ಬಾಂಗ್ಲಾದೇಶದ ವಿದ್ಯಾರ್ಥಿ ನಾಯಕ ಶರೀಫ್ ಉಸ್ಮಾನ್ ಹಾದಿ ನಿಧನ; ಯಾರಿವರು?
ಬಾಂಗ್ಲಾದೇಶದ ವಿದ್ಯಾರ್ಥಿ ನಾಯಕ ಶರೀಫ್ ಉಸ್ಮಾನ್ ಹಾದಿ ಅವರು ಸಿಂಗಾಪುರದಲ್ಲಿ ನಿಧನರಾದ ನಂತರ ದೇಶಾದ್ಯಂತ ಪ್ರತಿಭಟನೆಗಳು ಭುಗಿಲೆದ್ದಿವೆ. ಶೆಕ್ ಹಸೀನಾ ಸರ್ಕಾರದ ವಿರುದ್ಧದ ಪ್ರತಿಭಟನೆಗಳಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಹಾದಿ, ಚುನಾವಣಾ ಪ್ರಚಾರದ ವೇಳೆ ತಲೆಯಲ್ಲಿ ಗುಂಡೇಟು ತಿಂದಿದ್ದರು. ಅವರ ಸಾವಿನ ನಂತರ ಭಾರತ ವಿರೋಧಿ ಭಾವನೆಗಳು ತೀವ್ರಗೊಂಡಿವೆ.
ಡಿಸೆಂಬರ್ 19ರಂದು ರಾಜ್ಯದಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ?: ಜಿಲ್ಲಾವಾರು ಅಂಕಿಅಂಶಗಳ ವಿವರ
Petrol, Diesel Price: ಪೆಟ್ರೋಲ್, ಡೀಸೆಲ್ ದರದಲ್ಲಿ ಜಾಸ್ತಿ ಅಲ್ಲದಿದ್ದರೂ, ಸ್ವಲ್ಪ ಪ್ರಮಾಣದಲ್ಲಾದ್ರೂ ಏರಿಳಿತ ಆಗುತ್ತಿರುತ್ತದೆ. ಹಾಗಾದರೆ, ಇಂದು (ಡಿಸೆಂಬರ್ 19) ಬೆಂಗಳೂರು ಸೇರಿದಂತೆ ರಾಜ್ಯದ ಉಳಿದ ಜಿಲ್ಲೆಗಳಲ್ಲಿ ಲೀಟರ್ ಪೆಟ್ರೋಲ್, ಡೀಸೆಲ್ ಬೆಲೆ ಎಷ್ಟಿದೆ ಎನ್ನುವ ಅಂಕಿಅಂಶಗಳನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ. ಶಕ್ತಿಯ ಮೂಲಗಳು ಎನಿಸಿಕೊಂಡಿರುವ ಪೆಟ್ರೋಲ್ ಮತ್ತು ಡೀಸೆಲ್ ಇಂಧನ ಅತ್ಯವಶ್ಯಕವಾಗಿ ಬೇಕಾಗುವ ಸಂಪನ್ಮೂಲಗಳಾಗಿವೆ.
Gold Price Today: ಬಂಗಾರದ ಬೆಲೆ ನಿರಂತರ ಏರಿಕೆ, ಇಂದಿನ ಚಿನ್ನ-ಬೆಳ್ಳಿ ದರ ಎಷ್ಟಿದೆ?
ಬಂಗಾರ ದಿನೇ ದಿನೇ ದುಬಾರಿಯಾಗುತ್ತಿದೆ. ಚಿನ್ನದ ದರಗಳು ಕಳೆದ ಎರಡು ದಿನಗಳಿಂದ ನಿರಂತರವಾಗಿ ಏರಿಕೆ ಕಾಣುತ್ತಿದೆ. ಬುಧವಾರದಂದು ಪ್ರತಿ ಗ್ರಾಂ ಚಿನ್ನದ ಮೇಲೆ 65 ರೂಪಾಯಿವರೆಗೆ ಏರಿಕೆ ಕಂಡಿತ್ತು. ಗುರುವಾರ ಕೂಡ ಗ್ರಾಂ ಮೇಲೆ 33 ರೂಪಾಯಿ ಏರಿಕೆ ಕಂಡಿತ್ತು. ಇಂದು ಶುಕ್ರವಾರ ಕೂಡ ದರಗಳು ಹೆಚ್ಚಾಗುವ ನಿರೀಕ್ಷೆ ಇದೆ. ಬೆಂಗಳೂರಿನಲ್ಲಿ ಈಗ 24 ಕ್ಯಾರೆಟ್, 22
ಬಂಗಾರಪೇಟೆ | ಗ್ರಾಮೀಣ ಕುಡಿಯುವ ನೀರಿನ ಇಲಾಖೆ ಎಇಇಯಾಗಿ ಆನಂದ್ ಕುಮಾರ್ ಅಧಿಕಾರ ಸ್ವೀಕಾರ
ಬಂಗಾರಪೇಟೆ : ತಾಲೂಕು ಗ್ರಾಮೀಣ ಕುಡಿಯುವ ನೀರು ಹಾಗೂ ನೈರ್ಮಲ್ಯ ಇಲಾಖೆಯ ಸಹಾಯಕ ಕಾರ್ಯಾಪಾಲಕ ಎಂಜಿನಿಯರ್ ಆಗಿ ಎನ್.ಆನಂದ್ ಕುಮಾರ್ ಅಧಿಕಾರ ವಹಿಸಿಕೊಂಡಿದ್ದಾರೆ. ಕಳೆದ ಐದು ತಿಂಗಳಿಂದ ಖಾಲಿಯಾಗಿದ್ದ ಈ ಹುದ್ದೆಗೆ ಸಣ್ಣ ನೀರಾವರಿ ಇಲಾಖೆಯಿಂದ ತಾಲೂಕು ಗ್ರಾಮೀಣ ಕುಡಿಯುವ ನೀರು ಹಾಗೂ ನೈರ್ಮಲ್ಯ ಇಲಾಖೆಯ ಎಇಇ ಆಗಿ ವರ್ಗಾವಣೆಯಾಗಿ ಬಂದಿದ್ದು, ಇದುವರೆಗೂ ಪ್ರಭಾರ ಎಇಇ ಆಗಿದ್ದ ಮುಳಬಾಗಿಲು ತಾಲೂಕಿನ ಎಇಇ ಮುರಳಿ ಅವರಿಂದ ಅಧಿಕಾರ ವಹಿಸಿಕೊಂಡರು. ಎನ್.ಆನಂದ್ ಕುಮಾರ್ ಅವರು, ಜಿಲ್ಲೆಯ ಸಣ್ಣ ನೀರಾವರಿ ಇಲಾಖೆಯಲ್ಲಿ ಕಿರಿಯ ಎಂಜಿನಿಯರ್ ಆಗಿ ಕರ್ತವ್ಯ ನಿರ್ವಹಿಸಿದ್ದರು. ಅನಂತರ ಎಇಇ ಆಗಿ ಮುಂಬಡ್ತಿ ಹೊಂದಿದ ಮೇಲೆ ರಾಮನಗರ ತಾಲೂಕಿನ ಸಣ್ಣ ನೀರಾವರಿ ಇಲಾಖೆಯ ಉಪವಿಭಾಗದಲ್ಲಿ ಎಇಇ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಕಳೆದ ಐದು ತಿಂಗಳ ಹಿಂದೆ ಇಲ್ಲಿನ ಎಇಇ ಆಗಿದ್ದ ಸೂರ್ಯಪ್ರಸಾದ್ ವಯೋನಿವೃತ್ತಿಯಾಗಿದ್ದರಿಂದ ಇದುವರೆಗೂ ಈ ಸ್ಥಾನವು ಖಾಲಿಯಾಗಿತ್ತು. ಬಂಗಾರಪೇಟೆ ಹಾಗೂ ಕೆಜಿಎಫ್ ಎರಡೂ ತಾಲೂಕುಗಳಿಗೆ ಒಂದೇ ಉಪವಿಭಾಗವಿದ್ದು, ಪ್ರಭಾರಿಯಾಗಿ ಮುಳಬಾಗಿಲು ತಾಲೂಕಿನ ಎಇಇ ಮುರಳಿ ಅವರಿಗೆ ಅಧಿಕಾರ ವಹಿಸಲಾಗಿತ್ತು. ನೂತನ ಎಇಇ ಎನ್.ಆನಂದ್ ಕುಮಾರ್ ಮಾತನಾಡಿ, ಬಂಗಾರಪೇಟೆ ಹಾಗೂ ಕೆಜಿಎಫ್ ಎರಡೂ ತಾಲೂಕುಗಳಿಗೆ ಒಂದೇ ಉಪವಿಭಾಗವಿದ್ದು, ಈ ಎರಡು ತಾಲೂಕುಗಳಲ್ಲಿ ಬಾಕಿ ಇರುವ ಜಲಜೀವನ್ ಮಿಷನ್ ಕಾಮಗಾರಿಗಳನ್ನು ಸಂಪೂರ್ಣವಾಗಿ ಮುಗಿಸಲು ಸಂಬಂಧಪಟ್ಟಗುತ್ತಿಗೆದಾರರೊಂದಿಗೆ ಚರ್ಚಿಸಿ ಕ್ರಮಕೈಗೊಳ್ಳಲಾಗುವುದು. ಸದ್ಯಕ್ಕೆ ಈ ಎರಡು ತಾಲೂಕುಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇಲ್ಲವಾಗಿದೆ. ಮುಂದಿನ ಬೇಸಿಗೆಯಲ್ಲಿ ಏನಾದರೂ ಕುಡಿಯುವ ನೀರಿನ ಸಮಸ್ಯೆ ಉಂಟಾದಲ್ಲಿ ಸ್ಥಳೀಯ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಹಾಗೂ ಇಲಾಖೆಯ ಮೇಲಾಧಿಕಾರಿಗಳ ಸಹಕಾರದಿಂದ ಸಮಸ್ಯೆಯನ್ನು ಬಗೆಹರಿಸಲು ಶ್ರಮಿಸಲಾಗುವುದೆಂದು ಹೇಳಿದರು. ಜಿಲ್ಲಾ ಎಸ್ಸಿ, ಎಸ್ಠಿ ಗುತ್ತಿಗೆದಾರರ ಸಂಘದ ಅಧ್ಯಕ್ಷ ಮಾರ್ಜೇನಹಳ್ಳಿ ಬಾಬು, ಲೋಕೋಪಯೋಗಿ ಇಲಾಖೆಯ ಎಇಇ ರವಿ, ಉಪವಿಭಾಗದ ಎಂಜಿನಿಯರ್ಗಳಾದ ರಾಜಶೇಖರ್ ಹಿರೇಮಠ್, ಶೈಲಜಾ, ಅಭಿಲಾಶ್, ದೇವೇಗೌಡ, ಲಾವಣ್ಯ, ಸಿಬ್ಬಂದಿಯಾದ ಅನಿಲ್, ನಾಗರಾಜ್, ಶೋಭ, ನಟರಾಜ್ ಸೇರಿದಂತೆ ಹಲವು ಗುತ್ತಿಗೆದಾರರು ಸೇರಿದಂತೆ ಇತರರು ಇದ್ದರು. ಬಂಗಾರಪೇಟೆ ಪಟ್ಟಣದ ಗ್ರಾಮೀಣ ಕುಡಿಯುವ ನೀರು ಹಾಗು ನೈರ್ಮಲ್ಯ ಇಲಾಖೆಯ ಎಇಇ ಆಗಿ ವರ್ಗಾವಣೆಯಾಗಿ ಬಂದ ಎನ್.ಆನಂದ್ ಕುಮಾರ್ ಅವರು ಅಧಿಕಾರ ವಹಿಸಿಕೊಂಡ ವೇಳೆ ಅಧಿಕಾರಿ ಸಿಬ್ಬಂದಿ ಸ್ವಾಗತಿಸಿದರು.
Explained: ಬಾಂಗ್ಲಾದೇಶದಲ್ಲಿ ಭಾರತ ವಿರೋಧಿ ಪ್ರತಿಭಟನೆ; ʻಹಾದಿʼ ಬಿಟ್ಟವರಿಂದಲೇ ಧಗಧಗ ಉರಿಯುತ್ತಿದೆ ಮನೆ!
ಬಾಂಗ್ಲಾದೇಶಕ್ಕೂ ಶಾಂತಿಗೂ ಎಣ್ಣೆ-ಸೀಗೆಕಾಯಿ ಸಂಬಂಧ. ದಿನಕ್ಕೊಂದು ವಿವಾದ, ದಿನಕ್ಕೊಂದು ಸಂಘರ್ಷ, ದಿನಕ್ಕೊಂದು ಹಿಂಸಾಚಾರ ಬಾಂಗ್ಲಾದೇಶದ ಅವಿಭಾಜ್ಯ ಅಂಗವಾಗಿ ಹೋಗಿದೆ. ಅದರಲ್ಲೂ ನೆರೆಯ ದೇಶದಲ್ಲಿ ಭಾರತ ವಿರೋಧಿ ಮನೋಭಾವನೆ ಹೆಚ್ಚುತ್ತಿದ್ದು, ಇದು ಹಿಂಸಾತ್ಮಕ ಪ್ರತಿಭಟನೆಗಳಿಗೆ ತಿರುಗುತ್ತಿದೆ. ಬಾಂಗ್ಲಾದೇಶದ ವಿದ್ಯಾರ್ಥಿ ನಾಯಕ ಷರೀಫ್ ಉಸ್ಮಾನ್ ಹಾದಿ ಸಾವು, ಆ ದೇಶದಲ್ಲಿ ಹೊಸದಾಗಿ ಹಿಂಸಾತ್ಮಕ ಸಂಘರ್ಷ ಭುಗಿಲೇಳುವಂತೆ ಮಾಡಿದೆ. ರಾಜಧಾನಿ ಢಾಕಾದಲ್ಲಿ ಭಾರೀ ಪ್ರತಿಭಟನೆಗಳು ನಡೆಯುತ್ತಿದ್ದು, ಎಲ್ಲೆಡೆ ಆಕ್ರೋಶ ಕಂಡುಬರುತ್ತಿದೆ. ಇಲ್ಲಿದೆ ಸಂಪೂರ್ಣ ಮಾಹಿತಿ.
ಡಿಕೆ ಶಿವಕುಮಾರ್ ಆಪ್ತ ಕಾರ್ಯದರ್ಶಿ ಕಾರು ಅಪಘಾತ: ಬೈಕ್ ಸವಾರ ಸಾವು, ಆಸ್ಪತ್ರೆಗೆ ಡಿಸಿಎಂ ಭೇಟಿ
ನಿನ್ನೆ ತಡರಾತ್ರಿ ನಡೆದ ದುರ್ಘಟನೆಯಲ್ಲಿ ಬೈಕ್ ಸವಾರ ಸಾವನ್ನಪ್ಪಿದ್ದು, ಡಿಕೆಶಿ ಆಪ್ತ ಸಹಾಯಕ ಹಾಗೂ ಅವರ ಕಾರು ಚಾಲಕನಿದ್ದ ಕಾರು ಪಲ್ಟಿಯಾಗಿದ್ದು, ಇಬ್ಬರೂ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರ ಆರೋಗ್ಯ ವಿಚಾರಿಸಿದ ಡಿಕೆಶಿ ಏನು ಹೇಳಿದ್ದಾರೆ ನೋಡಿ
ಕರೋಲಿನಾ ವಿಮಾನ ನಿಲ್ದಾಣದಲ್ಲಿ ಲಘು ವಿಮಾನ ಅಪಘಾತ : 7 ಮಂದಿ ಮೃತ್ಯು
ಕರೋಲಿನಾ: ಉತ್ತರ ಕರೋಲಿನಾ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ಪ್ರಯತ್ನದಲ್ಲಿದ್ದ ಖಾಸಗಿ ವಿಮಾನ ಗುರುವಾರ ರಾತ್ರಿ ಅಪಘಾತಕ್ಕೀಡಾಗಿ ಸಂಭವಿಸಿದ ದುರಂತದಲ್ಲಿ ಏಳು ಮಂದಿ ಮೃತಪಟ್ಟಿದ್ದಾರೆ. ಮಾಜಿ ಎನ್ಎಎಸ್ಸಿಎಆರ್ ಚಾಲಕ ಗ್ರೆಗ್ ಬಿಫೆಲ್ ಹಾಗೂ ಅವರ ಕುಟುಂಬ ಸದಸ್ಯರು ಮೃತಪಟ್ಟವರಲ್ಲಿ ಸೇರಿದ್ದಾರೆ ಎಂದು ತಿಳಿದು ಬಂದಿದೆ. ಚಾರ್ಲೊಟ್ನಿಂದ 45 ಮೈಲಿ ದೂರದ ಸ್ಟೇಟಸ್ವಿಲ್ ಪ್ರಾದೇಶಿಕ ವಿಮಾನ ನಿಲ್ದಾಣದಲ್ಲಿ ಭೂಮಿಗೆ ಅಪ್ಪಳಿಸಿದ ವಿಮಾನ ಸ್ಫೋಟಗೊಂಡು ಭಸ್ಮಗೊಂಡಿತು ಎಂದು ಹೇಳಲಾಗಿದೆ. ಬಿಫಲ್ ಕಂಪನಿ ಈ ವಿಮಾನವನ್ನು ನಿರ್ವಹಿಸುತ್ತಿತ್ತು ಎಂದು ದಾಖಲೆಗಳಿಂದ ತಿಳಿದು ಬಂದಿದೆ. ವಿಮಾನ ಅಪಘಾತ ಸಂಭವಿಸಿದ್ದನ್ನು ನಾವು ದೃಢಪಡಿಸುತ್ತೇವೆ. ಬೆಳಿಗ್ಗೆ 10.15ರ ಸುಮಾರಿಗೆ ವಿಮಾನ ಲ್ಯಾಂಡಿಂಗ್ ವೇಳೆ ಅಪಘಾತಕ್ಕೀಡಾಗಿದೆ. ಫೆಡರಲ್ ಏವಿಯೇಶನ್ ಅಡ್ಮಿನಿಸ್ಟ್ರಷನ್ ಘಟನೆ ಬಗ್ಗೆ ತನಿಖೆ ನಡೆಸುತ್ತಿದೆ ಎಂದು ವಿಮಾನ ನಿಲ್ದಾಣದ ಫೇಸ್ಬುಕ್ ಪೇಜ್ನಲ್ಲಿ ವಿವರಿಸಲಾಗಿದೆ. ಘಟನೆ ಬಗ್ಗೆ ಹೆಚ್ಚಿನ ವಿವರಗಳು ಲಭ್ಯವಾದ ಬಳಿಕ ಹಂಚಿಕೊಳ್ಳಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ. ಸೆಸ್ನಾ ಸಿ550 ಬ್ಯುಸಿನೆಸ್ ಜೆಟ್ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ವೇಳೆ ಅಪಘಾತಕ್ಕೀಡಾಗಿದೆ ಎಂದು ಅಸೋಸಿಯೇಟೆಡ್ ಪ್ರೆಸ್ ವರದಿ ಮಾಡಿದೆ. ಸಾವುಗಳು ಸಂಭವಿವೆ ಎಂದು ಇರೆಡೆಲ್ ಕೌಂಟಿ ಶ್ರಾಫ್ ಗ್ರಾಂಟ್ ಕ್ಯಾಂಪ್ಬೆಲ್ ಹೇಳಿದ್ದರೂ, ಎಷ್ಟು ಮಂದಿ ಮೃತಪಟ್ಟಿದ್ದಾರೆ ಎಂದು ದೃಢಪಡಿಸಿಲ್ಲ. ವಿಮಾನ ಸ್ಫೋಟದಿಂದ ಚಲ್ಲಾಪಿಲ್ಲಿಯಾಗಿ ಬಿದ್ದಿದ್ದ ಅವಶೇಷಗಳತ್ತ ಪರಿಹಾರ ತಂಡ ಧಾವಿಸುತ್ತಿರುವ ವಿಡಿಯೊಗಳು ಜಾಲತಾಣಗಳಲ್ಲಿ ಹರಿದಾಡುತ್ತಿವೆ.
SSLC Exam 2026: ಮಾದರಿ ಪ್ರಶ್ನೆ ಪತ್ರಿಕೆ, ಕೀ-ಉತ್ತರಗಳು ಬಿಡುಗಡೆ: ವಿದ್ಯಾರ್ಥಿಗಳ ತಯಾರಿ ಹೀಗಿರಲಿ
ಬೆಂಗಳೂರು: ಕರ್ನಾಟಕದಲ್ಲಿ ಎಸ್ಎಸ್ಎಲ್ಸಿ 2026 (Karnataka SSLC Exam 2026) ಪರೀಕ್ಷೆಗಳಿಗೆ ಕೆಲವೇ ತಿಂಗಳುಗಳು ಬಾಕಿ ಇವೆ. ಈ ನಡುವೆ ವಿದ್ಯಾರ್ಥಿಗಳಿಗೆ ಅನುಕೂಲವಾಗಲೆಂದು ಕರ್ನಾಟಕ ಮಾಧ್ಯಮಿಕ ಶಿಕ್ಷಣ ಪರೀಕ್ಷಾ ಮಂಡಳಿ (KSEAB) ಅಧಿಕೃತ ಎಸ್ಎಸ್ಎಲ್ಸಿ ಮಾದರಿ ಪ್ರಶ್ನೆ ಪತ್ರಿಕೆಗಳು-2026 ಬಿಡುಗಡೆ ಮಾಡಿದೆ. ಪ್ರತಿ ವಿಷಯಕ್ಕೆ ಸಂಬಂಧಿಸಿದಂತೆ ಮಾದರಿ ಪ್ರಶ್ನೆ ಪತ್ರಿಕೆಗಳು, ಕೀ ಉತ್ತರಗಳು ಸೆಟ್ಗಳಲ್ಲಿ ಪಿಡಿಎಫ್ ಮಾದರಿಯಲ್ಲಿ
ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಮಾನಸಿಕ ಆರೋಗ್ಯದ ಬಗ್ಗೆ ಅನೇಕ ಬಾರಿ ಚರ್ಚೆಗಳು ನಡೆದಿವೆ. ಸಾರ್ವಜನಿಕ ಸಮಾರಂಭದಲ್ಲಿ ಅವರು ತೋರುವ ವರ್ತನೆ ಕೆಲವೊಮ್ಮೆ ಮುಜುಗರ ಮತ್ತು ಕೋಪಕ್ಕೆ ಗುರಿಯಗುತ್ತಿವೆ. ಅದೇ ರೀತಿ ಸಾರ್ವಜನಿಕ ಸಮಾರಂಭದಲ್ಲಿ ಮುಸ್ಲಿಂ ವೈದ್ಯೆಯ ಹಿಜಾಬ್ ಹಿಡಿದೆಳೆದು ವಿವಾದ ಸೃಷ್ಟಿಸಿರುವ ನಿತೀಶ್ ಕುಮಾರ್, ಬಿಹಾರದಲ್ಲಿ ಹಿಜಾಬ್ ವಿವಾದ ಭುಗಿಲೇಳಲು ಕಾರಣರಾಗಿದ್ದಾರೆ. ಇದೀಗ ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಕೂಡ ನಿತೀಶ್ ಕುಮಾರ್ ವರ್ತನೆಯನ್ನು ಖಂಡಿಸಿದ್ದಾರೆ.
ಪೋಷಣೆ ಕಳೆದುಕೊಳ್ಳುತ್ತಿರುವ ಪ್ರಧಾನಮಂತ್ರಿ ಪೋಷಣ್ ಶಕ್ತಿ
ಯಾವುದೇ ಯೋಜನೆಗಳ ಹೆಸರುಗಳನ್ನು ಕೇಂದ್ರ ಸರಕಾರ ಬದಲಿಸಲು ಮುಂದಾಗುತ್ತದೆಯೆಂದರೆ, ಆ ಯೋಜನೆಗಳ ಗ್ರಹಚಾರ ಕೆಡಲಿದೆಯೆಂದೇ ಅರ್ಥ. ಪರಿಷ್ಕರಣೆಯ ಹೆಸರಿನಲ್ಲಿ ಯೋಜನೆಯ ಹೆಸರನ್ನು ಬದಲಿಸುವ ಮೂಲಕ ಕೇಂದ್ರ ಸರಕಾರ ಯಾರದೋ ಸಾಧನೆಯನ್ನು ತನ್ನ ಖಾತೆಗೆ ಬರೆದುಕೊಳ್ಳುತ್ತದೆ. ಅದರ ಜೊತೆ ಜೊತೆಗೇ ಅದನ್ನು ಹಂತ ಹಂತವಾಗಿ ಮುಗಿಸುವುದಕ್ಕೆ ಬೇಕಾದ ಕಾರ್ಯಯೋಜನೆಯನ್ನೂ ರೂಪಿಸುತ್ತದೆ. ಯುಪಿಎ ಸರಕಾರ ಜಾರಿಗೆ ತಂದ ಹತ್ತು ಹಲವು ಸಬ್ಸಿಡಿ ಯೋಜನೆಗಳನ್ನು ಸರಕಾರ ಮುಗಿಸಿದ್ದು ಇದೇ ತಂತ್ರ ಅನುಸರಿಸಿ. ಮಾಹಿತಿ ಹಕ್ಕು ಕಾಯ್ದೆಯನ್ನು ಕೇಂದ್ರ ಸರಕಾರ ಹೇಗೆ ದುರ್ಬಲಗೊಳಿಸಿತು ಎನ್ನುವುದನ್ನು ನಾವು ನೋಡಿದ್ದೇವೆ. ನರೇಗಾ ಯೋಜನೆಯನ್ನು ಇಲ್ಲವಾಗಿಸಲು ರಾಮನ ಹೆಸರನ್ನು ಬಳಸಿಕೊಳ್ಳುತ್ತಿರುವುದರ ವಿರುದ್ಧ ದೇಶ ಆಕ್ರೋಶ ವ್ಯಕ್ತಪಡಿಸುತ್ತಿದೆ. 2021ರಲ್ಲಿ ಪ್ರಧಾನಮಂತ್ರಿ ಪೋಷಣ್ ಶಕ್ತಿ ನಿರ್ಮಾಣ್ ಯೋಜನೆ ಎಂದು ಪುನರ್ನಾಮಕರಣಕ್ಕೊಳಗಾದ ಮಧ್ಯಾಹ್ನದ ಬಿಸಿಯೂಟದ ಸ್ಥಿತಿಯೂ ಇದಕ್ಕಿಂತ ಭಿನ್ನವಾಗಿಯೇನೂ ಇಲ್ಲ. ಮಧ್ಯಾಹ್ನದ ಬಿಸಿಯೂಟ ಅಥವಾ ಮಿಡ್ಡೇ ಮೀಲ್ ಎಂದು ದೇಶಾದ್ಯಂತ ಜನಪ್ರಿಯಗೊಂಡಿದ್ದ, ಈ ದೇಶದ ಲಕ್ಷಾಂತರ ಬಡ ಮಕ್ಕಳು ಶಾಲೆಯ ಮೆಟ್ಟಿಲು ತುಳಿಯಲು ಕಾರಣವಾಗಿದ್ದ ಯೋಜನೆಯು 2021ರಲ್ಲಿ ಪುನರ್ನಾಮಕರಣಗೊಂಡಿತು. 2021ರಿಂದ 2026ರ ವರೆಗಿನ ಗುರಿಯಿಟ್ಟು, 1.3 ಲಕ್ಷ ಕೋಟಿ ರೂಪಾಯಿಗಳಿಗೂ ಅಧಿಕ ಬಜೆಟ್ನ್ನು ಈ ಯೋಜನೆಗೆ ಮೀಸಲಿಡಲಾಗಿತ್ತು. ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳು ಈ ಯೋಜನೆಯನ್ನು ಸದುಪಯೋಗಗೊಳಿಸಿವೆ. ಕೇಂದ್ರ ಸರಕಾರ ಮತ್ತು ರಾಜ್ಯ ಸರಕಾರ ಜಂಟಿಯಾಗಿ ಈ ಯೋಜನೆಯನ್ನು ಜಾರಿಗೊಳಿಸುತ್ತಾ ಬರುತ್ತಿವೆ. ಆದರೆ ಇತ್ತೀಚಿನ ದಿನಗಳಲ್ಲಿ ಈ ಯೋಜನೆಗೆ ಹಲವು ರಾಜ್ಯಗಳಲ್ಲಿ ಹಿನ್ನಡೆಯಾಗುತ್ತಿದೆ. ಈ ಯೋಜನೆಯಡಿ 2020-21ರಲ್ಲಿ 11.1 ಲಕ್ಷ ಶಾಲೆಗಳ ವಿದ್ಯಾರ್ಥಿಗಳು ಪ್ರಯೋಜನವನ್ನು ಪಡೆಯುತ್ತಿದ್ದರು. ಜನಸಂಖ್ಯೆ ಏರಿಕೆ ಮತ್ತು ದೇಶದಲ್ಲಿ ಹೆಚ್ಚುತ್ತಿರುವ ಅಪೌಷ್ಟಿಕತೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಈ ಯೋಜನೆ ಇನ್ನಷ್ಟು ವಿಸ್ತಾರಗೊಳ್ಳಬೇಕಾಗಿತ್ತು. ಆದರೆ 2024-25ರಲ್ಲಿ ಇದು 10.3 ಲಕ್ಷಕ್ಕೆ ಇಳಿಕೆಯಾಗಿದೆ ಎನ್ನುವುದನ್ನು ಸ್ವತಃ ಸರಕಾರವೇ ಒಪ್ಪಿಕೊಂಡಿದೆ. ಅಂದರೆ 84, 400 ಶಾಲೆಗಳು ಈ ಯೋಜನೆಯ ವ್ಯಾಪ್ತಿಯಿಂದ ಹೊರಬಿದ್ದಿವೆ. ಬಡತನ, ಅನಕ್ಷರತೆಗಾಗಿ ದೇಶದಲ್ಲೇ ಕುಖ್ಯಾತವಾಗಿರುವ ಉತ್ತರ ಪ್ರದೇಶದ ಅತ್ಯಧಿಕ ಶಾಲೆಗಳು ಈ ಯೋಜನೆಯ ವ್ಯಾಪ್ತಿಯಿಂದ ಹೊರ ತಳ್ಳಲ್ಪಟ್ಟಿವೆ. ಇಲ್ಲಿ ಐದು ವರ್ಷಗಳಲ್ಲಿ 25, 361 ಶಾಲೆಗಳು ಮಧ್ಯಾಹ್ನದ ಊಟದಿಂದ ವಂಚಿತವಾಗಿವೆ. ಆನಂತರದ ಸ್ಥಾನದಲ್ಲಿ ಮಧ್ಯಪ್ರದೇಶವಿದೆ. ಇಲ್ಲಿ, 9,321 ಶಾಲೆಗಳ ಮಕ್ಕಳು ಯೋಜನೆಯಿಂದ ವಂಚಿತರಾಗಿದ್ದಾರೆ. ಈ ಯೋಜನೆಯ ಹೊಣೆಗಾರಿಕೆಯನ್ನು ಕೇಂದ್ರ ಮತ್ತು ರಾಜ್ಯ ಎರಡೂ ಹೊತ್ತುಕೊಂಡಿವೆ. ಅನುದಾನ ಬಿಡುಗಡೆ ಮಾಡುವ ವಿಷಯದಲ್ಲಿ ಕೇಂದ್ರ ಅನುಸರಿಸುತ್ತಿರುವ ಪಕ್ಷಪಾತ ಈ ಯೋಜನೆಯ ಮೇಲೂ ಪರಿಣಾಮ ಬೀರಿದೆ. ಯೋಜನೆಯಡಿ ವರ್ಷದಲ್ಲಿ ಸರಾಸರಿ 220 ದಿನಗಳ ಕಾಲ ಮಕ್ಕಳಿಗೆ ಆಹಾರವನ್ನು ಒದಗಿಸಬೇಕು. 2024-25ರಲ್ಲಿ ಕೇಂದ್ರ ಸರಕಾರವು ಯೋಜನೆಗಾಗಿ 12, 467.3 ಕೋಟಿ ರೂಪಾಯಿಗಳನ್ನು ಹಂಚಿಕೆ ಮಾಡಿತ್ತು. ಆದರೆ ಬಳಿಕ ಅದನ್ನು 10,000 ಕೋಟಿ ರೂಪಾಯಿಗಳಿಗೆ ಇಳಿಸಿತ್ತು. ಫೆಬ್ರವರಿ 2025ರ ವೇಳೆಗೆ ಕೇವಲ 5,421.9 ಕೋಟಿ ರೂ.ಗಳನ್ನಷ್ಟೇ ವೆಚ್ಚ ಮಾಡಲಾಗಿದೆ ಎನ್ನುವುದನ್ನು ಕೇಂದ್ರ ಸರಕಾರದ ಅಂಕಿಅಂಶ ತಿಳಿಸುತ್ತದೆ. ಬಡತನದ ಕಾರಣಕ್ಕಾಗಿ ಗ್ರಾಮೀಣ ಪ್ರದೇಶದಲ್ಲಿ ಮಕ್ಕಳನ್ನು ಶಾಲೆಗೆ ಕಳುಹಿಸಲು ಕುಟುಂಬಗಳು ಹಿಂಜರಿಯುತ್ತಿದ್ದ ಸಂದರ್ಭದಲ್ಲಿ ಈ ಯೋಜನೆಯನ್ನು ಜಾರಿಗೆ ತರಲಾಯಿತು. ಗ್ರಾಮೀಣ ಪ್ರದೇಶದಲ್ಲಿ ಅಪೌಷ್ಟಿಕತೆಯನ್ನು ನಿವಾರಿಸುವುದಕ್ಕೂ ಈ ಯೋಜನೆ ಸದುಪಯೋಗವಾಯಿತು. ಸ್ಥಳೀಯ ರೈತ ಸಂಘಟನೆಗಳು, ಸ್ವಸಹಾಯ ಸಂಘಗಳ ಪಾಲುದಾರಿಕೆಯನ್ನು ಈ ಯೋಜನೆಗೆ ಬಳಸಿಕೊಳ್ಳಲಾಯಿತು. 1925ರಲ್ಲಿ ಮದ್ರಾಸ್ ಮುನ್ಸಿಪಲ್ ಕಾರ್ಪೊರೇಶನ್ ಈ ಯೋಜನೆಯನ್ನು ನಿರ್ದಿಷ್ಟ ಮಕ್ಕಳಿಗೆ ಪ್ರಯೋಗ ರೂಪದಲ್ಲಿ ಜಾರಿಗೆ ತಂದಿತ್ತು. ಸ್ವತಂತ್ರ ಭಾರತದಲ್ಲಿ ಈ ಯೋಜನೆ ಮೊದಲ ಬಾರಿಗೆ ಜಾರಿಗೆ ತಂದುದು ತಮಿಳು ನಾಡು ಸರಕಾರ. ಆ ಬಳಿಕ ಕೇರಳ ಆಸಕ್ತಿ ವಹಿಸಿತು. 2001ರಲ್ಲಿ ಸುಪ್ರೀಂಕೋರ್ಟ್ ಆದೇಶದ ಬಳಿಕ ಎಲ್ಲ ರಾಜ್ಯಗಳು ಈ ಯೋಜನೆಗೆ ಕೈ ಜೋಡಿಸಿದವು. ಅಲ್ಲಿಂದ ಅದು ಹಂತ ಹಂತವಾಗಿ ದೇಶಾದ್ಯಂತ ವಿಸ್ತಾರಗೊಂಡಿತು. ಈ ಯೋಜನೆ ಲಕ್ಷಾಂತರ ಮಕ್ಕಳು ಶಾಲೆಯ ಕಡೆಗೆ ಹೊರಳುವುದಕ್ಕೆ ಕಾರಣವಾಯಿತು. ಸರಕಾರಿ ಶಾಲೆಗಳಲ್ಲಿ ಹಾಜರಾತಿ ಹೆಚ್ಚುವಲ್ಲಿ ಇದು ಮಹತ್ತರ ಪಾತ್ರವನ್ನು ವಹಿಸಿತ್ತು. ಮಾತ್ರವಲ್ಲ ಅಪೌಷ್ಟಿಕತೆಯಿಂದ ಕಂಗಾಲಾಗಿದ್ದ ಗ್ರಾಮೀಣ ಪ್ರದೇಶದ ಮಕ್ಕಳ ಆರೋಗ್ಯವನ್ನು ಮೇಲೆತ್ತುವಲ್ಲೂ ಪರಿಣಾಮಕಾರಿಯಾಗಿ ಕೆಲಸ ಮಾಡಿತು. ಈ ಯೋಜನೆಯನ್ನು ನಿರ್ಲಕ್ಷಿಸಿದ್ದೇ ಆದರೆ ಅದು ಈ ದೇಶದ ಶಿಕ್ಷಣದ ಮೇಲೆ ಮಾತ್ರವಲ್ಲ, ಪೌಷ್ಟಿಕತೆಯ ಮೇಲೂ ದುಷ್ಪರಿಣಾಮವನ್ನು ಬೀರುತ್ತದೆ. ಈ ನಿಟ್ಟಿನಲ್ಲಿ, ಮಧ್ಯಾಹ್ನದ ಬಿಸಿಯೂಟದಿಂದ 84,000 ಶಾಲೆಗಳು ಯಾಕೆ ಹೊರಬಿದ್ದವು? ಮತ್ತು ಇದು ಗ್ರಾಮೀಣ ಪ್ರದೇಶದಲ್ಲಿ ಯಾವ ಪರಿಣಾಮವನ್ನು ಬೀರಬಹುದು ಎನ್ನುವುದರ ಬಗ್ಗೆ ಸರಕಾರ ತುರ್ತಾಗಿ ಆಲೋಚಿಸ ಬೇಕಾಗಿದೆ. ಸೂಕ್ತ ಸಮಯದಲ್ಲಿ ಅನುದಾನ ಒದಗಿಸದೇ ಇರುವ ಮೂಲಕ ಕೇಂದ್ರ ಸರಕಾರವೇ ಈ ಯೋಜನೆ ಯಶಸ್ವಿಯಾಗಿ ಅನುಷ್ಠಾನಗೊಳ್ಳದೇ ಇರಲು ಮುಖ್ಯ ಕಾರಣವಾಗಿದೆ. ಕರ್ನಾಟಕದಂತಹ ದಕ್ಷಿಣದ ರಾಜ್ಯಗಳು ಈ ಯೋಜನೆಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸುತ್ತಿದೆ ಮಾತ್ರವಲ್ಲ, ಬಿಸಿಯೂಟದ ಜೊತೆಗೆ ಮೊಟ್ಟೆ, ಹಾಲು, ಹಣ್ಣುಗಳ ಮೂಲಕ ಯೋಜನೆಯನ್ನು ಇನ್ನಷ್ಟು ಜನಪ್ರಿಯಗೊಳಿಸುತ್ತಿವೆ. ಇದೇ ಸಂದರ್ಭದಲ್ಲಿ ಉತ್ತರ ಪ್ರದೇಶದಂತಹ ರಾಜ್ಯಗಳಲ್ಲಿ ಈ ಯೋಜನೆಗಳು ನೆಲಕಚ್ಚಿವೆ. ಈ ರಾಜ್ಯದಲ್ಲಿ ಬಿಸಿಯೂಟದ ಹೆಸರಲ್ಲಿ ವಿದ್ಯಾರ್ಥಿಗಳಿಗೆ ರೊಟ್ಟಿ ಮತ್ತು ಉಪ್ಪು ನೀಡಿರುವುದು ಒಮ್ಮೆ ಮಾಧ್ಯಮಗಳಲ್ಲಿ ಸುದ್ದಿಯಾಗಿತ್ತು. ವಿದ್ಯಾರ್ಥಿಗಳಿಗೆ ಅತ್ಯಂತ ಕಳಪೆ ಊಟ ನೀಡುವುದರಲ್ಲಿ ಉತ್ತರಪ್ರದೇಶ ಆಗಾಗ ಮಾಧ್ಯಮಗಳಲ್ಲಿ ಸುದ್ದಿಯಾಗುತ್ತಲೇ ಬಂದಿದೆ. ಬಿಸಿಯೂಟ ಅನುದಾನ ದುರ್ಬಳಕೆಯಾಗಿ ವಿದ್ಯಾರ್ಥಿಗಳಿಗೆ ಕಳಪೆ ಆಹಾರ ನೀಡುವುದು ಕೂಡ ಈ ಯೋಜನೆ ವಿಫಲವಾಗಲು ಒಂದು ಕಾರಣವಾಗಿದೆ. ಶಾಲೆಗಳಲ್ಲಿ ಜೀವಂತವಿರುವ ಜಾತೀಯತೆಯೂ ಈ ಯೋಜನೆಗೆ ಬಹುದೊಡ್ಡ ತೊಡಕಾಗಿವೆ. ಮೇಲ್ಜಾತಿಯ ಜನರಿಗೆ ಈ ಯೋಜನೆ ಯಶಸ್ವಿಯಾಗುವುದು ಬೇಕಾಗಿಲ್ಲ. ಮಧ್ಯಮವರ್ಗದಿಂದ ಬರುವ ವಿದ್ಯಾರ್ಥಿಗಳು ಗುಣಮಟ್ಟದ ಕಾರಣದಿಂದ ಆಹಾರವನ್ನು ಮುಟ್ಟುವುದಿಲ್ಲ. ಇತ್ತೀಚಿನ ದಿನಗಳಲ್ಲಿ ಸಾವಿರಾರು ಸರಕಾರಿ ಶಾಲೆಗಳು ಮುಚ್ಚುತ್ತಿವೆ. ಪರಿಣಾಮವಾಗಿ ಬಡಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ ಮಾತ್ರವಲ್ಲ, ಈ ಬಿಸಿಯೂಟ ಯೋಜನೆಯಿಂದಲೂ ಹೊರತಳ್ಳಲ್ಪಡುತ್ತಿದ್ದಾರೆ. ಕೊರೋನ, ಲಾಕ್ಡೌನ್ ಕಾಲದಲ್ಲಿ ಶಾಲೆಯಿಂದ ಹೊರಬಿದ್ದ ಲಕ್ಷಾಂತರ ಮಕ್ಕಳು ಮತ್ತೆ ಶಾಲೆಯ ಮೆಟ್ಟಿಲು ತುಳಿದಿಲ್ಲ. ದೇಶವು ಹಸಿವಿನ ಸೂಚ್ಯಂಕದಲ್ಲಿ ಅಗ್ರಸ್ಥಾನದಲ್ಲಿದೆ. ಅಪೌಷ್ಟಿಕತೆ ಹೆಚ್ಚುತ್ತಿದೆ. ಇಂತಹ ಹೊತ್ತಿನಲ್ಲಿ ಮಧ್ಯಾಹ್ನದ ಬಿಸಿಯೂಟ ಯೋಜನೆಯನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಜಾರಿಗೊಳಿಸುವುದಕ್ಕೆ ಕೇಂದ್ರ ಸರಕಾರ ಮುಂದಾಗಬೇಕು. ಈ ಯೋಜನೆಯಿಂದ ಶಾಲೆಗಳು ಯಾಕೆ ಹೊರಬೀಳುತ್ತಿವೆ ಮತ್ತು ಆ ವಂಚಿತ ವಿದ್ಯಾರ್ಥಿಗಳನ್ನು ಮತ್ತೆ ಯೋಜನೆಯ ಭಾಗವಾಗಿಸುವುದು ಹೇಗೆ ಎನ್ನುವ ಬಗ್ಗೆ ಸರಕಾರ ಚರ್ಚಿಸಬೇಕು. ಇತರ ಜನಪ್ರಿಯ ಯೋಜನೆಗಳಿಗೆ ಒದಗಿದ ದಯನೀಯ ಸ್ಥಿತಿ ಈ ಮಧ್ಯಾಹ್ನದ ಊಟಕ್ಕೂ ಒದಗಿದರೆ ಅದು ಈ ದೇಶದ ಶಿಕ್ಷಣ ಮತ್ತು ಗ್ರಾಮೀಣ ಪ್ರದೇಶದ ಪೌಷ್ಟಿಕತೆಯ ಮೇಲೆ ತೀವ್ರ ದುಷ್ಪರಿಣಾಮವನ್ನು ಬೀರಲಿದೆ ಎನ್ನುವ ಎಚ್ಚರಿಕೆ ಸರಕಾರಕ್ಕೆ ಇರಬೇಕು.
ಕರ್ನಾಟಕ ಹವಾಮಾನ: ಈ ಜಿಲ್ಲೆಗಳಲ್ಲಿ ಮುಂದಿನ 5 ದಿನ ತಾಪಮಾನ ಇಳಿಕೆ, ಚಳಿ ಹೆಚ್ಚು
ಕರ್ನಾಟಕದ ಉತ್ತರ ಒಳನಾಡಿನಲ್ಲಿ ಈಶಾನ್ಯ ದಿಕ್ಕಿನ ಮಾರುತಗಳು ಮತ್ತು ದಕ್ಷಿಣ ಒಳನಾಡು ಮತ್ತು ಕರಾವಳಿ ಕರ್ನಾಟಕದ ಮೇಲೆ ಪೂರ್ವ ದಿಕ್ಕಿನ ಮಾರುತಗಳು ರಾಜ್ಯದ ಮೇಲೆ ಕೆಳ ಉಷ್ಣವಲಯದ ಮಟ್ಟದಲ್ಲಿ ಮೇಲುಗೈ ಸಾಧಿಸುವ ಸಾಧ್ಯತೆಯಿದೆ. ಈ ಹಿನ್ನೆಲೆ ರಾಜ್ಯದಲ್ಲಿ ತಾಪಮಾನ ಮತ್ತಷ್ಟು ಕಡಿಮೆಯಾಗುವ ಸಾಧ್ಯತೆ ಇದೆ. ಡಿಸೆಂಬರ್ 22ರವರೆಗೆ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಒಣಹವೆ ಮುಂದುವರಿಯಲಿದೆ. ಈ ವೇಳೆ
ಗ್ಯಾಸ್ ಗೀಸರ್ ಬಳಕೆ ಅಪಾಯಕಾರಿ: ಬಳಸುವ ಮುನ್ನ ಸುರಕ್ಷಿತ ಕ್ರಮಗಳನ್ನು ಅನುಸರಿಸಿ
ಗ್ಯಾಸ್ ಗೀಸರ್ ಮನೆಯಲ್ಲಿ ನೀರು ಕಾಯಿಸಲು ಬಳಸುವವರು ಎಚ್ಚರ ವಹಿಸಬೇಕು. ಏಕೆಂದರೆ ಗೀಸರ್ನಿಂದ ಗ್ಯಾಸ್ ಸೋರಿಕೆ ಆಗಬಹುದು. ಬಚ್ಚಲಮನೆಯಲ್ಲಿ ಸಾಮಾನ್ಯವಾಗಿ ಗಾಳಿ ಬೆಳಕು ಇರುವುದಿಲ್ಲ. ಅದರಲ್ಲೂ ಮಹಿಳೆಯರು ಸ್ನಾನ ಮಾಡುವಾಗ ಎಲ್ಲವನ್ನೂ ಮುಚ್ಚುವುದರಿಂದ ಇನ್ನೂ ಹೆಚ್ಚು ಅಪಾಯ ಸಂಭವಿಸಬಹುದು. ಅನಿಲದಿಂದ ಬೆಂಕಿ ಹತ್ತಿಕೊಳ್ಳಬಹುದು. ಅದರಿಂದ ಹೊಗೆ (ಕಾರ್ಬನ್ ಮಾನೋಕ್ಸೈಡ್) ಬಿಡುಗಡೆಯಾಗಿ ಒಳಗಿದ್ದವರು ಉಸಿರುಕಟ್ಟಿ ಸಾಯುತ್ತಾರೆ. ಕರ್ನಾಟಕದಲ್ಲಿ 40
ಎಚ್ಚರ: ಮೈಸೂರಲ್ಲಿ ಏಕ ಬಳಕೆ ಪ್ಲಾಸ್ಟಿಕ್ ನಿಯಂತ್ರಣಕ್ಕೆ ಟಾಸ್ಕ್ಫೋರ್ಸ್
ಮೈಸೂರು ನಗರದಲ್ಲಿ ಏಕ ಬಳಕೆ ಪ್ಲಾಸ್ಟಿಕ್ ನಿಯಂತ್ರಿಸಲು ಮಾಲಿನ್ಯ ನಿಯಂತ್ರಣ ಮಂಡಳಿ ಟಾಸ್ಕ್ಫೋರ್ಸ್ ರಚಿಸಲಿದೆ. ಈ ವಿಶೇಷ ಕಾರ್ಯಪಡೆ ತಂಡ ಒಂದು ತಿಂಗಳಲ್ಲಿ ಅಸ್ತಿತ್ವಕ್ಕೆ ಬರಲಿದ್ದು, ಈ ತಂಡವು ಪ್ಲಾಸ್ಟಿಕ್ ಬಳಕೆ ವಿರುದ್ಧ ಕಾರ್ಯಾಚರಣೆ ಆರಂಭಿಸಲಿದೆ.
ದಕ್ಷಿಣ ಕನ್ನಡದಲ್ಲಿ ಕ್ಯಾನ್ಸರ್ ಪ್ರಕರಣ ಹೆಚ್ಚಳ: ಈ ವರ್ಷ 3000 ಪ್ರಕರಣ ಪತ್ತೆ
ರಾಜ್ಯದ 'ಗೃಹ ಆರೋಗ್ಯ' ಯೋಜನೆಯಿಂದಾಗಿ ಜನರ ಆರೋಗ್ಯ ಸಮಸ್ಯೆಗಳ ಪತ್ತೆ ಹಾಗೂ ಚಿಕಿತ್ಸೆ ಈ ಉತ್ತಮವಾಗಿ ನಡೆಯುತ್ತಿದೆ. ಗೃಹ ಆರೋಗ್ಯ ಅಭಿಯಾನದ ವೇಳೆ, ಈ ಜಿಲ್ಲೆಯಲ್ಲಿ ಬಾಯಿ, ಸ್ತನ ಮತ್ತು ಗರ್ಭಕಂಠದ ಕ್ಯಾನ್ಸರ್ ಪ್ರಕರಣಗಳು ಇರುವುದು ಪತ್ತೆಯಾಗಿದ್ದು, ಹೆಚ್ಚಾಗಿ ಮಂಗಳೂರು ಹಾಗೂ ಪುತ್ತೂರಿನಲ್ಲಿ ಹೆಚ್ಚಿನ ಪ್ರಕರಣಗಳಿವೆ ಎಂಬುದು ಗೊತ್ತಾಗಿದೆ.
ಮಹೇಶ್ ಶೆಟ್ಟಿ ತಿಮರೋಡಿ ವಿರುದ್ಧ ಮತ್ತೆ ಗಡಿಪಾರು ಆದೇಶ ಜಾರಿ; ಕಾರಣ ಏನು? ಆದೇಶದಲ್ಲಿ ಏನಿದೆ?
ಸೌಜನ್ಯ ಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ದಕ್ಷಿಣ ಕನ್ನಡ ಜಿಲ್ಲೆಯಿಂದ ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿಗೆ ಗಡಿಪಾರು ಮಾಡಿ ಪುತ್ತೂರು ಸಹಾಯಕ ಆಯುಕ್ತರು ಪರಿಷ್ಕೃತ ಆದೇಶ ಹೊರಡಿಸಿದ್ದಾರೆ. 32ಕ್ಕೂ ಹೆಚ್ಚು ಪ್ರಕರಣಗಳನ್ನು ಗಮನಿಸಿ ಈ ಆದೇಶ ಹೊರಡಿಸಲಾಗಿದ್ದು, 10 ತಿಂಗಳು ಅನ್ವಯವಾಗಲಿದೆ.
‘ಪಾಕಿಸ್ತಾನ್ ಜಿಂದಾಬಾದ್’ ಘೋಷಣೆ : ಮೂರು ವರ್ಷದಲ್ಲಿ 12 ಪ್ರಕರಣ ದಾಖಲು : ಗೃಹ ಸಚಿವ ಜಿ.ಪರಮೇಶ್ವರ್
ಬೆಳಗಾವಿ : ರಾಜ್ಯದಲ್ಲಿ ಮೂರು ವರ್ಷಗಳಲ್ಲಿ ‘ಪಾಕಿಸ್ತಾನ್ ಜಿಂದಾಬಾದ್’ ಘೋಷಣೆ ಕೂಗಿದ ಕುರಿತು 12 ಪ್ರಕರಣ ದಾಖಲಿಸಿಕೊಂಡು 12 ಮಂದಿಯನ್ನು ಬಂಧಿಸಲಾಗಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ. ಗುರುವಾರ ವಿಧಾನ ಪರಿಷತ್ನ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿ ಸದಸ್ಯ ಸಿ.ಟಿ.ರವಿ ಪ್ರಶ್ನೆಗೆ ಉತ್ತರಿಸಿದ ಸಚಿವರು, 2023ರಿಂದ 2025 ಅವಧಿಯಲ್ಲಿ 12 ಪ್ರಕರಣ ʼಪಾಕಿಸ್ತಾನ್ ಜಿಂದಾಬಾದ್ʼ ಕೂಗಿದ ಸಂಬಂಧ ಸ್ವಯಂಪ್ರೇರಿತ ದೂರು ಮತ್ತು ದೂರಿನ ಆಧಾರದಲ್ಲಿ ಪ್ರಕರಣ ದಾಖಲು ಮಾಡಲಾಗಿದೆ. ಈ 12 ಪ್ರಕರಣಗಳಲ್ಲಿ 5 ಪ್ರಕರಣ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಲಾಗಿದೆ. 2 ಪ್ರಕರಣ ಬಿ-ರಿಪೋರ್ಟ್ ವರದಿ ಸಲ್ಲಿಸಲಾಗಿದೆ. 3 ಪ್ರಕರಣದ ತನಿಖೆ ನಡೆಯುತ್ತಿದೆ. 1 ಪ್ರಕರಣ ಸಿ-ರಿಪೋರ್ಟ್ ಹಾಕಲಾಗಿದೆ. 1 ಪ್ರಕರಣ ವಿಧಿವಿಜ್ಞಾನ ವಿಜ್ಞಾನ ಪ್ರಯೋಗಾಲಯ(ಎಫ್ಎಸ್ಎಲ್)ದಿಂದ ವರದಿ ಬರಬೇಕಿದೆ ಎಂದು ವಿವರಿಸಿದರು. ಸ್ವಯಂ ಪ್ರೇರಿತ ದೂರುಗಳನ್ನು ದಾಖಲಿಸುವಾಗ, ಕಾನೂನು ಸುವ್ಯವಸ್ಥೆಗೆ ಧಕ್ಕೆಯುಂಟಾಗುವ ಸಂದರ್ಭ, ಸಾರ್ವಜನಿಕ ಆಸ್ತಿ-ಪಾಸ್ತಿಗಳಿಗೆ ಹಾನಿಯನ್ನುಂಟು ಮಾಡಿದ ಸಂದರ್ಭ, ಅಕ್ರಮ ಚಟುವಟಿಕೆಗಳು ನಡೆಯುತ್ತಿದ್ದಲ್ಲಿ, ಸರಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಲ್ಲಿ, ವಾರಸುದಾರರು ಯಾರೂ ಇಲ್ಲದೇ ಇರುವ ಪ್ರಕರಣಗಳಲ್ಲಿ, ದ್ವೇಷಭಾಷಣ ಹಾಗೂ ಧಾರ್ಮಿಕ ಭಾವನೆಗಳಿಗೆ ಧಕ್ಕೆಯುಂಟಾಗುವ ಸಂದರ್ಭಗಳಲ್ಲಿ, ಕೆಲವು ಪ್ರಕರಣಗಳಲ್ಲಿ ಸಾರ್ವಜನಿಕರು ದೂರು ನೀಡಲು ಬಾರದೇ ಇದ್ದ ಸಂದರ್ಭಗಳಲ್ಲಿ ಸ್ವಯಂಪ್ರೇರಿತ ಪ್ರಕರಣಗಳನ್ನು ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗುವುದು ಎಂದು ಡಾ.ಜಿ.ಪರಮೇಶ್ವರ್ ಹೇಳಿದರು. ಸಾರ್ವಜನಿಕರ ಪ್ರಾಣ ಮತ್ತು ಮಾನ ಕಾಪಾಡುವ ಸಂದರ್ಭಗಳಲ್ಲಿ ಸ್ವಯಂಪ್ರೇರಿತ ದೂರುಗಳನ್ನು ದಾಖಲಿಸಲಾಗುತ್ತಿದೆ. ಸ್ಥಳೀಯ ಮತ್ತು ವಿಶೇಷ ಕಾಯ್ದೆ ಅಡಿಯಲ್ಲಿ ಕಾನೂನು ಬಾಹೀರ ಚಟುವಟಿಕೆಗಳ ವಿರುದ್ಧ ಪ್ರಕರಣಗಳನ್ನು ದಾಖಲಿಸುವಂತಹ ಸಂಜ್ಞೆಯ ಅಪರಾಧ, ಕೃತ್ಯದ ಬಗ್ಗೆ ಖಚಿತ ಮಾಹಿತಿ ಮೇರೆಗೆ ದೂರುಗಳನ್ನು ದಾಖಲಿಸಲಾಗುತ್ತಿದೆ ಎಂದರು. ಎರಡೂವರೆ ವರ್ಷದಲ್ಲಿ 61,299 ಸ್ವಯಂಪ್ರೇರಿತ ದೂರು: ರಾಜ್ಯದಲ್ಲಿ ಹಿಂದಿನ ಎರಡೂವರೆ ವರ್ಷದಲ್ಲಿ ಒಟ್ಟು 61,299 ಸ್ವಯಂಪ್ರೇರಿತ(ಸುವೋಮೋಟೋ) ದೂರುಗಳನ್ನು ದಾಖಲು ಮಾಡಲಾಗಿದೆ. 2023ರಲ್ಲಿ 20,435 ಪ್ರಕರಣ, 2024ರಲ್ಲಿ 19,152 ಹಾಗೂ 2025ರಲ್ಲಿ 21,712 ಪ್ರಕರಣಗಳನ್ನು ಸ್ವಯಂ ಪ್ರೇರಿತವಾಗಿ ದಾಖಲಿಸಲಾಗಿದೆ. ದಾಖಲು ಮಾಡಿರುವ ಈ ಸ್ವಯಂಪ್ರೇರಿತ ದೂರುಗಳಲ್ಲಿ 57,646 ದೂರುಗಳಿಗೆ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಲಾಗಿದ್ದು, ಯಾವುದೇ ದೂರುಗಳನ್ನು ಹಿಂಪಡೆದಿಲ್ಲ ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದರು.
ಬಿಜೆಪಿ ವಿರುದ್ಧ ಆಕ್ಷೇಪಾರ್ಹ ಜಾಹೀರಾತು; ರಾಹುಲ್ ಗಾಂಧಿ ಅರ್ಜಿ ಕುರಿತ ತೀರ್ಪು ಕಾಯ್ದಿರಿಸಿದ ಹೈಕೋರ್ಟ್
ಬೆಂಗಳೂರು : ಕಳೆದ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ರಾಜ್ಯದ ಪ್ರಮುಖ ದಿನಪತ್ರಿಕೆಗಳ ಮುಖಪುಟದಲ್ಲಿ ಅಂದಿನ ಬಿಜೆಪಿ ಸರಕಾರದ ವಿರುದ್ಧ ಸರಣಿ ಆರೋಪಗಳನ್ನು ಮಾಡಿ ಕಾಂಗ್ರೆಸ್ ಪಕ್ಷ ನೀಡಿದ್ದ ಜಾಹೀರಾತನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಆರೋಪದಲ್ಲಿ ದಾಖಲಾಗಿರುವ ಮಾನಹಾನಿ ಪ್ರಕರಣ ರದ್ದು ಕೋರಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಲ್ಲಿಸಿರುವ ಅರ್ಜಿ ಕುರಿತ ತೀರ್ಪನ್ನು ಹೈಕೋರ್ಟ್ ಕಾಯ್ದಿರಿಸಿದೆ. ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಸಲ್ಲಿಸಿರುವ ಅರ್ಜಿ ಕುರಿತು ಗುರುವಾರ ವಾದ-ಪ್ರತಿವಾದ ಆಲಿಸಿ ವಿಚಾರಣೆ ಪೂರ್ಣಗೊಳಿಸಿದ ನ್ಯಾಯಮೂರ್ತಿ ಎಸ್. ಸುನೀಲ್ ದತ್ ಯಾದವ್ ಅವರಿದ್ದ ಏಕಸದಸ್ಯ ನ್ಯಾಯಪೀಠ, ತೀರ್ಪು ಕಾಯ್ದಿರಿಸಿತು. ಬಿಜೆಪಿ ವಾದವೇನು? ವಿಚಾರಣೆ ವೇಳೆ ಬಿಜೆಪಿ ಪರ ವಕೀಲ ಎಂ. ವಿನೋದ್ ಕುಮಾರ್ ವಾದ ಮಂಡಿಸಿ, ವಿಧಾನಸಭೆ ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್ ಹೊರಡಿಸಿರುವ ತಾರಾ ಪ್ರಚಾರಕರ ಪಟ್ಟಿಯಲ್ಲಿ ರಾಹುಲ್ ಗಾಂಧಿ ಅವರ ಹೆಸರಿತ್ತು. ಆಕ್ಷೇಪಾರ್ಹ ಜಾಹೀರಾತಿಗೂ ರಾಹುಲ್ ಗಾಂಧಿಗೂ ಸಂಬಂಧವಿದೆಯೇ ಎಂಬುದು ವಿಚಾರಣೆಯಲ್ಲಿ ನಿರ್ಧಾರವಾಗಬೇಕಿದೆ. ಜಾಹೀರಾತು ಓದಿದ ಯಾರಿಗಾದರೂ ಅದು ಬಿಜೆಪಿ ವಿರುದ್ಧವೇ ನೀಡಿರುವುದು ಎಂದರ್ಥವಾಗುತ್ತದೆ ಎಂದು ಪ್ರತಿಪಾದಿಸಿದರು. ಆಗ ನ್ಯಾಯಪೀಠ, ಅರ್ಜಿದಾರರು ಮಾಡಿದ್ದಾರೆನ್ನಲಾದ ರೀಟ್ವೀಟ್ ಅನ್ನು ಮಾರ್ಕ್ ಮಾಡಿಲ್ಲ ಎಂಬುದು ನಿಜವೇ? ಎಂದು ಕೇಳಿತು. ಅದಕ್ಕೆ ವಿನೋದ್ ಕುಮಾರ್ ಅವರು, ರೀಟ್ವೀಟ್ ಮಾಡಿರುವುದು ಕಡತದಲ್ಲಿದೆ. ಇದನ್ನು ವಿಚಾರಣೆಯ ಸಂದರ್ಭದಲ್ಲಿ ಸಲ್ಲಿಸುವುದಕ್ಕೂ ಕಾನೂನಿನಲ್ಲಿ ಅವಕಾಶವಿದೆ. ಅಪರಾಧ ದಂಡಪ್ರಕ್ರಿಯಾ ಸಂಹಿತೆ (ಸಿಆರ್ಪಿಸಿ) ಸೆಕ್ಷನ್ 91ರ ಅಡಿ ಟ್ವಿಟರ್ನಿಂದ ಕೆಲವು ದಾಖಲೆಗಳನ್ನು ತರಿಸಿಕೊಳ್ಳಬಹುದು ಮತ್ತು ಮಾರ್ಕ್ ಮಾಡಬಹುದು. ರಾಹುಲ್ ಅರ್ಜಿಯಲ್ಲಿ ರೀಟ್ವೀಟ್ ಮಾಡಿರುವುದನ್ನು ಒಪ್ಪಿಕೊಂಡಿದ್ದಾರೆ. ಆದರೆ, ಅದು ಅಪರಾಧವಲ್ಲ ಎನ್ನುತ್ತಿದ್ದಾರೆ. ಇದು ವಿಚಾರಣೆಯಲ್ಲಿ ಸಾಬೀತುಪಡಿಸಬೇಕಿದೆಯಷ್ಟೆ ಎಂದರು. ಮುಂದುವರಿದು, ಪತ್ರಿಕೆಗಳಲ್ಲಿ ಪ್ರಕಟವಾಗಿರುವ ಜಾಹೀರಾತನ್ನು ರೀಟ್ವೀಟ್ ಮಾಡಲಾಗಿದೆ ಎಂದು ರಾಹುಲ್ ಹೇಳಿದ್ದಾರೆ. ನೇರವಾಗಿ ಅಲ್ಲದಿದ್ದರೂ ಪರೋಕ್ಷವಾಗಿ ಮಾನಹಾನಿ ಮಾಡುವುದೂ ಅಪರಾಧ. ಪ್ರಕರಣದ ಕಾಗ್ನೈಜೆನ್ಸ್ ತೆಗೆದುಕೊಳ್ಳುವಾಗ ವಿಚಾರಣಾ ನ್ಯಾಯಾಲಯವು ಮೇಲ್ನೋಟಕ್ಕೆ ಪ್ರಕರಣ ಇದೆ ಎಂದು ಪರಿಶೀಲಿಸಿ, ಸಮನ್ಸ್ ಜಾರಿ ಮಾಡಿದೆ. ಆಗ ನ್ಯಾಯಾಲಯವು ವಿವೇಚನ ಬಳಸಿದೆ ಎಂದು ನ್ಯಾಯಪೀಠಕ್ಕೆ ತಿಳಿಸಿದರು. ಸ್ವತಂತ್ರ ಸಾಕ್ಷಿಯೂ ಸೇರಿ ಐವರ ಹೇಳಿಕೆಯನ್ನು ನ್ಯಾಯಾಲಯ ದಾಖಲಿಸಿಕೊಂಡಿದೆ. ಈ ಹೇಳಿಕೆಗಳು ಮತ್ತು ಲಭ್ಯವಿರುವ ದಾಖಲೆಗಳನ್ನು ಆಧರಿಸಿ ನ್ಯಾಯಾಲಯ ಮೇಲ್ನೋಟಕ್ಕೆ ಕಾಗ್ನೈಜೆನ್ಸ್ ತೆಗೆದುಕೊಂಡಿದೆ. ಪತ್ರಿಕೆ ಖರೀದಿಸಿದವರು ಮಾತ್ರ ಜಾಹೀರಾತು ನೋಡಬಹುದು. ಆದರೆ, ಅದನ್ನು ಟ್ವೀಟ್ ಮಾಡಲಾಗಿರುವ ಎಕ್ಸ್ನಲ್ಲಿ ಪ್ರತಿದಿನವೂ ನೋಡಬಹುದು ಅಥವಾ ಹಂಚಿಕೊಳ್ಳಬಹುದು. ಪತ್ರಿಕೆ ಬರುವ ವೇಳೆಗೆ ರಾಹುಲ್ ಗಾಂಧಿ ಅವರು ಆಕ್ಷೇಪಾರ್ಹ ಜಾಹೀರಾತನ್ನು ಟ್ವೀಟ್ ಮಾಡಿದ್ದಾರೆ. ಆದ್ದರಿಂದ, ಅದು ಮೊದಲೇ ಸಾರ್ವಜನಿಕಗೊಂಡಿತ್ತು ಎಂದು ಹೇಳಲಾಗದು ಎಂದು ಆಕ್ಷೇಪಿಸಿದರು. ಸರಕಾರವನ್ನು ಟೀಕಿಸಲಾಗಿದೆ, ಯಾವುದೇ ಪಕ್ಷವನ್ನಲ್ಲ: ರಾಹುಲ್ ಗಾಂಧಿ ಪರ ವಾದ ಮಂಡಿಸಿದ ಹಿರಿಯ ವಕೀಲ ಕೆ. ಶಶಿಕಿರಣ್ ಶೆಟ್ಟಿ ಅವರು, ರಾಹುಲ್ ರೀಟ್ವೀಟ್ ಮಾಡಿರುವುದಕ್ಕೆ ಯಾವುದೇ ದಾಖಲೆಯನ್ನು ಬಿಜೆಪಿ ಸಲ್ಲಿಸಿಲ್ಲ. ಅದನ್ನು ಎಷ್ಟು ಜನ ನೋಡಿದ್ದಾರೆ ಮತ್ತು ಅದರಿಂದ ಮಾನಹಾನಿಯಾಗಿದೆಯೇ ಎಂಬುದಕ್ಕೆ ಯಾವುದೇ ಮಾಹಿತಿ ಇಲ್ಲ. ತಾರಾ ಪ್ರಚಾರಕರ ಪಟ್ಟಿಯಲ್ಲಿ 40 ಮಂದಿ ಇದ್ದರು ಎಂದು ಹೇಳುವ ಬಿಜೆಪಿಯು ಅವರನ್ನೆಲ್ಲ ದಾವೆಯಲ್ಲಿ ಪ್ರತಿವಾದಿಗಳನ್ನಾಗಿ ಏಕೆ ಮಾಡಿಲ್ಲ? ರಾಹುಲ್ ಗಾಂಧಿ ಅವರು ಉಪಾಧ್ಯಕ್ಷರಾಗಿದ್ದಾರೆ ಎಂಬುದರ ಮೇಲೆ ಇಡೀ ದೂರು ನಿಂತಿದೆ. ಆದರೆ, ಆ ಸಂದರ್ಭದಲ್ಲಿ ರಾಹುಲ್ ಉಪಾಧ್ಯಕ್ಷರಾಗಿರಲೇ ಇಲ್ಲ ಎಂದರು. ರೀಟ್ವೀಟ್ ಮಾಡುವುದು ಮಾನಹಾನಿಯಾಗುತ್ತದೆಯೇ ಎಂಬ ಪ್ರಕರಣ ಸುಪ್ರೀಂಕೋರ್ಟ್ನಲ್ಲಿ ಬಾಕಿ ಇದೆ. ಹಾಲಿ ಪ್ರಕರಣದಲ್ಲಿ ರಾಹುಲ್ ಅವರು ರೀಟ್ವೀಟ್ ಮಾಡಿಲ್ಲ. ಜಾಹೀರಾತಿನಲ್ಲಿ ಬಿಜೆಪಿಯ ಹೆಸರನ್ನೇ ಉಲ್ಲೇಖಿಸಿಲ್ಲ. ಅಂದಿನ ರಾಜ್ಯ ಸರ್ಕಾರವನ್ನು ಅದರಲ್ಲಿ ಉಲ್ಲೇಖಿಸಲಾಗಿದೆ. ಮುಖ್ಯಮಂತ್ರಿ, ಮಂತ್ರಿ ಆಗಿ ಹೋಗುತ್ತಾರೆ. ಆದರೆ, ಸರ್ಕಾರ ಯಾವಾಗಲೂ ಇರುತ್ತದೆ. ಸರ್ಕಾರವನ್ನು ವಿರೋಧಿಸಿದ ಮಾತ್ರಕ್ಕೆ ರಾಜಕೀಯ ಪಕ್ಷವೊಂದು ದಾವೆ ಹೂಡಲಾಗದು. ಹೀಗಾದಲ್ಲಿ ಸರ್ಕಾರದ ವಿರುದ್ಧ ಟೀಕೆ ಮಾಡುವುದೇ ಅಪರಾಧವಾಗಲಿದೆ ಎಂದು ನ್ಯಾಯಪೀಠಕ್ಕೆ ವಿವರಿಸಿದರು.
ವಿಜಯನಗರ | ಗಲಾಟೆ ಬಿಡಿಸಲು ಹೋದ ವ್ಯಕ್ತಿಯ ಕೊಲೆ : 7 ಮಂದಿ ಆರೋಪಿಗಳ ಬಂಧನ
ವಿಜಯನಗರ: ಹಳೇ ದ್ವೇಷ ಕಾರಣಕ್ಕೆ ನಡೆದ ಗಲಾಟೆಯಲ್ಲಿ ಗಲಾಟೆ ಬಿಡಿಸಲು ಹೋದ ವ್ಯಕ್ತಿಯೊರ್ವ ಕೊಲೆಯಾದ ಘಟನೆ ಕಾರಿಗನೂರು ಗ್ರಾಮದಲ್ಲಿ ನಡೆದಿದೆ. ಮೃತರನ್ನು ಮಾಬುಸಾಬ್ ( 50) ಎಂದು ಗುರುತಿಸಲಾಗಿದೆ. ಆರೋಪಿಗಳಾದ ಭಂಗಿ ಹನುಮಂತ, ಚರಣ, ಹುಲಿಗೆಮ್ಮ, ರಾಘವೇಂದ್ರ, ಚಂದ್ರಶೇಖರ, ಗುರುರಾಯ, ದರ್ಶನ್ ನನ್ನು ಗ್ರಾಮೀಣ ಪೊಲೀಸ್ ಠಾಣೆ ಪೊಲೀಸರು ಬಂಧಿಸಿದ್ದಾರೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಎಸ್. ಜಾಹ್ನವಿ ತಿಳಿಸಿದ್ದಾರೆ. ಡಿ.18 ರಂದು ಹೊಸಪೇಟೆ ತಾಲೂಕಿನ ಕಾರಿಗನೂರು ಗ್ರಾಮದಲ್ಲಿ ಮಾಬುಸಾಬ್ ಮನೆಯ ಮುಂದೆ ಹಳೇ ದ್ವೇಷ ಕಾರಣಕ್ಕೆ ನಡೆದ ಗಲಾಟೆಯನ್ನು ಬಿಡಿಸಲು ಹೋದ ನನ್ನ ತಂದೆಯನ್ನು 7 ಮಂದಿ ಹಲ್ಲೆ ನಡೆಸಿಕೊಲೆ ಮಾಡಿದ್ದಾರೆ ಎಂದು ಮೃತ ಮಾಬುಸಾಬ್ ಅವರ ಮಗ ಪಿ.ಜಿಲಾನ್ ಎಂಬುವವರು ಹೋಸಪೇಟೆಯ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಕೊಪ್ಪಳ | ಸಿಲಿಂಡರ್ ಸ್ಫೋಟ ಪ್ರಕರಣ : ಗಾಯಗೊಂಡಿದ್ದ ಇಬ್ಬರು ಮೃತ್ಯು
ಕೊಪ್ಪಳ/ಗಂಗಾವತಿ, ಡಿ.17: ತಾಲೂಕಿನ ಹೆಬ್ಬಾಳ ಗ್ರಾಮದಲ್ಲಿ ನಡೆದ ಸಿಲಿಂಡರ್ ಸ್ಫೋಟದಲ್ಲಿ ಗಾಯಗೊಂಡಿದ್ದ ಇಬ್ಬರು ಮೃತಪಟ್ಟಿರುವುದು ವರದಿಯಾಗಿದೆ. ಸುರೇಶ್ (29) ಎಂಬ ಯುವಕ ಈ ಮೊದಲೇ ಮೃತಪಟ್ಟಿದ್ದರೆ, ರಾಜಣ್ಣ (40) ಎಂಬವರು ಗುರುವಾರ ಚಿಕಿತ್ಸೆ ಫಲಕಾರಿಯಾಗದೆ ಬಳ್ಳಾರಿಯ ವಿಮ್ಸ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಎಂಟು ದಿನಗಳ ಹಿಂದೆ ಗಂಗಾವತಿ ತಾಲೂಕಿನ ಹೆಬ್ಬಾಳ ಗ್ರಾಮದಲ್ಲಿ ಸಿಲಿಂಡರ್ ಏಕಾಏಕಿ ಸ್ಫೋಟಗೊಂಡು ಮನೆಯಲ್ಲಿದ್ದ ರಾಜು, ದುರಗೆಪ್ಪ, ಸುರೇಶ್, ಹುಸೇನಮ್ಮ, ನಾಗರಾಜ್, ವಿಷ್ಣು, ಶ್ರೀಕಾಂತ್ ಎಂಬವರು ಗಂಭೀರವಾಗಿ ಗಾಯಗೊಂಡಿದ್ದರು. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು, ಆದರೆ ಗಾಯದ ತೀವ್ರತೆಯನ್ನು ಗಮನಿಸಿದ ಸ್ಥಳೀಯ ವೈದ್ಯರು ಹೆಚ್ಚಿನ ಚಿಕಿತ್ಸೆಗಾಗಿ ಬಳ್ಳಾರಿಗೆ ಕಳುಹಿಸಿದ್ದರು.
ಮೈಸೂರು ಉದ್ಯಮಿಯಿಂದ ಹೊಸ ಹೆಜ್ಜೆ; ಲಘು ವಿಮಾನಯಾನ ಸೇವೆ ಆರಂಭಿಸಲು ಸಿದ್ಧತೆ, ಎಂದಿನಿಂದ ಆರಂಭ
ಮೈಸೂರಿನ ಉದ್ಯಮಿ ವಿಶ್ವ ಪ್ರಸಾದ್ ಆಳ್ವಾ ಅವರು 'ಸ್ಕ್ಯಾನ್ಜೆಟ್ ಏವಿಯೇಷನ್' ಹೆಸರಿನಲ್ಲಿ ವಿಮಾನಯಾನ ಸೇವೆ ಆರಂಭಿಸಲು ಸಿದ್ಧತೆ ನಡೆಸಿದ್ದಾರೆ. 150-200 ಕೋಟಿ ರೂ. ಹೂಡಿಕೆಯೊಂದಿಗೆ 2026ರ ಏಪ್ರಿಲ್ನಿಂದ ನೆರೆ ಜಿಲ್ಲೆ ಹಾಗೂ ರಾಜ್ಯಗಳಿಗೆ ಲಘು ವಿಮಾನಯಾನ ಸೇವೆ ನೀಡುವ ಯೋಜನೆ ರೂಪಿಸಲಾಗಿದೆ. ಆರಂಭದಲ್ಲಿ ಮೂರು ಎಟಿಆರ್-72 ವಿಮಾನಗಳೊಂದಿಗೆ ಸೇವೆ ಆರಂಭಿಸಿ, ನಂತರ ವಿಸ್ತರಿಸುವ ಗುರಿ ಹೊಂದಲಾಗಿದೆ.
WTL 2025- ಇದೀಗ ಬೆಂಗಳೂರಿನಲ್ಲಿ ನಡೆಯುತ್ತಿರುವ ವರ್ಲ್ಡ್ ಟೆನಿಸ್ ಲೀಗ್ನಲ್ಲಿ AOS ಈಗಲ್ಸ್ ತಂಡವು ಆಸ್ಸಿ ಮೇವರಿಕ್ಸ್ ಕೈಟ್ಸ್ ವಿರುದ್ಧ ರೋಚಕ ಗೆಲುವು ಸಾಧಿಸಿದೆ. ಭಾರತದ ಉದಯೋನ್ಮುಖ ಟೆನಿಲ್ ಪಟು ಸುಮಿತ್ ನಾಗಲ್ ನಿರ್ಣಾಯಕ ಗೋಲ್ಡನ್ ಪಾಯಿಂಟ್ ಗೆದ್ದು ಪಂದ್ಯವನ್ನು ತಮ್ಮದಾಗಿಸಿಕೊಂಡರು. ಪೌಲಾ ಬಡೋಸಾ, ಮಾರ್ಟಾ ಕೋಸ್ಟ್ಯುಕ್ ವಿರುದ್ಧ ಸುಲಭ ಗೆಲುವು ಪಡೆದರು. ಈ ಲೀಗ್ ಭಾರತೀಯ ಅಭಿಮಾನಿಗಳಿಗೆ ವಿಶ್ವದ ಅಗ್ರ ಟೆನಿಸ್ ತಾರೆಯರನ್ನು ನೋಡುವ ಅವಕಾಶ ನೀಡಿದ್ದು ಸೋನಿ ಸ್ಪೋರ್ಟ್ಸ್ ನೆಟ್ ವರ್ಕ್ ನಲ್ಲಿ ನೇರಪ್ರಸಾರವಾಗಲಿದೆ.
ಮೊದಲ ವಿಕೆಟ್ಗೆ 323 ರನ್ ಜೊತೆಯಾಟ!
95 ವರ್ಷ ಹಳೆಯ ದಾಖಲೆ ಮುರಿದ ಡೆವೊನ್ ಕಾನ್ವೆ-ಟಾಮ್ ಲ್ಯಾಥಮ್
ಹೊಸದಿಲ್ಲಿ: ಮೇ 10ರ ಮುಂಜಾನೆ ಭಾರತೀಯ ವಾಯು ಪಡೆ ನಡೆಸಿದ್ದ ಆಪರೇಷನ್ ಸಿಂಧೂರ್ ಕಾರ್ಯಾಚರಣೆಯ ವೇಳೆ ತೀವ್ರ ಹಾನಿಗೀಡಾಗಿದ್ದ ಪಾಕಿಸ್ತಾನದ ಮುರಿದ್ ವಾಯು ನೆಲೆಯ ಬಳಿಯ ಪ್ರಮುಖ ಕಮಾಂಡಿಂಗ್ ಮತ್ತು ನಿಯಂತ್ರಣ ಕಟ್ಟಡದ ಸುತ್ತ ಭಾರಿ ಪ್ರಮಾಣದ ಮರು ನಿರ್ಮಾಣ ಕಾಮಗಾರಿಗಳು ನಡೆಯುತ್ತಿರುವ ದೃಶ್ಯಗಳು ತನಗೆ ಲಭ್ಯವಾಗಿರುವ ಇತ್ತೀಚಿನ ಹೈ ರೆಸಲ್ಯೂಷನ್ ಉಪಗ್ರಹ ಚಿತ್ರಗಳಲ್ಲಿ ಕಂಡು ಬಂದಿವೆ ಎಂದು ndtv.com ವರದಿ ಮಾಡಿದೆ. ಈ ವರದಿಯಲ್ಲಿ ಒದಗಿಸಲಾಗಿರುವ ಡಿಸೆಂಬರ್ 16ರ ಉಪಗ್ರಹ ಚಿತ್ರವು ಪಾಕಿಸ್ತಾನ ಕಾರ್ಯಾಚರಿಸುವ ಮಾನವರಹಿತ ವೈಮಾನಿಕ ವಾಹನಗಳ ಬೃಹತ್ ಸಂಕೀರ್ಣದ ಪಕ್ಕದಲ್ಲಿರುವ ಕಟ್ಟಡಕ್ಕೆ ದೊಡ್ಡ ಗಾತ್ರದ ಟಾರ್ಪಾಲಿನ್ ಹೊದಿಸಿರುವ ದೃಶ್ಯ ಕಂಡು ಬಂದಿದೆ. ಭಾರತೀಯ ವಾಯು ಪಡೆ ನಡೆಸಿದ ದಾಳಿಯ ವೇಳೆ ಈ ಕಟ್ಟಡದ ಚಾವಣಿಯ ಕೆಲ ಭಾಗ ಹಾನಿಗೀಡಾಗಿದ್ದು, ಭಾರಿ ಪ್ರಮಾಣದ ಕಟ್ಟಡ ಹಾನಿ ಹಾಗೂ ಸಂಭವನೀಯ ಆಂತರಿಕ ಕಟ್ಟಡದ ನಾಶವಾಗಿದೆ ಎಂದು ಭಾವಿಸಲಾಗಿದೆ. ಈ ವರ್ಷದ ಜೂನ್ ತಿಂಗಳಲ್ಲಿ ಲಭ್ಯವಾಗಿದ್ದ ವಾಯು ದಾಳಿಯೋತ್ತರ ಉಪಗ್ರಹ ಚಿತ್ರಗಳಲ್ಲಿ ಆಗ ಈ ಕಟ್ಟಡದ ಸುತ್ತ ಹಸಿರು ಟಾರ್ಪಾಲಿನ್ ಹೊದಿಸಿರುವುದು ಕಂಡು ಬಂದಿತ್ತು. ಆದರೀಗ ಬೃಹತ್ ಟಾರ್ಪಾಲಿನ್ ಅಡಿ ಇಡೀ ಕಟ್ಟಡದ ದುರಸ್ತಿ ಕಾರ್ಯ ನಡೆಯುತ್ತಿದೆ ಅಥವಾ ಮರು ನಿರ್ಮಾಣ ಕಾಮಗಾರಿ ನಡೆಯುತ್ತಿದೆ ಎಂಬಂತೆ ಕಂಡು ಬಂದಿದೆ. ಭಾರಿ ಗಾತ್ರದ ಟಾರ್ಪಾಲಿನ್ ಗಳನ್ನು ಸೇನೆಗಳು ಸಾಮಾನ್ಯವಾಗಿ ದುರಸ್ತಿ ಕಾರ್ಯ, ಅವಶೇಷಗಳ ತೆರವು ಅಥವಾ ಸೂಕ್ಷ್ಮ ಹಾನಿಯನ್ನು ಉಪಗ್ರಹಗಳ ಕಣ್ಗಾವಲಿನಿಂದ ತಪ್ಪಿಸಲು ಬಳಸುತ್ತವೆ. ಆರಂಭಿಕ ಉಪಗ್ರಹ ಚಿತ್ರಗಳ ಪ್ರಕಾರ, ಭಾರತೀಯ ವಾಯು ಸೇನೆಯ ದಾಳಿಯಲ್ಲಿ ಕಟ್ಟಡದ ಮೇಲ್ಚಾವಣಿಯ ಕೆಲವು ನಿರ್ದಿಷ್ಟ ಭಾಗಗಳು ತೂತು ಬಿದ್ದಿರುವುದು ಕಂಡು ಬಂದಿತ್ತು. ನಿರ್ದಿಷ್ಟ ಗುರಿಗಳನ್ನು ಗುರಿಯಾಗಿಸಿಕೊಂಡು ನಡೆಸಿದ ದಾಳಿಯಲ್ಲಿ ಯಾವ ಶಸ್ತ್ರಾಸ್ತ್ರಗಳನ್ನು ಬಳಸಲಾಗಿದೆ ಎಂಬ ಕುರಿತು ಭಾರತೀಯ ವಾಯು ಪಡೆ ಇದುವರೆಗೂ ಬಹಿರಂಗಪಡಿಸಿಲ್ಲವಾದರೂ, ವಿಳಂಬಿತ ಫ್ಯೂಸ್ ಛೇದಕವನ್ನು ಹೊತ್ತು ನಿಖರವಾಗಿ ನಿರ್ದೇಶಿಸಲ್ಪಟ್ಟ ಕ್ಷಿಪಣಿಯಂತಹ ಚಾವಣಿಯನ್ನು ಭೇದಿಸುವ ಸಿಡಿಗುಂಡುಗಳನ್ನು ಹೊಂದಿರುವ ಕ್ಷಿಪಣಿಗಳನ್ನು ಬಳಸಿ ಮುರಿದ್ ಸೇನಾ ನೆಲೆಯ ಮೇಲೆ ದಾಳಿ ನಡೆಸಿರುವಂತೆ ಆಪರೇಷನ್ ಸಿಂಧೂರ್ ಕಾರ್ಯಾಚರಣೆಯೋತ್ತರ ಉಪಗ್ರಹ ಚಿತ್ರಗಳಲ್ಲಿ ಕಂಡು ಬಂದಿದೆ.
ಏಮ್ಸ್ ಆಸ್ಪತ್ರೆಯಲ್ಲಿ ಸತೀಶ್ ಸೈಲ್ ಆರೋಗ್ಯ ತಪಾಸಣೆ; ಚರ್ಚಿಸಿ ದಿನ-ಸಮಯ ನಿರ್ಧರಿಸುವಂತೆ ಹೈಕೋರ್ಟ್ ನಿರ್ದೇಶನ
ಬೆಂಗಳೂರು: ಅಕ್ರಮ ಹಣ ವರ್ಗಾವಣೆ ಪ್ರಕರಣದ ಆರೋಪಿ ಶಾಸಕ ಸತೀಶ್ ಸೈಲ್ ಅವರನ್ನು ದೆಹಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ (ಏಮ್ಸ್) ಯಾವ ದಿನ ಹಾಗೂ ಯಾವ ಸಮಯಕ್ಕೆ ಆರೋಗ್ಯ ತಪಾಸಣೆಗೆ ಒಳಪಡಿಸಬೇಕು ಎಂಬ ಬಗ್ಗೆ ಸೈಲ್ ಹಾಗೂ ಜಾರಿ ನಿರ್ದೇಶನಾಲಯದ (ಇಡಿ) ಅಧಿಕಾರಿಗಳು ಚರ್ಚಿಸಿ ನಿರ್ಧರಿಸಬೇಕು ಎಂದು ಹೈಕೋರ್ಟ್ ನಿರ್ದೇಶಿಸಿದೆ. ಇಡಿ ದಾಖಲಿಸಿರುವ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ನೀಡಲಾಗಿದ್ದ ಮಧ್ಯಂತರ ವೈದ್ಯಕೀಯ ಜಾಮೀನು ರದ್ದುಪಡಿಸಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ಕ್ರಮ ಪ್ರಶ್ನಿಸಿ ಸತೀಶ್ ಸೈಲ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಸ್. ಸುನೀಲ್ ದತ್ ಯಾದವ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿತು. ವಿಚಾರಣೆ ಆರಂಭವಾಗುತ್ತಿದ್ದಂತೆ ಇಡಿ ಪರ ಹಾಜರಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್ ಕೆ. ಅರವಿಂದ್ ಕಾಮತ್ ಅವರು, ಬೆಂಗಳೂರಿನ ಇಡಿ ಸಹಾಯಕ ನಿರ್ದೇಶಕರಿಗೆ ಏಮ್ಸ್ನ ಮೇಲ್ವಿಚಾರಕರು ಪತ್ರ ಬರೆದಿದ್ದು, ಜಠರ ಕರುಳಿನ ತಜ್ಞರು ಡಿಸೆಂಬರ್ 19ರ ಮಧ್ಯಾಹ್ನ 12.30 ಅಥವಾ ಡಿಸೆಂಬರ್ 20ರ ಬೆಳಗ್ಗೆ 8.30ರ ವೇಳೆಗೆ ಏಮ್ಸ್ ನಿಯಂತ್ರಣ ಕೊಠಡಿಗೆ ಸತೀಶ್ ಸೈಲ್ ಕರೆತರುವಂತೆ ಸೂಚಿಸಿದ್ದಾರೆ. ಇದರ ಜತೆಗೆ ಈಗಾಗಲೇ ನಡೆಸಿರುವ ವೈದ್ಯಕೀಯ ತಪಾಸಣೆಗೆ ಸಂಬಂಧಿಸಿದ ದಾಖಲೆಗಳನ್ನು ಪರಿಶೀಲನೆಗೆ ತರಲು ತಿಳಿಸಿದ್ದಾರೆ ಎಂದರು. ಆಗ ಸತೀಶ್ ಸೈಲ್ ಪರ ವಕೀಲರು, ದೆಹಲಿಯಲ್ಲಿ ವಾಯುಗುಣಮಟ್ಟ ಸರಿ ಇಲ್ಲ. ಇದರಿಂದ ವಿಮಾನಗಳ ಹಾರಾಟ ಏರುಪೇರಾಗುತ್ತಿವೆ. ವೈದ್ಯಕೀಯ ತಪಾಸಣೆಗೆ ಒಳಗಾಗಲು ಕಾಲಾವಕಾಶ ನೀಡಬೇಕು ಎಂದು ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಇದು ನಮಗೆ ಸಂಬಂಧಿಸಿದ್ದಲ್ಲ. ಇಡಿ ಅಧಿಕಾರಿಗಳು ಹಾಗೂ ಸತೀಶ್ ಸೈಲ್ ಒಟ್ಟಾಗಿ ಚರ್ಚಿಸಿ, ವೈದ್ಯರ ಅನುಕೂಲ ನೋಡಿಕೊಂಡು ತೀರ್ಮಾನಿಸಬಹುದು ಎಂದು ಹೇಳಿತು. ಅಂತಿಮವಾಗಿ, ದೆಹಲಿಯ ಏಮ್ಸ್ಗೆ ಯಾವತ್ತು ಮತ್ತು ಯಾವ ಸಮಯಕ್ಕೆ ಹೋಗಬೇಕು ಎಂಬುದನ್ನು ನಿರ್ಧರಿಸಲು ಅರ್ಜಿ ವಿಚಾರಣೆ ಮುಂದೂಡಲಾಗದು. ದಿನಾಂಕದ ಕುರಿತು ಜಾರಿ ನಿರ್ದೇಶನಾಲಯದ ಜತೆ ಕುಳಿತು ಸೈಲ್ ಅವರು ತೀರ್ಮಾನಿಸಬಹುದು ಎಂದು ತಿಳಿಸಿ, ವಿಚಾರಣೆಯನ್ನು 2026ರ ಜನವರಿ 13ಕ್ಕೆ ಮುಂದೂಡಿದ ನ್ಯಾಯಪೀಠ, ಸೈಲ್ ಅವರಿಗೆ ನೀಡಿರುವ ವೈದ್ಯಕೀಯ ಮಧ್ಯಂತರ ಜಾಮೀನನ್ನು ಮುಂದಿನ ವಿಚಾರಣೆವರೆಗೆ ವಿಸ್ತಿರಿಸಿತು.
ಕಲಬುರಗಿ | ಸಮಾಜದಲ್ಲಿ ಪರೋಪಕಾರ ಸೇವೆ ಮುಖ್ಯ : ಅಭಿನವ ಸಿದ್ಧಲಿಂಗ ಶಿವಾಚಾರ್ಯ
ಕಲಬುರಗಿ: ಸಮಾಜದಲ್ಲಿ ನಾವು ಮಾಡುವ ಸೇವೆಗಳಲ್ಲಿ ಪರೋಪಕಾರ ಎಂಬ ಸೇವೆ ಮುಖ್ಯವಾಗಿದೆ ಎಂದು ಮುಗುಳನಾಗಾವಿ ಕಟ್ಟಿಮನಿ ಸಂಸ್ಥಾನ ಹಿರೇಮಠದ ಅಭಿನವ ಸಿದ್ಧಲಿಂಗ ಶಿವಾಚಾರ್ಯರು ಅವರು ಹೇಳಿದರು. ಶರಣಬಸವ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪದವಿ ಸ್ವೀಕರಿಸಿದ ಮುತ್ಯಾನ ಬಬಲಾದ ಶ್ರೀ ಗುರುಪಾದಲಿಂಗ ಮಹಾಶಿವಯೋಗಿಗಳು ಹಾಗೂ ಭಾರತ ಗೌರವ ಪುರಸ್ಕಾರ ಪಡೆದ ಜಯಶ್ರೀ ಬಸವರಾಜ ಮತ್ತಿಮಡು ಅವರಿಗೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ನಗರದ ಕನ್ನಡ ಭವನದ ಸುವರ್ಣ ಸಭಾ ಭವನದಲ್ಲಿ ಏರ್ಪಡಿಸಿದ ಅಭಿನಂದನಾ ಸಮಾರಂಭದ ಸಾನಿಧ್ಯ ವಹಿಸಿ ಮಾತನಾಡಿದರು. ಸತ್ಕಾರ ಸ್ವೀಕರಿಸಿ ಮಾತನಾಡಿದ ಜಯಶ್ರೀ ಬಸವರಾಜ ಮತ್ತಿಮಡು ಅವರು, ಈ ನೆಲದ ಸೊಸೆಯಾಗಿ, ಮಗಳಾಗಿ ಮಾಡಿದ ಸೇವೆಯೇ ಇಂದು ನನಗೆ ಇಂಥ ಗೌರವ ಸಿಕ್ಕಿದೆ. ಇದರಿಂದ ಮತ್ತಷ್ಟು ಜವಾಬ್ದಾರಿ ಹೆಚ್ಚಿದ್ದು, ಗ್ರಾಮೀಣ ಮತಕ್ಷೇತ್ರದ ಜನ ಸೇವೆ ಮಾಡಲು ಅವಕಾಸ ಸಿಕ್ಕಿದೆ. ಇಂದು ದೊರೆತ ಸನ್ಮಾನ ಜನರಿಗೆ ಅರ್ಪಿಸುತ್ತೇನೆ ಎಂದರು. ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಸಾಪ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ, ಯಾವ ವ್ಯಕ್ತಿ ತನಗಾಗಿ ಬದುಕದೇ ಜನರಿಗಾಗಿ ಬದುಕುತ್ತಾನೋ ಅವನು ಸಮಾಜದ ಬಹು ದೊಡ್ಡ ವ್ಯಕ್ತಿಯಾಗಿ ಬೆಳೆಯುತ್ತಾನೆ. ಮಠಾಧೀಶರು ಕೇವಲ ಮಠಕ್ಕೆ ಸೀಮಿತವಾಗದೇ ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡವರಲ್ಲಿ ಮುತ್ತಿನ ಬಬಲಾದ ಶ್ರೀಗಳು ಹಾಗೂ ಮನೆಗೆ ಸೀಮಿತವಾಗದೇ ಜನರ ಸಮಸ್ಯೆಗೆ ಸ್ಪಂದಿಸಿ ಸೇವೆ ಮಾಡುವ ಜಯಶ್ರೀ ಮತ್ತಿಮಡು ನಮಗೆಲ್ಲ ಪ್ರೇರಣೆಯ ವ್ಯಕ್ತಿಗಳಾಗಿ ಕಾಣುತ್ತಾರೆ ಎಂದರು. ಗುಲಬರ್ಗಾ ನ್ಯಾಯವಾದಿಗಳ ಸಂಘದ ಅಧ್ಯಕ್ಷ ಶಿವಕುಮಾರ ಪಸಾರ, ಸಾಹಿತ್ಯ ಪ್ರೇರಕಿ ಲಕ್ಷ್ಮೀ ದತ್ತಾತ್ರೇಯ ಪಾಟೀಲ ರೇವೂರ, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಬಿ-ಗ್ರೇಡ್ ಹುದ್ದೆ ಉನ್ನತಿಕರಣ ಸಂಘದ ರಾಜ್ಯ ನಿರ್ದೇಶಕಿ ರಾಜೇಶ್ವರಿ ಸಾಹು ಮಾತನಾಡಿದರು. ಜಿಲ್ಲಾ ಕಸಾಪದ ಶಿವರಾಜ ಅಂಡಗಿ, ಧರ್ಮಣ್ಣ ಎಚ್.ಧನ್ನಿ, ಸೈಯ್ಯದ್ ನಝಿರುದ್ದಿನ್ ಮುತ್ತವಲ್ಲಿ, ಕುಸನೂರ ಗ್ರಾಪಂ ಅಧ್ಯಕ್ಷ ಕುಪೇಂದ್ರ ಬರಗಾಲಿ, ಧರ್ಮರಾಜ ಜವಳಿ, ರವೀಂದ್ರಕುಮಾರ ಭಂಟನಳ್ಳಿ, ರಾಜೇಂದ್ರ ಮಾಡಬೂಳ, ಬಾಬುರಾವ ಪಾಟೀಲ, ಕಲ್ಯಾಣಕುಮಾರ ಶೀಲವಂತ, ರವಿಕುಮಾರ ಶಹಾಪೂರಕರ್, ಪ್ರಭುಲಿಂಗ ಮೂಲಗೆ, ದಿನೇಶ ಮದಕರಿ, ಜಗದೀಶ ಮರಪಳ್ಳಿ, ಶಿವಾನಂದ ಪೂಜಾರಿ, ಜಯಶ್ರೀ ಜಮಾದಾರ, ಜ್ಯೋತಿ ಕೋಟನೂರ, ಶಿವಾನಂದ ಮಠಪತಿ, ಶಿವಾನಂದ ಸುರವಸೆ, ಎಂ.ಎನ್ . ಸುಗಂಧಿ, ಡಾ. ರೆಹಮಾನ್ ಪಟೇಲ್, ಮಹಾನಂದಾ ಹುಲಿ, ಶಾರದಾ ಕಮದಗೂಳ, ವಿಶಾಲಾಕ್ಷಿ ಮಾಯಣ್ಣವರ್, ಮಲ್ಲಿಕಾರ್ಜುನ ಇಬ್ರಾಹಿಂಪುರ, ಶರಣು ಹಾಗರಗುಂಡಗಿ, ರೇವಯ್ಯಾ ಸ್ವಾಮಿ, ಜ್ಯೋತಿ ಮರಗೋಳ, ವಿನೋದ ಜೇನವೇರಿ, ಪದ್ಮಾವತಿ ನಾಯಕ್ ಸೇರಿದಂತೆ ಅನೇಕರು ಭಾಗವಹಿಸಿದ್ದರು.
Bengaluru | ಅಪಾರ್ಟ್ಮೆಂಟ್ ಕಾಮಗಾರಿ ಸ್ಥಳದಲ್ಲಿ ಮಣ್ಣು ಕುಸಿದು ಕಾರ್ಮಿಕ ಸಾವು
ಬೆಂಗಳೂರು : ಮಂಗಳವಾರ ತಡರಾತ್ರಿ ಇಲ್ಲಿನ ದೊಮ್ಮಸಂದ್ರ ಸಮೀಪದ ವರ್ತೂರು ರಸ್ತೆಯಲ್ಲಿರುವ ಅಪಾರ್ಟ್ಮೆಂಟ್ ಕಾಮಗಾರಿ ಸ್ಥಳದಲ್ಲಿ ಮಣ್ಣು ಕುಸಿದು ಕಾರ್ಮಿಕನೊಬ್ಬ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಮೂಲತಃ ತಮಿಳುನಾಡಿನ ಧರ್ಮಪುರಿ ಜಿಲ್ಲೆಯ ನಲ್ಲಂಪಲ್ಲಿ ಗ್ರಾಮದ ನಿವಾಸಿ ಚಿದಂಬರಂ(45) ಮೃತ ಕಾರ್ಮಿಕನಾಗಿದ್ದು, ಘಟನೆ ನಡೆದು ಒಂದು ದಿನ ಕಳೆದರೂ ಅಪಾರ್ಟ್ಮೆಂಟ್ಗೆ ಸಂಬಂಧಪಟ್ಟವರು ಈವರೆಗೂ ಕಾರ್ಮಿಕನ ಕುಟುಂಬದ ನೆರವಿಗೆ ಆಗಮಿಸಿಲ್ಲ. ಈ ಸಂಬಂಧ ವರ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಪಾರ್ಟ್ಮೆಂಟ್ನ ಒಳಚರಂಡಿ ಕಾಮಗಾರಿ ಹಿನ್ನೆಲೆಯಲ್ಲಿ, ಮಣ್ಣು ತೆಗೆಯುವ ಕೆಲಸ ಮಾಡುತ್ತಿದ್ದ ವೇಳೆ, ಏಕಾಏಕಿ ಮಣ್ಣು ಕುಸಿದು ಚಿದಂಬರಂ ಮೇಲೆ ಬಿದ್ದಿದೆ. ಪರಿಣಾಮ ಮಣ್ಣಿನಡಿ ಸಿಲುಕಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಘಟನಾ ಸ್ಥಳಕ್ಕೆ ವರ್ತೂರು ಪೊಲೀಸ್ ಠಾಣೆಯ ಸಿಬ್ಬಂದಿ ಹಾಗೂ ಬೆರಳಚ್ಚು ತಜ್ಞರು ಸ್ಥಳಕ್ಕೆ ಭೇಟಿ ನೀಡಿ ಮಹಜರು ನಡೆಸಿದ್ದಾರೆ. ನಂತರ ಅಗ್ನಿಶಾಮಕ ದಳದ ಸಿಬ್ಬಂದಿ ಮಣ್ಣಿನಡಿ ಹೂತುಹೋಗಿದ್ದ ಕಾರ್ಮಿಕನ ಶವವನ್ನು ಹೊರತೆಗೆದು, ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದರು.
ರೇಣುಕಾಸ್ವಾಮಿ ಕೊಲೆ ಪ್ರಕರಣ; ಆರೋಪಿಗಳ ಪರ ವಕೀಲರಿಂದ ರತ್ನಪ್ರಭಾ ಪಾಟಿ ಸವಾಲು
ಬೆಂಗಳೂರು : ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತನ ತಾಯಿ ರತ್ನಪ್ರಭಾ ಅವರ ಪಾಟಿ ಸವಾಲು ಪ್ರಕ್ರಿಯೆಯನ್ನು ಪವಿತ್ರಾ ಗೌಡ ಸೇರಿ ಒಟ್ಟು 12 ಮಂದಿ ಆರೋಪಿಗಳ ಪರ ವಕೀಲರು ಗುರುವಾರ ಪೂರ್ಣಗೊಳಿಸಿದರು. ರೇಣುಕಾಸ್ವಾಮಿ ಕೊಲೆ ಪ್ರಕರಣದ ಮುಖ್ಯ ವಿಚಾರಣೆಯನ್ನು (ಟ್ರಯಲ್) ನಗರದ 57ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ ನ್ಯಾಯಾಧೀಶ ಐ.ಪಿ. ನಾಯ್ಕ್ ಅವರು ಗುರುವಾರ ಮುಂದುವರಿಸಿದರು. ರತ್ನಪ್ರಭಾ ಅವರ ಪಾಟಿ ಸವಾಲು ಪ್ರಕ್ರಿಯೆಯನ್ನು ಒಟ್ಟು 12 ಮಂದಿ ಆರೋಪಿಗಳು ಪೂರ್ಣಗೊಳಿಸಿದರು. ನಂತರ ಪವಿತ್ರಾಗೌಡ ಪರ ವಕೀಲ ಬಾಲನ್, ರೇಣುಕಾಸ್ವಾಮಿಯ ತಂದೆ ಕಾಶೀನಾಥಯ್ಯ ಅವರ ಪಾಟಿ ಸವಾಲು ನಡೆಸಿದರು. ಅದು ಅಪೂರ್ಣಗೊಂಡಿದ್ದು, ಕಾಲಾವಕಾಶದ ಕೊರತೆಯಿಂದ ನ್ಯಾಯಾಧೀಶರು ವಿಚಾರಣೆಯನ್ನು ಡಿಸೆಂಬರ್ 29ಕ್ಕೆ ಮುಂದೂಡಿದರು. ಬುಧವಾರ ರೇಣುಕಾಸ್ವಾಮಿಯ ತಾಯಿ ರತ್ನಪ್ರಭಾ ಮತ್ತು ತಂದೆ ಕಾಶಿನಾಥಯ್ಯ ಅವರು ತಮ್ಮ ಸಾಕ್ಷ್ಯ ದಾಖಲಿಸಿದ್ದರು. ನಂತರ ಪವಿತ್ರಾಗೌಡ ಪರ ವಕೀಲ ಬಾಲನ್, ರತ್ನಪ್ರಭಾ ಅವರ ಪಾಟಿ ಸವಾಲು ನಡೆಸಿದ್ದರು. ಆ ಪ್ರಕ್ರಿಯೆ ಅಪೂರ್ಣಗೊಂಡ ಹಿನ್ನೆಲೆಯಲ್ಲಿ ಗುರುವಾರಕ್ಕೆ ವಿಚಾರಣೆ ನಿಗದಿಪಡಿಸಲಾಗಿತ್ತು. ಗುರುವಾರ ರತ್ನಪ್ರಭಾ ಮತ್ತು ಕಾಶಿನಾಥಯ್ಯ ವಿಚಾರಣೆಗೆ ಹಾಜರಾಗಿದ್ದರು. ಮಧ್ಯಾಹ್ನ 12.40ಕ್ಕೆ ರತ್ನಪ್ರಭಾ ಅವರ ಪಾಟಿ ಸವಾಲು ಪ್ರಕ್ರಿಯೆಯನ್ನು ಬಾಲನ್ ಮುಂದುವರಿಸಿದರು. ಅವರು ಕೇಳಿದ ಹಲವು ಪ್ರಶ್ನೆಗಳಿಗೆ ರತ್ನಪ್ರಭಾ ಉತ್ತರಿಸಿದ ನಂತರ ತಮ್ಮ ಪಾಟಿ ಸವಾಲು ಮುಕ್ತಾಯವಾಗಿದೆ ಎಂದು ಬಾಲನ್ ತಿಳಿಸಿದರು. ಆನಂತರ ಆರೋಪಿಗಳಾದ ಪವನ್, ಎನ್.ರಾಘವೇಂದ್ರ, ಜಗದೀಶ್, ಅನುಕುಮಾರ್, ರವಿಶಂಕರ್, ಧನರಾಜ್, ಕಾರ್ತಿಕ್, ಕೇಶವಮೂರ್ತಿ ಮತ್ತು ನಿಖಿಲ್ ಪರ ವಕೀಲರು ರತ್ನಪ್ರಭಾ ಅವರನ್ನು ಪಾಟಿ ಸವಾಲಿಗೆ ಗುರಿಪಡಿಸಿದರು. ಅದೇ ಪಾಟಿ ಸವಾಲನ್ನು ತಾವೂ ಸಹ ಅಳವಡಿಸಿಕೊಂಡಿರುವುದಾಗಿ ಆರೋಪಿ ನಂದೀಶ್ ಮತ್ತು ವಿನಯ್ ಪರ ವಕೀಲರು ತಿಳಿಸಿದರು. ಇದಾದ ನಂತರ ನಟಿ ಪವಿತ್ರಾ ಗೌಡ ಪರ ವಕೀಲರು, ರೇಣುಕಾಸ್ವಾಮಿಯ ತಂದೆ ಕಾಶೀನಾಥಯ್ಯ ಅವರ ಪಾಟಿ ಸವಾಲು ನಡೆಸಿದರು. ಆ ಪ್ರಕ್ರಿಯೆ ಅಪೂರ್ಣಗೊಂಡ ಹಿನ್ನೆಲೆಯಲ್ಲಿ ನ್ಯಾಯಾಲಯ ವಿಚಾರಣೆಯನ್ನು ಡಿಸೆಂಬರ್ 29ಕ್ಕೆ ಮುಂದೂಡಿತು. ಜೆಸಿ ವಿಸ್ತರಣೆ: ನಟ ದರ್ಶನ್, ಪವಿತ್ರಾ ಗೌಡ ಸೇರಿ 7 ಆರೋಪಿಗಳು ಜೈಲಿನಿಂದಲೇ ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆಗೆ ಹಾಜರಾಗಿದ್ದರು. ಜಾಮೀನಿನ ಮೇಲಿರುವ ಎಲ್ಲ ಆರೋಪಿಗಳು ಖುದ್ದು ಹಾಜರಾಗಿದ್ದರು. ಗುರುವಾರ ವಿಚಾರಣೆ ಮುಕ್ತಾಯಗೊಂಡ ನಂತರ ದರ್ಶನ್ ಹಾಗೂ ಇತರ 6 ಆರೋಪಿಗಳ ನ್ಯಾಯಾಂಗ ಬಂಧನದ (ಜೆಸಿ) ಅವಧಿಯನ್ನು ಡಿಸೆಂಬರ್ 29ರವರೆಗೆ ನ್ಯಾಯಾಲಯ ವಿಸ್ತರಿಸಿತು.
ಬಳ್ಳಾರಿ | ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಪ್ರತಿಭಾ ಕಾರಂಜಿ ಪೂರಕ : ಮಾಯಮ್ಮ
ಬಳ್ಳಾರಿ / ಕಂಪ್ಲಿ: ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಪ್ರತಿಭಾ ಕಾರಂಜಿ ಪೂರಕವಾಗಿದೆ ಎಂದು ಗ್ರಾಪಂ ಅಧ್ಯಕ್ಷೆ ಮಾಯಮ್ಮ ಹೇಳಿದರು. ತಾಲೂಕಿನ ದೇವಸಮುದ್ರ ಗ್ರಾಮದ ಸ.ಹಿ.ಪ್ರಾ ಶಾಲೆಯಲ್ಲಿ ದೇವಸಮುದ್ರ ಸಂಪನ್ಮೂಲ ಕೇಂದ್ರದಿಂದ ಬುಧವಾರ ಆಯೋಜಿಸಿದ್ದ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿ, ಶಿಕ್ಷಣ ಇಲಾಖೆ ಮಕ್ಕಳ ಭವಿಷ್ಯ ರೂಪಿಸುವ ಇಲಾಖೆಯಾಗಿದ್ದು, ಮಕ್ಕಳ ಪ್ರತಿಭೆ ಹೊರ ಹಾಕುವಲ್ಲಿ ಶಿಕ್ಷಕರ ಪಾತ್ರ ಮುಖ್ಯವಾಗಿದೆ ಎಂದರು. ಸಿಆರ್ಪಿಯಾಗಿ ಕರ್ತವ್ಯ ನಿರ್ವಹಿಸಿದ ವೀರೇಶರವರಿಗೆ ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಗ್ರಾಪಂ ಸದಸ್ಯ ನಾಯಕರ ಯಂಕೋಬ, ಮುಖ್ಯಗುರು ಹೆಚ್.ದೊಡ್ಡಬಸಪ್ಪ ನಿರೂಪಿಸಿದರು. ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕಾಧ್ಯಕ್ಷ ಹನುಮಂತಪ್ಪ, ಪ್ರಧಾನ ಕಾರ್ಯದರ್ಶಿ ಸುನಿತಾ, ಇಸಿಒ ರೇವಣ್ಣ, ಸಿಆರ್ಪಿಗಳಾದ ಕರುಣಾಕರ, ಭೂಮೇಶ್ವರ, ಗಂಗಾಧರ, ಉಪ ಪ್ರಾಚಾರ್ಯೆ ಸುಜಾತ, ಎಸ್ಡಿಎಂಸಿ ಅಧ್ಯಕ್ಷ ಹನುಮೇಶ, ಸದಸ್ಯ ಯರ್ರಿಸ್ವಾಮಿ, ಜಿಪಿಟಿ ಸಂಘದ ಅಧ್ಯಕ್ಷ ಮಂಜುನಾಥ, ಮುಖ್ಯಗುರುಗಳಾದ ಮಲ್ಲಿಕಾರ್ಜುನ, ನಾಗಪ್ಪ, ಪಾಟೇಲ್, ಮುಖಂಡರಾದ ಹೆಚ್. ಗುಂಡಪ್ಪ, ರುದ್ರಗೌಡ, ಜಡೆಪ್ಪ, ಆನಂದ, ವೆಂಕನಗೌಡ, ಪಂಪಾಪತಿ ಸೇರಿದಂತೆ ಅನೇಕರಿದ್ದರು.
ಮುಡಾ ಪ್ರಕರಣದ ತನಿಖಾ ವರದಿ ಕೋರ್ಟ್ಗೆ ಸಲ್ಲಿಸದ ಲೋಕಾಯುಕ್ತ ಪೊಲೀಸರು; ಹಿಂದಿನ ವರದಿ ಆಧರಿಸಿ ವಿಚಾರಣೆ
ಬೆಂಗಳೂರು : ಮುಡಾ ನಿವೇಶನ ಹಂಚಿಕೆ ಅಕ್ರಮ ಹಗರಣದ ಮುಂದುವರಿದ ತನಿಖೆಗೆ ಸಂಬಂಧಿಸಿದ ಯಾವುದೇ ದಾಖಲೆಗಳನ್ನು ಲೋಕಾಯುಕ್ತ ಪೊಲೀಸರು ಸಲ್ಲಿಸದ ಕಾರಣ, ಈ ಹಿಂದೆ ಸಲ್ಲಿಸಲಾಗಿರುವ ವರದಿಯ ಆಧಾರದಲ್ಲಿ ವಿಚಾರಣೆ ಮುಂದುವರಿಸಬೇಕಾಗುತ್ತದೆ ಎಂದು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಹೇಳಿದೆ. ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಸಲ್ಲಿಸಿದ್ದ ಖಾಸಗಿ ದೂರನ್ನು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಸಂತೋಷ್ ಗಜಾನನ್ ಭಟ್ ಅವರು ಗುರುವಾರ ವಿಚಾರಣೆ ನಡೆಸಿದರು. ಕೆಲ ಕಾಲ ಖಾಸಗಿ ದೂರನ್ನು ಆಲಿಸಿದ ನ್ಯಾಯಾಲಯ, ಕಳೆದ ವಿಚಾರಣೆಯಂದು ತನಿಖೆ ಪೂರ್ಣಗೊಳಿಸಿ, ಅಂತಿಮ ವರದಿ ಸಲ್ಲಿಸಲು ತನಿಖಾಧಿಕಾರಿಗಳಿಗೆ ನಿರ್ದೇಶಿಸಲಾಗಿತ್ತು. ತನಿಖೆ ಪೂರ್ಣಗೊಳ್ಳದ ಕಾರಣ ಹಾಗೂ ಹೆಚ್ಚಿನ ತನಿಖೆ ನಡೆಸಲು ತನಿಖಾಧಿಕಾರಿಗಳು ಮನವಿ ಮಾಡಿದ್ದರಿಂದ ಪ್ರಕರಣದಲ್ಲಿ 1ರಿಂದ 4ನೇ ಆರೋಪಿಗಳಿಗೆ ಸಂಬಂಧಿಸಿದಂತೆ ಸಲ್ಲಿಸಲಾದ ಬಿ ವರದಿಯ ಕುರಿತು ಯಾವುದೇ ಆದೇಶ ಹೊರಡಿಸುವುದನ್ನು ಈ ನ್ಯಾಯಾಲಯವು ಮುಂದೂಡುತ್ತಾ ಬಂದಿದೆ. ಆದರೆ, ಕೋರ್ಟ್ ನಿರ್ದೇಶನದ ಹೊರತಾಗಿಯೂ ತನಿಖೆಗೆ ಸಂಬಂಧಿಸಿದ ಯಾವುದೇ ದಾಖಲೆಗಳನ್ನು ತನಿಖಾ ಸಂಸ್ಥೆ ಸಲ್ಲಿಸದಿರುವ ಕಾರಣ, ಈಗಾಗಲೇ ಸಲ್ಲಿಸಲಾಗಿರುವ ವರದಿ ಆಧಾರದಲ್ಲಿ ವಿಚಾರಣೆ ಮುಂದುವರಿಯಬೇಕಾಗುತ್ತದೆ. ಆದ್ದರಿಂದ, ಮುಂದಿನ ವಿಚಾರಣೆಯ ದಿನಾಂಕ ಅಥವಾ ಅದಕ್ಕೂ ಮೊದಲು ಕೇಸ್ ಡೈರಿ (ಸಿಡಿ) ಕಡತಗಳನ್ನು ಒದಗಿಸಬೇಕು ಎಂದು ಲೋಕಾಯುಕ್ತ ಎಸ್ಪಿಪಿಗೆ ನಿರ್ದೇಶಿಸಿ ವಿಚಾರಣೆಯನ್ನು ಡಿಸೆಂಬರ್ 23ಕ್ಕೆ ಮುಂದೂಡಿತು. ಇದಕ್ಕೂ ಮುನ್ನ ಲೋಕಾಯುಕ್ತ ಎಸ್ಪಿಪಿ ವೆಂಕಟೇಶ್ ಅರಬಟ್ಟಿ ಅವರು, ಪ್ರಕರಣದ ತನಿಖೆಗೆ ಸಂಬಂಧಿಸಿದ ವಸ್ತುಸ್ಥಿತಿ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿ, ಪ್ರಕರಣದಲ್ಲಿ ಕೆಲ ಅಗತ್ಯ ಪೂರ್ವಾನುಮತಿ ಆದೇಶ ಪಡೆಯಬೇಕಿದ್ದು, ತನಿಖೆಯು ಅಂತಿಮ ಹಂತದಲ್ಲಿದೆ ಎಂದು ತಿಳಿಸಿದರು. ಇದಕ್ಕೆ ಆಕ್ಷೇಪಿಸಿದ ದೂರುದಾರ ಸ್ನೇಹಮಯಿ ಕೃಷ್ಣ ಅವರು ಖಾಸಗಿ ದೂರಿನಲ್ಲಿ ಉಲ್ಲೇಖಿಸಲಾದ 1ರಿಂದ 4ನೇ ಆರೋಪಿಗಳ (ಸಿದ್ದರಾಮಯ್ಯ, ಬಿ.ಎಂ. ಪಾರ್ವತಿ, ಮಲ್ಲಿಕಾರ್ಜುನ ಸ್ವಾಮಿ, ಜೆ. ದೇವರಾಜು) ವಿರುದ್ಧದ ಬಿ ವರದಿಯ ಬಗ್ಗೆ ಇದುವರೆಗೆ ಯಾವುದೇ ಹೆಚ್ಚಿನ ತನಿಖೆ ನಡೆಸಲಾಗಿಲ್ಲ. ತನಿಖಾ ಸಂಸ್ಥೆಯು ಪ್ರಕರಣವನ್ನು ಸತತವಾಗಿ ವಿಳಂಬ ಮಾಡುತ್ತಿದೆ ಎಂದು ದೂರಿದರು. ಇದನ್ನು ನಿರಾಕರಿಸಿದ ಅರಬಟ್ಟಿ ಅವರು, ವರದಿಯ ಅಂತಿಮ ಪ್ರತಿಯನ್ನು ಮುಚ್ಚಿದ ಲಕೋಟೆಯಲ್ಲಿ ನ್ಯಾಯಾಲಯಕ್ಕೆ ಒದಗಿಸಲು ಸಿದ್ಧರಿದ್ದೇವೆ ಮತ್ತು ಅವುಗಳ ವಿಶ್ವಾಸಾರ್ಹತೆಯನ್ನು ಸಾಬೀತುಪಡಿಸಲು ಕೇಸ್ ಡೈರಿ ಕಡತಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಲು ಅನುಮತಿ ನೀಡಬೇಕು ಎಂದು ಕೋರಿದರು. ದಿನೇಶ್ ಕುಮಾರ್ ನ್ಯಾಯಾಂಗ ಬಂಧನ ವಿಸ್ತರಣೆ: ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಮುಡಾ ಮಾಜಿ ಆಯುಕ್ತ ಜಿ.ಟಿ. ದಿನೇಶ್ ಕುಮಾರ್ ಅವರ ನ್ಯಾಯಾಂಗ ಬಂಧನವನ್ನು 14 ದಿನಗಳವರೆಗೆ ವಿಸ್ತರಿಸುವಂತೆ ತನಿಖಾಧಿಕಾರಿಗಳು ಮಾಡಿದ ಮನವಿ ಪರಿಗಣಿಸಿದ ನ್ಯಾಯಾಲಯವು ದಿನೇಶ್ ಕುಮಾರ್ ನ್ಯಾಯಾಂಗ ಬಂಧನವನ್ನು ಡಿಸೆಂಬರ್ 31ರವರೆಗೆ ವಿಸ್ತರಿಸಿತು.
ಪದೇ ಪದೆ ಸಿಎಂ ಬದಲಿಸುವ ಪದ್ಧತಿ ಕಾಂಗ್ರೆಸ್ನಲ್ಲಿಲ್ಲ, ಅದು ಬಿಜೆಪಿಯಲ್ಲಿ ಮಾತ್ರ: ಜಮೀರ್ ಅಹ್ಮದ್
ಪದೇ ಪದೇ ಮುಖ್ಯಮಂತ್ರಿಗಳನ್ನು ಬದಲಿಸುವ ಪದ್ಧತಿ ಬಿಜೆಪಿಯಲ್ಲಿ ಮಾತ್ರ ಇದೆ, ಕಾಂಗ್ರೆಸ್ನಲ್ಲಿ ಇಲ್ಲ ಎಂದು ಸಚಿವ ಬಿ.ಝೆಡ್. ಜಮೀರ್ ಅಹ್ಮದ್ ಖಾನ್ ಹೇಳಿದ್ದಾರೆ. ಸಿದ್ದರಾಮಯ್ಯನವರ ಆರೋಗ್ಯ ಚೆನ್ನಾಗಿದ್ದು, ಆಡಳಿತವನ್ನು ಸಮರ್ಥವಾಗಿ ನಡೆಸುತ್ತಿದ್ದಾರೆ, ಅವರ ಸ್ಥಾನಕ್ಕೆ ಯಾವುದೇ ಸಮಸ್ಯೆ ಇಲ್ಲ ಎಂದರು. ಬಿಜೆಪಿ ಅವಧಿಯಲ್ಲಿ ಐದು ವರ್ಷದಲ್ಲಿ ಮೂರು ಮುಖ್ಯಮಂತ್ರಿಗಳನ್ನು ಬದಲಾಯಿಸಲಾಗಿದೆ ಎಂದು ಅವರು ದೂರಿದರು.
ರಶ್ಯ ಸಶಸ್ತ್ರ ಪಡೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದ 26 ಮಂದಿ ಭಾರತೀಯರು ಮೃತ: ರಾಜ್ಯಸಭೆಗೆ ತಿಳಿಸಿದ ಕೇಂದ್ರ ಸರಕಾರ
ಹೊಸದಿಲ್ಲಿ: ರಶ್ಯ ಸಶಸ್ತ್ರ ಪಡೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದ 26 ಮಂದಿ ಭಾರತೀಯರು ಮೃತಪಟ್ಟಿದ್ದು, ಏಳು ಮಂದಿ ನಾಪತ್ತೆಯಾಗಿದ್ದಾರೆ ಎಂದು ಗುರುವಾರ ಕೇಂದ್ರ ಸರಕಾರ ಸಂಸತ್ತಿಗೆ ತಿಳಿಸಿದೆ. ರಾಜ್ಯಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಲಿಖಿತ ಉತ್ತರ ನೀಡಿದ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ಕೀರ್ತಿ ವರ್ಧನ್ ಸಿಂಗ್, 50 ಮಂದಿ ಭಾರತೀಯರನ್ನು ರಶ್ಯ ಸಶಸ್ತ್ರ ಪಡೆಗಳಿಂದ ಬಿಡುಗಡೆಗೊಳಿಸುವ ಪ್ರಯತ್ನಗಳು ಜಾರಿಯಲ್ಲಿವೆ ಎಂದೂ ಹೇಳಿದ್ದಾರೆ. “ವಿದೇಶಾಂಗ ವ್ಯವಹಾರಗಳ ಸಚಿವಾಲಯವು 10 ಮಂದಿ ಭಾರತೀಯರ ಪಾರ್ಥಿವ ಶರೀರಗಳನ್ನು ಭಾರತಕ್ಕೆ ತರಲು ಹಾಗೂ ಇಬ್ಬರು ಭಾರತೀಯ ಪ್ರಜೆಗಳ ಅಂತ್ಯಕ್ರಿಯೆಯನ್ನು ಸ್ಥಳೀಯವಾಗಿ ನೆರವೇರಿಸಲು ನೆರವು ಒದಗಿಸಿದೆ” ಎಂದು ಅವರು ತಿಳಿಸಿದ್ದಾರೆ. “ಮೃತಪಟ್ಟಿರುವ ಅಥವಾ ನಾಪತ್ತೆಯಾಗಿರುವ 18 ಭಾರತೀಯರ ಕುಟುಂಬದ ಸದಸ್ಯರ ಡಿಎನ್ಎ ಮಾದರಿಗಳನ್ನು ರಶ್ಯ ಪ್ರಾಧಿಕಾರಗಳೊಂದಿಗೆ ಹಂಚಿಕೊಳ್ಳಲಾಗಿದ್ದು, ಮೃತಪಟ್ಟಿರುವ ಭಾರತೀಯ ಪ್ರಜೆಗಳನ್ನು ಪತ್ತೆ ಹಚ್ಚುವ ಪ್ರಯತ್ನಕ್ಕೆ ನೆರವು ಒದಗಿಸಲಾಗಿದೆ” ಎಂದೂ ಅವರು ಹೇಳಿದ್ದಾರೆ.
ಬೆಳ್ಳಿ ಬೆಲೆ ಗುರುವಾರವೂ ₹3,000 ಏರಿಕೆ; ಹಳೆ ಖರೀದಿದಾರಿಗೆ ಖುಷಿ, ಹೊಸದಾಗಿ ಖರೀದಿಸುವವರಿಗೆ ತಲೆ ಬಿಸಿ!
ಈ ವರ್ಷ ಬೆಳ್ಳಿ ಬೆಲೆ ಗಗನಕ್ಕೇರಿದೆ. ಜನವರಿಯಲ್ಲಿ ಕೆ.ಜಿ.ಗೆ 90,500 ರೂ. ಇದ್ದ ಬೆಳ್ಳಿ, ಇದೀಗ 2,11,000 ರೂ. ತಲುಪಿದೆ. ಇದು ಸಾರ್ವಕಾಲಿಕ ದಾಖಲೆಯಾಗಿದೆ. ಜಾಗತಿಕ ಮಾರುಕಟ್ಟೆಯಲ್ಲೂ ಬೆಳ್ಳಿ ಧಾರಣೆ ಏರುಗತಿಯಲ್ಲಿದೆ. ಕೈಗಾರಿಕೆಗಳ ಬಳಕೆ ಹೆಚ್ಚಳ, ಕಡಿಮೆ ಪೂರೈಕೆ, ಹೂಡಿಕೆದಾರರ ವಿಶ್ವಾಸ ಇದಕ್ಕೆ ಕಾರಣ. ಬೆಳ್ಳಿ ಬೆಲೆ 2.5 ಲಕ್ಷ ರೂ. ತಲುಪುವ ನಿರೀಕ್ಷೆಯಿದೆ.
ಎರಡೇ ದಿನದಲ್ಲಿ 2 ಕೆಜಿ ತೂಕ ಕಳೆದುಕೊಂಡ ಯಶಸ್ವಿ ಜೈಸ್ವಾಲ್! ಪುಣೆ ಹೋಟೆಲ್ ಊಟವೇ ಎಡವಟ್ಟಾಯ್ತಾ?
Yashasvi Jaiswal Health Updates- ತೀವ್ರ ಹೊಟ್ಟೆನೋವಿನಿಂದ ಪುಣೆ ಆಸ್ಪತ್ರೆಗ ದಾಖಲಾಗಿದ್ದ ಭಾರತದ ಯುವ ಕ್ರಿಕೆಟಿಗ ಯಶಸ್ವಿ ಜೈಸ್ವಾಲ್ ಅವರು ಇದೀಗ ಡಿಸ್ಚಾರ್ಜ್ ಆಗಿದ್ದಾರೆ. ಆದರೆ ಎರಡೇ ದಿನದಲ್ಲಿ 2 ಕೆಜಿ ತೂಕ ಕಳೆದುಕೊಂಡಿದ್ದಾರೆ. ಪುಣೆಯ ಹೋಟೆಲ್ನಲ್ಲಿ ಅವರು ಸೇವಿಸಿದ್ದ ಆಹಾರ ವಿಷವಾಗಿದ್ದೇ ಇದಕ್ಕೆ ಕಾರಣ ಎಂದು ಮೂಲಗಳಿಂದ ತಿಳಿದುಬಂದಿದೆ. ವೈದ್ಯರು ಅವರಿಗೆ 7ರಿಂದ 10 ದಿನಗಳ ವಿಶ್ರಾಂತಿ ತೆಗೆದುಕೊಳ್ಳಲು ಸೂಚಿಸಿದ್ದು ವಿಜಯ್ ಹಜಾರೆ ಟ್ರೋಫಿಯ ಆರಂಭಿಕ ಪಂದ್ಯಗಳಲ್ಲಿ ಆಡುವುದು ಅನುಮಾನವಾಗಿದೆ.
ಪೋಲಿಸ್ ದೌರ್ಜನ್ಯ ಆರೋಪ: ಅಕ್ಷತಾ ಪೂಜಾರಿ ಮನೆಗೆ ಸಿಪಿಎಂ ಜಿಲ್ಲಾ ನಿಯೋಗ ಭೇಟಿ
ಬ್ರಹ್ಮಾವರ: ಉಪ್ಪೂರು ಜಾತಾಬೆಟ್ಟು ನಿವಾಸಿ ಅಕ್ಷತಾ ಪೂಜಾರಿ ಎಂಬವರ ಮನೆಗೆ ಪೋಲಿಸರು ನುಗ್ಗಿ ಭಯಪಡಿಸಿ ದೌರ್ಜನ್ಯ ನಡೆಸಿದ್ದಾರೆ ಎನ್ನಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಆಕೆಯ ಮನೆಗೆ ಸಿಪಿಎಂ ಜಿಲ್ಲಾ ಸಮಿತಿ ನಿಯೋಗ ಭೇಟಿ ಮಾಡಿ ನೈತಿಕ ಧೈರ್ಯ ತುಂಬಿತು. ಮನೆಯಲ್ಲಿ ತಾಯಿ ಮಗಳು ಅಜ್ಜ ಮಾತ್ರ ವಾಸವಾಗಿದ್ದರು. ಮುಂದೆ ಯಾವುದೇ ಸಮಯದಲ್ಲಿ ಸಹಾಯಕ್ಕೆ ಸ್ಪಂದಿಸುತ್ತೇವೆ ಎಂದು ಭರವಸೆ ನೀಡಿ ಬಂದೇವು. ಮನೆಯವರೂ ಸಂತೋಷ ವ್ಯಕ್ತಪಡಿಸಿ ಧನ್ಯವಾದ ತಿಳಿಸಿದರು ಎಂದು ನಿಯೋಗ ತಿಳಿಸಿದೆ. ಪಕ್ಷದ ಜಿಲ್ಲಾ ಕಾರ್ಯದರ್ಶಿ ಸುರೇಶ್ ಕಲ್ಲಾಗರ, ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯೆ ಕಾಂ ನಾಗರತ್ನ ನಾಡ, ಜಿಲ್ಲಾ ಸಮಿತಿ ಸದಸ್ಯರಾದ ಸುಭಾಶ್ಚಂದ್ರ ನಾಯಕ್, ಕಾಂ ಶೀಲಾವತಿ ಇದ್ದರು. ಬೈಂದೂರು ತಾಲೂಕು ಸಿಪಿಎಂ ಸದಸ್ಯರಾದ ಶೋಭ ಕೆರೆಮನೆ ಇದ್ದರು. ಕಟ್ಟಡ ಕಾರ್ಮಿಕರ ಸಂಘದ ಮುಖಂಡರಾದ ಉದಯ ಪೂಜಾರಿ ಹಾಗು ಇತರರು ಈ ಸಂದರ್ಭ ಉಪಸ್ಥಿತರಿದ್ದರು.
ಕಲಬುರಗಿ: ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ 2026ನೇ ಶೈಕ್ಷಣಿಕ ಸಾಲಿನಲ್ಲಿ ಬಿ.ಎಡ್ ಕೋರ್ಸ್ ಒಳಗೊಂಡoತೆ 35 ಸ್ನಾತಕೋತ್ತರ ಕೋರ್ಸ್ ಗಳಲ್ಲಿ ವ್ಯಾಸಂಗಕ್ಕೆ ಪ್ರವೇಶಾತಿ ಪ್ರಕ್ರಿಯೆ ಆರಂಭಗೊಂಡಿದ್ದು, ನ್ಯಾಷನಲ್ ಟೆಸ್ಟ್ ಏಜೆನ್ಸಿ ನಡೆಸುವ ಪ್ರವೇಶ ಪರೀಕ್ಷೆಗೆ ಆನ್ಲೈನ್ ಮೂಲಕ ( https://exams.nta.nic.in/cuet-pg/ ) ಅರ್ಜಿ ಸಲಿಸಲು 2026ರ ಜ.14 ಕೊನೆ ದಿನವಾಗಿದೆ ಎಂದು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಬಟ್ಟು ಸತ್ಯನಾರಾಯಣ ಹೇಳಿದ್ದಾರೆ. ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಕಳೆದ ಡಿ.14 ರಿಂದ ಆನ್ಲೈನ್ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದ್ದು, ಜ.14ರೊಳಗೆ ಆನ್ಲೈನ್ ಮೂಲಕವೇ ಶುಲ್ಕ ಪಾವತಿಯೊಂದಿಗೆ ಪರೀಕ್ಷೆಗೆ ಅರ್ಜಿ ಸಲ್ಲಿಸಲು ಕೊನೆ ದಿನವಾಗಿದೆ. ಅರ್ಜಿಯಲ್ಲಿ ಏನಾದರೂ ತಿದ್ದುಪಡಿ ಮಾಡುವುದಿದ್ದಲ್ಲಿ ಜ.18 ರಿಂದ 20 ವರೆಗೆ ಮಾಡಲು ಅವಕಾಶ ಕಲ್ಪಿಸಲಾಗಿದೆ. ಕಂಪ್ಯೂಟರ್ ಆಧಾರಿತ ಪರೀಕ್ಷೆ ಇದಾಗಿದ್ದು, ಭಾಷಾ ಪ್ರಶ್ನೆ ಪತ್ರಿಕೆಗಳು ಹೊರತು ಪಡಿಸಿ ಉಳಿದ ಎಲ್ಲಾ ಪ್ರವೇಶ ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳು ಕೇವಲ ಇಂಗ್ಲಿಷ್ ಮತ್ತು ಹಿಂದಿ ಭಾಷೆಯಲ್ಲಿರಲಿವೆ ಎಂದರು. ಪರೀಕ್ಷೆ ನಡೆಯುವ ಸ್ಥಳ, ದಿನಾಂಕ, ಪ್ರವೇಶ ಕಾರ್ಡ್, ಫಲಿತಾಂಶ ಎಲ್ಲವು ಎನ್.ಟಿ.ಎ ವೆಬ್ಸೈಟ್ ಮೂಲಕವೇ ತಿಳಿಸಲಾಗುತ್ತದೆ. ಹೀಗಾಗಿ ವಿದ್ಯಾರ್ಥಿಗಳು https://nta.ac.in/, https://exams.nta.nic.in/cuet-pg/ ವೆಬ್ಸೈಟ್ ನಿರಂತರವಾಗಿ ವೀಕ್ಷಿಸಬೇಕು ಮತ್ತು ಕರ್ನಾಟಕ ಕೇಂದ್ರಿಯ ವಿಶ್ವವಿದ್ಯಾಲಯದಲ್ಲಿನ ಪಿ.ಜಿ.ಕೋರ್ಸ್ ವಿವರಗಳನ್ನು ವಿ.ವಿ.ಯ ಅಂತರ್ಜಾಲದಿoದ ಪಡೆಯಬಹುದಾಗಿದೆ ಎಂದು ಪ್ರವೇಶ ಪರೀಕ್ಷೆಯ ವಿವಿಧ ಹಂತಗಳ ಕುರಿತು ಕುಲಪತಿಗಳು ಮಾಹಿತಿ ನೀಡಿದರು. ಪ್ರಸಕ್ತ ಪದವಿಯ 5ನೇ ಮತ್ತು 6ನೇ ಸೆಮಿಸ್ಟರ್ನಲ್ಲಿ ವ್ಯಾಸಂಗ ಮಾಡುತ್ತಿರುವ ಮತ್ತು ಸ್ನಾತಕ ಪದವಿ ಪೂರ್ಣಗೊಳಿಸಿರುವ ಅಭ್ಯರ್ಥಿಗಳು ಪ್ರವೇಶಾತಿ ಪರೀಕ್ಷೆ ಬರೆಯಲು ಅರ್ಹರಿದ್ದಾರೆ. ಮುಂದಿನ ವರ್ಷದ ಮಾರ್ಚ್ ನಲ್ಲಿ ಪ್ರವೇಶ ಪರೀಕ್ಷೆ ನಡೆದು ಏಪ್ರಿಲ್-ಮೇನಲ್ಲಿ ಪರೀಕ್ಷಾ ಫಲಿತಾಂಶ ಪ್ರಕಟವಾಗಲಿದೆ. ತದನಂತರ ಜೂನ್-ಜುಲೈ ಮಾಹೆಯಲ್ಲಿ ಪ್ರವೇಶಾತಿ ಪ್ರಕ್ರಿಯೆ ನಡೆಯಲಿದೆ. ಹೀಗಾಗಿ ಪದವಿಯ ಅಂತಿಮ ವರ್ಷದಲ್ಲಿ ಓದುತ್ತಿರುವ ಅಭ್ಯರ್ಥಿಗಳು ಸಹ ಎನ್.ಎ.ಟಿ. ನಡೆಸುವ ಪ್ರವೇಶ ಪರೀಕ್ಷೆ ಬರೆಯಬಹುದಾಗಿದೆ ಎಂದು ಅವರು ತಿಳಿಸಿದರು. ದೇಶದಲ್ಲಿನ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಪ್ರವೇಶಾತಿ ಪಡೆಯಬೇಕಾದರೆ ಮೊದಲು ನ್ಯಾಷನಲ್ ಟೆಸ್ಟ್ ಏಜೆನ್ಸಿ ನಡೆಸುವ ಪ್ರವೇಶ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಭಾಗವಹಿಸುವುದು ಕಡ್ಡಾಯವಾಗಿದೆ. ಎನ್.ಎ.ಟಿ. ಫಲಿತಾಂಶ ಪ್ರಕಟಿಸಿದ ನಂತರ ವಿದ್ಯಾರ್ಥಿ ಬಯಸಿದಲ್ಲಿ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಪ್ರವೇಶಕ್ಕೆ www.cuk.ac.in ಮೂಲಕವೇ ಹೆಸರು ನೋಂದಾಯಿಸಿಕೊಳ್ಳಬಹುದಾಗಿದೆ. ಸಿ.ಯು.ಇ.ಟಿ. ಪಿ.ಜಿ-2026 ರಲ್ಲಿ ಗಳಿಸಿದ ಅಂಕ ಮತ್ತು ವಿ.ವಿ.ಯಲ್ಲಿ ಜಾರಿಯಲ್ಲಿರುವ ಮೀಸಲಾತಿ ಮತ್ತು ರೋಸ್ಟರ್ ನಿಯಮದಂತೆ ಪ್ರವೇಶಾತಿ ಕಲ್ಪಿಸಲಾಗುತ್ತದೆ. ಕಲ್ಯಾಣ ಕರ್ನಾಟಕ ಭಾಗದ ವಿದ್ಯಾರ್ಥಿಗಳಿಗೆ 371ಜೆ ಅನ್ವಯ ಶೇ.೮ರಷ್ಟು ಪ್ರವೇಶಾತಿ ಮೀಸಲಾತಿ ಇದ್ದು, ಈ ಭಾಗದ ವಿದ್ಯಾರ್ಥಿಗಳು ಇದರ ಪ್ರಯೋಜನೆ ಪಡೆಯುವಂತೆ ಪ್ರೊ. ಬಟ್ಟು ಸತ್ಯನಾರಾಯಣ ಮನವಿ ಮಾಡಿದರು. CUET (PG)-2026ಗೆ ಅರ್ಜಿ ಸಲ್ಲಿಸಲು ಯಾವುದೇ ಅಭ್ಯರ್ಥಿಯು ತೊಂದರೆಯನ್ನು ಎದುರಿಸಿದಲ್ಲಿ ದೂ.ಸಂ. 011 40759000 / 011 69227700 ಅನ್ನು ಸಂಪರ್ಕಿಸಬಹುದು ಅಥವಾ helpdesk-cuetpg@nta.ac.in ನಲ್ಲಿ ಇ-ಮೇಲ್ ಮೂಲಕ ಸಹ ಸಂವಹನ ಮಾಡಬಹುದು. ಅಭ್ಯರ್ಥಿಗಳು ಪರೀಕ್ಷೆಗೆ ಸಂಬಂಧಿಸಿದ ಅಪಡೇಟ್ ಮಾಹಿತಿಗೆ www.nta.ac.in ಮತ್ತು https://exams.nta.nic.in/cuet-pg/ ವೀಕ್ಷಿಸಬೇಕು. ಪ್ರವೇಶ ಪರೀಕ್ಷೆಯು ಸಂಪೂರ್ಣವಾಗಿ ಆನ್ಲೈನ್ನಲ್ಲಿ ನಡೆಯುವುದರಿಂದ ಭವಿಷ್ಯದ ಸಂವಹನಕ್ಕಾಗಿ ಅಭ್ಯರ್ಥಿಗಳು ಅರ್ಜಿಯಲ್ಲಿ ಸರಿಯಾದ ಇಮೇಲ್ ವಿಳಾಸ, ಮೊಬೈಲ್ ಸಂಖ್ಯೆ ನಮೂದಿಸಬೇಕು ಎಂದು ಪ್ರೊ. ಬಟ್ಟು ಸತ್ಯರಾಯಣ ಮನವಿ ಮಾಡಿದ್ದಾರೆ. ಸಿ.ಯು.ಕೆ.ಯಲ್ಲಿ ಲಭ್ಯವಿರುವ ಕೋರ್ಸ್ ಗಳು : ಎಂ.ಎ (ಇಂಗ್ಲೀಷ್), (ಹಿಂದಿ), (ಕನ್ನಡ), (ಭಾಷಾಶಾಸ್ತ್ರ), (ಜಾನಪದ ಮತ್ತು ಬುಡಕಟ್ಟು ಅಧ್ಯಯನ), (ಅರ್ಥಶಾಸ್ತ್ರ), (ಇತಿಹಾಸ), (ಸಾರ್ವಜನಿಕ ಆಡಳಿತ), (ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ) ಹಾಗೂ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ. ಎಂ.ಎಸ್ಸಿ. (ಗಣಿತ), (ಭೌತಶಾಸ್ತ್ರ), (ರಸಾಯನಶಾಸ್ತ್ರ), (ಭೂಗೋಳ), (ಭೂವಿಜ್ಞಾನ), (ಸಸ್ಯಶಾಸ್ತ್ರ), (ಪ್ರಾಣಿಶಾಸ್ತ್ರ) ಹಾಗೂ (ಅಂಕಿ ಅಂಶಗಳು ಮತ್ತು ದತ್ತಾಂಶ ವಿಶ್ಲೇಷಣೆ). ಎಂ.ಎಸ್ಸಿ. ಮನೋವಿಜ್ಞಾನ, ಜೆನೆಟಿಕ್ಸ್ ಮತ್ತು ಜೀನೋಮಿಕ್, ಎಂ.ಕಾo (ಬ್ಯಾಂಕಿಂಗ್ ಮತ್ತು ಹಣಕಾಸು ತಂತ್ರಜ್ಞಾನ), ಎಂ.ಕಾಂ, ಎಂ.ಬಿ.ಎ, ಎಂ.ಬಿ.ಎ (ಪ್ರವಾಸೋದ್ಯಮ ಮತ್ತು ಪ್ರಯಾಣ ನಿರ್ವಹಣೆ), ಸಮಾಜಕಾರ್ಯ, ಎಂ.ಸಿ.ಎ, ಎಲ್.ಎಲ್.ಎಂ, ಬಿ.ಎಡ್, ಎಂ.ಎಡ್, ಎಂ.ಟೆಕ್ ಪವರ್ & ಎನರ್ಜಿ ಇಂಜಿನೀಯರಿಂಗ್, ಎಂ.ಟೆಕ್ ಆರ್.ಎಫ್. & ಮೈಕ್ರೋವೇವ್ ಇಂಜಿನೀಯರಿoಗ್, ಎಂ.ಟೆಕ್ ಎ.ಐ ಮತ್ತು ಎಂ.ಎಲ್., ಎಂಪಿಎ. ಹಿಂದೂಸ್ತಾನಿ ಗಾಯನ, ಎಂ.ಪಿ.ಎ. ಇನ್ಸ್ಟಾಲ್ ಮೆಂಟಲ್ (ಹಿಂದೂಸ್ತಾನಿ ತಬಲಾ) ಹಾಗೂ ಮಾಸ್ಟರ್ ಆಫ್ ವಿಜುವಲ್ ಆರ್ಟ್ಸ್. ಸುದ್ದಿಗೋಷ್ಠಿಯಲ್ಲಿ ಕುಲಸಚಿವ ಪ್ರೊ.ಆರ್.ಆರ್.ಬಿರಾದಾರ, ಪರೀಕ್ಷಾ ನಿಯಂತ್ರಣಾಧಿಕಾರಿ ಡಾ. ಕೋಟಾ ಸಾಯಿಕೃಷ್ಣ, ಸಾರ್ವಜನಿಕ ಸಂಪರ್ಕ ಅಧಿಕಾರಿ ಡಾ. ಗಣಪತಿ ಬಿ. ಸಿನ್ನೂರ ಉಪಸ್ಥಿತರಿದ್ದರು.
ಬಜ್ಪೆ| ಪೊಲೀಸರನ್ನು ಅವಹೇಳನಕಾರಿಯಾಗಿ ನಿಂದಿಸಿದ ಆರೋಪ: ಯುವಕ ಸೆರೆ
ಬಜ್ಪೆ: ಸಾಮಾಜಿಕ ಜಾಲತಾಣದಲ್ಲಿ ಬಜ್ಪೆ ಪೊಲೀಸರನ್ನು ಅವಹೇಳನಕಾರಿಯಾಗಿ ನಿಂದಿಸಿರುವ ಆರೋಪದಲ್ಲಿ ಓರ್ವನನ್ನು ಪೊಲೀಸರು ಬಂಧಿಸಿದ್ದಾರೆ. ಸುರತ್ಕಲ್ ಕಾಟಿಪಳ್ಳ ನಿವಾಸಿ ಅಭಿಷೇಕ್ ಎಂ. (23) ಬಂಧಿತ ಆರೋಪಿ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಆರೋಪಿಯು mr_a_titude 22 ಎಂಬ Instagram ಪೇಜ್ ನಲ್ಲಿ ಬಜ್ಪೆ ನಿಸರ್ಗ ಹೋಟೆಲ್ನ ಫೋಟೊ ಬಳಸಿಕೊಂಡು ಅದರ ಮೇಲೆ ಬಜ್ಪೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವರದಿಯಾದ ಕೊಲೆ ಪ್ರಕರಣದ ಆರೋಪಿತರಿಗೆ ಬಜ್ಪೆ ಪೊಲೀಸರಿಂದ ರಾಜ ಅತಿಥ್ಯ, ದಿನಾಲೂ ನಿಸರ್ಗ ಹೋಟೆಲ್ ಬಜ್ಪೆ ಇಂದ ಬೀಫ್ ಊಟವನ್ನು ನೀಡುತ್ತಿದ್ದಾರೆ. ಜನರನ್ನು ರಕ್ಷಣೆ ಮಾಡಬೇಕಾದ ಪೊಲೀಸ್ ಅಪರಾಧಿಗಳೊಟ್ಟಿಗೆ ಸೇರಿಕೊಂಡು ಪೊಲೀಸ್ ಇಲಾಖೆಯನ್ನು ದುರ್ಬಳಕೆ ಮಾಡುತ್ತಿದ್ದಾರೆ. ಇಲ್ಲಿ ಬೇಲಿಯೇ ಎದ್ದು ಹೊಲ ಮೇಯುತ್ತಿದೆ. ಇಲ್ಲಿ ಪೊಲೀಸ್ ನವರ ಮೇಲೆ ಇಟ್ಟಿರುವ ಭರವಸೆ ಸುಳ್ಳಾಗುತ್ತಿದೆ ಎಂದು ಪೊಲೀಸರನ್ನು ನಿಂದಿಸಿ ಪೋಸ್ಟ್ ಮಾಡಿರುವುದಾಗಿ ದೂರಲಾಗಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಬಜ್ಪೆ ಪೊಲೀಸರು ಆರೋಪಿ ಅಭಿಷೇಕ್ ನನ್ನು ಬಂಧಿಸಿದ್ದಾರೆ. ಅಭಿಷೇಕ್ ವಿರುದ್ಧ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಮಂಗಳಪೇಟೆ ನಿವಾಸಿ ಫಾಝಿಲ್ ಕೊಲೆ, ಕೊಲೆಯತ್ನ, ಹಲ್ಲೆ ಪ್ರಕರಣ, ಕಾಪು ಪೊಲೀಸ್ ಠಾಣೆಯಲ್ಲಿ ದರೋಡೆ ಪ್ರಕರಣಗಳು ದಾಖಲಾಗಿವೆ. ಆರೋಪಿಯನ್ನು ಬಂಧಿಸಿರುವ ಪೊಲೀಸರು ಮುಂದಿನ ತನಿಖೆಗಾಗಿ ಸೆನ್ ಪೊಲೀಸರ ವಶಕ್ಕೆ ಒಪ್ಪಿಸಿದ್ದರು. ಬಳಿಕ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಕುದ್ರೋಳಿ: ಬ್ರೈಟ್ ಶಾಲೆಯಲ್ಲಿ ಅರಬಿ ಭಾಷಾ ದಿನಾಚರಣೆ
ಮಂಗಳೂರು: ಕುದ್ರೋಳಿಯ ಬ್ರೈಟ್ ಮೋಡೆಲ್ ಶಾಲೆಯಲ್ಲಿ ಅರಬಿ ಭಾಷಾ ದಿನವನ್ನು ಗುರುವಾರ ಆಚರಿಸಲಾಯಿತು. ಶಾಲಾಧ್ಯಕ್ಷ ಜಾವೇದ್ ಕುದ್ರೋಳಿ ಕಾರ್ಯಕ್ರಮ ಉದ್ಘಾಟಿಸಿದರು. ಶಾಲಾ ಪ್ರಾಂಶುಪಾಲೆ ಕವಿತಾ ಜಲೇಂದ್ರ ಶುಭಕೋರಿದರು. ಅಬ್ದುಲ್ ಲತೀಫ್ ಆಲಿಯಾ ಅರಬಿ ಭಾಷೆಯ ಮಹತ್ವ, ಅದರ ಸಾಂಸ್ಕೃತಿಕ ಮತ್ತು ಧಾರ್ಮಿಕ ಮೌಲ್ಯಗಳ ಕುರಿತು ಮಾತನಾಡಿದರು. ಅದನ್ನು ವಿದ್ಯಾರ್ಥಿ ರಿಫಾಝ್ ಅನುವಾದಿಸಿದರು. ಫರ್ಹಾನ್, ಮುಹಮ್ಮದ್ ಅರ್ಶ್, ಇಮಾದ್, ನಬಾ, ಖಲೀಲ್, ಹೈಫಾ, ರಝೀನ್ ಮತ್ತಿತರ ವಿದ್ಯಾರ್ಥಿಗಳಿಂದ ಅರಬಿ ಭಾಷಣ, ಅರಬಿ ಸುದ್ದಿ ವಾಚನ ಹಾಗೂ ಅರಬಿ ಹಾಡುಗಳ ಕಾರ್ಯಕ್ರಮ ನಡೆಯಿತು. ವಿದ್ಯಾರ್ಥಿಗಳಾದ ಲಿಫಾಮ್ ಹಾಗೂ ಮಾಹಿರ್ ಅರಬಿಯಲ್ಲಿ ಕಾರ್ಯಕ್ರಮ ನಿರೂಪಿಸಿದರು.
ಪೂರ್ವ ಪೆಸಿಫಿಕ್ ನಲ್ಲಿ ಹಡಗಿನ ಮೇಲೆ ಅಮೆರಿಕಾ ಪಡೆ ದಾಳಿ: 4 ಮಂದಿ ಸಾವು
ವಾಷಿಂಗ್ಟನ್, ಡಿ. 18: ಪೂರ್ವ ಪೆಸಿಫಿಕ್ ನಲ್ಲಿ ಮಾದಕ ವಸ್ತು ಕಳ್ಳಸಾಗಣೆ ಕಾರ್ಯಾಚರಣೆಯಲ್ಲಿದ್ದ ಹಡಗಿನ ಮೇಲೆ ಅಮೆರಿಕದ ಪಡೆ ನಡೆಸಿದ ದಾಳಿಯಲ್ಲಿ ನಾಲ್ವರು ಪುರುಷ `ಮಾದಕ ವಸ್ತು ಭಯೋತ್ಪಾದಕರನ್ನು' ಹತ್ಯೆ ಮಾಡಿರುವುದಾಗಿ ಅಮೆರಿಕಾದ ಮಿಲಿಟರಿ ಹೇಳಿದೆ. On Dec. 17, at the direction of @SecWar Pete Hegseth, Joint Task Force Southern Spear conducted a lethal kinetic strike on a vessel operated by a Designated Terrorist Organizations in international waters. Intelligence confirmed that the vessel was transiting along a known… pic.twitter.com/Yhu3LSOyea — U.S. Southern Command (@Southcom) December 18, 2025 ಅಂತರಾಷ್ಟ್ರೀಯ ಜಲಪ್ರದೇಶದಲ್ಲಿ ನಿಯೋಜಿತ ಭಯೋತ್ಪಾದಕ ಗುಂಪು ನಿರ್ವಹಿಸುತ್ತಿದ್ದ ಹಡಗಿನ ಮೇಲೆ ರಕ್ಷಣಾ ಕಾರ್ಯದರ್ಶಿ ಪೀಟ್ ಹೆಗ್ಸೆಥ್ ನಿರ್ದೇಶನದ ಮೇರೆಗೆ ಡಿಸೆಂಬರ್ 17ರಂದು ನಿಖರ ದಾಳಿ ನಡೆಸಲಾಗಿದ್ದು ನಾಲ್ವರು ಪುರುಷ ಮಾದಕ ವಸ್ತು ಭಯೋತ್ಪಾದಕರು ಸಾವನ್ನಪ್ಪಿದ್ದಾರೆ. ಅಮೆರಿಕಾದ ಮಿಲಿಟರಿ ಪಡೆಗಳಲ್ಲಿ ಯಾವುದೇ ಸಾವು-ನೋವು ವರದಿಯಾಗಿಲ್ಲ ಎಂದು ಹೇಳಿಕೆ ತಿಳಿಸಿದೆ. ಇದರೊಂದಿಗೆ ಮಾದಕ ವಸ್ತು ಕಳ್ಳಸಾಗಣೆಯ ಆರೋಪದಡಿ ಅಮೆರಿಕಾ ಕ್ಯಾರಿಬಿಯನ್ ಮತ್ತು ಪೆಸಿಫಿಕ್ ಪ್ರದೇಶದಲ್ಲಿ ಹಡಗುಗಳ ಮೇಲೆ ನಡೆಸುತ್ತಿರುವ ದಾಳಿಗಳಲ್ಲಿ ಮೃತಪಟ್ಟವರ ಸಂಖ್ಯೆ 99ಕ್ಕೇರಿದೆ. ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ದಾಳಿಗಳನ್ನು ಸಮರ್ಥಿಸಿಕೊಂಡಿದ್ದು ಅಮೆರಿಕಾಕ್ಕೆ ಮಾದಕ ವಸ್ತು ಕಳ್ಳಸಾಗಣೆಯನ್ನು ತಡೆಯಲು ಇದು ಅಗತ್ಯವಾಗಿದೆ ಎಂದು ಪ್ರತಿಪಾದಿಸಿದ್ದಾರೆ. ಟ್ರಂಪ್ ಹೇಳಿಕೆಯನ್ನು ತಿರಸ್ಕರಿಸಿರುವ ಡೆಮಾಕ್ರಟಿಕ್ ಸಂಸದ ಗ್ರೆಗೋರಿ ಮೀಕ್ಸ್, ವೆನೆಝುವೆಲಾದ ತೈಲದ ಮೇಲೆ ಕಣ್ಣಿಟ್ಟು ಟ್ರಂಪ್ ಈ ವಲಯದಲ್ಲಿ ಆಕ್ರಮಣಕ್ಕೆ ನಿರ್ಧರಿಸಿದ್ದಾರೆ ಎಂದು ಟೀಕಿಸಿದ್ದಾರೆ.
ಈಜಿಪ್ಟ್ ನೊಂದಿಗೆ 35 ಶತಕೋಟಿ ಡಾಲರ್ ಅನಿಲ ಒಪ್ಪಂದಕ್ಕೆ ನೆತನ್ಯಾಹು ಅನುಮೋದನೆ
ಜೆರುಸಲೇಂ, ಡಿ.18: ಈಜಿಪ್ಟ್ ಗೆ ಅನಿಲ ರಫ್ತು ಮಾಡುವುದಕ್ಕೆ ಸಂಬಂಧಿಸಿ ಸುಮಾರು 35 ಶತಕೋಟಿ ಡಾಲರ್ ಮೊತ್ತದ ಒಪ್ಪಂದಕ್ಕೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಬುಧವಾರ ಅನುಮೋದನೆ ನೀಡಿರುವುದಾಗಿ ವರದಿಯಾಗಿದೆ. ಇಸ್ರೇಲ್ ನ ಇತಿಹಾಸದಲ್ಲೇ ಅತೀ ದೊಡ್ಡ, 34.7 ಶತಕೋಟಿ ಡಾಲರ್ ಮೌಲ್ಯದ ಗ್ಯಾಸ್ ಒಪ್ಪಂದಕ್ಕೆ ಅನುಮೋದನೆ ನೀಡಲಾಗಿದೆ . ಇದರಲ್ಲಿ 18 ಶತಕೋಟಿ ಡಾಲರ್ಗಳು ರಾಜ್ಯದ ಬೊಕ್ಕಸಕ್ಕೆ ಹೋಗುತ್ತದೆ. ಅಮೆರಿಕದ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಂಡಿದ್ದು ಅದು ಈಜಿಪ್ಟ್ಗೆ ಗ್ಯಾಸ್ ಸರಬರಾಜು ಮಾಡುತ್ತದೆ ಎಂದು ನೆತನ್ಯಾಹು ದೂರದರ್ಶನದ ಮೂಲಕ ದೇಶವನ್ನುದ್ದೇಶಿಸಿ ಮಾಡಿದ ಭಾಷಣದಲ್ಲಿ ಹೇಳಿದ್ದಾರೆ.
Silver Price Today: ಬೆಂಗಳೂರು ಸೇರಿ ದೇಶದ ಪ್ರಮುಖ ನಗರಗಳಲ್ಲಿ ಬೆಳ್ಳಿ ದರ ದಾಖಲೆ ಮಟ್ಟದಲ್ಲಿ ಏರಿಕೆ!
Silver Price On December 18: ಆಭರಣಗಳ ಬೆಲೆ ದುಬಾರಿಯಾದರೂ ಸಹ ಜನರು ಕಷ್ಟ ಕಾಲಕ್ಕೆ ಬರುತ್ತವೆ ಎನ್ನುವ ಕಾರಣಕ್ಕೆ ಕೊಂಡುಕೊಳ್ಳುತ್ತಲೇ ಇದ್ದಾರೆ. ಇನ್ನೂ ಇದೀಗ ಬೆಳ್ಳಿ ದರ ದಾಖಲೆ ಮಟ್ಟದಲ್ಲಿ ಏರಿಕೆ ಕಂಡಿದೆ. ಹಾಗಾದ್ರೆ, ಇಂದು (ಡಿಸೆಂಬರ್ 18) ಕರ್ನಾಟಕದ ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಎಷ್ಟಿದೆ ಎನ್ನುವ ಸಂಪೂರ್ಣ ಅಂಕಿ ಅಂಶಗಳನ್ನು ಇಲ್ಲಿ
ಅನಾಮಧೇಯ ಪತ್ರ ನೀಡಿದ ಮಾಹಿತಿ: ಗೃಹಬಂಧನದಲ್ಲಿದ್ದ ಪದವೀಧರೆ ಮಾನಸಿಕ ಅಸ್ವಸ್ಥೆಯ ರಕ್ಷಣೆ
ಉಡುಪಿ ಡಿ.18: ಅನಾಮಧೇಯ ಪತ್ರ ನೀಡಿದ ಮಾಹಿತಿಯಂತೆ ಗೃಹ ಬಂಧನದಲ್ಲಿದ್ದ ಮನೋರೋಗಿ ಎಂ.ಕಾಂ. ಪದವೀಧರೆ ಯುವತಿಯನ್ನು ಸಮಾಜ ಸೇವಕ ವಿಶು ಶೆಟ್ಟಿ ಅಂಬಲಪಾಡಿ ರಕ್ಷಿಸಿದ್ದಾರೆ. ಕಾರ್ಕಳ ಮೂಲದ 25ರ ಹರೆಯದ ಯುವತಿ ತೀರಾ ಮಾನಸಿಕ ರೋಗಿಯಾಗಿದ್ದು ಹೆತ್ತವರಿಂದ ನಿಯಂತ್ರಿಸಲು ಅಸಾಧ್ಯವಾದಾಗ ಗೃಹ ಬಂಧನದಲ್ಲಿರಿಸಿದ್ದರು. ಈ ಕುರಿತ ಅನಾಮಧೇಯ ಪತ್ರವೊಂದು ಮಹಿಳಾ ಪರ ಇಲಾಖೆಗೆ ಬಂದಿದ್ದು ಈ ಯುವತಿಯ ಗೃಹ ಬಂಧನ ಮುಕ್ತಿ ಹಾಗೂ ಚಿಕಿತ್ಸೆಯ ಬಗ್ಗೆ ಕಾನೂನು ಕ್ರಮಕ್ಕೆ ಆಗ್ರಹಿಸಿತ್ತು. ಅನಾಮಧೇಯ ಪತ್ರದ ಮಾಹಿತಿ ಪಡೆದ ಕಾರ್ಕಳ ತಾಲೂಕಿನ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶ್ರೀಲತಾ ಸ್ಥಳಕ್ಕೆ ಧಾವಿಸಿ ಯುವತಿಯ ಪರಿಸ್ಥಿತಿ ಹಾಗೂ ಹೆತ್ತವರ ಅಸಹಾಯಕತೆ ನೋಡಿ ವಿಶೇಷ ಮುತುವರ್ಜಿ ವಹಿಸಿದ್ದು, ಕಾನೂನು ಪ್ರಕ್ರಿಯೆ ನಡೆಸಿ ಸಹಕರಿಸಿದರು. ಸಖಿ ಸೆಂಟರಿನಿಂದ ವಿಶು ಶೆಟ್ಟಿ ಅವರಿಗೆ ಮಾಹಿತಿ ಲಭಿಸಿದ್ದು ರಕ್ಷಣಾ ಕಾರ್ಯ ನಡೆಸಲಾಯಿತು. ವಿಶು ಶೆಟ್ಟಿಯ ಮನವಿಗೆ ಸ್ಪಂದಿಸಿದ ದೈಗೋಳಿಯ ಸಾಯಿ ನಿಕೇತನ ಆಶ್ರಮದ ಡಾ.ಉದಯ ಕುಮಾರ್ ದಂಪತಿ ಸ್ವತಃ ಕಾರ್ಕಳಕ್ಕೆ ಬಂದು ವಿಶು ಶೆಟ್ಟಿ ಮುಖಾಂತರ ರಕ್ಷಣಾ ಕಾರ್ಯ ನಡೆಸಿ ಆಕೆಯನ್ನು ಚಿಕಿತ್ಸೆ ಹಾಗೂ ಪುನರ್ವಸತಿಗೆ ಕರೆದುಕೊಂಡು ಹೋಗಿ ಸಹಕರಿಸಿದ್ದಾರೆ. ವಿಶು ಶೆಟ್ಟಿ ಆಶ್ರಮಕ್ಕೆ ವೈಯಕ್ತಿಕವಾಗಿ 10,000ರೂ. ಧನ ಸಹಾಯ ನೀಡಿದ್ದಾರೆ.
ಕಾಪು ನಗರ ಯೋಜನಾ ಪ್ರಾಧಿಕಾರದಲ್ಲಿ ಕಡತಗಳು ಬಾಕಿ: ಲೋಕಾಯುಕ್ತರಿಂದ ಪರಿಶೀಲನೆ
ಕಾಪು, ಡಿ.18: ಕಂದಾಯಕ್ಕೆ ಸಂಬಂಧಿಸಿದ ಕಡತಗಳು ವಿಲೇವಾರಿ ಯಾಗದೆ ಬಾಕಿ ಉಳಿದಿರುವ ಬಗ್ಗೆ ಬಂದ ದೂರಿನಂತೆ ಉಡುಪಿ ಲೋಕಾಯುಕ್ತ ಪೊಲೀಸರು ಗುರುವಾರ ಕಾಪು ನಗರ ಯೋಜನಾ ಪ್ರಾಧಿಕಾರಕ್ಕೆ ದಾಳಿ ನಡೆಸಿ ಪರಿಶೀಲನೆ ನಡೆಸಿದರು. ಕಾಪು ಪುರಸಭಾ ಕಟ್ಟಡದಲ್ಲಿರುವ ನಗರ ಯೋಜನಾ ಪ್ರಾಧಿಕಾರದಲ್ಲಿ ಕಡತಗಳು ವಿಲೇವಾರಿಯಾಗದೆ ಹಲವು ಸಮಯಗಳಿಂದ ಬಾಕಿ ಉಳಿದಿ ರುವ ಬಗ್ಗೆ ಹಲವು ದೂರುಗಳು ಬಂದಿದ್ದು, ಈ ಕುರಿತು ಕಾಪು ಜನಸಂಪರ್ಕ ಸಭೆಯಲ್ಲೂ ಆರೋಪಗಳು ಕೇಳಿ ಬಂದಿದ್ದವು. ಈ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲಾ ಲೋಕಾಯುಕ್ತ ಡಿವೈಎಸ್ಪಿ ಹಾಲ ಮೂರ್ತಿ ರಾವ್ ನೇತೃತ್ವದ ತಂಡ ರಾಜ್ಯ ಲೋಕಾಯುಕ್ತದಿಂದ ಸರ್ಚ್ ವಾರೆಂಟ್ ಪಡೆದು ಪ್ರಾಧಿಕಾರಕ್ಕೆ ದಾಳಿ ನಡೆಸಿ ಪರಿಶೀಲನೆ ನಡೆಸಿದೆ. ಬೆಳಗ್ಗೆಯಿಂದ ಸಂಜೆಯವರೆಗೆ ಕಡತಗಳನ್ನು ಪರಿಶೀಲನೆ ನಡೆಸಿದ್ದು, ಇದರಲ್ಲಿ ಸಾಕಷ್ಟು ಸಮಯಗಳಿಂದ ವಿಲೇವಾರಿ ಆಗದೆ ಬಾಕಿ ಉಳಿದಿರುವ ಹಲವು ಕಡತಗಳು ಕಂಡುಬಂದಿವೆ. ಇವುಗಳನ್ನು ಲೋಕಾಯುಕ್ತ ಪೊಲೀಸರು ದಾಖಲು ಮಾಡಿಕೊಂಡಿದ್ದು, ಈ ಕುರಿತ ವರದಿಯನ್ನು ರಾಜ್ಯ ಲೋಕಾ ಯುಕ್ತಕ್ಕೆ ಕಳುಹಿಸಿ ದೂರು ನೋಂದಾವಣಿ ಮಾಡಲಾಗುವುದು. ಮುಂದೆ ಈ ಬಗ್ಗೆ ತನಿಖೆ ನಡೆಸಿ, ಕಾನೂನು ಉಲ್ಲಂಘನೆ ಕಂಡುಬಂದರೆ ಕ್ರಮಕ್ಕೆ ಸರಕಾರಕ್ಕೆ ಶಿಫಾರಸ್ಸು ಮಾಡ ಲಾಗುವುದು ಎಂದು ಲೋಕಾಯುಕ್ತ ಡಿವೈಎಸ್ಪಿ ಹಾಲಮೂರ್ತಿ ರಾವ್ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಲೋಕಾಯುಕ್ತ ನಿರೀಕ್ಷಕರುಗಳಾದ ಮಂಜುನಾಥ್, ರಾಜೇಂದ್ರ ನಾಯ್ಕ್ ಎಂ.ಎನ್. ಹಾಗೂ ಸಿಬ್ಬಂದಿಗಳು ಹಾಜರಿದ್ದರು.
ವಿಜಯನಗರ | ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮದ ಪೋಸ್ಟರ್ ಬಿಡುಗಡೆ
ವಿಜಯನಗರ(ಹೊಸಪೇಟೆ), ಡಿ.18: ಜಿಲ್ಲಾದ್ಯಾಂತ ಡಿ.21 ರಿಂದ 25 ರವರೆಗೆ ನಡೆಯಲಿರುವ ರಾಷ್ಟ್ರೀಯ ಪಲ್ಸ್ ಪೋಲಿಯೋ ಸಲಿಕೆ ಕಾರ್ಯಕ್ರಮದ ಪೋಸ್ಟರ್ ಗಳನ್ನು ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಬುಧವಾರ ಸಂಜೆ ಬಿಡುಗಡೆಗೊಳಿಸಿದರು. ಬಳಿಕ ಅವರು ಮಾತನಾಡಿ, ಐದು ವರ್ಷದೊಳಗಿನ ಯಾವುದೇ ಮಕ್ಕಳ ಪಲ್ಸ್ ಪೋಲಿಯೋ ಲಸಿಕೆಯಿಂದ ವಂಚಿತರಾಗದoತೆ ನಿಗಾ ವಹಿಸಿಬೇಕು. ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮವು ಜಿಲ್ಲೆಯ 100 ರಷ್ಟು ಪ್ರತಿಶತ ಸಾಧನೆ ಮಾಡಬೇಕು. ಇದಕ್ಕೆ ಸಂಬಂಧಿಸಿದಂತೆ ಎಲ್ಲಾ ಇಲಾಖೆಗಳು ಸದರಿ ಕಾರ್ಯಕ್ರಮದಲ್ಲಿ ಸಕ್ರೀಯವಾಗಿ ಪಾಲ್ಗೊಳ್ಳುವುದರ ಮೂಲಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಈ ಹಿಂದೆ ಎಷ್ಟೇ ಬಾರಿ ಪೋಲಿಯೋ ಹಾಕಿಸಿದ್ದರೂ, ಈ ಸುತ್ತಿನಲ್ಲಿ ಮತ್ತೆ ಪೋಲಿಯೋ ಹನಿ ಹಾಕಿಸಿಕೊಳ್ಳುವುದರ ಮೂಲಕ ಪೋಲಿಯೋ ನಿರ್ಮೂಲನೆಗೆ ಸಾರ್ವಜನಿಕರು ಸಹಕರಿಸುಂತೆ ಮನವಿ ಮಾಡಿದರು. ಒಟ್ಟಾರೆಯಾಗಿ ಜಿಲ್ಲೆಯ 1,39,55,179 ಜನಸಂಖ್ಯೆಯಿದ್ದು, ಇದರಲ್ಲಿ 1,31,363 ಐದು ವರ್ಷದೊಳಗಿನ ಮಕ್ಕಳು ಇದ್ದರೆ. ಈ ಎಲ್ಲಾ ಮಕ್ಕಳಿಗೆ ಲಸಿಕೆ ಹಾಕಲು 1,047 ಬೂತ್ ಗಳು ಮತ್ತು 912 ಮನೆಗಳಿಗೆ ತೆರಳಿ ಪೋಲಿಯೋ ಹನಿ ಹಾಕಲು ತಂಡಗಳನ್ನು ರಚಿಸಲಾಗಿದೆ. ಕಾರ್ಯಕ್ರಮದಲ್ಲಿ 2,172 ಲಸಿಕಾದಾರರಾಗಿ ಕಾರ್ಯನಿರ್ವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು. ಈ ವೇಳೆ ಅಪರ ಜಿಲ್ಲಾಧಿಕಾರಿ ಇ.ಬಾಲಕೃಷ್ಣಪ್ಪ, ಆರ್ಸಿಹೆಚ್ ಅಧಿಕಾರಿ ಡಾ.ಜಂಬಯ್ಯ, ಜಿಲ್ಲಾ ಪಂಚಾಯತ್ ಸಂಯೋಜಕ ಜೆ.ಎಂ.ಅನ್ನದಾನ ಸ್ವಾಮಿ, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಡಿ.ಟಿ.ಮಂಜುನಾಥ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಉಪನಿರ್ದೇಶಕಿ ಶ್ವೇತಾ, ನಗರಾಭಿವೃದ್ಧಿ ಕೋಶ ಯೋಜನಾ ನಿರ್ದೇಶಕ ಮನೋಹರ್, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ವೈ.ಎ.ಕಾಳೆ, ಅಹಾರ ಇಲಾಖೆ ಉಪನಿರ್ದೇಶಕ ರಿಯಾಝ್ ಸೇರಿದಂತೆ ವಿವಿಧ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದರು.
Messi ತೆರಳಿದರೂ ಮುಗಿಯದ ಗದ್ದಲ; ಗಂಗುಲಿಯಿಂದ 50 ಕೋಟಿ ರೂ. ಮಾನನಷ್ಟ ಮೊಕದ್ದಮೆ
ಕೋಲ್ಕತಾ, ಡಿ. 18: ಕೋಲ್ಕತಾದ ಅರ್ಜೆಂಟೀನ ಫ್ಯಾನ್ ಕ್ಲಬ್ ಅಧ್ಯಕ್ಷ ಉತ್ತಮ್ ಸಾಹ ವಿರುದ್ಧ ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಸೌರವ್ ಗಂಗುಲಿ 50 ಕೋಟಿ ರೂಪಾಯಿ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ. ಅರ್ಜೆಂಟೀನ ಫುಟ್ಬಾಲ್ ತಂಡದ ಸೂಪರ್ ಸ್ಟಾರ್ ಲಿಯೊನೆಲ್ ಮೆಸ್ಸಿ ಶನಿವಾರ ಕೋಲ್ಕತದ ಯುವ ಭಾರತಿ ಸ್ಟೇಡಿಯಮ್ ಗೆ ಭೇಟಿ ನೀಡಿದ್ದಾಗ ನಡೆದ ನೂಕುನುಗ್ಗಲಿಗೆ ಸೌರವ್ ಗಂಗುಲಿ ಕಾರಣ ಎಂಬುದಾಗಿ ಆರೋಪಿಸಿದ್ದರು. ಸಾಹಾ ಅವರ ಸಾರ್ವಜನಿಕ ಹೇಳಿಕೆಗಳು ಆಧಾರರಹಿತ ಹಾಗೂ ಅವುಗಳು ಗಂಗುಲಿಯ ಪ್ರತಿಷ್ಠೆಗೆ ಗಂಭೀರ ಹಾನಿ ಮಾಡಿವೆ ಎಂಬುದಾಗಿ ಲಾಲ್ ಬಝಾರ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ದೂರಿನಲ್ಲಿ ಆರೋಪಿಸಲಾಗಿದೆ.
ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ 25 ವರ್ಷವಾಗುವ ತನಕ ಬೆಂಗಳೂರು 2 ನೇ ಏರ್ಪೋರ್ಟ್ ಇಲ್ಲ: ಕೇಂದ್ರ ಸರ್ಕಾರ ಸ್ಪಷ್ಟನೆ
ಬೆಂಗಳೂರಿನಲ್ಲಿ ಎರಡನೇ ವಿಮಾನ ನಿಲ್ದಾಣ ನಿರ್ಮಾಣದ ಬಗ್ಗೆ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ ವರದಿ ನೀಡಿದೆ. ಆದರೆ, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ 25 ವರ್ಷಗಳ ಸೇವೆ ಪೂರ್ಣಗೊಳಿಸುವವರೆಗೆ ಹೊಸ ವಿಮಾನ ನಿಲ್ದಾಣ ನಿರ್ಮಾಣ ಸಾಧ್ಯವಿಲ್ಲ. ರಾಜ್ಯ ಸರ್ಕಾರವು ಸ್ಥಳ ಗುರುತಿಸಿ ಟೆಂಡರ್ ಕರೆದಿದೆ. ಸಲಹಾ ಸಂಸ್ಥೆಯು ವರದಿ ಸಿದ್ಧಪಡಿಸಲಿದೆ.
ಸರಕಾರಿ ಉದ್ಯೋಗದಲ್ಲಿ ನೇರ ನೇಮಕಾತಿಗೆ ಆಗ್ರಹ: ಕೊರಗರ ಅಹೋರಾತ್ರಿ ಧರಣಿ ನಾಲ್ಕನೇ ದಿನವೂ ಮುಂದುವರಿಕೆ
ಉಡುಪಿ, ಡಿ.18: ಕೊರಗ ಸಮುದಾಯದ ಯುವಜನತೆಗೆ ಸರಕಾರಿ ಉದ್ಯೋಗದಲ್ಲಿ ನೇರ ನೇಮಕಾತಿ ಕಲ್ಪಿಸು ವಂತೆ ಆಗ್ರಹಿಸಿ ಕೊರಗಾಭಿವೃದ್ಧಿ ಸಂಘಗಳ ಒಕ್ಕೂಟ ಕರ್ನಾಟಕ ಕೇರಳ ನೇತೃತ್ವದಲ್ಲಿ ಉಡುಪಿ ಜಿಲ್ಲಾಧಿಕಾರಿ ಕಚೇರಿ ಎದುರು ಹಮ್ಮಿಕೊಳ್ಳಲಾಗಿರುವ ಅನಿಧಿಷ್ಠಾವಧಿ ಅಹೋರಾತ್ರಿ ಧರಣಿ ಸತ್ಯಾಗ್ರಹ ನಾಲ್ಕನೇ ದಿನವಾದ ಗುರುವಾರವೂ ಮುಂದುವರೆದಿದೆ. ಧರಣಿಗೆ ಬೆಂಬಲವಾಗಿ ಕರ್ನಾಟಕ ದಲಿತ ಸಂಷರ್ಷ ಸಮಿತಿ ಅಂಬೇಡ್ಕರ್ ವಾದ ರಾಜ್ಯ ಸಂಘಟನಾ ಸಂಚಾಲಕ ಸುಂದರ್ ಮಾಸ್ತರ್, ಮೈಸೂರು ವಿಭಾಗದ ಸಂಘಟನಾ ಸಂಚಾಲಕ ಶ್ಯಾಮ್ರಾಜ್ ಬಿರ್ತಿ, ಉಡುಪಿ ಜಿಲ್ಲಾ ಪ್ರಧಾನ ಸಂಚಾಲಕ ಮಂಜುನಾಥ್ ಗಿಳಿಯಾರು ಪಾಲ್ಗೊಂಡರು. ಅರಣ್ಯ ಬುಡಕಟ್ಟು ಸಮುದಾಯಗಳ ಅರ್ಹ ವಿದ್ಯಾವಂತ ನಿರುದ್ಯೋಗಿ ಗಳನ್ನು ಕರ್ನಾಟಕ ಸರಕಾರದ ಸಿವಿಲ್ ಸೇವೆಗಳಲ್ಲಿ ನೇರ ನೇಮಕಾತಿ ಮಾಡಿ ಉದ್ಯೋಗ ಭದ್ರತೆ ಒದಗಿಸುವ ಆದೇಶ ಹೊರಡಿಸುವವರೆಗೂ ಈ ಹೋರಾಟ ಮುಂದುವರೆಸಲಾಗುವುದೆಂದು ಧರಣಿನಿರತರು ತಿಳಿಸಿದ್ದಾರೆ. ಧರಣಿಯಲ್ಲಿ ಒಕ್ಕೂಟದ ಅಧ್ಯಕ್ಷೆ ಸುಶೀಲಾ ನಾಡ, ಸಂಯೋಜಕ ಕೆ.ಪುತ್ರನ್ ಹೆಬ್ರಿ, ಮುಖಂಡರಾದ ಶೇಖರ್ ಕೆಂಜೂರು, ಭಾರತಿ, ಪ್ರವೀಣ ಹೆಬ್ರಿ, ಶೇಖರ್ ಕುಂದಾಪುರ ಮೊದಲಾದವರು ಉಪಸ್ಥಿತರಿದ್ದರು.
ಅವಧಿ ಮೀರಿದ ಆಹಾರ ವಸ್ತುಗಳ ಮಾರಾಟ ಜಾಲ ಪತ್ತೆ
ಅವಧಿ ಮೀರಿದ ವಸ್ತುಗಳನ್ನು ಕಡಿಮೆ ಬೆಲೆಗೆ ಖರೀದಿಸಿ ಮಾರಾಟ!
Punjab | ಜಿಲ್ಲಾ ಪರಿಷದ್, ಪಂಚಾಯತ್ ಚುನಾವಣೆ: AAP ಮೇಲುಗೈ
ಚಂಡಿಗಡ,ಡಿ.18: ಪಂಜಾಬಿನಲ್ಲಿ ಜಿಲ್ಲಾ ಪರಿಷದ್ಗಳು ಮತ್ತು ಪಂಚಾಯತ್ ಸಮಿತಿಗಳಿಗೆ ನಡೆದಿದ್ದ ಚುನಾವಣೆಗಳ ಫಲಿತಾಂಶಗಳು ಗುರುವಾರ ಪ್ರಕಟಗೊಂಡಿದ್ದು,ಆಪ್ ಭರ್ಜರಿ ಗೆಲುವನ್ನು ಸಾಧಿಸಿದೆ. 22 ಜಿಲ್ಲಾ ಪರಿಷದ್ಗಳ 346 ವಲಯಗಳು ಮತ್ತು 153 ಪಂಚಾಯತ್ ಸಮಿತಿಗಳ 2,838 ವಲಯಗಳಿಗೆ ಸದಸ್ಯರ ಆಯ್ಕೆಗಾಗಿ ಡಿ.8ರಂದು ಚುನಾವಣೆಗಳು ನಡೆದಿದ್ದವು. ಜಿಲ್ಲಾ ಪರಿಷದ್ ಚುನಾವಣೆಯಲ್ಲಿ ಆಪ್ 218,ಕಾಂಗ್ರೆಸ್ 62,ಶಿರೋಮಣಿ ಅಕಾಲಿ ದಳ (ಎಸ್ಎಡಿ) 46, ಬಿಜೆಪಿ 7, ಬಿಎಸ್ಪಿ 3 ಮತ್ತು ಐಎನ್ಡಿ 10 ವಲಯಗಳಲ್ಲಿ ಗೆಲುವು ಸಾಧಿಸಿವೆ. ಪಂಚಾಯತ್ ಸಮಿತಿ ಚುನಾವಣೆಯಲ್ಲಿ ಆಪ್ 1531, ಕಾಂಗ್ರೆಸ್ 612, ಎಸ್ಎಡಿ 445, ಬಿಜೆಪಿ 73, ಬಿಎಸ್ಪಿ 28 ಮತ್ತು ಐಎನ್ಡಿ 144 ವಲಯಗಳಲ್ಲಿ ಗೆದ್ದಿವೆ. ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಆಪ್ ಮುಖ್ಯಸ್ಥ ಅರವಿಂದ ಕೇಜ್ರಿವಾಲ್ ಅವರು, ಚುನಾವಣೆಗಳಲ್ಲಿ ಆಪ್ನ ಭರ್ಜರಿ ಗೆಲುವು ಗ್ರಾಮೀಣ ಪ್ರದೇಶಗಳ ಜನರು ಭಗವಂತ್ ಮಾನ್ ಸರಕಾರದ ಕೆಲಸಗಳನ್ನು ಮೆಚ್ಚಿಕೊಂಡಿದ್ದಾರೆ ಎನ್ನುವುದನ್ನು ತೋರಿಸಿದೆ ಎಂದು ಹೇಳಿದರು.
ಯೂಟ್ಯೂಬ್ ನೋಡಿ ಕೇಂದ್ರ ಸಚಿವ ಗಡ್ಕರಿ ಮಾಡಿದ ಖಾದ್ಯ ಸವಿದ ಪ್ರಿಯಾಂಕಾ ಗಾಂಧಿ
ಕೇರಳದಲ್ಲಿ ರಸ್ತೆ ಯೋಜನೆಗಳ ಬಗ್ಗೆ ಚರ್ಚೆಗೆ ಸಚಿವರನ್ನು ಭೇಟಿ ಮಾಡಿದ್ದ ವಯನಾಡ್ ಸಂಸದೆ
ಚಿತ್ತಾಪುರ | ನಾಲವಾರದಲ್ಲಿ ಹತ್ತಿ ಖರೀದಿ ಕೇಂದ್ರ ಸ್ಥಾಪಿಸಬೇಕು: ವೀರಣ್ಣಗೌಡ ಪರಸರೆಡ್ಡಿ
ಕಲಬುರಗಿ : ಚಿತ್ತಾಪುರ ತಾಲೂಕಿನ ನಾಲವಾರ ವಲಯದಲ್ಲಿ ರೈತರು ಅತಿ ಹೆಚ್ಚು ಹತ್ತಿ ಬೆಳೆಯುತ್ತಿದ್ದು, ಸರ್ಕಾರ ನಾಲವಾರದಲ್ಲಿ ಹತ್ತಿ ಕೇಂದ್ರ ಸ್ಥಾಪಿಸಬೇಕು ಎಂದು ಕೃಷಿಕ ಸಮಾಜದ ಜಿಲ್ಲಾ ಪ್ರತಿನಿಧಿ ವೀರಣ್ಣಗೌಡ ಪರಸರೆಡ್ಡಿ ಹೇಳಿದರು. ಚಿತ್ತಾಪುರ ಪಟ್ಟಣದ ಪಶು ವೈದ್ಯಕೀಯ ಇಲಾಖೆಯ ಸಭಾಂಗಣದಲ್ಲಿ ನಡೆದ ತಾಲೂಕು ಕೃಷಿಕ ಸಮಾಜದ ಕಾರ್ಯಕಾರಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಹತ್ತಿ ಬೆಳೆಯದ ಶಹಾಬಾದ್-ತೋನಸನಳ್ಳಿಯಲ್ಲಿ ಹತ್ತಿ ಖರೀದಿ ಕೇಂದ್ರ ತೆರೆದಿರುವುದು ಅವೈಜ್ಞಾನಿಕವಾಗಿದೆ. ಆದ್ದರಿಂದ ನಾಲವಾರ ವಲಯದಲ್ಲಿ ಹತ್ತಿ ಕೇಂದ್ರ ತೆರೆದರೆ ರೈತರಿಗೆ ಅನುಕೂಲವಾಗಲಿದೆ ಎಂದರು. ನಾಲವಾರದಲ್ಲಿನ ಕೃಷಿ ಉತ್ಪನ್ನ ಕೇಂದ್ರ ಮುಚ್ಚುವ ಹುನ್ನಾರ ನಡೆದಿದೆ ಎಂಬ ಅನುಮಾನ ಬರುತ್ತಿದೆ. ಕೇಂದ್ರದ ಮುಂದಾಳು ಹುದ್ದೆಯಲ್ಲಿನ ಅಧಿಕಾರಿಯನ್ನು ಬೇರೆ ಕಡೆ ವರ್ಗಾವಣೆ ಮಾಡಲಾಗಿದೆ. ಕೂಡಲೇ ಮುಂದಾಳು ಹುದ್ದೆ ಸೇರಿದಂತೆ ಕೃಷಿ ವಿಜ್ಞಾನಿಗಳ ಹಾಗೂ ಸಿಬ್ಬಂದಿಗಳ ನೇಮಕ ಮಾಡಿ ಕೃಷಿ ಶಿಕ್ಷಣ ಉತ್ಪನ್ನ ಕೇಂದ್ರ ಆರಂಭಿಸಬೇಕು. ನಿರ್ಲಕ್ಷ ವಹಿಸಿದರೆ ಕೃಷಿಕ ಸಮಾಜದ ನಿರ್ದೇಶಕರ ನಿಯೋಗ ರಾಯಚೂರಿನ ಕೃಷಿ ವಿಶ್ವವಿದ್ಯಾಲಯದ ಉಪ ಕುಲಪತಿಗಳಿಗೆ ಭೇಟಿಯಾಗಿ ಹೋರಾಟ ಮಾಡಲಾಗುವುದು ಎಂದು ಹೇಳಿದರು. ಕೆಲ ಮುಗ್ಧ ರೈತರು ಎಫ್'ಡಿಎ ಮಾಡಿಸದೇ ಇರುವುದರಿಂದ ಸರ್ಕಾರದ ಬೆಳೆ ಹಾನಿ ಪಡೆಯುವಲ್ಲಿ ವಂಚಿತರಾಗಿದ್ದಾರೆ. ಕೂಡಲೇ ಸರ್ಕಾರ ಅವರಿಗೆ ಪರಿಹಾರ ನೀಡಬೇಕು ಎಂದು ಅವರು ಒತ್ತಾಯಿಸಿದರು. ಕೃಷಿಕ ಸಮಾಜದ ತಾಲೂಕು ಅಧ್ಯಕ್ಷ ನಾಗರೆಡ್ಡಿ ಗೋಪಸೇನ್ ಮಾತನಾಡಿದರು. ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಸಂಜೀವಕುಮಾರ ಮಾನಕರ್, ಪಶು ವೈದ್ಯಕೀಯ ಇಲಾಖೆ ಸಹಾಯಕ ನಿರ್ದೇಶಕ ಡಾ.ಶಂಕರ ಕಣ್ಣಿ, ತೋಟಗಾರಿಕೆ ಇಲಾಖೆಯ ಅಧಿಕಾರಿ ರಾಜಕುಮಾರ ಗೋವಿನ, ಅರಣ್ಯ ಇಲಾಖೆಯ ಅಧಿಕಾರಿ ಎಂ.ಡಿ.ಜಾವೀದ್, ಕೃಷಿಕ ಸಮಾಜದ ಖಜಾಂಚಿ ನಿಂಗಣ್ಣ ಹೇಗಲೇರಿ, ನಿರ್ದೇಶಕರಾದ ಸತ್ಯನಾರಾಯಣ ಯಾದವ, ಶಿವಶರಣರೆಡ್ಡಿ ಭಂಕಲಗಿ, ಪಂಚಾಕ್ಷರಿ ಪೂಜಾರಿ, ಉಪಾಧ್ಯಕ್ಷ ಚನ್ನಬಸಪ್ಪ ಜೀವಣಗಿ, ಪ್ರಧಾನ ಕಾರ್ಯದರ್ಶಿ ನಿಂಗಣ್ಣಗೌಡ ಬಿರಾದಾರ, ಸುಭಾಶ್ಚಂದ್ರ ಅಮ್ಮೋಜಿ, ಕುಮಾರ ರಾಮಚಂದ್ರ, ರವೀಂದ್ರ, ಮಲ್ಲಿಕಾರ್ಜುನ, ಚನ್ನಬಸಪ್ಪಗೌಡ, ಕೃಷಿ ಇಲಾಖೆಯ ಅಧಿಕಾರಿ ರವೀಂದ್ರಕುಮಾರ, ಪುರಸಭೆಯ ಲೋಹಿತ ಕಟ್ಟಿಮನಿ ಸೇರಿದಂತೆ ಇತರರು ಇದ್ದರು.
ಎಂಟು ಮಂದಿ ‘ತಹಶೀಲ್ದಾರ್’ಗಳ ವರ್ಗಾವಣೆ
ಬೆಂಗಳೂರು : ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ತಹಶೀಲ್ದಾರ್ ನಾಗೇಂದ್ರ ಕೋಳಶೆಟ್ಟಿ ಸೇರಿದಂತೆ 8 ಮಂದಿ ತಹಶೀಲ್ದಾರ್ ಗಳನ್ನು ವರ್ಗಾವಣೆ ಮಾಡಿ, ರಾಜ್ಯ ಸರಕಾರವು ಗುರುವಾರದಂದು ಆದೇಶ ಹೊರಡಿಸಿದೆ. ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ತಹಶೀಲ್ದಾರ್ ನಾಗೇಂದ್ರ ಕೋಳಶೆಟ್ಟಿ ಅವರನ್ನು ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ತಹಶೀಲ್ದಾರ್ ಹುದ್ದೆಗೆ ವರ್ಗಾವಣೆ ಮಾಡಲಾಗಿದೆ. ಹೂವಿನಹಡಗಲಿ ತಾಲೂಕಿನ ತಹಶೀಲ್ದಾರ್ ಜಿ.ಸಂತೋಷ ಕುಮಾರ್ ಅವರನ್ನು ಹರಿಹರ ತಾಲೂಕಿನ ತಹಶೀಲ್ದಾರ್ ರಾಗಿ, ಸ್ಥಳ ನಿರೀಕ್ಷಣೆಯಲ್ಲಿದ್ದ ನಿಂಗಪ್ಪ ಅವರನ್ನು ದೇವರಹಿಪ್ಪರಗಿ ತಾಲೂಕಿನ ತಹಶೀಲ್ದಾರ್ ಹುದ್ದೆಗೆ, ಕೊಪ್ಪಳ ಜಿಲ್ಲೆ ಪುರಸಭೆ ತಹಶೀಲ್ದಾರ್ ರವಿ ಎಸ್.ಅಂಗಡಿ ಅವರನ್ನು ರಾಯಚೂರು ಮಹಾನಗರ ಪಾಲಿಕೆಯ ಕಂದಾಯ ಅಧಿಕಾರಿಯಾಗಿ ವರ್ಗಾವಣೆ ಮಾಡಲಾಗಿದೆ. ಸ್ಥಳ ನಿರೀಕ್ಷಣೆಯಲ್ಲಿದ್ದ ಮಮತ ಎಂ. ಅವರನ್ನು ಚಿಕ್ಕನಾಯಕನಹಳ್ಳಿ ತಾಲೂಕಿನ ತಹಶೀಲ್ದಾರ್ ಆಗಿ ನೇಮಕ ಮಾಡಲಾಗಿದೆ. ಕೋಲಾರ ಜಿಲ್ಲಾಧಿಕಾರಿಗಳ ಕಚೇರಿ ಪುರಸಭಾ ತಹಶೀಲ್ದಾರ್ ಎಸ್.ವೆಂಕಟೇಶಪ್ಪ ಅವರನ್ನು ಕಿದ್ವಾಯಿ ಮೆಮೋರಿಯಲ್ ಇನ್ಸ್ ಟ್ಯೂಟ್ ಆಫ್ ಅಂಕಾಲಾಜಿಯ ಆಡಳಿತಾಧಿಕಾರಿಯಾಗಿ, ನೆಲಮಂಗಲ ತಾಲೂಕು ತಹಶೀಲ್ದಾರ್ ಗ್ರೇಡ್-2 ಕಲಾವತಿ ಎಂ. ಅವರನ್ನು ಗ್ಯಾಸ್ ಅಥಾರಿಟಿ ಆಫ್ ಇಂಡಿಯಾ ಲಿಮಿಟೆಡ್ನ ತಹಶೀಲ್ದಾರ್ ರಾಗಿ, ಕುಣಿಗಲ್ ತಾಲೂಕು ತಹಶೀಲ್ದಾರ್ ಗ್ರೇಡ್-2 ಯೋಗೇಶ್ ಟಿ.ಜಿ. ಅವರನ್ನು ಚನ್ನಪಟ್ಟಣ ತಾಲೂಕಿನ ತಹಶೀಲ್ದಾರ್ ಗ್ರೇಡ್-2 ಅಧಿಕಾರಿಯಾಗಿ ವರ್ಗಾವಣೆ ಮಾಡಲಾಗಿದೆ.
ಮುಡಾ ಅಕ್ರಮ: ಕೇಸ್ ಡೈರಿ ಸಲ್ಲಿಸುವಂತೆ ಲೋಕಾಯುಕ್ತ ಅಧಿಕಾರಿಗಳಿಗೆ ನ್ಯಾಯಾಲಯ ಸೂಚನೆ!
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ನಿವೇಶನಗಳ ಅಕ್ರಮ ಹಂಚಿಕೆ ಪ್ರಕರಣದ ಕೇಸ್ ಡೈರಿಯನ್ನು ಡಿ. 23ರಂದು ಸಲ್ಲಿಸುವಂತೆ ಲೋಕಾಯುಕ್ತ ಪೊಲೀಸರಿಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ನಿರ್ದೇಶಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿ ಇತರರಿಗೆ ಕ್ಲೀನ್ಚಿಟ್ ನೀಡಿದ್ದ 'ಬಿ' ರಿಪೋರ್ಟ್ನ ಆಕ್ಷೇಪಣಾ ಅರ್ಜಿ ವಿಚಾರಣೆ ನಡೆಸಲಾಯಿತು.
ಬೆಳಗಾವಿ ಅಧಿವೇಶನ | ಕೇಂದ್ರದ ಸಹಕಾರ ಕೋರಿ ಹಲವು ನಿರ್ಣಯಗಳಿಗೆ ಅಂಗೀಕಾರ
ಬೆಳಗಾವಿ : ಉತ್ತರ ಕರ್ನಾಟಕ ಹಾಗೂ ಕಲ್ಯಾಣ ಕರ್ನಾಟಕ ಭಾಗದ ಸಮಗ್ರ ಅಭಿವೃದ್ಧಿಗೆ ಕೇಂದ್ರ ಸರಕಾರದ ಸಹಕಾರ ಕೋರಿದ ಹಲವು ನಿರ್ಣಯಗಳಿಗೆ ಸರ್ವಾನುಮತದ ಅಂಗೀಕಾರ ದೊರೆಯಿತು. ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ಗುರುವಾರದ ವಿಧಾನಸಭೆ ಕಲಾಪದಲ್ಲಿ ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಸಚಿವ ಎಚ್.ಕೆ. ಪಾಟೀಲ್ ಅವರು ನಿರ್ಣಯಗಳನ್ನು ಮಂಡಿಸಿದರು. ರಾಯಚೂರಿನಲ್ಲಿ ಏಮ್ಸ್ ಸ್ಥಾಪನೆ, ಬೆಂಗಳೂರು ಪ್ರದೇಶದಲ್ಲಿನ ರಾಷ್ಟ್ರೀಯ ಪ್ರಾಮುಖ್ಯತೆ ಸಂಸ್ಥೆಗಳನ್ನು ಉತ್ತರ ಕರ್ನಾಟಕ್ಕೆ ಸ್ಥಳಾಂತರ ಮಾಡುವುದು, ಕೃಷ್ಣಾ ಜಲವಿವಾದ ನ್ಯಾಯಧೀಕರಣ-2 ತೀರ್ಪಿನ ಕುರಿತು ಅಧಿಸೂಚನೆ ಹೊರಡಿಸುವುದು, ಮಹಾರಾಷ್ಟ್ರದ ವಿದರ್ಭ ಅಭಿವೃದ್ಧಿಗೆ ಮಂಡಳಿಗೆ ಕೇಂದ್ರ ಸರಕಾರ ಪ್ರತಿವರ್ಷ ನೀಡುವ ಆರ್ಥಿಕ ನೆರವಿನ ಮಾದರಿಯಲ್ಲಿ ಕಲ್ಯಾಣ ಕರ್ನಾಟಕ ಪ್ರಾದೇಶಿಕ ಅಭಿವೃದ್ಧಿ ಮಂಡಳಿಗೆ ಪ್ರತಿವರ್ಷ 5000 ಕೋಟಿ ರೂ., ಆರ್ಥಿಕ ನೆರವು ನೀಡುವುದು. ರಾಜ್ಯದಿಂದ ಹೆಚ್ಚಿನ ಎಥೆನಾಲ್ ಖರೀದಿಸುವುದು, ಕಳಸಾ ಬಂಡೋರಿ ಯೋಜನೆ ಅನುಷ್ಠಾನಕ್ಕೆ ಮಂಜೂರಾತಿ ನೀಡುವುದು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗಗಳಿಗೆ ಉದ್ಯೋಗ ಮತ್ತು ಶಿಕ್ಷಣದಲ್ಲಿ ಮೀಸಲಾತಿಯನ್ನು ಶೇ.50 ರಿಂದ ಶೇ.56ರಷ್ಟು ಹೆಚ್ಚಿಸಿದ ಮೀಸಲಾತಿ ಪ್ರಮಾಣದ ಅಧಿಸೂಚನೆ ಮತ್ತು ಆದೇಶಗಳನ್ನು ಭಾರತ ಸಂವಿಧಾನ ಅನುಸೂಚಿ-9 ಸೇರಿಸುವಂತೆ ಕೋರಿದರು. ಚರ್ಚೆ ಬಳಿಕ ಸದನವು ಸರ್ವಾನುಮತದಿಂದ ನಿರ್ಣಯಗಳನ್ನು ಅಂಗೀಕರಿಸಿತು. ಈ ನಿರ್ಣಯಗಳನ್ನು ಕೇಂದ್ರ ಸರಕಾರಕ್ಕೆ ಕಳುಹಿಸಿಕೊಡಲಾಗುವುದು ಎಂದು ಪ್ರಕಟಿಸಿದರು.
ದೋಣಿಯಿಂದ ಸಮುದ್ರಕ್ಕೆ ಬಿದ್ದು ಮೀನುಗಾರ ಮೃತ್ಯು
ಬೈಂದೂರು, ಡಿ.18: ಉಪ್ಪುಂದ ಗ್ರಾಮದ ಮಡಿಕಲ್ ಬಳಿ ಅರಬ್ಬಿ ಸಮುದ್ರದಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ದೋಣಿಯಿಂದ ಮೀನುಗಾರ ರೊಬ್ಬರು ಆಯತಪ್ಪಿ ನೀರಿಗೆ ಬಿದ್ದು ಮೃತಪಟ್ಟ ಬಗ್ಗೆ ವರದಿಯಾಗಿದೆ. ಮೃತರನ್ನು ಹರಿಶ್ಚಂದ್ರ ಖಾರ್ವಿ ಎಂದು ಗುರುತಿಸಲಾಗಿದೆ. ಇವರು ಮಹಾಸತಿ ದೋಣಿಯಲ್ಲಿ ಇತರ ಮೀನುಗಾರರೊಂದಿಗೆ ಡಿ.15ರಂದು ಸಂಜೆ ಮೀನುಗಾರಿಕೆಗೆ ತೆರಳಿದ್ದು, ಸಮುದ್ರ ಮಧ್ಯೆ ಮೀನುಗಾರಿಕೆ ಮಾಡುತ್ತಿದ್ದಾಗ ಹರಿಶ್ಚಂದ್ರ ಖಾರ್ವಿ ದೋಣಿಯಿಂದ ಆಯತಪ್ಪಿ ನೀರಿಗೆ ಬಿದ್ದರೆನ್ನಲಾಗಿದೆ. ಕೂಡಲೇ ಅವರನ್ನು ಇತರ ಮೀನುಗಾರರು ನೀರಿನಿಂದ ಮೇಲಕ್ಕೆತ್ತಿ ಆಸ್ಪತ್ರೆಗೆ ದಾಖಲಿಸಿದರು. ತೀವ್ರವಾಗಿ ಅಸ್ವಸ್ಥಗೊಂಡಿದ್ದ ಇವರು ಡಿ.18ರಂದು ಬೆಳಗ್ಗೆ ಇವರು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟ್ರಂಪ್ ಮಾರಕ ಪ್ರಮಾದ ಎಸಗುವುದಿಲ್ಲ ಎಂಬ ವಿಶ್ವಾಸವಿದೆ: ರಶ್ಯ ಎಚ್ಚರಿಕೆ
ಮಾಸ್ಕೋ, ಡಿ.18: ವೆನೆಝುವೆಲಾ ವಿಷಯದಲ್ಲಿ ಅಮೆರಿಕಾ ಅಧ್ಯಕ್ಷ ಟ್ರಂಪ್ ಆಡಳಿತ ಮಾರಣಾಂತಿಕ ಪ್ರಮಾದ ಎಸಗುವುದಿಲ್ಲ ಎಂಬ ವಿಶ್ವಾಸವಿದೆ. ಅಂತರಾಷ್ಟ್ರೀಯ ಸರಕು ಸಾಗಣೆ ಪ್ರಕ್ರಿಯೆಗೆ ಬೆದರಿಕೆಯೊಡ್ಡಿರುವ ಅಮೆರಿಕಾದ ನಿರ್ಧಾರಗಳ ಬಗ್ಗೆ ಕಳವಳಗೊಂಡಿರುವುದಾಗಿ ರಶ್ಯದ ವಿದೇಶಾಂಗ ಇಲಾಖೆ ಗುರುವಾರ ಹೇಳಿದೆ. `ನಮ್ಮ ಮಿತ್ರರಾಷ್ಟ್ರ ವೆನೆಝುವೆಲಾದ ಸುತ್ತಲಿನ ಉದ್ವಿಗ್ನತೆಗಳ ನಿರಂತರ ಮತ್ತು ಉದ್ದೇಶಪೂರ್ವಕ ಉಲ್ಬಣವನ್ನು ನಾವು ಗಮನಿಸಿದ್ದೇವೆ. ಅಂತರಾಷ್ಟ್ರೀಯ ಶಿಪ್ಪಿಂಗ್ ಪ್ರಕ್ರಿಯೆಗೆ ಬೆದರಿಕೆ ಒಡ್ಡಿರುವ ನಿರ್ಧಾರಗಳ ಏಕಪಕ್ಷೀಯ ಸ್ವರೂಪ ಹೆಚ್ಚಿನ ಕಳವಳಕ್ಕೆ ಕಾರಣವಾಗಿದೆ ಎಂದು ಹೇಳಿಕೆ ತಿಳಿಸಿದೆ. ತರ್ಕಬದ್ಧ ಮತ್ತು ಪ್ರಾಯೋಗಿಕ ವಿಧಾನಗಳಿಂದ ನಿರೂಪಿಸಲ್ಪಟ್ಟಿರುವ ಟ್ರಂಪ್ ಆಡಳಿತವು ಮಾರಕ ಪ್ರಮಾದ ಎಸಗುವುದಿಲ್ಲ ಎಂಬ ವಿಶ್ವಾಸವಿದೆ. ಅಮೆರಿಕಾ ಮತ್ತು ವೆನೆಝುವೆಲಾ ಮಾತುಕತೆಯ ಮೂಲಕ ವಿವಾದ ಇತ್ಯರ್ಥಪಡಿಸಿಕೊಳ್ಳಬೇಕು ಎಂಬುದು ನಮ್ಮ ನಿಲುವಾಗಿದೆ. ಇಡೀ ಪಶ್ಚಿಮ ಭೂಗೋಳಾರ್ಧಕ್ಕೆ ಅನಿರೀಕ್ಷಿತ ಪರಿಣಾಮಗಳನ್ನು ಉಂಟು ಮಾಡುವ ಪರಿಸ್ಥಿತಿಗೆ ಅಮೆರಿಕಾ ಕಾರಣವಾಗುವುದಿಲ್ಲ ಎಂಬ ವಿಶ್ವಾಸವಿದೆ. ಮಡುರೊ ಸರಕಾರದ ಕ್ರಮಗಳನ್ನು ರಶ್ಯ ಬೆಂಬಲಿಸುತ್ತದೆ. ಈ ವಲಯದ ಎಲ್ಲಾ ದೇಶಗಳು ಸಂಯಮ ವಹಿಸಬೇಕು ಎಂದು ಆಗ್ರಹಿಸುವುದಾಗಿ ರಶ್ಯ ಅಧ್ಯಕ್ಷರ ಕಚೇರಿ ಹೇಳಿದೆ.
ಕಲಬುರಗಿ | ಡೆಂಗ್ಯೂ, ಚಿಕನ್ ಗುನ್ಯಾ ಪಾಸಿಟಿವ್ ಪ್ರಮಾಣ ಶೇ.6.48ಕ್ಕೆ ಇಳಿಕೆ : ಡಿಸಿ ಫೌಝಿಯಾ ತರನ್ನುಮ್
ಕಲಬುರಗಿ: ಕಳೆದ ವರ್ಷ ಜಿಲ್ಲೆಯಾದ್ಯಂತ ಡೆಂಗ್ಯೂ ಹಾವಳಿ ಹೆಚ್ಚಾಗಿದ್ದರಿಂದ ಈ ವರ್ಷ ಮರುಕಳಿಸದಂತೆ ಜಿಲ್ಲಾಡಳಿತ ಮತ್ತು ಆರೋಗ್ಯ ಇಲಾಖೆಯಿಂದ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದರಿಂದ ಡೆಂಗ್ಯೂ, ಚಿಕನ್ಗುನ್ಯಾ ತಕ್ಕ ಮಟ್ಟಿಗೆ ಹತೋಟಿಗೆ ಬಂದಿದ್ದು, ಕಳೆದ ವರ್ಷಕ್ಕೆ (2024ರಲ್ಲಿ ಪಾಸಿಟಿವಿಡಿ ಪ್ರಮಾಣ 9.6 ) ಹೋಲಿಸಿದರೆ ಈ ವರ್ಷ ಶೇ.6.48ಕ್ಕೆ ಇಳಿಕೆಯಾಗಿದೆ ಎಂದು ಜಿಲ್ಲಾಧಿಕಾರಿ ಬಿ.ಫೌಝಿಯಾ ತರನ್ನುಮ್ ತಿಳಿಸಿದ್ದಾರೆ. ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಜಿಲ್ಲಾಧಿಕಾರಿಗಳು, ಕಳೆದ ವರ್ಷಕ್ಕೆ ಹೋಲಿಸಿದರೆ ಕಲಬುರಗಿ ಜಿಲ್ಲೆಯಲ್ಲಿ ಪ್ರಸ್ತುತ 2025ನೇ ಕ್ಯಾಲೆಂಡರ್ ವರ್ಷದಲ್ಲಿ ಹೆಚ್ಚಿನ ಸ್ಯಾಂಪಲ್ ಪರೀಕ್ಷೆಗೆ ಒಳಪಡಿಸಿದ್ದಾಗಿಯೂ ಡೆಂಗ್ಯೂ ಪಾಸಿಟಿವ್ ಪ್ರಮಾಣದಲ್ಲಿ ಶೇ. 6.48 ಇಳಿಕೆ ಕಂಡಿರುವುದು ಸಮಾಧಾನದ ವಿಷಯವಾಗಿದೆ ಎಂದಿದ್ದಾರೆ. 2024ನೇ ಕ್ಯಾಲೆಂಡರ್ ವರ್ಷದಲ್ಲಿ ಜಿಲ್ಲೆಯಾದ್ಯಂತ ಆಸ್ಪತ್ರೆಗಳಲ್ಲಿ ಸಂಗ್ರಹಿಸಿದ 12,190 ಡೆಂಗ್ಯೂ ರಕ್ತ ಲೇಪನಗಳಲ್ಲಿ 1,201 ಮತ್ತು 3,043 ಚಿಕುನ್ ಗುನ್ಯಾ ರಕ್ತ ಲೇಪನಗಳಲ್ಲಿ 295 ಪಾಸಿಟಿವ್ ಕಂಡುಬಂದಿತ್ತು. ಪ್ರಸಕ್ತ ಜನವರಿ-2025 ರಿಂದ ಇಲ್ಲಿಯವರೆಗೆ 7,584 ರಕ್ತದ ಮಾದರಿಗಳಲ್ಲಿ 492 ಖಚಿತ ಡೆಂಗ್ಯೂ ಪ್ರಕರಣಗಳು ಹಾಗೂ 1,749 ರಕ್ತದ ಮಾದರಿಗಳಲ್ಲಿ 41 ಖಚಿತ ಚಿಕನ್ಗುನ್ಯಾ ಪ್ರಕರಣಗಳು ವರದಿಯಾಗಿವೆ. 2024 ರಲ್ಲಿದ್ದ ಶೇ.9.6 ಪಾಸಿಟಿವಿಟಿ ರೇಟ್ 2025 ರಲ್ಲಿ ಶೇ. 6.48ಕ್ಕೆ ಇಳಿದಿದೆ ಎಂದು ಅಂಕಿ-ಸಂಖ್ಯೆ ಸಮೇತ ಡಿ.ಸಿ. ಮಾಹಿತಿ ನೀಡಿದ್ದಾರೆ. ಇಷ್ಟಾಗಿಯೂ ಕಲಬುರಗಿ ನಗರ ಸೇರಿ ಜಿಲ್ಲೆಯಾದ್ಯಂತ ಡೆಂಗ್ಯೂ ಮತ್ತು ಚಿಕನ್ ಗುನ್ಯಾ ಸಂಪೂರ್ಣವಾಗಿ ನಿಯಂತ್ರಣ ಸಾಧಿಸುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆಯು ಅಗತ್ಯ ಮುಂಜಾಗ್ರತೆ ಕ್ರಮ ತೆಗೆದುಕೊಂಡಿದ್ದು, ವಿಶೇಷವಾಗಿ ಕಲಬುರಗಿ ನಗರದಲ್ಲಿ ಈಡಿಸ್ ಸೊಳ್ಳೆಗಳ ನಿರ್ಮೂಲನೆಗೆ ಲಾರ್ವಾ ಸಮೀಕ್ಷೆ ತೀವ್ರಗೊಳಿಸಿದೆ ಎಂದು ಅವರು ತಿಳಿಸಿದ್ದಾರೆ. ಪ್ರಸ್ತುತ 2025ನೇ ಕ್ಯಾಲೆಂಡರ್ ವರ್ಷದಲ್ಲಿ ಕಲಬುರಗಿ ನಗರದಲ್ಲಿ ಅಲ್ಲಲ್ಲಿ ಡೆಂಗ್ಯೂ ಪ್ರಕರಣ ಪತ್ತೆಯಾಗಿವೆಯಾದರು ಜನವರಿ ಮಾಹೆಯಿಂದ ಇಲ್ಲಿಯವರೆಗೆ ಯಾವುದೇ ಡೆಂಗ್ಯೂ ಖಚಿತ ಪ್ರಕರಣಗಳಿಂದ ಸಾವು ಸಂಭವಿಸಿಲ್ಲ ಎಂದು ಸ್ಪಷ್ಟಪಡಿಸಿರುವ ಜಿಲ್ಲಾಧಿಕಾರಿಗಳು, ಡೆಂಗ್ಯೂ ಪತ್ತೆಯಾದ ಪ್ರದೇಶಗಳಲ್ಲಿ ನಿಯಮಿತವಾಗಿ ಆಶಾ ಕಾರ್ಯಕರ್ತೆಯರು ಈಡೀಸ್ ಸೊಳ್ಳೆಗಳ ನಿರ್ಮೂಲನೆಗೆ ಲಾರ್ವಾ ಸಮೀಕ್ಷೆ ಕೈಗೊಂಡು ಇದರ ಹತೋಟಿಗೆ ಎಲ್ಲಾ ರೀತಿಯ ಕ್ರಮ ಕೈಗೊಂಡಿದೆ ಎಂದಿದ್ದಾರೆ. ಖಾಸಗಿ ಆಸ್ಪತ್ರೆಯಲ್ಲಿ ಡೆಂಗ್ಯೂ ಕಿಟ್ ಮೂಲಕ ಪರೀಕ್ಷಿಸಿದ ನಂತರ ಸಂಶಯಾಸ್ಪದ ಚಿಕನ್ಗುನ್ಯಾ, ಡೆಂಗ್ಯೂ ಪಾಸಿಟಿವ್ ಬಂದಲ್ಲಿ ರೋಗಿಯ ಇನ್ನೊಂದು ಸ್ಯಾಂಪಲ್ ಪಡೆದು ಅದನ್ನು ಜಿಲ್ಲೆಯ ಡಿ.ಪಿ.ಎಚ್.ಎಲ್ ಮತ್ತು ವಿ.ಆರ್.ಡಿ.ಎಲ್ ಲ್ಯಾಬ್ ಗಳಿಗೆ ಕಳುಹಿಸಿ ಪರೀಕ್ಷಿಸಿ ಖಚಿತಪಡಿಸಿಕೊಳ್ಳಬೇಕೆಂದು ಆಸ್ಪತ್ರೆಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ಡಿ.ಸಿ. ಬಿ.ಫೌಝಿಯಾ ತರನ್ನುಮ್ ತಿಳಿಸಿದ್ದಾರೆ. ಡೆಂಗ್ಯೂ, ಚಿಕನ್ ಗುನ್ಯಾ ಪ್ರಕರಣದಲ್ಲಿ ಅನಗತ್ಯ ಭಯ ಪಡುವ ಅವಶ್ಯತೆ ಇಲ್ಲ. ಸಾರ್ವಜನಿಕರು ಸ್ವಚ್ಛತೆ, ನೈರ್ಮಲ್ಯಕ್ಕೆ ಹೆಚ್ಚಿನ ಒತ್ತು ನೀಡಬೇಕು. ಮನೆ ಸುತ್ತಮುತ್ತ ನೀರು ಶೇಖರಣೆಯಾಗದಂತೆ ನೋಡಿಕೊಳ್ಳಬೇಕು. ಈಡಿಸ್ ಸೊಳ್ಳೆ ಉತ್ಪತ್ತಿ ಸ್ಥಾನ ಸಂಪೂರ್ಣವಾಗಿ ನಿರ್ಮೂಲನೆಗೊಳಿಸಬೇಕು. 20,000 ಪ್ಲೇಟ್ ಲೆಟ್ಗಳು ಇರುವವರೆಗೂ ಭಯ ಪಡಬೇಕಿಲ್ಲ ಎಂದಿರುವ ಜಿಲ್ಲಾಧಿಕಾರಿಗಳು, ಈ ಜ್ವರವು ಸಾಮಾನ್ಯ ಒಂದು ವೈರಸ್ ನಿಂದ ಬರುತ್ತಿದ್ದು, ಇಂತಹ ಜ್ವರ ಪ್ರಕರಣಗಳಲ್ಲಿ ಪ್ಯಾರಾಸಿಟಾಮೋಲ್ ಮಾತ್ರೆಗಳನ್ನು ನೀಡುವುದರ ಮೂಲಕ ಶೇ.90ರಷ್ಟು ರೋಗಿಗಳು ಪ್ರಾಥಮಿಕ ಚಿಕಿತ್ಸೆಯಿಂದಲೇ ಗುಣಮುಖಪಡಿಸಬಹುದಾಗಿದೆ ಎಂದಿದ್ದಾರೆ. ಡೆಂಗ್ಯೂ, ಚಿಕನ್ ಗುನ್ಯಾ ಲಕ್ಷಣ ಕಂಡುಬಂದಲ್ಲಿ ಕೂಡಲೆ ವೈದ್ಯರನ್ನು ಕಾಣಬೇಕು. ಡೆಂಗ್ಯೂ ರೋಗಿಗಳ ಚಿಕಿತ್ಸೆಗಾಗಿ ಮುಂಜಾಗ್ರತೆ ಕ್ರಮವಾಗಿ ಜಿಲ್ಲೆಯಾದ್ಯಂತ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ತಲಾ 2, ಸಮುದಾಯ ಆರೋಗ್ಯ ಕೇಂದ್ರದಲ್ಲಿ ತಲಾ 5, ತಾಲ್ಲೂಕು ಆಸ್ಪತ್ರೆಗಳಲ್ಲಿ ತಲಾ 10, ಜಿಮ್ಸ್ ಮತ್ತು ಇ.ಎಸ್.ಐ.ಸಿ ಆಸ್ಪತ್ರೆಗಳಲ್ಲಿ ತಲಾ 20 ಹಾಸಿಗೆಗಳನ್ನು ಕಾಯ್ದಿರಿಸಲಾಗಿದೆ. ಶೇ.5 ರಿಂದ 10 ರಷ್ಟು ರೋಗಿಗಳು ಮಾತ್ರ ಕ್ಲಿಷ್ಟಕರ ಸಂದರ್ಭಗಳಿಗೆ ಒಳಗಾಗುವಸಂಭವ ಇರುತ್ತದೆ. ಇಂತಹ ರೋಗಿಗಳಿಗೆ ವಿಶೇಷ ಆರೈಕೆಗೆಂದೆ ಜಿಲ್ಲಾ ಆಸ್ಪತ್ರೆಯಲ್ಲಿ ಒಂದು ವಿಶೇಷ ವಾರ್ಡ್ ಸ್ಥಾಪಿಸಿದೆ.
ಅಮೆರಿಕದಲ್ಲಿ ಪಾನ ಮತ್ತಳಾಗಿದ್ದ ಯುವತಿ ಮೇಲೆ ರೇಪ್; ಭಾರತೀಯ ಮೂಲದ ಟ್ಯಾಕ್ಸಿ ಡ್ರೈವರ್ ಅರೆಸ್ಟ್
ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ 21 ವರ್ಷದ ಯುವತಿಯ ಮೇಲೆ ಅತ್ಯಾಚಾರವೆಸಗಿದ ಆರೋಪದ ಮೇಲೆ ಭಾರತೀಯ ಮೂಲದ ಟ್ಯಾಕ್ಸಿ ಚಾಲಕ ಸಿಮ್ರಂಜಿತ್ ಸಿಂಗ್ ಸೆಖೋನ್ಎಂ ಬಾತನನ್ನು ಪೊಲೀಸರು ಬಂಧಿಸಿದ್ದಾರೆ. ನವೆಂಬರ್ನಲ್ಲಿ ಈ ಘಟನೆ ನಡೆದಿದ್ದು, ಡಿಸೆಂಬರ್ನಲ್ಲಿ ಆತನನ್ನು ಬಂಧಿಸಲಾಗಿದೆ. ಮುಂದಿನ ವಿಚಾರಣೆ ಡಿಸೆಂಬರ್ 29 ರಂದು ಮುಂದಿನ ವಿಚಾರಣೆ ನಡೆಯಲಿದೆ.
ವೆನೆಝುವೆಲಾ ಸಂಪೂರ್ಣ ಸುತ್ತುವರಿದಿದೆ: ಟ್ರಂಪ್ ಘೋಷಣೆ
ದಿಗ್ಬಂಧನ ವಿಸ್ತರಿಸುವ ಎಚ್ಚರಿಕೆ
ಗುಲ್ಬರ್ಗಾ ವಿ.ವಿ. ಅಂತರ ಮಹಾವಿದ್ಯಾಲಯದ ಯುವಜನೋತ್ಸವಕ್ಕೆ ನಟ ಪ್ರಕಾಶ್ ರಾಜ್ ಆಗಮನ: ಪ್ರೊ.ರಮೇಶ ಲಂಡನಕರ್
ಕಲಬುರಗಿ: ಗುಲ್ಬರ್ಗಾ ವಿಶ್ವವಿದ್ಯಾಲಯದ ಪ್ರಸಕ್ತ 2025-26ನೇ ಸಾಲಿನ ಅಂತರ ಮಹಾವಿದ್ಯಾಲಯಗಳ ಯುವಜನೋತ್ಸವ ಡಿ.20 ರಿಂದ 22ರವರೆಗೆ ಮೂರು ದಿನಗಳ ಕಾಲ ಜ್ಞಾನಗಂಗಾ ಆವರಣದಲ್ಲಿ ನಡೆಯಲಿದ್ದು, ಸಿನಿಮಾ ನಟ-ನಿರ್ದೇಶಕ ಪ್ರಕಾಶ ರಾಜ್ ಯುವಜನೋತ್ಸವಕ್ಕೆ ಚಾಲನೆ ನೀಡಲಿದ್ದಾರೆ ಎಂದು ಗುಲ್ಬರ್ಗಾ ವಿ.ವಿ. ಕುಲಸಚಿವ ಪ್ರೊ.ರಮೇಶ ಲಂಡನಕರ್ ಹೇಳಿದರು. ಗುರುವಾರ ಇಲ್ಲಿನ ಕೈಲಾಸ ಭವನ ಅತಿಥಿಗೃಹದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳಲ್ಲಿ ಕಲಾಸಕ್ತಿ, ಕಲಾಭಿರುಚಿ, ಕಲಾ ಕೌಶಲ್ಯ ಹಾಗೂ ಸಾಂಸ್ಕೃತಿಕ ಪ್ರತಿಭೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಪ್ರತಿ ವರ್ಷದಂತೆ ಈ ಬಾರಿಯೂ ಯುವಜನೋತ್ಸವ ಆಯೋಜಿಸಿದ್ದು, ಇದುವರೆಗೆ 16 ಕಾಲೇಜುಗಳು ಭಾಗವಹಿಸುವುದಾಗಿ ಈಗಾಗಲೆ ನೋಂದಣಿ ಮಾಡಿಕೊಂಡಿದ್ದಾರೆ. ಸುಮಾರು 500 ಪದವಿ ಮತ್ತು ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳು ಇದರಲ್ಲಿ ಭಾಗವಹಿಸುವ ನಿರೀಕ್ಷೆ ಹೊಂದಿದ್ದು, ಸ್ಪಾಟ್ ನೋಂದಣಿ ಸಹ ಅವಕಾಶ ಕಲ್ಪಿಸಿದೆ ಎಂದರು. ಯುವಜನೋತ್ಸವ ನಿಮಿತ್ತ ವಿಶ್ವವಿದ್ಯಾಲಯ ಆವರಣದಲ್ಲಿ ಸಾಂಸ್ಕೃತಿಕ ವಾತವರಣವನ್ನು ನಿರ್ಮಿಸಲು ಡಿ.20 ರಂದು ಬೆಳಿಗ್ಗೆ 9.30 ಗಂಟೆಗೆ ಪಾಣಿಶಾಸ್ತ್ರ ವಿಭಾಗದಿಂದ ಡಾ.ಬಿ.ಆರ್.ಅಂಬೇಡ್ಕರ್ ಭವನದವರೆಗೆ ಸ್ಥಳೀಯ ಜಾನಪದ ಕಲಾ ತಂಡಗಳ ನೃತ್ಯ ಮತ್ತು ವಾದ್ಯ ಮೇಳ, ಯುವ ಸಮೂಹದ ವೈವಿಧ್ಯಮದ ಉಡುಗೆ, ತೊಡುಗೆ, ಜಾನಪದ ಕಲಾ ವೇಷಭೂಷಣದೊಂದಿಗೆ ರಂಗು-ರಂಗೀನ ಮೆರವಣಿಗೆ ಸಹ ನಡೆಯಲಿದೆ ಎಂದರು. ವಿದ್ಯಾರ್ಥಿಗಳಲ್ಲಿ ಕಲಾಸಕ್ತಿ, ಕಲಾಭಿರುಚಿ, ಕಲಾ ಕೌಶಲ್ಯ ಹಾಗೂ ಸಾಂಸ್ಕೃತಿಕ ಪ್ರತಿಭೆಯನ್ನು ಪ್ರೋತ್ಸಾಹಿಸುವುದು ಉನ್ನತ ಶಿಕ್ಷಣದ ಉದ್ದೇಶಗಳಲ್ಲಿ ಒಂದಾಗಿದ್ದು, ಶಿಕ್ಷಣ, ಕ್ರೀಡೆ, ಸಾಹಿತ್ಯ ಜೊತೆಗೆ ಸಾಂಸ್ಕೃತಿಕ ಕಲೆಗಳನ್ನು ಉಳಿಸಿ ಬೆಳೆಸುವ ಮೂಲಕ ಅವುಗಳ ಮೌಲ್ಯಗಳನ್ನು ಸಮಾಜಕ್ಕೆ ತಲುಪಿಸುವ ಉದ್ದೇಶದೊಂದಿಗೆ ಈ ಯುವಜನೋತ್ಸವ ಆಯೋಜಿಸಲಾಗಿದೆ ಎಂದ ಅವರು, ಅಂತರ ಮಹಾವಿದ್ಯಾಲಯ ಯುವಜನೋತ್ಸವ ಕಾರ್ಯಕ್ರಮ ಯಶಸ್ವಿಯಾಗಿ ಜರುಗಲು ಕುಲಪತಿಗಳ ಅಧ್ಯಕ್ಷತೆಯಲ್ಲಿ 19 ಉಪ ಸಮಿತಿಗಳನ್ನು ರಚಿಸಲಾಗಿದ್ದು, ಎಲ್ಲಾ ರೀತಿಯ ಪೂರ್ವಸಿದ್ಧತೆ ಕೆಲಸ ಭರದಿಂದ ನಡೆದಿದೆ ಎಂದರು. 28 ವೈವಿಧ್ಯಮದ ಸ್ಪರ್ಧೆ : ಯುವಜನೋತ್ಸವ ಭಾಗವಾಗಿ ಮೂರು ದಿನಗಳ ಕಾಲ ವಿ.ವಿ. ಆವರಣದಲ್ಲಿರುವ ಮಹಾತ್ಮ ಗಾಂಧಿ ಸಭಾಂಗಣ, ಗಣಿತಶಾಸ್ತ್ರ ವಿಭಾಗದಲ್ಲಿರುವ ಭಾಸ್ಕರ್ ಸಭಾಂಗಣ, ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ವೃಂದ ಗಾಯನ (ಭಾರತೀಯ), ಏಕವ್ಯಕ್ತಿ ಸ್ವರ ಗಾಯನ (ಪಾಶ್ಚಿಮಾತ್ಯ), ವೃಂದ ಗಾಯನ (ಪಾಶ್ಚಿಮಾತ್ಯ), ರಸಪ್ರಶ್ನೆ, ಅಂಟು ಪತ್ರಗಳ ತಯಾರಿಕೆ(ಪೋಸ್ಟರ್ ಮೇಕಿಂಗ್), ಮಣ್ಣಿನ ಆಕೃತಿ (ಕ್ಷೇ ಮಾಡಲಿಂಗ್, ಪ್ರಹಸನ (ಸ್ಕಿಟ್), ಏಕಾಂಕ ನಾಟಕ (ಒನ್ ಆಕ್ಟ್ ಪ್ಲೇ), ಶಾಸ್ತ್ರೀಯ ಏಕವ್ಯಕ್ತಿ ಗಾಯನ, ಕ್ಲಾಸಿಕಲ್ ಇನ್ಸುಮೆಂಟಲ್ - ಸೋಲೋ, ಲಘು ಸಂಗೀತ, ಜಾನಪದ ಸಂಗೀತ, ವಾಸ್ಪಟುತ್ವ, ಚರ್ಚಾ ಸ್ಪರ್ಧೆ, ರಸಪ್ರಶ್ನೆ, ಆನ್ ಸ್ಪಾಟ್ ಪೇಂಟಿಂಗ್, ರಂಗೋಲಿ, ಮೂಕಾಭಿನಯ, ಅನುಕರಣೆ, ಶಾಸ್ತ್ರೀಯ ನೃತ್ಯ, ಜಾನಪದ ಅಥವಾ ಬುಡಕಟ್ಟು ಶೈಲಿ ನೃತ್ಯ, ಕೋಲಾಜ್ ಹಾಗೂ ಕಾರ್ಟೂನಿಂಗ್ ಹೀಗೆ ವೈವಿಧ್ಯಮಯವಾದ 28 ಬಗೆಯ ಸಾಂಸ್ಕೃತಿಕ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ವಿಶ್ವವಿದ್ಯಾಲಯದ ಸ್ನಾತಕೋತ್ತರ ವಿಭಾಗಗಳು ಒಳಗೊಂಡಂತೆ ವಿ.ವಿ. ವ್ಯಾಪ್ತಿಯ ಪದವಿ ಹಾಗೂ ಸ್ನಾತಕೋತ್ತರ ಪದವಿ ಮಹಾವಿದ್ಯಾಲಯಗಳಿಂದ ಸುಮಾರು 500 ಪ್ರತಿಭಾನ್ವಿತ ವಿದ್ಯಾರ್ಥಿಗಳು ಇದರಲ್ಲಿ ಭಾಗವಹಿಸಿ ತಮ್ಮ ಕಲಾ ಪ್ರತಿಭೆಯನ್ನು ಪ್ರದರ್ಶಿಸಿಲಿದ್ದಾರೆ ಎಂದು ಪ್ರೊ.ರಮೇಶ ಲಂಡನಕರ್ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮೌಲ್ಯಾಮಾಪನ ಕುಲಸಚಿವ ಡಾ.ಎನ್.ಜಿ.ಕಣ್ಣೂರ, ವಿತ್ತಾಧಿಕಾರಿ ಜಯಾಂಬಿಕ, ಯುವಜನೋತ್ಸವದ ಪ್ರಚಾರ ಸಮಿತಿ ಅಧ್ಯಕ್ಷ ಡಾ.ಸುರೇಶ ಜಂಗೆ ಇದ್ದರು.
ಸಿಂಧನೂರು | ಗ್ರಾಮ ಪಂಚಾಯತ್ನಿಂದ ಪ್ರತಿ ಗುರುವಾರ ಕರ ವಸೂಲಿ ಅಭಿಯಾನ
ಸಿಂಧನೂರು : ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿನ ವ್ಯಾಪಾರ, ಸೇವೆಗಳು, ಆಸ್ತಿಗಳ ಮೇಲಿನ ಶುಲ್ಕಗಳನ್ನು ಸಮರ್ಪಕವಾಗಿ ವಸೂಲಿ ಮಾಡುವುದರಿಂದ ಪಂಚಾಯತ್ಗಳ ಸ್ವಂತ ಸಂಪನ್ಮೂಲಗಳು ಬಲಪಡಿಸಿ, ಮೂಲಸೌಕರ್ಯ ಅಭಿವೃದ್ಧಿಗೆ ಸಹಾಯವಾಗುತ್ತದೆ ಎಂದು ತಾಲ್ಲೂಕು ಪಂಚಾಯತ್ ಇಓ ಚಂದ್ರಶೇಖರ ಹೇಳಿದರು. ತಾಲೂಕಿನ ಉಮಲೂಟಿ ಗ್ರಾಮ ಪಂಚಾಯಿತಿಗೆ ತಾ.ಪಂ.ಕಾರ್ಯನಿರ್ವಾಹಕ ಅಧಿಕಾರಿಗಳು ಚಂದ್ರಶೇಖರ್ ಪಂಚಾಯತ್ ಸಿಬ್ಬಂದಿಯೊಂದಿಗೆ ಮನೆ-ಮನೆಗೆ ಭೇಟಿ ನೀಡಿ ಕರ ವಸೂಲಿ ಅಭಿಯಾನದಲ್ಲಿ ಪಾಲ್ಗೊಂಡು ಕರವಸೂಲಿ ಮಾಡಿದರು. ನಂತರ ಮಾತನಾಡಿದ ಅವರು, ಸಿಂಧನೂರು ತಾಲೂಕಿನ ಗ್ರಾ.ಪಂ.ಗಳಲ್ಲಿ ಪ್ರತಿ ಗುರುವಾರ ಕರ ವಸೂಲಿ ಅಭಿಯಾನ ಹಮ್ಮಿಕೊಂಡಿದ್ದು, ಇಂದು ತಾಲೂಕಿನಲ್ಲಿ 16.2 ಲಕ್ಷ ರೂ.ಗಳ ಕರ ವಸೂಲಿ ಮಾಡಲಾಗಿದೆ. ಕರ್ನಾಟಕದ ಗ್ರಾಮ ಪಂಚಾಯಿತಿಗಳಲ್ಲಿ ತೆರಿಗೆ ಮತ್ತು ಕರಗಳ ಸಂಗ್ರಹಣೆಗೆ ನಡೆಸುವ ವಿಶೇಷ ಚಳವಳಿಯಾಗಿದೆ. ಇದು ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಮಾರ್ಗದರ್ಶನದಲ್ಲಿ ನಡೆಯುತ್ತಿದೆ ಎಂದರು. ಸಹಾಯಕ ನಿರ್ದೇಶಕ ಅಮರ ಗುಂಡಪ್ಪ ನೇತೃತ್ವದ ಇನ್ನೊಂದು ತಂಡ ಮಾಡಿಕೊಂಡು ರಾಗಲಪರ್ವಿ ಗ್ರಾ.ಪಂ.ಗೆ ಭೇಟಿ ನೀಡಿ ಕರವಸಲಿ ಮಾಡುವ ಸಿಬ್ಬಂದಿಯೊಂದಿಗೆ ಪಾಲ್ಗೊಂಡು ಕರ ವಸೂಲಿ ಮಾಡಿದರು.
G RAM G ಮಸೂದೆ: ಸಂಸತ್ ಸಂಕೀರ್ಣದಲ್ಲಿ ಪ್ರತಿಪಕ್ಷಗಳಿಂದ ಪ್ರತಿಭಟನಾ ಜಾಥಾ
ಹೊಸದಿಲ್ಲಿ,ಡಿ.18: ಜಿ ರಾಮ ಜಿ ಮಸೂದೆಯನ್ನು ವಿರೋಧಿಸಿ ಗುರುವಾರ ಸಂಸತ್ ಭವನ ಸಂಕೀರ್ಣದಲ್ಲಿ ಪ್ರತಿಭಟನಾ ಜಾಥಾ ನಡೆಸಿದ ಹಲವಾರು ಪ್ರತಿಪಕ್ಷ ಸಂಸದರು, ಮಸೂದೆಯನ್ನು ಹಿಂದೆಗೆದುಕೊಳ್ಳುವಂತೆ ಆಗ್ರಹಿಸಿದರು. ಇದೇ ವೇಳೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಸರಕಾರದ ಕ್ರಮದ ವಿರುದ್ಧ ಸಂಸತ್ತಿನಲ್ಲಿ ಮತ್ತು ಬೀದಿಗಳಲ್ಲಿ ಹೋರಾಟ ನಡೆಸುವುದಾಗಿ ಪ್ರತಿಜ್ಞೆ ಮಾಡಿದರು. ‘ಮಹಾತ್ಮಾ ಗಾಂಧಿ ನರೇಗಾ’ ಎಂಬ ಬೃಹತ್ ಬ್ಯಾನರ್ನೊಂದಿಗೆ ಪ್ರತಿಪಕ್ಷ ಸಂಸದರು ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತ ಪ್ರೇರಣಾ ಸ್ಥಳದಲ್ಲಿಯ ಗಾಂಧಿ ಪ್ರತಿಮೆಯಿಂದ ಮಕರ ದ್ವಾರದವರೆಗೆ ಜಾಥಾ ನಡೆಸಿದರು. ಖರ್ಗೆ, AICC ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್, DMKಯ ಕನ್ಹಿಮೋಳಿ, ಟಿ.ಆರ್.ಬಾಲು ಮತ್ತು ಎ.ರಾಜಾ, IUML ನ ಇ.ಟಿ.ಮುಹಮ್ಮದ್ ಬಷೀರ್, ಶಿವಸೇನೆ (UBT)ಯ ಅರವಿಂದ ಸಾವಂತ್, RSP ಯ ಎನ್.ಕೆ.ಪ್ರೇಮಚಂದ್ರನ್ ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ‘ಮೋದಿ ಸರಕಾರವು ರಾಷ್ಟ್ರಪಿತ ಮಹಾತ್ಮಾ ಗಾಂಧಿಯವರನ್ನು ಅವಮಾನಿಸಿರುವುದು ಮಾತ್ರವಲ್ಲ, ಭಾರತದ ಗ್ರಾಮಗಳಲ್ಲಿ ಸಾಮಾಜಿಕ-ಆರ್ಥಿಕ ಪರಿವರ್ತನೆಯನ್ನು ತರುವಲ್ಲಿ ಪ್ರಮುಖ ಸಾಧನವಾಗಿದ್ದ ದುಡಿಯುವ ಹಕ್ಕನ್ನೂ ದಮನಿಸಿದ್ದಾರೆ. ಆಡಳಿತಾರೂಢ ಸರ್ವಾಧಿಕಾರಿ ಸರಕಾರದ ಈ ದಬ್ಬಾಳಿಕೆಯ ವಿರುದ್ಧ ನಾವು ಸಂಸತ್ತಿನಿಂದ ಬೀದಿಗಳವರೆಗೆ ಹೋರಾಟ ನಡೆಸುತ್ತೇವೆ’ ಎಂದು ಖರ್ಗೆ ಪ್ರತಿಭಟನೆಯ ಬಳಿಕ ಟ್ವೀಟಿಸಿದ್ದಾರೆ. ಹಿರಿಯ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿಯವರು ಮಕರ ದ್ವಾರದಲ್ಲಿ ಪ್ರತಿಭನಾನಿರತ ಸಂಸದರನ್ನು ಸೇರಿಕೊಂಡು ಪ್ರದರ್ಶನದಲ್ಲಿ ಭಾಗಿಯಾಗಿದ್ದರು. ಸುದ್ದಿಗಾರರೊಂದಿಗೆ ಮಾತನಾಡಿದ ವೇಣುಗೋಪಾಲ್, ಇಂದು ಸಂಸತ್ತು ಪ್ರಜಾಪ್ರಭುತ್ವದ ಕಗ್ಗೊಲೆಗೆ ಸಾಕ್ಷಿಯಾಗುತ್ತಿದೆ. ನರೇಗಾದಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ತೆಗೆಯುವ ಮೂಲಕ ಅವರು ಪ್ರಜಾಪ್ರಭುತ್ವ ಮೌಲ್ಯಗಳು ಮತ್ತು ರಾಷ್ಟ್ರಪಿತನ ಸಿದ್ಧಾಂತವನ್ನು ನಾಶಗೊಳಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಿದರು.
ಅಬ್ದುಲ್ ರಹ್ಮಾನ್ ಕೊಲೆ ಪ್ರಕರಣ: ಡಿ.19ರಂದು ಎಸ್ಡಿಪಿಐ ವತಿಯಿಂದ ಪ್ರತಿಭಟನೆ
ಮಂಗಳೂರು: ಬಂಟ್ವಾಳ ತಾಲೂಕಿನ ಕೊಳತ್ತಮಜಲುವಿನಲ್ಲಿ ಅಬ್ದುಲ್ ರಹ್ಮಾನ್ರ ಕೊಲೆ ಪ್ರಕರಣದ ಆರೋಪಿಗಳ ವಿರುದ್ಧ ಕಠಿಣ ಕ್ರಮಕೈಗೊಳ್ಳುವಲ್ಲಿ ಪೊಲೀಸ್ ಇಲಾಖೆ ಮತ್ತು ರಾಜ್ಯ ಸರಕಾರದ ವೈಫಲ್ಯ ಖಂಡಿಸಿ ಎಸ್ಡಿಪಿಐ ದ.ಕ. ಜಿಲ್ಲಾ ಸಮಿತಿಯು ಡಿ.19ರಂದು ಸಂಜೆ 4ಕ್ಕೆ ನಗರದ ಕ್ಲಾಕ್ ಟವರ್ ಬಳಿ ಪ್ರತಿಭಟನೆ ಹಮ್ಮಿಕೊಂಡಿದೆ. ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಸರಕಾರ ಮತ್ತು ಪೊಲೀಸ್ ಇಲಾಖೆಯ ವೈಫಲ್ಯ ಹಾಗೂ ತಾರತಮ್ಯ ನೀತಿಯ ವಿರುದ್ಧ ನಡೆಯುವ ಈ ಪ್ರತಿಭಟನೆಗೆ ಜಿಲ್ಲೆಯ ಸಮಾನ ಮನಸ್ಕರು ಪಕ್ಷಭೇದ, ಜಾತಿಭೇದ ಮರೆತು ಭಾಗವಹಿಸಬೇಕು ಎಂದು ಎಸ್ಡಿಪಿಐ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಮಾಲ್ ಜೋಕಟ್ಟೆ ಮನವಿ ಮಾಡಿದ್ದಾರೆ.
ರಾಯಚೂರು | ಡಿ.20, 21ರಂದು ʼ11ನೇ ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನʼ : ಸುರೇಶ ಮಾಚನೂರು ಹಟ್ಟಿ
ರಾಯಚೂರು : 11ನೇ ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನವನ್ನು ರಾಯಚೂರು ನಗರದ ಪಂಡಿತ ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಡಿ.20 ಹಾಗೂ 21ರಂದು ಹಮ್ಮಿಕೊಳ್ಳಲಾಗಿದ್ದು, ಸಮಾನ ಮನಸ್ಕರು, ಪ್ರಗತಿಪರರು, ಸಾಹಿತಿಗಳು ಬಂದು ಯಶಸ್ವಿಗೊಳಿಸಬೇಕು ಎಂದು ದಲಿತ ಸಾಹಿತ್ಯ ಪರಿಷತ್ತಿನ ಯುವ ಘಟಕ ಅಧ್ಯಕ್ಷ ಸುರೇಶ ಮಾಚನೂರು ತಿಳಿಸಿದರು. ಲಿಂಗಸುಗುರು ತಾಲೂಕಿನ ಹಟ್ಟಿ ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಗುರುವಾರ ಮಾತನಾಡಿದ ಅವರು, ಯಾದಗಿರಿಯ ಸಾಹಿತಿ ಡಾ.ಜಯದೇವಿ ಗಾಯಕವಾಡ ಅವರು ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಸಾಹಿತಿ ಹಾಗೂ ಸಂಸ್ಕೃತಿ ಚಿಂತಕ ಪ್ರೊ. ಬರಗೂರು ರಾಮಚಂದ್ರಪ್ಪ ಅವರು ಸಮ್ಮೇಳನ ಉದ್ಘಾಟಿಸಲಿದ್ದಾರೆ. ಸಮ್ಮೇಳನದಲ್ಲಿ ಸರ್ವರಿಗೂ 'ಸಂವಿಧಾನ ಮತ್ತು ಮೀಸಲಾತಿ ಒಳಗೆ ಮತ್ತು ಹೊರಗೆ' ಎಂಬ ವಿಷಯ ಕುರಿತು ಎರಡು ಸಂವಾದ ಗೋಷ್ಠಿ ಹಮ್ಮಿಕೊಳ್ಳಲಾಗಿದೆ'' ಎಂದರು. ತಾಲೂಕಿನ DSS ಹಿರಿಯ ಹೋರಾಟಗಾರ ಭೀಮಣ್ಣ ನಗನೂರು BNR ರವರಿಗೆ 'ರಾಷ್ಟ್ರೀಯ ದಲಿತ ಚೇತನ ಪ್ರಶಸ್ತಿ' ಹಾಗೂ ಹಟ್ಟಿಯ ಜಾನಪದ ಕಲಾವಿದೆ ಬುರ್ರ ಕಥೆ ಕಮಲಮ್ಮ ಮತ್ತು ಯುವ ಕ್ರೀಡಾ ಪಟು ಜೀವನ ಕುಮಾರ ರಾಯಪ್ಪ ಮಗನಿಗೆ ಪ್ರಶಸ್ತಿ ಸನ್ಮಾನ ದೊರಕಿರುವುದು ಸಂತಸ ಸುದ್ದಿಯಾಗಿದೆ ಎಂದರು. ಆದಕಾರಣ ನಾಡಿನ ಪ್ರತಿ ಜಿಲ್ಲಾ ಮತ್ತು ತಾಲೂಕಿನ ನಗರ ಪಟ್ಟಣ ಹಳ್ಳಿಯ ಸರ್ವರೂ ಸಮ್ಮೇಳನದಲ್ಲಿ ಪಾಲ್ಗೊಳ್ಳಲು ಕರೆ ನೀಡಲಾಯಿತು. ಈ ವೇಳೆ ಮಲ್ಲಿಕಾರ್ಜುನ ಕಡೇಚೂರು ದಾ.ಸ.ಪ ಖoಜಾಚಿ, ಭೀಮಣ್ಣ ನಗನೂರು ಇದ್ದರು.
ರೋಟಿ - ಕಪ್ಡಾ - ಮಕಾನ್ ಕಾಲ ಹೊಯ್ತು, ಈಗೇನಿದ್ದರೂ ಮೊಬೈಲ್ -ವಾಹನ ಬೇಕು!
ಭಾರತದ ಗ್ರಾಮೀಣ ಜನತೆ ಏನನ್ನು ಹೆಚ್ಚು ಖರೀದಿಸುತ್ತಿದ್ದಾರೆ ಗೊತ್ತಾ?
ಕುವೆಂಪು ಬರಹಗಳಲ್ಲಿ ಜೀವಪರ ಕಾಳಜಿ ಕಾಣಲು ಸಾಧ್ಯ: ಡಾ.ಅನಂತರಾಮ ನಾಯಕ್
ಉಡುಪಿ, ಡಿ.18: ಕುವೆಂಪು ಅವರ ಬರಹಗಳಲ್ಲಿ ಜೀವಪರ ಅಂಶಗಳ ಕಾಳಜಿಯನ್ನು ಕಾಣಲು ಸಾಧ್ಯವಾಗುತ್ತದೆ. ಅವರ ಪ್ರಖರ ಮೌಢ್ಯ ವಿರೋಧಿ ಚಿಂತನೆಯನ್ನು ಯುವ ಸಮುದಾಯ ಆಸ್ಥೆಯಿಂದ ಅರ್ಥ ಮಾಡಿಕೊಳ್ಳುವ ಮೂಲಕ ಅದನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು ಉಡುಪಿ ಸರಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಡಾ.ಅನಂತ ರಾಮ ನಾಯಕ್ ಹೇಳಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಂಗಳೂರು, ಚಕೋರ ಸಾಹಿತ್ಯ ವಿಚಾರ ವೇದಿಕೆ ಉಡುಪಿ ಜಿಲ್ಲೆ, ಉಡುಪಿ ಕ್ರಿಶ್ಚಿಯನ್ ಪದವಿ ಪೂರ್ವ ಕಾಲೇಜು ಇವುಗಳ ಸಹಯೋಗದೊಂದಿಗೆ ಕಾಲೇಜು ಸಭಾಂಗಣದಲ್ಲಿ ಬುಧವಾರ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಅವರು ಕುವೆಂಪು ಅವರ ವಿಚಾರ ಸಾಹಿತ್ಯ ವಿಶೇಷ ಉಪನ್ಯಾಸ ನೀಡಿದರು. ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲೆ ಶ್ವೇತಾ ಶ್ರೀನಿವಾಸ್ ಮಾತನಾಡಿ, ಸಾಹಿತ್ಯ ಪಠ್ಯಗಳನ್ನು ಮತ್ತೆ ಮತ್ತೆ ಓದುವ ಮೂಲಕ ಅದರ ಅರ್ಥ ಪ್ರಪಂಚವನ್ನು ಹುಡುಕಿಕೊಂಡಾಗ ನಮ್ಮ ತೀರ್ಮಾನ ಬದಲಾಗುತ್ತದೆ ಎಂದು ತಿಳಿಸಿದರು. ಅಕಾಡೆಮಿ ಸದಸ್ಯ ಡಾ.ಜಯಪ್ರಕಾಶ್ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ, ಸಾಂವಿಧಾನಿಕ ಆಶಯ ಮತ್ತು ಸಮಬಾಳ್ವೆಯ ಸಾಮರಸ್ಯದ ಬದುಕಿನ ಮೌಲ್ಯಗಳನ್ನು ಯುವ ಸಮುದಾಯಗಳ ನಡುವೆ ಬಿತ್ತುವ ಉದ್ದೇಶಕ್ಕಾಗಿ ಅಕಾಡೆಮಿಯು ಚಕೋರ ವೇದಿಕೆಯನ್ನು ಹುಟ್ಟುಹಾಕಿದೆ. ಕುವೆಂಪು ಅವರ ಜನ್ಮದಿನದ ಪ್ರಯುಕ್ತ ಡಿಸೆಂಬರ್ ತಿಂಗಳು ಪೂರ್ತಿ ಅವರ ವಿಚಾರಧಾರೆಗಳನ್ನು ಯುವಸಮುದಾಯಕ್ಕೆ ತಲುಪಿಸುವ ಕಾರ್ಯಕ್ರಮ ವನ್ನು ಹಮ್ಮಿಕೊಳ್ಳಲಾಗಿದೆ ಎಂದರು. ವಿದ್ಯಾರ್ಥಿ ನಾಯಕ ಶ್ರೀಪಾದ ಉಪಸ್ಥಿತರಿದ್ದರು. ಉಪನ್ಯಾಸಕಿ ಶೈಲಶ್ರೀ ಸದಾನಂದ ಸ್ವಾಗತಿಸಿದರು. ಚಕೋರ ಜಿಲ್ಲಾ ಸಂಚಾಲಕಿ ಶಾಲಿನಿ ಯು.ಬಿ. ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿನಿಯರಾದ ಸಮೀಕ್ಷಾ, ಸಂಜನಾ, ಅಕ್ಷತಾ, ಡಾಫ್ನಿ ನಾಡಗೀತೆಯನ್ನು ಹಾಡಿದರು. ಜಿಲ್ಲಾ ಸಂಚಾಲಕ ರಾಮಾಂಜಿ ವಂದಿಸಿದರು.
ಉಡುಪಿ, ಡಿ.18: ಬಿಜೂರು ಗ್ರಾಮದ ಕಂಚಿಕಾನ ಎಂಬಲ್ಲಿ ಒಬ್ಬಂಟಿ ಯಾಗಿ ವಾಸವಿದ್ದ ಕೆ.ಲೀಲಾವತಿ ಭಟ್ಟ (71) ಎಂಬ ವೃದ್ಧೆ ಸುಮಾರು ಕಳೆದ ಒಂದು ತಿಂಗಳಿನಿಂದ ನಾಪತ್ತೆಯಾಗಿರುವುದಾಗಿ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 5 ಅಡಿ ಎತ್ತರ, ಉರುಟು ಮುಖ, ಎಣ್ಣೆಕಪ್ಪು ಮೈಬಣ್ಣ, ಸದೃಢ ಶರೀರ ಹೊಂದಿದ್ದು, ಕನ್ನಡ ಹಾಗೂ ಸಂಸ್ಕೃತ ಭಾಷೆ ಮಾತನಾಡುತ್ತಾರೆ. ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಬೈಂದೂರು ಪೊಲೀಸ್ ಠಾಣೆ ದೂ.ಸಂಖ್ಯೆ: 08254- 251033, ಮೊ.ನಂ: 9480805459, ಬೈಂದೂರು ವೃತ್ತ ನಿರೀಕ್ಷಕರ ಕಚೇರಿ ದೂ.ಸಂಖ್ಯೆ:08254-251031, ಮೊ.ನಂ: 9480805434 ಹಾಗೂ ಕಂಟ್ರೋಲ್ ರೂಂ 100 (0820-2526444) ಅನ್ನು ಸಂಪರ್ಕಿಸಬಹುದು ಎಂದು ಬೈಂದೂರು ಪೊಲೀಸ್ ಠಾಣಾಧಿಕಾರಿಗಳ ಪ್ರಕಟಣೆ ತಿಳಿಸಿದೆ.
ಶಹಾಪುರ | ಪ್ರಜಾಸೌಧ ನಿರ್ಮಾಣ ವಿರೋಧಿಸಿ ಮುಂದುವರೆದ ಧರಣಿ
ಶಹಾಪುರ: ಶೈಕ್ಷಣಿಕ ಉದ್ದೇಶಕ್ಕಾಗಿ ಮೀಸಲಿಟ್ಟ ಜಾಗದಲ್ಲಿ ಪ್ರಜಾಸೌಧ ನಿರ್ಮಾಣ ಮಾಡುವುದು ತಕ್ಷಣ ನಿಲ್ಲಿಸಬೇಕು ಎಂದು ಆಗ್ರಹಿಸಿ ಮಂಗಳವಾರದಿಂದ ಎಬಿವಿಪಿ, ಸಾಮೂಹಿಕ ಸಂಘಟನೆಗಳ ಒಕ್ಕೂಟ, ರಾಜ್ಯ ರೈತ ಸಂಘ ಹಸಿರು ಸೇನೆ ಮುಖಂಡರು ನಗರದ ಪ್ರಥಮ ದರ್ಜೆ ಕಾಲೇಜಿನ ಎದುರುಡೆ ಅನಿರ್ದಿಷ್ಟಾವಧಿ ಧರಣಿ ಮುಂದುವರೆಸಿದ್ದಾರೆ. ಇಲ್ಲಿನ ಕಾಲೇಜಿಗೆ ವಿದ್ಯಾಭ್ಯಾಸ ಮಾಡಲು ವಿವಿಧ ತಾಲ್ಲೂಕಿನಿಂದ ವಿದ್ಯಾರ್ಥಿಗಳು ಆಗಮಿಸುತ್ತಾರೆ. ಈಗಾಗಲೇ ಕಾಲೇಜು ಜಾಗವನ್ನು ನಗರಸಭೆ 1 ಎಕರೆ ಷರತ್ತಿನ ಮೇರೆಗೆ ತೆಗೆದುಕೊಂಡು ಟೌನ ಹಾಲ್ ನಿರ್ಮಿಸಿದ್ದಾರೆ, ಮುಂದಿನ ಶೈಕ್ಷಣಿಕ ಅಭ್ಯುದ್ಯಯಕ್ಕೆ ಶಿಕ್ಷಣದ ಜಮೀನು ಅಗತ್ಯವಿದೆ, ಕೂಡಲೇ ಪ್ರಜಾಸೌಧ ಹಳೆ ತಹಶೀಲ್ದಾರ್ ಕಚೇರಿ ಆವರಣದಲ್ಲಿ ನಿರ್ಮಾಣ ಮಾಡಬೇಕು' ಎಂದು ಧರಣಿ ನಿರತರು ಆಗ್ರಹಿಸಿದರು. ರೈತ ಮುಖಂಡ ಮಲ್ಲಣಗೌಡ ಪರಿವಾಣ, ಮಹೇಶಗೌಡ ಸುಬೇದಾರ, ಶಾಂತಪ್ಪ ಸಾಲಿಮನಿ, ಮರೆಪ್ಪ ಜಾಲಿಬೆಂಚಿ, ಅನೀಲ ಸಾಕರೆ, ಮಹಾಂತಗೌಡ ಪಾಟೀಲ, ಆಂಜನೆಯ್ಯ ಗಾಂಜಿ, ಶಿವಲಿಂಗ ಮದ್ರಿಕಿ, ಸಂತೋಷ ಸಾಹುಕಾರ, ಶಿವುಕುಮಾರ ಮಲ್ಲೇದ, ಶಂಕರ ಪಡಶೆಟ್ಟಿ, ರಮೇಶ ಗಾಂಜಿ, ಮಹಮ್ಮದ ಇಸ್ಮಾಯಿಲ್ ಧರಣಿಯಲ್ಲಿ ಭಾಗವಹಿಸಿದ್ದರು.
ಕಾನೂನು ಪದವೀಧರರಿಗೆ ಲೋಕಸೇವಾ ಆಯೋಗದಲ್ಲಿ ಹುದ್ದೆಗಳಿಗೆ ಅರ್ಜಿ ಆಹ್ವಾನ
ಕಾನೂನು ಪದವೀಧರರು ಅರ್ಹತಾ ಮಾನದಂಡಗಳು ಮತ್ತು ಅರ್ಜಿ ಸಲ್ಲಿಸುವ ವಿಧಾನ ಮತ್ತು ಆಯ್ಕೆ ಪ್ರಕ್ರಿಯೆಗೆ upsc.gov.in ನಲ್ಲಿ ಪರಿಶೀಲಿಸಬಹುದು. ಸರ್ಕಾರಿ ಉದ್ಯೋಗಗಳನ್ನು ಬಯಸುವ ಕಾನೂನು ಪದವೀಧರರಿಗೆ ಶುಭ ಸುದ್ದಿ ಇಲ್ಲಿದೆ. ಕಾನೂನು ಪದವೀಧರರಿಗೆ ಯುಪಿಎಸ್ಸಿ ಪರೀಕ್ಷಕ ಮತ್ತು ಉಪ ನಿರ್ದೇಶಕ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದ ಸಿಜಿಪಿಡಿಟಿಎಂ ಅಡಿಯಲ್ಲಿ ಒಟ್ಟು 102 ಖಾಲಿ ಸ್ಥಾನಗಳನ್ನು ಭರ್ತಿ ಮಾಡಲಾಗುತ್ತದೆ. ಅರ್ಹತಾ ಮಾನದಂಡಗಳು ಮತ್ತು ಅರ್ಜಿ ಸಲ್ಲಿಸುವ ವಿಧಾನ ಮತ್ತು ಆಯ್ಕೆ ಪ್ರಕ್ರಿಯೆಗೆ upsc.gov.in ನಲ್ಲಿ ಪರಿಶೀಲಿಸಬಹುದು. ಲೋಕಸೇವಾ ಆಯೋಗ (UPSC) ಪರೀಕ್ಷಕ ಮತ್ತು ಉಪ ನಿರ್ದೇಶಕ ಖಾಲಿ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದ DPIIT ಯ ಕಂಟ್ರೋಲರ್ ಜನರಲ್ ಆಫ್ ಪೇಟೆಂಟ್ಸ್, ಡಿಸೈನ್ಸ್ ಮತ್ತು ಟ್ರೇಡ್ ಮಾರ್ಕ್ಸ್ (CGPDTM) ಅಡಿಯಲ್ಲಿ ಟ್ರೇಡ್ಮಾರ್ಕ್ಗಳು ಮತ್ತು ಭೌಗೋಳಿಕ ಸೂಚನೆಗಳ (GI) ಪರೀಕ್ಷಕ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಇದರಲ್ಲಿ ಉಪ ನಿರ್ದೇಶಕ (ಪರೀಕ್ಷಾ ಸುಧಾರಣೆಗಳು) ಹುದ್ದೆಗಳು ಸಹ ಸೇರಿವೆ. ಆಸಕ್ತ ಅಭ್ಯರ್ಥಿಗಳು UPSC ಯ ಅಧಿಕೃತ ವೆಬ್ಸೈಟ್ upsc.gov.in ಗೆ ಭೇಟಿ ನೀಡುವ ಮೂಲಕ ಜನವರಿ 1ರೊಳಗೆ ಅರ್ಜಿ ಸಲ್ಲಿಸಬಹುದು. ಅಗತ್ಯವಿರುವ ಅರ್ಹತೆ ಏನು? ಎಕ್ಸಾಮಿನರ್ ಟ್ರೇಡ್ಮಾರ್ಕ್ ಮತ್ತು ಜಿಐ ಹುದ್ದೆಗೆ, ಅಭ್ಯರ್ಥಿಗಳು ಕಾನೂನು ಅಥವಾ ಸಂಬಂಧಿತ ವಿಷಯದಲ್ಲಿ ಪದವಿ ಹೊಂದಿರಬೇಕು ಮತ್ತು ನ್ಯಾಯಾಲಯದ ಪ್ರಕರಣಗಳನ್ನು ನಿರ್ವಹಿಸುವಲ್ಲಿ ಎರಡು ವರ್ಷಗಳ ಅನುಭವವನ್ನು ಹೊಂದಿರಬೇಕು. ಉಪ ನಿರ್ದೇಶಕ (ಪರೀಕ್ಷಾ ಸುಧಾರಣೆಗಳು) ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಿಂದ ಮಾನವಿಕ, ವಿಜ್ಞಾನ, ವಾಣಿಜ್ಯ, ಎಂಜಿನಿಯರಿಂಗ್/ತಂತ್ರಜ್ಞಾನ, ಕಾನೂನು, ನಿರ್ವಹಣೆ, ಹಣಕಾಸು ಅಥವಾ ಲೆಕ್ಕಪತ್ರ ನಿರ್ವಹಣೆಯಂತಹ ವೃತ್ತಿಪರ ಕೋರ್ಸ್ನಲ್ಲಿ ಪಿಎಚ್ಡಿ ಪದವಿ ಹೊಂದಿರಬೇಕು. ಅರ್ಹತಾ ಅವಶ್ಯಕತೆಗಳ ಕುರಿತು ಹೆಚ್ಚಿನ ಮಾಹಿತಿಗಾಗಿ, ಅಭ್ಯರ್ಥಿಗಳು ಆಯೋಗದ ಅಧಿಕೃತ ವೆಬ್ಸೈಟ್ನಲ್ಲಿ ಅಧಿಸೂಚನೆಯನ್ನು ಪರಿಶೀಲಿಸಬಹುದು. ಅರ್ಜಿ ಸಲ್ಲಿಸುವುದು ಹೇಗೆ? • UPSC ಅಧಿಕೃತ ವೆಬ್ಸೈಟ್ upsc.gov.in ಗೆ ಭೇಟಿ ನೀಡಿ. • ಇಲ್ಲಿ OTR ಮಾಡಿ ಲಾಗಿನ್ ಮಾಡಿ. • ಈಗ ಆಯಾ ಹುದ್ದೆಗೆ ಅರ್ಜಿ ಸಲ್ಲಿಸಲು ಲಿಂಕ್ ಅನ್ನು ಕ್ಲಿಕ್ ಮಾಡಿ. • ಅರ್ಜಿ ನಮೂನೆಯನ್ನು ಭರ್ತಿ ಮಾಡಿ ಮತ್ತು ಅಗತ್ಯವಿರುವ ಎಲ್ಲಾ ದಾಖಲೆಗಳನ್ನು ಅಪ್ಲೋಡ್ ಮಾಡಿ. • ಫಾರ್ಮ್ ಅನ್ನು ಒಮ್ಮೆ ಕ್ರಾಸ್ ಚೆಕ್ ಮಾಡಿ ಮತ್ತು ಸಲ್ಲಿಸಿ. ಅರ್ಜಿ ಸಲ್ಲಿಸಲು ನೇರ ಲಿಂಕ್: https://upsconline.nic.in/login ಆಯ್ಕೆ ಪ್ರಕ್ರಿಯೆ ಹೇಗೆ? ಪೂರ್ವಭಾವಿ ಪರೀಕ್ಷೆ, ಮುಖ್ಯ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆಯನ್ನು ಮಾಡಲಾಗುತ್ತದೆ. ಪೂರ್ವಭಾವಿ ಪರೀಕ್ಷೆಯು ವಸ್ತುನಿಷ್ಠ ಮಾದರಿಯ ಪ್ರಶ್ನೆಗಳನ್ನು ಒಳಗೊಂಡಿರುತ್ತದೆ. ಇದರ ನಂತರ ಮುಖ್ಯ ಪರೀಕ್ಷೆ ನಡೆಯಲಿದ್ದು, ಇದರಲ್ಲಿ ಯಶಸ್ವಿ ಅಭ್ಯರ್ಥಿಗಳು ಸಂದರ್ಶನಕ್ಕೆ ಹಾಜರಾಗುತ್ತಾರೆ.
ರ್ಯಾಂಪ್ ಯೋಜನೆಯಡಿ ಇನ್ಕ್ಯೂಬೇಷನ್ ಜಾಗೃತಿ ಕಾರ್ಯಕ್ರಮ
ಉಡುಪಿ, ಡಿ.18: ಎಐಸಿ ನಿಟ್ಟೆ ಇನ್ಕ್ಯೂಬೇಷನ್ ಸೆಂಟರ್ ನಿಟ್ಟೆ, ಎನ್.ಎಂ.ಎ.ಎಂ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಾಜಿ ನಿಟ್ಟೆ, ಜಿಲ್ಲಾ ಕೈಗಾರಿಕಾ ಕೇಂದ್ರ ಉಡುಪಿ, ಕರ್ನಾಟಕ ತಾಂತ್ರಿಕ ಉನ್ನತೀಕರಣ ಪರಿಷತ್ ಹಾಗೂ ಕರ್ನಾಟಕ ತಾಂತ್ರಿಕ ಸಲಹಾ ಸೇವೆಗಳ ಸಂಸ್ಥೆಗಳ ಸಹಯೋಗದಲ್ಲಿ ಕಾರ್ಕಳದ ನಿಟ್ಟೆ ಎನ್.ಎಂ.ಎ.ಎಂ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಇಲ್ಲಿ ಇತ್ತೀಚೆಗೆ ಕೇಂದ್ರ ಸರಕಾರದ ರ್ಯಾಂಪ್ ಯೋಜನೆಯಡಿಯಲ್ಲಿ ಏರ್ಪಡಿಸಿದ ಇನ್ಕ್ಯೂಬೇಷನ್ ಜಾಗೃತಿ ಕಾರ್ಯಕ್ರಮವನ್ನು ಎಂಎಸ್ಎಂಇ- ಡಿಎಫ್ಒ ಪ್ರಭಾರ ಜಂಟಿ ನಿರ್ದೇಶಕ ಸುಂದರ್ ಶೇರಿಗಾರ್ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ನಾಗರಾಜ ನಾಯಕ್ ವಹಿಸಿದ್ದರು. ಜಿಲ್ಲಾ ಕೈಗಾರಿಕಾ ಕೇಂದ್ರದ ಉಪನಿರ್ದೇಶಕ ಸೀತಾರಾಮ ಶೆಟ್ಟಿ ಉದ್ಯಮಶೀಲತೆಯ ಮಹತ್ವವನ್ನು ವಿವರಿಸಿದರು. ಚಾರ್ಟೆಡ್ ಅಕೌಂಟೆಟ್ ಎಸ್.ಎಸ್.ನಾಯಕ್ ಹಾಗೂ ಆರ್.ಕೆ ಬಾಲಚಂದ್ರ ಎಂ.ಎಸ್.ಎಂ.ಇ ಯೋಜನೆಗಳು ಹಾಗೂ ಉದ್ಯಮ ಶೀಲತೆ ಕುರಿತು ಮಾಹಿತಿ ನೀಡಿದರು. ಕರ್ನಾಟಕ ತಾಂತ್ರಿಕ ಉನ್ನತೀಕರಣ ಪರಿಷತ್ ಸಹಾಯಕ ಸಂಚಾಲಕ ಅರವಿಂದ್ ಬಾಳೇರಿ, ಇನ್ಕ್ಯೂಬೇಷನ್ ಮ್ಯಾನೇಜರ್ ಪುನೀತ್ ರೈ, ಪ್ಯಾಬ್ ಲ್ಯಾಬ್ ಕಾರ್ಡಿನೇಟರ್ ಆದರ್ಶ ಹೆಗ್ಡೆ ಮತ್ತಿತರರು ಉಪಸ್ಥಿತರಿದ್ದರು. ಡಾ.ಎ.ಪಿ.ಆಚಾರ್ ಸ್ವಾಗತಿಸಿ, ದೀಕ್ಷಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
ಕೌಟುಂಬಿಕ ವ್ಯವಸ್ಥೆಯಲ್ಲಿ ಬೆಳೆಯುವುದು ಮಗುವಿನ ಹಕ್ಕು: ಉಡುಪಿ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ
ಉಡುಪಿ, ಡಿ.18: ಕೌಟುಂಬಿಕ ವ್ಯವಸ್ಥೆಯಲ್ಲಿ ಬೆಳೆಯುವುದು ಪ್ರತಿ ಯೊಂದು ಮಗುವಿನ ಹಕ್ಕು. ಮಗುವಿಗೆ ಅವಶ್ಯವಿ ರುವ ಪ್ರೀತಿ ಮತ್ತು ಆರೈಕೆಯನ್ನು ಕುಟುಂಬದ ವಾತಾವರಣವು ಕಲ್ಪಿಸುತ್ತದೆ. ದತ್ತು ಪ್ರಕ್ರಿಯೆ ಕಾನೂನು ಬದ್ಧವಾಗಿ ಬಾಲನ್ಯಾಯ (ಮಕ್ಕಳ ಪಾಲನೆ ಮತ್ತು ರಕ್ಷಣೆ) ತಿದ್ದುಪಡಿ ಕಾಯ್ದೆ 2021ರ ಸೆಕ್ಷನ್ 56(1) 58 ಮತ್ತು 61ರ ಅಡಿಯಲ್ಲಿ ಕುಟುಂಬದ ಪ್ರೀತಿ ವಂಚಿತ, ಪೋಷಕರನ್ನು ಕಳೆದುಕೊಂಡ, ಪಾಲನೆ ಪೋಷಣೆ ವಂಚಿತ ಪರಿತ್ಯಕ್ತ ಹಾಗೂ ನಿರ್ಗತಿಕ ಮಕ್ಕಳು ಮಾತ್ರ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯಿಂದ ದತ್ತು ಮುಕ್ತ ಆದೇಶ ಪಡೆದು ದತ್ತು ನೀಡಲು ಅರ್ಹರಾಗಿರುತ್ತಾರೆ ಎಂದು ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ ಹೇಳಿದ್ದಾರೆ. ಮಣಿಪಾಲದ ತಮ್ಮ ಕಚೇರಿಯಲ್ಲಿ ತಮಿಳುನಾಡು ಮೂಲದ ಇಬ್ಬರು ದಂಪತಿಗಳಿಗೆ ಹಾಗೂ ಹಾಸನ ಮೂಲದ ಓರ್ವ ದಂಪತಿಗೆ ಒಟ್ಟು ಮೂರು ಮಕ್ಕಳ ಅಂತಿಮ ದತ್ತು ಆದೇಶವನ್ನು ಇತ್ತೀಚೆಗೆ ನೀಡಿ ಅವರು ಮಾತನಾಡುತ್ತಿದ್ದರು. ದತ್ತು ಪಡೆಯಲು ಇಚ್ಛಿಸುವ ದಂಪತಿಗಳು ಕಾನೂನು ಬದ್ಧವಾಗಿ ದತ್ತು ಪ್ರಕ್ರಿಯೆ ಮೂಲಕ ದತ್ತು ಪಡೆಯಬಹು ದಾಗಿದೆ. ಮಗು ಬೇಡವಾದಲ್ಲಿ ಕಸದ ತೊಟ್ಟಿ, ಆಸ್ಪತ್ರೆ ಆವರಣ, ಶೌಚಾಲಯ, ರಸ್ತೆ ಬದಿ ಹಾಗೂ ಪೊದೆಗಳಲ್ಲಿ ಎಸೆಯದೇ ಪರಿತ್ಯಕ್ತ ಮಕ್ಕಳ ರಕ್ಷಣೆಗಾಗಿ ಇರುವ ವಿಶೇಷ ಮಮತೆಯ ತೊಟ್ಟಿಲುಗಳಲ್ಲಿ ಮಕ್ಕಳನ್ನು ಬಿಡಬಹು ದಾಗಿದೆ ಎಂದವರು ತಿಳಿಸಿದರು. ಜಿಲ್ಲೆಯಲ್ಲಿ ಸಂತೆಕಟ್ಟೆಯ ಶ್ರೀ ಕೃಷ್ಣಾನುಗೃಹ ದತ್ತು ಕೇಂದ್ರ, ಉಡುಪಿಯ ಬಿ.ಆರ್.ಶೆಟ್ಟಿ ಆಸ್ಪತ್ರೆ ಹಾಗೂ ನಿಟ್ಟೂರು ಸರಕಾರಿ ಬಾಲಕಿಯರ ಬಾಲಮಂದಿರ ಇಲ್ಲಿ ಮಮತೆಯ ತೊಟ್ಟಿಲುಗಳನ್ನು ಇರಿಸಲಾಗಿದೆ ಎಂದರು. ಕಾನೂನು ಉಲ್ಲಂಘಿಸಿ ಅಥವಾ ಮಕ್ಕಳ ಮಾರಾಟ ಪ್ರಕರಣಗಳಲ್ಲಿ ಆಸ್ಪತ್ರೆ ಸಿಬ್ಬಂದಿಗಳು ಶಾಮೀಲಾಗಿದ್ದಲ್ಲಿ 1 ಲಕ್ಷ ರೂ. ದಂಡ ಹಾಗೂ 7 ವರ್ಷ ದವರೆಗೆ ಜೈಲು ಶಿಕ್ಷೆ ಹಾಗೂ ಮಕ್ಕಳನ್ನು ಮಾರಾಟ ಮಾಡಿದವರಿಗೆ ಹಾಗೂ ಮಕ್ಕಳನ್ನು ದತ್ತು ಪಡೆದವರಿಗೆ ಒಂದು ಲಕ್ಷ ದಂಡ ಹಾಗೂ 5 ವರ್ಷದವರೆಗೆ ಜೈಲು ಶಿಕ್ಷೆ ವಿಧಿಸಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ನಾಗರತ್ನ ನಾಯಕ, ರಕ್ಷಣಾಧಿಕಾರಿಗಳಾದ ಮಹೇಶ್, ಸುರಕ್ಷಾ, ಶ್ರೀಕೃಷ್ಣಾನುಗೃಹ ದತ್ತು ಕೇಂದ್ರದ ಸಿಬ್ಬಂದಿಗಳು ಉಪಸ್ಥಿತರಿದ್ದರು. ದತ್ತು ಪ್ರಕ್ರಿಯೆ ಕುರಿತು ಹಚ್ಚಿನ ಮಾಹಿತಿ ಹಾಗೂ ವಿವರಗಳಿಗಾಗಿ ವೆಬ್ಸೈಟ್ - https://missionvatsalya.wcd.gov.in-, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಕಛೇರಿ ದೂರವಾಣಿ ಸಂಖ್ಯೆ: 0820-2574964 ಮತ್ತು ಸಂತೆಕಟ್ಟೆಯ ಶ್ರೀಕೃಷ್ಣಾನುಗೃಹ ದತ್ತು ಕೇಂದ್ರ ದೂರವಾಣಿ ಸಂಖ್ಯೆ: 9880442640ನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.
ಉಕ್ರೇನ್ ಯುದ್ಧ ಭೂಮಿಯಲ್ಲಿ ಮೃತಪಟ್ಟ ಇಬ್ಬರು ಭಾರತೀಯ ಮೃತದೇಹ ಸ್ವದೇಶಕ್ಕೆ
ವಿದ್ಯಾರ್ಥಿ ವೀಸಾದಲ್ಲಿ ರಶ್ಯಕ್ಕೆ ತೆರಳಿದವರನ್ನು ಬಲವಂತವಾಗಿ ರಶ್ಯದ ಸೇನೆಗೆ ಸೇರ್ಪಡೆ!
ವಿಮಾನ ಪ್ರಯಾಣಿಕರ ಗಮನಕ್ಕೆ: ದೆಹಲಿಯಲ್ಲಿ ದಟ್ಟ ಮಂಜು: ಕೆಲವು ವಿಮಾನಗಳ ಹಾರಾಟ ರದ್ದು, ವಿಳಂಬ
ನವದೆಹಲಿ: ದೆಹಲಿಯಲ್ಲಿ ಕಳಪೆ ಗಾಳಿ ದಾಖಲಾತಿ ಮತ್ತು ದಟ್ಟ ಮಂಜಿನ ವಾತಾವರಣ ಮುಂದುವರಿದಿದೆ. ರಾಜ್ಯ ಸರ್ಕಾರ ಈ ಸಮಸ್ಯೆ ನಿವಾರಣೆಗೆ ಕ್ರಮ ಕೈಗೊಳ್ಳುವಲ್ಲಿ ನಿರತವಾಗಿದೆ. ಇನ್ನೊಂದೆಡೆ ಅಗೋಚರತೆಯು ವಿಮಾನಯಾನ ಸೇವೆಗೆ ಅಡ್ಡಿ ಉಂಟು ಮಾಡಿದೆ. ಗುರುವಾರ ಒಂದೇ ದಿನ 22 ವಿಮಾನಗಳ ಹಾರಾಟ ರದ್ದಾಗಿದೆ. 80ಕ್ಕೂ ಅಧಿಕ ವಿಮಾನಗಳ ಸೇವೆಯಲ್ಲಿ ವಿಳಂಬವಾಗಿತು. ಸಂಕಷ್ಟದಲ್ಲಿರುವ ಪ್ರಯಾಣಿಕರೊಂದಿಗೆ ದೆಹಲಿ ಏರ್ಪೋರ್ಟ್
ನಿವೃತ್ತಿಯ ಅಂಚಿನಲ್ಲಿರುವ ನ್ಯಾಯಾಧೀಶರಿಂದ ಸರಣಿ ತೀರ್ಪುಗಳನ್ನು ನೀಡುವುದಕ್ಕೆ ಸುಪ್ರೀಂ ಆಕ್ಷೇಪ
ಹೊಸದಿಲ್ಲಿ,ಡಿ.18: ನ್ಯಾಯಾಂಗದಲ್ಲೂ ಭ್ರಷ್ಟಾಚಾರ ಇರುವ ಬಗ್ಗೆ ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ನೇತೃತ್ವದ ಸುಪ್ರೀಂಕೋರ್ಟ್ ನ್ಯಾಯಪೀಠವು ಒಪ್ಪಿಕೊಳ್ಳುವ ಮೂಲಕ ಅಚ್ಚರಿ ಮೂಡಿಸಿದೆ. ನಿವೃತ್ತಿಯ ಸನಿಹದಲ್ಲಿರುವಾಗ ನ್ಯಾಯಾಧೀಶರುಗಳು ಅಸಮರ್ಪಕವಾದ ಪರಿಗಣನೆಗಳಿಂದ ಪ್ರೇರಿತವಾಗಿ ಸರಣಿ ಆದೇಶಗಳನ್ನು ಹೊರಡಿಸುವ ಪ್ರವೃತ್ತಿ ಹೆಚ್ಚುತ್ತಿರುವುದನ್ನು ಅದು ಬೆಟ್ಟು ಮಾಡಿ ತೋರಿಸಿದೆ ಎಂದು Times of India ಸುದ್ದಿಸಂಸ್ಥೆ ವರದಿ ಮಾಡಿದೆ. ತಾನು ನೀಡಿದ್ದ ಎರಡು ತೀರ್ಪುಗಳ ಕಾರಣದಿಂದಾಗಿ, ನಿವೃತ್ತಿಗೆ ಹತ್ತು ದಿನಗಳ ಮೊದಲು ತನ್ನನ್ನು ಸೇವೆಯಿಂದ ಅಮಾನತುಗೊಳಿಸಿದ್ದನ್ನು ಪ್ರಶ್ನಿಸಿ ಮಧ್ಯಪ್ರದೇಶದ ಪ್ರಧಾನ ಜಿಲ್ಲಾ ನ್ಯಾಯಾಧೀಶರು ಸಲ್ಲಿಸಿದ ಅರ್ಜಿಯ ಆಲಿಕೆಯನ್ನು ನಡೆಸಿದ ಸಂದರ್ಭ ಸುಪ್ರೀಂಕೋರ್ಟ್ ನ್ಯಾಯಪೀಠ ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ. ನಿವೃತ್ತಿಯ ಅಂಚಿನಲ್ಲಿರುವಾಗ ಸರಣಿ ತೀರ್ಪುಗಳನ್ನು ನೀಡಿದ ಅರ್ಜಿದಾರರ ನಡೆಯನ್ನು ಸಿಜೆಐ ಸೂರ್ಯಕಾಂತ್ ಹಾಗೂ ನ್ಯಾಯಮೂರ್ತಿ ಜಯ್ಮಾಲ್ಯಾ ಬಾಗ್ಚಿ ಅವರನ್ನೊಳಗೊಂಡ ನ್ಯಾಯಪೀಠ ಆಕ್ಷೇಪಿಸಿತು. ‘‘ ನಿವೃತ್ತಿಗೆ ತುಸು ಮುನ್ನ ಅರ್ಜಿದಾರರು ಸಿಕ್ಸರ್ ಗಳನ್ನು ಬಾರಿಸತೊಡಗಿದರು. ಇದೊಂದು ದುರದೃಷ್ಟಕರ ಪ್ರವೃತ್ತಿ. ಆದರೆ ಅದನ್ನು ವಿಸ್ತರಿಸಿ ಹೇಳಲು ನಾವು ಬಯಸುವುದಿಲ್ಲ’’ ಎಂದು ನ್ಯಾಯಪೀಠ ತಿಳಿಸಿತು. ಅರ್ಜಿದಾರ ನ್ಯಾಯಾಧೀಶರ ಪರ ವಕೀಲರು ವಾದ ಮಂಡಿಸುತ್ತಾ, ತನ್ನ ಕಕ್ಷಿದಾರನ ವೃತ್ತಿಯ ಸಾಧನೆ ಪ್ರಶಂಸನೀಯವಾಗಿದ್ದು, ಕರ್ತವ್ಯ ನಿರ್ವಹಣೆಗೆ ಸಂಬಂಧಿಸಿದ ವಾರ್ಷಿಕ ಗೋಪ್ಯ ವರದಿಯಲ್ಲಿ ಅವರು ಉತ್ತಮ ರೇಟಿಂಗ್ ಪಡೆದಿದ್ದರು. ನ. 30ರಂದು ಅವರ ನಿವೃತ್ತಿ ಅವಧಿ ವಿಸ್ತರಣೆಗೊಳ್ಳುವುದರಲ್ಲಿತ್ತು. ಆದರೆ ಅವರು ಹೊರಡಿಸಿದ ಎರಡು ನ್ಯಾಯಾಂಗದ ಆದೇಶಗಳಿಗಾಗಿ ಅವರನ್ನು ಅಮಾನತುಗೊಳಿಸಲಾಗಿತ್ತು ಎಂದು ಹೇಳಿದರು. ಆಗ ಉತ್ತರಿಸಿದ ಸಿಜೆಐ ಕಾಂತ್ ಅವರು, ಈ ಎರಡು ಆದೇಶಗಳನ್ನು ಹೊರಡಿಸುವಾಗ ಆ ನ್ಯಾಯಾಧೀಶರಿಗೆ ತನ್ನ ನಿವೃತ್ತಿಯ ವಯಸ್ಸನ್ನು 1 ವರ್ಷದವರೆಗೆ ವಿಸ್ತರಿಸಲಾಗುವುದೆಂಬ ಬಗ್ಗೆ ಅರಿವಿರಲಿಲ್ಲ. ನಿವೃತ್ತಿಗೆ ತುಸು ಮೊದಲು ನ್ಯಾಯಾಧೀಶರುಗಳು ಹಲವಾರು ಆದೇಶಗಳನ್ನು ಜಾರಿಗೊಳಿಸುವ ಪ್ರವೃತ್ತಿ ಹೆಚ್ಚುತ್ತಿದೆ ಎಂದವರು ಅಸಮಾಧಾನ ವ್ಯಕ್ತಪಡಿಸಿದರು. ತನ್ನನ್ನು ಅಮಾನತುಗೊಳಿಸಿರುವ ಕುರಿತಾಗಿ ಮಾಹಿತಿಯನ್ನು RTI ಅರ್ಜಿಯ ಮೂಲಕ ಕೇಳಿರುವ ಬಗ್ಗೆಯೂ ಸುಪ್ರೀಂಕೋರ್ಟ್ ಅಸಮಾಧಾನ ವ್ಯಕ್ತಪಡಿಸಿತು.
ವಿಜಯನಗರ | ವಚನ ಸಾಹಿತ್ಯದ ಜೀವನ ಮೌಲ್ಯಗಳು ಅರಿತರೆ ವ್ಯಕ್ತಿತ್ವ ವಿಕಸನ ಸಾಧ್ಯ : ಡಿ.ವಿ.ಪರಮಶಿವಮೂರ್ತಿ
ವಿಜಯನಗರ(ಹೊಸಪೇಟೆ) : ವಚನ ಸಾಹಿತ್ಯದಲ್ಲಿ ಅಡಗಿರುವ ಒಳ್ಳೆಯ ಜೀವನ ಮೌಲ್ಯಗಳು ಮತ್ತು ಸಂದೇಶಗಳನ್ನು ಅರಿತರೆ ವ್ಯಕ್ತಿತ್ವ ವಿಕಸನಕ್ಕೆ ಉತ್ತಮ ಮಾರ್ಗವಾಗಲಿದೆ ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಡಿ.ವಿ.ಪರಮಶಿವಮೂರ್ತಿ ಹೇಳಿದರು. ನಗರದ ಶ್ರೀಶಂಕರ್ ಆನಂದ್ ಸಿಂಗ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಸಾಹಿತ್ಯ ಅಕಾಡೆಮೆ, ಬೆಂಗಳೂರು ಚಕೋರ ಸಾಹಿತ್ಯ ವಿಚಾರ ವೇದಿಕೆ ಹಾಗೂ ಶ್ರೀಶಂಕರ್ ಆನಂದ್ ಸಿಂಗ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಹಯೋಗದಲ್ಲಿ ಏರ್ಪಡಿಸಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಗುರುವಾರ ಅವರು ಮಾತನಾಡಿದರು. ಸಾಹಿತ್ಯದ ಪ್ರಕಾರಗಳಲ್ಲಿ ವಚನ ಸಾಹಿತ್ಯ ತುಂಬಾ ಗಮನ ಸೆಳೆಯುವ ಪ್ರಾಮುಖ್ಯತೆಯನ್ನು ಹೊಂದಿದೆ. ತಂತ್ರಜ್ಞಾನ ಮತ್ತು ಕೃತಕಮತ್ತೆ ಯುಗದಲ್ಲಿ ವಚನಗಳ ಓದುಗರ ಸಂಖ್ಯೆ ಕ್ಷೀಣವಾಗಿದೆ. ವಚನಗಳನ್ನು ಓದುವ ಮೂಲಕ ಪ್ರತಿಯೊಬ್ಬರು ಅವುಗಳ ಮಹತ್ವವನ್ನು ತಿಳಿದುಕೊಳ್ಳಬೇಕಿದೆ. ವಚನಗಳ ತಾತ್ಪರ್ಯವನ್ನು ಸರಿಯಾಗಿ ಅರ್ಥೈಸಿಕೊಂಡರೆ ಸ್ವಯಂಪ್ರೇರಿತ ಬದಲಾವಣೆ ಸಾಧ್ಯವಾಗಲಿದೆ. ಕನ್ನಡ ವಚನಕಾರರು ಅದ್ಭುತ ಸಾಹಿತ್ಯವನ್ನು ವಿಶ್ವಕ್ಕೆ ಕೊಡುಗೆಯಾಗಿ ನೀಡಿರುವುದು ನಿಜಕ್ಕೂ ಶ್ಲಾಘನೀಯ ಎಂದರು. ಅಣ್ಣ ಬಸವಣ್ಣನವರ ಪ್ರಸಿದ್ಧ ವಚನವಾದ ಕಳಬೇಡ ಕೊಲಬೇಡ, ಹುಸಿಯ ನುಡಿಯಲು ಬೇಡ, ಮುನಿಯಬೇಡ, ಅನ್ಯರಿಗೆ ಅಸಹ್ಯ ಪಡೆಬೇಡ, ತನ್ನ ಬಣ್ಣಿಸಬೇಡ, ಇದಿರ ಹಳಿಯ ಬೇಡ, ಇದೇ ಅಂತರಂಗ ಶುದ್ದಿ, ಇದೇ ಬಹಿರಂಗ ಶುದ್ದಿಯ ವಚನದ ಈ ಸಾಲುಗಳ ಸಂಕ್ಷಿಪ್ತ ಅರ್ಥವನ್ನು ವಿದ್ಯಾರ್ಥಿಗಳಿಗೆ ತಿಳಿಪಡಿಸಿದರು. ಕರ್ನಾಟಕ ಸಾಹಿತ್ಯ ಅಕಾಡಮಿಯ ಸದಸ್ಯ ಸಂಚಾಲಕ ಡಾ.ಮಲ್ಲಕಾರ್ಜುನ ಬಿ.ಮಾನ್ಪಡೆ, ಶ್ರೀಶಂಕರ್ ಆನಂದ್ ಸಿಂಗ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಡಾ.ಜಿ.ನಾರಾಯಣ ಹೆಬಸೂರ ಮಾತನಾಡಿದರು. ಚಿಂತಕರು, ವಿಶ್ರಾಂತ ಪ್ರಾಧ್ಯಾಪಕ ಡಾ.ಮೃತ್ಯುಂಜಯ ರುಮಾಲೆ ಅವರು ಉತ್ತಮ ವ್ಯಕ್ತಿತ್ವ ರೂಪಿಸಲು ವಚನ ಸಾಹಿತ್ಯದ ಬಗ್ಗೆ ಉಪನ್ಯಾಸ ನೀಡಿದರು. ಈ ವೇಳೆ ಶ್ರೀಶಂಕರ್ ಆನಂದ್ಸಿಂಗ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಸಿ.ದೇವಣ್ಣ, ಕನ್ನಡ ವಿಭಾಗದ ಪ್ರಾಧ್ಯಾಪಕ ಡಾ.ನಾಗಣ್ಣ ಕಿಲಾರಿ, ಚಕೋರ ಸಾಹಿತ್ಯ ವಿಚಾರ ವೇದಿಕೆ ಸಂಚಾಲಕ ವೆಂಕಟೇಶ ಬಡಿಗೇರ, ಮುದೇನೂರು ಉಮಾಮಹೇಶ್ವರ ಸೇರಿದಂತೆ ವಿವಿಧ ವಿಷಯಗಳ ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಕಟಪಾಡಿ ಜಂಕ್ಷನ್ ರಾ.ಹೆದ್ದಾರಿ ಅಂಡರ್ಪಾಸ್ ಕಾಮಗಾರಿ ಆರಂಭ: ಸಂಚಾರದಲ್ಲಿ ಬದಲಾವಣೆ
ಕಾಪು, ಡಿ.18: ರಾಷ್ಟ್ರೀಯ ಹೆದ್ದಾರಿ 66ರ ಕಟಪಾಡಿ ಜಂಕ್ಷನ್ನಲ್ಲಿ ರಾಷ್ಟ್ರೀಯ ಹೆದ್ದಾರಿ 66ರ ಅಂಡರ್ ಪಾಸ್ ಮತ್ತು ವೆಹಿಕಲ್ ಓವರ್ ಪಾಸ್ ನಿರ್ಮಾಣ ಕಾಮಗಾರಿ ಇದೀಗ ಆರಂಭಗೊಂಡಿದ್ದು, ಈ ಹಿನ್ನೆಲೆಯಲ್ಲಿ ವಾಹನಗಳ ಸಂಚಾರದಲ್ಲಿ ಬದಲಾವಣೆ ಮಾಡಲಾಗಿದೆ. ಸುಮಾರು 17 ಕೋಟಿ ರೂ. ವೆಚ್ಚದ ಈ ಯೋಜನೆ ಇದಾಗಿದ್ದು, ಈಗಾಗಲೇ ಕಟಪಾಡಿ ಜಂಕ್ಷನ್ ಬಂದ್ ಮಾಡಿ, ಕಾಮಗಾರಿಯನ್ನು ಕೈಗೆತ್ತಿ ಕೊಳ್ಳಲಾಗಿದೆ. ಉಡುಪಿ ಕಡೆಯಿಂದ ಮಂಗಳೂರು ಹಾಗೂ ಶಿರ್ವ ಕಡೆ ಹೋಗುವ ವಾಹನಗಳು ಕಟಪಾಡಿ ಜಂಕ್ಷನ್ನಲ್ಲಿರುವ ಸರ್ವಿಸ್ ರಸ್ತೆಯ ಮೂಲಕ ಸಾಗಬೇಕು. ಮಂಗಳೂರು ಸಾಗುವ ವಾಹನಗಳು ಅದೇ ಸರ್ವಿಸ್ ರಸ್ತೆಯಲ್ಲಿ ಮುಂದುವರೆದು ಪೊಸಾರು ಬಳಿ ರಾಷ್ಟ್ರೀಯ ಹೆದ್ದಾರಿ 66ರ ಪಥದಲ್ಲಿ ಹೆದ್ದಾರಿಯನ್ನು ಸೇರಬೇಕು. ಸುಗಮ ಸಂಚಾರಕ್ಕಾಗಿ ರಾಷ್ಟ್ರೀಯ ಹೆದ್ದಾರಿ ಪೂರ್ವ ಭಾಗದಲ್ಲಿರುವ ಸರ್ವಿಸ್ ರಸ್ತೆಯ ಈ ಮೊದಲಿನ ಡಿವೈಡರ್ ಕಟ್ಟೆಯ ಒಂದು ಭಾಗವನ್ನು ತೆರವುಗೊಳಿಸಿ ಅಗಲಗೊಳಿಸಲಾಗಿದೆ. ಮಂಗಳೂರು ಭಾಗದಿಂದ ಬರುವ ವಾಹನಗಳು ಕಲ್ಲಾಪು ದಾಟಿ ಬಂದ ಕೂಡಲೇ ಅಳವಡಿಸಿದ ಮಾರ್ಗಸೂಚಿ ಯಂತೆ ತಿರುವು ಪಡೆದುಕೊಂಡು ರಾ.ಹೆ. 66ರ ಪೂರ್ವ ಭಾಗದಲ್ಲಿ ಸಂಚರಿಸಿ ಕಟಪಾಡಿ ಜಂಕ್ಷನ್ ದಾಟಿದ ಬಳಿಕ ಪಶ್ಚಿಮ ಭಾಗದ ರಾ.ಹೆ. ಸೇರಿಕೊಂಡು ಉಡುಪಿ ಕಡೆ ಮುಂದು ವರೆಯಬೇಕು. ಶಿರ್ವ ಭಾಗದಿಂದ ರಾಷ್ಟ್ರೀಯ ಹೆದ್ದಾರಿಯಿಂದ ಕಟಪಾಡಿ ಪೇಟೆಗೆ ನೇರ ಪ್ರವೇಶವನ್ನು ಮುಚ್ಚಲಾಗಿದ್ದು, ಮಂಗಳೂರು ಭಾಗಕ್ಕೆ ಸಂಚರಿಸಿ ಕಲ್ಲಾಪು ಬಳಿ ರಾ.ಹೆ. 66ರ ಪಶ್ಚಿಮ ಭಾಗವನ್ನು ತಲುಪಬೇಕು. ಇದರಿಂದ ಶಿರ್ವ ಕಡೆಯವರು ಕಟಪಾಡಿ ಪೇಟೆ ತಲುಪಲು ದೂರ ಸಂಚಾರ ಮಾಡ ಬೇಕಾಗಿದೆ. ಮಂಗಳೂರು ಕಡೆಯಿಂದ ಬರುವ ವರು ಶಿರ್ವ ಕಡೆ ಹೋಗಲು ಫಾರೆಸ್ಟ್ ಗೇಟ್ ಬಳಿಯ ಡಿವೈಡರ್ನಲ್ಲಿ ಯೂ ಟರ್ನ್ ತೆಗೆದುಕೊಂಡು ಬರಬೇಕಾಗಿದೆ. ಈ ಯುಟರ್ನ್ ಅಪಾಯಕಾರಿಯಾಗಿದ್ದು, ವೇಗ ನಿಯಂತ್ರಿಸಲು ಬ್ಯಾರಿಕೇಡ್ಗಳನ್ನು ಅಳವಡಿಸಬೇಕಾಗಿ ಸಾರ್ವಜನಿಕರು ಆಗ್ರಹಿಸಿದ್ದಾರೆ.
ಯೋಗೀಶ್ ಗೌಡ ಕೊಲೆ ಪ್ರಕರಣ; ವಿನಯ್ ಕುಲಕರ್ಣಿ ಜಾಮೀನು ಅರ್ಜಿ ವಿಚಾರಣೆ ಶುಕ್ರವಾರಕ್ಕೆ ಮುಂದೂಡಿದ ಹೈಕೋರ್ಟ್
ಬೆಂಗಳೂರು: ಧಾರವಾಡ ಜಿಲ್ಲೆಯ ಹೆಬ್ಬಳ್ಳಿ ಜಿಲ್ಲಾ ಪಂಚಾಯಿತಿ ಕ್ಷೇತ್ರದ ಬಿಜೆಪಿ ಸದಸ್ಯರಾಗಿದ್ದ ಯೋಗೀಶ್ ಗೌಡ ಕೊಲೆ ಪ್ರಕರಣದಲ್ಲಿ ಜಾಮೀನು ಕೋರಿ ಶಾಸಕ ವಿನಯ ಕುಲಕರ್ಣಿ ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ಶುಕ್ರವಾರಕ್ಕೆ ಮುಂದೂಡಿದೆ. ಕೊಲೆ ಪ್ರಕರಣದಲ್ಲಿ 15ನೇ ಆರೋಪಿಯಾಗಿರುವ ವಿನಯ್ ಕುಲಕರ್ಣಿ ಸಲ್ಲಿಸಿರುವ ಜಾಮೀನು ಅರ್ಜಿಯನ್ನು ನ್ಯಾಯಮೂರ್ತಿ ಎಸ್. ಸುನೀಲ್ ದತ್ ಯಾದವ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿತು. ವಿನಯ್ ಕುಲಕರ್ಣಿ ಪರ ಹಿರಿಯ ವಕೀಲ ಸಿ.ವಿ. ನಾಗೇಶ್ ವಾದ ಮಂಡಿಸಿ, ಪ್ರಕರಣ ಸಂಬಂಧ ಕೇವಲ ಒಬ್ಬ ಸಾಕ್ಷಿ ವಿಚಾರಣೆ ಬಾಕಿಯಿದೆ. ಪ್ರಕರಣದಲ್ಲಿ ಒಟ್ಟು 21 ಆರೋಪಿಗಳಿದ್ದಾರೆ. ಈಗಾಗಲೇ 20 ಮಂದಿಗೆ ಜಾಮೀನು ದೊರೆತಿದೆ. ಕುಲಕರ್ಣಿ ಅವರಿಗೆ ಮಾತ್ರ ಜಾಮೀನು ದೊರೆತಿಲ್ಲ ಎಂದು ನ್ಯಾಯಪೀಠಕ್ಕೆ ವಿವರಿಸಿದರು. ಇದಕ್ಕೆ ಆಕ್ಷೇಪಿಸಿದ ಸಿಬಿಐ ಪರ ವಿಶೇಷ ಅಭೀಯೋಜಕ ಪಿ. ಪ್ರಸನ್ನ ಕುಮಾರ್ ಅವರು, ಸಾಕ್ಷಿ ಮೇಲೆ ಒತ್ತಡ ಹೇರುವ ಮೂಲಕ ಜಾಮೀನು ಷರತ್ತು ಉಲ್ಲಂಘಿಸಿದ ಕಾರಣಕ್ಕೆ ಸುಪ್ರೀಂಕೋರ್ಟ್ ಅರ್ಜಿದಾರರಿಗೆ ಈ ಹಿಂದೆ ನೀಡಿದ್ದ ಜಾಮೀನು ರದ್ದುಪಡಿಸಿ, ತಕ್ಷಣ ಶರಣಾಗುವಂತೆ ಆದೇಶಿಸಿತ್ತು. ಜತೆಗೆ, ಪ್ರಕರಣದ ವಿಚಾರಣೆ (Trial) ಮುಂದುವರಿಸುವಂತೆ ವಿಚಾರಣಾ ನ್ಯಾಯಾಲಯಕ್ಕೆ ನಿರ್ದೇಶಿಸಿದೆ. ಜಾಮೀನು ಕೋರುವ ಯಾವುದೇ ಸ್ವಾತಂತ್ರ್ಯವನ್ನು ವಿನಯ್ ಕುಲಕರ್ಣಿಗೆ ಸುಪ್ರೀಂಕೋರ್ಟ್ ಉಳಿಸಿಲ್ಲ. ಇದೇ ಕಾರಣಕ್ಕೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಇತ್ತೀಚೆಗೆ ಜಾಮೀನು ನಿರಾಕರಿಸಿದೆ. ದಿನನಿತ್ಯ ಪ್ರಕರಣದ ವಿಚಾರಣೆ ನಡೆಯುತ್ತಿದ್ದು, ಜಾಮೀನು ನೀಡುವ ಅಗತ್ಯವಿಲ್ಲ ಎಂದು ನ್ಯಾಯಪೀಠದ ಗಮನಕ್ಕೆ ತಂದರು. ಇದನ್ನು ಆಲಿಸಿದ ನ್ಯಾಯಪೀಠ, ಅರ್ಜಿದಾರರ ಜಾಮೀನನ್ನು ಸುಪ್ರೀಂಕೋರ್ಟ್ ರದ್ದುಪಡಿಸಿದೆ. ಇದರಿಂದ, ಹಾಲಿ ಜಾಮೀನು ಅರ್ಜಿಯನ್ನು ಹೈಕೋರ್ಟ್ ನಿರ್ಧರಿಸಬಹುದೇ? ಎಂಬ ಬಗ್ಗೆ ಸ್ಪಷ್ಟನೆ ಬೇಕಿದೆ. ಈ ಕುರಿತು ಸುಪ್ರೀಂಕೋರ್ಟ್ ಸ್ಪಷ್ಟನೆ ನೀಡಿದರೆ ಮೆರಿಟ್ ಮೇಲೆ ಅರ್ಜಿ ವಿಚಾರಣೆ ನಡೆಸಿ ತೀರ್ಮಾನಿಸಬಹುದು. ಇಲ್ಲವಾದರೆ ಅರ್ಜಿದಾರರು ನೇರವಾಗಿ ಸುಪ್ರೀಂಕೋರ್ಟ್ನಲ್ಲೇ ಜಾಮೀನು ಕೋರಬಹುದು ಎಂದು ಹೇಳಿತು. ವಿನಯ್ ಕುಲಕರ್ಣಿ ಪರ ವಕೀಲರು ವಾದ ಮುಂದುವರಿಸುವುದಾಗಿ ತಿಳಿಸಿದ ಹಿನ್ನೆಲೆಯಲ್ಲಿ ನ್ಯಾಯಪೀಠ ವಿಚಾರಣೆಯನ್ನು ಶುಕ್ರವಾರಕ್ಕೆ ಮುಂದೂಡಿತು.
ರಾಯಚೂರು | ನವೋದಯ ಕಾಲೇಜಿನಲ್ಲಿ ಮೂರು ದಿನ ಮಧುಮೇಹ ಸಂಶೋಧನಾ ಸಂಸ್ಥೆಯ ವಾರ್ಷಿಕ ಸಮ್ಮೇಳನ
ರಾಯಚೂರು: ಕರ್ನಾಟಕ ರಾಜ್ಯ ಮಧುಮೇಹ ಸಂಶೋಧನಾ ಸಂಸ್ಥೆ(ಕೆಆರ್ಎಸ್ಎಸ್ಡಿಐ)ನಿಂದ 21ನೇ ವಾರ್ಷಿಕ ಸಮ್ಮೇಳನ ನಗರದ ನವೋದಯ ವೈದ್ಯಕೀಯ ಕಾಲೇಜಿನಲ್ಲಿ ಡಿ.19 ರಿಂದ 21 ವರೆಗೆ ಮೂರು ದಿನ ನಡೆಯಲಿದೆ ಎಂದು ಸಂಸ್ಥೆ ರಾಜ್ಯಾಧ್ಯಕ್ಷ ಡಾ.ಬಸವರಾಜ ಪಾಟೀಲ್ ಹೇಳಿದರು. ಅವರಿಂದು ಮಾಧ್ಯಮಗೋಷ್ಟಿ ಉದ್ದೇಶಿಸಿ ಮಾತನಾಡಿ, ಸಕ್ಕರೆಯಿಂದ ದೂರ, ಸುಖಿ ಜೀವನದತ್ತ ಘೋಷವಾಕ್ಯದೊಂದಿಗೆ ಡಿ.19ರಂದು ಮೊದಲ ದಿನ ಕಾರ್ಯಾಗಾರ ನಡೆಯಲಿದ್ದು, ಆರು ವಿಶೇಷ ಉಪನ್ಯಾಸಗಳು ನಡೆಯಲಿವೆ. ಮಧುಮೇಹ ಕುರಿತು ನಡೆದಿರುವ ಹೊಸ ಸಂಶೋಧನೆಗಳು, ಪರಿಹಾರಗಳು, ಸಮಸ್ಯೆಗಳ ಕುರಿತು ತಜ್ಞರು ಮಾಹಿತಿ ನೀಡಲಿದ್ದಾರೆ. ಟೈಪ್ -1 ಮಧುಮೇಹಿಗಳೊಂದಿಗೆ ಸಂವಾದ ನಡೆಯಲಿದೆ. ಡಿ.20 ರಂದು ಬೆಳಿಗ್ಗೆ ವಾರ್ಷಿಕ ಸಮ್ಮೇಳನ ಉದ್ಘಾಟನೆಯಾಗಲಿದೆ. ಸಮ್ಮೇಳನದಲ್ಲಿ ಅನೇಕರು ಮಧುಮೇಹ ಆಧಾರಿತ ವಿಷಯಗಳನ್ನು ಮಂಡನೆ ಮಾಡಲಿದ್ದಾರೆ. ಮಧುಮೇಹದ ಕುರಿತು ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ರಸಪ್ರಶ್ನೆ ಕಾರ್ಯಕ್ರಮ ನಡೆಯಲಿದೆ ಎಂದರು. ಸಂಜೆ ರಾಯಚೂರು ತಾಲೂಕಿನ ಜೇಗರಕಲ್ ಹೊಸಪೇಟೆ ಗ್ರಾಮಗಳನ್ನು ದತ್ತು ತೆಗೆದುಕೊಳ್ಳುವ ಕಾರ್ಯಕ್ರಮ ನಡೆಯಲಿದೆ. ಸಂಘಟನೆ ರಾಷ್ಟ್ರೀಯ ಅಧ್ಯಕ್ಷರು ಹಾಗೂ ತಜ್ಞ ಡಾ.ಲಕ್ನೋ ಆಗಮಿಸಲಿದ್ದಾರೆ. ಮಕ್ಕಳಿಗೆ ಬ್ಯಾಗ್, ಗುಕ್ಲೋಮೀಟರ್ ವಿತರಿಸಲಾಗುತ್ತದೆ ಎಂದರು. ಡಿ.21 ರಂದು ಮಧುಮೇಹದ ಕುರಿತು ಗುಂಪು ಚರ್ಚೆ, ರಾಷ್ಟ್ರೀಯ ಹಾಗೂ ರಾಜ್ಯ ಮಟ್ಟದ ತಜ್ಞರಿಂದ ಉಪನ್ಯಾಸ ಹಾಗೂ ಸಮ್ಮೇಳನದಲ್ಲಿ ನಡೆದ ಚರ್ಚೆಗಳ ಕುರಿತು ಸಮಾಲೋಚನೆ ನಡೆಯಲಿದೆ ಎಂದರು. ಹಿರಿಯ ವೈಧ್ಯ ಡಾ.ಮಹಾಲಿಂಗಪ್ಪ ಮಾತನಾಡಿದರು. ಈ ಸಂದರ್ಭದಲ್ಲಿ ಸಂಘಟನಾ ಕಾರ್ಯದರ್ಶಿ ಡಾ.ರಾಮಕೃಷ್ಣ ಎಂ.ಆರ್., ಸಮ್ಮೇಳನದ ಸಂಘಟನಾ ಅಧ್ಯಕ್ಷ ಡಾ.ಎಸ್.ಎಸ್.ರೆಡ್ಡಿ, ಡಾ.ಹರಿಪ್ರಸಾದ್, ಡಾ.ಸುರೇಶ್ ಸಗರದ ಇದ್ದರು.
ರಾಯಚೂರು: ಯರಮರಸ್ ಕ್ರಿಟಿಕಲ್ ಶಾಖೋತ್ಪನ್ನ ಕೇಂದ್ರ(ವೈಟಿಪಿಎಸ್)ದಲ್ಲಿ ನಡೆದಿರುವ ಕಲ್ಲಿದ್ದಲು ಕಳ್ಳತನ ಪ್ರಕರಣದಲ್ಲಿ ಪವರ್ ಮ್ಯಾಕ್ ಕಂಪನಿಯ ವಿರುದ್ದ ಕೇಸ್ ದಾಖಲಿಸಿ ಕಪ್ಪು ಪಟ್ಟಿಗೆ ಸೇರಿಸಬೇಕು ಎಂದು ರಾಯಚೂರು ನಗರ ಶಾಸಕ ಡಾ.ಶಿವರಾಜ ಪಾಟೀಲ್ ಆಗ್ರಹಿಸಿದ್ದು, ಎರಡನೇ ಚಾರ್ಜ್ಶೀಟ್ನಲ್ಲಿ ಸೇರ್ಪಡೆ ಮಾಡಲು ಸೂಚನೆ ನೀಡುವುದಾಗಿ ಗೃಹ ಸಚಿವ ಡಾ.ಜಿ.ಪರಮೇಶ್ವರ ಭರವಸೆ ನೀಡಿದ್ದಾರೆ. ಬೆಳಗಾವಿಯ ಸುವರ್ಣ ಸೌಧದಲ್ಲಿ ನಡೆದ ವಿಧಾನಸಭೆ ಕಲಾಪದಲ್ಲಿ ಶಾಸಕ ಡಾ.ಶಿವರಾಜ ಪಾಟೀಲ್ ಸರ್ಕಾರದ ಗಮನಸೆಳೆದು ವೈಟಿಪಿಎಸ್ನಲ್ಲಿ ಕಲ್ಲಿದ್ದಲು ಅಕ್ರಮ ಕಳ್ಳತನ ನಡೆಯುತ್ತಿದೆ. ಪ್ರತಿದಿನ 30 ರಿಂದ 40 ಲಕ್ಷ ರೂ. ಮೌಲ್ಯದ ಕಳ್ಳತನ ನಡೆದಿದೆ. ಆದರೆ ವೈಟಿಪಿಎಸ್ ಅಧಿಕಾರಿಗಳು ಗುರುರಾಘವೇಂದ್ರ ಏಜೆನ್ಸಿ ಮತ್ತು ಯರಮರಸ್ ಸ್ಟೇಷನ್ ಮಾಸ್ತರ ವಿರುದ್ದ ಮಾತ್ರ ಕೇಸ್ ದಾಖಲಿಸಿದ್ದಾರೆ. ಕಲ್ಲಿದ್ದಲು ಸ್ವಚ್ಚತೆ, ನಿಗಧಿತ ಕಲ್ಲಿದ್ದಲು ಪಡೆಯುವುದು ಪವರ್ ಮ್ಯಾಕ್ ಅಧಿಕಾರಿಗಳ ಹೊಣೆ. ಕಳ್ಳತನಕ್ಕೆ ಪವರ್ ಮ್ಯಾಕ್ ಕಂಪನಿಯೇ ನೇರಹೊಣೆಯಾಗಿದ್ದರಿಂದ ಕಂಪನಿ ಅಧಿಕಾರಿಗಳ ವಿರುದ್ದ ಕೇಸ್ ದಾಖಲಿಸಬೇಕು ಮತ್ತು ಪವರ ಮ್ಯಾಕ್ ಕಂಪನಿಯನ್ನು ಕಪ್ಪು ಪಟ್ಟಿಗೆ ಸೇರಿಸಬೇಕೆಂದು ಆಗ್ರಹಿಸಿದರು. ಶಾಸಕರ ಪ್ರಶ್ನೆಗೆ ಉತ್ತರಿಸಿದ ಡಾ.ಜಿ.ಪರಮೇಶ್ವರ್ ಅವರು ವೈಟಿಪಿಎಸ್ನಲ್ಲಿ 120ಮೆಟ್ರಿಕ್ ಟನ್ ಕಲ್ಲಿದ್ದಲ್ ಕಳ್ಳತನ ನಡೆದಿರುವ ಪ್ರಕರಣದ ಕುರಿತು ಕೇಸ್ ದಾಖಲಾಗಿ ಈಗಾಗಲೇ ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ. ಡಿ.23 ರಂದು ವಿಚಾರಣೆ ನಿಗಧಿಯಾಗಿದೆ. ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿರುದರಿಂದ ಎರಡನೇ ಚಾರ್ಜ್ಶೀಟ್ ಹಾಕುವ ಅವಕಾಶವಿದೆ. ಪೊಲೀಸರು ನಡೆಸಿರುವ ತನಿಖೆಯಲ್ಲಿ ಪವರ್ ಮ್ಯಾಕ್ ಕಂಪನಿಯ ಉಲ್ಲೇಖವಿಲ್ಲ. ಸಾಧ್ಯವಾದರೆ ಎರಡನೇ ಚಾರ್ಜಶೀಟ್ ಸಲ್ಲಿಸಿ ಪವರ್ ಮ್ಯಾಕ್ ಕಂಪನಿ ವಿರುದ್ದವೂ ತನಿಖೆ ನಡೆಸಿ ದೋಷಾರೋಪಣೆ ಸಲ್ಲಿಸಲು ರಾಯಚೂರು ಪೊಲೀಸರಿಗೆ ಸೂಚಿಸುವುದಾಗಿ ಭರವಸೆ ನೀಡಿದರು. ವೈಟಿಪಿಎಸ್ ಕಲ್ಲಿದ್ದಲು ಕಳ್ಳತನ ಪ್ರಕರಣದಲ್ಲಿ ಈಗಾಗಲೇ ಎರಡು ಪ್ರಕರಣಗಳು ದಾಖಲಾಗಿದ್ದು, ವಿಚಾರಣಾ ಹಂತದಲ್ಲಿವೆ. ನಿರಂತರವಾಗಿ ಕಲ್ಲಿದ್ದಲು ಕಳ್ಳತನ ನಡೆಯುತ್ತಿದ್ದು, ಪ್ರಕರಣ ಮುಚ್ಚಿ ಹಾಕಲು ಕೆಲವೇ ಕೆಲ ಅಧಿಕಾರಿಗಳ ವಿರುದ್ದ ಮಾತ್ರ ಕೇಸ್ ದಾಖಲಿಸಲಾಗಿದೆ. ಡಿ.19 ರಂದು ಪ್ರಕರಣ ನಡೆದಿದ್ದರೂ ದೂರು ದಾಖಲಿಸಲು ವೈಟಿಪಿಎಸ್ ಅಧಿಕಾರಿಗಳು ಐದು ದಿನ, ಪೊಲೀಸರು ಎರಡು ದಿನ ಸಮಯತೆಗೆದುಕೊಂಡು ಒಲ್ಲದ ಮನಸ್ಸಿನಿಂದಲೇ ಕೇಸ್ ದಾಖಲಿಸಿದ್ದಾರೆ. ಸರಬರಾಜ ಆಗುವಕಲ್ಲಿದ್ದಲು ಸ್ವಚ್ಚತೆ, ಗುಣಮಟ್ಟ ಪಡೆಯುವುದು ಪವರ್ ಮ್ಯಾಕ್ ಕಂಪನಿಯ ಹೊಣೆಯಾಗಿದೆ ಎಂದು ಡಾ.ಶಿವರಾಜ ಪಾಟೀಲ್ ಹೇಳಿದರು. ಪ್ರಕರಣದ ಕುರಿತಂತೆ ಯಾರನ್ನು ರಕ್ಷಿಸುವ ಪ್ರಶ್ನೆಯೇ ಇಲ್ಲ. ಪೊಲೀಸರು ತನಿಖೆ ನಡೆಸಿ ಕ್ರಮ ಕೈಗೊಳ್ಳುತ್ತಾರೆ ಎಂದು ಗೃಹ ಸಚಿವರು ಹೇಳಿದರು.
ಡಿ.20ರಿಂದ ಕರಾವಳಿ ಉತ್ಸವ; ಪಿಲಿಕುಳ ಪರ್ಬ ವಿಶೇಷ ಆಕರ್ಷಣೆ
ಮಂಗಳೂರು: ಪ್ರತೀ ವರ್ಷದಂತೆ ಈ ವರ್ಷವೂ ಕೂಡ ವೈವಿಧ್ಯಮಯವಾದ ವಸ್ತು ಪ್ರದರ್ಶನ, ಆಹಾರೋತ್ಸವ, ಕ್ರೀಡೆ ಹಾಗೂ ಸಾಂಸ್ಕೃತಿಕ, ಮನರಂಜನೆ ಯನ್ನು ನೀಡುವುದರೊಂದಿಗೆ ಕರಾವಳಿ ಉತ್ಸವ ಡಿಸೆಂಬರ್ 20 ರಿಂದ ಪ್ರಾರಂಭವಾಗಲಿದ್ದು, ಜನವರಿ 31 ವರೆಗೆ ಜಿಲ್ಲೆಯ ವಿವಿಧ ಕಡೆಗಳಲ್ಲಿ ಆಕರ್ಷಕ ಸಾಂಸ್ಕೃತಿಕ ಮತ್ತು ಸಾಹಸಮಯ ಕಾರ್ಯಕ್ರಮ ಗಳನ್ನುಆಯೋಜಿಸಲಾಗುತ್ತಿದೆ. ಇದೇ ಸಂದರ್ಭದಲ್ಲಿ ಪಿಲಿಕುಳದಲ್ಲಿ ಡಿ.20ರಿಂದ ಜ.4ರವರೆಗೆ ಪಿಲಿಕುಳ ಹಬ್ಬ ನಡೆಯಲಿದೆ. ಇದೇ ಸಂದರ್ಭದಲ್ಲಿ ಖ್ಯಾತ ಗಾಯಕರಾದ ಕೈಲಾಸ್ ಕೇರ್, ವಿಜಯ ಪ್ರಕಾಶ್ ರಿಂದ ಸಂಗೀತ ಸಂಜೆ ನಡೆಯಲಿದೆ ಎಂದು ಜಿಲ್ಲಾಧಿಕಾರಿ ದರ್ಶನ್ ಎಚ್.ವಿ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ. ನಗರದ ಕರಾವಳಿ ಉತ್ಸವ ಮೈದಾನದಲ್ಲಿ ಮುಖ್ಯ ಕಾರ್ಯಕ್ರಮ ನಡೆಯಲಿದ್ದು, ರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ ಗಳಿಸಿದ ಭಾರತೀಯ ಕಲಾವಿದರಿಂದ ವೈವಿಧ್ಯಮಯವಾದ ಸಾಂಸ್ಕೃತಿಕ ಮನರಂಜನಾ ಪ್ರದರ್ಶನವನ್ನು ಆಯೋಜಿಸಲಾಗಿದೆ ಹಾಗೂ ಜಿಲ್ಲೆಯ ಕಡಲ ತೀರಗಳಿಗೆ ಪ್ರವಾಸಿಗರನ್ನು ಆಕರ್ಷಿಸಲು. ಜಿಲ್ಲೆಯ ಬೀಚ್ಗಳಲ್ಲಿ ಕರಾವಳಿ ಉತ್ಸವದ ಅಂಗವಾಗಿ ವಿವಿಧ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ಉತ್ಸವದ ಅಂಗವಾಗಿ ಕದ್ರಿ ಪಾರ್ಕ್ನಲ್ಲಿ ಕಲಾ ಪರ್ಬ ಕಾರ್ಯಕ್ರಮ, ಫಲಪುಷ್ಪ ಪ್ರದರ್ಶನ, ಸ್ವೀಟ್ ಫುಡ್ ಫೆಸ್ಟಿವಲ್ ಹಾಗೂ ವಿವಿಧ ಜಾತಿಯ ಶ್ವಾನಗಳ ಪ್ರದರ್ಶನ ನಡೆಯಲಿದೆ.ಮಂಗಳೂರು ನಗರದಲ್ಲಿ ಚಲನಚಿತ್ರ ಉತ್ಸವ ನಡೆಯಲಿದೆ.ನೆಹರು ಮೈದಾನದ ಫುಟ್ಬಾಲ್ ಕ್ರೀಡಾಂಗಣದಲ್ಲಿ ಫುಟ್ಬಾಲ್ ಕ್ರೀಡಾ ಸ್ಪರ್ಧೆ ನಡೆಯಲಿದೆ. ಪಿಳಿಕುಳ ಉದ್ಯಾನವನದಲ್ಲಿಯೂ ಗಾಲ್ಫ್ ಪಂದ್ಯಾವಳಿ ಕಾರ್ಯಕ್ರಮ ನಡೆಯಲಿದೆ. ಸಾರ್ವಜನಿಕರು ನಗರದ ಹಾಗೂ ಕಡಲ ತೀರದ ಸೊಬಗನ್ನು ಆನಂದಿಸಲು ಅನುಕೂಲವಾಗುವಂತೆ ಸುಲ್ತಾನ್ ಬತ್ತೇರಿ ಹಾಗೂ ಪಣಂಬೂರಿನಲ್ಲಿ ಹೆಲಿಕಾಪ್ಟರ್ ಸಂಚಾರ ಕೂಡ ಆಯೋಜಿಸಲಾಗಿದೆ. ತಣ್ಣೀರು ಬಾವಿ ಬೀಚ್ನಲ್ಲಿ ಮುಸ್ಸಂಜೆಯ ಸಮಯದಲ್ಲಿ ಕಡಲ ತೀರಕ್ಕೆ ವಾಯು ವಿಹಾರಕ್ಕೆಂದು ಹೋಗುವ ಜನತೆಗೆ ಕಡಲ ತೀರದಲ್ಲಿ ಮನಸ್ಸಿಗೆ ಮುದ ನೀಡುವಂತೆ ಮ್ಯೂಸಿಕ್ ಫೆಸ್ಟಿವಲ್ (ಸಂಗೀತ ಉತ್ಸವ) ನ್ನು ಆಯೋಜಿಸಲಾಗಿದೆ.ಸಾರ್ವಜನಿಕರು ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಅತ್ಯಂತ ಉತ್ಸಾಹದಿಂದ ಕುಟುಂಬ ಸಮೇತರಾಗಿ ಹಾಗೂ ಸ್ನೇಹಿತರೊಂದಿಗೆ ಭಾಗವಹಿಸಿ, ಕರಾವಳಿ ಉತ್ಸವವನ್ನು ಯಶಸ್ವೀಗೊಳಿಸಲು ಜಿಲ್ಲಾಡಳಿತದ ಪರವಾಗಿ ವಿನಂತಿಸುತ್ತೇವೆ. ವೈವಿಧ್ಯಮಯವಾದ ವಸ್ತು ಪ್ರದರ್ಶನ, ಆಹಾರೋತ್ಸವ, ಕರಾವಳಿ ಪ್ರಶಸ್ತಿ ಪ್ರದಾನ ಸಮಾರಂಭ ಹಾಗೂ ಮನರಂಜನಾ ಕಾರ್ಯಕ್ರಮಗಳು ಕರಾವಳಿ ಜನತೆಯ ಒತ್ತಡದ ಜೀವನಕ್ಕೆ ವಿರಾಮ ನೀಡುವುದರೊಂದಿಗೆ ಖುಷಿ ಇಮ್ಮಡಿಗೊಳಿಸುವುದರಲ್ಲಿ ಅಚ್ಚರಿಯೇನಿಲ್ಲ. ಕ್ರಿಸ್ಮಸ್ ಹಾಗೂ ಹೊಸ ವರ್ಷದ ಆಚರಣೆಯನ್ನು ಸವಿಯಲು ಕರಾವಳಿ ಉತ್ಸವವು ಸ್ಥಳೀಯರಿಗೆ ಹಾಗೂ ಪ್ರವಾಸಿಗರಿಗೆ ಪ್ರಮುಖ ವೇದಿಕೆಯಾಗಲಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ. ಡಿ20ರಂದು ಕರಾವಳಿ ಉತ್ಸವ ಮೈದಾನದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆಗೊಳ್ಳಲಿದೆ.ಡಿ21ರಂದು ತಣ್ಣೀರು ಬಾವಿ ಬ್ಲೂ ಪ್ಲ್ಯಾಗ್ ಬೀಚ್ ನಲ್ಲಿ ಕೇಕ್ ಮತ್ತು ವೈನ್ ಉತ್ಸವ ನಡೆಯಲಿದೆ.ಡಿ.23ರಿಂದ ಜ.2ರವರೆಗೆ ಸುಲ್ತಾನ್ ಬತ್ತೇರಿ ಪಣಂಬೂರು ಬೀಚ್ ನಲ್ಲಿ ಹೆಲಿಕಾಪ್ಟರ್ ರೈಡ್ ನಡೆಯಲಿದೆ. ಪಿಲಿಕುಳದ ಪುಟಾಣಿ ಹುಲಿ ಮರಿ ವಿಶೇಷ ಆಕರ್ಷಣೆಯಾಗಿ ಸಾರ್ವಜನಿಕರಿಗೆ ವೀಕ್ಷಣೆಗೆ ಅವಕಾಶವಿದೆ ಎಂದು ಸುದ್ದಿಗೋಷ್ಠಿಯಲ್ಲಿ ಜಿಲ್ಲಾಧಿಕಾರಿ ದರ್ಶನ್ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ. ನಾರ್ವಡೆ ವಿನಾಯಕ ಕರ್ಬಾರಿ,ಉಪ ಅರಣ್ಯ ಸಂರಕ್ಷಣಾಧಿಕಾರಿ ಅ್ಯಂಟೊನಿ ಎಸ್ ಮರಿಯಪ್ಪ, ಅಪರ ಜಿಲ್ಲಾಧಿಕಾರಿ ರಾಜು ಕೆ, ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ ಡಾ.ಅರುಣ್ ಕುಮಾರ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
ವಂಚನೆ ಪ್ರಕರಣ: ನಾಲ್ಕು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಸೆರೆ
ಸುಳ್ಯ: ವಂಚನೆ ಪ್ರಕರಣದಲ್ಲಿ ಸುಮಾರು ನಾಲ್ಕು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಸುಳ್ಯ ಪೊಲೀಸರು ಬೆಂಗಳೂರಿನಿಂದ ಬಂಧಿಸಿದ್ದಾರೆ. ಕಡೂರು ಗ್ರಾಮದ ನಿವಾಸಿ ನಾಗೇಶ್ ಬಂಧಿತ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ. ಸುಳ್ಯ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದಲ್ಲಿ ಆರೋಪಿಯಾಗಿ, ಸುಮಾರು 4 ವರ್ಷಗಳಿಂದ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿ ಕಡೂರು ಗ್ರಾಮದ ನಿವಾಸಿ ನಾಗೇಶ್ ಎಂಬಾತನನ್ನು, ಸುಳ್ಯ ಪೊಲೀಸ್ ಠಾಣಾ ಸಿಬ್ಬಂದಿಗಳಾದ ರಮೇಶ್ ಹಾಗೂ ಶ್ರೀಶೈಲ ಅವರು ಗುರುವಾರ ಬೆಂಗಳೂರಿನ ಚಿಕ್ಕಬಿದರಿಕಲ್ಲು ಎಂಬಲ್ಲಿ ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ನ್ಯಾಯಾಲಯ ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.
ದೇಶ ಕಟ್ಟುವಲ್ಲಿ ಶಿಕ್ಷಣದ ಪಾತ್ರ ಮಹತ್ವದ್ದು: ಡಾ.ಹಕೀಂ ಅಝ್ಹರಿ
ಪುಣೆ | ಸಿದ್ರಾ ಫೌಂಡೇಶನ್ನಿಂದ ಲೀಡರ್ಸ್ ಟಾಲೆಂಟ್ ಶೋ, ಎಮಿನೆನ್ಸ್ ಮೀಟ್
ಮಾದಕ ವಸ್ತು ಸೇವನೆ ಆರೋಪ: ಯುವಕ ಸೆರೆ
ಮಂಗಳೂರು: ನಗರದ ಬೋಳೂರಿನಲ್ಲಿ ಮಾದಕ ವಸ್ತು ಸೇವಿಸಿದ ಆರೋಪದ ಮೇರೆಗೆ ಬೊಳೂರು ನಿವಾಸಿ ಅಂಕಿತ್ ಎಂಬಾತನನ್ನು ಬರ್ಕೆ ಪೊಲೀಸರು ಬಂಧಿಸಿದ್ದಾರೆ. ಗಸ್ತು ನಿರತ ಪೊಲೀಸರು ಅಮಲಿನಲ್ಲಿದ್ದಂತೆ ಕಂಡು ಬಂದ ಅಂಕಿತ್ನನ್ನು ಹಿಡಿದು ವಿಚಾರಿಸಿದಾಗ ಆತ ಮಾತನಾಡಲು ತಡವರಿಸಿದ್ದು, ಬಳಿಕ ತಪ್ಪೊಪ್ಪಿಕೊಂಡ ಎನ್ನಲಾಗಿದೆ. ಯುವಕನನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ ಗಾಂಜಾ ಸೇವನೆ ಮಾಡಿರುವುದು ದೃಢಪಟ್ಟಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈತನ ವಿರುದ್ದ ಎನ್ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.
ರಾಯಚೂರು | ಲಾರಿ-ಬೈಕ್ ಢಿಕ್ಕಿ : ವ್ಯಕ್ತಿ ಮೃತ್ಯು
ರಾಯಚೂರು: ಸಿರವಾರ ಪಟ್ಟಣದ ಹೊರ ವಲಯದ ದೇವದುರ್ಗ-ಸಿರವಾರ ಮುಖ್ಯ ರಸ್ತೆಯಲ್ಲಿ ಲಾರಿ ಮತ್ತು ಬೈಕ್ ಢಿಕ್ಕಿಯಾಗಿದ್ದು, ಬೈಕ್ ಸವಾರ ಮಲ್ಲಿಕಾರ್ಜುನ ಕುರುಬರು (35) ಸ್ಥಳದಲ್ಲಿ ಮೃತಪಟ್ಟಿರುವ ಘಟನೆ ಬುಧವಾರ ರಾತ್ರಿ ನಡೆದಿದೆ. ಈ ಕುರಿತು ಸಿರವಾರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಲಾರಿ ಚಾಲಕ ಪರಾರಿಯಾಗಿದ್ದು, ಪತ್ತೆ ಕಾರ್ಯ ಕೈಗೊಳ್ಳಲಾಗಿದೆ ಎಂದು ಪ್ರಭಾರಿ ಪಿಎಸ್ ಐ ಬಸನಗೌಡ ಹಣಗಿ ತಿಳಿಸಿದ್ದಾರೆ.
ವಿಕೆ ಫರ್ನಿಚರ್ ಆ್ಯಂಡ್ ಇಲೆಕ್ಟ್ರಾನಿಕ್ಸ್ ನಲ್ಲಿ ಕ್ರಿಸ್ಮಸ್ - ಹೊಸ ವರ್ಷದ ಮೆಗಾ ಸೇಲ್; ಶೇ 40 ವರೆಗೆ ರಿಯಾಯಿತಿ
ಮಂಗಳೂರು, ಡಿ.18: ವಿಕೆ ಫರ್ನಿಚರ್ ಆ್ಯಂಡ್ ಇಲೆಕ್ಟ್ರಾನಿಕ್ಸ್ ಸಂಸ್ಥೆಯು ತನ್ನ ಬಹು ನಿರೀಕ್ಷಿತ ಕ್ರಿಸ್ಮಸ್ ಹಾಗೂ ಹೊಸ ವರ್ಷದ ಮೆಗಾ ಸೇಲ್ 2025-26 ಅನ್ನು ಘೋಷಿಸಿದೆ. ಹಬ್ಬದ ಕಾಲವನ್ನು ಗ್ರಾಹಕರು ಅತ್ಯುತ್ತಮ ಆಫರ್ ಗಳೊಂದಿಗೆ ಸಂಭ್ರಮಿಸಲು ಈ ವಿಶೇಷ ಮಾರಾಟವನ್ನು ಆಯೋಜಿಸಲಾಗಿದೆ. ಈ ಮೆಗಾ ಸೇಲ್ನಲ್ಲಿ ಫರ್ನಿಚರ್, ಮನೆ ಮತ್ತು ಕಚೇರಿ ಒಳಾಂಗಣ ವಿನ್ಯಾಸ, ಇಲೆಕ್ಟ್ರಾನಿಕ್ಸ್, ಟೆಲಿವಿಷನ್ಗಳು, ಗೃಹೋಪಯೋಗಿ ಉಪಕರಣಗಳು, ಮೊಬೈಲ್ಗಳು, ಲ್ಯಾಪ್ಟಾಪ್ಗಳು, ಅಡುಗೆ ಸಾಮಗ್ರಿಗಳು ಹಾಗೂ ಅಲಂಕಾರಿಕ ವಸ್ತುಗಳು ಸೇರಿದಂತೆ ಪ್ರಮುಖ ರಾಷ್ಟ್ರೀಯ ಮತ್ತು ಅಂತರ್ರಾಷ್ಟ್ರೀಯ ಬ್ರ್ಯಾಂಡ್ಗಳ ವಿಶಾಲ ಶ್ರೇಣಿ ಲಭ್ಯವಿದೆ. ಆಯ್ದ ಉತ್ಪನ್ನಗಳ ಮೇಲೆ ಶೇ 40 ವರೆಗೆ ರಿಯಾಯಿತಿ, ಶೂನ್ಯ ಮುಂಗಡದೊಂದಿಗೆ ಸುಲಭ ಇಎಂಐ, ಮತ್ತು ಶೇ 100 ಫೈನಾನ್ಸ್ ಸೌಲಭ್ಯಗಳೊಂದಿಗೆ ಮಿತ ಅವಧಿಯ ಅನಿಯಮಿತ ಉಳಿತಾಯವನ್ನು ಗ್ರಾಹಕರು ಪಡೆಯಬಹುದು. ಹಬ್ಬದ ವಿಶೇಷ ‘‘ಶಾಪ್ ಆ್ಯಂಡ್ ವಿನ್’’ ಆಫರ್ ಅಡಿಯಲ್ಲಿ ಖರೀದಿದಾರರು ಬಂಪರ್ ಬಹುಮಾನಗಳು ಗೆಲ್ಲುವ ಅವಕಾಶ ಇದೆ. ಬಂಪರ್ ಬಹುಮಾನವಾಗಿ ಮಹೀಂದ್ರ ಎಕ್ಸ್ ಯುವಿ 3ಎಕ್ಸ್ಒ ಕಾರು, ಮೊದಲ ಮತ್ತು ಎರಡನೇ ಬಹುಮಾನವಾಗಿ ಸುಝಕಿ ಅವೆನಿಸ್ ಸ್ಕೂಟರ್, ಮೂರನೇ ಬಹುಮಾನವಾಗಿ ಚಿನ್ನದ ನೆಕ್ಲೆಸ್ ಹಾಗೂ ಇನ್ನೂ 6 ಅತ್ಯಾಕಷರ್ಕ ಬಹುಮಾನಗಳಾದ, ಬೆಡ್ರೂಂ ಸೆಟ್, ಎಲ್ ಕಾರ್ನರ್ ಸೋಫಾ ಸೆಟ್, ಡೈನಿಂಗ್ ಟೇಬಲ್, ಡಿಡಿ ರೆಫ್ರಿಜರೇಟರ್, 43’ಟಿವಿ, 5 ಗಿಫ್ಟ್ ವೋಚರ್ಸ್ ಗೆಲ್ಲುವ ಅಪೂರ್ವ ಅವಕಾಶವಿದೆ. ಶೋರೂಂನಲ್ಲಿ ಬೆಡ್ರೂಮ್ ಸೆಟ್, ಡೈನಿಂಗ್ ಸೆಟ್, ಟಿವಿ ಯೂನಿಟ್, ಆಧುನಿಕ ಕಿಚನ್, ಕ್ರಾಕರಿ ಯೂನಿಟ್, ಕಚೇರಿ ಫರ್ನಿಚರ್, ಎಲೆಕ್ಟ್ರಾನಿಕ್ಸ್ ಹಾಗೂ ಗೃಹೋಪಯೋಗಿ ಉಪಕರಣಗಳು ಲಭ್ಯವಿದ್ದು, ಮನೆ ಹಾಗೂ ಕಚೇರಿಯ ಎಲ್ಲ ಅಗತ್ಯಗಳಿಗೆ ಒಂದೇ ಸ್ಥಳದಲ್ಲಿ ಸಂಪೂರ್ಣ ಪರಿಹಾರ ದೊರೆಯಲಿದೆ. ಆಕರ್ಷಕ ಆಫರ್ಗಳು, ಉತ್ತಮ ಗುಣಮಟ್ಟ ಮತ್ತು ಗ್ರಾಹಕ ಸ್ನೇಹಿ ಹಣಕಾಸು ಸೌಲಭ್ಯಗಳೊಂದಿಗೆ, ಈ ಹಬ್ಬದ ಕಾಲದಲ್ಲಿ ಕನಸಿನ ಮನೆಗಳನ್ನು ನಿರ್ಮಿಸುವ ತನ್ನ ಬದ್ಧತೆಯನ್ನು ವಿಕೆ ಫರ್ನಿಚರ್ ಆ್ಯಂಡ್ ಇಲೆಕ್ಟ್ರಾನಿಕ್ಸ್ ಮತ್ತೊಮ್ಮೆ ದೃಢಪಡಿಸಿದೆ. ಗ್ರಾಹಕರು ಯೆಯ್ಯಾಡಿ ಏರ್ಪೋರ್ಟ್ ರಸ್ತೆ, ತೊಕ್ಕೊಟ್ಟು-ಕಲ್ಲಾಪು, ವಾಮಂಜೂರು (ಸೈಂಟ್ ಜೋಸೆಫ್ ಚರ್ಚ್ ಎದುರು), ಹಾಗೂ ಲೇಡಿಹಿಲ್-ಚಿಲಿಂಬಿ ಶೋರೂಮ್ಗಳಿಗೆ ಭೇಟಿ ನೀಡಿ, ಹಬ್ಬದ ಶಾಪಿಂಗ್ನಲ್ಲಿ ಪಾಲ್ಗೊಳ್ಳುವಂತೆ ವಿಕೆ ಫರ್ನಿಚರ್ ಆ್ಯಂಡ್ ಇಲೆಕ್ಟ್ರಾನಿಕ್ಸ್ ಸಂಸ್ಥೆಯ ಪ್ರಕಟನೆ ತಿಳಿಸಿದೆ.
Magadi | ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಆತ್ಯಾಚಾರ ಆರೋಪ: ಮೂವರು ಆರೋಪಿಗಳ ಬಂಧನ
ಬೆಂಗಳೂರು : ಇಲ್ಲಿನ ಕಾಲೇಜುವೊಂದರಲ್ಲಿ ವ್ಯಾಸಂಗ ಮಾಡುತ್ತಿದ್ದ 19 ವರ್ಷದ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಆತ್ಯಾಚಾರ ನಡೆದಿದೆ ಎಂಬ ದೂರಿನ ಅನ್ವಯ ಮಾಗಡಿ ಠಾಣೆ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ವಿಕಾಸ್, ಪ್ರಶಾಂತ್ ಹಾಗೂ ಚೇತನ್ ಬಂಧಿತ ಆರೋಪಿಗಳಾಗಿದ್ದಾರೆ. ವಿಕಾಸ್ ಹಾಗೂ ಪ್ರಶಾಂತ್ ಬೆಂಗಳೂರಿನ ಖಾಸಗಿ ಕಾಲೇಜೊಂದರಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಚೇತನ್ ಮಾಗಡಿ ಪಟ್ಟಣದಲ್ಲಿ ಎಲೆಕ್ಟ್ರಿಕ್ ಕೆಲಸ ಮಾಡುತ್ತಾನೆ. ಇನ್ನು ಚೇತನ್ ಪತ್ನಿ ಹೆರಿಗೆಗೆ ಹೋಗಿದ್ದ ವೇಳೆ ಮನೆಯಲ್ಲಿಯೇ ಯುವತಿಯ ಮೇಲೆ ಆತ್ಯಾಚಾರ ಎಸಗಿದ್ದಾರೆ ಎಂದು ವರದಿಯಾಗಿದೆ. ಕಾಲೇಜು ವಿದ್ಯಾರ್ಥಿನಿಯನ್ನು ಪ್ರೀತಿಯ ನೆಪದಲ್ಲಿ ವಿಕಾಸ್ ಪರಿಚಯ ಮಾಡಿಕೊಂಡಿದ್ದನು. ಆನಂತರ ವಿದ್ಯಾರ್ಥಿನಿಯ ಜೊತೆ ಲೈಂಗಿಕ ಸಂಪರ್ಕ ನಡೆಸಿದ್ದು, ಅದನ್ನು ವಿಡಿಯೋ ಮಾಡಿಕೊಂಡು ವಿದ್ಯಾರ್ಥಿನಿಗೆ ಬೆದರಿಕೆ ಹಾಕಿದ್ದನು. ಮೂರು ತಿಂಗಳ ಹಿಂದೆ ವಿಡಿಯೋ ಮಾಡಿಕೊಂಡಿದ್ದ ವಿಕಾಸ್ ‘ನಾನು ಕರೆದಾಗಲೆಲ್ಲ ಬರಬೇಕು’ ಎಂದು ಹೇಳಿದ್ದನು ಎನ್ನಲಾಗಿದೆ. ನಂತರ ಪ್ರಶಾಂತ್, ಚೇತನ್ ಜೊತೆಗೆ ಸೇರಿಸಿಕೊಂಡು ವಿದ್ಯಾರ್ಥಿನಿಯ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಿದ್ದಾರೆ ಎನ್ನಲಾಗಿದೆ. ಇದರಿಂದ ಮನನೊಂದ ವಿದ್ಯಾರ್ಥಿನಿ ಡಿ.17ರಂದು ಬೆಂಗಳೂರು ದಕ್ಷಿಣ ಜಿಲ್ಲೆಯ ಮಾಗಡಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾಳೆ. ವಿದ್ಯಾರ್ಥಿನಿಯ ದೂರಿನ ಅನ್ವಯ ಭಾರತೀಯ ನ್ಯಾಯ ಸಂಹಿತಾ ಸೆಕ್ಷನ್ 64 (ಅತ್ಯಾಚಾರ), 70 (ಸಾಮೂಹಿಕ ಅತ್ಯಾಚಾರ) ಮತ್ತು 71 (ಪುನರಾವರ್ತಿತ ಅಪರಾಧಿಗಳಿಗೆ ಶಿಕ್ಷೆ) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.
ಕಲಬುರಗಿಯಲ್ಲಿ ‘ವಾರ್ತಾ ಭಾರತಿ’ ನೂತನ ಕಚೇರಿ ಉದ್ಘಾಟನೆ
ಡಿ.20 ರಂದು ಕಲ್ಯಾಣ ಕರ್ನಾಟಕ ಆವೃತ್ತಿ ಲೋಕಾರ್ಪಣೆ
ಮಿಸ್ಟರ್ ಕ್ಲೀನ್ ಚಿಟ್ ಸಚಿವ ಕೃಷ್ಣ ಬೈರೇಗೌಡರಿಂದ ಜಮೀನು ಒತ್ತುವರಿ ಆರೋಪ; ರಾಜೀನಾಮೆಗೆ ಒತ್ತಾಯ
ಕಂದಾಯ ಸಚಿವ ಕೃಷ್ಣ ಬೈರೇಗೌಡರು ತಮ್ಮ ತವರು ಜಿಲ್ಲೆಯ ಗರುಡನಪಾಳ್ಯದಲ್ಲಿ ಸರ್ಕಾರಿ ಜಮೀನು ಅಕ್ರಮವಾಗಿ ಒತ್ತುವರಿ ಮಾಡಿ ಫಾರಂ ಹೌಸ್ ನಿರ್ಮಿಸಿದ್ದಾರೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಓಂಶಕ್ತಿ ಚಲಪತಿ ಆರೋಪಿಸಿದ್ದಾರೆ. ಕೂಡಲೇ ಸಚಿವರು ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ದಾಖಲೆಗಳನ್ನು ತಿದ್ದುವ ಸಾಧ್ಯತೆಯಿದೆ ಎಂದು ಎಚ್ಚರಿಕೆ ನೀಡಿದರು.
ಮ್ಯೂಚುವಲ್ ಫಂಡ್ ಹೂಡಿಕೆದಾರರಿಗೆ ಸಿಹಿ ಸುದ್ದಿ: 'ಸೆಬಿ' ಹೊಸ ನಿಯಮದಿಂದ ಲಕ್ಷಾಂತರ ರೂ. ಲಾಭ! ಇಲ್ಲಿದೆ ಲೆಕ್ಕಾಚಾರ
ಸೆಬಿ ಮ್ಯೂಚುವಲ್ ಫಂಡ್ ನಿರ್ವಹಣಾ ವೆಚ್ಚವನ್ನು ಕಡಿತಗೊಳಿಸಿದ್ದು, ಡಿಸೆಂಬರ್ 17, 2025 ರಂದು ನಡೆದ ಮಂಡಳಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಹೊಸ ನಿಯಮದಂತೆ ಎಕ್ಸ್ಪೆನ್ಸ್ ರೇಶಿಯೋ 10-15 ಬೇಸಿಸ್ ಪಾಯಿಂಟ್ಸ್ ಕಡಿಮೆಯಾಗಲಿದೆ. ಅಲ್ಲದೆ, ಹೂಡಿಕೆದಾರರಿಗೆ ಹೆಚ್ಚು ಪಾರದರ್ಶಕತೆ ಒದಗಿಸಲು 'ಬೇಸ್ ಎಕ್ಸ್ಪೆನ್ಸ್ ರೇಶಿಯೋ' (ಬಿಇಆರ್) ಪರಿಚಯಿಸಲಾಗಿದೆ. ಇದು ಜಿಎಸ್ಟಿ ಮತ್ತು ಇತರೆ ತೆರಿಗೆಗಳನ್ನು ಹೊರತುಪಡಿಸಿ, ಕೇವಲ ಫಂಡ್ ನಿರ್ವಹಣಾ ವೆಚ್ಚವನ್ನು ಮಾತ್ರ ತೋರಿಸುತ್ತದೆ. ಈ ಚಿಕ್ಕ ಕಡಿತವು ದೀರ್ಘಾವಧಿಯಲ್ಲಿ ಹೂಡಿಕೆದಾರರ ಉಳಿತಾಯವನ್ನು ಗಣನೀಯವಾಗಿ ಹೆಚ್ಚಿಸಲಿದೆ.
‘ವಾರ್ತಾಭಾರತಿ’ ವರದಿ ಫಲಶ್ರುತಿ
Qatar ನ ಡಗಾಂಗ್ ಸ್ಮಶಾನದಲ್ಲಿ 21 ದಶಲಕ್ಷ ವರ್ಷಗಳ ಹಿಂದಿನ ಕಡಲ್ ಕುದುರೆ ಪತ್ತೆ!
ಡುಗಾಂಗ್ ಸ್ಮಶಾನ ಎಂದೇ ಕರೆಯಲಾಗುವ ಖತರ್ನ ನೈರುತ್ಯ ಮರುಭೂಮಿಯಲ್ಲಿ 21 ದಶಲಕ್ಷ ವರ್ಷಗಳ ಹಿಂದಿನ ಕಡಲ್ಕುದುರೆಯ ಪಳೆಯುಳಿಕೆ ಪತ್ತೆಯಾಗಿದೆ. ಮರಳಿನ ರಾಶಿಯಲ್ಲಿ ನಡೆದು ಸಾಗುತ್ತಿದ್ದಾಗ ದೂರ ದೂರಕ್ಕೂ ಮರಳೇ ಮರಳು. ಆಕಸ್ಮಿಕವಾಗಿ ಮೂಳೆಗಳ ರಾಶಿ ನಿಮ್ಮನ್ನು ಸ್ವಾಗತಿಸುತ್ತದೆ. ಕೆಲವು 50 ವರ್ಷಗಳ ಹಿಂದೆ ಖತರ್ ನ ನೈರುತ್ಯ ಮರುಭೂಮಿಯಲ್ಲಿ ನಡೆದು ಸಾಗುತ್ತಿದ್ದ ಭೂವಿಜ್ಞಾನಿಗಳಿಗೆ ಇಂತಹುದೇ ಅನುಭವವಾಗಿತ್ತು. ಅಲ್ ಮಝಾಬಿಯ ಪ್ರದೇಶದಲ್ಲಿ ಅವರು ಆಗ ಅನ್ವೇಷಿಸಿದ್ದ ಸರೀಸೃಪವನ್ನು ಪುರಾತನ ಸರೀಸೃಪಗಳ ಮತ್ತೊಂದು ಪಳೆಯುಳಿಕೆ ಎಂದುಕೊಂಡಿದ್ದರು. ► ಡುಗಾಂಗ್ ಸ್ಮಶಾನದಲ್ಲಿ ಪಳೆಯುಳಿಕೆಗಳು ವರ್ಷಗಳ ನಂತರ, 2000ರಲ್ಲಿ ಖತರ್ ವಸ್ತುಸಂಗ್ರಹಾಲಯ ಮತ್ತು ಸ್ಮಿಥ್ ಸೊನಿಯನ್ ಸಂಸ್ಥೆಯ ವಿಜ್ಞಾನಿಗಳ ತಂಡವೊಂದು ಮತ್ತೊಮ್ಮೆ ಅದನ್ನು ಅಧ್ಯಯನ ಮಾಡಲು ನಿರ್ಧರಿಸಿತು. ಪ್ರದೇಶವನ್ನು ಪುನಃ ಪರಿಶೀಲಿಸಿ ಪಳೆಯುಳಿಕೆಯ ನಿಗೂಢತೆಯನ್ನು ಬಗೆಹರಿಸುವ ಉತ್ಸಾಹ ಅವರಲ್ಲಿತ್ತು. ಈ ಪ್ರದೇಶವನ್ನು ಈಗ ‘ಡುಗಾಂಗ್ ಸ್ಮಶಾನ’ ಎಂದು ಕರೆಯಲಾಗುತ್ತಿದೆ. ಹೊಸ ಪರೀಕ್ಷೆಯಲ್ಲಿ ಈ ವಿಶಾಲ ಪ್ರದೇಶವು 21 ದಶಲಕ್ಷ ವರ್ಷಗಳಷ್ಟು ಹಳೆಯದಾದ ಮೂಳೆಗಳ ರಾಶಿಯೆಂದು ತಿಳಿದುಬಂತು. ಕಡಲ್ ಕುದುರೆಗಳು, ಶಾರ್ಕ್ ಗಳು, ಬಾರಾಕುಡಾ ತರಹದ ಮೀನುಗಳು, ಇತಿಹಾಸಪೂರ್ವದ ಡಾಲ್ಫಿನ್ಗಳು ಹಾಗೂ ಕಡಲಾಮೆಗಳು ಇಲ್ಲಿ ಪತ್ತೆಯಾಗಿವೆ. 170ಕ್ಕೂ ಅಧಿಕ ಪಳೆಯುಳಿಕೆಗಳಿಂದ ಸಮೃದ್ಧವಾಗಿರುವ ಈ ಸ್ಥಳ ಜಗತ್ತಿನಲ್ಲೇ ಅತ್ಯಂತ ಶ್ರೀಮಂತ ಸಾಗರ ಜೀವಿಗಳ ಪಳೆಯುಳಿಕೆ ಪ್ರದೇಶವೆಂದು ಖ್ಯಾತಿ ಗಳಿಸಿದೆ. ಕೆಲವರು ಇದನ್ನು ಚಿಲಿಯ ಪ್ರಸಿದ್ಧ ‘ತಿಮಿಂಗಿಲ ಗುಡ್ಡೆ’ಯೊಂದಿಗೆ ಹೋಲಿಸಿದ್ದಾರೆ. ಅಲ್ಲಿ ಡಜನ್ಗಟ್ಟಲೆ ತಿಮಿಂಗಿಲಗಳ ಅಸ್ಥಿಪಂಜರಗಳು ದೊರೆತಿದ್ದವು. ► ಹೊಸ ಕಡಲ್ ಕುದುರೆ ಪತ್ತೆ ಇತ್ತೀಚೆಗೆ ಇದೇ ಪ್ರದೇಶದಲ್ಲಿ ಮತ್ತೊಂದು ಮಹತ್ವದ ಅನ್ವೇಷಣೆ ನಡೆದಿದೆ. ಪೀರ್ಜೆ ಜರ್ನಲ್ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ‘ಸಾಲ್ವಾಸಿರೆನ್ ಕತಾರೆನ್ಸಿಸ್’ ಎಂಬ ಹೊಸ ಪ್ರಭೇದದ ಕಡಲ್ ಕುದುರೆ ಪತ್ತೆಯಾಗಿದೆ. ಈ ಪ್ರಾಣಿ ಡಗಾಂಗ್ ಗಳಂತೆ ಕಾಣಿಸಿಕೊಂಡರೂ ಕೆಲವು ಮಹತ್ವದ ವ್ಯತ್ಯಾಸಗಳನ್ನು ಹೊಂದಿದೆ. ಡಗಾಂಗ್ಗಳು ಇಂದಿಗೂ ಈ ಪ್ರದೇಶದಿಂದ ಸುಮಾರು 10 ಮೈಲು ದೂರದ ಸಮುದ್ರ ಪ್ರದೇಶದಲ್ಲಿ ವಾಸಿಸುತ್ತಿವೆ. ಆದರೆ ಪತ್ತೆಯಾದ ಸಾಲ್ವಾಸಿರೆನ್ ಗಾತ್ರದಲ್ಲಿ ಸಣ್ಣದು, ನೇರವಾದ ಮೂತಿ, ಸಣ್ಣ ದಂತಗಳು ಹಾಗೂ ಹಿಂಗಾಲು ಮೂಳೆಗಳನ್ನು ಹೊಂದಿತ್ತು. ಆಧುನಿಕ ಕಡಲ್ಕುದುರೆಗಳು ಲಕ್ಷಾಂತರ ವರ್ಷಗಳ ಹಿಂದೆ ಈ ಲಕ್ಷಣಗಳನ್ನು ಕಳೆದುಕೊಂಡಿವೆ. ► ಪರಿಸರ ಬದಲಾವಣೆಯ ಇತಿಹಾಸ ಅಲ್ ಮಝಾಬಿಯ ಪ್ರದೇಶದಲ್ಲಿ ಕಂಡುಬಂದ ಪಳೆಯುಳಿಕೆಗಳ ಮಿಶ್ರಣವನ್ನು ಪರಿಶೀಲಿಸಿದಾಗ, ಇಂದಿನ ಮರುಭೂಮಿ ಒಂದು ಕಾಲದಲ್ಲಿ ಸಮುದ್ರವಾಗಿದ್ದು, ಜೀವಜಗತ್ತು ಸಮೃದ್ಧವಾಗಿದ್ದುದನ್ನು ಖಚಿತಪಡಿಸುತ್ತದೆ. ಲಕ್ಷಾಂತರ ವರ್ಷಗಳ ಪರಿಸರ ಬದಲಾವಣೆಯ ದೀರ್ಘ ಇತಿಹಾಸವನ್ನು ಈ ಬಂಡೆಗಳು ತಮ್ಮೊಳಗೆ ಸಂಗ್ರಹಿಸಿಕೊಂಡಿವೆ. ಸಮುದ್ರದ ತಾಪಮಾನ ಏರಿಕೆ, ಲವಣಾಂಶದ ಹೆಚ್ಚಳ ಹಾಗೂ ಮಾಲಿನ್ಯಗಳಿಗೆ ಇಂದಿನ ಸಾಗರ ಪರಿಸರ ವ್ಯವಸ್ಥೆಗಳು ಹೇಗೆ ಪ್ರತಿಕ್ರಿಯಿಸಬಹುದು ಎಂಬುದನ್ನು ಊಹಿಸಲು ಈ ಪಳೆಯುಳಿಕೆಗಳು ನೆರವಾಗಲಿವೆ ಎಂದು ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ. ► ಡಗಾಂಗ್ ಗಳ ಅನಿಶ್ಚಿತ ಭವಿಷ್ಯ ಇಂದು ಅರೆಬಿಯನ್ ಕೊಲ್ಲಿಯಲ್ಲಿ ವಿಶ್ವದಲ್ಲೇ ಅತಿಹೆಚ್ಚು ಡಗಾಂಗ್ಗಳ ಸಮೂಹಗಳು ಕಂಡುಬರುತ್ತವೆ. ಆದರೆ ಅವುಗಳ ಭವಿಷ್ಯ ಅನಿಶ್ಚಿತವಾಗಿದೆ. ಸಮುದ್ರ ಹುಲ್ಲಿನ ಆವಾಸಸ್ಥಾನಗಳು ವೇಗವಾಗಿ ನಾಶವಾಗುತ್ತಿರುವುದು ಇದಕ್ಕೆ ಪ್ರಮುಖ ಕಾರಣವಾಗಿದೆ. ಇಂದಿನ ಡಗಾಂಗ್ ಗಳು ಪರಿಸರ ವ್ಯವಸ್ಥೆಯಲ್ಲಿ ನಿರ್ವಹಿಸುತ್ತಿರುವ ಪಾತ್ರವನ್ನು ಹಿಂದೆ ಸಾಲ್ವಾಸಿರೆನ್ ಗಳು ನಿರ್ವಹಿಸುತ್ತಿದ್ದವು ಎಂದು ವಿಜ್ಞಾನಿಗಳು ನಂಬಿದ್ದಾರೆ. ಅಂದರೆ, ಸಮುದ್ರ ಹುಲ್ಲನ್ನು ತಿನ್ನುವ ಮೂಲಕ ಸಮುದ್ರ ಪರಿಸರವನ್ನು ಆರೋಗ್ಯಕರವಾಗಿಡುವುದು!

17 C