SENSEX
NIFTY
GOLD
USD/INR

Weather

26    C
... ...View News by News Source

ಮಂಗಳೂರು | ಡಿ.19-20: ಪಶುಪಾಲನಾ ಚಟುವಟಿಕೆಗಳ ಬಗ್ಗೆ ತರಬೇತಿ

ಮಂಗಳೂರು,ಡಿ.10: ಪಶುಪಾಲನಾ ಇಲಾಖೆಯ ಪಶುಪಾಲನಾ ಮತ್ತು ಪಶುವೈದ್ಯಕೀಯ ತರಬೇತಿ ಕೇಂದ್ರದ ವತಿಯಿಂದ ದ.ಕ.ಜಿಲ್ಲೆಯ ಆಸಕ್ತ ರೈತರಿಗೆ ಕೋಳಿ ಸಾಕಾಣಿಕೆ ತರಬೇತಿ ಡಿ.19-20 ಮತ್ತು ಹಂದಿ ಸಾಕಾಣಿಕೆ ತರಬೇತಿ ಡಿ.29-30ರಂದು ಏರ್ಪಡಿಸಲಾಗಿದೆ. ಆಸಕ್ತ ರೈತರು ಆಯಾ ತಾಲೂಕಿನ ಅಧಿಕಾರಿಗಳನ್ನು ಸಂಪರ್ಕಿಸಿ ನೋಂದಣಿ ಮಾಡಿಕೊಳ್ಳಬೇಕು. ಹೆಚ್ಚಿನ ಮಾಹಿತಿಗೆ ದೂ.ಸಂ: ಮಂಗಳೂರು ತಾಲೂಕು-9243306956/0824-2950369, ಉಳ್ಳಾಲ ತಾಲೂಕು-9880424077, ಮುಲ್ಕಿ ತಾಲೂಕು- 8971024282, ಮೂಡುಬಿದಿರೆ ತಾಲೂಕು- 7204271943, ಬಂಟ್ವಾಳ ತಾಲೂಕು- 9448253010, ಬೆಳ್ತಂಗಡಿ ತಾಲೂಕು- 9481963820, ಪುತ್ತೂರು ತಾಲೂಕು-9483920208, ಕಡಬ ತಾಲೂಕು-9483922594, ಸುಳ್ಯ ತಾಲೂಕು- 9844995078ನ್ನು ಸಂಪರ್ಕಿಸಬಹುದು ಎಂದು ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಮುಖ್ಯ ಪಶು ವೈದ್ಯಾಧಿಕಾರಿ(ಆಡಳಿತ) ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ವಾರ್ತಾ ಭಾರತಿ 10 Dec 2025 6:54 pm

ಮಂಗಳೂರು | ಕರಾವಳಿ ಉತ್ಸವದ ಲೋಗೋ ತಯಾರಿಕೆ ಸ್ಪರ್ಧೆ

ಮಂಗಳೂರು,ಡಿ.10: ಪ್ರಸಕ್ತ (2025-26) ಸಾಲಿನ ಕರಾವಳಿ ಉತ್ಸವವು ಡಿ.20ರಿಂದ ನಡೆಯಲಿದೆ. ಈ ಉತ್ಸವಕ್ಕೆ ಲೋಗೋ ತಯಾರಿಸುವ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಕರಾವಳಿಯ ಕಲೆ, ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಮ್ಮಿಲನದ ಲೋಗೋವನ್ನು ತಯಾರಿಸಿ ಡಿ.17ರೊಳಗೆ ಪಡೀಲ್ ಪ್ರಜಾಸೌಧ ಕಟ್ಟಡದಲ್ಲಿರುವ ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕರ ಕಚೇರಿ (ದೂ.ಸಂ: 0824-2453926/906313259) ಅಥವಾ ಇ-ಮೇಲ್: adtourismmangalore@gmail.com ಗೆ ಸಲ್ಲಿಸಬಹುದು. ಉತ್ತಮ ಲೋಗೋ ತಯಾರಿಸಿದವರಿಗೆ 50,000 ರೂ. ಬಹುಮಾನವಾಗಿ ನೀಡಲಾಗುವುದು ಎಂದು ಪ್ರಕಟನೆ ತಿಳಿಸಿದ್ದಾರೆ.

ವಾರ್ತಾ ಭಾರತಿ 10 Dec 2025 6:51 pm

ರಾಜ್ಯದಲ್ಲಿ 37,48,700 ವಸತಿ ರಹಿತರು: ಸಚಿವ ಝಮೀರ್ ಅಹ್ಮದ್

ಬೆಳಗಾವಿ (ಸುವರ್ಣವಿಧಾನಸೌಧ): ರಾಜ್ಯದಲ್ಲಿ 37,48,700 ವಸತಿ ರಹಿತರು ಇದ್ದಾರೆ ಎಂದು ವಸತಿ ಸಚಿವ ಝಮೀರ್ ಅಹ್ಮದ್ ಖಾನ್ ತಿಳಿಸಿದರು. ಬುಧವಾರ ವಿಧಾನ ಪರಿಷತ್‍ನ ಪ್ರಶ್ನೋತ್ತರ ಕಲಾಪದಲ್ಲಿ ಆಡಳಿತ ಪಕ್ಷದ ಸದಸ್ಯ ಕೆ.ಶಿವಕುಮಾರ್ ಪ್ರಶ್ನೆಗೆ ಉತ್ತರಿಸಿದ ಸಚಿವರು, ಕೇಂದ್ರ ಸರಕಾರದ ಮಾರ್ಗಸೂಚಿಯಂತೆ 2018ರಲ್ಲಿ ರಾಜ್ಯದ ಗ್ರಾಮೀಣ ಪ್ರದೇಶದಲ್ಲಿ ವಸತಿ/ನಿವೇಶನ ರಹಿತರ ಸಮೀಕ್ಷೆ ಹಾಗೂ 2017ರಲ್ಲಿ ಪ್ರಧಾನ ಮಂತ್ರಿ ಆವಾಸ್(ನಗರ) ಯೋಜನೆಯಡಿ ನಗರ ಪ್ರದೇಶದಲ್ಲಿ ವಸತಿ/ನಿವೇಶನ ರಹಿತರ ಸಮೀಕ್ಷೆಯನ್ನು ಕೈಗೊಳ್ಳಲಾಗಿದ್ದು, ಈ ಸಮೀಕ್ಷೆಯಲ್ಲಿ ರಾಜ್ಯದಲ್ಲಿ ಒಟ್ಟು 37,48,766 ವಸತಿ ರಹಿತರು ಕಂಡು ಬಂದಿದ್ದು, ಇದರಲ್ಲಿ 17,31,633 ನಿವೇಶನ ರಹಿತರು ಮತ್ತು 20,17,133 ವಸತಿ ರಹಿತರು ಇದ್ದಾರೆ ಎಂದು ವಿವರಿಸಿದರು. 2024-2025ನೇ ಸಾಲಿನಲ್ಲಿ ವಿವಿಧ ವಸತಿ ಯೋಜನೆಗಳಡಿ ಒಟ್ಟು 7,38,881 ಮನೆಗಳ ಗುರಿ ನೀಡಿದ್ದು, ಇವುಗಳಲ್ಲಿ 3,27,747 ಅನುಮೋದನೆಗೊಂಡಿವೆ. 411134 ಮನೆಗಳು ಅನುಮೋದನೆಗೆ ಬಾಕಿಯಿವೆ. ರಾಜ್ಯದಲ್ಲಿ ಮನೆ ನಿರ್ಮಾಣಕ್ಕೆ ನೀಡುತ್ತಿರುವ ಅನುದಾನವನ್ನು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರಿಗೆ 4 ಲಕ್ಷ ರೂ. ಮತ್ತು ಸಾಮಾನ್ಯ ವರ್ಗದವರಿಗೆ 3.5 ಲಕ್ಷ ರೂ.ಗೆ ಹೆಚ್ಚಳ ಮಾಡುವ ಚಿಂತನೆ ಇದೆ ಎಂದು ಝಮೀರ್ ಅಹ್ಮದ್ ಖಾನ್ ತಿಳಿಸಿದರು.

ವಾರ್ತಾ ಭಾರತಿ 10 Dec 2025 6:51 pm

ದ.ಕ.ಜಿಲ್ಲಾ ಮಟ್ಟದ ಗ್ಯಾರಂಟಿ ಫಲಾನುಭವಿಗಳ ಸಮಾವೇಶ : ಭರತ್ ಮುಂಡೋಡಿ

ಮಂಗಳೂರು,ಡಿ.10: ಬಿಪಿಎಲ್ ಪಡಿತರ ಚೀಟಿಯನ್ನು ಎಪಿಎಲ್ ಆಗಿ ಬದಲಾಯಿಸುವ ಪ್ರಕ್ರಿಯೆಯನ್ನು ಸಮಗ್ರವಾಗಿ ಪರಿಶೀಲನೆ ಮಾಡಲು ಸರಕಾರದ ಆದೇಶವಿದೆ. ಇದನ್ನು ಆಹಾರ ಇಲಾಖೆಯ ಅಧಿಕಾರಿಗಳು ಸರಿಯಾಗಿ ಪರಿಶೀಲಿಸಬೇಕು ಎಂದು ದ.ಕ.ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಭರತ್ ಮುಂಡೋಡಿ ಹೇಳಿದ್ದಾರೆ. ದ.ಕ.ಜಿಪಂ ಕಚೇರಿಯಲ್ಲಿ ಬುಧವಾರ ನಡೆದ ದ.ಕ. ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಡಿ.23ರಂದು ದ.ಕ.ಜಿಲ್ಲಾ ಮಟ್ಟದ ಗ್ಯಾರಂಟಿ ಫಲಾನುಭವಿಗಳ ಸಮಾವೇಶ ಆಯೋಜಿಸಲಾಗುವುದು ಎಂದು ಹೇಳಿದರು. ಶಕ್ತಿ ಯೋಜನೆಯಡಿ ಮಂಗಳೂರಿನಿಂದ ಉಡುಪಿ ಹಾಗೂ ಕುಂದಾಪುರ ಕಡೆಗೆ ಕಾರ್ಯಾಚರಣೆಯಲ್ಲಿರುವ ನಿಗಮದ ಸಾರಿಗೆಗಳಿಗೆ ಮುಲ್ಕಿಯಲ್ಲಿ ನಿಲುಗಡೆ ನೀಡಿ ಪ್ರಯಾಣಿಕರನ್ನು ಹತ್ತಿಸಿ ಅಥವಾ ಇಳಿಸಲು ಕ್ರಮ ಕೈಗೊಳ್ಳುವಂತೆ ಕೆಎಸ್ಸಾರ್ಟಿಸಿ ಅಧಿಕಾರಿಗಳಿಗೆ ಭರತ್ ಮುಂಡೋಡಿ ನಿರ್ದೇಶನ ನೀಡಿದರು. ಜಿಲ್ಲೆಯಲ್ಲಿ ಕೆಲವು ಕಡೆಗಳಲ್ಲಿ ಸಿಸಿ ಬಸ್ಸುಗಳು ಕಾರ್ಯಾಚರಿಸುತ್ತಿರುವ ಬಗ್ಗೆ ಮಂಗಳೂರು ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಯ ಅನುಷ್ಠಾನ ಸಮಿತಿಯ ಅಧ್ಯಕ್ಷರು ವಿಷಯ ಪ್ರಸ್ತಾಪಿಸಿದರು. ಈ ಬಗ್ಗೆ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಕ್ರಮವಹಿಸಲು ಭರತ್ ಮುಂಡೋಡಿ ಸೂಚಿಸಿದರು. ಸುಳ್ಯ-ತೊಡಿಕಾನ ಮಾರ್ಗದ ಸಾರಿಗೆ ಕಾರ್ಯಾಚರಣೆಗೆ ಪರವಾನಗಿ ಕೋರಿ ಅರ್ಜಿ ಸಲ್ಲಿಸಲಾಗಿದೆ. ಪರವಾನಗಿ ಮಂಜೂರಾದ ಬಳಿಕ ನಿಗಮದ ಸಾರಿಗೆ ಸೌಲಭ್ಯ ಕಲ್ಪಿಸಲಾಗುತ್ತದೆ ಎಂದು ಕೆಎಸ್ಸಾರ್ಟಿಸಿ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು. ಯುವ ನಿಧಿ ಪ್ಲಸ್ ಯೋಜನೆಯಡಿ ಕೌಶಲಾಭಿವೃದ್ಧಿ ತರಬೇತಿ ಪಡೆಯಲು ಅಭ್ಯರ್ಥಿಗಳ ಮನವೊಲಿಸುವ ಜೊತೆಗೆ ಫಲಾನುಭವಿಗಳಿಗೆ ಸಲಹೆಗಳನ್ನು ನೀಡಬೇಕು ಎಂದು ತಿಳಿಸಿದರು. ಆಹಾರ ಕಿಟ್ ವಿತರಣೆಗಾಗಿ ಸರಕಾರವು ಅನುಮೋದನೆ ನೀಡಿದೆ. ಟೆಂಡರ್ ಪ್ರಕ್ರಿಯೆ ಆದ ತಕ್ಷಣ ವಿತರಣೆ ಮಾಡುವುದಾಗಿ ಮಾಹಿತಿ ಲಭ್ಯವಿರುವುದಾಗಿ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಉಪ ನಿರ್ದೇಶಕರು ತಿಳಿಸಿದರು. ಜಿಲ್ಲೆಯ ಯುವನಿಧಿ ಯೋಜನೆಯ ಫಲಾನುಭವಿಗಳಿಗೆ ಯುವನಿಧಿ ಪ್ಲಸ್ ಯೋಜನೆಯಡಿ ತರಬೇತಿ ಕಾರ್ಯಾಗಾರ ಏರ್ಪಡಿಸಲಾಗಿದೆ. ಕಾರ್ಯಾಗಾರಕ್ಕೆ ಹಾಜರಾದ ಯುವನಿಧಿ ಫಲಾನುಭವಿಗಳಿಗೆ ಜಾಬ್ ರೋಲ್ ಗಳ ಬಗ್ಗೆ ಮಾಹಿತಿ ಒದಗಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು. ಗೃಹಲಕ್ಷ್ಮಿ ಯೋಜನೆಯಡಿ ನ.20ರಿಂದ ಡಿ.8ರವರೆಗೆ 467 ಫಲಾನುಭವಿಗಳ ಸಹಿತ ಈವರೆಗೆ 3,80,116 ಫಲಾನುಭವಿಗಳು ಈ ಯೋಜನೆಗೆ ಹೆಸರು ನೋಂದಾಯಿಸಿಕೊಂಡಿದ್ದಾರೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಉಪನಿರ್ದೇಶಕರು ಮಾಹಿತಿ ನೀಡಿದರು. ಸಭೆಯಲ್ಲಿ ದ.ಕ. ಜಿಪಂ ಸಿಇಒ ನರ್ವಾಡೆ ನಾಯಕ್ ಕಾರ್ಬಾರಿ, ಜಿಪಂ ಉಪಕಾರ್ಯದರ್ಶಿ ಜಯಲಕ್ಷ್ಮಿ, ಜಿಪಂ ಯೋಜನಾ ಅಂದಾಜು ಮತ್ತು ಮೌಲ್ಯಮಾಪನ ಅಧಿಕಾರಿ ಸುಷ್ಮಾ ಕೆ.ಎಸ್, ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಉಪಾಧ್ಯಕ್ಷರಾದ ಜೋಕಿಂ ಡಿಸೋಜ, ಸುರೇಖಾ ಚಂದ್ರಹಾಸ್, ನಾರಾಯಣ ನಾಯಕ್, ಸದಸ್ಯರಾದ ಅರುಣ್ ಕುಮಾರ್ ಶೆಟ್ಟಿ, ಆಲ್ವಿನ್ ಕ್ಲೆಮೆಂಟ್ ಕುಟಿನ್ಹ, ಜಯಂತಿ ಬಿಎ, ಶಾಹುಲ್ ಹಮೀದ್, ಉಮಾನಾಥ್ ಶೆಟ್ಟಿ, ಸುರೇಂದ್ರ ಕಂಬಳಿ, ಎಸ್. ರಫೀಕ್, ಸುಧೀರ್ ಕುಮಾರ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

ವಾರ್ತಾ ಭಾರತಿ 10 Dec 2025 6:46 pm

Yash: \ನೀವ್ಯಾಕೆ ಪ್ರತಿಯೊಂದಕ್ಕೂ ಗಂಡನನ್ನು ಕರೀತೀರಿ\.. ರಾಧಿಕಾ ಪಂಡಿತ್ ಇನ್‌ಸ್ಟಾಗ್ರಾಮ್ ಪೋಸ್ಟ್‌ ವೈರಲ್!

ಸ್ಯಾಂಡಲ್‌ವುಡ್‌ನ ಟಾಪ್ ಬೆಸ್ಟ್‌ ಜೋಡಿಗಳಲ್ಲಿ ರಾಕಿಂಗ್‌ ಸ್ಟಾರ್ ಯಶ್ ಮತ್ತು ರಾಧಿಕಾ ಪಂಡಿತ್ ಜೋಡಿ ಸಹ ಒಂದು. ತೆರೆಯ ಮೇಲೆ ಒಂದಾಗಿ ಕಾಣಿಸಿಕೊಂಡು ಸಿನಿ ಪ್ರಿಯರನ್ನು ರಂಜಿಸಿದ್ದ ಜೋಡಿ ಇದೀಗ ದಾಂಪತ್ಯ ಜೀವನಕ್ಕೆ ಕಾಲಿರಿಸಿ 8 ವರ್ಷಗಳು ಪೂರ್ಣಗೊಂಡಿವೆ. ನಟ ಯಶ್ ಅವರು ಭಾರತೀಯ ಸಿನಿಮಾರಂಗದಲ್ಲಿ ಹೊಸ ಅಲೆ ಸೃಷ್ಟಿ ಮಾಡಿದ್ದಾರೆ. ಕೆಜಿಎಫ್ ದೇಶದಾದ್ಯಂತ ಭಾರೀ ಸದ್ದು

ಒನ್ ಇ೦ಡಿಯ 10 Dec 2025 6:33 pm

‘ಮಂಗಳೂರು ಐಟಿ ಪಾರ್ಕ್’ ನಿಯಮ ಸರಳೀಕರಿಸಲು ಕ್ರಮ: ಸಚಿವ ಪ್ರಿಯಾಂಕ್ ಖರ್ಗೆ

ಬೆಳಗಾವಿ(ಸುವರ್ಣ ವಿಧಾನಸೌಧ): ಉಡುಪಿ, ಮಂಗಳೂರು ಮತ್ತು ಮಣಿಪಾಲದಲ್ಲಿ ಬಂಡವಾಳ ಹೂಡಿಕೆ ಮತ್ತು ಉದ್ಯೋಗ ಸೃಷ್ಟಿಸಲು ವಿಫುಲ ಅವಕಾಶಗಳಿವೆ. ಆ ಹಿನ್ನೆಲೆಯಲ್ಲಿ ಸಾರ್ವಜನಿಕ ಖಾಸಗಿ ಸಹಭಾಗಿತ್ವ(ಪಿಪಿಪಿ)ದಲ್ಲಿ ವಾಣಿಜ್ಯ ಕಚೇರಿ ಟೆಕ್ ಪಾರ್ಕ್(ಐಟಿ ಪಾರ್ಕ್) ಸ್ಥಾಪಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಇಲಾಖೆ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ. ಬುಧವಾರ ವಿಧಾನಸಭೆ ಪ್ರಶ್ನೋತ್ತರ ಅವಧಿಯಲ್ಲಿ ಬಿಜೆಪಿ ಸದಸ್ಯ ಡಾ. ವೈ ಭರತ್ ಶೆಟ್ಟಿ ಕೇಳಿದ ಪ್ರಶ್ನೆಗೆ ಉತ್ತರ ನೀಡಿದ ಅವರು, ಮಂಗಳೂರು ನಗರದ ಕಸಬಾ ಹೋಬಳಿ ದೇರೇಬೈಲು (ಬ್ಲೂಬೆರಿ ಹಿಲ್ಸ್ ರಸ್ತೆ) ಗ್ರಾಮದಲ್ಲಿ ಐಟಿ ಪಾರ್ಕ್ ಸ್ಥಾಪಿಸಲು ಟೆಂಡರ್ ಆಹ್ವಾನಿಸಲಾಗಿದೆ. ಕಟ್ಟಡ ವಿನ್ಯಾಸ ನಿರ್ಮಾಣ, ಹಣಕಾಸು ಕಾರ್ಯಾಚರಣೆ ಮತ್ತು ವರ್ಗಾವಣೆಗಾಗಿ 30 ವರ್ಷಗಳನ್ನು ನಿಗದಿಪಡಿಸಲಾಗಿದೆ. ಡಿಸೆಂಬರ್ 15ಕ್ಕೆ ಟೆಂಡರ್ ಬಿಡ್ ನಡೆಯಲಿದೆ ಎಂದರು. ಉದ್ದೇಶಿತ ಐಟಿ ಪಾರ್ಕ್ ಸ್ಥಾಪಿಸುವ ಮೊದಲೇ ಆ ಭಾಗದಲ್ಲಿ ಐಟಿ ಕಂಪೆನಿಗಳು, ಶಿಕ್ಷಣ ಸಂಸ್ಥೆಗಳು, ಉದ್ಯಮಿಗಳು, ಶಾಸಕರು ಸೇರಿದಂತೆ ಎಲ್ಲರೊಂದಿಗೆ ಸಮಾಲೋಚನೆ ನಡೆಸಿದ್ದು, ಉಡುಪಿ, ಮಂಗಳೂರು ಮತ್ತು ಮಣಿಪಾಲ ಮೂರು ನಗರಗಳನ್ನು ಸೇರಿಸಿ ಒಂದು ಕ್ಲಷ್ಟರ್ ಮಾಡಲಾಗಿದೆ. ಉದ್ಯೋಗ ಸೃಷ್ಟಿಸುವುದರಿಂದ ಸರಕಾರಕ್ಕೆ ಲಾಭವಾಗಲಿದೆ ಎಂದು ಪ್ರಿಯಾಂಕ್ ಖರ್ಗೆ ವಿವರ ನೀಡಿದರು. ಆರಂಭಕ್ಕೆ ವಿಷಯ ಪ್ರಸ್ತಾಪಿಸಿದ ಬಿಜೆಪಿ ಸದಸ್ಯ ಭರತ್ ಶೆಟ್ಟಿ, ಮಂಗಳೂರಿನ ಐಟಿ ಪಾರ್ಕ್ ಯೋಜನೆ ಮತ್ತು ಪ್ರಾದೇಶಿಕ ಆರ್ಥಿಕ ಅಭಿವೃದ್ಧಿಗೆ ಅನುಕೂಲಕರ. ಆದರೆ, ಭೂಮಿ ಮೌಲ್ಯದ ಶೇ.50ರಷ್ಟು ಠೇವಣಿ ಕೇಳುವುದರಿಂದ ನಿರ್ಮಾಣ ಮಾಡುವವರಿಗೆ ಬ್ಯಾಂಕ್ ಸಾಲ ಸಿಗುವುದಿಲ್ಲ. ಸರಕಾರಿ ಆಸ್ತಿಗಳಲ್ಲಿ ಇಂತಹ ನಿಯಮಗಳು ಕಾರ್ಯಸಾಧ್ಯವಲ್ಲ, ಆದುದರಿಂದ ಈ ನೀತಿಯನ್ನು ಮರುಪರಿಶೀಲಿಸಬೇಕು ಎಂದು ಮನವಿ ಮಾಡಿದರು. ಡಿ.15ಕ್ಕೆ ಟೆಂಡರ್ ಪ್ರಕ್ರಿಯೆ ನಡೆಯಲಿದ್ದು, ಅದು ಪೂರ್ಣಗೊಳ್ಳಲಿ. ಆ ಬಳಿಕ ಅಗತ್ಯವಿದ್ದರೆ ಮರು ಪರಿಶೀಲನೆ ನಡೆಸಲಾಗುವುದು ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದರು.

ವಾರ್ತಾ ಭಾರತಿ 10 Dec 2025 6:32 pm

ಡಿ.11ರಂದು ಸುರತ್ಕಲ್ ಹೋಬಳಿ ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನ

ಮಂಗಳೂರು, ಡಿ.10: ಸುರತ್ಕಲ್ ಹೋಬಳಿ ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನ ಡಿ.11ರಂದು ಬ್ರಹ್ಮಶ್ರೀ ನಾರಾಯಣ ಗುರು ಶಿಕ್ಷಣ ಸಂಸ್ಥೆಯ ವಠಾರದಲ್ಲಿ ನಡೆಯಲಿದೆ. ಆಡಳಿತ ಅಧಿಕಾರಿ ಗಣೇಪುರ ಶ್ರೀ ಮಹಾಗಣಪತಿ ದೇವಸ್ಥಾನ ಆಡಳಿತ ಅಧಿಕಾರಿ ನವೀನ್ ಕುಮಾರ್ ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ. ಹಿರಿಯ ಸಾಹಿತಿ ಗೀತಾ ಸುರತ್ಕಲ್ ಅಧ್ಯಕ್ಷತೆಯಲ್ಲಿ ಸಮ್ಮೇಳನ ನಡೆಯಲಿದೆ. ಸಮ್ಮೇಳನ ಉದ್ಘಾಟನೆಯನ್ನು ಕಸಾಪ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು ನೆರವೇರಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.

ವಾರ್ತಾ ಭಾರತಿ 10 Dec 2025 6:27 pm

Hardik Pandya ಕಮ್‌ಬ್ಯಾಕ್: ಸ್ಫೋಟಕ 59*, ಭಾರತದ ಭರ್ಜರಿ ಗೆಲುವಿನ ಹೀರೋ

ಗಾಯದಿಂದ ಮರಳಿ ಬಂದ ಹಾರ್ದಿಕ್ ಪಾಂಡ್ಯ, ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಮೊದಲ T20 ಪಂದ್ಯದಲ್ಲಿ ಸ್ಫೋಟಕ ಬ್ಯಾಟಿಂಗ್ ಮಾಡಿ ಭಾರತವನ್ನು ದೊಡ್ಡ ಗೆಲುವಿನತ್ತ ಕೊಂಡೊಯ್ದರು. ಕುಟ್ಟಕ್‌ನ ಬರಬಟಿ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಹಾರ್ದಿಕ್ 28 ಎಸೆತಗಳಲ್ಲಿ ಅಜೇಯ 59 ರನ್‌ಗಳನ್ನು ಬಾರಿಸಿದರು. ಭಾರತ ಆರಂಭದಲ್ಲಿ ಕೆಲವು ವಿಕೆಟ್‌ಗಳನ್ನು ಕಳೆದುಕೊಂಡ ಸಣ್ನದರ್ಭದಲ್ಲಿ ಪಾಂಡ್ಯ ಕ್ರೀಸ್‌ಗೆ ಬಂದರು. ನಂತರ ದಿಟ್ಟ ದಾಳಿಗೆ ಕೈ ಹಾಕಿ, 6 ಬೌಂಡರಿ ಮತ್ತು 4 ಸಿಕ್ಸರ್‌ಗಳೊಂದಿಗೆ 59 ರನ್ ಗಳಿಸಿ ಪಂದ್ಯವನ್ನು ... Read more The post Hardik Pandya ಕಮ್‌ಬ್ಯಾಕ್: ಸ್ಫೋಟಕ 59*, ಭಾರತದ ಭರ್ಜರಿ ಗೆಲುವಿನ ಹೀರೋ appeared first on Karnataka Times .

ಕರ್ನಾಟಕ ಟೈಮ್ಸ್ 10 Dec 2025 6:26 pm

ಯಾದಗಿರಿ| ಹಳೆ ಬಸ್‌ಗಳ ಗುಜರಿ ಟೆಂಡರ್ ಪಡೆದವರಿಂದ ಅಪಾಯಕಾರಿ ನಿರ್ವಹಣೆ, ವಿಷಾನಿಲ ಭೀತಿ: ಕ್ರಮ ಕೈಗೊಳ್ಳುವಂತೆ ಕರವೇ ಆಗ್ರಹ

ಯಾದಗಿರಿ: ಕಲ್ಯಾಣ ಕರ್ನಾಟಕ ಸಾರಿಗೆ ಇಲಾಖೆ ಹಳೆ ಬಸ್‌ಗಳನ್ನು ಟೆಂಡರ್‌ನಲ್ಲಿ ಪಡೆದ ಏಜೆನ್ಸಿಯವರು ನಿಯಮಾವಳಿಗಳನ್ನು ಉಲ್ಲಂಘಿಸಿ ಅಪಾಯಕಾರಿ ರೀತಿಯಲ್ಲಿ ಗುಜರಿ ನಿರ್ವಹಣೆ ಮಾಡುತ್ತಾ ಪರಿಸರಕ್ಕೆ ಹಾನಿ ಮಾಡುತ್ತಿರುವುದಲ್ಲದೆ ಅಪಾಯಕ್ಕೆ ದಾರಿ ಮಾಡಿಕೊಡುತ್ತಿದ್ದು, ಎಫ್ ಐಆರ್ ದಾಖಲಾಗಿದ್ದರೂ ಕ್ರಮ ಕೈಗೊಳ್ಳದೆ ಇರುವುದು ಖಂಡನೀಯವಾಗಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಟಿ.ಎನ್. ಭೀಮುನಾಯಕ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಕುರಿತು ಹೇಳಿಕೆ ನೀಡಿರುವ ಟಿ.ಎನ್. ಭೀಮುನಾಯಕ್‌, ಗುಜರಿಗೆ ಬಿದ್ದ ನೂರಾರು ಹಳೆಯ ಬಸ್‌ಗಳು ಟೆಂಡ‌ರ್ ಮೂಲಕ ಪಡೆದುಕೊಂಡ ಏಜೆನ್ಸಿಗಳಾದ ಉತ್ತರ ಪ್ರದೇಶದ ಸೆವನ್ ಸ್ಟಾರ್, ಹೈದರಾಬಾದ್‌ ಆಟೋ ಟೆಕ್ಸ್ ಸ್ಥಾಪರ್ಸ ಏಜೆನ್ಸಿ ಹಾಗೂ ಮಧ್ಯಪ್ರದೇಶದ ನಿಯಮಾವಳಿಗಳು ಷರತ್ತುಗಳು ಉಲ್ಲಂಘಿಸಿ ತಾಲೂಕಿನ ಮುಂಡರಗಿ ಗ್ರಾಮ ಸೀಮಾಂತರ ಗಂಜ್ ಪ್ರದೇಶದ ಸಮೀಪದ ಕೈಗಾರಿಕೆ ಪ್ರದೇಶದ ಪಕ್ಕದ ಖಾಸಗಿ ಜಮೀನಿನಲ್ಲಿ ಆಕ್ರಮವಾಗಿ ಗುಜರಿ ನಿರ್ವಹಣೆ ಮಾಡುತ್ತಿರುವುದರಿಂದ ಸುತ್ತಮುತ್ತಲ ಪರಿಸರಕ್ಕೆ ಧಕ್ಕೆಯಾಗುತ್ತಿದೆ. ಇದಲ್ಲದೇ ಈ ಪ್ರದೇಶದ ಸುತ್ತಮುತ್ತ ಶಿಕ್ಷಣ ಸಂಸ್ಥೆಗಳಿದ್ದು ನೂರಾರು ವಿದ್ಯಾರ್ಥಿಗಳು ಓಡಾಡುವ ಅತ್ಯಂತ ಸೂಕ್ಷ್ಮ ಪ್ರದೇಶ ಇದಾಗಿದೆ. ಅಪಾಯಕಾರಿ ಡಿಸ್ಟೆಂಟ್ಲಿಂಗ್ ಬಗ್ಗೆ ಈಗಾಗಲೇ ಪರಿಸರ ಮಂಡಳಿಯ ಸಹಾಯಕ ಪರಿಸರ ಅಧಿಕಾರಿ ಹಣಮಂತಪ್ಪ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರೂ ಜಿಲ್ಲಾಧಿಕಾರಿಗಳು, ಸಂಬಂಧಿಸಿದ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು  ಆರೋಪಿಸಿದ್ದಾರೆ.  ಈ ಬಗ್ಗೆ ಮೇಲಾಧಿಕಾರಿಗಳು ತಕ್ಷಣ ಕಾರ್ಯಪ್ರವೃತ್ತರಾಗಿ ಕ್ರಮ ಕೈಗೊಳ್ಳದೇ ಇರುವುದರಿಂದ ಅಪಾಯದ ಹೆಚ್ಚಳದ ಭೀತಿಯಲ್ಲಿ ಮುಂಡರಗಿ ಭಾಗದ ಹಾಗೂ ನಗರದ ಗಂಜ್ ಪ್ರದೇಶದ ನಿವಾಸಿಗಳು ಬದುಕುವಂತಾಗಿದೆ. ಬಸ್ ಬಿಡಿಭಾಗಗಳನ್ನು ಹಂತ ಹಂತವಾಗಿ ಸಿಲಿಂಡರ್‌ ಬಳಸಿ  ತೆಗೆಯುತ್ತಿದ್ದು ಮತ್ತು ಸದರಿ ವಾಹನಗಳಲ್ಲಿನ ಅಳಿದುಳಿದ ಆಯಿಲ್‌ ಮತ್ತು ಇನ್ನಿತರ ಪೇಟ್ರೋಕೆಮಿಕಲುಗಳು ಅಸುರಕ್ಷಿತವಾಗಿ ಮಣ್ಣಲ್ಲಿ ಸೇರಿಕೊಳ್ಳುವ ಭೀತಿಯಿದೆ ಎಂದು ಹೇಳಿದ್ದಾರೆ.  ಈ ಕುರಿತು ಎರಡು ದಿನಗಳಲ್ಲಿ ಕ್ರಮ ಕೈಗೊಳ್ಳದೆ ಇದ್ದಲ್ಲಿ ಕರವೇ ಕಾರ್ಯಕರ್ತರು ಯಾದಗಿರಿ-ಹೈದರಾಬಾದ್‌ ಹೆದ್ದಾರಿ ತಡೆದು ಪ್ರತಿಭಟನೆ ಮಾಡುವುದಾಗಿ ಮಲ್ಲು ಮಾಳಿಕೇರಿ, ಸಿದ್ದು ನಾಯಕ ಹತ್ತಿಕುಣಿ, ಅಂಬ್ರೇಷ್ ಹತ್ತಿಮನಿ, ಸಂತೋಷ್‌ ನಿರ್ಮಲಕರ್, ವಿಶ್ವರಾಜ ಪಾಟೀಲ್, ಕಾಶಿನಾಥ ನಾಯಕ್‌, ಬಸ್ಸು ಜಗನ್ನಾಥ್‌ ಎಚ್ಚರಿಕೆ ನೀಡಿದ್ದಾರೆ.    

ವಾರ್ತಾ ಭಾರತಿ 10 Dec 2025 6:25 pm

ಮಲ್ಪೆ | ತೊಟ್ಟಂ ಸಂತ ಅನ್ನಮ್ಮ ದೇವಾಲಯದ ವಾರ್ಷಿಕ ಮಹೋತ್ಸವ

ಮಲ್ಪೆ, ಡಿ.10: ಪರಸ್ಪರ ಒಗ್ಗಟ್ಟಿನಿಂದ ಕೂಡಿಕೊಂಡು ಧರ್ಮಸಭೆಯ ಅಭಿವೃದ್ಧಿಗೆ ಶ್ರಮಿಸಿದಾಗ ಭರವಸೆಯ ಬಲಿಷ್ಠ ಸೌಹಾರ್ದ ಸಮುದಾಯ ರಚನೆ ಸಾಧ್ಯವಿದೆ ಎಂದು ಮಂಗಳೂರು ಧರ್ಮಪ್ರಾಂತ್ಯದ ಸಾರ್ವಜನಿಕ ಸಂಪರ್ಕಾಧಿಕಾರಿ ಹಾಗೂ ಬಿಜೈ ಚರ್ಚಿನ ಪ್ರಧಾನ ಧರ್ಮಗುರು ವಂ.ಜೆ.ಬಿ.ಸಲ್ಡಾನಾ ಹೇಳಿದ್ದಾರೆ. ತೊಟ್ಟಂ ಸಂತ ಅನ್ನಮ್ಮ ದೇವಾಲಯದ ವಾರ್ಷಿಕ ಮಹೋತ್ಸವದ ಪ್ರಧಾನ ಬಲಿಪೂಜೆಯನ್ನು ಬುಧವಾರ ನೆರವೇರಿಸಿ ಅವರು ಸಂದೇಶ ನೀಡಿದರು. ದೇವರು ತಮ್ಮ ಇಚ್ಚೆಯನ್ನು ಪೊರೈಸಲು ಶ್ರೀಮಂತರನ್ನು, ಬಲಿಷ್ಠರನ್ನು ಆಯ್ಕೆ ಮಾಡದೆ ಹುಲು ಮಾನವರನ್ನು ಆರಿಸಿಕೊಳ್ಳುತ್ತಾರೆ. ಭರವಸೆಯ ಸಮುದಾಯದ ನಿರ್ಮಾಣದಲ್ಲಿ ದೇವರು ಮತ್ತು ಮಾನವನ ನಡುವಿನ ಸಂಬಂಧ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಪ್ರತಿಯೊಬ್ಬರು ಒಂದಾಗಿ ದೈವಿ ಯೋಜನೆಗಳನ್ನು ಅನುಷ್ಠಾನಗೊಳಿಸುವ ಕಾರ್ಯದಲ್ಲಿ ಕೈ ಜೋಡಿಸಿದಾಗ ಶಾಂತಿ, ಮತ್ತು ಪ್ರೀತಿಯುತ ಸಮಾಜ ನಿರ್ಮಾಣವಾಗುತ್ತದೆ ಎಂದರು. ಮಹೋತ್ಸವಕ್ಕೆ ಸಹಕರಿಸಿದ ದಾನಿಗಳಿಗೆ ಮೇಣದ ಬತ್ತಿ ಗೌರವವನ್ನು ಪ್ರಧಾನ ಧರ್ಮಗುರುಗಳು ಸಲ್ಲಿಸಿ ಶುಭ ಹಾರೈಸಿದರು. ಪವಿತ್ರ ಬಲಿ ಪೂಜೆಯಲ್ಲಿ ಉಡುಪಿ ಧರ್ಮಪ್ರಾಂತ್ಯದ ಶ್ರೇಷ್ಠ ಗುರು ವಂ.ಮೊನ್ಸಿಂಜ್ಞೊರ್ ಫರ್ಡಿನಾಂಡ್ ಗೊನ್ಸಾಲ್ವಿಸ್, ಚರ್ಚಿನ ಪ್ರಧಾನ ಧರ್ಮಗುರು ವಂ.ಡೆನಿಸ್ ಡೆಸಾ, ಕಲ್ಯಾಣಪುರ ವಲಯ ಹಾಗೂ ಧರ್ಮಪ್ರಾಂತ್ಯ ವ್ಯಾಪ್ತಿಯ ವಿವಿಧ ಚರ್ಚುಗಳ ಧರ್ಮಗುರುಗಳು, ಧರ್ಮಭಗಿನಿಯರು ಭಕ್ತಾದಿಗಳು ಭಾಗಿಯಾಗಿದ್ದರು. ಚರ್ಚ್ ಪಾಲನಾ ಮಂಡಳಿಯ ಉಪಾಧ್ಯಕ್ಷರಾದ ಲೆಸ್ಲಿ ಆರೋಝಾ, ಕಾರ್ಯದರ್ಶಿ ಬ್ಲೆಸಿಲ್ಲಾ ಕ್ರಾಸ್ತಾ, ಸ್ಥಳೀಯಾ ಕಾನ್ವೆಂಟಿನ ಸಿರ್ಸ್ಟ ಸುಶ್ಮಾ, 20 ಆಯೋಗಗಳ ಸಂಚಾಲಕಿ ವನಿತಾ ಫೆರ್ನಾಂಡಿಸ್ ಉಪಸ್ಥಿತರಿದ್ದರು. ಮಂಗಳವಾರ ಸಂಜೆ ನಡೆದ ದೈವ ವಾಕ್ಯದ ಆರಾಧನೆಯನ್ನು ಮಂಗಳೂರು ಧರ್ಮಪ್ರಾಂತ್ಯದ ಬೈಬಲ್ ಆಯೋಗದ ನಿರ್ದೇಶಕ ವಂ.ವಿನ್ಸೆಂಟ್ ಸಿಕ್ವೇರಾ ಅವರು ನೆರವೇರಿಸಿದರು. ದೈವವ್ಯಾಕ್ಯದ ಆರಾಧನೆಯ ಪ್ರಯುಕ್ತ ಮೆರವಣಿಗೆ ತೊಟ್ಟಂ ಗಣೇಶೋತ್ಸವ ಸಮಿತಿ ವೇದಿಕೆಯಿಂದ ಚರ್ಚಿನ ವರೆಗೆ ನಡೆದಿದ್ದು, ತೊಟ್ಟಂ ಸಮನ್ವಯ ಸರ್ವಧರ್ಮ ಸೌಹಾರ್ದ ಸಮಿತಿ ವಿಶೇಷವಾಗಿ ಸಹಕರಿಸಿತು.

ವಾರ್ತಾ ಭಾರತಿ 10 Dec 2025 6:23 pm

ಬಡಗುಪೇಟೆ | ಹೊಂಡಗುಂಡಿಗಳಿರುವ ರಸ್ತೆಯ ದುರಸ್ತಿಗೆ ಆಗ್ರಹ

ಉಡುಪಿ, ಡಿ.10: ಬಡಗುಪೇಟೆ ವಾರ್ಡಿನ ವಾಸುಕಿ ಅನಂತ ಪದ್ಮನಾಭ ದೇವಸ್ಥಾನ ರಸ್ತೆಯು ಶ್ರೀಕೃಷ್ಣ ಮಠ, ಮುಕುಂದಕೃಪ ಶಾಲೆಯನ್ನು ಸಂಪರ್ಕಿಸುವ ಪ್ರಮುಖ ರಸ್ತೆಯಾಗಿದ್ದು, ಈ ರಸ್ತೆ ಹೊಂಡ ಗುಂಡಿಗಳಿಂದಾಗಿ ಸಂಚಾರ ಕಷ್ಟಕರವಾಗಿ ಸಾರ್ವಜನಿಕರು ಪ್ರಯಾಸಪಡುವ ಪರಿಸ್ಥಿತಿ ಎದುರಾಗಿದೆ. ಈ ರಸ್ತೆಯ ನಡುವಿನ ತಳದಲ್ಲಿದ್ದ ಡ್ರೈನೇಜ್ ಕೊಳವೆಗಳನ್ನು ಬದಲಿಸುವ ಕಾಮಗಾರಿ ನಡೆದಿತ್ತು. ಗುಂಡಿ ಅಗೆದಿರುವ ಸ್ಥಳದಲ್ಲಿ ಜಲ್ಲಿಕಲ್ಲು, ಜಲ್ಲಿಹುಡಿ ಹಾಕಿ ಮುಚ್ಚಿಡಲಾಗಿತ್ತು. ಇದೀಗ ಗುಂಡಿ ತೋಡಿರುವ ಸ್ಥಳವು ಕುಸಿತ ಗೊಂಡಿದ್ದು, ರಸ್ತೆಯ ಉದ್ದಕ್ಕೂ ಗುಂಡಿಗಳು ಬಿದ್ದಿವೆ. ಕಿರುದಾಗಿರುವ ಈ ರಸ್ತೆಯಲ್ಲಿ ವಾಹನಗಳು ಸಂಚರಿಸಲು ಪ್ರಯಾಸ ಪಡಬೇಕಾಗಿದೆ. ರಸ್ತೆಯು ಹದಗೆಟ್ಟ ಕಾರಣದಿಂದ ಅಪಘಾತಗಳು ಸಂಭವಿಸುವುದು ಕಂಡುಬರುತ್ತಿವೆ. ಶಾಲಾ ವಿದ್ಯಾರ್ಥಿಗಳು, ಶ್ರೀಕೃಷ್ಣ ಮಠಕ್ಕೆ ಬರುವ ಯಾತ್ರಿಕರು ಧೂಳುಣ್ಣಬೇಕಾದ ಪರಿಸ್ಥಿತಿ ಇಲ್ಲಿ ಉದ್ಭವಿಸಿದೆ. ಧೂಳೇಳುವ ರಸ್ತೆಯಲ್ಲಿ ಸಾರ್ವಜನಿಕರು, ವಿದ್ಯಾರ್ಥಿಗಳು ಶ್ವಾಸಕೋಶ, ಕಣ್ಣಿನ ತೊಂದರೆಗಳಿಗೆ ತುತ್ತಾಗಬೇಕಾದ ಅಪಾಯಕರ ಸ್ಥಿತಿಯು ಎದುರಾಗಿದೆ. ಜಿಲ್ಲಾಡಳಿತ, ನಗರಾಡಳಿತ ತಕ್ಷಣವಾಗಿ ದುಸ್ಥಿತಿಯಲ್ಲಿರುವ ವಾಸುಕಿ ಅನಂತ ಪದ್ಮನಾಭ ರಸ್ತೆಯನ್ನು ಡಾಮರೀಕರಣ ಮಾಡಿಸುವಂತೆ ಉಡುಪಿ ಜಿಲ್ಲಾ ನಾಗರಿಕ ಸಮಿತಿಯ ಕಾರ್ಯಕರ್ತರಾದ ನಿತ್ಯಾನಂದ ಒಳಕಾಡು ಹಾಗೂ ತಾರಾನಾಥ್ ಮೇಸ್ತ ಶಿರೂರು ಆಗ್ರಹಿಸಿದ್ದಾರೆ.

ವಾರ್ತಾ ಭಾರತಿ 10 Dec 2025 6:19 pm

ಪೋಕ್ಸೊ ಪ್ರಕರಣ: ಮುರುಘಾಶ್ರೀ ಖುಲಾಸೆ ಪ್ರಶ್ನಿಸಿ ಸಂತ್ರಸ್ತೆಯರಿಂದ ಹೈಕೋರ್ಟ್‌ಗೆ ಮೇಲ್ಮನವಿ

ಬೆಂಗಳೂರು: ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಚಿತ್ರದುರ್ಗದ ಮುರುಘರಾಜೇಂದ್ರ ಬೃಹನ್ಮಠದ ಶಿವಮೂರ್ತಿ ಮರುಘಾ ಶರಣರು ಹಾಗೂ ಇತರ ಇಬ್ಬರನ್ನು ಖುಲಾಸೆಗೊಳಿಸಿರುವ ಚಿತ್ರದುರ್ಗ ಸೆಷನ್ಸ್ ನ್ಯಾಯಾಲಯದ ತೀರ್ಪು ಪ್ರಶ್ನಿಸಿ ಸಂತ್ರಸ್ತ ಬಾಲಕಿಯರು ಹೈಕೋರ್ಟ್‌ಗೆ ಕ್ರಿಮಿನಲ್ ಮೇಲ್ಮನವಿ ಸಲ್ಲಿಸಿದ್ದಾರೆ‌. ವಿಚಾರಣಾ ನ್ಯಾಯಾಲಯದ ತೀರ್ಪು ರದ್ದುಪಡಿಸುವಂತೆ ಹಾಗೂ ಖುಲಾಸೆಗೊಂಡಿರುವವರನ್ನು ಅಪರಾಧಿಗಳು ಎಂದು ತೀರ್ಮಾನಿಸಿ ಕಾನೂನು ಪ್ರಕಾರ ಶಿಕ್ಷೆಗೆ ಗುರಿಪಡಿಸುವಂತೆ ಕೋರಿ ಬಾಲಕಿಯರು ಎರಡು ಪ್ರತ್ಯೇಕ ಮೇಲ್ಮನವಿಗಳನ್ನು ಸಲ್ಲಿಸಿದ್ದು, ಚಿತ್ರದುರ್ಗ ಗ್ರಾಮೀಣ ಠಾಣೆ ಪೊಲೀಸರು, ಖುಲಾಸೆಗೊಂಡಿರುವ ಶಿವಮೂರ್ತಿ ಮುರುಘಾ ಶರಣರು, ಎಸ್‌. ರಶ್ಮಿ ಮತ್ತು ಎ.ಜೆ. ಪರಮಶಿವಯ್ಯ ಅವರನ್ನು ಪ್ರತಿವಾದಿಗಳನ್ನಾಗಿಸಲಾಗಿದೆ. ಮೇಲ್ಮನವಿಗಳು ಇನ್ನಷ್ಟೇ ವಿಚಾರಣೆಗೆ ನಿಗದಿಯಾಗಬೇಕಿದೆ. ಪ್ರಕರಣದ ಹಿನ್ನೆಲೆ: ಮುರುಘಾ ಮಠದ ವಸತಿ ನಿಲಯದಲ್ಲಿ ಇದ್ದುಕೊಂಡು ವ್ಯಾಸಾಂಗ ಮಾಡುತ್ತಿದ್ದ ಇಬ್ಬರು ಅಪ್ರಾಪ್ತ ಹೆಣ್ಣು ಮಕ್ಕಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪಕ್ಕೆ ಸಂಬಂಧಿಸಿದಂತೆ ಮುರುಘಾ ಶರಣರು ಮತ್ತಿತರರ ವಿರುದ್ಧ ಪ್ರಕರಣ ದಾಖಲಾಗಿತ್ತು. ಮುರುಘಾ ಶರಣರು ನಮ್ಮನ್ನು ಖಾಸಗಿ ಕೊಠಡಿಗೆ ಹಿಂಬಾಗಿಲಿನಿಂದ ಕರೆಸಿಕೊಂಡು ಚಾಕೊಲೇಟ್‌ಗಳು ಮತ್ತು ಹಣ್ಣು ಇತ್ಯಾದಿಗಳನ್ನು ತಿನ್ನಲು ನೀಡುತ್ತಿದ್ದರು. ಇದರಲ್ಲಿ ಮಾದಕ ಪದಾರ್ಥಗಳನ್ನು ಬೆರಸಲಾಗಿತ್ತು. ಅದನ್ನು ಸೇವಿಸಿ ಪ್ರಜ್ಞೆ ಕಳೆದುಕೊಂಡ ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದರು. ಈ ವಿಚಾರವನ್ನು ಯಾರಿಗೂ ಬಹಿರಂಗಪಡಿಸಬಾರದು. ಬಹಿರಂಗಪಡಿಸಿದರೆ ತಂದೆ-ತಾಯಿಯನ್ನು ಕೊಲೆ ಮಾಡಿಸುವುದಾಗಿ ಬೆದರಿಕೆ ಹಾಕಿದ್ದರು. ಮಾಜಿ ಶಾಸಕ ಎಸ್‌.ಕೆ. ಬಸವರಾಜನ್‌ ಮತ್ತವರ ಪತ್ನಿ ಸೌಜನ್ಯಾ ನೆರವಿನಿಂದ ಮೈಸೂರಿನ ಸರ್ಕಾರೇತರ ಸಂಸ್ಥೆ ಒಡನಾಡಿ ತಲುಪಿ, ಅವರ ನೆರವಿನಿಂದ ಮೈಸೂರಿನ ನಜಾರಾಬಾದ್‌ ಠಾಣೆಯಲ್ಲಿ ದೂರು ನೀಡಿದ್ದಾಗಿ ಬಾಲಕಿಯರು ದೂರಿನಲ್ಲಿ ವಿವರಿಸಿದ್ದರು. ಆನಂತರ ಪ್ರಕರಣ ಚಿತ್ರದುರ್ಗದ ಗ್ರಾಮೀಣ ಪೊಲೀಸ್ ಠಾಣೆಗೆ ವರ್ಗಾವಣೆಯಾಗಿತ್ತು. ಕಳೆದ ನವೆಂಬರ್‌ 26ರಂದು ಐಪಿಸಿ ಸೆಕ್ಷನ್‌ಗಳಾದ 376(2)(ಎನ್‌), 376(3), 323, 504, 506, ಪೋಕ್ಸೊ ಕಾಯ್ದೆಯ ಸೆಕ್ಷನ್‌ಗಳಾದ 5(I), 6 ಮತ್ತು 17ರ ಆರೋಪಗಳಿಂದ ಸ್ವಾಮೀಜಿ ಸೇರಿ ಮೂವರನ್ನು ವಿಚಾರಣಾ ನ್ಯಾಯಾಲಯ ಖುಲಾಸೆಗೊಳಿಸಿತ್ತು.

ವಾರ್ತಾ ಭಾರತಿ 10 Dec 2025 6:19 pm

ಮಂಗಳೂರು | ಕಾರ್ಮಿಕರಿಗೆ ಉಚಿತ ಕಾನೂನು ಸಲಹೆ , ನೆರವು ನೀಡಲು ಚಿಂತನೆ : ಕರೀಷ್ಮಾ

ಮಂಗಳೂರು, ಡಿ.10: ಕಾರ್ಮಿಕರಿಗೆ ಸಂಬಂಧಿಸಿದ ಯಾವುದೇ ಕಾನೂನು ಸಮಸ್ಯೆಗಳಿಗೆ ಉಚಿತ ಕಾನೂನು ಸಲಹೆ ಮತ್ತು ನೆರವು ನೀಡಲು ಪ್ರತ್ಯೇಕ ಘಟಕ ರಚಿಸುವ ಬಗ್ಗೆ ಚಿಂತನೆ ನಡೆಸುವುದಾಗಿ ಇಂಡಿಯನ್ ನ್ಯಾಶನಲ್ ಟ್ರೇಡ್ ಯೂನಿಯನ್ ಕಾಂಗ್ರೆಸ್( ಇಂಟಕ್) ಜಿಲ್ಲಾ ಯುವ ಕಾಂಗ್ರೆಸ್ ಮಹಿಳಾ ಘಟಕದ ನೂತನ ಅಧ್ಯಕ್ಷೆ ಕರೀಷ್ಮಾ ಎಸ್. ಹೇಳಿದ್ದಾರೆ. ನಗರದಲ್ಲಿ ಇತ್ತೀಚೆಗೆ ನಡೆದ ತಮ್ಮ ಪದಗ್ರಹಣ ಸಮಾರಂಭದ ಬಳಿಕ ಮಾತನಾಡಿದ ಅವರು, ತಾನು ವಕೀಲೆಯಾಗಿರುವ ಹಿನ್ನೆಲೆಯಲ್ಲಿ ಕಾರ್ಮಿಕರಿಗೆ ನ್ಯಾಯ ದೊರಕಿಸುವುದು ತನ್ನ ಕರ್ತವ್ಯವಾಗಿದೆ ಎಂದು ಹೇಳಿದರು. ತಮ್ಮ ಕುಟುಂಬ ಕಾಂಗ್ರೆಸ್ ಸಿದ್ಧಾಂತದಲ್ಲಿ ನಂಬಿಕೆ ಇಟ್ಟು ಪಕ್ಷಕ್ಕಾಗಿ ಹಲವು ವರ್ಷಗಳಿಂದ ದುಡಿದಿದೆ. ಆ ಮೌಲ್ಯಗಳೇ ತಮಗೆ ನ್ಯಾಯಕ್ಕಾಗಿ ಹೋರಾಡುವ ಶಕ್ತಿ ನೀಡಿ ಬೆಳೆಸಿವೆ ಎಂದು ಹೇಳಿದರು. ಇಂಟಕ್ ದೇಶದ ಕೋಟ್ಯಂತರ ಕಾರ್ಮಿಕರ ಬೆನ್ನೆಲುಬು ಆಗಿದೆ. ಕಾರ್ಮಿಕರನ್ನು ‘ಓಟ್ ಬ್ಯಾಂಕ್’ ಅಲ್ಲ, ರಾಷ್ಟ್ರ ನಿರ್ಮಾಣದ ಅಡಿಪಾಯ ಎಂದು ಪರಿಗಣಿಸುವ ಏಕೈಕ ಸಂಘಟನೆ ನಮ್ಮದು ಎಂದು ಹೇಳಿದರು. ಮಹಿಳಾ ಕಾರ್ಮಿಕರು ಎದುರಿಸುತ್ತಿರುವ ಪ್ರಮುಖ ಸವಾಲುಗಳಾದ ವೇತನ ತಾರತಮ್ಯ, ಸುರಕ್ಷತಾ ಕೊರತೆ, ಕೆಲಸದ ಸ್ಥಳದಲ್ಲಿ ಕಿರುಕುಳ, ಶಿಶುಪಾಲನಾ ಸೌಲಭ್ಯಗಳ ಅಭಾವ ಮುಂತಾದ ಸಮಸ್ಯೆಗಳ ವಿರುದ್ಧ ಹೋರಾಡುವುದಾಗಿ ತಿಳಿಸಿದರು. ಕರ್ನಾಟಕ ರಾಜ್ಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಡಾ. ಸುರಯ್ಯ ಅಂಜುಮ್, ಇಂಟಕ್ ರಾಜ್ಯ ಅಧ್ಯಕ್ಷ ಡಾ.ಲಕ್ಷ್ಮೀ ವೆಂಕಟೀಶ್, ಕರ್ನಾಟಕ ರಾಜ್ಯ ಯುವ ಕಾಂಗ್ರೆಸ್ ಇಂಟಕ್ ಅಧ್ಯಕ್ಷ ಟಿ.ವೈ ಕುಮಾರ್, ಉಪಾಧ್ಯಕ್ಷ ರಮೇಶ್ , ಕೆಪಿಸಿಸಿ ಕಾರ್ಮಿಕ ವಿಭಾಗದ ರಾಜ್ಯ ಕಾರ್ಯದರ್ಶಿ ವಹಾಬ್ ಕುದ್ರೋಳಿ, ವಕೀಲ ಹಫೀಝ್, ಮತ್ತಿತರರು ಉಪಸ್ಥಿತರಿದ್ದರು.

ವಾರ್ತಾ ಭಾರತಿ 10 Dec 2025 6:12 pm

ಉಡುಪಿ | ನೂರುಲ್ ಫುರ್ಕಾನ್ ವಿಶೇಷ ಮಕ್ಕಳ ಶಾಲೆಗೆ ಉಪಕರಣ ಹಸ್ತಾಂತರ

ಉಡುಪಿ, ಡಿ.10: ಉಡುಪಿಯ ನೇಜಾರಿನ ನೂರುಲ್ ಫುರ್ಕಾನ್ ಟ್ರಸ್ಟ್ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ನೂರುಲ್ ಫುರ್ಕಾನ್ ವಿಶೇಷ ಮಕ್ಕಳ ಶಾಲೆಯಲ್ಲಿ, ವಿಶೇಷ ಅಗತ್ಯಗಳ ಮಕ್ಕಳ ಶಾರೀರಿಕ ಸಾಮರ್ಥ್ಯ ವೃದ್ಧಿಗೆ ಮಹತ್ತರ ಸಹಾಯವಾಗುವ ಫಿಸಿಯೊಥೆರಪಿ ಉಪಕರಣ ದಾನದ ಹಸ್ತಾಂತರ ಸಮಾರಂಭವು ಇಂದು ಶಾಲಾ ಆವರಣದಲ್ಲಿ ನಡೆಯಿತು. ಮುಖ್ಯ ಅತಿಥಿಯಾಗಿ ಆಸ್ಟರ್ ಡಿಎಂ ಹೆಲ್ತ್ ಕೇರ್ ಸಂಸ್ಥೆಯ ವಲಯ ಮುಖ್ಯಸ್ಥ ರೋಹನ್ ಫ್ರಾಂಕೋ, ಶಾಲೆಯ ಮಕ್ಕಳ ಪುನರ್ವಸತಿ ಕಾರ್ಯಕ್ರಮಕ್ಕೆ ಬಳಸಲಾಗುವ ಅತ್ಯಾಧುನಿಕ ಫಿಸಿಯೊಥೆರಪಿ ಉಪಕರಣಗಳನ್ನು ಅಧಿಕೃತವಾಗಿ ಹಸ್ತಾಂತರಿಸಿದರು. ವಿಶೇಷ ಅಗತ್ಯಗಳಿರುವ ಮಕ್ಕಳಿಗೆ ಗುಣಮಟ್ಟದ ಪುನರ್ವಸತಿ ಹಾಗೂ ಆರೈಕೆಯ ಸೌಲಭ್ಯ ನೀಡುವುದು ನಮ್ಮ ಸಾಮಾಜಿಕ ಜವಾಬ್ದಾರಿಯ ಒಂದು ಪ್ರಮುಖ ಅಂಗ. ನೂರುಲ್ ಫುರ್ಕಾನ್ ಸ್ಪೆಷಲ್ ಶಾಲೆಯ ಕೆಲಸ, ಸೇವಾ ಭಾವ ಹಾಗೂ ಸಮರ್ಪಣೆ ಅತ್ಯಂತ ಶ್ಲಾಘನೀಯ ಎಂದು ರೋಹನ್ ಫ್ರಾಂಕೋ ಮೆಚ್ಚುಗೆ ವ್ಯಕ್ತಪಡಿಸಿದರು. ಶಾಲೆಯ ಪ್ರಾಂಶುಪಾಲೆ ದಿಲ್ದಾರ್ ಫಜ್ಲುರ್ ರಹ್ಮಾನ್ ಮಾತನಾಡಿ, ವಿಶೇಷ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಮಾತ್ರವಲ್ಲ, ಶಾರೀರಿಕ ಪುನರ್ವಸತಿ ಸಹ ಸಮಾನವಾಗಿ ಅಗತ್ಯ. ಆಸ್ಟರ್ ಡಿಎಂ ಹೆಲ್ತ್ ಕೇರ್ ಸಂಸ್ಥೆ ನೀಡಿರುವ ಈ ಅಮೂಲ್ಯ ಬೆಂಬಲದ ಮೂಲಕ ನಮ್ಮ ವಿದ್ಯಾರ್ಥಿಗಳ ಶಾರೀರಿಕ ಸಾಮರ್ಥ್ಯ ವೃದ್ಧಿ ಕಾರ್ಯಕ್ರಮ ಮತ್ತಷ್ಟು ಬಲವಾಗಲಿದೆ ಎಂದು ತಿಳಿಸಿದರು. ಟ್ರಸ್ಟ್ ನ ಉಪಾಧ್ಯಕ್ಷ ಇಕ್ಬಾಲ್ ಮನ್ನ, ಟ್ರಸ್ಟಿ ಅಶ್ರಫ್ ಬಂಗ್ರೆ ಮಾತನಾಡಿದರು. ಈ ಸಂದರ್ಭದಲ್ಲಿ ಶಾಲೆಯ ಶಿಕ್ಷಕರು, ವಿದ್ಯಾರ್ಥಿಗಳು, ಪೋಷಕರು ಉಪಸ್ಥಿತರಿದ್ದರು. ಕೌಸರ್ ಬಾನು ಕಾರ್ಯಕ್ರಮ ನಿರೂಪಿಸಿದರು. ರೇಷ್ಮಾ ನಾಸೀರ್ ವಂದಿಸಿದರು.

ವಾರ್ತಾ ಭಾರತಿ 10 Dec 2025 6:08 pm

ಸಂಸತ್ ಕಲಾಪ ನಡೆಯುತ್ತಿರುವಾಗಲೇ ರಾಹುಲ್ ಗಾಂಧಿ ಜರ್ಮನಿ ಪ್ರವಾಸ! ಬಿಜೆಪಿ ಟೀಕೆ

ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರೊಂದಿಗೆ ಪ್ರಮುಖ ಹುದ್ದೆಗಳ ನೇಮಕಾತಿ ಕುರಿತು ಸಭೆ ನಡೆಸಿದರು. ಇದೇ ವೇಳೆ, ಸಂಸತ್ತಿನ ಅಧಿವೇಶನ ನಡೆಯುತ್ತಿರುವಾಗಲೇ ಜರ್ಮನಿ ಪ್ರವಾಸ ಕೈಗೊಂಡಿರುವುದಕ್ಕೆ ಬಿಜೆಪಿ ಟೀಕಿಸಿದೆ. ರಾಹುಲ್ ಗಾಂಧಿ ಅವರು ಬರ್ಲಿನ್‌ನಲ್ಲಿ ಭಾರತೀಯ ವಲಸಿಗರೊಂದಿಗೆ ಸಂವಾದ ನಡೆಸಲಿದ್ದಾರೆ.

ವಿಜಯ ಕರ್ನಾಟಕ 10 Dec 2025 6:02 pm

Starlink –ಭಾರತ ಪ್ರವೇಶಕ್ಕೆ ಸಿದ್ಧ. ವೇಗ, ಲೇಟೆನ್ಸಿ ಬೆಲೆ, ಮತ್ತು ಎಲ್ಲ ತಾಂತ್ರಿಕ ಸೌಲಭ್ಯಗಳ ಸಂಪೂರ್ಣ ಮಾಹಿತಿ

SpaceX ಕಂಪನಿಯ ಸ್ಟಾರ್‌ಲಿಂಕ್ (Starlink) ಸ್ಯಾಟಲೈಟ್ ಇಂಟರ್ನೆಟ್ ಸೇವೆ ಭಾರತಕ್ಕೆ ಬರುವ ಅಂತಿಮ ಹಂತದಲ್ಲಿದೆ. ಡಿಪಾರ್ಟ್ಮೆಂಟ್ ಆ ಟೆಲಿಕಮ್ಯುನಿಕೇಷನ್ಸ್ (DoT) ಈಗಾಗಲೇ ಕಂಪನಿಗೆ ಅಗತ್ಯವಾದ ಪ್ರಮುಖ ಲೈಸೆನ್ಸ್‌ಗಳನ್ನು ನೀಡಿದೆ. ಆದರೆ ವ್ಯಾಪಾರಿಕ ಸೇವೆ ಪ್ರಾರಂಭಿಸಲು ಬೇಕಾದ ಕೆಲವು ಅಂತಿಮ ಅನುಮೋದನೆಗಳು ಮತ್ತು ಸ್ಪೆಕ್ಟ್ರಮ್ ಸಂಬಂಧಿತ ತೀರ್ಮಾನಗಳು ಬಾಕಿ ಇರುವುದರಿಂದ ಗ್ರಾಹಕರ ಕೈಗೆ ತಲುಪುವ ಹಂತಕ್ಕೆ ಬಂದಿಲ್ಲ. ಡಿಸೆಂಬರ್ 10, 2025ರಂದು ಮಿನಿಸ್ಟರ್ ಆಫ್ ಕಮ್ಯುನಿಕೇಷನ್ಸ್ ಜ್ಯೋತಿರಾದಿತ್ಯ ಸಿಂಧಿಯಾ ಅವರು ಸ್ಟಾರ್‌ಲಿಂಕ್ ಉಪಾಧ್ಯಕ್ಷೆ ಲಾರೆನ್ ಡ್ರೇಯರ್ ಸೇರಿದಂತೆ ಕಂಪನಿಯ ... Read more The post Starlink – ಭಾರತ ಪ್ರವೇಶಕ್ಕೆ ಸಿದ್ಧ. ವೇಗ, ಲೇಟೆನ್ಸಿ ಬೆಲೆ, ಮತ್ತು ಎಲ್ಲ ತಾಂತ್ರಿಕ ಸೌಲಭ್ಯಗಳ ಸಂಪೂರ್ಣ ಮಾಹಿತಿ appeared first on Karnataka Times .

ಕರ್ನಾಟಕ ಟೈಮ್ಸ್ 10 Dec 2025 5:59 pm

ರಾಜ್ಯದ ಅತಿ ಚಿಕ್ಕ ರೈಲ್ವೆ ಮಾರ್ಗದಲ್ಲಿ ರೈಲು ಸೇವೆ ಆರಂಭ; ರೈಲ್ವೆ ಸಚಿವಾಲಯ ಒಪ್ಪಿಗೆ - 2 ಜಿಲ್ಲೆಗೆ ಅನುಕೂಲ!

ಅಳ್ನಾವರ ಮತ್ತು ದಾಂಡೇಲಿ ನಡುವೆ ರೈಲು ಸಂಚಾರ ಪುನರಾರಂಭವಾಗಲಿದೆ. ಕೇಂದ್ರ ರೈಲ್ವೆ ಸಚಿವಾಲಯವು ಈ ಚಿಕ್ಕ ರೈಲು ಮಾರ್ಗದಲ್ಲಿ ಡೆಮು ರೈಲು ಓಡಿಸಲು ಅನುಮತಿ ನೀಡಿದೆ. ಇದರಿಂದ ವಿದ್ಯಾರ್ಥಿಗಳು, ಉದ್ಯೋಗಿಗಳು ಮತ್ತು ವ್ಯಾಪಾರಿಗಳಿಗೆ ಅನುಕೂಲವಾಗಲಿದೆ. ಪ್ರವಾಸೋದ್ಯಮಕ್ಕೂ ಇದು ಉತ್ತೇಜನ ನೀಡಲಿದೆ. ಈ ಮಾರ್ಗವು ಉತ್ತರ ಕರ್ನಾಟಕದ ಜನತೆಗೆ ಮಹತ್ವದ ಸಂಪರ್ಕ ಕಲ್ಪಿಸಲಿದೆ.

ವಿಜಯ ಕರ್ನಾಟಕ 10 Dec 2025 5:52 pm

ಕೃತಕ ಬುದ್ಧಿಮತ್ತೆ ಆಧಾರಿತ ಮಳೆ ಮುನ್ಸೂಚನೆ ಯೋಜನೆ: ರೈತರಿಗೆ ಪ್ರಯೋಜನಗಳೇನು? ವರದಿ ಪಡೆಯುವುದು ಹೇಗೆ?

ಕೃಷಿ ಕ್ರಾಂತಿಗೆ ನಾಂದಿ ಹಾಡಲು ಕೃತಕ ಬುದ್ಧಿಮತ್ತೆ (AI) ಸಜ್ಜಾಗಿದೆ! ಭಾರತದಲ್ಲಿ ಇದೇ ಮೊದಲ ಬಾರಿಗೆ, AI-ಚಾಲಿತ ಮುಂಗಾರು ಮುನ್ಸೂಚನೆ ವ್ಯವಸ್ಥೆಯನ್ನು ಪರಿಚಯಿಸಲಾಗಿದೆ. ಈ ನೂತನ ತಂತ್ರಜ್ಞಾನವು ರೈತರಿಗೆ ಮಳೆ ಮತ್ತು ಬಿತ್ತನೆಗೆ ಸೂಕ್ತ ಸಮಯದ ಬಗ್ಗೆ ನಿಖರವಾದ ಮಾಹಿತಿಯನ್ನು ಒದಗಿಸುತ್ತದೆ. ಕೇಂದ್ರ ಕೃಷಿ ಸಚಿವಾಲಯ ಮತ್ತು ಗೂಗಲ್‌ನ ಮಹತ್ವಾಕಾಂಕ್ಷೆಯ ಸಹಯೋಗದಲ್ಲಿ ರೂಪುಗೊಂಡ ಈ ಯೋಜನೆ, ರೈತರ ಕೃಷಿ ನಿರ್ವಹಣೆಯನ್ನು ಸುಧಾರಿಸಲು ಮತ್ತು ಉತ್ತಮ ಇಳುವರಿಯನ್ನು ಸಾಧಿಸಲು ಸಹಾಯ ಮಾಡಲಿದೆ. ಈ ಕುರಿತ ಮಾಹಿತಿ ಇಲ್ಲಿದೆ.

ವಿಜಯ ಕರ್ನಾಟಕ 10 Dec 2025 5:50 pm

ಭಾರತದಲ್ಲಿ 'ಎಐ ಪ್ಲಸ್' ಪ್ಲ್ಯಾನ್‌ ಬಿಡುಗಡೆಗೊಳಿಸಿದ ಗೂಗಲ್‌: ಮಾಸಿಕ ದರ ಎಷ್ಟು? ಏನೆಲ್ಲಾ ವಿಶೇಷತೆಗಳಿವೆ?

ಗೂಗಲ್ ಭಾರತದಲ್ಲಿ ತನ್ನ ಹೊಸ 'ಎಐ ಪ್ಲಸ್' ಚಂದಾದಾರಿಕೆ ಸೇವೆಯನ್ನು ತಿಂಗಳಿಗೆ 399 ರೂ. ದರದಲ್ಲಿ ಆರಂಭಿಸಿದೆ. ವಿಶೇಷ ಆಫರ್ ಅಡಿಯಲ್ಲಿ ಹೊಸ ಚಂದಾದಾರರು ಇದನ್ನು ಮೊದಲ ಆರು ತಿಂಗಳವರೆಗೆ ಕೇವಲ 199 ರೂ.ಗಳಿಗೆ ಪಡೆಯಬಹುದು. ಈ ಯೋಜನೆಯು ಉಚಿತ ಪ್ಲಾನ್ ಮತ್ತು ದುಬಾರಿ ಎಐ ಪ್ರೊ ಪ್ಲಾನ್ ನಡುವಿನ ಪ್ಲ್ಯಾನ್‌ ಆಗಿದ್ದು, ಇದರಲ್ಲಿ ಜೆಮಿನಿ 3 ಪ್ರೊ ಮಾಡೆಲ್, 200 ಜಿಬಿ ಕ್ಲೌಡ್ ಸ್ಟೋರೇಜ್, ಸುಧಾರಿತ ವಿಡಿಯೋ ಮತ್ತು ಇಮೇಜ್ ಎಡಿಟಿಂಗ್ ಟೂಲ್‌ಗಳು ಹಾಗೂ 5 ಜನರಿಗೆ ಫ್ಯಾಮಿಲಿ ಶೇರಿಂಗ್ ಆಯ್ಕೆ ಇದೆ.

ವಿಜಯ ಕರ್ನಾಟಕ 10 Dec 2025 5:42 pm

ಶಾಶ್ವತ ಕೃಷಿ ವಲಯವೋ? ಅಥವಾ ಶಾಶ್ವತ ಬೃಹತ್ ಕೃಷಿ ಬಂಡವಾಳಶಾಹಿ ವಲಯವೋ?

ಮುಖ್ಯಮಂತ್ರಿಗಳಿಗೊಂದು ಬಹಿರಂಗ ಪತ್ರ

ವಾರ್ತಾ ಭಾರತಿ 10 Dec 2025 5:37 pm

ಧರ್ಮಸ್ಥಳ ಪ್ರಕರಣ: ಎಸ್‌.ಐ.ಟಿ ವರದಿ ಅಪೂರ್ಣ : ತೀರ್ಪು ಡಿ.26ಕ್ಕೆ ಮುಂದೂಡಿಕೆ

ಬೆಳ್ತಂಗಡಿ : ಧರ್ಮಸ್ಥಳ ಪ್ರಕರಣದಲ್ಲಿ ಎಸ್.ಐ.ಟಿ‌ ಸಲ್ಲಿಸಿರುವ ವರದಿಯ ಕುರಿತಾಗಿ ಬೆಳ್ತಂಗಡಿ ನ್ಯಾಯಾಲಯದಲ್ಲಿ ಎಸ್.ಐ.ಟಿ ಪರವಾಗಿ ವಾದ ಮಂಡನೆ ಮುಕ್ತಾಯವಾಗಿದ್ದು, ಅಪೂರ್ಣ ವರದಿಯ ಹಿನ್ನಲೆಯಲ್ಲಿ ಸುಳ್ಳು ಸಾಕ್ಷಿಯ ಕುರಿತು ಈ ಕೂಡಲೇ ತೀರ್ಮಾನ ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂದು ಪ್ರಕರಣದ ತೀರ್ಪನ್ನು ಡಿ.26ಕ್ಕೆ ಮುಂದೂಡಿದೆ. ಎಸ್.ಐ.ಟಿ ಪರವಾಗಿ ವಾದ ಮಂಡಿಸಿದ ಸರಕಾರಿ ವಕೀಲರು ಮುಂದಿನ ತನಿಖೆಯ ಕುರಿತು ನ್ಯಾಯಾಲಯದಿಂದ ನಿರ್ದೇಶನ ನೀಡುವಂತೆ ಕೇಳಿಕೊಂಡಿತ್ತು. ವಾದ ಆಲಿಸಿದ ನ್ಯಾಯಾಲಯ ಎಸ್.ಐ.ಟಿ ನ್ಯಾಯಾಲಯದಲ್ಲಿ ಸಲ್ಲಿಸಿರುವ ವರದಿಯು ಪರಿಪೂರ್ಣ ವರದಿಯಲ್ಲ ಇದರಿಂದಾಗಿ ಸುಳ್ಳು ಸಾಕ್ಷಿಯ ಕುರಿತು ತೀರ್ಮಾನ ತೆಗೆದುಕೊಳ್ಳುವುದು ಸಾಧ್ಯವಿಲ್ಲ ಸೂಕ್ತ ಕಾನೂನು ಸಲಹೆ ಪಡೆದು ಅಂತಿಮ ವರದಿಯನ್ನು ಸಿದ್ದಪಡಿಸುವಂತೆ ನ್ಯಾಯಾಲಯ ಎಸ್.ಐ.ಟಿಗೆ ಸೂಚಿಸಿದೆ,. ಲಭಿಸಿರುವ ತಲೆ ಬುರುಡೆಯ ಸಾಕ್ಷಿಯು ಆರೋಪಿಗಳ ಸುಳ್ಳು ಸಾಕ್ಷಿಯನ್ನು ತಿಳಿಸುತ್ತದೆ. ಕೂಡಲೇ ಮುಂದಿನ ಕ್ರಮಕ್ಕೆ ಸೂಚನೆ ನೀಡಬೇಕು ಎಂಬ ವಕೀಲರು ವಾದ ಮಂಡಿಸಿದ್ದರೂ, ತಕ್ಷಣ ಅನುಮತಿ ನೀಡಲು ಸಾಧ್ಯವಿಲ್ಲ ಎಂದು ನ್ಯಾಯಾಧೀಶರು ಪ್ರಕರಣದ ಬಗ್ಗೆ ಇನ್ನಷ್ಟು ಪರಿಶೀಲಿಸಬೇಕಾಗಿದೆ ಎಂದು ಡಿ 26ಕ್ಕೆ ತೀರ್ಪು ನೀಡಲು ಮುಂದೂಡಿದ್ದಾರೆ.

ವಾರ್ತಾ ಭಾರತಿ 10 Dec 2025 5:32 pm

ಡಿ.12, 13 ರಂದು ಮಂಗಳೂರು ವಿವಿಯಲ್ಲಿ'ಸ್ವಾಸ್ಥ್ಯ ಸಂಪದ-2025' ರಾಷ್ಟ್ರೀಯ ಸಮ್ಮೇಳನ

ಕೊಣಾಜೆ: ಮಂಗಳೂರು ವಿಶ್ವ ವಿದ್ಯಾನಿಲಯದ ಸೂಕ್ಷ್ಮಾಣುಜೀವ ವಿಜ್ಞಾನ ವಿಭಾಗದ ವತಿಯಿಂದ ಆಳ್ವಾಸ್ ಪಾರಂಪರಿಕ ಔಷಧೀಯ ಸಂಶೋಧನಾ ಕೇಂದ್ರ, ಆಳ್ವಾಸ್ ಆಯುರ್ವೇದ ಮೆಡಿಕಲ್ ಕಾಲೇಜು ಮೂಡುಬಿದಿರೆ ಇದರ ಸಹಯೋಗದೊಂದಿಗೆ 'ಸ್ವಾಸ್ಥ್ಯ ಸಂಪದ-2025' ಔಷಧೀಯ ಸಸ್ಯಗಳ ಬಗ್ಗೆ ರಾಷ್ಟ್ರೀಯ ಸಮ್ಮೇಳನವು ಡಿ.12 ಮತ್ತು 13 ರಂದು ಮಂಗಳೂರು ವಿವಿಯ ಮಂಗಳಾ ಸಭಾಂಗಣದಲ್ಲಿ ನಡೆಯಲಿದೆ ಎಂದು ಮಂಗಳೂರು ವಿವಿ ಸೂಕ್ಷ್ಮಾಣುಜೀವ ವಿಜ್ಞಾನ ವಿಭಾಗದ ಹಿರಿಯ ಪ್ರಾಧ್ಯಾಪಕ ಹಾಗೂ ಸಮ್ಮೇಳನದ ಸಂಘಟನಾ ಕಾರ್ಯದರ್ಶಿ ಪ್ರೊ.ಎಂ.ಜಯಶಂಕರ್ ಅವರು ಹೇಳಿದರು. ಅವರು ಉಳ್ಳಾಲ ಪ್ರೆಸ್ ಕ್ಲಬ್ ನಲ್ಲಿ ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಆಯುರ್ವೇದ, ಯೋಗ, ಸಸ್ಯ ಮೂಲಗಳಿಂದ ಬೇರ್ಪಡಿಸುವ ರಾಸಾಯನಿಕ ವಸ್ತುಗಳು, ಸಂಪ್ರದಾಯಿಕ ಚಿಕಿತ್ಸಾ ಪದ್ಧತಿಗಳು, ಹೊಸ ರೀತಿಯ ವೈದ್ಯಕೀಯ ಔಷಧಗಳ ತಯಾರಿಕೆಗಳು ಮಾನವ ಮತ್ತು ಸಾಕು ಪ್ರಾಣಿಗಳ ಆಹಾರ ಪದ್ಧತಿಗಳಲ್ಲಿ ರೋಗ ನಿರೋಧಕ ಶಕ್ತಿ ವೃದ್ಧಿಸುವ ಕ್ರಿಯೆಗಳು ಮುಂತಾದ ಪುರಾತನ ಆಹಾರ ಪದ್ಧತಿ ಮತ್ತು ರೋಗ ನಿರೋಧಕ ಶಕ್ತಿ ವೃದ್ಧಿ ಹಾಗೂ ರೋಗ ನಿಯಂತ್ರಣ ಕ್ರಮ ಮತ್ತು ರೋಗ ನಿವಾರಣ ಕ್ರಮಗಳನ್ನು ಸೂಕ್ಷ್ಮಾಣುಜೀವಿಗಳ ಅಧ್ಯಯನಗಳಿಗೆ ಮತ್ತು ಸಂಶೋಧನೆಗಳನ್ನು ಒಳಗೊಂಡ ಈ ಪಠ್ಯಕ್ರಮದಡಿಯಲ್ಲಿ ಇತ್ತೀಚಿನ ದಿನಗಳಲ್ಲಿ ನಡೆದಿರುವ ವೈಜ್ಞಾನಿಕ ಅಧ್ಯಯನ ಮತ್ತು ಸಂಶೋಧನೆಗಳನ್ನು ಪ್ರಚಾರಪಡಿಸುವ ಹಿನ್ನೆಲೆಯಲ್ಲಿ ಈ ಸಮ್ಮೇಳನವನ್ನು ಆಯೋಜಿಸಲಾಗಿದೆ. ಸಮ್ಮೇಳನವನ್ನು ಪಿ.ಎಮ್. ಉಷಾ ಯೋಜನೆ, ಕರ್ನಾಟಕ ರಾಜ್ಯ ಔಷಧಿ ಗಿಡ ಮೂಲಿಕಾ ಪ್ರಾಧಿಕಾರ ಮತ್ತು ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಪರಿಷತ್‌ರವರ ನೆರವಿನೊಂದಿಗೆ ಏರ್ಪಡಿಸಲಾಗಿದೆ. ಡಿ.12ರಂದು ಬೆಳಿಗ್ಗೆ 9.30 ಗಂಟೆಗೆ ಉದ್ಘಾಟನಾ ಕಾರ್ಯಕ್ರಮ ನಂತರ ವಿವಿಧ ವಿಷಯ ತಜ್ಞರಿಂದ ವಿಚಾರ ಗೋಷ್ಠಿ, ಸಂಶೋಧಕರುಗಳ ಪ್ರಬಂಧ ಮಂಡನೆ ಮತ್ತು ಸಂಜೆ 6.00 ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಲಾಗಿದೆ. ಸ್ವಾಸ್ಥ್ಯ ಆರೋಗ್ಯಕ್ಕಾಗಿ ಪೂರಕವಾದ ಜೈವಿಕ ಮಜ್ಜಿಗೆ ಕುಡಿಯುವ ಬಗ್ಗೆ ಜಾಗೃತಿ, ಔಷಧೀಯ ಸಸ್ಯಗಳ ಪ್ರದರ್ಶನವನ್ನು ಏರ್ಪಡಿಸಲಾಗಿದೆ. ಸಮ್ಮೇಳನದಲ್ಲಿ ಒಟ್ಟು 450ಕ್ಕೂ ಹೆಚ್ಚು ಪ್ರತಿನಿಧಿಗಳು ರಾಜ್ಯ ಹಾಗೂ ಹೊರರಾಜ್ಯಗಳಿಂದ ಭಾಗವವಹಿಸಲಿದ್ದಾರೆ ಎಂದರು. ಪತ್ರಿಕಾ ಗೋಷ್ಠಿಯಲ್ಲಿ ಆಳ್ವಾಸ್ ಕಾಲೇಜಿನ ಪ್ರಾಧ್ಯಾಪಕರಾದ ಡಾ.ಸುಬ್ರಹ್ಮಣ್ಯ ಪದ್ಯಾಣ, ಮಂಗಳೂರು ವಿವಿ ಉಪನ್ಯಾಸಕರಾದ‌ ಡಾ. ಶರತ್‌ ಚಂದ್ರ ರವರು ಉಪಸ್ಥಿತರಿದ್ದರು.  

ವಾರ್ತಾ ಭಾರತಿ 10 Dec 2025 5:29 pm

ICC Rankings- ನಂ 1 ಸ್ಥಾನಕ್ಕೆ ರೋಹಿತ್-ವಿರಾಟ್ ನಡುವೆ ಪೈಪೋಟಿ! ಫಿಟ್ನೆಸ್ ಬಗ್ಗೆ ಮಾತನಾಡಿದವರೆಲ್ಲಾ ಈಗ ಸೈಲೆಂಟ್

Rohit Sharma And Virat Kohli- ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರ ಫಿಟ್ನೆಸ್ ಬಗ್ಗೆ ಕಳೆದೊಂದು ವರ್ಷದಿಂದ ಚರ್ಚೆ ನಡೆಯುತ್ತಲೇ ಇದೆ. ಆದರೆ ಇವರಿಬ್ಬರು ಮಾತ್ರ ನಿರಂತರ ಉತ್ಕೃಷ್ಟ ಪ್ರದರ್ಶನ ನೀಡುತ್ತಿದ್ದು ಇದೀಗ ಅವರೊಳಗೇ ಸ್ಪರ್ಧೆ ಏರ್ಪಟ್ಟಿದೆ. ಐಸಿಸಿ ಏಕದಿನ ಬ್ಯಾಟಿಂಗ್ ರ‍್ಯಾಂಕಿಂಗ್‌ ಪಟ್ಟಿಯಲ್ಲಿ ರೋಹಿತ್ ಶರ್ಮಾ ಒಂದನೇ ಸ್ಥಾನದಲ್ಲಿದ್ದಾರೆ. ಇತ್ತೀಚೆಗೆ ಮುಗಿದ ಸರಣಿಯಲ್ಲಿ 2 ಶತಕ ಸಿಡಿಸಿರುವ ವಿರಾಟ್ ಕೊಹ್ಲಿ ಎರಡನೇ ಸ್ಥಾನಕ್ಕೇರಿದ್ದಾರೆ. ಇದೀಗ ನಂಬರ್ 1ನೇ ಸ್ಥಾನಕ್ಕಾಗಿ ಅವರಿಬ್ಬರ ನಡುವೆಯೇ ಪೈಪೋಟಿ ಏರ್ಪಟ್ಟಿದೆ.

ವಿಜಯ ಕರ್ನಾಟಕ 10 Dec 2025 5:21 pm

ಬೆಳ್ತಂಗಡಿ | ಡಿ.12ರಂದು ಮಾದರಿ ಮದುವೆ: ಜಮಾಅತ್ ಪ್ರತಿನಿಧಿಗಳ ಸಂಗಮ

ಬೆಳ್ತಂಗಡಿ, ಡಿ.10: ಮದುವೆಯ ಹೆಸರಿನಲ್ಲಿ ನಡೆಯುವ ಅನಾಚಾರ ಮತ್ತು ದುಂದುಬೆಚ್ಚಗಳನ್ನು ತಡೆಗಟ್ಟುವ ಸಲುವಾಗಿ ಎಸ್‌ವೈಎಸ್‌ ಕರ್ನಾಟಕ ರಾಜ್ಯ ಸಮಿತಿಯು ಹಮ್ಮಿಕೊಂಡ ಱಮಾದರಿ ಮದುವೆ: ಶತದಿನ ಅಭಿಯಾನ’ದ ಪ್ರಯುಕ್ತ ಎಸ್‌ವೈಎಸ್‌ ಬೆಳ್ತಂಗಡಿ ರೆನ್ ಜಮಾಅತ್ ಪ್ರತಿನಿಧಿಗಳ ಸಂಗಮವು ಡಿ.12ರಂದು ಅಪರಾಹ್ನ 3ಕ್ಕೆ ಗುರುವಾಯನಕೆರೆ ಮಸೀದಿ ಹಾಲ್ ನಲ್ಲಿ ನಡೆಯಲಿದೆ. ಎಸ್‌ವೈಎಸ್‌ ರೆನ್ ಅಧ್ಯಕ್ಷ ಅಬ್ದುಲ್ ರಹ್ಮಾನ್ ಸಖಾಫಿ ಆಲಟದಿಲ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಅಸ್ಸಯ್ಯದ್ ಇಸ್ಮಾಯಿಲ್ ಅಲ್ಹಾದಿ ತಂಞಳ್ ಉಜಿರೆ ದುಆಕ್ಕೆ ನೇತೃತ್ವ ನೀಡಲಿದ್ದಾರೆ. ಅಸ್ಸಯ್ಯದ್ ಅಬ್ದುಲ್ ರಹ್ಮಾನ್ ಬಾ-ಅಲವಿ ಸಾದಾತ್ ತಂಞಳ್ ಕುಪ್ಪೆಟ್ಟಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಕರ್ನಾಟಕ ಮುಸ್ಲಿಂ ಜಮಾಅತ್ ರಾಜ್ಯ ಕಾರ್ಯದರ್ಶಿ ಡಾ.ಎಂಎಸ್ಸೆಎಂ ಅಬ್ದುಲ್ ರಶೀದ್ ಝ್ಯೆನಿ ಕಾಮಿಲ್ ಸಖಾಫಿ ಮಾದರಿ ಮದುವೆ ಬಗ್ಗೆ ವಿಷಯ ಮಂಡಿಸಲಿದ್ದಾರೆ ಎಂದು ರೆನ್ ಪ್ರಧಾನ ಕಾರ್ಯದರ್ಶಿ ಸಲೀಂ ಕನ್ಯಾಡಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ವಾರ್ತಾ ಭಾರತಿ 10 Dec 2025 5:20 pm

ಡಿ.13ರಂದು ಕಡಬದಲ್ಲಿ ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ದ.ಕ. ಜಿಲ್ಲಾ ಸಮ್ಮೇಳನ

ಮಂಗಳೂರು, ಡಿ.10: ವಿಜಯ್ ದಿವಸ್ ಅಂಗವಾಗಿ ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘ(ರಿ)ದ ದ.ಕ. ಜಿಲ್ಲಾ ಸಮ್ಮೇಳನ ಡಿ.13ರಂದು ಕಡಬದ ನೆಲ್ಯಾಡಿಯ ಬಿರ್ವಾ ಸಭಾಂಗಣದಲ್ಲಿ ಬೆಳಗ್ಗೆ 9:30ರಿಂದ ನಡೆಯಲಿದೆ ಎಂದು ದ.ಕ. ಜಿಲ್ಲಾ ಘಟಕದ ಅಧ್ಯಕ್ಷ ನೋಬರ್ಟ್ ರೋಡ್ರಿಗಸ್ ತಿಳಿಸಿದ್ದಾರೆ. ಮಂಗಳೂರು ಪತ್ರಿಕಾ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಲವು ಜಿಲ್ಲೆಗಳ ಜಿಲ್ಲಾಧ್ಯಕ್ಷರುಗಳು, ವೀರ ನಾರಿಯರು, ಬಂಟ್ವಾಳ, ಕಡಬ, ಬೆಳ್ತಂಗಡಿ, ಪುತ್ತೂರು ಮತ್ತು ಮಂಗಳೂರು ತಾಲೂಕುಗಳ ಧುರೀಣರು, ಸದಸ್ಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು. 1971ರಲ್ಲಿ ಇಂಡೋ- ಪಾಕ್ ಯುದ್ಧದಲ್ಲಿ ಭಾಗಿಯಾದ ದ.ಕ. ಜಿಲ್ಲೆಯ ಯೋಧರಿಗೆ ಕಾರ್ಯಕ್ರಮದಲ್ಲಿ ಗೌರವ ಸಲ್ಲಿಸಲಾಗುವುದು. ಈ ಸಮ್ಮೇಳನದಲ್ಲಿ ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ರಾಜ್ಯಾಧ್ಯಕ್ಷ ಡಾ.ಶಿವಣ್ಣ ಎನ್. ಕೆ , ಮಹಾ ಪೋಷಕರಾದ ಮಾಜಿ ಸಂಸದೆ ಡಾ. ತೇಜಸ್ವಿನಿ ಗೌಡ , ವಿಶೇಷ ಆಹ್ವಾನಿತರಾಗಿ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ, ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ , ಪುತ್ತೂರು ಸಹಾಯಕ ಆಯುಕ್ತ ಸ್ಟೇಲ್ಲಾ ವರ್ಗೀಸ್, ಇಸಿಎಚ್‌ಎಸ್ ಆಯುಕ್ತ ಕರ್ನಲ್ ನಿತಿನ್ ಭಿಡೆ , ಕೌಕ್ರಾಡಿ ಗ್ರಾಪಂ ಅಧ್ಯಕ್ಷ ಉದಯ್ ಕುಮಾರ್ ಗೌಡ ಭಾಗವಹಿಸಲಿದ್ದಾರೆ. ರಾಜ್ಯ ಘಟಕದ ದ.ಕ. ಹಾಗೂ ಉಡುಪಿ ಜಿಲ್ಲಾ ಸಂಚಾಲಕ ಮ್ಯಾಥ್ಯೂ ಟಿ.ಜಿ ಮಾತನಾಡಿ, ಮಾಜಿ ಸೈನಿಕರು ಮತ್ತು ಅವರ ಕುಟುಂಬ ಎದುರಿಸುತ್ತಿರುವ ಸಮಸ್ಯೆಗಳಿಗೆ ಸಂಘಟಿತ ಪರಿಹಾರ ಕಂಡುಕೊಳ್ಳಲು 2020, ಸೆ.21ರಂದು ಆರಂಭಗೊಂಡ ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘವು ಇದೀಗ ರಾಜ್ಯದ 24 ಜಿಲ್ಲೆಗಳಲ್ಲಿ ಜಿಲ್ಲಾ ಘಟಕಗಳನ್ನು ಆರಂಭಿಸಿದ್ದು, ಸಂಘದಲ್ಲಿ 1.41 ಲಕ್ಷ ಮಂದಿ ಸದಸ್ಯರಿದ್ದಾರೆ. 350ಮಂದಿ ದ.ಕ. ಜಿಲ್ಲಾ ಘಟಕ ಸದಸ್ಯತ್ವ ಪಡೆದಿದ್ದಾರೆ. ಮಾಜಿ ಸೈನಿಕರ ಸಮಸ್ಯೆಗಳಾದ ಪುನರ್ವಸತಿ , ಉದ್ಯೋಗ, ಆರೋಗ್ಯ ಮತ್ತು ಕೌಟುಂಬಿಕ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಸಂಘ ಕಾರ್ಯನಿರತವಾಗಿದೆ ಎಂದು ಮಾಹಿತಿ ನೀಡಿದರು . ಎಲ್ಲಾ ಜಿಲ್ಲೆಗಳಲ್ಲಿ ಯುದ್ಧ ಸ್ಮಾರಕ ಹಾಗೂ ಅಮರ್ ಜವಾನ್ ಜ್ಯೋತಿ ಸ್ಥಾಪನೆ, ಸೈನಿಕರಿಗೆ ಸಮಾಜದಲ್ಲಿ ಉತ್ತಮ ಗೌರವವನ್ನು ದೊರಕಿಸಿ ಕೊಡುವಲ್ಲಿ ಪ್ರಯತ್ನಿಸುತ್ತಿದೆ. ಮಾಜಿ ಸೈನಿಕರ ಹಕ್ಕುಗಳನ್ನು ಪಡೆಯಲು ಮತ್ತು ಸರಕಾರದಿಂದ ದೊರೆಯುವ ನ್ಯಾಯಯುತ ಸವಲತ್ತುಗಳನ್ನು ದೊರಕಿಸಿಕೊಡುವಲ್ಲಿ ಸಂಘ ಯಶಸ್ವಿಯಾಗಿದೆ ಎಂದು ಅವರು ಹೇಳಿದರು. ಈ ಸಮ್ಮೇಳನದಲ್ಲಿ ಮಾಜಿ ಸೈನಿಕರ ಸಂಘದ ಬಲವರ್ಧನೆಯೊಂದಿಗೆ ಸರಕಾರದಿಂದ ದೊರೆಯುವ ಸವಲತ್ತುಗಳ ಬಗ್ಗೆ ಮಾಹಿತಿ ನೀಡಲಾಗುವುದು ಎಂದು ಸಂಘದ ಕಡಬ ತಾಲೂಕು ಅಧ್ಯಕ್ಷ ಸೆಬಾಸ್ಟಿಯನ್ ಕೆ.ಕೆ ಮಾಹಿತಿ ನೀಡಿದರು. ಸುದ್ದಿಗೋಷ್ಠಿಯಲ್ಲಿ ದ.ಕ. ಜಿಲ್ಲಾ ಘಟಕದ ಕೋಶಾಧಿಕಾರಿ ಚಂದಪ್ಪ ಡಿಎಸ್, ಬಂಟ್ವಾಳ ಘಟಕದ ಉಪಾಧ್ಯಕ್ಷ ಧನಂಜಯ ನಾಯ್ತೋಟು, ಬೆಳ್ತಂಗಡಿ ಘಟಕದ ಅಧ್ಯಕ್ಷ ತಂಗಚ್ಚನ್ , ಪುತ್ತೂರು ಘಟಕದ ಅಧ್ಯಕ್ಷ ಗೋಪಾಲ ವಿ ಬನ್ನೂರು ಉಪಸ್ಥಿತರಿದ್ದರು.

ವಾರ್ತಾ ಭಾರತಿ 10 Dec 2025 5:16 pm

ರೈತರಿಗೆ ಗುಡ್‌ ನ್ಯೂಸ್‌; ಬೆಳೆ ವಿಮೆ ಪರಿಹಾರ ಬಿಡುಗಡೆ ಮಾಹಿತಿ ಕೊಟ್ಟ ಕೃಷಿ ಸಚಿವ ಎನ್.ಚಲುವರಾಯಸ್ವಾಮಿ

ಬೆಳಗಾವಿ, ಡಿಸೆಂಬರ್‌ 10: ಕಲಬುರಗಿ ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 2022-23 ರಿಂದ 2024-25ನೇ ಸಾಲಿನವರೆಗೆ ಒಟ್ಟು 13,728 ರೈತರು ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಡಿ ನೊಂದಾಯಿಸಿಕೊಂಡಿದ್ದಾರೆ. ಈ ಪೈಕಿ 945 ರೈತರಿಗೆ ವಿವಿಧ ಕಾರಣಗಳಿಂದ ಬೆಳೆ ವಿಮೆ ಪರಿಹಾರ ಜಮೆಯಾಗಿರುವುದಿಲ್ಲ. ಸಮಸ್ಯೆಗಳನ್ನು ಪರಿಹರಿಸಿ ಸರ್ಕಾರ ಪರಿಹಾರ ವಿತರಣೆಗೆ ಕ್ರಮ ಕೈಗೊಳ್ಳಲಿದೆ ಎಂದು ಕೃಷಿ ಸಚಿವ

ಒನ್ ಇ೦ಡಿಯ 10 Dec 2025 5:05 pm

ಸೌರ ಸ್ವಾಸ್ಥ್ಯ ಯೋಜನೆ: ಸರ್ಕಾರಿ ಆಸ್ಪತ್ರೆಗಳಿಗೆ ಸೌರ ಶಕ್ತಿಯ ಬಲ; ಶಸ್ತ್ರ ಚಿಕಿತ್ಸೆಗೂ ಸೋಲಾರ್‌ ಬಳಕೆ: ಏನಿದು ಯೋಜನೆ?

ಕರ್ನಾಟಕ ಸರ್ಕಾರವು ಆರೋಗ್ಯ ಕೇಂದ್ರಗಳಿಗೆ ಸೌರಶಕ್ತಿಯ ಮೂಲಕ 24/7 ವಿದ್ಯುತ್‌ ಒದಗಿಸಲು 'ಸೌರ ಸ್ವಾಸ್ಥ್ಯ' ಯೋಜನೆಯನ್ನು ಜಾರಿಗೊಳಿಸಿದೆ. ಇದರಿಂದ ವಿದ್ಯುತ್‌ ಬಿಲ್‌ಗಳಲ್ಲಿ ಶೇ. 80ರಷ್ಟು ಕಡಿತವಾಗಲಿದೆ. ರಾಯಚೂರು ಜಿಲ್ಲೆಯು ಸಂಪೂರ್ಣ ಸೌರಶಕ್ತಿಯಿಂದ ಕಾರ್ಯನಿರ್ವಹಿಸುವ ಮೊದಲ ಜಿಲ್ಲೆಯಾಗಿದೆ. ಈ ಯೋಜನೆಯು ಗ್ರಾಮೀಣ ಪ್ರದೇಶಗಳಲ್ಲಿ ಆರೋಗ್ಯ ಸೇವೆಗಳನ್ನು ಸುಧಾರಿಸಲಿದೆ. ಸೌರ ಇ-ಮಿತ್ರ ಮೊಬೈಲ್ ಅಪ್ಲಿಕೇಶನ್ ನಿರ್ವಹಣೆಗೆ ಸಹಾಯ ಮಾಡುತ್ತದೆ. ಈ ಕುರಿತ ಮಾಹಿತಿ ಇಲ್ಲಿದೆ.

ವಿಜಯ ಕರ್ನಾಟಕ 10 Dec 2025 4:40 pm

‌BTS JK ಮತ್ತೊಂದು ಸಾಧನೆ: ರೋಲಿಂಗ್‌ ಸ್ಟೋನ್‌ ತ್ರಿವಳಿ ಸಂಯೋಜಿತ ಆವೃತ್ತಿ ಕವರ್‌ ಪೇಜ್‌ನಲ್ಲಿ ಕಾಣಿಸಿಕೊಂಡ ಫಸ್ಟ್‌ K-ಪಾಪ್‌ ಸೋಲೋ ಐಡಲ್‌

ಕೆ-ಪಾಪ್‌ನ ಗೋಲ್ಡನ್ ಮ್ಯಾಕ್ನೆ ಜುಂಗ್‌ಕುಕ್, ರೋಲಿಂಗ್‌ ಸ್ಟೋನ್ ಮ್ಯಾಗಜೀನ್‌ನ ಕೊರಿಯಾ, ಯುಕೆ ಮತ್ತು ಜಪಾನ್ ಸಂಯೋಜಿತ ಕವರ್‌ ಪೇಜ್‌ನಲ್ಲಿ ಕಾಣಿಸಿಕೊಂಡ ಮೊದಲ ಕೆ-ಪಾಪ್ ಸೋಲೋ ಕಲಾವಿದರಾಗಿ ಇತಿಹಾಸ ಸೃಷ್ಟಿಸಿದ್ದಾರೆ. ಈ ಸಾಧನೆಯು 8 ದೇಶಗಳಲ್ಲಿ ಪ್ರದರ್ಶನಗೊಂಡು ಭಾರಿ ಸದ್ದು ಮಾಡುತ್ತಿದೆ. ಸ್ಪಾಟಿಫೈನಲ್ಲಿ 10 ಶತಕೋಟಿಗೂ ಹೆಚ್ಚು ಸ್ಟ್ರೀಮ್‌ಗಳನ್ನು ತಲುಪಿದ ಮೊದಲ ಕೊರಿಯನ್ ಸೋಲೋ ಕಲಾವಿದ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.

ವಿಜಯ ಕರ್ನಾಟಕ 10 Dec 2025 4:39 pm

ಸತತ 3ನೇ ದಿನವೂ ಇಳಿಕೆ ಕಂಡ ಷೇರುಪೇಟೆ, ನಿರಂತರ ಕುಸಿತಕ್ಕೆ ಇಲ್ಲಿವೆ 4 ಕಾರಣಗಳು

ಅಮೆರಿಕದ ಫೆಡರಲ್ ರಿಸರ್ವ್ ಮುಖ್ಯಸ್ಥ ಜೆರೋಮ್ ಪವಲ್ ಅವರು 2026ರ ಬಡ್ಡಿ ದರಗಳ ಬಗ್ಗೆ ನೀಡಲಿರುವ ಸುಳಿವಿಗಾಗಿ ಜಾಗತಿಕ ಹೂಡಿಕೆದಾರರು ಕಾದು ನೋಡುವ ತಂತ್ರ ಅನುಸರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಭಾರತೀಯ ಷೇರುಪೇಟೆ ಬುಧವಾರದಂದು ನಷ್ಟದಲ್ಲಿ ಅಂತ್ಯಗೊಂಡಿತು. ವಿದೇಶಿ ಹೂಡಿಕೆದಾರರ ಸತತ ಮಾರಾಟ ಮತ್ತು ಕಚ್ಚಾ ತೈಲ ದರ ಏರಿಕೆಯು ಹೂಡಿಕೆದಾರರ ಮನೋಬಲವನ್ನು ಕುಗ್ಗಿಸಿದೆ. ಪರಿಣಾಮವಾಗಿ ಸೆನ್ಸೆಕ್ಸ್ ಮತ್ತು ನಿಫ್ಟಿ ಸತತ ಮೂರನೇ ದಿನವೂ ಕೆಂಪು ಬಣ್ಣದಲ್ಲಿ ವಹಿವಾಟು ಮುಗಿಸಿವೆ.

ವಿಜಯ ಕರ್ನಾಟಕ 10 Dec 2025 4:38 pm

Gold Price: ಚಿನ್ನದ ಬೆಲೆ ದಿಢೀರ್ 80,000 ರೂಪಾಯಿಗೆ ಕುಸಿತ ಸಾಧ್ಯತೆ...

ಚಿನ್ನ ಬೆಲೆ ಭಾರಿ ಭರ್ಜರಿ ಏರಿಕೆ ಕಾಣುತ್ತಿದ್ದು, ಚಿನ್ನ ಇದೇ ರೀತಿ ಏರಿಕೆ ಕಾಣುತ್ತಾ ಹೋದರೆ ಇನ್ನೇನು ಕೆಲವೇ ತಿಂಗಳಲ್ಲಿ ಚಿನ್ನದ ಬೆಲೆ ಬರೋಬ್ಬರಿ 2,00,000 ರೂಪಾಯಿ ಆಗುವ ಆತಂಕ ಇದೆ ಅನ್ನೋ ಚರ್ಚೆ ಶುರುವಾಗಿತ್ತು. ಅದರಲ್ಲೂ ಬಂಗಾರ &ಬೆಳ್ಳಿ ಬೆಲೆಯಲ್ಲಿ ದಿಢೀರ್ ಹೀಗೆ ಏರಿಕೆ ಕಂಡುಬಂದ ಕಾರಣಕ್ಕೆ ಸಾಮಾನ್ಯ ಜನರು &ಬಡವರು ಚಿಂತೆ

ಒನ್ ಇ೦ಡಿಯ 10 Dec 2025 4:35 pm

ಇಂದಿನಿಂದ ಆಸ್ಟ್ರೇಲಿಯದಲ್ಲಿ 16ರೊಳಗಿನ ಮಕ್ಕಳಿಗೆ ಸಾಮಾಜಿಕ ಜಾಲತಾಣ ನಿಷೇಧ!

16 ವಯಸ್ಸಿಗಿಂತ ಕೆಳಗಿನ ಮಕ್ಕಳು ಬಳಸುತ್ತಿರುವ ಲಕ್ಷಾಂತರ ಖಾತೆಗಳನ್ನು ಬ್ಲಾಕ್ ಮಾಡುವಂತೆ ಆದೇಶಿಸಿದ ಆಸ್ಟ್ರೇಲಿಯದ ಶಾಸನ ವಿರುದ್ಧ ಟೆಕ್ ಕಂಪೆನಿಗಳು ಕಿಡಿ ಕಾರಿವೆ. ಆಸ್ಟ್ರೇಲಿಯದಲ್ಲಿ 16 ವರ್ಷಕ್ಕಿಂತ ಕಡಿಮೆ ವಯಸ್ಸಿನ ಬಳಕೆದಾರರಿಗೆ ಇಂದಿನಿಂದ ಸಾಮಾಜಿಕ ಮಾಧ್ಯಮ ಬಳಕೆಯನ್ನು ನಿರ್ಬಂಧಿಸಬೇಕಾಗುತ್ತದೆ. ಯುವ ಬಳಕೆದಾರರು ಸಾಮಾಜಿಕ ಜಾಲತಾಣಗಳನ್ನು ಸುರಕ್ಷಿತವಾಗಿ ಬಳಸುವ ಬಗ್ಗೆ ಜಾಗತಿಕವಾಗಿ ಪೋಷಕರಿಂದ ಒತ್ತಾಯವಿದೆ. ಡಿಸೆಂಬರ್ 10ರ ನಂತರ ಫೇಸ್‌ಬುಕ್‌, ಇನ್ಸ್ಟಾಗ್ರಾಂ, ಕಿಕ್, ರೆಡಿಟ್, ಸ್ನ್ಯಾಪ್‌ಚಾಟ್‌, ಥ್ರೆಡ್ಸ್, ಟಿಕ್‌ಟಾಕ್‌, ಟ್ವಿಚ್, ಎಕ್ಸ್ ಹಾಗೂ ಯುಟ್ಯೂಬ್ 16ರೊಳಗಿನ ಆಸ್ಟ್ರೇಲಿಯನ್ನರು ವೇದಿಕೆಯನ್ನು ಬಳಸದಂತೆ ಸೂಕ್ತ ಕ್ರಮ ಕೈಗೊಳ್ಳಬೇಕಿದೆ. ಆದರೆ ಆಸ್ಟ್ರೇಲಿಯದ ಈ ಶಾಸನಕ್ಕೆ ತಂತ್ರಜ್ಞಾನ ಸಂಸ್ಥೆಗಳಿಂದ ಟೀಕೆ ವ್ಯಕ್ತವಾಗಿದೆ. ಆರಂಭದಲ್ಲಿ ಶೈಕ್ಷಣಿಕ ಉದ್ದೇಶಕ್ಕಾಗಿ ‘ಯುಟ್ಯೂಬ್’ ಬಳಸಲು ಅವಕಾಶ ಕೊಡುವ ಬಗ್ಗೆ ಆಸ್ಟ್ರೇಲಿಯ ಆಲೋಚಿಸಿತ್ತು. ಆದರೆ ನಂತರ ನಿರ್ಧಾರ ಬದಲಿಸಿದ ಆಸ್ಟ್ರೇಲಿಯದ ಸರ್ಕಾರ ಸಾಮಾಜಿಕ ಜಾಲತಾಣಗಳನ್ನು ಅಪ್ರಾಪ್ತರ ಬಳಕೆಗೆ ನಿಷೇಧಿಸಿದೆ. ಆದರೆ ಡೇಟಿಂಗ್ ವೆಬ್ತಾಣಗಳು, ಗೇಮಿಂಗ್ ವೇದಿಕೆಗಳು ಮತ್ತು ಎಐ ಚಾಟ್‌ಬಾಟ್‌ಗಳನ್ನು ನಿಯಮದಿಂದ ಹೊರಗಿರಿಸಲಾಗಿದೆ. 16 ವಯಸ್ಸಿಗಿಂತ ಕೆಳಗಿನ ಮಕ್ಕಳು ಬಳಸುತ್ತಿರುವ ಲಕ್ಷಾಂತರ ಖಾತೆಗಳನ್ನು ಬ್ಲಾಕ್ ಮಾಡುವಂತೆ ಆದೇಶಿಸಿದ ಆಸ್ಟ್ರೇಲಿಯದ ಶಾಸನದ ವಿರುದ್ಧ ಟೆಕ್ ಕಂಪೆನಿಗಳು ಕಿಡಿ ಕಾರಿವೆ. ಟೆಕ್ ಕಂಪನಿಗಳು ಮಾತ್ರವಲ್ಲದೆ ಆಸ್ಟ್ರೇಲಿಯದ ಮಾನವ ಹಕ್ಕು ಆಯೋಗ ಕೂಡ ಅಪ್ರಾಪ್ತ ಬಳಕೆದಾರರನ್ನು ಸಾಮಾಜಿಕ ಮಾಧ್ಯಮ ಬಳಕೆಯಿಂದ ನಿಷೇಧಿಸುವುದು ಸೂಕ್ತವಾದ ಸ್ಪಂದನೆಯಲ್ಲ ಎಂದು ಹೇಳಿದೆ. ಇದರಿಂದ ಮಕ್ಕಳ ವಾಕ್‌ ಸ್ವಾತಂತ್ರ್ಯಕ್ಕೆ ಧಕ್ಕೆಯಾಗಲಿದೆ ಎಂದು ಆಯೋಗ ಅಭಿಪ್ರಾಯಪಟ್ಟಿದೆ. ಜಾಗತಿಕವಾಗಿ ಪ್ರತಿಧ್ವನಿಸುವ ಸಾಧ್ಯತೆ ಆದರೆ ಆಸ್ಟ್ರೇಲಿಯದ ಈ ನಿರ್ಧಾರ ಜಾಗತಿಕವಾಗಿ ಪ್ರತಿಧ್ವನಿಸುವ ಸಾಧ್ಯತೆಯಿದೆ. ಇದೀಗ ಆಸ್ಟ್ರೇಲಿಯದಲ್ಲಿ “ಆನ್‌ಲೈನ್‌ ಸುರಕ್ಷತಾ ತಿದ್ದುಪಡಿ (ಸಾಮಾಜಿಕ ಮಾಧ್ಯಮ ಬಳಕೆಗೆ ಕನಿಷ್ಠ ವಯಸ್ಸು) ಕಾಯ್ದೆಯನ್ನು ಜಾರಿಗೆ ತರಲಾಗಿದೆ. ಶಾಸನ ಜಾರಿಗೆ ಬಂದ ನಂತರ 16ರ ಒಳಗಿನ ವಯಸ್ಸಿನ ಮಕ್ಕಳ ಖಾತೆಯನ್ನು ನಿಷ್ಕ್ರಿಯಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಮತ್ತು ಹೊಸ ಖಾತೆ ತೆರೆಯಲು ಅನುಮತಿ ಕೊಡಲಾಗುವುದಿಲ್ಲ. ಸ್ಥಳೀಯ ವರದಿಗಳ ಪ್ರಕಾರ ಮೆಟಾ ಅದಾಗಲೇ 16ರೊಳಗಿನ ಮಕ್ಕಳ ಖಾತೆಗಳನ್ನು ನಿಷ್ಕ್ರಿಯಗೊಳಿಸುವ ಕಾರ್ಯವನ್ನು ಆರಂಭಿಸಿದೆ. ಸಾಮಾಜಿಕ ಮಾಧ್ಯಮ ಬಳಸುವ ಮಕ್ಕಳನ್ನು ಕಾನೂನು ಶಿಕ್ಷಿಸುವುದಿಲ್ಲ ಬದಲಾಗಿ ಮಕ್ಕಳಿಗೆ ಬಳಕೆಗೆ ಅವಕಾಶ ಕೊಡುವ ವೇದಿಕೆಗೆ 33 ದಶಲಕ್ಷ ಡಾಲರ್ ದಂಡ ಹೇರುವ ಅಪಾಯವಿದೆ. ಆಸ್ಟ್ರೇಲಿಯ ಸರಕಾರದ ಪ್ರಕಾರ ಯುವಜನತೆ ಸಾಮಾಜಿಕ ಜಾಲತಾಣಗಳನ್ನು ಬಳಸುವಾಗ ಎದುರಿಸಬಹುದಾದ ಅಪಾಯಗಳಿಂದ ರಕ್ಷಣೆ ನೀಡುವುದು ಈ ನಿಷೇಧದ ಮುಖ್ಯ ಉದ್ದೇಶವಾಗಿದೆ. ಇದಕ್ಕೆ ಮೊದಲು ಆಸ್ಟ್ರೇಲಿಯದ ನಿಯಂತ್ರಣ ಪ್ರಾಧಿಕಾರ ನಡೆಸಿದ ಸಮೀಕ್ಷೆಯಲ್ಲಿ ಯುವ ಆಸ್ಟ್ರೇಲಿಯನ್ನು ಸೈಬರ್ ಬೆದರಿಕೆ ಪ್ರಕರಣಗಳನ್ನು ಎದುರಿಸಿರುವುದು ಕಂಡುಬಂದಿದೆ. ಸಾಮಾಜಿಕ ಜಾಲತಾಣ ನಿಷೇಧದ ಉದ್ದೇಶವೇನು? ಆಸ್ಟ್ರೇಲಿಯದಲ್ಲಿ ಆನ್‌ಲೈನ್‌ ಸುರಕ್ಷೆಗೆ ನಿಯಂತ್ರಕನಾಗಿರುವ ಇಸೇಫ್ಟಿ 2024ರ ಡಿಸೆಂಬರ್‌ನಿಂದ 2025ರ ಫೆಬ್ರವರಿ ನಡುವೆ ನಡೆಸಿದ ಸಮೀಕ್ಷೆಯಲ್ಲಿ 4ರಲ್ಲಿ 3 (ಶೇ 74) ಮಕ್ಕಳು ಆನ್‌ಲೈನ್‌ನಲ್ಲಿ ಹಾನಿಗೆ ಸಂಬಂಧಿಸಿದ ವಿಷಯವನ್ನು ನೋಡಿದ್ದಾರೆ ಅಥವಾ ಕೇಳಿದ್ದಾರೆ. 2 ರಲ್ಲಿ 1 ಕ್ಕಿಂತ ಹೆಚ್ಚು (ಶೇ 53) ಮಕ್ಕಳು ಸೈಬರ್ ಬೆದರಿಕೆಯನ್ನು ಅನುಭವಿಸಿದ್ದಾರೆ. 5 ರಲ್ಲಿ 3 (ಶೇ 60) ಮಕ್ಕಳು ಆನ್‌ಲೈನ್ ದ್ವೇಷವನ್ನು ನೋಡಿದ್ದಾರೆ ಅಥವಾ ಕೇಳಿದ್ದಾರೆ, ಆದರೆ 4 ರಲ್ಲಿ 1 ಕ್ಕಿಂತ ಹೆಚ್ಚು (ಶೇ 27) ಮಕ್ಕಳು ವೈಯಕ್ತಿಕವಾಗಿ ಅದನ್ನು ಅನುಭವಿಸಿದ್ದಾರೆ. 4 ರಲ್ಲಿ 1 (ಶೇ 25) ಮಕ್ಕಳು ಒಮ್ಮತವಿಲ್ಲದ ಟ್ರ್ಯಾಕಿಂಗ್, ಮೇಲ್ವಿಚಾರಣೆ ಅಥವಾ ಕಿರುಕುಳವನ್ನು ಅನುಭವಿಸಿದ್ದಾರೆ.

ವಾರ್ತಾ ಭಾರತಿ 10 Dec 2025 4:22 pm

ಮುಂಬೈನಲ್ಲಿ ಬಾಲಿವುಡ್- ಫುಟ್‌ಬಾಲ್ ಸಂಗಮದಲ್ಲಿ ಲಿಯೊನೆಲ್ ಮೆಸ್ಸಿ ರ‍್ಯಾಂಪ್ ವಾಕ್ !

ಫುಟ್‌ಬಾಲ್ ದಿಗ್ಗಜ ಲಿಯೊನೆಲ್ ಮೆಸ್ಸಿಯ ಭಾರತ ಪ್ರವಾಸಕ್ಕೆ ಬಾಲಿವುಡ್ ಸಜ್ಜಾಗುತ್ತಿದೆ. ಜಾಗತಿಕ ಫುಟ್‌ಬಾಲ್ ದಿಗ್ಗಜರು ಬಾಲಿವುಡ್ ಗ್ಲಾಮರ್‌ ಜೊತೆಗೆ ಮೇಳೈಸುವ ಅದ್ದೂರಿ ಕಾರ್ಯಕ್ರಮಕ್ಕಾಗಿ ಮನರಂಜನಾ ಜಗತ್ತು ಸಿದ್ಧವಾಗುತ್ತಿದೆ. ಲಿಯೊನೆಲ್ ಮೆಸ್ಸಿ ಭಾರತ ಪ್ರವಾಸದ ಸಂದರ್ಭದಲ್ಲಿ ಇತರ ಫುಟ್‌ಬಾಲ್ ಆಟಗಾರರಾದ ಲೂಯಿಸ್ ಸೌರೆಜ್ ಮತ್ತು ರೊಡ್ರಿಗೊ ಡಿ ಪಾಲ್ ಅವರೊಂದಿಗೆ ಮುಂಬೈನಲ್ಲಿ ರ‍್ಯಾಂಪ್ ವಾಕ್ ಮಾಡಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಬಾಲಿವುಡ್‌ನ ದಿಗ್ಗಜರು ಭಾಗವಹಿಸುವ ನಿರೀಕ್ಷೆಯಿದೆ. ಬಾಲಿವುಡ್‌-ಫುಟ್‌ಬಾಲ್ ಸಂಗಮ ಮೆಸ್ಸಿ ಮತ್ತು ಇತರ ಫುಟ್‌ಬಾಲ್ ಆಟಗಾರರು ಡಿಸೆಂಬರ್ 14ರಂದು ಮುಂಬೈನಲ್ಲಿ 45 ನಿಮಿಷಗಳ ಫ್ಯಾಷನ್‌ ಶೋನಲ್ಲಿ ಭಾಗವಹಿಸಲಿದ್ದಾರೆ. ಇದು ದತ್ತಿ ಕಾರ್ಯಕ್ರಮವಾಗಿದ್ದು, ಟೈಗರ್ ಶ್ರಾಫ್, ಜಾಕಿ ಶ್ರಾಫ್ ಮತ್ತು ಜಾನ್‌ ಅಬ್ರಾಹಾಂ ಸೇರಿದಂತೆ ಬಾಲಿವುಡ್‌ನ ಖ್ಯಾತನಾಮರು ರ‍್ಯಾಂಪ್ ಮೇಲೆ ನಡೆಯಲಿದ್ದಾರೆ. 14 ವರ್ಷಗಳ ನಂತರದ ಆಗಮನ ಮುಂಬೈಗೆ ಬಂದಿಳಿಯಲಿರುವ ಮೆಸ್ಸಿ ಪ್ರಸಿದ್ಧ ವಾಂಖೆಡೆ ಸ್ಟೇಡಿಯಂನಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ನಂತರ ಕೋಲ್ಕತ್ತಾ, ಹೈದರಾಬಾದ್ ಮತ್ತು ಹೊಸದಿಲ್ಲಿಗೂ ಭೇಟಿ ನೀಡಲಿದ್ದಾರೆ. ಈ ಹಿಂದೆ 2011ರಲ್ಲಿ ಮೆಸ್ಸಿ ಭಾರತಕ್ಕೆ ಆಗಮಿಸಿದ್ದರು. ಆಗ ಕೋಲ್ಕತ್ತಾದ ಸಾಲ್ಟ್ ಲೇಕ್ ಸ್ಟೇಡಿಯಂನಲ್ಲಿ ಅರ್ಜೆಂಟಿನಾದ ತಂಡ ವೆನೆಜುವೆಲಾ ವಿರುದ್ಧ ಸ್ನೇಹಪರ ಪಂದ್ಯದಲ್ಲಿ ಭಾಗವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ಸ್ಟೇಡಿಯಂ ತುಂಬಿ ತುಳುಕಿತ್ತು ಮತ್ತು ಫುಟ್‌ಬಾಲ್ ಪ್ರೇಮಿಗಳು ಬಹಳ ಹುರುಪಿನಿಂದ ಭಾಗವಹಿಸಿದ್ದರು. ಇದೀಗ ಡಿಸೆಂಬರ್‌ನಲ್ಲಿ 14 ವರ್ಷಗಳ ನಂತರ ಮೆಸ್ಸಿ ಭಾರತ ಪ್ರವಾಸದಲ್ಲಿ ಒಂದೇ ಪಂದ್ಯದಲ್ಲಿ ಆಡಲಿದ್ದಾರೆ. ಇದು ಕ್ರೀಡೆಗಿಂತ ಹೆಚ್ಚಾಗಿ ಅಭಿಮಾನಿಗಳನ್ನು ರಂಜಿಸಲಿರುವ ಆಗಮನವಾಗಲಿದೆ. ಅಭಿಮಾನಿಗಳನ್ನು ಭೇಟಿಯಾಗುವ ಸೆಶನ್‌ಗಳು, ಯುವ ಫುಟ್‌ಬಾಲ್ ಕ್ಲಿನಿಕ್‌ಗಳು, ಕಾರ್ಯಾಗಾರಗಳು ಮತ್ತು ಇತರ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಹೈದರಾಬಾದ್‌ನಲ್ಲಿ ಗೋಟ್ ಕಪ್‌ ಹೈದರಾಬಾದ್‌ನಲ್ಲಿ ಅವರು ಸಂಜೆ 7 ಗಂಟೆಯಿಂದ ಉಪ್ಪಲ್‌ನ ರಾಜೀವ್ ಗಾಂಧಿ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಲಿರುವ ಹೈದರಾಬಾದ್ ಗೋಟ್ ಕಪ್‌ನಲ್ಲಿ ಭಾಗವಹಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಭಾಗವಹಿಸುವ ನಿರೀಕ್ಷೆಯಿದೆ. ಮೆಸ್ಸಿಮಯವಾಗಲಿರುವ ಕೋಲ್ಕತ್ತಾ ಕೋಲ್ಕತ್ತಾದ ಶ್ರೀಭೂಮಿಯಲ್ಲಿ ತಮ್ಮ 70 ಅಡಿಯ ಪ್ರತಿಮೆಯನ್ನು ಲಿಯೊನೆಲ್ ಮೆಸ್ಸಿ ಉದ್ಘಾಟಿಸಲಿದ್ದಾರೆ. ಭದ್ರತಾ ಕಾರಣಗಳಿಂದಾಗಿ ಮೆಸ್ಸಿ ತಮ್ಮ ಹೊಟೇಲ್‌ನಿಂದಲೇ ವರ್ಚುವಲ್ ಆಗಿ ಇದನ್ನು ಉದ್ಘಾಟಿಸಲಿದ್ದಾರೆ. ಸ್ಥಳದಲ್ಲಿ ಉದ್ಘಾಟನೆಗೆ ಪೊಲೀಸರು ಅನುಮತಿ ನೀಡಲಿಲ್ಲ. ಕೋಲ್ಕತ್ತಾ ಕ್ರೀಡಾಂಗಣದ ಕಾರ್ಯಕ್ರಮದಲ್ಲಿ 70,000ಕ್ಕೂ ಹೆಚ್ಚು ಜನರು ಭಾಗವಹಿಸುವ ನಿರೀಕ್ಷೆಯಿದೆ. ಟಿಕೆಟ್‌ಗೆ ಅತಿಯಾದ ಬೇಡಿಕೆಯಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ವಾರ್ತಾ ಭಾರತಿ 10 Dec 2025 4:18 pm

ಕ್ರಿಕೆಟ್ ತಂಡಕ್ಕೆ ಆಯ್ಕೆ ಮಾಡದ ಸಿಟ್ಟಲ್ಲಿ ಕೋಚ್ ಮೇಲೆ ಹಿಗ್ಗಾಮುಗ್ಗಾ ಹಲ್ಲೆ!; ಪಾಂಡಿಚೇರಿಯಲ್ಲಿ ಹೀಗೊಂದು ಪ್ರಕರಣ

Selection Scam Allegations- ಪಾಂಡಿಚೇರಿ ಕ್ರಿಕೆಟ್ ಅಸೋಸಿಯೇಶನ್ ಸ್ಥಳೀಯ ಆಟಗಾರರ ಮೇಲೆ ತಾರತಮ್ಯ ಮಾಡುತ್ತಿದೆ ಎಂದು ವರದಿಯಾದ ಬೆನ್ನಲ್ಲೇ ಕ್ರಿಕೆಟ್ ತಂಡಕ್ಕೆ ಆಯ್ಕೆ ಮಾಡಿಲ್ಲ ಎಂಬ ಕಾರಣಕ್ಕೆ ಕೋಚ್ ಒಬ್ಬರ ಮೇಲೆ ಮೂವರು ಸ್ಥಳೀಯ ಆಟಗಾರರು ಹಲ್ಲೆ ನಡೆಸಿದ ಘಟನೆ ನಡೆದಿದೆ. ಪಾಂಡಿಚೇರಿ ಅಂಡರ್ 19 ಕ್ರಿಕೆಟ್ ತಂಡದ ಕೋಚ್ ಎಸ್. ವೆಂಕಟರಾಮನ್ ಹಲ್ಲೆಗೊಳಗಾದವರು. ಕೋಚ್‌ಗೆ ಗಂಭೀರ ಗಾಯಗಳಾಗಿವೆ. ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ತಂಡಕ್ಕೆ ಆಯ್ಕೆ ಮಾಡಿಲ್ಲ ಎಂಬ ಕಾರಣಕ್ಕೆ ಈ ಘಟನೆ ನಡೆದಿದೆ.

ವಿಜಯ ಕರ್ನಾಟಕ 10 Dec 2025 4:17 pm

ಬೆಳ್ಳಿ ಬೆಲೆ ದಾಖಲೆ ಮಟ್ಟದಲ್ಲಿ ಏರಿಕೆ, ಚಿನ್ನವೂ ದುಬಾರಿ!

ಡಿಸೆಂಬರ್ 10ರಂದು ಚಿನ್ನ ಮತ್ತು ಬೆಳ್ಳಿ ದರದಲ್ಲಿ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದೆ. ಬೆಳ್ಳಿ ಬೆಲೆ ಗರಿಷ್ಠ ಮಟ್ಟಕ್ಕೇರಿದ್ದು, ಶೀಘ್ರದಲ್ಲೇ 2 ಲಕ್ಷ ರೂಪಾಯಿಯಾಗುವ ಸಾಧ್ಯತೆಯಿದೆ. ಚಿನ್ನ ಮತ್ತು ಬೆಳ್ಳಿಯ ಬೆಲೆಗಳು ಪ್ರತಿದಿನ ಏರಿಳಿತದ ಹಾದಿಯಲ್ಲಿ ಸಾಗುತ್ತಿವೆ. ಒಂದು ದಿನ ಏರಿಕೆಯಾದರೆ ಮತ್ತೊಂದು ದಿನ ಇಳಿಯುತ್ತಿದೆ. ಹೀಗಾಗಿ ಜನರನ್ನು ಗೊಂದಲಕ್ಕೆ ಈಡುಮಾಡಿದೆ. ಬುಧವಾರ ಮಂಗಳೂರಿನಲ್ಲಿ ಮತ್ತೆ ಚಿನ್ನದ ಬೆಲೆ ಏರಿಕೆಯಾಗಿದೆ. ದಿಲ್ಲಿಯಲ್ಲಿ ಸತತ ಎರಡನೇ ದಿನವೂ ಒಂದು ಕಿಲೋಗ್ರಾಂ ಬೆಳ್ಳಿ ದುಬಾರಿಯಾಗಿದೆ. ಡಿಸೆಂಬರ್ 10ರಂದು ಚಿನ್ನ ಮತ್ತು ಬೆಳ್ಳಿ ದರ ಭಾರಿ ಪ್ರಮಾಣದಲ್ಲಿ ಏರಿದೆ. ಬೆಳ್ಳಿ ಬೆಲೆ ಗರಿಷ್ಠ ಮಟ್ಟಕ್ಕೇರಿದ್ದು, ಶೀಘ್ರದಲ್ಲೇ 2 ಲಕ್ಷ ರೂಪಾಯಿಯಾಗುವ ಸಾಧ್ಯತೆಯಿದೆ. ಚಿನ್ನದ ಬೆಲೆಯೂ ಗರಿಷ್ಠ 1 ಲಕ್ಷ 30 ಸಾವಿರ ರೂಪಾಯಿ ತಲುಪಿದೆ. ಬೆಳ್ಳಿ ಬೆಲೆ ರೂ 900 ಹೆಚ್ಚಳವಾಗಿ ಕಿಲೊಗ್ರಾಂಗೆ ರೂ 1,99,000ಕ್ಕೆ ಏರಿಕೆಯಾಗಿದೆ. ಮಂಗಳೂರಿನಲ್ಲಿ ಚಿನ್ನದ ದರವೆಷ್ಟು? ಬುಧವಾರ ಡಿಸೆಂಬರ್ 10ರಂದು ಮಂಗಳೂರಿನಲ್ಲಿ ಬಂಗಾರದ ಬೆಲೆ ಮತ್ತೆ ಏರಿಕೆ ಕಂಡಿದೆ. ಬೆಳಗಿನ ವಹಿವಾಟಿನಲ್ಲಿ ಒಂದು ಗ್ರಾಂ 24 ಕ್ಯಾರೆಟ್ ಚಿನ್ನಕ್ಕೆ ರೂ. 13,031 (+87), 22 ಕ್ಯಾರೆಟ್ ಚಿನ್ನಕ್ಕೆ ರೂ. 11,945 (+80) ಮತ್ತು 18 ಕ್ಯಾರೆಟ್ ಚಿನ್ನಕ್ಕೆ ರೂ. 9,773 (+65) ಬೆಲೆಗೆ ಏರಿಕೆಯಾಗಿದೆ. ಶುದ್ಧ ಚಿನ್ನದ ಇಂದಿನ ದರ ಎಷ್ಟಿದೆ? ಡಿಸೆಂಬರ್ 10 ಬುಧವಾರದಂದು ಮಾರುಕಟ್ಟೆಗಳಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ ಗ್ರಾಂ ಒಂದಕ್ಕೆ ರೂ. 13,031 ಇದ್ದು, ಇಂದು 87 ರೂಪಾಯಿ ಹೆಚ್ಚಳ ಆಗಿದೆ. 10 ಗ್ರಾಂ ಶುದ್ಧ ಚಿನ್ನಕ್ಕೆ 1,30,310 ರೂಪಾಯಿ ಇದೆ. 24 ಕ್ಯಾರೆಟ್ 10 ಗ್ರಾಂ ಬೆಲೆಯಲ್ಲಿ ಇಂದು ರೂ. 870 ಏರಿಕೆ ಆಗಿದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 24 ಕ್ಯಾರಟ್‌ನ ಚಿನ್ನದ ಬೆಲೆ ರೂ. 1,29,430, 22 ಕ್ಯಾರಟ್‌ ಚಿನ್ನದ ಬೆಲೆ ರೂ. 1,18,640ಕ್ಕೆ ಏರಿದೆ. 24 ಕ್ಯಾರಟ್‌ 1 ಗ್ರಾಂ ಚಿನ್ನದ ಬೆಲೆ: ರೂ. 13,042, 22 ಕ್ಯಾರಟ್‌ನ 1 ಗ್ರಾಂ ಚಿನ್ನದ ಬೆಲೆ ರೂ, 11,955 ಇದೆ. ಬೆಳ್ಳಿಯ ಬೆಲೆ 1 ಗ್ರಾಂಗೆ ರೂ. 189ಕ್ಕೇರಿದೆ.

ವಾರ್ತಾ ಭಾರತಿ 10 Dec 2025 4:16 pm

ಇಂಡಿಗೊ ಬಿಕ್ಕಟ್ಟು | ಟಿಕೆಟ್‌ಗಳ ಬೆಲೆ 40,000ರೂ. ತಲುಪಿದ್ದು ಹೇಗೆ?: ಕೇಂದ್ರ ಸರಕಾರಕ್ಕೆ ಹೈಕೋರ್ಟ್ ಚಾಟಿ

ಹೊಸದಿಲ್ಲಿ: ಹಾರಾಟದಲ್ಲಿ ಉಂಟಾದ ವ್ಯತ್ಯಯದಿಂದ ಇಂಡಿಗೋಗೆ ಸಾವಿರಾರು ವಿಮಾನಗಳ ರದ್ದತಿಯಿಂದಾಗಿ ವಿಮಾನ ನಿಲ್ದಾಣಗಳಲ್ಲಿ ಸಿಲುಕಿರುವ ಪ್ರಯಾಣಿಕರಿಗೆ ಪರಿಹಾರ ನೀಡುವಂತೆ ದಿಲ್ಲಿ ಹೈಕೋರ್ಟ್ ಬುಧವಾರ ಕೇಂದ್ರ ನಿರ್ದೇಶನ ನೀಡಿದೆ. ವಿಮಾನಯಾನದ ದರಗಳು 40,000 ರೂ.ಗೆ ಏರಿರುವುದನ್ನು ತಡೆಯುವಲ್ಲಿ ವಿಫಲವಾದ ಕೇಂದ್ರವನ್ನು ಅದು ತರಾಟೆಗೆ ತೆಗೆದುಕೊಂಡಿತು. ಪರಿಸ್ಥಿತಿಯನ್ನು ಆತಂಕಕಾರಿ ಎಂದು ಹೇಳಿದ ದಿಲ್ಲಿ ಹೈಕೋರ್ಟ್ ನ ಮುಖ್ಯ ನ್ಯಾಯಮೂರ್ತಿ ಡಿ.ಕೆ. ಉಪಾಧ್ಯಾಯ ನೇತೃತ್ವದ ವಿಭಾಗೀಯ ಪೀಠವು, ಇದರಿಂದಾಗಿ ಪ್ರಯಾಣಿಕರಿಗೆ ಅನಾನುಕೂಲತೆ ಮಾತ್ರವಲ್ಲ, ಇದರಿಂದಾಗುವ ಆರ್ಥಿಕ ಪರಿಣಾಮದ ಬಗ್ಗೆಯೂ ಬೆಳಕು ಚೆಲ್ಲಿದೆ. ವಿಮಾನ ನಿಲ್ದಾಣಗಳಲ್ಲಿ ಸಿಲುಕಿರುವ ಪ್ರಯಾಣಿಕರಿಗೆ ಪರಿಹಾರ ನೀಡಲು ನಾಗರಿಕ ವಿಮಾನಯಾನ ಸಚಿವಾಲಯ, ಡಿಜಿಸಿಎ ಮತ್ತು ಇಂಡಿಗೋ ಸಾಕಷ್ಟು ಕ್ರಮಗಳನ್ನು ತೆಗೆದುಕೊಳ್ಳುತ್ತವೆ ಎಂದು ನಾವು ನಿರೀಕ್ಷಿಸುತ್ತೇವೆ ಎಂದು ಹೈಕೋರ್ಟ್ ಹೇಳಿದೆ. ಪರಿಸ್ಥಿತಿಯನ್ನು ಉಲ್ಬಣಗೊಳಿಸಲು ಅವಕಾಶ ನೀಡಿದ್ದಕ್ಕಾಗಿ ಮತ್ತು ಬಿಕ್ಕಟ್ಟು ಭುಗಿಲೆದ್ದ ನಂತರವೇ ಕ್ರಮ ಕೈಗೊಂಡಿದ್ದಕ್ಕಾಗಿ ನ್ಯಾಯಾಲಯವು ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿತು. ವಿಮಾನ ಹಾರಾಟದಲ್ಲಿ ಬಿಕ್ಕಟ್ಟು ಇದ್ದಲ್ಲಿ, ಅದನ್ನು ಇತರ ವಿಮಾನಯಾನ ಸಂಸ್ಥೆಗಳು ಲಾಭ ಪಡೆಯಲು ಹೇಗೆ ಅನುಮತಿಸಬಹುದು? ವಿಮಾನಯಾನ ಟಿಕೆಟ್ ದರ 35-40 ಸಾವಿರಕ್ಕೆ ತಲುಪಲು ಹೇಗೆ ಸಾಧ್ಯ? ನೀವು ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸಲು ಬಿಟ್ಟಿದ್ದೀರಿ ಎಂದು ನ್ಯಾಯಾಲಯವು ಆಕ್ರೋಶ ವ್ಯಕ್ತಪಡಿಸಿತು. ಇಂತಹ ಪರಿಸ್ಥಿತಿ ಪ್ರಯಾಣಿಕರಿಗೆ ಅನಾನುಕೂಲತೆಯನ್ನುಂಟುಮಾಡುವುದಕ್ಕೆ ಮಾತ್ರ ಸೀಮಿತವಾಗಿಲ್ಲ, ಬದಲಾಗಿ ದೇಶದ ಆರ್ಥಿಕತೆಯ ಮೇಲೂ ಪರಿಣಾಮ ಬೀರುತ್ತದೆ ಎಂದು ಅದು ನ್ಯಾಯಾಲಯವು ಕಳವಳ ವ್ಯಕ್ತಪಡಿಸಿತು. ಇದಕ್ಕೆ ಪ್ರತಿಕ್ರಿಯಿಸಿದ ಹೆಚ್ಚುವರಿ ಸಾಲಿಸಿಟರ್ ಜನರಲ್ (ಎಎಸ್‌ಜಿ) ಚೇತನ್ ಶರ್ಮಾ, ಭಾರತದ ಅತಿದೊಡ್ಡ ವಿಮಾನಯಾನ ಸಂಸ್ಥೆಯಾದ ಇಂಡಿಗೋ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತಿದೆ ಮತ್ತು ಈಗಾಗಲೇ ಆ ಸಂಸ್ಥೆಗೆ ಶೋಕಾಸ್ ನೋಟಿಸ್ ನೀಡಲಾಗಿದೆ ಎಂದು ಪೀಠದ ಗಮನಕ್ಕೆ ತಂದರು.

ವಾರ್ತಾ ಭಾರತಿ 10 Dec 2025 4:13 pm

ರೋಹಿಂಗ್ಯಾ ಪ್ರಕರಣದಲ್ಲಿ ಸಿಜೆಐ ವಿರುದ್ಧದ ‘ಪ್ರೇರೇಪಿತ ಅಭಿಯಾನʼಕ್ಕೆ ನಿವೃತ್ತ ನ್ಯಾಯಾಧೀಶರಿಂದ ಖಂಡನೆ

ಹೊಸದಿಲ್ಲಿ,ಡಿ.10: ರೋಹಿಂಗ್ಯಾ ವಲಸಿಗರಿಗೆ ಸಂಬಂಧಿಸಿದ ವಿಚಾರಣೆ ಸಂದರ್ಭದಲ್ಲಿ ಭಾರತದ ಮುಖ್ಯ ನ್ಯಾಯಾಧೀಶ (ಸಿಜೆ ಐ) ಸೂರ್ಯಕಾಂತ ಅವರ ಹೇಳಿಕೆಗಳಿಗಾಗಿ ಅವರನ್ನು ಗುರಿಯಾಗಿಸಿಕೊಂಡು ‘ಪ್ರೇರೇಪಿತ ಅಭಿಯಾನʼವನ್ನು ಸರ್ವೋಚ್ಚ ನ್ಯಾಯಾಲಯ ಮತ್ತು ಉಚ್ಚ ನ್ಯಾಯಾಲಯಗಳ 44 ನಿವೃತ್ತ ನ್ಯಾಯಾಧೀಶರು ಹೇಳಿಕೆಯೊಂದರಲ್ಲಿ ಖಂಡಿಸಿದ್ದಾರೆ. ಕಸ್ಟಡಿಯಲ್ಲಿದ್ದ ರೋಹಿಂಗ್ಯಾ ನಿರಾಶ್ರಿತರು ನಾಪತ್ತೆಯಾಗಿದ್ದಾರೆ ಎಂದು ಆರೋಪಿಸಿರುವ ಅರ್ಜಿಯ ವಿಚಾರಣೆಯನ್ನು ಡಿ.2ರಂದು ಕೈಗೆತ್ತಿಕೊಂಡಿದ್ದ ಸರ್ವೋಚ್ಚ ನ್ಯಾಯಾಲಯದ ಪೀಠವು ರೋಹಿಂಗ್ಯಾ ನಿರಾಶ್ರಿತರ ಕುರಿತು ನೀಡಿದ ‘ಕೆಲವು ಅವಿವೇಕದ ಹೇಳಿಕೆಗಳ ಬಗ್ಗೆ ತೀವ್ರ ಕಳವಳಗಳನ್ನು ವ್ಯಕ್ತಪಡಿಸಿ’ ಕೆಲವು ಮಾಜಿ ನ್ಯಾಯಾಧೀಶರು, ವಕೀಲರು ಮತ್ತು ಕ್ಯಾಂಪೇನ್ ಫಾರ್ ಜ್ಯುಡಿಷಿಯಲ್ ಅಕೌಂಟೇಬಿಲಿಟಿ ಆ್ಯಂಡ್ ರಿಫಾರ್ಮ್ಸ್ (ಸಿಜೆಎಆರ್) ಡಿ.5ರಂದು ಹೊರಡಿಸಿದ್ದ ಬಹಿರಂಗ ಪತ್ರವನ್ನು ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ. ಸರ್ವೋಚ್ಚ ನ್ಯಾಯಾಲಯದ ಅವಹೇಳನ ಸ್ವೀಕಾರಾರ್ಹವಲ್ಲ ಎಂದು ಒತ್ತಿ ಹೇಳಿರುವ ಹೇಳಿಕೆಯು, ನ್ಯಾಯಾಂಗ ಪ್ರಕ್ರಿಯೆಗಳು ನ್ಯಾಯಯುತ ಮತ್ತು ತಾರ್ಕಿಕ ಟೀಕೆಗಳಿಗೆ ಮಾತ್ರ ಒಳಪಟ್ಟಿರಬೇಕು ಎಂದು ತಿಳಿಸಿದೆ. ‘ಆದರೆ ನಾವು ನೋಡುತ್ತಿರುವುದು ತಾತ್ವಿಕ ಭಿನ್ನಾಭಿಪ್ರಾಯವಲ್ಲ, ಬದಲಾಗಿ ನ್ಯಾಯಾಂಗದ ನಿಯಮಿತ ಕಲಾಪವನ್ನು ಪೂರ್ವಾಗ್ರಹ ಪೀಡಿತ ಕೃತ್ಯವೆಂದು ತಪ್ಪಾಗಿ ನಿರೂಪಿಸುವ ಮೂಲಕ ದುರ್ಬಲಗೊಳಿಸುವ ಪ್ರಯತ್ನವಾಗಿದೆ’ ಎಂದು ಹೇಳಿಕೆಯು ತಿಳಿಸಿದೆ. ನ್ಯಾಯಾಲಯದ ಮುಂದೆ ಹೇಳಿಕೊಳ್ಳಲಾಗುತ್ತಿರುವ ಸ್ಥಾನಮಾನವನ್ನು ಕಾನೂನಿನಲ್ಲಿ ಯಾರು ನೀಡಿದ್ದಾರೆ ಎಂಬ ಅತ್ಯಂತ ಮೂಲಭೂತ ಕಾನೂನು ಪ್ರಶ್ನೆಯನ್ನೆತ್ತಿದ್ದಕ್ಕಾಗಿ ಸಿಜೆಐ ವಿರುದ್ಧ ಅಭಿಯಾನ ನಡೆಸಲಾಗುತ್ತಿದೆ. ಈ ಪ್ರಶ್ನೆಗೆ ಉತ್ತರವನ್ನು ಕಂಡುಕೊಳ್ಳದ ಹೊರತು ಹಕ್ಕುಗಳ ಕುರಿತು ನ್ಯಾಯನಿರ್ಣಯ ಸಾಧ್ಯವಿಲ್ಲ ಎಂದು ನಿವೃತ್ತ ನ್ಯಾಯಾಧೀಶರು ತಮ್ಮ ಹೇಳಿಕೆಯಲ್ಲಿ ಬೆಟ್ಟು ಮಾಡಿದ್ದಾರೆ. ಭಾರತದಲ್ಲಿರುವ ಯಾವುದೇ ವ್ಯಕ್ತಿಯನ್ನು, ಭಾರತೀಯ ಅಥವಾ ವಿದೇಶಿ ಪ್ರಜೆಯಾಗಿರಲಿ, ಚಿತ್ರಹಿಂಸೆ, ಕಣ್ಮರೆ ಅಥವಾ ಅಮಾನವೀಯ ನಡವಳಿಕೆಗೆ ಗುರಿಯಾಗಿಸುವಂತಿಲ್ಲ ಮತ್ತು ಪ್ರತಿಯೊಬ್ಬ ವ್ಯಕ್ತಿಯ ಘನತೆಯನ್ನು ಗೌರವಿಸಬೇಕು ಎಂಬ ಪೀಠದ ಹೇಳಿಕೆಯನ್ನು ಸಿಜೆ ವಿರುದ್ಧದ ಅಭಿಯಾನವು ಗಮನಕ್ಕೆ ತೆಗೆದುಕೊಂಡಿಲ್ಲ ಎಂದು ಹೇಳಿಕೆಯು ತಿಳಿಸಿದೆ. ಇದನ್ನು ಬಚ್ಚಿಟ್ಟು ನ್ಯಾಯಾಲಯವು ಅಮಾನವೀಯತೆಯನ್ನು ತೋರಿಸಿದೆ ಎಂದು ಆರೋಪಿಸುವುದು ನಿಜವಾಗಿ ಹೇಳಿದ್ದರ ಗಂಭೀರ ತಿರುಚುವಿಕೆಯಾಗಿದೆ ಎಂದು ತಿಳಿಸಿರುವ ಹೇಳಿಕೆಯು ರಾಷ್ಟ್ರೀಯತೆ, ವಲಸೆ, ದಾಖಲೀಕರಣ ಅಥವಾ ಗಡಿ ಭದ್ರತೆ ಕುರಿತು ನ್ಯಾಯಾಂಗದ ಪ್ರತಿಯೊಂದೂ ಪ್ರಶ್ನೆಯನ್ನು ದ್ವೇಷ ಅಥವಾ ಪೂರ್ವಾಗ್ರಹ ಎಂದು ಆರೋಪಿಸಿದರೆ ನ್ಯಾಯಾಂಗದ ಸ್ವಾತಂತ್ರ್ಯಕ್ಕೆ ಅಪಾಯವುಂಟಾಗುತ್ತದೆ ಎಂದು ಹೇಳಿದೆ. ‘ಆದ್ದರಿಂದ ನಾವು ಸರ್ವೋಚ್ಚ ನ್ಯಾಯಾಲಯ ಮತ್ತು ಸಿಜೆಐ ಮೇಲೆ ನಮ್ಮ ಸಂಪೂರ್ಣ ವಿಶ್ವಾಸವನ್ನು ದೃಢಪಡಿಸುತ್ತೇವೆ, ನ್ಯಾಯಾಲಯದ ಹೇಳಿಕೆಗಳನ್ನು ತಿರುಚುವ ಮತ್ತು ಭಿನ್ನಾಭಿಪ್ರಾಯಗಳನ್ನು ನ್ಯಾಯಾಧೀಶರ ವಿರುದ್ಧ ವೈಯಕ್ತಿಕ ದಾಳಿಗಳನ್ನಾಗಿಸುವ ಪ್ರೇರೇಪಿತ ಪ್ರಯತ್ನಗಳನ್ನು ನಾವು ಖಂಡಿಸುತ್ತೇವೆ. ಕಾನೂನನ್ನು ಉಲ್ಲಂಘಿಸಿ ಭಾರತವನ್ನು ಪ್ರವೇಶಿಸಿರುವ ವಿದೇಶಿ ಪ್ರಜೆಗಳು ಭಾರತೀಯ ಗುರುತು ಮತ್ತು ದಾಖಲೆಗಳನ್ನು ಕಾನೂನುಬಾಹಿರವಾಗಿ ಪಡೆದುಕೊಂಡಿರುವುದನ್ನು ಪರಿಶೀಲಿಸಲು ನ್ಯಾಯಾಲಯದ ಮೇಲ್ವಿಚಾರಣೆಯಲ್ಲಿ ವಿಶೇಷ ತನಿಖಾ ತಂಡದ ರಚನೆಯನ್ನು ನಾವು ಬೆಂಬಲಿಸುತ್ತೇವೆ ’ಎಂದು ನಿವೃತ್ತ ನ್ಯಾಯಾಧೀಶರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ವಾರ್ತಾ ಭಾರತಿ 10 Dec 2025 4:12 pm

Mangaluru | ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಹಮಾಲಿ ಕಾರ್ಮಿಕರ ಧರಣಿ

ಮಂಗಳೂರು: ಹಮಾಲಿ ಕಾರ್ಮಿಕರಿಗೆ ಭವಿಷ್ಯ ನಿಧಿ, ಪಿಂಚಣಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ, ಮುಂದಿನ ಕರ್ನಾಟಕ ಬಜೆಟಿನಲ್ಲಿ ಹಮಾಲಿ ಕಲ್ಯಾಣ ಮಂಡಳಿ ರಚನೆಗೆ 500 ಕೋಟಿ ಮೀಸಲಿಡಲು ಆಗ್ರಹಿಸಿ ರಾಜ್ಯ ಹಮಾಲಿ ಕಾರ್ಮಿಕರ ಫೆಡರೇಶನ್ ಕರೆಯಂತೆ ಇಂದು ರಾಜ್ಯವ್ಯಾಪಿ ಪ್ರತಿಭಟನೆಯ ಭಾಗವಾಗಿ ಮಂಗಳೂರಿನ ಹಳೇ ಬಂದರು ಸಗಟು ಮಾರುಕಟ್ಟೆಯಲ್ಲಿ ಬಂದರು ಶ್ರಮಿಕರ ಸಂಘದ ನೇತೃತ್ವದಲ್ಲಿ ಕಾರ್ಮಿಕರ ಕಟ್ಟೆ ಬಳಿ ಹಮಾಲಿ ಕಾರ್ಮಿಕರು ಧರಣಿ ನಡೆಸಿದರು. ಕರ್ನಾಟಕ ರಾಜ್ಯ ಹಮಾಲಿ ಕಾರ್ಮಿಕರ ಫೆಡರೇಷನ್ ಕಾರ್ಯದರ್ಶಿ ಮತ್ತು ಬಂದರು ಶ್ರಮಿಕರ ಸಂಘದ ಅಧ್ಯಕ್ಷ ಬಿ.ಕೆ.ಇಮ್ತಿಯಾಝ್ ಮಾತನಾಡಿ, ಅತ್ಯಂತ ಶ್ರಮ ಜೀವಿಗಳಾದ ಹಮಾಲಿ ಕಾರ್ಮಿಕರ ಶ್ರಮದಿಂದಾಗಿ ಮಾರುಕಟ್ಟೆಗಳು ಕ್ರಿಯಾಶೀಲಗೊಂಡು ಆರ್ಥಿಕ ಚೈತನ್ಯ ಪಡೆಯಲು ಸಾಧ್ಯವಾಗಿದೆ ಹಮಾಲಿ ಕಾರ್ಮಿಕರ ಶ್ರಮಕ್ಕೆ ನ್ಯಾಯ ಕೊಡಿಸಲು ರಾಜ್ಯ ಸರಕಾರ ಮುಂದಾಗಬೇಕೆಂದು ಒತ್ತಾಯಿಸಿದರು. ರಾಜ್ಯದ ವಿವಿಧ ಎಪಿಎಂಸಿ, ಗೋಡೌನ್, ವೇರ್ ಹೌಸ್ ಹಾಗೂ ನಗರ, ಗ್ರಾಮೀಣ ಬಝಾರ್ ಗಳಲ್ಲಿ ದುಡಿಯುವ ಲಕ್ಷಾಂತರ ಹಮಾಲಿ ಕಾರ್ಮಿಕರ ಬೇಡಿಕೆಗಳನ್ನು ಸರಕಾರ ನಿರಂತರವಾಗಿ ಕಡೆಗಣಿಸುತ್ತಿದೆ. ಅತ್ಯಂತ ಬಡವರಾಗಿರುವ ಹಮಾಲಿ ಕಾರ್ಮಿಕರಿಗೆ ಪಿಂಚಣಿ, ಭವಿಷ್ಯ ನಿಧಿ ಮತ್ತು ನಿವೃತ್ತಿ ವೇತನ ಯೋಜನೆ ಜಾರಿಗೊಳಿಸಲು ಕ್ರಮ ಜರುಗಿಸಬೇಕು ಮತ್ತು ಕೇರಳ ಮತ್ತು ಮಹಾರಾಷ್ಟ ಮಾದರಿಯಲ್ಲಿ ಹಮಾಲಿ ಕಾರ್ಮಿಕರ ಕಲ್ಯಾಣ ಮಂಡಳಿ ರಚನೆ ಮಾಡಿ ಮುಂದಿನ ಬಜೆಟಿನಲ್ಲಿ 500ಕೋಟಿ ಅನುದಾನ ಒದಗಿಸಬೇಕೆಂದು ಅವರು ಒತ್ತಾಯಿಸಿದರು. ಬಂದರು ಶ್ರಮಿಕರ ಸಂಘದ ಮುಖಂಡರಾದ ಫಾರೂಕ್ ಉಳ್ಳಾಲಬೈಲ್, ಮೋಹನ್ ಕುಂಪಲ, ಲೋಕೇಶ್ ಶೆಟ್ಟಿ ಶಮೀರ್ ಬೋಳಿಯಾರ್, ಮಜೀದ್ ಉಳ್ಳಾಲ, ಶರಣಪ್ಪ, ಸಿದ್ದೀಕ್ ಬೆಂಗ್ರೆ, ಪದ್ಮನಾಭ, ಅಬ್ಬಾಸ್, ಅಕ್ಬರ್ ಮತ್ತಿತರರು ಉಪಸ್ಥಿತರಿದ್ದರು.

ವಾರ್ತಾ ಭಾರತಿ 10 Dec 2025 3:59 pm

ಸಂಸತ್ ಅಧಿವೇಶನ ವೇಳೆ ರಾಹುಲ್ ಗಾಂಧಿ ಜರ್ಮನಿ ಪ್ರವಾಸ ; ಬಿಜೆಪಿ ತೀವ್ರ ಆಕ್ಷೇಪ

ಸಂಸತ್ ಅಧಿವೇಶನ ನಡೆಯುತ್ತಿರುವಾಗಲೇ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಜರ್ಮನಿ ಪ್ರವಾಸ ಕೈಗೊಂಡಿರುವುದಕ್ಕೆ ಬಿಜೆಪಿ ವಾಗ್ದಾಳಿ ನಡೆಸಿದ್ದಾರೆ. ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರು ರಾಹುಲ್ ಗಾಂಧಿಯನ್ನು ಎನ್‌ಐಆರ್ ರಾಜಕಾರಣಿ ಎಂದು ಕರೆದರೆ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಅರೆಕಾಲಿಕ ಮತ್ತು ಗಂಭೀರವಲ್ಲದ ನಾಯಕ ಎಂದು ವ್ಯಂಗ್ಯವಾಡಿದ್ದಾರೆ. ಇದಕ್ಕೆ ತಿರುಗೇಟು ನೀಡಿದ ಕಾಂಗ್ರೆಸ್, ಪ್ರಧಾನಿ ನರೇಂದ್ರ ಮೋದಿ ಅವರ ವಿದೇಶಿ ಪ್ರವಾಸಗಳ ಬಗ್ಗೆ ಪ್ರಶ್ನೆ ಎತ್ತಿದೆ.

ವಿಜಯ ಕರ್ನಾಟಕ 10 Dec 2025 3:58 pm

RCB ಫ್ಯಾನ್ಸ್‌ಗೆ ಗುಡ್‌ ನ್ಯೂಸ್‌: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ರಿಕೆಟ್ ಪಂದ್ಯಾವಳಿ: ಡಿ ಕೆ ಶಿವಕುಮಾರ್ ಹೇಳಿದ್ದೇನು?

ಬೆಳಗಾವಿ, ಡಿಸೆಂಬರ್‌ 10: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ರಿಕೆಟ್ ಪಂದ್ಯಗಳಿಗೆ ಅನುಮತಿ ನೀಡುವ ಬಗ್ಗೆ ಗುರುವಾರ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ನಡೆಸಿ ತೀರ್ಮಾನ ಮಾಡಲಾಗುವುದು ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ತಿಳಿಸಿದರು. ಬೆಳಗಾವಿಯ ಸರ್ಕಿಟ್ ಹೌಸ್ ನಲ್ಲಿ ಕೆಎಸ್ ಸಿಎ ನೂತನ ಅಧ್ಯಕ್ಷ ವೆಂಕಟೇಶ್ ಪ್ರಸಾದ್ ಅವರು ತಮ್ಮನ್ನು ಭೇಟಿ ಮಾಡಿದ ನಂತರ ಡಿಸಿಎಂ ಡಿ.ಕೆ.

ಒನ್ ಇ೦ಡಿಯ 10 Dec 2025 3:52 pm

ಮೀಶೋ ಬ್ಲಾಕ್‌ಬಸ್ಟರ್‌ ಲಿಸ್ಟಿಂಗ್‌: ಐಪಿಒ ಬೆಲೆಗೆ ಹೋಲಿಸಿದರೆ 60% ಏರಿಕೆ, ಹೂಡಿಕೆದಾರರು ಈಗ ಏನು ಮಾಡಬೇಕು?

ಬಹುನಿರೀಕ್ಷಿತ ಮೀಶೋಕಂಪನಿಯ ಷೇರುಗಳು ಷೇರು ಮಾರುಕಟ್ಟೆಯಲ್ಲಿ ಹೂಡಿಕೆದಾರರ ನಿರೀಕ್ಷೆಗೂ ಮೀರಿ ಅದ್ಭುತ ಪ್ರದರ್ಶನ ನೀಡಿವೆ. ಗ್ರೇ ಮಾರುಕಟ್ಟೆಯ ಲೆಕ್ಕಾಚಾರಗಳನ್ನು ತಲೆಕೆಳಗಾಗಿಸಿ, ಶೇ. 46ರಷ್ಟು ಪ್ರೀಮಿಯಂ ದರದಲ್ಲಿ ಲಿಸ್ಟ್ ಆಗುವ ಮೂಲಕ ಹೂಡಿಕೆದಾರರಿಗೆ ಮೊದಲ ದಿನವೇ ಬಂಪರ್ ಲಾಭ ತಂದುಕೊಟ್ಟಿದೆ. ಲಿಸ್ಟಿಂಗ್ ನಂತರವೂ ಷೇರುಗಳ ನಾಗಾಲೋಟ ಮುಂದುವರೆದಿದ್ದು, ಷೇರು ಬೆಲೆ ಶೇ. 60ರವರೆಗೆ ಏರಿಕೆ ಕಂಡಿತ್ತು. ಹಾಗಾದರೆ ಷೇರುಗಳನ್ನು ಮಾರಾಟ ಮಾಡಬೇಕೇ ಅಥವಾ ಹೋಲ್ಡ್ ಮಾಡಬೇಕೇ? ತಜ್ಞರು ಏನನ್ನುತ್ತಾರೆ? ಇಲ್ಲಿದೆ ಸಂಪೂರ್ಣ ವರದಿ.

ವಿಜಯ ಕರ್ನಾಟಕ 10 Dec 2025 3:50 pm

ಮೈಸೂರು ಜಿಲ್ಲೆಯ 'ಗೃಹ ಆರೋಗ್ಯ' ವರದಿ: 63,000ಕ್ಕೂ ಹೆಚ್ಚು ಜನರಿಗೆ ಬಿಪಿ, ಮಧುಮೇಹದ ತೊಂದರೆ

ಮೈಸೂರು ಜಿಲ್ಲೆಯಲ್ಲಿ 'ಗೃಹ ಆರೋಗ್ಯ' ಯೋಜನೆಯಡಿ ನಡೆದ ತಪಾಸಣೆಯಲ್ಲಿ ಅಧಿಕ ರಕ್ತದೊತ್ತಡ ಮತ್ತು ಮಧುಮೇಹ ಪ್ರಕರಣಗಳು ಹೆಚ್ಚಿರುವುದು ಕಳವಳ ಮೂಡಿಸಿದೆ. ಕೇವಲ ಎರಡು ತಿಂಗಳಲ್ಲಿ 37,510 ಮಂದಿಯಲ್ಲಿ ಬಿಪಿ ಮತ್ತು 25,925 ಮಂದಿಯಲ್ಲಿ ಮಧುಮೇಹ ಪತ್ತೆಯಾಗಿದೆ. 30 ವರ್ಷ ಮೇಲ್ಪಟ್ಟ 8 ಲಕ್ಷಕ್ಕೂ ಹೆಚ್ಚು ಜನರ ಆರೋಗ್ಯ ತಪಾಸಣೆ ಗುರಿಯಾಗಿದ್ದು, 14 ಬಗೆಯ ಅಸಾಂಕ್ರಾಮಿಕ ರೋಗಗಳ ಬಗ್ಗೆ ಮಾಹಿತಿ ನೀಡಲಾಗುತ್ತಿದೆ.

ವಿಜಯ ಕರ್ನಾಟಕ 10 Dec 2025 3:44 pm

ʻಶಾಲೆಗಳಲ್ಲಿ ವಂದೇ ಮಾತರಂ ಗೀತೆ ಹಾಡುವುದು ಕಡ್ಡಾಯಗೊಳಿಸಿ, ಇಲ್ಲದಿದ್ದರೆ ಮರೆತೆ ಹೋಗ್ತಾರೆʼ: ಸುಧಾ ಮೂರ್ತಿ

ಶಾಲೆಗಳಲ್ಲಿ ಜನಗಣಮನ ರಾಷ್ಟ್ರ ಗೀತೆ ಮಾತ್ರ ಹಾಡೋದನ್ನು ಕಡ್ಡಾಯಗೊಳಿಸಲಾಗಿದೆ ಹಾಗೆಯೇ, ವಂದೇ ಮಾತರಂಗೂ ಕಡ್ಡಾಯ ಮಾಡಿ. ಮಕ್ಕಳಿಗೆ ಈ ಹಾಡು ಕಲಿಸಲು ಒಂದು ಮೂರು ನಿಮಿಷ ಸಾಕು. ಆದರೆ, ಈ ನಿರ್ಲಕ್ಷ್ಯ ಯಾಕೆ. ವಂದೇ ಮಾತರಂ ಹಾಡದಿದ್ರೆ ಮಕ್ಕಳು ಗೀತೆಯನ್ನು ಮರೆತೆ ಹೋಗುತ್ತಾರೆ ಎಂದು ಸುಧಾ ಮೂರ್ತಿ ಅವರು ಕಳವಳ ವ್ಯಕ್ತಪಡಿಸಿದ್ದಾರೆ. ನಾನು ಸಂಸದೆ, ಲೇಖಕಿಯಾಗಿ ಕೇಳಿಕೊಳ್ಳುತ್ತಿಲ್ಲ ಭಾರತದ ಮಗಳಾಗಿ ನಿಮ್ಮ ಬಳಿ ಮನವಿ ಮಾಡಿಕೊಳ್ಳುತ್ತಿದ್ದೇನೆ ಎಂದರು.

ವಿಜಯ ಕರ್ನಾಟಕ 10 Dec 2025 3:34 pm

ಸಿಎಎ ಅಡಿ ಅರ್ಜಿದಾರರಿಗೆ ಪೌರತ್ವ ಸ್ವಯಂಸಿದ್ಧವಲ್ಲ,ಅವರ ಹಕ್ಕು ಕೋರಿಕೆಗಳನ್ನು ಪರಿಶೀಲಿಸಬೇಕು:ಸುಪ್ರೀಂ ಕೋರ್ಟ್

ಹೊಸದಿಲ್ಲಿ,ಡಿ.10: ತಾವು ಧಾರ್ಮಿಕ ಅಲ್ಪಸಂಖ್ಯಾತರು ಮತ್ತು ಪೌರತ್ವ (ತಿದ್ದುಪಡಿ) ಕಾಯ್ದೆಯಡಿ (ಸಿಎಎ) ರಕ್ಷಿತರು ಎಂದು ಹೇಳಿಕೊಳ್ಳುವ ಜನರಿಗೆ ಭಾರತೀಯ ಪೌರತ್ವವು ಸ್ವಯಂಸಿದ್ಧವಲ್ಲ ಮತ್ತು ಅದು ಅವರ ಹಕ್ಕುಕೋರಿಕೆಗಳ ಸತ್ಯಾಸತ್ಯತೆಯನ್ನು ಅವಲಂಬಿಸಿರುತ್ತದೆ ಎಂದು ಸರ್ವೋಚ್ಚ ನ್ಯಾಯಾಲಯವು ಹೇಳಿದೆ. ಮಂಗಳವಾರ ‘ಆತ್ಮದೀಪ’ ಎನ್‌ಐಒ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಕೈಗೆತ್ತಿಕೊಂಡಿದ್ದ ಭಾರತದ ಮುಖ್ಯ ನ್ಯಾಯಾಧೀಶ (ಸಿಜೆಐ) ಸೂರ್ಯಕಾಂತ ಮತ್ತು ನ್ಯಾ.ಜಾಯಮಾಲ್ಯಾ ಬಾಗ್ಚಿ ಅವರ ಪೀಠವು ಈ ಮೌಖಿಕ ಅಭಿಪ್ರಾಯವನ್ನು ವ್ಯಕ್ತಪಡಿಸಿತು. ಸಿಎಎಯಲ್ಲಿನ ತಿದ್ದುಪಡಿ ಮಾಡಲಾದ ನಿಬಂಧನೆಗಳಿಂದಾಗಿ ಈ ದೇಶದ ಪ್ರಜೆಗಳಾಗಲು ಅರ್ಹರಾಗಿದ್ದೇವೆ ಎಂದು ನೀವು ಹೇಳಿಕೊಳ್ಳುತ್ತಿದ್ದೀರಿ. ಆದರೆ ನಿಮಗೆ ಈವರೆಗೆ ಪೌರತ್ವವನ್ನು ನೀಡಲಾಗಿಲ್ಲ. ತಿದ್ದುಪಡಿ ಮಾಡಲಾದ ನಿಬಂಧನೆಗಳು ಪೌರತ್ವವನ್ನು ಕೋರಲು ನಿಮ್ಮ ಪರವಾಗಿ ಕೆಲವು ಜಾರಿಗೊಳಿಸಬಹುದಾದ ಹಕ್ಕುಗಳನ್ನು ನೀಡಿರಬಹುದು,ಆದರೆ ನೀವು ಸಿಎಎ ಅಡಿ ಸೂಚಿತ ನೆರೆಯ ದೇಶದಲ್ಲಿಯ ಯಾವುದೇ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದವರೇ;ಅಲ್ಪಸಂಖ್ಯಾತರಿಗೆ ಭಾರತಕ್ಕೆ ಬರಲು ಅನುಮತಿಸಲಾಗಿರುವ ದೇಶದ ನಿವಾಸಿಯೇ;ಮತ್ತು ನೀವು ಯಾವ ಆಧಾರದಲ್ಲಿ ಭಾರತಕ್ಕೆ ಬಂದಿದ್ದೀರಿ ಎಂಬಿತ್ಯಾದಿ ಪ್ರತಿಯೊಂದೂ ಶಾಸನಬದ್ಧ ಅಗತ್ಯಗಳನ್ನು ನಿರ್ಧರಿಸಬೇಕು ಎಂದು ಸಿಜೆಐ ಹೇಳಿದರು. ಆರು ದೇಶಗಳಲ್ಲಿ ಧಾರ್ಮಿಕ ಕಿರುಕುಳಕ್ಕೊಳಗಾದ ಅಲ್ಪಸಂಖ್ಯಾತರಿಗೆ ‘ಜಾರಿಗೊಳಿಸಬಹುದಾದ ಹಕ್ಕುಗಳನ್ನು’ ನೀಡುವುದನ್ನು ಪ್ರತಿಪಾದಿಸಿರುವ ಬದಲಾವಣೆಗಳನ್ನು ಸಿಎಎಗೆ ತಂದಿದ್ದರೂ,ಇಂತಹ ಪ್ರತಿಯೊಂದೂ ಹಕ್ಕು ಕೋರಿಕೆಯನ್ನು ಅಧಿಕಾರಿಗಳು ಪರಿಶೀಲಿಸಬೇಕಾಗುತ್ತದೆ ಮತ್ತು ನಿರ್ಧಾರವನ್ನು ತೆಗೆದುಕೊಳ್ಳಬೇಕಾಗುತ್ತದೆ ಎಂದು ನ್ಯಾಯಾಲಯವು ಹೇಳಿತು. ನೆರೆಯ ಮೂರು ದೇಶಗಳಿಂದ,ವಿಶೇಷವಾಗಿ ಬಾಂಗ್ಲಾದೇಶದಿಂದ ಪರಾರಿಯಾಗಿ ಬಂದಿರುವ ಧಾರ್ಮಿಕ ಅಲ್ಪಸಂಖ್ಯಾತರು ಪಶ್ಚಿಮ ಬಂಗಾಳದಲ್ಲಿ ವಾಸವಾಗಿದ್ದಾರೆ ಮತ್ತು ಪ್ರಸ್ತುತ ನಡೆಯುತ್ತಿರುವ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆಯು (ಎಸ್‌ಐಆರ್) ತಮ್ಮನ್ನು ದೇಶರಹಿತರನ್ನಾಗಿಸುತ್ತದೆ ಎಂಬ ಭೀತಿಯಲ್ಲಿದ್ದಾರೆ ಎಂದು ಅರ್ಜಿದಾರರು ಹೇಳಿದ್ದರು. ಅಧಿಕಾರಿಗಳು ಪೌರತ್ವ ಪ್ರಮಾಣಪತ್ರ ನೀಡಿಕೆಯನ್ನು ವಿಳಂಬಿಸಿದ್ದಾರೆ ಮತ್ತು ಪ್ರಸ್ತುತ ನಡೆಯುತ್ತಿರುವ ಎಸ್‌ಐಆರ್ ಪ್ರಕ್ರಿಯೆಯಲ್ಲಿ ಸ್ವೀಕೃತಿ ರಸೀದಿಗೆ ಮಾನ್ಯತೆ ನೀಡದಿರುವುದು ಸಾಂವಿಧಾನಿಕ ಬಿಕ್ಕಟ್ಟಿಗೆ ಕಾರಣವಾಗಿದೆ ಎಂದೂ ಅರ್ಜಿಯಲ್ಲಿ ಹೇಳಲಾಗಿದೆ. ಸರಕಾರವು ಕಾನೂನನ್ನು ಮಾಡಿದ್ದರೆ ಅದನ್ನು ಜಾರಿಗೊಳಿಸಲು ಅನುಸರಣಾ ಕಾರ್ಯವಿಧಾನವು ಇರುತ್ತದೆ ಎಂದು ಹೇಳಿದ ಸಿಜೆಐ,ವಲಸಿಗರು ಸೂಕ್ತ ಪ್ರಕ್ರಿಯೆಯ ಮೂಲಕ ಸಹಜ ಪ್ರಜೆಗಳಾದ ನಂತರ ಮತದಾರರ ಪಟ್ಟಿಯಲ್ಲಿ ನೋಂದಣಿಗಾಗಿ ಶಾಸನಬದ್ಧ ಯೋಜನೆಯಡಿ ಅರ್ಜಿ ಸಲ್ಲಿಸಬಹುದು ಎಂದರು.

ವಾರ್ತಾ ಭಾರತಿ 10 Dec 2025 3:31 pm

Explained: ಪಾಕಿಸ್ತಾನದಲ್ಲಿ ಭುಗಿಲೆದ್ದ ʼಸಿಂಧ್‌ʼ ಪ್ರತ್ಯೇಕ ರಾಷ್ಟ್ರ ಕೂಗು: ಪಾಕ್‌ ನಾಯಕರ ನಿದ್ದೆಗೆಡಿಸಿದ ಪ್ರತಿಭಟನೆಗೆ ಕಾರಣವೇನು? ಇಭ್ಬಾಗವಾಗುತ್ತಾ ಪಾಕಿಸ್ತಾನ ?

ಪಾಕಿಸ್ತಾನದ ಕರಾಚಿಯಲ್ಲಿ 'ಸಿಂಧೂ ದೇಶ'ಕ್ಕಾಗಿ ಪ್ರತ್ಯೇಕತಾವಾದಿ ಪ್ರತಿಭಟನೆಗಳು ತೀವ್ರಗೊಂಡಿವೆ. ಭಾರತದ ರಕ್ಷಣಾ ಸಚಿವ ರಾಜ್‌ನಾಥ್‌ ಸಿಂಗ್ ಸಿಂಧೂ ಭಾರತದ ಭಾಗವಾಗಲಿದೆ ಎಂದ ಹೇಳಿಕೆ ನೀಡಿದ ಬೆನ್ನಲ್ಲೇ ಈ ಪ್ರತಿಭಟನೆಗಳು ಪಾಕಿಸ್ತಾನದಲ್ಲಿ ಹೊಸ ತಲೆನೋವಾಗಿ ಪರಿಣಮಿಸಿದೆ. ಸಿಂಧ್ ಸಮುದಾಯದವರು ತಮ್ಮ ಹಕ್ಕುಗಳ ಉಲ್ಲಂಘನೆ ಮತ್ತು ತಾರತಮ್ಯದ ವಿರುದ್ಧ ಧ್ವನಿ ಎತ್ತಿದ್ದಾರೆ. ಪಾಕಿಸ್ತಾನದಲ್ಲಿ ಭುಗಿಲೆದ್ದ ಸಿಂಧ್‌ ಸಮುದಾಯದ ಆಕ್ರೋಶಕ್ಕೆ ಕಾರಣ ತಿಳಿಯೋಣ..

ವಿಜಯ ಕರ್ನಾಟಕ 10 Dec 2025 3:30 pm

ಧರ್ಮಸ್ಥಳ ವಿರುದ್ಧ ನಡೆದ ಷಡ್ಯಂತ್ರಕ್ಕೆ ಅಚ್ಚರಿಯ ಕಾರಣ ಕೊಟ್ಟ ಡಿಕೆ ಶಿವಕುಮಾರ್! ಬೊಟ್ಟು ಮಾಡಿದ್ದು ಯಾರತ್ತಾ?

ಬೆಳಗಾವಿಯಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಧರ್ಮಸ್ಥಳದ ಷಡ್ಯಂತ್ರದ ಬಗ್ಗೆ ಮಾತನಾಡಿದರು. ಬಿಜೆಪಿ ಮತ್ತು ಆರ್‌ಎಸ್‌ಎಸ್ ನಡುವಿನ ಭಿನ್ನಾಭಿಪ್ರಾಯವೇ ಇದಕ್ಕೆ ಕಾರಣ ಎಂದರು. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ರಿಕೆಟ್ ಪಂದ್ಯಗಳಿಗೆ ಅನುಮತಿ ನೀಡುವ ಬಗ್ಗೆ ಸಚಿವ ಸಂಪುಟದಲ್ಲಿ ತೀರ್ಮಾನಿಸಲಾಗುವುದು. ರೈತರ ಸಮಸ್ಯೆಗಳನ್ನು ಬಗೆಹರಿಸಿದ್ದೇವೆ ಎಂದರು. ದ್ವೇಷ ಭಾಷಣ ನಿಯಂತ್ರಣ ವಿಧೇಯಕ ಸರ್ಕಾರದ ಅಜೆಂಡಾ ಎಂದು ತಿಳಿಸಿದರು.

ವಿಜಯ ಕರ್ನಾಟಕ 10 Dec 2025 3:30 pm

ಕಾಸರಗೋಡು | 48 ಸ್ಥಳೀಯಾಡಳಿತ ಸಂಸ್ಥೆಗಳಿಗೆ ಡಿ.11ರಂದು ಚುನಾವಣೆ: 1370 ಮತಗಟ್ಟೆಗಳು ಸಜ್ಜು

ಕಾಸರಗೋಡು: ಜಿಲ್ಲೆಯಲ್ಲಿ ಸ್ಥಳೀಯಾಡಳಿತ ಸಂಸ್ಥೆಗಳಿಗೆ ಡಿ.11ರಂದು ಚುನಾವಣೆ ನಡೆಯಲಿದ್ದು, ಮತಗಟ್ಟೆಗಳಿರುವ ಮತಯಂತ್ರ ಹಾಗೂ ಸಾಮಗ್ರಿಗಳನ್ನು ಇಂದು ಬೆಳಗ್ಗೆ ವಿತರಿಸಲಾಯಿತು. ನಾಳೆ ಬೆಳಗ್ಗೆ 7ರಿಂದ ಸಂಜೆ 6 ಗಂಟೆ ತನಕ ಮತದಾನ ನಡೆಯಲಿದೆ. ಡಿ.13ರಂದು ಫಲಿತಾಂಶ ಹೊರಬೀಳಲಿದೆ. ಜಿಲ್ಲೆಯ 38 ಗ್ರಾಮ ಪಂಚಾಯತ್ ಗಳು, ಮೂರು ನಗರಸಭೆ, ಆರು ಬ್ಲಾಕ್ ಪಂಚಾಯತ್ ಹಾಗೂ ಒಂದು ಜಿಲ್ಲಾ ಪಂಚಾಯತ್ ಸೇರಿದಂತೆ 48 ಸ್ಥಳೀಯಾಡಳಿತ ಸಂಸ್ಥೆಗಳಿಗೆ ಚುನಾವಣೆ ನಡೆಯಲಿದೆ.   ಗ್ರಾಮ ಪಂಚಾಯತ್ ಗಳ 725 ವಾರ್ಡ್ ಗಳಿಗೆ ಒಟ್ಟು 1,242 ಮತಗಟ್ಟೆಗಳನ್ನು ಸಜ್ಜುಗೊಳಿಸಲಾಗಿದೆ. ನಗರಸಭೆಗಳ 120 ವಾರ್ಡ್ ಗಳಿಗೆ 128 ಮತಗಟ್ಟೆಗಳು ಸೇರಿದಂತೆ ಒಟ್ಟು 1,370 ಮತಗಟ್ಟೆಗಳನ್ನು ಸಜ್ಜುಗೊಳಿಸಲಾಗಿದೆ. ಬ್ಲಾಕ್ ಪಂಚಾಯತ್ ಗಳ 92 ಡಿವಿಜನ್ ಗಳಿಗೆ ಹಾಗೂ ಜಿಲ್ಲಾ ಪಂಚಾಯತ್ ನ 18 ವಾರ್ಡ್ ಗಳು ಸೇರಿದಂತೆ 955 ವಾರ್ಡ್ ಗಳಿಗೆ ಮತದಾನ ನಡೆಯಲಿದೆ. ಜಿಲ್ಲೆಯಲ್ಲಿ 11,12,190 ಮತದಾರರಿದ್ದಾರೆ. ಈ ಪೈಕಿ 5,24,022 ಪುರುಷರು ಹಾಗೂ 5,88,156 ಮಹಿಳಾ ಮತದಾರರಿದ್ದಾರೆ.12 ಮಂಗಳಮುಖಿಯರು, 129 ಅನಿವಾಸಿ ಭಾರತೀಯ ಮತದಾರರು ಒಳಗೊಂಡಿದ್ದಾರೆ. ಒಟ್ಟು 1370 ಮತಗಟ್ಟೆಗಳನ್ನು ಸಜ್ಜುಗೊಳಿಸಲಾಗಿದೆ. ಮತಯಂತ್ರ ಸೇರಿದಂತೆ ಚುನಾವಣಾ ಸಾಮಗ್ರಿಗಳ ವಿತರಣೆಗೆ ಆರು ಬ್ಲಾಕ್ ಪಂಚಾಯತ್ ಹಾಗೂ ಮೂರು ನಗರಸಭಾ ಮಟ್ಟದಲ್ಲಿ ಮೂರು ಸೇರಿದಂತೆ 9 ಕೇಂದ್ರಗಳನ್ನು ವ್ಯವಸ್ಥೆ ಗೊಳಿಸಲಾಗಿದೆ.   ಡಿ.11ರಂದು ಬೆಳಗ್ಗೆ 7ರಿಂದ ಸಂಜೆ 6 ಗಂಟೆಯ ತನಕ ಮತದಾನ ನಡೆಯಲಿದೆ 119 ಸೂಕ್ಷ್ಮ ಮತಗಟ್ಟೆಗಳೆಂದು ಗುರುತಿಸಲಾಗಿದೆ. ಸೂಕ್ಷ್ಮ ಮತಗಟ್ಟೆಗಳಲ್ಲಿ ವೆಬ್ ಕಾಸ್ಟಿಂಗ್ ವ್ಯವಸ್ಥೆ ಮಾಡಲಾಗುವುದು. ಚುನಾವಣಾ ಕರ್ತವ್ಯಕ್ಕೆ 6,584 ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. 2,855 ಅಭ್ಯರ್ಥಿಗಳು ಜಿಲ್ಲೆಯಲ್ಲಿ 2,855 ಅಭ್ಯರ್ಥಿಗಳು ಸ್ಪರ್ಧಾ ಕಣದಲ್ಲಿದ್ದಾರೆ. 1,312 ಪುರುಷರು, 1,473 ಮಹಿಳೆಯರು ಒಳಗೊಂಡಿದ್ದಾರೆ.ಜಿಲ್ಲಾ ಪಂಚಾಯತ್ ನ 18 ಡಿವಿಜನ್ ಗಳಿಗೆ 62 ಅಭ್ಯರ್ಥಿಗಳು, ಆರು ಬ್ಲಾಕ್ ಪಂಚಾಯತ್ ಗಳಿಗೆ 293 ಅಭ್ಯರ್ಥಿಗಳು, 38 ಗ್ರಾಮ ಪಂಚಾಯತ್ ಗಳಿಗೆ 2,167 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಮೂರು ನಗರಸಭೆಗಳಿಗೆ 333 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಮತಗಟ್ಟೆ ಕೇಂದ್ರಗಳಿಗೆ ರಜೆ ಮತಗಟ್ಟೆಗಳೆಂದು ಗುರುತಿಸಿರುವ ಶೈಕ್ಷಣಿಕ ಸಂಸ್ಥೆಗಳಿಗೆ ಡಿ.10 ಮತ್ತು 11ರಂದು ರಜೆ ಘೋಷಿಸಿ ಜಿಲ್ಲಾ ಚುನಾವಣಾಧಿಕಾರಿಯಾಗಿರುವ ಜಿಲ್ಲಾಧಿಕಾರಿ ಕೆ.ಇನ್ಬಾ ಶೇಖರ್ ಆದೇಶ ನೀಡಿದ್ದಾರೆ. ಮತ ಎಣಿಕೆ ನಡೆಯುವ ಶೈಕ್ಷಣಿಕ ಸಂಸ್ಥೆಗಳಿಗೆ ಡಿ.13ರಂದು ರಜೆ ಘೋಷಿಸಲಾಗಿದೆ. ಮತಗಟ್ಟೆಗಳೆಂದು ಗುರುತಿಸುವ 158 ಅಂಗನವಾಡಿ ಕೇಂದ್ರಗಳಿಗೂ ರಜೆ ಅನ್ವಯವಾಗಲಿದೆ.

ವಾರ್ತಾ ಭಾರತಿ 10 Dec 2025 3:28 pm

Arecanut: ಅಡಿಕೆ ದರ ಮತ್ತಷ್ಟು ಕುಸೀತಾ? ರೈತರಲ್ಲಿ ಆತಂಕ

ರಾಜ್ಯದ ರೈತರಿಗೆ ಇದೀಗ ಆಘಾತಕಾರಿ ಪರಿಸ್ಥಿತಿ ಎದುರಾಗುತ್ತಿದೆ. ಅದರಲ್ಲೂಅಡಿಕೆ ಕೃಷಿಯನ್ನೇ ನಂಬಿ ಬದುಕುತ್ತಿರುವ ಕೃಷಿಕರಿಗೆ ಇದೀಗ ಸಂಕಷ್ಟ ಎದುರಾಗುವಂತೆ ಮಾಡಿದೆ… ದೇಶದಲ್ಲಿ ಅಡಿಕೆ ಬೆಲೆಗಳು ಕುಸಿಯುವ ಭೀತಿ ಹೆಚ್ಚುತ್ತಿರುವುದು ಇವರಲ್ಲಿ ಆತಂಕ ಉಂಟುಮಾಡಿದೆ. WHO ಎಚ್ಚರಿಕೆ ವಿಶ್ವ ಆರೋಗ್ಯ ಸಂಸ್ಥೆ (WHO) ಅಡಿಕೆ ಸೇವನೆಯು ಬಾಯಿಯ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತದೆ ಎಂದು ಈ ಹಿಂದೆ ಎಚ್ಚರಿಸಿದೆ. ಇದನ್ನು ಅನೇಕ ವೈದ್ಯಕೀಯ ಅಧ್ಯಯನಗಳು ದೃಢಪಡಿಸಿದ್ದರೇ, ಆರೋಗ್ಯಕ್ಕೆ ಸಂಬಂಧಿಸಿದ ಯಾವುದೇ ಲಾಭಗಳ ಬಗ್ಗೆ ಸ್ಪಷ್ಟ ವೈದ್ಯಕೀಯ ಸಾಬೀತುಗಳಿಲ್ಲ ಎಂದು ತಜ್ಞರು ... Read more The post Arecanut: ಅಡಿಕೆ ದರ ಮತ್ತಷ್ಟು ಕುಸೀತಾ? ರೈತರಲ್ಲಿ ಆತಂಕ appeared first on Karnataka Times .

ಕರ್ನಾಟಕ ಟೈಮ್ಸ್ 10 Dec 2025 3:15 pm

ಭೂ ಕಂದಾಯ ಕಾಯ್ದೆ ತಿದ್ದುಪಡಿ: ರಾಜ್ಯದಲ್ಲಿ ಭೂ ಪರಿವರ್ತನೆ ಈಗ ಮತ್ತಷ್ಟು ಸುಲಭ ಸರಳ ಲಂಚಮುಕ್ತ - ಕಂದಾಯ ಸಚಿವ

ಕರ್ನಾಟಕ ಭೂ ಕಂದಾಯ ಕಾಯ್ದೆ 1964ರ ತಿದ್ದುಪಡಿಗೆ ಕರಡು ಸಿದ್ಧವಾಗಿದ್ದು, ಮುಂದಿನ ತಿಂಗಳಲ್ಲಿ ಅಧಿಸೂಚನೆ ಹೊರಡಿಸಿ ಜಾರಿಗೆ ತರಲಾಗುವುದು. ಭೂ ಪರಿವರ್ತನೆಯನ್ನು ಸರಳೀಕರಿಸಿ, ಆನ್‌ಲೈನ್ ಅರ್ಜಿ ಸೌಲಭ್ಯ ಕಲ್ಪಿಸಲಾಗಿದೆ. 30 ದಿನಗಳಲ್ಲಿ ಪರಿವರ್ತನೆಗೆ ಅವಕಾಶ, ಇಲ್ಲದಿದ್ದರೆ ಸ್ವಯಂ ಮಂಜೂರಿ ದೊರೆಯಲಿದೆ. ಸಣ್ಣ ಕೈಗಾರಿಕೆಗಳಿಗೆ 2 ಎಕರೆ ವರೆಗೆ ಪರಿವರ್ತನೆ ಅಗತ್ಯವಿಲ್ಲ.

ವಿಜಯ ಕರ್ನಾಟಕ 10 Dec 2025 2:54 pm

ಭಾರತದಲ್ಲಿ 2030ರ ವೇಳೆಗೆ $35 ಬಿಲಿಯನ್ ಹೂಡಿಕೆ ಮಾಡಲಿದೆ ಅಮೆಜಾನ್: 10 ಲಕ್ಷ ಉದ್ಯೋಗ ಸೃಷ್ಟಿಯ ಗುರಿ

ಅಮೆಜಾನ್ 2030ರ ವೇಳೆಗೆ ಭಾರತದಲ್ಲಿ 35 ಬಿಲಿಯನ್ ಡಾಲರ್ ಹೂಡಿಕೆ ಮಾಡಲಿದೆ. ಕೃತಕ ಬುದ್ಧಿಮತ್ತೆ, ರಫ್ತು ಬೆಳವಣಿಗೆ ಮತ್ತು ಉದ್ಯೋಗ ಸೃಷ್ಟಿಗೆ ಈ ಹೂಡಿಕೆ ಮಾಡಲಾಗುತ್ತಿದ್ದು, ಭಾರತದಿಂದ ರಫ್ತು ಪ್ರಮಾಣವನ್ನು ನಾಲ್ಕು ಪಟ್ಟು ಹೆಚ್ಚಿಸಿ, 10 ಲಕ್ಷ ಉದ್ಯೋಗ ಸೃಷ್ಟಿಸುವ ಗುರಿ ಹೊಂದಿದೆ.

ವಿಜಯ ಕರ್ನಾಟಕ 10 Dec 2025 2:45 pm

ಹಳೆ ಬಂದರಿನಲ್ಲಿ ಲಕ್ಷದ್ವೀಪ ಜೆಟ್ಟಿ ಅಭಿವೃದ್ಧಿ-ಪರಿಸರ ಸಾರ್ವಜನಿಕ ಸಭೆ

ಸ್ಥಳೀಯರು, ಮೀನುಗಾರರಿಗೆ ತೊಂದರೆ ಇಲ್ಲದೆ ಕಾಮಗಾರಿಗೆ ಸಲಹೆ

ವಾರ್ತಾ ಭಾರತಿ 10 Dec 2025 2:36 pm

ದೆಹಲಿ ಹೈಕೋರ್ಟ್‌ನಿಂದ ಇಂಡಿಗೋಗೆ ಪ್ರಯಾಣಿಕರಿಗೆ ಪರಿಹಾರ ನೀಡುವಂತೆ ಆದೇಶ

ಇಂಡಿಗೋ ವಿಮಾನಗಳ ರದ್ದತಿಯಿಂದಾಗಿ ಪ್ರಯಾಣಿಕರು ಪರದಾಡುತ್ತಿದ್ದಾರೆ. ದೆಹಲಿ ಹೈಕೋರ್ಟ್ ಪ್ರಯಾಣಿಕರಿಗೆ ಪರಿಹಾರ ನೀಡಲು ಆದೇಶಿಸಿದೆ. ವಿಮಾನ ದರ ಏರಿಕೆಯನ್ನು ನ್ಯಾಯಾಲಯ ತೀವ್ರವಾಗಿ ಖಂಡಿಸಿದೆ. ಕೇಂದ್ರ ಸರ್ಕಾರದ ನಿರ್ಲಕ್ಷ್ಯವನ್ನು ನ್ಯಾಯಾಲಯ ಪ್ರಶ್ನಿಸಿದೆ. ಈ ಬಿಕ್ಕಟ್ಟಿನಿಂದಾಗಿ ವಿಮಾನ ದರಗಳು ಗಗನಕ್ಕೇರಿದ್ದವು. ಮುಂದಿನ ವಿಚಾರಣೆ ಜನವರಿ 22, 2026 ರಂದು ನಡೆಯಲಿದೆ.

ವಿಜಯ ಕರ್ನಾಟಕ 10 Dec 2025 2:35 pm

Bhavitha Mandava: ಚಾನೆಲ್‌ನ 2026 ಫ್ಯಾಷನ್ ಶೋ ಉದ್ಘಾಟಿಸಿದ ಭವಿತಾ ಮಂಡವ: ಮಾಡೆಲ್‌ ಆಗಿ ಸಾಧನೆ..

ನ್ಯೂಯಾರ್ಕ್ ನಗರದಲ್ಲಿ ಮ್ಯಾಥಿಯು ಬ್ಲೇಜಿ ಅವರ ಚಾನೆಲ್‌ನ ಮೀಟಿಯರ್ಸ್ ಡಿ'ಆರ್ಟ್ 2026 ಪ್ರದರ್ಶನ ಉದ್ಘಾಟಿಸುವ ಮೂಲಕ 'ಭವಿತ ಮಾಂಡವ' (Bhavitha Mandava) ಅವರ ಮಾಡೆಲ್ ವೃತ್ತಿಜೀವನದ ನಿರ್ಣಾಯಕ ಕ್ಷಣ ಆನಂದಿಸಿದ್ದಾರೆ. ಪೋಷಕರ ಕಂಗಳಲ್ಲಿ ಮಗಳ ಕನಸು ನನಸಾಗಿದ್ದು ಕಂಡು ಭಾವುಕರಾದರು. ಭವಿತಾ ಯುವ ಮಾಡೆಲ್ ಆಗಿದ್ದರ ಹಿಂದಿನ ಕಥೆ ಕುರಿತು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇದಕ್ಕೆ

ಒನ್ ಇ೦ಡಿಯ 10 Dec 2025 2:29 pm

‘ನಾನು ಕಾರ್ಯಕ್ರಮಕ್ಕೆ ಹೋಗುವುದಿಲ್ಲ’: ಸಾವರ್ಕರ್ ಪ್ರಶಸ್ತಿಯನ್ನು ತಿರಸ್ಕರಿಸಿದ ಶಶಿ ತರೂರ್

ಹೊಸದಿಲ್ಲಿ: ಸ್ವಯಂಸೇವಕ ಸಂಘಟನೆ HRDS ಇಂಡಿಯಾ ನೀಡುವ ಸಾವರ್ಕರ್ ಅಂತರರಾಷ್ಟ್ರೀಯ ಇಂಪ್ಯಾಕ್ಟ್ ಪ್ರಶಸ್ತಿ–2025 ಪುರಸ್ಕೃತರ ಪಟ್ಟಿಯಲ್ಲಿ ಕಾಂಗ್ರೆಸ್ ಸಂಸದ ಶಶಿ ತರೂರ್ ಅವರ ಹೆಸರು ಸೇರಿತ್ತು. ಆದರೆ ಆಯ್ಕೆ ಕುರಿತು ಯಾವುದೇ ಮಾಹಿತಿ ನೀಡದೆ ತಮ್ಮ ಹೆಸರನ್ನು ಪ್ರಕಟಿಸಿರುವುದನ್ನು ತೀವ್ರ ವಿರೋಧಿಸಿರುವ ತರೂರ್, ಪ್ರಶಸ್ತಿಯನ್ನು ಸ್ವೀಕರಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಈ ಪ್ರಶಸ್ತಿ ಪ್ರದಾನ ಸಮಾರಂಭ ಡಿ. 10ರಂದು ಹೊಸದಿಲ್ಲಿಯ NDMC ಕನ್ವೆನ್ಷನ್ ಹಾಲ್‌ನಲ್ಲಿ ನಡೆಯಲಿದ್ದು, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಆದರೆ ತರೂರ್ ತಮ್ಮನ್ನು ಪ್ರಶಸ್ತಿ ಪುರಸ್ಕೃತರಾಗಿ ಘೋಷಿಸಿರುವುದೇ ಮಾಧ್ಯಮ ವರದಿಗಳ ಮೂಲಕ ತಿಳಿದ ಮಾಹಿತಿಯೇ ಹೊರತು, ಸಂಘಟಕರಿಂದ ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲವೆಂದು ಹೇಳಿದ್ದಾರೆ. “ನನಗೆ ಏನೂ ತಿಳಿದಿಲ್ಲ. ನಿನ್ನೆ ಮಾತ್ರ ಇದರ ಬಗ್ಗೆ ಕೇಳಿದೆ. ನಾನು ಕಾರ್ಯಕ್ರಮಕ್ಕೆ ಹೋಗುವುದಿಲ್ಲ,” ಎಂದು ಅವರು ಪ್ರತಿಕ್ರಿಯಿಸಿದ್ದಾರೆ. X‌ ನಲ್ಲಿ ಪ್ರಕಟಿಸಿದ ಹೇಳಿಕೆಯಲ್ಲಿ ತರೂರ್, “ಪ್ರಶಸ್ತಿಯ ಸ್ವರೂಪ, ಅದನ್ನು ನೀಡುವ ಸಂಸ್ಥೆಯ ಹಿನ್ನೆಲೆ, ಅಥವಾ ಸಂಬಂಧಿತ ಯಾವುದೇ ವಿವರ ನನಗೆ ತಿಳಿದಿಲ್ಲ. ನನ್ನ ಒಪ್ಪಿಗೆಯಿಲ್ಲದೆ ನನ್ನ ಹೆಸರನ್ನು ಘೋಷಿಸಿರುವುದು ಬೇಜವಾಬ್ದಾರಿ ನಡೆ,” ಎಂದು ಟೀಕಿಸಿದ್ದಾರೆ. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಆರು ಮಂದಿಯನ್ನು ಈ ವರ್ಷ ಪ್ರಶಸ್ತಿಗೆ ಗುರುತಿಸಿದ್ದು, ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿನ ತರೂರ್ ಅವರ ಪ್ರಭಾವವೇ ಆಯ್ಕೆ ಮಾಡುವುದಕ್ಕೆ ಕಾರಣವೆಂದು HRDS ಇಂಡಿಯಾ ತಿಳಿಸಿದೆ. ಇನ್ನೊಂದೆಡೆ, ಕಾಂಗ್ರೆಸ್ ನಾಯಕ ಕೆ. ಮುರಳೀಧರನ್, “ಕಾಂಗ್ರೆಸ್ಸಿಗರು ಸಾವರ್ಕರ್ ಹೆಸರಿನ ಪ್ರಶಸ್ತಿಯನ್ನು ಸ್ವೀಕರಿಸುವುದು ಸೂಕ್ತವಲ್ಲ,” ಎಂದು ಪ್ರತಿಕ್ರಿಯಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಪ್ರಧಾನಿ ಮೋದಿ ಪರವಾಗಿ ನೀಡಿದ ಕೆಲ ಹೇಳಿಕೆಗಳ ಹಿನ್ನೆಲೆಯಲ್ಲಿ ತರೂರ್ ಕಾಂಗ್ರೆಸ್ ಪಕ್ಷದ ಆಂತರಿಕ ವಲಯದಲ್ಲಿ ಚರ್ಚೆಗೆ ಕಾರಣರಾಗಿದ್ದರು.

ವಾರ್ತಾ ಭಾರತಿ 10 Dec 2025 2:24 pm

ಬಾಗಲಕೋಟೆ | ಬಸ್ ಹತ್ತುವ ವೇಳೆ ಮಹಿಳೆಯ ಮಾಂಗಲ್ಯ ಸರ ಕಳವು

ಬಾಗಲಕೋಟೆ : ಬಸ್ ಹತ್ತುವ ಸಂದರ್ಭದಲ್ಲಿ ಮಹಿಳೆಯೊಬ್ಬರ ಬ್ಯಾಗಿನಲ್ಲಿದ್ದ ಬಂಗಾರದ ಮಾಂಗಲ್ಯ ಸರ ಕಳುವಾದ ಘಟನೆ ಬಾಗಲಕೋಟೆ ಜಿಲ್ಲೆಯ ಇಲಕಲ್ ಬಸ್ ನಿಲ್ದಾಣದಲ್ಲಿ ನಡೆದಿದೆ. ಮಲ್ಲಾಪೂರ ಗ್ರಾಮದ ಬಸಮ್ಮ ರಾಜನಾಳ ಅವರು ಗಜೇಂದ್ರಗಡಕ್ಕೆ ತೆರಳಲು ಇಲಕಲ್ ನಿಲ್ದಾಣದಲ್ಲಿ ಬಸ್ ಹತ್ತುವಾಗ, ಕಳ್ಳರು ಬ್ಯಾಗಿನ ಚೀಪ್ ಅನ್ನು ತೆರೆದು, ಬ್ಯಾಗ್‌ನಲ್ಲಿ ಇರಿಸಲಾಗಿದ್ದ ಸುಮಾರು 40 ಗ್ರಾಂ ಬಂಗಾರದ ಮಾಂಗಲ್ಯ ಸರವನ್ನು ಅಪಹರಿಸಿದ್ದಾರೆ. ಮಹಿಳೆ ಬಸ್ ಹತ್ತಿ ಸೀಟ್‌ನಲ್ಲಿ ಕುಳಿತ ಬಳಿಕ ಸಂಬಂಧಿಕರು ಬ್ಯಾಗಿನ ಚೀಪ್ ತೆರೆಯಲ್ಪಟ್ಟಿರುವುದನ್ನು ಗಮನಿಸಿ ತಿಳಿಸಿದ ನಂತರ ಮಹಿಳೆ ಹುಡುಕಿದರೂ ಚಿನ್ನ ಸಿಕ್ಕದೇ ಪರಿತಪಿಸಿದ್ದು, ಜೋರಾಗಿ ಕಿರುಚಿ ಹಾಯ ಕೇಳಿದ್ದಾರೆ. ತಕ್ಷಣ ಬಸ್‌ ಅನ್ನು ಇಳಕಲ್ ನಗರ ಪೊಲೀಸ್ ಠಾಣೆಗೆ ಕರೆ ತರಲಾಗಿದೆ. ನಂತರ ಪೋಲಿಸರು ಬಸ್‌ನಲ್ಲಿದ್ದ ಎಲ್ಲ ಪ್ರಯಾಣಿಕರನ್ನೂ ಹಾಗೂ ಅವರ ಬ್ಯಾಗ್‌ಗಳನ್ನು ಪರಿಶೀಲಿಸಿದರೂ ಚಿನ್ನ ಪತ್ತೆಯಾಗಿಲ್ಲ. ನಂತರ ಬಸ್‌ನ್ನು ಬಿಡಲಾಗಿದ್ದು, ಪ್ರಕರಣದ ಬಗ್ಗೆ ಇಲಕಲ್ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ವಾರ್ತಾ ಭಾರತಿ 10 Dec 2025 2:22 pm

Tirupati-Shirdi Train: 04 ರಾಜ್ಯಗಳ ಮಾರ್ಗವಾಗಿ ಹೊಸ ರೈಲು ಸೇವೆ ಆರಂಭ: ನಿಲುಗಡೆ, ವೇಳಾಪಟ್ಟಿ ಇಲ್ಲಿದೆ

Tirupati-Shirdi Train: ನಾಲ್ಕು ರಾಜ್ಯಗಳಿಗೆ ಸಂಪರ್ಕ ಸೇತುವೆಯಾಗಿ ಪ್ರಮುಖ ಧಾರ್ಮಿಕ ಕ್ಷೇತ್ರಗಳವರೆಗೆ ಸೇವೆ ನೀಡುವ ಪ್ರಮುಖ ರೈಲು ಸಂಚಾರಕ್ಕೆ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಅವರು ಚಾಲನೆ ನೀಡಿದ್ದಾರೆ. ಈ ಮೂಲಕ ಬಹುದಿನಗಳ ಪ್ರಯಾಣಿಕರ ಬೇಡಿಕೆ ಈಡೇರಿದಂತಾಗಿದೆ. ತಿರುಪತಿ - ಸಾಯಿನಗರ ಶಿರಡಿ ಎಕ್ಸ್‌ಪ್ರೆಸ್‌ ರೈಲು ಇದಾಗಿದ್ದು, ಒಟ್ಟು ಸುಮಾರು 1000 ಕಿಲೋ ಮೀಟರ್‌ಗೂ ದೂರ

ಒನ್ ಇ೦ಡಿಯ 10 Dec 2025 2:07 pm

ಲಡ್ಡು ವಿವಾದವಾಯ್ತು ಈಗ ರೇಷ್ಮೆ; ತಿಮ್ಮಪ್ಪನ ದೇಗುಲಕ್ಕೆ ನಕಲಿ ರೇಷ್ಮೆ ದುಪ್ಪಟ್ಟಾ ಪೂರೈಕೆ

ತಿರುಪತಿ ಲಡ್ಡುವಿಗೆ ಬಳಸಿದ ತುಪ್ಪದಲ್ಲಿ ಪ್ರಾಣಿ ಕೊಬ್ಬು ಬಳಕೆ, ದೇಣಿಗೆ ಕಳ್ಳತನ ಮಾಡಿದ ಪ್ರಕರಣಗಳು ಇನ್ನು ತಣ್ಣಗಾಗದ ಬೆನ್ನಲ್ಲೇ, ತಿರುಮಲ ತಿರುಪತಿಯಲ್ಲಿ ಮತ್ತೊಂದು ಹಗರಣವನ್ನು ಟಿಟಿಡಿ ಬಯಲಿಗೆಳೆದಿದೆ. 15,000‌ ರೇಷ್ಮೆ ದುಪಟ್ಟಾವನ್ನು ಎಂದು ಹೇಳಿಕೊಂಡು ನಕಲಿ ಶಾಲನ್ನು ಪೂರೈಕೆ ಮಾಡಿರುವುದು ಬೆಳಕಿಗೆ ಬಂದಿದೆ. ಇದರಿಂದ ದೇವಸ್ಥಾನಕ್ಕೆ 54 ಕೋಟಿ ರೂ.ಗೂ ಹೆಚ್ಚು ನಷ್ಟ ಉಂಟಾಗಿದೆ ಎಂದು ಟಿಟಿಡಿ ಹೇಳಿಕೊಂಡಿದೆ.

ವಿಜಯ ಕರ್ನಾಟಕ 10 Dec 2025 2:06 pm

ಪಡುಬಿದ್ರಿ | ಬೈಕ್ ಢಿಕ್ಕಿ: ಪಾದಾಚಾರಿ ಮೃತ್ಯು

ಪಡುಬಿದ್ರೆ, ಡಿ.10: ಬೈಕೊಂದು ಢಿಕ್ಕಿ ಹೊಡೆದ ಪರಿಣಾಮ ರಸ್ತೆ ದಾಟುತ್ತಿದ್ದ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಮಂಗಳವಾರ ರಾತ್ರಿ 8.15ರ ಸುಮಾರಿಗೆ ಉಚ್ಚಿಲ ಮಸೀದಿ ಸಮೀಪದ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನಡೆದಿದೆ. ಮೃತರನ್ನು ಕಿನ್ನಿಗೋಳಿಯ ರೋನಾಲ್ಡ್ ಡಿಸೋಜ(67) ಎಂದು ಗುರುತಿಸಲಾಗಿದೆ. ಉಚ್ಚಿಲದಿಂದ ಕಾಪು ಕಡೆ ಹೋಗುತ್ತಿದ್ದ ಬೈಕ್ ರಸ್ತೆ ದಾಟುತ್ತಿದ್ದ ರೋನಾಲ್ಡ್ ಡಿಸೋಜ ಅವರಿಗೆ ಢಿಕ್ಕಿ ಹೊಡೆಯಿತ್ತೆನ್ನಲಾಗಿದೆ. ಇದರಿಂದ ರಸ್ತೆಗೆ ಬಿದ್ದು ಗಂಭೀರವಾಗಿ ಗಾಯಗೊಂಡ ಇವರು, ಉಡುಪಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರು ಎಂದು ತಿಳಿದು ಬಂದಿದೆ. ಗಾಯಾಳನ್ನು ಎಸ್‌ಡಿಪಿಐ ಅಂಬುಲೆನ್ಸ್‌ನಲ್ಲಿ ಸಾಮಾಜಿಕ ಕಾರ್ಯಕರ್ತ ಜಲಾಲುದ್ದೀನ್ ಉಚ್ಚಿಲ ಹಾಗೂ ಹನೀಫ್ ಆಸ್ಪತ್ರೆಗೆ ದಾಖಲಿಸಿದ್ದರು. ಈ ಬಗ್ಗೆ ಪಡುಬಿದ್ರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಾರ್ತಾ ಭಾರತಿ 10 Dec 2025 2:03 pm

IMD Weather Forecast: 05 ದಿನ ಈ ಭಾಗಗಳಲ್ಲಿ ಶೀತ ಅಲೆ, ಒಣ ಹವೆ ಅಲರ್ಟ್, ಮಳೆ ಮುನ್ಸೂಚನೆ

India Weather Alert: ದೇಶದೆಲ್ಲಡೆ ಮಳೆ ಹವಾಮಾನ ಪರಿಸ್ಥಿತಿ ಕುಗ್ಗಿದೆ. ಹಿಂಗಾರು ಮಳೆ ದುರ್ಬಲಗೊಂಡಿದ್ದು, ದಕ್ಷಿಣ ಹಾಗೂ ಉತ್ತರ ಭಾರತದ ಪ್ರಮುಖ ರಾಜ್ಯಗಳು, ಮಹಾನಗರಗಳಲ್ಲಿ ಚಳಿ ಆವರಿಸಿದೆ. ಬೆಳಬೆಳಗ್ಗೆ ದಟ್ಟ ಮಂಜು, ಮೈಕೊರೆವ ಚಳಿ ಆವರಿಸುತ್ತಿದೆ. ಇದೇ ವಾತಾವರಣ ಮುಂದಿನ 05 ದಿನಗಳ ಕಾಲ ಮುಂದುವರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬಂಗಾಳಕೊಲ್ಲಿ ಸಮುದ್ರ

ಒನ್ ಇ೦ಡಿಯ 10 Dec 2025 2:01 pm

T-20 ತಂಡ ಗೆಲ್ಲುತ್ತಿದೆ ಸರಿ, ಟೆನ್ಶನ್‌ ಕೊಡ್ತಿದೆ SKY ಕಳಪೆ ಬ್ಯಾಟಿಂಗ್‌ ಪ್ರದರ್ಶನದ ಪರಿ

SKY failure : ದಕ್ಷಿಣ ಆಫ್ರಿಕಾದ ಜೊತೆಗಿನ ಆರಂಭಿಕ ಪಂದ್ಯದಲ್ಲಿ ತಂಡ ಪಂದ್ಯವೇನೋ ಗೆದ್ದಿತು. ಆದರೆ, ನಾಯಕ ಸೂರ್ಯ ಕುಮಾರ್ ಯಾದವ್ ಅವರ ವೈಫಲ್ಯ ಮುಂದುವರಿದಿದೆ. ಸಾಮಾಜಿಕ ಜಾಲತಾಣದಲ್ಲಿ ಸೂರ್ಯ ಕುಮಾರ್ ಬಗ್ಗೆ ವ್ಯಾಪಕ ವ್ಯಂಗ್ಯ ಎದುರಾಗುತ್ತಿದೆ. ಕಟಕ್ ನಲ್ಲಿ ನಡೆದ ಮೊದಲ ಟಿ20 ಪಂದ್ಯದಲ್ಲೂ ಸ್ಕೈ ಕಳಪೆ ಪ್ರದರ್ಶನ ನೀಡಿದ್ದಾರೆ.

ವಿಜಯ ಕರ್ನಾಟಕ 10 Dec 2025 1:53 pm

ದ್ವೇಷ ಭಾಷಣಕ್ಕೆ ಗರಿಷ್ಠ 10 ವರ್ಷ ಶಿಕ್ಷೆ, 1 ಲಕ್ಷ ದಂಡ: ವಿಧಾನಸಭೆಯಲ್ಲಿ ಮಸೂದೆ ಮಂಡನೆ, ಬಿಜೆಪಿ ವಿರೋಧ

ರಾಜ್ಯ ಸರ್ಕಾರ ದ್ವೇಷ ಭಾಷಣ ತಡೆಯಲು ಕಠಿಣ ಕ್ರಮ ಕೈಗೊಂಡಿದೆ. ಕರ್ನಾಟಕ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ(ಪ್ರತಿಬಂಧಕ) ವಿಧೇಯಕ ವಿಧಾನಸಭೆಯಲ್ಲಿ ಮಂಡನೆಯಾಗಿದೆ. ಮೊದಲ ಬಾರಿ ತಪ್ಪಿಗೆ 7 ವರ್ಷ ಜೈಲು, 50 ಸಾವಿರ ರೂ ದಂಡ. ಪುನರಾವರ್ತನೆ ಆದರೆ 10 ವರ್ಷ ಜೈಲು, 1 ಲಕ್ಷ ರೂ ದಂಡ ವಿಧಿಸಲಾಗುತ್ತದೆ. ಇದು ನೋಂದಾಯಿತ ಹಾಗೂ ನೋಂದಾಯಿತವಲ್ಲದ ಎರಡು ಸಂಘಟನೆಗಳಿಗೂ ಅನ್ವಯವಾಗಲಿದೆ ಎಂದು ತಿಳಿಸಲಾಗಿದೆ. ಆದರೆ ಇದು ಪರೋಕ್ಷವಾಗಿ ಆರ್ ಎಸ್ ಎಸ್‌ ಟಾರ್ಗೆಟ್‌ ಮಾಡುತ್ತಿರುವ ರೀತಿಯಿದೆ ಎಂದು ಬಿಜೆಪಿ ಈ ಮಸೂದೆಗೆ ಭಾರಿ ವಿರೋಧ ವ್ಯಕ್ತಪಡಿಸಿದೆ.

ವಿಜಯ ಕರ್ನಾಟಕ 10 Dec 2025 1:46 pm

ಸದನದಲ್ಲಿ ಸ್ಪೀಕರ್ ಕ್ಷಮೆಯಾಚಿಸಿದ ಬಿಜೆಪಿ ಶಾಸಕ ಡಾ.ಭರತ್ ಶೆಟ್ಟಿ

ಬೆಳಗಾವಿ(ಸುವರ್ಣ ವಿಧಾನಸೌಧ), ಡಿ. 10: ವಿಧಾನಸಭೆ ಪ್ರಶ್ನೋತ್ತರ ಅವಧಿಯಲ್ಲಿ ಬಾಯಿ ತಪ್ಪಿ ಖಾದರ್ ಅವರೇ ಎಂದು ಸ್ಪೀಕರ್ ಯು.ಟಿ.ಖಾದರ್ ಅವರನ್ನು ಸಂಬೋಧಿಸಿದ ಬಿಜೆಪಿ ಶಾಸಕ ಡಾ.ಭರತ್ ಶೆಟ್ಟಿ ಆ ಬಳಿಕ ಕ್ಷಮೆಯಾಚಿಸಿದ ಪ್ರಸಂಗ ವಿಧಾನಸಭೆಯಲ್ಲಿ ನಡೆಯಿತು. ಬುಧವಾರ ವಿಧಾನಸಭೆ ಪ್ರಶ್ನೋತ್ತರ ಅವಧಿಯಲ್ಲಿ ಮಂಗಳೂರು ನಗರದಲ್ಲಿ ‘ವಾಣಿಜ್ಯ ಕಚೇರಿ ಟೆಕ್ ಪಾರ್ಕ್’ ಸ್ಥಾಪಿಸುವ ಸಂಬಂಧ ಸರಕಾರವನ್ನು ಪ್ರಶ್ನಿಸುತ್ತಿದ್ದ ವೇಳೆ ಬಾಯಿತಪ್ಪಿ, ‘ಸಭಾಧ್ಯಕ್ಷರ ಬದಲಿಗೆ ಖಾದರ್ ಅವರೇ’ ಎಂದು ಕರೆದರು. ತಕ್ಷಣವೇ ತಪ್ಪಿನ ಅರಿವು ಮಾಡಿಕೊಂಡ ಡಾ.ಭರತ್ ಶೆಟ್ಟಿ ತಕ್ಷಣವೇ ಸ್ಪೀಕರ್ ಅವರೇ ಕ್ಷಮೆ ಇರಲಿ ಎಂದು ಕ್ಷಮೆ ಕೋರಿದರು.

ವಾರ್ತಾ ಭಾರತಿ 10 Dec 2025 1:41 pm

Land Conversion: ಲಂಚವಿಲ್ಲದೆ ಭೂ ಪರಿವರ್ತನೆಗೆ ಅವಕಾಶ, ಮಹತ್ವದ ಬದಲಾವಣೆ: ಸರ್ಕಾರದಿಂದ ಗುಡ್‌ನ್ಯೂಸ್‌

ಕರ್ನಾಟಕ ಭೂ ಕಂದಾಯ ಕಾಯ್ದೆ ತಿದ್ದುಪಡಿ ಬಗ್ಗೆ ಕಂದಾಯ ಸಚಿವ ಕೃಷ್ಣಬೈರೇಗೌಡ ಅವರು ಬೆಳಗಾವಿ ಅಧಿವೇಶನದಲ್ಲಿ ಮಹತ್ವದ ಮಾಹಿತಿ ಹಂಚಿಕೊಂಡಿದ್ದಾರೆ. ಕರ್ನಾಟಕ ಭೂ ಕಂದಾಯ ಕಾಯ್ದೆ 1964ರ ತಿದ್ದುಪಡಿಗೆ ಕಳೆದ ಅಕ್ಟೋಬರ್ ತಿಂಗಳಲ್ಲೇ ಕರಡು ರಚಿಸಲಾಗಿದೆ. ಮುಂದಿನ ಒಂದು ತಿಂಗಳಲ್ಲಿ ಅಧಿಸೂಚನೆ ಹೊರಡಿಸಿ ಅದನ್ನು ಕಾರ್ಯರೂಪಕ್ಕೆ ತರಲಾಗುವುದು ಎಂದು ಮಾಹಿತಿ ನೀಡಿದ್ದಾರೆ. ವಿಧಾನ ಪರಿಷತ್‌ನಲ್ಲಿ ಶಾಸಕ ರಾಮೋಜಿ

ಒನ್ ಇ೦ಡಿಯ 10 Dec 2025 1:39 pm

ಬಾಕಿ ಇರುವ ಕಾರ್ಮಿಕ ಕಾರ್ಡ್ ವಿಲೇವಾರಿಗೆ ಕ್ರಮ: ಸಚಿವ ಸಂತೋಷ್‌ ಲಾಡ್

ಬೆಳಗಾವಿ(ಸುವರ್ಣ ವಿಧಾನಸೌಧ), ಡಿ. 10: ಹಾವೇರಿ ಜಿಲ್ಲೆಯ ಹಿರೇಕೆರೂರು ತಾಲೂಕಿನಲ್ಲಿ ಮಂಜೂರಾತಿಗೆ ಬಾಕಿ ಇರುವ ಕಾರ್ಮಿಕ ಕಾರ್ಡ್‍ಗಳಿಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಕಾರ್ಮಿಕ ಸಚಿವ ಸಂತೋಷ್‌ ಲಾಡ್ ಭರವಸೆ ನೀಡಿದರು. ಬುಧವಾರ ವಿಧಾನಸಭೆ ಪ್ರಶ್ನೋತ್ತರ ಅವಧಿಯಲ್ಲಿ ಆಡಳಿತ ಪಕ್ಷದ ಸದಸ್ಯ ಯು.ಬಿ.ಬಣಕಾರ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಹಿರೇಕೆರೂರು ತಾಲೂಕಿನಲ್ಲಿ 15,910 ಸಕ್ರಿಯ ಕಾರ್ಡ್‍ಗಳು ಇವೆ. ಈಗ 3,115 ಅರ್ಜಿಗಳು ಬಂದಿವೆ. ಆಪೈಕಿ 2,625 ವಿಲೇ ಮಾಡಲಾಗಿದೆ. ಶೇ.80ರಷ್ಟು ಕಾರ್ಡ್‍ಗಳಿಗೆ ಅನುಮೋದನೆ ನೀಡಲಾಗಿದೆ. ಉಳಿದವುಗಳನ್ನು ವಿಲೇವಾರಿ ಮಾಡಲು ಕೋರಿದ್ದಾರೆ ಎಂದು ಹೇಳಿದರು. ತಾಲೂಕಿನಲ್ಲಿ ಬಾಕಿ ಉಳಿದ ಅರ್ಜಿಗಳ ಪರಿಶೀಲನೆ ನಡೆಸಲಾಗುವುದು. ಹಾವೇರಿ ಜಿಲ್ಲೆಯಲ್ಲಿ ಈ ಹಿಂದೆ ಗಣನೀಯ ಪ್ರಮಾಣದಲ್ಲಿ ನಕಲಿ ಕಾರ್ಮಿಕ ಕಾರ್ಡ್‍ಗಳು ನೋಂದಣಿಯಾಗಿದ್ದವು. ಹೊಸ ಕಾರ್ಡ್‍ಗಳ ಅರ್ಜಿಯನ್ನು ಇಲಾಖೆಯ ಅಧಿಕಾರಿಗಳು ಖುದ್ದು ಭೇಟಿ ನೀಡಿ ತಪಾಸಣೆ ನಡೆಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು. ಯಾವುದೇ ತೊಂದರೆ ಇದ್ದರೆ ತಕ್ಷಣ ಪರಿಹಾರ ಮಾಡಲಾಗುವುದು ಎಂದು ಭರವಸೆ ನೀಡಿದರು. ಶ್ಲಾಘನೆ : ಹಾವೇರಿ ಜಿಲ್ಲೆಯಲ್ಲಿ ನಕಲಿ ಕಾರ್ಮಿಕ ಕಾರ್ಡ್‍ಗಳ ರದ್ದುಪಡಿಸುವಲ್ಲಿ ಸಚಿವ ಸಂತೋಷ್‌ ಲಾಡ್ ಪ್ರಮುಖ ಪಾತ್ರ ವಹಿಸಿದರು ಎಂದು ಯು.ಬಿ.ಬಣಕಾರ್ ಶ್ಲಾಘಿಸಿದರು. ಜಿಲ್ಲೆಯಲ್ಲಿ, ಕಾರ್ಮಿಕ ಕಾರ್ಡ್‍ಗಳ ಅಕ್ರಮ ತಡೆಗಟ್ಟುವಲ್ಲಿ ಕ್ರಮ ಕೈಗೊಂಡರು. ಇನ್ನು ಕೆಲವೇ ದಿನಗಳಲ್ಲಿ ಜಿಲ್ಲೆಯಲ್ಲಿ ನಕಲಿ ಕಾರ್ಮಿಕ ಕಾರ್ಡ್‍ಗಳು ಸಂಪೂರ್ಣವಾಗಿ ರದ್ದಾಗಲಿವೆ. ಇದರ ಹಿಂದೆ ಲಾಡ್ ಅವರ ಶ್ರಮವಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ವಾರ್ತಾ ಭಾರತಿ 10 Dec 2025 1:34 pm

ದ್ವೇಷ ಭಾಷಣ, ದ್ವೇಷ ಅಪರಾಧಗಳ (ಪ್ರತಿಬಂಧಕ) ವಿಧೇಯಕ ಮಂಡನೆ

ವಿಧೇಯಕದಲ್ಲಿ ಏನಿದೆ?: ಇಲ್ಲಿದೆ ವಿವರ

ವಾರ್ತಾ ಭಾರತಿ 10 Dec 2025 1:31 pm

ರಾಜ್ಯದ 518 ಕಡೆಗಳಲ್ಲಿ ಆರೆಸ್ಸೆಸ್ ಪಥ ಸಂಚಲನ: ಸದನದಲ್ಲಿ ಮಾಹಿತಿ ನೀಡಿದ ಗೃಹ ಇಲಾಖೆ

ಬೆಳಗಾವಿ(ಸುವರ್ಣ ವಿಧಾನಸೌಧ), ಡಿ. 10: ‘ರಾಜ್ಯದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ(ಆರೆಸ್ಸೆಸ್) ಪಥಸಂಚಲನ ವಿಚಾರಕ್ಕೆ ಪರ-ವಿರೋಧ ಚರ್ಚೆಯ ಬೆನ್ನಲ್ಲೇ 2025ನೇ ಸಾಲಿನಲ್ಲಿ ಒಟ್ಟು 518 ಕಡೆಗಳಲ್ಲಿ ಆರೆಸ್ಸೆಸ್ ಪಥಸಂಚಲನ ನಡೆದಿದೆ. ಆದರೆ ಯಾವುದೇ ಗಲಾಟೆ, ದೊಂಬಿ, ಕೋಮುಗಲಭೆ ನಡೆದಿಲ್ಲ’ ಎಂದು ಗೃಹ ಇಲಾಖೆ ತಿಳಿಸಿದೆ. ಬುಧವಾರ ವಿಧಾನಸಭೆಯಲ್ಲಿ ಬಿಜೆಪಿ ಸದಸ್ಯ ವಿ.ಸುನೀಲ್ ಕುಮಾರ್ ಕೇಳಿದ ಚುಕ್ಕೆ ಗುರುತ್ತಿಲ್ಲದ ಪ್ರಶ್ನೆಗೆ ಉತ್ತರ ನೀಡಿರುವ ಗೃಹ ಸಚಿವ ಡಾ.ಜಿ.ಪರಮೇಶ್ವರ್, ಆರೆಸ್ಸೆಸ್ ಪಥಸಂಚಲನ ಸಂದರ್ಭದಲ್ಲಿ ಎಲ್ಲಿಯೂ ಗಲಾಟೆ, ದೊಂಬಿ ನಡೆದಿಲ್ಲ ಎಂದು ತಿಳಿಸಿದ್ದಾರೆ. ಆರೆಸ್ಸೆಸ್ ಪಥಸಂಚಲನಕ್ಕೆ ಅವಕಾಶ ಕಲ್ಪಿಸುವ ಸಂಬಂಧ ಪರ-ವಿರೋಧ ಚರ್ಚೆಗಳು ನಡೆಯುತ್ತಿದ್ದು, ರ್‍ಯಾಲಿಗೆ ಅವಕಾಶ ಕಲ್ಪಿಸುವ ವಿಚಾರ ಕೋರ್ಟ್ ಮೆಟ್ಟಿಲೇರಿದ ಪ್ರಸಂಗವೂ ನಡೆದಿತ್ತು. ಬೆಂಗಳೂರಿನಲ್ಲಿ ನಡೆದ ಆರೆಸ್ಸೆಸ್ ಪಥಸಂಚಲನದಲ್ಲಿ ವಿಪಕ್ಷ ನಾಯಕ ಆರ್.ಅಶೋಕ್ ಸೇರಿದಂತೆ ಬಿಜೆಪಿಯ ಹಲವು ನಾಯಕರು ಭಾಗಿಯಾಗಿದ್ದರು. ಇದೇ ವೇಳೆ ಅನುಮತಿಯನ್ನು ಪಡೆಯದೆ ಪಥಸಂಚಲನ ನಡೆಸಲು ಯಾವುದೇ ಕಾರಣಕ್ಕೂ ಅವಕಾಶ ನೀಡಬಾರದು ಎಂಬ ಸಚಿವ ಪ್ರಿಯಾಂಕ್ ಖರ್ಗೆ ಸೇರಿದಂತೆ ಹಲವರು ಆಗ್ರಹಿಸಿದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಈ ವಿಚಾರ ವಿವಾದದ ಸ್ವರೂಪವನ್ನು ಪಡೆದುಕೊಂಡಿತ್ತು. ಬೆಂಗಳೂರು ನಗರದಲ್ಲಿ ಅತ್ಯಂತ ಹೆಚ್ಚು 97 ಪಥ ಸಂಚಲನಗಳು ನಡೆದಿದ್ದು, ಒಟ್ಟು 30 ಸಾವಿರಕ್ಕೂ ಅಧಿಕ ಮಂದಿ ಪಾಲ್ಗೊಂಡಿದ್ದರೆ, ಕಲಬುರಗಿಯಲ್ಲಿ ಒಟ್ಟು 50ಕ್ಕೂ ಹೆಚ್ಚು ನಡೆದಿದ್ದು, ಬೀದರ್ ನಲ್ಲಿ 40ಕ್ಕೂ ಹೆಚ್ಚು ಪಥ ಸಂಚಲನಗಳು ನಡೆದಿವೆ. ಉಳಿದಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 10 ಪಥಸಂಚಲನ ನಡೆದಿದ್ದು, ಒಟ್ಟು 8,410 ಮಂದಿ ಸ್ವಯಂ ಸೇವಕರು ಪಾಲ್ಗೊಂಡಿದ್ದಾರೆಂದು ಇಲಾಖೆ ವಿವರ ನೀಡಿದೆ.

ವಾರ್ತಾ ಭಾರತಿ 10 Dec 2025 1:27 pm

ಗೋವಿಗೆ ಚಿಕನ್ ಮೊಮೊಸ್ ತಿನ್ನಿಸಿದ ಆರೋಪ| ಯುವಕನನ್ನು ಥಳಿಸಿ ಮೆರವಣಿಗೆ: ವೈರಲ್ ವೀಡಿಯೊ ಆಧಾರದಲ್ಲಿ ಎಫ್‌ಐಆರ್

ಗುರುಗ್ರಾಮ: ಗೋವಿಗೆ ಚಿಕನ್ ಮೊಮೊಸ್ ತಿನ್ನಿಸಿದ ಆರೋಪದ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆಯೇ, 28 ವರ್ಷದ ಯುವಕನನ್ನು ಬಜರಂಗದಳಕ್ಕೆ ಸೇರಿದ ವ್ಯಕ್ತಿಗಳು ಥಳಿಸಿ, ಬೀದಿಯಲ್ಲಿ ಮೆರವಣಿಗೆ ಮಾಡಿಸಿದ ಘಟನೆ ಗುರುಗ್ರಾಮದಲ್ಲಿ ನಡೆದಿದ್ದು, ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ನ್ಯೂ ಕಾಲೋನಿಯಲ್ಲಿ ವಾಸಿಸುವ ರಿತಿಕ್ ಎಂಬ ಯುವಕನು ರವಿವಾರ ಪ್ರಿಸಂ ಆಪ್‌ ನಲ್ಲಿ ಲೈವ್ ಸ್ಟ್ರೀಮಿಂಗ್ ಮಾಡುತ್ತಿದ್ದ ವೇಳೆ ವಿವಾದಕ್ಕೆ ಕಾರಣವಾದ ದೃಶ್ಯಗಳು ದಾಖಲಾಗಿದ್ದವು. ವೀಡಿಯೊದಲ್ಲಿ, ಮೊದಲು ಮೊಮೊಸ್ ನಲ್ಲಿ ಚಿಕನ್ ಇದೆ ಎಂಬುದನ್ನು ಮಾರಾಟಗಾರರಿಂದ ದೃಢೀಕರಿಸಿಕೊಂಡ ರಿತಿಕ್, ಚಾಲೆಂಜ್ ನ ಭಾಗವಾಗಿ ಅವನ್ನು ತಿನ್ನಲು ಪ್ರಯತ್ನಿಸುತ್ತಾನೆ. ಬಳಿಕ ಉಳಿದ ಮೊಮೊಸ್ ಗಳನ್ನು ಹತ್ತಿರದಲ್ಲಿದ್ದ ಗೋವಿಗೆ ಹಾಕುತ್ತಿರುವುದು ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ವಿಡಿಯೋವನ್ನು ಬಜರಂಗದಳ ಸದಸ್ಯನೆಂದು ಪರಿಚಯಿಸಿಕೊಂಡಿರುವ ಚಮನ್ ಖತಾನಾ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ಸ್ಥಳೀಯ ಸ್ವಗೋಷಿತ ಗೋಸಂರಕ್ಷಣಾ ಗುಂಪುಗಳಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. ಸೋಮವಾರ ಖತಾನಾ ಮತ್ತು ಇನ್ನಿತರರು ರಿತಿಕ್ ಮನೆಗೆ ತೆರಳಿ, ಆತನ ತಂದೆಯೊಂದಿಗೆ ವಾಗ್ವಾದ ನಡೆಸಿದ ದೃಶ್ಯಗಳನ್ನು ಚಿತ್ರೀಕರಿಸಿದರು. ಹೊರಬಂದ ಬಳಿಕ ಖತಾನಾ, ರಿತಿಕ್ ತಂದೆಯನ್ನು ಗದರಿಸುತ್ತಾ, ಕ್ಷಮೆಯಾಚಿಸುವಂತೆ ಒತ್ತಾಯಿಸುತ್ತಿರುವುದು ಹಾಗೂ ಮಗನನ್ನು ಹೊಡೆಯುವುದಾಗಿ ಬೆದರಿಸುವುದು ವೀಡಿಯೊದಲ್ಲಿ ಕಂಡು ಬರುತ್ತದೆ.   ನಂತರ ರಿತಿಕ್‌ ನನ್ನು ಮನೆಯಿಂದ ಹೊರಗೆ ಕರೆದು ತಂದೆಯೊಂದಿಗೆ ಬೀದಿಯಲ್ಲಿ ಮೆರವಣಿಗೆ ಮಾಡಿಸಿ, ಘಟನೆಯ ಬಗ್ಗೆ ಕ್ಯಾಮೆರಾ ಮುಂದೆ ಪ್ರಶ್ನಿಸುವುದು ವೀಡಿಯೊಗಳಲ್ಲಿ ಸ್ಪಷ್ಟವಾಗಿ ಗೋಚರಿಸಿದೆ. ಈ ವೇಳೆಯಲ್ಲಿ, ರಿತಿಕ್ ಲೈವ್ ಸ್ಟ್ರೀಮ್ ಮೂಲಕ ಹಣ ಹೇಗೆ ಸಂಪಾದಿಸುತ್ತಾನೆಯೇ ಎಂಬುದರ ಕುರಿತ ಪ್ರಶ್ನೆಗಳು ಕೂಡ ಕೇಳಿಬಂದಿವೆ. ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ವೈರಲ್ ಆದ ನಂತರ ಪೊಲೀಸರು ರಿತಿಕ್ ವಿರುದ್ಧ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪದಡಿ ಎಫ್‌ಐಆರ್ ದಾಖಲಿಸಿದ್ದಾರೆ. ಜಾಮೀನು ಪಡೆದಿರುವ ರಿತಿಕ್‌ ರ ಮೇಲಿನ ದಾಳಿಯ ಕುರಿತು ಪೊಲೀಸರು ಪ್ರತ್ಯೇಕವಾಗಿ ತನಿಖೆ ಪ್ರಾರಂಭಿಸುವ ಸಾಧ್ಯತೆಯೂ ಇದೆ ಎಂದು ತಿಳಿದು ಬಂದಿದೆ.

ವಾರ್ತಾ ಭಾರತಿ 10 Dec 2025 1:25 pm

ನನ್ನ ಹೆಸರು ಪ್ರಿಯಾಂಕ್ ಖರ್ಗೆ ಆದರೂ ಪ್ರಿಯಾಂಕಾ ಎಂದು ಕರೆಯುತ್ತಾರೆ: ಸದನದಲ್ಲಿ ಹಾಸ್ಯಕ್ಕೆ ಕಾರಣವಾದ ಸಚಿವರ ಹೇಳಿಕೆ

ಬೆಳಗಾವಿ(ಸುವರ್ಣ ವಿಧಾನಸೌಧ), ಡಿ. 10: ‘ಹೆಸರು ಬದಲಾವಣೆ ಮಾಡಿದರೆ ಏನಾಗುತ್ತದೆ ಎಂದು ನನಗಿಂತ ಬೇರೆ ಉದಾಹರಣೆಯೇ ಇಲ್ಲ. ಪ್ರಿಯಾಂಕ್ ಖರ್ಗೆ ನನ್ನ ಹೆಸರು. ಆದರೆ, ಪ್ರಿಯಾಂಕಾ ಪ್ರಿಯಾಂಕಾ ಎಂದು ನನ್ನ ಲಿಂಗವನ್ನೇ ಬದಲು ಮಾಡಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಅಲವತ್ತುಕೊಂಡ ಪ್ರಸಂಗ ವಿಧಾನಸಭೆಯಲ್ಲಿ ನಡೆಯಿತು. ಬುಧವಾರ ವಿಧಾನಸಭೆಯ ಪ್ರಶ್ನೋತ್ತರ ಅವಧಿಯಲ್ಲಿ ಆಡಳಿತ ಪಕ್ಷದ ಸದಸ್ಯ ತಮ್ಮಯ್ಯ ಎಚ್.ಡಿ. ಅವರ ಹೆಸರನ್ನು ಸಚಿವ ಪ್ರಿಯಾಂಕ್ ಖರ್ಗೆ, ‘ತಿಮ್ಮಯ್ಯ’ ಎಂದು ಉಚ್ಚರಿಸಿದರು. ಇದಕ್ಕೆ ಆಕ್ಷೇಪಿಸಿದ ಸದಸ್ಯ ತಮ್ಮಯ್ಯ, ಸ್ಪೀಕರ್ ಅವರೇ ನನ್ನ ಹೆಸರನ್ನು ತಾವು ತಿಮ್ಮಯ್ಯ ಎಂದು ಕರೆದ ಪರಿಣಾಮ ಎಲ್ಲರೂ ನನ್ನನ್ನು ತಿಮ್ಮಯ್ಯ ಎಂದು ಕರೆಯುತ್ತಿದ್ದು, ನನ್ನ ಹೆಸರೇ ಬದಲಾಗಿದೆ ಎಂದು ಗಮನ ಸೆಳೆದರು. ಇದಕ್ಕೆ ಪ್ರತಿಕ್ರಿಯಿಸಿದ ಸ್ಪೀಕರ್ ಯು.ಟಿ. ಖಾದರ್ ಅವರು, ತಮ್ಮ ಹೆಸರು ತಪ್ಪಾಗಿ ಕರೆದಿದ್ದು ಸರಿಯಲ್ಲ. ನಿಮ್ಮ ಹೆಸರು ತಮ್ಮಯ್ಯ ಎಂದು. ಹೀಗಾಗಿ ಸದನದ ಕಲಾಪದಲ್ಲಿ ಸದಸ್ಯರ ಹೆಸರನ್ನು ಯಾರೂ ತಪ್ಪಾಗಿ ಕರೆಯಬಾರದು. ಒಂದು ವೇಳೆ ಯಾರಾದರೂ ತಪ್ಪಾಗಿ ಹೆಸರು ಕರೆದರೆ ಅವರಿಗೆ ದಂಡವನ್ನು ವಿಧಿಸಲಾಗುವುದು ಎಂದು ಚಟಾಕಿ ಹಾರಿಸಿದರು. ಬಳಿಕ ಉತ್ತರಿಸಲು ಎದ್ದುನಿಂತ ಸಚಿವ ಪ್ರಿಯಾಂಕ್ ಖರ್ಗೆ, ‘ಸದಸ್ಯರ ಹೆಸರನ್ನು ತಪ್ಪಾಗಿ ಕರೆದೆ ಕ್ಷಮೆ ಇರಲಿ. ಹೆಸರು ತಪ್ಪಾದರೆ ಏನಾಗುತ್ತದೆ ಎಂಬುದಕ್ಕೆ ನನಗಿಂತ ಬೇರೆ ಉದಾಹರಣೆಯೇ ಇಲ್ಲ. ನನ್ನ ಹೆಸರು ಪ್ರಿಯಾಂಕ್ ಖರ್ಗೆ. ಆದರೆ, ಪ್ರಿಯಾಂಕಾ ಪ್ರಿಯಾಂಕಾ ಎಂದು ನನ್ನ ಲಿಂಗವನ್ನೇ ಬದಲು ಮಾಡಿದ್ದಾರೆ’ ಎಂದು ಮಸಾಲೆ ಬೆರೆಸಿದ್ದು ಸದನದಲ್ಲಿ ಹಾಸ್ಯಕ್ಕೆ ನಾಂದಿಯಾಯಿತು. ಸರಕಾರದಿಂದ ಉತ್ತರ ಪಡೆದ ಸದಸ್ಯರು ‘ಸಮರ್ಥ ಮಂತ್ರಿ ಎಂದು ಮೆಚ್ಚುಗೆ ಸೂಚಿಸಿದ ಬಳಿಕ ಆದರೆ, ಅಂದ್ರೆನೇ ಸಮಸ್ಯೆ. ಸಮರ್ಥ ಎಂದು ಹೇಳಿದ ನಂತರ ಆದರೆ ಎಂಬ ಪ್ರಶ್ನೆ ಏಕೇ?. ಏನೇ ಆದರೂ ಸರಕಾರ ಸದಸ್ಯರ ಪ್ರಶ್ನೆಗೆ ಸೂಕ್ತ ಉತ್ತರವನ್ನು ನೀಡಲಾಗಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ, ಸದಸ್ಯ ತಮ್ಮಯ್ಯ ಪ್ರಸ್ತಾಪಕ್ಕೆ ಪ್ರತಿಕ್ರಿಯೆ ನೀಡಿದರು.

ವಾರ್ತಾ ಭಾರತಿ 10 Dec 2025 1:21 pm

ಇಮ್ರಾನ್‌ ಖಾನ್‌ಗೆ ಮರಣದಂಡನೆ ಶಿಕ್ಷೆಯ ಎಚ್ಚರಿಕೆ; ಮನದಾಳದ ಇಂಗಿತ ಹೊರಹಾಕಿದ ಪಾಕಿಸ್ತಾನ ಸರ್ಕಾರ?

ಭ್ರಷ್ಟಾಚಾರ ಆರೋಪದಡಿ ಜೈಲಿನಲ್ಲಿರುವ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ ಅವರನ್ನು, ಲೇಟ್‌ ಇಮ್ರಾನ್‌ ಖಾನ್‌ ಆಗಿ ಮಾಡುವ ಬಯಕೆಯನ್ನು, ಪಾಕಿಸ್ತಾನ ಸರ್ಕಾರ ಮತ್ತು ಸೇನೆ ಪದೇ ಪದೇ ಹೊರಹಾಕುತ್ತಲೇ ಇದೆ. ಇದಕ್ಕೆ ಪುಷ್ಠಿ ಎಂಬಂತೆ, ಪ್ರಧಾನಿ ಶೆಹಬಾಜ್‌ ಷರೀಫ್‌ ಅವರ ಸಲಹೆಗಾರ ರಾಣಾ ಸನಾವುಲ್ಲಾ ಅವರು, ದೇಶದ್ರೋಹದ ಆರೋಪದ ಮೇಲೆ ಇಮ್ರಾನ್‌ ಖಾನ್‌ ಗಂಭೀರ ಪರಿಣಾಮಗಳನ್ನು ಎದುರಿಸಬೇಕಾಗಬಹುದು ಎಂದು ಎಚ್ಚರಿಸಿದ್ದಾರೆ. ಪಾಕ್‌ ಸೆನೆಟರ್‌ ನೀಡಿದ ಈ ಹೇಳಿಕೆಯ ಬಗ್ಗೆ ಇಲ್ಲಿದೆ ಮಾಹಿತಿ.

ವಿಜಯ ಕರ್ನಾಟಕ 10 Dec 2025 1:21 pm

ದಿಲ್ಲಿಯ ಹಲವು ಶಾಲೆಗಳಿಗೆ ಬಾಂಬ್ ಬೆದರಿಕೆ: ಪೊಲೀಸರಿಂದ ಶೋಧ

ಹೊಸದಿಲ್ಲಿ: ಬುಧವಾರ ದಿಲ್ಲಿಯ ಹಲವು ಶಾಲೆಗಳಿಗೆ ಇಮೇಲ್ ಮೂಲಕ ಬಾಂಬ್ ಬೆದರಿಕೆ ಕರೆ ಬಂದಿರುವ ಬಗ್ಗೆ ವರದಿಯಾಗಿದೆ. ANI ವರದಿಯ ಪ್ರಕಾರ, ಶಾಲೆಗಳು ಮುನ್ನೆಚ್ಚರಿಕೆ ಕ್ರಮವಾಗಿ ತಮ್ಮ ಮಕ್ಕಳನ್ನು ಕರೆದುಕೊಂಡು ಹೋಗುವಂತೆ ಪೋಷಕರಿಗೆ ಸೂಚಿಸಿದೆ. ಈ ಬೆಳವಣಿಗೆ ವಿದ್ಯಾರ್ಥಿಗಳು ಮತ್ತು ಪೋಷಕರಲ್ಲಿ ಆತಂಕ ಉಂಟು ಮಾಡಿದೆ. ಪೂರ್ವ ದಿಲ್ಲಿಯ ಲಕ್ಷ್ಮಿ ನಗರದ ಖಾಸಗಿ ಶಾಲೆಗೆ ಬುಧವಾರ ಬೆಳಿಗ್ಗೆ ಬಾಂಬ್ ಬೆದರಿಕೆ ಕರೆ ಬಂದಿದ್ದು, ಕ್ಷಿಪ್ರ ಕಾರ್ಯಾಚರಣೆ ಮೂಲಕ ವಿದ್ಯಾರ್ಥಿಗಳನ್ನು ಸ್ಥಳಾಂತರಿಸಲಾಯಿತು ಎಂದು ದಿಲ್ಲಿ ಅಗ್ನಿಶಾಮಕ ದಳದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ದಿ ಇಂಡಿಯನ್ ಸ್ಕೂಲ್ ಹೊರಡಿಸಿದ ನೋಟಿಸ್‌ನಲ್ಲಿ, ಪ್ರಿಯ ಪೋಷಕರೇ, ಶಾಲೆಗೆ ಇಮೇಲ್ ಮೂಲಕ ಬಾಂಬ್ ಬೆದರಿಕೆ ಸಂದೇಶ ಬಂದಿದೆ. ಮುನ್ನೆಚ್ಚರಿಕೆ ಕ್ರಮವಾಗಿ ನಿಮ್ಮ ಮಗುವನ್ನು ವಾಪಾಸ್ಸು ಕರೆದುಕೊಂಡು ಹೋಗಲು ವಿನಂತಿಸಲಾಗಿದೆ ಎಂದು ಬರೆಯಲಾಗಿದೆ. ಬೆಳಿಗ್ಗೆ 10.40ರ ಸುಮಾರಿಗೆ ಲವ್ಲಿ ಪಬ್ಲಿಕ್ ಶಾಲೆಯೊಳಗೆ ಸ್ಫೋಟಕ ಸಾಧನವನ್ನು ಇರಿಸಲಾಗಿದೆ ಎಂದು ಹೇಳಿಕೊಂಡು ಬೆದರಿಕೆ ಸಂದೇಶ ಬಂದಿದೆ. ಅಗ್ನಿಶಾಮಕ ದಳದ ಸಿಬ್ಬಂದಿ, ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಸ್ಥಳದಲ್ಲಿ ಅನುಮಾನಾಸ್ಪದವಾಗಿರುವ ವಸ್ತುಗಳು ಏನೂ ಕಂಡುಬಂದಿಲ್ಲ ಎಂದು ಅಧಿಕಾರಿಯೋರ್ವರು ತಿಳಿಸಿದ್ದಾರೆ.

ವಾರ್ತಾ ಭಾರತಿ 10 Dec 2025 1:17 pm

Gruha Lakshmi Scheme: 5 ತಿಂಗಳ ಗೃಹಲಕ್ಷ್ಮಿ ಹಣ ಯಾವಾಗ ಬರುತ್ತೆ? ಸದನಕ್ಕೆ ಮಾಹಿತಿ ಕೊಟ್ಟ ಲಕ್ಷ್ಮಿ ಹೆಬ್ಬಾಳ್ಕರ್

ಬೆಳಗಾವಿ, ಡಿಸೆಂಬರ್‌ 10: ಕಾಂಗ್ರೆಸ್‌ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾಗಿರುವ ಗೃಹ ಲಕ್ಷ್ಮೀ ಯೋಜನೆಯಡಿ ಮನೆ ಯಜಮಾನಿ ಖಾತೆಗೆ 2000 ಹಣ ನೀಡುವ ವಿಚಾರದಲ್ಲಿ ಒಂದಲ್ಲ ಒಂದು ರೀತಿಯಲ್ಲಿ ಗೊಂದಲಗಳಿಗೆ ಕಾರಣವಾಗಿದೆ. ಇದೀಗ ಮಹಿಳೆಯವರಿಗೆ ಪ್ರತಿ ತಿಂಗಳು ಹಣ ಜಮಾ ಆಗುತ್ತಿಲ್ಲ ಎಂದು ಮಹಿಳೆಯರು ಹಾಗೂ ವಿಪಕ್ಷಗಳು ಆಕ್ರೋಶ ಹೊರ ಹಾಕಿದ್ದು, ಸದನದಲ್ಲಿ ಈ ಬಗ್ಗೆ ಚರ್ಚೆ

ಒನ್ ಇ೦ಡಿಯ 10 Dec 2025 1:12 pm

ರೆಸ್ಟೋರಂಟ್‌ ನಲ್ಲಿ ಜಗಳವಾಡಿದ್ರಾ ಜೆ.ಡಿ ವಾನ್ಸ್‌ -ಉಷಾ‌ ದಂಪತಿ? ವೈರಲ್ ಫೋಟೋಗೆ ಉಪಾಧ್ಯಕ್ಷ ವಾನ್ಸ್‌ ಕೊಟ್ಟ ಹಾಸ್ಯಭರಿತ ಉತ್ತರ ಹೇಗಿತ್ತು ನೋಡಿ..

ಅಮೆರಿಕಾ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ಮತ್ತು ಪತ್ನಿ ಉಷಾ ನಡುವೆ ರೆಸ್ಟೋರೆಂಟ್‌ನಲ್ಲಿ ಜಗಳ ನಡೆದಿದೆ ಎನ್ನೋ ಪೋಸ್ಟ್ ವೈರಲ್ ಆಗಿತ್ತು. ಇದಕ್ಕೆ ಪ್ರತಿಕ್ರಿಯಿಸಿದ ವ್ಯಾನ್ಸ್, 'ಸಾರ್ವಜನಿಕವಾಗಿ ಹೊರಗೆ ಹೋದಾಗ ಜೋರಾಗಿ ಜಗಳವಾಡಲು ಒಳಉಡುಪು ಧರಿಸುತ್ತೇನೆ' ಎಂದು ಹಾಸ್ಯ ಚಟಾಕಿ ಹಾರಿಸಿ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ. ಈ ಹಿಂದೆಯೂ ಹಲವು ಬಾರಿ ಹಿಂದೆ ಉಷಾ ಅವರ ಉಂಗುರ ಧರಿಸದಿರುವುದು ಈ ವದಂತಿಗಳಿಗೆ ಕಾರಣವಾಗಿತ್ತು.

ವಿಜಯ ಕರ್ನಾಟಕ 10 Dec 2025 12:59 pm

ಮೈಸೂರು | ಪುನರ್ವಸತಿ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ನಾಲ್ಕು ಹುಲಿಮರಿಗಳು ಸಾವು

ಮೈಸೂರು,ಡಿ. 10: ಹುಣಸೂರು ತಾಲ್ಲೂಕು ಗೌಡನಕಟ್ಟೆ ಹೊಲದಲ್ಲಿ ಸೆರೆಯಾಗಿ ಮೈಸೂರು ಹೊರವಲಯದ ಕೂರ್ಗಳ್ಳಿ ಪುನರ್ವಸತಿ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ನಾಲ್ಕು ಹುಲಿಮರಿಗಳು ನಾಲ್ಕು ದಿನಗಳ ಅಂತರದಲ್ಲಿ ಅನಮಾನಾಸ್ಪದವಾಗಿ ಸಾವಿಗೀಡಾಗಿರುವುದು ತಿಳಿದು ಬಂದಿದೆ. ಡಿ.6 ರಂದು ಒಂದು ಹುಲಿಮರಿ, ಡಿ.7ರಂದು ಎರಡು ಹಾಗೂ ಮಂಗಳವಾರ ಒಂದು ಹುಲಿ ಮರಿ ಮೃತಪಟ್ಟಿದೆ. ತಾಯಿ ಹುಲಿ ಆರೋಗ್ಯವಾಗಿದ್ದು, ಹುಲಿಮರಿಗಳ ಅಂಗಾಗಗಳನ್ನು ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ನ. 28ರಂದು ಹನಗೋಡು ಹೋಬಳಿಯ ಗೌಡನಕಟ್ಟೆಯ ಪ್ರಕಾಶ್ ಅವರ ಜೋಳದ ಹೊಲದಲ್ಲಿ ನಾಲ್ಕು ಮರಿಗಳೊಂದಿಗೆ ತಾಯಿ ಹುಲಿ ಕಾಣಿಸಿಕೊಂಡಿತ್ತು. ಮಧ್ಯರಾತ್ರಿ ತಾಯಿ ಹುಲಿ ಸೆರೆಯಾಗಿತ್ತು. ಎರಡು ದಿನಗಳ ನಂತರ ನ.30ರಂದು ನಾಲ್ಕು ಹುಲಿಮರಿಗಳು ಪತ್ತೆಯಾಗಿತ್ತು. ಅವುಗಳನ್ನು ರಕ್ಷಿಸಿ ಕೂರ್ಗಳ್ಳಿ ಪುನರ್ವಸತಿ ಕೇಂದ್ರಲ್ಲಿದ್ದ ತಾಯಿ ಹುಲಿಯೊಂದಿಗೆ ಸೇರಿಸಲಾಗಿತ್ತು. ಹುಲಿಮರಿಗಳು ಸೆರೆ ಹಿಡಿಯುವ ವೇಳೆ ಜನರ ಕಿರುಚಾಟದಿಂದ ಗಾಬರಿಯಾಗಿದ್ದವು. ಎರಡು ದಿನ ತಾಯಿಯಿಂದ ದೂರವಾಗಿದ್ದ ಮರಿಗಳು ಆಹಾರವಿಲ್ಲದೇ ಬಳಲಿದ್ದವು. ಸೆರೆ ಹಿಡಿಯುವ ವೇಳೆಯೇ ನಿತ್ರಾಣಗೊಂಡಿದ್ದವು. ಸೂಕ್ತ ಚಿಕಿತ್ಸೆಗಾಗಿ ಪುನರ್ವಸತಿ ಕೇಂದ್ರಕ್ಕೆ ರವಾನಿಸಲಾಗಿತ್ತು. ಸೆರೆ ಸಿಕ್ಕ ನಂತರ ತಾಯಿ ಹಾಗೂ ನಾಲ್ಕು ಮರಿಗಳನ್ನು ಕೂರ್ಗಳ್ಳಿ ಪುನರ್ವಸತಿ ಕೇಂದ್ರಕ್ಕೆ ರವಾನಿಸಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಮರಿಗಳು ಸರಿಯಾಗಿ ಆಹಾರ ಸೇವಿಸುತ್ತಿರಲಿಲ್ಲ. ಅಸ್ವಸ್ಥಗೊಂಡಿದ್ದ ಇವು ನಾಲ್ಕು ದಿನಗಳ ಅಂತರದಲ್ಲಿ ಸಾವಿಗೀಡಾಗಿವೆ. ಮರಿಗಳ ಶವ ಪರೀಕ್ಷೆ ನಡೆಸಿದ್ದು, ಮರಿಗಳ ಅಂಗಾಂಗಗಳನ್ನು ಬೆಂಗಳೂರಿನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಶೀಘ್ರ ವರದಿ ಬರಲಿದ್ದು, ನಂತರ ಸಾವಿಗೆ ನಿಖರ ಕಾರಣ ತಿಳಿದು ಬರಲಿದೆ ಎಂದು ಹುಣಸೂರು ಪ್ರಾದೇಶಿಕ ಅರಣ್ಯ ವಿಭಾಗದ ಡಿಸಿಎಫ್ ಮಹಮ್ಮದ್ ಯಾಜುದ್ದೀನ್ ತಿಳಿಸಿದ್ದಾರೆ.

ವಾರ್ತಾ ಭಾರತಿ 10 Dec 2025 12:54 pm

Gold Price on December: ಚಿನ್ನದ ಬೆಲೆ ₹1.50 ಲಕ್ಷ ತಲುಪುತ್ತಾ? ಇಲ್ಲಿದೆ ಮಾಹಿತಿ, ಇಂದಿನ ಚಿನ್ನದ ದರಪಟ್ಟಿ

Gold price today: ಚಿನ್ನ-ಬೆಳ್ಳಿ ಬೆಲೆಯಲ್ಲಿ ಹಾವು ಏಣಿ ಆಟ ಮುಂದುವರಿದಿದೆ. ದಿನಕ್ಕೊಂದು ಕಾರಣಗಳಿಂದ ಚಿನ್ನದ ಬೆಲೆಯಲ್ಲಿ ಹೆಚ್ಚಾಗುತ್ತಲೆ ಇದೆ. ಇಂದು ಡಿಸೆಂಬರ್ 10ರಂದು ಚಿನ್ನದ ದರವು ವ್ಯಾಪಕವಾಗಿದೆ ಹೆಚ್ಚಾಗಿದೆ. ಎಷ್ಟೆಂದರೆ ನೆನ್ನೆಗಿಂತ ಇಂದು ಹೆಚ್ಚು ಪ್ರಮಾಣದಲ್ಲಿ ದರ ಹೆಚ್ಚಾಗಿದ್ದು, ಗ್ರಾಹಕ ನಿದ್ದೆಗೆಡಿಸಿದೆ. ಇಂದು 24k, 22k ಮತ್ತು ಬೆಳ್ಳಿ ದರವು ಎಷ್ಟಿದೆ, ನಗರವಾರು ಮಾಹಿತಿ, ದರಪಟ್ಟಿ

ಒನ್ ಇ೦ಡಿಯ 10 Dec 2025 12:53 pm

ಗೋ ಮಾತೆಗೆ ಚಿಕನ್‌ ಮೋಮಸ್‌ ತಿನ್ನಿಸಿದ ಯುವಕ; ಹಲ್ಲೆ ಮಾಡಿ, ಮೆರವಣಿಗೆ ಮಾಡಿಸಿದ ಬಜರಂಗ ದಳ!

ಚಾಲೆಂಜ್‌ಗಾಗಿ ಚಿಕನ್‌ ಮೊಮೊಸ್‌ ಕೊಂಡು ತಿನ್ನಲಾಗದೆ, ಹತ್ತಿರದಲ್ಲೇ ಇದ್ದ ಹಸುವಿಗೆ ತಿನ್ನಿಸಿದ ಘಟನೆ ಗುರ್ಗಾಂವ್‌ನಲ್ಲಿ ನಡೆದಿದೆ. ಸದ್ಯ ಆತನ ಮನೆಯನ್ನು ಪತ್ತೆ ಹಚ್ಚಿ ದ ಬಜರಂಗದಳ ಆತನನ್ನು ಊರು ತುಂಬಾ ಮೆರವಣಿಗೆ ಮಾಡಿಸಿ, ಆತನ ಮೇಲೆ ಹಲ್ಲೆ ಮಾಡಿದ್ದಾರೆ. ಸ್ಥಳೀಯ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪದ ಮೇಲೆ ಆತನನ್ನು ಬಂಧಿಸಿದ ಪೊಲೀಸರು ಸಂಜೆಯೇ ವಾರ್ನಿಂಗ್‌ ಕೊಟ್ಟು ಬಿಡುಗಡೆ ಮಾಡಿದ್ದಾರೆ.

ವಿಜಯ ಕರ್ನಾಟಕ 10 Dec 2025 12:50 pm

ವೇತನ ಸಹಿತ ಋತುಚಕ್ರ ರಜೆ ನೀತಿ ಸಮರ್ಥಿಸಿಕೊಂಡ ಸರಕಾರ: ಅಧಿಸೂಚನೆ ತಡೆಗೆ ಹೈಕೋರ್ಟ್ ನಕಾರ

ಬೆಂಗಳೂರು: ರಾಜ್ಯದ ಮಹಿಳಾ ನೌಕರರಿಗೆ ಋತುಚಕ್ರದ ಸಮಯದಲ್ಲಿ ಮಾಸಿಕ ಒಂದು ದಿನದ ವೇತನಸಹಿತ ರಜೆ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಅಧಿಸೂಚನೆ ಹೊರಡಿಸಿರುವ ಕ್ರಮವನ್ನು ರಾಜ್ಯ ಸರಕಾರ ಬಲವಾಗಿ ಸಮರ್ಥಿಸಿಕೊಂಡಿದೆ. ಇದೇ ವೇಳೆ, ಸಾರ್ವಜನಿಕ ದೃಷ್ಟಿಯಿಂದ ಅತ್ಯಂತ ಮಹತ್ವದ ಈ ಪ್ರಕರಣವನ್ನು ವಿಸ್ತೃತವಾಗಿ ವಿಚಾರಣೆ ನಡೆಸಬೇಕಿದೆ ಎಂದು ಅಭಿಪ್ರಾಯಪಟ್ಟಿರುವ ಹೈಕೋರ್ಟ್, ಸರಕಾರದ ಅಧಿಸೂಚನೆಗೆ ತಡೆ ನೀಡಲು ನಿರಾಕರಿಸಿ ವಿಚಾರಣೆಯನ್ನು ಜನವರಿ 20ಕ್ಕೆ ಮುಂದೂಡಿದೆ. ರಾಜ್ಯ ಕಾರ್ಮಿಕ ಇಲಾಖೆ 2025ರ ನವೆಂಬರ್ 20ರಂದು ಹೊರಡಿಸಿರುವ ಅಧಿಸೂಚನೆ ಪ್ರಶ್ನಿಸಿ ಬೆಂಗಳೂರು ಹೋಟೆಲ್ಗಳ ಸಂಘ, ಅವಿರತ ಡಿಫೆನ್ಸ್ ಸಿಸ್ಟಮ್, ಫೆಸಿಲ್ ಏರೋಸ್ಪೇಸ್ ಟೆಕ್ನಾಲಜೀಸ್ ಲಿಮಿಟೆಡ್, ಸ್ಯಾಮೋಸ್ ಟೆಕ್ನಾಲಜೀಸ್ ಲಿಮಿಟೆಡ್ಗಳ ಆಡಳಿತ ಮಂಡಳಿಗಳು ಸಲ್ಲಿಸಿದ್ದ ಅರ್ಜಿಗಳನ್ನು ನ್ಯಾಯಮೂರ್ತಿ ಜ್ಯೋತಿ ಮೂಲಿಮನಿ ಅವರಿದ್ದ ಏಕಸದಸ್ಯ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿತು. ವಿಚಾರಣೆ ಆರಂಭವಾಗುತ್ತಿದ್ದಂತೆ ನ್ಯಾಯಪೀಠ, ಅರ್ಜಿಗಳಿಗೆ ಸರಕಾರ ಆಕ್ಷೇಪಗಳನ್ನು ಸಲ್ಲಿಸಿದೆಯೇ ಎಂದು ಪ್ರಶ್ನಿಸಿತು. ಇದಕ್ಕೆ ಅಡ್ವೋಕೇಟ್ ಜನರಲ್ ಕೆ. ಶಶಿಕಿರಣ್ ಶೆಟ್ಟಿ ಆಕ್ಷೇಪಗಳನ್ನು ಸಲ್ಲಿಸಲಾಗಿದೆ, ಅರ್ಜಿದಾರರಿಗೆ ಪ್ರತಿಗಳನ್ನು ಒದಗಿಸಲಾಗುವುದು ಎಂದರು. ದೇಶದಲ್ಲೇ ಮೊದಲು: ವಾದ ಮುಂದುವರಿಸಿದ ಅಡ್ವೊಕೇಟ್ ಜನರಲ್, ಮಹಿಳೆಯರ ಹಿತದೃಷ್ಟಿಯಿಂದ ದೇಶದ ಬೇರಾವುದೇ ರಾಜ್ಯದಲ್ಲಿ ಜಾರಿಗೊಳಿಸದ ಪ್ರಗತಿಪರ ಕಾನೂನನ್ನು ಸರಕಾರ ಜಾರಿಗೊಳಿಸಿದೆ. 72 ಆಕ್ಷೇಪಗಳು ಬಂದಿದ್ದು, ಎಲ್ಲವನ್ನೂ ಆಲಿಸಲಾಗಿದೆ. ಸಂವಿಧಾನದ 42ನೇ ಪರಿಚ್ಛೇದದ ಅಡಿ ನೀತಿ ರೂಪಿಸಲು ಸರಕಾರಕ್ಕೆ ಅವಕಾಶವಿದೆ. ಈ ಸಂಬಂಧ ಸುಪ್ರೀಂ ಕೋರ್ಟ್ ನಿರ್ದೇಶನವೂ ಇದೆ. ಕಾನೂನು ಆಯೋಗವೂ ಈ ಕುರಿತು ಶಿಫಾರಸು ಮಾಡಿದೆ. ಇದೆಲ್ಲವನ್ನೂ ಆಕ್ಷೇಪದಲ್ಲಿ ವಿವರಿಸಲಾಗಿದೆ ಎಂದು ಸರಕಾರದ ಕ್ರಮವನ್ನು ಸಮರ್ಥಿಸಿಕೊಂಡರು. ಸರಕಾರದ ಅಧಿಸೂಚನೆ ಎಲ್ಲ ಕ್ಷೇತ್ರಗಳಿಗೂ ಅನ್ವಯಿಸಲಿದೆಯೇ ಎಂಬ ನ್ಯಾಯಪೀಠದ ಪ್ರಶ್ನೆಗೆ ಅಡ್ವೊಕೇಟ್ ಜನರಲ್ ಹೌದು ಎಂದು ಉತ್ತರಿಸಿದರು. ಇದನ್ನು ಆಲಿಸಿದ ನ್ಯಾಯಪೀಠ, ಪ್ರಕರಣವನ್ನು ವಿಸ್ತೃತವಾಗಿ ವಿಚಾರಣೆ ನಡೆಸಬೇಕಿದ್ದು, ಜನವರಿಯಲ್ಲಿ ನಡೆಸಲಾಗುವುದು. ಅಷ್ಟರಲ್ಲಿ ಸರಕಾರ ಸಲ್ಲಿಸಿರುವ ಆಕ್ಷೇಪಗಳಿಗೆ ಪ್ರತಿಕ್ರಿಯೆಗಳಿದ್ದರೆ ಅರ್ಜಿದಾರರು ಸಲ್ಲಿಸಬಹುದು ಎಂದು ಹೇಳಿತು. ಅರ್ಜಿದಾರರ ಪರ ವಕೀಲ ಬಿ.ಕೆ. ಪ್ರಶಾಂತ್, ಅಲ್ಲಿಯವರೆಗೆ ಬಲವಂತದ ಕ್ರಮ ಕೈಗೊಳ್ಳಬಾರದು ಎಂದು ಆದೇಶಿಸಬೇಕು ಎಂದು ಕೋರಿದರು. ಇದಕ್ಕೆ ಅಡ್ವೋಕೇಟ್ ಜನರಲ್, ಸರಕಾರ ಈ ಆದೇಶವನ್ನು ಈಗಾಗಲೇ ಎಲ್ಲ ಕ್ಷೇತ್ರಗಳಲ್ಲಿಯೂ ಜಾರಿಗೊಳಿಸಿಯಾಗಿದೆ ಎಂದು ನ್ಯಾಯಪೀಠಕ್ಕೆ ತಿಳಿಸಿದರು. ಇದಕ್ಕೆ ನ್ಯಾಯಮೂರ್ತಿಗಳು, ಅರ್ಜಿಯ ಮುಂದಿನ ವಿಚಾರಣೆಯೊಳಗೆ ಏನೂ ಆಗುವುದಿಲ್ಲ. ಇದು ಸಾರ್ವಜನಿಕ ಹಿತದೃಷ್ಟಿಯಿಂದ ಅತ್ಯಂತ ಮಹತ್ವದ ಪ್ರಕರಣವಾಗಿದೆ. ಈ ಸಂಬಂಧ ವಿಸ್ತೃತವಾಗಿ ವಾದ ಆಲಿಸಿದ ಬಳಿಕವೇ ಆದೇಶ ಹೊರಡಿಸಲಾಗುವುದು, ವಿಚಾರಣೆಗೆ ದಿನ ನಿಗದಿಪಡಿಸಲಾಗುವುದು ಎಂದರು. ಅಂತಿಮವಾಗಿ ನ್ಯಾಯಪೀಠ, ಸರಕಾರದ ಆಕ್ಷೇಪಕ್ಕೆ ಪ್ರತ್ಯುತ್ತರ ದಾಖಲಿಸುವಂತೆ ಅರ್ಜಿದಾರರ ಪರ ವಕೀಲರಿಗೆ ನಿರ್ದೇಶಿಸಿ, ವಿಚಾರಣೆಯನ್ನು ಜನವರಿ 20ಕ್ಕೆ ಮುಂದೂಡಿತು. ಜೊತೆಗೆ, ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಅರ್ಜಿ ಸಲ್ಲಿಸುವವರು ರಿಜಿಸ್ಟ್ರಾರ್ ಕಚೇರಿಯಲ್ಲಿ ಸಲ್ಲಿಸಿ, ಅರ್ಜಿಯ ಪ್ರತಿಯನ್ನು ಸರಕಾರದ ಪರ ವಕೀಲರಿಗೆ ಒದಗಿಸಬೇಕು ಎಂದು ಸೂಚಿಸಿತು.

ವಾರ್ತಾ ಭಾರತಿ 10 Dec 2025 12:47 pm

ರಾವಣನ ಅಸ್ತ್ರ ಇಟ್ಟಿದ್ದ 'ಅಸ್ತ್ರ ಆಲಯ'ವೇ ಈಗ ಆಸ್ಟ್ರೇಲಿಯಾ ಆಗಿದೆಯಂತೆ! 'ಪೂಕಿ ಬಾಬಾ' ಪ್ರವಚನಕ್ಕೆ ನಕ್ಕ ನೆಟ್ಟಿಗರು

ಆನ್‌ಲೈನ್‌ನಲ್ಲಿ 'ಪೂಕಿ ಬಾಬಾ' ಎಂದೇ ಖ್ಯಾತರಾದ ಆಧ್ಯಾತ್ಮಿಕ ನಾಯಕ ಅನಿರುದ್ಧಾಚಾರ್ಯ ಅವರು ರಾಮಾಯಣ ಕಾಲದಲ್ಲಿ ಆಸ್ಟ್ರೇಲಿಯಾ ಉಗಮಿಸಿತು ಎಂದು ವಿವರಿಸಿದ್ದಾರೆ. ರಾಮ-ರಾವಣರ ಯುದ್ಧದ ನಂತರ ಉಳಿದ ಕತ್ತಿಗಳನ್ನು ದೂರದ ದ್ವೀಪದಲ್ಲಿ ಇಡಲಾಗಿತ್ತು, ಆ 'ಅಸ್ತ್ರ ಆಲಯ'ವೇ ಕ್ರಮೇಣ ಆಸ್ಟ್ರೇಲಿಯಾ ಆಯಿತು ಎಂದು ಅವರು ಹೇಳಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಹಾಸ್ಯಮಯ ಕಮೆಂಟ್ ಗಳಿಗೆ ಕಾರಣವಾಗಿದೆ.

ವಿಜಯ ಕರ್ನಾಟಕ 10 Dec 2025 12:44 pm

Sports Street- ಐಪಿಎಲ್ ಬಗ್ಗೆ ವಸೀ ಅಕ್ರಂ ಹೇಳಿದ ಅಪ್ರಿಯ ಸತ್ಯ; ಬಿಸಿಸಿಐ ಇನ್ನಾದರೂ ಯೋಚಿಸಬೇಕಾದ್ದು ಯಾಕೆ ಮುಖ್ಯ?

ಪಾಕಿಸ್ತಾನ ಕ್ರಿಕೆಟ್ ನ ಬೌಲಿಂಗ್ ದಂತಕತೆ ವಸೀಂ ಅಕ್ರಂ ಉಳಿದ ಪಾಕಿಸ್ತಾನಿ ಆಟಗಾರರಂತಲ್ಲ. ಕ್ರಿಕೆಟ್ ಮೈದಾನದಲ್ಲಿ ಭಾರತ ತಂಡಕ್ಕೆ ಸಿಂಹಸ್ವಪ್ನವಾಗಿ ಕಾಡಿದ್ದರೂ ಮೈದಾನದ ಹೊರಗೆ ಅವರು ಬಾಯಿ ತಪ್ಪಿ ಮಾತನಾಡಿದ್ದು ಕಡಿಮೆ. ಭಾರತದ ಕ್ರಿಕೆಟ್ ಅನ್ನು ಅಂತೂ ಅವರು ಹೀಗಳೆದ ನಿದರ್ಶನವಿಲ್ಲ. ಹೀಗಿರುವಾಗ ಅವರು ಪಾಕಿಸ್ತಾನ ಸೂಪರ್ ಲೀಗ್ ಹೊಗಳಿ, ಐಪಿಎಲ್ ಅನ್ನು ತೆಗಳಿರುವುದು ಸಹಜವಾಗಿಯೇ ಭಾರತೀಯ ಕ್ರಿಕೆಟ್ ಪ್ರೇಮಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಐಪಿಎಲ್ ಮುಗಿಯೋ ಹೊತ್ತಿಗೆ ಮಕ್ಕಳೆಲ್ಲಾ ದೊಡ್ಡವರಾಗ್ತಾರೆ ಎಂದು ಅವರು ಹೇಳಿದ್ದರು. ಇದಕ್ಕೆ ಏನರ್ಥ? ಇದು ಸರಿಯೇ?

ವಿಜಯ ಕರ್ನಾಟಕ 10 Dec 2025 12:34 pm

ರಾಜ್ಯದಲ್ಲಿ ಈ ವರ್ಷ 518 ಕಡೆಗಳಲ್ಲಿ ಆರ್‌ಎಸ್‌ಎಸ್ ಪಥಸಂಚಲನ: ಗಲಾಟೆ, ದೊಂಭಿ ನಡೆದಿಲ್ಲ ಎಂದ ಸರ್ಕಾರ

ರಾಜ್ಯದಾದ್ಯಂತ 518 ಕಡೆಗಳಲ್ಲಿ ಆರ್ ಎಸ್ ಎಸ್ ಪಥಸಂಚಲನ ಯಶಸ್ವಿಯಾಗಿ ನಡೆದಿದೆ. ಗೃಹ ಇಲಾಖೆಯ ಪ್ರಕಾರ, ಯಾವುದೇ ಗಲಾಟೆ, ದೊಂಭಿ ಅಥವಾ ಕೋಮು ಗಲಭೆಗಳು ಸಂಭವಿಸಿಲ್ಲ. ಚಿತ್ತಾಪುರದಲ್ಲಿ ನ್ಯಾಯಾಲಯದ ಅನುಮತಿ ಪಡೆದು ಪಥಸಂಚಲನ ನಡೆಸಲಾಗಿತ್ತು. ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಿಜೆಪಿ ನಾಯಕರು ಭಾಗವಹಿಸಿದ್ದರು. ಸ್ವಯಂಸೇವಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

ವಿಜಯ ಕರ್ನಾಟಕ 10 Dec 2025 12:29 pm

ರಾಹುಲ್‌ ಗಾಂಧಿ ಗಂಭೀರ ರಾಜಕಾರಣಿಯಲ್ಲ; ಪ್ರಹ್ಲಾದ್‌ ಜೋಶಿ ಹೇಳಿದ್ದನ್ನು ಕೇಳಿ ನಸುನಕ್ಕ ವಿ. ಸೋಮಣ್ಣ

ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್‌ ಗಾಂಧಿ ಅವರ ಸರಣಿ ವಿದೇಶ ಪ್ರವಾಸಗಳ ಬಗ್ಗೆ ಚರ್ಚೆಗಳು ನಡೆಯುತ್ತಲೇ ಇರುತ್ತವೆ. ಅದೇ ರೀತಿ ರಾಹುಲ್‌ ವಿದೇಶ ಪ್ರಯಾಣದ ಬಗ್ಗೆ ವ್ಯಂಗ್ಯವಾಡಿರುವ ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ, ಅಧಿವೇಶನ ನಡೆಯುವಾಗ ವಿದೇಶಕ್ಕೆ ಹಾರುವ ಎಲ್‌ಒಪಿ ಆಮೇಲೆ ನನಗೆ ಮಾತನಾಡಲು ಅವಕಾಶ ಕೊಡಲಿಲ್ಲ ಎಂದು ಆರೋಪಿಸುವುದು ಹಾಸ್ಯಾಸ್ಪದ ಎಂದು ಹೇಳಿದ್ದಾರೆ. ಪ್ರಹ್ಲಾದ್‌ ಜೋಶಿ ಅವರು ರಾಹುಲ್‌ ಗಾಂಧಿ ಅವರಿಗೆ, ರಾಜಕಾರಣವನ್ನು ಗಂಭೀರವಾಗಿ ಪರಿಗಣಿಸುವಂತೆ ಸಲಹೆ ನೀಡಿದ್ದಾರೆ.

ವಿಜಯ ಕರ್ನಾಟಕ 10 Dec 2025 12:21 pm

ಶಾಲೆಗಳಲ್ಲಿ ‘ವಂದೇ ಮಾತರಂ’ ಕಡ್ಡಾಯಗೊಳಿಸಬೇಕು: ಸುಧಾ ಮೂರ್ತಿ ಮನವಿ

ಹೊಸದಿಲ್ಲಿ: ಶಾಲಾ ಮಕ್ಕಳಲ್ಲಿ ದೇಶಭಕ್ತಿ ಬೆಳೆಸುವ ನಿಟ್ಟಿನಲ್ಲಿ ವಂದೇ ಮಾತರಂ ಹಾಡನ್ನು ಕಡ್ಡಾಯಗೊಳಿಸಬೇಕೆಂದು ರಾಜ್ಯಸಭೆ ಸಂಸದೆ ಸುಧಾ ಮೂರ್ತಿ ಸರಕಾರವನ್ನು ಒತ್ತಾಯಿಸಿದ್ದಾರೆ. ಮಂಗಳವಾರ ವಂದೇ ಮಾತರಂ ರಚನೆಯ 150ನೇ ವರ್ಷಾಚರಣೆಯ ವಿಶೇಷ ಚರ್ಚೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. “ನಾನು ಸಂಸದೆ ಎಂಬ ಹುದ್ದೆಯಲ್ಲಿ ಇಲ್ಲಿ ನಿಲ್ಲುತ್ತಿಲ್ಲ; ಭಾರತ ಮಾತೆಯ ಮಗಳಾಗಿ ನಿಂತಿದ್ದೇನೆ” ಎಂದು ಮಾತು ಪ್ರಾರಂಭಿಸಿದ ಸುಧಾ ಮೂರ್ತಿ, ವಂದೇ ಮಾತರಂನ ತಾತ್ವಿಕ ಅರ್ಥ, ಅದರ ಸಾಂಸ್ಕೃತಿಕ ಪರಿಣಾಮಗಳನ್ನು ಸದನಕ್ಕೆ ನೆನಪಿಸಿದರು. ಭಾರತವನ್ನು ಒಂದು ಬಣ್ಣಬಣ್ಣದ ಹೊದಿಕೆಗೆ ಹೋಲಿಸಿದ ಅವರು, “ಪ್ರತಿಯೊಂದು ರಾಜ್ಯವೂ ಬಟ್ಟೆಯ ತುಂಡು; ಅವನ್ನು ದಾರದ ಸೂಜಿಯಿಂದ ಜೋಡಿಸುವ ಕೆಲಸ ವಂದೇ ಮಾತರಂ ಮಾಡುತ್ತದೆ” ಎಂದು ಹೇಳಿದರು.   “ತಾಯ್ನಾಡು ಎಂಬ ಪರಿಕಲ್ಪನೆ ನಕ್ಷೆ, ಧ್ವಜಗಳಿಗೆ ಸೀಮಿತವಲ್ಲ; ಇದು ಜೀವನ, ಭಾವನೆ, ಆಳವಾದ ನಿಷ್ಠೆಯ ಸಂಕೇತ” ಎಂದು ಅವರು ಅಭಿಪ್ರಾಯಪಟ್ಟರು. ವಂದೇ ಮಾತರಂ ಕಲಿಸುವುದರ ಅಗತ್ಯತೆಯನ್ನು ಉಲ್ಲೇಖಿಸಿದ ಸುಧಾ ಮೂರ್ತಿ, “ಮಕ್ಕಳಿಗೆ ಜನಗಣಮನ ಕಲಿಸುತ್ತೇವೆ. ವಂದೇ ಮಾತರಂ ಕಲಿಸಲು ಹೆಚ್ಚುವರಿ ಮೂರು ನಿಮಿಷ ಸಾಕು. ಕಲಿಸದೇ ಹೋದರೆ ಮುಂದಿನ ಪೀಳಿಗೆ ಹಾಡಿನ ಸಂಪೂರ್ಣ ಪಠ್ಯವನ್ನೇ ಕಳೆದುಕೊಳ್ಳಬಹುದಾದ ಅಪಾಯ ಇದೆ” ಎಂದು ಕಳವಳ ವ್ಯಕ್ತಪಡಿಸಿದರು. ಶಿಕ್ಷಣ ಸಚಿವಾಲಯವನ್ನು ಉದ್ದೇಶಿಸಿ ಅವರು,“ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ವಂದೇ ಮಾತರಂ ಹಾಡುವುದನ್ನು ಕಡ್ಡಾಯಗೊಳಿಸಬೇಕು. ದೇಶಭಕ್ತಿ ಎಂದರೆ ಸಹಾನುಭೂತಿ, ತ್ಯಾಗ, ತಾಯ್ನಾಡಿನ ರಕ್ಷಣೆಯ ಮೌಲ್ಯಗಳು—ಇವೆಲ್ಲವೂ ವಂದೇ ಮಾತರಂ ರೂಪಿಸಿರುವ ಸಂದೇಶಗಳಲ್ಲಿ ಅಡಕವಾಗಿವೆ” ಎಂದು ಹೇಳಿದರು.

ವಾರ್ತಾ ಭಾರತಿ 10 Dec 2025 12:12 pm

ಜೈಪುರ ಸಾಹಿತ್ಯ ಉತ್ಸವ 2026: ಜಾಗತಿಕ ಚರ್ಚೆಗೆ ವೇದಿಕೆ

ಜೈಪುರ ಸಾಹಿತ್ಯ ಉತ್ಸವ (JLF) 2026 ಜಗತ್ತಿನ ಅತಿದೊಡ್ಡ ಸಾಂಸ್ಕೃತಿಕ ಮತ್ತು ಸಾಹಿತ್ಯಿಕ ಒಕ್ಕೂಟವಾಗಿ ಹೊರಹೊಮ್ಮುತ್ತದೆ, ಜನವರಿ 15ರಿಂದ 19ರವರೆಗೆ ಜೈಪುರದಲ್ಲಿ ನಡೆಯುತ್ತದೆ. ಇದು ಸಾಹಿತ್ಯವನ್ನು ಮೀರಿ, ಹವಾಮಾನ ಬದಲಾವಣೆ, ಭೂರಾಜಕೀಯತೆ, ಸಾಮಾಜಿಕ ನ್ಯಾಯ ಮತ್ತು ಗುರುತುಗಳಂತಹ ಜಾಗತಿಕ ಸಮಸ್ಯೆಗಳಲ್ಲಿ ಸಂವಾದಗಳ ಕೇಂದ್ರಬಿಂದುವಾಗುತ್ತದೆ. ಜಗತ್ತಿನ ಅತ್ಯಂತ ದೊಡ್ಡ ಹಾಗೂ ವೈವಿಧ್ಯಮಯ ಸಾಹಿತ್ಯ ಸಂಭ್ರಮವೆಂದು ಹೆಸರು ಮಾಡಿರುವ ಜೈಪುರ

ಒನ್ ಇ೦ಡಿಯ 10 Dec 2025 11:51 am

ಇಂಡಿಗೋ ವಿಮಾನಗಳ ಕಾರ್ಯಾಚರಣೆಯನ್ನು ಶೇ. 10 ರಷ್ಟು ಕಡಿತಗೊಳಿಸಲು ಸರ್ಕಾರ ಆದೇಶ

ಇಂಡಿಗೋ ವಿಮಾನಯಾನ ಸಂಸ್ಥೆಗೆ ನಾಗರಿಕ ವಿಮಾನಯಾನ ಸಚಿವಾಲಯವು ದೊಡ್ಡ ಶಾಕ್ ನೀಡಿದೆ. ಹೊಸ ನಿಯಮಗಳನ್ನು ಪಾಲಿಸದ ಕಾರಣ, ವಿಮಾನಗಳ ಕಾರ್ಯಾಚರಣೆಯನ್ನು ಶೇಕಡಾ 10 ರಷ್ಟು ಕಡಿತಗೊಳಿಸಲು ಆದೇಶಿಸಲಾಗಿದೆ. ಇದರಿಂದಾಗಿ ಸುಮಾರು 216 ವಿಮಾನಗಳು ರದ್ದಾಗಲಿವೆ. ಈ ಕ್ರಮವು ಸಂಸ್ಥೆಯ ಕಾರ್ಯಾಚರಣೆಯನ್ನು ಸ್ಥಿರಗೊಳಿಸಲು ಮತ್ತು ರದ್ದತಿಗಳನ್ನು ಕಡಿಮೆ ಮಾಡಲು ಉದ್ದೇಶಿಸಿದೆ. ಸಚಿವಾಲಯವು ಪರಿಸ್ಥಿತಿಯನ್ನು ನಿಯಮಿತವಾಗಿ ಪರಿಶೀಲಿಸಲಿದೆ.

ವಿಜಯ ಕರ್ನಾಟಕ 10 Dec 2025 11:50 am

ಬೆಳಗಾವಿ | ಗೋಹತ್ಯೆ ನಿಷೇಧ ಕಾಯ್ದೆ ತಿದ್ದುಪಡಿ ವಿರೋಧಿಸಿ ವಿಎಚ್ ಪಿ, ಬಜರಂಗದಳ ಪ್ರತಿಭಟನೆ

ಬೆಳಗಾವಿ : ಕರ್ನಾಟಕ ಗೋಹತ್ಯೆ ಪ್ರತಿಬಂಧಕ ಹಾಗೂ ಸಂರಕ್ಷಣಾ ಕಾಯ್ದೆಯ ತಿದ್ದುಪಡಿಯನ್ನು ವಿರೋಧಿಸಿ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದ ಕಾರ್ಯಕರ್ತರು ಬುಧವಾರ ಚನ್ನಮ್ಮ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು. ರಾಜ್ಯ ಸರಕಾರ ಕ್ಯಾಬಿನೆಟ್ ಸಭೆಯಲ್ಲಿ 2020ರ ಜಾನುವಾರು ಹತ್ಯೆ ಪ್ರತಿಬಂಧಕ ಕಾಯ್ದೆಯ ಸೆಕ್ಷನ್ 6(4)ಕ್ಕೆ ತಿದ್ದುಪಡಿಗೆ ನಿರ್ಧಾರ ಕೈಗೊಂಡಿದ್ದರೂ, ಈಗ ಸರಕಾರ ಅದನ್ನು ಅನುಷ್ಠಾನಗೊಳಿಸಲು ಹಿಂದೇಟು ಹಾಕುತ್ತಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು. ರಾಜ್ಯದಲ್ಲಿ ಒಂದೇ ವಾಹನದಲ್ಲಿ ನಿಗದಿತ ಮಿತಿಗಿಂತ ಹಲವು ಪಟ್ಟು ಹೆಚ್ಚು ಜಾನುವಾರುಗಳನ್ನು ತುಂಬಿ ಕ್ರೂರವಾಗಿ ಸಾಗಿಸುವ ಘಟನೆಗಳು ನಡೆಯುತ್ತಿದ್ದರೂ, 2021ರಿಂದ ಜಾರಿಯಾದ ಕಾಯ್ದೆಯ ಪರಿಣಾಮವಾಗಿ ಇದರಲ್ಲಿ ಸ್ವಲ್ಪ ನಿಯಂತ್ರಣ ಕಂಡಿತ್ತು. ಆದರೆ ಕಾಯ್ದೆಯ ಸಂಪೂರ್ಣ ಜಾರಿಗೆ ಬಾರದಿರುವ ಹಿನ್ನೆಲೆಯಲ್ಲಿ, ಇನ್ನೂ ಕೆಲವು ಪ್ರದೇಶಗಳಲ್ಲಿ ಹಣದ ಆಸೆಗೆ ಜಾನುವಾರುಗಳನ್ನು ಅಮಾನ್ಯ ರೀತಿಯಲ್ಲಿ ಸಾಗಿಸಲಾಗುತ್ತಿದೆ ಎಂದು ಪ್ರತಿಭಟನಾಕಾರರು . ಪ್ರತಿಭಟನೆಯಲ್ಲಿ ಪ್ರಮೋದ್ ಒಕ್ಕುಂದಮಠ, ಸ್ವರೂಪ ಕಾಲಕುಂದ್ರಿ, ಆನಂದ ಕರಲಿಂಗನ್ನವರ, ನಾಗೇಶ ಕಾಂಬಳೆ ಸೇರಿದಂತೆ ಹುದ್ದೆದಾರರು ಮತ್ತು ಕಾರ್ಯಕರ್ತರು ಪಾಲ್ಗೊಂಡಿದ್ದರು.  

ವಾರ್ತಾ ಭಾರತಿ 10 Dec 2025 11:47 am

ಎರ್ಮಾಳು | ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಚಾಲಕ ಮೃತ್ಯು

ಪಡುಬಿದ್ರಿ :  ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ವಿದ್ಯುತ್ ಕಂಬಕ್ಕೆ ಢಿಕ್ಕಿಯಾಗಿ ತೋಟಕ್ಕೆ ಉರುಳಿ ಕಾರಿನಲ್ಲಿದ್ದ ವ್ಯಕ್ತಿಯೋರ್ವರು ಮೃತಪಟ್ಟ ಘಟನೆ ಪಡುಬಿದ್ರಿ ರಾ.ಹೆ.66 ರಲ್ಲಿ ತಡರಾತ್ರಿ 2 ಗಂಟೆಯ ಸುಮಾರಿಗೆ ಎರ್ಮಾಳು ತೆಂಕ ಸೇತುವೆ ಬಳಿ ನಡೆದಿದೆ. ಮೃತ ವ್ಯಕ್ತಿಯನ್ನು ಮಂಗಳೂರಿನ ಗೌಜಿ ಇವೆಂಟ್ಸ್ ಮಾಲಿಕ ಅಭಿಷೇಕ್ ಎಂದು ಗುರುತಿಸಲಾಗಿದೆ. ಉಡುಪಿಯಿಂದ ಮಂಗಳೂರು ಕಡೆಗೆ ಸಾಗುತ್ತಿದ್ದ ಕಾರನ್ನು ಅವರೇ ಚಲಾಯಿಸುತ್ತಿದ್ದು, ಸಹಪ್ರಯಾಣಿಕರು ಯಾರೂ ಇರಲಿಲ್ಲ. ಹಿಂದಿನ ವಾಹನಗಳಲ್ಲಿ ಅವರ ಗೆಳೆಯರು ಇದ್ದರು ಎಂದು ತಿಳಿದು ಬಂದಿದೆ. ಢಿಕ್ಕಿಯ ರಭಸಕ್ಕೆ ಕಾರು ನಜ್ಜುಗುಜ್ಜಾಗಿದೆ. ಈ ವೇಳೆ ವಿದ್ಯುತ್ ಇಲ್ಲದ ಕಾರಣ ಭಾರೀ ಅನಾಹುತ ತಪ್ಪಿದಂತಾಗಿದೆ. ಗಾಯಗೊಂಡಿದ್ದ ಅಭಿಷೇಕ್ ಅವರನ್ನು ಸ್ಥಳೀಯರ ಸಹಕಾರದಿಂದ ಆತನ ಸ್ನೇಹಿತರು ಮುಕ್ಕದ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟದ್ದಾರೆಂದು ತಿಳಿದು ಬಂದಿದೆ. ಪಡುಬಿದ್ರಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಾರ್ತಾ ಭಾರತಿ 10 Dec 2025 11:30 am

ಸಿಎಂ ಬದಲಾವಣೆ ಬಗ್ಗೆ ಭಿನ್ನ, ಭಿನ್ನ ಚರ್ಚೆ: ವಿಧಾನಸಭೆ ಮೊಗಸಾಲೆಯ ಗುಸು ಗುಸು ಮಾತುಕತೆಗಳೇ ಕುತೂಹಲ!

ಕರ್ನಾಟಕದಲ್ಲಿ ಮುಖ್ಯಮಂತ್ರಿ ಬದಲಾವಣೆ ಚರ್ಚೆ ಜೋರಾಗಿದೆ. ಸಿದ್ದರಾಮಯ್ಯ ಅಧಿಕಾರ ಬಿಟ್ಟುಕೊಡುತ್ತಾರಾ, ಮುಂದಿನ ಸಿಎಂ ಯಾರು ಎಂಬ ಪ್ರಶ್ನೆಗಳು ಮೂಡಿವೆ.ಇತ್ತ ಸಿದ್ದು ಹಾಗೂ ಡಿಕೆ ಬಣದಲ್ಲಿ ಶಾಸಕರು ಪರ ವಿರೋಧ ಚರ್ಚೆ ನಡೆಸುತ್ತಿದ್ದರೆ, ಕಲವು ಶಾಸಕರು, ಸಚಿವರು ಯಾವುದೇ ಬಹಿರಂಗ ಹೇಳಿಕೆ ನೀಡುತ್ತಿಲ್ಲ. ರಾಹುಲ್ ಗಾಂಧಿಯವರ ನಿರ್ಧಾರವೇ ಅಂತಿಮ ಎಂದು ಸಿದ್ದು ಆಪ್ತರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಡಿಕೆಶಿ ಬಣದಲ್ಲಿ 50-50 ವಾತಾವರಣವಿದೆ. ಇದರಿಂದಾಗಿ ಸಂಪುಟ ಪುನಾರಚನೆ ವಿಳಂಬವಾಗುವ ಆತಂಕ ಕೆಲವರಲ್ಲಿ ಇದೆ.

ವಿಜಯ ಕರ್ನಾಟಕ 10 Dec 2025 11:29 am

ಸರಕಾರಿ ಯೋಜನೆಗಳ ಹೆಸರಿನಲ್ಲಿ ಬಿಜೆಪಿಯಿಂದ ದೇಣಿಗೆ ಸಂಗ್ರಹ; ಆರ್‌ಟಿಐ ಮಾಹಿತಿಯಿಂದ ಬಹಿರಂಗ

ಸ್ವಚ್ಛ ಭಾರತ ಮಿಷನ್‌ಗೆ ಹಣ ಪಾವತಿಸಿದರೆ ರಸೀದಿ ಮಾತ್ರ ಬಿಜೆಪಿಯಿಂದ ಬರುತ್ತದೆ!

ವಾರ್ತಾ ಭಾರತಿ 10 Dec 2025 11:27 am

ಜೈಪುರ ಸಾಹಿತ್ಯ ಉತ್ಸವ (JLF) 2026ರಲ್ಲಿ ಹೊಳೆಯಲಿರುವ ಭಾರತೀಯ ಸಾಹಿತಿಗಳು

ಜೈಪುರ ಸಾಹಿತ್ಯ ಉತ್ಸವ (JLF) 2026ರ ಆವೃತ್ತಿಗಾಗಿ ಭರದ ಸಿದ್ಧತೆ ನಡೆದಿದೆ. ಈ ವೇಳೆ ಎಲ್ಲರ ಮನಸ್ಸಿನಲ್ಲಿ ಉದ್ಭವಿಸಿದ ಪ್ರಶ್ನೆ ಎಂದರೆ, ಇಂದು ಹೆಚ್ಚುತ್ತಿರುವ ಡಿಜಿಟಲ್ ಮತ್ತು ಪರಸ್ಪರ ಸಂಪರ್ಕಿತ ಜಗತ್ತಿನಲ್ಲಿ ಸಾಹಿತ್ಯದ ಭವಿಷ್ಯವೇನು? ತಂತ್ರಜ್ಞಾನ, ಬದಲಾಗುತ್ತಿರುವ ಜಾಗತಿಕ ನಿರೂಪಣೆಗಳು ಮತ್ತು ಓದುಗರ ಅಭ್ಯಾಸ ಬದಲಾವಣೆ ಸಂದರ್ಭದಲ್ಲಿ ಸಾಹಿತ್ಯ ಹೇಗೆ ವಿಕಸನಗೊಳ್ಳುತ್ತಿದೆ ಎಂಬುದರ ಮೇಲೆ ಈ JLF

ಒನ್ ಇ೦ಡಿಯ 10 Dec 2025 11:19 am

ಬೆಳಗಾವಿ ಜಿಲ್ಲೆ ವಿಭಜನೆ; ಎರಡು ಹೊಸ ಜಿಲ್ಲೆ ರಚನೆ: ಮಹತ್ವದ ಅಪ್ಡೇಟ್‌ ನೀಡಿದ ಕಂದಾಯ ಸಚಿವ ಕೃಷ್ಣ ಬೈರೇಗೌಡ

ಬೆಳಗಾವಿ, ಡಿಸೆಂಬರ್‌ 10: ಬೆಳಗಾವಿ ಜಿಲ್ಲೆಯನ್ನು ವಿಭಜಿಸಿ ಚಿಕ್ಕೋಡಿ ಮತ್ತು ಗೋಕಾಕ್ ಗಳನ್ನು ನೂತನ ಜಿಲ್ಲೆಗಳನ್ನಾಗಿ ಘೋಷಿಸುವ ಸಂಬಂಧಪಟ್ಟಂತೆ ಅಭಿಪ್ರಾಯ ಸಂಗ್ರಹಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಕಂದಾಯ ಸಚಿವ ಕೃಷ್ಣ ಭೈರೇಗೌಡ ವಿಧಾನಸಭೆಯಲ್ಲಿ ತಿಳಿಸಿದರು. ಐಹೊಳೆ ದುರ್ಯೋಧನ ಮಹಾಲಿಂಗಪ್ಪ ಅವರ ಸರ್ಕಾರದ ಗಮನ ಸೆಳಯುವ ಸೂಚನೆಗೆ ಉತ್ತರಿಸಿದ ಕಂದಾಯ ಸಚಿವ ಕೃಷ್ಣ ಭೈರೇಗೌಡ ಅವರು, ದೊಡ್ಡ

ಒನ್ ಇ೦ಡಿಯ 10 Dec 2025 11:18 am

ಕಲಬುರಗಿ | ಡಿ.14ರವರೆಗೆ ಕನಿಷ್ಠ ತಾಪಮಾನ ಸಾಧ್ಯತೆ: ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಜಿಲ್ಲಾಧಿಕಾರಿ ಮಾಹಿತಿ

ಕಲಬುರಗಿ: ಜಿಲ್ಲಾದ್ಯಂತ ಡಿಸೆಂಬರ್ 14ರ ವರೆಗೆ ತಾಪಮಾನವು ಸಾಮಾನ್ಯಕ್ಕಿಂತ (4°C ನಿಂದ 6°C) ತೀರಾ ಕಡಿಮೆ ಇರುವ ಸಾಧ್ಯತೆಯಿದೆ. ಇದು ತೀವ್ರ ಶೀತ ಅಲೆಯ ಪರಿಸ್ಥಿತಿಗೆ ಕಾರಣವಾಗಬಹುದು. ಆದ್ದರಿಂದ ಸಾರ್ವಜನಿಕರು ಅನಗತ್ಯವಾಗಿ ಹೊರಗಡೆ ತಿರುಗಾಡಬಾರದು ಮತ್ತು ಪ್ರವಾಸವನ್ನು ಮಿತಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಬಿ.ಫೌಝಿಯಾ ತರನ್ನುಮ್ ತಿಳಿಸಿದ್ದಾರೆ. ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಚಳಿ ಮತ್ತು ಶೀತ ಗಾಳಿಯಿಂದ ರಕ್ಷಿಸಿಕೊಳ್ಳಲು ಸಾರ್ವಜನಿಕರು ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕು. ವೃದ್ಧರು, ಮಕ್ಕಳು ಬಗ್ಗೆ ಪಾಲಕ ಪೋಷಕರು ಎಚ್ಚರಿಕೆ ವಹಿಸಬೇಕು ಎಂದಿದ್ದಾರೆ. ಏನು ಮಾಡಬೇಕು:? ಚಳಿಯಿಂದ ರಕ್ಷಿಸಲು ಬೆಚ್ಚನೆಯ ಬಟ್ಟೆಗಳನ್ನು ಧರಿಸಬೇಕು. ಸಾಧ್ಯವಾದಷ್ಟು ಒಳಾಂಗಣದಲ್ಲಿರಬೇಕು. ಬಟ್ಟೆ ಒದ್ದೆಯಾಗದಂತೆ ಎಚ್ಚರ ವಹಿಸಬೇಕು. ಒದ್ದೆಯಾದಲ್ಲಿ ದೇಹದ ಶಾಖದ ನಷ್ಟವನ್ನು ತಡೆಯಲು ಬಟ್ಟೆಗಳನ್ನು ತ್ವರಿತವಾಗಿ ಬದಲಾಯಿಸಬೇಕು. ಕೈಗವಸುಗಳನ್ನು ಹಾಕಿಕೊಳ್ಳಬೇಕು. ಮನೆಯಲ್ಲೇ ರೇಡಿಯೋ ಆಲಿಸಿ, ಟಿವಿ, ದಿನಪತ್ರಿಕೆ ವೀಕ್ಷಿಸುವ ಮೂಲಕ ಹವಾಮಾನ ಮುನ್ಸೂಚನೆ ಅರಿಯಬೇಕು. ನಿಯಮಿತವಾಗಿ ಬಿಸಿ ಪಾನೀಯಗಳನ್ನು ಕುಡಿಯಬೇಕು. ನೀರಿನ ಪೈಪ್ ಗಳು ಚಳಿಯಿಂದ ಹೆಪ್ಪುಗಟ್ಟಬಹುದು ನೀರನ್ನು ಸಂಗ್ರಹಿಸಿಕೊಳ್ಳಬೇಕು. ಮರಗಟ್ಟುವಿಕೆ, ಬೆರಳುಗಳು, ಕಾಲ್ಬೆರಳುಗಳು, ಕಿವಿಯೋಲೆಗಳು ಮತ್ತು ಮೂಗಿನ ತುದಿಯಲ್ಲಿ ಬಿಳಿ ಅಥವಾ ಮಸುಕಾದ ನೋಟದಂತಹ ಹಿಮಪಾತ(ಹೈಪೋಥರ್ಮಿಯಾ)ದ ಲಕ್ಷಣಗಳ ಬಗ್ಗೆ ಎಚ್ಚರದಿಂದಿರಬೇಕು. ಹೈಪೋಥರ್ಮಿಯಾ ಸಂದರ್ಭದಲ್ಲಿ ವ್ಯಕ್ತಿಯನ್ನು ಬೆಚ್ಚಗಿನ ಸ್ಥಳಕ್ಕೆ ಕರೆದೊಯ್ದು ಅವರ ಬಟ್ಟೆಗಳನ್ನು ಬದಲಾಯಿಸಬೇಕು. ಚರ್ಮದಿಂದ ಚರ್ಮ ಸಂಪರ್ಕಿಸುವ ಮೂಲಕ ದೇಹ ಬೆಚ್ಚಗಿರುವಂತೆ ನೋಡಿಕೊಳ್ಳಬೇಕು. ಒಣ ಪದರಗಳ ಕಂಬಳಿಗಳು, ಬಟ್ಟೆಗಳು, ಟವೆಲ್ಗಳಿಂದ ವ್ಯಕ್ತಿಯ ದೇಹವನ್ನು ಬೆಚ್ಚಗಿರುವಂತೆ ಎಚ್ಚರ ವಹಿಸಬೇಕು. ಏನು ಮಾಡಬಾರದು: ದೇಹದ ಉಷ್ಣತೆಯನ್ನು ಕಡಿಮೆಗೊಳಿಸುವ ಮದ್ಯ ಸೇವನೆ ಮಾಡಬಾರದು. ಹೈಪೋಥರ್ಮಿಯಾ ಕಾಣಿಸಿಕೊಂಡ ದೇಹದ ಭಾಗವನ್ನು ಮಸಾಜ್ ಮಾಡಬೇಡಿ. ಇದು ಹೆಚ್ಚಿನ ಹಾನಿಯನ್ನುಂಟು ಮಾಡಬಹುದು. ಜಾನುವಾರುಗಳ ಕಾಳಜಿ ಹೇಗೆ? ಪಶು, ಪ್ರಾಣಿಗಳನ್ನು ಸಾಕಿರುವ ಸಾರ್ವಜನಿಕರು ರಾತ್ರಿ ವೇಳೆ ಜಾನುವಾರುಗಳನ್ನು ಶೆಡ್ ಗಳ ಒಳಗೆ ಇರಿಸಿ ಶೀತದಿಂದ ರಕ್ಷಿಸಲು ಒಣ ಹಾಸಿಗೆಯನ್ನು ಒದಗಿಸಬೇಕು. ಚಳಿಯನ್ನು ನಿಭಾಯಿಸಲು ಮತ್ತು ಪ್ರಾಣಿಗಳು ಆರೋಗ್ಯವಾಗಿರಲು ಮೇವಿನ ಸಾಂಧ್ರತೆಯಲ್ಲಿ ಪ್ರೋಟೀನ್ ಮಟ್ಟ ಮತ್ತು ಖನಿಜಗಳನ್ನು ಹೆಚ್ಚಿಸಬೇಕು. ಪ್ರಾಣಿಗಳಿಗೆ ದೈನಂದಿನ ನೀಡುವ ಮೇವು, ಬೇಳೆ ಕಾಳಿನ ಜೊತೆಗೆ ಉಪ್ಪಿನೊಂದಿಗೆ ಖನಿಜ ಮಿಶ್ರಣ ಪೂರೈಸಬೇಕು. ಇದಲ್ಲದೆ ಗೋಧಿ ಧಾನ್ಯ, ಬೆಲ್ಲ ನೀಡಬಹುದು. ಕೋಳಿ ಸಾಕಣೆ ಕೇಂದ್ರಗಳಲ್ಲಿ ಕೃತಕ ಬೆಳಕನ್ನು ಒದಗಿಸುವ ಮೂಲಕ ಮರಿಗಳನ್ನು ಬೆಚ್ಚಗಿಡಬಹುದು. ಇನ್ನು ಬೆಳಗ್ಗೆ ಸಮಯದಲ್ಲಿ ದನ-ಮೇಕೆಗಳನ್ನು ಮೇಯಲು ಬಿಡಬಾರದು ಮತ್ತು ರಾತ್ರಿ ಸಮಯದಲ್ಲಿ ತೆರೆದ ಸ್ಥಳದಲ್ಲಿ ಇರಿಸಬಾರದೆಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ.

ವಾರ್ತಾ ಭಾರತಿ 10 Dec 2025 11:10 am