ಮುಡಿಪು: ಝೆನಿತ್ ಆಂಗ್ಲ ಮಾಧ್ಯಮ ಶಾಲೆಯ ʼಪ್ಲೇ ಸ್ಕೂಲ್ʼ ನ ನೂತನ ಕೊಠಡಿ ಉದ್ಘಾಟನೆ
ಬಂಟ್ವಾಳ: ಮುಂದಿನ ಶೈಕ್ಷಣಿಕ ವರ್ಷದಿಂದ ಆರಂಭವಾಗಲಿರುವ ಮುಡಿಪು ಝೆನಿತ್ ಆಂಗ್ಲ ಮಾಧ್ಯಮ ಶಾಲೆಯ ಪ್ಲೇ ಸ್ಕೂಲ್ ನ ನೂತನ ಕೊಠಡಿಯನ್ನು ಕೆ ಎಸ್ ಆಟ್ಟಕೋಯ ತಂಙಳ್ ಕುಂಬೋಲ್ ಅವರು ಏ.20 ಶನಿವಾರ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಅಲ್-ಅನ್ಸಾರ್ ವಾರಪತ್ರಿಕೆಯ ಸಂಪಾದಕ ಸಿದ್ದೀಕ್ ಮೊಂಟುಗೋಳಿ, ಹಾಗೂ ರಫೀಕ್ ಮಾಸ್ಟರ್ ಅವರು ಪೋಷಕರನ್ನುದ್ದೇಶಿಸಿ ಮಾತನಾಡಿದರು. ಸಮಾರಂಭದಲ್ಲಿ ಗೌಸಿಯ ಜುಮಾ ಮಸೀದಿಯ ಖತೀಬ್, ಸಂಸ್ಥೆಯ ಅಧ್ಯಕ್ಷರಾದ ಅಬ್ದುಲ್ ಮಜೀದ್, ಆಡಳಿತಾಧಿಕಾರಿ ಮೊಯಿದಿನ್ ಕುಂಞಿ, ಟ್ರಸ್ಟಿ ಬಶೀರ್, ನ್ಯಾಯವಾದಿ ಅಸ್ಗರ್ ಮುಡಿಪು, ಸಂಚಾಲಕಿ ನಹಾದ. ಎಂ, ಮುಖ್ಯಶಿಕ್ಷಕಿ ಸಫೂರ ಕೆ.ಇ ಉಪಸ್ಥಿತರಿದ್ದರು.
Budget Car: ಮಾರುಕಟ್ಟೆಗೆ ಲಗ್ಗೆ ಇಡಲಿದೆ ಬಡವರ BMW ಎನ್ನಲಾಗುತ್ತಿರುವ ಈ ಕಾರು! 19Km ಮೈಲೇಜ್ ಕೇವಲ ಇಷ್ಟು ಮಾತ್ರ
ಕಾರು ಎಂದರೆ ಯಾರಿಗೆ ಇಷ್ಟ ಇಲ್ಲ ಹೇಳಿ, ಪ್ರತಿ ಕಾರು ಇಷ್ಟ ಪಡಲು ಕೂಡ ಬೇರೆ ಬೇರೆ ತರಹದ ಕಾರಣ ಇರಲಿದೆ. ಆದರೆ ಇಲ್ಲೊಂದು ಲಕ್ಶೂರಿ ಕಾರು (Budget Car)ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದು ಅನೇಕರಿಗೆ ಈ ಕಾರು ಬಹಳ ಇಷ್ಟ ಆಗಿದೆ ಎಂದು ಹೇಳಬಹುದು. ಈ ಒಂದು ಕಾರು ಯಾವುದು ಯಾವೆಲ್ಲ ವಿಶೇಷ ಫೀಚರ್ಸ್ ಇದರಲ್ಲಿ ಇರಲಿದೆ ಯಾವ ಕಾರುಗಳಿಗೆ ಪ್ರಬಲ ಪ್ರತಿ ಸ್ಪರ್ಧಿ ಆಗಿ ಈ ಕಾರು ಕೆಲಸ ಮಾಡಲಿದೆ ಎಂಬ ಇತರ ಮಾಹಿತಿ ಇಲ್ಲಿದೆ. The post Budget Car: ಮಾರುಕಟ್ಟೆಗೆ ಲಗ್ಗೆ ಇಡಲಿದೆ ಬಡವರ BMW ಎನ್ನಲಾಗುತ್ತಿರುವ ಈ ಕಾರು! 19Km ಮೈಲೇಜ್ ಕೇವಲ ಇಷ್ಟು ಮಾತ್ರ appeared first on Karnataka Times .
ಕುಂದಾಪುರ: ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ನಿಧನ
ಕುಂದಾಪುರ, ಎ.25: ಬಡಗುತಿಟ್ಟಿನ ಯಕ್ಷಗಾನದ ಪ್ರಸಿದ್ಧ ಹಾಗೂ ಜನಪ್ರಿಯ ಭಾಗವತರಾಗಿದ್ದ ಸುಬ್ರಹ್ಮಣ್ಯ ಧಾರೇಶ್ವರ (67) ಎ.25 ರ ಮುಂಜಾನೆ ಬೆಂಗಳೂರಿನ ಪುತ್ರನ ಮನೆಯಲ್ಲಿ ಅಲ್ಪಕಾಲದ ಅಸೌಖ್ಯದಿಂದ ನಿಧನರಾಗಿದ್ದಾರೆ. ಧಾರೇಶ್ವರ ಅವರು ಯಕ್ಷಗಾನ ಕ್ಷೇತ್ರದಲ್ಲಿ ಸುಮಾರು 46 ವರ್ಷಗಳ ಸೇವೆ ಸಲ್ಲಿಸಿದ್ದರು. 1957 ರಲ್ಲಿ ಗೋಕರ್ಣದಲ್ಲಿ ಜನಿಸಿದ್ದ ಅವರು ಚಿಕ್ಕಂದಿನಿಂದಲೂ ಸಂಗೀತಾಭ್ಯಾಸ ಮಾಡುತಿದ್ದರು. ಶಿರಸಿ ಮೇಳದಲ್ಲಿ ಭಾಗವತರಾಗಿ ಸೇವೆ ಸಲ್ಲಿಸಿದ ಬಳಿಕ ಪೆರ್ಡೂರು ಮೇಳ ಸೇರಿದ್ದ ಧಾರೇಶ್ವರ ಅವರು 28 ವರ್ಷ ಪ್ರಧಾನ ಭಾಗವತರಾಗಿ ಸೇವೆ ಸಲ್ಲಿಸಿದ್ದರು. ಅದಕ್ಕೂ ಮೊದಲು ಅಮೃತೇಶ್ವರಿ ಮೇಳದಲ್ಲಿ ತಮ್ಮ ತಿರುಗಾಟ ಆರಂಭಿಸಿದ್ದರು. ಪ್ರಸಿದ್ಧ ಬಡಗುತಿಟ್ಟಿನ ಭಾಗವತ ನಾರಣಪ್ಪ ಉಪ್ಪೂರರಿಂದ ಭಾಗವತಿಕೆ ಕಲಿತು ರಂಗಸ್ಥಳದ ಮೇಲೇರಿದರು. ಹೊಸ ಹೊಸ ಪ್ರಸಂಗಗಳನ್ನು ನಿರ್ದೇಶಿಸುವ ಮೂಲಕ ಅವರು ಯಕ್ಷಗಾನ ಕ್ಷೇತ್ರದಲ್ಲಿ ಹೊಸ ಸಂಚಲನ ಸೃಷ್ಟಿಸಿದ್ದರು. ಕೀರ್ತಿಯ ಉತ್ತುಂಗದಲ್ಲಿ ಇದ್ದಾಗಲೇ ಮೇಳ ತಿರುಗಾಟ ನಿಲ್ಲಿಸಿದ್ದರು. ಮೇಳ ಬಿಟ್ಟು 10 ವರ್ಷದ ಬಳಿಕ ಮತ್ತೆ ಅದೇ ಮೇಳಕ್ಕೆ ಸೇರಿ ಒಂದು ವರ್ಷದ ತಿರುಗಾಟ ಮಾಡಿದ್ದರು. ಧಾರೇಶ್ವರ ಯಕ್ಷ ಬಳಗ ಮೂಲಕ ಯಕ್ಷಗಾನ ಕಾರ್ಯಕ್ರಮ ಸಂಯೋಜಿಸುತ್ತಿದ್ದರು. ಬಡಗುತಿಟ್ಟಿನಲ್ಲಿ ಪ್ರಯೋಗಶೀಲ ಭಾಗವತರೆನಿಸಿದ್ದ ಇವರು ಪತ್ನಿ, ಪುತ್ರ, ಪುತ್ರಿ ಹಾಗೂ ಅಪಾರ ಬಂಧುಗಳನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆ ಇಂದು ಸಂಜೆ ಕುಂದಾಪುರ ತಾಲೂಕಿನ ನಾಗೂರಿನ ಸ್ವಗೃಹದಲ್ಲಿ ನಡೆಯಲಿದೆ ಎಂದು ತಿಳಿದುಬಂದಿದೆ.
ರಾಜಕೀಯ ಮೈದಾನದಲ್ಲಿ ವೆಂಕಿ ಎಸೆದ ನೋ ಬಾಲ್!
ಕ್ರಿಕೆಟ್ ಬರೀ ಆಟವಲ್ಲ, ಅದೊಂದು ಬೃಹತ್ ಉದ್ಯಮ ಎನ್ನುವ ಟೀಕೆ ಇಂದು ನಿನ್ನೆಯದಲ್ಲ. ಭಾರತದಲ್ಲಿ ಕಾರ್ಪೊರೇಟ್ ಶಕ್ತಿಗಳು ರಾಜಕೀಯವನ್ನು ನಿಯಂತ್ರಿಸ ತೊಡಗಿದ ದಿನದಿಂದ ಕ್ರಿಕೆಟ್ ಬರೇ ಉದ್ಯಮವಾಗಿಯಷ್ಟೇ ಉಳಿದಿಲ್ಲ. ಕ್ರಿಕೆಟ್ ಎಂದರೆ ರಾಜಕೀಯವೂ ಹೌದು. ಬಿಸಿಸಿಐ ಎಂದರೆ ನೂರಾರು ಕೋಟಿ ರೂಪಾಯಿಗಳ ವ್ಯವಹಾರವಾಗಿದ್ದು ಅದನ್ನು ರಾಜಕಾರಣಿಗಳೇ ನಿಯಂತ್ರಿಸುತ್ತಾ ಬರುತ್ತಿದ್ದಾರೆ. ಕ್ರಿಕೆಟ್ನ ಗಂಧಗಾಳಿಯಿಲ್ಲದ ಉದ್ಯಮಿಗಳು, ರಾಜಕಾರಣಿಗಳು ಬಿಸಿಸಿಐಯ ಅತ್ಯುನ್ನತ ಸ್ಥಾನಗಳನ್ನು ನಿಭಾಯಿಸುತ್ತಾ ಬರುತ್ತಿರುವುದು ಇದೇ ಕಾರಣಕ್ಕೆ. ಕ್ರಿಕೆಟ್ ಆಟಕ್ಕೆ ಧರ್ಮವಿಲ್ಲ. ಅದು ಎಲ್ಲ ಗಡಿಗಳನ್ನು ಮೀರಿ ಜನರ ಮನಸ್ಸುಗಳನ್ನು ಬೆಸೆಯುತ್ತದೆ, ಒಂದಾಗಿಸುತ್ತದೆ ಎಂದು ಹೇಳಲಾಗುತ್ತದೆಯಾದರೂ, ಕ್ರಿಕೆಟ್ ತಾರೆಯರು ಮಾತ್ರ ‘ನಮಗೆ ಧರ್ಮ, ಜಾತಿಗಳಿವೆ’ ಎನ್ನುವುದನ್ನು ಆಗಾಗ ಸಾಬೀತು ಪಡಿಸುತ್ತಾ ಬಂದಿದ್ದಾರೆ. ಯಾವಾಗ ಕ್ರಿಕೆಟ್ ತಾರೆಯರು ತಮ್ಮ ನಿವೃತ್ತಿಯ ಬಳಿಕ ರಾಜಕೀಯದ ಕಡೆಗೆ ವಾಲತೊಡಗಿದರೋ ಅಲ್ಲಿಂದ ಕ್ರಿಕೆಟ್ ಕೂಡ ತನ್ನ ಅಳಿದುಳಿದ ಘನತೆಯನ್ನು ಕಳೆದುಕೊಳ್ಳ ತೊಡಗಿತು. ಗೌತಮ್ ಗಂಭೀರ್ರಂತಹ ಆಟಗಾರರು ಬಿಜೆಪಿ ಸೇರಿದ ಬಳಿಕ ನೀಡತೊಡಗಿದ ರಾಜಕೀಯ ಹೇಳಿಕೆಗಳು ಕ್ರೀಡೆಯ ಮೌಲ್ಯಗಳನ್ನು ಗಾಳಿಗೆ ತೂರಿದವು. ಸೋಲುವ ಭಯದಿಂದ ಪ್ರಧಾನಿ ಮೋದಿಯವರು ರಾಜಸ್ಥಾನದಲ್ಲಿ ಆಡುತ್ತಿರುವ ಹತಾಶೆಯ ದ್ವೇಷ ಭಾಷಣಗಳಿಗೆ ದೇಶಾದ್ಯಂತ ಟೀಕೆಗಳು ವ್ಯಕ್ತವಾಗುತ್ತಿವೆ. ಒಬ್ಬ ಪ್ರಧಾನಿ ಆಡುವ ಮಾತುಗಳೇ ಇವು? ಎಂದು ಸ್ವತಃ ಬಿಜೆಪಿಯೊಳಗಿರುವ ನಾಯಕರೇ ಮುಜುಗರ ಪಡುತ್ತಿದ್ದಾರೆ. ಇಂತಹ ಹೊತ್ತಿನಲ್ಲಿ, ಪ್ರಧಾನಿಯ ದ್ವೇಷ ಮಾತುಗಳನ್ನು ಸಮರ್ಥಿಸಲು ಹೋಗಿ ಮಾಜಿ ಕ್ರಿಕೆಟಿಗ ವೆಂಕಟೇಶ್ ಪ್ರಸಾದ್, ‘ಹಿಟ್ ವಿಕೆಟ್’ ಆಗಿದ್ದಾರೆ. ಪ್ರಧಾನಿಯ ಮಾತುಗಳನ್ನು ಸಮರ್ಥಿಸುವ ಯಾವ ಅನಿವಾರ್ಯವೂ ಮಾಜಿ ಕ್ರಿಕೆಟಿಗ ವೆಂಕಟೇಶ್ ಪ್ರಸಾದ್ಗೆ ಇರಲಿಲ್ಲವಾದರೂ, ತಾವಾಗಿಯೇ ಪ್ರಧಾನಿ ಉಗುಳಿದ ತಟ್ಟೆಗೆ ಹೋಗಿ ಬಾಯಿ ಹಾಕಿದ್ದಾರೆ. ಪ್ರಧಾನಿ ಮೋದಿಯವರು ಕೇವಲ ದ್ವೇಷದ ಮಾತುಗಳನ್ನಷ್ಟೇ ಆಡಿರುವುದಲ್ಲ. ತಮ್ಮ ದ್ವೇಷ ಹಂಚಿಕೆಗಾಗಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಮಾತುಗಳನ್ನು ತಿರುಚಿದ್ದರು. ‘‘ಭಾರತದ ಸಂಪತ್ತಿನಲ್ಲಿ ಈ ದೇಶದ ಮುಸ್ಲಿಮರಿಗೆ ಮೊದಲ ಪಾಲು ಎಂದು ಮನಮೋಹನ್ ಸಿಂಗ್ ಹೇಳಿದ್ದರು. ಕಾಂಗ್ರೆಸ್ ಸರಕಾರ ಆಡಳಿತಕ್ಕೆ ಬಂದರೆ ನುಸುಳುಕೋರರಿಗೆ ಈ ದೇಶದ ಸಂಪತ್ತನ್ನು ಹಂಚಲಿದೆ’’ ಎಂದು ಮೋದಿ ಏಕಕಾಲದಲ್ಲಿ ಸುಳ್ಳಿನ ಪಾತ್ರೆಯಲ್ಲಿ ದ್ವೇಷದ ಮಾತುಗಳನ್ನು ಜನರಿಗೆ ಹಂಚಿದ್ದರು. ಕಾಂಗ್ರೆಸ್ ಪಕ್ಷವು ತನ್ನ ಪ್ರಣಾಳಿಕೆಯಲ್ಲಿ ಹೇಳಿರುವ ಶ್ರೀಮಂತರ ಸಂಪತ್ತನ್ನು ಬಡವರಿಗೆ ಹಂಚುವ ಪ್ರಸ್ತಾವವನ್ನು ಟೀಕಿಸುತ್ತಾ ಅವರು ಮೇಲಿನ ಮಾತುಗಳನ್ನು ಆಡಿದ್ದರು. ಮುಖ್ಯವಾಗಿ ‘ಶ್ರೀಮಂತರ ಸಂಪತ್ತನ್ನು ಬಡವರಿಗೆ ಹಂಚುವುದು’ ಪ್ರಧಾನಿ ಮೋದಿಯವರಿಗೆ ಅಪಥ್ಯವಾಗಿತ್ತು. ಇದರ ವಿರುದ್ಧ ಹೇಳಿಕೆಯನ್ನು ನೀಡಲು ಸಾಧ್ಯವಿಲ್ಲ ಎನ್ನುವ ಕಾರಣಕ್ಕಾಗಿ, ‘ದೇಶದ ಸಂಪತ್ತನ್ನು ನುಸುಳುಕೋರರಿಗೆ ಹಂಚಲು ಕಾಂಗ್ರೆಸ್ ಹೊರಟಿದೆ’ ಎಂದು ವ್ಯಾಖ್ಯಾನಿಸಿದರು. ಈ ದೇಶದ ಎಲ್ಲ ಮುಸ್ಲಿಮರನ್ನು ಅವರು ನುಸುಳುಕೋರರ ಸಾಲಿಗೆ ಸೇರಿಸಿದ್ದರು. ಹಿಂದೂ-ಮುಸ್ಲಿಮ್ ಎಂದು ಜನರನ್ನು ಅವರು ವಿಭಜಿಸಿದರು. ಅನ್ನ ತಿನ್ನುವ ಯಾವನೂ ಪ್ರಧಾನಿಯ ಮಾತುಗಳನ್ನು ಸಮರ್ಥಿಸಲು ಸಾಧ್ಯವಿಲ್ಲ. ಆದರೆ ಮಾಜಿ ಕ್ರಿಕೆಟಿಗ ವೆಂಕಟೇಶ್ ಪ್ರಸಾದ್ ಮಾತ್ರ ಪ್ರಧಾನಿ ಮೋದಿಯವರ ಮಾತುಗಳನ್ನು ಪ್ರಸಾದದಂತೆ ಸ್ವೀಕರಿಸಿದ್ದಾರೆ. ಈ ಹಿಂದೆ ಸನಾತನ ಧರ್ಮದ ಪರವಾಗಿ ಬ್ಯಾಟಿಂಗ್ ಮಾಡಿದ್ದ ವೆಂಕಟೇಶ್ ಪ್ರಸಾದ್, ಇದೀಗ ದೇಶದ ಸಂಪತ್ತನ್ನು ಶ್ರೀಮಂತರಿಂದ ಬಡವರಿಗೆ ಹಂಚುವುದು ಎಷ್ಟು ಸರಿ ಎಂದು ಕೇಳಿದ್ದಾರೆ. ಅದಕ್ಕೆ ತನ್ನ ಕ್ರಿಕೆಟ್ ಅರ್ಥಶಾಸ್ತ್ರವನ್ನು ಸಮರ್ಥನೆಯಾಗಿ ನೀಡಿದ್ದಾರೆ. ‘ಶ್ರೀಮಂತರ ಸಂಪತ್ತನ್ನು ಬಡವರಿಗೆ ಮರು ಹಂಚಿಕೆ ಮಾಡುವ ಬಗ್ಗೆ ಪಕ್ಷವೊಂದು ಮಾತನಾಡುತ್ತಿರುವುದು ಚಿಂತಾಜನಕವಾಗಿದೆ. ನಾವು ರಾಜಸ್ಥಾನ ರಾಯಲ್ಸ್, ಕೋಲ್ಕತಾ ನೈಟ್ ರೈಡರ್ಸ್, ಸನ್ ರೈಸರ್ಸ್ ಹೈದರಾಬಾದ್ನಿಂದ ನಾಲ್ಕು ಅಂಕಗಳನ್ನು ತೆಗೆದು ಅದನ್ನು ಕೆಳಗಿನ ಹಂತದಲ್ಲಿರುವ ಮೂರು ತಂಡಗಳಿಗೆ ಮರುಹಂಚಿಕೆ ಮಾಡಿ ಅವರು ಪ್ಲೇ ಆಫ್ಗೆ ಬರುವಂತೆ ಮಾಡಬೇಕು ಎಂದು ಹೇಳಿದಂತಾಗುತ್ತದೆ’’ ಎಂದು ಹೇಳಿದ್ದಾರೆ. ಈ ದೇಶದ ಬಡತನ, ಹಸಿವು ಇವೆಲ್ಲದರ ಬಗ್ಗೆ ಪ್ರಾಥಮಿಕ ಅರಿವೂ ಇಲ್ಲದ, ಸಾಮಾಜಿಕ ನ್ಯಾಯಗಳ ಬಗ್ಗೆ ಅಸಹನೆಯಿರುವ ಹಿಂದುತ್ವವಾದಿ ಮಾಜಿ ಕ್ರಿಕೆಟ್ ತಾರೆಯಿಂದ ಇದರಾಚೆಗಿನ ಮಾತುಗಳನ್ನು ನಿರೀಕ್ಷಿಸುವುದು ಕೂಡ ತಪ್ಪಾಗುತ್ತದೆ. ಭಾರತದ ಶೇ. 1ರಷ್ಟು ಜನರ ಬಳಿ ಈ ದೇಶದ ಶೇ. 40ರಷ್ಟು ಸಂಪತ್ತುಗಳು ಶೇಖರಣೆಯಾಗಿವೆೆ ಮತ್ತು ಈ ಅಸಮಾನತೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ ಎಂದು ಆಕ್ಸ್ಫಾಮ್ ವರದಿ ಹೇಳುತ್ತದೆ. ಈ ದೇಶದ ಜನಸಂಖ್ಯೆಯಲ್ಲಿ ಕೊನೆಯ ಸ್ಥಾನದಲ್ಲಿರುವ ಶೇ. 50 ಜನರು ಕೇವಲ ಶೇ. 3ರಷ್ಟು ಸಂಪತ್ತನ್ನು ಮಾತ್ರ ಹೊಂದಿದ್ದಾರೆ. ವಿಪರ್ಯಾಸವೆಂದರೆ, ಈ ದೇಶದ ಶೇ. 10ರಷ್ಟಿರುವ ಶ್ರೆಮಂತರು ಕಟ್ಟುವ ತೆರಿಗೆಗಿಂತ ಆರು ಪಟ್ಟು ಹೆಚ್ಚು ಪರೋಕ್ಷ ತೆರಿಗೆಯನ್ನು ಈ ದೇಶದ ಶೇ. 50ರಷ್ಟಿರುವ ಜನರು ಕಟ್ಟುತ್ತಿದ್ದಾರೆ. ಈ ದೇಶದ ಬಿಲಿಯಾಧಿಪತಿಗಳು ಇನ್ನಷ್ಟು ಶ್ರೀಮಂತರಾಗುತ್ತಿದ್ದಂತೆಯೇ ಇತ್ತ ಈ ದೇಶದ ಬಡವರು ಇನ್ನಷ್ಟು ಬಡವರಾಗುತ್ತಿದ್ದಾರೆ. ಆಕ್ಸ್ಫಾಮ್ ವರದಿಯ ಪ್ರಕಾರ, ಅತಿ ಶ್ರೀಮಂತರ ಮೇಲೆ ಹೆಚ್ಚುವರಿ ತೆರಿಗೆಗಳನ್ನು ವಿಧಿಸುವ ಮೂಲಕ ಸಮಾನತೆಯನ್ನು ಸಾಧಿಸಬಹುದಾಗಿದೆ. ಇದನ್ನೇ ಕಾಂಗ್ರೆಸ್ ಪಕ್ಷ ತನ್ನ ಪ್ರಣಾಳಿಕೆಯಲ್ಲಿ ಹೇಳಿದೆ. ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿಯಾದ ಗೌತಮ್ ಅದಾನಿಯ ಲಾಭಗಳ ಮೇಲೆ ಒಂದು ಬಾರಿ ತೆರಿಗೆ ಹಾಕಿದರೆ 1.79 ಲಕ್ಷ ಕೋಟಿ ರೂಪಾಯಿಗಳನ್ನು ಸರಕಾರ ತನ್ನದಾಗಿಸಿಕೊಳ್ಳಬಹುದು. ಇಷ್ಟು ಹಣದಿಂದ ಒಂದು ವರ್ಷಕ್ಕೆ 50 ಲಕ್ಷಕ್ಕೂ ಹೆಚ್ಚು ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕವನ್ನು ಮಾಡಬಹುದು ಎಂದು ವರದಿ ಅಭಿಪ್ರಾಯ ಪಡುತ್ತದೆ. ಶ್ರೀಮಂತರ ಮೇಲೆ ವಿಧಿಸುವ ತೆರಿಗೆಯಿಂದ ಈ ದೇಶದ ಅಪೌಷ್ಟಿಕತೆ, ಅನಾರೋಗ್ಯಗಳನ್ನು ಹೇಗೆ ನಿವಾರಿಸಬಹುದು ಎನ್ನುವುದನ್ನೂ ಆಕ್ಸ್ಫಾಮ್ ತನ್ನ ವರದಿಯಲ್ಲಿ ಹೇಳಿದೆ. ವೆಂಕಟೇಶ್ ಪ್ರಸಾದ್ ಅವರು ವಿವಿಧ ಐಪಿಎಲ್ ಕ್ರಿಕೆಟ್ ತಂಡಗಳ ಅಂಕಗಳನ್ನು ಸಮಾನವಾಗಿ ಹಂಚುವ ಬಗ್ಗೆ ಮಾತನಾಡುತ್ತಿದ್ದಾರೆ. ಅವರು ಮಾತನಾಡಬೇಕಾದುದು ಅಂಕಗಳನ್ನು ಹಂಚುವುದರ ಬಗ್ಗೆಯಲ್ಲ, ಕ್ರಿಕೆಟ್ ತಂಡದಲ್ಲಿ ಪ್ರತಿಭಾವಂತರಿಗೆ ಸಮಾನಪಾಲು ದೊರಕುವಂತೆ ಮಾಡುವುದರ ಬಗ್ಗೆ. ಕ್ರಿಕೆಟ್ ಆಟದಲ್ಲಿ ಮೇಲ್ಜಾತಿಗಳು ತನ್ನ ಪ್ರಾಬಲ್ಯವನ್ನು ಮೆರೆಯುತ್ತಿವೆ. ಶೋಷಿತ ಸಮುದಾಯದಿಂದ ಬಂದ ಪ್ರತಿಭಾವಂತ ಆಟಗಾರರನ್ನು ಬದಿಗೆ ತಳ್ಳಲಾಗುತ್ತಿದೆ. ಈ ಬಗ್ಗೆ ಹಲವು ದಶಕಗಳಿಂದ ಟೀಕೆಗಳು ಕೇಳಿ ಬರುತ್ತಿವೆ. ಆದುದರಿಂದ, ಕ್ರಿಕೆಟ್ನಲ್ಲಿ ಮೇಲ್ಜಾತಿಯ ಪ್ರಾಬಲ್ಯವನ್ನು ಕಿತ್ತುಹಾಕಿ, ಅಲ್ಲಿ ಎಲ್ಲ ಸಮುದಾಯಗಳ ಪ್ರತಿಭಾವಂತ ಆಟಗಾರರಿಗೆ ಸಮಾನ ಅವಕಾಶವನ್ನು ನೀಡುವ ಬಗ್ಗೆ ವೆಂಕಟೇಶ್ ಪ್ರಸಾದ್ ಮಾತನಾಡಬೇಕು. ಇದೇ ಸಂದರ್ಭದಲ್ಲಿ ಈ ದೇಶದ ಇತರೆಲ್ಲ ಕ್ರೀಡೆಗಳನ್ನು ನಿರ್ಲಕ್ಷಿಸಿ ಕ್ರಿಕೆಟನ್ನು ಪ್ರೋತ್ಸಾಹಿಸಲಾಗುತ್ತಿದೆ. ಕ್ರಿಕೆಟ್ ಇತರ ಕ್ರೀಡೆಗಳನ್ನು ಆಪೋಷನ ತೆಗೆದುಕೊಳ್ಳುತ್ತಿದೆ ಎನ್ನುವ ಆರೋಪ ಇಂದು ನಿನ್ನೆಯದಲ್ಲ. ಆದುದರಿಂದ ಕ್ರಿಕೆಟ್ಗೆ ನೀಡುವ ಎಲ್ಲ ರೀತಿಯ ಆರ್ಥಿಕ ನೆರವನ್ನು ಸಮಾನವಾಗಿ ಇತರ ಕ್ರೀಡೆಗಳಿಗೂ ಹಂಚಬೇಕಾಗಿದೆ. ಕ್ರಿಕೆಟ್ ತಾರೆಯರಿಗೆ ನೀಡುವ ಸಂಭಾವನೆ, ಇತರ ಅತ್ಲೀಟ್ಗಳಿಗೂ ಸಿಗಬೇಕಾಗಿದೆ. ವೆಂಕಟೇಶ್ ಪ್ರಸಾದ್ ಈ ಬಗ್ಗೆ ಬಾಯಿ ತೆರೆಯಬೇಕು. ಎಲ್ಲಕ್ಕಿಂತ ಮುಖ್ಯವಾಗಿ ಕೇಂದ್ರ ಸರಕಾರ ಇತ್ತೀಚೆಗೆ ಮೇಲ್ಜಾತಿ ಬಡವರಿಗೂ ಶೇ.10 ಮೀಸಲಾತಿಯನ್ನು ಜಾರಿಗೆ ತಂದಿದೆ. ತಮ್ಮ ಕ್ರಿಕೆಟ್ ಅರ್ಥಶಾಸ್ತ್ರವನ್ನು ಈ ಶೇ.10 ಮೀಸಲಾತಿಗೂ ಅನ್ವಯಿಸಿ, ಆ ಮೀಸಲಾತಿಯನ್ನು ರದ್ದುಗೊಳಿಸಲು ಕೇಂದ್ರ ಸರಕಾರವನ್ನು ಒತ್ತಾಯಿಸಬೇಕಾಗಿದೆ.
Subrahmanya Dhareshwara : ಬಡಗು ತಿಟ್ಟು ಯಕ್ಷಗಾನದ ಖ್ಯಾತ ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಇನ್ನಿಲ್ಲ
ಬೆಂಗಳೂರು: ಬಡಗು ತಿಟ್ಟು ಯಕ್ಷಗಾನದ ಖ್ಯಾತ ಭಾಗವತ, ಉಭಯ ತಿಟ್ಟುಗಳಲ್ಲೂ ಅಪಾರ ಅಭಿಮಾನಿಗಳನ್ನು ಹೊಂದಿರುವ ಅವರು ಗುರುವಾರ ಬೆಳಗ್ಗೆ ನಿಧನರಾಗಿದ್ದಾರೆ. ಬೆಂಗಳೂರಿನ ತಮ್ಮ ಪುತ್ರನ ಮನೆಯಲ್ಲಿದ್ದ ಅವರು ಅಲ್ಪಕಾಲದ ಅಸೌಖ್ಯದಿಂದಾಗಿ ಬೆಳಗ್ಗೆ 430ರ ಸುಮಾರಿಗೆ ಇಹಲೋಕ ತ್ಯಜಿಸಿದರು. ಯಕ್ಷಗಾನ ರಂಗ ಕಂಡ ಅತ್ಯಂತ ಪ್ರಯೋಗಶೀಲ ಭಾಗವತರಾಗಿದ್ದ ಅವರಿಗೆ ಪತ್ನಿ, ಪುತ್ರ, ಪುತ್ರಿ ಇದ್ದಾರೆ. 46 ವರ್ಷಗಳ ಕಾಲ ಯಕ್ಷಗಾನ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿರುವ ಅವರು ಪೆರ್ಡೂರು, , ಹಿರೇಮಹಾಲಿಂಗೇಶ್ವರ ಮೇಳ, ಶಿರಸಿ ಮೇಳಗಳಲ್ಲಿ ಪ್ರಧಾನ ಭಾಗವತರಾಗಿ ತಿರುಗಾಟ ನಡೆಸಿದ್ದರು. ಬಡಗು ತಿಟ್ಟಿನ ಜನಪ್ರಿಯ ಮೇಳವಾಗಿರುವ ಪೆರ್ಡೂರು ಮೇಳವೊಂದರಲ್ಲೇ 28 ವರ್ಷಗಳ ಕಾಲ ತಿರುಗಾಟ ನಡೆಸಿದ್ದರು.
UPI Payment: ಫೋನ್ ಪೇ, ಗೂಗಲ್ ಪೇ ಯಾವುದೂ ಬೇಡ! ಇಂಟರ್ನೆಟ್ ಇಲ್ಲದ ಸಮಯದಲ್ಲಿ ಹೀಗೆ ಮಾಡಿ
ಆನ್ಲೈನ್ ಪಾವತಿ ಮಾಡುವಂತಹ ಈ ವಿಧಾನ ನರೇಂದ್ರ ಮೋದಿ ಅವರ ಸಾರಥ್ಯದಲ್ಲಿ ಭಾರತ ದೇಶದಲ್ಲಿ ಹೆಚ್ಚಾಗಿ ಬೆಳೆದು ನಿಂತಿದೆ ಎಂದು ಹೇಳಬಹುದಾಗಿದೆ. ಆದರೆ ಇವುಗಳನ್ನು ಬಳಸುವಾಗ ಇಂಟರ್ನೆಟ್ ಇರಬೇಕಾಗಿರುವುದು ಅತ್ಯಂತ ಪ್ರಮುಖವಾಗಿರುತ್ತದೆ ಎಂಬುದು ನಿಮಗೆಲ್ಲರಿಗೂ ತಿಳಿದಿರುವ ವಿಚಾರ. ಆದರೆ ಈಗ ತಿಳಿದು ಬಂದಿರುವ ಮಾಹಿತಿಯ ಪ್ರಕಾರ ನೀವು UPI ಪೇಮೆಂಟ್ಸ್ (UPI Payment) ಗಳನ್ನು ಇಂಟರ್ನೆಟ್ ಇಲ್ಲದೆ ಕೂಡ ಬಳಸಿಕೊಳ್ಳಬಹುದಾಗಿದೆ. ಬನ್ನಿ ಇದರ ಬಗ್ಗೆ ಇನ್ನಷ್ಟು ಹೆಚ್ಚಿನ ಮಾಹಿತಿ ಪಡೆದುಕೊಳ್ಳೋಣ. The post UPI Payment: ಫೋನ್ ಪೇ, ಗೂಗಲ್ ಪೇ ಯಾವುದೂ ಬೇಡ! ಇಂಟರ್ನೆಟ್ ಇಲ್ಲದ ಸಮಯದಲ್ಲಿ ಹೀಗೆ ಮಾಡಿ appeared first on Karnataka Times .
ಸ್ವಯಂ ಘೋಷಿತ 'ದೇಶ ಭಕ್ತ'ರಿಗೆ ಜಾತಿ ಗಣತಿಯ ನಡುಕ: ನರೇಂದ್ರ ಮೋದಿ ವಿರುದ್ಧ ರಾಹುಲ್ ಗಾಂಧಿ ವ್ಯಂಗ್ಯ
Lok Sabha Elections 2024: ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಜಾತಿ ಗಣತಿಯ ಎಕ್ಸ್ರೇ ಬಗ್ಗೆ ಸ್ವಯಂ ಘೋಷಿತ ದೇಶಭಕ್ತರು ಗಾಬರಿಗೊಂಡಿದ್ದಾರೆ ಎಂದು ಹೇಳಿದ್ದಾರೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಜಾತಿ ಗಣತಿಯನ್ನು ತಡೆಯುವುದು ಯಾರಿಂದಲೂ ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ.
ಕರ್ನಾಟಕದ ಕೆಲವು ಜಿಲ್ಲೆಗಳಿಗೆ ಬಿಸಿಗಾಳಿ: ಹವಾಮಾನ ಇಲಾಖೆ ಎಚ್ಚರಿಕೆ
IMD Warns Heat waves in Karnataka: ಕೆಲವು ದಿನಗಳ ಹಿಂದೆ ವಿವಿಧ ಭಾಗಗಳಲ್ಲಿ ಆರ್ಭಟಿಸಿದ್ದ ವರುಣ ಮತ್ತೆ ತಣ್ಣಗಾಗಿದ್ದಾನೆ. ಅಲ್ಲಲ್ಲಿ ಹಗುರ ಮಳೆಯಾಗುತ್ತಿದ್ದರೂ, ಸೆಕೆಯ ವಾತಾವರಣ ಜನರನ್ನು ಹಿಂಡಿ ಹಿಪ್ಪೆ ಮಾಡುತ್ತಿದೆ. ಈ ನಡುವೆ ಗುರುವಾರದಿಂದ ನಾಲ್ಕು ದಿನ ವಿವಿಧ ಜಿಲ್ಲೆಗಳಲ್ಲಿ ಬಿಸಿ ಗಾಳಿ ಬೀಸುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ಸಾಲ ನೀಡುವ ಆ್ಯಪ್ ಗಳಿಂದ ಕಿರಿಕ್: ತಕ್ಷಣ ಹಣ ಸಿಗುತ್ತದೆ ಎಂದು ಮುಂದುವರಿದರೆ ಮಾನ ಹರಾಜು ಆಗುತ್ತೆ ಜೋಕೆ
ಕಷ್ಟಕಾಲದಲ್ಲಿ ತಕ್ಷಣಕ್ಕೆ ಸಾಲ ಸಿಗುತ್ತದೆ ಎಂದು ಲೋನ್ ಆ್ಯಪ್ ಗಳ ಮೊರೆ ಹೋದಿರೋ ಎಚ್ಚರ. ಸಾಮಾಜಿಕ ಜಾಲತಾಣಗಳಲ್ಲಿ ಬರುವ ಸಂದೇಶಗಳನ್ನು ನೋಡಿ ಆರ್ಥಿಕ ಸಂಕಷ್ಟದಲ್ಲಿ ಇರುವವರು ಇವರನ್ನು ಸಂಪರ್ಕಿಸಿದರೆ ಪ್ರಾರಂಭದಲ್ಲಿ ಚೆನ್ನಾಗಿ ಮಾತನಾಡಿ ಮರುಳು ಮಾಡುತ್ತಾರೆ. ಬಳಿಕ ಒಂದೊಂದಾಗಿಯೇ ಕಿರಿಕ್ ಶುರು ಮಾಡುತ್ತಾರೆ. ನೀವು ಹಣ ಕಟ್ಟಿದರೂ ಹೆಚ್ಚಿನ ಹಣಕ್ಕೆ ಬೇಡಿಕೆಯಿಡುತ್ತಾರೆ. ಹೆಚ್ಚಿನ ಹಣ ಕೊಡಲು ಸಾಧ್ಯವಾಗದೇ ಇದ್ದಾಗ ನಿಮ್ಮ ಫೋಟೋಗಳನ್ನು ಮಾರ್ಪಿಂಗ್ ಮಾಡಿ ಅಶ್ಲೀಲ ಚಿತ್ರಗಳನ್ನಾಗಿಸಿ ವೈರಲ್ ಮಾಡುತ್ತಾರೆ.
40 ಡಿಗ್ರಿ ಸೆಲ್ಸಿಯಸ್ ದಾಟಿದ ತಾಪಮಾನ: ಸರಳ ಮತದಾನಕ್ಕೆ ಚುನಾವಣಾ ಆಯೋಗದಿಂದ ನೆರಳ ಯೋಜನೆ!
ಸಾಮಾನ್ಯವಾಗಿ ಕಳೆದ ಎರಡು ದಶಕಗಳಿಂದ ಲೋಕಸಭಾ ಚುನಾವಣೆಯು ಪ್ರತಿ ಬಾರಿಯೂ ಬೇಸಿಗೆ ಕಾಲದಲ್ಲಿಯೇ ಬರುತ್ತಿದೆ. ಜನರೂ, ರಾಜಕಾರಣಿಗಳೂ ಅದಕ್ಕೆ ಹೊಂದಿಕೊಂಡಿದ್ದಾರೆ. ಆದರೆ ಈ ಬಾರಿ ಮಾತ್ರ ಹಿಂದೆಂದಿಗಿಂತಲೂ ಹೆಚ್ಚಿಗೆ ತಾಪಮಾನ ಇದೆ. ಬಹುತೇಕ ರಾಜ್ಯದ ಎಲ್ಲೆಡೆಗಳಲ್ಲೂ ಮನೆಯಿಂದ ಹೊರಗೆ ಕಾಲಿಟ್ಟರೆ ಮೈಸುಡುವಂತಹಾ ಬಿಸಿಲಿದೆ. ಸಹಿಸಲಸಾಧ್ಯ ಸೆಕೆಯಿದೆ. ಮಳೆ ಬಾರದ್ದರಿಂದ ಇಳೆ ಅಕ್ಷರಶಃ ಕಾದ ಕಾವಲಿಯಂತಾಗಿದ್ದಾಳೆ. ಇದು ಮತದಾನ ಪ್ರಕ್ರಿಯೆಯ ಮೇಲೂ ಪ್ರಭಾವ ಬೀರುವ ಸಾಧ್ಯತೆ ಇಲ್ಲದಿಲ್ಲ. ಹೀಗಾಗಿ ಚುನಾವಣಾ ಆಯೋಗ ವಿಶೇಷ ಸಿದ್ಧತೆ ಮಾಡಿಕೊಂಡಿದೆ.
ಟ್ರಿಪ್ಗಳ ಸಂಖ್ಯೆ ಕುಸಿತ: ಬೆಂಗಳೂರಿನಲ್ಲಿ ಬಿಎಂಟಿಸಿ ಸಂಚಾರ ವ್ಯವಸ್ಥೆಗೆ ಮಂಕು
Bengaluru BMTC Issue: ಎಷ್ಟೇ ಮಂದಿ ವಾಹನಗಳನ್ನು ಖರೀದಿಸಿದರೂ, ನಗರದ ಮೂಲೆ ಮೂಲೆಗಳನ್ನು ಸಂಪರ್ಕಿಸುವ ಮೆಟ್ರೋ ಮಾರ್ಗಗಳನ್ನು ಆರಂಭಿಸಿದರೂ, ಬಡವರು ಹಾಗೂ ಮಧ್ಯಮ ವರ್ಗದವರಿಗೆ ಕಡಿಮೆ ದರದಲ್ಲಿ ಸಂಚಾರ ವ್ಯವಸ್ಥೆ ಕಲ್ಪಿಸಿಕೊಡುವುದು ಬಿಎಂಟಿಸಿ. ಆದರೆ ಇತ್ತೀಚಿನ ವರ್ಷಗಳಲ್ಲಿ ಬಿಎಂಟಿಸಿಯ ಟ್ರಿಪ್ಗಳ ಸಂಖ್ಯೆಯಲ್ಲಿ ಗಣನೀಯ ಇಳಿಕೆಯಾಗಿದೆ. ಹೊಸ ಬಸ್ ಖರೀದಿಗಳೂ ನಡೆಯುತ್ತಿಲ್ಲ.
ಡಿಕೆ ಸುರೇಶ್ ಆಪ್ತರಿಗೆ ಐಟಿ ಶಾಕ್: ರಾಜಕೀಯ ಪ್ರೇರಿತ ದಾಳಿ ಎಂದು ಕಾಂಗ್ರೆಸ್ ಪ್ರತಿಭಟನೆ
IT Raids on DK Suresh Close Aides: ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಿಕೆ ಸುರೇಶ್ ಅವರ ಮತ್ತಷ್ಟು ಆಪ್ತರ ಮನೆಗಳ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಬುಧವಾರ ದಾಳಿ ನಡೆಸಿ, ದಾಖಲೆಗಳನ್ನು ಪರಿಶೀಲಿಸಿದ್ದಾರೆ. ಈ ವೇಳೆ ಸಾಕಷ್ಟು ನಗದು ಮತ್ತು ಚಿನ್ನಾಭರಣಗಳನ್ನು ಜಪ್ತಿ ಮಾಡಲಾಗಿದೆ.
ಬಹುತೇಕ ಕ್ಷೇತ್ರಗಳಲ್ಲಿ ತುರುಸಿನ ಸ್ಪರ್ಧೆ: ಹಳೆ ಮೈಸೂರು ಭಾಗದಲ್ಲಿ ನಿಕಟ ಪೈಪೋಟಿ
Lok Sabha Elections 2024: ಲೋಕಸಭೆ ಚುನಾವಣೆಯ ಎರಡನೇ ಹಂತದ ಮತ್ತು ಕರ್ನಾಟಕದಲ್ಲಿ ಮೊದಲ ಹಂತದ ಮತದಾನ ಶುಕ್ರವಾರ ನಡೆಯಲಿದೆ. ಹಳೆ ಮೈಸೂರು ಭಾಗದ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ- ಜೆಡಿಎಸ್ ಮೈತ್ರಿ ನಡುವೆ ನಿಕಟ ಪೈಪೋಟಿ ನಡೆಯಲಿದೆ. ಇಲ್ಲಿ ಯಾವುದೇ ಪಕ್ಷಕ್ಕೆ ಸುಲಭದ ತುತ್ತು ಎಂದು ಪರಿಗಣಿಸಲಾಗಿರುವ ಕ್ಷೇತ್ರಗಳ ಸಂಖ್ಯೆ ಬಹಳ ಕಡಿಮೆ.
ಶೃಂಗೇರಿಯಲ್ಲಿ ತುಂಗಾ ನದಿ ಒಡಲಲ್ಲೇ ವ್ಯಾಪಾರ: ವರದಿಗೆ ಭೂಕೋರ್ಟ್ ಆದೇಶ
Illegal Shops in Tunga River Bank: ಶಾರದಾಂಬೆ ನೆಲೆಸಿರುವ ಶೃಂಗೇರಿಯಲ್ಲಿ ತುಂಗಾ ನದಿ ತೀರದಲ್ಲಿಯೇ ಅನಧಿಕೃತವಾಗಿ ಅಂಗಡಿಗಳನ್ನು ನಿರ್ಮಾಣ ಮಾಡಿರುವ ಕುರಿತಾದ ವಿಜಯ ಕರ್ನಾಟಕ ವರದಿ ನ್ಯಾಯಾಲಯದ ಗಮನ ಸೆಳೆದಿದೆ. ಸ್ವಯಂ ಪ್ರೇರಿತ ಪ್ರಕರಣ ದಾಖಲು ಮಾಡಿಕೊಂಡಿರುವ ಕರ್ನಾಟಕ ಭೂ ಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯ, ಈ ಬಗ್ಗೆ ವರದಿ ನೀಡುವಂತೆ ಚಿಕ್ಕಮಗಳೂರು ಜಿಲ್ಲಾಡಳಿತಕ್ಕೆ ಸೂಚನೆ ನೀಡಿದೆ.
ಏ. 26ರಂದು ಮತದಾನಕ್ಕೆ 14 ಲೋಕಸಭಾ ಕ್ಷೇತ್ರಗಳ 2. 88ಕೋಟಿ ಮತದಾರರು ತುದಿಗಾಲಲ್ಲಿ!
ಈ ಬಾರಿಯ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಕರ್ನಾಟಕದಲ್ಲಿ ಎರಡು ಹಂತಗಳಲ್ಲಿ ಮತದಾನ ನಡೆಯಲಿದೆ. ಏ. 26ರಂದು ಮೊದಲ ಹಂತ ಹಾಗೂ ಮೇ 7ರಂದು ಎರಡನೇ ಹಂತದ ಮತದಾನ ನಡೆಯಲಿದೆ. ಅದರಂತೆ, ಏ. 26ರಂದು ರಾಜ್ಯದ ಒಟ್ಟು 14 ಲೋಕಸಭಾ ಕ್ಷೇತ್ರಗಳ 2.88 ಕೋಟಿ ಮತದಾರರಿಂದ ಹಕ್ಕು ಚಲಾವಣೆಯಾಗಲಿದೆ. ಪ್ರತಿಯೊಂದು ಬೂತ್ ನಲ್ಲಿಯೂ ತುರ್ತು ವೈದ್ಯಕೀಯ ಸೇವೆಗಳನ್ನು ನಿಯೋಜಿಸಲಾಗಿದ್ದು, ಮತದಾನಕ್ಕಾಗಿ ಕ್ಯೂ ನಿಂತಾಗ ಯಾರಿಗಾದರೂ ಬಿಸಿಲಾಘಾತವಾದರೆ ತುರ್ತು ವೈದ್ಯಕೀಯ ಚಿಕಿತ್ಸೆಯೂ ಸಿಗಲಿದೆ.
ಹಾಸನ, ಮಂಡ್ಯದಲ್ಲಿ ‘ಮೈತ್ರಿ’ ಅಸಹಕಾರ - ಮಾಜಿ ಪ್ರಧಾನಿ ದೇವೇಗೌಡರ ಅಸಮಾಧಾನ
ಹಾಸನ ಮತ್ತು ಮಂಡ್ಯ ಲೋಕಸಭಾ ಕ್ಷೇತ್ರಗಳಲ್ಲಿ ಮೈತ್ರಿ ಅಭ್ಯರ್ಥಿಗಳಿಗೆ ಯಾವುದೇ ಸಹಕಾರ ಸಿಗುತ್ತಿಲ್ಲ ಎದಂು ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕರ್ನಾಟಕದಲ್ಲಿ ಮೊದಲ ಸುತ್ತಿನ ಮತದಾನಕ್ಕೆ ಇನ್ನೊಂದೇ ದಿನ ಬಾಕಿಯಿದೆ. ಆದರೂ, ಮೈತ್ರಿಯ ಬಗ್ಗೆ ಬಿಜೆಪಿ ಹಾಗೂ ಜೆಡಿಎಸ್ ನಡುವೆ ಇನ್ನೂ ಒಮ್ಮತ ಮೂಡಿಲ್ಲ ಎಂದು ಬೇಸರ ಹೊರಹಾಕಿದ್ದಾರೆ. ಮಂಡ್ಯದಲ್ಲಿ ಸುಮಲತಾ ಅವರು ಕುಮಾರಸ್ವಾಮಿಗೆ ಸಹಾಯ ಮಾಡಿಲ್ಲ. ಹಾಸನದಲ್ಲಿ ಪ್ರಜ್ವಲ್ ರೇವಣ್ಣಗೆ ಬಿಜೆಪಿ ನಾಯಕರು ಸಹಾಯ ಮಾಡಿಲ್ಲ. ಹಾಗಂತ ಅವರು ಸೋಲುತ್ತಾರೆ ಎಂದರ್ಥವಲ್ಲ ಎಂದು ಹೇಳಿದ್ದಾರೆ.
ಹಾರ್ದಿಕ್ ಪಾಂಡ್ಯಗೆ ಕೊಕ್ - ಟಿ20 ವಿಶ್ವಕಪ್ಗೆ ಭಾರತ ತಂಡ ಕಟ್ಟಿದ ವೀರೇಂದ್ರ ಸೆಹ್ವಾಗ್!
Team India Playing 11 for ICC T20 World Cup 2024: ಹದಿನೇಳನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಆಟಗಾರರು ನೀಡುತ್ತಿರುವ ಪ್ರದರ್ಶನ ಗಮನದಲ್ಲಿಟ್ಟು, ಮುಂಬರುವ ಐಸಿಸಿ ಟಿ20 ಕ್ರಿಕೆಟ್ ವಿಶ್ವಕಪ್ ಟೂರ್ನಿಗೆ ಭಾರತ ತಂಡ ಆಯ್ಕೆ ಮಾಡಿಕೊಳ್ಳಬೇಕಾದ 11 ಆಟಗಾರರನ್ನು ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಹೆಸರಿಸಿದ್ದಾರೆ. ಅಮೆರಿಕ ಮತ್ತು ವೆಸ್ಟ್ ಇಂಡೀಸ್ನ ಜಂಟಿ ಆತಿಥ್ಯದಲ್ಲಿ ನಡೆಯಲಿರುವ ಐಸಿಸಿ ಟಿ20 ಕ್ರಿಕೆಟ್ ವಿಶ್ವಕಪ್ ಟೂರ್ನಿ ಜೂನ್ 1ರಿಂದ 29ರವರೆಗೆ ಆಯೋಜನೆ ಆಗಲಿದೆ.
'4 ಓವರ್ಗಳಿಗೆ 73 ರನ್' : ಐಪಿಎಲ್ನ ಅತ್ಯಂತ ದುಬಾರಿ ಸ್ಪೆಲ್ ಮಾಡಿದ ಮೋಹಿತ್ ಶರ್ಮಾ!
most expensive bowling figures in IPL: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟೂರ್ನಿಯ ಇತಿಹಾಸದಲ್ಲಿಯೇ ಗುಜರಾತ್ ಟೈಟನ್ಸ್ ವೇಗಿ ಮೋಹಿತ್ ಶರ್ಮಾ ಅತ್ಯಂತ ದುಬಾರಿ ಬೌಲಿಂಗ್ ಸ್ಪೆಲ್ ಮಾಡಿದ್ದಾರೆ. ಬುಧವಾರ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಬೌಲ್ ಮಾಡಿದ ಕೇವಲ ಓವರ್ಗಳಿಗೆ 18.20ರ ಎಕಾನಮಿ ರೇಟ್ನಲ್ಲಿ 73 ರನ್ಗಳನ್ನು ಬಿಟ್ಟುಕೊಟ್ಟಿದ್ದರು. ಆ ಮೂಲಕ ಐಪಿಎಲ್ ಇತಿಹಾಸದಲ್ಲಿಯೇ ಅತ್ಯಂತ ದುಬಾರಿ ಬೌಲಿಂಗ್ ಸ್ಪೆಲ್ ಮಾಡಿದ ಬೌಲರ್ ಎಂಬ ಅನಗತ್ಯ ದಾಖಲೆಯನ್ನು ಹೆಗಲೇರಿಸಿಕೊಂಡಿದ್ದಾರೆ.
ಲೋಕಸಭಾ ಚುನಾವಣೆ ನಡೆಯುವ ರಾಜ್ಯದ 14 ಕ್ಷೇತ್ರಗಳಲ್ಲಿ ಏಪ್ರಿಲ್ 26 ಕ್ಕೆ ಸಾರ್ವತ್ರಿಕ ರಜೆ ಘೋಷಣೆ
Voting Day Holiday : ಮತದಾನ ಮಾಡುವವರಿಗೆ ಅನುಕೂಲವಾಗಲೆಂದು ಏಪ್ರಿಲ್ 26 ರಂದು ರಾಜ್ಯದಲ್ಲಿ ಮತದಾನ ನಡೆಯುವ ಜಿಲ್ಲೆಗಳಲ್ಲಿ ಸಾರ್ವತ್ರಿಕ ರಜೆ ಘೋಷಣೆ ಮಾಡಲಾಗಿದೆ. ಯಾವೆಲ್ಲಾ ಕಡೆ ರಜೆ? ಯಾವ ಸಂಸ್ಥೆಗಳಿಗೆ ರಜೆ? ಇಲ್ಲಿದೆ ಹೆಚ್ಚಿನ ಮಾಹಿತಿ.
ಚಾಂಪಿಯನ್ಸ್ ಟ್ರೋಫಿ ಆಡಲು ಪಾಕಿಸ್ತಾನಕ್ಕೆ ಭಾರತ ತಂಡವನ್ನು ಕಳುಹಿಸಲ್ಲ: ಬಿಸಿಸಿಐ!
Champions Trophy 2025: 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಆಡುವ ಸಲುವಾಗು ಭಾರತ ತಂಡವನ್ನು ತಮ್ಮ ದೇಶಕ್ಕೆ ಕರೆಸಿಕೊಳ್ಳುವ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಪ್ರಯತ್ನಗಳು ವಿಫಲವಾಗುತ್ತಿವೆ. ಇದಕ್ಕಾಗಿ 2023ರ ಏಕದಿನ ವಿಶ್ವಕಪ್ ಟೂರ್ನಿಯ ಅಂತ್ಯದಿಂದಲೂ ಪ್ರಯತ್ನಿಸುತ್ತಿರುವ ಪಿಸಿಬಿ, ಪಾಕಿಸ್ತಾನದ ನೆಲದಲ್ಲಿ ಆಡುವ ಭರವಸೆಯನ್ನು ನೀಡುವಂತೆ ಬಿಸಿಸಿಐಗೆ ಕೇಳುತ್ತಿದೆ. ಆದರೆ ಭಾರತ ತಂಡ ಪಾಕಿಸ್ತಾನಕ್ಕೆ ಹೋಗುವುದು ಬಹುತೇಕ ಅನುಮಾನ ಎಂದು ಕಾಣುತ್ತಿದೆ. ಬಿಸಿಸಿಐ ಮೂಲಗಳ ಪ್ರಕಾರ ಭಾರತ ಯಾವುದೇ ಸಂದರ್ಭದಲ್ಲೂ ಪಾಕಿಸ್ತಾನಕ್ಕೆ ಹೋಗುವುದಿಲ್ಲ ಮತ್ತು ತಟಸ್ಥ ಸ್ಥಳದಲ್ಲಿ ಟೂರ್ನಿಯನ್ನು ಆಯೋಜಿಸುವ ಬಗ್ಗೆ ಚರ್ಚೆ ನಡೆಸಲಾಗುತ್ತಿದೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.
ಶಾಸಕ ಉದಯ್ ಗರುಡಾಚಾರ್ಗೆ ಹೈಕೋರ್ಟ್ ಕ್ಲೀನ್ ಚೀಟ್; ಕೆಳ ಹಂತದ ಕೋರ್ಟ್ ವಿಧಿಸಿದ್ದ ಜೈಲು ಶಿಕ್ಷೆ ರದ್ದು!
MLA Uday Garudachar : ಕಳೆದ ಚುನಾವಣೆ ಸಮಯದಲ್ಲಿ ಕ್ರಿಮಿನಲ್ ಪ್ರಕರಣಗಳ ಮರೆ ಮಾಚಿದ ಆರೋಪ ಎದುರಿಸುತ್ತಿದ್ದ ಶಾಸಕ ಉದಯ್ ಗರುಡಾಚಾರ್ಗೆ ಹೈಕೋರ್ಟ್ ಕ್ಲೀನ್ ಚೀಟ್ ನೀಡಿದೆ. ಕಳೆ ಹಂತದ ನ್ಯಾಯಾಲಯ ವಿಧಿಸಿದ್ದ ಜೈಲು ಶಿಕ್ಷೆ, ದಂಡ ಮೊತ್ತವನ್ನು ರದ್ದು ಮಾಡಿದೆ. ಈ ಬಗ್ಗೆ ವಿವರ ಇಲ್ಲಿದೆ.
ನೇಹಾ ಕೊಲೆ ಪ್ರಕಾರಣ: ಕೊಲೆ ಆರೋಪಿ ಫಯಾಜ್ ಕೊಲೆಯಾದ ಸ್ಥಳಕ್ಕೆ ಮಹಜರು
ಹುಬ್ಬಳ್ಳಿಯಲ್ಲಿ ಇತ್ತೀಚೆಗೆ ನಡೆದಿರುವ ನೇಹಾ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ಫಯಾಜ್ ನನ್ನು ಏ. 24ರಂದು ಕೊಲೆಯಾದ ಜಾಗಕ್ಕೆ ಕರೆದೊಯ್ದಿದ್ದ ಪೊಲೀಸರು, ಸ್ಥಳ ಮಹಜರು ನಡೆಸಿದರು. ಕೇಂದ್ರ ಕಾರಾಗೃಹದಿಂದ ಆರೋಪಿಯ ಆರೋಗ್ಯ ತಪಾಸಣೆ ನಡೆಸಿದ ಪೊಲೀಸರು ಆನಂತರ ಸಿಐಡಿ ಅಧಿಕಾರಿಗಳು ನೇರವಾಗಿ ಹುಬ್ಬಳ್ಳಿಯ ಬಿವಿಬಿ ಇಂಜಿನಿಯರಿಂಗ್ ಕಾಲೇಜಿಗೆ ಕರೆದೊಯ್ದ ಪೊಲೀಸರು ಅಲ್ಲಿ ಘಟನೆ ನಡೆದಿದ್ದರ ಬಗ್ಗೆ ಸಿಐಡಿ ಅಧಿಕಾರಿಗಳು ಆರೋಪಿಯಿಂದ ಮಾಹಿತಿ ಪಡೆದರು.
Siddaramaiah On Modi Muslim Reservation Statement : ಪ್ರಧಾನಿ ಮೋದಿ ಅವರು ಕರ್ನಾಟಕದಲ್ಲಿ ದಲಿತರ, ಹಿಂದುಳಿದವರ ಮೀಸಲಾತಿ ಕಿತ್ತು ಮುಸ್ಲಿಮರಿಗೆ ನೀಡಲಾಗುತ್ತಿದೆ ಎಂದು ಹೇಳಿಕೆ ನೀಡಿದ್ದರು. ಈ ಬಗ್ಗೆ ಸಿದ್ದರಾಮಯ್ಯ ಕಿಡಿಕಾರಿದ್ದಾರೆ. ಇಲ್ಲಿದೆ ಸಿಎಂ ಸ್ಪಷ್ಟನೆ.
ಇದು ಜನಸಾಮಾನ್ಯರ ಚುನಾಚಣೆಯಲ್ಲ ಶ್ರೀಮಂತರ ಚುನಾಚಣೆ: ವಾಟಾಳ್ ನಾಗರಾಜ್
ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಹಿರಿಯ ರಾಜಕಾರಣಿ ವಾಟಾಳ್ ನಾಗರಾಜ್ ಅವರು ಸ್ಪರ್ಧಿಸಿದ್ದಾರೆ. ತಮ್ಮ ವಿಭಿನ್ನ ಬಗೆಯ ಹೋರಾಟಗಾರರಿಂದಲೇ ಹೆಸರುವಾಸಿಯಾಗಿರುವ ವಾಟಾಳ್ ಅವರು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿರುವ ಅವರನ್ನು ವಿಜಯ ಕರ್ನಾಟಕ ವೆಬ್ ಮಾತನಾಡಿಸಿತು. ಆ ಸಂದರ್ಭದಲ್ಲಿ ಅವರು, ಇತ್ತೀಚೆಗಿನ ಚುನಾವಣೆಗಳು ಶ್ರೀಮಂತರ ಚುನಾವಣೆಗಳಾಗಿದ್ದು, ಬಡವರ ಅಥವಾ ಜನಸಾಮಾನ್ಯರ ಚುನಾವಣೆಗಳಾಗಿ ಉಳಿದಿಲ್ಲ ಎಂದು ಹೇಳಿದ್ದಾರೆ.
ಸಿದ್ದರಾಮಯ್ಯ ಸರ್ಕಾರ ಗ್ಯಾರಂಟಿ ಕೊಟ್ಟು ಕಿತ್ತುಕೊಂಡಿದ್ದು ಎಲ್ಲೆಲ್ಲಿ : ಪ್ರಲ್ಹಾದ್ ಜೋಶಿ ಕೊಟ್ಟ ಲೆಕ್ಕ
Guarantee Scheme Adjustment : ಸಿದ್ದರಾಮಯ್ಯನವರ ಸರ್ಕಾರ ಗ್ಯಾರಂಟಿಗಳಿಗೆ ದುಡ್ಡು ಹೊಂದಿಸಲು ಏಲ್ಲೆಲ್ಲಿ ದರವನ್ನು ಏರಿಸಿತು ಎನ್ನುವ ಲೆಕ್ಕವನ್ನು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ವಿವರಿಸಿದ್ದಾರೆ. ಸಿದ್ದರಾಮಯ್ಯ ಸರ್ಕಾರ ಹೇಗೆ ಪಿಕ್ ಪಾಕೆಟ್ ಮಾಡುತ್ತಿದೆ ಎನ್ನುವುದನ್ನು ವಿವರಿಸಿದ್ದಾರೆ.
ಕುಡಿಯುವ ನೀರಿನ ಸಮಸ್ಯೆ| 3 ಗ್ರಾಮಗಳಿಗೆ ಟ್ಯಾಂಕರ್ ನೀರು: ಉಡುಪಿ ಜಿಲ್ಲಾಧಿಕಾರಿ
ಉಡುಪಿ, ಎ.24: ಉಡುಪಿ ಜಿಲ್ಲೆಯ ಸದ್ಯ ಕುಡಿಯುವ ನೀರಿನ ಸಮಸ್ಯೆ ಉದ್ಭವಿಸಿಲ್ಲ. ಬ್ರಹ್ಮಾವರ ತಾಲೂಕಿನ ಮೂರು ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಸಂಬಂಧ ಟ್ಯಾಂಕರ್ ನೀರು ಪೂರೈಕೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಉಡುಪಿ ಜಿಲ್ಲಾಧಿಕಾರಿ ಡಾ.ವಿದ್ಯಾ ಕುಮಾರಿ ಕೆ. ತಿಳಿಸಿದ್ದಾರೆ. ಕೊಕ್ಕರ್ಣೆ, ಕಳತ್ತೂರು, ಕರ್ಜೆ ಗ್ರಾಪಂ ವ್ಯಾಪ್ತಿಯ ಕೆಲವು ಪ್ರದೇಶಗಳಲ್ಲಿ ನೀರಿನ ಕೊರತೆ ಎದುರಾಗಿದ್ದು, ಅಲ್ಲಿಗೆ ಟ್ಯಾಂಕರ್ ಮೂಲಕ ನೀರು ಪೂರೈಸಲು ಕ್ರಮ ತೆಗೆದುಕೊಳ್ಳಲಾಗಿದೆ. ಅದೇ ರೀತಿ ಬೈಂದೂರು ತಾಲೂಕಿನ ಉಪ್ಪುಂದ ಗ್ರಾಪಂ ವ್ಯಾಪ್ತಿಯ ಮನೆಗಳ ಬಾವಿಗಳಲ್ಲಿ ಉಪ್ಪು ನೀರಿನ ಸಮಸ್ಯೆ ಇದ್ದು, ಅಲ್ಲಿಗೂ ಟ್ಯಾಂಕರ್ ವ್ಯವಸ್ಥೆ ಮಾಡಬೇಕಾಗುತ್ತಿದೆ ಎಂದರು. ಕೆಲ ದಿನಗಳ ಹಿಂದೆ ಜಿಲ್ಲೆಯಲ್ಲಿ 62 ಮೀ.ಮೀಟರ್ ಮಳೆಯಾಗಿದೆ. ಉಡುಪಿ ನಗರಕ್ಕೆ ನೀರು ಉಣಿಸುವ ಬಜೆ ಡ್ಯಾಂನಲ್ಲಿ ಸದ್ಯ ನೀರಿನ ಸಂಗ್ರಹ ಇದ್ದು, ಇದು ಮೇ 10ರವರೆಗೆ ಸಾಕಾಗಬಹುದು ಎಂದು ಅಂದಾಜಿಸಲಾಗಿದೆ ಎಂದು ಅವರು ಹೇಳಿದರು.
ಉಡುಪಿಯ 4 ವಿಧಾನಸಭಾ ಕ್ಷೇತ್ರಗಳಲ್ಲಿ ಬಿಗಿ ಭದ್ರತೆ: ಎಸ್ಪಿ ಡಾ.ಅರುಣ್
ಉಡುಪಿ, ಎ.24: ಲೋಕಸಭೆ ಚುನಾವಣೆ ಸಂಬಂಧ ಎ.26ರಂದು ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ನಡೆಯಲಿರುವ ಮತದಾನದ ಹಿನ್ನೆಲೆ ಯಲ್ಲಿ ಬಿಗಿ ಪೊಲೀಸ್ ಭದ್ರತೆಯನ್ನು ಏರ್ಪಡಿಸಲಾಗಿದೆ ಎಂದು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ.ಅರುಣ್ ಕೆ. ತಿಳಿಸಿದ್ದಾರೆ. ಚುನಾವಣಾ ಬಂದೋಬಸ್ತ್ಗಾಗಿ ಮೂರು ಎಸ್ಪಿ ಶ್ರೇಣಿಯ ಅಧಿಕಾರಿ ಗಳು, ಆರು ಡಿವೈಎಸ್ಪಿಗಳು, 15 ಪೊಲೀಸ್ ನಿರೀಕ್ಷಕರು, 1501 ಪೊಲೀಸ್ ಸಿಬ್ಬಂದಿ ಮತ್ತು 500 ಮೀಸಲು ಪಡೆಯ ಪೊಲೀಸರನ್ನು ನಿಯೋಜಿಸಲಾಗಿದೆ. ಒಟ್ಟು ನಾಲ್ಕು ಮೀಸಲು ಪೊಲೀಸ್ ಪಡೆಗಳನ್ನು ನೇಮಿಸಲಾಗುತ್ತಿದೆ ಎಂದು ಅವರು ಹೇಳಿದರು. ಉಡುಪಿ ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿರುವ ಒಟ್ಟು 866 ಮತಗಟ್ಟೆಗಳ ಪೈಕಿ 177 ಸೂಕ್ಷ್ಮ ಮತಗಟ್ಟೆ ಗಳಿವೆ. ಕ್ಷೇತ್ರದ ಎಲ್ಲಾ ಸಾಮಾನ್ಯ ಮತಗಟ್ಟೆಗಳಿಗೆ ಕನಿಷ್ಠ ಒಬ್ಬ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗುತ್ತದೆ. ಎಲ್ಲಾ ಮತಗಟ್ಟೆಗಳನ್ನು 57 ಸೆಕ್ಟರ್ಗಳಾಗಿ ವರ್ಗೀಕರಿಸಲಾಗಿದ್ದು, ಪ್ರತಿ ಸೆಕ್ಟರ್ನ್ನು ಎಸ್ಸೈ ಅಥವಾ ಎಎಸ್ಸೈ ಮೂಲಕ ಮೇಲ್ವಿಚಾರಣೆ ಮಾಡಲಾಗುತ್ತದೆ ಎಂದು ಅವರು ಮಾಹಿತಿ ನೀಡಿದರು. ಈ 57 ಸೆಕ್ಟರ್ ಅಧಿಕಾರಿಗಳನ್ನು 14 ಪೊಲೀಸ್ ನಿರೀಕ್ಷಕರು ಮೇಲ್ವಿಚಾರಣೆ ಮಾಡಲಿದ್ದಾರೆ. ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಒಬ್ಬರಂತೆ ಒಟ್ಟು 4 ಡಿವೈಎಸ್ಪಿಗಳನ್ನು ನೇಮಕ ಮಾಡಲಾಗುತ್ತದೆ. ಅವರು ಮೇಲ್ವಿಚಾರಣೆಯೊಂದಿಗೆ ಇಡೀ ಕ್ಷೇತ್ರದಲ್ಲಿ ನಿಗಾ ವಹಿಸಲಿರುವರು ಎಂದು ಅವರು ತಿಳಿಸಿದರು. ಗುರುವಾರ ಮಸ್ಟರಿಂಗ್ ಕೇಂದ್ರಗಳಿಂದ ಪೊಲೀಸ್ ಸಿಬ್ಬಂದಿ ಮತ್ತು ಅಧಿಕಾರಿಗಳನ್ನು ಸಂಬಂಧಪಟ್ಟ ಮತಗಟ್ಟೆಗಳಿಗೆ ಚುನಾವಣಾ ತಂಡದೊಂದಿಗೆ ಕಳುಹಿಸಲಾಗುತ್ತದೆ. ಎಲ್ಲಾ ಪ್ರಮುಖ ನಗರಗಳಲ್ಲಿ ಪೊಲೀಸ್ ಪಥಸಂಚಲನ ನಡೆಸಲಾ ಗಿದೆ. ಮುಕ್ತ ಮತ್ತು ನ್ಯಾಯ ಸಮ್ಮತ ಚುನಾವಣೆ ನಡೆಸಲು ಎಲ್ಲ ರೀತಿಯ ಕ್ರಮ ತೆಗೆದುಕೊಳ್ಳಲಾಗಿದೆ. ತುರ್ತು ಸಂದರ್ಭಗಳಲ್ಲಿ ಸಾರ್ವಜನಿಕರು 112ಗೆ ಕರೆ ಮಾಡಬೇಕು ಎಂದು ಅವರು ಪ್ರಕಟಣೆಯಲ್ಲಿ ಕೋರಿದ್ದಾರೆ. ನಕ್ಸಲ್ ಬಾಧಿತ ಪ್ರದೇಶಗಳಲ್ಲಿ 36 ಮತಗಟ್ಟೆಗಳು ಜಿಲ್ಲೆಯ 177 ಕ್ರಿಟಿಕಲ್ ಮತಗಟ್ಟೆಗಳ ಪೈಕಿ 36 ಮತಗಟ್ಟೆಗಳನ್ನು ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ಗುರುತಿಸಲಾಗಿದೆ. ಚುನಾವಣಾ ಆಯೋಗದ ಮಾರ್ಗಸೂಚಿ ಪ್ರಕಾರ ಈ ಎಲ್ಲಾ 36 ಮತಗಟ್ಟೆಗಳಿಗೆ ಸಶಸ್ತ್ರ ಪಡೆಗಳನ್ನು ನಿಯೋಜಿಸಲಾ ಗುತ್ತದೆ ಎಂದು ಎಸ್ಪಿ ಡಾ.ಅರುಣ್ ಕೆ. ತಿಳಿಸಿದರು. ಅಲ್ಲದೆ ಹೆಚ್ಚುವರಿಯಾಗಿ ಆರು ಸಶಸ್ತ್ರ ಪೊಲೀಸ್ ಗಸ್ತು ವಾಹನಗಳನ್ನು ಇರಿಸಲಾಗುತ್ತಿದ್ದು, ಪ್ರತಿ ಆರು ಮತಗಟ್ಟೆಗಳಿಗೆ ಒಂದರಂತೆ ಈ ವಾಹನಗಳು ಗಸ್ತು ತಿರುಗಳಿವೆ. ಈ 36 ಮತಗಟ್ಟೆಗಳ ಮೇಲ್ವಿಚಾರಣೆ ಮಾಡಲು ಡಿವೈಎಸ್ಪಿ ಯನ್ನು ನಿಯೋಜಿಸಲಾಗಿದೆ. ನಕ್ಸಲ್ ಪೀಡಿತ ಪ್ರದೇಶಗಳ ಮತಗಟ್ಟೆಗಳಿಗೆ ಕ್ಯಾಮೆರಾ ಅಳವಡಿಸಿ ವೆಬ್ ಕಾಸ್ಟಿಂಗ್ ಮಾಡಲಾಗುತ್ತದೆ ಮತ್ತು ಮೈಕ್ರೋ ಅಬರ್ಸವರ್ಗಳನ್ನು ನೇಮಿಸ ಲಾಗುತ್ತದೆ. ಎಲ್ಲ ಪೊಲೀಸ್ ನಿರೀಕ್ಷಕರು ಮತ್ತು ಅದಕ್ಕಿಂತ ಮೇಲಿನ ಅಧಿಕಾರಿ ಗಳು ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಪ್ರತ್ಯೇಕ ಸ್ಟ್ರೈಕಿಂಗ್ ಪಡೆಯನ್ನು ಹೊಂದಿರುತ್ತಾರೆ ಎಂದು ಅವರು ಹೇಳಿದರು.
ಸದ್ಯಕ್ಕೆ ಪೆಟ್ರೋಲ್ ಡೀಸೆಲ್ ವಾಹನ ಖರೀದಿಸಬೇಡಿ! ಹೊರಬಿಟ್ಟು ಊಹಿಸದ ಸಿಹಿಸುದ್ದಿ
ಕೆಲ ನ್ಯೂಸ್ ಪೇಪರ್ಗಳಲ್ಲಿ ಎಲೆಕ್ಟ್ರಿಕ್ ವಾಹನಗಳ (Electric Vehicles) ಮೇಲಿನ ಬೆಲೆ 30% ಕಡಿಮೆಯಾಗಲಿದೆ ಎಂಬ ಮಾಹಿತಿ ಹರಿದಾಡುತ್ತಿದೆ. ಇದಕ್ಕೆ ಮುಖ್ಯ ಕಾರಣ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ಉಪಯೋಗಿಸುತ್ತಿರುವ ಬ್ಯಾಟರಿ ಮತ್ತು ಚಿಪ್ಪಿನ ಬೆಲೆಯಲ್ಲಿ ಇಳಿಕೆ ಕಂಡಿರುವುದು. The post ಸದ್ಯಕ್ಕೆ ಪೆಟ್ರೋಲ್ ಡೀಸೆಲ್ ವಾಹನ ಖರೀದಿಸಬೇಡಿ! ಹೊರಬಿಟ್ಟು ಊಹಿಸದ ಸಿಹಿಸುದ್ದಿ appeared first on Karnataka Times .
ಬೆಂಗಳೂರು | ಕಾಂಬೋಡಿಯಾಗೆ 111 ಸಿಮ್ ಕಾರ್ಡ್ಗಳನ್ನು ಕೊರಿಯರ್ ಮಾಡಲು ಯತ್ನಿಸಿದ ವ್ಯಕ್ತಿ ವಿರುದ್ಧ ಎಫ್ಐಆರ್ ದಾಖಲು
ಬೆಂಗಳೂರು : ಖಾಸಗಿ ಕೊರಿಯರ್ ಸೇವೆಯ ಮೂಲಕ 111 ಸಿಮ್ ಕಾರ್ಡ್ಗಳನ್ನು ಕಾಂಬೋಡಿಯಾಗೆ ಕಳುಹಿಸಲು ಯತ್ನಿಸಿದ ಆರೋಪದಡಿ ಚೆನ್ನೈ ಮೂಲದ ವ್ಯಕ್ತಿಯ ವಿರುದ್ಧ ಇಲ್ಲಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿರುವುದಾಗಿ ವರದಿಯಾಗಿದೆ. ಚೆನ್ನೈ ಮೂಲದ ಸೈಯದ್(37) ಎಂಬಾತ ಫೆ.2ರಂದು ಕಾಂಬೋಡಿಯಾಗೆ ಪಾರ್ಸೆಲ್ ಕಳುಹಿಸಲು ಬ್ಲೂ ಡಾರ್ಟ್ ಎಕ್ಸ್ ಪ್ರೆಸ್ ಸೇವೆ ಬಳಸಿದ್ದಾರೆ. ಪಾರ್ಸೆಲ್ಗಳನ್ನು ಸ್ಕ್ಯಾನ್ ಮಾಡುವ ಸ್ಕ್ಯಾನರ್ ಸಿಮ್ ಕಾರ್ಡ್ಗಳು ಇರುವುದನ್ನು ಪತ್ತೆಹಚ್ಚಿದೆ ಎಂದು ಎಫ್ಐಆರ್ ನಲ್ಲಿ ಉಲ್ಲೇಖಸಲಾಗಿದೆ ಎಂದು ಗೊತ್ತಾಗಿದೆ. ಈ ಪ್ರಕರಣವನ್ನು ಹೇಗೆ ನಿಭಾಯಿಸಬೇಕು ಎಂಬುದರ ಕುರಿತು ಕಳೆದ ಎರಡು ತಿಂಗಳಿನಿಂದ ಆಂತರಿಕವಾಗಿ ಚರ್ಚೆ ನಡೆಯುತ್ತಿತ್ತು. ಕೊನೆಗೆ ಪೊಲೀಸರನ್ನು ಸಂಪರ್ಕಿಸಿ ದೂರು ನೀಡಲು ನಿರ್ಧರಿಸಲಾಯಿತು ಎಂದು ವಿಮಾನ ನಿಲ್ದಾಣ ಅಧಿಕಾರಿಗಳು ತಿಳಿಸಿದ್ದಾರೆ. ಆರೋಪಿ ಸೈಯದ್ ವಿರುದ್ಧ ಎ.22ರಂದು ದೂರಸಂಪರ್ಕ ಕಾಯ್ದೆ ಮತ್ತು ಐಪಿಸಿ ಸೆಕ್ಷನ್ 424 ಮತ್ತು 120 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಈ ಬಗ್ಗೆ ತನಿಖೆ ಮುಂದುವರೆಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಮಲ್ಪೆ ಬೀಚ್ನಲ್ಲಿ ಪ್ರವಾಸಿಗರು ಸುರಕ್ಷತಾ ಕ್ರಮಗಳನ್ನು ಕಡ್ಡಾಯವಾಗಿ ಪಾಲಿಸಲು ಕರೆ
ಉಡುಪಿ: ಮಲ್ಪೆ ಬೀಚ್ ಪ್ರದೇಶಕ್ಕೆ ಆಗಮಿಸುವ ಪ್ರವಾಸಿಗರು ಹಾಗೂ ಸಾರ್ವಜನಿಕರು ಬೀಚ್ ಪ್ರದೇಶದಲ್ಲಿ ಸೂಚಿಸಿರು ವಂತಹ ಸುರಕ್ಷತಾ ಮಾಹಿತಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಹಾಗೂ ಮದ್ಯಪಾನ ಮಾಡಿ ನೀರಿಗೆ ಇಳಿಯುವುದು, ಕಡಲ ತೀರದ ಅನಧಿ ದೂರದಲ್ಲಿ ಈಜುವುದು ಹಾಗೂ ಅಪಾಯವಿರುವಂತಹ ಸ್ಥಳದಲ್ಲಿ ನೀರಿಗೆ ಇಳಿಯುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿರುತ್ತದೆ. ಈ ಸೂಚನೆಗಳನ್ನು ಉಲ್ಲಂಘಿಸುವ ಪ್ರವಾಸಿಗರ ಮೇಲೆ ದಂಡ ವಿಧಿಸಿ, ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ನಗರಸಭೆ ಪೌರಾಯುಕ್ತರ ಕಚೇರಿ ಪ್ರಕಟಣೆ ತಿಳಿಸಿದೆ.
ಬಿಜೆಪಿ ಸಾಮಾಜಿಕ ನ್ಯಾಯ, ಬಡವರ ಹಿತಕ್ಕೆ ವಿರುದ್ಧವಾಗಿರುವ ಪಕ್ಷ : ಸಿಎಂ ಸಿದ್ದರಾಮಯ್ಯ
ಬೀದರ್ : ಬಿಜೆಪಿ ಆಡಳಿತದ ಅವಧಿಯಲ್ಲಿ ಸಂವಿಧಾನ ಅಪಾಯದಲ್ಲಿದ್ದು, ಅದನ್ನು ರಕ್ಷಣೆ ಮಾಡಬೇಕಿದೆ. ಪ್ರಜಾಪ್ರಭುತ್ವದ ಉಳಿವಿಗಾಗಿ ಎಲ್ಲರೂ ಚಿಂತನೆ ನಡೆಸಬೇಕು. ದೇಶದ ಭವಿಷ್ಯ ರೂಪಿಸಲು ಇದು ಬಹಳ ಮುಖ್ಯ. ಜನತೆ ವಿಚಾರ ಮಾಡಿ ಯಾವ ಪಕ್ಷಕ್ಕೆ ಅಧಿಕಾರ ಕೊಟ್ಟರೆ ದೇಶದ ಹಿತ ಕಾಪಾಡುತ್ತಾರೆ ಎಂದು ತೀರ್ಮಾನಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದರು. ಅವರು ಇಂದು ಕೆಪಿಸಿಸಿ ವತಿಯಿಂದ ಶ್ರೀ ರಾಮ ಮಾರ್ಕೆಟ್ ಮೈದಾನದಲ್ಲಿ ಆಯೋಜಿಸಲಾಗಿದ್ದ ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ ಸಾಗರ್ ಖಂಡ್ರೆ ಪರವಾಗಿ ಪ್ರಜಾಧ್ವನಿ -02 ಪ್ರಚಾರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು. ಬಿಜೆಪಿ ಸಾಮಾಜಿಕ ನ್ಯಾಯದ ವಿರುದ್ಧ, ಬಡವರ ಹಿತಕ್ಕೆ ವಿರುದ್ಧವಾಗಿರುವ ಪಕ್ಷ ನರೇಂದ್ರ ಮೋದಿಯವರು 10 ವರ್ಷಗಳಿಂದ ಪ್ರಧಾನ ಮಂತ್ರಿಯಾಗಿದ್ದಾರೆ. ಈ ಸುದೀರ್ಘ ಅವಧಿಯಲ್ಲಿ ಈ ದೇಶದ ಬಡವರಿಗೆ , ದಲಿತರಿಗೆ, ಹಿಂದುಳಿದವರಿಗೆ, ಅಲ್ಪಸಂಖ್ಯಾತರಿಗೆ ಕಾರ್ಯಕ್ರಮಗಳನ್ನು ಕೊಟ್ಟಿಲ್ಲ. ಈ ವರ್ಗದ ಪರವಾಗಿ ಯಾವತ್ತೂ ಕೆಲಸ ಮಾಡಿಲ್ಲ. ಬಿಜೆಪಿ ಸಾಮಾಜಿಕ ನ್ಯಾಯದ ವಿರುದ್ಧ, ಬಡವರ ಹಿತಕ್ಕೆ ವಿರುದ್ಧವಾಗಿರುವ ಪಕ್ಷ. ಸಂವಿಧಾನ, ಪ್ರಜಾಪ್ರಭುತ್ವಕ್ಕೆ ವಿರೋಧಿಯಾಗಿರುವ ಪಕ್ಷ. ಇದನ್ನು ಜನರು ಗಮನದಲ್ಲಿರಿಸಿಕೊಳ್ಳಬೇಕು ಎಂದು ನುಡಿದರು. ನರೇಂದ್ರ ಮೋದಿ ನೀಡಿದ್ದ ಭರವಸೆಗಳನ್ನು ಒಮ್ಮೆ ನೆನಪಿಸಿಕೊಳ್ಳಿ. ಭರವಸೆಗಳನ್ನು ಈಡೇರಿಸದಿದ್ದ ಮೇಲೆ ಅವರಿಗೆ ಮತ ಕೇಳುವ ನೈತಿಕತೆ ಇಲ್ಲ. ದೇಶದ ಯುವಕರಿಗೆ ಪ್ರತಿ ವರ್ಷ 2 ಕೋಟಿ ಉದ್ಯೋಗ ಸೃಷ್ಟಿ ಮಾಡುತ್ತೇವೆ ಎಂದು ಹೇಳಿ ನಿರುದ್ಯೋಗದ ಸಮಸ್ಯೆಯನ್ನು ಹೆಚ್ಚಿಸಿದ್ದಾರೆ. ರೈತರ ಆದಾಯ ಎರಡು ಪಟ್ಟು ಹೆಚ್ಚಿಸುತ್ತೇವೆ ಎಂದು ಹೇಳಿ, 10 ವರ್ಷಗಳಲ್ಲಿ ಒಂದು ರೂಪಾಯಿ ಕೂಡ ಹೆಚ್ಚಾಗಿಲ್ಲ. ಅದಕ್ಕೆ ಬದಲಾಗಿ ವೆಚ್ಚ ಹೆಚ್ಚಾಗಿದೆ. ಎಲ್ಲಾ ಅಗತ್ಯ ವಸ್ತುಗಳ ಬೆಲೆ ಇಳಿಸುತ್ತೇನೆ ,ಬಡವರ, ಮಧ್ಯಮವರ್ಗದ ಜನರ ಬದುಕು ಹಸನು ಮಾಡುತ್ತೇವೆ, ಅಚ್ಚೇ ದಿನ್ ಬರುತ್ತದೆ ಎಂದು ಹೇಳಿ ಎಲ್ಲಾ ಅಗತ್ಯ ವಸ್ತುಗಳ ಬೆಲೆಯನ್ನು ಹೆಚ್ಚಿಸಿದ್ದಾರೆ. ರೈತರು ಕೆಲವು ತಿಂಗಳಿನಿಂದ ಸಾಲ ಮನ್ನಾ, ಎಂ.ಎಸ್.ಪಿ ಕೊಡಲು ಕಾನೂನು ಮಾಡಬೇಕೆಂದು ಚಳುವಳಿ ಮಾಡುತ್ತಿದ್ದಾರೆ. ರೈತರು ಸತ್ತರೂ ಅವರ ಬೇಡಿಕೆ ಈಡೇರಿಸುವ ಪ್ರಯತ್ನ ಮಾಡಲಿಲ್ಲ ಎಂದು ಆಕ್ರೋಶ ಹೊರಹಾಕಿದರು. 10 ವರ್ಷಗಳಲ್ಲಿ ಬಿಜೆಪಿ ಯಾವ ಭರವಸೆಗಳನ್ನು ಈಡೇರಿಸಿಲ್ಲ : ನರೇಂದ್ರ ಮೋದಿಯವರು ಅವರು 10 ವರ್ಷಗಳಲ್ಲಿ ನೀಡಿದ್ದ ಯಾವ ಭರವಸೆಗಳನ್ನು ಬಗೆಹರಿಸಿಲ್ಲ. ನಾವು ಹಿಂದೆ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ 165 ರಲ್ಲಿ 158 ಭರವಸೆಗಳನ್ನು ಈಡೇರಿಸಿದ್ದಲ್ಲದೇ 30 ಹೊಸ ಯೋಜನೆಗಳನ್ನು ಜಾರಿ ಮಾಡಿದ್ದೇವೆ. 2023 ರಲ್ಲಿ ನಮ್ಮ ಪ್ರಣಾಳಿಕೆಯಲ್ಲಿ ಅನೇಕ ಭರವಸೆ ನೀಡಿ, 82 ಭರವಸೆಗಳನ್ನು ಈಡೇರಿಸಿ 5 ಗ್ಯಾರಂಟಿಗಳನ್ನೂ ಅಧಿಕಾರಕ್ಕೆ ಬಂದ 8 ತಿಂಗಳಲ್ಲಿ ಜಾರಿ ಮಾಡಿದ್ದೇವೆ. 195 ಕೋಟಿ ಮಹಿಳೆಯರು ಶಕ್ತಿ ಯೋಜನೆಯಡಿ ಪ್ರಯಾಣ ಮಾಡಿದ್ದಾರೆ. ಅನ್ನಭಾಗ್ಯ, ಗೃಹಲಕ್ಷ್ಮೀ, ಗೃಹ ಜ್ಯೋತಿ, ಯುವನಿಧಿ ಯೋಜನೆಗಳನ್ನು ಜಾರಿ ಮಾಡಿದ್ದೇವೆ ಎಂದರು. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ರೈತರ ಸಾಲ ಸಂಪೂರ್ಣ ಮನ್ನಾ : ಕಾಂಗ್ರೆಸ್ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ರೈತರ ಸಾಲವನ್ನು ಸಂಪೂರ್ಣವಾಗಿ ಮನ್ನಾ ಮಾಡಲಾಗುವುದು. ರೈತರು ಬೆಳೆದ ಬೆಳೆಗಳಿಗೆ ನ್ಯಾಯಯುತ ಬೆಲೆ ನೀಡಲು ಎಂ.ಎಸ್.ಪಿ ಯನ್ನು ಕಾನೂನಿನ ಚೌಕಟ್ಟಿಗೆ ತರಲಾಗುವುದು. ನರೇಂದ್ರ ಮೋದಿಯವರು ರೈತರ ಸಾಲ ಮನ್ನಾ ಮಾಡಿಲ್ಲ. ಆದರೆ ಮನ್ ಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ 72000 ಕೋಟಿ ರೂ.ಗಳನ್ನು ಸಾಲಮನ್ನಾ ಮಾಡಿದ್ದಾರೆ . ನಮ್ಮ ಅವಧಿಯಲ್ಲಿ ರಾಜ್ಯ ಸರ್ಕಾರ 50,000 ರೂ.ಗಳ ವರೆಗೆ ಸೊಸೈಟಿಗಳಲ್ಲಿ ಪಡೆದ ಬೆಳೆ ಸಾಲವನ್ನು 27 ಲಕ್ಷ ರೈತರ ಸಾಲ ಮನ್ನಾ ಮಾಡಲಾಗಿತ್ತು. 8165 ಕೋಟಿ ರೂ.ಗಳನ್ನು ಸಾಲ ಮಾಡಿ ಭರಿಸಿತು. ಆದರೆ ನರೇಂದ್ರ ಮೋದಿಯವರು ರೈತರಿಗಾಗಿ ಬೇಡಿಕೆ ಇದ್ದರೂ ಸಾಲ ಮಾಡಿಲ್ಲ. ಆದರೆ ಬಂಡವಾಳಶಾಹಿಗಳು, ಕೈಗಾರಿಕೋದ್ಯಮಿಗಳ 16 ಲಕ್ಷ ಕೋಟಿ ರೂ.ಗಳ ಸಾಲ ಮನ್ನಾ ಮಾಡಿದ್ದಾರೆ. ನರೇಂದ್ರ ಮೋದಿಯವರು ಶ್ರೀಮಂತರ ಪರವಾಗಿ ಇದ್ದಾರೆ ಎಂದರು. ಅದಾನಿ, ಅಂಬಾನಿಗೆ ಸಹಾಯ ಶೇ 30 ಇದ್ದ ಕಾರ್ಪೊರೇಟ್ ತೆರಿಗೆಯನ್ನು ಶೇ 27 ಇಳಿಸಿ, ಅದಾನಿ, ಅಂಬಾನಿಗೆ ಸಹಾಯ ಮಾಡಿದ್ದಾರೆ. ಸಾಮಾನ್ಯ ಜನರ ಪರೋಕ್ಷ ತೆರಿಗೆಯನ್ನು ಶೇ 50ಕ್ಕೆಗೇರಿಸಿದರು. ಬಡವರು ಮಧ್ಯಮ ವರ್ಗದವರ ತೆರಿಗೆ ಹೆಚ್ಚಿಸಿ, ಶ್ರೀಮಂತರ ತೆರಿಗೆಯನ್ನು ಕಡಿಮೆ ಮಾಡಿದ್ದಾರೆ. ಅದಕ್ಕಾಗಿ ಬಿಜೆಪಿಯನ್ನು ತಿರಸ್ಕರಿಸಬೇಕೆಂದು ಕರೆ ನೀಡಿದರು. ಕಿರಿಯ ವಯಸ್ಸಿನ ಸಾಗರ್ ಖಂಡ್ರೆಯವರನ್ನು ನಮ್ಮ ಅಭ್ಯರ್ಥಿಯಾಗಿಸಿದ್ದು, ಅವರಿಗೆ ನಿಮ್ಮ ಮತವನ್ನು ಹಾಬೇಕು ಎಂದು ಮನವಿ ಮಾಡಿದರು. ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ, ಶಾಸಕ ಬಿ.ಆರ್. ಪಾಟೀಲ್, ಶಾಸಕರಾದ ಅಜಯ್ ಸಿಂಗ್, ಅಭ್ಯರ್ಥಿ ಸಾಗರ್ ಖಂಡ್ರೆ, ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು.
IPL 2024: ಆರ್ಸಿಬಿಯ ವೈಫಲ್ಯಕ್ಕೆ ಬಲವಾದ ಕಾರಣ ತಿಳಿಸಿದ ಆರೋನ್ ಫಿಂಚ್!
Aaron Finch on RCB's Failure: ಫಾಫ್ ಡು ಪ್ಲೆಸಿಸ್ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಪ್ರಸ್ತುತ ನಡೆಯುತ್ತಿರುವ 2024ರ ಇಂಡಿಯನ್ ಪ್ರಿಮಿಯರ್ ಲೀಗ್ (ಐಪಿಎಲ್) ಟೂರ್ನಿಯಲ್ಲಿ ನೀರಸ ಪ್ರದರ್ಶನ ತೋರುತ್ತಿದೆ. ಇಲ್ಲಿಯವರೆಗೂ ಆಡಿದ 8 ಪಂದ್ಯಗಳಲ್ಲಿ 7 ಪಂದ್ಯಗಳಲ್ಲಿ ಸೋಲುವ ಮೂಲಕ ಟೂರ್ನಿಯ ಪಾಯಿಂಟ್ಸ್ ಟೇಬಲ್ನಲ್ಲಿ ಕೊನೆಯ ಸ್ಥಾನಕ್ಕೆ ಕುಸಿದಿದೆ. ಇದರ ಪರಿಣಾಮವಾಗಿ ಆರ್ಸಿಬಿಗೆ ಪ್ಲೇಆಫ್ ಹಾದಿ ಅತ್ಯಂತ ಕಠಿಣವಾಗಿದೆ. ಇನ್ನುಳಿದ 6ರಲ್ಲಿ ಒಂದರಲ್ಲಿ ಸೋತರೂ ಟೂರ್ನಿಯ ನಾಕ್ಔಟ್ನಿಂದ ಹೊರಬೀಳಲಿದೆ. ಅಂದ ಹಾಗೆ ಆರ್ಸಿಬಿಯ ವೈಫಲ್ಯಕ್ಕೆ ಕಾರಣವೇನೆಂದು ಆರೋನ್ ಫಿಂಚ್ ವಿವರಿಸಿದ್ದಾರೆ.
ಲೋಕಸಭಾ ಚುನಾವಣೆ ಮತದಾನಕ್ಕೆ ಕ್ಷಣಗಣನೆ: ರಾಜ್ಯಾದ್ಯಂತ ಚೆಕ್ ಪೋಸ್ಟ್ಗಳಲ್ಲಿ ಭಾರೀ ಕಣ್ಗಾವಲು!
High Alert In Interstate Checkposts: ರಾಜ್ಯದಲ್ಲಿ ಲೋಕಸಭಾ ಚುನಾವಣೆಯ ಮೊದಲ ಹಂತದ ಮತದಾನಕ್ಕೆ ಇನ್ನೊಂದೇ ದಿನ ಬಾಕಿ. ದೇಶಾದ್ಯಂತ ಈಗಾಗಲೇ ಮೊದಲ ಹಂತದ ಮತದಾನ ನಡೆದಿದ್ದು, ಎರಡನೇ ಹಂತದಲ್ಲಿ ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ಮತದಾನ ನಡೆಯಲಿದೆ. ಏಪ್ರಿಲ್ 26 ಶುಕ್ರವಾರ ಮತದಾನ ನಡೆಯಲಿರುವ ಹಿನ್ನೆಲೆಯಲ್ಲಿ ಈಗಾಗಲೇ ಅಭ್ಯರ್ಥಿಗಳು ಮನೆ ಮನೆ ಪ್ರಚಾರಕ್ಕೆ ಮುಂದಾಗಿದ್ದಾರೆ. ಇತ್ತ ಅಂತರ್ ಜಿಲ್ಲಾ ಹಾಗೂ ಅಂತಾರಾಜ್ಯ ಚೆಕ್ ಪೋಸ್ಟ್ಗಳಲ್ಲಿ ಅಕ್ರಮ ತಡೆಯಲು ಭಾರೀ ಕಟ್ಟೆಚ್ಚರ ವಹಿಸಲಾಗಿದೆ.
ಬೆಂಗಳೂರು ನಿವಾಸಿಗಳಿಗೆ ಅನಧಿಕೃತ ಒಳಚರಂಡಿ, ನೀರಿನ ಸಂಪರ್ಕವನ್ನು ಅಧಿಕೃತ ಮಾಡಿಕೊಳ್ಳಲು ಕೊನೆಯ ಅವಕಾಶ ನೀಡಿದ ಜಲಮಂಡಳಿ
BWSSB On Unauthorized Sewerage And Water Connections : ಅಕ್ರಮ ನೀರಿನ ಸಂಪರ್ಕ ಹಾಗೂ ಒಳಚರಂಡಿ ಸಂಪರ್ಕ ಪಡೆದವರಿಗೆ ಬೆಂಗಳೂರು ಜಲಮಂಡಳಿ ಕೊನೆಯ ಅವಕಾಶ ನೀಡಿದೆ. ಮೇ 7 ರೊಳಗೆ ಅಕ್ರಮವನ್ನು ಅರ್ಜಿ ಸಲ್ಲಿಸಿ ಸಕ್ರಮ ಮಾಡಿಕೊಳ್ಳಲು ಸೂಚಿಸಿದ್ದಾರೆ. ಈ ಬಗ್ಗೆ ಹೆಚ್ಚಿನ ವಿವರ ಇಲ್ಲಿದೆ.
PM Kisan Yojana: ಪಿಎಂ ಕಿಸಾನ್ ಯೋಜನೆಯ 17 ನೇ ಕಂತಿನ ಹಣ ಬಾರದವರಿಗೆ ಹೊಸ ಸೂಚನೆ
PM Kisan Samman Yojana ಅಡಿಯಲ್ಲಿ ಅರ್ಜಿ ಸಲ್ಲಿದವರಿಗೆ ಈಗಾಗಲೇ ಹದಿನಾರು ಕಂತಿನ ಹಣ ಬಂದವರಿಗೆ ಮುಂದಿನ ಕಂತಿನ ಹಣ ಯಾವಾಗ ಬರಲಿದೆ ಎಂಬ ಪ್ರಶ್ನೆ ಇದ್ದರೆ, ಇದೇ 2024ರ ಜುಲೈ ಅಥವಾ ಆಗಸ್ಟ್ ತಿಂಗಳಿನಲ್ಲಿ ಪಿಎಂ ಕಿಸಾನ್ ಸಮ್ಮಾನ್ ಯೋಜನೆಯ 17 ಕಂತಿನ ಹಣ ಬರುವ ಸಾಧ್ಯತೆ ಇದೆ. ಪಿಎಂ ಕಿಸಾನ್ ಯೋಜನೆ (PM Kisan Yojana) ಅಡಿಯಲ್ಲಿ ಹಣ ಬರಲು ನಿಮ್ಮ ಬ್ಯಾಂಕ್ ಖಾತೆಯ EKYC ಅಪ್ಡೇಟ್ ಮಾಡಿಸಲೇ ಬೇಕಿದೆ. The post PM Kisan Yojana: ಪಿಎಂ ಕಿಸಾನ್ ಯೋಜನೆಯ 17 ನೇ ಕಂತಿನ ಹಣ ಬಾರದವರಿಗೆ ಹೊಸ ಸೂಚನೆ appeared first on Karnataka Times .
Gold Loan: ಚಿನ್ನದ ಮೇಲೆ ಸಾಲ ಪಡೆಯುವವರಿಗೆ ಗುಡ್ ನ್ಯೂಸ್! ಬದಲಾಯ್ತು ನಿಯಮ
ಚಿನ್ನದ ಮೇಲಿನ ನಗದು ಸಾಲದ ಮಿತಿ ಗರಿಷ್ಠ ಎಂದರೆ ನಾಲ್ಕು ಲಕ್ಷ ರೂಪಾಯಿ ಆಗಲಿದೆ. ಚಿನ್ನದ ಮೇಲಿನ ಸಾಲಕ್ಕೆ (Gold Loan) ಅಸಲು ಪಾವತಿ ಮಾಡುವ ತನಕ ಬಡ್ಡಿ ಕಟ್ಟಿದರೆ ಸಾಕು. ಚಿನ್ನದ ಮೇಲೆ ಸಾಲ ಪಡೆಯುವಾಗ ಬೇರೆ ಯಾವುದೇ ತರನಾಗಿ ಅಡಮಾನ ಅಥವಾ ಗ್ಯಾರೆಂಟಿ ಪಡೆಯುವ ಅಗತ್ಯ ಇಲ್ಲ. ಸಾಲ ಮರುಪಾವತಿ ಮಾಡುವಾಗ ಅಸಲು ಮತ್ತು ಬಡ್ಡಿ ಸೇರಿ ಬರುವ EMI ಮೊತ್ತ ಪಾವತಿ ಮಾಡುವ ಅಗತ್ಯ ಇಲ್ಲ. ಬದಲಿಗೆ ಬಡ್ಡಿ ಮಾತ್ರ ಪಾವತಿ ಮಾಡಬೇಕು. The post Gold Loan: ಚಿನ್ನದ ಮೇಲೆ ಸಾಲ ಪಡೆಯುವವರಿಗೆ ಗುಡ್ ನ್ಯೂಸ್! ಬದಲಾಯ್ತು ನಿಯಮ appeared first on Karnataka Times .
ಪಾತಾಳ ವೆಂಕಟರಮಣ ಭಟ್ಟರಿಗೆ ಕುರಿಯ ಪ್ರಶಸ್ತಿ
ಉಜಿರೆ: ಯಕ್ಷ ಶಾಂತಲಾ ಎಂದೇ ಜನಪ್ರಿಯರಾಗಿದ್ದ ತೆಂಕು, ಬಡಗು ಎರಡೂ ತಿಟ್ಟಿನಲ್ಲಿ ಕಲಾವ್ಯವಸಾಯ ಮಾಡಿದ ಪ್ರಸಿದ್ಧ ಸ್ತ್ರೀವೇಷಧಾರಿ ಪಾತಾಳ ವೆಂಕಟರಮಣ ಭಟ್ ಅವರಿಗೆ ಕುರಿಯ ವಿಠಲ ಶಾಸ್ತ್ರಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಎ.26ರಂದು ಉಪ್ಪಿನಂಗಡಿಯ ಪಾತಾಳದ ದುರ್ಗಾಗಿರಿ ಭಜನ ಮಂದಿರದಲ್ಲಿ ಸುಂಕದಕಟ್ಟೆ ಮೇಳದ ವೇದಿಕೆಯಲ್ಲಿ ನಡೆಯಲಿದೆ ಎಂದು ಕುರಿಯ ವಿಠಲ ಶಾಸ್ತ್ರಿ ಸಾಂಸ್ಕೃತಿಕ ಪ್ರತಿಷ್ಠಾನ ಉಜಿರೆ ಇದರ ಸಂಚಾಲಕ ಉಜಿರೆ ಅಶೋಕ್ ಭಟ್ ತಿಳಿಸಿದ್ದಾರೆ. 91ರ ಹರಯದ ಪಾತಾಳ ವೆಂಕಟರಮಣ ಭಟ್ಟರು ಕಾಂಚನ ಮೇಳ, ಸೌಕೂರು ಮೇಳ, ಮೂಲ್ಕಿ ಮೇಳ, ದೀರ್ಘಕಾಲದ ತಿರುಗಾಟ ಧರ್ಮಸ್ಥಳ ಮೇಳದಲ್ಲಿ ನಡೆಸಿದ್ದಾರೆ. ಸ್ತ್ರೀವೇಷಕ್ಕೆ ಪುರುಷವೇಷಕ್ಕೆ ಸಮದಂಡಿಯಾಗುವಂತೆ ಬೇಲೂರು ಶಿಲಾಬಾಲಿಕೆಯರ ಅಂಗಭಂಗಿಗಳನ್ನು ಸ್ವತಃ ಪರಿಶೀಲಿಸಿ ಅಧ್ಯಯನ ಮಾಡಿ ಯಕ್ಷಗಾನ ಸ್ತ್ರೀವೇಷದ ಆಹಾರ್ಯವನ್ನು ನೃತ್ಯವಿನ್ಯಾಸಕ್ಕೆ ಬೇಕಾದಂತೆ ಸಿದ್ಧಪಡಿಸಿದ ಅವರು ಸೌಂದರ್ಯ ಪ್ರಧಾನ ಸ್ತ್ರೀವೇಷದ ಬಣ್ಣಗಾರಿಕೆಯಲ್ಲೂ ಹೊಸತನದ ಆವಿಷ್ಕಾರ ತಂದಿದ್ದರು. ಮಾಯಾ ಮೋಹಿನಿ, ಮಾಯಾ ಪೂತನಿ, ಮಾಯಾ ಅಜಮುಖಿ ಮೊದಲಾದ ಮಾಯಾ ಸ್ತ್ರಿವೇಷದ ಪಾತ್ರಗಳಿಗೆ ವಿಶಿಷ್ಟ ಕಲ್ಪನೆ ನೀಡಿ ಇತರ ಸ್ತ್ರೀವೇಷಗಳಿಗಿಂತ ಭಿನ್ನ ಎಂದು ನಿರೂಪಿಸಿದ್ದರು. ಗರತಿ ಪಾತ್ರಗಳಲ್ಲಿ ಸೈ ಎನಿಸಿದ್ದರು. ಧರ್ಮಸ್ಥಳ ಕ್ಷೇತ್ರ ಮಹಾತ್ಮೆಯ ಅಮ್ಮುದೇವಿ ಮೊದಲಾದ ಪಾತ್ರಗಳಲ್ಲಿ ಹೆಸರು ಗಳಿಸಿದ್ದರು. ರಂಭೆ, ಊರ್ವಶಿ, ಮೇನಕೆ, ಸತ್ಯ ಭಾಮೆ, ಸುಭದ್ರೆ, ದ್ರೌಪದಿ, ಸ್ವಯಂಪ್ರಭೆಯಂತಹ ಪಾತ್ರಗಳಲ್ಲಿ ಪರಕಾಯ ಪ್ರವೇಶದಿಂದ ಪ್ರೇಕ್ಷಕರನ್ನು ಬೆರಗಾಗಿಸಿ ದವರು. ಮಾಸ್ಟರ್ ವಿಠಲ ಅವರ ಶಿಷ್ಯನಾಗಿ ಭರತನಾಟ್ಯ, ಶಿವತಾಂಡವ, ಭಸ್ಮಾಸುರ ಮೋಹಿನಿಯ ನೃತ್ಯಗಳ ಪದಗತಿಯ ಅಭ್ಯಾಸ ಮಾಡಿದ್ದರು. ಮಂಕುಡೆ ಸಂಜೀವ, ಕೋಳ್ಯೂರು ರಾಮಚಂದ್ರ ರಾವ್, ಕರ್ಗಲ್ಲು ಸುಬ್ಬಣ್ಣ ಭಟ್ ಮೊದಲಾದವರ ಸಾಲಿನಲ್ಲಿ ಗುರುತಿಸಿಕೊಂಡವರು. ಯಕ್ಷಗಾನದಿಂದ ದೊರೆತ ಆರ್ಥಿಕ ಸಂಪಾದನೆಯನ್ನು ಈವರೆಗೆ 50 ಮಂದಿ ಕಲಾವಿದರಿಗೆ ತಲಾ 10 ಸಾವಿರ ರೂ.ಗಳಂತೆ ನೀಡಿ ಸಮ್ಮಾನಿಸಿದವರು.
Subsidy: ರಾಜ್ಯ ಸರ್ಕಾರದಿಂದ ಮಹಿಳೆಯರಿಗೆ ಸಿಗಲಿದೆ 50,000 ರೂ ಸಹಾಯಧನ, ಯಾರು ಈ ಸೌಲಭ್ಯ ಪಡೆಯಬಹುದು?
ಮಹಿಳೆಯರು ಸ್ವ ಉದ್ಯಮ, ಸಣ್ಣ ಉದ್ಯಮ ಅಂದರೆ ತರಕಾರಿ, ಮೀನು ಮಾರಾಟ, ಪಾರ್ಲರ್ ಇತ್ಯಾದಿ ಉದ್ದಿಮೆಗಾಗಿ 50,000 ರೂ. ಪಡೆದರೆ ಮಹಿಳೆ ಕೇವಲ 25000ಗಳನ್ನು ಪಾವತಿ ಮಾಡಿದರೆ ಸಾಕು. ಇನ್ನೂ 25,000ರೂ. ಸರ್ಕಾರದಿಂದ ಸಬ್ಸಿಡಿ (Subsidy) ಯಾಗಿ ಸಿಗಲಿದೆ. The post Subsidy: ರಾಜ್ಯ ಸರ್ಕಾರದಿಂದ ಮಹಿಳೆಯರಿಗೆ ಸಿಗಲಿದೆ 50,000 ರೂ ಸಹಾಯಧನ, ಯಾರು ಈ ಸೌಲಭ್ಯ ಪಡೆಯಬಹುದು? appeared first on Karnataka Times .
ಕೊಣಾಜೆ: ರಸ್ತೆ ಸ್ವಚ್ಛತೆ ಶ್ರಮದಾನದೊಂದಿಗೆ ಮತದಾನ ಜಾಗೃತಿ ಅಭಿಯಾನ ಸಂಪನ್ನ
ಕೊಣಾಜೆ: ಲೋಕ ಸಭಾ ಚುಣಾವಣೆ2024 ರ ಅಂಗವಾಗಿ ಅಪ್ನಾದೇಶ್ ಮಾದರಿ ಗ್ರಾಮ ಅಭಿಯಾನದಡಿ ಜನ ಶಿಕ್ಷಣ ಟ್ರಸ್ಟ್ ಸಂಯೋಜಿಸಿದ 48 ದಿನಗಳ ಮತದಾರರ ಜಾಗೃತಿ ಅಭಿಯಾನ ಮುಡಿಪುನಲ್ಲಿ ರಸ್ತೆ ಸ್ವಚ್ವತೆ ಶ್ರಮದಾನದೊಂದಿಗೆ ಸಂಪನ್ನಗೊಂಡಿತು. ಮುಡಿಪು- ಇರಾ ಕ್ರಾಸ್ ರಸ್ತೆ ಸ್ವಚ್ಛತೆ ಶ್ರಮದಾನದಲ್ಲಿ ಸ್ಮೈಲ್ ಸ್ಕಿಲ್ ಸ್ಕೂಲ್ ವಿದ್ಯಾರ್ಥಿನಿಯರು, ಸ್ವಚ್ಚತಾ ಸೇನಾನಿಗಳು ಭಾಗವಹಿಸಿ ದ್ವಿಪಥ ರಸ್ತೆ ಬದಿಗಳಲ್ಲಿ ಬಿದ್ದಿದ್ದ ತ್ಯಾಜ್ಯಗಳನ್ನು ಸಂಗ್ರಹಿಸಿ, ವಿಂಗಡಿಸಿ ಬಾಳೆಪುಣಿ ಸ್ವಚ್ಚ ಸಂಕೀರ್ಣದ ಮೂಲಕ ನಿರ್ವಹಿಸಲಾಯಿತು. ಶ್ರಮದಾನದೊಂದಿಗೆ ಮತದಾನ ಜಾಗೃತಿ ಘೋಷಣೆ, ಗೀತೆಗಳ ಮೂಲಕ ಮತದಾನದ ಮಹತ್ವದ ಸಂದೇಶ ನೀಡಲಾಯಿತು. ನರೇಗ ಮಾಜಿ ಒಂಬುಡ್ಸ್ ಮೆನ್ ಶೀನ ಶೆಟ್ಟಿಮತದಾನದ ಪ್ರತಿಜ್ನವಿಧಿ ಭೋಧಿಸಿ ರಾಷ್ಟ್ರಿಯ ಪಂಚಾಯತ್ ರಾಜ್ ದಿನಾಚರಣೆಯ ಸಂದೇಶ ನೀಡುವುದರೊಂದಿಗೆ ಕಸಮುಕ್ತ ಸ್ವಚ್ಚ ಪಂಚಾಯತ್ ಪರಿವರ್ತನೆಗೆ ಸಾಮೂಹಿಕ ಸಂಕಲ್ಪ ದೊಂದಿಗೆ ಪ್ರಮಾಣಿಕವಾಗಿ ಶ್ರಮಿಸುವುದು ಅಗತ್ಯವೆಂದರು.ಕುರ್ನಾಡು ಪಂ. ಅಭಿವೃಧ್ಧಿ ಅಧಿಕಾರಿ ಕೇಶವ, ಸ್ವಚ್ಚ ವಾಹಿನಿ ಸಾರಥಿ ವಿದ್ಯಾ, ಸ್ಚಚ್ಚ ಸೇನಾನಿಗಳಾದ ಇಸ್ಮಯಿಲ್ ಕಣಂತೂರು, ಶಮ ಪ್ರಕಾಶ್ ನಡುಪದವು ನವಗ್ರಾಮ, ರಝಿಯ, ಕಾಂತಿಮತಿ, ಸುಗಂಧಿ ಅನುಭವಗಳನ್ನು ಹಂಚಿಕೊಂಡರು. ಸ್ಮೈಲ್ ಸ್ಕಿಲ್ ಸ್ಕೂಲ್ ನ ಪ್ರಜ್ನ, ಶಮಿಕ, ಓಫಿಯ ತಂಡ ಮತದಾನದ ಜಾಗೃತಿ ಗೀತೆಗಳನ್ನು ಹಾಡಿದರು. ಜನ ಶಿಕ್ಷಣದ ನಿರ್ದೇಶಕರು ಅಭಿಯಾನದ ಆಶಯಗಳ ಬಗ್ಗೆ ಪ್ರಾಸ್ತಾವಿಕ ಮತನ್ನಾಡಿದರು. ವಿಜೇತ್ ಸಹಕರಿಸಿದರು.
25 ಸಾವಿರ ಕೋಟಿ ರೂ. ಸಹಕಾರ ಬ್ಯಾಂಕ್ ಹಗರಣ: ಅಜಿತ್ ಪವಾರ್ ಪತ್ನಿ ಸುನೇತ್ರಾಗೆ ಕ್ಲೀನ್ ಚಿಟ್!
Ajit Pawar Wife Gets Clean Chit: ಮಹಾರಾಷ್ಟ್ರ ರಾಜ್ಯದ ಸಹಕಾರ ಬ್ಯಾಂಕ್ ಹಗರಣದಲ್ಲಿ ಅಜಿತ್ ಪವಾರ್ ಅವರ ಪತ್ನಿ ಸುನೇತ್ರಾ ಪವಾರ್ ಅವರ ಹೆಸರು ಕೇಳಿ ಬಂದಿತ್ತು. ಆದರೆ, ಸಾಲ ನೀಡಿಕೆ ಹಾಗೂ ಸಕ್ಕರೆ ಕಾರ್ಖಾನೆ ಮಾರಾಟ ವಿಚಾರದಲ್ಲಿ ನಡೆದ ಹಣಕಾಸಿನ ವಹಿವಾಟಿನ ವಿಚಾರದಲ್ಲಿ ಪವಾರ್ ಕುಟುಂಬದ ವಿರುದ್ಧ ಯಾವುದೇ ಅಪರಾಧಿಕ ಆರೋಪ ಹೊರಿಸಲು ಸಾಧ್ಯವಿಲ್ಲ ಎಂದು ಮುಂಬೈ ಪೊಲೀಸರು ಅಭಿಪ್ರಾಯಪಟ್ಟಿದ್ದಾರೆ. ಇತ್ತ ವಿಪಕ್ಷಗಳು ಮಾತ್ರ ಇದು ಬಿಜೆಪಿ 'ವಾಷಿಂಗ್ ಮಷಿನ್' ಎಂದಿವೆ.
ತಂಗಿಗೆ ಟಿವಿಯನ್ನು ಗಿಫ್ಟ್ ಕೊಡಲು ಮುಂದಾಗಿದ್ದ ಅಣ್ಣನನ್ನೇ ಕೊಂದ ಹೆಂಡತಿ ಮನೆಯವರು! ಏನ್ ಕಾಲ ಬಂತಪ್ಪ
Husband Killed By Wife In UP : ಯಾವ್ಯಾವ ಕಾರಣಕ್ಕೆ ಒಬ್ಬ ವ್ಯಕ್ತಿಯ ಪ್ರಾಣ ತೆಗೆಯುತ್ತಾರೆ ಅಂದ್ರೇ ಊಹಿಸಲು ಆಗಲ್ಲ. ಉತ್ತರ ಪ್ರದೇಶದಲ್ಲಿ ಇದೇ ರೀತಿ ಘಟನೆ ನಡೆದಿದ್ದು, ತನ್ನ ತಂಗಿ ಮದುವೆಗೆ ಗಿಫ್ಟ್ ಕೊಡಲು ಮುಂದಾಗಿದ್ದ ಅಣ್ಣನನ್ನು ಆತನ ಹೆಂಡತಿಯ ಮನೆಯವರೇ ಸಾಯಿಸಿದ್ದಾರೆ. ತನ್ನ ತಂಗಿಗೆ ಚಿನ್ನದ ಉಂಗುರ ಹಾಗೂ ಟಿವಿ ಕೊಡಲು ಚಂದ್ರಪ್ರಕಾಶ್ ಮಿಶ್ರಾ ಎಂಬಾತ ಮುಂದಾಗಿದ್ದ. ಅದು ಆತನ ಪತ್ನಿಗೆ ಗೊತ್ತಾಗಿ ಜಗಳವಾಗಿದ್ದು, ಬಳಿಕ ತನ್ನ ಸಹೋದರರನ್ನು ಕರೆದುಕೊಂಡು ಬಂದು ಆತನನ್ನು ಹೊಡೆಸಿ ಸಾಯಿಸಿದ್ದಾಳೆ.
ಮುಲ್ಕಿ: ಜೆಡಿಎಸ್ ಕಾರ್ಯಕರ್ತರು ಕಾಂಗ್ರೆಸ್ ಸೇರ್ಪಡೆ
ಕಿನ್ನಿಗೋಳಿ: ಮುಲ್ಕಿ - ಮೂಡಬಿದ್ರೆ ವಿಧಾನ ಸಭಾ ಕ್ಷೇತ್ರದ ಸುಮಾರು 25ಕ್ಕೂ ಹೆಚ್ಚು ಜೆಡಿಎಸ್ ಕಾರ್ಯಕರ್ತರು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ, ಕೆಪಿಸಿಸಿ ಕೋ ಆಡಿನೇಟರ್ ವಸಂತ್ ಬರ್ನಾರ್ಡ್ ಹಾಗೂ ರಾಜ್ಯ ಅಲ್ಪಸಂಖ್ಯಾತ ಘಟಕದ ರಾಜ್ಯ ಕಾರ್ಯದರ್ಶಿ ಕೆ. ಸಾಹುಲ್ ಹಮೀದ್ ಕದಿಕೆ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು. ಜೆಡಿಎಸ್ ದಕ್ಷಿಣ ಕನ್ನಡ ಜಿಲ್ಲೆಯ ಮಾಜಿ ಉಪಾಧ್ಯಕ್ಷ ಹಾಗೂ ಮುಲ್ಕಿ ಬ್ಲಾಕ್ ಜೆಡಿಎಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷರಾದ ನಿಸಾರ್ ಅಹ್ಮದ್ ಅಂಗರಗುಡ್ಡೆ, ಹುಸೈನ್, ರಹೀಮ್ ಸಯ್ಯದ್, ನಿಲಾಧರ ದೇವಾಡಿಗ, ಆಸೀಫ್, ಇಸ್ಮಾಯಿಲ್ ಬಿ.ಎಂ., ಮುಸ್ತಫಾ ಸಯ್ಯದ್, ನಶಾಲ್ ಅಹ್ಮದ್, ಖಾದರ್ ಶಿಮಾನ್, ಮುಬಾರಕ್ ಪುನರೂರು ಸೇರಿದಂತೆ 25ಕ್ಕೂ ಹೆಚ್ಚಿನ ಜೆಡಿಎಸ್ ಕಾರ್ಯಕರ್ತರನ್ನು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ ಅವರ ಕಿನ್ನಿಗೋಳಿಯ ನಿವಾಸದ ಕಚೇರಿಯಲ್ಲಿ ಕಾಂಗ್ರೆಸ್ ಪಕ್ಷದ ಧ್ವಜ ನೀಡುವ ಮೂಲಕ ಪಕ್ಷಕ್ಕೆ ಸ್ವಾಗತಿಸಿದರು. ಈ ಸಂದರ್ಭ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಜಿಲ್ಲಾ ಕಾರ್ಯದರರ್ಶಿ ಅಬ್ದುಲ್ ಖಾದರ್ ಉಪಸ್ಥಿತರಿದ್ದರು.
ದೇಶವನ್ನು ಮಾವೋವಾದಿ ವ್ಯವಸ್ಥೆಗೆ ನೂಕಲು ಕಾಂಗ್ರೆಸ್ ಹೊರಟಿದೆ : ಪ್ರಹ್ಲಾದ್ ಜೋಶಿ
ಹುಬ್ಬಳ್ಳಿ : ಕಾಂಗ್ರೆಸ್ ಪಕ್ಷ ದೇಶವನ್ನು ಒಂದು ರೀತಿ ಮಾವೋವಾದಿ ವ್ಯವಸ್ಥೆಗೆ ನೂಕಲು ಹೊರಟಂತಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ. ಬುಧವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆ ಮತ್ತು ಆ ನಾಯಕರ ಭಾಷಣ ಕೇಳಿದರೆ ಇದು ಸ್ಪಷ್ಟವಾಗುತ್ತಿದೆ. ಮಾವೋವಾದಿ ವ್ಯವಸ್ಥೆ ಜಗತ್ತಿನಲ್ಲೆ ವಿಫಲತೆ ಕಂಡಿದೆ. ಆದರೆ, ಕಾಂಗ್ರೆಸ್ ಭಾರತದಲ್ಲಿ ಅದನ್ನು ತರಲು ಹೊರಟಂತಿದೆ. ಜನ ಎಚ್ಚರದಿಂದ ಇರಬೇಕು ಎಂದು ಹೇಳಿದರು. ಕಾಂಗ್ರೆಸ್ ಪಕ್ಷ ದೇಶದ ಎಲ್ಲ ವರ್ಗದ ಜನರ ಆಸ್ತಿ ಕಸಿದುಕೊಳ್ಳುವ ಹುನ್ನಾರ ಅದರ ಪ್ರಣಾಳಿಕೆಯಲ್ಲಿ ಇದ್ದಂತಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಎಲ್ಲ ವರ್ಗದ ಜನರ ಆಸ್ತಿ ಸರ್ವೇ ಮಾಡುವುದಾಗಿ ಹೇಳಿದೆ. ಅಂದರೆ, ಯಾರಲ್ಲಿ 2 ಮನೆ, 2 ವಾಹನ ಇರುವುದೋ ಅವರಿಂದ ಒಂದೊಂದು ಕಸಿದುಕೊಳ್ಳುವ ಸಂಚು ಅದು ಎಂದು ಅವರು ಆರೋಪಿಸಿದರು. ಬಡವರಿಗೆ ಏನು ಬೇಕೋ ಅದನ್ನು ಮಾಡುವುದು ಸರಕಾರದ ಕರ್ತವ್ಯ. ಆದರೆ, ಕಾಂಗ್ರೆಸ್ ಆ ನೆಪದಲ್ಲಿ ಎಲ್ಲ ವರ್ಗದವರನ್ನು ಟಾರ್ಗೆಟ್ ಮಾಡುತ್ತಿದೆ. ಕಾಂಗ್ರೆಸ್ ಪಕ್ಷಕ್ಕೆ ದೇಶಕ್ಕೆ, ಬಡವರಿಗೆ ನಿಜವಾಗಿ ಒಳಿತು ಮಾಡಬೇಕೆಂಬ ಮನಸಿಲ್ಲ. ತುಷ್ಟೀಕರಣದ ಪರಾಕಾಷ್ಠೆ ತಲುಪಿದ್ದಾರೆ ಎಂದು ಪ್ರಹ್ಲಾದ್ ಜೋಶಿ ಹೇಳಿದರು. ಸಿಎಂಗೆ ನಿಜವಾದ ಕಾಳಜಿಯಿಲ್ಲ: ಸಿಎಂ ಸಿದ್ದರಾಮಯ್ಯ ಅವರಿಗೆ ನೇಹಾ ಕುಟುಂಬದ ಮೇಲೆ ನಿಜವಾದ ಕಾಳಜಿಯಿಲ್ಲ. ಇದ್ದಿದ್ದರೆ ಘಟನೆ ನಡೆದ ದಿನವೇ ನೇರವಾಗಿ ಕಾರ್ಪೊರೇಟರ್ ನಿರಂಜನ್ ಅವರಿಗೆ ಕರೆ ಮಾಡಿ ಅವರ ಧಾಟಿ, ಭಾಷೆಯಲ್ಲೆ ಸಾಂತ್ವನ, ಧೈರ್ಯ ನೀಡಿತ್ತಿದ್ದರು ಎಂದು ಅವರು ತಿಳಿಸಿದರು. ನೇಹಾ ಮನೆಗೆ ಸಚಿವರಾದ ಸಂತೋಷ್ ಲಾಡ್, ಲಕ್ಷ್ಮಿ ಹೆಬ್ಬಾಳ್ಕರ್ ಭೇಟಿ ನೀಡಿದಾಗಲೆ ಸಿಎಂ ಫೋನ್ ನಲ್ಲಿ ಮಾತನಾಡಬಹುದಿತ್ತು. ಆದರೆ, ಎಚ್.ಕೆ.ಪಾಟೀಲ್ ಅವರನ್ನು ಕಳಿಸಿ, ತಾವು ಫೋನ್ ನಲ್ಲಿ ಸಾಂತ್ವನ ಹೇಳಬೇಕಿತ್ತೆ? ಎಂದು ಪ್ರಶ್ನಿಸಿದ ಅವರು, ನೇಹಾ ಹತ್ಯೆ ಬಗ್ಗೆ ಹಳ್ಳಿ ಹಳ್ಳಿಗಳಲ್ಲಿ ಪ್ರತಿ ಮನೆಯ ಮಾತಾಗಿದೆ. ಸರಕಾರದ ನಡೆ ಬಗ್ಗೆ ತೀವ್ರ ವಿರೋಧ ವ್ಯಕ್ತವಾಗುತ್ತಿದೆ ಎಂದರು.
ರಾಜ್ಯದಲ್ಲಿ ಮೊದಲ ಹಂತದ ಲೋಕಸಭೆ ಚುನಾವಣೆ ಬಹಿರಂಗ ಪ್ರಚಾರಕ್ಕೆ ತೆರೆ: ಇನ್ನೇನಿದ್ದರೂ ಮನೆ ಮನೆ ಪ್ರಚಾರ
ಅಂತೂ ರಾಜ್ಯದಲ್ಲಿ ಲೋಕಸಭಾ ಚುನಾವಣೆಯ ಮೊದಲ ಹಂತದ ಬಹಿರಂಗ ಪ್ರಚಾರ ಬುಧವಾರ ಸಂಜೆ 6 ಗಂಟೆಗೆ ಕೊನೆಗೊಂಡಿದೆ. ಆದರೆ ಮನೆ ಮನೆ ಪ್ರಚಾರಕ್ಕೆ ಮಾತ್ರ ಅವಕಾಶ ಇದೆ. ಹೀಗಾಗಿ ಅಭ್ಯರ್ಥಿಗಳು ಮತ್ತು ಪಕ್ಷಗಳ ಕಾರ್ಯಕರ್ತರು, ಬೆಂಬಲಿಗರು ಇದೀಗ ಕೊನೆಯ ಕ್ಷಣದಲ್ಲಿ ಮತದಾರರ ಮನವೊಲಿಕೆೆಗ ಮುಂದಾಗಿದ್ದಾರೆ. ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಈ ಅವಧಿಯಲ್ಲಿ ಮನೆ ಮನೆಗೆ ತೆರಳಿ ಮತ ಯಾಚಿಸಲು ಕೇವಲ 5 ಮಂದಿಗಷ್ಟೇ ಅವಕಾಶ ಇದೆ. ಕ್ಷೇತ್ರದಲ್ಲಿ ಮತದಾರರಲ್ಲದ ರಾಜಕಾರಣಿಗಳಿಗೂ ಉಳಿದುಕೊಳ್ಳಲು ಅವಕಾಶ ಇರುವುದಿಲ್ಲ.
ದ.ಕ. ಜಿಲ್ಲೆಯ ಕೋಮು ಸಾಮರಸ್ಯಕ್ಕಾಗಿ ಮತ ನೀಡಿ: ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್
ಮಂಗಳೂರು: ಕಳೆದ 33 ವರ್ಷಗಳಿಂದ ದ.ಕ. ಜಿಲ್ಲೆ, ಸಾಮರಸ್ಯದ ತುಳುನಾಡು ಕೋಮುಸೂಕ್ಷ್ಮ ಪ್ರದೇಶವೆಂಬ ಹಣೆಪಟ್ಟಿಯೊಂದಿಗೆ ಅಭಿವೃದ್ಧಿಯಲ್ಲಿ ಹಿಂದೆ ಬಿದ್ದಿದೆ. ಮತ್ತೆ ಜಿಲ್ಲೆಯನ್ನು ಸಾಮರಸ್ಯದ ನಾಡಾಗಿಸಲು ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ತನ್ನನ್ನು ಗೆಲ್ಲಿಸಬೇಕೆಂದು ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಪದ್ಮರಾಜ್ ಆರ್. ಅವರು ಮತದಾರರಿಗೆ ಮನವಿ ಮಾಡಿದ್ದಾರೆ. ದ.ಕ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ದ.ಕ. ಜಿಲ್ಲೆಯಲ್ಲಿ ಪರಸ್ಪರ ಪ್ರೀತಿ ಹಂಚುವ ಮೂಲಕ ಚುನಾವಣೆ ಎದುರಿಸುವ ನಿಟ್ಟಿನಲ್ಲಿ ಪ್ರಚಾರ ಕಾರ್ಯ ನಡೆಸಲಾಗಿದೆ. ಅಭಿವೃದ್ಧಿ ವಿಚಾರವನ್ನು ಮುಂದಿಟ್ಟು ಮತ ಯಾಚಿಸಲಾಗಿದೆ. ಜಿಲ್ಲೆಯ ಎಂಟು ವಿಧಾನಸಭಾ ಕ್ಷೇತ್ರಗಳಲ್ಲೂ ಪ್ರಚಾರ ಕಾರ್ಯ ನಡೆಸಿದ್ದು, ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದರು. ಕಾಂಗ್ರೆಸ್ ಈ ದೇಶವನ್ನು ಕಟ್ಟುವಲ್ಲಿ ಆರಂಭದಿಂದ ಮಾಡಿದ ತ್ಯಾಗ, ಸಾಧನೆಗಳ ಜತೆಗೆ ಕರ್ನಾಟಕ ರಾಜ್ಯ ಸರಕಾರ ಕಳೆದ ವಿಧಾನಸಭಾ ಚುನಾವಣೆಯ ವೇಳೆ ಘೋಷಿಸಿದ ಗ್ಯಾರಂಟಿಗಳನ್ನು ಅನುಷ್ಠಾನಗೊಳಿಸಿರುವುದನ್ನು ಮುಂದಿಟ್ಟು ಮತ ಯಾಚನೆ ಮಾಡಲಾಗಿದೆ. ಬಿಜೆಪಿಯ ದ್ವೇಷ ರಾಜಕಾರಣ, ಜಾತಿ ಧರ್ಮಗಳ ನಡುವೆ ವಿಷಬೀಜ ಬಿತ್ತಿ ಅಮಾಯಕ ರನ್ನು ಆಸ್ಪತ್ರೆಗೆ ಸೇರುವಂತೆ ಮಾಡಿದ, ಪೋಷಕರನ್ನು ಅನಾಥವಾಗಿಸಿರುವ, ಯುವಕರು ಜೈಲು ಪಾಲಾಗುವಂತೆ ಮಾಡಿದ ವಿಷಯಗಳ ಬಗ್ಗೆ ಮತದಾರರಿಗೆ ಮನವರಿಕೆ ಮಾಡಲಾಗಿದೆ. ಜನ ಪ್ರಬುದ್ಧರಾಗಿದ್ದಾರೆ. ಹಾಗಾಗಿ ಈ ಬಾರಿ ಕಾಂಗ್ರೆಸ್ ಜಿಲ್ಲೆಯಲ್ಲಿ ಸತತ ಸೋಲಿನ ಸರಪಳಿಯಿಂದ ಹೊರಬಂದು ಜಯಗಳಿಸಲಿದೆ ಎಂದು ಪದ್ಮರಾಜ್ ವಿಶ್ವಾಸ ವ್ಯಕ್ತಪಡಿಸಿದರು. ಜಿಲ್ಲೆಯಲ್ಲಿ ಕಾಂಗ್ರೆಸ್ ಗೆಲುವಿನ ಸೂಚನೆಯ ಹಿನ್ನೆಲೆಯಲ್ಲಿ ಬಿಜೆಪಿ ತನ್ನ ಎಂದಿನ ಚಾಳಿಯಂತೆ ಅಪಪ್ರಚಾರ ನಡೆಸಿದೆ. ಆದರೆ ಅದ್ಯಾವುದಕ್ಕೂ ಕಿವಿಗೊಡದೆ, ದ್ವೇಷಸಾಧಿಸದೆ ಪ್ರೀತಿಯಿಂದ ಚುನಾವಣೆ ಎದುರಿಸಬೇಕೆಂಬುದು ನನ್ನ ಕಳಕಳಿಯ ಮನವಿ. ಈ ಬಾರಿ ಕಾಂಗ್ರೆಸ್ ಪರ ಮತಯಾಚನೆಗಾಗಿ ಹಿಂದೆಂಗಿಂತಲೂ ಪರಿಶ್ರಮದಿಂದ ದುಡಿದಿರುವ ಕಾರ್ಯಕರ್ತರು ಹಿಂದಿನ ಎಲ್ಲಾ ದಾಖಲೆಗಳನ್ನು ಮುರಿದಿದ್ದಾರೆ. ಪಕ್ಷದಿಂದ ಮುಂದೆಯೂ ಕಾರ್ಯಕರ್ತರನ್ನು ಗುರುತಿಸುವ ಕಾರ್ಯ ಆಗಲಿದೆ ಎಂದವರು ಹೇಳಿದರು. ಬಡ ವರ್ಗದ ಮಹಿಳೆಯರಿಗೆ ತಲಾ 1 ಲಕ್ಷರೂ. ವಾರ್ಷಿಕ ಗ್ಯಾರಂಟಿ, ರೈತರ ಸಾಲಮನ್ನಾ, ಶಿಕ್ಷಣ ಸಾಲ ಮನ್ನಾ ಸೇರಿ ದಂತೆ ಕೇಂದ್ರದಲ್ಲಿ ಕಾಂಗ್ರೆಸ್ ಘೋಷಿಸಿರುವ ಹೊಸ ಗ್ಯಾರಂಟಿಗಳ ಬಗ್ಗೆಯೂ ಪ್ರಚಾರ ವೇಳೆ ಮತದಾರರಿಗೆ ಮನವರಿಕೆ ಮಾಡಲಾಗಿದೆ. 33 ವರ್ಷಗಳಲ್ಲಿ ಜಿಲ್ಲೆಯಲ್ಲಿ ಬಿಜೆಪಿಯಿಂದ ಆಗಿರುವ ಅಭಿವೃದ್ಧಿ , ಸಾಧನೆ ಶೂನ್ಯ ಎಂದು ಹೇಳಿದ ಪದ್ಮರಾಜ್, ಪ್ರಚೋದನಕಾರಿ ಭಾಷಣಗಳ ಮೂಲಕ ಯುವಕರನ್ನು ಕಾನೂನುಬಾಹಿರ ಕೆಲಸ ಮಾಡುವಂತೆ ಮಾಡಿ ಅವರು ಜೈಲು ಸೇರುವಂತೆ ಮಾಡಿ ಅವರ ಪೋಷಕರನ್ನು ಅನಾಥವಾಗಿಸಿರುವುದೇ ಬಿಜೆಪಿಯ ಸಾಧನೆ. ಇದು ಬಿಜೆಪಿಯ ದೇಶಪ್ರೇಮವೇ ಎಂದು ಪ್ರಶ್ನಿಸಿದರು. ಕಾಂಗ್ರೆಸ್ನಿಂದ ರಾಜ್ಯದಲ್ಲಿ ಅನುಷ್ಟಾನಗೊಂಡಿರುವ ಗ್ಯಾರಂಟಿ ಯೋಜನೆಗಳು ಹಾಗೂ ಈಗಾಗಲೇ ಕೇಂದ್ರ ಮಟ್ಟ ದಲ್ಲಿಯೂ ಕಾಂಗ್ರೆಸ್ ಘೋಷಣೆ ಮಾಡಿರುವ ಗ್ಯಾರಂಟಿ ಯೋಜನೆಗಳಿಂದಾಗಿ ಬಿಜೆಪಿಯ ಮತದಾರರು ಕೂಡಾ ಮತಯಾ ಚನೆಯ ಸಂದರ್ಭ ನಗುಮುಖದಿಂದಲೇ ಮಾತನಾಡಿಸಿರುವ ರೀತಿ ಬದಲಾವಣೆಯನ್ನು ಬಯಸಿರುವುದು ಸ್ಫಷ್ಟವಾಗಿದೆ ಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಪದ್ಮರಾಜ್ ಪ್ರತಿಕ್ರಿಯಿಸಿದರು. ಗೋಷ್ಟಿಯಲ್ಲಿ ಕಾಂಗ್ರೆಸ್ ಮುಖಂಡರಾದ ಐವನ್ ಡಿಸೋಜಾ, ಶಶಿಧರ ಹೆಗ್ಡೆ, ಪ್ರವೀಣ್ ಚಂದ್ರ ಆಳ್ವ, ಮಹಾಬಲ ಮಾರ್ಲ, ನೀರಜ್ಪಾಲ್, ಶುಭೋದಯ ಆಳ್ವ, ವಿಕಾಸ್ ಶೆಟ್ಟಿ, ಶಾಹುಲ್ ಹಮೀದ್, ಜಿತೇಂದ್ರ, ಮುಹಮ್ಮದ್, ಸವಾದ್ ಸುಳ್ಯ ಮೊದಲಾವದರು ಉಪಸ್ಥಿತರಿದ್ದರು. ತುಳುನಾಡಿನ ಸಂಸ್ಕೃತಿ, ದೈವದೇವರು, ಕಂಬಳ, ಯಕ್ಷಗಾನ, ಜನಪದ ಕ್ರೀಡೆಗಳಿಗೆ ಪ್ರವಾಸಿಗರನ್ನು ಆಕರ್ಷಿಸುವ ಶಕ್ತಿ ಇದೆ. ಮುಂಬೈನಂತೆ ಮಂಗಳೂರು ನಗರವೂ ರಾತ್ರಿ ಹೊತ್ತಿನಲ್ಲೂ ವಾಣಿಜ್ಯ ನಗರಿಯಾಗಿ ಆರ್ಥಿಕವಾಗಿ ಸದೃಢವಾಗುವ ಎಲ್ಲಾ ಅರ್ಹತೆಯನ್ನು ಪಡೆದಿದೆ. ಆದರೆ ಬಿಜೆಪಿಯ ಧರ್ಮಾಧಾರಿತ ದ್ವೇಷದಿಂದಾಗಿ ಇಲ್ಲಿ ಕಾಂಗ್ರೆಸ್ ಅವಧಿಯಲ್ಲಿ ಆಗಿದ್ದಂತಹ ಬೃಹತ್ ಕೈಗಾರಿಕಾ ಘಟಕಗಳು, ಏರ್ಪೋರ್ಟ್, ಬಂದರು, ರೈಲ್ವೇ, ಹೆದ್ದಾರಿ ಹೊರತುಪಡಿಸಿ, ಬಿಜೆಪಿ ಅವಧಿಯಲ್ಲಿ ಅಂತಹ ಯಾವುದೇ ಕೊಡುಗೆ ಜಿಲ್ಲೆಗೆ ದೊರಕಿಲ್ಲ. ಇಲ್ಲಿನ ವಿದ್ಯಾವಂತರು ಉದ್ಯೋಗಕ್ಕಾಗಿ ಪರದೇಶವನ್ನು ಅವಲಂಬಿಸಿದ ಕಾರಣ, ಅವರ ಪೋಷಕರು ಇಲ್ಲಿ ಮಕ್ಕಳಿಂದ ದೂರವಾಗುವಂತಾಗಿದೆ. ಅದಕ್ಕೆಲ್ಲಾ ಪರಿಹಾರವಾಗಿ ಜಿಲ್ಲೆಯಲ್ಲಿ ಸೂಕ್ತ ಹೂಡಿಕೆ, ಉದ್ಯೋಗ ಸೃಷ್ಟಿಗೆ ಆದ್ಯತೆ ನೀಡಲಾಗುವುದು. ಈ ನಿಟ್ಟಿನಲ್ಲಿ ಇಲ್ಲಿಂದ ಹೊರ ರಾಷ್ಟ್ರಗಳಿಗೆ ಉದ್ಯೋಗಕ್ಕಾಗಿ ಹೋಗಿ ಅಲ್ಲಿ ಸಲಹಾಗಾರರಾಗಿರುವ, ಇಲ್ಲಿನ ವಿವಿಧ ವಿಭಾಗಗಳ ತಜ್ಞರನ್ನು ಒಗ್ಗೂಡಿಸಿ ಜಿಲ್ಲೆಯ ಅಭಿವೃದ್ಧಿ ನಿಟ್ಟಿನಲ್ಲಿ ನೀಲನಕ್ಷೆಯೊಂದನ್ನು ತಯಾರಿಸಿ ಜಿಲ್ಲೆಯ ಅಭಿವೃದ್ಧಿ ಒತ್ತು ನನ್ನ ಗುರಿ ಎಂದು ಪದ್ಮರಾಜ್ ಆರ್. ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ಶೀಘ್ರದಲ್ಲೇ ಬರಲಿದೆ ಟಾಟಾ ಗ್ರೂಪ್ಗೆ ಸೇರಿದ ಮತ್ತೊಂದು ಕಂಪನಿಯ ಬೃಹತ್ ಐಪಿಒ
ಟಾಟಾ ಗ್ರೂಪ್ ಶೀಘ್ರದಲ್ಲೇ ಮತ್ತೊಂದು ಆರಂಭಿಕ ಸಾರ್ವಜನಿಕ ಷೇರು ಕೊಡುಗೆ ತೆರೆಯಲು ಸಜ್ಜಾಗಿದೆ. ಟಾಟಾದ ಹಣಕಾಸು ಸೇವಾ ಘಟಕವಾದ 'ಟಾಟಾ ಕ್ಯಾಪಿಟಲ್' ತನ್ನ ಐಪಿಒಗೆ ಸಿದ್ಧತೆಯನ್ನು ಆರಂಭಿಸಿದೆ. ಟಾಟಾ ಕ್ಯಾಪಿಟಲ್ನಲ್ಲಿ ಟಾಟಾ ಸನ್ಸ್ ಶೇಕಡಾ 95ರಷ್ಟು ಷೇರನ್ನು ಹೊಂದಿದೆ. ಈ ಹಿನ್ನೆಲೆಯಲ್ಲಿ ಐಪಿಒಗಾಗಿ ಬ್ಯಾಂಕರ್ಗಳನ್ನು ನೇಮಿಸಿಕೊಳ್ಳಲು ಟಾಟಾ ಸನ್ಸ್ ಎದುರುನೋಡುತ್ತಿದೆ.
ಮೇ 31ರೊಳಗೆ ನಿಮ್ಮ ವಾಹನಕ್ಕೆ HSRP ನಂಬರ್ ಪ್ಲೇಟ್ ಅಳವಡಿಸಿ, ಇಲ್ಲವಾದಲ್ಲಿ ಖಚಿತ ದಂಡದ ಬಿಸಿ!
ನೀವಿನ್ನೂ ನಿಮ್ಮ ವಾಹನಕ್ಕೆ HSRP ನಂಬರ್ ಪ್ಲೇಟ್ ಅಳವಡಿಸಿಲ್ಲವೇ? ಹಾಗಿದ್ದರೆ ಕೂಡಲೇ ನೋಂದಾಯಿಸಿ. ಈಗಾಗಲೇ ನಿಗದಿಪಡಿಸಿರುವ ಗಡುವನ್ನು 2 ಬಾರಿ ವಿಸ್ತರಿಸಿರುವ ಸಾರಿಗೆ ಇಲಾಖೆ ಇನ್ನೊಮ್ಮೆ ವಿಸ್ತರಿಸುವ ಸಾಧ್ಯತೆ ಇಲ್ಲ. ಹೀಗಾಗಿ ಮೇ 31ರೊಳಗೆ ನಂಬರ್ ಪ್ಲೇಟ್ ಅಳವಡಿಸದ ವಾಹನಗಳಿಗೆ ದಂಡ ವಿಧಿಸುವ ಬಗ್ಗೆ ಇಲಾಖೆ ಚಿಂತನೆ ನಡೆಸುತ್ತಿದ್ದು ಸರ್ಕಾರದ ಆದೇಶಕ್ಕಾಗಿ ಕಾಯುತ್ತಿದೆ. ಪ್ರಾರಂಭದಲ್ಲಿ 500 ರೂ ದಂಡ ಮತ್ತು ಬಳಿಕ 1000 ರೂ ದಂಡ ವಿಧಿಸುವ ಸಾಧ್ಯತೆ ಇದೆ ಎಂದು ಮೂಲಗಳಿಂದ ತಿಳಿದು ಬಂದಿದೆ.
ಡಿ.ಕೆ.ಸುರೇಶ್ ಆಪ್ತರ ಮನೆ ಮೇಲೆ ಐಟಿ ದಾಳಿ : ಕಾಂಗ್ರೆಸ್ ಕಾರ್ಯಕರ್ತರಿಂದ ಪ್ರತಿಭಟನೆ
ಬೆಂಗಳೂರು: ಕಾಂಗ್ರೆಸ್ ಸಂಸದ ಡಿ.ಕೆ. ಸುರೇಶ್ ಅವರ ಆಪ್ತರಾದ ಗಂಗಾಧರ್ ಹಾಗೂ ಇತರರ ಮನೆ ಮೇಲೆ ಐಟಿ ದಾಳಿ ನಡೆದಿದ್ದು, ಇದು ಚುನಾವಣೆ ಸಮಯದಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಕಟ್ಟಿಹಾಕುವ ಪ್ರಯತ್ನ ಎಂದು ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಕೋಣನಕುಂಟೆ ಬ್ಲಾಕ್ ನಲ್ಲಿರುವ ಮಾಜಿ ಕಾರ್ಪೊರೇಟರ್ ಗಂಗಾಧರ್ ಮನೆ ಮುಂದೆ ಕಾಂಗ್ರೆಸ್ ಕಾರ್ಯಕರ್ತರು ಬುಧವಾರ ಧರಣಿ ನಡೆಸಿ ಬಿಜೆಪಿ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಬಲಿಷ್ಠವಾಗಿ ಕಟ್ಟುತ್ತಿದ್ದೇವೆ. ಬಿಜೆಪಿಗೆ ಸೋಲಿನ ಭಯ ಕಾಡುತ್ತಿದೆ. ಹೀಗಾಗಿ ಕಾಂಗ್ರೆಸ್ ಮುಖಂಡರು ಹಾಗೂ ಕಾಂಗ್ರೆಸ್ ಅಭ್ಯರ್ಥಿಗಳ ಮನೆ ಮೇಲೆ ಐಟಿ ದಾಳಿಗಳು ನಡೆಯುತ್ತಿವೆ. ಗಂಗಾಧರ್ ಅವರು ಹಣಕಾಸಿನ ವಿಚಾರದಲ್ಲಿ ಅನುಕೂಲಸ್ಥರು. ಸಾಕಷ್ಟು ಜಮೀನು ಇದೆ. ಬೇರೆ ಪಕ್ಷದಲ್ಲಿ ಇವರಿಗಿಂತ ಶ್ರೀಮಂತರು ಇದ್ದಾರೆ. ಅವರ ಮನೆಗಳ ಮೇಲೆ ದಾಳಿಯಾಗಿಲ್ಲ. ಕೇವಲ ಕಾಂಗ್ರೆಸ್ ನಾಯಕರ ಮೇಲೆ ದಾಳಿ ನಡೆಯುತ್ತಿದೆ. ಡಿ.ಕೆ ಸುರೇಶ್ ಹಾಗೂ ಡಿ.ಕೆ. ಶಿವಕುಮಾರ್ ಅವರ ಆಪ್ತರನ್ನು ಗುರಿಯಾಗಿಸಿ ದಾಳಿ ಮಾಡಲಾಗುತ್ತಿದೆ ಎಂದು ಕಾಂಗ್ರೆಸ್ ಕಾರ್ಯಕರ್ತರು ಆಕ್ರೋಶ ಹೊರಹಾಕಿದರು. ಗಂಗಾಧರ್ ಅವರ ಜತೆಗೆ ಗೊಟ್ಟಿಗೆರೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶ್ರೀಧರ್, ಸುರೇಶ್ ಅವರ ಆಪ್ತ ಸಹಾಯಕ ಸುಜಯ್, ಚಂದ್ರು, ಲಕ್ಷ್ಮಣ್, ಬಾಬು ಸೇರಿದಂತೆ ಹಲವರ ಮನೆ ಮೇಲೆ ದಾಳಿ ಮಾಡಲಾಗಿದೆ.
ಪ್ರಧಾನಿ ಮೋದಿ ಅಸಾಧ್ಯವನ್ನು ಸಾಧಿಸಿದ್ದಾರೆ: ಚುನಾವಣೆ ಹೊತ್ತಲ್ಲಿ ಹಾಡಿ ಹೊಗಳಿದ ಜೆಪಿ ಮೋರ್ಗಾನ್ ಸಿಇಒ
JPMorgan CEO Appreciates PM Modi Govt: ಬಡತನ, ವಿಪರೀತ ಜನಸಂಖ್ಯೆ ಇರುವ ದೇಶದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಸರ್ಕಾರ ಅಸಾಧ್ಯವನ್ನು ಸಾಧಿಸಿದೆ ಎಂದು ಜೆಪಿ ಮೋರ್ಗಾನ್ ಸಂಸ್ಥೆಯ ಸಿಇಒ ಜೇಮೀ ಡಿಮನ್ ಅವರು ಹಾಡಿ ಹೊಗಳಿಸಿದ್ದಾರೆ. 400 ದಶಲಕ್ಷ ಮಂದಿಯನ್ನು ಬಡತನದಿಂದ ಹೊರ ತರಲಾಗಿದೆ. ಅಷ್ಟೇ ಪ್ರಮಾಣದ ಮಂದಿಗೆ ಶೌಚಾಲಯ ನಿರ್ಮಿಸಿ ಕೊಡಲಾಗಿದೆ. ಬ್ಯಾಂಕ್ ಖಾತೆ ಮಾಡಿಸಲಾಗಿದೆ. ಜನರು ಆನ್ಲೈನ್ನಲ್ಲಿ ಹಣಕಾಸು ವಹಿವಾಟು ನಡೆಸ್ತಿದ್ದಾರೆ ಅಂತಾ ಜೇಮೀ ಡಿಮನ್ ಹೇಳಿದ್ದಾರೆ.
IPL 2024: ಎಂಎಸ್ ಧೋನಿ ನೀಡಿದ್ದ ಸಲಹೆಯನ್ನು ರಿವೀಲ್ ಮಾಡಿದ ಮಾರ್ಕಸ್ ಸ್ಟೋಯ್ನಿಸ್!
Marcus Stoinis reveals MS Dhoni's advice: ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 2024ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟೂರ್ನಿಯ ಪಂದ್ಯದಲ್ಲಿ ಲಖನ ಸೂಪರ್ ಜಯಂಟ್ಸ್ ತಂಡ 6 ವಿಕೆಟ್ಗಳ ಗೆಲುವು ಪಡೆದಿತ್ತು. 211 ರನ್ಗಳ ಗುರಿಯನ್ನು ಹಿಬಾಲಸಿದ್ದ ಲಖನೌ ಪರ ಮಾರ್ಕಸ್ ಸ್ಟೋಯ್ನಿಸ್ (124*) ಸ್ಪೋಟಕ ಶತಕ ಸಿಡಿಸಿದ್ದರು. ಆ ಮೂಲಕ ಎಲ್ಎಸ್ಜಿ ಗೆಲುವಿನಲ್ಲಿ ಮಹತ್ತರ ಪಾತ್ರವನ್ನು ವಹಿಸಿದ್ದರು. ಅಂದ ಹಾಗೆ ಪಂದ್ಯದ ಬಳಿಕ ಮಾತನಾಡಿದ್ದ ಮಾರ್ಕಸ್ ಸ್ಟೋಯ್ನಿಸ್, ಎಂಎಸ್ ಧೋನಿ ನೀಡಿದ್ದ ಮಹತ್ವದ ಸಲಹೆಯನ್ನು ಬಹಿರಂಗಪಡಿಸಿದ್ದಾರೆ.
ಕೋಟಕ್ ಬ್ಯಾಂಕ್ಗೆ ಆರ್ಬಿಐ ನಿರ್ಬಂಧ, ಹೊಸ ಗ್ರಾಹಕರ ಆನ್ಲೈನ್ ಸೇರ್ಪಡೆ, ಕ್ರೆಡಿಟ್ ಕಾರ್ಡ್ ವಿತರಣೆಗೆ ಬ್ರೇಕ್
ಖಾಸಗಿ ರಂಗದ ಪ್ರಮುಖ ಬ್ಯಾಂಕ್ ಕೋಟಕ್ ಮಹೀಂದ್ರಾ ಬ್ಯಾಂಕ್ಗೆ ಭಾರತೀಯ ರಿಸರ್ವ್ ಬ್ಯಾಂಕ್ ಬುಧವಾರ ಹಲವು ನಿರ್ಬಂಧಗಳನ್ನು ಹೇರಿದೆ. ಆನ್ಲೈನ್ ಮತ್ತು ಮೊಬೈಲ್ ಬ್ಯಾಂಕಿಂಗ್ ಚಾನೆಲ್ಗಳ ಮೂಲಕ ಹೊಸ ಗ್ರಾಹಕರನ್ನು ಸೇರ್ಪಡೆ ಮಾಡಿಕೊಳ್ಳದಂತೆ ಹಾಗೂ ಹೊಸದಾಗಿ ಕ್ರೆಡಿಟ್ ಕಾರ್ಡ್ ನೀಡದಂತೆ ಕೇಂದ್ರೀಯ ಬ್ಯಾಂಕ್ ನಿರ್ಬಂಧ ವಿಧಿಸಿದೆ.
ನಾವು ಚುನಾವಣಾ ನಿಯಂತ್ರಣ ಪ್ರಾಧಿಕಾರವಲ್ಲ, ಸಂಶಯದ ಆಧಾರದಲ್ಲಿ ಕ್ರಮ ತಗೊಳೋಕೆ ಆಗಲ್ಲ : ಸುಪ್ರೀಂ ಕೋರ್ಟ್
Supreme Court On EVM VVPAT Case : ಇವಿಎಂ ಹಾಗೂ ವಿವಿಪ್ಯಾಟ್ ಸ್ಲಿಪ್ಗಳ ಸಂಪೂರ್ಣ ಪರಿಶೀಲನೆಗೆ ಕೋರಿ ಸಲ್ಲಿಸಿದ್ದ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಅಂತ್ಯಗೊಳಿಸಿದ್ದು, ತೀರ್ಪನ್ನು ಕಾಯ್ದಿರಿಸಿದೆ. ಈ ವೇಳೆ ಸುಪ್ರೀಂ ಕೋರ್ಟ್ ನಾವು ಚುನಾವಣಾ ನಿಯಂತ್ರಣ ಪ್ರಾಧಿಕಾರವಲ್ಲ, ಅದಲ್ಲದೇ ಸಾಂವಿಧಾನಿಕ ಸಂಸ್ಥೆಗೆ ಹೀಗೆ ಕೆಲಸ ಮಾಡಬೇಕು ಎಂದು ನಿರ್ದೇಶಿಸಲು ಸಾಧ್ಯವಿಲ್ಲ ಎಂದು ಹೇಳಿದೆ. ಹಿರಿಯ ವಕೀಲ ಪ್ರಶಾಂತ್ ಭೂಷಣ್ ಅವರ ವಾದಕ್ಕೆ ಪ್ರತಿಕ್ರಿಯಿಸಿರುವ ಸುಪ್ರೀಂ ಕೋರ್ಟ್, ಕೇವಲ ಅನುಮಾನದ ಆಧಾರದ ಮೇಲೆ ಕ್ರಮ ಕೈಗೊಳ್ಳಲು ಆಗಲ್ಲ ಎಂದು ಹೇಳಿದೆ.
ಲೋಕಸಭಾ ಚುನಾವಣೆ: ವೋಟು ಹಾಕಲು ಹೋಗ್ತಿದ್ದೀರಾ? ಹಾಗಾದ್ರೆ ಇವುಗಳಲ್ಲಿ ಯಾವುದಾದರೊಂದು ದಾಖಲೆ ನಿಮ್ಮಲ್ಲಿದ್ದರೆ ಸಾಕು!
Documents Required For Voting : ಮತದಾನ ಮಾಡಲು ವೋಟರ್ ಐಡಿ ಸಿಗ್ತಿಲ್ವಾ? ಹಾಗಾದರೆ ಇತರೆ ದಾಖಲೆಗಳು ನಡೆಯುತ್ತಾ? ಯಾವೆಲ್ಲಾ ದಾಖಲೆಗಳನ್ನು ತೆಗೆದುಕೊಂಡು ಹೋಗಿ ಮತದಾನ ಮಾಡಬಹುದು? ಮತದಾನ ಸಮಯ ಏನು? ಮತದಾನದ ದಿನ ಯಾವ ಬೆರಳಿಗೆ ಶಾಯಿ ಹಾಕುತ್ತಾರೆ? ಇಲ್ಲಿದೆ ಸಂಪೂರ್ಣ ಮಾಹಿತಿ.
ಮೊದಲ ಹಂತದಲ್ಲಿ ಯಾರಿಗೆ ಮೇಲುಗೈ? ಯಾರಿಗೆ ಹಿನ್ನಡೆ ? | Lokshabha Election 2024 | Karnataka | BJP | Congress
ಪ್ರತಿ ಕ್ಷೇತ್ರದಲ್ಲಿ ಹೇಗಿದೆ ಅಖಾಡ ? ಏನಿದೆ ಪರಿಸ್ಥಿತಿ ? ► ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಗೆ ಎಷ್ಟು ಸ್ಥಾನ ಸಿಗಲಿದೆ ?
ಎಸ್ಆರ್ಎಚ್ ಎದುರು ಸೇಡಿಗೆ ಸಜ್ಜಾದ ಆರ್ಸಿಬಿ, ಆಡುವ 11ರ ಬಳಗದ ವಿವರ ಇಲ್ಲಿದೆ!
Sunrisers Hyderabad (SRH) vs Royal Challengers Bengaluru (RCB): ಇನ್ನೊಂದು ಪಂದ್ಯ ಸೋತರೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 17ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಯಾವುದೇ ರೀತಿಯಲ್ಲಿ ಪ್ಲೇ-ಆಫ್ಸ್ ಹಂತಕ್ಕೆ ಕಾಲಿಡಲು ಸಾಧ್ಯವಿಲ್ಲ ಎಂಬಂತ್ತಾಗುತ್ತದೆ. ಆರ್ಸಿಬಿ ಈಗಾಗಗಲೇ 7 ಪಂದ್ಯಗಳಲ್ಲಿ ಸೋತು ಅಂಕಪಟ್ಟಿಯಲ್ಲಿ ಕೊನೇ ಸ್ಥಾನದಲ್ಲಿದೆ. ಈ ಹಂತದಲ್ಲಿ ಅಗ್ರಸ್ಥಾನ ಎದುರು ನೋಡುತ್ತಿರುವ ಸನ್ರೈಸರ್ಸ್ ಹೈದರಾಬಾದ್ ಎದುರು ಮತ್ತೊಮ್ಮೆ ಪೈಪೋಟಿ ನಡೆಸಲು ಚಾಲೆಂಜರ್ಸ್ ಬಳಗ ಸಜ್ಜಾಗಿದೆ.
ಕಳೆದ ಹತ್ತು ವರ್ಷದಲ್ಲಿ ನೀಡಿದ ಯಾವ ಭರವಸೆಯನ್ನೂ ಪ್ರಧಾನಿ ಮೋದಿ ಈಡೇರಿಸಿಲ್ಲ : ಸಿಎಂ ಸಿದ್ದರಾಮಯ್ಯ
ಕಲಬುರಗಿ : ಕಳೆದ ಹತ್ತು ವರ್ಷದಲ್ಲಿ ಮೋದಿಯವರು ತಾವು ನೀಡಿದ ಯಾವ ಭರವಸೆಯನ್ನೂ ಈಡೇರಿಸಿಲ್ಲ, ಪ್ರತಿವರ್ಷ ಎರಡು ಕೋಟಿ ಉದ್ಯೋಗ ನೀಡುವುದಾಗಿ ಹೇಳಿದ್ದರು. ಈ ಉದ್ಯೋಗಗಳು ಎಲ್ಲಿ ಹೋದವು?. 15 ಲಕ್ಷ ರೂ. ಹಣ ನೀಡುವುದಾಗಿ ಹೇಳಿದ್ದರು, ಆ ಹಣ ಎಲ್ಲಿಹೋಯಿತು ? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು. ಅವರು ಅಫಜಲಪುರ ತಾಲ್ಲೂಕಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಗ್ಯಾರಂಟಿ ಯೋಜನೆ ಜಾರಿಗೆ ತಂದರೆ ರಾಜ್ಯ ದಿವಾಳಿಯಾಗುತ್ತದೆ ಎಂದು ಮೋದಿ ಹೇಳಿದ್ದರು. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಜಾರಿಗೆ ತಂದಿದ್ದೇನೆ. ನಮ್ಮ ಸರ್ಕಾರ ದಿವಾಳಿಯಾಗಿದೆಯಾ? ಮೋದಿ ಸುಳ್ಳು ಹೇಳುತ್ತಾರೆ. ಬಿಜೆಪಿ ಸುಳ್ಳಿನ ಕಾರ್ಖಾನೆಯಾಗಿದೆ. ಸುಳ್ಳು ಇವರ ಮನೆ ದೇವರು. ಲೋಕಸಭೆ ಚುನಾವಣೆ ನಂತರ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುತ್ತಾರೆ ಎಂದು ಬಿಜೆಪಿಯವರ ಸುಳ್ಳು ಹೇಳುತ್ತಿದ್ದಾರೆ. ಆದರೆ ನಾನು ಹೇಳುತ್ತೇನೆ, ನಾವು ಬಸವಣ್ಣನವರ ಅನುಯಾಯಿಗಳು ಕೊಟ್ಟ ಮಾತನ್ನು ಮೀರುವುದಿಲ್ಲ ಎಂದು ಭರವಸೆ ನೀಡಿದರು. ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕಾಗಿ ವಾರ್ಷಿಕ 52,000 ಕೋಟಿ ರೂ. ಖರ್ಚು ಮಾಡಲಿದ್ದೇವೆ. ಈವರೆಗೆ 195 ಕೋಟಿ ಮಹಿಳೆಯರು ಶಕ್ತಿ ಯೋಜನೆ ಲಾಭ ಪಡೆದುಕೊಂಡಿದ್ದಾರೆ. ನಾನು ಸಿಎಂ ಇದ್ದಾಗ ಅನ್ನಭಾಗ್ಯ ಯೋಜನೆಯಡಿಯಲ್ಲಿ ಪ್ರತಿಯೊಬ್ಬರಿಗೆ ಏಳು ಕೆಜಿ ಅಕ್ಕಿಯನ್ನು ಉಚಿತವಾಗಿ ಕೊಡುತ್ತಿದ್ದೆ. ನಂತರ ಅಧಿಕಾರಕ್ಕೆ ಬಂದ ಯಡಿಯೂರಪ್ಪ ಏಳು ಕೆಜಿಯಿಂದ ಐದು ಕೆಜಿಗೆ ಇಳಿಸಿದರು. ನಮ್ಮ ಸರ್ಕಾರ ಪುನಃ ಅಧಿಕಾರಕ್ಕೆ ಬಂದ ನಂತರ ಅಕ್ಕಿ ಖರೀದಿಗೆ ಹಣ ನೀಡುತ್ತಿದ್ದೇವೆ. ಗೃಹ ಜ್ಯೋತಿ ಅಡಿಯಲ್ಲಿ 200 ಯೂನಿಟ್ ವಿದ್ಯುತ್ ಉಚಿತ ನೀಡಲಾಗುತ್ತಿದೆ. ನಮ್ಮ ಗ್ಯಾರಂಟಿಗಳನ್ನೇ ಮೋದಿ ಹೈಜಾಕ್ ಮಾಡಿ ಅದಕ್ಕೆ ಮೋದಿ ಗ್ಯಾರಂಟಿ ಎಂದು ಹೆಸರಿಟ್ಟಿದ್ದಾರೆ ಎಂದು ಟೀಕಿಸಿದರು. ರಾಜ್ಯಕ್ಕೆ ಅನ್ಯಾಯ ಮಾಡಿದ್ದಾರೆ : ಸಂಸತ್ತಿನಲ್ಲಿ ರಾಜ್ಯ ಸರ್ಕಾರದ ಪರ ಧ್ವನಿ ಎತ್ತದ ಜಾಧವ್ ಯಾಕೆ ಗೆಲ್ಲಬೇಕು? ಶಾ, ನಡ್ಡಾ, ನಿರ್ಮಲ ಸೀತಾರಾಮನ್ ಸೇರಿ ರಾಜ್ಯಕ್ಕೆ ಅನ್ಯಾಯ ಮಾಡಿದ್ದಾರೆ. 15 ನೆಯ ಹಣಕಾಸು ಆಯೋಗದ 5495 ಕೋಟಿ ರೂ. ಸೇರಿದಂತೆ ರಾಜ್ಯಕ್ಕೆ ಘೋಷಿತ 11495 ಕೋಟಿ ಅನುದಾನ ಬಿಡುಗಡೆ ಮಾಡಲಿಲ್ಲ. ರಾಜ್ಯದಲ್ಲಿ ಭೀಕರ ಬರಗಾಲವಿದೆ. ಲಕ್ಷಾಂತರ ಹೆಕ್ಟೇರ್ ಪ್ರದೇಶ ಬೆಳೆ ಹಾನಿಯಾಗಿದೆ. ಬರ ಪರಿಹಾರವಾಗಿ 18171 ಕೋಟಿ ರೂ. ಬಿಡುಗಡೆ ಮಾಡಲು ಪರಿಪರಿಯಾಗಿ ಬೇಡಿಕೊಂಡರೂ ಕ್ಯಾರೆ ಅನ್ನಲಿಲ್ಲ. ಹಾಗಾಗಿ ಅನಿವಾರ್ಯವಾಗಿ ಸುಪ್ರಿಂ ಕೋರ್ಟ್ ಗೆ ಹೋಗಬೇಕಾಯಿತು. ಆಗ ಅಟಾರ್ನಿ ಜನರಲ್ ಇತ್ಯರ್ಥಪಡಿಸುವುದಾಗಿ ಒಂದು ವಾರ ಸಮಯ ಕೇಳಿದ್ದಾರೆ. ನಾವು ಸುಪ್ರಿಂಗೆ ಹೋಗಿರದೇ ಇದ್ದರೆ, ನಮಗೆ ಈ ಭರವಸೆ ಸಿಗುತ್ತಿರಲಿಲ್ಲ. ನಿರ್ಮಲಾ ಸೀತರಾಮನ್ ಅವರು ರಾಜ್ಯ ಸರ್ಕಾರ ಬರಪರಿಹಾರ ಕೇಳಿಲ್ಲ. ಗ್ಯಾರಂಟಿ ಯೋಜನೆಗಳಿಗೆ ಹಣ ಕೇಳುತ್ತಿದ್ದಾರೆ ಎಂದು ಸುಳ್ಳು ಹೇಳಿದ್ದಾರೆ. ನಿರ್ಮಲಾ ಅವರೇ ನಮಗೆ ಗ್ಯಾರಂಟಿಗಾಗಿ ಹಣ ಬೇಡ ನಮಗಿರುವ ಸಂಪನ್ಮೂಲ ಗಳಿಂದ ಅದನ್ನು ಭರಿಸುತ್ತೇವೆ ಎಂದು ತಿರುಗೇಟು ನೀಡಿದರು. ಸಂವಿಧಾನ ಅಪಾಯದಲ್ಲಿದೆ. ಪ್ರಜಾ ಪ್ರಭುತ್ವ ಉಳಿಯಬೇಕಾದರೆ ಕಾಂಗ್ರೆಸ್ ಅಧಿಕಾರಕ್ಕೆ ಬರಲೇಬೇಕು. ಅವಕಾಶದಿಂದ ವಂಚಿತರಾದವರಿಗೆ ನ್ಯಾಯ ಕೊಡಿಸಬೇಕಾದರೆ ನೀವೆಲ್ಲ ಕಾಂಗ್ರೆಸ್ ಗೆ ಆಶೀರ್ವಾದ ಮಾಡಿ ಎಂದು ಮನವಿ ಮಾಡಿದರು. ಕುರುಬ ಗೊಂಡ, ಕುರುಬ ಕೋಲಿ ಸಮಾಜವನ್ನು ಎಸ್ ಟಿ ಸೇರಿಸಲು ಕೇಂದ್ರಕ್ಕೆ ಪ್ರಸ್ತಾವ ಕಳಿಸಲಾಗಿದೆ. ಜಾಧವ್ ಈ ಬಗ್ಗೆ ಧ್ವನಿ ಎತ್ತಿದ್ದಾರೆಯೇ?. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದಾಗ ಈ ಸಮುದಾಯಗಳನ್ನು ಎಸ್ ಟಿ ಸೇರಿಸುವುದಾಗಿ ಭರವಸೆ ನೀಡಿದರು. ಕಳೆದ ಐವತ್ತು ವರ್ಷದಿಂದ ಮಲ್ಲಿಕಾರ್ಜುನ ಖರ್ಗೆ ಅವರು ಈ ಭಾಗದ ಜನರ ಧ್ವನಿಯಾಗಿ ಲೋಕಸಭೆ ಹಾಗೂ ರಾಜ್ಯ ಸಭೆಯಲ್ಲಿ ಕೆಲಸ ಮಾಡಿದ್ದಾರೆ. ಈ ಸಲ ಕಾಂಗ್ರೆಸ್ ಅಭ್ಯರ್ಥಿ ರಾಧಾಕೃಷ್ಣ ಅವರಿಗೆ ಆಶೀರ್ವಾದ ಮಾಡಿ ಎಂದು ಸಿಎಂ ಸಿದ್ದರಾಮಯ್ಯ ಮನವಿ ಮಾಡಿದರು.
ಕಾಂಗ್ರೆಸ್ ನ `ಚೊಂಬು' ವಿರುದ್ಧ ಈಗ ಬಿಜೆಪಿಯಿಂದ `ಚಿಪ್ಪು' ಪೋಸ್ಟರ್'!: ಕೈ ಪಡೆ ವಿರುದ್ಧ ಆರ್ ಅಶೋಕ ಸೆಡ್ಡು
ಕಾಂಗ್ರೆಸ್ ನಡೆಸುತ್ತಿರುವ ಚೊಂಬು ಜಾಹೀರಾತು ಅಭಿಯಾನ ರಾಜ್ಯ ರಾಜಕೀಯದಲ್ಲಿ ತೀವ್ರ ಸಂಚಲನವನ್ನು ಉಂಟು ಮಾಡಿದೆ. ಇದರ ವಿರುದ್ಧ ವಿಪಕ್ಷ ನಾಯಕ ಆರ್ ಅಶೋಕ್ ಅವರು ಇದೀಗ ಚಿಪ್ಪು ಪೋಸ್ಟರ್ ಅಭಿಯಾನ ಪ್ರಾರಂಭಿಸಿದ್ದಾರೆ. ತಮ್ಮ ಎಕ್ಸ್ ಖಾತೆಯಲ್ಲಿ ಸರಣಿ ಪೋಸ್ಟರ್ ಗಳನ್ನು ಹಾಕಿರುವ ಅವರು ಬಿಜೆಪಿ ಸರ್ಕಾರ ಜಾರಿಗೆ ತಂದಿದ್ದ ಭಾಗ್ಯ ಲಕ್ಷ್ಮೀ ಯೋಜನೆ, ವಿವೇಕ ಯೋಜನೆಗಳನ್ನು ಸ್ಥಗಿತಗೊಳಿಸಿರುವುದಕ್ಕೆ ಕಾಂಗ್ರೆಸ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅದೇ ರೀತಿ ಕೇಂದ್ರದ ಕಿಸಾನ್ ಸಮ್ಮಾನ್ ಯೋಜನೆ, ದಲಿತರ ಅನುದಾನ ವಿಚಾರಗಳನ್ನು ಪ್ರಸ್ತಾಪಿಸಿದ್ದಾರೆ.
BCCI: ಇನ್ಮೇಲೆ ದೇಶದ ಯಾವುದೇ ವ್ಯಕ್ತಿ IPL ಆಡಲು ಬರಲಿದೆ ಹೊಸ ರೂಲ್ಸ್! BCCI ನಿರ್ಧಾರ
ಇಶಾನ್ ಕಿಶನ್ (Ishan Kishan) ರವರು ಅಗತ್ಯವಾಗಿ ತಮ್ಮ ಜಾರ್ಖಂಡ್ ರಾಜ್ಯ ಕ್ರಿಕೆಟ್ ತಂಡದ ಪರವಾಗಿ ಡೊಮೆಸ್ಟಿಕ್ ಕ್ರಿಕೆಟ್ ಆಡಬೇಕಾಗಿತ್ತು. ಆ ಸಂದರ್ಭದಲ್ಲಿ ಅವರ ತಂಡ ಪಾಯಿಂಟ್ಸ್ ಟೇಬಲ್ ನಲ್ಲಿ ಕೆಳಗೆ ಇದ್ದರೂ ಕೂಡ ಇಶಾನ್ ಕಿಶನ್ ತಮ್ಮ ಮುಂಬೈ ತಂಡದ ಐಪಿಎಲ್ (IPL) ಗಾಗಿ ತಯಾರಿ ಮಾಡಿಕೊಳ್ಳುತ್ತಾ ತಮ್ಮ ಗಮನವನ್ನು ವಹಿಸಿದ್ದರು. ಇದನ್ನು ನೋಡಿ ಉಳಿದ ಯುವ ಆಟಗಾರರು ಕೂಡ ಐಪಿಎಲ್ ಆಡುವುದಕ್ಕಾಗಿ ತಮ್ಮ ಸಂಪೂರ್ಣ ತಯಾರಿಯನ್ನು ನಡೆಸಿಕೊಳ್ಳಬೇಕು ಎನ್ನುವಂತಹ ಸಂದೇಶವನ್ನು ಬೀರಬಾರದು ಎನ್ನುವ ಕಾರಣಕ್ಕಾಗಿ ಬಿಸಿಸಿಐ ಹೊಸ ನಿಯಮಗಳನ್ನು ಯುವ ಆಟಗಾರರ ಮೇಲೆ ಹೇರುವಂತಹ ಸಾಧ್ಯತೆ ದಟ್ಟವಾಗಿ ಕಾಣುತ್ತಿದೆ. The post BCCI: ಇನ್ಮೇಲೆ ದೇಶದ ಯಾವುದೇ ವ್ಯಕ್ತಿ IPL ಆಡಲು ಬರಲಿದೆ ಹೊಸ ರೂಲ್ಸ್! BCCI ನಿರ್ಧಾರ appeared first on Karnataka Times .
Rahul Gandhi U-Turn On Wealth Survey : ಆಸ್ತಿ ಹಂಚಿಕೆಯ ವಿಚಾರ ವಿವಾದಕ್ಕೆ ತಿರುಗಿದ ಬೆನ್ನಲ್ಲಿಯೇ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಯೂಟರ್ನ್ ಹೊಡೆದಿದ್ದಾರೆ. ನಾವು ದೇಶ ಎದುರಿಸುತ್ತಿರುವ ಅನ್ಯಾಯದ ಪ್ರಮಾಣವನ್ನು ಕಂಡುಹಿಡಿಯಲು ಮಾತ್ರ ಬಯಸುತ್ತೇವೆಯೇ ಹೊರತು ನಾವು ಸಂಪತ್ತಿನ ಮರುಹಂಚಿಕೆ ಬಗ್ಗೆ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಹೇಳಿಲ್ಲ ಎಂದಿದ್ದಾರೆ. ಶೇ.90ರಷ್ಟು ಅನ್ಯಾಯಕ್ಕೆ ಒಳಗಾದ ಜನರಿಗೆ ನ್ಯಾಯ ದೊರಕಿಸಿಕೊಡುವುದೇ ನನ್ನ ಜೀವನದ ಧ್ಯೇಯ ಎಂದು ಕೂಡ ಅವರು ಹೇಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳಸೂತ್ರವನ್ನೂ ಒಳಗೊಂಡಂತೆ ಜನರ ಚಿನ್ನವನ್ನು ಕಸಿದುಕೊಳ್ಳುತ್ತದೆ ಎಂದು ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದರು.
Hybrid Car: ಇನೋವಾಗಿಂತ ಕಡಿಮೆ ಬೆಲೆಗೆ ಬಂತು ಹೈಬ್ರಿಡ್ ಕಾರು! ಬೆಂಕಿ ಲುಕ್
Mitsubishi Xpander Cross ಕಾರು ಸಧ್ಯಕ್ಕೆ ಹೈಬ್ರಿಡ್ ವರ್ಷನ್ (Hybrid Car) ನಲ್ಲಿ ವಿದೇಶದಲ್ಲಿ ಲಾಂಚ್ ಆಗಿದೆ. ಕಾರಿನ ಲುಕ್ ಬಗ್ಗೆ ಮಾತನಾಡೋದಾದ್ರೆ ಪಕ್ಕಾ ಸ್ಪೋರ್ಟ್ಸ್ ಲುಕ್ ನಲ್ಲಿ ಕಾಣಿಸುತ್ತದೆ. ಹೈಡ್ರಾಲಿಕ್ ಟೇಲ್ಗೇಟ್ ಓಪನಿಂಗ್ ಅನ್ನು ನೀಡಲಾಗಿದೆ. ಏಳು ಸೀಟರ್ಗಳ ಉತ್ತಮ ಸೀಟಿಂಗ್ ವ್ಯವಸ್ಥೆಯನ್ನು ಕೂಡ ನೀವು ಈ ಕಾರ್ಯದಲ್ಲಿ ಕಾಣಬಹುದಾಗಿದೆ. The post Hybrid Car: ಇನೋವಾಗಿಂತ ಕಡಿಮೆ ಬೆಲೆಗೆ ಬಂತು ಹೈಬ್ರಿಡ್ ಕಾರು! ಬೆಂಕಿ ಲುಕ್ appeared first on Karnataka Times .
ಮಂಗಳಸೂತ್ರ ವಿವಾದ: 1962ರ ಯುದ್ಧದ ವೇಳೆ ಇಂದಿರಾ ಗಾಂಧಿ ತಮ್ಮ ಒಡವೆ ದಾನ ಮಾಡಿದ್ರು: ಖರ್ಗೆ
Kharge Slams PM Modi On Mangalsutra Row: ಚುನಾವಣಾ ಪ್ರಚಾರದ ವೇಳೆ ಪ್ರಧಾನಿ ಮೋದಿ ಅವರು ಕಾಂಗ್ರೆಸ್ ಪಕ್ಷ ನಿಮ್ಮ ಮಂಗಳ ಸೂತ್ರವನ್ನೂ ಬಿಡೋದಿಲ್ಲ ಎಂದು ಹೇಳಿದ್ದರು. ಈ ಹೇಳಿಕೆಗೆ ತಿರುಗೇಟು ನೀಡಿರುವ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, 55 ವರ್ಷಗಳ ಕಾಲ ಕಾಂಗ್ರೆಸ್ ದೇಶವನ್ನು ಆಳಿದೆ, ಎಂದಾದರೂ ಈ ರೀತಿ ಆಗಿತ್ತಾ ಎಂದು ಪ್ರಶ್ನಿಸಿದ್ದಾರೆ. 1962ರ ಯುದ್ದದ ವೇಳೆ ಇಂದಿರಾ ಗಾಂಧಿ ಅವರು ತಮ್ಮ ಆಭರಣಗಳನ್ನೇ ದಾನ ಮಾಡಿದ್ದರು ಎಂದು ಖರ್ಗೆ ಹೇಳಿದ್ದಾರೆ.
Free Gas Cylinder: ಈ 7 ದಾಖಲೆ ನೀಡಿದವರಿಗೆ ಸಿಗಲಿದೆ ಉಚಿತ ಗ್ಯಾಸ್ ಸಿಲಿಂಡರ್ ಹಾಗೂ ಸ್ಟವ್
ಪ್ರಧಾನ ಮಂತ್ರಿ ಉಜ್ವಲ ಯೋಜನೆ (PM Ujjwala Yojana) ಯನ್ನು 2016 ರಲ್ಲಿ ಪ್ರಾರಂಭ ಮಾಡಲಾಗಿದ್ದು ಬಡತನ ರೇಖೆಗಿಂತ ಕೆಳಗಿರುವ ಮಹಿಳೆಯರಿಗೆ ಈ ಯೋಜನೆಯನ್ನು ರೂಪಿಸಲಾಗಿದೆ.ಉಜ್ವಲ ಯೋಜನೆ ಮೂಲಕ ಕೇಂದ್ರ ಸರ್ಕಾರವು ಬಡ ವರ್ಗದ ಜನತೆಗೆ ಉಚಿತ ಗ್ಯಾಸ್ ಸಿಲಿಂಡರ್ (Free Gas Cylinder) ಅನ್ನು ನೀಡುತ್ತಿದೆ. The post Free Gas Cylinder: ಈ 7 ದಾಖಲೆ ನೀಡಿದವರಿಗೆ ಸಿಗಲಿದೆ ಉಚಿತ ಗ್ಯಾಸ್ ಸಿಲಿಂಡರ್ ಹಾಗೂ ಸ್ಟವ್ appeared first on Karnataka Times .
ಕಾಂಗ್ರೆಸ್ ಪ್ರಣಾಳಿಕೆ ಬಗ್ಗೆ ಚರ್ಚೆಗೆ ಬರುವಂತೆ ಮೋದಿಗೆ ಪತ್ರ: ಮಲ್ಲಿಕಾರ್ಜುನ ಖರ್ಗೆ
ಕಲಬುರಗಿ, ಎ.24: ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಯುವಕರಿಗೆ, ಮಹಿಳೆಯರಿಗೆ ರೈತರಿಗೆ ಎಸ್ಸಿ , ಎಸ್ಟಿ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತಹ ಯೋಜನೆಗಳನ್ನು ಜಾರಿಗೆ ತರುವುದಾಗಿ ಹೇಳಿದೆ. ಆದರೆ, ನಮ್ಮ ಪ್ರಣಾಳಿಕೆಯನ್ನು ಮುಸ್ಲಿಮ್ ಲೀಗ್ ಸಿದ್ಧಾಂತದಂತಿದೆ ಎಂದು ಪ್ರಧಾನಿ ಮೋದಿ ಆರೋಪಿಸಿದ್ದಾರೆ. ಈ ಹಿನ್ನೆಲೆಯಲ್ಲಿ ನಮ್ಮ ಪ್ರಣಾಳಿಕೆಯ ಬಗ್ಗೆ ಚರ್ಚೆಗೆ ಬರುವಂತೆ ಅವರಿಗೆ ಪತ್ರ ಬರೆದಿದ್ದೇನೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.. ಅಝ್ಝಲಪುರ ಪಟ್ಟಣದಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಭಾಗವಹಿಸಿ ಕಾಂಗ್ರೆಸ್ ಅಭ್ಯರ್ಥಿ ರಾಧಾಕೃಷ್ಣರ ಪರ ಮತ ಯಾಚಿಸಿ ಅವರು ಮಾತನಾಡುತ್ತಿದ್ದರು. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಮಹಿಳೆಯರ ಮಾಂಗಲ್ಯ ಸೂತ್ರ ಕಿತ್ತುಕೊಳ್ಳುತ್ತದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ ನಾಚಿಕೆಯಾಗಬೇಕು ಅವರಿಗೆ. ಎಂತಹ ಪ್ರಧಾನಿ ಇವರು? ಕಾಂಗ್ರೆಸ್ ಮಹಿಳೆಯರಿಗಾಗಿ ಹಲವಾರು ಯೋಜನೆ ಜಾರಿಗೆ ತಂದಿದೆ ಹೊರತು ಮಾಂಗಲ್ಯ ಸೂತ್ರ ಕಿತ್ತುಕೊಳ್ಳುವ ಕೆಲಸ ಮಾಡಿಲ್ಲ ಎಂದು ಪ್ರತ್ಯುತ್ತರ ನೀಡಿದರು. ಕಾಂಗ್ರೆಸ್ ತನ್ನ ಪ್ರಣಾಳಿಕೆಯ ಯುವಕರಿಗೆ, ಮಹಿಳೆಯರಿಗೆ ರೈತರಿಗೆ ಎಸ್ ಸಿ ಎಸ್ ಟಿ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತಹ ಯೋಜನೆಗಳನ್ನು ಹೇಳಿದ್ದೇವೆ. ಆದರೆ ಆ ಬಗ್ಗೆ ಟೀಕಿಸಿದ್ದಾರೆ. ನಮ್ಮ ಪ್ರಣಾಳಿಕೆಯ ಬಗ್ಗೆ ಚರ್ಚೆಗೆ ಬರುವಂತ ಪತ್ರ ಬರೆದಿದ್ದೇನೆ. ನೋಡೋಣ ಅವರು ಬಂದರೆ ನಾನು ಚರ್ಚೆ ಮಾಡುತ್ತೇನೆ ಎಂದರು. ಮೋದಿ ಹಾಗೂ ಅಮಿತ್ ಶಾ ಮಾರುವವರಿದ್ದರೆ ಅಂಬಾನಿ ಹಾಗೂ ಅದಾನಿ ಕೊಳ್ಳುವವರಿದ್ದಾರೆ ಎಂದು ಟೀಕಿಸಿದ ಖರ್ಗೆ, ದುರ್ದೈವದಿಂದಾಗಿ ಕಳೆದ ಸಲ ನನಗೆ ಹಿನ್ನೆಡೆಯಾಯಿತು. ಇದರಿಂದ ತಾಪತ್ರಯ ಆಗಿತ್ತು. ಆದದ್ದು ಆಗಿ ಹೋಗಿದೆ. ಅದನ್ನೇ ಪದೇ ಪದೇ ಹೇಳಿದರೂ ಚೆನ್ನಾಗಿರುವುದಿಲ್ಲ. ಕಳೆದ ಸಲದ ಸೋಲಿನಿಂದ ಹೊರಗೆ ಬನ್ನಿ. ಈ ಸಲ ನೀವೆಲ್ಲ ಸೇರಿ ಬಿಜೆಪಿಗೆ ಮುಖಭಂಗ ಮಾಡಿ. ಇದು ಮೋದಿಗೂ ಗೊತ್ತಾಗಲಿ ಎಂದು ಮನವಿ ಮಾಡಿದರು. ನಾನು ರಾಜಕೀಯದಿಂದ ಎಂದಿಗೂ ನಿವೃತ್ತರಾಗುವುದಿಲ್ಲ ಎಂದು ಘೋಷಿಸಿದ ಖರ್ಗೆ ನಾನು ಚುನಾವಣೆಗೆ ನಿಲ್ಲುತ್ತೇನೋ ಬಿಡುತ್ತೇನೋ ಆ ಮಾತು ಬೇರೆ. ಆದರೆ ತುಳಿತಕ್ಕೆ ಒಳಗಾದ ಸಮಾಜದ ಪರವಾದ ಹೋರಾಟ ಮಾಡಲು ನಾನು ರಾಜಕೀಯದಲ್ಲಿ ಇರುತ್ತೇನೆ. ಆರೆಸ್ಸೆಸ್ ಸಿದ್ಧಾಂತಗಳನ್ನು ಸೋಲಿಸಲು ನಾನು ಹೋರಾಡುತ್ತಲೇ ಇರುತ್ತೇನೆ. ಕಳೆದ ಸಲದ ಸೋಲಿನ ವಿಚಾರ ಬಿಡಿ. ನಾವು ಮಾಡಿದ ಕೆಲಸಕ್ಕೆ ನೀವು ಆಶೀರ್ವಾದ ಮಾಡಿ ರಾಧಾಕೃಷ್ಣರನ್ನು ಗೆಲ್ಲಿಸಬೇಕು ಎಂದರು. ಅಭ್ಯರ್ಥಿ ರಾಧಾಕೃಷ್ಣ ದೊಡ್ಡಮನಿ ಮಾತನಾಡಿ, ಮತದಾರರು ಆಶೀರ್ವಾದ ಮಾಡಿ ದಿಲ್ಲಿಗೆ ಕಳಿಸಿದರೆ ನಿಮ್ಮ ಸೇವೆ ಮಾಡುತ್ತೇನೆ ಎಂದರು. ವೈದ್ಯಕೀಯ ಶಿಕ್ಷಣ ಸಚಿವ ಶರಣಪ್ರಕಾಶ ಪಾಟೀಲ, ವಿಧಾನ ಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರು, ಶಾಸಕರಾದ ಅಲ್ಲಮಪ್ರಭು, ಎಂ.ವೈ.ಪಾಟೀಲ್, ಮಾಜಿ ಸಚಿವರಾದ ಮಾಲೀಕಯ್ಯ ಗುತ್ತೇದಾರ, ಬಾಬುರಾವ ಚಿಂಚನಸೂರು ಮಾತನಾಡಿದರು. ಸಚಿವರಾದ ಪ್ರಿಯಾಂಕ್ ಖರ್ಗೆ, ಕೆಕೆಆರ್ ಡಿಬಿ ಅಧ್ಯಕ್ಷರಾದ ಅಜಯ್ ಸಿಂಗ್, ಡಿಸಿಸಿ ಜಗದೇವ ಗುತ್ತೇದಾರ್, ಶರಣಪ್ಪ ಮಟ್ಟೂರ, ಅರುಣಕುಮಾರ ಪಾಟೀಲ್, ರಿತೀಶ್ ಗುತ್ತೇದಾರ್,ಜೆ.ಎಂ.ಕೊರಬು, ಪಪ್ಪು ಪಟೇಲ್, ಸಿದ್ದು ಸಿರಸಗಿ,ಮತೀನ ಪಟೇಲ್, ರಾಜೇಂದ್ರ ಪಾಟೀಲ್ ರೇವೂರ, ಪ್ರಕಾಶ್ ಜಮಾದಾರ, ಸಿದ್ಧಾರ್ಥ್ ಬಸರಿಗಿಡ, ಭೀಮಾಶಂಕರ ಹೊನ್ನಕೇರಿ, ಚಂದಪ್ಪ ಕರಜಗಿ, ರಮೇಶ್ ಪೂಜಾರಿ, ಮಕ್ಬೂಲ್ ಪಟೇಲ್, ಶರಣು ಕುಂಬಾರ, ಅಸ್ಪಕ್ ಬಂದರವಾಡ, ಅಂಬರೀಷ್ ಬುರಲಿ, ಶಿವಾನಂದ ಗಾಡಿಸಾಹುಕಾರ, ರೇಣುಕಾ ಸಿಂಗೆ, ದಯಾನಂದ ದೊಡ್ಮನಿ, ಲಚ್ಚಪ್ಪ ಜಮಾದಾರ, ಅರವಿಂದ್ ಗುತ್ತೇದಾರ್ ಸೇರಿದಂತೆ ಮತ್ತಿತರಿದ್ದರು
ಹೊಸದಿಲ್ಲಿ: ಚುನಾವಣೆಗಳಿಗೆ ತಾನು ನಿಯಂತ್ರಣಾ ಪ್ರಾಧಿಕಾರವಲ್ಲ ಹಾಗೂ ಸಂವಿಧಾನಿಕ ಪ್ರಾಧಿಕಾರವಾದ ಚುನಾವಣಾ ಆಯೋಗಕ್ಕೆ ಅದರ ಕಾರ್ಯನಿರ್ವಹಣೆ ಕುರಿತು ಸೂಚನೆ ನೀಡಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಇಂದು ಹೇಳಿದೆ. ಇವಿಎಂಗಳಲ್ಲಿ ಬಿದ್ದ ಮತಗಳ ಜೊತೆಗೆ ವಿವಿಪ್ಯಾಟ್ ಸ್ಲಿಪ್ಗಳನ್ನೂ ಶೇ 100ರಷ್ಟು ಎಣಿಕೆ ಮಾಡಬೇಕೆಂದು ಕೋರಿ ಸಲ್ಲಿಸಲಾಗಿರುವ ಹಲವು ಅರ್ಜಿಗಳ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ ಮೇಲಿನಂತೆ ಹೇಳಿದೆ. ಈ ಪ್ರಕರಣದ ತೀರ್ಪನ್ನು ಸುಪ್ರೀಂ ಕೋರ್ಟ್ ಕಾಯ್ದಿರಿಸಿದೆ. ಕೇವಲ ಶಂಕೆಯ ಆಧಾರದಲ್ಲಿ ಸುಪ್ರೀಂ ಕೋರ್ಟ್ ಯಾವುದೇ ಕ್ರಮ ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂದು ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ದೀಪಾಂಕರ್ ದತ್ತ ಅವರ ಪೀಠ ಹೇಳಿದೆ. ಇಂದು ಮುಂಜಾನೆಯ ವಿಚಾರಣೆ ವೇಳೆ ಇವಿಎಂಗಳ ಕಾರ್ಯನಿರ್ವಹಣೆ ಕುರಿತಂತೆ ಚುನಾವಣಾ ಆಯೋಗಕ್ಕೆ ಹಲವು ಪ್ರಶ್ನೆಗಳನ್ನು ಕೇಳಿದ್ದ ಸುಪ್ರೀಂ ಕೋರ್ಟ್, 2 ಗಂಟೆಗೆ ಹಾಜರಾಗುವಂತೆ ಅಧಿಕಾರಿಗಳಿಗೆ ತಿಳಿಸಿತ್ತು. “ಉತ್ತರಗಳು ಸಿಕ್ಕಿವೆ, ತೀರ್ಪು ಕಾಯ್ದಿರಿಸಲಾಗಿದೆ, ಏನು ಮಾಡಬಹುದೆಂದು ನೋಡೋಣ. ಈಗಿನ ವ್ಯವಸ್ಥೆಯನ್ನು ಬಲಪಡಿಸಲು ಏನು ಮಾಡಬಹುದೆಂದು ನೋಡೋಣ,” ಎಂದು ನ್ಯಾಯಪೀಠ ಹೇಳಿದೆ.
ತಿರುವನಂತಪುರಂ: ವಿಝಿನ್ಜಂ ಎಂಬಲ್ಲಿ ಮೀನುಗಾರರು ಅದಾನಿ ಬಂದರು ಯೋಜನೆಯ ವಿರುದ್ಧ ಪ್ರತಿಭಟಿಸಿದ ನಂತರ ತನ್ನ ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ಕೇರಳದ ತಿರುವನಂತಪುರಂನ ಲ್ಯಾಟಿನ್ ಕ್ಯಾಥೊಲಿಕ್ ಚರ್ಚಿನ ಆರ್ಚ್ಡಯೋಸೀಸ್ ಹೇಳಿದೆ. ಲ್ಯಾಟಿನ್ ಕ್ಯಾಥೊಲಿಕ್ ಡಯೋಸೀಸ್ ಆಫ್ ತಿರುವನಂತಪುರಂ ಆಶ್ರಯದಲ್ಲಿ 2022 ರಲ್ಲಿ ಮೀನುಗಾರರ ಒಂದು ಗುಂಪು ಗೌತಮ್ ಅದಾನಿ ಅವರ ರೂ 7500 ಕೋಟಿ ಮೊತ್ತದ ಬಂದರು ಯೋಜನೆಯ ವಿರುದ್ಧ ಪ್ರತಿಭಟನೆ ಆರಂಭಿಸಿದ್ದರು. ಇದು ಕರಾವಳಿ ತೀರದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವುದರ ಜೊತೆಗೆ ತಮ್ಮ ಜೀವನೋಪಾಯವನ್ನೂ ಬಾಧಿಸುವುದು ಎಂದು ಮೀನುಗಾರರು ದೂರಿದ್ದರು. ಯೋಜನಾ ಸ್ಥಳದಲ್ಲಿ ಕೆಲಸ ಆರಂಭಿಸಲು ಸಂಸ್ಥೆಗೆ ಪ್ರತಿಭಟನಾಕಾರರು ತಡೆಯೊಡ್ಡಿದಾಗ ನವೆಂಬರ್ 26, 2022ರಂದು ಪ್ರತಿಭಟನೆ ಹಿಂಸಾತ್ಮಕ ಸ್ವರೂಪ ತಿರುಗಿತ್ತು. ನಂತರ ಕೇರಳ ಹೈಕೋರ್ಟ್ ನಿರ್ದೇಶಾನುಸಾರ ಕಾಮಗಾರಿ ಪುನರಾರಂಭಗೊಂಡಿತ್ತು. ರವಿವಾರ ಆರ್ಚ್ಬಿಷಪ್ ಥಾಮಸ್ ಜೆ ನೆಟ್ಟೋ ಅವರು ಎಲ್ಲಾ ಚರ್ಚ್ಗಳಲ್ಲಿ ಓದಲಾದ ಪ್ಯಾಸ್ಟೋರಲ್ ಪತ್ರದಲ್ಲಿ, ಬಂದರು ಯೋಜನೆ ವಿರುದ್ಧದ ಪ್ರತಿಭಟನೆಗಳ ನಂತರ ಬ್ಯಾಂಕ್ ಖಾತೆಗಳನ್ನು ಫ್ರೀಝ್ ಮಾಡಿದ ಕಾರಣ ತಮ್ಮ ಸಂಸ್ಥೆಯು ತನ್ನ ದೈನಂದಿನ ಖರ್ಚುಗಳನ್ನು ಹಾಗೂ ಸೆಮಿನರೇಯಿನ್ಗಳ ತರಬೇತಿ ವೆಚ್ಚಗಳನ್ನು ನಿಭಾಯಿಸಲು ಕಷ್ಟಪಡುತ್ತಿದೆ, ಪರಿಸ್ಥಿತಿ ಬದಲಾಗಿಲ್ಲ, ಜನರೇ ಡಯೋಸೀಸ್ಗೆ ಸಹಾಯ ಒದಗಿಸಬೇಕು ಎಂದು ಪತ್ರ ಹೇಳಿದೆ.
ಲೋಕಸಭಾ ಚುನಾವಣೆ ಮತದಾನ ಹಿನ್ನಲೆ ಏ.26 ರಂದು ನಮ್ಮ ಮೆಟ್ರೋ ಸೇವೆ ವಿಸ್ತರಣೆ
Namma Metro service Extension : ಮತದಾನ ದಿನ ಪ್ರಯಾಣಿಕರ ಅನುಕೂಲಕ್ಕಾಗಿ ನಮ್ಮ ಮೆಟ್ರೋ ಸೇವೆಯನ್ನು ವಿಸ್ತರಣೆ ಮಾಡಲಾಗಿದೆ. ಆ ದಿನ ರಾತ್ರಿ ಒಂದು ಗಂಟೆ ಹೆಚ್ಚುವರಿಯಾಗಿ ಮೆಟ್ರೋ ರೈಲುಗಳು ಸಂಚರಿಸಲಿವೆ.
ಮುಂಬರುವ ಟಿ20 ವಿಶ್ವಕಪ್ ಚಾಂಪಿಯನ್ಸ್ ಹೆಸರಿಸಿದ ಸರ್ ವಿವಿಯನ್ ರಿಚರ್ಡ್ಸ್!
ICC T20 World Cup 2024: ಜೂನ್ 1ರಿಂದ 29ರವರೆಗೆ ವೆಸ್ಟ್ ಇಂಡೀಸ್ ಮತ್ತು ಅಮೆರಿಕದ ಜಂಟಿ ಆತಿಥ್ಯದಲ್ಲಿ ಐಸಿಸಿ ಟಿ20 ಕ್ರಿಕೆಟ್ ವಿಶ್ವಕಪ್ ಟೂರ್ನಿ ನಡೆಯಲಿದೆ. ಈ ಸಲುವಾಗಿ ಎಲ್ಲ ತಂಡಗಳು ಸಕಲ ತಯಾರಿಯನ್ನು ಈಗಾಗಗಲೇ ಶುರು ಮಾಡಿವೆ. ಟೀಮ್ ಇಂಡಿಯಾ ಆಟಗಾರರು ಮತ್ತು ಅಂತಾರಾಷ್ಟ್ರೀಯ ಆಟಗಾರರು ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯನ್ನು ವೇದಿಕೆಯನ್ನಾಗಿಸಿಕೊಂಡು ಭರದ ತಯಾರಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಬಗ್ಗೆ ಮಾತನಾಡಿರುವ ವೆಸ್ಟ್ ಇಂಡೀಸ್ ದಿಗ್ಗಜ ಬ್ಯಾಟರ್ ಸರ್ ವಿವಿಯನ್ ರಿಚರ್ಡ್ಸ್ ಟ್ರೋಫಿ ಗೆಲ್ಲುವ ಫೇವರಿಟ್ ತಂಡ ಹೆಸರಿಸಿದ್ದಾರೆ.
ಗುಳೆ ತಡೆಯಲು ನಡೆಸಿದ ವಿಶೇಷ ಅಭಿಯಾನದಲ್ಲಿ ರಾಯಚೂರಿಗೆ ರಾಜ್ಯಕ್ಕೆ 4 ನೇ ಸ್ಥಾನ
ಪ್ರಸಕ್ತ ವರ್ಷದಲ್ಲಿ ರಾಯಚೂರು ಜಿಲ್ಲೆಯಲ್ಲಿ 1 ಕೋಟಿ 10 ಲಕ್ಷ ಮಾನವ ದಿನಗಳ ಸೃಜನೆಯ ಗುರಿ ಹೊಂದಲಾಗಿದ್ದು, ಈ ಪೈಕಿ ದೇವದುರ್ಗ 51,149, ಲಿಂಗಸುಗೂರು 1,02,964, ಮಾನ್ವಿ 1,06,454, ಮಸ್ಕಿ 46,917, ರಾಯಚೂರು 1,11,786, ಸಿಂಧನೂರು 79,419 ಹಾಗೂ ಸಿರವಾರ 16,349 ಸೇರಿ ಒಟ್ಟು 5,15,038 ಮಾನವ ದಿನಗಳ ಸೃಜಿಸಿ ರಾಜ್ಯದಲ್ಲೇ ರಾಯಚೂರು ಜಿಲ್ಲೆ ನಾಲ್ಕನೇ ಸ್ಥಾನದಲ್ಲಿದೆ.
WhatsApp: ವಾಟ್ಸಾಪ್ ಬಳಸಲು ಇನ್ಮೇಲೆ ರಿಚಾರ್ಜ್ ಬೇಕಿಲ್ಲ! ಹೊಸ ವಿಧಾನ ಇಲ್ಲಿದೆ
ಇಂಟರ್ನೆಟ್ ಇಲ್ಲದೆ ವಾಟ್ಸ್ ಆ್ಯಪ್ (WhatsApp) ಬಳಕೆ ಮಾಡಲು ನೀವು ನಿಮ್ಮ ಆ್ಯಂಡ್ರಾಯ್ಡ್ ಫೋನ್ ನಲ್ಲಿ ಇದಕ್ಕಾಗಿ ಅಪ್ಲಿಕೇಶನ್ ಒಂದನ್ನು ತೆರೆಯಬೇಕಿದ್ದು ಅದರ ಮೂಲಕ ಬ್ಲೂಟುತ್ ಕನೆಕ್ಟ್ ಮಾಡಿಕೊಂಡರೆ ಆಫ್ಲೈನ್ ಮೂಲಕ ನೀವು ವಾಟ್ಸ್ ಆ್ಯಪ್ ಬಳಸಬಹುದು. The post WhatsApp: ವಾಟ್ಸಾಪ್ ಬಳಸಲು ಇನ್ಮೇಲೆ ರಿಚಾರ್ಜ್ ಬೇಕಿಲ್ಲ! ಹೊಸ ವಿಧಾನ ಇಲ್ಲಿದೆ appeared first on Karnataka Times .
ಮತದಾನ ಮಾಡಿದ ಗ್ರಾಹಕರಿಗೆ ಉಚಿತ ಆಹಾರ ಒದಗಿಸಲು ಹೋಟೆಲ್ಗಳಿಗೆ ಹೈಕೋರ್ಟ್ ಅನುಮತಿ
ಬೆಂಗಳೂರು : ಲೋಕಸಭಾ ಚುನಾವಣೆಯಲ್ಲಿ ಹೆಚ್ಚಿನ ಮತದಾನವಾಗಬೇಕೆಂಬ ಉದ್ದೇಶದಿಂದ ಮತದಾನ ಮಾಡಿ ಬರುವ ಗ್ರಾಹಕರಿಗೆ ಉಚಿತ ಆಹಾರ ಒದಗಿಸುವ ಬೆಂಗಳೂರು ಹೋಟೆಲ್ ಸಂಘದ ನಿರ್ಧಾರಕ್ಕೆ ಹೈಕೋರ್ಟ್ ಅನುಮತಿ ನೀಡಿದೆ. ಉಚಿತ ಆಹಾರ ನೀಡುವುದಕ್ಕೆ ಬಿಬಿಎಂಪಿ ಆಕ್ಷೇಪಣೆ ಪ್ರಶ್ನಿಸಿ ಬೆಂಗಳೂರು ಹೋಟೆಲ್ ಸಂಘ ಮತ್ತು ನಿಸರ್ಗ ಗ್ರ್ಯಾಂಡ್ ಹೋಟೆಲ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ ಇಂದು ವಿಚಾರಣೆ ನಡೆಸಿತು. ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಅರ್ಜಿದಾರರ ಸಂಘ ಯಾವುದೇ ರಾಜಕೀಯ ದುರುದ್ದೇಶದಿಂದ ಈ ನಿರ್ಧಾರ ತೆಗೆದುಕೊಂಡಿಲ್ಲ. ಮತದಾನದ ಉತ್ತೇಜನಕ್ಕೆ ನಾವು ಈ ಕಾರ್ಯ ಕೈಗೊಂಡಿದ್ದು, ಈ ಹಿಂದೆಯೂ ಮತದಾರನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಉಚಿತ ಆಹಾರ ವಿತರಣೆ ಮಾಡಿದ್ದೇವೆ. ಹಾಗಾಗಿ ನಮ್ಮ ನಿರ್ಧಾರಕ್ಕೆ ಅನುಮತಿ ನೀಡಬೇಕು ಎಂದು ಮನವಿ ಮಾಡಿದರು. ಕೆಲಕಾಲ ವಾದ ಆಲಿಸಿದ ನ್ಯಾಯಪೀಠ ಅರ್ಜಿದಾರರ ಉತ್ತಮ ನಡೆಗೆ ಪ್ರಶಂಸೆ ವ್ಯಕ್ತಪಡಿಸಿತು. ಚುನಾವಣೆ ದಿನ ಮತದಾನ ಮಾಡಿ ಬಂದ ಗ್ರಾಹಕರಿಗೆ ಉಚಿತವಾಗಿ ಆಹಾರ ನೀಡಲು ಅವಕಾಶ ಕಲ್ಪಿಸಿ ಹೋಟೆಲ್ ಮಾಲೀಕರಿಗೆ ಹೈಕೋರ್ಟ್ ಅನುಮತಿ ನೀಡಿದೆ.
ದ್ವೇಷ ಭಾಷಣ: ಬಿಜೆಪಿ 12, ಕಾಂಗ್ರೆಸ್ 9, ಜೆಡಿ ಎಸ್ ವಿರುದ್ಧ 2 ಪ್ರಕರಣ ದಾಖಲು!
ರಾಜ್ಯದಲ್ಲಿ ಲೋಕಸಭಾ ಚುನಾವಣೆಯ ಬಹಿರಂಗ ಪ್ರಚಾರದ ಕಾವು ಅರ್ಧದಷ್ಟು ಮುಗಿದಿದೆ. ಮೊದಲನೇ ಹಂತದಲ್ಲಿ ಮತದಾನ ನಡೆಯಲಿರುವ 14 ಕ್ಷೇತ್ರಗಳಲ್ಲಿ ಬುಧವಾರ ಸಂಜೆ ತೆರೆ ಬೀಳಲಿದೆ. ಈ ಹೊತ್ತಿನಲ್ಲಿ ಚುನಾವಣಾ ಆಯೋಗ ನೀಡಿರುವ ಮಾಹಿತಿಯಂತೆ ಬಿಜೆಪಿ ವಿರುದ್ಧ 12, ಕಾಂಗ್ರೆಸ್ ವಿರುದ್ಧ 9 ಮತ್ತು ಜೆಡಿಎಸ್ ವಿರುದ್ಧ 2 ದ್ವೇಷ ಭಾಷಣದ ಪ್ರಕರಣಗಳು ದಾಖಲಾಗಿವೆ. ಇನ್ನು ಚುನಾವಣೆಯಲ್ಲಿ ಮಕ್ಕಳ ಬಳಕೆಗೆ ಸಂಬಂಧಿಸಿ ಕಾಂಗ್ರೆಸ್ ಮತ್ತು ಬಿಜೆಪಿ ವಿರುದ್ಧ ತಲಾ 7 ಮತ್ತು ಪಕ್ಷೇತರರ ವಿರುದ್ಧ 1 ಪ್ರಕರಣಗಳು ದಾಖಲಾಗಿವೆ.
ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಅರೆಸೇನಾ ಪಡೆ ಭದ್ರತೆ, ಮತಗಟ್ಟೆಗಳಲ್ಲಿ ವೆಬ್ ಕಾಸ್ಟಿಂಗ್
ರಾಜ್ಯದಲ್ಲಿ ಮೊದಲ ಹಂತದ ಲೋಕಸಭಾ ಚುನಾವಣೆ ಮತದಾನಕ್ಕೆ ದಿನಗಣನೆ ಆರಂಭವಾಗಿದೆ. ಮತದಾನಕ್ಕೆ ಮತದಾರರನ್ನು ಸೆಳೆಯುವ ನಿಟ್ಟಿನಲ್ಲಿ 58,834 ಮತಗಟ್ಟೆಗಳನ್ನು ಕೂಡ ಸಿದ್ದಪಡಿಸಲಾಗಿದೆ. ಈ ಬಾರಿ ನಾನಾ ವಿಷಯಗಳನ್ನು ಆಧರಿಸಿದ 1,832 ವಿಶೇಷ ಮತಗಟ್ಟೆಗಳನ್ನು ಕೂಡ ಸ್ಥಾಪಿಸಲಾಗಿದೆ. 28 ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 5.47 ಕೋಟಿ ಮತದಾರರಿದ್ದಾರೆ. ಚುನಾವಣೆಯ ಮತದಾನದ ಸಂದರ್ಭದಲ್ಲಿ ಮತದಾನ ಮಾಡುವಂತೆ ಈಗಾಗಲೇ ಜಾಗೃತಿ ಮೂಡಿಸಲಾಗಿದೆ.
ಕೇರಳದಲ್ಲಿ ಜಾತ್ಯತೀತತೆಗೆ ಆದ್ಯತೆ. ಇಲ್ಲಿ ಬಿಜೆಪಿ ಖಾತೆ ತೆರೆಯಲ್ಲ.. | Thiruvananthapuram | Congress | BJP
ಮೋದಿ ಆಡಳಿತ ಖುಷಿ ಕೊಟ್ಟಿದೆ, ಆದ್ರೆ ಬೆಲೆಯೇರಿಕೆ ಸಮಸ್ಯೆ ಇದೆ.. ► ನಾನು ಎಡಪಕ್ಷಗಳ ಕಾರ್ಯಕರ್ತ, ಆದರೆ ಈ ಬಾರಿ ತರೂರ್ ಗೆಲ್ತಾರೆ.. ► ಶಶಿತರೂರ್ ಗೆ ಸಿಗುತ್ತಿದ್ದ ಮತಗಳು ಈ ಬಾರಿ ರಾಜೀವ್ ಗೆ.. ► ಲೋಕಸಮರ - ಮತದಾರರ ಮನದಾಳ । ತಿರುವನಂತಪುರಂ ಲೋಕಸಭಾ ಕ್ಷೇತ್ರ
ತಪ್ಪು ದಾರಿಗೆಳೆಯುವ ಜಾಹೀರಾತು: ಛೀಮಾರಿ ಹಾಕಿಸಿಕೊಂಡ ಪತಂಜಲಿ | Ramdev | Patanjali | Supreme Court
ರಾಮ್ ದೇವ್ ಗೆ ಕಾನೂನು ನೆನಪಿಸಿದ ಸುಪ್ರೀಂ ಕೋರ್ಟ್ ► ಕ್ಷಮಾಪಣೆ ಜಾಹೀರಾತು ಸರಿಯಾಗಿ ಪ್ರಕಟಿಸುವಂತೆ ಸುಪ್ರೀಂ ತಾಕೀತು
ಇವಿಎಂ ಅನ್ನು ಪ್ರಮಾಣೀಕರಿಸುವ ತಾಂತ್ರಿಕ ಸಮಿತಿ ಬಗ್ಗೆಯೇ ಪ್ರಶ್ನೆಗಳು ! | EVM | Lok Sabha Election
ಇವಿಎಂ ವಿನ್ಯಾಸ ಮಾಡಿರುವ ಪ್ರೊ.ರಜತ್ ಮೂನಾ ಅವರೇ ಅದಕ್ಕೆ ತಾಂತ್ರಿಕ ಮಾನ್ಯತೆಯನ್ನೂ ಕೊಡ್ತಾರೆ ! ► ಸರಕಾರದ ಅದೆಷ್ಟು ಸಂಸ್ಥೆಗಳಲ್ಲಿ ಇದೇ ಪ್ರೊ. ಮೂನಾ ನಿರ್ದೇಶಕರು ?
ಕರ್ನಾಟಕ ಹೈಕೋರ್ಟ್ ನೀಡಿದ್ದ ಜಾಮೀನು ರದ್ದುಗೊಳಿಸಿದ ಸುಪ್ರೀಂ ಕೋರ್ಟ್ | Muruga Shree | POCSO Act
ಜಾಮೀನಿನ ಮೇಲೆ ಹೊರಗಿರುವ ಶ್ರೀ ಗೆ ಪೋಕ್ಸೋ ಕುತ್ತು ► ಬ್ರಿಜ್ ಭೂಷಣ್, ಯಡಿಯೂರಪ್ಪ ವಿರುದ್ಧ ಪೋಕ್ಸೋ ದಾಖಲಾದರೂ ಕ್ರಮವಿಲ್ಲ!
ವಿಪಕ್ಷ ಮುಕ್ತ ಚುನಾವಣೆ ನಡೆಸಲು ಹೊರಟಿದೆಯೇ ಬಿಜೆಪಿ ? | Surat Lok Sabha Seat | BJP - Congress | Politics
ಕಾಂಗ್ರೆಸ್ ಅಭ್ಯರ್ಥಿ ಕೂಡ ನಾಪತ್ತೆಯಾಗಿದ್ದು ಹೇಗೆ ? ► ಚಂಢೀಗಡದ ಮುಂದಿನ ಭಾಗ ಸೂರತ್ ನಲ್ಲಿ ನಡೆಯಿತೇ ?
ಕರ್ನಾಟಕಕ್ಕೆ ವಾರದೊಳಗೆ ಬರಪರಿಹಾರ : ಕೇಂದ್ರ ಸರಕಾರ | Karnataka | Supreme Court
ಮೋದಿ ಸರಕಾರ ಹೊರಗೆ ಹೇಳಿದ್ದೇನು , ಸುಪ್ರೀಂ ಕೋರ್ಟ್ ನಲ್ಲಿ ಒಪ್ಪಿಕೊಂಡಿದ್ದೇನು? ► ಸರ್ವೋಚ್ಚ ನ್ಯಾಯಾಲಯಕ್ಕೆ ಹೋಗಿ ನ್ಯಾಯ ಪಡೆದ ರಾಜ್ಯ ಸರಕಾರ
ಬಿಜೆಪಿಯಿಂದ ಈಶ್ವರಪ್ಪಗೆ ಉಚ್ಚಾಟನೆ ಶಾಕ್ | BJP | K. S. Eshwarappa | RSS
ಜೀವನವಿಡೀ ಆರೆಸ್ಸೆಸ್ ಜೀತ ಮಾಡಿದ ಈಶ್ವರಪ್ಪ ಈಗ ಏಕಾಂಗಿ
ಪ್ರತಿ ನಗರಕ್ಕೆ ವಿಮಾನ ನಿಲ್ದಾಣ ಅನ್ನೋ ಪ್ರಚಾರದ ಹಿಂದಿನ ಸತ್ಯವೇನು ? | Indian Railways | Vande Bharat | Modi
ರೈಲ್ವೇ ಕುರಿತ ಬಿಜೆಪಿ ಪ್ರಚಾರಕ್ಕೂ, ವಾಸ್ತವಕ್ಕೂ ಎಷ್ಟಿದೆ ಅಂತರ ?
ಎಲ್ಲ ಅಭ್ಯರ್ಥಿಗಳು ನಾಮಪತ್ರ ವಾಪಸ್ ಪಡೆದಿದ್ದು ಹೇಗೆ ? | BJP candidate Mukesh Dalal | Surat | Lok Sabha
ಕಾಂಗ್ರೆಸ್ ಅಭ್ಯರ್ಥಿಯ ಎಲ್ಲ ಮೂವರು ಸೂಚಕರು ಕಿಡ್ನಾಪ್ ?! ► ಬದಲಿ ಕಾಂಗ್ರೆಸ್ ಅಭ್ಯರ್ಥಿಯ ಸೂಚಕನೂ ತಿಪ್ಪರಲಾಗ !
ಕಾಂಗ್ರೆಸ್ ಅಭ್ಯರ್ಥಿ ನಾಪತ್ತೆ: ಸೂರತ್ನಲ್ಲಿ ಚುನಾವಣೆ ನಡೆಯದೇ ಬಿಜೆಪಿ ಗೆದ್ದಿದ್ದು ಹೇಗೆ?
Lok Sabha Elections 2024: ಲೋಕಸಭೆ ಚುನಾವಣೆಯ ಎಲ್ಲ ಏಳು ಹಂತಗಳ ಮತದಾನ ಮುಗಿದು ಫಲಿತಾಂಶ ಬರಲು ಇನ್ನೂ ಒಂದೂವರೆ ತಿಂಗಳಿನಷ್ಟು ಸಮಯವಿದೆ. ಆದರೆ ಗುಜರಾತ್ನ ಸೂರತ್ ಲೋಕಸಭೆ ಕ್ಷೇತ್ರದ ಫಲಿತಾಂಶ ಈಗಲೇ ಪ್ರಕಟವಾಗಿದೆ. ಯಾವ ಎದುರಾಳಿಯೂ ಇಲ್ಲದೆ ಬಿಜೆಪಿ ಅಭ್ಯರ್ಥಿ ಇಲ್ಲಿ ಗೆಲುವು ಸಾಧಿಸಿದ್ದಾರೆ. ಈ ನಾಟಕೀಯ ಬೆಳವಣಿಗೆ ಏನು? ಉಮೇದುವಾರಿಕೆ ತಿರಸ್ಕೃತಗೊಂಡ ಬಳಿಕ ಕಾಂಗ್ರೆಸ್ ಅಭ್ಯರ್ಥಿ ಎಲ್ಲಿದ್ದಾರೆ?
ಸಹೋದರನ ಕ್ಷೇತ್ರದಲ್ಲಿ ಬೆಂಬಿಡದೇ ಡಿಕೆಶಿ ಪ್ರಚಾರ : ಅಂಡರ್ ಕರೆಂಟ್ ಹೊಡೆತದ ಭೀತಿಯೇ?
DK Shivakumar Heavy Campaigning In Bangalore Rural : ಕಳೆದ ಒಂದು ವಾರದಿಂದ ಸತತವಾಗಿ ಕಾಂಗ್ರೆಸ್ ಅಭ್ಯರ್ಥಿ ಮತ್ತು ಸಹೋದರರೂ ಆಗಿರುವ ಡಿ.ಕೆ.ಸುರೇಶ್ ಪರ ಪ್ರಚಾರ ನಡೆಸುತ್ತಿದ್ದಾರೆ. ಮೂಲಗಳ ಪ್ರಕಾರ ಆರಂಭದ ಟ್ರೆಂಡ್ ಬದಲಾಗುತ್ತಿರುವ ಕಾರಣಕ್ಕಾಗಿ ಪ್ರಚಾರದ ವೇಗವನ್ನು ಡಿಕೆಶಿ ಹೆಚ್ಚಿಸಿದ್ದಾರೆ ಎಂದು ಹೇಳಲಾಗುತ್ತಿದೆ.
Lok Sabha Election 2024: ದಾವಣಗೆರೆಯಲ್ಲಿ ಅಚ್ಚರಿಯ ಫಲಿತಾಂಶ ನೀಡುವ ಮತದಾರ
Lok Sabha Election 2024: 2008 ಕ್ಕೂ ಮೊದಲು ಕಾಂಗ್ರೆಸ್ ಕೋಟೆಯಾಗಿದ್ದ ದಾವಣಗೆರೆ ಉತ್ತರ ಕ್ಷೇತ್ರದಲ್ಲಿ ಮೊದಲು ಹಿಡಿತ ಸಾಧಿಸಿದ ಪಕ್ಷ ಬಿಜೆಪಿ. 2008 ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯ ಎಸ್.ಎ.ರವೀಂದ್ರನಾಥ್, 53,910 ಮತಗಳ ಅಂತರದಿಂದ ಜಯ ಸಾಧಿಸಿ ಗಮನಸೆಳೆದಿದ್ದರು. ಆಗ ಬಿ ಫಾರಂ ಗಲಾಟೆಯಿಂದ ಕಾಂಗ್ರೆಸ್ ಕಣದಲ್ಲಿ ಇರಲಿಲ್ಲ. ಪ್ರತಿ ಬಾರಿಯೂ ಅಚ್ಚರಿಯ ಫಲಿತಾಂಶ ನೀಡುತ್ತಾ ಬಂದಿರುವ ದಾವಣಗೆರೆಯಲ್ಲಿ ಈ ಬಾರಿ ಏನಾಗಲಿದೆ ಎಂಬುದು ಕುತೂಹಲ.
ಕಾಂಗ್ರೆಸ್ ಅಧಿಕಾರಕ್ಕೆ ಬಂದಲ್ಲಿ ದೇಶದ ಜನರ ಸಂಪತ್ತನ್ನು ಮರು ಹಂಚಿಕೆ ಮಾಡಲಿದೆ ಎಂಬ ಪ್ರಧಾನಿ ಮೋದಿಯ ಭಾಷಣ ಇದೀಗ ರಾಜಕೀಯ ವಲಯದಲ್ಲಿ ಸಂಚಲನಕ್ಕೆ ಕಾರಣವಾಗಿದೆ. ಈ ವಿಚಾರವಾಗಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು ಸಹ ಮಾತನಾಡಿದ್ದು ಕಾಂಗ್ರೆಸ್ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯು ದೇಶವನ್ನು ಮಾವೋವಾದಿ ದೇಶ ಮಾಡಲು ಹೊರಟಿದೆ. ನಿಮ್ಮಲ್ಲಿ ಎರಡು ಬೈಕ್, ಮನೆ ಇದ್ದರೆ ಒಂದನ್ನು ಕಿತ್ತುಕೊಳ್ತಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ರಾಜ್ಯಾದ್ಯಂತ ಬಿಸಲಿನ ಹೊಡೆತಕ್ಕೆ ಏರಿದೆ ತರಕಾರಿ ರೇಟು: ಬೀನ್ಸ್ ದರ ಕೆಜಿಗೆ 200 ರೂಪಾಯಿ!
Beans Prices Surge: ಇಂಗ್ಲಿಷ್ನಲ್ಲಿ ಬೀನ್ಸ್ ಎನ್ನಲಾಗುವ ಹುರುಳಿಕಾಯಿಯನ್ನು ಬೆಳೆಯಲು ಸಾಕಷ್ಟು ನೀರು ಬೇಕು. ಅದರಲ್ಲೂ ನಾಟಿ ಬೀನ್ಸ್ಗಿಂತಲೂ ಫಾರಂ ಬೀನ್ಸ್ಗಳನ್ನೇ ಕೃಷಿಕರು ಹೆಚ್ಚಿನ ಪ್ರಮಾಣದಲ್ಲಿ ಬೆಳೆಯುತ್ತಾರೆ. ಆದರೆ ನೀರಿನ ಕೊರತೆಯಿಂದಾಗಿ ಬೀನ್ಸ್ ಬೆಳೆ ಕೈ ಕೊಟ್ಟಿದೆ. ಮಾರುಕಟ್ಟೆಗೆ ಆಗಮಿಸುವ ಬೀನ್ಸ್ ಆವಕ ಅರ್ಧದಷ್ಟು ಕಡಿಮೆ ಆಗಿದೆ. ಹೀಗಾಗಿ, ಬೆಲೆ ಕೂಡಾ ವಿಪರೀತ ಏರಿಕೆ ಕಂಡಿದೆ. 15 ದಿನಗಳಲ್ಲೇ ಬೀನ್ಸ್ ದರ ದುಪ್ಪಟ್ಟಾಗಿದ್ದು, ಗ್ರಾಹಕರಿಗೆ ಬೇಸಿಗೆ ಬಿಸಿಲ ಝಳದ ನಡುವೆ ಬೆಲೆ ಏರಿಕೆ ಬಿಸಿ ತಟ್ಟಿದೆ.
ತೇಜಸ್ವಿ ಸೂರ್ಯ v/s ಸೌಮ್ಯ ರೆಡ್ಡಿ: ಏನು ಹೇಳುತ್ತೆ ಬೆಂಗಳೂರು ದಕ್ಷಿಣ ಕ್ಷೇತ್ರದ ಇತಿಹಾಸ?
ರಷ್ಯಾ- ಉಕ್ರೇನ್ ಯುದ್ಧ ಎಫೆಕ್ಟ್: ಕಮರಿದ ಉತ್ತರ ಕನ್ನಡ ಪ್ರವಾಸೋದ್ಯಮ
ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದಲ್ಲಿ ಈ ಬಾರಿ ವಿದೇಶಿ ಪ್ರವಾಸಿಗರ ಸಂಖ್ಯೆ ವಿರಳವಾಗಿದೆ. ವಾರಾಂತ್ಯದಲ್ಲಿ ಮಾತ್ರ ದೇಶೀ ಪ್ರವಾಸಿಗರು ಕಾಣುತ್ತಾರೆ. ಉಳಿದ ದಿನಗಳಲ್ಲಿ ಬಹುತೇಕ ಖಾಲಿ ಖಾಲಿ. ಬಿಸಿಲು ಕೂಡ ಹೆಚ್ಚಾಗಿದ್ದರಿಂದ ಜನರಿಗೆ ಪ್ರಯಾಣವೂ ತ್ರಾಸದಾಯಕ ಆಗುತ್ತಿದೆ ಎಂದು ಹೋಟೆಲ್ ಮಾಲೀಕರೊಬ್ಬರು ತಿಳಿಸಿದ್ದಾರೆ.
ವಾಣಿಜ್ಯ ವಾಹನ ಮಾಲಿಕರಿಗೆ ಕಿರಿಕಿರಿ ತಂದಿಟ್ಟ ಸರಕಾರದ ಜಿಪಿಎಸ್ ಕಡ್ಡಾಯ ನಿಯಮ
ವಾಹನಗಳ ಕಳ್ಳತನ, ರಾತ್ರಿ ಕೆಲಸ ಮಾಡುವ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯದಂತಹ ಅಹಿತಕರ ಘಟನಾವಳಿಗಳು ಹೆಚ್ಚಿದ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ವಾಣಿಜ್ಯ ವಾಹನಗಳಿಗೆ ಜಿಪಿಎಸ್ ಅಳವಡಿಕೆ ಕಡ್ಡಾಯಗೊಳಿಸಿದೆ. ಕಚೇರಿ ಸೇರಿದಂತೆ ಪ್ರಯಾಣಿಕರ ಸಂಚಾರಕ್ಕೆ ಬಳಸುವ ವಾಣಿಜ್ಯ ವಾಹನಗಳಿಗೆ ಜಿಪಿಎಸ್ ಕಡ್ಡಾಯ ಮಾಡಲಾಗಿದ್ದು, ಇದು ವಾಹನಗಳ ಮಾಲೀಕರಿಗೆ ಕಿರಿಕಿರಿ ಉಂಟು ಮಾಡುತ್ತಿದೆ.