ಮೂಡುಬಿದಿರೆ | ಮಾದಕ ವಸ್ತು ಸಾಗಾಟ ಆರೋಪ: ರೌಡಿ ಶೀಟರ್ ನ ಬಂಧನ
ಮೂಡುಬಿದಿರೆ: ಕಾರಿನಲ್ಲಿ ಮಾದಕ ವಸ್ತು ಎಂಡಿಎಂಎ ಸಾಗಾಟ ಮಾಡುತ್ತಿದ್ದ ರೌಡಿ ಶೀಟರ್ ಓರ್ವನನ್ನು ಮೂಡುಬಿದಿರೆ ಪೊಲೀಸರು ಸಿನಿಮೀಯ ಶೈಲಿಯಲ್ಲಿ ಬಂಧಿಸಿರುವ ಘಟನೆ ಕೊಡಂಗಲ್ಲು ಎಂಬಲ್ಲಿ ಮಂಗಳವಾರ ಸಂಜೆ ವರದಿಯಾಗಿದೆ. ಬಂಧಿತನನ್ನು ಕಲ್ಲಡ್ಕ ನಿವಾಸಿ ತೌಸೀಫ್ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಬಂಧಿತನಿಂದ ಸುಮಾರು 50ಸಾವಿರ ರೂ. ಮೌಲ್ಯದ 10.800 ಗ್ರಾಂ ತೂಕದ ಎಂಡಿಎಂಎ, ಕೃತ್ಯಕ್ಕೆ ಬಳಸಿದ್ದ ಸುಮಾರು 3ಲಕ್ಷ ರೂ.ಮೌಲ್ಯದ ಕಾರು, ಈತನ ಕಾರಿನಲ್ಲಿ ಪತ್ತೆಯಾಗಿದ್ದ ತಲವಾರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಮೂಡುಬಿದಿರೆ ತಾಲೂಕಿನ ಶಿರ್ತಾಡಿಯಿಂದ ಕೊಡಂಗಲ್ಲು - ಮಹಾವೀರ ಕಾಲೇಜು ಮಾರ್ಗವಾಗಿ ಮಂಗಳೂರಿಗೆ ಎಂಡಿಎಂಎ ಸಹಿತ ಕಾರಿನಲ್ಲಿ ತೆರಳುತ್ತಿರುವ ಬಗ್ಗೆ ಪೊಲೀಸ್ ನಿರೀಕ್ಷಕ ಸಂದೇಶ್ ಅವರಿಗೆ ಮಾಹಿತಿ ದೊರೆತಿತ್ತು. ಅದರಂತೆ ಆತನ ಕಾರು ನಿಲ್ಲಿಸಿ ಬಂಧಿಸಲು ಹೋಗಿದ್ದ ಸಂದರ್ಭ ಆರೋಪಿಯು ತನ್ನ ಕಾರಿನಲ್ಲಿ ಪರಾರಿಯಾಗಲು ಯತ್ನಿಸಿದ್ದಾನೆ ಎನ್ನಲಾಗಿದೆ. ಈ ವೇಳೆ ಪೊಲೀಸರು ಸರಕಾರಿ ವಾಹನದಲ್ಲಿ ಬೆನ್ನು ಹತ್ತಿ ಆರೋಪಿಯನ್ನು ಸಿನಿಮೀಯ ರೀತಿಯಲ್ಲಿ ತಡೆದು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ. ಆರೋಪಿಯ ವಿರುದ್ಧ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಸುಮಾರು 5 ಪ್ರಕರಣಗಳು ದಾಖಲಾಗಿದ್ದು, ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಈತನ ವಿರುದ್ಧ ರೌಡಿ ಶೀಟ್ ತೆರೆಯಲಾಗಿದೆ ಎಂದು ತಿಳಿದು ಬಂದಿದೆ. ಆರೋಪಿಯ ವಿರುದ್ಧ ಮೂಡಬಿದಿರೆ ಅಪರಾಧ ಕ್ರಮಾಂಕ 200/2025 ಕಲಂ 8(c), 22(c) ಎನ್ ಡಿಪಿಎಸ್ ಕಾಯ್ದೆ 3, 25(1B)(a) Arms Act ರಂತೆ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆಯುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
Sports Street- ವೈಭವ್ ಸೂರ್ಯವಂಶಿಯನ್ನು ಈಗಲೇ ಟೀಂ ಇಂಡಿಯಾಗೆ ಆಯ್ಕೆ ಮಾಡ್ಬೇಕಾ? ಟಿ20 ವಿಶ್ವಕಪ್ ಸಕಾಲವೇ?
Vaibhav Suryavanshi- ಒಂದು ಮಾತ್ರ ನಿಜ. ವೈಭವ್ ಸೂರ್ಯವಂಶಿ ಎಂಬ ಬಾಲಕ ಬಿಹಾರದವನಲ್ಲದೆ ಮುಂಬೈನನಾಗಿದ್ದಿದ್ದರೆ ಐಪಿಎಲ್ ಸೆಂಚುರಿ ಹೊಡೆದ ಮರುದಿನವೇ ಟೀಂ ಇಂಡಿಯಾದಲ್ಲಿ ಇರುತ್ತಿದ್ದ. ವಯಸ್ಸು ಸಣ್ಣದು, ಅಂತಾರಾಷ್ಟ್ರೀಯ ಪಂದ್ಯ ಆಡುವ ಮೆಚ್ಯೂರಿಟಿ ಇಲ್ಲ ಎಂದು ನಮ್ಮ ಪಾಡಿಗೆ ತೀರ್ಮಾನಿಸುವ ಮೊದಲು ಒಂದು ಕ್ಯಾಲ್ಕುಲೇಟೆಡ್ ರಿಸ್ಕ್ ತೆಗೆದುಕೊಳ್ಳಬಹುದು. ಒಂದು ವೇಳೆ 1989ರಲ್ಲಿ ಬಿಸಿಸಿಐ ಅಂತಹದ್ದೊಂದು ರಿಸ್ಕ್ ತೆಗೆದುಕೊಳ್ಳದೇ ಹೋಗುತ್ತಿದ್ದರೆ ಕ್ರಿಕೆಟ್ ದುನಿಯಾಕ್ಕೆ ಸಚಿನ್ ತೆಂಡೂಲ್ಕರ್ ಎಂಬ ಅಮೂಲ್ಯ ರತ್ನ ಸಿಗುತ್ತಿರಲಿಲ್ಲ. ಈಗ ವೈಭವ್ ಸೂರ್ಯವಂಶಿ ರೆಡಿ ಇದ್ದಾನೆ. ಚೆಂಡು ಬಿಸಿಸಿಐ ಅಂಗಳದಲ್ಲಿದೆ.
ಮಂಗಳೂರು ವಿವಿಯಲ್ಲಿ ವಾಣಿಜ್ಯ ವಿಭಾಗದ ಹಳೆ ವಿದ್ಯಾರ್ಥಿಗಳ ಅಲೂಮ್ನಿ ಮೀಟ್-ಸಮನ್ವಿತ ಕಾರ್ಯಕ್ರಮ
ಹಳೆ ವಿದ್ಯಾರ್ಥಿಗಳ ಕೊಡುಗೆ ಅವಿಸ್ಮರಣೀಯ : ಪ್ರೊ. ಪಿ.ಎಲ್. ಧರ್ಮ
ದೆಹಲಿಯಲ್ಲಿ ವಾಯುಮಾಲಿನ್ಯದ ಬಿಕ್ಕಟ್ಟು : ಸರ್ಕಾರಿ ಖಾಸಗಿ ಕಂಪನಿಗಳ ಶೇ.50 ರಷ್ಟು ನೌಕರರಿಗೆ ವರ್ಕ್ ಫ್ರಂ ಹೋಂ ಕಡ್ಡಾಯ
ದೆಹಲಿಯಲ್ಲಿ ತೀವ್ರಗೊಂಡ ವಾಯುಮಾಲಿನ್ಯ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ, ಸರ್ಕಾರಿ ಹಾಗೂ ಖಾಸಗಿ ಕಂಪನಿಗಳಿಗೆ ಶೇ.50ರಷ್ಟು ನೌಕರರನ್ನು ಮನೆಯಿಂದಲೇ ಕೆಲಸ ಮಾಡುವಂತೆ ಕಡ್ಡಾಯಗೊಳಿಸಲಾಗಿದೆ. ನಿರ್ಮಾಣ ಕಾಮಗಾರಿಗಳನ್ನು ನಿಷೇಧಿಸಿ, ಕಾರ್ಮಿಕರಿಗೆ 10,000 ರೂ. ಪರಿಹಾರ ಘೋಷಿಸಲಾಗಿದೆ. ನಿಯಮ ಉಲ್ಲಂಘಿಸಿದರೆ ದಂಡ ವಿಧಿಸುವುದಾಗಿ ಎಚ್ಚರಿಕೆ ನೀಡಲಾಗಿದೆ.
ಕರ್ನಾಟಕ ಸರ್ಕಾರವು ಕಟ್ಟಡ ಕಾರ್ಮಿಕರ ಕಲ್ಯಾಣಕ್ಕಾಗಿ ಶ್ರಮ ಸಾಮರ್ಥ್ಯ ಯೋಜನೆಯನ್ನು ಜಾರಿಗೆ ತಂದಿದೆ. ಈ ಯೋಜನೆಯಡಿ 18 ರಿಂದ 60 ವರ್ಷದೊಳಗಿನ ಅರ್ಹ ಕಾರ್ಮಿಕರಿಗೆ ಉಚಿತ ತಾಂತ್ರಿಕ ತರಬೇತಿ ನೀಡಲಾಗುತ್ತದೆ. ಜೊತೆಗೆ, ಸುಮಾರು 20,000 ರೂ. ಮೌಲ್ಯದ ವೃತ್ತಿಪರ ಟೂಲ್ಕಿಟ್ ಸಹ ಉಚಿತವಾಗಿ ವಿತರಿಸಲಾಗುತ್ತದೆ. ಇದು ಕಾರ್ಮಿಕರ ಕೌಶಲ್ಯ ಮತ್ತು ಸುರಕ್ಷತೆಯನ್ನು ಹೆಚ್ಚಿಸಿ ಅವರ ಜೀವನಮಟ್ಟ ಸುಧಾರಿಸಲು ಸಹಕಾರಿಯಾಗಿದೆ.
ದರ್ವೇಸು ಸಮುದಾಯದ್ದು ಧಾರ್ಮಿಕ ವೃತ್ತಿ ಪರಂಪರೆ ಎಂದು ಪರಿಭಾವಿಸಬಹುದು. ದರ್ವೇಸುಗಳು ದರ್ಗಾ, ಮಸೀದಿ, ಇಲ್ಲವೇ ಇವರದೇ ಆದ ಮಕಾನ್/ಮಠಗಳಲ್ಲಿ ನೆಲೆನಿಂತು ಅಲ್ಲಿಯೇ ಸೇವೆ ಮಾಡುತ್ತಾ ದಾನ ಪಡೆಯುವವರಾಗಿದ್ದಾರೆ. ಇನ್ನೂ ಕೆಲವರು ಊರೂರು ಅಲೆದು ಹಾಡು, ಹಠಯೋಗ ಸಾಧನೆಗಳನ್ನು ಪ್ರದರ್ಶಿಸಿ ದಾನ, ಭಿಕ್ಷೆಗಳನ್ನು ಸ್ವೀಕರಿಸುತ್ತಾರೆ. ಈ ಹಿನ್ನೆಲೆಯಿಂದ ಇವರನ್ನು ಅಲೆಮಾರಿಗಳು ಎಂದು ಪರಿಗಣಿಸಬಹುದಾಗಿದೆ. ಸಾಂದರ್ಭಿಕ ಚಿತ್ರ ನಮ್ಮ ಆಯೋಗ ಅತಿ ಹೆಚ್ಚು ಕ್ಷೇತ್ರಕಾರ್ಯ ಮಾಡಿದ್ದು ದರ್ವೇಸು ಸಮುದಾಯದ ಕುರಿತಂತೆ. ಬಳ್ಳಾರಿಯ ಬಡಮಕಾನ್, ಕಂಪ್ಲಿ, ಗಂಗಾವತಿ, ಭದ್ರಾವತಿಯ ಧರ್ವೇಸು ಕಾಲನಿ, ಶಿವಮೊಗ್ಗ, ಚಿಕ್ಕಮಗಳೂರಿನ ದಂಟರಮಕ್ಕಿ, ಬಾಬಾಬುಡಾನ್ಗಿರಿ ಮುಂತಾದೆಡೆ ದರ್ವೇಸು ಸಮುದಾಯವನ್ನು ಹುಡುಕಾಡುತ್ತಾ ಅಲೆದ ಅನುಭವ ಅನನ್ಯ. ‘ಆಲ್ ಕರ್ನಾಟಕ ದರ್ವೇಶ್ ಆಂಡ್ ಸೂಫಿ ಕ್ಯಾಟಗರಿ-1 ಅಸೋಸಿಯೇಷನ್’ ರಾಜ್ಯಾದ್ಯಕ್ಷ ಸೈಯದ್ ಖಲಾಮುಲ್ಲಾ ಶಾ ದರ್ವೇಸ್ರವರು ನಮ್ಮನ್ನು ಕರೆದೊಯ್ದು ನಮಗೆ ದರ್ವೇಸು ಸಮುದಾಯದ ನಿಜ ದರ್ಶನ ಮಾಡಿಸಿದರು. ದರ್ವೇಸು, ದರ್ವೇಸಿ, ದರ್ವೇಶ್, ಫಕೀರ್ ಎಂದು ಕರೆಯಲಾಗುವ ಜನಾಂಗದ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಮತ್ತು ಸಾಂಸ್ಕೃತಿಕ ಸ್ಥಿತಿಗತಿಗಳನ್ನು ಹತ್ತಿರದಿಂದ ಕಣ್ಣಾರೆ ಕಂಡೆವು. ಕರ್ನಾಟಕದಲ್ಲಿ ಬೀದರ್, ಬಿಜಾಪುರ, ಗುಲ್ಬರ್ಗಾ, ಬಳ್ಳಾರಿ, ಕೊಪ್ಪಳ, ಗದಗ, ಹಾವೇರಿ, ಧಾರವಾಡ, ಶಿವಮೊಗ್ಗ, ಚಿಕ್ಕಮಗಳೂರು, ತುಮಕೂರು, ಹಾಸನ, ಮೈಸೂರು, ಕೋಲಾರ, ಚಾಮರಾಜನಗರ ಮತ್ತು ಬೆಂಗಳೂರಿನಲ್ಲೂ ಇರುವ ದರ್ವೇಸು ಅಥವಾ ಫಕೀರ್ ಸಮುದಾಯ ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಅತ್ಯಂತ ಹಿಂದುಳಿದ ಮತ್ತು ಇಸ್ಲಾಮ್ ಮತವನ್ನು ಅವಲಂಬಿಸಿರುವ ಸಮುದಾಯವಾಗಿದ್ದು ಹಿಂದುಳಿದ ವರ್ಗಗಳ ಪಟ್ಟಿಯ ಪ್ರವರ್ಗ ಒಂದರಲ್ಲಿ ಇದೆ. ದರ್ವೇಸು ಸಮುದಾಯ ಸೂಫಿ ತಾತ್ವಿಕ ಪರಂಪರೆಗೆ ಸೇರಿದ್ದು, ಆಧ್ಯಾತ್ಮಿಕ ಸಾಧನೆಯಲ್ಲಿ ತೊಡಗುವುದು ಹಾಗೂ ದಾನ ಇಲ್ಲವೇ ಭಿಕ್ಷೆಯ ಮೂಲಕ ತಮ್ಮ ಜೀವನವನ್ನು ನಿರ್ವಹಿಸಿಕೊಳ್ಳುವ ಅನನ್ಯತೆಯನ್ನು ತನ್ನದಾಗಿಸಿಕೊಂಡಿದೆ. ದರ್ವೇಸು ಎಂಬ ಪದದ ಮೂಲವು ಪರ್ಷಿಯನ್ ಭಾಷೆಯದಾಗಿದ್ದು, ಇದರ ಅರ್ಥ ಧಾರ್ಮಿಕ ಸೇವಕ ಎಂದಾಗುತ್ತದೆ. ದರ್ವೇಸ್ ಎಂಬ ಪದದ ಅರ್ಥ ‘ದರ್ವಾಸ್’ ಅಂದರೆ ಬಾಗಿಲು. ಪ್ರೀತಿ, ಕರುಣೆ, ಮಾನವೀಯತೆಗೆ ಹೃದಯದ ಬಾಗಿಲು ಸದಾ ತೆರೆದಿದೆ ಎಂದರ್ಥ. ದರ್ವೇಸುಗಳೇ ಆದ ಫಕೀರ್ ಎಂಬ ಪದದ ಮೂಲ ಅರಬಿಕ್ ಭಾಷೆಯದಾಗಿದ್ದು, ಅಧ್ಯಾತ್ಮ ಮತ್ತು ಆತ್ಮಾಭಿಮಾನವನ್ನು ಸೂಚಿಸುತ್ತದೆ. ದರ್ವೇಸು ಮತ್ತು ಫಕೀರ್ ಎಂಬ ಎರಡೂ ಪದಗಳು ಧಾರ್ಮಿಕ ಅಥವಾ ಆಧ್ಯಾತ್ಮಿಕ ಅನನ್ಯತೆಯನ್ನು ಸೂಚಿಸುತ್ತವೆ. ಇದರಿಂದಾಗಿ ದರ್ವೇಸು ಸಮುದಾಯದ್ದು ಧಾರ್ಮಿಕ ವೃತ್ತಿ ಪರಂಪರೆ ಎಂದು ಪರಿಭಾವಿಸಬಹುದು. ದರ್ವೇಸುಗಳು ದರ್ಗಾ, ಮಸೀದಿ, ಇಲ್ಲವೇ ಇವರದೇ ಆದ ಮಕಾನ್/ಮಠಗಳಲ್ಲಿ ನೆಲೆನಿಂತು ಅಲ್ಲಿಯೇ ಸೇವೆ ಮಾಡುತ್ತಾ ದಾನ ಪಡೆಯುವವರಾಗಿದ್ದಾರೆ. ಇನ್ನೂ ಕೆಲವರು ಊರೂರು ಅಲೆದು ಹಾಡು, ಹಠಯೋಗ ಸಾಧನೆಗಳನ್ನು ಪ್ರದರ್ಶಿಸಿ ದಾನ, ಭಿಕ್ಷೆಗಳನ್ನು ಸ್ವೀಕರಿಸುತ್ತಾರೆ. ಈ ಹಿನ್ನೆಲೆಯಿಂದ ಇವರನ್ನು ಅಲೆಮಾರಿಗಳು ಎಂದು ಪರಿಗಣಿಸಬಹುದಾಗಿದೆ. ಇಸ್ಲಾಮ್ ಧರ್ಮ ಸಂಸ್ಥಾಪನೆಯ ಮೂರನೇ ತಲೆಮಾರಿನಿಂದ ಆರಂಭಗೊಂಡ ದರ್ವೇಸು ಪರಂಪರೆ, ಬಗ್ದಾದ್ನಿಂದ ಆರಂಭಗೊಂಡರೂ, ಭಾರತದಲ್ಲಿ ಅಜ್ಮೀರ್ನ ಖ್ವಾಜಾ ಗರೀಬ್ ನವಾಝ್ರಿಂದ ಆರಂಭವಾಗಿ, ಕರ್ನಾಟಕದ ದರ್ವೇಸುಗಳು ಗುಲ್ಬರ್ಗಾ, ಬಿಜಾಪುರ, ಬೀದರ್, ಬಾಬಾಬುಡಾನ್ ಗಿರಿ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಾರೆ. ಕರ್ನಾಟಕದಲ್ಲಿರುವ ಪ್ರತೀ ದರ್ಗಾ ಹಾಗೂ ದರ್ಗಾ ಕೇಂದ್ರಿತ ಭೌಗೋಳಿಕ ವಲಯದಲ್ಲಿ ದರ್ವೇಸು/ಫಕೀರರನ್ನು ಕಾಣಬಹುದು. ದರ್ಗಾವನ್ನು ಕೇಂದ್ರವಾಗಿಟ್ಟುಕೊಂಡು ಅವರದೇ ಆದ ಚೌಕ ಅಥವಾ ಮಂಡಲಗಳನ್ನು ಕಲ್ಪಿಸಿಕೊಂಡಿರುತ್ತಾರೆ. ಪ್ರತೀ ದರ್ವೇಸು ಕುಟುಂಬವು ಇಂತಹ ಚೌಕಗಳ ಕಲ್ಪಿತ ವ್ಯಾಪ್ತಿಯಲ್ಲಿರುತ್ತವೆ. ದರ್ವೇಸುಗಳು ಎಲ್ಲೆಡೆ ಸಂಚಾರಕ್ಕೆ ಮುಕ್ತರಾಗಿದ್ದರೂ ಭಿನ್ನ ಚೌಕಗಳ ಅಸ್ತಿತ್ವ ಸಮುದಾಯ ಮಾನ್ಯವಾಗಿರುತ್ತದೆ. ದರ್ವೇಸು ಸಮುದಾಯವು ಗುರುದೀಕ್ಷಾ ವಿಧಾನವನ್ನು ಹೊಂದಿದ್ದು, ಕುಲವೃತ್ತಿಯನ್ನು ಮುಂದುವರಿಸ ಬಯಸುವ ಪ್ರತೀ ದರ್ವೇಸಿಯೂ ಗುರುವಿನಿಂದ ದೀಕ್ಷೆ ಪಡೆಯುವುದು ಕಡ್ಡಾಯವಾಗಿರುತ್ತದೆ. ಈ ದೀಕ್ಷಾ ಕ್ರಮದಲ್ಲಿ ಮೂರು ಹಂತಗಳಿದ್ದು, ಮೊದಲನೆಯದನ್ನು ಮುರೀದ್ ಎಂದು, ಎರಡನೆಯದನ್ನು ತರೀಖ್ ಎಂದು ಮೂರನೆಯದನ್ನು ಖಿಲಾಫತ್ ಎಂದು ಕರೆಯುತ್ತಾರೆ. ದೀಕ್ಷಾ ಬದ್ಧರಾದ ದರ್ವೇಸಿಗಳು ಲಂಗೋಟಿ, ಲುಂಗಿಗಳನ್ನು ಧರಿಸಿ ಭಿಕ್ಷಾಪಾತ್ರೆ ಹಿಡಿಯುವುದು ಕಡ್ಡಾಯವಾಗಿರುತ್ತದೆ. ದಪ್ತ್ ಸುಲ್ತಾನಿ, ಗುರ್ಜ್ ಇವರ ಸಾಮಾನ್ಯ ವಸ್ತುಗಳಾಗಿರುತ್ತವೆ. ರಫಾಯಿ, ಜಲಾಲಿಗಳು ತಲವಾರನ್ನು ಧರಿಸಿರುತ್ತಾರೆ. ಇವರಲ್ಲಿ ಮುಖ್ಯಸ್ಥರನ್ನು ಸರ್ ಗುರು ಸರ್ ಖಲೀಫಾ ಎಂದು ಕರೆಯುತ್ತಾರೆ. ದರ್ವೇಸುಗಳಲ್ಲಿ 1. ಬಾನುವಾ, 2. ರಫಾಯಿ, 3. ಜಲಾಲ್(ಖಾದ್ರಿಯಾ, ಖಲಂದರಿಯಾ) 4. ಅಹಲೇತಪ್ಕಾತ್ ಎಂದು ನಾಲ್ಕು ಒಳ ಪಂಗಡಗಳಿರುವುದು ತಿಳಿದುಬರುತ್ತದೆ. ಅಲೆಮಾರಿ ಭಿಕ್ಷಾಟನೆಯನ್ನು ತೊರೆದು ನೆಲೆನಿಂತವರನ್ನು ಮಕಾಂದಾರರೆಂದು ಕರೆಯುತ್ತಾರೆ. ಈ ಎಲ್ಲಾ ವಿವರಗಳನ್ನು ನಮ್ಮ ಆಯೋಗದಲ್ಲಿ ನಾವೇ ಸಂಗ್ರಹಿಸಿದ ದಾಖಲೆಗಳ ಆಧಾರದ ಮೇಲೆ ಇಲ್ಲಿ ವಿವರಗಳನ್ನು ನೀಡುತ್ತಿದ್ದೇನೆ. ಸೂಫಿ ಸಮುದಾಯದ ಕುರಿತು ಹೆಚ್ಚಿನ ಮಾಹಿತಿ ಪ್ರೊ. ರಹಮತ್ ತರೀಕೆರೆಯವರು ಬರೆದ ‘ಕರ್ನಾಟಕದ ಸೂಫಿಗಳು’ ಪುಸ್ತಕದಲ್ಲಿ ಲಭ್ಯವಿದೆ. ದರ್ವೇಸು ಮತ್ತು ಸೂಫಿ ಪರಂಪರೆ ಭಾರತೀಯ ಅನುಭಾವಿಗಳ ಮೇಲೆ ಅಪಾರ ಪ್ರಭಾವ ಬೀರಿದಂತಿದೆ. ಮಲೆ ಮಾದೇಶ್ವರ, ಮಾಂಟೇಸ್ವಾಮಿಗಳಿಂದ ಹಿಡಿದು ಸಿದ್ದಪ್ಪಾಜಿ, ಎತ್ತಪ್ಪ, ಜುಂಜಪ್ಪ, ಕೈವಾರ ತಾತಯ್ಯ, ಗಟ್ಟಹಳ್ಳಿ ಆಂಜನಪ್ಪ, ಬೇರಿಕಿ ಪುಟ್ಟಪ್ಪ, ದಾದಿನಾಯಕನದೊಡ್ಡಿ ವೆಂಕಟಗಿರಿಯಪ್ಪ, ಶಿಶುನಾಳ ಷರೀಫಜ್ಜ ಮುಂತಾಗಿ ಅನೇಕ ಮಂದಿ ಅನುಭಾವಿಗಳು, ಶರಣರು, ತತ್ವಪದಕಾರರು ಸೂಫಿಗಳಿಂದ ಪ್ರಭಾವಿತರಾಗಿರುವುದನ್ನು ಇಲ್ಲಿ ಸ್ಮರಿಸಬಹುದು. ಹನ್ನೆರಡನೇ ಶತಮಾನದಲ್ಲಿ ಅಲ್ಲಮಪ್ರಭುಗಳು ಕರ್ನಾಟಕದಲ್ಲಿ ಕುಳಿತು ಅನುಭಾವಿ ವಚನಗಳನ್ನು ಬರೆಯುತ್ತಿದ್ದಾಗ, ಅದೇ ಸಂದರ್ಭದಲ್ಲಿ ಜಲಾಲುದ್ದೀನ್ ರೂಮಿ ಕೂಡ ಪರ್ಷಿಯಾದಲ್ಲಿ ಕುಳಿತು ಅನುಭಾವಿ ಪದಗಳನ್ನು ಬರೆಯುತ್ತಿದ್ದದನ್ನು ಕಂಡಾಗ ನಮಗೆ ಎಲ್ಲೋ ಸೂಫಿ ಮತ್ತು ಶರಣ ಪರಂಪರೆಗಳು ಒಂದೇ ಧಾರೆಯಲ್ಲಿ ಯೋಚಿಸಿದ ದಾಟಿ ಆಶ್ಚರ್ಯವನ್ನುಂಟು ಮಾಡುತ್ತದೆ. ದರ್ವೇಸು ಸಮುದಾಯದ ಅಧ್ಯಾತ್ಮದ ಎತ್ತರವನ್ನು ಅರಿಯದವರು ದರ್ವೇಸು ಸಮುದಾಯವನ್ನು ಕೇವಲ ಬೈಗುಳವಾಗಿ ಬಳಸುತ್ತಿರುವುದು ದುರಂತ. ಅತ್ಯಂತ ಬಡವರು ಮತ್ತು ನಿರ್ಗತಿಕರಾದ ದರ್ವೇಸುಗಳು ಸರಕಾರದ ಎಲ್ಲಾ ಸವಲತ್ತುಗಳಿಂದಲೂ ವಂಚಿತರಾಗಿದ್ದಾರೆ. ಸರಕಾರಕ್ಕೂ ಹೃದಯವೆನ್ನುವುದು ಇದ್ದರೆ ದರ್ವೇಸುಗಳನ್ನೂ ತನ್ನ ಹೃದಯದ ಬಾಗಿಲು ತೆರೆದು ಒಮ್ಮೆ ನೋಡಲಿ...
ಮಂಗಳೂರು | ಗಲ್ಲಿ ಪ್ರೀಮಿಯರ್ ಲೀಗ್ : ಆಟಗಾರರ ಹರಾಜು ಪ್ರಕ್ರಿಯೆ
ಮಂಗಳೂರು : ಗಲ್ಲಿ ಪ್ರೀಮಿಯರ್ ಲೀಗ್ ಐದನೇ ಆವೃತ್ತಿ ಡಿ.26 ರಿಂದ ಜ.4 ರವರೆಗೆ ನಡೆಯಲಿದ್ದು, ಆಟಗಾರರ ಮೆಗಾ ಹರಾಜು ಪ್ರಕ್ರಿಯೆ ಅತ್ತಾವರದ ರಾಯಲ್ ಪ್ಲಾಜಾದಲ್ಲಿ ನಡೆಯಿತು. ಹರಾಜಿನಲ್ಲಿ 42 ಆಟಗಾರರು ಹೆಸರು ನೋಂದಾಯಿಸಿದ್ದು, ನಿಯಾಜ್ ಮುರ್ಶಾದ್ ಈ ಬಾರಿಯ ಹರಾಜಿನಲ್ಲಿ ಅತೀ ಹೆಚ್ಚು ಬೆಲೆಗೆ ಖರೀದಿಯಾದರು. ಉಳಿದಂತೆ ಮುಕ್ತಾರ್ ಕೆ., ಮುಹಮ್ಮದ್ ರಿಲ್ವಾನ್, ಅನ್ಸಾಫ್, ಮುಹಮ್ಮದ್ ಅನ್ವಾಝ್, ಇಬ್ರಾಹಿಂ ಶಕೀಬ್, ಜಾಫರ್ ಸಾಧಿಕ್, ದುಬಾರಿ ಮೊತ್ತದಲ್ಲಿ ಖರೀದಿಯಾದರು. ಗಲ್ಲಿ ಪ್ರೀಮಿಯರ್ ಲೀಗ್ ಕಂದಕ್ ಫ್ರಾಂಚೈಸಿಗಳಾದ ಅಫ್ತಾಬ್ ಬೋಳಾರ್ ಮಾಲಕತ್ವದ ಕಂದಕ್ ಬುಲ್ಸ್, ಮುಹಮ್ಮದ್ ಅಶ್ರಫ್ ಮಾಲಿಕತ್ವದ ಕಂದಕ್ ನೈಟ್ ರೈಡರ್, ದಾವೂದ್ ಹಕೀಂ ನೇತೃತ್ವದ ಕಂದಕ್ ವಾರಿಯರ್ಸ್, ಯಹ್ಯಾ ಮಾಲಕತ್ವದ ಕಂದಕ್ ಸೂಪರ್ ಕಿಂಗ್ಸ್, ಮುಝಫರ್ ಮಾಲಕತ್ವದ ಕಂದಕ್ ಯುನೈಟೆಡ್, ಹಾಗೂ ಮುಹಮ್ಮದ್ ಯೂಸುಫ್ ಮೋಶಿನ್ ನೇತೃತ್ವದ ರಾಯಲ್ ಕಂದಕ್ ತಂಡಗಳು ಈ ಬಾರಿಯ ಹರಾಜಿನಲ್ಲಿ ಭಾಗವಹಿಸಿತು. ಸತತ ಎರಡು ಬಾರಿಯ ಚಾಂಪಿಯನ್ಸ್ ತಂಡ ಕಂದಕ್ ಸೂಪರ್ ಕಿಂಗ್ಸ್ ಮುಹಮ್ಮದ್ ಫಾಝಿಲ್ ಮತ್ತು ನಿಯಾಝ್ ಮುರ್ಶಾದ್ ರವರನ್ನು ಹರಾಜಿನಲ್ಲಿ ಪೈಪೋಟಿ ನೀಡಿ ತಂಡ ಈ ಎರಡೂ ಆಟಗಾರರನ್ನು ಪಡೆಯಲು ಯಶಸ್ವಿಯಾಯಿತು. ಕಳೆದ ಎರಡು ಬಾರಿ ಫೈನಲ್ ಎಡವಿದ ಕಂದಕ್ ವಾರಿಯರ್ಸ್ ಮತ್ತೆ ಈ ಬಾರಿ ಫೈನಲ್ ಧಾವಿಸಿ ಪ್ರಶಸ್ತಿ ಗೆಲ್ಲುವ ತವಕದಲ್ಲಿದೆ. ಕಂದಕ್ ಸೂಪರ್ ಕಿಂಗ್ಸ್ ಹ್ಯಾಟ್ರಿಕ್ ಪ್ರಶಸ್ತಿ ಮುಡಿಗೇರಿಸಿಕೊಳ್ಳಲು ಪ್ರಯತ್ನಿಸುತ್ತಿದೆ. ಉಳಿದ ನಾಲ್ಕು ತಂಡ ಮೊದಲ ಬಾರಿ ಪ್ರಶಸ್ತಿ ಪಡೆಯುತ್ತೋ? ಕಾದು ನೋಡಬೇಕಾಗಿದೆ. ಕಾರ್ಯಕ್ರಮದಲ್ಲಿ ರಾವ್ ಆ್ಯಂಡ್ ಬ್ರದರ್ಸ್ ಮಾಲಕರಾದ ಶಿವಾನಂದ ರಾವ್, ಸಚಿನ್ ರಾವ್, ಉದ್ಯಮಿಗಳಾದ ಶರೀಫ್, ಸತ್ತಾರ್, ಗಲ್ಲಿ ಪ್ರೀಮಿಯರ್ ಲೀಗ್ ಸ್ಥಾಪಕಧ್ಯಕ್ಷರು, ನಿಕಟ ಪೂರ್ವ ಪಾಲಿಕೆ ಸದಸ್ಯರಾದ ಅಬ್ದುಲ್ ಲತೀಫ್ ಕಂದಕ್, ಬುರ್ಖಾ ಫ್ಯಾಶನ್ ಮಾಲಕರಾದ ರಿಯಾಝ್, ಕಮಲ್ ವಿಡಿಯೋ ಮಾಲಕರಾದ ಕಮಲಕ್ಷಾ ಜೆ., ಉಪಸ್ಥಿತರಿದ್ದರು. ಹರಾಜು ಪ್ರಕ್ರಿಯೆಯನ್ನು ನೀರಸವಾಗಿ ರಾಬಿನ್ ಎಮ್ಮೆಕರೆ ನೆರವೇರಿಸಿದರು.
ನ್ಯಾಷನಲ್ ಹೆರಾಲ್ಡ್ ಕೇಸ್ ವಿರುದ್ಧ ಸಿಡಿದೆದ್ದ ಕಾಂಗ್ರೆಸ್, ಸುವರ್ಣಸೌಧದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಕಹಳೆ
ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಕೇಂದ್ರ ಸರ್ಕಾರ ಕಾಂಗ್ರೆಸ್ ನಾಯಕರ ವಿರುದ್ಧ ದ್ವೇಷ ರಾಜಕಾರಣ ಮಾಡುತ್ತಿದೆ ಎಂದು ಆರೋಪಿಸಿ ಬೆಳಗಾವಿ ಸುವರ್ಣ ಸೌಧದ ಗಾಂಧಿ ಪ್ರತಿಮೆ ಮುಂದೆ ಕಾಂಗ್ರೆಸ್ ಪ್ರತಿಭಟನೆ ನಡೆಸಿತು. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಸೇರಿದಂತೆ ಹಲವು ನಾಯಕರು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.ಕೇಂದ್ರ ಸರ್ಕಾರ ತನಿಖಾ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ ಎಂದು ಆರೋಪಿಸಿದರು.
ಅನಿವಾಸಿ ಕನ್ನಡಿಗರ ಕಲ್ಯಾಣಕ್ಕೆ ಬಜೆಟ್ನಲ್ಲಿ ವಿಶೇಷ ಅನುದಾನ ಮೀಸಲಿಡಲು ಪ್ರವಾಸಿ ಕೂಟ ವಿಟ್ಲ (ರಿ) ನಿಯೋಗದಿಂದ ಮನವಿ
ಬೆಂಗಳೂರು : ಅನಿವಾಸಿ ಕನ್ನಡಿಗರ ಕ್ಷೇಮಾಭಿವೃದ್ಧಿಗಾಗಿ ಮುಂದಿನ ರಾಜ್ಯ ಬಜೆಟ್ನಲ್ಲಿ ವಿಶೇಷ ಅನುದಾನ ಮೀಸಲಿಡಬೇಕು, ನಿವೃತ್ತ ಅನಿವಾಸಿ ಕನ್ನಡಿಗರಿಗೆ ಪಿಂಚಣಿ ಭತ್ಯೆ ನೀಡಬೇಕು ಹಾಗೂ ಸ್ವ ಉದ್ಯೋಗಕ್ಕೆ ಬಡ್ಡಿರಹಿತ ಸಾಲ ಸೌಲಭ್ಯ ಒದಗಿಸಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಪ್ರವಾಸಿ ಕೂಟ ವಿಟ್ಲ (ರಿ) ವತಿಯಿಂದ ನಿಯೋಗವೊಂದು ಬೆಂಗಳೂರಿನಲ್ಲಿ ರಾಜ್ಯ ಸರ್ಕಾರದ ಪ್ರಮುಖರನ್ನು ಭೇಟಿಯಾಗಿ ಮನವಿ ಸಲ್ಲಿಸಿತು. ಪ್ರವಾಸಿ ಕೂಟ ವಿಟ್ಲ (ರಿ) ಅಧ್ಯಕ್ಷರಾದ ಮುಹಮ್ಮದ್ ಮಸೂದ್ ವಿಟ್ಲ (ಬಹ್ರೈನ್) ಅವರ ನೇತೃತ್ವದ ನಿಯೋಗವು ಡಿ.4ರ, ಗುರುವಾರದಂದು ಉಪಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್, ವಿಧಾನಸಭಾಧ್ಯಕ್ಷರಾದ ಯು.ಟಿ.ಖಾದರ್ ಹಾಗೂ ಅನಿವಾಸಿ ಭಾರತೀಯ ಸಮಿತಿಯ ಉಪಾಧ್ಯಕ್ಷೆ ಡಾ.ಆರತಿ ಕೃಷ್ಣ ಅವರನ್ನು ಬೆಂಗಳೂರಿನ ಅವರ ಕಚೇರಿಯಲ್ಲಿ ಭೇಟಿ ಮಾಡಿ ಚರ್ಚೆ ನಡೆಸಿತು. ನಿಯೋಗ ಮಂಡಿಸಿದ ಬೇಡಿಕೆಗಳನ್ನು ಗಮನಪೂರ್ವಕವಾಗಿ ಪರಿಶೀಲಿಸಿದ ಅವರು, ಮುಂದಿನ ರಾಜ್ಯ ಬಜೆಟ್ನಲ್ಲಿ ಅನಿವಾಸಿ ಕನ್ನಡಿಗರಿಗೆ ಆದ್ಯತೆ ನೀಡುವುದಾಗಿ ಭರವಸೆ ನೀಡಿದರು. ಅನಿವಾಸಿಗಳಿಗಾಗಿ ಪ್ರವಾಸಿ ಕೂಟ ವಿಟ್ಲ (ರಿ) ನಡೆಸುತ್ತಿರುವ ನಿರಂತರ ಹೋರಾಟ ಹಾಗೂ ಸಮಿತಿಯ ಕಾರ್ಯಚಟುವಟಿಕೆಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಪ್ರವಾಸಿ ಕೂಟ ವಿಟ್ಲ (ರಿ) ಸ್ಥಾಪಕರಾದ ಹೈದರಾಲಿ ಇಸ್ಮಾಯಿಲ್ ಮೇಗಿನಪೇಟೆ (ಸೌದಿ ಅರೇಬಿಯಾ), ಮಾಧ್ಯಮ ವಕ್ತಾರ ಸಫ್ವಾನ್ ಕೋಡಪದವು (ಬಹ್ರೈನ್), ಬದ್ರುದ್ದೀನ್ (ಬಹ್ರೈನ್) ಹಾಗೂ ಕಾನೂನು ಸಲಹೆಗಾರ ಅಡ್ವಕೇಟ್ ಅನ್ಸಾರ್ ವಿಟ್ಲ ಉಪಸ್ಥಿತರಿದ್ದರು.
ಅಬ್ಬಬ್ಬಾ.. ಡಾಲರ್ ವಿರುದ್ಧ ಕಡೆಗೂ ಚೇತರಿಕೆ ಕಂಡ ರುಪಾಯಿ! ಮಧ್ಯಮ ವರ್ಗಕ್ಕೆ ಚೇತೋಹಾರಿ?
ಬುಧವಾರ, ಅಮೆರಿಕನ್ ಡಾಲರ್ ಎದುರು ರೂಪಾಯಿ ದಾಖಲೆಯ ಕುಸಿತ ಕಂಡಿತು, 91.07 ಕ್ಕೆ ತಲುಪಿತು. ಭಾರತೀಯ ರಿಸರ್ವ್ ಬ್ಯಾಂಕ್ ಮಧ್ಯಪ್ರವೇಶದಿಂದಾಗಿ ರೂಪಾಯಿ ಚೇತರಿಸಿಕೊಂಡಿತು, ಇದು ಕಳೆದ ಏಳು ತಿಂಗಳಲ್ಲಿ ಅತಿ ದೊಡ್ಡ ದಿನದ ಚೇತರಿಕೆ. ಅಮೆರಿಕ-ಭಾರತ ವ್ಯಾಪಾರ ಮಾತುಕತೆಯಲ್ಲಿನ ಅಡೆತಡೆ ಮತ್ತು ವಿದೇಶಿ ಹೂಡಿಕೆದಾರರು ಹಣ ಹಿಂಪಡೆಯುತ್ತಿರುವುದು ರೂಪಾಯಿ ಕುಸಿತಕ್ಕೆ ಕಾರಣವಾಗಿತ್ತು.
ಚಾಮರಾಜನಗರ | ಮಹದೇಶ್ವರ ದೇವಸ್ಥಾನದ ಸಮೀಪ ಹುಲಿ ಸಂಚಾರ : ಸ್ಥಳೀಯರಲ್ಲಿ ಆತಂಕ
ಚಾಮರಾಜನಗರ : ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಮೀಣ್ಯಂ ರಸ್ತೆಯ ಮಹದೇಶ್ವರ ದೇವಾಲಯದ ಸಮೀಪ ಬೆಳ್ಳಂಬೆಳಿಗ್ಗೆ ಹುಲಿಯೊಂದು ರಸ್ತೆ ಸಮೀಪ ಸಂಚರಿಸಿರುವ ಘಟನೆ ನಡೆದಿದೆ. ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ಮೀಣ್ಯಂ ಗ್ರಾಮದಿಂದ ರಾಮಾಪುರ ಕಡೆಗೆ ತೆರಳುತ್ತಿದ್ದ ಬಸ್ ಸಮೀಪದಲ್ಲೇ ಹುಲಿ ನಡೆದುಕೊಂಡು ಹೋಗಿರುವುದು ಕಂಡುಬಂದಿದ್ದು, ಈ ವೇಳೆ ಬಸ್ನಲ್ಲಿದ್ದ ಪ್ರಯಾಣಿಕರು ಕೆಲಕಾಲ ಆತಂಕಗೊಂಡರು. ಇನ್ನು ಕೆಲವರು ತಮ್ಮ ಮೊಬೈಲ್ ಫೋನ್ಗಳಲ್ಲಿ ವೀಡಿಯೊ ಮಾಡಿದ್ದಾರೆ. ಇದೇ ಮೀಣ್ಯಂ ಅರಣ್ಯ ಪ್ರದೇಶದಲ್ಲಿ ಸುಮಾರು ಐದು ತಿಂಗಳ ಹಿಂದೆ ಐದು ಹುಲಿಗಳು ವಿಷಪ್ರಯೋಗದಿಂದ ಮೃತಪಟ್ಟಿದ್ದ ಘಟನೆ ನಡೆದಿತ್ತು. ಇದೀಗ ಮತ್ತೊಮ್ಮೆ ಹುಲಿಯ ಚಲನವಲನ ಕಂಡುಬಂದಿರುವುದು ಸ್ಥಳೀಯರಲ್ಲಿ ಆತಂಕಕ್ಕೆ ಕಾರಣವಾಗಿದೆ.
IPL-2026 RCB: ಬೆಂಗಳೂರಿನಲ್ಲೇ ಐಪಿಎಲ್ ಉದ್ಘಾಟನಾ ಪಂದ್ಯ: ಕೆಎಸ್ಸಿಎ
ಕ್ರಿಕೆಟ್ ಪ್ರಿಯರ ಹಬ್ಬ ಐಪಿಎಲ್-2026 ಸಮೀಪದಲ್ಲಿದೆ. ಈಗಾಗಲೇ ಐಪಿಎಲ್ ತಂಡಗಳು ಕೂಡ ಸಜ್ಜಾಗುತ್ತಿವೆ. ಆರ್ಸಿಬಿ ತಂಡವು ಚೊಚ್ಚಲ ಐಪಿಎಲ್ ಟ್ರೋಫಿ ಮುಡಿಗೇರಿಸಿಕೊಂಡ ನಂತರ ಅಭಿಮಾನಿಗಳು ಈ ಸಲವೂ ಕಪ್ ನಮ್ದೇ ಎನ್ನಲು ರೆಡಿಯಾಗಿದ್ದಾರೆ. ಇನ್ನು ಐಪಿಎಲ್ ಉದ್ಘಾಟನಾ ಪಂದ್ಯದ ಬಗ್ಗೆ ಮಹತ್ವದ ವಿಚಾರ ಹೊರಬಿದ್ದಿದೆ. ಈ ಬಾರಿ ನಮ್ಮ ಬೆಂಗಳೂರಿನಲ್ಲೇ ಉದ್ಘಾಟನಾ ಪಂದ್ಯ ನಡೆಸಲು ಕರ್ನಾಟಕ ರಾಜ್ಯ
ಲೋಕೋಪಯೋಗಿ ಇಲಾಖೆಯಿಂದ ಗುತ್ತಿಗೆದಾರರಿಗೆ 8804 ಕೋಟಿ ಬಿಲ್ ಬಾಕಿ ; ಯಾವಾಗ ಆಗಲಿದೆ ಪಾವತಿ?
ರಾಜ್ಯದಲ್ಲಿ ಗುತ್ತಿಗೆದಾರರ ಬಾಕಿ ಬಿಲ್ ಪಾವತಿ ವಿಳಂಬ ವಿಪಕ್ಷಗಳಿಗೆ ಅಸ್ತ್ರವಾಗಿದೆ. ಲೋಕೋಪಯೋಗಿ ಇಲಾಖೆಯಲ್ಲಿ 8804 ಕೋಟಿ ರೂ.ಗಳ ಬಿಲ್ ಬಾಕಿ ಇದ್ದು, ಅನುದಾನ ಲಭ್ಯತೆಯ ಆಧಾರದಲ್ಲಿ ಪಾವತಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ. ಗುತ್ತಿಗೆದಾರರು ಶೀಘ್ರದಲ್ಲೇ ಬಾಕಿ ಮೊತ್ತ ಪಾವತಿಸುವಂತೆ ಪದೇ ಪದೇ ಮನವಿ ಮಾಡುತ್ತಿದ್ದಾರೆ.
ಹೆಣ್ಣು ಭ್ರೂಣ ಹತ್ಯೆ ’ಪಿಡುಗು’ ತಡೆಗಟ್ಟಲು ರಾಜ್ಯ ಸರ್ಕಾರದ ಮಹತ್ವದ ನಿರ್ಧಾರ : ಏನದು?
Siddaramaiah Government : ಸಮಾಜದಲ್ಲಿ ಹೆಣ್ಣು ಭ್ರೂಣ ಹತ್ಯೆ ಎನ್ನುವುದು ದೊಡ್ಡದಾದ ಪಿಡುಗಿನಂತಾಗಿದೆ. ಈ ಸಂಬಂಧ, ಹಲವು ಕ್ರಮಗಳನ್ನು ಸರ್ಕಾರ ತೆಗೆದುಕೊಂಡರೂ, ಇದನ್ನು ಸಂಪೂರ್ಣವಾಗಿ ತಡೆಗಟ್ಟಲು ಸಾಧ್ಯವಾಗುತ್ತಿಲ್ಲ ಎಂದು ರಾಜ್ಯ ಆರೋಗ್ಯ ಇಲಾಖೆಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ. ಇದಕ್ಕೆ ಸೂಕ್ತ ಕ್ರಮ ತೆಗೆದುಕೊಳ್ಳಲು ಸರ್ಕಾರ ನಿರ್ಧರಿಸಿದೆ ಎಂದು ಸಚಿವರು ಹೇಳಿದ್ದಾರೆ.
Gold Rate Rise: ಮತ್ತೆ ಏರಿದ ಚಿನ್ನದ ಬೆಲೆ, ಬೆಳ್ಳಿ ಕೆ.ಜಿ ಬೆಲೆಯೂ ಬರೋಬ್ಬರಿ 8900 ರೂ ಹೆಚ್ಚಳ!
ಮಂಗಳವಾರ ತಾತ್ಕಾಲಿಕ ಇಳಿಕೆ ಕಂಡಿದ್ದ ಚಿನ್ನದ ಬೆಲೆ ಇಂದು ಮತ್ತೆ ಏರಿಕೆಯಾಗಿದ್ದು, 24 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ 1,34,510 ರೂ. ತಲುಪಿದೆ. 22 ಕ್ಯಾರೆಟ್ ಚಿನ್ನದ ಬೆಲೆಯೂ 10 ಗ್ರಾಂಗೆ 1,23,300 ರೂ.ಗೆ ಏರಿದೆ. ಬೆಳ್ಳಿ ಬೆಲೆ ಕೂಡ ಕೆಜಿಗೆ 2,08,000 ರೂ.ಗೆ ಭಾರಿ ಹೆಚ್ಚಳವಾಗಿದೆ.
ಕ್ಷಿಪ್ರ ಬೆಳವಣಿಗೆ; ಬೆಂಜಮಿನ್ ನೆತನ್ಯಾಹು ಭೇಟಿ ಮಾಡಿದ ಜೈಶಂಕರ್; ಭಯೋತ್ಪಾದನೆ ವಿರುದ್ಧ ಜೀರೋ ಟಾಲೆರೆನ್ಸ್ ಘೋಷಣೆ
ಎರಡು ದಿನಗಳ ಇಸ್ರೇಲ್ ಪ್ರವಾಸದಲ್ಲಿರುವ ಭಾರತದ ವಿದೇಶಾಂಗ ಸಚಿವ ಡಾ.ಎಸ್. ಜೈಶಂಕರ್, ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರೊಂದಿಗೆ ದ್ವಿಪಕ್ಷೀಯ ಸಭೆ ನಡೆಸಿದ್ದಾರೆ. ಇದೇ ವೇಳೆ ಆಸ್ಟ್ರೇಲಿಯಾದ ಸಿಡ್ನಿಯ ಬಾಂಡಿ ಬೀಚ್ನಲ್ಲಿ ನಡೆದ ಯಹೂದಿ ನರಮೇಧವನ್ನು ಖಂಡಿಸಿರುವ ಜೈಶಂಕರ್, ಭಾರತ ಮತ್ತು ಇಸ್ರೇಲ್ ಭಯೋತ್ಪಾದನೆ ವಿರುದ್ಧ ಶೂನ್ಯ ಸಹಿಷ್ಣುತೆ ನೀತಿಯನ್ನು ಹೊಂದಿವೆ ಎಂದು ಸ್ಪಷ್ಟಪಡಿಸಿದ್ಧಾರೆ. ಭಾರತ-ಇಸ್ರೇಲ್ ದ್ವಿಪಕ್ಷೀಯ ರಾಜತಾಂತ್ರಿಕ ಸಂಬಂಧ ಜಾಗತಿಕ ಪರಿಣಾಮ ಬೀರುವಲ್ಲಿ ಯಶಸ್ವಿಯಾಗಿದೆ ಎಂದು ಜೈಶಂಕರ್ ಸಂತಸ ವ್ಯಕ್ತಪಡಿಸಿದ್ದಾರೆ.
ಆಪರೇಷನ್ ಸಿಂಧೂರ್ ಕಾರ್ಯಾಚರಣೆಯ ಮೊದಲ ದಿನ ಭಾರತಕ್ಕೆ ಸಂಪೂರ್ಣ ಸೋಲು: ವಿವಾದಾತ್ಮಕ ಹೇಳಿಕೆ ನೀಡಿದ ಪೃಥ್ವಿರಾಜ್ ಚವಾಣ್
ಹೊಸದಿಲ್ಲಿ: ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ, ಹಿರಿಯ ಕಾಂಗ್ರೆಸ್ ನಾಯಕ ಪೃಥ್ವಿರಾಜ್ ಚವಾಣ್, ಆಪರೇಷನ್ ಸಿಂಧೂರ್ ಕಾರ್ಯಚರಣೆಯ ಮೊದಲ ದಿನ ಭಾರತ ಸಂಪೂರ್ಣವಾಗಿ ಸೋತಿದೆ ಎಂದು ಹೇಳಿಕೆ ನೀಡಿದ್ದು, ವಿವಾದಕ್ಕೆ ಕಾರಣವಾಗಿದೆ. ಅವರ ಹೇಳಿಕೆಯನ್ನು ಬಿಜೆಪಿ ತೀವ್ರವಾಗಿ ಟೀಕಿಸಿದೆ. ಪುಣೆಯಲ್ಲಿ ಮಾತನಾಡಿದ ಪೃಥ್ವಿರಾಜ್ ಚವಾಣ್, ಆಪರೇಷನ್ ಸಿಂಧೂರ್ ಕಾರ್ಯಾಚರಣೆಯ ಮೊದಲ ದಿನ ಭಾರತ ಹಿನ್ನಡೆ ಅನುಭವಿಸಿದೆ ಎಂದು ಹೇಳಿದ್ದಾರೆ. ಆಪರೇಷನ್ ಸಿಂಧೂರ್ ಕಾರ್ಯಾಚರಣೆಯ ಮೊದಲ ದಿನ ನಾವು ಸಂಪೂರ್ಣವಾಗಿ ಸೋತಿದ್ದೇವೆ. ಅರ್ಧ ಗಂಟೆಯ ವೈಮಾನಿಕ ಕಾರ್ಯಾಚರಣೆಯಲ್ಲಿ, ಜನರು ಒಪ್ಪಿಕೊಂಡರೂ ಇಲ್ಲದಿದ್ದರೂ ನಾವು ಸಂಪೂರ್ಣವಾಗಿ ಸೋತಿದ್ದೇವೆ. ಕಾರ್ಯಾಚರಣೆಯ ಸಮಯದಲ್ಲಿ ಭಾರತೀಯ ವಿಮಾನಗಳನ್ನು ಹೊಡೆದುರುಳಿಸುವ ಮೂಲಕ ವಾಯುಪಡೆಯನ್ನು ಸಂಪೂರ್ಣವಾಗಿ ನೆಲಸಮ ಮಾಡಲಾಯಿತು. ಗ್ವಾಲಿಯರ್, ಬಟಿಂಡಾ ಅಥವಾ ಸಿರ್ಸಾದಿಂದ ಯಾವುದೇ ವಿಮಾನ ಹೊರಟಿದ್ದರೆ ಪಾಕಿಸ್ತಾನ ಅದನ್ನು ಹೊಡೆದುರುಳಿಸುವ ಸಾಧ್ಯತೆ ಇತ್ತು ಎಂದು ಹೇಳಿದ್ದಾರೆ. ಆಪರೇಷನ್ ಸಿಂಧೂರ್ ಕಾರ್ಯಾಚರಣೆ ಸಮಯದಲ್ಲಿ ನಾವು ನೋಡಿದ್ದೇವೆ. ಮಿಲಿಟರಿಯ ಒಂದು ಕಿಲೋಮೀಟರ್ ಚಲನೆಯೂ ಇರಲಿಲ್ಲ. ಎರಡು ಅಥವಾ ಮೂರು ದಿನಗಳಲ್ಲಿ ಏನೇ ನಡೆದರೂ ಅದು ಕೇವಲ ವೈಮಾನಿಕ ಯುದ್ಧ ಮತ್ತು ಕ್ಷಿಪಣಿ ಯುದ್ಧವಾಗಿತ್ತು. ಭವಿಷ್ಯದಲ್ಲಿ ಕೂಡ, ಯುದ್ಧಗಳು ಅದೇ ರೀತಿಯಲ್ಲಿ ನಡೆಯುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ನಾವು ನಿಜವಾಗಿಯೂ 12 ಲಕ್ಷ ಸೈನಿಕರ ಸೈನ್ಯವನ್ನು ನಿರ್ವಹಿಸುವ ಅಗತ್ಯವಿದೆಯೇ ಅಥವಾ ಅವರಿಂದ ಬೇರೆ ಏನಾದರೂ ಕೆಲಸ ಮಾಡಿಸಲು ನಾವು ಒತ್ತಾಯಿಸಬಹುದೇ ಎಂದು ಪೃಥ್ವಿರಾಜ್ ಚವಾಣ್ ಪ್ರಶ್ನಿಸಿದ್ದಾರೆ. ಚವಾಣ್ ಅವರ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಬಿಜೆಪಿ ವಕ್ತಾರ ಶೆಹಜಾದ್ ಪೂನವಾಲಾ, ಕಾಂಗ್ರೆಸ್ ಪಕ್ಷ ಭಾರತೀಯ ಸಶಸ್ತ್ರ ಪಡೆಗಳನ್ನು ಪದೇ ಪದೇ ಅಗೌರವಿಸುತ್ತಿದೆ ಎಂದು ಆರೋಪಿಸಿದ್ದಾರೆ. ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ನೀಡಿದ ಹೇಳಿಕೆ ಆಘಾತಕಾರಿಯಾದುದು. ವಾಯುಪಡೆ ಮತ್ತು ಸಶಸ್ತ್ರ ಪಡೆಗಳನ್ನು ಅವರು ಗುರಿಯಾಗಿಸಿಕೊಂಡಿದ್ದಾರೆ ಎಂದು ಶೆಹಜಾದ್ ಪೂನವಾಲಾ ಹೇಳಿದ್ದಾರೆ.
ಇನ್ನು ಪೈಪ್ ಲೈನ್ ದುರಸ್ತಿಗಾಗಿ ರಸ್ತೆ ಅಗೆಯುವಂತಿಲ್ಲ! ಬಂತು ಹೊಸ ಟೆಕ್ನಾಲಜಿ.. ಬೆಂಗಳೂರಲ್ಲೇ ಮೊದಲು ಜಾರಿ
ಬೆಂಗಳೂರಿನಲ್ಲಿ ರಸ್ತೆ ಅಗೆಯದೆ ಪೈಪ್ ಲೈನ್ ದುರಸ್ತಿ ಮಾಡಲು ಹೊಸ ರೋಬೋ ಟೆಕ್ನಾಲಜಿ ಬಂದಿದೆ. ಬಿಡಬ್ಲ್ಯೂಎಸ್ಎಸ್ಬಿ ಈ ತಂತ್ರಜ್ಞಾನವನ್ನು ಅಳವಡಿಸಿಕೊಂಡಿದೆ. ಮ್ಯಾನ್ ಹೋಲ್ ಮೂಲಕ ರೋಬೋವನ್ನು ಇಳಿಸಿ ಪೈಪ್ ಲೈನ್ ಸಮಸ್ಯೆ ಪತ್ತೆ ಹಚ್ಚಲಾಗುತ್ತದೆ. ಇದರಿಂದ ಸಮಯ ಮತ್ತು ಹಣ ಉಳಿತಾಯವಾಗುತ್ತದೆ. ಕೂಲಿಕಾರ್ಮಿಕರ ಸುರಕ್ಷತೆಗೂ ಇದು ಸಹಕಾರಿ. ಈ ತಂತ್ರಜ್ಞಾನದಿಂದ 75 ಸೇವಾ ವಿನಂತಿಗಳು ಪರಿಹರಿಸಲ್ಪಟ್ಟಿವೆ.
ಕುದುರೆಮುಖಕ್ಕೆ ಪುನರ್ವಸತಿ ಕಲ್ಪಿಸುವ ಕೂಗಿಗೆ ಕೊನೆಗೂ ಸ್ಪಂದನೆ; ಸದನದಲ್ಲಿ ಚರ್ಚೆ
ಕಳೆದ 20 ವರ್ಷಗಳಿಂದ ಪುನರ್ವಸತಿಗಾಗಿ ಕಾಯುತ್ತಿದ್ದ ಕುದುರೆಮುಖ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯ ಜನರಿಗೆ ಸರ್ಕಾರ ಸ್ಪಂದಿಸಿದೆ. ಬೆಳಗಾವಿ ಅಧಿವೇಶನದಲ್ಲಿ ಈ ವಿಷಯ ಚರ್ಚೆಯಾಗಿದ್ದು, 600 ಕೋಟಿ ರೂ. ಅನುದಾನಕ್ಕೆ ಮನವಿ ಸಲ್ಲಿಸಲಾಗಿದೆ. ಆನೆ ದಾಳಿ ಘಟನೆ ಬಳಿಕ ಸರ್ಕಾರ ಎಚ್ಚೆತ್ತುಕೊಂಡಿದೆ. 1382 ಕುಟುಂಬಗಳಲ್ಲಿ 550 ಅರ್ಜಿ ಸಲ್ಲಿಸಿದ್ದು, 253 ಕುಟುಂಬಗಳು ಈಗಾಗಲೇ ಪುನರ್ವಸತಿ ಪಡೆದಿವೆ. 297 ಕುಟುಂಬಗಳು ಇನ್ನೂ ನಿರೀಕ್ಷೆಯಲ್ಲಿವೆ.
ಅಮೆರಿಕಾದಲ್ಲಿ ನಿರುದ್ಯೋಗ ಪ್ರಮಾಣ ಏರಿಕೆಯಾಗಿದೆ. ಸುಮಾರು ನಾಲ್ಕು ವರ್ಷಗಳಲ್ಲೇ ಇದು ಗರಿಷ್ಠ ಮಟ್ಟ ತಲುಪಿದೆ. ಸರ್ಕಾರದ ಕಾರ್ಯಚರಣೆಗಳಲ್ಲಿನ ಸ್ಥಗಿತ ಮತ್ತು ವಲಸಿಗರ ನಿರ್ಗಮನದಿಂದ ಈ ಪರಿಸ್ಥಿತಿ ಉಂಟಾಗಿದೆ. ಅಕ್ಟೋಬರ್ನಲ್ಲಿ 105,000 ಉದ್ಯೋಗಗಳು ಕಳೆದುಹೋಗಿವೆ ಇನ್ನು, ನವೆಂಬರ್ ನಲ್ಲಿ 64 ಸಾವಿರ ಉದ್ಯೋಗ ಸೃಷ್ಟಿಯಾಗಿದ್ದರೂ ಸಹ ಪರಿಸ್ಥಿತಿ ಹದಗೆಡಟುತ್ತಿದ್ದು, ಆರ್ಥಿಕ ತಜ್ಞರು ಈ ಬೆಳವಣಿಗೆಯಿಂದ ಚಿಂತಿತರಾಗಿದ್ದಾರೆ. ಫೆಡರಲ್ ರಿಸರ್ವ್ ಬಡ್ಡಿದರ ಕಡಿತದ ಬಗ್ಗೆ ಚರ್ಚಿಸುತ್ತಿದೆ.ಆದರೆ ಶ್ವೇತಭವನ ಪರಿಸ್ಥಿತಿಯನ್ನು ಏನೂ ಆಗಿಲ್ಲ ಎಲ್ಲಾ ನಾವು ಊಹಿಸಿದಂತೆ ನಡೆಯುತ್ತಿದೆ ಎಂದು ಮರೆಮಾಚುವ ಯತ್ನದಲ್ಲಿದೆ.
ಮಂಡ್ಯ, ಡಿಸೆಂಬರ್ 17: ರಾಜ್ಯದಲ್ಲಿ ಕಳೆದ ಮೂರು ತಿಂಗಳಿನಿಂದ ಸರಿಯಾಗಿ ಗೃಹಲಕ್ಷ್ಮಿ ಯೋಜನೆಯ ಹಣ ಫಲಾನುಭವಿ ಮಹಿಳೆಯರ ಬ್ಯಾಂಕ್ ಖಾತೆಗೆ ಬಂದಿಲ್ಲ ಎಂದು ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ವಿಪಕ್ಷಗಳು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿವೆ. ಈ ನಡುವೆ 3-4 ತಿಂಗಳ ಗೃಹ ಲಕ್ಷ್ಮಿಹಣ ಒಟ್ಟಿಗೆ ಹಾಕ್ತಾರೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರ ಸಚಿವರಾದ ಹೆಚ್
ಮೈಲಾಪುರ ಅಭಿವೃದ್ಧಿಗಿಲ್ಲ ಸರಕಾರದ ಕಾಳಜಿ ; ಪ್ರಾಧಿಕಾರ ರಚನೆ, ರೋಪ್ ವೇ ಸುದ್ದಿನೇ ಇಲ್ಲ
ಯಾದಗಿರಿ ಜಿಲ್ಲೆಯ ಮೈಲಾಪುರ ಮೈಲಾರಲಿಂಗೇಶ್ವರ ಜಾತ್ರೆಗೆ ಸಿದ್ಧತೆ ನಡೆದಿದೆ. ಲಕ್ಷಾಂತರ ಭಕ್ತರು ಸೇರುವ ಈ ಜಾತ್ರೆಯಲ್ಲಿ ಮೂಲ ಸೌಕರ್ಯಗಳ ಕೊರತೆ ಎದ್ದು ಕಾಣುತ್ತಿದೆ. 700 ವರ್ಷಗಳ ಇತಿಹಾಸವಿರುವ ದೇವಸ್ಥಾನಕ್ಕೆ ಕೋಟ್ಯಂತರ ರೂ. ಆದಾಯ ಬರುತ್ತಿದ್ದರೂ ಅಭಿವೃದ್ಧಿ ಕಾಣುತ್ತಿಲ್ಲ. ಭಕ್ತರ ಒತ್ತಾಯಕ್ಕೆ ಸರಕಾರ ಕಿವಿಗೊಡುತ್ತಿಲ್ಲ.
IMD Weather: ಈ ರಾಜ್ಯಗಳಲ್ಲಿ ತಾಪಮಾನ ಕುಸಿತ, ಆಲಿಕಲ್ಲು ಮಳೆ ಸಾಧ್ಯತೆ
ಇಂದು ಮತ್ತು ನಾಳೆ ತೆಲಂಗಾಣ, ಉತ್ತರ ಕರ್ನಾಟಕದ ಒಳಭಾಗ, ಪಶ್ಚಿಮ ಮಧ್ಯಪ್ರದೇಶದ ಪ್ರತ್ಯೇಕ ಸ್ಥಳಗಳಲ್ಲಿ ಶೀತ ಮಾರುತದ ಪರಿಣಾಮ ಬೀರುವ ಸಾಧ್ಯತೆ ಇದೆ. ಡಿಸೆಂಬರ್ 18ರಿಂದ 22ರ ಅವಧಿಯಲ್ಲಿ ಜಮ್ಮು-ಕಾಶ್ಮೀರ-ಲಡಾಖ್-ಮುಜಫರಾಬಾದ್ನ ಕೆಲವು ಸ್ಥಳಗಳಲ್ಲಿ, ಹಿಮಾಚಲ ಪ್ರದೇಶ ಮತ್ತು ಪಂಜಾಬ್, ಉತ್ತರಾಖಂಡ ಹಗುರ ಮಳೆ ಹಾಗೂ ಹಿಮಪಾತವಾಗುವ ಸಾಧ್ಯತೆ ಇದೆ. ಮೇಘಾಲಯದಲ್ಲಿ ಪ್ರತ್ಯೇಕ ಆಲಿಕಲ್ಲು ಮಳೆಯಾಗುವ ಸಾಧ್ಯತೆಯಿದೆ. ತಮಿಳುನಾಡು,
ಸಾಗರ ಜಿಲ್ಲಾ ಕೇಂದ್ರಕ್ಕೆ ಆಗ್ರಹ : ವಿವಿಧ ಸಂಘಟನೆಗಳಿಂದ ಸಾಗರ ಬಂದ್
ಸಾಗರ : ಸಾಗರವನ್ನು ಜಿಲ್ಲಾ ಕೇಂದ್ರವನ್ನಾಗಿ ಘೋಷಿಸಬೇಕೆಂದು ಆಗ್ರಹಿಸಿ ಇಂದು(ಡಿ.17) ವಿವಿಧ ಸಂಘಟನೆಗಳ ಒಕ್ಕೂಟದಿಂದ ಸಾಗರ ಬಂದ್ಗೆ ಕರೆ ನೀಡಲಾಗಿದೆ. ಬಂದ್ ಹಿನ್ನೆಲೆಯಲ್ಲಿ ಸಾಗರ ಪಟ್ಟಣದ ಹಲವೆಡೆ ರಸ್ತೆಗಳಲ್ಲಿ ಟೈರ್ಗಳಿಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಲಾಗಿದೆ. ಬೆಳಿಗ್ಗೆಯೇ ಕೋರ್ಟ್ ಸಮೀಪ, ಐತಪ್ಪ ಸರ್ಕಲ್ ಸೇರಿದಂತೆ ಪ್ರಮುಖ ಸ್ಥಳಗಳ ನಡು ರಸ್ತೆಯಲ್ಲಿ ಟೈರ್ಗಳಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಲಾಗಿದೆ. ಸಾಗರ ಜಿಲ್ಲಾ ಹೋರಾಟ ಸಮಿತಿ ವತಿಯಿಂದ ಬಂದ್ಗೆ ಕರೆ ನೀಡಲಾಗಿದ್ದು, ವಿವಿಧ ಸಂಘಟನೆಗಳು ಹಾಗೂ ಸಾರ್ವಜನಿಕರು ಬಂದ್ಗೆ ಬೆಂಬಲ ಸೂಚಿಸಿದ್ದಾರೆ.
ಬೆಳ್ತಂಗಡಿ | ಪೃಥ್ವಿ ಆಭರಣ ಮಳಿಗೆಯ ವ್ಯವಸ್ಥಾಪಕನಿಂದ ವಿದ್ಯಾರ್ಥಿಗಳಿಗೆ ಹಲ್ಲೆ ಆರೋಪ: ಪ್ರಕರಣ ದಾಖಲು
ಬೆಳ್ತಂಗಡಿ : ನಗರದ ಸಂತೆಕಟ್ಟೆ ಬಳಿ ಇರುವ ಪೃಥ್ವಿ ಆಭರಣ ಮಳಿಗೆಯ ವ್ಯವಸ್ಥಾಪಕನಾಗಿರುವ ಅಶೋಕ್ ಬಂಗೇರ ಹಾಗೂ ಇತರರು ಮೂವರು ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ಪೊಲೀಸರಿಗೆ ದೂರು ನೀಡಿದ್ದು, ಬೆಳ್ತಂಗಡಿ ಠಾಣೆಯಲ್ಲಿ ಬಿಎನ್ ಎಸ್ u/s 126(2),115(1) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಹಲ್ಲೆಗೆ ಒಳಗಾದ ವಿದ್ಯಾರ್ಥಿಗಳು ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ತಿಳಿದು ಬಂದಿದೆ. ವೇಣೂರು ಸಮೀಪದ ಮೂವರು ವಿದ್ಯಾರ್ಥಿಗಳು ಸೋಮವಾರ ಶಾಲೆಗೆ ರಜೆ ಹಾಕಿ, ಮಧ್ಯಾಹ್ನದ ಬಳಿಕ ಬೆಳ್ತಂಗಡಿ ಪೇಟೆಯಲ್ಲಿ ಪ್ರತಿ ಸೋಮವಾರ ನಡೆಯುವ ಸಂತೆಗೆಂದು ಬಂದಿದ್ದರು. ಅಲ್ಲಿ ಸುತ್ತಾಡಿದ ಬಳಿಕ ಬೆಳ್ತಂಗಡಿ ಸಂತೆಕಟ್ಟೆ ಬಳಿ ಇರುವ ಪೃಥ್ವಿ ಆಭರಣ ಮಳಿಗೆಯ ಪಕ್ಕದಲ್ಲಿ ಕುಳಿತು ಮೊಬೈಲ್ನಲ್ಲಿ ಆಟವಾಡುತ್ತಿದ್ದ ವೇಳೆ ಮಕ್ಕಳ ಹೆಸರನ್ನು ಕೇಳಿ ಮುಸ್ಲಿಂ ವಿದ್ಯಾರ್ಥಿಗಳು ಎಂದು ತಿಳಿದು, ಆ ಬಳಿಕ ಮಕ್ಕಳಿಗೆ ಧರ್ಮದ ಹೆಸರಿನಲ್ಲಿ ನಿಂದನೆ ಮಾಡಿ, ಕೋಣೆಯಲ್ಲಿ ಕೂಡಿ ಹಾಕಿ ಹಲ್ಲೆ ನಡೆಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ ಹಲ್ಲೆ ನಡೆಸಿದ್ದನ್ನು ಪ್ರಶ್ನಿಸಲು ಹೋಗಿದ್ದ ವಿದ್ಯಾರ್ಥಿಗಳ ಪೋಷಕರೊಂದಿಗೆ ಆಭರಣ ಮಳಿಗೆಯ ವ್ಯವಸ್ಥಾಪಕ ಸಹಿತ ಇತರೆ ಸಿಬ್ಬಂದಿಗಳು ವಾಗ್ವಾದ ನಡೆಸಿ ನಿಂದಿಸಿರುವ ಆರೋಪ ಕೂಡ ಕೇಳಿಬಂದಿದೆ. ಘಟನೆಯ ವೇಳೆ ಮೂವರು ವಿದ್ಯಾರ್ಥಿಗಳ ಪೈಕಿ ಓರ್ವ ವಿದ್ಯಾರ್ಥಿ ಹಲ್ಲೆಯಿಂದ ತಪ್ಪಿಸಿಕೊಂಡು ಓಡಿ ಹೋಗಿ ನಾಪತ್ತೆಯಾಗಿದ್ದನು. ಆ ಬಳಿಕ ರಾತ್ರಿ ಹುಡುಕಾಡಿದಾಗ ಪೋಷಕರ ಕೈಗೆ ಸಿಕ್ಕಿದ್ದಾನೆ. ಸದ್ಯ ಹಲ್ಲೆಯಿಂದ ಗಾಯಗೊಂಡಿರುವ ಮೂವರು ವಿದ್ಯಾರ್ಥಿಗಳು ಬೆಳ್ತಂಗಡಿ ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಆಸ್ಪತ್ರೆಯಲ್ಲಿ ಮಕ್ಕಳ ಹೇಳಿಕೆ ದಾಖಲಿಸಿದ ಪೊಲೀಸರು ಮಂಗಳವಾರ ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಘಟನೆಯ ಬಗ್ಗೆ ಮಾಹಿತಿ ಪಡೆದ ಬೆಳ್ತಂಗಡಿ ಎಸ್ಡಿಪಿಐ ಪಕ್ಷದ ಮುಖಂಡರಾದ ಅಕ್ಬರ್ ಬೆಳ್ತಂಗಡಿ ಆಸ್ಪತ್ರೆಯಲ್ಲಿ ದಾಖಲಾಗಿರುವ ಮಕ್ಕಳನ್ನು ಭೇಟಿ ಮಾಡಿ, ಆರೋಗ್ಯ ವಿಚಾರಿಸಿದ್ದು, ಮಕ್ಕಳ ಧರ್ಮವನ್ನು ಕೇಳಿ ಕ್ಷುಲ್ಲಕ ಕಾರಣಕ್ಕೆ ಹಲ್ಲೆ ನಡೆಸಲಾಗಿದೆ. ಇದು ಖಂಡನೀಯ. ಪೊಲೀಸ್ ಇಲಾಖೆ ತಪ್ಪಿತಸ್ಥರ ವಿರುದ್ಧ. ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
SSLC ಪರೀಕ್ಷೆ: ರಾಜ್ಯದಲ್ಲಿ 40 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳ ನೋಂದಣಿಯೇ ಇಲ್ಲ, ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯ?
ರಾಜ್ಯದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ 40 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಗೈರು, ಗುಳೆ, ಡ್ರಾಪೌಟ್ನಿಂದ ಹೊರಗುಳಿಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಒಟ್ಟು 84,0196 ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದು, 79,97,62 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಲಿದ್ದಾರೆ. 40,434 ವಿದ್ಯಾರ್ಥಿಗಳು ನೋಂದಣಿಯಿಂದ ಹೊರಗುಳಿದಿದ್ದಾರೆ. ಶಾಲೆಗಳು ಆರಂಭಗೊಂಡಿದ್ದರೂ, ಶಿಕ್ಷಕರು, ಮುಖ್ಯ ಶಿಕ್ಷಕರು ಮೇಲಧಿಕಾರಿಗಳು ವಿದ್ಯಾರ್ಥಿಗಳ ಮೇಲೆ ಕಣ್ಣಿಟ್ಟಿದ್ದಾರೆ.ಈ ವಿದ್ಯಾರ್ಥಿಗಳೆಲ್ಲಾ ಬಹುತೇಕ 15-16 ವರ್ಷದ ವ್ಯಾಪ್ತಿಯಲ್ಲಿರುವುದರಿಂದ ಕಡ್ಡಾಯ ಶಿಕ್ಷಣ ವ್ಯಾಪ್ತಿಗೆ ಬಾರದ ಕಾರಣ ನೋಂದಣಿಗೆ ಹೆಚ್ಚಿನ ಆಸಕ್ತಿ ತೋರುತ್ತಿಲ್ಲ.
ಆಸ್ಟ್ರೇಲಿಯಾದ ಸಿಡ್ನಿಯ ಬಾಂಡಿ ಬೀಚ್ನಲ್ಲಿ ನಡೆದ ಯಹೂದಿಗಳ ನರಮೇಧ, ಈ ಬಾರಿ ಶ್ವೇತಭವದಲ್ಲಿ ಹಮ್ಮಿಕೊಂಡಿದ್ದ ಹನುಕ್ಕಾ ಆಚರಣೆಯ ಸಂಭ್ರಮವನ್ನು ಕಸಿದುಕೊಂಡಿತ್ತು. ಆಚರಣೆಯಲ್ಲಿ ಭಾಗವಹಿಸಿ ಮಾತನಾಡಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಬಾಂಡಿ ಬೀಚ್ ಭಯೋತ್ಪಾದಕ ದಾಳಿಯನ್ನು ಅತ್ಯಂತ ಕಟು ಶಬ್ಧಗಳಲ್ಲಿ ಟೀಕಿಸಿದರು. ಇದೇ ವೇಳೆ ಇಸ್ಲಾಮಿಕ್ ಮೂಲಭೂತವಾದದ ವಿರುದ್ಧ ಜಾಗತಿಕ ಹೋರಾಟಕ್ಕೆ ಕರೆ ನೀಡಿರುವ ಡೊನಾಲ್ಡ್ ಟ್ರಂಪ್, ಮೂಲಭೂತವಾದಿ ರಾಕ್ಷಸರ ಸಂಹಾರಕ್ಕೆ ಇಡೀ ಜಗತ್ತು ಒಂದಾಗಲು ಇದು ಸಕಾಲ ಎಂದು ಹೇಳಿದ್ದಾರೆ.
ತೀವ್ರ ಚಳಿ ಅಬ್ಬರಕ್ಕೆ ರೋಣ ಜನತೆ ತತ್ತರ: ಶೀತ ಹೆಚ್ಚಾದಂತೆ ಉಣ್ಣೆ ಬಟ್ಟೆಗಳಿಗೂ ಬೇಡಿಕೆ ಹೆಚ್ಚಳ
ರೋಣ ತಾಲೂಕಿನಲ್ಲಿ ವಿಪರೀತ ಚಳಿ ಆವರಿಸಿದೆ. ಜನರು ಬೆಂಕಿ ಕಾಯಿಸುತ್ತಾ, ಉಣ್ಣೆ ಬಟ್ಟೆ, ಕಂಬಳಿ, ಕೌದಿಗಳನ್ನು ಧರಿಸುತ್ತಿದ್ದಾರೆ. ಸಂಜೆಯಾಗುತ್ತಿದ್ದಂತೆ ಕುರುಕಲು ತಿಂಡಿಗಳಿಗೆ ಹೆಚ್ಚಿನ ಬೇಡಿಕೆ ಕಂಡುಬರುತ್ತಿದೆ. ಬಿಸಿ ಬಜಿ, ಇಡ್ಲಿವಡಾ, ಗಿರಮಿಟ್ಟ ಅಂಗಡಿಗಳ ಮುಂದೆ ಜನಸಂದಣಿ ಹೆಚ್ಚಾಗಿದೆ. ಸ್ವೆಟರ್, ರೂಮಾಲು, ಮಂಕಿಕ್ಯಾಪ್ಗಳ ಮಾರಾಟವೂ ಭರ್ಜರಿಯಾಗಿ ನಡೆಯುತ್ತಿದೆ.ಈ ಚಳಿಯ ಹಿನ್ನಲೆಯಲ್ಲಿ ಕಂಬಳಿ, ಕೌದಿಗಳಿಗೂ ಬೇಡಿಕೆ ಹೆಚ್ಚಿದೆ.
Lionel Messi: ಅನಂತ್ ಅಂಬಾನಿಯ 'ವಂತಾರ'ಕ್ಕೆ ಫುಟ್ಬಾಲ್ ದಂತಕಥೆ ಮೆಸ್ಸಿ ಭೇಟಿ
ಭಾರತದ ಪ್ರವಾಸದಲ್ಲಿರುವ ಜಾಗತಿಕ ಫುಟ್ಬಾಲ್ ತಾರೆ ಲಯೋನೆಲ್ ಮೆಸ್ಸಿ ಅವರು ಅನಂತ್ ಅಂಬಾನಿ ಅವರು ಆರಂಭಿಸಿರುವ ಗುಜರಾತ್ನ ವಂತಾರಕ್ಕೆ ಭೇಟಿ ನೀಡಿದರು. ವಂತಾರಾ ಅನಂತ್ ಅಂಬಾನಿ ಅವರು ಆರಂಭಿಸಿದ ವನ್ಯಜೀವಿಗಳ ಪುನರ್ವಸತಿ ಹಾಗೂ ಸಂರಕ್ಷಣಾ ತಾಣಕ್ಕೆ ಲಯೋನೆಲ್ ಮೆಸ್ಸಿ ಅವರ ಈ ಭೇಟಿ ಗಮನ ಸೆಳೆಯಿತು. ಮೆಸ್ಸಿ ತಮ್ಮ ಭೇಟಿಯ ವೇಳೆ ಸಾಂಸ್ಕೃತಿಕ ಮೌಲ್ಯವನ್ನು ಪ್ರತಿಬಿಂಬಿಸುವಂತಹ ಧಾರ್ಮಿಕ
ವಾಷಿಂಗ್ಟನ್ | 30 ದೇಶಗಳಿಗೆ ಪ್ರವಾಸ ನಿಷೇಧ ಘೋಷಿಸಿದ ಟ್ರಂಪ್
ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಮಂಗಳವಾರ 30 ದೇಶಗಳಿಗೆ ಪ್ರವಾಸ ನಿಷೇಧ ಪಟ್ಟಿಯನ್ನು ಪ್ರಕಟಿಸಿದ್ದಾರೆ. ನ್ಯಾಷನಲ್ ಗಾರ್ಡ್ ಟ್ರೂಪ್ನ ಇಬ್ಬರು ಯೋಧರನ್ನು ಹತ್ಯೆ ಮಾಡಿದ ಪ್ರಕರಣದಲ್ಲಿ ಅಫ್ಘಾನ್ ಪ್ರಜೆಯನ್ನು ಬಂಧಿಸಿದ ಹಿನ್ನೆಲೆಯಲ್ಲಿ ವಲಸೆ ಬರುವವರನ್ನು ತಡೆಯಲು ಕೈಗೊಳ್ಳುವ ಕಾರ್ಯಯೋಜನೆಯ ಅಂಗವಾಗಿ ಈ ನಿಷೇಧ ಘೋಷಿಸಲಾಗಿದೆ. ಒಟ್ಟು 12 ದೇಶಗಳ ಪ್ರಜೆಗಳು ಅಮೆರಿಕಕ್ಕೆ ಭೇಟಿ ನೀಡುವುದನ್ನು ನಿಷೇಧಿಸಲಾಗಿದ್ದು, ಇತರ ಏಳು ದೇಶಗಳ ನಾಗರಿಕರು ನಿರ್ಬಂಧಗಳನ್ನು ಎದುರಿಸಬೇಕಾಗುತ್ತದೆ. ಪ್ರವಾಸ ನಿಷೇಧ ದೇಶಗಳ ಪಟ್ಟಿಯನ್ನು ವಿಸ್ತರಿಸುವ ನಿರ್ಧಾರವನ್ನು ಪ್ರಕಟಿಸಿರುವ ಟ್ರಂಪ್ ಆಡಳಿತ, ವ್ಯಾಪಕ ಭ್ರಷ್ಟಾಚಾರ, ವಂಚನಾತ್ಮಕ ಅಥವಾ ವಿಶ್ವಾಸಾರ್ಹವಲ್ಲದ ನಾಗರಿಕ ದಾಖಲೆಗಳು ಮತ್ತು ಅಪರಾಧ ದಾಖಲೆಗಳನ್ನು ಹೊಂದಿರುವ ದೇಶಗಳ ಪ್ರಜೆಗಳು ಅಮೆರಿಕಕ್ಕೆ ಭೇಟಿ ನೀಡುವ ವಿಚಾರದಲ್ಲಿ ನಿರ್ಬಂಧಗಳನ್ನು ಹೇರಲಾಗಿದೆ ಎಂದು ಸ್ಪಷ್ಟಪಡಿಸಿದೆ. ಕೆಲ ದೇಶಗಳ ಜನರು ವೀಸಾ ಅವಧಿ ಮುಗಿದರೂ ವಾಸ ಮುಂದುವರಿಸಿರುವುದು ತಿಳಿದುಬಂದಿದೆ. ಅಮೆರಿಕ ಗಡೀಪಾರು ಮಾಡಿದರೂ ಇಂಥ ದೇಶಗಳು ತಮ್ಮ ಪ್ರಜೆಗಳನ್ನು ವಾಪಾಸು ಕರೆಸಿಕೊಳ್ಳಲು ನಿರಾಕರಿಸಿವೆ ಎಂದು ಪ್ರಕಟಣೆ ಹೇಳಿದೆ. ಹೊಸ ಅಧ್ಯಾದೇಶದ ಅನ್ವಯ 12 ಅಪಾಯ ಸಾಧ್ಯತೆಯ ದೇಶಗಳ ಪ್ರಜೆಗಳ ಅಮೆರಿಕ ಭೇಟಿಯನ್ನು ನಿಷೇಧಿಸಲಾಗಿದೆ ಅಥವಾ ಅತ್ಯಧಿಕ ನಿರ್ಬಂಧಗಳನ್ನು ವಿಧಿಸಲಾಗಿದೆ. ಈ ದೇಶಗಳೆಂದರೆ ಅಫ್ಘಾನಿಸ್ತಾನ, ಬರ್ಮಾ, ಛಡ್, ರಿಪಬ್ಲಿಕ್ ಆಫ್ ಕಾಂಗೊ, ಈಕ್ವಿಟೋರಿಯಲ್ ಗುನಿಯಾ, ಎರಿಟ್ರಿಯಾ, ಹೈಟಿ, ಇರಾನ್, ಲಿಬಿಯಾ, ಸೋಮಾಲಿಯಾ, ಸೂಡಾನ್ ಹಾಗೂ ಯೆಮನ್. ಇತ್ತೀಚಿನ ವಿಶ್ಲೇಷಣೆಗಳ ಅನ್ವಯ ನಿರ್ಬಂಧ ವಿಧಿಸಲಾದ ದೇಶಗಳೆಂದರೆ ಬುರ್ಕಿನಾ ಫ್ಯಾಸೊ, ಮಾಲಿ, ನೈಜೆರ್, ದಕ್ಷಿಣ ಸೂಡಾನ್ ಮತ್ತು ಸಿರಿಯಾ. ಅಂತೆಯೇ ಪ್ಯಾಲೆಸ್ತೀನ್ ಅಧಿಕಾರಿಗಳು ನೀಡಿದ ಪ್ರವಾಸ ದಾಖಲೆಗಳನ್ನು ಹೊಂದಿರುವವರ ಭೇಟಿಯನ್ನೂ ನಿಷೇಧಿಸಲಾಗಿದೆ. ಭಾಗಶಃ ನಿರ್ಬಂಧ ಎದುರಿಸಲಿರುವ ದೇಶಗಳೆಂದರೆ ಲಾವೋಸ್ ಮತ್ತು ಸಿರ್ರಾಲಿಯೋನ್. ಅತ್ಯಧಿಕ ಅಪಾಯ ಸಾಧ್ಯತೆಯ ಪಟ್ಟಿಯಲ್ಲಿದ್ದ 7 ದೇಶಗಳ ಪೈಕಿ ಬುರುಂಡಿ, ಕ್ಯೂಬಾ, ಟೋಗೊ ಮತ್ತು ವೆನೆಜಿವಲಾ ಹೀಗೆ ನಾಲ್ಕು ದೇಶಗಳ ಮೇಲೆ ಅತ್ಯಧಿಕ ನಿರ್ಬಂಧ ಹೇರಲಾಗಿದೆ. ತುರ್ಕಮೇನಿಯಾದ ನಾನ್-ಇಮಿಗ್ರೆಂಟ್ ವೀಸಾ ಹೊಂದಿರುವವರ ಪ್ರವೇಶವನ್ನೂ ನಿರ್ಬಂಧಿಸಲಾಗಿದೆ.
ಹಾಳು ಬೀಳುತ್ತಿದೆ ಭದ್ರಾವತಿಯ ವಿಐಎಸ್ಎಲ್ ಟೌನ್ಶಿಪ್
ಶಿವಮೊಗ್ಗದ ಭದ್ರಾವತಿ ವಿಐಎಸ್ಎಲ್ ಕಾರ್ಖಾನೆಯ ಟೌನ್ಶಿಪ್ ಈಗ ಹಾಳುಬಿದ್ದಿದೆ. ಒಂದು ಕಾಲದಲ್ಲಿ ವೈಭವದಿಂದ ಮೆರೆದಿದ್ದ ವಸತಿಗೃಹಗಳು, ಶಾಲೆಗಳು, ಆಸ್ಪತ್ರೆಗಳು ನಿರ್ಲಕ್ಷ್ಯಕ್ಕೆ ಒಳಗಾಗಿವೆ. 4200 ವಸತಿಗೃಹಗಳ ಪೈಕಿ 500ಕ್ಕೂ ಹೆಚ್ಚು ಮನೆಗಳು ಶಿಥಿಲಗೊಂಡಿವೆ. ಕಾರ್ಖಾನೆಯು ನಿರ್ಮಿಸಿದ್ದ 14 ಕಲ್ಯಾಣ ಶಾಲೆಗಳಿಗೂ ಬೀಗ ಬಿದ್ದಿದೆ. ಸುಸಜ್ಜಿತ ಆಸ್ಪತ್ರೆಯೂ ಪಾಳುಬಿದ್ದಿದೆ. ಕಾರ್ಮಿಕರ ನೆಲೆಗಳು ಈಗ ಶೋಕದ ವಾತಾವರಣ ಸೃಷ್ಟಿಸಿವೆ.
ಅಮೆರಿಕ ಪ್ರಯಾಣ ನಿಷೇಧಕ್ಕೆ ಗುರಿಯಾದ ದೇಶಗಳ ಸಂಖ್ಯೆ 30ಕ್ಕೆ ಏರಿಕೆ; ಇಲ್ಲಿಗೆ ನಿಲ್ಲಲ್ಲ ಎಂದ ಡೊನಾಲ್ಡ್ ಟ್ರಂಪ್!
ರಾಷ್ಟ್ರೀಯ ಭದ್ರತೆ ಹೆಸರಿನಲ್ಲಿ ಕಠಿಣ ವಲಸೆ ನೀತಿಯನ್ನು ಜಾರಿಗೊಳಿಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ತಮ್ಮ ಟ್ರಾವೆಲ್ ಬ್ಯಾನ್ ದೇಶಗಳ ಪಟ್ಟಿಯನ್ನು ಬೆಳೆಸುತ್ತಲೇ ಇದ್ದಾರೆ. ಟ್ರಂಪ್ ಈಗ ಒಟ್ಟು 30 ದೇಶಗಳ ಮೇಲೆ ಸಂಪೂರ್ಣ ಅಥವಾ ಭಾಗಶಃ ನಿರ್ಬಂಧಗಳನ್ನು ಹೇರಿದ್ದಾರೆ. ಈ ಮೊದಲು ಅಸ್ತಿತ್ವದಲ್ಲಿದ್ದ ಟ್ರಾವೆಲ್ ಬ್ಯಾನ್ ಪಟ್ಟಿ ಮತ್ತಷ್ಟು ವಿಸ್ತರಣೆಗೊಂಡಿದ್ದು, ಹಲವು ದೇಶಗಳ ಜನರು ಈಗ ಅಮೆರಿಕವನ್ನು ನೋಡುವ ಕನಸನ್ನು ಬಿಡಬೇಕಿದೆ. ಈ ಕುರಿತು ಇಲ್ಲಿದೆ ಸಂಪೂರ್ಣ ಮಾಹಿತಿ.
42 ವರ್ಷಗಳ ಮೌನ ಮುರಿದ ನಿವೃತ್ತ ಪ್ರಾಧ್ಯಾಪಕಿ; ಪತಿಯ ವಿರುದ್ಧ ಲೈಂಗಿಕ ಕಿರುಕುಳ ಆರೋಪ
ಬೆಂಗಳೂರಿನಲ್ಲಿ 42 ವರ್ಷಗಳ ಬಳಿಕ ನಿವೃತ್ತ ಪ್ರಾಧ್ಯಾಪಕಿ ತಮ್ಮ ಪತಿ ರಮೇಶ್ ವಿರುದ್ಧ ಲೈಂಗಿಕ ಕಿರುಕುಳ, ಗೃಹ ಹಿಂಸೆ ಆರೋಪಿಸಿ ದೂರು ನೀಡಿದ್ದಾರೆ. 70ರ ಹರೆಯದ ಪತಿ ದೈಹಿಕ, ಮಾನಸಿಕ, ಆರ್ಥಿಕ ಕಿರುಕುಳ ನೀಡುತ್ತಿದ್ದರು ಎಂದು ಆರೋಪಿಸಿದ್ದಾರೆ. ಇತ್ತೀಚೆಗೆ ಮನೆಯಿಂದ ಹೊರಹಾಕುವ ನೋಟಿಸ್ ನೀಡಿದ್ದರಿಂದ ದೂರು ದಾಖಲಿಸಿದ್ದಾರೆ. ಈ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
MGNREGA Scheme: ನರೇಗಾ ಯೋಜನೆ ಬದಲಾವಣೆಯಿಂದ ವಲಸೆ ಹೆಚ್ಚಾಗಲಿದೆ: ಸಿದ್ದರಾಮಯ್ಯ ಕಳವಳ
ಕೇಂದ್ರ ಸರ್ಕಾರವು ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (ಎಂ-ನರೇಗಾ)ಯ ಹೆಸರು ಮತ್ತು ಸ್ವರೂಪವನ್ನು ಬದಲಾಯಿಸಲು ಮುಂದಾಗಿದೆ. ಇದಕ್ಕೆ ಕಾಂಗ್ರೆಸ್ ತೀವ್ರ ವಿರೋಧ ವ್ಯಕ್ತಪಡಿಸುತ್ತಿದೆ. ಸಿಎಂ ಸಿದ್ದರಾಮಯ್ಯ ಅವರು ಕೂಡ ಕೇಂದ್ರದ ಈ ನಡೆಯನ್ನು ಖಂಡಿಸಿದ್ದಾರೆ. ನರೇಗಾ ಯೋಜನೆಯ ಸ್ವರೂಪ ಬದಲಾಗುವುದರಿಂದ ಜನರ ವಲಸೆ ಹೆಚ್ಚಾಗಲಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ. ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ
ಆಸ್ಕರ್ ಪ್ರಶಸ್ತಿಗೆ ಪಟ್ಟಿ ಮಾಡಲಾದ ಚಿತ್ರಗಳ ಪೈಕಿ ಭಾರತದ ಈ ಚಿತ್ರಕ್ಕೆ ಸ್ಥಾನ
ಮುಂಬೈ: ಪ್ರಸಕ್ತ ಸಾಲಿನ ಆಸ್ಕರ್ ಪ್ರಶಸ್ತಿಗೆ ಪಟ್ಟಿ ಮಾಡಲಾದ ಅತ್ಯುತ್ತಮ ಅಂತರರಾಷ್ಟ್ರೀಯ ಫೀಚರ್ ಫಿಲ್ಮ್ ವರ್ಗದಲ್ಲಿ 'ಹೋಮ್ಬೌಂಡ್' ಚಿತ್ರ ಭಾರತದಿಂದ ಆಯ್ಕೆಯಾಗಿದೆ. 98ನೇ ಅಕಾಡೆಮಿ ಅವಾರ್ಡ್ಗಾಗಿ 12 ವಿವಿಧ ವಿಭಾಗಗಳಲ್ಲಿ ಸ್ಪರ್ಧಿಸುವ ಚಿತ್ರಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದ್ದು, ಇದರಲ್ಲಿ ಸಾಕ್ಷ್ಯಚಿತ್ರಗಳು, ಗೀತೆ, ಸ್ಕೋರ್, ಸಿನಿಮಟೋಗ್ರಫಿ, ಸೌಂಡ್, ವಿಶುವಲ್ ಎಫೆಕ್ಟ್, ಮೇಕಪ್ ಮತ್ತು ಕೇಶವಿನ್ಯಾಸ ಹಾಗೂ ಹೊಸದಾಗಿ ಪರಿಚಯಿಸಲಾದ ಕ್ಯಾಸ್ಟಿಂಗ್ ವರ್ಗ ಸೇರಿದೆ. 86 ಅರ್ಹ ದೇಶ ಹಾಗೂ ಪ್ರದೇಶಗಳ 15 ಚಿತ್ರಗಳು ಈ ಪಟ್ಟಿಯಲ್ಲಿ ಸ್ಥಾನ ಪಡೆದಿವೆ. ಅಂತರರಾಷ್ಟ್ರೀಯ ಫೀಚರ್ ಫಿಲ್ಮ್ ಪಟ್ಟಿಯು ವಿಶ್ವದ ವಿವಿಧೆಡೆಗಳ ಸಿನಿಮಾಗಳನ್ನು ಪ್ರದರ್ಶಿಸುತ್ತದೆ. ಅರ್ಜೆಂಟೀನಾದ 'ಬೆಲೆನ್'. ಬ್ರೆಜಿಲ್ನ 'ದ ಸೀಕ್ರೆಟ್ ಏಜೆಂಟ್'. ಫ್ರಾನ್ಸ್ನ 'ಇಟ್ ವಾಸ್ ಜೆಸ್ಟ್ ಆ್ಯನ್ ಆ್ಯಕ್ಸಿಡೆಂಟ್'. ಜರ್ಮನಿಯ 'ಸೌಂಡ್ ಆಫ್ ಫಾಲಿಂಗ್', ಇರಾಕ್ ನ 'ದ ಪ್ರಸಿಡೆಂಟ್ಸ್ ಕೇಕ್'. ಜಪಾನ್ನ 'ಕೊಖೋ'. ಜೋರ್ಡಾನ್ನ 'ಆಲ್ ದಟ್ಸ್ ಲೆಫ್ಟ್ ಆಫ್ ಯೂ' ನಾರ್ವೆಯ 'ಸೆಂಟಿಮೆಂಟಲ್ ವ್ಯಾಲ್ಯೂ'. ಫೆಲೆಸ್ತೀನ್ನ 'ಫೆಲೆಸ್ತೀನ್ 36', ದಕ್ಷಿಣ ಕೊರಿಯಾದ 'ನೋ ಅದರ್ ಚಾಯ್ಸ್', ಸ್ಪೇನ್ನ 'ಸಿರಟ್' ಸ್ವಿಡ್ಜರ್ಲೆಂಡ್ನ 'ಲೇಟ್ ಶಿಫ್ಟ್' ತೈವಾನ್ನ ಲೆಫ್ಟ್ ಹ್ಯಾಂಡೆಡ್ ಗರ್ಲ್, ಟ್ಯೂನೇಷಿಯಾದ ದ ವಾಯ್ಸ್ ಆಫ್ ಹಿಂದ್ ರಜಬ್ ಮತ್ತು ಭಾರತದ ಹೋಮ್ಬೌಂಡ್ ಈ ಪಟ್ಟಿಯಲ್ಲಿವೆ. ಪ್ರಾಥಮಿಕ ಮತದಾನ ಪ್ರಕ್ರಿಯೆಯಲ್ಲಿ ಅಕಾಡೆಮಿಯ ಎಲ್ಲ ಶಾಖೆಗಳ ಸದಸ್ಯರು ಪಾಲ್ಗೊಳ್ಳುತ್ತಾರೆ. ಇದರಲ್ಲಿ ಅರ್ಹ ಚಿತ್ರಗಳನ್ನು ವೀಕ್ಷಿಸಬೇಕಾಗುತ್ತದೆ. ಅಂತಿಮ ನಾಮನಿರ್ದೇಶನ ಸುತ್ತಿಗೆ ಎಲ್ಲ 15 ಪಟ್ಟಿ ಮಾಡಲಾದ ಚಿತ್ರಗಳನ್ನು ವೀಕ್ಷಿಸಿಯೇ ಮತ ಚಲಾಯಿಸಬೇಕಾಗುತ್ತದೆ. ಉತ್ತರ ಭಾರತದ ಗ್ರಾಮವೊಂದರಲ್ಲಿ ಬಾಲ್ಯದ ಸ್ನೇಹಿತರಿಬ್ಬರು ತಮಗೆ ಘನತೆ ಮತ್ತು ಸ್ಥಿರತೆ ನೀಡುವ ವೃತ್ತಿಗಾಗಿ ರಾಷ್ಟ್ರೀಯ ಪೊಲೀಸ್ ಪರೀಕ್ಷೆಗೆ ತಯಾರಾಗುವ ಚಿತ್ರಣವನ್ನು ಹೋಮ್ಬೌಂಡ್ ಬಿಂಬಿಸಿದೆ.
ದಟ್ಟ ಮಂಜು: ವಿಮಾನ ವಿಳಂಬ ಸಾಧ್ಯತೆ ಘೋಷಿಸಿದ ಇಂಡಿಗೋ
ಹೊಸದಿಲ್ಲಿ: ಉತ್ತರ ಭಾರತ ಮತ್ತು ಪೂರ್ವಭಾರತದಲ್ಲಿ ದಟ್ಟ ಮಂಜು ಮುಸುಕಿರುವ ಹಿನ್ನೆಲೆಯಲ್ಲಿ ಸಂಭಾವ್ಯ ವಿಮಾನ ವಿಳಂಬ ಮತ್ತು ಸಂಚಾರ ವ್ಯತ್ಯಯ ಸಾಧ್ಯತೆ ಸೇರಿದಂತೆ ವಿಮಾನ ಪ್ರಯಾಣಿಕರಿಗೆ ಸಲಹೆಗಳನ್ನು ಇಂಡಿಗೋ ವಿಮಾನಯಾನ ಸಂಸ್ಥೆ ಪ್ರಕಟಿಸಿದೆ. ವಿಮಾನದ ವೇಳಾಪಟ್ಟಿ ನಿರ್ವಹಿಸುವುದನ್ನು ಅನುಷ್ಠಾನಕ್ಕೆ ತರುವ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಕಡಿಮೆ ಗೋಚರತೆಯ ಪರಿಸ್ಥಿತಿಯಲ್ಲಿ ಗ್ರಾಹಕರ ಪ್ರಯಾಣ ಸುರಕ್ಷತೆಗೆ ನೆರವಾಗುವ ಕ್ರಮಗಳನ್ನು ಪ್ರಕಟಿಸಿದೆ. ಉತ್ತರ ಹಾಗೂ ಪೂರ್ವ ಭಾಗದಲ್ಲಿ ಮುಂಜಾನೆಯ ವೇಳೆ ಚಳಿಗಾಲದಲ್ಲಿ ಆಗಸ ದಟ್ಟ ಮಂಜಿನಿಂದ ಮುಸುಕುವ ಸಾಧ್ಯತೆ ಅಂದಾಜಿಸಿರುವ ಹಿನ್ನೆಲೆಯಲ್ಲಿ, ಗೋಚರತೆ ಕುಸಿಯುವ ಸಾಧ್ಯತೆ ಇದೆ ಹಾಗೂ ವಿಮಾನದ ಚಲನೆಯ ವೇಗ ಕುಸಿಯಲಿದೆ. ಸುರಕ್ಷತೆಯ ದೃಷ್ಟಿಯಿಂದ ಕೆಲ ವಿಮಾನಗಳು ವಿಳಂಬವಾಗಬಹುದು ಅಥವಾ ಕೆಲ ಹೊಂದಾಣಿಕೆಗಳನ್ನು ಮಾಡಿಕೊಳ್ಳಬೇಕಾಗಬಹುದು ಎಂದು ಎಕ್ಸ್ ಪೋಸ್ಟ್ ನಲ್ಲಿ ಇಂಡಿಗೋ ಸ್ಪಷ್ಟಪಡಿಸಿದೆ. ಎಲ್ಲ ವಿಮಾನ ನಿಲ್ದಾಣಗಳಲ್ಲಿ ಪರಿಸ್ಥಿತಿಯನ್ನು ನಿಭಾಯಿಸಲು ಮತ್ತು ಸುಲಲಿತ ಕಾರ್ಯಾಚರಣೆಯನ್ನು ನಿರ್ವಹಿಸಲು ಸಿಬ್ಬಂದಿ ತಂಡ ಸಜ್ಜಾಗಿದೆ ಎಂದು ಪ್ರಕಟಣೆ ಹೇಳಿದೆ. ಎಲ್ಲ ವಿಮಾನ ನಿಲ್ದಾಣಗಳಲ್ಲಿರುವ ನಮ್ಮ ತಂಡ ಎಲ್ಲ ವಿಮಾನ ಸಂಚಾರವನ್ನು ಸುಲಲಿತವಾಗಿ ನಿರ್ವಹಿಸುವ ಉದ್ದೇಶದಿಂದ ಸಮನ್ವಯದ ಕಾರ್ಯ ನಿರ್ವಹಿಸಲು ಸರ್ವಸನ್ನದ್ಧವಾಗಿದೆ. ಗ್ರಾಹಕರಿಗೆ ಅಗತ್ಯ ನೆರವು ನೀಡುವಲ್ಲಿ ಮತ್ತು ಕಾರ್ಯಾಚರಣೆಯ ಹರಿವನ್ನು ನಿರ್ವಹಿಸಲು ಆದ್ಯತೆ ನೀಡಲಿದೆ ಎಂದು ಹೇಳಿದೆ. ಪ್ರಯಾಣಿಕರು ಹೆಚ್ಚುವರಿ ಅವಧಿಯನ್ನು ತಮ್ಮ ಪ್ರಯಾಣ ವೇಳಾಪಟ್ಟಿ ಸಿದ್ಧಪಡಿಸುವ ವೇಳೆ ಇರಿಸಿಕೊಳ್ಳುವಂತೆ ಮತ್ತು ಇಂಡಿಗೋ ವೆಬ್ಸೈಟ್ ಅಥವಾ ಆ್ಯಪ್ ಮೂಲಕ ವಿಮಾನದ ಸ್ಥಿತಿಗತಿಯ ಮೇಲೆ ನಿಗಾ ಇರಿಸುವಂತೆ ಸೂಚಿಸಿದೆ.
Car Diplomacy; ಜಗತ್ತಿಗೆ ಹೊಸ ರಾಜತಾಂತ್ರಿಕತೆ ಪರಿಚಯಿಸಿದ ನರೇಂದ್ರ ಮೋದಿ; ಕಾರಿನಲ್ಲಿ ನಡೆಯುವ ಮಾತುಕತೆ ಬಹಿರಂಗ
ಜಾಗತಿಕ ರಾಜಕಾರಣದಲ್ಲಿ ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಸ್ಥಾನಮಾನ ದಿನದಿಂದ ದಿನಕ್ಕೆ ಗಟ್ಟಿಯಾಗುತ್ತಲೇ ಇದೆ. ಭಾರತವನ್ನು ಜಾಗತಿಕ ರಾಜಕಾರಣದ ಅತ್ಯಂತ ಪ್ರಭಾವಿ ಸ್ಥಾನದಲ್ಲಿ ಕೂರಿಸಿರುವ ಪ್ರಧಾನಿ ಮೋದಿ, ಇದೀಗ ಜಗತ್ತಿಗೆ ಹೊಸ ರೀತಿಯ ರಾಜತಾಂತ್ರಿಕತೆಯೊಂದನ್ನು ಪರಿಚಯಿಸಿದ್ದಾರೆ. ಯಾವುದೇ ಜಾಗತಿಕ ನಾಯಕ ಭಾರತಕ್ಕೆ ಬರಲಿ ಅಥವಾ ಪ್ರಧಾನಿ ಮೋದಿ ವಿದೇಶ ಪ್ರವಾಸ ಕೈಗೊಳ್ಳಲಿ, ಅವರು ಆ ದೇಶದ ನಾಯಕರೊಂದಿಗೆ ಕಾರಿನಲ್ಲಿ ಪ್ರಯಾಣ ಮಾಡುತ್ತಾರೆ. ಏನಿದು ಕಾರು ರಾಜತಾಂತ್ರಿಕತೆ? ಇಲ್ಲಿದೆ ಮಾಹಿತಿ.
ರಾಮನ ಮರೆಯಲ್ಲಿ ನಿಂತು ನರೇಗಾದ ಎದೆಗೆ ಬಾಣ
ರಾಮನ ಮರೆಯಲ್ಲಿ ನಿಂತು ಕೇಂದ್ರ ಸರಕಾರ ನರೇಗಾ ಯೋಜನೆಯ ಕಡೆಗೆ ಬಾಣ ಬಿಟ್ಟಿದೆ. ನರೇಗಾ ಯೋಜನೆಯ ವಿರುದ್ಧ ಕಳೆದ ಕೆಲವು ವರ್ಷಗಳಿಂದ ಮಸಲತ್ತು ಮಾಡುತ್ತಲೇ ಬಂದಿದ್ದ ಕೇಂದ್ರ ಸರಕಾರ, ಇದೀಗ ಯೋಜನೆಯ ಪರಿಷ್ಕರಣೆಯ ಹೆಸರಿನಲ್ಲೇ ಅದನ್ನು ಹಂತಹಂತವಾಗಿ ಮುಗಿಸುವುದಕ್ಕೆ ಮುಂದಾಗಿದೆ. ವಿರೋಧ ಪಕ್ಷಗಳ ಪ್ರತಿಭಟನೆಗಳ ನಡುವೆಯೇ ಮಂಗಳವಾರ ವಿಕಸಿತ ಭಾರತ ಉದ್ಯೋಗ ಖಾತರಿ ಮತ್ತು ಅಜೀವಿಕ ಮಿಶನ್ ಗ್ರಾಮೀಣ ಅಥವಾ ‘ವಿಬಿ-ಜಿ ರಾಮ್ ಜಿ’ ಮಸೂದೆಯನ್ನು ಮಂಡಿಸಿದೆ. ವಿಶ್ವದಲ್ಲೇ ಅತಿ ದೊಡ್ಡ ಉದ್ಯೋಗ ಯೋಜನೆಯೆಂದು ಈಗಾಗಲೇ ಗುರುತಿಸಲ್ಪಟ್ಟ, ವಿಶ್ವಸಂಸ್ಥೆಯಿಂದಲೂ ಪ್ರಶಂಸಿಸಲ್ಪಟ್ಟ ಈ ಯೋಜನೆಯನ್ನು ಇಲ್ಲವಾಗಿಸಲು ರಾಮನ ಹೆಸರನ್ನು ಬಳಸಲು ಮುಂದಾಗಿರುವುದು ವಿಷಾದನೀಯ. ಗ್ರಾಮೀಣ ಪ್ರದೇಶದ ಜನರಿಗೆ ಉದ್ಯೋಗ ಕಲ್ಪಿಸುವ ಈ ಮಹತ್ತರ ಯೋಜನೆಗೆ ‘ಗ್ರಾಮ ಭಾರತದ’ ಕುರಿತಂತೆ ತನ್ನದೇ ಆದ ಕನಸನ್ನು ಹೊಂದಿದ್ದ ಮಹಾತ್ಮಾ ಗಾಂಧೀಜಿಯ ಹೆಸರನ್ನು ಇಡುವ ಮೂಲಕ ಅಂದಿನ ಯುಪಿಎ ಸರಕಾರ ಪ್ರಬುದ್ಧತೆಯನ್ನು ಪ್ರದರ್ಶಿಸಿತ್ತು. ನಿಜಕ್ಕೂ ಈ ಯೋಜನೆಯನ್ನು ರಾಜಕೀಯವಾಗಿ ದುರುಪಯೋಗ ಪಡಿಸುವ ಉದ್ದೇಶ ಅಂದಿನ ಯುಪಿಎ ಸರಕಾರಕ್ಕಿದ್ದಿದ್ದರೆ ಅದು ನೆಹರೂ ಅಥವಾ ರಾಜೀವ್ ಗಾಂಧಿಯ ಹೆಸರನ್ನು ಇಡಬಹುದಿತ್ತು. ಆದರೆ ಅಂದಿನ ಮನಮೋಹನ್ ಸಿಂಗ್ ಸರಕಾರ ಗಾಂಧೀಜಿಯ ಹೆಸರನ್ನು ನಾಮಕರಣ ಮಾಡಿತು. ಇಂದು ಮೋದಿ ಸರಕಾರಕ್ಕೆ ಮಹಾತ್ಮಾಗಾಂಧೀಜಿಯ ಹೆಸರು ಕೂಡ ಅಪಥ್ಯವಾಗಿದೆ. ಮುಖ್ಯವಾಗಿ ಅದಕ್ಕೆ ಬೇಡವಾಗಿರುವುದು ಗಾಂಧೀಜಿಯ ಹೆಸರಲ್ಲ, ನರೇಗಾ ಯೋಜನೆಯೇ ಬೇಡವಾಗಿದೆ. ಆ ಕಾರಣಕ್ಕಾಗಿ ಜನರ ಬಾಯಿ ಮುಚ್ಚಿಸಲು ಈ ಪರಿಷ್ಕೃತ ಯೋಜನೆಗೆ ರಾಮನ ಹೆಸರನ್ನು ಇಟ್ಟಿದೆ. ಹೊಸ ಮಸೂದೆಯ ಪ್ರಕಾರ ಉದ್ಯೋಗ ಖಾತ್ರಿ ಕೆಲಸದ ದಿನಗಳನ್ನು 100 ದಿನಗಳಿಂದ 125 ದಿನಗಳಿಗೆ ಹೆಚ್ಚಿಸಿದ್ದೇವೆ ಎಂದು ಕೇಂದ್ರ ಸರಕಾರ ಕೊಚ್ಚಿ ಕೊಳ್ಳುತ್ತಿದೆ. ಆದರೆ, ಇದೇ ಸಂದರ್ಭದಲ್ಲಿ ಈ ಯೋಜನೆಗೆ ಕೆಲವು ನಿಯಮಗಳನ್ನೂ ಹೇರುವುದಕ್ಕೆ ಮುಂದಾಗಿದೆ. ಈ ಹಿಂದೆ ಗ್ರಾಮೀಣ ಪ್ರದೇಶದ ಕುಟುಂಬದ ಸಾರ್ವತ್ರಿಕ ಹಕ್ಕಾಗಿತ್ತು ಈ ಯೋಜನೆ. ಇದೀಗ ಕೇಂದ್ರ ಸರಕಾರದಿಂದ ಅಧಿಸೂಚಿಸಲ್ಪಟ್ಟ ಗ್ರಾಮೀಣ ಪ್ರದೇಶಗಳಲ್ಲಿ ಮಾತ್ರ ಕೆಲಸ ಖಾತರಿ ಪಡಿಸಲಾಗಿದೆ. ಕೃಷಿ ಋತುಗಳನ್ನು ಮುಂದಿಟ್ಟುಕೊಂಡು ಕಾರ್ಮಿಕರಿಗೆ ಕೆಲಸವನ್ನು ನಿರಾಕರಿಸುವ ಅವಕಾಶವಿದೆ. ಈ ಹಿಂದೆ ಸ್ಥಳೀಯ ಸಂಸ್ಥೆಗಳು ಸ್ಥಳೀಯ ಅಗತ್ಯಕ್ಕನುಗುಣವಾಗಿ ಕೆಲಸಗಳನ್ನು ಯೋಜಿಸುತ್ತಿತ್ತು. ಇದೀಗ ಕೇಂದ್ರ ಒದಗಿಸುವ ನಿಧಿಯನ್ನು ಅವಲಂಬಿಸಿ ಕೆಲಸವನ್ನು ಯೋಜಿಸಬೇಕಾಗುತ್ತದೆ. ವರ್ಷದ ಯಾವುದೇ ಸಮಯದಲ್ಲಿ ಕೆಲಸವನ್ನು ಮಾಡುವ ಹಕ್ಕು ಜನರಿಗಿಲ್ಲ. ಕೇಂದ್ರಸರಕಾರದಿಂದ ಅಧಿಸೂಚಿಸಲ್ಪಟ್ಟ ಗ್ರಾಮೀಣ ಪ್ರದೇಶಗಳಲ್ಲಿ ಮಾತ್ರ ಕೆಲಸದ ಖಾತರಿಯಿರುತ್ತದೆ. ಕೆಲಸವನ್ನು ಖಾತರಿಪಡಿಸುವ ವಿಷಯದಲ್ಲಿ ಸ್ಥಳೀಯ ಸಂಸ್ಥೆಗಳ ಸ್ವಾತಂತ್ರ್ಯವನ್ನು ಕಿತ್ತುಕೊಳ್ಳಲಾಗಿದೆ. ಎಲ್ಲಕ್ಕಿಂತ ಮುಖ್ಯವಾಗಿ ಮುಂದಿನ ದಿನಗಳಲ್ಲಿ ನರೇಗಾಕ್ಕೆ ಸಂಬಂಧಿಸಿ ಕೇಂದ್ರ ಶೇ. 60ರಷ್ಟು ಅನುದಾನವನ್ನಷ್ಟೇ ನೀಡುತ್ತದೆ. ಉಳಿದ ಶೇ. 40ರಷ್ಟು ಹಣವನ್ನು ರಾಜ್ಯ ಸರಕಾರ ಭರಿಸಬೇಕು. ಇದೇ ಸಂದರ್ಭದಲ್ಲಿ, ಕೇಂದ್ರದ ಅಧಿಸೂಚನೆಗಳನ್ನು ಮೀರಿ ಕೆಲಸಗಳನ್ನು ನೀಡಿದ್ದೇ ಆದರೆ ಕೇಂದ್ರ ಸರಕಾರ ಅನುದಾನ ನೀಡುವ ಹೊಣೆಯಿಂದ ಜಾರಿಕೊಳ್ಳುತ್ತದೆ. ಮುಖ್ಯವಾಗಿ ಕಳೆದ ಕೆಲವು ವರ್ಷಗಳಿಂದ ಸಾವಿರಾರು ಕೋಟಿ ರೂಪಾಯಿಗಳನ್ನು ನರೇಗಾ ಯೋಜನೆಗಳಿಗೆ ಬಾಕಿ ಉಳಿಸಿಕೊಂಡಿದೆ. ಹಲವು ರಾಜ್ಯಗಳು ಈಗಾಗಲೇ ಇದರ ವಿರುದ್ಧ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿವೆ. ಕರ್ನಾಟಕಕ್ಕೂ ಕೋಟ್ಯಂತರ ರೂಪಾಯಿಯನ್ನು ಕೇಂದ್ರ ಸರಕಾರ ಕೊಡುವುದಕ್ಕಿದೆ. ಇವೆಲ್ಲವೂ ಕಾರ್ಮಿಕರು ದುಡಿದ ಹಣವಾಗಿದೆ. ಅವರ ಬೆವರಿಗೆ ಈವರೆಗೆ ನ್ಯಾಯ ನೀಡಲು ಕೇಂದ್ರ ಸರಕಾರಕ್ಕೆ ಸಾಧ್ಯವಾಗಿಲ್ಲ. ಬಾಕಿ ಉಳಿಸಿದ ಹಣವನ್ನು ರಾಜ್ಯಗಳು ಕೇಳಿದಾಗಲೆಲ್ಲ, ನರೇಗಾ ಯೋಜನೆಯನ್ನೇ ಅಪ್ರಸ್ತುತವಾಗಿಸಲು ಕೇಂದ್ರ ಸರಕಾರ ಪ್ರಯತ್ನಿಸಿದೆ. ಈಗಾಗಲೇ ಲೋಕಸಭೆಯಲ್ಲಿ ವಿತ್ತ ಸಚಿವರು ಎರಡೆರಡು ಬಾರಿ ನರೇಗಾ ಬಗ್ಗೆ ತಪ್ಪು ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ. ‘‘ನರೇಗಾ ಯೋಜನೆಯ ಬೇಡಿಕೆಗಳು ಇಳಿಮುಖವಾಗುತ್ತಿವೆೆ’’ ಎಂದು ಅವರು ಲೋಕಸಭೆಗೆ ಸ್ಪಷ್ಟಪಡಿಸಿದ್ದರು. ಅಂದರೆ, ನರೇಗಾ ಯೋಜನೆಗೆ ಹಣ ಬಿಡುಗಡೆ ಮಾಡುವುದು ಕೇಂದ್ರ ಸರಕಾರಕ್ಕೆ ಇಷ್ಟವಿಲ್ಲದ ವಿಷಯವಾಗಿತ್ತು. ಈ ಹಿಂದಿನ ಯೋಜನೆಯ ಪ್ರಕಾರ, ಉದ್ಯೋಗಗಳನ್ನು ಕೊಡುವುದು ಕಡ್ಡಾಯವಾಗಿತ್ತು. ಇದೀಗ ಬೇರೆ ಬೇರೆ ನೆಪಗಳನ್ನು ಮುಂದಿಟ್ಟುಕೊಂಡು ಉದ್ಯೋಗಗಳನ್ನು ನೀಡದೇ ಇರುವ ಹಕ್ಕನ್ನು ಕೇಂದ್ರ ಸರಕಾರ ತನ್ನಲ್ಲಿ ಉಳಿಸಿಕೊಳ್ಳಲು ಮುಂದಾಗಿದೆ. ಇದರ ಮೇಲಿನ ನಿಯಂತ್ರಣವನ್ನು ಸ್ಥಳೀಯ ಸಂಸ್ಥೆಗಳ ಕೈಯಿಂದ ಕಿತ್ತುಕೊಂಡಿರುವುದು ಕೂಡ ಇದೇ ಉದ್ದೇಶಕ್ಕೆ. ರಾಜ್ಯದ ತೆರಿಗೆಯ ಮೇಲೆ ಕೇಂದ್ರ ಸರಕಾರ ಬಹುತೇಕ ನಿಯಂತ್ರಣವನ್ನು ಸಾಧಿಸಿದೆ. ರಾಜ್ಯ ಸರಕಾರಗಳು ಹಮ್ಮಿಕೊಂಡಿರುವ ಜನಪ್ರಿಯ ಕಾರ್ಯಕ್ರಮಗಳಿಗೆ, ಅಭಿವೃದ್ಧಿ ಕಾರ್ಯಕ್ರಮಗಳಿಗೆ ಬಿಡುಗಡೆ ಮಾಡಲು ರಾಜ್ಯದ ಬೊಕ್ಕಸದಲ್ಲಿ ಹಣ ಇಲ್ಲ ಎನ್ನುವ ಸ್ಥಿತಿ ನಿರ್ಮಾಣವಾಗಿದೆ. ಇದೇ ಹೊತ್ತಿಗೆ, ರಾಜ್ಯಗಳಿಗೆ ಬರಬೇಕಾದ ಹಣವನ್ನು ನೀಡದೆ ಕೇಂದ್ರ ಸರಕಾರ ಸತಾಯಿಸುತ್ತಿದೆ. ಈ ವಿತ್ತವರ್ಷದಲ್ಲಿ ಕೇಂದ್ರ ಪ್ರಾಯೋಜಿತ ಯೋಜನೆಗಳಿಗಾಗಿ ಕೇಂದ್ರ ಸರಕಾರ 16,000 ಕೋಟಿ ರೂಪಾಯಿಗಳನ್ನು ನೀಡುವುದಾಗಿ ಭರವಸೆ ಕೊಟ್ಟಿತ್ತಾದರೂ ಈವರೆಗೆ ಕೇವಲ 7,000 ಕೋಟಿ ರೂಪಾಯಿಗಳನ್ನಷ್ಟೇ ಬಿಡುಗಡೆ ಮಾಡಿದೆ. ಜಲಜೀವನ ಯೋಜನೆಯಡಿಯಲ್ಲಿ ಕೇಂದ್ರದ ಪಾಲು 4,574 ಕೋಟಿ ರೂಪಾಯಿ ರಾಜ್ಯಕ್ಕೆ ಬರಲು ಬಾಕಿಯಿದೆ. 15ನೇ ಹಣಕಾಸು ಆಯೋಗವು ರಾಜ್ಯಕ್ಕೆ ಶಿಫಾರಸು ಮಾಡಿದ್ದ ಆರೋಗ್ಯ ಅನುದಾನವನ್ನು ಕೇಂದ್ರ ಸಚಿವಾಲಯವು ಕಳೆದೆರಡು ವರ್ಷಗಳಿಂದ ಬಿಡುಗಡೆ ಮಾಡಿಲ್ಲ. ಕೇಂದ್ರದಿಂದ ಕರ್ನಾಟಕಕ್ಕೆ ಒಟ್ಟು 22,476 ಕೋಟಿ ರೂಪಾಯಿ ಬರಲು ಬಾಕಿಯಿದೆ. ಇದೀಗ ಜಿ ರಾಮ್ ಜಿ ಯೋಜನೆಗೆ ರಾಜ್ಯವು ಶೇ. 40ರಷ್ಟನ್ನು ಎಲ್ಲಿಂದ ತುಂಬಿಸಬೇಕು? ಎನ್ನುವ ಪ್ರಶ್ನೆ ಎದುರಾಗುತ್ತದೆ. ಇಲ್ಲಿಯವರೆಗೆ ನರೇಗಾ ಯೋಜನೆಯ ಪಾವತಿ ಬಾಕಿಗೆ ಕೇಂದ್ರ ಸಂಪೂರ್ಣ ಹೊಣೆಯಾಗಿತ್ತು. ಮುಂದಿನ ದಿನಗಳಲ್ಲಿ ಕೇಂದ್ರ ಸರಕಾರವು ರಾಜ್ಯದ ಕಡೆಗೆ ಕೈ ತೋರಿಸಿ ಹೆಗಲು ಜಾರಿಸಿಕೊಳ್ಳಲಿದೆ. ಒಟ್ಟಿನಲ್ಲಿ ಇದೊಂದು ರೀತಿಯಲ್ಲಿ ಬಲಿಷ್ಠವಾಗಿದ್ದ ನರೇಗಾವನ್ನು ವಂಚನೆಯಿಂದ ಕೊಂದು ಹಾಕಲು ಕೇಂದ್ರ ಸರಕಾರ ರಾಮನ ಹೆಸರನ್ನು ಬಳಸಿಕೊಂಡು ರೂಪಿಸಿದ ಸಂಚು. ಮೋದಿ ನೇತೃತ್ವದಲ್ಲಿ ನಡೆಯಲಿರುವ ಈ ಹೊಸ ‘ವಾಲಿ ವಧೆ’ ಪ್ರಸಂಗಕ್ಕೆ ಗ್ರಾಮೀಣ ಪ್ರದೇಶದ ಬಡ ಕಾರ್ಮಿಕರು ಎದೆಕೊಡಬೇಕಾಗಿರುವುದು ವಿಷಾದನೀಯವಾಗಿದೆ.
Karnataka Weather: ಡಿಸೆಂಬರ್ 22ರವರೆಗೆ ವಿಪರೀತ ಚಳಿ, ದಟ್ಟ ಮಂಜಿನ ವಾತಾವರಣ
ಕರ್ನಾಟಕದಾದ್ಯಂತ ಮುಂದಿನ 5 ದಿನಗಳವರೆಗೆ ಕನಿಷ್ಠ ತಾಪಮಾನ ಮುಂದುವರಿಯಲಿದೆ. ಡಿಸೆಂಬರ್ 22ರವರೆಗೆ ಚಳಿ ಮತ್ತಷ್ಟು ತೀವ್ರಗೊಳ್ಳಲಿದೆ. ಉತ್ತರ ಒಳನಾಡಿನ ಕೆಲವು ಭಾಗಗಳಲ್ಲಿ ಮತ್ತು ದಕ್ಷಿಣ ಒಳನಾಡಿನ ಪ್ರತ್ಯೇಕ ಪ್ರದೇಶಗಳಲ್ಲಿ ಕನಿಷ್ಠ ತಾಪಮಾನವು ಸಾಮಾನ್ಯಕ್ಕಿಂತ 3-5 ಡಿಗ್ರಿ ಸೆಲ್ಸಿಯಸ್ ಕಡಿಮೆ ಇರುವ ಸಾಧ್ಯತೆ ಇದೆ. ಮುಂದಿನ 2 ದಿನಗಳವರೆಗೆ ಉತ್ತರ ಒಳನಾಡಿನ ಬೀದರ್, ಕಲಬುರಗಿ ಮತ್ತು ವಿಜಯಪುರದ ಪ್ರತ್ಯೇಕ
ಬೆಂಗಳೂರಿನ ಜಾಲಹಳ್ಳಿ ವೃತ್ತದ ಅಂಡರ್ ಪಾಸ್ ಭೂಸ್ವಾಧೀನ ಬಗ್ಗೆ ಸಭೆ : 26 ಸ್ವತ್ತಿನ ಮಾಲೀಕರಿಗೆ 52 ಕೋಟಿ ರೂ ಬಾಕಿ
ಜಾಲಹಳ್ಳಿ ವೃತ್ತದಲ್ಲಿ ಅಂಡರ್ಪಾಸ್ ಕಾಮಗಾರಿಗೆ ಭೂಸ್ವಾಧೀನ ಸಮಸ್ಯೆ ಬಗೆಹರಿಸಲು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಪ್ರತಿಪಕ್ಷ ನಾಯಕರು, ಶಾಸಕರೊಂದಿಗೆ ಸಭೆ ನಡೆಸುವುದಾಗಿ ತಿಳಿಸಿದ್ದಾರೆ. 26 ಸ್ವತ್ತುಗಳ ಮಾಲೀಕರಿಗೆ 53 ಕೋಟಿ ರೂ. ಪರಿಹಾರ ನೀಡಬೇಕಿದ್ದು, ಟಿಡಿಆರ್ ಬದಲಿಗೆ ನಗದು ಪರಿಹಾರಕ್ಕೆ ಒಪ್ಪಿದರೆ ಕಾಮಗಾರಿ ಆರಂಭಿಸಲು ಕ್ರಮ ಕೈಗೊಳ್ಳಲಾಗುವುದು.
ಹಿಂದುಳಿದ ವಿದ್ಯಾರ್ಥಿಗಳಿಗೆ ಸಂಕಟ: 1.60 ಲಕ್ಷ ಮಕ್ಕಳಿಗೆ ಬಾಕಿ ಸ್ಕಾಲರ್ಶಿಪ್ಗೆ ಅನುದಾನ ಕೊರತೆ
ರಾಜ್ಯದ ಹಿಂದುಳಿದ ವರ್ಗಗಳ 1.60 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಕಳೆದ 2 ವರ್ಷಗಳಿಂದ ವಿದ್ಯಾರ್ಥಿ ವೇತನ ಬಾಕಿ ಉಳಿದಿದೆ. ಅನುದಾನದ ಕೊರತೆಯಿಂದಾಗಿ ಅರ್ಹ ಫಲಾನುಭವಿಗಳು ಶಿಕ್ಷಣ ಮೊಟಕುಗೊಳ್ಳುವ ಆತಂಕ ಎದುರಿಸುತ್ತಿದ್ದಾರೆ. ಆದಾಯ, ಅಂಕಗಳ ಮಾನದಂಡಗಳಿಂದಾಗಿ ಹಲವು ಅರ್ಜಿಗಳು ತಿರಸ್ಕೃತಗೊಳ್ಳುತ್ತಿವೆ.
ಸಾಮಾಜಿಕ ಸಾಮರಸ್ಯಕ್ಕೆ ಅಧ್ಯಾತ್ಮದ ಮಾರ್ಗದರ್ಶನ ಅತ್ಯಗತ್ಯ : ರಾಷ್ಟ್ರಪತಿ ದ್ರೌಪದಿ ಮುರ್ಮು
ಸುತ್ತೂರು ಶಿವರಾತ್ರೀಶ್ವರ ಶಿವಯೋಗಿಗಳ ಜಯಂತಿ ಮಹೋತ್ಸವಕ್ಕೆ ಚಾಲನೆ
‘ವಕ್ಫ್: ಅಪಪ್ರಚಾರ ಮತ್ತು ವಾಸ್ತವ’ ಪುಸ್ತಕ ಬಿಡುಗಡೆ
ಬೆಳಗಾವಿ : ‘ಸೋಲಿಡಾರಿಟಿ ಯೂತ್ ಮೂವ್ಮೆಂಟ್ ಕರ್ನಾಟಕ’ದ ವತಿಯಿಂದ ಲೇಖನಗಳ ಸಂಕಲನವಾಗಿ ರಚಿಸಲಾದ ‘ವಕ್ಫ್: ಅಪಪ್ರಚಾರ ಮತ್ತು ವಾಸ್ತವ’ ಪುಸ್ತಕವನ್ನು ಸೋಮವಾರ ಸುವರ್ಣ ವಿಧಾನಸೌಧದಲ್ಲಿ ವಕ್ಫ್ ಸಚಿವ ಝಮೀರ್ ಅಹ್ಮದ್ ಖಾನ್, ಮುಖ್ಯಮಂತ್ರಿಯ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್ ಹಾಗೂ ಶಾಸಕ ಆಸಿಫ್ ಸೇಠ್ ಬಿಡುಗಡೆ ಮಾಡಿದರು. ವಕ್ಫ್ ವಿಷಯಕ್ಕೆ ಸಂಬಂಧಿಸಿ ಸಮಾಜದಲ್ಲಿ ವ್ಯಾಪಕವಾಗಿ ಹರಡಿರುವ ತಪ್ಪು ಕಲ್ಪನೆಗಳನ್ನು ದೂರಗೊಳಿಸುವ ಉದ್ದೇಶದಿಂದ ಈ ಪುಸ್ತಕವನ್ನು ರಚಿಸಲಾಗಿದೆ. ಇಂತಹ ಜಾಗೃತಿಪೂರ್ಣ ಹಾಗೂ ಸಂಶೋಧನಾತ್ಮಕ ಪ್ರಯತ್ನಗಳು ಅತ್ಯಂತ ಸ್ವಾಗತಾರ್ಹವಾಗಿದ್ದು, ಸಮಾಜದಲ್ಲಿ ಸರಿಯಾದ ಅರಿವು ಮೂಡಿಸಲು ಸಹಕಾರಿಯಾಗುತ್ತವೆ ಎಂದು ಝಮೀರ್ ಅಹ್ಮದ್ ಖಾನ್ ಅಭಿಪ್ರಾಯಪಟ್ಟರು. ಸೋಲಿಡಾರಿಟಿ ಯೂತ್ ಮೂವ್ಮೆಂಟ್ನಂತಹ ಸಂಘಟನೆಗಳು ಈ ರೀತಿಯ ರಚನಾತ್ಮಕ ಕಾರ್ಯಗಳಲ್ಲಿ ತೊಡಗಿಕೊಳ್ಳುವುದರಿಂದ ಸಮಾಜದಲ್ಲಿ ಶಾಂತಿ ಮತ್ತು ಸೌಹಾರ್ದತೆ ಸ್ಥಾಪನೆಗೊಳ್ಳಲು ಸಹಕಾರಿಯಾಗುತ್ತದೆ ಎಂದು ಅವರು ಹೇಳಿದರು. ಈ ಕಾರ್ಯಕ್ರಮದಲ್ಲಿ ಸೋಲಿಡಾರಿಟಿ ಯೂತ್ ಮೂವ್ಮೆಂಟ್ ರಾಜ್ಯಾಧ್ಯಕ್ಷ ಡಾ.ನಸೀಮ್ ಅಹ್ಮದ್ ಉಪಸ್ಥಿತರಿದ್ದರು.
ಮಾನವ- ವನ್ಯಜೀವಿ ಸಂಘರ್ಷ ತಡೆಗಟ್ಟಲು 5 ವರ್ಷಗಳ ಸ್ಟ್ರಾಟೆಜಿಕ್ ಪ್ಲಾನ್ ತಯಾರಿಗೆ ಪ್ರಸ್ತಾವ
ಬೆಳಗಾವಿ : ಮಾನವ- ವನ್ಯಜೀವಿ ಸಂಘರ್ಷ ತಡೆಗಟ್ಟಲು 5 ವರ್ಷಗಳ ಸ್ಟ್ರಾಟೆಜಿಕ್ ಪ್ಲಾನ್ ತಯಾರಿಸುವ ಪ್ರಸ್ತಾವವು ಪರಿಶೀಲನೆಯಲ್ಲಿದೆ ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ತಿಳಿಸಿದರು. ಮಂಗಳವಾರ ವಿಧಾನ ಪರಿಷತ್ನ ಪ್ರಶ್ನೋತ್ತರ ಕಲಾಪದಲ್ಲಿ ಕಾಂಗ್ರೆಸ್ ಸದಸ್ಯ ಡಾ.ಡಿ.ತಿಮ್ಮಯ್ಯ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ಮಾನವ ಪ್ರಾಣಹಾನಿಗೆ ಕಾರಣವಾದ ಹುಲಿ ಹಾಗೂ ಆನೆಯನ್ನು ನಿರ್ದಿಷ್ಟವಾಗಿ ಗುರುತಿಸಿ ಸೆರಹಿಡಿಯಲಾಗಿದೆ ಎಂದರು. ಮಾನವ-ವನ್ಯಜೀವಿ ಸಂಘರ್ಷ ಪ್ರಕರಣಗಳು ಹೆಚ್ಚಾಗಿ ಕಂಡು ಬರುತ್ತಿರುವ ವಲಯಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕಳ್ಳಬೇಟೆ ಶಿಬಿರಗಳ ಸಿಬ್ಬಂದಿಗಳನ್ನು ತಾತ್ಕಾಲಿಕವಾಗಿ ಸಂಘರ್ಷ ಸಂಭವಿಸುತ್ತಿರುವ ಅರಣ್ಯದಂಚಿನ ಗಡಿರೇಖೆಗಳಿಗೆ ಸ್ಥಳಾಂತರಿಸಲು ಅಗತ್ಯ ಕ್ರಮಕೈಗೊಳ್ಳಲಾಗಿದೆ. ಶಿಬಿರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ನೌಕರರು ಸಂಘರ್ಷವಿರುವ ವಲಯಗಳಲ್ಲಿ ನಿರಂತರವಾಗಿ ಮುಂದಿನ ಮೂರು ತಿಂಗಳವರೆಗೆ ಗಸ್ತು ನಡೆಸಿ, ಮಾನವ ವನ್ಯಪ್ರಾಣಿ ಸಂಘರ್ಷವನ್ನು ತಡೆಗಟ್ಟಲು ಕ್ರಮವಹಿಸಲಾಗಿದೆ ಎಂದು ಈಶ್ವರ್ ಖಂಡ್ರೆ ಹೇಳಿದರು. ಮಾನವ-ವನ್ಯಜೀವಿ ಸಂಘರ್ಷ ಸಮಸ್ಯೆ ಇರುವ ಪ್ರತಿಯೊಂದು ವನ್ಯಜೀವಿ ವಲಯಗಳಲ್ಲಿ ಮಾನವ-ವನ್ಯಜೀವಿ ಸಂಘರ್ಷ ಉಂಟಾಗುವ ಸಂದರ್ಭದಲ್ಲಿ ತಕ್ಷಣದ ಪ್ರತಿಕ್ರಿಯೆಗಾಗಿ ಕ್ಷಿಪ್ರಸ್ಪಂದನ ವಾಹನ ಹಾಗೂ ಡೋನ್ ಒಳಗೊಂಡಂತೆ ಇತರೆ ಉಪಕರಣಗಳೊಂದಿಗೆ ಒಂದು ಕ್ಷಿಪ್ರಸ್ಪಂದನ ತಂಡವನ್ನು ಪಾಳಿ ಆಧಾರದ ಮೇಲೆ ರಚಿಸಿ, ಈ ಕ್ಷಿಪ್ರಸ್ಪಂದನ ತಂಡಕ್ಕೆ ಸಿಬ್ಬಂದಿಗಳನ್ನು ಪ್ರಸ್ತುತ ಅಸ್ತಿತ್ವದಲ್ಲಿರುವ ಆನೆ ಕಾರ್ಯಪಡೆ, ಕ್ಷಿಪ್ರ ಸ್ಪಂದನ ತಂಡ, ವಿಶೇಷ ಹುಲಿ ಸಂರಕ್ಷಣಾ ದಳದಿಂದ ನಿಯೋಜಿಸಲಾಗಿದೆ ಎಂದು ಈಶ್ವರ್ ಖಂಡ್ರೆ ತಿಳಿಸಿದರು. ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಲಭ್ಯವಿರುವ ಕ್ಯಾಮರಾ ಟ್ರಾಪ್ಸ್ ಗಳನ್ನು ಸಾಕಷ್ಟು ಸಂಖ್ಯೆಯಲ್ಲಿ ಅರಣ್ಯ ಪ್ರದೇಶದ ಅಂಚಿನಲ್ಲಿರುವ ಕಾನಫ್ಲಿಕ್ಟ್ ಝೋನ್ನಲ್ಲಿ ಅಳವಡಿಸಿ ಪ್ರಾಣಿಗಳ ಚಲನವಲನಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಈಶ್ವರ್ ಖಂಡ್ರೆ ಮಾಹಿತಿ ನೀಡಿದರು.
ರಾಷ್ಟ್ರೀಯ ಲೋಕ್ ಅದಾಲತ್ನಲ್ಲಿ 1.4 ಕೋಟಿ ಪ್ರಕರಣ ಇತ್ಯರ್ಥ
ಬೆಂಗಳೂರು : ಶನಿವಾರಂದು(ಡಿ.13) ನಡೆದ ರಾಷ್ಟ್ರೀಯ ಲೋಕ್ ಅದಾಲತ್ನಲ್ಲಿ ಒಟ್ಟು 1.4 ಕೋಟಿ ಪ್ರಕರಣಗಳನ್ನು ಇತ್ಯರ್ಥಗೊಳಿಸಲಾಗಿದೆ ಎಂದು ಕರ್ನಾಟಕ ಹೈಕೋರ್ಟ್ನ ನ್ಯಾಯಮೂರ್ತಿ ಅನು ಶಿವರಾಮನ್ ತಿಳಿಸಿದ್ದಾರೆ. ಮಂಗಳವಾರ ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹೈಕೋರ್ಟ್ ಪೀಠಗಳಲ್ಲಿ 1,107 ಪ್ರಕರಣಗಳು, ಜಿಲ್ಲಾ ಮತ್ತು ತಾಲೂಕು ನ್ಯಾಯಾಯಲಗಳಲ್ಲಿ 1,04,65,130 ಪ್ರಕರಣಗಳು ಸೇರಿ ಒಟ್ಟು 1,04,66,237 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ ಎಂದು ಮಾಹಿತಿ ನೀಡಿದರು. 2019ರಿಂದ 2025ರ ವರೆಗೆ 4,44,27,865 ಸಂಚಾರ ಚಲನ್ ಪ್ರಕರಣಗಳು ಬಾಕಿ ಇದ್ದು, 2695 ಕೋಟಿ ರೂ. ದಂಡ ವಿಧಿಸಲಾಗಿದೆ. 4,32,339 ಪ್ರಕರಣಗಳು ಸಾರಿಗೆ ಇಲಾಖೆಯ ಮುಂದೆ ಬಾಕಿ ಉಳಿದಿವೆ. ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಕೋರಿಕೆಯ ಮೇರೆಗೆ ರಾಜ್ಯ ಸರಕಾರವು ಶೇ.50ರಷ್ಟು ರಿಯಾಯಿತಿ ನೀಡಿರುವುದರಿಂದ ರಾಜ್ಯಾದ್ಯಂತ ಒಟ್ಟು 24,29,461 ಸಂಚಾರ ಚಲನ್ ಪ್ರಕರಣಗಳನ್ನು ವ್ಯಾಜ್ಯ ಪೂರ್ವ ಪ್ರಕರಣಗಳಾಗಿ ವಿಲೇವಾರಿ ಮಾಡಲಾಗಿದೆ. ಅದರಿಂದ 56 ಕೋಟಿ ರೂ.ಗಳಿಗೂ ಹೆಚ್ಚಿನ ದಂಡದ ಮೊತ್ತವನ್ನು ಸಂಗ್ರಹಿಸಲಾಗಿದೆ ಎಂದು ಅವರು ತಿಳಿಸಿದರು. ಸಾರಿಗೆ ಇಲಾಖೆಗೆ ಸಂಬಂಧಿಸಿದ ಒಟ್ಟು 902 ಪ್ರಕರಣಗಳನ್ನು ವಿಲೇವಾರಿ ಮಾಡಲಾಗಿದ್ದು, 29,66,564 ರೂ. ದಂಡದ ಮೊತ್ತವನ್ನು ವಿಧಿಸಲಾಗಿದೆ. ಈ ಬಾರಿಯ ಲೋಕ್ ಅದಾಲತ್ನಲ್ಲಿ 5 ವರ್ಷಕ್ಕಿಂತ ಹಳೆಯ 2,268 ಪ್ರಕರಣಗಳು, 10ವರ್ಷಕ್ಕಿಂತ ಹೆಚ್ಚು ಹಳೆಯ 56 ಪ್ರಕರಣಗಳನ್ನು ಇತ್ಯರ್ಥ ಪಡಿಸಲಾಗಿದೆ. 2,144 ಪ್ರಕರಣಗಳಲ್ಲಿ ಹಿರಿಯ ನಾಗರಿಕರು ತಮ್ಮ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಂಡಿದ್ದಾರೆ ಎಂದು ಅವರು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಚ್.ಶಶಿಧರ ಶೆಟ್ಟಿ, ಉಪಕಾರ್ಯದರ್ಶಿ ಶ್ರೀಧರ ಎಂ, ಸಾರ್ವಜನಿಕ ಸಂಪರ್ಕ ಅಧಿಕಾರಿ ಪಿ.ಎಂ.ಬಾಲಸುಬ್ರಹ್ಮಣಿ ಮತ್ತಿತರರು ಉಪಸ್ಥಿತರಿದ್ದರು. 2026ರ ಮಾ.14ಕ್ಕೆ ರಾಷ್ಟ್ರೀಯ ಲೋಕ್ ಅದಾಲತ್ ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದ ಮೇರೆಗೆ 2026ರ ಮಾ.14ರಂದು ರಾಷ್ಟ್ರೀಯ ಲೋಕ್ ಅದಾಲತ್ ನಡೆಯಲಿದೆ. ಎಲ್ಲ ಸರಕಾರಿ ಇಲಾಖೆಗಳ ಸಹಯೋಗದೊಂದಿಗೆ ರಾಜ್ಯಾದ್ಯಂತ ಜ.1ರಿಂದ ಜ.31ರ ವರೆಗೆ ರಸ್ತೆ ಸುರಕ್ಷತೆಯ ಕುರಿತು ವಿಶೇಷ ಅಭಿಯಾನ ನಿಗದಿಪಡಿಸಲಾಗಿದೆ. ಡಿ.4ರಿಂದ 2026ರ ಮಾ.8ರವರೆಗೆ ಬಾಲ್ಯ ವಿವಾಹ ಮುಕ್ತ ಭಾರತ ಅಭಿಯಾನವನ್ನು ನಿಗದಿಪಡಿಸಲಾಗಿದೆ ಎಂದು ನ್ಯಾಯಮೂರ್ತಿ ಅನು ಶಿವರಾಮನ್ ತಿಳಿಸಿದ್ದಾರೆ.
ಅಂಗಡಿ ಮಾಲಕನಿಂದ 1.60 ಲಕ್ಷ ರೂ. ವಸೂಲಿ ಆರೋಪ: ಪಿಎಸ್ಐ ಅಮಾನತು
ಬೆಂಗಳೂರು : ಬೆಂಗಳೂರು ದಕ್ಷಿಣ ಜಿಲ್ಲೆ ಕನಕಪುರದ ಜ್ಯೂಸ್ ಹಾಗೂ ಜೆರಾಕ್ಸ್ ಅಂಗಡಿ ಮಾಲಕನಿಂದ 1.60 ಲಕ್ಷ ರೂ ವಸೂಲಿ ಮಾಡಿದ್ದ ಆರೋಪಕ್ಕೆ ಸಂಬಂಧಿಸಿದಂತೆ ಪಿಎಸ್ಐ ಹರೀಶ್ ಅವರನ್ನು ಬೆಂಗಳೂರು ದಕ್ಷಿಣ ಜಿಲ್ಲೆಯ ಸೂಪರಿಂಟೆಂಡೆಂಟ್ ಆಫ್ ಪೊಲಿಸ್(ಎಸ್ಪಿ) ಶ್ರೀನಿವಾಸ್ ಗೌಡ ಅವರು ಸೇವೆಯಿಂದ ಅಮಾನತು ಮಾಡಿದ್ದಾರೆ ಎಂದು ವರದಿಯಾಗಿದೆ. ಅ.29ರಂದು ಅಂದಿನ ಚನ್ನಪಟ್ಟಣ ಟೌನ್ ಪಿಎಸ್ಐ ಆಗಿದ್ದ ಹರೀಶ್, ಕನಕಪುರದ ಜ್ಯೂಸ್ ಹಾಗೂ ಜೆರಾಕ್ಸ್ ಅಂಗಡಿ ಮಾಲಕ ರಾಜೇಶ್ ಅವರ ಬಳಿ ಹೋಗಿ ‘ನೀವು ನಕಲಿ ಆಧಾರ್ ಕಾರ್ಡ್ ಮಾಡುತ್ತೀದ್ದೀರಿ’ ಎಂದು ಕನಕಪುರದಿಂದ ಚನ್ನಪಟ್ಟಣ ಠಾಣೆಗೆ ಕರೆದುಕೊಂಡು ಬಂದು, ಬೆದರಿಕೆ ಹಾಕಿದ್ದರು ಎನ್ನಲಾಗಿದೆ. ಯಾವುದೇ ಪ್ರಕರಣ ದಾಖಲಿಸಿಕೊಳ್ಳದೇ, ಪೆಟ್ರೋಲ್ ಬಂಕ್ನಲ್ಲಿ 60 ಸಾವಿರ ರೂ. ಆನ್ಲೈನ್ ನಲ್ಲಿ ಮಾಡಿಸಿಕೊಂಡಿದ್ದರು. ಜೊತೆಗೆ ಒಂದು ಲಕ್ಷ ರೂ. ನಗದನ್ನು ರಾಜೇಶ್ ಅವರಿಂದ ಕಸಿದುಕೊಂಡಿದ್ದರು. ಹೀಗಾಗಿ ವಾರದ ಹಿಂದೆ ರಾಜೇಶ್ ಕೇಂದ್ರ ವಲಯ ಐಜಿಪಿ ಅವರಿಗೆ ದೂರು ನೀಡಿದ್ದರು. ಈ ಬಗ್ಗೆ ತಕ್ಷಣ ಪ್ರಕ್ರಿಯಿಸಿದ ಐಜಿಪಿ ಕಚೇರಿ, ಇದರ ತನಿಖೆ ನಡೆಸಲು ಡಿವೈಎಸ್ಪಿ ಕೆಂಚೇಗೌಡ ಅವರಿಗೆ ವಹಿಸಲಾಗಿತ್ತು. ಈ ಬಗ್ಗೆ ಕೆಂಚೇಗೌಡ ಅವರು ತನಿಖೆಯನ್ನು ನಡೆಸಿ, ವರದಿಯನ್ನು ಕೇಂದ್ರ ವಲಯ ಐಜಿಪಿ ಕಚೇರಿಗೆ ನೀಡಿದ್ದಾರೆ. ತನಿಖೆಯಲ್ಲಿ ಆರೋಪ ಮೇಲ್ನೋಟಕ್ಕೆ ಸಾಬೀತಾಗಿದ್ದು, ಎಸ್.ಪಿ. ಶ್ರೀನಿವಾಸ್ ಗೌಡ ಅವರು ಕಗ್ಗಲಿಪುರ ಠಾಣೆಯಲ್ಲಿ ಪಿಎಸ್ಪಿ ಆಗಿ ಕೆಲಸ ಮಾಡುತ್ತಿದ್ದ ಹರೀಶ್ ಅವರನ್ನು ಅಮಾನತು ಮಾಡಿದ್ದಾರೆ. ತನಿಖೆಯ ವೇಳೆ ಪಿಎಸ್ ಐ ಹರೀಶ್ ಅವರು, ‘ನಾನು ಯಾವುದೇ ತಪ್ಪು ಮಾಡಿಲ್ಲ’ ಎಂದು ಹೇಳಿದ್ದಾರೆ. ಇನ್ನು ಅಂಗಡಿ ಮಾಲೀಕ ರಾಜೇಶ್ ಹೇಳಿರುವ ಪ್ರಕಾರ, ‘ನನ್ನ ಮೇಲೆ ಯಾವುದೇ ದೂರು ದಾಖಲಿಸಿಕೊಳ್ಳದೇ, ಮೆಡಿಕಲ್ ಪರೀಕ್ಷೆ ಮಾಡಿಸಿದ್ದಾರೆ’ ಎಂದು ಹೇಳಿದ್ದಾರೆ.
ಮುಂದಿನ ಬಜೆಟ್ ಒಳಗಾಗಿ ಎಲ್ಲ ಕೆರೆಗಳ ಒತ್ತುವರಿ ತೆರವುಗೊಳಿಸುವ ಗುರಿ : ಸಚಿವ ಭೋಸರಾಜು
ಬೆಳಗಾವಿ : ರಾಜ್ಯದಲ್ಲಿರುವ ಜಲಮೂಲಗಳ ಸಂರಕ್ಷಣೆಗೆ ಸರಕಾರ ಬದ್ಧವಾಗಿದ್ದು, ಮುಂದಿನ ಆಯವ್ಯಯ ಮಂಡನೆಯ ಒಳಗಾಗಿ ರಾಜ್ಯದ ಎಲ್ಲ ಕೆರೆಗಳ ಒತ್ತುವರಿಯನ್ನು ಸಂಪೂರ್ಣವಾಗಿ ತೆರವುಗೊಳಿಸುವ ಗುರಿ ಹೊಂದಲಾಗಿದೆ ಎಂದು ಸಣ್ಣ ನೀರಾವರಿ ಸಚಿವ ಎನ್.ಎಸ್.ಭೋಸರಾಜು ತಿಳಿಸಿದ್ದಾರೆ. ಮಂಗಳವಾರ ಸುವರ್ಣ ವಿಧಾನಸೌಧದಲ್ಲಿನ ಸೆಂಟ್ರಲ್ ಹಾಲ್ನಲ್ಲಿ ‘ಕೆರೆ ಬಳಕೆದಾರರ ಸಂಘ’ಗಳ ಪದಾಧಿಕಾರಿಗಳಿಗೆ ಕೆರೆಗಳ ನಿರ್ವಹಣೆ ಕುರಿತ ಕಾರ್ಯಾಗಾರ'ಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ನಮ್ಮ ಸರಕಾರ ಕೆರೆಗಳ ಸಂರಕ್ಷಣೆಗೆ ಮಹತ್ವದ ಹೆಜ್ಜೆಯಿಟ್ಟಿದೆ. ರಾಜ್ಯಾದ್ಯಂತ ಸುಮಾರು 41,849 ಜಲಮೂಲಗಳಿವೆ. ಇವುಗಳ ಪೈಕಿ ಒತ್ತುವರಿ ತೆರವು ಕಾರ್ಯ ಭರದಿಂದ ಸಾಗಿದ್ದು, ಪ್ರಸ್ತುತ ಕೇವಲ 6,500 ಕೆರೆಗಳ ಒತ್ತುವರಿ ತೆರವು ಮಾತ್ರ ಬಾಕಿ ಉಳಿದಿದೆ. ಇದನ್ನು ಸಮರೋಪಾದಿಯಲ್ಲಿ ಕೈಗೊಂಡು, ಮುಂದಿನ ಬಜೆಟ್ ವೇಳೆಗೆ ಸಂಪೂರ್ಣ ಒತ್ತುವರಿ ಮುಕ್ತಗೊಳಿಸುವ ಗುರಿಯನ್ನು ಹೊಂದಿದ್ದೇವೆ ಎಂದರು. ಸಂಪನ್ಮೂಲ ಕ್ರೋಢೀಕರಣಕ್ಕೆ ಹೊಸ ಚಿಂತನೆ : ಕೆರೆಗಳ ನಿರ್ವಹಣೆಗೆ ಆರ್ಥಿಕ ಸ್ವಾವಲಂಬನೆ ಕಂಡುಕೊಳ್ಳುವ ನಿಟ್ಟಿನಲ್ಲಿಯೂ ಸರಕಾರ ಚಿಂತನೆ ನಡೆಸಿದೆ. ವರ್ಷಪೂರ್ತಿ ಏತ ನೀರಾವರಿ ಯೋಜನೆಗಳ ಮೂಲಕ ಶೇ.50ಕ್ಕೂ ಹೆಚ್ಚು ನೀರು ಹೊಂದಿರುವ ಕೆರೆಗಳಲ್ಲಿ, ಮೀನುಗಾರಿಕೆ ಹಕ್ಕನ್ನು ಹರಾಜು ಹಾಕುವ ಮೂಲಕ ಕೆರೆಗಳ ನಿರ್ವಹಣೆಗೆ ಅಗತ್ಯ ಸಂಪನ್ಮೂಲ ಕ್ರೋಢೀಕರಿಸುವ ಕುರಿತು ಚಿಂತನೆ ನಡೆಸಲಾಗುತ್ತಿದೆ ಎಂದು ಅವರು ತಿಳಿಸಿದರು. ಬಳಕೆದಾರರ ಸಂಘಗಳಿಗೆ ಮರುಜೀವ: ಜಲಮೂಲಗಳ ಸಮರ್ಪಕ ನಿರ್ವಹಣೆಯಲ್ಲಿ ಸ್ಥಳೀಯ ಸಮುದಾಯದ ಪಾತ್ರ ನಿರ್ಣಾಯಕ. ಕೆರೆಗಳ ಉಸ್ತುವಾರಿಗಾಗಿ ರಚಿಸಲಾಗಿದ್ದ ಕೆರೆ ಬಳಕೆದಾರರ ಸಂಘಗಳು ಆಡಿಟ್ ಮತ್ತಿತರ ತಾಂತ್ರಿಕ ಸಮಸ್ಯೆಗಳಿಂದಾಗಿ ನಿಷ್ಕ್ರಿಯಗೊಂಡಿದ್ದವು. ಈ ಸಂಘಗಳು ಕೆರೆಗಳ ನಿರ್ವಹಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಹೀಗಾಗಿ, ಆಡಿಟ್ ಸಮಸ್ಯೆಗಳನ್ನು ಬಗೆಹರಿಸಿ, ಈ ಸಮುದಾಯ ಆಧಾರಿತ ಸಂಘಗಳಿಗೆ ಮರುಜೀವ ತುಂಬಲು ಸರಕಾರ ಅಗತ್ಯ ಕ್ರಮಗಳನ್ನು ಕೈಗೊಂಡಿದೆ ಎಂದು ಹೇಳಿದರು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಾತನಾಡಿ, ರಾಜ್ಯದಲ್ಲಿ ಅಂತರ್ಜಲ ಹೆಚ್ಚಳಕ್ಕೆ ಕೆರೆಗಳ ಸಂರಕ್ಷಣೆ ಮುಖ್ಯ. ಜಲಸಂಪನ್ಮೂಲ, ಗ್ರಾಮೀಣಾಭಿವೃದ್ದಿ ಹಾಗೂ ಸಣ್ಣ ನೀರಾವರಿ ಇಲಾಖೆಗಳ ವ್ಯಾಪ್ತಿಯಲ್ಲಿ ಹಂಚಿಹೋಗಿವೆ. ಯಾವುದೇ ಇಲಾಖೆಯ ವ್ಯಾಪ್ತಿಯಲ್ಲಿದ್ದರೂ ಅವುಗಳ ಸಮರ್ಪಕ ನಿರ್ವಹಣೆಗೆ ಸಮುದಾಯ ಆಧಾರಿತ ಕೆರೆ ಬಳಕೆದಾರರ ಸಂಘಗಳ ಅಗತ್ಯ. ಇವುಗಳನ್ನ ಆರ್ಥಿಕವಾಗಿ ಸಧೃಡಗೊಳಿಸುವ ನಿಟ್ಟಿನಲ್ಲಿ ಸರಕಾರ ತೀರ್ಮಾನ ಕೈಗೊಳ್ಳಲಿದೆ ಎಂದರು. ಕಾರ್ಯಾಗಾರದಲ್ಲಿ ಕೆರೆ ಬಳಕೆದಾರರ ಸಂಘಗಳ ನಿರ್ವಹಣೆಯ ಕೈಪಿಡಿ ಹಾಗೂ ‘ನೀರಿದ್ದರೆ ನಾಳೆ' ಕರಪತ್ರವನ್ನು ಅನಾವರಣಗೊಳಿಸಲಾಯಿತು. ಕಾರ್ಯಕ್ರಮದಲ್ಲಿ ಗ್ರಾಮೀಣಾಭಿವೃದ್ದಿ ಸಚಿವ ಪ್ರಿಯಾಂಕ ಖರ್ಗೆ, ಅಂತರ್ಜಲ ಅಭಿವೃದ್ದಿ ಇಲಾಖೆಯ ಕಾರ್ಯದರ್ಶಿ ಬಿ.ಕೆ.ಪವಿತ್ರ ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ಕೆರೆ ಬಳಕೆದಾರರ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಡಿ.20 ರಂದು ಜಮೀಯ್ಯತ್ತುಲ್ ಫಲಾಹ್ ವತಿಯಿಂದ ಪ್ರತಿಭಾ ಪುರಸ್ಕಾರ, ವಿದ್ಯಾರ್ಥಿ ವೇತನ ವಿತರಣೆ
ಮಂಗಳೂರು: ಜಮೀಯ್ಯತ್ತುಲ್ ಫಲಾಹ್ ದ. ಕ. ಮತ್ತು ಉಡುಪಿ ಜಿಲ್ಲೆ ಇದರ ಸುಳ್ಯ ಘಟಕದ ವತಿಯಿಂದ ಡಿಸೆಂಬರ್ 20 ರಂದು ಸುಳ್ಯ ಅನ್ಸಾರಿಯಾ ಗಲ್ಫ್ ಆಡಿಟೋರಿಯಂನಲ್ಲಿ ನಡೆಯಲಿರುವ ವಿದ್ಯಾರ್ಥಿ ವೇತನ ವಿತರಣೆ, ಪ್ರತಿಭಾ ಪುರಸ್ಕಾರ, ಮತ್ತು ಮಾದಕ ವ್ಯಸನಗಳ ವಿರುದ್ಧ ಜನ ಜಾಗೃತಿ ಅಭಿಯಾನದ ಆಹ್ವಾನ ಪತ್ರ ಅನ್ಸಾರ್ ಕಾಂಪ್ಲೆಕ್ಸ್ ನಲ್ಲಿರುವ ಜಮೀಯ್ಯತ್ತುಲ್ ಫಲಾಹ್ ಕಚೇರಿಯಲ್ಲಿ ನಡೆಯಿತು. ಸುಳ್ಯ ನಗರ ಯೋಜನಾ ಪ್ರಾಧಿಕಾರ ( ಸೂಡ ) ಅಧ್ಯಕ್ಷ ಕೆ. ಎಂ. ಮುಸ್ತಫ ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ಜೆ.ಎಫ್. ಉಪಾಧ್ಯಕ್ಷರುಗಳಾದ ಅಬ್ದುಲ್ ಖಾದರ್ ಸಂಗಮ್, ಹಾಜಿ ಇಬ್ರಾಹೀಂ ಖತರ್, ಪ್ರಧಾನ ಕಾರ್ಯದರ್ಶಿ ಹಸೈನಾರ್ ವಳಲಂಬೆ ಜತೆ ಕಾರ್ಯದರ್ಶಿ ಅಮೀರ್ ಕುಕ್ಕುಂಬಳ, ನಿರ್ದೇಶಕ ಎಸ್. ಪಿ. ಅಬೂಬಕ್ಕರ್ ಮೊದಲಾದವರು ಉಪಸ್ಥಿತರಿದ್ದರು.
ಮಾ.26ರಿಂದ 2026ರ ಆವೃತ್ತಿಯ ಐಪಿಎಲ್ ಆರಂಭ?
ಮುಂಬೈ, ಡಿ.16: 19ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್)2026ರ ಮಾರ್ಚ್ 26ರಿಂದ ಮೇ 31ರ ತನಕ ನಡೆಯಲು ಸಜ್ಜಾಗಿದೆ. ಸೋಮವಾರ ರಾತ್ರಿ ಮಿನಿ ಹರಾಜು ಕಾರ್ಯಕ್ರಮಕ್ಕೂ ಮೊದಲು ಫ್ರಾಂಚೈಸಿಗಳಿಗೆ ಈ ವಿಚಾರವನ್ನು ತಿಳಿಸಲಾಗಿದೆ. ಐಸಿಸಿ ಪುರುಷರ ಟಿ20 ವಿಶ್ವಕಪ್ ಮುಕ್ತಾಯದ ಅಂಶವನ್ನು ದೃಷ್ಟಿಯಲ್ಲಿಟ್ಟುಕೊಂಡು ಐಪಿಎಲ್ ಪಂದ್ಯಾವಳಿಯ ವೇಳಾಪಟ್ಟಿಯನ್ನು ಐಪಿಎಲ್ ಅಧಿಕಾರಿಗಳು ಎಚ್ಚರಿಕೆಯಿಂದ ಅಂತಿಮಗೊಳಿಸಲಿದ್ದಾರೆ ಎಂದು ‘ಸ್ಪೋಟ್ಸ್ಸ್ಟಾರ್’ ವರದಿ ಮಾಡಿದೆ. T20 ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯವು ಅಹ್ಮದಾಬಾದ್ ನಲ್ಲಿ ಮಾರ್ಚ್ 8ರಂದು ನಡೆಯಲಿದೆ. ಐಪಿಎಲ್ ಗೆ ಸಜ್ಜಾಗಲು ಪ್ರಮುಖ ಅಂತರ್ರಾಷ್ಟ್ರೀಯ ಹಾಗೂ ಭಾರತೀಯ ಆಟಗಾರರಿಗೆ 15 ದಿನಗಳಿಗೂ ಹೆಚ್ಚು ಕಾಲಾವಕಾಶ ನೀಡಲಾಗಿದೆ. ಪ್ರಮುಖ ಪಂದ್ಯಾವಳಿಗಿಂತ ಮೊದಲು ಆಟಗಾರರ ಕೆಲಸದ ಒತ್ತಡ ಹಾಗೂ ಸಾರಿಗೆ ವ್ಯವಸ್ಥೆಗಳನ್ನು ನಿರ್ವಹಿಸಲು ಈ ವಿರಾಮವು ತಂಡಗಳಿಗೆ ನೆರವಾಗುವ ನಿರೀಕ್ಷೆ ಇದೆ. ಸ್ಥಳಗಳು ಹಾಗೂ ವೇಳಾಪಟ್ಟಿಗಳು ಸಹಿತ ವಿವರವಾದ ಐಪಿಎಲ್ ವೇಳಾಪಟ್ಟಿಯು ಮುಂದಿನ ದಿನಗಳಲ್ಲಿ ಬಿಡುಗಡೆಯಾಗಲಿದೆ. ಐಪಿಎಲ್ ವೇಳೆ ಶ್ರೀಲಂಕಾ ಹಾಗೂ ಬಾಂಗ್ಲಾದೇಶ ಆಟಗಾರರು ಮಾತ್ರ ದ್ವಿಪಕ್ಷೀಯ ಅಂತರ್ರಾಷ್ಟ್ರೀಯ ಬದ್ದತೆಯನ್ನು ಹೊಂದಿದ್ದಾರೆ. ಸಂಪೂರ್ಣ ಪಂದ್ಯಾವಳಿಗೆ ತಮ್ಮ ಆಟಗಾರರಿಗೆ ಆಡಲು ಅವಕಾಶ ನೀಡುವುದಾಗಿ ಉಭಯ ಕ್ರಿಕೆಟ್ ಮಂಡಳಿಗಳು ಬಿಸಿಸಿಐಗೆ ಭರವಸೆ ನೀಡಿವೆ.
Mangaluru | ಬಸ್ನಿಂದ ಕೆಳಗೆ ಬಿದ್ದು ಮಹಿಳೆ ಮೃತಪಟ್ಟ ಪ್ರಕರಣ: ಬಸ್ ಚಾಲಕನಿಗೆ ಆರು ತಿಂಗಳ ಜೈಲು ಶಿಕ್ಷೆ
ಮಂಗಳೂರು: ಎಂಟು ವರ್ಷಗಳ ಹಿಂದೆ ನಗರದಲ್ಲಿ ಬಸ್ನಿಂದ ಕೆಳಗೆ ಬಿದ್ದು ಮಹಿಳೆ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿ ಖಾಸಗಿ ಬಸ್ ಚಾಲಕ ಸೈಯದ್ ಇರ್ಫಾನ್ ಅಲಿ ವಿರುದ್ಧದ ಆರೋಪ ನ್ಯಾಯಾಲಯದಲ್ಲಿ ರುಜುವಾತು ಆಗಿದ್ದು, ಆತನಿಗೆ ಮಂಗಳೂರಿನ ಜೆಎಂಎಫ್ಸಿ ಎಂಟನೆ ನ್ಯಾಯಾಲಯವು ಆರು ತಿಂಗಳ ಸಾದಾ ಜೈಲು ಶಿಕ್ಷೆ ಮತ್ತು 3, 500 ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ಆರೋಪಿ ಬಸ್ ಚಾಲಕನು ತನ್ನ ಬಸ್ನ್ನು ಅತಿ ವೇಗದಿಂದ ಚಲಾಯಿಸಿಕೊಂಡು ಬಂದು ತನ್ನ ಮುಂದೆ ನಿಂತಿದ್ದ ಬಸ್ನ್ನು ಓವರ್ಟೇಕ್ ಮಾಡಿ ನಂತರ ಜಂಕ್ಷನ್ ಬಳಿ ಪದವು ಕಡೆಯಿಂದ ಪಂಪು ವೆಲ್ ಕಡೆಗೆ ಹೋಗುತ್ತಿರುವ ಕಂಟೇನರ್ ಲಾರಿಗೆ ಬಸ್ ಢಿಕ್ಕಿ ಹೊಡೆದು ಅಪಘಾತಕ್ಕೆ ಕಾರಣವಾಗಿರುವುದಾಗಿ ಆರೋಪಿಸಲಾಗಿತ್ತು. ಬಸ್ ಡಿಕ್ಕಿ ಹೊಡೆದ ಪರಿಣಾಮ ಕಂಟೇನರ್ ಲಾರಿ ಬಲಕ್ಕೆ ತಿರುಗಿ ಕಾರಿಗೆ ಗುದ್ದಿದ್ದು, ಇದೇ ಸಂದರ್ಭದಲ್ಲಿ ಬಸ್ಸಿನ ಎಡ ಬದಿ ಸೀಟಿನಲ್ಲಿ ಕುಳಿತಿದ್ದ ಕವಿತಾ ಎಂಬವರು ಬಸ್ನಿಂದ ಕೆಳಗೆ ಬಿದ್ದು ಮೃತಪಟ್ಟಿದ್ದರು. ಬಸ್ಸಿನಲ್ಲಿದ್ದ ಹಲವು ಮಂದಿ ಪ್ರಯಾಣಿಕರಿಗೆ ಗಾಯವಾಗಿತ್ತು. ಪ್ರಯಾಣಿಕರಿಗೆ ಗಾಯವಾಗಲು ಬಸ್ಸಿನ ಚಾಲಕ ಕಾರಣವಾಗಿದ್ದು , ಆತನ ಅತಿ ವೇಗದ ಚಾಲನೆ ಅಪಘಾತಕ್ಕೆ ಕಾರಣವಾಗಿರುದಾಗಿ ಆರೋಪಿಸಲಾಗಿತ್ತು. ಈ ಸಂಬಂಧ ಸಂಚಾರ ಪೂರ್ವ ಪೊಲೀಸ್ ಠಾಣೆಯ ನಿರೀಕ್ಷಕರಾಗಿದ್ದ ಸುರೇಶ್ ಮತ್ತು ಶಿವಪ್ರಕಾಶ್ ಎಚ್ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪನಾ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಸರಕಾರಿ ಸಹಾಯಕ ಅಭಿಯೋಜಕರಾದ ನೇತ್ರಾವತಿ ಹಾಗೂ ಗೀತಾ ರೈ ರವರು ಸಾಕ್ಷಿ ವಿಚಾರ ನಡೆಸಿದ್ದು, ಸರಕಾರಿ ಸಹಾಯಕ ಅಭಿಯೋಜಕರಾದ ಆರೋನ್ ಡಿ ಸೋಜ ವಿಟ್ಲ ವಾದ ಮಂಡಿಸಿದ್ದರು . ಜೆಎಂಎಫ್ಸಿ ಎಂಟನೇ ನ್ಯಾಯಾಲಯದ ನ್ಯಾಯಾಧೀಶ ಫವಾಜ್ ಪಿ ಎ ಅವರು ಪ್ರಾಸಿಕ್ಯೂಷನ್ ಪರ ವಾದವನ್ನು ಎತ್ತಿ ಹಿಡಿದು, ಆರೋಪಿಗೆ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ.
ದಾಖಲೆ ಮೊತ್ತಕ್ಕೆ ಹರಾಜಾಗಿ ಇತಿಹಾಸ ನಿರ್ಮಿಸಿದ ಲಂಕಾದ ವೇಗಿ ಮಥೀಶ ಪಥಿರನ
ಅಬುಧಾಬಿ,ಡಿ.16: ಮುಂಬರುವ ಐಪಿಎಲ್ ಋತುವಿಗಿಂತ ಮೊದಲು ತನ್ನ ತಂಡವನ್ನು ಬಲಿಷ್ಠಗೊಳಿಸಲು ಭಾರೀ ಹಣ ಹೂಡಿರುವ ಕೋಲ್ಕತಾ ನೈಟ್ ರೈಡರ್ಸ್ ತಂಡ ಮಂಗಳವಾರ ನಡೆದ ಮಿನಿ ಐಪಿಎಲ್ ಹರಾಜಿನಲ್ಲಿ ಸುದ್ದಿಯಾಗಿದೆ. ಕೆಕೆಆರ್ ಫ್ರಾಂಚೈಸಿಯು 25.20 ಕೋಟಿ ರೂ.ಗೆ ಆಸ್ಟ್ರೇಲಿಯದ ಆಲ್ರೌಂಡರ್ ಕ್ಯಾಮರೂನ್ ಗ್ರೀನ್ ಅವರನ್ನು ಮೊದಲಿಗೆ ತನ್ನ ತೆಕ್ಕೆಗೆ ಸೇರಿಸಿಕೊಂಡಿತು. ತಮ್ಮದೇ ದೇಶದ ಮಿಚೆಲ್ ಸ್ಟಾರ್ಕ್ ಅವರ ಹಿಂದಿನ ದಾಖಲೆ(24.75 ಕೋಟಿ ರೂ.)ಯನ್ನು ಮುರಿದ ಗ್ರೀನ್ ಐಪಿಎಲ್ ಹರಾಜಿನಲ್ಲಿ ಅತ್ಯಂತ ದುಬಾರಿ ವಿದೇಶೀ ಆಟಗಾರನಾಗಿದ್ದಾರೆ. ಗ್ರೀನ್ರನ್ನು ತಮ್ಮ ತೆಕ್ಕೆಗೆ ಸೇರಿಸಿಕೊಳ್ಳಲು ಕೆಕೆಆರ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳ ನಡುವೆ ತೀವ್ರ ಬಿಡ್ಡಿಂಗ್ ವಾರ್ ನಡೆಯಿತು. ಅಂತಿಮವಾಗಿ CSKಯನ್ನು ಹಿಂದಿಕ್ಕಿದ ಕೆಕೆಆರ್ ವಿಜಯಶಾಲಿಯಾಯಿತು. ಕೆಕೆಆರ್ ತಂಡ ಶ್ರೀಲಂಕಾದ ವೇಗದ ಬೌಲರ್ ಮಥೀಶ ಪಥಿರನ ಅವರನ್ನು 18 ಕೋಟಿ ರೂ. ನೀಡಿ ಖರೀದಿಸಿತು. ಐಪಿಎಲ್ ಇತಿಹಾಸದಲ್ಲಿ ಪಥಿರನ ಅತ್ಯಂತ ದುಬಾರಿ ಶ್ರೀಲಂಕಾ ಆಟಗಾರ ಎನಿಸಿಕೊಂಡರು. ಪಥಿರನ ಅವರು ಚೆನ್ನೈ ಸೂಪರ್ ಕಿಂಗ್ಸ್ ತಂಡದಿಂದ ಬಿಡುಗಡೆಯಾಗಿದ್ದರು. *RCBಗೆ ವೆಂಕಟೇಶ್ ಅಯ್ಯರ್: ಕೆಕೆಆರ್ ತಂಡ ಭಾರತದ ಆಲ್ರೌಂಡರ್ ವೆಂಕಟೇಶ್ ಅಯ್ಯರ್ ಮೇಲೆ ಆಸಕ್ತಿ ತೋರಿತ್ತು. ಮತ್ತೊಂದು ಪ್ರಮುಖ ಹೆಜ್ಜೆಯೊಂದರಲ್ಲಿ, ರಾಯಲ್ ಚಾಲೆಂಜರ್ಸ್ ಬೆಂಗಳೂರು(RCB)ತಂಡವು 7 ಕೋಟಿ ರೂ.ಗೆ ಅಯ್ಯರ್ ರನ್ನು ಖರೀದಿಸಿತು. ಐಪಿಎಲ್ ನಲ್ಲಿ ಸ್ಥಿರ ಪ್ರದರ್ಶನ ನೀಡುತ್ತಿರುವ ವೆಂಕಟೇಶ್ 29.12ರ ಸರಾಸರಿಯಲ್ಲಿ, 137ಕ್ಕೂ ಅಧಿಕ ಸ್ಟ್ರೈಕ್ರೇಟ್ ನಲ್ಲಿ 1,468 ರನ್ ಗಳಿಸಿದ್ದಾರೆ. 56 ಇನಿಂಗ್ಸ್ಗಳಲ್ಲಿ ಒಂದು ಶತಕ ಹಾಗೂ 12 ಅರ್ಧಶತಕಗಳನ್ನು ಗಳಿಸಿದ್ದಾರೆ. ಈ ಹಿಂದಿನ ವರ್ಷ ಕೆಕೆಆರ್ ತಂಡಕ್ಕೆ 23.75 ಕೋಟಿ ರೂ.ಗೆ ಹರಾಜಾಗಿದ್ದ ವೆಂಕಟೇಶ್ ಏಳು ಇನಿಂಗ್ಸ್ಗಳಲ್ಲಿ 20ರ ಸರಾಸರಿಯಲ್ಲಿ ಒಂದು ಅರ್ಧಶತಕ ಸಹಿತ 142 ರನ್ ಗಳಿಸಲಷ್ಟೇ ಶಕ್ತರಾಗಿದ್ದರು. ವೆಂಕಟೇಶ್ T20 ಕ್ರಿಕೆಟ್ ನಲ್ಲಿ 144 ಪಂದ್ಯಗಳಲ್ಲಿ 34.18ರ ಸರಾಸರಿಯಲ್ಲಿ ಒಂದು ಶತಕ ಹಾಗೂ 18 ಅರ್ಧಶತಕಗಳ ಸಹಿತ 3,179 ರನ್ ಗಳಿಸಿದ್ದಾರೆ. 55 ವಿಕೆಟ್ ಗಳನ್ನು ಉರುಳಿಸಿದ್ದಾರೆ. ಸದ್ಯ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಟೂರ್ನಿಯಲ್ಲಿ 11 ಪಂದ್ಯಗಳಲ್ಲಿ ಎರಡು ಅರ್ಧಶತಕಗಳ 211 ರನ್ ಗಳಿಸಿದ್ದಾರೆ. ನ್ಯೂಝಿಲ್ಯಾಂಡ್ನ ವೇಗದ ಬೌಲರ್ ಜೇಕಬ್ ಡಫಿ RCB ತಂಡದ ಪಾಲಾಗಿದ್ದಾರೆ. ಡಫಿ 2025ರಲ್ಲಿ ಇಂಟರ್ನ್ಯಾಶನಲ್ ಕ್ರಿಕೆಟ್ ನಲ್ಲಿ 35 ಪಂದ್ಯಗಳಲ್ಲಿ 72 ವಿಕೆಟ್ ಗಳನ್ನು ಪಡೆದಿದ್ದಾರೆ. ಇದರಲ್ಲಿ 3 ನಾಲ್ಕು ವಿಕೆಟ್ ಗೊಂಚಲು ಹಾಗೂ 2 ಐದು ವಿಕೆಟ್ ಗೊಂಚಲು ಇದೆ. T20 ವೃತ್ತಿಜೀವನದಲ್ಲಿ ಡಫಿ 156 ಪಂದ್ಯಗಳಲ್ಲಿ 178 ವಿಕೆಟ್ ಗಳನ್ನು ಪಡೆದಿದ್ದಾರೆ. ಪಥಿರನ ಈ ಹಿಂದಿನ ಐಪಿಎಲ್ ಅಭಿಯಾನದಲ್ಲಿ ತನ್ನ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದರು. 2025ರ ಐಪಿಎಲ್ ಟೂರ್ನಿಯಲ್ಲಿ 12 ಪಂದ್ಯಗಳನ್ನು ಆಡಿದ್ದ ಪಥಿರನ 10.14ರ ಇಕಾನಮಿ ರೇಟ್ ನಲ್ಲಿ 13 ವಿಕೆಟ್ ಗಳನ್ನು ಪಡೆದಿದ್ದರು. ಒಟ್ಟು 32 ಐಪಿಎಲ್ ಪಂದ್ಯಗಳನ್ನು ಆಡಿರುವ ಪಥಿರನ 8.68ರ ಇಕಾನಮಿ ರೇಟ್ ನಲ್ಲಿ 47 ವಿಕೆಟ್ ಗಳನ್ನು ಉರುಳಿಸಿದ್ದರು. ವೇಗ, ಬೌನ್ಸ್ ಹಾಗೂ ತೀವ್ರ ಒತ್ತಡದ ಪರಿಸ್ಥಿತಿಯಲ್ಲೂ ಬೌಲಿಂಗ್ ಮಾಡಬಲ್ಲ ತನ್ನ ಸಾಮರ್ಥ್ಯದ ಮೂಲಕ ಪ್ರಸಿದ್ಧಿ ಪಡೆದಿರುವ ಪಥಿರನ ಕೆಕೆಆರ್ ಬೌಲಿಂಗ್ ದಾಳಿಗೆ ಮತ್ತಷ್ಟು ಶಕ್ತಿ ತುಂಬಲಿದ್ದಾರೆ. ಕ್ಯಾಮರೂನ್ ಗ್ರೀನ್ ಅವರ ಒಪ್ಪಂದವು ವಿದೇಶಿ ಆಟಗಾರರ ನಿಯಮಗಳನ್ನು ಅನುಸರಿಸಲಿದೆ. ಈ ನಿಯಮದ ಪ್ರಕಾರ 18 ಕೋಟಿ ರೂ.(1.9 ಮಿಲಿಯನ್ ಡಾಲರ್)ಗ್ರೀನ್ ಗೆ ನೇರವಾಗಿ ತಲುಪಲಿದ್ದು, ಇನ್ನುಳಿದ ಮೊತ್ತವು ಬಿಸಿಸಿಐನ ಆಟಗಾರರ ಕಲ್ಯಾಣ ಕಾರ್ಯಕ್ರಮಕ್ಕೆ ಬಳಕೆಯಾಗಲಿದೆ. ಗ್ರೀನ್ ಅವರು ಈ ತನಕ 29 ಐಪಿಎಲ್ ಪಂದ್ಯಗಳನ್ನಾಡಿದ್ದಾರೆ. ಮುಂಬೈ ಇಂಡಿಯನ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರವಾಗಿ ಒಟ್ಟು 707 ರನ್ ಹಾಗೂ 16 ವಿಕೆಟ್ ಗಳನ್ನು ಕಬಳಿಸಿದ್ದಾರೆ. 2023ರಲ್ಲಿ ಮೊದಲ ಬಾರಿ ಐಪಿಎಲ್ ನಲ್ಲಿ ಆಡಿದ್ದ ಗ್ರೀನ್ ಅವರನ್ನು ಮುಂಬೈ ತಂಡವು 17.5 ಕೋಟಿ ರೂ.ಗೆ ಖರೀದಿಸಿತ್ತು. 2023ರಲ್ಲಿ ಗ್ರೀನ್ 452 ರನ್ ಗಳಿಸಿದ್ದರು. 2024ರ ಐಪಿಎಲ್ ಟೂರ್ನಿಯಲ್ಲಿ 17.5 ಕೋಟಿ ರೂ.ಗೆ RCB ಪಾಲಾಗಿದ್ದ ಗ್ರೀನ್ ಅವರು 255 ರನ್ ಗಳಿಸಿದ್ದಲ್ಲದೆ 10 ವಿಕೆಟ್ ಗಳನ್ನು ಕಬಳಿಸಿದ್ದರು. ಬೆನ್ನುನೋವಿನಿಂದಾಗಿ 2025ರ ಐಪಿಎಲ್ ಮೆಗಾ ಹರಾಜಿನಿಂದ ಹೊರಗುಳಿದಿದ್ದರು. ಇತ್ತೀಚೆಗೆ ದೇಶೀಯ ಕ್ರಿಕೆಟ್ ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಹೊರತಾಗಿಯೂ ಪೃಥ್ವಿ ಶಾ ಹಾಗೂ ಸರ್ಫರಾಝ್ ಖಾನ್ ಹರಾಜಾಗದೆ ಉಳಿದರು. ಅತಿ ಮುಖ್ಯವಾಗಿ ಸರ್ಫರಾಝ್ ಅವರು ಮುಂಬೈನಲ್ಲಿ ನಡೆದಿದ್ದ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಪಂದ್ಯದಲ್ಲಿ 22 ಎಸೆತಗಳಲ್ಲಿ 73 ರನ್ ಗಳಿಸಿದ್ದರು. ಡೆಲ್ಲಿ ಕ್ಯಾಪಿಟಲ್ಸ್ ತಂಡವು ದಕ್ಷಿಣ ಆಫ್ರಿಕಾದ ಬ್ಯಾಟರ್ ಡೇವಿಡ್ ಮಿಲ್ಲರ್ ರನ್ನು ಮೂಲ ಬೆಲೆ 2 ಕೋಟಿ ರೂ.ಗೆ ಖರೀದಿಸಿತ್ತು. ದಕ್ಷಿಣ ಆಫ್ರಿಕಾದ ಹಿರಿಯ ಆರಂಭಿಕ ಆಟಗಾರ ಕ್ವಿಂಟನ್ ಡಿಕಾಕ್ 1 ಕೋಟಿ ರೂ. ಮೂಲ ಬೆಲೆಗೆ ಮುಂಬೈ ಇಂಡಿಯನ್ಸ್ ಪಾಲಾದರು. ಮಿನಿ ಐಪಿಎಲ್ ಹರಾಜಿನ ಕಣದಲ್ಲಿ 246 ಭಾರತೀಯರು ಹಾಗೂ 113 ವಿದೇಶಿ ಆಟಗಾರರು ಸಹಿತ ಒಟ್ಟು 359 ಆಟಗಾರರಿದ್ದರು. 10 ಫ್ರಾಂಚೈಸಿಗಳು 77 ಸ್ಥಾನಗಳನ್ನು ಭರ್ತಿ ಮಾಡಲು ಎದುರು ನೋಡುತ್ತಿದ್ದು, 31 ಸ್ಥಾನಗಳು ವಿದೇಶೀ ಆಟಗಾರರಿಗೆ ಮೀಸಲಾಗಿದೆ.
ಸ್ಯಾನ್ಫ್ರಾನ್ಸಿಸ್ಕೊ,ಡಿ.16: ಹೊಸ ವರ್ಷಾಚರಣೆ ಸಂದರ್ಭ ದಕ್ಷಿಣ ಕ್ಯಾಲಿಪೋರ್ನಿಯಾದಲ್ಲಿರುವ ಎರಡು ಅಮೆರಿಕನ್ ಕಂಪೆನಿಗಳಿಗೆ ಸೇರಿದ ಸ್ಥಳಗಳಲ್ಲಿ ಸರಣಿ ಬಾಂಬ್ ಸ್ಫೋಟಗಳನ್ನು ನಡೆಸುವ, ಬಂಡವಾಳಶಾಹಿ ಹಾಗೂ ಸರಕಾರಿ ವಿರೋಧಿ ತೀವ್ರವಾದಿ ಗುಂಪೊಂದರ ಸದಸ್ಯರನ್ನು ಸಂಚನ್ನು ಫೆಡರಲ್ ತನಿಖಾಧಿಕಾರಿಗಳು ವಿಫಲಗೊಳಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ನಾಲ್ವರನ್ನು ಬಂಧಿಸಿದ್ದಾರೆ. ಲಾಸ್ ಏಂಜಲೀಸ್ ಸಮೀಪದ ಮೊಜಾವೆ ಮರುಭೂಮಿ ಪ್ರದೇಶದಲ್ಲಿ ಆರೋಪಿಗಳು ತಮ್ಮ ಸಂಚಿನ ರಿಹರ್ಸಲ್ ನಡೆಸುತ್ತಿದ್ದಾಗ ಅವರನ್ನು ಬಂಧಿಸಲಾಯಿತೆಂದು, ಅಮೆರಿಕದ ಪ್ರಧಾನ ಸಹಾಯಕ ಅಟಾರ್ನಿ ಬಿಲ್ ಎಸ್ಸಾಯಿಲ್ ತಿಳಿಸಿದ್ದಾರೆ. ಶಂಕಿತ ಆರೋಪಿಗಳು ದೊಡ್ಡ ಗಾತ್ರದ ಕಪ್ಪುಬಣ್ಣದ ವಸ್ತುವೊಂದನ್ನು ಕೊಂಡೊಯ್ಯುತ್ತಿರುವ ವೀಡಿಯೊ ದೃಶ್ಯಾವಳಿಯನ್ನು ವೈಮಾನಿಕ ಕಣ್ಗಾವಲು ಕ್ಯಾಮರಾ ಸೆರೆಹಿಡಿದಿರುವುದನ್ನು ಅಧಿಕಾರಿಗಳು ಸುದ್ದಿಗಾರರಿಗೆ ತೋರಿಸಿದ್ದಾರೆ. ಶಂಕಿತ ಆರೋಪಿಗಳು ವಿಧ್ವಂಸ ಕೃತ್ಯಕ್ಕಾಗಿ ಸ್ಫೋಟಕ ಸಾಮಾಗ್ರಿಯನ್ನು ಜೋಡಿಸುವ ಮುನ್ನ ಅವರನ್ನು ಬಂಧಿಸಲಾಗಿದೆಯೆಂದು ಎಸ್ಸಾಯಿಲ್ ತಿಳಿಸಿದ್ದಾರೆ. ಬಂಧಿತ ಆರೋಪಿಗಳನ್ನು ಆಡ್ರೆ ಇಲ್ಲೀನ್ ಕರೋಲ್ (30), ಝಕಾರಿ ಆರೋನಂ ಪೇಜ್ (32), ದಾಂತೆ ಗ್ಯಾಫೀಲ್ಡ್ (24) ಹಾಗೂ ಟೀನಾ ಲಾಯಿ (41) ಎಂದು ಗುರುತಿಸಲಾಗಿದೆ. ಅವರೆಲ್ಲರೂ ಲಾಸ್ಏಂಜಲೀಸ್ ಪ್ರದೇಶದವರೆಂದು ಎಸ್ಸಾಯಿಲ್ ತಿಳಿಸಿದ್ದಾರೆ. ಟರ್ಟಲ್ ಐಲ್ಯಾಂಡ್ ವಿಮೋಚನಾ ರಂಗದ ಅಂಗಘಟಕದ ಸದಸ್ಯರೆಂದು ಆರೋಪಿಗಳು ವಿಚಾಣೆಯ ವೇಳೆ ಬಹಿರಂಗಪಡಿಸಿದ್ದಾರೆ. ವಸಾಹತುಶಾಹಿಯಿಂದ ವಿಮೋಚನೆ, ಬುಡಕಟ್ಟು ಜನರ ಸಾರ್ವಭೌಮತ್ವ ಹಾಗೂ ಬಂಡವಾಳಶಾಹಿ ವಾದದ ವಿರುದ್ಧ ಹೋರಾಟ ನಡೆಸಲು ಶ್ರಮಿಕ ವರ್ಗವನ್ನು ಒಗ್ಗೂಡಿಸುವುದು ಈ ಸಂಘಟನೆಯ ಗುರಿಯಾಗಿದೆ.
ತಲಪಾಡಿ: ಅಪಘಾತಕ್ಕೀಡಾದ ಕಾರಿನಲ್ಲಿ ಡ್ರಗ್ಸ್ ಪತ್ತೆ
ಅಪಘಾತದಿಂದ ಕಾರಿನಲ್ಲಿದ್ದ ಓರ್ವನಿಗೆ ಗಾಯ, ಆರೋಪಿ ಕಾರು ಚಾಲಕ ಪರಾರಿ
ರಾಜಸ್ಥಾನ: ಮತದಾರ ಪಟ್ಟಿಯಿಂದ 42 ಲಕ್ಷ ಮಂದಿ ಹೊರಗೆ
ಜೈಪುರ, ಡಿ. 16: ವಿಶೇಷ ತೀವ್ರ ಪರಿಷ್ಕರಣೆ (ಎಸ್ಐಆರ್) ವೇಳೆ, ರಾಜಸ್ಥಾನದ ಮತದಾರರ ಪಟ್ಟಿಯಿಂದ ಸುಮಾರು 42 ಲಕ್ಷ ಮತದಾರರ ಹೆಸರುಗಳನ್ನು ತೆಗೆದುಹಾಕಲಾಗಿದೆ ಎಂದು ರಾಜ್ಯದ ಮುಖ್ಯ ಚುನಾವಣಾಧಿಕಾರಿ ನವೀನ್ ಮಹಾಜನ್ ತಿಳಿಸಿದ್ದಾರೆ. 5.46 ಕೋಟಿ ಮತದಾರರ ಪೈಕಿ 41.79 ಲಕ್ಷ ಮತದಾರರಿಂದ ನೋಂದಣಿ ಅರ್ಜಿಗಳನ್ನು ಪಡೆಯಲು ಸಾಧ್ಯವಾಗಿಲ್ಲ ಎಂದು ಮಹಾಜನ್ ಹೇಳಿದರು. ಅಳಿಸಿ ಹಾಕಲಾಗಿರುವ ಮತದಾರರಲ್ಲಿ 8.75 ಲಕ್ಷ ಮೃತಪಟ್ಟಿದ್ದಾರೆ, 29.6 ಲಕ್ಷ ಮನೆ ಬದಲಾಯಿಸಿದ್ದಾರೆ ಅಥವಾ ಮನೆಯಲ್ಲಿ ಇಲ್ಲ ಮತ್ತು 3.44 ಲಕ್ಷ ಮಂದಿ ಒಂದಕ್ಕಿಂತ ಹೆಚ್ಚು ಸ್ಥಳಗಳಲ್ಲಿ ತಮ್ಮ ಹೆಸರುಗಳನ್ನು ನೋಂದಾಯಿಸಿದ್ದಾರೆ. ಇದಲ್ಲದೆ, 11 ಲಕ್ಷ ಮತದಾರರಿಗೆ ದಾಖಲೆಗಳನ್ನು ಸಲ್ಲಿಸುವಂತೆ ನೋಟಿಸ್ಗಳನ್ನು ನೀಡಲಾಗುವುದು ಎಂದು ಅವರು ತಿಳಿಸಿದರು.
ಸೌಹಾರ್ದತೆಗೆ ಶ್ರಮಿಸುವವನು ನಿಜವಾದ ದೇಶಭಕ್ತ: ಡಾ. ಎಕ್ಕಾರು
ಮಲ್ಪೆ: ಸಂವಿಧಾನದ ಮೂಲ ತತ್ವಗಳಾದ ಸಮಾನತೆ, ಸ್ವಾತಂತ್ರ್ಯ ಸಹೋದರತೆ ಮತ್ತು ಸಾಮಾಜಿಕ ನ್ಯಾಯವನ್ನು ಅರಿತುಕೊಂಡು ಜೀವಿಸಿದಾಗ ಹಬ್ಬಗಳ ಆಚರಣೆಗೆ ನಿಜವಾದ ಆರ್ಥ ಬರುತ್ತದೆ ಎಂದು ಹಿರಿಯ ಜನಪದ ವಿದ್ವಾಂಸ, ಡಾ.ಶಿವರಾಮ ಕಾರಂತ ಟ್ರಸ್ಟಿನ ಅಧ್ಯಕ್ಷ ಡಾ. ಗಣನಾಥ ಎಕ್ಕಾರು ಅಭಿಪ್ರಾಯಪಟ್ಟಿದ್ದಾರೆ. ತೊಟ್ಟಂನ ಸಮನ್ವಯ ಸರ್ವಧರ್ಮ ಸೌಹಾರ್ದ ಸಮಿತಿ ಹಾಗೂ ಕಥೊಲಿಕ್ ಸಭಾ ಉಡುಪಿ ಪ್ರದೇಶ ಇದರ ತೊಟ್ಟಂ ಘಟಕಗಳ ಜಂಟಿ ಆಶ್ರಯದಲ್ಲಿ ಸೋಮವಾರ ಸಂಜೆ ಆಯೋಜಿಸಲಾಗಿದ್ದ ಸರ್ವಧರ್ಮ ಹಬ್ಬಗಳ ಸೌಹಾರ್ದ ಕೂಟದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು. ಜಗತ್ತಿನ ಯಾವುದೇ ರಾಷ್ಟ್ರದಲ್ಲಿ ಸೌಹಾರ್ದತೆ ಇದ್ದಾಗ ಅಲ್ಲಿ ಅಭಿವೃದ್ದಿ ಕಾಣಲು ಸಾಧ್ಯವಿದೆ. ಸೌಹಾರ್ದತೆಗಾಗಿ ಶ್ರಮಿಸುವ ಪ್ರತಿಯೊಬ್ಬ ಕೂಡ ನಿಜವಾದ ದೇಶಭಕ್ತನಾಗಲು ಸಾಧ್ಯವಿದೆ. ಕ್ಷಮೆ, ಕರುಣೆ ಮತ್ತು ಪ್ರೀತಿಯ ಸಂದೇಶವನ್ನು ಜಗತ್ತಿನ ಪ್ರತಿಯೊಂದು ಧರ್ಮಗಳು ಸಾರುವುದರೊಂದಿಗೆ ಮಾನವೀಯತೆಯನ್ನು ಕಲಿಸುತ್ತವೆ. ಪ್ರತಿಯೊಬ್ಬ ವ್ಯಕ್ತಿ ತನ್ನ ಧರ್ಮವನ್ನು ಪಾಲಿಸಿಕೊಂಡು ಇತರ ಧರ್ಮದ ಬಗ್ಗೆ ಅರಿತುಕೊಂಡು ಬಾಳಿದಾಗ ಸೌಹಾರ್ದತೆ ಮೂಡಲು ಸಾಧ್ಯವಿದೆ ಎಂದವರು ಹೇಳಿದರು. ಎಲ್ಲಾ ಹಬ್ಬಗಳ ಮೂಲತತ್ವ ಪ್ರೀತಿ ಮತ್ತು ಒಗ್ಗಟ್ಟಿನಿಂದ ಬಾಳುವುದಾಗಿದ್ದು ಇದರೊಂದಿಗೆ ಎಲ್ಲಾ ಧರ್ಮಗಳಿಗಿಂತ ಮಾನವೀಯ ಧರ್ಮ ಅತೀ ಶ್ರೇಷ್ಟವಾದುದ್ದಾಗಿದೆ ಎಂದರು. ಸಮಾಜ ಸೇವಕರಾದ ರಫೀಕ್ ಮಾಸ್ಟರ್ ಮಾತನಾಡಿ, ಪ್ರತಿಯೊಂದು ಧರ್ಮವೂ ಜಗತ್ತಿಗೆ ಪ್ರೀತಿ, ನಂಬಿಕೆ ಹಾಗೂ ವಿಶ್ವಾಸದ ಮೌಲ್ಯಗಳನ್ನು ನೀಡಿದ್ದು ನಾವು ಇತರರನ್ನು ಕಾಣುವಾಗ ನಮ್ಮ ಕಣ್ಣುಗಳಲ್ಲಿ ಅಪನಂಬಿಕೆಯ ದೃಷ್ಟಿಯನ್ನು ಬದಿಗೊತ್ತಿ ವಿಶ್ವಾಸದಿಂದ ಕಂಡಾಗ ಯಾವುದೇ ರೀತಿಯ ಸಮಸ್ಯೆಗೆ ಅವಕಾಶವಿರುವುದಿಲ್ಲ. ಪ್ರತಿಯೊಬ್ಬರು ಹೃದಯಗಳನ್ನು ಕತ್ತರಿಸುವ ಕತ್ತರಿಯಾಗದೆ ಪರಸ್ಪರ ಬೆಸೆಯುವ ಸೂಜಿ ನೂಲಾಗಬೇಕು. ತಾನು ಬೆಳೆಯುವುದರೊಂದಿಗೆ ಇನ್ನೊಬ್ಬರನ್ನು ಬೆಳೆಸಿದಾಗ ಪ್ರತಿಯೊಂದು ಧರ್ಮದ ಮೌಲ್ಯ ಹೆಚ್ಚಾಗುತ್ತದೆ ಎಂದರು. ಸಮನ್ವಯ ಸರ್ವಧರ್ಮ ಸೌಹಾರ್ದ ಸಮಿತಿ ತೊಟ್ಟಂ ಇದರ ಗೌರವಾಧ್ಯಕ್ಷ ವಂ. ಡೆನಿಸ್ ಡೆಸಾ ಪ್ರಾಸ್ತಾವಿಕ ಸಂದೇಶ ನೀಡಿದರು. ಕಾರ್ಯಕ್ರಮದಲ್ಲಿ ಸಮಾಜ ಸೇವೆಯೊಂದಿಗೆ ಜನರ ಕಷ್ಟಗಳಿಗೆ ದನಿಯಾಗುವ ಮುಳುಗು ತಜ್ಞ ಈಶ್ವರ ಮಲ್ಪೆ ಹಾಗೂ ಅವರ ತಂಡವನ್ನು ಹಾಗೂ ಇತ್ತೀಚೆಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ರಮೇಶ್ ತಿಂಗಳಾಯ ಮತ್ತು ರೆಜಿನಾಲ್ಡ್ ಫುರ್ಟಾಡೊ ಇವರನ್ನು ಗೌರವಿಸಲಾಯಿತು. ಸಿಎಸ್ಐ ಎಬನೇಜರ್ ಚರ್ಚ್ ಮಲ್ಪೆ ಇದರ ಸಭಾಪಾಲಕರಾದ ರೆ. ವಿನಯ್ ಸಂದೇಶ್, ಸಮನ್ವಯ ಸರ್ವಧರ್ಮ ಸೌಹಾರ್ದ ಸಮಿತಿ ತೊಟ್ಟಂನ ಉಪಾಧ್ಯಕ್ಷ ಯಾಹ್ಯಾ ನಕ್ವಾ, ತೊಟ್ಟಂ ಚರ್ಚಿನ ಅಂತರ ಧರ್ಮೀಯ ಸಂವಾದ ಆಯೋಗದ ಸಂಚಾಲಕ ಆಗ್ನೆಲ್ ಫೆರ್ನಾಂಡಿಸ್, ಜಮಾತೆ ಇಸ್ಲಾಮಿ ಹಿಂದ್ ಮಲ್ಪೆ ಘಟಕದ ಸಿರಾಜ್, ಕಥೊಲಿಕ್ ಸಭಾ ಕಾರ್ಯದರ್ಶಿ ಶಾಂತಿ ಪಿಕಾರ್ಡೊ, ಚರ್ಚ್ ಪಾಲನಾ ಮಂಡಳಿಯ ಉಪಾಧ್ಯಕ್ಷ ಲೆಸ್ಲಿ ಆರೋಝಾ, ಕಾರ್ಯದರ್ಶಿ ಬ್ಲೆಸಿಲ್ಲಾ ಕ್ರಾಸ್ತಾ, ಸ್ಥಳೀಯ ಕಾನ್ವೆಂಟಿನ ಸಿಸ್ಟರ್ ಸುಶ್ಮಾ, ಸೌಹಾರ್ದ ಸಮಿತಿ ಹಾಗೂ ಕಥೊಲಿಕ್ ಸಭಾದ ಪದಾಧಿಕಾರಿಗಳು ಉಪಸ್ಥಿತರಿದ್ದರು. ಕಥೊಲಿಕ್ ಸಭಾ ಅಧ್ಯಕ್ಷರಾದ ವೀಣಾ ಫೆರ್ನಾಂಡಿಸ್ ಸ್ವಾಗತಿಸಿ, ಸಮನ್ವಯ ಸರ್ವಧರ್ಮ ಸೌಹಾರ್ದ ಸಮಿತಿ ತೊಟ್ಟಂನ ಅಧ್ಯಕ್ಷ ರಮೇಶ್ ತಿಂಗಳಾಯ ವಂದಿಸಿದರು. ಲವೀನಾ ಫೆರ್ನಾಂಡಿಸ್ ಕಾರ್ಯಕ್ರಮ ನಿರೂಪಿಸಿದರು. ತೊಟ್ಟಂ ಚರ್ಚು, ಸಿಎಸ್ಐ ಚರ್ಚ್ ಮಲ್ಪೆ ಹಾಗೂ ಇತರರಿಂದ ವಿವಿಧ ರೀತಿಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
‘ಹೀರೋ’ ಆಹ್ಮದ್ ಶೌರ್ಯವನ್ನು ಶ್ಲಾಘಿಸಿದ ಆಸ್ಟ್ರೇಲಿಯ ಪ್ರಧಾನಿ
ಸಿಡ್ನಿ,ಡಿ.16: ನಗರದ ಬಾಂಡಿ ಬೀಚ್ನಲ್ಲಿ ಉಗ್ರಗಾಮಿಗಳು ನಡೆಸಿದ ಶೂಟೌಟ್ ಸಂದರ್ಭ, ಬಂದೂಕುಧಾರಿಯ ಜೊತೆ ಹೋರಾಡಿದ ‘ಹೀರೋ’, ಅಹ್ಮದ್ ಅಲ್ ಅಹ್ಮದ್ ಅವರನ್ನು ಆಸ್ಟ್ರೇಲಿಯದ ಪ್ರಧಾನಿ ಆ್ಯಂಥನಿ ಅಲ್ಬಾನಿಸ್ ಆಸ್ಪತ್ರೆಯಲ್ಲಿ ಭೇಟಿಯಾದರು. ಉಗ್ರನೊಂದಿಗೆ ಹೋರಾಡಿದ ಅವರ ಅಸಾಧಾರಣ ಶೌರ್ಯವನ್ನು ಮುಕ್ತಕಂಠದಿಂದ ಪ್ರಶಂಸಿಸಿದರು. ಗುಂಡಿನ ಗಾಯಗಳಿಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅಹ್ಮದ್ ರನ್ನು ತಾನು ಭೇಟಿಯಾದ ದೃಶ್ಯವಿರುವ ಛಾಯಾಚಿತ್ರವನ್ನು ಅಲ್ಬಾನಿಸ್ ಅವರು ಎಕ್ಸ್ನಲ್ಲಿ ಹಂಚಿಕೊಂಡಿದ್ದಾರೆ. ಜೀವದ ಹಂಗು ತೊರೆದು ಇತರರ ಪ್ರಾಣ ರಕ್ಷಿಸಲು ಧಾವಿಸಿದ ಅಹ್ಮದ್ ಅವರನ್ನು ‘ಆಸ್ಟ್ರೇಲಿಯದ ಹೀರೋ’ ಎಂದು ಬಣ್ಣಿಸಿದ ಅವರು, ಅವರ ಧೈರ್ಯ ಹಾಗೂ ನಿಸ್ವಾರ್ಥವನ್ನು ಶ್ಲಾಘಿಸಿದ್ದಾರೆ. ನಮ್ಮದು ಧೈರ್ಯಶಾಲಿ ರಾಷ್ಟ್ರ. ಅಹ್ಮದ್-ಅಲ್-ಅಹ್ಮದ್ ನಮ್ಮ ದೇಶದ ಶ್ರೇಷ್ಠತೆಯನ್ನು ಪ್ರತಿನಿಧಿಸುತ್ತಿದ್ದಾರೆ. ಉಗ್ರರ ಬಯಸುತ್ತಿರುವಂತೆ ನಮ್ಮ ದೇಶವು ವಿಭಜನೆಗೊಳ್ಳಲು ನಾವು ಆಸ್ಪದ ನೀಡಲಾರೆವು. ನಾವು ಒಗ್ಗೂಡುವೆವು, ಒಬ್ಬರನ್ನೊಬ್ಬರು ಆಲಂಗಿಸಿಕೊಳ್ಳುವೆವು ಎಂದವರು ಹೇಳಿದ್ದಾರೆ. ಅಹ್ಮದ್ ಅವರು ಉಗ್ರನ ಮೇಲೆ ಮುಗಿಬಿದ್ದು ಆತನನ್ನು ನಿರಾಯುಧಗೊಳಿಸಿದ ಸಂದರ್ಭ, ಇನ್ನೋರ್ವ ಉಗ್ರಗಾಮಿ ಗುಂಡುಹಾರಿಸಿದ್ದರಿಂದ ಗಾಯಗೊಂಡಿರುವ ಅವರು ಕೊಗಾರ್ನ ಸೈಂಟ್ ಜಾರ್ಜ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಗತ್ಯ ಬಿದ್ದಲ್ಲಿ ಮುಂದೆಯೂ ತಾನು ಹೋರಾಡಲು ಸಿದ್ಧನಿದ್ದೇನೆ ಎಂದು ಅಹ್ಮದ್ ಹೇಳುತ್ತಾರೆಂದು ಅವರ ವಕೀಲರಾದ ಸ್ಯಾಮ್ ಇಸ್ಸಾ ತಿಳಿಸಿದ್ದಾರೆ. ‘‘ಅಹ್ಮದ್ ಅವರ ಆರೋಗ್ಯ ಚೆನ್ನಾಗಿಲ್ಲ. ಗುಂಡೇಟುಗಳಿಂದ ಅವರ ದೇಹಜರ್ಝರಿತವಾಗದೆ. ಈ ಕ್ಷಣದಲ್ಲಿ ನಮ್ಮ ಹೀರೋ ಬಳಲುತ್ತಿದ್ದಾರೆ’’ಎಂದು ಅವರ ವಕೀಲರು ತಿಳಿಸಿದ್ದಾರೆ. ಬಂದೂಕುಧಾರಿಯು ಎಸೆದ ಗುಂಡುಗಳಿಂದಾಗಿ ಅಹ್ಮದ್ ಅವರ ಎಡಗೈಗೆ ಗಂಭೀರ ಏಟಾಗಿದೆ. ಅವರ ಎಡಭುಜದ ಪಕ್ಕೆಲುಬಿಗೆ ಹೊಕ್ಕಿರುವ ಬುಲೆಟ್ ಅನ್ನು ಇನ್ನಷ್ಟೇ ತೆಗೆಯಬೇಕಾಗಿದೆ. ಗಾಯಗಳ ತೀವ್ರತೆಯಿಂದಾಗಿ ಅಹ್ಮದ್ ಅವರು ಎಡಗೈಯನ್ನು ಕಳೆದುಕೊಳ್ಳಬೇಕಾದೀತೆಂದು ಅವರ ವಕೀಲರು ತಿಳಿಸಿದ್ದಾರೆ. ಅಹ್ಮದ್ರನ್ನು ಭೇಟಿಯಾದ ಬಳಿಕ ವರದಿಗಾರರ ಜೊತೆ ಮಾತನಾಡಿದ ಅಲ್ಬನೀಸ್ ಅವರು ‘ಆಸ್ಟ್ರೇಲಿಯದ ಹೀರೋ’ನ ಸಾಹಸವು, ದೇಶದ ಮೌಲ್ಯಗಳನ್ನು ಪ್ರತಿನಿಧಿಸುತ್ತದೆ ಹಾಗೂ ಭಯೋತ್ಪಾದನೆಯನ್ನು ಒಗ್ಗಟ್ಟಿನಿಂದ ಎದುರಿಸಬೇಕೆಂಬ ಬಲವಾದ ಸಂದೇಶವನ್ನು ನೀಡಿದೆ ಎಂದು ಆಸ್ಟ್ರೇಲಿಯ ಪ್ರಧಾನಿ ಆ್ಯಂಥನಿ ಅಲ್ಬಾನಿಸ್ನ ಹೇಳಿದರು. Ahmed, you are an Australian hero. You put yourself at risk to save others, running towards danger on Bondi Beach and disarming a terrorist. In the worst of times, we see the best of Australians. And that's exactly what we saw on Sunday night. On behalf of every Australian, I… pic.twitter.com/mAoObU3TZD — Anthony Albanese (@AlboMP) December 16, 2025
‘VB-G RAM G’ ಯೋಜನೆಯ ವಿರುದ್ಧ ನಾಳೆ(ಡಿ.17)ರಿಂದ ಕಾಂಗ್ರೆಸ್ ನಿಂದ ದೇಶಾದ್ಯಂತ ಪ್ರತಿಭಟನೆ
ಹೊಸದಿಲ್ಲಿ, ಡಿ. 16: MGNREGAದ ಸ್ಥಾನದಲ್ಲಿ ತರಲು ಕೇಂದ್ರ ಸರಕಾರ ಉದ್ದೇಶಿಸಿರುವ ಗ್ರಾಮೀಣ ಉದ್ಯೋಗ ಮಸೂದೆ ವಿಬಿ- ಜಿ ರಾಮ್ ಜಿ ವಿರುದ್ಧ ಬುಧವಾರ ದೇಶಾದ್ಯಂತ ಪ್ರತಿಭಟನೆ ಮಾಡಲು ಕಾಂಗ್ರೆಸ್ ನಿರ್ಧರಿಸಿದೆ. ಇದು ಹಕ್ಕು-ಆಧಾರಿತ ಕಲ್ಯಾಣ ಯೋಜನೆಯೊಂದನ್ನು ಕೆಡವಲು, ಮಹಾತ್ಮಾ ಗಾಂಧಿಯ ಪರಂಪರೆಯನ್ನು ಅಳಿಸಿಹಾಕಲು ಹಾಗೂ ಕಾರ್ಮಿಕರ ಹಕ್ಕುಗಳು ಮತ್ತು ಕೇಂದ್ರ ಸರಕಾರದ ಜವಾಬ್ದಾರಿಯನ್ನು ತೊಡೆದುಹಾಕಲು ಬಿಜೆಪಿ-RSS ನಡೆಸಿರುವ ಪಿತೂರಿಯಾಗಿದೆ ಎಂದು ಅದು ಆರೋಪಿಸಿದೆ. ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆಗಳನ್ನು ಏರ್ಪಡಿಸುವಂತೆ ಎಲ್ಲಾ ರಾಜ್ಯ ಕಾಂಗ್ರೆಸ್ ಘಟಕಗಳ ಅಧ್ಯಕ್ಷರುಗಳಿಗೆ ಬರೆದ ಪತ್ರವೊಂದರಲ್ಲಿ ಪಕ್ಷದ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಸೂಚಿಸಿದ್ದಾರೆ.
MGNREGAವು ಮೋದಿಯನ್ನು ಅಸ್ಥಿರಗೊಳಿಸುತ್ತಿತ್ತು: ಪ್ರಧಾನಿ ವಿರುದ್ಧ ರಾಹುಲ್ ಗಾಂಧಿ ತೀವ್ರ ವಾಗ್ದಾಳಿ
“ಮಹಾತ್ಮಾ ಗಾಂಧಿಯನ್ನು ದ್ವೇಷಿಸುವ ಮೋದಿ”
Mangaluru | ವಾಹನ, ಸರಗಳ್ಳತನ ಪ್ರಕರಣ: ಇಬ್ಬರು ಆರೋಪಿಗಳ ಬಂಧನ
ಮಂಗಳೂರು: ಅಂತರ್ ರಾಜ್ಯಗಳಲ್ಲಿ ವಾಹನ ಹಾಗೂ ಸರಗಳ್ಳತನ ನಡೆಸಿದ ಪ್ರಕರಣಗಳ ಇಬ್ಬರು ಆರೋಪಿಗಳನ್ನು ಮಂಗಳೂರು ನಗರ ಪೊಲೀಸರು ಬಂಧಿಸಿದ್ದಾರೆ. ತೋಟ ಪೈಸಲ್ ಮತ್ತು ಮೈಸೂರಿನ ವಿನಾಯಕ ನಗರದ ನಿತೀನ್ ಕುಮಾರ್ ಬಂಧಿತ ಆರೋಪಿಗಳು. ಆರೋಪಿಗಳಿಂದ ಸುಮಾರು 1,20,000 ರೂ. ಮೌಲ್ಯದ ಚಿನ್ನದ ಸರ ಮತ್ತು ಕೃತ್ಯಕ್ಕೆ ಬಳಿಸಿದ 45 ಸಾವಿರ ರೂ. ಮೌಲ್ಯದ ಬೈಕ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಡಿ.12ರಂದು ಯೆಯ್ಯಾಡಿಯ ಶ್ರೀ ಹರಿ ಕಾಂಪ್ಲೆಕ್ಸ್ ನ ಪಾರ್ಕಿಂಗ್ ಬಳಿ ನಿಲ್ಲಿಸಿದ್ದ ಬೈಕ್ ಕಳವು ಆಗಿರುವ ಬಗ್ಗೆ ಬಗ್ಗೆ ಕದ್ರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಈ ಬಗ್ಗೆ ಕದ್ರಿ ಅಫರಾಧ ವಿಭಾಗದ ಸಿಬ್ಬಂದಿಗೆ ದೊರೆತ ಖಚಿತ ಮಾಹಿತಿಯಂತೆ ಡಿ.16ರಂದು ಪ್ರಕರಣದ ಪ್ರಮುಖ ಆರೋಪಿ ಪೈಸಲ್ ಅಲಿಯಾಸ್ ತೋಟ ಪೈಸಲ್ ಮತ್ತು ನಿತೀನ್ ಕುಮಾರ್ ನನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಆರೋಪಿಗಳು ಡಿ.13ರಂದು ಭಟ್ಕಳ ಗ್ರಾಮಿಣ ಪೊಲೀಸ್ ಠಾಣಾ ಸರಹದ್ದಿನ ಗರ್ಡಿ ಹಿತ್ಲು ಬೆಳಕೆ ಎಂಬಲ್ಲಿ ವಯೋವೃದ್ಧೆ ಹೊನ್ನಮ್ಮ ಮಹಾದೇವ ನಾಯ್ಕ್ ಎಂಬವರ ಕುತ್ತಿಗೆಯಿಂದ ಚಿನ್ನದ ಚೈನ್ನ್ನು ಕಸಿದುಕೊಂಡು ಪರಾರಿಯಾದ ಪ್ರಕರಣದಲ್ಲಿ ಭಾಗಿಯಾಗಿರುವುದನ್ನು ಬಾಯಿ ಬಿಟ್ಟಿದ್ದಾರೆ. ಆರೋಪಿಗಳಿಂದ ಚಿನ್ನದ ಸರ ಮತ್ತು ಕೃತ್ಯಕ್ಕೆ ಬಳಸಿದ ಬೈಕನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಮಾಹಿತಿ ನೀಡಿದ್ದಾರೆ. ಪೈಸಲ್ ಅಲಿಯಾಸ್ ತೋಟ ಪೈಸಲ್ನ ವಿರುದ್ದ ಉಡುಪಿ ,ಕಾರ್ಕಳ, ಮಣಿಪಾಲ, ಮಂಗಳೂರು,ಬೆಳ್ತಂಗಡಿ, ವಿಟ್ಲ, ಕಂಕನಾಡಿ ನಗರ ಪೊಲೀಸ್ ಠಾಣೆ, ಪುತ್ತೂರು, ಶಿರ್ವ ಸುರತ್ಕಲ್, ಕಡಬ, ಕೊಣಾಜೆ, ಮಡಿಕೇರಿಯ ಕುಶಾಲ ನಗರ, ಹಾಗೂ ಕೇರಳ ರಾಜ್ಯಗಳಲ್ಲಿ , ದರೋಡೆ, ಕಳ್ಳತನದ ಮತ್ತು ಕೊಲೆ ಪ್ರಕರಣ ಸೇರಿದಂತೆ ಸುಮಾರು 42 ಪ್ರಕರಣಗಳು ದಾಖಲಾಗಿದೆ. ಈತನ ವಿರುದ್ದ ವಿವಿಧ ನ್ಯಾಯಾಲಯಗಳಲ್ಲಿ 10ಕ್ಕಿಂತಲೂ ಹೆಚ್ಚು ಜಾಮೀನು ರಹಿತ ವಾರೆಂಟ್ ಇದ್ದು, ನ್ಯಾಯಾಲಯಕ್ಕೆ ಹಾಜರಾಗದೇ ತಲೆ ತಪ್ಪಿಸಿಕೊಂಡಿದ್ದ ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ. ಮಂಗಳೂರು ಪೂರ್ವ ಪೊಲೀಸ್ ಠಾಣೆಯ ನಿರೀಕ್ಷಕರಾದ ಅನಂತ ಪದ್ಮನಾಭ, ಪಿಎಸ್ಐ ಮನೋಹರ್ ಪ್ರಸಾದ್, ಎ.ಎಸ್ಐಗಳಾದ ಚಂದ್ರಶೇಖರ್, ಸುಧಾಕರ್ ರಾವ್, ರಾಜಶೇಖರ್, ಎಚ್ಸಿಗಳಾದ ಲೋಕೆಶ್, ಸಂತೋಷ್ ಡಿ.ಕೆ. ಸುರೇಶ್, ದಿಲೀಪ್, ಮೋಹನ್, ಮಲ್ಲಪ್ಪ ಬಿ. ಮತ್ತು ಪಿಸಿಗಳಾದ ಸುನೀಲ್, ಮಣಿಕಂಠ, ಮೌಲಾ ಅಹಮ್ಮದ್ ಮತ್ತು ಮಂಜುನಾಥ ವಡ್ಡರ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
ನ್ಯೂಯಾರ್ಕ್,ಡಿ.16: ಗ್ರೀನ್ ಕಾರ್ಡ್ ಗಾಗಿನ ಸಂದರ್ಶನದ ಕೊನೆಯ ಸುತ್ತಿನ ವೇಳೆ ಅಮೆರಿಕದ ವಲಸೆ ಅಧಿಕಾರಿಗಳು 60 ವರ್ಷ ವಯಸ್ಸಿನ ಭಾರತೀಯ ಮೂಲದ ಮಹಿಳೆಯೊಬ್ಬರನ್ನು ಬಂಧಿಸಿದ ಘಟನೆ ವರದಿಯಾಗಿದೆ. ಬಬ್ಬಲ್ಜೀತ್ ಯಾನೆ ಬಬ್ಲಿ ಕೌರ್ ಬಂಧಿತ ಮಹಿಳೆಯಾಗಿದ್ದು, ಆಕೆ 1994ರಿಂದ ಅಮೆರಿಕದಲ್ಲಿ ವಾಸವಾಗಿದ್ದಾರೆ. ವಿಲೇವಾರಿಗೆ ಬಾಕಿಯಿದ್ದ ಅವರ ಗ್ರೀನ್ ಕಾರ್ಡ್ ಅರ್ಜಿಯ ಬಯೋಮೆಟ್ರಿಕ್ ಸ್ಕ್ಯಾನಿಂಗ್ ಸಂದರ್ಭ ಅವರನ್ನು ಫೆಡರಲ್ ಏಜೆಂಟರು ವಶಕ್ಕೆ ತೆಗೆದುಕೊಂಡರೆಂದು, ಕೌರ್ ಅವರ ಪುತ್ರಿ ಜ್ಯೋತಿ ತಿಳಿಸಿದ್ದಾರೆ. ಬಬ್ಲಿ ಕೌರ್ ಸಲ್ಲಿಸಿದ್ದ ಗ್ರೀನ್ ಕಾರ್ಡ್ ಅರ್ಜಿಯನ್ನು,ಅಮೆರಿಕ ಪ್ರಜೆಗಳಾದ ಆಕೆಯ ಇನ್ನೋರ್ವ ಪುತ್ರಿ ಹಾಗೂ ಅಳಿಯ ಅನುಮೋದಿಸಿದ್ದರು. ಡಿಸೆಂಬರ್ 1ರಂದು ಅಮೆರಿಕದ ವಲಸೆ ಹಾಗೂ ಕಸ್ಟಮ್ಸ್ ಜಾರಿ (ಐಸಿಇ) ಕಚೇರಿಯಲ್ಲಿದ್ದಾಗ ಹಲವಾರು ಫೆಡರಲ್ ಏಜೆಂಟರುಗಳು ಅಲ್ಲಿಗೆ ಆಗಮಿಸಿದ್ದರು. ಆಗ ಕಚೇರಿ ಅಧಿಕಾರಿಗಳು ಕೌರ್ ರನ್ನು ಫೆಡರಲ್ ಏಜೆಂಟರುಗಳಿದ್ದ ಇನ್ನೊಂದು ಕೊಠಡಿಗೆ ತೆರಳುವಂತೆ ಸೂಚಿಸಲಾಯಿತು. ಅಲ್ಲಿ ಆಕೆಯನ್ನು ಬಂಧಿಸಲಾಯಿತೆಂದು ಜ್ಯೋತಿ ತಿಳಿಸಿದ್ದಾರೆ. ಕೌರ್ರಿಗೆ ಅವರ ನ್ಯಾಯವಾದಿ ಜೊತೆ ದೂರವಾಣಿ ಮಾತುಕತೆ ನಡೆಸಲು ಅವಕಾಶ ನೀಡಲಾಗಿದೆ. ಆದರೆ ಆಕೆ ಇನ್ನೂ ಬಂಧನದಲ್ಲಿದ್ದಾರೆಂದು ಆಕೆಯ ಪುತ್ರಿ ತಿಳಿಸಿದ್ದಾರೆ. ಹಲವಾರು ತಾಸುಗಳವರೆಗೆ ಕೌರ್ ರನ್ನು ಎಲ್ಲಿಗೆ ಕರೆದುಕೊಂಡು ಹೋಗಲಾಗಿದೆಯೆಂಬ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡಿರಲಿಲ್ಲ. ಆದರೆ ಆನಂತರ ಆಕೆಯನ್ನು ಅಕ್ರಮವಾಗಿ ವಲಸಿಗರನ್ನು ಬಂಧನದಲ್ಲಿರಿಸಲು ಬಳಸಲಾಗುತ್ತಿದ್ದ ಹಳೆಯ ಫೆಡರಲ್ ಕಾರಾಗೃಹಕ್ಕೆ ಕೊಂಡೊಯ್ಯಲಾಗಿದೆಯೆಂದು ತಿಳಿದುಬಂದಿತೆಂದು ಜ್ಯೋತಿ ತಿಳಿಸಿದ್ದಾರೆ. ಎರಡು ದಶಕಗಳಿಂದ ಕೌರ್ ಹಾಗೂ ಆಕೆಯ ಪತಿ, ಅಮೆರಿಕ ಬೆಲ್ಮೊಂಟ್ ಶೋರ್ ಪ್ರದೇಶದಲ್ಲಿ ಹೊಟೇಲ್ ಒಂದನ್ನು ನಡೆಸುತ್ತಿದ್ದರು. ಅವರ ಉಪಾಹಾರ ಮಳಿಗೆ ಈ ವರ್ಷದ ಆರಂಭದಲ್ಲಿ ಮುಚ್ಚುಗಡೆಯಾದ ಬಳಿಕ ಅವರು ಫಾರ್ಮಸಿ ಮಳಿಗೆಯಲ್ಲಿ ಕೆಲಸ ಮಾಡಿದ್ದು. ತೀರಾ ಇತ್ತೀಚೆಗೆ ಅವರು ನ್ಯೂಯಾರ್ಕ್ನ ಭಾರತೀಯ ಹೊಟೇಲ್ ಒಂದರಲ್ಲಿ ಉದ್ಯೋಗಕ್ಕೆ ಸೇರಲು ಸಿದ್ದತೆ ನಡೆಸುತ್ತಿದ್ದರು. ಈ ಮಧ್ಯೆ ಕೌರ್ ಬಂಧನಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದು, ಡೆಮಾಕ್ರಾಟಿಕ್ ಪಕ್ಷದ ಸಂಸದ ರಾಬರ್ಟ್ ಅವರು ಕೌರ್ ರನ್ನು ತಕ್ಷಣವೇ ಬಿಡುಗಡೆಗೊಳಿಸಬೇಕೆಂದು ಆಗ್ರಹಿಸಿದ್ದಾರೆ. ರಾಬರ್ಟ್ ಅವರು ಫೆಡರಲ್ ಅಧಿಕಾರಿಗಳ ಜೊತೆ ಸಂಪರ್ಕದಲ್ಲಿರುವುದಾಗಿ ಅವರ ಕಚೇರಿಯ ಮೂಲಗಳು ತಿಳಿಸಿವೆ.
ಭಯೋತ್ಪಾದನೆಗೆ ಆಶ್ರಯ ಅಂತ್ಯಗೊಳಿಸುವ ತನಕ ಸಿಂಧೂ ನದಿ ಜಲ ಒಪ್ಪಂದ ಸ್ಥಗಿತ: ಭದ್ರತಾ ಮಂಡಳಿಯಲ್ಲಿ ಭಾರತ ಪುನರುಚ್ಚಾರ
ವಿಶ್ವಸಂಸ್ಥೆ,ಡಿ.16: ಪಾಕಿಸ್ತಾನವು ಮತ್ತೊಮ್ಮೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಜಮ್ಮುಕಾಶ್ಮೀರ ವಿಷಯವನ್ನು ಅನಪೇಕ್ಷಿತವಾಗಿ ಪ್ರಸ್ತಾವಿಸಿರುವುದನ್ನು ಹಾಗೂ ಆ ಕೇಂದ್ರಾಡಳಿತ ಪ್ರದೇಶದ ಮೇಲಿನ ಅದರ ಹಕ್ಕೊತ್ತಾಯವನ್ನು ಭಾರತವು ಸೋಮವಾರ ತೀವ್ರವಾಗಿ ಖಂಡಿಸಿದೆ. ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಕ್, ಯಾವತ್ತೂ ಭಾರತದ ಅವಿಭಾಜ್ಯ ಅಂಗವಾಗಿದೆ ಹಾಗೂ ಸದಾ ಕಾಲವೂ ಹಾಗೆಯೇ ಇರಲಿದೆ ಎಂದು ವಿಶ್ವಸಂಸ್ಥೆಯಲ್ಲಿನ ಭಾರತದ ರಾಯಭಾರಿ ಹರೀಶ್ ಪರ್ವತನೇನಿ ತಿಳಿಸಿದ್ದಾರೆ. ಮಾಜಿ ಪ್ರಧಾನಿ ಇಮ್ರಾನ್ ಖಾನ್ ಬಂಧನ ಹಾಗೂ ಅವರ ಪಾಕಿಸ್ತಾನ್ ತೆಹ್ರೀಕೆ ಇನ್ಸಾಫ್ ಪಕ್ಷವನ್ನು ನಿಷೇಧ ಮತ್ತು ಪಾಕ್ ಸಂವಿಧಾನದ 27ನೇ ತಿದ್ದುಪಡಿಯ ಮೂಲಕ ರಕ್ಷಣಾ ಪಡೆಗಳ ವರಿಷ್ಠ ಆಸೀಮ್ ಮುನೀರ್ರಿಗೆ ಕಾನೂನುಕ್ರಮಗಳಿಂದ ಅಜೀವ ರಕ್ಷಣೆ ನೀಡಿರುವುನ್ನು ಅವರು ಟೀಕಿಸಿದ್ದಾರೆ. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ‘ಶಾಂತಿಗಾಗಿ ನಾಯಕತ್ವ’ ಕುರಿತ ಚರ್ಚಾಗೋಷ್ಠಿಯಲ್ಲಿ ಪಾಕಿಸ್ತಾನವು ಭಾರತ ಹಾಗೂ ಅದರ ಪ್ರಜೆಗಳಿಗೆ ಹಾನಿಯೆಸಗುವ ಬಗ್ಗೆ ಗಮನಹರಿಸುವುದನ್ನೇ ಗೀಳಾಗಿಸಿಕೊಂಡಿದೆ ಎಂದು ಪರ್ವತನೇನಿ ಖಂಡಿಸಿದರು. ಜಾಗತಿಕ ಭಯೋತ್ಪಾದನೆಗೆ ಪಾಕಿಸ್ತಾನವು ಕೇಂದ್ರ ಬಿಂದುವಾಗಿದ್ದು ಎಂದು ಬಣ್ಣಿಸಿದ ಪರ್ವತನೇನಿ ಆ ದೇಶದ ಜೊತೆ ಸಿಂಧೂ ನದಿ ಜಲ ಹಂಚಿಕೆ ಒಪ್ಪಂದವನ್ನು ಕೊನೆಗೊಳಿಸಿದ್ದನ್ನು ಸಮರ್ಥಿಸಿಕೊಂಡರು. ಭದ್ರತಾ ಮಂಡಳಿಯಲ್ಲಿ ನಡೆದ ಶಾಂತಿಗಾಗಿ ನಾಯಕತ್ವ ಚರ್ಚಾಗೋಷ್ಠಿಯಲ್ಲಿ ಪಾಕ್ ರಾಯಭಾರಿ ಆಸೀಮ್ ಇಫ್ತಿಕಾರ್ ಅಹ್ಮದ್ ಅವರು ಜಮ್ಮುಕಾಶ್ಮೀರವು ಬಗೆಹರಿಯದ ವಿವಾದ ಎಂದು ಪುನರುಚ್ಚರಿಸಿರುವುದಕ್ಕೆ ಪ್ರತಿಯಾಗಿ ಪರ್ವತನೇನಿ ಈ ಕಟು ಪ್ರತಿಕ್ರಿಯೆ ನೀಡಿದ್ದಾರೆ. ‘‘ಜಮ್ಮುಕಾಶ್ಮೀರ ವಿವಾದವು ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಅತ್ಯಂತ ಹಳೆಯ ಕಾರ್ಯಸೂಚಿಗಳಲ್ಲಿ ಒಂದಾಗಿದೆ. ವಿಶ್ವಸಂಸ್ಥೆಯ ಸನದು ಹಾಗೂ ಭದ್ರತಾ ಮಂಡಳಿಯ ನಿರ್ಣಯಗಳಿಗೆ ಮತ್ತು ಜಮ್ಮುಕಾಶ್ಮೀರದ ಜನತೆಯ ಇಚ್ಛೆಗೆ ಅನುಗುಣವಾಗಿ ಅದು ಇತ್ಯರ್ಥವಾಗಬೇಕಿದೆ ಎಂದು ಅಹ್ಮದ್ ಹೇಳಿದ್ದರು. ‘ಉತ್ತಮ ವಿಶ್ವಾಸ, ಸದ್ಭಾವನೆ ಹಾಗೂ ಮಿತ್ರತ್ವದೊಂದಿಗೆ ಭಾರತವು ಪಾಕ್ ಜೊತೆ ಸಿಂಧೂ ನದಿ ನೀರು ಹಂಚಿಕೆ ಒಪ್ಪಂದವನ್ನು ಏರ್ಪಡಿಸಿಕೊಂಡಿತ್ತು. ಆದರೂ ಆರೂವರೆ ದಶಕಗಳುದ್ದಕ್ಕೂ ಪಾಕಿಸ್ತಾನವು ಮೂರು ಯುದ್ಧಗಳು ಹಾಗೂ ಸಾವಿರಾರು ಭಯೋತ್ಪಾದಕ ದಾಳಿಗಳನ್ನು ನಡೆಸುವ ಮೂಲಕ ಒಪ್ಪಂದದ ಆಶಯವನ್ನು ಉಲ್ಲಂಘಿಸಿದೆ’’ ಎಂದು ವಿಶ್ವಸಂಸ್ಥೆಯಲ್ಲಿ ಭಾರತದ ರಾಯಭಾರಿ ಹರೀಶ್ ಪರ್ವತನೇನಿ ಹೇಳಿದರು. ►ಭಾಷಣದ ಮುಖ್ಯಾಂಶಗಳು -ಕಳೆದ ನಾಲ್ಕು ದಶಕಗಳಲ್ಲಿ ಪಾಕ್ ಪ್ರಾಯೋಜಿತ ಭಯೋತ್ಪಾದಕ ದಾಳಿಗಳಿಂದ ಸಾವಿರಾರು ಭಾರತೀಯರು ಪ್ರಾಣ ಕಳೆದುಕೊಂಡಿದ್ದಾರೆ. ಭಾರತವು ಏಕಪಕ್ಷೀಯವಾಗಿ ಸಿಂಧೂ ನದಿ ಒಪ್ಪಂದವನ್ನು ಅಮಾನತಿನಲ್ಲಿರಿಸಿರುವುದು ಅಂತಾರಾಷ್ಟ್ರೀಯ ಬಾಧ್ಯತೆಗಳ ಘೋರ ಉಲ್ಲಂಘನೆಯೆಂದು ಪಾಕಿಸ್ತಾನ ಬಣ್ಣಿಸಿತ್ತು. ಪಾಕಿಸ್ತಾನವು ಗಡಿಯಾಚೆಗಿನ ಭಯೋತ್ಪಾದನೆ ಮತ್ತಿತರ ವಿಧದ ಉಗ್ರವಾದಕ್ಕೆ ಬೆಂಬಲವನ್ನು ವಿಶ್ವಸನೀಯವಾಗಿ ಹಾಗೂ ಶಾಶ್ವತವಾಗಿ ಕೊನೆಗೊಳಿಸುವವರೆಗೆ ಸಿಂಧೂ ನದಿ ನೀರಿನ ಒಪ್ಪಂದವನ್ನು ಅಮಾನತಿನಲ್ಲಿಡುವುದಾಗಿ ಭಾರತವು ಅಂತಿಮವಾಗಿ ಘೋಷಿಸಿದೆ.
ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಶಿಕ್ಷಣದ ಅಭಿವೃದ್ಧಿಗೆ ಸಂಬಂಧಿಸಿದಂತೆ ತಜ್ಞರ ಸಮಿತಿ ವರದಿ ಸಲ್ಲಿಕೆ
ಬೆಳಗಾವಿ : ಕಲ್ಯಾಣ ಕರ್ನಾಟಕ ಭಾಗದಲ್ಲಿ ಶಿಕ್ಷಣದ ಸಮಗ್ರ ಅಭಿವೃದ್ಧಿಗಾಗಿ ರಚಿಸಲಾಗಿದ್ದ ಶಿಕ್ಷಣ ತಜ್ಞರ ಸಮಿತಿಯು ತನ್ನ ವರದಿಯನ್ನು ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬೆಳಗಾವಿಯ ಸುವರ್ಣಸೌಧದಲ್ಲಿ ಸಲ್ಲಿಸಿತು. ವರದಿಯ ಮುಖ್ಯಾಂಶಗಳು: ಕಲ್ಯಾಣ ಕರ್ನಾಟಕ ಪ್ರದೇಶವು ತನ್ನ ವ್ಯಾಪ್ತಿಯಲ್ಲಿರುವ ಒಟ್ಟು ಶಾಲೆಗಳಲ್ಲಿ, ಸರಕಾರಿ ಶಾಲೆಗಳ ಪಾಲು (57.35%) ಹೊಂದಿದ್ದು, ನಂತರದ ಸ್ಥಾನದಲ್ಲಿ ಖಾಸಗಿ ಶಾಲೆಗಳು (33.42%) ಇವೆ. ಮುಂದಿನ ತರಗತಿಗಳಿಗೆ ತೇರ್ಗಡೆ ಹೊಂದುವ ವಿದ್ಯಾರ್ಥಿಗಳ ಪ್ರಮಾಣ 7ನೇ ತರಗತಿ ಬಳಿಕ ನಿರಂತರವಾಗಿ ಕಡಿಮೆಯಾಗುತ್ತಿದೆ. 9 ರಿಂದ 10ನೇ ತರಗತಿಗೆ ತೇರ್ಗಡೆ ಶೇ.12ರಷ್ಟು ವಿದ್ಯಾರ್ಥಿಗಳಿಗೆ ಸಾಧ್ಯವಾಗುತ್ತಿಲ್ಲ. ಈ ಪ್ರದೇಶದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ 17,274 ಹುದ್ದೆಗಳು (ಒಟ್ಟು ಹುದ್ದೆಗಳ 38.2%) ಮತ್ತು ಪ್ರೌಢಶಾಲಾ ಶಿಕ್ಷಕರ 4,107 ಹುದ್ದೆಗಳು (34.8%) ಖಾಲಿ ಇರುತ್ತವೆ. ಇದರಿಂದ ಪ್ರಾಥಮಿಕ ಹಂತದಿಂದಲ್ಲೇ ಶಿಕ್ಷಣದ ಗುಣಮಟ್ಟಕ್ಕೆ ಹಾನಿಯಾಗುತ್ತಿದೆ. ಈ ಪ್ರದೇಶದ ಮೊದಲ ಹಂತದ ಎಸ್ಸೆಸೆಲ್ಸಿ ಪರೀಕ್ಷೆಯಲ್ಲಿ ಒಟ್ಟಾರೆ ಉತ್ತೀರ್ಣ ಪ್ರಮಾಣವು 53.40 ಶೇಕಡಾ ಆಗಿದ್ದು, ರಾಜ್ಯದ ಸರಾಸರಿ 66.14 ಶೇಕಡಾ ಆಗಿದೆ. ಇದು ಕಲಬುರಗಿ ಜಿಲ್ಲೆಯಲ್ಲಿ ಅತಿ ಕಡಿಮೆ – 42.43 ಶೇಕಡಾ ಆಗಿದೆ. ರಾಜ್ಯ ಮಟ್ಟದಲ್ಲಿ ಮೂರು ಪರೀಕ್ಷೆಗಳ ಸರಾಸರಿ ಫಲಿತಾಂಶ 79.97 ಶೇಕಡಾ ಆಗಿದ್ದು, ವಿಜಯನಗರ ಜಿಲ್ಲೆಯನ್ನು ಹೊರತುಪಡಿಸಿ ಉಳಿದ ಎಲ್ಲಾ ಜಿಲ್ಲೆಗಳು ರಾಜ್ಯ ಸರಾಸರಿಗಿಂತ ಕಡಿಮೆ ಫಲಿತಾಂಶ ದಾಖಲಿಸಿವೆ. ಕಡಿಮೆ ಸಾಧನೆಗೆ ಕಾರಣಗಳು: ವಿಷಯ ಶಿಕ್ಷಕರನ್ನೂ ಒಳಗೊಂಡಂತೆ ಶಿಕ್ಷಕರ ಕೊರತೆ ಇರುವುದು, ಬೋಧನಾ ವಿಧಾನಗಳಲ್ಲಿ ಕಡಿಮೆ ಮಟ್ಟದ ಸಾಮರ್ಥ್ಯ ವೃದ್ಧಿ, ಸೂಕ್ತ ತರಬೇತಿಯಿಲ್ಲದ ಅತಿಥಿ ಶಿಕ್ಷಕರೇ ಹೆಚ್ಚಾಗಿರುವುದು, ಪರಿಣತ ಅಧ್ಯಾಪಕರ ಕೊರತೆಯಿಂದಾಗಿ ಡಯಟ್ ಸಂಸ್ಥೆಗಳ ಪರಿಣಾಮಕಾರಿ ಕಾರ್ಯನಿರ್ವಹಣೆಯ ಕೊರತೆ, ಬಿಆರ್ಸಿ ಮತ್ತು ಸಿಆರ್ಸಿ ಗಳಿಂದ ಸಮರ್ಪಕ ಗುಣಮಟ್ಟದ ಶೈಕ್ಷಣಿಕ ಮಾರ್ಗದರ್ಶನದ ಕೊರತೆ, ಹಾಗೂ ಶಾಲಾ ಕಾರ್ಯನಿರ್ವಹಣೆಯ ಮೇಲ್ವಿಚಾರಣೆ ಮತ್ತು ಪರಿಶೀಲನೆಯಲ್ಲಿ ದುರ್ಬಲತೆ ಇರುವುದು ಫಲಿತಾಂಶ ಕಳಪೆಯಾಗಲು ಕಾರಣವಾಗಿವೆ ಎಂದು ಸಮಿತಿ ತಿಳಿಸಿದೆ.. ಸಮಿತಿಯ ಪ್ರಮುಖ ಶಿಫಾರಸ್ಸುಗಳು: ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ತರಬೇತಿ ಪಡೆದ ಶಿಕ್ಷಕರ ಲಭ್ಯತೆ ಖಚಿತಪಡಿಸಲು ವರ್ಗಾವಣೆ ನೀತಿಯ ಪರಿಶೀಲನೆ ನಡೆಸುವ ಅಗತ್ಯವಿದೆ. ಮೂಲಭೂತ ಸಾಕ್ಷರತೆ ಮತ್ತು ಗಣಿತಜ್ಞತೆ ಕಾರ್ಯಕ್ರಮದ ಪರಿಣಾಮಕಾರಿ ಮತ್ತು ಫಲಿತಾಂಶಾಧಾರಿತ ಅನುಷ್ಠಾನಕ್ಕೆ ತಂತ್ರ ರೂಪಿಸುವುದು. ಮಾಧ್ಯಮಿಕ ಶಿಕ್ಷಣಕ್ಕೆ ಪ್ರವೇಶ ಸುಧಾರಿಸಲು ಸಾಧ್ಯವಿರುವ ಮತ್ತು ಕಾರ್ಯನಿರ್ವಹಣೆಯಲ್ಲಿರುವ ಕಡೆಗಳಲ್ಲಿ ಹಿರಿಯ ಪ್ರಾಥಮಿಕ ಶಾಲೆಗಳನ್ನು ಪ್ರೌಢಶಾಲೆಗಳಾಗಿ ಮೇಲ್ದರ್ಜೆಗೇರಿಸುವುದು. ಕೆಳ ಹಂತದಲ್ಲಿ ಕಲಿಕಾ ಪ್ರಕ್ರಿಯೆಯನ್ನು ಸುಧಾರಿಸಲು ಕ್ರಮ ಕೈಗೊಳ್ಳುವುದು. 1–3ನೇ ತರಗತಿಗಳಲ್ಲಿ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಿ, ಮುಂದಿನ ತರಗತಿಗಳಲ್ಲಿಯೂ ಅವುಗಳನ್ನು ನಿರಂತರವಾಗಿರಿಸುವುದು. ಮಧ್ಯವರ್ತಿ ಕಲಿಕಾ ವಿಧಾನಗಳು 4ನೇ ತರಗತಿಯಿಂದ ಆರಂಭವಾಗಬೇಕು. ನಿಧಾನ ಕಲಿಯುವ ವಿದ್ಯಾರ್ಥಿಗಳಿಗೆ ವೈಯಕ್ತಿಕ ಬೆಂಬಲ ಒದಗಿಸಬೇಕು. ಶಾಲೆಗಳು ಮತ್ತು ಶಿಕ್ಷಕರಿಗೆ ಕಲಿಕಾ ಫಲಿತಾಂಶ ಗುರಿಗಳೊಂದಿಗೆ ಸ್ವಾಯತ್ತತೆ ಮತ್ತು ಜವಾಬ್ದಾರಿ ನೀಡುವುದು ಹಾಗೂ ಶಾಲೆಗಳಿಗೆ ನಿರ್ದಿಷ್ಟ ಕಾರ್ಯಯೋಜನೆಗಳನ್ನು ರೂಪಿಸುವುದು. ಆರಂಭಿಕ ಬಾಲ್ಯ ಶಿಕ್ಷಣಕ್ಕೆ ಬೇಡಿಕೆ ಇದ್ದು, ಇಂಗ್ಲಿಷ್ ಮಾಧ್ಯಮದಲ್ಲಿ ವಿದ್ಯಾಭ್ಯಾಸ ಮಾಡಿದ ಅಥವಾ ಸಮರ್ಪಕ ಇಂಗ್ಲಿಷ್ ಜ್ಞಾನ ಹೊಂದಿದ ಶಿಕ್ಷಕರನ್ನು ಈ ತರಗತಿಗಳಿಗೆ ವರ್ಗಾಯಿಸಬೇಕು. ಆರಂಭಿಕ ಬಾಲ್ಯ ಶಿಕ್ಷಣವನ್ನು ಐಸಿಡಿಎಸ್ ಜೊತೆ ಸಂಯೋಜಿಸಿ ಜಾರಿ ಮಾಡಬೇಕು. ಪ್ರಸ್ತುತ ನಲಿ–ಕಲಿ ಕಾರ್ಯಕ್ರಮದಲ್ಲಿ ಅನೇಕ ಶೈಕ್ಷಣಿಕ, ಮೂಲಸೌಕರ್ಯ ಮತ್ತು ಸಂಪನ್ಮೂಲಗಳಲ್ಲಿ ಕೊರತೆಗಳಿದ್ದು, ಇದನ್ನು ಸುಧಾರಿಸಬೇಕು. ಕರ್ನಾಟಕ ಪಬ್ಲಿಕ್ ಶಾಲೆಗಳು (KPS) ಈ ಪ್ರದೇಶದಲ್ಲಿ ಹೆಚ್ಚಿನ ಉಪಯೋಗ ಮತ್ತು ಸಾಮರ್ಥ್ಯ ಹೊಂದಿದ್ದು, ಇದು ಮಕ್ಕಳು ಶಾಲೆಯಿಂದ ಹೊರಗುಳಿಯುವುದನ್ನು ಕಡಿಮೆ ಮಾಡುತ್ತದೆ. ಮುಂದಿನ ಐದು ವರ್ಷಗಳಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ 350 ಕೆಪಿಎಸ್ ಸ್ಥಾಪಿಸುವಂತೆ ಶಿಫಾರಸು ಮಾಡಲಾಗಿದೆ, ಇದರಲ್ಲಿ 200 ಶಾಲೆಗಳನ್ನು ಮಂಡಳಿಯಡಿಯಲ್ಲಿ ಸ್ಥಾಪಿಸಬೇಕು. ವಿಜಯನಗರ ಜಿಲ್ಲೆಯಲ್ಲಿ DIET ಸ್ಥಾಪಿಸಬೇಕು. ಹೆಚ್ಚಿನ ದಾಖಲಾತಿಯಿರುವ ಹೊಸ ತಾಲ್ಲೂಕುಗಳಲ್ಲಿ 14 ಬಿಇಒ ಕಚೇರಿಗಳನ್ನು ಸ್ಥಾಪಿಸುವಂತೆ ಶಿಫಾರಸು ಮಾಡಲಾಗಿದೆ. ಶಾಲೆ ಬಿಡುವುದು ಮತ್ತು ಗೈರುಹಾಜರಿ ಕಡಿಮೆ ಮಾಡಲು ಹಾಗೂ ಬಾಲ್ಯ ವಿವಾಹಗಳನ್ನು ತಡೆಗಟ್ಟಲು ಹಾಗು ಸಿದ್ದತೆ ತಡೆಯಲು ಸಮುದಾಯದ ಭಾಗವಹಿಸುವಿಕೆ ಅತ್ಯಗತ್ಯವಾಗಿದೆ. ಯೋಜನೆಗಳ ಪರಿಣಾಮಗಳ ಮೌಲ್ಯಮಾಪನ, ಶಾಲಾ ಕಾರ್ಯಕ್ಷಮತೆ ಮತ್ತು ಗುಣಮಟ್ಟದ ಶಿಕ್ಷಣ ಗುರಿಗಳನ್ನು ಆಧರಿಸಿ ದೀರ್ಘಕಾಲೀನ ಯೋಜನೆ ಸಿದ್ಧ ಪಡಿಸಬೇಕು. ಎಲ್ಲಾ ಕಾರ್ಯಕ್ರಮಗಳ ಅನುಷ್ಠಾನದ ಗುಣಮಟ್ಟ ಪರಿಶೀಲನೆಯನ್ನು ಎರಡು ವರ್ಷಕ್ಕೊಮ್ಮೆ ನಡೆಸಬೇಕು ಎಲ್ಲಾ ಸರಕಾರಿ ಶಾಲೆಗಳಲ್ಲಿ ಕಲಿಕಾ ಖಾತರಿ ಕಾರ್ಯಕ್ರಮವನ್ನು ಕೆಕೆಆರ್ಡಿಬಿ ವತಿಯಿಂದ ಜಾರಿಗೆ ತರಲು ಶಿಫಾರಸ್ಸು ಮಾಡಲಾಗಿದೆ. ಹಾಜರಾತಿ ಮತ್ತು ಕಲಿಕಾ ಫಲಿತಾಂಶ ಗುರಿಗಳನ್ನು ಸಾಧಿಸಿದ ಶಾಲೆಗಳಿಗೆ ಪ್ರಶಸ್ತಿ ಮತ್ತು ಗೌರವ ನೀಡುವ ಮೂಲಕ ಉತ್ತಮ ಸಾಧನೆ ಮಾಡುವ ಶಾಲೆಗಳು, ಶಿಕ್ಷಕರು, ಮುಖ್ಯಶಿಕ್ಷಕರು ಮತ್ತು ಕಾರ್ಯನಿರ್ವಹಕರನ್ನು ಉತ್ತೇಜಿಸುವ ಕಾರ್ಯಕ್ರಮ ಇದಾಗಿದೆ. ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯು ತನ್ನ ಒಟ್ಟು ಬಜೆಟ್ನ ಶೇ. 2 5ರಷ್ಟು ಶಿಕ್ಷಣಕ್ಕೆ ಮೀಸಲಿಟ್ಟಿದೆ. ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಸಮಗ್ರ ಮತ್ತು ಗುಣಮಟ್ಟದ ಶಿಕ್ಷಣ ಅಭಿವೃದ್ಧಿಗೆ ತಜ್ಞರ ಸಲಹೆ ಪಡೆಯುವ ಉದ್ದೇಶದಿಂದ, ಸರಕಾರ ಫೆಬ್ರವರಿ 2025ರಲ್ಲಿ ಶಿಕ್ಷಣ ತಜ್ಞರಾದ ಡಾ.ಛಾಯಾ ದೇಗಾಂವಕರ ಅಧ್ಯಕ್ಷತೆಯಲ್ಲಿ ಡಾ.ಅಬ್ದುಲ್ ಖಾದಿರ್, ಮಲ್ಲಿಕಾರ್ಜುನ ಎಂ.ಎಸ್., ಫಾ.ಫ್ರಾನ್ಸಿಸ್ ಬಾಷ್ಯಂ, ಡಾ.ರುದ್ರೇಶ್ ಎಸ್., ಎನ್.ಬಿ. ಪಾಟೀಲ್, ಯಶವಂತ್ ಹರಸೂರ್ ಮತ್ತು ಡಾ. ನಾಗಬಾಯಿ ಬಿ. ಬುಳ್ಳಾ ಇವರನ್ನು ಒಳಗೊಂಡು ಸಮಿತಿಯನ್ನು ರಚಿಸಿತ್ತು. ಸಮಿತಿಯು ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳ ಸುಮಾರು 100 ಸರಕಾರಿ ಶಾಲೆಗಳ ಕ್ಷೇತ್ರ ಭೇಟಿಗಳ ಮೂಲಕ ಮಾಹಿತಿ ಪಡೆದು ಸಮಗ್ರ ಅಧ್ಯಯನ ವರದಿಯನ್ನು ಸಿದ್ದಪಡಿಸಿದೆ.
ಕೇಂದ್ರ ಸರಕಾರದ ದ್ವೇಷ ರಾಜಕಾರಣ ಖಂಡಿಸಿ ನಾಳೆ ಪ್ರತಿಭಟನೆ : ಡಿಸಿಎಂ ಡಿ.ಕೆ.ಶಿವಕುಮಾರ್
ಬೆಂಗಳೂರು : ಕೇಂದ್ರ ಸರಕಾರವು ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರ ವಿರುದ್ಧ ಮಾಡುತ್ತಿರುವ ದ್ವೇಷ ರಾಜಕಾರಣ ಖಂಡಿಸಿ ಕಾಂಗ್ರೆಸ್ ಪಕ್ಷ ಬುಧವಾರ ಪ್ರತಿಭಟನೆ ಹಮ್ಮಿಕೊಂಡಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು. ಸುವರ್ಣ ವಿಧಾನಸೌಧದಲ್ಲಿ ಮಂಗಳವಾರ ಮಾಧ್ಯಮಗಳಿಗೆ ಕೆಪಿಸಿಸಿ ಅಧ್ಯಕ್ಷರೂ ಆದ ಶಿವಕುಮಾರ್ ಅವರು ಪ್ರತಿಕ್ರಿಯೆ ನೀಡಿದರು. ಬುಧವಾರ ಬೆಳಗ್ಗೆ 9.30ಕ್ಕೆ ಬೆಳಗಾವಿ ಸುವರ್ಣ ವಿಧಾನಸೌಧದ ಆವರಣದಲ್ಲಿರುವ ಮಹಾತ್ಮ ಗಾಂಧಿ ಪ್ರತಿಮೆ ಬಳಿ ಧರಣಿ ಮಾಡಲಾಗುವುದು. ಈ ಪ್ರತಿಭಟನೆಯಲ್ಲಿ ಸಿಎಂ, ನಾನು, ನಮ್ಮ ಸಚಿವರು ಭಾಗವಹಿಸಲಿದ್ದೇವೆ. ನಂತರ ಸದನದಲ್ಲೂ ನಾವು ಇದನ್ನು ಚರ್ಚೆ ಮಾಡುತ್ತೇವೆ. ಬೆಂಗಳೂರಿನ ವಿವಿಧ ಕಡೆಗಳಲ್ಲಿ ಪ್ರತಿಭಟನೆ ನಡೆಸಲಾಗುವುದು. ಶನಿವಾರ ಪ್ರತ್ಯೇಕ ಕಾರ್ಯಕ್ರಮ ರೂಪಿಸುತ್ತೇವೆ. ಪಕ್ಷದ ಎಲ್ಲಾ ಶಾಸಕರು, ಪರಿಷತ್ ಸದಸ್ಯರು ಹೋರಾಟದಲ್ಲಿ ಭಾಗವಹಿಸಬೇಕು ಎಂದು ಕರೆ ನೀಡಿದರು. ಬೆಂಗಳೂರು ಸೇರಿದಂತೆ ಜಿಲ್ಲಾ ಹಾಗೂ ತಾಲ್ಲೂಕು ಕೇಂದ್ರಗಳಲ್ಲಿ ನಾಳೆ ಪ್ರತಿಭಟನೆ ಮಾಡಲು ಕರೆ ನೀಡಲಾಗಿದೆ ಎಂದು ತಿಳಿಸಿದರು. ನ್ಯಾಷನಲ್ ಹೆರಾಲ್ಡ್ ಕಾಂಗ್ರೆಸ್ ಪಕ್ಷದ ಆಸ್ತಿ. ನೆಹರು ಅವರು 1937ರಲ್ಲಿ ನ್ಯಾಷನಲ್ ಹೆರಾಲ್ಡ್ ಸಂಸ್ಥೆ ಸ್ಥಾಪಿಸಿದರು. ಇದರ ಷೇರು ಕಾಂಗ್ರೆಸ್ ಪಕ್ಷದ ಅಧ್ಯಕ್ಷರು ಇಟ್ಟುಕೊಳ್ಳದೆ ಬೇರೆ ಯಾರು ಇಟ್ಟುಕೊಳ್ಳಲು ಸಾಧ್ಯ? ಅದನ್ನು ಮುಟ್ಟುಗೊಲು ಹಾಕಿಕೊಂಡು, ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರಿಗೆ ಕೊಡಬಾರದ ಕಿರುಕುಳ ನೀಡುತ್ತಿದ್ದಾರೆ. ನಾವು ಪಕ್ಷದ ಕಾರ್ಯಕರ್ತರಾಗಿ ಪಕ್ಷದ ಸಂಸ್ಥೆಗೆ ದೇಣಿಗೆ ನೀಡಿದ್ದೇವೆ ಎಂದು ಹೇಳಿದರು. ಇಂದು ಮಾನ್ಯ ನ್ಯಾಯಾಲಯ ನೀವು ದಾಖಲಿಸಿರುವ ಪ್ರಕರಣ ಸರಿ ಇಲ್ಲ ಎಂದು ವಜಾಗೊಳಿಸಿದೆ. ದೇಶದಲ್ಲಿ ನ್ಯಾಯಾಲಯ ಜೀವಂತವಾಗಿದೆ ಎಂಬುದಕ್ಕೆ ಇದೇ ಸಾಕ್ಷಿ. ಅಧಿಕಾರ ದುರುಪಯೋಗ ಮಾಡಿಕೊಂಡು ಹೇಗೆ ಕಿರುಕುಳ ನೀಡುತ್ತಿದ್ದಾರೆ ಎಂಬುದಕ್ಕೆ ಇದೇ ಸಾಕ್ಷಿ ಎಂದರು. ನಿನ್ನೆ ನಾನು ಹಾಗೂ ನನ್ನ ಸಹೋದರ ಸುರೇಶ್ ಇಬ್ಬರೂ ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿದಂತೆ ದೆಹಲಿ ಪೊಲೀಸರ ನೋಟೀಸ್ ಗೆ ಉತ್ತರ ನೀಡಲು ತೆರಳಬೇಕಿತ್ತು. ಆದರೆ ನಾವು ಎಫ್ಐಆರ್ ಪ್ರತಿ ನೀಡಿ ಎಂದು ಕೇಳಿದೆವು. ಎಫ್ ಐಆರ್ ಇಲ್ಲದೆ ಚಾರ್ಜ್ ಶೀಟ್ ಸಲ್ಲಿಸಿದ್ದರು. ಇ.ಡಿ ಸಂಸ್ಥೆ ಚಾರ್ಜ್ ಶೀಟ್ ಸಲ್ಲಿಸಿದೆ ಎಂದು ತಿಳಿಸಿದರು. ಗಾಂಧೀಜಿ ಅಪಮಾನಿಸಲು ನರೇಗಾ ಹೆಸರು ಬದಲಾವಣೆ: ನಮ್ಮ ಯುಪಿಎ ಸರಕಾರ ಮಹಾತ್ಮ ಗಾಂಧಿ ಅವರ ಹೆಸರಿನಲ್ಲಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ರೂಪಿಸಿತ್ತು. ಈಗ ಈ ಯೋಜನೆ ಹೆಸರನ್ನು ಬದಲಿಸಲು ಕೇಂದ್ರ ಸರಕಾರ ಮುಂದಾಗಿದೆ ಎಂದು ಹೇಳಿದರು. ದೆಹಲಿಯಲ್ಲೂ ಪ್ರತಿಭಟನೆ ಮಾಡಲಾಗುವುದೇ ಎಂದು ಕೇಳಿದಾಗ, ದೆಹಲಿ ಸೇರಿದಂತೆ ದೇಶದೆಲ್ಲೆಡೆ ಪ್ರತಿಭಟನೆ ಮಾಡಿ ಜನರಿಗೆ ಅರಿವು ಮೂಡಿಸಲಾಗುವುದು. ಗಾಂಧೀಜಿ ಅವರಿಗೆ ಅಪಮಾನ ಮಾಡಲು, ನರೇಗಾ ಅನುದಾನ ಕಡಿಮೆ ಮಾಡಲು ಹಾಗೂ ನರೇಗಾ ಯೋಜನೆ ಶಮನ ಮಾಡಲು ಈ ರೀತಿ ಮಾಡುತ್ತಿದ್ದಾರೆ ಎಂದರು. ಬಿಹಾರ ಚುನಾವಣೆಗೆ ಗೃಹಲಕ್ಷ್ಮಿ ಹಣ ಬಳಕೆಯಾಗಿದೆ ಎಂಬ ಬಿಜೆಪಿ ಟೀಕೆ ಬಗ್ಗೆ ಕೇಳಿದಾಗ, ಬಿಹಾರ ಚುನಾವಣೆಗೂ ಗೃಹಲಕ್ಷ್ಮಿ ಹಣಕ್ಕೂ ಏನು ಸಂಬಂಧ? ಅವರನ್ನು ಆಸ್ಪತ್ರೆಗೆ ಸೇರಿಸಬೇಕಾಗಿದೆ. ಅವರು ಬಂದು ನಮ್ಮ ಬಳಿ ಚರ್ಚೆ ಮಾಡಲಿ ಎಂದರು.
‘ಅಕ್ರಮ ಮದ್ಯ ತಡೆ’ಗೆ ಸದನ ಸಮಿತಿ ರಚನೆ ಮಾಡಿ : ಬಿ.ಆರ್.ಪಾಟೀಲ್
ಬೆಳಗಾವಿ : ರಾಜ್ಯದಲ್ಲಿನ ಅಕ್ರಮ ಮದ್ಯ ಮಾರಾಟವನ್ನು ತಡೆಗಟ್ಟಲು ಸರಕಾರ, ಸದನ ಸಮಿತಿಯೊಂದನ್ನು ರಚನೆ ಮಾಡಬೇಕು ಎಂದು ಆಡಳಿತ ಪಕ್ಷದ ಹಿರಿಯ ಸದಸ್ಯ ಬಿ.ಆರ್.ಪಾಟೀಲ್ ಆಗ್ರಹಿಸಿದ ಪ್ರಸಂಗ ವಿಧಾನಸಭೆಯಲ್ಲಿ ನಡೆಯಿತು. ಮಂಗಳವಾರ ವಿಧಾನಸಭೆ ಪ್ರಶ್ನೋತ್ತರ ಅವಧಿಯಲ್ಲಿ ಬಿಜೆಪಿ ಸದಸ್ಯ ಬಿ.ಪಿ.ಹರೀಶ್ ಕೇಳಿದ ಪ್ರಶ್ನೆಗೆ ಅಬಕಾರಿ ಸಚಿವ ಆರ್.ಬಿ. ತಿಮ್ಮಾಪೂರ್ ನೀಡಿದ ಉತ್ತರಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಅವರು, ‘ಸರಕಾರವೇ ಮದ್ಯ ಕುಡಿಯಲು ಪ್ರೋತ್ಸಾಹ ನೀಡಿ. ಆ ಬಳಿಕ ಕುಡಿಯುಬೇಡಿ ಎಂದು ಜಾಗೃತಿ ಮೂಡಿಸಿದರೆ ಏನು ಪ್ರಯೋಜನ ಎಂದು ತಮ್ಮ ಸರಕಾರದ ವಿರುದ್ಧವೇ ಆಕ್ರೋಶ ವ್ಯಕ್ತಪಡಿಸಿದರು. ರಾಜ್ಯದಲ್ಲಿ ಅಕ್ರಮ ಮದ್ಯ ಮಾರಾಟ ತಡೆಗಟ್ಟಲು ಸರಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ಗ್ರಾಮಸಭೆ ನಡೆಸಿದ್ದು, ಅನುದಾನ ಸಿಕ್ಕರೆ ಮದ್ಯಪಾನದಿಂದ ಆಗುವ ಅನಾಹುತಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲಾಗುವುದು ಎಂದು ಸಚಿವ ಆರ್.ಬಿ.ತಿಮ್ಮಾಪೂರ್ ಉತ್ತರಿಸಿದರು. ಆರಂಭಕ್ಕೆ ವಿಷಯ ಪ್ರಸ್ತಾಪಿಸಿದ ಸದಸ್ಯ ಬಿ.ಪಿ.ಹರೀಶ್, ಗ್ರಾಮೀಣ ಪ್ರದೇಶದಲ್ಲಿ ಅಕ್ರಮ ಮದ್ಯ ಮಾರಾಟದ ಹಿನ್ನೆಲೆಯಲ್ಲಿ ಚಿಕ್ಕಮಕ್ಕಳು, ಶಾಲಾ-ಕಾಲೇಜು ವಿದ್ಯಾರ್ಥಿಗಳು ಮದ್ಯದ ದಾಸರಾಗುತ್ತಿದ್ದು, ರಸ್ತೆ ಅಪಘಾತಗಳು ಸೇರಿದಂತೆ ಇನ್ನಿತರ ಅಪರಾಧ ಪ್ರಕರಣಗಳು ಸಂಭವಿಸುತ್ತಿವೆ. ಹೀಗಾಗಿ ಸರಕಾರ ಕಟ್ಟುನಿಟ್ಟಾಗಿ ಅಕ್ರಮ ಮದ್ಯ ಮಾರಾಟ ತಡೆಗೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಅಕ್ಷತಾ ಪೂಜಾರಿ ಹಲ್ಲೆ ಪ್ರಕರಣ | ಬ್ರಹ್ಮಾವರ ಠಾಣೆಯಿಂದ ತನಿಖೆ ವರ್ಗಾವಣೆ: ಎಸ್ಪಿ ಹರಿರಾಂ ಶಂಕರ್
ಲೋಪ ಕಂಡುಬಂದಲ್ಲಿ ತಪ್ಪಿತಸ್ಥ ಪೊಲೀಸರ ವಿರುದ್ಧ ಕ್ರಮದ ಭರವಸೆ
Maharashtra | 74 ಲಕ್ಷಕ್ಕೆ ಹಿಗ್ಗಿದ ಒಂದು ಲಕ್ಷ ರೂ. ಸಾಲ: ತನ್ನ ಕಿಡ್ನಿಯನ್ನೇ ಮಾರಿದ ರೈತ!
ಚಂದ್ರಾಪುರ್ (ಮಹಾರಾಷ್ಟ್ರ): ದಿನಕ್ಕೆ 10,000 ರೂ. ಬಡ್ಡಿ ದರದಲ್ಲಿ ಒಂದು ಲಕ್ಷ ರೂ. ಸಾಲ 74 ಲಕ್ಷ ರೂ.ಗೆ ಹಿಗ್ಗಿದ ಪರಿಣಾಮ, ರೈತನೊಬ್ಬ ಕಾಂಬೋಡಿಯಾಗೆ ತೆರಳಿ ತನ್ನ ಕಿಡ್ನಿಯನ್ನು ಮಾರಾಟ ಮಾಡಬೇಕಾದ ಒತ್ತಡಕ್ಕೀಡಾಗಿರುವ ಘಟನೆ ಮಹಾರಾಷ್ಟ್ರದ ಚಂದ್ರಾಪುರ್ ಜಿಲ್ಲೆಯಿಂದ ವರದಿಯಾಗಿದೆ. ಮಹಾರಾಷ್ಟ್ರದ ಚಂದ್ರಾಪುರ್ ಜಿಲ್ಲೆಯ ರೈತ ರೋಶನ್ ಸದಾಶಿವ್ ಕುಡೆ ಎಂಬ ರೈತ ನಿರಂತರವಾಗಿ ಕೃಷಿಯಲ್ಲಿ ನಷ್ಟ ಅನುಭವಿಸಿದ್ದರಿಂದ, ಹೈನುಗಾರಿಕೆ ಉದ್ಯಮವನ್ನು ಪ್ರಾರಂಭಿಸಲು ನಿರ್ಧರಿಸಿದ್ದಾರೆ. ಅವರು ಇದಕ್ಕಾಗಿ ವಿವಿಧ ಸಾಲಗಾರರಿಂದ ಒಟ್ಟಾರೆ ಒಂದು ಲಕ್ಷ ರೂ. ಸಾಲ ಪಡೆದಿದ್ದಾರೆ. ಆದರೆ, ಅವರು ತಮ್ಮ ಹೈನುಗಾರಿಕೆ ಉದ್ಯಮವನ್ನು ಪ್ರಾರಂಭಿಸುವುದಕ್ಕೂ ಮುನ್ನವೇ, ಅವರು ಖರೀದಿಸಿದ್ದ ಜಾನುವಾರುಗಳು ಮೃತಪಟ್ಟಿವೆ ಹಾಗೂ ಅವರ ಮಾಲಕತ್ವದ ಭೂಮಿಯಲ್ಲಿನ ಫಸಲು ವಿಫಲಗೊಂಡಿದೆ. ಇದರಿಂದಾಗಿ ಅವರ ಸುತ್ತ ಸಾಲದ ಕುಣಿಕೆ ಬಿಗಿಯಾಗಿದ್ದು, ಸಾಲಗಾರರು ಕುಡೆ ಹಾಗೂ ಅವರ ಕುಟುಂಬಕ್ಕೆ ಕಿರುಕುಳ ನೀಡಲು ಪ್ರಾರಂಭಿಸಿದ್ದಾರೆ. ಹೀಗಾಗಿ, ಕುಡೆ ತಮ್ಮ ಜಮೀನು, ಟ್ರ್ಯಾಕ್ಟರ್ ಹಾಗೂ ಬೆಲೆಬಾಳುವ ಗೃಹೋಪಯೋಗಿ ವಸ್ತುಗಳನ್ನು ಸಾಲ ತೀರಿಸಲು ಮಾರಾಟ ಮಾಡಿದ್ದಾರೆ. ಆದರೆ, ಅದಷ್ಟೇ ಸಾಲ ತೀರಿಸಲು ಸಾಕಾಗಿಲ್ಲ. ಹೀಗಾಗಿ, ಏಜೆಂಟ್ ಗಳ ಮೂಲಕ ಕೋಲ್ಕತ್ತಾಗೆ ತೆರಳಿರುವ ಕುಡೆ, ವೈದ್ಯಕೀಯ ಪರೀಕ್ಷೆಗಳ ನಂತರ ಕಾಂಬೋಡಿಯಾಗೆ ತೆರಳಿದ್ದು, ಅಲ್ಲಿ 8 ಲಕ್ಷ ರೂ.ಗೆ ತಮ್ಮ ಕಿಡ್ನಿಯನ್ನು ಮಾರಾಟ ಮಾಡಿದ್ದಾರೆ. ಈ ಸಂಬಂಧ ಪೊಲೀಸರಿಗೆ ದೂರು ನೀಡಿದರೂ ಅವರು ಯಾವುದೇ ಕ್ರಮ ಕೈಗೊಳ್ಳದೆ ಹೋಗಿದ್ದರಿಂದ, ನನ್ನ ಮಾನಸಿಕ ಮತ್ತು ದೈಹಿಕ ಆರೋಗ್ಯ ಮತ್ತಷ್ಟು ಬಿಗಡಾಯಿಸಿತು ಎಂದು ಕುಡೆ ಹೇಳುತ್ತಾರೆ. ಒಂದು ವೇಳೆ ನನಗೆ ಈಗಲೂ ನ್ಯಾಯ ದೊರೆಯದಿದ್ದರೆ, ನಾನು ಹಾಗೂ ನನ್ನ ಕುಟುಂಬದ ಸದಸ್ಯರು ರಾಜ್ಯ ಸರಕಾರದ ಪ್ರಧಾನ ಕೇಂದ್ರವಾದ ಮುಂಬೈನ ಕಾರ್ಯಾಲಯದೆದುರು ಸ್ವಯಂ ಅಗ್ನಿಗಾಹುತಿಯಾಗುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ. ಸಾಲಗಾರರನ್ನು ಕಿಶೋರ್ ಬವಾಂಕುಲೆ, ಪ್ರದೀಪ್ ಬವಾಂಕುಲೆ, ಸಂಜಯ್ ಬಲ್ಲಾರ್ ಪುರೆ ಹಾಗೂ ಲಕ್ಷ್ಮಣ್ ಬೋರ್ಕರ್ ಎಂದು ಗುರುತಿಸಲಾಗಿದ್ದು, ಅವರೆಲ್ಲರೂ ಬ್ರಹ್ಮಪುರಿ ಪಟ್ಟಣದ ನಿವಾಸಿಗಳಾಗಿದ್ದಾರೆ.
ನಕಲಿ ಕಾನೂನು ಪದವಿಗಳ ಕುರಿತು 160 FIRಗಳು ದಾಖಲು: ನ್ಯಾಯಾಲಯಕ್ಕೆ ಬಿಸಿಡಿ ಮಾಹಿತಿ
ಹೊಸದಿಲ್ಲಿ,ಡಿ.16: ದಿಲ್ಲಿಯಲ್ಲಿ ನಕಲಿ ವಕೀಲರ ಗುಂಪೊಂದು ಕಾರ್ಯಾಚರಿಸುತ್ತಿದೆ ಎಂದು ಸೋಮವಾರ ಇಲ್ಲಿಯ ಸಾಕೇತ್ ನ್ಯಾಯಾಲಯಕ್ಕೆ ತಿಳಿಸಿರುವ ದಿಲ್ಲಿ ವಕೀಲರ ಸಂಘವು (ಬಿಸಿಡಿ),ಇಂತಹ ವಕೀಲರು ಬಿಸಿಡಿಯಲ್ಲಿ ನೋಂದಾಯಿಸಿಕೊಳ್ಳಲು ನಕಲಿ ಪದವಿ ಪ್ರಮಾಣಪತ್ರಗಳನ್ನು ಬಳಸುತ್ತಿರುವ ಬಗ್ಗೆ ಕಳವಳವನ್ನು ವ್ಯಕ್ತಪಡಿಸಿದೆ. ದಿಲ್ಲಿಯಲ್ಲಿ ಕಳೆದ ಎರಡು ವರ್ಷಗಳಲ್ಲಿ ವಕೀಲರ ನಕಲಿ ಪದವಿಗಳಿಗೆ ಸಂಬಂಧಿಸಿದಂತೆ ಬಿಸಿಡಿ 160 ಎಫ್ಐಆರ್ಗಳನ್ನು ದಾಖಲಿಸಿದೆ. ದಿಲ್ಲಿಯಲ್ಲಿ ನಕಲಿ ವಕೀಲರ ಗ್ಯಾಂಗ್ವೊಂದು ಕಾರ್ಯಾಚರಿಸುತ್ತಿದ್ದು, ಇದೊಂದು ಬೃಹತ್ ಜಾಲವಾಗಿದೆ. ನಕಲಿ ಪದವಿಗಳ ಆಧಾರದಲ್ಲಿ ನೋಂದಣಿಗಳನ್ನು ಅವರು ಕೋರುತ್ತಾರೆ ಎಂದು ಬಿಸಿಡಿ ಪರ ವಕೀಲರು ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶೆ ಶುನಾಲಿ ಗುಪ್ತಾ ಅವರಿಗೆ ತಿಳಿಸಿದರು. ಸುಮಾರು ಎರಡು ಲಕ್ಷ ವಕೀಲರು ಬಿಸಿಡಿಯಲ್ಲಿ ನೋಂದಣಿ ಹೊಂದಿದ್ದು, ಕೇವಲ ಒಂದು ಲಕ್ಷಕ್ಕಿಂತ ಸ್ವಲ್ಪ ಹೆಚ್ಚಿನ ವಕೀಲರ ದಾಖಲೆಗಳನ್ನು ದೃಢಪಡಿಸಿಕೊಳ್ಳಲಾಗಿದೆ. ವಿವಿಗಳು ಬಿಸಿಡಿಗೆ ಉತ್ತರಿಸದ್ದರಿಂದ 90,000ಕ್ಕೂ ಅಧಿಕ ಪರಿಶೀಲನೆಗಳು ಬಾಕಿಯುಳಿದಿವೆ ಎಂದು ಸುದ್ದಿಸಂಸ್ಥೆಯು ತನ್ನ ವರದಿಯಲ್ಲಿ ತಿಳಿಸಿದೆ. ಬಿಸಿಡಿಯಲ್ಲಿ ನೋಂದಣಿ ಮಾಡಿಕೊಳ್ಳಲು ಸುಮಾರು 1.5 ಲಕ್ಷ ರೂ.ಗಳ ಲಂಚವನ್ನು ನೀಡಿರುವ ಆರೋಪವನ್ನು ಎದುರಿಸುತ್ತಿರುವ ತಮಿಳುನಾಡು ಮೂಲದ ಜೆ.ವಸಂತನ್ ಸಲ್ಲಿಸಿರುವ ನಿರೀಕ್ಷಣಾ ಜಾಮೀನು ಅರ್ಜಿಯ ವಿಚಾರಣೆ ಸಂದರ್ಭ ಬಿಸಿಡಿ ನ್ಯಾ.ಗುಪ್ತಾ ಅವರಿಗೆ ಈ ಮಾಹಿತಿಗಳನ್ನು ನೀಡಿದೆ. ► 2023ರಲ್ಲಿ ಬಿಸಿಡಿಯಲ್ಲಿ ನೋಂದಾಯಿಸಿಕೊಂಡಿದ್ದ ವಸಂತನ್ ಅವರನ್ನು ನಕಲಿ ಕಾನೂನು ಪದವಿ ಮತ್ತು ಫೋರ್ಜರಿ ಮಾಡಲಾದ ಅಂಕಪಟ್ಟಿಗಳನ್ನು ಸಲ್ಲಿಸಿದ್ದಕ್ಕಾಗಿ ಸೆ.18ರಂದು ಅಮಾನತುಗೊಳಿಸಲಾಗಿತ್ತು. ನವಂಬರ್ನಲ್ಲಿ ಬಾರ್ ಕೌನ್ಸಿಲ್ ಆಫ್ ಇಂಡಿಯಾ ರಾಜ್ಯ ವಕೀಲರ ಸಂಘಕ್ಕೆ ಪತ್ರ ಬರೆದು ವಸಂತನ್ರನ್ನು ವಜಾಗೊಳಿಸುವಂತೆ ನಿರ್ದೇಶನ ನೀಡಿದ ಬಳಿಕ ಅವರ ಪರವಾನಿಗೆಯನ್ನು ಸ್ಥಗಿತಗೊಳಿಸಲಾಗಿತ್ತು.
ಮಾಲಿನ್ಯ ತಪಾಸಣೆ ಪ್ರಮಾಣಪತ್ರವಿಲ್ಲದಿದ್ದರೆ ಇಂಧನವಿಲ್ಲ: ದಿಲ್ಲಿ ಪರಿಸರ ಸಚಿವ ಘೋಷಣೆ
ಹೊಸದಿಲ್ಲಿ, ಡಿ. 16: ಮಾನ್ಯ ಹೊಗೆ ತಪಾಸಣಾ ಪ್ರಮಾಣಪತ್ರ (ಪಿಯುಸಿಸಿ)ವಿಲ್ಲದ ವಾಹನಗಳಿಗೆ ದಿಲ್ಲಿಯ ಪಟ್ರೋಲ್ ಪಂಪ್ಗಳು ಗುರುವಾರದಿಂದ ಇಂಧನ ತುಂಬಿಸುವುದಿಲ್ಲ ಎಂದು ದಿಲ್ಲಿಯ ಪರಿಸರ ಸಚಿವ ಮಂಜಿಂದರ್ ಸಿಂಗ್ ಸೀರ್ಸ ಮಂಗಳವಾರ ತಿಳಿಸಿದ್ದಾರೆ. ರಾಷ್ಟ್ರ ರಾಜಧಾನಿಯ ವಾಯು ಗುಣಮಟ್ಟ ತೀವ್ರ ಅನಾರೋಗ್ಯಕರ ಮಟ್ಟಕ್ಕೆ ಇಳಿದ ಹಿನ್ನೆಲೆಯಲ್ಲಿ ದಿಲ್ಲಿ ಸಚಿವರು ಹೊಸ ಉಪಕ್ರಮವನ್ನು ಘೋಷಿಸಿದ್ದಾರೆ. ದಿಲ್ಲಿಯ ವಾಯು ಗುಣಮಟ್ಟ ಸೂಚ್ಯಂಕ (ಎಕ್ಯೂಐ)ವು ನಿರಂತರ ಮೂರನೇ ದಿನವಾದ ಮಂಗಳವಾರವೂ ‘‘ಅತ್ಯಂತ ಕಳಪೆ’’ಯಾಗಿ ಮುಂದುವರಿದಿದೆ. ಸೆಪ್ಟಂಬರ್ ತಿಂಗಳಲ್ಲಿ, ನಿಯಮಗಳ ಉಲ್ಲಂಘನೆಗಾಗಿ ಪೊಲೀಸರು ದಾಖಲಿಸಿಕೊಂಡ ಒಟ್ಟು ಪ್ರಕರಣಗಳ ಪೈಕಿ 54,615 ವಾಯು ಮಾಲಿನ್ಯ ತಪಾಸಣೆ ಪ್ರಮಾಣಪತ್ರವಿಲ್ಲದೆ ವಾಹನಗಳನ್ನು ಚಲಾಯಿಸಿರುವುದಕ್ಕೆ ಸಂಬಂಧಿಸಿರುವುದಾಗಿದೆ. ಅಂದರೆ ವಾಯು ಮಾಲಿನ್ಯ ತಪಾಸಣೆ ಪ್ರಮಾಣಪತ್ರವಿಲ್ಲದೆ ವಾಹನಗಳನ್ನು ಚಲಾಯಿಸಿದ ಪ್ರಮಾಣ 17 ಶೇಕಡ ಆಗಿದೆ. ಈ ಸಂಖ್ಯೆಯು ಅಕ್ಟೋಬರ್ನಲ್ಲಿ ಕೂಡ ಅಧಿಕವಾಗಿತ್ತು. ಅಂದರೆ ಪಿಯುಸಿಸಿ ಪ್ರಮಾಣಪತ್ರವಿಲ್ಲದೆ ವಾಹನಗಳನ್ನು ಚಲಾಯಿಸಿರುವುದಕ್ಕಾಗಿ 68,986 ಪ್ರಕರಣಗಳು (23 ಶೇಕಡ) ದಾಖಲಾಗಿದ್ದವು. ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಚಿವ ಸೀರ್ಸ, ‘‘ಇಂದು ವಾಯು ಗುಣಮಟ್ಟ ಸೂಚ್ಯಂಕ 363 ದಾಖಲಾಗಿದೆ. ಇದು ತೀವ್ರ ಮಾಲಿನ್ಯ ವಿಭಾಗದಲ್ಲಿ ಬರುತ್ತದೆ. ವಾಯು ಮಾಲಿನ್ಯವು ಕಳೆದ 10 ವರ್ಷಗಳಿಂದಲೂ ಇದೇ ಮಟ್ಟದಲ್ಲಿದೆ. ಕಳೆದ ವರ್ಷ ಇದೇ ದಿನ ಈ ಸಂಖ್ಯೆ 380 ಆಗಿತ್ತು. ಇಂದು ಅದು 363 ಆಗಿದೆ’’ ಎಂದು ಹೇಳಿದರು. ಈ ಸಮಸ್ಯೆ ಹಿಂದಿನ ಸರಕಾರದ ವೈಫಲ್ಯವಾಗಿದೆ ಎಂದು ಅವರು ದೂರಿದರು. ‘‘ಆಪ್ ಕಳೆದ 10 ವರ್ಷಗಳಲ್ಲಿ ದಿಲ್ಲಿಗೆ ಈ ಸಮಸ್ಯೆಯನ್ನು ನೀಡಿದೆ’’ ಎಂದು ಸೀರ್ಸ ಹೇಳಿದರು.
ರಾಯಚೂರು, ಯಾದಗಿರಿ, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ‘ಕೌಶಲ್ಯ ರಥ ಕಾರ್ಯಕ್ರಮ’
ಬೆಳಗಾವಿ : ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮದಿಂದ ಕೌಶಲ್ಯ ರಥ ಕಾರ್ಯಕ್ರಮವನ್ನು ರಾಯಚೂರು, ಯಾದಗಿರಿ, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಪ್ರಾಯೋಗಿಕವಾಗಿ ಅನುಷ್ಠಾನಗೊಳಿಸಲಾಗಿದೆ ಎಂದು ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ತಿಳಿಸಿದರು. ಮಂಗಳವಾರ ವಿಧಾನ ಪರಿಷತ್ನ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿ ಸದಸ್ಯ ಗೋವಿಂದರಾಜು ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ಅತಿ ಹಿಂದುಳಿದ ಗ್ರಾಮೀಣ ಪ್ರದೇಶದ ಯುವಕ-ಯುವತಿಯರಿಗೆ ಕೌಶಲ್ಯ ತರಬೇತಿಯನ್ನು ಪಡೆಯಲು ಪೂರಕವಾಗುವಂತೆ ಅವರಿರುವ ಸ್ಥಳಕ್ಕೆ ತೆರಳಿ ತರಬೇತಿ ನೀಡುವ ಸಂಬಂಧ ಸ್ಕಿಲ್ಸ್ ಆನ್ ವೀಲ್ಸ್(ಕೌಶಲ್ಯ ರಥ/ನೈಪುಣ್ಯ ರಥ) ವಿನೂತನ ಯೋಜನೆಯನ್ನು ಅನುಷ್ಠಾನಗೊಳಿಸಲಾಗಿದೆ ಎಂದರು. ರಾಜ್ಯದ ಗ್ರಾಮೀಣ ಯುವಜನರಿಗೆ ಅಲ್ಪಾವಧಿ ಕೌಶಲ್ಯಾಧಾರಿತ ತರಬೇತಿಯೊಂದಿಗೆ ಜೀವನೋಪಾಯದ ಅವಕಾಶಗಳನ್ನು ಹೆಚ್ಚಿಸುವ ಉದ್ದೇಶ ಈ ಕಾರ್ಯಕ್ರಮದ್ದಾಗಿದೆ. 2022-23ನೇ ಸಾಲಿನಲ್ಲಿ ಯಾದಗಿರಿ ಹಾಗೂ ರಾಯಚೂರು ಜಿಲ್ಲೆಗಳಲ್ಲಿ ತಲಾ 75 ಅಭ್ಯರ್ಥಿಗಳಿಗೆ ಅನುಕ್ರಮವಾಗಿ ಅಸಿಸ್ಟಂಟ್ ಬ್ಯೂಟಿ ಥೆರಪಿಸ್ಟ್ ಅಂಡ್ ಅಸಿಸ್ಟಂಟ್ ಎಲೆಕ್ಟ್ರಿಷಿಯನ್ ಜಾಬ್ ರೋಲ್ ನಡಿ ಹಾಗೂ 2023-24ನೇ ಸಾಲಿನಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 45 ಅಭ್ಯರ್ಥಿಗಳು ಮತ್ತು ಉಡುಪಿ ಜಿಲ್ಲೆಯಲ್ಲಿ 60 ಅಭ್ಯರ್ಥಿಗಳಿಗೆ ಅನುಕ್ರಮವಾಗಿ ಅಸಿಸ್ಟಂಟ್ ಎಲೆಕ್ಟ್ರಿಷಿಯನ್ ಅಂಡ್ ಅಸಿಸ್ಟಂಟ್ ಬ್ಯೂಟಿ ಥೆರಪಿಸ್ಟ್ ಜಾಬ್ ರೋಲ್ ನಡಿ ತರಬೇತಿಯನ್ನು ನೀಡಲಾಗಿದೆ ಎಂದು ಡಾ.ಶರಣಪ್ರಕಾಶ್ ಪಾಟೀಲ್ ಮಾಹಿತಿ ನೀಡಿದರು.
ವಿಧೇಯಕಗಳ ಬಗ್ಗೆ ಆಸಕ್ತಿ ಮೂಡಿಸಿಕೊಳ್ಳಿ: ಯು.ಟಿ.ಖಾದರ್
ಬೆಳಗಾವಿ : ವಿಧೇಯಕಗಳ ಕುರಿತು ಚರ್ಚೆ ಮಾಡಲಿಕ್ಕೆ ಶಾಸಕರು ಆಸಕ್ತಿ ಮೂಡಿಸಿಕೊಳ್ಳಿ ಎಂದು ವಿಧಾನಸಭೆ ಸಭಾಧ್ಯಕ್ಷ ಯು.ಟಿ.ಖಾದರ್ ಹೇಳಿದ್ದಾರೆ. ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಮಂಗಳವಾರ ವಿಧಾನಸಭೆಯಲ್ಲಿನ ಶಾಸನ ರಚನೆ ಕಲಾಪದಲ್ಲಿ ವಿಧೇಯಕಗಳ ಅಂಗೀಕಾರಕ್ಕೆ ವಿಧೇಯಕಗಳು ಮಂಡನೆ ಆದ ಸಂದರ್ಭದಲ್ಲಿ ವಿಧೇಯಕಗಳ ಪರಿಭಾಷೆಯು ಕ್ಲಿಷ್ಟಕರವಾಗಿದ್ದು, ವಿಧೇಯಕಗಳ ಕನ್ನಡವನ್ನು ಸರಳೀಕರಣಗೊಳಿಸಬೇಕು ಎಂದು ಹಲವು ಶಾಸಕರು ಅಭಿಪ್ರಾಯಪಟ್ಟರು. ಆಗ ಶಾಸಕರ ಅಭಿಪ್ರಾಯ ಆಲಿಸಿದ ಯು.ಟಿ.ಖಾದರ್, ವಿಧಾನಸಭೆಯಲ್ಲಿ ಮಂಡಿಸುವ ವಿಧೇಯಕಗಳ ಬಗ್ಗೆ ಚರ್ಚಿಸಲು ಶಾಸಕರುಗಳು ಆಸಕ್ತಿ ತೋರಿಸಬೇಕು. ವಿಧೇಯಕಗಳನ್ನು ಮಂಡಿಸಿದ ಸಂದರ್ಭದಲ್ಲಿ ವಿಧೇಯಕಗಳ ಕುರಿತು ಸಂಬಂಧಪಟ್ಟ ಕಚೇರಿಯ ಅಧಿಕಾರಿಗಳಿಂದ ವಿಧೇಯಕಗಳ ಕುರಿತು ಮಾಹಿತಿ ಪಡೆದುಕೊಳ್ಳಬೇಕು ಎಂದು ನುಡಿದರು.
ಮಹಿಳಾ ಉದ್ಯೋಗಿಗಳ ವೇತನ ಏರಿಕೆಗೆ ಸೋನಿಯಾ ಗಾಂಧಿ ಆಗ್ರಹ
ಹೊಸದಿಲ್ಲಿ,ಡಿ.16: ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ಹಾಗೂ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್ ಅಡಿ ಸಮುದಾಯ ಸಂಪನ್ಮೂಲ ವ್ಯಕ್ತಿಗಳು ಸೇರಿದಂತೆ ಪ್ರಮುಖ ಸರಕಾರಿ ಕಾರ್ಯಕ್ರಮಗಳನ್ನು ಜಾರಿಗೊಳಿಸುತ್ತಿರುವ ಮಹಿಳಾ ಉದ್ಯೋಗಿಗಳು ಎದುರಿಸುತ್ತಿರುವ ಸಂಕಷ್ಟಗಳ ಬಗ್ಗೆ ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿಯವರು ಮಂಗಳವಾರ ರಾಜ್ಯಸಭೆಯ ಗಮನವನ್ನು ಸೆಳೆದರು. ಸದನದಲ್ಲಿ ಮಾತನಾಡಿದ ಸೋನಿಯಾ, ಪ್ರಮುಖ ಸರಕಾರಿ ಯೋಜನೆಗಳನ್ನು ಅನುಷ್ಠಾನಿಸುತ್ತಿರುವ ಮಹಿಳಾ ಉದ್ಯೋಗಿಗಳು ನಿರಂತರ ಸಂಕಷ್ಟಗಳನ್ನು ಎದುರಿಸುತ್ತಿದ್ದಾರೆ. ಈ ಉಪಕ್ರಮಗಳು ಮಹಿಳಾ ಸಬಲೀಕರಣಕ್ಕೆ ನೆರವಾಗುವ ಉದ್ದೇಶವನ್ನು ಹೊಂದಿವೆ. ಆದರೂ ಸಾರ್ವಜನಿಕ ಸೇವಾ ವಿತರಣೆಯಲ್ಲಿ ತಮ್ಮ ಪ್ರಮುಖ ಕೊಡುಗೆಯ ಹೊರತಾಗಿಯೂ ಈ ಮಹಿಳಾ ಉದ್ಯೋಗಿಗಳು ಅತಿಯಾದ ಕೆಲಸದ ಹೊರೆಯನ್ನು ಹೊಂದಿದ್ದಾರೆ ಮತ್ತು ಕಡಿಮೆ ವೇತನವನ್ನು ಪಡೆಯುತ್ತಿದ್ದಾರೆ ಎಂದು ಹೇಳಿದರು. ಸೇವಾ ವಿತರಣೆಯ ಮೇಲೆ ಪ್ರತಿಕೂಲ ಪರಿಣಾಮವನ್ನು ಬೀರುತ್ತಿರುವ ಸಿಬ್ಬಂದಿ ಕೊರತೆಗಳನ್ನೂ ಬೆಟ್ಟು ಮಾಡಿದ ಸೋನಿಯಾ, ಕಡಿಮೆ ವೇತನದ ಹೊರತಾಗಿ ಸಮಗ್ರ ಮಕ್ಕಳ ಅಭಿವೃದ್ಧಿ ಸೇವೆಗಳ (ಐಸಿಡಿಎಸ್) ವಿವಿಧ ಹಂತಗಳಲ್ಲಿ ಪ್ರಸ್ತುತ ಸುಮಾರು ಮೂರು ಲಕ್ಷ ಹುದ್ದೆಗಳು ಖಾಲಿಯಿವೆ. ಇದರಿಂದಾಗಿ ಲಕ್ಷಾಂತರ ಮಕ್ಕಳು ಮತ್ತು ತಾಯಂದಿರು ಅಗತ್ಯ ಸೇವೆಗಳಿಂದ ವಂಚಿತರಾಗಿದ್ದಾರೆ. ಈ ಹುದ್ದೆಗಳನ್ನು ಭರ್ತಿ ಮಾಡಿದರೂ 2011ರ ಬಳಿಕ ಹೊಸ ಜನಗಣತಿ ಅಂಕಿಅಂಶಗಳ ಅನುಪಸ್ಥಿತಿಯಿಂದಾಗಿ ಜನಸಂಖ್ಯೆಗೆ ಅನುಗುಣವಾಗಿ ಅಗತ್ಯವನ್ನು ಪೂರೈಸುವುದಿಲ್ಲ ಎಂದು ಹೇಳಿದರು. ದೇಶಾದ್ಯಂತ ಆಶಾ ಕಾರ್ಯಕರ್ತೆಯರು ಲಸಿಕೀಕರಣ, ಸಮುದಾಯ ಜಾಗೃತಿ, ತಾಯಂದಿರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಕಾರ್ಯಗಳನ್ನು ನಿರ್ವಹಿಸುತ್ತಿದ್ದಾರೆ. ಆದರೂ ಅವರು ಕಡಿಮೆ ಗೌರವ ಧನ ಮತ್ತು ಸೀಮಿತ ಸಾಮಾಜಿಕ ಭದ್ರತೆಯೊಂದಿಗೆ ಸ್ವಯಂಸೇವಕರಾಗಿಯೇ ಉಳಿದಿದ್ದಾರೆ. ಇದೇ ರೀತಿ ಅಂಗನವಾಡಿ ಕಾರ್ಯಕರ್ತೆಯರಿಗೆ ಕೇಂದ್ರ ಸರಕಾರವು ಮಾಸಿಕ 4,500 ರೂ. ಮತ್ತು 2,250 ರೂ.ಗಳ ಅತ್ಯಲ್ಪ ಗೌರವ ಧನವನ್ನು ನೀಡುತ್ತಿದೆ ಎಂದು ಸೋನಿಯಾ ಗಾಂಧಿ ಹೇಳಿದರು
ಸತ್ಯಕ್ಕೆ ದೂರವಾದುದು: ತೂಕದಲ್ಲಿ ಮೋಸ ಆರೋಪದ ಕುರಿತು ಸಿದ್ಧಸಿರಿ ಕಾರ್ಖಾನೆ ಸ್ಪಷ್ಟನೆ
ಕಲಬುರಗಿ: ಚಿಂಚೋಳಿ ಪಟ್ಟಣದ ಹೊರವಲಯದಲ್ಲಿರುವ ಸಿದ್ಧಸಿರಿ ಎಥನಾಲ್ ಮತ್ತು ಪವರ್ ಘಟಕದಲ್ಲಿ ಕಬ್ಬು ತೂಕದಲ್ಲಿ ರೈತರಿಗೆ ಮೋಸ ಮಾಡಲಾಗುತ್ತಿದೆ ಎಂಬ ಆರೋಪ ಸತ್ಯಕ್ಕೆ ದೂರವಾದುದು. ಇದು ರಾಜಕೀಯ ಪ್ರೇರಿತ ಕುತಂತ್ರ ಎಂದು ಕಂಪೆನಿಯ ನಿರ್ದೇಶಕರಾದ ಪ್ರಭು ದೇಸಾಯಿ ಮತ್ತು ಜಗದೀಶ ಕ್ಷತ್ರಿ ಸ್ಪಷ್ಟನೆ ನೀಡಿದ್ದಾರೆ. ಈ ಕುರಿತು ಜಂಟಿ ಪತ್ರಿಕಾ ಹೇಳಿಕೆ ನೀಡಿರುವ ಅವರು, ಕಾರ್ಖಾನೆಯು ರೈತರೊಂದಿಗೆ ಪಾರದರ್ಶಕ ಮತ್ತು ಪ್ರಾಮಾಣಿಕ ವ್ಯವಹಾರ ನಡೆಸುತ್ತಿದೆ. ಆದರೆ ಕೆಲವರು ರಾಜಕೀಯ ದುರುದ್ದೇಶದಿಂದ ಮತ್ತು ಸಿದ್ಧಸಿರಿ ಸಮೂಹದ ಅಧ್ಯಕ್ಷರಾದ ಬಸನಗೌಡ ಪಾಟೀಲ್ ಯತ್ನಾಳ್ ಅವರ ವರ್ಚಸ್ಸಿಗೆ ಧಕ್ಕೆ ತರುವ ಹತಾಶ ಪ್ರಯತ್ನವಾಗಿ ಈ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇತ್ತೀಚೆಗೆ ಪ್ರವೀಣಕುಮಾರ್ ಕೋರಿ, ಬಸವರಾಜ ಕೋರಿ ಹಾಗೂ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಶರಣಬಸಪ್ಪ ಮಮಶೆಟ್ಟಿ ಅವರು ಕಾರ್ಖಾನೆಯ ತೂಕದಲ್ಲಿ ವ್ಯತ್ಯಾಸವಿದೆ ಎಂದು ಆರೋಪಿಸಿದ್ದರು. ಇದಕ್ಕೆ ಪ್ರತ್ಯುತ್ತರ ನೀಡಿರುವ ನಿರ್ದೇಶಕರು, ಆರೋಪಿತರು ತೋರಿಸಿರುವ 'ಫ್ರೆಂಡ್ಸ್ ವೇ ಬ್ರಿಡ್ಜ್' ರಸೀದಿಯು ಶಹಾಬಾದ್ನದ್ದಾಗಿದೆ. ಅಲ್ಲಿ ಮಧ್ಯಾಹ್ನ 2:49ಕ್ಕೆ ತೂಕ ಮಾಡಿಸಿದ್ದರೆ, ಸಿದ್ಧಸಿರಿ ಕಾರ್ಖಾನೆಯಲ್ಲಿ ಅದೇ ದಿನ ರಾತ್ರಿ 9:47ಕ್ಕೆ ತೂಕವಾಗಿದೆ. ಕೇವಲ 70 ಕಿ.ಮೀ ದೂರ ಕ್ರಮಿಸಲು ಸುಮಾರು 7 ಗಂಟೆಗಳ ಕಾಲಾವಕಾಶ ತೆಗೆದುಕೊಂಡಿರುವುದು ಮತ್ತು ತನಿಖೆ ನಡೆಸಿದಾಗ ಸದರಿ ವಿಳಾಸದಲ್ಲಿ 'ಫ್ರೆಂಡ್ಸ್ ವೇ ಬ್ರಿಡ್ಜ್' ಅಸ್ತಿತ್ವದಲ್ಲಿಲ್ಲದಿರುವುದು ಈ ಆರೋಪಗಳು ಯೋಜಿತ ಸಂಚು ಎಂಬುದನ್ನು ಸಾಬೀತುಪಡಿಸುತ್ತದೆ ಎಂದು ತಿಳಿಸಿದ್ದಾರೆ. ತೂಕದ ಯಂತ್ರದಲ್ಲಿ ಮೋಸ ನಡೆಯುತ್ತಿದೆ ಎಂಬ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ, ಡಿಸೆಂಬರ್ 14ರಂದು ಕಾನೂನು ಮಾಪನಶಾಸ್ತ್ರ ಇಲಾಖೆಯ (Legal Metrology Department) ಅಧಿಕಾರಿಗಳು ಕಾರ್ಖಾನೆಗೆ ಭೇಟಿ ನೀಡಿದ್ದರು. ರೈತರ ಸಮ್ಮುಖದಲ್ಲೇ ಲಾರಿ ತೂಕ ಮಾಡಿ ಪರಿಶೀಲನೆ ನಡೆಸಿದ ಅಧಿಕಾರಿಗಳು, ಕಾರ್ಖಾನೆಯ ತೂಕದ ಯಂತ್ರವು ಸರ್ಕಾರದ ಎಲ್ಲಾ ಮಾನದಂಡಗಳಿಗೆ ಅನುಗುಣವಾಗಿದೆ ಮತ್ತು ನಿಖರವಾಗಿದೆ ಎಂದು ದೃಢಪಡಿಸಿ ಪ್ರಮಾಣಪತ್ರ ನೀಡಿದ್ದಾರೆ. ಸಂಸ್ಥೆಯ ಮತ್ತು ಅಧ್ಯಕ್ಷರ ಹೆಸರಿಗೆ ಮಸಿ ಬಳಿಯುವ ಉದ್ದೇಶದಿಂದ ಸುಳ್ಳು ಸುದ್ದಿ ಹಬ್ಬಿಸುತ್ತಿರುವ ವ್ಯಕ್ತಿಗಳು ಹಾಗೂ ಮಾಧ್ಯಮ ಸಂಸ್ಥೆಗಳ ವಿರುದ್ಧ ಮಾನನಷ್ಟ ಮೊಕದ್ದಮೆ ಸೇರಿದಂತೆ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು ಎಂದು ನಿರ್ದೇಶಕರು ಎಚ್ಚರಿಕೆ ನೀಡಿದ್ದಾರೆ.
BBC ವಿರುದ್ಧ ಟ್ರಂಪ್ 10 ಬಿಲಿಯ ಡಾಲರ್ ಮಾನನಷ್ಟ ಮೊಕದ್ದಮೆ
ವಾಶಿಂಗ್ಟನ್,ಡಿ.16: 2021ರಲ್ಲಿ ಯುಎಸ್ ಕ್ಯಾಪಿಟೊಲ್ ಕಟ್ಟಡದಲ್ಲಿ ನಡೆದ ದಾಂಧಲೆಗೆ ಮುನ್ನ ಬೆಂಬಲಿಗರನ್ನುದ್ದೇಶಿಸಿ ತಾನು ಮಾಡಿದ ಭಾಷಣವನ್ನು ತಿರುಚಿ ಪ್ರಸಾರಿಸಿದ್ದಕ್ಕಾಗಿ ಕನಿಷ್ಠ 10 ಶತಕೋಟಿ ಡಾಲರ್ ಪರಿಹಾರ ಕೋರಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಬ್ರಿಟಿಶ್ ಸುದ್ದಿಸಂಸ್ಥೆ BBC ವಿರುದ್ಧ ಸೋಮವಾರ ಮೊಕದ್ದಮೆ ಹೂಡಿದ್ದಾರೆ. ಅಮೆರಿಕದ ಮಿಯಾಮಿಯ ಫೆಡರಲ್ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಿಸಲಾಗಿದೆ. BBC ವಿರುದ್ಧ ತಾನು ದಾಖಲಿಸಿರುವ ಎರಡೂ ದಾವೆಗಳಲ್ಲಿಯೂ ತನಗೆ ಕನಿಷ್ಠ 5 ಶತಕೋಟಿ ಡಾಲರ್ ಮಾನನಷ್ಟ ಪರಿಹಾರ ನೀಡಬೇಕೆಂದು ಟ್ರಂಪ್ ಅರ್ಜಿಯಲ್ಲಿ ಆಗ್ರಹಿಸಿದ್ದಾರೆ. 2021ರ ಜನವರಿ 6ರಂದು ತಾನು ಮಾಡಿದ ಭಾಷಣದ ಭಾಗಗಳನ್ನು ಕತ್ತರಿಸಿ ಸಂಕಲನಗೊಳಿಸುವ ಮೂಲಕ BBCಯು ತನ್ನ ವರ್ಚಸ್ಸಿಗೆ ಮಸಿ ಬಳಿಯಲು ಯತ್ನಿಸಿದೆಯೆಂದು ಟ್ರಂಪ್ ಆಪಾದಿಸಿದ್ದಾರೆ. ಭಾಷಣದ ಒಂದು ಭಾಗದಲ್ಲಿ ಅವರು ಕ್ಯಾಪಿಟಲ್ ಹಿಲ್ಗೆ ತೆರಳುವಂತೆ ಬೆಂಬಲಿಗರಿಗೆ ಕರೆ ನೀಡಿದ್ದರೆ, ಇನ್ನೊಂದು ಭಾಗದಲ್ಲಿ ‘ ನರಕಸದೃಶವಾಗಿ ಹೋರಾಡಿ’ ಎಂದು ಕರೆ ನೀಡಿದ್ದರು. ಆದರೆ ಶಾಂತಿಯುತವಾಗಿ ಪ್ರತಿಭಟಿಸಿ ಎಂದು ಅವರು ಕರೆ ನೀಡಿದ್ದ ಭಾಗವನ್ನು ತೆಗೆದುಹಾಕಲಾಗಿತ್ತು. ತನ್ನಿಂದಾದ ತಪ್ಪಿಗೆ BBC ಟ್ರಂಪ್ ಅವರಲ್ಲಿ ಕ್ಷಮೆಯಾಚಿಸಿತ್ತು. ಭಾಷಣದ ಭಾಗಗಳನ್ನು ಸಂಕಲನಗೊಳಿಸುವ ಮೂಲಕ ಟ್ರಂಪ್ ಅವರು ಹಿಂಸೆಗಿಳಿಯುವಂತೆ ಬೆಂಬಲಿಗರಿಗೆ ಕರೆ ನೀಡಿದ್ದರು ಎಂಬ ಭಾವನೆಯನ್ನು ಮೂಡಿಸಲಾಗಿದೆ ಎಂಬುದನ್ನು BBC ಒಪ್ಪಿಕೊಂಡಿತ್ತು. ಆದರೆ ತನ್ನ ವಿರುದ್ಧ ಮೊಕದ್ದಮೆ ದಾಖಲಿಸುವುದಕ್ಕೆ ಯಾವುದೇ ಕಾನೂನಾತ್ಮಕ ನೆಲೆಗಟ್ಟು ಇಲ್ಲವೆಂದು ಅದು ಪ್ರತಿಪಾದಿಸಿತ್ತು.
ಬಸನಗೌಡ ಪಾಟೀಲ್ ಯತ್ನಾಳ್ ಒಡೆತನದ ಕಾರ್ಖಾನೆಯಲ್ಲಿ ಕಬ್ಬಿನ ತೂಕದಲ್ಲಿ ಅಕ್ರಮ: ರೈತರ ಆರೋಪ
ಕಲಬುರಗಿ: ಬಿಜೆಪಿ ಉಚ್ಛಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಒಡೆತನದ ಚಿಂಚೋಳಿ ತಾಲೂಕಿನ ಸಿದ್ಧಸಿರಿ ಎಥೆನಾಲ್ ಮತ್ತು ಪವರ್ ಕಾರ್ಖಾನೆಯು ಕಬ್ಬಿನ ತೂಕದಲ್ಲಿ ವ್ಯಾಪಕ ಅಕ್ರಮ ಎಸಗುವ ಮೂಲಕ ರೈತರನ್ನು ಶೋಷಿಸುತ್ತಿದೆ ಎಂದು ಆರೋಪಿಸಿ ಸಂಯುಕ್ತ ಹೋರಾಟ ಕರ್ನಾಟಕ (SKM) ನೇತೃತ್ವದಲ್ಲಿ ಮಂಗಳವಾರ ವಿವಿಧ ರೈತ ಪರ ಸಂಘಟನೆಗಳು ಪ್ರತಿಭಟನೆ ನಡೆಸಿದವು. ಸಿದ್ದಸಿರಿ ಕಾರ್ಖಾನೆ ವಿರುದ್ಧ ಘೋಷಣೆ ಕೂಗಿದ ಪ್ರತಿಭಟನಾಕಾರರು, ಕಷ್ಟಪಟ್ಟು ಬೆಳೆದ ಕಬ್ಬಿಗೆ ನ್ಯಾಯಯುತ ಬೆಲೆ ನೀಡುವ ಬದಲು ತೂಕದಲ್ಲಿ ಮೋಸ ಮಾಡುವ ಮೂಲಕ ರೈತರ ರಕ್ತ ಹೀರುತ್ತಿದೆ ಎಂದು ಜಿಲ್ಲಾಧಿಕಾರಿಗಳ ಮೂಲಕ ರಾಜ್ಯ ಸರಕಾರಕ್ಕೆ ಮನವಿ ಸಲ್ಲಿಸಿ ಆಕ್ರೋಶ ಹೊರಹಾಕಿದರು. ಕೇವಲ ಒಂದು ಲೋಡ್ನಲ್ಲಿ 6 ಕ್ವಿಂಟಾಲ್ಗಿಂತಲೂ ಹೆಚ್ಚು ತೂಕ ಕಡಿಮೆ ತೋರಿಸುತ್ತಿರುವುದು ಕೇವಲ ತಾಂತ್ರಿಕ ದೋಷವಲ್ಲ, ಇದೊಂದು ವ್ಯವಸ್ಥಿತ ಸಂಚು. ಈ ಮೂಲಕ ರೈತರಿಗೆ ಭಾರಿ ಆರ್ಥಿಕ ನಷ್ಟ ಉಂಟುಮಾಡಲಾಗುತ್ತಿದೆ ಎಂದು ರೈತರು ದೂರಿದರು. ಬಾಕಿ ಹಣ ಮತ್ತು ಬಡ್ಡಿ ಪಾವತಿಗೆ ಒತ್ತಾಯ: ಸಕ್ಕರೆ ಕಾರ್ಖಾನೆಗಳು ಆರಂಭವಾಗಿ ತಿಂಗಳುಗಳು ಕಳೆದರೂ ರೈತರ ಖಾತೆಗೆ ಹಣ ಜಮಾ ಮಾಡದಿರುವುದನ್ನು ರೈತ ಸಂಘಟನೆಗಳು ತೀವ್ರವಾಗಿ ಖಂಡಿಸಿದೆ. ನಿಯಮದಂತೆ ಕಬ್ಬು ಪೂರೈಕೆಯಾದ 14 ದಿನಗಳೊಳಗೆ ಹಣ ಪಾವತಿಸಬೇಕು. ವಿಳಂಬವಾದಲ್ಲಿ ಬಡ್ಡಿ ಸೇರಿಸಿ ನೀಡಬೇಕು. ಸಿದ್ಧಸಿರಿ ಕಾರ್ಖಾನೆಯು ಕೇವಲ 2550 ಪಾವತಿಸಿ ಉಳಿದ ಬಾಕಿಯನ್ನು ತಡೆಹಿಡಿದಿದೆ. ಇದನ್ನು ತಕ್ಷಣವೇ ಪಾವತಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ಶರಣಬಸಪ್ಪ ಮಮಶೆಟ್ಟಿ, ಭೀಮಾಶಂಕರ್ ಮಾಡ್ಯಾಳ, ಮೌಲಾ ಮುಲ್ಲಾ, ಕೃಪಾ ಸಾಗರ ಕೊರವಿ, ಸಿದ್ಧು ಎಸ್.ಎಲ್, ಕರೆಪ್ಪ ಕರಗೊಂಡ, ಸಿದ್ದು ಡೊಣ್ಣೂರ್, ಬಸವರಾಜ ಮರಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ರಾಯಚೂರು| ಅಪರಾಧ ತಡೆ ಜಾಗೃತಿಗಾಗಿ ಬ್ಯಾಂಕ್ಗಳ ವ್ಯವಸ್ಥಾಪಕರೊಂದಿಗೆ ಸಭೆ
ರಾಯಚೂರು: ನಗರ ಸೇರಿದಂತೆ ಜಿಲ್ಲೆಯಾದ್ಯಂತ ಅಪರಾಧಗಳನ್ನು ತಡೆಗಟ್ಟಲು ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಪುಟ್ಟಮಾದಯ್ಯ ಅವರ ಅಧ್ಯಕ್ಷತೆಯಲ್ಲಿ ಮಂಗಳವಾರ ಎಲ್ಲ ಬ್ಯಾಂಕ್ಗಳ ವ್ಯವಸ್ಥಾಪಕರು ಹಾಗೂ ಅಧಿಕಾರಿಗಳೊಂದಿಗೆ ಸಭೆ ನಡೆಯಿತು. ಪೊಲೀಸ್ ಠಾಣೆಗಳಲ್ಲಿ ಇರುವಂತೆ ಬ್ಯಾಂಕ್ಗಳಲ್ಲಿಯೂ ಸಿಸಿ ಕ್ಯಾಮೆರಾಗಳನ್ನು ಅಳವಡಿಸಬೇಕು ಹಾಗೂ ಒಂದು ವರ್ಷದವರೆಗೂ ಮಾಹಿತಿ ಸಂಗ್ರಹಣೆಯಾಗುವ ರೀತಿಯಲ್ಲಿ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಹೇಳಿದರು. ಪ್ರತಿಯೊಂದು ಬ್ಯಾಂಕ್ನಲ್ಲಿ ಸಾರ್ವಜನಿಕರಿಗೆ ಕಾಣುವಂತೆ ಸೈಬರ್ ಸಹಾಯವಾಣಿ 1930 ಹಾಗೂ ಇತರ ಸೈಬರ್ ಅಪರಾಧಗಳ ತಡೆಗಟ್ಟಲು ಜಾಗೃತಿ ಸಂದೇಶಗಳ ನಾಮಫಲವನ್ನು ಹಾಕಬೇಕು. ಕರೆಂಟ್ ಖಾತೆಗಳನ್ನು ತೆಗೆಯುವಾಗ ಕಡ್ಡಾಯವಾಗಿ ಸ್ಥಳ ಪರಿಶೀಲಿಸುವುದು ಹಾಗೂ ಬ್ಯಾಂಕ್ ಗ್ರಾಹಕರು ಆನ್ಲೈನ್ನಲ್ಲಿ ಹಣ ವರ್ಗಾವಣೆ ಮಾಡಬೇಕಾದಲ್ಲಿ ವಹಿಸಬೇಕಾದ ಮುಂಜಾಗ್ರತ ಕ್ರಮಗಳ ಬಗ್ಗೆ ಗಮನಹರಿಸಬೇಕು ಎಂದು ಸೂಚನೆ ನೀಡಿದರು. ಗ್ರಾಹಕರು ಹಣವನ್ನು ಡ್ರಾ ಮಾಡಿಕೊಂಡು ಹೋಗುವಾಗ ಅವರ ಗಮನವನ್ನು ಬೇರೆಡೆಗೆ ಸೆಳೆದು ಹಣ ಕದಿಯುವ ಸಾಧ್ಯತೆ ಈ ಕುರಿತು ಗ್ರಾಹಕರಿಗೆ ತಿಳುವಳಿಕೆ ನೀಡಬೇಕು, ಸದಾಕಾಲ ಬ್ಯಾಂಕ್ ಮತ್ತು ಎಟಿಎಂನಲ್ಲಿ ಸೆಕ್ಯೂರಿಟಿ ಗಾರ್ಡುಗಳು ಕರ್ತವ್ಯ ನಿರ್ವಹಿಸುವ ವ್ಯವಸ್ಥೆ ಮಾಡಬೇಕು ಎಂದು ಸಲಹೆ ನೀಡಿದರು. ಈ ವೇಳೆ ಸೈಬರ್ ಅಪರಾಧ ವಿಭಾಗದ ಡಿವೈಎಸ್ಪಿ ವೆಂಕಟೇಶ್, ರಾಯಚೂರು ಜಿಲ್ಲಾ ಲೀಡ್ ಬ್ಯಾಂಕ್ ವ್ಯವಸ್ಥಾಪಕ ಸುಧೀಂದ್ರ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ರಾಯಚೂರು| ವೈಟಿಪಿಎಸ್ ಕಲ್ಲಿದ್ದಲು ಕಳ್ಳತನ ಆರೋಪ: ಕ್ರಮಕ್ಕೆ ಒತ್ತಾಯ
ರಾಯಚೂರು: ಯರಮರಸ್ ಕ್ರಿಟಿಕಲ್ ವಿದ್ಯುತ್ ಶಾಖೋತ್ಪನ್ನ ಕೇಂದ್ರ (ವೈಟಿಪಿಎಸ್) ವಿದ್ಯುತ್ ಕೇಂದ್ರಕ್ಕೆ ಪೂರೈಕೆಯಾಗುವ ಕಲ್ಲಿದ್ದಲು ಕಳ್ಳತನದ ಮಾರಾಟ ಅವ್ಯಾಹುತವಾಗಿ ನಡೆಯುತ್ತಿದ್ದು ಪ್ರಕರಣದಲ್ಲಿ ಭಾಗಿಯಾದವರ ವಿರುದ್ದ ಕ್ರಿಮಿನಲ್ ಕೇಸ್ ದಾಖಲಿಸಬೇಕೆಂದು ಆಗ್ರಹಿಸಿ ಡಿ.22ರಿಂದ ವೈಟಿಪಿಎಸ್ ಕಚೇರಿ ಮುಂದೆ ಅನಿರ್ದಿಷ್ಟಾವಧಿ ಧರಣಿ ನಡೆಸಲಾಗುತ್ತದೆ ಎಂದು ದಲಿತ ಸಂಘಟನೆಗಳ ಒಕ್ಕೂಟದ ಜಿಲ್ಲಾ ಸಂಚಾಲಕ ಎಸ್.ನರಸಿಂಹಲು ಹೇಳಿದರು. ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಸ್.ನರಸಿಂಹಲು, 193 ಕೊಟಿ ರೂ. ವೆಚ್ಚದಲ್ಲಿ ಕಲ್ಲಿದ್ದಲು ಪೂರೈಕೆ ಟೆಂಡರ್ ಆಗಿದ್ದು, ಯರಮರಸ್ ರೈಲು ನಿಲ್ದಾಣ ಬಳಿ ಕಲ್ಲಿದ್ದಲು ಸ್ವಚ್ಚತೆ ಹೆಸರಿನಲ್ಲಿ ಅಕ್ರಮವಾಗಿ ಕಲ್ಲಿದ್ದಲು ಮಾರಾಟ ಮಾಡಲಾಗುತ್ತಿದೆ. ಈಗಾಗಲೇ ಎರಡು ಬಾರಿ ಕೇಸ್ ದಾಖಲಾದರೂ ಅಕ್ರಮ ಕಳ್ಳತನ ಮಾತ್ರ ನಿಂತಿಲ್ಲ. ಪವರ್ ಮ್ಯಾಕ್ ಕಂಪೆನಿಯ ವ್ಯವಸ್ಥಾಪಕ ನಿರ್ದೇಶಕ ಕಿಶೋರ ಬಾಬು, ಸಹಾಯಕ ಮೇಲ್ವಿಚಾರಕ ಹರಿಕೃಷ್ಣ, ವೈಟಿಪಿಎಸ್ ಮುಖ್ಯ ಅಭಿಯಂತರ, ವ್ಯವಸ್ಥಾಪಕ ನಿರ್ದೇಶಕರು ಸೇರಿದಂತೆ ರೈಲು ಗುತ್ತಿಗೆದಾರರು ಸೇರಿ ಅಕ್ರಮ ಕಲ್ಲಿದ್ದಲು ಸಾಗಾಣೆ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಈ ಸಂದರ್ಭದಲ್ಲಿ ರಾಜ್ಯ ಸಂಚಾಲಕ ಎಲ್.ವಿ.ಸುರೇಶ್, ಹನುಮೇಶ ಆರೋಲಿ, ಹನುಮೇಶ ಭೇರಿ, ಫಕ್ರುದ್ದೀನ್ ಅಲಿ ಅಹ್ಮದ್ ಭೀಮಣ್ಣ, ಚಿದಾನಂದ ಸೇರಿ ಹಲವರು ಉಪಸ್ಥಿತರಿದ್ದರು.
ಮತದಾರರ ಪಟ್ಟಿ ಪರಿಷ್ಕರಣೆ ಸಂವಿಧಾನ ವಿರೋಧಿ ನಡೆ: ಶಿವಸುಂದರ್
ಉಡುಪಿ: ಮತದಾರರ ಪಟ್ಟಿ ಪರಿಷ್ಕರಣೆ ಮೂಲಕ ಮತದಾರರ ನಾಗರಿಕತ್ವ ಪರಿಶೀಲನೆ ಸಂವಿಧಾನ ವಿರೋಧಿ ನಡೆಯಾಗಿದ್ದು, ಮತದಾರರ ಪಟ್ಟಿಯಲ್ಲಿರಲು, ಸೇರಲು ಶಿಕ್ಷಣ, ಆಸ್ತಿಯನ್ನು ಷರತ್ತಿಗೊಡ್ಡಲಾಗುತ್ತಿದೆ ಎಂದು ಹಿರಿಯ ಚಿಂತಕ ಶಿವಸುಂದರ್ ಆರೋಪಿಸಿದ್ದಾರೆ. ಸಾಲಿಡಾರಿಟಿ ಯೂತ್ ಮೂವ್ಮೆಂಟ್ ವತಿಯಿಂದ ‘ವಕ್ಛ್ ಅಪಪ್ರಚಾರ ಮತ್ತು ವಾಸ್ತವ’ ಕೃತಿ ಬಿಡುಗಡೆ ಹಾಗೂ ಎಸ್ಐಆರ್(ಮತದಾರರ ಪಟ್ಟಿಯ ತೀವ್ರ ಪರಿಶೀಲನೆ) ಕುರಿತಂತೆ ಹೋಟೆಲ್ ಕಿದಿಯೂರಿನ ಮಾಧವಕೃಷ್ಣ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಲಾದ ವಿಚಾರ ವಿನಿಮಯ ಕಾರ್ಯಕ್ರಮದಲ್ಲಿ ಅವರು ಮಾತನಾಡುತಿದ್ದರು. ಸಂವಿಧಾನದ ಆಶಯದಂತೆ ನಡೆದ ಯಾವ ಪರಿಷ್ಕರಣೆಯನ್ನು ಯಾರೂ ವಿರೋಧಿಸಿಲ್ಲ. ಕಾಲ ಕಾಲಕ್ಕೆ ಪರಿಷ್ಕರಣೆ ನಡೆಯಲೇ ಬೇಕು. ನಾವು ಯಾರು ಕೂಡ ಪರಿಷ್ಕರಣೆಯ ವಿರೋಧಿಗಳಲ್ಲ. ಆದರೆ ಈ ವಿಶೇಷ ಪರಿಷ್ಕಣೆಯು ಸಂವಿಧಾನದ ಆಶಯದ ವಿರುದ್ಧ ಇರುವುದರಿಂದ ಇದರ ಕುರಿತು ಅಪಸ್ವರ ವ್ಯಕ್ತವಾಗುತ್ತಿದೆ. ಇದರಿಂದಾಗಿ ದೇಶದ ದುರ್ಬಲ ವರ್ಗದ ಜನ ಮತದಾನದ ಹಕ್ಕನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ ಎಂದು ಅವರು ಅಭಿಪ್ರಾಯಪಟ್ಟರು. ಈ ದೇಶದ ಚುನಾವಣೆಯನ್ನು ಸಂಘಟಿಸುವುದು, ನಿಯಂತ್ರಿಸುವುದು ಮತ್ತು ಮಾರ್ಗದರ್ಶನ ಮಾಡುವುದು ಚುನಾವಣಾ ಆಯೋಗದ ಪ್ರಮುಖ ಉದ್ದೇಶವಾಗಿದೆ. ಮುಕ್ತ ನಿರ್ಭೀತ ಚುನಾವಣೆ ನಡೆಸುವುದು ಸಹ ಆಯೋಗದ ಕರ್ತವ್ಯ. 18 ವರ್ಷ ತುಂಬಿದ ಎಲ್ಲರೂ ಈ ದೇಶದಲ್ಲಿ ಮತದಾನ ಮಾಡಲು ಅರ್ಹರು. ಯಾವುದೇ ಪಕ್ಷಪಾತ ಇಲ್ಲದೆ ಎಲ್ಲ ಪಕ್ಷಗಳು ಚುನಾವಣೆಯಲ್ಲಿ ಸ್ಪರ್ಧಿಸುವ ವಾತಾವರಣವನ್ನು ಚುನಾವಣಾ ಆಯೋಗ ನಿರ್ಮಾಣ ಮಾಡ ಬೇಕಾಗಿದೆ. ಇದಕ್ಕೆ ಪೂರಕವಾದ ಕ್ರಮಗಳನ್ನು ಮಾತ್ರ ಮಾಡಲು ಅದಕ್ಕೆ ಅಧಿಕಾರವಿದೆ. ಈ ಉದ್ದೇಶವನ್ನು ಈಡೇರಿಸಲು ಚುನಾವಣಾ ಆಯೋಗ ಮತಪಟ್ಟಿಯನ್ನು ಪರಿಷ್ಕರಿಸಬಹುದಾಗಿದೆ ಎಂದವರು ಹೇಳಿದರು. ಈ ದೇಶದಲ್ಲಿ ಹಿಂದೂ, ಮುಸ್ಲಿಮ್, ಬಡವ, ಶ್ರೀಮಂತ, ದಲಿತ ಯಾರೇ ಆದರೂ ಕೂಡ ಮತದಾನ ಮಾಡಲು, ಚುನಾವಣೆಯಲ್ಲಿ ಭಾಗವಹಿಸಲು ಅರ್ಹರು. ಇಂದು ಚುನಾವಣಾ ಆಯೋಗ ಹನ್ನೊಂದು ದಾಖಲಾತಿಗಳ ಪಟ್ಟಿಯನ್ನು ಒದಗಿಸಿ ಇದರಲ್ಲಿ ಯಾವುದಾದರೂ ಇರಬೇಕೆಂದು ಕಡ್ಡಾಯಗೊಳಿಸುತ್ತಿದೆ. ವಿಶೇಷ ಪರಿಷ್ಕೃರಣೆಯ ಹೆಸರಿನಲ್ಲಿ ದೊಡ್ಡ ಸಂಖ್ಯೆಯ ಜನರು ಮತದಾನದ ಹಕ್ಕನ್ನು ಕಳೆದುಕೊಳ್ಳುವ ಭೀತಿ ಎದುರಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು. ಚುನಾವಣಾ ಆಯೋಗ ಪಟ್ಟಿ ಮಾಡಿರುವ ದಾಖಲಾತಿಗಳು ಈ ದೇಶದ ಅರ್ಧದಷ್ಟು ಜನರ ಬಳಿ ಇಲ್ಲ. ಮುಖ್ಯವಾಗಿ ಬಡವರಲ್ಲಿ ಇಲ್ಲ. ಮತದಾರರಲ್ಲಿ ಇರೋ ದಾಖಲೆ ಬದಲು ಇಲ್ಲದಿರೋ ದಾಖಲೆಯನ್ನು ಅದು ಕೇಳುತ್ತಿದೆ. ಈ ವಿಶೇಷ ಪರಿಷ್ಕೃರಣೆಯಿಂದ ಅವರು ಅವರ ಮತದಾನದ ಹಕ್ಕನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ ಎಂದು ಶಿವಸುಂದರ್ ಹೇಳಿದರು. ಪ್ರಜಾಪ್ರಭುತ್ವದಲ್ಲಿ ಜನರು ಸರಕಾರವನ್ನು ಚುನಾಯಿಸಬೇಕು. ಆದರೆ ಇಂದು ಸರಕಾರ ತನಗೆ ಯಾರು ಮತದಾನ ಮಾಡಬೇಕೆಂದು ಆಯ್ಕೆ ಮಾಡುತ್ತದೆ. ಈ ಪ್ರಕ್ರಿಯೆಯಿಂದ ಅಲ್ಪಸಂಖ್ಯಾತರು, ದುರ್ಬಲರು, ದಲಿತರು ವ್ಯಾಪಕ ಸಮಸ್ಯೆಗೀಡಾಗುತ್ತಾರೆ. ಈ ವಿಶೇಷ ಪರಿಷ್ಕೃರಣೆಯ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದವರು ನುಡಿದರು. ಬಿಹಾರ ಚುನಾವಣೆಯಲ್ಲಿ ಇದು ಯಾವ ರೀತಿಯಲ್ಲಿ ಪರಿಣಾಮ ಬೀರಿದೆ ಎಂಬುದು ನಮ್ಮ ಮುಂದಿರುವಾಗ ಇದರ ಕುರಿತು ಜನ ಜಾಗೃತಿ ಅಗತ್ಯ. ಅನಗತ್ಯವಾಗಿ ಚುನಾವಣಾ ಆಯೋಗದ ಸಂವಿಧಾನ ಆಶಯದ ವಿರೋಧಿ ನೀತಿಗಳಿಂದ ಬಡವರು ತಮ್ಮ ಹಕ್ಕನ್ನು ಕಳೆದುಕೊಳ್ಳುವಂತಾಗಬಾರದು ಎಂದರು. ವಕ್ಛ್ ಪ್ರಕರಣ ಸುಪ್ರೀಂಕೋರ್ಟಿನಲ್ಲಿದ್ದು ನ್ಯಾಯಾಲಯಗಳು ಗಾಯಕ್ಕೆ ಮುಲಾಮು ಹಚ್ಚೋದು ಬಿಟ್ಟರೆ ಸಾಂವಿಧಾನಿಕ ಪರಿಹಾರ ನೀಡದಂತಹ ಪರಿಸ್ಥಿತಿ ಉದ್ಭವವಾಗಿದೆ. ಮನೆ ಮನೆಗೆ ಬಂದು ಅರ್ಹರನ್ನು ಮತದಾರರ ಪಟ್ಟಿಯಲ್ಲಿ ಸೇರಿಸೋದು ಚುನಾವಣಾ ಆಯೋಗದ ಜವಾಬ್ದಾರಿ. ಆದರೆ ಈಗ ಯಾರು ಮತದಾರರಾಗಬೇಕೆಂಬುದನ್ನು ಸರಕಾರ/ಚುನಾವಣಾ ಆಯೋಗ ಆಯ್ಕೆ ಮಾಡುತ್ತಿದೆ. ಆಯೋಗ ಕೇಂದ್ರದ ತಾಳಕ್ಕೆ ತಕ್ಕಂತೆ ಕುಣಿಯುತ್ತಿದೆ ಎಂದವರು ಆರೋಪಿಸಿದರು. ಸನ್ಮಾರ್ಗ ವಾರ ಪತ್ರಿಕೆಯ ಸಂಪಾದಕ ಎ.ಕೆ ಕುಕ್ಕಿಲ, ವಕ್ಫ್ ತಿದ್ದುಪಡಿ ಕಾಯಿದೆ, ಮುಂದಿನ ನಡೆಯ ಕುರಿತು ಮಾತನಾಡಿದರು. ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟದ ಅಧ್ಯಕ್ಷರಾದ ಮುಹಮ್ಮದ್ ಮೌಲಾ, ಫಾ.ವಿಲಿಯಂ ಮಾರ್ಟಿಸ್, ಸಾಲಿಡಾರಿಟಿ ಜಿಲ್ಲಾಧ್ಯಕ್ಷ ಅಫ್ವಾನ್ ಹೂಡೆ ಉಪಸ್ಥಿತರಿದ್ದರು. ಯಾಸೀನ್ ಕಾರ್ಯಕ್ರಮ ನಿರೂಪಿಸಿದರು.
ಮಾಹಿತಿ ನೀಡದಿದ್ದರೆ ಕೆಲಸದಿಂದ ವಜಾ! ಸರ್ಕಾರಿ ಅಧಿಕಾರಿಗೆ ಕರ್ನಾಟಕ ಹೈಕೋರ್ಟ್ನಿಂದ ಎಚ್ಚರಿಕೆ
ಸರ್ಕಾರಿ ವಕೀಲರಿಗೆ ಮಾಹಿತಿ ನೀಡಲು ವಿಳಂಬ ಮಾಡುವ ಅಧಿಕಾರಿಗಳ ವಿರುದ್ಧ ಕರ್ನಾಟಕ ಹೈಕೋರ್ಟ್ ಕಠಿಣ ಎಚ್ಚರಿಕೆ ನೀಡಿದೆ. ಚಿತ್ರದುರ್ಗದ ತಹಸೀಲ್ದಾರ್ಗೆ 50 ಸಾವಿರ ರೂ. ದಂಡ ವಿಧಿಸಿ, ವಿಚಾರಣೆಗೆ ಖುದ್ದು ಹಾಜರಾಗಲು ನಿರ್ದೇಶಿಸಿತ್ತು. ವಿಳಂಬ ಖಚಿತಪಟ್ಟರೆ ಸೇವೆಯಿಂದ ವಜಾಗೊಳಿಸುವ ಆದೇಶ ನೀಡಲಾಗುವುದು ಎಂದು ನ್ಯಾಯಪೀಠ ಎಚ್ಚರಿಸಿದೆ.
ದೇವದುರ್ಗ ಶಾಸಕಿ ಕರೆಮ್ಮ ಜಿ ನಾಯಕ್ ವಿರುದ್ಧ ಸಭಾಪತಿಗೆ ಭೀಮ್ ಆರ್ಮಿ ದೂರು
ರಾಯಚೂರು: ದೇವದುರ್ಗ ಶಾಸಕಿ ಕರೆಮ್ಮ ಜಿ.ನಾಯಕ್ ಅವರು ಅನಧಿಕೃತವಾಗಿ ಪ್ರವಾಸಿ ಮಂದಿರಕ್ಕೆ ಶಾಸಕರ ಕಾರ್ಯಾಲಯವೆಂದು ನಾಮಫಲಕ ಹಾಕಿಕೊಂಡು ಸಂಘ ಸಂಸ್ಥೆಗಳಿಗೆ ಸಭೆ ಮಾಡಲು ಅವಕಾಶ ನೀಡುತ್ತಿಲ್ಲ. ಶಾಸಕಿಯ ವಿರುದ್ಧ ದೂರು ನೀಡಿದರೆ ಬೆಂಬಲಿಗರು ಬೆದರಿಕೆ ಹಾಕುತ್ತಿದ್ದಾರೆ ಎಂದು ಭೀಮ್ ಆರ್ಮಿ ದೇವದುರ್ಗ ತಾಲೂಕು ಘಟಕದ ವತಿಯಿಂದ ಸಭಾಧ್ಯಕ್ಷ ಯು.ಟಿ ಖಾದರ್ ಅವರಿಗೆ ದೂರನ್ನು ಸಲ್ಲಿಸಲಾಯಿತು. ಭೀಮ್ ಆರ್ಮಿ ದೇವದುರ್ಗ ತಾಲೂಕು ಅಧ್ಯಕ್ಷ ವಿಶ್ವನಾಥ್ ಅವರು ಮಾತನಾಡಿ, ಕಳೆದ ಡಿ.12ರಂದು ಶಾಸಕರು ತಮ್ಮ ವಕೀಲರ ಮೂಲಕ ನನಗೆ ಲೀಗಲ್ ನೋಟೀಸ್ ಕಳುಹಿಸಿ ನನ್ನ ಮೇಲೆ ಪ್ರಕರಣ ದಾಖಲಿಸುತ್ತೇವೆಂದು ಬೆದರಿಕೆ ಹಾಕುತಿದ್ದಾರೆ. ಕಳೆದ ಒಂದು ವರ್ಷದಿಂದ ಆಡಳಿತಾತ್ಮಕವಾಗಿ ಪ್ರಶ್ನೆ ಮಾಡಿದ ಕಾರಣ ಶಾಸಕರ ಬೆಂಬಲಿಗರಿಂದ ನನಗೆ ಜೀವ ಬೆದರಿಕೆ ಕರೆ ಬರುತ್ತಿದೆ. ಈ ಬಗ್ಗೆ ದೇವದುರ್ಗ ಪೊಲೀಸ್ ಠಾಣೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಪೊಲೀಸ್ ಮಾಹಾನಿರ್ದೇಶಕರಿಗೆ ದೂರು ನೀಡಿದರೂ ಪ್ರಕರಣ ದಾಖಲಿಸಿಕೊಂಡಿರುವುದಿಲ್ಲ. ನನ್ನ ಜೀವಕ್ಕೆ ಅಪಾಯವುಂಟಾದರೆ ಶಾಸಕಿ ಕರೆಮ್ಮ ಜಿ.ನಾಯಕರೆ ಕಾರಣ ಎಂದು ಹೇಳಿದರು. ಈ ವೇಳೆ ಬಾಬ ಖಾನ್, ಸಿ.ದೀಪಕ್ ಭಂಡಾರಿ, ಎಚ್.ಎಮ್.ಬಾಬು, ಕರಿಯಪ್ಪ ಮಾರ್ಕೆಲ್ ಉಪಸ್ಥಿತರಿದ್ದರು. ಶಾಸಕಿ ಕರೆಮ್ಮಾ ನಾಯಕ್ ಸ್ಪಷ್ಟನೆ: ದಾಖಲೆ ಇಲ್ಲದೆ ಇನ್ನೊಬ್ಬರ ಬಗ್ಗೆ ಅರೋಪ ಮಾಡುವುದು ಸಮಂಜಸವಲ್ಲ. ದಾಖಲೆಗಳು ಇದ್ದರೆ ಕಾನೂನು ಚೌಕಟ್ಟಿನಲ್ಲಿ ಹೋರಾಟ ಮಾಡಲಿ. ಅದಕ್ಕೆ ನನ್ನ ಬೆಂಬಲವಿದೆ. ದಾಖಲೆ ಇಲ್ಲದೆ ನನ್ನ ಬಗ್ಗೆ ಸಭಾಪತಿಗಳಿಗೆ ದೂರು ನೀಡುವುದು ಬಿಟ್ಟು ದಾಖಲೆ ತೆಗೆದುಕೊಂಡು ಬರಲಿ, ಎದುರಿಸಲು ನಾನು ಸಿದ್ದಳಿದ್ದೇನೆ. ನನ್ನ ಮಕ್ಕಳು, ಮನೆಯವರು ಬೆದರಿಕೆ ಹಾಕಿದರೆ ಕಾನೂನು ಚೌಕಟ್ಟಲ್ಲಿ ಹೋರಾಟ ಮಾಡಲಿ. ನನ್ನ ಮಕ್ಕಳು ಯಾವುದೇ ತಪ್ಪು ಮಾಡಿಲ್ಲ. ಅಧಿಕಾರ ದುರುಪಯೋಗ ಪಡಿಸಿಕೊಳ್ಳುವ ಅವಶ್ಯಕತೆ ನನಗಿಲ್ಲ. ನನ್ನಮತದಾರರ ಋಣ ತೀರಿಸಲಾಗದು. ನಾನು ಇರುವವರೆಗೂ ಪ್ರಾಮಾಣಿಕ ಸೇವೆ ಮಾಡುವೆ ಎಂದು ಶಾಸಕಿ ಕರೆಮ್ಮಾ ಜಿ ನಾಯಕ ಸ್ಪಷ್ಟನೆಯನ್ನು ನೀಡಿದ್ದಾರೆ.
ಕರ್ನಾಟಕದಾದ್ಯಂತ 2134 ಇಲಿ ಜ್ವರ ಪ್ರಕರಣ: ದಕ್ಷಿಣ ಕನ್ನಡ, ಉಡುಪಿಯಲ್ಲಿ ಹೆಚ್ಚಳ!
ರಾಜ್ಯದಲ್ಲಿ ಇಲಿ ಜ್ವರ ಪ್ರಕರಣಗಳು ವರದಿಯಾಗಿವೆ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗಿದೆ. 2025ರ ನವೆಂಬರ್ ವರೆಗೆ 2134 ಪ್ರಕರಣಗಳು ದಾಖಲಾಗಿವೆ. ಕಳೆದ ವರ್ಷಕ್ಕೆ ಹೋಲಿಸಿದರೆ ಶೇಕಡಾ 1ರಷ್ಟು ಇಳಿಕೆಯಾಗಿದೆ. ಆರೋಗ್ಯ ಇಲಾಖೆ ಸೂಕ್ತ ಕ್ರಮಗಳನ್ನು ಕೈಗೊಂಡಿದೆ. ಔಷಧಿಗಳ ಕೊರತೆ ಇಲ್ಲ. ತ್ವರಿತ ಚಿಕಿತ್ಸೆಗೆ ಆದ್ಯತೆ ನೀಡಲಾಗಿದೆ ಎಂದು ಆರೋಗ್ಯ ಇಲಾಖೆ ಸ್ಪಷ್ಟಪಡಿಸಿದೆ.
ಮಸ್ಕಿ ಪುರಸಭೆ ಅಧ್ಯಕ್ಷರಾಗಿ ಸುರೇಶ್ ಹರಸೂರು ಅವಿರೋಧವಾಗಿ ಆಯ್ಕೆ
ರಾಯಚೂರು: ಮಸ್ಕಿ ಪುರಸಭೆಯ ನೂತನ ಅಧ್ಯಕ್ಷರಾಗಿ ಸುರೇಶ್ ಹರಸೂರು ಅವಿರೋಧವಾಗಿ ಆಯ್ಕೆಯಾದರು. ಅಧ್ಯಕ್ಷ ಮಲ್ಲಯ್ಯ ಅಂಬಾಡಿ ತಮ್ಮ ಅಧ್ಯಕ್ಷ ಸ್ಥಾನಕ್ಕೆ ಇತ್ತೀಚೆಗೆ ರಾಜೀನಾಮೆ ನೀಡಿದ್ದರಿಂದ ಸೋಮವಾರ ಚುನಾವಣೆ ನಡೆಯಿತು. ಪುರಸಭೆಯ ವಾರ್ಡ್ ನಂ16ರ ಸದಸ್ಯ ಸುರೇಶ ಹರಸೂರು ಒಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಅವರ ಅವಿರೋಧ ಆಯ್ಕೆಯನ್ನು ಚುನಾವಣಾಧಿಕಾರಿ ತಹಶೀಲ್ದಾರ್ ಮಂಜುನಾಥ್ ಬೋಗಾವತಿ ಘೋಷಿಸಿದರು. ಪುರಸಭೆಯ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿ ಮಾತನಾಡಿದ ಸುರೇಶ್ ಹರಸೂರ, ಪಟ್ಟಣದಲ್ಲಿ ಸಾರ್ವಜನಿಕರಿಗೆ ಪುರಸಭೆಯಿಂದ ನೀಡಬೇಕಾದ ಮೂಲಭೂತ ಸೌಲಭ್ಯಗಳನ್ನು ನೀಡಲು ಎಲ್ಲಾ ಸದಸ್ಯರ ಸಹಕಾರದಿಂದ ಶ್ರಮಿಸುತ್ತೇನೆ ಎಂದು ಹೇಳಿದರು.
BWSSB Water Cut: ಬೆಂಗಳೂರಿನ 80 ಕ್ಕೂ ಅಧಿಕ ಬಡಾವಣೆಯಲ್ಲಿ ಡಿ.17 ಕ್ಕೆ ಕಾವೇರಿ ನೀರು ಸರಬರಾಜು ಬಂದ್! ಎಲ್ಲೆಲ್ಲಿ?
ಬೆಂಗಳೂರಿನಲ್ಲಿ ಕಾವೇರಿ 5ನೇ ಹಂತದ ನೀರು ಸರಬರಾಜಿನಲ್ಲಿ ಸೋರಿಕೆ ಪತ್ತೆಯಾಗಿದೆ. ಇದನ್ನು ಸರಿಪಡಿಸಲು ತುರ್ತು ದುರಸ್ತಿ ಕಾರ್ಯ ನಡೆಯಲಿದೆ. ಡಿಸೆಂಬರ್ 17ರಂದು ಬೆಳಗ್ಗೆ 7ರಿಂದ ರಾತ್ರಿ 10ರವರೆಗೆ ನಗರದ ಹಲವು ಪ್ರದೇಶಗಳಲ್ಲಿ ನೀರಿನ ಪೂರೈಕೆ ವ್ಯತ್ಯಯವಾಗಲಿದೆ. ಬೆಂಗಳೂರು ಜಲಮಂಡಳಿ ಈ ಬಗ್ಗೆ ಮಾಹಿತಿ ನೀಡಿದೆ. ಈ ಸಮಯದಲ್ಲಿ ನೀರು ಸರಬರಾಜು ಆಗುವುದಿಲ್ಲ.
ರಾಯಚೂರು| ಪೋಲಿಯೋ ಲಸಿಕೆ ಟಾಸ್ಕ್ ಪೋರ್ಸ್ ಸಮಿತಿ ಸಭೆ
ರಾಯಚೂರು: ರಾಯಚೂರು ನಗರದಲ್ಲಿ ಪಲ್ಸ್ ಪೋಲಿಯೋ ಅಭಿಯಾನದಡಿ ಡಿ.21ರಿಂದ 24ರವರೆಗೆ ಐದು ವರ್ಷದೊಳಗಿನ 35,560 ಮಕ್ಕಳಿಗೆ ಲಸಿಕೆ ಹಾಕುವ ಗುರಿ ಹೊಂದಲಾಗಿದೆ. ಈ ಕಾರ್ಯಕ್ಕೆ ನಿಯೋಜನೆಗೊಂಡ ವೈದ್ಯರು, ಆರೋಗ್ಯ ಇಲಾಖೆ ಸಿಬ್ಬಂದಿ, ಅಂಗನವಾಡಿ ಆಶಾ ಕಾರ್ಯಕರ್ತೆಯರು ಕೆಲಸಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಬೇಕೆಂದು ರಾಯಚೂರು ಮಹಾನಗರ ಪಾಲಿಕೆಯ ಆಯುಕ್ತರಾದ ಜುಬಿನ್ ಮೊಹೊಪಾತ್ರ ಅವರು ಅಧಿಕಾರಿಗಳಿಗೆ ಸೂಚಿಸಿದರು. ಡಿಸೆಂಬರ್ 16ರ ಮಂಗಳವಾರದಂದು ನಗರದ ಹಳೆ ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ನಡೆದ ಪಲ್ಸ್ ಪೋಲಿಯೋ ಟಾಸ್ಕ್ಪೋರ್ಸ್ ಸಮಿತಿ ಸಭೆಯ ಆಧ್ಯಕ್ಷತೆ ವಹಿಸಿ ಮಾತನಾಡಿದ ಜುಬಿನ್ ಮೊಹೊಪಾತ್ರ, ಯಾವುದೇ ಮಗು ಲಸಿಕೆಯಿಂದ ವಂಚಿತವಾಗದಂತೆ ನೋಡಿಕೊಳ್ಳಲು ನಗರ ಪ್ರದೇಶಗಳಲ್ಲಿ ಒಟ್ಟು 143 ಲಸಿಕಾ ಕೇಂದ್ರ ಸ್ಥಾಪಿಸಲಾಗಿದೆ. 9 ಟ್ರಾಂಜಿಟ್ ಹಾಗೂ 6 ಸಂಚಾರಿ (ಮೊಬೈಲ್) ತಂಡ ರಚಿಸಲಾಗಿದೆ. ಪಲ್ಸ್ ಪೋಲಿಯೋ ಅಭಿಯಾನದಲ್ಲಿ ಒಟ್ಟು 286 ವ್ಯಾಕ್ಸಿನೆಟರ್ಸ್, 31 ಮೇಲ್ವಿಚಾರಕರಿದ್ದು, ರಾಯಚೂರು ನಗರದಲ್ಲಿ ಒಟ್ಟು 62,685 ಮನೆಗಳನ್ನು ಲಸಿಕಾ ಅಭಿಯಾನದಡಿ ಸಂದರ್ಶಿಸುವ ಗುರಿ ಹೊಂದಲಾಗಿದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿ ಡಾ.ನಂದಿತಾ ಎಮ್.ಎನ್, ಪಾಲಿಕೆ ಆರೋಗ್ಯಾಧಿಕಾರಿ ಡಾ.ಮಹಮ್ಮದ್ ಶಾಕೀರ್ ಮೊಹಿಯುದ್ದಿನ್, ತಾಲೂಕು ಆರೋಗ್ಯಾಧಿಕಾರಿ ಡಾ.ಪ್ರಜ್ವಲ್ಕುಮಾರ್, ಜಿಲ್ಲಾ ಅರೋಗ್ಯ ಶಿಕ್ಷಣಾಧಿಕಾರಿ ಈಶ್ವರ ಹೆಚ್.ದಾಸಪ್ಪನವರ, ಪರಿಸರ ಅಭಿಯಂತರರು ಜಯಪಾಲ್ ರೆಡ್ಡಿ, ಉಪ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಬಸಯ್ಯ, ಬಿ.ಹೆಚ್.ಇ.ಓ, ಸರೋಜಾ ಕೆ, ಹಿರಿಯ ಆರೋಗ್ಯ ನೀರಿಕ್ಷಣಾಧಿಕಾರಿ ಸುರೇಶ್, ಕ್ಷೇತ್ರ ಲಸಿಕಾ ಮೇಲ್ವಿಚಾರಕ ಕೋಪ್ರೇಶ್, ಡಿಡಿಎಮ್ ಲೋಕೇಶ್ ಸೇರಿದಂತೆ ಪಾಲಿಕೆ ವಾಹನ ವಿಭಾಗದ ವೆಂಕಟೇಶ ಕುಲಕರ್ಣಿ ಹಾಗೂ ಪಾಲಿಕೆ ಆರೋಗ್ಯ ನಿರೀಕ್ಷಣಾಧಿಕಾರಿಗಳು ಉಪಸ್ಥಿತರಿದ್ದರು.
ಸೈಬರ್ ಅಪರಾಧಕ್ಕೆ ನಿರ್ಲಕ್ಷ್ಯವೇ ಕಾರಣ : ಎಂ.ವಿನೋದ್ ಕುಮಾರ್
► ಸಹಕಾರ ರತ್ನ ಬಿ.ಎಲ್.ಲಕ್ಕೇಗೌಡ ಸ್ಮರಣಾರ್ಥ ಅಂತರ ಕಾಲೇಜು ಕನ್ನಡ ಚರ್ಚಾ ಕಾರ್ಯಕ್ರಮ► ʼಚರ್ಚಾ ಸ್ಪರ್ಧೆʼ ಪವನ್ ಕಲ್ಯಾಣ್ ಪ್ರಥಮ, ಮಂಜುಳಾ ಮಾಸ್ತಿಕಟ್ಟೆ ದ್ವಿತೀಯ
ಉರಿಗೆ ವಿಪಕ್ಷದ ಉಪ್ಪು, ಇಂದು, ಮುಂದು ನಾನೇ ಸಿಎಂ ಎಂದು ಸಿದ್ದು ಗುದ್ದು: ಸದನ ಡೇ 7 ಹೈಲೈಟ್ಸ್
ಬೆಳಗಾವಿ ಚಳಿಗಾಲದ ಏಳನೇ ದಿನದ ಅಧಿವೇಶನದಲ್ಲಿ ನಾಯಕತ್ವ ಬದಲಾವಣೆ ಚರ್ಚೆ ತೀವ್ರಗೊಂಡಿದ್ದು, ಸಿಎಂ ಸಿದ್ದರಾಮಯ್ಯ ವಿಪಕ್ಷಗಳ ಟೀಕೆಗೆ ತಿರುಗೇಟು ನೀಡಿದರು. ಇನ್ನುಇದೇ ವೇಳೆ ಡಿಕೆ ಶಿವಕುಮಾರ್ ಅವರು ನಾಯಕತ್ವ ಬದಲಾವಣೆ ಬಗ್ಗೆ ಏನೊಂದನ್ನು ಮಾತನಾಡದೆ,ಶಾಸಕರ ಬಳಿ ಉಭಯ ಕುಶಲೋಪರಿ ವಿಚಾರಿಸುತ್ತಿದ್ದರು. ಅವರ ಈ ನಡೆಗೆ ಯತೀಂದ್ರ ಅವರೇ ಕಾರಣ ಎನ್ನುವ ಗುಸುಗುಸು ಹಬ್ಬಿದೆ. ವೋಟ್ ಚೋರಿ ವಿಚಾರ ಬಗ್ಗೆಯೂ ಚರ್ಚೆ ನಡೆಯಿತು. ನಾಲ್ಕು ವಿಧೇಯಕಗಳು ಮಂಡನೆಯಾಗಿ, 6279.87 ಕೋಟಿ ರೂ. ಪೂರಕ ಅಂದಾಜು ಮಂಡಿಸಲಾಯಿತು.
IPL 2026 RCB: ಆರ್ಸಿಬಿಗೆ ಹೊಸ 8 ಆಟಗಾರರ ಸೇರ್ಪಡೆ: ಇಲ್ಲಿದೆ ಉಳಿದ ಮೊತ್ತದ ವಿವರ
IPL 2026 RCB: ಈಗಾಗಲೇ ಬಲಿಷ್ಠ ತಂಡ ಹೊಂದಿರುವ ಆರ್ಸಿಬಿ ಇಂದು (ಡಿಸೆಂಬರ್ 16) ಐಪಿಎಲ್ 2026 ಮಿನಿ ಹರಾಜಿನಲ್ಲಿ 8 ಆಟಗಾರರನ್ನು ಕೊಂಡುಕೊಂಡಿದೆ. ಹಾಗಾದ್ರೆ, ಅವರು ಯಾರು ಹಾಗೂ ಎಷ್ಟು ಮೊತ್ತಕ್ಕೆ ಖರೀದಿ ಮಾಡಿದೆ ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ. ರಾಯಲ್ ಚಾಲೆಂಜರ್ಸ್ ಬೆಂಗಳೂರು ರಿಟೈನ್ ಪ್ರಕಿಯೆ ವೇಳೆ ಬಹುತೇಕ ಈ ಬಾರಿಯ
ಮೆಣಸಿನಕಾಯಿ ಮಾರುಕಟ್ಟೆ ಸ್ಥಾಪನೆಗೆ ಕ್ರಮ ಕೈಗೊಳ್ಳಿ: ರಾಜ್ಯ ರೈತ ಸಂಘ ಒತ್ತಾಯ
ರಾಯಚೂರು: ಜಿಲ್ಲೆಯಲ್ಲಿ ಮೆಣಸಿನಕಾಯಿ ಮಾರುಕಟ್ಟೆ ಸ್ಥಾಪಿಸಲು ರಾಜ್ಯ ಸರಕಾರ ಕೂಡಲೇ ತೀರ್ಮಾನ ಕೈಗೊಳ್ಳಬೇಕಾಗಿದೆ ಎಂದು ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಪ್ರಭಾಕರ್ ಪಾಟೀಲ್ ಒತ್ತಾಯಿಸಿದ್ದಾರೆ. ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ ಪ್ರಭಾಕರ್ ಪಾಟೀಲ್, ರಾಜ್ಯ ಸರಕಾರ ಈ ಹಿಂದೆ ಜಿಲ್ಲೆಯಲ್ಲಿ ಮೆಣಸಿನ ಕಾಯಿ ಮಾರುಕಟ್ಟೆ ಸ್ಥಾಪಿಸಲು 25ಕೋಟಿ ರೂ. ಬಿಡುಗಡೆಗೊಳಿಸಲು ತೀರ್ಮಾನಿಸಿತ್ತು. ಆದರೆ ಜಿಲ್ಲಾಡಳಿತ ರಾಜ್ಯ ಸರಕಾರಕ್ಕೆ ವರದಿ ಸಲ್ಲಿಸಿ, ಮಾರುಕಟ್ಟೆ ಸ್ಥಾಪಿಸುವಲ್ಲಿ ಇಚ್ಛಾಶಕ್ತಿ ಪ್ರಸರ್ಶಿಸಿಲ್ಲ. ಈಗಾಗಲೇ ರಾಯಚೂರಿನ ರಾಜ್ಯ ಹೆದ್ದಾರಿಗೆ ಹೊಂದಿಕೊಂಡ ಸರ್ವೆ ನಂ.277 ಹಾಗೂ 290 ಜಮೀನುಗಳನ್ನು ಗುರುತಿಸಲಾಗಿದೆ. ಕೂಡಲೆ ಜಿಲ್ಲಾಡಳಿತ ಮತ್ತು ಜಿಲ್ಲೆಯ ಜನಪ್ರತಿನಿಧಿಗಳು ಮಾರುಕಟ್ಟೆ ಸ್ಥಾಪಿಸಲು ಮುಂದಾಗಬೇಕು ಎಂದು ಆಗ್ರಹಿಸಿದ್ದಾರೆ. ಈ ಸಂದರ್ಭದಲ್ಲಿ ರೈತ ಸಂಘದ ತಾಲೂಕು ಅಧ್ಯಕ್ಷ ಹುಸೇನಬಾಷ, ಹಾಜಿ ಮಲ್ಲಂಗ, ಹನುಮಗೌಡ, ತಿಮ್ಮನ ಗೌಡ ಉಪಸ್ಥಿತರಿದ್ದರು.
ಪಾಟ್ನಾ/ಲಕ್ನೋ: ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಆಯುಷ್ ವೈದ್ಯೆಯೊಬ್ಬರ ಹಿಜಾಬ್ ಎಳೆದಿರುವ ಘಟನೆಯ ವೀಡಿಯೋ ವೈರಲ್ ಆಗಿರುವ ಹಿನ್ನೆಲೆಯಲ್ಲಿ ಉಂಟಾದ ವಿವಾದ ಮತ್ತಷ್ಟು ತೀವ್ರಗೊಂಡಿದೆ. ಈ ವಿಚಾರದಲ್ಲಿ ನಿತೀಶ್ ಕುಮಾರ್ ಅವರನ್ನು ಸಮರ್ಥಿಸಿಕೊಂಡ ಉತ್ತರಪ್ರದೇಶ ಸರ್ಕಾರದ ಸಚಿವ ಸಂಜಯ್ ನಿಶದ್ ಅವರ ಹೇಳಿಕೆ ಹೊಸ ವಿವಾದಕ್ಕೆ ಕಾರಣವಾಗಿದೆ. ಸೋಮವಾರ ಬಿಹಾರದ ಮುಖ್ಯಮಂತ್ರಿ ಕಚೇರಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ, ನೂತನವಾಗಿ ನೇಮಕಗೊಂಡ ಆಯುಷ್ ವೈದ್ಯರಿಗೆ ನೇಮಕಾತಿ ಪತ್ರಗಳನ್ನು ವಿತರಿಸುವ ಸಂದರ್ಭದಲ್ಲಿ, CM ನಿತೀಶ್ ಕುಮಾರ್ ವೈದ್ಯೆಯೊಬ್ಬರ ಹಿಜಾಬ್ ಎಳೆದಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಈ ಘಟನೆಗೆ ಆಕ್ರೋಶ್ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಸ್ಥಳೀಯ ಸುದ್ದಿ ವಾಹಿನಿಗೆ ಪ್ರತಿಕ್ರಿಯಿಸಿದ ಉತ್ತರ ಪ್ರದೇಶದ ಸಚಿವ ಸಂಜಯ್ ನಿಶದ್, “ನಿತೀಶ್ ಕುಮಾರ್ ಅವರು ಹಿಜಾಬ್ ಎಳೆಯಲಿಲ್ಲ. ನೇಮಕಾತಿ ಪತ್ರವನ್ನು ಸರಿಯಾದ ವ್ಯಕ್ತಿಗೆ ನೀಡಲಾಗುತ್ತಿದೆಯೇ ಎಂದು ಖಚಿತಪಡಿಸಿಕೊಳ್ಳಲು ಮಾತ್ರ ಹಿಜಾಬ್ ತೆಗೆಯಲಾಯಿತು. ಅಷ್ಟಕ್ಕೆ ಅನಗತ್ಯ ಗದ್ದಲ ಸೃಷ್ಟಿಸಲಾಗುತ್ತಿದೆ. ಅವರು ಕೂಡ ಮನುಷ್ಯರು; ಅವರನ್ನು ಸುಮ್ಮನೆ ಗುರಿಯಾಗಿಸಬಾರದು. ಕೇವಲ ಹಿಜಾಬ್ ಮುಟ್ಟಿದ್ದಕ್ಕೆ ಇಷ್ಟೊಂದು ಗಲಾಟೆ ಆಗಿದ್ದರೆ, ಬೇರೆ ಏನಾದರೂ ಮುಟ್ಟಿದ್ದರೆ ಏನಾಗುತ್ತಿತ್ತು?” ಎಂದು ನಕ್ಕು ಉತ್ತರಿಸಿದ್ದಾರೆ. ಈ ಹೇಳಿಕೆಯ ವೇಳೆ ಸಚಿವರು ನಕ್ಕಿರುವ ದೃಶ್ಯವೂ ವೈರಲ್ ಆಗಿದ್ದು, ಸಾರ್ವಜನಿಕ ವಲಯದಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಸಚಿವರ ಹೇಳಿಕೆಯನ್ನು ಮಹಿಳಾವಿರೋಧಿ ಮತ್ತು ಅಸಭ್ಯ ಎಂದು ವಿರೋಧ ಪಕ್ಷಗಳು ಹಾಗೂ ಸಂಘಟನೆಗಳು ತೀವ್ರವಾಗಿ ಖಂಡಿಸಿವೆ. ಕಾಂಗ್ರೆಸ್ ಪಕ್ಷದ ವಕ್ತಾರೆ ಸುಪ್ರಿಯಾ ಶ್ರಿನೇತ್ ಅವರು ಸಾಮಾಜಿಕ ಜಾಲತಾಣ X ನಲ್ಲಿ ಪ್ರತಿಕ್ರಿಯಿಸಿ, “ಹಿಜಾಬ್ ತೆಗೆದಿದ್ದಕ್ಕೆ ಇಷ್ಟೊಂದು ಗಲಾಟೆ ಎಂದರೆ, ಬೇರೆಡೆ ಮುಟ್ಟಿದ್ದರೆ ಏನಾಗುತ್ತಿತ್ತು ಎನ್ನುವ ಹೇಳಿಕೆಯನ್ನು ಯುಪಿ ಸರ್ಕಾರದ ಸಚಿವರು ನಗುತ್ತಾ ಹೇಳಿದ್ದಾರೆ. ಇದು ಅವರ ಸ್ತ್ರೀದ್ವೇಷಿ ಮತ್ತು ನೀಚ ಮನಸ್ಥಿತಿಯನ್ನು ತೋರಿಸುತ್ತದೆ” ಎಂದು ಆರೋಪಿಸಿದ್ದಾರೆ. “सिर्फ नकाब हटाया है तो इतना हल्ला, कहीं यहाँ-वहाँ उंगली लगा देते तो क्या होता” ये बेशर्मी की बात हँसते हुए यूपी सरकार में मंत्री संजय निषाद कह रहे हैं जिस अंदाज़ और जिस काईयाँ हँसी के साथियों यह कह रहे हैं वो उनकी घटिया, बेहूदा और महिला विरोधी सोच दिखाता है pic.twitter.com/AsZApjHQsi — Supriya Shrinate (@SupriyaShrinate) December 16, 2025
ಸ್ವಚ್ಛ ನಗರಗಳ ಪಟ್ಟಿಯಲ್ಲಿ ಮಂಗಳೂರು ಟಾಪ್ 5ಗೆ ತರಲು ಸಂಕಲ್ಪ: ಬೈರತಿ ಸುರೇಶ್
ಬೆಳಗಾವಿ : ಸ್ವಚ್ಛ ನಗರಗಳ ಕುರಿತು ರಾಷ್ಟ್ರೀಯ ಸ್ವಚ್ಛಭಾರತ್ ಮಿಷನ್ ಅಡಿಯಲ್ಲಿ ನಡೆಸುವ ಸಮೀಕ್ಷೆಯಲ್ಲಿ ಮಂಗಳೂರು ನಗರವನ್ನು ಟಾಪ್ 5ರೊಳಗೆ ಬರುವಂತೆ ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ನಗರಾಭಿವೃದ್ಧಿ ಮತ್ತು ನಗರ ಯೋಜನೆ ಸಚಿವ ಬೈರತಿ ಸುರೇಶ್ ತಿಳಿಸಿದ್ದಾರೆ. ಮಂಗಳವಾರ ವಿಧಾನಪರಿಷತ್ತಿನ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿ ಸದಸ್ಯ ಕಿಶೋರ್ ಕುಮಾರ್ ಪುತ್ತೂರ್ ಪ್ರಶ್ನೆಗೆ ಉತ್ತರಿಸಿದ ಸಚಿವರು, ಹಿಂದಿನ ವರ್ಷದಲ್ಲಿ ರಾಜ್ಯದ ಮೈಸೂರು ಮತ್ತು ದಾವಣಗೆರೆ ನಗರಗಳಿಗೆ ಟಾಪ್ 5ರಲ್ಲಿ ಸ್ಥಾನ ದೊರಕಿದ್ದು, ಅತ್ಯುತ್ತಮ ಪ್ರಶಸ್ತಿಯನ್ನೂ ಪಡೆದುಕೊಂಡಿವೆ. ಅದೇ ರೀತಿ ಈ ವರ್ಷ ಮಂಗಳೂರು ನಗರಕ್ಕೆ ಟಾಪ್ 25ರಲ್ಲಿ ಸ್ಥಾನ ಬಂದಿರುವುದು ಸಂತಸದ ಸಂಗತಿಯಾಗಿದೆ ಎಂದರು. ಮಂಗಳೂರು ಮಹಾನಗರ ಪಾಲಿಕೆಯಡಿ ನಗರದ ಸ್ವಚ್ಛತೆ ಕಾಪಾಡಲು ಅಗತ್ಯವಾದ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದ್ದು, ಇಲ್ಲಿ 310ರಿಂದ 330 ಟನ್ ತ್ಯಾಜ್ಯ ಸಂಗ್ರಹವಾಗುತ್ತಿದ್ದು, ಈ ಪೈಕಿ ಶೇ.70ರಷ್ಟನ್ನು ವೈಜ್ಞಾನಿಕವಾಗಿ ಸಂಸ್ಕರಣೆ ಮಾಡಲಾಗುತ್ತಿದೆ ಎಂದು ಬೈರತಿ ಸುರೇಶ್ ತಿಳಿಸಿದರು. ಪ್ರತಿ ಶುಕ್ರವಾರ ಒಣ ಕಸವನ್ನು ಮಾತ್ರ ಸಂಗ್ರಹ ಮಾಡಲಾಗುತ್ತಿದೆ. ಹೆಚ್ಚು ತ್ಯಾಜ್ಯ ಉತ್ಪಾದನೆ ಮಾಡುವ ಸಂಸ್ಥೆಗಳೇ ಸ್ವತಃ ತ್ಯಾಜ್ಯವನ್ನು ಸಂಸ್ಕರಣೆ ಮಾಡುವುದನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡುವಂತೆ ಸೂಚಿಸಲಾಗಿದೆ. ಸಮರ್ಪಕವಾಗಿ ಕಸ ವಿಂಗಡಣೆ ಮಾಡದೇ ಇರುವವರು ಮತ್ತು ಕಸ ಸಂಸ್ಕರಣೆ ಮಾಡದೇ ಇರುವವರಿಗೆ ಬೆಂಗಳೂರು ಮಾದರಿಯಲ್ಲಿ ದಂಡ ವಿಧಿಸಲು ಪಾಲಿಕೆ ಅಧಿಕಾರಿಗಳಿಗೆ ಆದೇಶ ನೀಡಲಾಗಿದ್ದು, ಅಗತ್ಯ ಬಿದ್ದರೆ ಪೊಲೀಸರ ನೆರವನ್ನೂ ಪಡೆಯಲು ಸೂಚಿಸಲಾಗಿದೆ ಎಂದು ಬೈರತಿ ಸುರೇಶ್ ಹೇಳಿದರು. ರಸ್ತೆ ಬದಿಯಲ್ಲಿ ಕಸ ಎಸೆಯುವವರನ್ನು ಪತ್ತೆ ಮಾಡುವ ಸಲುವಾಗಿ ನಗರದಲ್ಲಿ 60ಕ್ಕೂ ಹೆಚ್ಚು ಸೌರಚಾಲಿತ ಸಿಸಿ ಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಈ ರೀತಿಯಲ್ಲಿ ತ್ಯಾಜ್ಯವನ್ನು ಉತ್ತಮ ರೀತಿಯಲ್ಲಿ ವಿಲೇವಾರಿ ಮಾಡಲು ಕ್ರಮ ಕೈಗೊಳ್ಳಲಾಗಿದ್ದು, ಸರ್ವೇಕ್ಷಣಾ ಸಮೀಕ್ಷೆಯಲ್ಲಿ ಸ್ವಚ್ಛ ನಗರಗಳ ಸಾಲಿನಲ್ಲಿ ಟಾಪ್ 5 ರಲ್ಲಿ ಮಂಗಳೂರನ್ನು ತರುವ ನಿಟ್ಟಿನಲ್ಲಿ ಸಂಕಲ್ಪ ಮಾಡಲಾಗಿದೆ ಎಂದು ಬೈರತಿ ಸುರೇಶ್ ತಿಳಿಸಿದರು.
Shankar Nag: ಕೇವಲ ನಟನಲ್ಲ, ಕಾಲವನ್ನೇ ಮೀರಿ ಬೆಳೆದ ಅದ್ಭುತ ‘ವಿಷನರಿ’
ಕನ್ನಡ ಚಿತ್ರರಂಗದಲ್ಲಿ ಎಷ್ಟೇ ನಟರು ಬಂದು ಹೋದರೂ, ಕೆಲವೊಂದು ಹೆಸರುಗಳು ಮಾತ್ರ ಶಾಶ್ವತವಾಗಿ ಉಳಿಯುತ್ತವೆ. ಅಂತಹ ಸಾಲಿನಲ್ಲಿ ಅಗ್ರಗಣ್ಯವಾಗಿ ನಿಲ್ಲುವ ಹೆಸರು ‘ಶಂಕರ್ ನಾಗ್’. ಅವರು ನಮ್ಮನ್ನಗಲಿ ದಶಕಗಳೇ ಕಳೆದಿದ್ದರೂ, ಇಂದಿಗೂ ಕರ್ನಾಟಕದ ಮೂಲೆ ಮೂಲೆಯಲ್ಲಿರುವ ಆಟೋಗಳ ಮೇಲೆ ಅವರ ಭಾವಚಿತ್ರ ರಾರಜಿಸುತ್ತಿದೆ. ಕೇವಲ ಒಬ್ಬ ನಟನಾಗಿ ಮಾತ್ರವಲ್ಲದೆ, ತಾಂತ್ರಿಕವಾಗಿ ಮತ್ತು ಸಾಮಾಜಿಕವಾಗಿ ಅತ್ಯಂತ ದೂರದೃಷ್ಟಿಯುಳ್ಳ ವ್ಯಕ್ತಿಯಾಗಿ ಶಂಕರ್ ನಾಗ್ ಗುರುತಿಸಿಕೊಂಡಿದ್ದರು. ಅವರು ಕಂಡಿದ್ದ ಕನಸುಗಳು ಮತ್ತು ಯೋಜನೆಗಳು ಇಂದಿನ ಆಧುನಿಕ ಯುಗಕ್ಕೂ ಹೇಗೆ ಪ್ರಸ್ತುತವಾಗಿವೆ ಎಂಬುದರ ... Read more The post Shankar Nag: ಕೇವಲ ನಟನಲ್ಲ, ಕಾಲವನ್ನೇ ಮೀರಿ ಬೆಳೆದ ಅದ್ಭುತ ‘ವಿಷನರಿ’ appeared first on Karnataka Times .

24 C