SENSEX
NIFTY
GOLD
USD/INR

Weather

14    C
... ...View News by News Source

ಚೇಳಾಯರು | ಬಾಲಕಿಗೆ ಲೈಂಗಿಕ ಕಿರುಕುಳ ಆರೋಪ : ಆರೋಪಿ ವೃದ್ಧನ ಬಂಧನ

ಸುರತ್ಕಲ್, ಡಿ.13: ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿ ಸುರತ್ಕಲ್ ಪೊಲೀಸರು ಪೊಕ್ಸೊ ಕಾಯ್ದೆಯಡಿ ಆರೋಪಿಯನ್ನು ಚೇಳಾಯರು ಎಂಬಲ್ಲಿ ಬಂಧಿಸಿದ್ದಾರೆ. ಸುರತ್ಕಲ್ ಚೇಳಾಯರು ನಿವಾಸಿ ಸುಂದರ ಪೂಜಾರಿ (60) ಬಂಧಿತ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ. ಟ್ಯೂಶನ್ ಮುಗಿಸಿ ಬಸ್‌ನಲ್ಲಿ ಬಂದು ಮುಕ್ಕದಲ್ಲಿ ಇಳಿದು ತನ್ನ ಮನೆಗೆ ಒಳ ರಸ್ತೆಯಾಗಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಆ ರಸ್ತೆಯಾಗಿ ಬಂದ ಆರೋಪಿ ಲೈಂಗಿಕ ಕಿರುಕುಳ ನೀಡಿರುವುದಾಗಿ ಪೊಲೀಸ್ ದೂರಿನಲ್ಲಿ ಸಂತ್ರಸ್ತೆ ತಿಳಿಸಿದ್ದಾಳೆ. ಈ ಘಟನೆ 2025ರ ಅಕ್ಟೋಬರ್‌ನಲ್ಲಿ ನಡೆದಿದ್ದು, ಆ ಬಳಿಕ ಬಾಲಕಿ ಮಾನಸಿಕ ಖಿನ್ನತೆಗೆ ಒಳಗಾಗಿದ್ದಳು. ಹಾಗಾಗಿ ಆಕೆಯ ತಾಯಿ ವೈದ್ಯರ ಬಳಿ ಕರೆದೊಯ್ದು ತಪಾಸಣೆಗೆ ಒಳಪಡಿಸಿದ್ದರು. ಈ ವೇಳೆ ಬಾಲಕಿ ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ವಿಚಾರ ತಿಳಿಸಿದ್ದಾಗಿ ಪೊಲೀಸರು ಪ್ರಾಥಮಿಕ ವರದಿಯಲ್ಲಿ ತಿಳಿಸಿದ್ದಾರೆ. ಈ ಸಂಬಂಧ ಸಂತ್ರಸ್ತೆ ನೀಡಿದ ದೂರಿಂತೆ ಸುರತ್ಕಲ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.

ವಾರ್ತಾ ಭಾರತಿ 13 Dec 2025 11:55 pm

ರೀಲ್ಸ್‌ ರಾಣಿ ಜತೆ ಕಾನ್ಸ್‌ಟೆಬಲ್‌ ಪರಾರಿ, ಸಿಬ್ಬಂದಿಯನ್ನು ಅಮಾನತುಗೊಳಿಸಿದ ಪೊಲೀಸ್‌ ಅಧಿಕಾರಿಗಳು!

ವಿವಾಹಿತ ಮಹಿಳೆಯೊಬ್ಬರ ಜತೆ ಕಾನ್ಸ್‌ಟೆಬಲ್‌ವೊಬ್ಬರು ಪರಾರಿಯಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಮಹಿಳೆಯ ಪತಿ ನೀಡಿದ ದೂರಿನ ಅನ್ವಯ ಚಿನ್ನ, ನಗದು ಕಳ್ಳತನ ಆರೋಪದ ಮೇಲೆ ಎಫ್‌ಐಆರ್‌ ದಾಖಲಾಗಿದ್ದು, ಕಾನ್ಸ್‌ಟೆಬಲ್‌ ರಾಘವೇಂದ್ರನನ್ನು ಅಮಾನತುಗೊಳಿಸಲಾಗಿದೆ. ಇನ್‌ಸ್ಟಾಗ್ರಾಂ ಮೂಲಕ ಪರಿಚಯವಾಗಿದ್ದ ಇಬ್ಬರು ಒಟ್ಟಿಗೆ ಪರಾರಿಯಾಗಿದ್ದಾರೆ.

ವಿಜಯ ಕರ್ನಾಟಕ 13 Dec 2025 11:46 pm

ವೀಸಾ ವಿಚಾರವಾಗಿ ಅಮೆರಿಕದಲ್ಲಿ ಶುರುವಾಗಿದೆ ಹೊಸ ತಿಕ್ಕಾಟ, ಭಾರತೀಯರಿಗೆ ಲಾಭ ಆಗುತ್ತಾ? H-1B Visa

ಅಮೆರಿಕ ಅನ್ನೋದು ಪ್ರತಿಯೊಬ್ಬರ ಕನಸಿನ ಲೋಕ ಆಗಿತ್ತು... ಅದರಲ್ಲೂ ಅಮೆರಿಕ ಎನ್ನುವ ದೊಡ್ಡ ಶ್ರೀಮಂತ ದೇಶದಲ್ಲಿ ಕೆಲಸ ಸಿಕ್ಕರೆ ಜೀವನ ಸೆಟಲ್ ಆಗಿಬಿಡುತ್ತೆ ಅನ್ನೋ ಆಸೆಯು ಕೂಡ ಮೂಡಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಅಮೆರಿಕದಲ್ಲಿ ಕೆಲಸ ಹಿಡಿಯುವುದು ಹಾಗೂ ವೀಸಾ ಪಡೆಯುವುದು ದೊಡ್ಡ ಸವಾಲಿನ ಕೆಲಸವಾಗುತ್ತಿದೆ. ಇದರ ಜೊತೆಗೆ ಅಮೆರಿಕದಲ್ಲಿ ಹೊಸ ಹೊಸ ಕೆಲಸಗಳು ಸಿಗುತ್ತಿಲ್ಲ ಎಂಬ

ಒನ್ ಇ೦ಡಿಯ 13 Dec 2025 11:45 pm

ರಾಂಚಿ | ಲ್ಯಾಂಡಿಂಗ್ ವೇಳೆ IndiGo ವಿಮಾನದ ರೆಕ್ಕೆ ರನ್‌ವೇಗೆ ಢಿಕ್ಕಿ

ರಾಂಚಿ, ಡಿ. 13: ರಾಂಚಿ ವಿಮಾನ ನಿಲ್ದಾಣದಲ್ಲಿ ಇಂಡಿಗೊ ವಿಮಾನ ಇಳಿಯುವ ಸಂದರ್ಭ ಅದರ ಬಾಲ ರನ್‌ ವೇ ಗೆ ಢಿಕ್ಕಿ ಹೊಡೆದ ಘಟನೆ ನಡೆದಿದೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ. ಸುಮಾರು 70 ಪ್ರಯಾಣಿಕರಿದ್ದ ಭುವನೇಶ್ವರ-ರಾಂಚಿ ವಿಮಾನ ಶುಕ್ರವಾರ ರಾತ್ರಿ ಸುಮಾರು 7.30ಕ್ಕೆ ಇಳಿಯುವ ಸಂದರ್ಭ ಈ ಘಟನೆ ನಡೆದಿದೆ ಎಂದು ಅವರು ಹೇಳಿದ್ದಾರೆ. ‘‘ಇಳಿಯುವ ಸಂದರ್ಭ ವಿಮಾನದ ರೆಕ್ಕೆ ರನ್‌ವೇಗೆ ಸ್ಪರ್ಶಿಸಿತು. ಪ್ರಯಾಣಿಕರಿಗೆ ಕಂಪನದ ಅನುಭವವಾಯಿತು. ಆದರೆ, ಪ್ರಯಾಣಿಕರಿಗೆ ಯಾವುದೇ ಹಾನಿ ಉಂಟಾಗಿಲ್ಲ. ಅವರು ಸುರಕ್ಷಿತವಾಗಿ ಇಳಿದಿದ್ದಾರೆ ಎಂದು ರಾಂಚಿ ವಿಮಾನ ನಿಲ್ದಾಣದ ನಿರ್ದೇಶಕ ವಿನೋದ್ ಕುಮಾರ್ ತಿಳಿಸಿದ್ದಾರೆ. ಈ ಘಟನೆಯ ನಂತರ ವಿಮಾನ ತಾಂತ್ರಿಕವಾಗಿ ಟೇಕ್‌ ಆಫ್‌ ಗೆ ಅನರ್ಹವಾಗಿದೆ ಎಂದು ಕಂಡು ಬಂದ ಹಿನ್ನೆಲೆಯಲ್ಲಿ ಅದರ ಹಾರಾಟವನ್ನು ಸ್ಥಗಿತಗೊಳಿಸಲಾಯಿತು ಎಂದು ಅವರು ಹೇಳಿದ್ದಾರೆ. ‘‘ರಾಂಚಿಯಿಂದ ಭುವನೇಶ್ವರಕ್ಕೆ ಅದರ ಮುಂದಿನ ನಿರ್ಗಮನವನ್ನು ರದ್ದುಗೊಳಿಸಲಾಯಿತು. ಕೆಲವು ಪ್ರಯಾಣಿಕರು ತಮ್ಮ ಪ್ರಯಾಣವನ್ನು ರದ್ದುಗೊಳಿಸಿದರು. ಕೆಲವರು ತಮ್ಮ ಪ್ರಯಾಣವನ್ನು ಮರು ನಿಗದಿ ಮಾಡಿದರು. ಕೆಲವು ಪ್ರಯಾಣಿಕರನ್ನು ರಸ್ತೆಯ ಮೂಲಕ ಭುವನೇಶ್ವರಕ್ಕೆ ಕಳುಹಿಸಲಾಯಿತು’’ ಎಂದು ಅವರು ತಿಳಿಸಿದ್ದಾರೆ.

ವಾರ್ತಾ ಭಾರತಿ 13 Dec 2025 11:37 pm

ಗಾಜಾ ಪಟ್ಟಿಯಲ್ಲಿ ಮತ್ತೊಬ್ಬ ಹಮಾಸ್ ಕಮಾಂಡರ್ ಮೇಲೆ ದಾಳಿ ಮಾಡಿದ ಬಗ್ಗೆ ಇಸ್ರೇಲ್ ಮಹತ್ವದ ಹೇಳಿಕೆ

ಮಧ್ಯಪ್ರಾಚ್ಯ ದೇಶಗಳ ನೆಮ್ಮದಿಗೆ ಕಿಚ್ಚು ಹೊತ್ತಿಸಿರುವ ಇಸ್ರೇಲ್ ಮತ್ತು ಗಾಜಾ ಯುದ್ಧ ಇದೀಗ ದಿಢೀರ್ ಇನ್ನಷ್ಟು ಘೋರವಾಗಿದೆ. ಒಂದು ಕಡೆ ಗಾಜಾ ಜನರಿಗೆ ಸೂಕ್ತ ವ್ಯವಸ್ಥೆ ಇಲ್ಲದೆ ಪ್ರತಿನಿತ್ಯ ಪರದಾಡುತ್ತಾ ಇದ್ದಾರೆ ಅನ್ನೋ ಆರೋಪಗಳ ನಡುವೆ, ಇನ್ನೋಂದು ಕಡೆ ಇಸ್ರೇಲ್ ಸೇನೆಯಿಂದ ದಾಳಿ ಕೂಡ ನಿರಾತಂಕವಾಗಿ ನಡೆಯುತ್ತಲೇ ಇದೆ. ಹೀಗೆ ಇಬ್ಬರ ನಡುವೆ ಒಂದಾದ ನಂತರ ಒಂದು

ಒನ್ ಇ೦ಡಿಯ 13 Dec 2025 11:37 pm

ಜ.6ಕ್ಕೆ ಡಿಕೆ ಶಿವಕುಮಾರ್‌ಗೆ ಸಿಎಂ ಪಟ್ಟಾಭಿಷೇಕ: ಕಾಂಗ್ರೆಸ್‌ ಶಾಸಕನ ಸ್ಫೋಟಕ ಹೇಳಿಕೆ; ದಿಲ್ಲಿಗೆ ಸಿಎಂ, ಡಿಸಿಎಂ!

ರಾಮನಗರ ಶಾಸಕ ಇಕ್ಬಾಲ್ ಹುಸೇನ್ ಅವರು ಡಿ.ಕೆ. ಶಿವಕುಮಾರ್‌ಗೆ ಮುಖ್ಯಮಂತ್ರಿ ಸ್ಥಾನ ಸಿಗುವ ಬಗ್ಗೆ ಶೇ. 99ರಷ್ಟು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ನಾಯಕತ್ವ ಗೊಂದಲದ ನಡುವೆ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ವೋಟ್ ಚೋರಿ ಅಭಿಯಾನದಲ್ಲಿ ಪಾಲ್ಗೊಳ್ಳಲು ದಿಲ್ಲಿಗೆ ತೆರಳಿದ್ದಾರೆ. ಇವೆಲ್ಲದರ ನಡುವೆ ಮುಂದಿನ ವಾರ ನಾಯಕತ್ವದ ಬಗ್ಗೆ ಸ್ಪಷ್ಟತೆ ಸಿಗುವ ನಿರೀಕ್ಷೆಯಿದೆ.

ವಿಜಯ ಕರ್ನಾಟಕ 13 Dec 2025 11:35 pm

ಉಕ್ರೇನ್ ಸೇನೆಗೆ ದಿಢೀರ್ ಆಘಾತ, 450 ಡ್ರೋನ್ & 30 ಕ್ಷಿಪಣಿಗಳ ಮೂಲಕ ದಾಳಿ?

ಅಯ್ಯಯ್ಯೋ ಅನ್ಯಾಯ... ಅಯ್ಯಯ್ಯೋ ಆಘಾತ... ಹೀಗೆ ರಷ್ಯಾ ಮತ್ತು ಉಕ್ರೇನ್ ಯುದ್ಧದ ಪರಿಣಾಮ ಯುರೋಪ್ ಜನರು ತಮ್ಮ ತಮ್ಮ ಸಂಕಷ್ಟ ಹೇಳಿಕೊಳ್ಳುತ್ತಾ ಇದ್ದಾರೆ. ಆದರೆ ಅತ್ತ ಉಕ್ರೇನ್ ಜನರು ತಮ್ಮ ಕಷ್ಟಗಳನ್ನು ಹೊರ ಜಗತ್ತಿಗೆ ಹೇಳಿಕೊಳ್ಳಲು ಆಗದೆ &ಇನ್ನೊಂದು ಕಡೆ ಇರುವ ಸಮಸ್ಯೆಗಳನ್ನು ಎದುರಿಸಲೂ ಆಗದೆ ಒದ್ದಾಡುತ್ತಿದ್ದಾರೆ. ಇಷ್ಟೆಲ್ಲಾ ಒದ್ದಾಟದ ನಡುವೆಯೇ ದಿಢೀರ್ ರಷ್ಯಾ ಸೇನೆ

ಒನ್ ಇ೦ಡಿಯ 13 Dec 2025 11:26 pm

ವಾಲ್ಮೀಕಿ ಗುರುಕುಲ ಪೀಠದ ಸ್ವಾಮೀಜಿ ಬ್ರಹ್ಮಾನಂದ ಗುರೂಜಿ ವಿರುದ್ಧ ಪ್ರಕರಣ ದಾಖಲು

ಬೆಂಗಳೂರು, ಡಿ.13: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕು ಮೆಳೆಕೋಟೆಯಲ್ಲಿರುವ ಮಹರ್ಷಿ ಶ್ರೀ ವಾಲ್ಮೀಕಿ ಗುರುಕುಲ ಪೀಠದ ಸ್ವಾಮೀಜಿ ಬ್ರಹ್ಮಾನಂದ ಗುರೂಜಿ ಮಹಿಳೆಯೊಬ್ಬರನ್ನು ಮಂಚಕ್ಕೆ ಕರೆದಿದ್ದು, ಈ ಬಗ್ಗೆ ಸಂತ್ರಸ್ತ ಮಹಿಳೆ ಕೊಟ್ಟ ದೂರಿನ ಅನ್ವಯ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದೂರು ನೀಡಿದ ಮಹಿಳೆ ಮತ್ತು ಆಕೆಯ ಪತಿ ಸ್ವಾಮೀಜಿ ನಿವಾಸದ ಬಳಿಯೇ ವಾಸವಿದ್ದು, ಅವರ ಪರಿಚಯವಾಗಿತ್ತು ಎನ್ನಲಾಗಿದೆ. ಸ್ವಾಮೀಜಿ ಬ್ರಹ್ಮಾನಂದ ಗುರೂಜಿ ಅವರು ಮಹಿಳೆಗೆ ತಮ್ಮ ಪರಿಚಯದವರಿಂದ ಕಡಿಮೆ ಬೆಲೆಗೆ ನಿವೇಶನವನ್ನು ಕೊಡಿಸುವ ಭರವಸೆ ನೀಡಿದ್ದರು ಎನ್ನಲಾಗಿದೆ. 13 ಲಕ್ಷ ರೂ. ಮೌಲ್ಯದ ನಿವೇಶನವನ್ನು 12 ಲಕ್ಷ ರೂ.ಗೆ ಕೊಡಿಸುವುದಾಗಿ ಮಾತುಕತೆ ನಡೆಸಿದ್ದರು. ಆದರೆ, ತಮ್ಮ ಬಳಿ 8 ಲಕ್ಷ ರೂ. ಮಾತ್ರ ಇದೆ ಎಂದು ಮಹಿಳೆ ಹೇಳಿದ್ದರು. ಹೀಗಾಗಿ ಉಳಿದ ಹಣಕ್ಕೆ ಸಹಾಯ ಮಾಡುವುದಾಗಿ ಸ್ವಾಮೀಜಿ ಹೇಳಿದ್ದರು ಎಂಬ ಆರೋಪವಿದೆ. ಮಹಿಳೆ ಬಳಿಯಿದ್ದ 8 ಲಕ್ಷ ರೂ.ಗಳಲ್ಲಿ 5 ಲಕ್ಷ ರೂಪಾಯಿಯನ್ನು ಮುಂಗಡವಾಗಿ ಮೂರನೇ ವ್ಯಕ್ತಿಗೆ ಸ್ವಾಮೀಜಿ ಕೊಡಿಸಿದ್ದಾರೆ. ಆದರೆ ಒಂದು ವರ್ಷ ಕಳೆದರೂ ನಿವೇಶನ ನೀಡದೆ, ಮುಂಗಡ ಹಣವನ್ನೂ ವಾಪಸ್ ನೀಡದೇ ನಿರ್ಲಕ್ಷ್ಯವಹಿಸಲಾಗಿದೆ ಎಂದು ಮಹಿಳೆ ದೂರಿನಲ್ಲಿ ಆರೋಪಿಸಿದ್ದಾರೆ. ಒಂದು ವರ್ಷವಾದರೂ ನಿವೇಶನ ಕೊಡದ ಕಾರಣ ಹಣವನ್ನು ಮಹಿಳೆ ವಾಪಸ್ ಕೇಳಿದ್ದಾರೆ. ‘‘ರೂಂಗೆ ಬಾ ಹಣ ಕೊಡಿಸುತ್ತೇನೆ, ನಿನಗೆ ಹಣ ಬೇಕು, ನನಗೆ ಮಜಾ ಬೇಕು’’ ಎಂದು ಸ್ವಾಮೀಜಿ ಹೇಳಿದ್ದಾರೆ ಎಂಬ ಆಡಿಯೊ ವೈರಲ್ ಆಗಿದ್ದು, ಸ್ವಾಮೀಜಿಯ ಈ ಮಾತುಗಳನ್ನು ಮಹಿಳೆ ಮೊಬೈಲ್‌ನಲ್ಲಿ ಆಡಿಯೋ ಹಾಗೂ ವೀಡಿಯೊ ರೂಪದಲ್ಲಿ ಸಂಗ್ರಹಿಸಿ ಕೊಂಡಿದ್ದಾರೆ ಎಂದು ವರದಿಯಾಗಿದೆ. ಸ್ವಾಮೀಜಿ ನಿರಂತರವಾಗಿ ಫೋನ್ ಕರೆ, ಆಡಿಯೋ ಮೆಸೇಜ್ ಹಾಗೂ ವೀಡಿಯೊ ಕಾಲ್ ಮಾಡಿ ಕಿರುಕುಳ ನೀಡಿದ್ದಾರೆ. ಅಲ್ಲದೇ ಒಂಟಿಯಾಗಿದ್ದ ವೇಳೆ ಮನೆಗೆ ಬಂದು ಕಿರುಕುಳ ನೀಡಿದ್ದಾರೆ. ಆಡಿಯೋ-ವೀಡಿಯೊಗಳನ್ನು ಡಿಲೀಟ್ ಮಾಡುವಂತೆ ಒತ್ತಡ ಹೇರಿದ್ದು, ಅದಕ್ಕಾಗಿ 50 ಸಾವಿರ ರೂ. ನೀಡುವ ಆಮಿಷವನ್ನೂ ಒಡ್ಡಿದ್ದಾರೆ ಎಂದು ಮಹಿಳೆ ದೂರಿನಲ್ಲಿ ಆರೋಪಿಸಿದ್ದಾರೆ. ಸ್ವಾಮೀಜಿಯಿಂದ ಪ್ರತಿ ದೂರು : ಮಹಿಳೆ ಮತ್ತು ಆಕೆಯ ಕುಟುಂಬದವರು ಹಣಕ್ಕಾಗಿ ಬೆದರಿಕೆ ಹಾಕುತ್ತಿದ್ದಾರೆ ಎಂದು ಬ್ರಹ್ಮಾನಂದ ಸ್ವಾಮೀಜಿ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರತಿದೂರು ದಾಖಲಿಸಿದ್ದಾರೆ. ಹಣ ಕೊಡಬೇಕು. ಇಲ್ಲದಿದ್ದರೆ ನಿಮ್ಮ ಫೋಟೊ, ಆಡಿಯೊ, ವೀಡಿಯೊಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಮಾಡಿ, ಹೆಸರು ಹಾಳು ಮಾಡುತ್ತೇವೆಂದು ಬೆದರಿಕೆಯೊಡ್ಡಿದ್ದಾರೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ಸ್ವಾಮೀಜಿ ಉಲ್ಲೇಖಿಸಿದ್ದಾರೆ.

ವಾರ್ತಾ ಭಾರತಿ 13 Dec 2025 11:22 pm

ಯತ್ನಾಳ್ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಲು ಚಿಂತನೆ: ವಿಜಯೇಂದ್ರ

ಶಿವಮೊಗ್ಗ, ಡಿ.13: ಬಸನಗೌಡ ಪಾಟೀಲ್ ಯತ್ನಾಳ್ ಅವರು ನನ್ನ ವಿರುದ್ಧ ಪದೇ ಪದೇ ಸುಳ್ಳು ಆರೋಪಗಳನ್ನು ಮಾಡುತ್ತಿದ್ದು, ಅವರಿಗೆ ನನ್ನ ಬಗ್ಗೆ ಮಾತನಾಡದಿದ್ದರೆ ಊಟ ಸೇರಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶನಿವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನನ್ನ ತಾಳ್ಮೆಗೂ ಮೀತಿ ಇದೆ. ಬಸನಗೌಡ ಪಾಟೀಲ್ ಯತ್ನಾಳ್ ಮೇಲೆ ಒಂದು ರೂ. ಅಥವಾ ಒಂದು ಕೋಟಿ ರೂ. ಮಾನನಷ್ಟ ಮೊಕದ್ದಮೆ ಹೂಡಲು ಚಿಂತನೆ ನಡೆಸುತ್ತಿದ್ದೇನೆ ಎಂದು ಹೇಳಿದರು. ಕುರ್ಚಿಯ ಕಿತ್ತಾಟದಿಂದಾಗಿ ರಾಜ್ಯದ ಆಡಳಿತ ಸಂಪೂರ್ಣ ಕುಸಿದಿದೆ. ಇಚ್ಛಾಶಕ್ತಿಯ ಕೊರತೆಯಿಂದಾಗಿ ಅಭಿವೃದ್ಧಿ ಶೂನ್ಯ ಸರಕಾರವಾಗಿದ್ದು, ಸರಕಾರ ಬದುಕಿದೆಯೋ?, ಸತ್ತಿದೆಯೋ? ಎನ್ನುವ ಪರಿಸ್ಥಿತಿಗೆ ಬಂದಿದೆ ಎಂದು ಕಿಡಿಕಾರಿದರು. ರಾಜ್ಯದ ಹಿತದೃಷ್ಟಿಯಿಂದ ಪಕ್ಷ ಬೇಧ ಮರೆತು ಸಮಗ್ರವಾಗಿ ಚರ್ಚೆ ಮಾಡುವುದಾದರೆ ಮಾತ್ರ ಈ ಅಧಿವೇಶನ ಕರೆಯಿರಿ ಎಂದಿದ್ದೆ. ನಾಯಕತ್ವಕ್ಕಾಗಿ ಪೈಪೋಟಿ ಮಾಡುವುದರಿಂದ ಅಭಿವೃದ್ಧಿಗೆ ಹಿನ್ನಡೆಯಾಗಿದ್ದು, ನಿಮ್ಮ ನಾಯಕತ್ವ ಸಮಸ್ಯೆ ಬಗೆಹರಿಯುವ ತನಕ ಅಧಿವೇಶನ ಮುಂದೂಡಬೇಕೆಂದು ಮುಖ್ಯಮಂತ್ರಿಗೆ ವಿನಂತಿ ಮಾಡಿಕೊಳ್ಳುತ್ತೇನೆ ಎಂದರು. ಅಧಿವೇಶನ ಪ್ರಾರಂಭವಾಗಿ ಒಂದು ವಾರ ಆದರೂ ವಿರೋಧ ಪಕ್ಷದ ನಾಯಕರು ಮತ್ತು ಸದಸ್ಯರ ಸಮಸ್ಯೆಗಳಿಗೆ ಸ್ಪಂದಿಸುವ ವ್ಯವದಾನ ಇಲ್ಲದೇ ಇರುವುದು ಈ ಸರಕಾರದ ದುರ್ದೈವವಾಗಿದೆ. ಸಿಎಂ-ಡಿಸಿಎಂ ಕಳೆದೆರೆಡು ವರ್ಷಗಳಿಂದ ಒಗ್ಗಟ್ಟಿನ ಮಂತ್ರ ಜಪಿಸುತ್ತಿದ್ದವರು ಈಗ ಒಬ್ಬರ ಮೇಲೊಬ್ಬರು ಕತ್ತಿ ಮಸೆಯುತ್ತಿದ್ದಾರೆ. ಇದರಿಂದ ರೈತರು, ಕೂಲಿ ಕಾರ್ಮಿಕರು, ಜನಸಾಮಾನ್ಯರ ಮೇಲೆ ಪರಿಣಾಮ ಬೀರಿದೆ. 54 ಲಕ್ಷ ಟನ್ ಮೆಕ್ಕೆಜೋಳ ಬೆಳೆದ ರೈತ ಖರೀದಿ ಕೇಂದ್ರ ಇಲ್ಲದೆ ದಲ್ಲಾಳಿಗಳ ಮೊರೆ ಹೋಗಿ 1,400 ರೂ.ಗೆ ಕಣ್ಣೀರು ಹಾಕುತ್ತಾ ಕೊಡುತ್ತಿದ್ದಾರೆ. ಕೇಂದ್ರ ಸರಕಾರ ಎಂಎಸ್‌ಪಿ 2400 ರೂ.ಯನ್ನು ಮೆಕ್ಕೆಜೋಳಕ್ಕೆ ನಿಗದಿ ಮಾಡಿ 2 ತಿಂಗಳಾಗುತ್ತಾ ಬಂದಿದೆ. ಕಾಂಗ್ರೆಸ್ ಶಾಸಕರೇ ಈ ಗಂಭೀರ ಸಮಸ್ಯೆ ಬಗ್ಗೆ ನಮ್ಮೊಂದಿಗೆ ಧ್ವನಿಗೂಡಿಸಿದ್ದಾರೆ. ಆದರೂ ಯಾವ ಸಚಿವರೂ ಉತ್ತರ ಕರ್ನಾಟಕ ಭಾಗಕ್ಕೆ ಅತಿವೃಷ್ಟಿಯ ಹಾನಿ ಹಾಗೂ ಕಬ್ಬು ಬೆಳೆಗಾರರ ಸಮಸ್ಯೆ ಬಗ್ಗೆ ಸ್ಥಳಕ್ಕೆ ಭೇಟಿ ನೀಡಿ, ಪರಿಹಾರ ನೀಡಿಲ್ಲ ಎಂದು ವಿಜಯೇಂದ್ರ ಟೀಕಿಸಿದರು. ಸುದ್ದಿಗೋಷ್ಠಿಯಲ್ಲಿ ಜಿಲ್ಲಾಧ್ಯಕ್ಷ ಎನ್.ಕೆ.ಜಗದೀಶ್, ಶಾಸಕರಾದ ಎಸ್.ಎನ್.ಚನ್ನಬಸಪ್ಪ, ಡಾ. ಧನಂಜಯ ಸರ್ಜಿ, ಪ್ರಮುಖರಾದ ಕೆ.ಜಿ.ಕುಮಾರಸ್ವಾಮಿ, ಟಿ.ಡಿ. ಮೇಘರಾಜ್, ಜ್ಞಾನೇಶ್ವರ್, ನಾಗರಾಜ್, ಶಿವರಾಜ್, ಮಾಲತೇಶ್, ಎನ್.ಡಿ. ಸತೀಶ್, ಮಂಜುನಾಥ್, ಕೆ.ವಿ. ಇದ್ದರು.

ವಾರ್ತಾ ಭಾರತಿ 13 Dec 2025 11:15 pm

ಶುಬ್ಮನ್‌ ಗಿಲ್‌ಗೆ ಕಮ್‌ಬ್ಯಾಕ್‌ ಒತ್ತಡ, 10 ಡಿಗ್ರಿ ತಾಪಮಾನದಲ್ಲಿ ಬಿಸಿಯೇರಿಸುತ್ತಾ ಧರ್ಮಶಾಲಾ ಪಂದ್ಯ?

ಟಿ20 ವಿಶ್ವಕಪ್‌ ತಂಡದಲ್ಲಿ ಸ್ಥಾನ ಭದ್ರಪಡಿಸಿಕೊಳ್ಳಲು ಶುಭಮನ್ ಗಿಲ್ ದಕ್ಷಿಣ ಆಫ್ರಿಕಾ ವಿರುದ್ಧದ 3ನೇ ಟಿ20 ಪಂದ್ಯದಲ್ಲಿ ತಮ್ಮ ಸಾಮರ್ಥ್ಯ ಸಾಬೀತುಪಡಿಸಬೇಕಿದೆ. ಸರಣಿ 1-1ರಿಂದ ಸಮಬಲಗೊಂಡಿದ್ದು, ಗಿಲ್ ಆಯ್ಕೆಯನ್ನು ಸಮರ್ಥಿಸಿಕೊಳ್ಳಲು ಇದು ಮಹತ್ವದ ಅವಕಾಶವಾಗಿದೆ. ನಾಯಕ ಸೂರ್ಯಕುಮಾರ್ ಯಾದವ್ ಅವರ ಫಾರ್ಮ್ ಕೂಡ ಚರ್ಚೆಯಲ್ಲಿದೆ.

ವಿಜಯ ಕರ್ನಾಟಕ 13 Dec 2025 11:07 pm

ಗೋವಾ-ಹೊಸದಿಲ್ಲಿ ವಿಮಾನದಲ್ಲಿ ಅಮೆರಿಕನ್ ಯುವತಿಯ ಜೀವ ಉಳಿಸಿದ ಡಾ.ಅಂಜಲಿ ನಿಂಬಾಳ್ಕರ್

30 ಸಾವಿರ ಅಡಿ ಎತ್ತರದಲ್ಲಿ ಸಿಪಿಆರ್ ಮೂಲಕ ಪ್ರಾಣ ರಕ್ಷಣೆ

ವಾರ್ತಾ ಭಾರತಿ 13 Dec 2025 10:48 pm

ಜನ ಸಾಮಾನ್ಯರ ಮಕ್ಕಳನ್ನು ದೇಶದ ಸಂಪತ್ತಾಗಿ ರೂಪಿಸಿ : ಅಂಜುಮನ್ 106ನೇ ವರ್ಷಾಚರಣೆಯಲ್ಲಿ ಯು.ಟಿ.ಖಾದರ್ ಕರೆ

ಭಟ್ಕಳ, ಡಿ.13: ಗ್ರಾಮೀಣ ಮಟ್ಟದಲ್ಲಿ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ ಸಾಮಾನ್ಯ ಜನರ ಮಕ್ಕಳನ್ನು ದೇಶದ ಸಂಪತ್ತಾಗಿ ರೂಪಿಸುವುದು ನಿಜವಾದ ದೇಶಪ್ರೇಮ ಎಂದು ಕರ್ನಾಟಕ ವಿಧಾನಸಭಾ ಸ್ಪೀಕರ್ ಯು.ಟಿ.ಖಾದರ್ ಹೇಳಿದ್ದಾರೆ. ಭಟ್ಕಳದ ಅಂಜುಮನ್ ಹಾಮೀಯೇ ಮುಸ್ಲಿಮೀನ್ ಶಿಕ್ಷಣ ಸಂಸ್ಥೆಯ 106ನೇ ವರ್ಷಾಚರಣೆ ಅಂಗವಾಗಿ ಶನಿವಾರ ಆಯೋಜಿಸಲಾದ ‘ಅಂಜುಮನ್ ದಿನ’ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು, ಕ್ಲಾಸ್‌ರೂಂ ಮತ್ತು ಪ್ಲೇ ಗ್ರೌಂಡ್‌ನಲ್ಲಿ ಬೆಳೆಯುವ ವಿದ್ಯಾರ್ಥಿಗಳು ಬಲಿಷ್ಠರಾದಾಗಲೇ ದೇಶ ಬಲಿಷ್ಠವಾಗುತ್ತದೆ ಎಂದು ಹೇಳಿದರು. ಅಂಜುಮನ್ ಸಂಸ್ಥೆಯು ಭಟ್ಕಳ ಮಾತ್ರವಲ್ಲದೆ ಸುತ್ತಮುತ್ತಲಿನ ಜಿಲ್ಲೆ ಮತ್ತು ಗ್ರಾಮಗಳ ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಹಾಗೂ ಆರೋಗ್ಯ ಕ್ಷೇತ್ರಗಳ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡಿದೆ ಎಂದು ಪ್ರಶಂಸಿಸಿದ ಯು.ಟಿ.ಖಾದರ್, ವಿದ್ಯಾರ್ಥಿಗಳು ಕೇವಲ ವ್ಯಾಪಾರಕ್ಕೆ ಸೀಮಿತವಾಗದೆ ಇಂಜಿನಿಯರ್, ವೈದ್ಯ, ವಕೀಲ, ಐಎಎಸ್ ಅಧಿಕಾರಿ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿ ಮುನ್ನಡೆಯಬೇಕೆಂದು ಆಶಯ ವ್ಯಕ್ತಪಡಿಸಿದರು. ಮೀನುಗಾರಿಕೆ, ಬಂದರು ಹಾಗೂ ಒಳನಾಡು ಜಲ ಸಾರಿಗೆ ಮತ್ತು ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಮಾತನಾಡಿ, ಭಟ್ಕಳದಲ್ಲಿ ಬಹು ಸೌಲಭ್ಯ ಆಸ್ಪತ್ರೆ ಹಾಗೂ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಸರಕಾರದಿಂದ ಸಂಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಿದರು. ಈ ಭಾಗದಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗಳ ಕೊರತೆ ಇರುವುದರಿಂದ ಅಂಜುಮನ್ ಸಂಸ್ಥೆಯ ಬಳಿ ಜಾಗ ಮತ್ತು ಮೂಲಸೌಕರ್ಯ ಇರುವ ಹಿನ್ನೆಲೆಯಲ್ಲಿ ಸರಕಾರ ಬೆಂಬಲ ನೀಡಲಿದೆ ಎಂದು ಸಚಿವರು ಹೇಳಿದರು. ಇದೇ ವೇಳೆ ಲಾ ಕಾಲೇಜಿನ ಅಗತ್ಯವನ್ನೂ ಅಂಜುಮನ್ ಪ್ರಸ್ತಾವಿಸಿದ್ದು, ಅದರ ಅವಶ್ಯವನ್ನು ಸಚಿವರು ಒಪ್ಪಿಕೊಂಡರು. ಅಂಜುಮನ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಮುಹಮ್ಮದ್ ಯೂನುಸ್ ಕಾಝಿಯಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಶಾಹೀನ್ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಅಬ್ದುಲ್ ಕದೀರ್ ಹಾಗೂ ಕರ್ನಾಟಕ ವಿಶ್ವವಿದ್ಯಾಇಲಯದ ಉಪಕುಲಪತಿ ಡಾ.ಎ.ಎಂ.ಖಾನ್ ಉಪಸ್ಥಿತರಿದ್ದರು.

ವಾರ್ತಾ ಭಾರತಿ 13 Dec 2025 10:43 pm

ದಾವಣಗೆರೆ | ಜಗಳೂರಿನ ಹಲವು ಗ್ರಾಮಗಳಲ್ಲಿ ಲಘು ಭೂಕಂಪನ

ದಾವಣಗೆರೆ, ಡಿ.13: ಜಗಳೂರು ತಾಲೂಕಿನ ಚಿಕ್ಕ ಮಲ್ಲನಹೊಳೆ, ದಿಬ್ಬದ ಹಳ್ಳಿ ಗ್ರಾಮದಲ್ಲಿ ಭೂಮಿ ಕಂಪಿಸಿದ ಘಟನೆ ಶನಿವಾರ ರಾತ್ರಿ 8ರ ಸುಮಾರಿಗೆ ನಡೆದಿರುವುದಾಗಿ ವರದಿಯಾಗಿದೆ. ಭಾರೀ ಶಬ್ದವಾದ ತಕ್ಷಣ ಭೂಮಿಯು ಕಂಪನವಾಗಿದ್ದು, ಮನೆಯಲ್ಲಿರುವ ಪಾತ್ರೆ, ಸಾಮಗ್ರಿಗಳು ಇದ್ದಕ್ಕಿದ್ದಂತೆ ಬಿದ್ದಿವೆ. ಅಲ್ಲದೆ, ಮನೆಯಲ್ಲಿದ್ದ ಪೀಠೋಪಕರಣಗಳು ಅಲುಗಾಡಿದೆ. ದೊರೆ ಸಾಲು ಭಾಗದ ಗ್ರಾಮಗಳಲ್ಲಿ ಮಾಳಿಗೆ ಮನೆಯ ಮೇಲ್ಚಾವಣಿಯ ಮಣ್ಣು ಕುಸಿದು ಬಿದ್ದಿವೆ. ಘಟನೆಯಿಂದ ಗ್ರಾಮಸ್ಥರು ಭಯ ಭೀತರಾಗಿದ್ದು, ಮನೆಗಳಿಂದ ಹೊರಗೆ ಬಂದು ನಿಂತಿದ್ದಾರೆ. ತಾಲೂಕಿನ ಸಿದ್ದಮ್ಮನಹಳ್ಳಿ ಗ್ರಾಮಕ್ಕೆ ತೆರಳುತ್ತಿದ್ದ ಬಸ್ಸು ಅಲುಗಾಡಿದ್ದು, ಇದರಿಂದ ಬಸ್‌ನಲ್ಲಿದ್ದ ಪ್ರಯಾಣಿಕರು ಗಾಬರಿಗೊಂಡಿದ್ದಾರೆ. ಮೂರು ತಾಲೂಕುಗಳಲ್ಲಿ ಲಘು ಭೂಕಂಪನ : ಚಳ್ಳಕೆರೆ ತಾಲೂಕಿನ ಕೊಲಮ್ಮನಹಳ್ಳಿ, ಕೂಡ್ಲಿಗಿ ತಾಲೂಕಿನ ಕಲ್ಲಳ್ಳಿ ಹಾಗೂ ಜಗಳೂರು ತಾಲೂಕಿನ ಚಿಕ್ಕಮಲ್ಲನ ಹೊಳೆ, ದಿಬ್ಬಜಹಟ್ಟಿ ಸೇರಿದಂತೆ ದೊರೆ ಸಾಲು ಭಾಗದ ಇತರ ಗ್ರಾಮಗಳಲ್ಲಿ ಭೂಮಿ ಕಂಪಿಸಿದೆ ಎಂದು ತಿಳಿದು ಬಂದಿದೆ. ಸ್ಥಳಕ್ಕೆ ಸಿಪಿಐ ಸಿದ್ರಾಮಯ್ಯ ಭೇಟಿ ನೀಡಿ ಗ್ರಾಮಸ್ಥರಿಗೆ ಧೈರ್ಯ ತುಂಬಿದ್ದಾರೆ.

ವಾರ್ತಾ ಭಾರತಿ 13 Dec 2025 10:34 pm

ಕಲಬುರಗಿ | ಗಮನ ಸೆಳೆದ ದಖ್ಹನಿ ಉರ್ದು ನಾಟಕ ʼಕಿವಡೆ ಕಾ ಬನ್ʼ

ಕಲಬುರಗಿ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ರಂಗಾಯಣ ಕಲಬುರಗಿ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಬಹುಭಾಷಾ ನಾಟಕೋತ್ಸವ ನಿಮಿತ್ತ ಶನಿವಾರ ರಾತ್ರಿ ಇಲ್ಲಿನ ಡಾ.ಎಸ್.ಎಂ ಪಂಡಿತ್ ರಂಗ ಮಂದಿರದಲ್ಲಿ ದಖ್ಹನಿ ಉರ್ದು ಭಾಷೆಯ ʼಕಿವಡೆ ಕಾ ಬನ್ʼ ಎಂಬ ನಾಟಕ ಪ್ರೇಕ್ಷಕರ ಗಮನ ಸೆಳೆಯಿತು. ಖ್ಯಾತ ದಖ್ಹನಿ ಉರ್ದು ಸಾಹಿತಿ ಸುಲೇಮಾನ್ ಖತೀಬ್ ರಚನೆಯ ʼಕೆವಡೆ ಕಾ ಬನ್ʼ ನಾಟಕವನ್ನು ಅಲಿ ಅಹ್ಮದ್ ನಿರ್ದೇಶನ ಮಾಡಿದ್ದರು. ನಾಟಕದ ಉದ್ಘಾಟನೆ ವೇಳೆ ಮಾತನಾಡಿದ ರಾಯಚೂರಿನ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ರಂಗಕರ್ಮಿ ಜಫರ್ ಮುಹಿಯುದ್ದೀನ್, ಸುಲೇಮಾನ್ ಖತೀಬ್ ಅವರು ಹಲವು ವರ್ಷಗಳ ಹಿಂದೆ ಮೃತಪಟ್ಟಿದ್ದರೂ ಕೂಡ ಅವರ ಕೊಟ್ಟ ಕೊಡುಗೆ ಅನನ್ಯವಾಗಿದೆ, ದಖ್ಹನಿ ಭಾಷೆಯನ್ನು ದೇಶಾದ್ಯಂತ ಪ್ರಸಿದ್ಧಿಗೊಳಿಸಿದವರಲ್ಲಿ ಹಿಂದಿ ನಟ ಮೆಹಮೂದ್ ಮೊದಲಾದರೆ ಅವರೊಂದಿಗೆ ಸಾಹಿತಿ ಸುಲೇಮಾನ್ ಖತೀಬ್ ಅವರು ಕಾಣುತ್ತಾರೆ ಎಂದರು. ರಂಗಾಯಣ ನಿರ್ದೇಶಕಿ ಸುಜಾತಾ ಜಂಗಮಶೆಟ್ಟಿ ಮಾತನಾಡಿ, ಕಲ್ಯಾಣ ಕರ್ನಾಟಕ ಬಹು ಸಂಸ್ಕೃತಿಯ ನಾಡು, ಕನ್ನಡದಿಂದ ಉರ್ದು, ಮರಾಠಿ, ತೆಲುಗು ಮಾತನಾಡುತ್ತಾರೆ, ಭಾಷೆ, ಸಂಗೀತ, ಸಾಹಿತ್ಯಕ್ಕೆ ಧರ್ಮ, ಜಾತಿ ಇರುವುದಿಲ್ಲ, ಇದು ಎಲ್ಲೆಯೂ ಮೀರುತ್ತದೆ ಎಂದು ಹೇಳಿದರು. ಭಾರತೀಯ ಉರ್ದು ಮಂಚನ ಅಧ್ಯಕ್ಷ ಸೈಯದ್ ರವುಫ್ ಖಾದ್ರಿ ಮಾತನಾಡಿ, 36 ವರ್ಷಗಳಿಂದ ಸುಲೇಮಾನ್ ಖತೀಬ್ ಸ್ಮಾರಕ ಶೈಕ್ಷಣಿಕ ಸಾಂಸ್ಕೃತಿಕ ಹಾಗೂ ಚಾರಿಟೇಬಲ್ ಸಂಸ್ಥೆಯು ಸಾಂಸ್ಕೃತಿಕ ಚಟುವಟಿಕೆಗಳನ್ನು ಹಮ್ಮಿಕೊಳ್ಳುತ್ತಾ ಕಲ್ಯಾಣ ಕರ್ನಾಟಕದ ದಖ್ಹನಿ ಭಾಷೆಯನ್ನು ಪ್ರಚರಿಸುತ್ತಾ ಬರುತ್ತಿರುವುದು ಹೆಮ್ಮೆಯ ವಿಷಯ ಎಂದರು. ಕೆಕೆಆರ್ ಡಿಬಿ ಉಪಕಾರ್ಯದರ್ಶಿ ಪ್ರವೀಣ್ ಪ್ರಿಯಾ, ಮಹಾತ್ಮಾ ಗಾಂಧೀಜಿ ಗ್ರಾಹಕರ ರಕ್ಷಣಾ ವೇದಿಕೆಯ ಪ್ರಧಾನ ಕಾರ್ಯದರ್ಶಿ ವೈಜನಾಥ್ ಝಳಕಿ, ಅಖಿಲ ಭಾರತೀಯ ಉರ್ದು ಮಂಚನ ಅಧ್ಯಕ್ಷ ಸೈಯದ್ ರವೂಫ್ ಖಾದ್ರಿ, ರೋಜಾ ಕುರ್ದ್ ನ ಉತ್ತರಾಧಿಕಾರಿ ಸಯ್ಯದ್ ಶಾ ಯಾದುಲ್ಲಾ ಹುಸೈನಿ, ಸೇರಿದಂತೆ ಹಲವರು ಇದ್ದರು. ಸುಲೇಮಾನ್ ಖತೀಬ್ ಸ್ಮಾರಕ ಶೈಕ್ಷಣಿಕ ಸಾಂಸ್ಕೃತಿಕ ಹಾಗೂ ಚಾರಿಟೇಬಲ್ ಸಂಸ್ಥೆಯ ಶಮೀಮ್ ಸುರೈಯ ಪ್ರಾಸ್ತಾವಿಕ ಮಾತನಾಡಿ ಅತಿಥಿಗಳನ್ನು ಸ್ವಾಗತಿಸಿದರು. ಸಾಧಕರಿಗೆ ವಿಶೇಷ ಸನ್ಮಾನ : 2025ನೇ ಸಾಲಿನಲ್ಲಿ ಎಸ್ಎಸ್ಎಲ್ಸಿ ವಿಭಾಗದಲ್ಲಿ 625ಕ್ಕೆ 621 ಅಂಕ ಪಡೆದು ರಾಜ್ಯಕ್ಕೆ ಕೀರ್ತಿ ತಂದಿರುವ ನಿಮಿತ್ತ ವಿದ್ಯಾರ್ಥಿನಿ ನಝರಿನ್ ಗೌಸ್ ಮೈನುದ್ದೀನ್ ಅವರಿಗೆ 5 ಗ್ರಾಮ ಬಂಗಾರ, 10 ಸಾವಿರ ನಗದು ಹಣ ಸೇರಿದಂತೆ ಪ್ರಶಸ್ತಿ ಫಲಕ ನೀಡಿ ಗೌರವಿಸಲಾಯಿತು. ಅಲ್ಲದೆ, ಎಸೆಸೆಲ್ಸಿಯಲ್ಲಿ 625ಕ್ಕೆ 616 ಅಂಕ ಪಡೆದ ಜುಬೇಯಾ ರುಬೀನ, ಹಾವೇರಿಯ ಶಗುಪ್ತಾ ಹಾಗೂ ಶಿಕ್ಷಕಿ ಅಸ್ಮಾ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.  

ವಾರ್ತಾ ಭಾರತಿ 13 Dec 2025 10:18 pm

ಮಂಗಳೂರು | ಉತ್ತಮ ಗ್ರಾಹಕ ಬಾಂಧವ್ಯದ ಜೊತೆ ಸೈಬರ್ ಭದ್ರತೆ ಮುಖ್ಯ : ನಾಗರಾಜನ್‌ ಸುಬ್ಬು

ಮಂಗಳೂರು,ಡಿ.13 : ಬ್ಯಾಂಕಿಂಗ್‌ ಕ್ಷೇತ್ರದಲ್ಲಿ ತಾಂತ್ರಿಕತೆ ಅಳವಡಿಕೆ ಕ್ಷಿಪ್ರಗತಿಯಲ್ಲಿದ್ದು, ಇದಕ್ಕೆ ಅನುಗುಣವಾಗಿ ಸೈಬರ್‌ ಭದ್ರತೆಯನ್ನು ಇನ್ನಷ್ಟು ಶಕ್ತಿಯುತಗೊಳಿಸಲು ಗ್ರಾಹಕರ ಜೊತೆ ಉತ್ತಮ ಬಾಂಧವ್ಯದ ಅಗತ್ಯವಿದೆ ಎಂದು ಬ್ಯಾಂಕ್‌, ಫೈನಾನ್ಸ್‌, ಇನ್ಫೋ ಸೆಕ್ಯುರಿಟಿ ಕನ್ಸಲ್ಟೆಂಟ್‌ ನಾಗರಾಜನ್‌ ಸುಬ್ಬು ಹೇಳಿದ್ದಾರೆ. ಅವರು ಶನಿವಾರ ನಗರದ ಸಂಘ ನಿಕೇತನದಲ್ಲಿ ಕರ್ನಾಟಕ ಬ್ಯಾಂಕ್‌ ಆಫೀಸರ್ಸ್‌ ಆರ್ಗನೈಝೇಶನ್‌ (ಕೆಬಿಒಒ)ನ 20ನೇ ರಾಷ್ಟ್ರೀಯ ಸಮ್ಮೇಳನ ಉದ್ಘಾಟಿಸಿ ಮಾತನಾಡುತ್ತಾ, ಬ್ಯಾಂಕಿಂಗ್ ಕ್ಷೇತ್ರ ಈಗ ಡಿಜಿಟಲೀಕರಣವಾಗಿ ವಿಕಸನಗೊಂಡಿದೆ. ಮುಂದೆ ಭೌತಿಕವಾಗಿ ಬ್ಯಾಂಕ್‌ ಶಾಖೆಗಳೇ ಇಲ್ಲದ ದಿನಗಳು ಬರಲಿವೆ. ಮೆಟಾವರ್ಸ್ ಬ್ಯಾಂಕಿಂಗ್ ವಿಸ್ತರಿಸಲಿದೆ ಎಂದು ತಿಳಿಸಿದರು. ಭಾರತದಲ್ಲಿ ಯೂನಿಯನ್‌ ಬ್ಯಾಂಕ್‌ ಆಫ್‌ ಇಂಡಿಯಾ ಮೆಟಾವರ್ಸ್‌ನ್ನು ಈಗಾಗಲೇ ಅಳವಡಿಸಿದೆ, ಉಳಿದ ಬ್ಯಾಂಕ್‌ಗಳಿಗೂ ಇದು ವಿಸ್ತರಿಸಲಿದೆ. ಈ ಬದಲಾವಣೆಯೊಂದಿಗೆ ಸೈಬರ್‌ ಸೆಕ್ಯೂರಿಟಿಯ ಭಯವೂ ಇದ್ದು, ಭದ್ರತೆಯ ಬಗ್ಗೆ ಬ್ಯಾಂಕಿಂಗ್‌ ಕ್ಷೇತ್ರ ಇನ್ನಷ್ಟು ಮುಂದುವರಿಯುವ ಅಗತ್ಯವಿದೆ ಎಂದರು. ಬ್ಯಾಂಕಿಂಗ್‌ ಕ್ಷೇತ್ರದಲ್ಲಿ ಈ ಹಿಂದೆಯೇ ಡಿಜಿಟಲ್‌ ಕ್ರಾಂತಿ ಆಗಿದೆ. ಪ್ರಸ್ತುತ ಕೃತಕ ಬುದ್ಧಿಮತ್ತೆ, ಕ್ಲೌಡ್‌, ರೊಬೊಟಿಕ್ಸ್‌ ತಂತ್ರಜ್ಞಾನದ ಹೊಸ ಅಧ್ಯಾಯ ನಡೆಯುತ್ತಿದೆ. 2025ರ ನಂತರದ ವರ್ಷಗಳಲ್ಲಿ ಡಿಜಿಟಲೀಕರಣವನ್ನೂ ಮೀರಿದ ಮೆಟಾವರ್ಸ್‌ ಈ ಕ್ಷೇತ್ರವನ್ನು ಆಳಲಿದೆ. ಈ ಹೊತ್ತಿನಲ್ಲಿ ಬ್ಯಾಂಕ್‌ ಅಧಿಕಾರಿಗಳು ಹೊಸ ತಂತ್ರಜ್ಞಾನಕ್ಕೆ ತೆರೆದುಕೊಳ್ಳಲೇಬೇಕಾಗಿದೆ, ತಾಂತ್ರಿಕತೆಯನ್ನು ಕಲಿಯದಿದ್ದರೆ ಬ್ಯಾಂಕಿಂಗ್‌ ಕ್ಷೇತ್ರದ ಸ್ಪರ್ಧಾತ್ಮಕ ಜಗತ್ತಿನಲ್ಲಿ ಅನಿವಾರ್ಯ ಎಂದರು. ಕರ್ಣಾಟಕ ಬ್ಯಾಂಕ್‌ ಈ ದೇಶದಲ್ಲಿ 100 ವರ್ಷ ಪೂರೈಸಿದ ಏಕೈಕ ಖಾಸಗಿ ಬ್ಯಾಂಕ್‌ ಎಂಬ ಹೆಗ್ಗಳಿಕೆ ಹೊಂದಿದೆ. ಯುದ್ಧ, ಆರ್ಥಿಕ ಬಿಕ್ಕಟ್ಟು ಇಂಥ ಅನೇಕ ಸಂದರ್ಭಗಳಲ್ಲಿ ಈ ಬ್ಯಾಂಕ್‌ ಜನಸಂಪರ್ಕವನ್ನು ಬಿಡದೆ ಅಭಿವೃದ್ಧಿ ಹೊಂದುತ್ತಲೇ ಇದೆ. ರಾಜ್ಯಕ್ಕೆ ಕರ್ನಾಟಕ ಹೆಸರು ಬರುವ ಮೊದಲೇ ಕರ್ಣಾಟಕ ಬ್ಯಾಂಕಿನ ಹೆಸರೇ ಅದಾಗಿತ್ತು. ಕೋರ್‌ ಬ್ಯಾಂಕಿಂಗ್‌ ವ್ಯವಸ್ಥೆಯನ್ನು ಮೊತ್ತಮೊದಲು ಆರಂಭಿಸಿದ ಕೀರ್ತಿ ಕರ್ಣಾಟಕ ಬ್ಯಾಂಕ್‌ನದ್ದು. ಈ ಬ್ಯಾಂಕನ್ನು ಸ್ಥಾಪಿಸಿದ ಮಹನೀಯರ ದೂರದೃಷ್ಟಿಗೆ ಇದು ಸಾಕ್ಷಿ ಎಂದು ನಾಗರಾಜನ್‌ ಸುಬ್ಬು ಹೇಳಿದರು. ಸಮಾರಂಭದಲ್ಲಿ ಕರ್ಣಾಟಕ ಬ್ಯಾಂಕ್‌ ಎಂಡಿ ಮತ್ತು ಸಿಇಒ ರಾಘವೇಂದ್ರ ಎಸ್‌.ಭಟ್‌, ಆಲ್‌ ಇಂಡಿಯಾ ಬ್ಯಾಂಕ್‌ ಆಫೀಸರ್ಸ್‌ ಎಸೋಸಿಯೇಶನ್‌ (ಎಐಬಿಒಎ) ಪ್ರಧಾನ ಕಾರ್ಯದರ್ಶಿ ಎಸ್‌.ನಾಗರಾಜನ್‌, ಎಐಕೆಬಿಇಎ ಪ್ರಧಾನ ಕಾರ್ಯದರ್ಶಿ ಫಣೀಂದ್ರ ಕೆ.ಜಿ., ಎಐಬಿಒಎ ಅಧ್ಯಕ್ಷ ಸುರೇಶ್‌ ಎ.ಎನ್‌., ಕೆಬಿಒಒ ಅಧ್ಯಕ್ಷ ಕೆ. ರಾಘವ ವೇದಿಕೆಯಲ್ಲಿದ್ದರು. ಸುರೇಶ್‌ ಹೆಗ್ಡೆ ಸ್ವಾಗತಿಸಿದರು.

ವಾರ್ತಾ ಭಾರತಿ 13 Dec 2025 10:11 pm

Madikeri | ಬೆತ್ತಲೆಗೊಳಿಸಿ ಹಣಕ್ಕಾಗಿ ಬೇಡಿಕೆ ಆರೋಪ; ಇಬ್ಬರು ಪೊಲೀಸ್ ವಶಕ್ಕೆ, ನಾಲ್ವರು ನಾಪತ್ತೆ

ಮಡಿಕೇರಿ : ಫೇಸ್ ಬುಕ್ ಗೆಳತಿಯ ಮನೆಗೆ ಬಂದ ವ್ಯಕ್ತಿಯನ್ನು ಬೆತ್ತಲೆಗೊಳಿಸಿ, ಹಲ್ಲೆ ನಡೆಸಿ ಹಣಕ್ಕಾಗಿ ಪೀಡಿಸಿದ ಆರೋಪದಡಿ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದಿರುವ ಘಟನೆ ಶನಿವಾರ ನಡೆದಿದೆ. ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ವ್ಯಾಪಾರಿಯೊಬ್ಬರು ಆರು ಮಂದಿಯ ವಿರುದ್ಧ ಮಡಿಕೇರಿ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು, ರಚನಾ ಹಾಗೂ ಆಕೆಯ ತಾಯಿ ಮಾಲತಿ ಎಂಬವರನ್ನು ವಶಕ್ಕೆ ಪಡೆದಿದ್ದು, ನಾಲ್ವರು ಆರೋಪಿಗಳು ತಲೆ ಮರೆಸಿಕೊಂಡಿದ್ದಾರೆ. ವ್ಯಾಪಾರಿಗೆ ರಚನಾ ಅವರೊಂದಿಗೆ ಫೇಸ್ ಬುಕ್‌ನಲ್ಲಿ ಪರಿಚಯವಾಗಿದ್ದು, ನಂತರ ಹಣದ ಅವಶ್ಯವಿದೆ ಎಂದು ಹೇಳಿ ನ.20ರಂದು ಮತ್ತು ನ.28ರಂದು ಆನ್‌ಲೈನ್ ಮೂಲಕ ತಲಾ 5 ಸಾವಿರ ರೂ.ಯನ್ನು ಪಡೆದುಕೊಂಡಿದ್ದಾಳೆ. ವ್ಯಾಪಾರಿಯು ಹಣವನ್ನು ವಾಪಸ್ ಕೇಳಿದಾಗ ರಚನಾ ಮೈಸೂರು ಅಥವಾ ಕುಶಾಲನಗರಕ್ಕೆ ಬಾ ಎಂದು ಹೇಳಿದ್ದಾಳೆ. ನಂತರ ಡಿ.12ರಂದು ಮಡಿಕೇರಿಗೆ ಬರಮಾಡಿಕೊಂಡು ರಾತ್ರಿ 10:30 ರ ವೇಳೆಗೆ ಮಂಗಳಾದೇವಿ ನಗರದ ಮನೆಗೆ ಕರೆದುಕೊಂಡು ಹೋಗಿದ್ದಾಳೆ ಎನ್ನಲಾಗಿದೆ. ಮನೆಯಲ್ಲಿ ಇಬ್ಬರೇ ಇರುವಾಗ ರಾತ್ರಿ 11:45 ಗಂಟೆಗೆ ರಚನಾಳ ತಾಯಿ ಮಾಲತಿ ಹಾಗೂ ದಿನೇಶ್ ಎಂಬಾತ ಆಟೊದಲ್ಲಿ ಮನೆಗೆ ಬಂದಿದ್ದಾನೆ. ಹಣದ ಬಗ್ಗೆ ಇವನನ್ನು ನಾನು ವಿಚಾರಿಸಿಕೊಳ್ಳುತ್ತೇನೆ ಎಂದ ದಿನೇಶ್, ನೀವು ಹೋಗಿ ಎಂದು ರಚನಾ ಹಾಗೂ ಅವರ ತಾಯಿಯನ್ನು ಮನೆಯಿಂದ ಕಳುಹಿಸಿದ್ದಾನೆ. ನಂತರ ದಿನೇಶನು ಫೋನ್ ಮಾಡಿ ಸುಜಿತ್ ಹಾಗೂ ದರ್ಶನ್ ಎಂಬವರನ್ನು ಮನೆಗೆ ಕರೆಸಿಕೊಂಡಿದ್ದಾರೆ. ನಂತರ ಮೂವರು ಕೈಗಳಿಂದ, ದೊಣ್ಣೆಯಿಂದ ಮತ್ತು ಕತ್ತಿಯ ಹಿಡಿಯಿಂದ ಮುಖಕ್ಕೆ, ಬಾಯಿಗೆ, ಎಡ ಎದೆಯ ಭಾಗಕ್ಕೆ ಹಾಗೂ ಎಡ ಕಾಲಿನ ಮಂಡಿಗೆ ಹೊಡೆದು ನೋವುಪಡಿಸಿದ್ದಾರೆ. ನನ್ನ ಮೊಬೈಲ್ ಫೋನ್ ಕಿತ್ತುಕೊಂಡು, ನಾನು ಧರಿಸಿದ್ದ ಬಟ್ಟೆಯನ್ನು ಬಲವಂತವಾಗಿ ಬಿಚ್ಚಿಸಿ ಬೆತ್ತಲೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಮೊಬೈಲ್‌ಗಳಿಂದ ಬೆತ್ತಲೆ ವೀಡಿಯೊ ಮಾಡಿಕೊಂಡು, ಒಳ ಉಡುಪನ್ನು ಧರಿಸಲು ನೀಡಿದ್ದಾರೆ. ನಂತರ ಸುಜಿತ್ ಎಂಬಾತ ಏರ್ ಗನ್ ಅನ್ನು ನನ್ನ ತಲೆಗೆ ಇಟ್ಟು ಬೆದರಿಸಿ 50 ಲಕ್ಷ ಹಣ ನೀಡು, ಇಲ್ಲದಿದ್ದರೆ ನಿನ್ನ ವೀಡಿಯೊವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕುವುದಾಗಿ ಹೇಳಿ ಬೆದರಿಕೆ ಹಾಕಿದ್ದಾನೆ. ಮನೆಯಲ್ಲಿ ಬೆಳಗ್ಗಿನವರೆಗೆ ಬಲವಂತವಾಗಿ ಕೂಡಿಹಾಕಿ, ರಕ್ತವಾಗಿದ್ದ ಶರ್ಟ್, ಬನಿಯನ್ ಮತ್ತು ಕರ್ಚೀಪ್ ಅನ್ನು ಮನೆಯೊಳಗೆ ಸುಟ್ಟು ಹಾಕಿದ್ದಾರೆ ಎಂದು ವ್ಯಾಪಾರಿಯು ದೂರಿನಲ್ಲಿ ತಿಳಿಸಿದ್ದಾರೆ.

ವಾರ್ತಾ ಭಾರತಿ 13 Dec 2025 10:04 pm

ರಾಜ್ಯದ ಮುಂದಿನ ಮುಖ್ಯಮಂತ್ರಿ ಬಗ್ಗೆ ಸ್ಫೋಟಕ ಭವಿಷ್ಯ ನುಡಿದ ಕೇಂದ್ರ ಸಚಿವ ವಿ.ಸೋಮಣ್ಣ

V.Somanna: ರಾಜ್ಯದಲ್ಲಿ ಸದ್ಯ ಸಿಎಂ ಬದಲಾವಣೆ ಚರ್ಚೆ ಮತ್ತೆ ಮುನ್ನೆಲೆಗೆ ಬಂದಿದೆ. ಈ ಬಗ್ಗೆ ಕೆಲ ರಾಜಕೀಯ ನಾಯಕರು ಪ್ರತಿಕ್ರಿಯಿಸಿದ್ದು, ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಇದೆಲ್ಲದ ನಡುವೆ ಇದೀಗ ಕೇಂದ್ರ ಸಚಿವ ವಿ.ಸೋಮಣ್ಣ, ಅವರು ಈ ರಾಜ್ಯದ ಮುಖ್ಯಮಂತ್ರಿ ಯಾರಾಗಬೇಕು ಎಂದು ಕೇಂದ್ರ ಸಚಿವ ಸ್ಫೋಟಕ ಭವಿಷ್ಯ ನುಡಿದರು. ತುಮಕೂರಿನ ಹೆಗ್ಗೆರೆಯಲ್ಲಿ ರೇಲ್ವೆ ಮೇಲ್ಸೆತುವೆ ಕಾಮಗಾರಿಗೆ ಗುದ್ದಲಿ

ಒನ್ ಇ೦ಡಿಯ 13 Dec 2025 9:52 pm

ದೆಹಲಿಯಲ್ಲಿ ವಾಯು ಮಾಲಿನ್ಯ ಹೆಚ್ಚಳ: ಸರ್ಕಾರಿ ಮತ್ತು ಖಾಸಗಿ ಕಚೇರಿಗಳಲ್ಲಿ ಶೇ. 50ರಷ್ಟು ಸಿಬ್ಬಂದಿಗೆ 'ಮನೆಯಿಂದ ಕೆಲಸ' ಕಡ್ಡಾಯ; ಹೊಸ ನಿಯಮಗಳೇನು?

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಾಯು ಮಾಲಿನ್ಯ ತೀವ್ರಗೊಂಡಿದೆ. ಜನರು ಮನೆಯಿಂದ ಹೊರಬರುವುದು ಕಷ್ಟಕರವಾಗಿದೆ. ಈ ಪರಿಸ್ಥಿತಿಯನ್ನು ಎದುರಿಸಲು, ದೆಹಲಿ ಸರ್ಕಾರ ತನ್ನ ಶೇ. 50ರಷ್ಟು ನೌಕರರು ಮತ್ತು ಖಾಸಗಿ ಕಚೇರಿಗಳ ಸಿಬ್ಬಂದಿ ಮನೆಯಿಂದಲೇ ಕೆಲಸ ಮಾಡುವಂತೆ ಆದೇಶಿಸಿದೆ. ಕಠಿಣ ನಿರ್ಬಂಧಗಳು ಜಾರಿಗೆ ಬಂದಿರುವುದರಿಂದ ಈ ಕ್ರಮ ತೆಗೆದುಕೊಳ್ಳಲಾಗಿದೆ. ವಾಯು ಗುಣಮಟ್ಟ ನಿರ್ವಹಣಾ ಆಯೋಗವು ನಿರ್ಬಂಧಗಳನ್ನು ಜಾರಿಗೊಳಿಸಿದೆ.

ವಿಜಯ ಕರ್ನಾಟಕ 13 Dec 2025 9:45 pm

ಉತ್ತರ ಪ್ರದೇಶದ ಮೂಲದ ಮಗು ಮೃತ್ಯು

ಮಣಿಪಾಲ, ಡಿ.13: ಅನಾರೋಗ್ಯದಿಂದ ಬಳಲುತ್ತಿದ್ದ ಉತ್ತರ ಪ್ರದೇಶದ ಮೂಲದ ಮಗುವೊಂದು ಇಂದ್ರಾಳಿ ರೈಲ್ವೇ ನಿಲ್ದಾಣದಲ್ಲಿ ಮೃತಪಟ್ಟ ಘಟನೆ ನಡೆದಿದೆ. ಮೃತರನ್ನು ಉತ್ತರ ಪ್ರದೇಶ ಮೂಲದ ಪರ್ಕಳ ದೇವಿನಗರದ ನಿವಾಸಿ ನೀಲಾಂಬರಿ ಎಂಬವರ ಒಂದೂವರೆ ವರ್ಷದ ಮಗು ದೀಪಾಲಿ ಎಂದು ಗುರುತಿಸಲಾಗಿದೆ. ದೀಪಾಲಿ ಹುಟ್ಟಿನಿಂದಲೂ ಲಿವರಿಗೆ ಸಂಬಂಧಿಸಿದ ಸಮಸ್ಯೆಯಿಂದ ಬಳಲುತ್ತಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಸ್ವಂತ ಊರಾದ ಉತ್ತರ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಅಲ್ಲಿ ಚಿಕಿತ್ಸೆ ಪಡೆದು ಡಿ.11ರಂದು ರೈಲಿನಲ್ಲಿ ಹೊರಟಿದ್ದರು. ಡಿ.12ರಂದು ರಾತ್ರಿ ಇಂದ್ರಾಳಿ ರೈಲ್ವೇ ನಿಲ್ದಾಣಕ್ಕೆ ಬರುವಾಗ ದೀಪಾಲಿ ಅಸ್ವಸ್ಥಗೊಂಡಿದ್ದು, ಚಿಕಿತ್ಸೆ ಬಗ್ಗೆ ಉಡುಪಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ಅಲ್ಲಿ ಪರೀಕ್ಷಿಸಿದ ವೈದ್ಯರು ಮಗು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಾರ್ತಾ ಭಾರತಿ 13 Dec 2025 9:40 pm

ಕಾಪು | ಮೆಡಿಕಲ್ ಔಷಧಿ ಸೇವಿಸಿ ಮಲಗಿದ್ದ ವ್ಯಕ್ತಿ ಮೃತ್ಯು

ಕಾಪು, ಡಿ.13: ವಿಪರೀತ ಕೆಮ್ಮು ಮತ್ತು ದಮ್ಮು ಕಾಯಿಲೆಗೆ ಮೆಡಿಕಲ್ ನಿಂದ ತಂದ ಔಷಧಿ ಸೇವಿಸಿ ಮಲಗಿದ್ದ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಡಿ.12ರಂದು ರಾತ್ರಿ ವೇಳೆ ನಡೆದಿದೆ. ಮೃತರನ್ನು ಉದ್ಯಾವರ ಗ್ರಾಮದ ಮಮತ ಆಚಾರ್ಯ ಎಂಬವರ ಮಗ ರಕ್ಷಿತ್ ಕುಮಾರ್(34) ಎಂದು ಗುರುತಿಸಲಾಗಿದೆ. ಇವರಿಗೆ ಸುಮಾರು 20 ದಿನದಿಂದ ವಿಪರೀತ ಕೆಮ್ಮು ಮತ್ತು ದಮ್ಮು ಕಾಯಿಲೆ ಇದ್ದು, ಮೆಡಿಕಲ್ ನಿಂದ ಔಷಧಿಯನ್ನು ತಂದು ಸೇವಿಸುತ್ತಿದ್ದರು. ರಾತ್ರಿ ಊಟ ಮಾಡಿ ಮಲಗಿದ್ದ ಇವರು, ಬೆಳಗ್ಗೆ ಏಳದೇ ಅಲ್ಲೇ ಮೃತಪಟ್ಟಿರುವುದು ತಿಳಿದು ಬಂದಿದೆ. ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಾರ್ತಾ ಭಾರತಿ 13 Dec 2025 9:38 pm

ಉಡುಪಿ | ಎಪಿಎಂಸಿ ಅಧಿಕಾರಿಯ ಕರ್ತವ್ಯಕ್ಕೆ ಅಡ್ಡಿಪಡಿಸಿ ಬೆದರಿಕೆ ಆರೋಪ : ಬಿಜೆಪಿ ಮುಖಂಡ ಸಹಿತ ಹಲವರ ವಿರುದ್ಧ ಪ್ರಕರಣ ದಾಖಲು

ಉಡುಪಿ, ಡಿ.13: ಆದಿಉಡುಪಿಯಲ್ಲಿರುವ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ(ಎಪಿಎಂಸಿ) ಎದುರು ಕಾನೂನು ಬಾಹಿರವಾಗಿ ಪ್ರತಿಭಟನೆ ನಡೆಸಿ ಅಧಿಕಾರಿಯ ಕರ್ತವ್ಯಕ್ಕೆ ಅಡ್ಡಿ ಪಡಿಸಿ ಬೆದರಿಕೆ ಹಾಕಿರುವ ಬಗ್ಗೆ ಬಿಜೆಪಿ ಮುಖಂಡ ಸಹಿತ ಹಲವರ ವಿರುದ್ಧ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಎಪಿಎಂಸಿ ಕಾರ್ಯದರ್ಶಿ ಕೆ.ಪಿ.ಸಂದೇಶ್ ಎಂಬವರು ಡಿ.11ರಂದು ಮಧ್ಯಾಹ್ನ ವೇಳೆ ಸಮಿತಿಯ ಆಡಳಿತ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವಾಗ ಬಿಜೆಪಿ ಮುಖಂಡ, ಮಾಜಿ ನಗರಸಭೆ ಸದಸ್ಯ ವಿಜಯ ಕುಮಾರ್ ಕೊಡವೂರು, ಸುಭಾಷಿತ್ ಕುರ್ಮಾ, ಫಯಾಜ್ ಅಹಮ್ಮದ್, ಸುಶಾಂತ್ ನ್ಯಾರಿ, ಪ್ರಭು ಭೀಮನಗೌಡ, ಲಕ್ಷ್ಮಣ, ಚಂದಪ್ಪ ಎಸ್., ರಾಮನಾಥ ಪೈ, ರಾಘವೇಂದ್ರ, ಸಿದ್ಧನಗೌಡ, ಕೃಷ್ಣಪ್ಪ, ಅಂಬರೀಶ ಮೆಣಸಿನಕಾಯಿ, ಕೆ.ಹರೀಶ್ ಭಟ್, ಜಗಳೂರಯ್ಯ, ಪಾಪರಾಜ ಜೆ. ಮತ್ತು ಇತರರು ಏಕಾಏಕಿ ಸಮಿತಿ ಕಚೇರಿ ಒಳಗೆ ಪ್ರವೇಶಿಸಿದರೆನ್ನಲಾಗಿದೆ. ಈ ವೇಳೆ ಕಚೇರಿಯ ಹೊರಗಡೆ ಬಂದ ಕೆ.ಪಿ.ಸಂದೇಶ್ ಅವರನ್ನು ಆರೋಪಿಗಳು ತಡೆದು ಕಾನೂನು ಬಾಹಿರವಾಗಿ ಕಚೇರಿ ಎದುರುಗಡೆ ಧರಣಿ ಕುಳಿತರು. ನ್ಯಾಯ ಬೇಕು, ಸರಕಾರಿ ಜಾಗ ಉಳಿಸೋಣ, ಕೃಷಿಕರಿಗೆ ನ್ಯಾಯ ಸಿಗಲಿ ಹಾಗೂ ಇತರೆ ಫಲಕಗಳನ್ನು ಹಿಡಿದು ಸಮಿತಿಯ ಆಡಳಿತಾಧಿಕಾರಿಗಳ ವಿರುದ್ಧ ಧಿಕ್ಕಾರ ಕೂಗಿ, ಸರಕಾರಿ ಕೆಲಸಕ್ಕೆ ಅಡಚಣೆ ಪಡಿಸಿದರು. ಅಲ್ಲದೆ ಕೆಲವರು ಕೆ.ಪಿ.ಸಂದೇಶ್ ಅವರನ್ನು ಉದ್ದೇಶಿಸಿ ಬೆದರಿಕೆ ಹಾಕಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.

ವಾರ್ತಾ ಭಾರತಿ 13 Dec 2025 9:34 pm

Assam | ಪಾಕ್‌ ಗುಪ್ತಚರರೊಂದಿಗೆ ಸಂಪರ್ಕ ಆರೋಪ, ನಿವೃತ್ತ ಐಎಎಫ್ ಸಿಬ್ಬಂದಿ ಕುಳೇಂದ್ರ ಶರ್ಮಾ ಬಂಧನ

ತೇಜಪುರ,ಡಿ.13: ಪಾಕಿಸ್ತಾನದ ಗುಪ್ತಚರರೊಂದಿಗೆ ಸಂಪರ್ಕ ಹೊಂದಿದ್ದ ಆರೋಪದಲ್ಲಿ ಭಾರತೀಯ ವಾಯುಪಡೆಯ (ಐಎಎಫ್) ನಿವೃತ್ತ ಸಿಬ್ಬಂದಿ ಕುಳೇಂದ್ರ ಶರ್ಮಾ ನನ್ನು ಅಸ್ಸಾಮಿನ ಸೋನಿತ್‌ಪುರ ಜಿಲ್ಲೆಯಲ್ಲಿ ಬಂಧಿಸಲಾಗಿದೆ ಎಂದು ಪೋಲಿಸರು ಶನಿವಾರ ತಿಳಿಸಿದರು. ಆರೋಪಿಯ ಕುಳೇಂದ್ರ ಶರ್ಮಾ ಸಾಮಾಜಿಕ ಮಾಧ್ಯಮಗಳ ಮೂಲಕ ಪಾಕ್ ಏಜೆಂಟ್‌ ಗಳೊಂದಿಗೆ ಸೂಕ್ಷ್ಮ ದಾಖಲೆಗಳು ಮತ್ತು ಮಾಹಿತಿಗಳನ್ನು ಹಂಚಿಕೊಂಡಿದ್ದು ಪ್ರಾಥಮಿಕ ತನಿಖೆಯಿಂದ ಬಹಿರಂಗಗೊಂಡಿದೆ. ಆತನ ಲ್ಯಾಪ್‌ಟಾಪ್ ಮತ್ತು ಮೊಬೈಲ್ ಫೋನ್ ವಶಪಡಿಸಿಕೊಳ್ಳಲಾಗಿದೆ. ಕೆಲವು ಡೇಟಾವನ್ನು ಅಳಿಸಲಾಗಿದ್ದರೂ ಈ ಸಾಧನಗಳನ್ನು ವಿಧಿವಿಜ್ಞಾನ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಹೆಚ್ಚುವರಿ ಎಸ್‌ಪಿ ಹರಿಚರಣ ಭೂಮಿಜ್ ಅವರು ಸುದ್ದಿಗಾರರಿಗೆ ತಿಳಿಸಿದರು. ಬಿಎನ್‌ಎಸ್‌ನ ಸಂಬಂಧಿತ ಕಲಮ್‌ ಗಳಡಿ ಕುಳೇಂದ್ರ ಶರ್ಮಾ ವಿರುದ್ಧ ಪ್ರಕರಣವನ್ನು ದಾಖಲಿಸಲಾಗಿದೆ ಎಂದರು.

ವಾರ್ತಾ ಭಾರತಿ 13 Dec 2025 9:31 pm

ಉಡುಪಿ | ರಕ್ಷಿಸಲ್ಪಟ್ಟ ರಕ್ಷಣಾ ಇಲಾಖೆ ಸಿಬ್ಬಂದಿ ಸಂಬಂಧಿಕರ ವಶಕ್ಕೆ

ಉಡುಪಿ, ಡಿ.13: ರೈಲಿನಲ್ಲಿ ತಲೆಗೆ ತಾಗಿ ಗಾಯಗೊಂಡು ಮಾನಸಿಕ ಸ್ಥಿಮಿತ ಕಳೆದುಕೊಂಡ ವ್ಯಕ್ತಿಯೊಬ್ಬರನ್ನು ಸಮಾಜ ಸೇವಕ ವಿಶು ಶೆಟ್ಟಿ ಸಾರ್ವಜನಿಕರ ಸಹಾಯದಿಂದ ಚಿಕಿತ್ಸೆ ಕೊಡಿಸಿ ಸಂಬಂಧಿಕರಿಗೆ ಹಸ್ತಾಂತರಿಸಿದ್ದಾರೆ. ರಕ್ಷಣಾ ಇಲಾಖೆಯ ಸಿಬ್ಬಂದಿ ಹೊರ ರಾಜ್ಯದ ವಿಜಯ್(38) ಎಂಬವರು ರಜೆಯಲ್ಲಿ ಊರಿಗೆ ತೆರಳುವಾಗ ಅಕಸ್ಮಾತ್ ರೈಲಿನಲ್ಲಿ ತಲೆಗೆ ತಾಗಿ ಗಾಯವಾಗಿತ್ತು. ಚಿಕಿತ್ಸೆಗಾಗಿ ತುರ್ತು ರೈಲು ನಿಲ್ದಾಣ ಒಂದರಲ್ಲಿ ಇಳಿದಿದ್ದು ಆ ಸಮಯದಲ್ಲಿ ವ್ಯಕ್ತಿ ತನ್ನ ಮನಸ್ಸಿನ ಸ್ತಿಮಿತ ಕಳೆದುಕೊಂಡು ಉಡುಪಿ ಕಡೆಯ ಬಸ್ಸು ಹತ್ತಿದ್ದರು. ಈ ಬಗ್ಗೆ ಪೊಲೀಸರಿಂದ ಮಾಹಿತಿ ಪಡೆದ ವಿಶು ಶೆಟ್ಟಿ ವ್ಯಕ್ತಿಯ ಪತ್ತೆಗಾಗಿ ಶ್ರಮಿಸಿದ್ದು, ರಾತ್ರಿಯ ವೇಳೆ ವ್ಯಕ್ತಿಯ ಮಾಹಿತಿ ಲಭಿಸಿದ್ದು, ಸಾರ್ವಜನಿಕರ ಸಹಾಯದಿಂದ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದರು. ಚಿಕಿತ್ಸೆಗೆ ವ್ಯಕ್ತಿ ಸಂಪೂರ್ಣ ಸ್ಪಂದಿಸಿದ್ದು, ಇದೀಗ ಹೊರರಾಜ್ಯದ ಸಂಬಂಧಿಕರ ಪತ್ತೆಯಾಗಿದ್ದು, ಸಂಬಂಧಿಕರು ಉಡುಪಿಗೆ ಬಂದಿದ್ದಾರೆ. ವಿಶು ಶೆಟ್ಟಿ ಮುಖಾಂತರ ಕಾನೂನು ಪ್ರಕ್ರಿಯೆ ನಡೆಸಿ ವಶಕ್ಕೆ ಪಡೆದು ಊರಿಗೆ ತೆರಳಿದ್ದಾರೆ.

ವಾರ್ತಾ ಭಾರತಿ 13 Dec 2025 9:26 pm

ಕೋಲ್ಕತಾವನ್ನು ಆವರಿಸಿದ ‘ಮೆಸ್ಸಿ’ ಉನ್ಮಾದ!

ಫುಟ್ಬಾಲ್ ಮಾಂತ್ರಿಕನನ್ನು ಸ್ವಾಗತಿಸಲು ಮುಂಜಾನೆ 2:30ಕ್ಕೆ ನೆರೆದ ಸಾವಿರಾರು ಅಭಿಮಾನಿಗಳು

ವಾರ್ತಾ ಭಾರತಿ 13 Dec 2025 9:25 pm

ಮಂಗಳೂರು | ಸ್ಕೂಟರ್ ಚಲಾಯಿಸಿದ ಅಪ್ರಾಪ್ತ: ಮಾಲಕನಿಗೆ 25,000 ರೂ. ದಂಡ

ಮಂಗಳೂರು, ಡಿ.13 : ಅಪ್ರಾಪ್ತ ಬಾಲಕ ಸ್ಕೂಟರ್ ಚಲಾಯಿಸಿ ಅಪಘಾತಕ್ಕೆ ಕಾರಣವಾದ ಆರೋಪದ ಮೇರೆಗೆ ಸ್ಕೂಟರ್ ಮಾಲಕನಿಗೆ ನ್ಯಾಯಾಲಯದ ದಂಡ ವಿಧಿಸಿದೆ. ರಾ.ಹೆ. 66ರ ನಂತೂರು ಪದವು ಬಳಿ 2025ರ ಮಾ.30ರಂದು ಮುಂಜಾವ 3:50ರ ವೇಳೆಗೆ ಅಪ್ರಾಪ್ತ ಬಾಲಕ ಸ್ಕೂಟರ್‌ನಲ್ಲಿ ತೆರಳುತ್ತಿದ್ದ. ಆ ವೇಳೆ ಅದೇ ದಿಕ್ಕಿನಲ್ಲಿ ಕುಂಟಿಕಾನ ಕಡೆಗೆ ಸಾಗುತ್ತಿದ್ದ ದ್ವಿಚಕ್ರ ವಾಹನಕ್ಕೆ ಬಾಲಕ ಸವಾರಿ ಮಾಡುತ್ತಿದ್ದ ಸ್ಕೂಟರ್ ಢಿಕ್ಕಿ ಹೊಡೆದಿತ್ತು. ಇದರಿಂದ ಎರಡೂ ವಾಹನದಲ್ಲಿದ್ದವರು ಗಾಯಗೊಂಡಿದ್ದರು. ಈ ಬಗ್ಗೆ ಕದ್ರಿ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ನಡೆಸಿದ ಎಸ್ಸೈ ರೋಸಮ್ಮ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಜೆಎಂಎಫ್‌ಸಿ ಎಂಟನೇ ನ್ಯಾಯಾಲಯದ ನ್ಯಾಯಾಧೀಶ ಫವಾಝ್ ಪಿ.ಎ. ಅವರು ಅಪ್ರಾಪ್ತನಿಗೆ ಚಲಾಯಿಸಲು ಸ್ಕೂಟರ್ ನೀಡಿದ ಮಾಲಕ ಅಬ್ದುಲ್ ಹಮೀದ್‌ನಿಗೆ 25,000 ರೂ. ದಂಡ ವಿಧಿಸಿ ಆದೇಶಿಸಿದ್ದಾರೆ.

ವಾರ್ತಾ ಭಾರತಿ 13 Dec 2025 9:20 pm

ಐಸಿಸಿಯ ಮಾಧ್ಯಮ ಹಕ್ಕು ಗುತ್ತಿಗೆಯಿಂದ ಜಿಯೋಸ್ಟಾರ್ ಹಿಂದೆ ಸರಿದಿಲ್ಲ

ಉಭಯ ಸಂಸ್ಥೆಗಳಿಂದ ಜಂಟಿ ಸ್ಪಷ್ಟೀಕರಣ

ವಾರ್ತಾ ಭಾರತಿ 13 Dec 2025 9:19 pm

ಹೊಸ ಬೆಂಗಳೂರು ನಿರ್ಮಾಣ ಮಾಡಿ ವಿಶ್ವದ ಜನರನ್ನು ಆಕರ್ಷಿಸಬೇಕು : ಡಿ.ಕೆ.ಶಿವಕುಮಾರ್

ಬೆಂಗಳೂರು : ಬೆಂಗಳೂರು ದಕ್ಷಿಣ ಹಾಗೂ ಉತ್ತರ ಜಿಲ್ಲೆಗಳಲ್ಲಿ ಹೊಸ ಬೆಂಗಳೂರು ನಿರ್ಮಾಣ ಮಾಡಿ ವಿಶ್ವದ ಜನರನ್ನು ಆಕರ್ಷಿಸಬೇಕು ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ. ದೇವನಹಳ್ಳಿಯ ಅಂಬಿಕಾ ಲೇಔಟ್‍ನಲ್ಲಿ ಬೆಂಗಳೂರು ಅಂತರ್‍ರಾಷ್ಟ್ರೀಯ ವಿಮಾನ ನಿಲ್ದಾಣ ಪ್ರದೇಶ ಯೋಜನಾ ಪ್ರಾಧಿಕಾರದ ನೂತನ ಕಚೇರಿ ಕಟ್ಟಡವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಎತ್ತಿನಹೊಳೆ ಹಾಗೂ ಕಾವೇರಿ ನೀರನ್ನು ಈ ಭಾಗಕ್ಕೆ ನೀಡಬೇಕು ಎಂದು ಸಚಿವ ಕೆ.ಎಚ್.ಮುನಿಯಪ್ಪ ಅವರು ನನ್ನ ಮೇಲೆ ಬಹಳ ಒತ್ತಡ ಹಾಕುತ್ತಿದ್ದಾರೆ. ನಾನು ಮಂತ್ರಿಯಾದ ಬಳಿಕ ಬೆಂಗಳೂರು ನಗರಕ್ಕೆ ಪ್ರತ್ಯೇಕವಾಗಿ 6 ಟಿಎಂಸಿ ನೀರನ್ನು ಮೀಸಲಿಡಲು ಆದೇಶ ಹೊರಡಿಸಿರುವೆ ಎಂದರು. ಎಲ್ಲರೂ ನಮ್ಮ ನೀರು ನಮ್ಮ ಹಕ್ಕು ಎಂದು ಮೇಕೆದಾಟು ಹೋರಾಟದಲ್ಲಿ ಭಾಗವಹಿಸಿ ಹೆಜ್ಜೆ ಹಾಕಿದ್ದೀರಿ, ಇತ್ತೀಚೆಗೆ ಸುಪ್ರೀಂ ಕೋರ್ಟ್ ರಾಜ್ಯದ ಪರವಾಗಿ ತೀರ್ಪು ನೀಡಿದೆ. ಈ ವಿಚಾರದಲ್ಲಿ ನಮ್ಮ ಹಸ್ತಕ್ಷೇಪವಿಲ್ಲ. ತಾಂತ್ರಿಕ ವಿಚಾಗಳೇನೆ ಇದ್ದರು ಕೇಂದ್ರ ಜಲ ಆಯೋಗ ತೀರ್ಮಾನ ಮಾಡಬೇಕು ಎಂದು ತಿಳಿಸಿದೆ. ಎತ್ತಿನಹೊಳೆ ನೀರು ನೀಡುವ ಗುರಿ ಇದೆ. ಕೋಲಾರ, ಚಿಕ್ಕಬಳ್ಳಾಪುರ, ದೇವನಹಳ್ಳಿಗೆ ನೀರು ತರಲು ಪ್ರಯತ್ನಿಸುತ್ತಿದ್ದೇವೆ ಎಂದು ತಿಳಿಸಿದರು. ಇಲ್ಲಿ ಯಾರೇ ಆಗಲಿ ಕೊಳಚೆ ನೀರನ್ನು ಯಾವುದೇ ಕಾರಣಕ್ಕೂ ಕೆರೆಗಳಿಗೆ ಬಿಡಬಾರದು. ಇದಕ್ಕೆ ಪ್ರತ್ಯೇಕ ಚರಂಡಿ ವ್ಯವಸ್ಥೆ ಮಾಡಬೇಕು. ಕೆರೆಗಳ ರಕ್ಷಣೆ ಮಾಡಿ. ಈ ಭಾಗ ಅಂತಾರಾಷ್ಟ್ರೀಯ ನಗರವಾಗಿ ಬೆಳೆಯಲಿದೆ. ಯೋಜನಾ ಪ್ರಾಧಿಕಾರದಿಂದ ಯಾವುದೇ ಬಡಾವಣೆ ರಸ್ತೆಯಾದರೂ 30-40 ಮೀಟರ್ ಅಗಲದ ರಸ್ತೆ ಕಡ್ಡಾಯವಾಗಿ ಇರಲೇಬೇಕು ಎಂದು ಸೂಚಿಸಿದರು. ಕೆಂಪೇಗೌಡರ ಕನಸು ಮೀರಿ ಬೆಂಗಳೂರು ಬೆಳೆಯುತ್ತಿದೆ. ಬೆಂಗಳೂರಿನ ಸುತ್ತಮುತ್ತಲ ಪ್ರದೇಶವನ್ನು ಜಿಬಿಎ ವ್ಯಾಪ್ತಿಯ ಪಾಲಿಕೆಗಳಿಗೆ ಸೇರಿಸಲಾಗುವುದು. ಬಿಡದಿ, ಸೋಲೂರು, ನಂದಗುಡಿಯಲ್ಲಿ ಟೌನ್ ಶಿಪ್ ಮಾಡುತ್ತೇವೆ. ಇದನ್ನು ಡಿನೋಟಿಫಿಕೆಷನ್ ಮಾಡಲು ಸಾಧ್ಯವೇ ಇಲ್ಲ. ನಿನ್ನೆ ಕೂಡ ಹೈಕೋರ್ಟ್ ದ್ವಿಸದಸ್ಯ ಪೀಠ ಬಿಡಿಎ ಪರವಾಗಿ ಆದೇಶ ಬಂದಿದೆ. ರೈತರಿಗೆ ಅನುಕೂಲ ಮಾಡಿಕೊಡಲು ಉತ್ತಮ ಬೆಲೆ ಸಿಗುವಂತೆ ಮಾಡಲಾಗುವುದು ಎಂದು ಭರವಸೆ ನೀಡಿದರು. ಹೊಸಕೋಟೆ, ದೇವನಹಳ್ಳಿ, ದೊಡ್ಡಬಳ್ಳಾಪುರ, ನೆಲಮಂಗಲ, ಬಿಡದಿ, ರಾಮನಗರ ಹೊಸ ಬೆಂಗಳೂರಾಗಲಿದೆ. ನೀವು ನಿಮ್ಮ ಆಸ್ತಿಗಳನ್ನು ಕಾಪಾಡಿಕೊಳ್ಳಿ. ನಿಮ್ಮ ಆಸ್ತಿಗಳಿಗೆ ಹೆಚ್ಚು ಮೌಲ್ಯ ಬರುವಂತೆ ಮಾಡುತ್ತನೆ. ಇಡೀ ವಿಶ್ವ ನೋಡುವಂತೆ ಬೆಂಗಳೂರನ್ನು ಪರಿವರ್ತನೆ ಮಾಡುತ್ತೇವೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯನ್ನು ಬೆಂಗಳೂರು ಉತ್ತರ ಜಿಲ್ಲೆ ಎಂದು ಪರಿಗಣಿಸಲಾಗಿದೆ. ನಮ್ಮ ಸರ್ಕಾರ ಸದಾ ನಿಮ್ಮ ಜೊತೆ ಇರಲಿದೆ ಎಂದು ತಿಳಿಸಿದರು. 2002-2004ರಲ್ಲಿ ನಾನು ನಗರಾಭಿವೃದ್ಧಿ ಸಚಿವನಾಗಿದ್ದಾಗ ಈ ಯೋಜನಾ ಪ್ರಾಧಿಕಾರಕ್ಕೆ ಸಹಿ ಹಾಕಿದ್ದೆ. ವಿಮಾನ ನಿಲ್ದಾಣ ಎಲ್ಲಿ ಮಾಡಬೇಕು, ಬಿಡದಿಯಲ್ಲಾ ಅಥವಾ ದೇವನಹಳ್ಳಿಯಲ್ಲಾ ಎಂದು ದೊಡ್ಡ ಚರ್ಚೆ ನಡೆಯುತ್ತಿತ್ತು. ಅಂದು ರಾಮಯ್ಯ ಅವರು, ಬಚ್ಚೆಗೌಡರು, ಮುನಿನರಸಿಂಹಯ್ಯನವರು ಈ ಭಾಗದ ರೈತರನ್ನು ಒಪ್ಪಿಸಿ ಪ್ರತಿ ಎಕರೆಗೆ ಕೇವಲ 6 ಲಕ್ಷದಂತೆ 2,400 ಎಕರೆ ಭೂಮಿಯನ್ನು ಕೊಡುವಂತೆ ಮಾಡಿದ್ದರು. ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರನ್ನು ಕರೆಸಿ ಇದಕ್ಕೆ ಭೂಮಿ ಪೂಜೆ ಮಾಡಲಾಯಿತು ಎಂದರು.

ವಾರ್ತಾ ಭಾರತಿ 13 Dec 2025 9:18 pm

ಭೂಗಳ್ಳತನ | ಹೆಡ್‍ಕಾನ್‍ಸ್ಟೇಬಲ್ ವಿರುದ್ಧ ಪ್ರಕರಣ ದಾಖಲು

ಬೆಂಗಳೂರು : ನೆಲಮಂಗಲದಲ್ಲಿ 25 ಕೋಟಿ ರೂ. ಮೌಲ್ಯದ ಭೂಗಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ನೆಲಮಂಗಲ ಗ್ರಾಮಾಂತರ ಠಾಣೆ ಹೆಡ್ ಕಾನ್ಸಟೇಬಲ್ ಗಿರಿಜೇಶ್ ಹೆಡ್‍ಕಾನ್‍ಸ್ಟೇಬಲ್ ವಿರುದ್ಧ ದಾಬಸ್‍ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನೆಲಮಂಗಲ ತಾಲೂಕು ಸೋಂಪುರ ಹೋಬಳಿ, ಮಾಚನಹಳ್ಳಿ ಗ್ರಾಮದಲ್ಲಿರುವ ಥ್ಯಾಂಪಿ ಮ್ಯಾಥ್ಯೂ ಅವರಿಗೆ ಸೇರಿದ 8 ಎಕರೆ ಜಮೀನನ್ನು ಅವರಿಗೆ ತಿಳಿಯದೆ ಮೂರ್ನಾಲ್ಕು ಜನರ ಮೂಲಕ ರಿಜಿಸ್ಟರ್ ಮಾಡಲಾಗಿದೆ. ಹೆಡ್‍ಕಾನ್‍ಸ್ಟೇಬಲ್ ಗಿರಿಜೇಶ್ ಸೇರಿದಂತೆ ಪ್ರಕರಣದಲ್ಲಿ ಭಾಗಿಯಾದ ಹಲವರ ವಿರುದ್ದ ಪ್ರಕರಣ ದಾಖಲಾಗಿದೆ. ಈ ಜಮೀನು ಕರ್ನಾಟಕ ಕೈಗಾರಿಕಾ ಪ್ರದೇಶಗಳ ಅಭಿವೃದ್ಧಿ ಮಂಡಳಿ ಸೇರಿದ್ದು, ಅದರ ಪರಿಹಾರ ಹಣ ಕಬಳಿಸಲು ಗಿರಿಜೇಶ್ ಯೋಜನೆ ರೂಪಿಸಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ನೋಂದಣಿ ಆಗದೇ ಇದ್ದರೂ ದಾಖಲೆಗಳಲ್ಲಿ ಗಿರಿಜೇಶ್ ಹಾಗೂ ಇನ್ನಿಬ್ಬರ ಹೆಸರುಗಳಿರುವುದು ಅನುಮಾನಕ್ಕೆ ಕಾರಣವಾಗಿದೆ. ಈ ಸಂಬಂಧ ಥ್ಯಾಂಪಿ ಮ್ಯಾಥ್ಯೂ ನೀಡಿದ ದೂರಿನ ಮೇರೆಗೆ ದಾಬಸ್‍ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಾರ್ತಾ ಭಾರತಿ 13 Dec 2025 9:13 pm

ಎಚ್-1ಬಿ ವೀಸಾ ಶುಲ್ಕ ಹೆಚ್ಚಳ ಪ್ರಶ್ನಿಸಿ ಟ್ರಂಪ್ ವಿರುದ್ಧ ಮೊಕದ್ದಮೆ

ವಾಷಿಂಗ್ಟನ್, ಡಿ.13: ಎಚ್-1ಬಿ ವೀಸಾ ಶುಲ್ಕ ಹೆಚ್ಚಿಸಿರುವುದನ್ನು ಪ್ರಶ್ನಿಸಿ ಟ್ರಂಪ್ ಆಡಳಿತದ ವಿರುದ್ಧ ಅಮೆರಿಕಾದ 20 ರಾಜ್ಯಗಳ ಒಕ್ಕೂಟ ಮೊಕದ್ದಮೆ ದಾಖಲಿಸಿರುವುದಾಗಿ ವರದಿಯಾಗಿದೆ. ಎಚ್-1ಬಿ ವೀಸಾ ಶುಲ್ಕವನ್ನು 1 ಲಕ್ಷ ಡಾಲರ್‍ ಗೆ ಹೆಚ್ಚಿಸಿ ಸೆಪ್ಟಂಬರ್ 19ರಂದು ದೇಶೀಯ ಭದ್ರತೆ ಇಲಾಖೆ ಜಾರಿಗೊಳಿಸಿದ ಆದೇಶವನ್ನು ಪ್ರಶ್ನಿಸಿ ಕ್ಯಾಲಿಫೋರ್ನಿಯಾದ ಅಟಾರ್ನಿ ಜನರಲ್ ರಾಬ್ ಬೋಟ್ನ ನೇತೃತ್ವದಲ್ಲಿ 20 ರಾಜ್ಯಗಳು ಮೊಕದ್ದಮೆ ದಾಖಲಿಸಿವೆ. ಹೊಸ ನೀತಿಯು ವೀಸಾ ಕಾರ್ಯಕ್ರಮವನ್ನು ಸ್ಥಗಿತಗೊಳಿಸಲು ಕಾನೂನುಬಾಹಿರ ಪ್ರಯತ್ನವಾಗಿದ್ದು ಟ್ರಂಪ್ ಆಡಳಿತವು ಸಂಸತ್ತು ನೀಡಿದ ಅಧಿಕಾರವನ್ನು ಮೀರಿದೆ ಮತ್ತು ಆಡಳಿತಾತ್ಮಕ ಕಾರ್ಯವಿಧಾನದ ಕಾಯ್ದೆಯನ್ನು ಉಲ್ಲಂಘಿಸಿದೆ ಎಂದು ದಾವೆಯಲ್ಲಿ ಉಲ್ಲೇಖಿಸಲಾಗಿದೆ.

ವಾರ್ತಾ ಭಾರತಿ 13 Dec 2025 9:12 pm

ಮಂಗಳೂರು | ಲೋಕ ಅದಾಲತ್‌ನಲ್ಲಿ ಒಂದಾದ ದಂಪತಿಗಳು

ಮಂಗಳೂರು, ಡಿ.13: ವಿಚ್ಛೇದನಕ್ಕೆ ನಿರ್ಧರಿಸಿದ್ದ ಎರಡು ಜೋಡಿ ಮತ್ತೆ ಒಂದಾದ ವಿದ್ಯಮಾನಕ್ಕೆ ದ.ಕ. ಜಿಲ್ಲಾ ನ್ಯಾಯಾಲಯದಲ್ಲಿ ಶನಿವಾರ ನಡೆದ ಲೋಕ ಅದಾಲತ್ ಸಾಕ್ಷಿಯಾಯಿತು. ಈ ಎರಡೂ ಜೋಡಿಗಳ ದಾಂಪತ್ಯ ಜೀವನದಲ್ಲಿ ಯಾವುದೋ ಕಾರಣಕ್ಕೆ ಮನಸ್ತಾಪ ಉಂಟಾಗಿತ್ತು. ಹಾಗಾಗಿ ಎರಡೂ ಜೋಡಿಗಳು ವಿಚ್ಛೇದನ ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ವೇಳೆ ಪ್ರಕರಣವನ್ನು ನ್ಯಾಯಾಲಯದ ಮಧ್ಯಸ್ಥಿಕೆ ಕೇಂದ್ರದ ಮೂಲಕ ಸರಿಪಡಿಸಲು ಪ್ರಯತ್ನ ನಡೆಯಿತು. ಪತಿ ಮತ್ತು ಪತ್ನಿಯ ಮಧ್ಯೆ ಸಂಧಾನ ಏರ್ಪಡಿಸಿ ಮತ್ತೆ ಒಗ್ಗೂಡಿ ದಾಂಪತ್ಯ ಜೀವನ ಮುಂದುವರಿಸುವ ಬಗ್ಗೆ ಮನವರಿಕೆ ಮಾಡಿ ಕೊಡಲಾಗಿತ್ತು. ಸಂಧಾನದ ಬಳಿಕ ಈ ದಂಪತಿಗಳು ಮತ್ತೆ ಒಗ್ಗೂಡಿ ಜೀವನ ಮುಂದುವರಿಸಲು ಒಪ್ಪಿಕೊಂಡರು. ಅದರಂತೆ ಶನಿವಾರ ಲೋಕ ಅದಾಲತ್ ಗೆ ಆಗಮಿಸಿದ್ದ ಎರಡೂ ಜೋಡಿಗಳು ಕೌಟುಂಬಿಕ ನ್ಯಾಯಾಲಯದ ಪ್ರಧಾನ ನ್ಯಾಯಾಧೀಶ ಲಕ್ಷ್ಮಿನಾರಾಯಣ ಭಟ್ ಕೆ. ಸಮಕ್ಷಮದಲ್ಲಿ ಪರಸ್ಪರ ಹಾರ ಬದಲಾಯಿಸುವ ಮೂಲಕ ಒಂದಾದರು. ಈ ಸಂದರ್ಭ ಹಿರಿಯ ಸಿವಿಲ್ ನ್ಯಾಯಾಧೀಶೆ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಜೈಬುನ್ನೀಸಾ, ವಿವಿಧ ನ್ಯಾಯಾಲಯಗಳ ನ್ಯಾಯಾಧೀಶರು ಮತ್ತು ವಕೀಲರು ಅಪೂರ್ವ ಕ್ಷಣಕ್ಕೆ ಸಾಕ್ಷಿಯಾದರು. ಲೋಕ ಅದಾಲತ್ ಅಧಿವೇಶನದಲ್ಲಿ ಭಾಗವಹಿಸಿದ್ದ ಎರಡೂ ಜೋಡಿಗಳು ಮತ್ತೆ ಒಂದಾಗುವ ಮೂಲಕ ತಮ್ಮ ವಿಚ್ಛೇದನದ ಹೋರಾಟವನ್ನು ಕೊನೆಗೊಳಿಸಿರುವುದು ಸಮಾಜಕ್ಕೆ ಮಾದರಿಯಾಗಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶೆ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಜೈಬುನ್ನೀಸಾ ತಿಳಿಸಿದ್ದಾರೆ.

ವಾರ್ತಾ ಭಾರತಿ 13 Dec 2025 9:10 pm

ವೆನೆಝುವೆಲಾದಲ್ಲಿ ಭೂ ದಾಳಿಗೆ ಅಮೆರಿಕಾ ಸಿದ್ಧತೆ: ಟ್ರಂಪ್ ಸೂಚನೆ

ವಾಷಿಂಗ್ಟನ್, ಡಿ.13: ವೆನೆಝವೆಲಾದಲ್ಲಿ ಮಾದಕ ವಸ್ತು ಕಳ್ಳಸಾಗಣೆಯ ವಿರುದ್ಧ ಅಮೆರಿಕಾ ನಡೆಸುತ್ತಿರುವ ಅಭಿಯಾನ ತೀವ್ರಗೊಳಿಸುವುದಾಗಿ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದು , ಭೂ ದಾಳಿ ಶೀಘ್ರವೇ ಆರಂಭಗೊಳ್ಳುವ ಸೂಚನೆ ನೀಡಿದ್ದಾರೆ. ಶುಕ್ರವಾರ ಶ್ವೇತಭವನದಲ್ಲಿ ಮಾತನಾಡಿದ ಟ್ರಂಪ್ `ಇಲ್ಲಿಯವರೆಗೆ ಸಮುದ್ರವನ್ನು ಕೇಂದ್ರೀಕರಿಸಿದ ಕಾರ್ಯಾಚರಣೆಗಳು ಈಗ ತೀರಕ್ಕೆ ಚಲಿಸುತ್ತವೆ. ಭೂ ದಾಳಿ ಶೀಘ್ರವೇ ಪ್ರಾರಂಭಗೊಳ್ಳಲಿದೆ' ಎಂದು ಹೇಳಿರುವುದಾಗಿ ವರದಿಯಾಗಿದೆ. ಸೆಪ್ಟಂಬರ್‍ ನಿಂದ ದಕ್ಷಿಣ ಆಫ್ರಿಕಾದ ಸಮುದ್ರ ತೀರದ ಬಳಿ ಅಂತಾರಾಷ್ಟ್ರೀಯ ಸಮುದ್ರ ಪ್ರದೇಶದಲ್ಲಿ ಮಾದಕ ವಸ್ತು ಕಳ್ಳಸಾಗಣೆ ದೋಣಿಗಳನ್ನು ಗುರಿಯಾಗಿಸಿ ಅಮೆರಿಕಾ 21 ನೌಕಾ ದಾಳಿಯನ್ನು ನಡೆಸಿದ್ದು 83 ಮಂದಿ ಸಾವನ್ನಪ್ಪಿದ್ದಾರೆ. ಈ ದಾಳಿಗಳು ಸಮುದ್ರದ ಮೂಲಕ ಮಾದಕ ವಸ್ತುಗಳ ಹರಿವನ್ನು ತೀವ್ರವಾಗಿ ಕಡಿಮೆಗೊಳಿಸಿದೆ. ಸಮುದ್ರದ ಮೂಲಕ ಬರುವ ಮಾದಕ ವಸ್ತುಗಳಲ್ಲಿ 96%ದಷ್ಟನ್ನು ನಿವಾರಿಸಿದ್ದೇವೆ. ನಾವೀಗ ಭೂಮಿಯ ಮೇಲೆ ಆರಂಭಿಸುತ್ತೇವೆ ಮತ್ತು ಇದು ಸುಲಭದ ಕಾರ್ಯಾಚರಣೆಯಾಗಲಿದೆ. ದಾಳಿ ಒಂದು ದೇಶಕ್ಕೆ ಮಾತ್ರ ಸೀಮಿತವಾಗಲಿದೆ ಎಂದು ಹೇಳಲು ಸಾಧ್ಯವಿಲ್ಲ. ನಮ್ಮ ದೇಶಕ್ಕೆ ಮಾದಕ ವಸ್ತುಗಳನ್ನು ತರುವ ಜನರು ದಾಳಿಯ ಗುರಿಯಾಗಿರುತ್ತಾರೆ ಎಂದು ಟ್ರಂಪ್ ಹೇಳಿದ್ದಾರೆ.

ವಾರ್ತಾ ಭಾರತಿ 13 Dec 2025 9:01 pm

ಉನ್ನತ ಶಿಕ್ಷಣ ಸುಧಾರಣೆ: UGC, AICTE ಬದಲಿಗೆ ಏಕ ನಿಯಂತ್ರಕ ಸ್ಥಾಪನೆಗೆ ಕೇಂದ್ರ ಸಚಿವ ಸಂಪುಟದ ಒಪ್ಪಿಗೆ; ಏನಿದು ಮಸೂದೆ?

ದೇಶದ ಉನ್ನತ ಶಿಕ್ಷಣದಲ್ಲಿ ಕ್ರಾಂತಿಕಾರಿ ಬದಲಾವಣೆ ತರಲು ಕೇಂದ್ರ ಸಂಪುಟವು ನಿರ್ಧರಿಸಿದೆ. 'ವಿಕಸಿತ್ ಭಾರತ್ ಶಿಕ್ಷಾ ಅಧೀಕ್ಷಣ್‌ ಮಸೂದೆ'ಗೆ ಒಪ್ಪಿಗೆ ನೀಡಿದ್ದು, ಇದು ಯುಜಿಸಿ ಮತ್ತು ಎಐಸಿಟಿಇಯಂತಹ ಸಂಸ್ಥೆಗಳನ್ನು ಬದಲಿಸಿ, ದೇಶದ ಉನ್ನತ ಶಿಕ್ಷಣಕ್ಕೆ ಏಕೈಕ ನಿಯಂತ್ರಕ ಸಂಸ್ಥೆಯಾಗಿ ಕಾರ್ಯನಿರ್ವಹಿಸಲಿದೆ. ವೈದ್ಯಕೀಯ ಮತ್ತು ಕಾನೂನು ಶಿಕ್ಷಣ ಹೊರತುಪಡಿಸಿ, ಎಲ್ಲಾ ಉನ್ನತ ಶಿಕ್ಷಣ ಸಂಸ್ಥೆಗಳು ಇದರ ಅಡಿಯಲ್ಲಿ ಬರುತ್ತವೆ. ಈ ಮಹತ್ವದ ಮಸೂದೆಯನ್ನು ಮುಂದಿನ ವಾರ ಸಂಸತ್ತಿನಲ್ಲಿ ಮಂಡಿಸಲಾಗುವುದು.

ವಿಜಯ ಕರ್ನಾಟಕ 13 Dec 2025 9:01 pm

ಚಾರ್ಮಾಡಿ | ಅಝ್ರೀನ್ ಸಿದ್ದೀಕ್ ಸ್ಮರಣಾರ್ಥ ರಕ್ತದಾನ ಶಿಬಿರ

ಚಾರ್ಮಾಡಿ : ಇತ್ತೀಚಿಗೆ ರಸ್ತೆ ಅಪಘಾತದಲ್ಲಿ ಮರಣ ಹೊಂದಿದ ಬಾಲಕ ಮರ್ಹೂಮ್ ಅಝ್ರೀನ್ ಸಿದ್ದೀಕ್ ಇವರ ಸ್ಮರಣಾರ್ಥದ ಭಾಗವಾಗಿ ಹಯಾತುಲ್ ಇಸ್ಲಾಂ ಮದರಸ ಬೀಟಿಗೆ ಹಾಗೂ ಮರ್ಹೂಂ ಹೈದರ್ ನಿರ್ಸಾಲ್ ಬ್ಲಡ್ ಡೋನರ್ಸ್ ಫಾರಂ ಹಾಗೂ ಬ್ಲಡ್ ಡೋನರ್ಸ್ ಮಂಗಳೂರು ಇದರ ಸಂಯುಕ್ತಾಶ್ರಯದಲ್ಲಿ ಯೇನಪೋಯ ಆಸ್ಪತ್ರೆ ಇವರ ಸಹಯೋಗದೊಂದಿಗೆ ಬೃಹತ್ ರಕ್ತದಾನ ಶಿಬಿರ ಕಕ್ಕಿಂಜೆಯ ಬೀಟಿಗೆ ಮದರಸ ವಠಾರದಲ್ಲಿ ನಡೆಯಿತು. ಅಹ್ಮದ್ ಕುಂಞ ಮುಸ್ಲಿಯಾರ್ ದುವಾ ಆಶೀರ್ವಾದದೊಂದಿಗೆ ನೆರವೇರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಬ್ದುಲ್ ಖಾದರ್ ವಹಿಸಿದ್ದರು. ಅಹ್ಮದ್ ಕುಂಞ ಮುಸ್ಲಿಯಾರ್ ದುವಾ ಆಶೀರ್ವಾದದೊಂದಿಗೆ ನೆರವೇರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಬ್ದುಲ್ ಖಾದರ್ ವಹಿಸಿದ್ದರು. ರಫೀಕ್ ಫೈಝಿ ಖತೀಬರು ಜಲಾಲಿಯನಗರ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕಾರ್ಯಕ್ರಮವನ್ನು ಉದ್ದೇಶಿಸಿ ತೌಸೀಫ್ ಫೈಝಿ ಖತೀಬರು ಇಸ್ಲಾಂಬಾದ್ ಹಾಗೂ ಅಕ್ಟರ್ ಬೆಳ್ತಂಗಡಿ ಅಧ್ಯಕ್ಷರು ಎಸ್‌ಡಿಪಿಐ ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರ ರಕ್ತದಾನ ಮಹತ್ವದ ಕುರಿತು ಮಾತುಗಳನ್ನಾಡಿದರು. ವೇದಿಕೆಯಲ್ಲಿ ಸ್ವದಕತ್‌ ದಾರಿಮಿ ಕತ್ತರಿಗುಡ್ಡೆ, ಅಬೂಬಕ್ಕರ್ ಮುಸ್ಲಿಯಾರ್, ಉಮರ್ ಮುಸ್ಲಿಯಾರ್, ಹಾರಿಸ್‌ ಹನೀಫಿ, ಮುಸ್ತಫಾ ಜಿ.ಕೆ., ಹಕೀಮ್ ಜಿ.ಕೆ., ಉಸ್ಮಾನ್ ಕಲ್ಲಡ್ಕ, ಇಸ್ಮಾಯಿಲ್, ಇಸ್ಮಾಯಿಲ್ ಕೆ., ಸಿದ್ದೀಕ್ ಯು. ಪಿ., ಹಾಜಿ ಸುಲೈಮಾನ್, ಅಬ್ದುಲ್ ಖಾದರ್ (ಮೋನಾಕ), ಡಾಕ್ಟರ್ಸ್ ಮತ್ತು ಸಿಬ್ಬಂದಿಗಳು ಯೆನೋಪೊಯಾ ಆಸ್ಪತ್ರೆ ಮಂಗಳೂರು, ಅಹಮ್ಮದ್ ಕುಂಞ ಮುಸ್ಲಿಯಾರ್ ಬೀಟಿಗೆ, ಪಕೀರಬ್ಬ ಯು.ಪಿ, ರಫೀಕ್ ಯು. ಪಿ. ಹಾಗೂ ಇನ್ನಿತರರು ಉಪಸ್ಥಿತರಿದ್ದರು. ಅಶ್ರಫ್‌ ಚಾರ್ಮಾಡಿ ಕಾರ್ಯಕ್ರಮವನ್ನು ನಿರೂಪಿಸಿದರು. ರಕ್ತದಾನ ಶಿಬಿರದಲ್ಲಿ ದಾನಿಗಳಿಂದ ಒಟ್ಟು ಎಪ್ಪತ್ತೈದು ಯುನಿಟ್ ರಕ್ತವನ್ನು ಸಂಗ್ರಹಿಸಲಾಯಿತು.    

ವಾರ್ತಾ ಭಾರತಿ 13 Dec 2025 8:56 pm

GOAT Tour 2025 | ಕಾರ್ಯಕ್ರಮದಲ್ಲಿ ಅವ್ಯವಸ್ಥೆ; ಆಯೋಜಕನ ಬಂಧನ

ಕೋಲ್ಕತಾ: ಮೆಸ್ಸಿ ಅವರ ಕಾರ್ಯಕ್ರಮದ ಅವ್ಯವಸ್ಥೆ ಕುರಿತಂತೆ ‘ಭಾರತದ ಗೋಟ್ (ಸಾರ್ವಕಾಲಿಕ ಶ್ರೇಷ್ಠ) ಪ್ರವಾಸ’ದ ಮುಖ್ಯ ಆಯೋಜಕನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಕಾರ್ಯಕ್ರಮ ಅವ್ಯವಸ್ಥೆ ಕುರಿತಂತೆ ಅಭಿಮಾನಿಗಳು ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ವಿಚಾರಣೆ ನಡೆಸಲು ಮುಖ್ಯ ಆಯೋಜಕರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಪಶ್ಚಿಮಬಂಗಳದ ಡಿಜಿಪಿ ರಾಜೀವ್ ಕುಮಾರ್ ತಿಳಿಸಿದ್ದಾರೆ. ಪರಿಸ್ಥಿತಿ ನಿಯಂತ್ರಣದಲ್ಲಿದೆ. ಕಾನೂನು ಸುವ್ಯವಸ್ಥೆಯನ್ನು ಮರು ಸ್ಥಾಪಿಸಲಾಗಿದೆ. ಮೆಸ್ಸಿ ಆಟ ಆಡುವುದನ್ನು ಹಾಗೂ ಮೈದಾನದಲ್ಲಿ ಹೆಚ್ಚು ಸಮಯ ಕಳೆಯುವುದನ್ನು ನಿರೀಕ್ಷಿಸಿದ್ದರಿಂದ ಹೆಚ್ಚಿನ ಅಭಿಮಾನಿಗಳು ಅಸಮಾಧಾನಗೊಂಡರು ಎಂದು ಅವರು ಹೇಳಿದ್ದಾರೆ.

ವಾರ್ತಾ ಭಾರತಿ 13 Dec 2025 8:54 pm

Gulfstream V (G-V) ವಿಲಾಸಿ ವಿಮಾನದಲ್ಲಿ ಭಾರತಕ್ಕೆ ಆಗಮಿಸಿದ ಲಿಯೊನೆಲ್ ಮೆಸ್ಸಿ; ಈ ವಿಮಾನದ ವಿಶೇಷತೆಯೇನು?

ಹೊಸದಿಲ್ಲಿ: ಅರ್ಜೆಂಟೀನ ಸೂಪರ್‌ ಸ್ಟಾರ್ ಲಿಯೊನೆಲ್ ಮೆಸ್ಸಿ ಖಾಸಗಿ ‘Gulfstream V (G-V)’ ವಿಮಾನದಲ್ಲಿ ಕೋಲ್ಕತಾ ವಿಮಾನ ನಿಲ್ದಾಣದಲ್ಲಿ ಬಂದಿಳಿದರು. Gulfstream V (G-V) ಎನ್ನುವುದು ಅತಿ ವಿಲಾಸಿ, ಅತಿ-ದೀರ್ಘ ವ್ಯಾಪ್ತಿಯ ಬಿಝ್ನೆಸ್ ದರ್ಜೆಯ ವಿಮಾನ. ಅದು 6,500 ನಾಟಿಕಲ್ ಮೈಲಿ (12,038 ಕಿ.ಮೀ.) ದೂರ ಎಲ್ಲಿಯೂ ಇಳಿಯದೆ ಹಾರುವ ಸಾಮರ್ಥ್ಯವನ್ನು ಹೊಂದಿದೆ. ಅದು ನ್ಯೂಯಾರ್ಕ್‌ನಿಂದ ಟೋಕಿಯೊಗೆ ಮತ್ತು ಲಂಡನ್‌ ನಿಂದ ಸಿಂಗಾಪುರಕ್ಕೆ ಎಲ್ಲಿಯೂ ಇಳಿಯದೆ ಹಾರಬಲ್ಲದು. ಈ ವಿಮಾನ 51,000 ಅಡಿ (15.5 ಕಿಲೋಮೀರ್) ಎತ್ತರದಲ್ಲಿ ಲೀಲಾಜಾಲವಾಗಿ ಹಾರುವ ಸಾಮರ್ಥ್ಯವನ್ನು ಹೊಂದಿದೆ. ಈ ಎತ್ತರದಲ್ಲಿ ಅದಕ್ಕೆ ಹೆಚ್ಚಿನ ವಿಮಾನ ಸಂಚಾರ ಎದುರಾಗುವುದಿಲ್ಲ. ಅದು 885 ಕಿ.ಮೀ.ಗಿಂತಲೂ ಅಧಿಕ ವೇಗದಲ್ಲಿ ಸಂಚರಿಸುತ್ತದೆ. ಬಳಸಿದ Gulfstream V (G-V) ವಿಮಾನದ ಬೆಲೆ ಅದರ ಪ್ರಾಯ, ಸ್ಥಿತಿಗತಿಯನ್ನು ಆಧರಿಸಿ ಸುಮಾರು 9 ಮಿಲಿಯ ಡಾಲರ್ (ಸುಮಾರು 81.5 ಕೋಟಿ ರೂಪಾಯಿ) ನಿಂದ 14 ಮಿಲಿಯ ಡಾಲರ್ (ಸುಮಾರು 127 ಕೋಟಿ ರೂಪಾಯಿ) ಇರುತ್ತದೆ. ಹೊಸ ವಿಮಾನದ ಬೆಲೆ 40 ಮಿಲಿಯ ಡಾಲರ್ (ಸುಮಾರು 360 ಕೋಟಿ ರೂಪಾಯಿ)ಗಿಂತ ಅಧಿಕವಿರುತ್ತದೆ.

ವಾರ್ತಾ ಭಾರತಿ 13 Dec 2025 8:48 pm

ಬೆಂಗರೆ | ಬೋಟ್ ಚಾಲಕರಿಗೆ ಸನ್ಮಾನ

ಬೆಂಗರೆ, ಡಿ.13: ನದಿಗೆ ಬಿದ್ದ ಬಾಲಕನನ್ನು ರಕ್ಷಿಸಿದ ಬಿಎಂಡಿ ಬೋಟ್ ಚಾಲಕ ಜಲೀಲ್ ಬೆಂಗರೆ ಅವರನ್ನು ಮರ್ಕಝುನ್ನೂರ್ ಸುನ್ನಿ ಮದ್ರಸ, ಕೆಎಂಜೆ, ಎಸ್ವೈಎಸ್,ಎಸೆಸ್ಸೆಫ್ ವತಿಯಿಂದ ಸನ್ಮಾನಿಸಲಾಯಿತು. ಈ ಸಂದರ್ಭ ಬೆಂಗರೆಯ ಮರ್ಕಝುನ್ನೂರ್ ಸುನ್ನಿ ಮದ್ರಸದ ಅಧ್ಯಕ್ಷ ಕುಂಞಿಮೋನು, ಉಪಾಧ್ಯಕ್ಷ ಖ್ವಾಜಾ ಮೊಯ್ದಿನ್, ಪ್ರಧಾನ ಕಾರ್ಯದರ್ಶಿ ಬಿ.ಎ.ಹಮೀದ್, ಕೋಶಾಧಿಕಾರಿ ಆರ್.ಕೆ., ಮುಸ್ತಫಾ, ಮದ್ರಸದ ಉಸ್ತಾದರು, ವಿದ್ಯಾರ್ಥಿಗಳು, ಸಮಿತಿ ಪದಾಧಿಕಾರಿಗಳು, ಸದಸ್ಯರು ಭಾಗವಹಿಸಿದ್ದರು.

ವಾರ್ತಾ ಭಾರತಿ 13 Dec 2025 8:46 pm

ಸೌಕೂರು ಏತ ನೀರಾವರಿ ಯೋಜನೆಗೆ ವಿದ್ಯುತ್ ಸಂಪರ್ಕ ಒದಗಿಸಿದ ಮೆಸ್ಕಾಂ : ಶೀಘ್ರವೇ ರೈತರ ಗದ್ದೆಗೆ ಹರಿಯಲಿದೆ ನೀರು

ಕುಂದಾಪುರ, ಡಿ.13: ಒಂದೂವರೆ ವರ್ಷದಿಂದ ಸುಮಾರು ಎರಡು ಕೋಟಿ ರೂ. ವಿದ್ಯುತ್ ಬಿಲ್ ಬಾಕಿ ಇರಿಸಿಕೊಂಡಿದ್ದಕ್ಕಾಗಿ ಸೌಕೂರು ಏತ ನೀರಾವರಿ ಯೋಜನೆಗೆ ವಿದ್ಯುತ್ ಸಂಪರ್ಕವನ್ನು ಕಡಿತ ಮಾಡಿದ್ದ ಮೆಸ್ಕಾಂ ಇಲಾಖೆ, ಇದೀಗ ಸರಕಾರದ ಸೂಚನೆಯಂತೆ ವಿದ್ಯುತ್ ಸಂಪರ್ಕವನ್ನು ಮತ್ತೆ ನೀಡಿದೆ. ಈ ಮೂಲಕ ಯೋಜನೆಯ ನೀರು ಗದ್ದೆಗಳಿಗೆ ಹರಿಯದೇ ಪರಿಸರದ ರೈತರಿಗೆ ಆಗಿರುವ ತೊಂದರೆ ಕೆಲವೇ ದಿನಗಳಲ್ಲಿ ಬಗೆಹರಿದು ಗದ್ದೆಗಳಿಗೆ ನೀರು ಬಂದು ಹಿಂಗಾರು ಋತುವಿನ ಎರಡನೇ ಬೆಳೆ ಬೆಳೆಯಲು ಸಾಧ್ಯವಾಗುವ ನಿರೀಕ್ಷೆ ಇದೆ. ಸರಕಾರದ ಸೂಚನೆಯಂತೆ ವಿದ್ಯುತ್ ಸಂಪರ್ಕ ಸಿಕ್ಕಿರುವುದರಿಂದ ಮತ್ತೆ ಕಾಲುವೆಯಲ್ಲಿ ನೀರು ಹರಿಸಲು ಕ್ರಮಕೈಗೊಳ್ಳಲಾಗುತ್ತಿದೆ. ಗುಲ್ವಾಡಿಯಲ್ಲಿರುವ ಯೋಜನೆಯ ಪಂಪ್ ಹೌಸ್‌ಗೆ ವಿದ್ಯುತ್ ಪೂರೈಸಲಾಗಿದ್ದು, ತಾಂತ್ರಿಕ ನಿರ್ವಹಣೆ ಬಳಿಕ ಮುಂದಿನ ವಾರದಲ್ಲೆ ರೈತರ ಸುಗ್ಗಿ ಕೃಷಿಗೆ ನೀರು ಹರಿಸಲಾಗುತ್ತದೆ ಎಂದು ತಿಳಿದುಬಂದಿದೆ. ಈ ವರ್ಷದಲ್ಲಿ ಸುಗ್ಗಿ ಬೆಳೆಗೆ ಆಗುತ್ತಿರುವ ನೀರು ಸಮಸ್ಯೆ ಬಗ್ಗೆ ‘ವಾರ್ತಾಭಾರತಿ’ ವಿಸ್ತ್ರತ ವರದಿ ಪ್ರಕಟಿಸಿತ್ತು. ಇದಕ್ಕೆ ತಕ್ಷಣ ಸ್ಪಂದಿಸಿದ ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ, ವರದಿಯನ್ನು ಉಲ್ಲೇಖಿಸಿ ಜಲಸಂಪನ್ಮೂಲ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಪತ್ರಬರೆದಿದ್ದಲ್ಲದೆ ಭೇಟಿಯಾಗಿ ರೈತರ ಸಮಸ್ಯೆ ಪರಿಹಾರದ ಬಗ್ಗೆ ಮನವಿ ನೀಡಿದ್ದರು. ಡಿಸಿಎಂ ಡಿ.ಕೆ.ಶಿವಕುಮಾರ್ ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿ ತಕ್ಷಣ ಕ್ರಮವಹಿಸುವ ಭರವಸೆಯೊಂದಿಗೆ ಸಂಬಂದಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು. ಈ ಹಿನ್ನೆಲೆ ಶುಕ್ರವಾರ ಗುಲ್ವಾಡಿಯಲ್ಲಿರುವ ಮುಖ್ಯ ಪಂಪ್ ಹೌಸ್‌ಗೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ. ಅಲ್ಲಿನ ತಾಂತ್ರಿಕ ಸಮಸ್ಯೆಗಳನ್ನು ಪರಿಶೀಲಿಸಿ ಅಗತ್ಯಕ್ರಮ ಕೈಗೊಂಡು ಮುಂದಿನ ವಾರದೊಳಗೆ ರೈತರ ಕೃಷಿ ಕಾರ್ಯಕ್ಕೆ ನೀರು ಒದಗಿಸುವುದಾಗಿ ಸಂಬಂಧಪಟ್ಟ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ವಾರ್ತಾ ಭಾರತಿ 13 Dec 2025 8:43 pm

ಉಡುಪಿ | ಡಿ.16ರಂದು ಮಹಿಳೆಯರ ಮೌನ ಮೆರವಣಿಗೆ, ಸಮಾವೇಶ

ಕಿಡಿಗೇಡಿಗಳ ಅಪಪ್ರಚಾರ, ಸುಳ್ಳಿಗೆ ಕಿವಿಗೋಡಬೇಡಿ: ಜ್ಯೋತಿ ಎ.

ವಾರ್ತಾ ಭಾರತಿ 13 Dec 2025 8:37 pm

ಜ.6 ರಂದು ಡಿ.ಕೆ.ಶಿವಕುಮಾರ್ ಅವರಿಗೆ ಸಿಎಂ ಸ್ಥಾನ : ಇಕ್ಬಾಲ್ ಹುಸೇನ್

ಇಕ್ಬಾಲ್ ಹುಸೇನ್‍ಗೆ ಮಾತನ್ನು ಗಂಭೀರವಾಗಿ ಪರಿಗಣಿಸಬೇಡಿ ಎಂದ ಡಿಸಿಎಂ

ವಾರ್ತಾ ಭಾರತಿ 13 Dec 2025 8:30 pm

ರಾಷ್ಟ್ರೀಯ ಲೋಕ ಅದಾಲತ್ : ಉಡುಪಿಯಲ್ಲಿ ಒಂದೇ ದಿನ 65,473 ಪ್ರಕರಣ ಇತ್ಯರ್ಥ

ಉಡುಪಿ, ಡಿ.13: ಬೆಂಗಳೂರಿನ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದಂತೆ ಇಂದು ಉಡುಪಿ ಜಿಲ್ಲೆಯ ಉಡುಪಿ, ಕುಂದಾಪುರ, ಕಾರ್ಕಳ ಹಾಗೂ ಬೈಂದೂರುಗಳ ವಿವಿಧ ನ್ಯಾಯಾಲಯಗಳಲ್ಲಿ ರಾಷ್ಟ್ರೀಯ ಲೋಕ ಅದಾಲತ್ ಅನ್ನು ಆಯೋಜಿಸಿದ್ದು, ಒಂದೇ ದಿನದಲ್ಲಿ ಒಟ್ಟು 65,473 ಪ್ರಕರಣಗಳನ್ನು ಇತ್ಯರ್ಥ ಪಡಿಸಲಾಗಿದೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾಗಿರುವ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಇಂದು ಇತ್ಯರ್ಥಗೊಂಡಿರುವ 65,473 ಪ್ರಕರಣಗಳಲ್ಲಿ ರಾಜಿಯಾಗಬಲ್ಲ ಅಪರಾಧಿಕ ಪ್ರಕರಣಗಳು-24, ಚೆಕ್ಕು ಅಮಾನ್ಯ ಪ್ರಕರಣಗಳು-343, ಬ್ಯಾಂಕ್ ಹಾಗೂ ಹಣ ವಸೂಲಾತಿ ಪ್ರಕರಣಗಳು-10, ಎಂ.ವಿ.ಸಿ. ಪ್ರಕರಣಗಳು-102, ಸಿವಿಲ್ ಪ್ರಕರಣಗಳು-247, ಇತರೆ ಕ್ರಿಮಿನಲ್ ಪ್ರಕರಣಗಳು-3002, ಕಾರ್ಮಿಕ ವ್ಯಾಜ್ಯ-1 ಹಾಗೂ ವ್ಯಾಜ್ಯ ಪೂರ್ವ ಪ್ರಕರಣಗಳು- 61,744 ಸೇರಿವೆ. ರಾಜೀ ಮುಖಾಂತರ ಇತ್ಯರ್ಥ ಪಡಿಸಿ ಒಟ್ಟು 19.68 ಕೋಟಿ ರೂ. ಪರಿಹಾರದ ಮೊತ್ತವನ್ನು ಸಹ ಘೋಷಿಸಲಾಗಿದೆ ಎಂದು ಕಿರಣ್ ಎಸ್.ಗಂಗಣ್ಣವರ್ ತಿಳಿಸಿದ್ದಾರೆ. ನ್ಯಾಯಾಂಗ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ತಾಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ ಉಡುಪಿ, ಕುಂದಾಪುರ, ಕಾರ್ಕಳ, ಬೈಂದೂರು ಹಾಗೂ ಬ್ರಹ್ಮಾವರ, ಅಭಿಯೋಜನೆ ಇಲಾಖೆ, ಸರಕಾರಿ ವ್ಯಾಜ್ಯಗಳ ಇಲಾಖೆ, ಪೊಲೀಸ್ ಇಲಾಖೆ, ಕಂದಾಯ ಇಲಾಖೆ, ಗಣಿ ಮತ್ತು ಭೂವಿಜ್ಞಾನ ಇಲಾಖೆ, ವಿಮಾ ಕಂಪೆನಿಗಳು, ಬಾಂಕ್, ಕಕ್ಷಿದಾರರು ಹಾಗೂ ಇತರ ಸರಕಾರಿ ಇಲಾಖೆಗಳ ಸಂಪೂರ್ಣ ಸಹಕಾರ ದೊಂದಿಗೆ ಇಂದಿನ ಲೋಕ ಅದಾಲತ್ ಅನ್ನು ಯಶಸ್ವಿಗೊಳಿಸಲಾಯಿತು ಎಂದು ಪ್ರಕಟಣೆ ತಿಳಿಸಿದೆ.

ವಾರ್ತಾ ಭಾರತಿ 13 Dec 2025 8:28 pm

ಉದ್ದೇಶಿತ ನರೇಗಾ ಮರುನಾಮಕರಣದಿಂದ ಏನು ಪ್ರಯೋಜನ?: ಪ್ರಿಯಾಂಕಾ ಗಾಂಧಿ

ಹೊಸದಿಲ್ಲಿ,ಡಿ.13: ನರೇಗಾ ಯೋಜನೆಯ ಮರುನಾಮಕರಣ ಪ್ರಸ್ತಾವವನ್ನು ಶನಿವಾರ ಪ್ರಶ್ನಿಸಿದ ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಅವರು,ಈ ಕ್ರಮವು ಯಾವುದೇ ಸ್ಪಷ್ಟ ಲಾಭವನ್ನು ನೀಡುವುದಿಲ್ಲ ಮತ್ತು ಸರಕಾರಿ ಸಂಪನ್ಮೂಲಗಳ ಅನಗತ್ಯ ವೆಚ್ಚಕ್ಕೆ ಕಾರಣವಾಗುತ್ತದೆ ಎಂದು ಪ್ರತಿಪಾದಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು,2005ರಲ್ಲಿ ಜಾರಿಗೊಂಡಿದ್ದ ಪ್ರಮುಖ ಗ್ರಾಮೀಣ ಉದ್ಯೋಗ ಕಾರ್ಯಕ್ರಮದ ಹೆಸರನ್ನು ಬದಲಿಸುವುದರ ಹಿಂದಿನ ತಾರ್ಕಿಕತೆ ತನಗೆ ಅರ್ಥವಾಗಿಲ್ಲ ಎಂದು ಹೇಳಿದರು. ‘ಇದರ ಹಿಂದೆ ಯಾವ ಮನಃಸ್ಥಿತಿ ಇದೆ ಎನ್ನುವುದು ನನಗೆ ಅರ್ಥವಾಗುತ್ತಿಲ್ಲ. ಮೊದಲನೆಯದಾಗಿ ಯೋಜನೆಯು ಮಹಾತ್ಮಾ ಗಾಂಧಿಯವರ ಹೆಸರನ್ನು ಹೊಂದಿದೆ ಮತ್ತು ಅದನ್ನು ಬದಲಿಸಿದಾಗ ಅದಕ್ಕಾಗಿ ಮತ್ತೆ ಸರಕಾರದ ಸಂಪನ್ಮೂಲಗಳನ್ನು ವೆಚ್ಚ ಮಾಡಲಾಗುತ್ತದೆ. ಕಚೇರಿಗಳಿಂದ ಹಿಡಿದು ಸ್ಟೇಷನರಿವರೆಗೆ ಪ್ರತಿಯೊಂದನ್ನೂ ಮರುನಾಮಕರಣ ಮಾಡಬೇಕಾಗುತ್ತದೆ,ಇದು ಬೃಹತ್ ಮತ್ತು ದುಬಾರಿ ಪ್ರಕ್ರಿಯೆಯಾಗಿದೆ’ ಎಂದು ಹೇಳಿದ ಅವರು,‘ಹೀಗಾಗಿ ಅನಗತ್ಯವಾಗಿ ಇದನ್ನು ಮಾಡುವುದರಿಂದ ಏನು ಪ್ರಯೋಜನ? ನನಗೆ ಅರ್ಥವಾಗುತ್ತಿಲ್ಲ’ ಎಂದರು. ಇತರ ಪ್ರತಿಪಕ್ಷಗಳೂ ಮರುನಾಮಕರಣ ಪ್ರಸ್ತಾವವನ್ನು ಟೀಕಿಸಿವೆ.

ವಾರ್ತಾ ಭಾರತಿ 13 Dec 2025 8:15 pm

ಕೇಂದ್ರದಿಂದ ಕರ್ನಾಟಕಕ್ಕೆ 22,476 ಕೋಟಿ ರೂ.ಬಾಕಿ!

ಹೊಸದಿಲ್ಲಿ,ಡಿ.13: ಕೇಂದ್ರ ಸರಕಾರವು ಪ್ರಸಕ್ತ ವರ್ಷದ ಕರ್ನಾಟಕದ ತೆರಿಗೆ ಹಂಚಿಕೆಯಾಗಿ 51,700 ಕೋಟಿ ರೂ.ಗಳನ್ನು ಕಂತುಗಳಲ್ಲಿ ಬಿಡುಗಡೆ ಮಾಡಿದೆ. ಈ ವಿತ್ತವರ್ಷದಲ್ಲಿ ಕೇಂದ್ರ ಪ್ರಾಯೋಜಿತ ಯೋಜನೆಗಳಿಗಾಗಿ 16,000 ಕೋಟಿ ರೂ.ಗಳನ್ನು ನೀಡುವುದಾಗಿ ಕೇಂದ್ರವು ಭರವಸೆ ಕೊಟ್ಟಿತ್ತಾದರೂ ಈವರೆಗೆ ಕೇವಲ 7000 ಕೋ.ರೂ.ಗಳನ್ನು ಬಿಡುಗಡೆ ಮಾಡಲಾಗಿದ್ದು,ಇನ್ನೂ 9,000 ಕೋ.ರೂ.ಗಳನ್ನು ಬಾಕಿಯುಳಿಸಿಕೊಂಡಿದೆ. ಬಾಕಿಯಿರುವ ಹಣವನ್ನು ಶೀಘ್ರ ಬಿಡುಗಡೆ ಮಾಡುವಂತೆ ಕೋರಿ ಕರ್ನಾಟಕ ಸರಕಾರವು ಕೇಂದ್ರಕ್ಕೆ ಪತ್ರವನ್ನು ಬರೆದಿದೆ. ಜೊತೆಗೆ ಜಲಜೀವನ ಯೋಜನೆಯಡಿ ಕೇಂದ್ರದ ಪಾಲು 4,574 ಕೋಟಿ ರೂ.ಕೂಡ ರಾಜ್ಯಕ್ಕೆ ಬಾಕಿಯಿದೆ. 15ನೇ ಹಣಕಾಸು ಆಯೋಗವು ಕರ್ನಾಟಕಕ್ಕೆ ಶಿಫಾರಸು ಮಾಡಿದ್ದ ಆರೋಗ್ಯ ಅನುದಾನವನ್ನು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಕಳೆದೆರಡು ವರ್ಷಗಳಲ್ಲಿ ಬಿಡುಗಡೆ ಮಾಡಿಲ್ಲ. ಆಯೋಗವು 2021-22ರಿಂದ 2025-26ರವರೆಗಿನ ಅವಧಿಗೆ ರಾಜ್ಯಕ್ಕೆ 2,928 ಕೋ.ರೂ.ಗಳನ್ನು ಹಂಚಿಕೆ ಮಾಡಿತ್ತು. ಈ ಪೈಕಿ ಕೇವಲ 1,497 ಕೋ.ರೂ.ಗಳನ್ನು ಈವರೆಗೆ ಬಿಡುಗಡೆ ಮಾಡಲಾಗಿದ್ದು, 2024-25 ಮತ್ತು 2025-26ರ ವರ್ಷಗಳಿಗೆ ಯಾವುದೇ ಹಣವನ್ನು ಬಿಡುಗಡೆ ಮಾಡಲಾಗಿಲ್ಲ. ಶುಕ್ರವಾರ ಲೋಕಸಭೆಯಲ್ಲಿ ದಕ್ಷಿಣ ಕನ್ನಡ ಸಂಸದ ಬ್ರಿಜೇಶ ಚೌಟ ಅವರ ಪ್ರಶ್ನೆಗೆ ನೀಡಿದ ಲಿಖಿತ ಉತ್ತರದಲ್ಲಿ ಆರೋಗ್ಯ ಮತ್ತು ಕುಟುಂಬ ಖಾತೆಯ ರಾಜ್ಯಸಚಿವ ಪ್ರತಾಪರಾವ್ ಜಾಧವ ಅವರು ಈ ಮಾಹಿತಿಯನ್ನು ಒದಗಿಸಿದ್ದಾರೆ. ಕಳೆದ ಐದು ವರ್ಷಗಳಲ್ಲಿ ಕರ್ನಾಟಕಕ್ಕೆ ಬಿಡುಗಡೆಯಾದ ಒಟ್ಟು ಹಣ ಮತ್ತು ರಾಜ್ಯವು ಖರ್ಚು ಮಾಡಿದ ಮೊತ್ತದ ವಿವರಗಳನ್ನು ಸಂಸದರು ಕೋರಿದ್ದರು. ಜಲಜೀವನ ಮಿಷನ್ ಅಡಿ ಕರ್ನಾಟಕಕ್ಕೆ ಬಾಕಿಯಿರುವ ಹಣವನ್ನು ಬಳಕೆ ಪ್ರಮಾಣಪತ್ರಗಳನ್ನು ಸಲ್ಲಿಸಿದ ಬಳಿಕವೇ ಬಿಡುಗಡೆ ಮಾಡಲಾಗುವುದು ಎಂದು ಕೇಂದ್ರ ಜಲಶಕ್ತಿ ಸಚಿವ ಸಿ.ಆರ್.ಪಾಟೀಲ ಸ್ಪಷ್ಟಪಡಿಸಿದ್ದಾರೆ. ಲೋಕಸಭೆಯಲ್ಲಿ ಬಳ್ಳಾರಿ ಸಂಸದ ಇ.ತುಕಾರಾಮ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ‘ಕರ್ನಾಟಕ ಸೇರಿದಂತೆ ಹಲವಾರು ರಾಜ್ಯಗಳು ಈಗಾಗಲೇ ಬಿಡುಗಡೆಗೊಂಡ ಹಣಕ್ಕೆ ಬಳಕೆ ಪ್ರಮಾಣ ಪತ್ರಗಳನ್ನು ಸಲ್ಲಿಸಿಲ್ಲ. ಬಳಕೆ ಪ್ರಮಾಣಪತ್ರಗಳನ್ನು ಸಲ್ಲಿಸದಿದ್ದರೆ ಇನ್ನಷ್ಟು ಹಣವನ್ನು ಬಿಡುಗಡೆ ಮಾಡಲಾಗುವುದಿಲ್ಲ ಎಂದು ನಾವು ಕರ್ನಾಟಕದ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗಳಿಗೆ ಪತ್ರಗಳ ಮೂಲಕ ತಿಳಿಸಿದ್ದೇವೆ ’ಎಂದು ಹೇಳಿದರು. ಜಲಜೀವನ ಮಿಷನ್ ಅಡಿ ಹಣಕಾಸು ಬಿಡುಗಡೆಗೆ ಸಂಬಂಧಿಸಿದಂತೆ ಮುಂದಿನ ವಾರ ಮತ್ತೊಂದು ಸಭೆ ನಡೆಯಲಿದೆ ಎಂದರು. ಈ ವೇಳೆ ತುಕಾರಾಮ,ಈ ಯೋಜನೆಯಡಿ ಕರ್ನಾಟಕವು ಗಮನಾರ್ಹ ಪ್ರಗತಿಯನ್ನು ಸಾಧಿಸಿದೆ,ಆದರೆ ಕೇಂದ್ರವು ಸುಮಾರು 13,500 ಕೋಟಿ ರೂ.ಗಳನ್ನು ತಡೆಹಿಡಿದಿದೆ ಎಂದು ಆರೋಪಿಸಿದರು. ಬಾಕಿ ಇರುವ ಹಣವನ್ನು ಶೀಘ್ರವೇ ಬಿಡುಗಡೆ ಮಾಡುವಂತೆ ಅವರು ಕೇಂದ್ರ ಸರಕಾರವನ್ನು ಆಗ್ರಹಿಸಿದರು. ಕರ್ನಾಟಕದಲ್ಲಿ ಅನುಷ್ಠಾನಗೊಳ್ಳುತ್ತಿರುವ ಕೇಂದ್ರ ಪ್ರಾಯೋಜಿತ ಯೋಜನೆಗಳಿಗೆ ಈ ವರ್ಷ 56,549 ಕೋಟಿ ರೂ.ಗಳನ್ನು ಕೇಂದ್ರ ಸರಕಾರವು ಹಂಚಿಕೆ ಮಾಡಿತ್ತು,ಆದರೆ ಡಿ.6ರವರೆಗೆ ಕೇವಲ 34,703 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದ್ದು,22,476 ಕೋ.ರೂ.ಗಳನ್ನು ಬಾಕಿಯುಳಿಸಿಕೊಂಡಿದೆ ಎಂದು ರಾಜ್ಯಸಭಾ ಸದಸ್ಯ ಜಿ.ಸಿ.ಚಂದ್ರಶೇಖರ ಅವರು ತಿಳಿಸಿದರು. ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಕರ್ನಾಟಕಕ್ಕೆ ಆಗಿರುವ ಅನ್ಯಾಯವನ್ನು ಸಂಸತ್ತಿನಲ್ಲಿ ಪ್ರಸ್ತಾವಿಸುವಂತೆ ಆಗ್ರಹಿಸಿ ರಾಜ್ಯ ಸರಕಾರವು ಎಲ್ಲ ಸಂಸದರಿಗೆ ಪತ್ರಗಳನ್ನು ಬರೆದಿದೆ ಎಂದು ತಿಳಿಸಿದರು. ಕೇಂದ್ರದ ತಾರತಮ್ಯ ನೀತಿಯ ವಿರುದ್ಧ ತಾನು ಮಂಗಳವಾರ ರಾಜ್ಯಸಭೆಯಲ್ಲಿ ಧ್ವನಿಯೆತ್ತುವುದಾಗಿ ಅವರು ಹೇಳಿದರು. ಆಯುಷ್ಮಾನ ಭಾರತ ಯೋಜನೆಯಡಿ 2020ರಲ್ಲಿ ಕರ್ನಾಟಕದಲ್ಲಿ ಸುಮಾರು ಎಂಟು ಲಕ್ಷ ಫಲಾನುಭವಿಗಳಿದ್ದು,ಅವರ ಸಂಖ್ಯೆ ಈಗ 34 ಲಕ್ಷಕ್ಕೆ ಏರಿಕೆಯಾಗಿದೆ. ಆದರೆ ಕೇಂದ್ರದ ಕೊಡುಗೆ ಕೇವಲ 2,500 ಕೋ.ರೂ.ಗಳಷ್ಟಿದ್ದು,ರಾಜ್ಯ ಸರಕಾರವು 7,400 ಕೋ.ರೂ.ಗಳನ್ನು ವೆಚ್ಚ ಮಾಡಿದೆ. ಯೋಜನೆಯ ವೆಚ್ಚದ ಶೇ.60ರಷ್ಟು ಪಾಲನ್ನು ಕೇಂದ್ರವು ಭರಿಸಬೇಕಿತ್ತು,ಆದರೆ ಅದು ಪ್ರಸ್ತುತ ಕೇವಲ ಶೇ.25ರಷ್ಟು ಪಾಲನ್ನು ನೀಡುತ್ತಿದೆ ಎಂದು ಅವರು ಆರೋಪಿಸಿದರು.

ವಾರ್ತಾ ಭಾರತಿ 13 Dec 2025 8:09 pm

GOAT ಇಂಡಿಯಾ ಟೂರ್: ಮೆಸ್ಸಿಯನ್ನು ನೋಡಲು ಮದುವೆಯನ್ನೇ ಬಿಟ್ಟು ಬಂದ ಅಭಿಮಾನಿಗೆ ಭಾರಿ ನಿರಾಸೆ!

ಕೋಲ್ಕತ್ತಾದಲ್ಲಿ ಲಿಯೋನೆಲ್ ಮೆಸ್ಸಿಯವರ ಕಾರ್ಯಕ್ರಮವು ಅಭಿಮಾನಿಗಳಿಗೆ ತೀವ್ರ ನಿರಾಸೆ ಮೂಡಿಸಿತು. ಮೆಸ್ಸಿಯನ್ನು ನೋಡಲು ಅಭಿಮಾನಿಯೊಬ್ಬ ತನ್ನ ಮದುವೆಯನ್ನು ಬಿಟ್ಟು ಬಂದಿದ್ದ. ಆದರೆ, ಕೊನೆಗೆ ನಿರಾಸೆ ಅನುಭವಿಸಬೇಕಾಯಿತು. ಕಾರ್ಯಕ್ರಮದಲ್ಲಿ ಜನಸಂದಣಿ ನಿರ್ವಹಣೆ ಮತ್ತು ಭದ್ರತಾ ಲೋಪಗಳು ಕಂಡುಬಂದವು. ಇದರಿಂದಾಗಿ ಅಭಿಮಾನಿಗಳು ಆಕ್ರೋಶಗೊಂಡು ವಸ್ತುಗಳನ್ನು ಎಸೆದರು. ರಾಜಕಾರಣಿಗಳು ಮತ್ತು ಗಣ್ಯರು ಮೆಸ್ಸಿಯನ್ನು ಸುತ್ತುವರಿದಿದ್ದರಿಂದ ಸಾಮಾನ್ಯ ಅಭಿಮಾನಿಗಳಿಗೆ ನಿರಾಶೆಯಾಯಿತು. ಟಿಕೆಟ್ ಬೆಲೆ ಹೆಚ್ಚಿದ್ದರೂ ನಿರೀಕ್ಷಿತ ಅನುಭವ ಸಿಗಲಿಲ್ಲ.

ವಿಜಯ ಕರ್ನಾಟಕ 13 Dec 2025 7:47 pm

ಯುಜಿ ನೀಟ್: ಆಪ್ಶನ್ ದಾಖಲಿಸಲು ಡಿ.15ರವೆರೆಗೆ ಅವಧಿ ವಿಸ್ತರಣೆ

ಬೆಂಗಳೂರು : ವೈದ್ಯಕೀಯ ಮತ್ತು ದಂತ ವೈದ್ಯಕೀಯ ಪದವಿ ಕೋರ್ಸ್‍ಗಳ ಪ್ರವೇಶಕ್ಕೆ ಸ್ಟ್ರೇ ವೇಕೆನ್ಸಿ ಸುತ್ತಿನಲ್ಲಿ ಭಾಗವಹಿಸಲು ಇಚ್ಛಿಸುವವರಿಗೆ ಆಪ್ಶನ್ ದಾಖಲಿಸಲು ಡಿ.15ರಂದು ಬೆಳಗ್ಗೆ 11 ಗಂಟೆವರೆಗೆ ದಿನಾಂಕ ವಿಸ್ತರಿಸಲಾಗಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ತಿಳಿಸಿದ್ದಾರೆ. ಈ ಕುರಿತು ಪ್ರಕಟನೆ ನೀಡಿರುವ ಅವರು, ಆನ್‍ಲೈನ್ ಮೂಲಕ ವೈದ್ಯಕೀಯ ಕೋರ್ಸ್ ಶುಲ್ಕ ಪಾವತಿಸುವುದಕ್ಕೂ ಬ್ಯಾಂಕ್ ಖಾತೆ ನಂಬರ್ ನೀಡಿದ್ದು, ಅದರ ನಂತರ ಪಾವತಿ ವಿವರ ಹಾಗೂ ಸಿಇಟಿ ಸಂಖ್ಯೆಯನ್ನು keavikasana@gmail.comಗೆ ಇ-ಮೇಲ್ ಮಾಡಬೇಕು. ಅಥವಾ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಚೇರಿಗೆ ಖುದ್ದು ತಲುಪಿಸಬೇಕು. ಅದರ ಬಳಿಕವೇ ಆಪ್ಶನ್ ದಾಖಲಿಗೆ ಅವಕಾಶ ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ. ಸ್ಟ್ರೇ ವೇಕೆನ್ಸಿ ಸುತ್ತಿನ ಸೀಟು ಹಂಚಿಕೆಯ ತಾತ್ಕಾಲಿಕ ಫಲಿತಾಂಶವನ್ನು ಡಿ.15ರಂದು ಸಂಜೆ 4ಗಂಟೆ ನಂತರ ಪ್ರಕಟಿಸಲಾಗುತ್ತದೆ. 3ನೇ ಸುತ್ತಿನಲ್ಲಿ ಸೀಟು ಹಂಚಿಕೆಯಾಗಿ, ಶುಲ್ಕ ಪಾವತಿಸಿ, ಸೀಟು ಖಾತರಿ ಚೀಟಿ ಡೌನ್‍ಲೋಡ್ ಮಾಡಿಕೊಂಡಿರುವ ಕೆಲವರು ಇನ್ನೂ ಕಾಲೇಜಿಗೆ ವರದಿ ಮಾಡಿಕೊಂಡಿಲ್ಲ. ಅಂತಹವರ ಪಟ್ಟಿಯನ್ನೂ ವೆಬ್‍ಸೈಟ್‍ನಲ್ಲಿ ಪ್ರಕಟಿಸಲಾಗಿದೆ. ಪ್ರವೇಶ ಪಡೆಯುವುದು ಕಡ್ಡಾಯವಾಗಿದ್ದು ಅಂತಹವರಿಗೆ ಡಿ.14ರವರೆಗೆ ಕಾಲೇಜಿಗೆ ವರದಿ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಒಂದು ವೇಳೆ ನಿಗದಿತ ಅವಧಿಯಲ್ಲಿ ಕಾಲೇಜಿಗೆ ವರದಿ ಮಾಡಿಕೊಳ್ಳದಿದ್ದರೆ ಡಿ.15ರಂದು ಬೆಳಗ್ಗೆ 9ಗಂಟೆಗೆ ಪ್ರಾಧಿಕಾರಕ್ಕೆ ಖುದ್ದು ಬಂದು ಕಾರಣ ತಿಳಿಸಬೇಕು. ನಂತರ ಅವರಿಂದ ತೆರವಾಗುವ ಸೀಟುಗಳನ್ನು ಸ್ಟ್ರೇ ವೇಕೆನ್ಸಿ ಸುತ್ತಿಗೆ ಪರಿಗಣಿಸಲಾಗುತ್ತದೆ ಎಂದು ತಿಳಿಸಿದ್ದಾರೆ.

ವಾರ್ತಾ ಭಾರತಿ 13 Dec 2025 7:47 pm

ಸರಕಾರ ಅಪಾರ್ಟ್ ಮೆಂಟ್ ನಿವಾಸಿಗಳು ಹಾಗೂ ಮನೆ ಖರೀದಿದಾರರ ಪರ ನಿಲ್ಲುತ್ತದೆ : ಡಿ.ಕೆ.ಶಿವಕುಮಾರ್

ಬೆಂಗಳೂರು : ಸರಕಾರ ಅಪಾರ್ಟ್‍ಮೆಂಟ್ ನಿವಾಸಿಗಳು ಹಾಗೂ ಮನೆ ಖರೀದಿದಾರರ ಪರವಾಗಿ ನಿಲ್ಲುತ್ತದೆ. ಈ ಕಾರಣಕ್ಕೆ ಕರ್ನಾಟಕ ಅಪಾರ್ಟ್‍ಮೆಂಟ್ ಮಾಲಕತ್ವ ಮತ್ತು ನಿರ್ವಹಣೆ ವಿಧೇಯಕ-2025ಕ್ಕೆ ಸಂಬಂಧಿಸಿದಂತೆ ಅಪಾರ್ಟ್‍ಮೆಂಟ್ ಅಸೋಸಿಯೇಷನ್‍ಗಳ ಪ್ರತಿನಿಧಿಗಳ ಅಭಿಪ್ರಾಯ ಸಂಗ್ರಹಿಸುತ್ತಿದ್ದೇವೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ. ಶನಿವಾರ ಇಲ್ಲಿನ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‍ನಲ್ಲಿ ಕರ್ನಾಟಕ ಅಪಾರ್ಟ್‍ಮೆಂಟ್(ಮಾಲಕತ್ವ ಮತ್ತು ನಿರ್ವಹಣೆ) ವಿಧೇಯಕ-2025 ಕುರಿತು ಅಪಾರ್ಟ್‍ಮೆಂಟ್ ಅಸೋಸಿಯೇಷನ್‍ಗಳ ಪ್ರತಿನಿಧಿಗಳೊಂದಿಗೆ ನಡೆದ ಸಂವಾದದಲ್ಲಿ ಅವರು ಮಾತನಾಡಿದರು. ನಾನು ನಿಮಗೆ ಸಹಾಯ ಮಾಡುವುದರ ಜೊತೆಗೆ ನಿಮ್ಮ ಸಹಾಯವನ್ನು ಮತಗಳ ಮೂಲಕ ಬಯಸುತ್ತೇನೆ. ಜಿಬಿಎ ಚುನಾವಣೆಯಲ್ಲಿ ನೀವು ನಮ್ಮ ಜತೆ ನಿಲ್ಲಿ ಎಂದು ಕೋರುತ್ತೇನೆ. ನಿಮ್ಮ ಮೇಲೆ ನಂಬಿಕೆ ಇಟ್ಟಿದ್ದೇನೆ. ಅದಕ್ಕಾಗಿ ಯಾರೂ ಜಾರಿಗೆ ತರದ ಕಾನೂನನ್ನು ಜಾರಿಗೆ ತರಲು ಮುಂದಾಗಿದ್ದೇನೆ. ನನಗೆ ನಿರಾಸೆ ಮಾಡಬೇಡಿ ಎಂದು ಅವರು ತಿಳಿಸಿದರು. ಬೆಂಗಳೂರಿನ ಸಮಸ್ಯೆ ನಿವಾರಿಸಿ, ನಗರದ ಸ್ವರೂಪ ಬದಲಿಸಲು, ಅನೇಕ ಯೋಜನೆ ಕೈಗೊಂಡಿದ್ದೇವೆ. ಬಹಳ ಅಧ್ಯಯನ ಮಾಡಿ 2 ಟನಲ್ ರಸ್ತೆ ನಿರ್ಮಾಣಕ್ಕೆ ಮುಂದಾಗಿದ್ದೇನೆ. 130 ಕಿ.ಮೀ ಉದ್ದದ ಬೆಂಗಳೂರು ಬಿಸಿನೆಸ್ ಕಾರಿಡಾರ್ ಅನ್ನು 26 ಸಾವಿರ ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸುತ್ತಿದ್ದೇವೆ. ಯಾರು ಏನೇ ಟೀಕೆ ಮಾಡಿದರೂ, ನಾವು ಈ ಯೋಜನೆ ಮಾಡೇ ಮಾಡುತ್ತೇವೆ. ಪ್ರಧಾನಮಂತ್ರಿಗಳು ಹಾಗೂ ಕೇಂದ್ರ ಸಚಿವ ನಿತೀನ್ ಗಡ್ಕರಿ ಅವರು ಈ ಯೋಜನೆ ಮುಂದುವರಿಸುವಂತೆ ನನಗೆ ತಿಳಿಸಿದ್ದಾರೆ ಎಂದು ಅವರು ಸ್ಪಷ್ಟಪಡಿಸಿದರು. ಬೆಂಗಳೂರಿನ ಸಂಚಾರ ದಟ್ಟಣೆ ನಿವಾರಣೆಗೆ ನಾನು ಸಾಕಷ್ಟು ಅಧ್ಯಯನ ನಡೆಸಿದ ನಂತರ ಟನಲ್ ರಸ್ತೆ ಉತ್ತಮ ಆಯ್ಕೆಯಾಗಿದೆ. ರಸ್ತೆ ಅಗಲೀಕರಣಕ್ಕೆ ನಾವು ಯಾವುದೇ ಕಟ್ಟಡ ಕೆಡವಲು ಆಗುವುದಿಲ್ಲ. 2013ರ ಕಾಯ್ದೆ ಅನುಸಾರ ಆಸ್ತಿ ಮೌಲ್ಯದ ದುಪ್ಪಟ್ಟು ಪರಿಹಾರ ನೀಡಬೇಕು. ಈಗ ನಗರದ ಆಸ್ತಿ ಮೌಲ್ಯ ಹೆಚ್ಚಾಗಿದೆ ಎಂದು ಅವರು ತಿಳಿಸಿದರು. ಕಿರಣ್ ಹೆಬ್ಬಾರ್ ಎಂಬಾತ ತಾನು ಅಂಪಾರ್ಟ್‍ಮೆಂಟ್ ಮಾಲಕ ಎಂದು ಪತ್ರ ಬರೆದಿದ್ದು, ನಮಗೆ ಬೆದರಿಕೆ ಹಾಕಲು ಮುಂದಾಗಿದ್ದಾನೆ. ನಮ್ಮಲ್ಲಿ ಬಹುದೊಡ್ಡ ಮತದಾರರ ಸಮೂಹವಿದ್ದು, ಬೆಂಗಳೂರಿನ 1.30 ಕೋಟಿ ಮತದಾರರ ಮೇಲೆ ಪರಿಣಾಮ ಬೀರಬಲ್ಲೆವು. ಸರಕಾರಗಳು ನಮ್ಮನ್ನು ನಿರ್ಲಕ್ಷಿಸಿದ್ದು, ಆಡಳಿತ ಪಕ್ಷ ನಮ್ಮ ಮನವಿ ನಿರ್ಲಕ್ಷಿಸಿದರೆ ಸದ್ಯದಲ್ಲೇ ಜಿಬಿಎ ಚುನಾವಣೆ ಬರುತ್ತಿದೆ ಎಂದು ಪತ್ರದಲ್ಲಿ ಎಚ್ಚರಿಕೆ ನೀಡಿದ್ದಾನೆ. ಈ ದೇಶದ ಪ್ರಧಾನಮಂತ್ರಿ, ಗೃಹ ಸಚಿವರಿಗೆ ಹೆದರದೇ ಜೈಲಿಗೆ ಹೋಗಿ ಬಂದಿರುವವನು ನಾನು. ಅವನ್ಯಾರೋ ಹೆಬ್ಬಾರ್ ಎಂಬುವವನಿಗೆ ಹೆದರುತ್ತೇನೆಯೇ ಎಂದು ಅವರು ಹೇಳಿದರು. ಅಪಾರ್ಟ್ ಮೆಂಟ್ ನಿವಾಸಿಗಳಿಗೆ 200 ಯೂನಿಟ್ ವರೆಗೂ ಉಚಿತ ವಿದ್ಯುತ್ ನೀಡಿದ್ದೇವೆ. ಈ ಯೋಜನೆ ಜಾರಿ ಅಸಾಧ್ಯ ಎಂದು ಪ್ರಧಾನಮಂತ್ರಿಗಳು ಹೇಳಿದ್ದರು. ಆದರೆ ಇಂದು ಬೇರೆ ರಾಜ್ಯಗಳಲ್ಲಿ ನಮ್ಮ ಯೋಜನೆಗಳೇ ಅವರನ್ನು ಕಾಪಾಡುತ್ತಿದೆ. ಕಾವೇರಿ 5ನೆ ಹಂತದ ಕುಡಿಯುವ ನೀರಿನ ಯೋಜನೆ ಜಾರಿ ಮಾಡಿ, ಮೊದಲು ನೀರಿನ ಸಂಪರ್ಕ ಪಡೆಯಿರಿ, ಒಂದು ವರ್ಷ ತಡವಾಗಿ ಬೇಕಾದರೆ ಹಣ ಪಾವತಿಸಿ ಎಂದು ಕಾಲಾವಕಾಶವನ್ನು ನೀಡಿದ್ದೇವೆ. ಆರನೇ ಹಂತದ ಯೋಜನೆಗೆ ಯೋಜನೆ ರೂಪಿಸಿದ್ದೇವೆ ಎಂದು ಅವರು ಹೇಳಿದರು. ಬೆಂಗಳೂರಿನ ಜನಸಂಖ್ಯೆಯಲ್ಲಿ ಶೇ.19 ಜನ ಅಪಾಟ್ಮೆರ್ಂಟ್ ನಿವಾಸಿಗಳಾಗಿದ್ದಾರೆ. ಇಂದು ಇಡೀ ವಿಶ್ವ ಬೆಂಗಳೂರಿನತ್ತ ತಿರುಗಿ ನೋಡುತ್ತಿದೆ ಎಂದು ಅಟಲ್ ಬಿಹಾರಿ ವಾಜಪೇಯಿ ಅವರು ಹೇಳಿದ್ದರು. ಬೆಂಗಳೂರಿನಲ್ಲಿ 2 ಲಕ್ಷ ವಿದೇಶಿ ಪಾಸ್ ಪೋರ್ಟ್ ಹೊಂದಿರುವವರು ಇದ್ದಾರೆ. ಕ್ಯಾಲಿಫೋರ್ನಿಯದಲ್ಲಿ 13 ಲಕ್ಷ ಐಟಿ ವೃತ್ತಿಪರರು ಇದ್ದರೆ, ಬೆಂಗಳೂರಿನಲ್ಲಿ 25 ಲಕ್ಷ ಐಟಿ ವೃತ್ತಿಪರರು ಇದ್ದಾರೆ. ಇದರಲ್ಲಿ ಬಹುತೇಕರು ನಿಮ್ಮ ಅಪಾರ್ಟ್ ಮೆಂಟ್ ನಲ್ಲಿ ಇದ್ದಾರೆ ಎಂದು ಅವರು ಹೇಳಿದರು. ಶಾಸಕ ರಿಝ್ವಾನ್ ಅರ್ಷದ್, ರಾಜ್ಯಸಭೆ ಸದಸ್ಯ ಲೆಹಾರ್ ಸಿಂಗ್, ಮಾಜಿ ಸದಸ್ಯ ಪ್ರೊ. ರಾಜೀವ್ ಗೌಡ, ಅಪರ ಮುಖ್ಯ ಕಾರ್ಯದರ್ಶಿ ತುಷಾರ್ ಗಿರಿನಾಥ್, ಉಪಮುಖ್ಯಮಂತ್ರಿಗಳ ಕಾರ್ಯದರ್ಶಿ ರಾಜೇಂದ್ರ ಚೋಳನ್ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.

ವಾರ್ತಾ ಭಾರತಿ 13 Dec 2025 7:43 pm

ತುಮಕೂರು - ಬೆಂಗಳೂರು ಚತುಷ್ಪಥ ರೈಲು ಕಾಮಗಾರಿ ಪೂರ್ಣಗೊಳ್ಳುವುದು ಯಾವಾಗ? ಡೆಡ್‌ಲೈನ್‌ ಘೋಷಿಸಿದ ಸೋಮಣ್ಣ

ತುಮಕೂರು-ಬೆಂಗಳೂರು ನಡುವೆ ಚತುಷ್ಪಥ ರೈಲು ಹಳಿ ಕಾಮಗಾರಿ ಎರಡು ವರ್ಷದಲ್ಲಿ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ ಎಂದು ರೈಲ್ವೆ ಖಾತೆ ಸಹಾಯಕ ಸಚಿವ ವಿ ಸೋಮಣ್ಣ ತಿಳಿಸಿದ್ದಾರೆ. ಪಂಡಿತನಹಳ್ಳಿ ಮತ್ತು ಹೆಗ್ಗೆರೆ ಗೇಟ್‌ಗಳಲ್ಲಿ ರೈಲ್ವೆ ಮೇಲ್ಸೇತುವೆ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಲಾಗಿದ್ದು, ಜಿಲ್ಲೆಯ ಅಭಿವೃದ್ಧಿಗೆ ಒತ್ತು ನೀಡಲಾಗಿದೆ.

ವಿಜಯ ಕರ್ನಾಟಕ 13 Dec 2025 7:37 pm

ಮುಸ್ಲಿಮರಿಗೆ ನಮಾಜ್‌ಗೆ ಸರ್ಕಾರಿ ಸ್ಥಳ ನಿಗದಿ ಮಾಡಲಾಗಿದೆಯಾ? ಸರ್ಕಾರದಿಂದ ಕುತೂಹಲಕಾರಿ ಉತ್ತರ

ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಮುಸ್ಲಿಂರ ನಮಾಜ್ ವಿಡಿಯೋ ವೈರಲ್ ಬೆನ್ನಲ್ಲೇ, ಸರ್ಕಾರಿ ಸ್ಥಳಗಳಲ್ಲಿ ಪ್ರಾರ್ಥನೆಗೆ ನಿರ್ದಿಷ್ಟ ಸ್ಥಳಗಳಿಲ್ಲ ಎಂದು ಸಚಿವ ಜಮೀರ್ ಅಹ್ಮದ್ ಖಾನ್‌ ಸ್ಪಷ್ಟಪಡಿಸಿದ್ದಾರೆ. ಚಾಮರಾಜಪೇಟೆ ಈದ್ಗಾ ಮೈದಾನದ ವಿವಾದದ ಹಿನ್ನೆಲೆಯಲ್ಲಿ, ಸರ್ಕಾರಿ ಜಾಗಗಳಲ್ಲಿ ಗೋಡೆ ನಿರ್ಮಾಣ ಅಥವಾ ಇತರ ಧರ್ಮದವರ ಕಾರ್ಯಕ್ರಮ ನಿರ್ಬಂಧಕ್ಕೆ ಯಾವುದೇ ಕಾನೂನು ಇಲ್ಲ ಎಂದು ತಿಳಿಸಿದ್ದಾರೆ.

ವಿಜಯ ಕರ್ನಾಟಕ 13 Dec 2025 7:23 pm

ಉಡುಪಿಯಲ್ಲಿ ಆಳ್ವಾಸ್ ಸಾಂಸ್ಕೃತಿಕ ವೈಭವ : ಭಾರತೀಯ ಸಂಸ್ಕೃತಿಯ ಅನಾವರಣ

ಉಡುಪಿ, ಡಿ.13: ಆಳ್ವಾಸ್ ನುಡಿಸಿರಿ ವಿರಾಸತ್ ಉಡುಪಿ ಘಟಕದ ಆಶ್ರಯದಲ್ಲಿ ಆಳ್ವಾಸ್ ಸಾಂಸ್ಕೃತಿಕ ವೈಭವ ಉಡುಪಿಯ ಶ್ರೀಕೃಷ್ಣ ಮಠದ ರಾಜಾಂಗಣ ಸಮೀಪದ ವಾಹನ ನಿಲುಗಡೆ ಆವರಣದ ಶ್ರೀವಿಶ್ವೇಶತೀರ್ಥ ಶ್ರೀಪಾದ ವೇದಿಕೆಯಲ್ಲಿ ಶನಿವಾರ ನಡೆಯಿತು. ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿದ ಪರ್ಯಾಯ ಪುತ್ತಿಗೆ ಮಠದ ಶ್ರೀಸುಗುಣೇಂದ್ರತೀರ್ಥ ಸ್ವಾಮೀಜಿ ಮಾತನಾಡಿ, ಶಿಕ್ಷಣದೊಂದಿಗೆ ಸಾಂಸ್ಕೃತಿಕ‌ ಕಾರ್ಯಕ್ರಮಗಳಿಗೂ ಆದ್ಯತೆ ನೀಡುವ ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿ ಕಲಾವಿದರು ಪ್ರಸ್ತುತಪಡಿಸುವ ಆಳ್ವಾಸ್ ವಿರಾಸತ್ ವೀಕ್ಷಣೆಯಿಂದ ಭಾರತೀಯ ಸಂಸ್ಕೃತಿಯ ದರ್ಶನವಾಗುತ್ತದೆ ಎಂದು ಹೇಳಿದರು. ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಪ್ರಾಸ್ತಾವಿಕವಾಗಿ ಮಾತನಾಡಿ, ಆಳ್ವಾಸ್ ವಿರಾಸತ್ ಮೂಲಕ ಜನತೆಗೆ ಮನರಂಜನೆ ಜೊತೆಗೆ ಉತ್ತಮ ಸಂದೇಶ ನೀಡುವುದು ನಮ್ಮ ಉದ್ದೇಶವಾಗಿದೆ. ಮಕ್ಕಳಿಗೆ ಶಿಕ್ಷಣದೊಂದಿಗೆ ಸಾಂಸ್ಕೃತಿಕ ಪ್ರಜ್ಞೆ ಮೂಡಿಸುವ ಕಾರ್ಯವಾಗಬೇಕು. ಅದು ವಿದ್ಯಾ ಸಂಸ್ಥೆಗಳಲ್ಲಿ ನಡೆಯಬೇಕು. ಸೌಂದರ್ಯ ಪ್ರಜ್ಞೆಯುಳ್ಳ ವ್ಯಕ್ತಿ ಕಲೆ, ಸಾಮರಸ್ಯದ ಬದುಕನ್ನು ಪ್ರೀತಿಸುತ್ತಾನೆ. ಆತ ನಿಜವಾದ ದೇಶದ ಸಂಪತ್ತು ಎಂದರು. ಈ ಸಂದರ್ಭದಲ್ಲಿ ಡಾ.ಮೋಹನ ಆಳ್ವ ಅವರಿಗೆ ಶ್ರೀಕೃಷ್ಣ- ಗೀತಾನುಗ್ರಹ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಉಡುಪಿ ಶಾಸಕ ಯಶಪಾಲ್ ಸುವರ್ಣ ಅಧ್ಯಕ್ಷತೆ ವಹಿಸಿದ್ದರು. ಪುತ್ತಿಗೆ ಕಿರಿಯ ಯತಿ ಶ್ರೀಸುಶ್ರೀಂದ್ರತೀರ್ಥ ಸ್ವಾಮೀಜಿ, ಅಮೆರಿಕಾದ ವರ್ಲ್ಡ್ ರಿಲೀಜಿಯಸ್ ಫಾರ್ ಪೀಸ್ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಡಾ.ವಿಲಿಯಂ ಎಫ್. ವಿಂಡ್ಲೆ, ಮೂಡುಬಿದಿರೆ ಜೈನ ಮಠದ ಸ್ವಸ್ತಿಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮೀಜಿ, ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಕರಾವಳಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಂ.ಎ.ಗಫೂರ್, ಯಕ್ಷಗಾನ ಅಕಾಡೆಮಿ ಅಧ್ಯಕ್ಷ ತಲ್ಲೂರು ಶಿವರಾಮ ಶೆಟ್ಟಿ, ಅಪರ ಜಿಲ್ಲಾಧಿಕಾರಿ ಆಬೀದ್ ಗದ್ಯಾಳ್ ಮುಖ್ಯ ಅತಿಥಿಗಳಾಗಿದ್ದರು. ಪ್ರಮುಖರಾದ ರಘುಪತಿ ಭಟ್, ಪ್ರಸಾದ್ ರಾಜ್ ಕಾಂಚನ್, ಡಾ.ಕಿರಣ್ ಆಚಾರ್ಯ, ಡಾ.ರವಿರಾಜ್ ಆಚಾರ್ಯ, ಹರಿಪ್ರಸಾದ್ ರೈ, ಸುಪ್ರಸಾದ್ ಶೆಟ್ಟಿ, ಶಂಭು ಶೆಟ್ಟಿ, ನಾಗೇಶ್ ಹೆಗ್ಡೆ, ವಿಶ್ವನಾಥ್ ಶೆಣೈ, ಕುತ್ಯಾರು ನವೀನ್ ಶೆಟ್ಟಿ, ಮನೋಹರ್ ಶೆಟ್ಟಿ, ಸಾಧು ಸಾಲ್ಯಾನ್, ಗುಜ್ಜಾಡಿ ಪ್ರಭಾಕರ ನಾಯಕ್, ಗಣನಾಥ ಎಕ್ಕಾರು, ಮಠದ ದಿವಾನರಾದ ನಾಗರಾಜ ಆಚಾರ್ಯ, ಪ್ರಸನ್ನ ಆಚಾರ್ಯ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಮೊದಲಾದವರು ಉಪಸ್ಥಿತರಿದ್ದರು. ಆಳ್ವಾಸ್ ನುಡಿಸಿರಿ ವಿರಾಸತ್ ಉಡುಪಿ ಘಟಕದ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ಸ್ವಾಗತಿಸಿದರು. ವೇಣುಗೋಪಾಲ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಭುವನಪ್ರಸಾದ್ ಹೆಗ್ಡೆ ವಂದಿಸಿದರು. ಸಾಂಸ್ಕೃತಿಕ ವೈಭವದಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ 500ಕ್ಕೂ ಅಧಿಕ ವಿದ್ಯಾರ್ಥಿ ಕಲಾವಿದರಿಂದ ಭಾರತೀಯ ಕಲಾಪ್ರಕಾರಗಳಾದ ಯೋಗ ದೀಪಿಕಾ, ಶಾಸ್ತ್ರೀಯ ನೃತ್ಯ- ಅಷ್ಟಲಕ್ಷ್ಮಿ, ಬಡಗುತಿಟ್ಟು ಯಕ್ಷಗಾನ, ಶಂಕರಾರ್ಧ ಶರೀರಿಣಿ, ಗುಜರಾತಿನ ದಾಂಡಿಯ ನೃತ್ಯ, ಮಣಿಪುರಿ ಸ್ಟಿಕ್ ಡಾನ್ಸ್, ಮಲ್ಲಕಂಬ ಹಾಗೂ ಕಸರತ್ತು, ಸೃಜನಾತ್ಮಕ ನೃತ್ಯ, ಡೊಳ್ಳು ಕುಣಿತ, ಕಥಕ್ ವರ್ಷಧಾರೆ, ಪುರುಲಿಯಾ ಸಿಂಹ ನೃತ್ಯ, ತೆಂಕುತಿಟ್ಟು ಯಕ್ಷಗಾನ ಹಿರಣ್ಯಾಕ್ಷ ವಧೆ, ಬೊಂಬೆ ವಿನೋದಾವಳಿಯ ಪ್ರದರ್ಶನ ಕಣ್ಮನ ಸೆಳೆಯಿತು. ಸಭಾ ಕಾರ್ಯಕ್ರಮಕ್ಕೂ ಮುನ್ನ ಆಳ್ವಾಸ್ ವಿದ್ಯಾರ್ಥಿಗಳಿಂದ ಸಿಂಗಾರಿ ಮೇಳ ಫ್ಯೂಷನ್ ನಡೆಯಿತು. ಬೊಂಬೆ ವಿನೋದಾವಳಿಯೊಂದಿಗೆ ಆಕರ್ಷಕ ಸಿಡಿಮದ್ದಿನ ಪ್ರದರ್ಶನ ಆಕರ್ಷಣೀಯ ವಾಗಿತ್ತು.

ವಾರ್ತಾ ಭಾರತಿ 13 Dec 2025 7:05 pm

ಮಂಗಳೂರು | ಕದ್ರಿ ಪಾರ್ಕ್‌ನಲ್ಲಿ ಸೌಹಾರ್ದ ಕ್ರಿಸ್ಮಸ್ ಉತ್ಸವ ಉದ್ಘಾಟನೆ

ಮಂಗಳೂರು : ಸಂತ ಮದರ್ ತೆರೆಸಾ ವೇದಿಕೆ ಮತ್ತು ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್ (ರಿ) ಜಂಟಿ ಆಶ್ರಯದಲ್ಲಿ ನಗರದ ಕದ್ರಿ ಉದ್ಯಾನವನದಲ್ಲಿ ಹಮ್ಮಿಕೊಂಡಿರುವ ಸೌಹಾರ್ದ ಕ್ರಿಸ್ಮಸ್ ಉತ್ಸವ ಶನಿವಾರ ಸಂಜೆ ಉದ್ಘಾಟನೆಗೊಂಡಿತು. ರಾಷ್ಟ್ರೀಯ ಯುವ ಕ್ರೀಡಾಪಟು, ವಿದ್ಯಾರ್ಥಿ ಯುವರಾಜ್ ಕುಂದರ್ ಕೇಕ್ ಕತ್ತರಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸಂದೇಶ ಪ್ರತಿಷ್ಠಾನದ ನಿರ್ದೇಶಕ ವಂ. ಸುದೀಪ್ ಕ್ರಿಸ್ಮಸ್ ಸಂದೇಶ ನೀಡಿದರು. ಮುಖ್ಯ ಅತಿಥಿ ಸಂತ ಅಲೋಶಿಯಸ್ ಕಾಲೇಜಿನ ಪ್ರಾಧ್ಯಾಪಕ ಡಾ.ಚಾರ್ಲ್ಸ್ ಫುಟ್ತಾದೊ ಶುಭನುಡಿಗಳನ್ನಾಡಿದರು. ಸಾಮಾಜಿಕ ಹೋರಾಟಗಾರ ಮುನೀರ್ ಕಾಟಿಪಳ್ಳ ಸಮಾಜದಲ್ಲಿ ಸೌಹಾರ್ದತೆಯ ಅಗತ್ಯವನ್ನು ಪ್ರತಿಪಾದಿಸಿ, ನಾಡಿನಲ್ಲಿ ಶಾಂತಿ ನೆಲೆಸಲು ಯೇಸುಕ್ರಿಸ್ತನ ಆದರ್ಶಗಳನ್ನು ಪಾಲಿಸಬೇಕೆಂದು ಕರೆ ನೀಡಿದರು. ಬ್ಯಾಂಕ್ ನೌಕರರ ಸಂಘದ ಮುಖಂಡ, ಕಲಾವಿದ ಶ್ಯಾಮ್ ಸುಂದರ್ ಅವರು ಮಾತನಾಡಿದರು. ರಾಷ್ಟ್ರ ಮಟ್ಟದ ಸ್ಕೇಟಿಂಗ್ ಪಟು ಯುವರಾಜ್ ಕುಂದರ್ ಅವರನ್ನು ಸನ್ಮಾನಿಸಲಾಯಿತು. ಕೊಡುಗೈ ದಾನಿ ಮೈಕಲ್ ಡಿಸೋಜಾರನ್ನು ಗೌರವಿಸಲಾಯಿತು. ಈ ವೇಳೆ ಕ್ರಿಸ್ಮಸ್ ಖೇಲ್ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಸಂತ ಆಗ್ನೆಸ್ ಕಾಲೇಜು ಪ್ರಥಮ, ಸಂತ ಅಲೋಶಿಯಸ್ ದ್ವಿತೀಯ ಹಾಗೂ ಸೀತಾ ಭಟ್ ಬಳಗ ತೃತೀಯ ಬಹುಮಾನಗಳಿಸಿದರು. ಕಾತ್ಯಕ್ರಮದ ಅಧ್ಯಕ್ಷತೆಯನ್ನು ರಾಯ್ ಕ್ಯಾಸ್ತೆಲಿನೊ ವಹಿಸಿದ್ಧರು. ಕಥೊಲಿಕ್ ಸಭಾ ಅಧ್ಯಕ್ಷ ಸಂತೋಷ್ ಡಿಸೋಜ, ಪರಿಸರ ಪ್ರವಾಸೋದ್ಯಮ ನಿಗಮದ ಅಧ್ಯಕ್ಷೆ ಶಾಲೆಟ್ ಪಿಂಟೊ, ಉದ್ಯಮಿ ಸಂತೋಷ್ ಸಿಕ್ವೇರಾ, ಡೊಲ್ಫಿ ಡಿಸೋಜ, ವಿಲ್ಮಾ ಮೊಂತೇರೊ ಉಪಸ್ಥಿತರಿದ್ದರು. ವೇದಿಕೆಯ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ಸ್ವಾಗತಿಸಿದರು. ಜಾನ್ ರೋಹನ್ ಕಾರ್ಯಕ್ರಮ ನಿರ್ವಹಿಸಿದರು. ಉತ್ಸವದ ಸಂಚಾಲಕ ಸ್ಟ್ಯಾನಿ ಲೋಬೊ ವಂದಿಸಿದರು.                        

ವಾರ್ತಾ ಭಾರತಿ 13 Dec 2025 7:00 pm

ಆಳಂದ ಮತ ಕಳವು ಪ್ರಕರಣ: ಮಾಜಿ ಶಾಸಕ ಸುಭಾಷ್ ಗುತ್ತೇದಾರ ಸೇರಿ ಏಳು ಮಂದಿ ವಿರುದ್ಧ ಚಾರ್ಜ್ ಶೀಟ್

2023ರ ಕರ್ನಾಟಕ ವಿಧಾನಸಭಾ ಚುನಾವಣೆಯ ಮತದಾರರ ಪಟ್ಟಿಯಲ್ಲಿ ಅಕ್ರಮ ನಡೆಸಿದ ಪ್ರಕರಣದಲ್ಲಿ, ಮಾಜಿ ಬಿಜೆಪಿ ಶಾಸಕ ಸುಭಾಷ್ ಗುತ್ತೇದಾರ ಸೇರಿದಂತೆ ಏಳು ಮಂದಿ ವಿರುದ್ಧ 20,000 ಪುಟಗಳ ದೋಷಾರೋಪ ಪಟ್ಟಿ ದಾಖಲಾಗಿದೆ. ಆಳಂದ ಕ್ಷೇತ್ರದ 6,018 ಮತದಾರರ ಹೆಸರುಗಳನ್ನು ಪಟ್ಟಿಯಿಂದ ಅಳಿಸಲು ಯತ್ನಿಸಿದ ಆರೋಪವಿದೆ. ಈ ಪ್ರಕರಣದಲ್ಲಿ ಹಲವು ಗಣ್ಯರು ಶಾಮೀಲಾಗಿದ್ದು, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಈ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ವಿಜಯ ಕರ್ನಾಟಕ 13 Dec 2025 6:56 pm

ಕಾರ್ಕಳ | ಬ್ಲಾಕ್ ಕಾಂಗ್ರೆಸ್, ಮಹಿಳಾ ಕಾಂಗ್ರೆಸ್ ವತಿಯಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ

ಕಾರ್ಕಳ : ಕಾರ್ಕಳ ಬ್ಲಾಕ್ ಕಾಂಗ್ರೆಸ್ ಸಮಿತಿಯ ಮಾರ್ಗದರ್ಶನದಲ್ಲಿ ಮಹಿಳಾ ಕಾಂಗ್ರೆಸ್ ನೇತೃತ್ವದಲ್ಲಿ ಕಾರ್ಕಳದ ಬಿಲ್ಲವ ಸಂಘದ ನಾರಾಯಣಗುರು ಸಭಾಭವನದಲ್ಲಿ ಮೂಡುಬಿದಿರೆ ಆಳ್ವಾಸ್ ಸಮೂಹ ಸಂಸ್ಥೆ, ಪ್ರಸಾದ್ ನೇತ್ರಾಲಯ ಮೂಡುಬಿದಿರೆ ಉಡುಪಿ, ನೋವಾ ಐವಿಎಎಪ್ ಪರ್ಟಿಲಿಟಿ ಮಂಗಳೂರು ಇವರ ಸಂಯುಕ್ತಾಶ್ರಯದಲ್ಲಿ ಉಚಿತ ಆರೋಗ್ಯ ತಪಾಸಣೆ ಹಾಗೂ ರಕ್ತದಾನ ಶಿಬಿರ ನಡೆಯಿತು. ಕಾರ್ಯಕ್ರಮವನ್ನು ಆಳ್ವಾಸ್ ಸಂಸ್ಥೆಯ ತಜ್ಙ ವೈದ್ಯರಾದ ಡಾ.ಹನಾ ಶೆಟ್ಟಿಯವರು ಉದ್ಘಾಟಿಸಿ, ಸಂವಾದ ಕಾರ್ಯಕ್ರಮವನ್ನು ನಡೆಸಿ ಸಭಿಕರ ಪ್ರಶ್ನೋತ್ತರಗಳಿಗೆ ಉತ್ತರಿಸಿದರು. ಅಧ್ಯಕ್ಷತೆಯನ್ನು ವಹಿಸಿದ್ದ ಕಾಂಗ್ರೆಸ್ ಮುಖಂಡ ಉದಯ ಶೆಟ್ಟಿ ಮುನಿಯಾಲು ಅವರು ಮಾತನಾಡಿ, ಒತ್ತಡಗಳ ಜೀವನ ಶೈಲಿಯಲ್ಲಿ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಬಹು ಮುಖ್ಯ, ಇಂತಾ ಆರೋಗ್ಯ ಶಿಬಿರಗಳು ಈ‌ ನಿಟ್ಟಿನಲ್ಲಿ ಸಹಕಾರಿಯಾಗಿದೆ ಎಂದರು. ರಾಜ್ಯ ನಾರಾಯಣಗುರು ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಮುದ್ರಾಡಿ ಮಂಜುನಾಥ ಪೂಜಾರಿಯವರು ಮಾತನಾಡಿ, ಇಂದಿರಾ ಗಾಂಧಿಯವರು ದೇಶಕ್ಕೆ ನೀಡಿದ ಕೊಡುಗೆ ಅಪಾರವಾಗಿದ್ದು, ಬಡ ಜನತೆ, ಮಹಿಳೆಯರ ಪರವಾದ ಅವರ ಕಾಳಜಿಯನ್ನು ಯಾವತ್ತೂ ಮರೆಯಲು ಸಾಧ್ಯವಿಲ್ಲ, ಅವರ ಹೆಸರಿನಲ್ಲಿ ನಡೆಯುತ್ತಿರುವ ಇಂದಿನ ಆರೋಗ್ಯ ಶಿಬಿರವು ಅತ್ಯಂತ ಅರ್ಥಪೂರ್ಣವಾಗಿದೆ ಎಂದರು. ಜಿಲ್ಲಾ ಮಹಿಳಾ ಕಾಂಗ್ರೆಸ್ ಅದ್ಯಕ್ಷೆ ಜ್ಯೋತಿ ಹೆಬ್ಬಾರ್, ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಭಾನು ಭಾಸ್ಕರ ಪೂಜಾರಿ ಮಾತನಾಡಿದರು. ಕಾರ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶುಭದ ರಾವ್ ಅವರು ಪ್ರಾಸ್ತಾವಿಕ ಮಾತುಗಳೊಂದಿಗೆ ಎಲ್ಲರನ್ನೂ ಸ್ವಾಗತಿಸಿದರು. ಶಿಬಿರದಲ್ಲಿ 200ಕ್ಕೂ ಹೆಚ್ವು ಸಾರ್ವಜನಿಕರು ವಿವಿಧ ಆರೋಗ್ಯ ತಪಾಸಣೆಯನ್ನು ನಡೆಸಿ ಶಿಬಿರದ ಸದುಪಯೋಗವನ್ನು ಪಡೆದುಕೊಂಡರು. ನಿಟ್ಟೆ ಗ್ರಾಮದ ಸವಿತಾ ಅವರಿಗೆ ಆರೋಗ್ಯ ಸಂಬಂದಿ ಸಹಾಯ ಧನವನ್ನು ಉದಯ ಶೆಟ್ಟಿ ಮುನಿಯಾಲು ಅವರು ವಿತರಿಸಿದರು. ಗ್ರಾಮೀಣ ಸಮಿತಿಯ ಮಹಿಳಾ ಅಧ್ಯಕ್ಷರುಗಳನ್ನು ವೇದಿಕೆ ಆಹ್ವಾನಿಸಿ ಹೂವನ್ನಿತ್ತು ಅಭಿನಂದಿಸಲಾಯಿತು. ಈ ಸಂದರ್ಭದಲ್ಲಿ ತಾಲೂಕು ಗ್ಯಾರಂಟಿ ಸಮಿತಿಯ ಅಧ್ಯಕ್ಷ ಅಜಿತ್ ಹೆಗ್ಡೆ ಮಾಳ, ನಗರ ಕಾಂಗ್ರೆಸ್ ಅದ್ಯಕ್ಷ ರಾಜೇಂದ್ರ ದೇವಾಡಿಗ, ಆಳ್ವಾಸ್ ಸಂಸ್ಥೆಯ ಭಾಸ್ಕರ್ ಪೂಜಾರಿ, ಡಾ. ಶವೀಝ್ ಪೈಜಿ, ಪ್ರಸಾದ್ ನೇತ್ರಾಲಯದ ಡಾ. ಕ್ರೀನಾ, ಮಾಲಿನಿ ರೈ, ಎಸ್.ಸಿ ಘಟಕದ ದೇವದಾಸ್, ರಾಜ್ಯ ಮಹಿಳಾ ಕಾರ್ಯದರ್ಶಿ ಅನಿತಾ ಡಿಸೋಜ ಅವರುಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪುರಸಭಾ ಸದಸ್ಯೆ ನಳಿನಿ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು. ನಗರ ಮಹಿಳಾ ಕಾಂಗ್ರೆಸ್ ಅದ್ಯಕ್ಷೆ ರೀನಾ ಡಿಸೋಜ ಧನ್ಯವಾದವಿತ್ತರು.

ವಾರ್ತಾ ಭಾರತಿ 13 Dec 2025 6:50 pm

ಮಂಗಳೂರು | ತಾಂತ್ರಿಕ ದೋಷದಿಂದ ಮುಳುಗಿದ ಮೀನುಗಾರಿಕಾ ಬೋಟ್ : ದೂರು

ಮಂಗಳೂರು,ಡಿ.13:ಮೀನುಗಾರಿಕೆಗೆ ತೆರಳಿದ್ದ ಬೋಟ್ ತಾಂತ್ರಿಕ ದೋಷದಿಂದ ಮುಳುಗಿ ಅಪಾರ ನಷ್ಟ ಉಂಟಾಗಿದೆ ಎಂದು ನಗರದ ಕಂಕನಾಡಿಯ ಮುಹಮ್ಮದ್ ಫಾರೂಕ್ ಅವರು ಮೀನುಗಾರಿಕಾ ಇಲಾಖೆಯ ಉಪನಿರ್ದೇಶಕರು ಮತ್ತು ಕರಾವಳಿ ಕಾವಲು ಪೊಲೀಸ್ ಘಟಕಕ್ಕೆ ದೂರು ನೀಡಿದ್ದಾರೆ. ತನ್ನ ಮಗಳು ಫಾತಿಮಾ ಶಾಫಾ ಮಾಲಕತ್ವದ ಮಶ್ರಿಕ್‌ ಎಂಬ ಹೆಸರಿನ ಬೋಟ್ ಡಿ.10ರ ಮುಂಜಾನೆ 4:30ಕ್ಕೆ ಬಂದರ್ ದಕ್ಕೆಯಿಂದ ಮೀನುಗಾರಿಕೆಗೆ ತೆರಳಿತ್ತು. ಅದರಲ್ಲಿ ಒಟ್ಟು 7 ಮಂದಿ ಮೀನುಗಾರರು ಇದ್ದರು. ಸುರತ್ಕಲ್-ಕಾಪು ಕರಾವಳಿ ತೀರದಿಂದ ಸುಮಾರು 12 ನಾಟಿಕಲ್ ಮೈಲ್ ಉತ್ತರದಲ್ಲಿ ಮೀನುಗಾರಿಕೆ ನಡೆಸುತ್ತಿದ್ದಾಗ ಅಂದರೆ ಡಿ.10ರ ಸಂಜೆ 6:15ಕ್ಕೆ ಬೋಟಿನ ಇಂಜಿನ್ ಕಡೆಯಿಂದ ಬೆಂಕಿ ಕಾಣಿಸಿಕೊಂಡಿತು. ಬೋಟಿನಲ್ಲಿದ್ದವರು ಬೆಂಕಿಯನ್ನು ನಂದಿಸಲು ಪ್ರಯತ್ನಿಸಿದರೂ ಆಗಲಿಲ್ಲ. ತಕ್ಷಣ ಸಮೀಪದಲ್ಲೇ ಇದ್ದ ಮಿಝಾನ್‌ ಎಂಬ ಹೆಸರಿನ ಬೋಟಿನವರಿಗೆ ಮಾಹಿತಿ ನೀಡಿದ್ದು, ಅವರ ಸಹಾಯದಿಂದ ಮಶ್ರಿಕ್ ಬೋಟಿನಲ್ಲಿದ್ದವರು ಅಪಾಯದಿಂದ ಪಾರಾಗಿದ್ದಾರೆ. ಬೆಂಕಿ ಆಕಸ್ಮಿಕದಿಂದ ಬೋಟ್ ಸಂಪೂರ್ಣ ಸುಟ್ಟು ಹೋಗಿದ್ದು, ಸುಮಾರು 1 ಕೋ.ರೂ. ನಷ್ಟ ಸಂಭವಿಸಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ವಾರ್ತಾ ಭಾರತಿ 13 Dec 2025 6:43 pm

ಜಿಬಿಎ ಚುನಾವಣೆಗೆ ಬಗ್ಗೆ ಬಿಗ್‌ ಅಪ್‌ಡೇಟ್‌ ಕೊಟ್ಟ ಡಿ ಕೆ ಶಿವಕುಮಾರ್‌

ಬೆಂಗಳೂರು, ಡಿಸೆಂಬರ್‌ 13: ನಾನು ನಿಮಗೆ ಸಹಾಯ ಮಾಡುವುದರ ಜೊತೆಗೆ ನಿಮ್ಮ ಸಹಾಯವನ್ನು ಮತಗಳ ಮೂಲಕ ಬಯಸುತ್ತೇನೆ. ಶೀಘ್ರದಲ್ಲೇ ಜಿಬಿಎ ಚುನಾವಣೆ ಬರಲಿದೆ. ಜಿಬಿಎ ಚುನಾವಣೆಯಲ್ಲಿ ನೀವು ನಮ್ಮ ಜತೆ ನಿಲ್ಲಿ ಎಂದು ಕೋರುತ್ತೇನೆ. ನಿಮ್ಮ ಮೇಲೆ ನಂಬಿಕೆ ಇಟ್ಟಿದ್ದೇನೆ. ಅದಕ್ಕಾಗಿ ಯಾರೂ ಜಾರಿಗೆ ತರದ ಕಾನೂನನ್ನು ಜಾರಿಗೆ ತರಲು ಮುಂದಾಗಿದ್ದೇನೆ. ನನಗೆ ನಿರಾಸೆ ಮಾಡಬೇಡಿ ಎಂದು

ಒನ್ ಇ೦ಡಿಯ 13 Dec 2025 6:42 pm

ಕೆಎಸ್ಸಾರ್ಟಿಸಿ ‘ಅಪಘಾತ ತುರ್ತು ಸ್ಪಂದನ ವಾಹನ’ಗಳಿಗೆ ಚಾಲನೆ ನೀಡಿದ ಸಚಿವ ರಾಮಲಿಂಗಾರೆಡ್ಡಿ

ಬೆಂಗಳೂರು : ಶನಿವಾರ ನಗರದಲ್ಲಿ ಸಾರಿಗೆ ಮತ್ತು ಮುಜರಾಯಿ ಇಲಾಖೆ ಸಚಿವ ರಾಮಲಿಂಗಾರೆಡ್ಡಿ ಅವರು ಕೆಎಸ್ಸಾರ್ಟಿಸಿ ಬಸ್‍ಗಳಿಗೆ ಅವಘಡ ಉಂಟಾದ ಸಂದರ್ಭದಲ್ಲಿ ತುರ್ತಾಗಿ ಸ್ಪಂದಿಸಲು ‘ಅಪಘಾತ ತುರ್ತು ಸ್ಪಂದನ ವಾಹನ’ಗಳಿಗೆ ಚಾಲನೆ ನೀಡಿದ್ದಾರೆ. ಈ ವೇಳೆ ಮಾತನಾಡಿದ ಸಚಿವ ರಾಮಲಿಂಗಾರೆಡ್ಡಿ, ಅಪಘಾತ ತುರ್ತು ಸ್ಪಂದನ ವಾಹನಗಳು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್‍ಗಳು ಮಾರ್ಗ ಮಧ್ಯೆ ಅಪಘಾತ ಅಥವಾ ಅವಘಡಕ್ಕೀಡಾದಲ್ಲಿ ಸದರಿ ವಾಹನವನ್ನು ಶೀಘ್ರವಾಗಿ ರಿಪೇರಿಗೊಳಿಸಲು ‘ಮೊಬೈಲ್ ವರ್ಕ್‍ಶಾಪ್’ ಮಾದರಿಯಲ್ಲಿ ರೂಪಿಸಲು ಉದ್ದೇಶಿಸಲಾಗಿದೆ ಎಂದು ತಿಳಿಸಿದರು. ಎರಡು ಅಪಘಾತ ತುರ್ತು ಸ್ಪಂದನ ವಾಹನಗಳನ್ನು ಬೆಂಗಳೂರು ಹಾಗೂ ಮೈಸೂರು ಕೇಂದ್ರ ಸ್ಥಳಗಳಲ್ಲಿ ನಿಯೋಜಿಸಲಾಗುವುದು. ಇದರಿಂದ ಬೆಂಗಳೂರು ಸುತ್ತಮುತ್ತ, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ, ಮೈಸೂರು, ಮಂಡ್ಯ, ಪ್ರದೇಶದಲ್ಲಿ ಉಂಟಾಗುವ ಅಪಘಾತ, ಅವಘಢಗಳನ್ನು ಶೀಘ್ರದಲ್ಲಿ ಸ್ಪಂದಿಸಲು ಅನುಕೂಲವಾಗುತ್ತದೆ ಎಂದರು. ಕೆಂಪೇಗೌಡ ಬಸ್ ನಿಲ್ದಾಣ ಹಾಗೂ ಮೈಸೂರು ರಸ್ತೆ ಬಸ್ ನಿಲ್ದಾಣದಿಂದ ರಾಜ್ಯದ ಹಾಗೂ ಅಂತರ್‍ರಾಜ್ಯದ ಭಾಗಗಳಿಗೆ ವಿವಿಧ ಮಾದರಿಯ ಬಸ್‍ಗಳು ವಿವಿಧ ಸ್ಥಳಗಳಿಗೆ ಕಾರ್ಯಾಚರಣೆಯಾಗುತ್ತಿದೆ. ಸದರಿ ಬಸ್‍ಗಳು ವಿವಿಧ ಸ್ಥಳಗಳಲ್ಲಿ ತಾಂತ್ರಿಕ ದೋಷದಿಂದಾಗಿ ಕೆಟ್ಟು ನಿಲ್ಲುವ ಸಂದರ್ಭದಲ್ಲಿ, ಉಂಟಾಗುವ ಸಂಚಾರ ಸಮಸ್ಯೆ ಪರಿಹರಿಸಲು ಈ ವಾಹನವು ಸಹಕಾರಿಯಾಗಲಿದ್ದು, ಇದರಿಂದ ಸಾರ್ವಜನಿಕರಿಗೆ ಅನಾನುಕೂಲವಾಗುತ್ತದೆ ಎಂದು ತಿಳಿಸಿದರು. ಕೆಂಪೇಗೌಡ ಬಸ್ ನಿಲ್ದಾಣ ಹಾಗೂ ಮೈಸೂರು ರಸ್ತೆ ಬಸ್ ನಿಲ್ದಾಣದ ತಾಂತ್ರಿಕ ಸಿಬ್ಬಂದಿ ವಾಹನ ಅವಘಡ, ಅಪಘಾತ ಸಮಯದಲ್ಲಿ ಶೀಘ್ರವಾಗಿ ಬಿಡಿಭಾಗಗಳು ಮತ್ತು ಇತರೆ ಪರಿಕರಗಳೊಂದಿಗೆ ಸದರಿ ಸ್ಥಳಗಳಿಗೆ ತೆರಳಿ ವಾಹನ ದುರಸ್ಥಿಗೊಳಿಸಲು ‘ಮೊಬೈಲ್ ವರ್ಕ್‍ಶಾಪ್’ ವಾಹನವನ್ನು ಸೇರ್ಪಡೆಗೊಳಿಸಲು ಉದ್ದೇಶಿಸಲಾಗಿದೆ ಎಂದು ಹೇಳಿದರು. ಬಸ್‍ಗಳು ಅಪಘಾತ, ಅವಘಡಕ್ಕೀಡಾದಲ್ಲಿ (ಬ್ರೇಕ್‍ಡೌನ್) ಚಾಲಕ, ನಿರ್ವಾಹಕರಿಗೆ ತಕ್ಷಣದಲ್ಲಿ ಸಹಾಯ ನೀಡಲು ಹಾಗೂ ಗಾಯಗೊಂಡಲ್ಲಿ ಹತ್ತಿರದ ಆಸ್ಪತ್ರೆಗೆ ದಾಖಲಿಸಲು ಸಹ ಸ್ಪಂದನ ವಾಹನವು ಉಪಯುಕ್ತವಾಗುತ್ತದೆ. ಪ್ರತಿ ವಾಹನದ ಬೆಲೆ.7.22 ಲಕ್ಷ ರೂ.ಗಳಾಗುತ್ತದೆ. ಜನವರಿ 2026ರ ಅಂತ್ಯಕ್ಕೆ ಹೆಚ್ಚುವರಿಯಾಗಿ 10 ಹೊಸ ವಾಹನಗಳು ಸೇರ್ಪಡೆಗೊಳ್ಳಲಿದ್ದು, ಸದರಿ ವಾಹನಗಳನ್ನು ಉಳಿದ ಜಿಲ್ಲೆಗಳಿಗೆ ಕ್ರಮವಾಗಿ ನಿಯೋಜಿಸಲಾಗುವುದು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಅಧ್ಯಕ್ಷ ಭರಮಗೌಡ(ರಾಜು) ಕಾಗೆ, ಕಲ್ಯಾಣ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಅಧ್ಯಕ್ಷ ಅರುಣ್ ಕುಮಾರ್ ಎಂ.ವೈ. ಪಾಟೀಲ, ಬಿಎಂಟಿಸಿ ಅಧ್ಯಕ್ಷ ವಿ.ಎಸ್.ಆರಾಧ್ಯ, ಉಪಾಧ್ಯಕ್ಷ ನಿಕೇತ್‍ರಾಜ್.ಎಂ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಉಪಾಧ್ಯಕ್ಷ ಮುಹಮ್ಮದ್ ರಿಝ್ವಾನ್ ನವಾಬ್ ಮತ್ತಿತರರು ಉಪಸ್ಥಿತರಿದ್ದರು.

ವಾರ್ತಾ ಭಾರತಿ 13 Dec 2025 6:38 pm

ಡಿ.21 ರಂದು ಬೆಂಗಳೂರಿನಲ್ಲಿ ಜನದನಿ ರ‍್ಯಾಲಿ ಬಹಿರಂಗ ಸಭೆ: ಕೆ.ಜಿ.ವೀರೇಶ

ರಾಯಚೂರು : ಭಾರತ ಕಮ್ಯುನಿಷ್ಟ್ ಪಕ್ಷ ಪರ್ಯಾಯ ರಾಜಕಾರಣಕ್ಕಾಗಿ ಸಿಪಿಐ(ಎಂ) ಜನದನಿ ರ‍್ಯಾಲಿಯನ್ನು ಬೃಹತ್ ಪ್ರತಿಭಟನಾ ಬಹಿರಂಗ ಸಮಾವೇಶವನ್ನು ಆಯೋಜಿಸಲಾಗಿದೆ ಎಂದು ಸಿಪಿಐ(ಎಂ) ಪಕ್ಷ ಜಿಲ್ಲಾ ಕಾರ್ಯದರ್ಶಿ ಕೆ.ಜಿ.‌ ವೀರೇಶ್ ಹೇಳಿದರು. ಅವರಿಂದು ಮಾಧ್ಯಮಗೋಷ್ಟಿ ಉದ್ದೇಶಿಸಿ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಕಾರ್ಮಿಕ, ರೈತ ವಿರೋಧಿ ನೀತಿ ವಿರೋಧಿಸಿ ರ್ಯಾಲಿ ನಡೆಯಲಿದೆ. ರಾಜ್ಯದ ಎಲ್ಲಾ ಜಿಲ್ಲೆಗಳಿಂದ 30 ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು ಭಾಗವಹಿಸಲಿದ್ದಾರೆ. ಸಿಪಿಐ(ಎಂ) ಪಕ್ಷದಿಂದ ನವಂಬರ್ 1 ರಿಂದ 15 ವರೆಗೆ ಎಲ್ಲಾ ಜಿಲ್ಲೆಗಳಲ್ಲಿಯೂ ಮನೆ ಮನೆ ಪ್ರಚಾರ ನಡೆಸಿ ಸಹಿ ಸಂಗ್ರಹಿಸಲಾಗಿದೆ. ಕೇಂದ್ರದಲ್ಲಿ ಬಿಜೆಪಿ ಸರ್ಕಾರದ ಅಧಿಕಾರಕ್ಕೆ ಬಂದ ನಂತರ ರೈತರ ಪರಸ್ಥಿತಿ ಆತಂತ್ರಕ್ಕೆ ಸಿಲುಕುವಂತಾಗಿದೆ. ಬೆಳೆಗೆ ಬೆಲೆಯಿಲ್ಲ. ಬೆಂಬಲ ಬೆಲೆಗೆ ಕಾಯ್ದೆ ಬಲ ಇಲ್ಲದಂತಾಗಿದೆ. ಬಲವಂತದಿಂದ ಭೂ ಸ್ವಾಧೀನ ನಡೆಸುವ ಕೆಲಸ ನಿರಂತರವಾಗಿ ನಡೆಯುತ್ತಿದೆ. ಕನಿಷ್ಟ ವೇತನ, ಪಿಂಚಣಿ ಯೋಜನೆಗಳನ್ನು ರೂಪಿಸದೇ ವಂಚಿಸಲಾಗುತ್ತಿದೆ. ಶಿಕ್ಷಣ, ಆರೋಗ್ಯ ಖಾಸಗೀಕರಣ ಮಾಡಲಾಗುತ್ತಿದ್ದು, ಹಣ ಕೊಟ್ಟವರಿಗೆ ಮಾತ್ರ ಸೌಲಭ್ಯ ಒದಗಿಸುವುದಾಗಿ ಸರ್ಕಾರ ಹೇಳುತ್ತಿದೆ. ರೈತ ವಿರೋಧಿಯಾಗಿರುವ ಮೂರು ಕಾಯ್ದೆಗಳನ್ನು ಸಹ ರಾಜ್ಯ ಸರ್ಕಾರ ಮುಂದುವರೆಸಿಕೊಂಡು ಬರುತ್ತಿದೆ. ಕೋಮುವಾದ, ಜಾತಿವಾದ, ಅಸಮಾನತೆ ಹೆಚ್ಚುತ್ತಿರುವದು ಸೇರಿ 19 ಬೇಡಿಕೆಗಳಿಗೆ ಆಗ್ರಹಿಸಿ ನಡೆಯುವ ಪ್ರತಿಭಟನಾ ರ್ಯಾಲಿಯನ್ನು ಉದ್ದೇಶಿಸಿ ಸಿಪಿಐ(ಎಂ) ಪಾಲಿಟ್‌ ಬ್ಯುರೋ ಸದಸ್ಯ ಯು.ವಾಸುಕಿ ಮಾತನಾಡಲಿದ್ದಾರೆ. ಅನೇಕ ರಾಜ್ಯ ಮುಖಂಡರುಗಳು ಭಾಗವಹಿಸಲಿದ್ದು ಜಿಲ್ಲಾ,ತಾಲುಕಗಳಿಂದ ಪಕ್ಷದ ಕಾರ್ಯಕರ್ತರು ಭಾಗವಹಿಸಲಿದ್ದಾರೆ ಎಂದರು. ಈ ಸಂದರ್ಬದಲ್ಲಿ ಡಿ.ಎಸ್. ಶರಣಬಸವ, ನಾಗೇಂದ್ರ ಇದ್ದರು.

ವಾರ್ತಾ ಭಾರತಿ 13 Dec 2025 6:29 pm

ಆಳಂದ ಮತಗಳ್ಳತನ ಪ್ರಕರಣ | ಬಿಜೆಪಿಯ ಮಾಜಿ ಶಾಸಕ ಸುಭಾಷ್‌ ಗುತ್ತೇದಾರ್ ಸೇರಿ ಏಳು ಜನರ ವಿರುದ್ಧ ದೋಷಾರೋಪಣಾ ಪಟ್ಟಿ ಸಲ್ಲಿಕೆ

ಬೆಂಗಳೂರು : ಕಲಬುರಗಿ ಜಿಲ್ಲೆಯ ಆಳಂದ ವಿಧಾನಸಭಾ ಕ್ಷೇತ್ರದಲ್ಲಿ ಮತಗಳ್ಳತನ ನಡೆದಿದೆ ಎಂಬ ಆರೋಪ ಸಂಬಂಧಿಸಿದಂತೆ ಎಸ್‍ಐಟಿ ತಂಡವು ಬಿಜೆಪಿಯ ಮಾಜಿ ಶಾಸಕ ಸುಭಾಷ್‌ ಗುತ್ತೇದಾರ್, ಅವರ ಪುತ್ರ ಹರ್ಷಾನಂದ ಸೇರಿದಂತೆ ಒಟ್ಟು 7 ಜನರ ವಿರುದ್ಧ ದೋಷಾರೋಪಣಾ ಪಟ್ಟಿಯನ್ನು ಬೆಂಗಳೂರು ನಗರದ ಎಸಿಎಂಎಂ ನ್ಯಾಯಾಲಯಕ್ಕೆ ಸಲ್ಲಿಸಿದೆ. ಆಳಂದ ಕ್ಷೇತ್ರದ ಬಿಜೆಪಿಯ ಮಾಜಿ ಶಾಸಕ ಸುಭಾಷ್‌ ಗುತ್ತೇದಾರ್, ಅವರ ಮಗನಾದ ಮಾಜಿ ಜಿಲ್ಲಾ ಪಂಚಾಯತಿ ಉಪಾಧ್ಯಕ್ಷ ಹರ್ಷಾನಂದ ಗುತ್ತೇದಾರ್, ಅವರ ಆಪ್ತ ಸಹಾಯಕರಾದ ತಿಪ್ಪೇರುದ್ರ, ಕಲಬುರಗಿ ನಿವಾಸಿಗಳಾದ ಅಕ್ರಂ ಪಾಷಾ, ಅಸ್ಲಂ ಪಾಷಾ, ಮುಹಮ್ಮದ್‌ ಅಲ್ಟಾಕ್ ಅಹ್ಮದ್, ಪಶ್ಚಿಮ ಬಂಗಾಳ ಮೂಲದ ಬಾಪಿ ಅದ್ಯ ವಿರುದ್ಧ 22 ಸಾವಿರ ಪುಟಗಳ ದೋಷಾರೋಪಣಾ ಪಟ್ಟಿ ಸಲ್ಲಿಕೆಯಾಗಿದೆ. 2023ರ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ನಡೆದಿದೆ ಎನ್ನಲಾಗಿದ್ದ ಮತಗಳ್ಳತನ ಪ್ರಕರಣದಲ್ಲಿ ಸುಭಾಷ್‌ ಗುತ್ತೇದಾರ್ ಪಾತ್ರವಿದೆ ಎಂಬುದು ಎಸ್‍ಐಟಿ ತನಿಖೆಯಿಂದ ದೃಢಪಟ್ಟಿದೆ. ತನಿಖೆಯ ವೇಳೆ ಆಳಂದ ಕ್ಷೇತ್ರದಲ್ಲಿ 5,994 ಮತದಾರರ ಹೆಸರು ಮತದಾರರ ಪಟ್ಟಿಯಿಂದ ಅಳಿಸಲಾಗಿದೆ ಎಂಬುದು ಪತ್ತೆಯಾಗಿದೆ. ಮತದಾರರ ಹೆಸರು ಅಳಿಸಲು ಸೈಬರ್ ಸೆಂಟರ್ ಬಳಸಿಕೊಂಡು ಹಣ ಪಾವತಿ ಮಾಡಲಾಗಿದೆ ಎಂದು ತಿಳಿದು ಬಂದಿದೆ. ಪ್ರಕರಣದಲ್ಲಿ, ಪ್ರತಿ ಮತದಾರರ ಹೆಸರು ಅಳಿಸಲು 80 ರೂ. ಹಣ ಪಾವತಿಸಲಾಗಿದೆ ಎಂಬ ಆರೋಪವಿದ್ದು, 2022ರ ಡಿ.9 ರಿಂದ 2023ರ ಫೆ.20ರ ನಡುವಿನ ಅವಧಿಯಲ್ಲಿ ಆಳಂದ ವಿಧಾನಸಭಾ ಮತಕ್ಷೇತ್ರದ 256 ಮತಗಟ್ಟೆಗಳ ವ್ಯಾಪ್ತಿಯಲ್ಲಿನ ಮೂಲ ಮತದಾರರ ಗಮನಕ್ಕೆ ಬಾರದಂತೆ 6,018 ಮತಗಳ ರದ್ದತಿಗೆ ಚುನಾವಣಾ ಆಯೋಗಕ್ಕೆ ಅರ್ಜಿ ಸಲ್ಲಿಸಲಾಗಿತ್ತು ಎಂದು ದೋಷಾರೋಪಣಾ ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ. ಕಲಬುರಗಿ ಡೇಟಾ ಸೆಂಟರ್‍ನಿಂದ 75 ಮೊಬೈಲ್ ನಂಬರ್‍ಗಳನ್ನು ಬಳಸಿಕೊಂಡು ಅರ್ಜಿಗಳನ್ನು ಸಲ್ಲಿಸಲಾಗಿತ್ತು. ಡೇಟಾ ಸೆಂಟರ್‌ನವನು ಪ್ರತಿ ಅರ್ಜಿಗೂ 80 ರೂ.ನಂತೆ 4.8 ಲಕ್ಷ ರೂ. ಪಡೆದಿದ್ದ ಎಂಬ ಆರೋಪವಿದೆ. ಮಾಜಿ ಶಾಸಕ ಸುಭಾಷ್‌ ಗುತ್ತೇದಾರ್ ಈ ಮತಗಳ್ಳತನ ಮಾಡಲು ಹಣ ಪಾವತಿ ಮಾಡಿಸಿದ್ದರು ಎಂದು ದೋಷಾರೋಪಣಾ ಪಟ್ಟಿಯಲ್ಲಿ ತಿಳಿಸಿರುವುದಾಗಿ ವರದಿಯಾಗಿದೆ. ಪ್ರಕರಣ: 2023ರ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಆಳಂದ ಕ್ಷೇತ್ರದಲ್ಲಿ ಮತಗಳ್ಳತನ ನಡೆದಿದೆ ಎಂದು ಕಾಂಗ್ರೆಸ್ ಶಾಸಕ ಬಿ.ಆರ್. ಪಾಟೀಲ್ ಆರೋಪಿಸಿದ್ದರು. ಈ ಬಗ್ಗೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಇದನ್ನು ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಪ್ರಸ್ತಾಪಿಸಿದ್ದರು. ರಾಜ್ಯ ಸರಕಾರವು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ಆದೇಶದಂತೆ ಸಿಐಡಿಯ ಎಡಿಜಿಪಿ ಬಿ.ಕೆ. ಸಿಂಗ್ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ(ಎಸ್‍ಐಟಿ) ರಚಿಸಲಾಗಿತ್ತು. ಇದೀಗ ತನಿಖೆಯನ್ನು ಪೂರ್ಣಗೊಳಿಸಿ, ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದೆ.

ವಾರ್ತಾ ಭಾರತಿ 13 Dec 2025 6:16 pm

ನೇಕಾರರಿಗೆ ಉಚಿತ ವಿದ್ಯುತ್; ಗುಡ್‌ ನ್ಯೂಸ್‌ ಕೊಟ್ಟ ಸಚಿವ ಶಿವಾನಂದ ಪಾಟೀಲ

ಬೆಳಗಾವಿ, ಡಿಸೆಂಬರ್‌ 13: ವಿದ್ಯುತ್ ಮಗ್ಗಗಳಿಗೆ ಹತ್ತು ಅಶ್ವಶಕ್ತಿವರೆಗೆ ನವೆಂಬರ್ 2023ರಿಂದ ಜಾರಿ ಮಾಡಿರುವ ಉಚಿತ ವಿದ್ಯುತ್ ಪೂರೈಕೆ ಯೋಜನೆಯನ್ನು 2023ರ ಏಪ್ರಿಲ್‍ನಿಂದ ಅನ್ವಯಗೊಳಿಸುವಂತೆ ನೇಕಾರರ ಬೇಡಿಕೆಯನ್ನು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳುವುದಾಗಿ ಜವಳಿ, ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಭರವಸೆ ನೀಡಿದರು. ವಿಧಾನಸಭೆಯಲ್ಲಿ ಪ್ರಶ್ನೋತ್ತರ ವೇಳೆಯಲ್ಲಿ ಶಾಸಕಿ

ಒನ್ ಇ೦ಡಿಯ 13 Dec 2025 6:16 pm

ರಾಯಚೂರು: ಡಿ.14ರಂದು ಟ್ಯಾಗೋರ ಶಿಕ್ಷಣ ಸಂಸ್ಥೆಯ ಹಳೆ ವಿದ್ಯಾರ್ಥಿಗಳಿಂದ ಟ್ಯಾಗೋರು ಉತ್ಸವ

ರಾಯಚೂರು: ಟ್ಯಾಗೋರ್ ಸ್ಮಾರಕ ಶಿಕ್ಷಣ ಸಂಸ್ಥೆಯ ಹಳೆ ವಿದ್ಯಾರ್ಥಿಗಳಿಂದ ಡಿ. 14 ರಂದು ನಗರದ ಮಹಾತ್ಮಗಾಂಧಿ ಕ್ರೀಡಾಂಗಣದಲ್ಲಿ ಟ್ಯಾಗೋರ್ ಉತ್ಸವ ಸಾಂಸ್ಕೃತಿಕ, ಸಂಗೀತ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ವಿಜೆ ಇಂಟರ್ ನ್ಯಾಷನಲ್‌ನ ವಿರೇಂದ್ರ ಜಲ್ದಾರ ಹೇಳಿದರು. ಅವರಿಂದು ಮಾಧ್ಯಮಗೋಷ್ಠಿ ಉದ್ದೇಶಿಸಿ ಮಾತನಾಡಿ, ನಗರದ ಹಳೆಯ ಶಿಕ್ಷಣ ಸಂಸ್ಥೆಯಾಗಿರುವ ಟ್ಯಾಗೋರ ಶಿಕ್ಷಣ ಸಂಸ್ಥೆಯಲಿ 1975ರಿಂದ 2025 ವರೆಗೆ ಶಿಕ್ಷಣ ಪಡೆದ ವಿವಿಧ ವರ್ಷಗಳ ಹಳೆ ವಿದ್ಯಾರ್ಥಿಗಳು ಸೇರಿ ಕಾರ್ಯಕ್ರಮ ಆಯೋಜಿಸಲಾಗಿದೆ. ಕಾರ್ಯಕ್ರಮದಲ್ಲಿ ಹಳೆ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಗುತ್ತದೆ.  ಸರಿಗಮಪ ವಿಜೇತ ಶಿವಾನಿ ಸೇರಿದಂತೆ ಅನೇಕ ಸಂಗೀತ ಕಲಾವಿದರು ಭಾಗಿಯಾಗಲಿದ್ದಾರೆ. ಸಂಜೆ 4 ಗಂಟೆಯಿಂದ ಪ್ರಾರಂಭವಾಗುವ ಕಾರ್ಯಕ್ರಮದಲ್ಲಿ ಮೊದಲು ಹಳೆ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರದರ್ಶನಗೊಳ್ಳಲಿವೆ. ನಂತರ ಶಿವಾನಿಯವರಿಂದ ಸಂಗೀತ, ಸ್ಯಾಕ್ಸಫೋನ್ ಸಂಗೀತ, ನೃತ್ಯ ಕಾರ್ಯಕ್ರಮಗಳು ಜರುಗಲಿವೆ. ನಗರದ ಜನರು ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮನವಿ ಮಾಡಿದರು. ಸಾಯಿ ಧ್ಯಾನಮಂದಿರ ಧರ್ಮಾಧಿಕಾರಿ ಸಾಯಿಕಿರಣ ಆದೋನಿ ಮಾತನಾಡಿ, ಟ್ಯಾಗೋರ ಶಾಲೆಯಲ್ಲಿ ಓದಿರುವ ಹಳೆ ವಿದ್ಯಾರ್ಥಿಗಳಸ್ನೇಹ ಸಮ್ಮಿಲನ ಕಾರ್ಯಕ್ರಮದಲ್ಲಿ ಎಲ್ಲರೂ ಒಂದೇ ಸೇರುವ ಸದಾಶಕಾಶ ದೊರೆತಿದೆ. ಸೇವಾ ನಿವೃತ್ತಿ ಹೊಂದಿರುವ ಶಿಕ್ಷಕರು, ಹಳೆ ವಿದ್ಯಾರ್ಥಿಗಳ ಸಾಧಕರನ್ನು ಸನ್ಮಾನಿಸಲಾಗುತ್ತದೆ ಎಂದರು. ಹಳೆ ವಿದ್ಯಾರ್ಥಿ ಪದ್ಮರಾಜ ಮಾಹಿತಿ ನೀಡಿ ಸರಿ ಸುಮಾರು 3 ರಿಂದ 4 ಸಾವಿರ ಹಳೆ ವಿದ್ಯಾರ್ಥಿಗಳು ಭಾಗವಹಿಸುವ ನಿರೀಕ್ಷೆಯಿದೆ. ರಾಷ್ಟ್ರೀಯ, ಅಂತರಾಷ್ಟ್ರೀಯ ಮಟ್ಟದಲ್ಲಿ ಕ್ರೀಡೆ, ಸಂಗೀತ ಸೇರಿ ಅನೇಕ ಸಾಧಕರನ್ನು ಗೌರವಿಸಲಾಗುತ್ತದೆ. ಎಲ್ಲರೂ ಬೆಂಬಲಿಸಿ ಭಾಗವಹಿಸುವಂತೆ ಮನವಿ ಮಾಡಿದರು. ಈ ಸಂದರ್ಬದಲ್ಲಿ ವಸಂತರಾವ್ ಪತಂಗೆ, ಶಿವನಗೌಡ, ನರೇಂದ್ರ, ಅಮರೇಶ, ನಿವೃತ್ತ ಶಿಕ್ಷಕ ನಾಗೇಂದ್ರ ನಾಥ, ಸಲೀಂ ಸೇರಿ ಅನೇಕರಿದ್ದರು.

ವಾರ್ತಾ ಭಾರತಿ 13 Dec 2025 6:15 pm

ಯಡ್ರಾಮಿ | ಕಡಕೋಳ ಮಡಿವಾಳೇಶ್ವರ ಭವ್ಯ ರಥೋತ್ಸವ

ಕಲಬುರಗಿ: ಯಡ್ರಾಮಿ ತಾಲೂಕಿನ ಕಡಕೋಳ ಗ್ರಾಮದಲ್ಲಿ ತತ್ವಪದ ಸಾಹಿತ್ಯದ ಪ್ರಾರಂಭಿಕ ಕಡಕೋಳ ಮಡಿವಾಳಪ್ಪನವರ ಜಾತ್ರಾ ಮಹೋತ್ಸವದ ಅಂಗವಾಗಿ ಶುಕ್ರವಾರ ಸಂಜೆ ಸಂಭ್ರಮದಿಂದ ಜರುಗಿತು. ಕಲ್ಯಾಣ ಕರ್ನಾಟಕ ಭಾಗದ ದೊಡ್ಡ ಜಾತ್ರೆಗಳಲ್ಲಿ ಕಡಕೋಳ ಮಡಿವಾಳಪ್ಪನವರ ಜಾತ್ರೆಗೆ ಹೂರ ರಾಜ್ಯ ಸೇರಿದಂತೆ ಜಿಲ್ಲೆಯ ಮೂಲೆ ಮೂಲೆಗಳಿಂದಲೂ ಹರಿದುಬಂದ ಜನಸಾಗರ ದೇವಸ್ಥಾನದ ಆವರಣದಲ್ಲಿ ಬೀಡುಬಿಟ್ಟಿತ್ತು. ಶುಕ್ರವಾರ ನಸುಕಿನಿಂದಲೇ ದೇವಸ್ಥಾನದಲ್ಲಿ ಪೂಜಾ ಕೈಂಕರ್ಯಗಳು ನೆರವೇರಿದವು. ಬೆಳಗ್ಗೆ ನಡೆದ ಮಡಿವಾಳಪ್ಪನವರ ಪಲ್ಲಕ್ಕಿ ಉತ್ಸವದಲ್ಲಿಯೂ ಜನಜಂಗುಳಿ ಇತ್ತು. ಮಠದ ಸ್ವಾಮೀಜಿ ರುದ್ರಮುನಿ ಶಿವಾಚಾರ್ಯರ ನೇತ್ವದಲ್ಲಿ ಆರಂಭವಾದ ಪಲ್ಲಕ್ಕಿ ಉತ್ಸವ ಊರಿನ ಪ್ರಮುಖ ಬೀದಿಗಳಲ್ಲಿ ಸುತ್ತಿ ರಥದ ಬಳಿ ಬಂದಿತು. ರಥವನ್ನು ಐದು ಸುತ್ತು ಹಾಕಿದ ನಂತರ ಮಡಿವಾಳಪ್ಪನವರ ರಥೋತ್ಸವ ಆರಂಭವಾಯಿತು. ಮಠದ ಎದುರಿನಿಂದ ರಥ 20 ಮೀಟರ್ ಸಾಗುವಷ್ಟರಲ್ಲಿ ರಥದ ಆ್ಯಕ್ಸೆಲ್ ಮುರಿಯಿತು. ಇದರಿಂದ ರಥೋತ್ಸವ ಅರ್ಧದಲ್ಲೇ ನಿಂತಿದೆ. ಅವಘಡದ ಬೆನ್ನಲ್ಲೇ ಎಚ್ಚೆತ್ತ ಪೊಲೀಸರು ಸುತ್ತಲಿನ ಭಕ್ತರನ್ನು ಚದುರಿಸಿದರು. ದೇವಸ್ಥಾನ ಸಮಿತಿಯವರು ರಥದ ಬುಡಕ್ಕೆ ಸದ್ಯ ಕಲ್ಲು ಹಾಗೂ ಮರದ ತುಂಡು ಜೋಡಿಸಿಟ್ಟು ಅದು ಬೀಳದಂತೆ ಕ್ರಮಹಿಸಿದ್ದಾರೆ.

ವಾರ್ತಾ ಭಾರತಿ 13 Dec 2025 6:05 pm

ಕಲಿತವರು ಕಂದಾಚಾರ ಬಿಡದೇ ಹೋದರೆ ಮನುಷ್ಯ ಸಮಾಜ ಕಟ್ಟಲು ಸಾಧ್ಯವಿಲ್ಲ : ಸಿಎಂ ಸಿದ್ದರಾಮಯ್ಯ

Land of Basavanna and Superstition : ರಾಜ್ಯದಲ್ಲಿ ಸಾಕ್ಷರತಾ ಮಟ್ಟ ಏರಿಕೆಯಾಗುತ್ತಿದ್ದರೂ, ಮೌಢ್ಯ ಇನ್ನೂ ಜೀವಂತವಾಗಿರುವುದು ಬೇಸರದ ಸಂಗತಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ನಾಡಿನಲ್ಲಿರುವ ಮೌಢ್ಯ ಮತ್ತು ಕಂದಾಚಾರಗಳನ್ನು ಕೊನೆಗಾಣಿಸಬೇಕು ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ವಿಜಯ ಕರ್ನಾಟಕ 13 Dec 2025 5:58 pm

ತಿರುವನಂತಪುರ ಪಾಲಿಕೆ ಚುನಾವಣೆಯಲ್ಲಿ ಎನ್‌ಡಿಎಗೆ ಐತಿಹಾಸಿಕ ಜಯ; ಮೋದಿ ಸಂತಸ

ತಿರುವನಂತಪುರಕ್ಕೆ ಧನ್ಯವಾದಗಳು ಎಂದ ಪ್ರಧಾನಿ

ವಾರ್ತಾ ಭಾರತಿ 13 Dec 2025 5:57 pm

ಕೇರಳ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ UDFಗೆ ಭರ್ಜರಿ ಗೆಲುವು, ರಾಜಧಾನಿಯಲ್ಲಿ LDF ಕೋಟೆ ಛಿದ್ರಗೊಳಿಸಿದ ಬಿಜೆಪಿ!

ಕೇರಳ ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶ ಹೊರಬಿದ್ದಿದೆ. ಯುಡಿಎಫ್ ರಾಜ್ಯಾದ್ಯಂತ ಭರ್ಜರಿ ಜಯಗಳಿಸಿದೆ. ತಿರುವನಂತಪುರಂ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ಐತಿಹಾಸಿಕ ಗೆಲುವು ಸಾಧಿಸಿದ್ದು, ಎಡಪಕ್ಷಗಳ 45 ವರ್ಷಗಳ ಕೋಟೆಯನ್ನು ಛಿದ್ರಗೊಳಿಸಿದೆ. ಮಹಾನಗರ ಪಾಲಿಕೆಗಳಲ್ಲಿ ಯುಡಿಎಫ್‌ಗೆ ಹೆಚ್ಚಿನ ಸ್ಥಾನಗಳು ಲಭಿಸಿದ್ದು, ಪುರಸಭೆ, ಪಂಚಾಯತ್‌ಗಳಲ್ಲೂ ಮೈತ್ರಿಕೂಟ ಮೇಲುಗೈ ಸಾಧಿಸಿದೆ. ಜಿಲ್ಲಾ ಪಂಚಾಯತ್‌ಗಳಲ್ಲಿ ಯುಡಿಎಫ್‌ ಮತ್ತು ಎಲ್‌ಡಿಎಫ್‌ ಸಮಬಲ ಸಾಧಿಸಿವೆ.

ವಿಜಯ ಕರ್ನಾಟಕ 13 Dec 2025 5:55 pm

ನಡುಪದವು | ʼಚೈತನ್ಯ ಸಾಧನೆ ಸ್ವಚ್ಛ ಮನೆ ಘೋಷಣೆʼ ಕಾರ್ಯಕ್ರಮ

ಕೊಣಾಜೆ: ಬಾಳೆ ಪುಣಿ ಗ್ರಾಮ ಪಂಚಾಯತ್ ವ್ಯಾಪ್ತಿಯ ನಡುಪದವು ಪ್ರದೇಶದ ಸರ್ವ ಕುಟುಂಬಗಳೂ ಮನೆಗಳಲ್ಲಿ ಸೃಷ್ಠಿಯಾಗುವ ಹಸಿ, ಒಣ, ಅಪಾಯಕಾರಿ ಕಸಗಳನ್ನು ವಿಂಗಡಿಸಿ ಪಂಚಾಯತ್ ನ ತ್ಯಾಜ್ಯ ನಿರ್ವಹಣಾ ಘಟಕಕ್ಕೆ ನೀಡಿ ಸ್ವಚ ಮನೆ ಸ್ವಯಂ ಘೋಷಣೆ ಪತ್ರಗಳನ್ನು ಸಲ್ಲಿಸುವ ಮೂಲಕ ನಡುಪದವನ್ನು ಸ್ವಚ್ಚ ಹಸಿರು ನಡುಪದವು ಘೋಷಣೆಗೆ ಸಂಕಲ್ಪ ಮಾಡಲಾಯಿತು. ಬಾಳೆ ಪುಣಿ ಗ್ರಾಮ ಪಂಚಾಯತ್, ಜನ ಶಿಕ್ಷಣ ಟ್ರಸ್ಟ್ ನಡುಪದವು ರಿಹಾಬ್ ಸೆಂಟರ್ ಸಹಯೋಗದಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಚೈತನ್ಯ ಸಾಧನೆ ಸ್ವಚ್ಛ ಮನೆ ಘೋಷಣೆ ಕಾರ್ಯಕ್ರಮದಲ್ಲಿ ಈ ಸಂಕಲ್ಪ ಮಾಡಲಾಯಿತು. ಜಿಲ್ಲಾ ಸ್ವಚ್ಚತಾ ರಾಯಭಾರಿ ಶೀನ ಶೆಟ್ಟಿ ಘನ ತ್ಯಾಜ್ಯಗಳನ್ನು ಸಂಪನ್ಮೂಲವಾಗಿ ಪರಿವರ್ತಿಸಿ ಶೂನ್ಯ ಕಸ ನಿರ್ವಹಣೆ ಕುರಿತು ಮಾಹಿತಿ ನೀಡಿದರು. ರೋಗ ಮುಕ್ತ ಆರೋಗ್ಯ ಕರ ಬದುಕಿಗೆ ಸ್ವಚ್ಚತೆಯ ಮಹತ್ವ ಮತ್ತು ಅಗತ್ಯದ ಬಗ್ಗೆ ಮುಡಿಪು ಪ್ರೌಢ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಇಬ್ರಾಹಿಂ ನಡುಪದವು, ಉದ್ಯಮಿ ನಾಸಿರ್ ನಡುಪದವು ಪಂ.ಕಾರ್ಯದರ್ಶಿ ಆಯಿಷಾ ಬಾನು ಮಾಹಿತಿ ನೀಡಿದರು. ವಿಶೇಷ ಚೇತನರಿಗೆ ಪಂಚಾಯತ್ ವತಿಯಿಂದ ವಿಶೇಷ ನೆರವಿನ ಚೆಕ್ ವಿತರಿಸಲಾಯಿತು. ಪಂ ಸದಸ್ಯರಾದ ಲಿಡಿಯ, ಅಂಜಲಿ, ರಜಿಯಾ ಮುಖ್ಯ ಶಿಕ್ಷಕಿ ಪ್ರೇಮ, ಕಾವ್ಯ ಉಪಸ್ಥಿತರಿದ್ದರು. ಗ್ರಾ.ಪಂ.ಉಪಾಧ್ಯಕ್ಷ ಯಸ್ ಡಿ ಯಮ್ ಸಿ ಅಧ್ಯಕ್ಷ ಶರೀಫ್ ಪಟ್ಟೋರಿ ಪ್ರಾಸ್ತಾವಿಕವಾಗಿ ಮಾತನಾಡಿ ಕಾರ್ಯಕ್ರಮ ನಿರೂಪಿಸಿದರು.

ವಾರ್ತಾ ಭಾರತಿ 13 Dec 2025 5:41 pm

ಮಂಗಳೂರು | ಸಂತ ಅಲೋಶಿಯಸ್ ಗೊನ್ಝಾಗ ಶಾಲೆಯಲ್ಲಿ ಸೃಷ್ಟಿನೋವಾ ಕಾರ್ಯಕ್ರಮ

ಮಂಗಳೂರು, ಡಿ.13: ನಗರದ ಸಂತ ಅಲೋಶಿಯಸ್ ಗೊನ್ಝಾಗ ಶಾಲೆಯಲ್ಲಿ 14ನೇ ವಾರ್ಷಿಕೋತ್ಸವ ಸೃಷ್ಟಿನೋವಾ ಕಾರ್ಯಕ್ರಮವು ವಿಜ್ಞಾನ ಮತ್ತು ಪ್ರಕೃತಿಯ ಅನುಬಂಧ ಎಂಬ ಸಂದೇಶದೊಂದಿಗೆ ಶುಕ್ರವಾರ ಆಚರಿಸಲಾಯಿತು. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ದ.ಕ.ಅಪರ ಜಿಲ್ಲಾಧಿಕಾರಿ ರಾಜು ಕೆ. ಮಾತನಾಡಿ, ಮಗುವಿನ ವ್ಯಕ್ತಿತ್ವ ನಿರ್ಮಾಣದಲ್ಲಿ ಪೋಷಕರ ಪಾತ್ರ ಅತ್ಯಂತ ನಿರ್ಣಾಯಕವಾಗಿದೆ. ಮನೆಯ ವಾತಾವರಣ, ಪೋಷಕರ ಮೌಲ್ಯಗಳ ಪ್ರಸಾರ, ಭಾವನಾತ್ಮಕ ಬೆಂಬಲದ ಮೂಲಕ ಮಗುವಿನ ನಡವಳಿಕೆ, ಅರಿವಿನ ಸಾಮಾರ್ಥ್ಯ ಇತ್ಯಾದಿ ಗುಣಗಳು ರೂಪುಗೊಳ್ಳುತ್ತದೆ ಎಂದರು. ಸಂತ ಅಲೋಶಿಯಸ್ ಸಂಸ್ಥೆಯ ರೆ.ಫಾ. ಮೆಲ್ವಿನ್ ಪಿಂಟೋ ಎಸ್.ಜೆ. ಮಾತನಾಡಿ, ವಿದ್ಯಾರ್ಥಿಗಳು ಸಾಮಾಜಿಕ ಜಾಲಾತಾಣಗಳ ಆಮಿಷಕ್ಕೆ ಬಲಿಯಾಗದೆ ಅಮೂಲ್ಯ ಸಮಯವನ್ನು ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸುವ ಮೂಲಕ ತಮ್ಮಲ್ಲಿರುವ ಜಡತೆಯನ್ನು ಹೊರದೂಡಬೇಕು. ಸೃಷ್ಟಿನೋವಾ ವಿಜ್ಞಾನ ಮತ್ತು ಪ್ರಕೃತಿಯ ಅನುಬಂಧದಂತೆ, ಪ್ರಕೃತಿಯ ಮೌನದ ಹಿಂದಿನ ಮಾತಾಗಬೇಕು ಎಂದರು. ಶಾಲೆಯ ಪ್ರಾಂಶುಪಾಲ ಫಾ. ರೋಹನ್ ಡಿ ಅಲ್ಮೇಡಾ ಎಸ್.ಜೆ.ಮಾತನಾಡಿದರು. ಈ ಸಂದರ್ಭ ಸಾಧಕ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಉಪ ಪ್ರಾಂಶುಪಾಲೆ ಲಾರೆಲ್ ಡಿಸೋಜ, ಅಪರ್ಣಾ ಸುರೇಶ್, ಶಾಲಾ ಪೋಷಕ-ಶಿಕ್ಷಕ ಸಂಘದ ಉಪಾಧ್ಯಕ್ಷೆ ರೀನಾ ನೊರೊನ್ಹಾ, ಕಾರ್ಯಕ್ರಮ ಸಂಯೋಜಕಿ ದೀಪ್ತಿ ಸಹನಾ ಕರ್ಕಡ, ಶಿಲ್ಪ ಬಲ್ಲಾಳ್, ಸುಶ್ಮಿತಾ ಕೆ. ಎಸ್., ಬೀನಾ ಪಾಯಸ್, ಗಾಯತ್ರಿ ತಂತ್ರಿ, ಆವ್ರಿಲ್ ಜೆ. ರೆಬೆಲ್ಲೊ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ರೆಹಾನ್ ವಿ.ಕೆ. ಹಾಗೂ ಇಸಾಬೆಲ್ ಜೋಸ್ಟರ್ ಕಾರ್ಯಕ್ರಮ ನಿರೂಪಿಸಿದರು.

ವಾರ್ತಾ ಭಾರತಿ 13 Dec 2025 5:37 pm

ಮಂಗಳೂರು | ಸೈಬರ್ ವಂಚನೆಯ ಬಗ್ಗೆ ಜಾಗೃತರಾಗಿ: ಎಸಿಪಿ ನಜ್ಮಾ ಫಾರೂಕಿ ಸಲಹೆ

ಮಂಗಳೂರು, ಡಿ.13: ಅಪರಾಧ ಕೃತ್ಯಗಳ ಸ್ವರೂಪ ಬದಲಾಗುತ್ತಿದೆ. ಇಂದಿನ ಯುವಜನತೆ ಮಾದಕ ವಸ್ತು ಸೇವನೆ, ಸೈಬರ್ ಕ್ರೈಂ, ಅತ್ಯಾಚಾರದಂತಹ ಕ್ರಿಮಿನಲ್ ಕೃತ್ಯಗಳಲ್ಲಿ ಹೆಚ್ಚಾಗಿ ಶಾಮೀಲಾಗುತ್ತಿರುವುದು ಆತಂಕಕಾರಿ ವಿಚಾರವಾಗಿದೆ. ಅದೇ ರೀತಿ ಆನ್ಲೈನ್ ವಂಚನೆಗೊಳಗಾಗಿ ಅದೆಷ್ಟೂ ಮಂದಿ ಹಣ, ಬದುಕನ್ನು ಕಳೆದುಕೊಂಡಿದ್ದಾರೆ. ಈ ಬಗ್ಗೆ ಇನ್ನಷ್ಟು ಜಾಗೃತಿ ಮೂಡಿಸುವುದಲ್ಲದೆ ಜನರೂ ಕೂಡ ಕಾನೂನು, ಮಾನವ ಹಕ್ಕುಗಳು ಮತ್ತು ಕರ್ತವ್ಯಗಳನ್ನು ತಿಳಿಯುವ ಅಗತ್ಯ ಇದೆ ಎಂದು ಎಸಿಪಿ ನಜ್ಮಾ ಫಾರೂಕಿ ಹೇಳಿದ್ದಾರೆ. ಲಯನ್ಸ್ ಇಂಟರ್ ನ್ಯಾಷನಲ್ ಜಿಲ್ಲೆ 317 ಡಿ ವತಿಯಿಂದ ನಗರದ ಬಲ್ಮಠ ಶಾಂತಿನಿಲಯದಲ್ಲಿ ನಡೆದ ಮಾನವ ಹಕ್ಕುಗಳು ಎಂಬ ವಿಷಯದಲ್ಲಿ ನಡೆದ ಕಾರ್ಯಾಗಾರದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು. ಸೈಬರ್ ವಂಚನೆ, ಡಿಜಿಟಲ್ ಅರೆಸ್ಟ್, ಸಾಮಾಜಿಕ ಜಾಲತಾಣಗಳ ಮೂಲಕ ಬ್ಲ್ಯಾಕ್ಮೇಲ್, ಯುಪಿಎ ಸ್ಕ್ಯಾನ್ ಹೆಸರಲ್ಲಿ ವಂಚನೆ, ಸಾಮಾಜಿಕ ಜಾಲತಾಣಗಳಲ್ಲಿ ಇನ್ನೊಬ್ಬರ ಹೆಸರಲ್ಲಿ ನಕಲಿ ಖಾತೆ ತೆರೆದು ಹಣಕ್ಕಾಗಿ ಬೇಡಿಕೆ ಇಡುವುದು, ಸೆಲೆಬ್ರಿಟಿಗಳ ಫೋಟೋಗಳನ್ನು ಮಾರ್ಫ್ ಮಾಡಿ ವಂಚಿಸುವುದು, ಎಪಿಕೆ ಫೈಲ್ ಗಳ ಮೂಲಕ ವಂಚನೆ, ಕೆವೈಸಿ, ಆಧಾರ್ ಅಪ್ಡೇಟ್ ಹೆಸರಲ್ಲಿ ವಂಚನೆ, ಹಣ ದ್ವಿಗುಣಗೊಳಿಸಿ ಕೊಡಲಾಗುವುದು ಎಂದು ಹೇಳಿ ಹಣ ಹೂಡಿಕೆ ಮಾಡಿಸಿ ಮೋಸ ಮಾಡುವುದು ಅಧಿಕವಾಗಿದೆ. ಹಾಗಾಗಿ ಈ ಬಗ್ಗೆ ಸದಾ ಜಾಗೃತರಾಗಬೇಕು ಎಂದು ನಜ್ಮಾ ಫಾರೂಕಿ ನುಡಿದರು. ಅಡ್ವಕೇಟ್ ಉದಯಾನಂದ ಕೆ. ಮುಖ್ಯ ಭಾಷಣಗೈದರು. ಕಾರ್ಯಕ್ರಮದಲ್ಲಿ ಬಿ.ಪಿ ಆಚಾರ್ ಬರೆದ ಮಾನವ ಹಕ್ಕುಗಳ ಕುರಿತ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು. ಕಾಲೇಜು ಮಕ್ಕಳಿಂದ ಮಾನವ ಹಕ್ಕು ಕುರಿತು ಪ್ಯಾನೆಲ್ ಡಿಸ್ಕಷನ್, ರಸಪ್ರಶ್ನೆ, ಬಹುಮಾನ ವಿತರಣೆ ನಡೆಯಿತು. ಜಿಲ್ಲಾ ಗವರ್ನರ್ ಕುಡ್ಪಿಅರವಿಂದ ಶೆಣೈ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಮುಖ್ಯ ಸಂಯೋಜಕ ಎಡ್ವಿನ್ ವಾಲ್ಟರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಎಂಎಚ್ ಕರುಣಾಕರ್, ಬಿ.ಎಸ್.ರೈ, ಕೆ.ಚಂದ್ರಮೋಹನ್ ರಾವ್, ಪ್ರಜ್ವಲ ಯು.ಎಸ್., ಎಂ.ಟಿ.ರಾಜಾ, ಜ್ಯೋತಿ ಎಸ್. ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು. ಆಶಾ ಚಂದ್ರಮೋಹನ್ ಕಾರ್ಯಕ್ರಮ ನಿರೂಪಿಸಿದರು.

ವಾರ್ತಾ ಭಾರತಿ 13 Dec 2025 5:34 pm

ಗೋವಿಗೆ ‘ರಾಷ್ಟ್ರಮಾತೆ’ ಸ್ಥಾನಮಾನ, ಸಂಪೂರ್ಣ ಗೋಹತ್ಯೆ ನಿಷೇಧಕ್ಕೆ ಸಂಸತ್ತಿನಲ್ಲಿ ಕಾಂಗ್ರೆಸ್ ಸಂಸದ ಉಜ್ವಲ್ ರಮಣ್ ಸಿಂಗ್ ಆಗ್ರಹ

ಹೊಸದಿಲ್ಲಿ: ಗೋವಿಗೆ ‘ರಾಷ್ಟ್ರಮಾತೆ’ ಅಥವಾ ‘ರಾಜಮಾತೆ’ ಸ್ಥಾನಮಾನ ನೀಡಬೇಕು ಹಾಗೂ ದೇಶಾದ್ಯಂತ ಸಂಪೂರ್ಣ ಗೋಹತ್ಯೆ ನಿಷೇಧ ಜಾರಿಗೆ ತರಬೇಕು ಎಂದು ಕಾಂಗ್ರೆಸ್ ಸಂಸದ ಉಜ್ವಲ್ ರಮಣ್ ಸಿಂಗ್ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಗುರುವಾರ ಲೋಕಸಭೆಯ ಶೂನ್ಯ ವೇಳೆಯಲ್ಲಿ ಮಾತನಾಡಿದ ಅವರು, ಭಾರತದ ಸ್ಥಳೀಯ ದೇಸೀಯ ಗೋ ತಳಿಗಳ ಸಂಖ್ಯೆಯು ಆತಂಕಕಾರಿ ರೀತಿಯಲ್ಲಿ ಕುಸಿಯುತ್ತಿರುವುದರತ್ತ ಸದನದ ಗಮನ ಸೆಳೆದರು. “ಗೋವು ನಮ್ಮ ರಾಷ್ಟ್ರೀಯ ಗುರುತು ಮತ್ತು ಹೆಮ್ಮೆಯ ಸಂಕೇತ. ದೇಶೀಯ ಗೋ ತಳಿಗಳ ಅಸ್ತಿತ್ವ, ಗುರುತು ಮತ್ತು ಘನತೆಯನ್ನು ಕಾಪಾಡುವುದು ತುರ್ತು ಅಗತ್ಯವಾಗಿದೆ,” ಎಂದು ಸಿಂಗ್ ಹೇಳಿದರು. ಎಲ್ಲಾ ಜಾನುವಾರುಗಳ ಹತ್ಯೆಯನ್ನು ಸಂಪೂರ್ಣವಾಗಿ ನಿಷೇಧಿಸಬೇಕು ಎಂಬ ಬೇಡಿಕೆಯನ್ನು ಕೂಡ ಅವರು ಮುಂದಿಟ್ಟರು. ಹಸುವಿಗೆ ರಾಷ್ಟ್ರಮಾತೆಯ ಸ್ಥಾನಮಾನ ನೀಡುವಂತೆ ಶಂಕರಾಚಾರ್ಯ ಸ್ವಾಮಿ ಅವಿಮುಕ್ತೇಶ್ವರಾನಂದರು ನಿರಂತರವಾಗಿ ಆಗ್ರಹಿಸುತ್ತಿದ್ದು, ಸರ್ಕಾರವು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಅವರು ಹೇಳಿದರು.

ವಾರ್ತಾ ಭಾರತಿ 13 Dec 2025 5:33 pm

ಹಿರಾ ಮಹಿಳಾ ಸಂಯುಕ್ತ ಪಪೂ ಕಾಲೇಜಿನ ವಾರ್ಷಿಕೋತ್ಸವ

ತೊಕ್ಕೊಟ್ಟು, ಡಿ.13: ಬಬ್ಬುಕಟ್ಟೆಯ ಹಿರಾ ಮಹಿಳಾ ಸಂಯುಕ್ತ ಪಪೂ ಕಾಲೇಜಿನ ಇಪ್ಪತ್ತೈದನೆಯ ವಾರ್ಷಿಕೋತ್ಸವ ಕಾರ್ಯಕ್ರಮವು ಗುರುವಾರ ಎಂಎಸ್ಎಚ್ಎಂ ಕಾಲೇಜು ಸಭಾಂಗಣದಲ್ಲಿ ನಡೆಯಿತು. ಶಾಂತಿ ಪ್ರಕಾಶನದ ಟ್ರಸ್ಟಿ ಸಮೀರಾ ಜಹಾನ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಶುಭ ಹಾರೈಸಿದರು. ಜಮಾಅತೆ ಇಸ್ಲಾಂ ಹಿಂದ್ ಸದಸ್ಯೆ ಝೀನತ್ ಹಸ್ನ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿನಿಯರನ್ನು ಗೌರವಿಸಲಾಯಿತು. ಕಾಲೇಜಿನ ಪ್ರಾಂಶುಪಾಲೆ ಫಾತಿಮಾ ಮೆಹರೂನ್ ಸ್ವಾಗತಿಸಿದರು. ಕಾಲೇಜಿನ ವಾರ್ಷಿಕ ವರದಿಯನ್ನು ಉಪನ್ಯಾಸಕಿ ಮಂಜುಳಾ ಕುಮಾರಿ ವಾಚಿಸಿದರು. ಹಿರಾ ವಿಮೆನ್ಸ್ ಕಾಲೇಜಿನ ಪ್ರಾಂಶುಪಾಲೆ ಆಯಿಷಾ ಅಸ್ಮಿನ್, ಹಿರಾ ಪ್ರೌಢಶಾಲೆಯ ಮುಖ್ಯಶಿಕ್ಷಕಿ ಆಫ್ರಿನ್, ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ರೀನಾ ವೇಗಸ್ ಮತ್ತಿತರರು ಉಪಸ್ಥಿತರಿದ್ದರು. ವಿದ್ಯಾರ್ಥಿನಿಯರಾದ ಹಾಜಿರಾ ಮತ್ತು ಮೆಹಪೂಜ ಕಾರ್ಯಕ್ರಮ ನಿರೂಪಿಸಿದರು. ಉಪನ್ಯಾಸಕಿಯರಾದ ದೀಕ್ಷಾ ಮತ್ತು ಸುಶ್ಮಿತಾ ಬಹುಮಾನಿತರ ಹೆಸರನ್ನು ವಾಚಿಸಿದರು. ನುಹ ಫಾತಿಮಾ ವಂದಿಸಿದರು.

ವಾರ್ತಾ ಭಾರತಿ 13 Dec 2025 5:31 pm

ಕೇರಳ ಸ್ಥಳೀಯ ಸಂಸ್ಥೆ ಚುನಾವಣೆ: ಯುಡಿಎಫ್‌ ಸ್ಪಷ್ಟ ಮೇಲುಗೈ

ತಿರುವನಂತಪುರಂ: ಕೇರಳದ ಸ್ಥಳೀಯ ಸಂಸ್ಥೆ ಚುನಾವಣೆ ಫಲಿತಾಂಶಗಳು ರಾಜ್ಯದ ರಾಜಕೀಯದಲ್ಲಿ ಮಹತ್ವದ ತಿರುವನ್ನು ಸೂಚಿಸಿವೆ. ವಿರೋಧ ಪಕ್ಷವಾದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್‌ (ಯುಡಿಎಫ್‌) ಕಾರ್ಪೊರೇಷನ್‌, ಪುರಸಭೆ ಹಾಗೂ ಪಂಚಾಯತ್‌ಗಳಾದ್ಯಂತ ಸ್ಪಷ್ಟ ಮೇಲುಗೈ ಸಾಧಿಸಿದ್ದು, ಆಡಳಿತಾರೂಢ ಲೆಫ್ಟ್ ಡೆಮಾಕ್ರಟಿಕ್ ಫ್ರಂಟ್‌ (ಎಲ್‌ಡಿಎಫ್‌) ತನ್ನ ಹಲವು ಸಾಂಪ್ರದಾಯಿಕ ಭದ್ರಕೋಟೆಗಳಲ್ಲಿ ಹಿನ್ನಡೆ ಅನುಭವಿಸಿದೆ. 2026ರ ವಿಧಾನಸಭಾ ಚುನಾವಣೆಗೆ ಮುನ್ನ ರಾಜಕೀಯ ದಿಕ್ಸೂಚಿ ಎಂದು ಪರಿಗಣಿಸಲಾಗುತ್ತಿರುವ ಈ ಫಲಿತಾಂಶಗಳು, ಬಿಜೆಪಿ ನೇತೃತ್ವದ ಎನ್‌ಡಿಎಗೆ ಸೀಮಿತ ಆದರೆ ಗಮನಾರ್ಹ ಪಲಿತಾಂಶ ನೀಡಿದೆ. ವಿಶೇಷವಾಗಿ ತಿರುವನಂತಪುರಂನಂತಹ ನಗರ ಪ್ರದೇಶಗಳಲ್ಲಿ ಬಿಜೆಪಿ ತನ್ನ ಅಸ್ತಿತ್ವವನ್ನು ಬಲಪಡಿಸಿದೆ. ಡಿ. 9 ಮತ್ತು 11ರಂದು ಎರಡು ಹಂತಗಳಲ್ಲಿ ನಡೆದ ಚುನಾವಣೆಯಲ್ಲಿ ಆರು ಕಾರ್ಪೊರೇಷನ್‌, 14 ಜಿಲ್ಲಾ ಪಂಚಾಯತ್‌, 87 ಪುರಸಭೆ, 152 ಬ್ಲಾಕ್ ಪಂಚಾಯತ್‌ ಹಾಗೂ 941 ಗ್ರಾಮ ಪಂಚಾಯತ್‌ಗಳಿಗೆ ಮತದಾನ ನಡೆದಿತ್ತು. ಕಾರ್ಪೊರೇಷನ್‌ ಫಲಿತಾಂಶ: ಆರು ಕಾರ್ಪೊರೇಷನ್‌ಗಳಲ್ಲಿ ನಾಲ್ಕನ್ನು ಯುಡಿಎಫ್‌ ತನ್ನದಾಗಿಸಿಕೊಂಡಿದೆ. ಕೊಲ್ಲಂ, ಕೊಚ್ಚಿ, ತ್ರಿಶೂರ್‌ ಹಾಗೂ ಕಣ್ಣೂರಿನಲ್ಲಿ ಯುಡಿಎಫ್‌ ಗೆಲುವು ದಾಖಲಿಸಿದ್ದು, ನಗರ ಪ್ರದೇಶಗಳಲ್ಲಿ ಎಲ್‌ಡಿಎಫ್‌ ಹಿಡಿತಕ್ಕೆ ದೊಡ್ಡ ಹೊಡೆತ ನೀಡಿದೆ. ಬಿಜೆಪಿ ನೇತೃತ್ವದ ಎನ್‌ಡಿಎ ತಿರುವನಂತಪುರಂ ಕಾರ್ಪೊರೇಷನ್‌ ಗೆಲ್ಲುವ ಮೂಲಕ ರಾಜಕೀಯವಾಗಿ ಮಹತ್ವದ ಸಾಧನೆ ಮಾಡಿದೆ. ಯುಡಿಎಫ್‌ ಮತ್ತು ಎನ್‌ಡಿಎಗಳಿಂದ ತೀವ್ರ ಸವಾಲು ಎದುರಿಸಿದರೂ, ಕೋಝಿಕ್ಕೋಡ್‌ ಕಾರ್ಪೊರೇಷನ್‌ನಲ್ಲಿ ಮಾತ್ರ ಎಲ್‌ಡಿಎಫ್‌ ತನ್ನ ಹಿಡಿತವನ್ನು ಉಳಿಸಿಕೊಂಡಿದೆ. ಪುರಸಭೆ–ಪಂಚಾಯತ್‌ಗಳಲ್ಲಿ ಯುಡಿಎಫ್‌ ಸ್ಥಾನಗಳಲ್ಲಿ ಹೆಚ್ಚಳ: ಪುರಸಭಾ ಮಟ್ಟದಲ್ಲಿಯೂ ಯುಡಿಎಫ್‌ ಸ್ಪಷ್ಟ ಮುನ್ನಡೆ ಸಾಧಿಸಿದೆ. 87 ಪುರಸಭೆಗಳ ಪೈಕಿ 54ರಲ್ಲಿ ಯುಡಿಎಫ್‌ ಜಯಗಳಿಸಿದ್ದು, ನಗರ ಹಾಗೂ ಅರೆನಗರ ಪ್ರದೇಶಗಳಲ್ಲಿ ತನ್ನ ಪ್ರಾಬಲ್ಯವನ್ನು ವಿಸ್ತರಿಸಿದೆ. ಎರ್ನಾಕುಲಂ, ಆಲಪ್ಪುಳ, ಮಲಪ್ಪುರಂ, ಕೊಟ್ಟಾಯಂ ಹಾಗೂ ಪಾಲಕ್ಕಾಡ್‌ ಜಿಲ್ಲೆಗಳ ಹಲವು ಪುರಸಭೆಗಳಲ್ಲಿ ಯುಡಿಎಫ್‌ ಮೇಲುಗೈ ಸಾಧಿಸಿದೆ. ಪತ್ತನಂತಿಟ್ಟ ಮತ್ತು ಇಡುಕ್ಕಿಯಲ್ಲಿಯೂ ಯುಡಿಎಫ್ ತನ್ನ ಛಾಪನ್ನು ಮರಳಿ ಪಡೆದಿದೆ. ತಿರುವನಂತಪುರಂ, ಕೊಲ್ಲಂ, ಕೋಝಿಕ್ಕೋಡ್‌ ಮತ್ತು ಕಣ್ಣೂರು ಸೇರಿದಂತೆ ಕೆಲವು ಸಾಂಪ್ರದಾಯಿಕ ಭದ್ರಕೋಟೆಗಳಲ್ಲಿ ಎಲ್‌ಡಿಎಫ್‌ ಜಯ ಸಾಧಿಸಿದರೂ, ಒಟ್ಟಾರೆ 2020ರ ಸಾಧನೆಗೆ ಹೋಲಿಸಿದರೆ ಸ್ಪಷ್ಟ ಹಿನ್ನಡೆ ಕಂಡಿದೆ. ಪಾಲಕ್ಕಾಡ್‌ ಪುರಸಭೆಯನ್ನು ಉಳಿಸಿಕೊಳ್ಳುವ ಮೂಲಕ ಹಾಗೂ ತ್ರಿಪುಣಿತುರವನ್ನು ಗೆಲ್ಲುವ ಮೂಲಕ ಎನ್‌ಡಿಎ ಅಲ್ಪ ಆದರೆ ಗಮನಾರ್ಹ ಮುನ್ನಡೆ ದಾಖಲಿಸಿದೆ. ತೋಡುಪುಳ ಮತ್ತು ಕಾಙಂಗಾಡ್ ನಂತಹ ನಿಕಟ ಕ್ಷೇತ್ರಗಳಲ್ಲಿ ಬಿಜೆಪಿ ನಿರ್ಣಾಯಕ ಪಾತ್ರ ವಹಿಸಿದೆ. ಒಟ್ಟಾರೆ, ಸ್ಥಳೀಯ ಸಂಸ್ಥೆ ಚುನಾವಣೆ ಫಲಿತಾಂಶಗಳು ಯುಡಿಎಫ್‌ ಪುನಶ್ಚೇತನದ ಸಂಕೇತವಾಗಿದ್ದು, ಮುಂದಿನ ವಿಧಾನಸಭಾ ಚುನಾವಣೆಗೆ ಮುನ್ನ ಕೇರಳದ ರಾಜಕೀಯ ಸಮೀಕರಣಗಳು ಬದಲಾಗುತ್ತಿರುವುದನ್ನು ಸ್ಪಷ್ಟಪಡಿಸುತ್ತವೆ.

ವಾರ್ತಾ ಭಾರತಿ 13 Dec 2025 5:29 pm

ಉಡುಪಿ ಎಂಜಿಎಂ ಕಾಲೇಜಿನಲ್ಲಿ ಒಡಿಸ್ಸಿ ನೃತ್ಯ ವೈಭವ

ಉಡುಪಿ, ಡಿ.12: ಉಡುಪಿ ಎಂ.ಜಿ.ಎಂ. ಪದವಿ ಪೂರ್ವ ಕಾಲೇಜಿನ ವತಿಯಿಂದ ನೃತ್ಯಗಾರ, ಅಂತರರಾಷ್ಟ್ರೀಯ ಕಲಾವಿದ ಪಂಡಿತ್ ರಾಹುಲ್ ಆಚಾರ್ಯ ಅವರಿಂದ ಒಡಿಸ್ಸಿ ನೃತ್ಯ ಪ್ರದರ್ಶನ ನಡೆಯಿತು. ಸೊಸೈಟಿ ಫಾರ್ಮದ ಪ್ರೊಮೋಷನ್ಸ್ ಆಫ್ ಇಂಡಿಯನ್ ಕ್ಲಾಸಿಕಲ್ ಮ್ಯೂಸಿಕ್ ಆಂಡ್ ಕಲ್ಚರ್ ಅಮೊಂಗ್ಸಸ್ಟ್ ಯೂಥ್ ಆಶ್ರಯದಲ್ಲಿ ನಡೆದ ಈ ವಿಶೇಷ ಕಾರ್ಯಕ್ರಮ ನೆರೆದಿದ್ದ ಕಲಾಭಿಮಾನಿಗಳ ಮನ ಸೆಳೆಯಿತು. ಡಿವೈನ್ ಡ್ಯಾನ್ಸರ್ ಎಂದೇ ಖ್ಯಾತರಾದ ರಾಹುಲ್ ಆಚಾರ್ಯ ಶಾಸ್ತ್ರೀಯವಾದ, ಶುದ್ಧವಾದ ನೈಜ ಕಲಾ ಪ್ರದರ್ಶನ ಹಾಗೂ ಅವರ ಪಾಂಡಿತ್ಯ ಮತ್ತು ಮೃದು ಮಾತು ನೆರೆದಿದ್ದ ಕಲಾರಸಿಕರಿಗೆ ರಸದೌತಣ ನೀಡಿತು. ಅವರೊಂದಿಗೆ ಸಹಕಲಾವಿದರಾಗಿ ಸಂಗೀತದಲ್ಲಿ ಸುಕಾಂತ ಕುರ್ಮಾರ್ ಕುಂಡ, ಮರ್ಧಲಾದಲ್ಲಿ ದಿಬಾಕರ್ ಪಾರಿದಾ, ವಯಲಿನ್ನಲ್ಲಿ ಪ್ರದೀಪ್ ಕುಮಾರ್ ಮಹಾರಣ ಮತ್ತು ಮಂಜೀರದಲ್ಲಿ ಸುಮುಖ ತಮಂಕರ್ ಸಹಕಾರ ನೀಡಿದರು. ಪದವಿ ಕಾಲೇಜಿನ ಪ್ರಾಂಶುಪಾಲೆ ಪ್ರೊ.ವನಿತಾ ಮಯ್ಯ, ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲೆ ಮಾಲತಿ ದೇವಿ, ಉಪ ಪ್ರಾಂಶುಪಾಲ ಡಾ.ಎಂ ವಿಶ್ವನಾಥ ಪೈ ಮತ್ತು ಕಾಲೇಜಿನ ಬೋಧಕ, ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ನೆರೆದಿದ್ದರು. ಅಂಕಿತಾ ರಾವ್ ಕಾರ್ಯಕ್ರಮ ನಿರೂಪಿಸಿ, ಅದಿತಿ ವಂದಿಸಿದರು.

ವಾರ್ತಾ ಭಾರತಿ 13 Dec 2025 5:28 pm

‘Haal’ ಮಲಯಾಳಂ ಚಿತ್ರದಲ್ಲಿ ನಾಲ್ಕು ಕಡಿತಗಳನ್ನು ರದ್ದುಗೊಳಿಸಿದ್ದ ಆದೇಶದ ವಿರುದ್ಧ ಮೇಲ್ಮನವಿಗಳು ಕೇರಳ ಹೈಕೋರ್ಟ್‌ನಲ್ಲಿ ವಜಾ

ಕೊಚ್ಚಿ: ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿಯು (ಸಿಬಿಎಫ್‌ಸಿ) ‘ಹಾಲ್’ ಮಲಯಾಳಂ ಚಿತ್ರದ ಕೆಲವು ಭಾಗಗಳಿಗೆ ಕತ್ತರಿ ಪ್ರಯೋಗ ಮಾಡುವಂತೆ ಹೊರಡಿಸಿದ್ದ ಆದೇಶವನ್ನು ಭಾಗಶಃ ರದ್ದುಗೊಳಿಸಿದ್ದ ಏಕ ನ್ಯಾಯಾಧೀಶ ಪೀಠದ ನ.14ರ ತೀರ್ಪಿನ ವಿರುದ್ಧ ಸಲ್ಲಿಸಲಾಗಿದ್ದ ಮೇಲ್ಮನವಿಗಳನ್ನು ಕೇರಳ ಉಚ್ಚ ನ್ಯಾಯಾಲಯದ ವಿಭಾಗೀಯ ಪೀಠವು ಶುಕ್ರವಾರ ವಜಾಗೊಳಿಸಿದೆ. ಸಿಬಿಎಫ್‌ಸಿ ಆರು ಕತ್ತರಿ ಪ್ರಯೋಗಗಳಿಗೆ ಆದೇಶಿತ್ತಾದರೂ ಏಕ ನ್ಯಾಯಾಧೀಶ ಪೀಠವು ಕೇವಲ ಎರಡಕ್ಕೆ ಅನುಮತಿ ನೀಡಿತ್ತು. ಸಿಬಿಎಫ್‌ಸಿ ಮತ್ತು ತಮರಶ್ಶೇರಿ ಡಯಾಸಿಸ್‌ನ ಕ್ಯಾಥೊಲಿಕ್ ಕಾಂಗ್ರೆಸ್ ಎಂಬ ಸಂಘಟನೆಗಳು ಸಲ್ಲಿಸಿದ್ದ ಮೇಲ್ಮನವಿಗಳ ವಿಚಾರಣೆಯನ್ನು ಪೀಠವು ಕೈಗೆತ್ತಿಕೊಂಡಿತ್ತು. ಅಂತರಧರ್ಮೀಯ ವಿವಾಹಗಳನ್ನು ಬೆಂಬಲಿಸಿದ್ದಾರೆ ಎಂದು ಆರೋಪಿಸಿ ತಲಮಶ್ಶೇರಿ ಬಿಷಪ್‌ರನ್ನು ಚಿತ್ರವು ಅವಮಾನಿಸಿದೆ ಎಂದು ಕ್ಯಾಥೊಲಿಕ್ ಕಾಂಗ್ರೆಸ್ ಪ್ರತಿಪಾದಿಸಿತ್ತು. ಮುಸ್ಲಿಮ್ ಯುವಕ ಮತ್ತು ಕ್ರೈಸ್ತ ಯುವತಿ ನಡುವಿನ ಅಂತರಧರ್ಮೀಯ ಪ್ರೇಮ ಕಥೆಯನ್ನು ಬಿಂಬಿಸಿರುವ ಹಾಲ್ ಚಿತ್ರ ನಿಗದಿಯಂತೆ ಸೆ.12ರಂದು ಬಿಡುಗಡೆಗೊಳ್ಳಬೇಕಿತ್ತು. ಆದರೆ ಚಿತ್ರವು ಮುಕ್ತ ಸಾರ್ವಜನಿಕ ಪ್ರದರ್ಶನಕ್ಕೆ ಸೂಕ್ತವಲ್ಲ ಎಂದು ಸಿಬಿಎಫ್‌ಸಿ ನಿರ್ಮಾಣ ಸಂಸ್ಥೆ ಜೆವಿಜೆ ಪ್ರೊಡಕ್ಷನ್ಸ್‌ಗೆ ತಿಳಿಸಿದ ಬಳಿಕ ಚಿತ್ರದ ಬಿಡುಗಡೆಯನ್ನು ಮುಂದೂಡಲಾಗಿತ್ತು. ಬೀಫ್ ಬಿರಿಯಾನಿ ಸೇವನೆಯ ದೃಶ್ಯ ಸೇರಿದಂತೆ ಆರು ಸೂಚಿತ ಕತ್ತರಿ ಪ್ರಯೋಗಗಳು ಮತ್ತು ಮಾರ್ಪಾಡು ಮಾಡಿದ ಬಳಿಕ ಚಿತ್ರಕ್ಕೆ ‘ಎ’ (ವಯಸ್ಕರಿಗೆ ಮಾತ್ರ) ಪ್ರಮಾಣಪತ್ರವನ್ನು ನೀಡಬಹುದು ಎಂದು ಸಿಬಿಎಫ್‌ಸಿ ಹೇಳಿತ್ತು. ಈ ನಿರ್ದೇಶನಗಳ ವಿರುದ್ಧ ಚಿತ್ರದ ನಿರ್ಮಾಪಕರು ಕೇರಳ ಉಚ್ಚ ನ್ಯಾಯಾಲಯದ ಮೆಟ್ಟಿಲೇರಿದ್ದರು. ಸಿಬಿಎಫ್‌ಸಿ ಚಿತ್ರಕ್ಕೆ ಆದೇಶಿಸಿರುವ ನಾಲ್ಕು ಕತ್ತರಿ ಪ್ರಯೋಗಗಳು ಅನಗತ್ಯವಾಗಿವೆ ಎಂದು ಏಕ ನ್ಯಾಯಾಧೀಶರು ತನ್ನ ನ.14ರ ತೀರ್ಪಿನಲ್ಲಿ ಆದೇಶಿಸಿದ್ದರು. ಸಿಬಿಎಫ್‌ಸಿ ಸೂಚಿಸಿದ್ದ ಎರಡು ಕಡಿತಗಳನ್ನು ಸ್ವತಃ ತಾವೇ ಮಾಡಿರುವುದಾಗಿ ಚಿತ್ರ ನಿರ್ಮಾಪಕರು ನ್ಯಾಯಾಲಯಕ್ಕೆ ತಿಳಿಸಿದ್ದರು. ಈ ಪೈಕಿ ಒಂದು ಬೀಫ್ ಬಿರಿಯಾನಿಯನ್ನು ಸೇವಿಸುತ್ತಿರುವ ದೃಶ್ಯಕ್ಕೆ ಸಂಬಂಧಿಸಿದ್ದರೆ,ಇನ್ನೊಂದು ನ್ಯಾಯಾಲಯದ ಕಲಾಪಗಳನ್ನು ಚಿತ್ರಿಸಿತ್ತು.

ವಾರ್ತಾ ಭಾರತಿ 13 Dec 2025 5:28 pm

ಬಡಾ ಗ್ರಾಮ: ಅಭಿವೃದ್ಧಿ ಕಾಮಗಾರಿಗಳ ಗುದ್ದಲಿ ಪೂಜೆ, ಉದ್ಘಾಟನೆ

ಕಾಪು, ಡಿ.13: ಎಲ್ಲೂರು ಗ್ರಾಮದಲ್ಲಿ ಅದಾನಿ ಪವರ್ ಲಿಮಿಟೆಡ್, ಅದಾನಿ ಸಮೂಹದ ಸಿಎಸ್ಆರ್ ಅಂಗವಾದ ಅದಾನಿ ಫೌಂಡೇಶನ್ ನ ಸಹಯೋಗದಲ್ಲಿ, ಬಡಾ ಗ್ರಾಪಂ ವ್ಯಾಪ್ತಿಯಲ್ಲಿ ಸುಮಾರು 17 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿದ ನೂತನ ಮಾರುಕಟ್ಟೆ ಸಂಕೀರ್ಣದ ಉದ್ಘಾಟನೆ, 20 ಲಕ್ಷ ರೂ. ಯೋಜನಾ ವೆಚ್ಚದ ಮಾರುಕಟ್ಟೆ ವಿಸ್ತರಣೆ ಹಾಗೂ ಸಾರ್ವಜನಿಕ ಶೌಚಾಲಯ ನಿರ್ಮಾಣದ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಲಾಯಿತು. ಉದ್ಘಾಟನೆ ಹಾಗೂ ಭೂಮಿಪೂಜೆಯನ್ನು ನೆರವೇರಿಸಿದ ಅದಾನಿ ಸಮೂಹದ ಕಾರ್ಯನಿರ್ವಾಹಕ ನಿರ್ದೇಶಕ ಮತ್ತು ಅಧ್ಯಕ್ಷ ಕಿಶೋರ್ ಆಳ್ವ ಮಾತನಾಡಿ, ಕಳೆದ ಒಂದು ದಶಕದಿಂದ ವಿವಿಧ ಸಿಎಸ್ಆರ್ ಉಪಕ್ರಮಗಳನ್ನು ಅದಾನಿ ಪವರ್ ಲಿಮಿಟೆಡ್ ಸಕ್ರಿಯವಾಗಿ ಕೈಗೆತ್ತಿಕೊಂಡಿದೆ. ಒಟ್ಟು 23 ಕೋಟಿ ರೂ. ಮೌಲ್ಯದ ಮೂಲಸೌಕರ್ಯ ಕಾಮಗಾರಿಗಳನ್ನು ಸುತ್ತಮುತ್ತಲಿನ 7 ಗ್ರಾಪಂಗಳಲ್ಲಿ ಹಂತ ಹಂತವಾಗಿ ಅನುಷ್ಠಾನಗೊಳಿಸಲಾಗುತ್ತಿದೆ. ಬಡಾ ಗ್ರಾಪಂ ವ್ಯಾಪ್ತಿಯಲ್ಲಿ ಈವರೆಗೆ 1.51 ಕೋಟಿ ರೂ. ಮೌಲ್ಯದ ಮೂಲಭೂತ ಸೌಕರ್ಯ ಅಭಿವೃದ್ಧಿ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗಿದೆ. ಕಳೆದ 1 ದಶಕದಲ್ಲಿ ಸಂಸ್ಥೆ ಸಿಎಸ್ಆರ್ ಅನುದಾನದಲ್ಲಿ ಒಟ್ಟು 46 ಕೋಟಿ ರೂ. ವೆಚ್ಚ ಮಾಡಿದ್ದು, ಇದರಲ್ಲಿ ಸುಮಾರು 19 ಕೋಟಿ ಸಮುದಾಯ ಮೂಲಸೌಕರ್ಯ ಅಭಿವೃದ್ಧಿಗೆ ಮೀಸರಿಸಲಾಗಿದೆ ಎಂದರು. ಬಡಾ ಗ್ರಾಪಂ ಅಧ್ಯಕ್ಷ ಶಿವಕುಮಾರ್ ಮೆಂಡನ್, ಸದಸ್ಯರಾದ ಇಂದಿರಾ ಶೆಟ್ಟಿ, ಅಬ್ದುಲ್ ಮಜೀದ್, ಶಕುಂತಲಾ, ನಿರ್ಮಲಾ, ರಜಾಕ್, ಮೋನಿ ಸುವರ್ಣ, ಕಲಾವತಿ, ತಾಪಂ ಮಾಜಿ ಸದ್ಯಸ್ಯ ಯು.ಟಿ.ಶೇಕಬ್ಬ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸತೀಶ, ಪಂಚಾಯತ್ ಸಿಬ್ಬಂದಿ ಶಶಿಕಾಂತ್ ಕುಮಾರ್, ಅದಾನಿ ಪವರ್ ಲಿಮಿಟೆಡ್ ನ ಎದಿಎಂ ರವಿ ಆರ್. ಜೇರೆ ಮತ್ತು ಅದಾನಿ ಫೌಂಡೇಶನ್ ನ ಅನುದೀಪ್ ಉಪಸ್ಥಿತರಿದ್ದರು.

ವಾರ್ತಾ ಭಾರತಿ 13 Dec 2025 5:23 pm

ಉಡುಪಿ | ಎಲ್ಲ ಧರ್ಮಗಳನ್ನು ಅರಿತುಕೊಳ್ಳುವುದು ಅಗತ್ಯ: ಎಸ್ಪಿ ಹರಿರಾಮ್ ಶಂಕರ್

ಉಡುಪಿ, ಡಿ.13: ಎಲ್ಲಾ ಧರ್ಮಗಳ ಆಚರಣೆ ಹಾಗೂ ಸಂಸ್ಕೃತಿಯ ಬಗ್ಗೆ ಅರಿತುಕೊಳ್ಳುವುದರಿಂದ ಸಮಾಜದಲ್ಲಿ ಶಾಂತಿಯ ಸಂದೇಶ ಸಾರಿದಂತಾಗುತ್ತದೆ ಎಂದು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಮ್ ಶಂಕರ್ ಹೇಳಿದ್ದಾರೆ. ಉಡುಪಿ ಧರ್ಮಪ್ರಾಂತ್ಯದ ವತಿಯಿಂದ ಮಾಧ್ಯಮ ಮಿತ್ರರೊಂದಿಗೆ ಶನಿವಾರ ಉಡುಪಿ ಶೋಕಾ ಮಾತಾ ಇಗರ್ಜಿಯ ಹಾಲ್ನಲ್ಲಿ ಆಯೋಜಿಸ ಲಾದ ಕ್ರಿಸ್ಮಸ್ ಸ್ನೇಹ ಕೂಟ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಎಲ್ಲಾ ಸಮುದಾಯದವರೂ ಜೊತೆಯಾಗಿ ಸೇರಿಕೊಂಡು ಆಚರಿಸುವ ಹಬ್ಬ ಕ್ರಿಸ್ಮಸ್ ಆಗಿದ್ದು, ಸಮಾಜದ ಏಕತೆಯನ್ನು ಗಟ್ಟಿಗೊಳಿಸುವುದು ವಿಶ್ವದ ಎಲ್ಲಾ ಧರ್ಮಗಳ ಮೂಲ ಉದ್ದೇಶವಾಗಿದೆ. ಸಮಾಜವನ್ನು ಒಗ್ಗೂಡಿಸುವಲ್ಲಿ ಧರ್ಮಕ್ಕೆ ಮಹತ್ವದ ಪಾತ್ರವಿದೆ. ಧರ್ಮ ಜನರನ್ನು ಧರ್ಮ, ಸಾಮಾಜಿಕ, ಆಧ್ಯಾತ್ಮಿಕವಾಗಿ ಪ್ರಭಾವಿತಗೊಳಿಸುತ್ತದೆ. ಪ್ರತಿಯೊಂದು ಧರ್ಮ ಸಮಾಜದಲ್ಲಿ ಒಗ್ಗಟ್ಟಿನ ಭಾವನೆ ಮೂಡಿಸುತ್ತದೆ ಈ ಮೂಲಕ ಬಲಿಷ್ಠ ಭಾರತ ನಿರ್ಮಾಣದಲ್ಲಿ ಪ್ರತಿಯೊಬ್ಬರು ಕೈಜೋಡಿಸಬೇಕು ಎಂದರು. ಅಧ್ಯಕ್ಷತೆಯನ್ನು ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಅತಿ ವಂ.ಡಾ.ಜೆರಾಲ್ಡ್ ಐಸಾಕ್ ಲೋಬೊ ವಹಿಸಿ ಮಾತನಾಡಿ, ಕ್ರಿಸ್ಮಸ್ ಪ್ರೀತಿ, ಶಾಂತಿ ಹಾಗೂ ಸಾಮರಸ್ಯದ ಹಬ್ಬವಾಗಿದೆ. ನಾವೆಲ್ಲ ಶಾಂತಿಯ ಸಾಧನಗಳಾಗಬೇಕು. ಅಶಾಂತಿ, ದ್ವೇಷದ ವಾತಾವರಣ ಇರುವಲ್ಲಿ ಶಾಂತಿಯನ್ನು ನೆಲೆಸಲು ಶ್ರಮಿಸಬೇಕು. ಮಾಧ್ಯಮಗಳ ಮೂಲಕ ಸಮಾಜದಲ್ಲಿ ಶಾಂತಿ ನೆಲೆಸುವಂತೆ ಮಾಡಲು ಸಾಧ್ಯ ಇದೆ ಎಂದು ತಿಳಿಸಿದರು. ಜಗತ್ತಿನಲ್ಲಿ ನಡೆಯುತ್ತಿರುವ ವಿದ್ಯಾಮಾನಗಳಿಗೆ ಪ್ರತಿಯಾಗಿ ನಾವೆಲ್ಲ ಪ್ರೀತಿ ಹರಿಕಾರರಾಗಬೇಕು. ದ್ವೇಷವನ್ನು ಪ್ರೀತಿಯ ಮೂಲಕ ಸೋಲಿಸಬೇಕು. ಇದು ಇಂದಿನ ಅಗತ್ಯವಾಗಿದೆ. ಪ್ರೀತಿಯಿಂದ ಮನಸ್ಸು ಗೆಲ್ಲಲು ಸಾಧ್ಯ ಎಂದು ಅವರು ಅಭಿಪ್ರಾಯ ಪಟ್ಟರು. ಭೂಲೋಕದಲ್ಲಿ ಶಾಂತಿಗಾಗಿ ಶ್ರಮಿಸಿದವರು ಭಾಗ್ಯವಂತರು ಎಂದು ಯೇಸು ಸ್ವಾಮಿ ಸಾರಿದ್ದರು ಅವರ ಸಂದೇಶದಂತೆ ಬದುಕಿ ಬಾಳಬೇಕು ಎಂದರು. ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ನೂತನವಾಗಿ ಆಯ್ಕೆಯಾದ ಪದಾಧಿಕಾರಿಗಳನ್ನು ಗೌರವಿಸಲಾಯಿತು. ಎಂಸಿಸಿ ಬ್ಯಾಂಕ್ ಅಧ್ಯಕ್ಷರಾದ ಅನಿಲ್ ಲೋಬೊ, ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಸುಬ್ರಹ್ಮಣ್ಯ ಜಿ.ಕುರ್ಯ ಶುಭ ಹಾರೈಸಿದರು. ಉಡುಪಿ ಧರ್ಮಪ್ರಾಂತ್ಯದ ಶ್ರೇಷ್ಠಗುರು ಮೊನ್ಸಿಂಜ್ಞೊರ್ ಫರ್ಡಿನಾಂಡ್ ಗೊನ್ಸಾಲ್ವಿಸ್, ಕುಲಪತಿ ವಂಂಸ್ಟೀವನ್ ಡಿಸೋಜ ಉಪಸ್ಥಿತರಿದ್ದರು. ಉಡುಪಿ ಧರ್ಮಪ್ರಾಂತ್ಯದ ಸಾರ್ವಜನಿಕ ಸಂಪರ್ಕಾಧಿಕಾರಿ ವಂ.ಡೆನಿಸ್ ಡೆಸಾ ಸ್ವಾಗತಿಸಿದರು. ಮಾಧ್ಯಮ ಸಂಚಾಲಕ ಮೈಕಲ್ ರೊಡ್ರಿಗಸ್ ವಂದಿಸಿದರು. ಲೆಸ್ಲಿ ಆರೋಝಾ ಕಾರ್ಯಕ್ರಮ ನಿರೂಪಿಸಿದರು.

ವಾರ್ತಾ ಭಾರತಿ 13 Dec 2025 5:18 pm

ಬೆಂಗಳೂರಿನಲ್ಲಿ 2ನೇ ವಿಮಾನ ನಿಲ್ದಾಣ | ಕಾರ್ಯಸಾಧ್ಯತಾ ವರದಿಗೆ ಟೆಂಡರ್ ಆಹ್ವಾನ : ಎಂ.ಬಿ.ಪಾಟೀಲ್‌

ಬೆಂಗಳೂರು : ರಾಜಧಾನಿಯ ಸಮೀಪ 2ನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಿಸುವ ಸಂಬಂಧ ಸ್ಥಳದ ಅನುಕೂಲ ಮತ್ತು ತಾಂತ್ರಿಕ ಹಾಗೂ ಆರ್ಥಿಕ ಕಾರ್ಯಸಾಧ್ಯತಾ ವರದಿ ಸಿದ್ಧಪಡಿಸಲು ಪರಿಣತ ಸಲಹಾ ಸಂಸ್ಥೆಯ ಆಯ್ಕೆಗಾಗಿ ರಾಜ್ಯ ಕೈಗಾರಿಕಾ ಮತ್ತು ಮೂಲಸೌಲಭ್ಯ ಅಭಿವೃದ್ಧಿ ನಿಗಮವು (ಕೆಎಸ್ಐಐಡಿಸಿ) ಟೆಂಡರ್ ಆಹ್ವಾನಿಸಿದ್ದು, ಅರ್ಜಿ ಸಲ್ಲಿಸಲು 2026ರ ಜನವರಿ 12 ಕೊನೆಯ ದಿನವಾಗಿದೆ ಎಂದು ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ.ಪಾಟೀಲ್‌ ಅವರು ಶನಿವಾರ ತಿಳಿಸಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿರುವ ಅವರು, 2ನೇ ವಿಮಾನ ನಿಲ್ದಾಣಕ್ಕಾಗಿ ರಾಜ್ಯ ಸರಕಾರವು ಕನಕಪುರ ರಸ್ತೆಯಲ್ಲಿರುವ ಚೂಡಹಳ್ಳಿ, ಸೋಮನಹಳ್ಳಿ ಮತ್ತು ನೆಲಮಂಗಲದ ಬಳಿ ಸ್ಥಳಗಳನ್ನು ಗುರುತಿಸಿದೆ. ಭಾರತೀಯ ವಿಮಾನನಿಲ್ದಾಣ ಪ್ರಾಧಿಕಾರದ ಉನ್ನತ ಮಟ್ಟದ ತಂಡವು ಇವುಗಳ ಪರಿಶೀಲನೆ ನಡೆಸಿ ಪ್ರಾಥಮಿಕ ವರದಿ ನೀಡಿದೆ. ಈಗ ಟೆಂಡರಿನಲ್ಲಿ ಆಯ್ಕೆಯಾಗುವ ಸಲಹಾ ಸಂಸ್ಥೆಯು 5 ತಿಂಗಳಲ್ಲಿ ಸರಕಾರಕ್ಕೆ ತನ್ನ ಸಮಗ್ರ ತಾಂತ್ರಿಕ ಮತ್ತು ಆರ್ಥಿಕ ಕಾರ್ಯಸಾಧ್ಯತಾ ವರದಿ ಕೊಡಬೇಕಾಗುತ್ತದೆ ಎಂದಿದ್ದಾರೆ. ಕಳೆದ 5 ವರ್ಷಗಳಲ್ಲಿ ವಾರ್ಷಿಕವಾಗಿ 250 ಕೋಟಿ ರೂ. ಮೊತ್ತದ ಕೆಲಸಗಳನ್ನು ನಿರ್ವಹಿಸಿರುವಂಥ ಮತ್ತು ಸದರಿ ಕ್ಷೇತ್ರದಲ್ಲಿ ಕನಿಷ್ಠ ಪಕ್ಷ ಐದು ಯೋಜನೆಗಳನ್ನಾದರೂ ನಿರ್ವಹಿಸಿರುವ/ಸಲಹಾ ವರದಿ ನೀಡಿರುವಂತಹ ಸಂಸ್ಥೆಗಳು ಟೆಂಡರ್ ನಲ್ಲಿ ಭಾಗವಹಿಸಬಹುದು. ಟೆಂಡರ್ ನಲ್ಲಿ ಆಯ್ಕೆಯಾಗುವ ಸಂಸ್ಥೆಯು ನಾವು ಸೂಚಿಸುತ್ತಿರುವ ಮೂರೂ ಸ್ಥಳಗಳ ಮಳೆ ಪ್ರಮಾಣ, ಭೂಲಕ್ಷಣ, ವಿದ್ಯುತ್, ನೀರು, ಒಳಚರಂಡಿ, ತ್ಯಾಜ್ಯ ನಿರ್ವಹಣೆಯಂಥ ಮೂಲಸೌಕರ್ಯಗಳು, ಸುತ್ತಮುತ್ತಲಿನ ಜನಸಂಖ್ಯೆ, ಅಭಿವೃದ್ಧಿ, ಶಬ್ದ ಮತ್ತು ವಿಮಾನ ನಿಲ್ದಾಣದಿಂದ ಉಂಟಾಗುವ ಮಾಲಿನ್ಯ ಇತ್ಯಾದಿಗಳತ್ತ ಗಮನ ಹರಿಸಲಿದೆ ಎಂದು ಅವರು ಹೇಳಿದ್ದಾರೆ. ಇದಲ್ಲದೆ ಉದ್ದೇಶಿತ 2ನೇ ವಿಮಾನ ನಿಲ್ದಾಣ ಅಭಿವೃದ್ಧಿಗೆ ತಗುಲುವ ವೆಚ್ಚ, ಅಗತ್ಯ ಇರುವ ಭೂಮಿ, ರಕ್ಷಣಾ ಸಚಿವಾಲಯ ಮತ್ತು ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) ಸೇರಿದಂತೆ ಹಲವು ಕಡೆಗಳಿಂದ ಪಡೆಯಬೇಕಾಗುವ ಅನುಮೋದನೆಗಳ ವಿವರಗಳು ಮುಂತಾದವನ್ನೂ ಈ ಕಾರ್ಯಸಾಧ್ಯತಾ ವರದಿಯಲ್ಲಿ ನೀಡಬೇಕಾಗುತ್ತದೆ. ಮತ್ತೊಂದು ವಿಮಾನ ನಿಲ್ದಾಣ ನಿರ್ಮಾಣದಿಂದ ಇಲ್ಲಿನ ಕೈಗಾರಿಕೆ, ಪ್ರವಾಸೋದ್ಯಮ, ಜನರ ಓಡಾಟ ಇತ್ಯಾದಿ ಅಂಶಗಳನ್ನೂ ಅದು ವಿವರಿಸಲಿದೆ ಎಂದು ಅವರು ನುಡಿದಿದ್ದಾರೆ. ಉದ್ದೇಶಿತ ವಿಮಾನ ನಿಲ್ದಾಣಕ್ಕೆ ಹಾಲಿ ಇರುವ ವಿವಿಧ ರೀತಿಯ ಸಂಪರ್ಕ, ವಿಮಾನ ನಿಲ್ದಾಣ ನಿರ್ಮಾಣ ನಂತರ ಏನೆಲ್ಲ ಮೂಲಸೌಕರ್ಯ ಅಭಿವೃದ್ಧಿಪಡಿಸಬೇಕು ಎಂಬುದರ ಬಗ್ಗೆಯೂ ಸಲಹಾ ಸಂಸ್ಥೆ ಅಧ್ಯಯನ ನಡೆಸಲಿದೆ. ಇದಲ್ಲದೆ, ಸರಕು ಸಾಗಣೆ ಮತ್ತು ಪ್ರಯಾಣಿಕ ಸೇವೆಗಳು ಹಾಗೂ ಅದರಿಂದಾಗುವ ಆರ್ಥಿಕ ಕಾರ್ಯಸಾಧ್ಯತೆ ಬಗ್ಗೆಯೂ ಅಧ್ಯಯನ ನಡೆಸಬೇಕಾಗಿದೆ. ಒಟ್ಟಿನಲ್ಲಿ ಮೂರೂ ಸ್ಥಳಗಳ ಬಗ್ಗೆ ಅಧ್ಯಯನ ನಡೆಸಿ, ಯಾವುದು ಹೆಚ್ಚು ಸೂಕ್ತ‌ ಎನ್ನುವ ಅಭಿಪ್ರಾಯ ಕೂಡ ಸಲಹಾ ಸಂಸ್ಥೆ ನೀಡಲಿದೆ ಎಂದು ಅವರು ಹೇಳಿದರು. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಈಗ ದಟ್ಟಣೆಯಲ್ಲಿ ದೇಶದಲ್ಲೇ 2ನೇ ಸ್ಥಾನದಲ್ಲಿದೆ. 2033ರ ಹೊತ್ತಿಗೆ ನಾವು ಮತ್ತೊಂದು ವಿಮಾನ ನಿಲ್ದಾಣ ಹೊಂದಬೇಕಾಗಿದೆ. ಮುಂದಾಲೋಚನೆಯನ್ನು ಇಟ್ಟುಕೊಂಡು ಈಗಿನಿಂದಲೇ ಪ್ರಯತ್ನಗಳನ್ನು ಆರಂಭಿಸಲಾಗಿದೆ. ಈಗಾಗಲೇ ಹೊಸದೆಹಲಿ ಮತ್ತು ಮುಂಬೈ ನಗರಗಳು ಎರಡೆರಡು ವಿಮಾನ ನಿಲ್ದಾಣ ಹೊಂದಿವೆ. ಕಾರ್ಯಸಾಧ್ಯತಾ ವರದಿ ಬಂದ ನಂತರ ಮುಂದಿನ ಹೆಜ್ಜೆ ಏನಿರಬೇಕೆಂದು ನಿರ್ಧರಿಸಲಾಗುವುದು ಎಂದು  ವಿವರಿಸಿದ್ದಾರೆ.

ವಾರ್ತಾ ಭಾರತಿ 13 Dec 2025 5:07 pm

ಯಾವನೇ ಆಗಿರಲಿ, ಸರ್ಕಾರಕ್ಕೆ ಎಚ್ಚರಿಕೆ ನೀಡಲು ಆಗುವುದಿಲ್ಲ: ಡಿ ಕೆ ಶಿವಕುಮಾರ್‌ ವಾರ್ನಿಂಗ್‌ ಕೊಟ್ಟಿದ್ದು ಯಾರಿಗೆ?

ಬೆಂಗಳೂರು, ಡಿಸೆಂಬರ್‌ 13: ರಾಜ್ಯದಲ್ಲಿ ಅಪಾರ್ಟ್‌ಮೆಂಟ್‌ಗಳಲ್ಲಿ ವಾಸಿಸುವ ಲಕ್ಷಾಂತರ ನಿವಾಸಿಗಳ ಸಮಸ್ಯೆಗಳು, ಹಕ್ಕುಗಳು ಹಾಗೂ ಆಡಳಿತ ವ್ಯವಸ್ಥೆ ಕುರಿತು ಚರ್ಚಿಸಲು ಉಪಮುಖ್ಯಮಂತ್ರಿ ಹಾಗೂ ಬೆಂಗಳೂರು ಅಭಿವೃದ್ಧಿ ಸಚಿವ ಡಿ.ಕೆ. ಶಿವಕುಮಾರ್ ಅವರು ಅಪಾರ್ಟ್‌ಮೆಂಟ್ ಅಸೋಸಿಯೇಷನ್‌ಗಳೊಂದಿಗೆ ಮಹತ್ವದ ಸಭೆ ನಡೆಸಿದರು. ಈ ಸಭೆಯಲ್ಲಿ ಕಿರಣ್‌ ಹೆಬ್ಬಾರ್‌ ಗೆ ಡಿಸಿಎಂ ಡಿ ಕೆ ಶಿವಕುಮಾರ್‌ ಖಡಕ್‌ ವಾರ್ನಿಂಗ್‌ ನೀಡಿದ್ದಾರೆ. ಈ

ಒನ್ ಇ೦ಡಿಯ 13 Dec 2025 5:07 pm

ಮಂಗಳೂರು ವಿವಿ ವಾಣಿಜ್ಯ ವಿಭಾಗದಲ್ಲಿ ಜಿಎಸ್‌ಟಿ ಕುರಿತ ಕಾರ್ಯಗಾರ

ಕೊಣಾಜೆ: ಮಂಗಳೂರು ವಿವಿಯ ವಾಣಿಜ್ಯ ವಿಭಾಗದ ಯೂನಿಯನ್ ಬ್ಯಾಂಕ್ ಚೇರ್ ವತಿಯಿಂದ ವಿದ್ಯಾರ್ಥಿಗಳಿಗೆ ಜಿಎಸ್ಟಿ ಕುರಿತು ಒಂದು ದಿನದ ಕಾರ್ಯಗಾರ ಇತ್ತೀಚೆಗೆ ನಡೆಯಿತು. ಮಂಗಳೂರಿನ ನಿತಿನ್ ಜೆ. ಶೆಟ್ಟಿ ಅಂಡ್ ಕೋ. ಚಾರ್ಟೆಡ್ ಅಕೌಂಟ್ಡ್ ಕಂಪೆನಿಯ ಸಿಎ ಲಕ್ಷ್ಮಿ ವಿಶ್ವನಾಥ ಮತ್ತು ಸ್ಮಿತಾ ಪಿ. ಸಂಪನ್ಮೂಲ ವ್ಯಕ್ತಿಗಳಾಗಿ ಮಾಹಿತಿ ನೀಡಿದರು. ಪ್ರಾಧ್ಯಾಪಕರಾದ ಪ್ರೊ.ಪರಮೇಶ್ವರ ಜಿಎಸ್‌ಟಿ ಪ್ರಾಯೋಗಿಕ ಅವಶ್ಯಕತೆಗಳ ಕುರಿತು ಮಾತನಾಡಿದರು. ವಾಣಿಜ್ಯ ವಿಭಾಗದ ಮುಖ್ಯಸ್ಥರಾದ ಪ್ರೊ. ಪ್ರೀತಿ ಕೀರ್ತಿ ಡಿಸೋಜಾ ಅಧ್ಯಕ್ಷತೆ ವಹಿಸಿದ್ದರು. ವಾಣಿಜ್ಯ ವಿಭಾಗದ ಉಪನ್ಯಾಸಕರಾದ ಡಾ. ದಿನಕರ ಕೆಂಜೂರು, ಡಾ. ರಮ್ಯ ಕೆ.ಆರ್. ವೈಶಾಲಿ ಕೆ. ಮತ್ತು ಸಿ. ಲಹರಿ ಹಾಜರಿದ್ದರು. ಮೋಕ್ಷಿತ ಎಂ. ತಂಡದವರು ಪ್ರಾರ್ಥಿಸಿದರು. ಪ್ರಿನ್ಸನ್ ಡಿಸೋಜಾ ಸ್ವಾಗತಿಸಿದರು. ದೀಕ್ಷಾ ಎನ್. ಭಟ್ ವಂದಿಸಿದರು. ಸಜೀಲಾ ಕೆ. ಕಾರ್ಯಕ್ರಮ ನಿರೂಪಿಸಿದರು.

ವಾರ್ತಾ ಭಾರತಿ 13 Dec 2025 5:01 pm

ಯಾರೋ ಕಿರಣ್ ಹೆಬ್ಬಾರ್ ಅಂತೆ, ಪಿಎಂಗೂ ಹೆದರದೇ ಜೈಲಿಗೆ ಹೋಗಿ ಬಂದವನು ನಾನು: ಡಿಕೆ ಶಿವಕುಮಾರ್

DK Shivakumar speech in Apartment Association : ಕರ್ನಾಟಕ ಅಪಾರ್ಟ್ಮೆಂಟ್ ಅಸೋಸಿಯೇಷನ್ ಪ್ರತಿನಿಧಿಗಳೊಂದಿಗೆ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸಂವಾದವನ್ನು ನಡೆಸಿದರು. ಆ ವೇಳೆ, ದೇಶದ ಗೃಹ ಸಚಿವರಿಗೆ ಹೆದರದವನು ನಾನು, ಯಾರೋ ಕಿರಣ್ ಹೆಬ್ಬಾರ್ ಎನ್ನುವ ವ್ಯಕ್ತಿಗೆ ಹೆದುರುತ್ತೇನಾ ಎಂದು ಪ್ರಶ್ನಿಸಿದ್ದಾರೆ.

ವಿಜಯ ಕರ್ನಾಟಕ 13 Dec 2025 4:57 pm

ಕೋಲ್ಕತ್ತಾ ಮೆಸ್ಸಿ ಕಾರ್ಯಕ್ರಮದಲ್ಲಿ ಭಾರೀ ರಾದ್ದಾಂತ: ಮುಖ್ಯ ಸಂಘಟಕನನ್ನು ಬಂಧಿಸಿದ ಪೊಲೀಸರು, ಟಿಕೆಟ್ ಹಣ ವಾಪಸ್!

ಅರ್ಜೆಂಟೀನಾದ ಫುಟ್ಬಾಲ್ ದಂತಕಥೆ ಲಿಯೋನೆಲ್ ಮೆಸ್ಸಿ ಅವರ ಕೋಲ್ಕತ್ತಾ ಭೇಟಿ ವೇಳೆ ಸಾಲ್ಟ್ ಲೇಕ್ ಸ್ಟೇಡಿಯಂನಲ್ಲಿ ಭಾರಿ ದಾಂಧಲೆ ಏರ್ಪಟ್ಟಿದೆ. ಅಭಿಮಾನಿಗಳ ಆಕ್ರೋಶ ಮತ್ತು ಗದ್ದಲದ ನಂತರ ಪೊಲೀಸರು ಕಾರ್ಯಕ್ರಮದ ಮುಖ್ಯ ಸಂಘಟಕನನ್ನು ಬಂಧಿಸಿದ್ದಾರೆ. ಅಭಿಮಾನಿಗಳಿಗೆ ಟಿಕೆಟ್ ಹಣವನ್ನು ಹಿಂತಿರುಗಿಸುವುದಾಗಿ ಭರವಸೆ ನೀಡಿದ್ದಾರೆ. ಈ ಘಟನೆಯನ್ನು ರಾಜ್ಯಪಾಲ ಸಿವಿ ಆನಂದ ಬೋಸ್ ಅವರು 'ಕ್ರೀಡಾಪ್ರೇಮಿಗಳ ಪಾಲಿಗೆ ಕತ್ತಲ ದಿನ' ಎಂದು ಬಣ್ಣಿಸಿದ್ದು, ಪೊಲೀಸರ ವೈಫಲ್ಯದ ಬಗ್ಗೆ ತೀವ್ರ ಕಿಡಿಕಾರಿದ್ದಾರೆ.

ವಿಜಯ ಕರ್ನಾಟಕ 13 Dec 2025 4:46 pm

ನರೇಗಾ ಮರುನಾಮಕರಣ, ಕೆಲಸದ ದಿನಗಳನ್ನು 100ರಿಂದ 125ಕ್ಕೆ ಹೆಚ್ಚಿಸಲು ಕೇಂದ್ರದ ಯೋಜನೆ; ವರದಿ

ಹೊಸದಿಲ್ಲಿ: ಕೇಂದ್ರ ಸರಕಾರವು ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಯೋಜನೆಯನ್ನು(ನರೇಗಾ) ಪರಿಷ್ಕರಿಸುವ ಮತ್ತು ಕೆಲಸದ ದಿನಗಳನ್ನು 100ರಿಂದ 125ಕ್ಕೆ ಹೆಚ್ಚಿಸುವ ಸಾಧ್ಯತೆಯಿದೆ ಎಂದು indianexpress.com ವರದಿ ಮಾಡಿದೆ. ವರದಿಯ ಪ್ರಕಾರ ನರೇಗಾಕ್ಕೆ ‘ಪೂಜ್ಯ ಬಾಪು ರೋಜಗಾರ್ ಯೋಜನಾ’ ಎಂದು ಮರುನಾಮಕರಣ ಮಾಡಲಾಗುವುದು. ಶುಕ್ರವಾರ ಕೇಂದ್ರ ಸಂಪುಟ ಸಭೆಯಲ್ಲಿ ಈ ಪ್ರಸ್ತಾವವನ್ನು ಚರ್ಚಿಸಲಾಗಿದೆ. ಗ್ರಾಮೀಣ ಕುಟುಂಬಗಳ ಜೀವನೋಪಾಯ ಭದ್ರತೆಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿರುವ ನರೇಗಾ ಯೋಜನೆಯನ್ನು 2005ರಲ್ಲಿ ಆಗಿನ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರವು ಜಾರಿಗೊಳಿಸಿತ್ತು. ಯೋಜನೆಯು ದೇಶದ ಎಲ್ಲ ಜಿಲ್ಲೆಗಳಲ್ಲಿ ಪ್ರತಿ ಗ್ರಾಮೀಣ ಕುಟುಂಬಕ್ಕೆ ವಾರ್ಷಿಕ 100 ದಿನಗಳ ಕೌಶಲ್ಯರಹಿತ ಕೆಲಸವನ್ನು ಖಚಿತಪಡಿಸಿದೆ. ಯೋಜನೆಯ ವೆಚ್ಚವನ್ನು ಕೇಂದ್ರ ಮತ್ತು ರಾಜ್ಯಸರಕಾರಗಳು ಭರಿಸುತ್ತವೆ. ನರೇಗಾ ಯೋಜನೆಯನ್ನು ‘ಪೂಜ್ಯ ಬಾಪು ಗ್ರಾಮೀಣ ರೋಜಗಾರ್ ಖಾತರಿ ಮಸೂದೆ ’ಎಂದು ಬದಲಿಸುವ ಕರಡು ಶಾಸನವನ್ನು ಸಂಪುಟವು ಅನುಮೋದಿಸಿದೆ ಮತ್ತು ಪ್ರಸಕ್ತ ನಡೆಯುತ್ತಿರುವ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಅದನ್ನು ಮಂಡಿಸಲಾಗುವುದು ಎಂದು ಅನಾಮಿಕ ಅಧಿಕಾರಿಗಳನ್ನು ಉಲ್ಲೇಖಿಸಿ ಸುದ್ದಿಸಂಸ್ಥೆಯು ವರದಿ ಮಾಡಿದೆ. ಶುಕ್ರವಾರ ಸಚಿವ ಸಂಪುಟದ ಸಭೆಯ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಕೇಂದ್ರ ಸಚಿವ ಅಶ್ವಿನಿ ವೈಷ್ಣವ ಅವರು ಒದಗಿಸಿದ್ದ ಅನುಮೋದಿತ ಪ್ರಸ್ತಾವಗಳ ಪಟ್ಟಿಯಲ್ಲಿ ಈ ಮಸೂದೆ ಸೇರಿರಲಿಲ್ಲ. ಯೋಜನೆಯಡಿ ಗರಿಷ್ಠ ಕೆಲಸದ ದಿನಗಳನ್ನು ಹೆಚ್ಚಿಸುವಂತೆ ಹಲವಾರು ರಾಜ್ಯಗಳು ಆಗ್ರಹಿಸಿವೆ. ನರೇಗಾದಡಿ ದಿನದ ವೇತನವನ್ನು ಕನಿಷ್ಠ 400 ರೂ.ಗಳಿಗೆ ಮತ್ತು ಖಾತರಿ ಪಡಿಸಿದ ಕೆಲಸದ ದಿನಗಳ ಸಂಖ್ಯೆಯನ್ನು ಕನಿಷ್ಠ 150ಕ್ಕೆ ಹೆಚ್ಚಿಸುವಂತೆ ಕಳೆದ ಎಪ್ರಿಲ್‌ನಲ್ಲಿ ಸಂಸದೀಯ ಸ್ಥಾಯಿ ಸಮಿತಿಯು ಕೇಂದ್ರ ಸರಕಾರವನ್ನು ಒತ್ತಾಯಿಸಿತ್ತು. ಪ್ರಸ್ತುತ ನರೇಗಾದಡಿ ದಿನಗೂಲಿಯು ವಿವಿಧ ರಾಜ್ಯಗಳಲ್ಲಿ 241 ರೂ.ಗಳಿಂದ 400 ರೂ.ವರೆಗಿದೆ. ಕಾನೂನು 100 ದಿನಗಳ ಕೆಲಸವನ್ನು ಖಚಿತಪಡಿಸಿದೆಯಾದರೂ 2024-25ರ ವಿತ್ತವರ್ಷದಲ್ಲಿ ಯೋಜನೆಯಡಿ ಪ್ರತಿ ಕುಟುಂಬಕ್ಕೆ ಒದಗಿಸಲಾದ ಸರಾಸರಿ ಕೆಲಸದ ದಿನಗಳು 50 ಮಾತ್ರ ಆಗಿದ್ದವು. ಪ್ರತಿಪಕ್ಷಗಳ ಟೀಕೆ ಪ್ರಧಾನಿ ನರೇಂದ್ರ ಮೋದಿಯವರು ಒಮ್ಮೆ ಕಾಂಗ್ರೆಸ್‌ನ ‘ವೈಫಲ್ಯಗಳ ಕಂತೆ ’ಎಂದು ಕರೆದಿದ್ದ ನರೇಗಾ ಯೋಜನೆ ಗ್ರಾಮೀಣ ಭಾರತದ ಜೀವನಾಡಿಯಾಗಿದೆ ಎನ್ನುವುದು ಸಾಬೀತಾಗಿದೆ ಎಂದು ಹೇಳಿದ ಕಾಂಗ್ರೆಸ್ ನಾಯಕಿ ಸುಪ್ರಿಯಾ ಶ್ರೀನೇತ ಅವರು,ಮೋದಿಯವರಿಗೆ ಕಾಂಗ್ರೆಸ್ ಯೋಜನೆಗಳ ಹೆಸರುಗಳನ್ನು ಬದಲಾಯಿಸುವ ಮತ್ತು ಅವುಗಳನ್ನು ತಮ್ಮದೇ ಎಂದು ಹೇಳಿಕೊಳ್ಳುವ ಹಾಗೂ ಅದನ್ನು ಪ್ರಚಾರಕ್ಕಾಗಿ ಬಳಸಿಕೊಳ್ಳುವ ಹಳೆಯ ಅಭ್ಯಾಸವಿದೆ. ಕಳೆದ 11 ವರ್ಷಗಳಿಂದಲೂ ಅದನ್ನೇ ಅವರು ಮಾಡುತ್ತಿದ್ದಾರೆ ಎಂದು ಟೀಕಿಸಿದರು.  ನರೇಗಾದಿಂದ ‘ಮಹಾತ್ಮಾ’ಪದವನ್ನು ಅಳಿಸಿಹಾಕುವ ಸರಕಾರದ ನಿರ್ಧಾರವು ಕೇವಲ ಆಡಳಿತಾತ್ಮಕ ಪರಿಷ್ಕರಣೆಯಲ್ಲ,ಅದು ‘ಸೈದ್ಧಾಂತಿಕವಾಗಿ ಪ್ರೇರಿತ ಕೃತ್ಯ’ವಾಗಿದೆ ಎಂದು ಕಿಡಿಕಾರಿರುವ ತೃಣಮೂಲ ಕಾಂಗ್ರೆಸ್,ಈ ನಿರ್ಧಾರವು ಬಂಗಾಳದ ಸಂಸ್ಕೃತಿ ಮತ್ತು ಬೌದ್ಧಿಕ ಪರಂಪರೆಯತ್ತ ಬಿಜೆಪಿಯ ದೀರ್ಘಕಾಲೀನ ದ್ವೇಷವನ್ನು ಬಹಿಗರಂಗಗೊಳಿಸಿದೆ. ಗಾಂಧಿಯವರಿಗೆ ‘ಮಹಾತ್ಮಾ’ ಬಿರುದನ್ನು ರವೀಂದ್ರನಾಥ ಟಾಗೋರ್ ಅವರು ಜನಪ್ರಿಯಗೊಳಿಸಿದ್ದರು,ತನ್ಮೂಲಕ ಅದನ್ನು ಭಾರತದ ನೈತಿಕ ಶಬ್ದಕೋಶದ ಭಾಗವಾಗಿಸಿದ್ದರು. ಅದನ್ನು ಅಳಿಸುವುದು ಭಾರತವು ಸ್ವಾತಂತ್ರ್ಯವನ್ನು ಸ್ಮರಿಸುವ ರೀತಿಯನ್ನು ಮರುರೂಪಿಸುತ್ತದೆ ಎಂದಿದೆ.

ವಾರ್ತಾ ಭಾರತಿ 13 Dec 2025 4:35 pm

ಇಟಲಿಯ ಖ್ಯಾತ ಫ್ಯಾಷನ್‌ ಬ್ರ್ಯಾಂಡ್‌ ಪ್ರಾಡಾದಿಂದ ಮೇಡ್‌ ಇಂಡಿಯಾ ಕೊಲ್ಹಾಪುರಿ ಚಪ್ಪಲಿ ಬಿಡುಗಡೆ; ಇದರ ಬೆಲೆ ಕೇವಲ 84,000 ರೂ.!

ಪ್ರಖ್ಯಾತ ಐಷಾರಾಮಿ ಬ್ರ್ಯಾಂಡ್ ಪ್ರಾಡಾ, ಕೊಲ್ಹಾಪುರಿ ಚಪ್ಪಲಿಗಳ ವಿವಾದದ ಬಳಿಕ, ಮಹಾರಾಷ್ಟ್ರ ಹಾಗೂ ಕರ್ನಾಟಕದ ನುರಿತ ಕುಶಲಕರ್ಮಿಗಳೊಂದಿಗೆ ಕೈಜೋಡಿಸಿದೆ. ಫೆಬ್ರವರಿ 2026 ರಿಂದ ವಿಶ್ವದಾದ್ಯಂತ ಮಾರುಕಟ್ಟೆಗೆ ಬರಲಿರುವ ಈ ವಿಶೇಷ ಚಪ್ಪಲಿಗಳು ಭಾರತದಲ್ಲೇ ತಯಾರಾಗಲಿದ್ದು, ಸ್ಥಳೀಯ ಕುಶಲಕರ್ಮಿಗಳಿಗೆ ತರಬೇತಿ ಹಾಗೂ ಉದ್ಯೋಗದ ಹೊಸ ದಾರಿ ತೆರೆಯಲಿವೆ. ಇದು ಭಾರತೀಯ ಕರಕುಶಲತೆಗೆ ಸಿಗುವ ಮಹತ್ವದ ಜಾಗತಿಕ ಗೌರವವಾಗಿದೆ.

ವಿಜಯ ಕರ್ನಾಟಕ 13 Dec 2025 4:33 pm

ಬೇಲೂರು | ಕಣಗುಪ್ಪೆ ಗ್ರಾಮದಲ್ಲಿ ಕಾಡಾನೆ ಹಾವಳಿ: ಕಾಫಿ, ಮೆಣಸು, ಅಡಿಕೆ ಬೆಳೆಗೆ ಹಾನಿ

ಬೇಲೂರು: ತಾಲೂಕಿನ ಕಣಗುಪ್ಪೆ ಗ್ರಾಮದಲ್ಲಿ ಕಾಡಾನೆಗಳ ಹಾವಳಿ ತೀವ್ರವಾಗಿದ್ದು, ತೋಟಗಳಿಗೆ ನುಗ್ಗಿ ಕಾಫಿ, ಮೆಣಸು ಹಾಗೂ ಅಡಿಕೆ ಬೆಳೆಗಳಿಗೆ ಹಾನಿಯುಂಟು ಮಾಡಿದೆ. ಗ್ರಾಮದ ದಯಾನಂದ ಎಂಬ ರೈತನ ತೋಟಕ್ಕೆ ತಡರಾತ್ರಿ ಕಾಡಾನೆ ನುಗ್ಗಿ ಕಾಫಿ, ಮೆಣಸು ಹಾಗೂ ಅಡಿಕೆ ಬೆಳೆಗಳನ್ನು ಸಂಪೂರ್ಣವಾಗಿ ನಾಶಪಡಿಸಿದೆ. ಇದರಿಂದ ಲಕ್ಷಾಂತರ ರೂಪಾಯಿ ನಷ್ಟವಾಗಿದೆ ಎಂದು ದಯಾನಂದ ಅಳಲು ತೋಡಿಕೊಂಡಿದ್ದಾರೆ. ಕಾಡಾನೆಗಳು ತೋಟದೊಳಗೆ ನುಗ್ಗಿ ಗಿಡಗಳನ್ನು ಮುರಿದು ಹಾಕಿ, ಅಡಿಕೆ ಮರಗಳನ್ನು ಧ್ವಂಸಗೊಳಿಸಿದ್ದು, ಮೆಣಸು ಬಳ್ಳಿಗಳನ್ನು ಸಂಪೂರ್ಣವಾಗಿ ನಾಶಮಾಡಿವೆ. ಕಣಗುಪ್ಪೆ ಹಾಗೂ ಸುತ್ತಮುತ್ತಲ ಗ್ರಾಮಗಳಲ್ಲಿ ಇತ್ತೀಚೆಗೆ ಕಾಡಾನೆಗಳ ಹಾವಳಿ ಹೆಚ್ಚಾಗಿದ್ದು, ರೈತರು ಭಯಭೀತರಾಗಿದ್ದಾರೆ. ರಾತ್ರಿಯ ಸಮಯದಲ್ಲಿ ತೋಟಗಳಿಗೆ ಹೋಗಲು ಕೂಡ ಜನರು ಆತಂಕ ಪಡುವ ಸ್ಥಿತಿ ನಿರ್ಮಾಣವಾಗಿದೆ. ಅರಣ್ಯ ಇಲಾಖೆಯ ನಿರ್ಲಕ್ಷ್ಯದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಸ್ಥಳೀಯರು, ಕೂಡಲೇ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು ಹಾಗೂ ಕಾಡಾನೆಯನ್ನು ಸುರಕ್ಷಿತವಾಗಿ ಸ್ಥಳಾಂತರಿ ಸಬೇಕು ಎಂದು ಒತ್ತಾಯಿಸಿ ದ್ದಾರೆ. ಜೊತೆಗೆ ನಷ್ಟಕ್ಕೊಳ ಗಾದ ರೈತರಿಗೆ ತಕ್ಷಣವೇ ಪರಿಹಾರ ನೀಡಬೇಕು ಎಂದು ಆಗ್ರಹಿಸಿದ್ದಾರೆ.

ವಾರ್ತಾ ಭಾರತಿ 13 Dec 2025 4:18 pm

ಕೊಲ್ಕತ್ತಾದಲ್ಲಿ ವಿಶ್ವಶ್ರೇಷ್ಠ ಫುಟ್‌ಬಾಲ್ ಆಟಗಾರ ಲಿಯೋನೆಲ್ ಮೆಸ್ಸಿ ನೋಡಲು ಬಿಡದಿದ್ದಕ್ಕೆ ಬಾಟಲಿ ಬೀಸಿದ ಅಭಿಮಾನಿಗಳು

Lionel Messi: ಅರ್ಜೆಂಟೈನಾದ ವಿಶ್ವಶ್ರೇಷ್ಠ ಫುಟ್‌ಬಾಲ್ ಆಟಗಾರ ಲಿಯೋನೆಲ್ ಮೆಸ್ಸಿ ಅವರು ಇಂದು (ಡಿಸೆಂಬರ್ 13) ಕೋಲ್ಕತ್ತಾಗೆ ಭೇಟಿ ನೀಡಿದ್ದಾರೆ. ಈ ಹಿನ್ನೆಲೆ ವಿವೇಕಾನಂದ ಯುವಭಾರತಿ ಸಾಲ್ಟ್ ಲೇಕ್ ಕ್ರೀಡಾಂಗಣದಲ್ಲಿ ಕಾರ್ಯಕ್ರಮ ಇಟ್ಟುಕೊಳ್ಳಲಾಗಿತ್ತು. ಆದರೆ. ಈ ವೇಳೆ ಬಾಟಲಿಗಳ ತೂರಿದ ಘಟನೆ ನಡೆದಿದ್ದು, ಇದು ಇಡೀ ದೇಶದ ಗಮನ ಸೆಳದಿದೆ. ಫುಟ್‌ಬಾಲ್ ಸೂಪರ್‌ಸ್ಟಾರ್ ಲಿಯೋನೆಲ್ ಮೆಸ್ಸಿಯವರ ಬಹುನಿರೀಕ್ಷಿತ

ಒನ್ ಇ೦ಡಿಯ 13 Dec 2025 4:17 pm

Kerala Local Body Election Result: ಮಲಪ್ಪುರಂನಲ್ಲಿ ಯುಡಿಎಫ್‌ಗೆ ಭರ್ಜರಿ ಗೆಲುವು

ತಿರುವನಂತಪುರಂ: ಸ್ಥಳೀಯ ಸಂಸ್ಥೆಗಳ ಚುನಾವಣೆ ಮತ ಎಣಿಕೆ ಪ್ರಕ್ರಿಯೆ ಮುಂದುವರಿದೆ. ಮಲಪ್ಪುರಂ ಜಿಲ್ಲೆಯಲ್ಲಿ ಯುಡಿಎಫ್ ಪ್ರಾಬಲ್ಯವನ್ನು ಮೆರೆದಿದೆ. ಮಲಪ್ಪುರಂನ 12 ಪುರಸಭೆಗಳಲ್ಲಿ 11ರಲ್ಲಿ ಯುಡಿಎಫ್ ಗೆಲುವನ್ನು ಸಾಧಿಸಿದೆ. 94 ಗ್ರಾಮ ಪಂಚಾಯಿತಿಗಳಲ್ಲಿ 84ರಲ್ಲಿ ಗೆಲುವನ್ನು ಸಾಧಿಸಿದೆ. 15 ಬ್ಲಾಕ್ ಪಂಚಾಯಿತಿಗಳಲ್ಲಿ 14ರಲ್ಲಿ ಯುಡಿಎಫ್ ಗೆಲುವನ್ನು ಸಾಧಿಸಿದೆ. ಎಲ್‌ಡಿಎಫ್ ಪೊನ್ನಾನಿ ಪುರಸಭೆಯಲ್ಲಿ ಗೆಲುವನ್ನು ಸಾಧಿಸಿದ್ದು, ಯುಡಿಎಫ್ ಪೆರಿಂತಲ್ಮಣ್ಣ ಮತ್ತು ನಿಲಂಬೂರು ಪುರಸಭೆಗಳನ್ನು ಎಲ್‌ಡಿಎಫ್‌ನಿಂದ ವಶಪಡಿಸಿಕೊಂಡಿದೆ.

ವಾರ್ತಾ ಭಾರತಿ 13 Dec 2025 4:16 pm

IMD Weather Forecast: 05 ದಿನ ಈ ಭಾಗಗಳಲ್ಲಿ ದಟ್ಟ ಮಂಜು, ಭಾರೀ ಚಳಿ ಮುನ್ಸೂಚನೆ, ಎಲ್ಲೆಲ್ಲಿ?

India Cold Wave Forecast: ಕರ್ನಾಟಕದ ಉತ್ತರ ಒಳನಾಡು ಸೇರಿದಂತೆ ದೇಶದ ವಿವಿಧ ರಾಜ್ಯಗಳಲ್ಲಿ ಶೀತದ ಅಲೆಯ ವಾತಾವರಣ ಈಗಾಗಲೇ ನಿರ್ಮಾಣವಾಗಿದೆ. ಬೆಳಗ್ಗೆ ನಿರಂತರವಾಗಿ ದಟ್ಟವಾದ ಮಂಜು ಕಂಡು ಬರುತ್ತಿದೆ. ಎಲ್ಲೆಡೆ ಮೈಕೊರೆವ ಚಳಿ ದಾಖಲಾಗಿದೆ. ಮುಂದಿನ 05 ದಿನ ದೇಶದ ವಿವಿಧ ಭಾಗಗಳಲ್ಲಿ ಇದೇ ರೀತಿಯ ಅತ್ಯಧಿಕ ಚಳಿ ಮುಂದುವರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ

ಒನ್ ಇ೦ಡಿಯ 13 Dec 2025 4:06 pm

ಬೆಂಗಳೂರು 2ನೇ ಏರ್‌ಪೋರ್ಟ್‌: ಅಂತಿಮ ಸ್ಥಳದ ಆಯ್ಕೆಗೆ ಟೆಂಡರ್ ಕರೆದ ಸರ್ಕಾರ, ರೇಸ್‌ನಲ್ಲಿರುವ 3 ಸ್ಥಳಗಳಿವು

ಬೆಂಗಳೂರಿನ ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ನಿರ್ಮಾಣಕ್ಕೆ ಸರ್ಕಾರ ಅಧಿಕೃತವಾಗಿ ಚಾಲನೆ ನೀಡಿದೆ. ಕೆಎಸ್‌ಐಐಡಿಸಿ ಇದೀಗ ಅಂತಿಮಗೊಂಡಿರುವ ಮೂರು ಪ್ರಮುಖ ಸ್ಥಳಗಳ ಕಾರ್ಯಸಾಧ್ಯತಾ ವರದಿಯನ್ನು ತಯಾರಿಸಲು ಸಲಹೆಗಾರರ ನೇಮಕಕ್ಕೆ ಟೆಂಡರ್ ಕರೆದಿದೆ. ತಮಿಳುನಾಡು ಗಡಿಯಲ್ಲಿ ಹೊಸ ವಿಮಾನ ನಿಲ್ದಾಣದ ಘೋಷಣೆಯ ಬೆನ್ನಲ್ಲೇ ಕರ್ನಾಟಕ ಸರ್ಕಾರ ಈ ಪ್ರಕ್ರಿಯೆಯನ್ನು ಚುರುಕುಗೊಳಿಸಿದೆ.

ವಿಜಯ ಕರ್ನಾಟಕ 13 Dec 2025 4:03 pm

ಏರ್ ಇಂಡಿಯಾದಿಂದ ಮಂಗಳೂರು- ಮಸ್ಕತ್ ವಿಮಾನ ಯಾನ ಮಾರ್ಚ್ ನಿಂದ ಪುನರಾರಂಭ

ಮಂಗಳೂರು, ಡಿ.13: ಏರ್ ಇಂಡಿಯಾದಿಂದ ಗಲ್ಫ್ ರಾಷ್ಟ್ರವಾದ ಮಸ್ಕತ್ ಗೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ನೇರ ವಿಮಾನ ಯಾನ 2026ರ ಮಾರ್ಚ್ ನಿಂದ ಪುನರಾರಂಭಗೊಳ್ಳಲಿದೆ. ವಾರದಲ್ಲಿ ಎರಡು ವಿಮಾನಗಳು ಹಾರಾಟ ನಡೆಸಲಿದ್ದು, ಮಾರ್ಚ್ ಮೊದಲ ವಾರದಿಂದ ವಿಮಾನಗಳು ಹಾರಾಟ ನಡೆಸಲಿವೆ. ಪ್ರತೀ ಶುಕ್ರವಾರ ಮತ್ತು ರವಿವಾರದಂದು ಐಎಕ್ಸ್ 817 ಮತ್ತು 818 ವಿಮಾನಗಳು ಮಂಗಳೂರು ವಿಮಾನ ನಿಲ್ದಾಣದಿಂದ ಮಸ್ಕತ್ ಗೆ ಹಾರಾಟ ಆರಂಭಿಸಲಿವೆ. ಈ ಹಿಂದೆ ಚಾಲ್ತಿಯಲ್ಲಿದ್ದ ಈ ವಿಮಾನ ಯಾನಗಳ ಸೇವೆಯನ್ನು ಕಾರಣಾಂತರಗಳಿಂದ ಕೆಲ ಸಮಯ ಸ್ಥಗಿತಗೊಳಿಸಲಾಗಿದ್ದು, ಇದೀಗ ಮತ್ತೆ ಪುನರಾರಂಭಕ್ಕೆ ಕ್ರಮ ವಹಿಸಲಾಗಿದೆ ಎಂದು ಏರ್ ಇಂಡಿಯಾ ಪ್ರಕಟನೆ ತಿಳಿಸಿದೆ.

ವಾರ್ತಾ ಭಾರತಿ 13 Dec 2025 3:57 pm

ಹೊಸ ರಾಜಕೀಯ ಪಕ್ಷ ಘೋಷಿಸಿದ ಸಿಎಂ ಇಬ್ರಾಹಿಂ; ಯಾವ್ಯಾವ ಪಕ್ಷದ ನಾಯಕರು ಇಬ್ರಾಹಿಂ ಸಂಪರ್ಕದಲ್ಲಿದ್ದಾರೆ ಗೊತ್ತಾ?

ಬೆಂಗಳೂರು, ಡಿಸೆಂಬರ್‌ 13: ಕಳೆದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್‌ ತೊರೆದು ಜೆಡಿಎಸ್‌ ಸೇರ್ಪಡೆಯಾಗಿದ್ದ ಸಿಎಂ ಇಬ್ರಾಹಿಂ ಅವರು ಜೆಡಿಎಸ್‌ ಪಕ್ಷದಿಂದ ಹೊರ ಬಂದಿದ್ದಾರೆ. ಅಲ್ಲದೇ ಲೋಕಸಭಾ ಚುನಾವಣೆ ಹೊತ್ತಲಿ ಸಿಎಂ ಇಬ್ರಾಹಿಂ ಮರಳಿ ಕಾಂಗ್ರೆಸ್‌ ಸೇರ್ಪಡೆಯಾಗಲಿದ್ದಾರೆ ಎನ್ನುವ ಚರ್ಚೆ ಶುರುವಾಗಿತ್ತು. ಆದರೆ, ಇದೀಗ ಹೊಸ ಪಕ್ಷ ಸ್ಥಾಪನೆ ಮಾಡುವುದಾಗಿ ಸಿಎಂ ಇಬ್ರಾಹಿಂ ಅವರು ಘೋಷಿಸಿದ್ದಾರೆ. ಈ

ಒನ್ ಇ೦ಡಿಯ 13 Dec 2025 3:45 pm

Kerala Local Body Election Result: ಶಶಿ ತರೂರ್ ಭದ್ರಕೋಟೆಯಲ್ಲಿ ಅರಳಿದ ಕಮಲ: ತಿರುವನಂತಪುರಂ ಮಹಾನಗರ ಪಾಲಿಕೆ ಬಿಜೆಪಿ ತೆಕ್ಕೆಗೆ

ತಿರುವನಂತಪುರಂ: ಕೇರಳದ ಸ್ಥಳೀಯ ಸಂಸ್ಥೆಗಳ ಚುನಾವಣೆ ಮತ ಎಣಿಕೆ ಪ್ರಕ್ರಿಯೆ ಮುಂದುವರಿದಿದೆ. ತಿರುವನಂತಪುರಂ ಮಹಾನಗರ ಪಾಲಿಕೆಯಲ್ಲಿ ಎನ್‌ಡಿಎ ಗೆಲುವನ್ನು ಸಾಧಿಸಿದೆ. ಆಡಳಿತರೂಢ ಎಲ್‌ಡಿಎಫ್‌ನಿಂದ ತ್ರಿಪುನಿತುರ ಪುರಸಭೆಯನ್ನು ವಶಪಡಿಸಿಕೊಂಡಿದೆ. ಹಿರಿಯ ಕಾಂಗ್ರೆಸ್ ನಾಯಕ ಶಶಿ ತರೂರ್ ಪ್ರತಿನಿಧಿಸುವ ಸಂಸದೀಯ ಕ್ಷೇತ್ರದಲ್ಲಿ ಬರುವ ತಿರುವನಂತಪುರಂ ಮಹಾನಗರ ಪಾಲಿಕೆಯು ಬಹಳ ಹಿಂದಿನಿಂದಲೂ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್) ಅಥವಾ ಎಲ್‌ಡಿಎಫ್‌ ಪ್ರಾಬಲ್ಯವನ್ನು ಹೊಂದಿತ್ತು. ಎನ್‌ಡಿಎ ಪಾಲಕ್ಕಾಡ್ ಪುರಸಭೆಯಲ್ಲೂ ಮೇಲುಗೈ ಸಾಧಿಸಿದೆ. ಬಿಜೆಪಿ 25 ಸ್ಥಾನಗಳೊಂದಿಗೆ ಪಾಲಕ್ಕಾಡ್ ಪುರಸಭೆಯಲ್ಲಿ ಏಕೈಕ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಯುಡಿಎಫ್ 18 ಸ್ಥಾನಗಳಲ್ಲಿ ಗೆಲುವನ್ನು ಸಾಧಿಸಿದ್ದು, ಎಲ್‌ಡಿಎಫ್‌ 9 ಸ್ಥಾನಗಳಿಗೆ ತೃಪ್ತಿಪಟ್ಟುಕೊಂಡಿದೆ. ಕೇರಳ ರಾಜಕೀಯದಲ್ಲಿ ನೆಲೆಯನ್ನು ಪಡೆಯಲು ಹೆಣಗಾಡುತ್ತಿರುವ ಬಿಜೆಪಿಗೆ ಈ ಗೆಲುವು ಮಹತ್ವಪೂರ್ಣವಾಗಿದೆ.

ವಾರ್ತಾ ಭಾರತಿ 13 Dec 2025 3:45 pm

ಖ್ಯಾತ ಸಂಗೀತ ಸಂಯೋಜಕ ರಿಕ್ಕಿ ಕೇಜ್‌ ಬೆಂಗಳೂರು ಮನೆಯಲ್ಲಿ ಝೊಮ್ಯಾಟೊ ಡೆಲಿವರಿ ವ್ಯಕ್ತಿಯಿಂದ ದರೋಡೆ: ಕಳ್ಳತನ ವಿಡಿಯೋದಲ್ಲಿ ಸೆರೆ!

ಖ್ಯಾತ ಸಂಗೀತ ನಿರ್ದೇಶಕ ರಿಕ್ಕಿ ಕೇಜ್ ಅವರ ಬೆಂಗಳೂರಿನ ನಿವಾಸದಲ್ಲಿ ಅಚ್ಚರಿಯ ಘಟನೆ ನಡೆದಿದೆ. ಝೊಮ್ಯಾಟೊ ಡೆಲಿವರಿ ಏಜೆಂಟ್ ಒಬ್ಬರು, ಬರೋಬ್ಬರಿ ಸಂಪ್ ಮುಚ್ಚಳವನ್ನೇ ಕದ್ದು ಪರಾರಿಯಾಗಿದ್ದಾನೆ! ಈ ಘಟನೆಯ ಸಿಸಿಟಿವಿ ದೃಶ್ಯಾವಳಿಗಳನ್ನು ರಿಕ್ಕಿ ಕೇಜ್ ಅವರೇ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು, ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಝೊಮ್ಯಾಟೊ ಸಂಸ್ಥೆ ಕೂಡಾ ಈ ಬಗ್ಗೆ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದೆ. ಈ ಘಟನೆ ಸಾರ್ವಜನಿಕರಲ್ಲಿ ಎಚ್ಚರಿಕೆಯ ಗಂಟೆಯಾಗಿದೆ.

ವಿಜಯ ಕರ್ನಾಟಕ 13 Dec 2025 3:36 pm

ಕಲಬುರಗಿ | ನೀರು ಸರಬರಾಜು ಕಾಮಗಾರಿಗೆ ತಂದಿರಿಸಿದ್ದ ಪೈಪ್ ಗಳು ಬೆಂಕಿಗಾಹುತಿ

ಕಲಬುರಗಿ: ನೀರು ಸರಬರಾಜು ಮಾಡುವ ಕಾಮಗಾರಿಗೆ ಸಂಬಂಧಿಸಿದ ರಸ್ತೆಬದಿಯಲ್ಲಿ ದಾಸ್ತಾನಿರಿಸಿದ್ದ ಪೈಪ್ ಗಳು ಬೆಂಕಿಗಾಹುತಿಯಾದ ಘಟನೆ ನಗರದ ಬಸವೇಶ್ವರ ಚೌಕ್ ಸಮೀಪ ನಡೆದಿದೆ. ಪೈಪ್ ಗಳಿಗೆ ಬೆಂಕಿ ತಗುಲಿ ಅಪಾರ ಪ್ರಮಾಣದ ಹಾನಿಯುಂಟಾಗಿದೆ. ಸ್ಥಳಕ್ಕೆ ಬಂದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

ವಾರ್ತಾ ಭಾರತಿ 13 Dec 2025 3:30 pm