Maharashtra | ಚಿರತೆ ದಾಳಿ ತಡೆಗೆ ಕಾಡಿಗೆ ಮೇಕೆ ಬಿಡಿ: ಅರಣ್ಯ ಸಚಿವರ ಸಲಹೆ!
ನಾಗಪುರ: ರಾಜ್ಯದಲ್ಲಿ ಹೆಚ್ಚುತ್ತಿರುವ ಚಿರತೆ ದಾಳಿಗಳನ್ನು ತಡೆಗಟ್ಟಲು ಅರಣ್ಯ ಪ್ರದೇಶಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಮೇಕೆಗಳನ್ನು ಬಿಡುವ ಮೂಲಕ “ಆಹಾರ ಲಭ್ಯತೆ” ಹೆಚ್ಚಿಸಬೇಕೆಂದು ಮಹಾರಾಷ್ಟ್ರ ಅರಣ್ಯ ಸಚಿವ ಗಣೇಶ್ ನಾಯಕ್ ಮಾಡಿದ ಸಲಹೆ ಹೊಸ ಚರ್ಚೆಗೆ ಕಾರಣವಾಗಿದೆ. ಮಹಾರಾಷ್ಟ್ರ ವಿಧಾನಸಭೆಯಲ್ಲಿ ಚಿರತೆ ದಾಳಿಗಳ ಕುರಿತು ಎನ್ಸಿಪಿ (ಎಸ್ಪಿ) ಶಾಸಕ ಜಿತೇಂದ್ರ ಅವಾದ್ ಅವರು ಎತ್ತಿದ ನಿಲುವಳಿ ಸೂಚನೆಗೆ ಪ್ರತಿಕ್ರಿಯಿಸುತ್ತಾ, ನಾಯಕ್ ವಿವಾದಾತ್ಮಕ ಹೇಳಿಕೆಯನ್ನು ನೀಡಿದರು. “ಚಿರತೆ ದಾಳಿಯಲ್ಲಿ ಒಬ್ಬರು ಸಾವಿಗೀಡಾದರೆ ಸರ್ಕಾರ 1 ಕೋಟಿ ರೂ. ಪರಿಹಾರ ನೀಡುತ್ತದೆ. ಅದೇ ಹಣದಲ್ಲಿ ಮೇಕೆಗಳನ್ನು ಖರೀದಿಸಿ ಕಾಡಿಗೆ ಬಿಡುವುದರಿಂದ ದಾಳಿಗಳನ್ನು ಕಡಿಮೆ ಮಾಡಬಹುದು ಎಂದು ಅಧಿಕಾರಿಗಳಿಗೆ ಸೂಚಿಸಿದ್ದೇನೆ” ಎಂದು ಅವರು ಹೇಳಿದರು. ಚಿರತೆಗಳ ನಡವಳಿಕೆಯಲ್ಲಿ ಬದಲಾವಣೆ ಕಂಡುಬಂದಿದ್ದು, ಅರಣ್ಯ ಪ್ರದೇಶಗಳಿಂದ ಕಬ್ಬು ಬೆಳೆ ಪ್ರದೇಶಗಳತ್ತ ಅವುಗಳ ಸಂಚಾರ ಹೆಚ್ಚಾಗಿದೆ ಎಂದು ಸಚಿವರು ಮಾಹಿತಿ ನೀಡಿದರು. “ಅಹಮದ್ನಗರ, ಪುಣೆ ಮತ್ತು ನಾಸಿಕ್ ಜಿಲ್ಲೆಗಳಲ್ಲಿ ಚಿರತೆ ದಾಳಿಯ ಪ್ರಕರಣಗಳು ಹೆಚ್ಚಿನ ಸಂಖ್ಯೆಯಲ್ಲಿ ವರದಿಯಾಗುತ್ತಿವೆ. ಈ ಹಿನ್ನಲೆಯಲ್ಲಿ ತುರ್ತು ಹಾಗೂ ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳಬೇಕಿದೆ” ಎಂದರು. ಸಚಿವರ ಈ ಹೇಳಿಕೆ ಪರಿಸರ ತಜ್ಞರ ವಲಯದಲ್ಲೂ ಚರ್ಚೆಗೆ ಕಾರಣವಾಗಿದ್ದು, ಚಿರತೆ–ಮಾನವ ಸಂಘರ್ಷಕ್ಕೆ ‘ಕಾಡಿಗೆ ಮೇಕೆ ಬಿಡುವುದು’ ಪರಿಹಾರವಾಗಬಹುದೇ ಎಂಬ ಪ್ರಶ್ನೆ ಹುಟ್ಟುಹಾಕಿದೆ.
ಸದನದ ಗೌರವವನ್ನು ಎತ್ತಿಹಿಡಿಯಬೇಕು: ಸಿಎಂ ಸಿದ್ದರಾಮಯ್ಯ ಕಿವಿಮಾತು
ಬೆಳಗಾವಿ: ವಿರೋಧ ಪಕ್ಷದವರು ಅಸತ್ಯವನ್ನು ಹೇಳುವುದನ್ನು ಸಾಧ್ಯವಾದಷ್ಟು ನಿಲ್ಲಿಸಿ ವಾಸ್ತವದ ತಳಹದಿಯ ಮೇಲೆ ಟೀಕೆಗಳನ್ನು ಮಾಡಬೇಕು. ಉತ್ತರಗಳನ್ನು ಕೊಡುವಾಗ ದಾರಿತಪ್ಪಿಸದೇ ಸದನದ ಗೌರವವನ್ನು ಎತ್ತಿಹಿಡಿಯುವ ಕೆಲಸ ಮಾಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿಧಾನಸಭೆಯಲ್ಲಿ ಕಿವಿಮಾತು ಹೇಳಿದರು. ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರು ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಸದನದಲ್ಲಿ ಮಾತನಾಡುವ ಸಂದರ್ಭದಲ್ಲಿ ರೈತರಿಗೆ ಸರ್ಕಾರ ಪರಿಹಾರವನ್ನು ನೀಡಿಲ್ಲ, ರೈತರಿಗೆ ಕೊಡಲು ಸರ್ಕಾರದ ಬಳಿ ಹಣವಿಲ್ಲ ಎಂದಾಗ ಮಧ್ಯ ಪ್ರವೇಶ ಮಾಡಿ ಮಾತನಾಡಿದ ಸಚಿವ ಕೃಷ್ಣಬೈರೇಗೌಡ ಅವರು ಕಳೆದ ಸಾಲಿನಲ್ಲಿ 38 ಲಕ್ಷ ರೈತರಿಗೆ ಪರಿಹಾರವನ್ನು ನೀಡಲಾಗಿದೆ. ಕೇಂದ್ರ ಸರ್ಕಾರಕ್ಕೆ ಮನವಿಯನ್ನೂ ಕೊಟ್ಟೂ ಕೂಡ ಇಲ್ಲಿಯವರೆಗೂ ಒಂದು ಪೈಸೆ ಹಣ ಬಿಡುಗಡೆಯಾಗಿಲ್ಲ. 2245 ಕೋಟಿ ರೈತರಿಗೆ ಪರಿಹಾರ ನೀಡಲಾಗಿದೆ ಎಂದರು ಉತ್ತರ ನೀಡಿದರು. ಈ ಬಗ್ಗೆ ಆಡಳಿತ ಮತ್ತು ವಿರೋಧ ಪಕ್ಷದವರ ಮಧ್ಯೆ ಕೆಲಕಾಲ ಮಾತಿನ ಚಕಮಕಿ ಉಂಟಾಗಿ ಸದನವನ್ನು 10 ನಿಮಿಷಗಳ ಕಾಲ ಮುಂದೂಡಲಾಯಿತು. ಸದನ ಮತ್ತೆ ಸೇರಿದಾಗ ಮಾತನಾಡಿದ ಮುಖ್ಯಮಂತ್ರಿಗಳು, ನಂತರ ವಿರೋಧ ಪಕ್ಷದ ನಾಯಕರು ಅಥವಾ ಸಭಾ ನಾಯಕರು ಮಾತನಾಡುವಾಗ ಮಧ್ಯೆ ಮಾತನಾಡುವುದು ಸರಿಯಲ್ಲ. ವಿಧಾನಮಂಡಲದಲ್ಲಿ ಗುಣಾತ್ಮಕ ಚರ್ಚೆಗಳು ಕಡಿಮೆಯಾಗುತ್ತಿರುವ ಬಗ್ಗೆ ಈಗಾಗಲೇ ಸಾರ್ವಜನಿಕರಲ್ಲಿ ಅಸಮಾಧಾನವಿದೆ. ಸಂವಿಧಾನಾತ್ಮಕವಾಗಿ ಮಾತನಾಡುವಾಗ ಅಡ್ಡಿಪಡಿಸಬಾರದು. ವಿರೋಧ ಪಕ್ಷದವರು ಮಾತನಾಡುವಾಗ ಸುಮ್ಮ ಸುಮ್ಮನೆ ಅಡ್ಡಿಪಡಿಸಬಾರದು. ವಿರೋಧ ಪಕ್ಷದ ನಾಯಕರು ಮಣಿದಾಗ ಮಾತ್ರ ಮಾತನಾಡಬೇಕು. ಯಾರೇ ಆದರೂ ಚರ್ಚೆಗೆ ಅಡ್ಡಿಪಡಿಸಬಾರದು ಎಂದರು. ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರು ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಸದನದಲ್ಲಿ ಚರ್ಚಿಸುವ ವೇಳೆ ರೈತರಿಗೆ ಸರ್ಕಾರ ಪರಿಹಾರವನ್ನು ನೀಡಿಲ್ಲ, ರೈತರಿಗೆ ಪರಿಹಾರ ಕೊಡಲು ಸರ್ಕಾರದ ಬಳಿ ಹಣವಿಲ್ಲ ಎಂಬೆಲ್ಲಾ ಸುಳ್ಳು ಹೇಳಿದ್ದಾರೆ. ಕಳೆದ ಸಾಲಿನಲ್ಲಿ 38 ಲಕ್ಷ ರೈತರಿಗೆ ನಷ್ಟ ಪರಿಹಾರವನ್ನು ನೀಡಲಾಗಿದೆ. ಕೇಂದ್ರ ಸರ್ಕಾರಕ್ಕೆ ಮನವಿಯನ್ನು… pic.twitter.com/UP5bhJPk0p — CM of Karnataka (@CMofKarnataka) December 9, 2025
Holiday: ಡಿಸೆಂಬರ್ 14ರ ವರೆಗೂ ಶಾಲೆಗಳಿಗೆ ರಜೆ ಘೋಷಣೆ..
School Holiday: ದೇಶದ ಹಲವೆಡೆ ಕಾರಣಾಂತರಗಳಿಂದ ಇಲ್ಲಿಯವರೆಗೂ ಶಾಲಾ-ಕಾಲೇಜುಗಳಿಗೆ ಸಾಲು ರಜೆಗಳನ್ನೇ ನೀಡಲಾಗಿದೆ. ಹಾಗೆಯೇ ಇದೀಗ ಡಿಸೆಂಬರ್ 14ರ ವರೆಗೂ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಹಾಗಾದ್ರೆ, ಎಲ್ಲೆಲ್ಲಿ ಹಾಗೂ ಕಾರಣ ಏನು ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ. ಭಾರೀ ಮಳೆ ವೇಳೆ ಈ ವರ್ಷ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಮಕ್ಕಳ ಹಿತದೃಷ್ಟಿಯಿಂದ ಅಂಗನವಾಡಿ, ಶಾಲಾ-ಕಾಲೇಜುಗಳಿಗೆ
ಮತಗಳ್ಳತನಕ್ಕಿಂತ ದೊಡ್ಡ ದೇಶ ವಿರೋಧಿ ಕೃತ್ಯ ಬೇರೆ ಇಲ್ಲ: ರಾಹುಲ್ ಗಾಂಧಿ
ಹೊಸದಿಲ್ಲಿ, ಡಿ. 9: ಮತಗಳ್ಳತನಕ್ಕಿಂತ ದೊಡ್ಡ ದೇಶ ವಿರೋಧಿ ಕೃತ್ಯ ಬೇರೆ ಇಲ್ಲ; ನೀವು ಮತವನ್ನು ನಾಶಮಾಡಿದರೆ, ಭಾರತದ ಕಲ್ಪನೆಯನ್ನು ನಾಶ ಮಾಡಿದಂತೆ ಎಂದು ಲೋಕಸಭೆಯ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ. ಮಂಗಳವಾರ ನಡೆದ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಸದನದಲ್ಲಿ ಚುನಾವಣಾ ಸುಧಾರಣೆ ಕುರಿತ ಚರ್ಚೆಯ ಸಂದರ್ಭ ಅವರು ಈ ಹೇಳಿಕೆ ನೀಡಿದರು. ನಮ್ಮ ದೇಶದಲ್ಲಿ 1.5 ಶತಕೋಟಿ ಜನರಿದ್ದಾರೆ. ಮತದಾನವು ನಮ್ಮನ್ನು ಒಗ್ಗೂಡಿಸುತ್ತದೆ ಅವರು ಹೇಳಿದರು. ‘‘ಭಾರತದಲ್ಲಿರುವ ಎಲ್ಲರೂ ಸಮಾನರು ಎಂಬ ಕಲ್ಪನೆ ನಮ್ಮ RSS ಗಳೆಯರನ್ನು ಕಂಗೆಡಿಸಿದೆ. RSS ಗೆ ಮೂಲಭೂತವಾಗಿ ಸಮಾನತೆಯಲ್ಲಿ ನಂಬಿಕೆ ಇಲ್ಲ. ಅದು ಶ್ರೇಣೀಕರಣವನ್ನು ಬಯಸುತ್ತದೆ. ಮಹಾತ್ಮಾ ಗಾಂಧಿ ಅವರ ಹತ್ಯೆಯ ನಂತರ ದೇಶದ ಪ್ರಮುಖ ಸಂಸ್ಥೆಗಳ ಮೇಲೆ ಹಿಡಿತ ಸಾಧಿಸುವ ಗುರಿಯನ್ನು RSS ಹೊಂದಿತ್ತು’’ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
IND Vs SA- ಡಿವಾಲ್ಡ್ ಬ್ರೆವಿಸ್ ನೋಬಾಲ್ ಗೆ ಔಟ್? ವಿವಾದದ ಸುಳಿಯಲ್ಲಿ ಜಸ್ಪ್ರೀತ್ ಬುಮ್ರಾ 100ನೇ ಟಿ20 ವಿಕೆಟ್!
Dewald Brevis Out Decision Controversy- ಕಟಕ್ನಲ್ಲಿ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾದ ಸ್ಱೋಟಕ ಬ್ಯಾಟರ್ ಡಿವಾಲ್ಡ್ ಬ್ರೆವಿಸ್ ಅವರು ಔಟಾದ ಜಸ್ಪ್ರೀತ್ ಬುಮ್ರಾ ಅವರ ಎಸೆತ ನೋಬಾಲ್ ಆಗಿತ್ತೆಂಬ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆ ನಡೆದಿದೆ. ಬುಮ್ರಾ ಅವರ ಮುಂದಿನ ಪಾದ ಗೆರೆಗಿಂತ ಮುಂದೆ ಹೋಗಿದ್ದರೂ ಥರ್ಡ್ ಅಂಪೈರ್ ಇದನ್ನು ಲೀಗಲ್ ಡೆಲಿವರಿ ಎಂದು ನಿರ್ಧರಿಸಿದ್ದಕ್ಕೆ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಾಗಿದ್ದರೆ ಪಂದ್ಯದಲ್ಲಿ ನಡೆದದ್ದು ಏನು? ಇಲ್ಲಿ ತಪ್ಪು ಯಾರದ್ದು?
Year Ender 2025: ವಿರಾಟ್ ಕೊಹ್ಲಿ ಪಾಲಿಗೆ 2025 ಎಂದೆಂದಿಗೂ ಮರೆಯಲಾಗದ ವರ್ಷ...
ಕ್ರಿಕೆಟ್ ಲೋಕದಲ್ಲಿ ವಿರಾಟ್ ಕೊಹ್ಲಿ ದೊರೆ, ಕ್ರಿಕೆಟ್ ದೇವರು ಅಂತಾ ಸಚಿನ್ ತೆಂಡೂಲ್ಕರ್ಗೆ ಬಿರುದು ಕೊಟ್ಟ ಜನರೇ ವಿರಾಟ್ ಕೊಹ್ಲಿಗೆ ಕಿಂಗ್ ಅಂತಾ ಕರೆಯುತ್ತಾರೆ. ಕ್ರಿಕೆಟ್ ಅಖಾಡದಲ್ಲಿ ದಾಖಲೆಗಳ ಜೊತೆಗೆ ಜನರನ್ನು ಸೆಳೆಯುವ ಕಲೆ ಕೂಡ ಕ್ರಿಕೆಟ್ ಕಿಂಗ್ ವಿರಾಟ್ ಕೊಹ್ಲಿ ಅವರಿಗೆ ಚನ್ನಾಗಿ ಗೊತ್ತು ಅಂತಾ ವಿರೋಧಿಗಳೆಲ್ಲಾ ಹೇಳುತ್ತಾರೆ. ಆದರೆ ವಿರಾಟ್ ಕೊಹ್ಲಿ ಫೀಲ್ಡ್ಗೆ ಎಂಟ್ರಿ
ರಾಜ್ಯದ ಪ್ರಮುಖ ಯೋಜನೆಗೆ ಭೂಸ್ವಾಧೀನ: ಮಹತ್ವದ ಅಪ್ಡೇಟ್ಸ್ ಕೊಟ್ಟ ಡಿ.ಕೆ ಶಿವಕುಮಾರ್, 15-20 ಸಾವಿರ ಕೋಟಿ
ರಾಜ್ಯದ ಪ್ರಮುಖ ಯೋಜನೆಯೊಂದರ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಬೆಂಗಳೂರು ನಗರಾಭಿವೃದ್ಧಿ ಸಚಿವ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಮಹತ್ವದ ಅಪ್ಡೇಟ್ಸ್ ನೀಡಿದ್ದಾರೆ. ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಯಾವ ಯೋಜನೆಯ ಬಗ್ಗೆ ಮಾತನಾಡಿದ್ದಾರೆ, ಭೂಸ್ವಾಧೀನದ ಬಗ್ಗೆ ಅವರು ಹೇಳಿದ್ದೇನು ಎನ್ನುವ ವಿವರ ಇಲ್ಲಿದೆ. ಕರ್ನಾಟಕದ ಮಹತ್ವದ ಯೋಜನೆಗೆ ಸಂಬಂಧಿಸಿದಂತೆ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್
ಕಲಬುರಗಿ| ನೋಟಿಸ್ ನೀಡದೆ ಶರಣಬಸವೇಶ್ವರ ದೇವಸ್ಥಾನದ ಎದುರಿನ ಶೆಡ್ಗಳ ತೆರವು; ಆರೋಪ
ಕಲಬುರಗಿ: ನಗರದಲ್ಲಿರುವ ಶ್ರೀ ಶರಣಬಸವೇಶ್ವರರ ಜಾತ್ರಾ ಮೈದಾನದಲ್ಲಿ ನಿರ್ಮಿಸಿದ್ದ ಶೆಡಗಳನ್ನು ಮಂಗಳವಾರ ಮಹಾನಗರ ಪಾಲಿಕೆಯಿಂದ ತೆರವುಗೊಳಿಸಲಾಗಿದ್ದು, ನೋಟಿಸ್ ನೀಡದೆ ದೇವಸ್ಥಾನದವರ ಅಣತಿಯಂತೆ ಹೆಚ್ಚುವರಿ ಜಾಗವನ್ನು ತೆರವುಗೊಳಿಸಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಈ ಕುರಿತು ಪ್ರತಿಕ್ರಿಯಿಸಿದ ತೆರವುಗೊಂಡಿದ್ದ ಅಂಗಡಿ ಮಾಲಕ ಪ್ರಕಾಶ್ ಬೆನಕನಳ್ಳಿ, ದೇವಸ್ಥಾನದ ಎದುರಿಗಿರುವ ಜಾಗ ಸರಕಾರಿ ಗೋಮಾಳದ ಜಾಗವಿದ್ದು, ಸುಮಾರು 70 ವರ್ಷಗಳಿಂದ ನಾವು ಅಲ್ಲಿಯೇ ಖಾನಾವಳಿ, ಮತ್ತಿತ್ತರ ಅಂಗಡಿಗಳನ್ನು ಹಾಕಿ ವ್ಯವಹಾರ ಮಾಡುತ್ತಿದ್ದೆವು. ಏಕಾಏಕಿ ನೋಟಿಸ್ ಕೊಡದೆ ಅಂಗಡಿಯ ಶೆಡ್ ಅನ್ನು ತೆರವುಗೊಳಿಸುತ್ತಿರುವುದು ಖಂಡನೀಯ ಎಂದು ಹೇಳಿದ್ದಾರೆ. ಕೋರ್ಟ್ ಹೇಳುವುದಕ್ಕಿಂತ ಮೊದಲೇ ನಾವು ಜಾಗವನ್ನು ಖಾಲಿ ಮಾಡಲು ನಿರ್ಧರಿಸಿದೆವು. ಆದರೆ ಪಾಲಿಕೆಯ ಅಧಿಕಾರಿಗಳು ದೇವಸ್ಥಾನದ ಮುಖ್ಯಸ್ಥರು ಹೇಳಿದಂತೆಯೇ ನಡೆದುಕೊಳ್ಳುತ್ತಿದ್ದಾರೆ. ಹೈಕೋರ್ಟ್ ಆದೇಶದಂತೆ ಲಾಲಗೇರಿ ಕ್ರಾಸ್ ನಿಂದ 72*42 ವ್ಯಾಪ್ತಿಯ ಸ್ಥಳವನ್ನು ತೆರವುಗೊಳಿಸಬೇಕಿತ್ತು. ಆದರೆ ಅದನ್ನ ಮೀರಿ 150*110 ಶೆಡ್ ನ ಹೆಚ್ಚಿನ ಜಾಗವನ್ನು ತೆರವು ಮಾಡಿದ್ದಾರೆ. ಇದು ಉಲ್ಲಂಘನೆಯಾಗುತ್ತದೆ ಎಂದು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿದ ಕಲಬುರಗಿ ಮಹಾನಗರ ಪಾಲಿಕೆಯ ಆಯುಕ್ತ ಅವಿನಾಶ್ ಶಿಂಧೆ, ಹೈಕೋರ್ಟ್ ಆದೇಶ ಪ್ರಕಾರ ಬೇಲಿಫ್ ಮತ್ತು ಪೊಲೀಸ್ ಬಂದೋಬಸ್ತಿನಲ್ಲಿ ಅನಧಿಕೃತ ಕಟ್ಟಡಗಳ ತೆರವು ಮಾಡಲಾಗಿದೆ. ದೇವಸ್ಥಾನ ಹಾಗೂ ಪಾಲಿಕೆಯ ಮಧ್ಯೆ ಹೈಕೋರ್ಟ್ ನಲ್ಲಿ ಕೇಸ್ ನಡೆಯುತ್ತಿದೆ ಎಂದು ತಿಳಿಸಿದ್ದಾರೆ. ಒತ್ತುವರಿ ತೆರವು ಕಾರ್ಯಾಚರಣೆ ನಿಮಿತ್ತ ಶರಣಬಸವೇಶ್ವರ ದೇವಸ್ಥಾನದ ಎದುರು ಹಾದುಹೋಗುವ ಮುಖ್ಯ ರಸ್ತೆಯ ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿತ್ತು.
ಅಹಿಂದ ನಾಯಕ ಸಿದ್ದರಾಮಯ್ಯ ಗಟ್ಟಿಮುಟ್ಟಾಗಿದ್ದಾರೆ; ಪರ್ಯಾಯ ನಾಯಕತ್ವದ ಪ್ರಸ್ತಾಪವೇ ಅಪ್ರಸ್ತುತ: ಸಚಿವ ಬೈರತಿ ಸುರೇಶ್
ಸುವರ್ಣಸೌಧ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗಟ್ಟಿಮುಟ್ಟಾಗಿದ್ದು, ಅವರ ನಂತರದ ಪರ್ಯಾಯ ನಾಯಕ ಯಾರಾಗಬೇಕೆಂಬುದರ ಬಗ್ಗೆ ಸ್ವತಃ ಸಿದ್ದರಾಮಯ್ಯನವರೇ ನಿರ್ಧರಿಸಬೇಕು ಎಂದು ನಗರಾಭಿವೃದ್ಧಿ ಮತ್ತು ನಗರ ಯೋಜನೆ ಸಚಿವ ಬೈರತಿ ಸುರೇಶ್ ಸ್ಪಷ್ಟಪಡಿಸಿದ್ದಾರೆ. ಸಿದ್ದರಾಮಯ್ಯ ಅವರ ನಂತರ ಅಹಿಂದ ನಾಯಕತ್ವವನ್ನು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರು ವಹಿಸಿಕೊಂಡರೆ ಸ್ವಾಗತ ಎಂದು ಕಾಂಗ್ರೆಸ್ ಮುಖಂಡರಾದ ಬಿ.ಕೆ. ಹರಿಪ್ರಸಾದ್ ಅವರು ನೀಡಿರುವ ಹೇಳಿಕೆ ಬಗ್ಗೆ ಬೆಳಗಾವಿಯ ಸುವರ್ಣಸೌಧದಲ್ಲಿ ಮಂಗಳವಾರ ಮಾಧ್ಯಮ ಪ್ರತಿನಿಧಿಗಳು ಮಾಡಿದ ಪ್ರಸ್ತಾಪದ ಬಗ್ಗೆ ಸಚಿವರು ಈ ಸ್ಪಷ್ಟನೆ ನೀಡಿದರು. ಹರಿಪ್ರಸಾದ್ ಅವರು ನಮ್ಮ ಪಕ್ಷದ ಅತ್ಯಂತ ಹಿರಿಯ ನಾಯಕರು. ಅವರು ತಮ್ಮ ವೈಯಕ್ತಿಕ ಹೇಳಿಕೆ ನೀಡಿದ್ದಾರೆ. ಆದರೆ, ʼಕಿಂಗ್ ಈಸ್ ಅಲೈವ್ʼ ಎನ್ನುವಂತೆ ಸಿದ್ದರಾಮಯ್ಯನವರು ಸದೃಢವಾಗಿದ್ದು, ಅಹಿಂದ ಸಮುದಾಯಗಳನ್ನಷ್ಟೇ ಅಲ್ಲ, ಇಡೀ ರಾಜ್ಯವನ್ನು ಸಮರ್ಥವಾಗಿ ಮುನ್ನಡೆಸುತ್ತಿದ್ದಾರೆ. ಹೀಗಾಗಿ ಅವರಿಗೆ ಪರ್ಯಾಯ ಎಂಬುದೇ ಅಪ್ರಸ್ತುತವಾಗಿದೆ ಎಂದು ಪ್ರತಿಕ್ರಿಯೆ ನೀಡಿದರು. ಹಾಗೊಂದು ವೇಳೆ ನಾಯಕತ್ವ ಬದಲಾವಣೆ ಮಾಡಬೇಕೆಂದು ಎನಿಸಿದಾಗ ತಮ್ಮ ಸ್ಥಾನಕ್ಕೆ ಪರ್ಯಾಯ ನಾಯಕರು ಯಾರಾಗಬೇಕೆಂಬುದನ್ನು ಸ್ವತಃ ಸಿದ್ದರಾಮಯ್ಯನವರೇ ಸೂಚಿಸಬೇಕು. ಅಲ್ಲದೇ, ನಮ್ಮ ಪಕ್ಷದ ರಾಷ್ಟ್ರೀಯ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ಸೋನಿಯಾಗಾಂಧಿ, ರಾಹುಲ್ ಗಾಂಧಿ, ವೇಣುಗೋಪಾಲ್, ಸುರ್ಜೇವಾಲ ಅವರು ಸೇರಿದಂತೆ ಅನೇಕ ನಾಯಕರು ಈ ಬಗ್ಗೆ ನಿರ್ಧರಿಸಲಿದ್ದಾರೆ ಎಂದು ಸಚಿವ ಬೈರತಿ ಸುರೇಶ್ ಹೇಳಿದರು. ಅಹಿಂದ ನಾಯಕತ್ವ ಅಥವಾ ಮುಖ್ಯಮಂತ್ರಿ ಸ್ಥಾನದ ಬಗ್ಗೆ ಹಿರಿಯ ನಾಯಕರನ್ನು ಒಳಗೊಂಡ ಹೈಕಮಾಂಡ್ ನಿರ್ಧಾರ ಮಾಡುತ್ತದೆ. ಅದಕ್ಕೆ ನಾವೆಲ್ಲರೂ ಬದ್ಧರಾಗಿದ್ದೇವೆ. ಏನೇ ಆದರೂ, ಅಹಿಂದ ನಾಯಕರಾದ ಸಿದ್ದರಾಮಯ್ಯನವರು ಇರುವಾಗಲೇ ಪರ್ಯಾಯ ನಾಯಕತ್ವದ ಕೂಗು ಏಕೆ? ಎಂದು ಸುರೇಶ್ ಪ್ರಶ್ನಿಸಿದರು.
ಎಲೆಕ್ಟ್ರಿಕ್ ವಾಹನ ಖರೀದಿಯಲ್ಲಿ ಬೆಂಗಳೂರು ದಕ್ಷಿಣ ಫಸ್ಟ್; ಯಾವ ಕ್ಷೇತ್ರದಲ್ಲಿ ಎಷ್ಟೆಷ್ಟು ನೋಂದಣಿಯಾಗಿದೆ?
ಬೆಂಗಳೂರಿನಲ್ಲಿ ದಿನೇ ದಿನೆ ಪರಿಸರ ಸ್ನೇಹಿ ಎಲೆಕ್ಟ್ರಿಕ್ ವಾಹನಗಳನ್ನು ಖರೀದಿಸುವವ ಸಂಖ್ಯೆ ಹೆಚ್ಚಾಗಿದೆ. ಸದ್ಯ ಸಾರಿಗೆ ಇಲಾಖೆ ಬಿಡುಗಡೆ ಮಾಡಿರುವ ಅಂಕಿ ಅಂಶದ ಪ್ರಕಾರ, ವಾಹನ ನೋಂದಣಿ ಪಟ್ಟಿಯಲ್ಲಿ ಬೆಂಗಳೂರು ದಕ್ಷಣ ಅಗ್ರಸ್ಥಾನದಲ್ಲಿದೆ, ನಂತರ ಸ್ಥಾನದಲ್ಲಿ ಯಶವಂತಪುರ ಮತ್ತು ಇಂದಿರಾನಗರವಿದೆ. ಸೌರ ಫಲಕ ಅಳವಡಿಕೆಯಲ್ಲೂ ಈ ಭಾಗದ ಜನರೇ ಮುಂಚೂಣಿಯಲ್ಲಿದ್ದಾರೆ ಎಂಬುದು ತಿಳಿದುಬಂದಿದೆ. ಯಾವ ಯಾವ ವಿಧಾನಸಭಾ ಕ್ಷೇತ್ರದಲ್ಲಿ ಎಷ್ಟೆಷ್ಟು ನೋಂದಣಿಯಾಗಿದೆ ಎಂಬುದು ಈ ಲೇಖನದಲ್ಲಿದೆ.
Google ಪ್ರಕಾರ ನಾಲ್ಕು ರೀತಿಯ Traveller ಗಳಿದ್ದಾರೆ,ಅದರಲ್ಲಿ ನೀವು ಯಾರು?
ಇಂದಿನ ಪ್ರವಾಸಿಗರು ಪ್ರಯಾಣ ಬೆಳೆಸಲು ಮೂಲ ಕಾರಣವಾಗುವುದು ಸಾಮಾಜಿಕ ಮಾಧ್ಯಮ! ಯುಟ್ಯೂಬ್ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಕಂಟೆಂಟ್ ಸೃಷ್ಟಿಸುವವರು ತಿಳಿಸಿದ ವಿವರಗಳಿಂದ ತಮ್ಮ ಪ್ರಯಾಣದ ಪಟ್ಟಿಯನ್ನು ನಿರ್ಧರಿಸಿರುತ್ತಾರೆ. ಸೂರ್ಯಾಸ್ತವನ್ನು ಕಂಡಾಗ, ಬೆಟ್ಟದ ತುದಿಯನ್ನು ತಲುಪಿದಾಗ ಸಿಗುವ ಅನುಭವವನ್ನು ಮರೆಯಲು ಸಾಧ್ಯವಿಲ್ಲ. ಅಂತಹ ಪ್ರಯಾಣದ ಹುಚ್ಚು ನಿಮಗೂ ಇದೆಯೆ? ಹಾಗಿದ್ದರೆ ನೀವು ಯಾವ ವಿಭಾಗದ ಪ್ರಯಾಣಿಕರು? ಗೂಗಲ್ ಇತ್ತೀಚೆಗೆ ಬಿಡುಗಡೆ ಮಾಡಿದ ವರದಿಯಲ್ಲಿ ಭಾರತೀಯ ಪ್ರವಾಸಿಗರನ್ನು ನಾಲ್ಕು ವಿಭಾಗಗಳಲ್ಲಿ ವಿಂಗಡಿಸಿದೆ. ಪ್ರತಿಯೊಂದು ವಿಭಾಗದವರೂ ತಮ್ಮದೇ ಆದ ಶೈಲಿ, ಉದ್ದೇಶ ಮತ್ತು ವಿಶಿಷ್ಟ ದೃಷ್ಟಿಕೋನದಿಂದ ಪ್ರವಾಸ ಕೈಗೊಳ್ಳುತ್ತಾರೆ. ►ಅನುಭವಕ್ಕಾಗಿ ಪ್ರವಾಸ ಮೊದಲನೆಯ ವಿಭಾಗದವವರು ಅನುಭವಕ್ಕಾಗಿ ಪ್ರವಾಸ ಮಾಡುವವರು! ಇವರು ಕಲಾವಿದರ ಕಾರ್ಯಕ್ರಮಗಳು, ಕ್ರೀಡಾ ಪಂದ್ಯಾವಳಿಗಳು ಮೊದಲಾದ ಉದ್ದೇಶಗಳಿಗೆ ಪ್ರವಾಸ ಬೆಳೆಸುತ್ತಾರೆ. ಸಾಮಾಜಿಕ ಮಾಧ್ಯಮಗಳ ಮೂಲಕ ನೋಡುವ ಬದಲಾಗಿ ಸ್ವತಃ ಅನುಭವಪಡೆಯಲು ಬಯಸುವವರು. ಇವರು ಸೂರ್ಯಾಸ್ತ, ಸಾಂಸ್ಕೃತಿಕ ಕಾರ್ಯಕ್ರಮಗಳು, ಸ್ಟೇಡಿಯಂನ ಅಬ್ಬರ, ಹಬ್ಬಗಳು ಮೊದಲಾಗಿ “ನಾನಲ್ಲಿದ್ದೆ” ಎನ್ನುವ ಕ್ಷಣಗಳನ್ನು ಜೀವಿಸಬಯಸುವವರು. ಜನರೇಶನ್ ಝೆಡ್ ಅಥವಾ ಜನ್ ಝೆಡ್ ಎಂದೇ ಹೆಸರಾದವರು ಇವರು! ಸಮೀಕ್ಷೆಯ ಪ್ರಕಾರ ಇವರು ವಾರವಿಡೀ ತಮ್ಮ ಪ್ರಯಾಣವನ್ನು ಯೋಜಿಸುತ್ತಾರೆ. ಬಹುತೇಕ 11 ದಿನಗಳ ಕಾಲ ಪ್ರಯಾಣ ಕೈಗೊಳ್ಳುತ್ತಾರೆ. ಸಾಮಾನ್ಯವಾಗಿ ಸ್ನೇಹಿತರ ಜೊತೆಗೆ ಯೋಜನೆ ರೂಪಿಸುತ್ತಾರೆ. ಶೇ 64ರಷ್ಟು ಜನ್ ಝೆಡ್ ಅಂತಾರಾಷ್ಟ್ರೀಯ ತಾಣಗಳನ್ನು ಬಯಸುತ್ತಾರೆ. ►ಮಿಲೇನಿಯಲ್ ಗಳ ಪ್ರಯಾಣ ಇನ್ನೊಂದು ತಂಡ ಮಿಲೇನಿಯಲ್ ಗಳು ಎಂದು ಕರೆಸಿಕೊಳ್ಳುವವರು ಮತ್ತು ಮಹಾನಗರಗಳಲ್ಲಿ ನೆಲೆಸಿರುವವರು. ತಮ್ಮದೇ ಆದ ಸಾಹಸಗಳಿಗೆ ಹಣಕಾಸು ಒದಗಿಸುವವರು. ಶೇ. 59ರಷ್ಟು ಮಂದಿ ಯೋಜನೆಯ ಸಂಪೂರ್ಣ ಜವಾಬ್ದಾರಿ ಹೊರುತ್ತಾರೆ. ಇವರು ಆನಂದಕ್ಕಾಗಿ ಪ್ರಯಾಣಿಸುವವರು. ಇವರಿಗೆ ಪ್ರಯಾಣವು ಗಮ್ಯ ಸ್ಥಾನದಷ್ಟೇ ಮುಖ್ಯವಾಗುತ್ತದೆ. ಅತ್ಯುತ್ತಮ ಹೊಟೇಲ್, ಮೆನು, ಬ್ಯುಸಿನೆಸ್ ಕ್ಲಾಸ್ ಪ್ರಯಾಣ ಮತ್ತು ಪ್ರೀಮಿಯಂ ಲಾಂಜ್ ಗಳನ್ನು ಹುಡುಕುತ್ತಾರೆ. ಇವರು ಪ್ರಯಾಣದ ಬಗ್ಗೆ ಸಾಕಷ್ಟು ಸಂಶೋಧನೆ ಮಾಡಿ ವಾರಕ್ಕೂ ಮೊದಲೇ ಯೋಜನೆ ರೂಪಿಸುತ್ತಾರೆ. ಶೇ. 63ರಷ್ಟು ಮಂದಿ ಸಾಮಾಜಿಕ ಮಾಧ್ಯಮಗಳಲ್ಲಿ ವಿ-ಬ್ಲಾಗ್ ಮಾಡುವವರು ಮತ್ತು ಬಹಳ ಪ್ರಭಾವಿ ಮತ್ತು ಪ್ರಯಾಣಕ್ಕೆ ಸ್ಫೂರ್ತಿ ನೀಡುವವರು. ಇವರು ಒಂದೆರಡು ದಿನಗಳಿಗೆ ಪ್ರಯಾಣಿಸುವವರಲ್ಲ. ವಾರವಿಡೀ ತಿರುಗಾಡುವ ಯೋಜನೆಯೊಂದಿಗೆ ಹೋಗುತ್ತಾರೆ. ಬಹುತೇಕ ಸಂಗಾತಿಗಳ ಜೊತೆಗೆ ತಿರುಗುತ್ತಾರೆ. ►ಆರಂಭಿಕ ಪ್ರಯಾಣಿಗರು ಇವರು ಬಹುತೇಕ ಜೆನ್ ಝೆಡ್ ಮಹಿಳೆಯರಾಗಿರುತ್ತಾರೆ. ಶೇ 38ರಷ್ಟು ಮಂದಿ 24 ಗಂಟೆಯೊಳಗೆ ನಿರ್ಧಾರ ಮಾಡಿ ಬುಕಿಂಗ್ ಮಾಡಿ ನಾಲ್ಕೈದು ದಿನಗಳಿಗೆ ಹೊರಗೆ ಹೋಗಿ ಬರುವವರು. ಇವರು ಉತ್ಸಾಹಿಗಳು ಮತ್ತು ತಮ್ಮ ಬಜೆಟ್ ಬಗ್ಗೆ ಜಾಗರೂಕರಾಗಿರುತ್ತಾರೆ. ತ್ವರಿತವಾಗಿ ಯೋಜನೆ ರೂಪಿಸುವವರು. ಪ್ಯಾಕೇಜ್ ಮತ್ತು ರಿಯಾಯಿತಿ ಕೊಡುಗೆಗಳಲ್ಲಿ ಪ್ರಯಾಣಿಸಲು ಬಯುಸುತ್ತಾರೆ. ►ಧಾರ್ಮಿಕ ಯಾತ್ರಿಗಳು ನಾಲ್ಕನೇ ವಿಭಾಗದವರಲ್ಲಿ ಜೆನ್ ಝೆಡ್, ಮಿಲೇನಿಯಲ್ ಅಥವಾ ಜೆನ್ ಎಕ್ಸ್ ಎಲ್ಲರೂ ಇರುತ್ತಾರೆ. ಇವರು ಐತಿಹಾಸಿಕ ತಾಣಗಳಿಗೆ ಭೇಟಿ ಕೊಡಲು ಬಯಸುತ್ತಾರೆ. ವಾರಾಣಾಸಿ, ಹರಿದ್ವಾರ ಇತ್ಯಾದಿ ಸ್ಥಳಗಳಿಗೆ ಪ್ರವಾಸ ಹೋಗುತ್ತಾರೆ. ಪರಂಪರೆ ಮತ್ತು ಸಾಂಸ್ಕೃತಿಕ ಸ್ಥಳಗಳು ಇವರ ಗುರಿಯಾಗಿರುತ್ತದೆ. ವೆಚ್ಚದ ಬಗ್ಗೆ ಬಹಳ ಸೂಕ್ಷ್ಮತೆ ಇರುತ್ತದೆ. ಸ್ನೇಹಿತರು ಮತ್ತು ಕುಟುಂಬದವರ ಜೊತೆಗೆ ಅಥವಾ ಇತರ ಧಾರ್ಮಿಕ ಸಮುದಾಯದವರ ಜೊತೆಗೆ ಪ್ರಯಾಣ ಬೆಳೆಸುತ್ತಾರೆ. ಇವೆರಲ್ಲರೂ ಪ್ರಯಾಣ ಬೆಳೆಸಲು ಮೂಲ ಕಾರಣವಾಗುವುದು ಸಾಮಾಜಿಕ ಮಾಧ್ಯಮ! ಯುಟ್ಯೂಬ್ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಕಂಟೆಂಟ್ ಸೃಷ್ಟಿಸುವವರು ತಿಳಿಸಿದ ವಿವರಗಳಿಂದ ತಮ್ಮ ಪ್ರಯಾಣದ ಪಟ್ಟಿಯನ್ನು ನಿರ್ಧರಿಸಿರುತ್ತಾರೆ.
ಏನಿದು ಕಚೇರಿ ಅವಧಿ ಮುಗಿದ ಮೇಲೆ ಸಂಪರ್ಕ ಕಡಿತದ ಕಾನೂನು? ಎಲ್ಲೆಲ್ಲಿ ಜಾರಿಯಲ್ಲಿದೆ?
ಸಂಸತ್ತಿನಲ್ಲಿ ಮಂಡಿಸಲಾದ ಮಸೂದೆಯ ಪ್ರಕಾರ ಕಚೇರಿಯ ಅವಧಿ ಮುಗಿದ ಮೇಲೆ ಕೆಲಸ ಮಾಡಲು ಉದ್ಯೋಗಿಗಳು ನಿರಾಕರಿಸಬಹುದು. ಹಾಗೆ ಪ್ರತಿಕ್ರಿಯಿಸಿದಲ್ಲಿ ಅಧಿಕಾವಧಿ ಕೆಲಸ ಮಾಡಿದ್ದಕ್ಕಾಗಿ ವೇತನ ಕೊಡಬೇಕಾಗುತ್ತದೆ. ಕಾರ್ಮಿಕರ ಹಕ್ಕುಗಳಿಗೆ ಸಂಬಂಧಿಸಿದ ಹೊಸ ಮಸೂದೆಯೊಂದನ್ನು ಇತ್ತೀಚೆಗೆ ಸಂಸತ್ತಿನ ಮುಂದಿಡಲಾಗಿದೆ. ಅದು ಸುಪ್ರಿಯಾ ಸುಲೆಯವರು ಸಂಸತ್ತಿನ ಮುಂದಿರಿಸಿದ ಕೆಲಸದ ಸಮಯದ ಬಳಿಕ ಸಂಪರ್ಕ ಕಡಿತಕ್ಕೆ ಸಂಬಂಧಿಸಿದ ಮಸೂದೆ. ಈ ಮಸೂದೆ ವೃತ್ತಿಪರ ಮತ್ತು ವೈಯಕ್ತಿಕ ಜೀವನದ ನಡುವಿನ ಗಡಿಗಳನ್ನು ಮಸುಕುಗೊಳಿಸುವ ನಿರಂತರ ಸಂಪರ್ಕದಲ್ಲಿರಬೇಕಾದ ಅನಿವಾರ್ಯತೆಯನ್ನು ಗುರಿಯಾಗಿಸಿದೆ. ಕಚೇರಿ ಅವಧಿ ಮುಗಿದ ಬಳಿಕ ಉದ್ಯೋಗದಾತರಿಂದ ಬರುವ ಪರಿಣಾಮಗಳ ಭಯವಿಲ್ಲದೆ ಕರೆಗಳು, ಇಮೇಲ್ಗಳು ಮತ್ತು ಸಂದೇಶಗಳಿಂದ ಸ್ವಿಚ್ ಆಫ್ ಮಾಡುವ ಕಾನೂನು ಬದ್ಧ ಅಧಿಕಾರವನ್ನು ನೌಕರರು ಪಡೆಯುತ್ತಾರೆ. ►ಏನಿದು ರೈಟ್ ಟು ಡಿಸ್ಕನೆಕ್ಟ್ ಮಸೂದೆ? ಈ ಮಸೂದೆಯ ಕಚೇರಿಯ ಅವಧಿ ಮುಗಿದ ಮೇಲೆ ಕೆಲಸ ಮಾಡಲು ಉದ್ಯೋಗಿಗಳು ನಿರಾಕರಿಸಬಹುದು. ಹಾಗೆ ಪ್ರತಿಕ್ರಿಯಿಸಿದಲ್ಲಿ ಅಧಿಕಾವಧಿ ಕೆಲಸ ಮಾಡಿದ್ದಕ್ಕಾಗಿ ವೇತನ ಕೊಡಬೇಕಾಗುತ್ತದೆ. ಕರೆಗೆ ಉತ್ತರಿಸದೆ ಇದ್ದರೆ ಶಿಸ್ತು ಕ್ರಮ ಕೈಗೊಳ್ಳುವುದಿಲ್ಲ. ಪರಸ್ಪರ ಒಪ್ಪಿಗೆಯಾದಲ್ಲಿ ಮಾತ್ರ ಸಂವಹನ ಮಾಡಬಹುದು. ಕೆಲಸ-ಜೀವನ ಸಮತೋಲನಕ್ಕೆ ಕೌನ್ಸಲಿಂಗ್ ಬೆಂಬಲ, ಡಿಜಿಟಲ್ ಡಿಟಾಕ್ಸ್ ಕೇಂದ್ರಗಳ ಸ್ಥಾಪನೆ, ಈ ನಿಯಮಗಳು ಅನುಸರಿಸದ ಕಂಪೆನಿಗಳಿಗೆ ದಂಡ ವಿಧಿಸುವುದು ಇತ್ಯಾದಿ ಸೌಲಭ್ಯಗಳಿವೆ. ►ಭಾರತದಲ್ಲಿ ಕೆಲಸದ ಸಂಸ್ಕೃತಿ ಬದಲಾಯಿಸಬಹುದಾದ ಮಸೂದೆ ಕಚೇರಿ ಅವಧಿಯ ನಂತರದ ಸಂಪರ್ಕಗಳಿಗೆ ಕಂಪೆನಿಗಳು ಸ್ಪಷ್ಟವಾದ ನಿಯಮಗಳನ್ನು ರೂಪಿಸಬೇಕು ಎಂದು ಶಾಸನ ಕಡ್ಡಾಯಗೊಳಿಸಿದೆ. ತುರ್ತು ಅಲ್ಲದ ಸಂವಹನಗಳನ್ನು ಕಾರ್ಮಿಕರು ನಿರಾಕರಿಸಬಹುದು. ಪ್ರಸ್ತಾಪಿತ ಪ್ರಾಧಿಕಾರವು ದೂರುಗಳ ತನಿಖೆ ನಡೆಸಲಿದೆ. ಅನುಸರಣೆ ಮಾಡದ ಕಂಪೆನಿಗಳಿಗೆ ಶೇ 1ರಷ್ಟು ದಂಡಗಳನ್ನು ವಿಧಿಸಬಹುದು. ►ಜಾಗತಿಕವಾಗಿ ಹಲವು ದೇಶಗಳಲ್ಲಿ ಜಾರಿ ಆಧುನಿಕ ಕಾರ್ಯಸ್ಥಳಗಳಲ್ಲಿ ಡಿಜಿಟಲ್ ಭಾರವನ್ನು ಹೊರುವ ಕೆಲಸಗಾರರಿಗೆ ನಿರಾಳವಾಗಲು ಹೊಸ ಪ್ರಸ್ತಾಪವನ್ನು ಇಡಲಾಗಿದೆ. ಫ್ರಾನ್ಸ್ ಇಂತಹ ಕಾನೂನು ತಂದ ಮೊದಲ ರಾಷ್ಟ್ರ. 2017ರಿಂದಲೇ ಫ್ರಾನ್ಸ್ನಲ್ಲಿ ಈ ಕಾನೂನು ಇದೆ. ಕಂಪೆನಿಗಳು ಮತ್ತು ಮುಖ್ಯವಾಗಿ ದೊಡ್ಡ ಕಂಪೆನಿಗಳು ಕಾರ್ಮಿಕ ಸಂಘಟನೆಗಳ ಜೊತೆಗೆ ಮಾತುಕತೆಯಲ್ಲಿ ಈ ಕಾನೂನನ್ನು ಅಳವಡಿಸಬೇಕಿದೆ. 50ಕ್ಕಿಂತ ಹೆಚ್ಚು ಕಾರ್ಮಿಕರಿರುವ ಕಂಪೆನಿಗಳಿಗೆ ಇದು ಅನ್ವಯಿಸುತ್ತದೆ. ಕಾರ್ಮಿಕರು ಸಂಪರ್ಕ ಕಡಿತಗೊಳಿಸಬಹುದು ಮತ್ತು ಉದ್ಯೋಗದಾತರು ಅವರ ವಿರಾಮವನ್ನು ಗೌರವಿಸಬೇಕಾಗುತ್ತದೆ. ►ಪೋರ್ಚುಗಲ್ನಲ್ಲಿದೆ ಕಠಿಣ ಮಿತಿಗಳು 2021ರಲ್ಲಿ ಪೋರ್ಚುಗಲ್ ಈ ಕಾನೂನನ್ನು ಜಾರಿಗೆ ತಂದಿತ್ತು. ಅಲ್ಲಿ ಈ ಕಾನೂನನ್ನು ಉಲ್ಲಂಘಿಸಿದರೆ 9,690 ಯೂರೋಗಳಷ್ಟು ದಂಡ ಕಟ್ಟಬೇಕಾಗುತ್ತದೆ. ಅಲ್ಲಿನ ಕಾನೂನು ಮನೆಯಿಂದ ಕೆಲಸ ಮಾಡುವ ಉದ್ಯೋಗಿಗಳಿಗೂ ಅನ್ವಯಿಸುತ್ತದೆ. ಕಚೇರಿ-ಮನೆಗೆ ಸಾಗುವ ವೆಚ್ಚವನ್ನೂ ಕಾರ್ಮಿಕರಿಗೆ ನೀಡಬೇಕಾಗುತ್ತದೆ. ಗೌಪ್ಯತೆ ಕಸಿದು ಮೇಲ್ವಿಚಾರಣೆ ಮಾಡುವ ಸಾಧನಗಳನ್ನೂ ಅಲ್ಲಿ ನಿಷೇಧಿಸಲಾಗಿದೆ. ►ಇಟಲಿಯಲ್ಲಿ ಹೊಂದಾಣಿಕೆಯ ನಿಯಮವಿದೆ 2017ರಲ್ಲಿ ಇಟಲಿ ಸ್ಮಾರ್ಟ್ ವರ್ಕಿಂಗ್ ಕಾನೂನುಗಳನ್ನು ತಂದಿತ್ತು. ಕಂಪೆನಿಗಳು ಕಾರ್ಮಿಕರ ಜೊತೆಗಿನ ಒಪ್ಪಂದದಲ್ಲಿಯೇ ಸಂಪರ್ಕ ಕಡಿತದ ಅವಧಿಯನ್ನು ಉಲ್ಲೇಖಿಸಿರಬೇಕು. ಕಾರ್ಮಿಕ ಸಂಘಟನೆಗಳು ನಿಯಮಗಳನ್ನು ಚರ್ಚಿಸಿ ನಿರ್ಧರಿಸುತ್ತವೆ. ಸಂಪರ್ಕರಾಹಿತ್ಯಕ್ಕೆ ದಂಡವಿಲ್ಲದಿರುವುದನ್ನು ಖಚಿತಪಡಿಸುತ್ತಾರೆ. ಇದು ಸರ್ಕಾರಿ ಮತ್ತು ಖಾಸಗಿ ಎರಡೂ ಕಡೆ ಅನ್ವಯಿಸಿದೆ. ►ಚಳವಳಿಯ ಜೊತೆಗೂಡಿದ ಆಸ್ಟ್ರೇಲಿಯ ಆಸ್ಟ್ರೇಲಿಯ 2024ರಲ್ಲಿ ಈ ನಿಯಮವನ್ನು ಅಳವಡಿಸಿಕೊಂಡಿದೆ. ಉದ್ಯೋಗಿಗಳು ಕಾರ್ಯಾವಧಿ ಮೀರಿದ ನಂತರ ಅನಗತ್ಯ ಸಂಪರ್ಕವನ್ನು ಅಲಕ್ಷಿಸಬಹುದಾಗಿದೆ. ವ್ಯಾಜ್ಯಗಳಿಗೆ ನ್ಯಾಯಮಂಡಳಿಗಳನ್ನು ರಚಿಸಲಾಗಿದೆ. ಆಸ್ಟ್ರೇಲಿಯದಲ್ಲಿ ಸಣ್ಣ ಕಂಪೆನಿಗಳಿಗೆ ಸಡಿಲಿಕೆ ತೋರಿಸಿದರೂ, ದೊಡ್ಡ ಕಂಪೆನಿಗಳು ಕಾನೂನು ಅನುಸರಿಸುತ್ತವೆ.
SIR ವಿರೋಧಿಸುವ ರಾಜ್ಯಗಳಿಗೆ ಸುಪ್ರೀಂ ತರಾಟೆ; ಸಿಬ್ಬಂದಿಗೆ ಅಡ್ಡಿಪಡಿಸುವವರ ವಿರುದ್ಧ ಕಠಿಣ ಕ್ರಮ ಎಚ್ಚರಿಕೆ
ಭಾರತೀಯ ಚುನಾವಣಾ ಆಯೋಗದ ಮತದಾರರ ಪಟ್ಟಿ ಪರಿಷ್ಕರಣೆಗೆ ಅಡ್ಡಿಪಡಿಸುವ ರಾಜ್ಯ ಸರ್ಕಾರಗಳಿಗೆ ಸುಪ್ರೀಂ ಕೋರ್ಟ್ ಎಚ್ಚರಿಕೆ ನೀಡಿದೆ. ಬೂತ್ ಮಟ್ಟದ ಅಧಿಕಾರಿಗಳಿಗೆ ಬೆದರಿಕೆ ಹಾಕಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಅವರಿಗೆ ಸೂಕ್ತ ಭದ್ರತೆ ನೀಡಬೇಕು ಎಂದು ತಾಕೀತು ಮಾಡಿದೆ. ಕೇಂದ್ರ ಸರ್ಕಾರ ಮತ್ತು ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದೆ. ಪರಿಷ್ಕರಣೆ ಪ್ರಕ್ರಿಯೆ ಸುಗಮವಾಗಿ ನಡೆಯಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಸೂಚಿಸಿದೆ.
Saudi Arabia | ಮುಸ್ಲಿಮೇತರ ವಿದೇಶಿಯರಿಗೆ ಮದ್ಯ ಮಾರಾಟ ನಿಯಮ ಇನ್ನಷ್ಟು ಸಡಿಲ
►ಮಾಸಿಕ 12 ಲಕ್ಷ ರೂ. ಸಂಬಳವಷ್ಟೇ ಸಾಕು, ಮದ್ಯ ಸಿಗುತ್ತೆ!►ಇನ್ನೆರಡು ನಗರಗಳಲ್ಲೂ ಮದ್ಯದ ಮಳಿಗೆಗೆ ಚಿಂತನೆ
ವಿಟ್ಲ | ವಿದ್ಯುತ್ ತಂತಿ ತಗುಲಿ ವ್ಯಕ್ತಿ ಮೃತ್ಯು
ವಿಟ್ಲ: ಅಲ್ಯುಮಿನಿಯಂ ಕೊಕ್ಕೆಯಿಂದ ತೆಂಗಿನ ಕಾಯಿ ಕೀಳುತ್ತಿದ್ದ ವೇಳೆ ಸಮೀಪದ ಹೈಟೆನ್ಶನ್ ಲೈನ್ ವಿದ್ಯುತ್ ತಂತಿ ತಗುಲಿ ವ್ಯಕ್ತಿಯೊರ್ವರು ಮೃತಪಟ್ಟ ಘಟನೆ ಕರೋಪಾಡಿ ಗ್ರಾಮದ ಪದ್ಯಾನ ಗಡಿಭಾಗ ಎಂಬಲ್ಲಿ ಡಿ.7 ರಂದು ಬೆಳಿಗ್ಗೆ ನಡೆದಿದೆ. ಮೃತ ವ್ಯಕ್ತಿಯನ್ನು ನಾರಾಯಣ ನಾಯ್ಕ್ ಎಂದು ಗುರುತಿಸಲಾಗಿದೆ. ಇವರು ಡಿ.7 ರಂದು ಬೆಳಿಗ್ಗೆ ಮನೆಯ ಎದುರುಗಡೆಯ ತೆಂಗಿನ ಮರದಿಂದ ಅಲ್ಯುಮಿನಿಯಂ ಕೊಕ್ಕೆಯಿಂದ ತೆಂಗಿನ ಕಾಯಿ ಕೀಳುತ್ತಿದ್ದ ವೇಳೆ ಕೊಕ್ಕೆ ಆಕಸ್ಮಿಕವಾಗಿ ಪಕ್ಕದಲ್ಲಿರುವ ಎಚ್ ಟಿ ಲೈನ್ ವಿದ್ಯುತ್ ತಂತಿಗೆ ತಗುಲಿ ಶಾಕ್ ಹೊಡೆದು ಕೆಳಗೆ ಬಿದ್ದಿದ್ದಾರೆ. ತಕ್ಷಣ ಇವರನ್ನು ದೇರಳಕಟ್ಟೆಯ ಕೆ ಎಸ್ ಹೆಗ್ಡೆ ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಅದಾಗಲೇ ಅವರು ಮೃತಪಟ್ಟಿದ್ದಾರೆ. ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಯುಡಿಆರ್ ಪ್ರಕರಣ ದಾಖಲಾಗಿದೆ.
ಇಸ್ರೇಲ್ ಸೇನೆಯಿಂದ ದಕ್ಷಿಣ ಲೆಬನಾನ್ ನಲ್ಲಿ ಹಿಝ್ಬುಲ್ಲಾ ನೆಲೆಗಳ ಮೇಲೆ Air Strike
ಜೆರುಸಲೇಂ,ಡಿ.9: ದಕ್ಷಿಣ ಲೆಬನಾನ್ ನಲ್ಲಿನ ಹಿಝ್ಬುಲ್ಲಾ ಹೋರಾಟಗಾರರ ತರಬೇತಿ ತಾಣ ಹಾಗೂ ಅವರು ಕಾರ್ಯಾಚರಿಸುತ್ತಿದ್ದ ಸ್ಥಳಗಳ ಮೇಲೆ ದಾಳಿ ನಡೆಸಿರುವುದಾಗಿ ಇಸ್ರೇಲ್ ಸೇನೆ ತಿಳಿಸಿದೆ. ಹಿಝ್ಬುಲ್ಲಾ ಸಂಘಟನೆಯ ‘ರಾದ್ವಾನ್’ ಪಡೆಯ ತರಬೇತಿ ತಾಣ ಹಾಗೂ ಮಿಲಿಟರಿ ರಚನೆಗಳನ್ನು ಗುರಿಯಿರಿಸಿ ಈ ದಾಳಿಯನ್ನು ನಡೆಸಲಾಗಿದೆ ಎಂದು ಅದು ಹೇಳಿದೆ. ಈ ತಾಣಗಳನ್ನು ಇಸ್ರೇಲ್ ದೇಶದ ವಿರುದ್ಧ ದಾಳಿ ನಡೆಸಲು ತರಬೇತಿ ಕೇಂದ್ರವಾಗಿ ಬಳಸಿಕೊಳ್ಳಲಾಗುತ್ತಿತ್ತು. ಇದು ಇಸ್ರೇಲ್ ಹಾಗೂ ಲೆಬನಾನ್ ನಡುವೆ ಏರ್ಪಟ್ಟಿರುವ ತಿಳುವಳಿಕಾ ಒಪ್ಪಂದದ ಉಲ್ಲಂಘನೆಯಾಗಿದೆ ಹಾಗೂ ಇಸ್ರೇಲ್ ದೇಶದ ವಿರುದ್ಧದ ಬೆದರಿಕೆಯಾಗಿದೆ ಎಂದವರು ತಿಳಿಸಿದ್ದಾರೆ.
ಅಖಿಲ ಭಾರತ ಸೀನಿಯರ್ ನ್ಯಾಶನಲ್ ಸಾಫ್ಟ್ ಬಾಲ್ ಚಾಂಪಿಯನ್ಶಿಪ್ : ಬನ್ನಡ್ಕ ಕಾಲೇಜಿನ ಇಬ್ಬರು ವಿದ್ಯಾರ್ಥಿಗಳು ಆಯ್ಕೆ
ಮೂಡುಬಿದಿರೆ : ಡಿ.13ರಿಂದ 18ರವರೆಗೆ ಕೊಲ್ಕೊತ್ತಾದಲ್ಲಿ ನಡೆಯಲಿರುವ ಅಖಿಲ ಭಾರತ ಸೀನಿಯರ್ ನ್ಯಾಶನಲ್ ಸಾಫ್ಟ್ ಬಾಲ್ ಚಾಂಪಿಯನ್ಶಿಪ್ನಲ್ಲಿ ಭಾಗವಹಿಸಲು ಕರ್ನಾಟಕ ತಂಡಕ್ಕೆ ಇಲ್ಲಿನ ಬನ್ನಡ್ಕ ವಿಶ್ವವಿದ್ಯಾಲಯ ಕಾಲೇಜಿನ ತೃತೀಯ ಬಿಸಿಎ ವಿದ್ಯಾರ್ಥಿನಿಯರಾದ ಸಂಗೀತಾ ಪೂಜಾರಿ ಮತ್ತು ನಿಖಿತಾ ಸ್ಥಾನ ಪಡೆದಿದ್ದಾರೆ ಎಂದು ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾದ ರತ್ನಾಕರ ಪುತ್ತೂರಾಯ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಲ್ಯಾಣಪುರ | ವಲಯ ಮಟ್ಟದ ಪ್ರತಿಭಾ ಕಾರಂಜಿ ಉದ್ಘಾಟನೆ
ಕಲ್ಯಾಣಪುರ, ಡಿ.9: ರಾಜ್ಯದಲ್ಲೇ ಉಡುಪಿ ಜಿಲ್ಲೆ ಶಿಕ್ಷಣದಲ್ಲಿ ಮುಂಚೂಣಿಯಲ್ಲಿದೆ. ಪ್ರತಿವರ್ಷ ಎಸೆಸೆಲ್ಸಿ ಮತ್ತು ಪಿಯುಸಿ ತರಗತಿಗಳ ಪಬ್ಲಿಕ್ ಪರೀಕ್ಷೆಗಳಲ್ಲಿ ಪ್ರಥಮ ಅಥವಾ ದ್ವಿತೀಯ ಸ್ಥಾನವನ್ನು ರಾಜ್ಯಮಟ್ಟದಲ್ಲಿ ಪಡೆಯುತ್ತ ಬರುತ್ತಿದೆ. ಅದೇ ರೀತಿ ಪಠ್ಯೇತರ ವಿಷಯಗಳಲ್ಲೂ ಉಡುಪಿ ಜಿಲ್ಲೆ ರಾಜ್ಯದಲ್ಲೇ ಮುಂಚೂಣಿ ಸ್ಥಾನದಲ್ಲಿರಬೇಕು ಎಂದು ಎಲ್ಲರೂ ಬಯಸುತ್ತಾರೆ ಎಂದು ಉಡುಪಿ ಶಾಸಕ ಯಶಪಾಲ್ ಸುವರ್ಣ ಹೇಳಿದ್ದಾರೆ. ಕಲ್ಯಾಣಪುರ ಸಂತೆಕಟ್ಟೆಯ ಮೌಂಟ್ ರೋಸರಿ ಆಂಗ್ಲ ಶಾಲೆಯಲ್ಲಿ ಆಯೋಜಿಸಲಾದ ಬ್ರಹ್ಮಾವರ ವಲಯ ಮಟ್ಟದ ಪ್ರತಿಭಾ ಕಾರಂಜಿ-2025 ಉದ್ಘಾಟಿಸಿ ಅವರು ಮಾತನಾಡುತಿದ್ದರು. ಇಪ್ಪತ್ತು ವರ್ಷಗಳಿಂದ ಪ್ರತಿಭಾ ಕಾರಂಜಿ ಸ್ಫರ್ಧೆಗಳು ನಡೆಯುತಿದ್ದು, ಪಠ್ಯೇತರ ವಿಷಯಗಳಾದ ಭರತನಾಟ್ಯ, ಸಂಗೀತ, ಭಾಷಣ, ಚರ್ಚೆ, ಕ್ವಿಜ್, ಚಿತ್ರಕಲೆಗಳಲ್ಲೂ ಉಡುಪಿ ಜಿಲ್ಲೆ ಪ್ರಥಮ ಸ್ಥಾನಿಯಾಗಬೇಕು ಎಂದು ಅವರು ಹೇಳಿದರು. ಸಂಸ್ಥೆ ವತಿಯಿಂದ ಶಾಸಕರನ್ನು ಸನ್ಮಾನಿಸಲಾಯಿತು. ಮುಖ್ಯ ಅತಿಥಿಯಾಗಿ ಭಾಗವಹಿಸಿದ ಕಾಪು ಶಾಸಕ ಸುರೇಶ್ ಶೆಟ್ಟಿ ಗುರ್ಮೆ ಮಾತನಾಡಿ, ಉಡುಪಿ ಜಿಲ್ಲೆ ಸಾಂಸ್ಕೃತಿಕ ನಗರಿಯಾಗಬೇಕಾದರೆ ಶಾಸ್ತ್ರೀಯ ಸಂಗೀತ, ನಾಟ್ಯ, ಪದ್ಯರಚನೆಯಲ್ಲಿ ವಿದ್ಯಾರ್ಥಿಗಳು ಲವಲವಿಕೆಯಿಂದ ಇವುಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕೆಂದು ಹೇಳಿದರು. ಕಾರ್ಯಕ್ರಮ ಅಧ್ಯಕ್ಷತೆಯನ್ನು ಮೌಂಟ್ ರೋಸರಿ ಚರ್ಚಿನ ಧರ್ಮಗುರು ವಂ.ಡಾ. ರೋಕ್ ಡಿ’ಸೋಜ ವಹಿಸಿದ್ದರು. ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನಕರ ಹೇರೂರು, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಎಂ.ಎ ಗಫೂರ್, ಡಯೆಟ್ ಉಡುಪಿ ಪ್ರಾಂಶುಪಾಲ ಆಶೋಕ್ ಕಾಮತ್, ಚರ್ಚಿನ ಸಹಾಯಕ ಧರ್ಮಗುರು ವ್.ರೋಹನ್, ಮುಖ್ಯ ಶಿಕ್ಷಕಿ ಸಿ. ಆನ್ಸಿಲ್ಲಾ, ಶಿಕ್ಷಕ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು. ನೋಡಲ್ ಅಧಿಕಾರಿ ನಾಗರಾಜ್ ಭಟ್ ಪ್ರಾಸ್ತಾವಿಕ ನುಡಿಗಳನ್ನು ಆಡಿದರು. ಬ್ರಹ್ಮಾವರದ ಕ್ಷೇತ್ರ ಶಿಕ್ಷಣಾಧಿಕಾರಿ ಉಮಾ ಸ್ವಾಗತಿಸಿದರು. ಪ್ರಶಾಂತ್ ಶೆಟ್ಟಿ ವಂದಿಸಿದರು. ಶಿಕ್ಷಕರಾದ ಸತೀಶ್ಚಂದ್ರ ಶೆಟ್ಟಿ ಮತ್ತು ಜಯಲಕ್ಷ್ಮಿ ಕಾರ್ಯಕ್ರಮ ನಿರೂಪಿಸಿದರು.
‘ವಂದೇ ಮಾತರಂ’ನ ಮೊದಲ ಎರಡು ಚರಣ ಬಳಸುವ ನಿರ್ಧಾರ ನೆಹರೂ ಒಬ್ಬರದ್ದಲ್ಲ: ಖರ್ಗೆ
ಹೊಸದಿಲ್ಲಿ, ಡಿ. 9: ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಬಿಜೆಪಿ ನಾಯಕರು ಜವಾಹರ್ಲಾಲ್ ನೆಹರೂ ಅವರನ್ನು ಅವಮಾನಿಸುತ್ತಿದ್ದಾರೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮಂಗಳವಾರ ಆರೋಪಿಸಿದ್ದಾರೆ. ‘‘ವಂದೇ ಮಾತರಂ’’ನ ಮೊದಲ ಎರಡು ಚರಣಗಳನ್ನು ಮಾತ್ರ ರಾಷ್ಟ್ರೀಯ ಗೀತೆಯಾಗಿ ಬಳಸಲು ಮಹಾತ್ಮಾ ಗಾಂಧಿ ಹಾಗೂ ರವೀಂದ್ರನಾಥ್ ಠಾಗೂರ್ರಂತಹ ನಾಯಕರು ಸಾಮೂಹಿಕವಾಗಿ ನಿರ್ಧಾರ ತೆಗೆದುಕೊಂಡಿದ್ದರು ಎಂದು ಅವರು ಹೇಳಿದ್ದಾರೆ. ಕವಿತೆಯ ಕೇವಲ ಎರಡು ಚರಣಗಳನ್ನು ಮಾತ್ರ ರಾಷ್ಟ್ರೀಯ ಗೀತೆಯಾಗಿ ಬಳಸಲು ನಿರ್ಧರಿಸಲು ಕಾಂಗ್ರೆಸ್ ನ ತುಷ್ಟೀಕರಣ ರಾಜಕೀಯ ಕಾರಣ ಎಂದು ಗೃಹ ಸಚಿವ ಅಮಿತ್ ಶಾ ಲೋಕಸಭೆಯಲ್ಲಿ ಆರೋಪಿಸಿದರು. ಇದಾದ ತತ್ಕ್ಷಣ ಖರ್ಗೆ ‘‘ವಂದೇ ಮಾತರಂ’’ ಎಂಬ ಘೋಷಣೆಯನ್ನು ಕೂಗುವ ಮೂಲಕ ತಮ್ಮ ಭಾಷಣವನ್ನು ಆರಂಭಿಸಿದರು. ‘‘1921ರಲ್ಲಿ ಅಸಹಕಾರ ಚಳುವಳಿ ಆರಂಭವಾದಾಗ, ಕಾಂಗ್ರೆಸ್ ಸದಸ್ಯರು ವಂದೇ ಮಾತರಂ ಜಪಿಸಿ ಜೈಲಿಗೆ ಹೋಗುತ್ತಿದ್ದರು. ನೀವು ಏನು ಮಾಡುತ್ತಿದ್ದಿರಿ? ನೀವು ಬ್ರಿಟೀಷರಿಗಾಗಿ ಕೆಲಸ ಮಾಡುತ್ತಿದ್ದಿರಿ’’ ಎಂದು ಖರ್ಗೆ ಹೇಳಿದರು. ‘‘ನೀವು ನಮಗೆ ದೇಶ ಭಕ್ತಿಯನ್ನು ಬೋಧಿಸುತ್ತಿದ್ದೀರಿ. ನೀವು ಸ್ವಾತಂತ್ರ್ಯ ಚಳುವಳಿಯನ್ನು ಬೆಂಬಲಿಸಲು ಹೆದರುತ್ತಿದ್ದಿರಿ. ಬ್ರಿಟೀಷರಿಗಾಗಿ ಕೆಲಸ ಮಾಡುತ್ತಿದ್ದೀರಿ’’ ಎಂದು ಅವರು ತಿಳಿಸಿದರು. ಕವಿತೆಯ ಎರಡು ಚರಣವನ್ನು ಮಾತ್ರ ಹಾಡುವ ನಿರ್ಣಯವನ್ನು ಕಾಂಗ್ರೆಸ್ ನ ಕಾರ್ಯಕಾರಿ ಸಮಿತಿ ಅಂಗೀಕರಿಸಿತು. ನೆಹರು ಮಾತ್ರ ಈ ನಿರ್ಣಯ ಕೈಗೊಂಡಿಲ್ಲ. ಈ ನಿರ್ಣಯ ತೆಗೆದುಕೊಳ್ಳುವಾಗ ಮಹಾತ್ಮಾ ಗಾಂಧಿ, ಸುಭಾಷ್ ಚಂದ್ರ ಭೋಸ್, ಮದನ್ ಮೋಹನ್ ಮಾಳವೀಯ ಹಾಗೂ ಆಚಾರ್ಯ ಜೆ.ಬಿ. ಕೃಪಲಾನಿಯಂತಹ ನಾಯಕರು ಸಭೆಯಲ್ಲಿ ಉಪಸ್ಥಿತರಿದ್ದರು ಎಂದು ಖರ್ಗೆ ಹೇಳಿದರು. ‘‘ನೀವು ಈ ಎಲ್ಲಾ ಅತ್ಯುನ್ನತ ನಾಯಕರಿಗೆ ಅವಮಾನ ಮಾಡುತ್ತಿದ್ದೀರಿ. ಅದು ಅವರ ಸಂಘಟಿತ ನಿರ್ಧಾರವಾಗಿತ್ತು. ನೀವು ನೆಹರೂ ಅವರನ್ನು ಮಾತ್ರ ಗುರಿಯಾಗಿರಿಸಿ ಯಾಕೆ ವಾಗ್ದಾಳಿ ಮಾಡುತ್ತಿದ್ದೀರಿ’’ ಎಂದು ಖರ್ಗೆ ಪ್ರಶ್ನಿಸಿದರು.
ಕಂಬ್ಯಾಕ್ ಪಂದ್ಯದಲ್ಲೇ ಹಾರ್ದಿಕ್ ಪಾಂಡ್ಯ ಭರ್ಜರಿ ಶೋ: ಕಟಕ್ ನಲ್ಲಿ ಹರಿಣಗಳ ಪ್ಲಾನ್ ಗಳೆಲ್ಲಾ ಉಲ್ಟಾಪಲ್ಟಾ!
ಆರಂಭದಲ್ಲಿ ಅದ್ಭುತ ಆಟವಾಡಿದ್ದ ದಕ್ಷಿಣ ಆಫ್ರಿಕಾ ಅಂತಿಮವಾಗಿ ಕಂಡದ್ದು 101 ರನ್ ಗಳ ಭರ್ಜರಿ ಸೋಲು. ಇದಲ್ಲವೇ ನ ಗಮ್ಮತ್ತು! ಹಾರ್ದಿಕ್ ಪಾಂಡ್ಯ ಅವರ ಆಲ್ರೌಂಡ್ ಆಟದ ನೆರವಿನಿಂದಾಗಿ ಭಾರತ ತಂಡ ದಕ್ಷಿಣ ಆಫ್ರಿಕಾವನ್ನು 101 ರನ್ ಗಳ ಅಂತರದಿಂದ ಸೋಲಿಸಿದೆ. ಈ ಮೂಲಕ 5 ಪಂದ್ಯಗಳ ಟಿ20 ಸರಣಿಯಲ್ಲಿ 1-0 ಅಂತರದಿಂದ ಮುನ್ನಡೆ ಸಾಧಿಸಿದೆ. ಕಟಕ್ ನಲ್ಲಿ ನಡೆಯುತ್ತಿರುವ ದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ ನಿಗದಿತ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 175 ರನ್ ಗಳಿಸಿತ್ತು. ಸವಾಲಿನ ಗುರಿ ಪಡೆದಿದ್ದ ದಕ್ಷಿಣ ಆಫ್ರಿಕಾ ತಂಡ 12.3 ಓವರ್ ಗಳಲ್ಲೇ ಸುಸ್ತಾಗಿ 74 ರನ್ ಗಳಿಗೆ ಆಲೌಟ್ ಆಯಿತು. ಹೀಗಾಗಿ ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡಿದ್ದ ದಕ್ಷಿಣ ಆಫ್ರಿಕಾ ತಂಡದ ಲೆಕ್ಕಾಚಾರವೆಲ್ಲಾ ಉಲ್ಟಾಪಲ್ಟಾ ಆಯಿತು. ಎದುರಾಳಿ ತಂಡದಲ್ಲಿ ಡಿವಾಲ್ಡ್ ಬ್ರೆವಿಸ್(14 ಎಸೆತದಲ್ಲಿ 22 ರನ್) ಅವರನ್ನು ಹೊರತುಪಡಿಸಿದರೆ ಬೇರಾರೂ ಕೂಡ ಉತ್ತಮ ಬ್ಯಾಟಿಂಗ್ ಮಾಡಲಿಲ್ಲ. ಭಾರತದ ಪರ ಅರ್ಶದೀಪ್ ಸಿಂಗ್, ಜಸ್ಪ್ರೀತ್ ಬುಮ್ರಾ, ವರುಣ್ ಚಕ್ರವರ್ತಿ, ಅಕ್ಷರ್ ಪಟೇಲ್ ಅವರು ತಲಾ 2 ವಿಕೆಟ್ ಗಳಿಸಿದರು. ಉಳಿದೆರಡು ವಿಕೆಟ್ ಗಳನ್ನು ಹಾರ್ದಿಕ್ ಪಾಂಡ್ಯ ಮತ್ತು ಶಿವಂ ದುಬೆ ಅವರು ಹಂಚಿಕೊಂಡರು. ಇದೇವೇಳೆ ಡಿವಾಲ್ಡ್ ಬ್ರೆವಿಸ್ ಅವರನ್ನು ಕೀಪರ್ ಜಿತೇಶ್ ಶರ್ಮಾ ಅವರಿಗೆ ಕ್ಯಾಚ್ ಕೊಡಿಸುವಲ್ಲಿ ಸಫಲರಾದ ಜಸ್ಪ್ರೀತ್ ಬುಮ್ರಾ ಅವರು ಟಿ20 ಕ್ರಿಕೆಟ್ ನಲ್ಲಿ 100 ವಿಕೆಟ್ ಮೈಲಿಗಲ್ಲು ದಾಟಿದರು. ಇದು ಅವರ 81ನೇ ಪಂದ್ಯವಾಗಿದೆ. ಇದಕ್ಕೂ ಮೊದಲು ಟಾಸ್ ಸೋತು ಬ್ಯಾಟಿಂಗ್ ಗೆ ಇಳಿಸಲ್ಪಟ್ಟ ಭಾರತ ತಂಡಕ್ಕೆ ದಕ್ಷಿಣ ಆಫ್ರಿಕಾ ತಂಡದ ವೇಗಿಗಳಾದ ಲುಂಗಿ ಎನ್ ಗಿಡಿ ಮತ್ತು ಲುಥೋ ಸಿಂಫಾಲಾ ಅವರು ಭಾರೀ ಹೊಡೆತ ನೀಡಿದರು. ಉಪನಾಯಕ ಶುಭಮನ್ ಗಿಲ್ (4) ಅವರನ್ನು ಮೊದಲ ಓವರ್ ನಲ್ಲೇ ಔಟ್ ಮಾಡಿದ ಎನ್ ಗಿಡಿ, ಮತ್ತೆ 3ನೇ ಓವರ್ ನಲ್ಲಿ ನಾಯಕ ಸೂರ್ಯಕುಮಾರ್ ಯಾದವ್ ಅವರನ್ನೂ ಬಲೆಗೆ ಬೀಳಿಸಿದರು. ಹೀಗಾಗಿ 17 ರನ್ ಆಗುವಷ್ಟರಲ್ಲಿಯೇ ಭಾರತ 2 ವಿಕೆಟ್ ಗಳ ಪತನ ಆಯಿತು. ಹೀಗಾಗಿ ತಂಡದ ರನ್ ವೇಗಕ್ಕೂ ಕಡಿವಾಣ ಬಿತ್ತು. ಹಾರ್ದಿಕ್ ಅರ್ಧಶತಕ ಇದಾದ ಬಳಿಕ ಸೆಟ್ ಆಗಿದ್ದ ಸ್ಫೋಟಕ ಬ್ಯಾಟರ್ ಅಭಿಷೇಕ್ ಶರ್ಮಾ(12 ಎಸೆತದಲ್ಲಿ 17) ಅವರು ಸಿಂಪಾಲಾ ಬೌಲಿಂಗ್ ನಲ್ಲಿ ಲಾಂಗ್ ಲೆಗ್ ನಲ್ಲಿ ಮಾರ್ಕೋ ಯಾನ್ಸನ್ ಹಿಡಿದ ಅದ್ಭುತವಾದ ಕ್ಯಾಚ್ ಗೆ ಬಲಿಯಾದರು. ನಿಧಾನ ಗತಿಯಲ್ಲಿ ಆಡುತ್ತಿದ್ದ ತಿಲಕ್ ವರ್ಮಾ(32 ಎಸೆತದಲ್ಲಿ 26) ಅವರು ಸಹ ಜಾನ್ಸನ್ ಅವರು ಅದೇ ಸ್ಥಳದಲ್ಲಿ ಅದೇ ರೀತಿ ಹಿಡಿದ್ದಿದ್ದರಿಂದ ಔಟ್ ಆಗಿ ಪೆವಿಲಿಯನ್ ಗೆ ಮರಳಬೇಕಾಯಿತು. ಹೀಗೆ ದಕ್ಷಿಣ ಆಫ್ರಿಕಾ ಬೌಲರ್ ಗಳು ಭಾರತದ ಬ್ಟಾಟರ್ ಗಳ ಮೇಲೆ ನಿರಂತರ ಒತ್ತಡ ಹೇರುತ್ತಲೇ ಇದ್ದರು. ಹೀಗಾಗಿ ರನ್ ರೇಟ್ ಮೇಲಕ್ಕೇಳುತ್ತಲೇ ಇರಲಿಲ್ಲ. ಈ ಹಂತದಲ್ಲಿ ಭಾರತದ ಇನ್ನಿಂಗ್ಸ್ ಗೆ ವೇಗವನ್ನು ತಂದವರು ಆಲ್ರೌಂಡರ್ ಹಾರ್ದಿಕ್ ಪಾಂಡ್ಯ. ಕೇವಲ 25 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಅವರು 28 ಎಸೆತಗಳಿಂದ 59 ರನ್ ಗಳಿಸಿ ನಾಟೌಟ್ ಆಗಿ ಉಳಿದರು. ಅವರ ಇನ್ನಿಂಗ್ಸ್ ನಲ್ಲಿ 6 ಬೌಂಡರಿ ಮತ್ತು 4 ಸಿಕ್ಸರ್ ಗಳಿದ್ದವು. ಇವರೊಂದಿಗೆ ಸಣ್ಣ ಸಣ್ಣ ಜೊತೆಯಾಟಗಳಲ್ಲಿ ಭಾಗಿಯಾದ ಅಕ್ಷರ್ ಪಟೇಲ್ (21 ಎಸೆತದಲ್ಲಿ 21) ಸಿಂಪಾಲಾ ಎಸೆತದಲ್ಲಿ ಫಿರೇರಾಗೆ ಕ್ಯಾಚ್ ನೀಡಿದರೆ, ಶಿವಂ ದುಬೆ(9 ಎಸೆತದಲ್ಲಿ 11) ಅವರು ಸ್ಪಿನ್ನರ್ ಫಿರೇರಾ ಅವರಿಗೆ ಕ್ಲೀನ್ ಬೌಲ್ಡ್ ಆದರು. ವಿಕೆಟ್ ಕೀಪರ್ ಬ್ಯಾಟರ್ ಜಿತೇಶ್ ಶರ್ಮಾ ಅವರು 5 ಎಸೆತದಲ್ಲಿ 10 ರನ್ ಗಳಿಸಿ ನಾಟೌಟ್ ಆಗಿ ಉಳಿದರು. ಸಂಕ್ಷಿಪ್ತ ಸ್ಕೋರ್ ಭಾರತ 175/6, ಹಾರ್ದಿಕ್ ಪಾಂಡ್ಯ 59(28), ತಿಲಕ್ ವರ್ಮಾ 26(32), ಅಕ್ಷರ್ ಪಟೇಲ್, ಲುಂಗಿ ಎನ್ ಗಿಡಿ 31ಕ್ಕೆ 3, ಲುಥೋ ಸಿಂಪಾಲಾ 38ಕ್ಕೆ 2. ದಕ್ಷಿಣ ಆಪ್ರಿಕಾ 12.3 ಓವರ್ ಗಳಲ್ಲಿ 74ಕ್ಕೆ ಆಲೌಟ್, ಡಿವಾಲ್ಡ್ ಬ್ರೆವಿಸ್ 22(14), ಐಡನ್ ಮಾರ್ಕಂ 14(14), ತ್ರಿಸ್ಟನ್ ಸ್ಟಬ್ಸ್ 14(9), ಅಕ್ಷರ್ ಪಟೇಲ್ 7ಕ್ಕೆ 2, ಅರ್ಶದೀಪ್ ಸಿಂಗ್ 14ಕ್ಕೆ 2.
228 ಕೋಟಿ ರೂ. ವಂಚನೆ ಪ್ರಕರಣ; ಅನಿಲ್ ಅಂಬಾನಿ ಪುತ್ರನ ವಿರುದ್ಧ CBIಯಿಂದ ಪ್ರಕರಣ ದಾಖಲು
ಹೊಸದಿಲ್ಲಿ, ಡಿ. 9: ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾಕ್ಕೆ 228.06 ಕೋಟಿ ರೂ. ನಷ್ಟಕ್ಕೆ ಕಾರಣವಾದ ವಂಚನೆ ಹಾಗೂ ಹಣವನ್ನು ಬೇರೆ ಉದ್ದೇಶಕ್ಕಾಗಿ ಬಳಸಿರುವ ಆರೋಪಗಳ ಹಿನ್ನೆಲೆಯಲ್ಲಿ ಉದ್ಯಮಿ ಅನಿಲ್ ಅಂಬಾನಿ ಪುತ್ರ ಜೈ ಅನ್ಮೋಲ್ ಅಂಬಾನಿ ವಿರುದ್ಧ CBI ಕ್ರಿಮಿನಲ್ ಪ್ರಕರಣ ದಾಖಲಿಸಿದೆ. ಅನಿಲ್ ಅಂಬಾನಿ ಅವರ ರಿಲಯನ್ಸ್ ಸಮೂಹ ಹಣ ವರ್ಗಾವಣೆ ತನಿಖೆೆಯನ್ನು ಎದುರಿಸುತ್ತಿದೆ. ಸುಮಾರು 17,000 ಕೋಟಿ ರೂ. ಸಾಲಗಳಲ್ಲಿ ಅಕ್ರಮಗಳ ಆರೋಪ ಅದರ ಮೇಲಿದೆ. ಹೊಸದಿಲ್ಲಿಯಲ್ಲಿರುವ CBIಯ ಬ್ಯಾಂಕಿಂಗ್ ಸೆಕ್ಯುರಿಟಿ ಆ್ಯಂಡ್ ಫ್ರಾಡ್ ಬ್ರಾಂಚ್ (ಬಿಎಸ್ಎಫ್ಬಿ) 2025 ಡಿಸೆಂಬರ್ 6ರಂದು ಎಫ್ಐಆರ್ ದಾಖಲಿಸಿದೆ. ಈ FIRನಲ್ಲಿ ರಿಲಾಯನ್ಸ್ ಹೋಮ್ ಫೈನಾನ್ ಲಿಮಿಟೆಡ್ (ಆರ್ಎಚ್ಎಫ್ಎಲ್)ನ ಮಾಜಿ ನಿರ್ದೇಶಕ ಜೈ ಅನ್ಮೋಲ್ ಅಂಬಾನಿ, ಕಂಪೆನಿಯ ಮಾಜಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಹಾಗೂ ನಿರ್ದೇಶಕ ರವೀಂದ್ರ ಶರದ್ ಸುಧಾಲ್ಕರ್, ಅಪರಿಚಿತ ಸಹಚರರು ಹಾಗೂ ಸರಕಾರಿ ಸಿಬ್ಬಂದಿಯನ್ನು ಉಲ್ಲೇಖಿಸಲಾಗಿದೆ. 2016 ಎಪ್ರಿಲ್ 1ರಿಂದ 2019 ಜೂನ್ 30ರ ವರೆಗಿನ ಅವಧಿಯಲ್ಲಿ ವಂಚನೆ ಹಾಗೂ ಹಣ ಬೇರೆ ಉದ್ದೇಶಕ್ಕೆ ಬಳಸಿರುವುದು ನಡೆದಿದೆ ಎಂದು ಆರೋಪಿಸಲಾಗಿದೆ. ಮುಂಬೈಯಲ್ಲಿರುವ ಯೂನಿಯನ್ ಬ್ಯಾಂಕ್ನ ಸ್ಟ್ರೆಸ್ಡ್ ಅಸೆಟ್ ಮ್ಯಾನೇಜ್ಮೆಂಟ್ ಶಾಖೆಯ ಉಪ ಪ್ರಧಾನ ಮ್ಯಾನೇಜರ್ ಅನೂಪ್ ವಿನಾಯಕ ತರಾಲೆ ಅವರು CBIಗೆ ವಿಸ್ತೃತ ದೂರು ಸಲ್ಲಿಸಿದ್ದರು. ಈ ದೂರಿನಲ್ಲಿ ಆರ್ಎಚ್ಎಫ್ಎಲ್ ಈಗ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದೊಂದಿಗೆ ವಿಲೀನಗೊಂಡಿರುವ ಆಂಧ್ರಾ ಬ್ಯಾಂಕ್ ಅನ್ನು 2015ರಲ್ಲಿ ಸಂಪರ್ಕಿಸಿತ್ತು ಹಾಗೂ ಹಣಕಾಸು ನೆರವು ಕೋರಿತ್ತು. 2015 ಫೆಬ್ರವರಿ ಹಾಗೂ ಮೇ ನಡುವೆ ಬ್ಯಾಂಕ್ ಫೆಬ್ರವರಿ 21ರಂದು 200 ಕೋಟಿ ರೂ., ಮೇ 29ರಂದು 150 ಕೋಟಿ ರೂ. ಹಾಗೂ 100 ಕೋಟಿ ರೂ.ಗಳ ಪ್ರತ್ಯೇಕ ಅವಧಿ ಸಾಲಗಳನ್ನು ಮಂಜೂರು ಮಾಡಿತ್ತು.
ಉಡುಪಿ | ಗೃಹ ರಕ್ಷಕರ ಹುದ್ದೆ: ಅರ್ಜಿ ಆಹ್ವಾನ
ಉಡುಪಿ, ಡಿ.9: ಉಡುಪಿ ಜಿಲ್ಲಾ ಗೃಹರಕ್ಷಕ ದಳ ಇಲಾಖೆಯಲ್ಲಿ ಗೃಹ ರಕ್ಷಕರಾಗಿ ಸೇವೆ ಸಲ್ಲಿಸಲು ಇಚ್ಛಿಸುವ ಸೇವಾ ಮನೋಭಾವವುಳ್ಳ, ಎಸೆಸೆಲ್ಸಿ ಉತ್ತೀರ್ಣರಾದ ಹಾಗೂ ಮೇಲ್ಪಟ್ಟು ವಿದ್ಯಾರ್ಹತೆ ಹೊಂದಿರುವ 19ರಿಂದ 45 ವರ್ಷದೊಳಗಿನ ಜಿಲ್ಲಾ ವ್ಯಾಪ್ತಿಯ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಡಿಸೆಂಬರ್ 25 ಕೊನೆಯ ದಿನ. ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಅಗ್ನಿಶಾಮಕ ಕಚೇರಿ ಆವರಣದಲ್ಲಿರುವ ಜಿಲ್ಲಾ ಗೃಹರಕ್ಷಕ ದಳ ಕಚೇರಿ, ದೂ.ಸಂಖ್ಯೆ: 0820-2533650 ಹಾಗೂ ತಾಲೂಕು ಘಟಕಾಧಿಕಾರಿಗಳ ಕಛೇರಿಯನ್ನು ಸಂಪರ್ಕಿಸಬಹುದು ಎಂದು ಇಲಾಖೆ ಪ್ರಕಟಣೆ ತಿಳಿಸಿದೆ.
ವಿಮಾನ ಪ್ರಯಾಣಿಕರೇ ಗಮನಿಸಿ, ದೊಡ್ಡ ಬದಲಾವಣೆ ತಂದ ಕೇಂದ್ರ ಸರ್ಕಾರ! IndiGo Flight
ಜೀವನದಲ್ಲಿ ಒಂದು ಬಾರಿಯಾದರೂ ವಿಮಾನದಲ್ಲಿ ಓಡಾಡಬೇಕು... ಹಕ್ಕಿಯಂತೆ ವಿಮಾನದಲ್ಲಿ ಕೂತು ಪ್ರಯಾಣ ಮಾಡಬೇಕು... ಆಕಾಶದಿಂದ ಭೂಮಿ ನೋಡಿ ಚಪ್ಪಾಳೆ ತಟ್ಟಬೇಕು ಅನ್ನುವ ಆಸೆ ಕೋಟ್ಯಂತರ ಜನರಿಗೆ ಇರುತ್ತದೆ. ಆದರೆ ಇನ್ನೂ ಕೆಲವರು ಸಣ್ಣಪುಟ್ಟ ವಿಚಾರಕ್ಕೂ ವಿಮಾನ ಹತ್ತಿ ಓಡಾಡುತ್ತಾ ಬೇಜಾರ್ ಬಂದಿರುತ್ತದೆ. ಹೀಗೆ ವಿಮಾನ ಪ್ರಯಾಣ ಅನ್ನುವುದು ಪ್ರಪಂಚದ ಮೂಲೆ ಮೂಲೆಯಲ್ಲೂ ಗಮನ ಸೆಳೆಯುವ ವಿಚಾರ. ಪ್ರತಿನಿತ್ಯ
ಉಡುಪಿ | ಡಿ.12ರಂದು ಅಂಚೆ ಪಿಂಚಣಿ ಅದಾಲತ್
ಉಡುಪಿ, ಡಿ.9: ಉಡುಪಿ ವಿಭಾಗದ ಅಂಚೆ ಅಧೀಕ್ಷಕರ ಕಚೇರಿಯಲ್ಲಿ ಡಿಸೆಂಬರ್ 12ರಂದು ಅಪರಾಹ್ನ 3:00 ಗಂಟೆಗೆ ಅಂಚೆ ಪಿಂಚಣಿ ಅದಾಲತ್ ನಡೆಯಲಿದೆ. ಅಂಚೆ ಇಲಾಖೆಯ ಪಿಂಚಣಿದಾರರು ತಮ್ಮ ಅಹವಾಲು ಗಳಿದ್ದಲ್ಲಿ ಡಿ.11ರ ಒಳಗೆ ಮೇಲಿನ ಕಚೇರಿಗೆ ತಲುಪಿಸಬಹುದು ಎಂದು ಉಡುಪಿ ವಿಭಾಗದ ಅಂಚೆ ಅಧೀಕ್ಷಕರ ಪ್ರಕಟಣೆ ತಿಳಿಸಿದೆ.
ʻಕಿಂಗ್ ಈಸ್ ಅಲೈವ್ʼ; ಪರ್ಯಾಯ ನಾಯಕತ್ವ ಪ್ರಸ್ತಾಪವೇ ಅಪ್ರಸ್ತುತ: ಬೈರತಿ ಸುರೇಶ್
ಬ್ರೇಕ್ಫಾಸ್ಟ್ ಮೀಟಿಂಗ್ ನಂತರವೂ ಬೆಳಗಾವಿಯಲ್ಲಿ ಕಾಂಗ್ರೆಸ್ ನಾಯಕತ್ವದ ಬಗ್ಗೆ ಚರ್ಚೆ ಜೋರಾಗಿದೆ. ಡಾ.ಯತೀಂದ್ರ ಸಿದ್ದರಾಮಯ್ಯ ಅವರು ಸಿದ್ದರಾಮಯ್ಯ ಅವರೇ ಪೂರ್ಣಾವಧಿ ಸಿಎಂ ಎಂದು ಹೇಳಿದ್ದರು. ಆ ಬೆನ್ನಲ್ಲೇ ಸಚಿವ ಬೈರತಿ ಸುರೇಶ್, ಕಿಂಗ್ ಈಸ್ ಅಲೈವ್ ಎಂದು ಹೇಳಿ ಪರ್ಯಾಯ ನಾಯಕತ್ವದ ಪ್ರಸ್ತಾಪ ಅಪ್ರಸ್ತುತ ಎಂದಿದ್ದಾರೆ. ಮತ್ತೊಂದೆಡೆ, ಚನ್ನರಾಜ ಹಟ್ಟಿಹೊಳಿ ಅವರು ಡಿ.ಕೆ.ಶಿವಕುಮಾರ್ ಅವರನ್ನು ಮುಖ್ಯಮಂತ್ರಿ ಎಂದು ಉಲ್ಲೇಖಿಸಿ ನಂತರ ಸ್ಪಷ್ಟನೆ ನೀಡಿದ್ದಾರೆ.
ಕಲಬುರಗಿ| ಕಾಳಗಿ ಅಭಿವೃದ್ಧಿಗೆ ಕಾಂಗ್ರೆಸ್ ಕೊಡುಗೆ ಶೂನ್ಯ: ಪ್ರಶಾಂತ್ ಕದಂ
ಕಲಬುರಗಿ: ಕಾಳಗಿ ಪಟ್ಟಣದ ಅಭಿವೃದ್ಧಿಗೆ ಶಾಸಕ ಡಾ. ಅವಿನಾಶ್ ಜಾಧವ್ ಅವರ ಕೊಡುಗೆ ಶೂನ್ಯ ಎಂದ ಕಾಂಗ್ರೆಸ್ ಕಾರ್ಯಕರ್ತರಿಗೆ ದಾಖಲೆ ಸಮೇತ ಬಹಿರಂಗ ಚರ್ಚೆಗೆ ಬನ್ನಿ ಎಂದು ಬಿಜೆಪಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಪ್ರಶಾಂತ್ ಕದಂ ಆಹ್ವಾನಿಸಿದರು. ಕಾಳಗಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಬಿಜೆಪಿ ಕಾರ್ಯಕರ್ತರು ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಶಾಸಕ ಡಾ. ಅವಿನಾಶ್ ಜಾಧವ್ ಅವರು ಮಾಡಿರುವ ಅಭಿವೃದ್ಧಿ ಕಾಮಗಾರಿಗಳ ದಾಖಲೆ ಬಿಡುಗಡೆ ಮಾಡಿ ಮಾತನಾಡಿದ ಪ್ರಶಾಂತ್ ಕದಂ, ಕಾಳಗಿ ಅಭಿವೃದ್ಧಿಯಲ್ಲಿ ಕಾಂಗ್ರೆಸ್ ನಾಯಕರ ಪಾಲು ಇದ್ದರೆ ಒಂದಾದರೂ ದಾಖಲೆ ತೋರಿಸಲಿ, ಅದು ಬಿಟ್ಟು ಸುಳ್ಳು ಆರೋಪ ಮಾಡುವುದು ಸರಿಯಲ್ಲ ಎಂದು ತಿರುಗೇಟು ನೀಡಿದರು. ಕಲ್ಯಾಣ ಕರ್ನಾಟಕದ 16 ನೂತನ ತಾಲೂಕುಗಳಂತೆ ಕಾಳಗಿ ತಾಲೂಕಿಗೂ ಪ್ರಜಾಸೌಧ ಅನುಮೋದನೆಗೊಂಡಿದೆ. ಇದರಲ್ಲಿ ಕಾಳಗಿಗೆ ವಿಶೇಷವಾಗಿದ್ದು ಏನಿದೆ, ಇದರಲ್ಲಿ ವಿಧಾನ ಪರಿಷತ್ ಸದಸ್ಯರ ಜಗದೇವ ಗುತ್ತೇದಾರ ಅವರ ಕೊಡುಗೆ ಏನಿದೆ ಎಂದು ಪ್ರಶ್ನಿಸಿದರು. ಶಾಸಕ ಡಾ. ಅವಿನಾಶ್ ಜಾಧವ್ ಅವರು ತಮ್ಮ ಅವಧಿಯಲ್ಲಿ ಕಾಳಗಿಯಲ್ಲಿ ಹೈಟೆಕ್ ಬಸ್ ನಿಲ್ದಾಣ, ಶಾಲಾ ಕಾಲೇಜು ಕಟ್ಟಡ ನಿರ್ಮಾಣ, ಅಮೃತ್ ಯೋಜನೆ, ಬ್ರಿಡ್ಜ್ ಕಂ ಬ್ಯಾರೆಜ್, ಸ್ಲಮ್ ಬೋರ್ಡ್ ಮನೆ ನಿರ್ಮಾಣ, ಬಹುಗ್ರಾಮ ಕುಡಿಯುವ ನೀರು ಯೋಜನೆ, ನೀಲಕಂಠ ಕಾಳೇಶ್ವರ ದೇವಸ್ಥಾನದಲ್ಲಿ ಬೃಹತ್ ಊಟದ ಹಾಲ್ ನಿರ್ಮಾಣ, ಡಿವೈಡರ್ ರಸ್ತೆ ನಿರ್ಮಾಣ, ಮುಖ್ಯಬಜಾರ ರಸ್ತೆ ಅಗಲಿಕರಣ, ಪಟ್ಟಣ ಪಂಚಾಯತ್ ವಿಶೇಷ ಅನುದಾನ ಸೇರಿದಂತೆ ನೂರಾರು ಕೋಟಿ ರೂ. ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ. ಇವ್ಯಾವು ಕಾಂಗ್ರೆಸ್ ನಾಯಕರ ಕಣ್ಣಿಗೆ ಕಾಣುವುದಿಲ್ಲವೇ ಎಂದು ಪ್ರಶ್ನೆ ಮಾಡಿದ್ದಾರೆ ಕಾಂಗ್ರೆಸ್ ನಾಯಕರು ಅಭಿವೃದ್ಧಿ ವಿಷಯದಲ್ಲೂ ರಾಜಕೀಯ ಮಾಡುವ ಮೂಲಕ ಕಾಮಗಾರಿ ತಡೆಹಿಡೆಯುವುದೆ ಇವರ ಕೆಲಸವಾಗಿದೆ. ಕಾಂಗ್ರೆಸ್ ಹಿಂಬಾಲಕರು ಸುಳ್ಳು ಆರೋಪ ಮಾಡುವುದು ಬಿಟ್ಟು ಅಭಿವೃದ್ಧಿ ಕಾರ್ಯಗಳ ದಾಖಲೆ ಸಮೇತ ಬಹಿರಂಗ ಚರ್ಚೆಗೆ ಬರಲಿ ಎಂದು ಪಂಥಹ್ವಾನ ಹಾಕಿದರು. ಈ ವೇಳೆ ಬಿಜೆಪಿ ಮುಖಂಡರಾದ ಶೇಖರ ಪಾಟೀಲ್, ಚಂದ್ರಕಾಂತ ಜಾಧವ್, ಪ.ಪಂ.ಸದಸ್ಯ ಜಿತೇಂದ್ರ ರಾಥೋಡ್, ಶರಣು ಸಾಲಿಮಠ, ಪುರುಷೋತ್ತಮ ಗುತ್ತೇದಾರ್, ಜಗದೀಶ ಪಾಟೀಲ್, ಭೀಮರಾವ ಮಲಘಾಣ, ಸುನೀಲ ರಾಜಪೂರ, ಜಗನಾಥ್ ತೇಲಿ, ಶರಣು ಚಂದಾ, ಮಂಜುನಾಥ ಹೆಬ್ಬಾಳ, ಸಂತೋಷ ಜಾಧವ್, ಹಣಮಂತ ಕಣ್ಣಿ, ಅಶೋಕ ಹುಗೊಂಡ್, ಗಣೇಶ್ ಸಿಂಗಶೆಟ್ಟಿ, ಕಾಳಶೆಟ್ಟಿ ಪಡಶೆಟ್ಟಿ, ಬಲರಾಮ ವಲ್ಲಾಪುರೆ, ಬಾಬು ಹಿರಾಪುರ್, ಶ್ರೀನಿವಾಸ್ ಗುರುಮಿಟ್ಕಲ, ರಾಜು ಒಡೆಯರಾಜ್ ಹಾಗೂ ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು.
ಉಡುಪಿ | ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ: ಅರ್ಜಿ ಆಹ್ವಾನ
ಉಡುಪಿ, ಡಿ.9: ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವತಿಯಿಂದ ಪ್ರಸಕ್ತ ಸಾಲಿನ ಮಹಿಳಾ ದಿನಾಚರಣೆಯ ಸಂದರ್ಭದಲ್ಲಿ ನೀಡಲಾಗುವ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿಗೆ ಮಹಿಳೆಯರ ಸರ್ವತೋಮುಖ ಅಭಿವೃದ್ಧಿಗಾಗಿ ಶ್ರಮಿಸುತ್ತಿರುವ ಅರ್ಹ ಸಂಸ್ಥೆಗಳಿಂದ, ವ್ಯಕ್ತಿಗಳನ್ನೊಳಗೊಂಡಂತೆ ಕ್ರೀಡೆ, ಕಲೆ, ಸಾಹಿತ್ಯ ಹಾಗೂ ಶಿಕ್ಷಣ ಕ್ಷೇತ್ರಗಳಲ್ಲಿ ಅತ್ಯುತ್ತಮ ಸಾಧನೆ ಮಾಡಿರುವ ಹಾಗೂ ಕ್ಲಿಷ್ಟಕರ ಪರಿಸ್ಥಿತಿಯಲ್ಲಿ ಆತ್ಮಸ್ಥೈರ್ಯದಿಂದ ಹೋರಾಡಿ ಜೀವಾಪಾಯದಿಂದ ಪಾರು ಮಾಡಿದಂತಹ ಮಹಿಳೆಯರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಡಿಸೆಂಬರ್ 20 ಕೊನೆಯ ದಿನ. ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಉಪನಿರ್ದೇಶಕರ ಕಚೇರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕೊಠಡಿ ಸಂಖ್ಯೆ: 204, ಒಂದನೇ ಮಹಡಿ, ರಜತಾದ್ರಿ, ಮಣಿಪಾಲ ದೂ.ಸಂಖ್ಯೆ: 0820-2574978ನ್ನು ಸಂಪರ್ಕಿಸ ಬಹುದು ಎಂದು ಇಲಾಖೆಯ ಪ್ರಕಟಣೆ ತಿಳಿಸಿದೆ.
ಲೋಕಸಭೆಯಲ್ಲಿ ‘ಬಂಕಿಮ್ ದಾ’ಹೇಳಿಕೆಗಾಗಿ ಪ್ರಧಾನಿ ಕ್ಷಮೆಯಾಚನೆಗೆ ಮಮತಾ ಆಗ್ರಹ
ಕೂಚ್ಬೆಹಾರ್(ಪ.ಬಂ.),ಡಿ.9: ಪ್ರಧಾನಿ ನರೇಂದ್ರ ಮೋದಿಯವರು ಖ್ಯಾತ ಲೇಖಕ ಹಾಗೂ ಕವಿ ಬಂಕಿಮ್ ಚಂದ್ರ ಚಟ್ಟೋಪಾಧ್ಯಾಯ ಅವರನ್ನು ‘ಬಂಕಿಮ್ ದಾ ’ ಎಂದು ಕರೆಯುವ ಮೂಲಕ ಅವರನ್ನು ಅವಮಾನಿಸಿದ್ದಾರೆ ಎಂದು ಮಂಗಳವಾರ ಆರೋಪಿಸಿದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು,ಇದಕ್ಕಾಗಿ ಪ್ರಧಾನಿ ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿದರು. ಕೂಚ್ಬೆಹಾರ್ ಜಿಲ್ಲೆಯಲ್ಲಿ ರ್ಯಾಲಿಯನ್ನುದ್ದೇಶಿಸಿ ಮಾತನಾಡುತ್ತಿದ್ದ ಮಮತಾ, ದೇಶಕ್ಕೆ ಸ್ವಾತಂತ್ರ್ಯ ಬಂದಾಗ ಮೋದಿಯವರು ಇನ್ನೂ ಜನಿಸಿರಲಿಲ್ಲ,ಆದರೂ ಅವರು ಬಂಗಾಳದ ಮಹಾನ್ ಸಾಂಸ್ಕೃತಿಕ ಪ್ರಭಾವಿಗಳಲ್ಲೋರ್ವರನ್ನು ಲಘುವಾಗಿ ಉಲ್ಲೇಖಿಸಿದ್ದಾರೆ ಎಂದು ಹೇಳಿದರು. ‘ಅವರಿಗೆ ಸಲ್ಲಬೇಕಾಗಿದ್ದ ಕನಿಷ್ಠ ಗೌರವವನ್ನೂ ನೀವು ತೋರಿಸಿಲ್ಲ. ಇದಕ್ಕಾಗಿ ನೀವು ದೇಶದ ಕ್ಷಮೆಯನ್ನು ಯಾಚಿಸಬೇಕು’ ಎಂದರು. ಈ ವಿವಾದವು ಸೋಮವಾರ ‘ವಂದೇ ಮಾತರಂ’ ರಾಷ್ಟ್ರೀಯ ಗೀತೆಯ 150ನೇ ವರ್ಷಾಚರಣೆಯ ಅಂಗವಾಗಿ ಲೋಕಸಭೆಯಲ್ಲಿ ಚರ್ಚೆಯ ಸಂದರ್ಭ ಪ್ರಧಾನಿಯವರು ಕವಿ ಬಂಕಿಮ್ಚಂದ್ರ ರನ್ನು ಉಲ್ಲೇಖಿಸಿದ್ದಕ್ಕೆ ಸಂಬಂಧಿಸಿದೆ. ಬಂಕಿಮ್ ಜೊತೆ ‘ದಾ’ ಸೇರಿಸಿದ್ದನ್ನು ಆಕ್ಷೇಪಿಸಿದ್ದ ಟಿಎಂಸಿ ಸಂಸದ ಸೌಗತ ರಾಯ್ ಅವರು,ಬದಲಿಗೆ ‘ಬಂಕಿಮ್ ಬಾಬು’ ಎಂದು ಹೇಳುವಂತೆ ಮೋದಿಯವರನ್ನು ಆಗ್ರಹಿಸಿದ್ದರು. ಅವರ ಭಾವನೆಯನ್ನು ತಕ್ಷಣ ಗೌರವಿಸಿದ್ದ ಮೋದಿ,‘‘ನಾನು ಬಂಕಿಮ್ ‘ಬಾಬು’ ಎಂದು ಹೇಳುತ್ತೇನೆ. ಧನ್ಯವಾದಗಳು, ನಾನು ನಿಮ್ಮ ಭಾವನೆಯನ್ನು ಗೌರವಿಸುತ್ತೇನೆ ’’ಎಂದು ತಿಳಿಸಿದ್ದರು. ಇದೇ ವೇಳೆ ತಾನು ಈಗಲೂ ರಾಯ್ ಅವರನ್ನು ‘ದಾದಾ’ ಎಂದು ಕರೆಯಬಹುದೇ ಎಂದು ಲಘು ಧಾಟಿಯಲ್ಲಿ ಪ್ರಶ್ನಿಸಿದ್ದರು. ಮಂಗಳವಾರ ಬಿಜೆಪಿ ವಿರುದ್ಧವೂ ದಾಳಿ ನಡೆಸಿದ ಮಮತಾ, ಅದು ಪಶ್ಚಿಮ ಬಂಗಾಳದಲ್ಲಿ ಅಧಿಕಾರಕ್ಕೆ ಬಂದರೆ ರಾಜ್ಯದ ಸಂಸ್ಕೃತಿ,ಭಾಷೆ ಮತ್ತು ಪರಂಪರೆಯನ್ನು ನಾಶಗೊಳಿಸುತ್ತದೆ ಎಂದು ಪ್ರತಿಪಾದಿಸಿದರು.
ಉಡುಪಿ | ಡಿ.12ರಂದು ರಾಜ್ಯ ಮಹಿಳಾ ನಿಲಯದಲ್ಲಿ ವಿವಾಹ !
ಉಡುಪಿ, ಡಿ.9 : ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ರಾಜ್ಯ ಮಹಿಳಾ ನಿಲಯ ಉಡುಪಿ ಇವರ ಸಹಯೋಗದಲ್ಲಿ ಸಂಸ್ಥೆಯ ನಿವಾಸಿನಿಯರಾದ ಮಲ್ಲೇಶ್ವರಿ ಅವರ ವಿವಾಹವು ದಕ್ಷಿಣ ಕನ್ನಡ ಜಿಲ್ಲೆ ಮೂಲ್ಕಿ ಬಪ್ಪನಾಡು ನಿವಾಸಿ ಸತೀಶ್ ಪ್ರಭು ಅವರ ಪುತ್ರ ಸಂಜಯ ಪ್ರಭು ಅವರೊಂದಿಗೆ ಹಾಗೂ ಸುಶೀಲಾ ಅವರ ವಿವಾಹವು ಹಾಸನ ಜಿಲ್ಲೆ ಹೊಳೆನರಸೀಪುರ ತಾಲೂಕು ಕೃಷ್ಣಾಪುರ ಗ್ರಾಮದ ಮಲ್ಲಪ್ಪ ಅವರ ಪುತ್ರ ನಾಗರಾಜ ಅವರೊಂದಿಗೆ ಡಿಸೆಂಬರ್ 12ರಂದು ಬೆಳಗ್ಗೆ 10 ಗಂಟೆಗೆ ಉಡುಪಿಯ ನಿಟ್ಟೂರಿನಲ್ಲಿರುವ ಸರಕಾರಿ ರಾಜ್ಯ ಮಹಿಳಾ ನಿಲಯದಲ್ಲಿ ನಡೆಯಲಿದೆ ಎಂದು ಇಲಾಖೆಯ ಪ್ರಕಟಣೆ ತಿಳಿಸಿದೆ.
ಇಂಡಿಗೊ ಮೊದಲಿನ ಸ್ಥಿತಿಗೆ ಮರಳಿದೆ, ಕಾರ್ಯಾಚರಣೆಗಳು ಸ್ಥಿರವಾಗಿವೆ:ಸಿಇಒ
“ನಮ್ಮ ಕ್ಷಮಾಯಾಚನೆಯನ್ನು ಸ್ವೀಕರಿಸಿದ್ದಕ್ಕಾಗಿ ಧನ್ಯವಾದಗಳು”
ಮೂಡುಬಿದಿರೆ | ಪ್ರತಿಯೊಬ್ಬರು ನೇತ್ರ ತಪಾಸಣೆ ಮಾಡಿಕೊಳ್ಳುವುದು ಅಗತ್ಯ : ಶರತ್ ಡಿ.ಶೆಟ್ಟಿ
ಉಚಿತ ನೇತ್ರ ತಪಾಸಣಾ ಶಿಬಿರ
8ನೇ ಕೇಂದ್ರೀಯ ವೇತನ ಆಯೋಗ ರಚನೆ; 2026ರಿಂದಲೇ ಅನ್ವಯ
ಹೊಸದಿಲ್ಲಿ, ಡಿ. 9: ಎಂಟನೇ ಕೇಂದ್ರೀಯ ವೇತನ ಆಯೋಗವನ್ನು ರಚಿಸಲಾಗಿದೆ ಎಂದು ಸರಕಾರ ಮಂಗಳವಾರ ಸಂಸತ್ಗೆ ತಿಳಿಸಿದೆ. ಆಯೋಗದ ಪರಿಶೀಲನಾ ವಿಷಯಗಳ ಬಗ್ಗೆ ನವೆಂಬರ್ 3ರಂದು ಅಧಿಸೂಚನೆ ಹೊರಡಿಸಲಾಗಿದೆ ಎಂದು ಹಣಕಾಸು ಖಾತೆ ಸಹಾಯಕ ಸಚಿವ ಪಂಕಜ್ ಚೌಧರಿ ಲೋಕಸಭೆಗೆ ನೀಡಿದ ಲಿಖಿತ ಉತ್ತರದಲ್ಲಿ ತಿಳಿಸಿದರು. ಕೇಂದ್ರ ಸರಕಾರದ ಸುಮಾರು 50.14 ಲಕ್ಷ ಉದ್ಯೋಗಿಗಳು ಮತ್ತು ಸುಮಾರು 69 ಲಕ್ಷ ಪಿಂಚಣಿದಾರರಿಗೆ ಎಂಟನೇ ವೇತನ ಆಯೋಗವು ಅನ್ವಯಿಸುತ್ತದೆ. ಎಂಟನೇ ವೇತನ ಆಯೋಗವು ಯಾವಾಗ ಜಾರಿಗೊಳ್ಳುತ್ತದೆ ಎನ್ನುವುದನ್ನು ಸರಕಾರ ಇನ್ನಷ್ಟೇ ನಿರ್ಧರಿಸಬೇಕಾಗಿದೆ ಎಂದು ಸಚಿವರು ಹೇಳಿದರು. ಆದರೆ, ಆಯೋಗವು ತನ್ನ ಶಿಫಾರಸುಗಳನ್ನು ರಚನೆಯಾದ ದಿನದಿಂದ 18 ತಿಂಗಳುಗಳ ಒಳಗೆ ಸರಕಾರಕ್ಕೆ ಸಲ್ಲಿಸಬೇಕು ಎಂದು ಅವರು ತಿಳಿಸಿದರು. ವರದಿಯ ಶಿಫಾರಸುಗಳು ಯಾವಾಗ ಜಾರಿಗೆ ಬಂದರೂ, ಅದು 2026 ಜನವರಿಯಿಂದ ಪೂರ್ವಾನ್ವಯವಾಗಿ ಜಾರಿಗೆ ಬರಲಿದೆ. ಹಾಗಾಗಿ, ಎಂಟನೇ ವೇತನ ಆಯೋಗದ ಶಿಫಾರಸುಗಳು ಜಾರಿಗೆ ಬಂದಾಗ ಉದ್ಯೋಗಿಗಳಿಗೆ ಹಿಂದಿನ ಬಾಕಿಯನ್ನು ನೀಡಲಾಗುತ್ತದೆ.
Peak hourನಲ್ಲಿ ರೈಲಿನ ಬಾಗಿಲ ಹತ್ತಿರ ನಿಲ್ಲುವುದು ನಿರ್ಲಕ್ಷ್ಯವಲ್ಲ: ಬಾಂಬೆ ಹೈಕೋರ್ಟ್
ಮುಂಬೈ, ಡಿ. 9: ನಿಬಿಡ ಅವಧಿಗಳಲ್ಲಿ ಕೆಲಸಕ್ಕೆ ಹೋಗಲು ಉಪನಗರ ರೈಲುಗಳಲ್ಲಿ ಬಾಗಿಲಿನ ಸಮೀಪ ನಿಂತು ಪ್ರಯಾಣಿಸುವವರಿಗೆ ತಮ್ಮ ಪ್ರಾಣಗಳನ್ನು ಈ ರೀತಿಯಾಗಿ ಅಪಾಯಕ್ಕೆ ಒಡ್ಡುವುದನ್ನು ಬಿಟ್ಟು ಬೇರೆ ಆಯ್ಕೆಯಿಲ್ಲ ಹಾಗೂ ಇದನ್ನು ನಿರ್ಲಕ್ಷ್ಯ ಎಂಬುದಾಗಿ ಪರಿಗಣಿಸುವಂತಿಲ್ಲ ಎಂದು ಬಾಂಬೆ ಹೈಕೋರ್ಟ್ ಹೇಳಿದೆ. ಹಾಗೂ ರೈಲು ಅಪಘಾತವೊಂದರಲ್ಲಿ ಮೃತಪಟ್ಟ ವ್ಯಕ್ತಿಯೊಬ್ಬರ ಕುಟುಂಬಕ್ಕೆ ನೀಡಲಾದ ಪರಿಹಾರವನ್ನು ನ್ಯಾಯಾಲಯ ಎತ್ತಿಹಿಡಿದಿದೆ. ಪ್ರಯಾಣಿಕನು ರೈಲಿನ ಬಾಗಿಲ ಸಮೀಪ ಫೂಟ್ಬೋರ್ಡ್ ನಲ್ಲಿ ನಿಂತಿದ್ದು, ಆತನ ನಿರ್ಲಕ್ಷ್ಯದಿಂದಾಗಿ ಅಪಘಾತ ಸಂಭವಿಸಿದೆ ಎಂಬ ರೈಲ್ವೇಯ ವಾದವನ್ನು ನ್ಯಾಯಮೂರ್ತಿ ಜಿತೇಂದ್ರ ಜೈನ್ ಅವರ ಏಕ ನ್ಯಾಯಾಧೀಶರ ಪೀಠವು ಸೋಮವಾರ ತಿರಸ್ಕರಿಸಿತು. ಸಂತ್ರಸ್ತನ ಕುಟುಂಬಕ್ಕೆ ಪರಿಹಾರ ನೀಡುವಂತೆ ಆದೇಶಿಸಿ ರೈಲ್ವೇ ಕೋರಿಕೆಗಳ ನ್ಯಾಯಮಂಡಳಿಯು 2009 ಡಿಸೆಂಬರ್ನಲ್ಲಿ ನೀಡಿದ್ದ ಆದೇಶವನ್ನು ಕೇಂದ್ರ ಸರಕಾರ ಹೈಕೋರ್ಟ್ನಲ್ಲಿ ಪ್ರಶ್ನಿಸಿತ್ತು. 2005 ಅಕ್ಟೋಬರ್ 28ರಂದು ಭಾಯಿಂದರ್ನಿಂದ ಮರೀನ್ ಲೈನ್ಸ್ಗೆ ಪ್ರಯಾಣಿಸುತ್ತಿದ್ದ ವೇಳೆ ಸಂತ್ರಸ್ತ ರೈಲಿನಿಂದ ಕೆಳಗೆ ಬಿದ್ದಿದ್ದರು. ಕೆಲವು ದಿನಗಳ ಬಳಿಕ ಅವರು ಕೊನೆಯುಸಿರೆಳೆದಿದ್ದರು. ಸಂತ್ರಸ್ತನ ನಿರ್ಲಕ್ಷ್ಯದಿಂದಾಗಿ ಸಾವು ಸಂಭವಿಸಿದೆ ಎಂಬ ರೈಲ್ವೇಯ ವಾದವನ್ನು ತಿರಸ್ಕರಿಸಿದ ಹೈಕೋರ್ಟ್, ವಿರಾರ್- ಚರ್ಚ್ಗೇಟ್ ರೈಲುಗಳು, ವಿಶೇಷವಾಗಿ ಬೆಳಗ್ಗಿನ ನಿಬಿಡ ಅವಧಿಗಳಲ್ಲಿ ತುಂಬಿ ತುಳುಕುತ್ತಿರುತ್ತವೆ ಎಂದು ಹೇಳಿತು. ಹಾಗಾಗಿ, ಯಾವುದೇ ಪ್ರಯಾಣಿಕನಿಗೆ, ಅದರಲ್ಲೂ ಮುಖ್ಯವಾಗಿ ಭಾಯಿಂದರ್ ರೈಲು ನಿಲ್ದಾಣದಲ್ಲಿ ಕಂಪಾರ್ಟ್ಮೆಂಟ್ ಪ್ರವೇಶಿಸಲು ಸಾಧ್ಯವಾಗುವುದಿಲ್ಲ ಎಂದು ಅವರು ಹೇಳಿದರು. ‘‘ಈಗಲೂ ಪರಿಸ್ಥಿತಿ ಹಾಗೆಯೇ ಇದೆ. ಹಾಗಾಗಿ, ಬಾಗಲಿನ ಸಮೀಪ ನಿಲ್ಲುವ ಪ್ರಯಾಣಿಕ ನಿರ್ಲಕ್ಷ್ಯ ತೋರಿದ್ದಾನೆ ಎಂಬ ವಾದವನ್ನು ಒಪ್ಪಲು ಸಾಧ್ಯವಿಲ್ಲ. ಒಬ್ಬ ವ್ಯಕ್ತಿ ಕೆಲಸಕ್ಕೆ ಹೋಗಬೇಕು, ಆದರೆ ಬೋಗಿಗಳತ್ತ ಹೋಗುವುದು ತುಂಬಾ ಕಷ್ಟವಾದಾಗ ಆ ಪ್ರಯಾಣಿಕನಿಗೆ ಬಾಗಿಲ ಸಮೀಪ ನಿಂತು ತನ್ನ ಪ್ರಾಣವನ್ನು ಅಪಾಯಕ್ಕೆ ಒಡ್ಡುವುದು ಬಿಟ್ಟು ಬೇರೆ ಆಯ್ಕೆಯಿಲ್ಲ’’ ಎಂದು ನ್ಯಾಯಾಲಯ ಹೇಳಿತು.
ಪೆರ್ಡೂರು | ಹಿರಿಯ ನಾಗರಿಕರಿಗಾಗಿ ಹಿರಿಯೆರೊಟ್ಟುಗೊಂಜಿ ದಿನ
ಪೆರ್ಡೂರು, ಡಿ.9: ಪೆರ್ಡೂರು ಶ್ರಿಭೈರವನಾಥೇಶ್ವರ ಸೇವಾ ಸಮಿತಿ ವತಿಯಿಂದ ದ್ವಿತೀಯ ಬಾರಿಗೆ ಉಡುಪಿ ಜಿಲ್ಲೆಯ 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗಾಗಿ ‘ಹಿರಿಯೆರೊಟ್ಟುಗೊಂಜಿ ದಿನ’ ಕಾರ್ಯಕ್ರಮವನ್ನು ಡಿ.28ರಂದು ಪೆರ್ಡೂರು ಸುಬ್ರಾಯ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗಿದೆ. ಹಾಡು, ನೃತ್ಯ, ಛದ್ಮವೇಷ, ಮೋಜಿನ ಆಟಗಳು, ಹಾಸ್ಯ, ಸ್ಕಿಟ್ ಐದು ನಿಮಿಷ(ಸಹ ಕಲಾವಿದರಾಗಿ ಮನೆಯ ಸದಸ್ಯರು ಭಾಗವಹಿಸಬಹುದು) ಇವುಗಳೊಂದಿಗೆ ಹಾಗೂ ತಮ್ಮಲ್ಲಿರುವ ವಿಶೇಷ ಪ್ರತಿಭೆಯನ್ನು ಪ್ರದರ್ಶಿಸುವ ಇಚ್ಛೆಯುಳ್ಳ ಹಿರಿಯ ನಾಗರಿಕರು ಈ ಕೆಳಕಂಡ ಮೊಬೈಲ್ ಸಂಖ್ಯೆಗಳನ್ನು ಸಂಪರ್ಕಿಸಿ ಡಿ.15ರೊಳಗೆ ನೋಂದಾಯಿಸಿಕೊಳ್ಳಬೇಕು. ಕಾರ್ಯಕ್ರಮಕ್ಕೆ ಪ್ರವೇಶ ಉಚಿತವಾಗಿದ್ದು, ವಯಸ್ಸಿನ ಯಾವುದೇ ದಾಖಲೆಯೊಂದಿಗೆ ಭಾಗವಹಿಸಬಹುದು. ಹಿರಿಯ ನಾಗರಿಕರಿಗೆ ಸ್ಪರ್ಧೆಗಳಿದ್ದು, ವಿಜೇತರಿಗೆ ಬಹುಮಾನ ನೀಡಲಾಗುವುದು. ಮಾಹಿತಿಗಾಗಿ ಸಂಪರ್ಕಿಸಲು 9743579059, 9900408243, 9743493177 ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.
Davanagere | ದೇಗುಲ ಕಟ್ಟಡ ನಿರ್ಮಾಣದ ಹೆಸರಿನಲ್ಲಿ ಹಣ ವಸೂಲಿ ಆರೋಪ: ದೇಣಿಗೆ ಸಂಗ್ರಹಿಸುತ್ತಿದ್ದವರ ಮೇಲೆ ಹಲ್ಲೆ
ದಾವಣಗೆರೆ: ತಾಲೂಕಿನ ಈಚಘಟ್ಟ ಗ್ರಾಮದಲ್ಲಿ ರೇಣುಕಾದೇವಿ ನೂತನ ದೇಗುಲ ಕಟ್ಟಡ ನಿರ್ಮಾಣಕ್ಕಾಗಿ ಹಣ ಸಂಗ್ರಹಿಸುತ್ತಿದ್ದ ಗುಂಪೊಂದನ್ನು ಗ್ರಾಮದ ಜನರು ಹಿಡಿದು ದೇವಸ್ಥಾನದಲ್ಲಿ ಕೂಡಿ ಹಾಕಿ ಥಳಿಸಿರುವ ಘಟನೆ ಮಂಗಳವಾರ ನಡೆದಿದೆ. ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಕಾರೇಹಳ್ಳಿ ದಾಸರಹಟ್ಟಿ ಗ್ರಾಮದವರಾದ ನಾರಾಯಣ, ಮಂಜುನಾಥ್, ಚಂದ್ರಶೇಖರ್, ರಮೇಶ್ ಹಾಗೂ ಶಿವಪ್ಪ ಥಳಿತಕ್ಕೊಳಗಾದವರು ಎಂದು ಗುರುತಿಸಲಾಗಿದೆ. ದಾವಣಗೆರೆ ಹಾಗೂ ಚನ್ನಗಿರಿ ತಾಲೂಕಿನ ಕೆಲ ಗ್ರಾಮಗಳಿಗೆ ಭೇಟಿ ನೀಡಿದ ಗುಂಪು, ಕಾರೇಹಳ್ಳಿ ದಾಸರಹಟ್ಟಿಯಲ್ಲಿ ರೇಣುಕಾ ಯಲ್ಲಮ್ಮದೇವಿ ದೇಗುಲ ನಿರ್ಮಾಣದ ಹೆಸರಿನಲ್ಲಿ ದೇಣಿಗೆ ಸಂಗ್ರಹಿಸಿದೆ. ಗ್ರಾಮದ ಸ್ಥಿತಿವಂತರ ಮನೆಗಳಿಗೆ ಭೇಟಿ ನೀಡಿ ದೇಗುಲದ ಕರಪತ್ರ ಕೈಗಿಟ್ಟು ದೇಣಿಗೆ ಕೇಳಿದೆ. ಅನೇಕರು 1,000 ರೂ.ಯಿಂದ 25,000 ರೂ.ವರೆಗೆ ದೇಣಿಗೆ ನೀಡಿದ್ದಾರೆ ಎನ್ನಲಾಗಿದೆ. ಈಚಘಟ್ಟ ಗ್ರಾಮಕ್ಕೆ ಮಂಗಳವಾರ ಬಂದಿದ್ದ ಗುಂಪು ಅನುಮಾನಾಸ್ಪದವಾಗಿ ವರ್ತಿಸಿದೆ. ಸಂಶಯಗೊಂಡ ಗ್ರಾಮಸ್ಥರು ಕರಪತ್ರ, ರಶೀದಿಯನ್ನು ಪರಿಶೀಲಿಸಿದ್ದಾರೆ. ಬಳಿಕ ಕಾರೇಹಳ್ಳಿ ದಾಸರಹಟ್ಟಿ ಗ್ರಾಮಸ್ಥರನ್ನು ಸಂಪರ್ಕಿಸಿ ವಿಚಾರಿಸಿದ್ದಾರೆ. ಆ ಗ್ರಾಮದಲ್ಲಿ ದೇಗುಲ ನಿರ್ಮಾಣ ಆಗುತ್ತಿಲ್ಲ ಎಂಬುದನ್ನು ಖಚಿತಪಡಿಸಿಕೊಂಡ ಜನರು ದೇಣಿಗೆ ಸಂಗ್ರಹಕ್ಕೆ ಬಂದಿದ್ದವರನ್ನು ದೇಗುಲದಲ್ಲಿ ಕೂಡಿಹಾಕಿ ಥಳಿಸಿದ್ದಾರೆ ಎಂದು ತಿಳಿದು ಬಂದಿದೆ. ರೇಣುಕಾ ಯಲ್ಲಮ್ಮದೇವಿ ಹಾಗೂ ಆಂಜನೇಯ ಚಿತ್ರವನ್ನು ಹಿಡಿದು ಮನೆ ಪ್ರವೇಶಿಸುತ್ತಿದ್ದರು. ದೇಣಿಗೆಯನ್ನು ನೀಡುವಂತೆ ಪಟ್ಟು ಹಿಡಿಯುತ್ತಿದ್ದರು. ಅನುಮಾನಗೊಂಡು ಪರಿಶೀಲಿಸಿ ದೇಗುಲಕ್ಕೆ ಕರೆದೊಯ್ದು ವಿಚಾರಿಸಿದಾಗ ಹೆದರಿ ಹಣ ಮರಳಿಸಿದರು ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಮಾಯಕೊಂಡ ಠಾಣೆಯ ಪೊಲೀಸರು ಈಚಘಟ್ಟ ಗ್ರಾಮಕ್ಕೆ ಭೇಟಿ ನೀಡಿದ್ದು, ದೇಣಿಗೆ ಪಡೆದ ಹಣವನ್ನು ಮರಳಿಸಿದ ಬಳಿಕ ಗ್ರಾಮಸ್ಥರು ಗುಂಪನ್ನು ಬಿಡುಗಡೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ಕಾಪು | ಆನ್ಲೈನ್ ಟ್ರೇಡಿಂಗ್ ಹೆಸರಿನಲ್ಲಿ 1.33ಲಕ್ಷ ರೂ. ವಂಚನೆ
ಕಾಪು, ಡಿ.9: ಆನ್ಲೈನ್ ಟ್ರೇಡಿಂಗ್ ಹಣವನ್ನು ಹೂಡಿಕೆ ಹೆಸರಿನಲ್ಲಿ ವ್ಯಕ್ತಿಯೊಬ್ಬರಿಗೆ ಲಕ್ಷಾಂತರ ರೂ. ವಂಚಿಸಿರುವ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಉದ್ಯಾವರ ಪಿತ್ರೋಡಿಯ ಅಶೋಕ್ ಆರ್.(42) ಎಂಬವವರಿಗೆ ಸುಮಾರು 3 ವರ್ಷಗಳಿಂದ ಆನ್ಲೈನ್ ಟ್ರೇಡಿಂಗ್ ವಾಟ್ಸ್ಪ್ ಗ್ರೂಪ್ ಮೂಲಕ ಆರೋಪಿ ರಾಜ್ಕುಮಾರ್ ಎಂಬಾತನ ಪರಿಚಯ ಇದ್ದು, ಆತ ಡಿ.3ರಂದು ಅಶೋಕ್ ಅವರಿಗೆ ಕರೆ ಮಾಡಿ 1,33,589 ರೂ. ಹಣವನ್ನು ತನ್ನ ಖಾತೆಗೆ ಜಮಾ ಮಾಡುವಂತೆ ತಿಳಿಸಿದಂತೆ ಅಶೋಕ್ ಹಣವನ್ನು ಹಾಕಿದ್ದರು. ಆದರೆ ಆರೋಪಿ ಆನ್ಲೈನ್ ಟ್ರೇಡಿಂಗ್ ಹಣವನ್ನು ಹೂಡಿಕೆ ಮಾಡಿದರೆ ಅಧಿಕ ಲಾಭಾಂಶ ಪಡೆಯಬಹುದು ಎಂಬುದಾಗಿ ನಂಬಿಸಿ ಅಶೋಕ್ ಅವರಿಂದ ಒಟ್ಟು 1,33,589 ರೂ. ಹಣವನ್ನು ಪಡೆದು ವಂಚಿಸಿರುವುದಾಗಿ ದೂರಲಾಗಿದೆ.
ಶಿರ್ವ | ದಾವಣಗೆರೆ ಮೂಲದ ಬಾಲಕ ಆತ್ಮಹತ್ಯೆ
ಶಿರ್ವ, ಡಿ.9: ದಾವಣಗೆರೆ ಮೂಲದ ಬಾಲಕನೋರ್ವ ವೈಯಕ್ತಿಕ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡ ಘಟನೆ ಡಿ.8ರಂದು ಬೆಳಗ್ಗೆ ಕುರ್ಕಾಲು ಗ್ರಾಮದ ಶಂಕರಪುರ ಎಂಬಲ್ಲಿ ನಡೆದಿದೆ. ಮೃತರನ್ನು ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕು ಮೂಲದ, ಕಟಪಾಡಿ ಶಂಕರಪುರ ಎಂಬಲ್ಲಿನ ಬಾಡಿಗೆ ಮನೆ ನಿವಾಸಿ, ಕೂಲಿ ಕಾರ್ಮಿಕ ಗಂಗಾರಾಮ್ ಎಂಬವರ ಮಗ ಮಂಜುನಾಥ ಜಿ(14) ಎಂದು ಗುರುತಿಸಲಾಗಿದೆ. ತಂದೆ ತಾಯಿ ಕೂಲಿ ಕೆಲಸಕ್ಕೆ ಹೋಗಿದ್ದ ಸಂದರ್ಭ ಮಗ ಯಾವುದೋ ವಿಷಯಕ್ಕೆ ಮನನೊಂದು ಜೀವನದಲ್ಲಿ ಜಿಗುಪ್ಸೆಗೊಂಡು ಮನೆಯ ಕಬ್ಬಿಣದ ಪಕ್ಕಾಸಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆತ್ಮಹತ್ಯೆಯ ಯೋಚನೆ ಬಂದಾಗ ಅದನ್ನು ನಿಗ್ರಹಿಸಲು ರಾಜ್ಯ ಸರಕಾರದ ಅರೋಗ್ಯ ಇಲಾಖೆಯ ಹೆಲ್ಪ್ ಲೈನ್ 104 ಸಹಾಯ ಮಾಡುತ್ತದೆ. ಅದರ ಜೊತೆಗೆ Tele-MANAS ನ 14416 ಅನ್ನೂ ಸಂಪರ್ಕಿಸಬಹುದು.
ಕಾಂತಾರ : ರಿಷಬ್ ಶೆಟ್ಟಿ ಹರಕೆಯ ಪಂಜುರ್ಲಿ ನೇಮೋತ್ಸವದ ವೇಳೆ ದೈವಗಳಿಗೆ ಅಪಚಾರ - ಭಾರೀ ಅಪಸ್ವರ
Kantara Kola : ಇತ್ತೀಚೆಗೆ ಕಾಂತಾರ ಚಾಪ್ಟರ್ ಒನ್ ಸಿನಿಮಾ ಭರ್ಜರಿ ಯಶಸ್ಸುಗೊಂಡ ಹಿನ್ನಲೆಯಲ್ಲಿ ಹೊಂಬಾಳೆ ಫಿಲಂಸ್ ಚಿತ್ರತಂಡ, ಮಂಗಳೂರಿನ ದೈವಸ್ಥಾನವೊಂದರಲ್ಲಿ ಕೋಲವನ್ನು ಹರಕೆಯಾಗಿ ನೀಡಿತ್ತು. ಈ ವೇಳೆ, ದೈವನರ್ತಕ ನಡೆದುಕೊಂಡ ರೀತಿಯ ಬಗ್ಗೆ ಆಕ್ರೋಶ ಎದುರಾಗಿದೆ.
ಶಿರ್ವ | ಸ್ಕೂಟರ್ ಕಳವು : ಪ್ರಕರಣ ದಾಖಲು
ಶಿರ್ವ, ಡಿ.9: ಬಂಟಕಲ್ಲು ಮದ್ವವಾದಿರಾಜ ಇಂಜಿನೀಯರಿಂಗ್ ಕಾಲೇಜು ವಿದ್ಯಾರ್ಥಿ ಬೆಳಪು ಗ್ರಾಮ ವಾಜಪೇಯಿ ಬಡಾವಣೆಯ ಕೌಶಿಕ್ ಎಂಬವರು ಡಿ.5ರಂದು ಮಧ್ಯಾಹ್ನ ವೇಳೆ ಬಂಟಕಲ್ಲು ದುರ್ಗಾ ಪರಮೇಶ್ವರಿ ದೇವಸ್ಥಾನದಲ್ಲಿ ಪಾರ್ಕಿಂಗ್ ಮಾಡಿದ್ದ ತನ್ನ ತಾಯಿಯ ಕೆಎ-20 ಎಚ್ಡಿ-8622 ನಂಬರಿನ ಹೊಂಡಾ ಆಕ್ಟಿವಾ ಸ್ಕೂಟರ್ ಅನ್ನು ಕಳ್ಳರು ಕಳವು ಮಾಡಿದ್ದಾರೆ. ಇದರ ಮೌಲ್ಯ 60ಸಾವಿರ ರೂ. ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ಶಂಕರನಾರಾಯಣ | ತೆಂಗಿನ ಮರದಿಂದ ಬಿದ್ದು ವ್ಯಕ್ತಿ ಮೃತ್ಯು
ಶಂಕರನಾರಾಯಣ, ಡಿ.9: ತೆಂಗಿನ ಮರದಿಂದ ಬಿದ್ದು ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಡಿ.9ರಂದು ಬೆಳಗ್ಗೆ ಸಿದ್ಧಾಪುರ ಗ್ರಾಮದ ಮೇಲ್ಕಡ್ರಿ ಎಂಬಲ್ಲಿ ನಡೆದಿದೆ. ಮೃತರನ್ನು ಮೇಲ್ಕಡ್ರಿಯ ರವೀಂದ್ರನಾಥ ಶೆಟ್ಟಿ(70) ಎಂದು ಗುರುತಿಸಲಾಗಿದೆ. ಇವರು ಮನೆಯ ತೆಂಗಿನಮರದಿಂದ ತೆಂಗಿನ ಕಾಯಿ ಕೊಯ್ಯುತ್ತಿರುವಾಗ ಆಕಸ್ಮಿಕವಾಗಿ ಕಾಲು ಜಾರಿ ಆಯತಪ್ಪಿ ಕೆಳಗೆ ಬಿದ್ದರೆನ್ನಲಾಗಿದೆ. ಇದರಿಂದ ಗಂಭೀರವಾಗಿ ಗಾಯಗೊಂಡ ಅವರು ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರು ಎಂದು ತಿಳಿದುಬಂದಿದೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರೈತ ನಾಯಕರಾದ ಕಾ.ಸತ್ಯವಾನ್, ಸದಾಶಿವ್ ದಾಸ್ ಮತ್ತಿತರರ ಬಂಧನ; ಬಿಡುಗಡೆಗೊಳಿಸುವಂತೆ ಆಗ್ರಹ
ಕಲಬುರಗಿ: ಒಡಿಶಾದ ಕಿಯೋಂಝಾರ್ ಜಿಲ್ಲೆಯ ಜಮುನಾಪೋಸಿ ಗ್ರಾಮದಲ್ಲಿ ಜಿಂದಾಲ್ ಪೋಸ್ಕೊ ವಿರೋಧಿ ಮಂಚ್ ಆಯೋಜಿಸಿದ್ದ ಸಭೆಯಲ್ಲಿ ಪಾಲ್ಗೊಂಡು ಹಿಂದಿರುಗುತ್ತಿದ್ದ ವೇಳೆ ಸಂಯುಕ್ತ ಕಿಸಾನ್ ಮೋರ್ಚಾ (SKM) ರಾಷ್ಟ್ರೀಯ ನಾಯಕ ಕಾ. ಸತ್ಯವಾನ್, AIKKMS ನ ಒಡಿಶಾ ರಾಜ್ಯ ಅಧ್ಯಕ್ಷ ಸದಾಶಿವ್ ದಾಸ್ ಸೇರಿದಂತೆ ಇತರರನ್ನು ಬಂಧಿಸಿರುವುದನ್ನು AIKKMS ಕಾರ್ಯದರ್ಶಿ ಮಹೇಶ್ ಎಸ್. ಬಿ. ಅವರು ಖಂಡಿಸಿದ್ದಾರೆ. ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಮಹೇಶ್ ಎಸ್. ಬಿ, ತುರುಮುಂಗಾ ಪೊಲೀಸ್ ಠಾಣೆಯಲ್ಲಿ ಬಂಧಿಸಿರುವ ಹೋರಾಟಗಾರರನ್ನು ಕೂಡಲೇ ಬಿಡುಗಡೆಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ. ಹೋರಾಟಗಾರರನ್ನು ಬಂಧಿಸಿರುವುದು ರೈತ ವಿರೋಧಿ ನೀತಿಯಾಗಿದೆ. ಬಂಧಿಸಿರುವುದನ್ನು ನಾವು ಬಲವಾಗಿ ಖಂಡಿಸುತ್ತೇವೆ. ತಕ್ಷಣವೇ ಬಂಧಿತ ನಾಯಕರನ್ನು ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
ಉಡುಪಿ | ಸಾವರ್ಕರ್ ದೇಶ ಪ್ರೇಮಿಗಳ ಬಳಗದ ಅಂಬೇಡ್ಕರ್ ನಾಟಕ ಪ್ರದರ್ಶನಕ್ಕೆ ಆಕ್ಷೇಪ
ಉಡುಪಿ, ಡಿ.9: ಸಾವರ್ಕರ್ ದೇಶ ಪ್ರೇಮಿಗಳ ಬಳಗದವರು ಗಂಗೊಳ್ಳಿಯಲ್ಲಿ ಡಿ.23ರಂದು ನಡೆಸಲು ಉದ್ದೇಶಿಸಿರುವ ‘ನಿಜ ಮಹಾತ್ಮ ಬಾಬಾ ಸಾಹೇಬ’ ಎಂಬ ನಾಟಕ ಪ್ರದರ್ಶನಕ್ಕೆ ದಲಿತ ಮುಖಂಡ ಜಯನ್ ಮಲ್ಪೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಗಂಗೊಳ್ಳಿ ತೀರ ಸೂಕ್ಮ ಪ್ರದೇಶ ಎಂಬುದು ತಮಗೆ ಈಗಾಗಲೇ ತಿಳಿದಿದೆ. ಈ ನಾಟಕದಲ್ಲಿ ಅಂಬೇಡ್ಕರ್ ಅವರನ್ನು ಅನಗತ್ಯವಾಗಿ ಹಿಂದೂ ಧರ್ಮದ ವಕ್ತಾರನಂತೆ ಮತ್ತು ಮುಸ್ಲಿಂ ವಿರೋಧಿ ಎಂಬಂತೆ ಹಾಗೂ ಅಸ್ಪಶ್ಯತೆಯ ಬಗ್ಗೆ ಇಲ್ಲ ಸಲ್ಲದ ಕಾಲ್ಪನಿಕ ಕಥೆಕಟ್ಟಿ ಪ್ರದರ್ಶನ ಮಾಡುವ ಅಪಾಯವಿದೆ. ಆದ್ದರಿಂದ ಜಿಲ್ಲಾ ಪೊಲೀಸ್ ಅಧೀಕ್ಷಕರು ಮತ್ತು ಜಿಲ್ಲಾಡಳಿತ ಜೊತೆಗೆ ಜಿಲ್ಲೆಯ ಎಲ್ಲಾ ದಲಿತ ನಾಯಕರಿಗೆ ಈ ನಾಟಕದ ವಿಡಿಯೋ ಪ್ರದರ್ಶನ ತೋರಿಸಿ ಎಲ್ಲರ ಒಪ್ಪಿಗೆ ಪಡೆದು ಪ್ರದರ್ಶನಕ್ಕೆ ಅವಕಾಶ ಕಲ್ಪಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ. ಒಂದು ವೇಳೆ ಈ ನಾಟಕಕ್ಕೆ ಅನುಮತಿ ನೀಡಿದಲ್ಲಿ ಸಾಕಷ್ಟು ಅನಾಹುತಕ್ಕೆ ಕಾರಣವಾಗಬಹುದು. ಆದುದರಿಂದ ಈ ನಾಟಕಕ್ಕೆ ಅನುಮತಿ ನೀಡುವ ಮುನ್ನ ವಿಡಿಯೋವನ್ನು ಗಮನಿಸಬೇಕು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಲಬುರಗಿ| ದೌರ್ಜನ್ಯ ತಡೆಗೆ ಕಾನೂನು ಅರಿವು ಅಗತ್ಯ: ಪ್ರೇಮಾ ಮೋದಿ
ಕಲಬುರಗಿ: ಮಹಿಳಾ ದೌರ್ಜನ್ಯಗಳು ತಡೆಗಟ್ಟಲು ಗ್ರಾಮೀಣ ಭಾಗದ ಮಹಿಳೆಯರು, ಯುವಕ, ಯುವತಿಯರಿಗೆ ಮಹಿಳಾಪರ ಕಾನೂನುಗಳ ಅರಿವು ನೀಡುವುದು ಅಗತ್ಯವಾಗಿದೆ ಎಂದು ಕಲಬುರಗಿಯ ಸಖೀ ಮಹಿಳಾ ಕೇಂದ್ರದ ಕಾನೂನು ಸಲಹೆಗಾರ್ತಿ ಪ್ರೇಮಾ ಮೋದಿ ತಿಳಿಸಿದರು. ಆಳಂದ ಪಟ್ಟಣದ ಸಂಬುದ್ಧ ಪದವಿ ಕಾಲೇಜಿನಲ್ಲಿ ಆಳಂದದ ಸಾಂತ್ವನ ಮಹಿಳಾ ಕೇಂದ್ರ, ಕಲಬುರಗಿಯ ಸಖೀ ಮಹಿಳಾ ಕೇಂದ್ರದ ಸಹಯೋಗದಲ್ಲಿ ಏರ್ಪಡಿಸಿದ ಮಹಿಳಾ ದೌರ್ಜನ್ಯ ತಡೆ ಕುರಿತು ಜಾಗೃತಿ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಮಾತನಾಡಿದರು. ಜಿಲ್ಲೆಯಲ್ಲಿ ಪೋಕ್ಸೋ ಪ್ರಕರಣಗಳ ಜಾಸ್ತಿ ವರದಿಯಾಗುತ್ತಿರುವುದು ಕಳವಳಕಾರಿ, ಮಹಿಳೆಯರು ವಿಶೇಷವಾಗಿ ಹೆಣ್ಣುಮಕ್ಕಳ ಸುರಕ್ಷತೆ ಮತ್ತು ಭದ್ರತೆ ಬಗ್ಗೆ ನಮ್ಮ ಕುಟುಂಬ, ಶಾಲೆ ವ್ಯವಸ್ಥೆ ಕಾಳಜಿವಹಿಸಿದರೂ ಕೂಡ ಮೋಸದಿಂದ ಅತ್ಯಾಚಾರ, ದೌರ್ಜನ್ಯ ಎಸಗಲಾಗುತ್ತಿದೆ. ಇಂತಹ ಸಂದರ್ಭದಲ್ಲಿ ಸಖೀ, ಸಾಂತ್ವನ ಹಾಗೂ ಮಹಿಳಾ ಸಹಾಯವಾಣಿಗಳ ನೆರವು ಪಡೆದುಕೊಳ್ಳಲು ತಿಳಿಸಿದರು. ಸಾಂತ್ವನ ಕೇಂದ್ರದ ಆಪ್ತ ಸಮಾಲೋಚಕಿ ಪಾರ್ವತಿ ಜಿಡ್ಡಿಮನಿ ಮಾತನಾಡಿ, ಆಳಂದಲ್ಲಿನ ಸಾಂತ್ವನ ಕೇಂದ್ರಕ್ಕೆ 8 ಸಾವಿರ ಮಹಿಳಾ ದೌರ್ಜನ್ಯದ ದೂರುಗಳು ಬಂದಿವೆ, ನೊಂದ ಹಾಗೂ ಅಸಹಾಯಕ ಹೆಣ್ಣುಮಕ್ಕಳಿಗೆ ಅಗತ್ಯ ನೆರವು ಈ ಕೇಂದ್ರ ನೀಡಲಿದೆ, ವಿಶೇಷವಾಗಿ ಆಸಿಡ್ ದಾಳಿಗೆ ತುತ್ತಾದ ಸಂತ್ರಸ್ತ ಮಹಿಳೆಗೆ ಮಾಸಿಕವಾಗಿ 10 ಸಾವಿರ ನೆರವು ಸಿಗಲಿದೆ ಎಂದರು. ಈ ವೇಳೆ ಆಡಳಿತಾಧಿಕಾರಿ ಮಹಾದೇವಪ್ಪ ಪಾಟೀಲ್, ಪ್ರಾಂಶುಪಾಲ ಸಂಜಯ ಪಾಟೀಲ್, ಪ್ರಾಧ್ಯಾಪಕಿ ಮಹಾದೇವಿ ಡಿ.ಪಾಟೀಲ್, ಮಹಾದೇವಿ ಮುನ್ನೋಳ್ಳಿ, ಶ್ರೀದೇವಿ ಸುತಾರ, ವಿಜಯಲಕ್ಷ್ಮಿ, ಪಟ್ನೆ, ಆಯೇಷಾ ಸಿದ್ಧಕ್ಕಿ, ಬಾಬುರಾವ ಚಿಕಣಿ, ಜಗದೀಶ ಮುಲಗೆ, ಇಕ್ಬಾಲ್ ಖಾನ್, ಭೀಮಾಶಂಕರ ಅತನೂರೆ, ಸುಕಮುನಿ ಪಾಟೀಲ್ ಉಪಸ್ಥಿತರಿದ್ದರು. ಶ್ರೀದೇವಿ ಜಕಾಪುರೆ ನಿರೂಪಿಸಿದರು. ಸುರೇಶ ಪಾಟೀಲ್ ಸ್ವಾಗತಿಸಿದರು. ಸವಿತಾ ಜೂಜಾರ ವಂದಿಸಿದರು.
ಹೆಲಿಕಾಪ್ಟರ್, ಸ್ಪೆಷಲ್ ಫ್ಲೈಟ್ ಖರೀದಿ ಮಾಡಲ್ಲ, ಬಾಡಿಗೆ ಪಡೆಯಲು ತೀರ್ಮಾನ: ಡಿಸಿಎಂ ಡಿ.ಕೆ. ಶಿವಕುಮಾರ್
ಬೆಳಗಾವಿ: ರಾಜ್ಯ ಸರಕಾರದ ಅತಿ ಗಣ್ಯ ವ್ಯಕ್ತಿಗಳು ತುರ್ತು ಹಾಗೂ ವಿಶೇಷ ಸಂದರ್ಭಗಳಲ್ಲಿ ಪ್ರಯಾಣಿಸಲು ಅತ್ಯುತ್ತಮ ಗುಣಮಟ್ಟದ ಹೆಲಿಕಾಪ್ಟರ್, ವಿಶೇಷ ವಿಮಾನದ ಸೇವೆಯನ್ನು ಬಾಡಿಗೆ ಆಧಾರದಲ್ಲಿ ಪಡೆಯಲು ತೀರ್ಮಾನಿಸಲಾಗಿದೆ. ಹೆಲಿಕಾಪ್ಟರ್, ವಿಶೇಷ ವಿಮಾನ ಖರೀದಿ ಮಾಡಲ್ಲ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು. ಹೆಲಿಕಾಪ್ಟರ್, ವಿಶೇಷ ವಿಮಾನ ಸೇವೆ ಸಂಬಂಧ ಡಿಸಿಎಂ ಡಿ.ಕೆ. ಶಿವಕುಮಾರ್ ನೇತೃತ್ವದ ಸಮಿತಿಯು ಬೆಳಗಾವಿ ಸುವರ್ಣಸೌಧದಲ್ಲಿ ಮಂಗಳವಾರ ಸಭೆ ಸೇರಿ ಸಮಾಲೋಚನೆ ನಡೆಸಿತು. ನಂತರ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು. ಸಭೆಯ ಬಗ್ಗೆ ಕೇಳಿದಾಗ, ಹೆಲಿಕಾಪ್ಟರ್ ಸೇವೆ ಒದಗಿಸುವಂತೆ ನಾವು ಎಚ್ಎಎಲ್ ಗೆ ಕೇಳಿದ್ದೆವು. ಅವರು ಇನ್ನೂ ತಡವಾಗುತ್ತದೆ ಎಂದು ಹೇಳಿದರು. ಎಚ್ ಎ ಎಲ್ ನಲ್ಲೇ ಹೆಲಿಕಾಪ್ಟರ್ ತಯಾರು ಮಾಡಲಾಗುತ್ತಿದೆ. ಏರ್ ಶೋ ವೇಳೆ ನಾನು, ಕೇಂದ್ರ ಸಚಿವ ರಾಜನಾಥ್ ಸಿಂಗ್ ಅವರು ನೋಡಿದ್ದೆವು. ಅಲ್ಲಿನ ಹೆಲಿಕಾಪ್ಟರ್ ಚೆನ್ನಾಗಿತ್ತು. ಅವರೇ ನಿರ್ವಹಣೆ ಮಾಡುತ್ತಾರೆ. ಹೀಗಾಗಿ ಅವರ ಸೇವೆಗೆ ಮನವಿ ಮಾಡಿದ್ದೆವು. ಸೇವೆ ಒದಗಿಸುವುದು ತಡವಾಗುವ ಕಾರಣ ಅವರೇ ಒಂದು ಸಂಸ್ಥೆಯನ್ನು ಶಿಫಾರಸು ಮಾಡಿದ್ದಾರೆ ಎಂದು ಮಾಹಿತಿ ನೀಡಿದರು. ಇದಕ್ಕೆ ಟೆಂಡರ್ ಕರೆಯಲಾಗಿದ್ದು, ಕೆಲವರು ಭಾಗಿಯಾಗಿದ್ದಾರೆ. ಹೀಗಾಗಿ ಸಂಪುಟ ಉಪಸಮಿತಿ ಸದಸ್ಯರಾದ ಸಚಿವರಾದ ಕೆ.ಜೆ. ಜಾರ್ಜ್, ಎಂ.ಬಿ. ಪಾಟೀಲ್, ಸತೀಶ್ ಜಾರಕಿಹೊಳಿ, ಬೈರತಿ ಸುರೇಶ್ ಹಾಗೂ ಅಧಿಕಾರಿಗಳು ಸಭೆ ನಡೆಸಿ ಚರ್ಚೆ ಮಾಡಿದ್ದೇವೆ. ಮುಂದಿನ ಸೋಮವಾರ ಅಥವಾ ಮಂಗಳವಾರ ಮತ್ತೊಂದು ಸಭೆ ಮಾಡುತ್ತೇವೆ. ಇದಕ್ಕೆ ತಾಂತ್ರಿಕವಾಗಿ ಪರಿಣಿತಿ ಹೊಂದಿರುವವರು ಬೇಕು. ಬೇರೆ ಸರ್ಕಾರಗಳಿಗೆ ಉತ್ತಮ ಸೇವೆ ನೀಡಿರುವಂತಹವರನ್ನು ನಾವು ಪರಿಗಣಿಸುತ್ತೇವೆ. ನಮಗೆ ಸುರಕ್ಷತೆ ಹಾಗೂ ಸರ್ಕಾರದ ಹಣ ಎರಡೂ ಮುಖ್ಯ ಎಂದು ತಿಳಿಸಿದರು. ಸಭೆಯಲ್ಲಿ ಸಚಿವರು ತಮ್ಮ ಅನುಭವಗಳ ಆಧಾರದ ಮೇಲೆ ಸಲಹೆ ನೀಡಿದ್ದಾರೆ. ಹೀಗಾಗಿ ಖರೀದಿ ಮಾಡದಿರಲು ತೀರ್ಮಾನಿಸಲಾಗಿದ್ದು, ಗಂಟೆಗಳ ಲೆಕ್ಕದಲ್ಲಿ ಬಾಡಿಗೆಗೆ ಪಡೆಯಲಾಗುವುದು ಎಂದರು.
ಕಾರ್ಕಳ | ಮುಂದಿನ ಪೀಳಿಗೆ ಒಟ್ಟಿಗೆ ಬದುಕಲು ಎಲ್ಲ ಭಾಷೆಗಳು ಮುಖ್ಯ : ಜಯಪ್ರಕಾಶ್ ಹೆಗ್ಡೆ
ಕನ್ನಡ ನಾಡು ನುಡಿ ಕಾರ್ಯಕ್ರಮ ಉದ್ಘಾಟನೆ
ಬೆಂಗಳೂರಿನಲ್ಲಿ ರಸ್ತೆ ಅಪಘಾತ: ಬಂಟ್ವಾಳದ ಯುವಕ ಮೃತ್ಯು
ಬೆಂಗಳೂರು: ಬೆಂಗಳೂರಿನ ಕೂಡ್ಲು ಗೇಟ್ ಸಮೀಪ ಮಧ್ಯಾಹ್ನ ನಡೆದ ರಸ್ತೆ ಅಪಘಾತವೊಂದರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ಯುವಕನೋರ್ವ ಮೃತಪಟ್ಟ ಘಟನೆ ಮಂಗಳವಾರ ನಡೆದಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಅಜಿಲಮೊಗರು ಸಮೀಪದ ಅಲ್ಲಿಪಾದೆ ಎಂಬಲ್ಲಿನ ಯುವಕ ಮುಹಮ್ಮದ್ ಹಾರಿಸ್ (34) ಮೃತಪಟ್ಟ ಯುವಕ. ಮುಹಮ್ಮದ್ ಹಾರಿಸ್ ಬೆಂಗಳೂರಿನ ಏಸಿ ಕಂಪನಿಯೊಂದರಲ್ಲಿ ಮೆಕ್ಯಾನಿಕ್ ಕೆಲಸ ಮಾಡುತ್ತಿದ್ದು, ಕೆಲಸದ ನಿಮಿತ್ತ ಇಂದು ತನ್ನ ಸಹೋದ್ಯೋಗಿಯೋರ್ವನೊಡನೆ ಬೈಕಿನಲ್ಲಿ ತೆರಳುತ್ತಿದ್ದಾಗ ಗೂಡ್ಸ್ ವಾಹನವು ಹಿಂಬದಿಯಿಂದ ಢಿಕ್ಕಿಯಾಗಿದೆ ಎನ್ನಲಾಗಿದೆ. ಡಿಕ್ಕಿಯ ರಭಸಕ್ಕೆ ಗಂಭೀರವಾಗಿ ಗಾಯಗೊಂಡ ಹಾರಿಸ್ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಹಿಂಬದಿಯಲ್ಲಿದ್ದ ಸಹೋದ್ಯೋಗಿಗೆ ಗಂಭೀರವಾಗಿ ಗಾಯವಾಗಿದೆ ಎಂದು ತಿಳಿದುಬಂದಿದೆ. ಯುವಕ ಹಾರಿಸ್ ಆರು ತಿಂಗಳ ಹಿಂದಷ್ಟೇ ವಿವಾಹವಾಗಿದ್ದರು. ಘಟನೆಯ ಸಂಬಂಧ ಎಚ್ ಎಸ್ ಆರ್ ಟ್ರಾಫಿಕ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಯುವಕ ಹಾರಿಸ್ ಮೃತದೇಹವು ಕೋರಮಂಗಲದಲ್ಲಿರುವ ಸೈಂಟ್ ಜಾನ್ಸ್ ಆಸ್ಪತ್ರೆಯ ಶವಾಗಾರದಲ್ಲಿದ್ದು, ಮರಣೋತ್ತರ ಪರೀಕ್ಷೆಯ ಬಳಿಕ ಊರಿಗೆ ಕಳುಹಿಸಲಾಗುವುದು ಎಂದು ತಿಳಿದುಬಂದಿದೆ. ಗಂಭೀರವಾಗಿ ಗಾಯಗೊಂಡಿರುವ ಹಿಂಬದಿ ಸವಾರ ಒಡಿಶಾ ಮೂಲದವನಾಗಿದ್ದು, ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿರುವುದಾಗಿ ತಿಳಿದುಬಂದಿದೆ.
ಕಲಬುರಗಿ| ಪತ್ರಕರ್ತನ ಮೇಲೆ ಹಲ್ಲೆ: ಕಿಡಿಗೇಡಿಗಳನ್ನು ಬಂಧಿಸುವಂತೆ ಪತ್ರಕರ್ತರ ಸಂಘ ಆಗ್ರಹ
ಕಲಬುರಗಿ: ಯಡ್ರಾಮಿ ತಾಲೂಕಿನಲ್ಲಿ ಪತ್ರಕರ್ತ ಪ್ರಶಾಂತ್ ಚವ್ಹಾಣ ಮೇಲೆ ಹಲ್ಲೆ ನಡೆಸಿದ ಕಿಡಿಗೇಡಿಗಳನ್ನು ಕೂಡಲೇ ಬಂಧಿಸಿ ಅವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಸೇಡಂ ತಾಲೂಕು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದಿಂದ ಸಹಾಯಕ ಆಯುಕ್ತರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು. ಪತ್ರಕರ್ತರ ಧೈರ್ಯವನ್ನು ಕುಂಠಿತಗೊಳಿಸುವ ಉದ್ದೇಶದಿಂದ ಈ ದಾಳಿ ನಡೆದಿದೆ. ಘಟನೆಯಿಂದ ಜಿಲ್ಲೆಯ ಪತ್ರಕರ್ತರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಪತ್ರಿಕಾ ಸ್ವಾತಂತ್ರ್ಯವು ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾದರೂ ವರದಿಗಾರರಿಗೆ ರಕ್ಷಣೆ ಇಲ್ಲದಂತಾಗಿದೆ ಎಂದು ಸಂಘದ ಪದಾಧಿಕಾರಿಗಳು ಆಕ್ರೋಶ ವ್ಯಕ್ತಪಡಿಸಿದರು. ಹಲ್ಲೆಗೆ ಒಳಗಾದ ಪತ್ರಕರ್ತರಿಗೆ ರಕ್ಷಣೆ ಒದಗಿಸಬೇಕು. ಕಿಡಿಗೇಡಿಗಳನ್ನು ತಕ್ಷಣ ಬಂಧಿಸಲು ಪೊಲೀಸ್ ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕು. ರಾಜ್ಯದಲ್ಲಿ ಪತ್ರಕರ್ತರ ಮೇಲೆ ನಡೆಯುತ್ತಿರುವ ಹಲ್ಲೆ ತಡೆಗಟ್ಟಲು ಪತ್ರಕರ್ತರ ರಕ್ಷಣಾ ನೀತಿ ಜಾರಿಗೆ ತರಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಈ ವೇಳೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷ ಶರಣು ಮಹಗಾಂವ್, ಕಾರ್ಯದರ್ಶಿ ಸಿದ್ದಲಿಂಗಯ್ಯ ಸ್ವಾಮಿ ಆಡಕಿ, ನಾಗಯ್ಯ ಸ್ವಾಮಿ ಬೊಮ್ನಳ್ಳಿ, ಅವಿನಾಶ್ ಬೊರಂಚಿ, ಶರಣಯ್ಯ ಸ್ವಾಮಿ ಬೊಮ್ನಳ್ಳಿ, ಜಗನ್ನಾಥ ತರನಳ್ಳಿ, ಸುಧೀರ್ ಬಿರಾದಾರ್, ರಾಧಾಕೃಷ್ಣ ಕೆ , ಶಫೀಕ್ ಉಡಗಿ, ಸುನೀಲ್ ರಾಣಿವಾಲ್, ಗಣೇಶ ನೀಲಹಳ್ಳಿ ಉಪಸ್ಥಿತರಿದ್ದರು.
ಕೊಂಕಣ ರೈಲ್ವೆ | ಟಿಕೆಟ್ ರಹಿತ ಪ್ರಯಾಣಿಕರಿಂದ ನವೆಂಬರ್ನಲ್ಲಿ 2.33 ಕೋಟಿ ರೂ. ದಂಡ ವಸೂಲಿ
ಉಡುಪಿ, ಡಿ.9: ಟಿಕೆಟ್ ರಹಿತ ಪ್ರಯಾಣಿಕರ ಪತ್ತೆಗೆ ಕೊಂಕಣ ರೈಲು ಮಾರ್ಗದಲ್ಲಿ ವಿಶೇಷ ಅಭಿಯಾನವನ್ನು ಕೈಗೊಂಡಿರುವ ಕೊಂಕಣ ರೈಲ್ವೆ ನಿಗಮ ಕಳೆದ ನವೆಂಬರ್ ತಿಂಗಳಿನಲ್ಲಿ 2.33 ಕೋಟಿ ರೂ.ಗಳನ್ನು ದಂಡ ರೂಪದಲ್ಲಿ ಸಂಗ್ರಹಿಸಿದೆ. ನವೆಂಬರ್ ತಿಂಗಳೊಂದರಲ್ಲೇ ಕೊಂಕಣ ರೈಲ್ವೆ ಮಾರ್ಗದಲ್ಲಿ ನಡೆಸಿದ 1070 ವಿಶೇಷ ಟಿಕೆಟ್ ತಪಾಸಣಾ ಕಾರ್ಯಾಚರಣೆಯಲ್ಲಿ ಒಟ್ಟು 42,965 ಮಂದಿ ಟಿಕೆಟ್ ರಹಿತ ಹಾಗೂ ಅನಧಿಕೃತವಾಗಿ ಸಂಚರಿಸುವವರನ್ನು ಪತ್ತೆ ಹಚ್ಚಿರುವ ಸಿಬ್ಬಂದಿಗಳು ಅವರಿಂದ 2.33 ಕೋಟಿ ರೂ.ಗಳನ್ನು ದಂಡ ರೂಪದಲ್ಲಿ ಸಂಗ್ರಹಿಸಿದ್ದಾರೆ ಎಂದು ಕೊಂಕಣ ರೈಲ್ವೆಯ ಪ್ರಕಟಣೆ ತಿಳಿಸಿದೆ. 2025ನೇ ಸಾಲಿನಲ್ಲಿ ನವೆಂಬರ್ ತಿಂಗಳವರೆಗೆ ಒಟ್ಟು 7843 ವಿಶೇಷ ಟಿಕೆಟ್ ತಪಾಸಣಾ ಕಾರ್ಯಾಚರಣೆ ನಡೆಸಲಾಗಿದ್ದು, ಒಟ್ಟು 2,90,786 ಮಂದಿ ಟಿಕೆಟ್ ರಹಿತ ಹಾಗೂ ಅನಧಿಕೃತವಾಗಿ ಸಂಚರಿಸುವವರನ್ನು ಪತ್ತೆ ಹಚ್ಚಿ ಅವರಿಂದ ದಂಡದ ರೂಪದಲ್ಲಿ ಒಟ್ಟು 17.83 ಕೋಟಿ ರೂ. ಹಣವನ್ನು ಸಂಗ್ರಹಿಸಲಾಗಿದೆ ಎಂದೂ ಹೇಳಿಕೆಯಲ್ಲಿ ತಿಳಿಸಲಾಗಿದೆ. ಕೊಂಕಣ ರೈಲ್ವೆ ಮಾರ್ಗದಲ್ಲಿ ಸಂಚರಿಸುವ ಪ್ರಯಾಣಿಕರು ಅಧಿಕೃತವಾದ ಟಿಕೆಟ್ ಖರೀದಿಸಿ ಪ್ರಯಾಣಿಸುವಂತೆ ವಿನಂತಿಸಿರುವ ರೈಲ್ವೆ ಅಧಿಕಾರಿಗಳು ಈ ಮೂಲಕ ಕೆಆರ್ಸಿಎಲ್ ನಲ್ಲಿ ಸಂಚರಿಸುವ ಪ್ರಯಾಣಿಕರಿಗೆ ಆಗುವ ಯಾವುದೇ ರೀತಿಯ ತೊಂದರೆಯನ್ನು ತಪ್ಪಿಸುವಂತೆ ವಿನಂತಿಸಿದೆ. ಇನ್ನು ಮುಂದೆಯೂ ಕೊಂಕಣ ರೈಲ್ವೆಯ ಎಲ್ಲಾ ಮಾರ್ಗಗಳಲ್ಲೂ ಟಿಕೆಟ್ ತಪಾಸಣಾ ಪ್ರಕ್ರಿಯೆಯನ್ನು ಇನ್ನಷ್ಟು ತೀವ್ರವಾಗಿ ನಡೆಸಲಾಗುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
Womens Cricket- ಶ್ರೀಲಂಕಾ ವಿರುದ್ಧ ಟಿ20 ಸರಣಿಗೆ ಭಾರತ ತಂಡ ಪ್ರಕಟ; ವಿಶ್ವಕಪ್ ಗೆದ್ದ ತಂಡದಲ್ಲಿದ್ದ ಇಬ್ಬರು ಔಟ್!
India W Vs Sri Lanka W T20 Series- ಶ್ರೀಲಂಕಾ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಗೆ ಭಾರತ ತಂಡವನ್ನು ಆಯ್ಕೆ ಮಾಡಲಾಗಿದೆ. ಡಿಸೆಂಬರ್ 21 ರಿಂದ ಆರಂಭವಾಗುವ ಈ ಸರಣಿಗೆ ಇಬ್ಬರು ಹೊಸ ಆಟಗಾರ್ತಿಯರಾದ ಗುಣಲನ್ ಕಮಲಿನಿ ಮತ್ತು ವೈಷ್ಣವಿ ಶರ್ಮಾ ಆಯ್ಕೆಯಾಗಿದ್ದಾರೆ. ಹರ್ಮನ್ಪ್ರೀತ್ ಕೌರ್ ನಾಯಕಿಯಾಗಿದ್ದು, ಸ್ಮೃತಿ ಮಂದಾನ ಉಪನಾಯಕಿಯಾಗಿ ಕಾರ್ಯ ನಿರ್ವಹಿಸಲಿದ್ದಾರೆ. ಪ್ರತೀಕಾ ರಾವಲ್ ಅವರ ಬದಲಿಗೆ ತಂಡಕ್ಕೆ ಆಯ್ಕೆಯಾಗಿ ವಿಶ್ವಕಪ್ ಫೈನಲ್ ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಶೆಫಾಲಿ ವರ್ಮಾ ಅವರನ್ನು ತಂಡದಲ್ಲಿ ಮುಂದುವರಿಸಲಾಗಿದೆ.
8ನೇ ದಿನಕ್ಕೂ ಇಂಡಿಯಾದಲ್ಲಿ ಮುಗಿಯದ IndiGo ಬಿಕ್ಕಟ್ಟು
500 ಯಾನಗಳು ರದ್ದು,ಮಾರ್ಗಗಳನ್ನು ಕಡಿತಗೊಳಿಸಿದ ಸರಕಾರ
SIRಗೆ ಅಸಹಕಾರ: ರಾಜ್ಯಗಳಿಗೆ ಸುಪ್ರೀಂ ಕೋರ್ಟ್ ತರಾಟೆ
ಹೊಸದಿಲ್ಲಿ,ಡಿ.9: ಪಶ್ಚಿಮ ಬಂಗಾಳ ಮತ್ತು ಇತರ ಹಲವಾರು ರಾಜ್ಯಗಳಲ್ಲಿ ಚುನಾವಣಾ ಆಯೋಗವು ನಡೆಸುತ್ತಿರುವ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆಗೆ (SIR) ಅಡ್ಡಿಯನ್ನುಂಟು ಮಾಡಲಾಗುತ್ತಿದೆ ಮತ್ತು ಬೂತ್ ಮಟ್ಟದ ಅಧಿಕಾರಿಗಳಿಗೆ (BLO) ಬೆದರಿಕೆಯೊಡ್ಡಲಾಗುತ್ತಿದೆ ಎಂಬ ವರದಿಗಳನ್ನು ಸರ್ವೋಚ್ಚ ನ್ಯಾಯಾಲಯವು ಮಂಗಳವಾರ ಗಂಭೀರವಾಗಿ ಪರಿಗಣಿಸಿದೆ. SIRಗೆ ಸಹಕರಿಸದ ಕೆಲವು ರಾಜ್ಯಗಳನ್ನು ತರಾಟೆಗೆತ್ತಿಕೊಂಡ ನ್ಯಾಯಾಲಯವು,BLOಗಳು ಬೆದರಿಕೆಯನ್ನು ಎದುರಿಸುತ್ತಿರುವ ಅಥವಾ SIR ಪ್ರಕ್ರಿಯೆಯನ್ನು ನಡೆಸುವಲ್ಲಿ ಅಧಿಕಾರಿಗಳು ಅಡೆತಡೆಗಳನ್ನು ಎದುರಿಸುತ್ತಿರುವ ಯಾವುದೇ ನಿದರ್ಶನವನ್ನು ತಕ್ಷಣ ತನ್ನ ಗಮನಕ್ಕೆ ತರುವಂತೆ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಿತು. ‘ಇಂತಹ ವಿಷಯಗಳನ್ನು ನಮ್ಮ ಮುಂದೆ ತಂದರೆ ನಾವು ಸೂಕ್ತ ಆದೇಶಗಳನ್ನು ಹೊರಡಿಸುತ್ತೇವೆ’ ಎಂದು ಪೀಠವು ಹೇಳಿತು. ಪರಿಸ್ಥಿತಿಯನ್ನು ಬಗೆಹರಿಸುವಲ್ಲಿ ವೈಫಲ್ಯವು ಅರಾಜಕತೆಗೆ ಕಾರಣವಾಗಬಹುದು ಎಂದು ಎಚ್ಚರಿಕೆ ನೀಡಿದ ಸರ್ವೋಚ್ಚ ನ್ಯಾಯಾಲಯವು,SIR ಪ್ರಕ್ರಿಯೆ ಸುಗಮವಾಗಿ ನಡೆಯುವುದನ್ನು ಖಚಿತಪಡಿಸಿಕೊಳ್ಳಲು ದೃಢವಾದ ಕ್ರಮಗಳನ್ನು ತೆಗೆದುಕೊಳ್ಳುವಂತೆ ಚುನಾವಣಾ ಆಯೋಗವನ್ನು ಆಗ್ರಹಿಸಿತು. ವಿಚಾರಣೆ ವೇಳೆ ಚುನಾವಣಾ ಆಯೋಗವು ನಿರಂತರ ಅಡೆತಡೆಗಳಿಂದಾಗಿ ಅಧಿಕಾರಿಗಳ ಸುರಕ್ಷತೆ ಮತ್ತು SIR ಸುಗಮವಾಗಿ ನಡೆಯುವಂತೆ ನೋಡಿಕೊಳ್ಳಲು ಪೋಲಿಸ್ ಸಿಬ್ಬಂದಿಗಳ ನಿಯೋಜನೆಯನ್ನು ಪಡೆದುಕೊಳ್ಳುವುದು ತನಗೆ ಅನಿವಾರ್ಯವಾಗಬಹುದು ಎಂದು ನ್ಯಾಯಾಲಯಕ್ಕೆ ತಿಳಿಸಿತು. SIR ಪ್ರಕ್ರಿಯೆಯಲ್ಲಿ ತೊಡಗಿಕೊಂಡಿರುವ BLOಗಳು ಮತ್ತು ಇತರ ಅಧಿಕಾರಿಗಳಿಗೆ ಬೆದರಿಕೆಗಳನ್ನು ತಡೆಯಲು ಅಗತ್ಯವಿರುವ ಎಲ್ಲ ಸಾಂವಿಧಾನಿಕ ಅಧಿಕಾರಗಳನ್ನು ತಾನು ಹೊಂದಿರುವುದಾಗಿ ಅದು ಒತ್ತಿ ಹೇಳಿತು.
ಡಿ.10ರಿಂದ ಕನ್ನಡೇತರಿಗೆ ಕನ್ನಡ ಕಲಿಕಾ ತರಬೇತಿ : ಮಲ್ಪೆಯ ಕೊಚ್ಚಿನ್ ಶಿಪ್ ಯಾರ್ಡ್ನಿಂದ ಪ್ರಾರಂಭ
ಉಡುಪಿ, ಡಿ.9: ಕನ್ನಡ ಸಂಸ್ಕೃತಿ ಇಲಾಖೆ, ಕನ್ನಡ ಅಭಿವೃದ್ಧಿ ಪ್ರಾಧಿಕಾರ ಬೆಂಗಳೂರು, ಡಾ.ಶಿವರಾಮ ಕಾರಂತ ಟ್ರಸ್ಟ್ ಉಡುಪಿ ಜಿಲ್ಲೆ ಇವರ ವತಿಯಿಂದ ಮಲ್ಪೆಯಲ್ಲಿರುವ ಉಡುಪಿ ಕೊಚ್ಚಿನ್ಶಿಪ್ ಯಾರ್ಡ್ ಲಿಮಿಟೆಡ್ ಸಹಯೋಗದಲ್ಲಿ ನಡೆಯುವ ಕನ್ನಡೇತರಿಗೆ ಕನ್ನಡ ಕಲಿಕಾ ತರಬೇತಿಯ ಉದ್ಘಾಟನಾ ಸಮಾರಂಭ ಡಿ.10ರ ಗುರುವಾರ ಅಪರಾಹ್ನ 3:00 ಗಂಟೆಗೆ ಮಲ್ಪೆಯ ಕೊಚ್ಚಿನ್ ಶಿಪ್ ಯಾರ್ಡ್ ನ ಸಮ್ಮೇಳನ ಸಭಾಂಗಣದಲ್ಲಿ ನಡೆಯಲಿದೆ. ಕಾರ್ಯಕ್ರಮವನ್ನು ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ನಾಗರಾಜ್ ನಾಯಕ್ ಉದ್ಘಾಟಿಸಲಿದ್ದು, ಡಾ.ಶಿವರಾಮ ಕಾರಂತ ಟ್ರಸ್ಟಿನ ಅಧ್ಯಕ್ಷ ಡಾ.ಗಣನಾಥ ಶೆಟ್ಟಿ ಎಕ್ಕಾರು ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಜಿಲ್ಲಾ ಕೈಗಾರಿಕಾ ಕೇಂದ್ರದ ಉಪನಿರ್ದೇಶಕ ಸೀತಾರಾಮ ಶೆಟ್ಟಿ, ಉಡುಪಿ ಕೊಚ್ಚಿನ್ ಶಿಪ್ ಯಾರ್ಡ್ ಲಿುಟೆಡ್ನ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಹರಿಕುಮಾರ್ ಎ, ಮುಖ್ಯ ಹಣಕಾಸು ಅಧಿಕಾರಿ ಶಂಕರ್ ನಟರಾಜ್, ಉಪಪ್ರಧಾನ ವ್ಯವಸ್ಥಾಪಕ ಎಂ ಅಂಬಲವನನ್ ಭಾಗವಹಿಸಲಿದ್ದಾರೆ ಎಂದು ಡಾ.ಶಿವರಾಮ ಕಾರಂತ ಟ್ರಸ್ಟಿನ ಸದಸ್ಯ ಕಾರ್ಯದರ್ಶಿಗಳ ಪ್ರಕಟಣೆ ತಿಳಿಸಿದೆ.
ಮ್ಯಾನ್ಮಾರ್ ನಿರಾಶ್ರಿತನ ಮೇಲೆ ಹಲ್ಲೆ ನಡೆಸಿದ ಪುನೀತ್ ಕೆರೆಹಳ್ಳಿ ವಿರುದ್ಧ ಪ್ರಕರಣ ದಾಖಲು
ಬೆಂಗಳೂರು: ಮ್ಯಾನ್ಮಾರ್ ನಿರಾಶ್ರಿತನ ಮೇಲೆ ಹಲ್ಲೆ ನಡೆಸಿದ ಸಂಬಂಧ ಹಿಂದುತ್ವ ಸಂಘಟನೆ ಕಾರ್ಯಕರ್ತ ಪುನೀತ್ ಕೆರೆಹಳ್ಳಿ ಹಾಗೂ ಸಹಚರರ ವಿರುದ್ಧ ಇಲ್ಲಿನ ಚೆನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವಿಶ್ವಸಂಸ್ಥೆಯ ನಿರಾಶ್ರಿತರ ಏಜೆನ್ಸಿಯು(ಯುಎನ್ಎಚ್ಸಿಆರ್) ನೀಡುವ ನಿರಾಶ್ರಿತರ ಗುರುತಿನ ಚೀಟಿಯನ್ನು ಪಡೆದಿದ್ದ ಮ್ಯಾನ್ಮಾರ್ ಮೂಲದ ಜಹಂಗೀರ್ ಆಲಂ ಅವರು, ತಮ್ಮ ಪತ್ನಿ ಮತ್ತು ಮಕ್ಕಳೊಂದಿಗೆ ಹಲವು ವರ್ಷಗಳಿಂದ ನಗರದ ಕಗ್ಗಲಿಪುರದಲ್ಲಿ ವಾಸವಾಗಿದ್ದಾರೆ. ಜಹಂಗೀರ್ ಆಲಂ ಅವರು ನಾಯಂಡಹಳ್ಳಿ, ಬನಶಂಕರಿ, ಚನ್ನಮ್ಮನಕೆರೆ ಅಚ್ಚುಕಟ್ಟು ಭಾಗದಲ್ಲಿ ಚಿಂದಿ ಆಯುವ ಕೆಲಸ ಮಾಡುತ್ತಿದ್ದರು. ಡಿ.3ರಂದು ರಾತ್ರಿ ಚನ್ನಮ್ಮನಕೆರೆ ಅಚ್ಚುಕಟ್ಟು ಭಾಗದಲ್ಲಿ ಚಿಂದಿ ಆಯುತ್ತಿದ್ದಾಗ ಪುನೀತ್ ಕೆರೆಹಳ್ಳಿ ಮತ್ತು ಸಹಚರರು ಅಲ್ಲಿಗೆ ಬಂದು ಜಹಂಗೀರ್ ಆಲಂಗೆ ಅವಾಚ್ಯವಾಗಿ ನಿಂದಿಸಿದ್ದಾರೆ. ಬಾಂಗ್ಲಾ ನುಸುಳುಕೋರನೆಂದು ಜಹಂಗೀರ್ ಆಲಂರ ಶರ್ಟ್ನ ಕತ್ತಿನ ಪಟ್ಟಿ ಹಿಡಿದು ಎಳೆದಾಡಿ, ಕಪಾಳ ಮೋಕ್ಷ ಮಾಡಿದ್ದಾರೆ. ಅಲ್ಲದೆ, ಹಿಗ್ಗಾಮುಗ್ಗಾ ಥಳಿಸಿದ್ದಾರೆ ಎಂದು ವರದಿಯಾಗಿದೆ. ಹಲ್ಲೆಗೆ ಒಳಗಾಗಿರುವ ಜಹಂಗೀರ್ ಆಲಂ ಚೆನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪುನೀತ್ ಕೆರೆಹಳ್ಳಿ ಮತ್ತು ಆತನ ಮೂವರು ಸಹಚರರ ವಿರುದ್ಧ ಪ್ರಕರಣ ದಾಖಲಿಸಿ, ವಿಚಾರಣೆಗೆ ಬರುವಂತೆ ನೋಟಿಸ್ ಜಾರಿ ಮಾಡಿದ್ದೇವೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
Ind Vs SA T20 | ಕಮ್ ಬ್ಯಾಕ್ ಮಾಡಿದ ಹಾರ್ದಿಕ್ ಪಾಂಡ್ಯ, ದಕ್ಷಿಣ ಆಫ್ರಿಕಾಕ್ಕೆ 176 ರನ್ ಗುರಿ
ಕಟಕ್: ಒಡಿಶಾದ ಕಟಕ್ ನ ಬಾರಾಬತಿ ಕ್ರೀಡಾಂಗಣದಲ್ಲಿನಡೆಯುತ್ತಿರುವ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಐದು ಪಂದ್ಯಗಳ ಟಿ–20 ಸರಣಿಯ ಮೊದಲ ಪಂದ್ಯದಲ್ಲಿ ಭಾರತ ತಂಡವು ದಕ್ಷಿಣ ಆಫ್ರಿಕಾ ತಂಡಕ್ಕೆ 176 ರನ್ಗಳ ಗುರಿ ನೀಡಿದೆ. ಟಾಸ್ ಗೆದ್ದ ಫೀಲ್ಡಿಂಗ್ ಆಯ್ದುಕೊಂಡ ದಕ್ಷಿಣ ಆಫ್ರಿಕಾ ತಂಡವು ಭಾರತ ತಂಡವನ್ನು ಬ್ಯಾಟಿಂಗ್ ಗೆ ಆಹ್ವಾನಿಸಿತು. 6 ವಿಕೆಟ್ ಕಳೆದುಕೊಂಡ ಭಾರತ ತಂಡವು 20 ಓವರ್ ಗಳಲ್ಲಿ 175 ರನ್ ಗಳಿಸಿತು. ತಂಡಕ್ಕೆ ಕಮ್ ಬ್ಯಾಕ್ ಮಾಡಿದ ಹಾರ್ದಿಕ್ ಪಾಂಡ್ಯ 28 ಎಸೆತಗಳಲ್ಲಿ 59 ರನ್ ಗಳಿಸಿ ಟಿ20 ಪಂದ್ಯದ ರಸದೌತಣ ನೀಡಿದರು. ಅವರ ಇನ್ನಿಂಗ್ಸ್ ನಲ್ಲಿ 4 ಸಿಕ್ಸರ್, 6 ಬೌಂಡರಿಗಳು ಸೇರಿದ್ದವು. ಉಳಿದಂತೆ ತಿಲಕ್ ವರ್ಮಾ 26, ಅಕ್ಸರ್ ಪಟೇಲ್ 23, ಸೂರ್ಯ ಕುಮಾರ್ ಯಾದವ್ 12 ರನ್ ಗಳಿಸಿದರು. ಆರಂಭದಲ್ಲಿ ಉತ್ತಮ ದಾಳಿ ಸಂಘಟಿಸಿದ ದಕ್ಷಿಣ ಆಫ್ರಿಕಾ ತಂಡವು ಭಾರತಕ್ಕೆ ರನ್ ಕಲೆಹಾಕಲು ಅಡ್ಡಗಾಲಿಟ್ಟಿತು. ಲುಂಗಿ ಎಂಗಿಡಿ 3 ವಿಕೆಟ್ ಪಡೆದು ಮಿಂಚಿದರು. ಲುತೋ ಸಿಪಮ್ಲ 2 ವಿಕೆಟ್ ಪಡೆದರು.
ಮಧ್ಯಪ್ರದೇಶ | ಸರ್ಕಾರಕ್ಕೆ ತಲೆನೋವಾದ ಮಾದಕ ವಸ್ತು ಪತ್ತೆ ಪ್ರಕರಣ; ಆರೋಪಿ ಸಚಿವೆಯ ಸಹೋದರ ಎಂದ ಕಾಂಗ್ರೆಸ್
ಭೋಪಾಲ್, ಡಿ. 9: ಸಚಿವೆ ಪ್ರತಿಮಾ ಬಾಗ್ರಿ ಅವರ ಸಹೋದರ ಅನಿಲ್ ಬಾಗ್ರಿ ಮಾದಕವಸ್ತು ಕಳ್ಳಸಾಗಣೆ ಪ್ರಕರಣದಲ್ಲಿ ಬಂಧನಕ್ಕೊಳಗಾದ ಹಿನ್ನೆಲೆಯಲ್ಲಿ, ಯುವ ಕಾಂಗ್ರೆಸ್ ಕಾರ್ಯಕರ್ತರು ಮಂಗಳವಾರ ಭೋಪಾಲ್ ನಲ್ಲಿರುವ ಅವರ ನಿವಾಸದ ಮುಂದೆ ಪ್ರತಿಭಟನೆ ನಡೆಸಿ ಸಚಿವರ ರಾಜೀನಾಮೆಗೆ ಆಗ್ರಹಿಸಿದರು. ಸಚಿವೆ ಪ್ರತಿಮಾ ಅವರು ಅಧಿಕಾರದಲ್ಲಿ ಮುಂದುವರೆದರೆ ನ್ಯಾಯಯುತ ತನಿಖೆ ಸಾದ್ಯವಿಲ್ಲವೆಂದು ಅನುಮಾನ ವ್ಯಕ್ತಪಡಿಸಿದ ಪ್ರತಿಭಟನಾಕಾರರು, “ನೈತಿಕ ಜವಾಬ್ದಾರಿಯ ಹೊತ್ತು ತಕ್ಷಣ ರಾಜೀನಾಮೆ ನೀಡಲಿ. ಸಿಎಂ ಮೋಹನ್ ಯಾದವ್ ಸರ್ಕಾರ ಯುವಕರ ಭವಿಷ್ಯವನ್ನು ಹಾಳುಮಾಡುತ್ತಿದೆ; ಅವರ ಸಚಿವರ ಆಪ್ತರಿಂದಲೇ ಈ ರೀತಿಯ ಕೃತ್ಯಗಳು ಬೆಳಕಿಗೆ ಬರುತ್ತಿವೆ,” ಎಂದು ಯುವ ಕಾಂಗ್ರೆಸ್ ನಾಯಕರು ಇದೇ ಸಂದರ್ಭದಲ್ಲಿ ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನಾಕಾರರು ಗೇಟ್ ಮೂಲಕ ನಿವಾಸಕ್ಕೆ ನುಗ್ಗಲು ಯತ್ನಿಸಿದಾಗ ಪೊಲೀಸರು ಮಧ್ಯಪ್ರವೇಶಿಸಿ ಅವರನ್ನು ತಡೆಯುವ ಸಂದರ್ಭವಾಗಿ ಸ್ವಲ್ಪ ಉದ್ವಿಗ್ನತೆ ಉಂಟಾಯಿತು. ಸ್ಥಳದಲ್ಲಿ ಬ್ಯಾರಿಕೇಡ್ಗಳನ್ನು ಹಾಕಿ ಹೆಚ್ಚುವರಿ ಪೊಲೀಸ್ ಪಡೆಯನ್ನು ನಿಯೋಜಿಸಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಮಧ್ಯಾಹ್ನ NSUI ಕಾರ್ಯಕರ್ತರು ಕಾಂಗ್ರೆಸ್ ಕಚೇರಿ ಹೊರಗೆ ಆಯೋಜಿಸಿದ್ದ ಪ್ರತಿಭಟನೆಯ ಬಳಿಕ, ಸಿಎಂ ಮೋಹನ್ ಯಾದವ್ ಅವರಿಗೆ ಸಾಂಕೇತಿಕವಾಗಿ ಮಾದಕ ವಸ್ತುಗಳ ಹಾರ ಅರ್ಪಿಸಲು ಸಿಎಂ ನಿವಾಸದತ್ತ ತೆರಳಲು ಪ್ರಯತ್ನಿಸಿದರು. ಆದರೆ ರೆಡ್ಕ್ರಾಸ್ ಚೌಕದಲ್ಲಿ ಪೊಲೀಸರು ಅವರನ್ನು ತಡೆದು, ಕೆಲವರನ್ನು ಬಂಧಿಸಿ ಉಳಿದವರನ್ನು ಬೇರೆಡೆಗೆ ಸ್ಥಳಾಂತರಿಸಿದರು. ಗಾಂಜಾ ಪ್ರಕರಣದಲ್ಲಿ ಸಹೋದರನ ಬಂಧನದ ವಿಚಾರವಾಗಿ ಪ್ರತಿಕ್ರಿಯಿಸಿದ ಸಚಿವೆ ಪ್ರತಿಮಾ ಬಾಗ್ರಿ, “ಪೊಲೀಸರು ತಮ್ಮ ಕೆಲಸವನ್ನು ಮಾಡುತ್ತಿದ್ದಾರೆ. ತಪ್ಪಿತಸ್ಥರು ಯಾರೇ ಆಗಿರಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು. ಅಪರಾಧದಲ್ಲಿ ಭಾಗಿಯಾದವರನ್ನು ರಕ್ಷಿಸುವ ಪ್ರಶ್ನೆಯೇ ಇಲ್ಲ,” ಎಂದು ANIಗೆ ಪ್ರತಿಕ್ರಿಯಿಸಿದರು.
ಮೂವರು ಐಎಎಸ್ ಅಧಿಕಾರಿಗಳ ವರ್ಗಾವಣೆ
ಬೆಂಗಳೂರು: ಮಂಗಳವಾರದಂದು ರಾಜ್ಯ ಸರಕಾರವು ಮೂವರು ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ಜವಳಿ ಅಭಿವೃದ್ಧಿ ಆಯುಕ್ತರು ಹಾಗೂ ಕೈಮಗ್ಗ ಮತ್ತು ಜವಳಿ ಇಲಾಖೆಯ ನಿರ್ದೇಶಕರಾದ ಜ್ಯೋತಿ ಕೆ. ಅವರನ್ನು ಕರ್ನಾಟಕ ಲೋಕಸೇವಾ ಆಯೋಗದ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಲಾಗಿದೆ. ಆಯೋಗದ ಕಾರ್ಯದರ್ಶಿಯಾಗಿದ್ದ(ಪ್ರಭಾರ) ಡಾ.ವಿಶಾಲ್ ಆರ್. ಅವರನ್ನು ಬಿಡುಗಡೆ ಮಾಡಲಾಗಿದೆ. ಹಣಕಾಸು ಇಲಾಖೆಯ ಸರಕಾರದ ಕಾರ್ಯದರ್ಶಿ ಡಾ.ವಿಶಾಲ್ ಆರ್. ಅವರನ್ನು ಮೂಲಸೌಕರ್ಯ ಅಭಿವೃದ್ಧಿ ಇಲಾಖೆಯ ಸರಕಾರದ ಕಾರ್ಯದರ್ಶಿಯಾಗಿ ವರ್ಗಾವಣೆ ಮಾಡಲಾಗಿದ್ದು, ಪ್ರಭಾರಿ ಅಧಿಕಾರಿಯಾಗಿ ಹಣಕಾಸು ಇಲಾಖೆಯ ಸರಕಾರದ ಕಾರ್ಯದರ್ಶಿ ಮತ್ತು ಹಣಕಾಸು ನೀತಿ ಸಂಸ್ಥೆಯ ನಿರ್ದೇಶಕ ಹುದ್ದೆಗಳಿಗೆ ನೇಮಕ ಮಾಡಲಾಗಿದೆ. ಇನ್ನು ಮೂಲಸೌಕರ್ಯ ಅಭಿವೃದ್ಧಿ ಇಲಾಖೆಯ ಸರಕಾರದ ಕಾರ್ಯದರ್ಶಿಯಾಗಿದ್ದ ಡಾ.ಮಂಜುಳಾ ಎನ್. ಅವರನ್ನು ಬಿಡುಗಡೆ ಮಾಡಲಾಗಿದೆ.
280000 ಸರ್ಕಾರಿ ಹುದ್ದೆಗಳು ಖಾಲಿ: ಹೊಸ ನೇಮಕಾತಿಯ ಬಗ್ಗೆ ಸಿದ್ದರಾಮಯ್ಯ ಹೇಳಿದ್ದೇನು ?
ರಾಜ್ಯದಲ್ಲಿ ಸರ್ಕಾರಿ ನೌಕರರ ನೇಮಕಾತಿಗೆ ಸಂಬಂಧಿಸಿದಂತೆ ಹೆಚ್ಚು ಚರ್ಚೆ ನಡೆಯುತ್ತಿದೆ. ಆದರೆ ರಾಜ್ಯದಲ್ಲಿ ಸುಮಾರು 280000 ಸರ್ಕಾರಿ ಹುದ್ದೆಗಳು ಖಾಲಿ ಇದ್ದು ಅದನ್ನು ಸಮರೋಪಾದಿಯಲ್ಲಿ ಭರ್ತಿ ಮಾಡಬೇಕಾಗಿದ್ದ ಸರ್ಕಾರ ಮಾಡುತ್ತಿಲ್ಲ ಎನ್ನುವ ಅಂಶ ಭಾರೀ ಅಸಮಾಧಾನಕ್ಕೆ ಕಾರಣವಾಗಿದೆ. ರಾಜ್ಯದಲ್ಲಿ ಸುಮಾರು 280000 ಸರ್ಕಾರಿ ಹುದ್ದೆಗಳು ಖಾಲಿ ಇದ್ದು ಅದನ್ನು ಭರ್ತಿ ಮಾಡುವ ಬದಲು ಕೇವಲ 24300 ಹುದ್ದೆಗಳನ್ನು
ಉತ್ತರ ಕರ್ನಾಟಕದ ಜೀವನಾಡಿ 72 ವರ್ಷ ಹಳೆಯದಾದ ತುಂಗಭದ್ರಾ ಜಲಾಶಯದ 33 ಕ್ರೆಸ್ಟ್ ಗೇಟ್ಗಳನ್ನು ಬದಲಾಯಿಸುವ ಮಹತ್ವದ ಕಾಮಗಾರಿ ಆರಂಭವಾಗಿದೆ. ಕಳೆದ ವರ್ಷ 19ನೇ ಗೇಟ್ ಹಾನಿಗೊಳಗಾದ ಬಳಿಕ ಈ ನಿರ್ಧಾರ ಕೈಗೊಳ್ಳಲಾಗಿದೆ. ಅಹಮದಾಬಾದ್ ಮೂಲದ ಕಂಪನಿ ಗುತ್ತಿಗೆ ಪಡೆದಿದ್ದು, ಏಪ್ರಿಲ್ 2026ರೊಳಗೆ ಕಾಮಗಾರಿ ಪೂರ್ಣಗೊಳಿಸುವ ಗುರಿ ಇದೆ. ಐದು ತಂಡಗಳು ಹಗಲಿರುಳು ಕೆಲಸ ಮಾಡಲಿವೆ. ಇದು ಜಲಾಶಯದ ಸುರಕ್ಷತೆಯನ್ನು ಹೆಚ್ಚಿಸಲಿದೆ.ತುಂಗಭದ್ರಾ ಜಲಾಶಯಕ್ಕೆ ಈಗ ನಿಜವಾದ ಅರ್ಥದಲ್ಲಿ ಕಾಯಕಲ್ಪ ಸಿಗುತ್ತಿದೆ. ಅಷ್ಟಕ್ಕೂ ಈ ಗೇಟ್ಗಳ ಅಳವಡಿಕೆ ಪ್ರಕ್ರಿಯೆ ಹೇಗಿರುತ್ತೆ? ಯಾವ ರೀತಿಯ ಲೋಹವನ್ನು ಗೇಟ್ಗಳಿಗೆ ಬಳಸಲಾಗುತ್ತದೆ? ಡ್ಯಾಂನ ಸುರಕ್ಷತೆಗಾಗಿ ಏನೆಲ್ಲಾ ಕ್ರಮವನ್ನು ಕೈಗೊಳ್ಳಲಾಗಿದೆ? ಅದಲ್ಲದೇ ಈ ಬೃಹತ್ ಆಪರೇಷನ್ನ ಸಂಪೂರ್ಣ ಚಿತ್ರಣವನ್ನು ಇಲ್ಲಿದೆ.
ಉಡುಪಿ | ಬಿಎಸ್ಸೆನ್ನೆಲ್ ಟವರ್ಗೆ ಬ್ಯಾಟರಿ, ಸೋಲಾರ್ ಮಂಜೂರಾತಿ
ಉಡುಪಿ, ಡಿ.9: ಜಿಲ್ಲೆಯಲ್ಲಿರುವ 71 ಬಿಎಸ್ಸೆನ್ನೆಲ್ ಟವರ್ ಗಳಿಗೆ ಹೊಸದಾಗಿ ಬ್ಯಾಟರಿ ಮಂಜೂರು ಮಾಡಲಾಗಿದೆ. ಈ ಬ್ಯಾಟರಿಗಳನ್ನು 2026ರ ಜನವರಿ ಒಳಗೆ ಸರಬರಾಜು ಮಾಡಲಾಗುತ್ತದೆ ಎಂದು ಉಡುಪಿ ಚಿಕ್ಕಮಗಳೂರು ಲೋಕಸಭಾ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ. ಅಲ್ಲದೇ ತಾವು ಮಾಡಿಕೊಂಡ ಮನವಿಯಂತೆ ಜಿಲ್ಲೆಯ 21 ಕಡೆಗಳಲ್ಲಿ ಸೋಲಾರ್ ಸ್ಥಾವರಗಳನ್ನು ಮಂಜೂರು ಮಾಡಲಾಗಿದೆ. ಇದನ್ನು ಮಾರ್ಚ್ 2026ರ ಒಳಗೆ ಪೂರ್ಣಗೊಳಿಸಲಾಗುವುದು ಎಂದು ಕೇಂದ್ರ ಸಂಪರ್ಕ ಸಚಿವ ಜ್ಯೋತಿರಾಜ್ ಸಿಂದಿಯಾ ಅವರು ತಮಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ ಎಂದೂ ಕೋಟ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಇತ್ತೀಚೆಗೆ ಉಡುಪಿ ಬಿಎಸ್ಎನ್ಎಲ್ ಕಚೇರಿಯಲ್ಲಿ ಜರುಗಿದ ಕುಂದುಕೊರತೆಗಳ ಪರಿಶೀಲನಾ ಸಭೆಯಲ್ಲಿ ಜಿಲ್ಲೆಗಳಲ್ಲಿರುವ ಟವರ್ ಗಳ ಸಮಸ್ಯೆಯನ್ನು ಸಂಸದರ ಗಮನಕ್ಕೆ ತರಲಾಗಿತ್ತು. ಹೊಸ ಬ್ಯಾಟರಿ ಮತ್ತು ಸೋಲಾರ್ ಸ್ಥಾವರಗಳ ಅಳವಡಿಕೆಯಿಂದ ಬಿ.ಎಸ್.ಎನ್.ಎಲ್ ಗುಣಮಟ್ಟ ಹೆಚ್ಚಲಿದೆ ಎಂದು ಸಂಸದರ ಕಚೇರಿಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
IPL 2026- ಹರಾಜು ಪಟ್ಟಿಯಲ್ಲಿ ಮೊದಲ ಬಾರಿ ಗೊಂದಲ; BBL ಆಟಗಾರ ನಿಖಿಲ್ ಚೌಧರಿ ಹೆಸರು ಹೇಗೆ ಬಂತು!
Nikhil Chaudhary In IPL 2026 Auction List- ಐಪಿಎಲ್ ನ ಇತಿಹಾಸದಲ್ಲೇ ಇಂತಹದ್ದೊಂದು ನಡೆದಿದ್ದಿಲ್ಲ. ಇದೀಗ 2026ರ ಇಂಡಿಯನ್ ಪ್ರೀಮಿಯರ್ ಲೀಗ್ (IPL) ಹರಾಜಿನ ಪಟ್ಟಿಯಲ್ಲಿ ಒಂದು ಅಚ್ಚರಿಯ ಹೆಸರು ಕಾಣಿಸಿಕೊಂಡಿದೆ. ಅದು ಆಸ್ಟ್ರೇಲಿಯಾದಲ್ಲಿ ಬಿಬಿಎಲ್ ಆಡುತ್ತಿರುವ ಭಾರತದ ಮೂಲದ ನಿಖಿಲ್ ಚೌಧರಿ ಎಂಬ ಆಟಗಾರನ ಹೆಸರು. ಅವರು ಭಾರತೀಯ ಮೂಲದವರಾಗಿದ್ದರೂ ಆಸ್ಟ್ರೇಲಿಯಾದ ಬಿಗ್ ಬ್ಯಾಷ್ ಲೀಗ್ (BBL) ನಲ್ಲಿ ಸ್ಥಳೀಯ ಆಟಗಾರನಾಗಿ ಆಡುತ್ತಿದ್ದಾರೆ. ಹೀಗಿದ್ದರೂ IPL ಹರಾಜಿನಲ್ಲಿ ಅವರನ್ನು ಭಾರತೀಯ ಆಟಗಾರನಾಗಿ ಸೇರಿಸಲಾಗಿರುವುದು ಚರ್ಚೆಗೆ ಗ್ರಾಸವಾಗಿದೆ.
ಉಡುಪಿ, ಡಿ.9: 2034ರ ವೇಳೆಗೆ, ದೇಶದಾದ್ಯಂತ 18,336 ಸಿಎನ್ಜಿ ಕೇಂದ್ರಗಳನ್ನು ಸ್ಥಾಪಿಸುವ ಗುರಿ ಹೊಂದಿದ್ದು, ಸೆ.30ರವರೆಗೆ ಒಟ್ಟು 8,357 ಸಿಎನ್ಜಿ ಕೇಂದ್ರಗಳನ್ನು ದೇಶಾದ್ಯಂತ ಸ್ಥಾಪಿಸಿ ಗುರಿ ಮೀರಿದ ಸಾಧನೆ ಮಾಡಲಾಗಿದೆ ಎಂದು ಕೇಂದ್ರದ ಪೆಟ್ರೋಲಿಯಂ ಖಾತೆಯ ರಾಜ್ಯ ಸಚಿವ ಚಿತ್ರನಟ ಸುರೇಶ್ ಗೋಪಿ, ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಅವರು ಕೇಳಿದ ಲಿಖಿತ ಪ್ರಶ್ನೆಗೆ ಉತ್ತರಿಸಿದ್ದಾರೆ. 2025ರ ಸೆ.30ರವರೆಗೆ ಒಟ್ಟು 5,826 ಸಿಎನ್ಜಿ ಕೇಂದ್ರಗಳನ್ನು ಸ್ಥಾಪಿಸುವ ಗುರಿಗೆ ವಿರುದ್ಧವಾಗಿ 8,357 ಸಿಎನ್ಜಿ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಸಿಎನ್ಜಿ ಬೇಡಿಕೆ ಮತ್ತು ಈ ನೈಸರ್ಗಿಕ ಅನಿಲದ ಲಭ್ಯತೆಯ ಮೇರೆಗೆ ಹೆಚ್ಚಿನ ಸಿಎನ್ಜಿ ಮಾರಾಟ ಕೇಂದ್ರಗಳನ್ನು ತೆರೆಯಲಾಗುತ್ತಿದೆ. ಈಗಿರುವ ಸಿಎನ್ಜಿ ಮಾರಾಟ ಕೇಂದ್ರಗಳನ್ನು ಆನ್ಲೈನ್ ಸ್ಟೇಶನ್ ಗಳಾಗಿ ಮೇಲ್ದರ್ಜೆಗೇರಿಸಲು ಈಗಾಗಲೇ ಸಿಜಿಡಿ (ಸಿಟಿ ಗ್ಯಾಸ್ ಡಿಸ್ಟ್ರಿಬ್ಯೂಟರ್) ಘಟಕಗಳಿಗೆ ಸೂಚನೆ ನೀಡಲಾಗಿದೆ ಎಂದು ಮಾಲಿವುಡ್ ನಟ ಸುರೇಶ್ ಗೋಪಿ ಹೇಳಿದ್ದಾರೆ. ಇದರಿಂದ ವಾಹನಗಳಿಗೆ ವೇಗವಾಗಿ ಇಂಧನವನ್ನು ತುಂಬಿಸಲು ಸಹಾಯವಾಗುತ್ತದೆ. ಸಿಎನ್ಜಿ ತಾಂತ್ರಿಕತೆ ತೊಂದರೆ ಮತ್ತು ಗೊಂದಲದ್ದರೆ ಪ್ರಗತಿ ಪರಿಶೀಲನಾ ಸಭೆ ನಡೆಸಲು ಸಹ ಆದೇಶ ನೀಡಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ. ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಸಿಎನ್ಜಿ ಕೊರತೆ ಮತ್ತು ಸರಬರಾಜಿನ ಸಮಸ್ಯೆಯಿಂದಾಗಿ ಜಿಲ್ಲೆಯ ಬಡ ರಿಕ್ಷಾಚಾಲಕರು ಮತ್ತು ವಾಹನ ಮಾಲಕರು ಕಿ.ಮೀ. ಉದ್ದದ ಸರದಿ ಸಾಲಿನಲ್ಲಿ ನಿಲ್ಲುತ್ತಿದ್ದಾರೆ. ಹೀಗಾಗಿ ಕರಾವಳಿ ಜಿಲ್ಲೆಗಳಿಗೆ ಹೆಚ್ಚುವರಿ ಸಿಎನ್ಜಿ ಸರಬರಾಜಿಗೆ ಆಗ್ರಹಿಸಿ ಸಂಸದ ಕೋಟ ಇಲಾಖೆಗೆ ಲಿಖಿತ ಪ್ರಶ್ನೆ ಕೇಳಿದ್ದರು. ದೇಶದಾದ್ಯಂತ ನೈಸರ್ಗಿಕ ಅನಿಲದ ಲಭ್ಯತೆಯನ್ನು ಹೆಚ್ಚಿಸಲು ಪಿಎನ್ಜಿಆರ್ಬಿ (ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ನಿಯಂತ್ರಣ ಮಂಡಳಿ) ಮೂಲಕ ಸುಮಾರು 34,223ಕಿ.ಮೀ. ಉದ್ದದ ನೈಸರ್ಗಿಕ ಪೈಪ್ಲೈನ್ ಅಳವಡಿಕೆ ವ್ಯವಸ್ಥೆಯನ್ನು ರಚಿಸಲು ಮತ್ತು ‘ಒಂದು ರಾಷ್ಟ್ರ, ಒಂದು ಅನಿಲ ಗ್ರಿಡ್’ ಕಲ್ಪನೆ ಕಾರ್ಯಗತಗೊಳಿಸಲು ಕ್ರಮ ಕೈಗೊಳ್ಳಲಾಗಿದೆ. ಇದೇ ವರ್ಷದಲ್ಲಿ ಕಾರ್ಯಾಚರಣೆಯ ಪೈಪ್ಲೈನ್ 25,429 ಕಿ.ಮೀ ಉದ್ದ ಹಾಗೂ 10,459 ಕಿ.ಮೀ ವ್ಯಾಪ್ತಿಯ ಪೈಪ್ಲೈನ್ಗಳು ನಿರ್ಮಾಣದ ವಿವಿಧ ಹಂತಗಳಲ್ಲಿವೆ. ಇದರೊಂದಿಗೆ ದೇಶದಲ್ಲಿ 6,20,428 ಕಿ.ಮೀ. ಗಾತ್ರದ ಕಿರು ಇಂಚು ಪೈಪ್ಲೈನ್ ಅಳವಡಿಕೆ ಪ್ರಗತಿಯಲ್ಲಿದೆ ಎಂದೂ ಸುರೇಶ್ ಗೋಪಿ ಉತ್ತರದಲ್ಲಿ ವಿವರಿಸಿದ್ದರು. ಅಲ್ಲದೇ, ಚಿಕ್ಕಮಗಳೂರು, ಹಾಸನ, ಕೊಡಗು ಜಿಲ್ಲೆಗಳ ಸಿಎನ್ಜಿ ನೆಟ್ವರ್ಕ್ ಅಭಿವೃದ್ಧಿಗಾಗಿ ಎಜಿಪಿ ಸಿಟಿ ಗ್ಯಾಸ್ ಪ್ರೈ.ಗೆ ಅಧಿಕಾರ ನೀಡಲಾಗಿದ್ದು, ಸದರಿ ಜಿಲ್ಲೆಗಳಲ್ಲಿ ಪೈಪ್ಲೈನ್ ಮೂಲಕ ನೈಸರ್ಗಿಕ ಅನಿಲ ಪೂರೈಸಲು ದಾಬೋಲ್-ಬೆಂಗಳೂರು ನೈಸರ್ಗಿಕ ಅನಿಲ ಪೈಪ್ಲೈನ್ ಕಾರ್ಯ ನಿರ್ವಹಿಸುತ್ತಿದೆ. ಎಂಡಬ್ಲ್ಯೂಪಿ (ಕನಿಷ್ಠ ಕಾರ್ಯ ಯೋಜನೆ) ಪ್ರಕಾರ 2029ರ ವೇಳೆಗೆ 121 ಹೆಚ್ಚುವರಿ ಸಿಎನ್ಜಿ ಕೇಂದ್ರಗಳನ್ನು ಸ್ಥಾಪಿಸಲಾಗುತ್ತದೆ. ಅಲ್ಲದೇ ಉಳಿದ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಲಾಗುವುದು ಎಂದೂ ಕೇಂದ್ರ ಸಚಿವರು ಲಿಖಿತ ಉತ್ತರ ದಲ್ಲಿ ತಿಳಿಸಿದ್ದಾರೆ.
ಗೂಗಲ್ ಬಳಿಕ ಮೈಕ್ರೋಸಾಫ್ಟ್ನಿಂದ ಭಾರತದಲ್ಲಿ ಬರೋಬ್ಬರಿ ₹1.5 ಲಕ್ಷ ಕೋಟಿ ಹೂಡಿಕೆ, ಬೆಂಗಳೂರಿಗೆ ಬಂಪರ್?
ಅಮೆರಿಕದ ಸಾಫ್ಟ್ವೇರ್ ದಿಗ್ಗಜ ಮೈಕ್ರೋಸಾಫ್ಟ್, ಭಾರತದ ಕೃತಕ ಬುದ್ಧಿಮತ್ತೆ ಕ್ಷೇತ್ರದ ಅಭಿವೃದ್ಧಿಗಾಗಿ ಬರೋಬ್ಬರಿ 1.57 ಲಕ್ಷ ಕೋಟಿ ರೂಪಾಯಿ ಹೂಡಿಕೆ ಮಾಡುವುದಾಗಿ ಘೋಷಿಸಿದೆ. ಮೈಕ್ರೋಸಾಫ್ಟ್ ಸಿಇಒ ಸತ್ಯ ನಾಡೆಲ್ಲಾ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ಈ ವಿಷಯ ತಿಳಿಸಿದ್ದಾರೆ. ಇದು ಏಷ್ಯಾದಲ್ಲೇ ಕಂಪನಿಯ ಅತಿದೊಡ್ಡ ಹೂಡಿಕೆಯಾಗಿದ್ದು, ಮುಂದಿನ ನಾಲ್ಕು ವರ್ಷಗಳಲ್ಲಿ ಡೇಟಾ ಸೆಂಟರ್, ಎಐ ಮೂಲಸೌಕರ್ಯ ಮತ್ತು ಕೌಶಲ್ಯ ತರಬೇತಿಗೆ ಈ ಹಣ ಬಳಕೆಯಾಗಲಿದೆ. ಗೂಗಲ್ ಮತ್ತು ಅಮೆಜಾನ್ ನಂತರ ಮೈಕ್ರೋಸಾಫ್ಟ್ ಈ ಹೂಡಿಕೆ ಮಾಡುತ್ತಿದ್ದು, ಇದು ಭಾರತವನ್ನು ಜಾಗತಿಕ ಟೆಕ್ ಹಬ್ ಆಗಿ ರೂಪಿಸಲು ಸಹಕಾರಿಯಾಗಲಿದೆ.
ಬಳ್ಳಾರಿ| ಕರ್ನಾಟಕ ಕಾರ್ಯನಿರತ ಪ್ರರ್ತಕರ್ತರ ಸಂಘದ ತಾಲೂಕು ಘಟಕಕ್ಕೆ ಪದಾಧಿಕಾರಿಗಳ ಆಯ್ಕೆ
ಬಳ್ಳಾರಿ : ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಕಂಪ್ಲಿ ತಾಲೂಕು ಘಟಕದ ಪದಾಧಿಕಾರಿಗಳ ಆಯ್ಕೆಗೆ ಚುನಾವಣೆ ಅತಿಥಿಗೃಹದ ಆವರಣದಲ್ಲಿ ಸೋಮವಾರ ನಡೆಯಿತು. ಸಂಘದ ಜಿಲ್ಲಾಧ್ಯಕ್ಷ ಎನ್.ವೀರಭದ್ರಗೌಡ ಮಾತನಾಡಿ, ಪತ್ರಕರ್ತರು ಸಮಾಜದ ಧ್ವನಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ರಾಜ್ಯದಲ್ಲಿನ ಬಹುತೇಕ ಪತ್ರಕರ್ತರು ಯಾವುದೇ ಜೀವನ ಭದ್ರತೆಯಿಲ್ಲದೇ ಸಂಕಷ್ಟದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸಮಾಜದಲ್ಲಿನ ಅಂಕು ಡೊಂಕು, ಸರಕಾರ ಹಾಗೂ ಜನ ಪ್ರತಿನಿಧಿಗಳನ್ನು ಎಚ್ಚರಿಸುವ ಹಾಗೂ ಸಾಮಾಜಿಕ ವ್ಯವಸ್ಥೆಯಲ್ಲಿ ವ್ಯತ್ಯಾಸವಾದಲ್ಲಿ ಬರಹ ಮೂಲಕ ಜಾಗೃತಿ ಮೂಡಿಸುವ ಪ್ರಾಮಾಣಿಕ ಪ್ರಯತ್ನ ನಡೆದಿದೆ ಎಂದು ತಿಳಿಸಿದರು. ತಾಲೂಕು ಘಟಕದ ಅಧ್ಯಕ್ಷರಾಗಿ ಬಂಗಿ ದೊಡ್ಡ ಮಂಜುನಾಥ, ಉಪಾಧ್ಯಕ್ಷರಾಗಿ ಕರಿ ವಿರುಪಾಕ್ಷಿ, ಪ್ರಧಾನ ಕಾರ್ಯದರ್ಶಿಯಾಗಿ ಪಿ.ವೀರೇಶ್, ಕಾರ್ಯದರ್ಶಿಯಾಗಿ ಎಸ್.ಯಮನಪ್ಪ, ಖಜಾಂಚಿಯಾಗಿ ಜೀರು ಗಾದಿಲಿಂಗ, ಸಮಿತಿ ಸದಸ್ಯರಾಗಿ ಎಂ.ಎಸ್.ವಿರೂಪಾಕ್ಷಯ್ಯ, ಸಿ.ವೆಂಕಟೇಶ, ಎಚ್.ಎಂ.ಪಂಡಿತಾರಾಧ್ಯ, ಬಿ.ರಸೂಲ್ ಇವರು ಅವಿರೋಧ ಆಯ್ಕೆಗೊಂಡರು. ಈ ವೇಳೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನರಸಿಂಹಮೂರ್ತಿ ಕುಲಕರ್ಣಿ, ಈನಾಡು ತೆಲಗು ಪತ್ರಕರ್ತರಾದ ಎಂ.ಚಂದ್ರದ್ರಶೇಖರ ಸೇರಿದಂತೆ ಇತರರು ಉಪಸ್ಥಿತರಿದ್ದರು.
ʻಚುನಾವಣಾ ಆಯುಕ್ತರ ಆಯ್ಕೆ ಸಮಿತಿಯಿಂದ ಸಿಜೆಐ ಹೊರಗಿಟ್ಟಿದ್ಯಾಕೆʼ: ರಾಹುಲ್ ಗಾಂಧಿ ಪ್ರಶ್ನೆ
ಬಿಜೆಪಿ ಸರ್ಕಾರದ ವಿರುದ್ಧ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ವಾಗ್ದಾಳಿ ನಡೆಸಿದರು. ಮತಗಳ್ಳತನಕ್ಕಿಂತ ದೊಡ್ಡ ದೇಶದ್ರೋಹ ಇನ್ನೊಂದಿಲ್ಲ. ಚುನಾವಣಾ ಆಯೋಗದ ಆಯುಕ್ತರನ್ನು ಆಯ್ಕೆ ಮಾಡುವ ಸಮಿತಿಯಲ್ಲಿ ಸರ್ಕಾರ ಸಿಜೆಐ ಅವರನ್ನು ಹೊರಗಿಟ್ಟಿದ್ದು ಯಾಕೆ? ಕುಲಪತಿಗಳ ಆಯ್ಕೆ ಆರ್ಎಸ್ಎಸ್ ಸಂಘಟನೆಗೆ ಬೇಕಾದವರ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತಿದೆ. ಜೊತೆಗೆ ಸಿಬಿಐ, ಇ.ಡಿ ಅಧಿಕಾರಿಗಳನ್ನು ತಮಗೆ ಬೇಕಾದಂಗೆ ಸರ್ಕಾರ ಬಳಕೆ ಮಾಡಿಕೊಳ್ಳುತ್ತಿದೆ ಎಂದು ಕಿಡಿಕಾರಿದರು.
ಹೆಬ್ರಿ | ಪೆರ್ಡೂರಿನಲ್ಲಿ ರಾಜ್ಯಮಟ್ಟದ ಸಂಗೀತ ಸ್ಪರ್ಧೆ ಉದ್ಘಾಟನೆ
ಹೆಬ್ರಿ, ಡಿ.9: ಯಾವುದೇ ಒಂದು ಪ್ರತಿಭೆ ಅನಾವರಣವಾಗಬೇಕಾದರೆ ಅದಕ್ಕೆ ಸೂಕ್ತ ವೇದಿಕೆ ಅಗತ್ಯ ಎಂದು ಪೆರ್ಡೂರು ಬಂಟರ ಸಂಘದ ಅಧ್ಯಕ್ಷ ಕೆ.ಶಾಂತರಾಮ ಸೂಡ ಹೇಳಿದ್ದಾರೆ. ಚಾಣಕ್ಯ ಮ್ಯೂಸಿಕ್ ಅಕಾಡೆಮಿ ಹೆಬ್ರಿ ಇವರ ನೇತೃತ್ವದಲ್ಲಿ ಕುಂಬಾರರ ಗುಡಿ ಕೈಗಾರಿಕಾ ಸಹಕಾರಿ ಸಂಘ ಪೆರ್ಡೂರು, ಉದಯ ಕೃಷ್ಣಯ್ಯ ಶೆಟ್ಟ ಚಾರಿಟೇಬಲ್ ಟ್ರಸ್ಟ್ ಸಹಯೋಗದೊಂದಿಗೆ ಪೆರ್ಡೂರು ಅನಂತ ಸೌರಭ ಸಭಾಂಗಣದಲ್ಲಿ ನಡೆದ ರಾಜ್ಯ ಮಟ್ಟದ ಟ್ರ್ಯಾಕ್ ಸಂಗೀತ ಸಮರದ ಸೆಮಿಫೈನಲ್ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಪೆರ್ಡೂರು ಕುಂಬಾರರ ಗುಡಿ ಕೈಗಾರಿಕಾ ಸಂಘದ ಅಧ್ಯಕ್ಷ ಸಂತೋಷ ಕುಲಾಲ್ ಅಧ್ಯಕ್ಷತೆ ವಹಿಸಿದ್ದರು. ಎಸ್.ಕೆ.ಗೋಲ್ಡಸ್ಮಿತ್ ಇಂಡಸ್ಟ್ರೀಯಲ್ ಕೋ- ಅಪರೇಟಿವ್ ಸೊಸೈಟಿ ಮಂಗಳೂರು ಇದರ ಅಧ್ಯಕ್ಷ ಉಪೇಂದ್ರ ಆಚಾರ್ಯ ಪೆರ್ಡೂರು ಮಾತನಾಡಿದರು. ಪೆರ್ಡೂರು ಶ್ರೀಅನಂತಪದ್ಮನಾಭ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಪ್ರಮೋದ್ ರೈ ಪಳಜೆ, ಉದ್ಯಮಿ ಸತೀಶ್ ಶೆಟ್ಟಿ ಕುತ್ಯಾರು ಬೀಡು, ಅನಂತಪದ್ಮನಾಭ ದೇವಳದ ಸ್ವಾಗತ ಸಮಿತಿಯ ಅಧ್ಯಕ್ಷ ಸಂದೀಪ್ ಶೆಟ್ಟಿ, ಚಾಣಕ್ಯ ಸಂಸ್ಥೆಯ ಪ್ರಾಂಶುಪಾಲೆ ವೀಣಾ ಯು.ಶೆಟ್ಟಿ, ಪ್ರವೀಣ್ ಪಟೇಲ್, ಪ್ರಸನ್ನ ಮುನಿಯಾಲು, ವನಿತಾ, ಅಮೃತ ಸುಕೇಶ್ ಕುಲಾಲ್, ನಿತ್ಯಾನಂದ ಭಟ್ ಮೊದಲಾದವರು ಉಪಸ್ಥಿತರಿದ್ದರು. ಸಂಗೀತ ನಿರ್ದೇಶಕ ರಮೇಶ್ ಡಿ., ಸಂಗೀತ ಗುರುಗಳಾದ ಸ್ಮಿತಾ ಭಟ್, ಶ್ರುತಿ ಭಟ್ ತೀರ್ಪುಗಾರರಾಗಿ ಭಾಗವಹಿಸಿದ್ದರು. ಚಾಣಕ್ಯ ಸಂಸ್ಥೆಯ ಅಧ್ಯಕ್ಷ ಉದಯ್ ಕುಮಾರ್ ಶೆಟ್ಟಿ ಸ್ವಾಗತಿಸಿ, ಮುದ್ರಾಡಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಚಂದ್ರಶೇಖರ್ ಭಟ್ ಬಲ್ಲಾಡಿ ಕಾರ್ಯಕ್ರಮ ನಿರೂಪಿಸಿದರು. ರಚಿತಾ ಕಬ್ಬಿನಾಲೆ ವಂದಿಸಿದರು. ಚಾಣಕ್ಯ ಡ್ಯಾನ್ಸ್ ಅಕಾಡೆಮಿ ಪೆರ್ಡೂರು ತಂಡದ ವಿದ್ಯಾರ್ಥಿಗಳಿಂದ ಆಕರ್ಷಕ ನೃತ್ಯ ವೈವಿಧ್ಯ ಕಾರ್ಯಕ್ರಮ ನಡೆಯಿತು.
ಉಡುಪಿ | ರೈತರ ಬೆಳೆವಿಮೆ ಪರಿಹಾರ ಮೊತ್ತ ಶೀಘ್ರವಾಗಿ ಮಂಜೂರಾತಿಗೆ ಮನವಿ
ಉಡುಪಿ, ಡಿ.9: ರೈತರ ಬೆಳೆ ವಿಮೆ ಪರಿಹಾರ ಮೊತ್ತವನ್ನು ತುರ್ತಾಗಿ ಬಿಡುಗಡೆ ಮಾಡುವಂತೆ ಉಡುಪಿ ಶಾಸಕ ಯಶ್ಪಾಲ್ ಎ.ಸುವರ್ಣ ಸರಕಾರಕ್ಕೆ ಮನವಿ ಸಲ್ಲಿಸಿದ್ದಾರೆ. ಸಂಕಷ್ಟಕ್ಕೊಳಗಾದ ರೈತರಿಗೆ ತಕ್ಷಣ ಪರಿಹಾರ ದೊರೆತರೆ ಕೃಷಿ ಚಟುವಟಿಕೆಗಳನ್ನು ಮುಂದುವರೆಸಿಕೊಂಡು ಹೋಗಲು ಸಹಾಯಕವಾಗುತ್ತದೆ ಎಂದು ಅವರು ತಿಳಿಸಿದ್ದಾರೆ. ಉಡುಪಿ ಜಿಲ್ಲೆಯಲ್ಲಿ ಈ ಬಾರಿ ವಾಡಿಕೆಗಿಂತ ಅಧಿಕ ಮಳೆಯಾಗಿದ್ದು, ಮೇ ತಿಂಗಳಿನಲ್ಲಿ ವಾಡಿಕೆಯ ಸರಾಸರಿ 166 ಮಿ.ಮೀ. ಬದಲಾಗಿ 837 ಮಿ.ಮೀ.ನಷ್ಟು ಮಳೆಯಾಗಿದೆ. ಶೇ.409ರಷ್ಟು ಹೆಚ್ಚುವರಿ ಮಳೆಯಾಗಿದೆ. ಜೂನ್ ಮಾಹೆಯಲ್ಲಿಯೂ ಅಧಿಕ ಮಳೆಯಾಗಿದ್ದು, ದೇಶದಲ್ಲಿ ಅತ್ಯಧಿಕವಾಗಿ ಉಡುಪಿ ಜಿಲ್ಲೆಯಲ್ಲಿ ದಾಖಲೆ ಮಳೆ ಆಗಿದೆ. ಪ್ರಸಕ್ತ ಸಾಲಿನಲ್ಲಿ ಮೇ 15ರಂದು ಪ್ರಾರಂಭಗೊಂಡ ಮಳೆಯು ನವೆಂಬರ್ ತಿಂಗಳ ಅಂತ್ಯದವರೆಗೂ ನಿರಂತರವಾಗಿ ಸುರಿದಿದ್ದು, ದೀರ್ಘಾವಧಿಯ ಮಳೆಗಾಲ ಎಂದೆನಿಸಿಕೊಂಡಿದೆ. ಅನೇಕ ರೈತರು ಇತ್ತೀಚಿನ ಅಕಾಲಿಕ ಮಳೆ, ಗಾಳಿ ಮತ್ತು ಪ್ರಕೃತಿ ವಿಕೋಪಗಳಿಂದ ಬೆಳೆ ನಷ್ಟ ಅನುಭವಿಸಿದ್ದು, ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ರೈತರು ಬೆಳೆ ವಿಮೆ ಪರಿಹಾರ ಬಾಕಿ ಉಳಿದಿರುವ ಹಿನ್ನೆಲೆಯಲ್ಲಿ ಪರಿಹಾರ ಬಿಡುಗಡೆಗೊಳಿಸುವಂತೆ ಮನವಿ ಮಾಡಿದ್ದಾರೆ.
ಕರ್ನಾಟಕ ಅಬಕಾರಿ 2ನೇ ತಿದ್ದುಪಡಿ ನಿಯಮಕ್ಕೆ ಹೈಕೋರ್ಟ್ ತಡೆ; ಪರವಾನಗಿ ಇ-ಹರಾಜು ಪ್ರಕ್ರಿಯೆಗೆ ಬ್ರೇಕ್
ಬೆಂಗಳೂರು: ರಾಜ್ಯದಲ್ಲಿ ಅಬಕಾರಿ ಸನ್ನದುಗಳನ್ನು ಇ-ಹರಾಜು ಮಾಡುವ ಉದ್ದೇಶದಿಂದ 2025 ನವೆಂಬರ್ 3ರಂದು ರಾಜ್ಯ ಸರ್ಕಾರ ಹೊರಡಿಸಿದ್ದ ಕರ್ನಾಟಕ ಅಬಕಾರಿ (ಭಾರತೀಯ ಹಾಗೂ ವಿದೇಶಿ ಮದ್ಯ ಮಾರಾಟ) ಎರಡನೇ ತಿದ್ದುಪಡಿ ನಿಯಮ-2025ಕ್ಕೆ ಹೈಕೋರ್ಟ್ ಮಧ್ಯಂತರ ತಡೆ ನೀಡಿದೆ. ಕರ್ನಾಟಕ ಫೆಡರೇಷನ್ ಆಫ್ ವೈನ್ ಮರ್ಚೆಂಟ್ಸ್ ಅಸೋಸಿಯೇಷನ್ನ ಅಧ್ಯಕ್ಷ ಎಸ್.ಗುರುಸ್ವಾಮಿ ಹಾಗೂ ಪ್ರಧಾನ ಕಾರ್ಯದರ್ಶಿ ಬಿ. ಗೋವಿಂದರಾಜ್ ಹೆಗ್ಡೆ ಮತ್ತಿತರರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ.ಎಸ್. ಹೇಮಲೇಖಾ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಮಧ್ಯಂತರ ಆದೇಶ ಮಾಡಿದೆ. ಇದರಿಂದ, ಸರ್ಕಾರ ಈ ತಿಂಗಳ ಅಂತ್ಯದಲ್ಲಿ ಮಾಡಲು ಉದ್ದೇಶಿಸಿದ್ದ ಬಾಕಿ ಅಬಕಾರಿ ಪರವಾನಗಿಗಳ ಇ-ಹರಾಜಿಗೆ ತಡೆ ಬಿದ್ದಂತಾಗಿದೆ. ಅರ್ಜಿ ಕುರಿತ ಮುಂದಿನ ಆದೇಶವರೆಗೆ 2025ರ ನಿಯಮ 5 ಮತ್ತು ನಿಯಮ 5ಎ ಜಾರಿಗೆ ತಡೆ ನೀಡಿ ವಿಚಾರಣೆಯನ್ನು ಡಿಸೆಂಬರ್ 12ಕ್ಕೆ ಮುಂದೂಡಿರುವ ಹೈಕೋರ್ಟ್, ಪ್ರತಿವಾದಿ ಸರ್ಕಾರ ಮಧ್ಯಂತರ ಆದೇಶದ ಮಾರ್ಪಾಡು ಅಥವಾ ತೆರವಿಗೆ ಅರ್ಜಿ ಸಲ್ಲಿಸಲು ಸ್ವತಂತ್ರವಿದೆ ಎಂದು ತಿಳಿಸಿದೆ. ಮೇಲ್ನೋಟಕ್ಕೆ ಕರ್ನಾಟಕ ಅಬಕಾರಿ (ಭಾರತೀಯ ಹಾಗೂ ವಿದೇಶಿ ಮದ್ಯ ಮಾರಾಟ) ಎರಡನೇ ತಿದ್ದುಪಡಿ ನಿಯಮ 5 ಮತ್ತು 5ಎ ಅಡಿಯಲ್ಲಿ ಪ್ರಸ್ತಾಪಿಸಿರುವ ಹೊಸ ಷರತ್ತುಗಳು, ಮೀಸಲು ಮತ್ತು ಅರ್ಹತಾ ಮಾನದಂಡ ಮತ್ತಿತರ ಅಂಶಗಳು ಮೂಲ ಕರ್ನಾಟಕ ಅಬಕಾರಿ ಕಾಯ್ದೆ 1965ರ ನಿಬಂಧನೆಗಳ ವ್ಯಾಪ್ತಿಯ ಹೊರಗಿದ್ದಂತಿವೆ. ಆದ್ದರಿಂದ, ಈ ಬಗ್ಗೆ ವಿಸ್ತೃತವಾದ ವಿಚಾರಣೆ ಹಾಗೂ ಪರಿಶೀಲನೆ ಅಗತ್ಯವಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಅರ್ಜಿದಾರರ ವಾದವೇನು? ವಿಚಾರಣೆ ವೇಳೆ ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲ ಡಿ.ಆರ್. ರವಿಶಂಕರ್ ಅವರು, ಸರ್ಕಾರ ಹಿಂದೆ ನವೀಕರಣವಾಗದ ಮತ್ತು ರದ್ದುಗೊಳಿಸಲಾದ ಅಬಕಾರಿ ಸನ್ನದುಗಳನ್ನು ಇ-ಹರಾಜು ಮಾಡಲು ಮುಂದಾಗಿದೆ. ಅದಕ್ಕಾಗಿ ಕರ್ನಾಟಕ ಅಬಕಾರಿ (ಭಾರತೀಯ ಹಾಗೂ ವಿದೇಶಿ ಮದ್ಯ ಮಾರಾಟ) ಎರಡನೇ ತಿದ್ದುಪಡಿ ನಿಯಮ 5 ಮತ್ತು 5ಎ ಪರಿಚಯಿಸಲಾಗಿದ್ದು, ಅದು ಮೂಲ ಅಬಕಾರಿ ಕಾಯ್ದೆ ವ್ಯಾಪ್ತಿಯನ್ನು ಉಲ್ಲಂಘಿಸುತ್ತದೆ. ಜತೆಗೆ ನಿಯಮ 5ರಲ್ಲಿ ಮೂಲ ಕಾಯ್ದೆಗೆ ವಿರುದ್ಧವಾಗಿ ಪರವಾನಗಿ ಹಂಚಿಕೆಗೆ ಕೆಲ ನಿರ್ಬಂಧಗಳನ್ನು ವಿಧಿಸಲಾಗುತ್ತಿದೆ. ಅವು ಹಿಂದಿನ ಆದೇಶಗಳಿಗೆ ವಿರುದ್ಧವಾಗಿವೆ ಎಂದರು. ಪ್ರಕರಣದ ಹಿನ್ನೆಲೆ: ಹೆಚ್ಚುವರಿ ಅಬಕಾರಿ ಆದಾಯ ಸಂಗ್ರಹಿಸುವ ಸಲುವಾಗಿ ಸರ್ಕಾರ 2025-26ನೇ ಸಾಲಿನ ಬಜೆಟ್ನಲ್ಲಿ ಅಬಕಾರಿ ಪರವಾನಗಿಗಳಿಗೆ ಇ-ಹರಾಜು ಪರಿಚಯಿಸುವುದಾಗಿ ಘೋಷಿಸಿತ್ತು. ಅದರಂತೆ ಇಲಾಖೆ ಹಿಂದೆ ನವೀಕರಣವಾಗದ ಅಥವಾ ಲ್ಯಾಪ್ಸ್ ಆದ ಸುಮಾರು 500 ಅಬಕಾರಿ ಸನ್ನದುಗಳನ್ನು ಪಟ್ಟಿ ಮಾಡಿ ಅವುಗಳನ್ನು ಹರಾಜು ಮಾಡಲು ಸಿದ್ಧತೆ ನಡೆಸಿದೆ. ಅದಕ್ಕೆ ಅನುಕೂಲವಾಗುವಂತೆ ಕಳೆದ ನವೆಂಬರ್ನಲ್ಲಿ ಕರ್ನಾಟಕ ಅಬಕಾರಿ (ಭಾರತೀಯ ಹಾಗೂ ವಿದೇಶಿ ಮದ್ಯ ಮಾರಾಟ) ಎರಡನೇ ತಿದ್ದುಪಡಿ ನಿಯಮ 5 ಮತ್ತು 5ಎ ಕರಡು ಪ್ರಕಟಿಸಿತ್ತು. ಆನಂತರ, ಅದನ್ನು ಅಂತಿಮಗೊಳಿಸಿ ರಾಜ್ಯಪತ್ರದಲ್ಲಿ ಪ್ರಕಟಿಸಲಾಗಿತ್ತು. ಇದನ್ನು ಹೈಕೋರ್ಟ್ನಲ್ಲಿ ಪ್ರಶ್ನಿಸಲಾಗಿದೆ.
ಉಡುಪಿ | ನಾಗರಿಕ ಸಮಾಜದ ಸಂಪರ್ಕವಿಲ್ಲದೆ ಬದುಕುತ್ತಿದ್ದ ಒಂದೇ ಮನೆಯ ಮೂವರ ರಕ್ಷಣೆ
ಉಡುಪಿ, ಡಿ.9: ನಾಗರಿಕ ಸಮಾಜದ ಸಂಪರ್ಕವಿಲ್ಲದೆ, ಅನಾಗರಿಕವಾಗಿ ಬದುಕು ಸಾಗಿಸುತ್ತಿದ್ದ ಮೂವರನ್ನು ರಕ್ಷಿಸಿರುವ ಘಟನೆ ಶಿರ್ವ ಪೋಲಿಸ್ ಠಾಣೆಯ ವ್ಯಾಪ್ತಿಯ ಮೂಡುಬೆಳ್ಳೆ ಎಂಬಲ್ಲಿ ನಡೆದಿದೆ. ಅಂದಾಜು ಎಪ್ಪತ್ತು ವರ್ಷ ಆಸುಪಾಸಿನ ಎಡ್ವಿನ್ ಅಮ್ಮನ್ನ, ಅವರ ಪತ್ನಿ ಜ್ಯೋತಿ ಅಮ್ಮನ್ನ ಹಾಗೂ ಮಗಳು ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದು, ಇವರು ಕಳೆದ ಹಲವು ವರ್ಷಗಳಿಂದ ನಾಗರಿಕ ಸಮಾಜದ ಸಂಪರ್ಕ ಇಲ್ಲದೆ ಮನೆಯೊಳಗೆ ಬದುಕು ನಡೆಸುತ್ತಿದ್ದರು. ಈ ಬಗ್ಗೆ ಬಂದ ಮಾಹಿತಿಯಂತೆ ಜಿಲ್ಲಾ ನಾಗರೀಕ ಸಮಿತಿಯ ನೇತೃತ್ವದಲ್ಲಿ ಈ ಮೂವರನ್ನು ರಕ್ಷಿಸಿ ಕಾರ್ಕಳದ ಹೊಸಬೆಳಕು ಆಶ್ರಮಕ್ಕೆ ದಾಖಲಿಸಲಾಗಿದೆ. ಆಪ್ತ ಸಮಾಲೋಚನೆ ನಡೆಸಿದಾಗ ವೃದ್ಧರು ಮನೆಯಲ್ಲಿ ಚಿನ್ನಾಭರಣಗಳು ಇರುವುದಾಗಿ ಹೇಳಿಕೊಂಡಿದ್ದರು. ಇಲಾಖೆಯ ಸಮಕ್ಷಮದಲ್ಲಿ ಹುಡುಕಾಟ ನಡೆಸಿ ಚಿನ್ನಾಭರಣಗಳನ್ನು ಅವರ ವಶಕ್ಕೆ ನೀಡಲಾಗಿದೆ. ಈ ಕಾರ್ಯಚರಣೆಯಲ್ಲಿ ನಾಗರೀಕ ಸಮಿತಿಯ ಸಂಚಾಲಕ ನಿತ್ಯಾನಂದ ಒಳಕಾಡು, ಗ್ರಾಪಂ ಅಧ್ಯಕ್ಷೆ ದಿವ್ಯ ವಿ.ಆಚಾರ್ಯ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಆಶಾಲತಾ ಮೂಡುಬೆಳ್ಳೆ, ವಿನ್ಸೆಂಟ್ ಫೆರ್ನಾಂಡಿಸ್, ಎಸ್ಸೈ ಮಂಜುನಾಥ್, 112 ಸಹಾಯವಾಣಿ ಕೇಂದ್ರದ ಎಎಸ್ಸೈ ಗಂಗಾಧರ, ಹೊಸಬೆಳಕು ಆಶ್ರಮದ ಮೆಲ್ವೀಚಾರಕ ಗೌರೀಶ್, ರವಿರಾಜ್ ಆಚಾರ್ಯ, ಮೂಡುಬೆಳ್ಳೆ, ಸುಧಾಕರ್ ಪೂಜಾರಿ, ಧನಲಕ್ಷ್ಮಿ ಪೂಜಾರಿ ಮೂಡುಬೆಳ್ಳೆ, ವಿಜಯಪ್ರಕಾಶ್ ಮೂಡುಬೆಳ್ಳೆ, ಪ್ರಕಾಶ್ ಮೂಡುಬೆಳ್ಳೆ ಭಾಗವಹಿಸಿದ್ದರು.
ಉಡುಪಿ | ಮೈಸೂರು ವಿಭಾಗ ಮಟ್ಟದ ಸಾಂಸ್ಕೃತಿಕ ಸ್ಪರ್ಧೆ ಉದ್ಘಾಟನೆ
ಉಡುಪಿ, ಡಿ.9: ಕರ್ನಾಟಕ ರಾಜ್ಯ ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ನಿಧಿ ಮತ್ತು ಶಾಲಾ ಶಿಕ್ಷಣ ಇಲಾಖೆ(ಪ. ಪೂ.), ಶಾಲಾ ಶಿಕ್ಷಣ ಮತುತಿ ಸಾಕ್ಷರತಾ ಇಲಾಖೆ(ಪ. ಪೂ. ವಿಭಾಗ), ಉಡುಪಿ ಜಿಲ್ಲಾ ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲರ ಸಂಘ ಹಾಗೂ ಪೂರ್ಣಪ್ರಜ್ಞ ಪದವಿ ಪೂರ್ವ ಕಾಲೇಜಿನ ವತಿಯಿಂದ ಮೈಸೂರು ವಿಭಾಗ ಮಟ್ಟದ ಸಾಂಸ್ಕೃತಿಕ ಸ್ಪರ್ಧೆಯನ್ನು ಮಂಗಳವಾರ ಉಡುಪಿ ಪೂರ್ಣಪ್ರಜ್ಞ ಅಡಿಟೋರಿಯಂನಲ್ಲಿ ಆಯೋಜಿಸಲಾಗಿತ್ತು. ಸ್ಪರ್ಧೆಯನ್ನು ಉದ್ಘಾಟಿಸಿದ ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನಕರ ಹೇರೂರು ಮಾತನಾಡಿ, ಶಿಕ್ಷಣಕ್ಕೆ ಪೂರಕವಾದ ಕ್ರೀಡೆ, ಸಾಂಸ್ಕೃತಿಕ ಸಹಿತ ನಾನಾ ನೆಲೆಗಳಲ್ಲಿ ಸಮಾಜವನ್ನು ಕಟ್ಟುವ, ತಿದ್ದುವ ಕೆಲಸವಾಗಬೇಕು. ವಿದ್ಯಾರ್ಥಿಗಳು ಶಿಕ್ಷಣದ ಜತೆಗೆ ಶಿಕ್ಷಣೇತರ ಕ್ಷೇತ್ರಗಳಲ್ಲೂ ತಮ್ಮ ಪ್ರತಿಭೆ, ಸಾಮರ್ಥ್ಯ ತೋರಬೇಕು. ನಾನಾ ಕ್ಷೇತ್ರಗಳಲ್ಲಿ ವಿದ್ಯಾರ್ಥಿಗಳು ತೊಡಗಿಸಲು, ಬೆಳವಣಿಗೆ ಹೊಂದಲು ವಿವಿಧ ವಲಯಗಳಿಂದ ಪ್ರೋತ್ಸಾಹ ಅತ್ಯಗತ್ಯ ಎಂದು ಹೇಳಿದರು. ಅಧ್ಯಕ್ಷತೆ ವಹಿಸಿದ್ದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪನಿರ್ದೇಶಕ ಮಾರುತಿ ಮಾತನಾಡಿ, ಸಾಂಸ್ಕೃತಿಕ ಸಮೃದ್ಧಿ, ವಿವಿಧತೆಯಲ್ಲಿ ಏಕತೆಯೇ ಭಾರತದ ಹೆಗ್ಗಳಿಕೆ. ಸೋಲು ಗೆಲುವನ್ನು ಸಮತೋಲನದಿಂದ ಸ್ವೀಕರಿಸಬೇಕು. ಕಠಿಣ ಪರಿಶ್ರಮವಿದ್ದರೆ ಸಾಧನೆ ಸಾಧ್ಯ ಎಂದು ತಿಳಿಸಿದರು. ಪೂರ್ಣಪ್ರಜ್ಞ ಎಜುಕೇಶನ್ ಕೌನ್ಸಿಲ್ ಆಡಳಿತ ಮಂಡಳಿ ಗೌರವ ಕಾರ್ಯದರ್ಶಿ ಡಾ.ಶ್ರೀರಮಣ ಐತಾಳ್, ಪೂರ್ಣಪ್ರಜ್ಞ ಸ್ವಾಯತ್ತ ಪದವಿ ಕಾಲೇಜಿನ ಪ್ರಾಂಶುಪಾಲ ಡಾ.ರಾಮು ಎ. ಮಾತನಾಡಿದರು. ಉಡುಪಿ ಅದಮಾರು ಮಠ ಶಿಕ್ಷಣ ಸಂಸ್ಥೆಯ ಉಪ ಆಡಳಿತಾಧಿಕಾರಿ ಪುಂಡರೀಕಾಕ್ಷ ಕೊಡಂಚ, ಉಡುಪಿ ಜಿಲ್ಲಾ ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲರ ಸಂಘದ ಅಧ್ಯಕ್ಷ ಮಂಜುನಾಥ ಭಟ್, ಉಡುಪಿ ಜಿಲ್ಲಾ ಅನುದಾನಿತ/ಅನುದಾನರಹಿತ ಕಾಲೇಜುಗಳ ಪ್ರಾಂಶುಪಾಲರ ಸಂಘದ ಅಧ್ಯಕ್ಷ ಡಾ. ದಯಾನಂದ ಪೈ, ಉಡುಪಿ ಜಿಲ್ಲಾ ಅನುದಾನಿತ/ಅನುದಾನರಹಿತ ಕಾಲೇಜುಗಳ ಪ್ರಾಂಶುಪಾಲರ ಸಂಘದ ಸಾಂಸ್ಕೃತಿಕ ಕಾರ್ಯದರ್ಶಿ ವಿಜಯ್ ರಾವ್ ಉಪಸ್ಥಿತರಿದ್ದರು. ಪೂರ್ಣಪ್ರಜ್ಞ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಸಂತೋಷ್ ಕುಮಾರ್ ಸ್ವಾಗತಿಸಿದರು. ಕನ್ನಡ ಉಪನ್ಯಾಸಕ ರಮಾನಂದ ರಾವ್ ಕಾರ್ಯಕ್ರಮ ನಿರೂಪಿಸಿದರು. ಪ್ರಾಂಶುಪಾಲರ ಸಂಘದ ಸಾಂಸ್ಕೃತಿಕ ಕಾರ್ಯದರ್ಶಿ ಜಗದೀಶ್ ನಾವುಡ ವಂದಿಸಿದರು.
ವಿಜಯನಗರ| ಡಿ.21ರಿಂದ ಪೋಲಿಯೋ ಲಸಿಕಾ ಕಾರ್ಯಕ್ರಮ: ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ
ವಿಜಯನಗರ: ಜಿಲ್ಲೆಯಾದ್ಯಂತ ಡಿ.21 ರಿಂದ 24ರವರೆಗೆ ರಾಷ್ಟ್ರೀಯ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮ ನಡೆಯಲಿದ್ದು, ಐದು ವರ್ಷದೊಳಗಿನ ಯಾವುದೇ ಮಗುವು ಲಸಿಕೆಯಿಂದ ವಂಚಿತವಾಗದಂತೆ ನಿಗಾ ವಹಿಸಬೇಕೆಂದು ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ತಿಳಿಸಿದ್ದಾರೆ. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಏರ್ಪಡಿಸಿದ್ದ ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮದ ಪೂರ್ವ ಸಿದ್ದತಾ ಸಭೆ, ಡಿಟಿಎಫ್ಐ ದಡಾರ ಮತ್ತು ರುಬೆಲ್ಲಾ ನಿರ್ಮೂಲನ ಕಾರ್ಯಕ್ರಮದ ಅಂತರ ಇಲಾಖಾ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಕವಿತಾ ಎಸ್.ಮನ್ನಿಕೇರಿ, ಪೊಲೀಯೋ ಮುಕ್ತ ಭಾರತ ನಿರ್ಮಾಣಕ್ಕೆ ಸರ್ಕಾರಗಳು ಹೆಚ್ಚಿನ ಉತ್ತೇಜನ ನೀಡಿದ ಹಿನ್ನಲೆಯಲ್ಲಿ ಸದ್ಯಕ್ಕೆ ದೇಶದಲ್ಲಿ ಪೋಲಿಯೋ ಪ್ರಕರಣಗಳು ದಾಖಲಾಗದಿರುವುದು ಹೆಮ್ಮೆಯ ವಿಷಯ. ಅದರೂ ನೆರೆಯ ದೇಶಗಳಲ್ಲಿ ಪೊಲೀಯೋ ಹಾವಳಿ ಇರುವುದರಿಂದ ನಮ್ಮಲ್ಲಿ ನಿರ್ಲಕ್ಷ್ಯ ಸಲ್ಲದು. ವಿವಿಧ ಇಲಾಖೆಗಳ ಸಹಕಾರ ತೆಗೆದುಕೊಂಡು ಲಸಿಕಾ ಕಾರ್ಯಕ್ರಮ ಯಶಸ್ವಿಗೊಳಿಸಬೇಕು. ರಾಷ್ಟ್ರೀಯ ಪಲ್ಸ್ ಪೋಲಿಯೊ ಕಾರ್ಯಕ್ರಮದ ಬಗ್ಗೆ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಜನರಿಗೆ ಲಸಿಕೆಯ ಕುರಿತು ಹೆಚ್ಚಿನ ಜಾಗೃತಿ ಮೂಡಿಸಬೇಕು ಎಂದು ಹೇಳಿದರು. ಜಿಲ್ಲಾ ಆರೋಗ್ಯಾಧಿಕಾರಿ ಡಾ.ಶಂಕರ್ ನಾಯ್ಕ್ ಎಲ್.ಆರ್ ಮಾತನಾಡಿ, ಜಿಲ್ಲೆಯಲ್ಲಿ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ 5 ವರ್ಷದೊಳಗಿನ ಮಕ್ಕಳ ಸಂಖ್ಯೆ 1,21,585 ಇದ್ದು, ಜಿಲ್ಲೆಯಲ್ಲಿ ಒಟ್ಟು 1040 ಕೇಂದ್ರಗಳಲ್ಲಿ ಲಸಿಕೆ ಹಾಕಲಾಗುತ್ತದೆ. ಒಟ್ಟು 923 ತಂಡಗಳನ್ನು ರಚಿಸಲಾಗಿದೆ. 4 ಮೊಬೈಲ್ ತಂಡಗಳು ಹಾಗೂ ಬಸ್ ನಿಲ್ದಾಣ, ರೈಲ್ವೇ ಸ್ಟೆಷನ್ ಮತ್ತು ಪ್ರಮುಖ ವೃತ್ತಗಳು ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ 50 ಟ್ರಾನ್ಸಿಟ್ ಕೇಂದ್ರಗಳನ್ನು ಸ್ಥಾಪಿಸಲಾಗುತ್ತದೆ. 2170 ಲಸಿಕಾ ಕಾರ್ಯಕರ್ತರನ್ನು ನಿಯೋಜನೆ ಮಾಡಲಾಗಿದೆ. ಮೊದಲ ದಿನ ಬೂತ್ ಮಟ್ಟದಲ್ಲಿ ನಂತರ ಮೂರು ದಿನಗಳ ಕಾಲ ಮನೆ ಮನೆಗೆ ಭೇಟಿ ನೀಡಿ ಲಸಿಕೆ ಹಾಕಲಾಗುತ್ತದೆ ಎಂದು ಹೇಳಿದರು.
ಹೊಸದಿಲ್ಲಿ: ಚುನಾವಣಾ ಸುಧಾರಣೆಗಳ ಕುರಿತು ಲೋಕಸಭೆಯಲ್ಲಿ ಮಂಗಳವಾರ ನಡೆದ ಚರ್ಚೆಯಲ್ಲಿ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಕೇಂದ್ರ ಸರ್ಕಾರದ ನಿರ್ಧಾರಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಮುಖ್ಯ ಚುನಾವಣಾ ಆಯುಕ್ತರು ಮತ್ತು ಇತರ ಚುನಾವಣಾ ಆಯುಕ್ತರ ನೇಮಕಾತಿಗಾಗಿ ರಚಿಸಲಾದ ಆಯ್ಕೆ ಸಮಿತಿಯಿಂದ ಭಾರತದ ಮುಖ್ಯ ನ್ಯಾಯಮೂರ್ತಿಯವರನ್ನು ಕೈಬಿಟ್ಟ ಕ್ರಮದ ಹಿಂದೆ ಇರುವ ಉದ್ದೇಶವೇನು ಎಂದು ಅವರು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರನ್ನು ನೇರವಾಗಿ ಪ್ರಶ್ನಿಸಿದರು. “CJI ಅವರನ್ನು ಆಯ್ಕೆ ಸಮಿತಿಯಿಂದ ಏಕೆ ತೆಗೆದುಹಾಕಲಾಯಿತು? CJI ಅವರ ಮೇಲೆ ನಮಗೆ ನಂಬಿಕೆಯಿಲ್ಲವೇ?” ಎಂದು ರಾಹುಲ್ ಗಾಂಧಿ ತೀಕ್ಷ್ಣವಾಗಿ ಪ್ರಶ್ನಿಸಿದರು. ವಿರೋಧ ಪಕ್ಷದ ನಾಯಕರಾಗಿ ಸಮಿತಿಯಲ್ಲಿದ್ದರೂ, ಸರ್ಕಾರದ ಸಂಖ್ಯಾಬಲದ ನಡುವೆ ತಮ್ಮ ಧ್ವನಿ ನಿಶ್ಶಬ್ದವಾಗಿಬಿಟ್ಟಿದೆ ಎಂದು ಅವರು ಆಕ್ಷೇಪಿಸಿದರು. “ಒಂದು ಕಡೆ ಪ್ರಧಾನಿ, ಮತ್ತೊಂದು ಕಡೆ ಗೃಹ ಸಚಿವರು. ಆ ಸಭೆಯಲ್ಲಿ ನನ್ನ ಧ್ವನಿಗೆ ಅವಕಾಶವೇ ಇಲ್ಲ,” ಎಂದು ಅವರು ಹೇಳಿದರು. 2023ರಲ್ಲಿ ಅಂಗೀಕರಿಸಿದ ನೂತನ ಕಾನೂನನ್ನು ಉಲ್ಲೇಖಿಸಿದ ರಾಹುಲ್ ಗಾಂಧಿ, ಈ ಕಾನೂನು ಪ್ರಧಾನ ಮಂತ್ರಿ ಮತ್ತು ವಿರೋಧ ಪಕ್ಷದ ನಾಯಕರ ಜೊತೆಗೆ ಮೂರನೇ ಸದಸ್ಯರಾಗಿ ಕೇಂದ್ರ ಸಚಿವರನ್ನು ಸೇರಿಸುವ ಮೂಲಕ ಆಯ್ಕೆ ಸಮಿತಿಯ ರಚನೆಯನ್ನು ಬದಲಿಸಿತ್ತು. ನ್ಯಾಯಾಂಗದ ಹಸ್ತಕ್ಷೇಪವನ್ನು ಸಮಿತಿಯಿಂದ ದೂರ ಮಾಡುವ ಈ ಕ್ರಮದ ಉದ್ದೇಶವೇನು? ಎಂದು ಗಾಂಧಿ ಗಂಭೀರವಾಗಿ ಪ್ರಶ್ನಿಸಿದರು. ಮುಖ್ಯ ಚುನಾವಣಾ ಆಯುಕ್ತರು ಮತ್ತು ಇತರ ಆಯುಕ್ತರ (ನೇಮಕಾತಿ, ಸೇವಾ ಷರತ್ತುಗಳು ಮತ್ತು ಅಧಿಕಾರಾವಧಿ) ಕಾಯ್ದೆಯು ಆಯೋಗದ ಅಧಿಕಾರಿಗಳಿಗೆ ತಮ್ಮ ಹುದ್ದೆಯಲ್ಲಿ ಮಾಡಿದ ಕ್ರಮಗಳಿಗೆ ಯಾವುದೇ ಕಾನೂನಾತ್ಮಕ ಕ್ರಮ ಕೈಗೊಳ್ಳಲು ಅವಕಾಶ ನೀಡುವುದಿಲ್ಲ. ಈ ವಿಧಾನದ ಅಗತ್ಯವೇನು ಎಂದು ಬಹಿರಂಗಪಡಿಸಿ ಎಂದು ರಾಹುಲ್ ಗಾಂಧಿ ಆಗ್ರಹಿಸಿದರು. ಚುನಾವಣಾ ಆಯೋಗವನ್ನು ನಿಯಂತ್ರಿಸುವ ಪ್ರಯತ್ನದ ಪರಿಣಾಮವೇನು? ಎಂಬ ಪ್ರಶ್ನೆಯನ್ನು ಎತ್ತಿದ ರಾಹುಲ್ ಗಾಂಧಿ, ಚುನಾವಣಾ ದಿನಾಂಕಗಳು ಪ್ರಧಾನ ಮಂತ್ರಿಯ ಪ್ರಚಾರ ವೇಳಾಪಟ್ಟಿಗೆ ಹೊಂದುವಂತೆ ಘೋಷಿಸಲಾಗುತ್ತಿವೆ ಎಂದು ಆರೋಪಿಸಿದರು. “ನನ್ನ ಯಾವುದೇ ಪ್ರಶ್ನೆಗಳಿಗೆ ಆಯೋಗ ಉತ್ತರಿಸಿಲ್ಲ,” ಎಂದು ರಾಹುಲ್ ಗಾಂಧಿ ಇದೇ ವೇಳೆ ಆಕ್ರೋಶ ವ್ಯಕ್ತಪಡಿಸಿದರು. ಮಧ್ಯಪ್ರದೇಶ, ಉತ್ತರ ಪ್ರದೇಶ, ಬಿಹಾರ ಸೇರಿದಂತೆ ಹಲವು ರಾಜ್ಯಗಳಲ್ಲಿ ಮತದಾರರ ಪಟ್ಟಿಗಳಲ್ಲಿನ ಗಂಭೀರ ವ್ಯತ್ಯಾಸಗಳ ಉದಾಹರಣೆಗಳನ್ನು ಉಲ್ಲೇಖಿಸಿದ ರಾಹುಲ್ ಗಾಂಧಿ, “ಬಿಹಾರದಲ್ಲಿ SIR ನಂತರ ಮತದಾರರ ಪಟ್ಟಿಯಲ್ಲಿ 1.2 ಲಕ್ಷ ನಕಲಿ ಫೋಟೋಗಳು ಪತ್ತೆಯಾಗಿವೆ. ಇದು ನೀವು ಚುನಾವಣೆಗಳನ್ನು ಗೆಲ್ಲುವ ರೀತಿ,” ಎಂದು ಗಾಂಧಿ ಎಂದು ತೀವ್ರವಾಗಿ ವಾಗ್ದಾಳಿ ನಡೆಸಿದರು. ಚುನಾವಣಾ ವ್ಯವಸ್ಥೆಯ ಸುಧಾರಣೆಗೆ ರಾಹುಲ್ ಗಾಂಧಿ ಮೂರು ಸಲಹೆಗಳನ್ನು ನೀಡಿದರು. ಚುನಾವಣೆಗೆ ಒಂದು ತಿಂಗಳ ಮೊದಲು ಯಂತ್ರಗಳು ಓದಬಲ್ಲ ಮತದಾರರ ಪಟ್ಟಿಗಳನ್ನು ಎಲ್ಲ ಪಕ್ಷಗಳಿಗೆ ಒದಗಿಸಬೇಕು ಎಂದು ಅವರು ಮನವಿ ಮಾಡಿದರು. ಸಿಸಿಟಿವಿ ದೃಶ್ಯಾವಳಿ ನಾಶ ಮಾಡಲು ಅವಕಾಶ ನೀಡುವ ಕಾನೂನನ್ನು ಹಿಂಪಡೆಯಬೇಕೆಂದು ಅವರು ಆಗ್ರಹಿಸಿದರು. ಇವಿಎಂನ ವಿನ್ಯಾಸ ಹೇಗಿದೆ? ರಾಜಕೀಯ ಪಕ್ಷಗಳಿಗೆ ಅದನ್ನು ಲಭ್ಯವಾಗುವಂತೆ ಮಾಡಬೇಕೆಂದು ಅವರು ಆಗ್ರಹಿಸಿದರು.
ಉಡುಪಿ | ಡಿ.13ರಂದು ಜಿಲ್ಲೆಯ 4 ನ್ಯಾಯಾಲಯಗಳ ಆವರಣದಲ್ಲಿ ಲೋಕ ಅದಾಲತ್
7,534 ಪ್ರಕರಣಗಳ ಇತ್ಯರ್ಥದ ಗುರಿ : ನ್ಯಾ.ಗಂಗಣ್ಣವರ್
ಸಂವಿಧಾನವನ್ನು ಬದಲಾಯಿಸುವುದೇ ಬಿಜೆಪಿ, ಆರೆಸ್ಸೆಸ್ ಅಜೆಂಡಾ: ಸಾತಿ ಸುಂದರೇಶ್
ಕಲಬುರಗಿ: ಸಂವಿಧಾನ ಬದಲಾಯಿಸುವುದೇ ಆರೆಸ್ಸೆಸ್ ಮತ್ತು ಬಿಜೆಪಿಯ ಅಜೆಂಡಾವಾಗಿದೆ ಎಂದು ಸಿಪಿಐ ರಾಜ್ಯ ಕಾರ್ಯದರ್ಶಿ ಸಾತಿ ಸುಂದರೇಶ್ ಹೇಳಿದ್ದಾರೆ. ನಗರದ ಜಗತ್ ವೃತ್ತದಲ್ಲಿ ಮಂಗಳವಾರ ನಡೆದ ಸಿಪಿಐ ಪಕ್ಷದ ಶತಮಾನೋತ್ಸವ ಸಮಾರಂಭದ ಬಹಿರಂಗ ಸಭೆ ಮತ್ತು ಜಾಥಾ ಸ್ವಾಗತ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಸಾತಿ ಸುಂದರೇಶ್, ಸಂವಿಧಾನವನ್ನು ಬದಲಿಸುವುದಕ್ಕೆ ಅವಕಾಶ ಮಾಡಿಕೊಡದೆ ನಾವೆಲ್ಲರೂ ಒಂದಾಗಿ ಸಂವಿಧಾನ ಉಳಿಸಲು ಹೋರಾಟ ಮಾಡಬೇಕಿದೆ ಎಂದು ಹೇಳಿದರು. ಸಮತಾ ರಾಜ್ಯದ ಕನಸುಗಳೊಂದಿಗೆ ಕಳೆದ 1925 ರಲ್ಲಿ ಜನ್ಮ ತಾಳಿದ ಸಿಪಿಐ ಪಕ್ಷ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿತ್ತು. ಇದೀಗ ಬಂಡವಾಳಶಾಹಿ ಮತ್ತು ಕೋಮುವಾದಿ ಶಕ್ತಿಗಳ ಹಾಗೂ ಶ್ರಮಿಕ ಕಾರ್ಮಿಕ, ರೈತ, ಬಡವರ ವಿರೋಧಿ ಸರ್ಕಾರಗಳ ವಿರುದ್ಧ ಹೋರಾಟ ಮಾಡಲಾಗುತ್ತಿದೆ.ರಾಜ್ಯದಲ್ಲಿಯೇ ಆರ್ಥಿಕ ತಲಾದಾಯದಲ್ಲಿ ಕಲಬುರಗಿ ಕೊನೆ ಸ್ಥಾನದಲ್ಲಿದೆ. ಈ ತಲಾದಾಯ ಹೆಚ್ಚಿಸಲು ಸರ್ಕಾರ ಕ್ರಮಕೈಗೊಳ್ಳಬೇಕು. ಕಲ್ಯಾಣ ಕರ್ನಾಟಕದಲ್ಲಿ ಕೃಷಿ ವಲಯ ಮತ್ತು ಕೈಗಾರಿಕೆ ಘಟಕಗಳು ಸ್ಥಾಪನೆಗಾಗಿ ಪಕ್ಷ ಹೋರಾಟ ರೂಪಿಸಲು ನಾವೆಲ್ಲ ಸಂಕಲ್ಪ ಮಾಡಬೇಕು ಎಂದರು. ರಾಜ್ಯ ಮಂಡಳಿ ಸದಸ್ಯ ಕೆ.ಎಸ್.ಜನಾರ್ಧನ್ ಮಾತನಾಡಿ, ಮೋದಿ ನೇತೃತ್ವದ ಬಿಜೆಪಿ ಆರೆಸ್ಸೆಸ್ ನಿರ್ದೇಶನದಂತೆ ದೇಶದ ಸಂವಿಧಾನ ತಿದ್ದುಪಡಿ ಮಾಡುವ ಹುನ್ನಾರ ಮಾಡುತ್ತಿದೆ. ಕೋಮುವಾದ ಎದುರಿಸಲು ನಾವೆಲ್ಲ ಒಗ್ಗಟ್ಟಿನ ಬಲ ಪ್ರದರ್ಶಿಸಬೇಕಾಗಿದೆ ಎಂದರು. ಜಿಲ್ಲಾ ಕಾರ್ಯದರ್ಶಿ ಮಹೇಶ್ ಕುಮಾರ್ ರಾಠೋಡ್ ಮಾತನಾಡಿ, ಇವತ್ತು ಕೋಮುವಾದಿಗಳು ದೇಶದ ಜನರ ಸಂಸ್ಕೃತಿಯನ್ನು ಸರ್ವನಾಶ ಮಾಡಲು ಜಾತಿ ವಿಷ ಬೀಜ ಬಿತ್ತುತ್ತಿದ್ದಾರೆ. ದುಡಿಯುವ ವರ್ಗ ಒಂದಾಗಬೇಕಿದೆ. ಕಾರ್ಮಿಕರು ಭಿನ್ನಾಭಿಪ್ರಾಯ ಬದಗಿಟ್ಟು ಒಂದಾಗಬೇಕಿದೆ. ಕೋಮುವಾದಿಗಳ ಬಣ್ಣ ಬಯಲು ಮಾಡಬೇಕಿದೆ. ಆರೆಸ್ಸೆಸ್ - ಬಿಜೆಪಿ ವಾಟ್ಸಾಪ್ ಯುನಿವರ್ಸಿಟಿ ಮೂಲಕ ಮನೆ, ಮನಸ್ಸುಗಳನ್ನು ಒಡೆಯುವಂತ ಕೆಲಸ ಮಾಡುತ್ತಿವೆ ಎಂದು ಕಿಡಿಕಾರಿದರು. ಎಸ್ ಯುಸಿಐ ಜಿಲ್ಲಾ ಮುಖಂಡ ಮಹೇಶ್ ಎಸ್.ಬಿ ಮಾತನಾಡಿ, ಲೆನಿನ್ ಕಾಲದಲ್ಲಿ ಭಾರತದಲ್ಲಿ ಎಡ ಚಳುವಳಿ ಪ್ರಾರಂಭವಾಯಿತು. ಇವತ್ತು ಸ್ವಾತಂತ್ರ್ಯ ಸಿಕ್ಕು ಇಷ್ಟು ವರ್ಷ ಕಳೆದರೂ ಕೂಡ ಪಕ್ಷ ಕೆಲಸ ಮಾಡುತ್ತಿದೆ ಎಂದರು. ಡಿಎಸ್ಎಸ್ ರಾಜ್ಯ ಸಂಚಾಲಕ ಅರ್ಜುನ್ ಭದ್ರೆ, ಪದ್ಮಾವತಿ ಮಾಲಿಪಾಟೀಲ್, ಪ್ರಭುದೇವ ಯಳಸಂಗಿ ಮಾತನಾಡಿದರು. ಈ ಸಂದರ್ಭದಲ್ಲಿ ಸುಧಾಮ್ ಧನ್ನಿ, ಭೀಮಾಶಂಕರ ಮಾಡಿಯಾಳ, ಮೌಲಾ ಮುಲ್ಲಾ, ಹಣಮಂತ್ರಾಯ ಅಟ್ಟೂರು, ಸಾಜಿದ್ ಅಹ್ಮದ್, ಎಚ್.ಎಸ್. ಪತಕಿ, ಸಂಪತರಾವ್, ಸಿದ್ದಪ್ಪ ಫಾಲ್ಕಿ, ಶರಣಮ್ಮ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಮಂಗಳೂರು | ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಗ್ರಾಪಂ ಸ್ವಚ್ಛತಾ ಪೌರ ಕಾರ್ಮಿಕರ ಕಾಲ್ನಡಿಗೆ ಜಾಥಾ, ಧರಣಿ
ಮಂಗಳೂರು, ಡಿ.9: ದ.ಕ. ಜಿಲ್ಲೆಯ ಗ್ರಾಮ ಪಂಚಾಯತ್ ಗಳಲ್ಲಿ ಕೆಲಸ ಮಾಡುತ್ತಿರುವ ಸ್ವಚ್ಛತಾ ಪೌರ ಕಾರ್ಮಿಕರು, ಸ್ವಚ್ಛತಾ ವಾಹನಗಳ ಮಹಿಳಾ ಚಾಲಕರು ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮಂಗಳವಾರ ಕಾಲ್ನಡಿಗೆ ಜಾಥಾ ನಡೆಸಿ, ದ.ಕ. ಜಿಲ್ಲಾ ಪಂಚಾಯತ್ ಮುಂದೆ ಧರಣಿ ನಡೆಸಿದರು. ದಕ್ಷಿಣ ಕನ್ನಡ ಜಿಲ್ಲಾ ಪೌರ ಕಾರ್ಮಿಕರ ಹಾಗೂ ನಾಲ್ಕನೇ ದರ್ಜೆ ನೌಕರರ ಸಂಘದ ನೇತೃತ್ವದಲ್ಲಿ ಪತ್ರಿಕಾ ಭವನದ ಬಳಿಯಿಂದ ಜಿಲ್ಲಾ ಪಂಚಾಯತ್ ತನಕ ಕಾಲ್ನಡಿಗೆ ಜಾಥಾದಲ್ಲಿ ತೆರಳಿದ ಪೌರ ಕಾರ್ಮಿಕರು, ಜಿಲ್ಲಾ ಪಂಚಾಯತ್ ಎದುರು ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿದ ಹಿನ್ನೆಲೆಯಲ್ಲಿ ಪ್ರತಿಭಟನೆ ನಡೆಸಿದರು. ಸ್ವಚ್ಛತಾ ಪೌರ ಕಾರ್ಮಿಕರು, ಸ್ವಚ್ಛತಾ ವಾಹನಗಳ ಮಹಿಳಾ ಚಾಲಕರನ್ನು ಸಂಜೀವಿನಿ ಒಕ್ಕೂಟದ ಗುತ್ತಿಗೆದಾರರಿಂದ ಬಿಡುಗಡೆಗೊಳಿಸಿ, ಪಂಚಾಯತ್ ಪೌರ ಕಾರ್ಮಿಕರೆಂದು ಪರಿಗಣಿಸಿ, ನೇರ ವೇತನ ಪಾವತಿಸಬೇಕು. ಹಲವಾರು ವರ್ಷಗಳಿಂದ ಪಂಚಾಯತ್ ಗಳಲ್ಲಿ ದುಡಿಯುತ್ತಿರುವ ಮಹಿಳಾ ಕಾರ್ಮಿಕರು, ವಾಹನ ಚಾಲಕಿಯರನ್ನು ಖಾಯಂಗೊಳಿಸಬೇಕು. ಆರೋಗ್ಯ ತಪಾಸಣೆ, ಆರೋಗ್ಯ ಕಾರ್ಡ್, ಇಎಸ್ಐ, ಪಿಎಫ್ ಸವಲತ್ತು, ಮಾಸ್ಕ್, ಗ್ಲೌಸ್ ಗಳನ್ನು ನೀಡಬೇಕು ಎಂದು ಆಗ್ರಹಿಸಿದರು. ದಕ್ಷಿಣ ಕನ್ನಡ ಜಿಲ್ಲಾ ಪೌರ ಕಾರ್ಮಿಕರ ಹಾಗೂ ನಾಲ್ಕನೇ ದರ್ಜೆ ನೌಕರರ ಸಂಘದ ಅಧ್ಯಕ್ಷ ಅನಿಲ್ ಕುಮಾರ್ ಮಾತನಾಡಿ, ಸಂಜೀವಿನಿ ಒಕ್ಕೂಟದ ಗುತ್ತಿಗೆದಾರರು ಪರಿಶಿಷ್ಟ ಸಮುದಾಯದ ಕಾರ್ಮಿಕರಿಗೆ ಶೋಷಣೆ ಮಾಡುತ್ತಿದ್ದಾರೆ. ಸಂಜೀವಿನಿ ಒಕ್ಕೂಟದ ದಬ್ಬಾಳಿಕೆಯಿಂದ ಕಾರ್ಮಿಕರನ್ನು ಬಿಡುಗಡೆಗೊಳಿಸಿ, ಗ್ರಾಮ ಪಂಚಾಯಿತಿಯಿಂದ ನೇರ ನೇಮಕ ಮಾಡಬೇಕು ಎಂದು ಆಗ್ರಹಿಸಿದರು. ದಕ್ಷಿಣ ಕನ್ನಡ ಜಿಲ್ಲಾ ಪೌರ ಕಾರ್ಮಿಕರ ಹಾಗೂ ನಾಲ್ಕನೇ ದರ್ಜೆ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಎಸ್.ಪಿ. ಆನಂದ್ ಮಾತನಾಡಿ, ಸ್ವಚ್ಛತಾ ಕಾರ್ಮಿಕರು ಸಂಜೀವಿನಿ ಒಕ್ಕೂಟದ ಗುತ್ತಿಗೆ ಅಡಿಯಲ್ಲಿ 300 ದಿನಗೂಲಿ ಪಡೆಯುತ್ತಿದ್ದಾರೆ. ಕನಿಷ್ಠ ವೇತನ, ಇಎಸ್ಐ, ಪಿಎಫ್, ಮಾಸ್ಕ್ ಮುಂತಾದ ಮೂಲಭೂತ ಕಾರ್ಮಿಕ ಹಕ್ಕುಗಳಿಂದ ವಂಚಿತರಾಗಿದ್ದಾರೆ ಎಂದರು. ಕಾರ್ಮಿಕ ಮುಖಂಡ ಪ್ರೇಮ್ ಕುಮಾರ್ ಬಲ್ಲಾಳ್ಬಾಗ್, ಪಾಣಾಜೆ ಗ್ರಾಪಂ ವಾಹನ ಚಾಲಕಿ ಪೌಲಿನ್ ಮೊಂತೆರೊ , ತಾಲೂಕಿನ ಪ್ರಮುಖರಾದ ರೇಣುಕಾ ಬೆಳ್ತಂಗಡಿ , ಅಕ್ಷತಾ ಬಂಟ್ವಾಳ, ನಯನ ಸುಳ್ಯ, ಮೂಡಬಿದ್ರೆ ಅನಿತ ಹೇಮಾ ವಿ ಕಡಬ , ಚಂದ್ರಾವತಿ ಪುತ್ತೂರು ನೇತೃತ್ವ ವಹಿಸಿದ್ದರು.
ಮಂಗಳೂರು | ಸಿಐಟಿಯು ಕಚೇರಿ ಕಾರ್ಯದರ್ಶಿಗೆ ಬೆದರಿಕೆ: ಪ್ರಕರಣ ದಾಖಲು
ಮಂಗಳೂರು, ಡಿ.9: ದ.ಕ.ಜಿಲ್ಲಾ ಬೀದಿ ಬದಿ ವ್ಯಾಪಾರಸ್ಥರ ಸಂಘ (ಸಿಐಟಿಯು)ದ ಕಚೇರಿ ಕಾರ್ಯದರ್ಶಿ ಯೋಗಿತಾ ಸುವರ್ಣ ಅವರಿಗೆ ವ್ಯಕ್ತಿಯೊರ್ವ ಜೀವ ಬೆದರಿಕೆ ಒಡ್ಡಿರುವ ಬಗ್ಗೆ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಡಿ.7ರಂದು ಸಂಜೆ 4 ಗಂಟೆಗೆ ಸಂಘದ ಸದಸ್ಯರಿಂದ ವಾರದ ದೇಣಿಗೆ ಸಂಗ್ರಹಕ್ಕಾಗಿ ಬೀದಿ ಬದಿ ವ್ಯಾಪಾರಿಗಳಿರುವ ಲೇಡಿಗೋಷನ್ ಆಸ್ಪತ್ರೆ ಬಳಿ ದೇಣಿಗೆ ಸಂಗ್ರಹಿಸುತ್ತಿರುವಾಗ ಅಲ್ಲಿಗೆ ಬಂದ ಮುಹಮ್ಮದ್ ಆಸಿಫ್ ಬಾವ ಎನ್ನುವ ವ್ಯಕ್ತಿ ನೀವು ವಾರದ ದೇಣಿಗೆ ಸಂಗ್ರಹ ಮಾಡಬಾರದು, ಇಲ್ಲಿಗೆ ಬಂದರೆ ನಾನು ಸುಮ್ಮನಿರುವುದಿಲ್ಲ ಎಂದು ತಳ್ಳಿ ಇತರ ವ್ಯಾಪಾರಿಗಳಲ್ಲಿ ದೇಣಿಗೆ ನೀಡದಂತೆ ತಿಳಿಸಿದ್ದಾನೆ. ಬಳಿಕ ಅವಾಚ್ಯ ಶಬ್ಧಗಳಿಂದ ಬೈದು ಇನ್ನೊಮ್ಮೆ ಇಲ್ಲಿ ಬಂದರೆ ಕೈ ಕಾಲು ಮುರಿದು ಕೊಂದು ಹಾಕುತ್ತೇನೆ ಎಂದು ಜೀವ ಬೆದರಿಕೆ ಒಡ್ಡಿ ಹಲ್ಲೆ ನಡೆಸಲು ಮುಂದಾಗಿದ್ದಾನೆ ಯೋಗಿತಾ ದೂರಿನಲ್ಲಿ ತಿಳಿಸಿದ್ದಾರೆ.
ಬೆಂಗಳೂರು: ಅಂಬೇಡ್ಕರ್ ಅಭಿವೃದ್ಧಿ ನಿಗಮದ ಮೇಲೆ ಲೋಕಾಯುಕ್ತ ದಾಳಿ
ಬೆಂಗಳೂರು: ಸಾಲ ನೀಡಲು ನಕಲಿ ದಾಖಲೆ ಸೃಷ್ಟಿ ಮಾಡಿ ಕೋಟ್ಯಾಂತರ ರೂಪಾಯಿಗಳ ಅಕ್ರಮ ನಡೆಸಲಾಗಿದೆ ಎಂಬ ದೂರಿನ ಅನ್ವಯ ಮಂಗಳವಾರದಂದು ಲೋಕಾಯುಕ್ತ ಅಧಿಕಾರಿಗಳ ತಂಡವು ಅಂಬೇಡ್ಕರ್ ಅಭಿವೃದ್ಧಿ ನಿಗಮದ ಕಚೇರಿಯ ಮೇಲೆ ದಾಳಿ ನಡೆಸಿ, ಪರಿಶೀಲನೆ ನಡೆಸಿತು. 2020ರಿಂದ 2023ರವರೆಗೆ ಅಂಬೇಡ್ಕರ್ ಅಭಿವೃದ್ಧಿ ನಿಗಮದಲ್ಲಿ ಕೆಲಸ ಮಾಡಿದ್ದ ಗುರುರಾಜ್ ಎಂಬವರು ನೀಡಿದ ದೂರಿನ ಆಧಾರದಲ್ಲಿ ಪ್ರಕರಣ ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ಲೋಕಾಯುಕ್ತ ಎಸ್ಪಿ ಶಿವಪ್ರಕಾಶ್ ನೇತೃತ್ವದಲ್ಲಿ ದಾಳಿ ನಡೆದಿದೆ. ನಿಗಮದ ಜಿಲ್ಲಾ ವ್ಯವಸ್ಥಾಪಕ ವಿಜಯ್ ಕುಮಾರ್, ಅಂದಿನ ಜಿಲ್ಲಾ ವ್ಯವಸ್ಥಾಪಕ ಶ್ರೀಚಂದ್ರ ವಿ.ಗೌಡ, ಅಂದಿನ ಪ್ರಭಾರ ವ್ಯವಸ್ಥಾಪಕಿ ಅಕ್ಷತಾ, ಅಂದಿನ ಕಚೇರಿ ನಿರೀಕ್ಷಕ ಕೇಶವಮೂರ್ತಿ, ತಾಲೂಕು ಅಭಿವೃದ್ಧಿ ಅಧಿಕಾರಿ ಮಾದೇವಿಭಾಯಿ, ನೀಲಮ್ಮ, ವಿಜಯಲಕ್ಷ್ಮಿ ಸೇರಿ ಒಟ್ಟು 8 ಮಂದಿ ಅಧಿಕಾರಿಗಳ ವಿರುದ್ಧ ದೂರು ಕೇಳಿಬಂದಿದ್ದು, ಅವರಲ್ಲಿ ಮೂವರು ಈಗಾಗಲೇ ನಿವೃತ್ತರಾಗಿದ್ದಾರೆ. ಉಳಿದ ಐವರು ನಿಗಮದಲ್ಲೇ ಸೇವೆ ಸಲ್ಲಿಸುತ್ತಿದ್ದಾರೆ ಎಂದು ವರದಿಯಾಗಿದೆ. ಸಹಕಾರಿ ಸಂಘಗಳು ಮತ್ತು ಸಹಕಾರಿ ಬ್ಯಾಂಕ್ಗಳಿಗೆ ನೀಡಬೇಕಿದ್ದ ಸಾಲ ಮಂಜೂರಿನಲ್ಲಿ ಅಕ್ರಮ ನಡೆದಿದೆ. ನಕಲಿ ದಾಖಲೆಗಳನ್ನು ಸೃಷ್ಟಿಸಿ ಸಾಲ ನೀಡಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದ್ದು, ಸುಮಾರು 3 ರಿಂದ 4 ಕೋಟಿ ರೂ. ಅವ್ಯವಹಾರ ನಡೆದಿರುವುದು ಆರಂಭಿಕ ತನಿಖೆಯಲ್ಲಿ ತಿಳಿದು ಬಂದಿದೆ ಎಂದು ಲೋಕಾಯುಕ್ತ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಈ ಹಿನ್ನೆಲೆ ಆರೋಪಿಗಳ ನಿವಾಸ ಸೇರಿ ಬೆಂಗಳೂರು ಅಂಬೇಡ್ಕರ್ ಅಭಿವೃದ್ಧಿ ನಿಗಮದ ಕಚೇರಿಯಲ್ಲೂ ಶೋಧ ನಡೆಸಲಾಗಿದೆ. ದಾಳಿ ವೇಳೆ ಕೆಲವು ಪ್ರಾಥಮಿಕ ದಾಖಲೆಗಳನ್ನು ವಶಕ್ಕೆ ಪಡೆಯಲಾಗಿದೆ. ಇನ್ನೂ ಮೂಲ ದಾಖಲೆಗಳ ಶೋಧ ಮುಂದುವರಿದಿದೆ ಎಂದು ಲೋಕಾಯುಕ್ತ ಅಧಿಕಾರಿಗಳು ತಿಳಿಸಿದ್ದಾರೆ.
ಮಂಗಳೂರು | ಮಾದಕ ವಸ್ತು ಸೇವನೆ ಆರೋಪ : ಆರೋಪಿಯ ಬಂಧನ
ಮಂಗಳೂರು, ಡಿ.9: ಕುಡುಪು ಗ್ರಾಮದ ಪಂಜಿರೇಲು ರಸ್ತೆ ಬಳಿ ಮಾದಕ ವಸ್ತುವನ್ನು ಸೇವನೆ ಮಾಡಿದಂತೆ ಕಂಡು ಬಂದ ಕೇರಳದ ಕೊಟ್ಟಾಯಂನ ಪುಳಿಯನ್ನೂರು ನಿವಾಸಿ ಸ್ಟೀವ್ ಸ್ಟೀಫನ್ (24) ಎಂಬಾತನನ್ನು ಗ್ರಾಮಾಂತರ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಆರೋಪಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ ಗಾಂಜಾ ಸೇವನೆ ಮಾಡಿರುವುದು ದೃಢಪಟ್ಟಿದ್ದು, ಆರೋಪಿಯ ವಿರುದ್ಧ ಎನ್ ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.
ಡಾ.ಬಿ.ಆರ್. ಅಂಬೇಡ್ಕರ್ ಜೀವನ ಕಥನ ಮಹಾಯಾನ ಕಾದಂಬರಿ ಬಿಡುಗಡೆ
ಕಲಬುರಗಿ: ಸಂವಿಧಾನ ಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ್ ರಚಿಸಿದ ಭಾರತದ ಸಂವಿಧಾನದ ಆಶಯಗಳು ಇಂದಿಗೂ ಈಡೇರಿಲ್ಲ ಎಂದು ಅನುವಾದ ಸಾಹಿತ್ಯದಲ್ಲಿ ಅಂತರರಾಷ್ಟ್ರೀಯ ಬೂಕರ್ ಪ್ರಶಸ್ತಿ ವಿಜೇತರಾದ ದೀಪಾ ಭಾಸ್ತಿ ಅವರು ಕಳವಳ ವ್ಯಕ್ತಪಡಿಸಿದರು. ಗುಲ್ಬರ್ಗಾ ವಿಶ್ವವಿದ್ಯಾಲಯದ ಮಹಾತ್ಮ ಗಾಂಧಿ ಸಭಾಂಗಣದಲ್ಲಿ ಬಂಡಾಯ ಸಾಹಿತಿ ಹಾಗೂ ಗುಲ್ಬರ್ಗಾ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ನಿರ್ದೇಶಕ ಪ್ರೊ.ಎಚ್. ಟಿ. ಪೋತೆ ಅವರು ಡಾ. ಅಂಬೇಡ್ಕರ್ ಜೀವನ ಕಥನ ಕುರಿತ ಬರೆದಿರುವ ಮಹಾಯಾನ ಕಾದಂಬರಿ ಬಿಡುಗಡೆಗೊಳಿಸಿ ಮಾತನಾಡಿದ ದೀಪಾ ಭಾಸ್ತಿ, ಡಾ. ಬಿ. ಆರ್. ಅಂಬೇಡ್ಕರ್ ಅವರ ಸಂವಿಧಾನ ಎಲ್ಲರಿಗೂ ತಲುಪಿದೆ. ಆದರೆ, ಸಂವಿಧಾನದ ಕನಸುಗಳು ಇಂದಿಗೂ ಹಾಗೆ ಉಳಿದಿವೆ. ಸಂವಿಧಾನದ ಆಶಯದಂತೆ ಮಹಿಳೆಯರಿಗೆ ಸ್ವಾತಂತ್ರ್ಯ, ಸಮಾನತೆ ಸಿಕ್ಕಿದೆಯೇ? ಎಂದು ಪ್ರಶ್ನಿಸಿದರು. ಡಾ. ಬಿ.ಆರ್. ಅಂಬೇಡ್ಕರ್ ಅವರ ಆಲೋಚನೆ ಮತ್ತು ಚಿಂತನೆಗಳು ಓದಿನಲ್ಲಿ ಅಲೆಗಳಂತೆ ಎದುರಾಗುತ್ತವೆ. ಅವರ ದೂರದೃಷ್ಠಿ ಆಲೋಚನೆಗಳು ನೊಂದವರಿಗೆ ಚೈತನ್ಯ ನೀಡುತ್ತಿವೆ. ಅವರ ಅಗಾಧ ಚಿಂತನೆಗಳು ಸಮಾಜವನ್ನು ಎಲ್ಲಾ ಕಾಲಕ್ಕೂ ಎಚ್ಚರಿಸುತ್ತವೆ ಎಂದು ಹೇಳಿದರು. ಬಹು ಭಾಷಾ ಪರಂಪರೆಯಿರುವ ಕನ್ನಡ ನಾಡಿನಲ್ಲಿ ವೈವಿಧ್ಯಮಯ ಸಂಸ್ಕೃತಿ ಬೆಳೆದಿದೆ. ಒಂದು ಭಾಷೆಗಿಂತ ಹಲವು ಭಾಷೆಗಳನ್ನ ಮಾತನಾಡುವ ಜನಸಮೂಹವಿದೆ. ಭಾಷಾ ಪ್ರಜ್ಞೆ ಮತ್ತು ಓದುವ ಆಸಕ್ತಿಯಿದೆ. ಸಾಹಿತ್ಯ ಅನುವಾದ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಸಾಕಷ್ಟು ಅವಕಾಶವಿದೆ. ವಿದ್ಯಾರ್ಥಿಗಳು ಹೆಚ್ಚು ಅಧ್ಯಯನ ಮತ್ತು ಅನುವಾದ ಕೆಲಸಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಅತ್ಯಂತ ಶ್ರೀಮಂತ ನಾಡಾಗಿರುವ ಕಲ್ಯಾಣ ಕರ್ನಾಟಕ ಸಾಹಿತ್ಯ ಕ್ಷೇತ್ರಕ್ಕೆ ಹಲವು ಕೃತಿಗಳನ್ನು ಕೊಡುಗೆಯಾಗಿ ನೀಡಿದೆ. ಈ ಭಾಗದ ಸೃಜನಶೀಲ ಲೇಖಕರ, ವಿದ್ವಾಂಸರ, ಬರಹಗಾರರ ಚಿಂತನೆ ಮತ್ತು ವೈಚಾರಿಕ ಆಲೋಚನೆಗಳು ಮತ್ತು ನಿರೀಕ್ಷೆಗಳ ವಸ್ತುಸ್ಥಿತಿಯನ್ನು ಇನ್ನಿತರೆ ಭಾಷೆಗಳ ಮೂಲಕ ಅನುವಾದಿಸಿ ಪರಿಚಯಿಸಬೇಕಿತ್ತು. ಹಾಗೆ ನಾವು ಮಾಡದೇ ಇರುವುದಕ್ಕಾಗಿ ಕಲ್ಯಾಣ ಹಿಂದುಳಿಯಲು ಕಾರಣವಾಗಿದೆ. ಇವತ್ತು ಬೆಂಗಳೂ ಇನ್ನು ಹಲವು ನಗರಗಳಲ್ಲಿ ಇಂಗ್ಲಿಷ್ ತಾಯಿ ಭಾಷೆಯಂತೆ ಹೇಳಿಕೊಳ್ಳುವ ಜನರ ಹೆಚ್ಚಾಗುತ್ತಿದ್ದಾರೆ. ಈ ಕಾಲ ಘಟ್ಟದಲ್ಲಿ ನಾವು ಮಾತೃ ಭಾಷೆಯಾದ ಕನ್ನಡವನ್ನು ಉಳಿಸಿಕೊಳ್ಳಬೇಕಿದೆ. ಇಡೀ ರಾಜ್ಯದಲ್ಲಿ ಹಲವಾರು ಬಗೆಯಲ್ಲಿ ಕನ್ನಡವನ್ನು ಬೆಳೆಸಿಕೊಂಡಿದ್ದೇವೆ. ಆದರೆ, ನಮ್ಮ ತಾಯಿ ಭಾಷೆಯ ಮೂಲ ಬೇರುಗಳನ್ನು ನಾವೆಂದು ಕಳೆದುಕೊಳ್ಳಬಾರದು. ಎಲ್ಲಾ ಭಾಷೆಯ ವಿಷಯಗಳು, ಸಾಹಿತ್ಯದ ಮೂಲಕ ಎಲ್ಲರಿಗೂ ಪರಿಚಯವಾಗಬೇಕು. ಆಗ ಕರ್ನಾಟಕವನ್ನು ಉಳಿಸಿಕೊಳ್ಳಲಿಕ್ಕೆ ಸಾಧ್ಯ. ಕನ್ನಡ ಭಾಷೆ ಅಳಿಯಲು ಸಾಧ್ಯವಿಲ್ಲ ಎಂದು ಹೇಳಿದರು. ಸಾಹಿತ್ಯಾಭಿರುಚಿ ಬೆಳೆಸಿಕೊಂಡಿರುವ ವಿದ್ಯಾರ್ಥಿಗಳು ಕುವೆಂಪು, ತೇಜಸ್ವಿ, ಕಾರಂತ, ದೇವನೂರು ಹಾಗೂ ಡಾ. ಸಿದ್ದಲಿಂಗಯ್ಯ ಅವರಂತಹ ಸಾಹಿತಿಗಳ ಕೃತಿಗಳನ್ನು ಅನುವಾದ ಮಾಡಬಹುದು. ಓದು ಆಸಕ್ತಿ ಮತ್ತು ಬರವಣಿಗೆ ರುಚಿಯಿಂದ ಅನುವಾದ ಸಾಹಿತ್ಯ ಇತರ ಬಾಷೆ ಓದುಗರನ್ನು ಸೆಳೆಯುತ್ತವೆ. ಭಾಷಾ ಪಾಂಡಿತ್ಯ ಸಾಹಿತ್ಯ ಅನುವಾದಕ್ಕೆ ಪ್ರೇರಣೆಯಾಗುತ್ತದೆ ಎಂದರು. ಗುಲ್ಬರ್ಗಾ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಶಶಿಕಾಂತ ಎಸ್. ಉಡಿಕೇರಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಹರಿಯುವ ನದಿ ಮತ್ತು ಬೀಸುವ ಗಾಳಿಯನ್ನು ತಡೆಯಲು ಹೇಗೆ ಸಾಧ್ಯವಿಲ್ಲವೊ ಹಾಗೆಯೇ ವಿದ್ಯಾರ್ಥಿಗಳು ಪಡೆದುಕೊಂಡ ಜ್ಞಾನವನ್ನು ಯಾರಿಂದಲು ಕಸಿದುಕೊಳ್ಳಲು ಸಾಧ್ಯವಿಲ್ಲ. ಲೇಖಕರು ಮ್ತತು ಬೂಕರ್ ಪ್ರಶಸ್ತಿ ವಿಜೇತರಾದ ದೀಪಾ ಬಾಸ್ತಿ ನಮ್ಮ ವಿಶ್ವವಿದ್ಯಾಲಯಕ್ಕೆ ವಿಶೇಷ ಆಹ್ವಾನಿತರಾಗಿ ಆಗಮಿಸಿ ಪ್ರೊ. ಎಚ್. ಟಿ ಪೋತೆಯವರು ಬರೆದಿರುವ ಡಾ. ಬಿ. ಆರ್. ಅಂಬೇಡ್ಕರ್ ಜೀವನ ಕಥನ ಕುರಿತಾದ ಮಹಾಯಾನ ಕಾದಂಬರಿ ಲೋಕಾರ್ಪಣೆಯನ್ನು ಮಾಡಿ ಅನುವಾದ ಕುರಿತು ನಮ್ಮ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಗೆ ಹೆಚ್ಚಿನ ಮಾಹಿತಿನ್ನು ನೀಡಿದ್ದಾರೆ. ಪ್ರತಿಯೊಬ್ಬರಿಗೂ ಶಿಕ್ಷಣ, ಸಮಾನತೆ ಮತ್ತು ಸಮಾನ ಅವಕಾಶಗಳು ಸಿಗಬೇಕು ಎಂದರು. ಕಾರ್ಯಕ್ರಮದಲ್ಲಿ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಮಾನವಿಕ ಮತ್ತು ಭಾಷಾ ವಿಭಾಗದ ಡೀನ್ ಪ್ರೊ. ವಿಕ್ರಮ ವಿಸಾಜಿ ಮಾತನಾಡಿದರು. ಗುಲ್ಬರ್ಗಾ ವಿಶ್ವವಿದ್ಯಾಲಯದ ಕುಲಸಚಿವ ರಮೇಶ ಲಂಡನಕರ್, ಡಿ.ಎಸ್.ಎಸ್ ಮುಖಂಡ ಡಿ.ಜಿ ಸಾಗರ್, ಕಲಬುರಗಿ ಸಪ್ನಾ ಬುಕ್ಹೌಸ್ನ ವ್ಯವಸ್ಥಾಪಕ ನಿರ್ದೇಶಕ ಮಹಾಂತೇಶ್ ಸೇರಿದಂತೆ ಬರಹಗಾರರು, ಚಿಂತಕರು, ಗುಲಬರ್ಗಾ ವಿಶ್ವವಿದ್ಯಾಲಯದ ವಿವಿಧ ವಿಭಾಗದ ಡೀನ್ಗಳು, ಅತಿಥಿ ಉಪನ್ಯಾಸಕರು, ಬೋಧಕೇತರ ಸಿಬ್ಬಂದಿಗಳು, ಸಂಶೋಧನಾ ಹಾಗೂ ಸ್ನಾತಕೋತ್ತರ ವಿಭಾಗದ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಮಂಗಳೂರು | ಮೀಫ್ ವಿದ್ಯಾಸಂಸ್ಥೆಗಳ ಆಡಳಿತ ಮಂಡಳಿಗಳ ಸಮಾವೇಶ
ಮಂಗಳೂರು, ಡಿ.9: ಮುಸ್ಲಿಂ ವಿದ್ಯಾ ಸಂಸ್ಥೆಗಳ ಒಕ್ಕೂಟ ಕೇಂದ್ರ ಘಟಕ ಮಂಗಳೂರು ಇದರ ಆಶ್ರಯದಲ್ಲಿ ದ.ಕ. ಮತ್ತು ಉಡುಪಿ ಜಿಲ್ಲೆಗಳ ವಿದ್ಯಾ ಸಂಸ್ಥೆಗಳ ಅಧ್ಯಕ್ಷರು, ಸಂಚಾಲಕರು, ಪ್ರಾಂಶುಪಾಲರು ಮತ್ತು ಮುಖ್ಯ ಶಿಕ್ಷಕರ ಸಮಾವೇಶವು ಮಂಗಳವಾರ ನಗರದ ಜಮೀಯ್ಯತುಲ್ ಫಲಾಹ್ ಸಭಾಂಗಣದಲ್ಲಿ ನಡೆಯಿತು. ಈ ವಿದ್ಯಾಸಂಸ್ಥೆಗಳಲ್ಲಿ ಅಳವಡಿಸಿರುವ ಸಿವಿಲ್ ಸರ್ವಿಸ್ ಪಠ್ಯ ಕ್ರಮದ ಪ್ರಗತಿ, ಕ್ಯಾಂಪಸ್ ಟ್ರಯಲ್ ಮಾಸಿಕ ಪತ್ರಿಕೆ ಮೀಫ್ ವಿದ್ಯಾ ಸಂಸ್ಥೆಗಳಲ್ಲಿ ಅಳವಡಿಸುವ, ಶಾಲಾ ಆಮಂತ್ರಣ ಪತ್ರಿಕೆಗಳನ್ನು ತಯಾರಿಸುವ ಶಿಷ್ಠಾಚಾರ ಮತ್ತು ಶಾಲಾ ಶೈಕ್ಷಣಿಕ ಗುಣಮಟ್ಟವನ್ನು ಉತ್ತಮಪಡಿಸುವ, ಎಸೆಸೆಲ್ಸಿ ಫಲಿತಾಂಶವನ್ನು ಹೆಚ್ಚಿಸಲು ಪ್ರಯತ್ನದ ಬಗ್ಗೆ ಮತ್ತು ಎಸೆಸೆಲ್ಸಿ ಮಾದರಿ ಪತ್ರಿಕೆಗಳನ್ನು ಮೀಫ್ ಮೂಲಕ ವಿತರಿಸುವ ವಿಚಾರದಲ್ಲಿ ಚರ್ಚಿಸಲಾಯಿತು. ಮೀಫ್ ವಿದ್ಯಾಸಂಸ್ಥೆಗಳ ಹಿರಿಯ ಮುಖ್ಯ ಶಿಕ್ಷಕರನ್ನು ಒಳಗೊಂಡ ಶೈಕ್ಷಣಿಕ ಸಲಹಾ ಸಮಿತಿಯನ್ನು ರಚಿಸಲಾಯಿತು. ಈ ಸಮಿತಿಯಲ್ಲಿ ಜಯಶ್ರೀ (ಅನ್ಸಾರ್ ಆಂಗ್ಲ ಮಾಧ್ಯಮ ಶಾಲೆ ಬಜ್ಪೆ), ಖತೀಜತುಲ್ ಕುಬ್ರ (ಬ್ಯಾರೀಸ್ ಪಬ್ಲಿಕ್ ಸ್ಕೂಲ್ ಹ್ಯಾಟ್ಹಿಲ್), ಶಶಿಕಲಾ (ಚೈತನ್ಯ ಆಂಗ್ಲ ಮಾಧ್ಯಮ ಶಾಲೆ ಕೃಷ್ಣಾಪುರ), ಶಂಶಾದ್ ಕಣ್ಣೂರ್ (ಆಂಗ್ಲ ಮಾಧ್ಯಮ ಶಾಲೆ) ಸಫೂರ (ಝೆನಿತ್ ಆಂಗ್ಲ ಮಾಧ್ಯಮ ಶಾಲೆ ಮುಡಿಪು), ಪ್ರಸನ್ನ (ಅಲ್ ಅಝ್ಹರ್ ಆಂಗ್ಲ ಮಾಧ್ಯಮ ಶಾಲೆ ಹೆಜಮಾಡಿ), ನುಸ್ರತ್ (ಸ್ನೇಹ ಆಂಗ್ಲ ಮಾಧ್ಯಮ ಶಾಲೆ ಪಕ್ಕಲಡ್ಕ), ಎ.ಎಚ್. ನಾಸಿರ್ (ಬಾಮಿ ಆಂಗ್ಲ ಮಾಧ್ಯಮ ಶಾಲೆ ಗುರುಪುರ) ಅವರನ್ನು ಸದಸ್ಯರನ್ನಾಗಿ ಆಯ್ಕೆ ಮಾಡಲಾಯಿತು. ಎಸೆಸೆಲ್ಸಿ ಫಲಿತಾಂಶವನ್ನು ಇನ್ನಷ್ಟು ಉತ್ತಮ ಪಡಿಸಲು ದ.ಕ. ಮತ್ತು ಉಡುಪಿ ಜಿಲ್ಲೆಗಳ 14 ಕೇಂದ್ರಗಳಲ್ಲಿ ಎಸೆಸೆಲ್ಸಿ ವಿದ್ಯಾರ್ಥಿಗಳಿಗೆ ಪಾಸಿಂಗ್ ಪ್ಯಾಕೇಜ್ ಕಾರ್ಯಗಾರ ನಡೆಸುವ ಬಗ್ಗೆ ಸಭೆಗೆ ಮಾಹಿತಿ ನೀಡಲಾಯಿತು. ಕೇಂದ್ರ ಘಟಕದ ಅಧ್ಯಕ್ಷ ಮೂಸಬ್ಬ ಪಿ. ಬ್ಯಾರಿ ಜೋಕಟ್ಟೆ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಮೀಫ್ ಉಡುಪಿ ಘಟಕದ ಗೌರವಾಧ್ಯಕ್ಷ ಶಾಭಿ ಅಹ್ಮದ್ ಖಾಝಿ, ಪ್ರಧಾನ ಕಾರ್ಯದರ್ಶಿ ರಿಯಾಝ್ ಅಹ್ಮದ್ ಕೆ.ಬಿ., ಬೆಳ್ಳಿಹಬ್ಬ ಸಂಚಾಲಕ ಬಿ.ಎ. ಇಕ್ಬಾಲ್, ಕಾರ್ಯಕಾರಿ ಸದಸ್ಯರಾದ ಅಡ್ವೋಕೇಟ್ ಉಮರ್ ಫಾರೂಕ್, ಆದಿಲ್ ಸೂಪಿ, ಅಝೀಝ್ ಅಂಬರ್ವ್ಯಾಲಿ, ಹೈದರ್ ಅನುಗ್ರಹ, ರಝಾಕ್ ಹಜಾಜ್, ಸಿವಿಲ್ ಸರ್ವಿಸ್ ಕೋಚ್ ಮುಹಮ್ಮದ್ ಶಿಹಾಬುದ್ದೀನ್ ಅಬೂಬಕ್ಕರ್ ಉಪಸ್ಥಿತರಿದ್ದರು. ಮೀಫ್ ಕೇಂದ್ರ ಸಮಿತಿಯ ಉಪಾಧ್ಯಕ್ಷ ಪರ್ವೇಝ್ ಅಲಿ ಸ್ವಾಗತಿಸಿ, ವಂದಿಸಿದರು.
ಮಂಗಳೂರು | ಕೋಮುದ್ವೇಷದ ಪೋಸ್ಟ್: ಪ್ರಕರಣ ದಾಖಲು
ಮಂಗಳೂರು, ಡಿ.9: ನಕಲಿ ಖಾತೆಯ ಮೂಲಕ ಫೇಸ್ಬುಕ್ನಲ್ಲಿ ಕೋಮು ದ್ವೇಷದ ಪೋಸ್ಟ್ ಮಾಡಿರುವ ಬಗ್ಗೆ ಕಾವೂರು ಠಾಣೆ ಪೊಲೀಸರು ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಠಾಣೆಯ ಕಾನ್ಸ್ಟೇಬಲ್ ನಾಗರಾಜ್ ಭೈರಗೊಂಡ ಅವರು ಡಿ.8ರಂದು ಸಂಜೆ ಸಾಮಾಜಿಕ ಜಾಲತಾಣಗಳನ್ನು ಪರಿಶೀಲಿಸುತ್ತಿರುವಾಗ ಮುಹಮ್ಮದ್ ಫಾರೂಕ್ ಅಬ್ದುಲ್ಲಾ ಎಂಬ ಹೆಸರಿನ ನಕಲಿ ಫೇಸ್ಬುಕ್ ಖಾತೆ ಹೊಂದಿರುವ ವ್ಯಕ್ತಿ ಮುಸ್ಲಿಂ ಧರ್ಮಗುರುಗಳ ರೀತಿಯಲ್ಲಿ ಕಾಣುವ ವ್ಯಕ್ತಿಯ ಭಾವ ಚಿತ್ರಕ್ಕೆ ಹಂದಿಯ ಮುಖ ಎಡಿಟ್ ಮಾಡಿ ಪೋಸ್ಟ್ ಮಾಡಿರುವುದು ಕಂಡು ಬಂದಿದೆ. ಸಾರ್ವಜನಿಕರಿಗೆ ತಪ್ಪುಸಂದೇಶಗಳನ್ನು ಕಳುಹಿಸುವ ಮೂಲಕ ಹಿಂದೂ ಮತ್ತು ಮುಸ್ಲಿಂ ಸಮುದಾಯಗಳ ನಡುವೆ ಕೋಮು ಭಾವನೆ ಕೆರಳಿಸುವಂತೆ ಮಾಡಲು ಉದ್ದೇಶಪೂರ್ವಕವಾಗಿ ಪೋಸ್ಟ್ ಹಾಕಿ, ಕೋಮು ಸೂಕ್ಷ್ಮ ಸ್ಥಳದಲ್ಲಿ ದೊಂಬಿ-ಗಲಭೆ ನಡೆಸುವ ಹುನ್ನಾರ ಇದರ ಹಿಂದೆ ಅಡಗಿದೆ. ಆದ್ದರಿಂದ ವಿವಾದಾತ್ಮಕ ಪೋಸ್ಟ್ ಮಾಡಿರುವ ವ್ಯಕ್ತಿಯನ್ನು ಪತ್ತೆ ಹಚ್ಚಿ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ದೂರಿನಲ್ಲಿ ತಿಳಿಸಲಾಗಿದೆ.
ಭಾರತೀಯ ಫುಟ್ಬಾಲ್ ನಲ್ಲಿ ಹೊಸ ಕ್ರಾಂತಿ; ಜೆಮ್ಷೆಡ್ ಪುರ ಸೂಪರ್ ಲೀಗ್ ನಲ್ಲಿ ತೃತೀಯ ಲಿಂಗಿಗಳ ಟೂರ್ನಿಗೆ ನಾಂದಿ
Transgender Football- ದೇಶದ ಉಕ್ಕಿನ ಕ್ರಾಂತಿಗೆ ನಾಂದಿ ಹಾಡಿದ್ದ ಜಮ್ಷೆಡ್ಪುರದಲ್ಲಿ ಇದೀಗ ಮತ್ತೊಂದು ಮಹತ್ವದ ನಡೆಗೆ ಸಾಕ್ಷಿಯಾಗಿದೆ. ಜಮ್ಷೆಡ್ ಪುರ ಸೂಪರ್ ಲೀಗ್ ನಲ್ಲಿ ತೃತೀಯ ಲಿಂಗಿಗಳಿಗಾಗಿ ಮೊದಲ ಬಾರಿಗೆ ಪ್ರತ್ಯೇಕ ಟೂರ್ನಮೆಂಟ್ ಅನ್ನೇ ಪ್ರಾರಂಭಿಸಲಾಗಿದೆ. ಅದೇನೂ ಕಾಟಾಚಾರಕ್ಕೆ ಪ್ರಾರಂಭಿಸಿದ ಪಂದ್ಯಾವಳಿಯಲ್ಲ. ಒಟ್ಟು ಏಳು ತಂಡಗಳು ಇದರಲ್ಲಿ ಭಾಗಿಯಾಗುತ್ತಿದ್ದು ಪ್ರಥಮ ದಿನವಾದ ಸೋಮವಾರ 3 ಪಂದ್ಯಗಳು ನಡೆದವು. ಪಂದ್ಯದ ಬಳಿಕ ಆಟಗಾರರು ಬಹಳ ಸಂತಸ ವ್ಯಕ್ತಪಡಿಸಿದ್ದಾರೆ. ಇದೊಂದು ಮಹತ್ವದ ವೇದಿಕೆಯಾಗಿದೆ ಎಂದು ತಿಳಿಸಿದ್ದಾರೆ.
Toyota Mini Land Cruiser FJ: ಬೆಲೆ, ವಿನ್ಯಾಸ , ರಿಲೀಸ್ ಡೇಟ್ – ಇಲ್ಲಿದೆ ಸಂಪೂರ್ಣ ವಿವರ
ಟೊಯೋಟಾ ತನ್ನ ಪ್ರಸಿದ್ಧ ಲ್ಯಾಂಡ್ ಕ್ರೂಸರ್ ಸರಣಿಯನ್ನು ವಿಸ್ತರಿಸುವ ಉದ್ದೇಶದಿಂದ ಅಭಿವೃದ್ಧಿಪಡಿಸಿರುವ ಮಿನಿ ಲ್ಯಾಂಡ್ ಕ್ರೂಸರ್ FJ concept ಅನ್ನು Japan Mobility Show 2025ರಲ್ಲಿ ಅಧಿಕೃತವಾಗಿ ಪ್ರದರ್ಶಿಸಿದೆ. ಕಾಂಪ್ಯಾಕ್ಟ್ ಗಾತ್ರ, ಕ್ಲಾಸಿಕ್ FJ40 ವಿನ್ಯಾಸದ ಮರುರೂಪ ಮತ್ತು соврем modern Toyota ತಂತ್ರಜ್ಞಾನಗಳ ಸಂಯೋಜನೆಯಾಗಿ ಬಂದಿರುವ ಈ concept SUV ಜಾಗತಿಕ ಮಟ್ಟದಲ್ಲಿ ದೊಡ್ಡ ಗಮನ ಸೆಳೆದಿದೆ. Japan Mobility Show 2025ರಲ್ಲಿ ಅಧಿಕೃತ ಪ್ರದರ್ಶನ ಟೊಯೋಟಾ ಗ್ಲೋಬಲ್ ತಂಡವು ಮಿನಿ ಲ್ಯಾಂಡ್ ಕ್ರೂಸರ್ FJ ... Read more The post Toyota Mini Land Cruiser FJ: ಬೆಲೆ, ವಿನ್ಯಾಸ , ರಿಲೀಸ್ ಡೇಟ್ – ಇಲ್ಲಿದೆ ಸಂಪೂರ್ಣ ವಿವರ appeared first on Karnataka Times .
ಸಿದ್ದಕಟ್ಟೆಯ ಕಲ್ಕೂರಿ ದಾರುಸ್ಸಲಾಂ ಜುಮಾ ಮಸೀದಿಯ ಪದಾಧಿಕಾರಿಗಳ ಆಯ್ಕೆ
ಬಂಟ್ವಾಳ, ಡಿ.9: ಸಿದ್ದಕಟ್ಟೆಯ ಕಲ್ಕೂರಿ ದಾರುಸ್ಸಲಾಂ ಜುಮಾ ಮಸೀದಿಯ ವಾರ್ಷಿಕ ಮಹಾಸಭೆಯು ರವಿವಾರ ಎ.ಎಚ್. ದಾರಿಮಿಯ ಸಭಾಧ್ಯಕ್ಷತೆಯಲ್ಲಿ ನಡೆಯಿತು. ಅಧ್ಯಕ್ಷರಾಗಿ ಸಿರಾಜುದ್ದೀನ್, ಉಪಾಧ್ಯಕ್ಷರಾಗಿ ಮುಸ್ತಫಾ, ಕಾರ್ಯದರ್ಶಿಯಾಗಿ ಸಾದಿಕ್ ಕೆ., ಜೊತೆ ಕಾರ್ಯದರ್ಶಿ ನಝೀರ್, ಲೆಕ್ಕಪರಿಶೋಧಕರಾಗಿ ಅಸ್ಫಾಕ್ ಆಯ್ಕೆಯಾದರು. ಸದಸ್ಯರಾಗಿ ಕೆ.ಮುಹಮ್ಮದ್ (ಮೋನಾಕ), ಹನೀಫ್ ಬಿ.ಕೆ., ಫಾರೂಕ್, ಆಸಿಫ್ ಕೆ., ಇಮ್ತಿಯಾಝ್, ತೀಫ್, ಇಂಝಾಮ್ ಕೆ., ಅಜ್ಮಾನ್ ಕೆ. ಆಯ್ಕೆಯಾಗಿದ್ದಾರೆ.
ಮಕ್ಕಳಿಗಿಲ್ಲ ಉದ್ಯೋಗದ ಚಿಂತೆ; ಹೆತ್ತವರಿಗಿದೆ ಖರ್ಚು ವೆಚ್ಚದ ಆತಂಕ!
ಎಐ ಉದ್ಯೋಗ ಕಸಿತ ಮತ್ತು ರೂಪಾಯಿ ಮೌಲ್ಯ ಕುಸಿತದ ಸಂದರ್ಭದಲ್ಲಿ ವಿದೇಶದಲ್ಲಿ ಶಿಕ್ಷಣ ಪೂರೈಸಲು ಯೋಜಿಸುತ್ತಿರುವ ವಿದ್ಯಾರ್ಥಿಗಳ ಹೆತ್ತವರು ಶಿಕ್ಷಣದ ದುಬಾರಿ ವೆಚ್ಚವನ್ನು ನಿಭಾಯಿಸುವ ಜೊತೆಗೆ ವೃತ್ತಿಪರ ಆಯ್ಕೆಯನ್ನು ಹೇಗೆ ಮಾಡಿಕೊಳ್ಳುತ್ತಾರೆ? ಕೃತಕ ಬುದ್ಧಿಮತ್ತೆ ಅಥವಾ ಎಐ ಅನೇಕ ಉದ್ಯಮಗಳನ್ನು ಪುನರ್ರೂಪಿಸುತ್ತಿರುವ ಸಂದರ್ಭದಲ್ಲಿ ರೂಪಾಯಿ ಮೌಲ್ಯ ಕುಸಿಯುತ್ತಿರುವಾಗ ಹೊಸದಾಗಿ ಉದ್ಯೋಗ ಜಗತ್ತನ್ನು ಪ್ರವೇಶಿಸುತ್ತಿರುವವರು ಮತ್ತು ಅವರ ಹೆತ್ತವರ ಆತಂಕವೇನು? ವಿದೇಶದಲ್ಲಿ ಶಿಕ್ಷಣ ಪೂರೈಸಲು ಯೋಜಿಸುತ್ತಿರುವ ವಿದ್ಯಾರ್ಥಿಗಳ ಹೆತ್ತವರು ಶಿಕ್ಷಣದ ದುಬಾರಿ ವೆಚ್ಚವನ್ನು ನಿಭಾಯಿಸುವ ಜೊತೆಗೆ ವೃತ್ತಿಪರ ಆಯ್ಕೆಯನ್ನು ಹೇಗೆ ಮಾಡಿಕೊಳ್ಳುತ್ತಾರೆ? ಹುಬ್ಬಳ್ಳಿ ನಿವಾಸಿಯಾಗಿರುವ ಸಂಗಮೇಶ್ ಮೆಣಸಿನಕಾಯಿ ಅವರ ಮಗಳು ಇದೀಗ ಮೊದಲನೇ ವರ್ಷ ಪಿಯುಸಿ ಓದುತ್ತಿದ್ದಾರೆ. ಆದರೆ ಮುಂದಿನ ವಿದ್ಯಾಭ್ಯಾಸಕ್ಕೆ ಮಗಳನ್ನು ವಿದೇಶಕ್ಕೆ ಕಳುಹಿಸುವ ಯೋಜನೆ ಹೊಂದಿದ್ದಾರೆ. “ಮಗಳು ಎಂಜಿನಿಯರಿಂಗ್ ಓದುವ ಉದ್ದೇಶ ಹೊಂದಿದ್ದಾರೆ. ಜಪಾನ್ ಅಥವಾ ಜರ್ಮನಿಗೆ ಕಳುಹಿಸಬೇಕೆನ್ನುವ ಯೋಜನೆಯಿದೆ. ಆ ಎರಡು ದೇಶಗಳು ಕಲಿಕೆ/ಗಳಿಕೆ ಎರಡನ್ನೂ ಪ್ರೋತ್ಸಾಹಿಸುವ ದೇಶಗಳಿಗೆ ಕಳುಹಿಸಲು ನಿರ್ಧರಿಸಿದ್ದೇವೆ. ಆದರೆ ಅತಿಯಾದ ಖರ್ಚು-ವೆಚ್ಚಗಳಾಗುವುದಾದಲ್ಲಿ ಕಳುಹಿಸುವುದಿಲ್ಲ. ಭಾರತದಲ್ಲಿ ಓದಿಗೆ ಎಷ್ಟು ಖರ್ಚಾಗುತ್ತದೆಯೋ ಅಷ್ಟೇ ಖರ್ಚಾಗುವುದಾದಲ್ಲಿ ಕಳುಹಿಸುತ್ತೇವೆ” ಎಂದು ಅಭಿಪ್ರಾಯಪಟ್ಟರು. ಎಐ ಉದ್ಯೋಗ ಕಡಿತ ಮಾಡುವ ಬಗ್ಗೆ ಸಂಗಮೇಶ್ ಅವರಿಗೆ ಚಿಂತೆಯಿಲ್ಲ “ಯಾವ ಕೋರ್ಸ್ ಮಾಡಿದರೆ ಉತ್ತಮ ಎನ್ನುವ ನಿರ್ಧಾರವನ್ನು ಮಗಳಿಗೇ ಬಿಟ್ಟಿದ್ದೇವೆ. ಆಕೆ ಪ್ರಸ್ತುತ ವೃತ್ತಿಪರ- ಉದ್ಯೋಗ ವಿಚಾರದಲ್ಲಿ ಸಾಕಷ್ಟು ಮಾಹಿತಿ ಹೊಂದಿದ್ದಾಳೆ. ಯಾವ ಉದ್ಯೋಗ ಉತ್ತಮ ಎನ್ನುವ ನಿರ್ಧಾರವನ್ನು ಆಕೆಗೇ ಬಿಟ್ಟಿದ್ದೇವೆ” ಎನ್ನುತ್ತಾರೆ. ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯಲ್ಲಿ ಅದ್ಯಾಪಕಿಯಾಗಿರುವ ಶೈಲಶ್ರೀ ಅವರ ಪುತ್ರ ಜಾರ್ಜಿಯದಲ್ಲಿ ವೈದ್ಯಕೀಯ ವಿದ್ಯಾಭ್ಯಾಸದಲ್ಲಿ ತೊಡಗಿದ್ದಾರೆ. ಅವರ ಪ್ರಕಾರ, “ರೂಪಾಯಿ ಮೌಲ್ಯದಿಂದ ಏರುತ್ತಿರುವ ವೆಚ್ಚದ ಬಗ್ಗೆ ಕಳವಳವಿದೆ. ಇದೀಗ ಸ್ಥಿರವಾಗಿದ್ದ (ಮೊದಲು ಹೇಳಿದ್ದ) ಶುಲ್ಕ, ರೂಪಾಯಿ ಮೌಲ್ಯ ಕುಸಿತವಾದ ನಂತರ ಹತ್ತಿಪ್ಪತ್ತು ಸಾವಿರ ಹೆಚ್ಚಾಗಿದೆ. ವಿಭಿನ್ನ ವಿಶ್ವವಿದ್ಯಾಲಯಗಳ ನಿಯಮಗಳನ್ನು ಅನುಸರಿಸಿ ವೆಚ್ಚ ಏರಿಕೆ ಇರುತ್ತದೆ. ನನ್ನ ಮಗ ಕೆನ್ವಾಕರ್ ವಿಶ್ವವಿದ್ಯಾಲಯದಲ್ಲಿ ಓದುತ್ತಿದ್ದಾನೆ. ಈ ಸಂಸ್ಥೆಗೆ ಅಮೆರಿಕದ ಜೊತೆಗೆ ಒಪ್ಪಂದವಿದೆ. ಹೀಗಾಗಿ ಅಮೆರಿಕದಲ್ಲಿ ಉದ್ಯೋಗಕ್ಕೆ ಪ್ರಯತ್ನಿಸಬಹುದು. ಮಾತ್ರವಲ್ಲದೆ, ಇಲ್ಲಿ ಪದವಿ ಮುಗಿದ ನಂತರ ಸ್ನಾತಕೋತ್ತರ ವಿದ್ಯಾಭ್ಯಾಸಕ್ಕೆ ಸ್ಕಾಲರ್ಶಿಪ್ ಕೂಡ ಕೊಡುತ್ತಾರೆ. ಉಳಿದಂತೆ ನಮ್ಮ ಮಕ್ಕಳು ಹೇಗೆ ವಿದ್ಯಾಭ್ಯಾಸ ಮಾಡುತ್ತಾರೆ ಎನ್ನುವುದನ್ನು ಅನುಸರಿಸಿದೆ.” ಮಂಗಳೂರಿನ ನಿವಾಸಿ ರಾಜೇಶ್ವರಿಯವರು ಇತ್ತೀಚೆಗೆ ತಮ್ಮ ಮಗನನ್ನು ಜರ್ಮನಿಗೆ ಕಳುಹಿಸಿದ್ದಾರೆ. ಅವರ ಮಗ ಜರ್ಮನಿಯಲ್ಲಿ ಇಂಟರ್ನ್ಯಾಷನಲ್ ಮ್ಯಾನೇಜ್ಮೆಂಟ್ ಕಲಿಕೆಯಲ್ಲಿ ತೊಡಗಿದ್ದಾರೆ. ಅವರ ಪ್ರಕಾರ ಜರ್ಮನಿಯಲ್ಲಿ ಓದುವ ಸಂಪೂರ್ಣ ನಿರ್ಧಾರ ಮಗನದ್ದು! “ನಮಗೆ ಆತಂಕವಿದೆ. ಆದರೆ ಮಗ ಇಷ್ಟಪಟ್ಟಿದ್ದಾನೆ ಎಂದು ಕಳುಹಿಸಿದ್ದೇವೆ. ಸಾಲ ತೆಗೆಯಲು ನೆರವಾಗಿದ್ದು ಹೊರತುಪಡಿಸಿದರೆ ಎಲ್ಲಾ ನಿರ್ಧಾರ ಮಗನದ್ದೇ ಆಗಿದೆ” ಎಂದು ಅವರು ಹೇಳಿದರು. ಜರ್ಮನಿಯಲ್ಲಿ ಸ್ನಾತಕೋತ್ತರ ಓದು ಉಚಿತವಾಗಿ ಮಾಡುವ ಅವಕಾಶವಿದೆ. ಮೊದಲ ವರ್ಷದ ಓದಿಗೆ ಹಣ ಕಟ್ಟಿದರೆ ನಂತರ ಅಲ್ಲಿ ಕಲಿಕೆ/ಗಳಿಕೆಗೆ ಅವಕಾಶವಿದೆ. ಉಳಿದ ಎಲ್ಲಾ ಖರ್ಚು ಉಚಿತವಾಗಿ ಹೋಗುತ್ತದೆ. ಹೀಗಾಗಿ ಭಾರತೀಯರು ಸ್ನಾತಕೋತ್ತರ ಓದಿಗೆ ಜರ್ಮನಿಗೆ ಹೋಗಲು ಹೆಚ್ಚು ಬಯಸುತ್ತಾರೆ. ಮೂಲತಃ ಮಂಗಳೂರಿನವರಾಗಿದ್ದು ಕಳೆದೊಂದು ದಶಕದಲ್ಲಿ ಬೆಂಗಳೂರಿನಲ್ಲಿ ನೆಲೆಸಿರುವ ಗರ್ಟ್ಯೂಡ್ ಅವರ ಮಗಳು ಆಸ್ಟ್ರೇಲಿಯದಲ್ಲಿ ಇತ್ತೀಚೆಗಷ್ಟೇ ಓದು ಮುಗಿಸಿದ್ದಾರೆ. ಮನಶ್ಯಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಮುಗಿಸಿರುವ ಅವರು ಸಲಹೆಗಾರರಾಗಿ ಕೆಲಸ ಮಾಡುತ್ತಾರೆ. “ವಿದೇಶದಲ್ಲಿ ದುಬಾರಿ ವಿದ್ಯಾಭ್ಯಾಸ ಮುಗಿಸಿದ ನಂತರದ ಭವಿಷ್ಯ ಏನು ಎನ್ನುವ ಚಿಂತೆ ನಮಗಿದೆ. ಆದರೆ ಮಕ್ಕಳಿಗೆ ಆ ಚಿಂತೆಯಿಲ್ಲ. ಜನರು ಎಚ್ಚೆತ್ತುಕೊಳ್ಳಬೇಕು. ಎಐನಿಂದ ವೈದ್ಯಕೀಯ ಕ್ಷೇತ್ರದಲ್ಲಿ ಉದ್ಯೋಗಕ್ಕೆ ತೊಂದರೆ ಬಾರದು ಎಂದು ಹೇಳುತ್ತಾರೆ. ಆದರೆ ನಾಳೆ ಉದ್ಯೋಗ ನಷ್ಟವಾದರೆ ಏನು ಮಾಡುತ್ತಾರೆ ಎನ್ನುವ ಆತಂಕ ನನ್ನದು” ಎಂದು ಅಭಿಪ್ರಾಯಪಟ್ಟರು. ಈಗಿನ ವಿದ್ಯಾರ್ಥಿಗಳು ತಮ್ಮ ಭವಿಷ್ಯದ ಬಗ್ಗೆ ಸ್ವಯಂ ನಿರ್ಧಾರ ಕೈಗೊಳ್ಳಲು ಬಯಸುತ್ತಾರೆ. ಅದು ವಿದೇಶಿ ಶಿಕ್ಷಣವಿರಲಿ ಅಥವಾ ವಿಷಯದ ಆಯ್ಕೆಯೇ ಇರಲಿ. ತಮ್ಮ ಭವಿಷ್ಯವನ್ನು ಸ್ವತಃ ನಿರ್ಧರಿಸುವಲ್ಲಿ ಜೆನ್ ಝೀ ಪ್ರಸಿದ್ಧರು. ಸಂಗಮೇಶ್ ಮಗಳು, ಗರ್ಟ್ಯೂಡ್ ಮಗಳು ಅಥವಾ ರಾಜೇಶ್ವರಿಯ ಮಗ ವಿದೇಶದಲ್ಲಿ ಶಿಕ್ಷಣ ಪಡೆಯುವ ಬಗ್ಗೆ ಸ್ವಯಂ ನಿರ್ಧರಿಸಿದ್ದಾರೆ. ಆದರೆ ಇಂತಹ ನಿರ್ಧಾರಗಳು ಪ್ರತಿ ಬಾರಿ ಸರಿಯಾಗಿರುತ್ತದೆಯೆ? ಮಂಗಳೂರು ಮೂಲದ ಅನುವಾದಕಿ/ ಪತ್ರಕತರ್ತೆ ಫ್ಲೋರಿನ್ ಅವರು ಮಗ ಆಕ್ಚುವರಲ್ ಸೈನ್ಸ್ (ಅಂಕಿ-ಅಂಶಗಳಿಗೆ ಸಂಬಂಧಿಸಿ) ಸ್ನಾತಕೋತ್ತರ ಪದವಿ ಪಡೆದು ಇದೀಗ ಎಐ ಸಂಬಂಧಿ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದಾರೆ. “ಅವರ ಪ್ರಕಾರ ಪರಿಣತಿ ಇದ್ದವರು ಬದಲಾಗುವ ತಂತ್ರಜ್ಞಾನಕ್ಕೆ ಸಮವಾಗಿ ಉದ್ಯೋಗವನ್ನು ಹುಡುಕಿಕೊಳ್ಳುತ್ತಾರೆ. ಎಐ ಉದ್ಯೋಗ ಕಸಿದುಕೊಳ್ಳುವುದು ನಿಜವಾದರೂ, ಪರ್ಯಾಯ ಉದ್ಯೋಗಗಳು ಸೃಷ್ಟಿಯಾಗಬಹುದು. ಹೀಗಾಗಿ ಮಗನ ಭವಿಷ್ಯದ ಬಗ್ಗೆ ಹೆಚ್ಚಿನ ಆತಂಕವಿಲ್ಲ” ಎಂದು ಅಭಿಪ್ರಾಯಪಟ್ಟಿದ್ದಾರೆ.
ಡಿ.29-30ರಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರ ದ.ಕ.ಜಿಲ್ಲಾ ಪ್ರವಾಸ
ಮಂಗಳೂರು,ಡಿ.9: ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಡಾ.ತಿಪ್ಪೇಸ್ವಾಮಿ ಕೆ.ಟಿ. ಡಿ.29 ಮತ್ತು 30ರಂದು ದ.ಕ.ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ. ಡಿ.29ರಂದು ಪೂ.11ರಿಂದ ಆಯೋಗದ ವತಿಯಿಂದ ದ.ಕ.ಜಿಲ್ಲೆಯ ಗ್ರಾಮೀಣ ಮತ್ತು ನಗರ ಪುನರ್ವಸತಿ ಕಾರ್ಯಕರ್ತರಿಗೆ ಏರ್ಪಡಿಸಿರುವ ತರಬೇತಿ ಕಾರ್ಯಕ್ರಮ, ಮಧ್ಯಾಹ್ನ 2:30ಕ್ಕೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಅಧಿಕಾರಿಗಳೊಂದಿಗೆ (ಜಿಲ್ಲೆ ಹಾಗೂ ತಾಲೂಕು ಮಟ್ಟ) ಮಕ್ಕಳ ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆ-2009’ರ ಅನುಷ್ಠಾನದ ಪ್ರಗತಿ ಪರಿಶೀಲನೆ ನಡೆಯಲಿದೆ. ಡಿ.30ರಂದು ಪೂ.11ಕ್ಕೆ ಮಕ್ಕಳೊಂದಿಗೆ ಸಂವಾದ ಕಾರ್ಯಕ್ರಮ, ಮಧ್ಯಾಹ್ನ 2:30ಕ್ಕೆ ಕಾರ್ಮಿಕ ಇಲಾಖೆಯ ಅಧಿಕಾರಿಗಳೊಂದಿಗೆ ಮಕ್ಕಳು ಮತ್ತು ಹದಿಹರೆಯದವರ ಕಾರ್ಮಿಕ ಪದ್ಧತಿ ಕಾಯ್ದೆ -1986 ರ ಅನುಷ್ಠಾನದ ಪ್ರಗತಿ ಪರಿಶೀಲನೆ ನಡೆಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.
ಟಾಕ್ಸಿಸ್ ಗೆ ನೂರು ದಿನಗಳು ಬಾಕಿ; ಕೌಂಟ್ ಡೌನ್ ಆರಂಭಿಸಿದ ಯಶ್!
ಖ್ಯಾತ ನಟ ಯಶ್ ತಮ್ಮ ಮುಂದಿನ ಸಿನಿಮಾದ ಪೋಸ್ಟರ್ ಬಿಡುಗಡೆ ಮಾಡಿ ಸಿನೆಮಾ ಬಿಡಗಡೆಗೆ ʼಕೌಂಟ್ ಡೌನ್ʼ ಆರಂಭಿಸಿದ್ದಾರೆ. ‘ಟಾಕ್ಸಿಸ್: ಎ ಫೇರಿಟೇಲ್ ಫಾರ್ ಗ್ರೋನಪ್ಸ್’ ಸಿನಿಮಾ ಮಾರ್ಚ್ 19ರಂದು ಯುಗಾದಿಗೆ ಬಿಡುಗಡೆಯಾಗಲಿದೆ. ಸಿನಿಮಾ ಬಿಡುಗಡೆಗೆ ನೂರು ದಿನಗಳು ಬಾಕಿ ಇವೆ. ಮಾರ್ಚ್ 19 ಗುರುವಾರ ಬರುವ ಕಾರಣ ಸಿನಿಮಾಗೆ ದೀರ್ಘ ವಾರಾಂತ್ಯ ಸಿಗುತ್ತದೆ. ಹೀಗಾಗಿ ಸಿನಿಮಾಗೆ ಉತ್ತಮ ಓಪನಿಂಗ್ ನಿರೀಕ್ಷೆಯಲ್ಲಿದ್ದಾರೆ ಯಶ್. ಸ್ನಾನದ ತೊಟ್ಟಿಯಲ್ಲಿ ಕುಳಿತ ಪೋಸ್ಟರ್: ಪೋಸ್ಟರ್ ನಲ್ಲಿ ಯಶ್ ರಕ್ತ ಸಿಕ್ತ ಸ್ನಾನದ ತೊಟ್ಟಿಯಲ್ಲಿ ಕೂದಲು ಬಿಚ್ಚಿ ಹಾಕಿ ಬೆನ್ನು ತೋರಿಸಿ ಕುಳಿತಿದ್ದಾರೆ. ಅವರ ಮುಖ ಮರೆಯಾಗಿರುವುದು ಅಭಿಮಾನಿಗಳ ಕುತೂಹಲ ಹೆಚ್ಚಿಸಿದೆ. ಹಾಲಿವುಡ್ ನಿರ್ದೇಶಕರ ಸಾಹಸ ದೃಶ್ಯ: “ಟಾಕ್ಸಿಸ್” ಸಿನಿಮಾದಲ್ಲಿ ರಾಷ್ಟ್ರ ಪ್ರಶಸ್ತಿ ವಿಜೇತ ರಾಜೀವ್ ರವಿಯವರ ಛಾಯಾಗ್ರಹಣವಿದೆ. ಕೆಜಿಎಫ್ ಗೆ ಸಂಗೀತ ನೀಡಿರುವ ರವಿ ಬಸ್ರೂರ್ ‘ಟಾಕ್ಸಿಸ್’ಗೂ ಸಂಗೀತ ನೀಡಿದ್ದಾರೆ. ‘ಜಾನ್ ವಿಕ್’ ಸಿನಿಮಾದ ಕೆಲಸಕ್ಕಾಗಿ ಪ್ರಸಿದ್ಧಿ ಪಡೆದಿರುವ ಹಾಲಿವುಡ್ ಚಲನಚಿತ್ರ ನಿರ್ದೇಶಕ ಜೆಜೆ ಪೆರ್ರಿ ಸಿನಿಮಾದ ಕೆಲವು ಸಾಹಸ ದೃಶ್ಯಗಳನ್ನು ವಿನ್ಯಾಸಗೊಳಿಸಿದ್ದಾರೆ. ಹೀಗಾಗಿ ಸಿನಿಮಾದ ಮೇಲಿನ ನಿರೀಕ್ಷೆ ಹೆಚ್ಚಾಗಿದೆ. ಪ್ಯಾನ್ ಇಂಡಿಯಾ ಸಿನಿಮಾ: ಟಾಕ್ಸಿಕ್’ ಸಿನಿಮಾ ಚಿತ್ರಕತೆಯನ್ನು ಯಶ್ ಮತ್ತು ಗೀತು ಮೋಹನ್ ದಾಸ್ ಜೊತೆಗೂಡಿ ಬರೆದಿದ್ದಾರೆ. ಗೀತು ಮೋಹನ್ ದಾಸ್ ಈ ಸಿನಿಮಾದ ನಿರ್ದೇಶಕರೂ ಹೌದು. ಇಂಗ್ಲಿಷ್ ಮತ್ತು ಕನ್ನಡದಲ್ಲಿ ಜೊತೆಗೂಡಿ ನಿರ್ದೇಶಿಸಲಾಗಿರುವ ಸಿನಿಮಾವನ್ನು ಹಿಂದಿ, ತೆಲುಗು, ತಮಿಳು ಹಾಗೂ ಮಲಯಾಳಂ ಸೇರಿದಂತೆ ಅನೇಕ ಭಾಷೆಗಳಲ್ಲಿ ಡಬ್ಬಿಂಗ್ ಮಾಡುವ ಉದ್ದೇಶವಿದೆ. ಕೆವಿಎನ್ ಪ್ರೊಡಕ್ಷನ್ಸ್ ಮತ್ತು ಮಾನ್ಸ್ಟರ್ ಮೈಂಡ್ ಕ್ರಿಯೇಶನ್ಸ್ ಅಡಿಯಲ್ಲಿ ವೆಂಕಟ್ ಕೆ ನಾರಾಯಣ ಮತ್ತು ಯಶ್ ಸಿನಿಮಾವನ್ನು ನಿರ್ಮಿಸುತ್ತಿದ್ದಾರೆ. ಹೀಗಾಗಿ ಈ ಸಿನಿಮಾವನ್ನು ಮುಂದಿನ ವರ್ಷದ ಅತಿ ದೊಡ್ಡ ರಿಲೀಸ್ ಎನ್ನಲಾಗುತ್ತಿದೆ.
ಕೇರಳ ಸ್ಥಳೀಯ ಸಂಸ್ಥೆಗಳ ಚುನಾವಣೆ: ಮದ್ಯದಂಗಡಿ ಮುಚ್ಚಲು ಆದೇಶ
ಮಂಗಳೂರು,ಡಿ.9 : ಕೇರಳದ ಸ್ಥಳೀಯ ಸಂಸ್ಥೆಗಳಿಗೆ ಡಿ.11ರಂದು ಚುನಾವಣೆ ಮತ್ತು ಡಿ.13ರಂದು ಮತ ಎಣಿಕೆ ನಿಗದಿಯಾಗಿರುವ ಹಿನ್ನೆಲೆಯಲ್ಲಿ ಕೇರಳದ ಗಡಿಗೆ ಹೊಂದಿಕೊಂಡಿರುವ ಕರ್ನಾಟಕದ ಪ್ರದೇಶಗಳಲ್ಲಿ ಮತದಾನ ಮತ್ತು ಮತ ಎಣಿಕೆಯ ದಿನಗಳಂದು 3 ಕಿ.ಮೀ. ವ್ಯಾಪ್ತಿಯ ಗಡಿಭಾಗಗಳಲ್ಲಿ ಶುಷ್ಕದಿನ ಘೋಷಿಸಲಾಗಿದೆ. ಹಾಗಾಗಿ ಮಂಗಳೂರು, ಬಂಟ್ವಾಳ, ಪುತ್ತೂರು, ಸುಳ್ಯ ತಾಲೂಕುಗಳು ಮತ್ತು ಕಾಸರಗೋಡು ಜಿಲ್ಲೆಯ ಗಡಿಭಾಗವನ್ನು ಹಂಚಿಕೊಂಡಿರುವ ಗಡಿಭಾಗದಿಂದ ದ.ಕ. ಜಿಲ್ಲೆಯ 3 ಕಿ.ಮೀ. ವ್ಯಾಪ್ತಿಯಲ್ಲಿರುವ ಮದ್ಯದಂಗಡಿ/ಬಾರ್ ಗಳನ್ನು ಡಿ.9ರ ಸಂಜೆ 6ರಿಂದ ಡಿ.11ರ ಸಂಜೆ 6ರ ತನಕ ಮತ್ತು ಮತ ಎಣಿಕೆಯ ನಿಮಿತ್ತ ಡಿ.12ರಂದು ಮಧ್ಯರಾತ್ರಿ 12ರಿಂದ ಡಿ.13ರ ಮಧ್ಯರಾತ್ರಿ 12ರವರೆಗೆ ತನಕ ಮುಚ್ಚುವಂತೆ ದ.ಕ.ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ಆದೇಶಿದ್ದಾರೆ.
Condom Shock: ಅಯ್ಯಯ್ಯೋ! ಕಾಂಡೋಮ್ ಖರೀದಿಗೂ ಬಂತು ದುಬಾರಿ ಟ್ಯಾಕ್ಸ್: ಮಕ್ಕಳ ಸಂಖ್ಯೆ ಹೆಚ್ಚಿಸಲು ಪ್ಲ್ಯಾನ್!
Condom Shock! ಭಾರತವೂ ಸೇರಿದಂತೆ ವಿಶ್ವದಾದ್ಯಂತ ಇತ್ತೀಚಿನ ದಿನಗಳಲ್ಲಿ ಕಾಂಡೋಮ್ಗೆ ಹೆಚ್ಚು ಬೇಡಿಕೆ ಇದೆ. ಅದರಲ್ಲೂ ಕೆಲವೊಂದು ದೇಶಗಳಲ್ಲಿ ಕಾಂಡೋಮ್ ಸೇರಿದಂತೆ ಕೆಲವೊಂದು ಪ್ರಾಡೆಕ್ಟ್ಗಳಿಗೆ ಯವ ಸಮೂಹವೇ ಪ್ರಮುಖ ಟಾರ್ಗೆಟ್ ಆಗಿದೆ. ಈ ರೀತಿ ಇರುವಾಗಲೇ ಕಾಂಡೋಮ್ ಮೇಲೂ ಭಾರೀ ಸುಂಕ ವಿಧಿಸುವುದಕ್ಕೆ ನಿರ್ಧರಿಸಲಾಗಿದೆ. ಕಾಂಡೋಮ್ ಮಾತ್ರವಲ್ಲ ಕಾಂಡೋಮ್ ಸೇರಿದಂತೆ ಗರ್ಭನಿರೋಧಕ ಔಷಧಗಳು ಮತ್ತು ಸಾಧನಗಳ ಮೇಲೆ
ಮಂಗಳೂರು | ನೈಸರ್ಗಿಕ ಕೃಷಿಯಿಂದ ಆರೋಗ್ಯಯುತ ಸಮಾಜ ಸೃಷ್ಟಿ: ಹೊನ್ನಪ್ಪ ಗೌಡ
ಮಂಗಳೂರು, ಡಿ.9: ನೈಸರ್ಗಿಕವಾಗಿ ಕೃಷಿ ಚಟುವಟಿಕೆಗಳನ್ನು ಕೈಗೊಳ್ಳುವುದರಿಂದ ರಾಸಾಯನಿಕ ಮುಕ್ತ ತರಕಾರಿ ಹಾಗೂ ಬೆಳೆಗಳು ದೊರಕಿ ಜನರು ಆರೋಗ್ಯಯುತ ಜೀವನ ನಡೆಸಲು ಸಹಕಾರಿಯಾಗಲಿದೆ ಎಂದು ಜಂಟಿ ಕೃಷಿ ನಿರ್ದೇಶಕ ಹೊನ್ನಪ್ಪಗೌಡ ತಿಳಿಸಿದ್ದಾರೆ. ಕೃಷಿ ವಿಜ್ಞಾನ ಕೇಂದ್ರ, ರಾಷ್ಟ್ರೀಯ ನೈಸರ್ಗಿಕ ಕೃಷಿ ಮಿಷನ್, ಕೃಷಿ ಮತ್ತು ರೈತರ ಕಲ್ಯಾಣ ಇಲಾಖೆ ಕೇಂದ್ರ ಸರಕಾರ, ಕೃಷಿ ಇಲಾಖೆ, ದ.ಕ. ಜಿಪಂ ಇವುಗಳ ಸಂಯುಕ್ತ ಆಶ್ರಯದಲ್ಲಿ ನಗರದ ಕೃಷಿ ವಿಜ್ಞಾನ ಕೇಂದ್ರದಲ್ಲಿ ಮಂಗಳವಾರ ನಡೆದ ದ.ಕ. ಜಿಲ್ಲೆಯ ಸಮುದಾಯ ಸಂಪನ್ಮೂಲ ವ್ಯಕ್ತಿಗಳಿಗೆ ನೈಸರ್ಗಿಕ ಕೃಷಿ ಕುರಿತು ಐದು ದಿನದ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕೇಂದ್ರ ಸರಕಾರದ ನೀತಿಯಂತೆ ನೈಸರ್ಗಿಕ ಕೃಷಿಗೆ ಒತ್ತು ನೀಡಲಾಗುತ್ತಿದ್ದು, ಸಾಂಪ್ರದಾಯಿಕವಾಗಿ ಪದ್ಧತಿ ಹಾಗೂ ಜಾನುವಾರು ಆಧಾರಿತ ಕೃಷಿ ಚಟುವಟಿಕೆಗಳನ್ನು ನಡೆಸಲು ಪ್ರೇರೇಪಿಸಲಾಗುತ್ತಿದೆ. ಇದಕ್ಕಾಗಿ 2025ರ ಫೆಬ್ರವರಿಯಲ್ಲಿ ಸರಕಾರ ಮಾರ್ಗಸೂಚಿ ಹೊರಡಿಸಿದೆ. ಮಣ್ಣಿನ ಆರೋಗ್ಯ ಕಾಪಾಡುವುದು, ನೀರಿನ ಗುಣಮಟ್ಟ ಪರಿಶೀಲಿಸುವುದು ಮತ್ತು ಪ್ರಾಕೃತಿಕವಾಗಿ ದೊರಕುವ ವಸ್ತುಗಳನ್ನು ಬಳಸಿಕೊಂಡು ಕೃಷಿ ಚಟುವಟಿಕೆಗಳನ್ನು ನಡೆಸುವುದು ಇದರ ಉದ್ದೇಶವಾಗಿದೆ ಎಂದರು. ಮುಂದಿನ ಮೂರು ವರ್ಷದವರೆಗೆ ಈ ಯೋಜನೆ ಜಾರಿಯಲ್ಲಿದ್ದು, ರೈತರಿಗೆ ಕೃಷಿ ಪರಿಕರಗಳ ವೆಚ್ಚ ತಗ್ಗಿಸಿ, ಯಾವುದೇ ಕ್ರಿಮಿನಾಶಕ ಮತ್ತು ರಸಗೊಬ್ಬರಗಳ ಬಳಕೆ ಇಲ್ಲದೆ ಸಾವಯವ ಪದ್ಧತಿಯಲ್ಲಿ ಕೃಷಿ ನಡೆಸಲು ಪ್ರೋತ್ಸಾಹಿಸಲಾಗುತ್ತದೆ ಎಂದು ಹೊನ್ನಪ್ಪ ಗೌಡ ತಿಳಿಸಿದರು. ಉಪ ಕೃಷಿ ನಿರ್ದೇಶಕ ಅಶೋಕ್ ಮಾತನಾಡಿ, ಮಣ್ಣು, ನೀರು, ಗಾಳಿ ಇವುಗಳು ಕೃಗೆ ಪೂರಕವಾದ ನೈಸರ್ಗಿಕ ಅಂಶಗಳಾಗಿವೆ. ಪರಿಸರಕ್ಕೆ ಪೂರಕವಾದ ಕೃಷಿ ಚಟುವಟಿಕೆಗಳನ್ನು ನಡೆಸುವುದು, ಮಣ್ಣಿನಲ್ಲಿ ಸಾವಯವ ಇಂಗಾಲ ಜಾಸ್ತಿ ಮಾಡುವುದು ಮತ್ತು ರಾಸಾಯನಿಕ ಬಳಕೆ ತಗ್ಗಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ ಎಂದರು. ಮಂಗಳೂರು ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ.ಟಿ.ಜೆ. ರಮೇಶ್ ಅಧ್ಯಕ್ಷತೆ ವಹಿಸಿದ್ದರು. ದ.ಕ. ಜಿಲ್ಲೆಯಲ್ಲಿ ಸ್ಥಳೀಯವಾಗಿ ಬೆಳೆದ ತರಕಾರಿಗಳಿಗೆ ಹೆಚ್ಚು ಬೇಡಿಕೆ ಇದೆ. ಇದನ್ನು ನೈಸರ್ಗಿಕ ಕೃಷಿ ಪದ್ಧತಿಯಲ್ಲಿ ಬೆಳೆಸಲು ಮತ್ತು ಕೃಷಿಕರ ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿಸಲು ಕೃಷಿ ವಿಜ್ಞಾನ ಕೇಂದ್ರವು ಶ್ರಮಿಸುತ್ತಿದೆ ಎಂದರು. ಜಿಲ್ಲಾ ವಾರ್ತಾಧಿಕಾರಿ ಬಿ.ಎ ಖಾದರ್ ಶಾ ತರಬೇತಿ ಕೈಪಿಡಿ ಬಿಡುಗಡೆ ಮಾಡಿದರು. ಕೃಷಿ ವಿಜ್ಞಾನ ಕೇಂದ್ರದ ಸಹಾಯಕ ಪ್ರಾಧ್ಯಾಪಕ ಡಾ. ಹರೀಶ್ ಶೆಣೈ ಸ್ವಾಗತಿಸಿದರು. ತೋಟಗಾರಿಕೆ ವಿಜ್ಞಾನಿ ಡಾ. ರಶ್ಮಿ ಆರ್. ವಂದಿಸಿದರು.
ನ್ಯಾ.ಗವಾಯಿವರ ಮೇಲೆ ಶೂ ಎಸೆದಿದ್ದ ವಕೀಲ ರಾಕೇಶ್ ಕಿಶೋರ್ ಗೆ ಚಪ್ಪಲಿಯೇಟು; ವೀಡಿಯೊ ವೈರಲ್
ಹೊಸದಿಲ್ಲಿ: ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರು CJI ಆಗಿದ್ದಾಗ ಸುಪ್ರೀಂ ಕೋರ್ಟ್ ನಲ್ಲಿ ವಿಚಾರಣೆಯ ವೇಳೆ ಅವರ ಮೇಲೆ ಶೂ ಎಸೆದು ಸುದ್ದಿಯಾಗಿದ್ದ ʼವಿವಾದಿತʼ ವಕೀಲ ರಾಕೇಶ್ ಕಿಶೋರ್ ಗೆ ಮಂಗಳವಾರ ಚಪ್ಪಲಿಯೇಟು ಕೊಟ್ಟಿರುವ ಘಟನೆ ನಡೆದಿದೆ. ದಿಲ್ಲಿಯ ಕರ್ಕಾರ್ಡೂಮಾ ನ್ಯಾಯಾಲಯ ಸಂಕೀರ್ಣದಲ್ಲಿ ಆತನ ಮೇಲೆ ಅಪರಿಚಿತ ವ್ಯಕ್ತಿಯೊಬ್ಬ ಚಪ್ಪಲಿಯಿಂದ ಹಲ್ಲೆ ನಡೆಸಿರುವ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. हिंसा का जवाब हिंसा नहीं हो सकता है! इनको पहचानिए! ये वही राकेश किशोर हैं जिन्होंने पूर्व CJI जस्टिस गवई पर जूता फेंका था। ये तस्वीर दिल्ली के कड़कड़डूमा कोर्ट परिसर की है। pic.twitter.com/XDFECWZK1p — Prabhakar Kumar Mishra (@PMishra_Journo) December 9, 2025 ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ದೃಶ್ಯಾವಳಿಯಲ್ಲಿ, ವ್ಯಕ್ತಿಯೊಬ್ಬ ಕಿಶೋರ್ ಗೆ ಚಪ್ಪಲಿಯನ್ನು ಎತ್ತಿ ಹೊಡೆಯಲು ಮುಂದಾಗುತ್ತಿದ್ದಂತೆ ಅಲ್ಲಿದ್ದ ಜನರು ತಕ್ಷಣ ಮಧ್ಯಪ್ರವೇಶಿಸಿ ದಾಳಿಯನ್ನು ತಡೆಹಿಡಿಯುವ ಪ್ರಯತ್ನ ಮಾಡುತ್ತಿರುವುದು ಕಾಣಿಸುತ್ತದೆ. ದಾಳಿ ನಡೆಸಿದ ವ್ಯಕ್ತಿಯ ಮುಖ ಸ್ಪಷ್ಟವಾಗಿಲ್ಲದ ಕಾರಣ, ಅಪರಿಚ ವ್ಯಕ್ತಿಯ ಗುರುತು ಇನ್ನೂ ನಿಖರವಾಗಿಲ್ಲ. ಘಟನೆ ನಡೆದ ಸಂದರ್ಭದಲ್ಲಿ ಭದ್ರತಾ ಸಿಬ್ಬಂದಿ ಇದ್ದಾರೆಯೇ ಎಂಬುದೂ ಸ್ಪಷ್ಟವಾಗಿಲ್ಲ. ಚಪ್ಪಲಿಯೇಟು ಬೀಳುತ್ತಿದ್ದಂತೆ ಸ್ವತಃ ರಕ್ಷಣೆಗೆ ಮುಂದಾಗುವ ವಕೀಲ ರಾಕೇಶ್ ಕಿಶೋರ್, ನನ್ನ ಮೇಲೆ ನೀನು ಹಲ್ಲೆ ಮಾಡುತ್ತಿಯಾ…? ನನಗೆ ಹೊಡೆಯುತ್ತಿಯಾ? ಎಂದು ದಾಳಿಕೋರನನ್ನು ಹಿಮ್ಮೆಟ್ಟಿಸುವುದು ಕಾಣಿಸುತ್ತಿದೆ. ಈ ವೇಳೆ ರಾಕೇಶ್ ಸನಾತನ ಧರ್ಮಕ್ಕೆ ಜೈ ಎನ್ನುವುದು ವೀಡಿಯೊದಲ್ಲಿ ಕೇಳಿ ಬರುತ್ತದೆ. ಅಕ್ಟೋಬರ್ 6ರಂದು ಸುಪ್ರೀಂ ಕೋರ್ಟ್ನಲ್ಲಿ CJI ಗವಾಯಿಯವರಿದ್ದ ಪೀಠದಲ್ಲಿ ನಡೆಯುತ್ತಿದ್ದ ವಿಚಾರಣೆಯಲ್ಲಿ ವಕೀಲ ರಾಕೇಶ್ ಕಿಶೋರ್, ಗವಾಯಿ ಅವರತ್ತ ಶೂ ಎಸೆದಿದ್ದ ಘಟನೆ ನಡೆದಿತ್ತು. ಸನಾತನ ಧರ್ಮ ರಕ್ಷಣೆಯ ಹೆಸರಿನಲ್ಲಿ ಘೋಷಣೆಗಳನ್ನು ಕೂಗಿದ್ದ ರಾಕೇಶ್, ಖಜುರಾಹೊದ ವಿಷ್ಣುವಿನ ಶಿರಚ್ಛೇದಿತ ವಿಗ್ರಹ ಪುನಃಸ್ಥಾಪನೆ ವಿಚಾರಣೆಯ ವೇಳೆ CJI ಗವಾಯಿ ನೀಡಿದ ಹೇಳಿಕೆಗಳನ್ನು ಟೀಕಿಸಿದ್ದ. ಬುಲ್ಡೋಝರ್ ಧ್ವಂಸಗಳ ಕುರಿತ ಗವಾಯಿ ಅವರ ಅಭಿಪ್ರಾಯಕ್ಕೂ ಆತ ವಿರೋಧ ವ್ಯಕ್ತಪಡಿಸಿದ್ದ. ಘಟನೆಯ ನಂತರ ಬಾರ್ ಕೌನ್ಸಿಲ್ ಆಫ್ ಇಂಡಿಯಾ ಕಿಶೋರ್ ನ ವಕೀಲ ವೃತ್ತಿ ಪರವಾನಗಿಯನ್ನು ಅಮಾನತುಗೊಳಿಸಿತ್ತು. ಸುಪ್ರೀಂ ಕೋರ್ಟ್ ಬಾರ್ ಅಸೋಸಿಯೇಷನ್ ಕೂಡ ಆತನ ಸದಸ್ಯತ್ವವನ್ನು ರದ್ದು ಮಾಡಿತ್ತು. ಅಟಾರ್ನಿ ಜನರಲ್ ಅವರ ಮೇಲಿನ ನ್ಯಾಯಾಂಗ ನಿಂದನೆ ಕ್ರಮಕ್ಕೆ ಅನುಮತಿ ನೀಡಿದ್ದರೂ, ನಂತರ ಪೀಠವು ಪ್ರಕರಣವನ್ನು ಮುಂದುವರಿಸಲು ಆಸಕ್ತಿ ತೋರಿರಲಿಲ್ಲ. ಮಂಗಳವಾರ ರಾಕೇಶ್ ಕಿಶೋರ್ ಮೇಲೆ ನಡೆದ ದಾಳಿಯ ಬಗ್ಗೆ ಬಾರ್ ಕೌನ್ಸಿಲ್ ಆಫ್ ಇಂಡಿಯಾ ಹಾಗೂ ಜಿಲ್ಲಾ ಬಾರ್ ಅಸೋಸಿಯೇಷನ್ಗಳು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ದಾಳಿಯ ಹಿಂದಿನ ಉದ್ದೇಶವೂ ಸ್ಪಷ್ಟವಾಗಿಲ್ಲ. ಇದಕ್ಕೆ ಸಂಬಂಧಿಸಿ ದೂರು ದಾಖಲಾಗಿದೆಯೋ ಇಲ್ಲವೋ ಎಂಬುದೂ ತಿಳಿದುಬಂದಿಲ್ಲ ಎಂದು barandbench.com ವರದಿ ಮಾಡಿದೆ.

18 C