ಹಾವೇರಿ: ಉಪಚುನಾವಣೆ ನಡೆಯಲಿರುವ ಶಿಗ್ಗಾಂವಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ವಿರುದ್ಧ ಬಂಡಾಯ ಎದ್ದಿರುವ ಮಾಜಿ ಶಾಸಕ ಸೈಯದ್ ಅಜ್ಜಂಪೀರ್ ಖಾದ್ರಿ ಅವರು ಪಕ್ಷೇತರ ಅಭ್ಯರ್ಥಿಯಾಗಿ ಶುಕ್ರವಾರ ನಾಮಪತ್ರ ಸಲ್ಲಿಸಿದ್ದಾರೆ. ಶಿಗ್ಗಾಂವಿಯಲ್ಲಿ ಕಾಂಗ್ರೆಸ್ ಪಕ್ಷದ ಟಿಕೆಟ್ ಆಕಾಂಕ್ಷಿಯಾಗಿದ್ದ ಅಜ್ಜಂಪೀರ್, ತಮಗೆ ಟಿಕೆಟ್ ಸಿಗುತ್ತದೆಂದು ವಿಶ್ವಾಸ ವ್ಯಕ್ತಪಡಿಸಿದ್ದರು. ಆದರೆ, ಕಾಂಗ್ರೆಸ್ ಹೈಕಮಾಂಡ್ ಯಾಸೀರ್ ಅಹ್ಮದ್ ಖಾನ್ ಪಠಾಣ್ ಅವರಿಗೆ ಮಣೆ ಹಾಕಿತ್ತು. ಶಿಗ್ಗಾಂವಿಯಲ್ಲಿ ಕಾಂಗ್ರೆಸ್ ಟಿಕೆಟ್ ಕೈ ತಪ್ಪಿದ್ದರಿಂದ ಅಸಮಾಧಾನಗೊಂಡಿದ್ದ ಖಾದ್ರಿ, ಇಂದು(ಅ.25) ಚುನಾವಣಾಧಿಕಾರಿ ಕಚೇರಿಗೆ ಭೇಟಿ ನೀಡಿ ನಾಮಪತ್ರ ಸಲ್ಲಿಸಿದರು. ಕಲ್ಲೆಸೆದ ಖಾದ್ರಿ ಬೆಂಬಲಿಗರು ಶಿಗ್ಗಾಂವಿ ಟಿಕೆಟ್ ವಂಚಿತ ಅಜ್ಜಂ ಪೀರ್ ಖಾದ್ರಿ ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಲು ಮುಂದಾದ್ದರಿಂದ ಸಚಿವರಾದ ಝಮೀರ್ ಅಹ್ಮದ್ ಖಾನ್, ರಹೀಂ ಖಾನ್, ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್, ವಕ್ಫ್ ಬೋರ್ಡ್ ಮಾಜಿ ಅಧ್ಯಕ್ಷ ಅನ್ವರ್ ಬಾಷಾ ಅವರೊಂದಿಗೆ ಖಾದ್ರಿ ಅವರ ನಿವಾಸಕ್ಕೆ ಭೇಟಿ ನೀಡಿ ಮನವೊಲಿಸಲು ಯತ್ನಿಸಿದ್ದರು. ಈ ಮಧ್ಯೆ ಅಸಮಾಧಾನಗೊಂಡಿದ್ದ ಬೆಂಬಲಿಗರನ್ನು ಸಮಾಧಾನಪಡಿಸಲು ಯತ್ನಿಸಿದ್ದಾರೆ. ಆದರೆ, ಇದಕ್ಕೆ ಬಗ್ಗದ ಅಜ್ಜಂಪೀರ್ ಖಾದ್ರಿ ಬೆಂಬಲಿಗರು, ಸಚಿವ ಝಮೀರ್ ಅಹ್ಮದ್ ಖಾನ್ ಅವರು ಬಂದಿದ್ದ ಕಾರಿಗೆ ಹುಲಗೂರು ಗ್ರಾಮದಲ್ಲಿ ಕಲ್ಲೆಸೆದಿದ್ದಾರೆ ಎಂದು ತಿಳಿದು ಬಂದಿದೆ. ಖಾದ್ರಿ ಅವರ ಮನ ಒಲಿಸಲು ಸಚಿವ ಝಮೀರ್ ಅಹ್ಮದ್ ಅವರು ಕಾಂಗ್ರೆಸ್ ಅಭ್ಯರ್ಥಿ ಯಾಸಿರ್ ಪಠಾಣ್ ಅವರ ಕಾರಲ್ಲಿ ಹೋಗಿದ್ದರು. ಈ ವೇಳೆ ಅಜ್ಜಂಪೀರ್ ಖಾದ್ರಿ ಅಭಿಮಾನಿಗಳು ಕಾರಿನ ಗಾಜು ಒಡೆದಿದ್ದಾರೆ ಎಂದು ತಿಳಿದು ಬಂದಿದೆ.
ಪ್ರೆಸ್ಟೀಜ್ ಇಂಟರ್ ನ್ಯಾಶನಲ್ ಸ್ಕೂಲ್ ಗೆ ʼಮಂಗಳೂರಿನ ಬೆಸ್ಟ್ ಕೋ-ಎಡ್ ಸ್ಕೂಲ್ʼ ಪ್ರಶಸ್ತಿ
ಮಂಗಳೂರು: ಪ್ರತಿಷ್ಟಿತ ಶಿಕ್ಷಣ ಸಂಸ್ಥೆ ಪ್ರೆಸ್ಟೀಜ್ ಇಂಟರ್ನ್ಯಾಷನಲ್ ಸ್ಕೂಲ್ ಮಂಗಳೂರಿನ ಬೆಸ್ಟ್ ಕೋ-ಎಡ್ ಸ್ಕೂಲ್ (Best Co-Ed School in Mangalore) ಪ್ರಶಸ್ತಿಯನ್ನು ಪಡೆದುಕೊಂಡಿದೆ. ಭಾರತದ ಪ್ರಮುಖ ಶಿಕ್ಷಣ ನಿಯತಕಾಲಿಕ “ಎಜುಕೇಶನ್ ವರ್ಲ್ಡ್” 2024ರ ಅ. 17ರಂದು ದಿಲ್ಲಿಯ ಆಂಬಿಯೆನ್ಸ್ ನಲ್ಲಿ ನಡೆದ ಸಮಾರಂಭದಲ್ಲಿ ಈ ಪ್ರಶಸ್ತಿಯನ್ನು ಘೋಷಿಸಿದೆ. ಪ್ರೆಸ್ಟೀಜ್ ಇಂಟರ್ನ್ಯಾಶನಲ್ ಸ್ಕೂಲ್ ಈ ಪ್ರಶಸ್ತಿಯನ್ನು ಹಲವು ಬಾರಿ ಪಡೆದುಕೊಂಡಿದೆ. ಪ್ರೆಸ್ಟೀಜ್ ಇಂಟರ್ನ್ಯಾಶನಲ್ ಸ್ಕೂಲ್ ಮಂಗಳೂರಿನ ಪ್ರತಿಷ್ಟಿತ ಶಿಕ್ಷಣ ಸಂಸ್ಥೆಯಾಗಿದೆ. ಶೈಕ್ಷಣಿಕ ಕ್ಷೇತ್ರದಲ್ಲಿನ ಸಾಧನೆಗಳು, ಉತ್ತಮ ಕಲಿಕೆಯ ವಾತಾವರಣ ನಿರ್ಮಾಣ ಸೇರಿ ಹಲವು ಸಾಧನೆಗಳನ್ನು ಗಮನಿಸಿ ಪ್ರೆಸ್ಟೀಜ್ ಇಂಟರ್ನ್ಯಾಶನಲ್ ಸ್ಕೂಲ್ ಗೆ ಈ ಬಹುಮಾನವನ್ನು ಘೋಷಿಸಲಾಗಿದೆ.
ಕೆನಡಾ| ಡಿವೈಡರ್ ಗೆ ಢಿಕ್ಕಿ ಹೊಡೆದ ಟೆಸ್ಲಾ ಕಾರು; ನಾಲ್ವರು ಭಾರತೀಯರು ಮೃತ್ಯು
ಕೆನಡಾ: ಟೊರೊಂಟೊ ಬಳಿ ಟೆಸ್ಲಾ ಕಾರೊಂದು ಡಿವೈಡರ್ ಗೆ ಢಿಕ್ಕಿ ಹೊಡೆದು ಬೆಂಕಿಗೆ ಆಹುತಿಯಾದ ಪರಿಣಾಮ ನಾಲ್ವರು ಭಾರತೀಯರು ಸಾವನ್ನಪ್ಪಿದ್ದಾರೆ. ಮೃತರಲ್ಲಿ ಇಬ್ಬರನ್ನು ಗುಜರಾತ್ ನ ಗೋಧ್ರಾ ಮೂಲದ ಕೇತಾ ಗೋಹಿಲ್(30) ಮತ್ತು ನಿಲ್ ಗೋಹಿಲ್(26) ಎಂದು ಗುರುತಿಸಲಾಗಿದೆ. ಇವರ ಜೊತೆ ಇನ್ನಿಬ್ಬರು ಭಾರತೀಯರು ಪ್ರಯಾಣಿಸುತ್ತಿದ್ದರು. ನಾಲ್ವರು ಕೂಡ ಘಟನೆಯಲ್ಲಿ ಮೃತಪಟ್ಟಿದ್ದಾರೆ. ಟೆಸ್ಲಾ ಕಾರು ಡಿವೈಡರ್ ಗೆ ಢಿಕ್ಕಿ ಹೊಡೆದ ಪರಿಣಾಮ ಕಾರಿನ ಬ್ಯಾಟರಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಬಳಿಕ ಬೆಂಕಿ ಇಡೀ ಕಾರಿಗೆ ಆವರಿಸಿ ಸುಟ್ಟು ಕರಕಲಾಗಿದೆ. 20ರ ಹರೆಯದ ಮಹಿಳೆಯೊಬ್ಬರು ಸುಟ್ಟು ಕರಕಲಾಗುತ್ತಿದ್ದ ಕಾರಿನಿಂದ ಕೆಳಗಿಳಿದು ವಾಹನ ಸವಾರರಲ್ಲಿ ಸಹಾಯ ಯಾಚಿಸಿದ್ದಾರೆ. ಸುಟ್ಟ ಗಾಯಗಳೊಂದಿಗೆ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಕೆನಡಾದಲ್ಲಿ ಕಳೆದ ಜುಲೈನಲ್ಲಿ ಕೂಡ ಪಂಜಾಬ್ ಮೂಲದ ಮೂವರು ವಿದ್ಯಾರ್ಥಿಗಳು ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದರು.
Bengaluru Electricity Cut : ಬೆಸ್ಕಾಂನಿಂದ ವಿದ್ಯುತ್ ನಿರ್ವಹಣಾ ಕಾಮಗಾರಿ ನಡೆಯುತ್ತಿದೆ. ಈ ಹಿನ್ನೆಲೆ ಬೆಂಗಳೂರಿನ ಹಳೇ ಬಡಾವಣೆಗಳಲ್ಲಿ ಭಾನುವಾರ ದಿನವಿಡೀ ವಿದ್ಯುತ್ ವ್ಯತ್ಯಯವಾಗಲಿದೆ. ಇನ್ನು ಕೆಲ ಪ್ರದೇಶಗಳಲ್ಲಿ ಭಾನುವಾರದಿಂದ ಬುಧವಾರದವರೆಗೂ ವಿದ್ಯುತ್ ವ್ಯತ್ಯಯವಾಗಲಿದೆ. ಈ ಬಗ್ಗೆ ಬೆಸ್ಕಾಂ ಮಾಹಿತಿ ನೀಡಿದ್ದು, ವಿದ್ಯುತ್ ಕಡಿತವಾಗುವ ಪ್ರದೇಶಗಳ ವಿವರವನ್ನು ನೀಡಿದೆ. ಎಲ್ಲೆಲ್ಲಿ ಯಾವ ದಿನ, ಯಾವ ಸಮಯದಲ್ಲಿ ಕರೆಂಟ್ ಇರುವುದಿಲ್ಲ ಎಂಬ ಮಾಹಿತಿ ಇಲ್ಲಿದೆ.
ಇದು ವಿರಾಟ್ ಕೊಹ್ಲಿ ಜೀವನದಲ್ಲೇ ಅತ್ಯಂತ ಕೆಟ್ಟ ಕ್ರಿಕೆಟ್ ಶಾಟ್ !: ಸಂಜಯ್ ಮಾಂಜ್ರೇಕರ್ ಟೀಕೆ ಯಾಕೆ?
Ind Vs NZ - ವಿರಾಟ್ ಕೊಹ್ಲಿ ನಿಂತ್ರೂ ಕುಂತ್ರೂ ಸುದ್ದಿಯೇ. ಹಾಗಿರುವಾಗ ತಂಡಕ್ಕೆ ಅಗತ್ಯವಾಗಿರುವ ಸಂದರ್ಭದಲ್ಲಿ ಔಟ್ ಆದಾಗ ಜನ ಸುಮ್ನೇ ಬಿಡ್ತಾರಾ. ಕೇವಲ ಒಂದು ರನ್ ಗಳಿಸಿ ಔಟ್ ಆಗಿರುವುದಕ್ಕೆ ನೆಟ್ಟಿಗರು ಟೀಕೆ ವ್ಯಕ್ತಪಡಿಸಿದ್ದಾರೆ. ಮಾಜಿ ಆಟಗಾರ ಸಂಜಯ್ ಮಾಂಜ್ರೇಕರ್ ಅವರಂತೂ ಇದು ವಿರಾಟ್ ಕೊಹ್ಲಿ ಅವರ ಜೀವಮಾನದ ಅತ್ಯಂತ ಕೆಟ್ಟ ಹೊಡೆತ ಎಂದು ಟೀಕಿಸಿದ್ದಾರೆ. ಈಗಾಗಲೇ ಪುಣೆ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ತೀವ್ರ ಹಿನ್ನಡೆಯಲ್ಲಿದೆ. ಹೀಗಾಗಿ 2ನೇ ಇನ್ನಿಂಗ್ಸ್ ನಲ್ಲಾದರೂ ಕೊಹ್ಲಿ ಅವರಿಂದ ಅಭಿಮಾನಿಗಳು ಉತ್ತಮ ಬ್ಯಾಟಿಂಗ್ ನಿರೀಕ್ಷಿಸುತ್ತಿದ್ದಾರೆ.
ಸುರತ್ಕಲ್ | ಕಿರುಕುಳ ಆರೋಪ : ಪೊಲೀಸರು ಕ್ರಮ ಕೈಗೊಂಡಿಲ್ಲ ಎಂದು ಆತ್ಮಹತ್ಯೆಗೆ ಯತ್ನಿಸಿದ ಯುವತಿ
ಸುರತ್ಕಲ್ : ಯುವಕನೊಬ್ಬ ಮೆಸೆಂಜರ್ ಮೂಲಕ ಬೆದರಿಕೆ ಹಾಕಿದ್ದಾನೆ ಎಂದು ಪೊಲೀಸರಿಗೆ ದೂರು ನೀಡಿದ್ದ ಯುವತಿಯೊಬ್ಬಳು ನ್ಯಾಯ ದೊರೆತಿಲ್ಲ ಎಂದು ಆರೋಪಿಸಿ ಆತ್ಮಹತ್ಯೆಗೆ ಯತ್ನಿಸಿ, ನಗರದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿರುವ ಘಟನೆ ಶುಕ್ರವಾರ ವರದಿಯಾಗಿದೆ. ಯುವತಿಯು ಸುರತ್ಕಲ್ ಇಡ್ಯಾ ಸದಾಶಿವ ನಗರದಲ್ಲಿ ಅಂಗಡಿ ನಡೆಸುತ್ತಿದ್ದು, ಯುವಕ ಆಕೆಯ ಅಂಗಡಿ ಬಳಿಯ ನಿವಾಸಿ ಶಾರಿಕ್ ಎಂದು ತಿಳಿದು ಬಂದಿದೆ. ಯುವಕ ಫೇಸ್ ಬುಕ್ ಮೆಸೆಂಜರ್ ಮೂಲಕ ನನಗೆ ಅಶ್ಲೀಲ ಸಂದೇಶಗಳನ್ನು ಕಳುಹಿಸುತ್ತಿದ್ದು, ಲೈಂಗಿಕತೆಗೆ ಆಹ್ವಾನಿಸುತ್ತಿದ್ದ. ಬರದಿದ್ದರೆ ತುಂಡು ತುಂಡುಗಳಾಗಿ ಮಾಡುತ್ತೇನೆ ಎಂದು ಬೆದರಿಕೆ ಒಡ್ಡಿದ್ದಾನೆ ಎಂದು ಆರೋಪಿಸಿ ಎರಡು ದಿನಗಳ ಹಿಂದೆ ಯುವತಿ ಸುರತ್ಕಲ್ ಪೊಲೀಸರಿಗೆ ದೂರು ನೀಡಿದ್ದಳು ಎನ್ನಲಾಗಿದೆ. ಯುವತಿಯ ದೂರು ಆಧರಿಸಿ ಪೊಲೀಸರು ಯುವಕ ಮತ್ತು ಆತನ ಮನೆಯವರು, ಕೆಲ ಮುಖಂಡರು ಹಾಗೂ ಯುವತಿಯ ಮನೆಯವರನ್ನು ಠಾಣೆಗೆ ಕರೆಸಿದ್ದರು. ಅಲ್ಲಿ ವಿಚಾರಣೆ ನಡೆಸಿದ ಪೊಲೀಸರು, ಯುವಕ ಯಾವುದೇ ಮೆಸೇಜ್ ಮಾಡಿಲ್ಲ ಎಂದು ತಿಳಿದುಕೊಂಡು ಆತನನ್ನು ಮನೆಗೆ ಕಳುಹಿಸಿದ್ದರು ಎಂದು ತಿಳಿದು ಬಂದಿದೆ. ದೂರು ನೀಡಿದರೂ ಪೊಲೀಸರು ಕ್ರಮ ಕೈಗೊಂಡಿಲ್ಲ ಎಂದು ಬೇಸರದಲ್ಲಿ ಯುವತಿ ಗುರುವಾರ ತಡರಾತ್ರಿ ಡೆತ್ ನೋಟ್ ಬರೆದಿಟ್ಟು 3.30ರ ಸುಮಾರಿಗೆ ಸುಮಾರು 10 ಡೊಲೊ 650 ಮಾತ್ರಗಳನ್ನು ನುಂಗಿ ಆತ್ಮಹತ್ಯೆಗೆ ಯತ್ನಿಸಿದ್ದಳು ಎನ್ನಲಾಗಿದೆ. ಆದರೆ, ಬೆಳಗ್ಗೆ 8ಗಂಟೆಯ ಸುಮಾರಿಗೆ ಆಕೆಗೆ ಹೊಟ್ಟೆನೋವು ಕಾಣಿಸಿಕೊಂಡಿದ್ದು, ಮನೆಯವರು ವಿಚಾರಿಸಿದಾಗ ಆತ್ಮಹತ್ಯೆ ಮಾಡಿಕೊಳ್ಳಲೆಂದು ಮಾತ್ರೆ ನುಂಗಿರುವುದಾಗಿ ತಿಳಿಸಿದ್ದಾಳೆ. ಮನೆಯವರು ಆಕೆಯನ್ನು ತಕ್ಷಣ ಸುರತ್ಕಲ್ ನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಅಲ್ಲಿನ ವೈದ್ಯರ ಸಲಹೆಯ ಮೇರೆಗೆ ಆಕೆಯನ್ನು ಕಂಕನಾಡಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗಿತ್ತು. ಸದ್ಯ ಯುವತಿ ಪ್ರಾಣಾಪಾಯದಿಂದ ಪಾರಾಗಿದ್ದು, ಚೇತರಿಕೊಳ್ಳುತ್ತಿದ್ದಾಳೆ ಎಂದು ತಿಳಿದು ಬಂದಿದೆ. ಸದ್ಯ ಘಟನೆಗೆ ಸಂಬಂಧಿಸಿ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಚುರುಕು ಗೊಳಿಸಿದ್ದಾರೆ ಎಂದು ತಿಳಿದು ಬಂದಿದೆ.
ಬೇಲೇಕೇರಿ ಅದಿರು ನಾಪತ್ತೆ ಪ್ರಕರಣ: ಕಾರವಾರ ಶಾಸಕ ಸತೀಶ್ ಶೈಲ್ ಬಂಧನ | Satish Krishna Sail
ಶಾಸಕ ಸತೀಶ್ ಸೈಲ್ ಅಪರಾಧಿ ಎಂದ ವಿಶೇಷ ನ್ಯಾಯಾಲಯ ► ಉಪಚುನಾವಣೆ ಹೊತ್ತಲ್ಲೇ ಕಾಂಗ್ರೆಸ್ ಗೆ ಶಾಕ್ !
ಶಿಕ್ಷಣದಲ್ಲಿ ರಂಗಭೂಮಿಯನ್ನು ಪರಿಣಾಮಕಾರಿಯಾಗಿ, ಗುಣಾತ್ಮಕವಾಗಿ ಹೇಗೆ ಮಾಡಬಹುದು ಎಂಬುದರ ಸಲುವಾಗಿ ವಿದ್ಯಾರ್ಥಿಗಳಿಗೆ ಪಠ್ಯವಿರುವ ನಾಟಕಗಳನ್ನು ಆಡುವುದರ ಜೊತೆಗೆ ಅಂಕಗಳು ಹೆಚ್ಚು ಬರಬೇಕು. ನಾಟಕಗಳಲ್ಲಿ ಆಸಕ್ತಿ ಹೆಚ್ಚಬೇಕು. ರಂಗಭೂಮಿಯತ್ತ ವಾಲಬೇಕು ಎನ್ನುವ ಉದ್ದೇಶದಿಂದ ಅವರು ಸಂಚಾರ ಕೈಗೊಂಡಿದ್ದಾರೆ.
ಹೆಚ್ಚು ಮಕ್ಕಳನ್ನು ಹೊಂದುವಂತೆ ಕರೆ ನೀಡಿದ ದಕ್ಷಿಣ ಭಾರತದ ಸಿಎಂಗಳು !
ಹೆಚ್ಚು ಮಕ್ಕಳನ್ನು ಹೆರುವ ಕುಟುಂಬಕ್ಕೆ ಪ್ರೋತ್ಸಾಹಧನ ! ► ಹೆಚ್ಚು ಮಕ್ಕಳನ್ನು ಹೊಂದಲು ಕರೆ ಯಾಕೆ ? ಇದರ ಹಿಂದಿನ ಕಾರಣವೇನು ?
ಕೆನಡಾಕ್ಕೆ ಓದಲು ಹೋಗುವ ವಿದೇಶಿ ವಿದ್ಯಾರ್ಥಿನಿಯರ ಮಾರಾಟ!
ಅಮೆರಿಕ ಖಂಡದಲ್ಲಿರುವ ಕೆನಡಾ ರಾಷ್ಟ್ರದಲ್ಲಿ ಮಾನವ ಕಳ್ಳಸಾಗಣೆಯು ನಡೆಯುತ್ತಲೇ ಇದೆ ಎಂದು ಅಲ್ಲಿನ ಪ್ರಮುಖ ನಗರವಾದ ಬ್ರಾಂಪ್ಟನ್ ನ ಮೇಯರ್ ಪ್ಯಾಟ್ರಿಕ್ ಬ್ರೌನ್ ತಿಳಿಸಿದ್ದಾರೆ. ಇತ್ತೀಚೆಗೆ, ಬ್ರಾಂಪ್ಟನ್ ನಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉನ್ನತ ವಿದ್ಯಾಭ್ಯಾಸಕ್ಕಾಗಿ ವಿದೇಶಗಳಿಂದ ಕೆನಡಾಕ್ಕೆ ಬರುವ ವಿದೇಶಿ ಉದ್ಯೋಗಿಗಳನ್ನು ಟಾರ್ಗೆಟ್ ಮಾಡಲಾಗುತ್ತದೆ. ಹೆಚ್ಚಾಗಿ ಸಿಂಗಲ್ ಆಗಿರುವಂಥವರು, ಓದಿಗಾಗಿ ಹಣ ಬೇಕಾಗಿರುವಂಥವರು ಅಥವಾ ಹೇಳಲು ಕೇಳಲು ಯಾರೂ ಇಲ್ಲದಂಥವರನ್ನು ಟಾರ್ಗೆಟ್ ಮಾಡಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.
ಬೆಂಗಳೂರಿನ ಪ್ರತಿಯೊಬ್ಬರು ನೆನಪಿಡಲೇಬೇಕಾದ ವ್ಯಕ್ತಿ ಸರ್ ಮಿರ್ಜಾ ಇಸ್ಮಾಯಿಲ್ | Sir Mirza Muhammad Ismail
ಬೆಂಗಳೂರಿಗೆ ಮಿರ್ಜಾ ಇಸ್ಮಾಯಿಲ್ ಕೊಟ್ಟ ಕೊಡುಗೆಗಳೇ ಅದ್ಭುತ.. ► ದಿವಾನ್ ಮಿರ್ಜಾ ಇಸ್ಮಾಯಿಲ್ ರ ಸ್ಮಾರಕ ಜೈಪುರದಲ್ಲಿದೆ, ಕರ್ನಾಟಕದಲ್ಲಿ ಯಾಕಿಲ್ಲಾ? ► ಕಾಲೇಜು, ಕಾರ್ಖಾನೆ, ಆಸ್ಪತ್ರೆ, ಜಲಾಶಯಗಳನ್ನು ಕಟ್ಟಿದ ದಿವಾನ.. ► ಸರ್ ಮಿರ್ಜಾ ಇಸ್ಮಾಯಿಲ್ ಜನ್ಮ ದಿನದ ವಿಶೇಷ: ಹವ್ಯಾಸಿ ಇತಿಹಾಸಕಾರ ಕೆ ಧನಪಾಲ್ ಮಾತು
ಎಂಟು ಮಂದಿ ಬಿಜೆಪಿ ಶಾಸಕರು ಕಾಂಗ್ರೆಸ್ಗೆ : ಡಿ ಕೆ ಸುರೇಶ್ ಏನಂದ್ರು?
ಬೆಂಗಳೂರು, ಅಕ್ಟೋಬರ್ 25: ಎಂಟು ಮಂದಿ ಬಿಜೆಪಿ ಶಾಸಕರು ಕಾಂಗ್ರೆಸ್ ಸೇರಿಲಿದ್ದಾರೆ ಎಂದು ಎಸ್.ಟಿ.ಸೋಮಶೇಖರ್ ಅವರ ಹೇಳಿಕೆ ರಾಜ್ಯ ರಾಜಕೀಯದಲ್ಲಿ ಸಂಚಲನ ಸೃಷ್ಟಿಸಿದ್ದು, ಈ ತರಹದ ನಡವಳಿಕೆ ಇರಬಹುದೇನೋ, ಸೋಮಶೇಖರ್ ಅವರ ಬಳಿ ಮಾತನಾಡಿರಬಹುದು ಎನಿಸುತ್ತದೆ ಎಂದು ಮಾಜಿ ಸಂಸದ ಡಿ ಕೆ ಸುರೇಶ್ ಹೇಳಿದರು. ಯೋಗೇಶ್ವರ್ ಅವರು ಕೊನೆ ಕ್ಷಣದಲ್ಲಿ ಕಾಂಗ್ರೆಸ್ ಸೇರಿದಂತೆ ಬೇರೆ ಪಕ್ಷದವರ
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ VS ನಿಖಿಲ್ ಕುಮಾರಸ್ವಾಮಿ ನೇರ ಹಣಾಹಣಿ | Channapatna
ಚನ್ನಪಟ್ಟಣ ಕ್ಷೇತ್ರಕ್ಕೆ ಎನ್ಡಿಎ ಅಭ್ಯರ್ಥಿಯಾಗಿ ನಿಖಿಲ್ ಕುಮಾರಸ್ವಾಮಿ ► ಯಡಿಯೂರಪ್ಪ ನಿವಾಸದಿಂದ ಹೊರಬಿತ್ತು ಅಧಿಕೃತ ಘೋಷಣೆ !
ಯೋಗೇಶ್ವರ್ ನಡೆ ಕುಮಾರ ಸ್ವಾಮಿ ಲೆಕ್ಕಾಚಾರ ತಪ್ಪಿಸಿತೇ?
ಸಿ.ಪಿ. ಯೋಗೇಶ್ವರ್ ಕಾಂಗ್ರೆಸ್ ಸೇರ್ಪಡೆಯಾಗಿದ್ದು, ಚನ್ನಪಟ್ಟಣ ಉಪ ಚುನಾವಣೆ ಅಖಾಡಕ್ಕೆ ಹೊಸ ರಂಗು ಬಂದಿದೆ. ಉಪ ಚುನಾವಣೆ ನಡೆಯುವ ಮೂರು ಕ್ಷೇತ್ರಗಳಲ್ಲಿ ಬಿಜೆಪಿ ಎರಡು ಕ್ಷೇತ್ರಗಳಿಗೆ ಈಗಾಗಲೇ ಅಭ್ಯರ್ಥಿಗಳನ್ನು ಪ್ರಕಟಿಸಿದ್ದು, ಚನ್ನಪಟ್ಟಣವನ್ನು ಜೆಡಿಎಸ್ ಕ್ಷೇತ್ರ ಎಂದು ಬಿಟ್ಟುಕೊಟ್ಟಿತ್ತು. ಎನ್ಡಿಎ ಅಭ್ಯರ್ಥಿಯಾಗಿ ಚನ್ನಪಟ್ಟಣದಿಂದ ಕಣಕ್ಕಿಳಿಯಲು ಬಯಸಿದ್ದ ಯೋಗೇಶ್ವರ್ ಈ ಬೆಳವಣಿಗೆಯಿಂದ ಬೇಸತ್ತು, ಕಾಂಗ್ರೆಸ್ ಸೇರಿದ್ದಾರೆ. ಅವರ ಕಾಂಗ್ರೆಸ್ ಸೇರ್ಪಡೆ ಬೆನ್ನಲ್ಲೇ ಚನ್ನಪಟ್ಟಣಕ್ಕೆ ಅವರನ್ನು ಅಭ್ಯರ್ಥಿಯನ್ನಾಗಿ ಎಐಸಿಸಿ ಘೋಷಿಸಿದೆ. ಯೋಗೇಶ್ವರ್ ಅವರನ್ನು ಕಾಂಗ್ರೆಸ್ಗೆ ಕರೆತರುವ ಮೂಲಕ ಡಿ.ಕೆ. ಶಿವಕುಮಾರ್ ಕುಟುಂಬ ಒಬ್ಬ ಎದುರಾಳಿಯನ್ನು ಕಡಿಮೆ ಮಾಡಿಕೊಂಡಿದೆ ಮತ್ತು ಅವರನ್ನೇ ಕುಮಾರಸ್ವಾಮಿ ವಿರುದ್ಧ ಅಸ್ತ್ರವಾಗಿಸುವ ತಂತ್ರಗಾರಿಕೆಯನ್ನು ಮೆರೆದಿದೆ. ಆಗಲೇ ವಿಚಿತ್ರ ಅಸಹಾಯಕ ಪರಿಸ್ಥಿತಿ ತಲುಪಿದ್ದ ಕುಮಾರಸ್ವಾಮಿ ಈಗ ಯೋಗೇಶ್ವರ್ ಎದುರಾಳಿಯಾಗಲಿರುವುದು ಪಕ್ಕಾ ಆಗುತ್ತಿದ್ದಂತೆ ಇನ್ನಷ್ಟು ಗೊಂದಲಗಳಿಗೆ ಒಳಗಾದಂತಿದೆ. ಚನ್ನಪಟ್ಟಣ ಕ್ಷೇತ್ರಕ್ಕೆ ಈಗ ಜೆಡಿಎಸ್ ಅಭ್ಯರ್ಥಿಯೆಂದು ಘೋಷಿಸಲ್ಪಟ್ಟಿರುವ ನಿಖಿಲ್ರನ್ನು ಮೊದಲೇ ಆ ಸ್ಥಾನಕ್ಕೆ ಅಭ್ಯರ್ಥಿಯೆಂದು ಕೊಂಡಿದ್ದ ಕುಮಾರಸ್ವಾಮಿ ಆನಂತರ ಯೋಗೇಶ್ವರ್ ಹಟದಿಂದಾಗಿ ಆ ಬಗ್ಗೆ ವಿಶ್ವಾಸವನ್ನೇ ಕಳೆದುಕೊಂಡಿದ್ದರು. ಬಿಜೆಪಿ ತಮ್ಮನ್ನು ಬೆಂಬಲಿಸುವುದಿಲ್ಲ ಎಂಬುದು ಖಾತ್ರಿಯಾಗುತ್ತಲೇ ಕುಮಾರಸ್ವಾಮಿ ಸಂದಿಗ್ಧಕ್ಕೆ ಸಿಲುಕಿದ್ದರು. ಒಂದು ಹಂತದಲ್ಲಿ ಯೋಗೇಶ್ವರ್ ಅವರನ್ನು ಜೆಡಿಎಸ್ ಚಿಹ್ನೆಯಡಿ ಕಣಕ್ಕಿಳಿಸಲು ತಮ್ಮ ಸಮ್ಮತಿಯಿದೆ ಎಂಬ ಸುಳಿವನ್ನೂ ನೀಡಿದ್ದರು. ಆದರೆ ಅದಾವುದೂ ಆಗದೆ, ಬಿಜೆಪಿಯಿಂದಲೇ ಸ್ಪರ್ಧಿಸುವ ಅವಕಾಶ ಸಿಗಬಹುದು ಎಂದು ಕಾಯುವಷ್ಟು ಕಾದ ಯೋಗೇಶ್ವರ್ ಬಿಜೆಪಿಗೆ ಸಡ್ಡು ಹೊಡೆದು ಕಾಂಗ್ರೆಸ್ಗೆ ಮರಳಿದ್ದಾರೆ. ಅಲ್ಲಿಗೆ, ಚನ್ನಪಟ್ಟಣದಲ್ಲಿ ಪಕ್ಷಕ್ಕೆ ಬಲವಾಗಿದ್ದ ಯೋಗೇಶ್ವರ್ ಅವರನ್ನು ಪಕ್ಷ ಕಳೆದುಕೊಳ್ಳುವಂತಾಗಲು ಕುಮಾರಸ್ವಾಮಿಯವರೇ ಕಾರಣ ಎಂಬ ಅಸಮಾಧಾನವೂ ಬಿಜೆಪಿಯಲ್ಲಿ ಮೂಡಿದೆ. ಮೊದಲೇ ಜೆಡಿಎಸ್ ಮೈತ್ರಿ, ಅದರಲ್ಲೂ ಕುಮಾರಸ್ವಾಮಿ ವಿಚಾರದಲ್ಲಿ ಅಸಮಾಧಾನದಿಂದಿರುವ ಬಿಜೆಪಿ ನಾಯಕರಿಗೆ ಯೋಗೇಶ್ವರ್ ರಾಜೀನಾಮೆ ಬೇಸರ ತರಿಸದಿದ್ದೀತೇ? ಬಿಜೆಪಿ ಮನಸ್ಸು ಮಾಡಿದ್ದರೆ ಯೋಗೇಶ್ವರ್ ಅವರನ್ನೇ ಕಣಕ್ಕಿಳಿಸುವ ತೀರ್ಮಾನಕ್ಕೂ ಬರಬಹುದಿತ್ತು. ಆದರೆ ಅದು ಮೈತ್ರಿಧರ್ಮವನ್ನು ಪಾಲಿಸುವುದಕ್ಕಾಗಿ ಅಂಥ ಹೆಜ್ಜೆ ತೆಗೆದುಕೊಂಡಿಲ್ಲ ಎನ್ನಲಾಗುತ್ತಿದೆ. ಆದರೆ ನಿಜವಾಗಿಯೂ ಮೈತ್ರಿಧರ್ಮದ ಪಾಲನೆಗಾಗಿ ಬಿಜೆಪಿ ಹೀಗೆ ಮಾಡಿತೇ ಅಥವಾ ಬೇರೆಯದೇ ತಂತ್ರಗಾರಿಕೆ ಅದಾಗಿದೆಯೆ? ಬಹುಶಃ ಕುಮಾರಸ್ವಾಮಿಯವರನ್ನು ಚನ್ನಪಟ್ಟಣ ಉಪ ಚುನಾವಣೆ ನೆಪದಲ್ಲಿ ನೀರಿಗಿಳಿಸಿ ನೋಡಲು ಮತ್ತು ಆ ಮೂಲಕ ಜೆಡಿಎಸ್ ಪಾಲಿನ ಭದ್ರಕೋಟೆಯಲ್ಲಿಯೇ ಕುಮಾರಸ್ವಾಮಿ ಸೋಲು ಅನುಭವಿಸುವಂತಾಗಲು ರಚಿಸಲಾಗಿರುವ ವ್ಯೆಹ ಇದೆಂಬಂತೆಯೂ ತೋರುತ್ತದೆ. ಚನ್ನಪಟ್ಟಣ ಕ್ಷೇತ್ರದ ವಿಚಾರದಲ್ಲಿ ಬಿಜೆಪಿ ಕಿಂಚಿತ್ ತೊಡಗಿಸಿಕೊಳ್ಳುವಿಕೆಯೇ ಇಲ್ಲದೆ ತನ್ನ ಪಾಡಿಗೆ ತಾನಿರುವುದು ತೀರಾ ಸರಳ ಎಂದೇನೂ ಅನ್ನಿಸುತ್ತಿಲ್ಲ. ವ್ಯವಸ್ಥಿತವಾಗಿ ಕುಮಾರಸ್ವಾಮಿಯವರನ್ನು ಕಟ್ಟಿಹಾಕುವುದು ಅದರ ಉದ್ದೇಶವಿದ್ದಂತೆ ಕಾಣಿಸುತ್ತದೆ. ಆದರೆ ಈ ಲೆಕ್ಕಾಚಾರದಲ್ಲಿ ಅದು ಯೋಗೇಶ್ವರ್ ನಡೆಯ ಬಗ್ಗೆ ಮಾಡಿಕೊಂಡಿದ್ದಿರಬಹುದಾದ ಅಂದಾಜು ಮಾತ್ರ ತಪ್ಪಿದ ಹಾಗಿದೆ. ಹೇಗೂ ಯೋಗೇಶ್ವರ್ ಪಕ್ಷೇತರರಾಗಿ ಕಣಕ್ಕಿಳಿಯುತ್ತಾರೆ ಮತ್ತು ಅಂಥ ವಾತಾವರಣ ನಿರ್ಮಿಸಿ, ಅವರನ್ನು ಮೈತ್ರಿ ವಿರುದ್ಧ ಬಂಡಾಯ ಎಂಬಂತೆ ಕಣಕ್ಕಿಳಿಯುವಂತೆ ಮಾಡುವುದು ಬಿಜೆಪಿ ಉದ್ದೇಶವಾಗಿತ್ತೆನ್ನಿಸುತ್ತದೆ. ಒಂದು ವೇಳೆ ಸೋತರೆ ಅದರಿಂದ ತಾನು ಕಳೆದುಕೊಳ್ಳುವುದೇನೂ ಇಲ್ಲ ಮತ್ತು ಗೆದ್ದರೆ ಪುನಃ ಯೋಗೇಶ್ವರ್ ಅವರನ್ನು ಪಕ್ಷಕ್ಕೆ ತೆಗೆದುಕೊಂಡರಾಯಿತು ಎಂಬ ಲೆಕ್ಕಾಚಾರ ಬಿಜೆಪಿಯದ್ದಾಗಿತ್ತು. ಆದರೆ, ಪಕ್ಷೇತರನಾಗಿ ಕಣಕ್ಕಿಳಿಯುವುದಕ್ಕಿಂತ ಒಂದು ಪಕ್ಷದ ಚಿಹ್ನೆಯಡಿ ಸ್ಪರ್ಧಿಸುವುದರಲ್ಲಿ ಹೆಚ್ಚು ಲಾಭವಿದೆ ಎಂದು ಯೋಚಿಸಿದ ಯೋಗೇಶ್ವರ್ ಒಂದು ಹಂತದಲ್ಲಿ ಎಸ್ಪಿ ಟಿಕೆಟ್ ಪಡೆದಾದರೂ ಕಣಕ್ಕಿಳಿಯುವ ಅವಕಾಶವನ್ನೂ ಮುಕ್ತವಾಗಿ ಇರಿಸಿಕೊಂಡಿದ್ದರು. ಆದರೆ ಕಾಂಗ್ರೆಸ್ ಜೊತೆಗೆ ನಡೆದಿರಬಹುದಾದ ತೆರೆಯ ಹಿಂದಿನ ಮಾತುಕತೆಗಳ ಬಳಿಕ ಗೂಡಿಗೆ ಮರಳುವ ನಿರ್ಧಾರಕ್ಕೆ ಬಂದಿದ್ದ ಯೋಗೇಶ್ವರ್ ಬುಧವಾರ ಬೆಳಗ್ಗೆಯೇ ಡಿ.ಕೆ. ಶಿವಕುಮಾರ್ ಮನೆಯಲ್ಲಿ ಕಾಣಿಸಿಕೊಂಡು, ಕಾಂಗ್ರೆಸ್ ಸೇರುವುದನ್ನು ಖಚಿತಪಡಿಸಿದ್ದರು. ಮುಂದಿನ ಒಂದೆರಡು ಗಂಟೆಗಳಲ್ಲಿಯೇ ಅವರು ಕಾಂಗ್ರೆಸ್ ಬಾವುಟ ಹಿಡಿದದ್ದೂ ಆಯಿತು. ಈಗ ಇರುವುದು ಚನ್ನಪಟ್ಟಣ ಅಖಾಡದಲ್ಲಿನ ಅವರ ಆಟ. ಯೋಗೇಶ್ವರ್ ಮೂಲಕ ಕಾಂಗ್ರೆಸ್ ಈಗ ಬಿಜೆಪಿ-ಜೆಡಿಎಸ್ ಮೈತ್ರಿಗೆ, ಅದರಲ್ಲೂ ಕುಮಾರಸ್ವಾಮಿಯವರಿಗೆ ದೊಡ್ಡ ಸವಾಲನ್ನೇ ಹಾಕಿ ನಿಂತಂತಿದೆ ಮತ್ತು ಈ ಸವಾಲನ್ನು ಎದುರಿಸುವುದು ಹೇಗೆಂಬ ಸಂದಿಗ್ಧದಲ್ಲಿಯೇ ಕುಮಾರಸ್ವಾಮಿ ಈಗ ಅಭ್ಯರ್ಥಿಯನ್ನು ನಿರ್ಧರಿಸಿದ್ದಾರೆೆ. ಕೊನೆಗೂ ನಿಖಿಲ್ರನ್ನು ಜೆಡಿಎಸ್ ಅಭ್ಯರ್ಥಿ ಎಂದು ಘೋಷಿಸಲಾಗಿದೆ. ಇನ್ನು ಕಾಂಗ್ರೆಸ್ ಸಂಡೂರಿಗೆ ಇ. ತುಕಾರಾಂ ಪತ್ನಿ ಇ. ಅನ್ನಪೂರ್ಣ ಅವರನ್ನು ಅಭ್ಯರ್ಥಿಯೆಂದು ಘೋಷಿಸಿದ್ದು, ನಿನ್ನೆ ಶಿಗ್ಗಾಂವಿ ಕ್ಷೇತ್ರಕ್ಕೂ ಅಭ್ಯರ್ಥಿ ಘೋಷಣೆ ಮಾಡಲಾಗಿದೆ. ಯಾಸೀರ್ ಪಠಾಣ್ ಅಲ್ಲಿನ ಅಭ್ಯರ್ಥಿಯಾಗಿದ್ದಾರೆ. ಅಲ್ಲಿಯೂ ಬಸವರಾಜ ಬೊಮ್ಮಾಯಿ ರಾಜಕಾರಣದ ಎದುರು ಎಂತಹ ಪ್ರತಿ ತಂತ್ರಗಾರಿಕೆ ಹೂಡಬೇಕು ಎಂಬ ಲೆಕ್ಕಾಚಾರ ನಡೆದಿತ್ತು. ಈ ಬಾರಿ ಮುಸ್ಲಿಮ್ ಅಭ್ಯರ್ಥಿ ಬದಲು ಲಿಂಗಾಯತ ಅಭ್ಯರ್ಥಿಯನ್ನೇ ಕಣಕ್ಕಿಳಿಸಿ ಬೊಮ್ಮಾಯಿಗೆ ಠಕ್ಕರ್ ನೀಡುವ ಹವಣಿಕೆಯಲ್ಲಿ ಕಾಂಗ್ರೆಸ್ ಇತ್ತು.ವಿನಯ್ ಕುಲಕರ್ಣಿ ಪುತ್ರಿ ವೈಶಾಲಿ ಹೆಸರು ಕೂಡ ಕಾಂಗ್ರೆಸ್ನಿಂದ ಶಿಗ್ಗಾಂವಿ ಕ್ಷೇತ್ರಕ್ಕೆ ಕೇಳಿಬಂದಿತ್ತು. ಆದರೆ ಅಲ್ಲಿ ಕಳೆದ ಬಾರಿಯ ಅಭ್ಯರ್ಥಿ ಯಾಸೀರ್ ಪಠಾಣ್ ಅವರು ಪ್ರಬಲ ಆಕಾಂಕ್ಷಿಯಾಗಿದ್ದರು. ಅವರಿಗೆ ಸ್ಥಳೀಯ ಕಾಂಗ್ರೆಸ್ ನಾಯಕರು ಹಾಗೂ ಕಾರ್ಯಕರ್ತರ ಬೆಂಬಲವೂ ಇರುವುದರಿಂದ ಕೊನೆಗೂ ಅವರೇ ಅಭ್ಯರ್ಥಿಯೆಂದು ಘೋಷಣೆಯಾಗಿದ್ದಾರೆ.
ಶಿಗ್ಗಾವಿ ಕ್ಷೇತ್ರದಲ್ಲಿ ಮುಸ್ಲಿಂ ನಾಯಕನಿಗೆ ಕಾಂಗ್ರೆಸ್ ಟಿಕೆಟ್| Shiggaon Congress - Yasir Ahmed Khan Pathan
ಕಾಂಗ್ರೆಸ್ ಕಾರ್ಯಕರ್ತರ ಮಾತಿಗೆ ವರಿಷ್ಠರ ಮನ್ನಣೆ ► ಬೊಮ್ಮಾಯಿ ಮಗನ ವಿರುದ್ಧ ಸ್ಪರ್ಧಿಸಲಿರುವ ಜನಪ್ರಿಯ ನಾಯ
Jharkhand Assembly Polls 2024: ಜಾರ್ಖಂಡ್ನಲ್ಲಿ ಜೆಎಂಎಂ ಅಭ್ಯರ್ಥಿಗಳ ನಾಲ್ಕನೇ ಪಟ್ಟಿ ಬಿಡುಗಡೆ
Jharkhand Assembly Polls 2024: ಈಗಾಗಲೇ ಜಾರ್ಖಂಡ್ ವಿಧಾನಸಭೆ ಚುನಾವಣೆಗೆ ದಿನಾಂಕ ಘೋಷಣೆಯಾಗಿದೆ. ಅಲ್ಲದೆ, ಈಗಾಗಲೇ ಎಲ್ಲಾ ಪಕ್ಷಗಳಿಂದಲೂ ಅಭ್ಯರ್ಥಿಗಳ ಫೈನಲ್ ಪ್ರಕ್ರಿಯೆ ನಡೆಯುತ್ತಿದೆ. ಇನ್ನು ಇದೀಗ ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ) ಪಕ್ಷ ಅಭ್ಯರ್ಥಿಗಳ ನಾಲ್ಕನೇ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಮಾಹಿತಿ, ವಿವರ ಇಲ್ಲಿದೆ ತಿಳಿಯಿರಿ.
ಗುಜರಾತ್ ನಲ್ಲಿ ಇಷ್ಟೊಂದು ಘೋರ ವಂಚನೆ ನಡೆಯೋದು ಹೇಗೆ ? | Gujarat
ಐಎಎಸ್ ಅಧಿಕಾರಿಯೂ ನಕಲಿ, ನ್ಯಾಯಾಧೀಶರೂ ನಕಲಿ ! ► ನಕಲಿ ಟೋಲ್ ಪ್ಲಾಝಾ ನಡೆಸಲು ಹೇಗೆ ಸಾಧ್ಯ ಸ್ವಾಮೀ...?
ಶಾಲೆಯಲ್ಲಿ ಮೇಸ್ಟ್ರು ನನ್ನನ್ನು ಹುಚ್ಚ ಅಂದಿದ್ರು : ಅರವಿಂದ್ ಬೋಳಾರ್ | Mangaluru - Aravind Bolar
ಹಿರಿಯರಿಗೆ ಮಾಡಿದ ಸೇವೆಯೇ ನನಗೆ ಆಶೀರ್ವಾದ.. ► ಮಂಗಳೂರು : ಪ್ರೆಸ್ ಕ್ಲಬ್ ಗೌರವ ಸ್ವೀಕರಿಸಿ ನಟ ಅರವಿಂದ ಬೋಳಾರ್ ಮಾತು
ಒಸಾಕ್ ಇಂಡಿಯಾದ ವಾರ್ಷಿಕ ಸಭೆ ಉದ್ಘಾಟಿಸಿದ ಯುಎಸ್ ಕಾನ್ಸಲ್ ಜನರಲ್, ಐಟಿ ಸಚಿವ
ಚೆನ್ನೈ ಅಕ್ಟೋಬರ್ 25: ಅಮೇರಿಕ ಸರ್ಕಾರ ಮತ್ತು ಖಾಸಗಿ ವಲಯದ ಭದ್ರತಾ ತಜ್ಞರ ನಡುವಿನ ಸಹಕಾರವನ್ನು ಹೆಚ್ಚಿಸುವ ಸಲುವಾಗಿ ಆಯೋಜಿಸಿದ್ದ ಒಸಾಕ್ ಇಂಡಿಯಾ ವಾರ್ಷಿಕ ಸಾಮಾನ್ಯ ಸಭೆಯನ್ನು ಯು.ಎಸ್. ಕಾನ್ಸಲ್ ಜನರಲ್ ಕ್ರಿಸ್ ಹಾಡ್ಜಸ್ ಮತ್ತು ತಮಿಳುನಾಡು ಮಾಹಿತಿ ತಂತ್ರಜ್ಞಾನ ಮತ್ತು ಡಿಜಿಟಲ್ ಸೇವೆಗಳ ಸಚಿವ ಡಾ. ಪಳನಿವೇಲ್ ತ್ಯಾಗರಾಜನ್ ಅವರು ಅಕ್ಟೋಬರ್ 24 ರಂದು ಚೆನ್ನೈಯಲ್ಲಿ
ಕೋಟಿಗೂ ಹೆಚ್ಚು ಸಂಬಳ ಪಡೆಯುವವರ ಸಂಖ್ಯೆಯಲ್ಲಿ ಭಾರೀ ಹೆಚ್ಚಳ !
12.9 ಕೋಟಿ ಭಾರತೀಯರಲ್ಲಿ ತೀವ್ರ ಬಡತನ ► ವಿಶ್ವಬ್ಯಾಂಕ್ ವರದಿ ಬಿಚ್ಚಿಟ್ಟ ಕಟು ವಾಸ್ತವವೇನು?
ಕಾಂಗ್ರೆಸ್ ಲೂಟಿಕೋರರ ಪಾರ್ಟಿ, ಯೋಗೇಶ್ವರ್ರನ್ನು ಬಲಿ ಪಡೆಯುತ್ತಿದೆ: ಆರ್ ಅಶೋಕ್ ವ್ಯಂಗ್ಯ
ರಾಮನಗರ: ಚನ್ನಪಟ್ಟಣ ಉಪಚುನಾವಣೆಗೆ ಸಂಬಂಧಿಸಿದಂತೆ ನಾಡಿದ್ದು ತಾಲೂಕು ಸಭೆ ಆಯೋಜನೆ ಮಾಡುತ್ತೇವೆ. ಮುಖಂಡರು, ಕಾರ್ಯಕರ್ತರ ಆದಿಯಾಗಿ ಎಲ್ಲರೂ ಸಂಪೂರ್ಣ ಸಾಮರ್ಥ್ಯ ಹಾಕಿ ನಿಖಿಲ್ ಗೆಲುವಿಗೆ ಶ್ರಮಿಸುತ್ತೇವೆ ಎಂದು ವಿಪಕ್ಷ ನಾಯಕ ಆರ್ ಅಶೋಕ್ ಹೇಳಿದರು. ನಿಖಿಲ್ ಗೆ ಮೋದಿ, ದೇವೇಗೌಡರ ಆಶೀರ್ವಾದ ಇದೆ. ನೂರಕ್ಕೆ ನೂರಷ್ಷು ಗೆಲ್ಲುತ್ತೇವೆ. ಜೆಡಿಎಸ್ ಬಲಿಷ್ಠವಾಗಿದೆ. ಬಿಜೆಪಿ ತನ್ನದೇ ಆದ ವೋಟ್ ಬ್ಯಾಂಕ್ ಹೊಂದಿದೆ. ಮತದಾರರಿಗೆ ಎನ್ ಡಿಎ ಪರವಾದ ಒಲವು ಇದೆ. ಕಾರ್ಯಕರ್ತರ ಸಭೆ ನಡೆಸಿ ನಿಖಿಲ್ ರನ್ನು ಆಯ್ಕೆ ಮಾಡುತ್ತೇವೆ ಎಂದರು.ಯೋಗೇಶ್ವರ್ ಅವರನ್ನು ನಾಯಕರು ಆಯ್ಕೆ ಮಾಡಿದ್ದಾರೆ. ಕಾರ್ಯಕರ್ತರು ರೆಬೆಲ್ ಆಗಿದ್ದಾರೆ. ಕಾರ್ಯಕರ್ತರ ಅಭಿಪ್ರಾಯ ಸಂಗ್ರಹ ಮಾಡಬಹುದಿತ್ತು. ಕಾಂಗ್ರೆಸ್ ನ ಒಂದು ಟೀಮ್ ನಮಗೆ ಬೆಂಬಲ ನೀಡಲಿದೆ. ವಾಲ್ಮೀಕಿ, ಮುಡಾ, ಎಸ್ಸಿಎಸ್ಟಿ ಹಣ ದುರುಪಯೋಗ, ಗಣಿ ಹಗರಣದಲ್ಲಿ ಕಾಂಗ್ರೆಸ್ ಶಾಸಕ ಸತೀಶ್ ಗೆ ಜೈಲು ಶಿಕ್ಷೆ ಆಗಿದೆ. ಹಗರಣಗಳ ಸರಮಾಲೆ, ಲೂಟಿಕೋರರ ಪಾರ್ಟಿ ಆಗಿದೆ. ಗಣಿ ಹಗರಣದಲ್ಲಿ ಪಾದಯಾತ್ರೆ ಮಾಡಿದರು. ಅದೇ ಪಕ್ಕದ ಶಾಸಕ ಗಣಿ ಲೂಟಿಯಲ್ಲಿ ಜೈಲು ಪಾಲಾಗಿದ್ದಾರೆ. ಲೂಟಿಕೋರ ಪಕ್ಷವನ್ನು ಮತದಾರರು ಗೆಲ್ಲಿಸಲ್ಲ ಎಂದರು. ನಿಖಿಲ್ ಅವರಿಗೆ ಸಿಂಪತಿ ಇದೆ. ಅಶ್ವತ್ಥ ನಾರಾಯಣ್ ಅವರು ಯೋಗೇಶ್ವರ್ಗೆ ಟಿಕೆಟ್ ಕೊಡಿಸಲು ಹೋರಾಟ ನಡೆಸಿದರು. ಬಿಜೆಪಿಯಲ್ಲಿ ದೊಡ್ಡ ನಾಯಕರಾಗಿದ್ದರು. ಕಾಂಗ್ರೆಸ್ ನಲ್ಲಿ ಮೂರನೇ ಸಾಲಿನ ನಾಯಕ ಆಗಿದ್ದಾರೆ. ಚುನಾವಣೆ ನಂತರ ಎಷ್ಟನೇ ಸಾಲಿಗೆ ಹೋಗುತ್ತಾರೊ ಗೊತ್ತಿಲ್ಲ. ಕಾಂಗ್ರೆಸ್ ಯೋಗೇಶ್ವರ್ ಅವರನ್ನು ಬಲಿ ಪಡೆಯುತ್ತಿದೆ. ಬಿಜೆಪಿ ಸರಕಾರದಲ್ಲಿ ನೀಡಿದ ಅನುದಾನ ಬಿಟ್ಟರೆ ಕಾಂಗ್ರೆಸ್ ನಯಾ ಪೈಸೆ ನೀಡಿಲ್ಲ. ಮಳೆಯಿಂದಾಗಿ ತೇಲುತ್ತಿರುವ, ಮುಳುಗುತ್ತಿರುವ ಬೆಂಗಳೂರು ಆಗಿದೆ. ಉತ್ತರ ಕರ್ನಾಟಕದ ಲ್ಲಿ ಬೆಳೆ ಹಾನಿಯಾಗಿದೆ. ಎಂದರು. ಮಾಜಿ ಉಪಮುಖ್ಯಮಂತ್ರಿ ಅಶ್ವತ್ಥ ಡಾ.ಸಿ.ಎನ್. ಅಶ್ವತ್ಥ್ ನಾರಾಯಣ ಮಾತನಾಡಿ, ನಿಖಿಲ್ ಎನ್ ಡಿಎ ಅಭ್ಯರ್ಥಿ. ಬಿಜೆಪಿ ಜೆಡಿಎಸ್ ಒಗ್ಗಟ್ಟಿನ ಅಭ್ಯರ್ಥಿ. ಚನ್ನಪಟ್ಟಣದ ಮಂದಿ ಪ್ರಬುದ್ಧರು. ಕೆಂಗಲ್ ನಿಂದ ದೇವೇಗೌಡರು ಪ್ರತಿನಿಧಿಸಿರುವ ಕ್ಷೇತ್ರ. ಚನ್ನಪಟ್ಟಣಕ್ಕೆ ವಿಶೇಷವಾಗಿ ಕಡಿಮೆ ಆಶೀರ್ವಾದ ಇದ್ದರೂ, ಪಕ್ಷದ ಶಾಸಕರು ಇಲ್ಲದಿದ್ದರೂ ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸಿದ್ದೇವೆ. ರೇಷ್ಮೆಗೂಡು ಮಾರುಕಟ್ಟೆ, ಸತ್ತೇಗಾಲ ಯೋಜನೆ, ಮೆಡಿಕಲ್ ಕಾಲೇಜು, ಜಲ ಜೀವನ್ ಮಿಷನ್, ನೆಟ್ಕಲ್ ಯೋಜನೆ ಜಾರಿಗೆ ತಂದೆವು. ಎನ್ ಡಿಎ ಜನಪರವಾಗಿದೆ. ಕಾಂಗ್ರೆಸ್ ನಿಂದ ಏನನ್ನು ಬಯಸಲು ಆಗಲ್ಲ. ಕಾಂಗ್ರೆಸ್ ಜನ ರೈತ ವಿರೋಧಿ ಆಗಿದೆ. ಜಿಲ್ಲೆಗೆ ಏನಾದರು ಕೊಡುಗೆ ನೀಡಿದೆಯಾ? ಜಿಲ್ಲೆಯನ್ನೆ ತೊರೆದು ಹೋದರು. ಅಭ್ಯರ್ಥಿ ಇಲ್ಲದ ಪಕ್ಷ. ಚನ್ನಪಟ್ಟಣ ಜನರು ಕಾಂಗ್ರೆಸ್ ನಂಬಿರಲಿಲ್ಲ. ಯೋಗೇಶ್ವರ್ ತೊರೆದಿರುವುದು ಹಿನ್ನಡೆ ಆಗಿದೆ. ಪಕ್ಷ ಕಟ್ಟಲು ತಯರಾಗಿದ್ದೇವೆ. ಬಿಜೆಪಿ ಟಿಕೆಟ್ ಆಫರ್ ಮಾಡಿದ್ದೆವು. ಕ್ಷೇತ್ರದ ಅಭಿವೃದ್ಧಿಗೆ ಹೋಗಿಲ್ಲ. ಸ್ವಂತ ಅಭಿವೃದ್ಧಿ ಗೆ ಹೋಗಿದ್ದಾರೆ ಎಂದರು. ಮಾಜಿ ಮುಖ್ಯಮಂತ್ರಿ ಸದಾನಂದಗೌಡ ಮಾತನಾಡಿ, ಸವಾಲಿನ ಚುನಾವಣೆ. ಒಬ್ಬ ವ್ಯಕ್ತಿ ಪಕ್ಷ ಅಂತ ಹೇಳಿ ಈಗ 7ನೇ ಬಾರಿ ಜಿಗಿತ. ಸ್ವಾರ್ಥ ಕ್ಕಾಗಿ ರಾಜಕಾರಣ. ಆತ ಇರಬೇಕೋ ಬೇಡವೋ ಪ್ರಶ್ನೆ. ವಿಚಾರ ಆಧಾರಿತ ಚುನಾವಣೆ ಆಗಲಿದೆ. ಪಕ್ಷಾಂತರ ಮಾಡುವವರನ್ನು ನಿರ್ಲಕ್ಷ್ಯ ಮಾಡಬೇಕಿದೆ. ಸಿದ್ದರಾಮಯ್ಯ ಡಿ.ಕೆ.ಶಿವಕುಮಾರ್ ಅವರನ್ನು ಯೋಗೇಶ್ವರ್ನನ್ನು ಹಿಂದಕ್ಕೆ ಹಾಕಿದ್ದಾರೆ ಎಂದರು. ಮಂಡ್ಯ ಮೈಸೂರುವರೆಗೆ ಹಸಿರು ಕಾಣುತ್ತಿರಲಿಲ್ಲ. ನಾನು ಸಿಎಂ ಆದಾಗ ಆರು ಕೆರೆ ತುಂಬಿಸಿ ಅಭಿವೃದ್ಧಿ ಮಾಡಿದೆವು. ಭಗೀರಥ ಬಿಜೆಪಿ ಸರ್ಕಾರವೇ ಹೊರತು ಯೋಗೇಶ್ವರ್ ಅಲ್ಲ. 150 ಕೋಟಿ ರೂ ಅನುದಾನ ನೀಡಿದೆ. ಇವತ್ತು ಭಗೀರಥ ಅಂತ ಹೇಳಿಕೊಂಡು ಚುನಾವಣೆ ಎದುರಿಸಲು ನಾಚಿಕೆ ಆಗಬೇಕು. ಕಾಂಗ್ರೆಸ್ ನಲ್ಲಿ ಇದ್ದಾಗ ಏಕೆ ಅನುದಾನ ತಂದು ಕೆರೆ ತುಂಬಿಸಲಿಲ್ಲ. ಅಶ್ವತ್ಥ ನಾರಾಯಣ ಉಸ್ತುವಾರಿ ಆಗಿದ್ದಾಗ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ನಡೆದಿವೆ. ಯೋಗೇಶ್ವರ್ಗೆ ಮಾನಮರ್ಯಾದೆ ಇದ್ದರೆ ನೀರು ತಂದೆ ಭಗೀರಥ ಅನ್ನುವುದನ್ನ ಬಿಟ್ಟು ಚುನಾವಣೆ ಎದುರಿಸಬೇಕು. ವಿಧಾನ ಪರಿಷತ್ ಸದಸ್ಯರಾಗಿದ್ದ ಕಾರಣ ಕಾಂಗ್ರೆಸ್ ನಲ್ಲಿ ಟಿಕೆಟ್ ಸಿಗಲಿದೆ. ನಿಖಿಲ್ ಗೆಲ್ಲುವರು. ಕೇಂದ್ರದ ಅಭಿವೃದ್ಧಿ ಕಾರ್ಯ, ಕಾಂಗ್ರೆಸ್ ಸರ್ಕಾರದ ಹಗರಣ ಸರಮಾಲೆ ಇದೆ ಎಂದರು.
KEA: ನಾಳೆ ಕನ್ನಡ ಕಡ್ಡಾಯ ಪರೀಕ್ಷೆ; ಅ.27ಕ್ಕೆ ಬಿಗಿ ಬಂದೋಬಸ್ತ್ ನಡೆಯಲಿದೆ ಗ್ರಾಮ ಆಡಳಿತ ಅಧಿಕಾರಿ ಪರೀಕ್ಷೆ
KEA : ಕನ್ನಡ ಕಡ್ಡಾಯ ಪರೀಕ್ಷೆ ಅ.26ಕ್ಕೆ, ಅ.27ಕ್ಕೆ ಗ್ರಾಮ ಆಡಳಿತ ಅಧಿಕಾರಿ ಪರೀಕ್ಷೆಯು ಬಿಗಿ ಪೊಲೀಸ್ ಬಂದೋಬಸ್ತ್ನಲ್ಲಿ ನಡೆಯಲಿದೆ. The post KEA: ನಾಳೆ ಕನ್ನಡ ಕಡ್ಡಾಯ ಪರೀಕ್ಷೆ; ಅ.27ಕ್ಕೆ ಬಿಗಿ ಬಂದೋಬಸ್ತ್ ನಡೆಯಲಿದೆ ಗ್ರಾಮ ಆಡಳಿತ ಅಧಿಕಾರಿ ಪರೀಕ್ಷೆ first appeared on Vistara News .
ಒಡಿಶಾ, ಬಂಗಾಳದಲ್ಲಿ ಡಾನಾ ಚಂಡಮಾರುತ ಅಬ್ಬರ: ಭಾರಿ ಮಳೆ, ಗಾಳಿ ಆರ್ಭಟಕ್ಕೆ ನಲುಗಿದ ಜನ
Cyclone Dana in Odisha, West Bengal: ಡಾನಾ ಚಂಡಮಾರುತವು ಒಡಿಶಾ ಮತ್ತು ಪಶ್ಚಿಮ ಬಂಗಾಳದ ಕರಾವಳಿ ಪ್ರದೇಶಗಳಲ್ಲಿ ಭಾರಿ ಅನಾಹುತ ಸೃಷ್ಟಿಸಿದೆ. ಶುಕ್ರವಾರ ಬೆಳಿಗ್ಗೆ ಚಂಡಮಾರುತವು ಒಡಿಶಾ ಕರಾವಳಿಗೆ ಅಪ್ಪಳಿಸಿದ್ದು, ವ್ಯಾಪಕ ಮಳೆ ಸುರಿಸುತ್ತಿದೆ. ಪಶ್ಚಿಮ ಬಂಗಾಳದಲ್ಲಿ ಮಳೆ ಗಾಳಿಯಿಂದ ಒಬ್ಬ ವ್ಯಕ್ತಿ ಮೃತಪಟ್ಟಿದ್ದಾರೆ.
ಲಾರೆನ್ಸ್ ಬಿಷ್ಣೋಯಿ ಸಹೋದರ ಅನ್ಮೋಲ್ ಸುಳಿವು ನೀಡಿದವರಿಗೆ ರೂ. 10 ಲಕ್ಷ ಬಹುಮಾನ ಘೋಷಿಸಿದ ಎನ್ಐಎ
ಹೊಸದಿಲ್ಲಿ: ಪಂಜಾಬ್ ಗಾಯಕ ಸಿಧು ಮೂಸೆವಾಲ ಹತ್ಯೆ ಪ್ರಕರಣದ ಸಂಬಂಧ ಗ್ಯಾಂಗ್ ಸ್ಟರ್ ಲಾರೆನ್ಸ್ ಬಿಷ್ಣೋಯಿ ಸಹೋದರ ಅನ್ಮೋಲ್ ಬಿಷ್ಣೋಯಿ ಕುರಿತು ಸುಳಿವು ನೀಡಿದವರಿಗೆ ರೂ. 10 ಲಕ್ಷ ಬಹುಮಾನ ನೀಡಲಾಗುವುದು ಎಂದು ರಾಷ್ಟ್ರೀಯ ತನಿಖಾ ದಳ (NIA) ಘೋಷಿಸಿದೆ. ಮೇ 29, 2022ರಂದು ಪಂಜಾಬ್ ಗಾಯಕ ಸಿಧು ಮೂಸೆವಾಲಾರನ್ನು ಹತ್ಯೆಗೈಯಲು ಅನ್ಮೋಲ್ ಅಲಿಯಾಸ್ ಭಾನು ಹಂತಕರಿಗೆ ಆಯುಧಗಳು ಹಾಗೂ ಸಾಗಾಣಿಕೆ ನೆರವು ಒದಗಿಸಿದ್ದ ಎಂದು ಆರೋಪಿಸಲಾಗಿದೆ. ಆತನ ವಿರುದ್ಧ ಸುಲಿಗೆ ಸೇರಿದಂತೆ ಒಟ್ಟು 18 ಪ್ರಕರಣಗಳು ದಾಖಲಾಗಿವೆ. 2022ರಲ್ಲಿ ಅನ್ಮೋಲ್ ಬಿಷ್ಣೋಯಿ ವಿರುದ್ಧದ ಎರಡು ಎನ್ಐಎ ಪ್ರಕರಣಗಳಲ್ಲಿ ದೋಷಾರೋಪ ಪಟ್ಟಿ ಸಲ್ಲಿಕೆಯಾಗಿದ್ದು, ಆತ ನಕಲಿ ಪಾಸ್ ಪೋರ್ಟ್ ಬಳಸಿ ಭಾರತದಿಂದ ಪರಾರಿಯಾಗಿದ್ದಾನೆ ಎಂಬ ಸಂಗತಿ ತನಿಖೆಯಲ್ಲಿ ತಿಳಿದು ಬಂದಿದೆ. ಅನ್ಮೋಲ್ ಬಿಷ್ಣೋಯಿ ಸಂಘಟಿತ ಅಪರಾಧಗಳಲ್ಲಿ ಪಾಲ್ಗೊಂಡಿರುವುದರಿಂದ, ಆತನ ಪತ್ತೆಗಾಗಿನ ಶೋಧ ಕಾರ್ಯಾಚರಣೆಯನ್ನು ಚುರುಕುಗೊಳಿಸಿರುವ ರಾಷ್ಟ್ರೀಯ ತನಿಖಾ ದಳ, ಆತನನ್ನು ಪತ್ತೆ ಹಚ್ಚಲು ಸಹಾಯವಾಗುವ ಮಾಹಿತಿಗಳನ್ನು ಸಾರ್ವಜನಿಕರು ಹಂಚಿಕೊಳ್ಳಬೇಕು ಎಂದು ಮನವಿ ಮಾಡಿದೆ. “ನಾವು ವಶಪಡಿಸಿಕೊಂಡಿರುವ ಧ್ವನಿ ಮಾದರಿಗಳೊಂದಿಗೆ ಅನ್ಮೋಲ್ ಬಿಷ್ಣೋಯಿ ಧ್ವನಿ ಮಾದರಿಯನ್ನು ಹೋಲಿಕೆ ಮಾಡಲು ನಾವು ದೇಶಾದ್ಯಂತ ಆತನ ಧ್ವನಿ ಮಾದರಿಗಳನ್ನು ಕಲೆ ಹಾಕುತ್ತಿದ್ದೇವೆ. ನಾವು ಆತನ ವಿರುದ್ಧ ಬಲವಾದ ತಾಂತ್ರಿಕ ಸಾಕ್ಷ್ಯಾಧಾರಗಳನ್ನು ಕಲೆ ಹಾಕಿದ ನಂತರ, ಆತನ ವಿರುದ್ಧ ಮತ್ತಷ್ಟು ಕ್ರಮಗಳನ್ನು ಕೈಗೊಳ್ಳಲಾಗುವುದು” ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಕೇಂದ್ರ ಗೃಹ ಸಚಿವಾಲಯ ಪಟ್ಟಿ ಮಾಡಿರುವ ಕುಖ್ಯಾತ ಗ್ಯಾಂಗ್ ಸ್ಟರ್ ಗಳ ಪೈಕಿ ಅನ್ಮೋಲ್ ಹೆಸರೂ ಸೇರಿದೆ. ಖ್ಯಾತ ಸಾಮಾಜಿಕ ಮತ್ತು ಧಾರ್ಮಿಕ ನಾಯಕರು, ಸಿನಿಮಾ ತಾರೆಯರು ಹಾಗೂ ಉದ್ಯಮಿಗಳನ್ನು ಗುರಿಯಾಗಿಸಿಕೊಂಡು ಹತ್ಯೆಗೈಯ್ಯುವ ಹಾಗೂ ಸರಣಿ ಭಯೋತ್ಪಾದಕ ದಾಳಿ ನಡೆಸುವ ಕ್ರಿಮಿನಲ್ ಪಿತೂರಿ ನಡೆಸಿದ ಆರೋಪದ ಮೇಲೆ ಕಳೆದ ವರ್ಷ ಲಾರೆನ್ಸ್ ಬಿಷ್ಣೋಯಿ ಹಾಗೂ ಆತನ ಸಹೋದರ ಅನ್ಮೋಲ್ ಬಿಷ್ಣೋಯಿ ಸೇರಿದಂತೆ ಒಟ್ಟು 14 ಮಂದಿಯ ವಿರುದ್ಧ ರಾಷ್ಟ್ರೀಯ ತನಿಖಾ ದಳವು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿತ್ತು. ಇದಲ್ಲದೆ, ಇತ್ತೀಚೆಗೆ ಬಾಲಿವುಡ್ ನಟ ಸಲ್ಮಾನ್ ಖಾನ್ ನಿವಾಸದ ಮೇಲೆ ನಡೆದಿದ್ದ ಗುಂಡಿನ ದಾಳಿಯ ಹೊಣೆಯನ್ನೂ ಫೇಸ್ ಬುಕ್ ಪೋಸ್ಟ್ ಒಂದರಲ್ಲಿ ಅನ್ಮೋಲ್ ಬಿಷ್ಣೋಯಿ ಹೊತ್ತುಕೊಂಡಿದ್ದ.
ಸಂಡೂರಿನಲ್ಲಿ ಕಮಲದ ಹೂ ಅರಳಲಿದೆ, 3 ಕ್ಷೇತ್ರಗಳಲ್ಲಿ ಕಾಂಗ್ರೆಸ್ಸಿಗೆ ತಕ್ಕ ಪಾಠ: ವಿಜಯೇಂದ್ರ ವಿಶ್ವಾಸ
ಈ ಸರ್ಕಾರ ಬಂದ ಬಳಿಕ ಅಭಿವೃದ್ಧಿ ಎಂಬುದು ಪ್ರಾರಂಭವೇ ಆಗಿಲ್ಲ. ಗ್ಯಾರಂಟಿಗಳ ಕುರಿತು ಸಾಕಷ್ಟು ಪ್ರಚಾರ ಪಡೆದುಕೊಂಡರು. ಲೋಕಸಭಾ ಚುನಾವಣೆಗೆ ಮತದಾನಕ್ಕೆ 3-4 ದಿನ ಇದ್ದಾಗ ಎಲ್ಲರ ಖಾತೆಗೆ ದುಡ್ಡು ಜಮಾ ಮಾಡುವ ಕೆಲಸವನ್ನು ಮುಖ್ಯಮಂತ್ರಿ, ಕಾಂಗ್ರೆಸ್ ಸರಕಾರ ಮಾಡಿತ್ತು ಎಂದು ಟೀಕಿಸಿದರು. 18-20 ಸಂಸದರನ್ನು ಗೆಲ್ಲಿಸುವ ಬಡಾಯಿ ಕೊಚ್ಚಿಕೊಳ್ಳುತ್ತಿದ್ದರು. ಇವರ ಅಬ್ಬರದ ಪ್ರಚಾರ, ಜಾಹೀರಾತುಗಳು, ಗ್ಯಾರಂಟಿಗಳ ಅಪಪ್ರಚಾರದ ನಡುವೆ ಬಿಜೆಪಿ- ಜೆಡಿಎಸ್ 19 ಸ್ಥಾನಗಳನ್ನು ಗೆದ್ದಿದೆ. ಬಿಜೆಪಿ- 17 ಸ್ಥಾನಗಳನ್ನು, ಜೆಡಿಎಸ್ 2 ಸ್ಥಾನಗಳನ್ನು ಗೆದ್ದಿದೆ ಎಂದು ವಿವರಿಸಿದರು.
ಸೆಲ್ಫಿ ತೆಗೆಯಲು ಮುಂದಾದ ವ್ಯಕ್ತಿಯನ್ನು ತುಳಿದು ಕೊಂದ ಕಾಡಾನೆ
ಮಹಾರಾಷ್ಟ್ರ: ಸೆಲ್ಫಿ ತೆಗೆಯಲು ಮುಂದಾದ ಕಾರ್ಮಿಕನನ್ನು ಕಾಡಾನೆಯೊಂದು ತುಳಿದು ಕೊಂದಿರುವ ಆಘಾತಕಾರಿ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. ಶ್ರೀಕಾಂತ್ ರಾಮಚಂದ್ರ ಸಾತ್ರೆ(23) ಕಾಡಾನೆ ದಾಳಿಯಿಂದ ಮೃತಪಟ್ಟವರು. ಶ್ರೀಕಾಂತ್ ಸಾತ್ರೆ ನವೆಗಾಂವ್ನಿಂದ ಕೇಬಲ್ ಅಳವಡಿಕೆ ಕೆಲಸಕ್ಕಾಗಿ ಗಡ್ಚಿರೋಲಿಗೆ ತನ್ನ ಸ್ನೇಹಿತರೊಂದಿಗೆ ಬಂದಿದ್ದರು. ಶ್ರೀಕಾಂತ್ ತನ್ನ ಇಬ್ಬರು ಸ್ನೇಹಿತರ ಜೊತೆ ಗುರುವಾರ ಬೆಳಿಗ್ಗೆ ಮಹಾರಾಷ್ಟ್ರದ ಗಡ್ಚಿರೋಲಿಯ ಅಬಾಪುರ ಅರಣ್ಯಕ್ಕೆ ಕಾಡಾನೆಯನ್ನು ನೋಡಲು ತೆರಳಿದ್ದರು. ಅರಣ್ಯದಲ್ಲಿ ಸೆಲ್ಫಿ ತೆಗೆಯುವಾಗ ಶ್ರೀಕಾಂತ್ ಮೇಲೆ ಕಾಡಾನೆ ದಾಳಿ ಮಾಡಿದೆ. ಎರಡು ದಿನಗಳ ಹಿಂದೆ ಚಿತ್ತಗಾಂಗ್ ಮತ್ತು ಗಡ್ಚಿರೋಲಿ ಅರಣ್ಯ ಪ್ರದೇಶದಿಂದ ಕಾಡಾನೆ ಹೊರಬರುತ್ತಿರುವ ಬಗ್ಗೆ ಮಾಹಿತಿ ನೀಡಲಾಗಿತ್ತು. ಮುಟ್ನೂರು ಅರಣ್ಯ ಪ್ರದೇಶದ ಅಬಾಪುರ ಅರಣ್ಯದಲ್ಲಿ ಆನೆ ಇದೆ ಎಂದು ತಿಳಿಸಲಾಗಿತ್ತು. ಆದರೆ, ಶ್ರೀಕಾಂತ್ ಮತ್ತು ಆತನ ಇಬ್ಬರು ಸ್ನೇಹಿತರು ಕೆಲಸದ ನಿಮಿತ್ತ ಆ ಪ್ರದೇಶದಲ್ಲಿದ್ದರು ಮತ್ತು ಆನೆ ವೀಕ್ಷಣೆಗೆಂದು ತೆರಳಿದ್ದರು. ಶ್ರೀಕಾಂತ್ ದೂರದಿಂದಲೇ ಆನೆಯೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಮುಂದಾದಾಗ ಆತನ ಮೇಲೆ ಕಾಡಾನೆ ದಾಳಿ ನಡೆಸಿದೆ. ಈ ವೇಳೆ ಆತನ ಇಬ್ಬರು ಸ್ನೇಹಿತರು ಓಡಿ ಹೋಗಿ ಪ್ರಾಣ ಉಳಿಸಿಕೊಂಡು ಪಾರಾಗಿದ್ದಾರೆ.
ಚನ್ನಪಟ್ಟಣ ಉಪಚುನಾವಣೆ | ಎನ್ಡಿಎ ಅಭ್ಯರ್ಥಿಯಾಗಿ ನಿಖಿಲ್ ಕುಮಾರಸ್ವಾಮಿ ನಾಮಪತ್ರ ಸಲ್ಲಿಕೆ
ಬೆಂಗಳೂರು: ಉಪಚುನಾವಣೆ ನಡೆಯಲಿರುವ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ನಿಖಿಲ್ ಕುಮಾರಸ್ವಾಮಿ ಶುಕ್ರವಾರ ನಾಮಪತ್ರ ಸಲ್ಲಿಸಿದರು. ನಿಖಿಲ್ ಕುಮಾರಸ್ವಾಮಿ ಚನ್ನಪಟ್ಟಣದಲ್ಲಿ ಜೆಡಿಎಸ್-ಬಿಜೆಪಿ ನಾಯಕರ ಸಮ್ಮುಖದಲ್ಲಿ ಬೃಹತ್ ಮೆರವಣಿಗೆ ನಡೆಸಿ, ಬಳಿಕ ತಮ್ಮ ಉಮೇದುವಾರಿಕೆಯನ್ನು ಸಲ್ಲಿಕೆ ಮಾಡಿದ್ದಾರೆ. ಗುರುವಾರವಷ್ಟೇ ಕಾಂಗ್ರೆಸ್ ಅಭ್ಯರ್ಥಿಯಾಗಿ ಸಿ.ಪಿ.ಯೋಗೇಶ್ವರ್ ನಾಮಪತ್ರ ಸಲ್ಲಿಸಿದ್ದರು. ನಿಖಿಲ್ ಕುಮಾರಸ್ವಾಮಿ ನಾಮಪತ್ರ ಸಲ್ಲಿಸುವಾಗ ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ, ಮಾಜಿ ಸಿಎಂ ಡಿ.ವಿ.ಸದಾನಂದಗೌಡ, ಸಂಸದ ರಾಘವೇಂದ್ರ, ನಿಖಿಲ್ ಪತ್ನಿ ರೇವತಿ ಉಪಸ್ಥಿತರಿದ್ದರು.
ಬೆಂಗಳೂರಿಗೆ ಆಗಮಿಸಿದ ಉಪರಾಷ್ಟ್ರಪತಿ ಜಗದೀಪ್ ಧನ್ಕರ್ : ರಾಜ್ಯಪಾಲರಿಂದ ಸ್ವಾಗತ
ಬೆಂಗಳೂರು : ಉಪರಾಷ್ಟ್ರಪತಿ ಜಗದೀಪ್ ಧನ್ಕರ್ ಹಾಗೂ ಸುದೇಶ್ ಧನ್ಕರ್ ಅವರು ಕರ್ನಾಟಕ ಪ್ರವಾಸಕ್ಕಾಗಿ ಇಂದು(ಅ.25) ಬೆಂಗಳೂರಿನ ಎಚ್.ಎ.ಎಲ್ ವಿಮಾನ ನಿಲ್ದಾಣಕ್ಕೆ ಭಾರತೀಯ ವಾಯುಸೇನೆಯ ವಿಶೇಷ ವಿಮಾನದ ಮೂಲಕ ಆಗಮಿಸಿದರು ಉಪರಾಷ್ಟ್ರಪತಿ ಜಗದೀಪ್ ಧನ್ಕರ್ ಅವರನ್ನು ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರು ಸ್ವಾಗತಿಸಿದರು. ಬೆಂಗಳೂರಿಗೆ ಆಗಮಿಸಿದ ಉಪರಾಷ್ಟ್ರಪತಿಗಳು ನಂತರ ಎಚ್.ಎ.ಎಲ್ ವಿಮಾನ ನಿಲ್ದಾಣದಿಂದ ವಿಶೇಷ ಹೆಲಿಕ್ಯಾಪ್ಟರ್ ಮೂಲಕ ಮಂಡ್ಯ ಜಿಲ್ಲೆಯ ನಾಗಮಂಗಲದ ಬಿ.ಜಿ. ನಗರದಲ್ಲಿರುವ ಆದಿಚುಂಚನಗಿರಿ ವಿಶ್ವವಿದ್ಯಾಲಯವು ಆಯೋಜಿಸಿರುವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸುವ ಸಲುವಾಗಿ ಆದಿಚುಂಚನಗಿರಿಗೆ ಪ್ರಯಾಣ ಕೈಗೊಂಡರು. ಈ ಸಂದರ್ಭದಲ್ಲಿ ಕೃಷಿ ಸಚಿವ ಎನ್ ಚೆಲುವರಾಯಸ್ವಾಮಿ, ಸರಕಾರದ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್, ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಕಾರ್ಯದರ್ಶಿ ಸತ್ಯವತಿ ಜಿ, ರಾಜ್ಯ ಪೊಲೀಸ್ ಮಹಾ ನಿರ್ದೇಶಕರಾದ ಅಲೋಕ್ ಮೋಹನ್, ಬೆಂಗಳೂರು ನಗರ ಜಿಲ್ಲೆಯ ಜಿಲ್ಲಾಧಿಕಾರಿ ಜಗದೀಶ್ ಜಿ, ಬೆಂಗಳೂರು ಪೊಲೀಸ್ ಆಯುಕ್ತರಾದ ಬಿ.ದಯನಂದ ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ಬೆಂಗಳೂರು, ಅಕ್ಟೋಬರ್ 25: ನಿಖಿಲ್ ಕುಮಾರಸ್ವಾಮಿ ಅವರಿಗೆ ಚನ್ನಪಟ್ಟಣ ಟಿಕೆಟ್ ಸಿಗುವಂತೆ ಮಾಡಲು ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಅವರು ಚದುರಂಗದಾಟ ಸೃಷ್ಟಿಸಿದರು ಎಂದು ಮಾಜಿ ಸಂಸದ ಡಿ.ಕೆ.ಸುರೇಶ್ ಅವರು ತಿಳಿಸಿದರು. ಸದಾಶಿವನಗರದ ನಿವಾಸದಲ್ಲಿ ಶುಕ್ರವಾರ ನಡೆದ ಮಾಧ್ಯಮಗೋಷ್ಟಿಯನ್ನು ಉದ್ದೇಶಿಸಿ ಸುರೇಶ್ ಅವರು ಮಾತನಾಡಿ, ಹಿರಿಯ ರಾಜಕಾರಣಿಯಾದ ಕುಮಾರಸ್ವಾಮಿ ಅವರು ಕಳೆದ 40 ವರ್ಷಗಳಿಂದ ಅವರ
ಶ್ರೇಯಸ್ ಐಯ್ಯರ್ ಅನ್ನು ಬಿಟ್ಟುಕೊಡಲು ಸಿದ್ಧವಾಗಿದೆ ಕೋಲ್ಕತಾ! ಆರ್ ಸಿಬಿ ತೆಗೆದುಕೊಳ್ಳುತ್ತಾ?
IPL Mega Auction 2025- ಐಪಿಲ್ ಹರಾಜು ಪ್ರಕ್ರಿಯೆಗೆ ಪೂರ್ವಭಾವಿಯಾಗಿ ಫ್ರಾಂಚೈಸಿಗಳು ರಿಟೈನ್ ಮಾಡಬೇಕಿರುವ ಆಟಗಾರರ ಪಟ್ಟಿ ನೀಡಲ ಅಕ್ಟೋಬರ್ 31 ಕೊನೇ ದಿನ. ಹೀಗಾಗಿ ಇದಕ್ಕೆ ಸಂಬಂಧಿಸಿ ಎಲ್ಲಾ ಮಾತುಕತೆ, ಚರ್ಚೆ, ಲೆಕ್ಕಾಚಾರಗಳು ತೀವ್ಪ ಜೋರಾಗಿವೆ. ಇದೀಗ ಕೋಲ್ಕತಾ ನೈಟ್ ರೈಡರ್ಸ್ ತಂಡದ ನಾಯಕ ಶ್ರೇಯಸ್ ಅಯ್ಯರ್ ಅವರನ್ನು ತಂಡದಿಂದ ಬಿಡುಗಡೆಗೊಳಿಸಲು ತೀರ್ಮಾನ ಮಾಡಿದೆಯಂತೆ! ಹಾಗಾದಲ್ಲಿ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲು ತುದಿಗಾಲಲ್ಲಿ ನಿಂತಿರುವ ಮೊದಲ ತಂಡವೆಂದರೆ ಅದು ರಾಯಲ್ ಚಾಲೆಂಜರ್ಸ್ ಬೆಂಗಳೂರು. ಇದಕ್ಕೆ ಬಲವಾದ ಕಾರಣವಿದೆ.
ಮಂಗಳೂರು: ವಿಮಾನ ಯಾನ ಪ್ರಯಾಣಿಕರ ಸಂಖ್ಯೆಯಲ್ಲಿ ಏರಿಕೆ
ಮಂಗಳೂರು, ಅ. 25: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು 2025ರ ಹಣಕಾಸು ವರ್ಷದ ಮೊದಲಾರ್ಧ ಮತ್ತು ದ್ವಿತೀಯ ತ್ರೈಮಾಸಿಕದಲ್ಲಿ ಪ್ರಯಾಣಿಕರ ಸಂಖ್ಯೆ ಮತ್ತು ವಿಮಾನ ಯಾನಗಳಲ್ಲಿ ಉತ್ತಮ ನಿರ್ವಹಣೆ ತೋರಿದೆಯಲ್ಲದೆ, ಸಾಕಷ್ಟು ಏರಿಕೆ ಕಂಡು ಬಂದಿದೆ ಎಂದು ಪ್ರಕಟನೆ ತಿಳಿಸಿದೆ. 2025ರ ಮೊದಲ ತ್ರೈಮಾಸಿಕದಲ್ಲಿ ಮಂಗಳೂರು ವಿಮಾನ ನಿಲ್ದಾಣವು ಒಟ್ಟು 1,121,410 ಪ್ರಯಾಣಿಕರನ್ನು ನಿರ್ವಹಿಸಿದ್ದು, 2024ರ ಮೊದಲ ತ್ರೈಮಾಸಿಕದಲ್ಲಿ ನಿರ್ವಹಣೆ ಮಾಡಲಾದ ಪ್ರಯಾಣಿಕರ ಸಂಖ್ಯೆ 9,46,233 ಆಗಿತ್ತು. ಈ ಮೂಲಕ ಈ ವರ್ಷದ ಮೊದಲ ತ್ರೈಮಾಸಿಕದಲ್ಲಿ ಶೇ. 18.5ರಷ್ಟು ಪ್ರಗತಿ ಕಂಡು ಬಂದಿದೆ. ಪ್ರಸ್ತುತ ಆರು ದೇಶೀಯ ಮತ್ತು ಎಂಟು ಮಧ್ಯಪ್ರಾಚ್ಯ ಸ್ಥಳಗಳಿಗೆ ದೇಶೀಯ ವಿಮಾನಗಳನ್ನು ಒದಗಿಸುವ ವಿಮಾನ ನಿಲ್ದಾಣವು ಆ. 15, 2024 ರಂದು 7,402 ಪ್ರಯಾಣಿಕರನ್ನು ನಿರ್ವಹಿಸಿದೆ. ದೇಶೀಯ ಪ್ರಯಾಣಿಕರ ಸಂಖ್ಯೆಯಲ್ಲಿಯೂ ಶೇ. 25ರಷ್ಟು ಹೆಚ್ಚಳವಾಗಿದೆ. ಬೆಂಗಳೂರು ಮತ್ತು ಮುಂಬೈ ಪ್ರಯಾಣಿಕರ ಎರಡು ಪ್ರಮುಖ ಆದ್ಯತೆಯ ತಾಣಗಳಾಗಿದ್ದು, ಅಂತರರಾಷ್ಟ್ರೀಯ ಪ್ರಯಾಣದಲ್ಲಿಯೂ ಶೇ. 5.58ರಷ್ಟು ಹೆಚ್ಚಳವನ್ನು ಕಂಡಿದೆ. ದುಬೈ, ಮಸ್ಕತ್ ಮತ್ತು ದಮ್ಮಾಮ್ ಪ್ರಮುಖ ಮೂರು ಅಂತಾರಾಷ್ಟ್ರೀಯ ಗಮ್ಯತಾಣಗಳಾಗಿವೆ ಎಂದು ಅದಾನಿ ಸಂಸ್ಥೆಗೊಳಪಡುವ ಅದಾನಿ ಏರ್ಪೋರ್ಟ್ ಹೋಲ್ಡಿಂಗ್ಸ್ ಲಿಮಿಟೆಡ್ನಿಂದ ನಿರ್ವಹಿಸಲ್ಪಡುತ್ತಿರುವ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಅಧಿಕಾರಿಗಳು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಬಿ.ಸಿ.ರೋಡ್ : ಮಿತ್ತಬೈಲು ಎಂ.ಜೆ.ಎಂ. ಅಧ್ಯಕ್ಷರಾಗಿ ಹಾಜಿ ಮುಹಮ್ಮದ್ ಅದ್ದೇಡಿ ಆಯ್ಕೆ
ಬಂಟ್ವಾಳ : ಬಿ.ಸಿ.ರೋಡ್ ಸಮೀಪದ ಮಿತ್ತಬೈಲ್ ಮುಹಿಯುದ್ದೀನ್ ಜುಮಾ ಮಸೀದಿ ಇದರ ನೂತನ ಅಧ್ಯಕ್ಷರಾಗಿ ಹಾಜಿ ಮುಹಮ್ಮದ್ ಅದ್ದೇಡಿ ಆಯ್ಕೆಯಾದರು. ಮುಹಮ್ಮದ್ ಇಕ್ಬಾಲ್ ನಂದರಬೆಟ್ಟು ಅವರ ಅಧ್ಯಕ್ಷತೆಯಲ್ಲಿ ನಡೆದ ಮಸೀದಿಯ ವಾರ್ಷಿಕ ಮಹಾಸಭೆಯಲ್ಲಿ ಈ ಆಯ್ಕೆ ನಡೆಯಿತು. ಮಸೀದಿ ಖತೀಬ್ ಅಬ್ಬಾಸ್ ಫೈಝಿ ಪುತ್ತಿಗೆ ದು:ಹಾ ನೆರವೇರಿಸಿದರು. ನೂತನ ಅಧ್ಯಕ್ಷರಾಗಿ ಹಾಜಿ ಮುಹಮ್ಮದ್ ಅದ್ದೇಡಿ, ಉಪಾಧ್ಯಕ್ಷರುಗಳಾಗಿ ಜಮಾಲುದ್ದೀನ್ ಶಾಂತಿ ಅಂಗಡಿ, ಸಯ್ಯದ್ ಫಲುಳ್ ತಂಗಳ್, ಪ್ರಧಾನ ಕಾರ್ಯದರ್ಶಿಯಾಗಿ ಅಕ್ಬರ್ ಆಲಿ ಪೊನ್ನೋಡಿ, ಕಾರ್ಯದರ್ಶಿಗಳಾಗಿ ಅಶ್ರಫ್ ಶಾಂತಿಅಂಗಡಿ, ಇಕ್ಬಾಲ್ ನಂದರಬೆಟ್ಟು, ಶಾಕೀರ್ ಶಾಂತಿಅಂಗಡಿ, ಕೋಶಧಿಕಾರಿಯಾಗಿ ಅಬ್ದುಲ್ ರಹ್ಮಾನ್, ಲೆಕ್ಕ ಪರಿಶೋಧಕರಾಗಿ ಹಮೀದ್ ಹಾಜಿ ಕೈಕಂಬ ಇವರು ಆಯ್ಕೆಯಾದರು.
ಮಾಣಿ ಗ್ರಾಮ ಪಂಚಾಯತ್ ನೂತನ ಅಧ್ಯಕ್ಷರಾಗಿ ಸುದೀಪ್ ಕುಮಾರ್ ಶೆಟ್ಟಿ ಅಧಿಕಾರ ಸ್ವೀಕಾರ
ಮಾಣಿ ಗ್ರಾಮ ಪಂಚಾಯತ್ತಿನ ನೂತನ ಅಧ್ಯಕ್ಷರಾಗಿ ಧಾರ್ಮಿಕ ಸಾಮಾಜಿಕ ಮುಂದಾಳು ಸುದೀಪ್ ಕುಮಾರ್ ಶೆಟ್ಟಿಯವರು ಅಧಿಕಾರ ವಹಿಸಿಕೊಂಡರು. ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ಸಿನ ಅಧ್ಯಕ್ಷರಾಗಿ, ಮಾಣಿ ಯುವಕ ಮಂಡಲದ ಅಧ್ಯಕ್ಷರಾಗಿ, ವಿವಿಧ ಸಂಘ ಸಂಸ್ಥೆಗಳಲ್ಲಿ ಗುರುತಿಸಿಕೊಂಡಿರುತ್ತಾರೆ. ಉಪಾಧ್ಯಕ್ಷರಾಗಿ ಸುಜಾತ ಪೂಜಾರಿಯವರು ಮುಂದುವರಿಯಲಿದ್ದಾರೆ. ಚುನಾವಣಾಧಿಕಾರಿಯಾಗಿ ಬಂಟ್ವಾಳ ಪ್ರಭಾರ ತಹಶೀಲ್ದಾರ್ ಅರವಿಂದ್ ಕೆ.ಎಮ್ ರವರು ಕಾರ್ಯ ನಿರ್ವಹಿಸಿದರು. ಉಪ ತಹಶೀಲ್ದಾರ್ ನವೀನ್ ಕುಮಾರ್ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಗಿರಿಜಾ ತಾಲೂಕು ಪಂಚಾಯತ್ತಿನ ಮಂಜುನಾಥ್ ಮತ್ತು ಪಂಚಾಯತ್ ಸಿಬ್ಬಂದಿ ಸಹಕರಿಸಿದರು. ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರ ಭಂಡಾರಿ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಜಯಂತಿ ಪೂಜಾರಿ, ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷ ಬಾಲಕೃಷ್ಣ ಆಳ್ವ ಕೊಡಾಜೆ, ನಿಕಟಪೂರ್ವಾಧ್ಯಕ್ಷ ಇಬ್ರಾಹಿಂ.ಕೆ.ಮಾಣಿ, ಸದಸ್ಯರಾದ ಮೆಲ್ವಿನ್ ಕಿಶೋರ್ ಮಾರ್ಟಿಸ್, ರಮಣಿ.ಡಿ.ಪೂಜಾರಿ, ಪ್ರೀತಿ ಡಿನ್ನಾ ಪಿರೇರಾ, ಸೀತಾ ಮತ್ತಿತರರು ಉಪಸ್ಥಿತರಿದ್ದು ನೂತನ ಅಧ್ಯಕ್ಷರಿಗೆ ಅಭಿನಂದನೆ ಸಲ್ಲಿಸಿದರು.
ಉಳ್ಳಾಲ ಸೆಂಟ್ರಲ್ ಕಮಿಟಿ ಟ್ರಸ್ಟ್ (ರಿ)ಅಧ್ಯಕ್ಷರಾಗಿ ನವಾಝ್ ಉಳ್ಳಾಲ್ ಆಯ್ಕೆ
ಉಳ್ಳಾಲ.ಉಳ್ಳಾಲ ಸೆಂಟ್ರಲ್ ಕಮಿಟಿ ಟ್ರಸ್ಟ್ ( ರಿ )ಇದರ 2024-25 ಸಾಲಿನ ನೂತನ ಅಧ್ಯಕ್ಷರಾಗಿ ನವಾಜ್ ಉಳ್ಳಾಲ್ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಹಾಜಿ ಮುಹಮ್ಮದ್ ತ್ವಾಹ, ಪ್ರಧಾನ ಕಾರ್ಯದರ್ಶಿಯಾಗಿ ಯು, ಕೆ. ಮುಹಮ್ಮದ್ ಮುಸ್ತಫ ಕೋಶಧಿಕಾರಿಯಾಗಿ ಹಾಜಿ ಅಹ್ಮದ್ ಬಾವ ಆಯ್ಕೆಯಾಗಿದ್ದಾರೆ. ಈ ಸಂಧರ್ಭದಲ್ಲಿ ಸಂಸ್ಥೆಯ ಟ್ರಸ್ಟಿಗಳಾದ ಯು.ಎಚ್. ಸಿದ್ದೀಕ್, ಯು.ಎಮ್.ಜಬ್ಬಾರ್, ಮೊಹಮ್ಮದ್ ಮುಸ್ತಾಫಾ,ಇಬ್ರಾಹಿಂ ಆಲಿಯಬ್ಬ, ಸಲ್ಮಾನ್ ಮಂಚಿಲ ಉಪಸ್ಥಿತರಿದ್ದರು.
ಬೋಳಿಯಾರು: ಮಾದಕ ದ್ರವ್ಯ ಮುಕ್ತ ಪರಿಸರಕ್ಕಾಗಿ ಸಂಯುಕ್ತ ಜಮಾಅತ್ ಒಕ್ಕೂಟ ಅಸ್ತಿತ್ವಕ್ಕೆ
ಉಳ್ಳಾಲ: ಬೋಳಿಯಾರು ಸುತ್ತಮುತ್ತಲಿನ 8 ಜಮಾಅತ್ ಗಳ ಸಹಭಾಗಿತ್ವದಲ್ಲಿ ಮಾದಕದ್ರವ್ಯ ಮುಕ್ತ ಪರಿಸರದ ಗುರಿಯೊಂದಿಗೆ ರಚನೆಯಾಗಿರುವ ಸಂಯುಕ್ತ ಜಮಾಅತ್ ಒಕ್ಕೂಟ ಇದರ ಅಧ್ಯಕ್ಷರಾಗಿ ಪಿ.ಕೆ.ಅಬ್ದುಲ್ಲಾ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರುಗಳಾಗಿ ಮುಹಮ್ಮದ್ ಪಲ್ಲ , ಉಬೈದ್ ಅಮ್ಮೆಂಬಳ, ಅಬೂಬಕ್ಕರ್ ಕೋಟೆ, ಮುಹಮ್ಮದ್ ರಂತಡ್ಕ, ರಝಾಕ್ ಬಂಡಸಾಲೆ ,ಪ್ರ, ಕಾರ್ಯದರ್ಶಿಯಾಗಿ ಹಮೀದ್ ಒಡಕಿನ ಕಟ್ಟೆ, ಕೋಶಾಧಿಕಾರಿ ಎಂ.ಕೆ.ನಿಯಾಝ್, ಸಂಘಟನಾ ಕಾರ್ಯದರ್ಶಿಗಾಗಿ ಕಬೀರ್ ರಂತಡ್ಕ, ಸಿಎ ಅಬ್ದುಲ್ ಖಾದರ್, ಜೊತೆ ಕಾರ್ಯದರ್ಶಿಗಳಾಗಿ ಇಸಾಕ್ ಮಧ್ಯನಡ್ಕ, ಜಾಫರ್ ಪಾನೇಲ, ಗೌರವ ಸಲಹೆಗಾರರಾಗಿ ಅಬೂಬಕ್ಕರ್ ಹಾಜಿ ಮಧ್ಯನಡ್ಕ , ಕಾರ್ಯಕಾರಿ ಸಮಿತಿ ಸದಸ್ಯರಾಗಿ ಬೋಳಿಯಾರು ಜಮಾಅತ್ ನ ಬಿ.ಎಂ.ಹನೀಫ್, ಎಂ.ಎಸ್.ಯೂಸುಫ್, ಟಿ.ಎಚ್.ಲತೀಫ್ ಹಾಜಿ, ಇಕ್ಬಾಲ್ ದೇವರಗುಂಡಿ ಶಫಿಯುಲ್ಲ ಝಿಯಾದ್, ಸುಬ್ಬಗುಳಿ ಜಮಾಅತ್ ನ ಲತೀಫ್ ಬೋಳಿಯಾರು, ಖಾಸಿಂ ಕುರ್ನಾಡು, ರಿಯಾಝ್ ಸುಬ್ಬಗುಳಿ, ಮಧ್ಯನಡ್ಕ ಜಮಾಅತ್ ನ ಮಜೀದ್ ಕೆ.ಎಂ, ಮೂಸಾಕುಂಙಿ, ಇಬ್ರಾಹಿಂ ಎಂ, ಕುಕ್ಕೋಟು ಜಮಾಅತ್ ನ ಶರೀಫ್ ಎನ್.ಜಿ, ಸಿದ್ದೀಕ್ ಕುಕ್ಕೋಟು, ಇಸ್ಮಾಯಿಲ್ ಮಲ್ಲಿಗೆ, ಅಮ್ಮೆಂಬಳ ಜಮಾಅತ್ ನ ಶಬೀರ್ ಅಮ್ಮೆಂಬಳ, ಅಸಿಫ್ ಅಮ್ಮೆಂಬಳ, ಪಾನೇಲ ಜಮಾಅತ್ ನ ಅಬ್ದುಲ್ ಖಾದರ್ ಬಾಕಿಮಾರ್, ಬದ್ರುದ್ದೀನ್ ಎಕೆಜೆ,ರಝಾಕ್ ಮುಸ್ಲಿಯಾರ್, ಇಬ್ರಾಹಿಂ ಮಡಿಲಬೈಲ್ ರಂತಡ್ಕ ಜಮಾಅತ್ ನ ಹನೀಫ್ ರಂತಡ್ಕ, ಹಮೀದ್ ರಂತಡ್ಕ , ಯೂನುಸ್ ರಂತಡ್ಕ, ಇಬ್ರಾಹಿಂ ಆರ್ ಎಸ್, ಅಬ್ದುಲ್ಲಾ ಆರ್ ಎಚ್ , ಜಾರದಗುಡ್ಡೆ ಜಮಾಅತ್ ನ ರಹೀಂ ಜಾರದಗುಡ್ಡೆ, ಸಮೀರ್, ಸಮೀರ್ ಎಮ್ ರವರನ್ನು ಆಯ್ಕೆ ಮಾಡಲಾಯಿತು.
ಕಿನ್ಯ: ಆಲಿಕುಂಞಿ ಹಾಜಿ ಪಾರೆ ಗೆ ಗೌರವಾರ್ಪಣೆ
ದೇರಳಕಟ್ಟೆ: ಕರ್ನಾಟಕ ಮುಸ್ಲಿಮ್ ಜಮಾಅತ್ ದ.ಕ. ವೆಸ್ಟ್ ಜಿಲ್ಲಾ ಸಮಿತಿಯ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಅಲಿಕುಂಞಿ ಹಾಜಿ ಪಾರೆಯವರಿಗೆ ಕಿನ್ಯ ಪ್ರದೇಶದ ಸುನ್ನೀ ಸಂಘ ಕುಟುಂಬದ ಗೌರವಾರ್ಪಣೆ ಕಾರ್ಯಕಗರಮ ಗುರುವಾರ ಕಿನ್ಯ ಬೆಳರಿಂಗೆ ಸುನ್ನೀ ಸೆಂಟರ್ ನಲ್ಲಿ ನಡೆಯಿತು. ಸುನ್ನೀ ಕೋ ಆರ್ಡಿನೇಶನ್ ಸಮಿತಿ ಅಧ್ಯಕ್ಷ ವಿ.ಎ.ಮುಹಮ್ಮದ್ ಮುಸ್ಲಿಯಾರ್ ಕೂಡಾರ ಅಧ್ಯಕ್ಷತೆ ವಹಿಸಿದ್ದರು. ಎಸ್ವೈಎಸ್ ಕಿನ್ಯ ಸರ್ಕಲ್ ಸಮಿತಿ ಅಧ್ಯಕ್ಷ ಮಹ್ಬೂಬುರ್ರಹ್ಮಾನ್ ಸಖಾಫಿ ಕಿನ್ಯ ಉದ್ಘಾಟಿಸಿ ಮಾತನಾಡಿದರು. ಇತ್ತೀಚೆಗೆ ಅಗಲಿದ ನಾಯಕ ಹಾಜಿ ಮುಮ್ತಾಝ್ ಅಲಿ ಕೃಷ್ಣಾಪುರ ರವರ ಅನುಸ್ಮರಣೆ ಮಜ್ಲಿಸ್ ನಲ್ಲಿ ಸೈಯದ್ ಶಿಹಾಬುದ್ದೀನ್ ಅಲ್ ಬುಖಾರಿ ತಂಙಳ್ ಕಿನ್ಯ ಪ್ರಾರ್ಥನೆಗೆ ನೇತೃತ್ವ ನೀಡಿದರು. ಕರ್ನಾಟಕ ಮುಸ್ಲಿಮ್ ಜಮಾಅತ್ ಕಿನ್ಯ ಸರ್ಕಲ್ ಸಮಿತಿ ಅಧ್ಯಕ್ಷ ಬಿ.ಎಂ. ಇಸ್ಮಾಯೀಲ್ ಹಾಜಿ ಪರಮಾಂಡ, ಪ್ರಧಾನ ಕಾರ್ಯದರ್ಶಿ ಕೆ.ಎಂ ಇಸ್ಮಾಯೀಲ್ ಹಾಜಿ ಸಾಗ್, ಪತ್ರಕರ್ತ ಬಶೀರ್ ಅಹ್ಮದ್ ಕಿನ್ಯ, ಎಸ್ವೈಎಸ್ ಕಿನ್ಯ ಸರ್ಕಲ್ ಉಪಾಧ್ಯಕ್ಷ ಪಿ.ಎಂ.ಉಸ್ಮಾನ್ ಝುಹ್ರಿ ಕುರಿಯ ಮಾತನಾಡಿದರು. ಸಮಾರಂಭದಲ್ಲಿ ಮುಸ್ಲಿಮ್ ಜಮಾಅತ್ ಕಿನ್ಯ ಸರ್ಕಲ್ ನಾಯಕ ಅಬ್ಬಾಸ್ ಖುತುಬಿನಗರ, ಕೆ.ಎಚ್. ಮೂಸಕುಂಞಿ ಬದ್ರಿಯಾ ನಗರ, ಹಸನ್ ಉಕ್ಕುಡ, ಅಲಿಕುಂಞಿ ಮೀಂಪ್ರಿ, ಮಹ್ಮೂದ್ ಉಳ್ಳಾಲ, ಅಲಿಕುಂಞಿ ಬಾಕಿಮಾರ್, ಎಸ್ವೈಎಸ್ ಕಿನ್ಯ ಸರ್ಕಲ್ ಇಸಾಬ ಕಾರ್ಯದರ್ಶಿ ಬಶೀರ್ ಲತೀಫಿ ಕುರಿಯ, ಸಾಂತ್ವನ ಕಾರ್ಯದರ್ಶಿ ಅಯ್ಯೂಬ್ ಖುತುಬಿನಗರ,ಉಮರ್ ಝುಹ್ರಿ ಬದ್ರಿಯಾ ನಗರ, ಕೆಸಿಎಫ್ ಕಾರ್ಯಕರ್ತ ಇಬ್ರಾಹೀಂ ಖಲೀಲ್, ಎಸ್ಸೆಸ್ಸೆಫ್ ನಾಯಕ ಹಸೈನಾರ್ ಮೀಂಪ್ರಿ ಮುಂತಾದವರು ಉಪಸ್ಥಿತರಿದ್ದರು. ಸುನ್ನೀ ಕೋ ಆರ್ಡಿನೇಶನ್ ಸಮಿತಿ ಕೋಶಾಧಿಕಾರಿ ನೌಫಲ್ ಅಹ್ಸನಿ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಅಬ್ದುಲ್ ಹಮೀದ್ ಮೀಂಪ್ರಿ ವಂದಿಸಿದರು.
ಚನ್ನಪಟ್ಟಣದಲ್ಲಿ ನಿಖಿಲ್ ಕುಮಾರಸ್ವಾಮಿ ಗೆಲುವು ಖಚಿತ: ಭವಿಷ್ಯ ನುಡಿದ ಬಿ ಎಸ್ ಯಡಿಯೂರಪ್ಪ
ಬೆಂಗಳೂರು, ಅಕ್ಟೋಬರ್ 25: , ಪ್ರಧಾನಿ ನರೇಂದ್ರ ಮೋದಿಯವರ ಆಶೀರ್ವಾದ ಇದೆ. ಮೋದಿಯವರ ಪಕ್ಷದಿಂದ ಬೆಂಬಲ ಇರುವ ಕಾರಣ ಚನ್ನಪಟ್ಟಣದ ಎನ್ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರ ಗೆಲುವು ಖಚಿತ ಎಂದು ಬಿಜೆಪಿ ಕೇಂದ್ರ ಸಂಸದೀಯ ಮಂಡಳಿ ಸದಸ್ಯ ಮತ್ತು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ತಿಳಿಸಿದರು. ಈ ಕುರಿತು ಮಾಧ್ಯಮಗಳ ಜೊತೆಗೆ ಮಾತನಾಡಿದ ಬಿಜೆಪಿ ಕೇಂದ್ರ
Ration Card: ಜನರು ದಿನವಿಡೀ ಕಾದುನಿಂತರೂ ಸಿಗದ ರೇಷನ್, ಪಡಿತರ ವಿತರಣೆ ಕುಂಟುತ್ತಿರುವುದೇಕೆ?
ಬೆಂಗಳೂರು, ಅಕ್ಟೋಬರ್ 25: ರಾಜ್ಯದಲ್ಲಿ ದೀಪಾವಳಿ ಸಂಭ್ರಮ ಕಳೆಗಟ್ಟುತ್ತಿದ್ದು, ಆಚರಣೆಗೆ ದಿನಗಣನೆ ಶುರುವಾಗಿದೆ. ಮತ್ತೊಂದೆಡೆ ವ್ಯಾಪಕ ಮಳೆ ಸುರಿಯಲಾರಂಭಿಸಿದೆ. ಮಳೆ ಮಧ್ಯೆ ಬೆಂಗಳೂರು ಸೇರಿದಂತೆ ರಾಜ್ಯದ ನಾನಾ ಕಡೆಗಳಲ್ಲಿ ಪಡಿತರ ಕಾರ್ಡುದಾರರು ಆಹಾರ ಧ್ಯಾನಗಳು ಸಿಗದೇ, ದಿನವಿಡೀ ನ್ಯಾಯಬೆಲೆ ಅಂಗಡಿ ಮುಂದೆ ಕ್ಯೂ ನಿಂತು ಬರಿಗೈನಲ್ಲಿ ಮನೆಗೆ ವಾಪಾಸ್ಸಾಗುತ್ತಿದ್ದಾರೆ. ಹಬ್ಬದ ವೇಳೆ ರೇಷನ್ ಸಿಗದೇ ಬಡವರು ಕಂಗಾಲಾಗಿದ್ದಾರೆ.
Channapatna BY-Election: ನಿಖಿಲ್ ಕುಮಾರಸ್ವಾಮಿ ಬೆನ್ನಿಗೆ ನಿಂತ ಬಿಜೆಪಿ ಘಟಾನುಘಟಿ ನಾಯಕರು
ಚನ್ನಪಟ್ಟಣ, ಅಕ್ಟೋಬರ್ 25: ಚನ್ನಪಟ್ಟಣದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ ಯೋಗೇಶ್ವರ್ ವಿರುದ್ಧ ಮಾಜಿ ಪ್ರಧಾನಿಗಳ ಮೊಮ್ಮಗ ನಿಖಿಲ್ ಕುಮಾರಸ್ವಾಮಿ ಅವರು ಎದುರಾಳಿಯಾಗಿ ಕಣಕ್ಕಿಳಿಯುತ್ತಿದ್ದಾರೆ. 2019 ರ ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಸುಮಲತಾ ಅಂಬರೀಶ್ ಅವರ ವಿರುದ್ಧ ಸ್ಪರ್ಧಿಸಿದ ಚುನಾವಣೆ ಅಂತೆಯೇ ಚನ್ನಪಟ್ಟಣ ಉಪಚುನಾವಣೆ ಕೂಡ ಹೈವೋಲ್ಟೇಜ್ ಕದನವಾಗಿ ಮಾರ್ಪಟ್ಟಿದ್ದು, ನಿಖಿಲ್ ಕುಮಾರಸ್ವಾಮಿ ಅವರ ಬೆನ್ನಿಗೆ ಬಿಜೆಪಿ ಘಟಾನುಘಟಿ
India vs New Zealand: ನ್ಯೂಜಿಲೆಂಡ್ ಸ್ಪಿನ್ ಬಲೆಗೆ ಬಿದ್ದ ಭಾರತ; ಶುರುವಾಯ್ತು ಸೋಲಿನ ಭೀತಿ
ನ್ಯೂಜಿಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಕೂಡ ಭಾರತ ಸಂಕಷ್ಟಕ್ಕೆ ಸಿಲುಕಿದೆ. ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದಲ್ಲಿ ಭಾರತ ಮೊದಲ ಇನ್ನಿಂಗ್ಸ್ನಲ್ಲಿ 156 ರನ್ಗಳಿಗೆ ಆಲೌಟ್ ಆಗಿದೆ. ಈ ಮೂಲಕ 103 ರನ್ಗಳ ಹಿನ್ನಡೆ ಅನುಭವಿಸಿದ್ದು, ಮತ್ತೊಂದು ಸೋಲಿನ ಸುಳಿಯಲ್ಲಿ ಸಿಲುಕಿದೆ. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್
ಶಿಗ್ಗಾವಿಗೆ ನನ್ನ ಹೆಸರು ಕೇಳಿ ಬಂದಿತ್ತು ನಾನು ಸ್ಪರ್ಧಿಸಲ್ಲ ಎಂದಿದ್ದೆ; ಮಾಜಿ ಸಚಿವ ನಿರಾಣಿ
ಹುಬ್ಬಳ್ಳಿ: ಇಂದು ನಾಮಪತ್ರ ಸಲ್ಲಿಸಲು ಶಿಗ್ಗಾವಿಗೆ ತೆರಳುತ್ತಿದ್ದೇವೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ದುರಾಡಳಿತದ ಬಗ್ಗೆ ಕಾಂಗ್ರೆಸ್ ಶಾಸಕರೇ ಭ್ರಮನಿರಸರಾಗಿದ್ದಾರೆ. ರಾಜ್ಯದಲ್ಲಿ ಯಾವುದೇ ಅಭಿವೃದ್ದಿ ಆಗದೇ ಇರುವ ಹಿನ್ನೆಲೆ ಅವರ ಪಕ್ಷದವರೇ ಅಸಮಾಧಾನದಲ್ಲಿದ್ದಾರೆಂ ದು ಹುಬ್ಬಳ್ಳಿಯಲ್ಲಿ ಮಾಜಿ ಸಚಿವ ಮುರುಗೇಶ ನಿರಾಣಿ ಹೇಳಿದರು.ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಬೊಮ್ಮಾಯಿ ಅವರು ಈ ಭಾಗದಲ್ಲಿ ಸಾಕಷ್ಟು ಅಭಿವೃದ್ದಿ ಕೆಲಸಗಳನ್ನ ಮಾಡಿದ್ದಾರೆ. ಕಳೆದ ಬಾರಿಯಂತೆ ಈ ಬಾರಿಯೂ ಸಹ ಶಿಗ್ಗಾವಿಯಲ್ಲಿ ಅತೀ ಹೆಚ್ಚು ಮತಗಳ ಅಂತರದಿಂದ ಗೆಲುವು ಸಾಧಿಸಲಿದ್ದೇವೆ. ಅತೀ ಹೆಚ್ಚು ಮತಗಳ ಅಂತರದಿಂದ ಭರತ್ ಬೊಮ್ಮಾಯಿ ಗೆಲುವು ಸಾಧಿಸಲಿದ್ದಾರೆ. ಶಿಗ್ಗಾವಿ ಕ್ಷೇತ್ರಕ್ಕೆ ನನ್ನ ಹೆಸರು ಸಹ ಕೇಳಿ ಬಂದಿತ್ತು. ಈ ಬಗ್ಗೆ ದೆಹಲಿಯಲ್ಲಿ ಪಕ್ಷದ ವರಿಷ್ಠರಿಗೆ ಸ್ಪರ್ಧೆ ಮಾಡಲ್ಲ ಅಂತಾ ಹೇಳಿದ್ದೆ ಎಂದರು. ಈ ಭಾಗದಲ್ಲಿ ಗೆಲುವು ಸಾಧಿಸುವ ಅಭ್ಯರ್ಥಿಗಳಿದ್ದಾರೆ. ಹಾಗಾಗಿ ನಾನು ಚುನಾವಣೆಗೆ ಸ್ಪರ್ಧಿಸಲ್ಲ ಎಂದು ಹೇಳಿದ್ದೆ. ಪಕ್ಷ ಸೂಚಿಸಿರುವ ಅಭ್ಯರ್ಥಿ ಗೆಲುವುಗೆ ಶ್ರಮಿಸುವುದಾಗಿ ಹೇಳಿದ್ದೆ. ಒಂದು ವಾರಗಳ ಕಾಲ ಶಿಗ್ಗಾವಿಯಲ್ಲೇ ನಾವು ಬೀಡುಬಿಟ್ಟು ಪಕ್ಷದ ಅಭ್ಯರ್ಥಿ ಗೆಲುವಿಗಾಗಿ ಶ್ರಮಿಸಲಿದ್ದೇವೆ ಎಂದರು. ಭರತ್ ಬೊಮ್ಮಾಯಿ ಬಹು ಕೋಟಿಗಳ ಒಡೆಯ ಶಿಗ್ಗಾವಿ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಬಿಜೆಪಿ ಅಭ್ಯರ್ಥಿ ಭರತ್ ಬೊಮ್ಮಾಯಿ ಬಹು ಕೋಟಿಗಳ ಒಡೆಯ. ಇನ್ನೊಂದೆಡೆ ತಂದೆ ಬಸವರಾಜ ಬೊಮ್ಮಾಯಿ ಅವರಿಂದ 5.74 ಲಕ್ಷ ರೂ. ಸಾಲವನ್ನೂ ಪಡೆದಿದ್ದಾರೆ.ಭರತ್ ಅವರ ಬಳಿ ಬ್ಯಾಂಕ್ ಠೇವಣಿ, ವಿವಿಧ ಕಂಪನಿಗಳಲ್ಲಿನ ಹೂಡಿಕೆಗಳು, ಬಂಗಾರದ ಆಭರಣಗಳು ಸೇರಿ 3.79 ಕೋಟಿ ಮೌಲ್ಯದ ಚರಾಸ್ತಿ ಇದೆ. ಹಾಗೂ ಬೆಂಗಳೂರಿನ ಆರ್.ಟಿ. ನಗರದಲ್ಲಿ 3.50 ಕೋಟಿ ಮೌಲ್ಯದ ಮನೆ, ಅಮೃತಳ್ಳಿಯಲ್ಲಿ 2 ಕೋಟಿ ರೂ. ಮೌಲ್ಯದ ಅಪಾರ್ಟ್ಮೆಂಟ್ ಸೇರಿದಂತೆ 5.50 ಕೋಟಿ ಸ್ಥಿರಾಸ್ತಿ ಹೊಂದಿದ್ದಾರೆ.ಭರತ್ ಅವರ ಪತ್ನಿ ಇಬ್ಬನಿ ಬ್ಯಾಂಕ್ ಠೇವಣಿಗಳು, ಹೂಡಿಕೆಗಳು, ಆಭರಣ ಸೇರಿ 3.64 ಕೋಟಿ ಮೌಲ್ಯದ ಚರಾಸ್ತಿ, ಬೆಂಗಳೂರಿನ ಕೆಂಗೇರಿಯಲ್ಲಿ70 ಲಕ್ಷ ರೂ. ಮೌಲ್ಯದ ಫ್ಲ್ಯಾಟ್, ಅಮೃತಳ್ಳಿಯಲ್ಲಿ2 ಕೋಟಿ ಮೌಲ್ಯದ ಮನೆ, ತಾವರೆಹಳ್ಳಿಯಲ್ಲಿನಿವೇಶನ ಸೇರಿದಂತೆ 2.83 ಕೋಟಿ ರೂ. ಸ್ಥಿರಾಸ್ತಿ ಹೊಂದಿದ್ದಾರೆ. ಭರತ್- ಇಬ್ಬನಿ ದಂಪತಿಯ ಪುತ್ರ ಇದ್ಯಾನ್ ಹೆಸರಿನಲ್ಲಿ40 ಲಕ್ಷ ರೂ. ಚರಾಸ್ತಿ ಇದೆ. ಸ್ವಂತ ಹೆಸರಲ್ಲಿ ಯಾವುದೇ ವಾಹನವಿಲ್ಲ ಭರತ್ ಬೊಮ್ಮಾಯಿ ಅವರು ಗೃಹ ಮತ್ತು ವೈಯಕ್ತಿಕ ಸೇರಿದಂತೆ ಒಟ್ಟು 2.32 ಕೋಟಿ ರೂ. ಸಾಲ ಹೊಂದಿದ್ದಾರೆ. ಇದರಲ್ಲಿ ತಂದೆ ಬಸವರಾಜ ಬೊಮ್ಮಾಯಿ ಅವರಿಂದ 5.74 ಲಕ್ಷ ರೂ. ಸಾಲ ಪಡೆದಿರುವುದು ವಿಶೇಷ. ಭರತ್ ಅವರ ಪತ್ನಿ ಇಬ್ಬನಿ ಅವರ ಹೆಸರಿನಲ್ಲಿ ಗೃಹ ಮತ್ತು ವಾಹನ ಸೇರಿದಂತೆ 1 ಕೋಟಿ ರೂ. ಸಾಲವಿದೆ. ಇನ್ನು ಭರತ್ ಬೊಮ್ಮಾಯಿ ಅವರ ಹೆಸರಿನಲ್ಲಿ ಯಾವುದೇ ವಾಹನವಿಲ್ಲ. ಪತ್ನಿ ಇಬ್ಬನಿ 6.80 ಲಕ್ಷ ರೂ.ಮೌಲ್ಯದ ಒಂದು ಮಾರುತಿ ಸ್ವಿಫ್ಟ್ ಕಾರ್ ಹೊಂದಿದ್ದಾರೆ. ಅಮೆರಿಕ, ಸಿಂಗಾಪುರದಲ್ಲಿ ಶಿಕ್ಷಣ ಭರತ್ ಬೊಮ್ಮಾಯಿ ಅವರು ಅಮೆರಿಕದ ಪಡ್ರ್ಯು ವಿಶ್ವ ವಿದ್ಯಾಲಯದಲ್ಲಿಎಲೆಕ್ಟ್ರಿಕಲ್ ಎಂಜಿನಿಯರಿಂಗ್ನಲ್ಲಿ ಪದವಿ, ಸಿಂಗಾಪುರದ ಮ್ಯಾನೇಜ್ಮೆಂಟ್ ವಿವಿಯಲ್ಲಿ ಮಾಸ್ಟರ್ ಆಫ್ ಸೈನ್ಸ್ ಇನ್ ಇನ್ನೋವೇಶನ್ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.
Assault case: ಟ್ರಾಫಿಕ್ ಪೊಲೀಸ್ ಮೇಲೆಯೇ ಕಾರು ಹರಿಸಿ ಪರಾರಿ ಆಗಿದ್ದ ಚಾಲಕ ಅರೆಸ್ಟ್
Assault case: ಕರ್ತವ್ಯ ನಿರತ ಸಂಚಾರಿ ಪೊಲೀಸ್ ಮೇಲೆ ಕಾರು ಹರಿಸಲು ಮುಂದಾದ ಕಾರು ಚಾಲಕನನ್ನು ಕೊಡಗು ಪೊಲೀಸರು ಬಂಧಿಸಿ, ಜೈಲಿಗೆ ಅಟ್ಟಿದ್ದಾರೆ. The post Assault case: ಟ್ರಾಫಿಕ್ ಪೊಲೀಸ್ ಮೇಲೆಯೇ ಕಾರು ಹರಿಸಿ ಪರಾರಿ ಆಗಿದ್ದ ಚಾಲಕ ಅರೆಸ್ಟ್ first appeared on Vistara News .
Tirumala Tirupati: ತಿರುಪತಿಯ ಆಯಕಟ್ಟಿನ ಸ್ಥಳಗಳಿಗೆ ಬಾಂಬ್ ಬೆದರಿಕೆ, ಹೈಅಲರ್ಟ್
ಆಂಧ್ರಪ್ರದೇಶದ ತಿರುಪತಿಯ 3 ಹೋಟೆಲ್ಗಳಿಗೆ ಬಾಂಬ್ ಬೆದರಿಕೆ ಬಂದಿದೆ. ಇಮೇಲ್ ಮೂಲಕ ಬೆದರಿಕೆ ಹಾಕಲಾಗಿದ್ದು, ಇಮೇಲ್ ನೋಡಿದ ಹೋಟೆಲ್ ಮ್ಯಾನೇಜರ್ ಪೊಲೀಸರಿಗೆ ಕರೆ ಮಾಡಿದ್ದಾರೆ. ಮಾಹಿತಿ ತಿಳಿದ ತಕ್ಷಣ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಪೊಲೀಸರು ಶ್ವಾನದಳ ಹಾಗೂ ಬಾಂಬ್ ಸ್ಕ್ವಾಡ್ನೊಂದಿಗೆ ಹೊಟೇಲ್ಗಳ ಮೂಲೆ ಮೂಲೆಗಳಲ್ಲಿ ಶೋಧ ನಡೆಸಿದರೂ ಅನುಮಾನಾಸ್ಪದವಾಗಿ ಏನೂ ಪತ್ತೆಯಾಗಲಿಲ್ಲ. ಬೆದರಿಕೆ ಇಮೇಲ್
ಅಮಿತ್ ಶಾ ಪ್ರವಾಸಗಳ ಬಗ್ಗೆ ಮಾಹಿತಿ ನೀಡಿದವರಿಗೆ ಒಂದು ದಶಲಕ್ಷ ಡಾಲರ್ ಬಹುಮಾನ ಘೋಷಿಸಿದ ಪನ್ನುನ್
ಹೊಸದಿಲ್ಲಿ: ಕೇಂದ್ರ ಗೃಹ ಸಚಿವ ಅಮಿತ್ ಶಾರ ವಿದೇಶ ಪ್ರವಾಸಗಳ ಕುರಿತು ನನಗೆ ಮಾಹಿತಿ ನೀಡುವವರಿಗೆ ಒಂದು ದಶಲಕ್ಷ ಡಾಲರ್ ಬಹುಮಾನ ನೀಡುವುದಾಗಿ ಘೋಷಿಸಿರುವ ಖಾಲಿಸ್ತಾನಿ ಪ್ರತ್ಯೇಕತಾವಾದಿ ಗುರು ಪತ್ವಂತ್ ಸಿಂಗ್ ಪನ್ನುನ್, ನವೆಂಬರ್ 26ರಿಂದ CRPF ಶಾಲೆಗಳನ್ನು ಮುಚ್ಚಬೇಕು ಎಂದೂ ಆಗ್ರಹಿಸಿದ್ದಾನೆ. Times of India ವರದಿಯ ಪ್ರಕಾರ, ಅಮೃತಸರದಲ್ಲಿನ ಸ್ವರ್ಣಮಂದಿರದ ಮೇಲಿನ ದಾಳಿ, 1984ರ ಜನಾಂಗೀಯ ಹತ್ಯೆಯಲ್ಲಿ ಪಾಲ್ಗೊಂಡಿದ್ದವರಿಗೆ ಸನ್ಮಾನ ಹಾಗೂ ಪಂಜಾಬ್ ನಲ್ಲಿ ನ್ಯಾಯಾಂಗ ಬಾಹಿರ ಹತ್ಯೆಗಳಂಥ ದೌರ್ಜನ್ಯಗಳನ್ನು CRPF ನಡೆಸಿದೆ. ಹೀಗಾಗಿ, ಪೋಷಕರು ತಮ್ಮ ಮಕ್ಕಳನ್ನು CRPF ಶಾಲೆಗಳಿಗೆ ಕಳಿಸಬಾರದು ಎಂದು ಪನ್ನುನ್ ತನ್ನ ಪ್ರಕಟಣೆಯಲ್ಲಿ ಹೇಳಿದ್ದಾನೆ. ತನಗೆ ಹಾಗೂ ತನ್ನ ನಿಷೇಧಿತ ಸಿಖ್ಸ್ ಫಾರ್ ಜಸ್ಟೀಸ್ ಸಂಘಟನೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾರ ವಿದೇಶ ಪ್ರವಾಸಗಳ ಕುರಿತು ಮಾಹಿತಿ ನೀಡುವವರಿಗೆ ಒಂದು ದಶಲಕ್ಷ ಡಾಲರ್ ಬಹುಮಾನ ನೀಡುವುದಾಗಿಯೂ ಪನ್ನುನ್ ಘೋಷಿಸಿದ್ದಾನೆ. “ಗೃಹ ಸಚಿವರು CRPF ನ ಮುಖ್ಯಸ್ಥರಾಗಿದ್ದು, ಹರ್ದೀಪ್ ನಿಜ್ಜರ್ ಹತ್ಯೆಗೆ ಬಾಡಿಗೆ ಹಂತಕರನ್ನು ನಿಯೋಜಿಸಿದ್ದಕ್ಕೆ ಹಾಗೂ ನ್ಯೂಯಾರ್ಕ್ ನಲ್ಲಿ ನನ್ನ ಮೇಲೆ ಹತ್ಯಾ ಪ್ರಯತ್ನ ನಡೆಸಿದ್ದಕ್ಕೆ ಅವರೇ ಹೊಣೆ” ಎಂದೂ ಪನ್ನುನ್ ಆರೋಪಿಸಿದ್ದಾನೆ. ರವಿವಾರ ದಿಲ್ಲಿಯ ರೋಹಿಣಿಯಲ್ಲಿನ ಪ್ರಶಾಂತ್ ವಿಹಾರದಲ್ಲಿರುವ CRPF ಶಾಲೆ ಬಳಿ ಸ್ಫೋಟ ಸಂಭವಿಸಿದ ನಂತರ, ಪನ್ನುನ್ ನಿಂದ ಈ ಹೇಳಿಕೆ ಹೊರ ಬಿದ್ದಿದೆ. ಈ ಸ್ಫೋಟದ ಹೊಣೆಯನ್ನು ಖಾಲಿಸ್ತಾನಿ ಪರ ಗುಂಪೊಂದು ಹೊತ್ತುಕೊಂಡ ನಂತರ, ಆ ಪೋಸ್ಟ್ ನ ಮಾಹಿತಿ ಒದಗಿಸುವಂತೆ ಸಂದೇಶ ತಂತ್ರಾಂಶವಾದ ಟೆಲಿಗ್ರಾಮ್ ಗೆ ದಿಲ್ಲಿ ಪೊಲೀಸರು ಪತ್ರ ಬರೆದಿದ್ದಾರೆ. ಇದರ ಬೆನ್ನಿಗೇ, CRPF ಸೋಮವಾರ ರಾತ್ರಿ ಸಂಶಯಾಸ್ಪದ ಇಮೇಲ್ ಒಂದನ್ನು ಸ್ವೀಕರಿಸಿದ್ದು, ಮಂಗಳವಾರ 11 ಗಂಟೆಯ ವೇಳೆಗೆ ಮೂರು CRPF ಜಾಗಗಳಲ್ಲಿ ಸುಧಾರಿತ ಬಾಂಬ್ ಗಳು ಸ್ಫೋಟಗೊಳ್ಳುವ ಸಾಧ್ಯತೆ ಇದೆ ಎಂದು ಬೆದರಿಕೆ ಒಡ್ಡಲಾಗಿದೆ. ಈ ನಡುವೆ, ದಿಲ್ಲಿಯ ರೋಹಿಣಿ, ದ್ವಾರಕಾ ಹಾಗೂ ಹೈದರಾಬಾದ್ ನ ಮೆಡ್ಚಲ್ ನಲ್ಲಿರುವ ಮೂರು CRPF ಶಾಲೆಗಳು ಸುರಕ್ಷಿತವಾಗಿದ್ದು, ಸಹಜವಾಗಿ ಕಾರ್ಯನಿರ್ವಹಿಸುತ್ತಿವೆ.
ಸಚಿನ್, ಕೊಹ್ಲಿಯಿಂದಲೂ ಮಾಡಲಾಗದ ವಿಶಿಷ್ಟ ಸಾಧನೆ ಮೆರೆದ ಮೊದಲ ಭಾರತೀಯ ಯಶಸ್ವಿ ಜೈಸ್ವಾಲ್!
Yashasvi Jaiswal Record - ಕ್ರಿಕೆಟ್ ದಂತಕತೆ ಸಚಿನ್ ತೆಂಡೂಲ್ಕರ್, ಸಮಕಾಲೀನ ಶ್ರೇಷ್ಠ ಬ್ಯಾಟರ್ ವಿರಾಟ್ ಕೊಹ್ಲಿ ಅವರಿಂದಲೂ ಮಾಡಲಾಗದ ಒಂದು ಅಪರೂಪದ ಸಾಧನೆಯನ್ನು ಇದೀಗ ಆರಂಭಿಕ ಬ್ಯಾಟರ್ ಯಶಸ್ವಿ ಜೈಸ್ವಾಲ್ ಅವರು ಮಾಡಿದ್ದಾರೆ. ಕ್ಯಾಲೆಂಡರ್ ವರ್ಷವೊಂದರಲ್ಲಿ 1000 ಟೆಸ್ಟ್ ರನ್ ಗಳನ್ನು 23 ವರ್ಷ ವಯಸ್ಸಿನೊಳಗೆ ಕಲೆ ಹಾಕಿದ ವಿಶ್ವದ 5ನೇ ಮತ್ತು ಭಾರತದ ಮೊದಲ ಬ್ಟಾಟರ್ ಎಂಬ ವಿಶೇಷ ದಾಖಲೆಯನ್ನು ಅವರು ಬರೆದಿದ್ದಾರೆ. ಇಲ್ಲಿದೆ ಈ ಬಗ್ಗೆ ವಿಶ್ಲೇಷಣೆ.
ನಿಖಿಲ್ ಜೆಡಿಎಸ್ ಅಭ್ಯರ್ಥಿ ಎಂದು ಎಲ್ಲರಿಗೂ ಗೊತ್ತಿತ್ತು, ನಾಟಕ ಇನ್ಮೇಲೆ ಶುರುವಾಗುತ್ತದೆ ಎಂದು ದಳಪತಿಗಳ ವಿರುದ್ಧ ಮಾಜಿ ಸಂಸದ ಡಿಕೆ ಸುರೇಶ್ ವಾಗ್ದಾಳಿ ನಡೆಸಿದರು. ಬೆಂಗಳೂರಿನಲ್ಲಿ ಶುಕ್ರವಾರ ಮಾತನಾಡಿದ ಅವರು, ಕಾರ್ಯಕರ್ತರ ಒತ್ತಾಯಕ್ಕೆ ಮಣಿದು ನಿಖಿಲ್ ಕುಮಾರಸ್ವಾಮಿ ಅವರನ್ನು ಬಲವಂತವಾಗಿ ನಿಲ್ಲಿಸ್ತಿದ್ದಾರೆ ಎಂಬುವುದು ಸುಳ್ಳು. ಅವರ ಪಕ್ಷಕ್ಕೆ ಅವರೇ ಅಧಿನಾಯಕರು ಎಂದು ಕೇಂದ್ರ ಸಚಿವ ಎಚ್ಡಿ ಕುಮಾರಸ್ವಾಮಿ ಅವರ ವಿರುದ್ಧ ವಾಗ್ದಾಳಿ ನಡೆಸಿದರು. ಅಲ್ಲದೆ, ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಾವು ಗೆದ್ದೇ ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ವಾಣಿ ವಿಲಾಸ ಸಾಗರ ಜಲಾಶಯಕ್ಕೆ ಹೆಚ್ಚಿದ ಒಳಹರಿವು: ಕೋಡಿ ಬೀಳಲು 3.90 ಅಡಿಯಷ್ಟೇ ಬಾಕಿ
Vani Vilasa Sagara Dam: ಚಂಡಮಾರುತದ ಕಾರಣದಿಂದ ಹಿಂಗಾರು ಮಳೆ ಆರ್ಭಟಿಸುತ್ತಿದೆ. ಇದರಿಂದ ಜಲಾಶಯಗಳಿಗೆ ನೀರಿನ ಒಳ ಹೆಸರು ಹೆಚ್ಚುತ್ತಿದೆ. ಚಿತ್ರದುರ್ಗದ ಹಿರಿಯೂರು ತಾಲೂಕಿನ ವಾಣಿ ವಿಲಾಸ ಸಾಗರ ಜಲಾಶಯ ಭರ್ತಿಯಾಗಿ ಕೋಡಿ ಬೀಳುವ ಹಂತಕ್ಕೆ ತಲುಪಿದೆ. ನೀರಿನ ಮಟ್ಟ 126.10 ಅಡಿ ತಲುಪಿದ್ದು, ಕೋಡಿ ಬೀಳಲು ಇನ್ನು 3.9 ಅಡಿ ಬಾಕಿ ಇದೆ.
Cyclone Dana: ಈ ಭಾಗಗಳಲ್ಲಿ ಬಿರುಗಾಳಿ ಮಳೆ ಮುನ್ಸೂಚನೆ
Cyclone Dana: ಡಾನಾ ಚಂಡಮಾರುತ ಕ್ಷಣ ಕ್ಷಣಕ್ಕೂ ತೀವ್ರತೆ ಪಡೆದುಕೊಳ್ಳುತ್ತಿದೆ. ಇದು ಇದೀಗ ದೇಶದ ಹಲವು ರಾಜ್ಯಗಳ ಮೇಲೆ ಪ್ರಭಾವ ಬೀರಿದ ಹಿನ್ನೆಲೆ ಭಾರೀ ಮಳೆಯಾಗುವ ಮನ್ಸೂಚನೆಯಿದೆ. ಅಲ್ಲದೆ, ಮುಂಜಾಗ್ರತಾ ಕ್ರಮವಾಗಿ ಈಗಾಗಲೇ ಹಲವು ಭಾಗಗಳಿಗೆ ರೆಡ್ ಅಲರ್ಟ್ ಕೂಡ ಘೋಷಣೆ ಮಾಡಿದೆ. ಹಾಗಾದರೆ ಎಲ್ಲೆಲ್ಲಿ ಮಳೆಯಾಗಲಿದೆ ಎಂದು ಇಲ್ಲಿ ತಿಳಿಯಿರಿ. ಮುಂಗಾರು ಬಳಿಕ ಇದೀಗ ದೇಶದ
ಕಾಂಗ್ರೆಸ್ನವರ ಬಗ್ಗೆ 'ಅಲಿಬಾಬಾ ಮತ್ತು 135 ಕಳ್ಳರು' ವೆಬ್ ಸೀರೀಸ್, ಏನಿದು ಹೊಸ ವಿಚಾರ?
ಬೇಲೆಕೇರಿ ಬಂದರಿನಲ್ಲಿ ಅಕ್ರಮವಾಗಿ ಅದಿರು ಸಾಗರ ಮಾಡಿದ ಪ್ರಕರಣದಲ್ಲಿ ಕಾಂಗ್ರೆಸ್ ಶಾಸಕ ಸತೀಶ್ ಸೈಲ್ ಅವರನ್ನು ಬಂಧಿಸಲಾಗಿದೆ. ಈ ವಿಚಾರವಾಗಿ ಕಾಂಗ್ರೆಸ್ ನಾಯಕರ ವಿರುದ್ಧ ವಿಪಕ್ಷ ನಾಯಕ ಆರ್.ಅಶೋಕ್ ಹಾಸ್ಯ ಮಾಡಿದ್ದಾರೆ. ಈ ಕಾಂಗ್ರೆಸ್ ನಾಯಕರ ಮೇಲೆ ʼಅಲಿಬಾಬಾ ಮತ್ತು 135 ಕಳ್ಳರುʼ ಎಂಬ ಸಿನಿಮಾ ಅಥವಾ ವೆಬ್ ಸೀರೀಸ್ ತೆಗೆಯಬಹುದು ಎಂದು ವ್ಯಂಗ್ಯ ಮಾಡಿದ್ದಾರೆ. ಮತ್ತೊಬ್ಬ
Virginia Lottery: ‘ನನಗೂ ಒಳ್ಳೇ ಟೈಂ ಬರ್ತದೆ’ ಎಂದ ಕೆಲವೇ ಗಂಟೆಗಳಲ್ಲಿ ಬಂತು 8 ಕೋಟಿ ರೂ. ಲಾಟರಿ ಬಹುಮಾನ!
ಕಳೆದ 13 ವರ್ಷಗಳಿಂದ ಲಾಟರಿ ಟಿಕೆಟ್ ಖರೀದಿಸುತ್ತಿದ್ದರೂ ತನಗೆ ಒಂದು ದಿನವೂ ಲಾಟರಿ ಹೊಡೆಯದ ಬಗ್ಗೆ ಸ್ನೇಹಿತರು ಗೇಲಿ ಮಾಡಿದಾಗ, ನನಗೂ ಒಳ್ಳೇ ಟೈಂ ಬರುತ್ತೆ ಎಂದಿದ್ದರು ಆ ಮಹಾಶಯರು. ಹಾಗೆ ಅಂದ ಕೆಲವೇ ಗಂಟೆಗಳಲ್ಲಿ ಅವರಿಗೆ ಅದೃಷ್ಟ ಒಲಿದಿದೆ. ಅವರ ಹೆಸರು ಜಾರ್ಜ್ ಹಂಟ್. ವರ್ಜೀನಿಯಾದ ರೋನೋಕ್ ಎಂಬ ಪ್ರಾಂತ್ಯದಲ್ಲಿನ ನಿವಾಸಿಯಾಗಿದ್ದು ಅವರೀಗ 8.5 ಕೋಟಿ ರೂ. ಬಂಪರ್ ಪ್ರೈಜ್ ಒಡೆಯರಾಗಿದ್ದಾರೆ.
'ಬೆಂಬಲ ಬೆಲೆಯಲ್ಲಿ ಶೇಂಗಾ ಖರೀದಿಗೆ ಕೇಂದ್ರ ಸರ್ಕಾರ ಸಮ್ಮತಿ'
ಬೆಂಗಳೂರು, ಅಕ್ಟೋಬರ್ 25: ಬೆಂಬಲ ಬೆಲೆಯಲ್ಲಿ ಶೇಂಗಾ ಖರೀದಿಗೆ ಅನುಮತಿ ನೀಡಬೇಕು ಎಂಬ ರಾಜ್ಯ ಸರ್ಕಾರದ ಮನವಿಗೆ ಕೇಂದ್ರ ಸರ್ಕಾರ ಸಮ್ಮತಿಸಿದೆ ಎಂದು ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ತಿಳಿಸಿದ್ದಾರೆ. ಪ್ರತಿ ಕ್ವಿಂಟಾಲ್ ಗೆ 6,783 ರೂ. ನಿಗದಿಪಡಿಸಿದ್ದು, ಬೆಂಬಲ ಬೆಲೆಯ ಮಾರ್ಗಸೂಚಿ ಅನ್ವಯ ಕೊಪ್ಪಳ, ಧಾರವಾಡ, ಹಾವೇರಿ, ಬಳ್ಳಾರಿ, ಚಿತ್ರದುರ್ಗ,ಗದಗ ಮತ್ತು ಬಾಗಲಕೋಟ, ದಾವಣಗೆರೆ,
Actor Darshan : ದರ್ಶನ್ ಫ್ಯಾನ್ಸ್ಗೆ ಗುಡ್ ನ್ಯೂಸ್; ನ.8ರಂದು ನವಗ್ರಹ ಸಿನಿಮಾ ರೀ-ರಿಲೀಸ್
Actor Darshan : ನಟ ದರ್ಶನ್ ಜೈಲಿನಲ್ಲಿದ್ದರೂ ಹಳೆಯ ಸಿನಿಮಾಗಳು ಥಿಯೇಟರ್ಗಳಲ್ಲಿ ಸೌಂಡ್ ಮಾಡುತ್ತಿವೆ. ಇತ್ತೀಚೆಗಷ್ಟೇ ದರ್ಶನ್ ಅಭಿನಯದ ಕರಿಯ, ಶಾಸ್ತ್ರಿ ಹಾಗೂ ಪೊರ್ಕಿ ಸಿನಿಮಾಗಳನ್ನು ಮರು ಬಿಡುಗಡೆಗೊಂಡಿತ್ತು. ಇದೀಗ ನವಗ್ರಹ ಸಿನಿಮಾ ರೀ ರಿಲೀಸ್ಗೆ ಡೇಟ್ ಫಿಕ್ಸ್ ಆಗಿದೆ. The post Actor Darshan : ದರ್ಶನ್ ಫ್ಯಾನ್ಸ್ಗೆ ಗುಡ್ ನ್ಯೂಸ್; ನ.8ರಂದು ನವಗ್ರಹ ಸಿನಿಮಾ ರೀ-ರಿಲೀಸ್ first appeared on Vistara News .
ಬೆಂಬಲ ಬೆಲೆಯಲ್ಲಿ ಶೇಂಗಾ ಖರೀದಿಗೆ ಕೇಂದ್ರ ಸರ್ಕಾರ ಸಮ್ಮತಿ ! ಪ್ರತಿ ಕ್ವಿಂಟಾಲ್ ಗೆ 6,783 ರೂ. ನಿಗದಿ
: ಬೆಂಬಲ ಬೆಲೆಯಲ್ಲಿ ಶೇಂಗಾ ಖರೀದಿಗೆ ಅನುಮತಿ ನೀಡಬೇಕು ಎಂಬ ರಾಜ್ಯ ಸರ್ಕಾರದ ಮನವಿ ಮಾಡಿತ್ತು. ರಾಜ್ಯ ಸರ್ಕಾರದ ಈ ಮನವಿಯನ್ನು ಕೇಂದ್ರ ಸರ್ಕಾರ ಸಮ್ಮತಿಸಿದೆ. ಹೀಗಾಗಿ ಬೆಂಬಲ ಬೆಲೆಗೆ ಶೇಂಗಾ ಖರೀದಿ ಮಾಡಲು ಒಪ್ಪಿಗೆ ನೀಡಿದೆ. ಶೇಂಗಾ ಸೇರಿ ರಾಜ್ಯದಲ್ಲಿ ಒಟ್ಟು ಎಂಟು ಕೃಷಿ ಉತ್ಪನ್ನಗಳನ್ನು ಇದೇ ಮೊದಲ ಬಾರಿಗೆ ಬೆಂಬಲ ಬೆಲೆ ಯೋಜನೆ ಅಡಿಯಲ್ಲಿ ಖರೀದಿ ಮಾಡಲಾಗಿದೆ. ಈಗಾಗಕೇ ಉಂಡೆ ಕೊಬ್ಬರಿ, ಮಿಲ್ಲಿಂಗ್ ಕೊಬ್ಬರಿ, ಹೆಸರುಕಾಳು, ಉದ್ದಿನಕಾಳು, ಸೋಯಾಬಿನ್, ಸೂರ್ಯಕಾಂತಿ, ಹತ್ತಿಯನ್ನು ಬೆಂಬಲ ಬೆಲೆಯಲ್ಲಿ ಖರೀದಿಸಲಾಗಿದೆ.
ರಾಜ್ಯದ ಜನೆತೆ ಗುಡ್ ನ್ಯೂಸ್: ‘ಗೃಹ ಆರೋಗ್ಯ ಯೋಜನೆ’: ಇದರ ಉಪಯೋಗ ಏನು ? ಇಲ್ಲಿದೆ ವಿವರ
ಬೆಂಗಳೂರು, ಅಕ್ಟೋಬರ್ 25: ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚಿನ ಜನರು ಸಕ್ಕರೆ ಕಾಯಿಲೆ, ರಕ್ತದೊತ್ತಡ ಇದ್ದರೂ ತಪಾಸಣೆ ಮಾಡಿಸಿಕೊಳ್ಳುತ್ತಿಲ್ಲ, ಚಿಕಿತ್ಸೆ ಪಡೆದುಕೊಳ್ಳುತ್ತಿಲ್ಲ. ಇದಕ್ಕಾಗಿ ಆರೋಗ್ಯ ಇಲಾಖೆ, ರಾಜ್ಯದ ಜನರ ಆರೋಗ್ಯ ಕಾಪಾಡುವ ಉದ್ದೇಶದಿಂದ ಆರೋಗ್ಯ ಯೋಜನೆಯನ್ನು ಜಾರಿಗೊಳಿಸುತ್ತಿದೆ. ರಾಜ್ಯ ಸರ್ಕಾರದ ಮಹತ್ವದ ಗೃಹ ಆರೋಗ್ಯ ಯೋಜನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗುರುವಾರ ಚಾಲನೆ ನೀಡಿದರು. ಆರೋಗ್ಯ ಯೋಜನೆ ಕುರಿತು
ದ.ಕ. ಜಿಲ್ಲಾ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ: ವಿವಿಧ ಯೋಜನೆಯ ಗುರಿಗಿಂತ ಅರ್ಜಿಗಳ ಸಂಖ್ಯೆಯೇ ಅಧಿಕ!
ಮಂಗಳೂರು, ಅ.24: ದ.ಕ. ಜಿಲ್ಲಾ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮವು 2023-24ನೇ ಸಾಲಿನ ವಿವಿಧ ಯೋಜನೆಯಡಿ ಭೌತಿಕ ಗುರಿಗಿಂತ ಸ್ವೀಕರಿಸಲಾದ ಅರ್ಜಿಗಳ ಸಂಖ್ಯೆಯೇ ಅಧಿಕವಾಗಿದೆ. ಇದರಿಂದ ಅರ್ಜಿ ಸಲ್ಲಿಸಿಯೂ ಯೋಜನೆಯನ್ನು ದಕ್ಕಿಸಿಕೊಳ್ಳಲಾಗದ ಅರ್ಜಿದಾರರು ತೀವ್ರ ಅಸಮಾಧಾನಿತರಾಗಿದ್ದಾರೆ. ಸರಕಾರದ ಕಾರ್ಯವೈಖರಿಯ ಬಗ್ಗೆ ಆಕ್ರೋಶಿತರಾಗಿದ್ದಾರೆ. ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮವು ಅರಿವು, ಅರಿವು ನವೀಕರಣ, ಅರಿವು ವಿದೇಶಿ ಸಾಲ, ಶ್ರಮಶಕ್ತಿ, ಶ್ರಮಶಕ್ತಿ ವಿಶೇಷ ಮಹಿಳಾ ಯೋಜನೆ, ಸ್ವಾಲವಂಬಿ ಸಾರಥಿ ಯೋಜನೆ-ಆಟೊ ಖರೀದಿ ಯೋಜನೆ, ಗಂಗಾ ಕಲ್ಯಾಣ ಯೋಜನೆ, ವೃತ್ತಿ ಪ್ರೋತ್ಸಾಹ, ಸಮುದಾಯ ಆಧಾರಿತ ತರಬೇತಿ ಯೋಜನೆ, ಸ್ವಯಂ ಉದ್ಯೋಗ ಯೋಜನೆ ಹೀಗೆ 9 ಯೋಜನೆಗಳಿಗೆ 2023-24ನೇ ಸಾಲಿನಲ್ಲಿ 1,500 ಫಲಾನುಭವಿಗಳ ಆಯ್ಕೆಗೆ ಗುರಿ ನಿಗದಿಪಡಿಸಿತ್ತು. ಆದರೆ ಸಲ್ಲಿಕೆಯಾದ ಅರ್ಜಿಗಳ ಸಂಖ್ಯೆ ಬರೋಬ್ಬರಿ 24,985. ಅಂದರೆ 1,500 ಫಲಾನಭವಿಗಳನ್ನು ಆಯ್ಕೆ ಮಾಡಿದರೂ 23,485 ಮಂದಿ ಅರ್ಜಿದಾರರಿಗೆ ಯಾವುದೇ ಯೋಜನೆಯ ಭಾಗ್ಯವಿಲ್ಲವಾಗಿದೆ. ಕೆಎಂಡಿಸಿ ಮಾತ್ರವಲ್ಲ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ವಿವಿಧ ಯೋಜನೆಗಳ ಅನುಷ್ಠಾನಕ್ಕೆ ಹಾಕಲಾದ ಸರಕಾರದ ಗುರಿ ಕೂಡಾ ತೀರಾ ಕಡಿಮೆಯಾಗಿದ್ದು, ಅದಕ್ಕೆ ಸಲ್ಲಿಕೆಯಾಗುವ ಅರ್ಜಿಗಳ ಸಂಖ್ಯೆಯು ಅಧಿಕವಾಗಿರುತ್ತದೆ. ಅರ್ಜಿ ಸಲ್ಲಿಸಿದ ಎಲ್ಲಾ ಅರ್ಹರಿಗೂ ಫಲಾನುಭವಿಗಳಾಗಲು ಸಾಧ್ಯವಾಗದಿರುವುದು ವಿಪರ್ಯಾಸವಾಗಿದೆ. ಯೋಜನೆಗೆ ಅರ್ಜಿ ಆಹ್ವಾನಿಸಿದ ತಕ್ಷಣ ಜನರು ದಾಖಲೆಗಳನ್ನೆಲ್ಲಾ ಸಿದ್ಧಪಡಿಸಿ, ಕೆಲಸಕ್ಕೆ ರಜೆ ಹಾಕಿ, ಸೈಬರ್ ಸೆಂಟರ್ಗಳ ಮುಂದೆ ಸಾಲುಗಟ್ಟಿ ನಿಂತು ನೂರಿನ್ನೂರು ರೂಪಾಯಿ ವ್ಯಯಿಸಿ ಅರ್ಜಿ ಹಾಕಿದರೂ ಕೊನೆಗೆ ‘ಭೌತಿಕ ಗುರಿ’ಯ ಸಮಸ್ಯೆಯಿಂದಾಗಿ ಯೋಜನೆಯನ್ನು ದಕ್ಕಿಸಿಕೊಳ್ಳಲಾಗದೆ ಹಲವರು ಪರಿತಪಿಸುತ್ತಿರುವುದು ಸಾಮಾನ್ಯವಾಗಿದೆ. ಈ ಯೋಜನೆಗಳ ಫಲಾನುಭವಿಗಳ ಆಯ್ಕೆಯು ಆಯಾ ಕ್ಷೇತ್ರದ ಶಾಸಕರ ಶಿಫಾರಸುಗಳನ್ನು ಅವಲಂಬಿಸಿರುತ್ತದೆ. ಹಿಂದೆ ಪ್ರತಿಯೊಂದು ಯೋಜನೆಯ ಭೌತಿಕ ಗುರಿ ವಿಧಾನಸಭಾ ಕ್ಷೇತ್ರವಾರು 15ರಿಂದ 20 ಇತ್ತು. ಆದರೆ ಇದೀಗ ಅದು ಕೇವಲ 2-3ಕ್ಕೆ ಸೀಮಿತವಾಗಿದೆ. ಸೀಮಿತ ಗುರಿಯ ಬಗ್ಗೆ ಮಾಹಿತಿ ಇಲ್ಲದ ಜನರು ಸಾಲುಗಟ್ಟಿ ಅರ್ಜಿ ಸಲ್ಲಿಸಿ ಕೊನೆಗೆ ನಿರಾಶರಾಗುವುದು ಕಂಡು ಬರುತ್ತದೆ. ಪ್ರತಿಯೊಂದು ತಾಲೂಕಿನಲ್ಲೂ ಮಾಹಿತಿ ಕೇಂದ್ರವನ್ನು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯು ತೆರೆಯಬೇಕು. ಆದರೆ ದ.ಕ. ಜಿಲ್ಲೆಯಲ್ಲಿ ಹೊಸದಾಗಿ ಅಸ್ತಿತ್ವಕ್ಕೆ ಬಂದ ಉಳ್ಳಾಲ, ಮುಲ್ಕಿ, ಮೂಡುಬಿದಿರೆ, ಕಡಬ ತಾಲೂಕುಗಳಲ್ಲಿ ಅಲ್ಪಸಂಖ್ಯಾತರ ಇಲಾಖೆಗೆ ಸಂಬಂಧಿಸಿದ ಮಾಹಿತಿ ಕೇಂದ್ರಗಳೇ ಇಲ್ಲ. ಮಂಗಳೂರು, ಬೆಳ್ತಂಗಡಿ, ಪುತ್ತೂರು, ಸುಳ್ಯದ ಮಾಹಿತಿ ಕೇಂದ್ರವು ಸರಕಾರಿ ಕಟ್ಟಡದಲ್ಲಿದೆ. ಆದರೆ ಬಂಟ್ವಾಳಕ್ಕೆ ಇನ್ನೂ ಸ್ವಂತ ಕಟ್ಟಡದ ಭಾಗ್ಯ ಸಿಕ್ಕಿಲ್ಲ. ಇದು ಕೂಡ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಬಗ್ಗೆ ಜನರಿಗೆ ಮಾಹಿತಿ ಪಡೆಯಲು ಸಮಸ್ಯೆಯಾಗಿ ಪರಿಣಮಿಸಿದೆ. ಸರಕಾರ ನಮಗೆ ನಿಗದಿಪಡಿಸಿದ ಗುರಿಯನ್ನು ಸಾಧಿಸುವಲ್ಲಿ ಯಶಸ್ವಿಯಾಗಿದ್ದೇವೆ. ಯೋಜನೆಯ ಗುರಿಯು ಕಡಿಮೆಯಾಗಿದ್ದು, ಅದನ್ನು ಹೆಚ್ಚಿಸ ಬೇಕು ಎಂಬ ಬೇಡಿಕೆ ಇದೆ. ಅದನ್ನು ಹಿರಿಯ ಅಧಿಕಾರಿಗಳ ಗಮನಕ್ಕೆ ತಂದಿದ್ದೇವೆ. ಭೌತಿಕ ಗುರಿಯನ್ನು ಸರಕಾರ ಹೆಚ್ಚಿಸಿದರೆ ನಾವು ಅದನ್ನು ಅನುಷ್ಠಾನಗೊಳಿಸಲು ಬದ್ಧರಾಗಿದ್ದೇವೆ. -ಯಶೋಧರ,ವ್ಯವಸ್ಥಾಪಕರು, ಕೆಎಂಡಿಸಿ ದ.ಕ.ಜಿಲ್ಲೆ
ತಿರುಪತಿ ದೇವಾಲಯ ಇರುವ ಪ್ರದೇಶದಲ್ಲಿನ ಹೊಟೇಲ್ ಗಳಿಗೆ ಬಾಂಬ್ ಬೆದರಿಕೆ: ತನಿಖೆ ಚುರುಕು
ಆಂಧ್ರಪ್ರದೇಶ: ತಿರುಪತಿ ದೇವಾಲಯ ಇರುವ ಪ್ರದೇಶದಲ್ಲಿನ ಮೂರು ಹೊಟೇಲ್ ಗಳಿಗೆ ಈಮೇಲ್ ಮೂಲಕ ಬಾಂಬ್ ಬೆದರಿಕೆ ಸಂದೇಶ ಕಳುಹಿಸಿರುವ ಬಗ್ಗೆ ವರದಿಯಾಗಿದೆ. ಬೆದರಿಕೆಗೆ ಕರೆ ಹಿನ್ನೆಲೆ ಪೊಲೀಸರು ಹೋಟೆಲ್ ಗಳಲ್ಲಿ ಸಂಪೂರ್ಣವಾಗಿ ಶೋಧ ಕಾರ್ಯ ನಡೆಸಿದ್ದು, ಬೆದರಿಕೆ ಹುಸಿ ಎಂದು ದೃಢಪಟ್ಟಿದೆ. ಲೀಲಾ ಮಹಲ್, ಕಪಿಲ ತೀರ್ಥಂ ಮತ್ತು ಅಲಿಪಿರಿ ಬಳಿಯ ಮೂರು ಖಾಸಗಿ ಹೋಟೆಲ್ ಗಳಿಗೆ ಈಮೇಲ್ ಮೂಲಕ ಬೆದರಿಕೆಗಳು ಬಂದಿವೆ. ಬೆದರಿಕೆಯ ಮೂಲದ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ತಿರುಪತಿ ಪೂರ್ವ ಪೊಲೀಸ್ ಠಾಣೆಯ ಸರ್ಕಲ್ ಇನ್ಸ್ಪೆಕ್ಟರ್ ಶ್ರೀನಿವಾಸುಲು ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಈಮೇಲ್ ಬಗ್ಗೆ ಎಫ್ಐಆರ್ ದಾಖಲಾಗಿದ್ದು, ವಿವಿಧ ಆಯಾಮಗಳಿಂದ ತನಿಖೆ ನಡೆಯುತ್ತಿದೆ. ನಾವು ಶೀಘ್ರದಲ್ಲೇ ಅಪರಾಧಿಗಳನ್ನು ಪತ್ತೆ ಹಚ್ಚುತ್ತೇವೆ ಎಂದು ಹೇಳಿದ್ದಾರೆ. ದೇಶದ ವಿಮಾನಯಾನ ಸಂಸ್ಥೆಗಳು ಮತ್ತು ಸಿ ಆರ್ ಪಿಎಫ್ ಶಾಲೆಗಳಿಗೆ ಸರಣಿ ಬಾಂಬ್ ಬೆದರಿಕೆ ಬೆನ್ನಲ್ಲಿ ಈ ಬೆಳವಣಿಗೆ ನಡೆದಿದೆ.
ಲೆಬನಾನ್: ಇಸ್ರೇಲ್ ದಾಳಿಗೆ ಮೂವರು ಪತ್ರಕರ್ತರು ಮೃತ್ಯು
ಲೆಬನಾನ್: ಆಗ್ನೇಯ ಲೆಬನಾನ್ ನಲ್ಲಿ ವಸತಿಗೃಹವೊಂದನ್ನು ಗುರಿಯಾಗಿಸಿಕೊಂಡು ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ಮೂವರು ಪತ್ರಕರ್ತರು ಮೃತಪಟ್ಟಿದ್ದಾರೆ ಎಂದು ಲೆಬನಾನ್ ನ ರಾಷ್ಟ್ರೀಯ ಸುದ್ದಿ ಸಂಸ್ಥೆ ವರದಿ ಮಾಡಿದೆ. ಇಸ್ರೇಲ್ ನಡೆಸಿದ ವೈಮಾನಿಕ ದಾಳಿಗೆ ಮೂವರು ಸಿಬ್ಬಂದಿಗಳು ಮೃತಪಟ್ಟಿದ್ದಾರೆ. ನಮ್ಮ ಕ್ಯಾಮರಾ ಮ್ಯಾನ್ ಘಾಸನ್ ನಜರ್ ಮತ್ತು ತಾಂತ್ರಿಕ ಸಹಾಯಕ ಮೊಹಮ್ಮದ್ ರಿದಾ ಮೃತಪಟ್ಟಿದ್ದಾರೆ ಎಂದು ಬೈರುತ್ ಮೂಲದ ಅಲ್-ಮಯಾದೀನ್ ಟಿವಿ (Al-Mayadeen TV) ಹೇಳಿದೆ. ಇದಲ್ಲದೆ, ಹಸ್ಬಯಾ ಪ್ರದೇಶದ ಮೇಲೆ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ನಮ್ಮ ಕ್ಯಾಮೆರಾ ಮ್ಯಾನ್ ವಿಸ್ಸಾಮ್ ಖಾಸಿಮ್ ಮೃತಪಟ್ಟಿದ್ದಾರೆ ಎಂದು ಹಿಜ್ಬುಲ್ಲಾಗೆ ಸೇರಿದ ಅಲ್-ಮನಾರ್ ಟಿವಿ(Al-Manar TV) ಹೇಳಿದೆ. ಇಸ್ರೇಲ್ ದಾಳಿಗೆ ಕಳೆದ 24 ಗಂಟೆಗಳಲ್ಲಿ ಲೆಬನಾನ್ ನಲ್ಲಿ ಕನಿಷ್ಠ 19 ಜನರು ಮೃತಪಟ್ಟಿದ್ದು, ದಾಳಿ ಪ್ರಾರಂಭವಾದಾಗಿನಿಂದ ಈವರೆಗಿನ ಒಟ್ಟು ಮೃತರ ಸಂಖ್ಯೆ 2,593ಕ್ಕೆ ಏರಿಕೆಯಾಗಿದೆ.
ಭಾರತ ಮೂಲದ ಕಮಲಾ ಹ್ಯಾರಿಸ್ಗೆ ಆಘಾತ: ಡೊನಾಲ್ಡ್ ಟ್ರಂಪ್ಗೆ ‘ಅಬ್ಬಬ್ಬಾ ಲಾಟರಿ’!
ಟಿಕ್.. ಟಿಕ್.. ಟಿಕ್.. ಹಿಂಗೆ ಅಮೆರಿಕದ ಅಧ್ಯಕ್ಷೀಯ ಚುನಾವಣೆಗೆ ಟೈಂ ಬರ್ತಾ ಇದೆ. ಸರಿಯಾಗಿ ಇನ್ನು 10 ದಿನಗಳಿಗೆ ಅಮೆರಿಕದ ಅಧ್ಯಕ್ಷೀಯ ಚುನಾವಣೆ ಮತದಾನ ಮುಕ್ತಾಯವಾಗಲಿದೆ. ಹೀಗಾಗಿ ಚುನಾವಣೆ ಅಖಾಡ ರಂಗೇರಿದೆ, ಡೊನಾಲ್ಡ್ ಟ್ರಂಪ್ &ಕಮಲಾ ಹ್ಯಾರಿಸ್ ನಡುವೆ ದೊಡ್ಡ ಫೈಟಿಂಗ್ ಕೂಡ ನಡೆಯುತ್ತಿದೆ. ಈ ಸಮಯದಲ್ಲೇ ಭಾರತ ಮೂಲದ ಕಮಲಾ ಹ್ಯಾರಿಸ್ಗೆ ಆಘಾತ ಎದುರಾಗಿದ್ದು,
Bengaluru News : ಪ್ರಿಯಕರನ ಕಣ್ಮುಂದೆಯೇ ಯುವತಿ ಮೇಲೆ ಎರಗಿದ್ದ ಕಾಮುಕರಿಗೆ ಜೀವಾವಧಿ ಶಿಕ್ಷೆ
Bengaluru News : ಪ್ರಿಯಕರನ ಕಣ್ಮುಂದೆಯೇ ಯುವತಿ ಮೇಲೆ ಎರಗಿದ್ದ ಕಾಮುಕರಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. The post Bengaluru News : ಪ್ರಿಯಕರನ ಕಣ್ಮುಂದೆಯೇ ಯುವತಿ ಮೇಲೆ ಎರಗಿದ್ದ ಕಾಮುಕರಿಗೆ ಜೀವಾವಧಿ ಶಿಕ್ಷೆ first appeared on Vistara News .
ಅಮೆರಿಕದಲ್ಲಿ ಪೋಷಕರು ಮತ್ತು ಒಡಹುಟ್ಟಿದ ಮೂವರನ್ನು ಭೀಕರವಾಗಿ ಕೊಂದ 15 ವರ್ಷದ ಬಾಲಕ
US Boy Kills Parents and 3 Siblings: ಅಮೆರಿಕದಲ್ಲಿ ಬಂದೂಕು ದಾಳಿ ಪ್ರಕರಣ ಹೆಚ್ಚುತ್ತಲೇ ಇದ್ದು, ವಾಷಿಂಗ್ಟನ್ನಲ್ಲಿ 15 ವರ್ಷದ ಬಾಲಕನೊಬ್ಬ ತನ್ನ ಕುಟುಂಬವನ್ನೇ ನಾಶ ಪಡಿಸಲು ಭಯಾನಕ ಕೃತ್ಯ ಎಸಗಿದ್ದಾನೆ. ಪೋಷಕರು ಮತ್ತು ಮೂವರು ಒಡಹುಟ್ಟಿದವರನ್ನು ಆತ ಹತ್ಯೆ ಮಾಡಿದ್ದಾನೆ. ಈ ಭೀಕರ ಗುಂಡಿನ ದಾಳಿಯಲ್ಲಿ ಆತನ 11 ವರ್ಷದ ಸಹೋದರಿ ಅದೃಷ್ಟವಶಾತ್ ಪಾರಾಗಿದ್ದಾಳೆ.
Gold Silver Price: ಚಿನ್ನದ ಬೆಲೆ ಗ್ರಾಮ್ಗೆ 10 ರೂನಷ್ಟು ಏರಿಕೆ: ಇಲ್ಲಿದೆ ಇವತ್ತಿನ ದರಪಟ್ಟಿ
ಬೆಂಗಳೂರು, ಅಕ್ಟೋಬರ್25: ಭರ್ಜರಿ ಇಳಿಕೆ ಕಂಡಿದ್ದ ಚಿನ್ನದ ಬೆಲೆ ಇಂದು ( ಶುಕ್ರವಾರ) ಹೆಚ್ಚಳವಾಗಿದೆ. ಚಿನ್ನದ ಬೆಲೆ ಗ್ರಾಮ್ಗೆ 10 ರೂನಷ್ಟು ಏರಿಕೆ ಆಗಿದ್ದು, ವಿದೇಶಗಳ ಮಾರುಕಟ್ಟೆಗಳಲ್ಲಿ ಯಾವ ವ್ಯತ್ಯಯವಾಗಿಲ್ಲ. ಆದರೆ, ಭಾರತದಲ್ಲಿ ಮಾತ್ರ ಕಳೆದ ಎರಡು ವಾರಗಳಿಂದ ತೀವ್ರ ಮಟ್ಟದಲ್ಲಿ ಚಿನ್ನದ ಬೆಲೆಯಲ್ಲಿ ಏರಿಳಿತಗಳಾಗುತ್ತಿವೆ. ಇನ್ನು, ಬೆಳ್ಳಿ ಬೆಲೆಯಲ್ಲಿ ಗ್ರಾಮ್ಗೆ 3 ರೂನಷ್ಟು ಇಳಿಕೆ ಆಗಿದೆ.
ಬಿ.ಸಿ.ರೋಡ್ : ಢಿಕ್ಕಿ ಹೊಡೆದು ಪರಾರಿಯಾದ ವಾಹನ ಪತ್ತೆ ಹೆಚ್ಚುವಂತೆ ಮಿತ್ತಬೈಲ್ ಜಮಾಅತಿನಿಂದ ಪೊಲೀಸರಿಗೆ ಮನವಿ
ಬಿ.ಸಿ.ರೋಡ್ : ಮಿತ್ತಬೈಲ್ ಜಮಾಅತ್ ವ್ಯಾಪ್ತಿಯ ಶಾಂತಿ ಅಂಗಡಿ ಬಳಿ ರಸ್ತೆ ದಾಟುತ್ತಿದ್ದ ಇಬ್ಬರು ಬಾಲಕಿಯರಿಗೆ ಢಿಕ್ಕಿ ಹೊಡೆದು ಪರಾರಿಯಾದ ವಾಹನವನ್ನು ಪತ್ತೆ ಹೆಚ್ಚುವಂತೆ ಮಿತ್ತಬೈಲ್ ಜಮಾಅತ್ ಕಮಿಟಿ ಅಧ್ಯಕ್ಷ ಮುಹಮ್ಮದ್ ಅದ್ದೇಡಿ ನೇತೃತ್ವದ ನಿಯೋಗ ಬಂಟ್ವಾಳ ನಗರ ಠಾಣಾಧಿಕಾರಿಯನ್ನು ಭೇಟಿಯಾಗಿ ಮನವಿ ಸಲ್ಲಿಸಿದರು. ಸೆ. 22 ರಂದು ಬಾಲಕಿಯರು ರಸ್ತೆ ದಾಟುತ್ತಿದ್ದ ವೇಳೆ ವಾಹನವೊಂದು ಢಿಕ್ಕಿ ಹೊಡೆದು ಪರಾರಿಯಾಗಿತ್ತು. ಘಟನೆಯಿಂದ ಒಂದೇ ಮನೆಯ ಇಬ್ಬರು ಬಾಲಕಿಯರು ಗಂಭೀರ ಗಾಯಗೊಂಡು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆ ನಡೆದು ಒಂದು ತಿಂಗಳು ಕಳೆದರೂ ಢಿಕ್ಕಿಯಾದ ವಾಹನ ಇದುವರೆಗೂ ಪತ್ತೆಯಾಗಿಲ್ಲ. ಆದುದರಿಂದ ತಕ್ಷಣ ತಪ್ಪಿತಸ್ಥ ಚಾಲಕ ಹಾಗೂ ವಾಹನವನ್ನು ಪತ್ತೆ ಹಚ್ಚಿ ಚಿಕಿತ್ಸೆ ಪಡೆಯುತ್ತಿರುವ ಬಾಲಕಿ ಹಾಗೂ ಕುಟುಂಬಸ್ಥರಿಗೆ ನ್ಯಾಯ ಒದಗಿಸುವಂತೆ ಮನವಿಯಲ್ಲಿ ಒತ್ತಾಯಿಸಲಾಗಿದೆ. ಈ ಸಂದರ್ಭದಲ್ಲಿ ಜಮಾತ್ ಉಪಾಧ್ಯಕ್ಷ ಜಮಾಲ್, ಪ್ರಧಾನ ಕಾರ್ಯದರ್ಶಿ ಅಕ್ಬರ್ ಅಲಿ ಪೊನ್ನೋಡಿ, ಕೋಶಾಧಿಕಾರಿ ಅಬ್ದುಲ್ ರಹಿಮಾನ್, ಕಾರ್ಯದರ್ಶಿ ಅಶ್ರಫ್ ಶಾಂತಿಅಂಗಡಿ ಉಪಸ್ಥಿತರಿದ್ದರು.
ಅಜೆಕಾರು: ಪ್ರಿಯಕರನ ಜೊತೆ ಸೇರಿ ಪತಿಯ ಕೊಲೆ; ಆರೋಪಿ ಪತ್ನಿ ಸಹಿತ ಇಬ್ಬರ ಬಂಧನ
ಅಜೆಕಾರು: ಪ್ರಿಯಕರನೊಂದಿಗೆ ಸೇರಿ ಪತಿಯನ್ನೇ ವಿಷ ಉಣಿಸಿ ಬಳಿಕ ಉಸಿರುಗಟ್ಟಿಸಿ ಕೊಲೆಗೈದ ಘಟನೆ ಮರ್ಣೆ ಗ್ರಾಮದಲ್ಲಿ ನಡೆದಿರುವ ಬಗ್ಗೆ ವರದಿಯಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ಪತ್ನಿ ಹಾಗೂ ಪ್ರಿಯಕರನನ್ನು ಪೊಲೀಸರು ಬಂಧಿಸಿದ್ದಾರೆ. ಕೊಲೆಗೀಡಾದವರನ್ನು ಬಾಲಕೃಷ್ಣ (44) ಎಂದು ಗುರುತಿಸಲಾಗಿದೆ. ಇವರ ಪತ್ನಿ ಪ್ರತಿಮಾ ಹಾಗೂ ಆಕೆಯ ಪ್ರಿಯಕರ ಹಿರ್ಗಾನದ ದಿಲೀಪ್ ಬಂಧಿತ ಆರೋಪಿಗಳು. ಪ್ರಕರಣದ ಹಿನ್ನೆಲೆ: ಕಳೆದ 25 ದಿನಗಳಿಂದ ಜ್ವರದಿಂದ ಬಳಲುತ್ತಿದ್ದ ಬಾಲಕೃಷ್ಣ ಅವರನ್ನು ಕಾರ್ಕಳದ ರೋಟರಿ ಆಸ್ಪತ್ರೆಗೆ ದಾಖಲಿಸಿದಾಗ ಪರೀಕ್ಷಿಸಿದ ವೈದ್ಯರು ಅವರಿಗೆ ಕಾಮಾಲೆ ರೋಗವಿದೆ ಎಂದು ತಿಳಿಸಿದ್ದರು. ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ, ಮಂಗಳೂರು, ಬೆಂಗಳೂರಿನ ಆಸ್ಪತ್ರೆಗಳಿಗೆ ದಾಖಲಿಸಿದ್ದರೂ ಚಿಕಿತ್ಸೆ ಫಲಕಾರಿಯಾದ ಕಾರಣ ಅ.19 ರಂದು ಶನಿವಾರ ರಾತ್ರಿ ಮನೆಗೆ ಕರೆತರಲಾಗಿತ್ತು. ಮರುದಿನ ಅ.20 ರಂದು ಬೆಳಗ್ಗಿನ ಜಾವ 3.30 ರ ಹೊತ್ತಿಗೆ ಬಾಲಕೃಷ್ಣ ಅವರು ಮೃತಪಟ್ಟಿದ್ದಾರೆ. ದಿಢೀರ್ ಕಾಣಿಸಿಕೊಂಡ ಅನಾರೋಗ್ಯದಿಂದ ಬಾಲಕೃಷ್ಣ ಅವರು ಮೃತಪಟಿದ್ದರಿಂದ ಪ್ರತಿಮಾಳ ಅಣ್ಣ ಪದೇ ಪದೇ ವಿಚಾರಿಸಿದಾಗ ಸತ್ಯ ಬಯಲಾಗಿದೆ. ಪ್ರತಿಮ ಮತ್ತು ದಿಲೀಪನ ಗೆಳೆತನಕ್ಕೆ ಅಡ್ಡ ಬರುತ್ತಿದ್ದ ಬಾಲಕೃಷ್ಣ ಅವರನ್ನು ಕೊಲೆ ಮಾಡಲು ಯೋಚಿಸಿದ್ದರು. ಯೋಜನೆಯಂತೆ ದಿಲೀಪನು ಯಾವುದೋ ವಿಷ ಪದಾರ್ಥ ತಂದು, ಅದನ್ನು ಊಟದಲ್ಲಿ ಬೆರೆಸಿ ಕೊಟ್ಟರೆ ನಿಧಾನವಾಗಿ ಸಾಯುತ್ತಾನೆ ಎಂದು ಹೇಳಿ ಕೊಟ್ಟಿದ್ದ. ಅದರಂತೆ ನಾನು ಅವರಿಗೆ ಊಟದಲ್ಲಿ ಹಾಕಿ ಕೊಟ್ಟಿದ್ದೇನೆ. ನಂತರ ಬಾಲಕೃಷ್ಣ ಅವರಿಗೆ ಅಸೌಖ್ಯ ಉಂಟಾಗಿದ್ದು, ನಾನು ಹೇಳಿದಂತೆ ಅ.20 ರಂದು ಬೆಳಗಿನ ಜಾವ 01:30 ಗಂಟೆಗೆ ದಿಲೀಪನು ನಮ್ಮ ಮನೆಗೆ ಬಂದಿದ್ದು, ನಾವಿಬ್ಬರು ಸೇರಿ ಬೆಡ್ಶೀಟ್ ಅನ್ನು ಬಾಲಕೃಷ್ಣರ ಮುಖಕ್ಕೆ ಒತ್ತಿ ಹಿಡಿದು ಅವರನ್ನು ಕೊಲೆ ಮಾಡಿರುತ್ತೇವೆ ಎಂದು ಪ್ರತಿಮಾ ಒಪ್ಪಿಕೊಂಡಿರುವುದಾಗಿ ಬಾಲಕೃಷ್ಣ ಅವರ ತಮ್ಮ ರಾಮಕೃಷ್ಣ ಪೊಲೀಸರಿಗೆ ದೂರಿನಲ್ಲಿ ತಿಳಿಸಿದ್ದಾರೆ. ಘಟನೆಗೆ ಸಂಬಂಧಿಸಿ ಅಜೆಕಾರು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 36/2024 ಕಲಂ: 61(1)(a), 103, 3(5) BNS ರಂತೆ ಪ್ರಕರಣ ದಾಖಲಾಗಿದೆ.
Congress Candidate Is A Rowdy Sheeter : 23 ವರ್ಷದಿಂದ ನಾನು ಕಾಂಗ್ರೆಸ್ಸಿನಲ್ಲಿದ್ದೇನೆ, ಟಿಕೆಟ್ ಸಿಗದೇ ಇರುವುದಕ್ಕೆ ನನಗೆ ದುಃಖವಿದೆ. ಹಾನಗಲ್ ಮೂಲದ 17 ಕ್ರಿಮಿನಲ್ ಕೇಸ್ ಇರುವ ರೌಡಿ ಶೀಟರ್ ಗೆ ಕಾಂಗ್ರೆಸ್ ಟಿಕೆಟ್ ಸಿಕ್ಕಿದೆ. ರೈತರು, ಬಡವರು ಸೇರಿದಂತೆ ಎಲ್ಲಾ ಸಮುದಾಯದವರ ಜೊತೆಗೆ ನನಗೆ ಉತ್ತಮ ಒಡನಾಟವಿದೆ. ಟಿಕೆಟ್ ವಿಚಾರದಲ್ಲಿ ಏನೋ ನಡೆದಿದೆ ಎನ್ನುವ ಸಂಶಯ ಬರುತ್ತಿದೆ ಎಂದು ಅಜ್ಜಂಪೀರ್ ಖಾದ್ರಿ ಹೇಳಿದ್ದಾರೆ.
ಕಿವೀಸ್ ನ ಈ ಆಟಗಾರನಿಗೆ ಹಿಂದಿ ತಿಳಿದಿತ್ತೆಂದು ಪಂತ್ ಗೇನು ಗೊತ್ತು? ಮಾತನಾಡಿ ಪೇಚಿಗೆ ಸಿಲುಕಿದ ಕೀಪರ್!
Ind Vs NZ - ಅದಕ್ಕೇ ಹೇಳುವುದು ಮಾತನಾಡುವ ಮೊದಲು ಸುತ್ತಮುತ್ತ ಯಾರಿದ್ದಾರೆ ಎಂಬುದರ ಬಗ್ಗೆ ಅರಿವಿರಬೇಕು ಎಂದು. ನ್ಯೂಜಿಲೆಂಡ್ ತಂಡದವರಿಗೆ ಹಿಂದಿಯಲ್ಲಿ ಮಾತನಾಡಿದರೆ ತಿಳಿಯುವುದಿಲ್ಲ ಎಂದು ರಿಷಬ್ ಪಂತ್ ಅವರು ಬೌಲಿಂಗ್ ಮಾಡುತ್ತಿದ್ದ ವಾಷಿಂಗ್ಟನ್ ಸುಂದರ್ ಗೆ ಹಿಂದಿಯಲ್ಲಿ ಸಲಹೆ ನೀಡುತ್ತಿದ್ದರು. ಗಮ್ಮತ್ತು ಅಂದರೆ ಕ್ರೀಸಿನಲ್ಲಿ ಬ್ಯಾಟಿಂಗ್ ಗೆ ಬಂದಿದ್ದುದು ಮುಂಬೈ ಮೂಲದ ಅಜಾಝ್ ಅಹ್ಮದ್! ಅವರಿಗೆ ಹಿಂದಿ ಚೆನ್ನಾಗಿ ಗೊತ್ತು ಎಂದು ರಿಷಬ್ ಪಂತ್ ಗೂ ತಿಳಿದಿರಲಿಲ್ಲ. ಆಗ ನಡೆದಿದ್ದೇನು? ಇಲ್ಲಿದೆ ಸ್ವಾರಸ್ಯಕರ ವರದಿ.
ಸಾಮಾಜಿಕ ಮಾಧ್ಯಮ ಸಾಲು ಸಾಲು ಸವಾಲುಗಳು
ಇಂದಿನ ದಿನಮಾನದಲ್ಲಿ ದಿನ ಪತ್ರಿಕೆ, ಪುಸ್ತಕಗಳನ್ನು ಕಣ್ಣೆತ್ತಿ ನೋಡದವರು ಇರಬಹುದು. ಆದರೆ ಸಾಮಾಜಿಕ ಮಾಧ್ಯಮ ಅಥವಾ ಸೋಶಿಯಲ್ ಮೀಡಿಯಾದ ಸಂಗ ಮಾಡದವರು ಬಹುಶಃ ಯಾರೂ ಇರಲಾರರು. ಯಾಕೆಂದರೆ ಈ ಸಾಮಾಜಿಕ ಮಾಧ್ಯಮವೆಂಬುದು ಅಷ್ಟೊಂದು ಪ್ರಭಾವಶಾಲಿ, ಜನಪ್ರಿಯ. ಇದು ಜನ ಸಮೂಹವನ್ನು ಪೂರ್ತಿಯಾಗಿ ತನ್ನ ತೆಕ್ಕೆಗೆ ಸೆಳೆದುಕೊಂಡು ಹಿಡಿದಿಟ್ಟುಕೊಂಡಿದೆ. ಆಧುನಿಕ ತಂತ್ರಜ್ಞಾನ ತಂದು ಕೊಟ್ಟಿರುವ ಈ ಸೌಲಭ್ಯ ಇಪ್ಪತ್ತೊಂದನೇ ಶತಮಾನದ ಅತ್ಯಂತ ಮಹತ್ವದ ಕೊಡುಗೆ. ಇದು ತಂದು ಕೊಟ್ಟಂತಹ ಅನುಕೂಲ, ಉಪಯೋಗ ಹಾಗೂ ಸ್ವಾತಂತ್ರ್ಯ ಅಪಾರ. ಎಲ್ಲ ಆವಿಷ್ಕಾರಗಳು ದುರುಪಯೋಗವಾಗುವಂತೆ ಇಲ್ಲಿಯೂ ಅನಾಹುತಕಾರಿ ಎನ್ನಬಹುದಾದಷ್ಟು ಕೆಟ್ಟ ಪರಿಣಾಮಗಳು ಸಮಾಜದ ಮೇಲಾಗುತ್ತಿವೆ. ಈ ಸಾಮಾಜಿಕ ಮಾಧ್ಯಮದ ಸ್ವರೂಪ, ವ್ಯಾಪಕತೆ ಹಾಗೂ ವೈವಿಧ್ಯ ಬೆರಗು ಹುಟ್ಟಿಸುವಂತಿದೆ. ಯೂಟ್ಯೂಬ್, ಫೇಸ್ಬುಕ್, ಟ್ವಿಟರ್, ಇನ್ಸ್ಟಾಗ್ರಾಂ, ವಾಟ್ಸ್ಆ್ಯಪ್, ಟೆಲಿಗ್ರಾಂ ಮುಂತಾದವುಗಳು ತುಂಬಾ ಜನಪ್ರಿಯವಾಗಿರುವ ಸಾಮಾಜಿಕ ಮಾಧ್ಯಮಗಳು. ಇದಲ್ಲದೆ ಹೊಸ ಹೊಸ ವಿಚಿತ್ರ ಹೆಸರುವುಳ್ಳಂತಹ ಹಲವಾರು ಮಾಧ್ಯಮಗಳೂ ಇವೆ. ಮುಂದಿನ ದಿನಗಳಲ್ಲಿ ಈ ಮಾಧ್ಯಮಗಳು ತಾಳ ಬಹುದಾದ ಸ್ವರೂಪವನ್ನು ಈ ಹಂತದಲ್ಲಿ ಊಹಿಸಲು ಕೂಡ ಸಾಧ್ಯವಿಲ್ಲ. ಯಾವುದೇ ಹೊಸ ಸಂಶೋದನೆ, ತಂತ್ರಜ್ಞಾನ ತಂದು ಕೊಡುವ ಅನುಕೂಲತೆ, ಸೌಲಭ್ಯಗಳೊಂದಿಗೆ ಕೆಲವೊಂದು ಅಡ್ಡ ಪರಿಣಾಮಗಳೂ ಸಹಜ. ಆದ್ದರಿಂದ ಅಂತರ್ಜಾಲದ ಅನ್ವೇಷಣೆಯ ಮೂಲಕ ಅಸ್ತಿತ್ವಕ್ಕೆ ಬಂದಿರುವ, ಅಪಾರ ಸಾಧ್ಯತೆಗಳ ಈ ಸಾಮಾಜಿಕ ಮಾಧ್ಯಮಗಳು ಸೃಷ್ಟಿಸಿರುವ ಸಮಸ್ಯೆಗಳನ್ನು ಅರಿತು ಕೊಳ್ಳುವುದು ಬಹುಮುಖ್ಯವಾಗುತ್ತದೆ. ಕೆಲವೊಮ್ಮೆ ಇಲ್ಲಿ ಬಹುತೇಕರಿಗೆ ಉಪಕಾರಕ್ಕಿಂತ ಉಪದ್ರವವೇ ಹೆಚ್ಚು ಎಂಬ ಭಾವನೆ ಮನಸ್ಸಿನಲ್ಲಿ ಹಾದು ಹೋಗಬಹುದು. ಹಾಗಂತ ಇವುಗಳನ್ನು ಬಹಿಷ್ಕರಿಸುವಂತೆಯೂ ಇಲ್ಲ, ನಿಷೇಧಿಸುವಂತೆಯೂ ಇಲ್ಲ. ಬದಲಾಗಿ ಕೆಲವೊಂದು ಕಟ್ಟುಪಾಡು, ಮಿತಿಗಳನ್ನು ಸರಕಾರ ವಿಧಿಸ ಬಹುದಾಗಿದೆ. ಜೊತೆಗೆ ವೈಯಕ್ತಿಕ ನೆಲೆಯಲ್ಲಿ ಸ್ವಯಂನಿಯಂತ್ರಣವೂ ಅಗತ್ಯ. ಮರ್ಕಟ ಮನಸ್ಸಿನ ಮನೋನಿಗ್ರಹವೂ ಸಮಸ್ಯೆ ಪರಿಹಾರದ ಒಂದು ವಿಧಾನ. ಮನುಷ್ಯ ನಡವಳಿಕೆ ಎಷ್ಟೊಂದು ವಿಚಿತ್ರ ನೋಡಿ. ಯಾವನೋ ಒಬ್ಬ ರಾತ್ರಿ ಹಗಲು ತಲೆ ಕೆಡಿಸಿ ಕೊಂಡು ಸಮಯ ಕೊಟ್ಟು ಶ್ರಮ ವಹಿಸಿ ಮಾನವ ಜನಾಂಗದ ಒಳಿತಿಗಾಗಿ ಯಾವುದೋ ಒಂದು ಅಪೂರ್ವವಾದ ತಂತ್ರಜ್ಞಾನವನ್ನು ಶೋಧಿಸುತ್ತಾನೆ. ಆ ತಂತ್ರಜ್ಞಾನ ಬೆಳಕಿಗೆ ಬರುತ್ತಲೇ ಅದನ್ನು ದುರ್ಬಳಕೆ ಮಾಡುವಂತಹ ಒಂದು ವಿಕೃತ ಮನಸ್ಥಿತಿಯ ವರ್ಗ ನಮ್ಮ ನಡುವಿನಿಂದಲೇ ಹುಟ್ಟಿ ಬರುತ್ತದೆ. ಈಗ ಸಾಮಾಜಿಕ ಮಾಧ್ಯಮಗಳ ವಿಷಯದಲ್ಲಿ ನಡೆಯುತ್ತಿರುವುದು ಕೂಡಾ ಅದೇ ಆಗಿದೆ. ಇಲ್ಲಿ ಹಣಕಾಸಿನ ವಂಚನೆ, ವೀಕ್ಷಣಾ ವ್ಯಸನ, ಅಶ್ಲೀಲತೆ, ಅರ್ಧ ಸತ್ಯ- ಸುಳ್ಳುಗಳ ಹರಡುವಿಕೆ, ಸಾಮಾಜಿಕ ಸಾಮರಸ್ಯ ಕದಡುವಿಕೆ ಇತ್ಯಾದಿ ಆತಂಕಕಾರಿ ಸಮಸ್ಯೆಗಳು ಸಾಲು ಸಾಲುಗಳಾಗಿ ನಿಂತು ಸವಾಲೊಡ್ಡುತ್ತಿವೆ. ಈ ಸಮಸ್ಯೆಗಳನ್ನು ಒಂದೊಂದಾಗಿ ಎತ್ತಿಕೊಂಡು ವಿಸ್ತೃತವಾಗಿ ಚರ್ಚಿಸಿ ವಿಶ್ಲೇಷಿಸುವಷ್ಟು ಅಗಾಧತೆಯ ಆಯಾಮ ಇವುಗಳಿಗೆ ಇವೆ. ಆದ್ದರಿಂದ ಕೆಲವೊಂದು ಸಮಸ್ಯೆಗಳನ್ನು ಸ್ಥೂಲವಾಗಿ ಚರ್ಚಿಸಿ ಕೊಂಡು ಮುಂದುವರಿಯಬಹುದು ಎಂದನಿಸುತ್ತದೆ. ವಿದ್ಯಾರ್ಥಿಗಳು, ಯುವಜನರನ್ನು ವಿಪರೀತವಾಗಿ ಆಕರ್ಷಿಸಿ ಸೆಳೆದುಕೊಂಡಿರುವ ಸಾಮಾಜಿಕ ಮಾಧ್ಯಮಗಳು ಇಂದು ಹೆತ್ತವರ ನಿದ್ದೆ ಕೆಡಿಸಿರುವುದು ನಿಜ. ಹಲವಾರು ಯುವಜನರ ವಿದ್ಯಾಭ್ಯಾಸ, ಭವಿಷ್ಯಕ್ಕೆ ಕಂಟಕವಾಗಿ ಹೋಗಿರುವ ಈ ಮಾಧ್ಯಮಗಳು ಇಂದು ಸಾಮಾಜಿಕ ಸಮಸ್ಯೆಯಾಗಿ ಪರಿಣಮಿಸಿದೆ. ಕಂಪ್ಯೂಟರ್, ಮೊಬೈಲ್ಗಳ ನಿರಂತರ ವೀಕ್ಷಣೆಯೆನ್ನುವುದು ಕೆಲವರನ್ನು ವ್ಯಸನದಂತೆ ಕಾಡುತ್ತಿದೆ. ‘ಇಂಟರ್ ನೆಟ್ ಅಡಿಕ್ಷನ್’ ಎಂಬುದು ಕಾಯಿಲೆಯ ಸ್ವರೂಪ ಪಡೆದು ಕೊಂಡಿರುವುದನ್ನು ತಿಳಿದು ಕೊಂಡರೆ ಸಾಕು, ಈ ಸಮಸ್ಯೆಯ ಗಂಭೀರತೆಯನ್ನು ಅರ್ಥ ಮಾಡಿ ಕೊಳ್ಳಬಹುದು. ಇದಕ್ಕಾಗಿ ಇಂದು ಎಷ್ಟೋ ಮಂದಿ ಮಾನಸಿಕ ತಜ್ಞರಿಂದ ಆಪ್ತ ಸಮಾಲೋಚನೆ, ಚಿಕಿತ್ಸೆ ಪಡೆದು ಕೊಳ್ಳಬೇಕಾಗಿ ಬಂದಿರುವುದು ಕಣ್ಣೆದೆರುಗಿನ ವಾಸ್ತವ. ಸಾಮಾಜಿಕ ಮಾಧ್ಯಮಗಳನ್ನು ವೈಚಾರಿಕ, ವೈಜ್ಞಾನಿಕ ವಿಷಯಗಳ ಮಂಡನೆ, ಚರ್ಚೆಗಳಿಗೆ ಬಳಸುವುದರಲ್ಲಿ ಅರ್ಥವಿದೆ. ಸದಭಿರುಚಿಯುಳ್ಳ ಮನರಂಜನೆಯೂ ಒಪ್ಪುವಂತಹದ್ದೆ. ಆದರೆ ಪ್ರಸಕ್ತ ಇಲ್ಲಿ ನಡೆಯುತ್ತಿರುವುದಾದರೂ ಏನು? ಕಾಲ ಹರಣ ಮಾಡುವುದಕ್ಕೋ, ಯಾವುದೋ ದುರುದ್ದೇಶ ಈಡೇರಿಸಲೋ ಈ ಮಾಧ್ಯಮಗಳು ಬಳಕೆಯಾಗುತ್ತಿರುವುದೇ ಹೆಚ್ಚು. ಜನಪ್ರಿಯ ಮಾಧ್ಯಮವಾಗಿರುವ ಫೇಸ್ಬುಕ್ನಲ್ಲಿ ವ್ಯೆದ್ಯಕೀಯ, ಸಾಹಿತ್ಯಿಕ ವಿಚಾರಗಳು ಉಪಯುಕ್ತವೆನಿಸುತ್ತವೆ. ಹಾಗೆಯೇ ಕೆಲವೊಂದು ಮಾಹಿತಿ, ಸಮಕಾಲೀನ ಬೆಳವಣಿಗೆಗಳು ಗಮನ ಸೆಳೆಯವಂತಿರುತ್ತವೆ. ಆದರೆ ‘ಫೇಸ್ಬುಕ್ ಫ್ರೆಂಡ್ಸ್’ ಎಂಬ ಪರಿಕಲ್ಪನೆ ಇರುವ ಈ ಮಾಧ್ಯಮದಲ್ಲಿ ಹೊಸ ಪರಿಚಯ, ಸ್ನೇಹ ಎನ್ನುವುದು ತಲೆನೋವು ತರುವುದೂ ಇದೆ. ಅನೈತಿಕ ಸಂಬಂಧ ಹಾಗೂ ವ್ಯವಹಾರಿಕ ಸಂಬಂಧಕ್ಕಾಗಿಯೇ ಕೆಲವರು ಇಂತಹ ಮಾಧ್ಯಮದಲ್ಲಿ ತೊಡಗಿಸಿ ಕೊಂಡಿರುವುದು ಸುಳ್ಳಲ್ಲ. ಇದು ಸಾಮಾಜಿಕ ಸ್ವಾಸ್ಥ್ಯ ಕೆಡಿಸುವಂತಹ ಬೆಳವಣಿಗೆ. ಫೇಸ್ಬುಕ್ನಲ್ಲಿ ಇಂದು ವೈಚಾರಿಕ, ಜಾತ್ಯತೀತ ಅಭಿಪ್ರಾಯವನ್ನು ಮುಕ್ತವಾಗಿ ವ್ಯಕ್ತ ಪಡಿಸುವುದು ಸುಲಭದ ಮಾತಲ್ಲ. ಸಾಕಷ್ಟು ಪೂರ್ವಗ್ರಹ ಪೀಡಿತ ವ್ಯಕ್ತಿಗಳು ಇಲ್ಲಿರುವುದರಿಂದ ಪರಿಣಾಮಗಳನ್ನು ಎದುರಿಸುವಂತಹ ಎದೆಗಾರಿಕೆಯೂ ಅಗತ್ಯ. ನಾವು ಭಿನ್ನಮತ, ರಚನಾತ್ಮಕ ಟೀಕೆಗಳನ್ನು ಸಹಜವಾಗಿಯೆ ಸ್ವೀಕರಿಸಬಹುದು. ಆದರೆ ಇಂತಹ ವ್ಯಕ್ತಿಗಳ ಆಕ್ರಮಣಕಾರಿ ಹೀಯಾಳಿಕೆ, ಬೈಗುಳಗಳ ದಾಳಿ ಎದುರಿಸುವುದು ಸುಲಭದ ಮಾತಲ್ಲ. ಸಭ್ಯರಾದವರು ಇಲ್ಲಿ ಮಾನಸಿಕ ಆಘಾತ, ನೋವು ಅನುಭವಿಸುವುದರಿಂದ ಪಾರಾಗುವಂತಿಲ್ಲ. ಹೀಗಾಗಿ ಇಂತಹ ಮಾಧ್ಯಮಗಳಲ್ಲಿ ಆರೋಗ್ಯಕಾರಿಯಾದ ವಿಚಾರ ವಿನಿಮಯ, ಚರ್ಚೆ ಎನ್ನುವುದು ಕನಸಿನ ಮಾತು. ಈಗೀಗ ವಾಟ್ಸ್ಆ್ಯಪ್ ಎನ್ನುವುದು ಅಗ್ಗದ ಜೋಕ್ಸ್, ಪಕ್ವತೆಯಿಲ್ಲದ ವಿಚಾರಗಳಿಗೆ ಸೀಮಿತವಾಗುವುದೇ ಹೆಚ್ಚು. ಆದರೆ ನೋವಿನ ವಿಷಯವೆಂದರೆ ಇದು ಸಂಬಂಧಿಕರ, ಸಹದ್ಯೋಗಿಗಳ, ಗೆಳೆಯರ ಸೌಹಾರ್ದ ಸಂಬಂಧಗಳಿಗೆ ತೊಡಕಾಗುವಂತಹದ್ದು. ಕೆಲವರಿಗೆ ತಮ್ಮ ವೈಯಕ್ತಿಕ ರಾಜಕೀಯ, ಸಾಮಾಜಿಕ, ಧಾರ್ಮಿಕ ನಿಲುವುಗಳನ್ನು ಇನ್ನೊಬ್ಬರ ಮೇಲೆ ಹೇರುವುದು ತಪ್ಪೆಂದು ತಿಳಿದಿದ್ದರೂ ಇಂತಹ ಮನೋಭಾವದವರು ಇನ್ನೊಬ್ಬರ ಅಭಿರುಚಿಯನ್ನು ಅರ್ಥ ಮಾಡಿಕೊಳ್ಳದೆ ತಮ್ಮ ನಿಲುವನ್ನು ಸಮರ್ಥಿಸಿಕೊಳ್ಳುವಂತಹ; ತಮ್ಮಿಷ್ಟದ ವೀಡಿಯೊ, ಆಡಿಯೊ ಕ್ಲಿಪ್ಸ್ಗಳನ್ನು ರವಾನಿಸುತ್ತ ಆತ್ಮೀಯ ಬಳಗದವರ ಮನಸ್ಸನ್ನು ನೋಯಿಸುವುದಲ್ಲದೆ ಸಂಬಂಧಗಳಲ್ಲಿ ಬಿರುಕು ಮೂಡಿಸುತ್ತಾರೆ. ಈಗ ಕೆಲವು ನಿರ್ದಿಷ್ಟ ಉದ್ದೇಶಗಳಿಗೆ ವಾಟ್ಸ್ಆ್ಯಪ್ ಗ್ರೂಪ್ಗಳನ್ನು ಸೃಷ್ಟಿಸಿಕೊಳ್ಳುವುದಿದೆ. ಇಂತಹ ಸಂದರ್ಭದಲ್ಲಿ ಈ ಜಿಗುಟು ಮನೋಭಾವದವರು ಯಾವುದೋ ನಿರ್ದಿಷ್ಟ ಉದ್ದೇಶಗಳಿಗೋಸ್ಕರ ಸೃಷ್ಟಿಸಲಾದ ಗುಂಪುಗಳಲ್ಲಿ ಸಹ ತಮ್ಮ ಮೂಗಿನ ನೇರಕ್ಕಿರುವ ಸಂಬಂಧ ಪಡದ ವಿಷಯ, ದೃಶ್ಯಾವಳಿಗಳನ್ನು ಕಳುಹಿಸಿ ಅಹಿತಕರ ಪರಿಣಾಮ ಉಂಟು ಮಾಡುತ್ತಾರೆ. ಕೊನೆಗೆ ಈ ಗುಂಪುಗಳು ಒಡೆಯುವ ಹಂತ ತಲುಪುತ್ತದೆ. ದೇಶದ ಪ್ರಮುಖ ರಾಜಕೀಯ ಪಕ್ಷಗಳೂ ಇಂದು ಸಾಮಾಜಿಕ ಮಾಧ್ಯಮಗಳನ್ನು ಪಕ್ಷದ ನೆಲೆ ವಿಸ್ತರಣೆ, ಮತಗಳಿಕೆಗಾಗಿ ಬಳಸಿ ಕೊಳ್ಳುತ್ತಿವೆ. ಇದರಲ್ಲಿ ತಪ್ಪೇನಿಲ್ಲ. ಆದರೆ ಅವುಗಳ ಗುಣ ಮಟ್ಟ ಅಪೇಕ್ಷಣೀಯ ಮಟ್ಟದಲ್ಲಿ ಇಲ್ಲದಿರುವುದು ಬೇಸರದ ವಿಚಾರ. ಜನತೆಗೆ ಮಾದರಿಯಾಗಬೇಕಾದ ಆಡಳಿತ ನಡೆಸುವಂತಹ ಪಕ್ಷಗಳೇ ಅಗ್ಗದ ತಂತ್ರಗಾರಿಕೆಗೆ ಶರಣಾಗಿರುವುದು ನಿಜಕ್ಕೂ ಖೇದಕರ. ಒಂದು ಕಡೆ ತಮ್ಮ ನಾಯಕನ ವ್ಯಕ್ತಿತವನ್ನು ಉತ್ಪ್ರೇಕ್ಷಿಸಿಕೊಳ್ಳುತ್ತಾ ಇನ್ನೊಂದೆಡೆ ಪ್ರತಿ ಪಕ್ಷದ ನಾಯಕನ್ನು ಅವಮಾನಕಾರಿಯಾಗಿ ಹೀಯಾಳಿಸುವುದು ಕಂಡು ಬರುತ್ತದೆ. ಎಲ್ಲಕ್ಕಿಂತ ಆಘಾತಕಾರಿಯಾದ ಸಂಗತಿಯೆಂದರೆ ಅರೆ ಸತ್ಯ-ಸುಳ್ಳು ಕಥಾನಕಗಳನ್ನು ಚುನಾವಣೆ ಸಂದರ್ಭದಲ್ಲಿ ವ್ಯವಸ್ಥಿತವಾಗಿ ಹರಡುವುದು. ಇದಕ್ಕೆ ಪೂರಕವಾಗಿ ಆ ಪಕ್ಷಗಳ ಬೆಂಬಲಿಗರು ಸಾಮಾಜಿಕ ಸಾಮರಸ್ಯ ಕದಡುವ ರೀತಿಯಲ್ಲಿ ಪ್ರಚೋದನಕಾರಿ ಆಡಿಯೊ, ವೀಡಿಯೊಗಳನ್ನು ವ್ಯಾಪಕವಾಗಿ ತೇಲಿ ಬಿಡುತ್ತಾರೆ. ಆದ್ದರಿಂದ ಈ ವಿಷಯದಲ್ಲಿ ಪಕ್ಷಗಳ ಮುಂದಾಳುಗಳು ಹಾಗೂ ಅವುಗಳ ‘ಐಟಿ ಸೆಲ್’ಗಳು ಅಗತ್ಯವಾಗಿ ಆತ್ಮ ಶೋಧನೆ ಮಾಡಿಕೊಳ್ಳುವುದು ಒಳಿತು. ಸಾಮಾಜಿಕ ಮಾಧ್ಯಮಗಳ ಅವಾಂತರಗಳನ್ನು ತಡೆಗಟ್ಟುವುದು ಸುಲಭದ ಮಾತಲ್ಲ. ಸರಕಾರ ಯಾವುದೇ ಕಾನೂನು ಜಾರಿ ತಂದರೂ ಅದರ ಪರಿಣಾಮಕಾರಿ ಅನುಷ್ಠಾನದಲ್ಲಿ ಸೋಲಾಗುತ್ತಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಆದರೂ ಸರಕಾರ, ನ್ಯಾಯಾಂಗ ಹಾಗೂ ದೇಶದ ಪ್ರಜ್ಞಾವಂತ ಜನತೆ ಒಟ್ಟಾಗಿ ಕೈ ಜೊಡಿಸಿದರೆ ಪರಿಹಾರ ಇಲ್ಲದಿಲ್ಲ. ಈ ನಿಟ್ಟಿನಲ್ಲಿ ಎಳೆಯ ಮಕ್ಕಳು, ಹದಿ ಹರೆಯದವರು ಹಾಗೂ ಮುಗ್ಧರಾದ ಅವಿದ್ಯಾವಂತರ ಹಿತದೃಷ್ಟಿ ನಮಗೆ ಮುಖ್ಯವಾಗಬೇಕು. ಜೊತೆಗೆ ಸುಸಂಸ್ಕೃತ ಸಮಾಜ ನಿರ್ಮಾಣದ ಆಶಯ ಕೂಡಾ.
ಚನ್ನಪಟ್ಟಣ ಉಪ ಚುನಾವಣೆ: ನಿಖಿಲ್ ಕುಮಾರಸ್ವಾಮಿಗಿದು ಮಾಡು ಇಲ್ಲವೇ ಮಡಿ ಹೋರಾಟ?
ಚನ್ನಪಟ್ಟಣ ಉಪ ಚುನಾವಣೆ ಕಣ ಗರಿಗೆದರಿದೆ. ಚನ್ನಪಟ್ಟಣ ಅಖಾಡದಲ್ಲಿ ಸಿಪಿ ಯೋಗೇಶ್ವರ್ ಹಾಗೂ ನಿಖಿಲ್ ಕುಮಾರಸ್ವಾಮಿ ಇದ್ದಾರೆ. ಕಳೆದ ಎರಡು ಚುನಾವಣೆಯಲ್ಲಿ ಸೋಲು ಕಂಡ ನಿಖಿಲ್ ಕುಮಾರಸ್ವಾಮಿಗೆ ಚನ್ನಪಟ್ಟಣ ಚುನಾವಣೆ ಮಾಡು ಇಲ್ಲವೇ ಮಡಿ ಹೋರಾಟವೇ? ಎಂಬ ಪ್ರಶ್ನೆ ಉದ್ಭವಿಸಿದೆ. ಹೀಗಾಗಿ ಚನ್ನಪಟ್ಟಣದಲ್ಲಿ ಪುತ್ರನನ್ನು ಗೆಲ್ಲಿಸಲು ಎಚ್ಡಿ ಕುಮಾರಸ್ವಾಮಿ ರಣತಂತ್ರ ರೂಪಿಸುತ್ತಾರೆ. ಒಂದು ವೇಳೆ ಈ ಚುನಾವಣೆಯಲ್ಲೂ ನಿಖಿಲ್ ಸೋತರೆ ಅವರು ಅವರ ರಾಜಕೀಯ ಜೀವನದ ಮೇಲೆ ಪರಿಣಾಮ ಬೀರಲಿದೆ.
ಕಲಬುರಗಿ: ಟಿಪ್ಪರ್ ಢಿಕ್ಕಿ, ರಸ್ತೆ ದಾಟುತ್ತಿದ್ದ ಮಹಿಳೆ ಸ್ಥಳದಲ್ಲೇ ಸಾವು
ಕಲಬುರಗಿ: ರಸ್ತೆ ದಾಟುತ್ತಿದ್ದ ಮಹಿಳೆಗೆ ಟಿಪ್ಪರ್ ಢಿಕ್ಕಿಯಾದ ಪರಿಣಾಮ ಮಹಿಳೆಯೊಬ್ಬರು ಮೃತಪಟ್ಟಿರುವ ಘಟನೆ ನಗರದ ಹುಮನಬಾದ್ ರಿಂಗ್ ರೋಡ್ನಲ್ಲಿ ನಡೆದಿದೆ. ಕಲಬುರಗಿ ತಾಲ್ಲೂಕಿನ ಗಣಜಲಖೇಡ ಗ್ರಾಮದ ಅನುಸೂಯ (55)ಮೃತಪಟ್ಟವರು. ರಸ್ತೆ ದಾಟುವಾಗ ಅನುಸೂಯಗೆ ಟಿಪ್ಪರ್ ಢಿಕ್ಕಿಯಾಗಿದೆ. ಪರಿಣಾಮ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಈ ಕುರಿತಾಗಿ ಕಲಬುರಗಿ ಸಂಚಾರಿ ಠಾಣೆ-2 ರಲ್ಲಿ ಪ್ರಕರಣ ದಾಖಲಾಗಿದೆ.
ಒಡಿಶಾ, ಪಶ್ಚಿಮ ಬಂಗಾಳಕ್ಕೆ ಅಪ್ಪಳಿಸಿದ ಡಾನಾ ಚಂಡಮಾರುತ: ಭಾರಿ ಮಳೆ, ಬಿರುಗಾಳಿ
ಹೊಸದಿಲ್ಲಿ: ಡಾನಾ ಚಂಡಮಾರುತವು ಒಡಿಶಾ ಕರಾವಳಿಗೆ ಅಪ್ಪಳಿಸಿದ್ದು, ಹಲವು ಪ್ರದೇಶಗಳಲ್ಲಿ ಭಾರಿ ಮಳೆ ಮತ್ತು ಬಿರುಗಾಳಿಗೆ ಕಾರಣವಾಗಿದೆ. ಕೇಂದ್ರಪಾರ ಜಿಲ್ಲೆಯ ಭಿಟಾರ್ ಕನಿಕ ಹಾಗೂ ಭದ್ರಕ್ ಜಿಲ್ಲೆಯ ಧಮ್ರ ನಡುವೆ ಈ ಚಂಡಮಾರುತ ಅಪ್ಪಳಿಸಿದ್ದು, ಗಂಟೆಗೆ ಸುಮಾರು 110 ಕಿಮೀ ವೇಗದಲ್ಲಿ ಬಿರುಗಾಳಿ ಬೀಸುತ್ತಿದೆ. ಒಡಿಶಾದ ಕರಾವಳಿ ಜಿಲ್ಲೆಗಳಾದ ಭದ್ರಕ್, ಕೇಂದ್ರಪಾರ, ಬಾಲಸೋರ್ ಹಾಗೂ ಜಗತ್ ಸಿಂಗ್ ಪುರ್ ಗೆ ಮಧ್ಯರಾತ್ರಿ ಗಂಟೆಗೆ ಸುಮಾರು 110 ಕಿಮೀ ವೇಗದ ಬಿರುಗಾಳಿಯೊಂದಿಗೆ ಡಾನಾ ಚಂಡಮಾರುತ ಅಪ್ಪಳಿಸಿದ್ದು, ಈ ಭಾಗಗಳಲ್ಲಿ ಭಾರಿ ಪ್ರಮಾಣದ ಮಳೆಯಾಗುತ್ತಿದೆ. ಈ ಚಂಡಮಾರುತಕ್ಕೆ ಖತರ್ ದೇಶವು ಡಾನಾ ಎಂದು ನಾಮಕರಣ ಮಾಡಿದ್ದು, ಇಂದು ಮಧ್ಯಾಹ್ನದ ವೇಳೆಗೆ ಹಂತಹಂತವಾಗಿ ಸುಂಟರಗಾಳಿಯಾಗಿ ದುರ್ಬಲಗೊಳ್ಳುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಚಂಡಮಾರುತದ ತೀವ್ರತೆಗೆ ಹಲವೆಡೆ ಮರಗಳು ಉರುಳಿ ಬಿದ್ದಿವೆ ಎಂದು ವರದಿಯಾಗಿದೆ. ನೆರೆಯ ಪಶ್ಚಿಮ ಬಂಗಾಳದ ಪೂರ್ವ ಮಿಡ್ನಾಪೂರ್ ಕೂಡಾ ಚಂಡಮಾರುತದಿಂದ ಹಾನಿ ಅನುಭವಿಸಿದೆ. ಗುರುವಾರ ಸಂಜೆ ಮುನ್ನೆಚ್ಚರಿಕೆಯ ಕ್ರಮವಾಗಿ ಅಮಾನತುಗೊಳಿಸಲಾಗಿದ್ದ ಭುವನೇಶ್ವರದಲ್ಲಿನ ಬಿಜು ಪಟ್ನಾಯಕ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಹಾಗೂ ಕೋಲ್ಕತ್ತಾದಲ್ಲಿನ ನೇತಾಜಿ ಸುಭಾಷ್ ಚಂದ್ರ ಬೋಸ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿನ ವೈಮಾನಿಕ ಸೇವೆಗಳು ಇಂದು ಬೆಳಗ್ಗೆ 8 ರಿಂದ ಪುನಾರಂಭಗೊಂಡಿವೆ. ಎರಡೂ ರಾಜ್ಯಗಳಲ್ಲಿನ ಪ್ರಾಧಿಕಾರಗಳು ಲಕ್ಷಾಂತರ ಮಂದಿಯನ್ನು ತೆರವುಗೊಳಿಸಿದ್ದು, ಶಾಲೆಗಳನ್ನು ಮುಚ್ಚಲಾಗಿದೆ. 400ಕ್ಕೂ ಹೆಚ್ಚು ರೈಲುಗಳ ಸೇವೆಯನ್ನು ರದ್ದುಗೊಳಿಸಲಾಗಿದ್ದು, ತೀವ್ರ ಸ್ವರೂಪದ ಚಂಡಮಾರುತದ ಕಾರಣಕ್ಕೆ ವಿಮಾನ ಕಾರ್ಯಾಚರಣೆಯನ್ನೂ ಅಮಾನತುಗೊಳಿಸಲಾಗಿದೆ.
ಸಂಪಾದಕೀಯ | ಕಾಂಗ್ರೆಸ್ಗೆ ಹೊಸ ದಿಕ್ಕು ನೀಡಬಹುದೇ ಪ್ರಿಯಾಂಕಾ ರಾಜಕೀಯ ಪ್ರವೇಶ
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
Karnataka Rains: ರಾಜ್ಯದ ಈ ಭಾಗಗಳಲ್ಲಿ ಮುಂದಿನ ಮೂರು ಗಂಟೆಗಳಲ್ಲಿ ಭಾರೀ ಮಳೆ ಮುನ್ಸೂಚನೆ
Karnataka Rains: ರಾಜ್ಯದಲ್ಲಿ ಮಳೆರಾಯ ಮತ್ತೆ ಆರ್ಭಟ ಶುರು ಮಾಡಿದ್ದಾನೆ. ಈಗಾಗಲೇ ಸುರಿದ ಭಾರೀ ಮಳೆಯಿಂದ ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ದೊಡ್ಡ ದೊಡ್ಡ ಪ್ರಮಾಣದಲ್ಲಿ ಅವಾಂತರಗಳೇ ಸೃಷ್ಟಿಯಾಗಿವೆ. ಇನ್ನು ಇಂದು (ಅಕ್ಟೋಬರ್ 25) ಈ ಭಾಗಗಳಲ್ಲಿ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಹಾಗಾದರೆ ಎಲ್ಲೆಲ್ಲಿ ಎಂದು ಇಲ್ಲಿ ತಿಳಿಯಿರಿ. ರಾಜ್ಯ ರಾಜಧಾನಿ
Dina Bhavishya : ಕುಟುಂಬದ ಆಪ್ತರೊಂದಿಗೆ ಗೌಪ್ಯ ವಿಷಯಗಳನ್ನು ಹಂಚಿಕೊಳ್ಳುವ ಮುನ್ನ ಎಚ್ಚರ
Dina Bhavishya: ಶ್ರೀ ಶಕೇ 1946, ಕ್ರೋಧಿನಾಮ ಸಂವತ್ಸರ, ದಕ್ಷಿಣಾಯಣ, ಶರದ್ ಋತು, ಆಶ್ವಿನ ಮಾಸ, ಕೃಷ್ಣ ಪಕ್ಷದ ನವಮಿ ದಿನವಾದ ಇಂದು ದ್ವಾದಶ ರಾಶಿಗಳ ಭವಿಷ್ಯ ಹೇಗಿದೆ ಎಂಬ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ. The post Dina Bhavishya : ಕುಟುಂಬದ ಆಪ್ತರೊಂದಿಗೆ ಗೌಪ್ಯ ವಿಷಯಗಳನ್ನು ಹಂಚಿಕೊಳ್ಳುವ ಮುನ್ನ ಎಚ್ಚರ first appeared on Vistara News .
AB de Villiers: ಮತ್ತೊಮ್ಮೆ ಕನ್ನಡಿಗರ ಮನಗೆದ್ದ ಎಬಿ ಡಿವಿಲಿಯರ್ಸ್
ಆರ್ಸಿಬಿ ತಂಡದ ಮಾಜಿ ಆಟಗಾರ, ಮಿಸ್ಟರ್ 360 ಎಂದೇ ಹೆಸರಾಗಿರುವ ಎಬಿ ಡಿವಿಲಿಯರ್ಸ್ ಮತ್ತೊಮ್ಮೆ ಕನ್ನಡಿಗರ ಮನಗೆದ್ದಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ಫ್ರಾಂಚೈಸಿ ಮಾಡಿದ ಟ್ವೀಟ್ಗೆ ಕನ್ನಡದಲ್ಲಿ ಪ್ರತಿಕ್ರಿಯೆ ನೀಡಿದ ಎಬಿಡಿ ನಡೆಗೆ ಕನ್ನಡಿಗರು ಸಖತ್ ಖುಷಿಯಾಗಿದ್ದಾರೆ. ಇರೊ ಒಂದು ಹೃದಯಾನೆ ಎಷ್ಟು ಸರಿ ಗೆಲ್ತೀರಾ ಎಂದು ಹಾಡಿ ಹೊಗಳಿದ್ದಾರೆ. ದಕ್ಷಿಣ ಆಫ್ರಿಕಾ ಮಾಜಿ ಆಟಗಾರ
ಬಾಬಾ ಸಿದ್ದೀಕಿ ಪುತ್ರ ಜೀಶನ್ ಸಿದ್ದೀಕಿ ಎನ್ ಸಿಪಿಗೆ ಸೇರ್ಪಡೆ: ಬಾಂದ್ರಾ ಪೂರ್ವದಿಂದ ಸ್ಪರ್ಧೆ
ಮಹಾರಾಷ್ಟ್ರ: ಮಾಜಿ ಸಚಿವ ದಿವಂಗತ ಬಾಬಾ ಸಿದ್ದೀಕಿ ಪುತ್ರ ಜೀಶನ್ ಸಿದ್ದೀಕಿ ಶುಕ್ರವಾರ ಅಜಿತ್ ಪವಾರ್ ನೇತೃತ್ವದ ನ್ಯಾಶನಲಿಸ್ಟ್ ಕಾಂಗ್ರೆಸ್ ಪಾರ್ಟಿ (NCP) ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಮಹಾರಾಷ್ಟ್ರ ವಿಧಾನ ಪರಿಷತ್ ಚುನಾವಣೆಯ ಸಂದರ್ಭದಲ್ಲಿ ಪಕ್ಷದ ವಿರುದ್ಧ ಮತ ಚಲಾಯಿಸಿದ ಆರೋಪದ ಮೇಲೆ ಅವರನ್ನು ಕಳೆದ ಆಗಸ್ಟ್ ನಲ್ಲಿ ಕಾಂಗ್ರೆಸ್ ನಿಂದ ಉಚ್ಚಾಟಿಸಲಾಗಿತ್ತು. “ನನಗೆ ಮತ್ತು ನನ್ನ ಕುಟುಂಬಕ್ಕೆ ಇದು ಭಾವನಾತ್ಮಕ ದಿನ. ಈ ಕಷ್ಟದ ಸಮಯದಲ್ಲಿ ನನ್ನ ಮೇಲೆ ನಂಬಿಕೆ ಇಟ್ಟಿದ್ದಕ್ಕಾಗಿ ಅಜಿತ್ ಪವಾರ್, ಪ್ರಫುಲ್ ಪಟೇಲ್, ಸುನಿಲ್ ತಟ್ಕರೆ ಅವರಿಗೆ ನಾನು ಕೃತಜ್ಞನಾಗಿದ್ದೇನೆ. ನಾನಗೆ ಬಾಂದ್ರಾ ಪೂರ್ವದಿಂದ ಟಿಕೆಟ್ ನೀಡಲಾಗಿದೆ. ಎಲ್ಲಾ ಜನರ ಪ್ರೀತಿ ಮತ್ತು ಬೆಂಬಲದೊಂದಿಗೆ ನಾನು ಬಾಂದ್ರಾ ಪೂರ್ವ ಕ್ಷೇತ್ರದಲ್ಲಿ ಮತ್ತೊಮ್ಮೆ ಗೆಲ್ಲುತ್ತೇನೆ ಎಂದು ನನಗೆ ಖಾತ್ರಿಯಿದೆ ಎಂದು ಎನ್ಸಿಪಿಗೆ ಸೇರಿದ ನಂತರ ಜೀಶನ್ ಹೇಳಿದ್ದಾರೆ. 2019ರ ಚುನಾವಣೆಯಲ್ಲಿ, ಮುಂಬೈ ಮಹಾನಗರ ಪಾಲಿಕೆಯ ಮಾಜಿ ಮೇಯರ್, ಶಿವಸೇನೆಯ ನಾಯಕ ವಿಶ್ವನಾಥ್ ಮಹದೇಶ್ವರ್ ಅವರನ್ನು ಸೋಲಿಸಿ ಜೀಶನ್ ಸಿದ್ದೀಕಿ ಬಾಂದ್ರಾ ಪೂರ್ವ ಕ್ಷೇತ್ರದಿಂದ ವಿಧಾನಸಭೆಗೆ ಆಯ್ಕೆಯಾಗಿದ್ದರು. ಎನ್ ಸಿಪಿ ನಾಯಕ ಮತ್ತು ಮಹಾರಾಷ್ಟ್ರದ ಮಾಜಿ ಸಚಿವ ಬಾಬಾ ಸಿದ್ದೀಕಿ ಅವರನ್ನು ಇತ್ತೀಚೆಗೆ ಗುಂಡಿಟ್ಟು ಹತ್ಯೆ ಮಾಡಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿ 10ಕ್ಕೂ ಅಧಿಕ ಆರೋಪಿಗಳನ್ನು ಬಂಧಿಸಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಚಿಕ್ಕಮಗಳೂರು: ಮಗುವನ್ನು ಕಿಡ್ನಾಪ್ ಮಾಡಿದ ಮಹಿಳೆ; ಪ್ರಕರಣ ದಾಖಲು
ಚಿಕ್ಕಮಗಳೂರು: ಎರಡು ವರ್ಷದ ಮಗುವನ್ನು ಮಹಿಳೆಯೊಬ್ಬರು ಕಿಡ್ನಾಪ್ ಮಾಡಿದ ಘಟನೆ ಕಡೂರು ಪಟ್ಟಣದ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣ ಸಮೀಪ ಶುಕ್ರವಾರ ನಡೆದಿದೆ. ಕಡೂರು ತಾಲೂಕಿನ ಸೀತಾಪುರ ಗ್ರಾಮದ ಮಾನಸ (2) ಅಪಹರಣಕ್ಕೊಳಗಾದ ಮಗು. ಬಟ್ಟೆ ಅಂಗಡಿಯಲ್ಲಿ ಬಟ್ಟೆ ಖರೀದಿ ಮಾಡುವಂತೆ ನಾಟಕವಾಡಿದ ಮಹಿಳೆ, ಪಕ್ಕದ ಎಣ್ಣೆ ಗಾಣದ ಅಂಗಡಿ ಮುಂದೆ ನಿಂತಿದ್ದ ಮಗುವನ್ನು ಹೊತ್ತೊಯ್ದ ಮಹಿಳೆ,ಮಗು ಕಾಣಿಸದಂತೆ ಸೀರೆಯ ಸೆರಗು ಮುಚ್ಚಿಕೊಂಡು ತೆರಳಿದ್ದಾಳೆ ಎನ್ನಲಾಗಿದೆ. ದೀಪಾವಳಿ ಹಬ್ಬಕ್ಕೆಂದು ಬಟ್ಟೆ ಖರೀದಿಗೆಂದು ರಾಘು ನಾಯಕ್ ದಂಪತಿ ಬಂದಿದ್ದರು. ಈ ವೇಳೆ ಮಗು ಮಾನಸ ಮತ್ತು ತಂದೆ ರಘುನಾಯಕ್ ಎಣ್ಣೆ ಗಾಣದ ಅಂಗಡಿಗೆ ತೆರಳಿದ್ದರು. ಸಂದರ್ಭಕ್ಕಾಗಿ ಹೊಂಚು ಹಾಕುತ್ತಿದ್ದ ಮಹಿಳೆ, ಎಣ್ಣೆ ಗಾಣದ ಅಂಗಡಿ ಮುಂದೆ ನಿಂತಿದ್ದ ಮಗುವನ್ನು ಅಪಹರಿಸಿದ್ದಾಳೆ. ನಾಪತ್ತೆಯಾದ ಮಗಳಿಗಾಗಿ ತಂದೆ ರಘುನಾಯ್ಕ್ ಹುಡುಕಾಟ ನಡೆಸಿದ್ದು, ಬಟ್ಟೆ ಅಂಗಡಿಯ ಮುಂದಿನ ಸಿಸಿ ಕ್ಯಾಮರಾದಲ್ಲಿ ಮಗುವಿನ ಕಿಡ್ನಾಪ್ ದೃಶ್ಯ ಸೆರೆಯಾಗಿದೆ. ಕಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮಗುವಿನ ಪತ್ತೆಗಾಗಿ ಹುಡುಕಾಟ ನಡೆಯುತ್ತಿದೆ.
Karnataka Rain: ಬೆಂಗಳೂರು ಸೇರಿದಂತೆ ಈ ಜಿಲ್ಲೆಗಳಲ್ಲಿ ಮುಂದುವರೆದ ಮಳೆ
ಬೆಂಗಳೂರು, ಅಕ್ಟೋಬರ್ 25: ಮಳೆಗಾಲ ಮುಕ್ತಾಯದ ಹಂತಕ್ಕೆ ಬಂದಿದ್ದರೂ ಡಾನಾ ಚಂಡಮಾರುತದ ಆರ್ಭಟದಿಂದಾಗಿ ಮಳೆ ಅಬ್ಬರ ದೇಶಾದ್ಯಂತ ಜೋರಾಗಿದೆ. ಕೆಲ ರಾಜ್ಯಗಳು ಸೇರಿದಂತೆ ಕರ್ನಾಟಕ ವಿವಿಧ ಜಿಲ್ಲೆಯಲ್ಲಿ ಮಳೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬೆಂಗಳೂರಿನಲ್ಲಿ ಇಂದು ಬೆಳಗ್ಗೆಯೇ ಮೋಡ ಮುಸುಕಿದ ವಾತಾವರಣ ಇದ್ದು, ಮಂಜು ಕವಿದಂತೆ ಕಾಣುತ್ತಿದೆ. ಅಲ್ಲದೇ ಬೆಂಗಳೂರು ನಗರದ ವಿವಿಧ
ವಿಜಯನಗರ: ಹಳ್ಳಕ್ಕೆ ಉರುಳಿದ ಕೆಎಸ್ಸಾರ್ಟಿಸಿ ಬಸ್; ಓರ್ವ ಮೃತ್ಯು
ಹರಪನಹಳ್ಳಿ : (ವಿಜಯನಗರ) ಕೆಎಸ್ಸಾರ್ಟಿಸಿ ಬಸ್ ಪಲ್ಟಿಯಾಗಿ ಹಳ್ಳಕ್ಕೆ ಬಿದ್ದ ಪರಿಣಾಮ ವ್ಯಕ್ತಿಯೊಬ್ಬರು ಮೃತಪಟ್ಟಿದ್ದು, ಆರು ಮಂದಿ ಗಾಯಗೊಂಡಿರುವ ಘಟನೆ ಹರಪನಹಳ್ಳಿ ತಾಲೂಕಿನ ಸತ್ತೂರು ಗ್ರಾಮದ ಬಳಿ ಗುರುವಾರ ನಡೆದಿದೆ. ಮೃತ ವ್ಯಕ್ತಿಯನ್ನು ಕರಿಬಸಪ್ಪರ ಹನುಮಕ್ಕ (45) ಎಂದು ಗುರುತಿಸಲಾಗಿದೆ. ದಾವಣಗೆರೆ ಸಮೀಪ ಮೇಳ್ಳೆಕಟ್ಟೆಗೆಯಿಂದ ಹರಪನಹಳ್ಳಿ ಕಡೆಗೆ ಹೋಗುವ ಕೆಎಸ್ಸಾರ್ಟಿಸಿ ಬಸ್ ಅಪಘಾತಕ್ಕೊಳಗಾಗಿದ್ದು, ಚಾಲಕನ ಅಜಾರೂಕತೆಯಿಂದ ಈ ಘಟನೆ ನಡೆದಿದೆ ಎಂದು ಪ್ರಯಾಣಿಕರು ಆರೋಪಿಸಿದ್ದಾರೆ. ಗಾಯಾಳುಗಳನ್ನು ದಾವಣಗೆರೆಯ ಚಿಕೆಟೇರಿ ಜಿಲ್ಲಾ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಈ ಬಗ್ಗೆ ಅರಸೀಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಖಾದ್ರಿ ಬದಲಾಗಿ ಯಾಸೀರ್ಗೆ ಟಿಕೆಟ್: ಶಿಗ್ಗಾವಿಯಲ್ಲಿ ಕೈಗೆ ಬಂಡಾಯದ ಬಿಸಿ, ಹೊಂದಾಣಿಕೆ ರಾಜಕಾರಣದ ಆರೋಪ
ಶಿಗ್ಗಾವಿ ಕಾಂಗ್ರೆಸ್ನಲ್ಲಿ ಬಂಡಾಯ ತೀವ್ರಗೊಂಡಿದೆ. ಮಾಜಿ ಶಾಸಕ ಅಜ್ಜಂಪೀರ್ ಖಾದ್ರಿ ಬದಲಾಗಿ ಯಾಸೀರ್ ಪಠಾಣ್ಗೆ ಟಿಕೆಟ್ ನೀಡಿರುವುದು ಅಸಮಾಧಾನಕ್ಕೆ ಕಾರಣವಾಗಿದೆ. ಇದರಿಂದಾಗಿ ಶಿಗ್ಗಾವಿಯಲ್ಲಿ ಕೈಗೆ ಬಂಡಾಯದ ಬಿಸಿ ಏರತೊಡಗಿದೆ. ಈ ನಡುವೆ ಶಿಗ್ಗಾವಿ ಅಭ್ಯರ್ಥಿ ಆಯ್ಕೆ ವಿಚಾರವಾಗಿ ಹೊಂದಾಣಿಕೆ ರಾಜಕಾರಣದ ಆರೋಪವೂ ಕೇಳಿಬರುತ್ತಿದೆ. ಸ್ಥಳೀಯವಾಗಿ ಸಾಕಷ್ಟು ಪ್ರಭಾವ ಹೊಂದಿರುವ ಮಾಜಿ ಶಾಸಕ ಅಜ್ಜಂಪೀರ್ ಖಾದ್ರಿಗೆ ಟಿಕೆಟ್ ನಿರಾಕರಣೆ ಮಾಡಿರುವ ಹಿಂದೆ ಕಾಂಗ್ರೆಸ್ ಹೊಂದಾಣಿಕೆ ರಾಜಕಾರಣವೇ ಕಾರಣ ಎಂಬುವುದು ಅವರ ಬೆಂಬಲಿಗರ ಆರೋಪವಾಗಿದೆ.
ಕಲಬುರಗಿ: ಹಾವು ಕಚ್ಚಿ ಕುರಿಗಾಹಿ ಮೃತ್ಯು
ಕಲಬುರಗಿ: ಹಾವು ಕಚ್ಚಿ ಕುರಿಗಾಹಿಯೊಬ್ಬರು ಮೃತಪಟ್ಟಿರುವ ಘಟನೆ ಯಡ್ರಾಮಿ ತಾಲ್ಲೂಕಿನ ಯತ್ನಾಳ ಗ್ರಾಮದಲ್ಲಿ ಗುರುವಾರ ನಡೆದಿದೆ. ತಮ್ಮಣ್ಣ ಭೀಮಪ್ಪ ಬಡಗೇರ (45) ಮೃತ ವ್ಯಕ್ತಿ. ತಮ್ಮಣ್ಣ ಅವರು ಕುರಿಗಳನ್ನು ಮೇಯಿಸಲು ಯತ್ನಾಳ ಗ್ರಾಮದ ಪಕ್ಕದ ಹಳ್ಳಕ್ಕೆ ಹೋದಾಗ ಹಾವು ಕಚ್ಚಿ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಜಮೀನಿಗೆ ತೆರಳಿದ್ದ ಜನರು ಮಲಗಿರುವ ಸ್ಥಿತಿಯಲ್ಲಿದ್ದ ವ್ಯಕ್ತಿಯನ್ನು ಎಬ್ಬಿಸಲು ಹೋದಾಗ ಮೃತಪಟ್ಟಿರುವುದು ತಿಳಿದು ಕುಟುಂಬಸ್ಥರಿಗೆ ತಿಳಿಸಿದ್ದಾರೆ ಎಂದು ತಿಳಿದು ಬಂದಿದೆ. ತಮ್ಮಣ್ಣ ಅವರಿಗೆ ಮೂವರು ಪುತ್ರಿಯರು, ಒಬ್ಬ ಪುತ್ರ ಇದ್ದಾರೆ. ಯಡ್ರಾಮಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಲಬುರಗಿ: ಹಾವು ಕಚ್ಚಿ ವ್ಯಕ್ತಿ ಮೃತ್ಯು
ಕಲಬುರಗಿ: ಹಾವು ಕಚ್ಚಿ ಕುರಿಗಾಹಿಯೊಬ್ಬರು ಮೃತಪಟ್ಟಿರುವ ಘಟನೆ ಯಡ್ರಾಮಿ ತಾಲ್ಲೂಕಿನ ಯತ್ನಾಳ ಗ್ರಾಮದಲ್ಲಿ ಗುರುವಾರ ನಡೆದಿದೆ. ತಮ್ಮಣ್ಣ ಭೀಮಪ್ಪ ಬಡಗೇರ (45) ಮೃತ ವ್ಯಕ್ತಿ. ತಮ್ಮಣ್ಣ ಅವರು ಕುರಿಗಳನ್ನು ಮೇಯಿಸಲು ಯತ್ನಾಳ ಗ್ರಾಮದ ಪಕ್ಕದ ಹಳ್ಳಕ್ಕೆ ಹೋದಾಗ ಹಾವು ಕಚ್ಚಿ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಜಮೀನಿಗೆ ತೆರಳಿದ್ದ ಜನರು ಮಲಗಿರುವ ಸ್ಥಿತಿಯಲ್ಲಿದ್ದ ವ್ಯಕ್ತಿಯನ್ನು ಎಬ್ಬಿಸಲು ಹೋದಾಗ ಮೃತಪಟ್ಟಿರುವುದು ತಿಳಿದು ಕುಟುಂಬಸ್ಥರಿಗೆ ತಿಳಿಸಿದ್ದಾರೆ ಎಂದು ತಿಳಿದು ಬಂದಿದೆ. ತಮ್ಮಣ್ಣ ಅವರಿಗೆ ಮೂವರು ಪುತ್ರಿಯರು, ಒಬ್ಬ ಪುತ್ರ ಇದ್ದಾರೆ. ಯಡ್ರಾಮಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Jharkhand Election: ಡಾನಾ ಚಂಡಮಾರುತಕ್ಕಿಂತ ಹೇಮಂತ್ ಸೊರೇನ್ ಸರ್ಕಾರ ಅಪಾಯಕಾರಿ; ಶಿವರಾಜ್ ಸಿಂಗ್ ಚೌಹಾಣ್
ಜಾರ್ಖಂಡ್ ವಿಧಾನಸಭಾ ಚುನಾವಣೆ ಅಖಾಡ ರಂಗೇರುತ್ತಿದ್ದು, ರಾಜಕೀಯ ಪಕ್ಷಗಳ ನಡುವೆ ವಾಕ್ಸಮರ ಶುರುವಾಗಿದೆ. ಆಡಳಿತಾರೂಢ ಜೆಎಂಎಂ ಪಕ್ಷದ ವಿರುದ್ಧ ಬಿಜೆಪಿ ಮುಗಿಬಿದ್ದಿದ್ದು ಹಲವು ಆರೋಪಗಳನ್ನು ಮಾಡುತ್ತಿದೆ. ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ) ನೇತೃತ್ವದ ಸಮ್ಮಿಶ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್, ಈ ಸರ್ಕಾರ 'ಡಾನಾ ಚಂಡಮಾರುತಕ್ಕಿಂತ ಮಾರಕ' ಎಂದು
ಹಾಸನ ಜಿಲ್ಲೆಯಲ್ಲಿ ವರ್ಷಕ್ಕೊಮ್ಮೆ ಬಾಗಿಲು ತೆರೆಯುವ ಹಾಸನಾಂಬ ದೇವಸ್ಥಾನದ ಬಾಗಿಲನ್ನು ಪ್ರತಿ ವರ್ಷದಂತೆ ಈ ವರ್ಷವೂ ತೆರೆಯಲಾಗಿದೆ. ಅ. 24ರಂದು ಬೆಳಗ್ಗೆಯೇ ಗರ್ಭಗುಡಿಯ ಬಾಗಿಲನ್ನು ತೆರೆಯಲಾಗಿದೆ. ಆದರೆ, ಸಾಂಪ್ರದಾಯಿಕ ಪೂಜಾವಿಧಾನಗಳನ್ನು ಅನುಸರಿಸಬೇಕಾಗಿದ್ದರಿಂದ ಮೊದಲ ದಿನ ಭಕ್ತಾದಿಗಳಿಗೆ ಪ್ರವೇಶ ನೀಡಲಾಗಿಲ್ಲ. ಅ. 25ರ ಬೆಳಗ್ಗೆ 6ರಿಂದ ಭಕ್ತರಿಗೆ ಅನುವು ಮಾಡಿಕೊಡಲಾಗಿದೆ. ಆನ್ ಲೈನ್ ನಲ್ಲಿ ಟಿಕೆಟ್ ಖರೀದಿಸಬಹುದಾಗಿದ್ದು, ಸರಣಿ ಸಾಲಿನಲ್ಲಿ ಬರುವರಿಗೆ ಕ್ಯುಆರ್ ಕೋಡ್, ನೇರ ದರ್ಶನ ಟಿಕೆಟ್ ಇತ್ಯಾದಿ ವ್ಯವಸ್ಥೆ ಕಲ್ಪಿಸಲಾಗಿದೆ.
ಹತ್ಯೆ ಭೀತಿ: ಶೇಕ್ ಹಸೀನಾಗೆ ಲ್ಯುಟಿಯೆನ್ಸ್ ಬಂಗಲೆಯಲ್ಲಿ ಸರ್ಪಗಾವಲು
ಹೊಸದಿಲ್ಲಿ: ಎರಡು ದಶಕಗಳ ಕಾಲ ಬಾಂಗ್ಲಾ ಮಾಜಿ ಪ್ರಧಾನಿ ಶೇಕ್ ಹಸೀನಾ ಆಕರ್ಷಕ ಉದ್ಯಾನವನಗಳಿಂದ ಸುತ್ತುವರಿದ ವೈಭವೋಪೇತ ಬಂಗಲೆಯಲ್ಲಿ ವಾಸವಿದ್ದರು. ಢಾಕಾ ನಗರದ ಹೃದಯ ಭಾಗದ 3600 ಚದರ ಮೀಟರ್ ವಿಶಾಲ ಬಂಗಲೆಯನ್ನು ರಾಣಿ ಎಲಿಜಬೆತ್-2 ಅವರ ವಾಸಕ್ಕಾಗಿ ಮೊದಲು ನಿರ್ಮಿಸಲಾಗಿತ್ತು. ಆದರೆ ಆಗಸ್ಟ್ 5ರಂದು ವಿದ್ಯಾರ್ಥಿ ಪ್ರತಿಭಟನೆ ಹಿನ್ನೆಲೆಯಲ್ಲಿ ನಡೆದ ವ್ಯಾಪಕ ಹಿಂಸಾಚಾರದ ಸಂದರ್ಭದಲ್ಲಿ ಶೇಕ್ ಹಸೀನಾ ಅವರನ್ನು ಪದಚ್ಯುತಗೊಳಿಸಲಾಗಿತ್ತು ಹಾಗೂ ಭಾರತಕ್ಕೆ ಪಲಾಯನ ಮಾಡಿ ಅವರು ಆಶ್ರಯ ಪಡೆದರು. ಉತ್ತರ ಪ್ರದೇಶದ ಹಿಂಡಾನ್ ವಾಯುನೆಲೆಯ ಬಳಿ ಸುರಕ್ಷಿತ ಸ್ಥಳದಲ್ಲಿ ಅವರನ್ನು ಇರಿಸಲಾಗಿತ್ತು. ಇದೀಗ 77 ವರ್ಷದ ಹಸೀನಾ ಕೇಂದ್ರ ದೆಹಲಿಯ ಇಂಡಿಯಾ ಗೇಟ್ ಮತ್ತು ಖಾನ್ ಮಾರ್ಕೆಟ್ ನಡುವಿನ ಸುರಕ್ಷಿತ ಬಂಗಲೆಯೊಂದರಲ್ಲಿ ವಾಸವಿದ್ದಾರೆ. ತಮ್ಮ ಅಧಿಕಾರಾವಧಿಯಲ್ಲಿ ಎಸಗಿದ್ದಾರೆ ಎನ್ನಲಾದ ದೌರ್ಜನ್ಯದ ಹಿನ್ನೆಲೆಯಲ್ಲಿ ಬಾಂಗ್ಲಾದ ಮಾಜಿ ಪ್ರಧಾನಿ ಅವರಿಗೆ ಜೀವ ಬೆದರಿಕೆ ಇರುವ ಕಾರಣದಿಂದ ಬಹುಪದರದ ಭದ್ರತಾ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ ಎಂದು ಗುಪ್ತಚರ ಮೂಲಗಳು ಹೇಳಿವೆ. ಹಿಂಡಾನ್ ನಿಂದ ಸ್ಥಳಾಂತರಗೊಂಡ ಬಳಿಕ ಲ್ಯುಟಿಯೆನ್ಸ್ ದೆಹಲಿಯಲ್ಲಿ ಅವರು ವಾಸವಿದ್ದಾರೆ ಎಂದು ಅಧಿಕೃತ ಮೂಲಗಳು ಹೇಳಿವೆ. ಕಳೆದ ವಾರ ಅವರು ಲೋಧಿ ಗಾರ್ಡನ್ ನಲ್ಲಿ ಪತ್ತೆಯಾಗಿದ್ದರು ಎಂದು ಫೈನಾನ್ಶಿಯಲ್ ಟೈಮ್ಸ್ ವರದಿ ಮಾಡಿತ್ತು. ಇದೀಗ ಹಸೀನಾ ಅವರ ಹೊಸ ನಿವಾಸ ಇಂಟೆಲಿಜೆನ್ಸ್ ಬ್ಯೂರೊದ ಸುರಕ್ಷಿತ ಗೃಹವಾಗಿದ್ದು, ಅವರ ಜೀವಕ್ಕೆ ಬೆದರಿಕೆ ಇರುವ ಕಾರಣದಿಂದ ನಿಖರವಾಗಿ ಆ ಸ್ಥಳವನ್ನು ಬಹಿರಂಗಪಡಿಸುವುದಿಲ್ಲ ಎಂದು ಅಧಿಕೃತ ಮೂಲಗಳು ಹೇಳಿವೆ. ಅವರ ವಿರುದ್ಧ ಬಾಂಗ್ಲಾದೇಶದಿಂದ ಬಂಧನ ವಾರೆಂಟ್ ಕೂಡಾ ಇದೆ.
ಗಂಟೆಗೆ 10 ಭಾರತೀಯರಿಂದ ಅಮೆರಿಕ ಅಕ್ರಮ ಪ್ರವೇಶ ಯತ್ನ: 90 ಸಾವಿರ ಮಂದಿ ಬಂಧನ!
ಅಹ್ಮದಾಬಾದ್: ಅಮೆರಿಕ ಗಡಿದಾಟುವ ಪ್ರಯತ್ನದಲ್ಲಿ ಅಕ್ರಮ ಭಾರತೀಯ ವಲಸೆಗಾರರ ಯಾತನಾಮಯ ಪ್ರಯಾಣ ಹಾಗೂ ಸರಣಿ ಸಾವಿನ ಘಟನೆಗಳ ಹೊರತಾಗಿಯೂ, ಅಮೆರಿಕದಲ್ಲಿ ವಾಸಿಸುವ ಆಸೆ ಭಾರತೀಯರಲ್ಲಿ ಅದರಲ್ಲೂ ಮುಖ್ಯವಾಗಿ ಅಮೆರಿಕದಲ್ಲಿ ಪ್ರಬಲವಾಗಿ ಇದೆ. ಅಮೆರಿಕದಲ್ಲಿ ಪ್ರಸಕ್ತ ಹಣಕಾಸು ವರ್ಷದಲ್ಲಿ ಅಂದರೆ 2023ರ ಅಕ್ಟೋಬರ್ 1ರಿಂದ 2024ರ ಸೆಪ್ಟೆಂಬರ್ 30ರ ಅವಧಿಯಲ್ಲಿ 29 ಲಕ್ಷ ಅಕ್ರಮ ವಲಸೆಗಾರರು ಕೆನಡಾ ಹಾಗೂ ಮೆಕ್ಸಿಕೊ ಗಡಿ ಮೂಲಕ ಅಮೆರಿಕವನ್ನು ಪ್ರವೇಶಿಸುವ ಪ್ರಯತ್ನ ಮಾಡಿದ ಹಂತದಲ್ಲಿ ಬಂಧನಕ್ಕೀಡಾಗಿದ್ದಾರೆ. ಈ ಪೈಕಿ 90415 ಮಂದಿ ಭಾರತೀಯರು ಸೇರಿದ್ದಾರೆ ಎಂದು ಅಮೆರಿಕದ ಕಸ್ಟಮ್ಸ್ ಮತ್ತು ಗಡಿ ರಕ್ಷಣಾ ಸಂಸ್ಥೆಯ ಅಂಕಿ ಅಂಶಗಳಿಂದ ತಿಳಿದು ಬಂದಿದೆ. ಬಂಧಿತರಲ್ಲಿ ಶೇಕಡ 50ರಷ್ಟು ಮಂದಿ ಗುಜರಾತಿಗಳು ಎಂದು ಅಕ್ರಮ ವಲಸೆಯ ಮೇಲೆ ನಿಗಾ ಇಟ್ಟಿರುವ ಭಾರತೀಯ ಏಜೆನ್ಸಿಗಳು ಸ್ಪಷ್ಟಪಡಿಸಿವೆ. ಅಂದರೆ ಪ್ರತಿ ಗಂಟೆಗೆ 10 ಮಂದಿ ಭಾರತೀಯ ಅಕ್ರಮ ವಲಸೆಗಾರರು ಬಂಧನಕ್ಕೀಡಾಗುತ್ತಿದ್ದಾರೆ. ಅಂತೆಯೇ 43764 ಮಂದಿಯನ್ನು ಕೆನಡಾ ಗಡಿಯಲ್ಲಿ ಬಂಧಿಸಲಾಗಿದೆ. ಕಳೆದ ವರ್ಷ ಗರಿಷ್ಠ ಸಂಖ್ಯೆಯ ಭಾರತೀಯ ವಲಸೆಗಾರರನ್ನು ಬಂಧಿಸಲಾಗಿದೆ ಎಂದು ಮೂಲಗಳು ಹೇಳಿವೆ. ಒಟ್ಟು ಬಂಧಿತರಾದ ಅಕ್ರಮ ವಲಸಿಗರ ಸಂಖ್ಯೆ ಹಿಂದಿನ ವರ್ಷ ಇದ್ದ 32 ಲಕ್ಷಕ್ಕೆ ಹೋಲಿಸಿದರೆ ತುಸು ಕಡಿಮೆಯಾಗಿದೆ. ಅಂತೆಯೇ ಮೆಕ್ಸಿಕೋ ಗಡಿಯ ಮಾರ್ಗದಲ್ಲಿ ಬಂಧಿತರಾದ ಭಾರತೀಯರ ಸಂಖ್ಯೆಯೂ ಇಳಿಮುಖವಾಗಿದೆ. 2023ನೇ ಹಣಕಾಸು ವರ್ಷದಲ್ಲಿ ಒಟ್ಟು 96917 ಭಾರತೀಯ ಅಕ್ರಮ ವಲಸೆಗಾರರನ್ನು ಬಂಧಿಸಲಾಗಿತ್ತು. 2024ರಲ್ಲಿ ಕಡಿಮೆ ಸಂಖ್ಯೆಯ (25,616) ಭಾರತೀಯರನ್ನು ಅಮೆರಿಕ- ಮೆಕ್ಸಿಕೊ ಗಡಿಯಲ್ಲಿ ಬಂಧಿಸಲಾಗಿದೆ. 2023ರಲ್ಲಿ ಈ ಸಂಖ್ಯೆ 41,770 ಆಗಿತ್ತು. ಜನರು ಮುಖ್ಯವಾಗಿ ಮೆಕ್ಸಿಕೋ ಮಾರ್ಗದ ಮೂಲಕ ಬರುವ ಕತ್ತೆ ಮಾರ್ಗದ ಬಳಕೆಯನ್ನು ಎರಡು ಕಾರಣಗಳಿಂದ ಕಡಿಮೆ ಮಾಡುತ್ತಿದ್ದಾರೆ. ಒಂದನೆಯದಾಗಿ ಮೆಕ್ಸಿಕೋಗೆ ಕರೆತರುವ ಮುನ್ನ ಕೆಲಕಾಲ ಅವರನ್ನು ದುಬೈ ಅಥವಾ ಟರ್ಕಿಯಲ್ಲಿ ಇರಿಸಲಾಗುತ್ತದೆ. ಕಳೆದ ಕೆಲ ವರ್ಷಗಳಿಂದ ಅಮೆರಿಕದ ಏಜೆನ್ಸಿಗಳು ಈ ದೇಶಗಳಲ್ಲಿ ವಾಸಿಸುವ ಅಕ್ರಮ ವಲಸಿಗರ ಮೇಲೆ ಹದ್ದಿನ ಕಣ್ಣು ಇರಿಸುತ್ತಾರೆ ಹಾಗೂ ಮಾನವ ಕಳ್ಳಸಾಗಾಣಿಕೆ ಸರಪಣಿಯನ್ನು ತುಂಡರಿಸಲು ಪ್ರಯತ್ನ ಮಾಡುತ್ತಿದ್ದಾರೆ ಎಂದು ಮೂಲಗಳು ಹೇಳಿವೆ. ಗುಜರಾತಿಗಳು ಕೂಡಾ ಮೆಕ್ಸಿಕೋ ಬದಲಾಗಿ ಕೆನಡಾವನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದು, ಅಲ್ಲಿ ಬಾಡಿಗೆ ಕಾರನ್ನು ಸುಲಭವಾಗಿ ಪಡೆದು ಅಮೆರಿಕದ ಗಡಿ ದಾಟಲು ಅವಕಾಶವಿದೆ ಎಂದು ಮೂಲಗಳು ತಿಳಿಸಿವೆ.
ಚೆಂಡು ವಿರೂಪ ಪ್ರಕರಣ: ವಾರ್ನರ್ ಮೇಲಿನ ನಾಯಕತ್ವ ನಿಷೇಧ ರದ್ದು
ನವದೆಹಲಿ: ಚೆಂಡು ವಿರೂಪ ಪ್ರಕರಣದ ಆರು ವರ್ಷದ ಬಳಿಕ ಆಸ್ಟ್ರೇಲಿಯಾ ಬ್ಯಾಟ್ಸ್ ಮನ್ ಡೇವಿಡ್ ವಾರ್ನರ್ ಮೇಲಿನ ನಾಯಕತ್ವ ನಿಷೇಧವನ್ನು ರದ್ದುಪಡಿಸಲಾಗಿದೆ. 2018ರ ಈ ಪ್ರಕರಣದಲ್ಲಿ ಜೀವಮಾನವಿಡೀ ನಾಯಕತ್ವದ ಜವಾಬ್ದಾರಿ ನಿರ್ವಹಿಸದಂತೆ ವಾರ್ನರ್ ಮೇಲೆ ನಿಷೇಧ ಹೇರಲಾಗಿತ್ತು. ಮೂವರು ಸದಸ್ಯರ ಸಮಿತಿಯ ಎದುರು ವಾರ್ನರ್ (37) ತಮ್ಮ ವಾದವನ್ನು ಮಂಡಿಸಿದ್ದು, ನಿಷೇಧ ರದ್ದುಪಡಿಸಲು ಬೇಕಾದ ಎಲ್ಲ ಮಾನದಂಡಗಳನ್ನು ವಾರ್ನರ್ ಪೂರೈಸಿರುವುದರಿಂದ ನಿಷೇಧ ರದ್ದುಪಡಿಸಲು ನಿರ್ಧರಿಸಲಾಯಿತು. ವಾರ್ನರ್ ಅವರ ಗೌರವಾರ್ಹ ಮತ್ತು ಪಶ್ಚಾತ್ತಾಪದ ಧ್ವನಿ ಹಾಗೂ ತಮ್ಮ ಕ್ರಮಕ್ಕಾಗಿ ಹೊಣೆಗಾರಿಕೆಯನ್ನು ಒಪ್ಪಿಕೊಂಡ ಅಂಶವನ್ನು ಸಮಿತಿ ಪರಿಗಣಿಸಿ ಈ ನಿರ್ಧಾರ ಕೈಗೊಂಡಿದೆ. ವಾರ್ನರ್ ಅಂತರಾಷ್ಟ್ರೀಯ ಕ್ರಿಕೆಟ್ ನಿಂದ ನಿವೃತ್ತಿ ಪಡೆದಿದ್ದು, ತಮ್ಮ ಬಿಗ್ ಬ್ಯಾಷ್ ಲೀಗ್ ತಂಡ ಸಿಡ್ನಿ ಥಂಡರ್ ಸೇರಿದಂತೆ ಎಲ್ಲೆಡೆ ನಾಯಕತ್ವದ ಪಾತ್ರವನ್ನು ನಿರ್ವಹಿಸಬಹುದಾಗಿದೆ. ತಮ್ಮ ಮೇಲಿನ ನಿರ್ಬಂಧದ ಪರಾಮರ್ಶೆಗೆ ಡೇವಿಡ್ ಮನವಿ ಮಾಡಿಕೊಂಡಿರುವುದು ನನಗೆ ಸಂತಸ ತಂದಿದೆ. ಈ ಬೇಸಿಗೆಯಲ್ಲಿ ಆಸ್ಟ್ರೇಲಿಯಾ ಕ್ರಿಕೆಟ್ ನ ನಾಯಕತ್ವ ಜವಾಬ್ದಾರಿಯನ್ನು ವಹಿಸಿಕೊಳ್ಳಲು ಅವರು ಅರ್ಹರು ಎಂದು ಕ್ರಿಕೆಟ್ ಆಸ್ಟ್ರೇಲಿಯಾ ಮುಖ್ಯಸ್ಥ ನಿಕ್ ಹಾಕ್ಲೆ ಹೇಳಿದ್ದಾರೆ. 2018ರ ಸ್ಯಾಂಡ್ ಪೇಪರ್ ಗೇಟ್ ಹಗರಣದ ಕೇಂದ್ರ ಬಿಂದು ಎನಿಸಿದ್ದ ಡೇವಿಡ್ ವಾರ್ನರ್, ತಮ್ಮ ತಂಡದ ನಾಯಕರಾಗಿದ್ದ ಸ್ಟೀವ್ ಸ್ಮಿತ್ ಮತ್ತು ಕ್ಯಾಮರೂನ್ ಬನ್ ಕ್ರಾಫ್ಟ್ ಜತೆ ಚೆಂಡಿನ ಮೇಲ್ಮೈಯನ್ನು ಅಕ್ರಮವಾಗಿ ವಿರೂಪಗೊಳಿಸಿದ ಆರೋಪ ಹೊತ್ತಿದ್ದರು. ಒಂದು ವರ್ಷ ವರೆಗೆ ಅವರನ್ನು ಅಮಾನತುಗೊಳಿಸಲಾಗಿತ್ತು ಹಾಗೂ ನಾಯಕತ್ವದ ಹೊಣೆ ಮೇಲೆ ಜೀವಿತಾವಧಿ ನಿದೇಧ ಹೇರಲಾಗಿತ್ತು.
ಕುಂಬಾರ ನಿಗಮ ಸ್ಥಾಪನೆಗೆ ಎಮ್ ವೈ ಪಾಟೀಲ್ ನೇತೃತ್ವದಲ್ಲಿ ಸಿಎಂಗೆ ಮನವಿ
ಬೆಂಗಳೂರು/ಕಲಬುರಗಿ: ಬೆಂಗಳೂರ ನಗರದ ಕಾವೇರಿ ಗೆಸ್ಟ್ ಹೌಸ್ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಅಫಜಲಪುರ ಕ್ಷೇತ್ರದ ಶಾಸಕ ಎಮ್. ವೈ ಪಾಟೀಲ್ ಮತ್ತು ಹೆಚ್ ಕೆ ಇ ಸಂಸ್ಥೆಯ ನಿರ್ದೇಶಕ ಅರುಣ್ ಕುಮಾರ್ ಪಾಟೀಲ್ ಅವರ ನೇತೃತ್ವದಲ್ಲಿ ಕುಂಬಾರ ಅಭಿವೃದ್ಧಿ ನಿಗಮಕ್ಕೆ ಹೆಚ್ಚಿನ ಅನುದಾನ ನೀಡಿ, ಕೂಡಲೇ ನಿಗಮದ ಅಧ್ಯಕ್ಷರು ಮತ್ತು ನಿರ್ದೇಶಕರನ್ನು ನೇಮಕ ಮಾಡಬೇಕೆಂದು ಸಮಾಜದ ವತಿಯಿಂದ ಮನವಿ ಪತ್ರ ಸಲ್ಲಿಸಲಾಯಿತು. ಕುಂಬಾರ ಸಮುದಾಯವು ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕ ವಲಯದಲ್ಲಿ ತೀರಾ ಹಿಂದುಳಿದಿದೆ. ಹಾಗಾಗಿ ಈ ಸಮುದಾಯದ ಶ್ರೇಯೋಭಿವೃದ್ಧಿಗಾಗಿ ಸರ್ಕಾರದಿಂದ ನಿಗಮ ಮಂಡಳಿ ಸ್ಥಾಪಿಸಿ, ಅದಕ್ಕೆ ವಿಶೇಷ ಅನುದಾನ ಘೋಷಿಸಬೇಕೆಂದು ನಿಯೋಗದಿಂದ ಒತ್ತಾಯಿಸಲಾಯಿತು. ಈ ಸಂದರ್ಭದಲ್ಲಿ ಕುಂಬಾರ ಗುಂಡಯ್ಯನ ಪೀಠದ ಚಿತ್ರದುರ್ಗ ಶ್ರೀಗಳು, ರಾಜ್ಯಾಧ್ಯಕ್ಷರು ಶಂಕರ್ ಶೆಟ್ಟಿ, ಕುಂಬಾರ ಸಮಾಜದ ಕಲಬುರಗಿ ಜಿಲ್ಲಾಧ್ಯಕ್ಷ ಶಿವಶರಣಪ್ಪ ಕುಂಬಾರ, ಅಫಜಲಪುರ ತಾಲೂಕಾಧ್ಯಕ್ಷ ಶರಣು ಕುಂಬಾರ, ಕಲಬುರ್ಗಿ ಜಿಲ್ಲೆಯ ಎಲ್ಲಾ ತಾಲೂಕುಗಳ ಅಧ್ಯಕ್ಷರು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಪೂಜಾರಿ, ತಾಲೂಕು ಪಂಚಾಯತಿ ಮಾಜಿ ಸದಸ್ಯರಾದ ಸುಭಾಷ್ ರೂಗಿ, ಶಿವಶರಣಪ್ಪ ಸುಲೇಪೇಟ, ಚಿತ್ತಾಪೂರ ತಾಲೂಕಾಧ್ಯಕ್ಷ ಪ್ರಭು ಬೆಣ್ಣೂರ, ಶಹಾಬಾದ ತಾಲೂಕಾಧ್ಯಕ್ಷ ಸದಾನಂದ ಕುಂಬಾರ, ಮುಖಂಡರಾದ ಶಂಕರನಾಗ ,ಸುಭಾಷ್ ರೂಗಿ, ರಮೇಶ ಪೂಜಾರಿ, ಭೂಪೇಂದ್ರ ಪ್ರಜಾಪತಿ, ರೇಖಾ ಕುಂಬಾರ ಸೇರಿದಂತೆ ಮತ್ತಿತರರು ಹಾಜರಿದ್ದರು.
ದುಬೈ ಗಡಿನಾಡ ಉತ್ಸವದಲ್ಲಿ ಡಾ.ಫಕ್ರುದ್ದೀನ್ ಕುನಿಲ್ಗೆ 'ಗಡಿನಾಡ ಪ್ರಶಸ್ತಿ'
ಮಂಗಳೂರು, ಅ.23: ಗಡಿನಾಡು ಸಾಹಿತ್ಯ ಸಾಂಸ್ಕೃತಿಕ ಅಕಾಡಮಿ ಯುಎಇ ಘಟಕದಿಂದ ಇತ್ತೀಚೆಗೆ ದುಬೈನ ಔದ್ ಮಥಾದಲ್ಲಿರುವ 'ಜೆಮ್' ಖಾಸಗಿ ಶಾಲೆಯಲ್ಲಿ ಆಯೋಜಿಸಲಾದ ದುಬೈ ಗಡಿನಾಡ ಉತ್ಸವದಲ್ಲಿ ಶಿಕ್ಷಣ ಕ್ಷೇತ್ರಕ್ಕೆ ನೀಡಿದ ಅಮೂಲ್ಯ ಕೊಡುಗೆಗೆ ಪ್ರತಿಷ್ಠಿತ 'ಗಡಿನಾಡ ಪ್ರಶಸ್ತಿ'ಯನ್ನು ಕುನಿಲ್ ಗ್ರೂಪ್ ಅಧ್ಯಕ್ಷ ಡಾ.ಫಕ್ರುದ್ದೀನ್ ಕುನಿಲ್, ಅವರಿಗೆ ನೀಡಿ ಗೌರವಿಸಿತು. 35 ವರ್ಷಗಳ ಹಿಂದೆ ಕಾಸರಗೋಡು ಜಿಲ್ಲೆಯ ಶಿರಿಯಾ ಎಂಬ ಸಣ್ಣ ಗ್ರಾಮದಲ್ಲಿ ಡಾ.ಫಕ್ರುದ್ದೀನ್ ಕುನಿಲ್ ಅವರು ಶೈಕ್ಷಣಿಕ ಯಾತ್ರೆ ಪ್ರಾರಂಭಿಸಿದರು. ಬಳಿಕ ಬದಿಯಡ್ಕ, ನಾಟೆಕಲ್ ಮತ್ತು ತುಂಬೆಯಲ್ಲಿ ಕುನಿಲ್ ಶಾಲೆಗಳನ್ನು ಸ್ಥಾಪಿಸಿದರು. ನಾಲ್ಕು ಶಾಲೆಗಳಲ್ಲಿ 7,000 ವಿದ್ಯಾರ್ಥಿಗಳು, 600 ವೃತ್ತಿಪರ ಸಿಬ್ಬಂದಿ ಮತ್ತು 125 ಶಾಲಾ ವಾಹನಗಳೊಂದಿಗೆ ಈ ಶಾಲೆಗಳು ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸುತ್ತಿವೆ. ಶೇ.100 ಫಲಿತಾಂಶವನ್ನು ನಿರಂತರವಾಗಿ ಕುನಿಲ್ ಶಾಲೆಗಳು ಸಾಧಿಸುತ್ತಿದ್ದು, ಇದು ಡಾ.ಫಕ್ರುದ್ದೀನ್ ಕುನಿಲ್ ಅವರ ಶಿಕ್ಷಣದಲ್ಲಿನ ಶ್ರೇಷ್ಠತೆಯ ಬದ್ಧತೆಗೆ ಸಾಕ್ಷಿಯಾಗಿದೆ ಎಂದು ಪ್ರಕಟನೆ ತಿಳಿಸಿದೆ.
ಹಾಡು ಹಳತು ಭಾವ ನವ ನವೀನ (ಭಾಗ 60): ದಶಾವತಾರ ಬಣ್ಣಿಸುವ ‘ಅಂಬೆಗಾಲಿಕ್ಕುತಲಿ ಬಂದ ಗೋವಿಂದ’
ಕನ್ನಡ ನಾಡಿನ ಹೆಮ್ಮೆಯ ದಾಸ ಪರಂಪರೆಯಿಂದ ಬಂದ ದಾಸ ಸಾಹಿತ್ಯ ನಿಜಕ್ಕೂ ಕರ್ನಾಟಕ ಜನತೆ ಹೆಮ್ಮೆಯಿಂದ ಸದಾ ಸ್ಮರಿಸಬಹುದಾದ ಒಂದು ಅದ್ಭುತವೆಂದರೆ ಅದು ಅತಿಶಯೋಕ್ತಿಯಾಗಲಾರದು. ಅದರಲ್ಲೂ ಕರ್ನಾಟಕ ಸಂಗೀತ ಪಿತಾಮಹರಾದ ಪುರಂದರ ದಾಸರ ನಾನಾ ಕೃತಿಗಳು ಶ್ರೀ ಮಹಾವಿಷ್ಣುವಿನ ಅನನ್ಯ ಅವತಾರಗಳನ್ನು, ಭಕ್ತ - ಭಗವಂತನ ನಡುವಿನ ಅಪ್ಯಾಯಮಾನ ಪ್ರೀತಿಯನ್ನು ನಾನಾ ರೀತಿಯಲ್ಲಿ ಬಣ್ಣಿಸುತ್ತವೆ. ಅವು ಕೊಡುವ ಮುದ ಅನಿರ್ವಚನೀಯ. ಅಂಥ ಕೃತಿಗಳಲ್ಲೊಂದು ಅಂಬೆಗಾಲಿಕ್ಕುತಲಿ ಬಂದ ಗೋವಿಂದ ಎಂಬ ಕೃತಿ. ಈ ಕೃತಿಯ ಮೂರೂ ಚರಣಗಳಲ್ಲಿ ದಶಾವತಾರದ ಬಣ್ಣನೆಯಿರುವುದು ವಿಶೇಷವಾಗಿದ್ದು, ಭಕ್ತಿ ಮಾರ್ಗದಲ್ಲಿರುವವರಿಗೆ ರಸದೌತಣ ನೀಡುತ್ತದೆ.
ಪ್ರತಾಪ್ ಸಿಂಹ ವಿರುದ್ಧ ಅವಹೇಳನೆ: ಶಾಸಕ ಪ್ರದೀಪ್ ಈಶ್ವರ್ ವಿರುದ್ಧದ ಪ್ರಕರಣಕ್ಕೆ ಕರ್ನಾಟಕ ಹೈಕೋರ್ಟ್ ತಡೆ
Karnataka High Court Stay to Pradeep Eshwar Case: ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ವಿರುದ್ಧ ಮೈಸೂರು- ಕೊಡಗು ಕ್ಷೇತ್ರದ ಮಾಜಿ ಸಂಸದ ಪ್ರತಾಪ್ ಸಿಂಹ ನೀಡಿರುವ ದೂರಿನ ಪ್ರಕರಣಕ್ಕೆ ಕರ್ನಾಟಕ ಹೈಕೋರ್ಟ್ ಮಧ್ಯಂತರ ತಡೆ ನೀಡಿದೆ. ತಮ್ಮ ವಿರುದ್ಧ ಪ್ರದೀಪ್ ಈಶ್ವರ್ ಅವರು ಏಕವಚನದಲ್ಲಿ ಅವಹೇಳನಾಕಾರಿಯಾಗಿ ಮಾತನಾಡಿದ್ದಾರೆ ಎಂದು ಪ್ರತಾಪ್ ಸಿಂಹ ದೂರು ನೀಡಿದ್ದರು.
ಸೇನಾ ಟ್ರಕ್ ಮೇಲೆ ಉಗ್ರರ ದಾಳಿ: ಇಬ್ಬರು ಸೈನಿಕರು ಸೇರಿ ನಾಲ್ವರು ಮೃತ್ಯು
ಶ್ರೀನಗರ: ಉತ್ತರ ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯ ಗುಲ್ಮಾರ್ಗ್ನಿಂದ 11 ಕಿಲೋಮೀಟರ್ ದೂರದ ಬೋಟಪತ್ರಿ ಎಂಬಲ್ಲಿ ವಾಸ್ತವ ನಿಯಂತ್ರಣ ರೇಖೆ ಬಳಿ ಸೇನಾ ಟ್ರಕ್ ಮೇಲೆ ಉಗ್ರಗಾಮಿಗಳು ನಡೆಸಿದ ದಾಳಿಯಲ್ಲಿ 18 ರಾಷ್ಟ್ರೀಯ ರೈಫಲ್ ನ ಇಬ್ಬರು ಸೈನಿಕರು ಹಾಗೂ ಇಬ್ಬರು ಹೊರೆ ಕೂಲಿಯಾಳುಗಳು ಸೇರಿ ನಾಲ್ವರು ಮೃತಪಟ್ಟಿದ್ದಾರೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಒಮರ್ ಅಬ್ದುಲ್ಲಾ ನೇತೃತ್ವದ ನೂತನ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ನಡೆದ ನಾಲ್ಕನೇ ಉಗ್ರದಾಳಿ ಇದಾಗಿದ್ದು, ಈ ಘಟನೆಯಲ್ಲಿ ಇತರ ಮೂವರು ಸೈನಿಕರು ಹಾಗೂ ಇಬ್ಬರು ಪೋರ್ಟರ್ ಗಳು ಗಾಯಗೊಂಡಿದ್ದಾರೆ. ಈ ಕೇಂದ್ರಾಡಳಿತ ಪ್ರದೇಶಗಳಲ್ಲಿ ಭಯೋತ್ಪಾದಕ ವಿರೋಧಿ ದಾಳಿಗಳು ಮತ್ತು ಉಗ್ರರ ದಾಳಿಗಳೆರಡೂ ಈ ವರ್ಷ ಹೆಚ್ಚಿರುವುದು ಆತಂಕಕಾರಿ ಬೆಳವಣಿಗೆ. ಮೇ 4ರ ಬಳಿಕ ಇದುವರೆಗೆ ಜಮ್ಮು ಪ್ರದೇಶದಲ್ಲಿ 18 ಹಾಗೂ ಕಾಶ್ಮೀರ ಪ್ರದೇಶದಲ್ಲಿ ಆರು ಮಂದಿ ಹೀಗೆ ಭದ್ರತಾ ಪಡೆಗಳ 24 ಮಂದಿ ಮೃತಪಟ್ಟಿದ್ದಾರೆ. ಕನಿಷ್ಠ 20 ಮಂದಿ ಉಗ್ರರು ಬಲಿಯಾಗಿದ್ದಾರೆ. ಈ ಹಿಂಸಾಕೃತ್ಯಗಳು ಭಯಾನಕ ಮತ್ತು ಬೇಷರತ್ ಖಂಡನಾರ್ಹ ಎಂದು ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಹೇಳಿದ್ದಾರೆ. ಘಟನೆಯನ್ನು ಖಂಡಿಸಿ ಮೃತರ ಕುಟುಂಬಕ್ಕೆ ಅವರು ಸಾಂತ್ವನ ಹೇಳಿರುವ ಅವರು, ಗಾಯಾಳುಗಳು ಸಂಪೂರ್ಣ ಹಾಗೂ ಶೀಘ್ರ ಗುಣಮುಖರಾಗುವಂತೆ ಪ್ರಾರ್ಥಿಸುತ್ತಿರುವುದಾಗಿ ತಿಳಿಸಿದ್ದಾರೆ. ಇದಕ್ಕೂ ಮುನ್ನ ಗುರುವಾರ ಬೆಳಿಗ್ಗೆ ಪುಲ್ವಾಮಾ ಜಿಲ್ಲೆಯಲ್ಲಿ ನಡೆದ ಇನ್ನೊಂದು ಉಗ್ರರ ದಾಳಿ ಘಟನೆಯಲ್ಲಿ ಉತ್ತರ ಪ್ರದೇಶ ಮೂಲದ ಕ್ಷೌರಿಕರೊಬ್ಬರು ತೀವ್ರವಾಗಿ ಗಾಯಗೊಂಡಿದ್ದಾರೆ. ಭಾನುವಾರ ಗಂದೆರ್ಬಾಲ್ ಜಿಲ್ಲೆಯಲ್ಲಿ ಸುರಂಗ ನಿರ್ಮಾಣ ಕಂಪನಿಯ ಏಳು ಮಂದಿ ಉದ್ಯೋಗಿಗಳು ಹತರಾಗಿದ್ದರೆ.