ಮನುಸ್ಮ ತಿ ಸುಟ್ಟಿದ್ದು ಫ್ರಾನ್ಸ್ ಕ್ರಾಂತಿಯಷ್ಟೇ ಮಹತ್ವದ್ದು
ಇಂದು ಅಂಬೇಡ್ಕರ್ ಮನುಸ್ಮ ತಿ ದಹಿಸಿದ ದಿನ
ವಿಬಿ-ಜಿ ರಾಮ್ ಜಿ: ಮನರೇಗಾ ನಿರ್ಮಿಸಿದ ಪರಂಪರೆಯ ಬುಡಮೇಲು
ಉದ್ಯೋಗದ ಮಿತಿಯನ್ನು 100 ದಿನಗಳಿಂದ 125 ದಿನಗಳಿಗೆ ಹೆಚ್ಚಿಸಿರುವುದು. ಕೇಂದ್ರವು ಇದನ್ನು ದೊಡ್ಡ ಸುಧಾರಣೆಯಂತೆ ಬಿಂಬಿಸುತ್ತಿದೆ. ಆದರೆ ವಾಸ್ತವದಲ್ಲಿ, ಶೇ. 2ರಷ್ಟು ಕುಟುಂಬಗಳು ಮಾತ್ರ ಪ್ರಸ್ತುತ 100 ದಿನಗಳ ಕೆಲಸ ಪಡೆಯುತ್ತಿವೆ. ಅಸ್ತಿತ್ವದಲ್ಲಿರುವ ಮಿತಿಯೇ ಬಳಕೆಯಾಗದಿರುವಾಗ, ಅದನ್ನು ಹೆಚ್ಚಿಸುವುದು ಕೇವಲ ತೋರಿಕೆಯ ಕ್ರಮವಾಗಿದೆ. ವೇತನ ದರ ಹೆಚ್ಚಿಸುವುದು ಜನರಿಗೆ ಹೆಚ್ಚು ಪ್ರಯೋಜನಕಾರಿ ಆಗುತ್ತಿತ್ತು. ಜೀನ್ ಡ್ರೇಜ್ | ಕನ್ನಡಕ್ಕೆ: ಟಿ.ಎಸ್. ವೇಣುಗೋಪಾಲ್ ಇಪ್ಪತ್ತು ವರ್ಷಗಳ ಹಿಂದೆ, ಭಾರತವು ‘ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ’ಯನ್ನು (NREGA) ಜಾರಿಗೆ ತರುವ ಮೂಲಕ ಜಗತ್ತಿಗೆ ಮಾದರಿಯಾಗಿತ್ತು. ಉದ್ಯೋಗ ಖಾತರಿ ಕಲ್ಪನೆ ಸಂಪೂರ್ಣವಾಗಿ ಹೊಸದೇನಲ್ಲ. ಬಿಕ್ಕಟ್ಟಿನ ಸಮಯದಲ್ಲಿ ಪರಿಹಾರವಾಗಿ ಸಾರ್ವಜನಿಕ ಕಾಮಗಾರಿಗಳನ್ನು ಬಳಸುವ ಸುದೀರ್ಘ ಇತಿಹಾಸ ಭಾರತಕ್ಕಿದೆ. ಮಹಾರಾಷ್ಟ್ರವು 1970ರ ದಶಕದ ಆರಂಭದಿಂದಲೇ ತನ್ನ ಉದ್ಯೋಗ ಖಾತರಿ ಯೋಜನೆಯ ಮೂಲಕ ದಾರಿ ತೋರಿಸಿತ್ತು. ಆದರೆ ನರೇಗಾ ಈ ಕಲ್ಪನೆಯನ್ನು ಇನ್ನಷ್ಟು ವಿಸ್ತರಿಸಿತು ಮತ್ತು ಜಗತ್ತಿಗೆ ಸ್ಫೂರ್ತಿಯಾಯಿತು. ಇದು ಪಕ್ಷದ ಎಲ್ಲೆ ಮೀರಿ ಬೆಳೆದಿದ್ದ ರಾಷ್ಟ್ರೀಯ ಕಾರ್ಯಕ್ರಮವಾಗಿತ್ತು ಮತ್ತು ಸಂಸತ್ನಲ್ಲಿ ಸರ್ವಾನುಮತದ ಬೆಂಬಲ ಪಡೆದಿತ್ತು. ಈ ಕಾರ್ಯಕ್ರಮವು ಉತ್ತಮವಾಗಿ ನಡೆಯುತ್ತಿತ್ತು ಎನ್ನುವುದಕ್ಕೆ ಆರು ವರ್ಷಗಳ ನಂತರ, 2011-12ರಲ್ಲಿ ಪುರಾವೆಗಳೂ ಸಿಕ್ಕವು. ಆ ವೇಳೆಗೆ ‘ಮನರೇಗಾ’ (MGNREGA) ಎಂದು ಮರುನಾಮಕರಣಗೊಂಡಿತ್ತು. ಅಧಿಕೃತವಾಗಿ ವರ್ಷಕ್ಕೆ 5 ಕೋಟಿ ಗ್ರಾಮೀಣ ಕುಟುಂಬಗಳಿಗೆ 200 ಕೋಟಿಗೂ ಹೆಚ್ಚು ಮಾನವ ದಿನಗಳ ಉದ್ಯೋಗವನ್ನು ಕೊಟ್ಟಿತ್ತು. ಉದ್ಯೋಗ ಪಡೆದುಕೊಂಡವರಲ್ಲಿ ಸುಮಾರು ಅರ್ಧದಷ್ಟು ಮಹಿಳೆಯರು ಮತ್ತು ಶೇ. 40ಕ್ಕಿಂತ ಹೆಚ್ಚು ಜನ ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡಕ್ಕೆ ಸೇರಿದವರಾಗಿದ್ದರು. ಈ ಅಧಿಕೃತ ಅಂಕಿಅಂಶಗಳನ್ನು 68ನೇ ಸುತ್ತಿನ ರಾಷ್ಟ್ರೀಯ ಮಾದರಿ ಸಮೀಕ್ಷೆ ಮತ್ತು ಎರಡನೇ ಭಾರತೀಯ ಮಾನವ ಅಭಿವೃದ್ಧಿ ಸಮೀಕ್ಷೆಯಂತಹ ಸ್ವತಂತ್ರ ಸಮೀಕ್ಷೆಗಳು ಪುಷ್ಟೀಕರಿಸಿದ್ದವು. ಗ್ರಾಮೀಣ ವೇತನದಲ್ಲೂ ಹಿಂದೆಂದಿಗಿಂತ ಹೆಚ್ಚಿನ ಏರಿಕೆ ಕಾಣತೊಡಗಿತು. ಮನರೇಗಾ ಉತ್ಪಾದಕ ಕೆಲಸಗಳನ್ನು ಕಸಿದುಕೊಳ್ಳಲಿಲ್ಲ, ಬದಲಿಗೆ ಆರ್ಥಿಕ ದಕ್ಷತೆ ಮತ್ತು ಒಟ್ಟು ಉತ್ಪಾದಕತೆಯನ್ನು ಹೆಚ್ಚಿಸಿತು ಎಂಬುದನ್ನು ಹಲವು ಅಧ್ಯಯನಗಳು ತೋರಿಸಿಕೊಟ್ಟಿವೆ. ಮನರೇಗಾದ ಆರಂಭಿಕ ವರ್ಷಗಳಲ್ಲಿನ ಉತ್ಸಾಹ ಮತ್ತು ಹುರುಪಿನಿಂದ ಈ ಸಾಧನೆಗಳು ಸಾಧ್ಯವಾದವು. ನಂತರದ ದಿನಗಳಲ್ಲಿ, ಅನುಷ್ಠಾನಕ್ಕೆ ಅಡೆತಡೆಗಳು ಪ್ರಾರಂಭವಾದವು. ಕೇಂದ್ರೀಕರಣ, ಅನುದಾನದ ಕೊರತೆ, ವೇತನ ಪಾವತಿಯಲ್ಲಿ ವಿಳಂಬ, ಭ್ರಷ್ಟರ ವಿರುದ್ಧ ಕ್ರಮ ಕೈಗೊಳ್ಳುವಲ್ಲಿನ ವೈಫಲ್ಯ ಇತ್ಯಾದಿ ಕಾರಣಗಳು ಕಾರ್ಯಕ್ರಮಕ್ಕೆ ಅಪಾರ ಹಾನಿ ಮಾಡಿದವು. ಕೋವಿಡ್-19ರ ಬಿಕ್ಕಟ್ಟಿನ ಸಮಯದಲ್ಲಿ ಇದು ಸ್ವಲ್ಪ ಚೇತರಿಸಿಕೊಂಡಂತೆ ಕಂಡರೂ, ಮನರೇಗಾಕ್ಕೆ ಹಳೆಯ ಮೆರುಗು ಮರಳಿ ಬರಲಿಲ್ಲ ಅನುಷ್ಠಾನದ ಸಮಸ್ಯೆಗಳನ್ನು ಪರಿಹರಿಸಬಹುದು, ಆದರೆ ಇದಕ್ಕೆ ಪ್ರಬಲ ರಾಜಕೀಯ ಬದ್ಧತೆ ಬೇಕು. ಆದರೆ ‘ವಿಬಿ-ಜಿ ರಾಮ್ ಜಿ’ ಮಸೂದೆ 2025 ಇದಕ್ಕೆ ವಿರುದ್ಧವಾದ ಹಾದಿಯಲ್ಲಿ ಸಾಗುತ್ತಿದೆ. ಇದು ಐತಿಹಾಸಿಕ ಕಾಯ್ದೆಯನ್ನು ಕೇಂದ್ರ ನಿರ್ದೇಶಿತ ಯೋಜನೆಯಾಗಿ ಬದಲಿಸಲು ಪ್ರಯತ್ನಿಸುತ್ತಿದೆ. ಈ ಮಸೂದೆಯಡಿಯಲ್ಲಿ ಕೇಂದ್ರವು ಸಂಪೂರ್ಣ ಅಧಿಕಾರವನ್ನು ತನ್ನ ಕೈಯಲ್ಲಿಟ್ಟುಕೊಳ್ಳುತ್ತಿದೆ, ಆದರೆ ಯಾವುದೇ ಪ್ರಮುಖ ಜವಾಬ್ದಾರಿಗಳನ್ನು ಹೊರಲು ಸಿದ್ಧವಿಲ್ಲ. ಉದ್ಯೋಗ ನೀಡುವುದು, ನಿರುದ್ಯೋಗ ಭತ್ತೆ ಪಾವತಿಸುವುದು, ವಿಳಂಬ ಪಾವತಿಗೆ ಕಾರ್ಮಿಕರಿಗೆ ಪರಿಹಾರ ನೀಡುವುದು ಮತ್ತು ಸಮರ್ಪಕ ಹಣಕಾಸು ಒದಗಿಸುವಂತಹ ಎಲ್ಲಾ ಜವಾಬ್ದಾರಿಗಳನ್ನು ರಾಜ್ಯ ಸರಕಾರಗಳ ಮೇಲೆ ಹೇರಲಾಗಿದೆ. ಯೋಜನೆಯನ್ನು ಎಲ್ಲಿ ಮತ್ತು ಯಾವಾಗ ಜಾರಿಗೆ ತರಬೇಕು ಎಂದು ನಿರ್ಧರಿಸುವ ‘ಸ್ವಿಚ್ ಆಫ್’ ಅಧಿಕಾರ ಕೇಂದ್ರದ ಕೈಯಲ್ಲಿದೆ. ಇದು ಉದ್ಯೋಗ ಖಾತರಿಯ ಮೂಲ ಉದ್ದೇಶವನ್ನೇ ಸೋಲಿಸುತ್ತದೆ ಇದು ಖಾತ್ರಿಯಾಗಿ ಅನ್ವಯವಾಗುತ್ತದೆ ಎನ್ನುವ ಖಾತ್ರಿಯೇ ಇಲ್ಲದೆ ಉದ್ಯೋಗ ಖಾತರಿ ನೀಡಿದಂತೆ! ಹಣಕಾಸಿನ ಹಂಚಿಕೆಯಲ್ಲೂ ದೊಡ್ಡ ಬದಲಾವಣೆ ಮಾಡಲಾಗಿದೆ. ಇಲ್ಲಿಯವರೆಗೆ ಮನರೇಗಾ ಕೇಂದ್ರದಿಂದ ಮುಕ್ತವಾದ ಧನಸಹಾಯದ ತತ್ವದ ಮೇಲೆ ಆಧಾರಿತವಾಗಿತ್ತು. ಹೊಸ ಯೋಜನೆಯಡಿಯಲ್ಲಿ ಕೇಂದ್ರ ಸರಕಾರವು ರಾಜ್ಯಗಳು ಮಾಡಬಹುದಾದ ವೆಚ್ಚದ ಮಿತಿಯನ್ನು ನಿಗದಿಪಡಿಸುತ್ತದೆ. ನಿಗದಿಪಡಿಸಿದ ಮೊತ್ತದಲ್ಲಿ ಕೇಂದ್ರ ಹಾಗೂ ರಾಜ್ಯಗಳು 60:40 ಅನುಪಾತದಲ್ಲಿ ವೆಚ್ಚ ಹಂಚಿಕೊಳ್ಳುತ್ತವೆ. ಅದಕ್ಕೂ ಮೀರಿದ ಎಲ್ಲಾ ಹಣಕಾಸನ್ನು ರಾಜ್ಯಗಳೇ ಭರಿಸಬೇಕಾಗುತ್ತದೆ. ಕೇಂದ್ರ ಸರಕಾರವು ತನ್ನ ವಿವೇಚನಾ ಅಧಿಕಾರವನ್ನು ದುರುಪಯೋಗಪಡಿಸಿಕೊಳ್ಳುವ ಸಾಧ್ಯತೆ ದಟ್ಟವಾಗಿದೆ. ಈ ಅಪಾಯ ಕೇವಲ ಕಲ್ಪನೆಯಲ್ಲ; ಪಶ್ಚಿಮ ಬಂಗಾಳದಲ್ಲಿ ಕಳೆದ ಮೂರು ವರ್ಷಗಳಿಂದ ಮನರೇಗಾ ಹಣಕಾಸು ಸ್ಥಗಿತಗೊಳಿಸಿರುವುದನ್ನು ನಾವು ನೋಡಿದ್ದೇವೆ. ಈ ಕಠಿಣ ಕ್ರಮಕ್ಕೆ ಕಾರಣಗಳನ್ನು ಕೇಂದ್ರ ಸರಕಾರವು ಸಂಸತ್ತಿನಲ್ಲೂ ಸ್ಪಷ್ಟಪಡಿಸಿಲ್ಲ. ಇದರ ಹಿಂದಿನ ರಾಜಕೀಯ ಉದ್ದೇಶ ಸ್ಪಷ್ಟವಾಗಿದೆ. ಹೊಸ ಹಣಕಾಸು ವ್ಯವಸ್ಥೆಯಿಂದ ಮನರೇಗಾ ದುರ್ಬಲಗೊಳ್ಳಲಿದೆ. ಇಲ್ಲಿಯವರೆಗೆ ರಾಜ್ಯ ಸರಕಾರಗಳು ಕೇವಲ ಶೇ. 25ರಷ್ಟು ಸಾಮಗ್ರಿ ವೆಚ್ಚವನ್ನು ಮಾತ್ರ ಭರಿಸಬೇಕಾಗಿತ್ತು, ಉಳಿದೆಲ್ಲಾ ವೆಚ್ಚವನ್ನು ಕೇಂದ್ರವೇ ನೀಡುತ್ತಿತ್ತು. ಇದು ರಾಜ್ಯಗಳಿಗೆ ಯೋಜನೆಯನ್ನು ಹುರುಪಿನಿಂದ ಜಾರಿಗೆ ತರಲು ಪ್ರೋತ್ಸಾಹ ನೀಡುತ್ತಿತ್ತು. ಹೊಸ ಶೇ. 40 ಪಾಲುದಾರಿಕೆಯ ಮಾದರಿಯು ಇದಕ್ಕೆ ದೊಡ್ಡ ಅಡ್ಡಿಯಾಗಲಿದೆ. ಮನರೇಗಾ ಯಶಸ್ಸಿಗೆ ಕೆಲಸದ ಬೇಡಿಕೆಯಷ್ಟೇ ಮುಖ್ಯವಾಗಿದ್ದು ರಾಜ್ಯಗಳಿಗೆ ಕೇಂದ್ರ ನೀಡುತ್ತಿದ್ದ ಆರ್ಥಿಕ ಬೆಂಬಲ. ರೈತರು ಬಾವಿ ನಿರ್ಮಾಣ, ತೋಟಗಾರಿಕೆಗೆ ಉತ್ಸುಕರಾಗಿದ್ದಾರೆ; ಕೆರೆ-ರಸ್ತೆಗಳ ಅಗತ್ಯವಿದೆ. ವೆಚ್ಚದ ಹೊರೆ ಹೆಚ್ಚಾದಂತೆ, ವಿಶೇಷವಾಗಿ ಬಡ ರಾಜ್ಯಗಳು ಹೊಸ ಯೋಜನೆಗಳ ಅನುಮೋದನೆಯನ್ನು ನಿಧಾನಿಸಬಹುದು ಅಥವಾ ತಡೆಹಿಡಿಯಬಹುದು. ಈ ಮಸೂದೆಯ ಪ್ರಕಾರ ಉದ್ಯೋಗ ನೀಡುವ ಜವಾಬ್ದಾರಿ ರಾಜ್ಯಗಳದ್ದು, ಆದರೆ ಹಣಕಾಸಿನ ಖಾತರಿ ಕೇಂದ್ರ ನೀಡುವುದಿಲ್ಲ. ಇದನ್ನು ರಾಜ್ಯಗಳು ವಿರೋಧಿಸುವುದು ನ್ಯಾಯಸಮ್ಮತವಾಗಿದೆ. ಮಸೂದೆಯನ್ನು ಬೆಂಬಲಿಸುವ ಕೆಲವು ಅರ್ಥಶಾಸ್ತ್ರಜ್ಞರು ಇದರಿಂದ ಬಡ ರಾಜ್ಯಗಳಿಗೆ ಹೆಚ್ಚಿನ ಹಣ ಸಿಗುತ್ತದೆ ಎಂದು ವಾದಿಸುತ್ತಾರೆ. ಆದರೆ ಬಡ ರಾಜ್ಯಗಳಿಗೆ ನೆರವಾಗಲು ಅಲ್ಲಿನ ವೇತನ ದರಗಳನ್ನು ಹೆಚ್ಚಿಸುವುದು ಸರಿಯಾದ ಮಾರ್ಗವೇ ಹೊರತು, ವೆಚ್ಚದ ಹೊರೆ ಹೇರುವುದಲ್ಲ. ಎರಡು ವಿಷಯಗಳು ಈ ಮಸೂದೆಯ ವಿನಾಶಕಾರಿ ಸ್ವರೂಪದಿಂದ ಜನರ ಗಮನವನ್ನು ಬೇರೆಡೆಗೆ ಸೆಳೆದಿವೆ. ಮೊದಲನೆಯದು, ಕಾಯ್ದೆಯ ಹೆಸರನ್ನು ಮನರೇಗಾ ಬದಲಿಗೆ ‘ವಿಕಸಿತ್ ಭಾರತ್-ಜಿ ರಾಮ್ ಜಿ’ ಎಂದು ಬದಲಿಸಿರುವುದು. ಹೆಸರನ್ನು ಬದಲಿಸುವುದು ಸಮಯ ಮತ್ತು ಹಣದ ಪೋಲು ಮಾತ್ರವಲ್ಲ, ಕಾಯ್ದೆಗಿದ್ದ ಪಕ್ಷಾತೀತ ಸ್ವರೂಪವನ್ನೂ ನಾಶಪಡಿಸುತ್ತದೆ. ದುರದೃಷ್ಟವಶಾತ್, ವಿರೋಧ ಪಕ್ಷಗಳು ಮಸೂದೆಯ ಆಳವಾದ ಸಮಸ್ಯೆಗಳನ್ನು ಚರ್ಚಿಸುವ ಬದಲಿಗೆ ಹೆಸರು ಬದಲಾವಣೆಯ ಬಗ್ಗೆ ಮಾತ್ರ ಆಕ್ರೋಶ ವ್ಯಕ್ತಪಡಿಸುತ್ತಿವೆ. ಮತ್ತೊಂದು ವಿಷಯವೆಂದರೆ ಉದ್ಯೋಗದ ಮಿತಿಯನ್ನು 100 ದಿನಗಳಿಂದ 125 ದಿನಗಳಿಗೆ ಹೆಚ್ಚಿಸಿರುವುದು. ಕೇಂದ್ರವು ಇದನ್ನು ದೊಡ್ಡ ಸುಧಾರಣೆಯಂತೆ ಬಿಂಬಿಸುತ್ತಿದೆ. ಆದರೆ ವಾಸ್ತವದಲ್ಲಿ, ಶೇ. 2ರಷ್ಟು ಕುಟುಂಬಗಳು ಮಾತ್ರ ಪ್ರಸ್ತುತ 100 ದಿನಗಳ ಕೆಲಸ ಪಡೆಯುತ್ತಿವೆ. ಅಸ್ತಿತ್ವದಲ್ಲಿರುವ ಮಿತಿಯೇ ಬಳಕೆಯಾಗದಿರುವಾಗ, ಅದನ್ನು ಹೆಚ್ಚಿಸುವುದು ಕೇವಲ ತೋರಿಕೆಯ ಕ್ರಮವಾಗಿದೆ. ವೇತನ ದರ ಹೆಚ್ಚಿಸುವುದು ಜನರಿಗೆ ಹೆಚ್ಚು ಪ್ರಯೋಜನಕಾರಿ ಆಗುತ್ತಿತ್ತು. ಸಂಕ್ಷಿಪ್ತವಾಗಿ ಹೇಳುವುದಾದರೆ, ಕೇಂದ್ರದ ಹೊಸ ಮಸೂದೆಯು ಉದ್ಯೋಗ ಖಾತರಿ ಯೋಜನೆಯನ್ನು ಸುಧಾರಿಸುವ ಬದಲಿಗೆ ರಾಜ್ಯಗಳ ಉತ್ಸಾಹ ಕುಂದಿಸುತ್ತಿದೆ. ಮತ್ತು ಕಾರ್ಮಿಕರ ಅಧಿಕಾರವನ್ನು ಕಸಿದುಕೊಳ್ಳುತ್ತಿದೆ. ಕೃಷಿ ಕಾಯ್ದೆಗಳಂತೆ ಈ ಮಸೂದೆಯೂ ಸಾರ್ವಜನಿಕ ಒತ್ತಡದಿಂದ ರದ್ದಾಗಬೇಕು. ಇಲ್ಲದಿದ್ದರೆ, ಇದು ಒಂದು ಐತಿಹಾಸಿಕ ಯುಗದ ಅಂತ್ಯವಾಗಲಿದೆ. ಕೃಪೆ: The Indian Express
ಕ್ರಿಸ್ಮಸ್ ಶಾಂತಿ, ಸಮಾನತೆ ಮತ್ತು ಭರವಸೆಯ ಹಬ್ಬ
ಜಾಗತಿಕವಾಗಿ ಸಂಪತ್ತು ಮತ್ತು ಅವಕಾಶಗಳ ಅಂತರ ಹೆಚ್ಚುತ್ತಿರುವ ಈ ಕಾಲದಲ್ಲಿ, ಯೇಸು ಬಡತನ ಮತ್ತು ಸರಳತೆಯಲ್ಲಿ ಜನಿಸಿದ್ದು ಪ್ರಬಲ ಸಂದೇಶ ನೀಡುತ್ತದೆ. ಅವರು ಸಂಪತ್ತು ಅಥವಾ ಅಧಿಕಾರವಿರುವ ಸ್ಥಳದಲ್ಲಿ ಹುಟ್ಟಲಿಲ್ಲ, ಬದಲಿಗೆ ಗೋದಲಿಯನ್ನು ಆರಿಸಿಕೊಂಡರು. ಇದು ನಮ್ಮ ಗಮನವನ್ನು ವಸ್ತುಸಂಗ್ರಹಣೆ ಮತ್ತು ವೈಭವದ ಬದಲು, ಸೇವೆ ಮತ್ತು ದೀನತೆಯ ಕಡೆಗೆ ಸೆಳೆಯುತ್ತದೆ. ಜಗತ್ತು ಹಲವಾರು ಆಂತರಿಕ ಮತ್ತು ಬಾಹ್ಯ ಬಿಕ್ಕಟ್ಟುಗಳಿಂದ ನರಳುತ್ತಿದೆ. ಯುದ್ಧದ ಭಯ, ಆರ್ಥಿಕ ಅಸಮಾನತೆ, ಪರಿಸರ ನಾಶ ಮತ್ತು ಸಮಾಜದಲ್ಲಿನ ವಿಭಜನೆ- ಈ ಎಲ್ಲಾ ಸವಾಲುಗಳು ನಮ್ಮನ್ನು ವಿವಶಗೊಳಿಸಿವೆ. ಈ ಸಂದರ್ಭದಲ್ಲಿ, 2000 ವರ್ಷಗಳ ಹಿಂದೆ ಬೆತ್ಲೆೆಹೆಮ್ನ ಗೋದಲಿಯಲ್ಲಿ ಜನಿಸಿದ ಯೇಸುಕ್ರಿಸ್ತರ ಸಂದೇಶವು ಎಂದಿಗಿಂತಲೂ ಹೆಚ್ಚು ಪ್ರಸ್ತುತವಾಗಿದೆ. ಆತನ ಜನನವು ಇಂದಿನ ಜಗತ್ತಿಗೆ ನೀಡುವ ಭರವಸೆ, ಶಾಂತಿ ಮತ್ತು ಸಮಾನತೆಯ ಕರೆಗಳ ಕುರಿತು ಯೋಚಿಸೋಣ. 1. ಯುದ್ಧ ಮತ್ತು ವಿಭಜನೆಯ ನಡುವೆ ಶಾಂತಿಯ ಕರೆ ಇಂದು ಅನೇಕ ದೇಶಗಳಲ್ಲಿ ಯುದ್ಧಗಳು, ರಾಜಕೀಯ ಕಲಹಗಳು ಮತ್ತು ಭಯೋತ್ಪಾದನೆ ಜನರನ್ನು ಭೀತಿಯಲ್ಲಿ ಇರಿಸಿದೆ. ಕ್ರಿಸ್ಮಸ್ ಸಂದೇಶವು ಈ ಅಂಧಕಾರವನ್ನು ಸೀಳುವ ದೈವಿಕ ಬೆಳಕು. ಯೇಸುವು ‘ಶಾಂತಿದಾಯಕ ಪ್ರಭು’. (ಯೆಶಾಯ 9:6) ಅವರ ಜನನದ ಉದ್ದೇಶವೇ ಮಾನವಕುಲಕ್ಕೆ ಶಾಂತಿಯನ್ನು ತರುವುದು. ದೇವದೂತರು ಯೇಸುವಿನ ಜನನದ ರಾತ್ರಿ ಹಾಡಿದ ಸಂದೇಶವು ಸಾರ್ವಕಾಲಿಕವಾಗಿದೆ: ‘‘ಮಹೋನ್ನತದಲ್ಲಿ ದೇವರಿಗೆ ಮಹಿಮೆ; ಭುವಿಯಲ್ಲಿ ಸುಮನಸ್ಕರಿಗೆ ಶಾಂತಿ.’’ (ಲೂಕ 2:14). ಈ ಶಾಂತಿಯು ಕೇವಲ ಯುದ್ಧದ ಅನುಪಸ್ಥಿತಿಯಲ್ಲ, ಅದು ದೇವರೊಂದಿಗೆ ಮತ್ತು ಪರರೊಂದಿಗೆ ಸೌಹಾರ್ದದ ಸ್ಥಿತಿ. ನಮ್ಮ ಕಾಲದ ಸಂಘರ್ಷಗಳನ್ನು ಕುರಿತು ವಿಶ್ವಗುರು ಫ್ರಾನ್ಸಿಸ್ರವರು ಆಳವಾದ ಕಳವಳ ವ್ಯಕ್ತಪಡಿಸಿದ್ದರು. ‘‘ನಾವು ನಮ್ಮ ಸಹೋದರ ಸಹೋದರಿಯರನ್ನು ನೋವಿನಿಂದ ನೋಡಿದಾಗ, ಕ್ರಿಸ್ತನ ಬೆಳಕು ಮಸುಕಾಗುತ್ತದೆ. ಈ ಕ್ರಿಸ್ಮಸ್ನಲ್ಲಿ, ನಮ್ಮ ಹೃದಯಗಳು ಶಾಂತಿಯ ಮಾರ್ಗವನ್ನುಕಂಡುಕೊಳ್ಳಬೇಕು, ಏಕೆಂದರೆ ಯೇಸುವೇ ನಮ್ಮ ಶಾಂತಿ’’ ಎಂದು. 2. ಆರ್ಥಿಕ ಅಸಮಾನತೆ ಮತ್ತು ಬಡತನದ ಸವಾಲು ಜಾಗತಿಕವಾಗಿ ಸಂಪತ್ತು ಮತ್ತು ಅವಕಾಶಗಳ ಅಂತರ ಹೆಚ್ಚುತ್ತಿರುವ ಈ ಕಾಲದಲ್ಲಿ, ಯೇಸು ಬಡತನ ಮತ್ತು ಸರಳತೆಯಲ್ಲಿ ಜನಿಸಿದ್ದು ಪ್ರಬಲ ಸಂದೇಶ ನೀಡುತ್ತದೆ. ಅವರು ಸಂಪತ್ತು ಅಥವಾ ಅಧಿಕಾರವಿರುವ ಸ್ಥಳದಲ್ಲಿ ಹುಟ್ಟಲಿಲ್ಲ, ಬದಲಿಗೆ ಗೋದಲಿಯನ್ನು ಆರಿಸಿಕೊಂಡರು. ಇದು ನಮ್ಮ ಗಮನವನ್ನು ವಸ್ತುಸಂಗ್ರಹಣೆ ಮತ್ತು ವೈಭವದ ಬದಲು, ಸೇವೆ ಮತ್ತು ದೀನತೆಯ ಕಡೆಗೆ ಸೆಳೆಯುತ್ತದೆ. ದೇವರ ಪ್ರೀತಿ ಕೇವಲ ಮಾತುಗಳಲ್ಲಿರದೆ, ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ದುರ್ಬಲರಾದವರ ಪರವಾದ ಕಾರ್ಯಗಳಲ್ಲಿ ಇರಬೇಕು. ವಿಶ್ವಗುರು ಲಿಯೋಘಿ XIIIರವರು ಬಡವರ ಪರವಾಗಿ ಧ್ವನಿ ಎತ್ತುತ್ತಾ, ‘‘ಯಾವ ವ್ಯಕ್ತಿ ಸಮಾನತೆ ಮತ್ತು ಸಹೋದರತ್ವವನ್ನು ಗೌರವಿಸುತ್ತಾನೋ, ಆತನು ಕ್ರಿಸ್ತನ ದೀನತೆಯ ಮನೋಭಾವವನ್ನು ಪ್ರತಿಬಿಂಬಿಸುತ್ತಾನೆ. ಸಂಪತ್ತು ಒಂದುಗುರಿಯಲ್ಲ, ಆದರೆ ಅದನ್ನು ನ್ಯಾಯಯುತವಾಗಿ ಹಂಚಿಕೊಳ್ಳುವ ಸಾಧನ’’ ಎಂದರು. 3. ಪರಿಸರ ಬಿಕ್ಕಟ್ಟು ಮತ್ತು ಸೃಷ್ಟಿಯ ರಕ್ಷಣೆ ಇಂದು ಹವಾಮಾನ ಬದಲಾವಣೆ, ಪ್ರಕೃತಿಯ ಅಸಮತೋಲನ ಮತ್ತು ಅತಿಯಾದ ಶೋಷಣೆಯಿಂದ ಜಗತ್ತು ತತ್ತರಿಸಿದೆ. ಕ್ರಿಸ್ಮಸ್ ಹಬ್ಬವು ನಮ್ಮನ್ನು ಮತ್ತೆ ಪ್ರಕೃತಿಯೊಂದಿಗೆ ಸೌಹಾರ್ದದ ಸಂಬಂಧಕ್ಕೆ ಕರೆ ನೀಡುತ್ತದೆ. ಯೇಸುವು ಕಾಂಕ್ರಿಟ್ ಕಟ್ಟಡದಲ್ಲಿ ಅಲ್ಲ, ಪ್ರಕೃತಿಯ ಮಡಿಲಾದ ಗೋದಲಿಯಲ್ಲಿ ಹುಲ್ಲು ಮತ್ತು ದನ ಕರುಗಳ ನಡುವೆ ಜನಿಸಿದ್ದು ಒಂದು ಸಾಂಕೇತಿಕ ಅರ್ಥವನ್ನು ಹೊಂದಿದೆ. ನಾವು ಪ್ರಕೃತಿಯ ಯಜಮಾನರಲ್ಲ, ಆದರೆ ಅದರ ವಿಶ್ವಾಸಾರ್ಹ ಪಾಲಕರಾಗಿದ್ದೇವೆ. ದೇವರ ಸೃಷ್ಟಿಗೆ ಗೌರವವನ್ನು ನೀಡುವ ಕುರಿತು ಬೈಬಲ್ ಗ್ರಂಥ ಹೀಗೆ ಹೇಳುತ್ತದೆ: ‘‘ಆಕಾಶಮಂಡಲಗಳು ದೇವರ ಮಹಿಮೆಯನ್ನು ಪ್ರಚುರಪಡಿಸುತ್ತವೆ; ಆಕಾಶವು ಆತನ ಕೈಕೆಲಸವನ್ನು ಪ್ರಕಟಿಸುತ್ತದೆ.’’(ಕೀರ್ತನೆಗಳು 19:1). ಈ ಸೃಷ್ಟಿಯನ್ನು ನಾಶಮಾಡುವುದು ದೇವರ ಮಹಿಮೆಯನ್ನು ನಿರಾಕರಿಸಿದಂತೆ.ವಿಶ್ವಗುರು ಫ್ರಾನ್ಸಿಸ್ರವರು ಪರಿಸರ ಕಾಳಜಿಗೆ ಹೆಚ್ಚಿನ ಒತ್ತು ನೀಡುತ್ತಾ ಹೀಗೆನ್ನುತ್ತಾರೆ: ‘‘ನಮಗೆ ಸ್ವಾಭಾವಿಕ ಮನೆಯಾದ ಈ ಭೂಮಿಯನ್ನು ನಾವು ಅದರ ಮೂಲಭೂತ ಅವಶ್ಯಕತೆಗಳಿಗಿಂತ ಹೆಚ್ಚು ಶೋಷಿಸುವಂತಿಲ್ಲ. ದೇವರ ಸೃಷ್ಟಿಯನ್ನು ಪ್ರೀತಿಸುವುದು ದೇವರನ್ನು ಪ್ರೀತಿಸುವ ಭಾಗವಾಗಿದೆ’’. 4. ವೈಯಕ್ತಿಕ ಖಿನ್ನತೆ ಮತ್ತು ಭರವಸೆಯ ಅಗತ್ಯ ಇಂದು, ಮಾನಸಿಕ ಆರೋಗ್ಯದ ಸಮಸ್ಯೆಗಳು ಹೆಚ್ಚುತ್ತಿವೆ. ಯೇಸುವಿನ ಆಗಮನವು ಕೇವಲ ಜಾಗತಿಕ ಸಮಸ್ಯೆಗಳಿಗೆ ಮಾತ್ರವಲ್ಲ, ಪ್ರತಿಯೊಬ್ಬ ವ್ಯಕ್ತಿಯ ಆಂತರಿಕ ಹೋರಾಟಗಳಿಗೂ ಉತ್ತರ ನೀಡುತ್ತದೆ. ಕ್ರಿಸ್ಮಸ್ ಸಂದೇಶವು ಪ್ರತಿಯೊಬ್ಬರಿಗೂ ‘‘ನೀವು ದೇವರ ಪ್ರೀತಿಯ ಮಗು’’ ಎಂಬ ದೃಢೀಕರಣವನ್ನು ನೀಡುತ್ತದೆ. ನಮ್ಮ ಮೌಲ್ಯ ನಮ್ಮ ಸಾಧನೆಗಳಲ್ಲಿ ಅಥವಾ ಸಂಪತ್ತಿನಲ್ಲಿಲ್ಲ, ಆದರೆ ನಾವು ಯೇಸುವಿನ ಮೂಲಕ ದೇವರೊಂದಿಗೆ ಹೊಂದಿರುವ ಆಳವಾದ ಸಂಬಂಧದಲ್ಲಿದೆ. ಪ್ರಸ್ತುತ ವಿಶ್ವಗುರು ಲಿಯೋಘಿ XIIIರವರ ಪ್ರೇರಣೆ, ‘‘ಭರವಸೆಯು ಕ್ರೈಸ್ತ ಜೀವನದ ಸ್ತಂಭವಾಗಿದೆ. ಯೇಸುವಿನ ಜನನವು ಭವಿಷ್ಯದ ಬಗ್ಗೆ ನಾವು ಭಯಪಡಬೇಕಾಗಿಲ್ಲ, ಆದರೆ ಭರವಸೆಯಿಂದ ಎದುರು ನೋಡಬೇಕು ಎಂಬುದನ್ನು ಖಚಿತಪಡಿಸುತ್ತದೆ. ಆ ಭರವಸೆಯು ಕ್ರಿಸ್ತನಲ್ಲಿ ನೆಲೆಯಾಗಿದೆ’’. ಬೈಬಲ್ ಭರವಸೆಯ ಮೂಲವನ್ನು ಹೀಗೆ ವಿವರಿಸುತ್ತದೆ. ‘‘ವಿಶ್ವಾಸದಲ್ಲಿ ಸ್ಥಿರವಾಗಿರುವ ನಾವು ನಮ್ಮ ಪ್ರಭು ಯೇಸುಕ್ರಿಸ್ತನ ಮೂಲಕ ದೇವರೊಂದಿಗೆ ಸಮಾಧಾನವನ್ನು ಹೊಂದಿದ್ದೇವೆ’’ (ರೋಮಾಪುರ 5:1). ಈ ಸಮಾಧಾನವೇ ನಿಜವಾದ ಆಂತರಿಕ ನೆಮ್ಮದಿ ಮತ್ತು ಖಿನ್ನತೆಯನ್ನು ಗೆಲ್ಲುವ ಶಕ್ತಿ. ಭರವಸೆ ನಮ್ಮನ್ನು ನಿರಾಶೆಗೊಳಿಸುವುದಿಲ್ಲ. ಈ ಕ್ರಿಸ್ಮಸ್ ಹಬ್ಬವು ನಮಗೆ ಮರಳಿ ಗೋದಲಿಯ ಸರಳತೆಗೆ ಕರೆನೀಡುತ್ತದೆ. ನಾವು ಹೊಸ ವಸ್ತ್ರಗಳನ್ನು ಧರಿಸುವುದರ ಜೊತೆಗೆ, ನಮ್ಮ ಹೃದಯಕ್ಕೆ ದೀನತೆ ಮತ್ತು ಪ್ರೀತಿಯನ್ನು ಧರಿಸಿಕೊಳ್ಳಬೇಕು. ವರ್ತಮಾನದ ಈ ಸಂಕಷ್ಟದ ಪರಿಸ್ಥಿತಿಯಲ್ಲಿ, ನಾವು ಪ್ರತಿಯೊಬ್ಬರೂ ಶಾಂತಿಯ ರಾಯಭಾರಿಗಳಾಗಿ, ಪ್ರಕೃತಿಯ ಪಾಲಕರಾಗಿ ಮತ್ತು ಬಡವರ ಸಹಾಯಕರಾಗಿ ಬಾಳಲು ಯೇಸುಕ್ರಿಸ್ತನ ಆದರ್ಶವನ್ನು ಅನುಸರಿಸಬೇಕು. ನಮ್ಮ ಬದುಕು ಮತ್ತು ಜಗತ್ತಿನ ಕತ್ತಲೆಯಲ್ಲೂ ಆತನು ಬೆಳಕಾಗಿ ಬರಲು ಸಿದ್ಧನಿದ್ದಾರೆ. ನಿಜವಾದ ಕ್ರಿಸ್ಮಸ್ನ ಶಾಂತಿ, ಭರವಸೆ ಮತ್ತು ಮರುಸಂಧಾನದ ಸಂದೇಶವು ನಿಮ್ಮೆಲ್ಲರೊಂದಿಗೆ ಇರಲಿ.
Bangladesh Crisis | ಬಾಂಗ್ಲಾ ಬಿಕ್ಕಟ್ಟು ಉಲ್ಬಣ: ಸ್ಫೋಟಕ್ಕೆ ಒಬ್ಬ ಬಲಿ
ಢಾಕಾ: ಬಾಂಗ್ಲಾದೇಶದ ರಾಜಧಾನಿಯ ಮೊಗ್ ಬಜಾರ್ ಪ್ರದೇಶದಲ್ಲಿ ಗುಂಪೊಂದು ಬುಧವಾರ ರಾತ್ರಿ ಫ್ಲೈಓವರ್ ನಿಂದ ಕಚ್ಚಾ ಸ್ಫೋಟಕವನ್ನು ಎಸೆದಾಗ ಸಂಭವಿಸಿದ ದುರಂತದಲ್ಲಿ ಒಬ್ಬ ಮೃತಪಟ್ಟಿದ್ದು, ಪ್ರಕ್ಷುಬ್ಧ ಪರಿಸ್ಥಿತಿ ನಿರ್ಮಾಣವಾಗಿದೆ. ಮೊಗ್ಬಜಾರ್ ನ ಸ್ವಾತಂತ್ರ್ಯ ಯೋಧರ ಸ್ಮಾರಕದ ಎದುರಿನ ಮೇಲ್ಸೇತುವೆಯಲ್ಲಿ ಈ ಘಟನೆ ಸಂಭವಿಸಿದೆ. ಸೇತುವೆ ಮೇಲಿನಿಂದ ಎಸೆಯಲ್ಪಟ್ಟ ಬಾಂಬ್ ಸ್ಫೋಟಗೊಂಡಿತು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಘಟನೆಯಲ್ಲಿ ಸಿಯಾಮ್ ಎಂಬ ವ್ಯಕ್ತಿ ತೀವ್ರವಾಗಿ ಗಾಯಗೊಂಡಿದ್ದು, ಬಳಿಕ ಅವರು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಫ್ಲೈಓವರ್ ನಿಂದ ವ್ಯಕ್ತಿಯೊಬ್ಬ ಕಾಕ್ ಟೇಲ್ ಬಾಂಬ್ ಎಸೆದಿದ್ದು, ಇದು ಸಂತ್ರಸ್ತ ವ್ಯಕ್ತಿಯ ತಲೆ ಮೇಲೆ ಬಿದ್ದು ಸ್ಫೋಟಗೊಂಡಿದೆ. ಅದು ತಲೆಯನ್ನು ಸಿಡಿಸಿದೆ. ಈ ಬಗ್ಗೆ ತನಿಖೆ ನಡೆಸುತ್ತಿದ್ದೇವೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ. ಸಿಯಾಮ್ ಖಾಸಗಿ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಹಾಗೂ ಸ್ಫೋಟ ಸಂಭವಿಸಿದ ಸಂದರ್ಭದಲ್ಲಿ ಆ ಜಾಗದಲ್ಲಿ ಹಾದು ಹೋಗುತ್ತಿದ್ದ ಎಂದು ಕುಟುಂಬ ಸದಸ್ಯರು ಹೇಳಿದ್ದಾರೆ. ತಕ್ಷಣಕ್ಕೆ ಆತನ ಗುರುತು ಪತ್ತೆಯಾಗಿರಲಿಲ್ಲ. ಬಳಿಕ ಸಂಬಂಧಿಕರು ದೃಢಪಡಿಸಿದರು. ಘಟನೆ ಸಾರ್ವಜನಿಕರಲ್ಲಿ ಭೀತಿ ಮೂಡಿಸಿದ ಬೆನ್ನಲ್ಲೇ ಇಡೀ ಪ್ರದೇಶವನ್ನು ಪೊಲೀಸರು ಸುತ್ತುವರಿದಿದ್ದಾರೆ. ಸ್ಫೋಟಕವನ್ನು ಎಸೆದ ಆರೋಪಿಗಳು ತಕ್ಷಣ ತಪ್ಪಿಸಿಕೊಂಡಿದ್ದಾರೆ. ದಾಳಿಯ ಉದ್ದೇಶ ತಕ್ಷಣಕ್ಕೆ ತಿಳಿದುಬಂದಿಲ್ಲ ಎಂದು ರಮ್ನಾ ವಿಭಾಗದ ಪೊಲೀಸ್ ಉಪ ಆಯುಕ್ತ ಮಸೂದ್ ಅಲಮ್ ಹೇಳಿದ್ದಾರೆ.
Vijay Hazare Trophy | ಸೂರ್ಯವಂಶಿ ಬ್ಯಾಟಿಂಗ್ ಕೌಶಲವನ್ನು ಸಚಿನ್ ಗೆ ಹೋಲಿಸಿದ ಶಶಿ ತರೂರ್!
ಹೊಸದಿಲ್ಲಿ: ಹದಿನಾಲ್ಕರ ಹರೆಯದ ಬ್ಯಾಟಿಂಗ್ ಕೌತುಕ ವೈಭವ್ ಸೂರ್ಯವಂಶಿ ಇದೀಗ ಭಾರತದ ಕ್ರಿಕೆಟ್ ಜಗತ್ತಿನ ಕೇಂದ್ರ ಬಿಂದು. ಅದ್ಭುತ ಬ್ಯಾಟಿಂಗ್ ಕೌಶಲದಿಂದ ಅಭಿಮಾನಿಗಳು, ಪರಿಣತರು ಮತ್ತು ಮಾಜಿ ಆಟಗಾರರನ್ನು ಬೆರಗುಗೊಳಿಸಿರುವ ಪೋರ ದೇಶಿ ಕ್ರಿಕೆಟ್ ನಲ್ಲಿ ದಾಖಲೆ ಸೃಷ್ಟಿಸುವ ಮೂಲಕ ಮತ್ತೆ ಸುದ್ದಿಯಲ್ಲಿದ್ದಾರೆ. ಹಿರಿಯ ರಾಜಕಾರಣಿ ಮತ್ತು ಕ್ರಿಕೆಟ್ಪ್ರೇಮಿ ಶಶಿ ತರೂರ್ ಈ ಹದಿಹರೆಯದ ಪ್ರತಿಭೆಯ ಬಗೆಗಿನ ರೋಮಾಂಚನವನ್ನು ಎಕ್ಸ್ ಪೋಸ್ಟ್ ನಲ್ಲಿ ಬಣ್ಣಿಸಿದ್ದಾರೆ. ಸೂರ್ಯವಂಶಿಯವರ ಇತ್ತೀಚಿನ ಸಾಧನೆ ಬಗ್ಗೆ ಪ್ರತಿಕ್ರಿಯಿಸಿ, ಹಿಂದಿನ ಬಾರಿ ಹದಿನಾಲ್ಕು ವರ್ಷದ ಬಾಲಕ ಕ್ರಿಕೆಟ್ ನ ಅದ್ಭುತ ಪ್ರತಿಭೆ ಪ್ರದರ್ಶಿಸಿದ್ದರು. ಅದು ಸಚಿನ್ ತೆಂಡೂಲ್ಕರ್. ಅವರಿಂದ ಏನಾಯಿತು ಎನ್ನುವುದು ನಮಗೆಲ್ಲರಿಗೂ ತಿಳಿದಿದೆ. ಯಾವುದಕ್ಕೆ ಕಾಯುತ್ತಿದ್ದೇವೆ? ಭಾರತಕ್ಕೆ ವೈಭವ್ ಸೂರ್ಯವಂಶಿ! ಎಂದು ತರೂರ್ ಹೇಳಿದ್ದಾರೆ. ವಿಜಯ್ ಹಝಾರೆ ಟ್ರೋಫಿ ಪ್ಲೇಟ್ ಲೀಗ್ ನಲ್ಲಿ ಬುಧವಾರ ಅರುಣಾಚಲ ಪ್ರದೇಶ ವಿರುದ್ಧದ ಪಂದ್ಯದಲ್ಲಿ ಬಿಹಾರ ಪರ ಆರಂಭಿಕನಾಗಿ ಕಣಕ್ಕಿಳಿದ ವೈಭವ್ ಸೂರ್ಯವಂಶಿ 36 ಎಸೆತಗಳಲ್ಲಿ ಶತಕ ಸಿಡಿಸಿ ಮತ್ತೆ ಸುದ್ದಿಯಾಗಿದ್ದರು. ಕಳೆದ ಸೀಸನ್ ನಲ್ಲಿ ಅಮೋಲ್ಪ್ರೀತ್ ಸಿಂಗ್ 35 ಎಸೆತಗಳಲ್ಲಿ ಶತಕ ಗಳಿಸಿದ್ದನ್ನು ಹೊರತುಪಡಿಸಿದರೆ ಇದು ಭಾರತದ ಲಿಸ್ಟ್ ಎ ಕ್ರಿಕೆಟ್ನಲ್ಲಿ ಎರಡನೇ ಅತಿವೇಗದ ಶತಕವಾಗಿದೆ. ಜಾಗತಿಕವಾಗಿ ಇದು ನಾಲ್ಕನೇ ಅತಿವೇಗದ ಶತಕವಾಗಿದೆ. ಯುವ ಕ್ರಿಕೆಟರ್ ಅಷ್ಟಕ್ಕೇ ಸೀಮಿತವಾಗದೇ 54 ಎಸೆತಗಳಲ್ಲಿ 150 ರನ್ಗಳ ಗಡಿ ದಾಟಿ, ಅಂತಿಮವಾಗಿ 84 ಎಸೆತಗಳಲ್ಲಿ 190 ರನ್ ಗಳಿಸಿ ಔಟ್ ಆದರು. ಬಿಹಾರ ತಂಡ 50 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 574 ರನ್ ಗಳಿಸಿದರೆ, ಅರುಣಾಚಲ ಪ್ರದೇಶ 177 ರನ್ಗಳಿಗೆ ಆಲೌಟ್ ಆಗಿ 397 ರನ್ಗಳ ಭಾರಿ ಅಂತರದ ಸೋಲೊಪ್ಪಿಕೊಂಡಿತು.
ಕಳೆದ ಜುಲೈನಲ್ಲಿ ಇರಾನ್ ರಾಜಧಾನಿ ಟೆಹ್ರಾನ್ನಲ್ಲಿ ನಡೆದಿದ್ದ ಹಮಾಸ್ ರಾಜಕೀಯ ಮುಖ್ಯಸ್ಥ ಇಸ್ಮಾಯಿಲ್ ಹನಿಯೆ ಅವರ ಹತ್ಯೆಯ ಬಗ್ಗೆ. ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಸ್ಪೋಟಕ ಮಾಹಿತಿಯನ್ನು ಹೊರಹಾಕಿದ್ದಾರೆ. ಹತ್ಯೆಗೂ ಕೆಲವೇ ಗಂಟೆಗಳ ಮೊದಲು ತಾವು ಇಸ್ಮಾಯಿಲ್ ಹನಿಯೆ ಅವರನ್ನು ಭೇಟಿ ಮಾಡಿದ್ದಾಗಿ ಗಡ್ಕರಿ ತಿಳಿಸಿದ್ದಾರೆ. ಇರಾನ್ ನೂತನ ಅಧ್ಯಕ್ಷರ ಪದಗ್ರಹಣ ಸಮಾರಂಭದಲ್ಲಿ ಹನಿಯೆ ಅವರನ್ನು ಅನೌಪಚಾರಿಕವಾಗಿ ಭೇಟಿ ಮಾಡಿದ್ದ ನಿತಿನ್ ಗಡ್ಕರಿ, ಕೆಲವೇ ಗಂಟೆಗಳ ಬಳಿಕ ಅವರ ಹತ್ಯೆಯ ವಿಚಾರ ತಿಳಿದು ಆಘಾತಗೊಂಡಿದ್ದರು.
1963 ರ ಗಣರಾಜ್ಯೋತ್ಸವ ಪರೇಡ್ನಲ್ಲಿ ಭಾಗವಹಿಸಲು ಆಗಿನ ಪ್ರಧಾನಿ ನೆಹರೂ ಆರೆಸ್ಸಸನ್ನು ಆಹ್ವಾನಿಸಿದ್ದರೆ?
ಆರೆಸ್ಸೆಸ್ 100 ವರ್ಷ ಪೂರೈಸಿದ ಪ್ರಯುಕ್ತ ಈ ಸಂಘಟನೆಯ ಪತ್ರಿಕೆಗಳ ಲೇಖನಗಳಲ್ಲಿ, ನಾಯಕರ ಭಾಷಣಗಳಲ್ಲಿ ಈ ವಿಷಯವನ್ನು ಮತ್ತೆ ಮತ್ತೇ ಹೇಳಲಾಗುತ್ತಿದೆ. 1962 ರಲ್ಲಿ ಚೀನಾದೊಡನೆ ನಡೆದ ಯುದ್ಧದಲ್ಲಿ ಭಾರತ ಸೋತು ಹೋಗಿ ನೆಹರೂ ಹತಾಶರಾಗಿದ್ದರು ಇಂತಹ ವಿಷಮ ಪರಿಸ್ಥಿತಿಯಲ್ಲಿ 1963ರ ಗಣರಾಜ್ಯೋತ್ಸವ ಪಾರಂಪರಿಕ ಪರೇಡ್ ನಲ್ಲಿ ಭಾಗವಹಿಸಲು ನೆಹರೂ ಆರೆಸ್ಸೆಸ್ ವಿನಂತಿಸಿಕೊಂಡರು. ಉಜ್ವಲ ದೇಶಭಕ್ತಿಯನ್ನು ಬೆಳೆಸುವ ಆರೆಸ್ಸೆಸ್ ಈ ಮನವಿಯನ್ನು ಅಂಗೀಕರಿಸಿತು. ಗಣರಾಜ್ಯೋತ್ಸವದಲ್ಲಿ ಅಧಿಕೃತವಾಗಿ ಸಾವಿರಾರು ಆರೆಸ್ಸೆಸ್ ಕಾರ್ಯಕರ್ತರು ಭಾಗವಹಿಸಿ ರಾಷ್ಟ್ರ ನಿಷ್ಠೆಯನ್ನು ಪ್ರದರ್ಶಿಸಿದರು. ಹಾಗಾಗಿ ಸ್ವತ: ಪ್ರಧಾನಿ ನೆಹರೂರವರೇ ಆರೆಸ್ಸೆಸ್ ರಾಷ್ಟ್ರ ಭಕ್ತಿಯನ್ನು ಮಾನ್ಯ ಮಾಡಿದ್ದರು ಎಂದು ಪ್ರಚಾರ ಮಾಡುತ್ತಾರೆ. ಭಾರತದ ರಾಷ್ಟ್ರಪತಿಯಾಗಿದ್ದ ಪ್ರಣವ್ ಮುಖರ್ಜಿ ಯವರು ಆರೆಸ್ಸೆಸ್ ಕೇಂದ್ರ ಕಚೇರಿಗೆ ಭೆೇಟಿಯಿತ್ತಾಗ ಭಾರೀ ವಿರೋಧ ವ್ಯಕ್ತವಾಯಿತು. ಆಗ ಕೂಡ ಆರೆಸ್ಸಸ್ ತನ್ನ ರಾಷ್ಟ್ರಭಕ್ತಿಯನ್ನು ಸ್ವತ: ನೆಹರೂವವರೇ ಒಪ್ಪಿಕೊಂಡಿದ್ದರು ಎಂದು ಹೇಳಿಕೊಂಡಿತ್ತು. ‘‘1962ರ ಭಾರತ-ಚೀನಾ ಯುದ್ಧ್ದದ ಸಂಧರ್ಭದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘವು ಸಲ್ಲಿಸಿದ ಸೇವೆಗಳಿಗೆ ಮನಸೋತು ಆಗಿನ ಪ್ರಧಾನಿ ನೆಹರೂ ಅವರು 1963 ರ ಗಣರಾಜ್ಯೋತ್ಸವದ ವಿಶೇಷ ಪಥ ಸಂಚಲನಕ್ಕೆ ರಾಷ್ಟ್ರೀಯ ಸ್ವಯಂ ಸೇವಕ ಸಂಘವನ್ನು ಆಹ್ವಾನಿಸಿದ್ದರು’’ (ವಿಕ್ರಮ ವಾರ ಪತ್ರಿಕೆ- ಟಿ. ದೇವಿದಾಸ್ 24-8-2025) ‘‘ಪರೇಡ್ನಲ್ಲಿ ಭಾಗವಹಿಸಬೇಕೆಂದು ಕೇವಲ ಒಂದು ವಾರವಿದ್ದಾಗ ದಿಲ್ಲಿಯ ಸಂಘ ಕಾರ್ಯಾಲಯಕ್ಕೆ ಕೇಂದ್ರ ಸರಕಾರದ ಕಡೆಯಿಂದ ಆಮಂತ್ರಣ ನೀಡಲಾಗಿತ್ತು’’ (ದು.ಗ.ಲಕ್ಷ್ಮಣ ಹೊಸ ದಿಗಂತ ದಿನ ಪತ್ರಿಕೆ 8-12-2025) ‘‘ಸಂಘದ ರಾಷ್ಟ್ರೀಯವಾದಿ ಕಾರ್ಯದ ಪ್ರಭಾವ ಎಷ್ಟಿತ್ತೆೆಂದರೆ ಸಂಘದ ಕುರಿತು ದ್ವೇಷ ಭಾವನೆಯನ್ನೇ ಹೊಂದಿದ ನೆಹರೂರವರು ಸಹ ತಮ್ಮ ಭಾವನೆ ಬದಲಿಸಿಕೊಳ್ಳಬೇಕಾಯಿತು. 1963ರ ಗಣರಾಜ್ಯೋತ್ಸವದ ಸಂದರ್ಭದಲ್ಲಿ ಗಣವೇಷಧಾರಿ ಸ್ವಯಂ ಸೇವಕರಿಗೆ ಪಥ ಸಂಚಲನ ನಡೆಸಲು ಅವಕಾಶ ನೀಡಿದರು’’ (ಸಂತೋಷ್ ಜಿ. ಆರ್. ಪುಟ 103 ಉತ್ಥಾನ ಗಣರಾಜ್ಯೋತ್ಸವ ಹಾಗೂ ಸಂಕ್ರಾಂತಿ ವಿಶೇಷಾಂಕ ಜನವರಿ 2025) ಆದರೆ ವಾಸ್ತವವೇನು?: ಗಣರಾಜ್ಯೋತ್ಸವದ ದಿನದಂದು ದಿಲ್ಲಿಯಲ್ಲಿ ಮಾಮೂಲಾಗಿ ಸಶಸ್ತ್ರ ಪಡೆಗಳು ಭಾಗವಹಿಸುವ ಅದ್ದೂರಿ ಗಣರಾಜ್ಯೋತ್ಸವ ಪರೇಡ್ ಮತ್ತು ದೇಶವನ್ನು ಉದ್ದೇಶಿಸಿ ಕೆಂಪು ಕೋಟೆಯಿಂದ ಪ್ರಧಾನ ಮಂತ್ರಿಗಳು ಭಾಷಣ ಮಾಡುವ ಕಾರ್ಯಕ್ರಮಗಳು ಪ್ರಸಿದ್ಧ್ದವಾಗಿವೆೆ. ಆದರೆ 1963 ರಲ್ಲಿ ಚೀನಾದೊಡನೆ ನಡೆದ ಯುದ್ಧ್ದದ ಕಾರಣ ಬಹುತೇಕ ಪಡೆಗಳು ಗಡಿ ಪ್ರದೇಶಗಳಿಗೆ ರವಾನೆಯಾಗಿದ್ದವು. ಈ ವಿಷಮ ಪರಿಸ್ಥಿತಿಯಲ್ಲಿ ಗಣರಾಜ್ಯೋತ್ಸವ ಪರೇಡನ್ನು ರದ್ದು ಪಡಿಸಬೇಕೆಂಬುದು ರಕ್ಷಣಾ ಇಲಾಖೆಯ ಇಂಗಿತವಾಗಿತ್ತು. ಆದರೆ ಪ್ರಧಾನಮಂತ್ರಿ ನೆಹರೂ ಆಗಿನ ರಕ್ಷಣಾ ಮಂತ್ರಿ ವೈ. ಬಿ. ಚವ್ಹಾಣರಿಗೆ ದಿನಾಂಕ 10-12-1962 ರಂದು ದೀರ್ಘ ಪತ್ರವನ್ನು ಬರೆದು ಆ ವರ್ಷದ ಗಣರಾಜ್ಯೋತ್ಸವ ಪರೇಡ್ ಬದಲಿಗೆ ಎಲ್ಲಾ ನಾಗರಿಕರೂ ಭಾಗವಹಿಸುವ ಮೆರವಣಿಗೆಯ ಮೂಲಕ ಆಚರಿಸಬೇಕೆಂದು ಸಲಹೆ ನೀಡಿದರು. ಈ ಮೆರವಣಿಗೆಯಲ್ಲಿ ದಿಲ್ಲಿಯಲ್ಲಿರುವ ಸೈನ್ಯದ ಕೆಲವು ತುಕಡಿಗಳಲ್ಲದೆ ನಾಗರಿಕರು, ಹೋಮ್ ಗಾರ್ಡ್ಸ್, ಎನ್. ಸಿ. ಸಿ. ಕೆಡೆಟ್ಗಳು ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು, ಕಾರ್ಮಿಕ ಸಂಘಗಳ ಮತ್ತು ಇನ್ನಿತರ ಸಂಘಟನೆಗಳ ಕಾರ್ಯಕರ್ತರು ಎಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿಸಬಹುದು. ಅವರಿಗೆಲ್ಲ ತರಬೆೇತಿ ಇಲ್ಲದಿರಬಹುದು. ಆದರೆ ಈ ನಡೆಯು ಅದರಲ್ಲಿ ಭಾಗವಹಿಸಿದವರ ಮೇಲೆ ಮತ್ತು ಅದನ್ನು ನೋಡುವವರ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆಂಬ ನಂಬಿಕೆಯಿದೆ ನನಗೆ ಎಂದರು ನೆಹರೂ ಈ ಪತ್ರದಲ್ಲಿ. ಮರು ದಿನ ಕಾಂಗ್ರೆಸ್ ಪಕ್ಷದ ಸಂಸದೀಯ ಪಕ್ಷದ ಸಭೆಯಲ್ಲಿ ‘‘ಈ ಪರೇಡನ್ನು ನಾವು ಸೈನಿಕ ಕಾರ್ಯಕ್ರಮಕ್ಕೆ ಬದಲಾಗಿ ಒಂದು ಸಾರ್ವಜನಿಕ ನಾಗರಿಕ ಕಾರ್ಯಕ್ರಮವಾಗಿ ನಡೆಸುತ್ತೇವೆ. ಹಾಗಾಗಿ ಸಂಸತ್ ಸದಸ್ಯರು ಗುಂಪಾಗಿ ಭಾಗವಹಿಸಬೇಕು’’ ಎಂದರು. ಆ ದಿನ ನಡೆದ ಗಣರಾಜ್ಯೋತ್ಸವದ ಮೆರವಣಿಗೆಯಲ್ಲಿ ಒಂದು ಲಕ್ಷ ಸಾರ್ವಜನಿಕರು ಭಾಗವಹಿಸಿದರು. ಸಂಸತ್ ಸದಸ್ಯರು ಮತ್ತು ತನ್ನ ಮಂತ್ರಿ ಮಂಡಲದ ಸದಸ್ಯರೊಂದಿಗೆ ನೆಹರೂ ಈ ಮೆರವಣಿಗೆಯ ಮುಂಚೂಣಿಯಲ್ಲಿದ್ದರು ಎಂದಿತು ಟೈಮ್ಸ್ ಆಫ್ ಇಂಡಿಯಾದ ವರದಿ. ಈ ಮೆರವಣಿಗೆಯ ಬಗ್ಗೆ ಹಿಂದೂಸ್ಥಾನ್ ಟೈಮ್ಸ್ ಪತ್ರಿಕೆಯ 1963ರ ಜನವರಿ 28ರ ಸಂಚಿಕೆಯಲ್ಲಿ ಪ್ರಕಟವಾದ ವರದಿಯ ಪ್ರಕಾರ ಚೀನೀ ದಾಳಿ ಮತ್ತು ದ್ರೋಹದ ವಿರುದ್ಧ್ದ ಮತ್ತು ಭಾರತದ ಗೌರವ ಮತ್ತು ಏಕ್ಯತೆಯ ಪರವಾಗಿ ಘೋಷಣೆಗಳನ್ನು ಕೂಗುತ್ತಾ ಒಂದು ಲಕ್ಷ ಜನರು ಭಾಗವಹಿಸಿದರು. ಆ ವರ್ಷ ಚೀನೀ ದಾಳಿಯಿಂದ ದೇಶವನ್ನು ರಕ್ಷಿಸಲು ಹೆಚ್ಚಿನ ಪಡೆಗಳು ಗಡಿಯಲ್ಲಿ ಕಾರ್ಯಾಚರಿಸುತ್ತಿತ್ತು. ಹಾಗಾಗಿ ಪರೇಡ್ನಲ್ಲಿ ಸಶಸ್ತ್ರ ಪಡೆಗಳ ಸಂಖ್ಯೆ ಕಡಿಮೆಯಿತ್ತು. ರಾಷ್ಟ್ರೀಯ ತುರ್ತು ಪರಿಸ್ಥಿತಿಯ ಕಾರಣ ಮತ್ತು ದೇಶದ ಆರ್ಥಿಕತೆಗೆ ಹೊರೆಯಾಗದಂತೆ ಮಿತವ್ಯಯ ಪಾಲಿಸಲು ಈ ನಾಗರಿಕ ಮೆರವಣಿಗೆಯಲ್ಲಿ ಯಾವುದೇ ಆಡಂಬರದ (ವರ್ಣರಂಜಿತ)ಬಹಿರಂಗ ಪ್ರದರ್ಶನಗಳಿರಲಿಲ್ಲ ಎಂದು ವರದಿ ಮಾಡಲಾಗಿತ್ತು. ಆ ದಿನಗಳಲ್ಲಿ ಗಾಂಧಿ ಹತ್ಯೆಯ ಕಳಂಕದಿಂದ ತತ್ತರಿಸಿದ್ದ ಆರೆಸ್ಸೆಸ್ ಹೇಗಾದರೂ ಮಾಡಿ ಸಾಮಾಜಿಕ ಮಾನ್ಯತೆಯನ್ನು ಗಳಿಸಿಕೊಳ್ಳಲು ಹೆಣಗಾಡುತ್ತಿತ್ತು. ಹಾಗಾಗಿ ಆರೆಸ್ಸೆಸ್ ಕಾರ್ಯಕರ್ತರು ಸಮವಸ್ತ್ರಧಾರಿಗಳಾಗಿ ಭಾರತೀಯ ಮಜ್ದೂರ್ ಸಂಘದ ಸದಸ್ಯರಾಗಿ ಭಾಗವಹಿಸಿರಬಹುದು. ಆದರೆ ಇದರಲ್ಲಿ ಆರೆಸ್ಸೆಸ್ ವಿಶೇಷ ಪಾತ್ರವೇನೂ ಇರಲಿಲ್ಲ. ಗುಂಪಿನೊಡನೆ ಗೋವಿಂದ ಎಂಬಂತೆ ಆ ಭಾರೀ ಜನಪ್ರವಾಹದ ನಡುವೆ ಹೆಜ್ಜೆ ಹಾಕಿದರು ಆರೆಸ್ಸೆಸ್ ಕಾರ್ಯಕರ್ತರು. ಹಾಗಾಗಿ ಯಾವುದೇ ರಾಷ್ಟ್ರೀಯ ಪತ್ರಿಕೆ ಸಂಘದ ಭಾಗವಹಿಸುವಿಕೆಯ ಬಗ್ಗೆ ವಿಶೇಷ ವರದಿಯನ್ನೇನೂ ಮಾಡಲಿಲ್ಲ. ಹಿಂದೂಸ್ಥಾನ ಎನ್ನುವ ಹಿಂದಿ ದೈನಿಕ ಜನವರಿ 28ರ ಸಂಚಿಕೆಯಲ್ಲಿ ಒಂದು ಪುಟವಿಡೀ ಈ ಮೆರವಣಿಗೆಯ ಪೋಟೊಗಳನ್ನು ಪ್ರಕಟಿಸಿತ್ತು. ಅದರಲ್ಲಿ ಆರೆಸ್ಸೆಸ್ನ ಒಂದಷ್ಟು ಕಾರ್ಯಕರ್ತರು ಭಾಗವಹಿಸಿದ ಪೋಟೊ ಪ್ರಕಟವಾಗಿತ್ತು. ಮತ್ತೊಂದು ಮುಖ್ಯ ಸಂಗತಿಯೆಂದರೆ ಈ ಪೋಟೊದಲ್ಲಿ ಆರೆಸ್ಸಸ್ ಸನಾತನ ಹಿಂದೂ ಧರ್ಮದ ಪ್ರತೀಕ ಎಂದೆಲ್ಲ ಬಿಂಬಿಸುವ ಕೇಸರಿ ಧ್ವಜವನ್ನು ಹಿಡಿದಿರಲಿಲ್ಲ. ಅದು ರಾಷ್ಟ್ರ ಧ್ವಜವನ್ನು ಹಿಡಿಯಬೇಕಾದ ಅನಿವಾರ್ಯತೆಯಿತ್ತು. ಆರೆಸ್ಸ್ಸೆಸ್ನ ಮುಖವಾಣಿ ಆರ್ಗನೈಸರ್ ವಾರಪತ್ರಿಕೆಯು 1963 ರ ಫೆಬ್ರವರಿ 4ರ ಸಂಚಿಕೆಯಲ್ಲಿ, ಸಮವಸ್ತ್ರ ಧರಿಸಿದ ಎರಡು ಸಾವಿರ ಸ್ವಯಂ ಸೇವಕರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು ಮತ್ತು ಅದು ದಿಲ್ಲಿ ನಾಗರಿಕರ ಗುಂಪಿನ ಮುಖ್ಯ ಅಂಗವಾಗಿತ್ತು ಎಂದಿತು. ಆರೆಸ್ಸೆಸ್ನ ಈ ಮೆರವಣಿಗೆಯಲ್ಲಿ ಭಾಗವಹಿಸುವುದರ ಕುರಿತು ಹಲವು ಕಾಂಗ್ರೆಸಿಗರು ಆಕ್ಷೇಪಿಸಿದರು. ಅದಕ್ಕೆ ಉತ್ತರಿಸುತ್ತ ನೆಹರೂ ಹೀಗೆಂದಿದ್ದರು ‘‘ಆರೆಸ್ಸೆಸ್ನವರು ಘಾಝಿಯಾಬಾದ್, ಮೀರತ್ ಮತ್ತು ಇತರ ಸ್ಥಳಗಳಿಂದ ಸಮವಸ್ತ್ರಧಾರಿ ಕಾರ್ಯಕರ್ತರನ್ನು ಸಂಘಟಿಸುತ್ತಿದ್ದಾರೆಂದು ಮೆರವಣಿಗೆಯ ಮುನ್ನಾ ದಿನ ನನಗೆ ಕೆಲವು ಕಾಂಗ್ರೆಸಿಗರು ತಿಳಿಸಿದರು. ನಾನು ಆರೆಸ್ಸೆಸ್ನವರು ಭಾಗವಹಿಸುವುದನ್ನು ತಡೆಯಲು ಸಾಧ್ಯವಿಲ್ಲ. ಯಾರನ್ನೂ ನಿರ್ಬಂಧಿಸುವುದು ಸರಿಯಲ್ಲ. ಯಾವುದೇ ಖಾಸಗಿ ವಾದ್ಯ ಮಾತ್ರ ಬೇಡವೆಂದೆ. ಇನ್ನುಳಿದಂತೆ ಯಾವುದೇ ಉಡುಪು ಅಥವಾ ಸಮವಸ್ತ್ರ ಧರಿಸಿ ಭಾಗವಹಿಸುವುದನ್ನು ತಡೆಯಲು ಸಾಧ್ಯವಿಲ್ಲ’’ ಹಾಗಾಗಿ ಆರೆಸ್ಸ್ಸೆಸ್ ಭಾಗವಹಿಸಿದ್ದ ಮೆರವಣಿಗೆ ಹಲವಾರು ಸಂಘ ಸಂಸ್ಥೆಗಳು ಭಾಗವಹಿಸಿದ್ದ್ದ ಒಂದು ಬೃಹತ್ ನಾಗರಿಕ ನಡೆಯಾಗಿತ್ತು. 1963ರ ಗಣರಾಜ್ಯೋತ್ಸವ ಪರೇಡ್ನಲ್ಲಿ ಭಾಗವಹಿಸಲು ಪ್ರಧಾನಿ ನೆಹರೂ ಆರೆಸ್ಸೆಸ್ನ ಸರಸಂಘ ಚಾಲಕ ಎಂ. ಎಸ್. ಗೋಳ್ವಾಲ್ಕರವರನ್ನು ಆಹ್ವಾನಿಸಿದ್ದರು ಮತ್ತು ಅದಕ್ಕೆ ಸಮ್ಮತಿಸಿ ಆರೆಸ್ಸೆಸ್ ಕಾರ್ಯಕರ್ತರು ಭಾಗವಹಿಸಿದ್ದರು ಎನ್ನುವುದೇ ಆರೆಸ್ಸೆಸ್ನ ಸುಳ್ಳಿನ ಕಾರ್ಖಾನೆಯಲ್ಲಿ ತಯಾರಾದ ‘ದೇಶಭಕ್ತ’ ಎಂಬ ಪ್ಯಾಕೇಟಿನೊಳಗೆ ಮಡಚಿಟ್ಟ ಅಪ್ಪಟ ಬೊಗಳೆ. (ಆಧಾರ: ಧಿರೇಂದ್ರ ಕೆ. ಝಾ., ದಿ. ಕಾರವಾನ ಇಂಗ್ಲಿಷ್ ಮಾಸ ಪತ್ರಿಕೆ, ಫೆಬ್ರವರಿ 2023)
ಭಾಷೆ - ಧರ್ಮೋನ್ಮಾದಕ್ಕೆ ಜೀವ ಬಲಿ ಕೊಟ್ಟ ಕೇರಳ- ಬಾಂಗ್ಲಾ: ಉದೈಫ್ ಅನಕ್ಕಲ್ ಬರಹ
ಭಾರತದ ಕೇರಳ ಹಾಗೂ ನೆರೆಯ ಬಾಂಗ್ಲಾದೇಶದಲ್ಲಿ ಎರಡು ಪ್ರತ್ಯೇಕ ಘಟನೆಗಳು ಈಚೆಗೆ ಸಂಭವಿಸಿವೆ. ಈ ಎರಡೂ ಘಟನೆಗಳಲ್ಲಿ ಮೃತಪಟ್ಟವರು ಒಂದೇ ವಯಸ್ಸಿನವರು, ಯುವಕರು ಹಾಗೂ ಕಡಿಮೆ ವೇತನಕ್ಕೆ ದಿನಗೂಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರು. ಮನಕಲಕುವ, ದಾರುಣ ಘಟನೆ ಹಾಗೂ ಅದರ ಹಿನ್ನೆಲೆಯ ಬಗ್ಗೆ ಹವ್ಯಾಸಿ ಬರಹಗಾರ ಉದೈಫ್ ಅನಕ್ಕಲ್, ಕಾಸರಗೋಡು ಅವರ ವಿಶೇಷ ಬರಹ ಇಲ್ಲಿದೆ. ಎರಡು
ದೇಶ-ದೇಶಗಳ ನಡುವಣ ಯುದ್ಧದಲ್ಲಿ ಯಾವ ವೈರವೂ ಇಲ್ಲದೆ ಯೋಧರು ಪರಸ್ಪರ ಹಿಂಸಿಸುತ್ತಾರೆ; ಕೊಲ್ಲುತ್ತಾರೆ. ಆದರೆ ದೇಶದೊಳಗೇ ಇದು ನಡೆದರೆ? ಕಳೆದ ಕೆಲವು ವರ್ಷಗಳಲ್ಲಿ ಭಾರತದಲ್ಲಿ ನಡೆಯುತ್ತಿರುವುದು ಇದೇ. ಕಾರಣವೇ ಇಲ್ಲದೆ ಕೊಲೆಗಿಲೆ ಮುಂತಾದವು ನಡೆಯುತ್ತಿವೆ. ಇದು ಎಲ್ಲ ಸಮಾಜಗಳಲ್ಲಿ ಸಹಜವೆಂದುಕೊಂಡರೆ ಇವಕ್ಕೆ ಪ್ರತಿಕ್ರಿಯೆಯಾಗಿ ಜವಾಬ್ದಾರಿಯುತ ಸ್ಥಾನಗಳಲ್ಲಿ ಇರುವವರು (ಅವರು ಆ ಸ್ಥಾನಕ್ಕೆ ಏರಿದ್ದೇ ಇಂತಹ ಮೂಲಭೂತವಾದಿಗಳ ಸಹಕಾರದಿಂದ; ಆ ವಿಚಾರ ಬೇರೆ!) ಆಡುವ ಸ್ಫೋಟಕ, ವಿನಾಶಕಾರೀ ಮಾತುಗಳು ಶ್ರೀರಾಮ ಬಿಡಿ, ಸಾಮಾನ್ಯನಿಗೂ ನಾಚಿಕೆಯಾಗುವಂತಿದೆ. ನನ್ನ ಹಿರಿಯ ಸ್ನೇಹಿತರೊಬ್ಬರು ಇತ್ತೀಚೆಗೆ ನನಗೊಂದು ಪ್ರಶ್ನೆ ಹಾಕಿದರು: ನಮ್ಮ ದೇಶದಲ್ಲೇಕೆ ಇಷ್ಟೊಂದು ಹಿಂಸೆ ನಡೆಯುತ್ತಿದೆ? ಅವರ ಪ್ರಶ್ನೆ ನನ್ನನ್ನು ಗಾಢವಾಗಿ ಕಾಡಿದೆ. ಅವರು ಮತ್ತೆ ಅದನ್ನು ನೆನಪಿಸುತ್ತಾರೋ ಅಥವಾ ಅವರೇ ಉತ್ತರ ಕಂಡುಕೊಂಡಿದ್ದಾರೋ ನನಗೆ ಗೊತ್ತಿಲ್ಲ. ಆದರೆ ನಾನಂತೂ ಇದರಿಂದ ಹೊರಬರಲಾಗಲಿಲ್ಲ. ಒಂದಷ್ಟು ಯೋಚನೆಗಳು ಕಾಡುತ್ತಲೇ ಇರುತ್ತವೆ. ಜೊತೆಗೇ ಕರ್ನಾಟಕದಲ್ಲಿ ದ್ವೇಷಭಾಷಣವನ್ನು ನಿಯಂತ್ರಿಸುವ ಒಂದು ಕಾಯ್ದೆ ಶಾಸನಸಭೆಯಲ್ಲಿ ಸ್ವೀಕೃತವಾಗಿದೆ. ಅದಿನ್ನೂ ರಾಜ್ಯಪಾಲರ ಅಂಕಿತ ಪಡೆದಿಲ್ಲ. ಮಸೂದೆ ಅಂಗೀಕಾರವಾಗುವ ಮೊದಲು ಮತ್ತು ಆನಂತರ ಭಾರತೀಯ ಜನತಾ ಪಕ್ಷದ ಒಂದಷ್ಟು ಧುರೀಣರು ಮತ್ತು ಅವರ ಶ್ರದ್ಧಾಳುಗಳು ಈ ಮಸೂದೆಯ ವಿರುದ್ಧ ಕಟುವಾದ ಟೀಕೆಯನ್ನು ಮಾಡುತ್ತಿದ್ದಾರೆ. ಇದು ತಮ್ಮನ್ನು ಗುರಿಯಾಗಿರಿಸಿದ ಮಸೂದೆಯೆಂದು ಅವರು ಹೆಗಲಿನಲ್ಲಿ ಕುಂಬಳಕಾಯಿಯನ್ನು ಹೊತ್ತು ಹೇಳುತ್ತಿರುವಾಗ ಅವರ ಕುರಿತು ನಗು ಮತ್ತು ಅನುಕಂಪದ ಹೊರತಾಗಿ ಇನ್ನೇನು ಹುಟ್ಟೀತು? ಯುದ್ಧ, ದಂಗೆ ಮುಂತಾದ ಸಂದರ್ಭಗಳಲ್ಲಿ ಹಿಂಸೆ ಸಹಜವೆಂಬಂತೆ ಕಾಣುವ, ಕಾಣಿಸಬಲ್ಲ ಅಥವಾ ಅಪೇಕ್ಷಿತ, ಅಗತ್ಯ. ಅನಿವಾರ್ಯವಲ್ಲ. ಅಹಿಂಸೆಯ ಎಲ್ಲ ಕಾಲದಲ್ಲೂ ಹಿಂಸೆ ತಾಂಡವವಾಡಿದೆ. ಅದು ಬುದ್ಧನ, ಮಹಾವೀರನ, ಯೇಸುವಿನ, ಕಾಲ-ದೇಶದಲ್ಲೂ ಅಷ್ಟೇ. ಶರಣ ಚಳವಳಿಯ ಕಾಲದಲ್ಲೂ ಅಷ್ಟೇ. ಗಾಂಧಿ ಅಹಿಂಸಾ ಚಳವಳಿಯನ್ನು ನಡೆಸುತ್ತಿದ್ದಾಗಲೂ ಕೆಲವರು ಹಿಂಸೆಯನ್ನು ವೈಭವೀಕರಿಸುತ್ತಲೇ ಹೋದರು. ಭಾರತ-ಪಾಕಿಸ್ತಾನಗಳ ವಿಭಜನೆ ಕಾಲದಲ್ಲಿ ಮಹತ್ತರ ಹಿಂಸೆ ನಡೆಯಿತು. ಆದರೂ ಸ್ವಾತಂತ್ರ್ಯಾನಂತರ ಎಲ್ಲ ಬಗೆಯ ಭಿನ್ನಾಭಿಪ್ರಾಯಗಳನ್ನು ಶಾಂತಿಯುತವಾಗಿ ಬಗೆಹರಿಸಬಹುದೆಂಬುದನ್ನು ಆ ತಲೆಮಾರಿನ ನಾಯಕರು ಕಂಡುಕೊಂಡಿದ್ದರಿಂದ ಭಾರತದ ಮೊದಲ ಕೆಲವು ದಶಕಗಳು ಸ್ವಲ್ಪ ಮಟ್ಟಿಗೆ ಗಾಂಧಿಮಾರ್ಗದಲ್ಲಿ ನಡೆದವು. ಆದರೆ ಆನಂತರದ ದಶಕಗಳು ಇಂದಿರಾ, ರಾಜೀವ್ ಹತ್ಯೆಗಳೂ ಸೇರಿದಂತೆ ಹಲವು ರಾಜಕೀಯ ಹತ್ಯೆಗಳನ್ನು ಕಂಡವು; ಈ ದೇಶದ ಕಾಹಿಲೆಗಳ ಪರ್ವಗಳಾಗಿ ಗುರುತಿಸಿಕೊಂಡವು. ಕಳೆದ ಕೆಲವು ವರ್ಷಗಳಲ್ಲಿ ಭಾರತದಲ್ಲಿ ನಡೆದಷ್ಟು ಹಿಂಸೆ ದೈನಂದಿನ ಜೀವನದಲ್ಲಿ ಹಿಂದೆಂದೂ ನಡೆದಿರಲಾರದು. ‘ದೇಶ’ವೆಂಬ ಪದವು ಕೈತಪ್ಪಿ ‘ದ್ವೇಷ’ವೆಂಬುದೇ ಕೆಲವು ಮಂದಿಗೆ ಕೈತುತ್ತಾಗಿದೆ. ಇದರಿಂದಾಗಿ ದೇಶದಲ್ಲಿ ಶಾಂತಿ ನೆಲೆಸುವುದಿಲ್ಲವೆಂದು ಅವರಿಗೂ ಗೊತ್ತಿದೆ. ಆದರೆ ಅವರ ಉದ್ದೇಶವೇ ಅದು: ದ್ವೇಷದ ಮೂಲಕ ಸಮಾಜ ನುಚ್ಚುನೂರಾಗುವುದು; ಮತ್ತು ಈ ದ್ವೇಷದ ನಡುವೆ ತಾವು ಅಧಿಕಾರದಲ್ಲಿ ಹಾಯಾಗಿರುವುದು. ಹಿಂಸೆಯೆಂದರೆ ದೈಹಿಕಹಿಂಸೆ, ಸಾವು-ನೋವು ಇವೇ ಆಗಬೇಕಿಲ್ಲವೆಂಬುದನ್ನು ಇತಿಹಾಸ ಹೇಳಿದೆ. ಜನ್ನನ ಯಶೋಧರ ಚರಿತೆ ಮಾನಸಿಕ ಗ್ರಹಿಕೆಯ ಹಿಂಸೆಗೆ ಒಳಗಾದವರ ಕಥೆ. ಶಾಂತಿಯ ಬದಲು, ದ್ವೇಷ, ಒಗ್ಗಟ್ಟಿನ ಬದಲು ಬಿಕ್ಕಟ್ಟು ಇವನ್ನು ಮತ್ತು ಇವುಗಳ ಮೂಲಕ ಶಾಶ್ವತ ಅಧಿಕಾರವನ್ನು ಸ್ಥಾಪಿಸಲು ದ್ವೇಷಕಾರಣಿಕರು ದ್ವೇಷದ, ಹಿಂಸೆಯ ಮಾತನ್ನೇ ಆಡಬೇಕಿಲ್ಲವೆಂಬುದನ್ನು ರಾಷ್ಟ್ರೀಯ ಸ್ವಯಂಸೇವಕ ಸಂಘದ ಪರಮೋಚ್ಚ ನಾಯಕ ಭಾಗವತರು ಸಾಬೀತುಪಡಿಸಿದ್ದಾರೆ. ಅವರು ಎಲ್ಲೂ ಹೊಡೆಯಿರಿ, ಬಡಿಯಿರಿ, ಕಡಿಯಿರಿ ಎಂದು ಹೇಳಿದ್ದೇ ಇಲ್ಲ. ಆದರೆ ಒಂದು ಹನಿ ರಕ್ತವೂ ಸೋರದಂತೆ ಸಾಮಾಜಿಕ ಸಾಮರಸ್ಯದ ಕತ್ತನ್ನು ಕುಯ್ಯುವುದರಲ್ಲಿ ತನ್ನ ನಿಸ್ಸೀಮತನವನ್ನು ಸಾರಿ ತೋರಿದ್ದಾರೆ. ಈಗ ಅವರು ಬಿಚ್ಚಿಟ್ಟಿರುವುದು ಕಳೆದ ನೂರು ವರ್ಷಗಳಿಂದ ಬಗಲೊಳಗೆ ಬಚ್ಚಿ ಟ್ಟಿದ್ದ ಹಿಂದೂರಾಷ್ಟ್ರದ ಕಲ್ಪನೆಯನ್ನು. ಅದಕ್ಕೆ ಸಾಂವಿಧಾನಿಕ ಅನುಮೋದನೆಯು ಅಗತ್ಯವಿಲ್ಲವೆಂದಿದ್ದಾರೆ. ಇಂತಹ ತರ್ಕಗಳು ಆರೆಸ್ಸೆಸ್ಗೆ ಸಹಜ. ಚಿವುಟುತ್ತಲೇ ಸಮಾಧಾನ ಮಾಡುವ ತಂತ್ರವನ್ನು ಅವರು ಚೆನ್ನಾಗಿ ಸಿದ್ಧಿಸಿಕೊಂಡಿದ್ದಾರೆ. ರಾಮಾಯಣದ ಶ್ರೀರಾಮನ ಹೆಸರು ಹೇಳುತ್ತಲೇ ಮಾತು ಹೇಗಿರಬೇಕು ಎಂಬುದರ ಕುರಿತು ವಾಲ್ಮೀಕಿಯ ಕಲ್ಪನೆಯ ರಾಮನ ‘ಅನುದ್ವೇಗಕರಂ ವಾಕ್ಯಂ’ನ್ನು ಧಿಕ್ಕರಿಸಿ ‘ಉದ್ವೇಗಕರಂ ವಾಕ್ಯಂ’ ಎಂಬ ಹೊಸ ಭಾಷ್ಯದಲ್ಲಿ. ರಾಮರಾಜ್ಯದ ಆದರ್ಶವನ್ನು ಎಲ್ಲ ರೀತಿಯಲ್ಲೂ ಸದೆಬಡಿಯುವ ಗುಣ ಸಿದ್ಧಿಸಿದ್ದು ರಾಷ್ಟ್ರೀಯತೆಯ ಮತ್ತು ರಾಷ್ಟ್ರೀಯ ಸಂಘಟನೆಯ ಹೆಸರಿನಲ್ಲಿ; ಸಮಾಜವನ್ನು, ರಾಷ್ಟ್ರವನ್ನು ಒಡೆಯುವುದರಲ್ಲಿ; ದ್ವೇಷದ ವಿಷವನ್ನು ಹರಡುವುದರಲ್ಲಿ. ಮುದ್ರಾಮಂಜೂಷದ ಅಮಾತ್ಯರಾಕ್ಷಸನ ವಿಷಕನ್ಯೆಯ ತಂತ್ರ ಭಾಗವತರ ತಂತ್ರದೆದುರು ಏನೂ ಅಲ್ಲ. ಅವರ ಹೇಳಿಕೆ ಬಂದಿರುವುದು ಕ್ರಿಸ್ಮಸ್, ಬ್ರಿಟಿಷ್ ಕ್ಯಾಲೆಂಡರಿನ ಹೊಸವರ್ಷದ ಕಾಲದಲ್ಲಿ. ಈ ಸಂದರ್ಭಕ್ಕೆ ಭಾಗವತರು ಹೊಸ ಮಂತ್ರ ಸೃಷ್ಟಿಸಿದ್ದಾರೆ: ‘ಸಂಘ ಮುಸ್ಲಿಮ್ ವಿರೋಧಿ ಅಲ್ಲ’ವೆಂದು ಹೇಳಿದ್ದಾರೆ. ಕ್ರೈಸ್ತರನ್ನು ಉದ್ದೇಶಪೂರ್ವಕವಾಗಿಯೇ ಉಲ್ಲೇಖಿಸಿಲ್ಲ. ಏಕೆಂದರೆ ಈ ಸಂದರ್ಭ ಅಂತಹದ್ದು. ಇದರ ತಕ್ಷಣದ ಪರಿಣಾಮವನ್ನು ಉತ್ತರ ಭಾರತ ಎದುರಿಸುತ್ತಿದೆ: ಕ್ರಿಸ್ಮಸ್ ಸಂದರ್ಭಕ್ಕೆ ಮಾರಾಟವಾಗುವ ಸಾಂತಾಕ್ಲಾಸ್ ಗೊಂಬೆಗಳ, ಉಡುಗೆಗಳ, ಮಾರಾಟವನ್ನು ಕೆಲವು ಹಿಂದುತ್ವ ಮತೀಯ ಮೂಲಭೂತವಾದಿಗಳು ತಡೆದು ಬೆದರಿಸಿ ನಿಲ್ಲಿಸಿದ್ದಾರೆ. ಇದಕ್ಕೆ ಪ್ರಚೋದನೆಯು ಬೇರೆ ಯಾವ ದ್ವೇಷಭಾಷಣವೂ ಅಲ್ಲ; ಭಾಗವತರ ಉತ್ತರಾದಿ ಹಿಂದೂರಾಷ್ಟ್ರರಾಗ. ದಕ್ಷಿಣಭಾರತದಲ್ಲಿ ಈ ಮಾತುಗಳು ದಿನನಿತ್ಯದ ಮತ್ತು ಹಬ್ಬಹರಿದಿನಗಳನ್ನು ಬಾಧಿಸುವುದಿಲ್ಲ ಅಥವಾ ಬಾಧಿಸಲಾರದು ಎಂಬ ಅಭಿಪ್ರಾಯ ಅವರಿಗೂ ಇದೆ. ಕೇರಳ, ಕರ್ನಾಟಕ, ತಮಿಳುನಾಡು, ತೆಲಂಗಾಣ ರಾಜ್ಯಗಳಲ್ಲಿ ಪ್ರತಿಪಕ್ಷಗಳ ಆಡಳಿತವಿರುವುದರಿಂದ ದ್ವೇಷವನ್ನು ಸಮೂಹ ಮೂಲಕ ಕಾರ್ಯರೂಪಕ್ಕೆ ಅಂದರೆ ಕ್ರೌರ್ಯರೂಪಕ್ಕೆ ತರಲಾಗುವುದಿಲ್ಲವೆಂಬ ಆತಂಕದಿಂದಲೇ ಭಾಗವತರು ಈಗ ಹೊಸ ಧಾಟಿಯಲ್ಲಿ ಮಾತನಾಡಿದ್ದಾರೆ. ಭಾಗವತರ ಜೊತೆಗೆ ದತ್ತ್ತಾತ್ರೇಯ ಹೊಸಬಾಳೆ ಮುಂತಾದ ಇತರ ಹಿಮ್ಮೇಳದವರು ಹಿಂದೂಯೇತರರು ಹಿಂದೂ ರೀತಿರಿವಾಜುಗಳನ್ನು, ಹಿಂದೂ ನೈತಿಕಮೌಲ್ಯಗಳನ್ನು ಅನುಸರಿಸಬೇಕೆಂದು ಕರೆಕೊಟ್ಟಿದ್ದಾರೆ. ಆದರೆ ವಾಸ್ತವದ ಪ್ರಜ್ಞೆಯಿರುವವರಿಗೆ ರಾಷ್ಟ್ರ ಮತ್ತು ರಾಷ್ಟ್ರೀಯತೆಯು ಯಾವ ದಿಕ್ಕಿನಲ್ಲಿ ನಡೆಯುತ್ತಿದೆಯೆಂಬುದು ಅರ್ಥವಾಗುತ್ತಿದೆ; ಅರ್ಥವಾಗದವರಿಗೂ ಅನುಭವವಾಗುತ್ತಿದೆ. ಭಾಗವತರು ಇನ್ನೂ ಒಂದು ಮಾತನ್ನು ಹೇಳಿದ್ದಾರೆ: ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೆ ರಾಜಕೀಯ ಕಾರ್ಯಸೂಚಿಯಿಲ್ಲ. ಇದು ಶತಮಾನದ ನಗೆಗಡಲು. ನೂರು ವರ್ಷದ ದಿಕ್ಸೂಚಿ. ಈ ಮಾತನ್ನು ಅನೇಕರು ತಮ್ಮ ಜೀವನದುದ್ದಕ್ಕೂ ನಂಬಿಕೊಂಡೇ ಬಂದಿದ್ದರು. ಅಂತಹ ಮೂರು ತಲೆಮಾರು ಈಗ ಕಳೆದಿದೆ. ಮೊದಮೊದಲು ಹೀಗಿರಬಹುದೇನೋ ಎಂಬ ಭ್ರಮೆಯ ಪರದೆಯಾದರೂ ಇತ್ತು. ಈಗ ಅದೂ ಕಳಚಿದೆ. ಸ್ವತಂತ್ರ ಭಾರತದ ಇತಿಹಾಸದ ಪುಟಗಳನ್ನು ಮಗುಚಿದರೆ, 1975ರಲ್ಲಿ ಇಂದಿರಾ ಸರಕಾರವು ತುರ್ತುಸ್ಥಿತಿಯನ್ನು ಘೋಷಿಸಿದಾಗ ಆನಂತರದ 18 ತಿಂಗಳ ಹೋರಾಟದಲ್ಲಿ ಸರ್ವಾಧಿಕಾರವನ್ನು ವಿರೋಧಿಸುವ ಎಲ್ಲ ಸಮುದಾಯ-ಸಮೂಹಗಳು ಒಟ್ಟಾದವು. ಎಡ-ಬಲ ಎಲ್ಲವೂ ಒಂದೇ ವಿಚಾರದಲ್ಲಿ ಸರ್ವಾಧಿಕಾರದ ವಿರುದ್ಧ ಕೇಂದ್ರೀಕೃತವಾಗಿದ್ದವು. ಹೀಗಾಗಿ ಯಾರ ಕಾರ್ಯಸೂಚಿ ಯಾವುದು ಎಂಬುದು ಪ್ರವಾಹದ ಕೆಂಪುನೀರಲ್ಲಿ ಗೊತ್ತಾಗುತ್ತಿರಲಿಲ್ಲ. ಆದರೆ ಚುನಾವಣೆ ನಡೆದು ಜನತಾಸರಕಾರ ಅಧಿಕಾರಕ್ಕೆ ಬಂದಾಗ ಈ ಅವಕುಂಠನವು ಹರಿಯಿತು. ಕೇವಲ ಎರಡೂವರೆ ವರ್ಷಗಳಲ್ಲಿ ಸರಕಾರ ಬಿದ್ದುಹೋಯಿತು. ಅದು ಕುಸಿದದ್ದು ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೆ ಒಂದು ಗುಂಪು ತೋರಿದ ದ್ವಂದ್ವನಿಷ್ಠೆಯಲ್ಲಿ. ಅಧಿಕಾರವನ್ನು ನಿರಂಕುಶವಾಗಿ ನಡೆಸುವ ಮಹತ್ವಾಕಾಂಕ್ಷೆಯಲ್ಲಿ ತನ್ನ ಹಿಡಿತದಲ್ಲಿ ಇಲ್ಲದ ಸರಕಾರ, ಅಧಿಕಾರವು ಮುಂದುವರಿಯುವುದು ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೆ ಬೇಡವಾಯಿತು. ಅಧಿಕಾರದ ವಿಚಾರದಲ್ಲಿ ಸೈದ್ಧಾಂತಿಕವಾಗಿ ತನ್ನ ಮತೀಯ ಪ್ರತ್ಯೇಕತಾವಾದವನ್ನು ಎಂದೂ ಬಿಟ್ಟುಕೊಡದ ಆರೆಸ್ಸೆಸ್ಗೆ ಜಾತ್ಯತೀತತೆಯ ಉದಾರವಾದವು ಹಿಡಿಸದ್ದರಿಂದ ಸರ್ವಾಧಿಕಾರದ ವಿರುದ್ಧದ, ಅಭೇದ್ಯವೆಂದು ಕಂಡ, ಪ್ರಜಾಪ್ರಭುತ್ವದ ಕೋಟೆ ಛಿದ್ರವಾಯಿತು. ಆರೆಸ್ಸೆಸ್ ಈಗಲೂ ತನಗೆ ಅಧಿಕಾರದ ದಾಹ- ಮೋಹವಿಲ್ಲವೆಂದು ಘೋಷಿಸುತ್ತಲೇ ಬಂದಿದೆ. ತನ್ನ ಸಿದ್ಧಾಂತವನ್ನು ಒಪ್ಪುವ ಯಾವುದೇ ರಾಜಕೀಯ ಪಕ್ಷವನ್ನು ಬೆಂಬಲಿಸಲು ಸಿದ್ಧವೆಂದು ಸೂಚಿಸುತ್ತಿದೆ. ಆದರೆ ಅದು ಭಾಜಪವನ್ನು ಹೊರತುಪಡಿಸಿ ಇತರ ಪಕ್ಷಗಳನ್ನು ಬೆಂಬಲಿಸಿದ ಇತಿಹಾಸವಿಲ್ಲ. 1975ರಲ್ಲೂ ಅದು ಭಾಜಪವನ್ನು ಅಧಿಕಾರಕ್ಕೇರಿಸಲು ಮಾತ್ರವೇ ಸರ್ವಧಿಕಾರದ ವಿರುದ್ಧ ಹೋರಾಡಿತೆಂಬುದನ್ನು ಆನಂತರದ ಈ ಸುಮಾರು ಐದು ದಶಕಗಳ ಭಾರತೀಯ ಇತಿಹಾಸ ತೋರಿಸಿ ಕೊಟ್ಟಿದೆ. 90ರ ದಶಕದಲ್ಲೂ ಅಯೋಧ್ಯೆಯ ಮೂಲಕ ದಿಲ್ಲಿಯ ಕುರ್ಚಿಯನ್ನು ಹಿಡಿಯಿತೇ ಹೊರತು ತನ್ನ ಪ್ರಕಟಿತ ರಾಷ್ಟ್ರೀಯ ಸಿದ್ಧಾಂತದ ಮೇಲಲ್ಲ. ಈ ಅವಧಿಯಲ್ಲಿ ಆದ ಅದರ ಕ್ರಾಂತಿಕಾರಕ ಬೆಳವಣಿಗೆಯೆಂದರೆ ಬದಲಾವಣೆಯಲ್ಲ; ಬದಲಿಗೆ ಯಾರು ಸಾಂವಿಧಾನಿಕ ಮೌಲ್ಯಗಳನ್ನು ಎತ್ತಿಹಿಡಿಯಬೇಕೆಂದು ನಿರೀಕ್ಷಿಸಲಾಗಿತ್ತೋ ಅಂತಹವರನ್ನು ಮತೀಯತೆಯ ಹಳ್ಳಹಿಡಿಸಿದ್ದು. ಇದು ನಮ್ಮ ಇತರ ವಿದ್ಯಾವಂತರನ್ನು, ವಿಷಯತಜ್ಞರನ್ನು, ಸಾಹಿತಿಗಳನ್ನು, ಚಿಂತಕರನ್ನು ಮಾತ್ರವಲ್ಲ ನ್ಯಾಯಾಧೀಶರನ್ನೂ ನ್ಯಾಯಮೂರ್ತಿಗಳನ್ನೂ ಬಿಟ್ಟಿಲ್ಲ. ಎಲ್ಲೆಲ್ಲಿ ಸಾಧ್ಯವೋ ಅಲ್ಲಲ್ಲಿ ಬಿರುಕು ಬಿಡಿಸುವುದು ಮತು ಅಲ್ಲಿ ಮತೀಯತೆಯ ಕೊತ್ತಂಬರಿ ಸೊಪ್ಪನ್ನು ನೆಡುವುದು (ಎ.ಕೆ.ರಾಮಾನುಜನ್ ಕ್ಷಮೆ ಕೋರಿ ಈ ರೂಪಕ!) ಈ ಅವಧಿಯಲ್ಲಿ ನಡೆದ ನಿತ್ಯ ಕಾಯಕ. ಭಾರತೀಯತೆಯೆಂದರೆ ಓಬಿರಾಯನ ಕಾಲದ ಕುರುಡು ಸಂಪ್ರದಾಯವಲ್ಲ. ಆರೆಸ್ಸೆಸ್ಗೆ ಮತ್ತು ಮುಖ್ಯವಾಗಿ ಅದರ ಮುನ್ನೆಲೆಯ ಮುಂದಾಳುಗಳಿಗೆ ಗೊತ್ತಿದೆ. ಅವರಿಗೆ ವಿಶ್ವ ರಾಜಕೀಯದಲ್ಲಿ ಅತಿಮೋಹಕತೆಯ ಸಿದ್ಧಾಂತಗಳು ಹೆಚ್ಚು ಕಾಲ ಬಾಳುವುದಿಲ್ಲವೆಂಬ ಯಥಾರ್ಥಸತ್ಯವೂ ಗೊತ್ತಿದೆ. ಆದ್ದರಿಂದ ಅದು ತನ್ನ ಒಂದುಕಾಲದ ರಾಷ್ಟ್ರೀಯತೆಯನ್ನು ಈಗ ಅಧಿಕಾರಸತ್ಯವಾಗಿ ಕಾಣಲು ಆರಂಭಿಸಿದೆ. ದೇಶದ ಪ್ರಧಾನಿ ದೇಶದ ಪ್ರತಿನಿಧಿ, ಆತ ನಾಯಕನೇ ಹೊರತು ಒಂದು ಸಂಕುಚಿತ ಗುಂಪಿನ ನಾಯಕನಲ್ಲವೆಂಬುದನ್ನು ಮರೆತು ಆತನ ಪ್ರೀತಿ, ದ್ವೇಷಗಳು ಸಮಾನವಾಗಿರಬೇಕೇ ಹೊರತು ಧ್ರುವನನ್ನು ಕಾಡಿಗೆ ಅಟ್ಟುವ ಉತ್ತಾನಪಾದನ ನೀತಿಯಾಗಬಾರದೆಂಬುದನ್ನು ಮರೆತು ಪ್ರಧಾನಿಗೂ ಚಡ್ಡಿಹಾಕಿಸುವ ದುರಂತಕ್ಕಿಂತ ಬೇರೇನಿದೆ? ಪ್ರಧಾನಿಯ ಪಟ್ಟಕ್ಕೇರಿದ ವ್ಯಕ್ತಿಯು ತನ್ನ ಯೋಗ್ಯತೆಯನ್ನು ನಡೆನುಡಿಯಲ್ಲಿ ಪ್ರದರ್ಶಿಸಬೇಕೇ ಹೊರತು ಸಿಂಹಾಸನದಲ್ಲಿ ಕುಳಿತ ಬೆಕ್ಕು ಇಲಿಯನ್ನು ಕಂಡಾಕ್ಷಣ ನೆಗೆಯುವ ಪ್ರವೃತ್ತಿಯಲ್ಲಿ ಅಲ್ಲ. ದೇಶವಿದೇಶಗಳಲ್ಲಿ ಸರಕಾರದ ಹೆಸರಿನಲ್ಲಿ ಪ್ರಜೆಗಳನ್ನೊಡೆದು ಬೆಣ್ಣೆ-ಸುಣ್ಣಗಳನ್ನು ಬಹಿರಂಗವಾಗಿ ಪ್ರದರ್ಶಿಸುವ ಈ ನೀತಿಯು ಭ್ರಷ್ಟಾಚಾರಕ್ಕಿಂತಲೂ ಕಳಪೆಯ ನೀತಿ. ಪ್ರಾಯಃ ಬ್ರಿಟಿಷರಿಗೆ ಈ ಕಲೆ ಗೊತ್ತಿದ್ದರೆ ಅವರು ಇನ್ನೂ ಹಲವು ಕಾಲ ಭಾರತವೆಂಬ ಈ ಭೂಭಾಗವನ್ನು ಅದರ ಅಸಂಖ್ಯ ಸಾಮ್ರಾಜ್ಯಗಳ ಸಹಿತ ತಮ್ಮ ನಿಯಂತ್ರಣದಲ್ಲಿ ಹಿಡಿದಿಡುತ್ತಿದ್ದರು. ಅವರು ನಾಚುವ ಪರಿಸ್ಥಿತಿ ಈಗ ದೇಶದಲ್ಲಿದೆ. ಆದರೆ ಇವಿಷ್ಟೇ ಆಗಿದ್ದರೆ ಅದನ್ನು ಹಾಳಾಗಿ ಹೋಗಲಿ ಇವರ ಯೋಗ್ಯತೆಯಿಷ್ಟೇ ಇದು ಕಾಲಕ್ರಮದಲ್ಲಿ ಸರಿಯಾಗಬಹುದೆಂದುಕೊಳ್ಳಬಹುದು. ರಾಮನ ಪಾದಸ್ಪರ್ಶಕ್ಕೆ ಕಾದ ಅಹಲ್ಯೆಯಂತೆ ನಿರ್ಜೀವ ಕಲ್ಲಾಗಿ ಸಹಿಸಿಕೊಳ್ಳಬಹುದು. ಆದರೆ ಇದರ ಪರಿಣಾಮದ ಹಿಂಸೆ ಸಹಿಸಲಸಾಧ್ಯ. ಪುನರ್ಜನ್ಮದ ಕಥೆಗಳು ಸುಂದರ. ಆದರೆ ಅವು ಅವಾಸ್ತವ. ಆದ್ದರಿಂದ ಇರುವ ಒಂದೇ ಒಂದು ಜನ್ಮವನ್ನು ಶಾಂತಿಯುತವಾಗಿ, ನೆಮ್ಮದಿಯಿಂದ ಬಾಳುವೆಮಾಡುವ ಆಸೆ, ನಿರೀಕ್ಷೆ ಜಾತಿ-ಮತ-ಧರ್ಮವನ್ನು ಮೀರಿ ಎಲ್ಲರದ್ದು. ದೇಶ-ದೇಶಗಳ ನಡುವಣ ಯುದ್ಧದಲ್ಲಿ ಯಾವ ವೈರವೂ ಇಲ್ಲದೆ ಯೋಧರು ಪರಸ್ಪರ ಹಿಂಸಿಸುತ್ತಾರೆ; ಕೊಲ್ಲುತ್ತಾರೆ. ಆದರೆ ದೇಶದೊಳಗೇ ಇದು ನಡೆದರೆ? ಕಳೆದ ಕೆಲವು ವರ್ಷಗಳಲ್ಲಿ ಭಾರತದಲ್ಲಿ ನಡೆಯುತ್ತಿರುವುದು ಇದೇ. ಕಾರಣವೇ ಇಲ್ಲದೆ ಕೊಲೆಗಿಲೆ ಮುಂತಾದವು ನಡೆಯುತ್ತಿವೆ. ಇದು ಎಲ್ಲ ಸಮಾಜಗಳಲ್ಲಿ ಸಹಜವೆಂದುಕೊಂಡರೆ ಇವಕ್ಕೆ ಪ್ರತಿಕ್ರಿಯೆಯಾಗಿ ಜವಾಬ್ದಾರಿಯುತ ಸ್ಥಾನಗಳಲ್ಲಿ ಇರುವವರು (ಅವರು ಆ ಸ್ಥಾನಕ್ಕೆ ಏರಿದ್ದೇ ಇಂತಹ ಮೂಲಭೂತವಾದಿಗಳ ಸಹಕಾರದಿಂದ; ಆ ವಿಚಾರ ಬೇರೆ!) ಆಡುವ ಸ್ಫೋಟಕ, ವಿನಾಶಕಾರೀ ಮಾತುಗಳು ಶ್ರೀರಾಮ ಬಿಡಿ, ಸಾಮಾನ್ಯನಿಗೂ ನಾಚಿಕೆಯಾಗುವಂತಿದೆ. ಒಂದು ಸುಖೀಸಮಾಜವನ್ನು ಕಟ್ಟುವುದೆಂದರೆ ಇನ್ನೊಬ್ಬರನ್ನು ಜಾತಿ-ಮತಾಧಾರಿತವಾಗಿ ಹಿಂಸಿಸುವುದು ಎಂಬ ತರ್ಕವನ್ನು ಆರೆಸ್ಸೆಸ್ ಮತ್ತು ಅದನ್ನು ಬೆಂಬಲಿಸುವವರು ಮತ್ತು ಅದು ಬೆಂಬಲಿಸುವ ಸಂಘಟನೆಗಳು ಹೇಳುತ್ತಲೇ ಬಂದಿವೆ. ದೇಶ ಸಾಗುತ್ತಿರುವ ದಿಕ್ಕು ಈಗ ಸದ್ಯಕ್ಕೆ ಬದಲಾಗದು. ಜಾತ್ಯಾಧಾರಿತವಾಗಿಯಾದರೂ ಈ ‘ಹಿಂದೂ ರಾಷ್ಟ್ರ’ ಸುಖವಾಗಿರದು ಎಂಬುದನ್ನು ಸಾಕ್ಷೀಕರಿಸುವಂತೆ ಜಾತ್ಯಾಧಾರಿತ ಹಿಂಸೆ ನಿತ್ಯ ನಡೆಯುತ್ತಲೇ ಇದೆ. ಅಂತರ್ಜಾತೀಯ ವಿವಾಹವಾದ್ದಕ್ಕೇ ಮಗಳನ್ನು ಕೊಂದ ಮೇಲ್ಜಾತಿಯ ‘ಹಿಂದೂ ರಾಷ್ಟ್ರ’ವೂ ಇಲ್ಲಿದೆ. (ಎಲ್ಲ ಜಾತಿ ಮತಗಳಲ್ಲೂ ಈ ಪರಿಯ ಸಣ್ಣ-ಕೀಳು ದ್ವೇಷದ ಮನಸ್ಸು ಇದ್ದೇ ಇದೆ!) ಪ್ರಾಯಃ ಭಾಗವತರು ಇದರ ಮುಂದಾಳತ್ವವನ್ನು ವಹಿಸಿ ಸೂಚಿಸಿದ್ದು ‘ಹಿಂದೂ ರಾಷ್ಟ್ರ’ವನ್ನಲ್ಲ. ಬದಲಿಗೆ ಅದಕ್ಕೂ ಕಿರಿದಾದ, ಸಂಕುಚಿತವಾದ, ಅಧಿಕಾರದಾಹದ, ಉದರವೈರಾಗ್ಯದ, ಜಾತಿತಾರತಮ್ಯದ ಕುತ್ಸಿತ ನರಭಕ್ಷಕ ಸಮಾಜದ ‘ರಾಷ್ಟ್ರ’ ವನ್ನು.
Karnataka Weather: ವರ್ಷಾಂತ್ಯದ 5 ದಿನ ಈ ಜಿಲ್ಲೆಗಳಲ್ಲಿ ವಿಪರೀತ ಚಳಿ, ದಟ್ಟ ಮಂಜು ಮುನ್ಸೂಚನೆ
ಬೆಂಗಳೂರು: ಕರ್ನಾಟಕದಾದ್ಯಂತ ಗರಿಷ್ಠ ತಾಪಮಾನದಲ್ಲಿ ಏರಿಕೆ ಆಗುತ್ತಿದ್ದು, ವರ್ಷಾಂತ್ಯದ ಮುಂದಿನ ಐದು ದಿನ (ಡಿಸೆಂಬರ್ 31ರವರೆಗೆ) ಒಣಹವೆ ಇರಲಿದೆ. ವಿವಿಧ ಜಿಲ್ಲೆಗಳಲ್ಲಿ ತಾಪಮಾನ ವ್ಯಾಪಕವಾಗಿ ಕುಸಿದಿದ್ದು, ಅಲ್ಲೆಲ್ಲ ಮೈಕೊರೆವ ಚಳಿ ಮುಂದುವರಿಯಲಿದೆ ಎಂದು ರಾಜ್ಯ ಹವಾಮಾನ ಇಲಾಖೆಯ ಬೆಂಗಳೂರು ನಿರ್ದೇಶಕ ಮತ್ತು ವಿಜ್ಞಾನಿ ಡಾ.ಸಿ.ಎಸ್.ಪಾಟೀಲ್ ಅವರು ತಿಳಿಸಿದರು. ರಾಜ್ಯದಲ್ಲಿ ಚಳಿ, ಒಣಹವೆ ಜೊತೆಗೆ ದಟ್ಟ ಮಂಜು ಈ
2025ರಲ್ಲಿ ವಿಶ್ವವೇ ನಿಬ್ಬೆರಗಾಗುವ 5 ಪ್ರಮುಖ ಸಾಧನೆ ಮಾಡಿದ ನಮ್ಮ ಇಸ್ರೋ
ISRO Successes: 2025 ವರ್ಷ ಇನ್ನೇನು ಮುಕ್ತಾಯವಾಗುತ್ತಿದೆ. ಈ ವರ್ಷದಲ್ಲಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಇಸ್ರೋ ಹಲವು ಮಹತ್ವದ ಸಾಧನಗಳನ್ನು ಮಾಡಿದೆ. ಹಲವು ಹೊಸ ಮೈಲಿಗಲ್ಲುಗಳನ್ನು ಇಸ್ರೋ ಸೃಷ್ಟಿಸಿದೆ. ಇದರಲ್ಲಿ ಯಶಸ್ವಿ SPADEX ಡಾಕಿಂಗ್ (ಭಾರತವನ್ನು ಬಾಹ್ಯಾಕಾಶದಲ್ಲಿ ಡಾಕಿಂಗ್ ಸಾಧನೆ ಮಾಡಿದ 4 ನೇ ರಾಷ್ಟ್ರವನ್ನಾಗಿ ಮಾಡಿತು). ಕಕ್ಷೆಯಲ್ಲಿರುವ ಎರಡು ಉಪಗ್ರಹಗಳನ್ನು (ಒಂದು 'ಟಾರ್ಗೆಟ್'
ಉನ್ನಾವೋ ಅತ್ಯಾಚಾರ ಪ್ರಕರಣ: ಸಂತ್ರಸ್ತಳೇ ಅಪರಾಧಿಯಾದರೆ?
ಭ್ರಷ್ಟಾಚಾರದ ವಿರುದ್ಧ, ಆದಿವಾಸಿಗಳು-ದಲಿತರ ಮೇಲೆ ನಡೆದ ದೌರ್ಜನ್ಯಗಳ ವಿರುದ್ಧ ಧ್ವನಿಯೆತ್ತಿದ ಹಲವು ಸಾಮಾಜಿಕ ಹೋರಾಟಗಾರರು ವಿಚಾರಣೆಯ ಹೆಸರಿನಲ್ಲಿ ಜೈಲಿನಲ್ಲಿ ಕೊಳೆಯುತ್ತಿದ್ದಾರೆ. ಹಲವು ವರ್ಷಗಳಿಂದ ಜೈಲು-ನ್ಯಾಯಾಲಯ ಎಂದು ಅಲೆದಾಡುತ್ತಿರುವ ಉಮರ್ ಖಾಲಿದ್ಗೆ ತಾನು ಯಾಕೆ ಜೈಲಿನಲ್ಲಿದ್ದೇನೆ ಎನ್ನುವುದರ ಕುರಿತಂತೆಯೇ ಅರಿವಿಲ್ಲ. ನ್ಯಾಯಾಲಯವೂ ಇವರನ್ನು ಯಾಕೆ ಜೈಲಿನಲ್ಲಿಟ್ಟುಕೊಂಡಿದ್ದೀರಿ ಎಂದು ಪೊಲೀಸರನ್ನು ಕೇಳುತ್ತಲೂ ಇಲ್ಲ. ಆದರೆ ಇಂದೇ ಸಂದರ್ಭದಲ್ಲಿ ದಲಿತ ಮಹಿಳೆಯ ಅತ್ಯಾಚಾರ ಮತ್ತು ಆಕೆಯ ಕುಟುಂಬ ಸದಸ್ಯರನ್ನು ಕೊಲೈಗೈದ ಆರೋಪ ಸಾಬೀತಾಗಿ ಜೈಲು ಪಾಲಾಗಿದ್ದ ಬಿಜೆಪಿಯ ಉಚ್ಚಾಟಿತ ನಾಯಕ ಕುಲದೀಪ್ ಸಿಂಗ್ ಸೆಂಗರ್ನ ಶಿಕ್ಷೆಯನ್ನು ದಿಲ್ಲಿ ಹೈಕೋರ್ಟ್ ಮಂಗಳವಾರ ಅಮಾನತಿನಲ್ಲಿಟ್ಟಿದೆ. ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವುದರಿಂದ ಬಿಡುಗಡೆ ತಡವಾಗಿದೆ. ಆದರೆ ಯಾವ ಕ್ಷಣದಲ್ಲೂ ಆತ ಬಿಡುಗಡೆಯಾಗುವ ಸಾಧ್ಯತೆಗಳಿವೆ. ಸೆಂಗರ್ನನ್ನು ಯಾವ ಕಾರಣಕ್ಕೂ ಬಿಡುಗಡೆ ಮಾಡಬಾರದು, ಆತನಿಂದ ತನ್ನ ಕುಟುಂಬಕ್ಕೆ ಜೀವಭಯವಿದೆ ಎಂದು ಸಂತ್ರಸ್ತೆ ಮತ್ತು ಆಕೆಯ ಕುಟುಂಬ ಕೂಗಿ ಹೇಳುತ್ತಿದ್ದರೂ ನ್ಯಾಯಾಲಯದ ಕಿವಿ ಕಿವುಡಾಗಿದೆ. ಸಂತ್ರಸ್ತೆಯ ಮನೆಯ ಐದು ಕಿಲೋಮೀಟರ್ ಒಳಗೆ ಬರಬಾರದು ಹಾಗೂ ಸಂತ್ರಸ್ತೆ ಮತ್ತು ಆಕೆಯ ತಾಯಿಗೆ ಬೆದರಿಕೆ ಹಾಕಬಾರದು ಎಂಬ ಷರತ್ತಿನೊಂದಿಗೆ ನ್ಯಾಯಾಲಯ ಜಾಮೀನನ್ನು ನೀಡಿದೆ. ವಿಪರ್ಯಾಸವೆಂದರೆ, ಸಂತ್ರಸ್ತೆಯ ಕುಟುಂಬಕ್ಕೆ ಬೆದರಿಕೆ ಹಾಕಿರುವುದು ಮಾತ್ರವಲ್ಲ, ಓರ್ವನನ್ನು ಕೊಂದು ಹಾಕಿದ ಆರೋಪ ಸಾಬೀತಾಗಿ ಸೆಂಗರ್ ಜೈಲು ಶಿಕ್ಷೆ ಅನುಭವಿಸುತಿದ್ದಾರೆ. ಇಷ್ಟಕ್ಕೂ ಸಮಾಜದಲ್ಲಿ ಬಲಿಷ್ಠ ಜಾತಿ, ವರ್ಗಕ್ಕೆ ಸೇರಿದ ಮಾಜಿ ಶಾಸಕನೊಬ್ಬ ನೇರವಾಗಿ ಸಂತ್ರಸ್ತೆಯ ಮನೆಗೆ ನುಗ್ಗುವ ಅಗತ್ಯವಿದೆಯೆ? ತಾನು ಮಾಡಬೇಕಾದ ಕೃತ್ಯವನ್ನು ಬೆಂಬಲಿಗರ ಜೊತೆಗೆ ಮಾಡಿಸುವ ಶಕ್ತಿ ಆರೋಪಿಗಿಲ್ಲ ಎಂದು ನ್ಯಾಯಾಲಯ ಭಾವಿಸುತ್ತಿದೆಯೆ? ಉನ್ನಾವೋ ಅತ್ಯಾಚಾರ ಪ್ರಕರಣ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿತ್ತು. ಇಲ್ಲಿ ಆರೋಪಿ ಬಿಜೆಪಿಯ ನಾಯಕನಾಗಿದ್ದ. ಸಂತ್ರಸ್ತೆ ಅಪ್ರಾಪ್ತ ವಯಸ್ಸಿನ ಬಾಲಕಿಯಾಗಿದ್ದಾಗ ಆಕೆಯನ್ನು ಅಪಹರಿಸಿ ಆರೋಪಿ ಅತ್ಯಾಚಾರಗೈದಿದ್ದ. ಇದು ಕೇವಲ ಅತ್ಯಾಚಾರ ಪ್ರಕರಣ ಮಾತ್ರವಾಗಿರಲಿಲ್ಲ. ಈ ಅತ್ಯಾಚಾರದ ವಿರುದ್ಧ ದೂರು ನೀಡಿದ ಇಡೀ ಕುಟುಂಬವನ್ನೇ ಬಲಿ ತೆಗೆದುಕೊಳ್ಳಲು ಸೆಂಗರ್ ಯೋಜನೆ ರೂಪಿಸಿದ್ದ. ಆರೋಪಿ ಅದೆಷ್ಟು ಬಲಿಷ್ಠನೆಂದರೆ, ದೂರನ್ನು ಹಿಂದೆಗೆಯಲು ಸಿದ್ಧವಿಲ್ಲದ ಸಂತ್ರಸ್ತೆಯ ತಂದೆಯನ್ನು ಸುಳ್ಳು ಪ್ರಕರಣದಲ್ಲಿ ಸಿಲುಕಿಸಿ ಜೈಲು ಸೇರುವಂತೆ ಮಾಡಿದ್ದ. ನ್ಯಾಯಾಲಯದ ಆವರಣದಲ್ಲೇ ಪೊಲೀಸರ ಸಮ್ಮುಖದಲ್ಲಿ ಸಂತ್ರಸ್ತೆಯ ತಂದೆಗೆ ಕುಲದೀಪ್ ಸಿಂಗ್ ಸೆಂಗರ್ನ ಸೋದರನ ನೇತೃತ್ವದಲ್ಲೇ ಹಲ್ಲೆ ನಡೆದಿತ್ತು. ಅಷ್ಟೇ ಅಲ್ಲ, ಅಕ್ರಮ ಶಸ್ತ್ರಾಸ್ತ್ರ ಹೊಂದಿದ ಆರೋಪ ಹೊರಿಸಿ ಹಲ್ಲೆಗೀಡಾದಾತನನ್ನೇ ಜೈಲಿಗೆ ತಳ್ಳಲಾಗಿತ್ತು. ಬಳಿಕ ಜೈಲಿನಲ್ಲಿ ಆತನನ್ನು ಕೊಂದು ಹಾಕಲಾಗಿತ್ತು. ಇದಾದ ಬಳಿಕ ಸಂತ್ರಸ್ತೆಯ ಮೇಲೂ ದಾಳಿ ನಡೆಯಿತು. ರಸ್ತೆ ಅವಘಡದ ಮೂಲಕ ಆಕೆಯನ್ನು ಸಾಯಿಸಲು ಪ್ರಯತ್ನ ನಡೆಯಿತು. ಈ ಕೃತ್ಯದಲ್ಲಿ ಆಕೆ ಕುಟುಂಬದ ಸದಸ್ಯರನ್ನು ಕಳೆದುಕೊಳ್ಳಬೇಕಾಯಿತು. ಅಂತಿಮವಾಗಿ ಸಂತ್ರಸ್ತೆ ಸಾರ್ವಜನಿಕವಾಗಿ ಆತ್ಮಹತ್ಯೆಯ ಬೆದರಿಕೆ ಒಡ್ಡಿದರು. ಹೀಗೆ ಪ್ರಕರಣ ರಾಷ್ಟ್ರಮಟ್ಟದಲ್ಲಿ ಸುದ್ದಿಯಾದ ಬಳಿಕ ಸರಕಾರ ಸೆಂಗರ್ನ ವಿರುದ್ಧ ದೂರು ದಾಖಲಿಸಲು ಮುಂದಾಯಿತು. ಸಂತ್ರಸ್ತೆ ಮತ್ತು ಆಕೆಯ ಕುಟುಂಬದ ಸುದೀರ್ಘ ಹೋರಾಟ, ಬಲಿದಾನಗಳ ಬಳಿಕವಷ್ಟೇ ಸೆಂಗರ್ನ ವಿರುದ್ಧ ಪೊಲೀಸ್ ವ್ಯವಸ್ಥೆ ಕ್ರಮ ತೆಗೆದುಕೊಂಡಿತು. ನ್ಯಾಯಾಲಯದಲ್ಲಿ ಆರೋಪಗಳು ಸಾಬೀತಾದವು. ಅನಿವಾರ್ಯವಾಗಿ ಬಿಜೆಪಿಯು ಕೂಡ ಸೆಂಗರ್ನನ್ನು ಪಕ್ಷದಿಂದ ಉಚ್ಚಾಟಿಸಿತು. ಸೆಂಗರ್ ಜೈಲಿನಲ್ಲಿದ್ದರೂ ಸಂತ್ರಸ್ತೆ ಮತ್ತು ಆಕೆಯ ಕುಟುಂಬ ಜೀವಭಯದಿಂದಲೇ ಬದುಕುತ್ತಾ ಬಂದಿದೆ. ಇದೀಗ ದಿಲ್ಲಿ ಹೈಕೋರ್ಟ್ ಸೆಂಗರ್ನ ಶಿಕ್ಷೆಯನ್ನು ಅಮಾನತಿನಲಿಟ್ಟು, ಜಾಮೀನು ನೀಡಿದೆ. ನ್ಯಾಯಾಲಯದ ತೀರ್ಮಾನಕ್ಕೆ ಪ್ರತಿಕ್ರಿಯಿಸಿರುವ ಸಂತ್ರಸ್ತೆ ‘‘ಆತನನ್ನು ಜೈಲಿನಿಂದ ಬಿಡುಗಡೆ ಮಾಡುವುದಾದರೆ, ನನ್ನನ್ನು ಜೈಲಿಗೆ ಹಾಕಿ’’ ಎಂದು ಮನವಿ ಮಾಡಿದ್ದಾರೆ. ಆರೋಪಿಗಿರುವ ರಾಜಕೀಯ ಶಕ್ತಿಯ ಅರಿವಿದ್ದೂ ಆತನನ್ನು ನ್ಯಾಯಾಲಯ ಬಿಡುಗಡೆ ಮಾಡಲು ಮನಸ್ಸು ಮಾಡುತ್ತದೆ ಎಂದಾದರೆ, ಬದಲಿಗೆ ಸಂತ್ರಸ್ತಳನ್ನು ಜೈಲಿಗೆ ವರ್ಗಾಯಿಸುವುದೇ ಹೈಕೋರ್ಟ್ ಸಂತ್ರಸ್ತೆಗೆ ನೀಡಬಹುದಾದ ಪರ್ಯಾಯ ನ್ಯಾಯವಾಗಿದೆ. ಆ ಮೂಲಕ ಆಕೆಯ ಜೀವಕ್ಕಾದರೂ ರಕ್ಷಣೆ ಸಿಕ್ಕಿದಂತಾಗಬಹುದು. ಆದರೆ, ಜೈಲಿನಲ್ಲೂ ಆಕೆಯನ್ನು ಸಾಯಿಸುವಷ್ಟು ಜನಬಲ, ಆರ್ಥಿಕ ಬಲ ಸೆಂಗರ್ನಿಗಿದೆ. ಇದು ನ್ಯಾಯಾಲಯಕ್ಕೆ ತಿಳಿಯದ ವಿಷಯವೇನೂ ಅಲ್ಲ. ವಿಪರ್ಯಾಸವೆಂದರೆ, ಸೆಂಗರ್ ಬಿಡುಗಡೆಯ ವಿರುದ್ಧ ದಿಲ್ಲಿಯಲ್ಲಿ ಪ್ರತಿಭಟನೆ ಮಾಡುತ್ತಿದ್ದ ಸಂತ್ರಸ್ತೆಯನ್ನು ಪೊಲೀಸರು ತಡೆದಿದ್ದಾರೆ. ಸಂತ್ರಸ್ತೆಯ ಆತಂಕವನ್ನು ಸರಕಾರ ಗಂಭೀರವಾಗಿ ಪರಿಗಣಿಸಿದಂತೆ ಇಲ್ಲ. ಇಂಡಿಯಾಗೇಟ್ ಬಳಿ ಪ್ರತಿಭಟನೆ ನಡೆಸುತ್ತಿದ್ದ ಸಂತ್ರಸ್ತೆಯನ್ನು ಉತ್ತರ ಪ್ರದೇಶದ ಸಚಿವ ಓಂ ಪ್ರಕಾಶ್ ರಾಜ್ಭರ್ ಅಣಕಿಸಿ ನಕ್ಕಿದ್ದಾರೆ. ‘‘ಆಕೆಯ ಮನೆ ಉನ್ನಾವೋದಲ್ಲಿದೆ. ಮತ್ತೆ ದಿಲ್ಲಿಯಲ್ಲಿ ಏನು ಮಾಡುತ್ತಿದ್ದಾಳೆ?’’ ಅವರು ಕೇಳಿದ್ದಾರೆ. ನಿಜಕ್ಕೂ ಆತ ನಕ್ಕಿದ್ದು, ನ್ಯಾಯ ವ್ಯವಸ್ಥೆಯ ಅಸಹಾಯಕತೆಯನ್ನು ನೋಡಿ. ಆತ ಮಾತ್ರವಲ್ಲ, ಈ ದೇಶದ ಜೈಲಿನಲ್ಲಿರುವ ಎಲ್ಲ ಅತ್ಯಾಚಾರ ಆರೋಪಿಗಳೂ ನ್ಯಾಯ ವ್ಯವಸ್ಥೆಯ ವೈಕಲ್ಯವನ್ನು ನೋಡಿ ನಗುತ್ತಿದ್ದಾರೆ. ಸೆಂಗರ್ ಪ್ರಕರಣವು, ಈ ಹಿಂದೆ ಗುಜರಾತ್ನ ದಂಗೆಯ ಸಂದರ್ಭದಲ್ಲಿ ಸಾಮೂಹಿಕ ಹತ್ಯೆ ಮತ್ತು ಅತ್ಯಾಚಾರ ಆರೋಪದಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿದ್ದ 11 ಮಂದಿ ಅಪರಾಧಿಗಳನ್ನು ಗುಜರಾತ್ ಸರಕಾರ ಮಧ್ಯ ಪ್ರವೇಶಿಸಿ ಬಿಡುಗಡೆ ಮಾಡಿ ಛೀಮಾರಿಗೊಳಗಾದುದನ್ನು ನೆನಪಿಸುತ್ತದೆ. ಅಂದು ಆ ಅಪರಾಧಿಗಳ ಬಿಡುಗಡೆಯನ್ನು ಬಿಜೆಪಿ ನಾಯಕರು ಅದ್ದೂರಿಯಾಗಿ ಸ್ವಾಗತಿಸಿದ್ದರು. ಮಾತ್ರವಲ್ಲ, ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಪ್ರಚಾರಕ್ಕಾಗಿ ಅವರನ್ನು ಬಿಜೆಪಿ ನಾಯಕರು ಬಳಸಿಕೊಂಡಿದ್ದರು ಎಂದು ಮಾಧ್ಯಮಗಳು ವರದಿ ಮಾಡಿದ್ದವು. ಬಳಿಕ ಸುಪ್ರೀಂಕೋರ್ಟ್ ಆರೋಪಿಗಳ ಬಿಡುಗಡೆಯನ್ನು ಖಂಡಿಸಿ ಗುಜರಾತ್ ಸರಕಾರಕ್ಕೆ ಛೀಮಾರಿ ಹಾಕಿತ್ತು. ಅಪರಾಧಿಗಳನ್ನು ಮತ್ತೆ ಜೈಲು ಸೇರುವಂತೆ ಮಾಡಿತ್ತು. ವಿಪರ್ಯಾಸವೆಂದರೆ, ಉನ್ನಾವೋ ಅತ್ಯಾಚಾರ ಆರೋಪಿಯ ಬಿಡುಗಡೆಯಲ್ಲಿ ನ್ಯಾಯಾಲಯವೇ ನೇರ ಪಾತ್ರವನ್ನು ವಹಿಸುತ್ತಿರುವುದು. ಹಾಗೊಂದು ವೇಳೆ ಆತ ಬಿಡುಗಡೆಯಾದರೆ, ಅದು ನ್ಯಾಯ ವ್ಯವಸ್ಥೆಯ ಮೇಲೆ ನಡೆಯುವ ಬರ್ಬರ ಅತ್ಯಾಚಾರವೆಂದು ಪರಿಗಣಿಸಲ್ಪಡಲಿದೆ. ಇಂತಹ ತೀರ್ಪಿಗಿಂತ ಅತ್ಯಾಚಾರವನ್ನು ಸಂವಿಧಾನಬದ್ಧವೆಂದು ಘೋಷಿಸುವುದು ಉತ್ತಮ. ಅತ್ಯಾಚಾರಗೈಯುವುದು ರಾಜಕಾರಣಿಗಳ ಹಕ್ಕು ಎಂದು ಘೋಷಿಸಿದರೆ ಸಂತ್ರಸ್ತರು ನ್ಯಾಯಕ್ಕಾಗಿ ಪೊಲೀಸ್ ಠಾಣೆಯ ಮೆಟ್ಟಿಲು ಹತ್ತುವ ಅಪರಾಧವನ್ನು ಮಾಡಲಾರರು. ನ್ಯಾಯಾಲಯವನ್ನು ನಂಬಿ ಮೋಸ ಹೋಗಿ ತಮ್ಮ ಕುಟುಂಬ ಸದಸ್ಯರನ್ನು ಕಳೆದುಕೊಂಡು, ಅಂತಿಮವಾಗಿ ತಮ್ಮ ಪ್ರಾಣವನ್ನೇ ತ್ಯಾಗ ಮಾಡುವ ಸನ್ನಿವೇಶವಾದರೂ ತಪ್ಪಬಹುದು.
Chitradurga | ಡಿವೈಡರ್ ದಾಟಿ ಲಾರಿ ಡಿಕ್ಕಿ; ಅಪಘಾತದ ತೀವ್ರತೆಗೆ ಹೊತ್ತಿ ಉರಿದ ಖಾಸಗಿ ಬಸ್: ಕನಿಷ್ಠ 17 ಸಜೀವ ದಹನ
ಸ್ಲೀಪರ್ ಕೋಚ್ ಬಸ್ ನಲ್ಲಿದ್ದ ಪ್ರಯಾಣಿಕರಲ್ಲಿ ಹೆಚ್ಚಿನವರು ಗೋಕರ್ಣ ಮೂಲದವರು
ಅರುಣಾಚಲ ಪ್ರದೇಶದ ಬಗ್ಗೆ ಚೀನಾದ ಭವಿಷ್ಯದ ಯೋಜನೆ ಬಯಲು ಮಾಡಿದ ಪೆಂಟಗನ್ ವರದಿ; ಈಗ ಭಾರತದ ಸರದಿ!
ಚೀನಾದ ವಿಸ್ತರಣಾವಾದ ದಶಕಗಳಿಂದ ಈ ಭಾಗದಲ್ಲಿ ಅಶಾಂತಿಗೆ ಕಾರಣವಾಗಿದೆ. ಚೀನಾದಿಂದ ಅದರ ನೆರೆಹೊರೆ ರಾಷ್ಟ್ರಗಳು ನಿರಂತರವಾಗಿ ಕಿರುಕುಳ ಅನುಭವಿಸುತ್ತಿವೆ. ಅದರಲ್ಲೂ ಅರುಣಾಚಲ ಪ್ರದೇಶ ವಿವಾದ ಭಾರತ-ಚೀನಾ ನಡುವೆ ಸುದೀರ್ಘ ಸಂಘರ್ಷಕ್ಕೆ ಮುನ್ನುಡಿ ಬರೆದಿದೆ. ಈ ಮಧ್ಯೆ ಅರುಣಾಚಲ ಪ್ರದೇಶದ ಕುರಿತು ಚೀನಾದ ನಿಲುವಿನ ಬಗ್ಗೆ, ಪೆಂಟಗನ್ ತನ್ನ ವರದಿಯನ್ನು ಯುಎಸ್ ಕಾಂಗ್ರೆಸ್ಗೆ ಸಲ್ಲಿಸಿದೆ. ಈ ವರದಿಯು ಗಡಿ ರಾಜ್ಯದ ಮೇಲಿನ ತನ್ನ ಹಕ್ಕಿನ ವಿಚಾರದಲ್ಲಿ ಚೀನಾ ರಾಜಿಗೆ ಸಿದ್ಧವಿಲ್ಲ ಎಂದು ಉಲ್ಲೇಖಿಸಲಾಗಿದೆ.
ಅರಾವಳಿಯಲ್ಲಿ ಹೊಸ ಗಣಿಗಾರಿಕೆಗೆ ನಿಷೇಧ; ಜನಾಂದೋಲನದ ಕರೆಗೆ ಓಗೊಟ್ಟ ಕೇಂದ್ರ ಸರ್ಕಾರದ ಐತಿಹಾಸಿಕ ಆದೇಶ
ಅರಾವಳಿ ಉಳಿಸಿ ಜನಾಂದೋಲನಕ್ಕೆ ಭಾರೀ ಯಶಸ್ಸು ದೊರೆತಿದೆ. ದೆಹಲಿಯಿಂದ ಗುಜರಾತ್ವರೆಗೆ ಹಬ್ಬಿರುವ ಈ ಬೆಟ್ಟಗಳ ಶ್ರೇಣಿಯಲ್ಲಿ, ಹೊಸದಾಗಿ ಗಣಿಗಾರಿಕೆ ಗುತ್ತಿಗೆ ನೀಡುವುದನ್ನು ಕೇಂದ್ರ ಸರ್ಕಾರ ಸಂಪೂರ್ಣವಾಗಿ ನಿಷೇಧಿಸಿದೆ. ಅಲ್ಲದೇ ಗಣಿಗಾರಿಕೆ ಚಟುವಟಿಕೆಗಳ ಮೇಲೆ ನಿಯಂತ್ರಣ ಹೇರಲು ಹೊಸ ನಿಯಮಗಳನ್ನು ಜಾರಿಗೆ ತಂದಿದೆ. ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ ಹೊರಡಿಸಿರುವ ಹೊಸ ಆದೇಶ, ಅರಾವಾಳಿಗಾಗಿ ಧ್ವನಿ ಎತ್ತಿದ್ದ ಪರಿಸರವಾದಿಗಳಿಗೆ ನೆಮ್ಮದಿ ತಂದಿದೆ. ಈ ಕುರಿತು ಇಲ್ಲಿದೆ ಮಾಹಿತಿ.
ಚಿತ್ರದುರ್ಗ ಭೀಕರ ಬಸ್ ಅಪಘಾತ : 17 ಮಂದಿ ಸಜೀವ ದಹನ, ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ
ಚಿತ್ರದುರ್ಗದ ಹೆದ್ದಾರಿಯಲ್ಲಿ ಘನಘೋರ ದುರಂತ ನಡೆದಿದ್ದು, ಬೆಂಗಳೂರಿಂದ ಶಿವಮೊಗ್ಗಕ್ಕೆ ಹೋಗುತ್ತಿದ್ದ ಖಾಸಗಿ ಬಸ್ ರಸ್ತೆ ಮಧ್ಯೆ ಹೊತ್ತಿ ಉರಿದಿದ್ದು, ಅದರಲ್ಲಿದ್ದ 17 ಮಂದಿ ಸಜೀವ ದಹನ ಆಗಿದ್ದಾರೆ. ಉಳಿದವರಿಗೆ ಗಂಭೀರ ಗಾಯಗಳಾಗಿದೆ.
New Railway Line: ಗಿಣಿಗೇರಾ-ರಾಯಚೂರು ರೈಲು ಮಾರ್ಗ ಯೋಜನೆ ಅಪ್ಡೇಟ್, ತೆಲಂಗಾಣಕ್ಕೆ ಸಂಪರ್ಕ ಸುಲಭ
ಬೆಂಗಳೂರು: ಕೇಂದ್ರ ಸರ್ಕಾರ ಕರ್ನಾಟಕದ ಕೆಲವೆಡೆ ಹೊಸ ರೈಲು ಮಾರ್ಗ ಯೋಜನೆಗಳನ್ನು ಕೈಗೆತ್ತಿಕೊಂಡಿದೆ. ಅದೇ ರೀತಿ ಉತ್ತರ ಕರ್ನಾಟಕದಲ್ಲಿ ಆರಂಭವಾಗಿದ್ದ ಪ್ರಮುಖ ರೈಲ್ವೆ ಯೋಜನೆಯಾಗಿರುವ ಹಾಗೂ ತೆಲಂಗಾಣಕ್ಕೆ ಸಂಪರ್ಕ ಕಲ್ಪಿಸುವ ಗಿಣಿಗೇರಾ-ರಾಯಚೂರು ರೈಲು ಮಾರ್ಗದ ನಿರ್ಮಾಣವು ಪ್ರಗತಿಯಲ್ಲಿದೆ. ಈ ಯೋಜನೆ ಮುನಿರಾಬಾದ್-ಮಹಬೂಬ್ನಗರ ರೈಲ್ವೆ ಮಾರ್ಗದ ಭಾಗವಾಗಿದೆ. ಒಟ್ಟು 165 ಕಿಲೋ ಮೀಟರ್ ಉದ್ದದ ಈ ಮಾರ್ಗವು ಯಾವೆಲ್ಲ
ಚಾಮರಾಜ ನಗರದಲ್ಲಿ ಮತ್ತೊಂದು ಕೆಎಚ್ಬಿ ಲೇಔಟ್ : ಬೇಡಿಕೆ ಸಮೀಕ್ಷೆಗಾಗಿ ಅರ್ಜಿ
ಚಾಮರಾಜನಗರದಲ್ಲಿ ಕರ್ನಾಟಕ ಗೃಹ ಮಂಡಳಿಯು ನಾಲ್ಕನೇ ಲೇಔಟ್ ನಿರ್ಮಾಣಕ್ಕೆ ಸಿದ್ಧತೆ ನಡೆಸಿದೆ. ಸಾರ್ವಜನಿಕರ ಬೇಡಿಕೆ ತಿಳಿಯಲು ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದ್ದು, ಡಿ.31 ಕೊನೆಯ ದಿನವಾಗಿದೆ. ಮೈಸೂರಿನ ವಿದ್ವತ್ ಇನ್ಫಾ ಸಂಸ್ಥೆಯೊಂದಿಗೆ ಜಂಟಿ ಸಹಯೋಗದಲ್ಲಿ 24 ಎಕರೆ 13 ಗುಂಟೆ ಜಮೀನಿನಲ್ಲಿ ಈ ಯೋಜನೆ ರೂಪಿಸಲಾಗುತ್ತಿದೆ.
ರಾಜಧಾನಿಯಲ್ಲಿ 30,735 ವಿದ್ಯುತ್ ಕಳ್ಳತನ ಕೇಸ್ ! ವಾಣಿಜ್ಯ ಉದ್ದೇಶಕ್ಕೆ ಗೃಃಜ್ಯೋತಿ ಯೋಜನೆ ದುರ್ಬಳಕೆ
ಬೆಂಗಳೂರಿನಲ್ಲಿ ವಿದ್ಯುತ್ ಕಳ್ಳತನ ನಿರಂತರವಾಗಿ ಮುಂದುವರೆದಿದ್ದು, ಕಳೆದ ಮೂರು ವರ್ಷಗಳಲ್ಲಿ 30,735 ಪ್ರಕರಣಗಳು ದಾಖಲಾಗಿವೆ. ಒಟ್ಟು 107.99 ಕೋಟಿ ರೂ. ದಂಡ ವಸೂಲಾಗಿದ್ದರೂ, ಮೀಟರ್ ಬೈಪಾಸ್, ಟ್ಯಾಂಪರಿಂಗ್ ಮತ್ತು ಅಕ್ರಮ ಸಂಪರ್ಕಗಳ ಮೂಲಕ ವಿದ್ಯುತ್ ದುರ್ಬಳಕೆ ನಡೆಯುತ್ತಿದೆ. ಗೃಹಜ್ಯೋತಿ ಯೋಜನೆಯನ್ನು ದುರುಪಯೋಗಪಡಿಸಿಕೊಳ್ಳುವ ಪ್ರಕರಣಗಳೂ ವರದಿಯಾಗಿವೆ.
ಚಿಕ್ಕಮಗಳೂರು| ಕಾರು ಪಲ್ಟಿಯಾಗಿ ವಿದ್ಯಾರ್ಥಿ ಮೃತ್ಯು, ಆರು ಮಂದಿ ಗಂಭೀರ
ಚಿಕ್ಕಮಗಳೂರು: ಚಾಲಕನ ನಿಯಂತ್ರಣ ತಪ್ಪಿ ಕಾರು ರಸ್ತೆ ಬದಿಯ ಗದ್ದೆಗೆ ಪಲ್ಟಿಯಾದ ಪರಿಣಾಮ ಓರ್ವ ಸ್ಥಳದಲ್ಲೇ ಮೃತಪಟ್ಟು, ಆರು ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಚಿಕ್ಕಮಗಳೂರು ಹೊರವಲಯದ ಮೂಗ್ತಿಹಳ್ಳಿ ಬಳಿ ನಡೆದಿರುವುದಾಗಿ ವರದಿಯಾಗಿದೆ. ಚಿಕ್ಕಮಗಳೂರಿನ ಎಂಇಎಸ್ ಕಾಲೇಜು ವಿದ್ಯಾರ್ಥಿ ಮೋಹಿನ್ (19) ಮೃತಪಟ್ಟವರು. ಕೊಟ್ಟಿಗೆಹಾರದಿಂದ ಚಿಕ್ಕಮಗಳೂರಿಗೆ ಆಗಮಿಸುವಾಗ ಚಾಲಕನ ನಿಯಂತ್ರಣ ತಪ್ಪಿದ ಕಾರು ರಸ್ತೆ ಬದಿಯ ಗದ್ದೆಗೆ ಪಲ್ಟಿಯಾದ ಪರಿಣಾಮ ಅವಘಡ ಸಂಭವಿಸಿದೆ ಎಂದು ತಿಳಿದು ಬಂದಿದೆ. ಚಿಕ್ಕಮಗಳೂರಿನ ಯುವಕರ ತಂಡ ಕೊಟ್ಟಿಗೆಹಾರದಲ್ಲಿ ನಡೆದ ಕ್ರಿಕೆಟ್ ಪಂದ್ಯಾವಳಿಗಾಗಿ ತೆರಳಿದ್ದರು. ಕ್ರಿಕೆಟ್ ಪಂದ್ಯ ಮುಗಿಸಿಕೊಂಡು ವಾಪಸ್ ಬರುವಾಗ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡ ಆರು ಜನರನ್ನು ಚಿಕ್ಕಮಗಳೂರು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಈ ಸಂಬಂಧ ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶಿವಮೊಗ್ಗ: ಶಿಮೂಲ್ ಮೇಲೆ ಲೋಕಾಯುಕ್ತ ದಾಳಿ
ಶಿವಮೊಗ್ಗ: ಶಿವಮೊಗ್ಗ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ಮೇಲೆ ಬುಧವಾರ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಲೋಕಾಯುಕ್ತ ಎಸ್ಪಿ ಮಂಜುನಾಥ್ ಚೌಧರಿ ಅವರ ನೇತೃತ್ವದಲ್ಲಿ ಅಧಿಕಾರಿಗಳ ತಂಡವು ದಾಖಲೆಗಳ ಪರಿಶೀಲನೆಯಲ್ಲಿ ತೊಡಗಿದೆ. ಲೋಕಾಯುಕ್ತರ ತಂಡವು ಶಿಮೂಲ್ ಕಚೇರಿಯ ಲೆಕ್ಕಪತ್ರ ವಿಭಾಗ ಮತ್ತು ಮಾರುಕಟ್ಟೆ ವಿಭಾಗಗಳ ಮೇಲೆ ಗಮನ ಕೇಂದ್ರೀಕರಿಸಿದೆ. ಕಳೆದ ಕೆಲವು ಸಮಯದಿಂದ ಈ ಎರಡೂ ವಿಭಾಗಗಳಲ್ಲಿ ಭಾರೀ ಭ್ರಷ್ಟಾಚಾರ ನಡೆಯುತ್ತಿದೆ ಎಂಬ ಗಂಭೀರ ಆರೋಪಗಳು ಕೇಳಿಬಂದಿದ್ದವು. ಈ ದೂರುಗಳ ಹಿನ್ನೆಲೆಯಲ್ಲಿ ಸಕಲ ದಾಖಲೆಗಳನ್ನು ವಶಪಡಿಸಿಕೊಂಡಿರುವ ಅಧಿಕಾರಿಗಳು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಬೆಂಗಳೂರು: ಅಮೆರಿಕ ಮೂಲದ ಸೆಮಿಕಂಡಕ್ಟರ್ ಕಂಪನಿ ಸ್ಯಾನ್ಸನ್ ಗ್ರೂಪ್ ಗೆ ತನ್ನ ಘಟಕ ಸ್ಥಾಪಿಸಲು ಮಂಡ್ಯ ಜಿಲ್ಲೆಯಲ್ಲಿ 100 ಎಕರೆ ಭೂಮಿ ನೀಡಲು ರಾಜ್ಯ ಸರಕಾರ ಉತ್ಸುಕವಾಗಿದೆ. ಆದರೆ ಈ ಸಂಬಂಧ ಆ ಕಂಪನಿಯ ಉನ್ನತಾಧಿಕಾರಿಗಳನ್ನು ಸಂಪರ್ಕಿಸಲು ಸಾಕಷ್ಟು ಪ್ರಯತ್ನಿಸಿದರೂ ಅವರು ಸಿಕ್ಕಿಲ್ಲ. ಈ ಯೋಜನೆ ರಾಜ್ಯಕ್ಕೆ ಬಂದು ನೆಲೆಯೂರಬೇಕು ಎನ್ನುವುದು ನಮ್ಮ ಆಸಕ್ತಿಯಾಗಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ತಿಳಿಸಿದ್ದಾರೆ. ಬುಧವಾರ ಈ ಸಂಬಂಧ ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಪತ್ರ ಬರೆದಿರುವ ಎಂ.ಬಿ.ಪಾಟೀಲ್, ಈ ಬಗ್ಗೆ ಅ.31ರಂದು ತಾವು ನಮಗೆ ಪತ್ರ ಬರೆದಿದ್ದು, ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿ ನಾವು ನ.24ರಂದು ಪ್ರತ್ಯುತ್ತರ ಬರೆದಿದ್ದೆವು. ಏತನ್ಮಧ್ಯೆ ಪ್ರಸ್ತಾವಿನ ಯೋಜನೆಯ ವಿವರಗಳನ್ನು ತಿಳಿದುಕೊಳ್ಳಲು ಸ್ಯಾನ್ಸನ್ ಕಂಪನಿಯ ಮುಖ್ಯ ತಾಂತ್ರಿಕ ಅಧಿಕಾರಿ ಮತ್ತು ಭಾರತೀಯ ವ್ಯವಹಾರಗಳ ಮುಖ್ಯಸ್ಥ ಅಭಯ್ ಕೆ.ರೈ ಅವರನ್ನು ಸಂಪರ್ಕಿಸಲು ಹಲವು ಬಾರಿ ಪ್ರಯತ್ನಿಸಲಾಗಿದೆ. ಆದರೆ ಅವರ ಕಡೆಯಿಂದ ಇದುವರೆಗೂ ಉತ್ತರ ಬಂದಿಲ್ಲ ಎಂದಿದ್ದಾರೆ. ಮಂಡ್ಯ ಜಿಲ್ಲೆಯಲ್ಲಿ ನೀರು, ವಿದ್ಯುತ್, ಸಂಪರ್ಕ ಸೌಲಭ್ಯವಿರುವ ಕಡೆಯಲ್ಲೇ 100 ಎಕರೆ ಕೊಡಲು ಅಡ್ಡಿಯೇನಿಲ್ಲ. ಕಂಪನಿಯ ಕಡೆಯಿಂದ ಮನವಿ ಬಂದರೆ ಭೂ ಮಂಜೂರಾತಿಯ ಕಾರ್ಯಸಾಧ್ಯತೆ ಜೊತೆಗೆ ಇನ್ನಿತರ ಅಗತ್ಯ ಅನುಮೋದನೆಗಳು ಮತ್ತು ಮೂಲ ಸೌಕರ್ಯಗಳನ್ನು ಪರಿಗಣಿಸಿ, ತ್ವರಿತವಾಗಿ ಮುಂದಿನ ಹಂತಕ್ಕೆ ಕೊಂಡೊಯ್ಯಲಾಗುವುದು. ಈ ಹೊಣೆಯನ್ನು ಕೈಗಾರಿಕಾ ಇಲಾಖೆಯ ಆಯುಕ್ತೆ ಗುಂಜನ್ ಕೃಷ್ಣ ಅವರಿಗೆ ವಹಿಸಲಾಗಿದೆ ಎಂದು ಎಂ.ಬಿ.ಪಾಟೀಲ್ ತಿಳಿಸಿದ್ದಾರೆ. ಹೈಟೆಕ್ ಉದ್ಯಮಗಳನ್ನು ಬೆಳೆಸಲು ರಾಜ್ಯ ಸರಕಾರ ಬದ್ಧವಾಗಿದೆ. ಈ ಉದ್ದೇಶಿತ ಹೂಡಿಕೆ ಯೋಜನೆ ರಾಜ್ಯದ ಕೈತಪ್ಪಬಾರದು ಎನ್ನುವುದು ನಮ್ಮ ಕಳಕಳಿಯಾಗಿದೆ. ಇದರಿಂದ ಬೆಂಗಳೂರಿನ ಹೊರಗಿನ ಭಾಗಗಳಲ್ಲಿ ಉದ್ಯೋಗಸೃಷ್ಟಿ ಮತ್ತು ಉದ್ದಿಮೆಗಳ ಬೆಳವಣಿಗೆಗೂ ಅನುಕೂಲವಾಗಲಿದೆ ಎಂದು ಎಂ.ಬಿ.ಪಾಟೀಲ್ ಹೇಳಿದ್ದಾರೆ.
ಹೊಸಂಗಡಿ : ಯುವಕನ ಮೃತದೇಹ ನದಿಯಲ್ಲಿ ಪತ್ತೆ
ಮೂಡುಬಿದಿರೆ : ಹೊಸಂಗಡಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಯುವಕನ ಮೃತದೇಹ ಬುಧವಾರ ಸಂಜೆ ನೆತ್ತೋಡಿ ಎಂಬಲ್ಲಿ ಸಂಜೆ ಪತ್ತೆಯಾಗಿದೆ. ಕಾರ್ಕಳ ತಾಲೂಕು ಮಿಯ್ಯಾರು ಗ್ರಾಮದ ಲತೀಶ್ ಪೂಜಾರಿ ( 42) ಎಂಬಾತ ಆತ್ಮಹತ್ಯೆ ಮಾಡಿಕೊಂಡವರು. ಮದುವೆಯಾಗಿ ಇಬ್ಬರು ಮಕ್ಕಳಿದ್ದಾರೆ. ವಿದೇಶದಲ್ಲಿದ್ದ ಈತ ಇತ್ತೀಚೆಗಷ್ಟೇ ಊರಿಗೆ ಬಂದಿದ್ದು,ಅಲ್ಲಿಂದ ಹೊಸಂಗಡಿಯಲ್ಲಿರುವ ಹೆಂಡತಿ ಮನೆಗೆ ಬಂದಿದ್ದರೆನ್ನಲಾಗಿದೆ. ರವಿವಾರ ಅದ್ಯಾವುದೋ ವಿಷಯಕ್ಕೆ ಜಗಳ ನಡೆದಿತ್ತೆನ್ನಲಾಗಿದ್ದು ಮಿಯ್ಯಾರಿನಲ್ಲಿರುವ ತನ್ನ ಅಣ್ಣನ ಮೊಬೈಲ್ ಗೆ ಮೆಸೇಜ್ ಮಾಡಿ ಈ ಬಗ್ಗೆ ಹೇಳಿಕೊಂಡಿದ್ದು, ಅವರು ‘ಸರಿಮಾಡುವ, ಆತುರದ ನಿರ್ಧಾರ ಬೇಡ’ ಎಂದು ಬುದ್ಧಿಮಾತು ಹೇಳಿದ್ದರೆನ್ನಲಾಗಿದೆ. ಆದರೆ ಆತ ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ನೇರವಾಗಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರಬೇಕೆಂದು ಶಂಕಿಸಲಾಗಿದೆ. ವೇಣೂರು ಪೊಲೀಸರು ಸ್ಥಳಕ್ಕಾಗಮಿಸಿ ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ನಡೆಸುತ್ತಿದ್ದಾರೆ.
ರಚನಾತ್ಮಕ ಅಂತರವನ್ನು ಸರಿಪಡಿಸುವ ʻವಿಬಿ-ಜಿ ರಾಮ್ ಜಿʼ ಕಾಯ್ದೆ-2025
ʻವಿಕಸಿತ ಭಾರತ ಉದ್ಯೋಗ ಮತ್ತು ಜೀವನೋಪಾಯ ಖಾತರಿ ಯೋಜನೆ (ಗ್ರಾಮೀಣ) ಕಾಯ್ದೆ-2025ʼಕ್ಕೆ ಭಾರತದ ರಾಷ್ಟ್ರಪತಿ ಅವರು ಅನುಮೋದನೆ ನೀಡಿದ್ದಾರೆ. ಆ ಮೂಲಕ ಶಾಸನಬದ್ಧ ವೇತನ ಉದ್ಯೋಗ ಖಾತರಿಯನ್ನು 125 ದಿನಗಳಿಗೆ ಹೆಚ್ಚಿಸಲಾಗಿದೆ. ಸಬಲೀಕರಣ, ಏಕೀಕರಣದ ಮತ್ತು ಪರಿಪೂರ್ಣತೆ ಆಧರಿತ ಯೋಜನೆ ಅನುಷ್ಠಾನದ ಮೂಲಕ ಗ್ರಾಮೀಣ ಜೀವನೋಪಾಯಕ್ಕೆ ಮತ್ತಷ್ಟು ಶಕ್ತಿ ತುಂಬಲಾಗಿದೆ. ಸದೃಢ ಮತ್ತು ಸ್ವಾವಲಂಬಿ ಗ್ರಾಮೀಣ ಭಾರತ ನಿರ್ಮಾಣಕ್ಕೆ ಅನುವು ಮಾಡಲಾಗಿದೆ. ಕೆಲವರಿಂದ ತಪ್ಪು ಗ್ರಹಿಕೆ ʻವಿಬಿ-ಜಿ ರಾಮ್ ಜಿʼ ಕಾಯ್ದೆಯು ಜಾರಿಯಾದ ಬಳಿಕವೂ ಕೆಲವರು ಕೂಲಂಕಷ ಪರಿಶೀಲನೆ ರಹಿತವಾದ ಊಹಾ ಪೋಹಗಳನ್ನು ಮುಂದಿಟ್ಟಿದ್ದಾರೆ. ಈ ಕಾಯ್ದೆಯ ಮೂಲಕ ಉದ್ಯೋಗ ಖಾತರಿಯನ್ನು ದುರ್ಬಲಗೊಳಿಸಲಾಗಿದೆ; ವಿಕೇಂದ್ರೀಕರಣ ಮತ್ತು ಬೇಡಿಕೆ ಆಧಾರಿತ ಉದ್ಯೋಗದ ಹಕ್ಕುಗಳನ್ನು ಸಮಾಲೋಚನೆಯಿಲ್ಲದೆ ದುರ್ಬಲಗೊಳಿಸಲಾಗಿದೆ ಎಂದು ಆರೋಪಿಸಲಾಗಿದೆ. ಜೊತೆಗೆ ಈ ಸುಧಾರಣೆಯು ಪುನರ್ ರಚನೆ ಸೋಗಿನಲ್ಲಿ ವಿತ್ತೀಯ ನಿಧಿ ಕಡಿತವನ್ನು ಸೂಚಿಸುತ್ತದೆ ಎಂದು ಹೇಳಲಾಗುತ್ತಿದೆ. ಈ ಪ್ರತಿಯೊಂದು ಪ್ರತಿಪಾದನೆಯೂ ಕಾಯ್ದೆಯ ಸತ್ವ ಮತ್ತು ಉದ್ದೇಶವನ್ನು ತಪ್ಪಾಗಿ ಗ್ರಹಿಸಿದ್ದರಿಂದ ಹೊರಹೊಮ್ಮಿದೆ. ಜನಕಲ್ಯಾಣ ಮತ್ತು ಅಭಿವೃದ್ಧಿಯು ಪರಸ್ಪರ ವಿರೋದ್ಧ ಆಯ್ಕೆಗಳು ಎಂಬ ಊಹೆ ಹಾಗೂ ಪರಿಕಲ್ಪನೆಯಲ್ಲಿನ ದೋಷವು ಈ ತಪ್ಪು ಗ್ರಹಿಕೆಗೆ ಕಾರಣವಾಗಿದೆ. ಆದರೆ, ಹೊಸ ಕಾಯಿದೆಯನ್ನು ಇದಕ್ಕೆ ವಿರುದ್ಧವಾದ ತಿಳಿವಳಿಕೆಯ ಮೇಲೆ ರೂಪಿಸಲಾಗಿದೆ. ಮತ್ತಷ್ಟು ಹೆಚ್ಚಿನ ಶಾಸನಬದ್ಧ ಜೀವನೋಪಾಯದ ಖಾತರಿಯನ್ನು ಹೊಂದಿರುವ ಜನಕಲ್ಯಾಣ ಮತ್ತು ಅಭಿವೃದ್ಧಿ, ದೀರ್ಘಬಾಳಿಕೆಯ ಮೂಲಸೌಕರ್ಯ ಸೃಷ್ಟಿ ಮತ್ತು ಉತ್ಪಾದಕತೆ ಹೆಚ್ಚಳದ ಮೇಲೆ ಹೊಸ ಕಾಯಿದೆ ನಿಂತಿದೆ. ಇದು ಪರಸ್ಪರ ಬಲವರ್ಧನೆಗೆ ಬೆಂಬಲಿಸುತ್ತದೆ. ಆದಾಯ ಬೆಂಬಲ, ಆಸ್ತಿ ಸೃಷ್ಟಿ, ಕೃಷಿ ಸ್ಥಿರತೆ ಮತ್ತು ದೀರ್ಘಕಾಲೀನ ಗ್ರಾಮೀಣ ಉತ್ಪಾದಕತೆಯನ್ನು ನಿರಂತರವಾಗಿ ಪರಿಗಣಿಸಲಾಗುತ್ತದೆ. ಇದು ಮಹತ್ವಾಕಾಂಕ್ಷೆಯ ವಾಕ್ಚಾತುರ್ಯವಲ್ಲ, ಬದಲಿಗೆ ಶಾಸನಬದ್ಧ ವಿನ್ಯಾಸವನ್ನು ಆಧರಿಸಿದ ಕಾರ್ಯವಿಧಾನವಾಗಿದೆ. ಉದ್ಯೋಗದ ಕಾನೂನುಬದ್ಧ ಹಕ್ಕನ್ನು ದುರ್ಬಲಗೊಳಿಸಲಾಗಿದೆ ಎಂಬ ಅಭಿಪ್ರಾಯ ಸರಿಯಲ್ಲ. ಈ ಕಾಯ್ದೆಯು ಉದ್ಯೋಗ ಖಾತರಿಯ ಶಾಸನಬದ್ಧ ಮತ್ತು ನ್ಯಾಯಸಮ್ಮತ ಗುಣಲಕ್ಷಣವನ್ನು ಉಳಿಸಿಕೊಳ್ಳುತ್ತದೆ ಮತ್ತು ಅದರ ಜಾರಿಯನ್ನು ಬಲಪಡಿಸುತ್ತದೆ. ಉದ್ಯೋಗ ಅರ್ಹತೆಯನ್ನು ಮೊಟಕುಗೊಳಿಸುವ ಬದಲು, ಅರ್ಹತೆಯನ್ನು 100 ರಿಂದ 125 ದಿನಗಳಿಗೆ ವಿಸ್ತರಿಸಲಾಗಿದೆ. ಈ ಹಿಂದೆ ಅನರ್ಹತೆ ಮೂಲಕ ನಿರುದ್ಯೋಗ ಭತ್ಯೆಯನ್ನು ನಿರಾಕರಿಸಲು ಅವಕಾಶವಿತ್ತು. ಈಗ ಅಂತಹ ಅರ್ಹತೆ ನಿರಾಕರಣೆ ಷರತ್ತುಗಳನ್ನು ತೆಗೆದುಹಾಕಲಾಗಿದೆ. ಜೊತೆಗೆ ಕ್ಷಿಪ್ರ ಕುಂದುಕೊರತೆ ಪರಿಹಾರ ಕಾರ್ಯವಿಧಾನಗಳನ್ನು ಬಲಪಡಿಸಲಾಗಿದೆ. ಈ ಸುಧಾರಣೆಯು ಶಾಸನಬದ್ಧ ಭರವಸೆ ಮತ್ತು ವಾಸ್ತವತೆಯ ನಡುವಿನ ದೀರ್ಘಕಾಲದ ಅಂತರವನ್ನು ಪರಿಹರಿಸುತ್ತದೆ. ಹೊಸ ಯೋಜನೆಯಲ್ಲಿ ಬೇಡಿಕೆ ಆಧಾರಿತ ಉದ್ಯೋಗವನ್ನು ಕೈಬಿಡಲಾಗಿದೆ ಎಂದು ವಾದಿಸಲಾಗಿದೆ. ಇದು ಆಧಾರರಹಿತ. ಕಾರ್ಮಿಕರ ಕಡೆಯಿಂದ ಕೆಲಸಕ್ಕಾಗಿ ಬೇಡಿಕೆ ಸೃಷ್ಟಿಯಾಗುವುದು ಮುಂದುವರಿಯುತ್ತದೆ. ಆದರೆ ಹೊಸ ಯೋಜನೆಯಲ್ಲಿ ಈ ನಿಟ್ಟಿನಲ್ಲಿ ಒಂದು ಬದಲಾವಣೆ ಎಂದರೆ ಕೇವಲ ಸಂಕಷ್ಟ ಎದುರಾದ ನಂತರವಷ್ಟೇ ಕೆಲಸಕ್ಕಾಗಿ ಬೇಡಿಕೆ ಸೃಷ್ಟಿಯಾಗುವುದಿಲ್ಲ. ಮುಂಚಿತವಾಗಿ ಉದ್ಯೋಗ ಸೃಜನೆಯನ್ನು ಕಾರ್ಯಗತಗೊಳಿಸುವ ಮೂಲಕ, ಸಕ್ರಿಯ ಭಾಗವಹಿಸುವಿಕೆ ಹೊಂದಿರುವ ಗ್ರಾಮ ಮಟ್ಟದ ಯೋಜನೆಯ ಮೂಲಕ ಹೊಸ ಯೋಜನೆಯು ಕಾರ್ಮಿಕರು ಉದ್ಯೋಗವನ್ನು ಹುಡುಕಿದಾಗ ಅವರಿಗೆ ಅದು ಖಚಿತವಾಗಿ ಲಭ್ಯವಾಗುತ್ತದೆ. ಇಲ್ಲಿ ಆಡಳಿತಾತ್ಮಕ ಸಿದ್ಧತೆಯಿಲ್ಲದ ಕಾರಣ ಉದ್ಯೋಗ ನಿರಾಕರಿಸುವ ಸಂದರ್ಭ ಬರುವುದಿಲ್ಲ. ಈ ಯೋಜನೆಯು, ಈ ಅರ್ಥದಲ್ಲಿ, ಬೇಡಿಕೆಯನ್ನು ಕಡಿಮೆ ಮಾಡುವುದಿಲ್ಲ. ಬದಲಿಗೆ, ಅದು ಅದನ್ನು ಕಾರ್ಯಗತಗೊಳಿಸುತ್ತದೆ. ಅಧಿಕಾರ ಕೇಂದ್ರೀಕರಣದ ಆರೋಪ ಮಾಡುವವರು, ಬಹುಶಃ ಈ ಕಾನೂನಿನ ರಚನಾ ಸ್ವರೂಪವನ್ನು ಕಡೆಗಣಿಸಿ ದಂತೆ ಕಾಣುತ್ತದೆ. ಗ್ರಾಮ ಪಂಚಾಯಿತಿಗಳು ಪ್ರಾಥಮಿಕ ಯೋಜನೆ ಮತ್ತು ಅನುಷ್ಠಾನ ಪ್ರಾಧಿಕಾರಗಳಾಗಿ ಉಳಿದಿವೆ ಮತ್ತು ಗ್ರಾಮ ಸಭೆಗಳು ಸ್ಥಳೀಯ ಯೋಜನೆಗಳ ಮೇಲೆ ಅನುಮೋದನೆಯ ಅಧಿಕಾರವನ್ನು ಉಳಿಸಿಕೊಂಡಿವೆ. ಹೊಸ ಯೋಜನೆಯಲ್ಲಿ ಬದಲಾಗಿರುವ ಒಂದು ಸಂಗತಿಯೆಂದರೆ, ವಿಕೇಂದ್ರೀಕೃತ ಯೋಜನೆಯು ಇನ್ನು ಮುಂದೆ ತಾತ್ಕಾಲಿಕ ಅಥವಾ ಸಾಂದರ್ಭಿಕವಾಗಿರುವುದಿಲ್ಲ. ಬದಲಿಗೆ, ರಚನಾತ್ಮಕ ಮತ್ತು ಭಾಗವಹಿಸುವ ಪ್ರಕ್ರಿಯೆಯಾಗಿ ಸಾಂಸ್ಥಿಕ ರೂಪ ಪಡೆಯುತ್ತದೆ. ʻವಿಕಸಿತ ಗ್ರಾಮ ಪಂಚಾಯತ್ ಯೋಜನೆʼಗಳನ್ನು ಬ್ಲಾಕ್, ಜಿಲ್ಲೆ, ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಒಟ್ಟುಗೂಡಿಸಲಾಗುತ್ತದೆ, ಇದು ಕ್ಷೇತ್ರಗಳಾದ್ಯಂತ ಸಮನ್ವಯ, ಏಕೀಕರಣ ಮತ್ತು ಗೋಚರತೆಯನ್ನು ಸಕ್ರಿಯಗೊಳಿಸುತ್ತದೆ. ಸ್ಥಳೀಯ ಆದ್ಯತೆಗಳನ್ನು ದಮನ ಮಾಡಲು ಅವಕಾಶವಿರುವುದಿಲ್ಲ. ಹೊಸ ಕಾಯಿದೆಯಲ್ಲಿ ಯೋಜನೆಯ ಸುಸಂಬದ್ಧತೆ ವಿಚಾರವಷ್ಟೇ ಕೇಂದ್ರೀಕೃತವಾಗಿರುತ್ತದೆ, ಆದರೆ ನಿರ್ಧಾರ ತೆಗೆದುಕೊಳ್ಳುವ ಅಧಿಕಾರವು ಸ್ಥಳೀಯವಾಗಿ ಉಳಿಯುತ್ತದೆ. ಇದು ವಿಕೇಂದ್ರೀಕರಣವನ್ನು ದುರ್ಬಲಗೊಳಿಸದೆಯೇ ವಿಘಟನೆಯನ್ನು ಸರಿಪಡಿಸುತ್ತದೆ. ಸಮಾಲೋಚನೆಯಿಲ್ಲದೆ ಸುಧಾರಣೆಯನ್ನು ಕೈಗೊಳ್ಳಲಾಗಿದೆ ಎಂಬ ವಾದಗಳು ಸಹ ಅಷ್ಟೇ ಅಸಂಗತವಾಗಿವೆ. ಈ ವಿಧೇಯಕ ಮಂಡನೆಗೂ ಮುನ್ನ ರಾಜ್ಯ ಸರ್ಕಾರಗಳೊಂದಿಗೆ ವ್ಯಾಪಕ ಸಮಾಲೋಚನೆಗಳು, ತಾಂತ್ರಿಕ ಕಾರ್ಯಾಗಾರಗಳು ಮತ್ತು ಬಹು-ಪಾಲುದಾರರ ಚರ್ಚೆಗಳು ನಡೆದವು. ಇದಲ್ಲಿನ ಪ್ರಮುಖ ವಿನ್ಯಾಸ ವೈಶಿಷ್ಟ್ಯಗಳು - ಗ್ರಾಮ ಯೋಜನಾ ರಚನೆಗಳು, ಒಮ್ಮುಖ ಕಾರ್ಯವಿಧಾನಗಳು ಮತ್ತು ಡಿಜಿಟಲ್ ಆಡಳಿತ ವ್ಯವಸ್ಥೆಗಳನ್ನು ರಾಜ್ಯಗಳ ಪ್ರತಿಕ್ರಿಯೆ ಮತ್ತು ಹಲವು ವರ್ಷಗಳ ಅನುಷ್ಠಾನದಿಂದ ಪಡೆದ ಪಾಠಗಳಿಂದ ರೂಪಿಸಲಾಗಿದೆ. ಹಂಚಿಕೆ, ಪಾಲಿನಲ್ಲಿ ಹೆಚ್ಚಳ ಕಳೆದ ದಶಕದಲ್ಲಿ ಉದ್ಯೋಗ ಖಾತರಿಯನ್ನು ವ್ಯವಸ್ಥಿತವಾಗಿ ದುರ್ಬಲಗೊಳಿಸಲಾಗಿದೆ ಎಂಬ ಆರೋಪವು ವಾಸ್ತವಕ್ಕೆ ದೂರವಾದುದು. ಬಜೆಟ್ ಹಂಚಿಕೆಯು 2013-14ರಲ್ಲಿದ್ದ 33,000 ಕೋಟಿ ರೂ.ಗಳ ಮಟ್ಟದಿಂದ 2024-25ರಲ್ಲಿ 286,000 ಕೋಟಿ ರೂ.ಗೆ ಏರಿದೆ. ಸೃಷ್ಟಿಯಾದ ಮಾನವ ದಿನಗಳ ಸಂಖ್ಯೆಯೂ 2013-14ರ ಅವಧಿಯಲ್ಲಿ 1,660 ಕೋಟಿ ಇದ್ದದ್ದು ಈಗ 3,210 ಕೋಟಿಗೆ ಏರಿದೆ. ಬಿಡುಗಡೆ ಮಾಡಲಾದ ಕೇಂದ್ರದ ನಿಧಿ ಪ್ರಮಾಣವೂ 2.13 ಲಕ್ಷ ಕೋಟಿ ರೂ.ಗಳಿಂದ 8.53 ಲಕ್ಷ ಕೋಟಿ ರೂ.ಗೆ ಹೆಚ್ಚಳವಾಗಿದೆ. ಜೊತೆಗೆ, ಪೂರ್ಣ ಗೊಂಡ ಕಾಮಗಾರಿಗಳ ಸಂಖ್ಯೆ 153 ಲಕ್ಷದಿಂದ 862 ಲಕ್ಷಕ್ಕೆ ಏರಿಕೆಯಾಗಿದೆ. ಮಹಿಳೆಯರ ಭಾಗವಹಿಸುವಿಕೆ ಶೇ.48ರಿಂದ ಶೇ.56.73ಕ್ಕೆ ಏರಿದೆ. ಶೇ.99 ಕ್ಕೂ ಹೆಚ್ಚು ಹಣ ವರ್ಗಾವಣೆ ಆದೇಶಗಳು ಈಗ ಸಕಾಲಿಕವಾಗಿ ಸೃಷ್ಟಿಯಾಗುತ್ತಿವೆ ಮತ್ತು ಸುಮಾರು ಶೇ.99 ರಷ್ಟು ಸಕ್ರಿಯ ಕಾರ್ಮಿಕರು ಆಧಾರ್ ಆಧರಿತ ಪಾವತಿ ವ್ಯವಸ್ಥೆಗೆ ಸಂಪರ್ಕ ಹೊಂದಿದ್ದಾರೆ. ಈ ಪ್ರವೃತ್ತಿಗಳು ನಿರಂತರ ಬದ್ಧತೆ ಮತ್ತು ಸುಧಾರಿತ ವಿತರಣೆಯನ್ನು ಸೂಚಿಸುತ್ತವೆಯೇ ಹೊರತು ನಿರ್ಲಕ್ಷ್ಯವನ್ನಲ್ಲ. ಆದಾಗ್ಯೂ ಕಾಲಾನಂತರದಲ್ಲಿ ಸ್ಪಷ್ಟವಾದ ಒಂದು ಸಂಗತಿಯೆಂದರೆ, ಯೋಜನೆಯ ಅನುಷ್ಠಾನದ ಅನುಭವವು ಹಿಂದಿನ ಯೋಜನೆಗಳಲ್ಲಿದ್ದ ರಚನಾತ್ಮಕ ದೌರ್ಬಲ್ಯಗಳನ್ನು ಬಹಿರಂಗಪಡಿಸಿದೆ. ಸಾಂದರ್ಭಿಕ ಉದ್ಯೋಗ, ನಿರುದ್ಯೋಗ ಭತ್ಯೆಯ ದುರ್ಬಲ ಜಾರಿಗೊಳಿಸುವಿಕೆ, ಛಿದ್ರಗೊಂಡ ಆಸ್ತಿ ಸೃಷ್ಟಿ ಮತ್ತು ನಕಲು ನೋಂದಣಿಗಳ ಸಾಧ್ಯತೆ ತಪ್ಪಿದೆ. ಬರಗಾಲದ ವರ್ಷಗಳು, ವಲಸೆಯ ಹೆಚ್ಚಳ ಮತ್ತು ಕೋವಿಡ್-19 ಸಾಂಕ್ರಾಮಿಕ ರೋಗದಂತಹ ಅವಧಿಗಳಲ್ಲಿ ಈ ದೌರ್ಬಲ್ಯಗಳು ಸ್ಪಷ್ಟವಾಗಿ ಗೋಚರವಾಗಿವೆ. ಹೊಸ ಕಾಯ್ದೆಯಡಿ ಹಣಕಾಸಿನ ಪುನರ್ ರಚನೆಯನ್ನು ನಿಧಿಯ ಕಡಿತ ಎಂದು ತಪ್ಪಾಗಿ ನಿರೂಪಿಸಲಾಗಿದೆ. ಕೇಂದ್ರ ಸರ್ಕಾರದ ಕೊಡುಗೆ ಹೆಚ್ಚುತ್ತಿದೆ - ಕೇಂದ್ರದ ಪಾಲು 86,000 ಕೋಟಿ ರೂ.ಗಳಿಂದ ಸುಮಾರು 295,000 ಕೋಟಿ ರೂ.ಗೆ ಏರುತ್ತದೆ, ಇದು ಗ್ರಾಮೀಣ ಉದ್ಯೋಗಕ್ಕೆ ನಿರಂತರ ಮತ್ತು ಹೆಚ್ಚಿದ ಬೆಂಬಲವನ್ನು ಒತ್ತಿಹೇಳುತ್ತದೆ. 60:40 ಧನಸಹಾಯ ಮಾದರಿಯು ದೀರ್ಘಕಾಲದಿಂದ ಅನುಸರಿಸಿಕೊಂಡು ಬಂದಿರುವ ಕೇಂದ್ರ ಪ್ರಾಯೋಜಿತ ಯೋಜನೆಗಳ ರಚನೆಯನ್ನು ಹೊಂದಿದೆ. ಇದೇವೇಳೆ, ಈಶಾನ್ಯ ಮತ್ತು ಹಿಮಾಲಯದ ತಪ್ಪಲಿನ ರಾಜ್ಯಗಳು ಹಾಗೂ ಜಮ್ಮು ಮತ್ತು ಕಾಶ್ಮೀರಕ್ಕೆ 90:10 ಅನುಪಾತದ ಧನಸಹಾಯ ರಚನೆಯನ್ನು ಯೋಜನೆ ಒಳಗೊಂಡಿದೆ. ಈ ಅನುದಾನ ಪಾಲುದಾರಿಕೆಯು ಹಣಕಾಸಿನ ಕಡಿತವನ್ನು ಸೂಚಿಸುವ ಬದಲು, ಹಂಚಿಕೆಯ ಜವಾಬ್ದಾರಿ ಮತ್ತು ಉತ್ತರದಾಯಿತ್ವವನ್ನು ಬಲಪಡಿಸುತ್ತದೆ. ನಿಯಮಗಳಲ್ಲಿ ಸೂಚಿಸಲಾದ ವಸ್ತುನಿಷ್ಠ ಮಾನದಂಡಗಳ ಆಧಾರದ ಮೇಲೆ ರಾಜ್ಯವಾರು ನಿಧಿ ಹಂಚಿಕೆಗಳನ್ನು ನಿರ್ಧರಿಸಲಾಗುತ್ತದೆ. ನಿಯಮ ಆಧಾರಿತ ಪ್ರಮಾಣಕ ಹಂಚಿಕೆಯ ಮೂಲಕ ಸಮಾನತೆಯನ್ನು ಖಾತ್ರಿಪಡಿಸಲಾ ಗುತ್ತದೆ. ರಾಜ್ಯಗಳನ್ನು ಕೇವಲ ಅನುಷ್ಠಾನ ಏಜೆನ್ಸಿಗಳಾಗಿ ಪರಿಗಣಿಸದೆ ಅಭಿವೃದ್ಧಿಯ ಪಾಲುದಾರರಾಗಿ ಪರಿಗಣಿಸ ಲಾಗುತ್ತದೆ, ಶಾಸನಬದ್ಧ ಚೌಕಟ್ಟಿನೊಳಗೆ ತಮ್ಮದೇ ಆದ ಯೋಜನೆಗಳನ್ನು ರೂಪಿಸಲು ಮತ್ತು ಕಾರ್ಯಗತಗೊಳಿ ಸಲು ರಾಜ್ಯಗಳಿಗೆ ಅಧಿಕಾರ ನೀಡಲಾಗುತ್ತದೆ. ಈ ಯೋಜನೆಯಲ್ಲಿ ನಮ್ಯತೆಯನ್ನು ಸ್ಪಷ್ಟವಾಗಿ ಸಂರಕ್ಷಿಸಲಾಗಿದೆ. ನೈಸರ್ಗಿಕ ವಿಕೋಪಗಳು ಅಥವಾ ಇತರ ಅಸಾಧಾರಣ ಸಂದರ್ಭಗಳಲ್ಲಿ ರಾಜ್ಯಗಳು ವಿಶೇಷ ಸಡಿಲಿಕೆಗಳನ್ನು ಶಿಫಾರಸು ಮಾಡಬಹುದು, ಇದರಲ್ಲಿ ಅನುಮತಿಸಬಹುದಾದ ಕೆಲಸಗಳ ದಿನಗಳ ವಿಸ್ತರಣೆ ಮತ್ತು ಉದ್ಯೋಗದ ತಾತ್ಕಾಲಿಕ ಹೆಚ್ಚಳವೂ ಸೇರಿದೆ. ನಿಯಮಾಧರಿತ ಹಂಚಿಕೆ ಮತ್ತು ಸಂದರ್ಭೋಚಿತ ಬದಲಾವಣೆಗೆ ಅವಕಾಶದ ಮೂಲಕ ಸಹಕಾರಿ ಒಕ್ಕೂಟ ವ್ಯವಸ್ಥೆಗೆ ಅನುಗುಣವಾದ ಸಮತೋಲನವನ್ನು ಕಾಯ್ದುಕೊಳ್ಳಲಾಗಿದೆ. ಈ ಕಾಯ್ದೆಯು ಗರಿಷ್ಠ ಬಿತ್ತನೆ ಮತ್ತು ಕೊಯ್ಲು ಋತುಗಳಲ್ಲಿ, ಒಂದು ಹಣಕಾಸು ವರ್ಷದಲ್ಲಿ 60 ದಿನಗಳವರೆಗೆ ಕಾಮಗಾರಿಗಳನ್ನು ಕೈಗೊಳ್ಳದ ಅವಧಿಯನ್ನು ಮುಂಚಿತವಾಗಿ ಘೋಷಿಸಲು ರಾಜ್ಯಗಳಿಗೆ ಅಧಿಕಾರ ನೀಡುತ್ತದೆ. ಕೃಷಿ-ಹವಾಮಾನ ಪರಿಸ್ಥಿತಿಗಳ ಆಧಾರದ ಮೇಲೆ ಜಿಲ್ಲೆಗಳು, ಬ್ಲಾಕ್ಗಳು ಅಥವಾ ಗ್ರಾಮ ಪಂಚಾಯಿತಿಗಳ ಮಟ್ಟದಲ್ಲಿ ವಿಭಿನ್ನ ಅಧಿಸೂಚನೆಗಳನ್ನು ಹೊರಡಿಸಬಹುದು. ಆ ಮೂಲಕ ಸುಧಾರಿತ ಉದ್ಯೋಗ ಖಾತರಿ ಯೋಜನೆಯು ಕೃಷಿ ಕಾರ್ಯಾಚರಣೆಗಳಿಗೆ ಪೂರಕವಾಗಿರುವುದನ್ನು ಖಚಿತಪಡಿಸುತ್ತದೆ. ಯು.ಪಿ.ಎ. ದಾಖಲೆ ತನ್ನ ಮೊದಲ ಅಧಿಕಾರಾವಧಿಯಿಂದಲೇ ಕಾಂಗ್ರೆಸ್ ನೇತೃತ್ವದ ʻಯು.ಪಿ.ಎ.ʼ ಸರ್ಕಾರವು ʻಮನರೇಗಾʼ ವಿಚಾರದಲ್ಲಿ ನುಡಿದಂತೆ ನಡೆಯಲು ವಿಫಲವಾಗಿದೆ. ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ದಿನಕ್ಕೆ 100 ರೂ.ಗಳ ನೈಜ ವೇತನದಂತೆ ಕನಿಷ್ಠ 100 ದಿನಗಳ ಕೆಲಸದ ಭರವಸೆ ನೀಡಲಾಗಿದ್ದರೂ, ಸರ್ಕಾರವು 2009ರ ಆರಂಭದಲ್ಲೇ ವೇತನವನ್ನು 100 ರೂ.ಗೆಮಿತಿಗೊಳಿಸಿತು. ಅಷ್ಟೇ ಅಲ್ಲದೆ, ಹಣದುಬ್ಬರ ಮತ್ತು ಹೆಚ್ಚುತ್ತಿರುವ ಗ್ರಾಮೀಣ ಸಂಕಷ್ಟಗಳನ್ನು ನಿರ್ಲಕ್ಷಿಸಿ ಹಲವು ವರ್ಷಗಳವರೆಗೆ ಅದೇ ಮಟ್ಟದಲ್ಲಿ ಮುಂದುವರಿಸಿತು. ಈ ಯೋಜನೆಯಡಿಯಲ್ಲಿ ರಾಜ್ಯಗಳು ಅನಿಯಂತ್ರಿತವಾಗಿ ವರ್ತಿಸುತ್ತಿವೆ ಎಂದು ಕೇಂದ್ರ ಸರ್ಕಾರ ಬಹಿರಂಗವಾಗಿ ಒಪ್ಪಿಕೊಂಡಿತು ಮತ್ತು 'ವಿವೇಚನಾರಹಿತ ಹೆಚ್ಚಳ'ಕ್ಕೆ ರಾಜ್ಯ ಸರ್ಕಾರಗಳನ್ನು ದೂಷಿಸುವ ಮೂಲಕ ವೇತನ ಸ್ಥಗಿತಗೊಳಿಸುವಿಕೆಯನ್ನು ಸಮರ್ಥಿಸಿಕೊಂಡಿತು. ಇದು ಆಡಳಿತದ ಗಂಭೀರ ವೈಫಲ್ಯವನ್ನು ಬಹಿರಂಗಪಡಿಸಿತು. ಕಾಂಗ್ರೆಸ್ ನೇತೃತ್ವದ ಕೇಂದ್ರ ಸರ್ಕಾರವು ತನ್ನದೇ ರಾಜ್ಯ ಸರ್ಕಾರಗಳನ್ನು ಸಹ ನಿಯಂತ್ರಿಸಲು ಸಾಧ್ಯವಾಗಲಿಲ್ಲ. ʻಮನರೇಗಾʼದಲ್ಲಿ ನಿಧಿ ದುರ್ಬಳಕೆ, ನಕಲಿ ಜಾಬ್ ಕಾರ್ಡ್ಗಳ ಸೃಷ್ಟಿ ಮತ್ತು ಆರ್ಥಿಕ ಸೋರಿಕೆಗಳಿಗೆ ಅವಕಾಶ ಮಾಡಿಕೊಟ್ಟಿತು. ʻಯುಪಿಎ-2ʼ ಅವಧಿಯಲ್ಲಿ ಯೋಜನೆಯ ಬಗೆಗಿನ ಬದ್ಧತೆ ಸ್ಥಿರವಾಗಿ ಕುಸಿಯಿತು. 2010-11ರಲ್ಲಿ 2,40,100 ಕೋಟಿ ರೂ.ಗಳಷ್ಟಿದ್ದ ಬಜೆಟ್ ಹಂಚಿಕೆಯನ್ನು 2012-13ರ ವೇಳೆಗೆ 33,000 ಕೋಟಿ ರೂ.ಗೆ ಇಳಿಸಲಾಯಿತು. 2013ರಲ್ಲಿ ಸಂಸತ್ತಿನಲ್ಲಿ ನೀಡಿದ ಉತ್ತರದಲ್ಲಿ ಸಹಾಯಕ ಸಚಿವರಾಗಿದ್ದ ರಾಜೀವ್ ಶುಕ್ಲಾ ಅವರು, ʻಮನರೇಗಾʼ ಅಡಿಯಲ್ಲಿ ಉದ್ಯೋಗ ಸೃಷ್ಟಿಯು 2010-11ರಲ್ಲಿ 7.55 ಕೋಟಿ ಕಾರ್ಮಿಕರಿಂದ 2013ರ ನವೆಂಬರ್ ವೇಳೆಗೆ ಕೇವಲ 6.93 ಕೋಟಿಗೆ ಕುಸಿದಿದೆ ಎಂದು ಒಪ್ಪಿಕೊಂಡಿದ್ದರು. ವಿಳಂಬವಾದ ನಿಧಿ ಬಿಡುಗಡೆಗಳು, ಪಾವತಿಗಳಲ್ಲಿ ಪಾರದರ್ಶಕತೆಯ ಕೊರತೆ ಮತ್ತು ಆಡಳಿತಾತ್ಮಕ ನಿರಾಸಕ್ತಿಯು ಕಾರ್ಮಿಕರಲ್ಲಿ ಉದ್ಯೋಗ ಶೋಧದ ಉತ್ಸಾಹ ಕುಂದಿಸಿತು. ಇದು ಕಾಯ್ದೆಯಡಿ ಭರವಸೆ ನೀಡಲಾದ ಶಾಸನಬದ್ಧ ಉದ್ಯೋಗ ಖಾತರಿಯನ್ನು ನೇರವಾಗಿ ದುರ್ಬಲಗೊಳಿಸಿತು. ʻಕಂಟ್ರೋಲರ್ ಮತ್ತು ಆಡಿಟರ್ ಜನರಲ್ʼ(ಸಿ.ಎ.ಜಿ.) ಅವರ 2013ರ ವರದಿಯು ಯು.ಪಿ.ಎ. ವರ್ಷಗಳಲ್ಲಿ ʻಮನರೇಗಾʼ ಯೋಜನೆಯ ನೈಜ ಸ್ಥಿತಿಯನ್ನು ಬಹಿರಂಗಪಡಿಸಿದೆ. ವ್ಯಾಪಕವಾದ ಭ್ರಷ್ಟಾಚಾರ ಮತ್ತು ದುರಾಡಳಿತವನ್ನು ವರದಿಯಲ್ಲಿ ಉಲ್ಲೇಖಿಸಲಾಗಿದೆ. 4.33 ಲಕ್ಷಕ್ಕೂ ಹೆಚ್ಚು ನಕಲಿ ಅಥವಾ ದೋಷಯುಕ್ತ ಜಾಬ್ ಕಾರ್ಡ್ಗಳು, ಲೆಕ್ಕವಿಲ್ಲದ ಹಣ ಹಿಂಪಡೆಯುವಿಕೆ ಮತ್ತು ಅನಿಯಮಿತ ಕೆಲಸದಿಂದ ಸಾವಿರಾರು ಕೋಟಿ ನಷ್ಟವಾ ಗಿದೆ. 23 ರಾಜ್ಯಗಳಲ್ಲಿ ವೇತನ ವಿಳಂಬವಾಗಿದೆ ಅಥವಾ ನಿರಾಕರಿಸಲಾಗಿದೆ ಮತ್ತು ಭಾರತದ ಅರ್ಧಕ್ಕಿಂತ ಹೆಚ್ಚು ಗ್ರಾಮ ಪಂಚಾಯಿತಿಗಳಲ್ಲಿ ಕಳಪೆ ದಾಖಲೆ ನಿರ್ವಹಣೆಯಾಗಿದೆ ಎಂದು ವರದಿಯು ಹೇಳಿತ್ತು. ಗ್ರಾಮೀಣ ಬಡವರ ಸಂಖ್ಯೆ ಅತಿ ಹೆಚ್ಚಾಗಿರುವ ಬಿಹಾರ, ಉತ್ತರ ಪ್ರದೇಶ ಮತ್ತು ಮಹಾರಾಷ್ಟ್ರ ರಾಜ್ಯಗಳು ಹಂಚಿಕೆಯಾದ ನಿಧಿಯಲ್ಲಿ ಕೇವಲ ಶೇ.20 ರಷ್ಟು ಮಾತ್ರ ಬಳಸಿಕೊಂಡಿದ್ದವು. ಇದು ಯೋಜನೆಯು ಹೆಚ್ಚು ಅಗತ್ಯವಿರುವ ಸ್ಥಳದಲ್ಲಿ ನಿಖರ ವಾಗಿ ವಿಫಲವಾಗಿರುವುದನ್ನು ಸಾಬೀತುಪಡಿಸಿದೆ. ಜನಕಲ್ಯಾಣ ಮತ್ತು ಅಭಿವೃದ್ಧಿಯ ನಡುವಿನ ಆಯ್ಕೆ ಎಂಬ ಚರ್ಚೆಯನ್ನು ಮುಂದಿಡುವುದು ಕೃತಿಮ ದ್ವಂದ್ವದ ಸೃಷ್ಟಿಯೇ ಸರಿ. ಜೀವನೋಪಾಯದ ಖಾತರಿಯು ಜನಕಲ್ಯಾಣಕ್ಕೆ ಅಡಿಪಾಯವಾದಾಗ ಮತ್ತು ದೀರ್ಘ ಬಾಳಿಕೆಯ ಗ್ರಾಮೀಣ ಮೂಲಸೌಕರ್ಯ ಸೃಷ್ಟಿ ಮತ್ತು ಉತ್ಪಾದಕತೆಯು ಅಭಿವೃದ್ಧಿಗೆ ಅಡಿಪಾಯವಾದಾಗ, ಜನಕಲ್ಯಾಣ ಮತ್ತು ಅಭಿವೃದ್ಧಿ ಎರಡೂ ಸಹ ಪರಸ್ಪರ ಸ್ಪರ್ಧಿಗಳಾಗುವ ಬದಲು ಪರಸ್ಪರ ಅವಲಂಬಿತ ವಿಷಯಗಳಾಗುತ್ತವೆ. ನಿರೀಕ್ಷಿತ ರೀತಿಯಲ್ಲಿ ಪ್ರಯೋಜನ ತಲುಪಿಸುವಲ್ಲಿ ವಿಫಲವಾದ ಯೋಜನೆಯನ್ನು ಮುಂದುವರಿಸಬೇಕೇ ಅಥವಾ ಅಭಿವೃದ್ಧಿಯ ಮೂಲಕ ಜನಕಲ್ಯಾಣವನ್ನು ಒದಗಿಸುವ, ಸಮಗ್ರ ಉದ್ಯೋಗ ಖಾತರಿ ಒದಗಿಸುವ ಆಧುನಿಕ ಯೋಜನೆಯನ್ನಾಗಿ ಅದನ್ನು ಮಾರ್ಪಡಿಸಬೇಕೆ ಎಂಬುದು ಇಲ್ಲಿ ಮೂಲ ಪ್ರಶ್ನೆಯಾಗಿದೆ. ಹೊಸ ಕಾಯ್ದೆಯು ಕೆಲಸ ಮಾಡುವ ಕಾನೂನು ಬದ್ಧ ಹಕ್ಕನ್ನು ಸಂರಕ್ಷಿಸುತ್ತದೆ, ಅರ್ಹತೆಗಳನ್ನು ವಿಸ್ತರಿಸುತ್ತದೆ, ಕಾರ್ಮಿಕರ ರಕ್ಷಣೆಯನ್ನು ಬಲಪಡಿಸುತ್ತದೆ. ಜೊತೆಗೆ ಹಲವು ವರ್ಷಗಳ ಅನುಷ್ಠಾನದ ಮೂಲಕ ಬಯಲಾದ ರಚನಾತ್ಮಕ ದೌರ್ಬಲ್ಯಗಳನ್ನು ಸರಿಪಡಿಸುತ್ತದೆ. ಇದು ಧ್ವಂಸ ಮಾಡುವ ಕೃತ್ಯವಲ್ಲ, ಬದಲಿಗೆ ಅನುಭವದ ಆಧಾರದ ಮೇಲೆ ನವೀಕರಿಸುವ ಪ್ರಕ್ರಿಯೆ. - ಶಿವರಾಜ್ ಸಿಂಗ್ ಚೌಹಾಣ್ ಲೇಖಕರು, ಭಾರತ ಸರ್ಕಾರದ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಹಾಗೂ ಗ್ರಾಮೀಣಾಭಿವೃದ್ಧಿ ಸಚಿವರು.
ಬೆಂಗಳೂರು- ಮೈಸೂರು ಮೂಲಸೌಕರ್ಯ ಯೋಜನೆ | ಸುಪ್ರೀಂಕೋರ್ಟ್ ರಿಟ್ ಅರ್ಜಿಯಲ್ಲಿ ನನ್ನ ಹೆಸರಿದೆ: ಎಚ್.ಡಿ. ದೇವೇಗೌಡ
ಬೆಂಗಳೂರು: ಬೆಂಗಳೂರು- ಮೈಸೂರು ಮೂಲಸೌಕರ್ಯ ಯೋಜನೆಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟಿನಲ್ಲಿ ರಿಟ್ ಅರ್ಜಿ ಸಲ್ಲಿಕೆಯಾಗಿದ್ದು, ನನ್ನ ಹೆಸರನ್ನು ಇದರಲ್ಲಿ ಉಲ್ಲೇಖಿಸಲಾಗಿದೆ ಎಂದು ಮಾಜಿ ಪ್ರಧಾನಿ, ಜೆಡಿಎಸ್ ಪಕ್ಷದ ವರಿಷ್ಠ ಎಚ್.ಡಿ.ದೇವೇಗೌಡರು ಹೇಳಿದ್ದಾರೆ. ಬುಧವಾರ ನಗರದ ಜೆಪಿ ಭವನದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ರಾಜ್ಯ ಸರಕಾರ ಕೆಲವು ರೈತರು ಹಾಗೂ ನನ್ನನ್ನು ಉಲ್ಲೇಖ (ಪಾರ್ಟಿ) ಮಾಡಿದೆ. ನಾನು ಈ ರಾಜ್ಯದಲ್ಲಿ ಮುಖ್ಯಮಂತ್ರಿ ಆಗಿದ್ದಾಗ ಸಿದ್ದರಾಮಯ್ಯ ಅವರು ಹಣಕಾಸು ಸಚಿವರಾಗಿದ್ದರು. ಬಿಎಂಐಸಿ ಯೋಜನೆಗೆ ಹಣಕಾಸು ಇಲಾಖೆಯ ಸಹಮತಿಯೂ ಇತ್ತು. ಆಗ ಯೋಜನೆಗೆ ಒಪ್ಪಂದ (ಎಂಓಯು) ಮಾಡಿಕೊಳ್ಳಲಾಗಿತ್ತು. ಆ ಒಪ್ಪಂದದ ಎಲ್ಲಾ ಮಾಹಿತಿಯೂ ಅವರಿಗೆ ಕೂಡ ಇದೆ ಎಂದು ತಿಳಿಸಿದರು. ಈ ಯೋಜನೆಯು ಬೆಂಗಳೂರು ನಗರ, ಮಂಡ್ಯ, ಮೈಸೂರು ಸೇರಿದಂತೆ ನಾಲ್ಕು ಜಿಲ್ಲೆಗಳಿಗೆ ಸಂಬಂಧಿಸಿದ್ದಾಗಿತ್ತು. ಐದು ಟೌನ್ಶಿಪ್ ಗಳು, ಕಾಂಕ್ರಿಟ್ ರಸ್ತೆ ನಿರ್ಮಾಣ ಮಾಡುವ ಬಗ್ಗೆ ಒಪ್ಪಂದವಾಗಿತ್ತು. ಈ ಇಳಿವಯಸ್ಸಿನಲ್ಲೂ ನಾನು ವಕೀಲರಿಗೆ ಶುಲ್ಕ ಕೊಟ್ಟು ನ್ಯಾಯಾಲಯದಲ್ಲಿ ಹೋರಾಟ ಮಾಡಬೇಕಾಗಿದೆ. ನೈಸ್ ಕಂಪೆನಿ ವಿಚಾರದಲ್ಲಿ ಕಾನೂನು ಸಲಹೆಗಾರರಿಗೆ 55 ಲಕ್ಷ ರೂಪಾಯಿ ಕೊಡುತ್ತಿದ್ದಾರಂತೆ. ರಾಜ್ಯ ಸರಕಾರದ ಅಡ್ವೋಕೇಟ್ ಜನರಲ್, ಕಾನೂನು ಸಲಹೆಗಾರರು ಇದ್ದರೂ ಸಹ ಇನ್ನೊಬ್ಬರನ್ನು ನೈಸ್ ಕಂಪೆನಿಗೆ ಸಂಬಂಧಿಸಿದಂತೆ ಕಾನೂನು ಸಲಹೆಗಾರರನ್ನು ನೇಮಿಸಿಕೊಂಡಿದ್ದಾರೆ ಎಂದು ಅವರು ಆರೋಪಿಸಿದರು. ನನಗೆ ಇನ್ನೂ ಹೋರಾಟದ ಕೆಚ್ಚಿದೆ. ಹೋರಾಟ ಮಾಡುವ ಶಕ್ತಿ ಇದೆ. ಒಂದು ಲಕ್ಷಕ್ಕೂ ಹೆಚ್ಚು ನೌಕರರು ಹೊರಗುತ್ತಿಗೆ ಮೂಲಕ ಕೆಲಸ ಮಾಡುತ್ತಿದ್ದಾರೆ. ಲಕ್ಷಾಂತರ ಹುದ್ದೆಗಳು ಭರ್ತಿಯಾಗದೇ ಹಾಗೆಯೇ ಖಾಲಿ ಉಳಿದಿವೆ. ವಿಕ್ಟೋರಿಯಾ ಆಸ್ಪತ್ರೆಗೆ ಭೇಟಿ ನೀಡಿದರೆ ಎಷ್ಟು ಹೊರಗುತ್ತಿಗೆ ನೌಕರರು ಕೆಲಸ ಮಾಡುತ್ತಿದ್ದಾರೆ ಎಂಬುದು ಎಲ್ಲರಿಗೂ ಗೊತ್ತಾಗುತ್ತದೆ ಎಂದು ದೇವೇಗೌಡರು ದೂರಿದರು.
ಬೆಂಗಳೂರು ವಿವಿಯಿಂದ ಡಾಕ್ಟರೇಟ್ ಪದವಿ ಪಡೆದ ಸ್ಪೀಕರ್ ಯು.ಟಿ.ಖಾದರ್ಗೆ ಬ್ಯಾರೀಸ್ ವೆಲ್ಫೇರ್ ಫೋರಂ ವತಿಯಿಂದ ಸನ್ಮಾನ
ಮಂಗಳೂರು: ಬ್ಯಾರೀಸ್ ವೆಲ್ಫೇರ್ ಫೋರಂ ಅಬುಧಾಬಿ ಇದರ ವತಿಯಿಂದ ಇತ್ತೀಚಿಗೆ ಬೆಂಗಳೂರು ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿಯಿಂದ ಗೌರವಿಸಲ್ಪಟ್ಟ ಸ್ಪೀಕರ್ ಡಾ. ಯು .ಟಿ . ಖಾದರ್ ಫರೀದ್ ಅವರನ್ನು ಸರಳ ಸಮಾರಂಭದಲ್ಲಿ ಸನ್ಮಾನಿಸಲಾಯಿತು. ಜಿಲ್ಲಾಧಿಕಾರಿ ಕಚೇರಿಯಲ್ಲಿ ಬಿ ಡಬ್ಲ್ಯೂ ಫ್ ಅಧ್ಯಕ್ಷ ಮಹಮ್ಮದ್ ಅಲಿ ಉಚ್ಚಿಲ್ ಶಾಲು ಹೊದಿಸಿ, ಸ್ಮರಣಿಕೆ ನೀಡಿ ಸನ್ಮಾನಿಸಿ ತುಂಬು ಹೃದಯದ ಹಾರೈಕೆ ಸಲ್ಲಿಸಿದರು. ಎಸ್ ಎಂ ರಶೀದ್ ಹಾಜಿ, ಯು ಚ್ ಉಮರ್, ನಾಸಿರ್ ಲಕ್ಕಿ ಸ್ಟಾರ್, ಹನೀಫ್ ಉಳ್ಳಾಲ್ ಮತ್ತು ಇಕ್ವಾನ್ ಅಹ್ಮದ್ ಉಪಸ್ಥಿತರಿದ್ದರು. ಡಾ । ಯು .ಟಿ .ಖಾದರ್ ರವರು ಸನ್ಮಾನಕ್ಕೆ ತುಂಬು ಹೃದಯದ ಕೃತಜ್ಞತೆ ಸಲ್ಲಿಸಿದರು.
ಸಿದ್ದರಾಮಯ್ಯ ಸಿಎಂ ಕುರ್ಚಿಯಲ್ಲಿ ಭದ್ರವಾಗಿದ್ದಾರೆ: ಸಚಿವ ಝಮೀರ್ ಅಹ್ಮದ್ ಖಾನ್
ಮೈಸೂರು: ಮುಖ್ಯಮಂತ್ರಿ ಸ್ಥಾನದಿಂದ ಸಿದ್ದರಾಮಯ್ಯರನ್ನು ಕೆಳಗಿಳಿಸಲು ಯಾರಿಂದಲೂ ಸಾಧ್ಯವಿಲ್ಲ. ಆದರೆ ಹೈಕಮಾಂಡ್ ಮಾತ್ರ ಆ ತೀರ್ಮಾನ ಮಾಡಬಹುದು ಎಂದು ವಸತಿ ಸಚಿವ ಝಮೀರ್ ಅಹ್ಮದ್ ಖಾನ್ ಹೇಳಿದರು. ನಗರದಲ್ಲಿ ಬುಧವಾರ ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಝಮೀರ್ ಅಹ್ಮದ್ ಖಾನ್, 2028ರವರೆಗೂ ಸಿದ್ದರಾಮಯ್ಯನವರೇ ಸಿಎಂ ಆಗಿರುತ್ತಾರೆ. ಸಿದ್ದರಾಮಯ್ಯನವರನ್ನು ಕೆಳೆಗಿಳಿಸಲು ಯಾರ ಕೈಯಲ್ಲೂ ಸಾಧ್ಯವಿಲ್ಲ. ಆದರೆ ಹೈಕಮಾಂಡ್ ಮಾತ್ರ ಆ ತೀರ್ಮಾನ ಮಾಡಬಹುದು. ಹೈಕಮಾಂಡ್ ಬಿಟ್ಟು ಯಾರಿಂದಲೂ ಕೆಳಗಿಳಿಸಲು ಸಾಧ್ಯವಿಲ್ಲ ಎಂದರು. ಸಿದ್ದರಾಮಯ್ಯ ಸಿಎಂ ಕುರ್ಚಿಯಲ್ಲಿ ಕುಳಿತಿದ್ದಾರೆ. ಸಿದ್ದರಾಮಯ್ಯ ಸಿಎಂ ಕುರ್ಚಿಯಲ್ಲಿ ಭದ್ರವಾಗಿದ್ದಾರೆ. ಹೈಕಮಾಂಡ್ ತೀರ್ಮಾನ ಎಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟವಾಗಿ ಹೇಳಿದ್ದಾರೆ . ಅಧಿಕಾರ ಹಂಚಿಕೆ ಒಪ್ಪಂದ ನನಗೆ ಗೊತ್ತಿಲ್ಲ ಎಂದು ಸಚಿವ ಜಮೀರ್ ಅಹ್ಮದ್ ಖಾನ್ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಮೆಟ್ರೋ ಪಿಂಕ್, ಬ್ಲೂ ಲೈನ್ ಆರಂಭದ ದಿನಾಂಕ ತಿಳಿಸಿದ ಡಿಕೆ ಶಿವಕುಮಾರ್; ಯಾವ ಮಾರ್ಗ ಯಾವಾಗ ಪ್ರಾರಂಭ?
ಬೆಂಗಳೂರಿನ ನಮ್ಮ ಮೆಟ್ರೋ ಯೋಜನೆ ವಿಸ್ತರಣೆ ಕಾಮಗಾರಿಗಳು ಭರದಿಂದ ಸಾಗಿದ್ದು, ಪಿಂಕ್ ಲೈನ್ ಮತ್ತು ಬ್ಲೂ ಲೈನ್ (ವಿಮಾನ ನಿಲ್ದಾಣ ಮಾರ್ಗ) ಕಾರ್ಯಾಚರಣೆಯ ಪರಿಷ್ಕೃತ ದಿನಾಂಕಗಳನ್ನು ಪ್ರಕಟಿಸಲಾಗಿದೆ. 2027ರ ಅಂತ್ಯದ ವೇಳೆಗೆ ಬೆಂಗಳೂರಿನ ಮೆಟ್ರೋ ಜಾಲ 175.55 ಕಿ.ಮೀ.ಗೆ ವಿಸ್ತರಣೆಯಾಗಲಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
`ಡ್ರೀಮ್ ಇಲೆವೆನ್' ಕೈತಪ್ಪಿದರೂ ಬಿಸಿಸಿಐ ಸಾಮಾನ್ಯ ನಿಧಿಯಲ್ಲಿ ಅಸಾಮಾನ್ಯ ಏರಿಕೆ! ಎಷ್ಟಿತ್ತು? ಎಷ್ಟಾಯ್ತು?
BCCI And Dream11 Agreement- ಕೇಂದ್ರ ಸರ್ಕಾರ ಆನ್ ಲೈನ್ ಗೇಮಿಂಗ್ ಆ್ಯಪ್ ಕಾಯ್ದೆ 2025ನ್ನು ಜಾರಿಗೆ ತಂದಿದ್ದರಿಂದ ಬಿಸಿಸಿಐ ಮತ್ತು ಡ್ರೀಮ್ 11 ಒಪ್ಪಂದ ಮುರಿದುಬಿತ್ತು. ಇದರಿಂದಾಗಿ ಬಿಸಿಸಿಐಗೆ ನಷ್ಟ ಆಗಬಹುದು ಎಂದು ಎಣಿಸಲಾಗಿತ್ತು. ಅಚ್ಚರಿ ಎಂದರೆ ಡ್ರೀಮ್ 11 ಒಪ್ಪಂದ ಮುರಿದು ಬಿದ್ದ ಬಳಿಕವೂ ಬಿಸಿಸಿಐ ಆರ್ಥಿಕವಾಗಿ ಬಲಿಷ್ಠವಾಗಿದೆ. ಅಡಿಡಾಸ್ (Adidas) ಮತ್ತು ಅಪೊಲೊ ಟೈರ್ಸ್ (Apollo Tyres) ಜೊತೆ ಹೊಸ ಒಪ್ಪಂದ ಮಾಡಿಕೊಂಡಿರುವ ಬಿಸಿಸಿಐ ಬೀಸುವ ದೊಣ್ಣೆಯಿಂದ ತಪ್ಪಿಸಿಕೊಂಡಿದೆ. ಜೊತೆಗೆ ಭರಪೂರ ಲಾಭವನ್ನೂ ಮಾಡಿಕೊಂಡಿದೆ.
ಉದ್ಯೋಗಿಯ ಜಾತಿ ಅರಿಯುವ ಅಧಿಕಾರ ಉದ್ಯೋಗದಾತರಿಗೆ ಇಲ್ಲ: ಹೈಕೋರ್ಟ್
ಬೆಂಗಳೂರು/ಧಾರವಾಡ: ಉದ್ಯೋಗಿಯ ಜಾತಿ ಅರಿಯುವ ಅಧಿಕಾರ ವ್ಯಾಪ್ತಿ ಉದ್ಯೋಗದಾತರಿಗೆ ಇಲ್ಲ ಎಂದು ಹೈಕೋರ್ಟ್ನ ಧಾರವಾಡ ಪೀಠ ಆದೇಶಿಸಿದೆ. ಕಾರವಾರದ ಅಗ್ನಿಶಾಮಕ ದಳದ ಅಧಿಕಾರಿ ರಾಜು ತಳವಾರ (27) ಸಲ್ಲಿಸಿದ್ದ ಅರ್ಜಿಯನ್ನು ಇತ್ತೀಚೆಗೆ ಪುರಸ್ಕರಿಸಿರುವ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಆದೇಶ ಮಾಡಿದೆ. ಪ್ರಕರಣ ಕೋರ್ಟ್ ಮೆಟ್ಟಿಲೇರಿದ್ದೇಕೆ? ಹಿಂದುಳಿದ ವರ್ಗಗಳ ವಿಭಾಗದ ಅಡಿ ರಾಜು ತಳವಾರ ಅವರನ್ನು ಅಗ್ನಿಶಾಮಕ ದಳದ ಅಧಿಕಾರಿಯನ್ನಾಗಿ ನೇಮಿಸಲಾಗಿದ್ದು, ಆ ವೇಳೆ ಅವರ ಜಾತಿಯು ಒಬಿಸಿ-I ಅಡಿ ಬರುತ್ತಿತ್ತು. 2020ರ ಮಾರ್ಚ್ 20ರಂದು ರಾಜು ತಳವಾರ ಅವರನ್ನು ಕಾರವಾರಕ್ಕೆ ನಿಯೋಜಿಸಿದ್ದಾಗ ಪರಿಶಿಷ್ಟ ಪಂಗಡಗಳ ಆದೇಶಕ್ಕೆ ತಿದ್ದುಪಡಿ ಮಾಡಿ, ತಳವಾರ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲಾಗಿತ್ತು. ಆದ್ದರಿಂದ, 2022ರ ಅಕ್ಟೋಬರ್ 29ರಂದು ರಾಜ್ಯ ಸರ್ಕಾರವು ತಳವಾರ ಸಮುದಾಯವನ್ನು ಹಿಂದುಳಿದ ವರ್ಗಗಳ ಮೀಸಲಾತಿಯಿಂದ ತೆಗೆದು ಹಾಕಿತ್ತು. ಈ ಮಧ್ಯೆ, ರಾಜು ತಳವಾರ ಅವರು ಪರಿಶಿಷ್ಟ ಪಂಗಡ ಮೀಸಲಾತಿ ಅಡಿ ಬಡ್ತಿ ಕೋರಿದ್ದು, ಅವರಿಗೆ ಬಡ್ತಿ ಸಿಕ್ಕಿತ್ತು. 2025ರ ಜನವರಿ 29ರಂದು ಪ್ರಾದೇಶಿಕ ಅಗ್ನಿಶಾಮಕ ಅಧಿಕಾರಿಯು ರಾಜು ತಳವಾರಗೆ ಹಿಂದುಳಿದ ವರ್ಗಗಳ ಅಡಿ ನೇಮಕವಾಗಿರುವುದಕ್ಕೆ ನೋಟಿಸ್ ಜಾರಿ ಮಾಡಿದ್ದರು. ಇದರಿಂದ, ಜಾತಿ ತಿಳಿಯುವ ವ್ಯಾಪ್ತಿ ಉದ್ಯೋಗದಾತರಿಗೆ ಇಲ್ಲ ಎಂದು ತಳವಾರ ಹೈಕೋರ್ಟ್ ಮೆಟ್ಟಿಲೇರಿದ್ದರು. ಹೈಕೋರ್ಟ್ ಆದೇಶ: ಯಾವುದೇ ಉದ್ಯೋಗಿಯ ಜಾತಿ ವಿಚಾರಿಸುವ ವ್ಯಾಪ್ತಿಯು ಉದ್ಯೋಗದಾತರಿಗೆ ಇಲ್ಲ. ಹಲವು ತೀರ್ಪುಗಳಲ್ಲಿ ಜಿಲ್ಲಾ ಜಾತಿ ಪರಿಶೀಲನಾ ಸಮಿತಿಗೆ ಮಾತ್ರ ಈ ಅಧಿಕಾರ ಇದೆ ಎಂದು ಸ್ಪಷ್ಟಪಡಿಸಲಾಗಿದೆ. ಈ ನೆಲೆಯಲ್ಲಿ ಉದ್ಯೋಗದಾತರಿಗೆ ಆ ವ್ಯಾಪ್ತಿ ಇಲ್ಲ ಎಂಬ ಏಕೈಕ ಕಾರಣದ ಮೇಲೆ ಅರ್ಜಿ ಪುರಸ್ಕರಿಸಲಾಗಿದೆ ಎಂದು ನ್ಯಾಯಾಲಯ ಆದೇಶಿಸಿದೆ. ಕರ್ನಾಟಕ ಪರಿಶಿಷ್ಟ ಜಾತಿಗಳು, ಪರಿಶಿಷ್ಟ ಪಂಗಡಗಳು ಮತ್ತು ಇತರೆ ಹಿಂದುಳಿದ ವರ್ಗಗಳ (ನೇಮಕಾತಿಯ ಮೀಸಲಾತಿ ಇತ್ಯಾದಿ) ಕಾಯಿದೆ 1990ರ ಅಡಿ ಮಾತ್ರ ವ್ಯಕ್ತಿಯ ಜಾತಿ ಮಾಹಿತಿ ಕೇಳಬಹುದು. ಕರ್ನಾಟಕ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯು ಯಾವುದೇ ಉದ್ಯೋಗಿಯ ಜಾತಿ ವಿಚಾರಿಸುವ ಅಧಿಕಾರ ಹೊಂದಿಲ್ಲ ಎಂದು ಪೀಠ ಸ್ಪಷ್ಟಪಡಿಸಿದೆ.
ಬಳ್ಳಾರಿ | ಇಬ್ಬರು ಮಕ್ಕಳನ್ನು ಕಾಲುವೆಗೆ ತಳ್ಳಿದ ತಂದೆ: ಓರ್ವ ಬಾಲಕಿಯ ಮೃತದೇಹ ಪತ್ತೆ
ಬಳ್ಳಾರಿ: ತಂದೆಯೇ ತನ್ನ ಇಬ್ಬರು ಹೆಣ್ಣು ಮಕ್ಕಳನ್ನು ಕಾಲುವೆಗೆ ತಳ್ಳಿದ ಘಟನೆ ಬಳ್ಳಾರಿ ಗಡಿಭಾಗದ ಆಂಧ್ರಪ್ರದೇಶದ ಬೊಮ್ಮನ ಹಾಳ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ ನೇಮಕಲ್ ಗ್ರಾಮದಲ್ಲಿ ನಡೆದಿದ್ದು, ನಾಪತ್ತೆಯಾದ ಇಬ್ಬರು ಬಾಲಕಿಯರಲ್ಲಿ ಓರ್ವ ಬಾಲಕಿಯ ಮೃತದೇಹ ಪತ್ತೆಯಾಗಿದ್ದು, ಮತ್ತೊಬ್ಬ ಬಾಲಕಿಗಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ. ಬೊಮ್ಮನ ಹಾಳ್ ಬಳಿಯ ನೇಮಕಲ್ ಗ್ರಾಮದ ನಿವಾಸಿ ಕಲ್ಲಪ್ಪ 5 ಮತ್ತು 6ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ತನ್ನ ಇಬ್ಬರು ಹೆಣ್ಣು ಮಕ್ಕಳ ಜತೆಗೆ ರವಿವಾರ ಊರಿಗೆ ಹೋಗೋಣ ಎಂದು ಕರೆದುಕೊಂಡು ಹೋಗಿದ್ದಾನೆ. ನಂತರ ತನ್ನಿಬ್ಬರು ಮಕ್ಕಳನ್ನು ಕಾಲುವೆಗೆ ತಳ್ಳಿದ ಕಲ್ಲಪ್ಪ ಬಳಿಕ ಒಬ್ಬನೇ ಊರಿಗೆ ಮರಳಿದ್ದು ಮಕ್ಕಳ ಬಗ್ಗೆ ಸರಿಯಾಗಿ ಮಾಹಿತಿ ನೀಡಿಲ್ಲ ಎನ್ನಲಾಗಿದೆ. ಅನುಮಾನಗೊಂಡ ಮನೆಯವರು ವಿಚಾರಿಸಿ ಠಾಣೆಗೆ ದೂರು ನೀಡಿದ್ದಾರೆ. ಮಂಗಳವಾರ ಸಿರಿಗೇರಿ ಕ್ರಾಸ್ ಬಳಿಯ ತುಂಗಭದ್ರಾ ಬಲದಂಡೆ ಕಾಲುವೆ (ಎಲ್ ಎಲ್ ಸಿ) ಯಲ್ಲಿ ಕಿರಿಯ ಪುತ್ರಿ ಚಂದ್ರಮ್ಮ (9) ಮೃತದೇಹ ಪತ್ತೆಯಾಗಿದ್ದು,ಹಿರಿಯ ಪುತ್ರಿ ಅನಸೂಯ (11) ಪತ್ತೆಗಾಗಿ ಸೀಮಾಂದ್ರದ ಪೊಲೀಸಲು ಶೋಧಕಾರ್ಯ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.
ಕಲ್ಲಡ್ಕ: ಹೃದಯಾಘಾತದಿಂದ ಹೋಟೆಲ್ ಅಬ್ಬು ನಿಧನ
ಬಂಟ್ವಾಳ : ಕಲ್ಲಡ್ಕ ಸಮೀಪದ ಬಹದ್ದೂರ್ ರೋಡ್ ನಿವಾಸಿ ಅಬೂಬಕ್ಕರ್ ಯಾನೆ ಹೋಟೆಲ್ ಅಬ್ಬು (70) ಹೃದಯಾಘಾತದಿಂದ ಬುಧವಾರ ರಾತ್ರಿ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಹಲವಾರು ವರ್ಷಗಳಿಂದ ಕಲ್ಲಡ್ಕ ಮಸೀದಿ ಕಟ್ಟಡದಲ್ಲಿ ಹೋಟೇಲ್ ಉದ್ಯಮ ನಡೆಸುತ್ತಿದ್ದ ಅವರು ಅಬ್ಬುವಾಕ ಎಂದು ಜನಾನುರಾಗಿಯಾಗಿದ್ದರು. ಅವರಿಗೆ ಮಂಗಳವಾರ ಎದೆನೋವು ಕಾಣಿಸಿಕೊಂಡಿದ್ದು ತಕ್ಷಣ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆಗೆ ಸ್ಪಂದಿಸದೆ ಬುಧವಾರ ರಾತ್ರಿ 9.30 ರ ವೇಳೆಗೆ ಮೃತಪಟ್ಟಿದ್ದಾರೆ. ಮೃತರು ಪತ್ನಿ, ಇಬ್ಬರು ಪುತ್ರರು, ಐವರು ಪುತ್ರಿಯರ ಸಹಿತ ಅಪಾರ ಸಂಖ್ಯೆಯ ಬಂಧು ಬಳಗವನ್ನು ಅಗಲಿದ್ದಾರೆ. ಗುರುವಾರ ಬೆಳಿಗ್ಗೆ 10 ಗಂಟೆಯ ವೇಳೆಗೆ ಮೃತರು ಅಂತಿಮ ಕಾರ್ಯ ಕಲ್ಲಡ್ಕ ಮಸೀದಿ ವಠಾರದಲ್ಲಿ ನಡೆಯಲಿದೆ ಎಂದು ಕುಟುಂಬಿಕರು ತಿಳಿಸಿದ್ದಾರೆ.
ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಬಿ.ಎಚ್. ಖಾದರ್ ರಿಗೆ ಜಮೀಯ್ಯತುಲ್ ಫಲಾಹ್ ವತಿಯಿಂದ ಸನ್ಮಾನ
ಬಂಟ್ವಾಳ : ಹಿರಿಯ ಸಾಮಾಜಿಕ ರಾಜಕೀಯ ಮುಂದಾಳು ಕರ್ನಾಟಕ ಗೇರು ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಹಾಜಿ ಬಿ.ಎಚ್ ಖಾದರ್ ಅವರು ಈ ಸಾಲಿನ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಪಾತ್ರರಾಗಿದ್ದು ಅವರನ್ನು ಜಮೀಯ್ಯತುಲ್ ಫಲಾಹ್ ಬಂಟ್ವಾಳ ಘಟಕದ ವತಿಯಿಂದ ಬಂಟ್ವಾಳದ ಬಿ.ಎಚ್ ಖಾದರ್ ಅವರ ನಿವಾಸದಲ್ಲಿ ಬುಧವಾರ ನಡೆದ ಕಾರ್ಯಕ್ರಮದಲ್ಲಿ ಅಭಿನಂದಿಸಿ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಅಭಿನಂದನಾ ಭಾಷಣ ಮಾಡಿದ ಉಪನ್ಯಾಸಕ ಅಬ್ದುಲ್ ರಝಾಕ್ ಅನಂತಾಡಿ, ಬಂಟ್ವಾಳ ಹಮ್ಮಬ್ಬ ಖಾದರ್ ಅವರು ತಮ್ಮ ತಂದೆಯಿಂದ ಬಳುವಳಿಯಾಗಿ ಬಂದ ವ್ಯವಹಾರವನ್ನು ಮುನ್ನಡೆಸುತ್ತಾ ಬದುಕು ಕಟ್ಟಿಕೊಂಡವರು, 1974 ರಲ್ಲಿ ನೇತ್ರಾವತಿಯಲ್ಲಿ ಬಂದ ದೊಡ್ಡ ಪ್ರವಾಹದ ನಂತರ ತನ್ನ ವ್ಯವಹಾರವನ್ನು ಕಳೆದುಕೊಂಡು ಸಾಮಾಜಿಕ, ರಾಜಕೀಯ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದರು. ಹಿರಿಯ ರಾಜಕಾರಣಿ ಶಿವರಾಮ ಶೆಟ್ಟರ ಪ್ರಭಾವದಿಂದ ರಾಜಕೀಯ ಪ್ರವೇಶಿಸಿ ವಿವಿಧ ಹುದ್ದೆಗಳನ್ನು ಅಲಂಕರಿಸಿದರು. ಕೇಂದ್ರ ಮತ್ತು ರಾಜ್ಯ ಸರಕಾರಗಳ ವಿವಿಧ ಮಂಡಳಿ, ಸಮಿತಿ , ನಿಗಮಗಳ ಜವಾಬ್ದಾರಿಯುತ ಹುದ್ದೆಗಳಲ್ಲಿ ಸೇವೆ ಸಲ್ಲಿಸಿರುತ್ತಾರೆ. ಶೈಕ್ಷಣಿಕ , ಸಾಮಾಜಿಕ ಸುಧಾರಣೆಗಳಿಗೆ ಪ್ರೇರಣಾದಾಯಕರಾಗಿ ಸೇವೆಗೈದ ನಿರಾಡಂಬರದ ಬಿ.ಎಚ್.ಖಾದರ್ ಅವರಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಬಂದಿರುವುದು ಹೆಮ್ಮೆಯ ವಿಚಾರ ಎಂದು ಹೇಳಿದರು. ಸನ್ಮಾನವನ್ನು ಸ್ವೀಕರಿಸಿದ ಬಿ.ಎಚ್.ಖಾದರ್ ಮಾತನಾಡಿ, ಬದುಕಿನ ಬೇರೆ ಬೇರೆ ಮಜಲುಗಳಲ್ಲಿ ಕಾರ್ಯಾ ನಿರ್ವಹಿಸುವ ಅವಕಾಶ ಸಿಕ್ಕಿದಾಗ ಜನರಿಗೆ ಪ್ರಾಮಣಿಕ ಸೇವೆ ಸಲ್ಲಿಸಿದ ಪ್ರತೀಕವಾಗಿ ಈ ಪ್ರಶಸ್ತಿ ಬಂದಿದ್ದು ಜಮೀಯ್ಯತುಲ್ ಫಲಾಹ್ ಸಂಸ್ಥೆಯ ಪ್ರೀತಿ ಗೌರವಾದರಗಳಿಗೆ ಋಣಿಯಾಗಿದ್ದೇನೆ ಎಂದರು. ಜಮೀಯ್ಯತುಲ್ ಫಲಾಹ್ ಬಂಟ್ವಾಳ ಘಟಕಾಧ್ಯಕ್ಷ ಬಿ.ಎಂ.ಅಬ್ಬಾಸ್ ಅಲಿ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಜಿಲ್ಲಾಧ್ಯಕ್ಷ ಮೊಹಮ್ಮದ್ ಹನೀಫ್ ಹಾಜಿ ಗೋಳ್ತಮಜಲು ಶುಭ ಹಾರೈಸಿದರು. ಸಂಸ್ಥೆಯ ಕಾರ್ಯಕಾರಿ ಸಮಿತಿ ಸದಸ್ಯರಾದ ಶೇಕ್ ರಹ್ಮತುಲ್ಲಾ ಕಾವಳಕಟ್ಟೆ, ಪಿ.ಮೊಹಮ್ಮದ್ ಪಾಣೆಮಂಗಳೂರು, ಎನ್. ಮೊಹಮ್ಮದ್ ನಾರಂಗೋಡಿ, ಮೊಹಮ್ಮದ್ ಸಾಗರ್ ಮಿತ್ತಬೈಲ್, ಪ್ರಮುಖರಾದ ಹಾರೂನ್ ರಶೀದ್ ಬಂಟ್ವಾಳ, ಸವಾಝ್ ಬಂಟ್ವಾಳ, ಇಫಾಝ್ ಬಂಟ್ವಾಳ, ಅನ್ವರ್ ಕರೋಪಾಡಿ, ಎ.ಕೆ.ಮಹಮ್ಮದ್, ರಿಯಾಝ್ ಕೆ, ಅಹ್ಮದ್ ಶಾಫಿ, ಅಬ್ಬಾಸ್ ಹಾಗೂ ಬಿ.ಎಚ್ ಖಾದರ್ ಅವರ ಕುಟುಂಬಸ್ಥರು ಉಪಸ್ಥಿತರಿದ್ದರು. ಸಂಸ್ಥೆಯ ಕೋಶಾಧಿಕಾರಿ ಲತೀಫ್ ನೇರಳಕಟ್ಟೆ ಸ್ವಾಗತಿಸಿ ಕಾರ್ಯದರ್ಶಿ ಅಬ್ದುಲ್ ಹಕೀಂ ಕಲಾಯಿ ವಂದಿಸಿದರು.
IndiGo ಬಿಕ್ಕಟ್ಟಿನ ಬಳಿಕ ಎರಡು ಹೊಸ ಏರ್ಲೈನ್ಗಳಿಗೆ ಸರಕಾರದ ಅನುಮತಿ
ದೇಶೀಯ ವಾಯು ಮಾರ್ಗದಲ್ಲಿ ಪೈಪೋಟಿ ನೀಡಲಿರುವ Al Hind Air, Fly Express
ʻಬ್ಯಾಲೆಟ್ ಇರಲಿ - ಇವಿಎಂ ಇರಲಿ ಫಲಿತಾಂಶ ಮಾತ್ರ ಒಂದೇ, ಗೆಲುವು ನಮ್ಮದೇʼ: ಪ್ರಲ್ಹಾದ ಜೋಶಿ
ದಕ್ಷಿಣ ಕನ್ನಡ, ಉತ್ತರ ಕನ್ನಡ ಮತ್ತು ಬೆಂಗಳೂರು ಸೇರಿದಂತೆ ವಿವಿಧೆಡೆ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಜಯಗಳಿಸಿದೆ. ಪ್ರಧಾನಿ ಮೋದಿ ಅವರ ನಾಯಕತ್ವಕ್ಕೆ ಸಿಕ್ಕ ಜನಾದೇಶ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಬಣ್ಣಿಸಿದ್ದಾರೆ. ಈ ಗೆಲುವು ಜನರ ಮನಸ್ಥಿತಿಯನ್ನು ಪ್ರತಿಬಿಂಬಿಸಿದೆ ಎಂದು ಅವರು ಪ್ರತಿಕ್ರಿಯಿಸಿದ್ದಾರೆ.
Uttar Pradesh | ಶಾಲೆಗಳಿಗೆ ಕ್ರಿಸ್ಮಸ್ ರಜೆಯಿಲ್ಲ,ವಿದ್ಯಾರ್ಥಿಗಳು ವಾಜಪೇಯಿ ಜನ್ಮ ಶತಾಬ್ದಿ ಆಚರಿಸಲಿದ್ದಾರೆ: ವರದಿ
ಹೊಸದಿಲ್ಲಿ,ಡಿ.24: ಗುರುವಾರ ಕ್ರಿಸ್ಮಸ್ ಪ್ರಯುಕ್ತ ರಾಜ್ಯದಲ್ಲಿಯ ಶಾಲೆಗಳಿಗೆ ರಜೆಯಿಲ್ಲ ಮತ್ತು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮ ಶತಾಬ್ದಿ ಆಚರಣೆಗಾಗಿ ತೆರೆದಿರುತ್ತವೆ ಎಂದು ಉತ್ತರ ಪ್ರದೇಶದ ಬಿಜೆಪಿ ಸರಕಾರವು ಪ್ರಕಟಿಸಿದೆ ಎಂದು ಸುದ್ದಿಸಂಸ್ಥೆಯು ಬುಧವಾರ ವರದಿ ಮಾಡಿದೆ. ಗುರುವಾರ ವಿದ್ಯಾರ್ಥಿಗಳು ಕಡ್ಡಾಯವಾಗಿ ಶಾಲೆಗಳಿಗೆ ಹಾಜರಾಗಬೇಕು ಎಂದು ತನ್ನ ಆದೇಶದಲ್ಲಿ ತಿಳಿಸಿರುವ ಪ್ರಾಥಮಿಕ ಶಿಕ್ಷಣ ಇಲಾಖೆಯು, ವಾಜಪೇಯಿಯವರನ್ನು ಗೌರವಿಸಲು ಭಾಷಣಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಸ್ಮರಣಾರ್ಥ ಚಟುವಟಿಕೆಗಳನ್ನು ಆಯೋಜಿಸುವಂತೆ ಶಾಲೆಗಳಿಗೆ ನಿರ್ದೇಶನ ನೀಡಿದೆ. ಆದೇಶವು ಸರಕಾರಿ ಪ್ರಾಥಮಿಕ ಮತ್ತು ಹಿರಿಯ ಪ್ರಾಥಮಿಕ ಶಾಲೆಗಳಿಗೆ ಅನ್ವಯಿಸುತ್ತದೆ. ಡಿ.25ನ್ನು ಕ್ರಿಸ್ಮಸ್ ಬದಲಿಗೆ ‘ಬಾಲ ಗೌರವ ಮತ್ತು ಉತ್ತಮ ಆಡಳಿತ ದಿನ’ಎಂದು ಆಚರಿಸುವಂತೆ ಸಹಾರನ್ ಪುರ ಜಿಲ್ಲೆಯ ಬಜರಂಗ ದಳ ಘಟಕದ ಆಗ್ರಹಗಳ ನಡುವೆ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ ಎನ್ನಲಾಗಿದೆ ಎಂದು ಸುದ್ದಿಸಂಸ್ಥೆಯು ವರದಿಯಲ್ಲಿ ತಿಳಿಸಿದೆ. 2014ರಲ್ಲಿ ಹೊಸದಾಗಿ ಚುನಾಯಿತ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರವು ಆರಂಭಿಸಿದ ಉತ್ತಮ ಆಡಳಿತ ದಿನವನ್ನು ವಾಜಪೇಯಿಯವರ ಜನ್ಮದಿನದ ಸ್ಮರಣಾರ್ಥ ಪ್ರತಿ ವರ್ಷ ಡಿ.25ರಂದು ಆಚರಿಸಲಾಗುತ್ತದೆ. ಶಾಲೆಗಳಿಗೆ ಕ್ರಿಸ್ಮಸ್ ರಜೆಯನ್ನು ನೀಡದಿರುವ ಸರಕಾರದ ನಿರ್ಧಾರವು ಟೀಕೆಗೆ ಗುರಿಯಾಗಿದೆ. ರಜೆಯನ್ನು ರದ್ದುಗೊಳಿಸಿರುವುದು ಕ್ರೈಸ್ತ ಸಮುದಾಯದ ಕಡೆಗಣನೆಯಾಗಿದೆ ಮತ್ತು ಸಾರ್ವಜನಿಕ ಶಿಕ್ಷಣದ ಜಾತ್ಯತೀತ ಸ್ವರೂಪವನ್ನು ದುರ್ಬಲಗೊಳಿಸುತ್ತದೆ ಎಂದು ಕ್ರೈಸ್ತ ಸಂಘಟನೆಗಳು ಮತ್ತು ಸಾಮಾಜಿಕ ಕಾರ್ಯಕರ್ತರು ಕಳವಳ ವ್ಯಕ್ತಪಡಿಸಿದ್ದಾರೆ. ಸಾಂಪ್ರದಾಯಿಕ ರಜೆಯ ಬದಲಿಗೆ ಸ್ಮರಣಾರ್ಥ ಕಾರ್ಯಕ್ರಮಗಳನ್ನು ಆಯೋಜಿಸುವಂತೆ ನಿರ್ದೇಶನವು ಕ್ರಿಶ್ಚಿಯನ್ ಕ್ಯಾಲೆಂಡರ್ನಲ್ಲಿಯ ಅತ್ಯಂತ ಪವಿತ್ರ ದಿನವನ್ನು ಉದ್ದೇಶಪೂರ್ವಕವಾಗಿ ಗುರಿಯಾಗಿಸಿಕೊಂಡಿದೆ ಎಂದು ಅಖಿಲ ಭಾರತ ಕ್ರಿಶ್ಚಿಯನ್ ಮಂಡಳಿಯ ಮಹಾ ಕಾರ್ಯದರ್ಶಿ ಮತ್ತು ರಾಷ್ಟ್ರೀಯ ಏಕೀಕರಣ ಮಂಡಳಿಯ ಸದಸ್ಯ ಜಾನ್ ದಯಾಳ್ ಹೇಳಿದರು.
H-1B ವೀಸಾ ಅರ್ಜಿ ಶುಲ್ಕ ಹೆಚ್ಚಳ ಕ್ರಮಕ್ಕೆ ನ್ಯಾಯಾಲಯ ಸಮ್ಮತಿ
ವಾಷಿಂಗ್ಟನ್, ಡಿ.24: ಹೊಸ H-1B ವೀಸಾ ಅರ್ಜಿಗಳಿಗೆ 1 ಲಕ್ಷ ಡಾಲರ್ ಶುಲ್ಕ ವಿಧಿಸುವುದನ್ನು ಟ್ರಂಪ್ ಆಡಳಿತ ಮುಂದುವರಿಸಬಹುದು ಎಂದು ಫೆಡರಲ್ ನ್ಯಾಯಾಧೀಶರು ಮಂಗಳವಾರ ಹೇಳಿದ್ದಾರೆ. ಜನಪ್ರಿಯ H-1B ವೀಸಾ ಅರ್ಜಿ ಶುಲ್ಕವನ್ನು ಭಾರೀ ಪ್ರಮಾಣದಲ್ಲಿ ಹೆಚ್ಚಿಸಿರುವುದನ್ನು ಪ್ರಶ್ನಿಸಿ ಅಮೆರಿಕಾದ ಚೇಂಬರ್ ಆಫ್ ಕಾಮರ್ಸ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದು ಶುಲ್ಕ ಹೆಚ್ಚಳಕ್ಕೆ ಅಧ್ಯಕ್ಷರಿಗೆ ಅಧಿಕಾರವಿಲ್ಲ ಎಂದು ವಾದಿಸಿತ್ತು. ಅರ್ಜಿಯ ವಿಚಾರಣೆ ನಡೆಸಿದ ಫೆಡರಲ್ ನ್ಯಾಯಾಲಯ `ಸಂಸತ್ತು ಅಧ್ಯಕ್ಷರಿಗೆ ವ್ಯಾಪಕ ಶಾಸನಬದ್ಧ ಅಧಿಕಾರ ನೀಡಿದೆ. ಆರ್ಥಿಕ ಮತ್ತು ರಾಷ್ಟ್ರೀಯ ಭದ್ರತೆಯ ವಿಷಯವೆಂದು ಅಧ್ಯಕ್ಷರು ಗ್ರಹಿಸುವ ಸಮಸ್ಯೆಯನ್ನು ಸೂಕ್ತವೆಂದು ತೋರುವ ರೀತಿಯಲ್ಲಿ ಅವರು ಪರಿಹರಿಸಬಹುದು' ಎಂದು ತೀರ್ಪು ನೀಡಿದೆ. ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸುವುದಾಗಿ ಅರ್ಜಿದಾರರು ಹೇಳಿದ್ದಾರೆ.
ಭಾರತ ದಾಳಿ ಮಾಡಿದರೆ ಬಾಂಗ್ಲಾಕ್ಕೆ ಪಾಕಿಸ್ತಾನದ ಕ್ಷಿಪಣಿ ನೆರವಾಗುತ್ತದೆ: ಪಾಕ್ ಪ್ರಧಾನಿ ಷರೀಫ್ ಆಪ್ತನ ಎಚ್ಚರಿಕೆ
ಲಾಹೋರ್, ಡಿ.24: ಒಂದು ವೇಳೆ ಭಾರತವು ಬಾಂಗ್ಲಾದೇಶದ ಮೇಲೆ ದಾಳಿ ನಡೆಸಿದರೆ ಪಾಕಿಸ್ತಾನದ ಮಿಲಿಟರಿ ಮತ್ತು ಕ್ಷಿಪಣಿಗಳು ರಂಗಪ್ರವೇಶ ಮಾಡುತ್ತದೆ ಎಂದು ಪಾಕ್ ಪ್ರಧಾನಿ ಶೆಹಬಾಝ್ ಷರೀಫ್ ಪಕ್ಷ `ಪಾಕಿಸ್ತಾನ್ ಮುಸ್ಲಿಂ ಲೀಗ್'ನ ಯುವ ಘಟಕದ ನಾಯಕ ಕಮ್ರಾನ್ ಸಯೀದ್ ಉಸ್ಮಾನಿ ಎಚ್ಚರಿಕೆ ನೀಡಿದ್ದು ಪಾಕಿಸ್ತಾನ ಮತ್ತು ಬಾಂಗ್ಲಾದೇಶಗಳ ನಡುವೆ ಅಧಿಕೃತ ಮಿಲಿಟರಿ ಒಕ್ಕೂಟಕ್ಕೆ ಸಲಹೆ ನೀಡಿರುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. `ಒಂದು ವೇಳೆ ಭಾರತವು ಬಾಂಗ್ಲಾದೇಶದ ಸ್ವಾಯತ್ತತೆಯ ಮೇಲೆ ದಾಳಿ ಮಾಡಿದರೆ, ಯಾರಾದರೂ ಕೆಟ್ಟ ಉದ್ದೇಶದಿಂದ ಬಾಂಗ್ಲಾದೇಶದತ್ತ ನೋಡಿದರೆ, ಪಾಕಿಸ್ತಾನದ ಜನತೆ, ಪಾಕಿಸ್ತಾನದ ಸಶಸ್ತ್ರ ಪಡೆಗಳು ಮತ್ತು ನಮ್ಮ ಕ್ಷಿಪಣಿಗಳು ಹೆಚ್ಚು ದೂರದಲ್ಲಿಲ್ಲ ಎಂಬುದನ್ನು ನೆನಪಿಸಬೇಕಾಗುತ್ತದೆ. ಭಾರತವು ತನ್ನ `ಅಖಂಡ ಭಾರತ ಸಿದ್ಧಾಂತ'ವನ್ನು ಬಾಂಗ್ಲಾದೇಶದ ಮೇಲೆ ಹೇರುವ ಪ್ರಯತ್ನವನ್ನು ಪಾಕಿಸ್ತಾನ ಒಪ್ಪುವುದಿಲ್ಲ' ಎಂದವರು ಹೇಳಿದ್ದಾರೆ. ಮತ್ತೊಂದು ವೀಡಿಯೊದಲ್ಲಿ ಉಸ್ಮಾನಿ ಸಂಘಟಿತ ಒತ್ತಡದ ಕುರಿತು ಮಾತನಾಡಿದ್ದು `ಪಾಕಿಸ್ತಾನವು ಪಶ್ಚಿಮದಿಂದ , ಬಾಂಗ್ಲಾದೇಶವು ಪೂರ್ವದಿಂದ ಕಾರ್ಯನಿರ್ವಹಿಸುತ್ತದೆ ಮತ್ತು ಚೀನಾವು ಅರುಣಾಚಲ ಪ್ರದೇಶ ಮತ್ತು ಲಡಾಕ್ ಮೇಲೆ ಗಮನ ಕೇಂದ್ರೀಕರಿಸಿದೆ' ಎಂದು ಹೇಳಿರುವುದಾಗಿ ವರದಿಯಾಗಿದೆ.
National Sports Awards- ಭಾರತೀಯ ಹಾಕಿ ತಂಡದ ಉಪನಾಯಕ ಹಾರ್ದಿಕ್ ಸಿಂಗ್ ಅವರು ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಗೌರವಕ್ಕೆ ಶಿಫಾರಸುಗೊಂಡಿದ್ದಾರೆ. ವಿಶೇಷವೆಂದರೆ ಅವರೊಬ್ಬರೇ ಈ ಮಹೋನ್ನತ ಕ್ರೀಡಾ ಪ್ರಶಸ್ತಿಗೆ ಶಿಫಾರಸು ಆಗಿರುವ ಏಕೈಕ ಕ್ರೀಡಾಪಟುವಾಗಿದ್ದಾರೆ. ಈ ಬಾರಿ ಒಬ್ಬನೇ ಒಬ್ಬ ಕ್ರಿಕೆಟರ್ ಈ ಪಟ್ಟಿಯಲ್ಲಿಲ್ಲ. 24 ಕ್ರೀಡಾಪಟುಗಳನ್ನು ಅರ್ಜುನ ಪ್ರಶಸ್ತಿಗಾಗಿ ಶಿಫಾರಸು ಮಾಡಲಾಗಿದ್ದು, ಇದೇ ಮೊದಲ ಬಾರಿಗೆ ಯೋಗಾಸನ ಕ್ರೀಡಾಪಟು ಆರತಿ ಪಾಲ್ ಅವರ ಹೆಸರು ಇದೆ.
ಬಂಟ್ವಾಳ: ಬಂಟ್ವಾಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಅಧ್ಯಕ್ಷರಾಗಿ ಪ್ರಶಾಂತ್ ಪುಂಜಾಲಕಟ್ಟೆ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಮಹಮ್ಮದ್ ಆಲಿ ವಿಟ್ಲ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಸೂಚನೆಯಂತೆ, ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಮಾರ್ಗದರ್ಶನದಲ್ಲಿ ಮಂಗಳವಾರ ಚುನಾವಣಾ ಪ್ರಕ್ರಿಯೆಗಳು ನಡೆದಿದ್ದು, ಚುನಾವಣಾಧಿಕಾರಿ ಸುರೇಶ ಡಿ ಪಳ್ಳಿ ಯವರು ಅವಿರೋಧವಾಗಿ ಆಯ್ಕೆಯಾದ ನೂತನ ಆಡಳಿತ ಮಂಡಳಿಯನ್ನು ಘೋಷಿಸಿದರು. ಸಂಘದ ಅಧ್ಯಕ್ಷ ಸಹಿತ ಐದು ಪದಾಧಿಕಾರಿಗಳ ಸ್ಥಾನ, ಐದು ಕಾರ್ಯಕಾರಿ ಸಮಿತಿ ಸದಸ್ಯರ ಸ್ಥಾನಗಳಿಗೆ ಮಂಗಳವಾರ ಬೆಳಿಗ್ಗೆ 10 ರಿಂದ 11:30 ರವರೆಗೆ ನಾಮಪತ್ರ ಸಲ್ಲಿಕೆಗೆ ಅವಕಾಶ ನೀಡಲಾಗಿತ್ತು. 10 ಸ್ಥಾನಗಳಿಗೆ 10 ನಾಮಪತ್ರಗಳು ಮಾತ್ರ ಸಲ್ಲಿಕೆಯಾದ ಹಿನ್ನೆಲೆಯಲ್ಲಿ, ನಾಮಪತ್ರ ಪರಿಶೀಲನೆಗ ಹಾಗೂ ನಾಮ ಪತ್ರ ಹಿಂತೆಗೆತದ ನಿಗದಿತ ಅವಧಿಯ ಬಳಿಕ, ನಾಮಪತ್ರ ಸಲ್ಲಿಸಿದ್ದ ಎಲ್ಲಾ ಹತ್ತು ಮಂದಿಯನ್ನು ಚುನಾವಣಾ ಧಿಕಾರಿಗಳು ಅವಿರೋಧ ಆಯ್ಕೆ ಎಂದು ಘೋಷಿಸಿದರು. ಕೋಶಾಧಿಕಾರಿಯಾಗಿ ಚಂದ್ರ ಶೇಖರ ಕಲ್ಮಲೆ, ಉಪಾಧ್ಯಕ್ಷರಾಗಿ ರಮೇಶ್ ಕೆ. ಪುಣಚ(ವಿಷ್ಣುಗುಪ್ತ ಪುಣಚ) ಹಾಗೂ ಕಾರ್ಯದರ್ಶಿಯಾಗಿ ಅಬ್ದುಲ್ ರಹಿಮಾನ್ ತಲಪಾಡಿ ಆಯ್ಕೆಯಾದರು. ಕಾರ್ಯಕಾರಿ ಸಮಿತಿಗೆ ವೆಂಕಟೆಶ್ ಬಂಟ್ವಾಳ, ರತ್ನದೇವ್ ಪುಂಜಾಲಕಟ್ಟೆ, ಉದಯಶಂಕರ ನೀರ್ಪಾಜೆ, ವಾಮನ ಪೊಳಲಿ ಹಾಗೂ ಮೌನೇಶ ವಿಶ್ವಕರ್ಮ ಆಯ್ಕೆಯಾದರು. ನೂತನ ಅಧ್ಯಕ್ಷರು ಹಾಗೂ ಪದಾಧಿಕಾರಿಗಳನ್ನು ಜಿಲ್ಲಾ ಸಂಘದ ಅಧ್ಯಕ್ಷರಾದ ಪುಷ್ಪರಾಜ್ ಬಿ.ಎನ್. ಅಭಿನಂದಿಸಿದರು. ಈ ಸಂದರ್ಭ ಚುನಾವಣಾಧಿಕಾರಿ ಸುರೇಶ್ ಡಿ ಪಳ್ಳಿ, ಸಹಾಯಕ ಚುನಾವಣಾಧಿಕಾರಿ ಜಯಶ್ರೀ ನವೀನ್, ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯರಾದ ಸಂದೀಪ್ ಸಾಲ್ಯಾನ್ , ಪತ್ರಕರ್ತರಾದ ಗಣೇಶ್ ಪ್ರಸಾದ್ ಪಾಂಡೇಲು, ಕಿಶೋರ್ ಪೆರಾಜೆ, ಕಿರಣ್ ಸರಪಾಡಿ, ಹರೀಶ್ ಮಾಂಬಾಡಿ ಯಾದವ ಅಗ್ರಬೈಲು ಮೊದಲಾದವರು ಉಪಸ್ಥಿತರಿದ್ದರು.
ಬೆಂಗಳೂರು: ಅಕ್ರಮ ಆಸ್ತಿ ಗಳಿಕೆ ಆರೋಪ ಮೇಲೆ ಸಚಿವ ಝಮೀರ್ ಅಹ್ಮದ್ ಖಾನ್ ಅವರ ಆಪ್ತ ಕಾರ್ಯದರ್ಶಿ ಸರ್ದಾರ್ ಸರ್ಫರಾಝ್ ಖಾನ್ ಅವರಿಗೆ ಸಂಬಂಧಿಸಿದ ಸ್ಥಳಗಳಲ್ಲಿ ಬುಧವಾರದಂದು ಲೋಕಾಯುಕ್ತ ದಾಳಿ ನಡೆದಿದ್ದು, 14 ಕೋಟಿ ರೂ.ಗಿಂತ ಹೆಚ್ಚಿನ ಮೌಲ್ಯದ ಆಸ್ತಿ ಪತ್ತೆಯಾಗಿದೆ. ವಸತಿ ಮತ್ತು ಅಲ್ಪಸಂಖ್ಯಾಂತರ ಕಲ್ಯಾಣ ಇಲಾಖೆಯ ಸಚಿವರ ಆಪ್ತ ಕಾರ್ಯದರ್ಶಿ ಆಗಿರುವ ಸರ್ಫರಾಜ್ ಖಾನ್ ಅವರು ಆದಾಯದ ಮೂಲಗಳಿಗಿಂತ ಹೆಚ್ಚು ಆಸ್ತಿಯನ್ನು ಹೊಂದಿದ್ದಾರೆ ಎಂದು ಲೋಕಾಯುಕ್ತ ಕಚೇರಿಯಲ್ಲಿ ಪ್ರಕರಣ ದಾಖಲಾಗಿತ್ತು. ಹೀಗಾಗಿ ಸರ್ಫರಾಝ್ ಖಾನ್ಗೆ ಸಂಬಂಧಿಸಿದ ಬೆಂಗಳೂರಿನ 7 ಮನೆಗಳು, ಕೊಡಗಿನಲ್ಲಿರುವ 2 ಕಾಫಿ ಎಸ್ಟೇಟ್, ಎಚ್.ಡಿ.ಕೋಟೆಯ ಒಂದು ರೆಸಾರ್ಟ್, ಇತರೆ ಸ್ಥಳಗಳು ಸೇರಿದಂತೆ ಒಟ್ಟು 13 ಸ್ಥಳಗಳಲ್ಲಿ ಸುಮಾರು 50ಕ್ಕೂ ಅಧಿಕ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿ, ಪರಿಶೀಲನೆ ನಡೆಸಿದ್ದಾರೆ. ಅಧಿಕಾರಿಯು 4 ವಾಸದ ಮನೆಗಳು, 37 ಎಕರೆ ಕೃಷಿ ಜಮೀನು ಹೊಂದಿದ್ದು, ಅವರ ಸ್ಥಿರ ಆಸ್ತಿಯ ಅಂದಾಜು ಮೌಲ್ಯ 8,44,33,500 ರೂ. ಆಗಿದೆ. ಇನ್ನು ಪರಿಶೀಲನೆ ವೇಳೆ 66,500 ರೂ. ನಗದು, 2,99,70,500 ರೂ. ಬೆಲೆ ಬಾಳುವ ಚಿನ್ನಾಭರಣಗಳು, 1,64,20,000 ರೂ. ಬೆಲೆ ಬಾಳುವ ವಾಹನಗಳು, 1,29,29,153 ರೂ. ಬೆಲೆ ಬಾಳುವ ಬ್ಯಾಂಕ್ ಠೇವಣಿ ಸೇರಿ ಒಟ್ಟು 5,93,86,153 ರೂ. ಮೌಲ್ಯದ ಚರ ಆಸ್ತಿ ಪತ್ತೆಯಾಗಿದೆ. ಹೀಗಾಗಿ ಅಧಿಕಾರಿಯು ಸ್ಥಿರ ಮತ್ತು ಚರಾಸ್ತಿ ಸೇರಿ ಒಟ್ಟು 14,38,19,653 ರೂ. ಮೌಲ್ಯದ ಆಸ್ತಿಯನ್ನು ಹೊಂದಿದ್ದಾರೆ ಲೋಕಾಯುಕ್ತ ಅಧಿಕಾರಿಗಳು ಪ್ರಕಟನೆಯಲ್ಲಿ ಸ್ಪಷ್ಟಪಡಿಸಿದ್ದಾರೆ.
Save Aravali Hills: ಅರಾವಳಿ ವಿವಾದ: ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ವಾಗ್ದಾಳಿ
ರಾಜಸ್ಥಾನ ಸೇರಿದಂತೆ ನಾಲ್ಕು ರಾಜ್ಯಗಳಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಜನ ಬೀದಿಗಿಳಿದಿದ್ದಾರೆ. ಅರಾವಳಿ ಪರ್ವತ ಶ್ರೇಣಿಗಳಲ್ಲಿ ಗಣಿಗಾರಿಕೆಗೆ ಅವಕಾಶ ಕೊಟ್ಟಿದ್ದನ್ನ ವಿರೋಧಿಸಿ ಹೋರಾಟ ತೀವ್ರಗೊಳಿಸಿದ್ದಾರೆ. ಅರಾವಳಿ ಉಳಿಸಿ ಅಭಿಯಾನ ತೀವ್ರಗೊಂಡಿದ್ದು, ಅರವಳ್ಳಿ ಬೆಟ್ಟಗಳನ್ನು ಹೇಗೆ ವ್ಯಾಖ್ಯಾನಿಸಲಾಗಿದೆ ಎಂಬುದರಲ್ಲಿ ಬದಲಾವಣೆಗಳ ಕುರಿತು ಕೇಂದ್ರವು ಸಾರ್ವಜನಿಕರನ್ನು ದಾರಿ ತಪ್ಪಿಸುತ್ತಿದೆ ಎಂದು ಕಾಂಗ್ರೆಸ್ ಬುಧವಾರ ಆರೋಪಿಸಿದೆ. ಅರಾವಳಿ ಪರ್ವತ ಶ್ರೇಣಿಯಲ್ಲಿ ಪ್ರಸ್ತಾಪಿತ
ಆರ್ಟಿಐ ಅರ್ಜಿ ವಿಲೇವಾರಿಗೂ ಲಂಚಕ್ಕೆ ಬೇಡಿಕೆ, ಎಫ್ಐಆರ್ ರದ್ದುಗೊಳಿಸಲು ನಿರಾಕರಿಸಿದ ಹೈಕೋರ್ಟ್
ರಾಜ್ಯ ಮಾಹಿತಿ ಆಯುಕ್ತ ರವೀಂದ್ರ ಗುರುನಾಥ್ ಢಾಕಪ್ಪ ವಿರುದ್ಧ ಲೋಕಾಯುಕ್ತ ಪೊಲೀಸರು ದಾಖಲಿಸಿದ್ದ ಪ್ರಕರಣವನ್ನು ಹೈಕೋರ್ಟ್ ರದ್ದುಪಡಿಸಲು ನಿರಾಕರಿಸಿದೆ. ಇವರು ಮಾಹಿತಿ ಹಕ್ಕು ಅರ್ಜಿ ವಿಲೇವಾರಿಗೆ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಧ್ವನಿ ರೆಕಾರ್ಡಿಂಗ್ ಮತ್ತು ಭ್ರಷ್ಟಾಚಾರಕ್ಕೆ ಮೇಲ್ನೋಟಕ್ಕೆ ಪುರಾವೆಗಳಿವೆ. ಹೀಗಾಗಿ ತನಿಖೆ ನಡೆಸುವಂತೆ ನ್ಯಾಯಪೀಠ ಆದೇಶಿಸಿದೆ. ಆರೋಪಿ 3 ಲಕ್ಷ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಇದರಲ್ಲಿ 1 ಲಕ್ಷ ರೂ. ವರ್ಗಾವಣೆ ಆಗಿತ್ತು.
ಇಂಗ್ಲೆಂಡ್ ಆಡುವ 11 ರ ಬಳಗದಿಂದ ಆರ್ಚರ್, ಪೋಪ್ ಹೊರಗೆ
ಮೆಲ್ಬರ್ನ್, ಡಿ. 24: ಆಸ್ಟ್ರೇಲಿಯ ವಿರುದ್ಧದ ಬಾಕ್ಸಿಂಗ್ ಡೇ ಟೆಸ್ಟ್ ಗೆ ಇಂಗ್ಲೆಂಡ್ ತನ್ನ ಆಡುವ ಹನ್ನೊಂದರ ತಂಡವನ್ನು ಪ್ರಕಟಿಸಿದೆ. ಆ್ಯಶಸ್ ಸರಣಿಯ ನಾಲ್ಕನೇ ಟೆಸ್ಟ್ ಕೂಡ ಆಗಿರುವ ಈ ಪಂದ್ಯವು ಡಿಸೆಂಬರ್ 26ರಂದು ಮೆಲ್ಬರ್ನ್ ಕ್ರಿಕೆಟ್ ಮೈದಾನದಲ್ಲಿ ಆರಂಭಗೊಳ್ಳಲಿದೆ. ಪ್ರವಾಸಿ ತಂಡವು ತನ್ನ ಆಡುವ ಹನ್ನೊಂದರ ಬಳಗಕ್ಕೆ ಎರಡು ಬದಲಾವಣೆಗಳನ್ನು ಮಾಡಿದೆ. ಗಾಯಾಳು ಜೋಫ್ರಾ ಆರ್ಚರ್ ಸ್ಥಾನಕ್ಕೆ ಗಸ್ ಆ್ಯಟ್ಕಿನ್ಸನ್ರನ್ನು ತರಲಾಗಿದೆ ಮತ್ತು ಓಲೀ ಪೋಪ್ ಸ್ಥಾನಕ್ಕೆ ಜಾಕೋಬ್ ಬೆತೆಲ್ ಬಂದಿದ್ದಾರೆ. ‘‘ಎಡ ಪಕ್ಕೆಲುಬು ಗಾಯದಿಂದ ಬಳಲುತ್ತಿರುವ ವೇಗದ ಬೌಲರ್ ಜೋಫ್ರಾ ಆರ್ಚರ್ ರನ್ನು ಸರಣಿಯ ಉಳಿದ ಭಾಗದಿಂದ ಹೊರಗಿಡಲಾಗಿದೆ’’ ಎಂದು ಇಂಗ್ಲೆಂಡ್ ಹೇಳಿಕೆಯೊಂದರಲ್ಲಿ ತಿಳಿಸಿದೆ. ಸರಣಿಯ ಮೊದಲ ಮೂರು ಟೆಸ್ಟ್ಗಳಲ್ಲಿ ಆರ್ಚರ್ ಇಂಗ್ಲೆಂಡ್ ನ ಶ್ರೇಷ್ಠ ಬೌಲರ್ ಆಗಿದ್ದರು. ಅವರು 80 ಓವರ್ ಗಳನ್ನು ಹಾಕಿ ಒಂಭತ್ತು ವಿಕೆಟ್ ಗಳನ್ನು ಪಡೆದಿದ್ದಾರೆ. ಆರ್ಚರ್ ಅನುಪಸ್ಥಿತಿಯು ಇಂಗ್ಲೆಂಡ್ ಗೆ ದೊಡ್ಡ ಹಿನ್ನಡೆಯಾಗಿದೆ. ಅದು ಈಗಾಗಲೇ ಸರಣಿಯಲ್ಲಿ 0-3ರ ಹಿನ್ನಡೆಯಲ್ಲಿದೆ. ಇಂಗ್ಲೆಂಡ್ 11: ಝ್ಯಾಕ್ ಕ್ರಾಲಿ, ಬೆನ್ ಡಕೆಟ್, ಜಾಕೋಬ್ ಬೆತೆಲ್, ಜೋ ರೂಟ್, ಹ್ಯಾರಿ ಬ್ರೂಕ್, ಬೆನ್ ಸ್ಟೋಕ್ಸ್ (ನಾಯಕ), ಜೇಮೀ ಸ್ಮಿತ್ (ವಿಕೆಟ್ ಕೀಪರ್), ವಿಲ್ ಜಾಕ್ಸ್, ಗಸ್ ಆ್ಯಟ್ಕಿನ್ಸನ್, ಬ್ರೈಡನ್ ಕಾರ್ಸ್, ಜೋಶ್ ಟಂಗ್.
ವಿಜಯ ಹಝಾರೆ ಟ್ರೋಫಿ | ಬಿಹಾರದ ವಿಶ್ವದಾಖಲೆಯ ಮೊತ್ತ; ಅತ್ಯಂತ ವೇಗದ ಶತಕ ಬಾರಿಸಿದ ಸಾಕಿಬುಲ್ ಗನಿ
ಹಲವು ದಾಖಲೆಗಳನ್ನು ಸೃಷ್ಟಿಸಿದ ವೈಭವ್ ಸೂರ್ಯವಂಶಿ
ಗೂಡ್ಸ್ ರೈಲು ಢಿಕ್ಕಿ: ವ್ಯಕ್ತಿ ಮೃತ್ಯು
ಬೈಂದೂರು: ಕೆರ್ಗಾಲ್ ಗ್ರಾಮದ ಚರುಮಕ್ಕಿ ರೈಲ್ವೆಗೇಟ್ ಸಮೀಪ ನಡೆದುಕೊಂಡು ಹೋಗುತಿದ್ದ ವ್ಯಕ್ತಿಯೊಬ್ಬರು ಗೂಡ್ಸ್ ರೈಲು ಡಿಕ್ಕಿ ಹೊಡೆದು ಮೃತಪಟ್ಟ ಘಟನೆ ಮಂಗಳವಾರ ಅಪರಾಹ್ನದ ವೇಳೆ ನಡೆದಿದೆ. ಮೃತರನ್ನು ಕೆರ್ಗಾಲ್ನ ಉದಯ ದೇವಾಡಿಗ (44) ಎಂದು ಗುರುತಿಸಲಾಗಿದೆ. ಕಂಬದಕೋಣೆಯ ಹೊಟೇಲ್ ಒಂದರಲ್ಲಿ ಕೆಲಸ ಮಾಡಿಕೊಂಡಿದ್ದ ಉದಯ ದೇವಾಡಿಗರಿಗೆ ಕಿವಿ ಸರಿಯಾಗಿ ಕೇಳಿಸುತ್ತಿರಲಿಲ್ಲ ಎನ್ನಲಾಗಿದೆ. ಇದರಿಂದ ರೈಲ್ವೇ ಹಳಿ ಬದಿ ನಡೆದುಕೊಂಡು ಹೋಗುತಿದ್ದ ಇವರಿಗೆ ರೈಲು ಬರುತ್ತಿರುವುದು ತಿಳಿಯಲಿಲ್ಲ ಎಂದು ಹೇಳಲಾಗಿದೆ. ರೈಲು ಬಡಿದು ಗಾಯ ಗೊಂಡಿದ್ದ ಉದಯರನ್ನು ಬೈಂದೂರು ಸರಕಾರಿ ಆಸ್ಪತ್ರೆಗೆ ದಾಖಲಿಸಿದರೂ ಪರೀಕ್ಷಿಸಿದ ವೈದ್ಯರು ಮೃತಪಟ್ಟಿರುವುದಾಗಿ ತಿಳಿಸಿದರು. ಈ ಬಗ್ಗೆ ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಜಯ ಹಝಾರೆ ಟ್ರೋಫಿ | ಪಡಿಕ್ಕಲ್ ಶತಕ; ಕರ್ನಾಟಕಕ್ಕೆ ದಾಖಲೆಯ ಜಯ
ಜಾರ್ಖಂಡ್ ನ ಇಶಾನ್ ಕಿಶನ್ ಶತಕ ವ್ಯರ್ಥ
ಮಂಗಳೂರು - ಬೆಂಗಳೂರು ವಂದೇ ಭಾರತ್ ರೈಲು ಆರಂಭಿಸಲು ಕೇಂದ್ರ ರೇಲ್ವೆ ಸಚಿವರಿಗೆ ದಿನೇಶ್ ಗುಂಡೂರಾವ್ ಮನವಿ
ಮಂಗಳೂರು, ಡಿ.24: ಮಂಗಳೂರು ಪಟ್ಟಣ ವಿದ್ಯಾಸಂಸ್ಥೆಗಳು, ಉದ್ಯಮಿಗಳಿಂದ ಕೂಡಿದ ಸಿಟಿಯಾಗಿದ್ದು ಬೆಂಗಳೂರು ಮತ್ತು ಮಂಗಳೂರು ಮಧ್ಯೆ ವಂದೇ ಭಾರತ್ ರೈಲು ಆರಂಭಿಸಿಸುವಂತೆ ಕೇಂದ್ರ ರೇಲ್ವೆ ಸಚಿವರಿಗೆ ಸಚಿವ ದಿನೇಶ್ ಗುಂಡೂರಾವ್ ಆಗ್ರಹಿಸಿದ್ದಾರೆ. ಕೇಂದ್ರ ರೈಲ್ವೆ ಸಚಿವ ಅಶ್ವಿನ್ ವೈಷ್ಣವ್ ಅವರಿಗೆ ಪತ್ರ ಬರೆದಿರುವ ದಿನೇಶ್ ಗುಂಡೂ ರಾವ್ ಅವರು ಬೆಂಗಳೂರಿನ ನಂತರ ಬೆಳವಣಿಗೆ ಹೊಂದುತ್ತಿರುವ ನಗರಗಳಲ್ಲಿ ಮಂಗಳೂರು ಸಹ ಮುಂಚೂಣಿಯಲ್ಲಿದ್ದು ಅತ್ಯುತ್ತಮ ಆಸ್ಪತ್ರೆಗಳು, ವಿದ್ಯಾ ಸಂಸ್ಥೆಗಳು, ಹಲವಾರು ಉದ್ಯಮಗಳು ಇಲ್ಲಿವೆೆ. ವಂದೇ ಭಾರತ್ ಪ್ರಾರಂಭಿಸಿದರೆ ಜನರಿಗೆ ಹೆಚ್ಚು ಪ್ರಯೋಜನವಗಲಿದೆ ಹಾಗೂ ಉದ್ಯಮಗಳ ಬೆಳವಣಿಗೆಗೆ ಅನುಕೂಲವಾಗಲಿದೆ. ಹಲವಾರು ಉದ್ಯಮಿಗಳು ಬೆಂಗಳೂರಿನಿಂದ ಮಂಗಳೂರಿಗೆ ಪ್ರಯಾಣಿಸಲು ಇದು ಸಹಾಯಕವಾಗಲಿದೆ. ದಿನಕ್ಕೆ 3 ವಂದೇ ಭಾರತ್ ರೈಲು ಪ್ರಾರಂಭಿಸಬೇಕೆಂದು ಕರ್ನಾಟಕ ಸರ್ಕಾರದ ಪರವಾಗಿ ಕೇಂದ್ರ ಸಚಿವರಿಗೆ ಬರೆದಿರುವ ಪತ್ರದಲ್ಲಿ ಸಚಿವ ಗುಂಡೂ ರಾವ್ ಹೇಳಿದ್ದಾರೆ.
ಬ್ರಹ್ಮಾವರ| ಅಕ್ಷತಾ ಪೂಜಾರಿ ಪ್ರಕರಣ: ದೂರು- ಪ್ರತಿದೂರುಗಳೆರಡೂ ಸಿಐಡಿ ತನಿಖೆಗೆ - ಎಸ್ಪಿ ಹರಿರಾಮ್ ಶಂಕರ್
ಉಡುಪಿ, ಡಿ.24: ಅಪಘಾತ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಆರೋಪಿ ವಿರುದ್ಧ ಜಾರಿಯಾದ ನ್ಯಾಯಾಲಯದ ವಾರಂಟ್ನ ಜಾರಿ ವಿಷಯದಲ್ಲಿ ಇತ್ತೀಚೆಗೆ ಉಂಟಾದ ವಿವಾದದಲ್ಲಿ ಉಪ್ಪೂರಿನ ಅಕ್ಷತಾ ಪೂಜಾರಿ ಎಂಬ ವಿದ್ಯಾರ್ಥಿನಿ ಬ್ರಹ್ಮಾವರ ಪೊಲೀಸರು ದಾಖಲಿಸಿದ ಪ್ರಕರಣ ಹಾಗೂ ಪೊಲೀಸರು ತಮ್ಮ ಕರ್ತವ್ಯಕ್ಕೆ ಅಡ್ಡಿಪಡಿಸಿದ ಕುರಿತಂತೆ ಆಕೆಯ ವಿರುದ್ಧ ದಾಖಲಿಸಿದ ಪ್ರಕರಣಗಳೆರಡನ್ನೂ ಸಿಐಡಿ ತನಿಖೆಗೆ ವರ್ಗಾಯಿಸಲಾಗಿದೆ ಎಂದು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ತಿಳಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ತನಿಖೆ ನಡೆಸುವಂತೆ ಡಿಜಿ ಕಚೇರಿಗೆ ಕಳುಹಿಸಿದ ಪ್ರಸ್ತಾಪವನ್ನು ಅಂಗೀಕರಿಸಲಾಗಿದ್ದು, ಪ್ರಕರಣದ ಕುರಿತು ಹೆಚ್ಚಿನ ತನಿಖೆಗಾಗಿ ಸಿಐಡಿಗೆ ವರ್ಗಾಯಿಸಲಾಗಿದೆ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ. ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ದಾಖಲಾದ ದೂರು ಹಾಗೂ ಪ್ರತಿದೂರುಗಳೆರಡರ ತನಿಖೆಯನ್ನು ಸಿಐಡಿ ನಡೆಸಲಿದೆ ಎಂದು ಅವರು ತಿಳಿಸಿದರು. ಇದಕ್ಕೆ ಮುನ್ನ ನೀಡಿದ ಹೇಳಿಕೆಯಲ್ಲಿ ಅವರು ಪ್ರಕರಣಗಳ ತನಿಖೆಯನ್ನು ಮಣಿಪಾಲ ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿತ ಮೂವರು ಪೊಲೀಸರನ್ನು ರಜೆಯ ಮೇಲೆ ಕಳುಹಿಸಲಾಗಿದೆ ಎಂದು ಹೇಳಿದ್ದರು. ಪ್ರಕರಣದಲ್ಲಿ ನ್ಯಾಯ ಹಾಗೂ ಪಾರದರ್ಶಕತೆಯನ್ನು ಖಚಿತಪಡಿಸಿ ಕೊಳ್ಳಲು ಇವನ್ನು ಮಾಡಲಾಗಿದೆ. ಡಿ.18ರಂದು ಬ್ರಹ್ಮಾವರ ಠಾಣೆ ಎದುರು ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡ ಪ್ರತಿಭಟನಕಾರರ ವಿರುದ್ಧ ದಾಖಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಭಟನಕಾರರು ಠಾಣೆಯ ಮುಂದೆ ಅನುಮತಿ ಇಲ್ಲದೇ ಧ್ವನಿವರ್ದಕ ಬಳಸಿದ್ದ ಕ್ಕಾಗಿ 200ರೂ. ದಂಡ ವಿಧಿಸ ಬಹುದಾದ ಪ್ರಕರಣ ದಾಖಲಿಸಲಾಗಿದೆ. ಪ್ರತಿಭಟನೆಗೆ ಮುನ್ನ ಪೊಲೀಸರು ಆಯೋಜಕರಿಗೆ ನೋಟೀಸು ನೀಡಿದ್ದರೂ ಅನುಮತಿ ಇಲ್ಲದೇ ಅದನ್ನು ಬಳಸಿದ್ದಕ್ಕಾಗಿ ಪ್ರಕರಣ ದಾಖಲಿಸಲಾಗಿದೆ ಎಂದು ಹರಿರಾಂ ಶಂಕರ್ ತಿಳಿಸಿದ್ದರು. ಗೃಹಸಚಿವರಿಗೆ ದೂರು ವಿನಾಕಾರಣ ಪೊಲೀಸರಿಂದ ಹಲ್ಲೆಗೊಳಗಾದ ಅಕ್ಷತಾ ಪೂಜಾರಿ ಅವರಿಗೆ ನ್ಯಾಯ ಸಿಗಬೇಕೆಂಬ ಉದ್ದೇಶದಿಂದ ನಾವು ಕಾನೂನು ಬದ್ಧವಾಗಿ ಪ್ರತಿಭಟನೆ ಮಾಡುತಿದ್ದೇವೆ. ಆದರೆ ಪೊಲೀಸರು ನಮ್ಮ ಹೋರಾಟವನ್ನು ಹತ್ತಿಕ್ಕಲು ವಿವಿಧ ಪ್ರಯತ್ನಗಳನ್ನು ನಡೆಸುತಿದ್ದಾರೆ ಎಂದು ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆ ಅಧ್ಯಕ್ಷ ಪ್ರವೀಣ್ ಎಂ.ಪೂಜಾರಿ ಆರೋಪಿಸಿದ್ದಾರೆ. ಅಕ್ಷತಾ ಪೂಜಾರಿ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬ್ರಹ್ಮಾವರ ಪೊಲೀಸ್ ಠಾಣೆ ಎದುರು ನಡೆದ ಪ್ರತಿಭಟನೆಯ ನೇತೃತ್ವ ವಹಿಸಿದ್ದ ಪ್ರವೀಣ್ ಎಂ. ಪೂಜಾರಿ ಇಂದು ಇಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಾವು ಶಾಂತಿ ಯುತ ಪ್ರತಿಭಟನೆ ನಡೆಸಿದರೂ ನಮ್ಮ ಮೇಲೆ ಸುಳ್ಳು ಪ್ರಕರಣ ದಾಖಲಿಸಿದ್ದಾರೆ. ಆದ್ದರಿಂದ ನಾವೀಗ ಹೋರಾಟ ವನ್ನು ರಾಜ್ಯಮಟ್ಟಕ್ಕೆ ಒಯ್ಯುವ ಕುರಿತಂತೆ ಆಲೋಚಿಸುತಿದ್ದೇವೆ. ಈ ಸಂಬಂಧ ರಾಜ್ಯ ಗೃಹ ಸಚಿವರನ್ನು ಭೇಟಿಯಾಗುವ ಯೋಚನೆಯೂ ಇದೆ ಎಂದರು. ಬ್ರಹ್ಮಾವರ ಠಾಣೆ ಎದುರು ನಡೆದ ಪ್ರತಿಭಟನೆಗೆ ಮಣಿದು ಮೂವರು ಪೊಲೀಸರ ವಿರುದ್ಧ ಎಫ್ಐಆರ್ ದಾಖಲಾ ದರೂ ಇನ್ನೂ ತನಿಖೆ ಪ್ರಾರಂಭ ಗೊಂಡಿಲ್ಲ. ತನಿಖಾಧಿಕಾರಿಯ ನೇಮಕವಾಗಿಲ್ಲ. ಹೀಗಾಗಿ ಇಡೀ ಪ್ರಕ್ರಿಯೆ ಕುರಿತಂತೆ ನಮಗೆ ಸಂಶಯವಿದೆ. ಅಲ್ಲದೇ ಅಕ್ಷತಾ ಪೂಜಾರಿ ನೀಡಿದ ದೂರಿನ ತಪ್ಪಿತಸ್ಥ ಪೊಲೀಸರ ವಿರುದ್ಧ ಯಾವುದೇ ರೀತಿಯ ಕ್ರಮ ಇನ್ನೂ ಆಗಿಲ್ಲ. ಹೀಗಾಗಿ ತಕ್ಷಣವೇ ನಿಷ್ಪಕ್ಷಪಾತ ತನಿಖೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳನ್ನು ಒತ್ತಾಯಿಸುವುದಾಗಿ ಅವರು ತಿಳಿಸಿದರು. ಸುದ್ಧಿಗೋಷ್ಠಿಯಲ್ಲಿ ಬಿಲ್ಲವ ಮುಖಂಡರಾದ ಸುಧಾಕರ್ ಡಿ.ಅಮೀನ್ ಪಾಂಗಾಳ, ರಾಜು ಪೂಜಾರಿ ಉಪ್ಪೂರು, ಮಹೇಶ್ ಆಂಚನ್ ಕಟಪಾಡಿ ಉಪಸ್ಥಿತರಿದ್ದರು.
ಸ್ಕಿ ಅಪಘಾತ: 70 ಮೀಟರ್ ಮೇಲಿನಿಂದ ಬಿದ್ದು ಜರ್ಮನ್ ಫುಟ್ಬಾಲ್ ಆಟಗಾರ ಮೃತ್ಯು
ಬರ್ಲಿನ್, ಡಿ. 24: ಜರ್ಮನ್ ಫುಟ್ಬಾಲ್ ಆಟಗಾರ ಸೆಬಾಸ್ಟಿಯನ್ ಹರ್ಟನರ್ ರವಿವಾರ ಸಂಭವಿಸಿದ ಸ್ಕಿ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಅವರಿಗೆ 34 ವರ್ಷ ವಯಸ್ಸಾಗಿತ್ತು. ಮೋಂಟನೆಗ್ರೊದಲ್ಲಿರುವ ಸಾವನ್ ಕಕ್ ಎಂಬಲ್ಲಿ ಸ್ಕೀಯಿಂಗ್ನಲ್ಲಿ ಪಾಲ್ಗೊಂಡಿದ್ದಾಗ, ಹರ್ಟನರ್ ಸುಮಾರು 70 ಮೀಟರ್ ಎತ್ತರದಿಂದ ಬಿದ್ದು ಸಾವನ್ನಪ್ಪಿದರು ಎಂದು ಜರ್ಮನ್ ಪತ್ರಿಕೆ ‘ಬಿಲ್ಡ್’ ವರದಿ ಮಾಡಿದೆ. ವಿಎಫ್ಬಿ ಸ್ಟಟ್ ಗರ್ಟ್ ಅಕಾಡೆಮಿಯಲ್ಲಿ ತರಬೇತಿ ಪಡೆದಿದ್ದ ಅವರು ತನ್ನ 16 ವರ್ಷಗಳ ಕ್ರೀಡಾ ಜೀವನದಲ್ಲಿ ಜರ್ಮನ್ ಫುಟ್ಬಾಲ್ನ ದ್ವಿತೀಯ ಮತ್ತು ತೃತೀಯ ಡಿವಿಶನ್ ಗಳಲ್ಲಿ ಹಲವು ಕ್ಲಬ್ಗಳ ಪರವಾಗಿ ಆಡಿದ್ದರು. ಇತ್ತೀಚೆಗೆ ಅವರು ಉಬರ್ಲಿಗ ಪಂದ್ಯಾವಳಿಯಲ್ಲಿ ಇಟಿಎಸ್ವಿ ಹ್ಯಾಂಬರ್ಗ್ ತಂಡದ ನಾಯಕತ್ವ ವಹಿಸಿದ್ದರು. ಅವರು ಜರ್ಮನಿಯ ಅಂಡರ್-18 ತಂಡದ ಪರವಾಗಿ 14 ಪಂದ್ಯಗಳಲ್ಲಿ ಮತ್ತು ಅಂಡರ್-19 ತಂಡದಲ್ಲಿ ಐದು ಬಾರಿ ಆಡಿದ್ದಾರೆ.
ಕರ್ನಾಟಕ ಕ್ರೀಡಾಕೂಟ 2025-26 ಲಾಂಛನ ಬಿಡುಗಡೆ
ಬೆಂಗಳೂರು, ಡಿ. 24: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಕರ್ನಾಟಕ ಒಲಿಂಪಿಕ್ ಸಂಸ್ಥೆಯ ಸಹಭಾಗಿತ್ವದಲ್ಲಿ ಜನವರಿ 16 ರಿಂದ 22ರವರೆಗೆ ತುಮಕೂರಿನಲ್ಲಿ ನಡೆಯಲಿರುವ ಕರ್ನಾಟಕ ಕ್ರೀಡಾಕೂಟವನ್ನು ಯಶಸ್ವಿಗೊಳಿಸಲು ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಗೃಹ ಸಚಿವ ಹಾಗೂ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವ ಡಾ. ಜಿ. ಪರಮೇಶ್ವರ ಬುಧವಾರ ಹೇಳಿದ್ದಾರೆ. ನಗರದ ಕಂಠೀರವ ಕ್ರೀಡಾಂಗಣದ ಒಲಿಂಪಿಕ್ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ‘ಕರ್ನಾಟಕ ಕ್ರೀಡಾಕೂಟ 2025-26’ರ ಲಾಂಛನ ಬಿಡುಗಡೆಗೊಳಿಸಿ ಅವರು ಮಾತನಾಡುತ್ತಿದ್ದರು. ತುಮಕೂರು ನಗರದಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಡಿ ಕಂಠೀರವ ಸ್ಟೇಡಿಯಂ ಮಾದರಿಯಲ್ಲಿ 70 ಕೋಟಿ ರೂ. ವೆಚ್ಚದಲ್ಲಿ ಜಿಲ್ಲಾ ಕ್ರೀಡಾಂಗಣ ನಿರ್ಮಿಸಲಾಗಿದೆ. ಇಲ್ಲಿ ಸಿಂತೆಟಿಕ್ ಟ್ರ್ಯಾಕ್ ಮತ್ತು ಕ್ರೀಡಾಪಟುಗಳಿಗೆ ವಸತಿ ವ್ಯವಸ್ಥೆ ಇದೆ. ರಾಷ್ಟ್ರೀಯ, ಅಂತರ್ರಾಷ್ಟ್ರೀಯ ಮಟ್ಟದ ಕ್ರೀಡಾಕೂಟಗಳನ್ನು ನಡೆಸುವ ಸಾಮರ್ಥ್ಯವಿದೆ ಎಂದು ಹೇಳಿದರು. ತುಮಕೂರಿನಲ್ಲಿ ನಡೆಯುವ ಕ್ರೀಡಾಕೂಟದಲ್ಲಿ 27 ಕ್ರೀಡೆಗಳನ್ನು ಆಯೋಜನೆ ಮಾಡಲಾಗಿದೆ. ನಾಲ್ಕು ಕ್ರೀಡೆಗಳನ್ನು ಮಾತ್ರ ಬೆಂಗಳೂರಿನಲ್ಲಿ ನಡೆಸಲಾಗುವುದು. ಒಲಿಂಪಿಕ್ ಮಟ್ಟದ ಕ್ರೀಡಾಕೂಟ ಇದಾಗಿದ್ದು, ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ, ಯುವಕರಿಗೆ ಉತ್ತಮ ಅವಕಾಶ ಸಿಗಲಿದೆ. ಕಳೆದ ವರ್ಷ ಮಂಗಳೂರಿನಲ್ಲಿ ಯಶಸ್ವಿಯಾಗಿ ನಡೆದಿತ್ತು. ಈ ಬಾರಿ ತುಮಕೂರಿನಲ್ಲಿ ನಡೆಯುವ ಕ್ರೀಡಾಕೂಟವನ್ನು ಯಶಸ್ವಿಯಾಗಿ ನಡೆಸಲಾಗುವುದು ಎಂದು ತಿಳಿಸಿದರು. ‘‘ತುಮಕೂರು ಜಿಲ್ಲೆಯಲ್ಲಿ ಕೃಷ್ಣಮೃಗ ಜಿಂಕೆ ಹೆಸರುವಾಸಿಯಾಗಿದೆ. ಈ ಹಿನ್ನೆಲೆಯಲ್ಲಿ ತುಮಕೂರಿನಲ್ಲಿ ನಡೆಯುವ ಕರ್ನಾಟಕ ಕ್ರೀಡಾಕೂಟಕ್ಕೆ ಕೃಷ್ಣಮೃಗ ಜಿಂಕೆಯನ್ನು ಲಾಂಛನಕ್ಕೆ ಬಳಸಲಾಗಿದೆ. ಇದು ಕ್ರೀಡಾಕೂಟದ ಮೊದಲ ಹೆಜ್ಜೆಯಾಗಿದ್ದು, ಯಶಸ್ವಿಗೊಳಿಸಲು ಎಲ್ಲ ರೀತಿಯ ಪ್ರಯತ್ನ ಮಾಡುತ್ತೇವೆ’’ ಎಂದರು. ಈ ಹಿಂದೆ ದಸರಾ ಕ್ರೀಡಾಕೂಟದಲ್ಲಿ ಎಲ್ಲ ಕ್ರೀಡೆಗಳನ್ನು ನಡೆಸಲಾಗುತಿತ್ತು. ಇದನ್ನು ಹೊರತುಪಡಿಸಿದರೆ ಕ್ರೀಡಾಪಟುಗಳಿಗೆ ಬೇರೆ ಅವಕಾಶಗಳು ಸಿಗುತ್ತಿರಲಿಲ್ಲ. ಗೋವಿಂದರಾಜ್ ಅವರು ಕರ್ನಾಟಕ ಒಲಿಂಪಿಕ್ ಸಂಸ್ಥೆಯ ಅಧ್ಯಕ್ಷರಾದ ಬಳಿಕ, ಕಳೆದ 25 ವರ್ಷಗಳಿಂದ ಕ್ರೀಡಾಪಟುಗಳಿಗೆ ಉತ್ತೇಜನ ನೀಡುವ ಕೆಲಸ ಮಾಡುತ್ತಿದ್ದಾರೆ ಎಂದು ಅವರು ಹೇಳಿದರು. ‘‘ಕಬಡ್ಡಿ, ಖೋಖೋ, ಹಾಕಿ ಸೇರಿದಂತೆ ವಿವಿಧ ಕ್ರೀಡಾ ಸಂಸ್ಥೆಗಳಿಗೆ ತಲಾ 50 ಲಕ್ಷ ರೂ. ಮೊತ್ತದ ಅನುದಾನ ನೀಡಲಾಗಿದೆ. ದೇಶದಲ್ಲಿ ಯಾವ ರಾಜ್ಯಗಳೂ ಈ ರೀತಿಯ ಕೆಲಸವನ್ನು ಮಾಡಿಲ್ಲ. ಕ್ರೀಡಾಪಟುಗಳಲ್ಲಿ ಕ್ರೀಡಾಸ್ಪೂರ್ತಿ ಬರಬೇಕಾದರೆ, ಕ್ರೀಡಾಕೂಟಗಳು ಹೆಚ್ಚಾಗಿ ನಡೆಯಬೇಕು ಮತ್ತು ಅದರಲ್ಲಿ ಕ್ರೀಡಾಪಟುಗಳು ಭಾಗವಹಿಸುತ್ತಿರಬೇಕು. ಇದರಿಂದ ಕ್ರೀಡಾಪಟುಗಳಿಗೆ ತಮ್ಮ ಸಾಮರ್ಥ್ಯ ಏನು ಎಂಬುದು ಗೊತ್ತಾಗುತ್ತದೆ. ಮುಂದಿನ ಕ್ರೀಡಾಕೂಟಗಳಿಗೆ ಹೆಚ್ಚಿನ ರೀತಿಯಲ್ಲಿ ಶ್ರಮವಹಿಸಲು ಸಾಧ್ಯವಾಗುತ್ತದೆ’’ ಎಂದರು. ಗೋವಿಂದರಾಜ ಅವರು ತುಮಕೂರಿನಲ್ಲಿ ಕರ್ನಾಟಕ ಕ್ರೀಡಾಕೂಟ ನಡೆಸಲು ಅವಕಾಶ ಕಲ್ಪಿಸಿಕೊಟ್ಟಿದ್ದಾರೆ. ತುಮಕೂರು ದಸರಾ ಯಶಸ್ವಿಯಾಗಿ ನಡೆಸಿದ್ದು, ಕರ್ನಾಟಕ ಕ್ರೀಡಾಕೂಟವನ್ನು ಯಶಸ್ವಿಯಾಗಿ ನಡೆಸಲಾಗುವುದು. ಟೆನಿಸ್, ಬಾಸ್ಕೆಟ್ಬಾಲ್, ಕಬಡ್ಡಿ ಸೇರಿದಂತೆ ಎಲ್ಲಾ ಕ್ರೀಡೆಗಳನ್ನು ನಡೆಸಲು ಸುಸಜ್ಜಿತ ವ್ಯವಸ್ಥೆ ಇದೆ ಎಂದು ತಿಳಿಸಿದರು. ಕರ್ನಾಟಕ ಸರಕಾರದ ದಿಲ್ಲಿ ವಿಶೇಷ ಪ್ರತಿನಿಧಿ ಟಿ.ಬಿ. ಜಯಚಂದ್ರ, ಪಾವಗಡ ಶಾಸಕ ಎಚ್.ವಿ. ವೆಂಕಟೇಶ್, ಕರ್ನಾಟಕ ಒಲಿಂಪಿಕ್ ಸಂಸ್ಥೆಯ ಅಧ್ಯಕ್ಷ ಡಾ. ಕೆ. ಗೋವಿಂದರಾಜ್, ಪ್ರಧಾನ ಕಾರ್ಯದರ್ಶಿ ಟಿ.ಅನಂತರಾಜ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಆಯುಕ್ತ ಚೇತನ್ ಆರ್., ತುಮಕೂರು ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಪ್ರಭು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
Assam | ಸಹಜ ಸ್ಥಿತಿಗೆ ಮರಳಿದ ಪಶ್ಚಿಮ ಕರ್ಬಿ ಅಂಗ್ಲಾಂಗ್
ಗುವಾಹಟಿ, ಡಿ. 24: ಅಸ್ಸಾಂನ ಪಶ್ಚಿಮ ಕರ್ಬಿ ಅಂಗ್ಲಾಂಗ್ ಜಿಲ್ಲೆಯ ಖೆರೋನಿ ಪ್ರದೇಶ ಬುಧವಾರ ಸಹಜ ಸ್ಥಿತಿಗೆ ಮರಳಿದೆ. ಗ್ರಾಮದ ಜಾನುವಾರು ಮೇಯಿಸುವ ಮೀಸಲು ಪ್ರದೇಶ (ವಿಜಿಆರ್) ಹಾಗೂ ವೃತ್ತಿಪರ ಮೇಯಿಸುವ ಮೀಸಲು ಪ್ರದೇಶ (ಪಿಜಿಆರ್) ದಿಂದ ಅತಿಕ್ರಮಣಕಾರರನ್ನು ತೆರೆವುಗೊಳಿಸುವಂತೆ ಆಗ್ರಹಿಸಿ ಪಶ್ಚಿಮ ಕರ್ಬಿ ಅಂಗ್ಲಾಂಗ್ ಜಿಲ್ಲೆಯಲ್ಲಿ ಕಳೆದ ಕೆಲವು ದಿನಗಳಿಂದ ಪ್ರತಿಭಟನೆ ನಡೆಯುತ್ತಿತ್ತು. ಮಂಗಳವಾರ ರಾತ್ರಿ ಹಾಗೂ ಬುಧವಾರ ಬೆಳಗ್ಗೆ ಯಾವುದೇ ಅಹಿತಕರ ಘಟನೆಗಳು ನಡೆದಿಲ್ಲ. ಇಲ್ಲಿ ಹೆಚ್ಚುವರಿ ಪಡೆಗಳನ್ನು ನಿಯೋಜಿಸಲಾಗಿ ಎಂದು ಅಧಿಕಾರಿಗಳು ತಿಳಿಸಿದ್ದಾರೆ ಮಂಗಳವಾರ ನಡೆದ ಹಿಂಸಾಚಾರದಲ್ಲಿ ಇಬ್ಬರು ಮೃತಪಟ್ಟಿದ್ದಾರೆ. 38 ಪೊಲೀಸ್ ಸಿಬ್ಬಂದಿ ಸೇರಿದಂತೆ 45 ಮಂದಿ ಗಾಯಗೊಂಡಿದ್ದಾರೆ. ಪೊಲೀಸರು ಗುಂಡು ಹಾರಿಸಿದ ಪರಿಣಾಮ ಗಂಭೀರ ಗಾಯಗೊಂಡಿದ್ದಾರೆ ಎನ್ನಲಾದ ಬುಡಕಟ್ಟು ಕರ್ಬಿ ಸಮುದಾಯದ ಪ್ರತಿಭಟನಕಾರರೋರ್ವರು ಸ್ಥಳೀಯ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಪ್ರತಿಭಟನಕಾರರು ಬೆಂಕಿ ಹಚ್ಚಿದ ಮನೆಯೊಳಗೆ ಸಿಲುಕಿದ ಬೆಂಗಾಳಿ ಸಮುದಾಯಕ್ಕೆ ಸೇರಿದ ಅಂಗವಿಕರೊಬ್ಬರು ಸಾವನ್ನಪ್ಪಿದ್ದಾರೆ ಎಂದು ಅವರು ಹೇಳಿದ್ದಾರೆ. ಹಿಂಸಾಚಾರದಲ್ಲಿ ಪಾಲ್ಗೊಂಡವರನ್ನು ಬಂಧಿಸುವಂತೆ ಆಗ್ರಹಿಸಿ ಪಶ್ಚಿಮ ಕರ್ಬಿ ಅಂಗ್ಲಾಂಗ್-ಹೋಜೈ ಜಿಲ್ಲೆಯ ಗಡಿ ಪ್ರದೇಶದಲ್ಲಿ ಬುಧವಾರ ಬುಡಕಟ್ಟು ಸಮುದಾಯಕ್ಕೆ ಸೇರದ ಜನರ ಗುಂಪೊಂದು ಪ್ರತಿಭಟನೆ ನಡೆಸಿದೆ. ಹಿಂಸಾಚಾರದಲ್ಲಿ ಮೃತಪಟ್ಟ ಬುಡಕಟ್ಟು ಸಮುದಾಯಕ್ಕೆ ಸೇರದ ವ್ಯಕ್ತಿಗಳ ಕುಟುಂಬಕ್ಕೆ 20 ಲಕ್ಷ ರೂ. ಪರಿಹಾರ ನೀಡುವಂತೆ ಅವರು ಆಗ್ರಹಿಸಿದ್ದಾರೆ.
ಬೆಳ್ತಂಗಡಿ: ಸಮಸ್ತದ ನೂರನೇ ವಾರ್ಷಿಕ ಮಹಾ ಸಮ್ಮೇಳನದ ಪ್ರಚಾರಾರ್ಥ ಆದರ್ಶ ಪ್ರಚಾರ ಸಮ್ಮೇಳನ
ಬೆಳ್ತಂಗಡಿ: ಕಾಸರಗೋಡಿನ ಕುಣಿಯಾದಲ್ಲಿ ನಡೆಯುವ ಸಮಸ್ತದ ನೂರನೇ ವಾರ್ಷಿಕ ಮಹಾ ಸಮ್ಮೇಳನದ ಪ್ರಚಾರಾರ್ಥ ಬೆಳ್ತಂಗಡಿ ತಾಲೂಕು ಜಂಇಯ್ಯತುಲ್ ಉಲಮಾ ಮತ್ತು ಎಸ್.ಕೆ.ಎಸ್.ಎಸ್.ಎಫ್ ಮದ್ದಡ್ಕ ಶಾಖೆಯ ಸಹಯೋಗದಲ್ಲಿ ಮದ್ದಡ್ಕ ಬಂಡಿಮಠ ಮೈದಾನ ತೊಟ್ಟಿ ಉಸ್ತಾದ್ ವೇದಿಕೆಯಲ್ಲಿ ಡಿ. 21 ರಂದು ಆದರ್ಶ ಪ್ರಚಾರ ಸಮ್ಮೇಳನ ನಡೆಯಿತು. ಮಧ್ಯಾಹ್ನ ಸೈಯದ್ ತ್ವಾಹ ತಂಙಳ್ ನೇತೃತ್ವದಲ್ಲಿ ಪಣಕಜೆ ಮಖಾಂ ಝಿಯಾರತಿನೊಂದಿಗೆ ಆರಂಭಗೊಂಡು ಮಸೀದಿ ಅಧ್ಯಕ್ಷರಾದ ನಿಯಾಝ್ ಪಣಕಜೆ ಧ್ವಜ ಹಸ್ತಾಂತರ ಮುಖಾಂತರ ಪ್ರಾರಂಭವಾಯಿತು. ನಂತರ ಬೆಳ್ತಂಗಡಿ ರೇಂಜ್ ಮಟ್ಟದ ಮದರಸ ವಿದ್ಯಾರ್ಥಿಗಳ ತಹ್ದೀಸ್ ಸಮಾವೇಶ ಹಾಗೂ ವಲಯ ವಿಖಾಯ ಸಂಗಮ ನಡೆಯಿತು. ಮಜೀದ್ ದಾರಿಮಿ, ಇಲ್ಯಾಸ್ ಅಝ್ಹರೀ ತರಗತಿ ನಡೆಸಿದರು. ಖಾದರ್ ಬಂಗೇರುಕಟ್ಟೆ ವೀಕ್ಷಕರಾಗಿದ್ದರು. ನಂತರ ಸಂಜೆ ಕಿನ್ನಿಗೋಳಿಯಿಂದ ಉಲಮಾಗಳು ,ಉಮರಾಗಳು,ವಿದ್ಯಾರ್ಥಿಗಳು,ಸೇರಿದಂತೆ ವಿವಿದ ಮದರಸಗಳ ಎಸ್ ಕೆ ಎಸ್ ಬಿ ವಿ ತಂಡಗಳ ಧಫ್ ,ಸ್ಕೌಟ್ ಮತ್ತು ಎಸ್ ಕೆ ಎಸ್ ಎಸ್ ಎಫ್ ವಿಖಾಯ ತಂಡಗಳು,ದಾರುಸ್ಸಲಾಂ ವಿಧ್ಯಾರ್ಥಿಗಳು, ಕಕ್ಕಿಂಜೆ ಜಲಾಲಿಯ ಧರ್ಸ್ ವಿದ್ಯಾರ್ಥಿಗಳ ಆಕರ್ಷಕ ಪ್ರಚಾರ ಜಾಥ ಮುಂಡೂರು ತಂಙಳ್ ದುವಾದೊಂದಿಗೆ ಜುನೈದ್ ಜಿಫ್ರಿ ತಂಙಳ್ ಆತೂರು ಉದ್ಘಾಟಿಸಿದರು. ಸದಖತುಲ್ಲಾ ದಾರಿಮಿ, ಶಂಸುದ್ದೀನ್ ದಾರಿಮಿ, ನೌಶಾದ್ ಅಝ್ಹರಿ, ಅಝೀಝ್ ಅಶ್ಶಾಫಿ, ಬಶೀರ್ ದಾರಿಮಿ, ಝುಬೈರ್ ಕಕ್ಕಿಂಜೆ , ಇಲ್ಯಾಸ್ ಚಿಲಿಂಬಿ, ನೌಶಾದ್ ಮದ್ದಡ್ಕ ರ್ಯಾಲಿಯನ್ನು ನಿಯಂತ್ರಿಸಿದರು. ಎಸ್ ಕೆ ಎಸ್ ಎಸ್ ಎಫ್ ಸ್ವಯಂ ಸೇವಕ ವಿಖಾಯ ತಂಡ ಹೆದ್ದಾರಿ ಸುವ್ಯವವಸ್ಥೆಯನ್ನು ನಿರ್ವಹಿಸಿತು. ಕಕ್ಕಿಂಜೆಯಿಂದ ಸಾಗಿ ಬಂದ ರಿಕ್ಷಾ ಜಾಥಾವೂ ಆಕರ್ಷಣಿಯವಾಗಿತ್ತು. ಮಗ್ರಿಬ್ ನಮಾಜಿನ ನಂತರ ಸಭಾ ಕಾರ್ಯಕ್ರಮವು ಎಸ್ ಕೆ ಎಸ್ ಎಸ್ ಎಫ್ ಬೆಳ್ತಂಗಡಿ ವಲಯ ಅಧ್ಯಕ್ಷರಾದ ಅಬ್ದುರ್ರಝಾಕ್ ಕನ್ನಡಿಕಟ್ಟೆ ಅಧ್ಯಕ್ಷತೆಯಲ್ಲಿ ನಡೆಯಿತು. ಆದಂ ದಾರಿಮಿ ದುಆ ನೆರವೇರಿಸಿದ ಕಾರ್ಯಕ್ರಮದಲ್ಲಿ ಮದ್ದಡ್ಕ ಸ್ವಾಗತ ಸಮಿತಿ ಅಧ್ಯಕ್ಷರಾದ ಸಿರಾಜ್ ಚಿಲಿಂಬಿ ಸ್ವಾಗತಿಸಿದರು. ಸಮಸ್ತ ಕರ್ನಾಟಕ ಕೋಶಾಧಿಕಾರಿಯಾದ ಝೈನುಲ್ ಆಬಿದೀನ್ ತಂಙಳ್ ಬೆಳ್ತಂಗಡಿ ಉದ್ಘಾಟಿಸಿದರು. ಸಮಸ್ತ ಕೇಂದ್ರ ಮುಶಾವರ ಸದಸ್ಯರಾದ ತೋಡಾರ್ ಉಸ್ತಾದ್ ಅನುಗ್ರಹ ಭಾಷಣವನ್ನು ನಡೆಸಿ ಕಾಸರಗೋಡ್ ಕುಣಿಯಾದ ಸಮಸ್ತ ಸಮ್ಮೇಳನ ಯಶಸ್ವಿಗೆ ಕರೆ ನೀಡಿದರು. ಎಸ್ ಕೆ ಎಸ್ ಎಸ್ ಎಫ್ ರಾಜ್ಯ ಕಾರ್ಯದರ್ಶಿ ಅನೀಸ್ ಕೌಸರಿ ಮುಖ್ಯಪ್ರಭಾಷಣ ಮಾಡಿದರು.ಮದ್ದಡ್ಕ ಮದರಸ ವಿಧ್ಯಾರ್ಥಿ ರುಹೈಲ್ ಖಿರಾಅತ್ ಪಠಿಸಿದರು.ಮದ್ದಡ್ಕ ಶಾಖೆಯ ವತಿಯಿಂದ ಚಹಾ ತಿಂಡಿ ವಿತರಣೆ ನಡೆಯಿತು. ಮಗ್ರಿಬ್ ನಮಾಝಿನ ಬಳಿಕ ನಡೆದ ಕಾರ್ಯಕ್ರಮದಲ್ಲಿ ಚೆಯರ್ಮಾನ್ ಐ.ಕೆ ಮೂಸಾ ದಾರಿಮಿ ಕಕ್ಕಿಂಜೆ ಅಧ್ಯಕ್ಷತೆ ವಹಿಸಿದರು. ಕಕ್ಕಿಂಜೆ ಮುದರ್ರಿಸ್ ಸಿಧ್ಧೀಖ್ ಜಲಾಲಿ ಉಸ್ತಾದ್ ದಿಕ್ಸೂಚಿ ಭಾಷಣ ಮಾಡಿದರು. ಪ್ರಮುಖ ವಾಗ್ಮಿ ಅಶ್ಫಾಕ್ ಫೈಝಿ ಬ್ಯಾರಿ ಭಾಷಣ ಮಾಡಿದರು. ಖ್ಯಾತ ವಾಗ್ಮಿ ಅಝೀಝ್ ದಾರಿಮಿ ಚೊಕ್ಕಬೆಟ್ಟು ಶುಭಾಶಯ ಭಾಷಣ ಮಾಡಿದರು. ಪ್ರಖ್ಯಾತ ಸುನ್ನತ್ ಜಮಾಅತಿನ ವಾಗ್ಮಿ ಕೇರಳದ ಜಝೀಲ್ ಕಮಾಲಿ ಫೈಝಿ ಉಸ್ತಾದ್ ಮುಖ್ಯ ಪ್ರಭಾಷಣಗೈಯುತ್ತಾ ಪರಲೋಕ ಜೀವನದ ವಿಜಯವೂ ಮುಸ್ಲಿಮರ ಪ್ರಥಮ ಆದ್ಯತೆ. ಈ ನಿಟ್ಟಿನಲ್ಲಿ ಸಮಸ್ತದ ಸುಂದರ ಹಾದಿಯಲ್ಲಿ ಸಾಗಿದರೆ ಮಾತ್ರ ಇದನ್ನು ಗಳಿಸಬಹುದು. ಸಮಸ್ತದ ಸಮ್ಮೇಳನ ಮತ್ತು ಸಯ್ಯಿದುಲ್ ಉಲಮಾರ ಶತಾಬ್ದಿ ಯಾತ್ರೆ ವಿಜಯಗೊಳಿಸಲು ಕರೆ ನೀಡಿದರು. ರೇಜ್ ಅಧ್ಯಕ್ಷರಾದ ಅಶ್ರಫ್ ಫೈಝಿ ಮತ್ತು ಸ್ವಾಗತ ಸಮಿತಿಯ ಉಪಾಧ್ಯಕ್ಷರಾದ ನಝೀರ್ ಅಝ್ಹರಿಯವರು ಶುಭ ಹಾರೈಸಿದರು. ಶಂಸುದ್ದೀನ್ ಅಶ್ರಫಿ ಗಣ್ಯರಿಗೆ ಸ್ಮರಣಿಕೆ ನೀಡಿ ಗೌರವಿಸಿದರು. ಇಸ್ಮಾಯಿಲ್ ಫೈಝಿ,ದ ಕ ಖಾಝಿ ಸುಪುತ್ರ ಹುಸೈನ್ ರಹ್ಮಾನಿ , ಶಾಫಿ ಫೈಝಿ, ಇಸ್ಮಾಯಿಲ್ ಯಮಾನಿ, ಲತೀಫ್ ಗುರುಪುರ, ಯಾಕುಬ್ ವೈ ಕೆ ಕನ್ನಡಿಕಟ್ಟೆ , ಉಸ್ಮಾನ್ ಹಾಜಿ ಏರ್ ಇಂಡಿಯಾ, ಶಮೀಂ ವಕೀಲರು, ನವಾಝ್ ವಕೀಲರು, ಉಮರ್ ಹಾಜಿ ಉಪ್ಪಿನಂಗಡಿ, ಅಝೀಝ್ ಮಾಲಿಕ್, ಅಹ್ಮದ್ ಹುಸೇನ್, ಇಸ್ಮಾಯಿಲ್ ಬಂಗೇರುಕಟ್ಟೇ, ಸಲಾಂ ಬೂಟ್ ಬಝಾರ್, ಹಾಶಿಂ ಫೈಝಿ ಉಪಸ್ಥಿತರಿದ್ದರು. ನಿಝಾಮುದ್ದೀನ್ ಅನ್ಸಾರಿ ನಿರೂಪಿಸಿದರು. ಅಲ್ ಕೌಸರ್ ಮೀಡಿಯಾ ಕಾರ್ಯಕ್ರಮದ ಪ್ರಸಾರವನ್ನು ಮಾಡಿತ್ತು. ಪ್ರಧಾನ ಸಂಚಾಲಕರಾದ ಇಸ್ಮಾಯಿಲ್ ದಾರಿಮಿ ಸ್ವಾಗತಿಸಿ ಸಂಚಾಲಕರಾದ ರಿಯಾಝ್ ಫೈಝಿ ಕಕ್ಕಿಂಜೆ ಧನ್ಯವಾದ ನಡೆಸಿದರು.
ರಾಜ್ಯ ಸರಕಾರ ಪ್ರತೀ ವಿಷಯಕ್ಕೂ ಕೇಂದ್ರ ಸರಕಾರವನ್ನು ದೂರುತ್ತಾ ಕೂತರೆ ಪ್ರಯೋಜನ ಇಲ್ಲ: ಎಚ್.ಡಿ.ದೇವೇಗೌಡ
ಬೆಂಗಳೂರು: ರಾಜ್ಯ ಸರಕಾರ ಪ್ರತೀ ವಿಷಯಕ್ಕೂ ಬೆಳಗಿನಿಂದ ಸಂಜೆಯವರೆಗೂ ಕೇಂದ್ರ ಸರಕಾರವನ್ನು ದೂರುತ್ತಾ ಕೂತರೆ ಪ್ರಯೋಜನ ಇಲ್ಲ. ಈ ನಡೆಯಿಂದ ಏನೂ ಸಾಧನೆ ಮಾಡಲು ಸಾಧ್ಯವಿಲ್ಲ ಎಂದು ಮಾಜಿ ಪ್ರಧಾನಿ, ಜೆಡಿಎಸ್ ಪಕ್ಷದ ವರಿಷ್ಠ ಎಚ್.ಡಿ.ದೇವೇಗೌಡರು ಹೇಳಿದ್ದಾರೆ. ಬುಧವಾರ ನಗರದ ಜೆಪಿ ಭವನದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ಹಣಕಾಸು ಸಚಿವರಾಗಿದ್ದಾಗ ಕೇಂದ್ರ ಸರಕಾರದಲ್ಲಿ ಡಾ.ಮನಮೋಹನ ಸಿಂಗ್ ಅವರು ಹಣಕಾಸು ಸಚಿವರಾಗಿದ್ದರು. ನಮ್ಮ ಪಕ್ಷದ ಪ್ರಣಾಳಿಕೆಯಲ್ಲಿ ನೀಡಲಾಗಿದ್ದ ಭರವಸೆಯಂತೆ ರೈತರ ಸಾಲದ ಮೇಲಿನ ಸುಸ್ತಿ ಬಡ್ಡಿ ಮನ್ನಾ ಮಾಡಲು ಪತ್ರ ಬರೆದಾಗ ಕೇಂದ್ರ ಮನಮೋಹನ್ ಸಿಂಗ್, ಆಗಿನ ಪ್ರಧಾನಿ ಪಿ.ವಿ.ನರಸಿಂಹರಾವ್, ನಬಾರ್ಡ್ ಯಾರೂ ಕೂಡ ಒಪ್ಪಿಗೆ ಕೊಡಲಿಲ್ಲ ಎಂದು ಆರೋಪಿಸಿದರು. ಈಗ ನೋಡಿದರೆ ರಾಜ್ಯ ಸರಕಾರ ಬೆಳಗಿನಿಂದ ಸಂಜೆಯವರೆಗೂ ಕೇಂದ್ರ ಸರ್ಕಾರದ ಮೇಲೆ ಆರೋಪ ಮಾಡುತ್ತ ಕಾಲಹರಣ ಮಾಡುತ್ತಿದೆ. ಹೀಗೆ ಟೀಕೆ ಮಾಡುತ್ತಾ ಹೋದರೆ ಆಗುವ ಪ್ರಯೋಜನ ಏನು? ಮುಖ್ಯಮಂತ್ರಿ ಆದವರು ಪ್ರಧಾನಿಗಳ ಅಧ್ಯಕ್ಷತೆಯಲ್ಲಿ ನಡೆಯುವ ದಿಶಾ ಸಭೆಗೆ ಹೋಗಿ ರಾಜ್ಯಕ್ಕೆ ಏನು ಬೇಕು ಎಂಬುದರ ಬಗ್ಗೆ ಚರ್ಚೆ ಮಾಡಿ ಹೋರಾಟ ಮಾಡಬೇಕು ಎಂದರು. ಸಮಾವೇಶ: ಜ.30ರಂದು ಸಂಸತ್ನ ಜಂಟಿ ಅಧಿವೇಶನ ಶುರುವಾಗುತ್ತಿದ್ದು, ಅದಕ್ಕೂ ಮೊದಲೇ ಜ.23ರಿಂದ 25ರ ನಡುವೆ ಹಾಸನ ಹಾಗೂ ಬಾಗಲಕೋಟೆ ಭಾಗದಲ್ಲಿ ಪಕ್ಷದ ವತಿಯಿಂದ ತಲಾ ಒಂದು ಸಮಾವೇಶ ನಡೆಸಲಾಗುವುದು. ಈ ಬಗ್ಗೆ ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ ಅವರಿಗೆ ತಿಳಿಸಿದ್ದೇನೆ. ರಾಜ್ಯ ಸರಕಾರದ ವೈಫಲ್ಯಗಳು, ಕುಮಾರಸ್ವಾಮಿ ಆಡಳಿತಾವಧಿಯಲ್ಲಿ ಜಾರಿಗೊಳಿಸಿದ್ದ ಜನಪರ ಕಾರ್ಯಕ್ರಮಗಳನ್ನು ಮುಂದುವರೆಸದಿರುವುದರ ಬಗ್ಗೆ ಸಮಾವೇಶದಲ್ಲಿ ಪ್ರಸ್ತಾಪಿಸಲಾಗುವುದು ಎಂದು ಅವರು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ವಿಧಾನ ಪರಿಷತ್ ಸದಸ್ಯ ಟಿ.ಎನ್.ಜವರಾಯಿ ಗೌಡ, ಮಾಜಿ ಸದಸ್ಯರಾದ ಕೆ.ಎ. ತಿಪ್ಪೇಸ್ವಾಮಿ, ಚೌಡರೆಡ್ಡಿ ತೂಪಲ್ಲಿ, ಜೆಡಿಎಸ್ ಮುಖಂಡ ರೋಷನ್ ಅಬ್ಬಾಸ್ ಸೇರಿದಂತೆ ಪ್ರಮುಖರಿದ್ದರು. ಗಾಂಧೀಜಿ ಮೇಲೆ ಕಾಂಗ್ರೆಸ್ ಅಕ್ಕರೆ ಬಗ್ಗೆ ಗೊತ್ತಿದೆ! ನರೇಗಾ ಯೋಜನೆ ಹೆಸರನ್ನು ಬದಲಾವಣೆ ಮಾಡಿದರು ಎನ್ನುವ ಕಾರಣಕ್ಕೆ ಕಾಂಗ್ರೆಸ್ ನಾಯಕರು ನರೇಂದ್ರ ಮೋದಿ ಅವರ ಬಗ್ಗೆ ಟೀಕೆ ಮಾಡುತ್ತಿದ್ದಾರೆ. ಆದರೆ, ಕಾಂಗ್ರೆಸ್ ಆಡಳಿತ ನಡೆಸುತ್ತಿದ್ದಾಗ ಮಹಾತ್ಮ ಗಾಂಧೀಜಿ ಅವರಿಗೆ ಎಷ್ಟು ಗೌರವ ನೀಡಿದ್ದಾರೆ ಎನ್ನುವುದು ನನಗೆ ಗೊತ್ತಿದೆ ಎಂದು ಎಚ್.ಟಿ.ದೇವೇಗೌಡ ಟೀಕಿಸಿದ್ದಾರೆ.
ಉನ್ನಾವೊ ಅತ್ಯಾಚಾರ ಪ್ರಕರಣ | “ಘರ್ ತೋ ಉನ್ ಕಾ ಉನ್ನಾವೊ ಹೈ”: ಸಂತ್ರಸ್ತೆಯನ್ನು ಅಣಕಿಸಿದ Uttar Pradesh ಸಚಿವ
ಲಕ್ನೋ,ಡಿ.24: ಉನ್ನಾವೊ ಅತ್ಯಾಚಾರ ಪ್ರಕರಣದ ಸಂತ್ರಸ್ತೆಯನ್ನು ಬುಧವಾರ ಅಣಕಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಓಂ ಪ್ರಕಾಶ್ ರಾಜಭರ್, ದಿಲ್ಲಿಯಲ್ಲಿ ಪ್ರತಿಭಟನೆ ನಡೆಸುತ್ತಿರುವುದಕ್ಕಾಗಿ ಅವರನ್ನು ಅಪಹಾಸ್ಯ ಮಾಡಿದರು. ಮಂಗಳವಾರ ದಿಲ್ಲಿ ಉಚ್ಚ ನ್ಯಾಯಾಲಯವು ಅತ್ಯಾಚಾರ ಪ್ರಕರಣದಲ್ಲಿ ಮಾಜಿ ಬಿಜೆಪಿ ಶಾಸಕ ಕುಲದೀಪ್ ಸೆಂಗಾರ್ ನ ಜೈಲು ಶಿಕ್ಷೆಯನ್ನು ಆತನ ಮೇಲ್ಮನವಿ ಇತ್ಯರ್ಥಗೊಳ್ಳುವವರೆಗೆ ಅಮಾನತಿನಲ್ಲಿರಿಸಿದ ಬಳಿಕ ಸಂತ್ರಸ್ತೆ ಮಹಿಳೆ ಮತ್ತು ಕುಟುಂಬ ಸದಸ್ಯರು ದಿಲ್ಲಿಯ ಇಂಡಿಯಾ ಗೇಟ್ ಬಳಿ ಪ್ರತಿಭಟನೆ ನಡೆಸಿದ್ದರು. ಉತ್ತರ ಪ್ರದೇಶದಲ್ಲಿ ಬಿಜೆಪಿಯ ಮಿತ್ರಪಕ್ಷ ಸುಹೇಲದೇವ್ ಭಾರತೀಯ ಸಮಾಜ ಪಾರ್ಟಿಯ (ಎಸ್ಬಿಎಸ್ಪಿ) ಮುಖ್ಯಸ್ಥರಾಗಿರುವ ರಾಜಭರ್ ಮಂಗಳವಾರ ಬೆಳಿಗ್ಗೆ ವಿಧಾನಸಭಾ ಅಧಿವೇಶನದಲ್ಲಿ ಪಾಲ್ಗೊಳ್ಳಲು ತೆರಳುತ್ತಿದ್ದಾಗ ಈ ಹೇಳಿಕೆಯನ್ನು ನೀಡಿದರು. ಪೋಲಿಸ್ ಸಿಬ್ಬಂದಿಗಳು ಸಂತ್ರಸ್ತೆಯನ್ನು ಎಳೆದೊಯ್ಯುತ್ತಿದ್ದ ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದ ಬಳಿಕ ಆಕೆಯ ಬಗ್ಗೆ ದಿಲ್ಲಿ ಪೋಲಿಸರ ಅಸಡ್ಡೆಯ ಕುರಿತು ಸುದ್ದಿಗಾರರು ರಾಜಭರ್ ಅವರನ್ನು ಪ್ರಶ್ನಿಸಿದ್ದರು. ಸಂತ್ರಸ್ತೆಯನ್ನು ಇಂಡಿಯಾ ಗೇಟ್ ಬಳಿ ಪೋಲಿಸರು ವಶಕ್ಕೆ ತೆಗೆದುಕೊಂಡಿದ್ದರು ಎಂದು ಓರ್ವ ಸುದ್ದಿಗಾರ ಹೇಳಿದಾಗ ಗಹಗಹಿಸಿ ನಕ್ಕ ರಾಜಭರ್, ‘ಇಂಡಿಯಾ ಗೇಟ್? ಉನ್ ಕಾ ಘರ್ ತೋ ಉನ್ನಾವೊ ಹೈ(ಉನ್ನಾವೊ ಅವರ ಮನೆಯಾಗಿದೆ)ʼ ಎಂದು ಹೇಳಿದರು. ‘ಸೆಂಗಾರ್ ಸಂತ್ರಸ್ತೆಯ ಕುಟುಂಬದಿಂದ ದೂರವಿರಬೇಕು, ಐದು ಕಿ.ಮೀ.ಅಂತರವನ್ನು ಕಾಯ್ದುಕೊಳ್ಳಬೇಕು ಎಂದು ನ್ಯಾಯಾಲಯವು ನಿರ್ದೇಶನಗಳನ್ನು ಹೊರಡಿಸಿದೆ. ಭದ್ರತೆಯನ್ನು ಖಚಿತಪಡಿಸಿ ನ್ಯಾಯಾಲಯವು ನಿರ್ದೇಶನಗಳನ್ನು ನೀಡಿರುವಾಗ ದಿಲ್ಲಿಯಲ್ಲೇಕೆ ಧರಣಿ? ಇಲ್ಲಿ ಭದ್ರತೆಯ ಕೊರತೆಯ ಪ್ರಶ್ನೆ ಎಲ್ಲಿದೆ?’ ಎಂದರು. ಪ್ರತಿಕ್ರಿಯೆಯನ್ನು ಕೋರಿ ಸುದ್ದಿಸಂಸ್ಥೆಯ ಕರೆಗಳಿಗೆ ರಾಜಭರ್ ಉತ್ತರಿಸಲಿಲ್ಲವಾದರೂ ಅವರ ಪುತ್ರ ಹಾಗೂ ಎಸ್ಬಿಎಸ್ಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣ ರಾಜಭರ್,‘ಹಾಗಾದರೆ ಓಂ ಪ್ರಕಾಶ್ ರಾಜಭರ್ ಅವರು ಈ ಬಗ್ಗೆ ಅಳಬೇಕು, ಅಂದರೆ ಸರಿಯಾಗುತ್ತದೆ. ಪ್ರಕರಣದಲ್ಲಿ ತನಿಖೆಯನ್ನು ಈಗಾಗಲೇ ನಡೆಸಲಾಗಿದೆ. ಕುಟುಂಬಕ್ಕೆ ಭದ್ರತೆಯ ಕುರಿತು ನ್ಯಾಯಾಲಯವು ನಿರ್ದೇಶನಗಳನ್ನು ನೀಡಿದೆ. ಹೇಳುವುದೇನೂ ಬಾಕಿಯಿಲ್ಲ’ ಎಂದರು.
ವೀರಪ್ಪನ್ಗಿಂತ ಸಿದ್ದರಾಮಯ್ಯ ಕಾಲದಲ್ಲೇ ಆನೆ ಸಾವು ಅಧಿಕ: ಆರ್. ಅಶೋಕ್
ಬೆಂಗಳೂರು: ಕಾಡುಗಳ್ಳ ವೀರಪ್ಪನ್ ಹಾವಳಿಗಿಂತಲೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಡಳಿತಾವಧಿಯಲ್ಲಿ ಅತಿ ಹೆಚ್ಚು ಆನೆಗಳು ಸಾವನ್ನಪ್ಪುತ್ತಿವೆ ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಟೀಕಿಸಿದ್ದಾರೆ. ಬುಧವಾರ ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ವೀರಪ್ಪನ್ ತನ್ನ 25 ವರ್ಷಗಳ ಕಾಡುಗಳ್ಳತನದ ಅವಧಿಯಲ್ಲಿ ಸುಮಾರು 500 ಆನೆಗಳನ್ನು ಕೊಂದಿರಬಹುದು. ಆದರೆ, ಈ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ಕೇವಲ ಎರಡೂವರೆ ವರ್ಷದಲ್ಲಿ ಬರೋಬ್ಬರಿ 206 ಆನೆಗಳು ಸಾವನ್ನಪ್ಪಿವೆ. ಸಿದ್ದರಾಮಯ್ಯನವಗಿಂತ ವೀರಪ್ಪನ್ ಉತ್ತಮ ಎನಿಸುತ್ತದೆ ಎಂದರು. 61 ಚಿರತೆ, 19 ನವಿಲು, ಅರಣ್ಯ ಇಲಾಖೆಯ ಸುಪರ್ದಿಯಲ್ಲಿದ್ದ ಜಿಂಕೆಗಳು ಸತ್ತಿವೆ. ಜಿಂಕೆ ಮಾಂಸ ಮಾರಾಟವಾಗುತ್ತಿದೆ. ವಿದೇಶದಿಂದ ಹಾವುಗಳನ್ನು ತಂದು ಮಾರಾಟ ಮಾಡಲಾಗುತ್ತಿದೆ. ಇದನ್ನು ತಡೆಯುವ ಬದಲು ಸಫಾರಿ ರದ್ದು ಮಾಡಲಾಗಿದೆ. ಯಾವುದೇ ರಾಜ್ಯಗಳಲ್ಲಿ ಸಫಾರಿ ರದ್ದು ಮಾಡಿಲ್ಲ. ಸಫಾರಿಯಿಂದ ವನ್ಯಜೀವಿ ಸಂಘರ್ಷ ಆಗುತ್ತಿಲ್ಲ. ಸಫಾರಿ ಮಾಡುವ ಜಂಗಲ್ ರೆಸಾರ್ಟ್ಗಳಲ್ಲಿ 6,000 ಸಿಬ್ಬಂದಿ ಇದ್ದಾರೆ. ಇದರಿಂದಾಗಿ ಪ್ರವಾಸೋದ್ಯಮ ಕುಸಿತವಾಗಿದೆ. ರೈತರು, ಸ್ಥಳೀಯರಿಗೆ ಇದರಿಂದ ನಷ್ಟವಾಗಿದೆ ಎಂದು ಅವರು ಹೇಳಿದರು. ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಚರ್ಚೆಯಾಗಿದೆ. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆ ಭಾಗಕ್ಕೆ ಹೊಸದಾಗಿ ಏನೂ ನೀಡಿಲ್ಲ. ಉತ್ತರ ಕರ್ನಾಟಕದ ಸಮಸ್ಯೆಗಳಿಗೆ ಸಂಬಂಧಿಸಿದಂತೆ ನಾನು ಎರಡು ಗಂಟೆ ಮಾತಾಡಿದ್ದೇನೆ. ಆದರೆ, ಈ ರಾಜ್ಯ ಸರಕಾರ ಯಾವುದೇ ಹೊಸ ಘೋಷಣೆ ಮಾಡದೆ ಸಂಪೂರ್ಣ ವಿಫಲವಾಗಿದೆ ಎಂದು ವಾಗ್ದಾಳಿ ನಡೆಸಿದರು. ಗೃಹಲಕ್ಷ್ಮೀ ಯೋಜನೆಗೆ ಹಣ ನೀಡಲು ಏಕೆ ವಿಳಂಬವಾಗಿದೆ ಎಂದು ಸರ್ಕಾರ ಸರಿಯಾಗಿ ತಿಳಿಸಿಲ್ಲ. 1.26 ಕೋಟಿ ಮಹಿಳೆಯರಿಗೆ ಅನ್ಯಾಯವಾಗಿದ್ದು, ಇದು ದೊಡ್ಡ ಹಗರಣವಾಗಿದೆ. ಫೆಬ್ರವರಿ ಹಾಗೂ ಮಾರ್ಚ್ನ ಹಣ ಏನಾಗಿದೆ ಎಂಬುದನ್ನು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಇನ್ನೂ ಹೇಳಿಲ್ಲ. ಮಹಿಳೆಯರಿಗೆ ಹಣ ಸಿಗುವವರೆಗೆ ನಾವು ಹೋರಾಟ ಮಾಡುತ್ತೇವೆ ಎಂದು ಅಶೋಕ್ ಹೇಳಿದರು.
ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ ದಿಢೀರ್ ದಾಳಿ; ಮೊಬೈಲ್, ಇಯರ್ ಬಡ್ಸ್, ಸಿಮ್ಕಾರ್ಡ್ ಪತ್ತೆ
ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ದಿಢೀರ್ ತಪಾಸಣೆ ನಡೆಸಿದ ಅಧಿಕಾರಿಗಳು, ಕೈದಿಗಳ ಬ್ಯಾರಕ್ಗಳಲ್ಲಿ ಮೊಬೈಲ್ಗಳು, ಸಿಮ್ಕಾರ್ಡ್ಗಳು, ಚಾರ್ಜರ್ಗಳು ಮತ್ತು ಇಯರ್ ಬಡ್ಸ್ಗಳಂತಹ ನಿಷೇಧಿತ ವಸ್ತುಗಳನ್ನು ಪತ್ತೆ ಮಾಡಿದ್ದಾರೆ. ಈ ಸಂಬಂಧ ಕಾರಾಗೃಹ (ತಿದ್ದುಪಡಿ) ಅಧಿನಿಯಮ 2022ರ ಅನ್ವಯ ಪ್ರಕರಣ ದಾಖಲಿಸಲಾಗಿದೆ. ಈ ಕಾರ್ಯಾಚರಣೆಗೆ ಸಹಕರಿಸಿದ ಸಿಬ್ಬಂದಿಗೆ 5 ಸಾವಿರ ರೂ. ನಗದು ಬಹುಮಾನ ಮತ್ತು ಪ್ರಶಂಸನಾ ಪತ್ರ ನೀಡಿ ಗೌರವಿಸಲಾಗಿದೆ.
ಬಾಂಗ್ಲಾದೇಶ ಬೆನ್ನಲ್ಲೇ ಅಸ್ಸಾಂನಲ್ಲಿ ಭುಗಿಲೆದ್ದ ಹಿಂಸಾಚಾರ: ಇಬ್ಬರ ಸಾವು, ಸೇನೆ ಮಧ್ಯಪ್ರವೇಶ
ಗುವಾಹಟಿ: ಈಶಾನ್ಯ ಭಾರತದ ಅಸ್ಸಾಂ ರಾಜ್ಯದಲ್ಲಿ ಹಿಂಸಾಚಾರ ಭುಗಿಲೆದ್ದಿದೆ. ಅಸ್ಸಾಂನ ಹಿಂಸಾಚಾರ ಪೀಡಿತ ಪಶ್ಚಿಮ ಕರ್ಬಿ ಅಂಗ್ಲಾಂಗ್ ಜಿಲ್ಲೆಯಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಲು ಸೇನೆಯನ್ನು ನಿಯೋಜಿಸಲಾಗಿದೆ ಎಂದು ಪೊಲೀಸ್ ಮಹಾನಿರ್ದೇಶಕರು ತಿಳಿಸಿದ್ದಾರೆ. ಇಲ್ಲಿನ ಮಣಿಪುರ ರಾಜ್ಯದಲ್ಲಿ ಈಗಾಗಲೇ ಆಂತರಿಕ ಕಲಹ ಶುರುವಾಗಿ ವರ್ಷಗಳೇ ಆಗಿವೆ. ಇದೀಗ ಈಶಾನ್ಯ ಭಾರತದ ಮತ್ತೊಂದು ರಾಜ್ಯದಲ್ಲಿ ಹಿಂಸಾಚಾರ ಭುಗಿಲೆದಿದ್ದೆ. ಅಸ್ಸಾಂನ
ಮನುಷ್ಯ ಜೀವಕ್ಕೆ ಗೌರವಿಸುವ ಸಂಸ್ಕೃತಿ ಬೆಳೆಸಿಕೊಳ್ಳಿ: ಬಿಷಪ್ ಸಲ್ಡಾನ
ಮಂಗಳೂರು,ಡಿ.24: ಸಮಾಜದಲ್ಲಿ ಪ್ರೀತಿಯ ಮತ್ತು ಜೀವದ ಸಂಸ್ಕೃತಿ ಇದೆ. ಮನುಷ್ಯ ಜೀವಕ್ಕೆ ಗೌರವ ಕೊಡುವ ಸಂಸ್ಕೃತಿಯನ್ನು ಕ್ರೆಸ್ತರು ಬೆಳೆಸಿಕೊಳ್ಳುತ್ತಿದ್ದಾರೆ ಎಂದು ಮಂಗಳೂರು ಕ್ರೆಸ್ತ ಧರ್ಮಪ್ರಾಂತದ ಬಿಷಪ್ ಡಾ.ಪೀಟರ್ ಪಾವ್ಲ್ ಸಲ್ಡಾನ ಹೇಳಿದರು. ನಗರದ ರೊಸಾರಿಯೋ ಕೆಥೆಡ್ರಲ್ನಲ್ಲಿ ಬುಧವಾರ ಕ್ರಿಸ್ಮಸ್ ಹಬ್ಬದ ವಿಶೇಷ ಬಲಿಪೂಜೆಯ ನೇತೃತ್ವ ವಹಿಸಿ ಅವರು ಸಂದೇಶ ನೀಡಿದರು. ಏಸುಸ್ವಾಮಿಯ ವಿಶ್ವಾಸಿಗಳು ಪ್ರತ್ಯೇಕವಾಗಿ ಜಗತ್ತಿನಲ್ಲಿ ಶಾಂತಿ ಮತ್ತು ಪ್ರೀತಿಯ ದ್ಯೋತಕವಾಗಿದೆ. ನಾನು ನಿಮ್ಮನ್ನು ಪ್ರೀತಿಸಿದಂತೆ, ನೀವು ಎಲ್ಲರನ್ನೂ ಪ್ರೀತಿಸಿರಿ ಎಂಬ ಏಸುವಿನ ಮಾತನ್ನು ಜೀವನದಲ್ಲಿ ಅಳವಡಿಸಿ ಕೊಂಡು ಬದುಕುತ್ತಿದ್ದಾರೆ. ಭಾರತದಲ್ಲಿ ಕ್ರೆಸ್ತರ ಕೊಡುಗೆ ಅಪಾರ. ಪ್ರತ್ಯೇಕವಾಗಿ ಪ್ರೀತಿ ಹಾಗೂ ಸೇವೆಯ ಪ್ರತೀಕವಾದ ಈ ಕ್ರೆಸ್ತರು ಏಸುಕ್ರಿಸ್ತರ ಜೀವನದ ಒಂದು ಪ್ರತಿಫಲನವಾಗಿದೆ. ಕ್ರಿಸ್ಮಸ್ ಹಬ್ಬವು ನಮಗೆ ವಿಶೇಷ ವಾಗಿ ಕ್ರೆಸ್ತನಂತೆ ಆಗಲು ಪ್ರೇರೇಪಿಸುತ್ತದೆ. ನಾವು ಶಾಂತಿಯ ದೂತರಾಗಿ ಮನುಷ್ಯರ ನಡುವೆ ಸೇತುವೆಯಾಗಿ, ಎಲ್ಲರನ್ನೂ ಪ್ರೀತಿಸುವವರಾಗಿ ಬೆಳೆಯಲು ಏಸು ಸ್ವಾಮಿಯ ಕೃಪೆ-ವರಗಳು ನಮಗೆ ಸಹಾಯ ಮಾಡುತ್ತಿವೆ ಎಂದು ಬಿಷಪ್ ಡಾ. ಪೀಟರ್ ಪಾವ್ಲ್ ಸಲ್ಡಾನ ಹೇಳಿದರು. ಈ ಸಂದರ್ಭ ರೊಸಾರಿಯೋ ಕೆಥೆಡ್ರಲ್ನ ಪ್ರಧಾನ ಧರ್ಮಗುರು ಫಾ. ವಲೇರಿಯನ್ ಡಿಸೋಜ, ಸಹಾಯಕ ಧರ್ಮಗುರುಗಳಾದ ಫಾ. ವಲೇರಿಯನ್ ಫೆರ್ನಾಂಡೀಸ್, ಫಾ.ಜೈಸನ್ ಲೋಬೋ ಭಾಗವಹಿಸಿದ್ದರು. *ನಗರದ ಮಿಲಾಗ್ರಿಸ್ ಚರ್ಚ್ನಲ್ಲಿ ಫಾ.ಬೊನವೆಂಚರ್ ನಜರತ್, ಉರ್ವ ಲೇಡಿಹಿಲ್ ಚರ್ಚ್ನಲ್ಲಿ ಫಾ. ಬೆಂಜಮಿನ್ ಪಿಂಟೋ, ಅಶೋಕನಗರದ ಸಂತ ಡೊಮಿನಿಕ್ ಚರ್ಚ್ನಲ್ಲಿ ಫಾ. ಡೇನಿಯಲ್ ಸಂಪತ್ ವೇಗಸ್, ಕೂಳೂರು ಚರ್ಚ್ನಲ್ಲಿ ಫಾ. ವಿಜಯ ವಿಕ್ಟರ್ ಲೋಬೊ ಕ್ರಿಸ್ಮಸ್ ಸಂಭ್ರಮದ ಬಲಿಪೂಜೆಯ ನೇತೃತ್ವ ವಹಿಸಿ ಸಂದೇಶ ನೀಡಿದರು. *ಮಂಗಳೂರು ಕ್ರೆಸ್ತ ಧರ್ಮಪ್ರಾಂತಕ್ಕೆ ಒಳಪಟ್ಟ ಚರ್ಚ್ಗಳಲ್ಲಿ ಸಂಜೆ ಹೊತ್ತು ಕ್ರಿಸ್ಮಸ್ ಕ್ಯಾರೆಲ್ಸ್, ಕ್ರಿಸ್ಮಸ್ ಬಲಿಪೂಜೆ ಹಾಗೂ ಕ್ರಿಸ್ಮಸ್ ಕಾರ್ಯಕ್ರಮಗಳು ನಡೆಯಿತು. ಪರಸ್ಪರ ಶುಭಾಶಯ ಕೋರುವ ಸಿಹಿತಿನಿಸುಗಳು (ಕುಸ್ವಾರ್) ಕೇಕ್ಗಳನ್ನು ನೀಡುವ ದೃಶ್ಯಗಳು ಎಲ್ಲೆಡೆ ಕಂಡು ಬಂತು.
ಜಮ್ಮು-ಕಾಶ್ಮೀರ: ಸೇನಾ ಶಿಬಿರದಲ್ಲಿ ಗುಂಡಿನ ದಾಳಿ; JCO ಮೃತ್ಯು
ಜಮ್ಮು, ಡಿ. 24: ಜಮ್ಮು ಹಾಗೂ ಕಾಶ್ಮೀರದ ಸಾಂಬಾ ಜಿಲ್ಲೆಯ ಸೇನಾ ಶಿಬಿರದ ಒಳಗೆ ನಡೆದ ಗುಂಡಿನ ದಾಳಿ ಘಟನೆಯಲ್ಲಿ ಜೂನಿಯರ್ ಕಮಿಷನ್ಡ್ ಆಫೀಸರ್ (JCO) ಒಬ್ಬರು ಮೃತಪಟ್ಟಿದ್ದಾರೆ ಎಂದು ರಕ್ಷಣಾ ಇಲಾಖೆಯ ವಕ್ತಾರ ಬುಧವಾರ ತಿಳಿಸಿದ್ದಾರೆ. ಈ ಘಟನೆ ಮಂಗಳವಾರ ರಾತ್ರಿ ನಡೆದಿದೆ. ಘಟನೆ ಕುರಿತು ತನಿಖೆ ನಡೆಯುತ್ತಿದೆ ಎಂದು ಅವರು ಹೇಳಿದ್ದಾರೆ. ಆದರೆ, ಅವರು ಯಾವುದೇ ಭಯೋತ್ಪಾದನಾ ದಾಳಿಯ ಸಾಧ್ಯತೆಯನ್ನು ತಳ್ಳಿ ಹಾಕಿದ್ದಾರೆ. ‘‘ಸಾಂಬಾದ ಸೇನಾ ಘಟಕದ JCO ಜಮ್ಮುವಿನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಂದರ್ಭ ಗುಂಡಿನ ದಾಳಿಗೆ ಗುರಿಯಾದರು. ಗಂಭೀರ ಗಾಯಗೊಂಡ ಅವರು ಅನಂತರ ಮೃತಪಟ್ಟರು. ಈ ಹಂತದಲ್ಲಿ ಈ ದಾಳಿಯನ್ನು ಭಯೋತ್ಪಾದನೆಯ ಆಯಾಮದಲ್ಲಿ ನೋಡಲು ಸಾಧ್ಯವಿಲ್ಲ’’ ಎಂದು ವಕ್ತಾರ ಹೇಳಿದ್ದಾರೆ. ‘‘ಈ ಘಟನೆ ಕುರಿತು ತನಿಖೆ ನಡೆಯುತ್ತಿದೆ. ಸತ್ಯಾಸತ್ಯತೆ ದೃಢವಾದ ಬಳಿಕ ಹೆಚ್ಚಿನ ವಿವರಗಳನ್ನು ಹಂಚಿಕೊಳ್ಳಲಾಗುವುದು’’ ಎಂದು ಅವರು ತಿಳಿಸಿದ್ದಾರೆ. ಗುಂಡಿನ ದಾಳಿಯಲ್ಲಿ ಮೃತಪಟ್ಟ ಯೋಧನನ್ನು ಸುಬೇದಾರ್ ಸುರ್ಜೀತ್ ಸಿಂಗ್ ಎಂದು ಸೇನೆಯ ರೈಸಿಂಗ್ ಸ್ಟಾರ್ ಕಾರ್ಪ್ಸ್ ಗುರುತಿಸಿದೆ. ಅಲ್ಲದೆ, ಅವರಿಗೆ ಗೌರವ ನಮನ ಸಲ್ಲಿಸಿದೆ. ‘‘ಜಮ್ಮುವಿನಲ್ಲಿ ಕರ್ತವ್ಯದ ಸಂದರ್ಭ ಪ್ರಾಣ ತ್ಯಾಗ ಮಾಡಿದ ಧೀರ ಸುಬೇದಾರ್ ಸುರ್ಜೀತ್ ಸಿಂಗ್ ಅವರಿಗೆ ರೈಸಿಂಗ್ ಸ್ಟಾರ್ ಕಾರ್ಪ್ಸ್ ಗೌರವ ನಮನ ಸಲ್ಲಿಸುತ್ತದೆ. ಈ ದುಃಖದ ಸಂದರ್ಭ ಭಾರತೀಯ ಸೇನೆ ಮೃತರ ಕುಟುಂಬದೊಂದಿಗೆ ದೃಢವಾಗಿ ನಿಲ್ಲುತ್ತದೆ ಹಾಗೂ ಬೆಂಬಲ ನೀಡುತ್ತದೆೆ’’ ಎಂದು ರಕ್ಷಣಾ ಇಲಾಖೆ ವಕ್ತಾರ ‘ಎಕ್ಸ್’ನ ಪೋಸ್ಟ್ನಲ್ಲಿ ಹೇಳಿದ್ದಾರೆ.
ʼಆಪರೇಷನ್ ಸಿಂದೂರ್ʼ ಸಂದರ್ಭ ಪಾಕ್ಗೆ ಗುಪ್ತಚರ ಮಾಹಿತಿಯೊಂದಿಗೆ ಚೀನಾ ಬೆಂಬಲ: ಅಮೆರಿಕದ ವರದಿ
ವಾಷಿಂಗ್ಟನ್, ಡಿ.24: ಆಪರೇಷನ್ ಸಿಂದೂರ್ ಸಂದರ್ಭ ಚೀನಾವು ಪಾಕಿಸ್ತಾನವನ್ನು ಗುಪ್ತಚರ ಮಾಹಿತಿ ಹಾಗೂ ಮಾಹಿತಿ ಯುದ್ದದ ಮೂಲಕ ಬೆಂಬಲಿಸಿತ್ತು ಎಂದು ಅಮೆರಿಕದ ರಕ್ಷಣಾ ಇಲಾಖೆಗೆ ಸಂಬಂಧಿಸಿದ ವರದಿ ಹೇಳಿದೆ. ಭಾರತದ ವಿರುದ್ಧ `ಬಹಿರಂಗ ಯುದ್ದದ' ಮಿತಿಯನ್ನು ದಾಟದೆ ನಿರಂತರ ಒತ್ತಡವನ್ನು ಅನ್ವಯಿಸಲು ವಿನ್ಯಾಸಗೊಳಿಸಲಾದ ಕಾರ್ಯಾಚರಣೆ ಮತ್ತು ಸಂಘಟಿತ `ಬೂದು ವಲಯ' ಕಾರ್ಯತಂತ್ರಗಳ ನೀತಿಯನ್ನು ಚೀನಾ ಮತ್ತು ಪಾಕಿಸ್ತಾನವು ಅಳವಡಿಸಿಕೊಂಡಿದೆ. ಈ ಹೊಸ ಸಿದ್ಧಾಂತದ ಮಹತ್ವದ ಪರೀಕ್ಷಾ ಉಪಕ್ರಮಕ್ಕೆ ʼಆಪರೇಷನ್ ಸಿಂಧೂರ್ʼ ಅನ್ನು ವೇದಿಕೆಯಾಗಿ ಬಳಸಿಕೊಳ್ಳಲಾಗಿದೆ ಎಂದು ವರದಿಯನ್ನು ಉಲ್ಲೇಖಿಸಿ ಸಿಎನ್ಎನ್-ನ್ಯೂಸ್ 18 ವರದಿ ಮಾಡಿದೆ. ವರದಿಯ ಪ್ರಕಾರ, ಕಾರ್ಯಾಚರಣೆಯ ಸಮಯದಲ್ಲಿ ಪಾಕಿಸ್ತಾನವು ಒತ್ತಡದ ಬಹಿರಂಗ ಅಂಶಗಳನ್ನು ಕಾರ್ಯಗತಗೊಳಿಸಿತು. ಚೀನಾವು ಮಾಹಿತಿ ಯುದ್ಧ, ಸೈಬರ್ ಚಟುವಟಿಕೆ, ಗುಪ್ತಚರ ನೆರವು ಮತ್ತು ರಾಜತಾಂತ್ರಿಕ ಕುಶಲತೆಯನ್ನು ಒಳಗೊಂಡ ಅಗೋಚರ ಯುದ್ಧದ ಮೂಲಕ ಹೆಚ್ಚಾಗಿ ಹಿನ್ನೆಲೆಯಲ್ಲಿ ಉಳಿಯಿತು. ಚೀನಾದ ಉಪಗ್ರಹಗಳ ವ್ಯಾಪ್ತಿ, ಇಲೆಕ್ಟ್ರಾನಿಕ್ ಕಣ್ಗಾವಲು ಮಾಹಿತಿಯು ಪಾಕಿಸ್ತಾನಕ್ಕೆ ಪರಿಸ್ಥಿತಿಯ ಕುರಿತ ಸಾಂದರ್ಭಿಕ ಅರಿವನ್ನು ಹೆಚ್ಚಿಸಿದೆ ಎಂದು ನಂಬಲಾಗಿದೆ. ಇದು ಚೀನಾ ಸೇನೆಯ ನೇರ ಒಳಗೊಳ್ಳುವಿಕೆ ಇಲ್ಲದೆಯೇ ಗುರಿ ಮತ್ತು ಕಾರ್ಯಾಚರಣೆಯ ಸಮನ್ವಯವನ್ನು ಸುಧಾರಿಸಿದೆ. ಪಾಕಿಸ್ತಾನವು ತಕ್ಷಣದ ಕ್ರಮವಾಗಿ ಅಂತರಾಷ್ಟ್ರೀಯ ಪರಿಶೀಲನೆಗೆ ಆಗ್ರಹಿಸುವತ್ತ ಗಮನ ಹರಿಸಿದರೆ, ಚೀನಾವು ನಿಯಂತ್ರಿತ ರಾಜತಾಂತ್ರಿಕ ಸಂದೇಶಗಳು ಮತ್ತು ಆನ್ಲೈನ್ ಮಾಹಿತಿ ಅಭಿಯಾನಗಳ ಮೂಲಕ ಪಾಕಿಸ್ತಾನದ ನಿರೂಪಣೆಯನ್ನು ವರ್ಧಿಸುವತ್ತ ಗಮನ ಹರಿಸಿದೆ. ಪಾಕಿಸ್ತಾನದ ವಿರುದ್ಧದ ಆರೋಪಗಳನ್ನು ಮಸುಕಾಗಿಸಲು, ಭಾರತೀಯರ ಪ್ರತಿಪಾದನೆಯನ್ನು ಪ್ರಶ್ನಿಸಲು ಮತ್ತು ಭಾರತದ ಪರವಾಗಿ ಯಾವುದೇ ಅಂತರಾಷ್ಟ್ರೀಯ ಒಮ್ಮತಾಭಿಪ್ರಾಯ ರಚನೆಗೊಳ್ಳುವುದನ್ನು ನಿಧಾನಗೊಳಿಸುವುದು ಈ ಪ್ರಯತ್ನಗಳ ಗುರಿಯಾಗಿತ್ತು. ಚೀನಾದ ಮಿಲಿಟರಿ ಕಾರ್ಯತಂತ್ರ ಯೋಜಕರು ಭಾರತವನ್ನು ದೀರ್ಘಾವಧಿಯ ಕಾರ್ಯತಂತ್ರದ ಸವಾಲಾಗಿರುವ ಪ್ರಮುಖ ಸಾರ್ವಭೌಮತ್ವ ಎಂದು ಪರಿಗಣಿಸಿದ್ದಾರೆ. ಭಾರತವನ್ನು ಭವಿಷ್ಯದ `ರಾಜಕೀಯ/ಮಿಲಿಟರಿ ಪ್ರಭಾವವನ್ನು ನಿರ್ಬಂಧಿಸುವ' ಗುರಿಯಾಗಿ ಪರಿಗಣಿಸಲಾಗಿದೆ (ವಿಶೇಷವಾಗಿ ಹಿಮಾಲಯದ ಗಡಿ ಮತ್ತು ಹಿಂದೂ ಮಹಾಸಾಗರ ಪ್ರದೇಶದಾದ್ಯಂತ. ಇಲ್ಲಿ ಭಾರತದ ಕಾರ್ಯತಂತ್ರದ ಪ್ರಗತಿಯನ್ನು ಹತ್ತಿಕ್ಕಲು ಚೀನಾ ಬಯಸುತ್ತಿದೆ) ಎಂದು ವರದಿ ಹೇಳಿದೆ. 2024ರ ಅಕ್ಟೋಬರ್ ನಲ್ಲಿ ಚೀನಾವು ವಾಸ್ತವಿಕ ನಿಯಂತ್ರಣ ರೇಖೆಯಾದ್ಯಂತ(ಎಲ್ಎಸಿ) ನಿರ್ಲಿಪ್ತ ಸ್ಥಿತಿ ಕಾಯ್ದುಕೊಳ್ಳುವ ಬಗ್ಗೆ ಭಾರತದೊಂದಿಗೆ ಮಾಡಿಕೊಂಡ ಒಪ್ಪಂದವು ಒಂದು ಲೆಕ್ಕಾಚಾರದ ನಡೆಯೆಂದು ಅಮೆರಿಕದ ರಕ್ಷಣಾ ಇಲಾಖೆ ಪರಿಗಣಿಸಿದೆ. ಪೈಪೋಟಿ ಕಡಿಮೆಯಾಗಿರುವುದನ್ನು ಇದು ಸೂಚಿಸುವುದಿಲ್ಲ. ಅಮೆರಿಕದೊಂದಿಗೆ ರಕ್ಷಣಾ ಹೊಂದಾಣಿಕೆಯನ್ನು ಭಾರತ ಮತ್ತಷ್ಟು ವೇಗಗೊಳಿಸುವುದನ್ನು ತಡೆಯುವ ಕ್ರಮವಾಗಿ ಈ ಲೆಕ್ಕಾಚಾರದ ನಡೆಯನ್ನು ಚೀನಾ ಇಟ್ಟಿದೆ ಎಂದು ವರದಿ ಹೇಳಿದೆ. ಭವಿಷ್ಯದ ಯಾವುದೇ ಭಾರತ-ಚೀನಾ ಸಂಘರ್ಷವೂ ಯುದ್ಧದ ಹೊಸ್ತಿಲಿಗಿಂತ ಕೆಳಮಟ್ಟದಲ್ಲಿ ಪ್ರಾರಂಭವಾಗುವ ಸಾಧ್ಯತೆಯಿದೆ. ಸೈಬರ್ ದಬ್ಬಾಳಿಕೆಗಳು, ಆರ್ಥಿಕ ದಬ್ಬಾಳಿಕೆ, ಮಾಹಿತಿ ಯುದ್ಧತಂತ್ರ ಮತ್ತು ಸೈಬರ್ ದಾಳಿಗಳು ಯುದ್ದಕ್ಕಿಂತ ಮೊದಲು ಸಂಭವಿಸಬಹುದು ಎಂದು ವರದಿಯಲ್ಲಿ ಎಚ್ಚರಿಕೆ ನೀಡಲಾಗಿದೆ. ►ಭಾರತದ ವಿರುದ್ಧ ಒತ್ತಡಕ್ಕೆ ಸಾಧನವಾಗಿ ಪಾಕ್ ಬಳಕೆ ಈ ಲೆಕ್ಕಾಚಾರದಲ್ಲಿ ಪಾಕಿಸ್ತಾನ ಪ್ರಮುಖ ಪಾತ್ರ ವಹಿಸುತ್ತದೆ. ಪಾಕಿಸ್ತಾನವನ್ನು ಭಾರತದ ವಿರುದ್ಧದ `ಒತ್ತಡದ ಗೇಟಿ'ನಂತೆ ಚೀನಾ ಬಳಸಿಕೊಳ್ಳುತ್ತಿದೆ ಎಂದು ಅಮೆರಿಕದ ಗುಪ್ತಚರ ಮೂಲಗಳು ಬಣ್ಣಿಸಿವೆ. ಭಾರತವನ್ನು ವ್ಯೂಹಾತ್ಮಕವಾಗಿ ವಿಚಲಿತಗೊಳಿಸಲು, ವಿಸ್ತರಿಸುತ್ತಿರುವ ಭಾರತ-ಅಮೆರಿಕ ರಕ್ಷಣಾ ಸಹಕಾರವನ್ನು ದುರ್ಬಲಗೊಳಿಸಲು, ಚೀನಾದ ತುಲನಾತ್ಮಕವಾಗಿ ಕಡಿಮೆ ವೆಚ್ಚದ ಹೈಬ್ರಿಡ್ ಯುದ್ಧ ಮಾದರಿಗಳ ಪ್ರಯೋಗಕ್ಕೆ ಈ ತಂತ್ರವನ್ನು ಚೀನಾ ಬಳಸುತ್ತಿದೆ. ಚೀನಾ ಮತ್ತು ಪಾಕಿಸ್ತಾನ ನಡುವಿನ ಸಮನ್ವಯವು ಪೂರ್ಣ ಪ್ರಮಾಣದ ಸಂಘರ್ಷವನ್ನು ಪ್ರಚೋದಿಸದೆ ಬಹು ಆಯಾಮಗಳ ಒತ್ತಡವನ್ನು ಅನ್ವಯಿಸುವ ಪ್ರಮುಖ ಸಾಧನವಾಗಿ ಹೊರಹೊಮ್ಮುತ್ತಿದೆ ಎಂದು ವರದಿಯಲ್ಲಿ ಎಚ್ಚರಿಕೆ ನೀಡಲಾಗಿದೆ.
ಚಿಕಾಗೋದಲ್ಲಿ ನ್ಯಾಷನಲ್ ಗಾರ್ಡ್ ನಿಯೋಜನೆ: ಟ್ರಂಪ್ ಕೋರಿಕೆ ತಿರಸ್ಕರಿಸಿದ ಅಮೆರಿಕದ ಉನ್ನತ ನ್ಯಾಯಾಲಯ
ವಾಷಿಂಗ್ಟನ್, ಡಿ.24: ಇಲಿನಾಯ್ಸ್ ರಾಜ್ಯದ ಚಿಕಾಗೋ ನಗರದಲ್ಲಿ ವಲಸೆ ಮತ್ತು ಕಸ್ಟಮ್ಸ್ ಜಾರಿ ಸೇವೆ(ಐಸಿಇ)ಯ ಏಜೆಂಟರ ಭದ್ರತೆಗೆ ನ್ಯಾಷನಲ್ ಗಾರ್ಡ್ ತುಕಡಿಯನ್ನು ನಿಯೋಜಿಸಲು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮನವಿಯನ್ನು ಅಮೆರಿಕದ ಸುಪ್ರೀಂಕೋರ್ಟ್ ಮಂಗಳವಾರ ನಿರಾಕರಿಸಿದ್ದು, ವಲಸೆ ವಿಚಾರದಲ್ಲಿ ಶ್ವೇತಭವನಕ್ಕೆ ಭಾರೀ ಹಿನ್ನಡೆಯಾಗಿದೆ. ಈ ಪ್ರಾಥಮಿಕ ಹಂತದಲ್ಲಿ, ಇಲಿನಾಯ್ಸ್ನಲ್ಲಿ ಕಾನೂನುಗಳನ್ನು ಕಾರ್ಯಗತಗೊಳಿಸಲು ಮಿಲಿಟರಿಯನ್ನು ಅನುಮತಿಸುವ ಅಧಿಕಾರದ ಮೂಲವನ್ನು ಗುರುತಿಸಲು ಸರಕಾರ ವಿಫಲವಾಗಿದೆ ಎಂದು ಸುಪ್ರೀಂಕೋರ್ಟ್ ಅಭಿಪ್ರಾಯಪಟ್ಟಿದ್ದು ಚಿಕಾಗೋ ನಗರದಲ್ಲಿ ನ್ಯಾಷನಲ್ ಗಾರ್ಡ್ ತುಕಡಿಯನ್ನು ನಿಯೋಜಿಸುವುದನ್ನು ನಿಷೇಧಿಸಿ ಕೆಳಹಂತದ ನ್ಯಾಯಾಲಯ ನೀಡಿದ್ದ ಆದೇಶವನ್ನು ಎತ್ತಿಹಿಡಿದಿದೆ. ನಿಯಮಿತ ಪಡೆಗಳೊಂದಿಗೆ ಅಮೆರಿಕ ಸಂಯುಕ್ತ ಸಂಸ್ಥಾನದ ಕಾನೂನುಗಳನ್ನು ಕಾರ್ಯಗತಗೊಳಿಸಲು ಸಾಧ್ಯವಾಗದಿದ್ದಾಗ ಅಧ್ಯಕ್ಷರು ನ್ಯಾಷನಲ್ ಗಾರ್ಡ್ ಅನ್ನು ನಿಯೋಜಿಸಬಹುದು ಎಂಬ ಅಮೆರಿಕದ ಫೆಡರಲ್ ಕಾನೂನನ್ನು ಸುಪ್ರೀಂಕೋರ್ಟ್ ನ 9 ಸದಸ್ಯರ ನ್ಯಾಯಪೀಠ 6-3 ಬಹುಮತದ ತೀರ್ಪಿನಲ್ಲಿ ಉಲ್ಲೇಖಿಸಲಾಗಿದೆ. ಅವರ ವಲಸೆ ಕಾನೂನುಗಳನ್ನು ಜಾರಿಗೊಳಿಸಲು, ಫೆಡರಲ್ ಸಿಬ್ಬಂದಿಯನ್ನು ರಕ್ಷಿಸಲು ಮತ್ತು ಅಮೆರಿಕದ ಸಾರ್ವಜನಿಕರನ್ನು ರಕ್ಷಿಸಲು ಟ್ರಂಪ್ ನಡೆಸುತ್ತಿರುವ ಪ್ರಯತ್ನಗಳನ್ನು ಈ ತೀರ್ಪು ತಡೆಯುವುದಿಲ್ಲ ಎಂದು ಶ್ವೇತಭವನದ ವಕ್ತಾರೆ ಅಬಿಗೈಲ್ ಜಾಕ್ಸನ್ ಹೇಳಿದ್ದಾರೆ.
ಹೊಸ ವರ್ಷಾಚರಣೆ: ರೆಸಾರ್ಟ್, ಹೋಟೆಲ್ ಮಾಲಕರ ಸಭೆ
ಉಡುಪಿ, ಡಿ.24: ಉಡುಪಿಯಲ್ಲಿ 2026ರ ಹೊಸ ವರ್ಷ ಆಚರಣೆಯ ಸಂದರ್ಭದಲ್ಲಿ ಜಿಲ್ಲೆಯ ಎಲ್ಲಾ ಹೊಟೇಲ್, ಲಾಡ್ಜ್, ಹೋಂಸ್ಟೇ, ರೆಸಾರ್ಟ್ ಗಳು ತೆಗೆದುಕೊಳ್ಳಬೇಕಾದ ಮುಂಜಾಗೃತೆ, ಎಚ್ಚರಿಕೆ ಕುರಿತಂತೆ ಇವುಗಳ ಮಾಲಕರ ಸಭೆಯನ್ನು ಪೊಲೀಸ್ ಇಲಾಖೆ ಇಂದು ಅಜ್ಜರಕಾಡಿನ ಪುರಭವನದಲ್ಲಿ ನಡೆಸಿತು. ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಮ್ ಶಂಕರ್ ಇವರ ಮಾರ್ಗದರ್ಶನ ದಲ್ಲಿ ಸಹಾಯಕ ಪೊಲೀಸ್ ಅಧೀಕ್ಷಕರಾದ ಡಾ.ಹರ್ಷ ಪ್ರಿಯಂವದ ಅವರು 2026 ಹೊಸ ವರ್ಷ ಅಚರಣೆಯ ಸಮಯ ವಹಿಸಬೇಕಾದ ಮುಂಜಾಗ್ರತ ಕ್ರಮ ಹಾಗೂ ಪಾಲಿಸಬೇಕಾದ ಕಾನೂನು ನಿಯಮಗಳ ಬಗ್ಗೆ ಮಾಹಿತಿ ನೀಡಿದರು. ಮಣಿಪಾಲ ಪೊಲೀಸ್ ನಿರೀಕ್ಷಕರಾದ ಮಹೇಶ್ ಪ್ರಸಾದ್, ಸೆನ್ ಪೊಲೀಸ್ ಠಾಣೆಯ ಪಿಎಸ್ಐ ಹರೀಶ್ ಅವರು ಸಹ ವಿವಿಧ ವಿಷಯಗಳಲ್ಲಿ ಮಾಹಿತಿಗಳನ್ನು ನೀಡಿದರು. ಸಭೆಯಲ್ಲಿ ಪೊಲೀಸ್ ಅಧಿಕಾರಿಗಳು ನೀಡಿದ ಸೂಚನೆಗಳಿವು. *ಉಡುಪಿ ಜಿಲ್ಲೆಯ ಎಲ್ಲಾ ಹೊಟೇಲ್, ಲಾಡ್ಜ್, ಹೋಂಸ್ಟೇ, ರೆಸಾರ್ಟ್ ಮಾಲಕರು ಹೊಸ ವರ್ಷಾಚರಣೆಯ ವೇಳೆ ಸುಪ್ರೀಂಕೋರ್ಟ್ ಆದೇಶದಂತೆ ರಾತ್ರಿ 10:00 ಗಂಟೆಯೊಳಗೆ ಧ್ವನಿವರ್ಧಕ ಬಳಕೆಯನ್ನು ಕಡ್ಡಾಯವಾಗಿ ನಿಲ್ಲಿಸುವಂತೆ ಹಾಗೂ ನಿಗದಿತ ಸಮಯದೊಳಗೆ ಎಲ್ಲಾ ಕಾರ್ಯಕ್ರಮಗಳನ್ನು ಮುಕ್ತಾಯಗೊಳಿಸುವಂತೆ ಸೂಚಿಸಲಾಯಿತು. *ಫೈರ್ ಕ್ಯಾಂಪ್ಗಳಿಂದ/ಅಬ್ಬರದ ಸಂಗೀತಗಳಿಂದ ನೆರೆಹೊರೆಯವರ ಶಾಂತಿ ಭಂಗವುಂಟು ಮಾಡುವಂತಿಲ್ಲ. ಹೋಮ್ಸ್ಟೇಗಳು ವಿದೇಶಿ ಪ್ರವಾಸಿಗರು ಒಳಗೊಂಡಂತೆ ಎಲ್ಲಾ ಪ್ರವಾಸಿಗರ ಭದ್ರತೆ ಹಾಗೂ ಸುರಕ್ಷತೆಗಾಗಿ ಅಗತ್ಯ ಸುರಕ್ಷಾ ಕ್ರಮಗಳನ್ನು ಕಡ್ಡಾಯವಾಗಿ ತೆಗೆದುಕೊಳ್ಳತಕ್ಕದ್ದು. *ಹೋಂಸ್ಟೇ/ರೆಸಾರ್ಟ್ಗಳು ಹೊರವಲಯಗಳಲ್ಲಿ ಅಥವಾ ನಿರ್ಜನ ಪ್ರದೇಶಗಳಿಗೆ ಪ್ರವಾಸಿಗರನ್ನು ಕರೆದೊಯ್ಯುವ ಮುಂಚಿತವಾಗಿ ಸಂಬಂಧಿಸಿದ ಅಧಿಕಾರ ವ್ಯಾಪ್ತಿಯುಳ್ಳ ಪೊಲೀಸ್ ಠಾಣೆಯಲ್ಲಿ ಮಾಹಿತಿಯನ್ನು ನೀಡಿ, ಅನುಮತಿ ಪಡೆಯತಕ್ಕದ್ದು. *ಪೊಲೀಸರಿಂದ/ಅರಣ್ಯ ಇಲಾಖೆ ಸಿಬ್ಬಂದಿಯಿಂದ ಪೂರ್ವಾನುಮತಿ ಪಡೆಯದೇ ನಿರ್ಜನ ಪ್ರದೇಶ/ಹೊರವಲಯ ಅಥವಾ ಅರಣ್ಯ ಪ್ರದೇಶ ಗಳಲ್ಲಿ ಪ್ರವಾಸಿಗರನ್ನು ಕರೆದೊಯ್ದಲ್ಲಿ ದುಷ್ಕರ್ಮಿಗಳಿಂದ ಅಥವಾ ಕಾಡು ಪ್ರಾಣಿಗಳಿಂದ ಸಂಭವಿಸುವ ದುರ್ಘಟನೆಗಳಿಗೆ ಆಯಾ ಹೋಮ್ ಸ್ಟೇ ಮಾಲಕರೇ ಜವಾಬ್ದಾರರಾಗುತ್ತಾರೆ ಹಾಗೂ ಕಾನೂನಿನ ಅನ್ವಯ ಶಿಕ್ಷಾರ್ಹ ಅಪರಾಧಕ್ಕೆ ಒಳಪಡುತ್ತಾರೆ. *ಹೋಮ್ ಸ್ಟೇಗಳಲ್ಲಿ ಅತಿಥಿಗಳ ವಾಹನಗಳನ್ನು ಕಡ್ಡಾಯವಾಗಿ ಸಾರ್ವಜನಿಕರಿಗೆ ತೊಂದರೆಯಾಗದಂತೆ ಹೋಂಸ್ಟೇ ನಿರ್ವಹಿಸಿರುವ ಜಾಗದೊಳಗೆ ಪಾರ್ಕಿಂಗ್ ಮಾಡಿಸತಕ್ಕದ್ದು. ಹೋಮ್ಸ್ಟೇಯಲ್ಲಿ ಕಾನೂನು ಬಾಹಿರ ಅನೈತಿಕ ಚಟುವಟಿಕೆಗಳನ್ನು ನಡೆಸುವಂತಿಲ್ಲ. *ಹೋಂ-ಸ್ಟೇಯಲ್ಲಿನ ಎಲ್ಲಾ ಹೊರ ಆವರಣದಲ್ಲಿ ಸಿಸಿ ಕ್ಯಾಮರವನ್ನು ಅಳವಡಿಸಿ ಸದರಿ ಕ್ಯಾಮೆರಾದ ದೃಶಗಳನ್ನು ಕನಿಷ್ಠ ಮೂರು ತಿಂಗಳಾದರೂ ಬ್ಯಾಕ್ ಅಪ್ ಇರುವಂತೆ ಅಳವಡಿಸಬೇಕು. *ವಿದೇಶಿಯರು ಹೋಂ-ಸ್ಟೇಗೆ ಬಂದಾಗ ಅವರ ಸಿ ಫಾರಂ ವಿವರವನ್ನು ಜಿಲ್ಲಾ ಪೊಲೀಸ್ ಅಧೀಕ್ಷಕರ ಕಛೇರಿಯಲ್ಲಿರುವ ವಿದೇಶಿ ವಿಭಾಗಕ್ಕೆ ಸಲ್ಲಿಸಿ ಕಡ್ಡಾಯವಾಗಿ ನಮೂದು ಮಾಡಿ ಸರಹದ್ದಿನ ಠಾಣೆಗೆ ಮಾಹಿತಿ ನೀಡಬೇಕು. *ಹೋಂ-ಸ್ಟೇಗೆ ಬರುವ ಅತಿಥಿಗಳ ಹೆಸರು, ವಿಳಾಸ, ಮೊಬೈಲ್ ಸಂಖ್ಯೆ, ವಾಹನ ನೊಂದಾಣಿ ಸಂಖ್ಯೆ, ಆಧಾರ್ ಕಾರ್ಡ್ ಗುರುತು ಪತ್ರವನ್ನು ಕಡ್ಡಾಯವಾಗಿ ಪಡೆದುಕೊಂಡು ನೊಂದಾವಣಿಯನ್ನು ತೆರೆಯಬೇಕು. * ಹೊಸ ವರ್ಷ ಆಚರಣೆ ಬಗ್ಗೆ ಧ್ವನಿವರ್ಧಕ ಬಳಸುವ ಬಗ್ಗೆ ಕಡ್ಡಾಯವಾಗಿ ಅನುಮತಿ ಪಡೆದುಕೊಳ್ಳಬೇಕು. ಹೋಂ ಸ್ಟೇ/ರೆಸಾರ್ಟ್ಗಳಲ್ಲಿ ಯಾವುದೇ ಜಾತಿ ಧರ್ಮಗಳ ಅವಹೇಳನ ಮಾಡುವಂತ ಕಾರ್ಯಕ್ರಮ ನಡೆಸಬಾರದು. *ಹೋಂ ಸ್ಟೇಯಲ್ಲಿ ಬರುವ ಅತಿಥಿಗಳು ಮದ್ಯಪಾನ ಮಾಡಿ ಇತರರಿಗೆ ತೊಂದರೆ ನೀಡಿ ಅನವಶ್ಯಕ ಘಟನೆಗಳು ನಡೆಯದಂತೆ ಸೂಕ್ತ ಮುನ್ನಚ್ಚರಿಕೆ ವಹಿಸಬೇಕು. ಹೋಂಸ್ಟೇ/ರೆಸಾರ್ಟ್ಗಳಲ್ಲಿ ನಿಗದಿ ಪಡಿಸಿದ ಸಮಯದೊಳಗೆ ಕಾರ್ಯಕ್ರಮವನ್ನು ಮುಗಿಸಿ ಶಾಂತಿ ಭಂಗವುಂಟಾಗದಂತೆ ಇಲಾಖೆಯೊಂದಿಗೆ ಸಹಕರಿಸಬೇಕು. *ವಿದೇಶಿಗರು ಕೆಲಸ ಅಥವಾ ಇನ್ನಿತರ ಯಾವುದೇ ಕಾರಣಗಳಿಂದ ಬಂದಲ್ಲಿ ಕೂಡಲೇ ಮಾಹಿತಿ ನೀಡಬೇಕು. ಹೋಂಸ್ಟೇ/ರೆಸಾರ್ಟ್ಗಳಲ್ಲಿ ಮದ್ಯಪಾನ ವಿತರಿಸಲು ಅಬಕಾರಿ ಇಲಾಖೆಯ ಅನುಮತಿಯನ್ನು ಕಡ್ಡಾಯವಾಗಿ ಪಡೆಯಬೇಕು. *ಹೋಂಸ್ಟೇ/ರೆಸಾರ್ಟ್ಗಳಲ್ಲಿ ಯಾವುದೇ ರೀತಿ ಗಾಂಜ/ಅಫೀಮು ಇನ್ನಿತರ ಮಾದಕ ವಸ್ತುಗಳ ಸೇವನೆಗೆ ಅವಕಾಶ ನೀಡಬಾರದು. *ಹೋಂಸ್ಟೇ/ರೆಸಾರ್ಟ್ಗಳಲ್ಲಿ ಇನ್ನಿತರ ಕಡೆಗಳಲ್ಲಿ ಆಯೋಜಿಸುವ ಕಾರ್ಯಕ್ರಮಗಳಲ್ಲಿ ಅಹಿತಕರ ಘಟನೆಗಳು ನಡೆದಲ್ಲಿ ಸಂಬಂಧಪಟ್ಟವರೇ ಜವಾಬ್ದಾರರಾಗಿರುತ್ತಾರೆ. ಆದುದರಿಂದ ಯಾವುದೇ ರೀತಿ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂದು ಪೊಲೀಸ್ ಇಲಾಖೆ ಸೂಚನೆ ನೀಡಿದೆ.
ಬಿಕ್ಲು ಶಿವು ಕೊಲೆ ಪ್ರಕರಣ: ನಿರೀಕ್ಷಣಾ ಜಾಮೀನಿಗಾಗಿ ಮತ್ತೆ ಹೈಕೋರ್ಟ್ ಕದ ತಟ್ಟಿದ ಬೈರತಿ ಬಸವರಾಜ್
ಬೆಂಗಳೂರು: ರೌಡಿಶೀಟರ್ ಶಿವಪ್ರಕಾಶ್ ಅಲಿಯಾಸ್ ಬಿಕ್ಲು ಶಿವ ಕೊಲೆ ಪ್ರಕರಣದಲ್ಲಿ ಬಂಧನ ಭೀತಿ ಎದುರಿಸುತ್ತಿರುವ ಬಿಜೆಪಿ ಶಾಸಕ ಬೈರತಿ ಬಸವರಾಜ್ ನಿರೀಕ್ಷಣಾ ಜಾಮೀನು ಕೋರಿ ಮತ್ತೊಮ್ಮೆ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಪ್ರಕರಣದ 5ನೇ ಆರೋಪಿ ಬಿ.ಎ. ಬಸವರಾಜ ಅಲಿಯಾಸ್ ಬೈರತಿ ಬಸವರಾಜ್ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಮಂಗಳವಾರವಷ್ಟೇ ವಜಾಗೊಳಿಸಿತ್ತು. ಇದರ ಬೆನ್ನಲ್ಲೇ, ಬೈರತಿ ಬಸವರಾಜ್ ಅವರು ನಿರೀಕ್ಷಣಾ ಜಾಮೀನು ಕೋರಿ ಬುಧವಾರ ಹೈಕೋರ್ಟ್ಗೆ ಕ್ರಿಮಿನಲ್ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿಯಲ್ಲಿ ಭಾರತಿನಗರ ಠಾಣೆ ಪೊಲೀಸರನ್ನು ಪ್ರತಿವಾದಿಯನ್ನಾಗಿಸಲಾಗಿದ್ದು, ಅರ್ಜಿಯು ನ್ಯಾಯಮೂರ್ತಿ ಜಿ. ಬಸವರಾಜ ಅವರ ರಜಾಕಾಲದ ನ್ಯಾಯಪೀಠದ ಮುಂದೆ ಶುಕ್ರವಾರ (ಡಿ.26) ವಿಚಾರಣೆಗೆ ನಿಗದಿಯಾಗಿದೆ. ಪ್ರಕರಣವೇನು? ಬೆಂಗಳೂರಿನ ಹಲಸೂರು ಕೆರೆಯ ಸಮೀಪದ ಮನೆಯೊಂದರ ಎದುರು ರಾತ್ರಿ ಬಿಕ್ಲು ಶಿವನ ಕೊಲೆಯಾಗಿತ್ತು. ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ಕೊಲೆ ನಡೆದಿದೆ ಎಂದು ಆರೋಪಿಸಿ ಶಿವಪ್ರಕಾಶ್ ತಾಯಿ ವಿಜಯಲಕ್ಷ್ಮಿ ನೀಡಿದ ದೂರಿನ ಮೇರೆಗೆ ಜಗದೀಶ್, ಕಿರಣ್, ವಿಮಲ್, ಅನಿಲ್ ಮತ್ತು ಬೈರತಿ ಬಸವರಾಜ್ ವಿರುದ್ಧ ಭಾರತಿನಗರ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದ್ದು, ಪ್ರಕರಣದ ತನಿಖೆ ಸಿಐಡಿಗೆ ವರ್ಗಾವಣೆಗೊಂಡಿತ್ತು. ಪ್ರಕರಣದಲ್ಲಿ 5ನೇ ಆರೋಪಿಯಾಗಿರುವ ಬೈರತಿ ಬಸವರಾಜ್ ಬಂಧನ ಭೀತಿಯಿಂದ ಹೈಕೋರ್ಟ್ ಮೊರೆ ಹೋಗಿದ್ದರು. ನಂತರ ನ್ಯಾಯಾಲಯದ ಸೂಚನೆ ಮೇರೆಗೆ ಬೈರತಿ, ಸಿಐಡಿ ಅಧಿಕಾರಿಗಳ ಮುಂದೆ ವಿಚಾರಣೆ ಹಾಜರಾಗಿದ್ದರು. ಬೈರತಿ ಬಸವರಾಜ್ ಅವರನ್ನು ಬಂಧಿಸಿದಂತೆ ನ್ಯಾಯಾಲಯ ಮಧ್ಯಂತರ ಆದೇಶ ನೀಡಿತ್ತು. ಆನಂತರ, ಬೈರತಿ ಬಸವರಾಜ್ ತನಿಖೆಗೆ ಸಹಕರಿಸುತ್ತಿಲ್ಲ ಎಂಬ ಕಾರಣಕ್ಕೆ ಮಧ್ಯಂತರ ಆದೇಶ ತೆರವುಗೊಳಿಸುವಂತೆ ಕೋರಿ ಸಿಐಡಿ ಹೈಕೋರ್ಟ್ ಮೆಟ್ಟಿಲೇರಿತ್ತು. ಈ ಮಧ್ಯೆ, ಎಫ್ಐಆರ್ ರದ್ದು ಕೋರಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದ ಬೈರತಿ ಬಸವರಾಜ್, ನಿರೀಕ್ಷಣಾ ಜಾಮೀನು ಕೋರಿ ಮಧ್ಯಂತರ ಅರ್ಜಿ ಸಲ್ಲಿಸಿದ್ದರು. ಮತ್ತೊಂದೆಡೆ, ಪ್ರಕರಣದಲ್ಲಿ ಬೈರತಿ ಬಸವರಾಜ್ ಸೇರಿ ಐವರು ಆರೋಪಿಗಳ ವಿರುದ್ಧ ಕರ್ನಾಟಕ ಸಂಘಟಿತ ಅಪರಾಧ ತಡೆ ಕಾಯ್ದೆ (ಕೊಕಾ) ಅನ್ವಯಿಸಿದ್ದ ರಾಜ್ಯ ಸರ್ಕಾರದ ಆದೇಶವನ್ನೂ ಹೈಕೋರ್ಟ್ನಲ್ಲಿ ಪ್ರಶ್ನಿಸಲಾಗಿತ್ತು. ವಿಚಾರಣೆ ನಡೆಸಿದ್ದ ಹೈಕೋರ್ಟ್, ಆರೋಪಿಗಳ ವಿರುದ್ಧ ಕೊಕಾ ಅನ್ವಯಿಸಿದ್ದ ಆದೇಶವನ್ನು ಡಿಸೆಂಬರ್ 19ರಂದು ರದ್ದುಪಡಿಸಿತ್ತಲ್ಲದೆ, ಬೈರತಿ ಬಸವರಾಜ್ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ವಜಾಗೊಳಿಸಿತ್ತು. ಇನ್ನು ಭಾರತಿನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್ಐಆರ್ ರದ್ದು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಬೈರತಿ ಬಸವರಾಜ್ ಹಿಂಪಡೆದ ಕಾರಣ ಆ ಅರ್ಜಿಯೂ ವಜಾಗೊಂಡಿತ್ತು. ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಸಹ ನಿರೀಕ್ಷಣಾ ಜಾಮೀನು ಮಂಜೂರು ಮಾಡಲು ನಿರಾಕರಿಸಿದ್ದರಿಂದ, ಬಂಧನ ಭೀತಿಯಿಂದ ಮತ್ತೊಮ್ಮೆ ಬೈರತಿ ಬಸವರಾಜ್ ಹೈಕೋರ್ಟ್ ಕದ ತಟ್ಟಿದ್ದಾರೆ.
ಗುಲ್ವಾಡಿ ಗ್ರಾಪಂನ ಸಿಪಿಎಂ ಸದಸ್ಯೆ ವನಜ ನಿಧನ
ಉಡುಪಿ, ಡಿ.24: ಕುಂದಾಪುರ ತಾಲೂಕು ಗುಲ್ವಾಡಿ ಗ್ರಾಮ ಪಂಚಾಯತ್ನ ಸಿಪಿಎಂ ಬೆಂಬಲಿತ ಸದಸ್ಯೆ ವನಜ ಅನಾರೋಗ್ಯದಿಂದ ಇಂದು ಸ್ವಗೃಹದಲ್ಲಿ ನಿಧನರಾದರು. ಕಳೆದ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಸಿಪಿಎಂ ಪಕ್ಷದ ಬೆಂಬಲಿತ ಅಭ್ಯರ್ಥಿಯಾಗಿ ಸ್ಪರ್ಧಿಸಿ ಅವರು ಗೆಲುವು ಸಾಧಿಸಿದ್ದರು. ವನಜ ಅವರಿಗೆ ಸಿಪಿಎಂ ಜಿಲ್ಲಾ ಸಮಿತಿ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದೆ. ಮೃತರ ಅಂತಿಮಕ್ರಿಯೆ ಗುರುವಾರ ಬೆಳಿಗ್ಗೆ 9 ಗಂಟೆಗೆ ನಡೆಯಲಿದೆ ಎಂದು ತಿಳಿದು ಬಂದಿದೆ.
ಉಪ ಮುಖ್ಯಮಂತ್ರಿಯಾಗಿ ಮುಂದುವರಿಯುವಲ್ಲಿ ತೃಪ್ತಿಯಿದೆ: CM ಬದಲಾವಣೆ ವದಂತಿ ನಡುವೆ ಡಿಕೆಶಿ
ಹೊಸದಿಲ್ಲಿ,ಡಿ.24: ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಕುರಿತು ಊಹಾಪೋಹಗಳನ್ನು ಬುಧವಾರ ತಳ್ಳಿಹಾಕಿದ ಕರ್ನಾಟಕದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು, ಮುಖ್ಯಮಂತ್ರಿ ಹುದ್ದೆಯ ಕುರಿತು ಯಾವುದೇ ವಿವಾದವಿಲ್ಲ ಮತ್ತು ಡಿಸಿಎಂ ಆಗಿ ಮುಂದುವರಿಯುವಲ್ಲಿ ತನಗೆ ತೃಪ್ತಿಯಿದೆ ಎಂದು ಒತ್ತಿ ಹೇಳಿದರು. ಇಲ್ಲಿಯ ಕರ್ನಾಟಕ ಭವನದಲ್ಲಿ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಶಿವಕುಮಾರ್, ಆಂತರಿಕ ಭಿನ್ನಾಭಿಪ್ರಾಯಗಳು ಅಥವಾ ಕಾಂಗ್ರೆಸ್ ಹೈಕಮಾಂಡ್ ಜೊತೆ ಭೇಟಿಗಳ ವದಂತಿಗಳು ಕೇವಲ ಮಾಧ್ಯಮಗಳಲ್ಲಿ ಅಸ್ತಿತ್ವದಲ್ಲಿವೆ ಎಂದು ಹೇಳಿದರು. ‘ಕಾಂಗ್ರೆಸ್ ಹೈಕಮಾಂಡ್ ನಲ್ಲಿ ಯಾರನ್ನೂ ನಾನು ಭೇಟಿಯಾಗುತ್ತಿಲ್ಲ. ಉಪ ಮುಖ್ಯಮಂತ್ರಿಯಾಗಿ ಮುಂದುವರಿಯಲು ನನಗೆ ಖುಷಿಯಿದೆ. ಪಕ್ಷದ ಕಾರ್ಯಕರ್ತನಾಗಿರಲು ನಾನು ಇಷ್ಟ ಪಡುತ್ತೇನೆ’ ಎಂದರು. ಮಾಧ್ಯಮಗಳ ಪುನರಾವರ್ತಿತ ವಿಚಾರಣೆಗಳಿಗೆ ಪ್ರತಿಕ್ರಿಯಿಸಿದ ಶಿವಕುಮಾರ್,ಯಾವುದೇ ಹೆಸರುಗಳನ್ನು ಊಹಾಪೋಹ ಮಾಡಬಾರದು,ನಾಯಕತ್ವಕ್ಕೆ ಸಂಬಂಧಿಸಿದ ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳುವ ಅಧಿಕಾರ ಸಂಪೂರ್ಣವಾಗಿ ಕಾಂಗ್ರೆಸ್ ಪಕ್ಷದ್ದಾಗಿದೆ. ಪಕ್ಷವು ಯಾವುದೇ ದಿನ ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳಬಹುದು. ನಾಯಕತ್ವ ಏನೇ ನಿರ್ಧರಿಸಿದರೂ ಅದಕ್ಕೆ ಬದ್ಧರಾಗಿರುತ್ತೇವೆ ಎಂದು ಹೇಳಿದರು. ಪ್ರಿಯಾಂಕಾ ಗಾಂಧಿಯವರ ಪಾತ್ರ ಅಥವಾ ಅವರು ಪ್ರಧಾನಿ ಹುದ್ದೆಗೆ ಅಭ್ಯರ್ಥಿಯಾಗಲಿದ್ದಾರೆ ಎನ್ನುವ ಊಹಾಪೋಹಕ್ಕೆ ಸಂಬಂಧಿಸಿದ ಪ್ರಶ್ನೆಗಳಿಗೆ ಡಿಕೆಶಿ,‘ಈ ವಿಷಯಗಳ ಬಗ್ಗೆ ನನಗೆ ತಿಳಿದಿಲ್ಲ. ಎಐಸಿಸಿ ಅಧ್ಯಕ್ಷರು ಮತ್ತು ವಿಪಕ್ಷ ನಾಯಕ ರಾಹುಲ್ ಗಾಂಧಿಯವರು ನನ್ನ ನಾಯಕರು ’ ಎಂದು ಉತ್ತರಿಸಿದರು. ರಾಜ್ಯದಲ್ಲಿ ಸಂಪುಟ ಪುನರ್ರಚನೆ ಕುರಿತು ಪ್ರಶ್ನೆಗೆ ಆ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಮಾತನಾಡಿ ಎಂದು ವರದಿಗಾರರಿಗೆ ಕಿವಿಮಾತು ಹೇಳಿದ ಶಿವಕುಮಾರ್,ತನ್ನ ದಿಲ್ಲಿ ಭೇಟಿಯು ಸಂಪೂರ್ಣವಾಗಿ ಆಡಳಿತಾತ್ಮಕವಾಗಿದೆ,ರಾಜಕೀಯಕ್ಕೆ ಸಂಬಂಧಿಸಿಲ್ಲ ಎಂದು ತಿಳಿಸಿದರು.
ನಾಡಿನ ಜನತೆಗೆ ಕ್ರಿಸ್ಮಸ್ ಹಬ್ಬದ ಶುಭಾಶಯ ತಿಳಿಸಿದ ಡಾ.ಪೀಟರ್ ಮಚಾದೊ
ಬೆಂಗಳೂರು: ಕ್ರಿಸ್ಮಸ್ ಹಬ್ಬದ ಪ್ರಯುಕ್ತ ಬೆಂಗಳೂರಿನ ಆರ್ಚ್ ಬಿಷಪ್ ಡಾ.ಪೀಟರ್ ಮಚಾದೊ ಅವರು ಕ್ರಿಶ್ಚಿಯನ್ ಸಮುದಾಯದ ಪರವಾಗಿ ಸಮಸ್ತ ನಾಗರಿಕರಿಗೂ ಕ್ರಿಸ್ಮಸ್ ಶುಭಾಶಯಗಳನ್ನು ತಿಳಿಸಿದ್ದಾರೆ. ಕ್ರಿಸ್ಮಸ್ ಧಾರ್ಮಿಕ ಎಲ್ಲೆಗಳನ್ನು ಮೀರಿದ ಸಾರ್ವತ್ರಿಕ ಆಚರಣೆಯಾಗಿದ್ದು, ಇದು ಭರವಸೆ, ಪ್ರೀತಿ ಮತ್ತು ಹೊಸ ಆರಂಭದ ಒಂದು ಸಂದೇಶವನ್ನು ಘೋಷಿಸುತ್ತದೆ. ಯೇಸು ಕ್ರಿಸ್ತನ ಜನನವು ಸಹಾನುಭೂತಿ, ಕ್ಷಮೆ ಮತ್ತು ಪರಸ್ಪರ ಗೌರವದ ಮೌಲ್ಯಗಳನ್ನು ಮರುಶೋಧಿಸಲು ನಮಗೆ ಕರೆ ನೀಡುತ್ತದೆ. ಭಯ ಮತ್ತು ಅನುಮಾನದಿಂದ ದೂರ ಸರಿಯಲು ಮತ್ತು ತಿಳುವಳಿಕೆ ಹಾಗೂ ಒಗ್ಗಟ್ಟಿನ ಸೇತುವೆಗಳನ್ನು ನಿರ್ಮಿಸಲು ಕ್ರಿಸ್ಮಸ್ ನಮ್ಮನ್ನು ಪ್ರೇರೇಪಿಸುತ್ತದೆ ಎಂದು ಹೇಳಿದ್ದಾರೆ. ದೇವರು ಪ್ರತಿಯೊಬ್ಬರಿಗೂ ಸಮಾನವಾದ ಘನತೆಯನ್ನು ನೀಡುತ್ತಾನೆ. ಈ ದೈವಿಕ ಸತ್ಯವು, ತಾರತಮ್ಯ, ಹಿಂಸೆ ಅಥವಾ ಬಹಿಷ್ಕಾರಕ್ಕೆ ಅವಕಾಶವನ್ನು ನೀಡುವುದಿಲ್ಲ. ಮನುಷ್ಯರಾಗಿ, ನಾವು ಶಾಂತಿ, ನ್ಯಾಯ ಮತ್ತು ಸಾಮಾನ್ಯ ಒಳಿತಿಗಾಗಿ ಒಟ್ಟಿಗೆ ಕೆಲಸ ಮಾಡುವ ಸಹೋದರ ಸಹೋದರಿಯರಂತೆ ಬದುಕಬೇಕು ಎಂದು ಅವರು ಕರೆ ನೀಡಿದ್ದಾರೆ. ಕ್ರಿಸ್ಮಸ್ ಹಬ್ಬದ ಸಂದರ್ಭದಲ್ಲಿ, ಶಾಂತಿ, ಏಕತೆ ಮತ್ತು ಸೌಹಾರ್ದತೆಗೆ ತಮ್ಮನ್ನು ತಾವು ಮರುಕಳಿಸುವಂತೆ ಸದ್ಭಾವನೆಯ ಎಲ್ಲ ಜನರಿಗೆ ನಾನು ಮನವಿ ಮಾಡುತ್ತೇನೆ. ನಮ್ಮ ಮನೆಗಳು, ನೆರೆಹೊರೆಗಳು ಮತ್ತು ಸಮುದಾಯಗಳು ಸಂವಾದ, ಬಡವರ ಕಾಳಜಿ ಮತ್ತು ದುರ್ಬಲರ ಬಗ್ಗೆ ಕಾಳಜಿಯ ಸ್ಥಳಗಳಾಗಲಿ. ದ್ವೇಷವನ್ನು ಮಾನವೀಯತೆಯೊಂದಿಗೆ, ವಿಭಜನೆಯನ್ನು ಸಂಭಾಷಣೆಯೊಂದಿಗೆ ಮತ್ತು ಭಯವನ್ನು ಭರವಸೆಯೊಂದಿಗೆ ಬದಲಿಸಲು ಕ್ರಿಸ್ಮಸ್ ನೆರವಾಗುತ್ತದೆ ಎಂದು ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಇಳಿ ವಯಸ್ಸಿನಲ್ಲೂ ಗೌಡರ ಹೆಸರನ್ನು ಸುಪ್ರೀಂ ಕೋರ್ಟ್ಗೆ ಎಳೆದ ರಿಟ್ ಅರ್ಜಿ : ಸಿದ್ದರಾಮಯ್ಯ ಮೇಲ್ಯಾಕೆ ಸಿಟ್ಟು?
Nice Project : ದೇವೇಗೌಡರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಸಿದ್ದರಾಮಯ್ಯ ಹಣಕಾಸು ಸಚಿವರಾಗಿದ್ದರು. ಆ ವೇಳೆ, ಹಣಕಾಸು ಇಲಾಖೆಯ ಅನುಮತಿಯನ್ನು ಪಡೆದ ಬೆಂಗಳೂರು- ಮೈಸೂರು ಇನ್ಫಾಸ್ಟ್ರಕ್ಚರ್ ಯೋಜನೆಗೆ ಸಂಬಂಧಿಸಿದಂತೆ, ರಿಟ್ ಅರ್ಜಿ ಸರ್ವೋಚ್ಚ್ ನ್ಯಾಯಾಲಯದಲ್ಲಿ ಸಲ್ಲಿಕೆಯಾಗಿದೆ. ಅದರಲ್ಲಿ, ದೇವೇಗೌಡರ ಹೆಸರು ಕೂಡಾ ಇದೆ.
ಉಡುಪಿ ಜಿಲ್ಲೆಯಾದ್ಯಂತ ಸಂಭ್ರಮದ ಕ್ರಿಸ್ಮಸ್ ಈವ್ ಆಚರಣೆ
ಉಡುಪಿ, ಡಿ.24: ವಿಶ್ವಕ್ಕೆ ಶಾಂತಿ ಸಂದೇಶ ಸಾರಿದ ಏಸುವಿನ ಜನ್ಮದಿನ ಕ್ರಿಸ್ಮಸ್ ಈವ್ ಹಬ್ಬವನ್ನು ಬುಧವಾರ ರಾತ್ರಿ ಕ್ರೈಸ್ತರು ಉಡುಪಿ ಜಿಲ್ಲೆಯಾದ್ಯಂತ ಸಡಗರ, ಸಂಭ್ರಮ, ಉತ್ಸಾಹದಿಂದ ಆಚರಿಸಿದರು. ಹಬ್ಬದ ಭಾಗವಾಗಿ ಕ್ರೈಸ್ತ ಬಾಂಧವರು ಬುಧವಾರ ರಾತ್ರಿ ಸಮೀಪದ ಚರ್ಚ್ಗಳಿಗೆ ಭೇಟಿ ನೀಡಿ ವಿಶೇಷ ಪ್ರಾರ್ಥನೆ ಸಲ್ಲಿಸಿ ಸ್ನೇಹಿತರು, ಬಂಧು ಬಾಂಧವರೊಂದಿಗೆ ಶುಭಾಶಯಗಳ ವಿನಿಮಯ ಮಾಡಿಕೊಂಡರು. ಉಡುಪಿ ಧರ್ಮಪ್ರಾಂತದ ಧರ್ಮಾಧ್ಯಕ್ಷ ಅತಿ ವಂ.ಡಾ.ಜೆರಾಲ್ಡ್ ಐಸಾಕ್ ಲೋಬೊ ಸಂಜೆಯ ಬಲಿಪೂಜೆಯನ್ನು ಕಲ್ಯಾಣಪುರ ಮಿಲಾಗ್ರಿಸ್ ಕ್ಯಾಥೆಡ್ರಲ್ನಲ್ಲಿ ಅರ್ಪಿಸಿ ಹಬ್ಬದ ಸಂದೇಶ ನೀಡಿದರು. ಈ ವೇಳೆ ಮಾತನಾಡಿದ ಅವರು ಕ್ರಿಸ್ತ ಜಯಂತಿ ಶಾಂತಿ ಮತ್ತು ಭರವಸೆಯ ಸಮಯವಾಗಿದ್ದು, ಬೆತ್ಲೆಹೇಮಿನ ದನದ ಕೊಟ್ಟಿಗೆಯಲ್ಲಿ ದೀನ ನಾಗಿ ಜನಿಸಿದ ಪ್ರಭು ಯೇಸುವಿನ ಜನನ, ದೇವರು ನಮ್ಮ ಮೇಲಿರಿಸಿದ ಪ್ರೀತಿ ಸ್ಮರಣೆಯಾಗಿದೆ. ದ್ವೇಷ, ಕಲಹ, ವಿಭಜನೆ ಹಾಗೂ ಪ್ರಾಕೃತಿಕ ವಿಕೋಪಗಳಿಂದ ನಲುಗಿದ ಜಗತ್ತಿಗೆ ಕ್ರಿಸ್ತ ಜಯಂತಿಯ ಸಂದೇಶವು ದೇವರ ಅಪರಿಮಿತಿ ಪ್ರೀತಿ ಮತ್ತು ನಿರಂತರ ಪ್ರಸನ್ನತೆಯ ಪ್ರತೀಕವಾಗಿದೆ. ಪರರ ಪ್ರೀತಿಸಲು ಮತ್ತು ಕಾಳಜಿ ವಹಿಸಲು ಪ್ರಭುವಿನ ಮಧುರ ಕರೆಯನ್ನು ನೆನಪಿಸುತ್ತದೆ. ನಮ್ಮ ಮನೆ ಮನಗಳನ್ನು ಶಾಂತಿಯಿಂದ ಹಾಗೂ ನಮ್ಮ ಸಮುದಾಯಗಳನ್ನು ಸಾಮರಸ್ಯದಿಂದ ತುಂಬಲಿ ಎಂದವರು ಶುಭ ಹಾರೈಸಿದರು. ಪ್ರಭು ಯೇಸು ಜಗಜ್ಯೋತಿಯಾಗಿ ಭುವಿಯ ಅಂಧಕಾರ ನೀಗಿಸಿದರು. ಕ್ರಿಸ್ಮಸ್ ಮನುಜನ ಬದುಕನ್ನು ಜ್ಯೋತಿ ಯಾಗಿ ಆಲಂಗಿಸಿ ಪ್ರೀತಿಯ ಸಿಂಚನ ವೆರೆದ ಹಬ್ಬ. ಕ್ರಿಸ್ಮಸ್, ನಮ್ಮ ಬದುಕಿನ ಬೆಳಕಿನ ಹಬ್ಬ. ಕ್ರಿಸ್ತ ಜಯಂತಿ ಯಲ್ಲಿನ ಜಗಜ್ಯೋತಿ ಯೇಸು ನಮ್ಮ ಹೃದಯಲ್ಲಿ ಜನಿಸಲಿ. ಅವರ ಪ್ರಭೆಯಿಂದ ಪುಳಕಿತರಾಗಿ, ಸ್ವಾರ್ಥ ದ್ವೇಷ ತೊರೆದು, ಐಕ್ಯತೆ, ಅನ್ಯೋನ್ಯತೆಯಿಂದ ನಾವು ಬದುಕುವಂತಾಗಲಿ. ಸಹೋದರತ್ವ, ಸಾಮರಸ್ಯದ ಬದುಕು ನಮ್ಮದಾಗಲಿ ಎಂದು ಅವರು ತಮ್ಮ ಸಂದೇಶದಲ್ಲಿ ತಿಳಿಸಿದರು. ಧರ್ಮಪ್ರಾಂತದ ಶ್ರೇಷ್ಠಗುರು ಹಾಗೂ ಕಲ್ಯಾಣಪುರ ಮಿಲಾಗ್ರಿಸ್ ಕ್ಯಾಥೆಡ್ರಲ್ನ ಪ್ರಧಾನ ಧರ್ಮಗುರು ಮೊನ್ಸಿಂಜ್ಞೊರ್ ಫರ್ಡಿನಾಂಡ್ ಗೊನ್ಸಾಲ್ವಿಸ್, ಸಹಾಯಕ ಧರ್ಮಗುರು ವಂ.ಪ್ರದೀಪ್ ಕಾರ್ಡೋಜಾ, ಕಥೊಲಿಕ್ ಎಜುಕೇಶನ್ ಸೊಸೈಟಿ ಕಾರ್ಯದರ್ಶಿ ವಂ. ವಿನ್ಸೆಂಟ್ ಕ್ರಾಸ್ತಾ, ಪಿಲಾರ್ ಸಭೆಯ ವಂ.ಪರೇಲ್ ಫೆರ್ನಾಂಡಿಸ್ ಉಪಸ್ಥಿತರಿದ್ದರು. ಕ್ರಿಸ್ಮಸ್ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲೆಯ ಪ್ರಮುಖ ಕ್ರೈಸ್ತ ದೇವಾಲಯ ಗಳು ಭಕ್ತಾದಿಗಳಿಂದ ತುಂಬಿ ತುಳುಕುತ್ತಿ ದ್ದವು. ಚರ್ಚ್ಗಳು ವಿದ್ಯುತ್ ದೀಪಾಲಂಕಾರ, ನಕ್ಷತ್ರಗಳಿಂದ ಕಂಗೊಳಿಸುತ್ತಿದ್ದವು. ಯೇಸುವಿನ ಜನ್ಮದಿನದ ಪ್ರಯುಕ್ತ ಮಾಡಿದ್ದ ಗೋದಲಿ ಹಾಗೂ ಪುಟ್ಟ ಗೊಂಬೆಗಳ ಪ್ರದರ್ಶನ ಆಕರ್ಷಣೆಯ ಕೇಂದ್ರ ಬಿಂದುಗಳಾಗಿದ್ದವು. ಏಸು ಕ್ರಿಸ್ತನ ಜನ್ಮ ವೃತ್ತಾಂತವನ್ನು ಗೋದಲಿಯಲ್ಲಿ ಪುಟ್ಟ ಗೊಂಬೆಗಳ ಮೂಲಕ ಪ್ರದರ್ಶಿಸಲಾಯಿತು. ಹಬ್ಬದ ಅಂಗವಾಗಿ ಚರ್ಚುಗಳಲ್ಲಿ ಯುವ ಸಂಘಟನೆಯ ಸದಸ್ಯರಿಂದ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮ, ಮಕ್ಕಳ ಪ್ರಿತಿಗೆ ಪಾತ್ರನಾದ ಸಾಂತಾಕ್ಲಾಸ್ ವೇಷ, ಭಕ್ತಾದಿಗಳಿಗೆ ಕ್ರಿಸ್ಮಸ್ ಕೇಕ್ ವಿತರಣೆ ಕೂಡ ನಡೆಯಿತು. ಜಿಲ್ಲೆಯ ಪ್ರಮುಖ ಚರ್ಚುಗಳಾದ ಅತ್ತೂರು ಸಂತ ಲಾರೆನ್ಸ್ ಬೆಸಿಲಿಕಾದಲ್ಲಿ ವಂ.ಆಲ್ಬನ್ ಡಿಸೋಜ, ತೊಟ್ಟಂ ಸಂತ ಅನ್ನಮ್ಮ ಚರ್ಚಿನಲ್ಲಿ ಧರ್ಮಗುರು ವಂ.ಡೆನಿಸ್ ಡೆಸಾ, ಸಾಸ್ತಾನ ಸಂತ ಅಂತೋನಿ ಚರ್ಚಿನಲ್ಲಿ ವಂ.ಸುನೀಲ್ ಡಿಸಿಲ್ವಾ, ಉಡುಪಿ ಶೋಕಮಾತಾ ಚರ್ಚಿನಲ್ಲಿ ವಂ.ಚಾರ್ಲ್ಸ್ ಮಿನೇಜಸ್ ನೇತೃತ್ವದಲ್ಲಿ ಹಬ್ಬದ ವಿಶೇಷ ಬಲಿಪೂಜೆಗಳು ಜರುಗಿದವು.
ಋುತುಚಕ್ರ ರಜೆ ಕುರಿತು ಕರ್ನಾಟಕ ಶಿಕ್ಷಣ ಇಲಾಖೆ ಮಹತ್ವದ ಆದೇಶ; ಪ್ರತಿ ತಿಂಗಳು ಒಂದು ರಜೆ
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ಸರ್ಕಾರಿ ಶಾಲಾ ಶಿಕ್ಷಕಿಯರಿಗೆ ಪ್ರತಿ ತಿಂಗಳು ಒಂದು ದಿನ ವೇತನ ಸಹಿತ ಋುತುಚಕ್ರ ರಜೆಯನ್ನು ಮಂಜೂರು ಮಾಡಿದೆ. ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಮನವಿಗೆ ಸ್ಪಂದಿಸಿ ಈ ಮಹತ್ವದ ಆದೇಶ ಹೊರಡಿಸಲಾಗಿದೆ. ಈ ಹಿಂದೆ ಕೆಎಸ್ಆರ್ಟಿಸಿ ಕೂಡ ಮಹಿಳಾ ಸಿಬ್ಬಂದಿಗೆ ಇದೇ ರೀತಿಯ ರಜೆ ಮಂಜೂರು ಮಾಡಿತ್ತು.
ಕ್ರಿಸ್ಮಸ್ ಪ್ರಯುಕ್ತ ಆರ್ಚ್ ಬಿಷಪ್ ನಿವಾಸಕ್ಕೆ ಸಿಎಂ, ಡಿಸಿಎಂ ಭೇಟಿ
ಬೆಂಗಳೂರು: ಬೆಂಗಳೂರಿನ ಬೆನ್ಸನ್ ಟೌನ್ ಮಿಲ್ಲರ್ಸ್ ರಸ್ತೆಯಲ್ಲಿರುವ ಆರ್ಚ್ ಬಿಷಪ್ ಡಾ.ಪೀಟರ್ ಮಚಾದೊ ಅವರ ನಿವಾಸಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಸೌಹಾರ್ದ ಭೇಟಿ ನೀಡಿ ಕ್ರೈಸ್ತರಿಗೆ ಕ್ರಿಸ್ಮಸ್ ಶುಭಾಶಯಗಳನ್ನು ಕೋರಿದರು.
ಉನ್ನಾವ್ ಅತ್ಯಾಚಾರ ಪ್ರಕರಣದ ಸಂತ್ರಸ್ತೆಯ ತಾಯಿಯಿಂದ ವಿಪಕ್ಷ ನಾಯಕ ರಾಹುಲ್ ಗಾಂಧಿ ಭೇಟಿ
ಹೊಸದಿಲ್ಲಿ: ಉನ್ನಾವ್ ಅತ್ಯಾಚಾರ ಪ್ರಕರಣದ ದೋಷಿ, ಬಿಜೆಪಿಯ ಮಾಜಿ ಶಾಸಕ ಕುಲದೀಪ್ ಸಿಂಗ್ ಸೆಂಗಾರ್ಗೆ ವಿಧಿಸಿದ್ದ ಜೀವಾವಧಿ ಶಿಕ್ಷೆಯನ್ನು ಅಮಾನತು ಮಾಡಿರುವ ದೆಹಲಿ ಹೈಕೋರ್ಟ್ ಕ್ರಮವನ್ನು ವಿರೋಧಿಸಿ ಪ್ರತಿಭಟನೆ ನಡೆಸಿದ ಸಂತ್ರಸ್ತೆ ಮತ್ತು ಆಕೆಯ ತಾಯಿ ಬುಧವಾರ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿದರು. ಈ ವೇಳೆ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಕೂಡ ಹಾಜರಿದ್ದರು. ಸೋನಿಯಾ ಗಾಂಧಿಯವರ 10 ಜನಪಥ್ ನಿವಾಸದಲ್ಲಿ ಈ ಭೇಟಿ ನಡೆಯಿತು. ವಿದೇಶ ಪ್ರವಾಸದಿಂದ ವಾಪಸ್ಸಾದ ಮರುದಿನವೇ ರಾಹುಲ್ ಗಾಂಧಿ ಸಂತ್ರಸ್ತೆಯ ಕುಟುಂಬದೊಂದಿಗೆ ಮಾತುಕತೆ ನಡೆಸಿದರು. ಸೆಂಗಾರ್ ನ ಜೀವಾವಧಿ ಶಿಕ್ಷೆ ಅಮಾನತು ವಿರೋಧಿಸಿ ಸಂತ್ರಸ್ತೆ ಹಾಗೂ ಆಕೆಯ ತಾಯಿ ದಿಲ್ಲಿಯಲ್ಲಿ ಪ್ರತಿಭಟನೆ ನಡೆಸಿದ ವೇಳೆ CRPF ಸಿಬ್ಬಂದಿ ಸಂತ್ರಸ್ತೆ ಮತ್ತು ಆಕೆಯ ತಾಯಿಯನ್ನು ಮಾಧ್ಯಮಗಳೊಂದಿಗೆ ಮಾತನಾಡದಂತೆ ತಡೆದಿದ್ದಾರೆ. ವೃದ್ಧ ಮಹಿಳೆಯನ್ನು ಚಲಿಸುತ್ತಿದ್ದ ಬಸ್ನಿಂದ ಹಾರುವಂತೆ ಒತ್ತಾಯಿಸಲಾಗಿದೆ ಎಂದು ಆರೋಪಿಸಲಾಗಿದೆ. ಸೆಂಗಾರ್ ತನಗೆ ವಿಧಿಸಿರುವ ಶಿಕ್ಷೆಯನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿದ್ದು, ನ್ಯಾಯಾಲಯವು ಮೇಲ್ಮನವಿಯ ವಿಚಾರಣೆ ಪೂರ್ಣಗೊಳ್ಳುವವರೆಗೆ ಜೈಲಿನಿಂದ ಹೊರಗಿರಲು ಅವಕಾಶ ನೀಡಿದೆ. ಈ ತೀರ್ಪು ದೇಶಾದ್ಯಂತ ತೀವ್ರ ವಿವಾದಕ್ಕೆ ಕಾರಣವಾಗಿದ್ದು, ವಿರೋಧ ಪಕ್ಷಗಳು ಕೇಂದ್ರ ಸರ್ಕಾರದ ನಿಲುವನ್ನು ಕಟುವಾಗಿ ಟೀಕಿಸಿವೆ. ಈ ಕುರಿತು ಸಾಮಾಜಿಕ ಜಾಲತಾಣದ ಎಕ್ಸ್ ನಲ್ಲಿ ಪ್ರತಿಕ್ರಿಯಿಸಿದ ವಿಪಕ್ಷ ನಾಯಕ ರಾಹುಲ್ ಗಾಂಧಿ, ಅನ್ಯಾಯದ ವಿರುದ್ಧ ಧ್ವನಿ ಎತ್ತಿದ ಕಾರಣಕ್ಕೆ ಸಂತ್ರಸ್ತೆ ದೌರ್ಜನ್ಯಕ್ಕೆ ಒಳಗಾಗಬೇಕೇ ಎಂದು ಪ್ರಶ್ನಿಸಿದ್ದಾರೆ. ಅತ್ಯಾಚಾರಿಗಳಿಗೆ ಜಾಮೀನು ನೀಡಲಾಗುತ್ತಿದ್ದು, ಸಂತ್ರಸ್ತರನ್ನು ಅಪರಾಧಿಗಳಂತೆ ನಡೆಸಿಕೊಳ್ಳಲಾಗುತ್ತಿದೆ ಎಂದು ಅವರು ಆರೋಪಿಸಿದ್ದಾರೆ. ನ್ಯಾಯಾಲಯದ ತೀರ್ಪಿನ ಬಳಿಕ, 2017ರಲ್ಲಿ ಸೆಂಗಾರ್ ನಿಂದ ಲೈಂಗಿಕ ದೌರ್ಜನ್ಯಕ್ಕೊಳಗಾದ ಮಹಿಳೆ ತನ್ನ ತಾಯಿ ಮತ್ತು ವಕೀಲೆ, ಸಾಮಾಜಿಕ ಕಾರ್ಯಕರ್ತೆ ಯೋಗಿತಾ ಭಯನಾ ಅವರೊಂದಿಗೆ ಇಂಡಿಯಾ ಗೇಟ್ ಬಳಿ ಪ್ರತಿಭಟನೆ ನಡೆಸುತ್ತಿದ್ದ ವೇಳೆ ಅವರನ್ನು ವಶಕ್ಕೆ ಪಡೆಯಲಾಗಿತ್ತು. ಬುಧವಾರ ಬೆಳಿಗ್ಗೆ ಸಂತ್ರಸ್ತೆ ತನ್ನ ತಾಯಿಯೊಂದಿಗೆ ಮಂಡಿ ಹೌಸ್ನಲ್ಲಿ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಲು ಮುಂದಾದಾಗ ತಡೆದ, CRPF ಸಿಬ್ಬಂದಿ ಅವರನ್ನು ಬಸ್ ನಲ್ಲಿ ಕರೆದೊಯ್ದರು. ಮಂಡಿ ಹೌಸ್ ನಲ್ಲಿಯೂ ಅವರಿಗೆ ಮಾತನಾಡಲು ಅವಕಾಶ ನಿರಾಕರಿಸಿದರು. ಬಳಿಕ, ಪ್ರತಿಭಟನೆ ನಡೆಸಲು ಸಂತ್ರಸ್ತರಿಗೆ ಅನುಮತಿ ನೀಡಿಲ್ಲ ಎಂದು CRPF ಸ್ವಷ್ಟಪಡಿಸಿತು.
ದೇವದತ್ ಪಡಿಕ್ಕಲ್ ಬೊಂಬಾಟ್ ಶತಕ! ಜಾರ್ಖಂಡ್ ಗಳಿಸಿದ್ದ ಬೃಹತ್ ಮೊತ್ತವನ್ನೂ ಲೆಕ್ಕಕ್ಕೇ ಇಲ್ಲದಂತೆ ಮಾಡಿದ ಕರ್ನಾಟಕ!
Vijay Hazare Trophy 2025-26- ವಿಜಯ್ ಹಜಾರೆ ಟ್ರೋಫಿ ಟೂರ್ನಿಯಲ್ಲಿ ಕರ್ನಾಟಕ ತಂಡ ಅದ್ಭುತ ಪ್ರದರ್ಶನ ನೀಡಿದೆ. ಜಾರ್ಖಂಡ್ ನೀಡಿದ್ದ 413 ರನ್ಗಳ ಗುರಿಯನ್ನು ಮಾಯಾಂಕ್ ಅಗರ್ವಾಲ್ ನೇತೃತ್ವದ ತಂಡ ಇನ್ನೂ 15 ಎಸೆತಗಳು ಬಾಕಿ ಉಳಿದಿರುವಂತೆ ಬೆನ್ನಟ್ಟಿ ಜಯ ಗಳಿಸಿದೆ. ಇದು ಲಿಸ್ಟ್ ಎ ಕ್ರಿಕೆಟ್ ಇತಿಹಾಸದಲ್ಲೇ ಎರಡನೇ ಅತಿ ದೊಡ್ಡ ರನ್ ಚೇಸ್ ಆಗಿದೆ. ದೇವದತ್ ಪಡಿಕ್ಕಲ್ ಅವರು ಕೇವಲ 118 ಎಸೆತಗಳಲ್ಲಿ 147 ರನ್ ಗಳಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.
ಮಂಗಳೂರು: ಸುರತ್ಕಲ್ ಠಾಣಾ ವ್ಯಾಪ್ತಿಯ ಧನರಾಜ್ (25) ಎಂಬವರು ಡಿ.19ರಿದ ಕಾಣೆಯಾದ ಬಗ್ಗೆ ಪ್ರಕರಣ ದಾಖಲಾಗಿದೆ. ಹೋಮ್ ನರ್ಸ್ ಕೆಲಸ ಮಾಡಿಕೊಂಡಿದ್ದ ಧನರಾಜ್ ತಿಂಗಳಿಗೊಮ್ಮೆ ಮನೆಗೆ ಹೋಗುತ್ತಿದ್ದರು. ಡಿ.19ರಂದು ಮನೆಯಲ್ಲಿ ಜಗಳ ಮಾಡಿ ಮನೆ ಬಿಟ್ಟು ಹೋದವರು ಡಿ.21ರಂದು ನಾನು ಇನ್ನು ಮನೆಗೆ ಬರುವುದಿಲ್ಲ ಎಂದು ವಾಟ್ಸ್ಆ್ಯಪ್ ಮೆಸೇಜ್ ಮಾಡಿದ್ದಾರೆ. ಬಳಿಕ ಧನರಾಜ್ರ ಮೊಬೈಲ್ ಸ್ವಿಚ್ ಆಫ್ ಆಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. 5 ಅಡಿ ಎತ್ತರದ, ಸಪೂರ ಶರೀರದ ಧನರಾಜ್ ಮನೆಯಿಂದ ಹೊರ ಹೋಗುವಾಗ ಕಪ್ಪುಅರ್ಧ ತೋಳಿನ ಶರ್ಟ್, ಕಪ್ಪು ಬಣ್ಣದ ಟ್ರ್ಯಾಕ್ ಪ್ಯಾಂಟ್ ಧರಿಸಿದ್ದು ಕನ್ನಡ, ತುಳು, ಹಿಂದಿ ಭಾಷೆ ಮಾತನಾಡುತ್ತಾರೆ. ಧನರಾಜ್ರ ಸುಳಿವು ಸಿಕ್ಕಲ್ಲಿ ಮಾಹಿತಿ ನೀಡುವಂತೆ ಠಾಣಾಧಿಕಾರಿ ಮನವಿ ಮಾಡಿದ್ದಾರೆ.
ಅಮೆರಿಕದ ಸೆಮಿಕಂಡಕ್ಟರ್ ಕಂಪನಿಗೆ ಮಂಡ್ಯ ಜಿಲ್ಲೆಯಲ್ಲಿ 100 ಎಕರೆ ಜಾಗ: HD ಕುಮಾರಸ್ವಾಮಿಗೆ MB ಪಾಟೀಲ್ ಪತ್ರ
ಅಮೆರಿಕದ ಸ್ಯಾನ್ಸನ್ ಗ್ರೂಪ್ಗೆ ಮಂಡ್ಯದಲ್ಲಿ 100 ಎಕರೆ ಭೂಮಿ ನೀಡಲು ರಾಜ್ಯ ಸರಕಾರ ಉತ್ಸುಕವಾಗಿದೆ. ಆದರೆ, ಕಂಪನಿಯ ಅಧಿಕಾರಿಗಳನ್ನು ಸಂಪರ್ಕಿಸಲು ವಿಫಲ ಯತ್ನ ನಡೆದಿದೆ. ಹೈಟೆಕ್ ಉದ್ಯಮಗಳನ್ನು ಬೆಳೆಸಲು ಬದ್ಧವಾಗಿರುವ ಸರಕಾರ, ಈ ಹೂಡಿಕೆ ರಾಜ್ಯಕ್ಕೆ ಬರಬೇಕೆಂದು ಬಯಸಿದೆ.
ಎಸ್ವೈಎಸ್ ಉಪ್ಪಿನಂಗಡಿ ರೋನ್ ವತಿಯಿಂದ ಜಮಾಅತ್ ಪ್ರತಿನಿಧಿ ಸಂಗಮ
ಉಪ್ಪಿನಂಗಡಿ, ಡಿ.24: ರಾಜ್ಯದ ಅತೀ ದೊಡ್ಡ ಸುನ್ನೀ ಯುವಜನ ಸಂಘಟನೆಯಾಗಿರುವ ಎಸ್ವೈಎಸ್ ಉಪ್ಪಿನಂಗಡಿ ಝೋನ್ ಸಮಿತಿ ವತಿಯಿಂದ ಖುತುಬಾಅ ಹಾಗೂ ಜಮಾಅತ್ ಪ್ರತಿನಿಧಿ ಸಂಗಮವು, ಎಸ್ ವೈ ಎಸ್ ಝೋನ್ ಸಮಿತಿ ಅಧ್ಯಕ್ಷ ಅಬ್ದುರ್ರಝಾಖ್ ಲತೀಫಿ ಕುಂತೂರು ಅಧ್ಯಕ್ಷತೆಯಲ್ಲಿ ಉಪ್ಪಿನಂಗಡಿ ನೆಕ್ಕಿಲಾಡಿ ಎಸ್ಜೆಎಂ ಜಿಲ್ಲಾ ಮುಅಲ್ಲಿಂ ಸೆಂಟರ್ ಸಭಾಂಗಣದಲ್ಲಿ ಜರಗಿತು. ಹಾಫಿಳ್ ಯಾಕೂಬ್ ಸಅದಿ ಅಲ್ ಅಫ್ಳಲಿ ನಾವೂರು ಮುಖ್ಯ ಅತಿಥಿಯಾಗಿ ಮಾತನಾಡಿ, ಸಮಾಜದಲ್ಲಿಂದು ಮದುವೆಯ ಹೆಸರಲ್ಲಿ ಅನಗತ್ಯವಾಗಿ ನಡೆಯುತ್ತಿರುವ ದುಂದು ವೆಚ್ಚ ಹಾಗೂ ಅನಾಚಾರದಿಂದ ದೂರವಿರುವಂತೆ ನಮ್ಮ ಯುವಕ ಯುವತಿಯರಿಗೆ ಜಮಾಅತ್ ನಾಯಕರು ಸ್ಪಷ್ಟ ಸಂದೇಶ ನೀಡಿ, ಸರಳ ಮಾದರಿ ಮದುವೆಗೆ ಪ್ರೇರಣೆ ನೀಡಬೇಕೆಂದು ಕರೆ ನೀಡಿದರು. ಕೆ.ಎಂ.ಜೆ ಜಿಲ್ಲಾಧ್ಯಕ್ಷ ಜಿ ಮುಹಮ್ಮದ್ ಕಾಮಿಲ್ ಸಖಾಫಿ ಕಾರ್ಯಕ್ರಮ ಉದ್ಘಾಟಿಸಿದರು. ಜಂ-ಇಯ್ಯತುಲ್ ಉಲಮಾ ಕೇಂದ್ರ ಸಮಿತಿ ನಾಯಕ ಆದಂ ಅಹ್ಸನಿ ಉಸ್ತಾದರು ದುಆ ನೆರವೇರಿಸಿದರು. ವೇದಿಕೆಯಲ್ಲಿ ಉಮರುಲ್ ಫಾರೂಕ್ ಸಖಾಫಿ ನೆಕ್ಕಿಲು, ಅಥಾವುಲ್ಲ ಹಿಮಮಿ ಸಖಾಫಿ, ಹಮೀದ್ ಸಅದಿ ಕಳಂಜಿಬೈಲು, ಕಾಸಿಂ ಪದ್ಮುಂಜ, ಅಬ್ಬಾಸ್ ಬಟ್ಲಡ್ಕ, ಉಸ್ಮಾನ್ ಸೋಕಿಲ, ಅಬ್ದುಲ್ ಮಜೀದ್ ಸಖಾಫಿ, ಡಿ.ಎಚ್.ಇಬ್ರಾಹೀಂ ಸಅದಿ, ಮುಹಮ್ಮದ್ ಅಲಿ ತುರ್ಕಳಿಕೆ, ಇಸ್ಹಾಕ್ ಹಾಜಿ ಮೇದರಬೆಟ್ಟು, ಅಬ್ದುಲ್ ಶುಕೂರ್ ಮೇದರಬೆಟ್ಟು, ಮುಹಮ್ಮದ್ ಫಾಳಿಲಿ, ಜಿ ಎಂ ಕುಂಞಿ ಜೋಗಿಬೆಟ್ಟು, ರಫೀಕ್ ಬಾಜಾರ, ನಿಸಾರ್ ಸೋಕಿಲ, ಕಲಂದರ್ ಪದ್ಮುಂಜ ಸೇರಿದಂತೆ ಝೋನ್ ವ್ಯಾಪ್ತಿಯ 40 ಕ್ಕೂ ಅಧಿಕ ಜಮಾಅತಿನ ಖತೀಬ್ ಉಪಸ್ಥಿತರಿದ್ದರು. ಎಸ್ ವೈ ಎಸ್ ಉಪ್ಪಿನಂಗಡಿ ಝೋನ್ ಪ್ರಧಾನ ಕಾರ್ಯದರ್ಶಿ ಎನ್.ಎಂ. ಶರೀಫ್ ಸಖಾಫಿ ನೆಕ್ಕಿಲು ಸ್ವಾಗತಿಸಿ ದರು. ಎಸ್ವೈ ಎಸ್ ಝೋನ್ ಕೋಶಾಧಿಕಾರಿ ಡಾ.ಫಾರೂಕ್ ನೆಕ್ಕಿಲಾಡಿ ವಂದಿಸಿದರು.
ವಿಸ್ಮಯ ಅಮ್ಯೂಸ್ಮೆಂಟ್ ಪಾರ್ಕ್ನಲ್ಲಿ ಇಟಾಲಿಯನ್ ಸಾಹಸ ಸವಾರಿ ‘ರಾಡಿಕ್ಸ್’ ಉದ್ಘಾಟನೆ
ಕಣ್ಣೂರು, ಡಿ.23: ವಿಸ್ಮಯ ಅಮ್ಯೂಸ್ಮೆಂಟ್ ಪಾರ್ಕ್ನಲ್ಲಿ ಹೊಸ ಇಟಾಲಿಯನ್ ಸಾಹಸ ಸವಾರಿ ‘ರಾಡಿಕ್ಸ್’ ಆರಂಭಗೊಂಡಿದೆ. ಕೇರಳ ವಿಧಾನಸಭಾ ಸ್ಪೀಕರ್ ಎ.ಎನ್. ಶಂಸೀರ್ ಉದ್ಘಾಟಿಸಿದರು. ವಿಸ್ಮಯ ಅಮ್ಯೂಸ್ಮೆಂಟ್ ಪಾರ್ಕ್ ಅಧ್ಯಕ್ಷ ಪಿ.ವಿ. ಗೋಪಿನಾಥ್ ಅಧ್ಯಕ್ಷತೆ ವಹಿಸಿದ್ದರು. ವಿಸ್ಮಯ ಅಮ್ಯೂಸ್ಮೆಂಟ್ ಪಾರ್ಕ್ ಉಪಾಧ್ಯಕ್ಷ ಕೆ. ಸಂತೋಷ್, ವ್ಯವಸ್ಥಾಪಕ ನಿರ್ದೇಶಕ ಇ. ವೈಶಾಖ್ ಶುಭ ಹಾರೈಸಿದರು. 15 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾದ ಈ ರೈಡ್ ಅನ್ನು ಇಟಾಲಿಯನ್ ಕಂಪೆನಿ ಮೋಸರ್ ತಯಾರಿಸಿದೆ. ಇಟಲಿಯಿಂದ ಆಗಮಿಸಿದ ತಜ್ಞರ ಮೇಲ್ವಿಚಾರಣೆಯಲ್ಲಿ ರೈಡ್ನ ಅಳವಡಿಕೆಯನ್ನು ಮಾಡಲಾಗಿದೆ. ಕ್ರಿಸ್ಮಸ್ ಮತ್ತು ಹೊಸ ವರ್ಷದ ಆಚರಣೆಯ ಅಂಗವಾಗಿ, ವಿಸ್ಮಯ ಪಾರ್ಕ್ನಲ್ಲಿ ಸಂದರ್ಶಕರಿಗೆ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ಹಳ್ಳಿಹೊಳೆ ಗ್ರಾಪಂಗೆ ಶಾಸಕ ಮಂಜುನಾಥ ಭಂಡಾರಿ ಭೇಟಿ
ಕುಂದಾಪುರ, ಡಿ.24: ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಅವರು ಡಿ.24ರಂದು ಹಳ್ಳಿಹೊಳೆ ಗ್ರಾಪಂಗೆ ಭೇಟಿ ನೀಡಿ, ಇತ್ತೀಚೆಗೆ ಉದ್ಘಾಟನೆಗೊಂಡ ನೂತನ ಗ್ರಾಪಂ ಕಟ್ಟಡವನ್ನು ಪರಿಶೀಲಿಸಿ ಗ್ರಾಮಸ್ಥರ ಹಲವು ಮನವಿಗಳನ್ನು ಸ್ವೀಕರಿಸಿದರು. ಹಳ್ಳಿಹೊಳೆಯಿಂದ ಬೈಂದೂರು ತಾಲೂಕು ಕೇಂದ್ರಕ್ಕೆ ಹೋಗುವ ಸರಕಾರಿ ಬಸ್ಗೆ ಬೇಡಿಕೆ, ಹಳ್ಳಿಹೊಳೆ ಕಮಲಶಿಲೆ ರಸ್ತೆಯ ಪಾರೆಯಲ್ಲಿ ರಸ್ತೆ ಅಭಿವೃದ್ಧಿಗೆ ವನ್ಯಜೀವಿ ವಿಭಾಗದಿಂದ ಆಕ್ಷೇಪದ ಬಗ್ಗೆ, ಶಾಡಬೇರುನಿಂದ ಮೂಡಹಿತ್ಲು ರಸ್ತೆ ಅಭಿವೃದ್ಧಿಗೆ ಮನವಿ, ಸುಮಾರು 25 ವರ್ಷದಿಂದ ಓಡಾಡುತ್ತಿದ್ದ ಉಡುಪಿ-ಹೈದರಾಬಾದ್ ಸರಕಾರಿ ಬಸ್ ಸಂಚಾರ ಸ್ಥಗಿತ ಗೊಂಡ ಬಗ್ಗೆ, ಮಡಾಮಕ್ಕಿ ಗ್ರಾಮದ ಬೆಪ್ದೆ ರಸ್ತೆ ಅಭಿವೃದ್ಧಿ ಬಗ್ಗೆ ಸ್ಥಳೀಯರು ಮಂಜುನಾಥ ಭಂಡಾರಿ ಅವರ ಬಳಿ ಮನವಿ ಮಾಡಿದ್ದು ಈ ಬಗ್ಗೆ ಅಗತ್ಯ ಕ್ರಮವಹಿಸುವುದಾಗಿ ಮಂಜುನಾಥ್ ಭಂಡಾರಿ ತಿಳಿಸಿದರು. ಈ ಸಂದರ್ಭದಲ್ಲಿ ಹಳ್ಳಿಹೊಳೆ ಗ್ರಾಪಂ ಅಧ್ಯಕ್ಷ ಮಂಜುನಾಥ ಶೆಟ್ಟಿ, ಉಪಾಧ್ಯಕ್ಷೆ ಗಿರಿಜಾ, ಸದಸ್ಯರಾದ ಪ್ರದೀಪ ಕೊಠಾರಿ, ನೇತ್ರಾವತಿ, ಯು. ಪ್ರಭಾಕರ ನಾಯ್ಕ, ಸುಜಾತ ಬೋವಿ, ಉಡುಪಿ ಜಿಲ್ಲಾ ಕೆಡಿಪಿ ಸದಸ್ಯ ಪ್ರಸನ್ನ ಕುಮಾರ್ ಶೆಟ್ಟಿ ಕೆರಾಡಿ, ಬೈಂದೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅರವಿಂದ ಪೂಜಾರಿ, ವಂಡ್ಸೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರದೀಪಕುಮಾರ್ ಶೆಟ್ಟಿ ಗುಡಿಬೆಟ್ಟು, ಮಾಜಿ ಅಧ್ಯಕ್ಷ ಸಂಜೀವ ಶೆಟ್ಟಿ ಸಂಪಿಗೇಡಿ ಉಪಸ್ಥಿತರಿದ್ದರು. ಮಾನಂಜೆ ವ್ಯವಸಾಯ ಸೇವಾ ಸಹಕಾರಿ ಸಂಘದ ಮಾಜಿ ಅಧ್ಯಕ್ಷ ಶಂಕರನಾರಾಯನ ಯಡಿಯಾಳ, ಪಂಚಾಯತ್ ರಾಜ್ ಒಕ್ಕೂಟದ ಅಧ್ಯಕ್ಷ ಉದಯಕುಮಾರ ಶೆಟ್ಟಿ ಅಡಿಕೆಕೊಡ್ಲು, ತಾ.ಪಂ. ಮಾಜಿ ಸದಸ್ಯ ರಾಜು ಪೂಜಾರಿ ಹನ್ಕಿ, ಕಾಂಗ್ರೆಸ್ ಪಕ್ಷದ ಮುಖಂಡರು, ಕಾರ್ಯಕರ್ತರು ಹಾಜರಿದ್ದರು.
ಡಿ.26-28: ಕೋಡಿ ಬ್ಯಾರೀಸ್ ಶೈಕ್ಷಣಿಕ ಸಂಸ್ಥೆಯಲ್ಲಿ ಪದವಿ ಪ್ರದಾನ
ಸಂಸ್ಥಾಪಕರ ದಿನಾಚರಣೆ, ‘ಬ್ಯಾರೀಸ್ ಉತ್ಸವ-2025’
ಸಹಕಾರ ಕ್ಷೇತ್ರದಲ್ಲಿ ಮೊದಲ ಬಾರಿಗೆ ಆನ್ಲೈನ್ ಪಾವತಿ; ಡಿಸಿಸಿ ಬ್ಯಾಂಕ್ನಿಂದ IMPS, ಯುಪಿಐ ಸೇವೆ
ಶಿವಮೊಗ್ಗ ಡಿಸಿಸಿ ಬ್ಯಾಂಕ್ ಸಹಕಾರ ಕ್ಷೇತ್ರದಲ್ಲಿ ಮೊಟ್ಟಮೊದಲ ಬಾರಿಗೆ ಐಎಂಪಿಎಸ್ ಮತ್ತು ಯುಪಿಐ ಆನ್ಲೈನ್ ಪಾವತಿ ಸೇವೆಗಳನ್ನ ಜಾರಿ ತರಲು ನಿರ್ಧರಿಸಿದೆ. ರೈತರು ಮತ್ತು ಜನಸಾಮಾನ್ಯರಿಗೆ ಅನುಕೂಲವಾಗುವಂತೆ ಈ ವ್ಯವಸ್ಥೆ ಜಾರಿಗೆ ತರಲಾಗುತ್ತಿದೆ. ಬ್ಯಾಂಕ್ ತನ್ನ ಶಾಖೆಗಳ ಸಂಖ್ಯೆಯನ್ನು ಹೆಚ್ಚಿಸುವ ಗುರಿ ಹೊಂದಿದೆ. 2025-26ನೇ ಸಾಲಿನಲ್ಲಿ 1.20 ಲಕ್ಷ ರೈತರಿಗೆ 1300 ಕೋಟಿ ರೂ. ಬೆಳೆ ಸಾಲ ನೀಡುವ ಯೋಜನೆ ಇದೆ. ಸ್ವ ಸಹಾಯ ಸಂಘಗಳಿಗೂ ಆರ್ಥಿಕ ನೆರವು ನೀಡಲಾಗುತ್ತಿದೆ.
ಬೆಂಗಳೂರು: ಪತ್ರಿಕೋದ್ಯಮ ಕ್ಷೇತ್ರದಲ್ಲಿ ಸಲ್ಲಿಸಿದ ಅಪ್ರತಿಮ ಸೇವೆಗಾಗಿ ಹಿರಿಯ ಪತ್ರಕರ್ತರು, ಸಾಧಕರಿಗೆ ಬೆಂಗಳೂರು ಪ್ರೆಸ್ ಕ್ಲಬ್ ವತಿಯಿಂದ ಪ್ರದಾನ ಮಾಡುವ 2025ನೆ ಸಾಲಿನ ವಾರ್ಷಿಕ ಪ್ರಶಸ್ತಿಗೆ ವಾರ್ತಾಭಾರತಿ ಕನ್ನಡ ದೈನಿಕ ಬೆಂಗಳೂರು ಆವೃತ್ತಿಯ ಹಿರಿಯ ವರದಿಗಾರ ಅಮ್ಜದ್ ಖಾನ್ ಎಂ., ಸೇರಿದಂತೆ 55 ಪತ್ರಕರ್ತರು ಭಾಜನರಾಗಿದ್ದಾರೆ. ಹಿರಿಯ ಪತ್ರಕರ್ತರಾದ ಮೃತ್ಯುಂಜಯ ಎನ್.ಎಚ್., ನಂಜುಂಡೇಗೌಡ ಎಚ್.ಜೆ., ನಂಜುಂಡಪ್ಪ ವಿ., ಶಿವರುದ್ರಪ್ಪ ಡಿ.ಎಸ್, ಕೀರ್ತಿ ಪ್ರಸಾದ್ ಎಂ., ರಮೇಶ್ ಕುಮಾರ್ ನಾಯ್ಕ್, ಶ್ರೀನಿವಾಸಮೂರ್ತಿ, ಝಿಕ್ರಿಯಾ ಕೆ.ಎಂ., ಅಂತೋನಿ ಎ.ಮೇರಿ, ಅತ್ತಿಗುಪ್ಪೆ ರವಿಕುಮಾರ್, ಮಧುಕೇಶ್ವರ್ ಜವಳಿ, ಅನುಷಾ ರವಿ, ಬನ್ಸಿ ಕಾಳಪ್ಪ, ಸೇರಿದಂತೆ 55 ಪತ್ರಕರ್ತರಿಗೆ ಈ ಬಾರಿ ಪ್ರಶಸ್ತಿ ಪ್ರದಾನಿಸಲಾಗುತ್ತಿದೆ. ಡಿ.31 ರಂದು ಬೆಂಗಳೂರಿನ ಪ್ರೆಸ್ಕ್ಲಬ್ ಆವರಣದಲ್ಲಿ ಏರ್ಪಡಿಸಲಾಗಿರುವ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪುರಸ್ಕೃತರಿಗೆ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವ ಸಂಪುಟ ಸದಸ್ಯರು ಸೇರಿದಂತೆ ಹಲವು ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದು ಬೆಂಗಳೂರು ಪ್ರೆಸ್ಕ್ಲಬ್ ಅಧ್ಯಕ್ಷ ಆರ್.ಶ್ರೀಧರ್ ಹಾಗೂ ಪ್ರಧಾನ ಕಾರ್ಯದರ್ಶಿ ಶಿವಕುಮಾರ್ ಬೆಳ್ಳಿತಟ್ಟೆ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಅತ್ಯಾಚಾರ ಅಪರಾಧಿ ಸೆಂಗರ್ ಜೈಲು ಶಿಕ್ಷೆ ಅಮಾನತು: ಸುಪ್ರೀಂಕೋರ್ಟ್ ಮೊರೆ ಹೋಗಲಿರುವ ಉನ್ನಾಂವ್ ಸಂತ್ರಸ್ತೆ
ನಮ್ಮ ಕುಟುಂಬದ ಪಾಲಿಗೆ ಕರಾಳ ತೀರ್ಪು ಎಂದ ಸಂತ್ರಸ್ತೆ
170 ಪರಮಾಣು ಸಿಡಿತಲೆಗಳ ಹುಸಿ ಬೆದರಿಕೆ: ಢಾಕಾಗೋಸ್ಕರ ಭಾರತದ ವಿರುದ್ಧ ಪಾಕಿಸ್ತಾನ ಏಕೆ ಯುದ್ಧಕ್ಕಿಳಿಯುವುದಿಲ್ಲ?
ಡಿಸೆಂಬರ್ 2025ರಲ್ಲಿ ದಕ್ಷಿಣ ಏಷ್ಯಾ ತೀವ್ರ ಉದ್ವಿಗ್ನತೆಗೆ ಸಾಕ್ಷಿಯಾಯಿತು. ಬಾಂಗ್ಲಾದೇಶದಲ್ಲಿ ನಡೆದ ಹಿಂಸಾಚಾರ ಭಾರತ, ಪಾಕಿಸ್ತಾನ ಮತ್ತು ಚೀನಾಗಳನ್ನು ಅಪಾಯಕಾರಿ ಪರಿಸ್ಥಿತಿಗೆ ತಳ್ಳಿತು. ಶರೀಫ್ ಒಸ್ಮಾನ್ ಹಾದಿ ಹತ್ಯೆಯಿಂದ ಆರಂಭವಾದ ಗಲಭೆಗಳು ಭಾರತೀಯ ರಾಯಭಾರ ಕಚೇರಿ ಮೇಲೆ ದಾಳಿಗೆ ಕಾರಣವಾಯಿತು. ಪಾಕಿಸ್ತಾನದ ಪರಮಾಣು ಶಸ್ತ್ರಾಸ್ತ್ರಗಳ ಉಪಸ್ಥಿತಿ ಮತ್ತು ಚೀನಾದ ಹೂಡಿಕೆಗಳು ಪರಿಸ್ಥಿತಿಯನ್ನು ಮತ್ತಷ್ಟು ಸಂಕೀರ್ಣಗೊಳಿಸಿದವು. ಇದು ಪರಮಾಣು ಯುದ್ಧದ ಅಂಚಿಗೆ ತಂದರೂ, ತಪ್ಪು ಲೆಕ್ಕಾಚಾರಗಳಿಂದ ಅಪಾಯ ಹೆಚ್ಚಾಯಿತು.
ಗುರುಪುರ: ತಾಲೂಕು, ಜಿಲ್ಲಾ ಪಂಚಾಯತ್ ಚುನಾವಣೆಯ ಪೂರ್ವಭಾವಿ ಸಭೆ
ಗುರುಪುರ: ಮುಂದಿನ ತಾಲೂಕು ಮತ್ತು ಜಿಲ್ಲಾ ಪಂಚಾಯತ್ ಚುನಾವಣೆಯ ಪೂರ್ವಭಾವಿ ಸಭೆಯು ಚುನಾವಣೆ ಸಂಬಂಧ ಗುರುಪುರ ಬ್ಲಾಕ್ ಕಾಂಗ್ರೆಸ್ ನ ಸಭೆಯು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ ಅವರ ಅಧ್ಯಕ್ಷತೆಯಲ್ಲಿ ಬುಧವಾರ ಗುರುಪುರ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ನಡೆಯಿತು. ಇನಾಯತ್ ಅಲಿ ಮಾತನಾಡಿ, ಬೂತ್ ಮಟ್ಟದಲ್ಲೂ ಸಭೆಗಳು ನಡೆಯಬೇಕು. ತಿಂಗಳಿಗೊಂದು ಸಭೆ ನಡೆಸಲಾ ಗುತ್ತಿದೆ. ವರಾಹ ಪೌಂಡೇಶನ್ ರೀತಿ ಎಲ್ಲಾ ವಲಯ ಮಟ್ಟದಲ್ಲಿ ಉಚಿತ ಆರೋಗ್ಯ ಶಿಬಿರಗಳನ್ನು ಆಯೋಜಿಸ ಬೇಕು. ಅದಕ್ಕೆ ಬೇಕಾದ ವ್ಯವಸ್ಥೆಯನ್ನು ಬ್ಲಾಕ್ ನಿರ್ವಹಿಸಲಿದೆ. ಕಾಂಗ್ರೆಸ್ ಕಾರ್ಯಕರ್ತರು ಗೆದ್ದ ಬಿಜೆಪಿ ಸದಸ್ಯರ ಫೊಟೊಗಳನ್ನು ಹಂಚಿ ಸಂಭ್ರಮಿಸುತ್ತಿದ್ದಾರೆ. ಕಾಂಗ್ರೆಸ್ ಎಂದರೆ ಸಾಯುವ ವರೆಗೂ ಸಾಯುವವರೆಗೂ ಕಾಂಗ್ರೆಸ್ ಆಗಿರಬೇಕು. ಮುಂದಿನ ಚುನಾವಣೆಯಲ್ಲಿ ರಾಹುಲ್ ಗಾಂಧಿ ಅವರನ್ನು ಪ್ರಧಾನಿ ಮಾಡುವವರೆಗೆ ಕಾರ್ಯಕರ್ತರು, ನಾಯಕರು ವಿರಮಿಸಬಾರದು ಎಂದು ಇನಾಯತ್ ಅಲಿ ನುಡಿದರು. ಬಳಿಕ ಮಾತನಾಡಿದ ಕಾಂಗ್ರೆಸ್ ದ.ಕ. ಜಿಲ್ಲಾ ಉಸ್ತುವಾರಿ ಗಿರೀಶ್ ಆಳ್ವ, ರಾಜ್ಯದಲ್ಲಿ ನೀಡಿರುವ ಗ್ಯಾರಂಟಿಗಳು ಪಟ್ಟಣ ಪಂಚಾಯತ್ ಚುನಾವಣೆಯಲ್ಲಿ ಮತಗಳಾಗಿ ಬದಲಾಗಿಲ್ಲ. ಮುಂದಿನ ಗ್ರಾಮ ಪಂಚಾಯತ್, ತಾಲೂಕು, ಜಿಲ್ಲಾ ಪಂಚಾಯತ್ ಚುನಾವಣೆ ಮುಂದಿನ ವಿಧಾನ ಸಭೆ ಚುನಾವಣೆಯ ಕನ್ನಡಿ ಎಂದರು. ಗುರುಪುರ ಕಾಂಗ್ರೆಸ್ ನ ಭದ್ರಕೋಟೆ, ಇಲ್ಲಿ ಕಾಂಗ್ರೆಸ್ ನ ಹಲವು ಬಲಿಷ್ಠ ನಾಯಕರು ಇದ್ದಾರೆ. ಹಾಗಾಗಿ ಮುಂದಿನ ಚುನಾವಣೆಯಲ್ಲಿ ಗುರುಪುರದಲ್ಲಿ ಅತೀ ಹೆಚ್ಚಿನ ಮತಗಳು ಪಕ್ಷಕ್ಕೆ ದೊರೆಯಲಿದೆ ಎಂದರು. ಸಭೆಯಲ್ಲಿ ಮುಖಂಡರು ಹಾಗೂ ಕಾರ್ಯಕರ್ತರು ವಿವಿಧ ಸಲಹೆ ಸೂಚನೆಗಳನ್ನು ನೀಡಿದರು. ಸಭೆಯಲ್ಲಿ ಬ್ಲಾಕ್ ಅಧ್ಯಕ್ಷ ಬಿ.ಎಲ್. ಪದ್ಮನಾಭ ಪೂಜಾರಿ, ಕೆಪಿಸಿಸಿ ಸದಸ್ಯ ಆರ್.ಕೆ. ಪ್ರಥ್ವಿರಾಜ್, ಜಿ.ಪಂ ಮಾಜಿ ಸದಸ್ಯ ಕೃಷ್ಣ ಅಮೀನ್, ಬ್ಲಾಕ್ ಮಹಿಳಾ ಘಟಕಾಧ್ಯಕ್ಷೆ ಜಯಲಕ್ಷ್ಮೀ , ಜಿಲ್ಲಾ ಹಿಂದುಳಿದ ವರ್ಗದ ಅಧ್ಯಕ್ಷ ಗಣೇಶ್ ಪೂಜಾರಿ, ಗುರುಪುರ ಬ್ಲಾಕ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಬಾಷಾ ಗುರುಪುರ, ಯೂತ್ ಬ್ಲಾಕ್ ಅಧ್ಯಕ್ಷ ಮುಫೀದ್ ಮೊದಲಾದವರು ಇದ್ದರು.
ಡಿ.27ರಂದು ಬೈಂದೂರು ನೂತನ ಬಸ್ ನಿಲ್ದಾಣ ಉದ್ಘಾಟನೆ
ಉಡುಪಿ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಮಂಗಳೂರು ವಿಭಾಗದ ವತಿಯಿಂದ ಬೈಂದೂರು ನೂತನ ಬಸ್ ನಿಲ್ದಾಣದ ಉದ್ಘಾಟನಾ ಸಮಾರಂಭ ಡಿ.27ರಂದು ಬೆಳಗ್ಗೆ 11:30ಕ್ಕೆ ಬೈಂದೂರು ಕ.ರಾ.ರ.ಸಾ.ನಿಗಮ ಬಸ್ ನಿಲ್ದಾಣದಲ್ಲಿ ನಡೆಯಲಿದೆ. ಕಾರ್ಯಕ್ರಮವನ್ನು ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲ ಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಆರ್. ಹೆಬ್ಬಾಳ್ಕರ್ ಉದ್ಘಾಟಿಸಲಿದ್ದು, ಶಾಸಕ ಗುರುರಾಜ್ ಶೆಟ್ಟಿ ಗಂಟಿಹೊಳೆ ಅಧ್ಯಕ್ಷತೆ ವಹಿಸಲಿದ್ದಾರೆ. ಸಮಾರಂಭದಲ್ಲಿ ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಅಧ್ಯಕ್ಷ ಎಸ್.ಅರ್.ಶ್ರೀನಿವಾಸ್ (ವಾಸು), ಸಂಸದರಾದ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಬಿ.ವೈ ರಾಘವೇಂದ್ರ, ಜಿಲ್ಲೆಯ ಶಾಸಕರು, ವಿಧಾನಪರಿಷತ್ ಸದಸ್ಯರು, ವಿವಿಧ ಮಂಡಳಿ, ನಿಗಮ, ಸಮಿತಿಗಳ ಪದಾಧಿಕಾರಿಗಳು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ವ್ಯವಸ್ಥಾಪಕ ನಿರ್ದೇಶಕ ಅಕ್ರಂ ಪಾಷ, ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ, ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್, ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಂ ಶಂಕರ್ ಹಾಗೂ ಇತರರು ಭಾಗವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
ಉನ್ನಾವೋ ಸಂತ್ರಸ್ತೆಯ ಮೇಲೆ ಪೊಲೀಸರ ದೌರ್ಜನ್ಯ; ಅಪರಾಧಿಗೆ ಜಾಮೀನು, ನಮಗೆ ಸಾವು ಎಂದು ಅಳಲು
ಜೈಲು ಶಿಕ್ಷೆಗೆ ಗುರಿಯಾಗಿರುವ ಮಾಜಿ ಬಿಜೆಪಿ ಶಾಸಕ ಕುಲದೀಪ್ ಸಿಂಗ್ ಸೆಂಗಾರ್ಗೆ ದೆಹಲಿ ಹೈಕೋರ್ಟ್ ನೀಡಿರುವ ರಿಯಾಯಿತಿಯನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದ ಉನ್ನಾವೋ ಸಂತ್ರಸ್ತೆ ಮತ್ತು ಆಕೆಯ ತಾಯಿ ಬುಧವಾರ ಸಂಜೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಭೇಟಿಯಾದರು. ಇದಕ್ಕೂ ಮುನ್ನ ಕೇಂದ್ರ ಪ್ಯಾರಾ ಮಿಲಿಟರಿ ಸಿಬ್ಬಂದಿ ಸಂತ್ರಸ್ತೆಯ ತಾಯಿಯನ್ನು ಅಮಾನವೀಯವಾಗಿ ನಡೆಸಿ ಕೊಂಡ ಘಟನೆ ನಡೆದಿದೆ.
ಕಾಪು ಮಾರಿಗುಡಿಗೆ ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ಭೇಟಿ
ಕಾಪು: ಕರ್ನಾಟಕ ವಿಧಾನ ಪರಿಷತ್ ಸಭಾಪತಿಗಳಾದ ಬಸವರಾಜ್ ಹೊರಟ್ಟಿ ಅವರು ಬುಧವಾರ ಕಾಪುವಿನ ಹೊಸ ಮಾರಿಗುಡಿ ದೇವಸ್ಥಾನಕ್ಕೆ ಭೇಟಿ ನೀಡಿ ಉಚ್ಚಂಗಿ ಸಹಿತ ಶ್ರೀಮಾರಿಯಮ್ಮ ದೇವಿಯ ದರುಶನ ಪಡೆದರು. ಈ ಸಂದರ್ಭದಲ್ಲಿ ಅವರನ್ನು ದೇವಳದ ವ್ಯವಸ್ಥಾಪನಾ ಸಮಿತಿ ಮತ್ತು ಅಭಿವೃದ್ಧಿ ಸಮಿತಿ ವತಿಯಿಂದ ಸ್ವಾಗತಿಸಿ ಗೌರವಿಸಲಾಯಿತು. ದೇವಳದ ಪ್ರಧಾನ ಅರ್ಚಕ ವೇದಮೂರ್ತಿ ಶ್ರೀನಿವಾಸ ತಂತ್ರಿ ಕಲ್ಯ ದೇವರ ಅನುಗ್ರಹ ಪ್ರಸಾದ ನೀಡಿದರು. ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬಸವರಾಜ ಹೊರಟ್ಟಿ, ನನಗೆ ಇದು ಜೀವನದಲ್ಲಿ ಅತ್ಯಂತ ಶ್ರೇಷ್ಠವಾದ ದಿನ, ಇಂತಹ ಚರಿತ್ರೆಯುಳ್ಳ ದೇವಸ್ಥಾನಕ್ಕೆ ಬಂದಿರುವುದರಿಂದ ಮಾನಸಿಕ ನೆಮ್ಮದಿಯ ಅನುಭವ ವಾಗಿದೆ. ಎಲ್ಲಿಯೂ ನಡೆಯದ ರೀತಿಯಲ್ಲಿ ಈ ದೇಗುಲದ ಜೀರ್ಣೋದ್ಧಾರ ನಡೆದಿದೆ, ತಾಯಿ ಎಲ್ಲರಿಗೂ ಒಳ್ಳೆಯದನ್ನು ಮಾಡಲಿ ಎಂದರು. ಈ ಸಂದರ್ಭದಲ್ಲಿ ಕಾಪು ಕ್ಷೇತ್ರದ ಶಾಸಕ ಮತ್ತು ಅಭಿವೃದ್ಧಿ ಸಮಿತಿಯ ಕಾರ್ಯಾಧ್ಯಕ್ಷ ಗುರ್ಮೆ ಸುರೇಶ್ ಶೆಟ್ಟಿ, ಅಭಿವೃದ್ಧಿ ಸಮಿತಿ ಅಧ್ಯಕ್ಷ ಕೆ. ವಾಸುದೇವ ಶೆಟ್ಟಿ, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರತ್ನಾಕರ ಶೆಟ್ಟಿ ನಡಿಕೆರೆ, ಕಾರ್ಯ ನಿರ್ವಹಣಾಧಿಕಾರಿ ರವಿಕಿರಣ್, ಅಭಿವೃದ್ಧಿ ಸಮಿತಿ ಪ್ರಧಾನ ಕಾರ್ಯದರ್ಶಿ ರಮೇಶ್ ಹೆಗ್ಡೆ ಕಲ್ಯ, ಉಪಾಧ್ಯಕ್ಷ ಮತ್ತು ವ್ಯವಸ್ಥಾಪನಾ ಸಮಿತಿಯ ಸದಸ್ಯ ಮಾಧವ ಆರ್. ಪಾಲನ್, ಪ್ರಚಾರ ಸಮಿತಿ ಪ್ರಧಾನ ಸಂಚಾಲಕ ಮತ್ತು ಘಂಟಾನಾದ ಸೇವಾ ಸಮಿತಿ ಅಧ್ಯಕ್ಷ ಯೋಗೀಶ್ ವಿ. ಶೆಟ್ಟಿ, ಹುಬ್ಬಳ್ಳಿ ಧಾರವಾಡ ಸಮಿತಿಯ ಸಂಚಾಲಕ ಸುಗ್ಗಿ ಸುಧಾಕರ ಶೆಟ್ಟಿ, ವ್ಯವಸ್ಥಾಪನಾ ಸಮಿತಿಯ ಸದಸ್ಯರಾದ ಶೇಖರ ಸಾಲ್ಯಾನ್, ರವೀಂದ್ರ ಮಲ್ಲಾರ್, ಮನೋಹರ ರಾವ್, ಜಯಲಕ್ಷ್ಮಿ ಎಸ್.ಶೆಟ್ಟಿ, ಚರಿತ ದೇವಾಡಿಗ, ಪ್ರಚಾರ ಸಮಿತಿ ಸಂಚಾಲಕ ಜಯರಾಮ್ ಆಚಾರ್ಯ, ನವದುರ್ಗಾ ಲೇಖನ ಯಜ್ಞ ಸಮಿತಿಯ ಪ್ರಧಾನ ಸಂಚಾಲಕಿ ಸಾವಿತ್ರಿ ಗಣೇಶ್ ಮತ್ತು ಇತರರು ಉಪಸ್ಥಿತರಿದ್ದರು.
ಜಾಗೃತ ಗ್ರಾಹಕರಿಂದ ಜಾಗೃತ ಸಮಾಜ ನಿರ್ಮಾಣ ಸಾಧ್ಯ: ಸುಮೀಲ ಟಿ. ಮಾಸರೆಡ್ಡಿ
ಉಡುಪಿ: ರಾಷ್ಟ್ರೀಯ ಗ್ರಾಹಕರ ದಿನಾಚರಣೆ
ಆಸೀಸ್ ನೆಲದಲ್ಲಿ ಆ್ಯಶಸ್ ಸರಣಿ ಸೋತ ಇಂಗ್ಲೆಂಡ್ ತಂಡದ ಕೋಚ್ ಬದಲಿಸಲು ಆಗ್ರಹ; ರವಿ ಶಾಸ್ತ್ರಿ ಹೊಡಿಯುತ್ತಾ ಚಾನ್ಸ್?
Monty Panesar On Ravi Shastri- ಆ್ಯಶಸ್ ಸರಣಿಯನ್ನು ಸೋಲುವುದರೊಂದಿಗೆ ಮಧ್ಯಪಾನದ ಪಾರ್ಟಿ ಮಾಡಿರುವ ಆರೋಪ ಎದುರಿಸುತ್ತಿರುವ ಇಂಗ್ಲೆಂಡ್ ತಂಡ ಇದೀಗ ತೀವ್ರ ಟೀಕೆಗೆ ಗುರಿಯಾಗಿದೆ. ಜೊತೆಗೆ ಪ್ರಧಾನ ಕೋಚ್ ಬ್ರೆಂಡನ್ ಮೆಕಲಂ ಅವರನ್ನು ಬದಲಾಯಿಸಬೇಕು ಎಂಬ ಒತ್ತಾಯ ಕೇಳಿ ಬಂದಿದೆ. ಆ ಸ್ಥಾನಕ್ಕೆ ಭಾರತದ ಮಾಜಿ ಕೋಚ್ ರವಿ ಶಾಸ್ತ್ರಿ ಅವರನ್ನು ನೇಮಿಸುವ ಬಗ್ಗೆ ಮಾಜಿ ಸ್ಪಿನ್ನರ್ ಮಾಂಟಿ ಪನಸರ್ ಬೆಂಬಲ ವ್ಯಕ್ತಪಡಿಸಿದ್ದಾರೆ. ಆಸ್ಟ್ರೇಲಿಯಾದಲ್ಲಿ ಭಾರತಕ್ಕೆ ಸರಣಿ ಗೆಲುವು ತಂದುಕೊಟ್ಟ ಅನುಭವ ಶಾಸ್ತ್ರಿ ಅವರಿಗಿದೆ.
ಮಂಗಳೂರು ತಾಲೂಕು ಬ್ಯಾರಿ ಸಾಹಿತ್ಯ ಸಮ್ಮೇಳನ: ಪ್ರಚಾರಕ್ಕೆ ಯು.ಟಿ. ಖಾದರ್ ಚಾಲನೆ
ಮಂಗಳೂರು, ಡಿ.24: ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿಯು 2026ರ ಜನವರಿ 4ರಂದು ಗುರುಪುರ ಕೈಕಂಬದ ಮೇಘಾ ಪ್ಲಾಝಾದಲ್ಲಿ ಹಮ್ಮಿಕೊಂಡಿರುವ ಮಂಗಳೂರು ತಾಲೂಕು ಬ್ಯಾರಿ ಸಾಹಿತ್ಯ ಸಮ್ಮೇಳನದ ಭಿತ್ರಿಪತ್ರ ಬಿಡುಗಡೆಯ ಮೂಲಕ ಸ್ಪೀಕರ್ ಯು.ಟಿ. ಖಾದರ್ ಬುಧವಾರ ಪ್ರಚಾರಕ್ಕೆ ಚಾಲನೆ ನೀಡಿದರು. ನಗರದ ಸರ್ಕ್ಯೂಟ್ ಹೌಸ್ನಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಬ್ಯಾರಿ ಅಕಾಡಮಿಯ ಅಧ್ಯಕ್ಷ ಉಮರ್ ಯು.ಎಚ್., ಸದಸ್ಯರಾದ ಮುಹಮ್ಮದ್ ಅಲಿ ಉಚ್ಚಿಲ್, ಯು.ಎಚ್. ಖಾಲಿದ್ ಉಜಿರೆ, ಸಮ್ಮೇಳನ ಸ್ವಾಗತ ಸಮಿತಿಯ ಉಪಾಧ್ಯಕ್ಷರಾದ ಎಂ.ಜಿ. ಸಾಹುಲ್ ಹಮೀದ್, ಸಲೀಂ ಹಂಡೇಲ್, ಕಾರ್ಯದರ್ಶಿಗಳಾದ ಎಸ್.ಎಂ.ಅಝೀಝ್ ಕೈಕಂಬ, ಅಬ್ದುಲ್ ಜಲೀಲ್ ಅರಳ, ಅಬುಧಾಬಿಯ ಬ್ಯಾರೀಸ್ ವೆಲ್ಫೇರ್ ಫೋರಂನ ಸದಸ್ಯ ಇಖ್ವಾನ್ ಅಹ್ಮದ್ ಉಪಸ್ಥಿತರಿದ್ದರು.

17 C