ಸುಸ್ಥಿರ ಅಭಿವೃದ್ಧಿಗೆ ಲಿಂಗತ್ವ ಸಮನ್ಯಾಯ ಅಗತ್ಯ
ಶಿಕ್ಷಣ ರಂಗದಲ್ಲಿ ತಳಹಂತದ ಅಧ್ಯಾಪಕರಲ್ಲಿ ಗರಿಷ್ಠ ಸಂಖ್ಯೆಯಲ್ಲಿರುವ ಶಿಕ್ಷಕಿಯರು ಉನ್ನತ ಶಿಕ್ಷಣ ವಲಯಕ್ಕೆ ಬಂದಾಗ ಯಾಕೆ ವಿರಳರಾಗುತ್ತಾರೆ? ಎಲ್ಲ ಪರೀಕ್ಷೆಗಳ ಫಲಿತಾಂಶಗಳ ಪ್ರಮಾಣದಲ್ಲಿ ಮುಂದಿರುವ ಹೆಣ್ಣುಮಕ್ಕಳು ಸಂಶೋಧನಾ ರಂಗದಲ್ಲಿ, ವೃತ್ತಿಪರತೆಯಲ್ಲಿ, ಅಧಿಕಾರದ ಕೇಂದ್ರಗಳಲ್ಲಿ, ನಿರ್ಣಯ ತೆಗೆದುಕೊಳ್ಳುವ ಜಾಗಗಳಲ್ಲಿ, ರಾಜಕೀಯ ಕ್ಷೇತ್ರದಲ್ಲಿ ಕಾಣುವುದಿಲ್ಲ ಯಾಕೆ? ಇದಕ್ಕೂ ಸಮಾಜದ ಪುರುಷ ಪ್ರಧಾನ ಚಿಂತನಾಕ್ರಮಕ್ಕೂ ಇರುವ ನೇರವಾದ ಸಂಬಂಧವನ್ನು ನಾವು ಅಧ್ಯಯನ ಮಾಡಿ, ವಿಶ್ಲೇಷಿಸಿ, ಬದಲಾವಣೆಗೆ ಪರಿಣಾಮಕಾರಿಯಾದ ಉಪಕ್ರಮಗಳನ್ನು ಕೈಗೊಳ್ಳಲು ಕಟಿಬದ್ಧರಾಗಬೇಕಿದೆ. ಕಾವ್ಯ, ಕಥೆ, ಲಲಿತ ಪ್ರಬಂಧ, ವಿಮರ್ಶೆ, ಸಂಶೋಧನೆ ಎಲ್ಲೆಲ್ಲ ಮಹಿಳಾ ಚರಿತ್ರೆಯ ಬೇರುಗಳು ಹರಡಿಕೊಂಡಿವೆಯೋ ಅಲ್ಲೆಲ್ಲ ಸಬೀಹಾ ಭೂಮಿಗೌಡ ಇದ್ದಾರೆ. ಮೂಲತಃ ಮೈಸೂರಿನವರಾಗಿರುವ ಸಬಿಹಾ ಮಂಗಳೂರು ವಿವಿಯ ಸ್ನಾತಕೋತ್ತರ ಕೇಂದ್ರದ ನಿರ್ದೇಶಕರಾಗಿ ಹಾಗೂ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿವಿಯ ಕುಲಪತಿಗಳಾಗಿ ಕಾರ್ಯನಿರ್ವಹಿಸಿದ್ದಾರೆ. ೧೮ ಸ್ವತಂತ್ರಮತ್ತು ೨೮ ಸಂಪಾದಿತಕೃತಿಗಳನ್ನು ಪ್ರಕಟಿಸಿರುವ ಇವರು, ‘ದಕ್ಷಿಣ ಕನ್ನಡಜಿಲ್ಲೆಯಲ್ಲಿ ಸಣ್ಣ ಕತೆಗಳಹುಟ್ಟು ಬೆಳವಣಿಗೆ’ ಮಹಾ ಪ್ರಬಂಧಕ್ಕೆ ಪಿಎಚ್ಡಿಯನ್ನು ಪಡೆದಿದ್ದಾರೆ. ಮಹಿಳೆಯ ಮೇಲೆ ನಡೆಯುವ ಶೋಷಣೆಯ ವಿವಿಧ ರೂಪಗಳನ್ನು ಚರ್ಚಿಸುತ್ತಲೇ, ಸಮತೆಯ ಕಡೆ ಸಮನ್ವಯ ದಾರಿಯೊಂದನ್ನು ಈ ಲೇಖನದಲ್ಲಿ ಅವರು ಕಂಡುಕೊಂಡಿದ್ದಾರೆ. ಇರುವ ಸ್ಥಿತಿಗಿಂತ ಉತ್ತಮ ಸ್ಥಿತಿಗೆ ಏರುವುದನ್ನು ಅಭಿವೃದ್ಧಿ ಎಂದು ಗುರುತಿಸುತ್ತಾ, ಇದೊಂದು ಧನಾತ್ಮಕ ಬದಲಾವಣೆಯನ್ನು ತರುವ ಬೆಳವಣಿಗೆಯ ಪ್ರಕ್ರಿಯೆ ಎಂದು ಗುರುತಿಸಲಾಗುತ್ತದೆ. ಅಭಿವೃದ್ಧಿಯನ್ನು ಒಂದು ಪ್ರದೇಶ ಅಥವಾ ಜಿಲ್ಲೆಯ ನೆಲೆಯಲ್ಲಿ ಗುರುತಿಸುವ ಸಂದರ್ಭದಲ್ಲಿ, ಎಲ್ಲೆಲ್ಲಿ ವಿಶಾಲವಾದ ಮತ್ತು ಒಳ್ಳೆಯ ರಸ್ತೆಗಳು, ಭವ್ಯ ಕಟ್ಟಡಗಳು, ಹತ್ತುಹಲವು ಕಾರ್ಖಾನೆಗಳು, ಆಡಳಿತ ಕಚೇರಿಗಳ ಉಪಸ್ಥಿತಿ, ಅನೇಕ ಶಾಲೆ, ಕಾಲೇಜುಗಳ ಸೌಲಭ್ಯ, ಆರೋಗ್ಯ ಸೇವೆಗಳ ಲಭ್ಯತೆ, ಅಂದವಾದ ಉದ್ಯಾನವನಗಳು ಇತ್ಯಾದಿಗಳು ಇರುತ್ತವೋ ಅವು ಆ ಪ್ರದೇಶದ ಅಭಿವೃದ್ಧಿಯ ಸೂಚಕಗಳೆಂದು ಗುರುತಿಸಲಾಗುತ್ತದೆ. ಅಭಿವೃದ್ಧಿ ಎಂದರೆ ಇಷ್ಟಿದ್ದರೆ ಸಾಕೇ? ಇದು ಸುಸ್ಥಿರ ಅಭಿವೃದ್ಧಿಯೇ? ಅಭಿವೃದ್ಧಿಗೂ ಸುಸ್ಥಿರ ಅಭಿವೃದ್ಧಿಗೂ ಮೂಲಭೂತ ವ್ಯತ್ಯಾಸಗಳು ಇವೆಯೇ? ಇದ್ದಲ್ಲಿ ಅವು ಯಾವುವು? ಸುಸ್ಥಿರ ಅಭಿವೃದ್ಧಿಯ ಪರಿಕಲ್ಪನೆ ಯಾವಾಗ ಮುನ್ನಡೆಗೆ ಬಂದಿತು? ಅದಕ್ಕೂ ಲಿಂಗತ್ವ ಸಮನ್ಯಾಯಕ್ಕೂ ಸಂಬಂಧವಿದೆಯೇ? ಇದ್ದಲ್ಲಿ ಅದರ ಸ್ವರೂಪವೇನು? ಇವೇ ಮುಂತಾದ ಪ್ರಶ್ನೆಗಳನ್ನು ಕೇಳಿಕೊಳ್ಳೋಣ. ೧೯೮೯ ರಲ್ಲಿ ಮೊತ್ತ ಮೊದಲ ಬಾರಿಗೆ ಸುಸ್ಥಿರ ಅಭಿವೃದ್ಧಿಯ ಪರಿಕಲ್ಪನೆ ಬಳಕೆಗೆ ಬಂದಿತು. ಅಭಿವೃದ್ಧಿಯ ಓಟದಲ್ಲಿ ನಾವು ಕೆಲವೇ ಕೆಲವರ ಹಿತವನ್ನು ಮಾತ್ರ ಗಮನಿಸಿದ ತಪ್ಪನ್ನು ಎಸಗಿದ್ದೇವೆ. ನಿರ್ದಿಷ್ಟ ವರ್ಗ, ಗುಂಪಿನ, ಸಮುದಾಯದ ಅಭಿವೃದ್ಧಿಯನ್ನೇ ಸಮಾಜದ ಸರ್ವರ ಅಭಿವೃದ್ಧಿ ಎಂದು ವ್ಯಾಖ್ಯಾನಿಸಿ, ಅವರ ಹಿತವನ್ನೇ ಎಲ್ಲರ ಹಿತ, ಪ್ರದೇಶದ ಹಿತವೆಂದು ನಂಬಿಸಿಬಿಟ್ಟಿದ್ದೇವೆ. ಇಂತಹ ಅಭಿವೃದ್ಧಿಯು ಸಾಮಾನ್ಯವಾಗಿ ಉಳ್ಳವರ, ಬಂಡವಾಳಿಗರ, ಅಧಿಕಾರಸ್ಥರ, ಮೇಲ್ಜಾತಿಗಳ, ಅಕ್ಷರಸ್ಥರ ಮತ್ತು ನಗರವಾಸಿಗಳ ಹಿತವನ್ನಷ್ಟೇ ಗಮನಿಸಿದೆ. ಹೀಗಾಗಿ ಬಹುಸಂಖ್ಯಾತರ, ಗ್ರಾಮೀಣರ, ಬಡವರ, ಅನಕ್ಷರಸ್ಥರ ಅಗತ್ಯ, ನಿರೀಕ್ಷೆ, ಸಕ್ರಿಯ ಪಾಲ್ಗೊಳ್ಳುವಿಕೆ ಮತ್ತು ಅವರ ಹಿತವನ್ನು ಪರಿಗಣಿಸಿದ ಅಭಿವೃದ್ಧಿಯನ್ನು ಸುಸ್ಥಿರ ಅಭಿವೃದ್ಧಿಯೆಂದು ಪರಿಗಣಿಸಬೇಕಿದೆ. ಅಭಿವೃದ್ಧಿಯು ಲಿಂಗತ್ವದ ಮೇಲೆ ಬೀರಿದ ಪರಿಣಾಮಗಳನ್ನು ಐದು ನೆಲೆಗಳಲ್ಲಿ ಗಮನಿಸಬಹುದು. ಅವುಗಳೆಂದರೆ ಲಿಂಗಾನುಪಾತ, ಶಿಕ್ಷಣ, ಆರೋಗ್ಯ, ಆರ್ಥಿಕತೆ ಮತ್ತು ಪರಿಸರ. ಲಿಂಗಾನುಪಾತ : ಸಂತಾನ ನಿಯಂತ್ರಣದ ಆವಿಷ್ಕಾರವು ಪ್ರಗತಿಯ ಹಾದಿಯಲ್ಲಿನ ದೊಡ್ಡ ಕೊಡುಗೆ ಎನಿಸಿದೆ. ಅಷ್ಟೇ ಅಲ್ಲ ಮಹಿಳೆಯರಿಗೆ ತಮ್ಮ ದೇಹದ ಮೇಲಿನ ಹಕ್ಕನ್ನು ಮೊತ್ತಮೊದಲ ಬಾರಿಗೆ ಒದಗಿಸಿ, ಅವರ ಬದುಕಿನಲ್ಲಿ ಊಹಾತೀತ ಬದಲಾವಣೆಯನ್ನು ತಂದುದು ನಮಗೆಲ್ಲ ಗೊತ್ತಿರುವ ಸಂಗತಿ. ಇಂತಹ ವಿಜ್ಞಾನದ ಆವಿಷ್ಕಾರದ ಭಾಗವಾದ ಆಮ್ನಿಯೋ ಸಿಂಥೆಸಿಸ್ ನ ಉದ್ದೇಶವು ಭ್ರೂಣದ ಆರೋಗ್ಯವನ್ನು ಪ್ರಸವ ಪೂರ್ವದಲ್ಲಿ ತಿಳಿದು, ಅದರ ಆರೋಗ್ಯದ ಕುರಿತು ಮುಂಜಾಗ್ರತೆ ವಹಿಸಲು ಇದು ವರದಾನವಾಯಿತು. ಆದರೆ ಸಂತಾನ ನಿಯಂತ್ರಣ ಎಂಬುದು ಕುಟುಂಬದಲ್ಲಿ ಮಕ್ಕಳ ಸಂಖ್ಯೆಯನ್ನು ನಿಯಂತ್ರಿಸುವ ಬದಲು, ಮಗುವಿನ ಲಿಂಗದ ಆಯ್ಕೆ(ಸೆಲೆಕ್ಷನ್)ಯ ಉದ್ದೇಶಕ್ಕೆ ಬಳಕೆಯಾಗ ತೊಡಗಿತು. ಇದಕ್ಕೆ ಗಂಡು ಮಗುವಿನ ಕುರಿತ ಸಾಂಪ್ರದಾಯಿಕವಾದ ಚಿಂತನೆಯು ಪ್ರಮುಖವಾದ ಕಾರಣ. ಉಳ್ಳವರಲ್ಲಿ ಆಸ್ತಿಯು ಬೇರೆಕಡೆ ವರ್ಗಾವಣೆ ಆಗದಂತೆ ತಡೆಯಲು ಲಿಂಗದ ಆಯ್ಕೆಯ ಪ್ರಕ್ರಿಯೆ ಪ್ರಬಲವಾಯಿತು. ಹೀಗೆ ಭ್ರೂಣದ ಆರೋಗ್ಯದ ಸ್ಥಿತಿಗತಿಯನ್ನು ಅರಿಯಲು ಜಾರಿಗೆ ಬಂದ ತಂತ್ರಜ್ಞಾನವು ಹೆಣ್ಣು ಭ್ರೂಣ ಹತ್ಯೆಗೆ ನಾಂದಿ ಆಯ್ತು. ತಂತ್ರಜ್ಞಾನದ ಇಂಥ ಕ್ರೂರ ಮತ್ತು ಅಮಾನವೀಯ ವಿರೂಪಿತ ಅಳವಡಿಕೆಯ ವಿರುದ್ಧ ಆರಂಭವಾದ ಹೋರಾಟವು ಮೂರು ದಶಕಗಳ ಬಳಿಕವೂ ಇನ್ನೂ ಮುಗಿದಿಲ್ಲ. ಹೊಸ ಹೊಸ ರೂಪದಲ್ಲಿ ಮತ್ತು ಗುಟ್ಟು ಗುಟ್ಟಾಗಿ ಎಲ್ಲೆಡೆ ತನ್ನ ಕ್ರೂರ ಬಾಹುಗಳನ್ನು ವಿಸ್ತರಿಸಿಕೊಂಡಿದೆ. ತೀರ ಇತ್ತೀಚೆಗೆ ಬೆಂಗಳೂರು, ಮಂಡ್ಯ, ಶ್ರೀರಂಗಪಟ್ಟಣ ಮತ್ತು ಮೈಸೂರು ಮುಂತಾದ ಪಟ್ಟಣಗಳಲ್ಲಿ ಬೆಳಕಿಗೆ ಬಂದ ಅಕ್ರಮ ಸ್ತ್ರೀ ಭ್ರೂಣ ಹತ್ಯೆಯ ಪ್ರಕರಣಗಳು ಇದಕ್ಕೆ ಜೀವಂತ ಸಾಕ್ಷಿಗಳು. ಲಿಂಗಾನುಪಾತವು ಕರ್ನಾಟಕದಲ್ಲಿ ಗಂಭೀರ ಸಮಸ್ಯೆ ಆಗಿದೆ ಎಂಬುದನ್ನು ಇದು ಸೂಚಿಸುತ್ತದೆ. ೧೯೭೧ರಲ್ಲಿ ಸಾವಿರಕ್ಕೆ ೯೫೭ರಷ್ಟು ಇದ್ದ ಲಿಂಗಾನುಪಾತವು ೨೦೧೧ರಲ್ಲಿ ೯೭೩ ರಷ್ಟು ಹೆಚ್ಚಾಗಿದೆ ಎಂದು ಮೇಲ್ನೋಟಕ್ಕೆ ಗೋಚರಿಸಿದರೂ ಆರು ವರ್ಷದೊಳಗಿನ ಹೆಣ್ಣುಮಕ್ಕಳ ಸಂಖ್ಯೆಯು ಕ್ರಮವಾಗಿ ೯೭೮ ರಿಂದ ೯೪೮ ರಷ್ಟು ಕುಸಿತ ಕಂಡಿರುವುದು ಕಳವಳಕಾರಿಯಾದ ವಿಷಯ. ಕಳೆದ ಐದು ದಶಕಗಳ ಹಿಂದಿಗಿಂತ ಇಂದು ಶಿಕ್ಷಣ, ನಗರೀಕರಣ, ಉದ್ಯೋಗೀಕರಣ, ಆರ್ಥಿಕ ಅಭಿವೃದ್ಧಿ, ಆರೋಗ್ಯ ಸೇವೆಗಳ ಲಭ್ಯತೆ ಇವೇ ಮುಂತಾದವು ಉತ್ತಮ ಸ್ಥಿತಿಯಲ್ಲಿ ಇದ್ದಾಗ್ಯೂ ಲಿಂಗಾನುಪಾತದ ಕುಸಿತವು ಅಭಿವೃದ್ಧಿಯ ಕುರಿತ ಸಾಂಪ್ರದಾಯಿಕ ಚಿಂತನೆಗಳ ಮರು ವಿಮರ್ಶೆಯ ಅಗತ್ಯವನ್ನು ಸೂಚಿಸುತ್ತದೆ. ೨೦೧೩-೧೫ ರಲ್ಲಿ ಗ್ರಾಮೀಣ ಭಾಗದಲ್ಲಿ ೯೬೭ರಷ್ಟಿದ್ದ ಲಿಂಗಾನುಪಾತವು ೨೦೧೭-೧೯ರಲ್ಲಿ ೯೪೧ಕ್ಕೆ ಇಳಿದಿದೆ. ನಗರದಲ್ಲಿ ೨೦೧೩-೧೫ ರಲ್ಲಿ ೮೮೭ರಷ್ಟಿದ್ದ ಲಿಂಗಾನುಪಾತವು ೮೭೩ ರಷ್ಟು ಕಳವಳಕಾರಿಯಾಗಿ ಕುಗ್ಗಿದೆ. ಇಂದು ಎಲ್ಲೆಲ್ಲಿ ನಗರೀಕರಣ, ನೀರಾವರಿ ಸೌಕರ್ಯ ಮತ್ತು ವೈದ್ಯಕೀಯ ಸೌಲಭ್ಯಗಳು ಹೆಚ್ಚಾಗಿವೆಯೋ ಅಲ್ಲಿ ಲಿಂಗಾನುಪಾತವು ಕುಸಿಯುತ್ತ ಸಾಗಿದೆ. ಗ್ರಾಮೀಣರ ಮನೋಭಾವವು ಹೆಣ್ಣುಶಿಶುವಿನ ಕುರಿತ ನಕಾರಾತ್ಮಕ ನಿಲುವನ್ನು ಹೊಂದಿರುವುದನ್ನು ಅಂಕಿ ಅಂಶಗಳು ದೃಢಪಡಿಸುತ್ತವೆ. ಇಂತಹ ಕಳವಳಕಾರಿ ಲಿಂಗಾನುಪಾತವು ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ, ಮಾನವ ಕಳ್ಳ ಸಾಗಣೆ, ಪ್ರವಾಸಿ ಲೈಂಗಿಕೋದ್ಯಮ ಮುಂತಾದ ಇನ್ನಿಷ್ಟು ಭೀಕರವಾದ ಮಹಿಳೆಯರ ಶೋಷಣೆಗೆ ದಾರಿ ಮಾಡಿಕೊಡುತ್ತಿವೆ. ಶಿಕ್ಷಣ : ಶಿಕ್ಷಣವು ವ್ಯಕ್ತಿಯ ಚಿಂತನೆಯ ಮಟ್ಟವನ್ನು ಹೆಚ್ಚಿಸುತ್ತದೆ, ವೈಚಾರಿಕತೆ ಮತ್ತು ವೈಜ್ಞಾನಿಕತೆಯನ್ನು ಬೆಳೆಸುತ್ತದೆ, ವ್ಯಕ್ತಿಯನ್ನು ಸ್ವಾವಲಂಬಿಯನ್ನಾಗಿ ಮತ್ತು ಪ್ರಜ್ಞಾವಂತ ನಾಗರಿಕರನ್ನಾಗಿ ಸೃಷ್ಟಿಸುತ್ತದೆ ಎಂದು ನಂಬಲಾಗಿತ್ತು. ೧೯೭೧ರಲ್ಲಿ ೨೯.೪೫ಶೇ. ಇದ್ದ ಮಹಿಳಾ ಸಾಕ್ಷರತೆಯು ೨೦೧೧ರ ಹೊತ್ತಿಗೆ ೭೪.೦೪ ಶೇ. ಗೆ ಹೆಚ್ಚಿದೆ. ಇದೊಂದು ಗಮನಾರ್ಹ ಮತ್ತು ಹೆಮ್ಮೆ ಪಡಬೇಕಾದ ಸಂಗತಿ ಎಂದು ಮೇಲ್ನೋಟಕ್ಕೆ ಅನಿಸುತ್ತದೆ. ಕಳೆದ ಅರ್ಧ ಶತಮಾನದಲ್ಲಿ ಮಹಿಳೆಯರು ಗಣನೀಯ ಸಂಖ್ಯೆಯಲ್ಲಿ ಉನ್ನತ ಶಿಕ್ಷಣ ಕ್ಷೇತ್ರವನ್ನು ಪ್ರವೇಶಿಸಿದ್ದಾರೆ, ಹೊರದುಡಿಮೆಗೆ ತೆರೆದುಕೊಂಡಿದ್ದಾರೆ. ತಮಗೆ ನಿರ್ಬಂಧಿತವಾದ ಹಲವು ಕ್ಷೇತ್ರಗಳನ್ನು ಪ್ರವೇಶಿಸಿ, ತಮ್ಮ ಸಾಮರ್ಥ್ಯ ಮತ್ತು ಪ್ರಾವೀಣ್ಯವನ್ನು ಮೆರೆದಿರುವುದು ನಿಜ. ಇಂದು ಯಾವುದೇ ಶಿಕ್ಷಣ ಸಂಸ್ಥೆಗಳಲ್ಲಿ ಪದವಿ ಮತ್ತು ಸ್ನಾತಕ ಪದವಿ ಕೋರ್ಸುಗಳಲ್ಲಿ ಓದುತ್ತಿರುವವರಲ್ಲಿ ೭೫ ಶೇ. ದಷ್ಟು ವಿದ್ಯಾರ್ಥಿಗಳು ಹೆಣ್ಣುಮಕ್ಕಳು. ಈ ಬಗ್ಗೆ ಸಂಭ್ರಮಿಸುವ ಹೊತ್ತಲ್ಲೇ, ಪುರುಷ ಪ್ರಧಾನ ಸಾಮಾಜಿಕತೆಯು ಹೆಣ್ಣುಮಕ್ಕಳಿಗೆ ಒದಗಿಸಿದ ಉದ್ಯೋಗ ರಂಗದ ಅವಕಾಶವನ್ನು ಸ್ವಲ್ಪ ಕೂಲಂಕಷವಾಗಿ ವಿಶ್ಲೇಷಿಸಬೇಕು. ಶಿಕ್ಷಣ ರಂಗದಲ್ಲಿ ತಳಹಂತದ ಅಧ್ಯಾಪಕರಲ್ಲಿ ಗರಿಷ್ಠ ಸಂಖ್ಯೆಯಲ್ಲಿರುವ ಶಿಕ್ಷಕಿಯರು ಉನ್ನತ ಶಿಕ್ಷಣ ವಲಯಕ್ಕೆ ಬಂದಾಗ ಯಾಕೆ ವಿರಳರಾಗುತ್ತಾರೆ? ಎಲ್ಲ ಪರೀಕ್ಷೆಗಳ ಫಲಿತಾಂಶಗಳ ಪ್ರಮಾಣದಲ್ಲಿ ಮುಂದಿರುವ ಹೆಣ್ಣುಮಕ್ಕಳು ಸಂಶೋಧನಾ ರಂಗದಲ್ಲಿ, ವೃತ್ತಿಪರತೆಯಲ್ಲಿ, ಅಧಿಕಾರದ ಕೇಂದ್ರಗಳಲ್ಲಿ, ನಿರ್ಣಯ ತೆಗೆದುಕೊಳ್ಳುವ ಜಾಗಗಳಲ್ಲಿ, ರಾಜಕೀಯ ಕ್ಷೇತ್ರದಲ್ಲಿ ಕಾಣುವುದಿಲ್ಲ ಯಾಕೆ? ಇದಕ್ಕೂ ಸಮಾಜದ ಪುರುಷ ಪ್ರಧಾನ ಚಿಂತನಾಕ್ರಮಕ್ಕೂ ಇರುವ ನೇರವಾದ ಸಂಬಂಧವನ್ನು ನಾವು ಅಧ್ಯಯನ ಮಾಡಿ, ವಿಶ್ಲೇಷಿಸಿ, ಬದಲಾವಣೆಗೆ ಪರಿಣಾಮಕಾರಿಯಾದ ಉಪಕ್ರಮಗಳನ್ನು ಕೈಗೊಳ್ಳಲು ಕಟಿಬದ್ಧರಾಗಬೇಕಿದೆ. ಇದೇ ಸಂದರ್ಭದಲ್ಲಿ ಶಿಕ್ಷಣದ ಹೆಸರಿನಲ್ಲಿ ನಾವು ಎಳೆಯರಿಗೆ ಯಾವ ಉಣಿಸನ್ನು, ಯಾವ ತಿರುಳನ್ನು ಮತ್ತು ಮಾದರಿಯನ್ನು ನೀಡುತ್ತಿದ್ದೇವೆ ಎಂಬುದು ಚರ್ಚಾರ್ಹ ಸಂಗತಿ. ‘ ವಸಾಹತುಶಾಹಿಯು ತನ್ನ ಅನುಕೂಲಕ್ಕೆ ಕ್ಲರಿಕಲ್ ವರ್ಗವನ್ನು ನಿರ್ಮಿಸಲು ಬೇಕಾದ ಶಿಕ್ಷಣವನ್ನು ನೀಡಿತು ’ ಎಂದು ಆರೋಪಿಸಿದಂತೆ, ಸ್ವತಂತ್ರ ಭಾರತದಲ್ಲಿ ಶಿಕ್ಷಣವನ್ನು ನೀಡುವಾಗ ಮಕ್ಕಳಲ್ಲಿ ವೈಚಾರಿಕತೆ ಮತ್ತು ವೈಜ್ಞಾನಿಕತೆಯನ್ನು ಬೆಳೆಸದೆ, ಪುರುಷ ಪ್ರಧಾನ ಮೌಲ್ಯಗಳನ್ನೇ ಗಂಡು-ಹೆಣ್ಣು ಮಕ್ಕಳಲ್ಲಿ ಬೆಳೆಸುವ ಪಠ್ಯಗಳ ಮಾದರಿಗಳನ್ನು ನೀಡುತ್ತಿದ್ದೇವೆ. ಪ್ರಾಥಮಿಕ ಶಾಲಾ ಪಠ್ಯಗಳ ಪಾಠಗಳಲ್ಲಿ ಲಿಂಗ ತಾರತಮ್ಯದ ಹಸಿಹಸಿ ಮಾದರಿಗಳನ್ನು ಭಾಷೆ, ಪಾತ್ರಗಳು, ಚಿತ್ರ, ವೃತ್ತಿ ಇತ್ಯಾದಿ ನೆಲೆಗಳಲ್ಲಿ ಉಣಪಡಿಸಲಾಗಿದೆ. ಪ್ರಶ್ನಿಸುವ ಮನೋಭಾವವನ್ನು ಎಳವೆಯಿಂದ ಹತ್ತಿಕ್ಕಿ, ಮಕ್ಕಳನ್ನು ಹೇಳಿದ್ದನ್ನು ಪಾಲಿಸುವ ಗೊಂಬೆಗಳನ್ನಾಗಿ ಮಾಡಲಾಗುತ್ತಿದೆ. ಸಮಾನ ಶಿಕ್ಷಣ, ವೃತ್ತಿ, ಜವಾಬ್ದಾರಿ, ಸ್ಥಾನಮಾನಗಳನ್ನು ಸ್ತ್ರೀ-ಪುರುಷರು ಹೊಂದಿದ್ದರೂ ಗೃಹಕೃತ್ಯದ ಜವಾಬ್ದಾರಿ ಇಂದಿಗೂ ಹೆಣ್ಣಿನದೇ ಎಂಬ ನಿಲುವನ್ನು ಯುವಕರು ಹೊಂದಿರುವುದಕ್ಕೂ ಈ ಮೌಲ್ಯಗಳ ಉಣಿಸೇ ಕಾರಣವಾಗಿದೆ. ಇನ್ನೊಂದೆಡೆ, ಜನಪದ ಜ್ಞಾನವನ್ನು ಅಕಾಡಮಿಕ್ ವಲಯ ಹೇಗೆ ನಿರ್ಲಕ್ಷ ,ಉಪೇಕ್ಷೆ ಮತ್ತು ತಾತ್ಸಾರದಿಂದ ಕಂಡಿದೆಯೋ, ಅವೈಜ್ಞಾನಿಕ ಎಂದು ಹೀಗಳೆದಿದೆಯೋ, ಅದೇ ರೀತಿ ಮಹಿಳೆಯರ ಅನುಭವ ಮೂಲದ ಜ್ಞಾನವನ್ನು ಅಕಾಡಮಿಕ್ ವಲಯವು ನಿರ್ಲಕ್ಷಿಸಿ, ಪರಿಧಿ ಆಚೆ ಇಟ್ಟಿದೆ. ಅವರು ಪೀಳಿಗೆಯಿಂದ ಪಡೆದ ಜ್ಞಾನವನ್ನೆಲ್ಲ ಉಪೇಕ್ಷಿಸಿದೆ. ಓರ್ವ ಹೆಣ್ಣುಮಗಳು ತನ್ನ ಸುತ್ತಲ ಪರಿಸರದಲ್ಲಿ ಆಹಾರವಾಗಿ ಉಪಯೋಗಿಸಬಹುದಾದ ನೂರಾರು ಸಸ್ಯ ಪ್ರಭೇದಗಳನ್ನು ಗುರುತಿಸಿ, ಆಹಾರಕ್ಕೂ ವೈದ್ಯಕೀಯಕ್ಕೂ ಬಳಸಿದರೆ ಅದಕ್ಕೆ ಮಾರುಕಟ್ಟೆ ಸಂಸ್ಕೃತಿಯಲ್ಲಿ ಬೆಲೆ ಇಲ್ಲ; ಅವುಗಳನ್ನು ಗುರುತಿಸಲಾಗದಿದ್ದರೂ ಪದವಿ ಪಡೆದ ಏಕೈಕ ಕಾರಣಕ್ಕೆ ವ್ಯಕ್ತಿಯು ಬಾಟನಿ ತಜ್ಞ ಎನಿಸಿಕೊಳ್ಳಬಹುದು! ಹಸುಗೂಸಿನಿಂದ ಮುದುಕರವರೆಗಿನ ಎಲ್ಲರಿಗೆ ಯಾವ ಯಾವ ಆಹಾರವನ್ನು ಕೊಡಬೇಕು, ಯಾವ ಯಾವಾಗ ಕೊಡಬೇಕು, ಯಾವ ಋತುಮಾನದಲ್ಲಿ ಯಾವ್ಯಾವ ಆಹಾರ ಕೊಡಬೇಕು, ಯಾವ ಹದದಲ್ಲಿ ಬೇಯಿಸಿ, ಯಾವ ಪ್ರಮಾಣದಲ್ಲಿ ವಿಭಿನ್ನ ವಸ್ತುಗಳನ್ನು ಬೆರೆಸಿ ಆಹಾರ ತಯಾರಿಸಬೇಕು ಎಂಬುದನ್ನು ಮಹಿಳೆಯರು ತಮ್ಮ ಪರಂಪರೆಯ ತಿಳುವಳಿಕೆ ಮತ್ತು ನಿರಂತರ ಸಂಶೋಧನಾಶೀಲತೆಯ ಮೂಲಕ ಕಂಡುಕೊಂಡಿದ್ದಾರೆ. ಆದರೆ ಅದಕ್ಕಿಲ್ಲದ ಬೆಲೆ ಫುಡ್ ಸೈನ್ಸ್ ಪದವಿ ಪಡೆದರೆ ಲಭ್ಯವಾಗುತ್ತದೆ! ಇದು ಶಿಕ್ಷಣ ರಂಗದ ರಾಜಕೀಯ. ಆದುದರಿಂದ ಅಕ್ಷರಮೂಲದ, ಪಠ್ಯ ಮೂಲದ, ಶಾಲಾ-ಕಾಲೇಜು ಆವರಣದೊಳಗಿನ ಶಿಕ್ಷಣವೇ ನಿಜವಾದ ಶಿಕ್ಷಣ ಎಂಬ ಭದ್ರ ನಿಲುವು ಮಹಿಳೆಯರ ಜ್ಞಾನ ಪರಂಪರೆಯನ್ನು ಅಗೌರವದಿಂದ ಕಂಡುದು ಮಾತ್ರವಲ್ಲ, ಅದನ್ನು ಅದರ ನಿರಾಕರಣೆಯನ್ನು ಮಾಡುತ್ತಿರುವುದರಿಂದ ಮಹಿಳೆಗೆ ಘನತೆಯ ಬದುಕನ್ನು ಕಟ್ಟಿಕೊಳ್ಳಲು ಇದು ನೆರವಾಗಿಲ್ಲ. ಆದುದರಿಂದ ಇಲ್ಲಿ ಅಭಿವೃದ್ಧಿ ಎಂಬುದು ಮತ್ತೆ ಸಮಾಜದ ಒಂದು ಗುಂಪಿನ ಮೂಗಿನ ನೇರಕ್ಕೆ ರೂಪಿತವಾಗಿ, ಪೋಷಿತವಾಗಿ ಚಲಾವಣೆಗೊಳ್ಳುತ್ತಿವೆ. ಆರ್ಥಿಕ ರಂಗ : ಸಾಮಾನ್ಯವಾಗಿ ದೇಶದ ಆರ್ಥಿಕ ಅಭಿವೃದ್ಧಿಯನ್ನು ಜಿಡಿಪಿ ಮತ್ತು ತಲಾ ವರಮಾನವನ್ನು ಆಧರಿಸಿ ನಿರ್ಧರಿಸಲಾಗುತ್ತದೆ ಆದರೆ ಅವಷ್ಟೇ ಆರ್ಥಿಕ ಸಬಲೀಕರಣದ ಮಾನದಂಡಗಳು ಆದರೆ ಸಾಕೇ? ಅದೂ ಪುರುಷ ಪ್ರಧಾನ ಮೌಲ್ಯಗಳು ಬಲವಾಗಿ ಮತ್ತು ಗಾಢವಾಗಿ ಬೇರೂರಿರುವ ವ್ಯವಸ್ಥೆಯಲ್ಲಿ ಜಿಡಿಪಿಗಳು ಹೇಳುವ ಸತ್ಯಗಳು ಅಥವಾ ಜಿಡಿಪಿ ಮತ್ತು ತಲಾ ವರಮಾನ ನೀಡುವ ಅಂಕಿ ಅಂಶಗಳು ವಾಸ್ತವ ಸತ್ಯಗಳನ್ನು ಮತ್ತು ಲಿಂಗತ್ವದ ನೆಲೆಯ ಸತ್ಯಗಳನ್ನು ಹೇಳುವುದಿಲ್ಲ. ಹೀಗಾಗಿ ಮಾನವ ಅಭಿವೃದ್ಧಿ ಸೂಚ್ಯಂಕಗಳು (ಹೆಚ್ ಡಿ ಐ) ಮಾತ್ರ ವಾಸ್ತವ ಸತ್ಯಗಳಿಗೆ ಹತ್ತಿರವಾಗಿರಬಲ್ಲವು. ಹೆಚ್ ಡಿ ಐ ಎಂಬುದು ಜನರ ಜ್ಞಾನದ ಮಟ್ಟ, ಜೀವನ ಮಟ್ಟ, ಆರೋಗ್ಯ ಸೌಲಭ್ಯ ಇತ್ಯಾದಿಗಳನ್ನು ಆಧರಿಸಿ ಅಭಿವೃದ್ಧಿಯನ್ನು ನಿರ್ಧರಿಸುತ್ತದೆ. ಕರ್ನಾಟಕವು ಮೊತ್ತ ಮೊದಲು ಹೆಚ್ಡಿಐ ಮೂಲಕ ಅಭಿವೃದ್ಧಿಯನ್ನು ಅಳೆಯುವ ಕ್ರಮವನ್ನು ಪ್ರಯೋಗಿಸಿ ಕ್ರಾಂತಿಕಾರಿ ಹೆಜ್ಜೆಗಳನ್ನು ಇಟ್ಟಿದ್ದನ್ನು ಮರೆಯುವಂತಿಲ್ಲ. ಮಧ್ಯಮ ವರ್ಗದ ಬಹುತೇಕ ಕುಟುಂಬದ ಹೆಣ್ಣುಮಕ್ಕಳೇ ಅಪೌಷ್ಟಿಕತೆಯಿಂದ ಬಳಲುತ್ತಿರುವುದು ನಮ್ಮ ಮುಂದಿರುವ ವಾಸ್ತವ. ಹೀಗಿರುವಾಗ ಬಿಪಿಎಲ್ ಕುಟುಂಬದ ಹೆಣ್ಣುಮಕ್ಕಳ ಅಪೌಷ್ಟಿಕತೆಯ ಪ್ರಮಾಣವನ್ನು ಊಹಿಸುವುದೂ ಕಷ್ಟ. ಇಂದು ಕಾಲೇಜು ಮತ್ತು ವಿಶ್ವವಿದ್ಯಾನಿಲಯಗಳಲ್ಲಿ ಓದುವ ಅನೇಕ ಯುವತಿಯರು ಕೂಡ ಅಪೌಷ್ಟಿಕತೆಯಿಂದ ಹೊರತಾಗಿಲ್ಲ. ಗರ್ಭಿಣಿಯರು ಮತ್ತು ಹಾಲೂಡಿಸುವ ತಾಯಂದಿರಲ್ಲಿ ಕಡಿಮೆ ತೂಕ ಮತ್ತು ಅಪೌಷ್ಟಿಕತೆ ಗರಿಷ್ಠ ಪ್ರಮಾಣದಲ್ಲಿದೆ. ಇತ್ತೀಚಿನ ಅಂಕಿಅಂಶಗಳ ಪ್ರಕಾರ ಕರ್ನಾಟಕದಲ್ಲಿ ೧.೩ ಲಕ್ಷ ಮಕ್ಕಳು (ಐದು ವರ್ಷಕ್ಕಿಂತ ಕಿರಿಯರು) ಈ ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ ಮತ್ತು ಅದರಲ್ಲೂ ೧೧,೦೦೦ಕ್ಕಿಂತ ಹೆಚ್ಚು ಮಕ್ಕಳು ತೀವ್ರವಾದ ಅಪೌಷ್ಟಿಕತೆಗೆ ಒಳಗಾಗಿದ್ದಾರೆ. ಹೀಗಿರುವಾಗ ಅಭಿವೃದ್ಧಿಯ ನಮ್ಮ ಸಾಂಪ್ರದಾಯಿಕ ದೃಷ್ಟಿಕೋನವನ್ನು ಬದಲಾಯಿಸುವ ಮತ್ತು ಸುಸ್ಥಿರ ಅಭಿವೃದ್ಧಿಯನ್ನು ಸಾಧಿಸಲು ಮಾರ್ಗೋಪಾಯಗಳ ಹುಡುಕಾಟ ಮತ್ತು ಆ ಹಾದಿಯ ಚಲನೆ ನಮ್ಮ ಸಮಾಜದ ತುರ್ತಾಗಬೇಕಿದೆ. ಇಂದಿಗೂ ಬಹುತೇಕ ಕುಟುಂಬಗಳಲ್ಲಿ ತಂಗಳು ಉಣ್ಣುವವರು ಮನೆಯಲ್ಲಿ ಕೊನೆಯಲ್ಲಿ ಉಳಿದದ್ದನ್ನು ಉಣ್ಣುವವರು ಹೆಂಗಸರೇ ಇದು ಸಸ್ಯಾಹಾರ ಮಾಂಸಾಹಾರ ಸೇವನೆಯ ಕುಟುಂಬಗಳಲ್ಲಿ ಏಕರೂಪವಾಗಿ ಗೋಚರಿಸುತ್ತದೆ. ಕೆಲವು ಕಡೆಗಳಲ್ಲಿ ಮಾಂಸಾಹಾರದ ಅಡುಗೆ ಮಾಡುವುದು ಮಾತ್ರ ಹೆಂಗಸರ ಕೆಲಸವಾದರೆ, ಅದನ್ನು ಎಲ್ಲರಿಗೂ ಹಂಚುವುದು ಗಂಡಸರಂತೆ! ಇಂಥ ಪದ್ಧತಿ ಕೆಲವು ಕಡೆ ಮಾತ್ರ ಕಂಡರೂ ಅದರ ಹಿಂದಿನ ತರ್ಕ ಚಿಂತನಾರ್ಹ. ಕೆಲವೆಡೆ ಕೋಳಿ ಕಾಲು ಮತ್ತು ಕೋಳಿ ತಲೆಯನ್ನು ಗಂಡಸರು ತಿಂದರೆ, ಅವರ ತಲೆ ಮತ್ತು ಕಾಲು ನಡುಗುತ್ತದೆ ಎಂಬ ನಂಬಿಕೆಯನ್ನು ಹುಟ್ಟುಹಾಕಿ, ಅಷ್ಟಾದರೂ ಮಾಂಸದ ತುಂಡುಗಳು ಹೆಂಗಸರ ಪಾಲಿಗೆ ಉಳಿಯುವಂತೆ ಮಾಡಿದ್ದು ಕೇಳಿ ಬರುತ್ತದೆ. ಇಂಥ ನಿದರ್ಶನಗಳು ಹಲವು. ಮನೆಯ ದುಡಿಮೆಯಲ್ಲಿ ಸ್ತ್ರೀ ಪುರುಷರು ಸಮವಾಗಿ ಭಾಗಿಗಳಾದರೂ ಹಣದ ಯಜಮಾನಿಕೆ ಆಯಾ ಕುಟುಂಬದ ಪುರುಷರ ಕೈಯಲ್ಲಿ ಇಂದಿಗೂ ಇದೆ. ಹೀಗಾಗಿ ಕುಟುಂಬ ಮತ್ತು ಅದರ ಸದಸ್ಯರ ಅಗತ್ಯಗಳಲ್ಲಿ ಪುರುಷ ಸದಸ್ಯರ ಅಗತ್ಯಗಳು ಆದ್ಯತೆಯನ್ನು ಪಡೆಯುತ್ತವೆ. ಇದನ್ನು ಕೇವಲ ಪುರುಷರು ಮಾಡುತ್ತಾರೆ ಎಂದಲ್ಲ, ಪುರುಷ ಪ್ರಧಾನ ಚಿಂತನಾಧಾರೆಯ ಬಲಿಪಶುಗಳಾದ ಎಲ್ಲ ಸ್ತ್ರೀ- ಪುರುಷರು ಇಂತಹ ತಪ್ಪನ್ನು ಮಾಡುವುದು ಕಂಡುಬರುತ್ತದೆ. ಯು ಎನ್ ಡಿ ಪಿ ಯು ೨೦೨೨ ರಲ್ಲಿ ೧೯೩ ರಾಷ್ಟ್ರಗಳ ಎಚ್ ಡಿ ಐ ಯಲ್ಲಿ ಭಾರತದ ಸ್ಥಾನ ೧೩೪ ಎಂದು ಗುರುತಿಸಿದ್ದು, ಈಗ ೧೩೦ನೇ ಸ್ಥಾನದಲ್ಲಿದೆ. ನಮ್ಮ ಬೃಹತ್ ದೇಶದ ಅಕ್ಕಪಕ್ಕದ ಪುಟ್ಟ ರಾಷ್ಟ್ರಗಳಾದ ಶ್ರೀಲಂಕಾ, ಭೂತಾನ್ ಇವು ಕ್ರಮವಾಗಿ ೮೯ ಮತ್ತು ೧೨೫ನೇ ಸ್ಥಾನದಲ್ಲಿದ್ದು, ನಮಗಿಂತ ಉತ್ತಮ ಸ್ಥಾನದಲ್ಲಿವೆ. ಪಕ್ಕದ ಬಾಂಗ್ಲಾದೇಶವು ನಮ್ಮಂತೆ ೧೩೦ನೇ ಸ್ಥಾನವನ್ನು ಹಂಚಿಕೊಂಡಿದೆ. ಹೀಗಿರುವಾಗ ಇಂದಿಗೂ ನಮ್ಮ ಸರಕಾರಗಳು ಮತ್ತು ರಾಜಕಾರಣಿಗಳು ಜಿಡಿಪಿಯನ್ನು ಏರಿಸುವ ಮಾತಾಡುತ್ತಾರೆ ಹೊರತು ಎಚ್ ಡಿ ಐ ಯನ್ನು ಹೆಚ್ಚಿಸುವ ಕುರಿತು ಚಿಂತಿಸುತ್ತಿಲ್ಲ. ಈ ಕುರಿತು ಜಾಣ ಕಿವುಡು ಮತ್ತು ಕುರುಡುತನವನ್ನು ಪ್ರದರ್ಶಿಸುತ್ತಿರುವುದು ದುರಂತ. ಸಂಘಟಿತ ಮತ್ತು ಅಸಂಘಟಿತ ವಲಯ ಎರಡರಲ್ಲೂ ದುಡಿಯುವ ಮಹಿಳೆಯರು ಲಿಂಗತ್ವಪೂರ್ವ ಗ್ರಹಗಳ ಪಿಡುಗಿಗೆ ಒಳಗಾಗಿದ್ದಾರೆ. ಲಿಂಗತ್ವಪೂರ್ವಾಗ್ರಹಗಳು ಸ್ತ್ರೀ-ಪುರುಷರ ವೇತನ, ರಜಾ ಸೌಲಭ್ಯ, ಅವಶ್ಯಕತೆಗಳ ಸೃಷ್ಟಿ, ಲೈಂಗಿಕ ದುರ್ಬಳಕೆ ಇತ್ಯಾದಿಗಳ ಮೇಲೆ ಪರಿಣಾಮವನ್ನು ಬೀರಿವೆ. ಕೆಲಸದ ಸ್ಥಳದಲ್ಲಿ ಲೈಂಗಿಕ ದೌರ್ಜನ್ಯ ತಡೆ ಕಾಯ್ದೆ ತಾತ್ವಿಕವಾಗಿ ಜಾರಿಯಾದರೂ ಹೆಣ್ಣುಮಕ್ಕಳು ಮುಕ್ತವಾಗಿ ತಮ್ಮ ಮೇಲಾದ ಶೋಷಣೆಯ ವಿರುದ್ಧ ದೂರು ನೀಡಲು ಧೈರ್ಯ ತೋರುವ ವಾತಾವರಣವಿಲ್ಲ. ಒಂದೊಮ್ಮೆ ದೂರು ನೀಡಿದಾಗ ಸರಿಯಾದ ವಿಚಾರಣೆ ನಡೆಯುವ, ತಪ್ಪಿತಸ್ಥರಿಗೆ ಶಿಕ್ಷೆಯಾಗುವ ವಾತಾವರಣವು ಸಮಾಜದಲ್ಲಿ ಇನ್ನೂ ಮಸುಕಾಗಿಯೇ ಇದೆ. ಹೀಗಾಗಿ ಮಹಿಳೆಗೆ ಘನತೆಯಿಂದ ಬದುಕುವ ವಾತಾವರಣ ಇನ್ನೂ ರೂಪುಗೊಂಡಿಲ್ಲ. ಅಲ್ಪ ವೇತನ, ಹೆಚ್ಚಿನ ದುಡಿಮೆ, ವಿಶ್ರಾಂತಿರಹಿತ ದುಡಿಮೆ, ಸಂಘಟಣೆಯ ನಿರಾಕರಣೆ ಇತ್ಯಾದಿಗಳು ಅವರ ಘನತೆಯ ಬದುಕಿಗೆ ತೊಡಕಾಗಿವೆ. ಪರಿಸರ ಮತ್ತು ಸುಸ್ಥಿರ ಅಭಿವೃದ್ಧಿ: ಆದಿವಾಸಿಗಳು, ಬುಡಕಟ್ಟು ಸಮುದಾಯಗಳು ಕಾಡಿನಲ್ಲಿ ವಾಸಿಸುತ್ತಾ ತಮ್ಮ ಕಾಡನ್ನು ನಾಳಿನ ಜನಾಂಗಕ್ಕೆ ಕಾಪಿಡುವವರು ಆಗಿದ್ದರು. ಒಂದು ಮರವನ್ನು ಅನಿವಾರ್ಯವಾಗಿ ಕಡಿಯಲೇಬೇಕಾದಾಗ, ಅದರ ಮುಂದೆ ತಮ್ಮ ಅನಿವಾರ್ಯತೆಯನ್ನು ತಿಳಿಸಿ, ಕ್ಷಮಿಸಲು ಕೋರಿ, ಇನ್ನೊಂದು ಅಂತಹ ಸಸಿಯನ್ನು ನೆಟ್ಟು, ಆ ಬಳಿಕವೇ ಮರವನ್ನು ಕಡಿಯುತ್ತಿದ್ದರು. ಒಣಗಿದ ಗೆಲ್ಲುಗಳನ್ನು ಅವರು ಕಡಿದು, ದಿನದ ಅಗತ್ಯಗಳನ್ನು ಪೂರೈಸಿಕೊಳ್ಳುತ್ತಾರೆಯೇ ಹೊರತು, ಹಸಿ ಗೆಲ್ಲನ್ನು ಅವರು ಕಡಿಯುವುದಿಲ್ಲ. ಕಾಡಿನ ಪ್ರತಿಯೊಂದು ಉತ್ಪನ್ನವನ್ನು ಅತ್ಯಂತ ಎಚ್ಚರಿಕೆಯಿಂದ ಮತ್ತು ಮುಂದಿನ ಪೀಳಿಗೆಗೆ ಉಳಿಯುವಂತೆ ಅವರು ಬಳಸುವವರು. ಆಧುನಿಕತೆಯ ಹೆಸರಿನಲ್ಲಿ ಇಂದು ಪರಿಸರದ ಉತ್ಪನ್ನಗಳ ಮೇಲಿನ ದಾಳಿ ಎಗ್ಗಿಲದೆ ನಡೆದಿದೆ. ಕಾಡಿನ ಮೂಲನಿವಾಸಿಗಳನ್ನು ಹೊರಗಟ್ಟಿ, ಗಣಿಗಾರಿಕೆ, ಮರಮಟ್ಟುಗಳ ಸಾಗಣೆಯನ್ನು ಆಧುನಿಕ ಉಪಕರಣಗಳ ಮೂಲಕ ಕ್ಷಣಮಾತ್ರದಲ್ಲಿ ಲೂಟಿ ಹೊಡೆಯುವುದನ್ನೇ ಅಭಿವೃದ್ಧಿ ಎಂಬ ಜನಾಭಿಪ್ರಾಯ ರೂಪಣೆಯನ್ನು ಮಾಡಲಾಗಿದೆ. ಕೃಷಿಯಲ್ಲಿ ಆಧುನಿಕ ರಾಸಾಯನಿಕಗಳ ಬಳಕೆಯಿಂದ ಒಂದೆಡೆ ಮಣ್ಣಿನ ಫಲವತ್ತತೆಯನ್ನು ನಾಶ ಮಾಡಿದರೆ, ನೀರು, ಗೊಬ್ಬರ, ಬೀಜದ ಸಂರಕ್ಷಣೆ, ಬೆಳೆಗಳ ಕಟಾವು ಇತ್ಯಾದಿ ಎಲ್ಲ ಕೆಲಸಗಳಲ್ಲಿ ಸ್ವಾವಲಂಬಿಯಾಗಿದ್ದ ಕೃಷಿಕರನ್ನು ಇಂದು ಪರಾವಲಂಬಿಗಳನ್ನಾಗಿ ಮಾಡಲಾಗಿದೆ. ಕೃಷಿಯಲ್ಲಿ ಮಹಿಳೆಯ ಪಾಲ್ಗೊಳ್ಳುವಿಕೆ, ಬೆಳೆಯ ನಿರ್ಧಾರದಲ್ಲಿ ಅವಳ ಅಭಿಪ್ರಾಯದ ನಿರಾಕರಣೆಯಿಂದ ಬಹು ಬೆಳೆಯ ಕೃಷಿ ಪದ್ಧತಿಯು ನಾಶವಾಗಿ, ಮಾರುಕಟ್ಟೆ ಆಧಾರಿತ ಏಕ ಬೆಳೆ ಪದ್ಧತಿಗೆ ರೈತರನ್ನು ದೂಡಿ, ಅವರ ಬದುಕನ್ನು ಹೊಸಕಿ ಹಾಕಿದೆ. ಅಭಿವೃದ್ಧಿಯು ಕೇವಲ ಮಧ್ಯವರ್ತಿಗಳ, ಬಂಡವಾಳಿಗರ, ಅಧಿಕಾರಸ್ಥರ ಮೂಗಿನ ನೇರಕ್ಕೆ, ಅವರ ಅನುಕೂಲತೆಗೆ ಮಾತ್ರ ರೂಪಿತವಾಗಿದೆ. ಇವೆಲ್ಲವೂ ಮಹಿಳೆಯರ ಆರ್ಥಿಕ ಮತ್ತು ಆರೋಗ್ಯದ ಮೇಲೆ ಗಂಭೀರ ಪರಿಣಾಮಗಳನ್ನು ಬೀರಿವೆ. ಒಂದೆಡೆ ಮಹಿಳೆಯನ್ನು ಪ್ರಕೃತಿಗೆ, ನಿಸರ್ಗಕ್ಕೆ ಹೋಲಿಸುತ್ತಾ ಅವಳ ಮತ್ತು ಪರಿಸರದ ಮೇಲೆ ನಿರಂತರ ದಬ್ಬಾಳಿಕೆಯನ್ನು ಅಭಿವೃದ್ಧಿಯ ಹೆಸರಿನಲ್ಲಿ ಮಾಡಲಾಗುತ್ತಿದೆ. ಸುಸ್ಥಿರ ಅಭಿವೃದ್ಧಿಯು ಇಂಥ ನಿಲುವು, ಯೋಜನೆ ಮತ್ತು ಕಾರ್ಯಗಳನ್ನು ಸ್ಪಷ್ಟವಾಗಿ ವಿರೋಧಿಸುತ್ತ, ಸಮಾಜದ ಎಲ್ಲ ವರ್ಗಗಳ ಹಿತದ ನೆಲೆಯಿಂದ ಅಭಿವೃದ್ಧಿಯ ಕಲ್ಪನೆಯನ್ನು ಮರು ಕಟ್ಟಲು ಒತ್ತಾಯಿಸುತ್ತದೆ. ನಾವಿಂದು ಸುಸ್ಥಿರ ಅಭಿವೃದ್ಧಿಯಿಂದ ಎಷ್ಟು ದೂರ ಸಾಗಿ ಬಂದಿದ್ದೇವೆ ಎಂದರೆ ಅದನ್ನು ಕಲ್ಪಿಸಿಕೊಳ್ಳಲೂ ನಾವು ಅಸಮರ್ಥರಾಗಿದ್ದೇವೆ. ಎಲ್ಲರ ಹಿತವನ್ನು ಗಮನಿಸುವ, ಎಲ್ಲರಿಗೂ ಸಮಾನವಾಗಿ ಭಾಗವಹಿಸುವ ಅವಕಾಶವಿರುವ, ಎಲ್ಲರಿಗೂ ಸಮಾನ ಪ್ರಯೋಜನದ ಹಂಚಿಕೆ ಇರುವ, ಭವಿಷ್ಯದ ಪೀಳಿಗೆಗೂ ಪ್ರಾಕೃತಿಕ ಸಂಪತ್ತನ್ನು ಉಳಿಸುವ ಎಚ್ಚರ ಇರುವ, ಯಾವ ಅನಾರೋಗ್ಯಕರ ಸ್ಪರ್ಧೆಗೂ ಅವಕಾಶವಿಲ್ಲದ, ಅಭಿವೃದ್ಧಿಯ ಪರಿಕಲ್ಪನೆಯೇ ಸುಸ್ಥಿರ ಅಭಿವೃದ್ಧಿ. ಸಮಷ್ಠಿ ಪ್ರಜ್ಞೆ ಮತ್ತು ಲಿಂಗತ್ವ ಸಮನ್ವಯದ ದೃಷ್ಟಿಕೋನಗಳು ಇಂದು ನಾವು ಕಾಣುತ್ತಿರುವ ಸಾಮಾಜಿಕ ವ್ಯವಸ್ಥೆಯೊಳಗಿನ ಕ್ರೌರ್ಯ ಮತ್ತು ಅವಾಂತರಗಳನ್ನು ಕಡಿಮೆ ಮಾಡಬಲ್ಲದು.
ಬಹರೈನ್ | ಕೆಸಿಎಫ್ ಸೌತ್ ಝೋನ್ ನಿಂದ ರಕ್ತದಾನ ಶಿಬಿರ
ಬಹರೈನ್ : ಕೆಸಿಎಫ್ ಬಹರೈನ್ ಸೌತ್ ಝೋನ್ ವತಿಯಿಂದ ಫೆ.6ರಂದು ಸಲ್ಮಾನಿಯಾ ಮೆಡಿಕಲ್ ಕ್ಯಾಂಪಸಿನಲ್ಲಿ ಕೆಸಿಎಫ್ ಡೇ ಭಾಗವಾಗಿ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು. ನಾರ್ತ್ ಝೋನ್ ಅಧ್ಯಕ್ಷ ಅಹ್ಮದ್ ಉಸ್ತಾದ್ ದುಆಗೈದರು. ಸೌತ್ ಝೋನ್ ಅಧ್ಯಕ್ಷ ಸೈಯದ್ ಪೆರ್ಲ ಅಧ್ಯಕ್ಷತೆ ವಹಿಸಿದರು. ಕಾರ್ಯಕ್ರಮದಲ್ಲಿ ಕೆಸಿಎಫ್ ರಾಷ್ಟ್ರೀಯ, ಝೋನ್, ಸೆಕ್ಟರುಗಳ ನಾಯಕರು ಕಾರ್ಯಕರ್ತರು ಹಾಗೂ ವಿವಿಧ ರಾಷ್ಟ್ರಗಳ ಜನರು ಭಾಗವಹಿಸಿ 110 ಯೂನಿಟ್ ರಕ್ತವನ್ನು ಸಂಗ್ರಹಿಸಿದರು. ಕೆಸಿಎಫ್ ಸೌತ್ ಝೋನ್ ಕಾರ್ಯದರ್ಶಿ ಔಫ್ ಸಅದಿ ಉಜಿರೆ, ಕೋಶಾಧಿಕಾರಿ ಶಾಫಿ ಕಂಬಳಬೆಟ್ಟು, ಝೋನ್ ನಾಯಕರಾದ ಅಶ್ರಫ್ ಇಂದ್ರಾಜೆ, ಅಶ್ರಫ್ ಬೋವಿಕ, ನವಾಝ್ ಮುಡಿಮಾರ್, ಫಯಾಝ್ ಉಜಿರೆಬೆಟ್ಟು, ಸಿರಾಜ್ ರೆಂಜ, ಮುಝಮ್ಮಿಲ್ ಪೆರ್ನೆ ಹಾಗೂ ರಾಷ್ಟ್ರೀಯ ಸಮಿತಿಯ ನಾಯಕರಾದ ಜಮಾಲುದ್ದೀನ್ ವಿಟ್ಲ, ಹಾರಿಸ್ ಸಂಪ್ಯ, ಖಲಂದರ್ ಉಸ್ತಾದ್, ಮನ್ಸೂರ್ ಬೆಳ್ಮ, ಸೂಫಿ ಪೈಂಪಚ್ಚಾಲ್, ರಝಾಕ್ ಆನೆಕಲ್, ಮೂಸಾ ಪೈಂಬಚ್ಚಾಲ್ ಮತ್ತಿತರರು ಭಾಗವಹಿಸಿ ಸಹಕರಿಸಿದರು.
ಜಿಸಿಸಿ ಅಧ್ಯಕ್ಷರಾಗಿ ಮುಹಮ್ಮದ್ ಶರೀಫ್, ಪೂರ್ವ ಪ್ರದೇಶದ ಅಧ್ಯಕ್ಷರಾಗಿ ಇಕ್ಬಾಲ್ ಬೊಟ್ಟು
ಐಕ್ಯತೆಯ ಬದುಕು ದೇಶದ ಸರ್ವತೋಮುಖ ಅಭಿವೃದ್ಧಿಗೆ ಪೂರಕ: ಇಬ್ರಾಹಿಂ ಗಡಿಯಾರ್
ಬಂಟ್ವಾಳ: ಸಾಮರಸ್ಯ ಹಾಗೂ ಸಹಬಾಳ್ವೆಯ ಸಮಾಜದ ನಿರ್ಮಾಣದ ಜೊತೆಗೆ ಸಾಮಾಜಿಕ, ಸಾಂಸ್ಕೃತಿಕ ಹಾಗೂ ಕ್ರೀಡಾ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ ಕೊಡಾಜೆ ಐಕ್ಯ ವೇದಿಕೆಯ ಕಾರ್ಯ ಶ್ಲಾಘನೀಯವಾಗಿದೆ ಎಂದು ದುಬಾಯಿಯ ಗಡಿಯಾರ್ ಗ್ರೂಪ್ ಆಫ್ ಕಂಪೆನಿಗಳ ಮಾಲೀಕ ಇಬ್ರಾಹಿಂ ಗಡಿಯಾರ್ ಮೆಚ್ಚುಗೆ ವ್ಯಕ್ತಪಡಿಸಿದರು. ಕೊಡಾಜೆ ಐಕ್ಯ ವೇದಿಕೆಯ ಕಚೇರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಮಾತನಾಡಿದ ಅವರು, ಊರಿನಲ್ಲಿ ಯಾವುದೇ ಜಾತಿ, ಧರ್ಮ, ಮತಭೇದವಿಲ್ಲದ ವಾತಾವರಣ ನಿರ್ಮಾಣ ಅತೀ ಅಗತ್ಯವಾಗಿದ್ದು, ಈ ನಿಟ್ಟಿನಲ್ಲಿ ಎಲ್ಲರೂ ಕೈಜೋಡಿಸಿದಾಗ ದೇಶದ ಸರ್ವತೋಮುಖ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದು ಹೇಳಿದರು. ಲಯನ್ ಡಾ. ಎ. ಮನೋಹರ್ ರೈ ಮಾತನಾಡಿ, ಜನರ ಕಷ್ಟಗಳಿಗೆ ಸ್ಪಂದಿಸುವ ಸಂಘಟನೆಗಳು, ಅದಕ್ಕೆ ಸಹಕಾರ ನೀಡುವ ದಾನಿಗಳು ಹಾಗೂ ಏಕತೆಯ ಭಾವನೆಯನ್ನು ಮೈಗೂಡಿಸಿಕೊಂಡವರು ಸರ್ವಶ್ರೇಷ್ಠರು ಎಂದು ಅಭಿಪ್ರಾಯಪಟ್ಟರು. ಐಕ್ಯ ವೇದಿಕೆಯ ಅಧ್ಯಕ್ಷ ಅಶ್ರಫ್ ಭಾರತ್ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಈ ವೇಳೆ ಇಬ್ರಾಹಿಂ ಗಡಿಯಾರ್ ಅವರ ಸಾಮಾಜಿಕ ಸೇವೆಯನ್ನು ಗುರುತಿಸಿ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಐಕ್ಯ ವೇದಿಕೆಯ ಗೌರವಾಧ್ಯಕ್ಷ ಲತೀಫ್ ನೇರಳಕಟ್ಟೆ, ಸ್ಥಾಪಕಾಧ್ಯಕ್ಷ ಫಾರೂಕ್ ಗೋಳಿಕಟ್ಟೆ, ಸಾಂಸ್ಕೃತಿಕ ಕಾರ್ಯದರ್ಶಿ ಮನ್ಸೂರ್ ನೇರಳಕಟ್ಟೆ, ನಿಕಟಪೂರ್ವ ಕೋಶಾಧಿಕಾರಿ ರಿಯಾಝ್ ನೇರಳಕಟ್ಟೆ ಮೊದಲಾದವರು ಉಪಸ್ಥಿತರಿದ್ದರು.
ಅಯೋಧ್ಯೆಯಲ್ಲಿ ಈಗ್ಯಾರು ಪಾಗಲ್ ದಾಸ್ ಇಲ್ಲ ಅಯೋಧ್ಯೆ ದುಃಖಿತಗೊಂಡಿದೆ
ಬಿಜೆಪಿ ಮತ್ತು ವಿಶ್ವ ಹಿಂದೂ ಪರಿಷತ್ನಿಂದ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದ ನೆಪದಲ್ಲಿ ಪ್ರಾರಂಭಿಸಲಾದ ಉಗ್ರ ಆಂದೋಲನವನ್ನು ವಿರೋಧಿಸುವಲ್ಲಿ ಸ್ವಾಮಿ ಪಾಗಲ್ದಾಸ್ ಅವರ ಪಾತ್ರವನ್ನು ಉಲ್ಲೇಖಿಸದ ಹೊರತು ಅವರ ಪರಿಚಯ ಪೂರ್ಣವಾಗುವುದಿಲ್ಲ. ಆ ದಿನಗಳಲ್ಲಿ, ಈ ಆಂದೋಲನದ ವಿರುದ್ಧ ಕೆಲವೊಮ್ಮೆ ಬಹಿರಂಗವಾಗಿ ಮತ್ತು ಕೆಲವೊಮ್ಮೆ ಮೌನವಾಗಿ ಪ್ರತಿರೋಧ ವ್ಯಕ್ತಪಡಿಸಿದ್ದರು. ರಾಮಮಂದಿರಕ್ಕಾಗಿ ಸತ್ಯ, ಘನತೆ ಮತ್ತು ನ್ಯಾಯದ ಬಲಿಯನ್ನು ಕೊಡಲು ತಾವು ಖಂಡಿತವಾಗಿಯೂ ಒಪ್ಪುವುದಿಲ್ಲ ಮತ್ತು ಈ ಕುರಿತ ಪ್ರಯತ್ನದಲ್ಲಿ ತಾವಾಗಲಿ ಅಥವಾ ತಮ್ಮ ಸಂಗೀತ ಸಾಧನೆಯಾಗಲಿ ಭಾಗಿಯಾಗುವುದಿಲ್ಲ ಎಂದು ಪದೇ ಪದೇ ಸ್ಪಷ್ಟಪಡಿಸಿದರು. ‘ಕಣ್ಣ ಕಣಿವೆ’ಯಲ್ಲಿ ಅಮೃತದ ನೆನಪುಗಳನ್ನಿಟ್ಟುಕೊಂಡು ದಿಲ್ಲಿಯ ಡೈರಿಯ ಪುಟಗಳ ತಿರುವುವ ರೇಣುಕಾ ನಿಡಗುಂದಿ ಮೂಲತಃ ಧಾರವಾಡದವರು. ಮೂರು ದಶಕದಿಂದಲೂ ದೆಹಲಿಯಲ್ಲಿ ವಾಸ, ಖಾಸಗೀ ಕಂಪನಿಯೊಂದರಲ್ಲಿ ಉದ್ಯೋಗ, ದೆಹಲಿ ಕರ್ನಾಟಕ ಸಂಘದ ’ಮುಖವಾಣಿ ‘ಅಭಿಮತ’ ದ ಸಂಪಾದಕ ಬಳಗದಲ್ಲಿ ಸಕ್ರಿಯವಾಗಿ ಕಾರ್ಯ ನಿರ್ವಹಿಸಿದ್ದಾರೆ, ಡಾ.ಪುರುಷೋತ್ತಮ ಬಿಳಿಮಲೆಯವರ ಸಂಪಾದಕತ್ವದಲ್ಲಿ ರಾಜಧಾನಿಯಲ್ಲಿ ಕರ್ನಾಟಕ ಪುಸ್ತಕವನ್ನು ಸಂಪಾದಿಸಿದ್ದು ಅನೇಕ ಕಥೆ, ಕವನ, ಲೇಖನಗಳು ನಾಡಿನ ಪ್ರಮುಖ ಪತ್ರಿಕೆಗಳಲ್ಲಿ, ಮಾಸಿಕಗಳಲ್ಲಿ ಪ್ರಕಟಗೊಂಡಿವೆ. ಕಣ್ಣ ಕಣಿವೆ, ದಿಲ್ಲಿ ಡೈರಿಯ ಪುಟಗಳು, ಅಮೃತ ನೆನಪುಗಳು, ನಮ್ಮಿಬ್ಬರ ನಡುವೆ ಇವರ ಇತರ ಕೃತಿಗಳು. ಡಾ. ಅಂಬೇಡ್ಕರ್ ಅವರ ಸಂಪಾದಕೀಯಗಳ ಬರಹ ಸಂಗ್ರಹ ‘ಮೂಕನಾಯಕ’ ಇವರ ಇನ್ನೊಂದು ಪ್ರಮುಖ ಕೃತಿ. ಅಯೋಧ್ಯೆಯಲ್ಲಿ ಸಂಗೀತದ ಲಯದ ಜೊತೆಗೆ ಸತ್ಯ, ನ್ಯಾಯ, ನಿಷ್ಠೆಯನ್ನು ಎತ್ತಿ ಹಿಡಿದ ಪಾಗಲ್ದಾಸ್ ವ್ಯಕ್ತಿತ್ವವನ್ನು ಲೇಖಕಿ ಕಟ್ಟಿಕೊಟ್ಟಿದ್ದಾರೆ. ಅಯೋಧ್ಯೆಯಲ್ಲಿ ಬಹಳ ಹಿಂದಿನಿಂದಲೂ ಒಂದು ಗಾದೆ ಪ್ರಚಲಿತದಲ್ಲಿದೆ - ಎಲ್ಲಿ ವೃದ್ಧರು ಸೇರುವರೋ, ಅಲ್ಲಿ ಹಣದ ಕೊರತೆ; ಎಲ್ಲಿ ಯುವಕರು ಸೇರುವರೋ, ಅಲ್ಲಿ ಮೃದಂಗ ಬಾರಿಸುವುದು! ಅಂದರೆ, ವೃದ್ಧರು ಸೇರಿದಲ್ಲಿ ಉಪ್ಪು, ಎಣ್ಣೆ, ಉರುವಲಿನ ಕೊರತೆಯ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಾರೆ, ಆದರೆ ಯುವಕರ ಗುಂಪು ತಲೆ ಕೆಡಿಸಿಕೊಳ್ಳುವಂತಹ ಪರಿಸ್ಥಿತಿಯಲ್ಲೂ ಉಲ್ಲಾಸದಿಂದಿರುತ್ತಾರೆ. ಹೇಗಾದರೂ ಮಾಡಿ ತಮ್ಮನ್ನು ತಾವು ಸಂತೋಷವಾಗಿಟ್ಟುಕೊಳ್ಳುತ್ತಾರೆ, ಮೃದಂಗ ಬಾರಿಸುತ್ತಾರೆ! ಮೃದಂಗ, ಅದಕ್ಕೆ ‘ಪಖಾವಜ್’ ಎಂಬ ಇನ್ನೊಂದು ಹೆಸರೂ ಇದೆ, ಉಲ್ಲಾಸದ ವಾದ್ಯ, ಸಂತೋಷದ ಅಭಿವ್ಯಕ್ತಿ. ಆದರೆ, 1992ರ ಡಿಸೆಂಬರ್ 6ರಂದು ಏನಾಯಿತೋ, ಅದರ ನಂತರ ಅಯೋಧ್ಯೆಯಲ್ಲಿ ಹರ್ಷೋಲ್ಲಾಸದ ದನಿ ಅಡಗಿಹೋಗಿದೆ. ಸಂತೋಷಪಡಲು ಒಂದೇ ಒಂದು ನಿಜವಾದ ಕಾರಣವೂ ಉಳಿದಿಲ್ಲ ಎನಿಸುತ್ತದೆ. ಬಹುಶಃ ಆ ಕಾರಣಕ್ಕಾಗಿಯೇ ಅಲ್ಲಿ ಹಲವು ಸರಕಾರಿ, ಖಾಸಗಿ ಕಾರ್ಯಕ್ರಮಗಳು ನಡೆಯುತ್ತಿದ್ದರೂ, ಮೃದಂಗದ ನಾದ ಕೇಳುವುದಿಲ್ಲ. ಅದರ ಯಾವುದೇ ಮೂಲೆಯಿಂದಲೂ ಇಲ್ಲ! ಮೃದಂಗ ಬಾರಿಸುವವರು ಉಳಿದಿಲ್ಲ ಎಂದಲ್ಲ. ಮೊದಲನೆಯದಾಗಿ ಅವರಿಗೆ ಬಾರಿಸಲು ಮನಸ್ಸಿಲ್ಲ, ಮತ್ತು ಒಲ್ಲದ ಮನಸ್ಸಿನಿಂದ ಒತ್ತಾಯಪೂರ್ವಕ ಬಾರಿಸಲು ಕುಳಿತರೆ, ಅದು ಬೇಡದ ಸಮಯದಲ್ಲಿ ಶಹನಾಯಿ ಬಾರಿಸುತ್ತಿರುವಂತೆ, ಮೃದಂಗವಲ್ಲ, ತಮ್ಮ ಎದೆಯನ್ನೇ ಬಡಿದುಕೊಳ್ಳುತ್ತಿರುವಂತೆ ಭಾಸವಾಗುತ್ತದೆ. ಅಯೋಧ್ಯೆಯಲ್ಲಿ ಈಗ ಪಾಗಲ್ದಾಸ್ ಯಾರೂ ಇಲ್ಲ. ಬಹುಶಃ ಅವರ ಬಗ್ಗೆ ನಿಮಗೆ ಗೊತ್ತಿಲ್ಲ. ಉತ್ತರಪ್ರದೇಶದ ದೇವರಿಯಾ ಜಿಲ್ಲೆಯ ಮರೆಲಿ ಗ್ರಾಮ ನಿವಾಸಿಯಾದ ಜಾನಕಿ ದೇವಿ, 1920 ರ ಆಗಸ್ಟ್ 15ರಂದು ಗಂಡುಮಗುವಿಗೆ ಜನ್ಮ ನೀಡಿ, ಅವನಿಗೆ ರಾಮಶಂಕರ್ ಎಂದು ಹೆಸರಿಸಿದಾಗ, ಅವರಿಗೂ ಸಹ ಈ ರಾಮಶಂಕರ್ ಒಂದು ದಿನ ಅವರನ್ನು ಅಂತರ್ರಾಷ್ಟ್ರೀಯ ಖ್ಯಾತಿಯ ಮೃದಂಗ ಮಹರ್ಷಿ, ಮೃದಂಗಾಚಾರ್ಯ ಸ್ವಾಮಿ ಪಾಗಲ್ದಾಸ್ ಅವರ ತಾಯಿಯನ್ನಾಗಿ ಮಾಡುತ್ತಾರೆಂದು ಗೊತ್ತಿರಲಿಲ್ಲ. ಅದೇ ರೀತಿ 1997 ರ ಜನವರಿ 20, 21 ರಂದು ಅಯೋಧ್ಯೆಯ ಪ್ರಮೋದ್ ವನದಲ್ಲಿರುವ ಹನುಮತ್ ವಿಶ್ವಕಲಾ ಸಂಗೀತ ಆಶ್ರಮದಲ್ಲಿ ಅವರು ಇಹವನ್ನು ತ್ಯಜಿಸಿದಾಗ ಜನರು ಕೇವಲ ಒಬ್ಬ ಸಂಗೀತಗಾರನನ್ನು ಮಾತ್ರವಲ್ಲದೆ, ಸತ್ಯ, ಘನತೆ ಮತ್ತು ನ್ಯಾಯದ ರಕ್ಷಕನನ್ನೂ ಕಳೆದುಕೊಂಡಿದ್ದೇವೆ ಎಂದು ದುಃಖಿಸಿದ್ದು ಸಹಜವೇ. . ಹಾಗೆಯೇ, ಅವರ ಜನ್ಮ ದಿನಾಂಕವೇ ಮುಂದೆ ದೇಶದ ಸ್ವಾತಂತ್ರ್ಯ ದಿನಾಂಕವಾಗಲಿದೆ ಎಂದು ಆಗ ಯಾರೂ ಹೇಳಲು ಸಾಧ್ಯವಿರಲಿಲ್ಲ. ವಾಸ್ತವವಾಗಿ ಏನಾಯಿತೆಂದರೆ, ರಾಮಶಂಕರ್ ಇನ್ನೂ 13-14 ವರ್ಷದವನಾಗಿದ್ದಾಗ, ಅವನ ಮನಸ್ಸು ಮನೆಯಿಂದ ಬೇಸರಗೊಂಡು ಓಡಿಹೋಗಿ ಅಯೋಧ್ಯೆಗೆ ಬಂದನು ಮತ್ತು ಬಂಗಾಲಿ ಬಾಬಾ ಎಂದು ಪ್ರಸಿದ್ಧರಾಗಿದ್ದ ಮಹಂತ್ ರಾಮ್ಕಿಶುನ್ ದಾಸ್ ಅವರಿಂದ ದೀಕ್ಷೆ ಪಡೆದು ಹನುಮಾನ್ ಗಢಿಯ ಬಾಬಾ ರಾಮ್ ಸುಖದಾಸ್ ಅವರ ಬಳಿ ವಾಸಿಸಲು ಪ್ರಾರಂಭಿಸಿದನು. ಕೇವಲ ಒಂದು ವರ್ಷದ ನಂತರ, ಅವನೊಳಗಿದ್ದ ನಟನೆಯ ಆಸೆ ತೀವ್ರವಾಗಿ, ಅವನು ಬಿಹಾರದ ಒಂದು ನಾಟಕ ಕಂಪೆನಿಯನ್ನು ಸೇರಿಕೊಂಡನು. ನಂತರ, ಒಂದರ ನಂತರ ಒಂದರಂತೆ ನಾಟಕ ಕಂಪೆನಿಗಳಲ್ಲಿ ತನ್ನ ಪ್ರತಿಭೆಯನ್ನು ಪ್ರದರ್ಶಿಸುತ್ತಾ ಬಹಳಷ್ಟು ಹೆಸರು ಗಳಿಸಿದನು, ಆದರೆ ಅವನ ಕಲಾವಿದನ ಮನಸ್ಸಿಗೆ ಇಷ್ಟರಿಂದ ತೃಪ್ತಿಯಾಗಲಿಲ್ಲ. ಅವನ ಅಸಮಾಧಾನವು ಅವನನ್ನು ಪಾಟ್ನಾದ ಪ್ರಸಿದ್ಧ ಸಂಗೀತಗಾರ ನೇಪಾಳ ಸಿಂಗ್ (ಈಗ ದಿವಂಗತ) ಬಳಿಗೆ ಕರೆದೊಯ್ಯಿತು, ಅಲ್ಲಿ ಅವನು ಐದು ವರ್ಷಗಳ ಕಾಲ ತಬಲಾ ನುಡಿಸಲು ಕಲಿತನು. ನಂತರ ಇಪ್ಪತ್ತು ವರ್ಷಗಳ ಕಾಲ ಅಯೋಧ್ಯೆಯ ಸ್ವಾಮಿ ಭಗವಾನ್ದಾಸ್, ಬಾಬಾ ಠಾಕೂರ್ದಾಸ್ ಮತ್ತು ರಾಮ್ ಮೋಹಿನಿ ಶರಣ್ರಿಂದ ಮೃದಂಗ ನುಡಿಸುವ ಶಿಕ್ಷಣ ಪಡೆದನು. ಮೃದಂಗ ವಾದನದಲ್ಲಿ ಪರಿಣತಿ ಹೊಂದಿದ್ದರೂ, ತಬಲಾ ವಾದನದಲ್ಲಿ ತನಗೆ ಇನ್ನೂ ಹೆಚ್ಚಿನ ಕೌಶಲ್ಯದ ಅಗತ್ಯವಿದೆ ಎಂದು ಅವನಿಗೆ ಅನಿಸಿತು, ಆದ್ದರಿಂದ ಅವನು ಪಂಡಿತ್ ಸಂತಶರಣ್ ‘ಮಸ್ತ್’ ಬಳಿಗೆ ಬಂದು ಅವರ ಶಿಷ್ಯತ್ವವನ್ನು ಸ್ವೀಕರಿಸಿದನು ಮತ್ತು ಮುಂದಿನ ಹತ್ತು ವರ್ಷಗಳನ್ನು ತಬಲಾ ವಾದನಕ್ಕಾಗಿ ಮೀಸಲಿಟ್ಟನು. ಸಂತಶರಣ್ ‘ಮಸ್ತ್’, ಇವರನ್ನು ಅವನು ತನ್ನ ವಿದ್ಯಾಗುರು ಎಂದು ಪರಿಗಣಿಸಿದ್ದನು, ಇವರೇ ರಾಮಶಂಕರ್ನಿಗೆ ‘ ಪಾಗಲ್ದಾಸ್’ ಎಂಬ ಬಿರುದು ನೀಡಿದ್ದು. ಇದಕ್ಕೂ ಒಂದು ಆಸಕ್ತಿದಾಯಕ ಕಥೆಯಿದೆ. ರಾಮಶಂಕರ್ ನಟನೆ ಮತ್ತು ಸಂಗೀತದ ಹುಚ್ಚನಾಗಿದ್ದನು, ಜೊತೆಗೆ ಕವಿತೆಗಳನ್ನು ರಚಿಸುವ ಮೂಲಕ ಕವಿತ್ವದಲ್ಲೂ ಕೈ ಹಾಕಲು ಶುರುಮಾಡಿದ್ದನು. ಒಂದು ದಿನ ಮಾತನಾಡುವಾಗ ‘ಮಸ್ತ್’ ಅವನಿಗೆ ತನ್ನ ಕವಿತೆಗಳಿಗೆ ‘ಪಾಗಲ್’ ಎಂಬ ಅಡ್ಡಹೆಸರನ್ನು ಬಳಸಬೇಕೆಂದು ಹೇಳಿದರು. ರಾಮಶಂಕರ್ ಇದನ್ನು ಗುರುವಿನ ಆಜ್ಞೆಯೆಂದು ಪರಿಗಣಿಸಿ ರಾಮಶಂಕರ್ದಾಸ್ ‘ಪಾಗಲ್’ ಆದನು ಮತ್ತು ಅಂತರ್ರಾಷ್ಟ್ರೀಯ ಖ್ಯಾತಿಯನ್ನು ಗಳಿಸುತ್ತಾ-ಗಳಿಸುತ್ತಾ ಕೇವಲ ಪಾಗಲ್ದಾಸ್ ಆಗಿ ಉಳಿದನು- ನಂತರ ಅವಧ್ ವಿಶ್ವವಿದ್ಯಾಲಯವು ಗೌರವ ಡಿ. ಲಿಟ್ ಪದವಿಯನ್ನು ನೀಡಿ ಈ ಸ್ವಾಮಿಯನ್ನು ಡಾಕ್ಟರ್ ಕೂಡ ಮಾಡಿತು. ಅಷ್ಟರಲ್ಲಿಯೇ ದೇಶದ ಮೂಲೆ ಮೂಲೆಯ ಡಜನ್ಗಟ್ಟಲೆ ಪ್ರತಿಷ್ಠಿತ ಸಂಗೀತ ಸಂಸ್ಥೆಗಳ ಗೌರವ, ಅಭಿನಂದನೆ ಮತ್ತು ಪದವಿಗಳು ಅವರ ಖಾತೆಗೆ ಸೇರಿದ್ದವು. ಸಂಗೀತಗಾರರು ಅವರನ್ನು ಮೃದಂಗ್ ಸಮ್ರಾಟ್, ಮೃದಂಗ್ ಮಾರ್ತಂಡ, ಮೃದಂಗ್ಮಣಿ, ಮೃದಂಗ್ಕೇಶರಿ, ತಬಲಾ ಶಾಸ್ತ್ರಿ, ಪಖಾವಜ್ ವಿಝಾರ್ಡ್, ಸಂಗೀತಸಾಮ್ರಾಟ್ ಮತ್ತು ಪಖಾವಜ್ದಾಸ್ ಎಂದೆಲ್ಲಾ ಕರೆಯಲು ಶುರು ಮಾಡಿದ್ದರು. ಪದ್ಮಭೂಷಣ ಉಸ್ತಾದ್ ಅಲ್ಲಾವುದ್ದೀನ್ ಅವರು ಅವರನ್ನು ತಮ್ಮ ಮಾನಸಪುತ್ರನನ್ನಾಗಿ ಮಾಡಿಕೊಂಡಿದ್ದರು ಮತ್ತು ಅವರನ್ನು ‘ಎರಡನೇ ಕುದೌ ಸಿಂಗ್’ ಎಂದು ಕರೆಯುತ್ತಿದ್ದರು. ‘ಎರಡನೇ ಕುದೌ ಸಿಂಗ್’ ಆಗುವುದರ ಅರ್ಥ?’ ‘ಅವಧಿ ಘರಾನಾ’ದ ಪ್ರತಿನಿಧಿ ವಾದಕರಾಗಿರುವುದು. (ಮಹಾನ್ ಪಖಾವಜ್ ವಾದಕ ಕುದೌ ಸಿಂಗ್ ಹೆಸರಿನಿಂದ ಕರೆಯಲಾಗುವ ಈ ಘರಾನಾ, ಉತ್ತರ ಭಾರತದ ಅತ್ಯಂತ ಹಳೆಯ ಮತ್ತು ಪ್ರತಿಷ್ಠಿತವಾಗಿದ್ದು ತನ್ನ ವಿಶಿಷ್ಟವಾದ ಶೈಲಿಗೆ ಜನಪ್ರಿಯವಾಗಿದೆ. ಇದರಲ್ಲಿ ಕಠಿಣ ತಿಹಾಯಿಗಳು ಮತ್ತು ಬೋಲ್ ಗಳನ್ನು ಬಳಸಲಾಗುತ್ತದೆ ). ಇಂತಹ ಸ್ವೀಕಾರ ವಿರಳರಿಗೆ ಮಾತ್ರ ಲಭ್ಯವಾಗುತ್ತದೆ. ಕೆಲವೇ ಕೆಲವರು ಸ್ವತಂತ್ರ ವಾದನ, ಗಾಯನ-ವಾದನ ಮತ್ತು ನರ್ತನದ ಜೊತೆಗೆ ವಾದನ ಶೈಲಿ, ವಾಕ್ಚಾತುರ್ಯ, ಲಯಗಾರಿಕೆ ಮತ್ತು ವ್ಯಾಖ್ಯಾನಾತ್ಮಕ ಪ್ರಸ್ತುತಿ ಇತ್ಯಾದಿಗಳಲ್ಲಿ ಒಂದೇ ರೀತಿಯಲ್ಲಿ ಸಮರ್ಥರಾಗಿರುತ್ತಾರೆ ಮತ್ತು ಸರ್ವಸಾಮಾನ್ಯರನ್ನು ಪ್ರಭಾವಿಸಲು ಶಕ್ತರಾಗಿರುತ್ತಾರೆ, ಆದರೆ ಸ್ವಾಮಿ ಪಾಗಲ್ದಾಸ್ ಇವರಿಗಿಂತಲೂ ಮುಂದೆ ಹೋಗಿ ಸಂಗೀತ ಸಭೆಗಳು ಮತ್ತು ಸಮಾರಂಭಗಳ ಕಣ್ಮಣಿಯಾದರು. ಆದರೆ ಬಿಜೆಪಿ ಮತ್ತು ವಿಶ್ವ ಹಿಂದೂ ಪರಿಷತ್ನಿಂದ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದ ನೆಪದಲ್ಲಿ ಪ್ರಾರಂಭಿಸಲಾದ ಉಗ್ರ ಆಂದೋಲನವನ್ನು ವಿರೋಧಿಸುವಲ್ಲಿ ಸ್ವಾಮಿ ಪಾಗಲ್ದಾಸ್ ಅವರ ಪಾತ್ರವನ್ನು ಉಲ್ಲೇಖಿಸದ ಹೊರತು ಅವರ ಪರಿಚಯ ಪೂರ್ಣವಾಗುವುದಿಲ್ಲ. ಆ ದಿನಗಳಲ್ಲಿ, ಈ ಆಂದೋಲನದ ವಿರುದ್ಧ ಕೆಲವೊಮ್ಮೆ ಬಹಿರಂಗವಾಗಿ ಮತ್ತು ಕೆಲವೊಮ್ಮೆ ಮೌನವಾಗಿ ಪ್ರತಿರೋಧ ವ್ಯಕ್ತಪಡಿಸಿದ್ದರು. ರಾಮಮಂದಿರಕ್ಕಾಗಿ ಸತ್ಯ, ಘನತೆ ಮತ್ತು ನ್ಯಾಯದ ಬಲಿಯನ್ನು ಕೊಡಲು ತಾವು ಖಂಡಿತವಾಗಿಯೂ ಒಪ್ಪುವುದಿಲ್ಲ ಮತ್ತು ಈ ಕುರಿತ ಪ್ರಯತ್ನದಲ್ಲಿ ತಾವಾಗಲಿ ಅಥವಾ ತಮ್ಮ ಸಂಗೀತ ಸಾಧನೆಯಾಗಲಿ ಭಾಗಿಯಾಗುವುದಿಲ್ಲ ಎಂದು ಪದೇ ಪದೇ ಸ್ಪಷ್ಟಪಡಿಸಿದರು. ಅಯೋಧ್ಯೆಯಲ್ಲಿ ಹಿಂದೂ-ಮುಸ್ಲಿಮ್ ಸೌಹಾರ್ದವನ್ನು ಪ್ರತಿಪಾದಿಸಿದ್ದರಿಂದ ಹಾಗೂ ಧ್ವಂಸದ ವಿರುದ್ಧ ಧ್ವನಿ ಎತ್ತಿದ್ದರಿಂದಾಗಿ ಅವರು ಹೆಚ್ಚಾಗಿ ರಾಷ್ಟ್ರೀಯ ಸ್ವಯಂಸೇವಕ ಸಂಘದವರ ಕಣ್ಣಿಗೆ ಕಿರಿಕಿರಿ ಆಗಿದ್ದರು. ಒಂದು ಸಮಯದಲ್ಲಿ ವಿಶ್ವ ಹಿಂದೂ ಪರಿಷತ್ ಅವರ ವಿರುದ್ಧ ಸಭೆಗಳನ್ನು ನಡೆಸಲು ಮತ್ತು ಅವರ ಭಂಡಾರಗಳ ಪತ್ರಗಳನ್ನು ನಿಲ್ಲಿಸಲು ಮುಂದಾಗಿತ್ತು. ಇದು ಅವರ ಸಜ್ಜನಿಕೆ ಮತ್ತು ಸಂಗೀತ ಸಾಧನೆಗೆ ಮಾಡಿದ ಅವಮಾನಕರ ತಿರಸ್ಕಾರದ ಕ್ರಮವಾಗಿತ್ತು, ಜೊತೆಗೆ ಅವರನ್ನು ತಮ್ಮ ಕಡೆಗೆ ಸೆಳೆಯಲು ಹಾಕಿದ ಸಂಪೂರ್ಣ ಅನ್ಯಾಯದ ಒತ್ತಡವೂ ಆಗಿತ್ತು. ಆದರೆ ಸ್ವಾಮಿ ಪಾಗಲ್ದಾಸ್ ಬಗ್ಗಲಿಲ್ಲ. ಒಬ್ಬ ಸಂಗೀತಗಾರನಾಗಿ ತಾನು ಮನುಷ್ಯರಲ್ಲಿ ಜಾತಿ, ಧರ್ಮ ಮತ್ತು ಪಂಗಡ ಇತ್ಯಾದಿಗಳ ಆಧಾರದ ಮೇಲೆ ಯಾವುದೇ ತಾರತಮ್ಯ ಮಾಡಬಾರದು ಎಂಬ ತಮ್ಮ ನಂಬಿಕೆಯಲ್ಲಿ ಯಾವುದೇ ಬದಲಾವಣೆಯನ್ನು ಮಾಡಲಿಲ್ಲ. ಈ ಘಟನೆಯ ನಂತರ ಉಂಟಾದ ರಾಜಕೀಯ ಮತ್ತು ಸಾಮಾಜಿಕ ಧ್ರುವೀಕರಣದಲ್ಲಿ ಅವರು ಪ್ರತಿರೋಧದ ನಾಯಕರಾಗಿ ಕಾಣಿಸಿಕೊಂಡರು. ಇದಕ್ಕಾಗಿ ಗಿರಫ್ತಾರುಗಳು, ಧಮಕಿಗಳು ಮತ್ತು ಸಾಮಾಜಿಕ ತೊಂದರೆಗಳನ್ನು ಎದುರಿಸಿದರು. ಅಯೋಧ್ಯೆಯಂತಹ ಸೂಕ್ಷ್ಮ ಪ್ರದೇಶದಲ್ಲಿ ಇದು ಅವರ ಮೇಲೆ ಭಾರವಾದ ಒತ್ತಡವನ್ನು ಹೇರಿತು, ಮತ್ತು ಅವರ ಸಂಗೀತ ಸಾಧನೆಯನ್ನು ಸಂಪೂರ್ಣವಾಗಿ ನಿಲ್ಲಿಸಿತು. ಯಾವುದೇ ಪರಿಹಾರದಲ್ಲಿ ಯಾರಾದರೂ ಸೋಲು ಅಥವಾ ಗೆಲುವಿನ ಭಾವನೆ ಹೊಂದಿದ್ದರೆ, ಅದು ಶಾಶ್ವತವಾಗಿ ಉಳಿಯುವುದಿಲ್ಲ. ಹಿಂದೂ-ಮುಸ್ಲಿಮ್ ದ್ವೇಷದ ಪ್ರತಿಪಾದಕರನ್ನು ಅವರು ಪ್ರಶ್ನಿಸುತ್ತಿದ್ದರು, ಯಾವ ದೇಶದಲ್ಲಿ ಹಿಂದೂ ಮಹಿಳೆಯರ ‘ಸೌಭಾಗ್ಯದ ಚಿಹ್ನೆಗಳ’ ಉತ್ಪಾದನೆ ಮತ್ತು ತಯಾರಿಕೆಯಲ್ಲಿ ಮುಸ್ಲಿಮರು ದೊಡ್ಡ ಪಾತ್ರ ವಹಿಸುತ್ತಾರೋ, ಅಲ್ಲಿ ಈ ದ್ವೇಷಕ್ಕೆ ಎಲ್ಲಿ ಮತ್ತು ಎಷ್ಟು ಜಾಗ ಇರಬೇಕು? ಪಾಗಲ್ ದಾಸ್ ಅವರ ಶಿಷ್ಯರು ಹೇಳುವ ಪ್ರಕಾರ, ಅಯೋಧ್ಯೆಯಲ್ಲಿ ಶಾಂತಿ ಪ್ರಯತ್ನಗಳ ಭಾಗವಾಗಿ ಪ್ರಖ್ಯಾತ ರಂಗಕರ್ಮಿ ಸಫ್ದರ್ ಹಾಶ್ಮಿ ಒಮ್ಮೆ ಅವರನ್ನು ಭೇಟಿಯಾಗಲು ಅವರ ಸಂಗೀತ ಆಶ್ರಮಕ್ಕೆ ಬಂದಾಗ, ಅವರು ಅವರೊಂದಿಗೆ ಹೀಗೆ ಹೇಳಿದ್ದರು - ನಿಮ್ಮ ಶಾಂತಿಯ ಆಸೆಯನ್ನು ನಾನು ಸ್ವಾಗತಿಸುತ್ತೇನೆ, ಆದರೆ ಪ್ರಸ್ತುತ ಪರಿಸ್ಥಿತಿಗಳಲ್ಲಿ ಇದು ತುಂಬಾ ಕಠಿಣವಾದ ಕೆಲಸ ಎಂದು ನೀವು ಅರ್ಥಮಾಡಿಕೊಳ್ಳಬೇಕು. ಬಾಬರಿ ಮಸೀದಿಯ ಧ್ವಂಸದ ನಂತರದ ‘ಬದಲಾದ’ ಅಯೋಧ್ಯೆಯಲ್ಲಿ ಪಾಗಲ್ ದಾಸ್ ತುಂಬಾ ಅಶಾಂತಿಯಿಂದ ಇರುತ್ತಿದ್ದರು. ತೀರಾ ವಿಚಲಿತರಾಗಿದ್ದರು, ದುಃಖಿತರಾಗಿದ್ದರು, ಗೊಂದಲಕ್ಕೊಳಗಾಗಿದ್ದರು ಮತ್ತು ಆಂತರಿಕ ಸಂಘರ್ಷದಿಂದ ಬಳಲುತ್ತಿದ್ದರು. ಸತ್ಯ ಹೇಳಬೇಕೆಂದರೆ, ಆ ಸಮಯವೇ ಅಂತಹದ್ದಾಗಿತ್ತು ಮತ್ತು ಅವರು ಸಾಧ್ಯವಾದಷ್ಟು ರಕ್ಷಿಸಿಕೊಂಡು ಬಂದ ಮೌಲ್ಯಗಳು ಮತ್ತು ಘನತೆಗಳನ್ನು ಅವರದೇ ಅಂಗಳದಲ್ಲಿ ಮತ್ತು ಅವರದೇ ಜನರ ಸಮ್ಮುಖದಲ್ಲಿ ಹತ್ತಿಕ್ಕುತ್ತಿದ್ದ ಶಕ್ತಿಗಳು ಎಲ್ಲರನ್ನೂ ಅಸಹಾಯಕರನ್ನಾಗಿ ಮಾಡಲು ಮತ್ತು ಗೇಲಿ ಮಾಡಲು ಸಿದ್ಧವಾಗಿದ್ದವು. ಇತಿಹಾಸವನ್ನು ಬದಲಿಸುವ ಹೆಸರಿನಲ್ಲಿ, ಅವರು ಇತಿಹಾಸವನ್ನು ನಾಶಪಡಿಸುತ್ತಿದ್ದರು, ವರ್ತಮಾನವನ್ನು ಅವಮಾನಿಸುತ್ತಿದ್ದರು ಮತ್ತು ಭವಿಷ್ಯದ ಕಲ್ಪನೆಯೂ ಭಯಾನಕವಾಗುವಂತಹ ಪರಿಸ್ಥಿತಿಗಳನ್ನು ಸೃಷ್ಟಿಸುತ್ತಿದ್ದರು. ಪಾಗಲ್ದಾಸ್ ಅವರ ಈ ದುಃಖ ಕೇವಲ ಅವರೊಬ್ಬರದ್ದಾಗಿರಲಿಲ್ಲ. ನ್ಯಾಯವನ್ನು ಬಯಸುವ, ಸತ್ಯವನ್ನು ರಕ್ಷಿಸಲು ಬಯಸುವ, ಅಯೋಧ್ಯೆಯ ಘನತೆಯನ್ನು ಉಳಿಸಿಕೊಳ್ಳಲು ಬಯಸುವ ಮತ್ತು ತಪ್ಪು ನಡೆಯುವುದನ್ನು ಸಹಿಸದ ಎಲ್ಲರದ್ದಾಗಿತ್ತು! ಪಾಗಲ್ದಾಸ್ ನಿಧನದ ನಂತರ, ಆ ದಿನಗಳ ಹಿಂದಿ ಯುವ ಕವಿ ಬೋಧಿಸತ್ವ ಅವರು ‘ಪಾಗಲ್ದಾಸ್’ ಎಂಬ ಶೀರ್ಷಿಕೆಯಡಿಯಲ್ಲಿಯೇ ಒಂದು ದೊಡ್ಡ ಭಾವನಾತ್ಮಕ ಮತ್ತು ಸ್ಪರ್ಶದ ಕವಿತೆಯನ್ನು ರಚಿಸಿದರು, ಅದಕ್ಕಾಗಿ ಅವರಿಗೆ 1999 ರ ಪ್ರತಿಷ್ಠಿತ ಭಾರತ ಭೂಷಣ ಅಗರ್ವಾಲ್ ಪ್ರಶಸ್ತಿ ಲಭಿಸಿತು. ಈ ಕವಿತೆಯಲ್ಲಿ ಅವರು ಆ ದುಃಖದ ಬಗ್ಗೆ ವಿವರವಾಗಿ ಹೇಳುತ್ತಾರೆ: ಸ್ವಾಮಿ ಪಾಗಲ್ದಾಸ್ ಅಯೋಧ್ಯೆಯಲ್ಲಿ ದುಃಖಿತರಾಗಿದ್ದರು, ಭೂತನಾಥ ಬನಾರಸ್ನಲ್ಲಿ, ಬುದ್ಧ ಕಪಿಲವಸ್ತುವಿನಲ್ಲಿ, ಕಾಳಿದಾಸ ಉಜ್ಜಯಿನಿಯಲ್ಲಿ, ಬೆಳೆಗಳು ಹೊಲಗಳಲ್ಲಿ, ಎಲೆಗಳು ಮರಗಳ ಮೇಲೆ, ಜನರು ದಿಲ್ಲಿಯಲ್ಲಿ, ಪಾಟ್ನಾದಲ್ಲಿ, ಪ್ರಪಂಚದಾದ್ಯಂತ ! ಅಂತಹ ಪರಿಸ್ಥಿತಿಯಲ್ಲಿ ದುಃಖಿಗಳಾಗಿದ್ದರು. ಪಾಗಲ್ದಾಸ್ ಮೃದಂಗ ನುಡಿಸುವುದನ್ನು ಸಹ ಬಿಟ್ಟಿದ್ದರು, ಬಣ್ಣ ಹಚ್ಚುವುದನ್ನು ಮರೆತಿದ್ದರು, ಸಮಾರಂಭಗಳನ್ನು ತ್ಯಜಿಸಿದ್ದರು, ನಿಯಮಗಳನ್ನು ಮರೆತಿದ್ದರು, ತುಂಬುವ ವಿಧಾನ ನೆನಪಿರಲಿಲ್ಲ, ಜನರಿಂದ ದೂರವಿರಲು ಪ್ರಾರಂಭಿಸಿದ್ದರು, ಲೋಮ ವಿಲೋಮಕ್ಕೆ ಅವಕಾಶವಿರಲಿಲ್ಲ. ಗಮನಾರ್ಹ ಸಂಗತಿಯೆಂದರೆ, ಆ ದೀನ ಅಸಹಾಯಕತೆಯ ಕಾಲದಲ್ಲೂ ಪಾಗಲ್ದಾಸ್ ನ್ಯಾಯದ ಹಾದಿಯಿಂದ ವಿಚಲಿತರಾಗಲು ಒಪ್ಪಿರಲಿಲ್ಲ. ಲಂಕೆಯಲ್ಲಿ ವಿಭೀಷಣನಂತೆ ಅವರು ಅಯೋಧ್ಯೆಯಲ್ಲಿ ಇರಬೇಕಾಗಿ ಬಂದರೂ ಸಹ! 1993ರ ಆಗಸ್ಟ್ 15ರಂದು ಸಹಮತ್ (ಸಫ್ದರ್ ಹಾಶ್ಮಿ ಮೆಮೋರಿಯಲ್ ಟ್ರಸ್ಟ್) ಶಬನಮ್ ಹಾಶ್ಮಿ ನೇತೃತ್ವದಲ್ಲಿ ಅಯೋಧ್ಯೆಯಲ್ಲಿ ತನ್ನ ಬಹುಪ್ರಚಾರಿತ ‘ಮುಕ್ತನಾದ್’ ಕಾರ್ಯಕ್ರಮವನ್ನು ಆಯೋಜಿಸಿದಾಗ, ಅದನ್ನು ತಡೆಯಲು ಮತ್ತು ವಿಫಲಗೊಳಿಸಲು ಪ್ರಯತ್ನಿಸುತ್ತಿದ್ದ ಸರಕಾರದ ಕೆಂಗಣ್ಣುಗಳಿಗೆ ಹೆದರದೆ ಸ್ವಾಮಿ ಪಾಗಲ್ದಾಸ್ ಅದರ ಉದ್ಘಾಟನೆಗೆ ಹೋದರು. ಆದರೆ, ಆಡಳಿತವು ಅವರ ದಾರಿಯಲ್ಲಿ ಅದೆಷ್ಟು ಅಡೆತಡೆಗಳನ್ನು ಸೃಷ್ಟಿಸಿತೆಂದರೆ ಅವರು ಸಮಯಕ್ಕೆ ಸರಿಯಾಗಿ ಮುಕ್ತನಾದ್ ಸ್ಥಳಕ್ಕೆ ತಲುಪಲು ಸಾಧ್ಯವಾಗಲಿಲ್ಲ. ಮೊದಲು ಅವರ ವಾಹನವನ್ನು ತಡೆಯಲಾಯಿತು, ನಂತರ ಭದ್ರತೆಯ ನೆಪ ಹೇಳಿ ನಡೆದುಕೊಂಡು ಹೋಗುವುದನ್ನು ಸಹ ತಡೆಯಲು ಪ್ರಯತ್ನಿಸಲಾಯಿತು, ಆದರೆ ಇದೆಲ್ಲವೂ ಮುಕ್ತನಾದ್ನಲ್ಲಿ ಅವರ ಭಾಗವಹಿಸುವಿಕೆಯನ್ನು ತಡೆಯಲು ಸಾಧ್ಯವಾಗಲಿಲ್ಲ. ಅವಿವಾಹಿತರಾಗಿದ್ದ ಹನುಮಾನ್ ಭಕ್ತ ಸ್ವಾಮಿ ಪಾಗಲ್ ದಾಸ್ ಅವರ ವ್ಯಕ್ತಿತ್ವ ಹಲವು ವಿಧಗಳಲ್ಲಿ ವಿಶಿಷ್ಟವಾಗಿತ್ತು. ಅವರು ತಮ್ಮ ಉಳಿತಾಯದ ಒಂದು ಭಾಗವನ್ನು ಉತ್ತರ ಪ್ರದೇಶ ಸಂಗೀತ ನಾಟಕ ಅಕಾಡಮಿಗೂ ನೀಡಿದ್ದರು, ಅದರಿಂದ ಅಕಾಡಮಿಯು ಸ್ವಾಮಿ ಭಗವಾನ್ದಾಸ್ ಮೃದಂಗಾಚಾರ್ಯರ ಸ್ಮರಣಾರ್ಥ ಧ್ರುಪದ್ ಸಮಾರೋಹಗಳನ್ನು ಆಯೋಜಿಸುತ್ತದೆ. ನಾವು ಮೊದಲೇ ಹೇಳಿದಂತೆ, ಸ್ವಾಮಿ ಭಗವಾನ್ದಾಸ್ ಪಾಗಲ್ದಾಸ್ರ ಆರಾಧ್ಯ ದೈವಗಳಲ್ಲಿ ಒಬ್ಬರಾಗಿದ್ದರು. ಅಕಾಡಮಿಯು 1995 ರಲ್ಲಿ ಸ್ವಾಮಿ ಪಾಗಲ್ದಾಸ್ಗೆ ತನ್ನ ರತ್ನ ಸದಸ್ಯತ್ವವನ್ನು ನೀಡುವ ಘೋಷಣೆ ಮಾಡಿತ್ತು, ಆದರೆ ಅದು ಅವರಿಗೆ ಮರಣೋತ್ತರವಾಗಿ 1999ರಲ್ಲಿ ಲಭಿಸಿತು. ಮಧ್ಯಕಾಲದಲ್ಲಿ ಅಯೋಧ್ಯೆಯ ನಿವಾಸಿ ವೈರಾಗಿಗಳು ನಿರ್ಗುಣ ಸಂತ ಕವಿ ಪಲ್ಟೂದಾಸ್ ಅವರನ್ನು ಜೀವಂತವಾಗಿ ಸುಟ್ಟಾಗ ಎಷ್ಟು ದುಃಖಿತವಾಗಿತ್ತೋ, ಪಾಗಲ್ ದಾಸರನ್ನು ಕಳೆದುಕೊಂಡು ಇಂದಿಗೂ ಅಷ್ಟೇ ದುಃಖಿತವಾಗಿದೆ. ಅಯೋಧ್ಯೆಯ ಈ ದುಃಖ ಈಗ ಯಾವಾಗ ದೂರವಾಗುವುದೋ? ಸದ್ಯಕ್ಕೆ ಅಲ್ಲಿ ಯಾವುದೇ ಪಾಗಲ್ದಾಸ್ ವಾಸಿಸುತ್ತಿಲ್ಲ.
ಬಸವಣ್ಣನವರನ್ನು ಕರುನಾಡಿನ ಸಾಂಸ್ಕೃತಿಕ ನಾಯಕರೆಂದು ರಾಜ್ಯ ಸರ್ಕಾರ ಈಗಾಗಲೇ ಹೆಮ್ಮೆಯಿಂದ ಘೋಷಿಸಿದೆ. ಅಲ್ಲದೆ, ಬಸವನಬಾಗೇವಾಡಿ ಪ್ರತ್ಯೇಕ ಅಭಿವೃದ್ಧಿ ಪ್ರಾಧಿಕಾರ ರಚಿಸಿ 1 ವರ್ಷ ಕಳೆದಿದ್ದು, ಈವರೆಗೂ ಕೇವಲ ಆಯುಕ್ತ ನೇಮಕ ಹೊರತು ಪಡಿಸಿ ಬೇರೆ ಅಭಿವೃದ್ದಿ ಕಾರ್ಯ ನಡೆದಿಲ್ಲ. ಹಾಗಾಗಿ ಈ ಬಾರಿಯ ರಾಜ್ಯ ಬಜೆಟ್ ನತ್ತ ಬಸವ ಭಕ್ತರ ಚಿತ್ತ ನೆಟ್ಟಿದ್ದು, ಈ ಬಾರಿಯಾದರೂ ಬಸವನಬಾಗೇವಾಡಿ ಅಭಿವೃದ್ದಿಗೆ ಕೊಡುಗೆ ನೀಡುತ್ತಾರೋ ಇಲ್ಲವೋ ಎಂದು ಕಾದು ನೋಡುತ್ತಿದ್ದಾರೆ. ಹಾಗಾದ್ರೆ ಬಸವಣ್ಣ ಜನಿಸಿದೂರಿನ ಅಭಿವೃದ್ದಿಗೆ ಅಲ್ಲಿನ ಜನರ ಬೇಡಿಕೆಗಳೇನು ನೋಡಿ..
ಭಾರತ-ಅಮೆರಿಕ ಒಪ್ಪಂದಕ್ಕೆ ವಿರೋಧ: ರೈತರ ಸಂಘಟನೆಗಳಿಂದ ಫೆ.12ಕ್ಕೆ ಬೃಹತ್ ಪ್ರತಿಭಟನೆಗೆ ಕರೆ
ನವದೆಹಲಿ: ಭಾರತ ಮತ್ತು ಅಮೆರಿಕ ಮಧ್ಯ ಬಹುನಿರೀಕ್ಷೆಯ ವ್ಯಾಪಾರ ಒಪ್ಪಂದ ಏರ್ಪಟ್ಟಿದೆ. ಇದರ ಬೆನ್ನಲ್ಲೆ ಭಾರತದಲ್ಲಿ ರೈತಪರ ಸಂಘಟನೆಗಳು ಈ ಅಂತಾರಾಷ್ಟ್ರೀಯ ಒಪ್ಪಂದ ವಿರೋಧಿಸಿವೆ. ಒಪ್ಪಂದ ಕುರಿತು ಮಾಹಿತಿ ನೀಡಿದ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯುಷ್ ಗೋಯೆಲ್ ಅವರು ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿವೆ. ಇದೇ ಫೆಬ್ರವರಿ 12ರಂದು ಬೃಹತ್ ಪ್ರತಿಭಟನೆಗೆ ಕರೆ ನೀಡಿವೆ. ಶನಿವಾರ
ಜಾರ್ಜಿಯಾ | ಅಟ್ಲಾಂಟ ಕನ್ನಡಿಗರಿಂದ ಸಂಕ್ರಾಂತಿ ಹಬ್ಬದ ಸಂಭ್ರಮಾಚರಣೆ
ವರದಿ : ಕೆ. ಆರ್.ಶ್ರೀನಾಥ್, ಅಟ್ಲಾಂಟ ಯುಎಸ್ಎ: ಜಾರ್ಜಿಯಾದ ಅಟ್ಲಾಂಟದಲ್ಲಿರುವ 'ನೃಪತುಂಗ ಕನ್ನಡ ಕೂಟ'ದ ವತಿಯಿಂದ ಮಕರ ಸಂಕ್ರಾತಿ 'ಸುಗ್ಗಿ ಸಂಭ್ರಮ' ಕಾರ್ಯಕ್ರಮ ಫೆ.7ರಂದು ನಡೆಯಿತು. ಇಲ್ಲಿನ 625 ಜೇಮ್ಸ್ ರೋಡ್ ನಲ್ಲಿರುವ ಡೆಸನ ಮಿಡ್ಲ್ ಸ್ಕೂಲ್ ನಲ್ಲಿ ಜರುಗಿದ ಸಮಾರಂಭಕ್ಕೆ ಆಗಮಿಸಿದ ಕನ್ನಡಿಗರನ್ನು ನೃಪತುಂಗ ಕನ್ನಡ ಕೂಟದ ಸದಸ್ಯರು ಎಳ್ಳು, ಬೆಲ್ಲ ನೀಡಿ ಆತ್ಮೀಯವಾಗಿ ಸ್ವಾಗತಿಸಿದರು. ವಿಶ್ವೇಶ ಭಟ್ ಅವರಿಂದ ಸಂಗೀತ ಕಾರ್ಯಕ್ರಮ ಕೇರಂ, ರಂಗೋಲಿ ಬಿಡಿಸುವ, ಗಾಳಿಪಟ ಹಾರಿಸುವ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಅಂತ್ಯಾಕ್ಷರಿ ಹಾಗೂ ಕೋಲಾಟ ಕಾರ್ಯಕ್ರಮಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕನ್ನಡಿಗರು ಭಾಗವಹಿಸಿ ಆನಂದಿಸಿದರು. ಸ್ಥಳೀಯ ಕನ್ನಡಿಗ ಪ್ರಕಾಶ್ ರಾಮಚಂದ್ರ ಗೌಡ ತಮ್ಮ ಸುಮಧುರ ಕಂಠದಿಂದ ಹಲವಾರು ಕನ್ನಡ ಗೀತೆಗಳನ್ನು ಹಾಡಿ ಗಮನಸೆಳೆದರು. ಸಂಜೆ ಪ್ರಮುಖ ಆಕರ್ಷಣೆಯಾಗಿ ಕುಂದಾಪುರ ಮೂಲದ ವಿಶ್ವೇಶ ಭಟ್ ಅವರಿಂದ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಿಕ್ಕಿರಿದು ತುಂಬಿದ್ದ ಸಭಾಂಗಣದಲ್ಲಿ ಜಾನಪದ, ಶಾಸ್ತ್ರೀಯ, ಸಿನೆಮಾ ಹಾಗೂ ಸುಗಮ ಸಂಗೀತದ ಹೊಸ ಮಿಶ್ರಣವನ್ನು ಸಭಿಕರಿಗೆ ನೀಡಿ ರಂಜಿಸಿದರು. ಪ್ರಕಾಶ್ ರಾಮಚಂದ್ರಗೌಡ ವಿಶ್ವೇಶ ಭಟ್ ರೊಂದಿಗೆ ಸ್ಥಳೀಯ ಪ್ರತಿಭೆಗಳಾದ ಜ್ಯೋತ್ಸ್ನಾ ರಾವ್ ಹಾಗೂ ಶ್ರೀಪ್ರಿಯ ಶ್ರೀನಿವಾಸ್ ಸಹ ಅದ್ಭುತವಾಗಿ ಹಾಡಿದರು. ಭಾಗವಹಿಸಿದ ಕಲಾವಿದರನ್ನು ಕೋಕಾ ಕೋಲಾ ಕಂಪೆನಿಯ ಗ್ಲೋಬಲ್ ಮಾರ್ಕೆಟಿಂಗ್ ಟೆಕ್ನಾಲಜಿಯ ಉಪಾಧ್ಯಕ್ಷ ಶೇಖರ್ ಗೌಡ ಸನ್ಮಾನಿಸಿದರು. ಮನೋರಂಜನೆ ಕಾರ್ಯಕ್ರಮಗಳನ್ನು ನೃಪತುಂಗ ಕನ್ನಡ ಕೂಟದ ಉಪಾಧ್ಯಕ್ಷ ಭರತ್ ತೇಜಸ್ವಿ ನಿರ್ವಹಿಸಿದರು. ಕೂಟದ ಪದಾಧಿಕಾರಿಗಳು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.
ಭಾರತದ ಜೊತೆಗೆ ಗಲ್ವಾನ್ ಘರ್ಷಣೆ ನಂತರ ಪಮಾಣು ಪರೀಕ್ಷೆ ನಡೆಸಿದ್ದ ಚೀನಾ: ಟ್ರಂಪ್ ತಂಡದ ಆರೋಪ | Donald Trump
ಭಾರತ ಮತ್ತು ಚೀನಾ ನಡುವೆ 2020 ಕೊರೊನಾ ಕಂಟಕದ ಸಮಯದಲ್ಲಿ ಭೀಕರ ಯುದ್ಧ ನಡೆದು ಹೋಗುವ ಆತಂಕ ಆವರಿಸಿತ್ತು. ಗಾಲ್ವಾನ್ ಕಣಿವೆಯ ಘರ್ಷಣೆ ನಂತರ, ಎರಡೂ ದೇಶಗಳು ಯುದ್ಧಕ್ಕೆ ಸಿದ್ಧತೆ ನಡೆಸಿರುವ ಭಯ ಆವರಿಸಿತ್ತು. ಇದೇ ವಿಚಾರವಾಗಿ ಈಗ ಮತ್ತೊಂದು ಸ್ಫೋಟಕ ಆರೋಪವನ್ನ ಮಾಡಿದೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ತಂಡ. ಗಾಲ್ವಾನ್ ಕಣಿವೆ ಘರ್ಷಣೆ
ಮೇಘಾಲಯ ಅಕ್ರಮ ಕಲ್ಲಿದ್ದಲು ಗಣಿಯಲ್ಲಿ ಸ್ಪೋಟ | 27 ಕಾರ್ಮಿಕರ ಸಾವಿಗೆ ಕಾರಣವಾದ rat-hole ಗಣಿಗಾರಿಕೆ; ಏನದು?
ಮೇಘಾಲಯದ ಪೂರ್ವ ಜೈಂಟಿಯಾ ಹಿಲ್ಸ್ ಜಿಲ್ಲೆಯಲ್ಲಿ ಅಕ್ರಮವಾಗಿ ನಡೆಸುತ್ತಿದ್ದ ಕಲ್ಲಿದ್ದಲು ಗಣಿಯಲ್ಲಿ ಜನವರಿ 5, ಗುರುವಾರ ಸಂಭವಿಸಿದ ಸ್ಫೋಟದಲ್ಲಿ ಸಾವಿಗೀಡಾದ ಕಾರ್ಮಿಕರ ಸಂಖ್ಯೆ 27ಕ್ಕೇರಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಗಣಿಯ ಮಾಲೀಕರು ಎಂದು ಗುರುತಿಸಿರುವ ಇಬ್ಬರನ್ನು ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ. 100 ಅಡಿ ಆಳದಲ್ಲಿರುವ ಕಿರಿದಾದ ಸುರಂಗಗಳಲ್ಲಿ ಸಿಲುಕಿರುವ ಕಾರ್ಮಿಕರನ್ನು ಪತ್ತೆ ಹಚ್ಚಲು ಗಣಿಯಲ್ಲಿ ರಕ್ಷಣಾ ತಂಡ ಶನಿವಾರವೂ ಕಾರ್ಯಾಚರಣೆಯನ್ನು ಮುಂದುವರೆಸಿದೆ. Rat-hole ಗಣಿಗಾರಿಕೆ (ಇಲಿ-ರಂಧ್ರ ಗಣಿಗಾರಿಕೆ)ಯನ್ನು ಎನ್ಜಿಟಿ ಮತ್ತು ಸುಪ್ರೀಂ ಕೋರ್ಟ್ ನಿಷೇಧಿಸಿದ್ದರೂ ಮೇಘಾಲಯದಲ್ಲಿ ಇದು ಇನ್ನೂ ವ್ಯಾಪಕವಾಗಿದೆ. ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ಪಡೆ (NDRF), ರಾಜ್ಯ ವಿಪತ್ತು ಪ್ರತಿಕ್ರಿಯೆ ಪಡೆ (SDRF) ಮತ್ತು ವಿಶೇಷ ರಕ್ಷಣಾ ತಂಡಗಳು ಕಾರ್ಯಾಚರಣೆ ವೇಳೆ ಎದುರಿಸುತ್ತಿರುವ ಸವಾಲುಗಳು ಇಲಿ-ರಂಧ್ರ ಗಣಿಗಳಲ್ಲಿ ಗಣಿಗಾರರು ಕೆಲಸ ಮಾಡುವ ಅಪಾಯಕಾರಿ ಪರಿಸ್ಥಿತಿಗಳನ್ನು ಬಯಲು ಮಾಡಿವೆ. ಗಣಿಯಲ್ಲಿ ಲಂಬವಾದ ಗುಂಡಿಯಿದ್ದು, ಅದು 100 ಅಡಿಗಿಂತ ಹೆಚ್ಚು ಆಳವಿದೆ. ಈ ಮಧ್ಯದ ಗುಂಡಿಯ ಕೆಳಭಾಗದಲ್ಲಿ ಮೂರು ಕಿರಿದಾದ ಸುರಂಗಗಳು ಅಥವಾ ಇಲಿ-ರಂಧ್ರಗಳು ಕವಲೊಡೆಯುತ್ತವೆ. ಕಲ್ಲಿದ್ದಲು ಹೊರತೆಗೆದುಕೊಳ್ಳಲು ಗಣಿಗಾರರು ಈ ಸುರಂಗಗಳನ್ನು ಪ್ರವೇಶಿಸುತ್ತಾರೆ. ಇದರೊಳಗೆ ಇನ್ನೂ ಹೆಚ್ಚಿನ ಕಾರ್ಮಿಕರು ಸಿಲುಕಿಕೊಂಡಿದ್ದಾರೆಯೇ ಎಂದು ಹುಡುಕಲು ರಕ್ಷಣಾ ಕಾರ್ಯಕರ್ತರು ಕಾರ್ಯಾಚರಣೆ ನಡೆಸುತ್ತಿದ್ದಾರೆ ಎಂದು ಸ್ಥಳದಲ್ಲಿರುವ ಎನ್ಡಿಆರ್ಎಫ್ ತಂಡದ ಭಾಗವಾಗಿರುವ ಇನ್ಸ್ಪೆಕ್ಟರ್ ಅನುರಾಗ್ ಕುಮಾರ್ ಸಿಂಗ್ ತಿಳಿಸಿದ್ದಾರೆ. ಸರಿಸುಮಾರು 50 ಅಡಿ ಆಳದಲ್ಲಿ ನೀರು ತೊಟ್ಟಿಕ್ಕುತ್ತಿದ್ದು, ಇದರಿಂದ ಮಣ್ಣು ಕೆಳಗೆ ಬೀಳಲು ಕಾರಣವಾಗುತ್ತಿದೆ. ಗುಂಡಿಯ ಕೆಳಭಾಗದಲ್ಲಿ 100 ಅಡಿ ಆಳದಲ್ಲಿ ಮೂರು ಇಲಿ-ರಂಧ್ರಗಳಿವೆ. ಇವುಗಳಲ್ಲಿ ಒಂದರೊಳಗೆ ನೀರಿದ್ದು, ನಾವು ಒಳಗೆ ಹೋದಂತೆ ಅದು ಹೆಚ್ಚಾಗುತ್ತದೆ. ಅದಕ್ಕಾಗಿಯೇ ನಮ್ಮ ತಂಡವು ಅದರೊಳಗೆ ಹೋಗಿ ಹುಡುಕಲು ಸಾಧ್ಯವಾಗುತ್ತಿಲ್ಲ. ನಾವು 25 ಅಡಿ ದೂರದವರೆಗೆ ಇತರ ಎರಡು ಇಲಿ-ರಂಧ್ರಗಳಿಗೆ ಹೋಗಿದ್ದೇವೆ. ಅಲ್ಲಿ ಯಾವುದೇ ಶವಗಳು ಕಂಡುಬಂದಿಲ್ಲ. ಆದರೆ ಈ ಎರಡೂ ಸುರಂಗಗಳಿಂದ ವಿಭಿನ್ನ ದಿಕ್ಕುಗಳಲ್ಲಿ ಕವಲೊಡೆಯುವ ಅನೇಕ ಇಲಿ-ರಂಧ್ರಗಳಿವೆ. ಇಲಿ-ರಂಧ್ರಗಳು ಕೇವಲ 2 ಅಡಿ ಎತ್ತರ ಮತ್ತು 3 ಅಡಿ ಅಗಲವಿದ್ದು, ಅವುಗಳಲ್ಲಿ ಮುಂದೆ ಸಾಗಬೇಕಾದರೆ ತೆವಳಬೇಕು ಎಂದು ಸಿಂಗ್ ಹೇಳಿದ್ದಾರೆ ಎಂದು Indian express ವರದಿ ಮಾಡಿದೆ. ಈ ಗಣಿ ಪ್ರದೇಶವು ಜಿಲ್ಲಾ ಕೇಂದ್ರದಿಂದ 25 ಕಿ.ಮೀ ದೂರದಲ್ಲಿದೆ. ರಸ್ತೆ ಸಂಪರ್ಕದ ಕೊರತೆಯಿಂದಾಗಿ ಅಲ್ಲಿ ತಲುಪಲು ರಸ್ತೆಯಲ್ಲಿ ಸುಮಾರು ಮೂರು ಗಂಟೆಗಳು ಬೇಕಾಗುತ್ತದೆ. ನಾಲ್ಕು ಚಕ್ರ ವಾಹನಗಳು ಮಾತ್ರ ಸಂಚರಿಸಬಹುದಾದ ಭೂಪ್ರದೇಶ ಇದಾಗಿದೆ. ಘಟನೆಯ ನಂತರ, ಪೂರ್ವ ಜೈಂಟಿಯಾ ಹಿಲ್ಸ್ ಪೊಲೀಸರು ನರಹತ್ಯೆ, ಗಣಿ ಮತ್ತು ಖನಿಜ (ಅಭಿವೃದ್ಧಿ ಮತ್ತು ನಿಯಂತ್ರಣ) ಕಾಯ್ದೆ ಹಾಗೂ ಸ್ಫೋಟಕ ವಸ್ತುಗಳ ಕಾಯ್ದೆಯ ಉಲ್ಲಂಘನೆ ಸೇರಿದಂತೆ ಆರೋಪಗಳ ಅಡಿಯಲ್ಲಿ ಎಫ್ಐಆರ್ ದಾಖಲಿಸಿದ್ದಾರೆ. ಅಕ್ರಮ ಗಣಿಗಾರಿಕೆ ನಡೆಯುತ್ತಿದ್ದರೂ ನಿರ್ಲಕ್ಷ್ಯ ಪೂರ್ವ ಜೈಂಟಿಯಾ ಹಿಲ್ಸ್ನಲ್ಲಿ ವ್ಯಾಪಕವಾದ ಅಕ್ರಮ ಗಣಿಗಾರಿಕೆ ಪದೇಪದೇ ನಡೆಯುತ್ತಿದೆ. ಉಚ್ಚ ನ್ಯಾಯಾಲಯವನ್ನು ಹೊರತುಪಡಿಸಿ ರಾಜ್ಯದಲ್ಲಿ ಯಾರೂ ಇದನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ ಎಂದು ನಿವೃತ್ತ ನ್ಯಾಯಮೂರ್ತಿ ಬಿ.ಪಿ. ಕಟಕಿ ಹೇಳಿದ್ದಾರೆ. 2022ರಿಂದ ರಾಜ್ಯದಲ್ಲಿ ಅಕ್ರಮ ಕಲ್ಲಿದ್ದಲು ಗಣಿಗಾರಿಕೆಯನ್ನು ಮೇಲ್ವಿಚಾರಣೆ ಮಾಡಲು ಮೇಘಾಲಯ ಹೈಕೋರ್ಟ್ನಿಂದ ಏಕವ್ಯಕ್ತಿ ಸಮಿತಿಯಾಗಿ ನೇಮಕಗೊಂಡವರು ಅವರು. ಗುರುವಾರವೇ ಇದೇ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯ ಸಂದರ್ಭದಲ್ಲಿ ಹೈಕೋರ್ಟ್ ಈ ಘಟನೆಯನ್ನು ಗಮನದಲ್ಲಿಟ್ಟುಕೊಂಡು ಫೆಬ್ರವರಿ 9ರಂದು ಜಿಲ್ಲಾ ಜಿಲ್ಲಾಧಿಕಾರಿ ಮತ್ತು ಎಸ್ಪಿಗೆ ಸಮನ್ಸ್ ಜಾರಿ ಮಾಡಿತು. ತೆಗೆದುಕೊಂಡ ಕ್ರಮಗಳ ವಿವರ ಹಾಗೂ ಯಾಕೆ ಮುಂದುವರಿಯಲು ಅವಕಾಶ ನೀಡಲಾಗಿದೆ ಎಂಬುದಕ್ಕೆ ಕಾರಣಗಳನ್ನು ಒದಗಿಸುವಂತೆ ಹೈಕೋರ್ಟ್ ಕೇಳಿದೆ. ಪೂರ್ವ ಜೈಂಟಿಯಾ ಬೆಟ್ಟಗಳು ಅಕ್ರಮ ಕಲ್ಲಿದ್ದಲು ಗಣಿಗಾರಿಕೆಯಿಂದ ಹೆಚ್ಚು ಪರಿಣಾಮ ಬೀರುವ ಜಿಲ್ಲೆಯಾಗಿದ್ದು, ಅಲ್ಲಿ ಚಟುವಟಿಕೆಗಳು ದೊಡ್ಡ ಪ್ರಮಾಣದಲ್ಲಿ ನಡೆಯುತ್ತಿವೆ ಎಂದು ಜನವರಿ 17ರಂದು ಸಲ್ಲಿಸಲಾದ ನ್ಯಾಯಮೂರ್ತಿ ಕಟಕಿ ಸಮಿತಿಯ ವರದಿ ಹೇಳಿದೆ. ಒಂದು ತಿಂಗಳ ಹಿಂದೆ, ಜನವರಿ 14ರಂದು ಥಾಂಗ್ಕ್ಸೊ ಪ್ರದೇಶದಲ್ಲಿ ಮತ್ತೊಂದು ಅಕ್ರಮ ಗಣಿಯಲ್ಲಿ ಕೆಲಸ ಮಾಡುತ್ತಿದ್ದಾಗ ಕಾರ್ಮಿಕನೊಬ್ಬ ಸಾವನ್ನಪ್ಪಿದ ಘಟನೆಯನ್ನು ಸಮಿತಿಯು ವರದಿ ಮಾಡಿತ್ತು. ಇದೇ ವಿಷಯದ ಕುರಿತು ಸಮಿತಿಯ ನೇತೃತ್ವ ವಹಿಸಲು 2019ರಲ್ಲಿ ಎನ್ಜಿಟಿಯಿಂದ ನೇಮಕಗೊಂಡಿದ್ದ ನಿವೃತ್ತ ನ್ಯಾಯಮೂರ್ತಿ ಕಟಕಿ, ಆ ಸಮಯದಲ್ಲಿ ಪೂರ್ವ ಜೈಂಟಿಯಾ ಬೆಟ್ಟಗಳಲ್ಲಿ ಮಾತ್ರ 22,000ಕ್ಕೂ ಹೆಚ್ಚು ಅಕ್ರಮ ಕಲ್ಲಿದ್ದಲು ಗಣಿಗಳಿದ್ದವು ಎಂದು ಹೇಳಿದ್ದಾರೆ. ಮೇಘಾಲಯದಾದ್ಯಂತ ಅಕ್ರಮ ಗಣಿಗಳ ಒಟ್ಟು ಸಂಖ್ಯೆ 25,000ಕ್ಕಿಂತ ಹೆಚ್ಚು ಇದೆ ಎಂದೂ ಅವರು ತಿಳಿಸಿದ್ದಾರೆ. ಇದು ನಿರಂತರವಾಗಿ ಮುಂದುವರಿದರೂ ಗಂಭೀರ ಕ್ರಮದ ಕೊರತೆ ಇದೆ. ಈಗ ನಡೆದಿರುವುದು ದೊಡ್ಡ ಘಟನೆ. ಆದರೆ ಹಲವು ಸಣ್ಣ ಘಟನೆಗಳು ನಡೆದಿದ್ದು ಇನ್ನೂ ಹಲವು ಗಮನಕ್ಕೆ ಬಾರದೇ ಉಳಿದಿರುವ ಸಾಧ್ಯತೆಯಿದೆ ಎಂದಿದ್ದಾರೆ. 2018ರಲ್ಲಿ ಕ್ಸಾನ್ನಲ್ಲಿ ನಡೆದ ಘಟನೆಯಲ್ಲಿ 15 ಗಣಿಗಾರರು ಇಲಿ-ರಂಧ್ರ ಗಣಿಯಲ್ಲಿ ಪ್ರವಾಹಕ್ಕೆ ಸಿಲುಕಿ ಸಾವಿಗೀಡಾಗಿದ್ದರು. ಉಂಪ್ಲೆಂಗ್ ನಲ್ಲಿ ನಡೆದ ಇದೇ ರೀತಿಯ ಘಟನೆಯಲ್ಲಿ ಐವರು ಕಾರ್ಮಿಕರು ಪ್ರವಾಹಕ್ಕೆ ಸಿಲುಕಿ ಸಾವನ್ನಪ್ಪಿದ್ದರು. ಇಲಿ-ರಂಧ್ರ ಗಣಿಗಾರಿಕೆ ಎಂದರೇನು? ಇಲಿ-ರಂಧ್ರ ಗಣಿಗಾರಿಕೆಯು ಕಲ್ಲಿದ್ದಲು ಹೊರತೆಗೆಯುವ ಒಂದು ವಿಧಾನ. ಇದು ಸಾಮಾನ್ಯವಾಗಿ ಮೂರರಿಂದ ನಾಲ್ಕು ಅಡಿಗಳಿಗಿಂತ ಹೆಚ್ಚು ಅಗಲವಿಲ್ಲದ, ಬಹಳ ಸಣ್ಣ ಲಂಬ ಹೊಂಡಗಳನ್ನು ಅಗೆಯುವುದನ್ನು ಒಳಗೊಂಡಿರುತ್ತದೆ. ಗಣಿ ಕಾರ್ಮಿಕರು ಕಲ್ಲಿದ್ದಲಿನ ಪದರ ತಲುಪಿದ ಕೂಡಲೇ ಅಲ್ಲಿಂದ ಕಲ್ಲಿದ್ದಲನ್ನು ತೆಗೆಯಲು ಅಡ್ಡ ಸುರಂಗಗಳನ್ನು ಅಗೆಯುತ್ತಾರೆ. ಮೇಘಾಲಯದಲ್ಲಿ ಸಾಮಾನ್ಯವಾಗಿ ಕಲ್ಲಿದ್ದಲಿನ ಪದರ ಮೇಲ್ಮೈಗೆ ಹತ್ತಿರವಾಗಿಯೇ ಇರುತ್ತದೆ. ಒಬ್ಬ ವ್ಯಕ್ತಿ ಮಾತ್ರ ಒಳಗೆ ಹೋಗಬಹುದಾದ ಕಿರಿದಾದ ಸುರಂಗಗಳನ್ನು ಸಾಮಾನ್ಯವಾಗಿ “ಇಲಿ-ರಂಧ್ರಗಳು” ಎಂದು ಕರೆಯಲಾಗುತ್ತದೆ. ಈ ಬಾವಿಗಳಿಂದ ಹೊರತೆಗೆಯಲಾದ ಕಲ್ಲಿದ್ದಲನ್ನು ಗಣಿಯ ಮುಂಭಾಗದಲ್ಲಿ ಸುರಿಯಲಾಗುತ್ತದೆ. ನಂತರ ರಸ್ತೆಯ ಮೂಲಕ ಸಾಗಿಸಲಾಗುತ್ತದೆ. ಯಾವುದೇ ಯಂತ್ರದ ಸಹಾಯವಿಲ್ಲದೆ ಕೈಯಿಂದ ಬಳಸುವ ಉಪಕರಣಗಳೊಂದಿಗೆ ಕಾರ್ಮಿಕರು ಗಣಿಗಳನ್ನು ಪ್ರವೇಶಿಸುತ್ತಾರೆ. ಈ ವಿಧಾನವು ಶ್ರಮದಾಯಕ ಮತ್ತು ಹೆಚ್ಚು ಅಪಾಯಕಾರಿಯಾಗಿದೆ. ಆದರೆ ತೆಳುವಾದ ಕಲ್ಲಿದ್ದಲು ಪದರಗಳು ದೊಡ್ಡ ಪ್ರಮಾಣದ ಯಾಂತ್ರಿಕೃತ ಗಣಿಗಾರಿಕೆಯನ್ನು ಆರ್ಥಿಕವಾಗಿ ಕಷ್ಟಕರವಾಗಿಸುವುದರಿಂದ ಮೇಘಾಲಯದಲ್ಲಿ ಈ ವಿಧಾನವನ್ನು ವ್ಯಾಪಕವಾಗಿ ಬಳಸಲಾಗುತ್ತಿದೆ. ಸುರಂಗಗಳ ಕಿರಿದಾಗಿರುವುದರಿಂದ ಅಲ್ಲಿ ಮಕ್ಕಳನ್ನು ಕೆಲಸಕ್ಕೆ ನೇಮಿಸಿಕೊಳ್ಳಲಾಗುತ್ತದೆ. ಅವರು ದೈಹಿಕವಾಗಿ ಚಿಕ್ಕ ಗಾತ್ರದವರಾಗಿರುವುದರಿಂದ ಈ ಇಲಿ-ರಂಧ್ರಗಳಲ್ಲಿ ತೆವಳಲು ಸುಲಭವಾಗುತ್ತದೆ. ಸೀಮಿತ ಜೀವನೋಪಾಯದ ಆಯ್ಕೆಗಳನ್ನು ಹೊಂದಿರುವ ರಾಜ್ಯದಲ್ಲಿ ಕುಟುಂಬಗಳು ಈ ಕೆಲಸವನ್ನು ಬಹಳ ಹಿಂದಿನಿಂದಲೂ ಅವಲಂಬಿಸಿವೆ. ಅಂತಹ ಗಣಿಗಳಲ್ಲಿ ಕೆಲಸ ಮಾಡಲು ಅಪ್ರಾಪ್ತ ವಯಸ್ಕರು ತಮ್ಮ ವಯಸ್ಸನ್ನು ತಪ್ಪಾಗಿ ನಮೂದಿಸಿ ಸೇರಿಕೊಳ್ಳುತ್ತಾರೆ. ಇಲಿ-ರಂಧ್ರ ಗಣಿಗಾರಿಕೆಯನ್ನು ನಿಷೇಧಿಸಿದ್ದೇಕೆ? ತೀವ್ರ ಪರಿಸರ ಹಾನಿ, ಅಂತರ್ಜಲ ಮಾಲಿನ್ಯ ಮತ್ತು ಮಾನವ ಜೀವಕ್ಕೆ ಗಂಭೀರ ಅಪಾಯಗಳನ್ನು ಉಲ್ಲೇಖಿಸಿ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ 2014ರಲ್ಲಿ ಮೇಘಾಲಯದಲ್ಲಿ ಇಲಿ-ರಂಧ್ರ ಕಲ್ಲಿದ್ದಲು ಗಣಿಗಾರಿಕೆ ಹಾಗೂ ಇತರ ಅವೈಜ್ಞಾನಿಕ ಗಣಿಗಾರಿಕೆ ಪದ್ಧತಿಗಳ ಮೇಲೆ ನಿಷೇಧ ಹೇರಿತು. ಅಕ್ರಮ ವಿಧಾನಗಳ ಮೂಲಕ ಹೊರತೆಗೆಯಲಾದ ಕಲ್ಲಿದ್ದಲಿನ ಸಾಗಣೆಯನ್ನೂ ನ್ಯಾಯಮಂಡಳಿಯು ನಿರ್ಬಂಧಿಸಿತು. ನಿಷೇಧದ ಹೊರತಾಗಿಯೂ ರಾಜ್ಯದ ಹಲವು ಭಾಗಗಳಲ್ಲಿ ಈ ಪದ್ಧತಿ ಮುಂದುವರೆದಿದೆ. ವರ್ಷಗಳಲ್ಲಿ ಹಲವಾರು ಗಂಭೀರ ಅಪಘಾತಗಳು ವರದಿಯಾಗಿವೆ. ಆಗಾಗ್ಗೆ ಕಿರಿದಾದ ಸುರಂಗಗಳೊಳಗೆ ಪ್ರವಾಹ ಅಥವಾ ಉಸಿರುಗಟ್ಟುವಿಕೆಯಿಂದ ಕಾರ್ಮಿಕರು ಪ್ರಾಣ ಕಳೆದುಕೊಂಡಿದ್ದಾರೆ. 2018 ಡಿಸೆಂಬರ್ನಲ್ಲಿ ಪೂರ್ವ ಜೈಂಟಿಯಾ ಬೆಟ್ಟಗಳಲ್ಲಿ ಪ್ರವಾಹಕ್ಕೆ ಸಿಲುಕಿದ ಇಲಿ-ರಂಧ್ರ ಗಣಿಯೊಳಗೆ 15 ಕಾರ್ಮಿಕರು ಸಿಕ್ಕಿಬಿದ್ದಿದ್ದರು. ರಕ್ಷಣಾ ಕಾರ್ಯಾಚರಣೆಗಳು ಎರಡು ತಿಂಗಳಿಗಿಂತ ಹೆಚ್ಚು ಕಾಲ ನಡೆದರೂ ಕೇವಲ ಎರಡು ಶವಗಳನ್ನು ಮಾತ್ರ ಹೊರತೆಗೆಯಲು ಸಾಧ್ಯವಾಯಿತು. 2021ರಲ್ಲಿ ನಡೆದ ಮತ್ತೊಂದು ಘಟನೆಯಲ್ಲಿ ಐದು ಕಾರ್ಮಿಕರು ಪ್ರವಾಹಕ್ಕೆ ಸಿಲುಕಿದ ಗಣಿಯಲ್ಲಿ ಸಿಲುಕಿಕೊಂಡರು. ಒಂದು ತಿಂಗಳ ನಂತರ ರಕ್ಷಣಾ ಪ್ರಯತ್ನಗಳನ್ನು ನಿಲ್ಲಿಸುವ ಮೊದಲು ಮೂರು ಶವಗಳು ಪತ್ತೆಯಾದವು. ಇಲಿ-ರಂಧ್ರ ಗಣಿಗಾರಿಕೆಯಿಂದ ಉಂಟಾಗುವ ಪರಿಸರ ಹಾನಿಯಲ್ಲಿ ಆಮ್ಲ ಗಣಿ ಒಳಚರಂಡಿ, ನದಿಗಳು ಮತ್ತು ಕೃಷಿಭೂಮಿಯ ಮಾಲಿನ್ಯ, ಭೂಮಿಯ ಅಗೆಯುವಿಕೆ ಸೇರಿವೆ. ಮೇಘಾಲಯದಲ್ಲಿ ಗಣಿಗಾರಿಕೆ ಆದಾಯದ ಪ್ರಮುಖ ಮೂಲವಾಗಿದ್ದು, ಈ ನಿಷೇಧವು ರಾಜಕೀಯ ಹಾಗೂ ಆರ್ಥಿಕವಾಗಿ ವಿವಾದಾಸ್ಪದವಾಗಿದೆ. ಪ್ರದೇಶದ ಭೂವಿಜ್ಞಾನಕ್ಕೆ ಸೂಕ್ತವಾದ ಕಾರ್ಯಸಾಧ್ಯ ಪರ್ಯಾಯ ಗಣಿಗಾರಿಕೆ ವಿಧಾನವಿಲ್ಲ ಎಂದು ರಾಜ್ಯ ಸರ್ಕಾರ ವಾದಿಸಿದೆ. 2022ರಲ್ಲಿ ಮೇಘಾಲಯ ಹೈಕೋರ್ಟ್ ನೇಮಿಸಿದ ಸಮಿತಿಯು ಕಾನೂನು ನಿರ್ಬಂಧಗಳ ಹೊರತಾಗಿಯೂ ಹಲವೆಡೆ ಇಲಿ-ರಂಧ್ರ ಗಣಿಗಾರಿಕೆ ನಿರಂತರವಾಗಿ ನಡೆಯುತ್ತಿದೆ ಎಂದು ಕಂಡುಹಿಡಿದಿದೆ. ನ್ಯಾಯಮಂಡಳಿ ವಿಧಿಸಿದ ನಿಷೇಧವನ್ನು ಎತ್ತಿಹಿಡಿದ ಸುಪ್ರೀಂ ಕೋರ್ಟ್, ಪರಿಸರ ಸಂರಕ್ಷಣೆ ಜೊತೆಗೆ ವೈಜ್ಞಾನಿಕ ಮತ್ತು ನಿಯಂತ್ರಿತ ಕಾರ್ಯವಿಧಾನಗಳ ಅಡಿಯಲ್ಲಿ ಮಾತ್ರ ಕಲ್ಲಿದ್ದಲು ಗಣಿಗಾರಿಕೆಗೆ ಅವಕಾಶ ನೀಡಿದೆ.
ದಾಂಡೇಲಿ-ಅಳ್ನಾವರ ರೈಲಿಗೆ ಕೇಂದ್ರ ಸಚಿವ ಸೋಮಣ್ಣ ಚಾಲನೆ : 10ರೂ. ನಲ್ಲಿ ದಾಂಡೇಲಿ ಟು ಅಳ್ನಾವರ ಟ್ರಾವೆಲ್ !
ದಾಂಡೇಲಿ ಮತ್ತು ಅಳ್ನಾವರ ನಡುವೆ ರೈಲು ಸಂಚಾರ ಮತ್ತೆ ಆರಂಭವಾಗಿದ್ದು, ಇದಕ್ಕೆ ಕೇಂದ್ರ ಸಚಿವ ವಿ.ಸೋಮಣ್ಣಫೆ.7ರಂದು ಅಧಿಕೃತವಾಗಿ ಮರುಚಾಲನೆ ನೀಡಿದ್ದಾರೆ. ಇನ್ನು, ಈ ವೇಳೆ, ಮಾತನಾಡಿದ ಅವರು ದಾಂಡೇಲಿಯಿಂದ ಕೇವಲ 10.ರೂ.ದಲ್ಲಿ ಅಳ್ನಾವರಕ್ಕೆ ಹೋಗಬಹುದು ಎಂದು ತಿಳಿಸಿದ್ದಾರೆ. ಅಲ್ಲದೆ , ಈ ರೈಲನ್ನು ಹುಬ್ಬಳಿಯವರೆಗೂ ವಿಸ್ತರಿಸಲು ಪ್ರಯತ್ನ ಮಾಡಬೇಕೆಂದು ರೈಲ್ವೆ ಅಧಿಕಾರಿಗಳಿಗೆ ಆದೇಶಿಸಿದ್ದಾರೆ. ಇನ್ನು, ಇದು ಈ ಭಾಗದಲ್ಲಿ ಪ್ರವಾಸೋದ್ಯಮಕ್ಕೆ ಮತ್ತಷ್ಟು ಉತ್ತೇಜನ ನೀಡಲಿದ್ದು, ದಾಂಡೇಲಿ ಜನರ ಬಹುದಿನದ ಕನಸು ನನಸಾಗಿದೆ.
ವಿಟ್ಲ : ಬೈಕ್ ಢಿಕ್ಕಿ; ಮಹಿಳೆ ಮೃತ್ಯು, ಸವಾರ ಗಂಭೀರ
ವಿಟ್ಲ: ಮಹಿಳೆಯೊಬ್ಬರಿಗೆ ಬೈಕ್ ಢಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿದ್ದು, ಬೈಕ್ ಸವಾರ ಗಂಭೀರವಾಗಿ ಗಾಯಗೊಂಡಿರುವ ಘಟನೆ ವಿಟ್ಲ ಬಸ್ಸ್ಟ್ಯಾಂಡ್ ಸಮೀಪ ರವಿವಾರ ಬೆಳಿಗ್ಗೆ ನಡೆದಿದೆ. ಮೃತ ಮಹಿಳೆಯನ್ನು ವಿಟ್ಲ ಮುಡ್ನೂರು ಗ್ರಾಮದ ಮರುವಾಳ ನಿವಾಸಿ ಸೀತಾ ಶೆಟ್ಟಿ (68) ಎಂದು ಗುರುತಿಸಲಾಗಿದೆ. ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡ ಬೈಕ್ ಸವಾರನನ್ನು ಸ್ಥಳೀಯರು ಖಾಸಗಿ ಆಸ್ಪತ್ರೆಗೆ ರವಾನಿಸಿದ್ದಾರೆ. ಬೈಕ್ ಸವಾರ ಪುತ್ತೂರು ಮೂಲದವರು ಎಂದು ತಿಳಿದು ಬಂದಿದೆ. ಅಪಘಾತದ ರಭಸಕ್ಕೆ ಬೈಕ್ ಸುಮಾರು 50 ಮೀಟರ್ ದೂರ ಬಿದ್ದಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. ಸ್ಥಳೀಯರು ತಮ್ಮ ದ್ವಿಚಕ್ರ ವಾಹನದಲ್ಲಿ ಗಾಯಾಳುವನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ದಿದ್ದಾರೆ ಎಂದು ತಿಳಿದು ಬಂದಿದೆ ಘಟನಾ ಸ್ಥಳಕ್ಕೆ ವಿಟ್ಲ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ನೂರಾರು ವರ್ಷಗಳಿಂದ ಬೆಣ್ಣಿಹಳ್ಳದ ನೆರೆಯಿಂದ ಬೆಳೆಹಾನಿ, ಆಸ್ತಿ ಹಾನಿ ಅನುಭವಿಸುತ್ತಿದ್ದ ಸುಮಾರು 20 ಸಾವಿರ ಹೆಕ್ಟೇರ್ ಪ್ರದೇಶವು ಹೊಸ 200 ಕೋಟಿ ರೂ ಯೋಜನೆಯಿಂದ ಮುಕ್ತಗೊಳ್ಳುವ ದಿನಗಳು ಹತ್ತಿರವಾಗುತ್ತಿವೆ. ಹಲವಾರು ಗ್ರಾಮಗಳು ಮಳೆಗಾಲದ ಸಂದರ್ಭದಲ್ಲಿ ಮುಳುಗಡೆಯ ಭೀತಿಯಿಂದ ನಿಟ್ಟುಸಿರು ಬಿಡುವಂತಾಗಿದೆ.
ಇತಿಹಾಸ ಬರೆದ ಎಸ್ಕೆವೈ: ಟಿ20 ವಿಶ್ವಕಪ್ನಲ್ಲೇ ದುಬಾರಿ ಬೌಲರ್ ಎನಿಸಿದ ಸೌರಭ್!
ಮುಂಬೈ: ಭಾರತ ಮತ್ತು ಅಮೆರಿಕ ತಂಡಗಳ ನಡುವಿನ ಟಿ20 ವಿಶ್ವಕಪ್ ಟೂರ್ನಿಯ ಮೊದಲ ಪಂದ್ಯ ಆಘಾತಗಳು ಹಾಗೂ ಅದ್ಭುತಗಳಿಗೆ ಸಾಕ್ಷಿಯಾಯಿತು. ಎರಡು ವಿಶಿಷ್ಟ ದಾಖಲೆಗಳು ಇಡೀ ಪಂದ್ಯದ ಸ್ವಾರಸ್ಯವನ್ನು ಬಿಂಬಿಸಿವೆ. ಅಮೆರಿಕದ ಬೌಲರ್ ಸೌರಭ್ ನೇತ್ರವಾಲ್ಕರ್ ನಾಲ್ಕು ಓವರ್ಗಳಲ್ಲಿ 65 ರನ್ ನೀಡಿದರೂ ಯಾವುದೇ ವಿಕೆಟ್ ಕಬಳಿಸಲು ಸಾಧ್ಯವಾಗಲಿಲ್ಲ. ಇದು ಟಿ20 ವಿಶ್ವಕಪ್ ಇತಿಹಾಸದಲ್ಲೇ ಅತ್ಯಂತ ದುಬಾರಿ ಬೌಲಿಂಗ್ ಎಂಬ ದಾಖಲೆಯಾಗಿದೆ. ಇದಕ್ಕೂ ಮೊದಲು 2007ರಲ್ಲಿ ಜೋಹಾನ್ಸ್ಬರ್ಗ್ನಲ್ಲಿ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಶ್ರೀಲಂಕಾದ ಸನತ್ ಜಯಸೂರ್ಯ ಯಾವುದೇ ವಿಕೆಟ್ ಪಡೆಯದೆ 64 ರನ್ಗಳನ್ನು ನೀಡಿದ್ದು, ಅದುವರೆಗೆ ದುಬಾರಿ ಬೌಲಿಂಗ್ ದಾಖಲೆಯಾಗಿತ್ತು. ಪತನದ ಅಂಚಿನಲ್ಲಿದ್ದ ತಂಡವನ್ನು ಮೇಲಕ್ಕೆತ್ತುವ ಪ್ರಯತ್ನದಲ್ಲಿ ಭಾರತ ತಂಡದ ನಾಯಕ ಸೂರ್ಯಕುಮಾರ್ ಯಾದವ್ ಕೊನೆಯ ಓವರ್ಗಳಲ್ಲಿ ನಿರ್ದಯವಾಗಿ ಬೌಲರ್ಗಳನ್ನು ದಂಡಿಸಿದ್ದು ಇದಕ್ಕೆ ಪ್ರಮುಖ ಕಾರಣವಾಯಿತು. ಕೇವಲ 49 ಎಸೆತಗಳಲ್ಲಿ 84 ರನ್ ಸಿಡಿಸಿದ ಎಸ್ಕೆವೈ ತಂಡವನ್ನು ಅಪಾಯದಿಂದ ಪಾರು ಮಾಡಿದರು. ಇದು ಟಿ20 ವಿಶ್ವಕಪ್ ಇತಿಹಾಸದ ಚೊಚ್ಚಲ ಇನಿಂಗ್ಸ್ನಲ್ಲಿ ಯಾವುದೇ ತಂಡದ ನಾಯಕನಿಂದ ಗಳಿಸಲಾದ ಎರಡನೇ ಗರಿಷ್ಠ ಸ್ಕೋರ್ ಆಗಿದೆ. 2009ರಲ್ಲಿ ಕ್ರಿಸ್ ಗೇಲ್ ಗಳಿಸಿದ 88 ರನ್ಗಳು ಅತ್ಯಧಿಕ ಸ್ಕೋರ್ ಎನಿಸಿವೆ. ಭಾರತದ ವಿರುದ್ಧ 2021ರಲ್ಲಿ ದುಬೈನಲ್ಲಿ 68 ರನ್ ಗಳಿಸಿದ ಬಾಬರ್ ಅಝಂ, 2007ರಲ್ಲಿ ಜೋಹಾನ್ಸ್ಬರ್ಗ್ನಲ್ಲಿ 65 ರನ್ ಗಳಿಸಿದ ಮಹೇಲಾ ಜಯವರ್ಧನೆ ಹಾಗೂ ವೆಸ್ಟ್ ಇಂಡೀಸ್ ವಿರುದ್ಧ ಜೋಹಾನ್ಸ್ಬರ್ಗ್ನಲ್ಲಿ 61 ರನ್ ಗಳಿಸಿದ್ದ ಅಶ್ರಫ್ ನಂತರದ ಸ್ಥಾನಗಳಲ್ಲಿ ಇದ್ದಾರೆ. ಶನಿವಾರದ ಪಂದ್ಯದಲ್ಲಿ ಭಾರತ 6 ವಿಕೆಟ್ ನಷ್ಟಕ್ಕೆ 77 ರನ್ ಗಳಿಸಿದ್ದಾಗ 16ನೇ ಓವರ್ನಲ್ಲಿ ಎಸ್ಕೆವೈ ಪ್ರತಿದಾಳಿ ಆರಂಭಿಸಿದರು. ಸೌರಭ್ ನೇತ್ರವಾಲ್ಕರ್ ವಿರುದ್ಧ ಮೂರು ಬೌಂಡರಿ ಹಾಗೂ ಒಂದು ಸಿಕ್ಸರ್ ಸಿಡಿಸಿ ಭಾರತದ ಚೇತರಿಕೆಗೆ ಕಾರಣರಾದರು. ನೇತ್ರವಾಲ್ಕರ್ ಅವರ ಅಂತಿಮ ಓವರ್ನಲ್ಲಿ ಎಸ್ಕೆವೈ 21 ರನ್ ಸಿಡಿಸಿ, ಭಾರತ 160 ರನ್ ಗಡಿ ದಾಟಲು ನೆರವಾದರು.
ಕಲ್ಲಡ್ಕ ಪ್ರಭಾಕರ್ ಭಟ್ ವಿರುದ್ಧದ ಪ್ರಕರಣಕ್ಕೆ ಕರ್ನಾಟಕ ಹೈಕೋರ್ಟ್ನಿಂದ ತಡೆ
ಕಲ್ಲಡ್ಕ ಪ್ರಭಾಕರ್ ಭಟ್ ಸಲ್ಲಿಸಿದ ಅರ್ಜಿಯ ಪರ ಹೈಕೋರ್ಟ್ ತೀರ್ಪು ನೀಡಿದ್ದು, ಸದ್ಯಕ್ಕೆ ರಿಲೀಫ್ ಸಿಕ್ಕಿದೆ. ಧ್ವೇಷ ಭಾಷಣಕ್ಕೆ ಸಂಬಂಧಿಸಿದ ಎಲ್ಲಾ ತನಿಖೆ ಹಾಗೂ ಪ್ರಕ್ರಿಯೆಗೆ ಸದ್ಯಕ್ಕೆ ತಡೆ ನೀಡಿ ಮಧ್ಯಂತರ ತಡೆಯಾಜ್ಞೆಯನ್ನು ಕರ್ನಾಟಕ ಹೈಕೋರ್ಟ್ ಹೊರಡಿಸಿದೆ.
ಮತದಾರರ ಪಟ್ಟಿಗೆ ಸೇರ್ಪಡೆ ವಿವಾದ ರಾಜಕೀಯ ಪ್ರೇರಿತ: ಸೋನಿಯಾ ಗಾಂಧಿ
ಹೊಸದಿಲ್ಲಿ: ಭಾರತೀಯ ಪೌರತ್ವ ಪಡೆಯುವ ಮೂರು ವರ್ಷಗಳ ಮುನ್ನವೇ, 1980ರಲ್ಲಿ ಮತದಾರರ ಪಟ್ಟಿಗೆ ಹೆಸರು ಸೇರಿಸಲಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿ ಎಫ್ಐಆರ್ ದಾಖಲಿಸುವಂತೆ ಕೋರಿದ್ದ ಮನವಿಯನ್ನು ತಿರಸ್ಕರಿಸಿದ ಮ್ಯಾಜಿಸ್ಟ್ರೇಟ್ ಕೋರ್ಟ್ ಆದೇಶವನ್ನು ಪ್ರಶ್ನಿಸಿ ದೆಹಲಿ ಹೈಕೋರ್ಟ್ನಲ್ಲಿ ಸಲ್ಲಿಸಲಾದ ಕ್ರಿಮಿನಲ್ ಪರಿಷ್ಕರಣೆ ಅರ್ಜಿಯನ್ನು ರಾಜಕೀಯ ಪ್ರೇರಿತ ಹಾಗೂ ಕ್ಷುಲ್ಲಕ ಎಂದು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಬಣ್ಣಿಸಿದ್ದಾರೆ. ವಿಶೇಷ ನ್ಯಾಯಾಧೀಶ ವಿಶಾಲ್ ಗೋಂಗೆ ಅವರ ಸಮ್ಮುಖದಲ್ಲಿ ರೋಸ್ ಅವೆನ್ಯೂ ಸೆಷನ್ಸ್ ಕೋರ್ಟ್ನಲ್ಲಿ ಸಲ್ಲಿಸಿರುವ ಅರ್ಜಿಯ ಪ್ರಕಾರ, ಇಟಲಿ ಮೂಲದ ಸೋನಿಯಾ ಗಾಂಧಿಯವರ ಹೆಸರನ್ನು ನಕಲಿ ದಾಖಲೆಗಳ ಮೂಲಕ ಮತದಾರರ ಪಟ್ಟಿಗೆ ಸೇರಿಸಲಾಗಿದೆ ಎಂಬ ಆರೋಪ ಮಾಡಲಾಗಿದೆ. ಆದರೆ ಇದು ಸಂಪೂರ್ಣ ತಪ್ಪುಕಲ್ಪನೆ ಹಾಗೂ ಕಾನೂನು ಪ್ರಕ್ರಿಯೆಯ ದುರ್ಬಳಕೆಗೆ ನಡೆಸಿರುವ ಪ್ರಯತ್ನವಾಗಿದೆ ಎಂದು ಕಾಂಗ್ರೆಸ್ ಪ್ರತಿಪಾದಿಸಿದೆ. ಪ್ರಕರಣದಲ್ಲಿ ಎಫ್ಐಆರ್ ದಾಖಲಿಸಲು ನಿರಾಕರಿಸಿ ಮ್ಯಾಜಿಸ್ಟ್ರೇಟ್ ವೈಭವ್ ಚೌರಾಸಿಯಾ ನೀಡಿದ್ದ ಆದೇಶವನ್ನು ಪ್ರಶ್ನಿಸಿ ವಿಕಾಸ್ ತ್ರಿಪಾಠಿ ಎಂಬವರು ಅರ್ಜಿ ಸಲ್ಲಿಸಿದ್ದಾರೆ. ಈ ಸಂಬಂಧ 2025ರ ಡಿಸೆಂಬರ್ 9ರಂದು ಸೋನಿಯಾ ಗಾಂಧಿಗೆ ನೋಟಿಸ್ ನೀಡಲಾಗಿದ್ದು, ನ್ಯಾಯಾಧೀಶ ಗೋಂಗೆ ಅವರು ಶನಿವಾರ ಉತ್ತರವನ್ನು ಪರಿಶೀಲಿಸಿ ಪ್ರಕರಣದ ವಿಚಾರಣೆಯನ್ನು ಫೆಬ್ರವರಿ 21ಕ್ಕೆ ನಿಗದಿಪಡಿಸಿದ್ದಾರೆ. ಪೌರತ್ವ ಸಂಬಂಧಿತ ವಿಷಯಗಳು ನೇರವಾಗಿ ಕೇಂದ್ರ ಸರ್ಕಾರದ ಅಧಿಕಾರ ವ್ಯಾಪ್ತಿಗೆ ಬರುವುದಾಗಿ ವಿಚಾರಣಾ ನ್ಯಾಯಾಲಯ ಸ್ಪಷ್ಟಪಡಿಸಿದೆ. ಅಲ್ಲದೆ, ಚುನಾವಣಾ ವ್ಯಾಜ್ಯಗಳ ಇತ್ಯರ್ಥದ ಅಧಿಕಾರ ಭಾರತದ ಚುನಾವಣಾ ಆಯೋಗಕ್ಕೆ ಸೇರಿದೆ ಎಂದು ಸೋನಿಯಾ ಗಾಂಧಿ ವಾದಿಸಿದ್ದಾರೆ. ಆದ್ದರಿಂದ ಐಪಿಸಿ ಅಥವಾ ಬಿಎನ್ಎಸ್ ಅಪರಾಧಗಳ ವ್ಯಾಪ್ತಿಯಲ್ಲಿ ಇಂತಹ ಖಾಸಗಿ ದೂರುಗಳನ್ನು ಪುರಸ್ಕರಿಸಲಾಗುವುದಿಲ್ಲ ಎಂದು ಅವರು ಪ್ರತಿಪಾದಿಸಿದ್ದಾರೆ. ಸಂವಿಧಾನದ 329ನೇ ವಿಧಿಯ ಪ್ರಕಾರ ಅಧಿಕಾರ ಪ್ರತ್ಯೇಕತೆಯ ಸಿದ್ಧಾಂತಕ್ಕೆ ಇದು ಸ್ಪಷ್ಟ ಉಲ್ಲಂಘನೆಯಾಗುತ್ತದೆ ಎಂದು ಅವರು ಹೇಳಿದ್ದಾರೆ.
Rajasthan | ಮೂರು ಮಹಡಿ ಕಟ್ಟಡ ಕುಸಿತ: ಇಬ್ಬರು ಮೃತ್ಯು, ಹಲವರು ಸಿಲುಕಿರುವ ಶಂಕೆ
ಹೊಸದಿಲ್ಲಿ: ರಾಜಸ್ಥಾನದ ಕೋಟಾ ನಗರದಲ್ಲಿ ಶನಿವಾರ ಸಂಜೆ ಮೂರು ಮಹಡಿ ಕಟ್ಟಡ ಕುಸಿದು ಸಂಭವಿಸಿದ ದುರಂತದಲ್ಲಿ ಕನಿಷ್ಠ ಇಬ್ಬರು ಮೃತಪಟ್ಟಿದ್ದು, ಹಲವು ಮಂದಿ ಅವಶೇಷಗಳಡಿ ಸಿಲುಕಿಕೊಂಡಿರುವ ಭೀತಿ ಇದೆ. ರಾಜಸ್ಥಾನ ಸಚಿವ ಮದನ್ ದಿಲಾವರ್ ಜೀವಹಾನಿಯನ್ನು ದೃಢಪಡಿಸಿದ್ದಾರೆ. ತಲ್ವಂಡಿ ಪ್ರದೇಶದಲ್ಲಿ ಈ ದುರಂತ ಸಂಭವಿಸಿದ್ದು, ಕಟ್ಟಡದೊಳಗೆ ರೆಸ್ಟೋರೆಂಟ್ ಕಾರ್ಯನಿರ್ವಹಿಸುತ್ತಿತ್ತು ಎಂದು ತಿಳಿದು ಬಂದಿದೆ. ಇದು ಪ್ರಮುಖ ದುರಂತ ಎಂದು ಬಣ್ಣಿಸಿರುವ ರಾಜಸ್ಥಾನ ಸಚಿವ ಮದನ್ ದಿಲಾವರ್, ಮೂರು ಮಹಡಿ ಕಟ್ಟಡ ಕುಸಿದ ಪರಿಣಾಮ ಇದುವರೆಗೆ ಇಬ್ಬರು ಮೃತಪಟ್ಟಿದ್ದಾರೆ ಎಂದು ದೃಢಪಡಿಸಿದ್ದಾರೆ. ಒಂಬತ್ತು ಮಂದಿಯನ್ನು ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ನಾಲ್ವರನ್ನು ಒಳರೋಗಿಗಳಾಗಿ ದಾಖಲಿಸಲಾಗಿದ್ದು, ಇತರರ ಪೈಕಿ ಮೂವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅವರು ವಿವರಿಸಿದ್ದಾರೆ. ಘಟನೆ ಕುರಿತು ತನಿಖೆ ನಡೆಯುತ್ತಿದ್ದು, ಪರಿಹಾರ ಕಾರ್ಯಾಚರಣೆ ಪ್ರಗತಿಯಲ್ಲಿದೆ ಎಂದು ತಿಳಿಸಿದ್ದಾರೆ. ಮಾಹಿತಿ ತಿಳಿದ ತಕ್ಷಣ ಪೊಲೀಸ್ ತಂಡಗಳು ಹಾಗೂ ಪರಿಹಾರ ಕಾರ್ಯಾಚರಣೆ ದಳಗಳು ಸ್ಥಳಕ್ಕೆ ಧಾವಿಸಿದ್ದು, ಇದುವರೆಗೆ ಐದು ಮಂದಿಯನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಧಿಕೃತ ಮೂಲಗಳು ಹೇಳಿವೆ. ಕುಸಿದು ಬಿದ್ದ ಕಟ್ಟಡದೊಳಗೆ ಗ್ರಾಹಕರು ಹಾಗೂ ಹೋಟೆಲ್ ಉದ್ಯೋಗಿಗಳು ಸಿಲುಕಿಕೊಂಡಿದ್ದಾರೆ ಎನ್ನಲಾಗಿದೆ. “ಹಲವರು ಅವಶೇಷಗಳಡಿ ಸಿಲುಕಿಕೊಂಡಿರುವ ಸಾಧ್ಯತೆ ಇದೆ. ಪೊಲೀಸರು ಹಾಗೂ ಆಡಳಿತ ಯಂತ್ರ ಸ್ಥಳದಲ್ಲಿದ್ದು, ರಕ್ಷಣೆ ಮತ್ತು ಪರಿಹಾರ ಕಾರ್ಯಾಚರಣೆ ಪ್ರಗತಿಯಲ್ಲಿದೆ. ಕೆಲವರನ್ನು ಅವಶೇಷಗಳಡಿಯಿಂದ ಹೊರತೆಗೆದುಕೊಳ್ಳಲಾಗಿದೆ” ಎಂದು ಸ್ಥಳಕ್ಕೆ ಭೇಟಿ ನೀಡಿದ ಶಾಸಕ ಸಂದೀಪ್ ಶರ್ಮಾ ವಿವರಿಸಿದ್ದಾರೆ.
ರಷ್ಯಾದ ಕಾಲೇಜಿನಲ್ಲಿ ಚೂರಿ ಇರಿತ: ನಾಲ್ವರು ಭಾರತೀಯ ವಿದ್ಯಾರ್ಥಿಗಳಿಗೆ ಗಾಯ
ಹೊಸದಿಲ್ಲಿ: ರಷ್ಯಾದ ಉಫಾ ನಗರದಲ್ಲಿ ನಡೆದ ಚೂರಿ ಇರಿತ ಘಟನೆಯಲ್ಲಿ ನಾಲ್ವರು ಭಾರತೀಯ ವಿದ್ಯಾರ್ಥಿಗಳು ಸೇರಿದಂತೆ ಹಲವರು ಗಾಯಗೊಂಡಿದ್ದಾರೆ ಎಂದು ಮಾಸ್ಕೊದಲ್ಲಿರುವ ಭಾರತೀಯ ರಾಯಭಾರ ಕಚೇರಿ ತಿಳಿಸಿದೆ. ರಷ್ಯಾದ ಬಷ್ಕಕೋರ್ಟೊಸ್ತಾನ್ ಗಣರಾಜ್ಯದ ವಿಶ್ವವಿದ್ಯಾನಿಲಯದ ಹಾಸ್ಟೆಲ್ನಲ್ಲಿರುವ ಕ್ರೀಡಾ ಹಾಲ್ನಲ್ಲಿ ವಿದೇಶಿ ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು ಚೂರಿ ಇರಿತದ ದಾಳಿ ನಡೆದಿರುವುದಾಗಿ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಈ ಹಿನ್ನೆಲೆಯಲ್ಲಿ ಭಾರತೀಯ ರಾಯಭಾರ ಕಚೇರಿ ಎಕ್ಸ್ (X) ಪೋಸ್ಟ್ ಮೂಲಕ ಮಾಹಿತಿ ನೀಡಿದೆ. ಘಟನೆಯಲ್ಲಿ ಇಬ್ಬರು ಪೊಲೀಸ್ ಅಧಿಕಾರಿಗಳೂ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. “ಉಫಾದಲ್ಲಿ ದುರದೃಷ್ಟಕರ ದಾಳಿಯೊಂದು ನಡೆದಿದೆ. ನಾಲ್ವರು ಭಾರತೀಯರು ಸೇರಿದಂತೆ ಹಲವರು ಗಾಯಗೊಂಡಿದ್ದಾರೆ. ಭಾರತೀಯ ರಾಯಭಾರ ಕಚೇರಿ ಸ್ಥಳೀಯ ಅಧಿಕಾರಿಗಳು ಹಾಗೂ ಕಝಾನ್ನಲ್ಲಿರುವ ದೂತಾವಾಸದೊಂದಿಗೆ ಸತತ ಸಂಪರ್ಕದಲ್ಲಿದ್ದು, ಗಾಯಾಳು ವಿದ್ಯಾರ್ಥಿಗಳಿಗೆ ಅಗತ್ಯ ನೆರವು ಒದಗಿಸಲು ಕ್ರಮ ಕೈಗೊಂಡಿದೆ” ಎಂದು ಮಾಸ್ಕೊದಲ್ಲಿರುವ ಭಾರತೀಯ ರಾಯಭಾರ ಕಚೇರಿ ಸ್ಪಷ್ಟಪಡಿಸಿದೆ.
ತುಮಕೂರಿನ ಕುಟುಂಬವನ್ನೇ ಮುಗಿಸಿದ ಗೇಮಿಂಗ್ ಗೀಳು: ಪಶ್ಚಾತ್ತಾಪದಲ್ಲಿ ಕುಟುಂಬದ ನಾಲ್ವರ ಆತ್ಮಹತ್ಯೆ?
ಮೊಬೈಲ್ ಹಾಗೂ ಗೇಮಿಂಗ್ ಗೀಳು ಹಲವು ಜೀವಗಳನ್ನು ಬಲಿಪಡೆಯುತ್ತಿರುವ ಘಟನೆಗಳು ಮರುಕಳಿಸುತ್ತಿವೆ, ಕರ್ನಾಟಕದ ತುಮಕೂರಿನ ಗುಬ್ಬಿಯ ಒಂದು ಕುಟುಂಬವೇ ಇದರಿಂದ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಕಿಗೆ ಬಂದಿದೆ. ಬಾಲಕನ ಗೇಮಿಂಗ್ ಗೀಳು ಬಿಡಿಸಲು ಹೋಗಿ ಕೊಲೆಯಲ್ಲಿ ಅಂತ್ಯವಾಗಿತ್ತು. ಈ ಪಶ್ಚಾತಾಪದಿಂದ ಇಡೀ ಕುಟುಂಬವೇ ಈಗ ಸಾನ್ನಪ್ಪಿರುವ ಘಟನೆ ಬೆಳಕಿಗೆ ಬಂದಿದೆ.
Karnataka Weather: ರಾಜ್ಯಾದ್ಯಂತ 30 ಡಿ.ಸೆ. ದಾಟಿದ ಗರಿಷ್ಠ ತಾಪಮಾನ, 5 ದಿನದ ಹವಾಮಾನ ಮುನ್ಸೂಚನೆ
ಬೆಂಗಳೂರು: ರಾಜಧಾನಿ ಬೆಂಗಳೂರು ಸೇರಿದಂತೆ ಕರ್ನಾಟಕದ ಬಹುತೇಕ ಎಲ್ಲ ಜಿಲ್ಲೆಗಳಲ್ಲಿ ಗರಿಷ್ಠ ತಾಪಮಾನ 30 ಡಿಗ್ರಿ ಸೆಲ್ಸಿಯಸ್ ದಾಟಿದೆ. ಕೆಲವು ಜಿಲ್ಲೆಗಳಲ್ಲಿ ಸಾಮಾನ್ಯಕ್ಕಿಂತ ಕಡಿಮೆ ಕನಿಷ್ಠ ತಾಪಮಾನ ದಾಖಲಾಗುವ ಮೂಲಕ ಕೊಂಚ ಚಳಿ ಹಾಗೂ ಮಂಜಿನ ವಾತಾವರಣ ದಾಖಲಾಗಿದೆ. ಐದು ದಿನ ರಾಜ್ಯದಾದ್ಯಂತ ಹಗಲು ಒಣಹವೆ ಮುಂದುವರಿಯಲಿದೆ ಎಂದು ರಾಜ್ಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬೆಂಗಳೂರಿನಲ್ಲಿ
5 ವರ್ಷದ ಹಿಂದೆ 7 ವರ್ಷ 7 ತಿಂಗಳಿನ ಅಪ್ರಾಪ್ತೆಯ ಮೇಲೆ ಸಾಮೂಹಿಕ ಅತ್ಯಾಚಾರ, ಕೊಲೆ ಇಡೀ ಸಮಾಜ ತಲೆತಗ್ಗಿಸುವಂತಹ ಕೆಲಸ ಮಾಡಿದ ಮೂವರು ಅಪರಾಧಿಗಳು, ಮತ್ತೆ ಶಿಕ್ಷೆ ರದ್ದು ಕೋರಿ ಹೈಕೋರ್ಟ್ ಮೆಟ್ಟಿಲೇರಿದಾಗ ಛೀಮಾರಿ ಹಾಕಿದ ಕೋರ್ಟ್, ಗಲ್ಲುಶಿಕ್ಷೆಯನ್ನು ಕಾಯಂಗೊಳಿಸಿದೆ.
ಭಾರತ ಹಾಗೂ ಅಮೆರಿಕದ ವ್ಯಾಪಾರ ಒಪ್ಪಂದ ಸುಗಮಗೊಂಡ ಬೆನ್ನಲ್ಲೇ ಡೊನಾಲ್ಡ್ ಟ್ರಂಪ್ ನಡೆ ಪಾಕಿಸ್ತಾನ ಹಾಗೂ ಚೀನಾಗೆ ಶಾಕ್ ನೀಡಿದೆ. ಸಮಗ್ರ ಭಾರತದ ಭೂಪಟದಲ್ಲಿ ಪಿಒಕೆ ಹಘೂ ಚೀನಾ ತನ್ನು ಹಕ್ಕು ಪ್ರತಿಪಾದಿಸಿರುವ ಅಕ್ಸಾಯ್ ಚಿನ್ ಪ್ರದೇಶವನ್ನೂ ಸೇರಿಸಿ ಬಿಡುಗಡೆ ಮಾಡಲಾಗಿದ್ದು, ಭಾರಿ ಚರ್ಚೆಗೆ ಗುರಿಯಾಗಿದೆ.
ಪಂಚಾಯಿತಿಗಳಲ್ಲಿ ತ್ಯಾಜ್ಯ ವಿಲೇವಾರಿ ನೆಪದಲ್ಲಿ ಮಹಿಳೆಯರ ಮೂಲಕ ಅಮಾನವೀಯ ಕೃತ್ಯ: ಕೈಯಲ್ಲೇ ಕಸ ವಿಂಗಡಿಸುವ ಶಿಕ್ಷೆ
ಪಂಚಾಯತಿಗಳಲ್ಲಿ ಕೇವಲ 5-10 ಸಾವಿರ ಸಂಬಳ ನೀಡಿ, ಯಾವುದೇ ಸಲಕರಣೆಗಳನ್ನು ಆರೋಗ್ಯ ಕಾಪಾಡಲು ಬೇಕಾಗುವ ಮಾಸ್ಕ್, ಗ್ಲೌಸ್ ಕೂಡಾ ನೀಡದೆ, ಮಹಿಳೆಯರನ್ನು ಕಸ ಬೇರ್ಪಡಿಸಲು ದುಡಿಸಿಕೊಳ್ಳಲಾಗುತ್ತಿದೆ. ಸರಕಾರ ಈ ಬಗ್ಗೆ ಎಚ್ಚೆತ್ತು ಸ್ವಚ್ಛ ಭಾರತ್ ಯೋಜನೆಯ ಕೆಲಸದಲ್ಲಿ ಮಾರ್ಪಾಡು ತರಬೇಕಿದೆ.
ಬೆಂಗಳೂರಿಂದ-ಮಂಗಳೂರಿಗೆ ಹಗಲು ರೈಲು ಪುನರಾರಂಭ: ಪ್ರಯಾಣಿಕರ ಸಂಖ್ಯೆಯಲ್ಲಿ ಭಾರೀ ಏರಿಕೆ
ಹಗಲಿನ ಮೂರು ರೈಲುಗಳು ರದ್ದಾಗಿ, ರಾತ್ರಿ ರೈಲುಗಳು ಜನರಿಂದ ತುಂಬಿತುಳುಕುತ್ತಿದ್ದವು. ಇದೀಗ 198 ದಿನಗಳ ಬಳಿಕ ಮತ್ತೆ ರೈಲು ಪ್ರಾರಂಭ ಆಗಿ, ಪ್ರಯಾಣಿಕರು ನಿಟ್ಟುಸಿರು ಬಿಡುವಂತೆ ಆಗಿದೆ. ಕರಾವಳಿಯ ಪ್ರಸಿದ್ಧ ದೇವಾಲಯಗಳಿಗೆ ತೆರಳುವ ಜನರಿಗೆ ಅನುಕೂಲವಾಗಿದೆ.
ಕೋಮುವಾದವನ್ನು ಅಂಬೇಡ್ಕರ್ವಾದದಿಂದ ದಮನ ಮಾಡಬೇಕು : ಎಚ್.ಸಿ.ಮಹದೇವಪ್ಪ
ʼಶೋಷಿತ ಸಮುದಾಯಗಳ ವಿಮೋಚನಾ ದಿನಾಚರಣೆ'
ಸರಕಾರಿ ಶಿಕ್ಷಣ ಸಂಸ್ಥೆ ಉಳಿಸುವುದು ನಮ್ಮ ಜವಾಬ್ಧಾರಿ : ಪ್ರೊ.ರವಿವರ್ಮ ಕುಮಾರ್
ಬೆಂಗಳೂರು : ಸರಕಾರಿ ಶಿಕ್ಷಣ ಸಂಸ್ಥೆಗಳನ್ನು ಉಳಿಸುವುದು ನಮ್ಮೆಲ್ಲರ ಜವಾಬ್ಧಾರಿ ಎಂದು ಹೈಕೋರ್ಟ್ನ ಹಿರಿಯ ವಕೀಲ ಪ್ರೊ.ರವಿವರ್ಮ ಕುಮಾರ್ ತಿಳಿಸಿದ್ದಾರೆ. ಶನಿವಾರ ನಗರದ ಗಾಂಧಿ ಭವನದಲ್ಲಿ ಸರಕಾರಿ ಶಾಲೆಗಳನ್ನು ಮುಚ್ಚುವ ಕೆಪಿಎಸ್ ಮ್ಯಾಗ್ನೆಟ್ ಯೋಜನೆಯನ್ನು ರದ್ದುಗೊಳಿಸುವಂತೆ ‘ನಮ್ಮೂರ ಶಾಲೆ’ ಉಳಿಸಲು ಎಐಡಿಎಸ್ಒ ಮತ್ತು ಶಿಕ್ಷಣ ಉಳಿಸಿ ಸಮಿತಿಗಳ ನೇತೃತ್ವದಲ್ಲಿ ನಡೆದ ರಾಜ್ಯಮಟ್ಟದ ವಿದ್ಯಾರ್ಥಿ ಮತ್ತು ಪೋಷಕರ ಸಮಾವೇಶದಲ್ಲಿ ಅವರು ಮಾತನಾಡಿದರು. ಸಂವಿಧಾನ ಮತ್ತು ಸುಪ್ರೀಂ ಕೋರ್ಟ್ನ ವಿವಿಧ ತೀರ್ಪುಗಳು ಶಿಕ್ಷಣ ಪಡೆಯುವುದು ಜನರ ಹಕ್ಕಾಗಿ ಪರಿಗಣಿಸಿತು. ಆದರೆ 2002ರ ನಂತರ ವ್ಯಾಪಾರ ಆಧಾರಿತ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸುವುದು ಬಂಡವಾಳಶಾಹಿಗಳ ಹಕ್ಕಾಗಿದೆ. ಇದರ ವಿರುದ್ಧ ಹೋರಾಡಿ ಸರಕಾರಿ ಶಿಕ್ಷಣ ಸಂಸ್ಥೆಗಳನ್ನು ಉಳಿಸಬೇಕು ಎಂದು ಅವರು ತಿಳಿಸಿದರು. ಶಿಕ್ಷಣ ತಜ್ಞ ಪ್ರೊ.ನಿರಂಜನಾರಾಧ್ಯ ಮಾತನಾಡಿ, ಕೇಂದ್ರ ಬಿ.ಜೆ.ಪಿ ಸರಕಾರ ಜಾರಿಗೊಳಿಸಿದ ಎನ್.ಇ.ಪಿ 2020ನ್ನೇ ಕೆ.ಪಿ.ಎಸ್, ಮ್ಯಾಗ್ನೆಟ್ ಯೋಜನೆ ಹೆಸರಿನಲ್ಲಿ ಪ್ರಸ್ತುತ ರಾಜ್ಯ ಸರಕಾರವು ಅನುಷ್ಠಾ ನಗೊಳಿಸಿ ಸರಕಾರಿ ಶಾಲೆಗಳನ್ನು ಮುಚ್ಚಲು ಹೊರಟಿದೆ. ಇದು ನಿಜಕ್ಕೂ ನಾಚಿಕೆಗೇಡಿನ ಸಂಗತಿ. ಬಿಜೆಪಿ ಸರಕಾರವು 13,800 ಶಾಲೆಗಳನ್ನು ಮುಚ್ಚಲು ಹೊರಟಾಗ ವಿರೋಧಿಸಿದ್ದ ಕಾಂಗ್ರೆಸ್ ಸರಕಾರವೇ ಈಗ 23,000ಕ್ಕೂ ಹೆಚ್ಚು ಶಾಲೆಗಳನ್ನು ಮುಚ್ಚಲು ಹೊರಟಿದೆ ಎಂದು ತಿಳಿಸಿದರು. ಅಕ್ಕ ಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ ಸಬಿಹಾ ಭೂಮಿಗೌಡ ಮಾತನಾಡಿ, ಶಿಕ್ಷಣವು ವೈಜ್ಞಾನಿಕ ಮನೋಭಾವ ಮತ್ತು ವೈಚಾರಿಕತೆ ನೀಡಿ ಮೌಢ್ಯ ಹಾಗೂ ದಾಸ್ಯದಿಂದ ಹೊರ ತರುತ್ತದೆ. ಅಂತಹ ಶಿಕ್ಷಣವನ್ನು ಕೆ.ಪಿ.ಎಸ್ ಮ್ಯಾಗ್ನೆಟ್ ಯೋಜನೆ ಮೂಲಕ ತಳ ಸಮುದಾಯದಕ್ಕೆ ದಕ್ಕದ ಹಾಗೆ ಮಾಡುತ್ತಿರುವ ಹುನ್ನಾರದ ವಿರುದ್ಧ ನಾವು ಹೋರಾಡಬೇಕು ಎಂದರು. ಕಲಬುರ್ಗಿಯ ಕೇಂದ್ರೀಯ ವಿಶ್ವ ವಿದ್ಯಾಲಯದ ಸಹಾಯಕ ಪ್ರಾಧ್ಯಪಕ ಕಿರಣ್ ಗಾಜನೂರು ಮಾತನಾಡಿ, ಶಾಲೆಗಳೇ ಇಲ್ಲದ ಊರನ್ನು ಸೃಷ್ಟಿಸುವುದು ಯುದ್ಧಕ್ಕಿಂತ ಕ್ರೂರವಾದದ್ದು. ಸರಕಾರಿ ಶಾಲೆಗಳೇ ಇಲ್ಲದೇ ಇರುವ ಊರನ್ನು ಊಹಿಸಿಕೊಳ್ಳಲು ಸಾಧ್ಯವಿಲ್ಲ. ಸರಕಾರ ಇಂತಹ ಕ್ರೌರ್ಯವನ್ನು ಎಸಗುತ್ತಿದೆ. ಸರಕಾರಿ ಶಾಲೆಗಳು ಆಧುನಿಕ ಚಿಂತನೆಯ ದ್ವಾರಗಳು. ಸರಕಾರಿ ಶಾಲೆಗಳು ಉಳಿದರೆ ಮಾತ್ರ ಪ್ರಜಾಪ್ರಭುತ್ವದ ಉಳಿವು. ಶಿಕ್ಷಣ, ಸಂಸ್ಕೃತಿ ಮತ್ತು ಪ್ರಜಾಪ್ರಭುತ್ವದ ರಕ್ಷಣೆಗಾಗಿ ಸರಕಾರಿ ಶಾಲೆ ಉಳಿಸುವ ಚಾರಿತ್ರಿಕ ಹೋರಾಟವು ಮುಂದುವರಿಯಬೇಕು ಎಂದು ಕರೆ ನೀಡಿದರು. ಈ ಸಂದರ್ಭದಲ್ಲಿ ದಸಂಸ ಸಂಚಾಲಕ ಗುರುಪ್ರಸಾದ್ ಕೆರೆಗೋಡು, ಶಿಕ್ಷಣ ಉಳಿಸಿ ಸಮಿತಿ ಉಪಾಧ್ಯಕ್ಷ ವಿ.ಎನ್.ರಾಜಶೇಖರ್, ಹಿರಿಯ ಸಾಹಿತಿ ಪ್ರೊ.ಎಸ್.ಜಿ.ಸಿದ್ದರಾಮಯ್ಯ, ಎಐಡಿಎಸ್ಒ ಕೇಂದ್ರ ಕೌನ್ಸಿಲ್ ಜಂಟಿ ಕಾರ್ಯದರ್ಶಿ ಅಲೀನಾ, ಕಾರ್ಯದರ್ಶಿ ಅಜಯ್ ಕಾಮತ್ ಮತ್ತಿತರರು ಉಪಸ್ಥಿತರಿದ್ದರು.
ʼಗೃಹಲಕ್ಷ್ಮಿʼ ಯೋಜನೆಯಡಿ ಮೃತರ ಖಾತೆಗೆ 2.20 ಕೋಟಿ ರೂ. ಹಣ ಸಂದಾಯ; ವಾಪಸ್ ಪಡೆಯಲು ಸೂಚನೆ : ಎಚ್.ಎಂ.ರೇವಣ್ಣ
ರಾಯಚೂರು : ಜಿಲ್ಲೆಯಲ್ಲಿ ಗೃಹಲಕ್ಷ್ಮಿ ಯೋಜನೆಯಡಿ ಮೃತಪಟ್ಟಿರುವವರ ಖಾತೆಗೆ 2.20 ಕೋಟಿ ರೂ. ಹಣ ಹೋಗಿದೆ. 1920 ಜನ ಮರಣ ಹೊಂದಿದ್ದು, 2.20 ಕೋಟಿ ರೂ ಮೃತರ ಖಾತೆಗೆ ಜಮೆ ಆಗಿದೆ. ಅದನ್ನು ತಡೆಗಟ್ಟಲು ಮತ್ತು ಆ ಹಣ ವಾಪಸ್ ಪಡೆಯಲು ಸೂಚನೆ ನೀಡಲಾಗಿದೆ ಎಂದು ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ರಾಜ್ಯಾಧ್ಯಕ್ಷ ಎಚ್.ಎಂ.ರೇವಣ್ಣ ಹೇಳಿದರು. ರಾಯಚೂರು ಕೃಷಿ ವಿವಿ ರಜತ ಮಹೋತ್ಸವ ಸಭಾಂಗಣದಲ್ಲಿ ಶನಿವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೃತರ ಹೆಸರಲ್ಲಿ ಹಣ ಹೋಗುತ್ತಿರುವುದನ್ನು ನಿಲ್ಲಿಸಿ ಹಣ ಹಿಂದಿರುಗಿಸುವ ಕೆಲಸ ಮಾಡುತ್ತೇವೆ. ಈಗಾಗಲೇ ನಕಲಿ 13 ಲಕ್ಷ ಪಡಿತರ ಕಾರ್ಡ್ ರದ್ದಾಗಿವೆ. ಅರ್ಹರಿಗೆ ಆಹಾರ ಇಲಾಖೆಯಿಂದ ಪಡಿತರ ಚೀಟಿ ವಿತರಿಸಲು ಆಹಾರ ಇಲಾಖೆ ಅಧಿಕಾರಿಗಳ ಜೊತೆ ಮಾತನಾಡುತ್ತೇನೆ ಎಂದರು. ರಾಜ್ಯದಲ್ಲಿ ಒಟ್ಟಾರೆ 17,280 ಕೋಟಿ ರೂ. ಪಂಚ ಗ್ಯಾರಂಟಿ ಯೋಜನೆಗಳಿಗಾಗಿ ಸಂದಾಯವಾಗಿದೆ. ಬಜೆಟ್ 4 ಲಕ್ಷ 9 ಸಾವಿರ ಕೋಟಿಗೆ ಹೆಚ್ಚಿರುವುದು ಅಭಿವೃದ್ಧಿಯ ಸಂಕೇತ. ರಾಷ್ಟ್ರದ ಬೇರೆ ರಾಜ್ಯಗಳಲ್ಲೂ ಗ್ಯಾರಂಟಿ ಯೋಜನೆಗಳನ್ನು ಬಿಜೆಪಿ ನಕಲು ಮಾಡಿ ಅಧಿಕಾರಕ್ಕೆ ಬಂದಿದ್ದಾರೆ. ಆದರೆ ನಾವು ರೂಪಿಸಿರುವ ಗ್ಯಾರಂಟಿ ಯೋಜನೆಗಳು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಲುಪಿಸುವ ಉದ್ದೇಶ ಹೊಂದಿದ್ದೇವೆ ಎಂದರು. ನಮ್ಮ ಸರಕಾರ ಅಧಿಕಾರಕ್ಕೆ ಬಂದ ನಂತರ ಗ್ಯಾರಂಟಿಗಳಲ್ಲಿ ಒಂದೇ ಒಂದು ಸವಲತ್ತು ಪಡೆದಿಲ್ಲ ಎಂಬ ದೂರುಗಳಿಲ್ಲ. ಪ್ರಪಂಚದಲ್ಲೇ ಅತ್ಯುತ್ತಮ ಯೋಜನೆ ಶಕ್ತಿ ಯೋಜನೆ ಎನ್ನಲಾಗಿದೆ ಎಂದು ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಪಕ್ಷದ ಮುಖಂಡರಾದ ಪುಷ್ಪ ಅಮರನಾಥ, ಜಿಲ್ಲಾ ಗ್ಯಾರಂಟಿ ಅಧ್ಯಕ್ಷ ಪಾಮಯ್ಯ ಮುರಾರಿ, ಪವನ್ ಪಾಟೀಲ್ ಸೇರಿ ಇತರರಿದ್ದರು.
ಎಸ್ಐಆರ್ ಮೂಲಕ ನಾಗರಿಕರ ಹಕ್ಕುಗಳನ್ನು ಕಸಿದುಕೊಳ್ಳಲು ಸಂಚು : ಶಿವಸುಂದರ್
ʼಎಸ್ಐಆರ್: ಪೌರತ್ವದ ಪ್ರಶ್ನೆ-ಪ್ರಭುತ್ವದ ಹುನ್ನಾರಗಳು’ ಸಂವಾದ ಗೋಷ್ಠಿ
ವಿಶ್ವಕಪ್ ವಿಜೇತ ಭಾರತೀಯ ಪುರುಷರ ಅಂಡರ್-19 ತಂಡಕ್ಕೆ 7.5 ಕೋಟಿ ರೂ. ಘೋಷಿಸಿದ ಬಿಸಿಸಿಐ
ಮುಂಬೈ: ವಿಶ್ವಕಪ್ ವಿಜೇತ ಭಾರತೀಯ ಪುರುಷರ ಅಂಡರ್-19 ಕ್ರಿಕೆಟ್ ತಂಡಕ್ಕೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ)ಯು ಶನಿವಾರ 7.5 ಕೋಟಿ ರೂಪಾಯಿ ನಗದು ಬಹುಮಾನ ಘೋಷಿಸಿದೆ. ಶುಕ್ರವಾರ ಜಿಂಬಾಬ್ವೆಯ ಹರಾರೆಯಲ್ಲಿ ನಡೆದ ಫೈನಲ್ನಲ್ಲಿ ಆಯುಶ್ ಮ್ಹಾತ್ರೆ ನೇತೃತ್ವದ ಭಾರತೀಯ ತಂಡವು ಇಂಗ್ಲೆಂಡ್ ತಂಡವನ್ನು 100 ರನ್ಗಳ ಭರ್ಜರಿ ಅಂತರದಿಂದ ಸೋಲಿಸಿ ಆರನೇ ಬಾರಿಗೆ ಅಂಡರ್-19 ವಿಶ್ವಕಪ್ ಪ್ರಶಸ್ತಿ ಗೆದ್ದಿದೆ. ‘‘ಜಿಂಬಾಬ್ವೆಯಲ್ಲಿ ನಡೆದ ಐಸಿಸಿ ಅಂಡರ್-19 ವಿಶ್ವಕಪ್ ಪಂದ್ಯಾವಳಿಯನ್ನು ಗೆದ್ದ ಭಾರತೀಯ ಅಂಡರ್-19 ತಂಡ, ಕೋಚಿಂಗ್ ಮತ್ತು ಸಹಾಯಕ ಸಿಬ್ಬಂದಿ ಹಾಗೂ ಜೂನಿಯರ್ ಕ್ರಿಕೆಟ್ ಸಮಿತಿಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ ಗೌರವ ಕಾರ್ಯದರ್ಶಿ ದೇವಜಿತ್ ಸೈಕಿಯ 7.5 ಕೋಟಿ ರೂಪಾಯಿ ನಗದು ಪ್ರಶಸ್ತಿಯನ್ನು ಘೋಷಿಸುತ್ತಾರೆ’’ ಎಂದು ಅಧಿಕೃತ ಹೇಳಿಕೆಯೊಂದರಲ್ಲಿ ಬಿಸಿಸಿಐ ತಿಳಿಸಿದೆ. ಬಿಸಿಸಿಐ ಅಧ್ಯಕ್ಷ ಮಿಥುನ್ ಮನ್ಹಾಸ್ ಅಂಡರ್-19 ಭಾರತೀಯ ತಂಡವನ್ನು ಅಭಿನಂದಿಸಿದ್ದಾರೆ. ‘‘ಅಂಡರ್-19 ವಿಶ್ವಕಪ್ನ್ನು ಆರು ಬಾರಿ ಗೆಲ್ಲುವುದು ಅಮೋಘ ಸಾಧನೆಯಾಗಿದೆ. ಅದು ವಿವಿಧ ವಯೋಗುಂಪುಗಳ ಕ್ರಿಕೆಟ್ನಲ್ಲಿ ಭಾರತದ ಸಾಮರ್ಥ್ಯವನ್ನು ಬಿಂಬಿಸುತ್ತದೆ. ಪುರುಷರ ಮತ್ತು ಮಹಿಳೆಯರ ಅಂಡರ್-19 ವಿಶ್ವಕಪ್ಗಳೆರಡನ್ನೂ ಗೆದ್ದಿರುವುದು ಹೆಮ್ಮಿಯ ಕ್ಷಣಗಳಾಗಿವೆ ಹಾಗೂ ಇದು ನಮ್ಮ ಕ್ರಿಕೆಟ್ ಸಂಸ್ಕೃತಿಯ ಆಳವನ್ನು ತೋರಿಸುತ್ತದೆ’’ ಎಂದು ಅವರು ಹೇಳಿದ್ದಾರೆ.
ಇನ್ನು ನಮ್ಮ ಮೆಟ್ರೋ ನಿಲ್ದಾಣಗಳ ಸನಿಹದಲ್ಲೇ ಬಿಎಂಟಿಎಸ್ ಬಸ್ ನಿಲುಗಡೆ; ಇಲ್ಲಿದೆ ಸಂಪೂರ್ಣ ಮಾಹಿತಿ
Namma Metro And BMTC- ಈವರೆಗೂ ಬಿಎಂಟಿಸಿ ಬಸ್ ಗಳಲ್ಲಿ ಪ್ರಯಾಣಿಸಿ ಕೆಲ ಮೆಟ್ರೋ ನಿಲ್ದಾಣಗಳನ್ನು ತಲುಪುವುದು ಪ್ರಯಾಸಕರವಾಗುತ್ತಿತ್ತು. ಕಾರಣ ಕೆಲವೆಡೆ ಬಸ್ ನಿಲುಗಡೆ ಇರಲಿಲ್ಲ. ಪ್ರಯಾಣಿಕರಿಗೆ ಆಗುತ್ತಿದ್ದ ಈ ಸಮಸ್ಯೆಯನ್ನು ಹೋಗಲಾಡಿಸುವ ಸಲುವಾಗಿ ಇದೀಗ ಎಲ್ಲಾ ಮೆಟ್ರೋ ನಿಲ್ದಾಣಗಳ ಬಳಿಯೇ ಬಸ್ ನಿಲುಗಡೆಗೆ ಅವಕಾಶ ಕಲ್ಪುಸಲಾಗಿದೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳುವ ಪ್ರಯಾಣಿಕರ ಅನುಕೂಲಕ್ಕಾಗಿ ವಾಯುವಜ್ರ ಬಸ್ ಗಳೂ ಮೆಟ್ರೋ ನಿಲ್ದಾಣದ ಬಳಿ ನಿಲ್ಲಲಿದೆ ಎಂದು ಬಿಎಂಆರ್ ಸಿಎಲ್ ಪ್ರಕಟಣೆ ತಿಳಿಸಿದೆ.
ʼಆಧಾರ್ vs ಗ್ರೀನ್ ಕಾರ್ಡ್’: IND–USA T20 ಪಂದ್ಯಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ʼಮೀಮ್ʼಗಳ ಬಿರುಗಾಳಿ!
ಮುಂಬೈ: ಇಲ್ಲಿನ ವಾಂಖೆಡೆ ಕ್ರೀಡಾಂಗಣದಲ್ಲಿ ಭಾರತ ತಂಡವು ಯುನೈಟೆಡ್ ಸ್ಟೇಟ್ಸ್ ವಿರುದ್ಧ ಟಿ20 ವಿಶ್ವಕಪ್ ಪ್ರಶಸ್ತಿ ರಕ್ಷಣೆಯ ಅಭಿಯಾನ ಆರಂಭಿಸುತ್ತಿದ್ದಂತೆಯೇ, ಕ್ರೀಡಾಂಗಣದ ಕ್ರಿಕೆಟ್ ಕಾಳಗದ ಜೊತೆಗೆ ಸಾಮಾಜಿಕ ಜಾಲತಾಣಗಳಲ್ಲಿ ಹಾಸ್ಯದ ಪ್ರವಾಹವೂ ಸಮಾನವಾಗಿ ಗಮನ ಸೆಳೆಯಿತು. ಟಾಸ್ ಗೆದ್ದ ಯುಎಸ್ಎ ತಂಡವು ಭಾರತವನ್ನು ಮೊದಲು ಬ್ಯಾಟಿಂಗ್ ಗೆ ಆಹ್ವಾನಿಸಿ ಕುತೂಹಲಕಾರಿ ಪೈಪೋಟಿಗೆ ವೇದಿಕೆ ಸಿದ್ಧಪಡಿಸಿತು. ಆದರೆ ಆನ್ಲೈನ್ ಚರ್ಚೆಗಳ ಕೇಂದ್ರಬಿಂದುವು ಶೀಘ್ರದಲ್ಲೇ ಪಿಚ್ ನಿಂದ ಯುಎಸ್ಎ ತಂಡದ ಆಟಗಾರರ ಸಂಯೋಜನೆ ಕಡೆಗೆ ಸರಿಯಿತು. ದಕ್ಷಿಣ ಏಷ್ಯಾ ಮೂಲದ, ವಿಶೇಷವಾಗಿ ಭಾರತೀಯ ಮೂಲದ ಹಲವಾರು ಆಟಗಾರರು ಯುಎಸ್ಎ ತಂಡದಲ್ಲಿರುವುದು ಸಾಮಾಜಿಕ ಜಾಲತಾಣಗಳಲ್ಲಿ ಜನರ ಗಮನ ಸೆಳೆಯಿತು. ಪಂದ್ಯ ಆರಂಭವಾಗುತ್ತಿದ್ದಂತೆಯೇ ಸಾಮಾಜಿಕ ಜಾಲತಾಣ ಬಳಕೆದಾರರು ಮೀಮ್ಗಳನ್ನು ಪೋಸ್ಟ್ ಮಾಡಿದ್ದಾರೆ. ಎರಡು ದೇಶಗಳ ನಡುವಿನ ಸಾಂಸ್ಕೃತಿಕ ಮತ್ತು ಕ್ರಿಕೆಟ್ ನಂಟನ್ನು ಹಾಸ್ಯಮಯವಾಗಿ ಚಿತ್ರಿಸಿದ ಪೋಸ್ಟ್ಗಳು ವೈರಲ್ ಆದವು. ಅನೇಕ ಪೋಸ್ಟ್ ಗಳಲ್ಲಿ ಭಾರತದ ‘ಆಧಾರ್ ಕಾರ್ಡ್’ ವ್ಯವಸ್ಥೆಯನ್ನು ಅಮೆರಿಕದ ‘ಗ್ರೀನ್ ಕಾರ್ಡ್’ ವ್ಯವಸ್ಥೆಯೊಂದಿಗೆ ಹೋಲಿಕೆ ಮಾಡಲಾಗಿದ್ದು, ಯುಎಸ್ಎ ತಂಡದ ಕೆಲ ಆಟಗಾರರು ಭಾರತೀಯ ಅಭಿಮಾನಿಗಳಿಗೆ ಎಷ್ಟು ಪರಿಚಿತರಂತೆ ಕಾಣುತ್ತಾರೆ ಎಂಬುದನ್ನು ವಿನೋದಾತ್ಮಕವಾಗಿ ಉಲ್ಲೇಖಿಸಿದ್ದಾರೆ. ಮೀಮ್ಗಳಲ್ಲಿ ಈ ಪಂದ್ಯವನ್ನು ‘ಅಂತರರಾಷ್ಟ್ರೀಯ’ ಕಾಳಗಕ್ಕಿಂತ ‘ಅಂತರರಾಜ್ಯ ಪಂದ್ಯ’ ಎಂದು ತಮಾಷೆಯಾಗಿ ಕರೆಯುವ ಬರಹಗಳೂ ಕಂಡುಬಂದವು. ಕ್ರಿಕೆಟ್ ನ ಜಾಗತಿಕ ವ್ಯಾಪ್ತಿಯನ್ನು ಬಳಕೆದಾರರು ವ್ಯಂಗ್ಯದ ಮೂಲಕ ಸಂಭ್ರಮಿಸಿದರು. ಹಾಸ್ಯಮಯ ಪೋಸ್ಟ್ಗಳು ಒಂದರ ಹಿಂದೆ ಒಂದರಂತೆ ಗಮನ ಸೆಳೆಯಿತು. ಆದರೂ ಪಂದ್ಯದ ಮಹತ್ವ ಏನೂ ಕಡಿಮೆಯಾಗಿರಲಿಲ್ಲ. ಭಾರತ ತಂಡದ ಟಿ20 ವಿಶ್ವಕಪ್ ಕಿರೀಟದ ರಕ್ಷಣೆಯ ಮೊದಲ ಹೆಜ್ಜೆಯಾಗಿ ಈ ಪಂದ್ಯವು ಗುರುತಿಸಲ್ಪಟ್ಟಿತು.
Shivamogga | ಪಾರ್ಶ್ವವಾಯುವಿಗೆ ತುತ್ತಾದ ಚಿರತೆ ‘ಭದ್ರಾ’ಗೆ ಎಂಆರ್ಐ ಸ್ಕ್ಯಾನ್
ತಡರಾತ್ರಿ ಆಸ್ಪತ್ರೆಗೆ ಕರೆ ತಂದು ಪರೀಕ್ಷೆ
RCB: ಐಪಿಎಲ್ 2026 ಆರಂಭಕ್ಕೂ ಮುನ್ನ ಆರ್ಸಿಬಿಗೆ ಹೊಸ ಮಾಲೀಕರು ಬರುವ ಸಾಧ್ಯತೆ
RCB Sale: ಐಪಿಎಲ್ ಇತಿಹಾಸದಲ್ಲೇ ಅತೀ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ತಂಡ ಅಂತ ಇದ್ರೆ ಅದು ಆರ್ಸಿಬಿ ಮಾತ್ರ. ಇದೀಗ 2026ರ ಆವೃತ್ತಿ ಆರಂಭಕ್ಕೂ ಮುನ್ನ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಹೊಸ ಮಾಲೀಕರು ಬರಲಿದ್ದಾರೆ ಎನ್ನುವ ಸುದ್ದಿ ದೊಟ್ಟ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಹಾಗಾದ್ರೆ, ಅವರು ಯಾರು ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಕಾಶ್ಮೀರ ವಿಚಾರದಲ್ಲಿ ಮತ್ತೆ ಕ್ಯಾತೆ ತೆಗೆದ ಪಾಕಿಸ್ತಾನಕ್ಕೆ ಬೆವರು ಇಳಿಸುತ್ತಿರುವ ಭಾರತೀಯರು
ಪಾಕಿಸ್ತಾನಕ್ಕೆ ತನ್ನನ್ನು ತಾನು ಸಾಕಿಕೊಳ್ಳುವ ಹಾಗೂ ರಕ್ಷಿಸಿಕೊಳ್ಳುವ ಯೋಗ್ಯತೆ ಇಲ್ಲದೇ ಇದ್ದರೂ ಅಕ್ಕಪಕ್ಕದ ದೇಶಗಳ ಮೇಲೆ ಕಣ್ಣು ಹಾಕುವ ಕೆಟ್ಟ ಅಭ್ಯಾಸ ಇದೆ. ಉಗ್ರರು ಪಾಕಿಸ್ತಾನದ ಒಳಗಡೆಗೆ ನುಗ್ಗಿ ಸಾವಿರಾರು ಜನರನ್ನು ಬಲಿ ಪಡೆಯುತ್ತಿದ್ದರೂ ಅದರ ಬಗ್ಗೆ ಕೇರ್ ಮಾಡದ ಅಲ್ಲಿನ ರಾಜಕೀಯ ನಾಯಕರು ಹಾಗೂ ಸರ್ಕಾರ, ಭಾರತದ ಕಿರೀಟ ಕಾಶ್ಮೀರದ ಮೇಲೆ ಕಣ್ಣು ಹಾಕಿ ಪದೇ
ಬಾಂಗ್ಲಾದೇಶದಲ್ಲಿ ಭುಗಿಲೆದ್ದ ಘರ್ಷಣೆ: ಕನಿಷ್ಠ 40 ಮಂದಿಗೆ ಗಾಯ
ಢಾಕಾ: ವಿದ್ಯಾರ್ಥಿ ನಾಯಕ ಒಸ್ಮಾನ್ ಹಾದಿಯ ಹತ್ಯೆ ಪ್ರಕರಣದ ತನಿಖೆಯನ್ನು ವಿಶ್ವಸಂಸ್ಥೆಯ ನೇತೃತ್ವದ ತನಿಖಾ ಸಂಸ್ಥೆ ನಡೆಸಬೇಕೆಂದು ಆಗ್ರಹಿಸಿ ಬಾಂಗ್ಲಾದೇಶದ ರಾಜಧಾನಿ ಢಾಕಾದಲ್ಲಿ ಶುಕ್ರವಾರ ಸಂಜೆ ಮತ್ತೆ ಘರ್ಷಣೆ ಭುಗಿಲೆದ್ದಿದ್ದು ಕನಿಷ್ಠ 40 ಮಂದಿ ಗಾಯಗೊಂಡಿರುವುದಾಗಿ ವರದಿಯಾಗಿದೆ. ಪ್ರತಿಭಟನೆ ನಡೆಸುತ್ತಿದ್ದ ಇಂಕ್ವಿಲಾಬ್ ಮೋರ್ಚಾದ ಕಾರ್ಯಕರ್ತರನ್ನು ಚದುರಿಸಲು ಪೊಲೀಸರು ಲಾಠಿ ಚಾರ್ಜ್ ನಡೆಸಿದ ಬಳಿಕ ಅಶ್ರುವಾಯು ಮತ್ತು ಸೌಂಡ್ ಗ್ರೆನೇಡ್ಗಳನ್ನು ಪ್ರಯೋಗಿಸಿದರು. ಘರ್ಷಣೆಯಲ್ಲಿ ಕನಿಷ್ಠ 40 ಮಂದಿ ಗಾಯಗೊಂಡಿರುವುದಾಗಿ ವರದಿಯಾಗಿದೆ.
Uttar Pradesh | ʼಹೋಮ್ ವರ್ಕ್ʼ ಪೂರ್ಣಗೊಳಿಸದ್ದಕ್ಕೆ ಎಳೆಯ ವಿದ್ಯಾರ್ಥಿಗೆ 150 ಛಡಿಯೇಟು!
ಲಕ್ನೋ: ಮನೆಗೆಲಸವನ್ನು ಪೂರ್ಣಗೊಳಿಸದ್ದಕ್ಕಾಗಿ 2ನೇ ತರಗತಿಯ ಹತ್ತರ ಹರೆಯದ ವಿದ್ಯಾರ್ಥಿಗೆ 150 ಛಡಿಯೇಟುಗಳನ್ನು ನೀಡಿದ ಗೊಂಡಾ ಜಿಲ್ಲೆಯ ಖಾಸಗಿ ಶಾಲಾ ಶಿಕ್ಷಕನೋರ್ವನ ವಿರುದ್ಧ ಪೋಲಿಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಶಿಕ್ಷೆಯಿಂದ ಬಾಲಕನ ಕಾಲುಗಳಿಗೆ ತೀವ್ರ ಗಾಯಗಳಾಗಿವೆ. ಕರ್ನೈಲ್ಗಂಜ್ನಲ್ಲಿ ಈ ಘಟನೆ ನಡೆದಿದ್ದು,ಎಂಆರ್ಜಿ ಸ್ಕೂಲ್ನ ಇಂಗ್ಲಿಷ್ ಶಿಕ್ಷಕ ಪ್ರಖರ ಸಿಂಗ್ ಆರೋಪಿಯಾಗಿದ್ದಾನೆ. ಬಾಲಕ ಕುಂಟುತ್ತ ಮನೆಗೆ ಮರಳಿದಾಗ ಆತನ ಶರೀರದ ಮೇಲೆ ಗಾಯಗಳನ್ನು ಕಂಡು ಕುಟುಂಬ ಸದಸ್ಯರು ಆಘಾತಗೊಂಡಿದ್ದರು. ವಿಚಾರಿಸಿದಾಗ ಶಿಕ್ಷಕ ತನಗೆ ಥಳಿಸಿದ್ದನ್ನು ಬಾಲಕ ತಿಳಿಸಿದ್ದ. ಈ ಬಗ್ಗೆ ಪೋಲಿಸರಿಗೆ ದೂರನ್ನು ಸಲ್ಲಿಸಿರುವ ಬಾಲಕನ ತಂದೆ, ಸಿಂಗ್ ತನ್ನ ಮಗನಿಗೆ 150 ಸಲ ಛಡಿಯಿಂದ ಹೊಡೆದಿದ್ದು, ಈ ವಿಷಯವನ್ನು ಯಾರಿಗಾದರೂ ಹೇಳಿದರೆ ಮತ್ತೆ ಥಳಿಸುವುದಾಗಿ ಬೆದರಿಕೆಯೊಡ್ಡಿದ್ದ. ತನ್ನ ಮಗನ ಬಾಯಿ ಮುಚ್ಚಿಸಲು ಆತ ಬಿಸ್ಕಟ್ಗಳನ್ನೂ ನೀಡಿದ್ದ ಎಂದು ಆರೋಪಿಸಿದ್ದಾರೆ. ಶಾಲೆಯ ಆಡಳಿತವು ಪ್ರಖರ್ ಸಿಂಗ್ನನ್ನು ಸೇವೆಯಿಂದ ವಜಾಗೊಳಿಸಿದೆ. ಪೋಲೀಸರು ಆರೋಪಿ ಶಿಕ್ಷಕನ ವಿರುದ್ಧ ಕಾನೂನು ಕ್ರಮವನ್ನು ಆರಂಭಿಸಿದ್ದು,ತನಿಖೆಯು ಪ್ರಗತಿಯಲ್ಲಿದೆ.
ಮಂಗಳೂರು, ಫೆ.7: ಮಲ್ಲೂರು ಬದ್ರಿಯಾ ನಗರದ ಅಲ್ ಮಸ್ಜಿದುಲ್ ಬದ್ರಿಯಾ ಜುಮಾ ಮಸ್ಜಿದ್ನ ಮಾಜಿ ಅಧ್ಯಕ್ಷ ಅಬೂಬಕ್ಕರ್ ಕುದ್ರೋಳಿ (63) ಶನಿವಾರ ನಿಧನರಾದರು. ಪತ್ನಿ ಮತ್ತು ಐವರು ಪುತ್ರರು ಹಾಗೂ ಇಬ್ಬರು ಪುತ್ರಿಯರು ಮತ್ತು ಅಪಾರ ಬಂಧು ಬಳಗವನ್ನು ಮೃತರು ಅಗಲಿದ್ದಾರೆ. ರವಿವಾರ ಬೆಳಗ್ಗೆ 8ಕ್ಕೆ ದಫನ್ ಕಾರ್ಯ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. *ಮಂಗಳೂರು ತಾಪಂ ಮಾಜಿ ಸದಸ್ಯ ಎನ್.ಇ. ಮುಹಮ್ಮದ್, ಮಸೀದಿಯ ಅಧ್ಯಕ್ಷ ಮುಹಮ್ಮದ್ ಅಶ್ರಫ್, ಗ್ರಾಪಂ ಮಾಜಿ ಅಧ್ಯಕ್ಷ ಎಂ.ಕೆ. ಯೂಸುಫ್, ಎಸ್ಡಿಪಿಐ ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರ ಕಾರ್ಯದರ್ಶಿ ಶಫೀಕ್ ಮಲ್ಲೂರು ಸಂತಾಪ ಸೂಚಿಸಿದ್ದಾರೆ.
WPL 2026 RCB Trophy: ಆರ್ಸಿಬಿ ಗೆದ್ದ ಡಬ್ಲ್ಯೂಪಿಎಲ್ ಟ್ರೋಫಿ ಬಿಸಿಸಿಐಗೆ ವಾಪಾಸ್
WPL 2026 RCB Trophy: ಡಬ್ಲ್ಯೂಪಿಎಲ್ 2026 ಫೈನಲ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಮಣಿಸಿ ಸ್ಮೃತಿ ಮಂಧಾನ ನಾಯಕತ್ವದ ಆರ್ಸಿಬಿ ಚಾಂಪಿಯಾನ್ ಆಯಿತು. ಇನ್ನೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಗೆದ್ದ ಟ್ರೋಫಿಯನ್ನು ಮತ್ತೆ ಬಿಸಿಸಿಐ ವಾಪಾಸ್ ಪಡೆಯಲಿದೆ. ಹಾಗಾದ್ರೆ, ಇದಕ್ಕೆ ಕಾರಣ ಏನು ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ. ರಾಯಲ್ ಚಾಲೆಂಜರ್ಸ್
USA Military: ನಮ್ಮ ತಂಟೆಗೆ ಬಂದ್ರೆ ಚನ್ನಾಗಿರಲ್ಲ ಅಂತು ಇರಾನ್, ಅಮೆರಿಕ ಕಡೆಯಿಂದಲೂ ಖಡಕ್ ವಾರ್ನಿಂಗ್
ಅಮೆರಿಕ ಮತ್ತು ಇರಾನ್ ನಡುವೆ ಯಾವ ಕ್ಷಣದಲ್ಲಿ ಏನಾಗುತ್ತೋ ಅನ್ನೋದು ಗೊತ್ತಾಗುತ್ತಲೇ ಇಲ್ಲ. ಯಾಕಂದ್ರೆ ಒಂದು ದಿನ ಇಬ್ಬರೂ ಚನ್ನಾಗಿಯೇ ಮಾತನಾಡುತ್ತಾರೆ, ಇನ್ನೊಂದು ದಿನ ಇಬ್ಬರ ಮಧ್ಯೆ ದೊಡ್ಡ ಕಿರಿಕ್ ಶುರುವಾಗಿರುತ್ತದೆ. ಅಲ್ಲಿ ನೋಡಿದರೆ ಒಮನ್ ನೆಲದಲ್ಲಿ ಇರಾನ್ ಮತ್ತು ಅಮೆರಿಕ ನಡುವೆ ಪರಮಾಣು ಒಪ್ಪಂದದ ಬಗ್ಗೆ ಮಾತುಕತೆ ನಡೆಯುತ್ತಿದೆ, ಆದರೆ ಇದೇ ಸಮಯದಲ್ಲಿ ದಿಢೀರ್ ಅಂತಾ
ನಿಫಾ ವೈರಸ್: ಬಾಂಗ್ಲಾದಲ್ಲಿ ಮಹಿಳೆ ಸಾವು
ಢಾಕಾ: ಬಾಂಗ್ಲಾದೇಶದಲ್ಲಿ ಮಹಿಳೆಯೊಬ್ಬರು ನಿಫಾ ವೈರಸ್ನಿಂದ ಮೃತಪಟ್ಟಿರುವುದನ್ನು ವಿಶ್ವ ಆರೋಗ್ಯ ಸಂಸ್ಥೆ ದೃಢಪಡಿಸಿದೆ. ಆದರೆ ಈ ಕಾಯಿಲೆ ಅಂತರಾಷ್ಟ್ರೀಯವಾಗಿ ಹರಡುವ ಅಪಾಯ ಈಗಲೂ ಕಡಿಮೆ ಎಂದು ಹೇಳಿದೆ. ಜನವರಿ 28ರಂದು ಆಸ್ಪತ್ರೆಗೆ ದಾಖಲಾಗಿದ್ದ ನವೋಗಾಂವ್ ಜಿಲ್ಲೆಯ ನಿವಾಸಿ, ಸುಮಾರು 40 ವರ್ಷದ ಮಹಿಳೆ ಫೆಬ್ರವರಿ 6ರಂದು ಮೃತಪಟ್ಟಿದ್ದು ಇದು ನಿಫಾ ವೈರಸ್ ಪ್ರಕರಣವೆಂದು ದೃಢಪಟ್ಟಿದೆ. ರೋಗಿಯು ಯಾವುದೇ ಪ್ರಯಾಣದ ಇತಿಹಾಸವನ್ನು ವರದಿ ಮಾಡಿಲ್ಲ. ಆದರೆ ಇತ್ತೀಚೆಗೆ ಕಚ್ಛಾ ಖರ್ಜೂರದ ರಸ ಸೇವಿಸಿದ್ದರು ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮೂಲಗಳನ್ನು ಉಲ್ಲೇಖಿಸಿದ ವರದಿ ಹೇಳಿದೆ.
ಎಮ್ ಡಿಎಮ್ ಎ ಮಾರಾಟ ಪ್ರಕರಣ: ಆರೋಪಿ ಸೆರೆ
ಕೊಣಾಜೆ: ಇಲ್ಲಿನ ಪೊಲೀಸ್ ಠಾಣಾ ವ್ಯಾಪ್ತಿಯ ಬಾಳೆಪುಣಿ ಗ್ರಾಮದ ನವಗ್ರಾಮ ಸೈಟ್ ನಾರ್ಯಗುತ್ತು ಗುಡ್ಡ ಪ್ರದೇಶದಲ್ಲಿ ನಿಷೇಧಿತ ಎಮ್ ಡಿಎಮ್ ಎ ಮಾದಕ ವಸ್ತುವನ್ನು ಮಾರಾಟ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿದ ಪೊಲೀಸರು ಓರ್ವ ಆರೋಪಿಯನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಶ್ರೀರಂಗಪಟ್ಟಣ ಹುಲಿಕೆರೆ ನಿವಾಸಿ ಜೋರ್ಡನ್,(21 ) ಎಂದು ಗುರುತಿಸಲಾಗಿದೆ. ಈತ ಪ್ರಸ್ತುತ ಬಾಳೆ ಪುಣೆ ಗ್ರಾಮದ ಕುಕ್ಕುದ ಕಟ್ಟೆ ಸೈಟ್ ನಲ್ಲಿ ರುವ ಸೆಫಿಯಾ ಎಂಬವರ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಎಂದು ತನಿಖೆ ವೇಳೆ ತಿಳಿದು ಬಂದಿದೆ ಬಂಧಿತನಿಂದ 55 ಗ್ರಾಂ ಎಮ್ ಡಿಎಮ್ ಎ ಮಾದಕ ವಸ್ತು, ಒಂದು ಮೊಬೈಲ್ ಫೋನ್, ಡಿಜಿಟಲ್ ತೂಕದ ಮಾಪನ ಯಂತ್ರ ಸಹಿತ ಇತರ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.ಈ ಸಂಬಂಧ ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ .
Kerala | ಅಪ್ರಾಪ್ತ ಬಾಲಕಿಗೆ ಲೈಂಗಿಕ ದೌರ್ಜನ್ಯ ಆರೋಪ: RSS ಕಾರ್ಯಕರ್ತನ ಬಂಧನ
ಕೋಝಿಕ್ಕೋಡ್: 9 ವರ್ಷದ ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ಕಾರ್ಯಕರ್ತನನ್ನು ಮುಕ್ಕಂ ಪೊಲೀಸರು ಗುರುವಾರ ಬಂಧಿಸಿದ್ದಾರೆ ಎಂದು manoramaonline.com ವರದಿ ಮಾಡಿದೆ. ಬಂಧಿತ ಆರೋಪಿಯನ್ನು ಕೋಝಿಕ್ಕೋಡ್ ನ ಮುಕ್ಕಂ ತೇಚಿಯಾಡ್ ಮುರಿಯನ್ ಕಂಡಲ್ಲಿ ನಿವಾಸಿ ಬಾಬುರಾಜನ್ (50) ಎಂದು ಗುರುತಿಸಲಾಗಿದೆ. ಆತನ ವಿರುದ್ಧ ಪೊಕ್ಸೊ ಕಾಯ್ದೆಯ ವಿವಿಧ ಕಲಂಗಳಡಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಶಾಲೆಯಲ್ಲಿ ನಡೆದ ಕೌನ್ಸೆಲಿಂಗ್ ಅವಧಿಯಲ್ಲಿ ಬಾಲಕಿ ತನ್ನ ಮೇಲೆ ನಡೆದ ದೌರ್ಜನ್ಯವನ್ನು ಬಹಿರಂಗಪಡಿಸಿದ್ದರಿಂದ ಘಟನೆ ಬೆಳಕಿಗೆ ಬಂದಿದೆ. ಶಿಕ್ಷಕರು ಬಾಲಕಿಯ ನಡವಳಿಕೆಯಲ್ಲಿ ಕಂಡ ಬದಲಾವಣೆಯನ್ನು ಗಮನಿಸಿದ ಹಿನ್ನೆಲೆ ಕೌನ್ಸೆಲಿಂಗ್ ನಡೆಸಲಾಗಿತ್ತು. ಆ ವೇಳೆ ಆಘಾತಕಾರಿ ಮಾಹಿತಿ ಹೊರಬಂದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ತನಿಖೆಯ ವೇಳೆ ಬಾಲಕಿ ಈ ಹಿಂದೆ ಹಲವು ಬಾರಿ ದೌರ್ಜನ್ಯಕ್ಕೆ ಒಳಗಾಗಿದ್ದಾಳೆ ಎಂಬುದು ತಿಳಿದುಬಂದಿದೆ. ಆರೋಪಿ ಬಾಬುರಾಜನ್ ವಿದ್ಯಾರ್ಥಿನಿಯ ಕುಟುಂಬಕ್ಕೆ ಆಪ್ತನಾಗಿದ್ದು, ಅದನ್ನು ದುರುಪಯೋಗಪಡಿಸಿಕೊಂಡು ದೌರ್ಜನ್ಯ ಎಸಗಿದ್ದಾನೆ ಎಂದು FIR ನಲ್ಲಿ ಉಲ್ಲೇಖಿಸಲಾಗಿದೆ. ಬಾಬುರಾಜನ್ ಈ ಪ್ರದೇಶದಲ್ಲಿ ಸಕ್ರಿಯ ಬಿಜೆಪಿ ಹಾಗೂ RSS ಕಾರ್ಯಕರ್ತನಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಮುಕ್ಕಂ ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದು, ನ್ಯಾಯಾಲಯವು ಆರೋಪಿಯನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸಿದೆ ಎಂದು ತಿಳಿದು ಬಂದಿದೆ.
ಬಿಜೆಪಿ ಸರಕಾರವು ಮನರೇಗ ಕಾಯ್ದೆಯ ಸ್ವರೂಪವನ್ನು ಬದಲಾಯಿಸಲು ಹೊರಟಿದೆ: ಪದ್ಮರಾಜ್ ಆರೋಪ
ಕೇಂದ್ರ ಸರ್ಕಾರದ ನೀತಿ ವಿರೋಧಿಸಿ ಕಾಂಗ್ರೆಸ್ ಪ್ರತಿಭಟನೆ
ಕೈಕಂಬ: ಮಾರುಕಟ್ಟೆ ಬಳಿ ಅಂಡರ್ ಪಾಸ್ ನಿರ್ಮಿಸಲು ಸಾರ್ವಜನಿಕರಿಂದ ಒತ್ತಾಯ
ಬಜ್ಪೆ: ಮಂಗಳೂರು- ಮೂಡುಬಿದಿರೆ ರಾಷ್ಟ್ರೀಯ ಹೆದ್ದಾರಿ 169ರ ಗುರುಪುರ ಕೈಕಂಬದಲ್ಲಿ ಮಾರುಕಟ್ಟೆ ಬಳಿ ಅಂಡರ್ ಪಾಸ್ ನಿರ್ಮಿಸಬೇಕು ಎಂದು ಅಗ್ರಹಿಸಿ ಗುರುಪುರ-ಕೈಕಂಬದ ಸಾರ್ವಜನಿಕರು ಶನಿವಾರ ಹೆದ್ದಾರಿ ಕಾಮಗಾರಿ ತಡೆದು ಆಗ್ರಹಿಸಿದರು. ಹಕ್ಕೊತ್ತಾಯ ಪ್ರತಿಭಟನೆಯಲ್ಲಿ ಪ್ರತಿಭಟನೆಯಲ್ಲಿ ಮಾತನಾಡಿದ ನ್ಯಾಯವಾದಿ ವಿಜಯ ಗೌಡ ಅವರು, ಗುರುಪುರ-ಕೈಕಂಬ ಪೇಟೆಯನ್ನು ವಿಭಾಗ ಮಾಡುವ ರೀತಿಯಲ್ಲಿ ಪೇಟೆಯ ನಡುವೆ ಗೋಡೆ ನಿರ್ಮಿಸಿ ಮಣ್ಣು ತುಂಬಿಸಿ ಹೆದ್ದಾರಿ ನಿರ್ಮಾಣ ಮಾಡಲಾಗುತ್ತಿದೆ. ಇದರಿಂದ ಲಕ್ಷಾಂತರ ರೂ. ಬಂಡವಾಳ ಹೂಡಿ ಪೇಟೆಯಲ್ಲಿ ವ್ಯಾಪಾರ ಮಾಡುತ್ತಿ ರುವ ವರ್ತಕರಿಗೆ ತೊಂದರೆಗಳಾಗಲಿವೆ. ಮಾರುಕಟ್ಟೆ ಬಳಿ ಅಂಡರ್ ಪಾಸ್ ನಿರ್ಮಾಣ ಮಾಡದೇ ಹೆದ್ದಾರಿ ನಿರ್ಮಾಣ ಮಾಡುವುದರಿಂದ ಕಂದಾವರ, ಆದ್ಯಪಾಡಿಗೆ ಹೋಗುವವರು ಕಿಲೋಮೀಟರ್ ದೂರ ಸುತ್ತಿಬಳಸಿ ಸಂಚರಿಸುವ ಅನಿವಾರ್ಯತೆ ಬರಲಿದೆ. ವಾಮಂಜೂರಿನಲ್ಲಿ ಮಾಡಿದಂತೆ ಇಲ್ಲಿಯೂ ತೆರೆದ ಹೆದ್ದಾರಿ ಮಾಡಬೇಕು ಅಥವಾ ಮಾರುಕಟ್ಟೆ ಬಳಿ ಅಂಡರ್ ಪಾಸ್ ನಿರ್ಮಿಸಬೇಕು ಎಂದು ಒತ್ತಾಯಿಸಿದರು. ಕಂದಾವರ ಪಂಚಾಯತ್ ಮಾಜಿ ಅಧ್ಯಕ್ಷೆ ವಿಜಯಾ ಗೋಪಾಲ ಸುವರ್ಣ ಅವರು ಮಾತನಾಡಿ, ಕೈಕಂಬ ಪೇಟೆ ಯನ್ನು ಎರಡು ಭಾಗಗಳಾಗಿ ವಿಂಗಡಿಸಿ, ದ್ವೀಪದಂತೆ ಹೆದ್ದಾರಿ ಕಾಮಗಾರಿ ನಡೆಸಲಾಗುತ್ತಿದೆ. ಪೇಟೆಯ ನಡುವೆ ಕಾಂಕ್ರೀಟ್ ಗೋಡೆ ನಿರ್ಮಿಸಿ ಮಣ್ಣು ತುಂಬಿಸಿ ರಸ್ತೆ ನಿರ್ಮಾಣ ಮಾಡುವ ಮೂಲಕ ಪೇಟೆಗೆ ದಿಗ್ಬಂಧನ ಹಾಕುವ ಹುನ್ನಾರ ನಡೆಯುತ್ತಿದೆ. ನಮಗೆ ನ್ಯಾಯ ಸಿಗುವವರೆಗೆ ಹೋರಾಟ ನಿರಂತರವಾಗಿ ಮುಂದುವರಿಯಲಿದೆ. ಈ ಹೊರಾಟ ಯಾವುದೇ ಪಕ್ಷ, ಧರ್ಮ, ಸಂಘ ಸಸ್ಥೆಗಳ ವಿರುದ್ಧವಲ್ಲ. ಎಲ್ಲಾ ಪಕ್ಷ, ಧರ್ಮ, ಸಂಘಟನೆಗಳು ಒಟ್ಟಾಗಿ ಈ ಹೋರಾಟ ಮುನ್ನಡೆಸುತ್ತಿವೆ ಎಂದು ನುಡಿದರು. ಕಂದಾವರ ಪಂಚಾಯತ್ ಅಧ್ಯಕ್ಷೆ ಶಾಲಿನಿ, ರವಿ ಕೈಕಂಬ, ಕಂದಾವರ ಮಸೀದಿಯ ಉಪಾಧ್ಯಕ್ಷ ಅಬ್ದುಲ್ ರಹಿಮಾನ್, ಓಸ್ವಾಲ್ಡ್, ಪ್ಯಾರಿಸ್, ಸುರೇಶ್ ಕೈಕಂಬ, ಕ್ರಿಷ್ಟೊಪರ್ ಡಿ'ಕುನ್ಹ, ಗಣೇಶ್ ಶೆಟ್ಟಿಗಾರ್ ಮೊದಲಾದವರು ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದರು. ವಿವಿಧ ಪಕ್ಷಗಳ ಮುಖಂಡರು, ಸ್ಥಳೀಯ ಸಂಘಟನೆಗಳ ನೇತಾರರು, ಪೇಟೆಯ ಉದ್ಯಮಿಗಳು, ರಿಕ್ಷಾ ಚಾಲಕರು, ಸಾರ್ವಜನಿಕರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಬಜಪೆ ಪೊಲೀಸರು ಭದ್ರತೆ ಒದಗಿಸಿದ್ದರು. ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಗುರುಪುರ ನಾಡಕಚೇರಿ ಉಪ ತಹಶೀಲ್ದಾರ್ ಸ್ಟೀಪನ್ ಅವರು ಪ್ರತಿಭಟನಾ ನಿರತರಿಂದ ಮನವಿಯನ್ನು ಸ್ವೀಕರಿಸಿದರು. ಬಳಿಕ ಮಾತನಾಡಿದ ಅವರು, ಮನವಿಯನ್ನು ಮೇಲಾಧಿಕಾರಿಗಳಿಗೆ ತಲುಪಿಸಿ ಸಾರ್ವಜನಿಕರ ಬೇಡಿಕೆ ಈಡೇರಿಕೆಗೆ ಮನವಿ ಮಾಡಲಾಗುವುದು ಎಂದು ಭರವಸೆ ನೀಡಿದರು. ಪೇಟೆಯ ಜನರ ತಾಳ್ಮೆಯನ್ನು ಹೆದ್ದಾರಿ ಇಲಾಖೆ ಪರೀಕ್ಷೆಗೆ ಒಡ್ದುವುದು ಬೇಡ. ಅಧಿಕಾರಿಗಳು ಸ್ಥಳಕ್ಕೆ ಬರುವ ರೀತಿಯಲ್ಲಿ ಹೋರಾಟ ನಡೆಸುತ್ತೇವೆ. ಮಾರುಕಟ್ಟೆ ಬಳಿ ಅಂಡರ್ ಪಾಸ್ ನಿರ್ಮಿಸದಿದ್ದರೆ, ಕಂದಾವರ, ನಾಡ ಕಚೇರಿ, ಈಗರ್ಜಿಗೆ ತೆರಳುವವರಿಗೆ ಸಮಸ್ಯೆಯಾಗಲಿದೆ. ಒಂದು ವೇಳೆ ನಮ್ಮ ಬೇಡಿಕೆಯನ್ನು ತಿರಸ್ಕರಿಸಿ ಈಗಿನ ಮಾದರಿಯಲ್ಲಿ ರಸ್ತೆ ನಿರ್ಮಾಣ ಮಾಡಿದ್ದಲ್ಲಿ ಜೆಸಿಬಿ ಮೂಲಕ ರಸ್ತೆಯನ್ನು ಅಡೆದು ಹಾಕುವುದಕ್ಕೂ ನಾವು ಹಿಂಜರಿಯುವುದಿಲ್ಲ. - ಹರೀಶ್ ಮಟ್ಟಿ, ಸ್ಥಳೀಯರು ಅಂಡರ್ ಪಾಸ್ ನಿರ್ಮಾಣಕ್ಕೆ ಹಣಕಾಸಿನ ಸಮಸ್ಯೆ ಇದ್ದಲ್ಲಿ ನಾವು ರಸ್ತೆ ಬದಿ ಭಿಕ್ಷೆ ಬೇಡಿಯಾದರೂ ಕೊಡುತ್ತೇವೆ. ಇಲ್ಲವಾದಲ್ಲಿ ನಮ್ಮಲ್ಲಿರುವ ಬಂಗಾರದ ಒಡವೆ ಮಾರಿ ದುಡ್ಡು ಕೊಡುತ್ತೇವೆ ಅಂಡರ್ ಪಾಸ್ ನಿರ್ಮಾಣ ಆಗಲೇ ಬೇಕು. - ದಿನೇಶ್ ಸ್ಥಳೀಯ ನಿವಾಸಿ
ಮೂಡುಬಿದಿರೆ: ʼರೋಸ್ಟ್ರಮ್ ಸ್ಪೀರ್ಸ್ ಕ್ಲಬ್ʼ ಚಟುವಟಿಕೆಗಳ ಉದ್ಘಾಟನಾ ಸಮಾರಂಭ
ಮೂಡುಬಿದಿರೆ: ವಿಕಸಿತ ಭಾರತ ನಿರ್ಮಾಣದ ಮಹಾಸಂಕಲ್ಪ ಸಾಕಾರಗೊಳಿಸಲು ಯುವಜನತೆ ಕೇವಲ ಫಲಾನುಭವಿಗಳಾದರೆ ಸಾಲದು, ರಾಷ್ಟ್ರದ ಭವಿಷ್ಯ ರೂಪಿಸುವ ಶಿಲ್ಪಿಗಳಾಗಬೇಕು ಎಂದು ನವದೆಹಲಿಯ ಸಂಸದೆ ಬಾನ್ಸುರಿ ಸ್ವರಾಜ್ ನುಡಿದರು. ಅವರು ಡಾ ವಿ.ಎಸ್ ಆಚಾರ್ಯ ಸಭಾಂಗಣದಲ್ಲಿ ನಡೆದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ರೋಸ್ಟ್ರಮ್ ಸ್ಪೀರ್ಸ್ ಕ್ಲಬ್ನ 2026-27 ಸಾಲಿನ ಚಟುವಟಿಕೆಗಳ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. “ವಂದೇ ಮಾತರಂ’’ ಘೋಷಣೆಯೊಂದಿಗೆ ಭಾಷಣ ಪ್ರಾರಂಭಿಸಿದ ಅವರು, ವಂದೇ ಮಾತರಂ ಕೇವಲ ದೇಶಭಕ್ತಿಯ ಘೋಷಣೆಯಲ್ಲ, ಅದು ಭಾರತದ ಆತ್ಮಸ್ವರವಾಗಿ ಪ್ರತಿಧ್ವನಿಸಬೇಕು. ಸ್ವಾತಂತ್ರ್ಯ ಸಮರದಲ್ಲಿ ಯುವಶಕ್ತಿಗೆ ಸ್ಪೂರ್ತಿ ತುಂಬಿದ ಈ ಘೋಷಣೆ, ಇಂದಿನ ವಿಕಸಿತ ಭಾರತದ ಪಥದಲ್ಲಿ ಪ್ರೇರಣೆಯ ಮಾರ್ಗಸೂಚಿಯಾಗಬೇಕು ಎಂದು ಅಭಿಪ್ರಾಯಪಟ್ಟರು. 2047ರೊಳಗೆ ವಿಕಸಿತ ಭಾರತ ನಿರ್ಮಾಣವು ಕೇವಲ ಕನಸಲ್ಲ, ಅದು ಸಂಕಲ್ಪ. ಇಂದಿನ ಪೀಳಿಗೆ ಅನುಭವಿಸುತ್ತಿರುವ ಸ್ವಾತಂತ್ರ್ಯ ಹಾಗೂ ಅವಕಾಶಗಳು ಹಿಂದಿನ ತಲೆಮಾರಿನ ತ್ಯಾಗಗಳ ಫಲ. ಅದಕ್ಕೆ ಪ್ರತಿಯಾಗಿ ಯುವಕರು ರಾಷ್ಟ್ರ ನಿರ್ಮಾಣದಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು ಎಂದು ಕರೆ ಕೊಟ್ಟರು. ಶಿಕ್ಷಣ, ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆಯ ಮೂಲಕ ಯುವಶಕ್ತಿಯನ್ನು ಆರ್ಥಿಕ ಪ್ರಗತಿಯ ಚಾಲಕಶಕ್ತಿಯನ್ನಾಗಿ ಮಾಡಬೇಕಾಗಿದೆ ಎಂದು ಅಭಿಪ್ರಾಯಪಟ್ಟರು. ಪದವಿ ಮಾತ್ರ ಸಾಲದು ಎಂದು ತಿಳಿಸಿದ ಹೇಳಿದ ಅವರು, ಯುವಜನತೆ ನಿರಂತರ ಕೌಶಲ್ಯಾಭಿವೃದ್ಧಿಗೆ ಒತ್ತು ನೀಡಬೇಕು ಎಂದರು. ಈ ಪೀಳಿಗೆ ಉದ್ಯೋಗ ಹುಡುಕುವವರಾಗದೆ, ಉದ್ಯೋಗ ಸೃಷ್ಟಿಸುವವರಾಗಬೇಕು. ಉದ್ಯಮಶೀಲತೆ ಮತ್ತು ನವೀನತೆ ಆರ್ಥಿಕ ಬೆಳವಣಿಗೆಯ ಮುಖ್ಯ ಚಾಲಕ ಶಕ್ತಿಗಳು ಎಂದು ವಿವರಿಸಿದರು. ಡಿಜಿಟಲ್ ಸಾಕ್ಷರತೆಯಿಂದ ಆರ್ಥಿಕ ಸಾಕ್ಷರತೆಯತ್ತ ಹೆಜ್ಜೆ ಇಡಬೇಕು ಎಂದ ಅವರು, ಯುವಜನತೆ ಹಣಕಾಸು ಯೋಜನೆ ಹಾಗೂ ಉಳಿತಾಯದ ಮಹತ್ವ ಅರಿತುಕೊಳ್ಳಬೇಕು ಎಂದು ಸಲಹೆ ನೀಡಿದರು. ವಿದ್ಯಾರ್ಥಿಗಳ ಪ್ರಶ್ನೆಗೆ ಉತ್ತರಿಸುತ್ತಾ, ಭಾರತವು ಜಾಗತಿಕವಾಗಿ ಮೂರನೇ ಅತಿದೊಡ್ಡ ಸ್ಟಾರ್ಟ್ಅಪ್ಗೆ ಪೂರಕ ಪರಿಸರ ಒದಗಿಸುವ ದೇಶವಾಗಿ ಹೊರಹೊಮ್ಮಿದೆ ಎಂದು ಹೇಳಿದರು. ಪ್ರಧಾನಮಂತ್ರಿ ಮುದ್ರಾ ಯೋಜನೆಯ ಮೂಲಕ ತಳಮಟ್ಟದ ಉದ್ಯಮಶೀಲತೆಗೆ ಉತ್ತೇಜನ ಸಿಕ್ಕಿದ್ದು, ತಂತ್ರಜ್ಞಾನ ಸ್ಟಾರ್ಟ್ಅಪ್ಗಳಷ್ಟೇ ಅಲ್ಲದೆ ಸಣ್ಣ ಉದ್ಯಮಗಳಿಗೂ ನೆರವಾಗಿದೆ ಎಂದರು. ಮುದ್ರಾ ಸಾಲಗಳ ಮೂಲಕ ಮಹಿಳೆಯರೂ ಆರ್ಥಿಕ ಸಬಲೀಕರಣದ ಹಾದಿಹಿಡಿದಿದ್ದಾರೆ ಎಂದರು. ಹಳೆಯ ಭಾರತೀಯ ದಂಡ ಸಂಹಿತೆಯನ್ನು ಬದಲಿಸಿ ಭಾರತೀಯ ನ್ಯಾಯ ಸಂಹಿತೆ, ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ ಹಾಗೂ ಭಾರತೀಯ ಸಾಕ್ಷಿ ಅಧಿನಿಯಮ ಜಾರಿಗೆ ತಂದಿರುವುದು ಕಾಲದ ಅಗತ್ಯ ಎಂದ ಅವರು, ಅನೇಕ ಹಳೆಯ ಕಾನೂನುಗಳನ್ನು ರದ್ದುಪಡಿಸಲಾಗಿದೆ. ನ್ಯಾಯಾಂಗದ ಪಾತ್ರ ಕುರಿತು ಮಾತನಾಡಿದ ಅವರು, ವಿಶಾಖಾ ಮಾರ್ಗಸೂಚಿಗಳನ್ನು ಉದಾಹರಣೆಯಾಗಿ ನೀಡಿ, ನಾಗರಿಕರ ಹಕ್ಕುಗಳ ರಕ್ಷಣೆಯಲ್ಲಿ ನ್ಯಾಯಾಂಗದ ಮಹತ್ವವನ್ನು ಒತ್ತಿಹೇಳಿದರು. ಕೃತಕ ಬುದ್ಧಿಮತ್ತೆ ಉದ್ಯೋಗಗಳನ್ನು ಕಸಿದುಕೊಳ್ಳುವುದಿಲ್ಲ; ಬದಲಾಗಿ ಹೊಸ ಅವಕಾಶಗಳನ್ನು ಸೃಷ್ಟಿಸುತ್ತದೆ. 1980ರ ದಶಕದ ಕಂಪ್ಯೂಟರ್ ಕ್ರಾಂತಿಯAತೆ, ಕೃತಕ ಬುದ್ದಿಮತ್ತೆಯ ಯುಗದಲ್ಲಿಯೂ ಕೌಶಲ್ಯವರ್ಧನೆ ಅಗತ್ಯವಿದೆ ಎಂದರು. ಸೆಮಿಕಂಡಕ್ಟರ್ ಉತ್ಪಾದನೆ ಮತ್ತು ಸ್ವಾವಲಂಬನೆಗೆ ಸಂಬAಧಿಸಿದ ಕೇಂದ್ರ ಬಜೆಟ್ ಕ್ರಮಗಳನ್ನೂ ಅವರು ಉಲ್ಲೇಖಿಸಿದರು. ಯುವಜನತೆ ಮತದಾನದ ಹಕ್ಕನ್ನು ಜವಾಬ್ದಾರಿಯಿಂದ ಬಳಸಬೇಕು ಮತ್ತು ಸಾರ್ವಜನಿಕ ಜೀವನದಲ್ಲಿ ಸಕ್ರಿಯ ವಾಗಿ ಪಾಲ್ಗೊಳ್ಳಬೇಕು ಎಂದು ಕರೆ ನೀಡಿದರು. ಭವಿಷ್ಯದ ಸಂಸತ್ತು ಮತ್ತು ವಿಧಾನಸಭೆಗಳು ಯುವಜನರ ಪ್ರತಿಬಿಂಬವಾಗಬೇಕಾಗಿದೆ. ದೇಶದ ಜನಸಂಖ್ಯೆಯಲ್ಲಿ ಯುವಕರ ಪ್ರಮಾಣ ಹೆಚ್ಚಿರುವ ಹಿನ್ನೆಲೆಯಲ್ಲಿ ಶಾಸನ ಸಭೆಗಳಲ್ಲಿ ಅವರ ಪ್ರತಿನಿಧಿತ್ವವೂ ಹೆಚ್ಚಾಗಬೇಕು. ಭಾರತದಲ್ಲಿ ಮಹಿಳೆಯರ ರಾಜಕೀಯ ಪ್ರತಿನಿಧಿತ್ವವನ್ನು ವಿಸ್ತರಿಸುವ ಉದ್ದೇಶದಿಂದ ಜಾರಿಗೆ ತಂದಿರುವ ಸಂವಿಧಾನದ 106ನೇ ತಿದ್ದುಪಡಿ ಅಧಿನಿಯಮ, 2023 (ನಾರಿ ಶಕ್ತಿ ವಂದನ ಅಧಿನಿಯಮ) ಮಹತ್ವದ ಮೈಲಿ ಗಲ್ಲಾಗಿದ್ದು, 2029ರಿಂದ ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಜಾರಿಗೆ ಬರಲಿದೆ. ಈ ಅಧಿನಿಯಮದ ಪ್ರಕಾರ, ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳ ಒಟ್ಟು ಸ್ಥಾನಗಳಲ್ಲಿ 33 ಶೇಕಡಾ (ಒಂದು ಮೂರನೇ ಭಾಗ) ಸ್ಥಾನಗಳನ್ನು ಮಹಿಳೆಯರಿಗೆ ಮೀಸಲಿಡಲಾಗುತ್ತದೆ. ಇದರ ಮೂಲಕ ಮಹಿಳೆಯರ ರಾಜಕೀಯ ಪಾಲ್ಗೊಳ್ಳುವಿಕೆ ಹೆಚ್ಚಿಸಿ, ಶಾಸಸ ಸಭೆಗಳಲ್ಲಿ ಸಮಾನ ಪ್ರತಿನಿಧಿತ್ವವನ್ನು ಖಚಿತಪಡಿಸುವುದಾಗಿದೆ. ಸ್ವಾತಂತ್ರ್ಯಾನAತರ ದಶಕಗಳ ಕಾಲ ಮಹಿಳಾ ಮೀಸಲಾತಿ ಕುರಿತು ಚರ್ಚೆಗಳು ನಡೆದಿದ್ದರೂ, 2023ರಲ್ಲಿ ಸಂಸತ್ತಿನಲ್ಲಿ ಅಂಗೀಕೃತವಾದ ಈ ತಿದ್ದುಪಡಿ ಮಹಿಳಾ ಸಬಲೀಕರಣದ ದಿಕ್ಕಿನಲ್ಲಿ ಐತಿಹಾಸಿಕ ಹೆಜ್ಜೆಯಾಗಿ ಪರಿಗಣಿಸಲಾಗುತ್ತಿದೆ ಎಂದರು. ಆಳ್ವಾಸ್: ರಾಷ್ಟ್ರ ನಿರ್ಮಾಣದ ಮಹಾನ್ಶಿಲ್ಪಿಗಳನ್ನು ರೂಪಿಸುವ ಕಾರ್ಖಾನೆ ಆಳ್ವಾಸ್ ಶಿಕ್ಷಣ ಸಂಸ್ಥೆ ಕೇವಲ ಶಿಕ್ಷಣ ನೀಡುವ ಕೇಂದ್ರವಲ್ಲ; ಅದು ರಾಷ್ಟ್ರ ನಿರ್ಮಾಣದ ಮಹಾನ್ಶಿಲ್ಪಿಗಳನ್ನು ರೂಪಿಸುವ ಕಾರ್ಖಾನೆ ಎಂದು ಬಣ್ಣಿಸಿದರು. ವಿದ್ಯಾಗಿರಿ, ಮಿಜಾರಿನ ವಿಶಾಲ ಹಸಿರುಗಾವಲು, ಸಮಗ್ರ ಮೂಲ ಸೌಕರ್ಯ ಹಾಗೂ ಶಿಸ್ತುಬದ್ಧ ಶೈಕ್ಷಣಿಕ ವಾತಾವರಣಕ್ಕೆ ಮನಸೋತರು. ಆಳ್ವಾಸ್ನ ಶೋಭಾವನ ಕಾಟೇಜ್ನಲ್ಲಿ ಶುಕ್ರವಾರವೇ ಬಂದು ವಾಸ್ತವ್ಯವಿದ್ದ ಅವರು, ಅಲ್ಲಿ ಸಂಜೆ ಹಾಗೂ ಮುಂಜಾನೆ ಶೋಭಾವನದ ಗೆಸ್ಟ್ ಹೌಸ್ನಲ್ಲಿ ನೀಡಲಾದ ಆತಿಥ್ಯವನ್ನು ಮೆಚ್ಚಿಕೊಂಡರು. ಅನ್ನ–ಸಾಂಬಾರ್, ಜೈನ್ ಉಪ್ಪಿನಕಾಯಿ, ಇಡ್ಲಿ, ಹೊಳಿಗೆ, ತೆಂಗಿನ ಚಟ್ನಿ, ನೀರ್ ದೋಸೆ, ಶೀರಾ, ಅವಲಕ್ಕಿ–ಕಡಲೆ, ಶಾವಿಗೆ ಪಾಯಸ, ವಡೆ ಮೊದಲಾದ ಸ್ಥಳೀಯ ಕರಾವಳಿಯ ಖಾದ್ಯಗಳನ್ನು ಆಸ್ವಾದಿಸಿದರು. ಕಾರ್ಯಕ್ರಮದಲ್ಲಿ ಬನ್ಸುರಿ ಸ್ವರಾಜ್ ಅವರನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ಸನ್ಮಾನಿಸಲಾಯಿತು. ಕರ್ಯಕ್ರಮದಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ್ ಆಳ್ವ, ರೋಸ್ಟ್ರಮ್ ಸ್ಪೀಕರ್ಸ್ ಕ್ಲಬ್ನ ಅಧ್ಯಕ್ಷೆ ಡಾ. ದೀಪಾ ಕೊಠಾರಿ, ಆಳ್ವಾ ಫಾರ್ಮಸಿ ಆಡಳಿತಾಧಿಕಾರಿ ಡಾ. ಗ್ರೀಷ್ಮಾ ವಿವೇಕ್ ಆಳ್ವ, ಬಾನ್ಸುರಿ ಸ್ವರಾಜ್ ಸಂಬAದಿ ನೀತು ಸೇರಿದಂತೆ ಹಲವರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ರೋಸ್ಟ್ರಮ್ ಸ್ಪೀರ್ಸ್ ಕ್ಲಬ್ನ ಸದಸ್ಯೆ ನಿಯತಿ ಅಮೀನ್ ನಿರೂಪಿಸಿ, ಶ್ರೀಶ್ ಕೊಟೇಗಾರ್ ವಂದಿಸಿದರು.
ಸೌಜನ್ಯಾ ಕೊಲೆ ಪ್ರಕರಣ; ವಿಶೇಷ ಕೋರ್ಟ್ ನಿರ್ದೇಶನ ಅನುಷ್ಠಾನಕ್ಕೆ ಕೋರಿದ್ದ ಅರ್ಜಿ ಸಂಬಂಧ ಸಿಬಿಐಗೆ ಹೈಕೋರ್ಟ್ ನೋಟಿಸ್
ಬೆಂಗಳೂರು : ಧರ್ಮಸ್ಥಳದ ಸೌಜನ್ಯಾ ಕೊಲೆ ಪ್ರಕರಣದಲ್ಲಿ ದೋಷಪೂರಿತ ತನಿಖೆ ನಡೆಸಿ ತಪ್ಪೆಸಗಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲು ಪ್ರಕರಣವನ್ನು ಖುಲಾಸೆ ಸಮಿತಿಯ ಮುಂದೆ ಇಡಬೇಕು ಎಂದು ಸಿಬಿಐ ವಿಶೇಷ ನ್ಯಾಯಾಲಯ ನೀಡಿದ್ದ ತೀರ್ಪಿನಲ್ಲಿನ ನಿರ್ದೇಶನ ಅನುಷ್ಠಾನಗೊಳಿಸಲು ಕೋರಿದ್ದ ಅರ್ಜಿಯ ಸಂಬಂಧ ಸಿಬಿಐ ಮತ್ತಿತರರಿಗೆ ಹೈಕೋರ್ಟ್ ನೋಟಿಸ್ ಜಾರಿಗೊಳಿಸಿದೆ. ಸಿಬಿಐ ವಿಶೇಷ ನ್ಯಾಯಾಲಯ 2023ರ ಜೂನ್ 16ರಂದು ಹೊರಡಿಸಿದ್ದ ತೀರ್ಪಿನಲ್ಲಿನ ನಿರ್ದೇಶನ ಜಾರಿಗೊಳಿಸಲು ಸಿಬಿಐಗೆ ನಿರ್ದೇಶಿಸುವಂತೆ ಕೋರಿ ಸೌಜನ್ಯಾ ತಾಯಿ ಕುಸುಮವತಿ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಬಿ.ಎಂ. ಶ್ಯಾಮ್ ಪ್ರಸಾದ್ ಅವರಿದ್ದ ಏಕಸದಸ್ಯ ನ್ಯಾಯಪೀಠ ವಿಚಾರಣೆ ನಡೆಸಿತು. ಅರ್ಜಿದಾರರ ಪರ ವಕೀಲ ಎಂ.ಆರ್. ಬಾಲಕೃಷ್ಣ ಅವರು, ಸಿಬಿಐ ಅಡಿ ಖುಲಾಸೆ ಸಮಿತಿ ಇದೆಯೇ ಎಂಬುದಕ್ಕೆ ಸಂಬಂಧಿಸಿದಂತೆ ಮಾಹಿತಿ ಪಡೆಯಲು ಸಾಧ್ಯವಾಗಿಲ್ಲ ಎಂದರು. ಇದನ್ನು ಆಲಿಸಿದ ನ್ಯಾಯಪೀಠ, ಪ್ರತಿವಾದಿಗಳಾದ ಗೃಹ ಇಲಾಖೆ, ಪೊಲೀಸ್ ಮಹಾನಿರ್ದೇಶಕರು, ಅಪರಾಧ ಮತ್ತು ತಾಂತ್ರಿಕ ಸೇವೆಗಳ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರು, ಪಶ್ಚಿಮ ವಿಭಾಗದ ಪೊಲೀಸ್ ಮಹಾನಿರ್ದೇಶಕರು, ದಕ್ಷಿಣ ಕನ್ನಡ ಪೊಲೀಸ್ ವರಿಷ್ಠಾಧಿಕಾರಿ, ಸಿಬಿಐ ದೆಹಲಿ ಮತ್ತು ಚೆನ್ನೈ ವಿಭಾಗದ ವಿಶೇಷ ತನಿಖಾ ದಳಕ್ಕೆ ನೋಟಿಸ್ ಜಾರಿಗೊಳಿಸಿ, ವಿಚಾರಣೆಯನ್ನು ಫೆಬ್ರವರಿ 23ಕ್ಕೆ ಮುಂದೂಡಿದೆ. ಪ್ರಕರಣವೇನು? ಧರ್ಮಸ್ಥಳದ ಪಿಯುಸಿ ವಿದ್ಯಾರ್ಥಿನಿ ಸೌಜನ್ಯಾ 2012ರ ಅಕ್ಟೋಬರ್ 9ರಂದು ನಾಪತ್ತೆಯಾಗಿದ್ದರು. ಮರುದಿನ ವಿದ್ಯಾರ್ಥಿನಿಯ ಮೃತದೇಹ ಪತ್ತೆಯಾಗಿತ್ತು. ಆಕೆಯ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಲಾಗಿದೆ ಎಂದು ಆರೋಪಿಸಲಾಗಿತ್ತು. ಮೊದಲಿಗೆ ಬೆಳ್ತಂಗಡಿ ಠಾಣೆಯಲ್ಲಿ ಆಕೆಯ ತಂದೆ ಚಂದಪ್ಪ ಗೌಡ ಪುತ್ರಿ ನಾಪತ್ತೆಯಾಗಿದ್ದಾರೆ ಎಂದು ದೂರು ನೀಡಿದ್ದರು. ಆನಂತರ ಅದನ್ನು ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನಾಗಿ ಪರಿವರ್ತಿಸಲಾಗಿತ್ತು. ಪ್ರಕರಣ 2013ರಲ್ಲಿ ಸಿಬಿಐಗೆ ವರ್ಗಾವಣೆಗೊಂಡಿದ್ದು, 2015ರಲ್ಲಿ ಮಂಗಳೂರಿನಿಂದ ಬೆಂಗಳೂರಿನ ಸಿಬಿಐ ನ್ಯಾಯಾಲಯಕ್ಕೆ ವರ್ಗಾವಣೆಗೊಂಡಿತ್ತು. ಇದರ ವಿಚಾರಣೆ ನಡೆಸಿದ್ದ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಸಿ.ಬಿ. ಸಂತೋಷ್ ಅವರು ಪ್ರಕರಣದಲ್ಲಿನ ಆರೋಪಿ ಸಂತೋಷ ರಾವ್ ಅವರನ್ನು ಅತ್ಯಾಚಾರ (ಐಪಿಸಿ ಸೆಕ್ಷನ್ 376) ಮತ್ತು ಕೊಲೆ (ಐಪಿಸಿ ಸೆಕ್ಷನ್ 302) ಪ್ರಕರಣದಲ್ಲಿ ನಿರ್ದೋಷಿ ಎಂದು ಘೋಷಿಸಿತ್ತು. ಅಲ್ಲದೇ, 11 ವರ್ಷಗಳಿಂದ ಜೈಲಿನಲ್ಲಿದ್ದ ಸಂತೋಷ್ ರಾವ್ನನ್ನು ತಕ್ಷಣ ಬಿಡುಗಡೆ ಮಾಡುವಂತೆ ನಿರ್ದೇಶಿಸಿತ್ತು. ಇದೇ ವೇಳೆ, ಕಳಪೆ ಮತ್ತು ದೋಷಪೂರಿತ ತನಿಖೆ ನಡೆಸಿರುವ ಮತ್ತು ತಪ್ಪೆಸಗಿರುವ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಲು ಈ ಪ್ರಕರಣವನ್ನು ಖುಲಾಸೆ ಸಮಿತಿಯ ಮುಂದೆ ಇಡಬೇಕು ಎಂದು ನಿರ್ದೇಶಿಸಿದ್ದ ನ್ಯಾಯಪೀಠ, ತನಿಖೆಯಲ್ಲಿ ವೈಜ್ಞಾನಿಕ ಸಾಕ್ಷಿಯು ವಿಫಲವಾಗಿದೆ ಎಂದು ಅಭಿಪ್ರಾಯಪಟ್ಟಿತ್ತು. ವಿಚಾರಣಾ ನ್ಯಾಯಾಲಯದ ಆದೇಶ ಪ್ರಶ್ನಿಸಿ ಸಿಬಿಐ ಸಲ್ಲಿಸಿದ್ದ ಮೇಲ್ಮನವಿಯನ್ನು ಹೈಕೋರ್ಟ್ ವಜಾಗೊಳಿಸಿತ್ತು.
ಫೆ.8: ಸಮಸ್ತ ಶತಮಾನೋತ್ಸವ ಅಂತಾರಾಷ್ಟ್ರೀಯ ಮಹಾ ಸಮ್ಮೇಳನ
ಕರ್ನಾಟಕ, ಕೇರಳ, ತಮಿಳುನಾಡು ಮುಖ್ಯಮಂತ್ರಿಗಳ ಉಪಸ್ಥಿತಿ
ಮಂಗಳೂರು| ಶಾಸಕ ವೇದವ್ಯಾಸ ಕಾಮತ್ರ ಪತ್ನಿಯ ಅವಹೇಳನ ಪ್ರಕರಣ: ಆರೋಪಿ ಸೆರೆ
ಮಂಗಳೂರು, ಫೆ.7: ಶಾಸಕ ವೇದವ್ಯಾಸ ಕಾಮತ್ ಮತ್ತವರ ಪತ್ನಿಯ ವಿರುದ್ಧ ಅಧಿವೇಶನದಲ್ಲಿ ಅರಸೀಕೆರೆ ಕ್ಷೇತ್ರದ ಶಾಸಕ ಕೆ.ಎಂ. ಶಿವಲಿಂಗೇ ಗೌಡ ಹೇಳಿದ್ದಾರೆ ಎನ್ನಲಾದ ಮಾತನ್ನು ಉಲ್ಲೇಖಿಸಿ ಸಾಮಾಜಿಕ ಜಾಲತಾಣದಲ್ಲಿ ಸಂದೇಶ ಹಾಕಿದ್ದ ವ್ಯಕ್ತಿಯನ್ನು ಬಂದರು ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಬಂಟ್ವಾಳ ತಾಲೂಕಿನ ಅಮ್ಟಾಡಿ ಗ್ರಾಮದ ನಿವಾಸಿ ಶರಣ್ ರೈ (29) ಬಂಧಿತ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ. ಇಂತಹ ಹೇಳಿಕೆಯಿಂದ ಶಾಸಕರ ಪತ್ನಿಯ ಬಗ್ಗೆ ಸಮಾಜದಲ್ಲಿ ಅಗೌರವ ಉಂಟಾಗಿದೆ. ಮಹಿಳೆಯರ ಬಗ್ಗೆ ಕೀಳು ಅಭಿರುಚಿಯಿಂದ ಪೋಸ್ಟ್ ಮಾಡಿದ್ದಾಗಿದೆ ಎಂಬ ದೂರಿನ ಹಿನ್ನಲೆಯಲ್ಲಿ ಬಂದರು ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ಆರೋಪಿಯನ್ನು ಬಂಧಿಸಿದ ಬಳಿಕ ಜಾಮೀನಿನ ಮೇಲೆ ಬಿಡುಗಡೆಗೊಳಿಸಿದ್ದಾರೆ.
ರಷ್ಯಾ ಮತ್ತು ಉಕ್ರೇನ್ ಯುದ್ಧಕ್ಕೆ 4 ವರ್ಷ ಪೂರ್ಣವಾಗುತ್ತಿದ್ದು, ಇದೇ ಸಮಯದಲ್ಲಿ ಅಮರಿಕದ ನಾಯಕರು ಕೂಡ ಅಳೆದು ತೂಗಿ ಯುದ್ಧ ನಿಲ್ಲಿಸಲು ಮಾಸ್ಟರ್ ಪ್ಲಾನ್ ಮಾಡಿದ್ದಾರೆ. ಉಕ್ರೇನ್ ಈ ಸಮಯದಲ್ಲಿ ಅಮೆರಿಕ ಹೇಳಿದ ಅಷ್ಟೂ ಮಾತನ್ನು ಕೇಳುತ್ತಾ, ಡೊನಾಲ್ಡ್ ಟ್ರಂಪ್ ಅವರ ಅಜ್ಞೆಗೆ ಜೈ ಎನ್ನುತ್ತಿದೆ. ಹೀಗಾಗಿಯೇ ಆದಷ್ಟು ಬೇಗ ಯುದ್ಧ ನಿಲ್ಲುವ ನಿರೀಕ್ಷೆ ಕೂಡ ಮೂಡಿತ್ತು,
ಹೈಕಮಾಂಡ್ ಹೇಳಿದಂತೆ ಕೇಳುವೆ: ಡಿ.ಕೆ. ಶಿವಕುಮಾರ್
ಮಂಗಳೂರು: ನಾನು ಸಿಎಂ ಆಗಬೇಕೆಂಬ ಆಸೆ ಜನರಿಗೂ ಇದೆ, ಶಾಸಕರಿಗೂ ಇದೆ. ಆದರೆ ಪಕ್ಷದ ಹೈಕಮಾಂಡ್ ಏನು ಹೇಳುತ್ತದೆಯೋ ಅದರಂತೆ ಕೇಳುವೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು. ಶನಿವಾರ ನಗರದಲ್ಲಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು ರಾಜ್ಯ ಬಜೆಟ್ ಬಳಿಕ ಅಧಿಕಾರ ಹಂಚಿಕೆ ಆಗುವುದೇ ಎಂದು ಕೇಳಿದಾಗ ಸಮಯವೇ ಉತ್ತರ ನೀಡಲಿದೆ ಎಂದರು. ಪರಮೇಶ್ವರ್ ಮುಖ್ಯಮಂತ್ರಿ ಆಗಬೇಕು ಎಂದು ದಲಿತ ಸಂಘಟನೆಗಳ ಒತ್ತಾಯದ ಬಗ್ಗೆ ಪ್ರತಿಕ್ರಿಯಿಸಿದ ಡಿಕೆಶಿ, ಅವರವರ ಅಭಿಮಾನಿಗಳು ಆಸೆ ಪಡುತ್ತಾರೆ. ಅದನ್ನು ನಾನು ಬೇಡ ಎಂದು ಹೇಳಲು ಆಗುವುದಿಲ್ಲ ಎಂದರು. ಮೆಟ್ರೋ ದರ ಬಗ್ಗೆ ತೀರ್ಮಾನ ಮಾಡಲು ಪ್ರತ್ಯೇಕ ಸಮಿತಿ ಇದೆ. ಕೇಂದ್ರ ಸರಕಾರದ ಕಾರ್ಯದರ್ಶಿ ಇದರ ಮುಖ್ಯಸ್ಥರು. ಮೆಟ್ರೋ ದರ ಏರಿಕೆ ವಿಚಾರವಾಗಿ ಸರಕಾರದ ಅಭಿಪ್ರಾಯವನ್ನು ಕೇಳಿಲಿ ಎಂದು ಡಿಸಿಎಂ ಸ್ಪಷ್ಟಪಡಿಸಿದರು.
Gruhalakshmi Scheme: ಗೃಹಲಕ್ಷ್ಮಿ ಯೋಜನೆ ಹಣ ದುರುಪಯೋಗಕ್ಕೆ ಕಡಿವಾಣ ಹಾಕಲು ಹೊಸ ನಿಯಮ
Gruhalakshmi Scheme: ರಾಜ್ಯ ಸರ್ಕಾರ ಜಾರಿ ಮಾಡಿರುವ ಪಂಚ ಗ್ಯಾರಂಟಿಗಳಲ್ಲಿ ಗೃಹಲಕ್ಷ್ಮಿ ಯೋಜನೆ ಕೂಡ ಒಂದಾಗಿದೆ. ಇದರಡಿಯಲ್ಲಿ ಪ್ರತಿ ತಿಂಗಳು ಪ್ರತಿ ಮನೆ ಯಜಮಾನಿ ಖಾತೆಗೆ 2,000 ರೂಪಾಯಿ ಹಣ ಹಾಕಲಾಗುತ್ತದೆ. ಆದರೆ, ಈ ಯೋಜನೆಯನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ ಎನ್ನುವ ಆರೋಪಗಳು ಕೇಳಿಬಂದಿದ್ದವು. ಆದ್ದರಿಂದ ಸರ್ಕಾರ ಇದೀಗ ಹೊಸ ನಿಯಮ ಜಾರಿಗೆ ಮುಂದಾಗಿದೆ. ರಾಜ್ಯ ಸರ್ಕಾರದ ಪ್ರಮುಖ
ಫೆ.8: ಹರೇಕಳ ಹಾಜಬ್ಬರ ಪಿಯು ಕಾಲೇಜು ಕಟ್ಟಡಕ್ಕೆ ಶಿಲಾನ್ಯಾಸ ಭಾಗ್ಯ
ಮಂಗಳೂರು: ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬ ಅವರು ತನ್ನೂರಿನಲ್ಲಿ ಆರಂಭಿಸಿದ ಪಿಯು ಕಾಲೇಜು ಕಟ್ಟಡಕ್ಕೆ ಫೆ.8ರಂದು ಶಿಲಾನ್ಯಾಸ ಭಾಗ್ಯ ಲಭಿಸಲಿದೆ. ಮಂಗಳೂರು ಕ್ಷೇತ್ರದ ಶಾಸಕರೂ ಆಗಿರುವ ವಿಧಾನ ಸಭೆಯ ಸ್ಪೀಕರ್ ಯು.ಟಿ.ಖಾದರ್ ಅವರು ಫೆ.8ರಂದು ಬೆಳಗ್ಗೆ 9:30ಕ್ಕೆ ಹರೇಕಳ ನ್ಯೂಪಡ್ಪುವಿನ ಸರಕಾರಿ ಪದವಿಪೂರ್ವ ಕಾಲೇಜು (ಹಾಜಬ್ಬ) ಕಟ್ಟಡದ ಎರಡು ಕೊಠಡಿಗಳಿಗೆ ಶಿಲಾನ್ಯಾಸ ನೆರವೇರಿಸಲಿದ್ದಾರೆ. ಅಂದಹಾಗೆ, ಮಂಗಳೂರಿನ ಎಂಆರ್ಪಿಎಲ್ ಕಂಪೆನಿಯು ಈ ಎರಡು ಕೊಠಡಿಗಳ ನಿರ್ಮಾಣಕ್ಕೆ 45 ಲಕ್ಷ ರೂ. ಅನುದಾನ ಒದಗಿಸಿದೆ. ಈಗಾಗಲೆ ಪಿಯು ತರಗತಿ ಆರಂಭಿಸಿದ್ದರೂ ಕೂಡ ಕಟ್ಟಡವಿಲ್ಲದೆ ವಿದ್ಯಾರ್ಥಿಗಳು ಸಮಸ್ಯೆ ಎದುರಿಸುವಂತಾಗಿತ್ತು. ಮುಂದಿನ ಶೈಕ್ಷಣಿಕ ವರ್ಷದೊಳಗೆ ಹೊಸ ಕಟ್ಟಡ ತಲೆ ಎತ್ತದಿದ್ದರೆ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಇಳಿಮುಖವಾದೀತು ಎಂದು ಆತಂಕಗೊಂಡಿರುವ ಹರೇಕಳ ಹಾಜಬ್ಬ ಕಾಲೇಜಿನ ಕಟ್ಟಡ ನಿರ್ಮಾಣಕ್ಕಾಗಿ ಸರಕಾರಿ ಹಂತದ ಪ್ರಯತ್ನವಲ್ಲದೆ ಖಾಸಗಿ ಸಂಸ್ಥೆ, ಕಂಪೆನಿ, ವ್ಯಕ್ತಿಗಳನ್ನು ಸಂಪರ್ಕಿಸಿ ಸಹಕಾರ ಕೋರಿದ್ದರು. ಅದರಂತೆ ಎಂಆರ್ಪಿಎಲ್ 45 ಲಕ್ಷ ರೂ. ಅನುದಾನ ಒದಗಿಸಿದೆ. ಕಾಲೇಜು ಕಟ್ಟಡಕ್ಕಾಗಿ ದಾನಿಗಳ ನೆರವು ಕೋರುವುದರ ಜೊತೆಗೆ ಆಸುಪಾಸಿನ ಗ್ರಾಮಗಳಲ್ಲಿರುವ ಸರಕಾರಿ ಪ್ರೌಢಶಾಲೆಗಳಿಗೆ ತೆರಳಿ 2026-27ನೆ ಶೈಕ್ಷಣಿಕ ವರ್ಷದ ಪ್ರವೇಶಾತಿಗಾಗಿ ವಿದ್ಯಾರ್ಥಿಗಳ ಮತ್ತು ಪೋಷಕರ ಮನ ಒಲಿಕೆಗೂ ಹರೇಕಳ ಹಾಜಬ್ಬ ಮುಂದಾಗಿದ್ದಾರೆ. 15 ವರ್ಷದ ಪ್ರಯತ್ನದ ಫಲವಾಗಿ ಮಂಜೂರಾದ ಕಾಲೇಜು ವಿದ್ಯಾರ್ಥಿಗಳ ಕೊರತೆಯಿಂದ ಮುಚ್ಚಬಾರದು ಎಂಬ ಕಳಕಳಿಯೊಂದಿಗೆ ಕಟ್ಟಡ ನಿರ್ಮಾಣಕ್ಕೆ ಪ್ರಯತ್ನ ಸಾಗಿಸಿದ್ದಾರೆ. 2022ರ ನವಂಬರ್ 21ರಂದು ಹರೇಕಳ ಗ್ರಾಮದ ನ್ಯೂಪಡ್ಪು-ಗ್ರಾಮಚಾವಡಿಯ ಮಧ್ಯೆ ಮುಖ್ಯರಸ್ತೆಗೆ ತಾಗಿ 1.30 ಎಕರೆ ಜಮೀನನ್ನು ಸರಕಾರ ಮಂಜೂರುಗೊಳಿಸಿತ್ತು. 2024ರ ಜ. 9ರಂದು ರಾಜ್ಯ ಸರಕಾರದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ (ಪದವಿ ಪೂರ್ವ ಶಿಕ್ಷಣ)ಯ ಅಧೀನ ಕಾರ್ಯದರ್ಶಿಯಾಗಿದ್ದ ಪದ್ಮಿನಿ ಎಸ್.ಎನ್. ಸರಕಾರಿ ಪ್ರೌಢಶಾಲೆಯನ್ನು ಉನ್ನತೀಕರಿಸಿ ಹೊಸದಾಗಿ ಸರಕಾರಿ ಪದವಿ ಪೂರ್ವ ಕಾಲೇಜನ್ನು ಪ್ರಾರಂಭಿಸಲು ಅನುಮತಿ ನೀಡಿದ್ದರು. ಅದರಂತೆ 2024-25ನೆ ಶೈಕ್ಷಣಿಕ ವರ್ಷದಿಂದ ಹಾಜಬ್ಬರು ಸರಕಾರಿ ಪ್ರೌಢಶಾಲೆಯ ಕಟ್ಟಡದಲ್ಲೇ ಪಿಯು ತರಗತಿ ಆರಂಭಿಸಿದ್ದರು. 2025ರ ಜೂನ್ 17ರಂದು ಲೋಕೋಪಯೋಗಿ ಇಲಾಖೆಯು ಹೊಸ ಕಟ್ಟಡದ ನೀಲನಕ್ಷೆಯೊಂದಿಗೆ 5.30 ಕೋ.ರೂ. ಅಂದಾಜು ಪಟ್ಟಿ ತಯಾರಿಸಿತ್ತು. ಆ ನೀಲನಕ್ಷೆಯನ್ನು ಇದೀಗ ಬದಲಾಯಿಸಲಾಗಿದೆ. ಅಂದಾಜು ವೆಚ್ಚವೂ ಹೆಚ್ಚಾಗುವ ಸಾಧ್ಯತೆ ಇದೆ. ಸ್ಪೀಕರ್ ಯು.ಟಿ.ಖಾದರ್ರ ವಿಶೇಷ ಸಹಕಾರ ಮತ್ತು ಸ್ಥಳೀಯ ಜನಪ್ರತಿನಿಧಿಗಳು, ಪ್ರಮುಖರು, ಹರೇಕಳ ಗ್ರಾಮದ ಹಾಗೂ ಸಾರ್ವಜನಿಕರ ನೆರವಿನಿಂದ ಪಿಯು ಕಾಲೇಜಿಗೆ ಎರಡು ಕೊಠಡಿಗೆ ಶಿಲಾನ್ಯಾಸ ನಡೆಯಲಿದೆ. ಈಗಾಗಲೆ ಜಮೀನನ್ನು ಸಮತಟ್ಟು ಮಾಡಲಾಗಿದೆ. ಬೋರ್ವೆಲ್ ಕೊರೆಯಲಾಗಿದೆ. ಕಟ್ಟಡ ನಿರ್ಮಾಣಕ್ಕೆ ಬೆಳ್ತಂಗಡಿ ಶಾಸಕರು 5 ಲಕ್ಷ ರೂ. ನೀಡಿದ್ದಾರೆ. ಪಿ.ಎ. ಶಿಕ್ಷಣ ಸಂಸ್ಥೆಯವರು ಸುಮಾರು 6:50 ಲಕ್ಷ ರೂ.ವೆಚ್ಚದ ಪೀಠೋಪಕರಣ ಒದಗಿಸಿದ್ದಾರೆ. ಪೂರ್ಣ ಕಟ್ಟಡ ನಿರ್ಮಿಸಲು ಇನ್ನೂ ಸಾಕಷ್ಟು ಅನುದಾನ ಬೇಕಾಗಿದೆ. ಹಾಗಾಗಿ ಸರಕಾರದ ಅನುದಾನದೊಂದಿಗೆ ಖಾಸಗಿ ಉದ್ಯಮ ಕಂಪೆನಿಗಳು, ಸಂಸ್ಥೆಗಳು, ಖಾಸಗಿ ವ್ಯಕ್ತಿಗಳ ನೆರವಿನ ನಿರೀಕ್ಷೆಯಲ್ಲಿರುವೆ. -ಹರೇಕಳ ಹಾಜಬ್ಬ, ಪದ್ಮಶ್ರೀ ಪುರಸ್ಕೃತರು
ರೀಲ್ಗಾಗಿ ನೇಣಿಗೆ ಕೊರಳೊಡ್ಡಿ ಜೀವ ಕಳೆದುಕೊಂಡ ಮಹಿಳೆ!
ಲಕ್ನೋ: ಉತ್ತರ ಪ್ರದೇಶದ ಬಂಡಾ ಜಿಲ್ಲೆಯಲ್ಲಿ ʼರೀಲ್ʼ ಚಿತ್ರೀಕರಿಸುವ ಪ್ರಯತ್ನದಲ್ಲಿ ಮಹಿಳೆಯೋರ್ವಳು ತನ್ನ ಜೀವವನ್ನೇ ಕಳೆದುಕೊಂಡಿದ್ದಾಳೆ. ಮೋಹಿನಿ (27) ಮೃತ ಮಹಿಳೆಯಾಗಿದ್ದು,ತನ್ನ ಮನೆಯಲ್ಲಿ ರೀಲ್ ಚಿತ್ರೀಕರಿಸಲು ಪ್ರಯತ್ನಿಸುತ್ತಿದ್ದಾಗ ಈ ಆಘಾತಕಾರಿ ಘಟನೆ ನಡೆದಿದೆ. ಕುಟುಂಬ ಸದಸ್ಯರ ಪ್ರಕಾರ ಮೋಹಿನಿ ನೇಣು ಬಿಗಿದುಕೊಳ್ಳುವ ದೃಶ್ಯವನ್ನು ಪುನರ್ ಸೃಷ್ಟಿಸುತ್ತಿದ್ದಳು. ಸ್ಟೂಲ್ ಮೇಲೆ ನಿಂತುಕೊಂಡು ತನ್ನ ಕುತ್ತಿಗೆಯ ಸುತ್ತ ನೇಣಿನ ಕುಣಿಕೆಯನ್ನು ಹಾಕಿಕೊಂಡಿದ್ದ ಆಕೆ ತನ್ನ ಮೊಬೈಲ್ ಫೋನ್ನಲ್ಲಿ ಆ ದೃಶ್ಯವನ್ನು ಚಿತ್ರೀಕರಿಸುತ್ತಿದ್ದಳು. ಸದಸ್ಯರ ಪ್ರಕಾರ, ಮೃತ ಮೋಹಿನಿಯು ನೇಣು ಬಿಗಿದುಕೊಳ್ಳುವ ದೃಶ್ಯವನ್ನು ಮರುಸೃಷ್ಟಿ ಮಾಡುತ್ತಿದ್ದರು ಎನ್ನಲಾಗಿದೆ. ತನ್ನ ಕುತ್ತಿಗೆಯ ಸುತ್ತ ಹಗ್ಗ ಬಿಗಿದುಕೊಂಡಿರುವ ಮಹಿಳೆಯು, ಸ್ಟೂಲ್ ಮೇಲೆ ನಿಂತುಕೊಂಡು ಅದನ್ನು ತನ್ನ ಮೊಬೈಲ್ ನಲ್ಲಿ ಚಿತ್ರೀಕರಿಸಿಕೊಳ್ಳಲು ಮುಂದಾಗಿದ್ದಾರೆ. ಆದರೆ, ಕೆಲವೇ ಕ್ಷಣಗಳಲ್ಲಿ ಪರಿಸ್ಥಿತಿ ದುರಂತಕ್ಕೆ ತಿರುಗಿದೆ. ಆಕೆ ಸ್ಟೂಲ್ ಮೇಲಿಂದ ಜಾರಿದಳೊ ಅಥವಾ ನಿಯಂತ್ರಣ ಕಳೆದುಕೊಂಡಳೊ ಎಂಬುದು ಇನ್ನೂ ಅಸ್ಪಷ್ಟವಾಗಿದ್ದರೂ, ಆಕೆಯ ಸುತ್ತ ಹಗ್ಗ ಬಿಗಿದುಕೊಂಡು ಕೆಲವೇ ಕ್ಷಣಗಳಲ್ಲಿ ಆಕೆ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಮೋಹಿನಿಯ ನಾಲ್ಕು ವರ್ಷದ ಮಗಳು ಕೋಣೆಯನ್ನು ಪ್ರವೇಶಿಸಿದಾಗ ಈ ಘಟನೆ ಬೆಳಕಿಗೆ ಬಂದಿದೆ. ಪ್ರಕರಣವನ್ನು ದಾಖಲಿಸಿಕೊಂಡಿರುವ ಪೋಲಿಸರು ತನಿಖೆ ನಡೆಸುತ್ತಿದ್ದಾರೆ.
ಸಾಲ ವಸೂಲಾತಿ ಹೆಸರಿನಲ್ಲಿ ನಿಂದನೆ: ಪ್ರಕರಣ ದಾಖಲು
ಮಣಿಪಾಲ, ಫೆ.7: ಬ್ಯಾಂಕಿನ ವಸೂಲಾತಿ ಅಧಿಕಾರಿಗಳೆಂದು ಹೇಳಿ ಕೊಂಡು ಮನೆಗೆ ಪ್ರವೇಶಿಸಿ ಮಹಿಳೆಗೆ ಅವಾಚ್ಯ ಶಬ್ದಗಳಿಂದ ಬೈದು ನಿಂದನೆ ಮಾಡಿರುವ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಉಡುಪಿ ಕುಂಜಿಬೆಟ್ಟುವಿನ ಈಶ್ವರ ಎಂಬವರ ಮನೆಗೆ ಬ್ಯಾಂಕಿನ ವಸೂಲಾತಿ ಅಧಿಕಾರಿಗಳೆಂದು ಹೇಳಿಕೊಂಡು ಸುಲೋಚನಾ, ಕೃಷ್ಣ ಮತ್ತು ಹರಿಣಾಕ್ಷಿ ಎಂಬವರು ಬಂದು ಈಶ್ವರ ತಾಯಿಯನ್ನು ಉದ್ದೇಶೀಸಿ ಅವಾಚ್ಯ ಶಬ್ದಗಳಿಂದ ಬೈದು ನಿಂದನೆ ಮಾಡಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.
ಮನೆಯ ದಾರಂದ ಬಿದ್ದು ಕಾರ್ಮಿಕ ಮೃತ್ಯು
ಉಡುಪಿ, ಫೆ.7: ನಿರ್ಮಾಣ ಹಂತದಲ್ಲಿದ್ದ ಮನೆಯ ಮರದ ದಾರಂದ ಮೈಮೇಲೆ ಬಿದ್ದು ಕಾರ್ಮಿಕರೊಬ್ಬರು ಮೃತಪಟ್ಟ ಘಟನೆ ಕೊರಂಗ್ರಪಾಡಿ ಗ್ರಾಮದ ನಂದಗೋಕುಲ ಎಂಬಲ್ಲಿ ಫೆ.6ರಂದು ಮಧ್ಯಾಹ್ನ ವೇಳೆ ನಡೆದಿದೆ. ಮೃತರನ್ನು ಬಸಪ್ಪ ಮಾದರ(38) ಎಂದು ಗುರುತಿಸಲಾಗಿದೆ. ಇವರು ನಂದಗೋಕುಲದ ರಾಘವೇಂದ್ರ ತಂತ್ರಿ ಎಂಬವರ ಹೊಸಮನೆ ನಿರ್ಮಾಣದ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದು, ಮೇಸ್ತ್ರಿ ಜೊತೆ ಮನೆಯ ಮುಖ್ಯದ್ವಾರದ ಮರದ ದಾರಂದವನ್ನು ನಿಲ್ಲಿಸಿದ್ದರು. ಬಳಿಕ ಊಟ ಮಾಡಿ ಬಂದ ಬಸಪ್ಪ ದಾರಂದ ನಿಲ್ಲಿಸಿದ ಸೀಟ್ಔಟ್ನಲ್ಲಿ ಮಲಗಿದ್ದರು. ಈ ವೇಳೆ ದಾರಂದ ಆಕಸ್ಮಿಕ ವಾಗಿ ಬಸಪ್ಪ ಮಾದರ ಅವರ ತಲೆಯ ಮೇಲೆ ಬಿತ್ತೆನ್ನಲಾಗಿದೆ. ಇದರಿಂದ ಗಂಭೀರವಾಗಿ ಗಾಯಗೊಂಡ ಉಡುಪಿ ಖಾಸಗಿ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟರು ಎಂದು ತಿಳಿದುಬಂದಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಂಪಿ ಉತ್ಸವ ವೇದಿಕೆಯಲ್ಲಿ ಬುದ್ಧನ ಭಾವಚಿತ್ರ ಬಿಡುಗಡೆಗೆ ಮನವಿ
ವಿಜಯನಗರ/ಹಂಪಿ (ಕಮಲಾಪುರ): ಹಂಪಿ ಉತ್ಸವವು ನಾಡಹಬ್ಬ ಹಾಗೂ ಶಾಂತಿಯ ಪ್ರತೀಕವಾಗಿ ಆಚರಿಸಲಾಗುತ್ತದೆ. ಈ ಹಿನ್ನೆಲೆ ಹಂಪಿ ಭಾಗದ ಪತ್ರಕರ್ತ ಚಿದಾನಂದ ಅವರು ಬುದ್ಧನ ಭಾವಚಿತ್ರವನ್ನು ಸ್ವತಃ ಚಿತ್ರಿಸಿ, ಅದನ್ನು ಹಂಪಿ ಉತ್ಸವದ ಪ್ರಮುಖ ವೇದಿಕೆಯಲ್ಲಿ ಬಿಡುಗಡೆ ಮಾಡುವಂತೆ ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದಾರೆ. ಶಾಂತಿ, ಸೌಹಾರ್ದತೆ ಹಾಗೂ ಭಾವೈಕ್ಯತೆಯ ಸಂಕೇತವಾಗಿರುವ ಬುದ್ಧನ ಭಾವಚಿತ್ರವನ್ನು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕೊಡುಗೆಯಾಗಿ ನೀಡುವ ಉದ್ದೇಶ ಹೊಂದಿರುವುದಾಗಿ ಅವರು ತಿಳಿಸಿದ್ದಾರೆ. ಈ ಕಾರ್ಯಕ್ಕೆ ಜಿಲ್ಲಾಡಳಿತ ಅಗತ್ಯ ಸಹಕಾರ ನೀಡಬೇಕು ಎಂದು ಪತ್ರಕರ್ತ ಚಿದಾನಂದ ಅವರು ಪತ್ರಿಕೆಯ ಮೂಲಕ ಮನವಿ ಮಾಡಿದ್ದಾರೆ.
ಬೈಕ್ ಢಿಕ್ಕಿ: ಎಲೆಕ್ಟ್ರಿಕಲ್ ವೀಲ್ ಚೇಯರ್ ವಾಹನ ಸವಾರ ಮೃತ್ಯು
ಉಡುಪಿ, ಫೆ.7: ಬೈಕೊಂದು ಎಲೆಕ್ಟ್ರಿಕಲ್ ವೀಲ್ ಚೇಯರ್ ವಾಹನಕ್ಕೆ ಢಿಕ್ಕಿ ಹೊಡೆದ ಪರಿಣಾಮ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಪುತ್ತೂರು ಗ್ರಾಮದ ಶ್ರೀಓಂಕಾರೇಶ್ವರ ಭಜನಾ ದೇಗುಲದ ಎದುರುಗಡೆ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಫೆ.6ರಂದು ಮಧ್ಯಾಹ್ನ ವೇಳೆ ನಡೆದಿದೆ. ಮೃತರನ್ನು ಮಧ್ವಮೂರ್ತಿ(61) ಎಂದು ಗುರುತಿಸಲಾಗಿದೆ. ಬೈಕ್ ಸವಾರ ಹರಿರಾವ್ ಎಂಬವರು ಗಾಯಗೊಂಡು ಉಡುಪಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಉಡುಪಿ ಕಡೆಯಿಂದ ಸಂತೆಕಟ್ಟೆ ಕಡೆಗೆ ಹೋಗುತ್ತಿದ್ದ ಬೈಕ್, ಅದೇ ರಸ್ತೆಯಲ್ಲಿ ಎದುರಿನಲ್ಲಿ ನಿಟ್ಟೂರು ಕಡೆಯಿಂದ ಅಂಬಾಗಿಲು ಕಡೆಗೆ ಮಧ್ವಮೂರ್ತಿ ಚಲಾಯಿಸಿಕೊಂಡು ಹೋಗುತ್ತಿದ್ದ ಎಲೆಕ್ಟ್ರಿಕಲ್ ವೀಲ್ ಚೇಯರ್ ವಾಹನಕ್ಕೆ ಢಿಕ್ಕಿ ಹೊಡೆಯಿತ್ತೆನ್ನಲಾಗಿದೆ. ಇದರಿಂದ ರಸ್ತೆಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ ಮಧ್ವಮೂರ್ತಿ, ಉಡುಪಿ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟರು ಎಂದು ತಿಳಿದುಬಂದಿದೆ. ಈ ಬಗ್ಗೆ ಉಡುಪಿ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪಿ.ಎಂ ಸೂರ್ಯಘರ್ ಯೋಜನೆಯಡಿ 4435 ಅರ್ಜಿ ಸಲ್ಲಿಕೆ: ಕೋಟ ಶ್ರೀನಿವಾಸ ಪೂಜಾರಿ
ಉಡುಪಿ, ಫೆ.7: ಪ್ರಧಾನಮಂತ್ರಿ ಸೂರ್ಯಘರ್ ಯೋಜನೆಯಡಿ ಜಿಲ್ಲೆಯಲ್ಲಿ 4,435 ಮಂದಿ ಅರ್ಜಿ ಸಲ್ಲಿಸಿದ್ದು, ಇವರಲ್ಲಿ 4,413 ಮಂದಿಗೆ ಆರ್ಥಿಕ ಅನುಮೋದನೆ ದೊರೆತಿದೆ. 1,592 ಮಂದಿ ವೆಂಡರ್ಗಳನ್ನು ಆಯ್ಕೆ ಮಾಡಿಕೊಂಡಿದ್ದಾರೆ. 1,222 ಮಂದಿ ಈಗಾಗಲೇ ಯೋಜನೆಯನ್ನು ಅನುಷ್ಠಾನಗೊಳಿಸಿದ್ದು ಇವರಲ್ಲಿ 1,135 ಮಂದಿಗೆ ಈಗಾಗಲೇ ಸಬ್ಸಿಡಿ ಹಣ ಸಹ ನೀಡಲಾಗಿದೆ ಎಂದು ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಲೋಕಸಭಾ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ. ಶನಿವಾರ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಪ್ರಧಾನಮಂತ್ರಿ ಸೂರ್ಯ ಘರ್ ಯೋಜನೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು. ಯೋಜನೆಯು ಸಬ್ಸಿಡಿ ದರದಲ್ಲಿ ಮೇಲ್ಛಾವಣಿಗೆ ಸೌರಫಲಕಗಳನ್ನು ಅಳವಡಿಸುವ ಮೂಲಕ ಉಚಿತ ವಿದ್ಯುತ್ ಒದಗಿಸುವ ಜೊತೆಗೆ ಜನರ ವಿದ್ಯುಚ್ಛಕ್ತಿಯ ವೆಚ್ಚವನ್ನು ಗಮನಾರ್ಹವಾಗಿ ಕಡಿಮೆ ಮಾಡಿದೆ ಎಂದು ಅವರು ವಿವರಿಸಿದರು. ಈ ಯೋಜನೆಯಡಿ ಸೌರಶಕ್ತಿಗೆ ಪರಿವರ್ತನೆಯ ಇಂಧನ ಉಳಿಸುವಿಕೆ ಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದ ಅವರು, ಇದರಿಂದಾಗಿ ಜನತೆ ತಮ್ಮ ವಿದ್ಯುತ್ ಬಿಲ್ಗಳಲ್ಲಿ ಗಮನಾರ್ಹ ಉಳಿತಾಯವನ್ನು ಪಡೆಯಲು ಸಾಧ್ಯವಾಗುತ್ತದೆ ಎಂದರಲ್ಲದೇ ಇದರ ಜೊತೆಜೊತೆಗೆ ತಮ್ಮ ಮನೆಯ ಮೇಲ್ಛಾವಣಿಯಲ್ಲಿ ಅಳವಡಿ ಸುವ ಸೌರಶಕ್ತಿ ವ್ಯವಸ್ಥೆಗಳಿಂದ ಉತ್ಪಾದಿಸುವ ಹೆಚ್ಚುವರಿ ವಿದ್ಯುತ್ನ್ನು ಮೆಸ್ಕಾಂಗಳಿಗೆ ಮಾರಾಟ ಮಾಡುವ ಮೂಲಕ ಆದಾಯ ಗಳಿಸುವ ಅವಕಾಶವೂ ಇರುತ್ತದೆ. ತಿಂಗಳಿಗೆ 3 ಕಿಲೋವ್ಯಾಟ್ನಲ್ಲಿ ಸರಾಸರಿ 300 ಯೂನಿಟ್ಗಳಿಗಿಂತ ಹೆಚ್ಚು ವಿದ್ಯುತ್ ಉತ್ಪಾದಿಸಬಹುದಾಗಿದೆ ಎಂದರು. ಐದು ಗ್ರಾಮಗಳು ಆಯ್ಕೆ: ಜಿಲ್ಲೆಯ 5 ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಮಾದರಿ ಸೋಲಾರ್ ಗ್ರಾಮಕ್ಕೆ ಬೈಂದೂರು ತಾಲೂಕಿನ ಕಿರಿಮಂಜೇಶ್ವರ, ಬ್ರಹ್ಮಾವರ ತಾಲೂಕಿನ ಕೋಟತಟ್ಟು, ಉಡುಪಿ ತಾಲೂಕಿನ ಉಪ್ಪೂರು, ಕಾಪು ತಾಲೂಕಿನ ಮಜೂರು ಹಾಗೂ ಕಾರ್ಕಳ ತಾಲೂಕಿನ ನಿಟ್ಟೆ ಗ್ರಾಮಗಳನ್ನು ಆಯ್ಕೆ ಮಾಡಲಾಗಿದೆ. ಸೌರ ಶಕ್ತಿ ಘಟಕ ಅಳವಡಿಸಲು ಚಾಲೆಂಜ್ ಅವಧಿಯನ್ನು ಡಿಸೆಂಬರ್ 31ರವರೆಗೆ ನಿಗದಿ ಪಡಿಸಿದ್ದು, ಕಿರಿಮಂಜೇಶ್ವರ ಗ್ರಾಮದವರು 26 ಕಿಲೋ ವ್ಯಾಟ್, ಕೋಟತಟ್ಟು ಗ್ರಾಮದವರು 1777 ಕಿಲೋ ವ್ಯಾಟ್, ಉಪ್ಪೂರು ಗ್ರಾಮದವರು 163 ಕಿಲೋ ವ್ಯಾಟ್, ಮಜೂರು 13.88 ಕಿ.ವ್ಯಾಟ್ ಹಾಗೂ ನಿಟ್ಟೆ ಗ್ರಾಮದವರು 1577.31 ಕಿ.ವ್ಯಾ. ಸೋಲಾರ್ ಅನ್ನು ಅಳವಡಿಸಿಕೊಂಡಿದ್ದಾರೆ ಎಂದರು. ಒಂದು ಕೋಟಿ ರೂ.ಬಹುಮಾನ: ಇವುಗಳಲ್ಲಿ ಯಾವ ಗ್ರಾಮದಲ್ಲಿ ಅತೀ ಹೆಚ್ಚು ಸೌರ ಶಕ್ತಿ ಘಟಕಗಳನ್ನು ಪರಿಣಾತ್ಮಕವಾಗಿ ಅನುಷ್ಠಾನ ಮಾಡಿರುವ ಕುರಿತು ಮೈಸೂರು ರೀಜನಲ್ ಕುೀಷನ್ ಅವರು ಪರಾಮರ್ಶಿಸಿ, ಒಂದು ಗ್ರಾಮವನ್ನು ಬಹುಮಾನಕ್ಕೆ ಆಯ್ಕೆ ಮಾಡಲಿದ್ದಾರೆ. ಆಯ್ಕೆಯಾದ ಒಂದು ಗ್ರಾಮಕ್ಕೆ 1 ಕೋಟಿ ರೂ. ಬಹುಮಾನವನ್ನು ಅನುದಾನದ ರೂಪದಲ್ಲಿ ಸರಕಾರದ ವತಿಯಿಂದ ನೀಡಲಾಗುತ್ತದೆ. ಅದರಲ್ಲಿ ಸೋಲಾರ್ ಪಾರ್ಕ್ ಅಳವಡಿಸಲು ಅವಕಾಶ ಕಲ್ಪಿಸಲಾಗುವುದು ಎಂದು ಕೋಟ ತಿಳಿಸಿದರು. ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ ಮಾತನಾಡಿ, ಸೂರ್ಯಘರ್ ಯೋಜನೆ ಯಡಿ ಮನೆಯ ಮೇಲ್ಛಾವಣಿಯ ಮೇಲೆ ಸೌರ ವಿದ್ಯುತ್ ಘಟಕಗಳನ್ನು ಅಳವಡಿಸುವುದರಿಂದ ಸಾಂಪ್ರದಾಯಿಕ ಇಂಧನದ ಮೇಲಿನ ಅವಲಂಬನೆ ಕಡಿಮೆಯಾಗಲಿದೆ. ಇದರಿಂದ ಪರಿಸರ ಮಾಲಿನ್ಯವು ಹತೋಟಿಯಲ್ಲಿರಲಿದೆ. ಪ್ರಧಾನಮಂತ್ರಿ ಸೂರ್ಯ ಘರ್ ಯೋಜನೆಯಡಿ ದೊರಕುವ ಸಹಾಯಧನ ಸೌಲಭ್ಯದ ಕುರಿತು ಹೆಚ್ಚು ಪ್ರಚಾರ ನೀಡಬೇಕು ಎಂದರು. ಸಭೆಯಲ್ಲಿ ಮೆಸ್ಕಾಂ ಅಧೀಕ್ಷಕ ಇಂಜಿನಿಯರ್ ನರಸಿಂಹ, ಕಿರಿಮಂಜೇಶ್ವರ, ಕೋಟತಟ್ಟು, ಉಪ್ಪೂರು, ಮಜೂರು ಹಾಗೂ ನಿಟ್ಟೆ ಗ್ರಾಮ ಪಂಚಾಯತ್ ಗಳ ಅಧ್ಯಕ್ಷರು, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಸಮಿತಿಯ ನಾಮನಿರ್ದೇಶಿತ ಸದಸ್ಯರು ಉಪಸ್ಥಿತರಿದ್ದರು. ಸೂರ್ಯಘರ್ ಯೋಜನೆಗೆ 75,012 ಕೋಟಿ ಅನುದಾನ ಹರ್ ಘರ್ ಸೂರ್ಯ ಯೋಜನೆಯು ಕೇಂದ್ರ ಸರಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದು, ಇದರ ಮೂಲಕ ದೇಶದಾದ್ಯಂತ ಒಂದು ಕೋಟಿ ಮನೆಗಳಿಗೆ ಸೌರ ಶಕ್ತಿ ಮೂಲಕ ಉಚಿತ ವಿದ್ಯುತ್ ಅಳವಡಿಸುವ ಗುರಿ ಹೊಂದಲಾಗಿದೆ. ಇದಕ್ಕಾಗಿ 75,012 ಕೋಟಿ ರೂ. ಹಣ ವಿನಿಯೋಗಿಸಲಾ ಗುತ್ತಿದೆ ಎಂದು ಸಂಸದ ಕೋಟ ತಿಳಿಸಿದರು. ಹರ್ ಘರ್ ಸೂರ್ಯ ಯೋಜನೆಯ ಅನುಷ್ಠಾನದಲ್ಲಾಗುವ ತಾಂತ್ರಿಕ ಸಮಸ್ಯೆಗಳನ್ನು ಕೂಡಲೇ ಬಗೆಹರಿಸಬೇಕು. ಈ ಯೋಜನೆಯ ಫಲಾನುಭವಿ ಗಳನ್ನು ಸತಾಯಿಸಬಾರದು. ಮೀಟರ್ ಸೇರಿದಂತೆ ಎಲ್ಲಾ ಅಗತ್ಯ ಪರಿಕರ ಗಳು ಸುಲಭವಾಗಿ ಲಭ್ಯವಾಗುವಂತೆ ನೋಡಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚನೆಗಳನ್ನು ನೀಡಿದರು.
ರಾಯಚೂರು | ಕೃಷಿ ವಿವಿಯಲ್ಲಿ ವಿಶೇಷ ಸಂವಾದ ಗೋಷ್ಠಿ
ರಾಯಚೂರು: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆ ರಾಯಚೂರು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತಾಶ್ರಯದಲ್ಲಿ ನಡೆಯುತ್ತಿರುವ ಎಡೆದೊರೆ ನಾಡು ರಾಯಚೂರು ಜಿಲ್ಲಾ ಉತ್ಸವ–2026ರ ಅಂಗವಾಗಿ ಶನಿವಾರ ವಿಶ್ವವಿದ್ಯಾಲಯ ಆವರಣದ ಎರಡನೇ ಮುಖ್ಯ ವೇದಿಕೆಯಲ್ಲಿ ಸಂವಾದಗೋಷ್ಠಿ ನಡೆಯಿತು. ‘ಕಲ್ಯಾಣ ಕರ್ನಾಟಕ ಮತ್ತು ಪ್ರಾದೇಶಿಕ ಅಸಮಾನತೆ: ಸಾಧ್ಯತೆ ಮತ್ತು ಸವಾಲುಗಳು’ ವಿಷಯದ ಕುರಿತು ಕಲ್ಯಾಣ ಕರ್ನಾಟಕ ಹೋರಾಟ ಸಮಿತಿಯ ರಾಜ್ಯ ಉಪಾಧ್ಯಕ್ಷ ಡಾ. ರಝಾಕ್ ಉಸ್ತಾದ್ ವಿಶೇಷ ಉಪನ್ಯಾಸ ನೀಡಿದರು. ಪ್ರಾದೇಶಿಕ ಅಸಮಾನತೆ ನಿವಾರಣೆಗಾಗಿ ಸಮಗ್ರ ಯೋಜನೆ ಹಾಗೂ ಸಮನ್ವಯದ ಅಗತ್ಯತೆಯನ್ನು ಅವರು ಒತ್ತಿಹೇಳಿದರು. ಕರ್ನಾಟಕ ಮಾಹಿತಿ ಆಯೋಗ, ಕಲಬುರಗಿ ಪೀಠದ ರಾಜ್ಯ ಮಾಹಿತಿ ಆಯುಕ್ತರಾದ ಬಿ. ವೆಂಕಟಸಿಂಗ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಸಾಮಾಜಿಕ ಚಿಂತಕ ಡಾ. ಬಸವರಾಜ ಕಳಸ ಆಶಯ ನುಡಿಗಳ ಮೂಲಕ ವಿಚಾರ ಪ್ರಸ್ತುತಪಡಿಸಿದರು. ಹಿರಿಯ ಸಾಹಿತಿ ರಾಘವೇಂದ್ರ ಕುಷ್ಟಗಿ ಅಧ್ಯಕ್ಷತೆ ವಹಿಸಿದ್ದರು. ರಾಯಚೂರು ಜಿಲ್ಲೆಯ ಕೃಷಿ ಮತ್ತು ನೀರಾವರಿ ಕುರಿತು ರೈತ ಮುಖಂಡ ಹನುಮನಗೌಡ ಬೆಳಗುರ್ಕಿ ಮಾತನಾಡಿದರು. ಮಾನವ ಅಭಿವೃದ್ಧಿ ಸವಾಲುಗಳು ಮತ್ತು ಸಾಧ್ಯತೆಗಳ ಕುರಿತು ಹಂಪಿ ಕನ್ನಡ ವಿಶ್ವವಿದ್ಯಾಲಯದ ಡಾ. ಹೆಚ್.ಡಿ. ಪ್ರಶಾಂತ ಉಪನ್ಯಾಸ ನೀಡಿದರು. ಜಿಲ್ಲಾ ಅಭಿವೃದ್ಧಿಯಲ್ಲಿ ಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳ ಪಾತ್ರದ ಕುರಿತು ದಕ್ಷಿಣ ಭಾರತ ಪ್ರಾಂತೀಯ ಪರಿಷತ್ತಿನ ಅಧ್ಯಕ್ಷ ಹಾಗೂ ಚಾರ್ಟರ್ಡ್ ಅಕೌಂಟೆಂಟ್ ಸಿರಿಗೆರೆ ಪನ್ನರಾಜ ತಮ್ಮ ಅಭಿಪ್ರಾಯ ಹಂಚಿಕೊಂಡರು. ಸಂವಾದಗೋಷ್ಠಿಯಲ್ಲಿ ವಿವಿಧ ಕ್ಷೇತ್ರಗಳ ಗಣ್ಯರು, ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಭಾಗವಹಿಸಿದರು.
ವಿದ್ಯಾರ್ಥಿಗಳಲ್ಲಿ ಕಲಿಕೆ ಬಗ್ಗೆ ಆಸಕ್ತಿ ಮೂಡಿಸುವುದು ಶಿಕ್ಷಕರ ಜವಾಬ್ದಾರಿ: ಉಡುಪಿ ಡಿಸಿ ಸ್ವರೂಪಾ ಟಿ.ಕೆ.
ಉಡುಪಿ, ಫೆ.7: ವಿದ್ಯಾರ್ಥಿಗಳಲ್ಲಿ ಕಲಿಕೆಯ ಕುರಿತಂತೆ ಆಸಕ್ತಿ ಮೂಡಿಸು ವುದರೊಂದಿಗೆ ಅವರು ಗುಣಮಟ್ಟದ ಶಿಕ್ಷಣವನ್ನು ಪಡೆದು ಉತ್ತಮ ಭವಿಷ್ಯ ರೂಪಿಸಿಕೊಳ್ಳುವಂತೆ ನೋಡಿಕೊಳ್ಳುವುದು ಪ್ರತಿಯೊಬ್ಬ ಶಿಕ್ಷಕರ ಜವಾಬ್ದಾರಿ ಯಾಗಿದೆ ಎಂದು ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ.ಹೇಳಿದ್ದಾರೆ. ಶನಿವಾರ ಮಣಿಪಾಲ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ, ಉಡುಪಿ ಜಿಲ್ಲಾ ಶಾಲಾ ಶಿಕ್ಷಣ ಇಲಾಖೆ ಮತ್ತು ಉಡುಪಿ ಜಿಲ್ಲಾ ಮುಖ್ಯ ಶಿಕ್ಷಕರಗಳ ಜಂಟಿ ಆಶ್ರಯದಲ್ಲಿ ಎಸೆಸೆಲ್ಸಿ ಪರೀಕ್ಷೆ ಫಲಿತಾಂಶ ವೃದ್ಧಿಗಾಗಿ ನಡೆದ ಜಿಲ್ಲಾ ಮಟ್ಟದ ಮುಖ್ಯ ಶಿಕ್ಷಕರ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡು ತ್ತಿದ್ದರು. ರಾಜ್ಯದ ಶೈಕ್ಷಣಿಕ ಕ್ಷೇತ್ರದಲ್ಲಿ ಅಗ್ರಸ್ಥಾನ ಕಾಯ್ದುಕೊಂಡು ಬರುತ್ತಿರುವ ಉಡುಪಿ ಜಿಲ್ಲೆ, ಪ್ರಸಕ್ತ ಸಾಲಿನ ಎಸೆಸೆಲ್ಸಿ ಪರೀಕ್ಷೆಯಲ್ಲಿ ಶೇ. ನೂರರಷ್ಟು ಫಲಿತಾಂಶ ಪಡೆದು ತಮ್ಮ ಸಾಧನೆಯನ್ನು ಮುಂದುವರಿಸಬೇಕು ಹಾಗೂ ಆ ಮೂಲಕ ಜಿಲ್ಲೆಗೆ ಕೀರ್ತಿ ತರುವಂತಾಗಬೇಕು ಎಂದು ಆಶಿಸಿದರು. ಎಸೆಸೆಲ್ಸಿ ಪರೀಕ್ಷೆಯಲ್ಲಿ ಗುಣಾತ್ಮಕ ಫಲಿತಾಂಶ ತರುವ ಉದ್ದೇಶದಿಂದ ಈ ಕಾರ್ಯಾಗಾರವನ್ನು ಆಯೋಜಿಸಲಾ ಗಿದೆ. ಫಲಿತಾಂಶ ವೃದ್ಧಿಗೊಳಿಸುವ ಶಿಕ್ಷಣ ಇಲಾಖೆಯ ನೂತನ ಕಾರ್ಯಕ್ರಮಗಳಿಗೆ ಮಕ್ಕಳು ಸಕಾರಾತ್ಮಕವಾಗಿ ಸ್ಪಂದಿಸುವಂತೆ ಶಿಕ್ಷಕರು ನೋಡಿಕೊಳ್ಳಬೇಕು. ಕಲಿಕೆಗೆ ಕಷ್ಟ ಎನಿಸಿದ ವಿಷಯದ ಕುರಿತಂತೆ ವಿದ್ಯಾರ್ಥಿಗಳಲ್ಲಿ ಒಲವು ಮೂಡುವಂತೆ ಮಾಡಬೇಕು. ವ್ಯವಸ್ಥಿತ ವಾಗಿ ಪರೀಕ್ಷೆಗೆ ಹೇಗೆ ತಯಾರಿ ನಡೆಸಬೇಕು, ಕಲಿಕಾ ವಿಧಾನದ ಕುರಿತು ವಿದ್ಯಾರ್ಥಿಗಳಿಗೆ ಅರ್ಥವಾಗುವಂತೆ ತಿಳಿಹೇಳಬೇಕು ಎಂದರು. ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ಶಿಕ್ಷಕರು ಮಹತ್ವದ ಪಾತ್ರ ವಹಿಸುತ್ತಾರೆ. ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ಹೆಚ್ಚಿನ ಒತ್ತು ನೀಡಬೇಕು. ಇಂತಹ ವಿದ್ಯಾರ್ಥಿಗಳ ಪಟ್ಟಿ ಮಾಡಿ ಅವರ ಬಗ್ಗೆ ವಿಶೇಷ ಗಮನ ನೀಡಬೇಕು. ಮಾದರಿ ಪ್ರಶ್ನೆಪತ್ರಿಕೆಗಳನ್ನು ಬಿಡಿಸಿ ವಿವರಿಸಬೇಕು ಹಾಗೂ ವಿದ್ಯಾರ್ಥಿಗಳಿಗೆ ಸುಲಭವಾಗಿ ವಿಷಯ ಮನದಟ್ಟಾಗುವಂತೆ ಮಾಡಬೇಕು ಎಂದರು. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್ ಮಾತನಾಡಿ, ನಾಗರಿಕ ಪ್ರಜ್ಞೆಯನ್ನು ವಿದ್ಯಾರ್ಥಿಗಳಲ್ಲಿ ಬೆಳೆಸಿ, ಅವರ ಆತ್ಮವಿಶ್ವಾಸವನ್ನು ಹೆಚ್ಚಿಸುವುದರಿಂದ ಪ್ರತಿಶತಃ ನೂರು ಫಲಿತಾಂಶ ಪಡೆಯಲು ಸಾಧ್ಯ. ಪ್ರತಿಯೊಬ್ಬ ವಿದ್ಯಾರ್ಥಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ದ್ದಾರೆ ಎಂಬುದು ಮುಖ್ಯವಲ್ಲ, ವಿಶೇಷ ದರ್ಜೆಯಲ್ಲಿ ಉತ್ತೀರ್ಣರಾಗುವುದು ಮುಖ್ಯವಾಗಿರುತ್ತದೆ ಎಂದರು. ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಲೋಕೇಶ್ ಸಿ ಪ್ರಾಸ್ತಾವಿಕ ವಾಗಿ ಮಾತನಾಡಿ, ರಾಜ್ಯದ ಗುಣಾತ್ಮಕ ಶಿಕ್ಷಣ ವ್ಯವಸ್ಥೆಯ ಟಾಪ್ ಐದು ಎ ಗ್ರೇಡ್ನಲ್ಲಿ ಉಡುಪಿ ಜಿಲ್ಲೆ ರಾಜ್ಯದಲ್ಲಿಯೇ ಮೊದಲ ಸ್ಥಾನ ಪಡೆದಿದೆ. ಇದನ್ನು ಮುಂದುವರೆಸಿಕೊಂಡು ಹೋಗುವಂತೆ ಮಾಡುವುದು ಶಿಕ್ಷಕರ ಹೊಣೆಗಾರಿಕೆ ಎಂದರು. ಯಾವುದೇ ವಿದ್ಯಾರ್ಥಿ ಶಾಲೆಯಿಂದ ದೂರ ವಿರದಂತೆ ನೋಡಿಕೊಳ್ಳಬೇಕು. ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಹೆಚ್ಚಿಸಿ, ಅವರೊಂದಿಗೆ ಇದ್ದು, ಫಲಿತಾಂಶ ಹೆಚ್ಚಿಸಲು ಪ್ರಯತ್ನಿಸಬೇಕು ಎಂದರು. ಕಾರ್ಯಕ್ರಮದಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಮಾರುತಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿ ಹಾಕಪ್ಪ ಆರ್ ಲಮಾಣಿ, ಡಯಟ್ ಪ್ರಾಂಶುಪಾಲ ಡಾ.ಅಶೋಕ್ ಕಾಮತ್, ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ಕಿರಣ್ ಹೆಗ್ಡೆ, ಐದು ವಲಯಗಳ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಎಸೆಸೆಲ್ಸಿ ನೋಡೆಲ್ ಅಧಿಕಾರಿಗಳು ಉಪಸ್ಥಿತರಿದ್ದರು. ಶಿಕ್ಷಕ ರಾಜೇಂದ್ರ ಭಟ್ ಕಾರ್ಯಕ್ರಮ ನಿರೂಪಿಸಿ, ಅಕ್ಷರ ದಾಸೋಹ ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರಾ ನಾಯಕ್ ವಂದಿಸಿದರು. ಎಸೆಸೆಲ್ಸಿ ಪರೀಕ್ಷೆಗೆ 13,480 ವಿದ್ಯಾರ್ಥಿಗಳು ನೊಂದಣಿ ಜಿಲ್ಲೆಯಲ್ಲಿ 115 ಸರಕಾರಿ, 68 ಅನುದಾನಿತ ಹಾಗೂ 91 ಅನುದಾನ ರಹಿತ ಶಾಲೆಗಳು ಸೇರಿದಂತೆ ಒಟ್ಟು 274 ಪ್ರೌಢಶಾಲೆಗಳು ಜಿಲ್ಲಾ ವಲಯದಲ್ಲಿ ಇವೆ. ಈ ಬಾರಿಯ ಎಸೆಸೆಲ್ಸಿ ಪರೀಕ್ಷೆಗೆ 6,880 ಬಾಲಕರು, 6,600 ಬಾಲಕಿಯರು ಸೇರಿದಂತೆ ಒಟ್ಟು 13,480 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಣಿ ಮಾಡಿಕೊಂಡಿದ್ದಾರೆ. ಈಗಾಗಲೇ ಪೂರ್ವ ಪರೀಕ್ಷೆಗಳನ್ನು ಎರಡು ಬಾರಿ ಮಾಡಲಾಗಿದ್ದು, ಶೇ. 77.77ರಷ್ಟು ಫಲಿತಾಂಶ ಬಂದಿದೆ. ರಾಜ್ಯಮಟ್ಟದ ಪೂರ್ವಭಾವಿ ಪರೀಕ್ಷೆಗೆ ಇನ್ನು 13 ದಿನಗಳು ಬಾಕಿ ಇದ್ದು, ವಿದ್ಯಾರ್ಥಿಗಳಲ್ಲಿ ಶಾಲಾ ಮಟ್ಟದಲ್ಲಿಯೇ ನಿಯಮಿತ ಪರೀಕ್ಷೆಗಳು, ಮರುಪಠಣ ತರಗತಿಗಳು ಹಾಗೂ ಪೋಷಕ ರೊಂದಿಗೆ ತರಗತಿಗಳು ಸೇರಿದಂತೆ ಸಮನ್ವಯ ಸಭೆಗಳನ್ನು ನಡೆಸುವ ಮೂಲಕ ಈ ಬಾರಿಯ ಸಾಧನೆಯನ್ನು ಹೆಚ್ಚಿಸಬೇಕು ಎಂದು ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ. ಸಲಹೆ ನೀಡಿದರು.
ಒಳ ಚರಂಡಿ ಕಾಮಗಾರಿ: ರಸ್ತೆ ಬಂದ್ ಮಾಡಿ ಬದಲಿ ವ್ಯವಸ್ಥೆ
ಉಡುಪಿ, ಫೆ.7: ಉಡುಪಿ ನಗರಸಭಾ ವ್ಯಾಪ್ತಿಯ ಬೈಲೂರು ವಾರ್ಡಿನ ಶಾರದಾ ದೇವಸ್ಥಾನ ಮುಂಭಾಗದಿಂದ ಪಿ.ಪಿ.ಸಿ ಲೇನ್ವರೆಗೆ ಒಳ ಚರಂಡಿ ಕಾಮಗಾರಿಯನ್ನು ಪ್ರಾರಂಭಿಸಿರುವುದರಿಂದ ಸದರಿ ರಸ್ತೆಯನ್ನು ಬಂದ್ ಮಾಡಿ ಬದಲಿ ವ್ಯವಸ್ಥೆಯನ್ನು ಕಲ್ಪಿಸಲಾಗಿದ್ದು ಸಾರ್ವಜನಿಕರು ಸಹಕರಿಸುವಂತೆ ನಗರಸಭೆ ಪೌರಾಯುಕ್ತರ ಪ್ರಕಟಣೆ ತಿಳಿಸಿದೆ.
ಜನೋತ್ಸವವಾಗಿ ಕಂಗೊಳಿಸಿದ ರಾಯಚೂರು ಜಿಲ್ಲಾ ಉತ್ಸವ
ರಾಯಚೂರು : ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತಾಶ್ರಯದಲ್ಲಿ ಫೆ.5ರಿಂದ 7ರವರೆಗೆ ಮೂರು ದಿನಗಳ ಕಾಲ ನಡೆದ ರಾಯಚೂರು ಜಿಲ್ಲಾ ಉತ್ಸವ ಜನೋತ್ಸವವಾಗಿ ಕಂಗೊಳಿಸಿತು. ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ ಆವರಣದಲ್ಲಿ ನಡೆದ ಉತ್ಸವ ಹಾಗೂ ಕೃಷಿ ಮೇಳದಲ್ಲಿ ಲಕ್ಷಾಂತರ ಜನರು ಭಾಗವಹಿಸಿದರು. ಉತ್ಸವದ ನಿಮಿತ್ತ ವಿವಿ ಆವರಣವನ್ನು ಹಬ್ಬದಂತೆ ಅಲಂಕರಿಸಲಾಗಿತ್ತು. ಭತ್ತದ ಒಣಮೇವಿನಿಂದ ನಿರ್ಮಿಸಿದ ಕೃಷಿ ಮೇಳದ ಕಮಾನು ವಿಶೇಷ ಆಕರ್ಷಣೆಯಾಗಿದ್ದು, ಅದರ ಮುಂದೆ ಸೆಲ್ಫಿ ತೆಗೆಯಲು ಜನರು ಮುಗಿಬಿದ್ದರು. ಜರ್ಮನ್ ಟೆಂಟ್ನಲ್ಲಿ ಸಿದ್ಧಪಡಿಸಿದ ಆಹಾರ ಮೇಳದಲ್ಲಿ 100ಕ್ಕೂ ಹೆಚ್ಚು ಮಳಿಗೆಗಳು ಗಮನ ಸೆಳೆದವು. ಚಿಕ್ಕಮಗಳೂರು, ಮೈಸೂರು, ಗದಗ, ಬಾಗಲಕೋಟೆ, ಬೆಳಗಾವಿ, ಕಲಬುರಗಿ ಸೇರಿದಂತೆ 12 ಜಿಲ್ಲೆಗಳ ತಯಾರಕರು ವಿವಿಧ ಬಗೆಯ ತಿಂಡಿ–ತಿನಿಸುಗಳನ್ನು ಪರಿಚಯಿಸಿದರು. ಮಕ್ಕಳು, ಯುವಕರು, ಕುಟುಂಬ ಸಮೇತರಾಗಿ ಆಗಮಿಸಿದ ಜನರು ಖಾದ್ಯಗಳನ್ನು ಸವಿದು ಸಂಭ್ರಮಿಸಿದರು. ವಿಭಿನ್ನ ಇಲಾಖೆಗಳ ಮಳಿಗೆಗಳ ಮುಂದೆ ಜನದಟ್ಟಣೆ ಕಂಡುಬಂತು. ಪಂಚ ಗ್ಯಾರಂಟಿ ಯೋಜನೆಗಳು—ಯುವನಿಧಿ, ಶಕ್ತಿ, ಅನ್ನಭಾಗ್ಯ, ಗೃಹಜ್ಯೋತಿ ಮತ್ತು ಗೃಹಲಕ್ಷ್ಮೀ ಕುರಿತು ಜಾಗೃತಿ ಮೂಡಿಸಲಾಯಿತು. ಆಯುಷ್ ಹಾಗೂ ಆರೋಗ್ಯ ಇಲಾಖೆ ವತಿಯಿಂದ ಉಚಿತ ಆರೋಗ್ಯ ತಪಾಸಣೆ ಶಿಬಿರಗಳು ನಡೆದವು. ಅಂಚೆ ಇಲಾಖೆ, ಸೆಲ್ಕೋ ಫೌಂಡೇಶನ್, ರಾಷ್ಟ್ರೀಯ ಬೀಜ ನಿಗಮ, ಸಾವಯವ ಪ್ರಮಾಣ ಸಂಸ್ಥೆ, ಖಾದಿ ಮತ್ತು ಜವಳಿ ಇಲಾಖೆ, ಹಾಲು ಉತ್ಪಾದಕರ ಸಂಘಗಳು ಸೇರಿದಂತೆ ಅನೇಕ ಸಂಸ್ಥೆಗಳು ತಮ್ಮ ಯೋಜನೆಗಳು ಮತ್ತು ಉತ್ಪನ್ನಗಳನ್ನು ಪರಿಚಯಿಸಿದವು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮಾದರಿ ಅಂಗನವಾಡಿ ಮತ್ತು ಪೌಷ್ಟಿಕ ಆಹಾರ ಪ್ರದರ್ಶನ ಹಮ್ಮಿಕೊಂಡಿತು. ಸಣ್ಣ ನೀರಾವರಿ ಇಲಾಖೆ ಜಲ ಸಂರಕ್ಷಣೆ ಕುರಿತು ಮಾಹಿತಿ ನೀಡಿದರೆ, ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರೋತ್ಸಾಹಕ ಸೊಸೈಟಿ ವತಿಯಿಂದ ಸಂಜೆ ಆಕಾಶ ವೀಕ್ಷಣೆ ಕಾರ್ಯಕ್ರಮ ಜನರ ಮೆಚ್ಚುಗೆ ಗಳಿಸಿತು. ಬ್ಯಾಂಕುಗಳ ಮಳಿಗೆಗಳಲ್ಲಿ ವಿವಿಧ ಹಣಕಾಸು ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಲಾಯಿತು. ಮೂರು ದಿನಗಳ ಕಾಲ ನಡೆದ ಉತ್ಸವ ಮತ್ತು ಕೃಷಿ ಮೇಳ ಜನರ ಅಪಾರ ಸ್ಪಂದನೆಗೆ ಪಾತ್ರವಾಗಿ ರಾಯಚೂರಿನಲ್ಲಿ ಹಬ್ಬದ ವಾತಾವರಣ ನಿರ್ಮಿಸಿತು.
ಶಹಾಬಾದ್ | ನಾಲ್ಕು ಕಾರ್ಮಿಕ ಸಂಹಿತೆ ರದ್ದುಪಡಿಸಲು ಫೆ.12ರಂದು ಮುಷ್ಕರ
ಶಹಾಬಾದ್ : ಕೇಂದ್ರದ ಸರಕಾರ ಜಾರಿಗೆ ತಂದಿರುವ ನಾಲ್ಕು ಕಾರ್ಮಿಕ ಕಾನೂನು ರದ್ದುಗೊಳಿಸಿ ರಾಜ್ಯ ಸರಕಾರ ತಂದಿರುವ ಗೆಜೆಟ್ ಅಧಿಸೂಚನೆ ಹಿಂಪಡೆಯಬೇಕೆಂದು ಫೆ.12ರಂದು ಹಮ್ಮಿಕೊಂಡಿರುವ ಮುಷ್ಕರದ ಕರಪತ್ರಗಳನ್ನು ಕಟ್ಟಡ-ಕಾರ್ಮಿಕ ಸಂಘಟನೆಯ ಮುಖಂಡರು ನಗರದ ರೇಲ್ವೆ ನಿಲ್ದಾಣದಲ್ಲಿ ಬಿಡುಗಡೆಗೊಳಿಸಿದರು. ನಗರದ ರೈಲ್ವೆ ನಿಲ್ದಾಣದಲ್ಲಿ ಮುಷ್ಕರ ಸಂಬಂಧ ಕರಪತ್ರಗಳನ್ನು ಬಿಡುಗಡೆಗೊಳಿಸಿ ಸಂಘಟನೆಯ ಮುಖಂಡ ನಾಗಪ್ಪ ರಾಯಚೂರಕರ್ ಮಾತನಾಡಿದರು. 29 ಕಾರ್ಮಿಕ ಕಾನೂನುಗಳನ್ನು ರದ್ದುಗೊಳಿಸಿ ನಾಲ್ಕು ಕಾರ್ಮಿಕ ಸಂಹಿತೆಗಳನ್ನು ಜಾರಿಗೊಳಿಸಿರುವುದರಿಂದ ಶೇ.90ರಷ್ಟು ಕಾರ್ಮಿಕರು ವೇತನ, ಇಎಸ್ಐ, ಪಿಎಫ್, ಗ್ರಾಚ್ಯುಟಿ ಹಾಗೂ ಬೋನಸ್ ಹಕ್ಕುಗಳಿಂದ ವಂಚಿತರಾಗುವ ಪರಿಸ್ಥಿತಿ ಉಂಟಾಗಿದೆ ಎಂದು ಆರೋಪಿಸಿದರು. ವ್ಯಾಪಾರ ಸುಗಮಗೊಳಿಸುವ ಹೆಸರಿನಲ್ಲಿ ಯೂನಿಯನ್ಗಳ ಹಕ್ಕುಗಳನ್ನು ಕಡಿತಗೊಳಿಸಲಾಗುತ್ತಿದೆ ಎಂದು ಅವರು ಹೇಳಿದರು. ವೇತನ ಹೆಚ್ಚಳಕ್ಕೆ ಸ್ಪಷ್ಟವಾದ ಆಧಾರವಿಲ್ಲದಂತೆ ಮಾಡಲಾಗಿದೆ. ಕಾರ್ಮಿಕರಿಗೆ ಸಂಘಟನೆ ರಚಿಸುವ ಹಕ್ಕಿಗೂ ನಿರ್ಬಂಧ ಹೇರಲಾಗಿದೆ ಎಂದು ತಿಳಿಸಿದರು. ಮನರೇಗಾ ಕಾಯ್ದೆಯಡಿ ಖಾತರಿ ನೀಡಲಾದ ಕೆಲಸದ ಹಕ್ಕು ದುರ್ಬಲಗೊಳಿಸಲಾಗುತ್ತಿದೆ. ಗ್ರಾಮೀಣ ಶ್ರಮಜೀವಿಗಳ ಖರೀದಿ ಸಾಮರ್ಥ್ಯ ಕುಸಿಯುತ್ತಿದೆ. ರೈತರಿಗೆ ಬೆಳೆಗಳಿಗೆ ಸೂಕ್ತ ಬೆಂಬಲ ಬೆಲೆ ನೀಡದೆ, ಕಂಪನಿ ಕೃಷಿಗೆ ಉತ್ತೇಜನ ನೀಡಿ ಭೂಸ್ವಾಧೀನ ಕಾಯ್ದೆಗೆ ತಿದ್ದುಪಡಿ ಮಾಡುವ ಮೂಲಕ ರೈತರ ಭೂಮಿಯನ್ನು ವಶಪಡಿಸಿಕೊಳ್ಳಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಫೆ.1ರಂದು ಮಂಡಿಸಲಾದ 53.5 ಲಕ್ಷ ಕೋಟಿ ರೂ.ಗಳ ಕೇಂದ್ರ ಬಜೆಟ್ನಲ್ಲಿ ಜನಸಾಮಾನ್ಯರ ಸಂಕಷ್ಟಗಳಿಗೆ ಪರಿಹಾರವಿಲ್ಲ. ಬಂಡವಾಳಗಾರರಿಗೆ ಮಾತ್ರ ಅನುಕೂಲವಾಗುವ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಟೀಕಿಸಿದರು. ರಾಜ್ಯ ಸರ್ಕಾರವೂ ಕೇಂದ್ರದ ರೈತ ಹಾಗೂ ಕಾರ್ಮಿಕ ವಿರೋಧಿ ನೀತಿಗಳನ್ನು ಮುಂದುವರಿಸುತ್ತಿದೆ ಎಂದು ಸಂಘಟನೆ ಆರೋಪಿಸಿದೆ.
ಕಲಬುರಗಿ | 'ಕಲ್ಯಾಣ ಕರ್ನಾಟಕ ಉತ್ಸವ' ಮಾಡುವಂತೆ ಮನವಿ
ಕಲಬುರಗಿ: ಕಲ್ಯಾಣ ಕರ್ನಾಟಕ ಹೆಬ್ಬಾಗಿಲು ಕಲಬುರಗಿಯಲ್ಲಿ ಕಲ್ಯಾಣ ಕರ್ನಾಟಕ ಪ್ರಾದೇಶಿಕ ಅಭಿವೃದ್ಧಿ ಮಂಡಳಿ ವತಿಯಿಂದ ಕಲ್ಯಾಣ ಕರ್ನಾಟಕ ಉತ್ಸವ ಮಾಡಬೇಕೆಂದು ಒತ್ತಾಯಿಸಿ ಕೆಕೆಆರ್ಡಿಬಿ ಅಧ್ಯಕ್ಷರಾದ ಡಾ.ಅಜಯಸಿಂಗ್ ಅವರಿಗೆ ಜೈ ಕನ್ನಡಿಗರ ಸೇನೆಯಿಂದ ಮನವಿ ಸಲ್ಲಿಸಲಾಯಿತು. ಸೇನೆಯ ಅಧ್ಯಕ್ಷ ಡಾ. ದತ್ತು ಭಾಸಗಿ ಅವರ ನೇತೃತ್ವದಲ್ಲಿ ಡಾ.ಅಜಯಸಿಂಗ್ ಅವರನ್ನು ಭೇಟಿಯಾಗಿ ಕಲ್ಯಾಣ ಕರ್ನಾಟಕ ಭಾಗದಲ್ಲಿ ಈಗಾಗಲೇ 2023ರಲ್ಲಿ ಕಲ್ಯಾಣ ಕರ್ನಾಟಕ ಉತ್ಸವ ಹಮ್ಮಿಕೊಳ್ಳಲಾಗಿತ್ತು. ಈಗ ತಮ್ಮ ಅವಧಿಯಲ್ಲಿ ಉತ್ಸವ ಹಮ್ಮಿಕೊಂಡು ಈ ಭಾಗದ ಜಾನಪದ ಕಲಾವಿದರು, ಸಾಹಿತಿಗಳು, ಚಿಂತಕರು, ಬುದ್ದಿಜೀವಿಗಳು ಗುರುತಿಸುವ ಕಾರ್ಯ ಕೈಕೊಂಡು ಪ್ರತಿಭೆಗಳಿಗೆ ಸೂಕ್ತ ಅವಕಾಶ ಕಲ್ಪಿಸಬೇಕೆಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ. ಕಲ್ಯಾಣ ಕರ್ನಾಟಕದ ಕಲಾವಿದರ ಕಲೆಗಳನ್ನು ದೇಶಮಟ್ಟದಲ್ಲಿ ಕೊಂಡೊಯ್ಯುವುದು ಒಂದು ಇತಿಹಾಸ ಸೃಷ್ಟಿದಂತಾಗುತ್ತದೆ. ಆದ್ದರಿಂದ ತಾವುಗಳು ಈ ಭಾಗದಲ್ಲಿ ಕಲ್ಯಾಣ ಕರ್ನಾಟಕ ಉತ್ಸವ ಹಮ್ಮಿಕೊಳ್ಳಬೇಕೆಂದು ಮನವಿಯಲ್ಲಿ ಉಲ್ಲೇಖಿಸಿದ್ದಾರೆ. ಈ ಸಂದರ್ಭದಲ್ಲಿ ಸಂಜು ಮಾಳಗೆ, ಸಿದ್ದು ಕಡಬೂರ ಸೇರಿದಂತೆ ಕಾರ್ಯಕರ್ತರು ಇದ್ದರು.
Thane: ಅಪಾರ್ಟ್ಮೆಂಟ್ನಿಂದ ಕೆಳಗೆ ಹಾರಿ 12 ವರ್ಷದ ಬಾಲಕ ಆತ್ಮಹತ್ಯೆ
ಮುಂಬೈ: ಉತ್ತರಪ್ರದೇಶದ ಗಾಝಿಯಾಬಾದ್ನಲ್ಲಿ ಮೂವರು ಬಾಲಕಿಯರು ಆತ್ಮಹತ್ಯೆ ಮಾಡಿಕೊಂಡ ಆಘಾತಕಾರಿ ಘಟನೆ ನಡೆದ ದಿನಗಳ ಬಳಿಕ ಇದೇ ರೀತಿಯ ಘಟನೆ ಮಹಾರಾಷ್ಟ್ರದಲ್ಲಿ ಕೂಡ ನಡೆದಿದೆ. ಮಹಾರಾಷ್ಟ್ರದ ಥಾಣೆಯಲ್ಲಿ ಶನಿವಾರ 12 ವರ್ಷದ ಬಾಲಕನೋರ್ವ 6ನೇ ಮಹಡಿಯಲ್ಲಿರುವ ಅಪಾರ್ಟ್ಮೆಂಟ್ನಿಂದ ಕೆಳಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಥಾಣೆ ನಗರದ ವಾಗ್ಲೆ ಎಸ್ಟೇಟ್ ಪ್ರದೇಶದಲ್ಲಿರುವ ಗಗನಚುಂಬಿ ಕಟ್ಟಡದ ಆರನೇ ಮಹಡಿಯಲ್ಲಿರುವ ಅಪಾರ್ಟ್ಮೆಂಟ್ನ ಕಿಟಕಿಯಿಂದ 12 ವರ್ಷದ ಬಾಲಕ ಕೆಳಗೆ ಹಾರಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಆಪಾರ್ಟ್ಮೆಂಟ್ನ ನಿವಾಸಿಗಳು ಕೂಡಲೇ ಬಾಲಕನ್ನು ಸಮೀಪದ ಆಸ್ಪತ್ರೆ ಕರೆದೊಯ್ದರು, ಆದರೆ, ಬಾಲಕ ಸಾವನ್ನಪ್ಪಿದ್ದಾನೆ ಎಂದು ವೈದ್ಯರು ತಿಳಿಸಿದರು ಎಂದು ಅವರು ಹೇಳಿದ್ದಾರೆ. ‘‘ನಾವು ಆಕಸ್ಮಿಕ ಸಾವು (ಎಡಿಆರ್) ಎಂದು ಪ್ರಕರಣ ದಾಖಲಿಸಿಕೊಂಡಿದ್ದೇವೆ. ಸುಸೈಡ್ ನೋಟ್ ಪತ್ತೆಯಾಗಿಲ್ಲ. ಆತ್ಮಹತ್ಯೆಯ ಹಿಂದಿನ ಕಾರಣ ಇನ್ನಷ್ಟೆ ತಿಳಿಯಬೇಕಾಗಿದೆ’’ ಎಂದು ವಾಗ್ಲೆ ಎಸ್ಟೇಟ್ ವಿಭಾಗದ ಅಧಿಕಾರಿ ತಿಳಿಸಿದ್ದಾರೆ.
ಸಿಬಿಸಿಐ ನೂತನ ಅಧ್ಯಕ್ಷರಾಗಿ ಕಾರ್ಡಿನಲ್ ಪೂಲಾ ಆಂಥೋನಿ ಆಯ್ಕೆ
ಬೆಂಗಳೂರು : ಹೈದರಾಬಾದ್ನ ಆರ್ಚ್ ಬಿಷಪ್ ಆಗಿರುವ ಕಾರ್ಡಿನಲ್ ಪೂಲಾ ಆಂಥೋನಿ ಅವರು ಭಾರತದ ಕ್ಯಾಥೊಲಿಕ್ ಬಿಷಪ್ಗಳ ಸಮ್ಮೇಳನದ (ಸಿಬಿಸಿಐ) ನೂತನ ಅಧ್ಯಕ್ಷರಾಗಿದ್ದಾರೆ. ಬೆಂಗಳೂರಿನ ಸೇಂಟ್ ಜಾನ್ಸ್ ರಾಷ್ಟ್ರೀಯ ಆರೋಗ್ಯ ವಿಜ್ಞಾನ ಅಕಾಡೆಮಿಯಲ್ಲಿ ಆರು ದಿನಗಳ ಕಾಲ ನಡೆಯುತ್ತಿರುವ ಭಾರತದ ಕ್ಯಾಥೊಲಿಕ್ ಬಿಷಪ್ಗಳ ಸಮ್ಮೇಳನದ (ಸಿಬಿಸಿಐ) 37ನೇ ಸಮಗ್ರ ಸಭೆಯಲ್ಲಿ ನೂತನ ಅಧ್ಯಕ್ಷ ಸ್ಥಾನಕ್ಕೆ ಕಾರ್ಡಿನಲ್ ಪೂಲಾ ಆಂಥೋನಿ ಅವರನ್ನು ಆಯ್ಕೆ ಮಾಡಲಾಯಿತು. ನೂತನ ಅಧ್ಯಕ್ಷರು, ಶೀಘ್ರದಲ್ಲಿಯೇ ಭಾರತೀಯ ಕ್ಯಾಥೋಲಿಕ್ ಚರ್ಚ್ಗಳ ನಾಯಕತ್ವ ವಹಿಸಿಕೊಳ್ಳಲಿದ್ದು, ಆಡಳಿತಾತ್ಮಕ ನಾಯಕತ್ವ ಮತ್ತು ನಂಬಿಕೆ, ನ್ಯಾಯ ಮತ್ತು ಮಾನವ ಘನತೆಯ ಸೇವೆಯಲ್ಲಿ ಕೊಡುಗೆ ನೀಡಲಿದ್ದಾರೆ ಎಂದು ಆಯ್ಕೆ ಸಮಿತಿಯ ಪ್ರಮುಖರು ಹೇಳಿದ್ದಾರೆ. ಕಾರ್ಡಿನಲ್ ಪೂಲಾ ಆಂಥೋನಿ ಅವರು 1961ರ ನವೆಂಬರ್ 15ರಂದು ಕರ್ನೂಲ್ ಡಯಾಸಿಸ್ನ ಪೋಲೂರಿನಲ್ಲಿ ಜನಿಸಿದ್ದು, ಸತತ ಐದು ವರ್ಷಗಳಿಂದ ಹೈದರಾಬಾದ್ನ ಆರ್ಚ್ ಬಿಷಪ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.
ಆಳಂದ | ಸಿದ್ಧರಾಮೇಶ್ವರರ 22ನೇ ಪುಣ್ಯಸ್ಮರಣೋತ್ಸವ
ಆಳಂದ: ತಾಲ್ಲೂಕಿನ ಜಿಡಗಾ ನವಕಲ್ಯಾಣ ಮಠದಲ್ಲಿ ಶ್ರೀ ಷಡಕ್ಷರಿ ಶಿವಯೋಗಿ ಸಿದ್ಧರಾಮೇಶ್ವರ ಮಹಾಸ್ವಾಮಿಗಳ 22ನೇ ಪುಣ್ಯಸ್ಮರಣೋತ್ಸವವು ಶನಿವಾರ ಧಾರ್ಮಿಕ ಭಕ್ತಿ, ಶ್ರದ್ಧೆ ಮತ್ತು ಸಾಮಾಜಿಕ ಸೇವೆಯ ಸಂಭ್ರಮದಲ್ಲಿ ಅದ್ದೂರಿಯಾಗಿ ನೆರವೇರಿತು. ದಿನಪೂರ್ತಿ ನಡೆದ ವಿವಿಧ ಧಾರ್ಮಿಕ ಕಾರ್ಯಕ್ರಮಗಳು, ಭವ್ಯ ಪಲ್ಲಕ್ಕಿ ಉತ್ಸವ ಹಾಗೂ ಸಂಜೆ ನಡೆದ ಮಹಾರಥೋತ್ಸವದಲ್ಲಿ ಸಹಸ್ರಾರು ಭಕ್ತರು ಭಾಗವಹಿಸಿ ಮಠದ ಆವರಣ ಭಕ್ತಿಮಯ ವಾತಾವರಣದಿಂದ ಕಂಗೊಳಿಸಿತು. ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ಪೀಠಾಧಿಪತಿ ಪರಮಪೂಜ್ಯ ಶ್ರೀ ಷಡಕ್ಷರಿ ಶಿವಯೋಗಿ ಡಾ. ಮುರುಘರಾಜೇಂದ್ರ ಮಹಾಸ್ವಾಮಿಗಳು ಮಾತನಾಡಿ, ಜಿಡಗಾ–ಮುಗಳಖೋಡ ಮಠದ ಅಭಿವೃದ್ಧಿ ಕಾರ್ಯಗಳು ಮಹತ್ವದ ಹಂತ ತಲುಪಿವೆ. ಆದರೆ ಇದು ಕೇವಲ ಆರಂಭ ಮಾತ್ರವಾಗಿದ್ದು, ಮುಂದಿನ ದಿನಗಳಲ್ಲಿ ಮಠವನ್ನು ಆಧ್ಯಾತ್ಮಿಕ, ಶೈಕ್ಷಣಿಕ ಹಾಗೂ ಸಾಮಾಜಿಕ ಚಟುವಟಿಕೆಗಳ ಮಹಾಕೇಂದ್ರವನ್ನಾಗಿ ರೂಪಿಸುವ ಸಂಕಲ್ಪ ಹೊಂದಿದ್ದೇವೆ ಎಂದು ತಿಳಿಸಿದರು. ಜಿಡಗಾ ಮಠದಲ್ಲಿ ನಿರ್ಮಾಣಗೊಂಡಿರುವ ಶಿವಯೋಗಿ ಸಿದ್ಧರಾಮೇಶ್ವರ ಕರ್ತೃಗದ್ದುಗೆ ಗೋಪುರ ಪೂರ್ಣಗೊಂಡಿದ್ದು, ಅದನ್ನು ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಸಾನ್ನಿಧ್ಯದಲ್ಲಿ 2027ರ ಜನ್ಮಶತಮಾನೋತ್ಸವದ ಅಂಗವಾಗಿ ಲೋಕಾರ್ಪಣೆ ಮಾಡುವ ಉದ್ದೇಶವಿದೆ ಎಂದು ಹೇಳಿದರು. ಮುಗಳಖೋಡ ಮಠದಲ್ಲಿ ಅನುಭವ ಮಂಟಪ ನಿರ್ಮಾಣ, ಜಿಡಗಾ ಮಠದಲ್ಲಿ ಬಡ ಮಕ್ಕಳಿಗೆ ಉಚಿತ ಶಿಕ್ಷಣ ಸೇರಿದಂತೆ ವಿವಿಧ ಸಮಾಜಮುಖಿ ಯೋಜನೆಗಳನ್ನು ಜಾರಿಗೆ ತರಲಾಗುತ್ತಿದೆ. ಮಠದ ಜಾಗದಲ್ಲಿ ಕೆರೆ ನಿರ್ಮಾಣಕ್ಕೆ ಶಾಸಕ ಬಿ.ಆರ್. ಪಾಟೀಲ ಅವರ ಪ್ರಯತ್ನದಿಂದ ಮೊದಲ ಹಂತವಾಗಿ 25 ಕೋಟಿ ರೂ. ಮಂಜೂರಾಗಿದ್ದು, ಜಿಡಗಾ ಮಠಕ್ಕೆ 10 ಕೋಟಿ ರೂ. ವೆಚ್ಚದ ಭವ್ಯ ದ್ವಾರಭಾಗಿಲು ನಿರ್ಮಾಣಕ್ಕೂ ಕ್ರಮ ಕೈಗೊಳ್ಳಲಾಗಿದೆ ಎಂದು ವಿವರಿಸಿದರು. ಈ ಸಂದರ್ಭದಲ್ಲಿ ಡಾ. ಮುರುಘರಾಜೇಂದ್ರ ಶ್ರೀಗಳಿಗೆ ಬಾಗಲಕೋಟ್ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ‘ಸಂಕಲ್ಪ ಯೋಗಿ’ ಪ್ರಶಸ್ತಿ ಪ್ರದಾನ ಮಾಡಲಾಯಿತು. ಬಬಲಾದ ಹಾಗೂ ಯಳಸಂಗಿ ಮಠದ ಶ್ರೀ ಗುರುಪಾದಲಿಂಗ ಶಿವಾಚಾರ್ಯರಿಗೆ ಗೌರವ ಡಾಕ್ಟರೇಟ್ ಪಡೆದ ನಿಮಿತ್ತ ಶ್ರೀಮಠದಿಂದ ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಜೆಮಸಿಂಗ್ ಮಹಾರಾಜ್ ಸೇರಿದಂತೆ ವಿವಿಧ ಮಠಾಧೀಶರು, ಕೆಎಂಎಫ್ ಅಧ್ಯಕ್ಷ ಆರ್.ಕೆ. ಪಾಟೀಲ, ಜಿಪಂ ಮಾಜಿ ಸದಸ್ಯ ಸಿದ್ಧರಾಮ ಪ್ಯಾಟಿ, ವೀರಣ್ಣ ಮಂಗಾಣೆ, ರಾಜಶೇಖರ ಪಾಟೀಲ, ಜಾನ್ಸನ್ ಗೋಡೆ, ಗೀತಾ ಚಿದ್ರಿ, ಸೂರ್ಯಕಾಂತ ಜುಲ್ಪೆ, ಡಾ. ವಿಕ್ರಂ ಇದ್ದಾರೆಡ್ಡಿ, ಯೋಗಿರಾಜ್ ಶಾಸ್ತ್ರಿ, ರೇವಣಸಿದ್ಧ ನಾಗೂರೆ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು. ಶ್ರೀಮಠದ ವತಿಯಿಂದ ಎರಡು ಜೋಡಿ ಉಚಿತ ವಿವಾಹಗಳು ಸಂಪ್ರದಾಯಬದ್ಧವಾಗಿ ನೆರವೇರಿಸಲಾಯಿತು. ಸಂಗಮೇಶ ಲಾವಣಿ ಹಾಗೂ ಜನಪದ ಕಲಾವಿದ ತಾತ್ಯರಾವ್ ಪಾಟೀಲ ಅವರ ತಂಡಗಳಿಂದ ಭಕ್ತಿಗೀತೆ, ಜನಪದ ಗೀತೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಪಲ್ಲಕ್ಕಿ ಉತ್ಸವ ಹಾಗೂ ಸಂಜೆ ನಡೆದ ಭವ್ಯ ಮಹಾರಥೋತ್ಸವ ಸಮಾರಂಭದ ಪ್ರಮುಖ ಆಕರ್ಷಣೆಯಾಗಿದ್ದು, ಸಹಸ್ರಾರು ಭಕ್ತರು ಶಿವಯೋಗಿ ಸಿದ್ಧರಾಮೇಶ್ವರರ ದಿವ್ಯ ಸ್ಮರಣೆಗೆ ಸಾಕ್ಷಿಯಾದರು.
Meghalaya | ಗಣಿಯಲ್ಲಿ ಸ್ಫೋಟ ಪ್ರಕರಣ: ಮತ್ತೆರಡು ಮೃತದೇಹಗಳು ಪತ್ತೆ
ಶಿಲ್ಲಾಂಗ್: ಮೇಘಾಲಯದ ಪೂರ್ವ ಜಯಂತಿಯಾ ಹಿಲ್ಸ್ ಜಿಲ್ಲೆಯ ಅಕ್ರಮ ಕಲ್ಲಿದ್ದಲು ಗಣಿಯಲ್ಲಿ ಮತ್ತೆ ಎರಡು ಮೃತದೇಹಗಳು ಪತ್ತೆಯಾಗಿವೆ. ಇದರೊಂದಿಗೆ ಈ ಗಣಿಯಲ್ಲಿ ಸಂಭವಿಸಿದ ಸ್ಪೋಟದಲ್ಲಿ ಮೃತಪಟ್ಟವರ ಸಂಖ್ಯೆ 27ಕ್ಕೆ ತಲುಪಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸ್ಫೋಟ ಸಂಭವಿಸಿದ ಉಮ್ಸನಗಟ್ ಗ್ರಾಮದ ತಂಗ್ಸ್ಕು ಪ್ರದೇಶದಲ್ಲಿ ವಿವಿಧ ಸಂಸ್ಥೆಗಳ ಶೋಧ ಕಾರ್ಯಾಚರಣೆ ಸಂದರ್ಭ ಎರಡು ಮೃತದೇಹಗಳು ಪತ್ತೆಯಾಗಿವೆ ಎಂದು ಅವರು ಹೇಳಿದ್ದಾರೆ. ಈ ಘಟನೆಯಲ್ಲಿ ಹಲವರು ನಾಪತ್ತೆಯಾಗಿದ್ದಾರೆ. ಶೋಧ ಕಾರ್ಯಾಚರಣೆ ಮುಂದುವರಿದಿದೆ ಎಂದು ಅವರು ತಿಳಿಸಿದ್ದಾರೆ. ಮೃತಪಟ್ಟವರ ಗುರುತು ಪರಿಶೀಲಿಸುವ ಕಾರ್ಯ ನಡೆಯುತ್ತಿದೆ ಎಂದು ಪೊಲೀಸ್ ವರಿಷ್ಠ ವಿಕಾಸ್ ಕುಮಾರ್ ಹೇಳಿದ್ದಾರೆ.
Haryana | ಸೂರಜ್ಕುಂಡ್ ಜಾತ್ರೆಯಲ್ಲಿ ʼಜಾಯ್ರೈಡ್ʼ ಕುಸಿತ: ಪೊಲೀಸ್ ಇನ್ಸ್ಪೆಕ್ಟರ್ ಮೃತ್ಯು, 13 ಮಂದಿಗೆ ಗಾಯ
ಫರಿದಾಬಾದ್: ಇಲ್ಲಿನ ಸೂರಜ್ಕುಂಡ್ ಜಾತ್ರೆಯಲ್ಲಿ ಶನಿವಾರ ಸಂಜೆ ‘ಸುನಾಮಿ’ ಎಂಬ ಜಾಯ್ರೈಡ್ ಉಯ್ಯಾಲೆ ಕುಸಿದು ಪೊಲೀಸ್ ಇನ್ಸ್ಪೆಕ್ಟರ್ ಒಬ್ಬರು ಮೃತಪಟ್ಟಿದ್ದು, 13 ಮಂದಿ ಗಾಯಗೊಂಡಿದ್ದಾರೆ. ಜಾತ್ರೆಗೆ ಬಂದಿದ್ದ ಜನರು ಉಯ್ಯಾಲೆಯಲ್ಲಿ ಸವಾರಿ ಮಾಡುತ್ತಿದ್ದ ವೇಳೆ ತಾಂತ್ರಿಕ ದೋಷದಿಂದ ಉಯ್ಯಾಲೆ ಏಕಾಏಕಿ ಮುರಿದು ಬಿದ್ದಿದೆ. ಈ ಸಂದರ್ಭ ಅನೇಕರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ರಕ್ಷಿಸಲು ಧಾವಿಸಿದ ಪೊಲೀಸ್ ಇನ್ಸ್ಪೆಕ್ಟರ್ ಜಗದೀಶ್ ಪ್ರಸಾದ್ ಗಂಭೀರವಾಗಿ ಗಾಯಗೊಂಡಿದ್ದು, ಬಳಿಕ ರಕ್ಷಣಾ ಕಾರ್ಯಾಚರಣೆ ನಡೆಯುವ ವೇಳೆ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಪಘಾತದಲ್ಲಿ ಒಟ್ಟು 13 ಮಂದಿ ಗಾಯಗೊಂಡಿದ್ದು, ಅವರನ್ನು ತಕ್ಷಣ ಆಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ಸಾಗಿಸಲಾಗಿದೆ. ಕೆಲವರ ಸ್ಥಿತಿ ಗಂಭೀರವಾಗಿದೆ ಎನ್ನಲಾಗಿದೆ. ಘಟನೆ ಬಳಿಕ ಉಪ ಆಯುಕ್ತರು, ಪ್ರವಾಸೋದ್ಯಮ ಇಲಾಖೆಯ ವ್ಯವಸ್ಥಾಪಕ ನಿರ್ದೇಶಕರು ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳು ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಹೆಚ್ಚಿನ ಅನಾಹುತಗಳನ್ನು ತಡೆಯುವ ಉದ್ದೇಶದಿಂದ ಅಪಘಾತ ನಡೆದ ಪ್ರದೇಶದ ಸುತ್ತ ಬ್ಯಾರಿಕೇಡ್ಗಳನ್ನು ಹಾಕಲಾಯಿತು. ಘಟನೆ ಕುರಿತು ಫರಿದಾಬಾದ್ ಉಪ ಆಯುಕ್ತ ಆಯುಷ್ ಸಿನ್ಹಾ ಹೇಳಿಕೆ ನೀಡಿದ್ದು, “ಸಂಜೆ ಸುಮಾರು 6.15ರ ಸುಮಾರಿಗೆ ದುರಂತ ಸಂಭವಿಸಿದೆ. ಸೂರಜ್ಕುಂಡ್ ನಲ್ಲಿ ಜಾಯ್ರೈಡ್ ಓರೆಯಾಗಲು ಆರಂಭಿಸಿ ಬಳಿಕ ಕುಸಿದಿದೆ. ಈ ಘಟನೆಯಲ್ಲಿ ಸುಮಾರು 13 ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಆಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ಸಾಗಿಸಲಾಗಿದೆ. ಪೊಲೀಸ್ ಇನ್ಸ್ಪೆಕ್ಟರ್ ಮೃತಪಟ್ಟಿರುವುದು ದೃಢಪಟ್ಟಿದೆ. ಜಾಯ್ರೈಡ್ ಓರೆಯಾಗುತ್ತಿದ್ದಾಗ ಜನರನ್ನು ರಕ್ಷಿಸಲು ಅವರು ಪ್ರಯತ್ನಿಸಿದ್ದರು. ಆದರೆ ಜಾಯ್ರೈಡ್ನ ಒಂದು ಭಾಗ ಅವರ ಮುಖ ಹಾಗೂ ತಲೆಗೆ ತಗುಲಿತು. ಉಳಿದವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಜಾಯ್ರೈಡ್ ನಿರ್ವಾಹಕರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಎಫ್ಐಆರ್ ದಾಖಲಿಸಿ ತನಿಖೆ ನಡೆಸಲಾಗುವುದು” ಎಂದು ತಿಳಿಸಿದ್ದಾರೆ. A policeman was killed and 12 others were injured after a swing collapsed at the Surajkund International Crafts Mela in Faridabad on Saturday evening. Tap to read story: https://t.co/xzJIkgxJjY pic.twitter.com/KxxMRfRcZ3 — The Indian Express (@IndianExpress) February 7, 2026 ಇದಕ್ಕೂ ಮೊದಲು ಜಾತ್ರಾ ಪ್ರದೇಶದಲ್ಲಿ ತೀವ್ರ ಗಾಳಿಯಿಂದ ಫುಡ್ ಕೋರ್ಟ್ನ ಪ್ರವೇಶ ದ್ವಾರ ಕುಸಿದಿರುವುದಾಗಿ ವರದಿಯಾಗಿದೆ. ಅಧಿಕಾರಿಗಳು ಸ್ಥಳದಲ್ಲೇ ಇದ್ದು ಪರಿಸ್ಥಿತಿಯನ್ನು ಅವಲೋಕಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಮಂಗಳೂರಿನಲ್ಲಿ ಬಾಲಕಿ ಅತ್ಯಾಚಾರ, ಕೊಲೆ ಪ್ರಕರಣ; ಮೂವರು ಅಪರಾಧಿಗಳ ಗಲ್ಲು ಶಿಕ್ಷೆ ಕಾಯಂಗೊಳಿಸಿದ ಹೈಕೋರ್ಟ್
ಬೆಂಗಳೂರು : ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿ, ಕೊಲೆಗೈದ ಪ್ರಕರಣದಲ್ಲಿ ಮೂವರಿಗೆ ಗಲ್ಲು ಶಿಕ್ಷೆ ವಿಧಿಸಿ ಸೆಷನ್ಸ್ ನ್ಯಾಯಾಲಯ ಹೊರಡಿಸಿದ್ದ ಆದೇಶವನ್ನು ಕಾಯಂಗೊಳಿಸಿರುವ ಹೈಕೋರ್ಟ್, ಇಂಥ ಪ್ರಕರಣಗಳಲ್ಲಿ ಅಪರಾಧಿಗಳ ಶಿಕ್ಷೆ ಕಡಿಮೆ ಮಾಡಿದರೆ ಸಮಾಜಕ್ಕೆ ತಪ್ಪು ಸಂದೇಶ ರವಾನೆಯಾಗಲಿದೆ ಎಂದು ತೀಕ್ಷ್ಣವಾಗಿ ನುಡಿದಿದೆ. ವಿಚಾರಣಾ ನ್ಯಾಯಾಲಯ ವಿಧಿಸಿದ್ದ ಗಲ್ಲು ಶಿಕ್ಷೆ ರದ್ದು ಕೋರಿ ಅಪರಾಧಿಗಳಾದ ಮಧ್ಯಪ್ರದೇಶದ ಜಯಬನ್ ಆದಿವಾಸಿ, ಮುಖೇಶ್ ಸಿಂಗ್ ಹಾಗೂ ಜಾರ್ಖಂಡ್ನ ಮನೀಶ್ ತಿರ್ಕಿ ಸಲ್ಲಿಸಿದ್ದ ಕ್ರಿಮಿನಲ್ ಮೇಲ್ಮನವಿ ಹಾಗೂ ಶಿಕ್ಷೆ ದೃಢೀಕರಿಸುವಂತೆ ಕೋರಿ ರಾಜ್ಯ ಸರ್ಕಾರ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಚ್. ಪಿ.ಸಂದೇಶ್ ಹಾಗೂ ನ್ಯಾಯಮೂರ್ತಿ ವೆಂಕಟೇಶ್ ಟಿ. ನಾಯ್ಕ್ ಅವರಿದ್ದ ವಿಭಾಗೀಯ ನ್ಯಾಯಪೀಠ ಈ ಆದೇಶ ಮಾಡಿದೆ. ಅಪ್ರಾಪ್ತ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ, ಕತ್ತು ಹಿಸುಕಿ ಕೊಲೆ ಮಾಡಿದ ಅಪರಾಧಿಗಳ ಶಿಕ್ಷೆ ಪ್ರಮಾಣ ಕಡಿಮೆ ಮಾಡಿದಲ್ಲಿ ಅಂತಹ ದುಷ್ಕೃತ್ಯಗಳನ್ನು ಪ್ರೋತ್ಸಾಹಿಸಿದಂತಾಗುತ್ತದೆ ಮತ್ತು ಸಮಾಜಕ್ಕೆ ತಪ್ಪು ಸಂದೇಶ ನೀಡಿದಂತಾಗಲಿದೆ ಎಂದು ನ್ಯಾಯಪೀಠ ಆದೇಶದಲ್ಲಿ ಅಭಿಪ್ರಾಯಪಟ್ಟಿದೆ. ಅಪರಾಧಿಗಳು 7 ವರ್ಷ 7 ತಿಂಗಳ ಬಾಲಕಿಗೆ ತಿಂಡಿ ಕೊಡಿಸುವ ನೆಪದಲ್ಲಿ ಕರೆದುಕೊಂಡು ಹೋಗಿ ತಮ್ಮ ಕಾಮತೃಷೆ ತೀರಿಸಿಕೊಂಡಿದ್ದಾರೆ. ಒಬ್ಬರ ನಂತರ ಮತ್ತೊಬ್ಬರು ಅತ್ಯಾಚಾರ ಎಸಗಿ ಕೊಲೆ ಮಾಡಿದ್ದು ಬಳಿಕ ಮೃತದೇಹವನ್ನು ಚರಂಡಿಗೆ ಎಸೆದಿರುವುದು ವಿಚಾರಣೆಯಲ್ಲಿ ದೃಢಪಟ್ಟಿದೆ. ಈ ಆಘಾತಕಾರಿ ಘಟನೆ ಕೇವಲ ನ್ಯಾಯಾಂಗ ಮಾತ್ರವಲ್ಲ, ಇಡೀ ಸಮಾಜದ ಆತ್ಮಸಾಕ್ಷಿಯನ್ನೇ ಕಲಕಿದೆ ಎಂದಿರುವ ನ್ಯಾಯಪೀಠ, ಶಿಕ್ಷೆ ರದ್ದು ಕೋರಿ ಅಪರಾಧಿಗಳು ಸಲ್ಲಿಸಿದ್ದ ಅರ್ಜಿಗಳನ್ನು ವಜಾಗೊಳಿಸಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ವಿಧಿಸಿದ್ದ ಗಲ್ಲು ಶಿಕ್ಷೆಯನ್ನು ದೃಢೀಕರಿಸಿದೆ. ಪ್ರಕರಣವೇನು? ಮಂಗಳೂರಿನ ವಾಮಂಜೂರು ಬಳಿಯ ಟೈಲ್ಸ್ ಕಾರ್ಖಾನೆಯಲ್ಲಿ ಕಾರ್ಮಿಕರಾಗಿದ್ದ ಅಪರಾಧಿಗಳು, ಅದೇ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯ ಪುತ್ರಿಯನ್ನು 2021ರ ನವೆಂಬರ್ 21ರಂದು, ಚಿಕ್ಕಿ ಕೊಡಿಸುವುದಾಗಿ ನಂಬಿಸಿ ತಮ್ಮ ಕೊಠಡಿಗೆ ಕರೆದೊಯ್ದಿದ್ದರು. ಒಬ್ಬ ಅರೋಪಿ ಅಸಹಜ ಲೈಂಗಿಕ ಕ್ರಿಯೆ ನಡೆಸಿದ್ದರೆ, ಇನ್ನಿಬ್ಬರು ಅತ್ಯಾಚಾರ ಎಸಗಿದ್ದರು. ಬಳಿಕ ಆಕೆಯ ಕುತ್ತಿಗೆ ಹಿಸುಕಿ ಕೊಂದು, ಸಾಕ್ಷ್ಯ ನಾಶಪಡಿಸುವ ಉದ್ದೇಶದಿಂದ ಮೃತದೇಹವನ್ನು ಚರಂಡಿಗೆ ಎಸೆದಿದ್ದರು. ಮೃತದೇಹ ಪತ್ತೆಯಾದ ಬಳಿಕ ಸಂತ್ರಸ್ತೆಯ ತಾಯಿ ಪೊಲೀಸರಿಗೆ ದೂರು ನೀಡಿದ್ದರು. ವಿಚಾರಣೆ ನಡೆಸಿದ್ದ ನ್ಯಾಯಾಲಯ ಆರೋಪಿಗಳಿಗೆ ಗಲ್ಲು ಶಿಕ್ಷೆ ಜತೆಗೆ ತಲಾ 40 ಸಾವಿರ ರೂ. ದಂಡ ವಿಧಿಸಿತ್ತು.
ಅಫಜಲಪುರ | ಶಿಸ್ತಿನಿಂದ ಶಿಕ್ಷಣ ಕಲಿತು ಬದುಕು ರೂಪಿಸಿಕೊಳ್ಳಿ: ಇಸ್ರಾರ್ ಪಟೇಲ್
ಅಫಜಲಪುರ : ವಿದ್ಯಾರ್ಥಿಗಳು ತಮ್ಮ ಬದುಕಿನಲ್ಲಿ ಶಿಸ್ತು ಮತ್ತು ಸಮಯ ಪ್ರಜ್ಞೆ ಅಳವಡಿಸಿಕೊಂಡಿರಬೇಕು. ಶಿಸ್ತಿನಿಂದ ಶಿಕ್ಷಣ ಪಡೆದು ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ವಿಜ್ಞಾನ ಶಿಕ್ಷಕ ಇಸ್ರಾರ್ ಪಟೇಲ್ ಸಲಹೆ ನೀಡಿದರು. ಪಟ್ಟಣದ ರಾಯಲ್ ವಿಜ್ಞಾನ ಮತ್ತು ಕಲಾ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಅವರು ಮಾತನಾಡಿ, ಜಗತ್ತು ವೇಗವಾಗಿ ಅಭಿವೃದ್ಧಿ ಹೊಂದುತ್ತಿದೆ. ನಿನ್ನೆ ಇದ್ದ ತಂತ್ರಜ್ಞಾನ ಇಂದು ಇಲ್ಲ. ಹೀಗಾಗಿ ವಿದ್ಯಾರ್ಥಿಗಳು ಕಾಲಕ್ಕೆ ತಕ್ಕಂತೆ ತಾವು ಪರಿವರ್ತನೆಯಾಗಬೇಕು ಎಂದು ತಿಳಿಸಿದರು. ಕನ್ನಡ ಉಪನ್ಯಾಸಕ ಡಾ. ಸಂಗಣ್ಣ ಎಂ.ಸಿ. ಮಾತನಾಡಿ, ವಿದ್ಯಾರ್ಥಿ ಜೀವನ ಅಮೂಲ್ಯವಾದುದು. ಕಲಿಯುವ ಆಸಕ್ತಿ ಹೆಚ್ಚಿಸಿಕೊಳ್ಳಬೇಕು. ಶಿಕ್ಷಣ ನೀಡುವ ಶಿಕ್ಷಕರಿಗೆ ಸದಾ ಗೌರವ ಮತ್ತು ವಿಧೇಯತೆ ಇರಬೇಕು. ಅದರಿಂದ ವಿದ್ಯಾರ್ಥಿಗಳ ಬದುಕು ಸಾರ್ಥಕವಾಗುತ್ತದೆ ಎಂದು ಹೇಳಿದರು. ಬಿಲಾಲ್ ಚೌಧರಿ ಮಾತನಾಡಿದರು. ಕಾರ್ಯಕ್ರಮಕ್ಕೆ ಖಾಜಾ ಹುಸೇನ್ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ವರ್ಷದ ಉತ್ತಮ ವಿದ್ಯಾರ್ಥಿ, ಶೈಕ್ಷಣಿಕ ಚಟುವಟಿಕೆಗಳಲ್ಲಿ ಸಾಧನೆ ಮಾಡಿದವರು ಹಾಗೂ 2024-25ನೇ ಸಾಲಿನಲ್ಲಿ ಅತ್ಯಧಿಕ ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಮುಖ್ಯಗುರು ನಬಿ ಪಟೇಲ್, ಆಡಳಿತ ಮಂಡಳಿ ಸದಸ್ಯ ಹುಸೇನ್ ಭಾಷಾ ಹಾಗೂ ಸಿಬ್ಬಂದಿಗಳಾದ ಸ್ನೇಹಾ, ಅಂಜಲಿ, ಮೇಘಾ, ಅನಿಷಿಧಾ, ಕಾರ್ತಿಕಾ ಸೇರಿದಂತೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಪ್ರಥಮ ವರ್ಷದ ವಿದ್ಯಾರ್ಥಿನಿಯರಾದ ಕೀರ್ತಿ ಕಣ್ಣಿ ಮತ್ತು ಪ್ರತಿಕ್ಷಾ ಪ್ರಾರ್ಥಿಸಿದರು. ಸಮರ್ಥ ಸ್ವಾಗತಿಸಿದರು. ಪ್ರಿಯಾ ಜಿ. ನವಲೇಕರ್ ಮತ್ತು ಭಾಗ್ಯಶ್ರೀ ಹಾವಳಗಿ ನಿರೂಪಿಸಿದರು. ಶ್ರೀಶೈಲ್ ವಂದಿಸಿದರು.
ವ್ಯಕ್ತಿಗಿಂತ ಸಮುದಾಯ ಮುಖ್ಯ: ರಫೀಕ್ ಮಾಸ್ಟರ್
ಬ್ಯಾರಿ ಅಧ್ಯಯನ ಪೀಠದ ವೆಬಿನಾರ್ ಸರಣಿ -2
ಕಲಬುರಗಿ | ಸಿ.ಟಿ.ಇ.ಟಿ ಪರೀಕ್ಷೆ: ಪರೀಕ್ಷಾ ಕೇಂದ್ರಗಳ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿ
ಕಲಬುರಗಿ: ಕೇಂದ್ರೀಯ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನವದೆಹಲಿ ಇವರ ವತಿಯಿಂದ ಕೇಂದ್ರೀಯ ಶಿಕ್ಷಕರ ಅರ್ಹತಾ ಪರೀಕ್ಷೆಯು (ಸಿ.ಟಿ.ಇ.ಟಿ.) (CENTRAL TEACHERS ELIGIBILITY TEST) ಫೆ.7 ಹಾಗೂ 8 ರಂದು ಪ್ರತಿದಿನ ಬೆಳಿಗ್ಗೆ 9.30 ರಿಂದ ಮಧ್ಯಾಹ್ನ 12 ಗಂಟೆಯವರೆಗೆ ಹಾಗೂ ಮಧ್ಯಾಹ್ನ 2 ರಿಂದ ಸಂಜೆ 5 ಗಂಟೆಯವರೆಗೆ ಕಲಬುರಗಿ ಜಿಲ್ಲೆಯ ಒಟ್ಟು 18 ಪರೀಕ್ಷಾ ಕೇಂದ್ರಗಳಲ್ಲಿ ಜರುಗಲಿದೆ. ಈ ಕೇಂದ್ರ ಶಿಕ್ಷಕರ ಅರ್ಹತಾ ಪರೀಕ್ಷೆಯನ್ನು ಶಾಂತಿಯುತ, ಸುಸೂತ್ರವಾಗಿ ನಡೆಸಲು ಹಾಗೂ ನಕಲನ್ನು ತಡೆಯುವ ಹಿತದೃಷ್ಟಿಯಿಂದ ಪರೀಕ್ಷೆ ಸಂದರ್ಭದಲ್ಲಿ ಒಟ್ಟು 18 ಪರೀಕ್ಷಾ ಕೇಂದ್ರಗಳ ಸುತ್ತಮುತ್ತಲಿನ 200 ಮೀಟರ್ ಪ್ರದೇಶವನ್ನು ನಿಷೇಧಿತ ಪ್ರದೇಶವೆಂದು ಘೋಷಿಸಿ ಕಲಬುರಗಿ ಜಿಲ್ಲಾಧಿಕಾರಿ ಬಿ. ಫೌಝಿಯಾ ತರನ್ನುಮ್ ಅವರು 2023 ಬಿ.ಎನ್.ಎಸ್.ಎಸ್. ಕಲಂ 163ರಡಿ ಪದತ್ತವಾದ ಅಧಿಕಾರ ಚಲಾಯಿಸಿ ಅವರು ಶುಕ್ರವಾರ ಈ ಆದೇಶ ಹೊರಡಿಸಿದ್ದಾರೆ. ಕರ್ನಾಟಕ ಪೊಲೀಸ್ ಅಧಿನಿಯಮ 1963ರ ಕಲಂ-35(ಸಿ)ರ ಅನ್ವಯ ಪರೀಕ್ಷಾ ಸಮಯದಲ್ಲಿ ಸಂಬಂಧಪಟ್ಟ ಪರೀಕ್ಷಾ ಕೇಂದ್ರದ ಮುಖ್ಯ ಅಧೀಕ್ಷಕರು, ಸಿಬ್ಬಂದಿ ವರ್ಗದವರನ್ನು ಹೊರತುಪಡಿಸಿ, ಯಾವುದೇ ಬೇರೆ ವ್ಯಕ್ತಿಗಳು ಪರೀಕ್ಷಾ ಕೇಂದ್ರಗಳ ಸುತ್ತಮುತ್ತಲಿನ 200 ಮೀಟರ್ ಪ್ರದೇಶದಲ್ಲಿ ಮೊಬೈಲ್ ಫೋನ್, ಪೇಜರ್, ಬ್ಲ್ಯೂಟೂತ್ ಹಾಗೂ ವೈರಲೆಸ್ ಸೆಟ್ಗಳು ಹಾಗೂ ಮತ್ತಿತರ ಎಲೆಕ್ಟ್ರಾನಿಕ್ಸ್ ಉಪಯೋಗಿಸುವುದನ್ನು ನಿಷೇಧಿಸಲಾಗಿದೆ. ಈ ಪರೀಕ್ಷಾ ಕೇಂದ್ರದ ಪ್ರದೇಶ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಜೆರಾಕ್ಸ್ ಮತ್ತು ಪುಸ್ತಕ ಅಂಗಡಿಗಳನ್ನು ಮುಚ್ಚುವಂತೆಯೂ ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ.
ಕಲ್ಲಂಗಡಿ ಬೆಳೆಗೆ ಸೊರಗು ರೋಗ: ವಿಜ್ಞಾನಿಗಳಿಂದ ಪರಿಶೀಲನೆ
ಕುಂದಾಪುರ, ಫೆ.7: ಉಡುಪಿ ಜಿಲ್ಲೆಯಲ್ಲಿ ಕಲ್ಲಂಗಡಿ ಹೆಚ್ಚಾಗಿ ಬೆಳೆಯುವ ಬೈಂದೂರು ವ್ಯಾಪ್ತಿಯಲ್ಲಿ ಈ ಬಾರಿ ಕಾಡುತ್ತಿರುವ ಸೊರಗು ರೋಗದಿಂದ ರೈತರು ಅಪಾರ ನಷ್ಟ ಅನುಭವಿಸಿದ್ದು, ಶುಕ್ರವಾರ ಸಂಜೆ ಅಧಿಕಾರಿಗಳು ಹಾಗೂ ವಿಜ್ಞಾನಿಗಳ ತಂಡ ಸಮಸ್ಯೆಯುಳ್ಳ ನಾಗೂರು- ಕಿರಿಮಂಜೇಶ್ವರ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಈ ಬಗ್ಗೆ ಫೆ.6 ಶುಕ್ರವಾರ ‘ವಾರ್ತಾಭಾರತಿ’ ಪತ್ರಿಕೆ ’ಕಲ್ಲಂಗಡಿ ಬೆಳೆದ ರೈತನಿಗೆ ನಿರಾಸೆ: ಸೊರಗು ರೋಗದಿಂದ ಅಪಾರ ನಷ್ಟ’ ತಲೆಬರಹದಡಿ ವಿಸ್ತೃತ ವರದಿ ಪ್ರಕಟಿಸಿತ್ತು. ಇಲ್ಲಿ ಬೆಳೆಗೆ ಬಂದಿರುವುದು ಗಮ್ಮೀ ಸ್ಟೆಮ್ ಬ್ಲೈಟ್ (ಕಾಂಡ ಸೋರುವಿಕೆ ರೋಗ) ಹಾಗೂ ಥ್ರಿಪ್ಸ್ ಬಾಧೆ ಎಂಬುದು ಮೇಲ್ನೋಟಕ್ಕೆ ಕಂಡುಬಂದಿದೆ ಎಂದು ರೋಗದಿಂದ ಬಾಧಿತ ಗಿಡಗಳನ್ನು ಪರಿಶೀಲಿಸಿದ ವಿಜ್ಞಾನಿಗಳು ತಿಳಿಸಿದ್ದಾರೆ. ಹಾಗೆಯೇ ಒಂದು ಗದ್ದೆಯಲ್ಲಿ ಬೂದಿಯಂತಹ ಶಿಲೀಂದ್ರ ಪತ್ತೆಯಾಗಿರುವುದಾಗಿ ಬ್ರಹ್ಮಾವರ ವಲಯ ಕೃಷಿ ಹಾಗೂ ತೋಟಗಾರಿಕಾ ಸಂಶೋಧನಾ ಕೇಂದ್ರದ ಸಹ ಸಂಶೋಧನಾ ನಿರ್ದೇಶಕ ಡಾ. ರೇವಣ್ಣ ರೇವಣ್ಣನವರ್ ಮಾಹಿತಿ ನೀಡಿದ್ದಾರೆ. ಬ್ರಹ್ಮಾವರ ವಲಯ ಕೃಷಿ ಹಾಗೂ ತೋಟಗಾರಿಕಾ ಸಂಶೋಧನಾ ಕೇಂದ್ರದ ಸಹ ಸಂಶೋಧನಾ ನಿರ್ದೇಶಕ ಡಾ. ರೇವಣ್ಣ ರೇವಣ್ಣನವರ್, ಶೃಂಗೇರಿ ವಲಯ ಕೃಷಿ ಸಂಶೋಧನಾ ಕೇಂದ್ರದ ಪ್ರಾಧ್ಯಾಪಕ ಸಂಜೀವ ಜಕಾತಿಮಠ, ಬೈಂದೂರು ತೋಟಗಾರಿಕೆ ಇಲಾಖೆಯ ಸಹಾಯಕ ಅಧಿಕಾರಿ ಪ್ರವೀಣ್, ಕಲ್ಲಂಗಡಿ ಬೆಳೆದ ರೈತರಾದ ನರಸಿಂಹ ದೇವಾಡಿಗ, ಲಕ್ಷ್ಮಣ ದೇವಾಡಿಗ, ಪರಮೇಶ್ವರ್ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಉಡುಪಿ ಜಿಲ್ಲೆಯಲ್ಲಿ ಡೆಸ್ಟಿನೇಷನ್ ಡೆವಲಪ್ಮೆಂಟ್ ಸ್ಕೀಮ್ನಡಿ 4 ಪ್ರವಾಸಿ ತಾಣ: ಸಂಸದ ಕೋಟ ಶ್ರೀನಿವಾಸ ಪೂಜಾರಿ
ಉಡುಪಿ: ದೇಶದಲ್ಲಿ ಸುಸ್ಥಿರ ಹಾಗೂ ಜವಾಬ್ದಾರಿಯುತ ಪ್ರವಾಸೋದ್ಯಮ ಅಭಿವೃದ್ಧಿ ಪಡಿಸುವ ಉದ್ದೇಶದಿಂದ ಕೇಂದ್ರ ಸರಕಾರದ ಪ್ರವಾಸೋದ್ಯಮ ಇಲಾಖೆ, ಜಾಗತಿಕ ಮಟ್ಟದಲ್ಲಿ 50ಕ್ಕೂ ಅಧಿಕ ಪ್ರವಾಸಿ ತಾಣಗಳನ್ನು ಅಭಿವೃದ್ಧಿ ಪಡಿಸಲು ಮುಂದಾಗಿದ್ದು, ಇವುಗಳಲ್ಲಿ ಉಡುಪಿ ಜಿಲ್ಲೆಯ ನಾಲ್ಕು ತಾಣಗಳು ಸ್ಥಾನ ಪಡೆದಿವೆ ಎಂದು ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ. ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಇಂದು ನಡೆದ ಕೇಂದ್ರ ಸರಕಾರದ ಜಾಗತಿಕ ಪ್ರವಾಸೋದ್ಯಮ ತಾಣ ಯೋಜನೆಯ ಅನುಷ್ಠಾನ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು. ಜಿಲ್ಲೆಯಲ್ಲಿ ಈ ಯೋಜನೆಗೆ ಕೋಡಿ- ಕನ್ಯಾನ, ಕೋಡಿ ಕುಂದಾಪುರ, ಬಾರ್ಕೂರು ಪೋರ್ಟ್ ಪ್ರದೇಶ ಹಾಗೂ ತ್ರಾಸಿ-ಮರವಂತೆ ಬೀಚ್ಗಳನ್ನು ಗುರುತಿಸಲಾಗಿದೆ ಎಂದು ಅವರು ಹೇಳಿದರು. ಪ್ರವಾಸೋದ್ಯಮ ಕ್ಷೇತ್ರದಲ್ಲಿ ಸುಸ್ಥಿರತೆಯನ್ನು ಮುನ್ನೆಲೆಗೆ ತರುವುದು ಮತ್ತು ನೈಸರ್ಗಿಕ, ಸಾಂಸ್ಕೃತಿಕ ಸಂಪನ್ಮೂಲಗಳನ್ನು ರಕ್ಷಿಸುವುದರೊಂದಿಗೆ ಪರಿಸರ ಸ್ನೇಹಿ ಪ್ರವಾಸೋದ್ಯಮ ತಾಣಗಳನ್ನು ಅಭಿವೃದ್ಧಿ ಪಡಿಸುವ ಮೂಲಕ ಪ್ರವಾಸಿಗರನ್ನು ಆರ್ಕಷಿಸುವುದು ಇದರ ಮುಖ್ಯ ಉದ್ದೇಶ. ಇದರೊಂದಿಗೆ ಈ ತಾಣಗಳಲ್ಲಿ ಮೂಲ ಸೌಕರ್ಯಗಳ ಅಭಿವೃದ್ಧಿಗೆ ವಿಶೇಷ ಗಮನ ಹರಿಸುವ ಗುರಿಯೊಂದಿಗೆ ‘ಡೆಸ್ಟಿನೇಷನ್ ಡೆವಲಪ್ಮೆಂಟ್ ಸ್ಕೀಮ್’ ಅನ್ನು ಜಾರಿಗೆ ತಂದಿದೆ ಎಂದರು. ಈ ಯೋಜನೆಗಳಲ್ಲಿ ನವೀಕರಿಸಬಹುದಾದದ ಇಂಧನಗಳ ಬಳಕೆ, ಮೂಲ ಸೌಕರ್ಯ ಹಾಗೂ ಪ್ರವಾಸಿಗರಿಗೆ ಜಾಗತಿಕ ಅಭಿಯಾನಗಳು ಸೇರಿ, ಜಾಗತಿಕ ಮಾನದಂಡಗಳಿಗೆ ಅನುಗುಣವಾಗಿ ಜಿಲ್ಲೆಯ ಒಂದು ಪ್ರವಾಸಿ ತಾಣವನ್ನು ಆಯ್ಕೆಮಾಡಿ ಅಭಿವೃದ್ಧಿಪಡಿಸಲಾಗುವುದು ಎಂದರು. ಕೇಂದ್ರ ಸರ್ಕಾರ ಈ ಯೋಜನೆಯನ್ನು ಅನುಷ್ಠಾನಗೊಳಿಸಲು 300 ಕೋಟಿ ರೂ. ಅನುದಾನ ನೀಡಲಿದೆ ಎಂದ ಅವರು, ಈ ಪ್ರವಾಸಿ ತಾಣದ ಅಭಿವೃದ್ಧಿಗೆ ಖಾಸಗಿ ಸಹಭಾಗಿತ್ವದ ಭಾಗವಹಿಸುವಿಕೆಯನ್ನು ಉತ್ತೇಜಿಸಲಾಗು ವುದು. ಇದಕ್ಕೆ ಅಗತ್ಯವಿರುವ ಭೂಮಿಯನ್ನು ಒದಗಿಸುವ ಅಗತ್ಯವಿದೆ ಎಂದರು. ಐಪಿಇ ಗ್ಲೋಬಲ್ನ ಹೇಮಲತಾ ಅವರು ಜಿಲ್ಲೆಯಲ್ಲಿ ‘ನೇಷನಲ್ ಮಿಷನ್ ಫಾರ್ ಡೆವಲಪಿಂಗ್ ಗ್ಲೋಬಲಿ ಕಾಂಪಿಟೇಟಿವ್ ಟೂರಿಸಂ ಡೆಸ್ಟಿನೇಷನ್ಸ್’ ಅನ್ನು ಅಭಿವೃದ್ಧಿ ಪಡಿಸಲು ಗುರುತಿಸಿರುವ ಸ್ಥಳಗಳನ್ನು ಪಿಪಿಟಿ ಮೂಲಕ ಪ್ರದರ್ಶಿಸಿ, ಅವುಗಳ ಕುರಿತು ವಿವರಿಸಿದರು. ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ ಮಾತನಾಡಿ, ಉಡುಪಿ ಜಿಲ್ಲೆಯು 98 ಕಿ.ಮೀ ಉದ್ದದ ಕರಾವಳಿ ತೀರ, ಪಶ್ಚಿಮ ಘಟ್ಟಗಳ ಪ್ರಕೃತಿ ಸೌಂದರ್ಯ, ಹಳ್ಳ, ಕೊಳ್ಳ, ಹೊಳೆಗಳನ್ನು ಹೊಂದಿ ಪ್ರವಾಸಿಗರನ್ನು ಹೆಚ್ಚು ಆಕರ್ಷಿಸುತ್ತಿದೆ ಎಂದರು. ಸಭೆಯಲ್ಲಿ ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕಿ ವಿಂದ್ಯಾ ಎನ್.ಎಂ, ವಿವಿಧ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಇತರರು ಉಪಸ್ಥಿತರಿದ್ದರು.
ಯತೀಂದ್ರ ಹೇಳಿಕೆಗೆ ಕಾಲವೇ ಉತ್ತರಿಸುತ್ತೆ: ಡಿ.ಕೆ.ಶಿವಕುಮಾರ್
ರಾಯಚೂರು : ಸಿದ್ದರಾಮಯ್ಯನವರೇ ಹೈಕಮಾಂಡ್ ಎಂದು ನಾನು ಹೇಳಿದ್ದೆ, ಯತೀಂದ್ರ ಸಿದ್ದರಾಮಯ್ಯ ಹೈಕಮಾಂಡ್ಗಿಂತ ಮೇಲೆ ಹೇಳುತ್ತಿದ್ದಾರೆ. ಅದಕ್ಕೆ ಏನು ಹೇಳಲ್ಲ ಕಾಲವೇ ಉತ್ತರಿಸುತ್ತೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು. ಸಿದ್ಧರಾಮಯ್ಯನವರೇ ಐದು ವರ್ಷ ಮುಖ್ಯಮಂತ್ರಿಗಳಾಗಿ ಅವಧಿ ಪೂರೈಸುತ್ತಾರೆ ಎಂಬ ಎಂಎಲ್ಸಿ ಯತೀಂದ್ರ ಅವರ ಹೇಳಿಕೆಗೆ ಶನಿವಾರ ನಗರದಲ್ಲಿ ಪ್ರತಿಕ್ರಿಯಿಸಿದ ಅವರು, ಸಿದ್ದರಾಮಯ್ಯನವರೇ ನಮ್ಮ ಹೈಕಮಾಂಡ್ ಎಂದು ಪುನರುಚ್ಚರಿಸಿದರು. ಮೆಟ್ರೊ ಪ್ರಯಾಣ ದರ ಏರಿಕೆ ಕುರಿತಾಗಿ ಸಂಸದ ತೇಜಸ್ವಿ ಸೂರ್ಯ ಅವರು “ಸೋಮವಾರದಿಂದ ದರ ಏರಿಕೆಯಾಗಲ್ಲ” ಎಂದು ನೀಡಿದ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಬಿಜೆಪಿಯವರು ಖಾಲಿ ಮಾತಾಡುವುದು ಬೇಡ. ಅವರು ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲಿ. ದರ ಏರಿಕೆ ಬೇಡ ಎಂದು ಎಲ್ಲ ಸಂಸದರೂ ಪ್ರಧಾನಿಗೆ ಮತ್ತು ಸಂಬಂಧಿತ ಕೇಂದ್ರ ಸಚಿವರಿಗೆ ಪತ್ರ ಬರೆಯಲಿ ಎಂದು ಸವಾಲು ಹಾಕಿದರು.
Madurai | ಕೌಟುಂಬಿಕ ವಿವಾದ: ಎಐಎಡಿಎಂಕೆ ಪದಾಧಿಕಾರಿಯ ಶಿರಚ್ಛೇದನ
ಮಧುರೈ: ಕೌಟುಂಬಿಕ ವಿವಾದದ ಹಿನ್ನೆಲೆಯಲ್ಲಿ 6 ಮಂದಿಯ ತಂಡವೊಂದು ಎಐಎಡಿಎಂಕೆ ಪದಾಧಿಕಾರಿಯೊಬ್ಬರ ಶಿರಚ್ಛೇದನ ಮಾಡಿದೆ ಘಟನೆ ಸಾಮನಾಥಮ್ನಲ್ಲಿ ಶುಕ್ರವಾರ ಬೆಳಗ್ಗೆ ನಡೆದಿದೆ. ಎಂ. ಧನಸೇಕರಪಾಂಡಿಯನ್ ಆಲಿಯಾಸ್ ಸೆಂಥಿಲ್ (38) ಅವರು ಸಾಮನಾಥಮ್ನಲ್ಲಿ ಎಐಎಡಿಎಂಕೆಯ ಯುವಜನ ಹಾಗೂ ಮಹಿಳಾ ಘಟಕದ ಅಧ್ಯಕ್ಷರಾಗಿದ್ದರು. ಸಾಮನಾಥಮ್ ನೆಡುಂಗಲಂ ಮುಖ್ಯ ರಸ್ತೆಯಲ್ಲಿ ಅವರ ಚಹಾ ಅಂಗಡಿ ನಡೆಸುತ್ತಿದ್ದರು. ಅಲ್ಲಿ ತಂಡ ಅವರ ಶಿರಚ್ಛೇದನ ಮಾಡಿದೆ. ಆರಂಭದಲ್ಲಿ ಮಧ್ಯ ಸೇವಿಸಿ ಗಲಾಟೆ ಮಾಡುವುದನ್ನು ಪ್ರಶ್ನಿಸಿರುವುದಕ್ಕೆ ಸೆಂಥಿಲ್ ಅವರನ್ನು ತಂಡ ಹತ್ಯೆಗೈದಿದೆ ಎಂಬ ವಂದಂತಿಗಳು ಸಾಮಾಜಿಕ ಮಾಧ್ಯಮದಲ್ಲಿ ಹರಡಿತ್ತು. ಅನಂತರ ಪೊಲೀಸ್ ವರಿಷ್ಠ ಬಿ.ಕೆ. ಅರವಿಂದ, ವಾಗ್ವಾದದ ಕಾರಣಕ್ಕೆ ಸೆಂಥಿಲ್ ಹತ್ಯೆಯಾಗಿಲ್ಲ ಎಂದು ತಿಳಿಸಿದ್ದಾರೆ. ಸೆಂಥಿಲ್ ಅವರ ಪತ್ನಿಯ ಅನೈತಿಕ ಸಂಬಂಧದ ಕುರಿತ ವಿವಾದ ಈ ಹತ್ಯೆಗೆ ಕಾರಣ ಎಂಬುದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ ಎಂದು ಅವರು ಸುದ್ದಿಗಾರರಿಗೆ ಹೇಳಿದ್ದಾರೆ. ಮೂವರನ್ನು ಬಂಧಿಸಲಾಗಿದೆ. ಇತರನ್ನು ಬಂಧಿಸಲು ಮೂರು ವಿಶೇಷ ತಂಡಗಳನ್ನು ರೂಪಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. ಬಂಧಿತರಾದ ಮೂವರಲ್ಲಿ ಇಬ್ಬರು ಅಪ್ರಾಪ್ತರು. ಪರಾರಿಯಾಗಿರುವ ಪ್ರಮುಖ ಆರೋಪಿ ಕುಟ್ಟಿ ಕಾರ್ತಿಕ್ಗೆ ಸೆಂಥಿಲ್ ಪತ್ನಿ ಕವಿಯಳೊಂದಿಗೆ ಅನೈತಿಕ ಸಂಬಂಧ ಇತ್ತು ಎಂದು ಹೇಳಲಾಗಿದೆ ಎಂದು ಮೂಲಗಳು ತಿಳಿಸಿವೆ.
T20 World Cup : ಟೀಂ ಇಂಡಿಯಾ ವಿರುದ್ದ ಮೈದಾನಕ್ಕಿಳಿದ USA ತಂಡದಲ್ಲಿ ಭಾರತ - ಪಾಕ್ ಜುಗಲ್ಬಂದಿ
Indian Origin Players : ಮುಂಬೈನ ವಾಂಖೇಡೆ ಮೈದಾನದಲ್ಲಿ ಟೀಂ ಇಂಡಿಯಾ ಮತ್ತು ಅಮೆರಿಕಾ ತಂಡಗಳು ವಿಶ್ವಕಪ್ ಟಿ20 ಪಂದ್ಯ ಆರಂಭಿಸಿದೆ. ಅಮೆರಿಕಾ ತಂಡದಲ್ಲಿ ಭಾರತ ಮತ್ತು ಪಾಕಿಸ್ತಾನದ ಎಂಟು ಆಟಗಾರರು ಮೈದಾನಕ್ಕಿಳಿದಿದ್ದಾರೆ. ಒಂದು ರೀತಿಯಲ್ಲಿ ಅಮೆರಿಕಾದ ತಂಡವು, ಏಷ್ಯಾ ಖಂಡದ ತಂಡಂದಂತಿದೆ. ಭಾರತದ ಆರಂಭ ಇತ್ತೀಚಿನ ವರದಿಯ ಪ್ರಕಾರ ಉತ್ತಮವಾಗಿಲ್ಲ.
ನಮ್ಮ ಮೆಟ್ರೋ ದರ ಏರಿಕೆಗೆ ತಾತ್ಕಾಲಿಕ ತಡೆ : ಆರ್.ಅಶೋಕ್
ಬೆಂಗಳೂರು : ‘ಸೋಮವಾರದಿಂದ ಜಾರಿಗೆ ಬರಬೇಕಿದ್ದ ನಮ್ಮ ಮೆಟ್ರೋ ರೈಲ್ವೆ ಪ್ರಯಾಣ ಪ್ರಸ್ತಾವಿತ ದರ ಏರಿಕೆಯನ್ನು ಸದ್ಯಕ್ಕೆ ತಡೆಹಿಡಿಯಲು ಕೇಂದ್ರ ಸಚಿವ ಮನೋಹರ್ ಲಾಲ್ ಖಟ್ಟರ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ’ ಎಂದು ವಿಪಕ್ಷ ನಾಯಕ ಆರ್.ಅಶೋಕ್ ತಿಳಿಸಿದ್ದಾರೆ. ಶನಿವಾರ ಈ ಸಂಬಂಧ ಎಕ್ಸ್ ನಲ್ಲಿ ಪೋಸ್ಟ್ ಹಾಕಿರುವ ಅವರು, ಅಸಮರ್ಥನೀಯವಾಗಿ ಏರಿಕೆ ಮಾಡಲು ಹೊರಟಿರುವ ಕಾಂಗ್ರೆಸ್ ಸರಕಾರದ ನಿರ್ಧಾರಕ್ಕೆ ಸಂಬಂಧಪಟ್ಟಂತೆ ನಾನು ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವ ಮನೋಹರ್ ಲಾಲ್ ಖಟ್ಟರ್ ಅವರೊಂದಿಗೆ ದೂರವಾಣಿ ಮೂಲಕ ಚರ್ಚೆ ನಡೆಸಿದೆ ಎಂದು ಉಲ್ಲೇಖಿಸಿದ್ದಾರೆ. ಈಗಾಗಲೇ ಭಾರತದಲ್ಲೇ ಅತ್ಯಂತ ದುಬಾರಿ ಮೆಟ್ರೋ ದರವನ್ನು ಹೊಂದಿರುವ ಬೆಂಗಳೂರಿನಲ್ಲಿ, ಮತ್ತೊಂದು ದರ ಏರಿಕೆಯು ಲಕ್ಷಾಂತರ ನಾಗರಿಕರಿಗೆ ಹಾಗೂ ಸಾರ್ವಜನಿಕ ಸಾರಿಗೆಯನ್ನೇ ನಂಬಿಕೊಂಡಿರುವ ಸಾಮಾನ್ಯ ಜನರಿಗೆ ಗಾಯದ ಮೇಲೆ ಬರೆ ಎಳೆದಂತಾಗುತ್ತದೆ ಎಂದು ಅವರಿಗೆ ಮನವರಿಕೆ ಮಾಡಿಕೊಟ್ಟಿದ್ದೇನೆ ಎಂದು ಅವರು ತಿಳಿಸಿದ್ದಾರೆ. ಇದರ ಜೊತೆಗೆ ದರ ನಿಗದಿ ಸಮಿತಿಯಲ್ಲಿನ ಲೋಪಗಳ ಬಗ್ಗೆ ವೈಯಕ್ತಿಕವಾಗಿ ಪರಿಶೀಲಿಸುವುದಾಗಿ ಭರವಸೆ ನೀಡಿರುವ ಅವರು, ರಾಜ್ಯ ಸರಕಾರ ವಿನಂತಿಸಿದರೆ ದರಗಳ ವೈಜ್ಞಾನಿಕ ಪರಿಷ್ಕರಣೆಗಾಗಿ ಹೊಸ ಸಮಿತಿಯನ್ನು ರಚಿಸುವ ಬಗ್ಗೆಯೂ ಮಾತನಾಡಿದರು. ಪ್ರಯಾಣಿಕರ ಹಿತದೃಷ್ಟಿಯಿಂದ ಕೂಡಲೇ ಕಾರ್ಯಪ್ರವೃತ್ತರಾದ ಕೇಂದ್ರ ಸಚಿವರಿಗೆ ನಾನು ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ ಎಂದು ಅವರು ತಿಳಿಸಿದ್ದಾರೆ.
ಪಾಕ್ ರಾಜಧಾನಿ ಇಸ್ಲಾಮಾಬಾದ್ ದುರ್ಘಟನೆ ಹಿನ್ನೆಲೆ, ಮೂವರು ಶಂಕಿತರು ಪೊಲೀಸರ ವಶಕ್ಕೆ | Islamabad Incident
ಪಾಕಿಸ್ತಾನ ಅನ್ನೋ ದೇಶ ಭೂಮಿ ಮೇಲೆ ಇರುವುದೇ ಮನುಷ್ಯರಿಗೆ ತೊಂದರೆ ಕೊಡಲು ಅಂತಾನೇ ಕಾಣುತ್ತದೆ. ಯಾಕಂದ್ರೆ ಜಗತ್ತಿನಲ್ಲಿ ಇರುವ ಸಮಸ್ಯೆಗಳೆಲ್ಲಾ ಇದೇ ಪಾಕಿಸ್ತಾನದಲ್ಲಿ ಬಂದು ಸೇರಿದಂತೆ ತೋರುತ್ತದೆ. ಅದರಲ್ಲೂ ಉಗ್ರರ ಕಾರ್ಖಾನೆ ಆಗಿರುವ ಪಾಕಿಸ್ತಾನ ತಾನು ಕೂಡ ಉದ್ದಾರ ಆಗಲ್ಲ &ತನ್ನ ಅಕ್ಕಪಕ್ಕದ ದೇಶಗಳು ಉದ್ಧಾರ ಆಗುತ್ತಿದ್ದರೆ ಅದನ್ನು ಸಹಿಸಿಕೊಳ್ಳದೆ ಕೆಡಿಸುವ ಕೆಲಸ ಮಾಡುತ್ತದೆ. ಆದರೆ
ಮಹಾರಾಷ್ಟ್ರ: ಗುಂಡಿನ ಕಾಳಗದಲ್ಲಿ 7 ಮಂದಿ ಶಂಕಿತ ಮಾವೋವಾದಿಗಳು ಸಾವು
ನಿಝಾಮಾಬಾದ್: ಮಹಾರಾಷ್ಟ್ರದ ಗಡ್ಚಿರೋಳಿ ಜಿಲ್ಲೆಯ ಅಂಬುಜ್ಮಾಡ್ ಪ್ರದೇಶದಲ್ಲಿ ನಡೆದ ಗುಂಡಿ ಕಾಳಗದಲ್ಲಿ ನಿಷೇಧಿತ ಸಿಪಿಐ (ಮಾವೋವಾದಿ) ಯ ಹಿರಿಯ ನಾಯಕ ಸೇರಿದಂತೆ 7 ಮಂದಿ ಶಂಕಿತ ಮಾವೋವಾದಿಗಳು ಹತರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಪ್ರದೇಶದಲ್ಲಿ ಕಳೆದ ಮೂರು ದಿನಗಳಿಂದ ನಡೆಯುತ್ತಿರುವ ಮಾವೋವಾದಿ ನಿಗ್ರಹ ಕಾರ್ಯಾಚರಣೆಯ ಸಂದರ್ಭ ಓರ್ವ ಭದ್ರತಾ ಅಧಿಕಾರಿ ಮೃತಪಟ್ಟಿದ್ದಾರೆ ಹಾಗೂ ಇನ್ನೊಬ್ಬರು ಗಾಯಗೊಂಡಿದ್ದಾರೆ. ಮೃತಪಟ್ಟ ಮಾವೋವಾದಿ ನಾಯಕನನ್ನು ಪ್ರಭಾಕರ್ ಅಲಿಯಾಸ್ ಲೋಯಟ್ಟಿ ಚಂದರ್ ರಾವ್ ಎಂದು ಗುರುತಿಸಲಾಗಿದೆ. ಈತ ಮಾವೋವಾದಿಗಳ ಗಡ್ಜಿರೋಳಿ ವಿಭಾಗೀಯ ಸಮಿತಿಯ ಉಸ್ತುವಾರಿ ವಹಿಸಿದ್ದ. ಈತನ ತಲೆಗೆ 25 ಲಕ್ಷ ರೂ. ಬಹುಮಾನ ಘೋಷಿಸಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಈ ಪ್ರದೇಶದಲ್ಲಿ ಮಾವೋವಾದಿಗಳ ಗುಂಪಿನ ಚಲನವಲನದ ಬಗ್ಗೆ ವಿಶ್ವಾಸಾರ್ಹ ಮಾಹಿತಿಯ ಹಿನ್ನೆಲೆಯಲ್ಲಿ ಮಂಗಳವಾರ ರಾತ್ರಿ ಕಾರ್ಯಾಚರಣೆ ಆರಂಭಿಸಲಾಯಿತು ಎಂದು ಗಡ್ಚಿರೋಳಿ ಪೊಲೀಸರು ಹೇಳಿದ್ದಾರೆ. ನಾರಾಯಣಪುರ-ಗಡ್ಚಿರೋಳಿ ಜಿಲ್ಲೆಯ ಗಡಿಯ ಫೋಡೆವಾಡಾ ಗ್ರಾಮದ ಸಮೀಪ ಸಿ-60 ಪಡೆಯ 14 ಘಟಕಗಳು, ಜಿಲ್ಲಾ ಪೊಲೀಸ್ನ ವಿಶೇಷ ಮಾವಾವೋದಿ ನಿಗ್ರಹ ಘಟಕವನ್ನು ನಿಯೋಜಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. ‘‘ಕಾರ್ಯಾಚರಣೆಯಲ್ಲಿ ಸಿ-60 ಅಧಿಕಾರಿ ದೀಪಕ್ ಚಿನನಾ ಮಾಡವಿ (38) ಸಾವನ್ನಪ್ಪಿದ್ದಾರೆ. ಅವರು ಅಹೆರಿ ತೆಹ್ಸಿಲ್ನ ಮಂದ್ರಾ ಗ್ರಾಮದ ನಿವಾಸಿ. ಗುರುವಾರ ಸಂಜೆ ನಡೆದ ಗುಂಡಿನ ಕಾಳಗದಲ್ಲಿ ಅವರು ಗಂಬೀರ ಗಾಯಗೊಂಡಿದ್ದರು. ಅವರನ್ನು ಏರ್ಲಿಫ್ಟ್ ಮಾಡಿ ಭಮ್ರಗಡದಲ್ಲಿರುವ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಅವರು ಅನಂತರ ಮೃತಪಟ್ಟರು’’ ಇನ್ನೊಬ್ಬರು ಅಧಿಕಾರಿ ಜೋಗಾ ಮಾಡವಿ ಅವರು ಗಾಯಗೊಂಡಿದ್ದಾರೆ. ಅವರು ಕಿಶ್ಟ್ಯಪಲ್ಲಿ ಗ್ರಾಮದ ನಿವಾಸಿ. ಅವರನ್ನು ಗಡ್ಚಿರೋಳಿಗೆ ಏರ್ಲಿಫ್ಟ್ ಮಾಡಲಾಯಿತು. ಅವರು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಅವರ ಸ್ಥಿತಿ ಸ್ಥಿರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಾಲ್ಯ ವಿವಾಹದಿಂದ ಹೆಣ್ಮಕ್ಕಳ ಶಿಕ್ಷಣ, ಆರೋಗ್ಯ ಮತ್ತು ಹಕ್ಕುಗಳ ಮೇಲೆ ದುಷ್ಪರಿಣಾಮ:ನ್ಯಾ.ಶಶಿಧರ ಶೆಟ್ಟಿ
ಬಾಲ್ಯ ವಿವಾಹ ಮುಕ್ತ ಭಾರತ ಅಭಿಯಾನದಡಿ ಕಾನೂನು ಅರಿವು ಕಾರ್ಯಗಾರ
ಇಂದೋರ್| ಕಲುಷಿತ ನೀರು ಸೇವನೆಯಿಂದ ವೃದ್ಧ ಸಾವು: ಆರೋಪ
ಭೋಪಾಲ್: ಇಂದೋರ್ನ ಭಗೀರಥಿಪುರ ಪ್ರದೇಶದಲ್ಲಿ ಕಲುಷಿತ ನೀರು ಸೇವನೆಯಿಂದ ಉಂಟಾದ ಅತಿಸಾರದಿಂದ ಮತ್ತೊಂದು ಸಾವು ವರದಿಯಾಗಿದೆ. ಅತಿಸಾರದ ಹಿನ್ನೆಲೆಯಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 70 ವರ್ಷದ ವೃದ್ಧರೊಬ್ಬರು ಗುರುವಾರ ಸಾವನ್ನಪ್ಪಿದ್ದಾರೆ. ಮೃತಪಟ್ಟ ವೃದ್ಧರನ್ನು ಅಲ್ಗು ಚೌಧರಿ ಎಂದು ಗುರುತಿಸಲಾಗಿದೆ. ಅತಿಸಾರ ಹಾಗೂ ವಾಂತಿಯ ಹಿನ್ನೆಲೆಯಲ್ಲಿ ಅವರನ್ನು ಶ್ರೀ ಅರಬಿಂದೋ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸಯನ್ಸಸ್ (ಎಸ್ಎಐಎಂಎಸ್-ಇಂದೋರ್) ಆಸ್ಪತ್ರೆಗೆ ಜನವರಿ 9ರಂದು ದಾಖಲಿಸಲಾಗಿತ್ತು. ಅವರಿಗೆ ಶ್ವಾಸೋಚ್ಛಾಸದ ಸಮಸ್ಯೆ ಕಾಣಿಸಿಕೊಂಡಿತ್ತು. ಅವರು ಚಿಕಿತ್ಸೆಯಲ್ಲಿರುವಾಗ ಗುರುವಾರ ತಡ ರಾತ್ರಿ ಮೃತಪಟ್ಟರು. ‘‘ನನ್ನ ತಂದೆ ಕಲುಷಿತ ನೀರು ಕುಡಿದ ಬಳಿಕ ಅತಿಸಾರ ಹಾಗೂ ವಾಂತಿ ಕಂಡು ಬಂತು. ಇದರಿಂದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು’’ ಎಂದು ಅಲ್ಗು ಚೌಧರಿ ಅವರ ಪುತ್ರ ಸಂಜಯ್ ತಿಳಿಸಿದ್ದಾರೆ. ಆದರೆ, ಇಂದೋರ್ನ ಜಿಲ್ಲಾ ಮುಖ್ಯ ಆರೋಗ್ಯ ಹಾಗೂ ವೈದ್ಯಾಧಿಕಾರಿ ಡಾ. ಮಾಧವ್ ಹಸ್ಸನಿ, ‘‘ಅಲ್ಗು ಚೌಧರಿ ಅವರು ಅತಿಸಾರದಿಂದ ಸಾವನ್ನಪ್ಪಿಲ್ಲ. ಅವರು ನಿರ್ಜಲೀಕರಣಕ್ಕೆ ಸಂಬಂಧಿಸಿದ ಆರೋಗ್ಯ ಸಮಸ್ಯೆಯಿಂದ ಮೃತಪಟ್ಟಿದ್ದಾರೆ. ಅವರ ಮೆದುಳಿನಲ್ಲಿ ರಕ್ತ ಸ್ರಾವವಾಗಿದೆ’’ ಎಂದು ಪ್ರತಿಪಾದಿಸಿದ್ದಾರೆ.
ಜಿಬಿಎ ಚುನಾವಣೆಗೆ ಕಮಲ ಪಡೆ ಭರ್ಜರಿ ಸಿದ್ದತೆ: ಜೆಡಿಎಸ್ ಜೊತೆ ಚರ್ಚಿಸಿ ಶೀಘ್ರದಲ್ಲೇ ಅಭ್ಯರ್ಥಿಗಳ ಆಯ್ಕೆ
ಹಿಂದಿನ ಬಿಜೆಪಿ ಸರಕಾರದ ಅವಧಿಯಲ್ಲಿ ಮುಖ್ಯಮಂತ್ರಿಗಳಾಗಿದ್ದ ಯಡಿಯೂರಪ್ಪ ಅವರು ಬೆಂಗಳೂರಿಗೆ ನೀಡಿದ ಆದ್ಯತೆ, ಅನುದಾನ ನೀಡಿದ್ದು, ಮುಖ್ಯಮಂತ್ರಿಗಳಾಗಿದ್ದ ಬಸವರಾಜ ಬೊಮ್ಮಾಯಿಯವರು ಅವಧಿಯ ಅಭಿವೃದ್ಧಿ ಕಾರ್ಯಗಳು- ಇವೆಲ್ಲವನ್ನೂ ಜನರ ಮುಂದೆ ತೆಗೆದುಕೊಂಡು ಹೋಗಲಿದ್ದೇವೆ. ಕಾಂಗ್ರೆಸ್ ಸರಕಾರದ ವೈಫಲ್ಯಗಳನ್ನೂ ಜನರ ಮುಂದಿಟ್ಟು ಮುಂದಿನ ದಿನಗಳಲ್ಲಿ ಎಲ್ಲ 5 ಜಿಬಿಎಗಳಲ್ಲೂ ನಾವು ಅಧಿಕಾರಕ್ಕೆ ಬರಬೇಕೆಂಬ ಸಂಕಲ್ಪದೊಂದಿಗೆ ಹೆಜ್ಜೆ ಮುಂದಿಡುತ್ತಿದ್ದೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ತಿಳಿಸಿದ್ದಾರೆ. ಈ ಕುರಿತಾಗಿ ಅವರು ಏನು ಹೇಳಿದ್ದಾರೆ ಎಂಬ ವಿವರ ಇಲ್ಲಿದೆ.
ಸರಕಾರದ 6ನೇ ಗ್ಯಾರಂಟಿಯಾಗಿ ಉಚಿತ ಭೂಮಿ ನೀಡುವ ಯೋಜನೆಯನ್ನು ರೂಪಿಸಲಾಗುವುದು : ಡಿ.ಕೆ.ಶಿವಕುಮಾರ್
ರಾಯಚೂರು ಜಿಲ್ಲಾ ಉತ್ಸವದ ಸಮಾರೋಪ ಕಾರ್ಯಕ್ರಮ
ಶೀಘ್ರ ಪತ್ತೆ ಹಚ್ಚಿ ಚಿಕಿತ್ಸೆ ನೀಡಿದರೆ ಕ್ಯಾನ್ಸರ್ ಕಾಯಿಲೆ ಗುಣಮುಖ: ಡಾ. ಎಚ್.ಆರ್.ತಿಮ್ಮಯ್ಯ
ಮಂಗಳೂರು, ಫೆ.7: ಕ್ಯಾನ್ಸರ್ ಕಾಯಿಲೆಯನ್ನು ಪ್ರಥಮ ಅಥವಾ ದ್ವಿತೀಯ ಹಂತದಲ್ಲೇ ಪತ್ತೆಹಚ್ಚಿ ಚಿಕಿತ್ಸೆ ನೀಡಿದರೆ ಸಂಪೂರ್ಣವಾಗಿ ಗುಣಮುಖರಾಗಲು ಸಾಧ್ಯವಿದೆ ಎಂದು ದ.ಕ. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಎಚ್.ಆರ್. ತಿಮ್ಮಯ್ಯ ಹೇಳಿದರು. ದ.ಕ.ಜಿಲ್ಲಾಡಳಿತ, ಜಿಪಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ವೆನ್ಲಾಕ್ ಆಸ್ಪತ್ರೆ, ಜಿಲ್ಲಾ ಎನ್ಪಿಸಿಡಿಸಿ ವಿಭಾಗ, ಯುನಿಟಿ ಆಸ್ಪತ್ರೆ ಮಂಗಳೂರು ಇವುಗಳ ಸಂಯುಕ್ತ ಆಶ್ರಯದಲ್ಲಿ ವೆನ್ಲಾಕ್ ಆಸ್ಪತ್ರೆಯ ಆರ್.ಎ.ಪಿ.ಸಿ.ಸಿ ಸಭಾಂಗಣದಲ್ಲಿ ಶನಿವಾರ ನಡೆದ ಜಿಲ್ಲಾ ಮಟ್ಟದ ವಿಶ್ವ ಕ್ಯಾನ್ಸರ್ ದಿನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಕ್ಯಾನ್ಸರ್ನ ಲಕ್ಷಣಗಳ ಬಗ್ಗೆ ಪ್ರತಿಯೊಬ್ಬರೂ ತಿಳಿದು ಕೊಳ್ಳಬೇಕು. ನರ್ಸಿಂಗ್ ವಿದ್ಯಾರ್ಥಿಗಳು ಈ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕು ಎಂದು ಡಾ. ಎಚ್.ಆರ್.ತಿಮ್ಮಯ್ಯ ಕರೆ ನೀಡಿದರು. ಸಭಾ ಕಾರ್ಯಕ್ರಮಕ್ಕೆ ಮುನ್ನ ನಗರದ ಅಂಬೇಡ್ಕರ್ ವೃತ್ತದಿಂದ ವೆನ್ಲಾಕ್ ಆಸ್ಪತ್ರೆಯವರೆಗೆ ಜಾಗೃತಿ ರ್ಯಾಲಿ ನಡೆಯಿತು. ಡಿಎಸ್ಒ ಡಾ.ನವೀನ್ಚಂದ್ರ ಮಾತನಾಡಿ ರೋಗಿಗಳು ಆಸ್ಪತ್ರೆಯತ್ತ ಬರುವಾಗ ಮೂರನೇ ಹಂತ ತಲುಪಿರು ತ್ತಾರೆ. ನಿಯಮಿತವಾಗಿ ಸೂಕ್ತ ತಪಾಸಣೆಗೆ ಒಳಪಡುವ ಮೂಲಕ, ಕ್ಯಾನ್ಸರ್ ಮುಕ್ತ ಜೀವನವನ್ನು ನಡೆಸಬಹುದು ಎಂದರು. ವೆನ್ಲಾಕ್ ಆಸ್ಪತ್ರೆಯ ನಿವಾಸಿ ವೈದ್ಯಾಧಿಕಾರಿ ಡಾ. ಸುಧಾಕರ್ ಮಾತನಾಡಿ ಕ್ಯಾನ್ಸರ್ ಬಾರದಂತೆ ತಡೆಯುವಲ್ಲಿ ನಾವು ಸೇವಿಸುವ ಆಹಾರವೂ ಪ್ರಮುಖ ಪಾತ್ರ ವಹಿಸುತ್ತದೆ. ಹಾಗಾಗಿ ಆಹಾರ ಸೇವನೆಯಲ್ಲೂ ಎಚ್ಚರಿಕೆ ವಹಿಸಬೇಕಾದ ಅಗತ್ಯವಿದೆ ಎಂದರು. ಸಂಪನ್ಮೂಲ ವ್ಯಕ್ತಿಯಾಗಿದ್ದ ಕೆ.ಎಂ.ಸಿ. ಆಸ್ಪತ್ರೆ ವಿಕಿರಣ ಆಂಕೊಲಾಜಿ ವಿಭಾಗದ ಮುಖ್ಯಸ್ಥ ಡಾ. ಅತಿಯಮಾನ್ ಎಂ.ಎಸ್. ಕ್ಯಾನ್ಸರ್ ಜಾಗೃತಿ ಕುರಿತು ಉಪನ್ಯಾಸ ನೀಡಿದರು. ಜಿಲ್ಲಾ ಅಸಾಂಕ್ರಾಮಿಕ ರೋಗಗಳ ನಿಯಂತ್ರಣಾಧಿಕಾರಿ ಡಾ.ಸುದರ್ಶನ್,ಮಂಗಳೂರು ತಾಲೂಕು ಆರೋಗ್ಯಾಧಿ ಕಾರಿ ಡಾ. ಸುಜಯ್, ವೆನ್ಲಾಕ್ ಪ್ಯಾರ ಮೆಡಿಕಲ್ ವಿಭಾಗದ ಪ್ರಾಂಶುಪಾಲೆ ಗ್ರೇಸಿ, ವೆನ್ಲಾಕ್ ಆಸ್ಪತ್ರೆಯ ಉಪಶಮನ ಆರೈಕೆ ವಿಭಾಗದ ವೈದ್ಯಾಧಿಕಾರಿ ಡಾ. ಅಣ್ಣಯ್ಯ ಕುಲಾಲ್ ಉಪಸ್ಥಿತರಿದ್ದರು. ಜಿಲ್ಲಾ ಆರೋಗ್ಯ ಶಿಕ್ಣಣಾಧಿಕಾರಿ ಜ್ಯೋತಿ ಉಳೆಪಾಡಿ ಕಾರ್ಯಕ್ರಮ ನಿರೂಪಿಸಿದರು.
ಹೊಸದಿಲ್ಲಿ: ಅಮೆರಿಕದೊಂದಿಗೆ ಮಧ್ಯಂತರ ವ್ಯಾಪಾರ ಒಪ್ಪಂದವು ರೈತರು ಮತ್ತು ಉದ್ಯಮಿಗಳಿಗೆ ಹೊಸ ಅವಕಾಶಗಳನ್ನು ತೆರೆಯುವ ಮೂಲಕ ‘ಮೇಕ್ ಇನ್ ಇಂಡಿಯಾ’ ಉಪಕ್ರಮವನ್ನು ಬಲಗೊಳಿಸಲಿದೆ ಹಾಗೂ ಮಹಿಳೆಯರು ಮತ್ತು ಯುವಜನರಿಗಾಗಿ ಉದ್ಯೋಗಗಳನ್ನು ಸೃಷ್ಟಿಸಲಿದೆ ಎಂದು ಪ್ರಧಾನಿ ನರೇಂದ್ರ ಮೋದಿಯವರು ಶನಿವಾರ ಹೇಳಿದ್ದಾರೆ. ಭಾರತ ಮತ್ತು ಅಮೆರಿಕ ನಡುವೆ ಸದೃಢ ಸಂಬಂಧಗಳಿಗಾಗಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ವೈಯಕ್ತಿಕ ಬದ್ಧತೆಗಾಗಿ ಎಕ್ಸ್ ಪೋಸ್ಟ್ನಲ್ಲಿ ಅವರಿಗೆ ಧನ್ಯವಾದಗಳನ್ನು ಸಲ್ಲಿಸಿರುವ ಮೋದಿ,‘ಭಾರತ ಮತ್ತು ಅಮೆರಿಕ ಎರಡಕ್ಕೂ ಒಳ್ಳೆಯ ಸುದ್ದಿ. ಎರಡು ಮಹಾನ್ ದೇಶಗಳ ನಡುವೆ ಮಧ್ಯಂತರ ವ್ಯಾಪಾರ ಒಪ್ಪಂದಕ್ಕಾಗಿ ಚೌಕಟ್ಟನ್ನು ನಾವು ಒಪ್ಪಿಕೊಂಡಿದ್ದೇವೆ’ ಎಂದು ತಿಳಿಸಿದ್ದಾರೆ. ಒಪ್ಪಂದವು ಭಾರತದ ಶ್ರಮಿಕ ರೈತರು,ಉದ್ಯಮಿಗಳು, ಎಂಎಸ್ಎಂಇಗಳು,ಸ್ಟಾರ್ಟ್ಅಪ್ಗಳು,ಮೀನುಗಾರರು,ಇತರರಿಗೆ ಹೊಸ ಅವಕಾಶಗಳನ್ನು ತೆರೆಯುವ ಮೂಲಕ ‘ಮೇಕ್ ಇನ್ ಇಂಡಿಯಾ’ವನ್ನು ಬಲಗೊಳಿಸಲಿದೆ. ಅದು ಭಾರೀ ಪ್ರಮಾಣದಲ್ಲಿ ಉದ್ಯೋಗಾವಕಾಶಗಳನ್ನು ಸೃಷ್ಟಿಸಲಿದೆ ಎಂದು ಮೋದಿ ಹೇಳಿದ್ದಾರೆ. ನವೀನತೆಯನ್ನು ಉತ್ತೇಜಿಸಲು ಭಾರತ ಮತ್ತು ಅಮೆರಿಕ ಬದ್ಧವಾಗಿವೆ ಮತ್ತು ಈ ಚೌಕಟ್ಟು ಉಭಯ ದೇಶಗಳ ನಡುವೆ ಹೂಡಿಕೆ ಮತ್ತು ತಂತ್ರಜ್ಞಾನ ಪಾಲುದಾರಿಕೆಗಳನ್ನು ಇನ್ನಷ್ಟು ಗಟ್ಟಿಗೊಳಿಸಲಿದೆ. ಅದು ಸ್ಥಿತಿಸ್ಥಾಪಕತ್ವ ಮತ್ತು ವಿಶ್ವಾಸಾರ್ಹ ಪೂರೈಕೆ ಸರಪಳಿಗಳನ್ನೂ ಬಲಗೊಳಿಸಲಿದೆ ಮತ್ತು ಜಾಗತಿಕ ಬೆಳವಣಿಗೆಗೆ ಕೊಡುಗೆಯನ್ನು ಸಲ್ಲಿಸಲಿದೆ ಎಂದು ಹೇಳಿರುವ ಪ್ರಧಾನಿ,‘ವಿಕಸಿತ ಭಾರತ ನಿರ್ಮಾಣದತ್ತ ದೇಶವು ಮುನ್ನಡೆಯುತ್ತಿರುವಾಗ ಭವಿಷ್ಯವನ್ನು ಕೇಂದ್ರೀಕರಿಸಿರುವ, ನಮ್ಮ ಜನರನ್ನು ಸಬಲರನ್ನಾಗಿಸುವ ಜಾಗತಿಕ ಪಾಲುದಾರಿಕೆಗಳನ್ನು ಸೃಷ್ಟಿಸಲು ನಾವು ಬದ್ಧರಾಗಿದ್ದೇವೆ’ ಎಂದಿದ್ದಾರೆ.
ಹೊಸದಿಲ್ಲಿ: ಭಾರತ-ಅಮೆರಿಕ ವ್ಯಾಪಾರ ಒಪ್ಪಂದ ಕುರಿತು ಶನಿವಾರ ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ಟೀಕಾಪ್ರಹಾರ ನಡೆಸಿದ ಕಾಂಗ್ರೆಸ್, ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜೊತೆ ಅವರ ‘ಆಲಿಂಗನಗಳು ಮತ್ತು ಫೋಟೊ ಅವಕಾಶಗಳು’ ಹೆಚ್ಚಿನ ಫಲವನ್ನು ನೀಡಿಲ್ಲ ಎಂದು ವ್ಯಂಗ್ಯವಾಡಿದೆ. ವ್ಯಾಪಾರ ಒಪ್ಪಂದ ಕುರಿತು ಭಾರತ-ಅಮೆರಿಕ ಜಂಟಿ ಹೇಳಿಕೆಯಲ್ಲಿ ವಿವರಗಳ ಕೊರತೆಯಿದೆ ಎಂದು ಎಕ್ಸ್ ಪೋಸ್ಟ್ನಲ್ಲಿ ಹೇಳಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ (ಸಂವಹನ) ಜೈರಾಮ್ ರಮೇಶ್ ಅವರು, ಅಮೆರಿಕದ ಅಧ್ಯಕ್ಷರ ಒತ್ತಾಯಕ್ಕೆ ಮಣಿದು ಭಾರತವು ರಷ್ಯಾದಿಂದ ತೈಲ ಖರೀದಿಯನ್ನು ನಿಲ್ಲಿಸುವ ಸುಳಿವನ್ನು ಜಂಟಿ ಹೇಳಿಕೆಯು ನೀಡಿದೆ ಎಂದಿದ್ದಾರೆ. ಭಾರತವು ಇನ್ನು ಮುಂದೆ ರಷ್ಯಾದಿಂದ ತೈಲವನ್ನು ಖರೀದಿಸುವುದಿಲ್ಲ ಎನ್ನುವುದು ಬಹಿರಂಗಗೊಂಡಿರುವ ಮಾಹಿತಿಯಿಂದ ಸ್ಪಷ್ಟವಾಗಿದೆ. ಪ್ರತ್ಯೇಕವಾಗಿ ಭಾರತವು ರಷ್ಯಾದಿಂದ ನೇರವಾಗಿ ಅಥವಾ ಪರೋಕ್ಷವಾಗಿ ತೈಲವನ್ನು ಖರೀದಿಸಿದರೆ ಶೇ.25ರಷ್ಟು ದಂಡಸುಂಕವನ್ನು ಮರುವಿಧಿಸಬಹುದು ಎಂದು ಅಮೆರಿಕ ಪ್ರಕಟಿಸಿದೆ ಎಂದು ಎಕ್ಸ್ ಪೋಸ್ಟ್ನಲ್ಲಿ ಹೇಳಿರುವ ರಮೇಶ್, ಜಂಟಿ ಹೇಳಿಕೆಯ ಪ್ರಕಾರ ಭಾರತವು ತನ್ನ ರೈತರ ಹಿತಾಸಕ್ತಿಗಳನ್ನು ಬಲಿಗೊಟ್ಟು ಅಮೆರಿಕದ ರೈತರಿಗೆ ನೆರವಾಗಲು ಆಮದು ಸುಂಕಗಳನ್ನು ಕಡಿತಗೊಳಿಸಲಿದೆ ಎಂದಿದ್ದಾರೆ. ‘ಅಮೆರಿಕದಿಂದ ಭಾರತದ ವಾರ್ಷಿಕ ಆಮದುಗಳು ಮೂರು ಪಟ್ಟು ಹೆಚ್ಚಾಗಲಿದ್ದು, ದೀರ್ಘಕಾಲದಿಂದ ನಾವು ಸರಕುಗಳ ರಫ್ತುಗಳಲ್ಲಿ ಹೊಂದಿದ್ದ ಮೇಲುಗೈಯನ್ನು ಕಳೆದುಕೊಳ್ಳಲಿದ್ದೇವೆ. ಅಮೆರಿಕಕ್ಕೆ ಐಟಿ ಮತ್ತು ಇತರ ಸೇವೆಗಳ ರಫ್ತುಗಳ ಕುರಿತ ಅನಿಶ್ಚಿತತೆ ಮುಂದುವರಿಯಲಿದೆ. ಭಾರತದ ಸರಕು ರಫ್ತುಗಳು ಅಮೆರಿಕದಲ್ಲಿ ಹಿಂದಿಗಿಂತಲೂ ಹೆಚ್ಚಿನ ಸುಂಕವನ್ನು ಎದುರಿಸಲಿವೆ’ ಎಂದು ಅವರು ಹೇಳಿದ್ದಾರೆ. ಮೋದಿಯವರನ್ನು ವ್ಯಂಗ್ಯವಾಡಿರುವ ಜೈರಾಮ್ ರಮೇಶ್ ಅವರು 1964ರ ಬಾಲಿವುಡ್ ಚಿತ್ರ ‘ಸಂಗಮ್’ನ ‘ದೋಸ್ತ್ ದೋಸ್ತ್ ನಾ ರಹಾ’ ಗೀತೆಯ ಸಾಲೊಂದನ್ನು ಉಲ್ಲೇಖಿಸಿದ್ದಾರೆ. ‘‘ಎಲ್ಲ ಆಲಿಂಗನಗಳು ಮತ್ತು ಫೋಟೊ ಅವಕಾಶಗಳು ಹೆಚ್ಚಿನ ಫಲವನ್ನು ನೀಡಿಲ್ಲ. ‘ಹೌಡಿ ಮೋದಿ’ ವಿರುದ್ಧ ‘ನಮಸ್ತೆ ಟ್ರಂಪ್’ಗೆದ್ದಿದೆ. ದೋಸ್ತ್ ದೋಸ್ತ್ ನಾ ರಹಾ’’ ಎಂದು ಅವರು ಬರೆದಿದ್ದಾರೆ.
ಎರಡು ದಿನಗಳಿಂದ ಬಾರದ ಕುಡಿಯುವ ನೀರು: ಗ್ರಾಮಸ್ಥರಿಂದ ಐರೋಡಿ ಗ್ರಾಪಂಗೆ ಮುತ್ತಿಗೆ, ಪ್ರತಿಭಟನೆ
ಸಾಸ್ತಾನ, ಫೆ.7: ಕಳೆದ ಎರಡು ದಿನಗಳಿಂದ ನೀರು ಬಾರದ ಹಿನ್ನೆಲೆಯಲ್ಲಿ ಐರೋಡಿ ಗ್ರಾಪಂನ ಐರೋಡಿ ಎರಡನೇ ವಾರ್ಡ್ನ ಹೊಳೆಬದಿ ಗ್ರಾಮಸ್ಥರು ಶನಿವಾರ ಗ್ರಾಪಂ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು. ಪಂಚಾಯತ್ನ ಪಂಪ್ ಆಪರೇಟರ್ ಸರಿಯಾದ ಸಮಯಕ್ಕೆ ಕೆಲಸಕ್ಕೆ ಬಾರದೆ ಇರುವುದರಿಂದ ಈ ಸಮಸ್ಯೆಗೆ ಉದ್ಭವಿಸಿದ್ದು, ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಪಂಚಾಯತ್ ಸದಸ್ಯ ಶಿವರಾಮ್ ಶ್ರೀಯಾನ್ ಮತ್ತು ನಟರಾಜ್ ಗಾಣಿಗ, ಪಂಪ್ ಅಪರೇಟರ್ ಸರಿಯಾಗಿ ಕೆಲಸ ಮಾಡದಿದ್ದರೂ ಅವರಿಗೆ ಹಲವು ಅವಕಾಶಗಳನ್ನು ನೀಡಲಾಗಿದೆ. ಆದರೂ ಸುಧಾರಿ ಸಿಲ್ಲ. ಈ ಕಾರಣಕ್ಕೆ ಸಾಮಾನ್ಯ ಸಭೆಯಲ್ಲಿ ಅವರನ್ನು ತೆಗೆದು ಹಾಕಿ ಬೇರೆ ಪಂಪ್ ಆಪರೇಟರ್ ನೇಮಿಸುವ ಬಗ್ಗೆ ನಿರ್ಣಯ ಕೈಗೊಳ್ಳ ಲಾಗಿದೆ. ಆದರೆ ಪಿಡಿಓ ಅವರ ವಿರುದ್ಧ ಕ್ರಮ ತೆಗೆದುಕೊಳ್ಳುತ್ತಿಲ್ಲ. ಈ ಬಗ್ಗೆ ಜಿಪಂ ಸಿಇಓ ಅವರಿಗೆ ದೂರು ನೀಡಲಾಗುವುದು ಎಂದರು. ‘ನಮ್ಮಲ್ಲಿ ಕುಡಿಯುವುದಕ್ಕೂ ನೀರಿಲ್ಲ. ಬಾವಿ ಇದ್ದರೆ ನಾವು ಪಂಚಾಯತ್ ನೀರಿಗೆ ಅವಲಂಭಿತರಾಗಬೇಕಾಗಿಲ್ಲ. ನಮ್ಮಲ್ಲಿ ಉಪ್ಪು ನೀರು ಬರುವುದರಿಂದ ಕುಡಿಯುವುದಕ್ಕೆ ಸಾಧ್ಯವಿಲ್ಲ. ಹಾಗಾಗಿ ಪಂಚಾಯತ್ ನೀರನ್ನೇ ಅವಲಂಬಿ ಸಬೇಕಾಗಿದೆ. ಮಕ್ಕಳಿಗೆ ಕುಡಿಯುವುದಕ್ಕೆ ಒಂದು ತೊಟ್ಟು ನೀರಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ಪ್ರತಿ ತಿಂಗಳೂ ಸರಿಯಾದ ಸಮಯಕ್ಕೆ ಬಂದು ಬಿಲ್ಲು ಸಂಗ್ರಹಿಸಲಾಗುತ್ತದೆ. ಆದರೆ ನೀರು ಸರಿಯಾಗಿ ಬರುತ್ತಿಲ್ಲ ಎಂದು ಸಂತ್ರಸ್ಥ ಮಹಿಳೆ ದೂರಿದರು. ಪಂಚಾಯತ್ ಕಾರ್ಯದರ್ಶಿ ವಿಜಯಕುಮಾರಿ ಮಾತನಾಡಿ, ಪಂಪ್ ಅಪರೇಟರ್ಗೆ ಹಲವು ಬಾರಿ ಎಚ್ಚರಿಕೆ ನೀಡಲಾಗಿದೆ. ಈಗ ಮತ್ತೆ 15 ದಿನ ಕೆಲಸಕ್ಕೆ ಬಂದು, ಮತ್ತೆ ಹದಿನೈದು ಗೈರು ಹಾಜಾರಾಗಿದ್ದಾರೆ. ಈ ಬಗ್ಗೆ ಸಂಬಂಧಪಟ್ಟವರಿಗೆ ದೂರು ನೀಡಿ ಮುಂದಿನ ಕ್ರಮ ಕೈಗೊಳ್ಳುವುದು. ಅಲ್ಲಿಯವರೆಗೆ ತಾತ್ಕಾಲಿಕವಾಗಿ ಬೇರೆ ಪಂಪ್ ಆಪರೇಟರ್ ಅವರನ್ನು ನೇಮಿಸಿಕೊಂಡು ಜನರಿಗೆ ಸರಿಯಾಗಿ ನೀರು ಸರಬರಾಜು ಮಾಡಲಾಗು ವುದು ಎಂದು ಭರವಸೆ ನೀಡಿದರು. ಈ ಹಿನ್ನೆಲೆಯಲ್ಲಿ ಗ್ರಾಮಸ್ಥರು ಪ್ರತಿಭಟನೆ ಕೈಬಿಟ್ಟು ವಾಪಾಸ್ಸು ತೆರಳಿದರು.

25 C