘ ಪರಿವಾರ ಒಂದೇ ಸಲ ಮನು ಧರ್ಮಶಾಸ್ತ್ರವನ್ನು ಜಾರಿಗೆ ತರುತ್ತದೆ ಎಂದು ಹಿರಿಯ ಸಾಹಿತಿ ಪ್ರೊ.ಶಿವರಾಮಯ್ಯ ಎಚ್ಚರಿಸಿದ್ದಾರೆ. ಬುಧವಾರ ನಗರದ ನಯನ ಸಭಾಂಗಣದಲ್ಲಿ ರಂಗಚಂದಿರದ ವತಿಯಿಂದ ಆಯೋಜಿಸಿದ್ದ ಸಾಹಿತಿ ಪ್ರೊ.ಎಸ್.ಜಿ.ಸಿದ್ದರಾಮಯ್ಯ ಅವರ ‘ಮಹಾಮನೆ’ ನಾಟಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಒಂದಲ್ಲ ಒಂದು ದಿನ ನಮ್ಮ ದೇಶದಲ್ಲಿ ಡಾ.ಅಂಬೇಡ್ಕರ್ ಅವರ ಸಂವಿಧಾನ ಮಾತ್ರ ನಮ್ಮ ದೇಶದಲ್ಲಿ ಉಳಿಯುತ್ತದೆ. ಸಂವಿಧಾನ ಇಲ್ಲದೇ ಇದ್ದರೆ, ನಾನು ಮಾತನಾಡಲು ಸಾಧ್ಯವಾಗುತ್ತಿರಲಿಲ್ಲ ಎಂದು ಹೇಳಿದರು. ಕರ್ನಾಟಕ ಇತಿಹಾಸವನ್ನು ನೋಡಿದರೆ, ಚಾಲುಕ್ಯ ತೈಲಪನನ್ನು ಕೊಂದು ಕಲಚೂರಿ ಬಿಜ್ಜಳ ಚಕ್ರವರ್ತಿಯಾಗುತ್ತಾನೆ. ಆಗ ಬಸವಣ್ಣ ಅವರು ಮಂತ್ರಿಯಾಗುತ್ತಾರೆ. ಬಸವಣ್ಣ ಅವರು ಮಂತ್ರಿಯಾದಾಗ ವರ್ಗ ಮತ್ತು ವರ್ಣ ರಹಿತ ಸಮಾಜಕ್ಕಾಗಿ ಕೆಲಸ ಮಾಡುತ್ತಾರೆ. ಆ ಸಿದ್ಧಾಂತದ ಮೇಲೆ ಮಹಾಮನೆಯನ್ನು ಸಾಧಿಸುತ್ತಾರೆ ಎಂದು ಹೇಳಿದರು. ಬಸವಣ್ಣನವರ ಚಿಂತನೆಗಳಿಂದಾಗಿ ಕಲ್ಯಾಣದ ಜನರು ಎಚ್ಚೆತ್ತುಕೊಂಡು ದುಡಿದ ನಂತರ ಬಿಜ್ಜಳನ ಕಲ್ಯಾಣದ ಸಂಪತ್ತು ಹೆಚ್ಚಾಯಿತು. ಸಂಪತ್ತು ಹೆಚ್ಚಾದ ನಂತರ ಬೇರೆ ಬೇರೆ ಕಡೆಯಿಂದ ಜನರು ಬಂದು ಸೇರಿಕೊಂಡರು. ಆಗ ಸನಾತನವಾದಿಗಳಿಗೆ ಸಹಿಸಲು ಆಗಲಿಲ್ಲ. ಅಷ್ಟರಲ್ಲಿ ಕಲ್ಯಾಣದಲ್ಲಿ ಅಂತರ್ಜಾತಿ ವಿವಾಹ ನಡೆಯಿತು. ಆಗ ಕಲ್ಯಾಣ ಕ್ರಾಂತಿಯಾಯಿತು. ಇವತ್ತಿಗೂ ಅಂತರ್ಜಾತಿ ವಿವಾಹಕ್ಕೆ ಅನೇಕರು ಬಲಿಯಾಗುತ್ತಿದ್ದಾರೆ ಎಂದರು. ನಾಟಕಕಾರ ಡಾ.ಬೇಲೂರು ರಘುನಂದನ್ ಮಾತನಾಡಿರು. ಇದೇ ವೇಳೆ ಆದಿಮೂಲ ರಂಗ ತಂಡದಿಂದ ರಂಗ ಗೀತೆಗಳ ಗಾಯನ ನಡೆಯಿತು. ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ ಪ್ರೊ.ಎಸ್.ಜಿ.ಸಿದ್ದರಾಮಯ್ಯ, ಕರ್ನಾಟಕ ನಾಟಕ ಅಕಾಡಮಿಯ ಅಧ್ಯಕ್ಷ ಕೆ.ವಿ. ನಾಗರಾಜಮೂರ್ತಿ, ಬೆಂಗಳೂರು ನಗರ ಜಿಲ್ಲಾ ಕಸಾಪ ಅಧ್ಯಕ್ಷ ಎಂ.ಪ್ರಕಾಶ್‍ಮೂರ್ತಿ, ರಂಗಚಂದಿರದ ಗೌರವಾಧ್ಯಕ್ಷ ರಾಮಕೃಷ್ಣ ಹೆಗಡೆ, ಕಾರ್ಯದರ್ಶಿ ಜಿಪಿಒ ಚಂದ್ರು, ಪ್ರಕಾಶಕ ಬಿ.ಎಸ್.ವಿದ್ಯಾರಣ್ಯ ಮತ್ತಿತರರು ಉಪಸ್ಥಿತರಿದ್ದರು.

ವಾರ್ತಾ ಭಾರತಿ 16 Apr 2026 12:39 am

ಅಂಗನವಾಡಿ ನೌಕರರನ್ನು ಸಿ, ಡಿ ದರ್ಜೆಯ ನೌಕರರನ್ನಾಗಿ ಖಾಯಂಗೊಳಿಸಲು ಆಗ್ರಹ : ಎ.21ರಿಂದ 23ರ ವರೆಗೆ ದಿಲ್ಲಿಯಲ್ಲಿ ಧರಣಿ

ಬೆಂಗಳೂರು : ಕೇಂದ್ರ ಸರಕಾರ ಅಂಗನವಾಡಿ ನೌಕರರ ಸೇವೆಯನ್ನು ಕೇವಲ ಗೌರವ ಸೇವೆಯಾಗಿ ಪರಿಗಣಿಸದೆ ಅವರನ್ನು ಖಾಯಂ ಉದ್ಯೋಗಿಯಾಗಿ ಮಾನ್ಯತೆ ನೀಡಿ, ಅವರನ್ನು ಸಿ ಮತ್ತು ಡಿ ದರ್ಜೆಯ ನೌಕರರನ್ನಾಗಿ ಖಾಯಂಗೊಳಿಸಲು ಆಗ್ರಹಿಸಿ ಎ.21ರಿಂದ 23ರ ವರೆಗೆ ಹೊಸದಿಲ್ಲಿಯಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ಧರಣಿ ನಡಸಲಿದ್ದಾರೆಂದು ಎಐಟಿಯುಸಿ ರಾಜ್ಯಾಧ್ಯಕ್ಷ ಬಿ.ಅಮ್ಜದ್ ತಿಳಿಸಿದ್ದಾರೆ. ಮಂಗಳವಾರ ನಗರದ ಶೇಷಾದ್ರಿಪುರಂನಲ್ಲಿರುವ ಎಐಟಿಯುಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸುಪ್ರೀಂಕೋರ್ಟಿನ ಆದೇಶದಂತೆ ಅಂಗನವಾಡಿ ಉದ್ಯೋಗಿಗಳು ಪೂರ್ಣಕಾಲಿಕೆ ಸ್ಥಿರ ಉದ್ಯೋಗಿಗಳಾಗಿದ್ದು, ಅವರು ಗ್ರಾಚ್ಯುಟಿ ಪಡೆಯುವ ಹಕ್ಕನ್ನು ಹೊಂದಿದ್ದಾರೆ. ಆದುದರಿಂದ ಕೇಂದ್ರ ಸರಕಾರ ಖಾಯಂ ಉದ್ಯೋಗಿಯಾಗಿ ಮಾನ್ಯತೆ ನೀಡುವ ಮೂಲಕ ಅವರನ್ನು ಸಿ ಮತ್ತು ಡಿ ದರ್ಜೆಯ ನೌಕರರನ್ನಾಗಿ ಖಾಯಂಗೊಳಿಸಬೇಕು ಎಂದರು. ಅಂಗನವಾಡಿ ನೌಕರರಿಗೆ ವೇತನ ನೀಡದೆ ಕೇಂದ್ರ ಮತ್ತು ರಾಜ್ಯ ಸರಕಾರ ಸಹಭಾಗಿತ್ವದ ಅನುಪಾತದಲ್ಲಿ ಕೇವಲ ಗೌರವಧನ ನೀಡಿ ದುಡಿಸಿಕೊಳ್ಳಲಾಗುತ್ತಿದೆ. ಇವರಿಗೆ ನೀಡುತ್ತಿರುವ ಗೌರವ ಸಂಭಾವನೆಯನ್ನು ಕನಿಷ್ಠವೇತನ ಕಾಯ್ದೆಯ ವ್ಯಾಪ್ತಿಗೊಳಪಡಿಸಿ ಕನಿಷ್ಠ ವೇತನ ನೀಡಲು ಕ್ರಮವಹಿಸಬೇಕು ಎಂದು ಬಿ.ಅಮ್ಜದ್ ಒತ್ತಾಯಿಸಿದರು. ಸುಪ್ರೀಂಕೋರ್ಟಿನ ಆದೇಶದಂತೆ ಅಂಗನವಾಡಿ ಸೇವೆಗೆ ಸೇರಿ ನಿವೃತ್ತರಾಗಿರುವವರೆಲ್ಲರಿಗೂ ಗ್ರಾಚ್ಯುಟಿ ಸೌಲಭ್ಯ ಒದಗಿಸಲು ಕ್ರಮ ಕೈಗೊಳ್ಳಬೇಕು ಹಾಗೂ ನಿವೃತ್ತಿಯ ನಂತರ ಮಾಸಿಕ ನಿವೃತ್ತಿ ವೇತನ ನೀಡಲು ಪಿಂಚಣಿ ಯೋಜನೆಯನ್ನು ಜಾರಿಗೊಳಿಸಿ ಅದರ ಪ್ರಯೋಜನ ಪಡೆಯಲು ಅಗತ್ಯವಾದ ಕ್ರಮಗಳನ್ನು ಜಾರಿಗೊಳಿಸಬೇಕು ಎಂದು ಬಿ.ಅಮ್ಜದ್ ತಿಳಿಸಿದರು. ಅಂಗನವಾಡಿ ನೌಕರರಿಗೆ ಆರೋಗ್ಯ ಸಮಸ್ಯೆಗಳು ಎದುರಾದಾಗ ಅವರ ಚಿಕಿತ್ಸೆಗೆ ಎಲ್ಲಾ ಆಸ್ಪತ್ರೆಗಳಲ್ಲೂ ಸೇವೆ ಪಡೆಯಲು ಅವಕಾಶ ಒದಗಿಸಬೇಕು. ಹಾಗೂ ಆರೋಗ್ಯ ವಿಮೆಯನ್ನು ಜಾರಿಗೊಳಿಸಿ ಅದರ ಪ್ರಯೋಜನ ಪಡೆಯಲು ಅಗತ್ಯವಾದ ಕ್ರಮಗಳನ್ನು ಜಾರಿಗೊಳಿಸಬೇಕು ಎಂದು ಬಿ.ಅಮ್ಜದ್ ಹೇಳಿದರು. ಅಂಗನವಾಡಿ ಸೇವೆಗಳನ್ನು ಹೊರತುಪಡಿಸಿ ಬೇರಾವುದೇ ಕೆಲಸ ಕಾರ್ಯಗಳಿಗೆ ಅಂಗನವಾಡಿ ನೌಕರರನ್ನು ನಿಯೋಜಿಸದೆ ಐಸಿಡಿಎಸ್ ಯೋಜನೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಕ್ರಮವಹಿಸಬೇಕು ಎಂದು ಬಿ.ಅಮ್ಜದ್ ತಿಳಿಸಿದರು. ಅಂಗನವಾಡಿ ಫಲಾನುಭವಿಗಳಿಗೆ ಒದಗಿಲಾಗುವ (ಪೌಷ್ಟಿಕ ಆಹಾರ-ಆರೋಗ್ಯ)ಸೌಲಭ್ಯಗಳನ್ನು ನೀಡಲು ಜಾರಿಗೊಳಿಸಲಾಗಿರುವ ಎಫ್‍ಆರ್‍ಎಸ್ ಪದ್ದತಿಯನ್ನು ಕೈಬಿಡಬೇಕು. ಅಂಗನವಾಡಿ ಕೇಂದ್ರಗಳಲ್ಲಿ ಗುಣಮಟ್ಟದ ಪೌಷ್ಟಿಕ ಆಹಾರ ವಿತರಣೆಗೆ ಆದ್ಯತೆ ನೀಡಬೇಕು ಎಂದು ಬಿ.ಅಮ್ಜದ್ ಹೇಳಿದರು. ಅಂಗನವಾಡಿ ಕೇಂದ್ರಗಳನ್ನು ದತ್ತು ಪಡೆಯುವಂತೆ ಯುಜಿಸಿ ಹೊರಡಿಸಿರುವ ಆದೇಶ ವಾಪಸ್ಸಾಗಲಿ. ವಿಶ್ವವಿದ್ಯಾಲಯಗಳ ಧನಸಹಾಯ ಆಯೋಗವು ಭಾರತದ ಎಲ್ಲಾ ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳು ತಲಾ ಐದಾರು ಅಂಗನವಾಡಿ ಕೇಂದ್ರಗಳನ್ನು ದತ್ತು ಪಡೆಯಬೇಕೆಂದು ಆದೇಶಿಸಿರುವುದು ಅಂಗನವಾಡಿಗಳ ಮೂಲಭೂತ ಉದ್ದೇಶವನ್ನು ಬುಡಮೇಲುಗೊಳಿಸುವಂತಹ ಕ್ರಮವಾಗಿದೆ ಎಂದು ಬಿ.ಅಮ್ಜದ್ ಖಂಡಿಸಿದರು. ಈ ಎಲ್ಲ ಅಂಶಗಳನ್ನಿಟ್ಟುಕೊಂಡು ಧರಣಿಯ ಸಂದರ್ಭದಲ್ಲಿ ಕೇಂದ್ರ ಸರಕಾರವನ್ನು ಒತ್ತಾಯಿಸಲಾಗುವುದು. ಧರಣಿಯಲ್ಲಿ ಸಾವಿರಾರು ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ಭಾಗವಹಿಸಲಿದ್ದಾರೆ ಎಂದು ಬಿ.ಅಮ್ಜದ್ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಎಐಟಿಯುಸಿ ಪ್ರಧಾನ ಕಾರ್ಯದರ್ಶಿ ಜಯಮ್ಮ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ವಾರ್ತಾ ಭಾರತಿ 16 Apr 2026 12:31 am

ಸಿಬಿಎಸ್ಸಿ ಫಲಿತಾಂಶ |ರಾಜ್ಯದ ವಿದ್ಯಾರ್ಥಿಗಳಿಬ್ಬರಿಗೆ 500ಕ್ಕೆ 499 ಅಂಕಗಳು

ಬೆಂಗಳೂರು : ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ(ಸಿಬಿಎಸ್ಸಿ)ಯು ಹತ್ತನೆ ತರಗತಿಯ ಫಲಿತಾಂಶ ಪ್ರಕಟಿಸಿದ್ದು, ಕರ್ನಾಟಕದ ಶ್ರೀ ಚೈತನ್ಯ ಟೆಕ್ನೋ ಶಿಕ್ಷಣ ಸಂಸ್ಥೆಯ ಕಲ್ವಿ ಜಯಿತಾ ಮತ್ತು ಬಪಾತು ತಾರುಣ್ಯ ಅವರು 500ಕ್ಕೆ 499 ಅಂಕಗಳಿಗೆ ಗಳಿಸುವ ಮೂಲಕ ಅತ್ಯುತ್ತಮ ಸಾಧನೆ ಮಾಡಿದ್ದಾರೆ. ಬುಧವಾರ ಈ ಕುರಿತು ಪ್ರಕಟಣೆ ನೀಡಿರುವ ಸಂಸ್ಥೆಯ ನಿರ್ದೇಶಕಿ ಸೀಮಾ ಬೊಪ್ಪಣ, ‘ಪ್ರಕೃತಿ ಕೆ.ಎನ್., ಲೀಲಾ ಮಾನುಷ್‌ ಜಿ. ಮತ್ತು ಲಾಸ್ಯ ಮೇಕಲ ಅವರು 500ಕ್ಕೆ 498 ಅಂಕಗಳನ್ನು ಗಳಿಸಿದ್ದಾರೆ. ಸಂಸ್ಥೆಯ ಒಟ್ಟು 60 ಮಂದಿ ವಿದ್ಯಾರ್ಥಿಗಳು 490 ಮತ್ತು ಅದಕ್ಕಿಂತ ಹೆಚ್ಚಿನ ಅಂಕಗಳನ್ನು ಗಳಿಸುವ ಮೂಲಕ ಶಿಕ್ಷಣ ಸಂಸ್ಥೆಗೆ ಕೀರ್ತಿ ತಂದಿದ್ದಾರೆ’ ಎಂದು ಹೇಳಿದ್ದಾರೆ.  

ವಾರ್ತಾ ಭಾರತಿ 16 Apr 2026 12:25 am

ನಾಳೆ ಹೊಸದಿಲ್ಲಿಯಲ್ಲಿ ಜಾಗತಿಕ ನಾವೀನ್ಯತಾ ಮೈತ್ರಿಕೂಟದ 2ನೇ ಆವೃತ್ತಿ ಅನಾವರಣ : ಸಚಿವ ಪ್ರಿಯಾಂಕ್ ಖರ್ಗೆ

ಬೆಂಗಳೂರು : ರಾಜ್ಯ ಸರಕಾರವು ಎ.17ರಂದು ಹೊಸದಿಲ್ಲಿಯಲ್ಲಿ ದೇಶದ ಅತಿದೊಡ್ಡ ರಾಜತಾಂತ್ರಿಕ ಸಂವಾದ ಸಮಾವೇಶವಾದ ‘ಬ್ರಿಡ್ಜ್ ಬೆಂಗಳೂರು-2026’ ಅನ್ನು ಆಯೋಜಿಸಿದ್ದು, ಸಮಾವೇಶದಲ್ಲಿ ಜಾಗತಿಕ ನಾವೀನ್ಯತಾ ಮೈತ್ರಿಕೂಟದ ಎರಡನೇ ಆವೃತ್ತಿಯನ್ನು(ಜಿಐಎ-2.0) ಅನಾವರಣ ಮಾಡಲಿದೆ ಎಂದು ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ. ಬುಧವಾರ ನಗರದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಸಮ್ಮೇಳನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅಲ್ಲದೇ ಕಿರಣ್ ಮಜುಂದಾರ್ ಷಾ ಭಾಗವಹಿಸಲಿದ್ದಾರೆ. ದಿಲ್ಲಿಯ ಈ ಸಮಾವೇಶವು ನ.17ರಿಂದ 19ರ ವರೆಗೆ ಬೆಂಗಳೂರಿನಲ್ಲಿ ನಡೆಯಲಿರುವ ಬೆಂಗಳೂರು ಟೆಕ್ ಸಮ್ಮೀಟ್‍ಗೆ ಪೂರ್ವಭವಿಯಾಗಿ ನಡೆಯುತ್ತಿದೆ ಎಂದು ತಿಳಿಸಿದರು. ರಾಜ್ಯ ಸರಕಾರವು ಕೈಗೊಳ್ಳುತ್ತಿರುವ ಹಲವು ಕಾರ್ಯಕ್ರಮಗಳ ಫಲವಾಗಿ ರಾಜ್ಯಕ್ಕೆ ಸುಮಾರು 5,500 ಕೋಟಿ ರೂ. ಮೊತ್ತದ ಜಾಗತಿಕ ಬಂಡವಾಳವು ಬರಲಿದ್ದು, ಸುಮಾರು 7,200 ಉದ್ಯೋಗಗಳು ಸೃಷ್ಟಿಯಾಗಲಿವೆ. 6,350 ಕೋಟಿ ರೂ. ಬಂಡವಾಳವು ಡಾಟಾ ಕೇಂದ್ರಗಳ ಸ್ಥಾಪನೆಗೆ ಹೂಡಿಕೆಯಾಗಲಿವೆ ಎಂದು ಅವರು ಮಾಹಿತಿ ನೀಡಿದರು. ರಾಜ್ಯ ಸರಕಾರವು ಜಾಗತಿಕ ನಾವೀನ್ಯತಾ ಮೈತ್ರಿಕೂಟದಲ್ಲಿ 40ಕ್ಕೂ ಹೆಚ್ಚು ದೇಶಗಳು, 2 ಸಾವಿರಕ್ಕಿಂತ ಅಧಿಕ ನವೋದ್ಯಮಗಳ ಬೆಂಬಲ ಹಾಗೂ 60ಕ್ಕೂ ಅಧಿಕ ಜಾಗತಿಕ ಮಟ್ಟದ ಒಡಂಬಡಿಕೆಗಳು(ಎಂಒಯು) ಹಾಗೂ ಬೇರೆ ಬೇರೆ ಕಂಪನಿಗಳ ಜತೆಗಿನ ಸಹಕಾರದೊಂದಿಗೆ ತನ್ನದೇ ಛಾಪನ್ನು ಮೂಡಿಸುತ್ತಿದೆ ಎಂದು ಅವರು ತಿಳಿಸಿದರು. ಪ್ರಮುಖವಾಗಿ ಯುಎಇ, ಸಿಂಗಾಪುರ್, ಬೆಲ್ಜಿಯಂ, ಆಸ್ಟ್ರೇಲಿಯಾ, ಜರ್ಮನಿ, ಜಪಾನ್, ಸ್ವಿಟ್ಜಲೆರ್ಂಡ್, ದಕ್ಷಿಣ ಕೊರಿಯಾ ಮತ್ತು ಫ್ರಾನ್ಸ್‍ನಂತಹ ದೇಶಗಳು ಸಮಾವೇಶದಲ್ಲಿ ಭಾಗವಹಿಸುತ್ತಿವೆ. ಹೆಲ್ತ್‌ ಟೆಕ್, ಕ್ಲೀನ್ ಟೆಕ್, ಬಯೋಟೆಕ್ ಮತ್ತು ಟ್ರಾವೆಲ್ಟೆಕ್ ಕ್ಷೇತ್ರಗಳಲ್ಲಿ ಜಾಗತಿಕ ಹೂಡಿಕೆದಾರರು, ಕಾರ್ಪೊ ರೇಟ್ ಸಂಸ್ಥೆಗಳು ಮತ್ತು ನಿಯಂತ್ರಣಾ ಸಂಸ್ಥೆಗಳ ಜತೆ ಸಂಪರ್ಕ ಸಾಧಿಸಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಬಲ ಸಂಪರ್ಕ ಸೇತುವೆಯನ್ನು ಕಲ್ಪಿಸಲು ನೆರವಾಗಲಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಮಾಹಿತಿ ನೀಡಿದರು.  

ವಾರ್ತಾ ಭಾರತಿ 16 Apr 2026 12:20 am

ಎಸ್‌ಐಆರ್ ವಿರೋಧಿಸಿ ರಾಜ್ಯದ ವಿವಿಧೆಡೆ ಪ್ರತಿಭಟನೆ

ಬೆಂಗಳೂರು : ಅಕ್ರಮವಾಗಿ ಕೋಟ್ಯಂತರ ಭಾರತೀಯರ ಮತದಾನದ ಹಕ್ಕನ್ನು ನಾಶ ಮಾಡಿರುವ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ(ಎಸ್‌ಐಆರ್) ಪ್ರಕ್ರಿಯೆಯನ್ನು ವಿರೋಧಿಸಿ ‘ನನ್ನ ಮತ ನನ್ನ ಹಕ್ಕು’ ಒಕ್ಕೂಟ ಸೇರಿದಂತೆ ವಿವಿಧ ಸಂಘಟನೆಗಳ ವತಿಯಿಂದ ಬೆಂಗಳೂರು, ಕಲಬುರಗಿ, ದಕ್ಷಿಣ ಕನ್ನಡ, ಮೈಸೂರು ಸೇರಿದಂತೆ ರಾಜ್ಯದ ವಿವಿಧೆಡೆಗಳಲ್ಲಿ ಪ್ರತಿಭಟನೆ ನಡೆಸಲಾಯಿತು. ಬುಧವಾರ ಬೆಂಗಳೂರಿನ ವಿಧಾನಸೌಧ ಮುಂಭಾಗ, ವಿನೋಭಾ ನಗರ, ಆನಂದಪುರಂ, ಜನತಾ ಕಾಲನಿ ಹಾಗೂ ಮೈಸೂರು, ಕೊಡಗು, ಸಿಂಧನೂರು, ವಿಜಯನಗರ, ಕೊಪ್ಪಳ, ತುಮಕೂರು, ದಕ್ಷಿಣ ಕನ್ನಡ ಜಿಲ್ಲೆ ಸೇರಿದಂತೆ ವಿವಿಧೆಡೆ ಪ್ರತಿಭಟನೆಗಳನ್ನು ನಡೆಸಿ, ಎಸ್‌ಐಆರ್ ಪ್ರಕ್ರಿಯೆಯನ್ನು ಕೂಡಲೇ ನಿಲ್ಲಿಸಬೇಕು ಎಂದು ಆಗ್ರಹಿಸಿದ್ದಾರೆ. ಎಸ್‌ಐಆರ್ ಪ್ರಕ್ರಿಯೆಯಿಂದಾಗಿ ಮತದಾರರ ಪಟ್ಟಿಯಿಂದ ದೊಡ್ಡ ಪ್ರಮಾಣದಲ್ಲಿ ಹೆಸರುಗಳನ್ನು ಅಳಿಸಲಾಗಿದ್ದು, ಪ್ರಜಾಪ್ರಭುತ್ವದ ಭಾಗವಹಿಸುವಿಕೆಯ ಅಡಿಪಾಯವನ್ನೇ ಹಾನಿಗೊಳಿಸಿದೆ. ಪಶ್ಚಿಮ ಬಂಗಾಳದಲ್ಲೇ, 2002ರ ಮತದಾರರ ಪಟ್ಟಿಗೆ ಮ್ಯಾಪಿಂಗ್ ಆಗಿದ್ದು, ಸಂಬಂಧಿಸಿದಂತೆ ದಾಖಲೆಗಳನ್ನು ಹೊಂದಿದ್ದ ಲಾಜಿಕಲ್ ಡಿಸ್ಕರೆಪೆನ್ಸಿ ಎಂಬ ಅಕ್ರಮ ಪ್ರಕ್ರಿಯೆ ಮೂಲಕ 27ಲಕ್ಷಕ್ಕೂ ಹೆಚ್ಚು ಮತದಾರರನ್ನು ಪ್ರಸ್ತುತ ಪಟ್ಟಿಯಿಂದ ತೆಗೆದುಹಾಕಲಾಗಿದೆ ಎಂದು ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಜ್ಯ ಸರಕಾರ ಎಸ್‌ಐಆರ್ ವಿರುದ್ಧ ದೃಢ ನಿಲುವು ತೆಗೆದುಕೊಳ್ಳಬೇಕು. ಮತಹಕ್ಕನ್ನು ಕಾಪಾಡಲು ಮತ್ತು ಎಸ್‌ಐಆರ್‌ಅನ್ನು ವಿರೋಧಿಸಲು ರಾಜ್ಯದ ಜನತೆ ಮುಂದಾಗಬೇಕು. ಅಳಿಸಲ್ಪಟ್ಟವರಿಗೆ ಮತಹಕ್ಕು ಮರುಸ್ಥಾಪನೆ ಆಗುವಂತೆ ಸುಪ್ರೀಂ ಕೋರ್ಟ್ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಹೋರಾಟಗಾರರು ಆಗ್ರಹಿಸಿದ್ದಾರೆ.  

ವಾರ್ತಾ ಭಾರತಿ 16 Apr 2026 12:17 am

ಕಾಂಗ್ರೆಸ್‌ನಿಂದ ಅಲ್ಪಸಂಖ್ಯಾತರ ಭಾವನೆಗಳ ಮೇಲೆ ಹಲ್ಲೆ: ಎದ್ದೇಳು ಕರ್ನಾಟಕ ಆಕ್ರೋಶ

ಬೆಂಗಳೂರು : ದಾವಣಗೆರೆ ಉಪಚುನಾವಣೆಗೆ ಸಂಬಂಧಿಸಿದಂತೆ ಕಾಂಗ್ರೆಸ್‌ನ ನೈತಿಕ ಸೋಲಿನ ಹೊಣೆ ಹೊರಬೇಕಾಗಿರುವುದು ನಿಸ್ಸಂಶಯವಾಗಿ ಕಾಂಗ್ರೆಸ್‌ನ ಹೈಕಮಾಂಡ್, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್. ಈ ಸ್ಥಿತಿಗೆ ಕಾರಣವಾಗಿರುವ ಇವರು ಆತ್ಮಾವಲೋಕನ ಮಾಡಿಕೊಳ್ಳುವ ಬದಲು, ನೊಂದಿದ್ದ ಅಲ್ಪಸಂಖ್ಯಾತ ಸಮುದಾಯದ ಭಾವನೆಗಳ ಮೇಲೆ ಹಲ್ಲೆ ಮಾಡಲು ಮುಂದಾಗಿರುವುದು ಅಕ್ಷಮ್ಯ ಅಪರಾಧ ಎಂದು ಎದ್ದೇಳು ಕರ್ನಾಟಕ ಆಕ್ರೋಶ ವ್ಯಕ್ತಪಡಿಸಿದೆ. ಬುಧವಾರ ಎದ್ದೇಳು ಕರ್ನಾಟಕ ಸಂಘಟನೆ ಹೆಸರಲ್ಲಿ ತಾರಾರಾವ್, ಜೆ.ಎಂ.ವೀರಸಂಗಯ್ಯ, ಕೆ.ಎಲ್.ಅಶೋಕ್, ಎನ್.ವೆಂಕಟೇಶ್, ಬಸವರಾಜ್ ಕೌತಾಳ್, ಅರುಣ್ ಲೂಯಿಸ್, ವಿ.ಎಸ್.ಶ್ರೀಧರ, ಮುಹಮ್ಮದ್ ಕುಂಞ, ಕಿರಣ್ ಕಮಲ್ ಪ್ರಸಾದ್, ಅನುಪಮಾ ಹೆಗಡೆ ಜಂಟಿ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದು, ಉಪಚುನಾವಣೆಗೆ ಟಿಕೆಟ್ ನೀಡುವ ವಿಚಾರದಲ್ಲಿ ಕಾಂಗ್ರೆಸ್ ನಡೆದುಕೊಂಡ ರೀತಿ ಜಿಗುಪ್ಸೆ ಮೂಡಿಸಿದರೆ, ಅದು ಈಗ ತನ್ನದೇ ಪಕ್ಷದ ಅಲ್ಪಸಂಖ್ಯಾತ ಮುಖಂಡರ ಮೇಲೆ ತೆಗೆದುಕೊಳ್ಳುತ್ತಿರುವ ಸೇಡಿನ ಕ್ರಮಗಳು ಆಕ್ರೋಶ ಹುಟ್ಟಿಸುತ್ತಿವೆ ಎಂದಿದ್ದಾರೆ. ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಮುಸ್ಲಿಮ್ ಸಮುದಾಯ ಹೆಚ್ಚಿನ ಜನಸಂಖ್ಯಾ ಬಾಹುಳ್ಯವಿದ್ದರೂ, ಶಾಮನೂರು ಶಿವಶಂಕರಪ್ಪ 30 ವರ್ಷಗಳಿಂದ ಕಾಂಗ್ರೆಸ್ ಶಾಸಕರಾಗಿ ಆಯ್ಕೆಯಾಗಿ ಬಂದಿದ್ದಾರೆ. ಅವರ ನಿಧನದ ನಂತರ ಈ ಕ್ಷೇತ್ರವನ್ನು ಮುಸ್ಲಿಮ್ ಸಮುದಾಯಕ್ಕೆ ನೀಡಲಾಗುತ್ತದೆ ಎಂಬ ಭರವಸೆಯನ್ನು ಕಾಂಗ್ರೆಸ್ ನಾಯಕತ್ವ ನೀಡಿತ್ತು. ಆದರೆ ಕುಟುಂಬ, ಜಾತಿ, ಹಣದ ಬಲದ ಮುಂದೆ ಕಾಂಗ್ರೆಸ್‌ನ ಹೈಕಮಾಂಡ್, ರಾಜ್ಯ ನಾಯಕತ್ವ ಮಂಡಿಯೂರಿದ ಬಗೆ ಎಲ್ಲರಿಗೂ ಜಿಗುಪ್ಸೆ ಮೂಡಿಸಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ. ದಾವಣಗೆರೆ ವಿದ್ಯಮಾನ ಬರಲಿರುವ 2028ರ ಚುನಾವಣೆಗೆ ಮುನ್ನೆಚ್ಚರಿಕೆ ಗಂಟೆಯಾಗಿದೆ. ಅಲ್ಪಸಂಖ್ಯಾತರನ್ನು, ದಲಿತರನ್ನು, ಜಾತ್ಯಾತೀತ ಜನತೆಯನ್ನು, ಪ್ರಗತಿಪರ ಶಕ್ತಿಯನ್ನು ಟೇಕನ್ ಫಾರ್ ಗ್ರಾಂಟೆಡ್ ಮಾಡಿಕೊಳ್ಳಬೇಡಿ. ಕಾಂಗ್ರೆಸ್ ನಾಯಕತ್ವ ಈಗಲಾದರೂ ತನ್ನ ತಪ್ಪನ್ನು ನೋಡಿಕೊಂಡು ಆಗಿರುವ ಅನಾಹುತವನ್ನು ಸರಿಪಡಿಸುವ ದಿಕ್ಕಿನಲ್ಲಿ ಹೆಜ್ಜೆ ಇಡಬೇಕು ಎಂದು ಪದಾಧಿಕಾರಿಗಳು ಒತ್ತಾಯಿಸಿದ್ದಾರೆ.

ವಾರ್ತಾ ಭಾರತಿ 16 Apr 2026 12:13 am

ನಮ್ಮದು ಕುಟುಂಬ ರಾಜಕಾರಣ ಅಲ್ಲ : ಯತೀಂದ್ರ ಸಿದ್ದರಾಮಯ್ಯ

ಮೈಸೂರು : ನಾನು ವಿಧಾನಪರಿಷತ್ ಸದಸ್ಯನಾಗಿರುವುದು ಕುಟುಂಬ ರಾಜಕಾರಣದಿಂದಲ್ಲ. ತಂದೆಯ ರಾಜಕೀಯ ಜೀವನದ ಮುಂದುವರಿದ ಭಾಗವಾಗಿ ಎಂದು ವಿಧಾನ ಪರಿಷತ್ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ. ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಟುಂಬ ರಾಜಕಾರಣ ಆರೋಪ ಮಾಡಿದ್ದ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹೇಳಿಕೆಗೆ ತಿರುಗೇಟು ನೀಡಿದರು. ನಾನು ಎಂಎಲ್ ಸಿ ಆಗಿರುವುದು ಕುಟುಂಬ ರಾಜಕಾರಣಕ್ಕಾಗಿ ಅಲ್ಲ. ತಂದೆಯ ರಾಜಕೀಯ ಜೀವನ ಮುಂದುವರಿಕೆ ಭಾಗವಾಗಿ. ನಮ್ಮ ಕ್ಷೇತ್ರದ ಜನರ ರಕ್ಷಣೆಗೆ ಎಂಎಲ್‌ಸಿ ಆಗಿದ್ದೇನೆ. ನಮ್ಮದು ಕುಟುಂಬ ರಾಜಕಾರಣ ಅಲ್ಲ. ನಮ್ಮ ತಂದೆ ಏನು ನನ್ನನ್ನು ಪಕ್ಷದ ಅಧ್ಯಕ್ಷ ಮಾಡಿದ್ದಾರಾ? ಮಕ್ಕಳನ್ನೇ ಪಕ್ಷದ ಅಧ್ಯಕ್ಷ ಮಾಡುವುದು, ಮಕ್ಕಳನ್ನೇ ಶಾಸಕ, ಸಂಸದ ಮಾಡುವುದು ಕುಟುಂಬ ರಾಜಕಾರಣ. ಆದರೆ ನಮ್ಮದು ಕುಟುಂಬ ರಾಜಕಾರಣ ಅಲ್ಲ. ನಮ್ಮ ಅಣ್ಣ ಇರದ ಕಾರಣ ನಾನು ರಾಜಕೀಯಕ್ಕೆ ಬಂದೆ ಎಂದರು.  

ವಾರ್ತಾ ಭಾರತಿ 16 Apr 2026 12:08 am

Belagavi | ಮರ್ಯಾದೆಗೇಡು ಹತ್ಯೆ ಪ್ರಕರಣ; ಮೂವರು ಆರೋಪಿಗಳ ಬಂಧನ

ಬೆಳಗಾವಿ : ಜಿಲ್ಲೆಯ ಯಮಕನಮರಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಮರ್ಯಾದೆಗೇಡು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಚುರುಕಿನ ಕಾರ್ಯಾಚರಣೆ ನಡೆಸಿದ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕ ಕೆ. ರಾಮರಾಜನ್ ತಿಳಿಸಿದ್ದಾರೆ. ಮೃತಳ ಚಿಕ್ಕಪ್ಪ ಪ್ರಕಾಶ ಭೀಮಪ್ಪ ಹಳವರ (46), ಸಹೋದರ ಶಾನೂರ ಸದಾಶಿವ ಹಳವರ (35) ಹಾಗೂ ಭಾವ ಕಲ್ಲಪ್ಪ ಮಾಯಪ್ಪ ಹಳವಿ (40) ಅವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಎಸ್‌ಪಿ ತಿಳಿಸಿದರು. ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಪ್ರಕರಣದ ತನಿಖೆ ನಡೆಸಿದ ಯಮಕನಮರಡಿ ಪೊಲೀಸ್ ಇನ್‌ಸ್ಪೆೆಕ್ಟರ್ ಜಾವೀದ್‌ ಎಫ್. ಮುಷಾಪುರಿ ಅವರ ನೇತೃತ್ವದ ತಂಡ ಮೂವರು ಆರೋಪಿಗಳನ್ನು ಬಂಧಿಸಿದೆ. ರಾಯಬಾಗ ತಾಲೂಕಿನ ಹಣಬರಟ್ಟಿ ಗ್ರಾಮದ ಸತ್ಯವ್ವ ಸಂತೋಷ ಹಳವಿ (24) ಅವರನ್ನು ಕುಟುಂಬದವರೇ ವಿಷವಿಕ್ಕಿ ಕೊಲೆ ಮಾಡಿ, ಬಳಿಕ ಮೃತದೇಹವನ್ನು ಸುಟ್ಟು ಹಾಕಿ ಸಾಕ್ಷ್ಯ ನಾಶಪಡಿಸಲು ಯತ್ನಿಸಿರುವ ಘಟನೆ ಬೆಳಕಿಗೆ ಬಂದಿತ್ತು ಎಂದು ವಿವರಿಸಿದರು. ಈ ಕುರಿತು ಕೃಷ್ಣಾ ಸಹದೇವ ಪಾಟೀಲ ನೀಡಿದ ದೂರಿನ ಮೇರೆಗೆ ಯಮಕನಮರಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಮೃತರಾದ ಸತ್ಯವ್ವ ಹಾಗೂ ಕೃಷ್ಣಾ ಸಹದೇವ ಪಾಟೀಲ ಇಬ್ಬರೂ ಹುಕ್ಕೇರಿ ತಾಲೂಕಿನ ನದಿಗುಡಿ ಕ್ಷೇತ್ರದವರಾಗಿದ್ದು, ಪರಸ್ಪರ ಪ್ರೀತಿಸುತ್ತಿದ್ದರು. ಸತ್ಯವ್ವಗೆ ಸಂತೋಷ ಹಳವಿ ಎಂಬಾತನೊಂದಿಗೆ ಮದುವೆಯಾದರೂ, ಅವರ ಪ್ರೀತಿ ಮುಂದುವರಿದಿತ್ತು. ಈ ಹಿನ್ನೆಲೆಯಲ್ಲಿ ಫೆಬ್ರವರಿ 17ರಂದು ಆಕೆ ಪ್ರಿಯಕರನೊಂದಿಗೆ ಬೆಳವಡಿ ಗ್ರಾಮದಲ್ಲಿ ಪ್ರತ್ಯೇಕವಾಗಿ ವಾಸಿಸುತ್ತಿದ್ದಳು ಎಂದು ತಿಳಿದುಬಂದಿದೆ. ಈ ವಿಷಯ ತಿಳಿದುಕೊಂಡ ಕುಟುಂಬಸ್ಥರು ಆಕೆಯನ್ನು ಪತ್ತೆಹಚ್ಚಿ ಕರೆತಂದು ಬುದ್ಧಿವಾದ ಹೇಳಿದರೂ, ಆಕೆ ಅವರ ಮಾತು ಕೇಳದೆ ಪ್ರಿಯಕರನ ಬಳಿಗೆ ಹೋಗುವುದಾಗಿ ಹಠ ಹಿಡಿದಿದ್ದಾಳೆ. ಮಾರ್ಚ್ 21ರಂದು ಸಾಂಗ್ಲಿ ಜಿಲ್ಲೆಯ ಅರಗ ಗ್ರಾಮದಲ್ಲಿ ಈ ವಿಚಾರವಾಗಿ ವಾಗ್ವಾದ ನಡೆದಿದ್ದು, ಆಕ್ರೋಶಗೊಂಡ ಕುಟುಂಬಸ್ಥರು ಬಲವಂತವಾಗಿ ವಿಷ ಕುಡಿಸಿ ಹತ್ಯೆಗೈದಿದ್ದಾರೆ. ನಂತರ ಅದೇ ರಾತ್ರಿ ಅರಗ ಗ್ರಾಮದ ಸ್ಮಶಾನದಲ್ಲಿ ಮೃತದೇಹವನ್ನು ಸುಟ್ಟು ಸಾಕ್ಷ್ಯ ನಾಶಪಡಿಸಲು ಯತ್ನಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ವಾರ್ತಾ ಭಾರತಿ 16 Apr 2026 12:03 am

RCB: ಟೀಕಾಕಾರರ ಬಾಯಿ ಮುಚ್ಚಿಸಿದ ವಿರಾಟ್‌ ಕೊಹ್ಲಿ, ಆರ್‌ಸಿಬಿ ಗೆಲ್ಲಿಸಿದ ರಸಿಖ್ ದಾರ್ ಸಲಾಂ

RCB IPL 2026: ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬುಧವಾರ (ಏಪ್ರಿಲ್ 15) ನಡೆದ ಐಪಿಎಲ್‌ ಪಂದ್ಯದಲ್ಲಿ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡವು ಎಲ್‌ಎಸ್‌ಜಿ ವಿರುದ್ಧ 5 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ. ರಸಿಖ್ ದಾರ್ ಸಲಾಂ ಮಾಡಿದ ಮಾರಕ ಬೌಲಿಂಗ್ ದಾಳಿಯು ಆರ್‌ಸಿಬಿ ಗೆಲುವಿಗೆ ಪ್ರಮುಖ ಪಾತ್ರವಹಿಸಿತು. ವೇಗಿ ರಸಿಖ್ ಸಲಾಮ್ ದಾರ್ ಅವರು

ಒನ್ ಇ೦ಡಿಯ 15 Apr 2026 11:52 pm

ಸ್ಥಿರಾಸ್ತಿ ಸಂಬಂಧ ನ್ಯಾಯಾಲಯಗಳ ಡಿಕ್ರಿ ಪರಿಣಾಮಕಾರಿ ಜಾರಿಗೆ ಮಾರ್ಗಸೂಚಿ ಹೊರಡಿಸಿದ High Court

ಬೆಂಗಳೂರು: ಸ್ಥಿರಾಸ್ತಿಗಳ ನೋಂದಾಯಿತ ದಾಖಲೆಗಳನ್ನು ರದ್ದುಗೊಳಿಸುವ ಕುರಿತ ವಿಚಾರಣಾ ನ್ಯಾಯಾಲಯಗಳ ತೀರ್ಪುಗಳ (ಡಿಕ್ರಿ) ಪರಿಣಾಮಕಾರಿ ಅನುಷ್ಠಾನಕ್ಕಾಗಿ ಸಿವಿಲ್ ನ್ಯಾಯಾಲಯಗಳು ಮತ್ತು ಉಪ-ನೋಂದಣಾಧಿಕಾರಿಗಳಿಗೆ (ಸಬ್-ರಿಜಿಸ್ಟ್ರಾರ್‌) ಹೈಕೋರ್ಟ್ ಹಲವು ಮಾರ್ಗಸೂಚಿಗಳನ್ನು ಹೊರಡಿಸಿದೆ. ನ್ಯಾಯಾಲಯದ ತೀರ್ಪನ್ನು ಜಾರಿಗೆ ತರಲು ನಿರಾಕರಿಸಿದ್ದ ಬೆಂಗಳೂರಿನ ಮಹದೇವಪುರದ ಸಬ್ ರಿಜಿಸ್ಟ್ರಾರ್ ಕ್ರಮವನ್ನು ಪ್ರಶ್ನಿಸಿ ನಗರದ ಕೆ. ಆ್ಯಂಟನಿಸಾಮಿ ಸಲ್ಲಿಸಿದ ಅರ್ಜಿ ಪುರಸ್ಕರಿಸಿರುವ ನ್ಯಾಯಮೂರ್ತಿ ಸಚಿನ್ ಶಂಕರ್ ಮಗದುಂ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಆದೇಶ ಮಾಡಿದೆ. ಜತೆಗೆ, ಇತ್ತೀಚಿನ ದಿನಗಳಲ್ಲಿ ಡಿಕ್ರಿಗಳನ್ನು ಮಾನ್ಯ ಮಾಡದ ಹಲವು ಪ್ರಕರಣಗಳು ನ್ಯಾಯಾಲಯದ ಮುಂದೆ ಬರುತ್ತಿವೆ. ಇದಕ್ಕೆ ಸಬ್‌ ರಿಜಿಸ್ಟ್ರಾರ್‌‌ಗಳೇ ಕಾರಣ. ಈ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್ ತೀರ್ಪು, ಸಿವಿಲ್ ನ್ಯಾಯಾಲಯದ ಡಿಕ್ರಿ ಇದ್ದರೂ ಅದನ್ನು ಆಧರಿಸಿ ಕ್ರಮ ಕೈಗೊಂಡಿಲ್ಲ ಎಂದು ಸಬ್ ರಿಜಿಸ್ಟ್ರಾರ್ ಅವರನ್ನು ನ್ಯಾಯಾಲಯ ತರಾಟೆಗೆ ತೆಗೆದುಕೊಂಡಿದೆ. ಇದೇ ವೇಳೆ, ಭವಿಷ್ಯದಲ್ಲಿ ಇಂತಹ ಸಂದರ್ಭಗಳು ಮರುಕಳಿಸುವುದನ್ನು ತಡೆಯಲು ಸಿವಿಲ್ ನ್ಯಾಯಾಲಯಗಳು ಹಾಗೂ ಸಬ್‌ ರಿಜಿಸ್ಟ್ರಾರ್‌ಗಳಿಗೆ ಹೈಕೋರ್ಟ್ ಮಾರ್ಗಸೂಚಿಗಳನ್ನು ಹೊರಡಿಸಿದೆ. ಕೋರ್ಟ್‌ಗಳಿಗೆ ಮಾರ್ಗಸೂಚಿ: ಸ್ಥಿರಾಸ್ತಿಗಳಿಗೆ ಸಂಬಂಧಿಸಿದಂತೆ ನೋಂದಾಯಿತ ದಾಖಲೆಯನ್ನು ಅಮಾನ್ಯವೆಂದು ಘೋಷಿಸಿದ, ರದ್ದುಗೊಳಿಸಿದ ಅಥವಾ ಮುಕ್ತಾಯಗೊಳಿಸಿದ ಮೊಕದ್ದಮೆಗಳಲ್ಲಿ ರಾಜ್ಯದ ಎಲ್ಲ ಸಿವಿಲ್ ನ್ಯಾಯಾಲಯಗಳು ಮತ್ತು ವಾಣಿಜ್ಯ ಕೋರ್ಟ್‌ಗಳು ತೀರ್ಪಿನ ಪ್ರತಿಯನ್ನು ದಾಖಲೆಯನ್ನು ನೋಂದಾಯಿಸಿದ ಅಧಿಕಾರ ವ್ಯಾಪ್ತಿಯ ಸಬ್-ರಿಜಿಸ್ಟ್ರಾರ್‌ಗೆ ರವಾನಿಸಲು ಕಚೇರಿಗೆ ನಿರ್ದೇಶಿಸಬೇಕು. ಸಾಮಾನ್ಯವಾಗಿ ತೀರ್ಪು ಹೊರಬಿದ್ದ ದಿನಾಂಕದಿಂದ 4 ವಾರಗಳಲ್ಲಿ ಸಂವನಹವನ್ನು ಕಳುಹಿಸಬೇಕು ಹಾಗೂ ಸಂವಹನವು ದಾಖಲೆ ಸಂಖ್ಯೆ, ನೋಂದಣಿ ದಿನಾಂಕ, ದಾಖಲೆ ಮತ್ತು ರದ್ದಾದ ದಾಖಲೆಯ ಸ್ವರೂಪವನ್ನು ಸ್ಪಷ್ಟವಾಗಿ ನಮೂದಿಸಬೇಕು ಎಂದು ಹೈಕೋರ್ಟ್ ಆದೇಶದಲ್ಲಿ ಹೇಳಿದೆ. ಸಬ್ ರಿಜಿಸ್ಟ್ರಾರ್‌ಗಳಿಗೆ ಮಾರ್ಗಸೂಚಿಗಳು: * ಸಿವಿಲ್ ನ್ಯಾಯಾಲಯವು ನೋಂದಾಯಿತ ದಾಖಲೆಯನ್ನು ರದ್ದುಗೊಳಿಸುವ ತೀರ್ಪನ್ನು ಹೊರಡಿಸಿದಾಗಲೆಲ್ಲ, ಉಪ-ನೋಂದಣಿದಾಧಿಕಾರಿಗಳು ಅಂತಹ ಸಂವಹನವನ್ನು ಸ್ವೀಕರಿಸಿದ ನಾಲ್ಕು ವಾರಗಳಲ್ಲಿ ಸಂಬಂಧಿತ ರಿಜಿಸ್ಟರ್ ಮತ್ತು ದಾಖಲೆಗಳಲ್ಲಿ ಅಗತ್ಯವಿರುವ ನಮೂದುಗಳನ್ನು ಮಾಡಬೇಕು. * ನ್ಯಾಯಾಲಯದಿಂದ ಯಾವುದೇ ಔಪಚಾರಿಕ ಸಂವಹನವನ್ನು ಸ್ವೀಕರಿಸದ ಸಂದರ್ಭಗಳಲ್ಲಿಯೂ ಸಹ, ಒಬ್ಬ ಪಕ್ಷಗಾರರು (ಪಾರ್ಟಿ) ತೀರ್ಪಿನ ಪ್ರಮಾಣೀಕೃತ ಪ್ರತಿಯನ್ನು ಮತ್ತು ನೋಂದಾಯಿತ ದಾಖಲೆಯನ್ನು ರದ್ದುಗೊಳಿಸಲಾಗಿದೆ ಅಥವಾ ಅನೂರ್ಜಿತವಾಗಿದೆ ಎಂದು ಘೋಷಿಸುವ ತೀರ್ಪನ್ನು ನೀಡಿದರೆ, ಉಪ-ನೋಂದಣಿದಾಧಿಕಾರಿಗಳು ತೀರ್ಪಿನ ಮೇಲೆ ಕಾರ್ಯನಿರ್ವಹಿಸಲು ನಿರಾಕರಿಸಬಾರದು. ಅಂತಹ ಸಂದರ್ಭಗಳಲ್ಲಿ, ಸಬ್-ರಿಜಿಸ್ಟ್ರಾರ್‌ಗಳು ಪ್ರಮಾಣೀಕೃತ ಪ್ರತಿಯ ದೃಢೀಕರಣವನ್ನು ಪರಿಶೀಲಿಸಬೇಕು ಮತ್ತು ನಿಯಮಗಳ ಪ್ರಕಾರ ಸಂಬಂಧಿತ ರಿಜಿಸ್ಟರ್‌ಗಳು ಮತ್ತು ಕಡತಗಳಲ್ಲಿ ರದ್ದತಿಯನ್ನು ದಾಖಲಿಸಬೇಕು. * ಸಕ್ಷಮ ಸಿವಿಲ್ ನ್ಯಾಯಾಲಯ ದಾಖಲೆಯನ್ನು ಅನೂರ್ಜಿತ ಅಥವಾ ರದ್ದುಗೊಳಿಸಲಾಗಿದೆ ಎಂದು ಘೋಷಿಸಿದ ನಂತರ ನೋಂದಣಿ ಪ್ರಾಧಿಕಾರವು ಹೈಕೋರ್ಟ್ ಅಥವಾ ಯಾವುದೇ ಇತರ ಪ್ರಾಧಿಕಾರದ ಪ್ರತ್ಯೇಕ ಆದೇಶಗಳನ್ನು ನೀಡುವಂತೆ ಒತ್ತಾಯ ಮಾಡಬಾರದು. ಪ್ರಕರಣವೇನು? ​ಅರ್ಜಿದಾರರು ಬಿಲ್ಡರ್ ಒಬ್ಬರ ಜತೆ ಮಾಡಿಕೊಂಡಿದ್ದ ಜಂಟಿ ಅಭಿವೃದ್ಧಿ ಒಪ್ಪಂದ (ಜೆಡಿಎ) ಮತ್ತು ಜನರಲ್ ಪವರ್ ಆಫ್ ಅಟಾರ್ನಿ (ಜಿಪಿಎ) ಅನ್ನು ಸಿವಿಲ್ ನ್ಯಾಯಾಲಯ ರದ್ದುಗೊಳಿಸಿತ್ತು. ಈ ತೀರ್ಪಿನ ಪ್ರತಿಯನ್ನು ಮಹದೇವಪುರ ಸಬ್‌ರಿಜಿಸ್ಟ್ರಾರ್ ಕಚೇರಿಗೆ ಸಲ್ಲಿಸಿದಾಗ, ನ್ಯಾಯಾಲಯದಿಂದ ನೇರ ಸಂವಹನ ಬಂದಿಲ್ಲ ಮತ್ತು ಹೈಕೋರ್ಟ್ ನಿರ್ದೇಶನವಿಲ್ಲ ಎಂಬ ಕಾರಣ ನೀಡಿ ದಾಖಲೆಗಳಲ್ಲಿ ಬದಲಾವಣೆಗೆ ನಿರಾಕರಿಸಿದ್ದರು. ಇದನ್ನು ಪ್ರಶ್ನಿಸಿ ಅರ್ಜಿದಾರರು ಹೈಕೋರ್ಟ್‌ ಮೆಟ್ಟಿಲೇರಿದ್ದರು.

ವಾರ್ತಾ ಭಾರತಿ 15 Apr 2026 11:50 pm

ಫಿಡೆ ಕ್ಯಾಂಡಿಡೇಟ್ಸ್ ಮುಕ್ತ ವಿಭಾಗ: ಜಾವೊಖಿರ್ ಸಿಂದಾರೋವ್ ಚಾಂಪಿಯನ್

ಸೈಪ್ರಸ್, ಎ.15: ನೆದರ್ಲ್ಯಾಂಡ್ಸ್ ಆಟಗಾರ ಅನಿಶ್ ಗಿರಿ ವಿರುದ್ಧ 13ನೇ ಸುತ್ತಿನ ಪಂದ್ಯವನ್ನು ಡ್ರಾಗೊಳಿಸಿರುವ ಕಝಕ್ಸ್ತಾನದ ಯುವ ಚೆಸ್ ತಾರೆ ಜಾವೊಖಿರ್ ಸಿಂದಾರೋವ್ ಇನ್ನೊಂದು ಸುತ್ತು ಬಾಕಿ ಇರುವಾಗಲೇ ಫಿಡೆ ಕ್ಯಾಂಡಿಡೇಟ್ಸ್ನ ಮುಕ್ತ ವಿಭಾಗದಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. ಈ ವರ್ಷಾಂತ್ಯದಲ್ಲಿ ನಡೆಯಲಿರುವ ಫಿಡೆ ವಿಶ್ವ ಚಾಂಪಿಯನ್ಶಿಪ್ ಪಂದ್ಯದಲ್ಲಿ ಭಾರತದ ಚೆಸ್ ತಾರೆ ಡಿ.ಗುಕೇಶ್ರನ್ನು ಎದುರಿಸಲಿದ್ದಾರೆ. ಸಿಂದಾರೋವ್ ಅವರು ಬುಧವಾರ ನಡೆದ 14ನೇ ಸುತ್ತಿನ ಪಂದ್ಯದಲ್ಲಿ ವೀ ಯೀ ವಿರುದ್ದ ಡ್ರಾ ಸಾಧಿಸುವ ಮೂಲಕ ಪಂದ್ಯಾವಳಿಯಲ್ಲಿ ಅಜೇಯವಾಗುಳಿದರು. ಅರ್ಹವಾಗಿಯೇ ಪ್ರತಿಷ್ಠಿತ ಕ್ಯಾಂಡಿಡೇಟ್ಸ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡರು. ಮಂಗಳವಾರ ನಡೆದ 13ನೇ ಸುತ್ತಿನ ಪಂದ್ಯಕ್ಕಿಂತ ಮೊದಲು ಸಿಂದಾರೋವ್ ಎರಡು ಅಂಕದಿಂದ ಮುನ್ನಡೆಯಲ್ಲಿದ್ದರು. ಗಿರಿ ಅವರು ಸ್ಪರ್ಧೆಯನ್ನು ಅಂತಿಮ ದಿನಕ್ಕೆ ವಿಸ್ತರಿಸಲು ಈ ಪಂದ್ಯದಲ್ಲಿ ಗೆಲ್ಲುವ ಅಗತ್ಯವಿತ್ತು. ಆದರೆ, ಪಂದ್ಯವು ಡ್ರಾಗೊಂಡ ಕಾರಣ ಸಿಂದಾರೋವ್ ಪ್ರಶಸ್ತಿ ಗೆದ್ದುಕೊಂಡರು. ಮುಕ್ತ ವಿಭಾಗದ ಇತರ ಫಲಿತಾಂಶಗಳಲ್ಲಿ ಹಿಕಾರು ನಕಮುರಾ ಅವರು ಮಥಿಯಾಸ್ ಬ್ಲೂಬಾಮ್ ವಿರುದ್ಧ ಮತ್ತೊಂದು ಡ್ರಾ ಸಾಧಿಸಿದರು. ವೀ ಯೀ ಅವರು ಆಂಡ್ರೆ ಎಸಿಪೆಂಕೊರನ್ನು ಸೋಲಿಸಿದರು. ಆರ್. ಪ್ರಜ್ಞಾನಂದ ಅವರು ಫ್ಯಾಬಿಯಾನೊ ಕರುವಾನಾ ವಿರುದ್ಧ ಡ್ರಾ ಸಾಧಿಸಿದರು.

ವಾರ್ತಾ ಭಾರತಿ 15 Apr 2026 11:38 pm

2024ರ ನಂತರ ಮೊದಲ ಬಾರಿ ಸತತ ಎರಡು ಪಂದ್ಯ ಗೆದ್ದ ಸಿಎಸ್‌ಕೆ

ಹೊಸದಿಲ್ಲಿ, ಎ.15: ಚೆನ್ನೈ ಸೂಪರ್ ಕಿಂಗ್ಸ್(ಸಿಎಸ್‌ಕೆ)ಸುಮಾರು ಎರಡು ವರ್ಷಗಳ ನಂತರ ಮೊದಲ ಬಾರಿ ಸತತ ಎರಡು ಪಂದ್ಯಗಳಲ್ಲಿ ಜಯ ಗಳಿಸಿ ನಾಲ್ಕು ಅಂಕಗಳನ್ನು ಗಳಿಸುವ ಮೂಲಕ ಇತರ ನಾಲ್ಕು ತಂಡಗಳನ್ನು ಸೇರಿಕೊಂಡಿದೆ. ಟಾಸ್ ಸೋತು, ತೀವ್ರ ಇಬ್ಬನಿಯಲ್ಲಿ ಬೌಲಿಂಗ್ ಮಾಡಿದ ಹೊರತಾಗಿಯೂ ಸಿಎಸ್ಕೆ ತಂಡವು ಕೋಲ್ಕತಾ ನೈಟ್ ರೈಡರ್ಸ್ ತಂಡದ ಮೇಲೆ ಸವಾರಿ ಮಾಡಿತು. ಎಂ.ಎ. ಚಿದಂಬರಂ ಸ್ಟೇಡಿಯಂನಲ್ಲಿ 32 ರನ್‌ಗಳಿಂದ ಸೋತಿರುವ ಕೆಕೆಆರ್ ಈ ವರ್ಷದ ಐಪಿಎಲ್‌ನಲ್ಲಿ ತನ್ನ ಸೋಲಿನ ಸರಪಳಿ ಮುಂದುವರಿಸಿತು. ಸಂಜು ಸ್ಯಾಮ್ಸನ್, ಡೆವಾಲ್ಡ್ ಬ್ರೆವಿಸ್ ಹಾಗೂ ಆಯುಷ್ ಮ್ಹಾತ್ರೆ ಸಂಘಟಿತ ಪ್ರದರ್ಶನ ನೀಡಿ ಸಿಎಸ್ಕೆ ತಂಡವು 192 ರನ್ ಗಳಿಸುವಲ್ಲಿ ನೆರವಾದರು. ಆ ನಂತರ ಅನ್ಶುಲ್ ಕಾಂಬೋಜ್ ಹಾಗೂ ಖಲೀಲ್ ಅಹ್ಮದ್ ಪವರ್ಪ್ಲೇನೊಳಗೆ ಫಿನ್ ಅಲೆನ್ ಹಾಗೂ ಸುನೀಲ್ ನರೇನ್ರಂತಹ ಪ್ರಮುಖ ವಿಕೆಟ್‌ಗಳನ್ನು ಉರುಳಿಸಿದರು. ಸಿಎಸ್‌ಕೆ ಸ್ಪಿನ್ನರ್‌ಗಳು 8 ಓವರ್‌ಗಳ ಬೌಲಿಂಗ್ ಮಾಡಿ 47 ರನ್ ನೀಡಿ ನಾಲ್ಕು ವಿಕೆಟ್‌ಗಳನ್ನು ಪಡೆದರು.

ವಾರ್ತಾ ಭಾರತಿ 15 Apr 2026 11:35 pm

ವಿಶ್ವಸಂಸ್ಥೆಯ ಅಧಿಕಾರವನ್ನು ಪುನಃಸ್ಥಾಪಿಸಲು ರಶ್ಯ, ಚೀನಾ ಒಟ್ಟಾಗಿ ಕೆಲಸ ಮಾಡಬೇಕು: ಕ್ಸಿ ಜಿಂಪಿಂಗ್ ಪ್ರತಿಪಾದನೆ

ಬೀಜಿಂಗ್, ಎ.15: ವಿಶ್ವಸಂಸ್ಥೆಯ ಅಧಿಕಾರವನ್ನು ಪುನಃಸ್ಥಾಪಿಸಲು ರಷ್ಯ ಮತ್ತು ಚೀನಾ ಒಟ್ಟಾಗಿ ಕೆಲಸ ಮಾಡುವ ಅಗತ್ಯವಿದೆ ಎಂದು ಚೀನಾದ ಅಧ್ಯಕ್ಷ ಕ್ಸಿ ಜಿಂಪಿಂಗ್ ಬುಧವಾರ ಹೇಳಿದ್ದಾರೆ. ರಷ್ಯದ ವಿದೇಶಾಂಗ ಸಚಿವ ಸೆರ್ಗೆಯ್ ಲಾವ್ರೋವ್ ಅವರೊಂದಿಗೆ ಬೀಜಿಂಗ್‍ನಲ್ಲಿ ನಡೆಸಿದ ಮಾತುಕತೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕ್ಸಿ ಜಿಂಪಿಂಗ್ ` ನ್ಯಾಯಯುತ, ಸಮತೋಲಿತ ಅಂತರರಾಷ್ಟ್ರೀಯ ಕ್ರಮ ಮರುಸ್ಥಾಪಿಸಲು ರಶ್ಯ ಮತ್ತು ಚೀನಾ ವಿಶ್ವಸಂಸ್ಥೆಯೊಂದಿಗೆ ನಿಕಟವಾಗಿ ಕಾರ್ಯನಿರ್ವಹಿಸಲಿದೆ. ಮತ್ತು ಅಂತರರಾಷ್ಟ್ರೀಯ ಕ್ರಮವನ್ನು ಹೆಚ್ಚು ನ್ಯಾಯಯುತ ಮತ್ತು ಸಮಂಜಸವಾದ ದಿಕ್ಕಿನಲ್ಲಿ ಮುನ್ನಡೆಸಲು `ಬ್ರಿಕ್ಸ್' `ಎಸ್‍ಸಿಒ' ವೇದಿಕೆಗಳಲ್ಲಿ ನಿಕಟವಾಗಿ ಸಹಕರಿಸಲಿವೆ ಎಂದರು. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆಕ್ರಮಣಕಾರಿ ಏಕಪಕ್ಷೀಯ ಕ್ರಮಗಳ ವಿರುದ್ಧ ಎರಡೂ ದೇಶಗಳು ಪ್ರಯತ್ನಗಳನ್ನು ಹೆಚ್ಚಿಸಬೇಕು. ಜಗತ್ತು ಮತ್ತೆ `ಜಂಗಲ್‍ರಾಜ್' (ಕಾಡಿನ ಕಾನೂನು) ಅವಧಿಗೆ ಮರಳಬಾರದು. ಬಹುರಾಷ್ಟ್ರೀಯ ವ್ಯವಸ್ಥೆ ಮತ್ತು ಅಂತರಾಷ್ಟ್ರೀಯ ಕಾನೂನನ್ನು ಮರುಸ್ಥಾಪಿಸಲು ರಶ್ಯ, ಚೀನಾ ಮತ್ತು ಇತರ ಮಿತ್ರರಾಷ್ಟ್ರಗಳ ನಡುವೆ ನಿಕಟ ಸಹಕಾರದ ಅಗತ್ಯವಿದೆ ಎಂದು ಜಿಂಪಿಂಗ್ ಆಗ್ರಹಿಸಿದ್ದಾರೆ. ಬದಲಾವಣೆ ಮತ್ತು ಅವ್ಯವಸ್ಥೆಯಿಂದ ಕೂಡಿರುವ ಅಂತರರಾಷ್ಟ್ರೀಯ ಸನ್ನಿವೇಶದಲ್ಲಿ ಚೀನಾ-ರಶ್ಯ ಸಂಬಂಧಗಳ ಸ್ಥಿರತೆ ಮತ್ತು ನಿಶ್ಚಿತತೆಯು ಅತ್ಯಮೂಲ್ಯವಾಗಿವೆ. `ಉಭಯ ದೇಶಗಳ ನಡುವಿನ ಸ್ನೇಹ ಸಂಬಂಧದ ಬಲವಾದ ಚೈತನ್ಯ ಮತ್ತು ಅನುಕರಣೀಯ ಮಹತ್ವವು ಇಂತಹ ಸನ್ನಿವೇಶದಲ್ಲಿ ಮಹತ್ವ ಪಡೆಯುತ್ತದೆ. ಕಾರ್ಯತಂತ್ರದ ಸಂವಹನ ಮತ್ತು ನಿಕಟ ರಾಜತಾಂತ್ರಿಕ ಸಮನ್ವಯತೆಯನ್ನು ಬಲಪಡಿಸಲು ಎರಡೂ ದೇಶಗಳ ವಿದೇಶಾಂಗ ಸಚಿವರು ಪ್ರಯತ್ನಗಳನ್ನು ಮುಂದುವರಿಸಬೇಕು. ಉಭಯ ದೇಶಗಳ ನಡುವೆ ಸಮಗ್ರ ಕಾರ್ಯತಂತ್ರದ ಪಾಲುದಾರಿಕೆಯನ್ನು ಉತ್ತೇಜಿಸುವ ಕ್ರಮಗಳನ್ನು ಮುಂದುವರಿಸಬೇಕು ಎಂದು ಚೀನಾ ಅಧ್ಯಕ್ಷರು ಒತ್ತಾಯಿಸಿದ್ದಾರೆ.

ವಾರ್ತಾ ಭಾರತಿ 15 Apr 2026 11:32 pm

ಮೊಟ್ಟಮೊದಲ ಕ್ವಾಂಟಮ್ ಎಕೋ ಸಿಸ್ಟಮ್ ಮ್ಯಾಪ್ ಅನಾವರಣ

ಕ್ವಾಂಟಮ್ ಮಾರ್ಗಸೂಚಿಯ ಮೊದಲ ಹಂತಕ್ಕೆ ಚಾಲನೆ: ಸಚಿವ ಭೋಸರಾಜು

ವಾರ್ತಾ ಭಾರತಿ 15 Apr 2026 11:17 pm

CBSE 10ನೇ ತರಗತಿ ಫಲಿತಾಂಶ 2026: ದಕ್ಷಿಣ ಭಾರತದ ವಿದ್ಯಾರ್ಥಿಗಳದ್ದೇ ಮೇಲುಗೈ, ಶೇ. 98.91ರಷ್ಟು ಸಾಧನೆ ಮಾಡಿದ ಬೆಂಗಳೂರು

ನವದೆಹಲಿ: ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ(CBSE) 2026ನೇ ಸಾಲಿನ ಬಹುನಿರೀಕ್ಷಿತ 10ನೇ ತರಗತಿ ಪರೀಕ್ಷೆಯ ಫಲಿತಾಂಶವನ್ನು ಬುಧವಾರ ಸಂಜೆ 4 ಗಂಟೆಗೆ ಅಧಿಕೃತವಾಗಿ ಪ್ರಕಟಿಸಿದೆ. ಈ ಬಾರಿಯ ಫಲಿತಾಂಶದಲ್ಲಿ ದಕ್ಷಿಣ ಭಾರತದ ವಲಯಗಳು ಎಂದಿನಂತೆ ತಮ್ಮ ಪಾರುಪತ್ಯ ಮೆರೆದಿದ್ದು, ಅತಿ ಹೆಚ್ಚು ಉತ್ತೀರ್ಣ ಪ್ರಮಾಣ ದಾಖಲಿಸುವ ಮೂಲಕ ರಾಷ್ಟ್ರಮಟ್ಟದಲ್ಲಿ ಅತ್ಯುತ್ತಮ ಹಾಗೂ ಗಮನಾರ್ಹ ಸಾಧನೆ ಮಾಡಿವೆ. ಮಂಡಳಿಯು

ಒನ್ ಇ೦ಡಿಯ 15 Apr 2026 11:11 pm

ಪ್ರಸಕ್ತ ಸಾಲಿನ SSLC ಪರೀಕ್ಷೆಯಲ್ಲಿ ತೃತೀಯ ಭಾಷೆಗೆ ಗ್ರೇಡ್ ಬದಲಿಗೆ ಅಂಕ; ರಾಜ್ಯ ಸರಕಾರಕ್ಕೆ ಹೈಕೋರ್ಟ್ ‌ನಿರ್ದೇಶನ

ಬೆಂಗಳೂರು : ಪ್ರಸಕ್ತ ಸಾಲಿನ (2025-2026) ಎಸೆಸೆಲ್ಸಿ ಪರೀಕ್ಷೆಯಲ್ಲಿ ಹಿಂದಿ ಸೇರಿದಂತೆ ತೃತೀಯ ಭಾಷೆ ವಿಷಯಗಳಿಗೆ ಗ್ರೇಡ್‌ ಬದಲಿಗೆ ಅಂಕಗಳನ್ನು ನೀಡುವಂತೆ ರಾಜ್ಯ ಸರಕಾರಕ್ಕೆ ಹೈಕೋರ್ಟ್‌ ನಿರ್ದೇಶಿಸಿದೆ. ತೃತೀಯ ಭಾಷೆಗೆ ಅಂಕಗಳ ಬದಲಿಗೆ ಗ್ರೇಡ್ ನೀಡುವ ನಿರ್ಧಾರ ಪ್ರಶ್ನಿಸಿ ವಿದ್ಯಾರ್ಥಿನಿಯರಾದ ಚಿಕ್ಕಮಗಳೂರಿನ ಸಹನಾ ಆರ್. ನಾಯ್ಕ್‌, ಉಡುಪಿಯ ಅನುಷಾ ಹಾಗೂ ಸುಧಿಕ್ಷಾ ಸಲ್ಲಿಸಿದ್ದ ರಿಟ್ ಅರ್ಜಿಯನ್ನು ಬುಧವಾರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಇ.ಎಸ್‌. ಇಂದಿರೇಶ್‌ ಅವರಿದ್ದ ಏಕಸದಸ್ಯ ನ್ಯಾಯಪೀಠ, ಸರಕಾರಕ್ಕೆ ಈ ನಿರ್ದೇಶನ ನೀಡಿ ಅರ್ಜಿ ಇತ್ಯರ್ಥಪಡಿಸಿದೆ. ಇದಕ್ಕೂ ಮುನ್ನ ಅರ್ಜಿದಾರ ವಿದ್ಯಾರ್ಥಿಗಳ ಪರ ವಕೀಲ ಆರ್‌.ವಿ. ನಾಯ್ಕ್‌ ವಾದ ಮಂಡಿಸಿ, 2025-2026ನೇ ಸಾಲಿನಿಂದಲೇ ಎಸೆಸೆಲ್ಸಿ ಪರೀಕ್ಷೆಯಲ್ಲಿ ಹಿಂದಿ ಸೇರಿ ತೃತೀಯ ಭಾಷೆ ವಿಷಯಗಳಿಗೆ ಅಂಕಗಳ ಬದಲಿಗೆ ಗ್ರೇಡ್‌ ನೀಡುವುದಾಗಿ ರಾಜ್ಯ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವರು 2026ರ ಮಾರ್ಚ್ 28ರಂದು ಹೇಳಿಕೆ ನೀಡಿದ್ದಾರೆ ಎಂದು ನ್ಯಾಯಪೀಠಕ್ಕೆ ವಿವರಿಸಿದರು. ಮುಂದುವರಿದು, ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ (ಕೆಎಸ್‌ಇಎಬಿ) ಮುಖ್ಯಸ್ಥರು 2024 ಅಕ್ಟೋಬರ್ 18 ಮತ್ತು 2025ರ ಅಕ್ಟೋಬರ್ 28ರಂದು ಮಾರ್ಗಸೂಚಿ ಹಾಗೂ ಸುತ್ತೋಲೆ ಹೊರಡಿಸಿದ್ದು, ಹಿಂದಿ ಸೇರಿದಂತೆ ತೃತೀಯ ಭಾಷಾ ವಿಷಯಗಳಿಗೆ 100 ಅಂಕ ನೀಡಬೇಕು. ಅದರಲ್ಲಿ ಲಿಖಿತ ಪರೀಕ್ಷೆಯ ಮೌಲ್ಯಮಾಪನದಲ್ಲಿ 80 ಅಂಕ, ಶಾಲಾ ಆಂತರಿಕ ಪರೀಕ್ಷೆಗೆ 20 ಅಂಕ ನೀಡಬೇಕು ಎಂದು ಸುತ್ತೋಲೆಯಲ್ಲಿ ಹೇಳಲಾಗಿದೆ. ಆದರೆ, ಕೊನೇ ಹಂತದಲ್ಲಿ ಅಂದರೆ ಎಸೆಸೆಲ್ಸಿ ಪರೀಕ್ಷೆ ನಡೆಯುತ್ತಿರುವ ಸಮಯದಲ್ಲಿ ಸರಕಾರ ಅಂಕಗಳ ಬದಲಿಗೆ ಗ್ರೇಡ್‌ ನೀಡುವ ತೀರ್ಮಾನ ಕೈಗೊಂಡಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್‌ಸಿ) ಸೇರಿದಂತೆ ಕೇಂದ್ರ ಸರಕಾರ ಹಾಗೂ ಕೇಂದ್ರ ಸ್ವಾಮ್ಯ ಸಂಸ್ಥೆಗಳು ಸ್ಪರ್ಧಾತ್ಮಕ ಪರೀಕ್ಷೆ ನಡೆಸುವ ಹಾಗೂ ಬ್ಯಾಂಕಿಂಗ್‌ ಪರೀಕ್ಷೆಗಳಲ್ಲಿ ಗ್ರೇಡಿಂಗ್ ಅನ್ನು ಪರಿಗಣಿಸುವುದಿಲ್ಲ. ಕೇವಲ ಅಂಕಗಳನ್ನಷ್ಟೇ ಪರಿಗಣಿಸಲಾಗುತ್ತದೆ. ರಾಜ್ಯ ಸರಕಾರ ಹಿಂದಿ ಹಾಗೂ ಇತರ ತೃತೀಯ ಭಾಷಾ ವಿಷಯಗಳ ಪರೀಕ್ಷೆಯಲ್ಲಿ ಅಂಕಗಳ ಬದಲಿಗೆ ಗ್ರೇಂಡಿಗ್‌ ನೀಡಿದರೆ, ರಾಜ್ಯದ ವಿದ್ಯಾರ್ಥಿಗಳ/ಉದ್ಯೋಗ ಆಕಾಂಕ್ಷಿಗಳ ಮೇಲೆ ಭವಿಷ್ಯದಲ್ಲಿ ಸಾಕಷ್ಟು ದುಷ್ಪರಿಣಾಮ ಬೀರುತ್ತದೆ. ಆದ್ದರಿಂದ, 2025-2026ನೇ ಸಾಲಿನ ಎಸೆಸೆಲ್ಸಿ ಪರೀಕ್ಷೆಯಲ್ಲಿ ಹಿಂದಿ ಸೇರಿದಂತೆ ತೃತೀಯ ಭಾಷೆ ವಿಷಯಗಳಿಗೆ ಗ್ರೇಡ್‌ ಬದಲಿಗೆ ಅಂಕಗಳನ್ನೇ ನೀಡಲು ಸರಕಾರ ಹಾಗೂ ಕೆಎಸ್‌ಇಎಬಿಗೆ ನಿರ್ದೇಶಿಸಬೇಕು ಎಂದು ಕೋರಿದರು. ಆಗ ನ್ಯಾಯಪೀಠ, ತೃತೀಯ ಭಾಷೆ ವಿಷಯಗಳ ಪರೀಕ್ಷೆಯಲ್ಲಿ ಗ್ರೇಡಿಂಗ್‌ ನೀಡುವ ಬಗ್ಗೆ ರಾಜ್ಯ ಸರಕಾರ ಅಧಿಸೂಚನೆ/ಸುತ್ತೋಲೆ ಹೊರಡಿಸಿದೆಯೇ ಎಂದು ಸರಕಾರಿ ವಕೀಲರನ್ನು ಕೇಳಿತು. ಸರಕಾರದ ಪರ ವಕೀಲರು, ಸದ್ಯ ಕರಡು ಅಧಿಸೂಚನೆ ಹೊರಡಿಸಲಾಗಿದೆ. ಹೆಚ್ಚಿನ ಮಾಹಿತಿಯನ್ನು ಸರಕಾರದಿಂದ ಪಡೆದು ತಿಳಿಸಲಾಗುವುದು ಎಂದು ನ್ಯಾಯಪೀಠಕ್ಕೆ ತಿಳಿಸಿದರು. ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ, ಚಾಲ್ತಿಯಲ್ಲಿರುವ ನಿಯಮಗಳು ಮತ್ತು ಮಾರ್ಗಸೂಚಿಗಳಂತೆ 2025-2026ನೇ ಸಾಲಿನ ಎಸೆಸೆಲ್ಸಿಸಿ ಪರೀಕ್ಷೆಯಲ್ಲಿ ಹಿಂದಿ ಸೇರಿದಂತೆ ತೃತೀಯ ಭಾಷೆ ವಿಷಯಗಳಿಗೆ ಗ್ರೇಡ್‌ ಬದಲಿಗೆ ಅಂಕಗಳನ್ನು ನೀಡುವಂತೆ ರಾಜ್ಯ ಸರಕಾರಕ್ಕೆ ನಿರ್ದೇಶಿಸಿ ಅರ್ಜಿ ಇತ್ಯರ್ಥಪಡಿಸಿತು.

ವಾರ್ತಾ ಭಾರತಿ 15 Apr 2026 11:09 pm

ತುರ್ಕಿಯೆ ಶಾಲೆಯಲ್ಲಿ ಗುಂಡಿನ ದಾಳಿ: ನಾಲ್ವರು ಮೃತ್ಯು; 20 ಮಂದಿಗೆ ಗಾಯ

ಅಂಕಾರ, ಎ.15: ತುರ್ಕಿಯೆ ಶಾಲೆಯೊಂದರಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಒಬ್ಬ ಶಿಕ್ಷಕ ಮತ್ತು ಮೂವರು ವಿದ್ಯಾರ್ಥಿಗಳು ಮೃತಪಟ್ಟಿದ್ದು, 20 ಮಂದಿ ಗಾಯಗೊಂಡಿರುವುದಾಗಿ ವರದಿಯಾಗಿದೆ. ಕಹ್ರಮನ್ಮರಸ್ ಪ್ರಾಂತದ ಶಾಲೆಯಲ್ಲಿ ಘಟನೆ ನಡೆದಿದ್ದು ವಿದ್ಯಾರ್ಥಿಯೊಬ್ಬ ಪಿಸ್ತೂಲಿನೊಂದಿಗೆ ಶಾಲೆಗೆ ಬಂದಿದ್ದು ತರಗತಿಗೆ ಪ್ರವೇಶಿಸಿ ಮನಬಂದಂತೆ ಗುಂಡಿನ ದಾಳಿ ನಡೆಸಿದ್ದಾನೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಮಂಗಳವಾರ ಸಾನ್ಲಿಯುರ್ಫಾ ಪ್ರಾಂತದ ಸಿವೆರೆಕ್ ಜಿಲ್ಲೆಯ ಶಾಲೆಯಲ್ಲಿ ಹಳೆ ವಿದ್ಯಾರ್ಥಿಯೊಬ್ಬ ನಡೆಸಿದ ಗುಂಡಿನ ದಾಳಿಯಲ್ಲಿ 16 ಮಂದಿ ಗಾಯಗೊಂಡಿದ್ದರು. ಬಳಿಕ ಆರೋಪಿ ಸ್ವಯಂ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ ಎಂದು ಅಧಿಕಾರಿಗಳು ಹೇಳಿದ್ದಾರೆ.

ವಾರ್ತಾ ಭಾರತಿ 15 Apr 2026 11:06 pm

ಕದನ ವಿರಾಮ ಮಾತುಕತೆ| ಅಮೆರಿಕದ ಸಂದೇಶದೊಂದಿಗೆ ಇರಾನ್‍ಗೆ ತೆರಳಲಿರುವ ಪಾಕ್ ನಿಯೋಗ

ಟೆಹರಾನ್, ಎ.15: ಪಾಕಿಸ್ತಾನದ ನಿಯೋಗವು ಅಮೆರಿಕದ ಸಂದೇಶವನ್ನು ರವಾನಿಸಲು ಇರಾನ್‍ಗೆ ತೆರಳುತ್ತಿದೆ. ನಿಯೋಗವು ಎರಡೂ ದೇಶಗಳ ನಡುವೆ ಎರಡನೇ ಸುತ್ತಿನ ಮಾತುಕತೆಗೆ ಯೋಜಿಸಬಹುದು ಎಂದು ಇರಾನ್‍ನ ಸರಕಾರಿ ಸ್ವಾಮ್ಯದ ಮಾಧ್ಯಮವನ್ನು ಉಲ್ಲೇಖಿಸಿ ರಾಯ್ಟರ್ಸ್ ವರದಿ ಮಾಡಿದೆ. ಇದಕ್ಕೂ ಮುನ್ನ, ಬುಧವಾರ ಟೆಹ್ರಾನ್‌ನಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ್ದ ಇರಾನ್‍ನ ವಿದೇಶಾಂಗ ಇಲಾಖೆಯ ವಕ್ತಾರ ಎಸ್ಮಾಯಿಲ್ ಬಗಾಯಿ `ಇಸ್ಲಮಾಬಾದ್‍ನಲ್ಲಿ ಮಾತುಕತೆಗಳ ಮುಂದುವರಿಕೆಯಾಗಿ ಬುಧವಾರ ಇರಾನ್‍ಗೆ ಪಾಕಿಸ್ತಾನದ ನಿಯೋಗ ಬರುವ ಸಾಧ್ಯತೆಯಿದೆ' ಎಂದು ಹೇಳಿದ್ದರು. ಈ ಮಧ್ಯೆ, ಅಮೆರಿಕ-ಇರಾನ್ ನಡುವಿನ ಎರಡನೇ ಸುತ್ತಿನ ಮಾತುಕತೆಗೆ ಬುಧವಾರದಿಂದ ಪಾಕಿಸ್ತಾನ ಸಿದ್ಧತೆ ನಡೆಸುತ್ತಿದೆ. ವಿಶೇಷವಾಗಿ ಭದ್ರತಾ ವ್ಯವಸ್ಥೆಗಳನ್ನು ಬಿಗಿಗೊಳಿಸಲಾಗುತ್ತಿದೆ. ವಾರಾಂತ್ಯ ಅಥವಾ ಮುಂದಿನ ವಾರದ ಆರಂಭದಲ್ಲಿ ಇಸ್ಲಮಾಬಾದ್‍ನಲ್ಲಿ ಮಾತುಕತೆ ನಡೆಯುವ ನಿರೀಕ್ಷೆಯಿದೆ ಎಂದು ಪಾಕ್ ಸರಕಾರದ ಮೂಲಗಳನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ.

ವಾರ್ತಾ ಭಾರತಿ 15 Apr 2026 11:03 pm

IPL-2026| ಕೆಕೆಆರ್ ನಾಯಕ ಅಜಿಂಕ್ಯ ರಹಾನೆಗೆ 12 ಲಕ್ಷ ರೂ. ದಂಡ

ಹೊಸದಿಲ್ಲಿ, ಎ.15: ಚೆನ್ನೈ ಸೂಪರ್ ಕಿಂಗ್ಸ್(ಸಿಎಸ್ಕೆ)ವಿರುದ್ಧ ಮಂಗಳವಾರ ಚೆನ್ನೈನ ಎಂ.ಎ.ಚಿದಂಬರಂ ಸ್ಟೇಡಿಯಂನಲ್ಲಿ ನಡೆದಿದ್ದ ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್)ಪಂದ್ಯದಲ್ಲಿ ನಿಧಾನಗತಿಯ ಬೌಲಿಂಗ್ ಕಾಯ್ದುಕೊಂಡಿದ್ದಕ್ಕೆ ಕೋಲ್ಕತಾ ನೈಟ್ ರೈಡರ್ಸ್(ಕೆಕೆಆರ್)ತಂಡದ ನಾಯಕ ಅಜಿಂಕ್ಯ ರಹಾನೆಗೆ ಬುಧವಾರ ಪಂದ್ಯ ಶುಲ್ಕದಲ್ಲಿ 12 ಲಕ್ಷ ರೂ. ದಂಡ ವಿಧಿಸಲಾಗಿದೆ. ಐಪಿಎಲ್ ನೀತಿ ಸಂಹಿತೆ ಆರ್ಟಿಕಲ್ 2.22ರ ಪ್ರಕಾರ ಇದು ಕೆಕೆಆರ್ ತಂಡದ ಈ ವರ್ಷದ ಮೊದಲ ತಪ್ಪಾಗಿತ್ತು. ಹೀಗಾಗಿ ನಿಧಾನಗತಿಯ ಬೌಲಿಂಗ್ಗಾಗಿ ರಹಾನೆಗೆ 12 ಲಕ್ಷ ರೂ. ದಂಡ ವಿಧಿಸಲಾಗಿದೆ. ಈ ಪಂದ್ಯದಲ್ಲಿ 21 ರನ್‌ಗೆ ಮೂರು ವಿಕೆಟ್‌ಗಳನ್ನು ಉರುಳಿಸಿದ ನೂರ್ ಅಹ್ಮದ್ ಅವರು ಸಿಎಸ್‌ಕೆ ತಂಡವು ಕೋಲ್ಕತಾ ತಂಡವನ್ನು 32 ರನ್‌ಗಳಿಂದ ಮಣಿಸುವಲ್ಲಿ ನೆರವಾದರು. ಸಿಎಸ್‌ಕೆ ತಂಡವು ಸತತ ಎರಡನೇ ಗೆಲುವು ದಾಖಲಿಸಿತ್ತು. ಸಂಜು ಸ್ಯಾಮ್ಸನ್(48 ರನ್)ಹಾಗೂ ಡೆವಾಲ್ಡ್ ಬ್ರೆವಿಸ್(41 ರನ್)ಕೊಡುಗೆಯ ನೆರವಿನಿಂದ ಮೊದಲು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟಿದ್ದ ಸಿಎಸ್ಕೆ ತಂಡವು ಐದು ವಿಕೆಟ್‌ಗಳ ನಷ್ಟಕ್ಕೆ 192 ರನ್ ಗಳಿಸಿತ್ತು. ಎಡಗೈ ಸ್ಪಿನ್ನರ್ ನೂರ್ ಅಹ್ಮದ್ ಅವರು ಕೋಲ್ಕತಾ ತಂಡವನ್ನು 7 ವಿಕೆಟ್‌ಗಳ ನಷ್ಟಕ್ಕೆ 160 ರನ್‌ಗೆ ನಿಯಂತ್ರಿಸಲು ನೆರವಾದರು. ಕೆಕೆಆರ್ ತಂಡವು 2026ರ ಆವೃತ್ತಿಯ ಐಪಿಎಲ್‌ನಲ್ಲಿ ಐದು ಪಂದ್ಯಗಳನ್ನು ಆಡಿದ್ದರೂ ಒಂದೂ ಪಂದ್ಯವನ್ನು ಗೆದ್ದಿಲ್ಲ. ಮಳೆಗಾಹುತಿಯಾದ ಪಂದ್ಯದಲ್ಲಿ ಒಂದು ಅಂಕವನ್ನು ಗಳಿಸಿದ್ದ ಕೆಕೆಆರ್ ತಂಡವು ಸದ್ಯ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ. ಸತತ ಮೂರು ಸೋಲಿನೊಂದಿಗೆ ಪ್ರಸಕ್ತ ಐಪಿಎಲ್ ಆರಂಭಿಸಿರುವ ಸಿಎಸ್‌ಕೆ ಇದೀಗ ಸತತ ಎರಡು ಪಂದ್ಯಗಳಲ್ಲಿ ಜಯ ಗಳಿಸಿದ್ದು, ಅಂಕಪಟ್ಟಿಯಲ್ಲಿ ಎಂಟನೇ ಸ್ಥಾನಕ್ಕೇರಿದೆ. ಕಾಲುನೋವಿನಿಂದ ಚೇತರಿಸಿಕೊಳ್ಳುತ್ತಿರುವ ಎಂ.ಎಸ್.ಧೋನಿ ಮರಳಿಕೆಗಾಗಿ ಸಿಎಸ್‌ಕೆ ತಂಡವು ಈಗಲೂ ಕಾಯುತ್ತಿದೆ. ಅವರು ಈ ತನಕ ಒಂದೂ ಪಂದ್ಯವನ್ನು ಆಡಿಲ್ಲ.

ವಾರ್ತಾ ಭಾರತಿ 15 Apr 2026 11:00 pm

Aland | ಎ.17ರಿಂದ ಸಿಯುಕೆಯಲ್ಲಿ ರಾಷ್ಟ್ರೀಯ ಕಾರ್ಯಾಗಾರ

ಆಳಂದ: ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಇಂಗ್ಲಿಷ್ ವಿಭಾಗದ ವತಿಯಿಂದ ಎ.7 ಮತ್ತು 18ರಂದು “ಸಂಶೋಧನಾ ವಿಧಾನ ಮತ್ತು ಶೈಕ್ಷಣಿಕ ಬರವಣಿಗೆ” ಕುರಿತು ಎರಡು ದಿನಗಳ ರಾಷ್ಟ್ರೀಯ ಕಾರ್ಯಾಗಾರವನ್ನು ಸಿಯುಕೆಯ ತರಗತಿ ಸಂಕೀರ್ಣದ ಸೆಮಿನಾರ್ ಹಾಲ್‌ನಲ್ಲಿ ಆಯೋಜಿಸಲಾಗಿದೆ. ಕಾರ್ಯಾಗಾರದ ಕರಪತ್ರವನ್ನು ಬಿಡುಗಡೆಗೊಳಿಸಿದ ಕುಲಪತಿ ಪ್ರೊ. ಬಟ್ಟು ಸತ್ಯನಾರಾಯಣ ಮಾತನಾಡಿ, ಮಾನವಶಾಸ್ತ್ರ ಮತ್ತು ಭಾಷೆಗಳ ಸಂಶೋಧನೆ ಸಾಂಸ್ಕೃತಿಕ ತಿಳುವಳಿಕೆ, ವಿಮರ್ಶಾತ್ಮಕ ಚಿಂತನೆ ಹಾಗೂ ಮಾನವಿಕ ಜ್ಞಾನ ಉತ್ಪಾದನೆಗೆ ಬಲವಾದ ಬೌದ್ಧಿಕ ನೆಲೆ ಒದಗಿಸುತ್ತದೆ ಎಂದು ಹೇಳಿದರು. ವಿದ್ಯಾರ್ಥಿಗಳು ಹಾಗೂ ಸಂಶೋಧಕರು ತಮ್ಮ ವಿಷಯಗಳ ಜೊತೆಗೆ ಸಂಶೋಧನಾ ವಿಧಾನ ಮತ್ತು ಶೈಕ್ಷಣಿಕ ಬರವಣಿಗೆಯಲ್ಲಿಯೂ ಆಸಕ್ತಿ ಬೆಳೆಸಿಕೊಳ್ಳಬೇಕು ಎಂದು ಅಭಿಪ್ರಾಯಪಟ್ಟರು. ಇಂಗ್ಲಿಷ್ ವಿಭಾಗದ ಮುಖ್ಯಸ್ಥ ಪ್ರೊ. ಬಸವರಾಜ ಡೋಣೂರ ಮಾತನಾಡಿ, ಮಾನವಶಾಸ್ತ್ರದಲ್ಲಿನ ಸಂಶೋಧನಾ ವಿಧಾನವು ಏಕಮುಖ ಶಿಸ್ತಲ್ಲ, ಬದಲಾಗಿ ವ್ಯಾಖ್ಯಾನಾತ್ಮಕ, ವಿಮರ್ಶಾತ್ಮಕ, ಪ್ರಾಯೋಗಿಕ ಹಾಗೂ ಮಿಶ್ರ ಚೌಕಟ್ಟುಗಳ ಮೇಲೆ ಆಧಾರಿತವಾಗಿದೆ ಎಂದು ವಿವರಿಸಿದರು. ಡೀನ್ ಪ್ರೊ. ವಿಕ್ರಮ್ ವಿಸಾಜಿ ಮಾತನಾಡಿ, ಶೈಕ್ಷಣಿಕ ಬರವಣಿಗೆಯಲ್ಲಿ ವಾದರಚನೆ, ಶಿಸ್ತಿನ ಸಂಪ್ರದಾಯಗಳು, ಉಲ್ಲೇಖ ವಿಧಾನಗಳು ಹಾಗೂ ಪ್ರಕಟಣಾ ಮಾನದಂಡಗಳ ಮೇಲೆ ಪಟ್ಟು ಸಾಧಿಸುವುದು ಅತ್ಯಗತ್ಯವಾಗಿದೆ ಎಂದು ಹೇಳಿದರು. ಈ ಕ್ಷೇತ್ರಗಳಲ್ಲಿ ಸಮರ್ಪಕ ತರಬೇತಿ ಕೊರತೆಯಿಂದ ಡಾಕ್ಟರೇಟ್ ಪ್ರಬಂಧಗಳ ಗುಣಮಟ್ಟ ಹಾಗೂ ಸಂಶೋಧನಾ ಪ್ರಕಟಣೆಗಳ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಎಚ್ಚರಿಸಿದರು. ಕರಪತ್ರ ಬಿಡುಗಡೆ ಸಮಾರಂಭದಲ್ಲಿ ಸಂಘಟನಾ ಕಾರ್ಯದರ್ಶಿ ಮಹೇಂದ್ರ ಎಂ., ಪ್ರೊ. ಪಾಂಡಾ, ಡಾ. ರೇಣುಕಾ, ಡಾ. ಪ್ರಕಾಶ ಹಾಗೂ ಡಾ. ಆಶಿಶ ಉಪಸ್ಥಿತರಿದ್ದರು. ಕಾರ್ಯಾಗಾರದಲ್ಲಿ ಹೈದರಾಬಾದ್‌ನ ಇಇಐಯು ವಿಶ್ವವಿದ್ಯಾಲಯದಿಂದ ಆಹ್ವಾನಿಸಲ್ಪಟ್ಟ ಸಂಪನ್ಮೂಲ ವ್ಯಕ್ತಿಗಳಾದ ಪ್ರೊ. ತಾರಕೇಶ್ವರ್ ವಿ.ಬಿ. ಮತ್ತು ಪ್ರೊ. ನಿಖಿಲಾ ಎಚ್. ಅವರು ಸಂಶೋಧನಾ ವಿಧಾನ, ಪರಿಕಲ್ಪನೆಗಳು, ಸಂಶೋಧನಾ ವಿನ್ಯಾಸ, ಶೈಕ್ಷಣಿಕ ಬರವಣಿಗೆ, ಪ್ರಕಟಣೆ ನೀತಿಶಾಸ್ತ್ರ, ಕೃತಿಚೌರ್ಯ ಹಾಗೂ ಉಲ್ಲೇಖ ಶೈಲಿಗಳ ಕುರಿತು ಉಪನ್ಯಾಸ ನೀಡಲಿದ್ದಾರೆ.

ವಾರ್ತಾ ಭಾರತಿ 15 Apr 2026 11:00 pm

ಭುವನೇಶ್ವರ್ ಹೊಡೆತಕ್ಕೆ ನಡುಗಿದ ಲಖನೌ ಸೂಪರ್ ಜೈಂಟ್ಸ್; ಅಧಿಕಾರಯುತ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ RCB

ಇದು ಹಾಲಿ ಚಾಂಪಿಯನ್ಸ್ ಗೆ ತಕ್ಕುದಾದ ಆಟ! ಭುವನೇಶ್ವರ ಕುಮಾರ್, ರಸಿಕ್ ಸಲಾಂ, ಜೋಶ್ ಹ್ಯಾಜಲ್ ವುಡ್ ಅವರ ಮೊನಚಾದ ಬೌಲಿಂಗ್ ಮತ್ತು ವಿರಾಟ್ ಕೊಹ್ಲಿ ಅವರ ಸೊಗಸಾದ ಬ್ಯಾಟಿಂಗ್ ನೆರವಿನಿಂದ ತಂಡವು ಲಖನೌ ಸೂಪರ್ ಜೈಂಟ್ಸ್ ತಂಡವನ್ನು 5 ವಿಕೆಟ್ ಗಳಿಂದ ಸೋಲಿಸಿ ಅಧಿಕಾರಯುತ ಜಯ ಸಾಧಿಸಿದೆ. ಈ ಮೂಲಕ ಆಢಿದ 5 ಪಂದ್ಯಗಳಲ್ಲಿ 4 ಜಯ ಗಳಿಸಿರುವ ರಜತ ಪಾಟೀದಾರ್ ಬಳಗವು 8 ಅಂಕಗಳನ್ನು ಸಂಪಾದಿಸಿದೆ. ಜೊತಗೆ ಅತ್ಯುನ್ನತ ರನ್ ರೇಟ್(1.503) ಆಧಾರದಲ್ಲಿ ಯಲ್ಲಿ ಮೊದಲ ಸ್ಥಾನಕ್ಕೇರಿದೆ.ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಏಪ್ರಿಲ್ 15ರ ಬುಧವಾರದಂದು ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಲಖನೌ ಸೂಪರ್ ಜೈಂಟ್ಸ್ ನಿಗದಿತ 20 ಓವರ್ ಗಳಲ್ಲಿ 146 ರನ್ ಗಳನ್ನಷ್ಟೇ ಗಳಿಸಲು ಶಕ್ತವಾಯಿತು. ಇದಕ್ಕುತ್ತರವಾಗಿ ರಾಯಲ್ ಚಾಲೆಂಜರ್ಸ್ ತಂಡವು ಇನ್ನೂ 29 ಎಸತೆತಗಳು ಬಾಕಿ ಉಳಿದಿರುವಂತೆ ಜಯಭೇರಿ ಬಾರಿಸಿತು. () ಸಂಕ್ಷಿಪ್ತ ಸ್ಕೋರ್ ಲಖನೌ ಸೂಪರ್ ಜೈಂಟ್ಸ್ 20 ಓವರ್ ಗಳಲ್ಲಿ 146ಕ್ಕೆ ಆಲೌಟ್, ಮಿಚೆಲ್ ಮಾರ್ಷ್ 40(32), ಆಯುಷ್ ಬದೋನಿ 38(24), ಮುಕುಲ್ ಚೌಧರಿ 38(28), ಭುವನೇಶ್ವರ್ ಕುಮಾರ್ 27ಕ್ಕೆ 3, ರಸಿಕ್ ಸಲಾಂ 34ಕ್ಕೆ 4,

ವಿಜಯ ಕರ್ನಾಟಕ 15 Apr 2026 10:54 pm

IPL 2026 | 'ಪಂತ' ಸೋತ ಲಕ್ನೋ; ಗೆದ್ದು ಬೀಗಿದ RCB

ಬೆಂಗಳೂರು: ಇಲ್ಲಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಐಪಿಎಲ್ ಟೂರ್ನಿಯ ಪಂದ್ಯದಲ್ಲಿ ರೋಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ಸೋಲಿಸಿ 5 ವಿಕೆಟ್ ಗಳ ಭರ್ಜರಿ ಜಯ ಸಾಧಿಸಿತು. ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡ RCB ತಂಡವು ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ಬ್ಯಾಟಿಂಗ್ ಗೆ ಆಹ್ವಾನಿಸಿತು. ಅದರೆ ರೋಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ರಸಿಖ್ ಸಲಾಮ್, ಭುವನೇಶ್ವರ್ ಕುಮಾರ್, ಕೃನಾಲ್ ಪಾಂಡ್ಯ ಅವರ ಬೌಲಿಂಗ್ ದಾಳಿಗೆ ಲಕ್ನೋ ಹಳಿ ತಪ್ಪಿತು. 20 ಓವರುಗಳಲ್ಲಿ 146 ರನ್ ಗಳಿಸಿ ಆಲೌಟ್ ಆಯಿತು. ರಸಿಖ್ ಸಲಾಮ್ 4 ವಿಕೆಟ್ ಪಡೆದರೆ, ಭುವನೇಶ್ವರ್ ಕುಮಾರ್ 3 ವಿಕೆಟ್ ಪಡೆದರು. ಕೃನಾಲ್ ಪಾಂಡ್ಯ 2, ಹೇಝಲ್ ವುಡ್ ಒಂದು ವಿಕೆಟ್ ಪಡೆದರು. 147 ರನ್‌ಗಳ ಗರಿ ಪಡೆದ RCB 29 ಎಸೆತಗಳು ಬಾಕಿ ಇರುವಂತೆ ಪಂತ್ ಪಡೆಯನ್ನು 5 ವಿಕೆಟ್ ಗಳಿಂದ ಸೋಲಿಸಿ ಜಯಗಳಿಸಿತು.

ವಾರ್ತಾ ಭಾರತಿ 15 Apr 2026 10:49 pm

Kalaburagi | ಎನ್ನೆಸ್ಸೆಸ್‌ ಶಿಬಿರದಿಂದ ವ್ಯಕ್ತಿತ್ವ ಬೆಳವಣಿಗೆ : ಡಾ.ಇಂದಿರಾ ಶೇಟಕಾರ

ಕಲಬುರಗಿ: ಎನ್ನೆಸ್ಸೆಸ್‌ ಶಿಬಿರದಲ್ಲಿ ಭಾಗವಹಿಸುವುದರಿಂದ ವಿದ್ಯಾರ್ಥಿಗಳಲ್ಲಿ ಸಂಪೂರ್ಣ ವ್ಯಕ್ತಿತ್ವ ಬೆಳವಣಿಗೆ ಸಾಧ್ಯವಾಗುತ್ತದೆ ಎಂದು ಡಾ.ಇಂದಿರಾ ಶೇಟಕಾರ ಹೇಳಿದರು. ನಗರದ ಶರಣಬಸವೇಶ್ವರ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಬುಧವಾರ ನಡೆದ ಎನ್‌ಎಸ್‌ಎಸ್ ಶಿಬಿರದ ಸಮಾರೋಪ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದ ಅವರು, ಶಿಬಿರದ ಮೂಲಕ ವಿದ್ಯಾರ್ಥಿಗಳು ಸಮಾಜದ ಸಮಸ್ಯೆಗಳ ಅರಿವು ಪಡೆದು, ಅವುಗಳಿಗೆ ಪರಿಹಾರ ಕಂಡುಹಿಡಿಯುವ ಮನೋಭಾವ ಬೆಳೆಸಿಕೊಂಡಿದ್ದಾರೆ ಎಂದು ಹೇಳಿದರು. ಗ್ರಾಮ ಸ್ವಚ್ಛತೆ, ಆರೋಗ್ಯ ಜಾಗೃತಿ, ಶಿಕ್ಷಣ ಪ್ರಚಾರ ಮತ್ತು ಪರಿಸರ ಸಂರಕ್ಷಣೆ ಸೇರಿದಂತೆ ವಿವಿಧ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳ ತೊಡಗಿಸಿಕೊಳ್ಳುವಿಕೆ ಶ್ಲಾಘನೀಯವಾಗಿದೆ. “ಪುಸ್ತಕ ಜ್ಞಾನ ಮಾತ್ರ ಸಾಕಾಗುವುದಿಲ್ಲ, ಸಮಾಜಜ್ಞಾನವೂ ಅಗತ್ಯ” ಎಂದು ಅವರು ತಿಳಿಸಿದರು. ಈ ಶಿಬಿರವು ವಿದ್ಯಾರ್ಥಿಗಳಿಗೆ ನಾಯಕತ್ವ ಗುಣ, ಸಹಕಾರ ಮನೋಭಾವ, ಸಮಯಪಾಲನೆ ಹಾಗೂ ಶಿಸ್ತುಗಳನ್ನು ಕಲಿಸಿದ್ದು, ಇವುಗಳು ಅವರ ಭವಿಷ್ಯದ ಯಶಸ್ಸಿಗೆ ಬುನಾದಿಯಾಗುತ್ತವೆ ಎಂದು ಅಭಿಪ್ರಾಯಪಟ್ಟರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ದಶರಥ ಮೇತ್ರೆ ಮಾತನಾಡಿ, ಶಿಬಿರದಿಂದ ಗ್ರಾಮೀಣ ಜೀವನ ಮತ್ತು ಅಲ್ಲಿನ ಸಮಸ್ಯೆಗಳ ಅರಿವು ಮೂಡುತ್ತದೆ. ದೇಶದ ಅಭಿವೃದ್ಧಿಗೆ ಯುವಜನರ ಪಾತ್ರ ಮಹತ್ವದ್ದಾಗಿದ್ದು, ವಿದ್ಯಾರ್ಥಿಗಳು ಈ ಅನುಭವವನ್ನು ಜೀವನದಲ್ಲಿ ಅಳವಡಿಸಿಕೊಂಡು ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಕರೆ ನೀಡಿದರು. ಮಹಾವಿದ್ಯಾಲಯದ ಎನ್ನೆಸ್ಸೆಸ್‌ ಅಧಿಕಾರಿ ಪ್ರೊ.ದಯಾನಂದ ಹೊಡಲ್ ಪ್ರಾಸ್ತಾವಿಕ ಮಾತನಾಡಿದರು. ಕು.ಮನೋಜಕುಮಾರ ಸ್ವಾಗತಿಸಿದರು, ಕು. ರಕ್ಷಿತ್ ನಿರೂಪಿಸಿದರೆ, ಕು. ಹರೀಶ್ ವಂದಿಸಿದರು. ವಿದ್ಯಾರ್ಥಿಗಳು ಶಿಬಿರದ ಅಭಿಪ್ರಾಯ ತಿಳಿಸಿದರು.

ವಾರ್ತಾ ಭಾರತಿ 15 Apr 2026 10:49 pm

ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಸಫಾರಿ ನಿಷೇಧ ಕೋರಿದ ಪಿಐಎಲ್; ವಿವರವಾದ ಪ್ರಮಾಣಪತ್ರ ಸಲ್ಲಿಸಲು ಸರಕಾರಕ್ಕೆ ಹೈಕೋರ್ಟ್ ನಿರ್ದೇಶನ

ಬೆಂಗಳೂರು : ಬಂಡೀಪುರ ಮತ್ತು ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಸಫಾರಿಗೆ ನಿಷೇಧ ಹೇರಲು ನಿರಾಕರಿಸಿರುವ ಹೈಕೋರ್ಟ್, ಅರಣ್ಯದ ಯಾವ ವಲಯದಲ್ಲಿ ಸಫಾರಿಗೆ ಅವಕಾಶ ನೀಡಲಾಗಿದೆ ಎಂಬ ಕುರಿತು ವಿವರವಾದ ಪ್ರಮಾಣಪತ್ರ ಸಲ್ಲಿಸುವಂತೆ ರಾಜ್ಯ ಸರಕಾರಕ್ಕೆ ನಿರ್ದೇಶಿಸಿದೆ. ರಾಜ್ಯದ ಸೂಕ್ಷ್ಮ ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಸಫಾರಿಯನ್ನು ಶಾಶ್ವತವಾಗಿ ನಿಷೇಧಿಸಲು‌ ನಿರ್ದೇಶನ ಕೋರಿ ಮೈಸೂರಿನ ವಿ. ರವಿಕುಮಾರ್‌ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಬುಧವಾರ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಹಾಗೂ ನ್ಯಾಯಮೂರ್ತಿ ಸಿ.ಎಂ. ಪೂಣಚ್ಚ ಅವರಿದ್ದ ವಿಭಾಗೀಯ ನ್ಯಾಯಪೀಠ, ಶೇ.50 ರಷ್ಟು ಸಫಾರಿಗೆ ಅವಕಾಶ ನೀಡಿ ಅರಣ್ಯ ಇಲಾಖೆ 2026ರ ಫೆಬ್ರವರಿ 21 ರಂದು ಹೊರಡಿಸಿರುವ ಆದೇಶಕ್ಕೆ ಮಧ್ಯಂತರ ತಡೆ ನೀಡಲು ನಿರಾಕರಿಸಿತು. ಜತೆಗೆ, ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಪ್ರವಾಸೋದ್ಯಮ ವಲಯ, ಕೋರ್ ಹಾಗೂ ಬಫರ್ ವಲಯಗಳೆಂಬ ಮೂರು ವಲಯಗಳಿರುತ್ತವೆ. ಇವುಗಳ ಪೈಕಿ ಯಾವ ವಲಯದಲ್ಲಿ ಸಫಾರಿಗೆ ಅವಕಾಶ‌ ನೀಡಲಾಗುತ್ತದೆ ಎಂಬ ಬಗ್ಗೆ ನಿಖರವಾದ ಸ್ಥಳಗಳು ಮತ್ತು ಈ ವಲಯಗಳನ್ನು ಸೂಚಿಸುವ ನಕ್ಷೆಗಳನ್ನು ಸ್ಪಷ್ಟಪಡಿಸುವ ವಿವರವಾದ ಪ್ರಮಾಣಪತ್ರ ಸಲ್ಲಿಸಬೇಕು ಎಂದು ಸರಕಾರಕ್ಕೆ ನಿರ್ದೇಶಿಸಿ ಅರ್ಜಿ ವಿಚಾರಣೆ ಮುಂದೂಡಿತು. ಇದಕ್ಕೂ ಮುನ್ನ ವಿಚಾರಣೆ ಆರಂಭವಾಗುತ್ತಿದ್ದಂತೆ ಅರ್ಜಿದಾರರ ಪರ ವಕೀಲರು, ಸಫಾರಿ ನಿಷೇಧಿಸಲ್ಪಟ್ಟಿರುವ, ಹುಲಿಗಳು ನೆಲೆಸಿರುವ ಪ್ರಮುಖ ಸ್ಥಳಗಳಲ್ಲಿ ಸಫಾರಿ ನಡೆಸಲಾಗುತ್ತಿದೆ. ರಾಜಕೀಯ ಮತ್ತು ವಾಣಿಜ್ಯ ಹಿತಾಸಕ್ತಿ ಹೊಂದಿರುವವರ ಒತ್ತಡಕ್ಕೆ ಮಣಿದು ಸಫಾರಿ ಮತ್ತ ಆರಂಭಿಸಲಾಗಿದೆ. ಸಫಾರಿ ಚಟುವಟಿಕೆ ಮುಂದುವರಿಸುವುದರಿಂದ ಮಾನವ-ವನ್ಯಜೀವಿಗಳ ಸಂಘರ್ಷ ವ್ಯಾಪಕವಾಗಲಿದೆ ಎಂದರು. ಈ ಹಂತದಲ್ಲಿ ನ್ಯಾಯಪೀಠ, ನಿರ್ಣಾಯಕ ಹುಲಿ ಆವಾಸಸ್ಥಾನವು ಯಾವಾಗಲೂ ಕೋರ್ ವಲಯಕ್ಕೆ ಸಮಾನಾರ್ಥಕವಲ್ಲ ಮತ್ತು ಸರಿಯಾದ ವರ್ಗೀಕರಣವನ್ನು ಪರಿಶೀಲಿಸಬೇಕು. ಹುಲಿ ಸಂರಕ್ಷಿತ ಪ್ರದೇಶಗಳು ಸಾಮಾನ್ಯವಾಗಿ ಕೋರ್, ಬಫರ್ ಮತ್ತು ಪ್ರವಾಸೋದ್ಯಮ ವಲಯಗಳನ್ನು ಒಳಗೊಂಡಿರುತ್ತವೆ. ಸಫಾರಿಯನ್ನು ಸಾಮಾನ್ಯವಾಗಿ ಬಫರ್ ಅಥವಾ ಗೊತ್ತುಪಡಿಸಿದ ಪ್ರವಾಸೋದ್ಯಮ ವಲಯಗಳಲ್ಲಿ ಮಾತ್ರ ಅನುಮತಿಸಲಾಗುತ್ತದೆ, ಕಟ್ಟುನಿಟ್ಟಾಗಿ ಸಂರಕ್ಷಿತ ಕೋರ್ ಪ್ರದೇಶಗಳಲ್ಲಿ ಅಲ್ಲ ಎಂದು ಹೇಳಿತು. ಮುಂದುವರಿದು, ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ (ಎನ್‌ಟಿಸಿಎ) ಹೊರಡಿಸಿದ ಮಾರ್ಗಸೂಚಿಗಳ ಪ್ರಕಾರ, ಬಫರ್ ವಲಯಗಳೊಳಗಿನ ಅರಣ್ಯೇತರ ಅಥವಾ ಅವನತಿ ಹೊಂದಿದ ಭೂಮಿಯಲ್ಲಿ ಸಫಾರಿಗಳನ್ನು ನಡೆಸಬೇಕು, ನಿರ್ಣಾಯಕ ಆವಾಸಸ್ಥಾನಗಳು ಮತ್ತು ಹುಲಿ ಕಾರಿಡಾರ್‌ಗಳನ್ನು ತಪ್ಪಿಸಬೇಕು ಎಂದು ನ್ಯಾಯಪೀಠ ಹೇಳಿತು. ಪ್ರಕರಣವೇನು? ಕಳೆದ ವರ್ಷದ ಅಕ್ಟೋಬರ್-ನವೆಂಬರ್​ನಲ್ಲಿ ಬಂಡೀಪುರ ಮತ್ತು ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಮಾನವ-ವನ್ಯಜೀವಿ ಸಂಘರ್ಷ ವ್ಯಾಪಕವಾಗಿ, ಹಲವು ಮಂದಿ ಪ್ರಾಣ ಕಳೆದುಕೊಂಡಿದ್ದರು. ಇದರಿಂದ, ಸಾರ್ವಜನಿಕವಾಗಿ ವ್ಯಾಪಕ ಟೀಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಸರ್ಕಾರ ಮೂರು ತಿಂಗಳಿಗೂ ಅಧಿಕ ಕಾಲ ಸಫಾರಿಗೆ ನಿಷೇಧ ಹೇರಿತ್ತು. ಆದರೆ, ಫೆಬ್ರವರಿಯಲ್ಲಿ ತಾಂತ್ರಿಕ ಸಮಿತಿಯ ಶಿಫಾರಸುಗಳು ಆಧಾರದ ಮೇಲೆ ಶೇ. 50ರಷ್ಟು ಸಫಾರಿಗೆ ಅನುಮತಿಸಿ ಅರಣ್ಯ ಇಲಾಖೆ ಫೆಬ್ರವರಿ 21ರಂದು ಆದೇಶ ಹೊರಡಿಸಿತ್ತು. ಇದನ್ನು ಪ್ರಶ್ನಿಸಿರುವ ಅರ್ಜಿದಾರರು, ಸಫಾರಿ ಚಟುವಟಿಕೆ ಸ್ಥಾಪಿತ ಸಂರಕ್ಷಣಾ ಮಾನದಂಡಗಳನ್ನು ಉಲ್ಲಂಘಿಸುವುದರಿಂದ ಪ್ರಮುಖ ಹುಲಿ ಆವಾಸ ಸ್ಥಾನಗಳಲ್ಲಿ ಹುಲಿ ಸಫಾರಿಗಳನ್ನು ಶಾಶ್ವತವಾಗಿ ನಿಷೇಧಿಸಬೇಕು. ಭಾರತದಲ್ಲಿ ಅರಣ್ಯ ರಕ್ಷಣೆ ಮತ್ತು ವನ್ಯಜೀವಿ ನಿರ್ವಹಣೆಗೆ ಸಂಬಂಧಿಸಿದ ಟಿ.ಎನ್. ಗೋದವರ್ಮನ್ ತಿರುಮುಲ್ಪಾಡ್ ಹಾಗೂ ಕೇಂದ್ರ ಸರ್ಕಾರದ ನಡುವಿನ ಪ್ರಕರಣದಲ್ಲಿ ಸುಪ್ರೀಂಕೋರ್ಟ್‌ ನೀಡಿರುವ ತೀರ್ಪನ್ನು ಪಾಲಿಸಬೇಕು ಎಂದು ಅರ್ಜಿದಾರರು ಕೋರಿದ್ದಾರೆ.

ವಾರ್ತಾ ಭಾರತಿ 15 Apr 2026 10:46 pm

ಡೆನ್ಮಾರ್ಕ್ ಬ್ಯಾಡ್ಮಿಂಟನ್ ದಂತಕತೆ ವಿಕ್ಟರ್ ಅಕ್ಸೆಲ್ಸೆನ್ ನಿವೃತ್ತಿ

ಚೆನ್ನೈ, ಎ.15: ಎರಡು ಬಾರಿಯ ಒಲಿಂಪಿಕ್ಸ್ ಹಾಗೂ ವಿಶ್ವ ಚಾಂಪಿಯನ್ ವಿಕ್ಟರ್ ಅಕ್ಸೆಲ್ಸೆನ್ ತನ್ನ 32ನೇ ವಯಸ್ಸಿನಲ್ಲಿ ವೃತ್ತಿಪರ ಬ್ಯಾಡ್ಮಿಂಟನ್‌ಗೆ ನಿವೃತ್ತಿ ಪ್ರಕಟಿಸಿದ್ದಾರೆ. ಬುಧವಾರದ ತನ್ನ ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ ಡೆನ್ಮಾರ್ಕ್ ಆಟಗಾರ ವಿಕ್ಟರ್, ‘‘ಇಂದು ನನಗೆ ಕಷ್ಟದ ದಿನವಾಗಿದೆ. ನನ್ನ ಬೆನ್ನುನೋವಿನಿಂದಾಗಿ ದೀರ್ಘಕಾಲ ಉನ್ನತ ಮಟ್ಟದಲ್ಲಿ ನನಗೆ ಸ್ಪರ್ಧಿಸಲು ಹಾಗೂ ತರಬೇತಿ ನಡೆಸಲು ಸಾಧ್ಯವಾಗುತ್ತಿಲ್ಲ. ಈ ಪರಿಸ್ಥಿತಿಯನ್ನು ಸ್ವೀಕರಿಸುವುದು ತುಂಬಾ ಕಷ್ಟಕರ. ನನ್ನ ದೇಹವು ಕ್ರೀಡೆಯಲ್ಲಿ ಮುಂದುವರಿಯಲು ಅವಕಾಶ ನೀಡುತ್ತಿಲ್ಲ’’ ಎಂದರು. ವಿಕ್ಟರ್ ಅಕ್ಸೆಲ್ಸೆನ್ 2010ರಲ್ಲಿ ಜೂನಿಯರ್ ವಿಶ್ವ ಚಾಂಪಿಯನ್ ಆಗುವ ಮೂಲಕ ಬೆಳಕಿಗೆ ಬಂದಿದ್ದರು. ಟೋಕಿಯೊ(2021)ಹಾಗೂ ಪ್ಯಾರಿಸ್(2024)ನಲ್ಲಿ ನಡೆದಿದ್ದ ಒಲಿಂಪಿಕ್ ಗೇಮ್ಸ್‌ಗಳಲ್ಲಿ ಸತತ ಚಿನ್ನದ ಪದಕಗಳನ್ನು ಗೆದ್ದಿದ್ದರು. 2016ರಲ್ಲಿ ರಿಯೋ ಡಿ ಜನೈರೊದಲ್ಲಿ ನಡೆದಿದ್ದ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದಿದ್ದರು. 2017 ಹಾಗೂ 2022ರಲ್ಲಿ ಎರಡು ವಿಶ್ವ ಚಾಂಪಿಯನ್ಶಿಪ್ ಪ್ರಶಸ್ತಿಗಳನ್ನು ಜಯಿಸಿದ್ದರು. 2021 ಹಾಗೂ 2023ರ ನಡುವೆ ಸತತ ಮೂರು ಬಾರಿ ಬಿಡಬ್ಲ್ಯುಎಫ್ ವರ್ಲ್ಡ್ ಟೂರ್ ಫೈನಲ್ಸ್‌ನಲ್ಲಿ ವಿಜಯಿಯಾಗಿದ್ದರು. ಮೂರು ಬಾರಿಯ ಯುರೋಪಿಯನ್ ಚಾಂಪಿಯನ್ ಅಕ್ಸೆಲ್ಸೆನ್ 2016ರಲ್ಲಿ ಡೆನ್ಮಾರ್ಕ್ ತಂಡವು ತನ್ನ ಚೊಚ್ಚಲ ಥಾಮಸ್ ಕಪ್ ಪ್ರಶಸ್ತಿ ಗೆಲ್ಲುವಲ್ಲಿ ನೇತೃತ್ವವಹಿಸಿದ್ದರು. ಪುರುಷರ ಬಿಡಬ್ಲ್ಯುಎಫ್ ರ್ಯಾಂಕಿಂಗ್‌ನಲ್ಲಿ ಒಟ್ಟು 183 ವಾರಗಳ ಕಾಲ ನಂ.1 ಆಟಗಾರನಾಗಿದ್ದರು. ಮಲೇಶ್ಯದ ಲೀ ಚೊಂಗ್ ವೀ(398)ಹಾಗೂ ಚೀನಾದ ಲಿನ್ ಡಾನ್(211) ನಂತರ ದೀರ್ಘಕಾಲ ಅಗ್ರ ಸ್ಥಾನದಲ್ಲಿದ್ದ ಮೂರನೇ ಆಟಗಾರನಾಗಿದ್ದಾರೆ. ‘‘ನಾನು ರಾಕೆಟ್ ಹಿಡಿದ ದಿನದಿಂದಲೇ ವಿಶ್ವದ ಅತ್ಯುತ್ತಮ ಆಟಗಾರನಾಗುವುದು ನನ್ನ ಕನಸಾಗಿತ್ತು. ನಾನು ಈ ಕ್ರೀಡೆಗಾಗಿ ಎಲ್ಲವನ್ನೂ ನೀಡಿದ್ದೇನೆ. ಇದು ನನಗೆ ಕೇವಲ ವೃತ್ತಿಜೀವನವಾಗಿರಲಿಲ್ಲ. ಇದು ನನ್ನ ಜೀವನವಾಗಿತ್ತು. ನಾನು ಯಾವುದೇ ಅವಕಾಶ ಬಿಟ್ಟುಕೊಟ್ಟಿಲ್ಲ’’ ಎಂದು ಕಳೆದ ವರ್ಷ ಅಕ್ಟೋಬರ್‌ನಲ್ಲಿ ಫ್ರೆಂಚ್ ಓಪನ್‌ನಿಂದ ಹೊರಗುಳಿದಿದ್ದ ಅಕ್ಸೆಲ್ಸೆನ್ ಹೇಳಿದ್ದಾರೆ.

ವಾರ್ತಾ ಭಾರತಿ 15 Apr 2026 10:46 pm

ವಾಡಿ | ಬೈಕ್ ಗೆ ಲಾರಿ ಢಿಕ್ಕಿ: ಆಸ್ಪತ್ರೆಗೆ ದಾಖಲಾಗಿದ್ದ ಯುವಕ ಮೃತ್ಯು

ವಾಡಿ: ಪಟ್ಟಣ ಸಮೀಪದ ಇಂಗಳಗಿ–ಶಹಾಬಾದ್ ಮಾರ್ಗ ಮಧ್ಯೆ ಎ.12ರಂದು ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಯುವಕ ಚಿಕಿತ್ಸೆ ಫಲಕಾರಿಯಾಗದೆ ಬುಧವಾರ ಮೃತಪಟ್ಟಿರುವ ಘಟನೆ ನಡೆದಿದೆ. ಇಂಗಳಗಿ ಗ್ರಾಮದ ತಾಂಡಾ ನಿವಾಸಿ ತುಕಾರಾಮ ದೇವು ಪವಾರ್ (25) ಮೃತ ದುರ್ದೈವಿ. ತಂದೆ-ತಾಯಿ, ಇಬ್ಬರು ಅಕ್ಕ ಹಾಗೂ ತಮ್ಮ ಸೇರಿದಂತೆ ಅಪಾರ ಬಂದುಬಳಗವನ್ನು ಅಗಲಿದ್ದಾರೆ. ಘಟನೆ ವಿವರ : ತುಕಾರಾಮ ಅವರು ಇಂಗಳಗಿ ಗ್ರಾಮದಿಂದ ಶಹಾಬಾದ್ ಕಡೆ ಬೈಕ್‌ನಲ್ಲಿ ತೆರಳುತ್ತಿದ್ದ ವೇಳೆ, ರಸ್ತೆಯಲ್ಲಿ ಮರಳು ತುಂಬಿದ ಟಿಪ್ಪರ್ ಮತ್ತು ಲಾರಿ ನಿಂತಿದ್ದರಿಂದ ಬೈಕ್ ಲಾರಿಗೆ ಢಿಕ್ಕಿ ಹೊಡೆದಿದೆ. ಢಿಕ್ಕಿಯ ತೀವ್ರತೆಗೆ ತಲೆಗೆ ಗಂಭೀರ ಗಾಯವಾಗಿದ್ದು, ಅವರನ್ನು ತಕ್ಷಣ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮೂರು ದಿನಗಳ ಕಾಲ ಸಾವು-ಬದುಕಿನ ಮಧ್ಯೆ ಹೋರಾಟ ನಡೆಸಿದ ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಕುಟುಂಬದ ಆಧಾರಸ್ತಂಭವಾಗಿದ್ದ ತುಕಾರಾಮ ಅವರ ಸಾವಿನಿಂದ ಇಡೀ ತಾಂಡಾದಲ್ಲಿ ದುಃಖದ ವಾತಾವರಣ ನಿರ್ಮಾಣವಾಗಿದೆ. ಎಸಿಸಿ ಕಂಪನಿಯಲ್ಲಿ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದ ಅವರು ಕುಟುಂಬ ನಿರ್ವಹಣೆಯ ಹೊಣೆ ಹೊತ್ತಿದ್ದರು. ಗ್ರಾಮಸ್ಥರು ಕೂಡ ಈ ದುರ್ಘಟನೆಗೆ ಬೇಸರ ವ್ಯಕ್ತಪಡಿಸಿ, ಲಾರಿ ಚಾಲಕನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಇಂಗಳಗಿ–ಶಹಾಬಾದ್ ರಸ್ತೆ ಕಿರಿದಾಗಿದೆ. ಭಾರಿ ವಾಹನಗಳ ಸಂಚಾರಕ್ಕೆ ನಿರ್ಬಂಧ ಹೇರಬೇಕು. ಅಕ್ರಮ ಮರಳು ಸಾಗಣೆ ಟಿಪ್ಪರ್‌ಗಳಿಗೆ ಕಡಿವಾಣ ಹಾಕಿ, ರಸ್ತೆಯಲ್ಲಿ ವಿದ್ಯುತ್ ದೀಪ ಅಳವಡಿಸಬೇಕು. -ಪ್ರೇಮಕುಮಾರ ರಾಠೋಡ, ತಾಂಡಾ ನಾಯಕ

ವಾರ್ತಾ ಭಾರತಿ 15 Apr 2026 10:46 pm

Kalaburagi | ಸಾವಳಗಿ (ಬಿ) ಗ್ರಾಮದಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಶಿಬಿರ ಉದ್ಘಾಟನೆ

ಕಲಬುರಗಿ: ಶ್ರೀ ಶರಣಬಸವೇಶ್ವರ ವಿಜ್ಞಾನ ಮಹಾವಿದ್ಯಾಲಯ ಹಾಗೂ ಗುಲ್ಬರ್ಗಾ ವಿಶ್ವವಿದ್ಯಾಲಯ ಸಂಯುಕ್ತ ಆಶ್ರಯದಲ್ಲಿ ರಾಷ್ಟ್ರೀಯ ಸೇವಾ ಯೋಜನೆ (ಎನ್‌ಎಸ್‌ಎಸ್) ವಾರ್ಷಿಕ ವಿಶೇಷ ಶಿಬಿರ 2025-26ರ ಅಂಗವಾಗಿ ಸಾವಳಗಿ (ಬಿ) ಗ್ರಾಮದಲ್ಲಿ “ನನ್ನ ಭಾರತಕ್ಕಾಗಿ ಯುವಕರು” ಹಾಗೂ “ಡಿಜಿಟಲ್ ಸಾಕ್ಷರತೆಗಾಗಿ ಯುವಕರು” ಎಂಬ ಶೀರ್ಷಿಕೆಯಡಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಶಿಬಿರವನ್ನು ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಿದ ಗುರುನಾಥ ಮಹಾಸ್ವಾಮಿಗಳು, ಪ್ರತಿಯೊಬ್ಬ ವಿದ್ಯಾರ್ಥಿಯಲ್ಲಿ ಸ್ವಚ್ಛತೆ, ಸೇವಾ ಮನೋಭಾವ ಹಾಗೂ ಸಾಮಾಜಿಕ-ಪರಿಸರ ಪ್ರಜ್ಞೆ ಬೆಳೆಸಿಕೊಳ್ಳುವುದು ಅಗತ್ಯ ಎಂದು ಹೇಳಿದರು. ಗ್ರಾಮೀಣ ಜೀವನಶೈಲಿ ಮತ್ತು ಸ್ವಚ್ಛತೆಯ ಕುರಿತು ಅರಿವು ಹೊಂದಿರುವುದು ಮುಖ್ಯವಾಗಿದ್ದು, ಆರೋಗ್ಯಕರ ಸಮಾಜ ನಿರ್ಮಾಣದಲ್ಲಿ ಯುವಕರ ಪಾತ್ರ ಮಹತ್ವದ್ದಾಗಿದೆ ಎಂದು ತಿಳಿಸಿದರು. ಇನ್ನೂ ದುಶ್ಚಟಗಳು ಗ್ರಾಮೀಣ ಜನರ ಜೀವನದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿವೆ. ಗ್ರಾಮಗಳನ್ನು ದುಶ್ಚಟಮುಕ್ತಗೊಳಿಸಲು ಜಾಗೃತಿ ಕಾರ್ಯಕ್ರಮಗಳು ಅಗತ್ಯವಾಗಿದ್ದು, ವಿದ್ಯಾರ್ಥಿಗಳ ಇಂತಹ ಪ್ರಯತ್ನ ಶ್ಲಾಘನೀಯ ಎಂದು ಅವರು ಅಭಿಪ್ರಾಯಪಟ್ಟರು. ಎನ್‌ಎಸ್‌ಎಸ್ ಗೌರವ ಸಲಹೆಗಾರರಾದ ಡಾ. ಲತಾದೇವಿ ಕರೆಕಲ್ ಮಾತನಾಡಿ, ಮಹಾತ್ಮ ಗಾಂಧೀಜಿ ಅವರ ಕನಸಿನಂತೆ ಹಳ್ಳಿಗಳ ಅಭಿವೃದ್ಧಿಯೇ ದೇಶದ ಅಭಿವೃದ್ಧಿ ಎಂದು ಹೇಳಿದರು. ಯುವಕರು ಸೇವಾ ಮನೋಭಾವ ಬೆಳೆಸಿ, ವ್ಯಕ್ತಿತ್ವ ವಿಕಸನದ ಜೊತೆಗೆ ಸಮಾಜ ಪರಿವರ್ತನೆಗೆ ಕಾರಣರಾಗಬೇಕು ಎಂದು ತಿಳಿಸಿದರು. ಕಾರ್ಯಕ್ರಮಕ್ಕೆ ಅಧ್ಯಕ್ಷತೆ ವಹಿಸಿದ್ದ ಡಾ. ಓಂ ಪ್ರಕಾಶ್ ಕೂಡ ಮಾತನಾಡಿದರು. ಕಾರ್ಯಕ್ರಮದಲ್ಲಿ ಎನ್‌ಎಸ್‌ಎಸ್ ಅಧಿಕಾರಿಗಳಾದ ಡಾ. ಬಸವರಾಜ್ ನರಬೋಳಿ ಪ್ರಾಸ್ತಾವಿಕ ಭಾಷಣ ಮಾಡಿದರು. ಡಾ. ರಮೇಶ್ ವಂದಿಸಿದರು. ವೇದಿಕೆಯಲ್ಲಿ ಪವನ ಹಾಗೂ ಡಾ. ಆನಂದ್ ಗುತ್ತೇದಾರ್ ಉಪಸ್ಥಿತರಿದ್ದರು. ಶಿಬಿರಾರ್ಥಿಗಳಾದ ಮಧುರಾ ಶೆಟ್ಟಿ ಅವರ ಪ್ರಾರ್ಥನೆ ಹಾಗೂ ಶಿಬಿರ ಗೀತೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಶ್ರೀದೇವಿ ಕಾರ್ಯಕ್ರಮ ನಿರೂಪಿಸಿದರು. ಸ್ಫೂರ್ತಿ ಅತಿಥಿಗಳನ್ನು ಪರಿಚಯಿಸಿದರು.

ವಾರ್ತಾ ಭಾರತಿ 15 Apr 2026 10:40 pm

ಮಧ್ಯಪ್ರಾಚ್ಯ ಸಂಘರ್ಷ| ನೇರ ಮಾತುಕತೆಗೆ ಇಸ್ರೇಲ್, ಲೆಬನಾನ್ ಒಪ್ಪಿಗೆ

ವಾಶಿಂಗ್ಟನ್, ಎ.15: ಅಮೆರಿಕದ ವಾಶಿಂಗ್ಟನ್‍ನಲ್ಲಿ ಮಂಗಳವಾರ ನಡೆದ ಉತ್ಪಾದಕ ಮಾತುಕತೆಯ ಬಳಿಕ ಮಹತ್ವದ ಬೆಳವಣಿಗೆಯಲ್ಲಿ ಇಸ್ರೇಲ್ ಮತ್ತು ಲೆಬನಾನ್ ನೇರ ಮಾತುಕತೆ ನಡೆಸಲು ಒಪ್ಪಿಕೊಂಡಿವೆ ಎಂದು ಅಮೆರಿಕದ ವಿದೇಶಾಂಗ ಇಲಾಖೆ ವಕ್ತಾರ ಟಾಮಿ ಪಿಗೊಟ್ ಹೇಳಿದ್ದಾರೆ. ಮಂಗಳವಾರ ಅಮೆರಿಕದ ನೇತೃತ್ವದಲ್ಲಿ ನಡೆದ ತ್ರಿಪಕ್ಷೀಯ ಮಾತುಕತೆಯಲ್ಲಿ ಎರಡೂ ನಿಯೋಗಗಳು ಪರಸ್ಪರ ಒಪ್ಪಿದ ಸಮಯ ಮತ್ತು ಸ್ಥಳದಲ್ಲಿ ನೇರ ಮಾತುಕತೆ ನಡೆಸಲು ಸಮ್ಮತಿಸಿದ್ದು ಇದು ಗಡಿಯಲ್ಲಿ ಉದ್ವಿಗ್ನತೆಯನ್ನು ತಗ್ಗಿಸುವ ನಿಟ್ಟಿನಲ್ಲಿ ಸಂಭಾವ್ಯ ಹೆಜ್ಜೆಯಾಗಿದೆ. ಇರಾನ್ ಬೆಂಬಲಿತ ಹಿಜ್ಬುಲ್ಲಾವನ್ನು ವಿರೋಧಿಸುವಲ್ಲಿ ಎರಡೂ ದೇಶಗಳು ಒಂದೇ ನಿಲುವು ಹೊಂದಿವೆ. ಇರಾನ್ ಬೆಂಬಲಿತ ಹಿಜ್ಬುಲ್ಲಾದ ಆಕ್ರಮಣದಿಂದ ಲೆಬನಾನ್ ಅನ್ನು ಸ್ವತಂತ್ರಗೊಳಿಸಲು ನಾವಿಬ್ಬರೂ ಒಗ್ಗೂಡುತ್ತೇವೆ' ಎಂದು ಇಸ್ರೇಲಿ ರಾಯಭಾರಿ ಯೆಚಿಲ್ ಲೀಟರ್ ಹೇಳಿದ್ದಾರೆ. ಮಾತುಕತೆ ರಚನಾತ್ಮಕವಾಗಿತ್ತು. ಇದೀಗ ಕದನ ವಿರಾಮ, ಸ್ಥಳಾಂತರಗೊಂಡ ನಾಗರಿಕರ ಮರಳುವಿಕೆ ಮತ್ತು ಲೆಬನಾನ್‍ಗೆ ತನ್ನ ಪ್ರದೇಶದ ಮೇಲೆ ಸಂಪೂರ್ಣ ಸಾರ್ವಭೌಮತ್ವದ ನಿಟ್ಟಿನಲ್ಲಿ ಕೆಲಸ ಮಾಡುವ ಅಗತ್ಯವಿದೆ ಎಂದು ಲೆಬನಾನ್ ರಾಯಭಾರಿ ನಡಾ ಹಮದೇಹ್ ಮೊವಾಡ್ ಸಭೆಯ ಬಳಿಕ ಹೇಳಿದ್ದಾರೆ.

ವಾರ್ತಾ ಭಾರತಿ 15 Apr 2026 10:34 pm

SSLC ಹಿಂದಿ ಪರೀಕ್ಷೆಗೆ ಗ್ರೇಡ್‌ ಬೇಡ, ಅಂಕ ನೀಡಲು ಹೈಕೋರ್ಟ್‌ ಆದೇಶ; ಕರ್ನಾಟಕ ಸರ್ಕಾರಕ್ಕೆ ತೀವ್ರ ಹಿನ್ನಡೆ

ಪ್ರಸಕ್ತ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಹಿಂದಿ ಸೇರಿದಂತೆ ತೃತೀಯ ಭಾಷಾ ವಿಷಯಗಳಿಗೆ 'ಗ್ರೇಡ್' ಬದಲಿಗೆ 'ಅಂಕ'ಗಳನ್ನೇ ನೀಡುವಂತೆ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಸ್ಪಷ್ಟ ನಿರ್ದೇಶನ ನೀಡಿದೆ. ಯುಪಿಎಸ್‌ಸಿ ಹಾಗೂ ಬ್ಯಾಂಕಿಂಗ್‌ನಂತಹ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಗ್ರೇಡಿಂಗ್ ಪರಿಗಣಿಸದ ಕಾರಣ ವಿದ್ಯಾರ್ಥಿಗಳ ಭವಿಷ್ಯಕ್ಕೆ ತೊಂದರೆಯಾಗಲಿದೆ ಎಂಬ ಅರ್ಜಿದಾರರ ವಾದವನ್ನು ನ್ಯಾಯಪೀಠ ಪುರಸ್ಕರಿಸಿದೆ. ಇದರಿಂದ ಗ್ರೇಡಿಂಗ್ ವ್ಯವಸ್ಥೆ ತರಲು ಮುಂದಾಗಿದ್ದ ಸರ್ಕಾರಕ್ಕೆ ಹಿನ್ನಡೆಯಾಗಿದೆ.

ವಿಜಯ ಕರ್ನಾಟಕ 15 Apr 2026 10:33 pm

ಲೆಬನಾನ್: ಇಸ್ರೇಲ್ ದಾಳಿಯಲ್ಲಿ ಮೂವರು ವೈದ್ಯಕೀಯ ಸಿಬ್ಬಂದಿ ಮೃತ್ಯು

ಬೈರೂತ್, ಎ.15: ದಕ್ಷಿಣ ಲೆಬನಾನ್‍ನಲ್ಲಿ ಬುಧವಾರ ಇಸ್ರೇಲ್‌ ಮಿಲಿಟರಿ ನಡೆಸಿದ ದಾಳಿಯಲ್ಲಿ ಕನಿಷ್ಠ ಮೂವರು ವೈದ್ಯಕೀಯ ಸಿಬ್ಬಂದಿ ಮೃತಪಟ್ಟಿರುವುದಾಗಿ ಲೆಬನಾನ್‍ನ ಆರೋಗ್ಯ ಇಲಾಖೆ ಹೇಳಿದೆ. ನಬಾತಿಯೆಹ್ ಜಿಲ್ಲೆಯ ಮೇಫಡೌನ್ ಪಟ್ಟಣದಲ್ಲಿ ವೈದ್ಯಕೀಯ ತಂಡವನ್ನು ಗುರಿಯಾಗಿಸಿ ಇಸ್ರೇಲ್ ಮಿಲಿಟರಿ ಸರಣಿ ದಾಳಿ ನಡೆಸಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಎಎಫ್‍ಪಿ ವರದಿ ಮಾಡಿದೆ.

ವಾರ್ತಾ ಭಾರತಿ 15 Apr 2026 10:31 pm

ಗುಜರಾತ್| ತಿಂಗಳುಗಳಿಂದಲೂ ಮನರೇಗಾ ಕೂಲಿ ಬಾಕಿ; ಕಾರ್ಮಿಕರಿಂದ ತೀವ್ರ ಆಕ್ರೋಶ

ಅಹ್ಮದಾಬಾದ್: ಗುಜರಾತಿನಲ್ಲಿ ಮನರೇಗಾ ಯೋಜನೆಯಡಿ ಕಾರ್ಮಿಕರಿಗೆ ಕಳೆದ ಐದಾರು ತಿಂಗಳುಗಳಿಂದಲೂ ಕೂಲಿ ಪಾವತಿಯಾಗಿಲ್ಲ. ಇದು ರಾಜ್ಯಾದ್ಯಂತ ಆಕ್ರೋಶವನ್ನು ಸೃಷ್ಟಿಸಿದ್ದು,ಗ್ರಾಮೀಣ ಪ್ರದೇಶಗಳಲ್ಲಿ ತೀವ್ರ ಸಂಕಷ್ಟಕ್ಕೆ ಕಾರಣವಾಗಿದೆ. ಬಾಕಿಯನ್ನು ತಕ್ಷಣವೇ ಪಾವತಿಸದಿದ್ದರೆ ರಾಜ್ಯಾದ್ಯಂತ ಪ್ರತಿಭಟನೆಯನ್ನು ನಡೆಸುವುದಾಗಿ ಕಾರ್ಮಿಕ ಸಂಘಟನೆಗಳು ಎಚ್ಚರಿಕೆ ನೀಡಿವೆ. ವೇತನ ವಿಳಂಬದ ದೂರುಗಳಿಂದ ಆರಂಭಗೊಂಡಿದ್ದ ಸಮಸ್ಯೆ ಈಗ ರಾಜ್ಯವ್ಯಾಪಿ ಬಿಕ್ಕಟ್ಟಾಗಿ ಮಾರ್ಪಟ್ಟಿದ್ದು, ಸೌರಾಷ್ಟ್ರದ ಉನಾ ಮತ್ತು ಗಿರಗಢಾದಂತಹ ಪ್ರದೇಶಗಳು ಅತ್ಯಂತ ಸಂಕಷ್ಟಕ್ಕೆ ತುತ್ತಾಗಿವೆ. ರಾಜ್ಯಾದ್ಯಂತ ಮನರೇಗಾ ಕಾರ್ಮಿಕರು ಮತ್ತು ಉದ್ಯೋಗಿಗಳು ನಿರಂತರವಾಗಿ ಕೆಲಸ ಮಾಡುತ್ತಿದ್ದರೂ ಐದಾರು ತಿಂಗಳುಗಳಿಂದಲೂ ಅವರಿಗೆ ವೇತನಗಳನ್ನು ಪಾವತಿಸಲಾಗಿಲ್ಲ. ಇದು ಕೇವಲ ವಿಳಂಬವಲ್ಲ,ಇದು ಆಡಳಿತಾತ್ಮಕ ಕಾರ್ಯ ವೈಖರಿ ಮತ್ತು ಹಣಕಾಸು ನಿರ್ವಹಣೆಯಲ್ಲಿ ಗಂಭೀರ ಲೋಪಗಳನ್ನು ತೋರಿಸುತ್ತಿದೆ. ಕಾರ್ಮಿಕರ ಕುಟುಂಬಗಳು ತೀವ್ರ ಹಣಕಾಸು ತೊಂದರೆಗೆ ಸಿಲುಕಿವೆ. ಮೂಲಭೂತ ಅಗತ್ಯಗಳಿಗೂ ಹಣವಿಲ್ಲದೆ ಜನರು ಸಾಲದ ಮೊರೆ ಹೋಗುತ್ತಿದ್ದಾರೆ ಎಂದು ಅಖಿಲ ಗುಜರಾತ್ ಮನರೇಗಾ ಉದ್ಯೋಗಿಗಳ ಯೂನಿಯನ್ ಅಧ್ಯಕ್ಷ ರಾಕೇಶ್‌ ಕುಮಾರ್‌ ಕಳವಳ ವ್ಯಕ್ತಪಡಿಸಿದರು.

ವಾರ್ತಾ ಭಾರತಿ 15 Apr 2026 10:25 pm

ಹೊಸಪೇಟೆ | 1,368 ಕೆಜಿ ಅಕ್ರಮ ಪಡಿತರ ಅಕ್ಕಿ ವಶ

ವಿಜಯನಗರ (ಹೊಸಪೇಟೆ): ನಗರದ ಬಡಾವಣೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಕ್ರಮವಾಗಿ ಸಂಗ್ರಹಿಸಲಾಗಿದ್ದ ಪಡಿತರ ಅಕ್ಕಿಯನ್ನು ಪೊಲೀಸರು ವಶಕ್ಕೆ ಪಡೆದ ಘಟನೆ ಬೆಳಕಿಗೆ ಬಂದಿದೆ. ಸಂಡೂರು ರಸ್ತೆಯ ಎಲ್.ಎಫ್.ಎಸ್ ಶಾಲೆಯ ಪಕ್ಕದ ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಪಡಿತರ ಅಕ್ಕಿಯನ್ನು ಸಂಗ್ರಹಿಸಿ ಸಾಗಾಣಿಕೆಗೆ ಸಿದ್ಧತೆ ನಡೆಸುತ್ತಿರುವ ಕುರಿತು ಮಾಹಿತಿ ದೊರಕಿದ ಹಿನ್ನೆಲೆಯಲ್ಲಿ ತಾಲೂಕು ಕಚೇರಿಯ ಆಹಾರ ನಿರೀಕ್ಷಕರು ಎ.14ರಂದು ದೂರು ನೀಡಿದ್ದರು. ಈ ದೂರಿನ ಮೇರೆಗೆ ಬಡಾವಣೆ ಪೊಲೀಸ್ ಠಾಣೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಸ್ಥಳಕ್ಕೆ ದಾಳಿ ನಡೆಸಿ, 4 ಚಕ್ರದ ಸರಕು ಸಾಗಣೆ ವಾಹನದಲ್ಲಿ ಇರಿಸಲಾಗಿದ್ದ 36 ಚೀಲಗಳಲ್ಲಿ ಒಟ್ಟು 1,368 ಕೆ.ಜಿ ಪಡಿತರ ಅಕ್ಕಿಯನ್ನು ಪತ್ತೆಹಚ್ಚಿದರು. ವಶಪಡಿಸಿಕೊಂಡ ಅಕ್ಕಿಯ ಅಂದಾಜು ಮೌಲ್ಯ 30,944 ರೂ. ಎಂದು ತಿಳಿದುಬಂದಿದೆ. ಅಕ್ಕಿ ಸಾಗಾಣಿಕೆಗೆ ಬಳಸಲಾಗುತ್ತಿದ್ದ ವಾಹನವನ್ನು ಕೂಡ ಪೊಲೀಸರು ವಶಕ್ಕೆ ಪಡೆದಿದ್ದು, ಈ ಸಂಬಂಧ ಬಡಾವಣೆ ಪೊಲೀಸ್ ಠಾಣೆಯಲ್ಲಿ ಗುನ್ನೆ ಸಂ. 41/26 ಅಡಿಯಲ್ಲಿ ಅಗತ್ಯ ವಸ್ತುಗಳ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಅಕ್ರಮ ಪಡಿತರ ವಸ್ತುಗಳ ಸಂಗ್ರಹ ಮತ್ತು ಸಾಗಾಣಿಕೆಯನ್ನು ತಡೆಯಲು ಕ್ರಮಗಳನ್ನು ಮತ್ತಷ್ಟು ಕಠಿಣಗೊಳಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ವಾರ್ತಾ ಭಾರತಿ 15 Apr 2026 10:25 pm

ಹುಬ್ಬಳ್ಳಿ-ಧಾರವಾಡ ಪಾಲಿಕೆಯಲ್ಲಿ ವಾರ್ಡ್ ಸಮಿತಿ ರಚನೆಗೆ ಕೋರಿ ಪಿಐಎಲ್; ಸರಕಾರಕ್ಕೆ ಹೈಕೋರ್ಟ್ ನೋಟಿಸ್

ಬೆಂಗಳೂರು: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ವ್ಯಾಪ್ತಿಯ ಎಲ್ಲ ವಾರ್ಡ್‌ಗಳಲ್ಲಿ ಸ್ಥಳೀಯ ವಾರ್ಡ್ ಸಮಿತಿಗಳು ಹಾಗೂ ಏರಿಯಾ ಸಭಾಗಳನ್ನು ರಚಿಸಲು ನಿರ್ದೇಶನ ಕೋರಿ ಸಲ್ಲಿಸಲಾದ ಅರ್ಜಿ ಸಂಬಂಧ ಸರಕಾರಕ್ಕೆ ಹೈಕೋರ್ಟ್ ನೋಟಿಸ್ ಜಾರಿಗೊಳಿಸಿದೆ. ಹುಬ್ಬಳ್ಳಿ-ಧಾರವಾಡ ವಾರ್ಡ್ ಸಮಿತಿ ಬಳಗ ಟ್ರಸ್ಟ್‌ನ ಸಂಚಾಲಕ ಲಿಂಗರಾಜ ಧಾರವಾಡ ಶೆಟ್ಟರ್ ಎಂಬುವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಹಾಗೂ ನ್ಯಾಯಮೂರ್ತಿ ಸಿ.ಎಂ. ಪೂಣಚ್ಚ ಅವರಿದ್ದ ವಿಭಾಗೀಯ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿತು. ಕೆಲ ಕಾಲ ಅರ್ಜಿ ಆಲಿಸಿದ ನ್ಯಾಯಪೀಠ ಪ್ರತಿವಾದಿಗಳಾದ ನಗರಾಭಿವೃದ್ದಿ ಇಲಾಖೆ, ಪೌರಾಡಳಿತ ನಿರ್ದೇಶನಾಲಯ, ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಆಯುಕ್ತರಿಗೆ ನೋಟಿಸ್ ಜಾರಿಗೊಳಿಸಿ ವಿಚಾರಣೆಯನ್ನು ಆಗಸ್ಟ್ 4ಕ್ಕೆ ಮುಂದೂಡಿತು. ಅರ್ಜಿದಾರರ ಮನವಿ ಏನು? ಸಂವಿಧಾನದ 73ನೇ ತಿದ್ದುಪಡಿಯಂತೆ 3 ಲಕ್ಷಕ್ಕೂ ಅಧಿಕ ಜನಸಂಖ್ಯೆ ಹೊಂದಿರುವ ಪಾಲಿಕೆಗಳಲ್ಲಿ ವಾರ್ಡ್ ಸಮಿತಿಗಳನ್ನು ರಚಿಸುವುದು ಕಡ್ಡಾಯವಾಗಿದೆ. ಅಲ್ಲದೇ ಕರ್ನಾಟಕ ಪೌರನಿಗಮಗಳ ಕಾಯ್ದೆ-1976ಕ್ಕೆ ರಾಜ್ಯ ಸರ್ಕಾರ 2011ರಲ್ಲಿ ತಂದಿರುವ ತಿದ್ದುಪಡಿಯಲ್ಲಿ ವಾರ್ಡ್ ಸಮಿತಿಗಳ ರಚನೆಯನ್ನು ಕಡ್ಡಾಯಗೊಳಿಸಲಾಗಿದೆ. ಈ ವಿಚಾರವಾಗಿ 2022ರಲ್ಲಿ ಪಾಲಿಕೆಯ ಮೇಯರ್, ವಿಶೇಷ ಸದನ ಸಮಿತಿಗೆ ಮನವಿ ಸಲ್ಲಿಸಲಾಗಿದೆ. 2023ರಲ್ಲಿ ಮುಖ್ಯಮಂತ್ರಿ, 2024ರಲ್ಲಿ ನಗರಾಭಿವೃದ್ದಿ ಸಚಿವರಿಗೆ ಮನವಿ ಸಲ್ಲಿಸಲಾಗಿದೆ. ಇದಲ್ಲದೆ ಸ್ಥಳೀಯ ಶಾಸಕರು, ಲೋಕಸಭಾ ಸದಸ್ಯರಿಗೂ ಹಲವು ಬಾರಿ ಮನವಿಯನ್ನು ಮಾಡಲಾಗಿದೆ. 2025ರಲ್ಲಿ ಅರ್ಜಿದಾರ ಸಂಸ್ಥೆಯು ಪಾಲಿಕೆಗೆ ಲೀಗಲ್ ನೋಟಿಸ್ ಸಹ ಕೊಟ್ಟಿದೆ. ಹೀಗಿದ್ದರೂ, ಈವರೆಗೂ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಆಕ್ಷೇಪಿಸಿರುವ ಅರ್ಜಿದಾರರು, ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ವಾರ್ಡ್ ಸಮಿತಿಗಳನ್ನು ರಚಿಸುವಂತೆ ನಿರ್ದೇಶನ ನೀಡಬೇಕು ಎಂದು ಕೋರಿದ್ದಾರೆ.

ವಾರ್ತಾ ಭಾರತಿ 15 Apr 2026 10:20 pm

ಹೊಸಪೇಟೆಯಲ್ಲಿ ಆಧುನಿಕ ಡುಪ್ಲೆಕ್ಸ್ ಅಂಗನವಾಡಿ ಉದ್ಘಾಟನೆ

ವಿಜಯನಗರ (ಹೊಸಪೇಟೆ): ನಗರದ 20ನೇ ವಾರ್ಡಿನಲ್ಲಿ ಆಧುನಿಕ ಸೌಲಭ್ಯಗಳೊಂದಿಗೆ ನಿರ್ಮಿಸಲಾದ ಡುಪ್ಲೆಕ್ಸ್ ಮಾದರಿಯ ನೂತನ ಅಂಗನವಾಡಿ ಕೇಂದ್ರವನ್ನು ಶಾಸಕರ ಪುತ್ರ ಹಾಗೂ ಸಮಾಜಸೇವಕರಾದ ಹೆಚ್.ಜಿ. ವಿರೂಪಾಕ್ಷ ಅವರು ಬುಧವಾರ ಉದ್ಘಾಟಿಸಿದರು. ನಗರದಲ್ಲಿ ಇದು ಎರಡನೇ ಡುಪ್ಲೆಕ್ಸ್ ಮಾದರಿಯ ಅಂಗನವಾಡಿಯಾಗಿದ್ದು, ಸ್ಥಳೀಯರ ಗಮನ ಸೆಳೆದಿದೆ. ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಇಂತಹ ಸುಸಜ್ಜಿತ ಕೇಂದ್ರಗಳು ಮಕ್ಕಳ ಸಮಗ್ರ ಅಭಿವೃದ್ಧಿಗೆ ಮಹತ್ವದ ಪಾತ್ರವಹಿಸುತ್ತವೆ. ಮಕ್ಕಳಿಗೆ ಆಟದ ಮೂಲಕ ಕಲಿಕೆ ನೀಡುವುದರ ಜೊತೆಗೆ ಪ್ರಾಥಮಿಕ ಹಂತದಲ್ಲೇ ಸಮಾನತೆ, ಸಾಮರಸ್ಯ ಹಾಗೂ ಮಾನವೀಯ ಮೌಲ್ಯಗಳನ್ನು ಬೆಳೆಸುವುದು ಅತ್ಯಂತ ಅಗತ್ಯ ಎಂದು ಹೇಳಿದರು. ಸಮಾಜದಲ್ಲಿ ಇರುವ ಅಸಮಾನತೆ ಹಾಗೂ ಜಾತಿ ವ್ಯವಸ್ಥೆಯನ್ನು ತೊರೆದು ಒಗ್ಗಟ್ಟಿನ ಸಮಾಜ ನಿರ್ಮಾಣದತ್ತ ಸಾಗಬೇಕು. ಡಾ. ಬಿ.ಆರ್. ಅಂಬೇಡ್ಕರ್ ಅವರು ರೂಪಿಸಿದ ಸಂವಿಧಾನದ ಆಶಯಗಳನ್ನು ಸದುಪಯೋಗಪಡಿಸಿಕೊಂಡು ದೇಶವನ್ನು ಮುಂದಕ್ಕೆ ಕೊಂಡೊಯ್ಯುವುದು ಪ್ರತಿಯೊಬ್ಬರ ಜವಾಬ್ದಾರಿ ಎಂದು ಅಭಿಪ್ರಾಯಪಟ್ಟರು. ನಂತರ ಮಾತನಾಡಿದ ನಗರಸಭಾ ಸದಸ್ಯ ಕಿರಣ್ ಕುಮಾರ್, ಹೊಸಪೇಟೆಯಲ್ಲಿ ಇದು ಎರಡನೇ ಡುಪ್ಲೆಕ್ಸ್ ಅಂಗನವಾಡಿಯಾಗಿದ್ದು, ನಗರಸಭೆ ವ್ಯಾಪ್ತಿಯ ಐದು ಅಂಗನವಾಡಿಗಳು ಈಗಲೂ ಬಾಡಿಗೆ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುತ್ತಿವೆ. ಬಾಡಿಗೆ ವೆಚ್ಚ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಹೊಸ ಕಟ್ಟಡಗಳ ಅಗತ್ಯವಿದ್ದು, ಶಾಸಕರ ಸಹಕಾರದಿಂದ ಈ ಕೇಂದ್ರ ನಿರ್ಮಾಣವಾಗಿದೆ ಎಂದರು. ಈ ಅಂಗನವಾಡಿ ಕೇಂದ್ರದಲ್ಲಿ ಮಕ್ಕಳಿಗೆ ಅಗತ್ಯವಾದ ಶೈಕ್ಷಣಿಕ, ಪೌಷ್ಠಿಕ ಹಾಗೂ ಆಟದ ಸೌಲಭ್ಯಗಳನ್ನು ಒದಗಿಸಲಾಗಿದ್ದು, ಸ್ಥಳೀಯರಿಗೆ ಮಹತ್ವದ ಮೂಲಸೌಕರ್ಯವಾಗಿ ಪರಿಣಮಿಸುವ ನಿರೀಕ್ಷೆ ಇದೆ. ಸಮಾರಂಭದಲ್ಲಿ ಸ್ಥಳೀಯ ಮುಖಂಡರು, ಅಧಿಕಾರಿಗಳು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು. ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ್ ಅವರ ನೆರವಿನಿಂದ ಮಾದರಿಯ ಅಂಗನವಾಡಿ ನಿರ್ಮಾಣಕ್ಕೆ ಅಗತ್ಯ ಅನುದಾನ ಬಿಡುಗಡೆಯಾಗಿದ್ದು, ಅವರಿಗೆ ಹೃತ್ಪೂರ್ವಕ ಧನ್ಯವಾದಗಳು ಸಲ್ಲಿಸುತ್ತೇವೆ ಎಂದು ನಗರಸಭೆ ಸದಸ್ಯ ಕಿರಣ್ ಕುಮಾರ್ ತಿಳಿಸಿದ್ದಾರೆ.

ವಾರ್ತಾ ಭಾರತಿ 15 Apr 2026 10:19 pm

ಮುಟ್ಟಿನ ರಜೆ ನೀತಿಯನ್ನು ಎಲ್ಲ ವಲಯಗಳಲ್ಲಿ ಕಟ್ಟುನಿಟ್ಟಾಗಿ ಜಾರಿಗೊಳಿಸಲು ರಾಜ್ಯ ಸರಕಾರಕ್ಕೆ ಹೈಕೋರ್ಟ್‌ ನಿರ್ದೇಶನ

ಬೆಂಗಳೂರು/ಧಾರವಾಡ : ವಿವಿಧ ಕಾರ್ಮಿಕ ಕಾಯ್ದೆಗಳಡಿ ನೋಂದಣಿಯಾಗಿರುವ ಉದ್ದಿಮೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಮಹಿಳಾ ನೌಕರರಿಗೆ ಋತುಚಕ್ರದ ಸಮಯದಲ್ಲಿ ಮಾಸಿಕ ಒಂದು ದಿನದ ವೇತನಸಹಿತ ರಜೆ ನೀಡುವ ಸಂಬಂಧ ರೂಪಿಸಲಾಗಿರುವ ನೀತಿಯನ್ನು ಕಟ್ಟುನಿಟ್ಟಾಗಿ ಸಂಘಟಿತ ಮತ್ತು ಅಸಂಘಟಿತ ವಲಯಗಳಲ್ಲಿ ಜಾರಿಗೊಳಿಸಲು ರಾಜ್ಯ ಸರಕಾರಕ್ಕೆ ಹೈಕೋರ್ಟ್‌ ನಿರ್ದೇಶಿಸಿದೆ. ಕರ್ನಾಟಕ ಗೆಜೆಟ್‌ನಲ್ಲಿ ಪ್ರಕಟಗೊಂಡಿರುವ ಹೊರತಾಗಿಯೂ ಋತುಚಕ್ರದ ರಜೆ ನೀತಿಯನ್ನು ಹೋಟೆಲ್‌ಗಳು ಮತ್ತಿತರ ಸಂಸ್ಥೆಗಳಲ್ಲಿ ಕಟ್ಟುನಿಟ್ಟಾಗಿ ಜಾರಿಗೆ ತರಲಾಗಿಲ್ಲ ಎಂದು ಆಕ್ಷೇಪಿಸಿ ಬೆಳಗಾವಿ ಜಿಲ್ಲೆಯ ಹೋಟೆಲ್ ಉದ್ಯೋಗಿ ಚಂದ್ರವ್ವ ಹಣಮಂತ ಗೋಕಾವಿ ಸಲ್ಲಿಸಿದ್ದ ರಿಟ್ ಅರ್ಜಿ ಕುರಿತು ಧಾರವಾಢದಲ್ಲಿ ವಿಚಾರಣೆ ಪೂರ್ಣಗೊಳಿಸಿ ಕಾಯ್ದಿರಿಸಿದ್ದ ತೀರ್ಪನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಬುಧವಾರ ಪ್ರಕಟಿಸಿತು‌. ಅರ್ಜಿ ಇತ್ಯರ್ಥಪಡಿಸಿರುವ ನ್ಯಾಯಪೀಠ, ಅಸಂಘಟಿತ ವಲಯ ಸೇರಿ ಎಲ್ಲ ವಲಯಗಳಲ್ಲೂ ಸರ್ಕಾರ ತನ್ನ ನೀತಿ ಜಾರಿಗೊಳಿಸುವುದನ್ನು ಖಾತ್ರಿಪಡಿಸಬೇಕು. ಸಂವಿಧಾನದಲ್ಲಿ ಅಡಕವಾಗಿರುವ ಜೀವಿಸುವ ಮತ್ತು ಸಮಾನತೆಯ ಹಕ್ಕನ್ನು ಮುಟ್ಟಿನ ರಜೆಯ ನೀತಿ ಮತ್ತು ಇದರ ಸಂಬಂಧ ವಿಧಾನಸಭೆಯಲ್ಲಿ ಮಂಡಿಸಲಾಗಿರುವ ಮಸೂದೆಯಲ್ಲಿ ವಿಸ್ತರಿಸಲಾಗಿದೆ ಎಂದು ಹೇಳಿದೆ. ಕಾನೂನಿನಲ್ಲಿ ಸಮಾನರಾದರೂ ಜೈವಿಕವಾಗಿ ಭಿನ್ನ: ಮಹಿಳೆ ಮತ್ತು ಪುರುಷ ಇಬ್ಬರೂ ಸಮಾನರು ಎಂದು ಕಾನೂನು ಹೇಳಿದರೂ ಜೈವಿಕ ಅನುಭವಗಳು ಅವರನ್ನು ಪ್ರತ್ಯೇಕಿಸುತ್ತವೆ. ಆದ್ದರಿಂದ, ಮುಟ್ಟಿನ ರಜೆಯ ಮನವಿಯು ವಿಶೇಷದ ವಿಚಾರವಲ್ಲ. ಬದಲಿಗೆ ಅದು ಘನತೆ, ನ್ಯಾಯಯುತ ಮತ್ತು ಮಹಿಳೆಯ ವಾಸ್ತವಿಕ ಬದುಕಿನ ಮಾನವೀಯ ಅರಿವು ಎಂದು ನ್ಯಾಯಾಲಯ ಆದೇಶದಲ್ಲಿ ಅಭಿಪ್ರಾಯಪಟ್ಟಿದೆ. ಕಾನೂನಿನ ದೃಷ್ಟಿಯಲ್ಲಿ ಪುರುಷರು ಮತ್ತು ಮಹಿಳೆಯರು ಸಮಾನರು; ಆದರೂ, ಅವರು ಜೈವಿಕವಾಗಿ ಭಿನ್ನರು. ಅಂತಹ ವ್ಯತ್ಯಾಸಗಳನ್ನು ಒಪ್ಪಿಕೊಳ್ಳುವುದು, ವಿಶೇಷವಾಗಿ ಆರೋಗ್ಯ, ಘನತೆ ಮತ್ತು ದೈಹಿಕ ಸ್ವಾಯತ್ತತೆಗೆ ಸಂಬಂಧಿಸಿದ ವಿಷಯಗಳಲ್ಲಿ, ಸಮಾನತೆಯ ಗ್ಯಾರಂಟಿಯನ್ನು ತುಳಿಯುವುದಕ್ಕೆ ಬದಲಾಗಿ ಗಣನೀಯ ಅರ್ಥವನ್ನು ನೀಡುವುದಾಗಿದೆ ಎಂದು ಹೈಕೋರ್ಟ್ ಹೇಳಿದೆ. ಪ್ರಕರಣವೇನು? ಬೆಳಗಾವಿಯ ಹೋಟೆಲ್ ಒಂದರಲ್ಲಿ ಅಡುಗೆ ಕೆಲಸಗಾರರಾಗಿರುವ ಚಂದ್ರವ್ವ ಹಣಮಂತ ಗೋಕಾವಿ ಮುಟ್ಟಿನ‌ ಸಂದರ್ಭದಲ್ಲಿ ರಜೆ ನೀಡುವಂತೆ ಕೋರಿದ್ದರು. ಆದರೆ, ರಜೆ ನೀಡಲು ಹೋಟೆಲ್ ಮಾಲೀಕರು ನಿರಾಕರಿಸಿದ್ದರು. ಇದರಿಂದ, ಕಾರ್ಮಿಕ ಇಲಾಖೆಗೆ ಮನವಿಪತ್ರ ಸಲ್ಲಿಸಿದ್ದ ಚಂದ್ರವ್ವ, ಮಹಿಳಾ ನೌಕರರಿಗೆ ಮುಟ್ಟಿನ ಸಂದರ್ಭದಲ್ಲಿ ಒಂದು ದಿನ ವೇತನಸಹಿತ ರಜೆ ನೀಡುವ ನೀತಿಯನ್ನು ಕಡ್ಡಾಯವಾಗಿ ಜಾರಿಗೊಳಿಸಬೇಕು. ಅಂಗಡಿ ಮತ್ತು ವಾಣಿಜ್ಯ ಸಂಸ್ಥೆಗಳ ಅಧಿನಿಯಮ ಹಾಗೂ ಕಾರ್ಖಾನೆಗಳ ಅಧಿನಿಯಮಕ್ಕೆ ಒಳಪಡುವ ಎಲ್ಲ ಸಂಸ್ಥೆಗಳಲ್ಲಿ ಸರಕಾರದ ನೀತಿಯ ಏಕರೂಪ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಬೇಕು. ರಜೆ ಪಡೆಯುವ ಮಹಿಳಾ ನೌಕರರಿಗೆ ವೇತನ ಕಡಿತ, ಬೆದರಿಕೆ ಅಥವಾ ಕೆಲಸದಿಂದ ದೂರವಿಡುವ ಕ್ರಮಗಳು ‌ನಡೆದರೆ ಅದನ್ನು ಕಾರ್ಮಿಕ ಕಾನೂನು ಉಲ್ಲಂಘನೆ ಎಂದು ಪರಿಗಣಿಸಿ ಕ್ರಮ ಜರುಗಿಸಬೇಕು. ತಳಮಟ್ಟದ ಮಹಿಳಾ ಕಾರ್ಮಿಕರಿಗೆ ಅವರ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಆಯೋಜಿಸಬೇಕು ಎಂದು ಕೋರಿದ್ದರು. ಆ ಮನವಿಗೆ ಯಾವುದೇ ಸ್ಪಂದನೆ ದೊರೆಯದ ಹಿನ್ನೆಲೆಯಲ್ಲಿ ಚಂದ್ರವ್ವ ಹೈಕೋರ್ಟ್‌‌ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿದಾರೆಯ ಪರವಾಗಿ ವಕೀಲೆ ದೀಕ್ಷಾ ಅಮೃತೇಶ್‌ ವಾದಿಸಿದ್ದರು. ಇನ್ನು ರಾಜ್ಯ ಸರ್ಕಾರದ ಋತುಚಕ್ರ ರಜೆ ನೀತಿ ಪ್ರಶ್ನಿಸಿ ಹಲವು ರಿಟ್ ಅರ್ಜಿಗಳು ಸಲ್ಲಿಕೆಯಾಗಿದ್ದು, ನ್ಯಾಯಮೂರ್ತಿ ಅನಂತ ರಾಮನಾಥ ಹೆಗ್ಡೆ ಅವರ ಏಕಸದಸ್ಯ ನ್ಯಾಯಪೀಠ ಈ ಎಲ್ಲ ಅರ್ಜಿಗಳ ವಿಚಾರಣೆ ನಡೆಸುತ್ತಿದೆ.

ವಾರ್ತಾ ಭಾರತಿ 15 Apr 2026 10:15 pm

ʼಜಾನಪದ ಶ್ರೀ ಪ್ರಶಸ್ತಿಗೆ ಬಿ.ಲಕ್ಷ್ಮಣ ಆಯ್ಕೆ

ಯಾದಗಿರಿ : ರಾಜ್ಯ ಸರಕಾರದ 2025-26ನೇ ಸಾಲಿನ ರಾಷ್ಟ್ರೀಯ ಪ್ರಶಸ್ತಿ, ಸಾಮಾಜಿಕ ಮತ್ತು ಸಾಂಸ್ಕೃತಿಕ ಪ್ರಶಸ್ತಿ , ಸಾಹಿತ್ಯ ಹಾಗೂ ನಾಟಕ ಪ್ರಶಸ್ತಿ, ಕಲಾ ಪ್ರಶಸ್ತಿ ಮತ್ತು ಸಂಗೀತ ನೃತ್ಯ ವಿಭಾಗದ ಪ್ರಶಸ್ತಿಗಳಿಗೆ ಹಲವು ಸಾಧಕರನ್ನು ಆಯ್ಕೆ ಮಾಡಿ ರಾಜ್ಯ ಸರಕಾರ ಆದೇಶ ಹೊರಡಿಸಿದ್ದು, ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಬಿ. ಲಕ್ಷ್ಮಣ ಅವರು ಜಾನಪದ ಶ್ರೀ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ದುಂದುಮೆಯ ದುಂದುಭಿ ಎಂಬ ಜನಪದ ಹಾಡಿನ ಮೂಲಕ ಪರಿಚಿತರಾಗಿರುವ ಲಕ್ಷ್ಮಣ ಅವರು, ಜಾನಪದ ಕಲೆ ಉಳಿವಿಗೆ ನೀಡಿದ ಕೊಡುಗೆಯನ್ನು ಪರಿಗಣಿಸಿ ಈ ಗೌರವಕ್ಕೆ ಪಾತ್ರರಾಗಿದ್ದಾರೆ. ಹಲವು ವರ್ಷಗಳಿಂದ ಗ್ರಾಮೀಣ ಭಾಗಗಳಲ್ಲಿ ಜನಪದ ಸಂಸ್ಕೃತಿಯನ್ನು ಜೀವಂತವಾಗಿರಿಸಲು ಅವರು ಶ್ರಮಿಸಿದ ಪ್ರಯುಕ್ತ ಸರ್ಕಾರ ಅವರನ್ನು ಗುರುತಿಸಿ ಪ್ರಶಸ್ತಿಗೆ ಆಯ್ಕೆ ಮಾಡಿದೆ.

ವಾರ್ತಾ ಭಾರತಿ 15 Apr 2026 10:14 pm

ದೇಶೀಯ ಗ್ರಾಹಕರಿಗೆ ಶೇ.100ರಷ್ಟು ಎಲ್‌ಪಿಜಿ, ಪಿಎನ್‌ಜಿ ಪೂರೈಕೆ: ಕೇಂದ್ರ ಸರಕಾರ ಭರವಸೆ

ಹೊಸದಿಲ್ಲಿ,ಎ.15: ಪಶ್ಚಿಮ ಏಶ್ಯಾ ಸಂಘರ್ಷದಿಂದ ಉಂಟಾಗಿರುವ ಇಂಧನ ವ್ಯತ್ಯಯಗಳ ನಡುವೆಯೂ ದೇಶದ ಗ್ರಾಹಕರ ಅಗತ್ಯಗಳಿಗೆ ಆದ್ಯತೆ ನೀಡುವ ಮೂಲಕ ಶೇ.100ರಷ್ಟು ಪೈಪ್ಡ್ ನೈಸರ್ಗಿಕ ಅನಿಲ (ಪಿಎನ್‌ಜಿ) ಮತ್ತು ದ್ರವೀಕೃತ ಪೆಟ್ರೋಲಿಯಂ ಅನಿಲ (ಎಲ್‌ಪಿಜಿ) ಪೂರೈಕೆ ಮಾಡುವುದಾಗಿ ಕೇಂದ್ರ ಸರಕಾರವು ಭರವಸೆ ನೀಡಿದೆ. ಪಶ್ಚಿಮ ಏಶ್ಯಾದಲ್ಲಿನ ಇತ್ತೀಚಿನ ಬೆಳವಣಿಗೆಗಳ ಕುರಿತು ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಜಂಟಿ ಕಾರ್ಯದರ್ಶಿ(ಮಾರುಕಟ್ಟೆ ಮತ್ತು ತೈಲ ಸಂಸ್ಕರಣಾಗಾರ) ಸುಜಾತಾ ಶರ್ಮಾ ಅವರು, ಇಂಧನ ಪೂರೈಕೆಯನ್ನು ಸ್ಥಿರಗೊಳಿಸಲು ಮತ್ತು ಅಗತ್ಯ ಸೇವೆಗಳನ್ನು ನಿರ್ವಹಿಸಲು ಸರಕಾರವು ಹಲವಾರು ಪರಿಣಾಮಕಾರಿ ಕ್ರಮಗಳನ್ನು ಜಾರಿಗೊಳಿಸಿದೆ ಎಂದು ಹೇಳಿದರು. ನಿಮಗೆ ತಿಳಿದಿರುವಂತೆ ಪಶ್ಚಿಮ ಏಶ್ಯಾ ಬಿಕ್ಕಟ್ಟು ಭಾರತದ ಇಂಧನ ಪೂರೈಕೆಗಳ ಮೇಲೆಯೂ ವ್ಯತಿರಿಕ್ತ ಪರಿಣಾಮಗಳನ್ನು ಬೀರಿದೆ. ಆದರೆ ಭಾರತ ಸರಕಾರವು ಹಲವಾರು ಪರಿಣಾಮಕಾರಿ ಕ್ರಮಗಳನ್ನು ತೆಗೆದುಕೊಳ್ಳುವ ಮೂಲಕ ದೇಶಿಯ ಪಿಎನ್‌ಜಿ ಮತ್ತು ಎಲ್‌ಪಿಜಿ ಗ್ರಾಹಕರಿಗೆ ಆದ್ಯತೆ ನೀಡುವ ಮೂಲಕ ಶೇ.100ರಷ್ಟು ಪೂರೈಕೆಯನ್ನು ಖಚಿತಪಡಿಸಲಾಗಿದೆ. ಇದರ ಜೊತೆಗೆ ಸಿಎನ್‌ಜಿ ಸಾಗಾಣಿಕೆಯನ್ನು ಶೇ.100ರಷ್ಟು ಖಚಿತಪಡಿಸಿಕೊಳ್ಳಲಾಗಿದೆ ಎಂದು ಶರ್ಮಾ ತಿಳಿಸಿದರು. ಸರಕಾರದ ಪ್ರಯತ್ನಗಳನ್ನು ಬೆಂಬಲಿಸಲು ದೇಶೀಯ ಸಂಸ್ಕರಣಾಗಾರಗಳು ಎಲ್‌ಪಿಜಿ ಉತ್ಪಾದನೆಯನ್ನು ಹೆಚ್ಚಿಸಿವೆ. ಇದೇ ವೇಳೆ ಬೇಡಿಕೆಯನ್ನು ನಿಭಾಯಿಸಲು ಸರಕಾರವು ಬುಕಿಂಗ್ ಅವಧಿಯನ್ನು ನಗರ ಪ್ರದೇಶಗಳಲ್ಲಿ 25 ದಿನಗಳಿಗೆ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ 45 ದಿನಗಳಿಗೆ ನಿಗದಿಗೊಳಿಸಿದೆ ಎಂದರು. ಈ ವ್ಯೆಹಾತ್ಮಕ ಕ್ರಮಗಳಿಂದಾಗಿ ವಾಣಿಜ್ಯ ಎಲ್‌ಪಿಜಿ ಪೂರೈಕೆಯನ್ನು ಶೇ.70ರಷ್ಟು ಹೆಚ್ಚಿಸಲು ಸಾಧ್ಯವಾಗಿದೆ. ಸರಕಾರವು ಆಸ್ಪತ್ರೆಗಳು, ಶಿಕ್ಷಣ ಸಂಸ್ಥೆಗಳು ಹಾಗೂ ಔಷಧಿಗಳು, ಉಕ್ಕು, ವಾಹನಗಳು ಮತ್ತು ಕೃಷಿಯಂತಹ ಕೈಗಾರಿಕೆಗಳು ಸೇರಿದಂತೆ ಪ್ರಮುಖ ವಲಯಗಳಿಗೂ ಆದ್ಯತೆಯನ್ನು ನೀಡಿದೆ. ಮಾ.14ರಿಂದ 1,34,000 ಟನ್‌ಗಳಷ್ಟು ವಾಣಿಜ್ಯ ಎಲ್‌ಪಿಜಿಯನ್ನು ಮಾರಾಟ ಮಾಡಲಾಗಿದೆ ಎಂದು ಶರ್ಮಾ ಹೇಳಿದರು. ದೇಶಿಯ ಎಲ್‌ಪಿಜಿ ಪೂರೈಕೆಯು ಸಹಜ ಸ್ಥಿತಿಯಲ್ಲಿದೆ. ಐದು ಕೆಜಿ ಸಿಲಿಂಡರ್‌ಗಳ ಸಂಖ್ಯೆಯನ್ನು ದ್ವಿಗುಣಗೊಳಿಸಲಾಗಿದೆ. ಮಾ.23ರಿಂದ ಐದು ಕೆ.ಜಿ.ಯ ಸುಮಾರು 14,60,000 ಸಿಲಿಂಡರ್‌ಗಳನ್ನು ಮಾರಾಟ ಮಾಡಲಾಗಿದೆ. ಸೀಮೆಎಣ್ಣೆ ಮತ್ತು ಕಲ್ಲಿದ್ದಲಿನಂತಹ ಪರ್ಯಾಯ ಇಂಧನ ಆಯ್ಕೆಗಳನ್ನೂ ಬಳಕೆದಾರರಿಗೆ ಲಭ್ಯವಾಗಿಸಲಾಗಿದೆ ಎಂದು ಅವರು ತಿಳಿಸಿದರು.

ವಾರ್ತಾ ಭಾರತಿ 15 Apr 2026 10:11 pm

Devadurga | ಮೊಸಳೆ ದಾಳಿಯಿಂದ ಕೈ ಕಳೆದುಕೊಂಡ ಕುರಿಗಾಹಿ

ದೇವದುರ್ಗ: ತಾಲೂಕಿನ ಶಾವಂತಗೇರ ಪಂಚಾಯತಿಯ ಹಿರೇರಾಯಕುಂಪಿ ಗ್ರಾಮದಲ್ಲಿ ಬುಧವಾರ ನಡೆದ ಭೀಕರ ಘಟನೆಯಲ್ಲಿ ಕುರಿಗಾಹಿ ಹೊನ್ನಗುಂಡಪ್ಪ (32) ಮೊಸಳೆ ದಾಳಿಗೆ ಒಳಗಾಗಿ ಕೈ ಕಳೆದುಕೊಂಡಿದ್ದಾರೆ. ಕುರಿ ಮೇಯಿಸಲು ಹೋಗಿದ್ದ ವೇಳೆ, ಕುರಿ ಮರಿಗಳಿಗೆ ನೀರು ತರಲು ಕೃಷ್ಣಾ ನದಿಗೆ ಇಳಿದಾಗ ನೀರಿನಲ್ಲಿ ಅಡಗಿದ್ದ ಮೊಸಳೆ ಅವರ ಕೈಗೆ ಕಚ್ಚಿಕೊಂಡಿದೆ. ಮೊಸಳೆ ಅವರನ್ನು ನದಿ ದಂಡೆಯಿಂದ ಸ್ವಲ್ಪ ದೂರ ಎಳೆದುಕೊಂಡು ಹೋಗಿದ್ದರೂ, ಬಿಡದ ಹಿನ್ನೆಲೆಯಲ್ಲಿ ಹೊನ್ನಗುಂಡಪ್ಪ ಜೋರಾಗಿ ಎಳೆದಾಗ ಕೈ ದೇಹದಿಂದ ಬೇರ್ಪಟ್ಟಿದೆ ಎಂದು ವಲಯ ಅರಣ್ಯಾಧಿಕಾರಿ ಅಲಿಮುದ್ದೀನ್ ತಿಳಿಸಿದ್ದಾರೆ. ಗಂಭೀರವಾಗಿ ಗಾಯಗೊಂಡ ಹೊನ್ನಗುಂಡಪ್ಪ ಅವರನ್ನು ತಕ್ಷಣ ರಾಯಚೂರಿನ ಒಪೆಕ್ ಆಸ್ಪತ್ರೆಗೆ ರವಾನಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸದ್ಯ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಂದೆ ಬಸ್ಸಪ್ಪ ಬಚ್ಚಲ್ ತಿಳಿಸಿದ್ದಾರೆ.

ವಾರ್ತಾ ಭಾರತಿ 15 Apr 2026 10:08 pm

IPL 2026- ಸೋಲಿನ ಸುಳಿಯಿಂದ ಹೊರಬರಲು ಪ್ರಯತ್ನಿಸುತ್ತಿರುವ ಮುಂಬೈ ಇಂಡಿಯನ್ಸ್ ಗೆ ಪಂಜಾಬ್ ಕಿಂಗ್ಸ್ ಸವಾಲು

MI Vs PBKS Match Preview- ಸತತ ಸೋಲುಗಳಿಂದ ಕಂಗೆಟ್ಟಿರುವ ಮುಂಬೈ ಇಂಡಿಯನ್ಸ್, ಗುರುವಾರ ವಾಂಖೆಡೆ ಕ್ರೀಡಾಂಗಣದಲ್ಲಿ ಬಲಿಷ್ಠ ಪಂಜಾಬ್ ಕಿಂಗ್ಸ್ ತಂಡವನ್ನು ಎದುರಿಸಲಿದೆ. ಗಾಯಾಳು ರೋಹಿತ್ ಶರ್ಮಾ ಅವರ ಅನುಪಸ್ಥಿತಿ ಮತ್ತು ಬುಮ್ರಾ ಅವರ ವಿಕೆಟ್ ಬರ ಮುಂಬೈಗೆ ದೊಡ್ಡ ಆತಂಕ ತಂದಿದೆ. ಮತ್ತೊಂದೆಡೆ, ಶ್ರೇಯಸ್ ಅಯ್ಯರ್ ನೇತೃತ್ವದ ಪಂಜಾಬ್ ತಂಡ ಭರ್ಜರಿ ಫಾರ್ಮ್‌ನಲ್ಲಿದ್ದು ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಬ್ಯಾಟಿಂಗ್ ಸ್ವರ್ಗವೆನಿಸಿದ ವಾಂಖೆಡೆ ಪಿಚ್‌ನಲ್ಲಿ ಮತ್ತೊಂದು ಹೈ-ಸ್ಕೋರಿಂಗ್ ಪಂದ್ಯ ನಿರೀಕ್ಷಿಸಲಾಗಿದ್ದು, ಗೆಲುವಿನ ಹಾದಿಗೆ ಮರಳಲು ಹಾರ್ದಿಕ್ ಪಾಂಡ್ಯ ಪಡೆ ಸಂಘಟಿತ ಪ್ರದರ್ಶನ ನೀಡಬೇಕಾದ ಅನಿವಾರ್ಯತೆ ಇದೆ.

ವಿಜಯ ಕರ್ನಾಟಕ 15 Apr 2026 10:05 pm

ನೌಕಾ ದಿಗ್ಬಂಧನ ಮುಂದುವರಿದರೆ ಕೆಂಪು ಸಮುದ್ರದಲ್ಲಿ ತಡೆ: ಇರಾನ್ ಎಚ್ಚರಿಕೆ

ಟೆಹರಾನ್, ಎ.15: ಅಮೆರಿಕದ ನೌಕಾ ದಿಗ್ಬಂಧನ ಮುಂದುವರಿದರೆ ಗಲ್ಫ್ ಮತ್ತು ಒಮನ್ ಸಮುದ್ರದೊಂದಿಗೆ ಕೆಂಪು ಸಮುದ್ರದ ಮೂಲಕ ವ್ಯಾಪಾರವನ್ನು ನಿರ್ಬಂಧಿಸುವುದಾಗಿ ಇರಾನ್‍ನ ಮಿಲಿಟರಿ ಬುಧವಾರ ಎಚ್ಚರಿಕೆ ನೀಡಿದೆ. ಅಮೆರಿಕ ತನ್ನ ದಿಗ್ಬಂಧನವನ್ನು ಮುಂದುವರಿಸಿದರೆ ಮತ್ತು ಇರಾನ್‍ನ ವಾಣಿಜ್ಯ ಹಡಗುಗಳು ಮತ್ತು ತೈಲ ಟ್ಯಾಂಕರ್‌ಗ ಳಿಗೆ ಅಭದ್ರತೆ ಸೃಷ್ಟಿಸಿದರೆ ಅದನ್ನು ಕದನ ವಿರಾಮ ಉಲ್ಲಂಘನೆಗೆ ಮುನ್ನುಡಿ ಎಂದು ಪರಿಗಣಿಸಲಾಗುತ್ತದೆ. ಇರಾನ್‍ನ ಪ್ರಬಲ ಸಶಸ್ತ್ರ ಪಡೆಗಳು ಅರೆಬಿಯನ್ ಕೊಲ್ಲಿ, ಒಮನ್ ಸಮುದ್ರ ಮತ್ತು ಕೆಂಪು ಸಮುದ್ರದಲ್ಲಿ ಯಾವುದೇ ರಫ್ತು ಮತ್ತು ಆಮದು ಮುಂದುವರಿಸಲು ಅವಕಾಶ ನೀಡುವುದಿಲ್ಲ' ಎಂದು ಇರಾನ್ ಮಿಲಿಟರಿ ಹೇಳಿಕೆಯಲ್ಲಿ ತಿಳಿಸಿದೆ.

ವಾರ್ತಾ ಭಾರತಿ 15 Apr 2026 10:04 pm

ಮುಸ್ಲಿಮರು ಒಬ್ಬರನ್ನು ನೋಡಿ ಮತ ನೀಡುತ್ತಾರೆ ಅಂದುಕೊಂಡಿದ್ದರೆ ಅಂತವರು ಆ ಭ್ರಮೆಯಿಂದ ಹೊರ ಬರಲಿ: ಸಲೀಂ ಅಹ್ಮದ್

ಕೊಪ್ಪಳ: ಮುಸ್ಲಿಂ ಸಮುದಾಯದವರು ಯಾರನ್ನಾದರೂ ನೋಡಿ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡುತ್ತಾರೆ ಎಂದು ಭಾವಿಸುವವರು ಭ್ರಮೆಯಲ್ಲಿ ಇದ್ದಾರೆ, ಅಂತಹವರು ತಮ್ಮ ಭ್ರಮೆಯಿಂದ ಹೊರಬರಬೇಕು ಎಂದು ವಿಧಾನ ಪರಿಷತ್ ಮುಖ್ಯ ಸಚೇತಕ ಸಲೀಂ ಅಹ್ಮದ್ ಹೇಳಿದರು. ಕೊಪ್ಪಳದಲ್ಲಿ ಖಾಸಗಿ ಕಾರ್ಯಕ್ರಮದ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ದಾವಣಗೆರೆ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಮುಸ್ಲಿಂ ಸಮುದಾಯಕ್ಕೆ ಟಿಕೆಟ್ ನೀಡುವಂತೆ ತಾವು ಸೇರಿದಂತೆ ಹಲವು ಮುಸ್ಲಿಂ ಮುಖಂಡರು ಮನವಿ ಮಾಡಿದ್ದೇವು ಎಂದು ಹೇಳಿದರು. ಆದರೆ, ಕಾಂಗ್ರೆಸ್ ಪಕ್ಷದ ಸಂಪ್ರದಾಯದಂತೆ, ಪಕ್ಷದ ನಾಯಕರ ನಿಧನವಾದ ಸಂದರ್ಭಗಳಲ್ಲಿ ಅವರ ಕುಟುಂಬ ಸದಸ್ಯರಿಗೆ ಟಿಕೆಟ್ ನೀಡುವ ನಿರ್ಧಾರ ಕೈಗೊಳ್ಳಲಾಗಿದ್ದು, ಇದೇ ರೀತಿಯಲ್ಲಿ ಈ ಕ್ಷೇತ್ರದಲ್ಲೂ ಟಿಕೆಟ್ ಹಂಚಿಕೆ ನಡೆದಿದೆ ಎಂದು ತಿಳಿಸಿದರು. ಎಲ್ಲರೂ ಒಪ್ಪಿಗೆಯೊಂದಿಗೆ ಈ ನಿರ್ಧಾರ ಕೈಗೊಳ್ಳಲಾಗಿದೆ. ಎರಡು ವರ್ಷಗಳ ಮಟ್ಟಿಗೆ ಮಾತ್ರ ಈ ನಿರ್ಧಾರವಾಗಿದ್ದು, ಮುಂದಿನ ಚುನಾವಣೆಯಲ್ಲಿ ಆ ಕ್ಷೇತ್ರವನ್ನು ಮುಕ್ತಗೊಳಿಸುವ ಭರವಸೆ ಪಕ್ಷದ ನಾಯಕರು ನೀಡಿದ್ದಾರೆ ಎಂದು ಹೇಳಿದರು. ಅಬ್ದುಲ್ ಜಬ್ಬಾರ್ ಅವರ ಅಮಾನತ್ತಿನ ವಿಚಾರಕ್ಕೆ ಸಂಬಂಧಿಸಿದಂತೆ ಮಾಹಿತಿ ಪಡೆದು ಬಳಿಕ ಪ್ರತಿಕ್ರಿಯೆ ನೀಡುವುದಾಗಿ ತಿಳಿಸಿದರು. ಸಚಿವ ಸಂಪುಟ ಪುನರ್‌ರಚನೆ ಕುರಿತು ಮಾತನಾಡಿದ ಅವರು, ಸಂಪುಟ ರಚನೆಯಾಗಿ ಮೂರು ವರ್ಷವಾದರೂ ಇನ್ನೂ ಪುನರ್‌ರಚನೆ ಆಗಿಲ್ಲ. ಆದರೆ ಒಳ್ಳೆಯದು ಎಂದು ಹೇಳಿದರು.

ವಾರ್ತಾ ಭಾರತಿ 15 Apr 2026 10:03 pm

ಹಾರ್ಮುಝ್‌ ಮೂಲಕ ಚೀನಾದ ಹಡಗುಗಳಿಗೆ ಅನುಮತಿಯಿಲ್ಲ: ಅಮೆರಿಕದ ಖಜಾನೆ ಕಾರ್ಯದರ್ಶಿ ಸ್ಕಾಟ್ ಬೆಸೆಂಟ್

ವಾಶಿಂಗ್ಟನ್, ಎ.15: ಇರಾನ್‍ನ ತೈಲವನ್ನು ಪಡೆಯಲು ಚೀನಾದ ನೌಕೆಗಳು ಹಾರ್ಮುಝ್‌ ಜಲಸಂಧಿಯ ಮೂಲಕ ಸಾಗಲು ಅನುಮತಿಸಲಾಗುವುದಿಲ್ಲ ಎಂದು ಅಮೆರಿಕದ ಖಜಾನೆ ಕಾರ್ಯದರ್ಶಿ ಸ್ಕಾಟ್ ಬೆಸೆಂಟ್ ಹೇಳಿದ್ದಾರೆ. ವಲಯದಲ್ಲಿ ಅಮೆರಿಕದ ಕ್ರಮಗಳು ಚೀನಾವು ಆಯಕಟ್ಟಿನ ಸಮುದ್ರ ಮಾರ್ಗದ ಮೂಲಕ ಇರಾನ್‍ನ ಕಚ್ಛಾತೈಲ ಪಡೆಯುವುದನ್ನು ತಡೆಯುತ್ತವೆ. ಆದ್ದರಿಂದ ಚೀನಾವು ಇರಾನ್‍ನ ತೈಲ ಪಡೆಯಲು ಸಾಧ್ಯವಾಗುವುದಿಲ್ಲ. ಅವರು ತೈಲವನ್ನು ಪಡೆಯಬಹುದು, ಆದರೆ ಇರಾನ್‍ನ ತೈಲ ಪಡೆಯಲಾಗದು' ಎಂದು ಜಲಸಂಧಿಯಲ್ಲಿ ಅಮೆರಿಕ ಕೈಗೊಂಡಿರುವ ಕ್ರಮಗಳನ್ನು ಉಲ್ಲೇಖಿಸಿ ಬೆಸೆಂಟ್ ಹೇಳಿದ್ದಾರೆ. ಇರಾನ್‍ನ ತೈಲ ರಫ್ತಿನ 90%ವನ್ನು ಚೀನಾವು ಖರೀದಿಸುತ್ತದೆ. ಇದು ಚೀನಾದ ವಾರ್ಷಿಕ ತೈಲ ಆಮದಿನ 8%ದಷ್ಟು ಆಗಿದೆ ಎಂದು ಬೆಸೆಂಟ್ ಹೇಳಿದ್ದಾರೆ.

ವಾರ್ತಾ ಭಾರತಿ 15 Apr 2026 10:00 pm

ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಇವಿಎಂ ಬದಲು ಮತಪತ್ರ ಬಳಕೆ; ವಿಧೇಯಕಕ್ಕೆ ರಾಜ್ಯಪಾಲರ ಅಂಕಿತ

ಬೆಂಗಳೂರು : ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಇವಿಎಂ ಬದಲಿಗೆ ಮತಪತ್ರ ಬಳಸುವ ಉದ್ದೇಶಕ್ಕಾಗಿ ರಾಜ್ಯ ಸರಕಾರ ರೂಪಿಸಿದ್ದ ವಿದೇಯಕಕ್ಕೆ ರಾಜ್ಯಪಾಲ ಥಾವರಚಂದ್ ಗೆಹ್ಲೋಟ್‌ ಅವರು ಅಂಕಿತ ಹಾಕಿದ್ದಾರೆ. 2026ನೆ ಸಾಲಿನ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್(ತಿದ್ದುಪಡಿ) ವಿಧೇಯಕಕ್ಕೆ ವಿಧಾನಮಂಡಲ ಅನುಮೋದನೆ ನೀಡಿತ್ತು. ರಾಜ್ಯಪಾಲರ ಅಂಕಿತದೊಂದಿಗೆ ಇದು ಕಾಯ್ದೆಯಾಗಲಿದ್ದು, ಮುಂದಿನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮತಪತ್ರ ಬಳಕೆಗೆ ಅನುಕೂಲವಾಗಲಿದೆ.

ವಾರ್ತಾ ಭಾರತಿ 15 Apr 2026 9:41 pm

ಇಸ್ಲಾಂ ಧಾರ್ಮಿಕ ಸೌಹಾರ್ದತೆ, ಸಹಬಾಳ್ವೆಯನ್ನು ಬೋಧಿಸಿದೆ: ಜಿಫ್ರಿ ಮುತ್ತುಕೋಯ ತಂಙಳ್

ಮಂಗಳೂರು, ಎ. 15: ಧಾರ್ಮಿಕ ಸೌಹಾರ್ದತೆಯಿಂದ ಹಾಗೂ ಸರ್ವಧರ್ಮೀಯರೊಂದಿಗೆ ಸಹಬಾಳ್ವೆಯಿಂದ ವರ್ತಿಸಬೇಕು ಎಂದು ಸಮಸ್ತ ಕೇರಳ ಜಂಇಯ್ಯತುಲ್ ಉಲಮಾದ ಅಧ್ಯಕ್ಷ ಸಯ್ಯಿದುಲ್ ಉಲಮಾ ಜಿಫ್ರಿ ಮುತ್ತು ಕೋಯ ತಂಙಳ್‌ ಅಭಿಪ್ರಾಯಪಟ್ಟಿದ್ದಾರೆ. ಕರ್ನಾಟಕ-ಕೇರಳ ಗಡಿ ಪ್ರದೇಶದಲ್ಲಿರುವ ಅಡ್ಕಸ್ಥಳದಲ್ಲಿ ಮಂಗಳವಾರ ರಾತ್ರಿ ಬಹು .ಮಶ್ಹೂರ್ ವಲಿಯುಲ್ಲಾಹಿ (ರ.ಅ) ದರ್ಗಾ ಶರೀಫ್‌ನ ನವೀಕೃತ ಕಟ್ಟಡದ ಲೋಕಾರ್ಪಣೆ ನೆರವೇರಿಸಿ ಮಾತನಾಡಿದರು. ಪ್ರವಾದಿಗಳು ಹಾಗೂ ಸಜ್ಜನರಾದ ಪೂರ್ವಿಕರ ಬದುಕು ಕೂಡಾ ಇಸ್ಲಾಂ ಧರ್ಮ ಬೋಧಿಸಿದಂತೆ ಇತ್ತು ಎಂದರು. ಮಹಾತ್ಮರನ್ನು ಗೌರವಿಸಬೇಕೆಂದು ಇಸ್ಲಾಮ್ ನಮಗೆ ಕಲಿಸಿ ಕೊಟ್ಟಿದೆ. ಮಹಾತ್ಮರ ಬದುಕು, ತ್ಯಾಗ ಮತ್ತು ಅವರ ಬದುಕಿನ ಸಂದೇಶಗಳನ್ನು ಎಲ್ಲರಿಗೂ ತಲುಪಿಸುವುದು ಅವರ ಹೆಸರಲ್ಲಿ ಉರೂಸ್ ಕಾರ್ಯಕ್ರಮದ ಆಯೋಜನೆ ಹಿಂದಿರುವ ಉದ್ದೇಶವಾಗಿದೆ ಎಂದು ನುಡಿದರು. ಉರೂಸ್ ಹಿನ್ನೆಲೆಯಲ್ಲಿ ಪ್ರವಚನ ಕಾರ್ಯಕ್ರಮಗಳನ್ನು ಆಯೋಜಿಸುವುದರ ಹಿಂದಿನ ಉದ್ದೇಶ ಜನರಿಗೆ ಸೌಹಾರ್ದದ ಸಂದೇಶ ಹಾಗೂ ಮಹಾತ್ಮರ ಬದುಕಿನ ಚರಿತ್ರೆಗಳನ್ನು ತಲುಪಿಸುವುದಾಗಿದೆ ಎಂದು ಹೇಳಿದರು. ಜಮಾಅತ್ ಕಮಿಟಿಯ ಗೌರವಾಧ್ಯಕ್ಷ ಮೀರ್ ಝಾಹಿದ್ ತಂಙಳ್ ಅಲ್ ಬುಖಾರಿ ಮಂಜೇಶ್ವರ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಅಸ್ಸಯ್ಯದ್ ಅಬ್ದುರ‌್ರಹ್ಮಾನ್ ಮಸೂದ್ ತಂಙಳ್ ಅಲ್ ಬುಖಾರಿ ಕೂರ, ಬೆದ್ರಂಪಳ್ಳ ನವಜೀವನ ವಿಶೇಷ ಶಾಲೆಯ ಅಸಿಸ್ಟೆಂಟ್ ಮ್ಯಾನೇಜರ್ ರೆ.ಫಾ.ಅಮಲ್ ಜೋಸ್, ಮಂಜೇಶ್ವರ ಶಾಸಕ ಎ.ಕೆ.ಎಂ.ಅಶ್ರಫ್ ಶುಭ ಹಾರೈಸಿದರು. ಕಾಸರಗೋಡು ಜಿ.ಪಂ ಸದಸ್ಯ ಸೋಮಶೇಖರ್ ಜೆ.ಎಸ್, ಎಣ್ಮಕಜೆ ಗ್ರಾ.ಪಂ ಸದಸ್ಯ ಐತಪ್ಪ ಕುಲಾಲ್ , ಅಡ್ಯನಡ್ಕ ಖತೀಬ್ ಮುಹಮ್ಮದ್ ಹಾರಿಸ್ ರಹ್ಮಾನಿ , ಉಕ್ಕುಡ ಮುದರ್ರಿಸ್ ಹಾಫಿಳ್ ಅಹ್ಮದ್ ಶೆರೀಫ್ ಕಾಮಿಲ್ ಸಖಾಫಿ ಶಾಫಿ ಅನ್ವರ್ ಪಾಲೆಕ್ಕಾಡ್, ಮಾಜಿ ಗ್ರಾಪಂ ಸದಸ್ಯ ಬಿ.ಎಸ್. ಗಾಂಬೀರ್, ಡಾ.ಶ್ರೀಪತಿ ಭಟ್ ಕಜಂಪಾಡಿ , ಅಡ್ಕಸ್ಥಳ ಸದರ್ ಮುಅಲ್ಲಿಂ ಮುಹಮ್ಮದ್ ಮದನಿ, ಮುಹಝ್ಝಿನ್ ಮುಝಮ್ಮಿಲ್ ಸ ಅದಿ , ಜಮಾಅತ್ ಕಮಿಟಿ ಉಪಾಧ್ಯಕ್ಷ ಆಮು ಎ ವೇದಿಕೆಯಲ್ಲಿ ಉಪಸ್ಥಿತರಿದ್ದರು. 8 ದಿನಗಳ ಧಾರ್ವಿಕ ಪ್ರವಚನ ಕಾರ್ಯಕ್ರಮದಲ್ಲಿ ಮೊದಲ ದಿನ 8 ಹಾಮಿದ್ ಯಾಸೀನ್ ಜೌಹರಿ ಅಲ್ ಮದನಿ ಕೊಲ್ಲಂ ಪ್ರವಚನ ನೀಡಿದರು. ಅಡ್ಕಸ್ಥಳ ಬದ್ರಿಯಾ ಜುಮಾ ಮಸ್ಜಿದ್ ಜಮಾಅತ್ ಕಮಿಟಿಯ ಅಧ್ಯಕ್ಷ ಸಿಎ. ಅಬ್ದುಲ್ಲ ಮಾದುಮೂಲೆ ಸ್ವಾಗತಿಸಿದರು. ಅಡ್ಕಸ್ಥಳ ಖತೀಬ್ ಹಾಫಿಳ್ ರಾಝಿಮ್ ಯಮಾನಿ ಪ್ರಾಸ್ತಾವಿಕವಾಗಿ ಮಾತನಾಡಿದರು. ನಿಝಾಮ್ ಅನ್ಸಾರಿ ಕಾರ್ಯಕ್ರಮ ನಿರೂಪಿಸಿದರು.     

ವಾರ್ತಾ ಭಾರತಿ 15 Apr 2026 9:31 pm

CBSE Result-2026| ಕಣಚೂರು ಪಬ್ಲಿಕ್ ಸ್ಕೂಲ್‌ಗೆ ಶೇ.100 ಫಲಿತಾಂಶ

ಕೊಣಾಜೆ: ದೇರಳಕಟ್ಟೆಯ ಕಣಚೂರು ಪಬ್ಲಿಕ್ ಸ್ಕೂಲ್‌ 2025–26ನೇ ಸಾಲಿನ ಸಿಬಿಎಸ್ಇ 10ನೇ ತರಗತಿ ಪರೀಕ್ಷೆಯಲ್ಲಿ ಶೇ.100 ಫಲಿತಾಂಶವನ್ನು ಸಾಧಿಸಿದೆ. ಒಟ್ಟು 70 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಎಲ್ಲಾ ವಿದ್ಯಾರ್ಥಿಗಳೂ ಉತ್ತೀರ್ಣರಾಗಿದ್ದಾರೆ. ಈ ಫಲಿತಾಂಶದಲ್ಲಿ 27 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ (ಪ್ರಥಮ ಶ್ರೇಣಿ ವಿಶಿಷ್ಟ), 31 ವಿದ್ಯಾರ್ಥಿಗಳು ಪ್ರಥಮ ಶ್ರೇಣಿ ಹಾಗೂ 12 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿ ಪಡೆದು ಗಮನಾರ್ಹ ಸಾಧನೆ ಮಾಡಿದ್ದಾರೆ. ಶಾಲೆಯ ಟಾಪರ್‌ಗಳಾಗಿ ಫಾತಿಮತ್ ಶಾರ್ಮಿನ್ ಎಂ.ಟಿ (93.2%), ಶಿಯಾ ಫಾತಿಮತ್ (90%) ಹಾಗೂ ಲಿಯಾ ಶಕೀನಾ (90%) ಅವರು ಅತ್ಯುತ್ತಮ ಸಾಧನೆ ಮಾಡಿದ್ದಾರೆ ಎಂದು ಪ್ರಕಟನೆ‌ ತಿಳಿಸಿದೆ. ಈ ಅತ್ಯುತ್ತಮ ಸಾಧನೆಗೆ ಶಾಲಾ ಆಡಳಿತ ಮಂಡಳಿ, ಸಂಚಾಲಕರು, ಪ್ರಾಂಶುಪಾಲರು, ಶಿಕ್ಷಕ ಹಾಗೂ ಶಿಕ್ಷಕೇತರ ವೃಂದದವರು ಸಂತಸ ವ್ಯಕ್ತಪಡಿಸಿ ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ. ವಿದ್ಯಾರ್ಥಿಗಳ ಶ್ರಮ, ಶಿಕ್ಷಕರ ಮಾರ್ಗದರ್ಶನ ಹಾಗೂ ಪೋಷಕರ ಸಹಕಾರವೇ ಈ ಸಾಧನೆಗೆ ಕಾರಣವೆಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ವಾರ್ತಾ ಭಾರತಿ 15 Apr 2026 9:26 pm

ಕರ್ನಾಟಕದ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ EVM ರದ್ದು, ಬ್ಯಾಲೆಟ್ ಪೇಪರ್ ಮರುಜಾರಿ! ರಾಜ್ಯಪಾಲರು ಅಸ್ತು

ಗ್ರಾಮ ಪಂಚಾಯತಿ ಸೇರಿ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಇವಿಎಂ ರದ್ದುಗೊಳಿಸಿ ಬ್ಯಾಲೆಟ್ ಪೇಪರ್ ಮರುಜಾರಿಗೆ ತರಲು ರಾಜ್ಯಪಾಲರು ಅಸ್ತು ಎಂದಿದ್ದಾರೆ. ‘ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ (ತಿದ್ದುಪಡಿ) ವಿಧೇಯಕಕ್ಕೆ ಅಂಕಿತ ಹಾಕಿದ್ದಾರೆ. ಈ ಮೂಲಕ ಎಲ್ಲಾ ಸ್ಥಳೀಯ ಸಂಸ್ಥೆ ಚುನಾವಣೆಗಳಿಗೆ

ವಿಜಯ ಕರ್ನಾಟಕ 15 Apr 2026 9:25 pm

ಕರುಳು ಹಿಂಡುವ ವಿಡಿಯೋ: ಸತ್ತ ಮರಿಯಾನೆಯ ಜೊತೆ ತಾಯಿ ಆನೆಯ ರೋಧನೆ

ದುಃಖ, ನೋವು, ಸಾವು, ಪ್ರೀತಿ ಕೇವಲ ಮನುಷ್ಯರಿಗೆ ಮಾತ್ರ ಸೀಮಿತವಲ್ಲ. ಪ್ರಾಣಿಗಳಿಗೂ ಈ ಎಲ್ಲಾ ಭಾವನೆಗಳು ಇರುತ್ತವೆ. ಅವುಗಳು ಕೂಡ ತಮ್ಮವರನ್ನು ಕಳೆದುಕೊಂಡಾಗ ಮನುಷ್ಯರಂತೆಯೇ ಕಣ್ಣೀರು ಹಾಕುತ್ತವೆ ಎಂಬುದಕ್ಕೆ ಸಾಕ್ಷಿಯಾದ ಅತ್ಯಂತ ಹೃದಯವಿದ್ರಾವಕ ವಿಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ. ಸತ್ತ ತನ್ನ ಮರಿಯನ್ನು ಹೇಗಾದರೂ ಮಾಡಿ ಎಬ್ಬಿಸಲೇಬೇಕು ಎಂದು ತಾಯಿ ಆನೆಯೊಂದು ನಡೆಸುವ

ಒನ್ ಇ೦ಡಿಯ 15 Apr 2026 9:20 pm

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ರಾಷ್ಟ್ರೀಯ, ರಾಜ್ಯ ಪ್ರಶಸ್ತಿ ಪ್ರಕಟ

► ʼಬಸವ ಪುರಸ್ಕಾರʼಕ್ಕೆ ಸಿದ್ದರಾಮ ಶರಣರು ಬೆಲ್ದಾಳ, ʼಮಹಾವೀರ ಪ್ರಶಸ್ತಿʼಗೆ ಭಾನುಕೀರ್ತಿ ಭಟ್ಟಾರಕ ಸ್ವಾಮೀಜಿ ಆಯ್ಕೆ► ಸಾಮಾಜಿಕ, ಸಾಂಸ್ಕೃತಿಕ ವಿಭಾಗದ ಪ್ರಶಸ್ತಿಗೆ ಡಾ.ಸಿದ್ದನಗೌಡ ಪಾಟೀಲ್ ಭಾಜನ

ವಾರ್ತಾ ಭಾರತಿ 15 Apr 2026 9:19 pm

ನಾರಿ ಶಕ್ತಿ ವಂದನ್ ಮಸೂದೆ ಜಾರಿಗೆ ದ.ಕ. ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾದಿಂದ ಸಹಿ ಸಂಗ್ರಹ

ಮಂಗಳೂರು, ಎ.15: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರವು ಐತಿಹಾಸಿಕ ‘ನಾರಿ ಶಕ್ತಿ ವಂದನ್ ಅಧಿನಿಯಮ’ವನ್ನು ಜಾರಿ ಹಿನ್ನೆಲೆಯಲ್ಲಿ, ದಕ್ಷಿಣ ಕನ್ನಡ ಜಿಲ್ಲಾ ಮಹಿಳಾ ಮೋರ್ಚಾದ ವತಿಯಿಂದ ಬುಧವಾರ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದಲ್ಲಿರುವ ಸಂಸದ ಬ್ರಿಜೇಶ್ ಚೌಟ ಅವರ ಕಚೇರಿಯಲ್ಲಿ ಸಹಿ ಸಂಗ್ರಹ ಅಭಿಯಾನ ನಡೆಯಿತು. ವಿವಿಧ ಕೆಲಸಗಳ ನಿಮಿತ್ತ ಸಂಸದ ಚೌಟ ಅವರನ್ನು ಭೇಟಿ ಮಾಡಲು ಬಂದಿದ್ದ ಮಹಿಳೆಯರು, ಕೇಂದ್ರ ಸರ್ಕಾರದ ಐತಿಹಾಸಿಕ ‘ನಾರಿ ಶಕ್ತಿ ವಂದನ್ ಅಧಿನಿಯಮ’ ಜಾರಿಯಾಗುತ್ತಿರುವ ಸಂದರ್ಭದಲ್ಲಿ ಮಹಿಳೆಯರು ಸ್ವಯಂ ಪ್ರೇರಿತರಾಗಿ ಸಹಿ ಸಂಗ್ರಹ ಅಭಿಯಾನದಲ್ಲಿ ಭಾಗವಹಿಸಿ, ಮಹಿಳೆಯರಿಗೆ ರಾಜಕೀಯದಲ್ಲಿ ಹೆಚ್ಚಿನ ಪ್ರಾತಿನಿಧ್ಯ ನೀಡುತ್ತಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ. ಕಳೆದ ದಶಕದಲ್ಲಿ ಭಾರತವು ಕೇವಲ ಮಹಿಳಾ ಕಲ್ಯಾಣದ ಹಂತದಿಂದ ಮಹಿಳಾ ನೇತೃತ್ವದ ಅಭಿವೃದ್ಧಿಯತ್ತ ದೃಢವಾದ ದಾಪುಗಾಲು ಹಾಕಿದ್ದು, ‘ನಾರಿ ಶಕ್ತಿ’ಯ ನವೋದಯಕ್ಕೆ ಸಾಕ್ಷಿಯಾಗಿದೆ ಎಂದು ಪಾಲ್ಗೊಂಡ ಮಹಿಳೆಯರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸಂಸತ್ತಿನ ವಿಶೇಷ ಕಲಾಪದಲ್ಲಿ ಈ ಅಧಿನಿಯಮವು ಚರ್ಚೆಯಾಗುತ್ತಿರುವುದು ದೇಶದ ಇತಿಹಾಸದಲ್ಲಿ ಒಂದು ಸುವರ್ಣ ಅಧ್ಯಾಯವಾಗಲಿದೆ. ಮಹಿಳಾ ಸಬಲೀಕರಣದಿಂದ ಮಹಿಳೆಯರ ನೇತೃತ್ವದ ಅಭಿವೃದ್ಧಿ ಎಂಬ ಆಶಯ ದೊಂದಿಗೆ ಕೇಂದ್ರ ಸರ್ಕಾರವು ಕೈಗೊಂಡಿರುವ ಈ ಕ್ರಾಂತಿಕಾರಿ ಹೆಜ್ಜೆಗೆ ನಮ್ಮೆಲ್ಲರ ಬೆಂಬಲವಿದೆ ಎಂದು ಇದೇವೇಳೆ ಮಹಿಳೆಯರು ಹೇಳಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಸಂಸದ ಬ್ರಿಜೇಶ್ ಚೌಟ ಅವರು, ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಮಹತ್ವದ ಹೆಜ್ಜೆಯನ್ನಿಟ್ಟಿದ್ದು, ‘ನಾರಿ ಶಕ್ತಿ ವಂದನ್ ಅಧಿನಿಯಮ’ ಎಂದು ಕರೆಯಲಾಗುವ ಮೀಸ ಲಾತಿ ಕಾನೂನಿನ ತಿದ್ದುಪಡಿಗಳನ್ನು ತರಲು ಮುಂದಾಗಿರುವುದು ಐತಿಹಾಸಿಕ ನಿರ್ಧಾರ. ಕಳೆದ ಒಂದು ದಶಕದಲ್ಲಿ ಭಾರತವು ಕೇವಲ ಮಹಿಳಾ ಕಲ್ಯಾಣದ ಹಂತದಿಂದ ಮಹಿಳಾ ನೇತೃತ್ವದ ಅಭಿವೃದ್ಧಿಯತ್ತ ದೃಢವಾದ ದಾಪುಗಾಲು ಹಾಕಿದೆ. ಇಂದು ಭಾರತೀಯ ಮಹಿಳೆಯರು ಕೇವಲ ಮನೆಗೆ ಸೀಮಿತವಾಗದೆ, ನಿರ್ಧಾರ ಕೈಗೊಳ್ಳುವ ಉನ್ನತ ಸ್ಥಾನಗಳಲ್ಲಿ ಕುಳಿತು ದೇಶದ ಬದಲಾವಣೆಗೆ ಮುನ್ನುಡಿ ಬರೆಯುತ್ತಿದ್ದಾರೆ. ಸಂಸತ್ತಿನಿಂದ ಹಿಡಿದು ಬಾಹ್ಯಾಕಾಶ ದವರೆಗೆ ಮಹಿಳೆಯರ ಪಾಲ್ಗೊಳ್ಳುವಿಕೆ ಹೆಚ್ಚುತ್ತಿರುವುದು ’ನಾರಿ ಶಕ್ತಿ’ಯ ನವೋದಯಕ್ಕೆ ಸಾಕ್ಷಿಯಾಗಿದೆ ಎಂದು ಹೇಳಿದ್ದಾರೆ. ಸಂಸತ್ತಿನ ವಿಶೇಷ ಕಲಾಪದಲ್ಲಿ ಈ ಅಧಿನಿಯಮದ ಚರ್ಚೆಗೆ ಅವಕಾಶ ಕಲ್ಪಿಸಿರುವುದು ಮಹಿಳಾ ಸಬಲೀಕರಣದ ಇತಿಹಾಸದಲ್ಲಿ ಒಂದು ಸುವರ್ಣ ಅಧ್ಯಾಯವಾಗಲಿದೆ. ಮಹಿಳಾ ಸಬಲೀಕರಣದಿಂದ ಮಹಿಳೆಯರ ನೇತೃತ್ವದ ಅಭಿವೃದ್ಧಿ ಎಂಬ ಆಶಯದೊಂದಿಗೆ ಕೇಂದ್ರ ಸರ್ಕಾರವು ಕೈಗೊಂಡಿರುವ ಈ ಕ್ರಾಂತಿಕಾರಿ ಹೆಜ್ಜೆಗೆ ಪೂರ್ಣ ರೀತಿಯ ಬೆಂಬಲವಿದ್ದು, ಈ ಮಸೂದೆ ಕಾನೂನು ಆಗಿ ಜಾರಿಗೆ ಬರುವ ದಿನಗಳು ಕೂಡ ಹತ್ತಿರವಾಗಿರುವುದು ಬಹಳ ಸಂತೋಷದ ವಿಚಾರ ಎಂದು ಚೌಟ ಸಂತಸ ವ್ಯಕ್ತಪಡಿಸಿದ್ದಾರೆ. ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಮಾಜಿ ಮೇಯರ್ ಪ್ರೇಮಾನಂದ ಶೆಟ್ಟಿ, ಮಹಿಳಾ ಮೋರ್ಚಾದ ಅಧ್ಯಕ್ಷ ಮಂಜುಳಾ ರಾವ್, ಜಿಲ್ಲಾ ವಕ್ತಾರ ಮಾಧವ್ ಮಾವೆ, ರಾಜ್ಯ ಮಹಿಳಾ ಮೋರ್ಚಾ ಕಾರ್ಯದರ್ಶಿ ಶ್ವೇತಾ ಪೂಜಾರಿ, ಕಾರ್ಯಕಾರಣಿ ಸದಸ್ಯೆ ಸುಲೋಚನಾ ಭಟ್, ಸಮಾಜ ಸೇವಕರಾದ ಹಿಲ್ಡಾ ರಾಯಪ್ಪನ್, ನಿಕಟ ಪೂರ್ವ ಮನಪಾ ಸದಸ್ಯರು, ಮುಖಂಡರು ಪಂಚಾಯತ್ ಸದಸ್ಯರು ಸೇರಿದಂತೆ ಹಲವರು ಉಪಸ್ಥಿತರಿದ್ದರು.     

ವಾರ್ತಾ ಭಾರತಿ 15 Apr 2026 9:19 pm

ಎ.17ರಂದು ನೇರ ಸಂದರ್ಶನ

ಉಡುಪಿ, ಎ.15: ನಗರದ ಕಿನ್ನಿಮೂಲ್ಕಿ ಬಸ್‌ನಿಲ್ದಾಣದ ಬಳಿಯ ಕೈಗಾರಿಕಾ ಸಹಕಾರ ಸಂಘದ ಪ್ರಧಾನ ಕಛೇರಿಯ ಎರಡನೇ ಮಹಡಿಯ ಲ್ಲಿರುವ ಗ್ರೋಸ್ಪೈರ್ ಗ್ರೂಪ್ ಇಲ್ಲಿ ಎ.17ರಂದು ಬೆಳಗ್ಗೆ 10:30ಕ್ಕೆ ವಿವಿಧ ಹುದ್ದೆಗಳಿಗೆ ನೇರ ಸಂದರ್ಶನ ನಡೆಯಲಿದೆ. ಪಿಯುಸಿ, ಡಿಪ್ಲೋಮಾ ಮತ್ತು ಇತರೆ ಪದವಿ ವಿದ್ಯಾರ್ಹತೆಯೊಂದಿಗೆ ಉತ್ತೀರ್ಣರಾದ ಅಭ್ಯರ್ಥಿಗಳು ತಮ್ಮ ಅಂಕಪಟ್ಟಿ, ಸ್ವವಿವರವುಳ್ಳ ರೆಸ್ಯೂಮ್/ಸಿವಿ ಹಾಗೂ ಆಧಾರ್ ಕಾರ್ಡ್ ಪ್ರತಿಯೊಂದಿಗೆ ನೇರ ಸಂದರ್ಶನದಲ್ಲಿ ಭಾಗವಹಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಉದ್ಯೋಗ ವಿನಿಮಯ ಕಛೇರಿ, ಜಿಲ್ಲಾಧಿಕಾರಿ ಸಂಕೀರ್ಣ, ರಜತಾದ್ರಿ ಮಣಿಪಾಲ ಉಡುಪಿ ಅಥವಾ ದೂರವಾಣಿ ಸಂಖ್ಯೆ: 8105618291, 9945856670 ಹಾಗೂ 9901472710 ಅನ್ನು ಸಂಪರ್ಕಿಸಬಹುದು ಎಂದು ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ಉದ್ಯೋಗಾಧಿಕಾರಿಗಳ ಪ್ರಕಟಣೆ ತಿಳಿಸಿದೆ.

ವಾರ್ತಾ ಭಾರತಿ 15 Apr 2026 9:14 pm

ದ್ವಿತೀಯ ಪಿಯುಸಿ ಪರೀಕ್ಷೆ-2: ನೋಂದಣಿಗೆ ಅವಕಾಶ

ಉಡುಪಿ, ಎ.15: 2026ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ-2ಕ್ಕೆ ನೋಂದಣಿಯನ್ನು ಈಗಾಗಲೇ ಪ್ರಾರಂಭಿಸಲಾಗಿದ್ದು, ಎ.17ರವರೆಗೆ ನೋಂದಣಿಗೆ ಅವಕಾಶ ಕಲ್ಪಿಸಲಾಗಿದೆ. 2026ರಲ್ಲಿ ರೆಗ್ಯೂಲರ್ ವಿದ್ಯಾರ್ಥಿಗಳಾಗಿ ನೋಂದಾಯಿಸಿಕೊಂಡು ಮತ್ತು ಮೊದಲನೇ ಪರೀಕ್ಷೆಯಲ್ಲಿ ಫಲಿತಾಂಶ ಪೂರ್ಣಗೊಳಿಸದ ವಿದ್ಯಾರ್ಥಿಗಳು ಯಾವುದೇ ಶುಲ್ಕ ಪಾವತಿಸದೇ ಆನ್‌ಲೈನ್ -http://tinyurl.com/mvp9k6es-ಲಿಂಕ್ ಮೂಲಕ ಅಥವಾ ಅಭ್ಯರ್ಥಿಗಳು ಸಂಬಂಧಿಸಿದ ಕಾಲೇಜಿನ ಪ್ರಾಂಶುಪಾಲರನ್ನು ಸಂಪರ್ಕಿಸಿ ಪಿಯು ಪರೀಕ್ಷಾ ಪೋರ್ಟಲ್‌ನಲ್ಲಿ ಪರೀಕ್ಷೆ-2ಕ್ಕೆ ನೋಂದಾಯಿಸಿಕೊಳ್ಳಬಹುದಾಗಿದೆ. ಜಿಲ್ಲೆಯ ಎಲ್ಲಾ ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲರು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿ ಪರೀಕ್ಷೆ-2ಕ್ಕೆ ನೋಂದಾಯಿಸುವಂತೆ ನೋಡಿಕೊಳ್ಳಬೇಕು.ಪರೀಕ್ಷೆಗೆ ನೋಂದಾಯಿಸಿಕೊಂಡ ವಿದ್ಯಾರ್ಥಿಗಳಿಗೆ ಪ್ರವೇಶಪತ್ರಗಳು ನಿಗದಿತ ಸಮಯದಲ್ಲಿ ಸಂಬಂಧಿಸಿದ ಕಾಲೇಜಿನ ಪ್ರಾಂಶುಪಾಲರ ಲಾಗಿನ್‌ನಲ್ಲಿ ಲಭ್ಯವಿರಲಿದೆ. ದ್ವಿತೀಯ ಪಿಯುಸಿ ಪರೀಕ್ಷೆ-2ರ ದಿನಾಂಕಗಳನ್ನು ಮರು ನಿಗದಿ ಪಡಿಸಲಾಗಿದೆ. ಪರೀಕ್ಷೆಗಳು ಎ.30ರಿಂದ ಪ್ರಾರಂಭವಾಗಲಿದ್ದು, ವಿದ್ಯಾರ್ಥಿ ಗಳು ಮಂಡಲಿಯ ಜಾಲತಾಣದ ಪಿಯುಸಿ ವಿದ್ಯಾರ್ಥಿ ಅಂಕಣದಲ್ಲಿ ಲಭ್ಯವಿರುವ ಮಾದರಿ ಪ್ರಶ್ನೆ ಪತ್ರಿಕೆಗಳ ಅನ್ವಯ ಪರೀಕ್ಷೆ-2ಕ್ಕೆ ಯಾವುದೇ ಆತಂಕಗಳಿಲ್ಲದೆ ಹಾಜರಾಗುವಂತೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಲಿಯ ಪ್ರಕಟಣೆ ತಿಳಿಸಿದೆ.

ವಾರ್ತಾ ಭಾರತಿ 15 Apr 2026 9:11 pm

ಭಾರತೀಯರ ಹೃದಯಾಂತರಂಗದಲ್ಲಿ ಮೋದಿ ನೆಲೆಸಿರುವುದು ಏಕೆ : ಕಾರಣ ವಿವರಿಸಿದ ಕುಮಾರಸ್ವಾಮಿ

PM Modi Leadership : ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಶ್ರೀ ಭೈರವೈಕ್ಯ ಪರಮಪೂಜ್ಯ ಜಗದ್ಗುರುಗಳಾದ ಪದ್ಮಭೂಷಣ ಶ್ರೀ ಶ್ರೀ ಶ್ರೀ ಡಾ. ಬಾಲಗಂಗಾಧರನಾಥ ಮಹಾಸ್ವಾಮೀಜಿ ಅವರ ಶ್ರೀ ಗುರು ಭೈರವೈಕ್ಯ ಮಂದಿರವನ್ನು ರಾಷ್ಟ್ರದ ಜನಪ್ರಿಯ ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿಯವರು ಲೋಕಾರ್ಪಣೆ ಮಾಡಿದ ದಿವ್ಯಕ್ಷಣಕ್ಕೆ ಸಾಕ್ಷಿ ಆಗುವ ಭಾಗ್ಯ ನನ್ನದಾಯಿತು. ಮೋದಿಯವರ ಜನಪ್ರಿಯತೆಗೆ ಅವರ ಪರಿಶ್ರಮ, ಬದ್ದತೆ ಮೂಲ ಕಾರಣ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

ವಿಜಯ ಕರ್ನಾಟಕ 15 Apr 2026 9:09 pm

ತುಳು ಸಂಸ್ಕೃತಿಯ ಉಳಿವಿಗೆ ತುಳುವರ ಆಚರಣೆ, ನಂಬಿಕೆ ಕಾರಣ: ಡಾ.ಮಾಧವ

ತುಳುಕೂಟ ಬಿಸು ಪರ್ಬ

ವಾರ್ತಾ ಭಾರತಿ 15 Apr 2026 9:01 pm

ಎಲ್‌ಎಸ್‌ಜಿ ವಿರುದ್ಧ ಆರ್‌ಸಿಬಿ ಪರ ಫೀಲ್ಡಿಂಗ್‌ಗೆ ಬಾರದ ವಿರಾಟ್‌.. ಕೊಹ್ಲಿ ಈ ಲಿಸ್ಟ್‌ಗೆ ಸೇರಿರುವುದು ಇದೇ ಮೊದಲ ಬಾರಿ

Virat Kohli: ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬುಧವಾರ (ಏಪ್ರಿಲ್ 15) ನಡೆಯುತ್ತಿರುವ ಐಪಿಎಲ್‌ 2026ರ 23ನೇ ಪಂದ್ಯದಲ್ಲಿ ಆರ್‌ಸಿಬಿ ಮತ್ತು ಎಲ್‌ಎಸ್‌ಜಿ ಮುಖಾಮುಖಿಯಾಗಿವೆ. ಆದರೆ, ವಿರಾಟ್ ಕೊಹ್ಲಿ ಅವರು ಆರಂಭಿಕ ಪಂದ್ಯದ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆದಿಲ್ಲ. ಬದಲಾಗಿ, ಅವರನ್ನು ಆರ್‌ಸಿಬಿ ತಂಡವು 'ಇಂಪ್ಯಾಕ್ಟ್ ಪ್ಲೇಯರ್' ಆಗಿದ್ದಾರೆ. ಐಪಿಎಲ್ ಇತಿಹಾಸದಲ್ಲಿ ಕೊಹ್ಲಿ ಅವರು ಇಂಪ್ಯಾಕ್ಟ್ ಪ್ಲೇಯರ್ ಆಗಿ

ಒನ್ ಇ೦ಡಿಯ 15 Apr 2026 9:01 pm

ʼರಾಷ್ಟ್ರೀಯ ಬಸವ ಪುರಸ್ಕಾರ'ಕ್ಕೆ ಡಾ.ಸಿದ್ಧರಾಮ ಬೆಲ್ದಾಳ್ ಶರಣರು ಆಯ್ಕೆ

ಬೀದರ್ : ರಾಜ್ಯ ಸರಕಾರದ 2025-26ನೇ ಸಾಲಿನ ರಾಷ್ಟ್ರೀಯ ಪ್ರಶಸ್ತಿ, ಸಾಮಾಜಿಕ ಮತ್ತು ಸಾಂಸ್ಕೃತಿಕ ಪ್ರಶಸ್ತಿ , ಸಾಹಿತ್ಯ ಹಾಗೂ ನಾಟಕ ಪ್ರಶಸ್ತಿ, ಕಲಾ ಪ್ರಶಸ್ತಿ ಮತ್ತು ಸಂಗೀತ ನೃತ್ಯ ವಿಭಾಗದ ಪ್ರಶಸ್ತಿಗಳಿಗೆ ಹಲವು ಸಾಧಕರನ್ನು ಆಯ್ಕೆ ಮಾಡಿ ರಾಜ್ಯ ಸರಕಾರ ಆದೇಶ ಹೊರಡಿಸಿದ್ದು, ಬಸವ ರಾಷ್ಟ್ರೀಯ ಪುರಸ್ಕಾರಕ್ಕೆ ಶರಣ ಡಾ.ಸಿದ್ದರಾಮ ಬೆಲ್ದಾಳ್ ಶರಣರು ಆಯ್ಕೆಯಾಗಿದ್ದಾರೆ. ಡಾ. ಬೆಲ್ದಾಳ ಶರಣರು ಬಸವಾದಿ ಶರಣರ ಹಲವಾರು ಪುಸ್ತಕಗಳು ಬರೆದಿದ್ದಾರೆ. ನಾಡಿನಲ್ಲಿ ಬಸವ ತತ್ವ ಸಿದ್ದಾಂತ ಅಧ್ಯಯನ ಮಾಡಿ ಸಾಹಿತ್ಯ ಬರೆದು ದೇಶದ ತುಂಬಾ ಪ್ರಚಾರ ಮಾಡುತ್ತಿರುವ ಬಸವ ಪ್ರೇಮಿಯಾಗಿದ್ದಾರೆ. ಕಳೆದ ವರ್ಷ ಅವರು ಬರೆದ 'ಸತ್ಯ ಶರಣರ ಸತ್ಯ ಶೋಧ' ಸುಮಾರು ಹದಿನೈದು ನೂರು ಪುಟದ ಪುಸ್ತಕವಾಗಿದೆ. ಶೀಘ್ರದಲ್ಲಿಯೇ ಮುಖ್ಯಮಂತ್ರಿಗಳಿಂದ ದಿನಾಂಕ ಪಡೆದು ಪ್ರಶಸ್ತಿ ಪ್ರಧಾನ ಸಮಾರಂಭವನ್ನು ಆಯೋಜನೆ ಮಾಡಲಾಗುವುದು ಎಂದು ಸಚಿವ ಶಿವರಾಜ ತಂಗಡಗಿ ಅವರು ಹೇಳಿದ್ದಾರೆ.

ವಾರ್ತಾ ಭಾರತಿ 15 Apr 2026 9:00 pm

ಸಜೀಪ| ಹಲ್ಲೆ ಪ್ರಕರಣ: ಆರೋಪಿಗಳಿಗೆ ನಿರೀಕ್ಷಣಾ ಜಾಮೀನು ಮಂಜೂರು

ಮಂಗಳೂರು: ಬಂಟ್ವಾಳ ತಾಲೂಕಿನ ಸಜೀಪ ತಲೆಮಗುರು ಎಂಬಲ್ಲಿ ಮಸೀದಿ ವಿಚಾರದಲ್ಲಿ ಇತ್ತಂಡಗಳ ನಡುವೆ ಹೊಡೆದಾಟವಾಗಿ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಶೌಕತ್ ಅಲಿ, ಇಸಾಕ್, ಸಫೀಕ್, ಯಾಕುಬ್, ಮೊಹಮ್ಮದ್ ಮುಸ್ತಫಾ, ನಾಸಿರ್, ನಿಜಾಲ್ ಎಂಬವರ ವಿರುದ್ಧ ಕೊಲೆಯತ್ನ ಪ್ರಕರಣ ಹಾಗೂ ಯಾಕುಬ್, ಸಫೀಕ್, ಇಸಾಕ್, ಸಫ್ವಾನ್ ಹಾಗೂ ಅಶ್ರಫ್ ಸಾಹೇಬ್ ಎಂಬವರ ವಿರುದ್ಧ ಹಲ್ಲೆ ಪ್ರಕರಣ ದಾಖಲಾಗಿದೆ. ಇಂದು ಮಂಗಳೂರಿನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಎಲ್ಲಾ ಆರೋಪಿಗಳಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿ ಆದೇಶಿಸಿದೆ. ಆರೋಪಿತರ ಪರವಾಗಿ ಮಂಗಳೂರಿನ ಯುವ ನ್ಯಾಯವಾದಿ ಅನ್ಸಾರ್ ಮೂಲರಪಟ್ಣ, ಅನಸ್ ದಿಲ್ದಾರ್ ಹಾಗೂ ಕವಿತಾ ಮುರುಗೇಶ್ ವಾದ ಮಂಡಿಸಿದ್ದರು.

ವಾರ್ತಾ ಭಾರತಿ 15 Apr 2026 8:59 pm

ಸಂತ್ರಸ್ತರ ಬದುಕಿನೊಂದಿಗೆ ಎಂಆರ್‌ಪಿಎಲ್ ಚೆಲ್ಲಾಟ : ಜೋಕಟ್ಟೆ ನಾಗರಿಕ ಹೋರಾಟ ಸಮಿತಿ ಆರೋಪ

► ಹಸಿರು ವಲಯಕ್ಕೆ ಭೂಸ್ವಾಧೀನಕ್ಕೆ ವಿಳಂಬ ಮಾಡಿದರೆ ಮೇ 1ರಿಂದ ಧರಣಿ ಸತ್ಯಾಗ್ರಹ

ವಾರ್ತಾ ಭಾರತಿ 15 Apr 2026 8:58 pm

ಹೈ-ವೋಲ್ಟೇಜ್ ಪಂದ್ಯಕ್ಕೆ ಸಿದ್ಧವಾಗಿದೆ ಕೋಲ್ಕತ್ತಾ; ಗೆಲುವಿನ ಹುಡುಕಾಟದಲ್ಲಿರುವ BFC ಈಗ ಈಸ್ಟ್ ಬೆಂಗಾಲ್ ವಿರುದ್ಧ ಗೆಲ್ಲುತ್ತಾ?

Bengaluru FC Vs East Bengal FC -ಕೋಲ್ಕತ್ತಾದಲ್ಲಿ ಗುರುವಾರ ನಡೆಯಲಿರುವ ಐಎಸ್‌ಎಲ್ ಪಂದ್ಯದಲ್ಲಿ ಬೆಂಗಳೂರು ಫುಟ್ಬಾಲ್ ಕ್ಲಬ್(BFC) ತಂಡ ಈಸ್ಟ್ ಬೆಂಗಾಲ್ ಎಫ್‌ಸಿಯನ್ನು ಎದುರಿಸಲಿದೆ. ಕೇರಳ ಬ್ಲಾಸ್ಟರ್ಸ್ ವಿರುದ್ಧದ ಸೋಲಿನಿಂದ ಹೊರಬಂದು ಮತ್ತೆ ಗೆಲುವಿನ ಹಾದಿಗೆ ಮರಳಲು ಬಿಎಫ್‌ಸಿ ಸಜ್ಜಾಗಿದೆ. ಇತ್ತ ಸತತ ನಾಲ್ಕು ಪಂದ್ಯಗಳಲ್ಲಿ ಅಜೇಯವಾಗಿರುವ ಈಸ್ಟ್ ಬೆಂಗಾಲ್ ಉತ್ತಮ ಲಯದಲ್ಲಿದೆ. ಪ್ರಮುಖ ಆಟಗಾರ ಬ್ರಿಯಾನ್ ಸ್ಯಾಂಚೆಜ್ ಅಮಾನತು ರದ್ದಾಗಿರುವುದು ಬೆಂಗಳೂರು ತಂಡಕ್ಕೆ ಆನೆಬಲ ನೀಡಿದೆ. ಉಭಯ ತಂಡಗಳ ಆಕ್ರಮಣಕಾರಿ ಆಟದ ನಡುವೆ ತೀವ್ರ ಪೈಪೋಟಿ ನಿರೀಕ್ಷಿಸಲಾಗಿದೆ.

ವಿಜಯ ಕರ್ನಾಟಕ 15 Apr 2026 8:56 pm

ನಾಗರಮಠ ಸೀತಾನದಿಯಲ್ಲಿ ಅವೈಜ್ಞಾನಿಕ ಮರಳುಗಾರಿಕೆ| ಉಡುಪಿ ಡಿಸಿ ಕಚೇರಿ ಎದುರು ಎ.16ರಿಂದ ಸಂತ್ರಸ್ಥರಿಂದ ಧರಣಿ

ಉಡುಪಿ, ಎ.15: ಬ್ರಹ್ಮಾವರ ತಾಲೂಕು ಹೊಸಾಳ ಗ್ರಾಮ ನಾಗರಮಠದ ಸೀತಾನದಿಯಲ್ಲಿ ನಡೆಯುತ್ತಿರುವ ಅವೈಜ್ಞಾನಿಕ ಮರಳುಗಾರಿಕೆ ವಿರುದ್ಧ ಕಳೆದ ಮೂರು ದಿನಗಳಿಂದ ಮರಳುಗಾರಿಕೆ ಸ್ಥಳದಲ್ಲಿ ಪ್ರತಿಭಟನೆ ನಡೆಸುತಿದ್ದ ಸಂತ್ರಸ್ಥ ಕೃಷಿಕರು ಹಾಗೂ ಗ್ರಾಮಸ್ಥರು ನಾಳೆಯಿಂದ ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ಎದುರು ಉಗ್ರ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದಾರೆ. ಕಳೆದ ಎರಡು ವಾರಗಳಿಂದ ಜನರ ಪ್ರತಿಭಟನೆ ನಡುವೆ ಬಲವಾದ ಪೊಲೀಸ್ ಪಹರೆಯೊಂದಿಗೆ ಮರಳುಗಾರಿಕೆ ನಡೆಯುತಿದ್ದು, ಸತತ ಮೂರು ದಿನಗಳಿಂದ ನೂರಾರು ಗ್ರಾಮಸ್ಥರು ನಡೆಸಿದ ಪ್ರತಿಭಟನೆ ಯಾವುದೇ ಫಲ ನೀಡದ ಹಿನ್ನೆಲಯಲ್ಲಿ ಇದೀಗ ನಾಳೆಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಉಪವಾಸ ಸತ್ಯಾಗ್ರಹ ನಡೆಸಲು ನಿರ್ಧರಿಸಲಾ ಗಿದೆ ಎಂದು ಪ್ರತಿಭಟನೆಯ ನೇತೃತ್ವ ವಹಿಸಿರುವ ಚಂದ್ರ ಕಾಂಚನ್ ತಿಳಿಸಿದ್ದಾರೆ. ಅವೈಜ್ಞಾನಿಕ ಹಾಗೂ ಅಕ್ರಮ ಮರಳುಗಾರಿಕೆಗಾಗಿ ಜಿಲ್ಲಾಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾ ಕಾರರು ನಾಗರಮಠದಲ್ಲಿ ನಡೆಯುತ್ತಿರುವ ಅವೈಜ್ಞಾನಿಕ ಮರಳುಗಾರಿಕೆ ಬಗ್ಗೆ ಜಿಲ್ಲಾಡಳಿತದ ಗಮನಕ್ಕೆ ತಂದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಹೀಗಾಗಿ ಅಕ್ರಮ ಮರಳುಗಾರಿಕೆಯೊಂದಿಗೆ ಜಿಲ್ಲಾಡಳಿತ ಶಾಮೀಲಾಗಿರುವ ಶಂಕೆ ನಮಗಿದೆ ಎಂದು ಆರೋಪಿಸಿದರು. ಕೈಕೊಟ್ಟ ಶಾಸಕರು, ಸಂಸದರು:ಎ.13 ಮತ್ತು 14ರಂದು ಮರಳುಗಾರಿಕಾ ಸ್ಥಳದಲ್ಲಿ ಪ್ರತಿಭಟನೆ ನಡೆಸಿ 15ರಿಂದ ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ಎದುರು ಸಂತ್ರಸ್ಥ ಗ್ರಾಮಸ್ಥರೆಲ್ಲ ಸೇರಿ ಪ್ರತಿಭಟನೆ ನಡೆಸುವುದಾಗಿ ಈ ಮೊದಲೇ ಹೋರಾಟಗಾರರು ಘೋಷಿಸಿದ್ದರೂ, ಶಾಸಕರಾದ ಕಿರಣ್ ಕುಮಾರ್ ಕೊಡ್ಗಿ ಅವರು ನಿನ್ನೆ ಪ್ರತಿಭಟನ ಕಾರರೊಂದಿಗೆ ಮಾತನಾಡಿ, ತಾವು ಜಿಲ್ಲಾಧಿಕಾರಿಗಳೊಂದಿಗೆ ಖುದ್ದಾಗಿ ಭೇಟಿಯಾಗಿ ವಿಷಯದ ಬಗ್ಗೆ ಮಾತನಾಡು ವುದಾಗಿ ತಿಳಿಸಿದ್ದಲ್ಲದೇ, ಅವರ ಪ್ರತಿಕ್ರಿಯೆ ನೋಡಿ ಮುಂದುವರಿಯೋಣ. ಅವರು ಒಪ್ಪದಿದ್ದರೆ ನಾನೂ ನಿಮ್ಮೊಂದಿಗೆ ಧರಣಿಗೆ ಬರುವುದಾಗಿ ತಿಳಿಸಿದ್ದರು ಎಂದು ಚಂದ್ರ ಕಾಂಚನ್ ವಿವರಿಸಿದರು. ಈ ಹಿನ್ನೆಲೆಯಲ್ಲಿ ಇಂದಿನ ತಮ್ಮ ಮಣಿಪಾಲ ಪ್ರತಿಭಟನೆಯನ್ನು ಮುಂದೂಡಿ ನಾಗರಮಠದಲ್ಲೇ ಧರಣಿ ಮುಂದುವ ರಿಸಿ ಶಾಸಕರಿಗಾಗಿ ಕಾದಿದ್ದಾಗಿ ತಿಳಿಸಿದ ಚಂದ್ರ ಕಾಂಚನ್, ಆದರೆ ಕೊಟ್ಟ ಮಾತಿನಂತೆ ದಿನವಿಡೀ ಸ್ಥಳಕ್ಕೆ ಬಾರದ ಶಾಸಕರು, ದೂರವಾಣಿ ಮೂಲಕ ಸಂಪರ್ಕಿಸಲು ಸತತ ಪ್ರಯತ್ನ ನಡೆಸಿದರೂ ಕರೆ ಸ್ವೀಕರಿಸಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಶಾಸಕರಂತೆ, ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರೂ ಪ್ರಯತ್ನಿಸುವ ಭರವಸೆ ನೀಡಿದ್ದರೂ ಅವರಿಂದಲೂ ಯಾವುದೇ ಉತ್ತರ ಬಂದಿಲ್ಲ. ಹೀಗಾಗಿ ನಾವು ನಾಳೆಯಿಂದ ನಮ್ಮ ಉಗ್ರ ಹೋರಾಟ ಮುಂದುವರಿಸಲು ನಿರ್ಧರಿ ಸಿದ್ದಾಗಿ ಹೇಳಿದರು. ಜಿಲ್ಲಾಧಿಕಾರಿಗಳು 10 ದಿನಗಳ ಹಿಂದೆ ಶಾಸಕರು ಹಾಗೂ ಸಂಸದರ ನೇತೃತ್ವದಲ್ಲಿ ಸ್ಥಳೀಯರು ನೀಡಿದ ಮನವಿಗೆ ಯಾವುದೇ ಸ್ಪಂದನೆ ನೀಡಿಲ್ಲ ಎಂದು ಚಂದ್ರ ಕಾಂಚನ್ ತಿಳಿಸಿದರು. ನಾಗರಮಠದಲ್ಲಿ ನಡೆದ ಧರಣಿಯನ್ನುದ್ದೇಶಿಸಿ ಮಾತನಾಡಿದ ಹೋರಾಟಗಾರರು, ಇಲ್ಲಿ ಒಂದೂವರೆ ಲಕ್ಷಕ್ಕೂ ಅಧಿಕ ಮೆಟ್ರಿಕ್ ಟನ್ ಮರಳು ತೆಗೆಯಲು ಜಿಲ್ಲಾಡಳಿತ ಅನುಮತಿ ನೀಡಿದೆ. ಇಲ್ಲಿ ಲಭ್ಯವಿರುವ ಗರಿಷ್ಠ ಮರಳು 10 ಸಾವಿರ ಮೆಟ್ರಿಕ್ ಟನ್ ಮಾತ್ರ ಎಂದು ತಜ್ಞರು ವರದಿ ನೀಡಿದ್ದಾರೆ. ಹೀಗಾಗಿ ಗ್ರಾಮಸ್ಥರು ಅವೈಜ್ಞಾನಿಕ ಮರಳು ಗಾರಿಕೆಗೆ ವಿರೋಧ ವ್ಯಕ್ತಪಡಿಸಿದರೆ, ಪೊಲೀಸ್ ಇಲಾಖೆಯನ್ನು ಬಳಸಿಕೊಂಡು ಕೇಸು ದಾಖಲಿಸುತ್ತಾರೆ ಎಂದರು. ಅವೈಜ್ಞಾನಿಕ ಮರಳು ಗಣಿಗಾರಿಕೆಯಿಂದ ಕೃಷಿ ಭೂಮಿಗೆ ತೊಂದರೆ ಯಾಗುತ್ತಿದೆ. ಜಿಲ್ಲಾಧಿಕಾರಿಗೆ ದೂರು ನೀಡಿದರೂ ಪ್ರಯೋಜನವಾಗುತ್ತಿಲ್ಲ. ನೂರಾರು ದೋಣಿಗಳಿಂದ ಮರಳು ತೆಗೆಯಲಾಗುತ್ತಿದೆ. ಬಾವಿಯ ನೀರು ಕೂಡ ಉಪ್ಪಾಗುತ್ತಿದೆ’ ಎಂದು ಸಂತ್ರಸ್ಥೆ ಆಶಾ ದೂರಿದರು. ಮುಂದಿನ ದಿನಗಳಲ್ಲಿ ಜಿಲ್ಲಾಡಳಿತದ ಯಾವುದೇ ಬೆದರಿಕೆಗಳಿಗೂ ನಾವು ಬಗ್ಗದೇ ಕಾನೂನು ರೀತಿಯ ಹೋರಾಟ ಮಾಡುವುದಾಗಿ ಎಚ್ಚರಿಸಿದರು. ಪ್ರತಿಭಟನೆಯಲ್ಲಿ ಚಂದ್ರ ಕಾಂಚನ್, ಕೃಷ್ಣ ಬಂಗೇರಾ, ಗಿರಿಜಾ ರಂಗ ಮರಕಾಲ, ಆಶಾ ಸೇರಿದಂತೆ ಗ್ರಾಮಸ್ಥರು ಭಾಗವಹಿಸಿದ್ದರು.

ವಾರ್ತಾ ಭಾರತಿ 15 Apr 2026 8:50 pm

ಹೋರಾಟಗಾರ್ತಿ ಕೆ.ನೀಲಾಗೆ ಅಕ್ಕಮಹಾದೇವಿ, ಸಿದ್ಧರಾಮ ಶರಣರಿಗೆ ಬಸವ ರಾಷ್ಟ್ರೀಯ ಪ್ರಶಸ್ತಿ

ಕಲಬುರಗಿ: ರಾಜ್ಯ ಸರಕಾರದ 2025-26ನೇ ಸಾಲಿನ ರಾಷ್ಟ್ರೀಯ ಪ್ರಶಸ್ತಿ, ಸಾಮಾಜಿಕ ಮತ್ತು ಸಾಂಸ್ಕೃತಿಕ ಪ್ರಶಸ್ತಿ , ಸಾಹಿತ್ಯ ಹಾಗೂ ನಾಟಕ ಪ್ರಶಸ್ತಿ, ಕಲಾ ಪ್ರಶಸ್ತಿ ಮತ್ತು ಸಂಗೀತ ನೃತ್ಯ ವಿಭಾಗದ ಪ್ರಶಸ್ತಿಗಳಿಗೆ ಹಲವು ಸಾಧಕರನ್ನು ಆಯ್ಕೆ ಮಾಡಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ. ಈ ಪೈಕಿ ಕಲಬುರಗಿ ಮೂಲದ ಹೋರಾಟಗಾರ್ತಿ ಕೆ.ನೀಲಾ ಅವರು ಅಕ್ಕಮಹಾದೇವಿ ಪ್ರಶಸ್ತಿಗೆ ಆಯ್ಕೆಯಾಗಿದ್ದರೆ, ಬೆಲ್ದಾಳದ ಸಿದ್ಧರಾಮ ಶರಣರು ಅವರು ಬಸವ ರಾಷ್ಟ್ರೀಯ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ.  ಸಾಹಿತ್ಯ ಮತ್ತು ನಾಟಕ ವಿಭಾಗದಲ್ಲಿ ಬಳ್ಳಾರಿ ಜಿಲ್ಲೆಯ ಡಾ.ಸುಕನ್ಯಾ ಮಾರುತಿ ಅವರಿಗೆ ದಾನ ಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿ, ವಿಜಯಪುರದ ಅಲ್ಲಬಕ್ಷ್ ಮೀರಸಾಹೇಬ ಮಿರ್ಜಿ ಅವರಿಗೆ ಪ್ರೊ. ಕೆ.ಜಿ. ಕುಂದಣಗಾರ ಗಡಿನಾಡ ಸಾಹಿತ್ಯ ಪ್ರಶಸ್ತಿ, ಯಾದಗಿರಿ ಜಿಲ್ಲೆಯ ಬಿ.ಲಕ್ಷಣ ಅವರಿಗೆ ಜಾನಪದ ಶ್ರೀ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ವಾರ್ತಾ ಭಾರತಿ 15 Apr 2026 8:50 pm

ಅಕ್ರಮ ಹಣ ವರ್ಗಾವಣೆ ಪ್ರಕರಣ: ರಾಬರ್ಟ್ ವಾದ್ರಾಗೆ ದಿಲ್ಲಿ ನ್ಯಾಯಾಲಯ ಸಮನ್ಸ್

ಹೊಸದಿಲ್ಲಿ, ಎ. 15: ಹರ್ಯಾಣದ ಶಿಖೋಹಪುರದಲ್ಲಿ ಭೂಮಿ ವ್ಯಾಪಾರಕ್ಕೆ ಸಂಬಂಧಿಸಿದ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಪತಿ, ಉದ್ಯಮಿ ರಾಬರ್ಟ್ ವಾದ್ರಾ ಹಾಗೂ ಇತರರಿಗೆ ದಿಲ್ಲಿ ನ್ಯಾಯಾಲಯ ಬುಧವಾರ ಸಮನ್ಸ್ ಜಾರಿ ಮಾಡಿದೆ. ಜಾರಿ ನಿರ್ದೇಶನಾಲಯ (ಈಡಿ) ಸಲ್ಲಿಸಿದ ಪ್ರಾಸಿಕ್ಯೂಷನ್ ದೂರನ್ನು (ಆರೋಪ ಪಟ್ಟಿಗೆ ಸಮಾನ) ಗಮನಕ್ಕೆ ತೆಗೆದುಕೊಂಡು ರೌಸ್ ಅವೆನ್ಯೂ ನ್ಯಾಯಾಲಯ ಈ ಸಮನ್ಸ್ ಜಾರಿ ಮಾಡಿದೆ. ವಾದ್ರಾ ಹಾಗೂ ಇತರ 8 ಮಂದಿ ಆರೋಪಿಗಳು ಮೇ 16ರಂದು ಹಾಜರಾಗುವಂತೆ ನ್ಯಾಯಾಲಯ ಆದೇಶಿಸಿದೆ. ನ್ಯಾಯಾಲಯದ ಕಲಾಪದ ಸಂದರ್ಭ ವಾದ್ರಾ ಅವರ ಪರ ನ್ಯಾಯವಾದಿ ಈ ವಿಷಯದಲ್ಲಿ ಅವರ ವಿರುದ್ಧ ಯಾವುದೇ ಪ್ರಕರಣ ದಾಖಲಾಗಿಲ್ಲ. ಆದ್ದರಿಂದ ಪ್ರಾಸಿಕ್ಯೂಷನ್ ದೂರನ್ನು ಗಮನಕ್ಕೆ ತೆಗೆದುಕೊಳ್ಳದಂತೆ ನ್ಯಾಯಾಲಯವನ್ನು ಆಗ್ರಹಿಸಿದರು. ವಾದ್ರಾ, ಆಗಿನ ಹರ್ಯಾಣ ಮುಖ್ಯಮಂತ್ರಿ ಭೂಪಿಂದರ್ ಸಿಂಗ್ ಹೂಡಾ, ಮಾಜಿ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್, ರಿಯಲ್ ಎಸ್ಟೇಟ್ ದೈತ್ಯ ಡಿಎಲ್ಎಫ್ ಹಾಗೂ ಆಸ್ತಿ ಮಾರಾಟಗಾರರ ವಿರುದ್ಧ 2018 ಸೆಪ್ಟಂಬರ್‌ನಲ್ಲಿ ದಾಖಲಾದ ಎಫ್ಐಆರ್ ಜಾರಿ ನಿರ್ದೇಶನಾಲಯದ ಈ ಪ್ರಕರಣಕ್ಕೆ ಮೂಲ.

ವಾರ್ತಾ ಭಾರತಿ 15 Apr 2026 8:50 pm

Vijayanagara | ಕಾರು ಮರಕ್ಕೆ ಢಿಕ್ಕಿ: ಸಿಪಿಐ ರಘುನಾಥ್ ಸ್ಥಳದಲ್ಲೇ ಮೃತ್ಯು

ವಿಜಯನಗರ/ಹೊಸಪೇಟೆ: ಕಾರು ನಿಯಂತ್ರಣ ತಪ್ಪಿ ಮರಕ್ಕೆ ಢಿಕ್ಕಿ ಹೊಡೆದ ಪರಿಣಾಮ ಡಿಸಿಆರ್‌ಇ ಘಟಕದ ಸಿಪಿಐ ರಘುನಾಥ್ ಅವರು ಸ್ಥಳದಲ್ಲೇ ಮೃತಪಟ್ಟ ಘಟನೆ ವಿಜಯನಗರ ಜಿಲ್ಲೆಯಲ್ಲಿ ನಡೆದಿದೆ. ವಿಜಯನಗರ ಮತ್ತು ಕೊಪ್ಪಳ ಜಿಲ್ಲೆಗಳ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯ (DCRE) ಘಟಕದಲ್ಲಿ ಸಿಪಿಐ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ರಘುನಾಥ್ ಅವರು, ಚಿತ್ರದುರ್ಗ ಜಿಲ್ಲೆಯ ತಮ್ಮ ಸ್ವಗ್ರಾಮದಿಂದ ಹೊಸಪೇಟೆ ಕಡೆಗೆ ಬರುತ್ತಿರುವ ವೇಳೆ ಅಪಘಾತಕ್ಕೊಳಗಾಗಿದ್ದಾರೆ. ವಿಜಯನಗರ–ದಾವಣಗೆರೆ ಗಡಿ ಭಾಗದ ಮುಸ್ಟೂರು ಮತ್ತು ಕಡಬನಕಟ್ಟೆ ಮಧ್ಯೆ ಅವರ ಕಾರು ನಿಯಂತ್ರಣ ತಪ್ಪಿ ರಸ್ತೆ ಬದಿಯ ಬೇವಿನ ಮರಕ್ಕೆ ಢಿಕ್ಕಿ ಹೊಡೆದಿದೆ ಎಂದು ತಿಳಿದು ಬಂದಿದೆ. ಢಿಕ್ಕಿಯ ತೀವ್ರತೆಗೆ ಕಾರು ಸಂಪೂರ್ಣ ಜಜ್ಜಿಹೋಗಿದ್ದು, ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಘಟನೆ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಗಮನಾರ್ಹವಾಗಿ, ರಘುನಾಥ್ ಅವರಿಗೆ ಇತ್ತೀಚೆಗೆ ಬೆಂಗಳೂರಿನ ಕೇಂದ್ರ ಕಚೇರಿಗೆ ವರ್ಗಾವಣೆಯ ಆದೇಶವಾಗಿದ್ದು, ಇನ್ನೂ ಹೊಸ ಹುದ್ದೆಗೆ ವರದಿ ಮಾಡಿಕೊಂಡಿರಲಿಲ್ಲ ಎನ್ನಲಾಗಿದೆ.

ವಾರ್ತಾ ಭಾರತಿ 15 Apr 2026 8:48 pm

ದೇವನೂರು ಮಹಾದೇವ ಅವರಿಗೆ ʼಪಂಪ ಪ್ರಶಸ್ತಿʼ

ಎಸ್.ಜಿ.ಸಿದ್ದರಾಮಯ್ಯರಿಗೆ ʼಕಾಯಕಯೋಗಿ ಶ್ರೀ ಸಿದ್ಧರಾಮೇಶ್ವರ ಪ್ರಶಸ್ತಿʼ, ಕೆ.ನೀಲಾರಿಗೆ ʼಅಕ್ಕಮಹಾದೇವಿ ಪ್ರಶಸ್ತಿʼ

ವಾರ್ತಾ ಭಾರತಿ 15 Apr 2026 8:48 pm

ಜಮ್ಮು-ಕಾಶ್ಮೀರ| ಸ್ವಘೋಷಿತ ಗೋರಕ್ಷಕರಿಗೆ ಹೆದರಿ ಹೊಳೆಗೆ ಹಾರಿದ ಯುವಕ: ಮುಂದುವರಿದ ಶೋಧ ಕಾರ್ಯಾಚರಣೆ

ಶ್ರೀನಗರ, ಎ. 15: ಸ್ವಘೋಷಿತ ಗೋರಕ್ಷಕರು ರವಿವಾರ ಬೆನ್ನಟ್ಟಿ ಹಲ್ಲೆ ನಡೆಸಿದ ಬಳಿಕ ಜಮ್ಮು ಹಾಗೂ ಕಾಶ್ಮೀರದ ರಾಂಬನ್ ಜಿಲ್ಲೆಯ ರಾಮ್ಸೂ ಪ್ರದೇಶದ ಶ್ರೀನಗರ-ಜಮ್ಮು ಹೆದ್ದಾರಿಯಲ್ಲಿರುವ ಹೊಳೆಗೆ ಹಾರಿ ನಾಪತ್ತೆಯಾದ ಯುವಕನ ಮೃತದೇಹ ಪತ್ತೆ ಹಚ್ಚಲು ನಡೆಸುತ್ತಿರುವ ಶೋಧ ಕಾರ್ಯಾಚರಣೆ ಬುಧವಾರ ಕೂಡ ಮುಂದುವರಿದಿದೆ. ಈ ಯುವಕನನ್ನು 28 ವರ್ಷದ ತನ್ವೀರ್ ಅಹ್ಮದ್ ಚೋಪನ್ ಎಂದು ಗುರುತಿಸಲಾಗಿದೆ. ಈತ ರಾಂಬನ್ ಜಿಲ್ಲೆಯ ಪೋಗಲ್‌ನ ಮುಂಡಖಲ್ ಗ್ರಾಮದ ನಿವಾಸಿ. ಈತ ರವಿವಾರ ಜಮ್ಮುವಿನಿಂದ ತನ್ನ ಗ್ರಾಮಕ್ಕೆ ಒಂದು ಹಾಲು ಕೊಡುವ ಹಸು ಹಾಗೂ ಎರಡು ಕರುಗಳನ್ನು ಸಾಗಿಸುತ್ತಿದ್ದ. ಈ ಸಂದರ್ಭ ನಕಲಿ ಗೋರಕ್ಷಕರು ಆತನನ್ನು ಬೆನ್ನಟ್ಟಿ ಹಲ್ಲೆ ನಡೆಸಿದ್ದಾರೆ. ಅವರಿಂದ ತಪ್ಪಿಸಿಕೊಳ್ಳಲು ಆತ ರಾಮ್ಸೂ ಪ್ರದೇಶದಲ್ಲಿರುವ ಹೊಳೆಗೆ ಹಾರಿದ್ದಾನೆ ಎಂದು ಹೇಳಲಾಗಿದೆ. ರಾಮ್ಸೂವಿನ ಮಾಕರ್ಕೋಟೆಯ ಸಮೀಪ ಹೊಳೆಯಲ್ಲಿ ಆತನ ಮೃತದೇಹವನ್ನು ಪತ್ತೆ ಹಚ್ಚಲು ರವಿವಾರದಿಂದ ಶೋಧ ಕಾರ್ಯಾಚರಣೆ ನಡೆಯುತ್ತಿದೆ. ಚೋಪನ್‌ನ ತಂದೆ ಜಮ್ಮು ಹಾಗೂ ಕಾಶ್ಮೀರ ಪೊಲೀಸ್‌ನಲ್ಲಿ ವಿಶೇಷ ಪೊಲೀಸ್ ಅಧಿಕಾರಿ (ಎಸ್ಪಿಒ) ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ತನ್ವೀರ್ ಮೃತದೇಹವನ್ನು ಪತ್ತೆ ಹಚ್ಚಲು ಎನ್‌ಡಿಆರ್‌ಎಫ್‌, ಎಸ್‌ಡಿಆರ್‌ಎಫ್‌, ಯುಡಿಆರ್‌ಎಫ್‌, ಪೊಲೀಸ್, ಕ್ಯುಆರ್‌ಟಿ, ನಾಗರಿಕ ಆಡಳಿತದ ಸಿಬ್ಬಂದಿ ಹಾಗೂ ಸ್ಥಳೀಯ ಸ್ವಯಂಸೇವಕರು ಶೋಧ ಕಾರ್ಯಾಚರಣೆಯನ್ನು ನಾಲ್ಕನೆಯ ದಿನವಾದ ಬುಧವಾರ ಕೂಡ ಮುಂದುವರಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಬಲವಾದ ನೀರಿನ ಪ್ರವಾಹ ಹಾಗೂ ನೀರಿನ ಆಳ ರಕ್ಷಣಾ ಪ್ರಯತ್ನಕ್ಕೆ ಅಡ್ಡಿ ಉಂಟು ಮಾಡುತ್ತಿದೆ. ಆದ್ದರಿಂದ ಮೃತದೇಹ ಇದುವರೆಗೆ ಪತ್ತೆಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮೃತದೇಹ ಪತ್ತೆಯಾಗುವವರೆಗೆ ಶೋಧ ಕಾರ್ಯಾಚರಣೆ ಮುಂದುವರಿಯಲಿದೆ ಎಂದು ರಾಂಬನ್ ಪೊಲೀಸ್ ಅಧೀಕ್ಷಕ ಅರುಣ್ ಗುಪ್ತಾ ತಿಳಿಸಿದ್ದಾರೆ.

ವಾರ್ತಾ ಭಾರತಿ 15 Apr 2026 8:47 pm

Basavanna: ದೇವರು - ದೇವಸ್ಥಾನಗಳ ಬಗ್ಗೆ ಬಸವಣ್ಣನವರಿಗೆ ನಂಬಿಕೆ ಇರಲಿಲ್ಲ: ಸಿದ್ದರಾಮಯ್ಯ

Basavanna: ದೇವರು - ದೇವಸ್ಥಾನಗಳ ಬಗ್ಗೆ ಬಸವಣ್ಣನವರಿಗೆ ನಂಬಿಕೆ ಇರಲಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರವು ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಆಯೋಜಿಸಿದ್ದ ಕರ್ನಾಟಕದ ಬಹುಮುಖ ಪರಂಪರೆಯನ್ನು ಪ್ರತಿನಿಧಿಸುವ ಕನ್ನಡ ಸಾಮರಸ್ಯ ನೆಲೆಗಳು ಕೃತಿಗಳನ್ನು ಲೋಕಾರ್ಪಣೆ ಸಮಾರಂಭದಲ್ಲಿ ಮಾತನಾಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿವಿಧ ವಿಚಾರಗಳ ಬಗ್ಗೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.

ಒನ್ ಇ೦ಡಿಯ 15 Apr 2026 8:39 pm

ನೌಕರನ ಕುಟುಂಬಕ್ಕೆ ಅಪಘಾತ ಅಪಘಾತ 51 ಲಕ್ಷ ರೂ. ಹೆಚ್ಚಳ: ಕರ್ನಾಟಕ ಹೈಕೋರ್ಟ್‌ ಆದೇಶ

ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್‌ ಮಹತ್ವದ ಆದೇಶ ನೀಡಿದೆ. ಮೃತರ ಪರಿಹಾರ ಮೊತ್ತವನ್ನು 41 ಲಕ್ಷ ರೂಪಾಯಿಯಿಂದ 51 ಲಕ್ಷ ರೂಪಾಯಿಗೆ ಹೆಚ್ಚಳ ಮಾಡಿದೆ. ಈ ಮೂಲಕ ಮೃತ ನೌಕರರ ಕುಟುಂಬಕ್ಕೆ ಕೋರ್ಟ್‌ ನ್ಯಾಯ ಒದಗಿಸಿದೆ. ಏನಿದು ಪ್ರಕರಣ? ಹಿನ್ನೆಲೆ ಏನು? ವಿವರ ಇಲ್ಲಿದೆ.

ವಿಜಯ ಕರ್ನಾಟಕ 15 Apr 2026 8:32 pm

ಲೆಬನಾನ್‌ ನಲ್ಲಿ ಶೀಘ್ರ ಕದನ ವಿರಾಮ ಸಾಧ್ಯತೆ: ಹಿಜ್ಬುಲ್ಲಾ ವಕ್ತಾರ

ಬೈರೂತ್, ಎ.15: ಲೆಬನಾನ್‌ ನಲ್ಲಿ ನಡೆಯುತ್ತಿರುವ ಸಂಘರ್ಷಕ್ಕೆ ಶೀಘ್ರದಲ್ಲೇ ಕದನ ವಿರಾಮ ಜಾರಿಯಾಗುವ ಸಾಧ್ಯತೆ ಇದೆ ಎಂದು ಹಿಜ್ಬುಲ್ಲಾ ಸಂಘಟನೆಯ ವಕ್ತಾರ ಹಾಗೂ ಸಂಸದ ಇಬ್ರಾಹಿಂ ಮೌಸಾವಿ ತಿಳಿಸಿದ್ದಾರೆ. ಇರಾನ್ ಹಾಗೂ ಪ್ರಾದೇಶಿಕ ಮಟ್ಟದಲ್ಲಿ ನಡೆಯುತ್ತಿರುವ ರಾಜತಾಂತ್ರಿಕ ಪ್ರಯತ್ನಗಳು ಈ ಪ್ರಕ್ರಿಯೆಗೆ ಕಾರಣವಾಗಬಹುದು ಎಂದು ಅವರು ಹೇಳಿದ್ದಾರೆ ಎಂದು ರಾಯಿಟರ್ಸ್ ಸುದ್ದಿ ಸಂಸ್ಥೆ ವರದಿ ಮಾಡಿದೆ. ಲೆಬನಾನ್‌ ನಲ್ಲಿ ಕದನ ವಿರಾಮಕ್ಕಾಗಿ ತೆರೆಮರೆಯಲ್ಲಿ ಚರ್ಚೆಗಳು ಮತ್ತು ಪ್ರಯತ್ನಗಳು ನಡೆಯುತ್ತಿವೆ ಎಂದು ಹೆಸರು ಬಹಿರಂಗಪಡಿಸದ ಇಬ್ಬರು ಹಿರಿಯ ಲೆಬನಾನ್ ಅಧಿಕಾರಿಗಳು ರಾಯಿಟರ್ಸ್‌ಗೆ ತಿಳಿಸಿದ್ದಾರೆ. ಆದರೆ, ಕದನ ವಿರಾಮ ಯಾವಾಗ ಪ್ರಾರಂಭವಾಗುತ್ತದೆ ಅಥವಾ ಅದು ಎಷ್ಟು ಕಾಲ ಮುಂದುವರಿಯುತ್ತದೆ ಎಂಬುದರ ಕುರಿತು ಇನ್ನೂ ಸ್ಪಷ್ಟ ಮಾಹಿತಿ ಲಭ್ಯವಿಲ್ಲವೆಂದು ಅವರು ಹೇಳಿದ್ದಾರೆ. ಇದಲ್ಲದೆ, ಲೆಬನಾನ್‌ ನಲ್ಲಿ ಜಾರಿಗೆ ಬರಬಹುದಾದ ಕದನ ವಿರಾಮದ ಅವಧಿ ಅಮೆರಿಕ–ಇರಾನ್ ನಡುವಿನ ಕದನ ವಿರಾಮದ ಅವಧಿಯೊಂದಿಗೆ ಸಂಬಂಧ ಹೊಂದಿರಬಹುದು ಎಂದು ಅಧಿಕಾರಿಗಳು ಹೇಳಿದ್ದಾರೆ.

ವಾರ್ತಾ ಭಾರತಿ 15 Apr 2026 8:25 pm

ಅಕ್ರಮ ಕಲ್ಲು ಗಣಿಗಾರಿಕೆ ಆರೋಪ: ಇಬ್ಬರು ವಶಕ್ಕೆ

ಕಾರ್ಕಳ, ಎ.15: ಕುಕ್ಕುಂದೂರು ಗ್ರಾಮದ ಶಂಕರಬೆಟ್ಟು ಅರ್ಬಿಪಾದೆ ಎಂಬಲ್ಲಿ ನಡೆಯುತ್ತಿದ್ದ ಅಕ್ರಮ ಕಲ್ಲು ಗಣಿಗಾರಿಕೆಗೆ ಎ.15ರಂದು ಬೆಳಗ್ಗೆ ದಾಳಿ ನಡೆಸಿದ ಪೊಲೀಸರು, ಇಬ್ಬರನ್ನು ಬಂಧಿಸಿ, ಹಲವು ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಖಚಿತ ಮಾಹಿತಿಯಂತೆ ದಾಳಿ ನಡೆಸಿದ ಪೊಲೀಸರು, ಅಕ್ರಮವಾಗಿ ಕಲ್ಲು ಗಣಿಗಾರಿಕೆ ನಡೆಸುತ್ತಿರುವ ಲಾರಿ ಚಾಲಕರಾದ ಮನೋಜ್ ಮತ್ತು ಶರಣ್ ಎಂಬವರನ್ನು ವಶಕ್ಕೆ ಪಡೆದುಕೊಂಡರು. ಅಲ್ಲದೆ ಸ್ಥಳದಲ್ಲಿದ್ದ ಟಿಪ್ಪರ್, ಲಾರಿ ಹಾಗೂ ಸೊತ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಾರ್ತಾ ಭಾರತಿ 15 Apr 2026 8:24 pm

ಹೆಜಮಾಡಿಯ ವ್ಯಕ್ತಿಗೆ 4.86ಲಕ್ಷ ರೂ. ಆನ್‌ಲೈನ್ ವಂಚನೆ: ಪ್ರಕರಣ ದಾಖಲು

ಉಡುಪಿ, ಎ.15: ವಾಟ್ಸಾಪ್‌ನಲ್ಲಿ ಬಂದ ಎಪಿಕೆ ಫೈಲ್ ಡೌನ್‌ಲೋಡ್ ಮಾಡಿದ ಪರಿಣಾಮ ವ್ಯಕ್ತಿಯೊಬ್ಬರು ಲಕ್ಷಾಂತರ ರೂ. ಹಣ ಕಳೆದುಕೊಂಡು ಆನ್‌ಲೈನ್ ವಂಚನೆ ಒಳಗಾಗಿರುವ ಬಗ್ಗೆ ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಎ.12ರಂದು ಪಡುಬಿದ್ರಿ ಹೆಜಮಾಡಿಯ ಅಬ್ದುಲ್ ಹಮೀದ್ ಎಂಬವರ ಪರಿಚಯದ ಕುಮಾರಸ್ವಾಮಿ ಎಂಬವರ ಮೊಬೈಲ್ ನಂಬ್ರದಿಂದ ಎಪಿಕೆ ಫೈಲ್ ವಾಟ್ಸಾಪ್‌ನಲ್ಲಿ ಬಂದಿದ್ದು, ಅದನ್ನು ಡೌನಲೋಡ್ ಮಾಡಿದಾಗ ಅಬ್ದುಲ್ ಹಮೀದ್ ಅವರ ಬ್ಯಾಂಕ್ ಖಾತೆಯಿಂದ ಎ.13ರಂದು ಹಂತ ಹಂತವಾಗಿ ಒಟ್ಟು 4,86,13ರೂ. ಹಣ ಕಡಿತವಾಗಿರುವುದಾಗಿ ದೂರಲಾಗಿದೆ.

ವಾರ್ತಾ ಭಾರತಿ 15 Apr 2026 8:22 pm

ಕಾರು ಢಿಕ್ಕಿ: ಪಾದಚಾರಿ ಮಹಿಳೆ ಮೃತ್ಯು

ಕೊಲ್ಲೂರು, ಎ.15: ಕಾರೊಂದು ಢಿಕ್ಕಿ ಹೊಡೆದ ಪರಿಣಾಮ ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆ ಯೊಬ್ಬರು ಮೃತಪಟ್ಟ ಘಟನೆ ಎ.14ರಂದು ಸಂಜೆ 7.15ರ ಸುಮಾರಿಗೆ ವಂಡ್ಸೆ ಗ್ರಾಮ ಪಂಚಾಯತ್ ಎದುರು ಕೊಲ್ಲೂರು-ಕುಂದಾಪುರ ಮುಖ್ಯ ರಸ್ತೆಯಲ್ಲಿ ನಡೆದಿದೆ. ಮೃತರನ್ನು ವಂಡ್ಸೆ ನಿವಾಸಿ ಶಶಿಕಲಾ(52) ಎಂದು ಗುರುತಿಸಲಾಗಿದೆ. ಇವರು ದಿನಸಿ ಅಂಗಡಿಯಿಂದ ಸಾಮಾನು ತರಲು ರಸ್ತೆ ಬದಿ ನಡೆದು ಕೊಂಡು ಹೋಗುತ್ತಿದ್ದಾಗ ಕೊಲ್ಲೂರು ಕಡೆಯಿಂದ ಕುಂದಾಪುರದ ಕಡೆಗೆ ಬರುತ್ತಿದ್ದ ಕಾರು, ಢಿಕ್ಕಿ ಹೊಡೆಯಿತ್ತೆನ್ನಲಾಗಿದೆ. ಇದರ ಪರಿಣಾಮ ಶಶಿಕಲಾ ಅಲ್ಲೇ ಇದ್ದ ಚರಂಡಿಗೆ ಬಿದ್ದರು. ಅದೇ ರೀತಿ ಕಾರು ಕೂಡ ಸ್ವಲ್ಪ ಮುಂದೆ ಹೋಗಿ ಚರಂಡಿಗೆ ಬಿತ್ತೆನ್ನಲಾಗಿದೆ. ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡ ಅವರು ಕುಂದಾಪುರ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗುವ ದಾರಿ ಮಧ್ಯೆ ಮೃತಪಟ್ಟರು ಎಂದು ತಿಳಿದುಬಂದಿದೆ. ಈ ಬಗ್ಗೆ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಾರ್ತಾ ಭಾರತಿ 15 Apr 2026 8:21 pm