SENSEX
NIFTY
GOLD
USD/INR

Weather

17    C
... ...View News by News Source

ಕರ್ನಾಟಕದಲ್ಲಿ Cold Wave: ಮುಂದಿನ 48 ಗಂಟೆಗಳ ಹವಾಮಾನ ಮುನ್ಸೂಚನೆ ಮತ್ತು ಎಚ್ಚರಿಕೆ

ಕಳೆದ ಕೆಲವು ದಿನಗಳಿಂದ ಕರ್ನಾಟಕದ ವಾತಾವರಣವು ನಿಗೂಢವಾಗಿ ಬದಲಾಗುತ್ತಿದೆ. ಕಲ್ಯಾಣ ಕರ್ನಾಟಕದಿಂದ ಹಿಡಿದು ಕರಾವಳಿಯವರೆಗೆ ಜನರು ಮುಂಜಾನೆ ಎದ್ದಾಗ ಪ್ರಕೃತಿಯ ಒಂದು ವಿಚಿತ್ರ ಸನ್ನಿವೇಶಕ್ಕೆ ಸಾಕ್ಷಿಯಾಗುತ್ತಿದ್ದಾರೆ. ಇದು ಕೇವಲ ಸಾಧಾರಣ ಮಂಜಲ್ಲ, ಬದಲಾಗಿ ಇಡೀ ರಾಜ್ಯವನ್ನೇ ನಡುಗಿಸುತ್ತಿರುವ ಒಂದು ಗಂಭೀರ ಹವಾಮಾನ ವೈಪರೀತ್ಯದ ಮುನ್ಸೂಚನೆಯಾಗಿದೆ. ದಕ್ಷಿಣದ ಬಯಲು ಸೀಮೆ ಮತ್ತು ಉತ್ತರದ ಗಡಿ ಜಿಲ್ಲೆಗಳ ನಡುವೆ ಹವಾಮಾನದಲ್ಲಿ ಕಂಡುಬರುತ್ತಿರುವ ಈ ಸಾಮ್ಯತೆಯು ತಜ್ಞರನ್ನೂ ಆಶ್ಚರ್ಯಚಕಿತಗೊಳಿಸಿದೆ. ರಾಜ್ಯದ ಕೆಲವು ಭಾಗಗಳಲ್ಲಿ ಜನರು ಬೆಳಿಗ್ಗೆ ಹೊರಬರಲು ಕನಿಷ್ಠ ಒಂದು ವಾರದಿಂದ ... Read more The post ಕರ್ನಾಟಕದಲ್ಲಿ Cold Wave: ಮುಂದಿನ 48 ಗಂಟೆಗಳ ಹವಾಮಾನ ಮುನ್ಸೂಚನೆ ಮತ್ತು ಎಚ್ಚರಿಕೆ appeared first on Karnataka Times .

ಕರ್ನಾಟಕ ಟೈಮ್ಸ್ 20 Dec 2025 12:37 am

ಕೇಂದ್ರ ಕೃಷಿ ಸಚಿವರಿಗೆ ಹಲಸಿನ ಹಣ್ಣು ನೀಡಿ ವಿಶೇಷ ಮನವಿ ಸಲ್ಲಿಸಿದ ದೇವೇಗೌಡರು, ಏನದು?

ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡ ಅವರು ಕೇಂದ್ರ ಕೃಷಿ ಸಚಿವ ಶಿವರಾಜ್‌ ಸಿಂಗ್‌ ಚೌಹಾಣ್‌ ಅವರನ್ನು ಭೇಟಿ ಮಾಡಿ ಹುಣಸೆ, ಹಲಸು, ನೇರಳೆ ಮುಂತಾದ ಪೌಷ್ಟಿಕಾಂಶಯುಕ್ತ ಹಣ್ಣುಗಳಿಗಾಗಿ ಪ್ರತ್ಯೇಕ ರಾಷ್ಟ್ರೀಯ ಮಂಡಳಿ ಸ್ಥಾಪಿಸುವಂತೆ ಮನವಿ ಮಾಡಿದ್ದಾರೆ. ಈ ಹಣ್ಣುಗಳು ಔಷಧೀಯ ಗುಣಗಳಿದ್ದು, ಸಾವಯವವಾಗಿ ಬೆಳೆಯುವ ಇವುಗಳಿಗೆ ದೇಶೀಯ ಹಾಗೂ ರಫ್ತು ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆಯಿದೆ ಎಂದು ಅವರು ಒತ್ತಿ ಹೇಳಿದರು.

ವಿಜಯ ಕರ್ನಾಟಕ 19 Dec 2025 11:42 pm

ಲೈಂಗಿಕ ಅಪರಾಧಿ ಜೆಫ್ರಿ ಎಪಿಸ್ಟೇನ್ ಜೊತೆಗೆ ಬಿಲ್ ಗೇಟ್ಸ್ ಫೋಟೋ ಏಕೆ? ಎಪಿಸ್ಟೇನ್ ಕಡತಗಳ ಬಿಡುಗಡೆಗೆ ಡೆಮಾಕ್ರಟ್ಸ್ ಆಗ್ರಹ

ಲೈಂಗಿಕ ಅಪರಾಧಿ ಜೆಫ್ರಿ ಎಪಿಸ್ಟೇನ್ ಜೊತೆಗೆ ಅಮೆರಿಕದ ಪ್ರಮುಖ ಉದ್ಯಮಿಗಳು ಮತ್ತು ಇತರ ಕ್ಷೇತ್ರಗಳ ಖ್ಯಾತನಾಮರು ಇರುವ ಫೋಟೋಗಳನ್ನು ಡೆಮಾಕ್ರಟ್ಸ್ ಬಿಡುಗಡೆ ಮಾಡಿದ್ದಾರೆ. ಶಿಕ್ಷಗೆ ಒಳಗಾಗಿರುವ ಲೈಂಗಿಕ ಅಪರಾಧಿ ಜೆಫ್ರಿ ಎಪಿಸ್ಟೇನ್ ಅವರ ಎಸ್ಟೇಟ್ ನಿಂದ ಅಮೆರಿಕದ ಸಂಸತ್ತಿನ ಡೆಮಾಕ್ರಾಟ್ ಗಳು ಗುರುವಾರ ಡಿಸೆಂಬರ್ 18ರಂದು ಹೊಸ ಫೋಟೋಗಳನ್ನು ಬಿಡುಗಡೆ ಮಾಡಿದ್ದಾರೆ. ಈ ಚಿತ್ರಗಳಲ್ಲಿ ಬಿಲಿಯನೇರ್ ಬಿಲ್ಗೇಟ್ಸ್, ಚಲನಚಿತ್ರ ನಿರ್ಮಾಪಕ ವುಡಿ ಅಲೆನ್ ಮತ್ತು ತತ್ವಜ್ಞಾನಿ ನೋಮ್ ಚೋಮ್ಸ್ಕಿ ಮೊದಲಾದವರಿದ್ದಾರೆ. ಆದರೆ ಈ ಫೋಟೋಗಳ ದಿನಾಂಕ ಮತ್ತು ವಿವರ ಪತ್ತೆಯಾಗಿಲ್ಲ. ವಿವಾದಾತ್ಮಕ ‘ಲೊಲಿಟ’ ಕಾದಂಬರಿಯ ಸಾಲುಗಳನ್ನು ಮಹಿಳೆಯ ದೇಹದ ವಿವಿಧ ಭಾಗಗಳಲ್ಲಿ ಬರೆದಿರುವಂತಹ ಚಿತ್ರಗಳನ್ನೂ ಡೆಮಾಕ್ರಾಟ್ ಗಳು ಬಿಡುಗಡೆ ಮಾಡಿದ್ದಾರೆ. ಅಮೆರಿಕದ ಸಂಸತ್ತು ಎಪಿಸ್ಟೇನ್ ನ ಎಸ್ಟೇಟ್ನಿಂದ ಪಡೆದ 95,000 ಚಿತ್ರಗಳಲ್ಲಿ ಇವುಗಳು ಸೇರಿವೆ. ಈ ಚಿತ್ರಗಳಿಂದಾಗಿ ಎಪಿಸ್ಟೇನ್ ಗೆ ಸಂಬಂಧಿಸಿದ ಕಡತಗಳನ್ನು ಡಿಸೆಂಬರ್ 19ರ ಅಂತಿಮ ಗಡುವಿಗೆ ಮೊದಲು ಬಹಿರಂಗಪಡಿಸುವಂತೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತದ ಮೇಲೆ ಒತ್ತಡ ಬಿದ್ದಿದೆ. ಪ್ರಭಾವಿ ವ್ಯಕ್ತಿಗಳ ಚಿತ್ರಗಳ ಬಿಡುಗಡೆ ಅನೇಕ ಪ್ರಭಾವಿ ಮತ್ತು ಜನಪ್ರಿಯ ವ್ಯಕ್ತಿಗಳ ಫೋಟೋಗಳು ಲೈಂಗಿಕ ಅಪರಾಧಿ ಜೆಫ್ರಿ ಎಪಿಸ್ಟೇನ್ನ್ ನ ಎಸ್ಟೇಟ್ನಿಂದ ದೊರಕಿದೆ. ಅಮೆರಿಕ ಸಂಸತ್ತಿನ ಪ್ರಮುಖ ತನಿಖಾ ಮಂಡಳಿಯಾದ ಹೌಸ್ ಓವರ್ಸೈಟ್ ಕಮಿಟಿಯಲ್ಲಿರುವ ಡೆಮಾಕ್ರಾಟ್ಗಳು ಈ ಫೋಟೋಗಳನ್ನು ಪ್ರಕಟಿಸಿದ್ದಾರೆ. ಮೈಕ್ರೋಸಾಫ್ಟ್ ಸಹಸಂಸ್ಥಾಪಕ ಬಿಲ್ ಗೇಟ್ಸ್ ಅವರು ಮುಖ ಮರೆ ಮಾಡಿರುವ ಮಹಿಳೆಯರ ಜೊತೆಗೆ ಫೋಟೋದಲ್ಲಿರುವುದನ್ನು ತೋರಿಸಲಾಗಿದೆ. ಪ್ರಸಿದ್ಧ ಭಾಷಾ ಶಾಸ್ತ್ರಜ್ಞ ಮತ್ತು ತತ್ವಜ್ಞಾನಿ ನೋವಮ್ ಚೋಮ್ಸ್ಕಿ ಅವರು ಖಾಸಗಿ ವಿಮಾನದಲ್ಲಿ ಎಪಿಸ್ಟೇನ್ ಜೊತೆಗೆ ಕುಳಿತಿರುವ ಚಿತ್ರವನ್ನೂ ಬಿಡುಗಡೆ ಮಾಡಲಾಗಿದೆ. ಬಿಲ್ ಗೇಟ್ಸ್ ಮತ್ತು ಚೋಮ್ಸ್ಕಿ ಅವರು ಎಪಿಸ್ಟೇನ್ ನ ಪರಿಚಿತರು ಎನ್ನುವ ಊಹಾಪೋಹಗಳು ಹರಿದಾಡಿದ್ದವು. ಗೇಟ್ಸ್ ಈ ಮೊದಲಿಗೆ ಎಪಿಸ್ಟೇನ್ ಅನ್ನು ಭೇಟಿಯಾಗಿರುವುದು ಜೀವನದ ಅತಿದೊಡ್ಡ ತಪ್ಪು ಎಂದು ಹೇಳಿಕೆ ನೀಡಿದ್ದರು. ಅವರು ಸಿಎನ್ಎನ್ ಗೆ ಹೇಳಿರುವ ಪ್ರಕಾರ, “ದತ್ತಿ ಕಾರ್ಯಕ್ರಮವೊಂದಕ್ಕಾಗಿ ಎಪಿಸ್ಟೇನ್ ಜೊತೆಗೆ ಅನೇಕ ಬಾರಿ ಭೋಜನ ಕೂಟದಲ್ಲಿ ಭಾಗವಹಿಸಿದ್ದೆ. ಆದರೆ ಆ ಕಾರ್ಯಕ್ರಮ ನಡೆಯದ ಕಾರಣ ಸಂಬಂಧ ಅಲ್ಲಿಗೇ ಮುಕ್ತಾಯವಾಗಿತ್ತು.” ಟ್ರಂಪ್ ಅವರ ಮಾಜಿ ಸಲಹೆಗಾರ ಸ್ಟೀವ್ ಬನಾನ್ ಎಪಿಸ್ಟೇನ್ನ ಪಕ್ಕದ ಡೆಸ್ಕ್ನಲ್ಲಿ ಕುಳಿತಿರುವುದು ಸೆರೆಹಿಡಿಯಲಾಗಿದೆ. ನ್ಯೂಯಾರ್ಕ್ ಟೈಮ್ಸ್ ಲೇಖಕ ಮತ್ತು ಅಂಕಣಕಾರ ಡೇವಿಡ್ ಬ್ರೂಕ್ಸ್ ಅವರೂ ಅನೇಕ ಫೋಟೋಗಳಲ್ಲಿ ಎಪಿಸ್ಟೇನ್ ನ ಜೊತೆಗೆ ಫೋಟೋದಲ್ಲಿ ಪತ್ತೆಯಾಗಿದ್ದಾರೆ. ಯಾವುದೋ ಭೋಜನ ಕೂಟದಲ್ಲಿ ಅವರು ಗೂಗಲ್ ಸಹಸಂಸ್ಥಾಪಕ ಸರ್ಜಿ ಬ್ರಿನ್ ಪಕ್ಕದಲ್ಲಿ ಅವರು ಕುಳಿತಿದ್ದರು. ನ್ಯೂಯಾರ್ಕ್ಟೈಮ್ಸ್ ಈ ಬಗ್ಗೆ ಹೇಳಿಕೆ ನೀಡಿದ್ದು, “ಭೋಜನ ಕೂಟ 2011ರಲ್ಲಿ ನಡೆದಿತ್ತು. ಎಪಿಸ್ಟೇನ್ ಅಪ್ರಾಪ್ತರ ಮೇಲೆ ಲೈಂಗಿಕ ದೌರ್ಜನ್ಯದಲ್ಲಿ ಶಿಕ್ಷೆಗೊಳಗಾದ ಮೂರು ವರ್ಷಗಳ ನಂತರ ಈ ಫೋಟೋ ತೆಗೆಯಲಾಗಿದೆ. ಬ್ರೂಕ್ಸ್ಗೆ ಎಪಿಸ್ಟೇನ್ ನ ಜೊತೆಗೆ ನಂತರ ಯಾವುದೇ ಸಂಪರ್ಕ ಇರಲಿಲ್ಲ. ಪತ್ರಕರ್ತರಾಗಿ ಡೇವಿಡ್ ಬ್ರೂಕ್ಸ್ ತಮ್ಮ ಅಂಕಣಕ್ಕೆ ಮಾಹಿತಿ ಪಡೆಯಲು ನಿಯಮಿತವಾಗಿ ಪ್ರಮುಖ ಉದ್ಯಮಿಗಳನ್ನು ಬೇಟಿಯಾಗುತ್ತಾರೆ. 2011ರ ಕಾರ್ಯಕ್ರಮವೂ ಅಂತಹುದೇ ಒಂದು ಭೋಜನ ಕೂಟವಾಗಿತ್ತು. ಬ್ರೂಕ್ಸ್ ಅವರಿಗೆ ಅದಕ್ಕಿಂತ ಮೊದಲು ಅಥವಾ ನಂತರ ಎಪಿಸ್ಟೇನ್ ಜೊತೆಗೆ ಯಾವುದೇ ಸಂಪರ್ಕವಿರಲಿಲ್ಲ” ಎಂದು ತಿಳಿಸಿದೆ. ಕಳೆದ ವಾರ ಬಿಡುಗಡೆ ಮಾಡಲಾಗಿರುವ ಎಪಿಸ್ಟೇನ್ ಎಸ್ಟೇಟ್ ಫೋಟೋಗಳಲ್ಲಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಮಾಜಿ ಅಧ್ಯಕ್ಷ ಬಿಲ್ ಕ್ಲಿಂಟನ್, ಸಿನಿಮಾ ನಿರ್ದೇಶಕ ವುಡಿ ಅಲೆನ್, ಮಾಜಿ ಅಮೆರಿಕದ ಕೋಶಾಧಿಕಾರಿ ಲ್ಯಾರಿ ಸಮನ್ಸ್, ವಕೀಲರಾದ ಅಲನ್ ಡೆರ್ಶೊವಿಟ್ಜ್, ಮಾಜಿ ಬ್ರಿಟಿಷ್ ರಾಜಕುಮಾರ ಆಂಡ್ರ್ಯೂ ಮೌಂಟ್ಬ್ಯಾಟನ್-ವಿಂಡ್ಸರ್ ಮತ್ತು ಇತರರು ಇದ್ದಾರೆ. ಈ ಚಿತ್ರಗಳಲ್ಲಿ ಕಾಣಿಸಿಕೊಂಡ ಮಾತ್ರಕ್ಕೆ ಅವರು ತಪ್ಪು ಮಾಡಿದ್ದಾರೆ ಎಂದು ಊಹಿಸುವುದು ಸರಿಯಲ್ಲ. *ಚಿತ್ರಗಳಲ್ಲಿ ಇನ್ನೇನು ವಿವರಗಳಿದ್ದವು? ಹೌಸ್ ಓವರ್ಸೈಟ್ ಕಮಿಟಿ ಬಿಡುಗಡೆ ಮಾಡಿದ ಚಿತ್ರಗಳಲ್ಲಿ ವ್ಲಾದಿಮಿರ್ ನಬೊಕೊವ್ನ ಕಾದಂಬರಿ ‘ಲೊಲಿತ’ದಿಂದ ತೆಗೆದುಕೊಂಡ ವಾಕ್ಯಗಳನ್ನು ಮಹಿಳೆಯ ದೇಹದ ವಿವಿಧ ಭಾಗಗಳಲ್ಲಿ ಬರೆದಿರುವುದನ್ನು ತೋರಿಸಲಾಗಿದೆ. ಒಂದು ಫೋಟೋಗ್ರಾಫ್ ನ ಹಿನ್ನೆಲೆಯಲ್ಲಿ ಪುಸ್ತಕ ಇರಿಸಿರುವುದನ್ನು ಕಾಣಬಹುದು. ಈ ಪುಸ್ತಕದಲ್ಲಿ ವ್ಯಕ್ತಿಯೊಬ್ಬ ಮಗುವಿನ ಕುರಿತಾದ ಲೈಂಗಿಕ ಗೀಳು ಸಂಬಂಧಿತ ಕತೆಯನ್ನು ನಿರೂಪಿಸಲಾಗಿದೆ. ಒಂದು ಫೋಟೋದಲ್ಲಿ ಮಹಿಳೆಯ ಎದೆಯ ಮೇಲೆ ಬರಹಗಳು ಇವೆ. ಇನ್ನೊಂದು ಚಿತ್ರದಲ್ಲಿ ಮಹಿಳೆಯ ಕಾಲಿನ ಮೇಲೆ ಬರಹಗಳು ಇವೆ. ಅನೇಕ ವಿದೇಶಿ ಪಾಸ್ಪೋರ್ಟ್ ಗಳ ಚಿತ್ರಗಳೂ ಇವೆ. ಲಿಥೂವಾನಿಯ, ರಷ್ಯಾ, ಝೆಕ್ ರಿಪಬ್ಲಿಕ್ ಮತ್ತು ಉಕ್ರೇನ್ನಂತಹ ದೇಶಗಳ ಮಹಿಳೆಯರ ಪಾಸ್ಪೋರ್ಟ್ಗಳ ಫೋಟೋಗಳಿವೆ. “ನನಗೆ ಒಬ್ಬ ಸ್ಕೌಟ್ ಪರಿಚಯವಿದೆ. ಆಕೆ ಕೆಲವು ಹುಡುಗಿಯರನ್ನು ಕಳುಹಿಸಿದ್ದಾಳೆ. ಆದರೆ ಒಂದು ಹುಡುಗಿಗೆ 1000 ಡಾಲರ್ ಹೇಳುತ್ತಾರೆ”. ಮೊದಲಾಗಿ 18 ವರ್ಷ ವಯಸ್ಸಿನ ಯುವತಿಯ ಕುರಿತ ಮಾತುಕತೆಯ ವಿವರಗಳ ಸ್ಕ್ರೀನ್ಶಾಟ್ಗಳು ಇವೆ. ಮತ್ತೊಂದು ಫೋಟೋದಲ್ಲಿ ಎಪಿಸ್ಟೇನ್ ಮುಖ ಮರೆಮಾಡಿದ ಮಹಿಳೆಯರ ಜೊತೆಗೆ ಆಪ್ತವಾಗಿ ಕುಳಿತಿರುವುದನ್ನು ಕಾಣಬಹುದು. ಎಪಿಸ್ಟೇನ್ ಕಡತಗಳ ಬಿಡುಗಡೆಗೆ ಒತ್ತಡ ಅಮೆರಿಕ ಹೌಸ್ ಓವರ್ಸೈಟ್ ಕಮಿಟಿಯಲ್ಲಿರುವ ಡೆಮಾಕ್ರಟ್ಗಳು ಫೋಟೋಗಳ ಸಂದರ್ಭದ ವಿವರ ನೀಡಲಿಲ್ಲ. ಆದರೆ ಇತ್ತೀಚೆಗಿನ ಚಿತ್ರಗಳು “ಜೆಫ್ರಿ ಎಪಿಸ್ಟೇನ್ ಮತ್ತು ಆತನ ಜೊತೆಗಾರರು ತೊಡಗಿಸಿಕೊಂಡಿರುವ ಮಹಿಳೆಯರ ಪಾಸ್ಪೋರ್ಟ್ಗಳಾಗಿವೆ. ಎಪಿಸ್ಟೇನ್ ಕಕ್ಷೆಯಲ್ಲಿದ್ದ ಶ್ರೀಮಂತ ಮತ್ತು ಪ್ರಭಾವೀ ಪುರುಷರ ಫೋಟೋಗಳು ಮತ್ತು ಎಪಿಸ್ಟೇನ್ಗೆ ಮಹಿಳೆಯರನ್ನು ನೇಮಿಸುತ್ತಿರುವ ಸಂಬಂಧಿತ ಪಠ್ಯದ ಸಂದೇಶಗಳು” ಎಂದು ವಿವರ ನೀಡಿದ್ದಾರೆ. ಎಪಿಸ್ಟೇನ್ನ ಜಾಲ ಮತ್ತು ಆತನ ಚಟುವಟಿಕೆಗಳ ಬಗ್ಗೆ ಜನರಿಗೆ ಅರಿವು ಮೂಡಿಸಲು ಫೋಟೋಗಳನ್ನು ಬಿಡುಗಡೆ ಮಾಡಲಾಗಿದೆ ಎಂದು ಡೆಮಾಕ್ರಟ್ಸ್ ತಿಳಿಸಿದ್ದಾರೆ. “ಕಮಿಟಿಯ ಬಳಿ ಇಂತಹ ಸಾವಿರಾರು ಫೋಟೋಗಳು ಇವೆ. ಹೊಸ ಫೋಟೋಗಳಿಂದ ನ್ಯಾಯಾಂಗ ಇಲಾಖೆಯ ಬಳಿ ಏನಿದೆ ಎನ್ನುವ ಬಗ್ಗೆ ಇನ್ನಷ್ಟು ಕುತೂಹಲ ಮೂಡಿಸಿದೆ. ಶ್ವೇತ ಭವನ ಇವರನ್ನು ರಕ್ಷಿಸಲು ನೋಡುವುದನ್ನು ನಾವು ತಡೆಯಬೇಕಿದೆ. ಇದೀಗ ಎಪಿಸ್ಟೇನ್ನ ಕಡತಗಳನ್ನು ಸರ್ಕಾರ ಬಿಡುಗಡೆ ಮಾಡಬೇಕು” ಎಂದು ಅವರು ಹೇಳಿದ್ದಾರೆ. ಆದರೆ ಕಮಿಟಿಯಲ್ಲಿ ಬಹುಸಂಖ್ಯಾತಾಗಿರುವ ರಿಪಬ್ಲಿಕನ್ಸ್ ಪ್ರಕಾರ, “ಡೆಮಾಕ್ರಟ್ ಗಳು ಕೆಲವೊಂದು ಫೋಟೋಗಳನ್ನು ಆರಿಸಿ ಡೊನಾಲ್ಡ್ ಟ್ರಂಪ್ ಕುರಿತಂತೆ ಕಪೋಲಕಲ್ಪಿತ ನಿರೂಪಣೆಗೆ ಹೊರಟಿದ್ದಾರೆ.” ಆದರೆ ಇತ್ತೀಚೆಗೆ ಬಿಡುಗಡೆ ಮಾಡಿದ ಫೋಟೋಗಳು ಕಡತಗಳನ್ನು ಅಂತಿಮ ಗಡುವಿಗೆ ಮೊದಲು ಬಿಡುಗಡೆ ಮಾಡುವಂತೆ ಸರ್ಕಾರದ ಮೇಲೆ ಒತ್ತಡ ಹೇರಲಿದೆ. ನ್ಯಾಯಾಂಗ ಇಲಾಖೆ ಶುಕ್ರವಾರದ ಮೊದಲು ಕಡತಗಳನ್ನು ಬಿಡುಗಡೆ ಮಾಡಲಿದೆಯೇ ಎನ್ನುವ ಬಗ್ಗೆ ತುಟಿಪಿಟಿಕ್ ಎನ್ನದೆ ಮೌನವಾಗಿದೆ.

ವಾರ್ತಾ ಭಾರತಿ 19 Dec 2025 11:20 pm

IND Vs SA- ಹಾರ್ದಿಕ್ ಪಾಂಡ್ಯ ಬಳಿಕ ವರುಣ್ ಚಕ್ರವರ್ತಿ ಸವಾರಿ; ಹರಿಣಗಳ ವಿರುದ್ಧ ಭಾರತಕ್ಕೆ ಟಿ20 ಸರಣಿ

ಭಾರತ ತಂಡ ದಕ್ಷಿಣ ಆಫ್ರಿಕಾ ವಿರುದ್ಧ 30 ರನ್ ಗಳಿಂದ ಗೆದ್ದು 5 ಪಂದ್ಯಗಳ ಟಿ20 ಸರಣಿಯನ್ನು 3-1 ಅಂತರದಿಂದ ತನ್ನದಾಗಿಸಿಕೊಂಡಿತು. ತಿಲಕ್ ವರ್ಮಾ ಅರ್ಧಶತಕ, ಹಾರ್ದಿಕ್ ಪಾಂಡ್ಯ ಅವರ ವೇಗದ ಅರ್ಧಶತಕ ಮತ್ತು ಆಲ್ರೌಂಡ್ ಆಟ, ವರುಣ್ ಚಕ್ರವರ್ತಿ ಅವರ ಮಾರಕ ಬೌಲಿಂಗ್ ಭಾರತದ ಗೆಲುವಿಗೆ ಕಾರಣವಾಯಿತು. ಈ ಗೆಲುವಿನೊಂದಿಗೆ ಭಾರತ ಸತತ 14ನೇ ಟಿ20 ಸರಣಿ ಗೆದ್ದ ಸಾಧನೆ ಮಾಡಿದೆ.

ವಿಜಯ ಕರ್ನಾಟಕ 19 Dec 2025 11:14 pm

ಬೆಂಗಳೂರಿನಲ್ಲಿ ಪಿಯುಸಿ ವಿದ್ಯಾರ್ಥಿನಿಗೆ ಮದ್ಯ ಕುಡಿಸಿ ಅತ್ಯಾಚಾರ; ಗೆಳೆಯನ ವಿರುದ್ಧ ಪೋಕ್ಸೋ ಕೇಸ್

ಪಿಯುಸಿ ವಿದ್ಯಾರ್ಥಿನಿಯ ಮೇಲೆ ಅಪ್ರಾಪ್ತ ವಯಸ್ಕನೊಬ್ಬ ಅತ್ಯಾಚಾರ ಎಸಗಿದ ಘಟನೆ ಯಲಹಂಕದಲ್ಲಿ ಬೆಳಕಿಗೆ ಬಂದಿದೆ. ಅಪ್ರಾಪ್ತೆಗೆ ಮದ್ಯ ಕುಡಿಸಿ ಲಾಡ್ಜ್‌ಗೆ ಕರೆದೊಯ್ದು ಈ ಕೃತ್ಯ ಎಸಗಿದ್ದು, ಈ ವೇಳೆ ಇಬ್ಬರು ಗೆಳೆಯರು ಆತನಿಗೆ ಸಹಕರಿಸಿದ್ದಾರೆ ಎನ್ನಲಾಗಿದೆ. ಸಂತ್ರಸ್ತೆಯ ದೂರಿನ ಅನ್ವಯ ಪೋಕ್ಸೊ ಪ್ರಕರಣ ದಾಖಲಿಸಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಮಗಳು ಮನೆಗೆ ಬಾರದ್ದನ್ನು ಕಂಡು ಶಂಕೆ ವ್ಯಕ್ತಪಡಿಸಿದಾಗ ಪ್ರಕರಣ ಬೆಳಕಿಗೆ.

ವಿಜಯ ಕರ್ನಾಟಕ 19 Dec 2025 10:59 pm

ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಡಿ. 20ರಂದು ವಿಜಯನಗರಕ್ಕೆ ಭೇಟಿ

ವಿಜಯನಗರ, ಡಿ. 19: ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವೆ ನಿರ್ಮಲಾ ಸೀತಾರಾಮನ್ ಡಿ.20ರಂದು ನಗರಕ್ಕೆ ಭೇಟಿ ನೀಡಲಿದ್ದಾರೆ. ಡಿ.20ರಂದು ಬೆಳಗ್ಗೆ 10 ಗಂಟೆಗೆ ನಗರದ ಅಮರಾವತಿ ಸರಕಾರಿ ಬಾಲಕಿಯರ ಪಿಯು ಕಾಲೇಜಿನಲ್ಲಿ ವಿಜಯ ಪಥ ಪ್ರಾಜೆಕ್ಟ್‌ಗೆ ಅವರು ಚಾಲನೆ ನೀಡಲಿದ್ದಾರೆ. ಬೆಳಗ್ಗೆ 11:30ಕ್ಕೆ ವಿಜಯಶ್ರೀ ಹೆರಿಟೇಜ್‌ನಲ್ಲಿ ನಡೆಯಲಿರುವ ಚಿಂತನ ಶಿಬಿರದಲ್ಲಿ ಭಾಗವಹಿಸಲಿದ್ದಾರೆ. ರಾತ್ರಿ 7:30ಕ್ಕೆ ಹಂಪಿಯಲ್ಲಿ ಧ್ವನಿ ಮತ್ತು ಬೆಳಕು ಪ್ರದರ್ಶನ ವೀಕ್ಷಣೆ, ಬಳಿಕ ರಾತ್ರಿ ಹಂಪಿಯಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಡಿ.21ರಂದು ಬೆಳಗ್ಗೆ 10 ಗಂಟೆಗೆ ಕಮಲಾಪುರದ ಹವಾಮ ಕಚೇರಿ ಆವರಣದಲ್ಲಿ ಸಸಿ ನೆಡುವ ಅಭಿಯಾನಕ್ಕೆ ಚಾಲನೆ ನೀಡಲಿದ್ದು, ಬೆಳಗ್ಗೆ 10:30ಕ್ಕೆ ಕಮಲಾಪುರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.

ವಾರ್ತಾ ಭಾರತಿ 19 Dec 2025 10:58 pm

ಪರಪ್ಪನ ಅಗ್ರಹಾರ ಜೈಲಿನಲ್ಲಿ ಬರೋಬ್ಬರಿ 101 ಮೊಬೈಲ್‌, ಇಯರ್‌ ಫೋನ್‌, ಚಾಕುಗಳು ಪತ್ತೆ; ಬೆಚ್ಚಿಬಿದ್ದ ಪೊಲೀಸರು

ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಅಕ್ರಮ ಚಟುವಟಿಕೆಗಳ ಮೇಲೆ ಅಧಿಕಾರಿಗಳು ಕಠಿಣ ಕ್ರಮ ಕೈಗೊಂಡಿದ್ದಾರೆ. ಒಂದು ತಿಂಗಳಲ್ಲಿ 101 ಮೊಬೈಲ್‌ಗಳು, ಸಿಮ್‌ಗಳು, ಚಾರ್ಜರ್‌ಗಳು, ಇಯರ್‌ಪೋನ್‌ಗಳು ಮತ್ತು ಚಾಕುಗಳು ಪತ್ತೆಯಾಗಿವೆ. ಗುರುವಾರ ತಡರಾತ್ರಿ ನಡೆದ ದಿಢೀರ್‌ ದಾಳಿಯಲ್ಲಿ 33 ಮೊಬೈಲ್‌ಗಳು ಸಿಕ್ಕಿವೆ. ಈ ಸಂಬಂಧ ಹಲವು ಪ್ರಕರಣಗಳು ದಾಖಲಾಗಿದ್ದು, ಈ ದಾಳಿ ನಡೆಸಿದ ಅಧಿಕಾರಿಗಳಿಗೆ ಬಹುಮಾನ ಘೋಷಿಸಲಾಗಿದೆ.

ವಿಜಯ ಕರ್ನಾಟಕ 19 Dec 2025 10:44 pm

ಗ್ರೀನ್‍ಕಾರ್ಡ್ ಲಾಟರಿ ವ್ಯವಸ್ಥೆ ಸ್ಥಗಿತ: ಟ್ರಂಪ್ ಘೋಷಣೆ

ವಾಷಿಂಗ್ಟನ್, ಡಿ.19: ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ನಿರ್ದೇಶನದಂತೆ ಅಮೆರಿಕಾದಲ್ಲಿ ಗ್ರೀನ್‍ಕಾರ್ಡ್ ಲಾಟರಿ ಕಾರ್ಯಕ್ರಮವನ್ನು ಸ್ಥಗಿತಗೊಳಿಸಲು ಪೌರತ್ವ ಮತ್ತು ವಲಸೆ ಸೇವೆಗೆ ಸೂಚಿಸಿರುವುದಾಗಿ ಆಂತರಿಕ ಭದ್ರತಾ ಕಾರ್ಯದರ್ಶಿ ಕ್ರಿಸ್ತಿ ನೊಯೆಮ್ ಸಾಮಾಜಿಕ ಮಾಧ್ಯಮ `ಎಕ್ಸ್'ನಲ್ಲಿ ಪೋಸ್ಟ್ ಮಾಡಿದ್ದಾರೆ. ಬ್ರೌನ್ ವಿವಿಯಲ್ಲಿ ಇತ್ತೀಚೆಗೆ ನಡೆದಿದ್ದ ಮಾರಣಾಂತಿಕ ಗುಂಡಿನ ದಾಳಿ ಘಟನೆಯ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಘಟನೆಯ ಶಂಕಿತ ಆರೋಪಿಯನ್ನು 48 ವರ್ಷದ ಪೋರ್ಚುಗಲ್ ಪ್ರಜೆ ಕ್ಲಾಡಿಯೊ ವ್ಯಲೆಂಟ್ ಎಂದು ಗುರುತಿಸಲಾಗಿದೆ. ಶಂಕಿತ ಆರೋಪಿ ` ಡೈವರ್ಸಿಟಿ ಲಾಟರಿ ಇಮಿಗ್ರೆಂಟ್ ವೀಸಾ ಪ್ರೋಗ್ರಾಂ'ನಡಿ ಅಮೆರಿಕ ಪ್ರವೇಶಿಸಿದ ಬಳಿಕ ಗ್ರೀನ್ ಕಾರ್ಡ್ ಪಡೆದಿದ್ದ. ಈ ಪ್ರಕ್ರಿಯೆಯನ್ನು 2017ರಲ್ಲೇ ಕೊನೆಗೊಳಿಸಲು ಅಧ್ಯಕ್ಷ ಟ್ರಂಪ್ ಪ್ರಯತ್ನಿಸಿದ್ದರು. ಒಂದು ವೇಳೆ ಆಗಲೇ ರದ್ದಾಗಿದ್ದರೆ ಇಂತಹ ಕೃತ್ಯಕ್ಕೆ ಆಸ್ಪದ ಇರುತ್ತಿರಲಿಲ್ಲ' ಎಂದು ಕ್ರಿಸ್ತಿ ನೊಯೆಮ್ ಹೇಳಿದ್ದಾರೆ.

ವಾರ್ತಾ ಭಾರತಿ 19 Dec 2025 10:37 pm

ಸರಕಾರಿ ಜಾಗ ಒತ್ತುವರಿ ಮಾಡಿಲ್ಲ, ತನಿಖೆಗೆ ಸಿದ್ಧ : ಕೃಷ್ಣ ಭೈರೇಗೌಡ

ಬೆಳಗಾವಿ : ಕೋಲಾರ ಜಿಲ್ಲೆಯ ಗರುಡುಪಾಳ್ಯ ಗ್ರಾಮದಲ್ಲಿ ಒಂದು ಇಂಚು ಭೂಮಿ ಒತ್ತುವರಿ ಮಾಡಿಲ್ಲ. ಈ ಸಂಬಂಧ ಯಾವುದೇ ತನಿಖೆಗೆ ಸಿದ್ಧನಿದ್ದು, ಶಿಫಾರಸು ಮಾಡಿ ಎಂದು ಕಂದಾಯ ಸಚಿವ ಕೃಷ್ಣ ಭೈರೇಗೌಡ ವಿಧಾನಸಭೆಯ ಸ್ಪೀಕರ್ ಯು.ಟಿ.ಖಾದರ್​ಗೆ ಮನವಿ ಮಾಡಿದ್ದಾರೆ. ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದ ಶುಕ್ರವಾರ ವಿಧಾನಸಭೆಯ ಕಲಾಪದಲ್ಲಿ ತಮ್ಮ ಮೇಲೆ ಬಂದಿರುವ ಕೆರೆ, ಸ್ಮಶಾನ ಒತ್ತುವರಿ ಆರೋಪ ಸಂಬಂಧ ದಾಖಲೆ ಸಮೇತ ಸ್ಪಷ್ಟನೆ ನೀಡಿದರು.‌ ಗರುಡುಪಾಳ್ಯ ಗ್ರಾಮ ಮೈಸೂರು ಮಹಾರಾಜರ ಮನೆತನಕ್ಕೆ‌ ಸೇರಿದ ಗ್ರಾಮ. 1923 ರಲ್ಲಿ ಮಹಾರಾಜರು ಖರೀದಿ ಮಾಡಿದ್ದರು. ಆಗ ಕೃಷಿ ತರಬೇತಿ ಕೇಂದ್ರ ನಡೆಯುತ್ತಿತ್ತು.‌ ಮಹಾರಾಜರೇ 1953ರಲ್ಲಿ ಇದನ್ನು ನಮ್ಮ ಅಜ್ಜ ಚೌಡೇಗೌಡ ಅವರಿಗೆ 10 ವರ್ಷಕ್ಕೆ ಗುತ್ತಿ​​ಗೆ ಕೊಟ್ಟಿದ್ದರು.‌ ಅಲ್ಲಿಂದ ಇಲ್ಲಿವರೆಗೆ ಆ ಜಮೀನಿನಲ್ಲಿ ವ್ಯವಸಾಯ ಮಾಡುತ್ತಿದ್ದೇವೆ. ಶ್ರೀಕಂಠ ದತ್ತ ನರಸಿಂಹರಾಜ ಒಡೆಯರ್ ಅವರ ಟ್ರಸ್ಟ್​ಗೆ ಸೇರಿದ ಜಮೀನು ಇದು. ಅವರ ಪರವಾಗಿ ಅಂದಿನ ರಾಜರ ಕಾರ್ಯದರ್ಶಿ ಅಧಿಕಾರಿ ನಾರಾಯಣಸ್ವಾಮಿ ಎಂಬವರು ಗುತ್ತಿ​ಗೆ ನಮ್ಮ ಅಜ್ಜನಿಗೆ ಕೊಟ್ಟಿದ್ದಾರೆ ಎಂದು ವಿವರಿಸಿದರು. ಗುತ್ತಿಗೆ ಅವಧಿ ಮುಗಿಯುವ ಮೊದಲೇ ರಾಜಮನೆತನದವರು ಅದನ್ನು ಮಾರಾಟ ಮಾಡಲು ಮುಂದಾಗುತ್ತಾರೆ. ನಮ್ಮ ಹಣವಿಲ್ಲದ ಕಾರಣ ನಮ್ಮ ಅಜ್ಜ ಖರೀದಿ ಮಾಡಲು ಆಗಿಲ್ಲ. 1959ರಲ್ಲಿ ಹಬೀಬ್ ಉಲ್ಲಾ ಖಾನ್​​ಗೆ ಮಹಾರಾಜರು ಅದನ್ನು ಮಾರಾಟ ಮಾಡುತ್ತಾರೆ. ಅದರ ವಿರುದ್ಧ ನಮ್ಮ ಅಜ್ಜ ಕಾನೂನು ಹೋರಾಟ ನಡೆsiದಾಗ ಆ ಜಮೀನು ಚೌಡೇಗೌಡರಿಗೆ ಬರುತ್ತದೆ ಎಂದು ಅವರು ಉಲ್ಲೇಖಿಸಿದರು. ಆ ಗ್ರಾಮದಲ್ಲಿನ 133.13 ಎಕರೆ ಒಣ ಹಾಗೂ 18.35 ಎಕರೆ ಹಸಿ ಮತ್ತು 21.21 ಎಕರೆ ತೋಟ, 82.20 ಎಕರೆ ವ್ಯವಸಾಯ ಮಾಡದ ಭೂಮಿ ಸೇರಿ ಗ್ರಾಮದ ಸಂಪೂರ್ಣ ಸರ್ವೆ ನಂಬರ್​​ಗಳು 256.9 ಎಕರೆ ಭೂಮಿ ಕ್ರಯಪತ್ರ ಆಗಿದೆ. ಮಹಾರಾಜರು ಸಂಪೂರ್ಣ ಗ್ರಾಮವನ್ನು ಮಾರಾಟ ಮಾಡಿದ್ದಾರೆ. 82.20 ಎಕರೆ ವ್ಯವಸಾಯ ಮಾಡದ ಭೂಮಿಯಲ್ಲಿ ಎರಡು ಕೆರೆ ಇದೆ. ಊರು ಸೇರಿದೆ. ಕಲ್ಲು ಗುಡ್ಡವೂ ಸೇರಿದೆ.‌ ಇದೆಲ್ಲವೂ ಮಾರಾಟವಾಗಿದೆ. ಅಲ್ಲಿಂದ ಅದು ನಮಗೆ ಬಂದಿದೆ. ಕ್ರಯ ಪತ್ರದಲ್ಲಿ ಈ ಎಲ್ಲ ಭೂಮಿ ಕ್ರಯ ಆಗಿದೆ ಎಂದು ಸಚಿವರು ವಿವರಿಸಿದರು. ಈಗ ಕೆರೆ ಒತ್ತುವರಿ ಆರೋಪ ಬಂದಿದೆ. ಈ ಊರಲ್ಲಿ ಎರಡು ಕೆರೆ ಇದೆ. ಆ ಎರಡೂ ಕೆರೆ ಅಸ್ತಿತ್ವದಲ್ಲಿ ಇವೆ. ಯಾರೂ ಬೇಕಾದರೂ ಪರಿಶೀಲಿಸಿ, ಈ ಕೆರೆಗಳಲ್ಲಿ ಒಂದೂ ಇಂಚು ಒತ್ತುವರಿ ಆಗಿದೆಯಾ ಎಂದು ಪರೀಕ್ಷಿಸಲಿ. ಬೇಕಾದರೆ ವಿಪಕ್ಷಗಳ ತಂಡ ಮಾಧ್ಯಮದವರ ಜೊತೆ ಬಂದು ತಾಪಸಣೆ ಮಾಡಲಿ ಎಂದು ಸವಾಲು ಹಾಕಿದರು. ಈಗ ಸರ್ವೆ ನಂ.46, 47ರಲ್ಲಿ ಕೆರೆ ಒತ್ತುವರಿ ಆಗಿದೆ ಎಂದು ಆರೋಪ ಬಂದಿದೆ. ಆ ಜಮೀನಿನ‌ ಬಗ್ಗೆ ನನಗೆ ಗೊತ್ತೇ ಇಲ್ಲ. ಇಲ್ಲಿವರೆಗೆ ಅದರ ಮಾಲಿಕತ್ವ ಹೊಂದಿದ್ದೇವೆ. ದಾಖಲೆಯಲ್ಲಿ ಏನಿದೆ ಎಂದು ಒಂದು ದಿನವೂ ನಾವು ನೋಡಲು ಹೋಗಿಲ್ಲ. ಕೆಲವರು ಬಹಳ ಸಂಶೋಧನೆ ಮಾಡಿದ್ದಾರೆ. ಹೀಗಾಗಿ ನಾನು ಆ ಜಮೀನು ಬಗ್ಗೆ ತಿಳಿಯಬೇಕಾಯಿತು ಎಂದು ತಿಳಿಸಿದರು. ನನ್ನ ಕೆಲ ಕಠಿಣ ತೀರ್ಮಾನದಿಂದ ಬಾಧಿತರಾದವರು ಕೆಲ ಅಧಿಕಾರಿಗಳು ಇದ್ದಾರೆ. ಇದರಲ್ಲಿ ನಮ್ಮವರು ಇದ್ದಾರೆ.‌ ಅವರು ಆಸಕ್ತಿ ತೋರಿ ಇದನ್ನು ಶೋಧ ಮಾಡಿದ್ದಾರೆ ಎಂದು ಅವರು ಹೇಳಿದರು. ಈ ವೇಳೆ ವಿಪಕ್ಷ ನಾಯಕ ಆರ್.ಅಶೋಕ್ ಮಾತನಾಡಿ, ನಮಗೆ ಅವರು ಯಾವುದೇ ದಾಖಲೆಗಳನ್ನು ಕೊಟ್ಟಿಲ್ಲ. ನಮ್ಮ ಬಳಿ ಇರುವ ದಾಖಲೆಗೂ ಅವರು ಹೇಳಿರುವುದಕ್ಕೂ ತಾಳೆನೇ ಆಗುತ್ತಿಲ್ಲ.‌ ಹಾಗಾಗಿ ಸಾಕಷ್ಟು ಗೊಂದಲ ಇದೆ. ಕಂದಾಯ ಸಚಿವರಾಗಿ ಅವರು ತನಿಖೆ ಮಾಡಲಿ. ಸತ್ಯಾಸತ್ಯತೆ ಹೊರಬರಲಿ ಎಂದು ಒತ್ತಾಯಿಸಿದರು. ಇದಕ್ಕೆ ಉತ್ತರಿಸಿದ ಸಚಿವರು, ಸರ್ವೆ ನಂ.48ರಲ್ಲಿ ಕೆರೆ ಇದೆ. ನಾವೇ ಹೂಳೆತ್ತಿ. ಕೆರೆ ಸಂರಕ್ಷಣೆ ಮಾಡಿ ಭದ್ರವಾಗಿ ಇಟ್ಟು ಕೊಂಡಿದ್ದೇವೆ. ಕೆರೆ ಸರಕಾರದ ಹೆಸರಲ್ಲಿ ಇದೆ.‌ ಅದರಲ್ಲಿ ಯಾವುದೇ ಒತ್ತುವರಿ ಆಗಿಲ್ಲ. ಸರ್ವೆ ನಂ. 47ರಲ್ಲಿ ಪ್ರತಿ ಪುಸ್ತಕದಲ್ಲಿ 1 ಎಕರೆ ಸ್ಮಶಾನ ಎಂದು ಬಂದಿದೆ. ಅದನ್ನು ಬೇಕಾದರೆ ಬಿಟ್ಟು ಕೊಡಲು ಸಿದ್ಧ ಎಂದರು. ಈ ವೇಳೆ ವಿಪಕ್ಷ ನಾಯಕ ಆರ್.ಅಶೋಕ್ ಮಧ್ಯಪ್ರವೇಶಿಸಿ, ಸ್ಮಶಾನ ಬೇಕಾದರೆ ವಾಪಸು ಕೊಡುತ್ತೇನೆ ಅಂದರೆ ನೀವು ತಪ್ಪು ಮಾಡಿದ್ದೀರಿ ಎಂದು ಆಗುತ್ತೆ ಎಂದರು. ಈ ವೇಳೆ ಎದ್ದು ನಿಂತ ಸಚಿವ ಭೈರತಿ ಸುರೇಶ್, ಅವರು ಸ್ಮಶಾನ ಜಾಗ ಬಿಟ್ಟು ಕೊಡಲು ಸಿದ್ಧರಿದ್ದಾರೆ ಎಂದ ಮೇಲೂ ಏನಿದೆ ಎಂದು ವಿಪಕ್ಷಗಳನ್ನು ಕೇಳಿದರು. ಅದಕ್ಕೆ ಬಿಜೆಪಿ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದಾಗ ಸ್ಪೀಕರ್ ಸದನವನ್ನು ಮುಂದೂಡಿದರು.

ವಾರ್ತಾ ಭಾರತಿ 19 Dec 2025 10:31 pm

ಉತ್ತರ ಭಾರತದಾದ್ಯಂತ ಶೀತಲ ವಾತಾವರಣ; ದಿಲ್ಲಿಯಲ್ಲಿ 150 ವಿಮಾನಯಾನ ರದ್ದು

ಹೊಸದಿಲ್ಲಿ, ಡಿ. 19: ಉತ್ತರ ಭಾರತದ ಹಲವು ಭಾಗಗಳಲ್ಲಿ ಶುಕ್ರವಾರ ಶೀತಲ ಹಾಗೂ ಮಂಜು ಕವಿದ ವಾತಾವರಣ ನೆಲೆಸಿದ್ದು, ದಿಲ್ಲಿಯ ಇಂದಿರಾಗಾಂಧಿ ಅಂತರ್‌ ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನಗಳ ಹಾರಾಟದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ. ದಿಲ್ಲಿ ವಿಮಾನ ನಿಲ್ದಾಣದಲ್ಲಿ ಕಳಪೆ ಗೋಚರತೆ ಹಿನ್ನೆಲೆಯಲ್ಲಿ, ಶುಕ್ರವಾರ 79 ಹೊರಹೋಗುವ ವಿಮಾನಗಳು ಮತ್ತು 73 ಒಳಬರುವ ವಿಮಾನಗಳನ್ನು ರದ್ದುಪಡಿಸಲಾಯಿತು. ದಟ್ಟ ಮಂಜಿನಿಂದಾಗಿ ವಿಮಾನಗಳ ಹಾರಾಟಕ್ಕೆ ತೊಂದರೆಯಾಯಿತು ಎಂದು ವಿಮಾನ ನಿಲ್ದಾಣ ತಿಳಿಸಿದೆ. ಆದರೆ, ಗೋಚರತೆ ಸುಧಾರಿಸಿದ ಬಳಿಕ ಪರಿಸ್ಥಿತಿ ಸುಧಾರಿಸಿತು. ಗೋಚರತೆಯಲ್ಲಿನ ಏರಿಳಿತದಿಂದಾಗಿ, ದಿಲ್ಲಿ ರಾಷ್ಟ್ರ ರಾಜಧಾನಿ ವಲಯ, ಅಮೃತಸರ, ಜಬಲ್ಪುರ ಮತ್ತು ಜಲಂಧರ್ ವಿಮಾನ ನಿಲ್ದಾಣಗಳಲ್ಲಿನ ವಿಮಾನ ಹಾರಾಟಗಳ ವೇಳಾಪಟ್ಟಿಯಲ್ಲಿ ಬದಲಾವಣೆಗಳಾಗಿವೆ ಎಂಬ ಮಾಹಿತಿಯನ್ನು ವಿಮಾನಯಾನ ಸಂಸ್ಥೆಗಳು ಹೊರಡಿಸಿದವು. ಈ ನಡುವೆ, ಉತ್ತರ ಭಾರತದಾದ್ಯಂತ ಮಂಜುಕವಿದ ವಾತಾವರಣ ನೆಲೆಸಿರುವ ಹಿನ್ನೆಲೆಯಲ್ಲಿ, ವಿಮಾನ ನಿಲ್ದಾಣಗಳ ಕಾರ್ಯಾಚರಣೆಯಲ್ಲಿ ವಿಳಂಬ ಅಥವಾ ವ್ಯತ್ಯಯ ಉಂಟಾಗಬಹುದು ಎಂದು ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರ ಹೇಳಿಕೆಯೊಂದರಲ್ಲಿ ತಿಳಿಸಿದೆ.

ವಾರ್ತಾ ಭಾರತಿ 19 Dec 2025 10:30 pm

ಅನುಸೂಚಿತ ಜಾತಿ, ಅನುಸೂಚಿತ ಬುಡಕಟ್ಟುಗಳ ಆಯೋಗ ತಿದ್ದುಪಡಿ ವಿಧೇಯಕಕ್ಕೆ ಮೇಲ್ಮನೆ ಅಸ್ತು

ಬೆಳಗಾವಿ : ವಿಧಾನಸಭೆಯಿಂದ ತಿದ್ದುಪಡಿಯೊಂದಿಗೆ ಅಂಗೀಕಾರವಾದ ರೂಪದಲ್ಲಿರುವ ರಾಜ್ಯ ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಬುಡಕಟ್ಟುಗಳ ಆಯೋಗ ತಿದ್ದುಪಡಿ ವಿಧೇಯಕ-2025ಕ್ಕೆ ಮೇಲ್ಮನೆಯಲ್ಲಿ ಶುಕ್ರವಾರ ಅಂಗೀಕಾರ ದೊರೆಯಿತು. ಕರ್ನಾಟಕ ರಾಜ್ಯ ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಬುಡಕಟ್ಟುಗಳ ಆಯೋಗದ ಸದಸ್ಯರನ್ನಾಗಿ ಅನುಸೂಚಿತ ಬುಡಕಟ್ಟುಗಳಿಗೆ ಸೇರಿದ ಒಬ್ಬ ವ್ಯಕ್ತಿಯನ್ನು ಹಾಗೂ ಒಬ್ಬ ಮಹಿಳೆಯನ್ನು ನಾಮನಿರ್ದೇಶಿಸಲು ಮತ್ತು ಸರಕಾರದಿಂದ ಹೊಸ ದತ್ತಾಂಶ ಅಥವಾ ಮಾಹಿತಿಯನ್ನು ಸ್ವೀಕರಿಸಿದ ಮೇಲೆ ಅನುಸೂಚಿತ ಜಾತಿಗಳ ಸದಸ್ಯರಿಗೆ ಉಪ-ವರ್ಗೀಕರಣದ ಶೇಕಡವಾರು ಮೀಸಲಾತಿಯಲ್ಲಿ ಅಗತ್ಯ ಮಾರ್ಪಾಡನ್ನು ಮಾಡಲು ಶಿಫಾರಸ್ಸು ಮಾಡುವಂತೆ, ಕರ್ನಾಟಕ ರಾಜ್ಯ ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಬುಡಕಟ್ಟುಗಳ ಆಯೋಗಕ್ಕೆ ಅಧಿಕಾರವನ್ನು ನೀಡಲು ಕರ್ನಾಟಕ ರಾಜ್ಯ ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಬುಡಕಟ್ಟುಗಳ ಆಯೋಗ ಅಧಿನಿಯಮ, 2002 (2002ರ ಕರ್ನಾಟಕ ಅಧಿನಿಯಮ 20)ನ್ನು ತಿದ್ದುಪಡಿ ಮಾಡುವುದು ಅವಶ್ಯಕವೆಂದು ಪರಿಗಣಿಸಿ ವಿಧೇಯಕ ಜಾರಿ ಮಾಡಲಾಗುತ್ತಿದೆ ಎಂದು ಸಮಾಜ ಕಲ್ಯಾಣ ಸಚಿವರಾದ ಡಾ.ಎಚ್.ಸಿ.ಮಹಾದೇವಪ್ಪ ಸದನಕ್ಕೆ ತಿಳಿಸಿದರು. ಸದನದಲ್ಲಿ ಸದಸ್ಯರ ಚರ್ಚೆಯ ನಂತರ ಪ್ರಸ್ತಾವವನ್ನು ಸಭಾಪತಿ ಬಸವರಾಜ್ ಹೊರಟ್ಟಿ ಅವರು ಧ್ವನಿಮತಕ್ಕೆ ಹಾಕಿದರು. ಸದಸ್ಯರ ಸಹಮತದೊಂದಿಗೆ ವಿಧೇಯಕಕ್ಕೆ ಅಂಗೀಕಾರ ದೊರೆಯಿತು.

ವಾರ್ತಾ ಭಾರತಿ 19 Dec 2025 10:28 pm

ಚಿನ್ನ ಕಳ್ಳ ಸಾಗಣೆ ಪ್ರಕರಣ; ನಟಿ ರನ್ಯಾ ರಾವ್‌ಗೆ ಹೈಕೋರ್ಟ್‌ನಿಂದ ಸಿಗದ ರಿಲೀಫ್‌, ಸದ್ಯ ಜೈಲೇ ಗತಿ

ನಟಿ ರನ್ಯಾ ರಾವ್ ಚಿನ್ನ ಕಳ್ಳ ಸಾಗಣೆ ಪ್ರಕರಣದಲ್ಲಿ ಹೈಕೋರ್ಟ್‌ನಿಂದ ರಿಲೀಫ್‌ ಪಡೆಯುವಲ್ಲಿ ವಿಫಲರಾಗಿದ್ದಾರೆ. ಅವರ ಬಂಧನ ಅಕ್ರಮವೆಂದು ಸಲ್ಲಿಸಿದ್ದ ಅರ್ಜಿ ವಜಾಗೊಂಡಿದೆ. ಕೇಂದ್ರ ಸರ್ಕಾರದ ಕಾಪಿಪೋಸಾ ಕಾಯ್ದೆಯಡಿ ಬಂಧನವನ್ನು ನ್ಯಾಯಾಲಯ ಎತ್ತಿಹಿಡಿದಿದೆ. ಹೀಗಾಗಿ ರನ್ಯಾ ಮತ್ತು ಇತರ ಆರೋಪಿಗಳು ಸದ್ಯ ಜೈಲಿನಲ್ಲಿಯೇ ಇರಬೇಕಾಗಿದೆ. ಪ್ರಕರಣದ ವಿಚಾರಣೆ ಮುಂದುವರಿದಿದೆ.

ವಿಜಯ ಕರ್ನಾಟಕ 19 Dec 2025 10:27 pm

ಸಿಎಂ ಸಿದ್ದರಾಮಯ್ಯಗೆ ಕ್ರಿಸ್‌ಮಸ್ ಶುಭಾಶಯ ಕೋರಿದ ಐವನ್ ಡಿಸೋಜಾ

ಮಂಗಳೂರು: ನಾಡಿನ ಸಮಸ್ತ ಕ್ರೈಸ್ತ ಸಮುದಾಯದ ಪರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕ್ರೈಸ್ತ ನಾಯಕರು ಹಾಗೂ ವಿಧಾನ ಪರಿಷತ್‌ನ ಶಾಸಕ ಐವನ್ ಡಿಸೋಜಾ ಕ್ರಿಸ್‌ಮಸ್ ಶುಭಾಶಯ ಕೋರಿದರು. ಕರಾವಳಿ ಕರ್ನಾಟಕದಲ್ಲಿ ಕ್ರಿಸ್‌ಮಸ್ ಹಬ್ಬಕ್ಕೆ ಸಿದ್ಧಪಡಿಸಲಾದ ಕೇಕ್, ನ್ಯೂರಿ, ಕುಕ್ಕೀಸ್, ಕಿಡಿಯೋ, ಅಕ್ಕಿಲಡ್ಡು, ಖಾದ್ಯ ತಿಂಡಿ ತಿನಿಸುಗಳ ಜತೆಗೆ ಕ್ರಿಸ್‌ಮಸ್ ಟೋಪಿ ನೀಡಿ ಶುಭಾಶಯ ಕೋರಲಾಯಿತು. ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರು ನಾಡಿನ ಎಲ್ಲಾ ಜನತೆಗೆ ಕ್ರಿಸ್‌ಮಸ್ ಹಬ್ಬ ಶಾಂತಿ ಸೌಹಾರ್ದತೆಯಿಂದ ಕೂಡಿರಲಿ ಎಂದು ಶುಭ ಹಾರೈಸಿದರು. ಕಾಂಗ್ರೆಸ್ ನಾಯಕರಾದ ವಿಜಯ ಬೈಕಂಪಾಡಿ, ಕ್ರೈಸ್ತ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಮಾಜಿ ನಿರ್ದೇಶಕ ಎಸ್. ಚಿನ್ನಪ್ಪ ಮತ್ತು ಸಿರಿಲ್ ಡಿಸೋಜಾ ಉಪಸ್ಥಿತರಿದ್ದರು.

ವಾರ್ತಾ ಭಾರತಿ 19 Dec 2025 10:22 pm

Bihar | ವೋಟ್ ಚೋರಿ ವಿವಾದವನ್ನು ಮತ್ತೆ ಕೆದಕಿದ ಜಿತನ್ ರಾಮ್ ಮಾಂಝಿ ವೀಡಿಯೊ

ಪಾಟ್ನಾ,ಡಿ.19: ಕೇಂದ್ರ ಸಚಿವ ಹಾಗೂ ಎಚ್‌ಎಎಂ ಮುಖ್ಯಸ್ಥ ಜಿತನ್ ರಾಮ್ ಮಾಂಝಿಯವರು ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಹಸ್ತಕ್ಷೇಪದ ಕುರಿತು ಮಾತನಾಡಿದ್ದನ್ನು ತೋರಿಸಿರುವ ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಕಾಣಿಸಿಕೊಂಡ ಬಳಿಕ ಬಿಹಾರದಲ್ಲಿ ಹೊಸ ರಾಜಕೀಯ ಬಿರುಗಾಳಿಯೆದ್ದಿದ್ದು, ಪ್ರತಿಪಕ್ಷಗಳು ಬಿಜೆಪಿ ನೇತೃತ್ವದ ಎನ್‌ಡಿಎ ವಿರುದ್ಧ ‘ವೋಟ್ ಚೋರಿ’ ಆರೋಪಗಳನ್ನು ಪುನರುಚ್ಚರಿಸಿದ್ದಾರೆ. ಗಯಾ ಲೋಕಸಭಾ ಕ್ಷೇತ್ರದಲ್ಲಿ ಚಿತ್ರೀಕರಿಸಲಾಗಿದೆ ಎನ್ನಲಾಗಿರುವ ವೀಡಿಯೊವನ್ನು ಆರ್‌ಜೆಡಿ-ಕಾಂಗ್ರೆಸ್ ಮೈತ್ರಿಕೂಟವು ಚುನಾವಣಾ ಅಕ್ರಮಕ್ಕೆ ಸಾಕ್ಷಿಯಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರ ಮಾಡಿದೆ. ಆದರೆ ಆರೋಪವನ್ನು ಸಾರಾಸಗಟಾಗಿ ತಿರಸ್ಕರಿಸಿರುವ ಮಾಂಝಿ, ವೀಡಿಯೊವನ್ನು ತಿರುಚಲಾಗಿದೆ ಮತ್ತು ತಪ್ಪಾಗಿ ನಿರೂಪಿಸಲಾಗಿದೆ ಎಂದು ಪ್ರತಿಪಾದಿಸಿದ್ದಾರೆ. ಟಿಕಾರಿ ವಿಧಾನಸಭಾ ಕ್ಷೇತ್ರದ ಕುರಿತು ಮಾಂಝಿ ಆಡಿದ್ದರೆನ್ನಲಾಗಿರುವ ಮಾತು ವಿವಾದದ ಕೇಂದ್ರಬಿಂದುವಾಗಿದೆ. ವೀಡಿಯೊದಲ್ಲಿ ಮಾಂಝಿ 2020ರ ವಿಧಾನಸಭಾ ಚುನಾವಣೆಯನ್ನು ಪ್ರಸ್ತಾಪಿಸಿದ್ದಾರೆ. ಆ ಚುನಾವಣೆಯಲ್ಲಿ ಅವರ ಪಕ್ಷದ ಅಭ್ಯರ್ಥಿ ಅನಿಲ್ ಕುಮಾರ್ ಅಲ್ಪ ಅಂತರದಿಂದ ಗೆದ್ದಿದ್ದರು. ಆದರೆ ಕಳೆದ ತಿಂಗಳು ನಡೆದ ಚುನಾವಣೆಯಲ್ಲಿ ಆರ್‌ಜೆಡಿ ಅಭ್ಯರ್ಥಿಯೆದುರು ಸೋಲನ್ನಪ್ಪಿದ್ದಾರೆ. ಮಘಾಹಿಯಲ್ಲಿ ಮಾತನಾಡಿದ ಮಾಂಝಿ,‘2020ರ ವಿಧಾನಸಭಾ ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿ 2,700 ಮತಗಳಿಂದ ಹಿಂದುಳಿದಿದ್ದರು. ಅವರು ನನಗೆ ಕರೆ ಮಾಡಿದ್ದರು ಮತ್ತು ನಾನು ಸಂಬಂಧಿಸಿದ ಅಧಿಕಾರಿಯೊಂದಿಗೆ ಮಾತನಾಡಿದ್ದೆ. ಅಂತಿಮವಾಗಿ ನಮ್ಮ ಅಭ್ಯರ್ಥಿಯನ್ನು ವಿಜೇತ ಎಂದು ಘೋಷಿಸಲಾಗಿತ್ತು’ ಎಂದು ಹೇಳಿರುವುದು ವೀಡಿಯೊದಲ್ಲಿ ಕೇಳಿಬಂದಿದೆ. ವೀಡಿಯೊದ ಸತ್ಯಾಸತ್ಯತೆಯನ್ನು ಪರಿಶೀಲಿಸಲು ಸುದ್ದಿಸಂಸ್ಥೆಗೆ ಸಾಧ್ಯವಾಗಿಲ್ಲ. ಅದೇ ವೀಡಿಯೊ ತುಣುಕಿನಲ್ಲಿ ಮಾಂಝಿ 2020ರ ಫಲಿತಾಂಶವನ್ನು ಇತ್ತೀಚಿನ ಸೋಲಿನೊಂದಿಗೆ ಹೋಲಿಸಿದ್ದಾರೆ.‘ಈ ಸಲ ನಮ್ಮ ಅಭ್ಯರ್ಥಿ 1,600 ಮತಗಳ ಅಂತರದಿಂದ ಸೋತಿದ್ದಾರೆ. ಆದರೆ ನನ್ನನ್ನು ಸಂಪರ್ಕಿಸುವ ಬದಲು ಸೋಲನ್ನು ಒಪ್ಪಿಕೊಳ್ಳಲು ಅವರು ನಿರ್ಧರಿಸಿದರು. ಈಗ ತ್ರಿಪುರಾದಲ್ಲಿ ನಿಯೋಜಿತರಾಗಿರುವ ಗಯಾದ ಆಗಿನ ಜಿಲ್ಲಾಧಿಕಾರಿ ನನಗೆ ದೂರವಾಣಿ ಕರೆ ಮಾಡಿ ಈ ಸಲ ಎಲ್ಲಿ ತಪ್ಪಾಗಿತ್ತು ಎಂದು ವಿಚಾರಿಸಿದ್ದರು. ಅಭ್ಯರ್ಥಿ ನನ್ನನ್ನು ಸಂಪರ್ಕಿಸದೆ ಮನೆಗೆ ಮರಳಲು ನಿರ್ಧರಿಸಿದಾಗ ಏನಾದರೂ ಮಾಡಲು ನನಗೆ ಸಾಧ್ಯವಾಗಿರಲಿಲ್ಲ’ಎಂದು ಮಾಂಝಿ ಹೇಳಿರುವುದು ವೀಡಿಯೊದಲ್ಲಿ ಕೇಳಿ ಬಂದಿದೆ. ಆರ್‌ಜೆಡಿ ತನ್ನ ಅಧಿಕೃತ ಎಕ್ಸ್ ಹ್ಯಾಂಡಲ್‌ ನಲ್ಲಿ ಈ ವೀಡಿಯೊವನ್ನು ಹಂಚಿಕೊಂಡಿದ್ದು,ಇದು ಪ್ರಧಾನಿ ನರೇಂದ್ರ ಮೋದಿಯವರ ಕೃತಕ ಜನಪ್ರಿಯತೆಯ ಹಿಂದಿನ ಸತ್ಯವಾಗಿದೆ ಎಂದು ಬಣ್ಣಿಸಿದೆ. ‘ಇತ್ತೀಚಿನ ಚುನಾವಣೆಯಲ್ಲಿ ಮೋದಿಯವರು ಚುನಾವಣಾ ಆಯೋಗದ ಬೆಂಬಲದೊಂದಿಗೆ ನಮ್ಮ ಯುವ ಮತ್ತು ಕ್ರಾಂತಿಕಾರಿ ನಾಯಕ ತೇಜಸ್ವಿ ಯಾದವ ಅವರ ‘ರಾಜಕೀಯ ಹತ್ಯೆ’ಗೆ ವಿಫಲ ಯತ್ನವನ್ನು ನಡೆಸಿದ್ದರು’ ಎಂದು ಅದು ಆರೋಪಿಸಿದೆ. ಇತ್ತೀಚಿಗೆ ಸಂಸತ್ತಿನಲ್ಲಿ ಮತಗಳ್ಳತನ ಆರೋಪಕ್ಕೆ ಪ್ರತಿಕ್ರಿಯಿಸುವಾಗ ಕೇಂದ್ರ ಗೃಹ ಸಚಿವರು ಬೆಂಕಿಯುಂಡೆಯಾಗಿದ್ದರು. ಈಗ ಅವರ ಸಂಪುಟ ಸಹೋದ್ಯೋಗಿಯ ಹೇಳಿಕೆಯು ನಡೆಯುತ್ತಿರುವುದು ಮತಗಳ್ಳತನವಲ್ಲ,ಮತಗಳ ದರೋಡೆ ಎನ್ನುವುದನ್ನು ಸೂಚಿಸುತ್ತಿದೆ ಎಂದು ಬಿಹಾರ ಕಾಂಗ್ರೆಸ್ ವಕ್ತಾರ ಅಸಿತ್ ನಾಥ್ ತಿವಾರಿ ಆರೋಪಿಸಿದರು. ಬಿಜೆಪಿ ವಿವಾದವನ್ನು ಲಘುವಾಗಿ ಪರಿಗಣಿಸಲು ಯತ್ನಿಸಿದೆ. ‘ಎಡಿಟ್ ಮಾಡಿರದ ವೀಡಿಯೊವನ್ನು ನಾನು ನೋಡಿದ್ದೇನೆ. 2020ರಲ್ಲಿ ತನ್ನ ಪಕ್ಷದ ಅಭ್ಯರ್ಥಿ ಅಂತಿಮ ಸುತ್ತಿನಲ್ಲಿ ಸ್ವಲ್ಪ ಮತಗಳ ಅಂತರದಿಂದ ಹಿಂದುಳಿದಿದ್ದಾಗ ಹಲವಾರು ಗಂಟೆಗಳ ಕಾಲ ಮತದಾನವನ್ನು ಸ್ಥಗಿತಗೊಳಿಸಿದ್ದ ಬಗ್ಗೆ ಮಾಂಝಿ ಮಾತನಾಡಿದ್ದರು. ಮತ ಎಣಿಕೆ ಮುಗಿದ ಬಳಿಕ ಅವರ ಅಭ್ಯರ್ಥಿ ಗೆದ್ದಿದ್ದರು ’ಎಂದು ಬಿಹಾರದ ಸಚಿವ ಹಾಗೂ ರಾಜ್ಯ ಬಿಜೆಪಿಯ ಮಾಜಿ ಅಧ್ಯಕ್ಷ ದಿಲೀಪ ಜೈಸ್ವಾಲ್ ಹೇಳಿದರು

ವಾರ್ತಾ ಭಾರತಿ 19 Dec 2025 10:20 pm

ಕಲಬುರಗಿ | ನಿತ್ಯದ ಬದುಕಿಗೆ ಸಾಂಸ್ಕೃತಿಕ ಅಭಿರುಚಿ ಮುಖ್ಯ : ಡಾ.ಸುಜಾತಾ ಜಂಗಮಶೆಟ್ಟಿ

ಕಲಬುರಗಿ: ನಿತ್ಯದ ಬದುಕಿಗೆ ಸಾಂಸ್ಕೃತಿಕ ಅಭಿರುಚಿ ಮುಖ್ಯ ಎಂದು ಕಲಬುರಗಿ ರಂಗಾಯಣದ ನಿರ್ದೇಶಕರಾದ ಡಾ.ಸುಜಾತಾ ಜಂಗಮಶೆಟ್ಟಿ ಹೇಳಿದರು. ಇಲ್ಲಿನ ಕಲಬುರಗಿ ರಂಗಾಯಣದಲ್ಲಿ ಆಯೋಜಿಸಿದ್ದ ಕಲಬುರಗಿ ವಿಭಾಗದ ಕಲಾಪ್ರತಿಭೋತ್ಸವ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಈವರೆಗೂ ಜಗತ್ತಿನಲ್ಲಿ ಯಾರು ದೊಡ್ಡ ಸಾಧನೆ ಮಾಡಿದ್ದಾರೋ ಅವರೆಲ್ಲ ಔಪಚಾರಿಕ ಶಿಕ್ಷಣದಿಂದ ಹೊರಗೆ ಪಡೆದಿರುವ ಅನುಭವದಿಂದ ಸಾಧಿಸಿದ್ದಾರೆ. ಡಾ.ರಾಜ್‌ ಕುಮಾರ್‌, ರಜನಿಕಾಂತ್‌, ಡಾ. ಮಲ್ಲಿಕಾರ್ಜುನ ಮನ್ನೂರ, ಭೀಮಸೇನ ಜೋಶಿ, ಇವರೆಲ್ಲ ಹೆಚ್ಚು ಓದದಿದ್ದರೂ ಕಲೆಯ ಮುಖಾಂತರ ದೊಡ್ಡ ಸಾಧನೆ ಮಾಡಿದ್ದಾರೆ ಎಂದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಆರಕ್ಷಕ ಉಪ ನಿರಿಕ್ಷಕರಾದ ಯಶೋಧಾ ಕಟಕೆಯವರು ಮಾತನಾಡಿ, ಮಕ್ಕಳಿಗೆ ಯಾವುದೇ ಹಿಂಜರಿಕೆ ಇರಬಾರದು. ಎಲ್ಲಾ ಸ್ಪರ್ದೆಗಳಲ್ಲಿ ಮಕ್ಕಳು ಬಹುಮಾನ ನಿರೀಕ್ಷೆ ಇಟ್ಟುಕೊಳ್ಳದೆ ಭಾಗವಹಿಸಬೇಕು. ವ್ಯಕ್ತಿ ಯಾವುದೇ ಹುದ್ದೆಯಲ್ಲಿರಲಿ ಆತನಿಗೆ ಸಂಗೀತ ಕಲೆಯ ಅಭಿರುಚಿ ಮುಖ್ಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿರುವ ಕಲಾತಪಸ್ವಿ ವೆಂಕಟಪ್ಪ ಪ್ರಶಸ್ತಿ ಪುರಸ್ಕೃತರಾದ ಡಾ.ವಿಜಯ ಹಾಗರಗುಂಡಗಿ ಮಾತನಾಡಿ, ಕಲೆಗೆ ಸವಾಲು ಯಾವಾಗಲು ಇರುತ್ತದೆ. ಆ ಸವಾಲನ್ನು ಮೀರಿ ಕಲಾವಿದ ಬೆಳೆಯಬೇಕು ಎಂದರು. ಕಾರ್ಯಕ್ರಮದಲ್ಲಿ ಬಾಲ ಪ್ರತಿಭೆ ಕಿಶೋರ ಪ್ರತಿಭೆ ಯುವ ಪ್ರತಿಭೆಯಲ್ಲಿ ಚಿತ್ರ ಕಲೆ, ಶಾಸ್ತ್ರೀಯ ನೃತ್ಯ ಸುಗಮ ಸಂಗೀತ, ಹಿಂದೂಸ್ಥಾನಿ ವಾದ್ಯ ಸಂಗೀತ ಸ್ಪರ್ಧೆಗಳು ನಡೆದವು. ಕಾರ್ಯಕ್ರಮದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕಲಾವಿದೆ ಹನಿಫಾ ಶೇಖ್‌, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕ ಬಸವರಾಜ ಹೂಗಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪನಿರ್ದೇಶಕಿ ಜಗದೀಶ್ವರಿ ನಾಸಿ ಭಾಗವಹಿಸಿದ್ದರು.

ವಾರ್ತಾ ಭಾರತಿ 19 Dec 2025 10:13 pm

ಡಿ.21: ಮರಾಠಿ ಸಮುದಾಯದಿಂದ ರಾಜೇಂದ್ರ ಪ್ರಸಾದ್‌ಗೆ ಅಭಿನಂದನೆ

ಉಡುಪಿ, ಡಿ.19: ಉಡುಪಿ ಜಿಲ್ಲಾ ಮರಾಠಿ ಸೇವಾ ಸಂಘ, ಜಿಲ್ಲಾ ಮರಾಠಿ ಮಹಿಳಾ ವೇದಿಕೆ, ಜಿಲ್ಲಾ ಮರಾಠಿ ಯುವ ಸಂಘಟನೆ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಚಂಡೀಗಢ ಸರಕಾರದ ಮುಖ್ಯ ಕಾರ್ಯದರ್ಶಿ ಎಚ್. ರಾಜೇಶ್ ಪ್ರಸಾದ್ ಅವರಿಗೆ ಅಭಿನಂದನಾ ಸಮಾರಂಭವನ್ನು ಇದೇ ಡಿ.21ರ ರವಿವಾರ ಬೆಳಿಗ್ಗೆ 10ಗಂಟೆಗೆ ಉಡುಪಿ ಕುಂಜಿಬೆಟ್ಟುವಿನ ಶ್ರೀ ತುಳಜಾ ಭವಾನಿ ಮರಾಠಿ ಸಮುದಾಯ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಉಡುಪಿ ಜಿಲ್ಲಾ ಮರಾಟಿ ಸೇವಾ ಸಂಘದ ಅಧ್ಯಕ್ಷ ಕೆ.ಟಿ. ನಾಯ್ಕ ತಿಳಿಸಿದ್ದಾರೆ. ಇಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಭಿನಂದನಾ ಸಮಾರಂಭಕ್ಕೂ ಮೊದಲು ಅಂದು ಬೆಳಗ್ಗೆ 8:30ಕ್ಕೆ ರಾಜೇಶ್ ಪ್ರಸಾದ್ ಅವರನ್ನು ಪರ್ಕಳದ ಅವರ ಸ್ವಗೃಹದಿಂದ ವಾಹನ ಜಾಥಾದ ಮೂಲಕ ಕುಂಜಿಬೆಟ್ಟಿನ ಎಂ.ಜಿ.ಎಂ. ಮೈದಾನಕ್ಕೆ ಕರೆದುಕೊಂಡು ಬರಲಾಗುವುದು. ಅಲ್ಲಿಂದ ತೆರದ ವಾಹನದಲ್ಲಿ ಚೆಂಡೆ, ಕೊಂಬು ಹಾಗೂ ಪೂರ್ಣಕುಂಭ ಮೇಳದೊಂದಿಗೆ ಅದ್ಧೂರಿ ಮೆರವಣಿಗೆ ಮೂಲಕ ಸಮುದಾಯ ಭವನಕ್ಕೆ ಕರೆತರಲಾಗುವುದು ಎಂದರು. ಅಭಿನಂದನಾ ಕಾರ್ಯಕ್ರಮದಲ್ಲಿ ಉಡುಪಿ- ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ, ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ, ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಮಾಜಿ ಶಾಸಕ ರಘುಪತಿ ಭಟ್ ಮೊದಲಾದವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು. ಹಿರಿಯಡ್ಕ ಸಮೀಪದ ಬೊಮ್ಮರಬೆಟ್ಟು ಗ್ರಾಮದಲ್ಲಿ ಜನಿಸಿ ಪದವಿವರೆಗಿನ ಶಿಕ್ಷಣವನ್ನು ಉಡುಪಿಯಲ್ಲಿ ಮಾಡಿರುವ ರಾಜೇಂದ್ರ ಪ್ರಸಾದ್, ಮರಾಟಿ ಸಮುದಾಯದಲ್ಲಿ ಐಎಎಸ್ ತೇರ್ಗಡೆಗೊಂಡ ಮೊದಲಿಗರಾಗಿದ್ದು, ಇದೀಗ ಅತ್ಯುನ್ನತ ಹುದ್ದೆಗೆ ಏರಿರುವುದು ಸಮುದಾಯಕ್ಕೊಂದು ಸ್ಪೂರ್ತಿಯಾಗಿದೆ ಎಂದು ಅವರು ವಿವರಿಸಿದರು. ಸುದ್ದಿಗೋಷ್ಠಿಯಲ್ಲಿ ಮರಾಠಿ ಸಮಾಜದ ಮುಖಂಡರಾದ ಉಮೇಶ್ ನಾಯ್ಕ್ ಚೇರ್ಕಾಡಿ, ಭುಜಂಗ ನಾಯ್ಕ್ ಮಣಿಪಾಲ, ವಿಜಯೇಂದ್ರ ನಾಯ್ಕ್ ಉಪಸ್ಥಿತರಿದ್ದರು.

ವಾರ್ತಾ ಭಾರತಿ 19 Dec 2025 10:02 pm

ದಲಿತರು, ಮುಸ್ಲಿಂರ ಮಧ್ಯೆ ದ್ವೇಷ ಹರಡುವ ನಾಟಕ ಪ್ರದರ್ಶನ ರದ್ದುಪಡಿಸಲು ಒತ್ತಾಯಿಸಿ ಕಾಂಗ್ರೆಸ್ ಮನವಿ

ಉಡುಪಿ, ಡಿ.19: ನಗರದ ಕಡಿಯಾಳಿಯ ಶಾರದ ಕಲ್ಯಾಣಮಂಟಪ ಬಳಿಯ ಓವೈಸಿ ಸಭಾಂಗಣದಲ್ಲಿ ಡಿ.21ರ ರವಿವಾರ ನಡೆಯಲಿರುವ ರಂಗಭೂಮಿ ಟ್ರಸ್ಟ್ ಕೊಡಗು ಇವರು ಪ್ರಸ್ತುತ ಪಡಿಸುವ ‘ನಿಜ ಮಹಾತ್ಮ ಬಾಬಾ ಸಾಹೇಬ’ ಹೆಸರಿನ ನಾಟಕದ ಪ್ರದರ್ಶನವನ್ನು ರದ್ದುಪಡಿಸುವಂತೆ ಕೋರಿ ಪಕ್ಷದ ಎಸ್‌ಸಿ ಘಟಕದ ನೇತೃತ್ವದಲ್ಲಿ ಉಡುಪಿ ಜಿಲ್ಲಾ ಕಾಂಗ್ರೆಸ್ ಜಿಲ್ಲಾಧಿಕಾರಿ ಹಾಗೂ ಪೊಲೀಸ್ ವರಿಷ್ಠಾಧಿಕಾರಿ ಅವರಿಗೆ ಮನವಿ ಅರ್ಪಿಸಿ ಒತ್ತಾಯಿಸಿದೆ. ಅವಿತಿಟ್ಟ ಸತ್ಯಗಳ ಸ್ಫೋಟಕ ನಾಟಕ ಪ್ರದರ್ಶನ ಎಂಬ ಉಪನಾಮೆಯೊಂದಿಗೆ ನಾಟಕ ಪ್ರದರ್ಶಿಸುವ ಬಗ್ಗೆ ಬಹಿರಂಗ ಜಾಹೀರಾತುಗಳನ್ನು ಈಗಾಗಲೇ ನೀಡಲಾಗಿದೆ. ಉಡುಪಿ ಜಿಲ್ಲೆ ಕೋಮು ಸೂಕ್ಷ್ಮ ಪ್ರದೇಶವಾಗಿರು ವುದರಿಂದ ಈ ನಾಟಕದ ಪೋಸ್ಟರ್‌ಗಳಲ್ಲಿ ತಿಳಿಸಿರು ವಂತೆ ನಾಟಕವು ಪಾಕಿಸ್ತಾನ ವಿಭಜನೆ, ಮುಸ್ಲಿಂರ ಬಗೆಗಿನ ಬಾಬಾ ಸಾಹೇಬರ ಅಭಿಪ್ರಾಯ, ಕಾಂಗ್ರೆಸ್ ಪಕ್ಷದ ದ್ರೋಹ ಎಂಬ ಒಕ್ಕಣೆಗಳು ಈ ನಾಟಕದ ಆಯೋಜಕರ ಪೂರ್ವಗ್ರಹ ಪೀಡಿತ ಅಸಹನೆ ಹಾಗೂ ದ್ವೇಷಪೂರಿತ ಉದ್ದೇಶಗಳನ್ನು ಒತ್ತಿ ಹೇಳುತ್ತಿವೆ ಎಂದು ಮನವಿಯಲ್ಲಿ ವಿವರಿಸಲಾಗಿದೆ. ಈ ಎಲ್ಲಾ ಪ್ರಚಾರಗಳನ್ನು ಗಮನಿಸಿದಾಗ, ಆಯೋಜಕರ ಉದ್ದೇಶ, ಸಮುದಾಯಗಳ ಮಧ್ಯದ ಸಾಮರಸ್ಯವನ್ನು ಹತ್ತಿಕ್ಕಿ, ಜಿಲ್ಲೆಯಲ್ಲಿ ಕೋಮು ದ್ವೇಷವನ್ನು ಪಸರಿಸುವುದೇ ಆಗಿದೆ. ಹಾಗೂ ಮಹಾಮಾನವತಾವಾದಿಗಳಾದ ಬಾಬಾ ಸಾಹೇಬ ಅಂಬೇಡ್ಕರ್ ಅವರನ್ನು ತಪ್ಪಾಗಿ ಪ್ರಸ್ತುತ ಪಡಿಸಿ ಅವರ ಹೆಸರಿನಲ್ಲಿ ಮುಸ್ಲಿಂ- ದಲಿತ ದ್ವೇಷವನ್ನು ಹೆಚ್ಚಿಸುವುದೇ ಆಗಿದೆ. ಆದ್ದರಿಂದ ಈ ನಾಟಕದ ಪ್ರದರ್ಶನದ ಅನುಮತಿಯನ್ನು ರದ್ದುಪಡಿಸುವಂತೆ ಜಿಲ್ಲಾಧಿಕಾರಿಗಳು ಹಾಗೂ ಪೊಲೀಸ್ ವರಿಷ್ಠಾಧಿಕಾರಿಯ ವರಲ್ಲಿ ವಿನಂತಿಸಲಾಗಿದೆ. ಮನವಿ ಸಲ್ಲಿಸಿದ ನಿಯೋಗದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ ಕುಮಾರ ಕೊಡವೂರು, ಎಸ್‌ಸಿ ಘಟಕದ ಜಿಲ್ಲಾ ಅಧ್ಯಕ್ಷ ಜಯಕುಮಾರ್, ಕೇಶವ ಸಾಲ್ಯಾನ್, ಲಕ್ಷ್ಮೀಶ ಶೆಟ್ಟಿ, ಕಿಶೋರ್ ಕುಮಾರ್ ಎರ್ಮಾಳ್, ಸುಮನ ಬೋಳಾರ್, ಸಂಧ್ಯಾ ತಿಲಕ್, ಸುಕನ್ಯಾ ಪೂಜಾರಿ ಉಪಸ್ಥಿತರಿದ್ದರು.

ವಾರ್ತಾ ಭಾರತಿ 19 Dec 2025 10:00 pm

Kerala| ಕಳ್ಳತನದ ಶಂಕೆಯಲ್ಲಿ ವಲಸೆ ಕಾರ್ಮಿಕನನ್ನು ಥಳಿಸಿ ಹತ್ಯೆ

ಮರಣೋತ್ತರ ಪರೀಕ್ಷೆ ವರದಿಯಲ್ಲಿ 80ಕ್ಕೂ ಹೆಚ್ಚು ಗಾಯಗಳು ಪತ್ತೆ!

ವಾರ್ತಾ ಭಾರತಿ 19 Dec 2025 9:59 pm

ಯಾದಗಿರಿ | ವಿಬಿ-ಜಿ ರಾಮ್ ಜಿ ಮಸೂದೆ ವಿರೋಧಿಸಿ ಡಿ.22ರಂದು ಸಂಸದರ ಮನೆಗಳ ಎದುರು ಪ್ರತಿಭಟನೆ : ಶರಣಗೌಡ

ಯಾದಗಿರಿ: ವಿಬಿ ಜಿ ರಾಮ್ ಜಿ ಮಸೂದೆಯನ್ನು ತಿರಸ್ಕರಿಸಿ ಎಂಜಿಎನ್‌ಆರ್‌ಇಜಿಎ ಕಾಯ್ದೆಯನ್ನು ಉಳಿಸಲು ಒತ್ತಾಯಿಸಿ ಡಿ. 22ರಂದು ಸಂಸದರ ನಿವಾಸಗಳ ಎದುರು ಪ್ರತಿಭಟನೆ ಆಯೋಜಿಸಲಾಗಿದೆ ಎಂದು ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆ ಜಿಲ್ಲಾಧ್ಯಕ್ಷ ಶರಣಗೌಡ ಹೇಳಿದರು. ನಗರದಲ್ಲಿನ ಜಿಲ್ಲಾ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಕಾರ್ಮಿಕರ ಹಕ್ಕುಗಳನ್ನು ನಿರಾಕರಿಸುವ ಹಾಗೂ ಗ್ರಾಮ ಪಂಚಾಯತ್‌ ಗಳನ್ನು ದುರ್ಬಲಪಡಿಸುವ ಮೂಲಕ ಸಾಮಾಜಿಕ ನ್ಯಾಯವನ್ನೇ ಅಣಕಿಸುವ ವಿಬಿ ಜಿ ರಾಮ್ ಜಿ ಮಸೂದೆಯನ್ನು ಲೋಕಸಭೆಯಲ್ಲಿ ಮಂಡಿಸಿ ಒಪ್ಪಿಗೆ ಪಡೆಯಲಾಗಿದ್ದು, ಇದು ರಾಜ್ಯಸಭೆಯಲ್ಲಿ ಮಂಡಿಸುವ ಮುಂಚೆಯೇ ಈ ಮಸೂದೆಯನ್ನು ತಿರಸ್ಕರಿಸಬೇಕು ಎಂದು ಆಗ್ರಹಿಸಿ ದೇಶವ್ಯಾಪಿ ಹೋರಾಟಗಳು ಆರಂಭಿಸಲಾಗಿದ್ದು, ಅದರ ಭಾಗವಾಗಿ ಈ ಹೋರಾಟ ನಡೆಸಲಾಗುತ್ತಿದೆ ಎಂದರು. ಉದ್ಯೋಗವನ್ನು ಬೇಡಿಕೆ ಆಧಾರಿತ ಹಕ್ಕಿನಿಂದ ಪೂರೈಕೆ ಆಧಾರಿತ ಯೋಜನೆಯಾಗಿ ಬದಲಾಯಿಸಿರುವ ಈ ಮಸೂದೆಯನ್ನು ಅನುಷ್ಠಾನಗೊಳಿಸಿದರೆ ಉದ್ಯೋಗದ ಹಕ್ಕನ್ನು ಕಸಿದುಕೊಳ್ಳಲಾಗುತ್ತದೆ. ಇದರ ಮೇಲೆ ಕೇಂದ್ರ ಸರಕಾರದ ನಿಯಂತ್ರಣ ಬಿಗಿಗೊಳಿಸಲಾಗಿದೆ. ಉದ್ಯೋಗದ ಖಾತ್ರಿಯೇ ಇಲ್ಲದಂತಾಗಲಿದೆ. ರಾಜ್ಯ ಸರಕಾರಗಳ ಮೇಲೆಯೂ ಹೊರೆಯಾಗಲಿದ್ದು, ಇದು ಸಂಕಷ್ಟಕ್ಕೆ ಕಾರಣವಾಗಲಿದೆ ಎಂದು ಆರೋಪಿಸಿದರು. ಕಾಮಗಾರಿಗಳನ್ನು ಕೇಂದ್ರ ಸರಕಾರವೇ ನಿರ್ಧರಿಸುವ ಮೂಲಕ ಗ್ರಾಮ ಸಭೆಗಳನ್ನು ದುರ್ಬಲಗೊಳಿಸಿದೆ. 73ನೇ ತಿದ್ದುಪಡಿಯ ವಿಕೇಂದ್ರಿಕೃತ ಆಡಳಿತವನ್ನು ಗಾಳಿಗೆ ತೂರಲಾಗಿದೆ. ಡಿಜಿಟಲ್ ಹಾಜರಾತಿ ಎನ್‌ಎಂಎಂಎಸ್ ಮತ್ತು ಆಧಾರ್ ಕಾರ್ಡ್ ಆಧಾರಿತ ಪಾವತಿಗಳು ಕಾರ್ಮಿಕರನ್ನು ಕೆಲಸದಿಂದ ಹೊರಗಿಡಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಮಲ್ಲಪ್ಪ ದೊಡ್ಮನಿ ಬೆಳಗೇರಾ, ನವಚೇತನ ಮಹಿಳಾ ಒಕ್ಕೂಟದ ಸುಶೀಲಮ್ಮ, ಬನ್ನಪ್ಪ ಯಲಸತ್ತಿ, ರೀನಾ, ದೇವಪುತ್ರ ಉಪಸ್ಥಿತರಿದ್ದರು.

ವಾರ್ತಾ ಭಾರತಿ 19 Dec 2025 9:59 pm

ಮುಗಿದ ಚಳಿಗಾಲದ ಅಧಿವೇಶನ | ಚಹಾ ಕೂಟದಲ್ಲಿ ವಿಪಕ್ಷ ಸಂಸದರೊಬ್ಬರನ್ನು ಪ್ರಶಂಸಿಸಿ, ನಗೆ ಚಟಾಕಿ ಹಾರಿಸಿದ ಪ್ರಧಾನಿ

ಹೊಸದಿಲ್ಲಿ: ಚಳಿಗಾಲದ ಸಂಸತ್ ಅಧಿವೇಶನದ ಬಳಿಕ ಲೋಕಸಭಾಧ್ಯಕ್ಷ ಓಂ ಬಿರ್ಲಾ ಆಯೋಜಿಸಿದ್ದ ಚಹಾ ಕೂಟದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ವಿಪಕ್ಷಗಳು ಸದಸ್ಯರೂ ಭಾಗವಹಿಸಿ ಗಮನ ಸೆಳೆದರು. ಚಳಿಗಾಲದ ಅಧಿವೇಶನದಲ್ಲಿ ಕಾವೇರಿದ ಚರ್ಚೆಯ ಬಳಿಕ, ಅಧಿವೇಶನ ಮುಕ್ತಾಯಗೊಂಡ ಪ್ರಯುಕ್ತ ಲೋಕಸಭಾಧ್ಯಕ್ಷರು ಸಾಂಪ್ರದಾಯಿಕವಾಗಿ ಆಯೋಜಿಸುವ ಚಹಾ ಕೂಟದಲ್ಲಿ ವಿಪಕ್ಷಗಳ ಸಂಸದರೂ ಭಾಗವಹಿಸಿದ್ದುದು ವಿಶೇಷವಾಗಿತ್ತು. ಕುತೂಹಲಕರ ಸಂಗತಿಯೆಂದರೆ, ಚಹಾ ಕೂಟದಲ್ಲಿ ವಿಪಕ್ಷಗಳ ಸಂಸದರೊಂದಿಗೆ ಲಘು ಹಾಸ್ಯದ ಚಟಾಕಿಗಳನ್ನು ಹಾರಿಸಿದ ಪ್ರಧಾನಿ ನರೇಂದ್ರ ಮೋದಿ, ವಿಪಕ್ಷಗಳ ಸಂಸದರು ಮಾಡಿದ ದೂರೊಂದರ ಕುರಿತು ಪ್ರಾಮಾಣಿಕವಾಗಿ ಪ್ರತಿಕ್ರಿಯಿಸಿದ್ದೂ ಕಂಡು ಬಂದಿತು. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಕೈಗೊಂಡ ನಿರ್ಧಾರದ ಮೇಲೆ ಲೋಕಸಭಾಧ್ಯಕ್ಷರು ಆಯೋಜಿಸಿದ್ದ ಚಹಾ ಕೂಟದಲ್ಲಿ ಪಾಲ್ಗೊಳ್ಳಲು ಪಕ್ಷ ತೀರ್ಮಾನಿಸಿತು ಎಂದು ಕಾಂಗ್ರೆಸ್ ಪಕ್ಷದ ಮೂಲಗಳು ತಿಳಿಸಿವೆ. ಈ ಬಾರಿಯ ಅಧಿವೇಶನದಲ್ಲಿ ವಿಪಕ್ಷಗಳು ಮಸೂದೆಗಳಿಗೆ ವಿರೋಧ ವ್ಯಕ್ತಪಡಿಸುವುದನ್ನು ಮುಂದುವರಿಸಿದರೂ, ಸಭಾಧ್ಯಕ್ಷ ಪೀಠವು ಈ ಬಾರಿ ಕಳೆದ ಬಾರಿಗಿಂತ ಹೆಚ್ಚು ನ್ಯಾಯಯುತವಾಗಿ ವರ್ತಿಸಿದ್ದು ಹಾಗೂ ವಿಪಕ್ಷಗಳ ಸಂಸದರಿಗೆ ಮಾತನಾಡಲು ಹೆಚ್ಚು ಅವಕಾಶ ನೀಡಿದ್ದು ಚಹಾ ಕೂಟದಲ್ಲಿ ವಿಪಕ್ಷಗಳ ಸಂಸದರು ಪಾಲ್ಗೊಳ್ಳುವ ನಿರ್ಧಾರ ಕೈಗೊಳ್ಳಲು ಪ್ರಮುಖ ಕಾರಣ ಎಂದು ಈ ಮೂಲಗಳು ತಿಳಿಸಿವೆ. ಈ ಚಹಾ ಕೂಟದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು RSP ಸಂಸದ ಎನ್.ಕೆ.ಪ್ರೇಮಚಂದ್ರನ್ ಅವರನ್ನು ಅತ್ಯುತ್ತಮ ಸಂಸದೀಯ ಪಟು ಎಂದು ಪ್ರಶಂಸಿಸಿದರು ಎಂದೂ ಈ ಮೂಲಗಳು ತಿಳಿಸಿವೆ. ಚಹಾ ಕೂಟದಲ್ಲಿ ನಡೆದ ಸಂವಾದದ ವೇಳೆ ವಿಪಕ್ಷಗಳ ಸದಸ್ಯರು ಅಧಿವೇಶನ ಮತ್ತಷ್ಟು ಸುದೀರ್ಘವಾಗಿರಬೇಕಿತ್ತು ಎಂದು ತಮ್ಮ ಆಕ್ಷೇಪಣೆಯನ್ನು ವ್ಯಕ್ತಪಡಿಸಿದರು. ಇದಕ್ಕೆ ಪ್ರತಿಯಾಗಿ, “ನೀವು ಹೆಚ್ಚು ಮಾತನಾಡಿ, ನಿಮ್ಮ ಧ್ವನಿ ದಣಿಯಬಾರದು ಎಂಬುದು ನನ್ನ ಬಯಕೆಯಾಗಿತ್ತು” ಎಂದು ಪ್ರಧಾನಿ ನರೇಂದ್ರ ಮೋದಿ ನಗೆ ಚಟಾಕಿ ಸಿಡಿಸಿದರು ಎನ್ನಲಾಗಿದೆ. ‘ನಿಮಗೆಲ್ಲರಿಗೂ ಮಾತನಾಡಲು ಸಾಕಷ್ಟು ಸಮಯಾವಕಾಶ ದೊರೆಯಿತು ಎಂದು ನಾನು ಭಾವಿಸಿದ್ದೇನೆ” ಎಂದೂ ಅವರು ಹೇಳಿದರು ಎಂದು ಮೂಲಗಳು ತಿಳಿಸಿವೆ. ಇದೇ ವೇಳೆ, ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿಯವರೊಂದಿಗೂ ಮಾತುಕತೆ ನಡೆಸಿದ ಪ್ರಧಾನಿ ನರೇಂದ್ರ ಮೋದಿ, ವಯನಾಡ್ ನ ಆಯುರ್ವೇದ ಔಷಧದ ಕುರಿತು ಅವರ ಬಳಿ ವಿಚಾರಿಸಿದರು ಎನ್ನಲಾಗಿದೆ. ಹಾಗೆಯೇ ಹರ್ಯಾಣ ವಿಧಾನಸಭಾ ಅಧಿವೇಶನದ ಕುರಿತು ಸಂಸದೆ ಸೆಲ್ಜಾ ಕುಮಾರಿ ಅವರನ್ನೂ ಮೋದಿ ವಿಚಾರಿಸಿದರು ಎಂದು ಹೇಳಲಾಗಿದೆ.

ವಾರ್ತಾ ಭಾರತಿ 19 Dec 2025 9:55 pm

ನಮ್ಮ ‌ಸರಕಾರ ಬಡವರ ಪರವಾದ ಸರಕಾರ : ಸಚಿವ ಡಾ.ಶರಣಪ್ರಕಾಶ್‌ ಪಾಟೀಲ್‌

ಕೊಪ್ಪಳ : ನಮ್ಮ ‌ಸರಕಾರ ಬಡವರ ಪರವಾದ ಸರಕಾರವಾಗಿದ್ದು, ಜನರ ಅಭಿವೃದ್ಧಿಗಾಗಿ ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರಲಾಗಿದೆ ಎಂದು ವೈದ್ಯಕೀಯ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ದಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ಸಚಿವರಾದ ಡಾ.ಶರಣಪ್ರಕಾಶ್‌ ಪಾಟೀಲ್‌ ಹೇಳಿದರು. ಅವರು ಶುಕ್ರವಾರ ಯಲಬುರ್ಗಾ ಪಟ್ಟಣದಲ್ಲಿ ಬಿ.ಎಸ್.ಸಿ. ನರ್ಸಿಂಗ್ ಕಾಲೇಜು ಪ್ರಾರಂಭೋತ್ಸವ ಮತ್ತು ಅಡಿಗಲ್ಲು ಸಮಾರಂಭ, ತಾಲ್ಲೂಕು ಪಂಚಾಯತ್ ಆಡಳಿತ ಭವನದ ಅಡಿಗಲ್ಲು ಸಮಾರಂಭ ಹಾಗೂ ಶಿಕ್ಷಕರ ತರಬೇತಿ ಕೇಂದ್ರ (ಬಿ.ಇ.ಓ) ಕಚೇರಿ ಶಂಕುಸ್ಥಾಪನೆ, ಯಲಬುರ್ಗಾ- ಕುಕನೂರ ಪಟ್ಟಣ ಪಂಚಾಯತಿಯಿಂದ ಮಲ ಕೆಸರು ಸಂಸ್ಕರಣಾ ಘಟಕ ( ಎಫ್.ಎಸ್.ಟಿ.ಸಿ) ಶಂಕುಸ್ಥಾಪನೆ ಮತ್ತು ಬಾಲ ಭವನ ಅಂಗನವಾಡಿ ತರಬೇತಿ ಕೇಂದ್ರ( ಸಿ.ಡಿ.ಪಿ.ಓ) ನಿರ್ಮಾಣದ ಶಂಕುಸ್ಥಾಪನೆ ನೆರವೇರಿಸಿದ ನಂತರ ಯಲಬುರ್ಗಾ ಪಟ್ಟಣ ಪಂಚಾಯತ್‌ ಬಯಲು ರಂಗಮಂದಿರದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ನಮ್ಮ ಮುಖ್ಯಮಂತ್ರಿಗಳು ಬಡವರ ಪರ ಕೆಲಸ ಮಾಡುವವರಾಗಿದ್ದು, ಅವರು ಬಡವರಿಗಾಗಿ ಅನೇಕ ಜನಪರ ಕೆಲಸಗಳನ್ನು ಮಾಡುತ್ತಿದ್ದಾರೆ. ನಮ್ಮ ಪ್ರಣಾಳಿಕೆಯಲ್ಲಿ ಹೇಳಿದಂತೆ ಅವುಗಳನ್ನು ಪಾಲಿಸಿಕೊಂಡು ಬರುತ್ತಿದ್ದೆವೆ. ನಮ್ಮ ರಾಜ್ಯದ ಜಿಡಿಪಿ ಇಡೀ ದೇಶದಲ್ಲಿ ಹೆಚ್ಚಿದೆ. ಬಡವರ ಅನುಕೂಲಕ್ಕಾಗಿ ಹೆಚ್ಚು ಬಿಪಿಎಲ್ ಕಾರ್ಡಗಳನ್ನು ನಾವು ನೀಡಿದ್ದೆವೆ. ಯಲಬುರ್ಗಾ ಕ್ಷೇತ್ರದ ಶಾಲಾ- ಕಾಲೇಜುಗಳು ಮತ್ತು ಹಾಸ್ಟೆಲ್‌ ಗಳನ್ನು ಬೇರೆ ಕ್ಷೇತ್ರಗಳಿಗೆ ಹೋಲಿಸಿದರೆ ಇದು ಅಭಿವೃದ್ಧಿಯ ಮತಕ್ಷೇತ್ರವಾಗಿದೆ. ಬಸವರಾಜ ರಾಯರಡ್ಡಿ ಅವರು ಜನಪರ ಕಾಳಜಿಯ ನಾಯಕರಾಗಿದ್ದಾರೆ ಎಂದು ಹೇಳಿದರು. ಯಲಬುರ್ಗಾದಲ್ಲಿ ಇಂದು ನರ್ಸಿಂಗ್ ಕಾಲೇಜಿನ ಉದ್ಘಾಟನೆ ಮತ್ತು ಅಡಿಗಲ್ಲು ಹಾಗೂ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಅಡಿಗಲ್ಲು ಮಾಡಿದ್ದೆನೆ. ನಮ್ಮ ರಾಜ್ಯ ದೇಶದಲ್ಲಿ ಅತಿ ಹೆಚ್ಚು ನರ್ಸಿಂಗ್ ಕಾಲೇಜುಗಳನ್ನು ಹೊಂದಿದೆ. 800 ಬಿಎಸ್ಸಿ ನರ್ಸಿಂಗ್, 600 ಬಿಎಸ್ಸಿ ಡಿಪ್ಲೊಮಾ ನರ್ಸಿಂಗ್ ಕಾಲೇಜುಗಳಿದ್ದು, ಬೇರೆ ರಾಜ್ಯಗಳಿಂದ ಇಲ್ಲಿಗೆ ವಿದ್ಯಾರ್ಥಿಗಳು ಕಲಿಯಲು ಬರುತ್ತಾರೆ. ಇದು ನಮ್ಮ ನಾಯಕರ ದೂರ ದೃಷ್ಟಿಯಾಗಿದೆ. ನರ್ಸಿಂಗ್ ಕೋರ್ಸ್ ಮಾಡಿದವರಿಗೆ ಶೇ.100 ಪ್ರತಿಶತ ಉದ್ಯೋಗ ದೊರೆಯುತ್ತದೆ. ಇದರಿಂದ ಬಡ ವಿದ್ಯಾರ್ಥಿಗಳಿಗೆ ತುಂಬಾ ಅನುಕೂಲಕರವಾಗಲಿದೆ. ಜಿಟಿಟಿಸಿ ಕೋರ್ಸ್ ಮಾಡಿದವರಿಗೂ ಶೇ. 100 ಉದ್ಯೋಗ ದೊರೆಯುತ್ತದೆ. ಯುವಕರಿಗೆ ಉದ್ಯೋಗ ಆಧಾರಿತ ಸರಿಯಾದ ಶಿಕ್ಷಣ ನೀಡಬೇಕಿದೆ. ತಳಕಲನಲ್ಲಿ ಮಲ್ಟಿಸ್ಕಿಲ್ ಕೇಂದ್ರವನ್ನು ಮಾಡುತ್ತಿದ್ದೆವೆ ಎಂದು ಹೇಳಿದರು. ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರರು ಹಾಗೂ ಯಲಬುರ್ಗಾ ಶಾಸಕರಾದ ಬಸವರಾಜ ರಾಯರಡ್ಡಿ ಅವರು ಮಾತನಾಡಿ, ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರ ನೇತೃತ್ವದ ನಮ್ಮ ರಾಜ್ಯ ಸರ್ಕಾರವು ಪಂಚ ಗ್ಯಾರಂಟಿ ಯೋಜನೆಗಳ ಸಮರ್ಪಕವಾಗಿ ಜಾರಿ ಜೊತೆಗೆ ಅಭಿವೃದ್ಧಿ ಕಾರ್ಯಗಳಿಗೂ ಒತ್ತು ನೀಡುತ್ತಿದೆ. ಈ ದಿಶೆಯಲ್ಲಿ ಇಂದು ಯಲಬುರ್ಗಾ ಪಟ್ಟಣದಲ್ಲಿ ಬಿ.ಎಸ್.ಸಿ. ನರ್ಸಿಂಗ್ ಕಾಲೇಜು ಪ್ರಾರಂಭೋತ್ಸವ ಮತ್ತು ಅಡಿಗಲ್ಲು ಸಮಾರಂಭ, ತಾಲೂಕು ಪಂಚಾಯತ್ ಆಡಳಿತ ಭವನದ ಅಡಿಗಲ್ಲು ಸಮಾರಂಭ ಹಾಗೂ ಶಿಕ್ಷಕರ ತರಬೇತಿ ಕೇಂದ್ರ (ಬಿ.ಇ.ಓ) ಕಚೇರಿ ಶಂಕುಸ್ಥಾಪನೆ ಮತ್ತು ಯಲಬುರ್ಗಾ-ಕುಕನೂರ ಪಟ್ಟಣ ಪಂಚಾಯತಿಯಿಂದ ಮಲ ಕೆಸರು ಸಂಸ್ಕರಣಾ ಘಟಕ (ಎಫ್.ಎಸ್.ಟಿ.ಪಿ.) ಶಂಕುಸ್ಥಾಪನೆ, ಬಾಲ ಭವನ, ಅಂಗನವಾಡಿ ತರಬೇತಿ ಕೇಂದ್ರ (ಸಿ.ಡಿ.ಪಿ.ಓ.) ನಿರ್ಮಾಣದ ಶಂಕುಸ್ಥಾಪನೆ ನೆರವೇರಿಸಲಾಗಿದೆ. ಸರ್ಕಾರಿ ನರ್ಸಿಂಗ್ ಕಾಲೇಜು ಪ್ರಾರಂಭದಿಂದ ಈ ಭಾಗದ ವಿದ್ಯಾರ್ಥಿಗಳಿಗೆ ಅನುಕೂಲವಾಗಿದೆ. ಇದರಿಂದ‌ ವಿದ್ಯಾರ್ಥಿಗಳ ಡೊನೆಶನ ಮೊತ್ತವು ಉಳಿದಿದೆ. ನಮ್ಮ ಸರ್ಕಾರವು ಜನಪರವಾದ ಮತ್ತು ಅತ್ಯುತ್ತಮವಾದ ಕೆಲಸಗಳನ್ನು ಮಾಡುತ್ತಿದ್ದು, ದೇಶದಲ್ಲಿ ಅತೀ ಹೆಚ್ಚು ಜಿಡಿಪಿ ಹೊಂದಿದೆ. ಇದಲ್ಲದೆ ದೇಶದಲ್ಲೇ ಹೆಚ್ಚಿನ ಸಂಖ್ಯೆಯ ಬಿಪಿಎಲ್ ಕಾರ್ಡ್‌ಗಳನ್ನು ವಿತರಿಸಿದೆ ಎಂದರು. ಕೊಪ್ಪಳ ಜಿಲ್ಲಾಧಿಕಾರಿ ಡಾ. ಸುರೇಶ ಬಿ. ಇಟ್ನಾಳ ಅವರು ಮಾತನಾಡಿ, ಯಲಬುರ್ಗಾದ ಸರ್ಕಾರಿ ನರ್ಸಿಂಗ್ ಕಾಲೇಜು ನಿರ್ಮಾಣಕ್ಕಾಗಿ ಸರ್ಕಾರದಿಂದ 10 ಎಕರೆ ಭೂಮಿಯನ್ನು ಉಚಿತವಾಗಿ ನೀಡಿದ್ದು, 9.85 ಕೋಟಿ ರೂ.ಗಳನ್ನು ಕಾಲೇಜಿನ ಸಿಬ್ಬಂದಿಗಳ ಮತ್ತು ಪ್ರಯೋಗಾಲಯ ಮತ್ತು ಇತರೆ ಕಟ್ಟಡಗಳ ನಿರ್ಮಾಣಕ್ಕೆ ನೀಡಲಾಗಿದೆ. ಇಂದು ಈ ಕಾಲೇಜಿನ ಪ್ರಾರಂಭೋತ್ಸವದಲ್ಲಿ ಪಾಲ್ಗೊಂಡ ವೈದ್ಯಕೀಯ ಶಿಕ್ಷಣ ಹಾಗೂ ಕೌಶಲ್ಯ ಅಭಿವೃದ್ಧಿ ಸಚಿವರಾದ ಡಾ.ಶರಣಪ್ರಕಾಶ್‌ ಪಾಟೀಲ್‌ ಅವರು ಉದ್ಘಾಟನೆಯನ್ನು ಮಾಡಿದರು. ಈ ಸರ್ಕಾರಿ ನರ್ಸಿಂಗ್ ಕಾಲೇಜಿಗೆ ಮುಂದಿನ ಮೂರು ವರ್ಷಗಳ ಅವದಿಗೆ ಕಾಲೇಜಿಗೆ ಬೇಕಾದ ಸಿಬ್ಬಂದಿಗಳ ವೇತನ ಮತ್ತು ಮೂಲ ಸೌಕರ್ಯಗಳಿಗೆ ಬೇಕಾದ ಹಣವನ್ನು ಸಹ ಕೆ.ಕೆ.ಆರ್.ಡಿ.ಬಿ ಯಿಂದ ಒದಗಿಸಲಾಗುವುದು ಎಂದರು. ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವರ್ಣಿತ್ ನೇಗಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ರಾಮ್ ಎಲ್. ಅರಸಿದ್ದಿ, ಜಿಲ್ಲಾ ಪಂಚಾಯತ್‌ ‌ಉಪ ಕಾರ್ಯದರ್ಶಿ ಟಿ. ಕೃಷ್ಣಮೂರ್ತಿ, ಸಹಾಯಕ ಆಯುಕ್ತರಾದ ಮಹೇಶ್ ಮಾಲಗಿತ್ತಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಆರ್. ಹೇಮಂತಕುಮಾರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೆಶಕರಾದ ಪಿ. ವೈ. ಶೆಟ್ಟೆಪ್ಪನವರ್, ಶಾಲಾ- ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪನಿರ್ದೆಶಕರಾದ ಸೋಮಶೇಖರಗೌಡ ಪಾಟೀಲ್‌ ಸೇರಿದಂತೆ ಇತರೆ ಜಿಲ್ಲಾ ‌ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.  

ವಾರ್ತಾ ಭಾರತಿ 19 Dec 2025 9:54 pm

ಮೋದಿಗೆ ಅಕ್ಷರಗಳೊಂದಿಗೆ ಆಡುವ ‘ಗಂಭೀರ ಕಾಯಲೆ’: ಕಾಂಗ್ರೆಸ್

ಹೊಸದಿಲ್ಲಿ, ಡಿ. 19: ಪ್ರಧಾನಿ ನರೇಂದ್ರ ಮೋದಿ ‘‘ಅಕ್ಷರಗೊಳೊಂದಿಗೆ ಆಡಿ ಯೋಜನೆಗಳಿಗೆ ಗಮನ ಸೆಳೆಯುವ ಹೆಸರುಗಳನ್ನು ಇಡುವ ಗಂಭೀರ ಕಾಯಿಲೆ’’ಯಿಂದ ಬಳಲುತ್ತಿದ್ದಾರೆ ಎಂದು ‘ವಿಬಿ- ಜಿ ರಾಮ್ ಜಿ’ ಮಸೂದೆಯನ್ನು ಸಂಸತ್ ಅಂಗೀಕರಿಸಿದ ಒಂದು ದಿನದ ಬಳಿಕ ಶುಕ್ರವಾರ ಕಾಂಗ್ರೆಸ್ ಹೇಳಿದೆ. ಇಪ್ಪತ್ತು ವರ್ಷಗಳ ಕಾಲ ಅಸ್ತಿತ್ವದಲ್ಲಿದ್ದ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಜಾಗಕ್ಕೆ ಕೇಂದ್ರ ಸರಕಾರ ತರಲು ಉದ್ದೇಶಿಸಿರುವ ‘ವಿಬಿ- ಜಿ ರಾಮ್ ಜಿ’ ಯೋಜನೆಯ ಮಸೂದೆಗೆ ಸಂಸತ್ ಗುರುವಾರ ಅಂಗೀಕಾರ ನೀಡಿದೆ. ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ವ್ಯಂಗ್ಯಚಿತ್ರವೊಂದನ್ನು ಹಾಕಿದರು. ಆ ವ್ಯಂಗ್ಯಚಿತ್ರದಲ್ಲಿ ಹೀಗೆ ಬರೆದಿದೆ: ‘‘ಪದಗಳ ಮೊದಲ ಅಕ್ಷರಗಳನ್ನು ಜೋಡಿಸಿ ಹೊಸ ಪದಗಳನ್ನು ಸೃಷ್ಟಿಸುವ ಸಚಿವಾಲಯ. ಇಲ್ಲಿ ಹಳೆಯ ಯೋಜನೆಗಳಿಗೆ ಹೊಚ್ಚ ಹೊಸ ಹೆಸರುಗಳನ್ನು ಇಡಲಾಗುತ್ತದೆ. ಹೆಸರುಗಳು ಹೊಸದಾದರೂ ಅರ್ಥಹೀನ!’’. ‘‘ಪ್ರಧಾನಿಯವರು ಅಕ್ಷರಗೊಳೊಂದಿಗೆ ಆಡಿ ಯೋಜನೆಗಳಿಗೆ ಗಮನ ಸೆಳೆಯುವ ಹೆಸರುಗಳನ್ನು ಇಡುವ ಗಂಭೀರ ಕಾಯಿಲೆಯಿಂದ ಬಳಲುತ್ತಿದ್ದಾರೆ’’ ಎಂಬುದಾಗಿ ರಮೇಶ್ ವ್ಯಂಗ್ಯಚಿತ್ರದ ಸಮೀಪ ಬರೆದಿದ್ದಾರೆ. ವಿಕಸಿತ ಭಾರತ ಗ್ಯಾರಂಟೀ ಫಾರ್ ರೋಜ್ಗಾರ್ ಆ್ಯಂಡ್ ಆಜೀವಿಕಾ ಮಿಶನ್ (ಗ್ರಾಮೀಣ್) (ವಿಬಿ- ಜಿ ರಾಮ್ ಜಿ) ಮತ್ತು ಸಸ್ಟೇನಬಲ್ ಹಾರ್ನೆಸಿಂಗ್ ಆ್ಯಂಡ್ ಅಡ್ವಾನ್ಸ್‌ಮೆಂಟ್ ಆಫ್ ನ್ಯೂಕ್ಲಿಯರ್ ಎನರ್ಜಿ ಫಾರ್ ಟ್ರಾನ್ಸ್‌ಫಾರ್ಮಿಂಗ್ ಇಂಡಿಯಾ (ಶಾಂತಿ)- ಈ ಎರಡು ಮಸೂದೆಗಳನ್ನು ಸಂಸತ್ ಅಂಗೀಕರಿಸಿದ ಬಳಿಕ ಜೈರಾಮ್ ಈ ರೀತಿಯಾಗಿ ಟೀಕಿಸಿದ್ದಾರೆ.

ವಾರ್ತಾ ಭಾರತಿ 19 Dec 2025 9:40 pm

ಕ್ರಿಸ್ಮಸ್‌, ಹೊಸ ವರ್ಷಾಚರಣೆಗೆ ಬೆಂಗಳೂರಿನ ಮಾಲ್‌, ಪಬ್‌, ರೆಸ್ಟೋರೆಂಟ್‌ಗಳು ಈ ನಿಯಮ ಪಾಲನೆ ಕಡ್ಡಾಯ

ಮಾಲ್‌ಗಳು, ಪಬ್‌ ಸೇರಿ ಹಲವು ವಾಣಿಜ್ಯ ಹೋಟೆಲ್‌ಗಳು ಸಾರ್ವಜನಿಕರ ಸುರಕ್ಷತೆಗಾಗಿ ಎಲ್ಲಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕು ಎಂದು ಪಾಲಿಕೆ ಆಯುಕ್ತರು ಸೂಚನೆ ನೀಡಿದ್ದಾರೆ. ಅಗ್ನಿಶಾಮಕ ಉಪಕರಣಗಳು ಕಾರ್ಯನಿರ್ವಹಿಸುವ ಸ್ಥಿತಿಯಲ್ಲಿರಬೇಕು. ತುರ್ತು ನಿರ್ಗಮನ ದ್ವಾರಗಳು ತೆರೆದಿರಬೇಕು. ನಿಯಮ ಪಾಲಿಸದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ. ಸಿಬ್ಬಂದಿಗೆ ಅಗ್ನಿ ಸುರಕ್ಷತಾ ತರಬೇತಿ ಕಡ್ಡಾಯವಾಗಿದೆ.

ವಿಜಯ ಕರ್ನಾಟಕ 19 Dec 2025 9:39 pm

IND Vs SA- ಆಮೆಗತಿ ಬ್ಯಾಟಿಂಗ್ ಎಂಬ ಟೀಕೆಗೆ ಹಾರ್ದಿಕ್ ಪಾಂಡ್ಯ ತಿರುಗೇಟು; ಭಾರತದ ಪರ 2ನೇ ವೇಗದ ಟಿ20 ಶತಕ!

ಟೀಂ ಇಂಡಿಯಾ ಆಲ್-ರೌಂಡರ್ ಹಾರ್ದಿಕ್ ಪಾಂಡ್ಯ ಅವರು ದಕ್ಷಿಣ ಆಫ್ರಿಕಾ ವಿರುದ್ಧದ ಕೇವಲ 16 ಎಸೆತಗಳಲ್ಲಿ ತಮ್ಮ ಅರ್ಧಶತಕವನ್ನು ಪೂರೈಸುವ ಮೂಲಕ ಭಾರತದ ಪರ ಎರಡನೇ ಅತಿ ವೇಗದ ಟಿ20 ಅರ್ಧಶತಕವನ್ನು ಬಾರಿಸಿದ ಸಾಧನೆ ಮಾಡಿದ್ದಾರೆ. ಈ ಮೂಲಕ ಡೆತ್ ಓವರ್ ಗಳಲ್ಲಿ ನಿಧಾನಗತಿಯಲ್ಲಿ ಬ್ಯಾಟ್ ಬೀಸುತ್ತಾರೆಂದು ಕೇಳಿ ಬಂದ ಟೀಕೆಗಳಿಗೆ ಸೂಕ್ತ ಸಮಯದಲ್ಲಿ ತಿರುಗೇಟು ನೀಡಿದ್ದಾರೆ. ನ್ಯೂು ಚಂಡೀಗಢದಲ್ಲಿ ನಡೆದ 2ನೇ ಟಿ20 ಪಂದ್ಯದಲ್ಲಿ ಅವರು ವೇಗವಾಗಿ ರನ್ ಗಳಿಸಬೇಕಾದ ಅಗತ್ಯವಿದ್ದ ಸಂದರ್ಭದಲ್ಲಿ 23 ಎಸತೆಗಳಿಂದ 20 ರನ್ ಗಳಿಸಿದ್ದು ತೀವ್ರ ಟೀಕೆಗೆ ಒಳಗಾಗಿತ್ತು. ಅಹ್ಮದಾಬಾದ್ ನ ನರೇಂದ್ರ ನೋದಿ ಕ್ರೀಡಾಂಗಣದಲ್ಲಿ ನಡೆದ ದಲ್ಲಿ ಅವರ ಮತ್ತು ತಿಲಕ್ ವರ್ಮಾ ಅವರ ಶತಕದ ಜೊತೆಯಾಟದಿಂದಾಗಿ ಭಾರತ ತಂಡ ನಿಗದಿತ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 231 ರನ್ ಗಳಸಿತು. ಟಾಸ್ ಸೋತು ಬ್ಯಾಟಿಂಗ್ ಗೆ ಇಳಿಸಲ್ಪಟ್ಟ ಭಾರತ ತಂಡಕ್ಕೆ ಸಂಜು ಸ್ಯಾಮ್ಸನ್ ಮತ್ತು ಅಭಿಷೇಕ್ ಶರ್ಮಾ ಉತ್ತಮ ಆರಂಭ ನೀಡಿದರು. ಇವರಿಬ್ಬರು ಕೇವಲ5.4 ಓವರ್ ಗಳಲ್ಲಿ 63 ರನ್ ಗಳ ಜೊತೆಯಾಟವಾಡಿದರು. ಈ ಭಾಗೀದಾರಿಯಲ್ಲಿ ಅಭಿಷೇಕ್ ಶರ್ಮಾ ಅವರು ಕೇವಲ 21 ಎಸತೆಗಳಿಂದ 6 ಬೌಂಡರಿ 1 ಸಿಕ್ಸರ್ ಇದ್ದ 34 ರನ್ ಗಳಿಸಿ ಔಟಾದರು. ಇನ್ನು ಉಪನಾಯಕ ಶುಭಮನ್ ಗಿಲ್ ಅವರು ಗಾಯಗೊಂಡಿದ್ದರಿಂದ ಅವರ ಅನುಪಸ್ಥಿತಿಯಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದರು. ಕೇವಲ 22 ಎಸೆತಗಳಿಂದ 4 ಬೌಂಡರಿ ಮತ್ತು 2 ಸಿಕ್ಸರ್ ಗಳಿದ್ದ 37 ರನ್ ಗಳಿಸಿ ಲಿಂಡೆ ಬೌಲಿಂಗ್ ನಲ್ಲಿ ಕ್ಲೀನ್ ಬೌಲ್ಡ್ ಆದರು. ವೇಗದ ಟಿ20 ಅರ್ಧಶತಕ ಬಾರಿಸಿದ ಭಾರತೀಯರು ಆಟಗಾರ ಎಸೆತಗಳು ಎದುರಾಳಿ ತಂಡ ವರ್ಷ ಯುವರಾಜ್ ಸಿಂಗ್ 12 ಇಂಗ್ಲೆಂಡ್ 2007 ಹಾರ್ದಿಕ್ ಪಾಂಡ್ಯ 16 ದಕ್ಷಿಣ ಆಫ್ರಿಕಾ 2025 ಅಭಿಷೇಕ್ ಶರ್ಮಾ 17 ಇಂಗ್ಲೆಂಡ್ 2025 ಕೆ.ಎಲ್. ರಾಹುಲ್ 18 ಸ್ಕಾಟ್ಲೆಂಡ್ 2021 ಸೂರ್ಯಕುಮಾರ್ ಯಾದವ್ 18 ದಕ್ಷಿಣ ಆಫ್ರಿಕಾ 2022 ಬ್ಯಾಟಿಂಗ್ ನಲ್ಲಿ ನಿರಂತರ ವಿಫಲರಾಗುತ್ತಿರುವ ನಾಯಕ ಸೂರ್ಯಕುಮಾರ್ ಯಾದವ್ ಈ ಬಾರಿಯೂ ಉತ್ತಮ ಬ್ಯಾಟಿಂಗ್ ಪ್ರದರ್ಶಿಸುವಲ್ಲಿ ಸಫಲರಾಗಲಿಲ್ಲ. ಕೇವಲ 7 ಎಸೆತಗಳಿಂದ 5 ರನ್ ಗಳಿಸಿದ ಅವರು ಬಾಷ್ ಬೌಲಿಂಗ್ ನಲ್ಲಿ ಮಿಡ್ ವಿಕೆಟ್ ನಲ್ಲಿದ್ದ ಮಿಲ್ಲರ್ ಕೈಗೆ ಸುಲಭ ಕ್ಯಾಚಿತ್ತು ಔಟಾದರು. ಇಲ್ಲಿಂದ ಬಳಿಕ ತಿಲಕ್ ವರ್ಮಾ ಮತ್ತು ಹಾರ್ದಿಕ್ ಪಾಂಡ್ಯ ಆಡಿದ್ದೇ ಆಟವಾಯಿತು. ಇವರಿಬ್ಬರು 4ನೇ ವಿಕೆಟ್ ಗೆ ಮಹತ್ವದ 105 ರನ್ ಗಳ ಜೊತೆಯಾಟವಾಡಿದರು. ಯುವರಾಜ್ ಸಿಂಗ್ ಅವರು 2007 ರಲ್ಲಿ ನಡೆದ ಉದ್ಘಾಟನಾ ಟಿ20 ವಿಶ್ವಕಪ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಕೇವಲ 12 ಎಸೆತಗಳಲ್ಲಿ ತಮ್ಮ ಅರ್ಧಶತಕವನ್ನು ಪೂರೈಸಿದ್ದರು. ಆ ಪಂದ್ಯದಲ್ಲಿ ಯುವರಾಜ್ ಸಿಂಗ್ ಅವರು ಸ್ಟುವರ್ಟ್ ಬ್ರಾಡ್ ಅವರ ಒಂದೇ ಓವರ್‌ನಲ್ಲಿ ಆರು ಸಿಕ್ಸರ್‌ಗಳನ್ನು ಬಾರಿಸಿ ಇತಿಹಾಸ ಸೃಷ್ಟಿಸಿದ್ದರು. ಇದು ಭಾರತದ ಪರ ದಾಖಲಾಗಿರುವ ಅತಿ ವೇಗದ ಟಿ20 ಅರ್ಧಶತಕ. ಈ ದಾಖಲೆ ಕಳೆದ 18 ವರ್ಷಗಳಿಂದ ಅಬಾಧಿತವಾಗಿಯೇ ಉಳಿದಿದೆ. ಸಂಕ್ಷಿಪ್ತ ಸ್ಕೋರ್ ಭಾರತ 20 ಓವರ್ ಗಳಲ್ಲಿ 231/5, ತಿಲಕ್ ವರ್ಮಾ 73(42), ಹಾರ್ದಿಕ್ ಪಾಂಡ್ಯ 63(25), ಸಂಜು ಸ್ಯಾಮ್ಸನ್ 37(22), ಅಭಿಷೇಕ್ ಶರ್ಮಾ 34(21), ಕಾರ್ಬಿನ್ ಬಾಷ್ 44ಕ್ಕೆ 2, ಬಾರ್ಟ್ ಮನ್ 39ಕ್ಕೆ 1, ಜಾರ್ಜ್ ಲಿಂಡೆ 46ಕ್ಕೆ 1.

ವಿಜಯ ಕರ್ನಾಟಕ 19 Dec 2025 9:38 pm

ಕನಕಗಿರಿ | ಹುಲ್ಲಿನ ಬಣವೆಗೆ ಬೆಂಕಿ : ತಪ್ಪಿದ ಅನಾಹುತ

ಕನಕಗಿರಿ: ತಾಲೂಕಿನ ಕರಡೋಣಿ ಗ್ರಾಮದ ಯಂಕಪ್ಪ ಲಕ್ಷ್ಮಪ್ಪ ಎಂಬ ರೈತನ ಹೊಲದಲ್ಲಿ ನಾಲ್ಕು ಟ್ರ್ಯಾಕ್ಟರ್‌ಗಳಷ್ಟು ಹುಲ್ಲಿನ ಬಣವೆಯನ್ನು ಸಂಗ್ರಹಿಸಿ ಇಟ್ಟಿದ್ದ ಸ್ಥಳದಲ್ಲಿ ಶುಕ್ರವಾರ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡ ಘಟನೆ ನಡೆದಿದೆ. ಮಧ್ಯಾಹ್ನ ಸುಮಾರು 12.30 ಗಂಟೆ ವೇಳೆಗೆ ಬಣವೆಯಿಂದ ಹೊಗೆ ಎದ್ದಿರುವುದನ್ನು ಗಮನಿಸಿದ ಸ್ಥಳೀಯರು ತಕ್ಷಣವೇ ಬಣವೆ ಮಾಲಕರಿಗೆ ಹಾಗೂ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ. ಬೆಂಕಿ ಕ್ಷಣಾರ್ಧದಲ್ಲಿ ತೀವ್ರಗೊಂಡ ಪರಿಣಾಮ ನಾಲ್ಕು ಟ್ರ್ಯಾಕ್ಟರ್‌ಗಳಷ್ಟು ಹುಲ್ಲಿನ ಬಣವೆ ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿದೆ. ಮಾಹಿತಿ ಪಡೆದ ತಕ್ಷಣವೇ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಸುಮಾರು ಎರಡು ಗಂಟೆಗಳ ಕಾಲ ಶ್ರಮಪಟ್ಟು ಬೆಂಕಿಯನ್ನು ಸಂಪೂರ್ಣವಾಗಿ ನಂದಿಸಿದ್ದಾರೆ ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ತಿಳಿದು ಬಂದಿದೆ. ಘಟನಾ ಸ್ಥಳಕ್ಕೆ ಅಧಿಕಾರಿಗಳಾದ ಕುಲಕರ್ಣಿ ಕುಮಾರ್ ಹಾಗೂ ಗ್ರಾಮ ಸಹಾಯಕ ರವಿಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಸರ್ಕಾರದಿಂದ ಪರಿಹಾರ ಒದಗಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.

ವಾರ್ತಾ ಭಾರತಿ 19 Dec 2025 9:36 pm

‘Live-in’ ಕಾನೂನುಬಾಹಿರಲ್ಲ; ಅಲಹಾಬಾದ್ ಹೈಕೋರ್ಟ್

ಅಲಹಾಬಾದ್,ಡಿ.19: ‘ಲಿವ್ ಇನ್ ರಿಲೇಶನ್‌ಶಿಪ್’ (ವಿವಾಹವಾಗದೆ ಜೊತೆಯಾಗಿ ವಾಸಿಸುವುದು) ಕಾನೂನುಬಾಹಿರವಲ್ಲ ಎಂದು ಅಲಹಾಬಾದ್ ಹೈಕೋರ್ಟ್ ಬುಧವಾರ ತೀರ್ಪು ನೀಡಿದ್ದು, ವೈವಾಹಿಕ ಸ್ಥಾನಮಾನ ಪರಿಗಣಿಸದೆ ದೇಶದ ಯಾವುದೇ ಪೌರನನ್ನು ಬೆದರಿಕೆಗಳು ಹಾಗೂ ಹಸ್ತಕ್ಷೇಪದಿಂದ ರಕ್ಷಿಸುವುದು ಆಡಳಿತದ ಬದ್ಧತೆಯಾಗಿದೆ ಎಂದು ಪ್ರತಿಪಾದಿಸಿದೆ. ವಿವಾಹವಾಗದೆ ಜೊತೆಯಾಗಿ ವಾಸಿಸುವುದು ಅಪರಾಧವಲ್ಲವೆಂದು ತೀರ್ಪು ನೀಡಿದ ನ್ಯಾಯಮೂರ್ತಿ ವಿವೇಕ್ ಕುಮಾರ್ ಸಿಂಗ್ ಅವರು, ಲಿವ್ ಇನ್ ರಿಲೇಶನ್‌ ನಲ್ಲಿರುವ ವಯಸ್ಕರು, ಸಂವಿಧಾನವು ಖಾತರಿಪಡಿಸಿರುವ ವೈಯಕ್ತಿಕ ಸ್ವಾತಂತ್ರ್ಯದ ಹಕ್ಕನ್ನು ಹಾಗೂ ಅವರ ಪ್ರಾಣಕ್ಕೆ ರಕ್ಷಣೆಯನ್ನು ಪಡೆಯುವ ಹಕ್ಕನ್ನು ಹೊಂದಿದ್ದಾರೆ ಎಂದು ತೀರ್ಪಿನಲ್ಲಿ ತಿಳಿಸಿದ್ದಾರೆ. ‘‘ ಲಿವ್ ಇನ್ ರಿಲೇಶನ್‌ ಶಿಪ್‌ನ ಪರಿಕಲ್ಪನೆ ಎಲ್ಲರಿಗೂ ಸ್ವೀಕಾರಾರ್ಹವಲ್ಲದೆ ಇರಬಹುದು. ಆದರೆ ಅಂತಹ ಸಂಬಂಧವು ಕಾನೂನುಬಾಹಿರವೆಂದು ಅಥವಾ ವಿವಾಹದ ಪಾವಿತ್ರ್ಯತೆ ಇಲ್ಲದೆ ಜೊತೆಯಾಗಿ ಬಾಳುವುದು ಅಪರಾಧವೆಂದು ಹೇಳಲು ಸಾಧ್ಯವಿಲ್ಲ ’’ಎಂದು ನ್ಯಾಯಮೂರ್ತಿ ವಿವೇಕ್ ಕುಮಾರ್ ಸಿಂಗ್ ಅವರು ಅಭಿಪ್ರಾಯಿಸಿದರು. ತನ್ನ ಸಂಗಾತಿಯನ್ನು ಹಾಗೂ ವಾಸ್ತವ್ಯ ಸ್ಥಳವನ್ನು ಆಯ್ಕೆ ಮಾಡುವುದು ವಯಸ್ಕ ವ್ಯಕ್ತಿಯ ಸ್ವಾಯತ್ತತೆಯಾಗಿದೆ ಎಂದು ಸಿಂಗ್ ಅವರು ಪ್ರತಿಪಾದಿಸಿದರು. ದೇಶದ ಸಾಮಾಜಿಕ ಚೌಕಟ್ಟನ್ನು ಬಲಿಗೊಟ್ಟು ಲಿವ್ ಇನ್ ರಿಲೇಶನ್ ಅನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲವೆಂಬ ರಾಜ್ಯಸರಕಾರದ ವಕೀಲರ ವಾದವನ್ನು ನ್ಯಾಯಾಲಯ ತಿರಸ್ಕರಿಸಿತು. ಲಿವ್ ಇನ್ ರಿಲೇಶನ್‌ಶಿಪ್‌ ಗೆ ಕಾನೂನಾತ್ಮಕವಾಗಿ ಮಾನ್ಯತೆ ನೀಡಲು ಸಾಧ್ಯವಿಲ್ಲ. ಮನಬಂದಂತೆ ಈ ಒಪ್ಪಂದವನ್ನು ಕೊನೆಗೊಳಿಸಬಹುದಾದ ಈ ಸಂಬಂಧದಿಂದ ಜನಿಸುವ ಮಕ್ಕಳ ಸ್ಥಾನಮಾನ ಸೇರಿದಂತೆ ವಿವಿ ಕಾನೂನು ಸಮಸ್ಯೆಗಳಿಗೆ ದಾರಿ ಮಾಡಿಕೊಡುತ್ತದೆ ಎಂದು ವಾದಿಸಿದ್ದರು. ತಮಗೆ ಜೀವಬೆದರಿಕೆ ಬಂದಿರುವ ಹಿನ್ನೆಲೆಯಲ್ಲಿ ಪೊಲೀಸ್ ರಕ್ಷಣೆ ಕೋರಿ ಲಿವ್‌ಇನ್ ರಿಲೇಶನ್‌ಶಿಪ್‌ನಲ್ಲಿರುವ 12 ಮಂದಿ ಮಹಿಳೆಯರು ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯವು ಈ ತೀರ್ಪನ್ನು ನೀಡಿದೆ. ತಮಗೆ ರಕ್ಷಣೆ ನೀಡುವಂತೆ ಕೋರಿ ಸ್ಥಳೀಯ ಪೊಲೀಸ್ ಠಾಣೆಯ ಮೆಟ್ಟಲೇರಿದರೂ,ಯಾವುದೇ ಸಹಾಯ ದೊರೆತಿಲ್ಲವೆಂದು ಅವರು ಹೇಳಿದರು. ‘‘ಪ್ರಾಯಪ್ರಬುದ್ಧನಾದ ವ್ಯಕ್ತಿಯು ತನ್ನ ಸಂಗಾತಿಯನ್ನು ಆಯ್ಕೆ ಮಾಡಿದಲ್ಲಿ.ಅದಕ್ಕೆ ಇತರ ಯಾವುದೇ ವ್ಯಕ್ತಿಯು, ಆತ ಕುಟುಂಬಸದಸ್ಯನೇ ಆಗಿರಲಿ ಆಕ್ಷೇಪಿಸುವಂತಿಲ್ಲ ಅಥವಾ ಅವರು ಶಾಂತಿಯುತವಾಗಿ ಬಾಳುವುದಕ್ಕೆ ಅಡ್ಡಿಪಡಿಸುವಂತಿಲ್ಲ’’ ಎಂದು ಅಲಹಾಬಾದ್ ಹೈಕೋರ್ಟ್ ಹೇಳಿದೆ.

ವಾರ್ತಾ ಭಾರತಿ 19 Dec 2025 9:33 pm

ಪ್ರಶ್ನೆ ಕೇಳಲು ಹಣ ಪಡೆದ ಪ್ರಕರಣ | ಮಹುವಾ ಮೊಯಿತ್ರಾ ವಿರುದ್ಧದ ಲೋಕಪಾಲ್ ಆದೇಶ ರದ್ದು: ದಿಲ್ಲಿ ಹೈಕೋರ್ಟ್

ಹೊಸದಿಲ್ಲಿ, ಡಿ. 19: ಪ್ರಶ್ನೆ ಕೇಳಲು ಹಣ ಪಡೆದ ಆರೋಪದಲ್ಲಿ ತೃಣಮೂಲ ಕಾಂಗ್ರೆಸ್ ಸಂಸದೆ ಮಹುವಾ ಮೊಯಿತ್ರಾ ಅವರ ವಿರುದ್ಧ ಆರೋಪ ಪಟ್ಟಿ ಸಲ್ಲಿಸಲು ಸಿಬಿಐಗೆ ಅನುಮತಿ ನೀಡಿದ್ದ ಲೋಕಪಾಲ್ ಆದೇಶವನ್ನು ದಿಲ್ಲಿ ಉಚ್ಚ ನ್ಯಾಯಾಲಯ ಶುಕ್ರವಾರ ರದ್ದುಗೊಳಿಸಿದೆ. ಮಹುವಾ ಮೊಯಿತ್ರಾ ಅವರ ಅರ್ಜಿ ಕುರಿತು ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಅನಿಲ್ ಕ್ಷೇತ್ರಪಾಲ್ ಹಾಗೂ ಹರೀಶ್ ವಿದ್ಯಾನಾಥನ್ ಶಂಕರ್ ಅವರ ಪೀಠ ಈ ಆದೇಶ ನೀಡಿತು. ‘‘ಆದೇಶವನ್ನು ರದ್ದುಗೊಳಿಸಲಾಗಿದೆ. ಲೋಕಪಾಲ್ ಹಾಗೂ ಲೋಕಾಯುಕ್ತ ಕಾಯ್ದೆಯ ಸೆಕ್ಷನ್ 20ರ ಅಡಿಯ ನಿಯಮಗಳ ಪ್ರಕಾರ ಅನುಮತಿ ನೀಡುವುದನ್ನು ಪರಿಶೀಲಿಸಿ ನಿರ್ಧರಿಸುವಂತೆ ನಾವು ಲೋಕಪಾಲರನ್ನು ಕೇಳಿದ್ದೇವೆ. ಲೋಕಪಾಲರು ಈ ಪ್ರಕ್ರಿಯೆಯನ್ನು ಒಂದು ತಿಂಗಳೊಳಗೆ ಪೂರ್ಣಗೊಳಿಸಬೇಕು’’ ಎಂದು ಪೀಠ ಹೇಳಿತು. ಪ್ರಶ್ನೆ ಕೇಳಲು ಹಣ ಪಡೆದ ಹಗರಣ ಉದ್ಯಮಿಯೊಬ್ಬರಿಂದ ನಗದು ಹಾಗೂ ಕೊಡುಗೆಗಳನ್ನು ಪಡೆಯುವ ಸಲುವಾಗಿ ಮೊಯಿತ್ರಾ ಅವರು ಸದನದಲ್ಲಿ ಪ್ರಶ್ನೆಗಳನ್ನು ಕೇಳಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದೆ.

ವಾರ್ತಾ ಭಾರತಿ 19 Dec 2025 9:30 pm

Haryana | 23 ವರ್ಷದ ಮಹಿಳಾ ಶೂಟರ್‌ ಮೇಲೆ ಅತ್ಯಾಚಾರ ಎಸಗಿದ ಆರೋಪ; ಮೂವರ ಬಂಧನ

ಫರೀದಾಬಾದ್(ಹರ್ಯಾಣ), ಡಿ. 19: 23 ವರ್ಷದ ಮಹಿಳಾ ಶೋಟರ್ ಓರ್ವರನ್ನು ಇಲ್ಲಿನ ಹೊಟೇಲೊಂದರಲ್ಲಿ ಅತ್ಯಾಚಾರ ಎಸಗಿದ ಆರೋಪದಲ್ಲಿ ಮಹಿಳೆ ಸೇರಿದಂತೆ ಮೂವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ. ಸಂತ್ರಸ್ತೆಯ ದೂರಿನ ಆಧಾರದಲ್ಲಿ ಸರಾಯಿ ಖ್ವಾಜಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಆರೋಪಿಗಳಾದ ಸತೇಂದ್ರ, ಗೌರವ್ ಹಾಗೂ ಮಹಿಳಾ ಶೂಟರ್‌ ಳ ಗೆಳತಿಯನ್ನು ಹೊಟೇಲ್‌ ನ ಆವರಣದಿಂದ ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಶೂಟಿಂಗ್ ಸ್ಪರ್ಧೆಯಲ್ಲಿ ಭಾಗವಹಿಸಲು ಮಹಿಳೆ ತನ್ನ ಗೆಳತಿಯೊಂದಿಗೆ ಮಂಗಳವಾರ ಫರೀದಾಬಾದ್‌ ಗೆ ಆಗಮಿಸಿದ್ದರು. ಬುಧವಾರ ಸಂಜೆ ಸ್ಪರ್ಧೆ ಮುಗಿದ ಬಳಿಕ ಶೂಟರ್‌ ನ ಗೆಳತಿ ಫರೀದಾಬಾದ್‌ ನ ನಿವಾಸಿ ಗೌರವ್‌ ನನ್ನು ಸಂಪರ್ಕಿಸಿ ಮೆಟ್ರೊ ನಿಲ್ದಾಣದಲ್ಲಿ ಬಿಡಲು ಕೇಳಿಕೊಂಡಳು. ಗೌರವ್ ತನ್ನ ಗೆಳೆಯ ಸತೇಂದ್ರನೊಂದಿಗೆ ಫರೀದಾಬಾದ್‌ ಗೆ ಆಗಮಿಸಿದ. ಅನಂತರ ನಾಲ್ವರು ಫರೀದಾಬಾದ್‌ನಲ್ಲಿ ರಾತ್ರಿ ತಂಗಲು ಹಾಗೂ ಮರುದಿನ ತೆರಳಲು ನಿರ್ಧರಿಸಿದರು. ಬಳಿಕ ಅವರು ಒಂದು ಹೊಟೇಲ್‌ ನಲ್ಲಿ ಎರಡು ಕೊಠಡಿಗಳಲ್ಲಿ ತಂಗಿದರು. ಒಂದು ಕೊಠಡಿಯಲ್ಲಿ ಪಾರ್ಟಿ ಮಾಡಿದರು ಎಂದು ಪೊಲೀಸರು ತಿಳಿಸಿದ್ದಾರೆ. ರಾತ್ರಿ 9 ಗಂಟೆಗೆ ಆಕೆಯ ಗೆಳತಿ ಗೌರವ್‌ ನೊಂದಿಗೆ ಕೆಲವು ವಸ್ತುಗಳನ್ನು ತರಲು ಕೆಳ ಮಹಡಿಗೆ ಹೋಗಿದ್ದ ಸಂದರ್ಭ ಕೊಠಡಿಯಲ್ಲಿ ಉಳಿದಿದ್ದ ಸತೇಂದ್ರ ತನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಸಂತ್ರಸ್ತೆ ದೂರಿನಲ್ಲಿ ಆರೋಪಿಸಿದ್ದಾರೆ ಎಂದು ಅವರು ಹೇಳಿದ್ದಾರೆ. ತನ್ನ ಸ್ನೇಹಿತೆ ಹಿಂದಿರುಗಿದ ಬಳಿಕ ಘಟನೆಯ ಬಗ್ಗೆ ಮತ್ತೊಬ್ಬ ಪರಿಚಯಸ್ಥನಿಗೆ ಮಾಹಿತಿ ನೀಡಿದಳು. ಆರೋಪಿಯನ್ನು ಕೊಠಡಿಯೊಳಗೆ ಕೂಡಿ ಹಾಕಿ ಕೂಡಲೇ ಪೊಲೀಸರನ್ನು ಸಂಪರ್ಕಿಸಿದಳು ಎಂದು ಸಂತ್ರಸ್ತೆ ಹೇಳಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಪೊಲೀಸರ ತಂಡ ಕೂಡಲೇ ಹೊಟೇಲ್‌ಗೆ ಧಾವಿಸಿ ಮೂವರು ಆರೋಪಿಗಳನ್ನು ಬಂಧಿಸಿದೆ ಎಂದು ಠಾಣಾಧಿಕಾರಿ ರಾಕೇಶ್ ಕುಮಾರ್ ಹೇಳಿದ್ದಾರೆ.

ವಾರ್ತಾ ಭಾರತಿ 19 Dec 2025 9:30 pm

ಬ್ಯಾರಿ ಜನಾಂಗ ಪ್ರಾಚೀನ ಕಾಲದಿಂದಲೂ ನೆಚ್ಚಿಕೊಂಡು ಬಂದಿರುವ ಸಾಂಸ್ಕೃತಿಕ ಕಲೆಯಾಗಿದೆ ದಫ್: ಲತೀಫ್ ನೇರಳಕಟ್ಟೆ

ವಿಟ್ಲ : ಬ್ಯಾರಿ ಜನಾಂಗ ಪ್ರಾಚೀನ ಕಾಲದಿಂದಲೂ ನೆಚ್ಚಿಕೊಂಡು ಬಂದಿರುವ ಸಾಂಸ್ಕೃತಿಕ ಕಲೆಯಾಗಿದೆ ದಫ್ ಕಲೆ ಎಂದು ದ.ಕ.ಮತ್ತು ಉಡುಪಿ ಜಿಲ್ಲಾ ದಫ್ ಅಸೋಸಿಯೇಷನ್ ಅಧ್ಯಕ್ಷ, ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಮಾಜಿ ಸದಸ್ಯ ಲತೀಫ್ ನೇರಳಕಟ್ಟೆ ಅಭಿಪ್ರಾಯಪಟ್ಟರು. ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ವತಿಯಿಂದ ವಿಟ್ಲ ಸಮೀಪದ ಒಕ್ಕೆತ್ತೂರು ನೂರುಲ್ ಹುದಾ ಸಮುದಾಯ ಭವನದಲ್ಲಿ ಗುರುವಾರ ನಡೆದ ಬಂಟ್ವಾಳ ತಾಲೂಕು ಮಟ್ಟದ ದಫ್ ಸ್ಪರ್ದಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಒಂದು ಜನಾಂಗದ ಅಳಿವು - ಉಳಿವು ಅವರ ಭಾಷೆ , ಸಾಹಿತ್ಯ, ಸಂಸ್ಕೃತಿಯ ಬಳಕೆಯನ್ನು ಅವಲಂಬಿಸಿರುತ್ತದೆ ಎಂದರು. ಕಾರ್ಯಕ್ರಮವನ್ನು ಉದ್ಘಾಟಿಸಿದ ಒಕ್ಕೆತ್ತೂರು ಬದ್ರಿಯಾ ಜುಮಾ ಮಸೀದಿ ಖತೀಬ್ ಮಹಮ್ಮದ್ ರಫೀಕ್ ಅಹ್ಸನಿ ಮಾತನಾಡಿ, ದಫ್ ಕಲೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಬ್ಯಾರಿ ಅಕಾಡೆಮಿ ಹಮ್ಮಿಕೊಂಡಿರುವ ಇಂತಹ ದಫ್ ಸ್ಪರ್ದಾ ಕಾರ್ಯಕ್ರಮಗಳು ಶ್ಲಾಘನೀಯ, ಅಕಾಡೆಮಿ ಅಧ್ಯಕ್ಷ ಉಮರ್ ಯು.ಎಚ್ ಅವರ ನೇತೃತ್ವದಲ್ಲಿ ಇಂತಹ ಕಾರ್ಯಕ್ರಮಗಳು ರಾಜ್ಯದೆಲ್ಲೆಡೆ ಪಸರಿಸಲಿ ಎಂದು ಹಾರೈಸಿದರು. ಕಾರ್ಯಕ್ರಮಕ್ಕೂ ಮುನ್ನ ಭಾಗವಹಿಸಿದ್ದ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಉಮರ್ ಯು.ಎಚ್. ಕಾರ್ಯಕ್ರಮದ ರೂಪುರೇಷೆಗಳ ಬಗ್ಗೆ ಮಾಹಿತಿ ನೀಡಿದರು. ಹಿರಿಯ ದಫ್ ತರಬೇತುದಾರ ಬಿ.ಎಂ.ಹಸೈನಾರ್ ಕಡಂಬು, ಸಾಮಾಜಿಕ ಮುಂದಾಳು ಅಬ್ದುಲ್ ಕರೀಮ್ ಕುದ್ದುಪದವು ಶುಭ ಹಾರೈಸಿದರು. ಒಕ್ಕೆತ್ತೂರು ಬದ್ರಿಯಾ ಜುಮಾ ಮಸೀದಿ ಅಧ್ಯಕ್ಷ ವಿ.ಎಂ.ಅಶ್ರಫ್, ಕಾರ್ಯದರ್ಶಿ ಇಕ್ಬಾಲ್ ಮೇಗಿನಪೇಟೆ, ಪ್ರಮುಖರಾದ ವಿ.ಎಸ್,ಇಬ್ರಾಹಿಂ ಒಕ್ಕೆತ್ತೂರು, ಹಸೈನಾರ್ ಹಾಜಿ ಪೈಲ್ವಾನ್, ಒಕ್ಕೆತ್ತೂರು ಶಾಲಾ ಎಸ್ಡಿಎಂಸಿ ಅಧ್ಯಕ್ಷ ಸಿ.ಎಚ್. ಹಾರಿಸ್ ಅತಿಥಿಗಳಾಗಿ ಭಾಗವಹಿಸಿದ್ದರು. ಬಂಟ್ವಾಳ ತಾಲೂಕು ಮಟ್ಟದ ದಫ್ ಸ್ಪರ್ಧೆಯಲ್ಲಿ ರಿಫಾಯಿಯ್ಯ ದಫ್ ಸಂಘ ಕಡಂಬು ಪ್ರಥಮ ಹಾಗೂ ಒಕ್ಕೆತ್ತೂರು ದಫ್ ತಂಡ ದ್ವಿತೀಯ ಸ್ಥಾನ ಪಡೆದು ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸುವ ಅವಕಾಶ ಪಡೆದುಕೊಂಡಿತು. ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಸದಸ್ಯ, ಕಾರ್ಯಕ್ರಮದ ಸಂಚಾಲಕ ಅಬೂಬಕರ್ ಅನಿಲಕಟ್ಟೆ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಅಕಾಡಮಿ ಸಿಬಂಧಿ ವಿಜಯ್ ವಂದಿಸಿದರು.      

ವಾರ್ತಾ ಭಾರತಿ 19 Dec 2025 9:23 pm

ವಾಲ್ಮೀಕಿ ನಿಗಮದ ಹಗರಣ; ಕಾಂಗ್ರೆಸ್‌ ಶಾಸಕ ನಾಗೇಂದ್ರಗೆ ED ಶಾಕ್: ಸ್ಥಿರಾಸ್ತಿ ಮುಟ್ಟುಗೋಲು

ವಾಲ್ಮೀಕಿ ನಿಗಮದ ಹಗರಣದಲ್ಲಿ ಮಾಜಿ ಸಚಿವ ಬಿ.ನಾಗೇಂದ್ರ ಅವರ 8.07 ಕೋಟಿ ರೂ. ಆಸ್ತಿ ಜಪ್ತಿಯಾಗಿದೆ. ಇ.ಡಿ ಅಧಿಕಾರಿಗಳು ಹಣ ಅಕ್ರಮ ವರ್ಗಾವಣೆ ತಡೆ ಕಾಯಿದೆಯಡಿ ಈ ಕ್ರಮ ಕೈಗೊಂಡಿದ್ದಾರೆ. ಈ ಹಿಂದೆ ಇತರ ಆರೋಪಿಗಳ 4.94 ಕೋಟಿ ರೂ. ಆಸ್ತಿ ವಶಪಡಿಸಿಕೊಳ್ಳಲಾಗಿತ್ತು. ನಾಗೇಂದ್ರ ಸೇರಿದಂತೆ ಆರು ಮಂದಿಯನ್ನು ಬಂಧಿಸಲಾಗಿತ್ತು. ಪ್ರಕರಣದ ತನಿಖೆ ಮುಂದುವರಿದಿದೆ.

ವಿಜಯ ಕರ್ನಾಟಕ 19 Dec 2025 9:18 pm

ಬಸ್ ಢಿಕ್ಕಿ: ಬೈಕ್ ಸವಾರ ಮೃತ್ಯು

ಬ್ರಹ್ಮಾವರ, ಡಿ.19: ಖಾಸಗಿ ಬಸ್ಸೊಂದು ಬೈಕಿಗೆ ಢಿಕ್ಕಿ ಹೊಡೆದ ಪರಿಣಾಮ ಸವಾರರೊಬ್ಬರು ಮೃತಪಟ್ಟ ಘಟನೆ ಹಂದಾಡಿ ಗ್ರಾಮದ ಅಂಬಿಕಾ ಪಾರಂ ಬಳಿ ಡಿ.19ರಂದು ಬೆಳಗ್ಗೆ ನಡೆದಿದೆ. ಮೃತರನ್ನು ಪವನ್ ಎಂದು ಗುರುತಿಸಲಾಗಿದೆ. ಇವರು ತನ್ನ ಬೈಕಿನಲ್ಲಿ ಬಾರ್ಕೂರು ಕಡೆಯಿಂದ ಬ್ರಹ್ಮಾವರ ಕಡೆ ರಸ್ತೆಯಲ್ಲಿ ಬಂದು, ಬಲಗಡೆ ಇಂಡಿಕೇಟರ್ ಹಾಕಿ ಅಂಬಿಕಾ ಫಾರಂ ಬಳಿಯ ಅಮ್ಮ ಶಾಮಿಯಾನ್ ಅಂಗಡಿ ಕಡೆಗೆ ತಿರುಗಿಸುತ್ತಿದ್ದಾಗ ಅದೇ ರಸ್ತೆಯಲ್ಲಿ ಬರುತ್ತಿದ್ದ ಬಸ್, ಬೈಕಿಗೆ ಹಿಂದಿನಿಂದ ಢಿಕ್ಕಿ ಹೊಡೆಯಿತ್ತೆನ್ನಲಾಗಿದೆ. ಇದರ ಪರಿಣಾಮ ಬೈಕ್ ಸವಾರ ಪವನ್, ಬಸ್ಸಿಗೆ ಬಡಿದು ರಸ್ತೆಗೆ ಬಿದ್ದು ಉರುಳಿಕೊಂಡು ರಸ್ತೆ ಬದಿಯಲ್ಲಿದ್ದ ಹೊಂಡಕ್ಕೆ ಬಿದ್ದರೆನ್ನಲಾಗಿದೆ. ಬಸ್, ಬೈಕ್‌ನ್ನು ಸುಮಾರು 50 ಅಡಿ ದೂರ ರಸ್ತೆಯಲ್ಲಿ ಎಳೆದುಕೊಂಡು ಹೋಗಿ ನಿಂತಿತು. ಅಪಘಾತದಿಂದ ಗಂಭೀರ ವಾಗಿ ಗಾಯಗೊಂಡಿದ್ದ ಪವನ್, ಬ್ರಹ್ಮಾವರ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರೆಂದು ತಿಳಿದುಬಂದಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಾರ್ತಾ ಭಾರತಿ 19 Dec 2025 9:12 pm

ಷೇರು ಹೆಸರಿನಲ್ಲಿ 13.11ಲಕ್ಷ ರೂ. ಆನ್‌ಲೈನ್ ವಂಚನೆ: ಪ್ರಕರಣ ದಾಖಲು

ಶಂಕರನಾರಾಯಣ: ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭಾಂಶ ಗಳಿಸಬಹುದೆಂಬ ಜಾಹೀರಾತನ್ನು ನಂಬಿ ವ್ಯಕ್ತಿಯೊಬ್ಬರು ಲಕ್ಷಾಂತರ ರೂ. ಕಳೆದುಕೊಂಡ ಘಟನೆ ನಡೆದಿದೆ. ವಿಶ್ವನಾಥ ಎಂಬವರು ಸಾಮಾಜಿಕ ಜಾಲತಾಣದಲ್ಲಿ ಷೇರು ಮಾರುಕಟ್ಟೆ ಯಲ್ಲಿ ಹಣ ಹೂಡಿಕೆ ಮಾಡುವ ಕುರಿತ ಜಾಹೀರಾತನ್ನು ನಂಬಿ, ಆರೋಪಿಗಳು ತಿಳಿಸಿದ ಖಾತೆಗೆ ಒಟ್ಟು 13,11,258ರೂ. ಹಣವನ್ನು ವರ್ಗಾವಣೆ ಮಾಡಿ ದ್ದರು. ಆದರೆ ಆರೋಪಿಗಳು ಷೇರನ್ನು ಖರೀದಿಸಲು ಕಳುಹಿಸಿದ ಹಣವಾಗಲೀ ಲಾಭಾಂಶವಾಗಲೀ ನೀಡದೇ ಮೋಸ ಮಾಡಿರುವುದಾಗಿ ದೂರಲಾಗಿದೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಾರ್ತಾ ಭಾರತಿ 19 Dec 2025 9:10 pm

ಕೆಎಸ್‌ಆರ್‌ಟಿಸಿ ಬಸ್ ಢಿಕ್ಕಿ: ಕಾರ್ಮಿಕ ಮೃತ್ಯು

ಹಿರಿಯಡ್ಕ, ಡಿ.19: ಕೆಎಸ್‌ಆರ್‌ಟಿಸಿ ಬಸ್ ಢಿಕ್ಕಿ ಹೊಡೆದ ಪರಿಣಾಮ ರಸ್ತೆ ದಾಟುತ್ತಿದ್ದ ಕಾರ್ಮಿಕರೊಬ್ಬರು ಮೃತಪಟ್ಟ ಘಟನೆ ಮದಗ ಶೇಡಿಗುಡ್ಡೆ, ಹತ್ತಿರ ಬಳಿ ನಡೆದಿದೆ. ಮೃತರನ್ನು ಸಲೀಂ ಎಂದು ಗುರುತಿಸಲಾಗಿದೆ. ಅಪಘಾತದಲ್ಲಿ ಇನ್ನೋರ್ವ ಕಾರ್ಮಿಕ ಗೋವಾರ್ಧನ ಬೀಮ್ ಮಂಡಲ್ ಎಂಬವರು ಗಾಯಗೊಂಡು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಡಿ.18ರಂದು ಸಂಜೆ ವೇಳೆ ಉಡುಪಿ ಕಡೆಯಿಂದ ಹಿರಿಯಡ್ಕ ಕಡೆಗೆ ಹೋಗುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್, ಕೆಲಸ ಮುಗಿಸಿ ಅತ್ರಾಡಿಯಿಂದ ಪೆರ್ಣಂಕಿಲಕ್ಕೆ ಹೋಗಲು ರಸ್ತೆ ದಾಟುತ್ತಿದ್ದ ಸಲೀಂ ಮತ್ತು ಗೋವಾರ್ಧನ ಅವರಿಗೆ ಡಿಕ್ಕಿ ಹೊಡೆಯಿತ್ತೆನ್ನಲಾಗಿದೆ. ಇದರಿಂದ ರಸ್ತೆಗೆ ಬಿದ್ದು ಗಾಯಗೊಂಡ ಇಬ್ಬರನ್ನು ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ದಾಖಸಲಾಗಿತ್ತು. ಇವರಲ್ಲಿ ಗಂಬೀರವಾಗಿ ಗಾಯಗೊಂಡ ಸಲೀಂ ಚಿಕಿತ್ಸೆ ಫಲಕಾರಿಯಾಗದೆ ಡಿ.19ರಂದು ಬೆಳಗ್ಗೆ ಮೃತಪಟ್ಟರೆಂದು ತಿಳಿದುಬಂದಿದೆ. ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಾರ್ತಾ ಭಾರತಿ 19 Dec 2025 9:08 pm

ರಾಮಪ್ರಸ್ಥ ಗ್ರೂಪ್ ವಿರುದ್ಧದ ಪ್ರಕರಣ | ವಾಟಿಕಾ, ಯುನಿಟೆಕ್ ಆಸ್ತಿಗಳನ್ನು ಜಪ್ತಿ ಮಾಡಿದ ED

ಹೊಸದಿಲ್ಲಿ,ಡಿ.19: ಗುರುಗ್ರಾಮ ಮೂಲದ ರಾಮಪ್ರಸ್ಥ ಗ್ರೂಪ್ ವಿರುದ್ಧ ಅಕ್ರಮ ಹಣ ವರ್ಗಾವಣೆ ತನಿಖೆಯ ಭಾಗವಾಗಿ ಜಾರಿ ನಿರ್ದೇಶನಾಲಯವು (ED) ವಾಟಿಕಾ ಮತ್ತು ಯುನಿಟೆಕ್ ಗ್ರೂಪ್‌ ನಂತಹ ರಿಯಲ್ ಎಸ್ಟೇಟ್ ಕಂಪನಿಗಳ 80 ಕೋಟಿ ರೂ.ಮೌಲ್ಯದ ಆಸ್ತಿಗಳನ್ನು ಜಪ್ತಿ ಮಾಡಿದೆ. ರಾಮಪ್ರಸ್ಥ ಮನೆ ಖರೀದಿದಾರರನ್ನು ವಂಚಿಸಿದ ಆರೋಪವನ್ನು ಎದುರಿಸುತ್ತಿದೆ. ತನಿಖೆಯು ರಾಮಪ್ರಸ್ಥ ಪ್ರಮೋಟರ್ಸ್ ಆ್ಯಂಡ್ ಡೆವಲಪರ್ಸ್ ಪ್ರೈ.ಲಿ.(ಆರ್‌ಪಿಡಿಪಿಎಲ್) ಮತ್ತು ಅದರ ಸಹಸಂಸ್ಥೆಗಳಿಗೆ ಸಂಬಂಧಿಸಿದ್ದು,ಜಪ್ತಿ ಮಾಡಲಾದ ಚರ ಮತ್ತು ಸ್ಥಿರಾಸ್ತಿಗಳ ಒಟ್ಟು ಮೌಲ್ಯ 80.03 ಕೋ.ರೂ.ಗಳಾಗಿವೆ ಎಂದು ED ಹೇಳಿಕೆಯಲ್ಲಿ ತಿಳಿಸಿದೆ. ಮನೆ ಖರೀದಿದಾರರಿಂದ ಸಂಗ್ರಹಿಸಲಾಗಿದ್ದ ಹಣವನ್ನು ಆರ್‌ಪಿಡಿಪಿಎಲ್‌ನ ಯೋಜನೆಗಳಿಗೆ ಬಳಸುವ ಬದಲು ವಾಟಿಕಾ ಗ್ರುಪ್,ಯುನಿಟೆಕ್ ಗ್ರುಪ್ ಮತ್ತು ಇತರ ಸಂಸ್ಥೆಗಳಿಗೆ ಅಕ್ರಮವಾಗಿ ವರ್ಗಾಯಿಸಲಾಗಿತ್ತು ಎಂದು ED ಹೇಳಿದೆ. ತನಿಖೆಯ ಅಂಗವಾಗಿ ED ಈ ಹಿಂದೆ 786 ಕೋಟಿ ರೂ.ಮೌಲ್ಯದ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಂಡಿತ್ತು. ಇತ್ತೀಚಿಗೆ ಜಪ್ತಿ ಮಾಡಲಾದ ಆಸ್ತಿಗಳೊಂದಿಗೆ ಇಂತಹ ಆಸ್ತಿಗಳ ಒಟ್ಟು ಮೌಲ್ಯವೀಗ 866 ಕೋಟಿ ರೂ.ಗಳಿಗೇರಿದೆ. ಆರ್‌ಪಿಡಿಪಿಎಲ್ ಮತ್ತು ಅದರ ಪ್ರವರ್ತಕರ ವಿರುದ್ಧ ಮನೆ ಖರೀದಿದಾರರ ದೂರುಗಳ ಮೇರೆಗೆ ದಿಲ್ಲಿ ಮತ್ತು ಹರ್ಯಾಣ ಪೋಲಿಸರ ಆರ್ಥಿಕ ಅಪರಾಧಗಳ ಘಟಕಗಳು ದಾಖಲಿಸಿರುವ ಹಲವಾರು ಎಫ್‌ಐಆರ್‌ಗಳನ್ನು EDಯ ಅಕ್ರಮ ಹಣ ವರ್ಗಾವಣೆ ಪ್ರಕರಣವು ಆಧರಿಸಿದೆ. ಆರೋಪಿಗಳು ಫ್ಲ್ಯಾಟ್‌ ಗಳು ಅಥವಾ ನಿವೇಶನಗಳನ್ನು ನಿಗದಿತ ಸಮಯದೊಳಗೆ ತಮಗೆ ಹಸ್ತಾಂತರಿಸಿಲ್ಲ ಎಂದು ದೂರುದಾರರು ಆರೋಪಿಸಿದ್ದಾರೆ. ಕಂಪೆನಿಯು ತನ್ನ ಯೋಜನೆಗಳಿಗಾಗಿ 2,000ಕ್ಕೂ ಅಧಿಕ ಮನೆ ಖರೀದಿದಾರರಿಂದ ಸುಮಾರು 1,100 ಕೋಟಿ ರೂ.ಗಳನ್ನು ಸಂಗ್ರಹಿಸಿತ್ತು. ಆರ್‌ಪಿಡಿಪಿಎಲ್‌ನ ನಿರ್ದೇಶಕರಾದ ಅರವಿಂದ್ ವಾಲಿಯಾ ಮತ್ತು ಸಂದೀಪ್ ಯಾದವ್ ರನ್ನು ED ಕಳೆದ ಜುಲೈನಲ್ಲಿ ಬಂಧಿಸಿದ್ದು, ಪ್ರಸ್ತುತ ನ್ಯಾಯಾಂಗ ಬಂಧನದಲ್ಲಿದ್ದಾರೆ.

ವಾರ್ತಾ ಭಾರತಿ 19 Dec 2025 9:07 pm

ಜ.10-11: ತ್ರಾಸಿ ಮರವಂತೆ 10ಕಿ.ಮೀ. ಓಟ -ಕಡಲ್ಸೋತ್ಸವ

ಉಡುಪಿ, ಡಿ.19: ಬೈಂದೂರು ಬಿಎಲ್ ಸ್ಪೋಟ್ಸ್ ಫೌಂಡೇಶನ್ ಹಾಗೂ ಬೆಂಗಳೂರು ರೆಡ್ ಎಲೆಮೆಂಟ್ಸ್ ವತಿಯಿಂದ ತ್ರಾಸಿ ಮರವಂತೆ 10ಕಿ.ಮೀ. ಓಟ ಹಾಗೂ ಕಡಲ್ಸೋತ್ಸವವನ್ನು ಜ.10 ಮತ್ತು 11ರಂದು ತ್ರಾಸಿ ಮರವಂತೆ ಕಡಲತೀರದಲ್ಲಿ ಹಮ್ಮಿಕೊಳ್ಳಲಾಗಿದೆ. ಉಡುಪಿಯಲ್ಲಿ ಗುರುವಾರ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಫೌಂಡೇಶನ್‌ನ ಸ್ಥಾಪಕ ನಿರ್ದೇಶಕ ಪ್ರವೀಣ್ ಶೆಟ್ಟಿ, ಸ್ಥಳೀಯ ಪ್ರವಾಸೋದ್ಯಮ ಮತ್ತು ಆರ್ಥಿಕ ಉತ್ತೇಜನ, ಆರೋಗ್ಯ, ಫಿಟ್ನೆಸ್ ಮತು ಕ್ರೀಡಾ ಸಂಸ್ಕೃತಿಗೆ ಉತ್ತೇಜನ ನೀಡುವ ಉದ್ದೇಶದಿಂದ ಈ ಕಾರ್ಯಕ್ರಮ ವನ್ನು ಆಯೋಜಿಸಲಾಗಿದೆ ಎಂದರು. ಕಡಲತೀರದ ಬಳಿ ನಡೆಯುವ 10ಕಿ.ಮೀ. ಓಟದಲ್ಲಿ ವಿಜೇತರಿಗೆ ಪ್ರತಿ ವಿಭಾಗದಲ್ಲೂ 50ಸಾವಿರ, 35ಸಾವಿರ 25ಸಾವಿರ ರೂ. ನಗದು ಬಹುಮಾನ ನೀಡಲಾಗುವುದು. ಅದೇ ರೀತಿ 3 ಕಿ.ಮೀ. ಓಟ ಮತ್ತು ಮೋಜಿನ ಓಟ ಕೂಡ ನಡೆಯಲಿದೆ. ಎಲ್ಲ ವಿಭಾಗಗಳಲ್ಲಿ ಒಟ್ಟು 10ಲಕ್ಷ ರೂ.ಗಿಂತ ಅಧಿಕ ನಗದು ಬಹುಮಾನ ನೀಡಲಾಗುವುದು. ಎರಡು ದಿನಗಳ ಕಾಲ ಸಂಸ್ಕೃತಿ, ಕ್ರೀಡೆ, ಮನರಂಜನೆ, ಆಹಾರ ಮತ್ತು ಕುಟುಂಬಗಳಿಗಾಗಿ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ. ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಪ್ರದರ್ಶನ, ಅಂತರ ಕಾಲೇಜು ಸಾಂಸ್ಕೃತಿಕ ಹಾಗೂ ಕ್ರೀಡಾ ಸ್ಪರ್ಧೆಗಳು, ಬೀಚ್ ಕ್ರೀಡೆಗಳಾದ ವಾಲಿಬಾಲ್, ಕಬಡ್ಡಿ, ಲಗೋರಿ, ಹಗ್ಗಜಗ್ಗಾಟ, ಸುಡುಮದ್ದು ಪ್ರದರ್ಶನ, ಸಂಗೀತ ಕಾರ್ಯಕ್ರಮ ಗಳು ನಡೆಯಲಿವೆ ಎಂದು ಅವರು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಪ್ರಮುಖರಾದ ನಂದಿನಿ, ಆರ್‌ಜೆ ನಯನ, ಜೀತು ರಾಧಾಕೃಷ್ಣನ್, ರಾದೇಶ್, ದೀಪಕ್ ಮೊದಲಾದವರು ಉಪಸ್ಥಿತರಿದ್ದರು.

ವಾರ್ತಾ ಭಾರತಿ 19 Dec 2025 9:06 pm

ಕೇಂದ್ರದಿಂದ ಟಾಗೋರ್‌ ಗೆ ಅವಮಾನದೊಂದಿಗೆ ಆರಂಭಗೊಂಡ ಚಳಿಗಾಲದ ಅಧಿವೇಶನ ಗಾಂಧಿಗೆ ಅವಮಾನದೊಂದಿಗೆ ಅಂತ್ಯ: ಕಾಂಗ್ರೆಸ್

ಹೊಸದಿಲ್ಲಿ,ಡಿ.19: ಸಂಸತ್ತಿನ ಚಳಿಗಾಲದ ಅಧಿವೇಶನವು ಶುಕ್ರವಾರ ಮುಕ್ತಾಯಗೊಂಡ ಬೆನ್ನಿಗೇ ಕಾಂಗ್ರೆಸ್ ಪಕ್ಷವು,ಕೇಂದ್ರ ಸರಕಾರವು ರವೀಂದ್ರನಾಥ ಟಾಗೋರ್ ಅವರನ್ನು ಅವಮಾನಿಸುವುದರೊಂದಿಗೆ ಆರಂಭಗೊಂಡಿದ್ದ ಅಧಿವೇಶನವು ಮಹಾತ್ಮಾ ಗಾಂಧಿಯವರಿಗೆ ಅವಮಾನದೊಂದಿಗೆ ಅಂತ್ಯಗೊಂಡಿದೆ ಎಂದು ಆರೋಪಿಸಿದೆ. ಅಧಿವೇಶನವನ್ನು ‘ಪ್ರದೂಷಣ ಕಾಲೀನ(ಮಾಲಿನ್ಯ ಸಂದರ್ಭದ)’ ಎಂದು ಬಣ್ಣಿಸಿದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಅವರು,ವಾಯು ಮಾಲಿನ್ಯ ಕುರಿತು ಚರ್ಚೆಗೆ ಕಾಂಗ್ರೆಸ್ ಪಕ್ಷವು ಸಿದ್ಧವಾಗಿತ್ತು,ಆದರೆ ಸರಕಾರವು ಇಂತಹ ಚರ್ಚೆಯಿಂದ ನುಣುಚಿಕೊಂಡಿದೆ ಎಂದು ಹೇಳಿದರು. ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮಣಿಪುರ ಮತ್ತು ಅನುದಾನಗಳಿಗಾಗಿ ಪೂರಕ ಬೇಡಿಕೆ ಕುರಿತು ಎರಡು ಔಪಚಾರಿಕ ಮಸೂದೆಗಳು ಸೇರಿದಂತೆ 14 ಮಸೂದೆಗಳನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ನಮಗೆ ತಿಳಿಸಲಾಗಿತ್ತು. ಎರಡು ಔಪಚಾರಿಕ ಮಸೂದೆಗಳನ್ನು ಬಿಟ್ಟರೆ ಉಳಿದ 12 ಮಸೂದೆಗಳ ಪೈಕಿ ಐದನ್ನು ಮಂಡಿಸಲಾಗಿಲ್ಲ. ಅವರು ಮಸೂದೆಗಳನ್ನು ಮಂಡಿಸಲು ಬಯಸಿರದಿದ್ದಾಗ ಈ ಮಾಹಿತಿಯನ್ನು ನಮಗೇಕೆ ನೀಡಿದ್ದರು ಎನ್ನುವುದು ನನಗೆ ತಿಳಿದಿಲ್ಲ’ ಎಂದು ಹೇಳಿದರು. ‘ಸಭೆಯು ಔಪಚಾರಿಕವಾಗಿದೆ ಮತ್ತು ಸಾಮಾನ್ಯವಾಗಿ ಅಧಿವೇಶನದ ಅಂತ್ಯದಲ್ಲಿ ಸರಕಾರವು ‘ಬ್ರಹ್ಮೋಸ್ ಕ್ಷಿಪಣಿ’ಯನ್ನು ಪ್ರಯೋಗಿಸುತ್ತದೆ ಎಂದು ಸರ್ವಪಕ್ಷ ಸಭೆಯಲ್ಲಿ ನಾನು ಕೇಂದ್ರ ಸಚಿವ ರಾಜನಾಥ್ ಸಿಂಗ್ ಅವರಿಗೆ ಹೇಳಿದ್ದೆ. ಈ ಸಲವೂ ಹಾಗೆಯೇ ಆಯಿತು. ಅಧಿವೇಶನದ ಅಂತ್ಯದಲ್ಲಿ ಮಸೂದೆಯನ್ನು ತರಲಾಗಿತ್ತು ಮತ್ತು ಪ್ರತಿಪಕ್ಷಗಳ ಪ್ರತಿಭಟನೆಗಳ ನಡುವೆಯೇ ಅದನ್ನು ಅಂಗೀಕರಿಸಲಾಗಿದೆ’ ಎಂದು ವಿಬಿ-ಜಿ ರಾಮ್ ಜಿ ಮಸೂದೆಯನ್ನು ಉಲ್ಲೇಖಿಸಿ ರಮೇಶ್ ಹೇಳಿದರು. ಅಧಿವೇಶನದಲ್ಲಿ ವಂದೇ ಮಾತರಂ ಕುರಿತು ಚರ್ಚೆಯು ಸಂಪೂರ್ಣವಾಗಿ ನೆಹರು ಅವರಿಗೆ ಅವಮಾನ ಮತ್ತು ಇತಿಹಾಸದ ತಿರುಚುವಿಕೆಯನ್ನೇ ಕೇಂದ್ರೀಕರಿಸಿತ್ತು ಎಂದು ಹೇಳಿದ ರಮೇಶ,ಟಾಗೋರ್ ಅವರನ್ನು ಅವಮಾನಿಸಲಾಯಿತು. ಟಾಗೋರ್ ಅವರ ಶಿಫಾರಸಿನ ಮೇರೆಗೆ 1937ರಲ್ಲಿ ಮೊದಲ ಎರಡು ಚರಣಗಳನ್ನು ರಾಷ್ಟ್ರೀಯ ಗೀತೆಯಾಗಿ ಹಾಡುವುದನ್ನು ನಿರ್ಧರಿಸಲಾಗಿತ್ತು ಎಂದರು. ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅವರನ್ನೂ ಅವಮಾನಿಸಲಾಗಿತ್ತು ಎಂದು ಅವರು ಹೇಳಿದರು. ಅಧಿವೇಶನವು ಗಾಂಧಿಯವರಿಗೆ ಅವಮಾನದೊಂದಿಗೆ ಅಂತ್ಯಗೊಂಡಿತು ಎಂದು ಹೇಳಿದ ರಮೇಶ್ ಯುಪಿಎ ಕಾಲದ ಎಂನರೇಗಾದ ಬದಲಿಗೆ ಜಿ ರಾಮ್ ಜಿ ಮಸೂದೆಯ ಅಂಗೀಕಾರವನ್ನು ಪ್ರಸ್ತಾವಿಸಿ,ಆಧುನಿಕ ಭಾರತವನ್ನು ನಿರ್ಮಿಸಿದ ಮೂವರು ವ್ಯಕ್ತಿಗಳನ್ನು ಅವಮಾನಿಸುವುದು ಪ್ರಧಾನಿ ನರೇಂದ್ರ ಮೋದಿಯವರ ಸ್ಪಷ್ಟ ಕಾರ್ಯತಂತ್ರವಾಗಿತ್ತು ಎಂದರು.

ವಾರ್ತಾ ಭಾರತಿ 19 Dec 2025 9:06 pm

ಬಳ್ಳಾರಿ | ಪಲ್ಸ್‌ ಪೋಲಿಯೋ ಕುರಿತು ಜಾಗೃತಿ ಜಾಥಾ

ಬಳ್ಳಾರಿ / ಕಂಪ್ಲಿ : ಡಿ.21ರಂದು ನಡೆಯುವ ಪಲ್ಸ್‌ ಪೋಲಿಯೋ ಲಸಿಕೆ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಸ್ಥಳೀಯ ಕೋಟೆಯಲ್ಲಿ ಜಾಗೃತಿ ಜಾಥಾ ನಡೆಸಲಾಯಿತು. ಪಟ್ಟಣದ ತಾಲೂಕು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿ ಕಚೇರಿ ಹಾಗೂ ಶ್ರೀ ಸ್ವಾಮಿ ವಿವೇಕಾನಂದ ಹಿರಿಯ ಪ್ರಾಥಮಿಕ ಶಾಲೆ ಸಂಯುಕ್ತಾಶ್ರಯದಲ್ಲಿ ನಡೆದ ಜಾಥಾಕ್ಕೆ ಪ್ರಾಥಮಿಕ ಅರೋಗ್ಯ ಮೇಲ್ವಿಚಾರಕರಾದ ಚೆನ್ನಬಸವರಾಜ ಜಾತಕ್ಕೆ ಚಾಲನೆ ನೀಡಿ ಮಾತನಾಡಿದರು. ಆಶಾ ಕಾರ್ಯಕರ್ತೆಯರು ಮತ್ತು ಅಂಗನವಾಡಿ ಕಾರ್ಯಕರ್ತರು ಸೇರಿದಂತೆ ಶಾಲಾ ವಿದ್ಯಾರ್ಥಿಗಳು ಪ್ರಮುಖ ಬೀದಿಗಳಲ್ಲಿ ಧ್ವನಿವರ್ಧಕರ ಹಾಗೂ ಫಲಕಗಳನ್ನು ಹಿಡಿದು ಘೋಷಣೆ ಕೂಗುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸಿದರು. ಈ ಸಂದರ್ಭದಲ್ಲಿ ಶಾಲಾ ಮುಖ್ಯಗುರು ಬಡಿಗೇರ್ ಜಿಲಾನಸಾಬ್, ಆಶಾ ಕಾರ್ಯಕರ್ತೆ ಆರ್. ವಲಿಮಾ, ಅಂಗನವಾಡಿ ಕಾರ್ಯಕರ್ತೆ ಶಿವಲೀಲಾಮ್ಮ, ಶಾಲಾ ಶಿಕ್ಷಕಿಯರಾದ ಶ್ವೇತಾ, ವರ್ಷಾ ಮಜುಮದಾರ, ಜೆ.ಅಕ್ಷತಾ, ಸುನೀತಾ, ಗೌಸಿಯಾ, ಕಾವ್ಯ, ಉಮಾ ಕೊಲ್ಕರಾ, ಕೆ.ಜಯಶ್ರೀ, ವಿಶ್ವನಾಥ, ಸುಮಂತ ಸೇರಿದಂತೆ ಇತರರು ಹಾಜರಿದ್ದರು.

ವಾರ್ತಾ ಭಾರತಿ 19 Dec 2025 9:05 pm

ಬಾಡಿಗೆದಾರರಿಗೆ ಬಂಪರ್ ಸುದ್ದಿ: ಮನೆ ಮಾಲೀಕರು ಹಾಗೂ ಬ್ರೋಕರ್‌ಗಳಿಗೆ ಹೊಸ ರೂಲ್ಸ್; ಇಲ್ಲಿದೆ ಪೂರ್ತಿ ಮಾಹಿತಿ!

ಕರ್ನಾಟಕದ ಪ್ರಮುಖ ನಗರಗಳಲ್ಲಿ, ಅದರಲ್ಲೂ ವಿಶೇಷವಾಗಿ ಬೆಂಗಳೂರಿನಲ್ಲಿ ವಾಸಿಸುವ ಲಕ್ಷಾಂತರ ಬಾಡಿಗೆದಾರರಿಗೆ ಮತ್ತು ಮನೆ ಮಾಲೀಕರಿಗೆ ಸರ್ಕಾರವು ಮಹತ್ವದ ಸುದ್ದಿಯೊಂದನ್ನು ನೀಡಿದೆ. ಇಷ್ಟು ದಿನಗಳಿಂದ ನಡೆದುಕೊಂಡು ಬಂದಿದ್ದ ಹಳೆಯ ಪದ್ಧತಿಗಳಿಗೆ ಈಗ ಬ್ರೇಕ್ ಬೀಳುವ ಸಮಯ ಹತ್ತಿರ ಬಂದಿದೆ. ಬಾಡಿಗೆ ಮನೆ ಹುಡುಕುವಾಗ ಎದುರಾಗುವ ಸಂಕಷ್ಟಗಳು, ಮಾಲೀಕರು ಕೇಳುವ ಭಾರಿ ಮೊತ್ತದ ಹಣ ಮತ್ತು ಬ್ರೋಕರ್‌ಗಳ ಕಿರಿಕಿರಿಗಳಿಗೆ ಸಂಬಂಧಿಸಿದಂತೆ ಸರ್ಕಾರವು ಹೊಸ ಕಾಯ್ದೆಯನ್ನು ಜಾರಿಗೆ ತರುತ್ತಿದೆ. ಬೆಳಗಾವಿಯಲ್ಲಿ ನಡೆಯುತ್ತಿರುವ ಅಧಿವೇಶನದಲ್ಲಿ ಈ ಕುರಿತು ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗಿದ್ದು, ... Read more The post ಬಾಡಿಗೆದಾರರಿಗೆ ಬಂಪರ್ ಸುದ್ದಿ: ಮನೆ ಮಾಲೀಕರು ಹಾಗೂ ಬ್ರೋಕರ್‌ಗಳಿಗೆ ಹೊಸ ರೂಲ್ಸ್; ಇಲ್ಲಿದೆ ಪೂರ್ತಿ ಮಾಹಿತಿ! appeared first on Karnataka Times .

ಕರ್ನಾಟಕ ಟೈಮ್ಸ್ 19 Dec 2025 9:05 pm

ಬಳ್ಳಾರಿ | ಪ್ರಧಾನಮಂತ್ರಿ ರಾಷ್ಟ್ರೀಯ ಡಯಾಲಿಸಿಸ್ ಸೇವೆಯ ಸದುಪಯೋಗ ಪಡೆದುಕೊಳ್ಳಿ : ಡಾ.ಯಲ್ಲಾ ರಮೇಶ್ ಬಾಬು

ಬಳ್ಳಾರಿ,ಡಿ.19 : ಜಿಲ್ಲೆಯ ಸರಕಾರಿ ಆರೋಗ್ಯ ಕೇಂದ್ರಗಳಲ್ಲಿ ಪ್ರಧಾನಮಂತ್ರಿ ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಡಯಾಲಿಸಿಸ್ ಸೇವೆ ಲಭ್ಯವಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಯಲ್ಲಾ ರಮೇಶ್ ಬಾಬು ಅವರು ಹೇಳಿದರು. ಶುಕ್ರವಾರ ಜಿಲ್ಲಾ ಆಸ್ಪತ್ರೆಯಲ್ಲಿ ವಿವಿಧ ವಾರ್ಡ್ ಗಳಿಗೆ ಭೇಟಿ ನೀಡಿ ಸಾರ್ವಜನಿಕರಿಗೆ ಮಾಹಿತಿ ನೀಡುತ್ತಾ ಡಯಾಲಿಸಿಸ್ ಸೇವೆಗಳನ್ನು ಅರ್ಹ ರೋಗಿಗಳಿಗೆ ಸೂಕ್ತ ಸಮಯದಲ್ಲಿ ಒದಗಿಸುವುದು ಮುಖ್ಯವಾಗಿದೆ ಎಂದರು. ಬಳ್ಳಾರಿ ಜಿಲ್ಲೆಯಲ್ಲಿ ಈಗಾಗಲೇ ಜಿಲ್ಲಾ ಆಸ್ಪತ್ರೆ, ಸಿರುಗುಪ್ಪ ಸಾರ್ವಜನಿಕ ಆಸ್ಪತ್ರೆ, ಹಾಗೂ ಸಂಡೂರು ತಾಲ್ಲೂಕುಗಳಲ್ಲಿ ಡಯಾಲಿಸಿಸ್ ಕೇಂದ್ರಗಳು ಉಚಿತವಾಗಿ ಡಯಾಲಿಸಿಸ್ ಸೇವೆ ಒದಗಿಸುತ್ತಿವೆ. ಹೊಸದಾಗಿ ಕುರುಗೋಡು ಹಾಗೂ ಕಂಪ್ಲಿ ತಾಲ್ಲೂಕುಗಳ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ 2 ಡಯಾಲಿಸಿಸ್ ಕೇಂದ್ರಗಳು ಹೊಸದಾಗಿ ಅನುಮೋದನೆಯಾಗಿದ್ದು, ಡಯಾಲಿಸಿಸ್ ಸೇವೆಗಳು ಪ್ರಾರಂಭಿಸುವ ಹಂತದಲ್ಲಿದೆ ಎಂದು ತಿಳಿಸಿದರು. ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಎನ್.ಬಸರೆಡ್ಡಿ ಅವರು ಮಾತನಾಡಿ, ಬಳ್ಳಾರಿ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಸಂಶೋಧನಾ ಸಂಸ್ಥೆ (ಬಿ.ಎಮ್.ಸಿ.ಆರ್.ಸಿ) ಯಲ್ಲಿ 100, ಜಿಲ್ಲಾ ಆಸ್ಪತ್ರೆ-50, ಸಿರುಗುಪ್ಪ ಸಾರ್ವಜನಿಕ ಆಸ್ಪತ್ರೆ-7, ಸಂಡೂರು ಸಾರ್ವಜನಿಕ ಆಸ್ಪತ್ರೆ-6 ಸೇರಿದಂತೆ ಒಟ್ಟು 163 ರೋಗಿಗಳು ಉಚಿತ ಡಯಾಲಿಸಿಸ್ ಸೇವೆ ಪಡೆಯುತ್ತಿದ್ದಾರೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ವೈದ್ಯರು, ಸಾರ್ವಜನಿಕರು ಹಾಗೂ ಇತರರು ಇದ್ದರು.

ವಾರ್ತಾ ಭಾರತಿ 19 Dec 2025 8:59 pm

Gujarat | SIR ಬಳಿಕ 73 ಲಕ್ಷ ಮತದಾರರಿಗೆ ಕೊಕ್!

ಅಹಮದಾಬಾದ್: ಗುಜರಾತ್‌ ನಲ್ಲಿ ನಡೆದ ವಿಶೇಷ ತೀವ್ರ ಮತ ಪಟ್ಟಿ ಪರಿಷ್ಕರಣೆಯ ಅಭಿಯಾನದ ನಂತರ, ಶುಕ್ರವಾರ ಕರಡು ಮತದಾರರ ಪಟ್ಟಿ ಪ್ರಕಟವಾಗಿದ್ದು, ಸುಮಾರು 73 ಲಕ್ಷ ಮತದಾರರನ್ನು ಈ ಮತ ಪಟ್ಟಿಯಿಂದ ಕೈಬಿಡಲಾಗಿದೆ. ಕರಡು ಮತ ಪಟ್ಟಿಯಿಂದ ಸುಮಾರು 74 ಲಕ್ಷ ಮತದಾರರನ್ನು ಕೈಬಿಡಲಾಗಿದ್ದು, ಇದೀಗ ಒಟ್ಟು ಮತದಾರರ ಸಂಖ್ಯೆ 4.34 ಕೋಟಿಗೆ ಇಳಿಕೆಯಾಗಿದೆ. ಇದಕ್ಕೂ ಮುನ್ನ ರಾಜ್ಯದ ಮತದಾರರ ಸಂಖ್ಯೆ 5.08 ಕೋಟಿಯಷ್ಟಿತ್ತು. ವಿಶೇಷ ತೀವ್ರ ಮತ ಪಟ್ಟಿ ಪರಿಷ್ಕರಣೆ ಅಭಿಯಾನದ ನಂತರ ಒಟ್ಟು 73.73 ಲಕ್ಷ ಮತದಾರರನ್ನು ಕೈಬಿಡಲಾಗಿದೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಹರೀತ್ ಶುಕ್ಲಾ ತಿಳಿಸಿದ್ದಾರೆ.  ವಿಶೇಷ ತೀವ್ರ ಮತ ಪಟ್ಟಿ ಪರಿಷ್ಕರಣೆ ಅಭಿಯಾನ ಪ್ರಾರಂಭವಾಗುವುದಕ್ಕೂ ಮುನ್ನ, ರಾಜ್ಯದಲ್ಲಿ ಒಟ್ಟು 5,08,43,436 ಮತದಾರರಿದ್ದರು. ಅಭಿಯಾನದ ಬಳಿಕ ಪ್ರಕಟಗೊಂಡಿರುವ ಕರಡು ಮತ ಪಟ್ಟಿಯಲ್ಲಿ ಒಟ್ಟು 4,34,70,109 ಮತದಾರರಿದ್ದಾರೆ ಎಂದು ಅವರು ಹೇಳಿದ್ದಾರೆ.

ವಾರ್ತಾ ಭಾರತಿ 19 Dec 2025 8:57 pm

Tamilnadu | SIR ಬಳಿಕ ಸುಮಾರು 97 ಲಕ್ಷ ಮತದಾರರನ್ನು ಅಳಿಸಿ ಹಾಕಿದ ಚುನಾವಣಾ ಆಯೋಗ!

ಚೆನ್ನೈ: ತಮಿಳುನಾಡಿನಲ್ಲಿ ಮುಕ್ತಾಯಗೊಂಡ ವಿಶೇಷ ತೀವ್ರ ಮತ ಪಟ್ಟಿ ಪರಿಷ್ಕರಣೆಯ ನಂತರ, ಕರಡು ಮತದಾರರ ಪಟ್ಟಿಯಿಂದ ಒಟ್ಟು 97.37 ಲಕ್ಷ ಮತದಾರರನ್ನು ಕರಡು ಮತದಾರರ ಮತ ಪಟ್ಟಿಯಿಂದ ಕೈಬಿಡಲಾಗಿದೆ ಎಂದು ತಮಿಳುನಾಡು ರಾಜ್ಯ ಮುಖ್ಯ ಚುನಾವಣಾಧಿಕಾರಿ ಅರ್ಚನಾ ಪಟ್ನಾಯಕ್ ತಿಳಿಸಿದ್ದಾರೆ. ಹೀಗೆ ಕೈಬಿಡಲಾಗಿರುವ ಮತದಾರರ ಪೈಕಿ ಮೃತಪಟ್ಟವರು, ಸ್ಥಳಾಂತರಗೊಂಡವರು, ಒಂದಕ್ಕಿಂತ ಹೆಚ್ಚು ಕಡೆ ಮತದಾರರ ಪಟ್ಟಿಯಲ್ಲಿ ನೋಂದಣಿಗೊಂಡಿರುವವರು ಹಾಗೂ ವಿಶೇಷ ತೀವ್ರ ಮತ ಪಟ್ಟಿ ಪರಿಷ್ಕರಣೆಯ ವೇಳೆ ಗೈರಾಗಿದ್ದವರು ಸೇರಿದ್ದಾರೆ ಎಂದೂ ಅವರು ಹೇಳಿದ್ದಾರೆ. ಅಕ್ಟೋಬರ್ 27, 2025ರಂದು ತಮಿಳುನಾಡು ರಾಜ್ಯದ ಒಟ್ಟು ಮತದಾರರ ಸಂಖ್ಯೆ 6,41,14,587 ಇತ್ತು. ಆದರೆ, ವಿಶೇಷ ತೀವ್ರ ಮತ ಪಟ್ಟಿ ಪರಿಷ್ಕರಣೆಯ ನಂತರ ಶುಕ್ರವಾರ ಪ್ರಕಟವಾಗಿರುವ ಕರಡು ಮತದಾರರ ಪಟ್ಟಿಯಲ್ಲಿ ಒಟ್ಟು 5,43,76,756 ಮತದಾರರಿದ್ದಾರೆ. ವಿಶೇಷ ತೀವ್ರ ಮತ ಪಟ್ಟಿ ಪರಿಷ್ಕರಣೆಯ ನಂತರ ಪ್ರಕಟವಾಗಿರುವ ಕರಡು ಮತ ಪಟ್ಟಿಯಿಂದ ತೆಗೆದು ಹಾಕಲಾಗಿರುವ ಒಟ್ಟು ಮತದಾರರ ಸಂಖ್ಯೆ 97,37,831 ಆಗಿದೆ. ಈ ಪೈಕಿ, 26,94,672 ಮತದಾರರನ್ನು ಮೃತಪಟ್ಟಿದ್ದಾರೆ ಎಂದು ಗುರುತಿಸಲಾಗಿದೆ. ಅಲ್ಲದೆ, ಸುಮಾರು 66,44,881 ಮತದಾರರು ಸ್ಥಳಾಂತರಗೊಂಡಿದ್ದಾರೆ ಇಲ್ಲವೆ ವಿಶೇಷ ತೀವ್ರ ಮತ ಪಟ್ಟಿ ಪರಿಷ್ಕರಣೆ ಅಭಿಯಾನದ ವೇಳೆ ಗೈರಾಗಿದ್ದಾರೆ ಎನ್ನಲಾಗಿದೆ. ಇನ್ನು ಒಟ್ಟು 3,39,278 ಮತದಾರರು ಒಂದಕ್ಕಿಂತ ಹೆಚ್ಚು ಮತಕ್ಷೇತ್ರಗಳಲ್ಲಿ ನೋಂದಣಿಗೊಂಡಿದ್ದಾರೆ ಎಂದು ಹೇಳಲಾಗಿದೆ. ಗ್ರೇಟರ್ ಚೆನ್ನೈ ಕಾರ್ಪೊರೇಷನ್ ಚೆನ್ನೈ ಜಿಲ್ಲೆಯ 16 ವಿಧಾನಸಭಾ ಕ್ಷೇತ್ರಗಳ ಕರಡು ಮತ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಒಟ್ಟು ಮತದಾರರ ಸಂಖ್ಯೆ 25,76,676 ಆಗಿದೆ. ಈ ಪೈಕಿ, 12,47,690 ಪುರುಷ ಮತದಾರರಿದ್ದರೆ, 13,31,243 ಮಹಿಳಾ ಮತದಾರರಿದ್ದಾರೆ. ಇವರೊಂದಿಗೆ 743 ತೃತೀಯ ಲಿಂಗಿಗಳು ಸೇರಿದ್ದಾರೆ. 14,25,243 ಮತದಾರರನ್ನು ಮರಣ, ಸ್ಥಳಾಂತರ, ಒಂದಕ್ಕಿಂತ ಹೆಚ್ಚು ಮತಕ್ಷೇತ್ರಗಳಲ್ಲಿ ನೋಂದಣಿ ಹಾಗೂ ವಿಶೇಷ ತೀವ್ರ ಮತ ಪಟ್ಟಿ ಪರಿಷ್ಕರಣೆಯ ವೇಳೆ ಗೈರಾಗಿದ್ದರು ಎಂಬ ಕಾರಣಕ್ಕೆ ಕೈಬಿಡಲಾಗಿದೆ.

ವಾರ್ತಾ ಭಾರತಿ 19 Dec 2025 8:54 pm

1xBet ಬೆಟ್ಟಿಂಗ್ ಆ್ಯಪ್ ಪ್ರಕರಣ: ಯುವರಾಜ್ ಸಿಂಗ್, ಸೋನು ಸೂದ್ ಮತ್ತಿತರರ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಂಡ ED

ಹೊಸದಿಲ್ಲಿ: 1xBet ಅಕ್ರಮ ಬೆಟ್ಟಿಂಗ್ ಆ್ಯಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ದಾಖಲಾಗಿರುವ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಮಾಜಿ ಭಾರತೀಯ ಆಟಗಾರ ಯುವರಾಜ್ ಸಿಂಗ್ ಮತ್ತು ರಾಬಿನ್ ಉತ್ತಪ್ಪ ಹಾಗೂ ಊರ್ವಶಿ ರೌಟೇಲಾ, ಸೋನು ಸೂದ್ ಸೇರಿದಂತೆ ಒಟ್ಟು ಐದು ಮಂದಿ ನಟರ ಸ್ಥಿರಾಸ್ತಿಗಳನ್ನು ಶುಕ್ರವಾರ ಜಾರಿ ನಿರ್ದೇಶನಾಲಯ ತಾತ್ಕಾಲಿಕವಾಗಿ ಮುಟ್ಟುಗೋಲು ಹಾಕಿಕೊಂಡಿದೆ. ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ ಜಾರಿ ನಿರ್ದೇಶನಾಲಯವು ತಾತ್ಕಾಲಿಕ ಮುಟ್ಟುಗೋಲು ಆದೇಶವನ್ನು ಹೊರಡಿಸಿದ ನಂತರ, ನಟಿ ನೇಹಾ ಶರ್ಮ, ರೂಪದರ್ಶಿ ಊರ್ವಶಿ ರೌತೇಲಾ ತಾಯಿ ಹಾಗೂ ಬಂಗಾಳಿ ನಟಿ ಅಂಕುಶ್ ಹಝ್ರಾ ಮತ್ತು ಮಿಮಿ ಚಕ್ರವರ್ತಿ ಅವರ ಸ್ಥಿರಾಸ್ತಿಗಳನ್ನೂ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಮಿಮಿ ಚಕ್ರವರ್ತಿ ಮಾಜಿ ಸಂಸದರೂ ಆಗಿದ್ದಾರೆ. ಜಾರಿ ನಿರ್ದೇಶನಾಲಯದ ಪ್ರಕಾರ, ಈ ಸೆಲೆಬ್ರಿಟಿಗಳು ತಿಳಿದೇ 1xBet ಬೆಟ್ಟಿಂಗ್ ಆ್ಯಪ್ ಅನ್ನು ಪ್ರಚಾರ ಮಾಡಲು ವಿದೇಶಿ ಸಂಸ್ಥೆಗಳ ಸೋಗುದಾರ ಪ್ರತಿನಿಧಿಗಳ ಮೂಲಕ ಒಪ್ಪಂದ ಮಾಡಿಕೊಂಡಿದ್ದರು. ಅಕ್ರಮ ಹಣದ ಮೂಲವನ್ನು ಮುಚ್ಚಿಡಲು ವಿದೇಶಿ ಸಂಸ್ಥೆಗಳ ಮೂಲಕ ಪಾವತಿಯಾದ ಹಣಕ್ಕೆ ಬದಲಿಯಾಗಿ ಈ ಪ್ರಚಾರವನ್ನು ಮಾಡಲಾಗಿದ್ದು, ಇದು ಅಕ್ರಮ ಬೆಟ್ಟಿಂಗ್ ಚಟುವಟಿಕೆಗಳಿಂದ ಉದ್ಭವವಾಗಿರುವ ಅಪರಾಧ ಪ್ರಕ್ರಿಯೆಯೊಂದಿಗೆ ಸಂಬಂಧ ಹೊಂದಿದೆ ಎಂದು ಹೇಳಲಾಗಿದೆ. 1xBet ಬೆಟ್ಟಿಂಗ್ ಆ್ಯಪ್ ಭಾರತದಲ್ಲಿ ಅಧಿಕೃತ ಮಾನ್ಯತೆ ಇಲ್ಲದೆ ತನ್ನ ಪ್ರಚಾರ ನಡೆಸಿದೆ ಹಾಗೂ ಸಾಮಾಜಿಕ ಮಾಧ್ಯಮ, ಆನ್ ಲೈನ್ ವಿಡಿಯೊಗಳು ಹಾಗೂ ಮುದ್ರಣ ಮಾಧ್ಯಮಗಳಲ್ಲಿ ಮರೆಮಾಚಿದ ಬ್ರಾಂಡಿಂಗ್ ಮತ್ತು ಜಾಹೀರಾತುಗಳ ಮೂಲಕ ಭಾರತೀಯ ಬಳಕೆದಾರರನ್ನು ಗುರಿಯಾಗಿಸಿಕೊಂಡಿತ್ತು ಎಂದು ಆರೋಪಿಸಲಾಗಿದೆ.

ವಾರ್ತಾ ಭಾರತಿ 19 Dec 2025 8:50 pm

ಪ್ರಬುದ್ಧ ಭಾರತ ನಿರ್ಮಾಣ ಅಂಬೇಡ್ಕರ್‌ ಅವರ ಕನಸು: ಪ್ರೊ.ವಿಶ್ವನಾಥ

ವಿಜಯನಗರ ಶ್ರೀ ಕೃಷ್ಣದೇವರಾಯ ವಿವಿಯಲ್ಲಿ ಎರಡು ದಿನಗಳ ‘ಪ್ರಬುದ್ಧ ಭಾರತ’ ಅಂತರರಾಷ್ಟ್ರೀಯ ಸಮ್ಮೇಳನ

ವಾರ್ತಾ ಭಾರತಿ 19 Dec 2025 8:43 pm

ಹೈಕಮಾಂಡ್‌ ಮುಂದೆ ನನ್ನ - ಸಿಎಂ ನಡುವೆ ಒಪ್ಪಂದವಾಗಿದೆ; ಆ ಪ್ರಕಾರ ನಡೆದುಕೊಳ್ಳುತ್ತೇವೆ: ಡಿಕೆ ಶಿವಕುಮಾರ್

ನಾನು ಮತ್ತು ಮುಖ್ಯಮಂತ್ರಿಗಳ ನಡುವೆ ಒಪ್ಪಂದವಿದೆ, ಹೈಕಮಾಂಡ್ ನಿರ್ದೇಶನದಂತೆ ನಡೆದುಕೊಳ್ಳುತ್ತೇವೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು. ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಚರ್ಚೆ ಇಲ್ಲ, ಪಕ್ಷದ ಆದೇಶಕ್ಕೆ ನಾವು ಬದ್ಧರಾಗಿದ್ದೇವೆ ಎಂದರು. ಗೋಕರ್ಣದಲ್ಲಿ ದೇವರ ದರ್ಶನ ಪಡೆದು, ರಾಜ್ಯಕ್ಕೆ ಒಳ್ಳೆಯದಾಗಲಿ ಎಂದು ಪ್ರಾರ್ಥಿಸಿ ಹಸನ್ಮುಖಿಯಾಗಿ ತೆರಳುತ್ತಿರುವುದಾಗಿ ಹೇಳಿದರು.

ವಿಜಯ ಕರ್ನಾಟಕ 19 Dec 2025 8:41 pm

ಬಳ್ಳಾರಿ | ರೈತರ ಆದಾಯ ಹೆಚ್ಚಿಸಲು ಬಹುಬೆಳೆ ಪದ್ಧತಿ ತರಬೇತಿ ಅಗತ್ಯ: ಡಾ. ಹನುಮಂತಪ್ಪ

ಬಳ್ಳಾರಿ, ಡಿ.19: ಜಿಲ್ಲೆಯಲ್ಲಿ ರೈತರ ಆದಾಯವನ್ನು ಹೆಚ್ಚಿಸುವ ಉದ್ದೇಶದಿಂದ ವಿಜ್ಞಾನಿಗಳು ಬಹುಬೆಳೆ ಪದ್ಧತಿಯ ಕುರಿತು ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸಿ ರೈತರಿಗೆ ಸೂಕ್ತ ಮಾಹಿತಿ ನೀಡಬೇಕು ಎಂದು ರಾಯಚೂರಿನ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಡಾ.ಹನುಮಂತಪ್ಪ ಅವರು ಹೇಳಿದರು. ನಗರದ ಐ.ಸಿ.ಎ.ಆರ್–ಕೃಷಿ ವಿಜ್ಞಾನ ಕೇಂದ್ರದಲ್ಲಿ ಸೋಮವಾರ ಆಯೋಜಿಸಿದ್ದ 25ನೇ ವೈಜ್ಞಾನಿಕ ಸಲಹಾ ಸಮಿತಿ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಸ್ಥಳೀಯ ಅಗತ್ಯಗಳಿಗೆ ಅನುಗುಣವಾದ ತಂತ್ರಜ್ಞಾನಗಳ ಬಗ್ಗೆ ವಿಜ್ಞಾನಿಗಳು ಮಾಹಿತಿ ಸಂಗ್ರಹಿಸಿ, ಅದರ ಆಧಾರದ ಮೇಲೆ ಮುಂದಿನ ವರ್ಷದ ಕಾರ್ಯಯೋಜನೆಯನ್ನು ರೂಪಿಸಬೇಕು ಎಂದು ಸಲಹೆ ನೀಡಿದರು. ಈ ಉನ್ನತ ಮಟ್ಟದ ಸಭೆಯು ಕಳೆದ ವರ್ಷದ ಕೃಷಿ ಪ್ರಗತಿಯನ್ನು ಪರಿಶೀಲಿಸಿ, ಮುಂಬರುವ ಬೆಳೆ ಹಂಗಾಮಿನ ಕ್ರಿಯಾಯೋಜನೆಯನ್ನು ಅಂತಿಮಗೊಳಿಸುವ ಮಹತ್ವದ ವೇದಿಕೆಯಾಗಿದೆ ಎಂದು ತಿಳಿಸಿದರು. ರಾಯಚೂರಿನ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ವಿಸ್ತರಣಾ ನಿರ್ದೇಶಕ ಡಾ. ಎ.ಆರ್. ಕುರುಬರ್ ಮಾತನಾಡಿ, ಪ್ರಯೋಗಾಲಯಗಳಲ್ಲಿ ನಡೆಯುವ ಸಂಶೋಧನೆಗಳು ನೇರವಾಗಿ ರೈತರ ಹೊಲಗದ್ದೆಗಳಿಗೆ ತಲುಪುವಲ್ಲಿ ಕೃಷಿ ವಿಜ್ಞಾನ ಕೇಂದ್ರಗಳು ಪ್ರಮುಖ ಪಾತ್ರ ವಹಿಸಬೇಕು. ರೈತರ ಹೊಲದ ಸಮಸ್ಯೆಗಳಿಗೆ ಸ್ಪಂದಿಸಿ ಆಧುನಿಕ ತಂತ್ರಜ್ಞಾನಗಳ ಅಳವಡಿಕೆಗೆ ಒತ್ತು ನೀಡಬೇಕೆಂದು ಸೂಚಿಸಿದರು. ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಸೋಮಸುಂದರ್ ಮಾತನಾಡಿ, ಬಳ್ಳಾರಿ ಜಿಲ್ಲೆಯಲ್ಲಿ 1.13 ಲಕ್ಷ ಹೆಕ್ಟೇರ್ ಪ್ರದೇಶವು ತುಂಗಭದ್ರಾ ಅಚ್ಚುಕಟ್ಟು ಪ್ರದೇಶಕ್ಕೆ ಒಳಪಟ್ಟಿದ್ದು, ರೈತರು ಹೆಚ್ಚಿನ ಪ್ರಮಾಣದಲ್ಲಿ ಕೇವಲ ಭತ್ತದ ಬೆಳೆ ಅವಲಂಬಿಸಿದ್ದಾರೆ. ಅತಿಯಾದ ರಾಸಾಯನಿಕ ಗೊಬ್ಬರ ಹಾಗೂ ಕೀಟನಾಶಕ ಬಳಕೆ ಗಂಭೀರ ಸಮಸ್ಯೆಯಾಗಿ ಪರಿಣಮಿಸಿರುವುದರಿಂದ, ರಾಸಾಯನಿಕ ಬಳಕೆಯನ್ನು ಕಡಿಮೆ ಮಾಡಿ ಜೈವಿಕ ಗೊಬ್ಬರ ಹಾಗೂ ಜೈವಿಕ ಕೀಟನಾಶಕಗಳ ಬಳಕೆಗೆ ರೈತರಲ್ಲಿ ಜಾಗೃತಿ ಮೂಡಿಸಬೇಕಿದೆ ಎಂದು ಅಭಿಪ್ರಾಯಪಟ್ಟರು. ಬಳ್ಳಾರಿ ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಹಾಗೂ ಮುಖ್ಯಸ್ಥ ಡಾ. ಪಾಲಯ್ಯ ಪಿ. ಅವರು ಪ್ರಸ್ತುತ ವರ್ಷದಲ್ಲಿ ಕೈಗೊಂಡ ಕಾರ್ಯಕ್ರಮಗಳ ವರದಿ ಹಾಗೂ 2024–25ನೇ ಸಾಲಿನ ಚಟುವಟಿಕೆಗಳ ವಿವರಗಳನ್ನು ಮಂಡಿಸಿದರು. ಕಾರ್ಯಕ್ರಮದಲ್ಲಿ ಗೃಹ ವಿಜ್ಞಾನಿ ಡಾ. ರಾಜೇಶ್ವರಿ ಸ್ವಾಗತಿಸಿದರು. ಮಣ್ಣು ವಿಜ್ಞಾನಿ ಡಾ.ರವಿ ಎಸ್. ವಂದಿಸಿದರು. ಸಭೆಯಲ್ಲಿ ಹಗರಿ ಕೃಷಿ ಕಾಲೇಜಿನ ಪ್ರಭಾರ ಅಧಿಕಾರಿ ಡಾ.ರವಿ ಶಂಕರ್, ಪಶು ವೈದ್ಯಕೀಯ ಪ್ರಾಧ್ಯಾಪಕ ಡಾ.ರಮೇಶ್, ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಸಹ ಸಂಶೋಧಕ ಡಾ.ಜಯಪ್ರಕಾಶ್ ನಿಡುಗುಂದಿ, ನಬಾರ್ಡ್ ಅಧಿಕಾರಿ ಯುವರಾಜ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಸಭಾ ಸದಸ್ಯರು, ಪ್ರಗತಿಪರ ರೈತರು ಹಾಗೂ ಕೃಷಿ ವಿಜ್ಞಾನ ಕೇಂದ್ರದ ಸಿಬ್ಬಂದಿಗಳು ಭಾಗವಹಿಸಿದ್ದರು.

ವಾರ್ತಾ ಭಾರತಿ 19 Dec 2025 8:35 pm

57 ಗಂಟೆ ನಡೆದ ಹತ್ತು ದಿನಗಳ ಅಧಿವೇಶನ ಕಲಾಪ : ಸ್ಪೀಕರ್ ಯು.ಟಿ.ಖಾದರ್

ಬೆಳಗಾವಿ : ಇಲ್ಲಿನ ಸುವರ್ಣ ವಿಧಾನಸೌಧದಲ್ಲಿ ಡಿ.8ರಿಂದ 19ರ ವರೆಗೆ 10 ದಿನಗಳ ಕಾಲ ನಡೆದ ವಿಧಾನಸಭೆ ಅಧಿವೇಶನವು ಸುಮಾರು 57 ಗಂಟೆ 35 ನಿಮಿಷಗಳ ಕಾಲ ಕಲಾಪ ನಡೆಸಲಾಗಿದೆ ಎಂದು ಸ್ಪೀಕರ್ ಯು.ಟಿ.ಖಾದರ್ ಪ್ರಕಟಿಸಿದರು. ಶುಕ್ರವಾರ ಅಧಿವೇಶನ ಅನಿಧಿರ್ಷಾವಧಿಗೆ ಮುಂದೂಡಿಕೆ ಮುನ್ನ ಕಲಾಪದಲ್ಲಿ ಶಾಮನೂರು ಶಿವಶಂಕರಪ್ಪ ಸೇರಿದಂತೆ ಇತ್ತೀಚೆಗೆ ನಿಧನ ಹೊಂದಿದ ಗಣ್ಯರುಗಳಿಗೆ ಸಂತಾಪ ಸೂಚನಾ ನಿರ್ಣಯವನ್ನು ಮಂಡಿಸಿ, ಅಂಗೀಕರಿಸಲಾಗಿದೆ. ಅಧಿವೇಶನದಲ್ಲಿ ಧನವಿನಿಯೋಗ ವಿಧೇಯಕವೂ ಸೇರಿದಂತೆ ಒಟ್ಟು 22 ವಿಧೇಯಕಗಳನ್ನು ಮಂಡಿಸಿ. ವಿಧಾನಸಭೆಯ ಪರಿಶೀಲನಾ ಸಮಿತಿಯ ಶಿಫಾರಸ್ಸಿನಂತೆ, ಕರ್ನಾಟಕ ಭೂಕಂದಾಯ (ಎರಡನೇ ತಿದ್ದುಪಡಿ) ವಿಧೇಯಕವು ಸೇರಿದಂತೆ ಒಟ್ಟು 23 ವಿಧೇಯಕಗಳನ್ನು ಪರ್ಯಾಲೋಚಿಸಿ, ಅಂಗೀಕರಿಸಲಾಗಿದೆ ಎಂದು ತಿಳಿಸಿದರು. ನಿಯಮ 60 ರಡಿಯಲ್ಲಿ ನೀಡಿದ್ದ 1 ನಿಲುವಳಿ ಸೂಚನೆಯನ್ನು ನಿಯಮ 69ಕ್ಕೆ ಪರಿವರ್ತಿಸಿ ಚರ್ಚಿಸಲಾಗಿದೆ. ಉತ್ತರ ಕರ್ನಾಟಕ ಅಭಿವೃದ್ಧಿ ಕುರಿತು ನಡೆದ ಚರ್ಚೆಯಲ್ಲಿ 39 ಸದಸ್ಯರುಗಳು ಭಾಗವಹಿಸಿದ್ದು, ಸುಮಾರು 17 ಗಂಟೆಗಳ ಕಾಲ ಚರ್ಚೆ ನಡೆಸಲಾಗಿದೆ ಎಂದು ಅವರು ತಿಳಿಸಿದರು. 2109 ಪ್ರಶ್ನೆಗಳನ್ನು ಸ್ವೀಕರಿಸಲಾಗಿದ್ದು, ಸದನದಲ್ಲಿ ಉತ್ತರಿಸಬೇಕಾಗಿದ್ದ 135 ಪ್ರಶ್ನೆಗಳ ಪೈಕಿ 134 ಪ್ರಶ್ನೆಗಳಿಗೆ ಹಾಗೂ ಲಿಖಿತ ಮೂಲಕ ಉತ್ತರಿಸುವ 1974 ಪ್ರಶ್ನೆಗಳ ಪೈಕಿ 1750 ಪ್ರಶ್ನೆಗಳಿಗೆ ಉತ್ತರಗಳನ್ನು ಸ್ವೀಕರಿಸಲಾಗಿದೆ. ನಿಯಮ 351 ರಡಿಯಲ್ಲಿ 180 ಸೂಚನೆಗಳನ್ನು 70 ಸೂಚನೆಗಳ ಉತ್ತರಗಳನ್ನು ಸ್ವೀಕರಿಸಲಾಗಿದೆ ಎಂದು ಹೇಳಿದರು. ರಾಯಚೂರು ಜಿಲ್ಲೆಯಲ್ಲಿ ತಕ್ಷಣವೇ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (AIIMS) ಅನ್ನು ಸ್ಥಾಪಿಸುವುದು ಸೇರಿದಂತೆ ಏಳು ಮಹತ್ವದ ನಿರ್ಣಯಗಳನ್ನು ಅಂಗೀಕರಿಸಲಾಗಿದೆ ಎಂದು ಅವರು ಹೇಳಿದರು. ಸುಗಮ ಕಲಾಪಕ್ಕೆ ಸಹಕಾರ ನೀಡಿದ ಸಭಾ ನಾಯಕರಾದ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ, ವಿರೋಧ ಪಕ್ಷದ ನಾಯಕರಿಗೆ, ಸಚಿವ ಸಂಪುಟದ ಸದಸ್ಯರಿಗೆ, ಸಚಿವಾಲಯದ ಅಧಿಕಾರಿ ಹಾಗೂ ಸಿಬ್ಬಂದಿಯವರಿಗೆ ಕೃತಜ್ಞತೆಗಳನ್ನು ಸಲ್ಲಿಸುತ್ತಾ, ನಾಡಿನ ಜನತೆಗೆ ಮುಂಬರುವ 2026ರ ಹೊಸ ವರ್ಷದ ಶುಭಾಶಯಗಳನ್ನು ತಿಳಿಸುತ್ತೇನೆ ಎಂದು ಪ್ರಕಟಿಸಿದ ಸ್ಪೀಕರ್ ಖಾದರ್, ರಾಷ್ಟ್ರಗೀತೆಯೊಂದಿಗೆ ಸದನವನ್ನು ಅನಿರ್ದಿಷ್ಟ ಅವಧಿಗೆ ಮುಂದೂಡಿದರು.

ವಾರ್ತಾ ಭಾರತಿ 19 Dec 2025 8:30 pm

ಕೋರ್ಟ್ ಆದೇಶದ ಹೆಸರಲ್ಲಿ ಮಂಗಳೂರಿನಲ್ಲಿ ಹೈಡ್ರಾಮಾ: ಸಿನಿಮೀಯ ಶೈಲಿಯಲ್ಲಿ ಲಾರಿ ಅಪಹರಣ!

ಮಂಗಳೂರಿನಲ್ಲಿ ಶುಕ್ರವಾರದಂದು ನಡೆದ ವಿಚಿತ್ರ ಘಟನೆಯೊಂದರಲ್ಲಿ, ಯುವಕರ ತಂಡವೊಂದು ಕೋರ್ಟ್ ವಾರಂಟ್ ಇದೆ ಎಂಬ ಸುಳ್ಳು ನೆಪವೊಡ್ಡಿ ಲಾರಿಯೊಂದನ್ನು ಅಪಹರಿಸಿದೆ. ನವದುರ್ಗಾ ಫುಡ್ ಪ್ರಾಡಕ್ಟ್ಸ್‌ಗೆ ಸೇರಿದ ಲಾರಿ ಚಾಲಕ ಬ್ರೆಡ್ ಅನ್‌ಲೋಡ್ ಮಾಡಿ ಬರುತ್ತಿದ್ದಾಗ, ಕಾರಿನಲ್ಲಿ ಬಂದ ರಕ್ಷಿತ್ ಎಂಬಾತ ಲಾರಿಯನ್ನು ತಡೆದಿದ್ದಾನೆ. ಬಳಿಕ ವಾಹನ ಜಪ್ತಿ ಮಾಡುವ ನಾಟಕವಾಡಿ, ಚಾಲಕನ ಮೊಬೈಲ್ ಕಸಿದುಕೊಂಡು, ವಾಹನದ ಜಿಪಿಎಸ್ ಸಂಪರ್ಕ ಕಡಿತಗೊಳಿಸಿ ಲಾರಿಯನ್ನು ಕದ್ದೊಯ್ಯಲಾಗಿದೆ. ಈ ಸಂಬಂಧ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ವಿಜಯ ಕರ್ನಾಟಕ 19 Dec 2025 8:26 pm

ವಿಧಾನ ಮಂಡಲ ಅಧಿವೇಶನಕ್ಕೆ ತೆರೆ; ಕಲಾಪದಲ್ಲೂ ಗಮನ ಸೆಳೆದ ‘ನಾಯಕತ್ವ ಬದಲಾವಣೆ’ ಪೈಪೋಟಿ

ಬೆಳಗಾವಿ : ರಾಜ್ಯದ ಗಡಿ ಜಿಲ್ಲೆ ಕುಂದಾನಗರಿ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಎರಡು ವಾರಗಳಿಂದ ನಡೆಯುತ್ತಿದ್ದ ವಿಧಾನ ಮಂಡಲದ ಉಭಯ ಸದನಗಳ ಅಧಿವೇಶನಕ್ಕೆ ವಿದ್ಯುಕ್ತ ತೆರೆ ಬಿದ್ದಿದೆ. ಆಡಳಿತಾರೂಢ ಕಾಂಗ್ರೆಸ್ ಪಕ್ಷದಲ್ಲಿನ ನಾಯಕತ್ವ ಬದಲಾವಣೆಯ ಪೈಪೋಟಿ, ಬಣ ರಾಜಕೀಯ, ಆಪ್ತರ ಔತಣಕೂಟಗಳು ಗಮನ ಸೆಳೆದವು. ಈ ಮಧ್ಯೆ ಮತ್ತೊಂದೆಡೆ ನೆರೆ ಸಂತ್ರಸ್ತರಿಗೆ ಪರಿಹಾರ, ಕೃಷಿ ಉತ್ಪನ್ನಗಳ ಖರೀದಿ ಸೇರಿದಂತೆ ವಿವಿಧ ಸಂಘಟನೆಗಳು ತಮ್ಮ ಬೇಡಿಕೆ ಹಾಗೂ ಸಮಸ್ಯೆಗಳ ಪರಿಹಾರಕ್ಕಾಗಿ ಸರಣಿ ಪ್ರತಿಭಟನೆಗಳು ನಡೆಸಿದವು. ಭಾರಿ ಪೊಲೀಸ್ ಭದ್ರತೆಯಲ್ಲಿ ನಡೆದ ಅಧಿವೇಶನ ಕಲಾಪದಲ್ಲಿ ಉತ್ತರ ಕರ್ನಾಟಕದ ಸಮಸ್ಯೆಗಳು ಸೇರಿದಂತೆ ರಾಜ್ಯದ ಜ್ವಲಂತ ವಿಚಾರಗಳು ಚರ್ಚಿಸಲಾಯಿತು. ಅಧಿವೇಶನಕ್ಕೆ ಆಗಮಿಸಿದ್ದ ರಾಜಕಾರಣಿಗಳು, ಅಧಿಕಾರಿಗಳು ಹಾಗೂ ಸಿಬ್ಬಂದಿ ಸುತ್ತಮುತ್ತಲಿನ ಪ್ರವಾಸಿ ಮತ್ತು ಯಾತ್ರಾಸ್ಥಳ ಗಳಿಗೆ ಭೇಟಿ ನೀಡಿದ್ದು ನಡೆಯಿತು. ಡಿಸೆಂಬರ್ 8ರಂದು ಆರಂಭವಾದ ವಿಧಾನ ಮಂಡಲ ಚಳಿಗಾಲದ ಅಧಿವೇಶನ ಡಿ.19ಕ್ಕೆ ಮುಕ್ತಾಯಕಂಡಿದ್ದು, ಹತ್ತು ದಿನಗಳ ಅಧಿವೇಶನದಲ್ಲಿ ಎರಡು ದಿನ ಹಾಲಿ ಸದಸ್ಯರಾಗಿದ್ದ ಎಚ್.ವೈ.ಮೇಟಿ ಹಾಗೂ ಶಾಮನೂರು ಶಿವಶಂಕರಪ್ಪ ಸೇರಿದಂತೆ ಇತ್ತೀಚೆಗೆ ನಿಧನರಾಗಿದ್ದ ಗಣ್ಯರಿಗೆ ಸಂತಾಪ ಸಲ್ಲಿಕೆಗೆ ಸೀಮಿತವಾಯಿತು. ಉಳಿದ 8 ದಿನಗಳಲ್ಲಿ ಶಾಸಕರು ತಮ್ಮ-ತಮ್ಮ ಕ್ಷೇತ್ರಗಳು ಸೇರಿದಂತೆ ರಾಜ್ಯದ ವಿವಿಧ ಸಮಸ್ಯೆಗಳ ಬಗ್ಗೆ ಪ್ರಶ್ನೋತ್ತರ, ವಿವಿಧ ನಿಯಮಗಳಲ್ಲಿ ವಿಷಯ ಪ್ರಸ್ತಾಪಿಸಿ ಸರಕಾರದಿಂದ ಉತ್ತರ ಪಡೆದರು. ಉತ್ತರ ಕರ್ನಾಟಕ ಭಾಗದ ನೀರಾವರಿ ಸಮಸ್ಯೆಗಳು ಸೇರಿದಂತೆ ಹಲವು ವಿಚಾರಗಳು ಕಲಾಪದಲ್ಲಿ ಚರ್ಚೆ ನಡೆಸಲಾಯಿತು. ಈ ಸಂದರ್ಭದಲ್ಲಿ ಉತ್ತರ ಕರ್ನಾಟಕದ ಬಗ್ಗೆ ನಿರ್ಲಕ್ಷ್ಯ ಮನೋಭಾವನೆ ಪ್ರಸ್ತಾಪವಾಗಿ ಸದಸ್ಯರು ತೀವ್ರ ಅಸಮಾಧಾನ ಹೊರಹಾಕಿದರು. ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಿಗೆ ಫೆಬ್ರವರಿ ಮತ್ತು ಮಾರ್ಚ್ ತಿಂಗಳ ಹಣ ನೀಡದಿದ್ದರೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆಂದು ಆರೋಪಿಸಿ ಬಿಜೆಪಿ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದ್ದರು. ಇದು ಕಲಾಪದಲ್ಲಿ ಕಾವೇರಿದ ಚರ್ಚೆಗೆ ಅವಕಾಶ ಮಾಡಿಕೊಟ್ಟಿತ್ತಲ್ಲದೆ, ತಾವು ನೀಡಿದ್ದ ಉತ್ತರಕ್ಕಾಗಿ ಕ್ಷಮೆ ಕೇಳಿದ ಪ್ರಸಂಗವು ಗಮನ ಸೆಳೆಯಿತು. ಗದ್ದಲದ ಮಧ್ಯೆ ‘ದ್ವೇಷ ಭಾಷಣ’ ನಿಯಂತ್ರಣ ವಿಧೇಯಕಕ್ಕೆ ಅಸ್ತು : ಪ್ರತಿಪಕ್ಷ ಬಿಜೆಪಿ ಸದಸ್ಯರ ತೀವ್ರ ವಿರೋಧದ ಮಧ್ಯೆ ಕರ್ನಾಟಕ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ (ಪ್ರತಿಬಂಧಕ) ವಿಧೇಯಕ ಸೇರಿದಂತೆ ಕರ್ನಾಟಕ ಸಾಮಾಜಿಕ ಬಹಿಷ್ಕಾರ(ಪ್ರತಿಬಂಧ, ನಿಷೇಧ ಮತ್ತು ಪರಿಹಾರ)ವಿಧೇಯಕ, ಪರಿಶಿಷ್ಟ ಜಾತಿ ಒಳಮೀಸಲಾತಿ ವಿಧೇಯಕ, ಪೂರಕ ಅಂದಾಜುಗಳು, ಧನವಿನಿಯೋಗ ಸೇರಿದಂತೆ ಹಲವು ವಿಧೇಯಕಗಳಿಗೆ ಉಭಯ ಸದನಗಳಲ್ಲಿ ಒಪ್ಪಿಗೆ ನೀಡಲಾಯಿತು. ಪ್ರತಿದಿನ ಬೆಳಗ್ಗೆಯಿಂದ ರಾತ್ರಿಯ ವರೆಗೆ ಅಧಿವೇಶನವನ್ನ ನಡೆಸಲಾಯಿತು. ಪ್ರತಿವರ್ಷ ಚಳಿಗಾಲದ ಅಧಿವೇಶನ ನಡೆದರೂ ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳಿಗೆ ಪರಿಹಾರ ದೊರೆತ್ತಿಲ್ಲ ಎಂಬ ಜನಸಾಮಾನ್ಯರ ಕೂಗು ಹಾಗೆಯೇ ಉಳಿದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರ ಆಪ್ತ ಶಾಸಕರು ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಆಪ್ತ ಬಣದ ಶಾಸಕರು ಸದನ ಹೊರಗೆ ಔತಣಕೂಟಗಳ ನೆಪದಲ್ಲಿ ಒಂದೆಡೆ ಸೇರಿದ್ದು, ನಾಯಕತ್ವ ಬದಲಾವಣೆ ಸಂಬಂಧ ಸಮಾಲೋಚನೆ ನಡೆಸಿದ್ದು, ಗಮನ ಸೆಳೆಯಿತು. ನಾಲ್ಕೈದು ತಿಂಗಳಿಂದ ರಾಜ್ಯದ ಆಡಳಿತಾರೂಢ ಕಾಂಗ್ರೆಸ್ ಪಕ್ಷದಲ್ಲಿ ‘ಮುಖ್ಯಮಂತ್ರಿ ಬದಲಾವಣೆ’ ಸುತ್ತ ನಡೆಯುತ್ತಿದ್ದ ಚರ್ಚೆ, ಪರ-ವಿರೋಧ ಅಭಿಪ್ರಾಯಗಳ ಮಂಡನೆಗೆ ವಿಧಾನ ಮಂಡಲ ಅಧಿವೇಶನ ಕಲಾಪವು ವೇದಿಕೆಯಾಯಿತು. ಒಟ್ಟಾರೆ ಬೆಳಗಾವಿ ಅಧಿವೇಶನವೂ ಮುಖ್ಯಮಂತ್ರಿ ಕುರ್ಚಿಗಾಗಿನ ಪೈಪೋಟಿ, ರಾಜಕೀಯ ಮೇಲಾಟಗಳು ನಡೆದರೂ ವಾರ್ಷಿಕ ಸಂಪ್ರದಾಯದಂತೆ ಹತ್ತು ದಿನಗಳ ಚಳಿಗಾಲದ ಅಧಿವೇಶನ ಕಲಾಪವು ಯಾವುದೇ ಗೊಂದಲಗಳಿಲ್ಲದೆ ಮುಕ್ತಾಯಕಂಡಿದೆ.

ವಾರ್ತಾ ಭಾರತಿ 19 Dec 2025 8:24 pm

ಬೆಳಗಾವಿ ಅಧಿವೇಶನಕ್ಕೆ ತೆರೆ: ಲಕ್ಷ್ಮೀ ಹೆಬ್ಬಾಳ್ಕರ್ ಕ್ಷಮೆ, ದ್ವೇಷ ಭಾಷಣದ ವಿರುದ್ಧ ಬಿಲ್: 10 ದಿನದ 10 ಹೈಲೈಟ್ಸ್ ಇಲ್ಲಿದೆ

ಬೆಳಗಾವಿ ಸುವರ್ಣಸೌಧದಲ್ಲಿ 10 ದಿನಗಳ ವಿಧಾನಮಂಡಲ ಚಳಿಗಾಲದ ಅಧಿವೇಶನ ಮುಕ್ತಾಯಗೊಂಡಿದೆ. ಉತ್ತರ ಕರ್ನಾಟಕದ ಅಭಿವೃದ್ಧಿ, ಲಕ್ಷ್ಮೀ ಹೆಬ್ಬಾಳ್ಕರ್ ಕ್ಷಮೆ ಸೇರಿ ಯಾವ್ಯಾವ ವಿಧೇಯಕಗಳಿಗೆ ಅನುಮೋದನೆ ಸಿಕ್ಕಿದೆ. ಏನೆಲ್ಲ ಚರ್ಚೆಗಳು ನಡೆದವು. ಹತ್ತು ದಿನ ನಡೆದ ಅಧಿವೇಶನದ ಹತ್ತು ಪ್ರಮುಖ ಹೈಲೈಟ್ಸ್ ಏನು ಎಂಬುದು ಈ ಲೇಖನದಲ್ಲಿ ಇದೆ.

ವಿಜಯ ಕರ್ನಾಟಕ 19 Dec 2025 8:21 pm

ಬಳ್ಳಾರಿ | ಬೆಂಬಲ ಬೆಲೆಯಲ್ಲಿ ತೊಗರಿ ಖರೀದಿ ಪ್ರಾರಂಭ : ಡಿಸಿ ನಾಗೇಂದ್ರ ಪ್ರಸಾದ್ ಕೆ.

ಜಿಲ್ಲಾ ಟಾಸ್ಕ್‌ಫೋರ್ಸ್ ಸಮಿತಿ ಸಭೆ

ವಾರ್ತಾ ಭಾರತಿ 19 Dec 2025 8:21 pm

SIR: ತಮಿಳುನಾಡಿನಲ್ಲಿ ಇಷ್ಟು ಲಕ್ಷ ಮತದಾರರ ಹೆಸರು ಡಿಲೀಟ್‌

ವಿರೋಧ ಪಕ್ಷಗಳ ವಿರೋಧದ ನಡುವೆಯೂ ಕೇಂದ್ರ ಸರ್ಕಾರ ಹಾಗೂ ಭಾರತೀಯ ಚುನಾವಣಾ ಆಯೋಗವು ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆಯನ್ನು ನಡೆಸಿದ್ದು, ತಮಿಳುನಾಡಿನಲ್ಲಿ ಭಾರೀ ಸಂಖ್ಯೆಯಲ್ಲಿ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಕೈಬಿಡಲಾಗಿದೆ. ತಮಿಳುನಾಡಿನಲ್ಲಿ ವಿಶೇಷ ತೀವ್ರ ಪರಿಷ್ಕರಣೆ (SIR) ನಂತರ ತಮಿಳುನಾಡು ಮುಖ್ಯ ಚುನಾವಣಾ ಅಧಿಕಾರಿ ಅರ್ಚನಾ ಪಟ್ನಾಯಕ್ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ರಾಜ್ಯದ ಕರಡು ಮತದಾರರ

ಒನ್ ಇ೦ಡಿಯ 19 Dec 2025 8:20 pm

ಮಲ್ಪೆ ಮೀನುಗಾರಿಕಾ ಬಂದರಿನ ಪ್ರವೇಶದ್ವಾರ ನಿರ್ಮಾಣ ಕಾಮಗಾರಿ; ಪರ್ಯಾಯ ಮಾರ್ಗ

ಉಡುಪಿ, ಡಿ.19: ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆಯಡಿ ಮಲ್ಪೆ ಮೀನುಗಾರಿಕಾ ಬಂದರಿನ ಆಧುನೀಕರಣ ಕಾಮಗಾರಿಗಳಲ್ಲಿ ಒಂದಾದ ಮಲ್ಪೆ ಮೀನುಗಾರಿಕಾ ಬಂದರಿನ ಮುಖ್ಯ ಪ್ರವೇಶದ್ವಾರವನ್ನು ಪುನರ್ ನಿರ್ಮಾಣ ಕಾಮಗಾರಿಯನ್ನು ಡಿ.22ರಿಂದ ಪ್ರಾರಂಭಿಸಲಾಗುವುದು. ಈ ಹಿನ್ನೆಲೆಯಲ್ಲಿ ಬಂದರನ್ನು ಪ್ರವೇಶಿಸುವ ಎಲ್ಲಾ ವಾಹನಗಳು ಮಲ್ಪೆ ಜಂಕ್ಷನ್‌ನಿಂದ ಶಿವಸಾಗರ್ ಹೋಟೆಲ್ ಮಾರ್ಗವಾಗಿ ರಾಜ್‌ಫಿಶ್ ಮಿಲ್ ಕ್ರಾಸ್ ಮೂಲಕ ಹಾಗೂ ಕೊಳ ಹನುಮಾನ್ ನಗರ ರಸ್ತೆ ಮೂಲಕ ಕೊಚ್ಚಿನ್ ಶಿಪ್‌ಯಾರ್ಡ್ ಬಳಿ ಇರುವ (ಬಂದರಿನ ಹಿಂದಿನ) ಗೇಟ್ ಮೂಲಕ ಮಲ್ಪೆ ಬಂದರನ್ನು ಪ್ರವೇಶಿಸಬೇಕು. ಇದಕ್ಕೆ ಸಾರ್ವಜನಿಕರು ಸಹಕರಿಸುವಂತೆ ಮಲ್ಪೆ ಮೀನುಗಾರಿಕಾ ಬಂದರು ಯೋಜನೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಾರ್ತಾ ಭಾರತಿ 19 Dec 2025 8:18 pm

ಪ್ರತಿಪಕ್ಷಗಳ ವಿರೋಧದ ಮಧ್ಯೆಯೂ ದ್ವೇಷ ಭಾಷಣ ನಿಷೇಧ ವಿಧೇಯಕ ಮೇಲ್ಮನೆಯಲ್ಲಿ ಅಂಗೀಕಾರ

ಬೆಳಗಾವಿ : ಪ್ರತಿಪಕ್ಷಗಳ ಸದಸ್ಯರ ವಿರೋಧದ ನಡುವೆಯೂ ವಿಧಾನಸಭೆಯಿಂದ ತಿದ್ದುಪಡಿಯೊಂದಿಗೆ ಅಂಗೀಕಾರವಾದ ರೂಪದಲ್ಲಿರುವ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ (ಪ್ರತಿಬಂಧಕ) ವಿಧೇಯಕ-2025ಕ್ಕೆ  ಮೇಲ್ಮನೆಯಲ್ಲಿ ಶುಕ್ರವಾರ ಅಂಗೀಕಾರ ದೊರೆಯಿತು. ವಿಧಾನ ಪರಿಷತ್ ಸದನದಲ್ಲಿ ಶುಕ್ರವಾರ ದ್ವೇಷ ಭಾಷಣಕ್ಕೆ ಸಂಬಂಧಿಸಿದ ವಿಧೇಯಕವನ್ನು ಮಂಡಿಸಿದ ಗೃಹ ಸಚಿವ ಡಾ.ಜಿ.ಪರಮೇಶ್ವರ್, ಇತ್ತೀಚಿನ ದಿನಗಳಲ್ಲಿ ದ್ವೇಷ ಭಾಷಣ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್‌ನ ನಿರ್ದೇಶನಗಳ ಅನ್ವಯ ಈ ತಿದ್ದುಪಡಿ ವಿಧೇಯಕ ತರಲಾಗಿದೆ ಎಂದು ಸದನಕ್ಕೆ ವಿವರಿಸಿದರು. ವ್ಯಕ್ತಿ, ವ್ಯಕ್ತಿಗಳ ಸಮೂಹ, ಸಂಸ್ಥೆಗಳ ವಿರುದ್ಧ ಸಮಾಜದಲ್ಲಿ ಅಸಾಮರಸ್ಯ ದ್ವೇಷವನ್ನುಂಟು ಮಾಡುವ ದ್ವೇಷ ಭಾಷಣದ ಪ್ರಸರಣೆ, ಪ್ರಕಟಣೆ ಅಥವಾ ಪ್ರಚಾರವನ್ನು ಹಾಗೂ ಅಪರಾಧಗಳನ್ನು ತಡೆಗಟ್ಟಲು ಮತ್ತು ಪ್ರತಿಬಂಧಿಸಲು, ಅಂಥ ಅಪರಾಧಗಳಿಗೆ ದಂಡನೆಯನ್ನು ಉಪಬಂಧಿಸಲು ಹಾಗೂ ಹಾನಿಗೊಳಗಾದ ಸಂತ್ರಸ್ತರಿಗೆ ತಕ್ಕಷ್ಟು ಪರಿಹಾರವನ್ನು ಒದಗಿಸಲು ಶಾಸನವನ್ನು ಅಧಿನಿಯಮಿಸುವುದು ಅವಶ್ಯಕವೆಂದು ಪರಿಗಣಿಸಿ ಈ ವಿಧೇಯಕ ಜಾರಿ ಮಾಡಲಾಗುತ್ತಿದೆ ಎಂದು ಜಿ.ಪರಮೇಶ್ವರ್ ತಿಳಿಸಿದರು. ಧಾರ್ಮಿಕ ಮತ್ತು ರಾಜಕೀಯ ವಿಚಾರಗಳಲ್ಲಿ ಸಂಘರ್ಷ ಸೃಷ್ಟಿಸುವ ಮಾತುಗಳು ಹೆಚ್ಚಾಗುತ್ತಿವೆ. ಪ್ರತಿನಿತ್ಯ ದ್ವೇಷ ಭಾಷಣದ ಪ್ರಕರಣಗಳು ಹೆಚ್ಚಾಗುತ್ತಿವೆ. ಈ ವರ್ಷ 59 ಪ್ರಚೋದನಾಕಾರಿ ಭಾಷಣ ಪ್ರಕರಣಗಳು ದಾಖಲಾಗಿವೆ. ಭಾಷಣ ಕೇಳಿ ಕೊಲೆ ಯತ್ನ ಮಾಡಿದ್ದಾರೆ. ಯುವಕರನ್ನು ಪ್ರಚೋದಿಸುವುದು ಹೆಚ್ಚಾಗಿದೆ ಎಂದು ಜಿ.ಪರಮೇಶ್ವರ್ ಆತಂಕ ವ್ಯಕ್ತಪಡಿಸಿದರು. ಏನೋ ದೊಡ್ಡ ದ್ವೇಷ ಭಾಷಣ ಬಿಲ್ ತಂದಿದ್ದಾರೆ ಎಂಬ ಆತಂಕ ಬೇಡ. ಕಾನೂನು ಪಾಲಿಸುವವರು ಯಾರೂ ಆತಂಕಪಡುವ ಅಗತ್ಯವಿಲ್ಲ ಎಂದು ಜಿ.ಪರಮೇಶ್ವರ್ ಸ್ಪಷ್ಟಪಡಿಸಿದರು. ವಿಧೇಯಕದ ಮುಖ್ಯ ಉದ್ದೇಶ ಸಾಮಾಜಿಕ ಸಾಮರಸ್ಯ ಕಾಪಾಡುವುದು ಮತ್ತು ದ್ವೇಷ ಭಾಷಣದಿಂದ ಉಂಟಾಗುವ ಸಂಘರ್ಷಗಳನ್ನು ತಡೆಗಟ್ಟುವುದು ಎಂದು  ಜಿ.ಪರಮೇಶ್ವರ್ ಹೇಳಿದರು. ಈ ವೇಳೆ ಸದಸ್ಯರಾದ ಸಿ.ಟಿ.ರವಿ, ಎನ್.ರವಿಕುಮಾರ್, ಭಾರತಿ ಶೆಟ್ಟಿ, ಕೇಶವ ಪ್ರಸಾದ್, ಶರವಣ, ಪ್ರತಾಪ್ ಸಿಂಹ ನಾಯಕ್ ಸೇರಿದಂತೆ ಹಲವರು ವಿಧೇಯಕವನ್ನು ವಿರೋಧಿಸಿದರು. ಸುದೀರ್ಘ ಅವಧಿಯ ಚರ್ಚೆಯ ನಂತರ ಪ್ರಸ್ತಾವನ್ನು ಸಭಾಪತಿ ಹೊರಟ್ಟಿ ಅವರು ಧ್ವನಿಮತಕ್ಕೆ ಹಾಕಿದರು. ಸದಸ್ಯರ ಸಹಮತದೊಂದಿಗೆ ವಿಧೇಯಕಕ್ಕೆ ಅಂಗೀಕಾರ ದೊರೆಯಿತು.

ವಾರ್ತಾ ಭಾರತಿ 19 Dec 2025 8:10 pm

ಸವಾಲುಗಳನ್ನು ಮೆಟ್ಟಿ ನಿಲ್ಲುವ ಭಾಷೆ ಕನ್ನಡ: ನಾಡೋಜ ಬರಗೂರು ರಾಮಚಂದ್ರಪ್ಪ

ಹೈದರಾಬಾದ್/ ಕಲಬುರಗಿ: ಹೈದರಾಬಾದಿನ ಉಸ್ಮಾನಿಯಾ ವಿಶ್ವವಿದ್ಯಾಲಯದ ಕನ್ನಡ ವಿಭಾಗ ಹಾಗೂ ಸುಭಾಶ್ಚಂದ್ರ ಪಾಟೀಲ ಸ್ಮಾರಕ ಜನಕಲ್ಯಾಣ ಟ್ರಸ್ಟ್, ಕಲಬುರಗಿ ಇವರ ಸಂಯುಕ್ತ ಆಶ್ರಯದಲ್ಲಿ “ಒಳನಾಡು–ಹೊರನಾಡು : ಕನ್ನಡ ಸ್ಥಿತಿಗತಿ ವಿಷಯದ ಕುರಿತು ವಿಶೇಷಗೋಷ್ಠಿ ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದ ನಾಡೋಜ ಬರಗೂರು ರಾಮಚಂದ್ರಪ್ಪ ಅವರು, ಕನ್ನಡಕ್ಕೆ ಸಾವಿರಾರು ವರ್ಷಗಳ ಚರಿತ್ರೆಯಿರುವಂತೆ ಅನೇಕ ಸವಾಲುಗಳೂ ಇವೆ. ಆದರೆ ಅಂತಃಶಕ್ತಿಯಿಂದ ಕೂಡಿದ ಭಾಷೆಯಾಗಿರುವ ಕಾರಣ ಎಲ್ಲ ಸವಾಲುಗಳನ್ನು ಮೆಟ್ಟಿ ಆಧುನಿಕವಾಗಿ ಅದು ಜೀವಂತವಾಗಿ ಉಳಿದಿದೆ. ಕಾಲಕ್ಕೆ ತಕ್ಕಂತೆ ತೆರೆದುಕೊಂಡು ತನ್ನ ಕಾರ್ಯವ್ಯಾಪ್ತಿಯನ್ನು ವಿಸ್ತರಿಸಿಕೊಂಡಿದೆ ಎಂದು ಹೇಳಿದರು. ಕರ್ನಾಟಕದ ಒಳನಾಡಿನಲ್ಲಿರುವ ಕನ್ನಡಿಗರ ಸ್ಥಿತಿಗತಿ ಹಾಗೂ ಕರ್ನಾಟಕದ ಹೊರನಾಡಿನಲ್ಲಿರುವ ಕನ್ನಡಿಗರ ಬದುಕಿನ ಸ್ಥಿತಿಗತಿಗಳ ನಡುವೆ ಮಹತ್ತರ ಅಜಗಜಾಂತರ ವ್ಯತ್ಯಾಸಗಳಿವೆ. ಅವರ ಅಡ್ಡಿ–ಆತಂಕಗಳೂ ವಿಭಿನ್ನವಾಗಿವೆ. ಆದ್ದರಿಂದ ಒಂದೇ ಸರಳ ರೇಖೆಯಲ್ಲಿ ಇವರ ಜೀವನ ವಿಧಾನವನ್ನು ಕನ್ನಡದ ಸಂದರ್ಭದಲ್ಲಿ ವಿವರಿಸುವುದು ಕಷ್ಟಕರವೆಂದು ಅಭಿಪ್ರಾಯಪಟ್ಟರು. ಭಾರತದ ಇತರೆ ರಾಜ್ಯಗಳಿಗಿಂತ ಕರ್ನಾಟಕದಲ್ಲಿ ಭಾಷಾ ಸಂಬಂಧಿತ ಚಟುವಟಿಕೆಗಳು ಹೆಚ್ಚಾಗಿ ನಡೆಯುತ್ತಿರುವುದು ಸಂತಸದ ಸಂಗತಿ. ಕನ್ನಡ ಭಾಷೆ ಹಾಗೂ ಸಂಸ್ಕೃತಿಯ ಸಂವರ್ಧನೆಗಾಗಿ ಸರ್ಕಾರವೇ ಅನೇಕ ಪ್ರಾಧಿಕಾರಗಳು, ಅಕಾಡೆಮಿಗಳು, ಪ್ರತಿಷ್ಠಾನಗಳು, ಟ್ರಸ್ಟ್‌ಗಳನ್ನು ಸ್ಥಾಪಿಸಿ ಕಾರ್ಯನಿರ್ವಹಿಸುತ್ತಿದೆ. ಹೀಗಾಗಿ ಒಳನಾಡಿನಲ್ಲಿ ಕನ್ನಡ ಸಾಯುತ್ತದೆ ಎಂಬ ಮಾತನ್ನು ನಾನು ನಿರಾಕರಿಸುತ್ತೇನೆ. ಕನ್ನಡ ತನ್ನ ಅಂತಃಶಕ್ತಿಯಿಂದಲೇ ಎಲ್ಲ ಸವಾಲುಗಳನ್ನು ಎದುರಿಸಿ ಕಾಲಕ್ಕೆ ತಕ್ಕಂತೆ ಸಾಗುತ್ತಿದೆ ಎಂದರು. ಕಾರ್ಯಕ್ರಮದಲ್ಲಿ ಉಸ್ಮಾನಿಯಾ ವಿಶ್ವವಿದ್ಯಾಲಯದ ಕಲಾ ವಿಭಾಗದ ಪ್ರಾಂಶುಪಾಲರಾದ ಪ್ರೊ.ಸಿ.ಕಾಶಿಂ ಅವರು ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದರು. ತಂತ್ರಜ್ಞಾನದಿಂದಾಗಿ ಎದುರುಬದುರು ಕುಳಿತರೂ ಮಾತನಾಡಲಾರದ ಸ್ಥಿತಿಗೆ ನಾವು ತಲುಪಿದ್ದೇವೆ. ಇಂತಹ ಸಂದರ್ಭದಲ್ಲಿ ಭಾಷೆ ನಮ್ಮ ಬದುಕನ್ನು ಹೇಗೆ ರೂಪಿಸಿದೆ ಎಂಬುದರ ಕುರಿತು ಆತ್ಮಾವಲೋಕನ ಅಗತ್ಯವಿದೆ ಎಂದರು. ಡಾ. ಶಾಂತಾದೇವಿ ಸಣ್ಣೆಲಪ್ಪನವರ ಅವರು ಮೂಲತಃ ಕನ್ನಡದಲ್ಲಿ ರಚಿಸಿರುವ ಕೃತಿಯನ್ನು ಶ್ರೀರಾಮ ಕೃಷ್ಣಮೂರ್ತಿ ಅವರು “ನ ಹಿ ಯೋಗೇನ ಸದೃಶ್ಯಂ” ಎಂಬ ಹೆಸರಿನಲ್ಲಿ ತೆಲುಗು ಭಾಷೆಗೆ ಅನುವಾದ ಗೊಳಿಸಿದ್ದಾರೆ. ಸದರಿ ಕೃತಿಯನ್ನು ಉಸ್ಮಾನಿಯಾ ವಿಶ್ವವಿದ್ಯಾಲಯದ ತೆಲುಗು ವಿಭಾಗದ ಮುಖ್ಯಸ್ಥರಾದ ಪ್ರೊ.ಎಸ್. ಕಮಲಾಕರ ಶರ್ಮಾ ಅವರು ಪರಿಚಯಿಸಿದರು. ಉಸ್ಮಾನಿಯಾ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ.ಎಂ.ಲಿಂಗಪ್ಪ ಗೋನಾಲ ಅವರು ಎಲ್ಲರನ್ನು ಸ್ವಾಗತಿಸಿ, ಪ್ರಾಸ್ತಾವಿಕ ನುಡಿಗಳನ್ನಾಡಿದರು. “ಒಳನಾಡು–ಹೊರನಾಡು ಕನ್ನಡದ ಸ್ಥಿತಿಗತಿ” ವಿಷಯದ ಸಂವಾದದಲ್ಲಿ ಪ್ರೊ.ನಿಖಿಲ ಹೆಚ್.ಎಸ್., ಸುಧೀಂದ್ರ ಕುಲಕರ್ಣಿ, ಸುರೇಂದ್ರ ಕಟಗೇರಿ, ಧರ್ಮೇಂದ್ರ ಪೂಜಾರಿ, ಸುಮತಿ ನಿರಂಜನ್ ಸೇರಿದಂತೆ ಹಲವರು ಪಾಲ್ಗೊಂಡಿದ್ದರು. ಟ್ರಸ್ಟ್ ಅಧ್ಯಕ್ಷ ಶರಣಗೌಡ ಪಾಟೀಲ ಪಾಳಾ ಅವರು ಅಧ್ಯಕ್ಷೀಯ ಭಾಷಣ ಮಾಡುತ್ತಾ, ಭವಿಷ್ಯದಲ್ಲಿ ಹೈದರಾಬಾದಿನ ಕನ್ನಡಿಗರು ಹಮ್ಮಿಕೊಳ್ಳುವ ಯಾವುದೇ ಸಾಹಿತ್ಯದ ಚಟುವಟಿಕೆಗಳಿಗೆ, ಕರ್ನಾಟಕ ಸರಕಾರದ ಹಣಕಾಸಿನ ನೆರವಿಗೆ ಕಾಯದೆ ನನಗೆ ಮಾಹಿತಿ ಕೊಟ್ಟಲ್ಲಿ, ಇಲ್ಲಿ ನಾ ಭೂತೋ ನಾ ಭವಿಷ್ಯತ್ ಎಂಬಂತೆ ಸಾಹಿತ್ಯ ಸಮ್ಮೇಳನವನ್ನು ಆಯೋಜಿಸಲು ಸಂಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಿದರು. ಹೈದರಾಬಾದ್ ಕರ್ನಾಟಕದ ಮೊದಲ ಎಂ.ಎ. ಕನ್ನಡ ಪದವೀಧರರೂ ಹಾಗೂ ಉಸ್ಮಾನಿಯಾ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಸಂಸ್ಥಾಪಕ ಮುಖ್ಯಸ್ಥರಾಗಿದ್ದ ಪ್ರೊ.ಡಿ.ಕೆ.ಭೀಮಸೇನರಾವ್ ಅವರ ಪುತ್ರ ಡಿ.ಬಿ.ರಾಘವೇಂದ್ರರಾವ್, ಹೈದರಾಬಾದಿನ ಕರ್ನಾಟಕ ಸಾಹಿತ್ಯ ಮಂದಿರದ ಉಪಾಧ್ಯಕ್ಷರಾದ ರಾಘವೇಂದ್ರ ದೇಸಾಯಿ ಸೇರಿದಂತೆ ಹೈದರಾಬಾದಿನ ಅನೇಕ ಕನ್ನಡಾಭಿಮಾನಿಗಳು, ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ವಾರ್ತಾ ಭಾರತಿ 19 Dec 2025 8:08 pm

ಬೀದರ್ | ಗಡಿ ಭಾಗದ ಸಂಘ ಸಂಸ್ಥೆಗಳಿಗೆ ಅನುದಾನ ನೀಡಲು ಸರಕಾರಕ್ಕೆ 100 ಕೋಟಿ ರೂ. ಪ್ರಸ್ತಾವನೆ ಸಲ್ಲಿಕೆ : ಡಾ.ಸಂಜುಕುಮಾರ್ ಅತಿವಾಳೆ

ಬೀದರ್ : ಗಡಿ ಭಾಗದ ನೋಂದಾಯಿತ ಸಂಘ ಸಂಸ್ಥೆಗಳಿಗೆ ಧನ ಸಹಾಯ ನೀಡಲು ರಾಜ್ಯ ಸರಕಾರಕ್ಕೆ 100 ಕೋಟಿ ರೂ. ಪ್ರಸ್ತಾವನೆ ಸಲ್ಲಿಸಿದ್ದೇವೆ. ಧನ ಸಹಾಯವನ್ನು ನೀಡುವ ವಿಶ್ವಾಸವಿದೆ ಎಂದು ಕರ್ನಾಟಕ ಪ್ರದೇಶ ಗಡಿ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಡಾ.ಸಂಜುಕುಮಾರ್ ಅತಿವಾಳೆ ಅವರು ಹೇಳಿದರು. ನಗರದ ಸವಿತಾ ಸಮಾಜ ಮಹಾರ್ಷಿ ಸಾಂಸ್ಕೃತಿಕ ಸಭಾಂಗಣದಲ್ಲಿ ಗುರುವಾರ ಬೆಂಗಳೂರಿನ ಕರ್ನಾಟಕ ಸರಕಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೀದರ್ ನ ದಿವ್ಯದರ್ಶನ ಸಾಂಸ್ಕೃತಿಕ ರೂರಲ್ ಮತ್ತು ಅರ್ಬನ್ ಡೆವಲಪ್ಮೆಂಟ್ ಇವರ ಸಂಯುಕ್ತಾಶ್ರಯದಲ್ಲಿ 2023-2024ನೇ ಸಾಲಿನ ವಿಶೇಷ ಘಟಕದ ಯೋಜನೆ ಅಡಿಯಲ್ಲಿ ಹಮ್ಮಿಕೊಂಡಿರುವ ಗ್ರಾಮೀಣ ಸಾಂಸ್ಕೃತಿಕ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಕರ್ನಾಟಕ ಪ್ರದೇಶ ಗಡಿ ಅಭಿವೃದ್ಧಿ ಪ್ರಾಧಿಕಾರವು ಗಡಿ ಭಾಗದಲ್ಲಿ ಬರುವ ಶಾಲಾ, ಕಾಲೇಜು ಸಾಂಸ್ಕೃತಿಕ ಭವನಗಳ ನಿರ್ಮಾಣಕ್ಕೆ ಸಹಾಯಧನವನ್ನು ನೀಡುತ್ತಿದೆ. ಅತಿ ಹೆಚ್ಚು ಸಹಾಯಧನವನ್ನು ಬೀದರ್ ಜಿಲ್ಲೆ ಪಡೆದುಕೊಂಡಿದೆ. ಕಳೆದ ಮೂರು ವರ್ಷಗಳಿಂದ ಗಡಿ ಭಾಗದ ನೋಂದಾಯಿತ ಗಡಿ ಭಾಗದಲ್ಲಿ ಸಾಂಸ್ಕೃತಿಕ ಸಾಹಿತ್ಯ ಕಾರ್ಯಕ್ರಮವನ್ನು ಮಾಡಲು ಧನ ಸಹಾಯ ನೀಡುವುದು ನಿಲ್ಲಿಸಿದೆ. ಇದರ ಬಗ್ಗೆ ವಿಶ್ವ ಕನ್ನಡಿಗರ ಸಂಸ್ಥೆಯ ಅಧ್ಯಕ್ಷ, ಸಾಹಿತಿ ಡಾ.ಸುಬ್ಬಣ್ಣ ಕರಕನಳ್ಳಿ ಅವರು ಗಡಿ ಕನ್ನಡಿಗರ ಉತ್ಸವವನ್ನು ರಾಜ್ಯಮಟ್ಟದ ಕಾರ್ಯಕ್ರಮ ಮಾಡಿ ಗಮನ ಸೆಳೆದಿದ್ದಾರೆ. ಗಡಿ ಭಾಗದ ನೋಂದಾಯಿತ ಸಂಘ ಸಂಸ್ಥೆಗಳಿಗೆ ಧನ ಸಹಾಯ ನೀಡಲು ಒತ್ತಾಯ ಮಾಡಿದ್ದಾರೆ. ರಾಜ್ಯ ಸರ್ಕಾರಕ್ಕೆ 100 ಕೋಟಿ ರೂ. ಪ್ರಸ್ತಾವನೆ ಸಲ್ಲಿಸಿದ್ದೇವೆ ಎಂದರು. ಹಿರಿಯ ಸಾಹಿತಿ ಡಾ. ಕಾಶಿನಾಥ್ ಚೆಲ್ವಾ, ಡಾ. ಶೇಷರಾವ್ ಬೆಳಕುಣಿ, ಶಂಭುಲಿಂಗ್ ವಾಲ್ದೊಡ್ಡಿ ಅವರ ಮುಖ್ಯ ಅತಿಥಿಗಳಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ವಿಶ್ವ ಕನ್ನಡಿಗರ ಸಂಸ್ಥೆಯ ಅಧ್ಯಕ್ಷ, ಸಾಹಿತಿ ಡಾ.ಸುಬ್ಬಣ್ಣ ಕರಕನಳ್ಳಿ, ದಿಲಿಪಕುಮಾರ ಭೋಸ್ಲೆ, ಶೇಷಪ್ಪ ಚಿಟ್ಟಾ, ಚಿನ್ನಮ್ಮಾ ಲಾಧ, ನಾಗಮ್ಮ, ರಾಜಕುಮಾರ್ ಕರುಣಸಾಗರ್, ರಮೇಶ್ ಬಾಬು ಅಮಲಾಪೂರ್, ತಾತರಾವ್ ಡಿಗ್ಗಿ, ರಮೇಶ್ ದೊಡ್ಡಿ, ಬಕ್ಕಪ್ಪ ದಂಡಿನ್, ಯಲ್ಲಾಲಿಂಗ್ ಸಿದ್ದಲಿಂಗ್ ಹಾಗೂ ದಯಾನಂದ್ ನವಲೆ ಸೇರಿದಂತೆ ಅನೇಕರು ಇದ್ದರು.  

ವಾರ್ತಾ ಭಾರತಿ 19 Dec 2025 8:03 pm

ದ.ಕ. ಜಿಲ್ಲಾ ಮಟ್ಟದ ಸಿರಿಧಾನ್ಯ ಮತ್ತು ಮರೆಯಲ್ಪಟ್ಟ ಖಾದ್ಯಗಳ ಪಾಕ ಸ್ಪರ್ಧೆ

ಮಂಗಳೂರು: ಅಂತಾರಾಷ್ಟ್ರೀಯ ಮಟ್ಟದ ವಾಣಿಜ್ಯ ಮೇಳದ ಅಂಗವಾಗಿ ಜಿಲ್ಲೆಗಳಲ್ಲಿ ಪೂರ್ವಭಾವಿಯಾಗಿ ಸಿರಿಧಾನ್ಯಗಳ ಕುರಿತು ಅರಿವು ಮೂಡಿಸುವ ಕಾರ್ಯಕ್ರಮ ನಡೆಯಲಿದೆ. ಈ ನಿಟ್ಟಿನಲ್ಲಿ ಜಿಲ್ಲಾ ಮಟ್ಟದ ಸಿರಿಧಾನ್ಯ ಮತ್ತು ಮರೆತು ಹೋದ ಖಾದ್ಯಗಳ ಪಾಕ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳು ಹಾಗೂ ಕೃಷಿ ಇಲಾಖಾ ಸಿಬ್ಬಂದಿ ಹೊರತುಪಡಿಸಿ ಜಿಲ್ಲೆಯ ಎಲ್ಲಾ ಸಾರ್ವಜನಿಕರು ಭಾಗವಹಿಸಬಹುದು. ಸಿರಿಧಾನ್ಯಗಳಾದ ಜೋಳ, ರಾಗಿ, ನವಣೆ, ಸಜ್ಜೆ, ಹಾರಕ, ಬರಗು ಮತ್ತು ಸಾಮೆ ಬೆಳೆಗಳಿಂದ ಸಿಹಿ ಅಥವಾ ಖಾರ ಖಾದ್ಯಗಳನ್ನು ತಯಾರಿಸಬಹುದು. ಮರೆತುಹೋದ ಖಾದ್ಯಗಳನ್ನು ಸಿರಿಧಾನ್ಯ ಹೊರತುಪಡಿಸಿ ಇತರೆ ದೇಸಿ ತಳಿಗಳಿಂದ ಬರುವ ಆಹಾರ, ಎಣ್ಣೆ ಕಾಳುಗಳು, ತರಕಾರಿ ಮತ್ತು ಹಣ್ಣುಗಳಿಂದ ತಯಾರಿಸಬಹುದಾಗಿದೆ. ಸಸ್ಯಾಹಾರ ತಿನಿಸುಗಳಿಗೆ ಮಾತ್ರ ಅವಕಾಶವಿದ್ದು, ಪ್ರತಿ ಸ್ಪರ್ಧಿಯು ಒಂದೇ ತಿನಿಸು (ಅಡುಗೆ) ಸಿರಿಧಾನ್ಯದ ಸಿಹಿ ಅಥವಾ ಖಾರಾ ಅಥವಾ ಮರೆತು ಹೋದ ಖಾದ್ಯವನ್ನು ತಯಾರಿಸಬಹುದು. ಅಭ್ಯರ್ಥಿಗಳು ಭಾವಚಿತ್ರದೊಂದಿಗೆ ಹೆಸರು, ವಿಳಾಸ ಮತ್ತು ತಯಾರಿಸುವ ಖಾದ್ಯ ಮತ್ತು ಅದಕ್ಕೆ ಬೇಕಾಗುವ ಸಾಮಗ್ರಿಗಳು, ತಯಾರಿಸಲು ಬೇಕಾಗುವ ಸಮಯ ಹಾಗೂ ತಯಾರಿಸುವ ವಿಧಾನದ ಸಂಕ್ಷಿಪ್ತ ಮಾಹಿತಿಯೊಂದಿಗೆ 2026ರ ಜ.3ರೊಳಗೆ ಕಚೇರಿಯ ಇಮೇಲ್ jdagrimng@gmail.comಗೆ ಅಥವಾ ವಾಟ್ಸ್‌ಆ್ಯಪ್ ಮೂಲಕ ಅರ್ಜಿ ಸಲ್ಲಿಸಬಹುದು ಅಥವಾ ಖುದ್ದಾಗಿ/ ಪೋಸ್ಟ್ ಮೂಲಕ ಜಂಟಿ ಕೃಷಿ ನಿರ್ದೇಶಕರ ಕಚೇರಿ, ಲೋಕೋಪಯೋಗಿ ಕಟ್ಟಡ ಸಂಕೀರ್ಣ, ನೆಹರೂ ಮೈದಾನ ರಸ್ತೆ, ದ.ಕ. ಜಿಲ್ಲೆ, ಮಂಗಳೂರು-575001 ವಿಳಾಸಕ್ಕೆ ಕಳುಹಿಸಬಹುದು. ಅರ್ಜಿಯಲ್ಲಿ ನಮೂದಿಸಿದ ತಿನಿಸನ್ನು ಮನೆಯಲ್ಲಿಯೇ ತಯಾರಿಸಿ ತಂದು ಸ್ಪರ್ಧೆಯ ದಿನ (ಜ.7)ದಂದು ಬೆಳಗ್ಗೆ 10ಕ್ಕೆ ಜಂಟಿ ಕೃಷಿ ನಿರ್ದೇಶಕರ ಕಚೇರಿಯಲ್ಲಿ ಪ್ರದರ್ಶಿಸಲು ಅವಕಾಶವಿರುತ್ತದೆ. ಸಿರಿಧಾನ್ಯ ಸಿಹಿ ಸಿರಿಧಾನ್ಯ ಖಾರ ಹಾಗೂ ಮರೆತುಹೋದ ಖಾದ್ಯಗಳ ಮೂರು ವಿಭಾಗಗಳಿದ್ದು, ವಿಜೇತರಿಗೆ ಪ್ರಥಮ ಬಹುಮಾನ 5,000 ರೂ, ದ್ವಿತೀಯ 3,000 ರೂ.ಹಾಗೂ ತೃತೀಯ 2,000 ರೂ.ನೀಡಲಾಗುತ್ತದೆ. ಹೆಚ್ಚಿನ ಮಾಹಿತಿಗೆ ಹಾಗೂ ಅರ್ಜಿ ನಮೂನೆ ಪಡೆಯಲು ಜಂಟಿ ಕೃಷಿ ನಿರ್ದೇಶಕರ ಕಚೇರಿ (ದೂ.ಸಂ: 0824-2423604 ಅಥವಾ ವಾಟ್ಸ್‌ಆಪ್ 9972718512/8792046592ನ್ನು ಸಂಪರ್ಕಿಸಬಹುದು ಎಂದು ಜಂಟಿ ಕೃಷಿ ನಿರ್ದೇಶಕರ ಪ್ರಕಟನೆ ತಿಳಿಸಿದೆ.

ವಾರ್ತಾ ಭಾರತಿ 19 Dec 2025 8:01 pm

ಬ್ಯಾರೀಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ರಾಷ್ಟ್ರೀಯ ಇಂಧನ ಸಂರಕ್ಷಣಾ ಸಪ್ತಾಹ ಆರಂಭ

ಮಂಗಳೂರು: ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ಲಿಮಿಟೆಡ್ (ಕೆಆರ್‌ಇಡಿಎಲ್) ಸಹಯೋಗದೊಂದಿಗೆ ಬ್ಯಾರೀಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಬಿಐಟಿ)ಯಲ್ಲಿ ʼರಾಷ್ಟ್ರೀಯ ಇಂಧನ ಸಂರಕ್ಷಣಾ ಸಪ್ತಾಹʼ ಡಿಸೆಂಬರ್ 15ರಿಂದ ವಿವಿಧ ಜಾಗೃತಿ ಹಾಗೂ ವಿದ್ಯಾರ್ಥಿ ಕೇಂದ್ರಿತ ಕಾರ್ಯಕ್ರಮಗಳೊಂದಿಗೆ ಯಶಸ್ವಿಯಾಗಿ ಆರಂಭವಾಯಿತು. ಇಂಧನ ಜಾಗೃತಿ ಫಲಕ ಅಭಿಯಾನ ಹಾಗೂ ಭಿತ್ತಿಪತ್ರ ತಯಾರಿಕಾ ಸ್ಪರ್ಧೆಯೊಂದಿಗೆ ಸಪ್ತಾಹಕ್ಕೆ ಅಧಿಕೃತವಾಗಿ ಚಾಲನೆ ನೀಡಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಬ್ಯಾರೀಸ್ ಶಿಕ್ಷಣ ಸಂಸ್ಥೆಯ ನಿರ್ದೇಶಕ ಡಾ.ಎಸ್.ಐ. ಮಂಝೂರ್ ಬಾಷಾ, ಇಂಧನ ದಕ್ಷ ತಂತ್ರಜ್ಞಾನಗಳನ್ನು ಉತ್ತೇಜಿಸುವಲ್ಲಿ ಮತ್ತು ಯುವ ಮನಸ್ಸುಗಳಲ್ಲಿ ಪರಿಸರ ಜಾಗೃತಿ ಮೂಡಿಸುವಲ್ಲಿ ಶಿಕ್ಷಣ ಸಂಸ್ಥೆಗಳ ಪಾತ್ರಗಳ ಬಗ್ಗೆ ಹೇಳಿದರು. ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯೂನಿಕೇಷನ್ ಎಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಡಾ. ಅಬ್ದುಲ್ಲಾ ಗುಬ್ಬಿ ಕಾರ್ಯಕ್ರಮವನ್ನು ಸಂಯೋಜಿಸಿದರು. ಕಾರ್ಯಕ್ರಮದಲ್ಲಿ ಡಾ.ಅಬ್ದುಲ್ಲಾ ಗುಬ್ಬಿ ಸ್ವಾಗತಿಸಿದರು. ಸಿವಿಲ್ ಇಂಜಿನಿಯರಿಂಗ್ ವಿಭಾಗದ ಪ್ರೊ.ಝಝೀರ್ ಅಹ್ಮದ್ ನಿರೂಪಿಸಿದರು. ಸಿಎಸ್‌ಇ ವಿಭಾಗದ ಪ್ರೊ.ಸಿನಾನ್ ವಂದಿಸಿದರು. ಆಚರಣೆಯ ಭಾಗವಾಗಿ ಡಿಸೆಂಬರ್ 18ರಂದು ನವೀಕರಿಸಬಹುದಾದ ಇಂಧನ ಮೂಲಗಳ ಬಗ್ಗೆ ಪರಿಣತರಾದ ಡಾ.ಕಮಲಕಣ್ಣನ್ ಸಿ ಅವರು, ಸುಸ್ಥಿರ ಇಂಧನ ವ್ಯವಸ್ಥೆಗಳಲ್ಲಿ ಉದಯೋನ್ಮುಖ ಪ್ರವೃತ್ತಿಗಳು, ಸವಾಲುಗಳು ಮತ್ತು ಅವಕಾಶಗಳ ಕುರಿತು ಮಾಹಿತಿಯನ್ನು ಹಂಚಿಕೊಂಡರು. ಡಿಸೆಂಬರ್ 18ರಂದು ಇಂಧನ ಸಂರಕ್ಷಣೆ ಉದ್ದೇಶದಿಂದ ವಾಕಥಾನ್ ಅನ್ನು ಆಯೋಜಿಸಲಾಯಿತು. ವಾಕಥಾನ್ ನಲ್ಲಿ 800ಕ್ಕೂ ಹೆಚ್ಚು ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿದ್ದರು. ವಿದ್ಯಾರ್ಥಿಗಳು ಇಂಧನ ಸಂರಕ್ಷಣೆ ಹಾಗೂ ಪರಿಸರ ಜವಾಬ್ದಾರಿಯ ಮಹತ್ವದ ಬಗ್ಗೆ ಸಾರ್ವಜನಿಕರಿಗೆ ಪರಿಣಾಮಕಾರಿಯಾಗಿ ಸಂದೇಶವನ್ನು ನೀಡಿದರು.   ರಾಷ್ಟ್ರೀಯ ಇಂಧನ ಸಂರಕ್ಷಣಾ ಸಪ್ತಾಹದ ಚಟುವಟಿಕೆಗಳು ಈ ಕೆಳಗಿನಂತಿವೆ: ಇಂಧನ ಸಂರಕ್ಷಣೆ ಮತ್ತು ಸುಸ್ಥಿರತೆಯ ಕುರಿತು ಭಾಷಣ ಸ್ಪರ್ಧೆ ಇಂಧನ ಸಂರಕ್ಷಣೆ ಮತ್ತು ನವೀಕರಿಸಬಹುದಾದ ಇಂಧನದ ಕುರಿತು ಚರ್ಚೆ ಇಂಧನ ನವೋತ್ಪಾದನಾ ಯೋಜನಾ ಪ್ರದರ್ಶನ ಪರಿಸರ ನವೋತ್ಪಾದನಾ ಸವಾಲು: ತ್ಯಾಜ್ಯದಿಂದ ಉತ್ತಮ ಫಲಿತಾಂಶ ಗ್ರೀನ್ ವಿಷನ್ ಸ್ಕೆಚಿಂಗ್ ಅಭಿಯಾನ ಒಂದು ನಿಮಿಷದ ಇಂಧನ ಜಾಗೃತಿ ವೀಡಿಯೊ ಅಭಿಯಾನ ಇಂಧನ ಸಂರಕ್ಷಣೆ ಕುರಿತು ಡಿಜಿಟಲ್ ಪೋಸ್ಟರ್ ವಿನ್ಯಾಸ ಸ್ಪರ್ಧೆ ಇಂಧನ ಜಾಗೃತಿ ಫಲಕ ಅಭಿಯಾನ                          

ವಾರ್ತಾ ಭಾರತಿ 19 Dec 2025 8:01 pm

ಆರೋಗ್ಯ ಸೇತು-ಸಂಚಾರಿ ಆರೋಗ್ಯ ಘಟಕಕ್ಕೆ ಸಿಎಂ ಚಾಲನೆ

ಪ್ರತಿಯೊಬ್ಬರಿಗೂ ಗುಣಮಟ್ಟದ ಆರೋಗ್ಯ ಸೇವೆ ಸರಕಾರದ ಗುರಿ : ಸಿದ್ದರಾಮಯ್ಯ

ವಾರ್ತಾ ಭಾರತಿ 19 Dec 2025 7:59 pm

ಅಂಡರ್ 19 ಏಷ್ಯಾ ಕಪ್ ಫೈನಲ್ ನಲ್ಲೂ ಇಂಡೋ- ಪಾಕ್ ಸೆಣೆಸಾಟ! ಭಾರತದ ಪಾಲಿಗೆ ಮತ್ತೊಂದು ಸೂಪರ್ ಸಂಡೇ ಆಗುತ್ತಾ?

Indo Pak Cricket Rivalry- ಕೇವಲ 2 ತಿಂಗಳ ಹಿಂದಷ್ಟೇ ಏಷ್ಯಾ ಕಪ್ ಫೈನಲ್ ನಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಿದ್ದವು. ಆ ಸೆಣೆಸಾಟದಲ್ಲಿ ಸೂರ್ಯಕುಮಾರ್ ಯಾದವ್ ನೇತೃದ ಭಾರತ ತಂಡ ಸೆಪ್ಟೆಂಬರ್ 28ರ ಭಾನುವಾರದಂದು ನಡೆದ ಫೈನಲ್ ನಲ್ಲಿ ಜಯಭೇರಿ ಬಾರಿಸಿತ್ತು. ಇದೀಗ ಸೆಮಿಫೈನಲ್ ನಲ್ಲಿ ಶ್ರೀಲಂಕಾವನ್ನು ಸೋಲಿಸಿರುವ ಆಯುಷ್ ಮ್ಹಾತ್ರೆ ನೇತೃತ್ವದ ಭಾರತ ತಂಡ ಅಂಡರ್ 19 ಏಷ್ಯಾ ಕಪ್ಟೂ ಫೈನಲ್ ತಲುಪಿದೆ. ವಿಶೇಷವೆಂದರೆ ಮತ್ತೊಂದು ಸೆಮಿಫೈನಲ್ ನಲ್ಲಿ ಬಾಂಗ್ಲಾದೇಶವನ್ನು ಸೋಲಿಸಿರುವ ಪಾಕಿಸ್ತಾನ ತಂಡ ಫೈನಲ್ ಗೆ ನೆಗೆದಿದೆ. ಡಿಸೆಂಬರ್ 21ರ ಭಾನುವಾರ ಫೈನಲ್ ಪಂದ್ಯ ನಡೆಯಲಿದೆ.

ವಿಜಯ ಕರ್ನಾಟಕ 19 Dec 2025 7:57 pm

ಮಂಗಳೂರು ತಾಲೂಕು ಗ್ಯಾರಂಟಿ ಸಮಿತಿಯಿಂದ ಪ್ರಗತಿ ಪರಿಶೀಲನಾ ಸಭೆ

ಮಂಗಳೂರು, ಡಿ.19: ಮಂಗಳೂರು ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಅಧ್ಯಕ್ಷ ಸುರೇಂದ್ರ ಕಂಬಳಿಯ ಅಧ್ಯಕ್ಷತೆಯಲ್ಲಿ ಮಂಗಳೂರು ತಾಪಂ ಸಭಾಂಗಣದಲ್ಲಿ ಶುಕ್ರವಾರ ಪ್ರಗತಿ ಪರಿಶೀಲನೆ ಸಭೆ ನಡೆಯಿತು. ಡಿ.23ರಂದು ನಗರದ ಪುರಭವನದಲ್ಲಿ ನಡೆಯಲಿರುವ ಜಿಲ್ಲಾ ಮಟ್ಟದ ಗ್ಯಾರಂಟಿ ಸಮಾವೇಶದ ತಯಾರಿಯ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು. ಸಮಾವೇಶಕ್ಕೆ ಬರುವ ಫಲಾನುಭವಿಗಳನ್ನು ಕರೆತರಲು ನಗರ ಹಾಗೂ ಗ್ರಾಮಾಂ ತರ ವ್ಯಾಪ್ತಿಯಲ್ಲಿ ಕೆಎಸ್ಸಾರ್ಟಿಸಿ ಬಸ್‌ಗಳ ವ್ಯವಸ್ಥೆ ಮಾಡಿಸುವಂತೆ ಸದಸ್ಯರು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು. ಯುವನಿಧಿಗೆ ನೋಂದಣಿ ಮಾಡಿಕೊಳ್ಳುವ ಉದ್ದೇಶದಿಂದ ಸಮಾವೇಶದಲ್ಲಿ ಮಳಿಗೆಗಳನ್ನು ಹಾಕುವ ಬಗ್ಗೆ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು. ಮಂಗಳೂರು ತಾಪಂ ಇಒ ಮಹೇಶ್ ಕುಮಾರ್ ಹೊಳ್ಳ ಸ್ವಾಗತಿಸಿದರು.ಜಿಲ್ಲಾ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಸದಸ್ಯ ಅಲ್‌ಸ್ಟನ್ ಡಿಕುನ್ಹ, ತಾಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಸದಸ್ಯರಾದ ಪ್ರಶಾಂತ್ ಎಸ್., ನವಾಝ್, ಶೈಲಾ ನೀತಾ ಡಿಸೋಜ, ರಿತೇಶ್ ಅಂಚನ್, ವಿದ್ಯಾ, ಶ್ರೀಧರ ಪಂಜ, ಮುಹಮ್ಮದ್ ಮುಸ್ತಫ, ತಾಪಂ ಸಹಾಯಕ ಲೆಕ್ಕಧಿಕಾರಿ ಪರಮೇಶ್ವರ, ತಾಪಂ ವ್ಯವಸ್ಥಾಪಕಿ ಸುವರ್ಣಾ ಹೆಗಡೆ, ವಿಷಯ ನಿರ್ವಾಹಕ ಹಾರಿಸ್, ತಾಲೂಕು ಐಇಸಿ ಸಂಯೋಜಕಿ ನಿಶ್ಮಿತ ಬಿ. ಉಪಸ್ಥಿತರಿದ್ದರು.

ವಾರ್ತಾ ಭಾರತಿ 19 Dec 2025 7:54 pm

Bengaluru | ಪಾನಿಪುರಿ ನೀಡಲು ನಿರಾಕರಿಸಿದ್ದಕ್ಕೆ ವ್ಯಾಪಾರಿಗೆ ಚಾಕು ಇರಿತ

ಬೆಂಗಳೂರು : ಇಲ್ಲಿನ ಬ್ಯಾಟರಾಯನಪುರದಲ್ಲಿ ಮದ್ಯದ ಅಮಲಿನಲ್ಲಿದ್ದ ವ್ಯಕ್ತಿಯೊಬ್ಬ, ಉಚಿತವಾಗಿ ಪಾನಿಪುರಿ ನೀಡಲು ನಿರಾಕರಿಸಿದ್ದಕ್ಕೆ ರಸ್ತೆಬದಿ ವ್ಯಾಪಾರಿಯೊಬ್ಬನಿಗೆ ಚಾಕು ಇರಿದಿದ್ದಾನೆ. ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಪೊಲೀಸರ ಮಾಹಿತಿಯ ಪ್ರಕಾರ ಬ್ಯಾಟರಾಯನಪುರ ಮುಖ್ಯ ರಸ್ತೆಯಲ್ಲಿರುವ ಪಾನಿಪುರಿ ಅಂಗಡಿಯಲ್ಲಿ ಗುರುವಾರ ರಾತ್ರಿ ಸುಮಾರು 10.30ರ ವೇಳೆಗೆ ಘಟನೆ ನಡೆದಿದೆ. ಮದ್ಯಪಾನ ಮಾಡಿದ ಸ್ಥಿತಿಯಲ್ಲಿದ್ದ ವ್ಯಕ್ತಿಯೋರ್ವ ಅಂಗಡಿಗೆ ಬಂದಿದ್ದು, ಉಚಿತವಾಗಿ ತನಗೆ ಪಾನಿಪುರಿ ನೀಡುವಂತೆ ಬೇಡಿಕೆ ಇಟ್ಟಿದ್ದಾನೆ. ಆದರೆ ತನ್ನ ದೈನಂದಿನ ಜೀವನಕ್ಕೆ ಇದೇ ವ್ಯಾಪಾರ ನಂಬಿಕೊಂಡಿದ್ದ ವ್ಯಾಪಾರಿ, ಉಚಿತವಾಗಿ ನೀಡಲು ಸಾಧ್ಯವಿಲ್ಲ ಎಂದಿದ್ದಾರೆ ಎನ್ನಲಾಗಿದೆ. ಇದೇ ವಿಚಾರಕ್ಕೆ ವಾಗ್ವಾದ ಆರಂಭವಾಗಿದ್ದು, ಈ ವೇಳೆ ಏಕಾಏಕಿ ಆರೋಪಿ ಚಾಕು ತೆಗೆದು ವ್ಯಾಪಾರಿಯ ಹೊಟ್ಟೆಯ ಭಾಗಕ್ಕೆ ಚುಚ್ಚಿ ಪರಾರಿಯಾಗಿದ್ದಾನೆ. ಅಂಗಡಿಯ ಬಳಿಯೇ ವ್ಯಾಪಾರಿ ಬಿದ್ದಿದ್ದನ್ನು ಕಂಡ ಸ್ಥಳೀಯರು ಕೂಡಲೇ ಆತನನ್ನು ಆಸ್ಪತ್ರೆಗೆ ಸಾಗಿಸಿದ್ದು, ಗಂಭೀರ ಗಾಯದ ಹೊರತಾಗಿಯೂ ಆತನ ಆರೋಗ್ಯ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ವಾರ್ತಾ ಭಾರತಿ 19 Dec 2025 7:51 pm

ರಾಯಚೂರು | ಬಾಲ್ಯ ವಿವಾಹ ಪದ್ಧತಿ ನಿರ್ಮೂಲನೆ ಕಾರ್ಯಕ್ಕೆ ಸರ್ವರೂ ಕೈಜೋಡಿಸಬೇಕು : ವೆಂಕಟೇಶ್

ರಾಯಚೂರು: ಸಾಮಾಜಿಕ ಪಿಡುಗಾಗಿ‌ ಪರಿಣಮಿಸಿದ ಬಾಲ್ಯ ವಿವಾಹದಿಂದಾಗಿ ಮಕ್ಕಳ ಭವಿಷ್ಯ ಹಾಳಾಗುತ್ತಿದೆ. ಸರ್ಕಾರದ ಜೊತೆ ಎಲ್ಲರೂ ಸೇರಿ ಜಾಗೃತಿ ಮೂಡಿಸಿದಾಗ ಬಾಲ್ಯ ವಿವಾಹ ಪದ್ಧತಿಯನ್ನು ನಿರ್ಮೂಲನೆ ಮಾಡಲು ಸಾಧ್ಯವಾಗುತ್ತದೆ ಎಂದು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರಾದ ವೆಂಕಟೇಶ್ ಅವರು ತಿಳಿಸಿದರು. ಡಿ.19ರ ಶುಕ್ರವಾರದಂದು ನಗರದ ಮಾಣಿಕ್ ಪ್ರಭು ಅಂಧ ಮಕ್ಕಳ ಶಾಲೆಯಲ್ಲಿ ಎಂ.ಆರ್.ಡಬ್ಲ್ಯೂ ಮತ್ತು ವಿ.ಆರ್.ಡಬ್ಲ್ಯೂಗಳಿಗೆ ಮಕ್ಕಳ ರಕ್ಷಣಾ ಕಾನೂನುಗಳ ಕುರಿತು ಹಮ್ಮಿಕೊಂಡಿದ್ದ ತರಬೇತಿ ಕಾರ್ಯಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಬಾಲ್ಯ ವಿವಾಹದಿಂದ ಮಕ್ಕಳ ಶಿಕ್ಷಣ ಮೊಟಕಾಗುತ್ತದಲ್ಲದೆ ಅವರ ಭವಿಷ್ಯ ನಾಶವಾಗಲಿದೆ. ಮಕ್ಕಳ ಮೇಲೆ ಅನೇಕ ರೀತಿಯಲ್ಲಿ ದುಷ್ಪರಿಣಾಮ ಉಂಟು ಮಾಡುವ ಈ ಕೆಟ್ಟ ಪದ್ಧತಿ ಬಗ್ಗೆ ಜಾಗೃತಿ ಮೂಡಿಸುವುದು ಅಗತ್ಯವಾಗಿದೆ ಎಂದರು. ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕುಮಾರಸ್ವಾಮಿ ಅವರು ಮಾತನಾಡಿ, ಮಕ್ಕಳಿಗೆ ಸುರಕ್ಷಿತ ವಾತಾವರಣ ಕಲ್ಪಿಸುವುದು ಇಂದು ಅಗತ್ಯವಾಗಿದೆ. ಎಲ್ಲಾ ಇಲಾಖೆಗಳ ಎಲ್ಲಾ ಹಂತದ ಅಧಿಕಾರಿಗಳು ಹಾಗೂ ಸಾರ್ವಜನಿಕರು ಈ ಬಗ್ಗೆ ಅರಿಯಬೇಕು ಎಂದರು. ಜಿಲ್ಲಾ ಮಕ್ಕಳ ರಕ್ಷಣಾ ಅಧಿಕಾರಿ ಅಮರೇಶ್ ಹಾವಿನ, ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷ ಸುದರ್ಶನ್, ಕ್ಷೇತ್ರ ಶಿಕ್ಷಣಾಧಿಕಾರಿ ಈರಣ್ಣ ಕೊಸಗಿ ಅವರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ಸಂಪನ್ಮೂಲ ವ್ಯಕ್ತಿ ರಾಜೇಂದ್ರ ಅವರು ಮಕ್ಕಳ ರಕ್ಷಣಾ ಕಾನೂನುಗಳ ಕುರಿತು ಉಪನ್ಯಾಸ ನೀಡಿದರು. ಈ ಸಂದರ್ಭದಲ್ಲಿ ಜಿಲ್ಲಾ ವಿಕಲಚೇತನರ ಕಲ್ಯಾಣ ಇಲಾಖೆಯ ಅಧಿಕಾರಿ ಶ್ರೀದೇವಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ಶರಣಮ್ಮ ಕಾರನೂರು, ಮಾಣಿಕ ಪ್ರಭು ಅಂಧಮಕ್ಕಳ ಶಾಲೆಯ ಮುಖ್ಯ ಗುರುಗಳಾದ ಆರ್.ಎಂ.ಯತ್ನಳ್ಳಿ, ರಕ್ಷಣಾಧಿಕಾರಿ ಹನುಮೇಶ, ಮಕ್ಕಳ ಸಹಾಯವಾಣಿ ಸಂಯೋಜಕ ಮೋಹನ್ ಕುಮಾರ್, ರಮೇಶ್ ಅವರು ಇದ್ದರು. ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿ ತಿಕ್ಕಯ್ಯ ಅವರು ನಿರೂಪಿಸಿದರು. ರಕ್ಷಣಾಧಿಕಾರಿ ಅಸಾಂಸ್ಥಿಕ ಕಿರಿಲಿಂಗಪ್ಪ ಅವರು ಸ್ವಾಗತಿಸಿದರು. ಕಾನೂನು ಪರಿವೀಕ್ಷಣಾಧಿಕಾರಿ ಶಿವರಾಜ್ ಪಾಟೀಲ್ ಅವರು ವಂದಿಸಿದರು ಹಾಗೂ ಇತರ ಸಿಬ್ಬಂದಿ ಹಾಜರಿದ್ದರು.

ವಾರ್ತಾ ಭಾರತಿ 19 Dec 2025 7:49 pm

ಇದೇ ಕಾರಣಕ್ಕೆ ಬಾಸ್‌ಗಳು ಇಂಟರ್ನ್‌ಗಳ ಬಳಿ ಫ್ರೆಂಡ್ಲಿಯಾಗಿರೊಲ್ಲ: ರೆಡ್ಡಿಟ್‌ನಲ್ಲಿ ಪೋಸ್ಟ್ ವೈರಲ್‌

ಹೊಸದಾಗಿ ವೃತ್ತಿ ಜೀವನ ಆರಂಭಿಸುವ ಉದ್ಯೋಗಿಗಳು ಮೊದಲಿಗೆ ಹುಮ್ಮಸ್ಸಿನಿಂದ ಕೆಲಸ ಆರಂಭಿಸುತ್ತಾರೆ. ಅವರನ್ನು ಪರ್ಮನೆಂಟ್‌ ಮಾಡಿಕೊಂಡ ನಂತರ ಸಂಬಳ ಸಿಕ್ಕಾಗ ಬದಲಾಗಿಬಿಡುತ್ತಾರೆ. ಇಂಟರ್ನ್‌ಗಳಾಗಿದ್ದಾಗ ಹೆಚ್ಚುವರಿ ಕೆಲಸ, ರಜೆ ಇಲ್ಲದೆ ಶ್ರಮಟ್ಟು ಕೆಲಸ ಮಾಡುತ್ತಾರೆ. ಆದರೆ, ಕೈಗೆ ಸಂಬಳ ಬಂದರೆ, ಅವರ ನಡವಳಿಕೆಯೇ ಬೇರೆಯಾಗುತ್ತದೆ. ಹೀಗಾಗಿ ಇಂಟರ್ನ್‌ಗಳ ಜೊತೆ ಸ್ನೇಹಿತರಾಗಿರುವುದು ತಪ್ಪು ಎನ್ನುವುದನ್ನ ಕಲಿತಿದ್ದೇನೆ ಎಂದು ವ್ಯಕ್ತಿಯೊಬ್ಬರು ರೆಡ್ಡಿಟ್‌ನಲ್ಲಿ ಪೋಸ್ಟ್‌ ಹಂಚಿಕೊಂಡಿದ್ದಾರೆ.

ವಿಜಯ ಕರ್ನಾಟಕ 19 Dec 2025 7:48 pm

ರಾಯಚೂರು | ನರೇಗಾ ಯೋಜನೆ ಬದಲಾವಣೆ ವಿರೋಧಿಸಿ ಡಿ.22ರಂದು ಸಂಸದರ ಕಚೇರಿ ಮುಂದೆ ಪ್ರತಿಭಟನೆ : ಗುರುರಾಜ

ರಾಯಚೂರು: ಮಹಾತ್ಮಗಾಂಧಿ ಉದ್ಯೋಗ ಖಾತ್ರಿಯ ಯೋಜನೆಯನ್ನು ವಿಬಿ-ಜಿ ರಾಮ್ ಜಿ ಯೋಜನೆ ಎಂದು ಬದಲಾವಣೆ ಮಾಡುವುದರೊಂದಿಗೆ ಹೊಸ ಮಸೂದೆ ಜಾರಿಗೆ ಮುಂದಾಗಿರುವ ಕೇಂದ್ರ ಸರ್ಕಾರದ ಕ್ರಮವನ್ನು ವಿರೋಧಿಸಿ ಗ್ರಾಮೀಣ ಕೂಲಿಕಾರರ ಸಂಘದಿಂದ ಡಿ.22ರಂದು ಸಂಸದರ ಕಚೇರಿ ಮುಂದೆ ಪ್ರತಿಭಟನೆ ನಡೆಸುವುದಾಗಿ ಸಮಿತಿಯ ಕಾರ್ಯದರ್ಶಿ ಗುರುರಾಜ ಹೇಳಿದ್ದಾರೆ. ಶುಕ್ರವಾರ ನಗರದಲ್ಲಿ ಮಾಧ್ಯಮಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, ಉದ್ಯೋಗ ಖಾತ್ರಿ ಯೋಜನೆಯನ್ನು ಪರಿಷ್ಕರಿಸಿ ನೂರು ದಿನ ಬದಲು 125 ದಿನಗಳಿಗೆ ಹೆಚ್ಚಿಸಿರುವ ಕೇಂದ್ರ ಸರಕಾರ ಉದ್ಯೋಗ ಖಾತ್ರಿ ಯೋಜನೆಗೆ ಅನುದಾನ ಕಡಿತಗೊಳಿಸಿದೆ. ಈ ಮೊದಲು ಕೇಂದ್ರದಿಂದ 90 ಪ್ರತಿಶತ ಹಾಗೂ ರಾಜ್ಯಗಳಿಂದ 10 ಪ್ರತಿಶತ ಅನುದಾನದಲ್ಲಿ ಜಾರಿಗೊಳಿಸುತ್ತಿದ್ದ ಯೋಜನೆಯನ್ನು ಈಗ 60:40 ಅನುಪಾತದಲ್ಲಿ ಜಾರಿಗೆ ಮುಂದಾಗಿದೆ. ನೂರು ದಿನ ಕೆಲಸ ನಿಗಧಿಪಡಿಸಿದ್ದಾಗಲೇ 60 ದಿನ ಕೆಲಸ ನೀಡಲು ಆಗಿಲ್ಲ. ಅನುದಾನವೇ ಕಡಿತಗೊಳಿಸಿದ್ದರಿಂದ ಉದ್ಯೋಗ ಖಾತ್ರಿಯೇ ಅರ್ಥ ಕಳೆದುಕೊಳ್ಳುವಂತಾಗಲಿದೆ ಎಂದು ಹೇಳಿದರು. ಉದ್ಯೋಗ ಖಾತ್ರಿ ಕಾಯ್ದೆಯನ್ನು ತಿದ್ದುಪಡಿಯಿಂದ ಬೇಡಿಕೆ ಆಧಾರದ ಬದಲು ಪೂರೈಕೆ ಆಧಾರದ ಮೇಲೆ ಜಾರಿಗೊಳಿಸಿ ಕಾರ್ಮಿಕರ ಹಕ್ಕು ಕಸಿಯುವ ಪ್ರಯತ್ನಕ್ಕೆ ಮುಂದಾಗಿದೆ. ವಿಕೇಂದ್ರಿಕರಣ ವ್ಯವಸ್ಥೆಯನ್ನು ಗಾಳಿಗೆ ತೂರಿ ಗ್ರಾಮಸಭೆ ಅಧಿಕಾರವೂ ಕಿತ್ತಿಕೊಂಡಿದೆ. ಮಹಿಳೆಯರು, ಕೂಲಿ ಕಾರ್ಮಿಕರು ನಂಬಿಕೊಂಡಿದ್ದ ಉದ್ಯೋಗಖಾತ್ರಿ ಕಳೆದುಕೊಂಡಂತಾಗಿದೆ. ಕೂಡಲೇ ಮಸೂದೆ ರದ್ದಿಗೆ ಆಗ್ರಹಿಸಿ ರಾಜ್ಯಾದ್ಯಂತ ಸಂಸದರ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ವಿರೋಧಿಸುವುದಾಗಿ ಅವರು ಹೇಳಿದರು. ಈ ಸಂದರ್ಭದಲ್ಲಿ ಬಸವರಾಜ , ಮಾರೆಮ್ಮ, ರೂಪಾ, ಹುಚ್ಚಮ್ಮ ಇದ್ದರು.

ವಾರ್ತಾ ಭಾರತಿ 19 Dec 2025 7:45 pm

ಮಂಗಳೂರು| ಸಿಟಿ ಗೋಲ್ಡ್‌ನಲ್ಲಿ ವಜ್ರಾಭರಣ ಪ್ರದರ್ಶನ ಮತ್ತು ಮಾರಾಟ ಮೇಳ ಆರಂಭ

ಮಂಗಳೂರು, ಡಿ.19: ನಗರದ ಕಂಕನಾಡಿಯಲ್ಲಿರುವ ಪ್ರತಿಷ್ಠಿತ ಚಿನ್ನ ಮತ್ತು ವಜ್ರಾಭರಣ ಮಳಿಗೆ ʼಸಿಟಿ ಗೋಲ್ಡ್ ಡೈಮಂಡ್ಸ್‌ʼ ನಲ್ಲಿ 2026ರ ಜನವರಿ 15ರವರೆಗೆ ನಡೆಯುವ THE HOPE ವಜ್ರಾಭರಣ ಪ್ರದರ್ಶನ ಮತ್ತು ಮಾರಾಟ ಮೇಳಕ್ಕೆ ಶುಕ್ರವಾರ ಚಾಲನೆ ನೀಡಲಾಯಿತು. ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಆಲಿ ಪ್ರದರ್ಶನ ಮತ್ತು ಮಾರಾಟ ಮೇಳವನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಸುಮಾರು 12 ವರ್ಷದ ಹಿಂದೆಯೇ ತಾನು ತನ್ನ ಮಗಳಿಗೆ ಕಾಸರಗೋಡಿನಲ್ಲಿದ್ದ ಸಿಟಿ ಗೋಲ್ಡ್ ಮಳಿಗೆಯಿಂದ ಚಿನ್ನಾಭರಣ ಖರೀದಿಸಿದ್ದೆ. ನಂಬಿಕೆ ಮತ್ತು ವಿಶ್ವಾಸಕ್ಕೆ ಅರ್ಹವಾದ ಚಿನ್ನ ಮತ್ತು ವಜ್ರಾಭರಣ ಮಳಿಗೆಗಳ ಪೈಕಿ ಸಿಟಿ ಗೋಲ್ಡ್ ಮುಂಚೂಣಿಯಲ್ಲಿದೆ. ಗ್ರಾಹಕರ ಹಿತಕ್ಕೆ ಸದಾ ಬದ್ಧವಾಗಿರುವ ಸಿಟಿ ಗೋಲ್ಡ್ ಮಳಿಗೆಯು ಸಮಾಜಮುಖಿ ಸೇವೆಯ ಮೂಲಕವೂ ಜನಸಾಮಾನ್ಯರಿಗೆ ಮತ್ತಷ್ಟು ಹತ್ತಿರವಾಗಿದೆ. ಉದ್ಯಮದಲ್ಲಿ ಯಶಸ್ಸು ಸಾಧಿಸುವುದರೊಂದಿಗೆ ಸಮಾಜ ಸೇವೆಯಲ್ಲೂ ಸಿಟಿ ಗೋಲ್ಡ್ ಸಂಸ್ಥೆಯು ಮತ್ತಷ್ಟು ತೊಡಗಿಸಿಕೊಳ್ಳಬೇಕು ಎಂದರು. ಮುಖ್ಯ ಆತಿಥಿಗಳಾಗಿ ಸೋಷಿಯಲ್ ಇನ್ಫ್ಲುಯೆನ್ಸರ್‌ಗಳಾದ ಅನೀಶ್ ಮತ್ತು ನೇಹಾ ಹಾಗೂ ಉದ್ಯಮಿಗಳಾದ ಉಮ್ಮರ್ ಫಾರೂಕ್, ರಿಯಾಝ್ ಅಶ್ರಫ್, ಆಶಿಕ್ ಕುಕ್ಕಾಜೆ, ಮೇಕಪ್ ಆರ್ಟಿಸ್ಟ್‌ಗಳಾದ ನಿಶಾ, ಸಹನಾ ಬಾನು ಭಾಗವಹಿಸಿ ಶುಭ ಹಾರೈಸಿದರು. ಸಿಟಿ ಗೋಲ್ಡ್‌ನ ಎಜಿಎಂ ಮುಹಮ್ಮದ್ ಅಝ್ಮಲ್, ಬ್ರಾಂಚ್ ಮ್ಯಾನೇಜರ್ ಅಹ್ಮದ್ ಹಫೀಝ್, ಅಸಿಸ್ಟೆಂಟ್ ಬ್ರಾಂಚ್ ಮ್ಯಾನೇಜರ್ ಅಝೀಝ್ ಎಸ್.ಎ.., ಸೇಲ್ಸ್ ಮ್ಯಾನೇಜರ್ ಇಮ್ರಾನ್ ವಿ., ಮಾರ್ಕೆಟಿಂಗ್ ಮ್ಯಾನೇಜರ್ ಮುಹಮ್ಮದ್ ರಹೀಸ್ ಮತ್ತು ಸಿಟಿಗೋಲ್ಡ್‌ನ ಸಿಬ್ಬಂದಿ ವರ್ಗ ಹಾಗೂ ಗ್ರಾಹಕರು ಉಪಸ್ಥಿತರಿದ್ದರು. ನಮಿತಾ ಅಂತರ್ಯ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. *THE HOPE ವಜ್ರಾಭರಣ ಪ್ರದರ್ಶನ ಪ್ರಯುಕ್ತ ಗ್ರಾಹಕರಿಗೆ ವಜ್ರಾಭರಣ ಖರೀದಿಯಲ್ಲಿ 1 ಕ್ಯಾರೆಟ್‌ಗೆ 15,000 ರೂ. ರಿಯಾಯಿತಿ ನೀಡಲಾಗುವುದು. ಇತರ ಬ್ರಾಂಡ್‌ನ ವಜ್ರಾಭರಣವನ್ನು ಉತ್ತಮ ದರದೊಂದಿಗೆ ವಿನಿಮಯ ಮಾಡಿಕೊಡಲಾಗುವುದು. ಯಾವುದೇ ಬ್ರಾಂಡ್‌ನ ವಜ್ರಾಭರಣಗಳನ್ನು ಉಚಿತ ಸರ್ವಿಸ್ ಮಾಡಿ ಕೊಡಲಾಗುವುದು. ದೇಶ ವಿದೇಶಗಳ ವಜ್ರಾಭರಣ ಪ್ರದರ್ಶನ ನಡೆಯಲಿದೆ ಎಂದು ಸಿಟಿ ಗೋಲ್ಡ್ ಪ್ರಕಟನೆಯಲ್ಲಿ ತಿಳಿಸಿದೆ.

ವಾರ್ತಾ ಭಾರತಿ 19 Dec 2025 7:45 pm

ಲೋಕಸಭಾ ಅಧಿವೇಶನ ಅನಿರ್ದಿಷ್ಟಾವಧಿಗೆ ಮುಂದೂಡಿಕೆ

ಹೊಸದಿಲ್ಲಿ,ಡಿ.19: ಲೋಕಸಭಾ ಅಧಿವೇಶನವನ್ನು ಶುಕ್ರವಾರ ಅನಿರ್ದಿಷ್ಟಾವಧಿಯವರೆಗೆ ಮುಂದೂಡಲಾಗಿದೆ. 19 ದಿನಗಳ ಕಾಲ ನಡೆದ ಅಧಿವೇಶನದಲ್ಲಿ ವಿಬಿ- ಜಿ ರಾಮ್ ಜಿ ಹಾಗೂ ಖಾಸಗಿ ಸಂಸ್ಥೆಗಳಿಗೆ ನಾಗರಿಕ ಅಣುಶಕ್ತಿ ವಲಯವನ್ನು ತೆರೆದಿಡುವ ಶಾಂತಿ ಮಸೂದೆ ಸೇರಿದಂತೆ ಹಲವು ಮಹತ್ವದ ಮಸೂದೆಗಳನ್ನು ಅಂಗೀಕರಿಸಲಾಯಿತು. ರಾಷ್ಟ್ರೀಯ ಗೀತೆ ವಂದೇಮಾತರಂಗೆ 150 ವರ್ಷಗಳು ತುಂಬಿದ ಸ್ಮರಣಾರ್ಥ ಹಾಗೂ ಚುನಾವಣಾ ಸುಧಾರಣೆ ಕುರಿತಾಗಿ ಲೋಕಸಭೆಯು ಕಾವೇರಿದ ಚರ್ಚೆಗಳಿಗೆ ಸಾಕ್ಷಿಯಾಯಿತು. ಉನ್ನತ ಶಿಕ್ಷಣ ನಿಯಂತ್ರಕ ಸಂಸ್ಥೆಯೊಂದನ್ನು ನಿಯೋಜಿಸುವ ಮಸೂದೆಯನ್ನು ಉಭಯ ಸದನಗಳ ಜಂಟಿ ಸಮಿತಿಯ ಪರಿಶೀಲನೆಗೆ ಒಪ್ಪಿಸಲಾಗಿದೆ. ಮಾರುಕಟ್ಟೆ ಸೆಕ್ಯೂರಿಟಿಗಳ ಪ್ರತ್ಯೇಕ ಸಂಹಿತೆಯನ್ನು ಕೂಡಾ ಲೋಕಸಭೆಯಲ್ಲಿ ಮಂಡಿಸಲಾಗಿತ್ತು. ಆನಂತರ ಆದನ್ನು ಹೆಚ್ಚಿನ ಪರಿಶೀಲನೆಗಾಗಿ ಇಲಾಖಾ ಸಂಬಂಧಿತ ಸ್ಥಾಯಿ ಸಮಿತಿಗೆ ಕಳುಹಿಸಿಕೊಡಲಾಗಿತ್ತು. ಶನಿವಾರ ಲೋಕಸಭಾ ಕಲಾಪ ಆರಂಭಗೊಂಡ ಬೆನ್ನಲ್ಲೇ ಸ್ಪೀಕರ್ ಓಂ ಬಿರ್ಲಾ ಅವರು ಸದನವನ್ನು ಅನಿರ್ದಿಷ್ಟಾವಧಿಗೆ ಮುಂದೂಡಿದರು.

ವಾರ್ತಾ ಭಾರತಿ 19 Dec 2025 7:44 pm

ಒಂದಾದ ಮೇಲೊಂದು ಐಪಿಎಲ್‌ ಫ್ರಾಂಚೈಸಿಗಳ ಮಾರಾಟ, ಷೇರು ಮಾರಾಟದ ಪಟ್ಟಿ ಸೇರಿದ 3ನೇ ತಂಡ! ಯಾವುದು?

ಐಪಿಎಲ್‌ನ ಯಶಸ್ವಿ ಫ್ರಾಂಚೈಸಿಗಳಲ್ಲಿ ಒಂದಾದ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್‌) ತಂಡದ ಅಲ್ಪ ಪ್ರಮಾಣದ ಷೇರುಗಳನ್ನು ಮಾರಾಟ ಮಾಡಲು ಸಹ-ಮಾಲೀಕರಾದ ಮೆಹ್ತಾ ಗ್ರೂಪ್ ನಿರ್ಧರಿಸಿದೆ. ಇದಕ್ಕಾಗಿ ಹೂಡಿಕೆ ಬ್ಯಾಂಕ್ 'ನೊಮುರಾ'ವನ್ನು ಸಲಹೆಗಾರರನ್ನಾಗಿ ನೇಮಿಸಲಾಗಿದೆ. ಆರ್‌ಸಿಬಿ ಮತ್ತು ರಾಜಸ್ಥಾನ್ ರಾಯಲ್ಸ್ ತಂಡಗಳು ಬಹುಪಾಲು ಷೇರು ಮಾರಾಟಕ್ಕೆ ಮುಂದಾಗಿರುವ ಬೆನ್ನಲ್ಲೇ, ಕೆಕೆಆರ್‌ನಲ್ಲಿಯೂ ಈ ಬೆಳವಣಿಗೆ ಕಂಡುಬಂದಿದೆ.

ವಿಜಯ ಕರ್ನಾಟಕ 19 Dec 2025 7:44 pm

ರಾಯಚೂರು | ಡಿ.21ರಂದು ಪಂಡಿತ ಸಿದ್ದರಾಮ ಜಂಬಲದಿನ್ನಿ ಅವರ 37ನೇ ಪುಣ್ಯಸ್ಮರಣೆ; ಸಂಗೀತ ಸಮ್ಮೇಳನ : ನರಸಿಂಹಲು ವಡವಾಟಿ

ರಾಯಚೂರು: ಸ್ವರ ಸಂಗಮ ಸಂಗೀತ ವಿದ್ಯಾ ಸಂಸ್ಥೆಯ ವತಿಯಿಂದ ಪಂಡಿತ ಸಿದ್ದರಾಮ ಜಂಬಲದಿನ್ನಿಯವರ 37ನೇ ವರ್ಷದ ಪುಣ್ಯಸ್ಮರಣೆಯ ಅಂಗವಾಗಿ ಡಿ.21ರಂದು ಸಂಜೆ 6 ಗಂಟೆಗೆ ನಗರದ ವಿದ್ಯಾನಗರದಲ್ಲಿರುವ ಸ್ವರ ಸಂಗಮ ಸಂಗೀತ ವಿದ್ಯಾ ಸಂಸ್ಥೆಯಲ್ಲಿ ಸಂಗೀತ ಸಮ್ಮೇಳನವನ್ನು ಆಯೋಜಿಸಲಾಗಿದೆ ಎಂದು ಸಂಸ್ಥೆಯ ಅಧ್ಯಕ್ಷ ಹಾಗೂ ಅಂತರಾಷ್ಟ್ರೀಯ ಖ್ಯಾತಿಯ ಕ್ಲಾರಿಯೋನೆಟ್ ವಾದಕ ಪಂಡಿತ ನರಸಿಂಹಲು ವಡವಾಟಿ ತಿಳಿಸಿದ್ದಾರೆ. ಅವರು ಶುಕ್ರವಾರ ಮಾಧ್ಯಮಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ, ಸಂಗೀತ ಸಮ್ಮೇಳನದ ಸಾನಿಧ್ಯವನ್ನು ಕಿಲ್ಲೆ ಬೃಹನ್ಮಠದ ಶ್ರೀ ಶಾಂತಮಲ್ಲ ಶಿವಾಚಾರ್ಯರು ಹಾಗೂ ಸೋಮವಾರಪೇಟೆ ಹೀರೆಮಠದ ಶ್ರೀ ಅಭಿನವ ರಾಚೋಟಿ ವೀರ ಶಿವಾಚಾರ್ಯರು ವಹಿಸಲಿದ್ದಾರೆ ಎಂದರು. ಕಾರ್ಯಕ್ರಮವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ. ಪುಟ್ಟಮಾದಯ್ಯ ಉದ್ಘಾಟಿಸಲಿದ್ದು, ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾ ಅಧ್ಯಕ್ಷ ಚಂದ್ರಶೇಖರ ಪಾಟೀಲ್ ಮಿರ್ಜಾಪುರ ಅವರು ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಹೇಳಿದರು. ಮುಖ್ಯ ಅತಿಥಿಗಳಾಗಿ ಡಾ. ಶಿವಪ್ರಸಾದ ಜಂಬಲದಿನ್ನಿ, ಓಪೆಕ್ ಆಸ್ಪತ್ರೆಯ ವಿಶೇಷಾಧಿಕಾರಿ ಡಾ. ರಮೇಶ್ ಪಿ. ಸಾಗರ್, ಕಾಂಗ್ರೆಸ್ ಮುಖಂಡ ರವಿ ಬೋಸರಾಜ್ ಹಾಗೂ ಕಲಾ ಸಂಕುಲ ಸಂಸ್ಥೆ ಅಧ್ಯಕ್ಷೆ ರೇಖಾ ಬಡಿಗೇರ ಆಗಮಿಸಲಿದ್ದಾರೆ. ಈ ಸಂದರ್ಭದಲ್ಲಿ ಕರ್ನಾಟಕ ಮಾಹಿತಿ ಆಯೋಗದ ಆಯುಕ್ತ ಬಿ. ವೆಂಕಟಸಿಂಗ್ ಅವರನ್ನು ಸನ್ಮಾನಿಸಿ ಗೌರವಿಸಲಾಗುತ್ತದೆ ಎಂದು ತಿಳಿಸಿದರು. ಸಂಗೀತ ಸಮ್ಮೇಳನದಲ್ಲಿ ದೆಹಲಿಯ ಖ್ಯಾತ ವೈಯಲಿನ್ ವಾದಕ ಪಂಡಿತ ಸಂತೋಷ್ ನಹಾರ್, ವಡವಾಟಿ ಶಾರದಾ ಭರತ್, ಹೈದರಾಬಾದ್‌ನ ಪವನ ಅವರ ತಬಲಾ ಸೋಲೋ, ಕಲ್ಕತ್ತಾದ ಪ್ರಣಮಿತ್ ರಾಯ ಹಾಗೂ ಕೃಷ್ಣ ಮುಖೇಡ್ಕರ್ ಅವರಿಂದ ಗಾಯನ ಕಾರ್ಯಕ್ರಮಗಳು ನಡೆಯಲಿವೆ. ತಬಲಾದಲ್ಲಿ ವಿಶ್ವನಾಥ ನಾಕೋಡ, ಹಾರ್ಮೋನಿಯಂನಲ್ಲಿ ಹರಿಕೃಷ್ಣ ಹಾಗೂ ಕೋಪ್ರೇಶ್ ದೇಸಾಯಿ ಭಾಗವಹಿಸಲಿದ್ದಾರೆ. ಕಾರ್ಯಕ್ರಮದ ಕೊನೆಯಲ್ಲಿ ಸ್ವರ ಸಂಗಮ ಸಂಗೀತ ವಿದ್ಯಾ ಸಂಸ್ಥೆಯ ವಿದ್ಯಾರ್ಥಿಗಳಿಂದ ಗುರುವಂದನೆ ಹಾಗೂ ಪಂಡಿತ ನರಸಿಂಹಲು ವಡವಾಟಿಯವರಿಂದ ಮಂಗಲ ಸಂಗೀತ ಕಾರ್ಯಕ್ರಮ ನಡೆಯಲಿದೆ ಎಂದರು. ಈ ಸಂದರ್ಭದಲ್ಲಿ ಮಾತನಾಡಿದ ನಿವೃತ್ತ ಇಂಜಿನಿಯರ್ ಶಂಕರ ನಾರಾಯಣ ಅವರು, ಗುರುಗಳ ಪುಣ್ಯಸ್ಮರಣೆಯ ಅಂಗವಾಗಿ ಕಳೆದ 37 ವರ್ಷಗಳಿಂದ ನಿರಂತರವಾಗಿ ಸಂಗೀತ ಸಮ್ಮೇಳನ ಆಯೋಜಿಸುತ್ತಿರುವ ಪಂಡಿತ ನರಸಿಂಹಲು ವಡವಾಟಿಯವರ ಸೇವೆ ಮಾದರಿಯಾಗಿದೆ. ಇಲ್ಲಿ ಮಕ್ಕಳಿಗೆ ಸಂಗೀತದ ಜೊತೆಗೆ ಸಂಸ್ಕೃತಿ ಮತ್ತು ಸಂಸ್ಕಾರಗಳ ಬಗ್ಗೆ ಉತ್ತಮ ತರಬೇತಿ ನೀಡಲಾಗುತ್ತಿದೆ ಎಂದು ಪ್ರಶಂಸಿಸಿದರು.

ವಾರ್ತಾ ಭಾರತಿ 19 Dec 2025 7:36 pm

ಮದ್ದಡ್ಕ: ಡಿ. 21ರಂದು ಸಮಸ್ತ ಆದರ್ಶ ಪ್ರಚಾರ ಸಮ್ಮೇಳನ

ಬೆಳ್ತಂಗಡಿ:  ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ಎಂಬ ಸಂಘಟನೆಯನ್ನು 1926ರಲ್ಲಿ ಆರಂಭಿಸಿದರು. ಈ ಸಂಘಟನೆಯು ಇದೀಗ ನೂರನೇ ವರ್ಷಕ್ಕೆ ದಾಪುಗಾಲಿಡುತ್ತಿದೆ. ಇದರ ಭಾಗವಾಗಿ ಕಾಸರಗೋಡಿನ ಕುಣಿಯ ಎಂಬಲ್ಲಿ 2026 ಫೆಬ್ರವರಿ 2 ರಿಂದ 8ರವರೆಗೆ 100 ನೇ ವಾರ್ಷಿಕ ಮಹಾ ಸಮ್ಮೇಳನವು ನಡೆಯಲಿಕ್ಕಿದೆ. ಅದರ ಪ್ರಚಾರಾರ್ಥ ಬೆಳ್ತಂಗಡಿ ತಾಲೂಕು ಜಂಇಯ್ಯತುಲ್ ಉಲಮಾ ಮತ್ತು ಎಸ್.ಕೆ.ಎಸ್.ಎಸ್.ಎಫ್ ಮದ್ದಡ್ಕ ಶಾಖೆಯ ಸಹಯೋಗದಲ್ಲಿ ಮದ್ದಡ್ಕದಲ್ಲಿ ಡಿ. 21 ರಂದು ಸಂಜೆ 4 ಗಂಟೆಗೆ ಬೃಹತ್ ಸಮಸ್ತ ಆದರ್ಶ ಪ್ರಚಾರ ಸಮ್ಮೇಳನ ನಡೆಯಲಿದೆ ಎಂದು ಸಮಿತಿಯ ವೈಸ್ ಚೆಯರ್ಮೇನ್ ನಝೀರ್ ಅಝ್ಹರಿ ತಿಳಿಸಿದ್ದಾರೆ. ಬೆಳ್ತಂಗಡಿಯಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಈ ವಿಚಾರ ತಿಳಿಸಿದರು. ಕಾರ್ಯಕ್ರಮದ ಮೊದಲಿಗೆ ಕಿನ್ನಿಗೋಳಿಯಿಂದ ಸಂಜೆ 3 ಗಂಟೆಗೆ ರ್ಯಾಲಿ ಆರಂಭಗೊಳ್ಳಲಿದೆ. ತ್ವಾಹ ತಂಙಳ್ ಬೆಳ್ತಂಗಡಿಯವರಿಂದ ಪಣಕಜೆ ಮಕಾಂ ಝಿಯಾರತ್ ಮೂಲಕ ಆರಂಭಗೊಳ್ಳಲಿದೆ, ಮಧ್ಯಾಹ್ನ 2 ಗಂಟೆಗೆ‌‌ ಎಸ್ ಕೆ ಎಸ್.ಬಿ ವಿ ಬೆಳ್ತಂಗಡಿ ರೇಂಜ್ ತಹ್ದೀಸ್ ಮೀಟ್ ವಿಧ್ಯಾರ್ಥಿ ಸಂಗಮದಲ್ಲಿ ಮಜೀದ್ ದಾರಿಮಿಯವರು ತರಗತಿ ನಡೆಸಲಿದ್ದಾರೆ. ನಂತರ SKSSF ಬೆಳ್ತಂಗಡಿ ವಲಯ ವಿಖಾಯ ಸಂಗಮ ನಡೆಯಲಿದೆ. ಕಿನ್ನಿಗೋಳಿಯಿಂದ ನಡೆಯುವ ಪ್ರಚಾರ ಜಾಥಾಕ್ಕೆ ಮುಂಡೂರು ತಂಙಳ್ ಚಾಲನೆಯನ್ನು ನೀಡಲಿದ್ದಾರೆ. ಮಿತ್ತಬೈಲ್ ಇರ್ಷಾದ್ ದಾರಿಮಿ ರ್ಯಾಲಿ ಉದ್ಘಾಟನೆಯನ್ನು ಮಾಡಲಿದ್ದಾರೆ. ಸದಖತುಲ್ಲಾ ದಾರಿಮಿ, ಶಂಸುದ್ದೀನ್ ದಾರಿಮಿ, ನೌಶಾದ್ ಅಝ್ಹರಿ, ಅಝೀಝ್ ಅಶ್ಶಾಫಿ, ಬಶೀರ್ ದಾರಿಮಿ, ಇಸ್ಮಾಯಿಲ್ ತಂಙಳ್, ನೌಶಾದ್ ಮದ್ದಡ್ಕ, ಝುಬೈರ್ ಕಕ್ಕಿಂಜೆ ರ್ಯಾಲಿಯ ನೇತೃತ್ವ ವಹಿಸಲಿದ್ದಾರೆ. ಬಳಿಕ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಬೆಳ್ತಂಗಡಿ ವಲಯ ಅಧ್ಯಕ್ಷರಾದ ಅಬ್ದುರ್ರಝಾಕ್ ಅಧ್ಯಕ್ಷತೆ ವಹಿಸಲಿದ್ದಾರೆ. ಆದಂ ದಾರಿಮಿ ದುಆ ನೆರವೇರಿಸುವ ಈ ಕಾರ್ಯಕ್ರಮದಲ್ಲಿ ಮದ್ದಡ್ಕ ಸ್ವಾಗತ ಸಮೀತಿ ಚೆಯರ್ಮೇನ್ ಸಿರಾಜ್ ಚಿಲಿಂಬಿ ಸ್ವಾಗತ ಭಾಷಣ ಮಾಡಲಿದ್ದು ಬೆಳ್ತಂಗಡಿ ರೇಂಜ್ ಅಧ್ಯಕ್ಷರಾದ ಅಶ್ರಫ್ ಫೈಝಿ ಪುಂಜಾಲಕಟ್ಟೆ ಪ್ರಾಸ್ತಾವಿಕವಾಗಿ ಮಾತನಾಡಲಿದ್ದಾರೆ. ಸಮಸ್ತ ಕರ್ನಾಟಕ ಕೋಶಾಧಿಕಾರಿಯಾದ ಝೈನುಲ್ ಆಬಿದೀನ್ ತಂಙಳ್ ಬೆಳ್ತಂಗಡಿ ಉದ್ಘಾಟಿಸಲಿದ್ದಾರೆ. ಸಮಸ್ತ ಕೇಂದ್ರ ಮುಶಾವರ ಸದಸ್ಯರಾದ ತೋಡಾರ್ ಉಸ್ತಾದ್ ಅನುಗ್ರಹ ಭಾಷಣವನ್ನು ನಡೆಸಲಿದ್ದು ಎಸ್ ಕೆ ಎಸ್ ಎಸ್ ಎಫ್ ರಾಜ್ಯ ಕಾರ್ಯದರ್ಶಿಯವರಾದ ಅನೀಸ್ ಕೌಸರಿ ಮುಖ್ಯ ಪ್ರಭಾಷಣಗೈಯಲಿದ್ದಾರೆ. ನಝೀರ್ ಅಝ್ಹರಿ ಮತ್ತು ಶಂಸುದ್ದೀನ್ ಅಶ್ರಫೀ ಆಶಂಸಾ ಭಾಷಣ ನಡೆಸುವರು. ಮಗ್ರಿಬ್ ನಮಾಝಿನ ಬಳಿಕ ನಡೆಯುವ ಕಾರ್ಯಕ್ರಮದಲ್ಲಿ ಕಾರ್ಯಕ್ರಮದ ಚೆಯರ್ಮಾನ್ ಐ.ಕೆ ಮೂಸಾ ದಾರಿಮಿ ಕಕ್ಕಿಂಜೆ ಅಧ್ಯಕ್ಷತೆ ವಹಿಸಲಿದ್ದಾರೆ. ಕನ್ವೀನರ್ ಇಸ್ಮಾಯಿಲ್ ದಾರಿಮಿ ಸ್ವಾಗತ ಭಾಷಣ ಮಾಡಲಿದ್ದಾರೆ. ಸಂಚಾಲಕರಾದ ರಿಯಾಝ್ ಫೈಝಿ ಕಕ್ಕಿಂಜೆ ಪ್ರಾಸ್ತಾವಿಕವಾಗಿ ಮಾತನಾಡಲಿದ್ದು ಜಲಾಲಿ ಉಸ್ತಾದ್ ಕಕ್ಕಿಂಜೆ ದಿಕ್ಸೂಚಿ ಭಾಷಣ ಮಾಡಲಿದ್ದಾರೆ.. ಅಶ್ಫಾಕ್ ಫೈಝಿ ಬ್ಯಾರಿ ಭಾಷಣ ಮಾಡಲಿದ್ದಾರೆ. ಅಝೀಝ್ ದಾರಿಮಿ ಚೊಕ್ಕಬೆಟ್ಟು,ಹೈದರ್ ದಾರಿಮಿ ಕರಾಯ,ಇಸ್ಮಾಯಿಲ್ ಫೈಝಿ ,ಜುನೈದ್ ಜಿಫ್ರಿ ತಂಙಳ್ ಆಶಂಸ ಭಾಷಣವನ್ನು ಮಾಡಲಿದ್ದಾರೆ.ಪ್ರಖ್ಯಾತ ಸುನ್ನತ್ ಜಮಾಅತಿನ ವಾಗ್ಮಿ ಜಝೀಲ್ ಕಮಾಲಿ ಫೈಝಿ ಉಸ್ತಾದ್ ಮುಖ್ಯ ಪ್ರಭಾಷಣಗೈಯಲಿದ್ದಾರೆ. ವಲಯ ಕಾರ್ಯದರ್ಶಿ ಹಾಶಿಂ ಫೈಝಿ ಧನ್ಯವಾದ ನಡೆಸುವರು. ಈ ಕಾರ್ಯಕ್ರಮದಲ್ಲಿ ಹಲವಾರು ಉಲಮಾ ಉಮರಾ ಗಣ್ಯರು ಭಾಗವಹಿಸಲಿದ್ದಾರೆ‌ ಎಂದು ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಬೆಳ್ತಂಗಡಿ ಜಂಇಯ್ಯತುಲ್ ಉಲಮಾ ಅಧ್ಯಕ್ಷರಾದ ಮೂಸಾ ದಾರಿಮಿ ಕಕ್ಕಿಂಜೆ ಸ್ವಾಗತ ಸಮಿತಿ ಕನ್ವೀನರ್ ರಿಯಾಝ್ ಫೈಝಿ, ರೇಂಜ್ ಅಧ್ಯಕ್ಷರಾದ ಅಶ್ರಫ್ ಫೈಝಿ, ವೈಸ್ ಚೆಯರ್ಮೇನ್ ನಝೀರ್ ಅಝ್ಹರಿ, ಬೆಳ್ತಂಗಡಿ ವಲಯ ಅಧ್ಯಕ್ಷರಾದ ರಝಾಕ್ ಮದ್ದಡ್ಕ ಸಮಿತಿ ಅಧ್ಯಕ್ಷರಾದ ಇಲ್ಯಾಸ್ ಚಿಲಿಂಬಿ, ಅಝೀಝ್ ಅಶ್ಶಾಫಿ ಉಪಸ್ಥಿತರಿದ್ದರು.

ವಾರ್ತಾ ಭಾರತಿ 19 Dec 2025 7:24 pm

ಕೆಇಎ : ಡಿ.20ರಿಂದ ಡಿ.22ರವರೆಗೆ ನೇಮಕಾತಿ ಪರೀಕ್ಷೆ

ಬೆಂಗಳೂರು : ಬಿಡಿಎ, ಬೆಂಗಳೂರು ಜಲಮಂಡಳಿ, ತಾಂತ್ರಿಕ ಶಿಕ್ಷಣ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳಲ್ಲಿನ ಖಾಲಿ ಹುದ್ದೆಗಳ ನೇಮಕಾತಿಗೆ ಕಲ್ಯಾಣ ಕರ್ನಾಟಕದ ಅಭ್ಯರ್ಥಿಗಳಿಗೆ ಡಿ.20ರಿಂದ ಡಿ.22ರವರೆಗೆ ಲಿಖಿತ ಪರೀಕ್ಷೆ ನಡೆಸಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಬಿಗಿ ಕ್ರಮಗಳನ್ನು ಕೈಗೊಂಡಿದೆ. ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ಪ್ರಕಟನೆ ತಿಳಿಸಿದ್ದು, ವಿವಿಧ ಹುದ್ದೆಗಳಿಗೆ ಕಲ್ಯಾಣ ಕರ್ನಾಟಕದ ಒಟ್ಟು 24,800 ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದು, ಅಷ್ಟೂ ಮಂದಿಗೆ ಮೂರು ದಿನಗಳ ಕಾಲ ಪರೀಕ್ಷೆ ನಡೆಸಲಾಗುತ್ತದೆ ಎಂದು ತಿಳಿಸಿದರು. ಅತ್ಯಂತ ಪಾರದರ್ಶಕ ಹಾಗೂ ಅಕ್ರಮಗಳಿಗೆ ಅವಕಾಶ ಇಲ್ಲದಂತೆ ಪರೀಕ್ಷೆಗಳನ್ನು ನಡೆಸಲು ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಪರೀಕ್ಷಾ ಕೊಠಡಿಯಲ್ಲಿ ಸಿಸಿಟಿವಿ ಜತೆಗೆ ಜಾಮರ್ ಹಾಕಿದ್ದು, ಎಲೆಕ್ಟ್ರಾನಿಕ್ ವಸ್ತುಗಳ ಬಳಕೆಗೆ ನಿರ್ಬಂಧ ವಿಧಿಸಲಾಗಿದೆ. ಮುಖಚಹರೆ ಪತ್ತೆ ತಂತ್ರಜ್ಞಾನ ಬಳಸಿಯೇ ಅಭ್ಯರ್ಥಿಗಳನ್ನು ಪರೀಕ್ಷಾ ಕೇಂದ್ರದ ಒಳಗೆ ಬಿಡಲಾಗುತ್ತದೆ. ವಸ್ತ್ರ ಸಂಹಿತೆ ಇದ್ದು ಅಭ್ಯರ್ಥಿಗಳು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಅವರು ಹೇಳಿದ್ದಾರೆ. ಡಿ.20ರಂದು ಬೆಂಗಳೂರಿನ ಏಳು ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದ್ದು, ಒಟ್ಟು 3,486 ಮಂದಿ ತೆಗೆದುಕೊಂಡಿದ್ದಾರೆ. ಬೆಂಗಳೂರು, ಬಳ್ಳಾರಿ, ದಾವಣಗೆರೆ, ಧಾರವಾಡ, ಕಲ್ಬುರ್ಗಿ ಮತ್ತು ಕೊಪ್ಪಳ ಜಿಲ್ಲೆಗಳ 51 ಕೇಂದ್ರಗಳಲ್ಲಿ ಡಿ.21ರಂದು ನಡೆಯುವ ಪರೀಕ್ಷೆಯನ್ನು 21,198 ಮಂದಿ ಹಾಗೂ ಡಿ.22ರಂದು ಬೆಂಗಳೂರಿನಲ್ಲಿ ಮಾತ್ರ ನಡೆಯುವ ಪರೀಕ್ಷೆಯನ್ನು 1,166 ಮಂದಿ ತೆಗೆದುಕೊಂಡಿದ್ದಾರೆ ಎಂದು ಅವರು ವಿವರಿಸಿದ್ದಾರೆ. ಎಲ್ಲರಿಗೂ ಕನ್ನಡ ಪರೀಕ್ಷೆ: ಕಲ್ಯಾಣ ಕರ್ನಾಟಕ ಸೇರಿದಂತೆ ಇತರ ಎಲ್ಲರಿಗೂ ಡಿ.28ರಂದು ಕನ್ನಡ ಕಡ್ಡಾಯ ಪರೀಕ್ಷೆ ನಡೆಯಲಿದೆ ಎಂದು ಅವರು ವಿವರಿಸಿದ್ದಾರೆ.

ವಾರ್ತಾ ಭಾರತಿ 19 Dec 2025 7:23 pm

ಕಲಬುರಗಿ | ರಸ್ತೆ ಕಾಮಗಾರಿಯಲ್ಲಿ ನಿರ್ಲಕ್ಷ್ಯ ವಹಿಸಿದ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಶ್ರವಣಕುಮಾರ ಆಗ್ರಹ

ಕಲಬುರಗಿ(ಯಡ್ರಾಮಿ): ರಸ್ತೆ ಡಾಂಬರೀಕರಣ ನಡೆಯುತ್ತಿರುವ ರಸ್ತೆಗೆ ಸೂಚನಾ ಫಲಕ ಅಳವಡಿಸದಿರುವ ಕಾರಣ ಯಡ್ರಾಮಿ ತಾಲೂಕಿನ ಇಜೇರಿ ಗ್ರಾಮದ ವಿದ್ಯಾರ್ಥಿನಿ ಮೇಲೆ ವಾಹನವೊಂದು ಹರಿದುಹೋಗಿದ್ದರಿಂದ ಬಾಲಕಿ ಕಾಲು ಕಳೆದುಕೊಂಡಿದ್ದಾಳೆ. ಮುಂಜಾಗೃತ ಕ್ರಮವನ್ನು ವಹಿಸದೇ ನಿರ್ಲಕ್ಷ್ಯ ವಹಿಸಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಎಂದು ಗ್ರಾಮೀಣಾಭಿವೃದ್ಧಿ ಹೋರಾಟ ಸಮಿತಿ ಸಂಸ್ಥಾಪಕ ಅಧ್ಯಕ್ಷ ಶ್ರವಣಕುಮಾರ ನಾಯಕ ಆಗ್ರಹಿಸಿದ್ದಾರೆ. ಯಡ್ರಾಮಿ-ಜೇವರ್ಗಿ ರಾಜ್ಯ ಹೆದ್ದಾರಿ ಬಂದ್ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಶಾಲೆಯಲ್ಲಿ ಮೂಲ ಸೌಕರ್ಯವಿರದ ಕಾರಣ ವಿದ್ಯಾರ್ಥಿನಿಯು ನೀರು ಕುಡಿಯಲು ಹೊರಗಡೆ ಹೋಗಿದ್ದು, ಈ ವೇಳೆ ಅಪಘಾತ ಸಂಭವಿಸಿದೆ. ವಿದ್ಯಾರ್ಥಿನಿ ಬಡಕುಟುಂಬದಿಂದ ಬಂದಿದ್ದು, ಮಾನವೀಯತೆ ದೃಷ್ಟಿಯಿಂದ ಕುಟುಂಬದ ಒಬ್ಬರಿಗೆ ಸರ್ಕಾರಿ ನೌಕರಿ ನೀಡುವುದರ ಜತೆಗೆ ಎರಡು ಕೋಟಿ ರೂ. ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು. ರಸ್ತೆ ಕಾಮಗಾರಿ ಕುರಿತು ಸೂಚನಾ ಫಲಕ ಅಳವಡಿಸದೆ ನಿರ್ಲಕ್ಷ್ಯ ವಹಿಸಿದ ಲೋಕೋಪಯೋಗಿ ಇಲಾಖೆ ಅಧಿಕಾರಿ ಹಾಗೂ ಗುತ್ತಿಗೆದಾರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು. ಮುಂಜಾಗೃತಾ ಕ್ರಮವಾಗಿ ಸೂಚನಾ ಫಲಕ, ಬ್ಯಾರಿಕೇಡ್, ರಾತ್ರಿಯ ಎಚ್ಚರಿಕೆ ದೀಪಗಳು ಹಾಕಿಲ್ಲ. ಇದರಿಂದ ಜನರು ಸಮಸ್ಯೆ ಅನುಭವಿಸುತ್ತಿದ್ದಾರೆ. ಸಾಕಷ್ಟು ಜನರು ವಾಹನಗಳಿಂದ ಬಿದ್ದು ಗಾಯ ಮಾಡಿಕೊಳ್ಳುತ್ತಿದ್ದಾರೆ ಎಂದು ದೂರಿದರು. ಇದೇ ವೇಳೆಯಲ್ಲಿ ಬಿಇಒ ವೀರಣ್ಣ ಬೊಮ್ಮನಳ್ಳಿ ಅವರಿಗೆ ಮನವಿಪತ್ರ ಸಲ್ಲಿಸಿ, ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಡ ಹೇರಿದರು. ಈ ಸಂದರ್ಭದಲ್ಲಿ ರೈತ ಹೋರಾಟಗಾರ ಅಲ್ಲಾಪಟೇಲ ಮಾಲಿಬಿರಾದಾರ, ಇಜೇರಿ ಗ್ರಾಮ ಘಟಕ ಅಧ್ಯಕ್ಷ ನಿಂಗಣ್ಣ ಚಿಗರಹಳ್ಳಿ, ಜೇವರ್ಗಿ ತಾಲೂಕು ಘಟಕ ಅಧ್ಯಕ್ಷ ಸಿದ್ದು ಹವಲ್ದಾರ, ಯಡ್ರಾಮಿ ತಾಲೂಕು ಘಟಕ ಅಧ್ಯಕ್ಷ ಪರಶುರಾಮ ಕೇದಾರ, ಭೀಮು ಖಾದ್ಯಾಪೂರ, ವೆಂಕಟೇಶ ಗುತ್ತೇದಾರ, ಸೈದಪ್ಪ ಹೊಸಮನಿ, ಯಲ್ಲಪ್ಪ ದೊರೆ, ರಮೇಶ ಮೇಲಗಿರಿ, ಪರಶುರಾಮ ಕಿಲೆದಮನಿ, ದೌಲತರಾಯ ನೀರಲಕೋಡ, ಹಣಮಂತ ತೆಗಿನಕೇರಿ, ಭೀಮು ಕಿಲೆದಮನಿ, ಮಲ್ಲಪ್ಪ ಪೂಜಾರಿ, ಗುಂಡೇಶ ಕೆ, ಮೊಹ್ಮದ್ ಸಿಪಾಯಿ, ಸುರೇಶ ಹಡಪದ, ನಿಂಗಪ್ಪ ಚಿಗರಹಳ್ಳಿ, ಈರಪ್ಪ ಕೋಳ್ಯಾಳ, ದೇವು ಮುತ್ತಕೋಡ, ಗೋಲು ಯಂಕಂಚಿ, ಇಲಿಯಾಸ್ ಪಟೇಲ, ಕಳೆಪ್ಪ ಭೋವಿ ಇತರರಿದ್ದರು.  

ವಾರ್ತಾ ಭಾರತಿ 19 Dec 2025 7:21 pm

ರೈಲ್ವೆ ಇಲಾಖೆ ಹುದ್ದೆಗಳ ಬಡ್ತಿಗೆ ಕನ್ನಡದಲ್ಲಿ ಪರೀಕ್ಷೆ ನಿರಾಕರಣೆ | ಕನ್ನಡ ವಿರೋಧಿ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಿ : ಡಾ.ಪುರುಷೋತ್ತಮ ಬಿಳಿಮಲೆ

ಬೆಂಗಳೂರು : ನೈರುತ್ಯ ರೈಲ್ವೆಯ ಬೆಂಗಳೂರು ವಿಭಾಗವು ಇತ್ತೀಚೆಗೆ ವಿವಿಧ ಬಡ್ತಿ ಹುದ್ದೆಗಳಿಗೆ ನೇಮಕಾತಿ ಕುರಿತಂತೆ ನಡೆಸಿದ ಪರೀಕ್ಷೆಗಳಲ್ಲಿ ಕನ್ನಡದಲ್ಲಿ ಬರೆಯುವ ಅವಕಾಶವನ್ನು ನಿರಾಕರಿಸುವ ಮೂಲಕ ಕನ್ನಡಿಗರ ಭಾವನೆಗಳಿಗೆ ತೀವ್ರ ಘಾಸಿಯನ್ನು ಉಂಟು ಮಾಡಿದ್ದು, ಕೂಡಲೇ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮವಹಿಸಿ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ ಆಗ್ರಹಿಸಿದ್ದಾರೆ. ಈ ಕುರಿತು ಕೇಂದ್ರ ರೈಲ್ವೆ ಇಲಾಖೆ ರಾಜ್ಯ ಸಚಿವ ವಿ.ಸೋಮಣ್ಣ ಅವರಿಗೆ ಪತ್ರ ಬರೆದಿರುವ ಅವರು, ನೈರುತ್ಯ ರೈಲ್ವೆಯ ಮೈಸೂರು ಹಾಗೂ ಹುಬ್ಬಳ್ಳಿ ವಿಭಾಗಗಳಲ್ಲಿ ಕನ್ನಡದಲ್ಲಿಯೂ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಿದ್ದು, ಬೆಂಗಳೂರು ವಿಭಾಗದಲ್ಲಿ ಯಾಕೆ ಸಾಧ್ಯವಾಗಿರುವುದಿಲ್ಲ ಎಂಬ ಬಗ್ಗೆ ತನಿಖೆ ನಡೆಸಬೇಕು ಎಂದು ತಿಳಿಸಿದ್ದಾರೆ. ಕನ್ನಡ ಭಾಷೆಗೆ ಅವಕಾಶವಿಲ್ಲದೇ ಕಳೆದ 15 ದಿನಗಳ ಹಿಂದೆ ನಡೆಸಿರುವ ಬಡ್ತಿ ಪರೀಕ್ಷೆಗಳನ್ನು ಪುನಃ ನಡೆಸಿ ಅರ್ಹ ಕನ್ನಡಿಗರಿಗೆ ನ್ಯಾಯ ದೊರಕಿಸಿ ಕೊಡಬೇಕು. ಮುಂದೆ ಈ ರೀತಿಯ ಅಚಾತುರ್ಯಗಳು ನಡೆಯದಂತೆ ಸ್ವ-ನಿಯಂತ್ರಣ ವ್ಯವಸ್ಥೆಯನ್ನು ಜಾರಿಯಲ್ಲಿಡಲು ರೈಲ್ವೆ ಇಲಾಖೆ ಮುಂದಾಗುವ ರೀತಿಯಲ್ಲಿ ತಾವು ಕಠಿಣ ಸೂಚನೆಯನ್ನು ನೀಡಬೇಕು ಎಂದು ತಿಳಿಸಿದ್ದಾರೆ.

ವಾರ್ತಾ ಭಾರತಿ 19 Dec 2025 7:20 pm

ಯಾದಗಿರಿ | ಕೆ.ಕೆ. ಭಾಗದ ಶೈಕ್ಷಣಿಕ ಬಿಕ್ಕಟ್ಟು ನಿವಾರಣೆಗೆ ʼಕಲಿಕೆಯೇ ಕಲ್ಯಾಣʼ ಅಭಿಯಾನ

ಯಾದಗಿರಿ: ಕಲ್ಯಾಣ ಕರ್ನಾಟಕ ಪ್ರದೇಶದ ಗಂಭೀರ ಶೈಕ್ಷಣಿಕ ಬಿಕ್ಕಟ್ಟಿಗೆ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಸೇಶನ್ ಆಫ್ ಇಂಡಿಯಾ (SIO) ಕರ್ನಾಟಕ ಘಟಕವು, ಸೆಂಟರ್ ಫಾರ್ ಎಜುಕೇಷನಲ್ ರಿಸರ್ಚ್ & ಅನಾಲಿಸಿಸ್ (CERA) ಸಹಯೋಗದೊಂದಿಗೆ ʼಕಲಿಕೆಯೇ ಕಲ್ಯಾಣʼ ಎಂಬ ಎರಡು ತಿಂಗಳ ವಿಶೇಷ ಅಭಿಯಾನಕ್ಕೆ ಚಾಲನೆ ನೀಡಿದೆ ಎಂದು ಎಸ್.ಐ.ಓ ಸಂಘಟನಾ ಕಾರ್ಯದರ್ಶಿ ಸಲ್ಲಾವುದ್ಧಿನ್ ಜಾಗೀರದಾರ್ ಹೇಳಿದರು. ಶುಕ್ರವಾರ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಡಿ.15 ರಿಂದ ಫೆ.15 ರವರೆಗೆ ನಡೆಯಲಿರುವ ಈ ಅಭಿಯಾನವು ಕಲ್ಯಾಣ ಕರ್ನಾಟಕದ ಸರ್ಕಾರಿ ಹಾಗೂ ಮೌಲಾನಾ ಆಜಾದ್ ಶಾಲೆಗಳ ಮೇಲೆ ಕೇಂದ್ರೀಕೃತವಾಗಿದೆ. ಇತ್ತೀಚಿನ SSLC ಮತ್ತು ದ್ವಿತೀಯ ಪಿಯುಸಿ ಫಲಿತಾಂಶಗಳು ಪ್ರದೇಶದ ಶೈಕ್ಷಣಿಕ ಹಿಂದುಳಿತವನ್ನು ಬಹಿರಂಗಪಡಿಸಿವೆ. ಶಿಕ್ಷಕರ ಕೊರತೆ, ಏಕ-ಶಿಕ್ಷಕ ಶಾಲೆಗಳ ಹೆಚ್ಚಳ ಹಾಗೂ ಕಡಿಮೆ ದಾಖಲಾತಿ ಪ್ರಮುಖ ಸಮಸ್ಯೆಗಳಾಗಿವೆ ಎಂದರು. ಶಿಕ್ಷಣದ ಮಹತ್ವದ ಕುರಿತು ಅರಿವು ಮೂಡಿಸುವುದು, SSLC ಅನುತ್ತೀರ್ಣ ಪ್ರಮಾಣ ಕಡಿಮೆ ಮಾಡುವುದು ಹಾಗೂ ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಸಮಸ್ಯೆಯನ್ನು ಮಾಧ್ಯಮ ಮತ್ತು ರಾಜಕೀಯ ಚರ್ಚೆಗೆ ತರುವುದೇ ಅಭಿಯಾನದ ಮುಖ್ಯ ಗುರಿಯಾಗಿದೆ ಎಂದು SIO ತಿಳಿಸಿದೆ. ಸುದ್ದಿಗೋಷ್ಠಿಯಲ್ಲಿ ಎಸ್.ಐ.ಓ ಸಂಘಟನಾ ಅಧ್ಯಕ್ಷ ಅಲ್ಲಾವುದ್ದೀನ್ ಜಾಗಿರದಾರ, ಪದಾಧಿಕಾರಿಗಳಾದ ಸೈಯದ್ ಫೈಝಾನ್, ಅಬ್ದುಲ್ ಬಸಿತ್, ಸಾಹಿಲ್, ಜಾಕಿರ್ ಅಹ್ಮದ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ವಾರ್ತಾ ಭಾರತಿ 19 Dec 2025 7:16 pm

ಡಿ. 20: ದ.ಕ. ಜಿಲ್ಲಾ ಮಟ್ಟದ ದಫ್ ಸ್ಪರ್ಧೆ

ಮಂಗಳೂರು, ಡಿ.19: ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿಯು ಜೋಗಿಬೆಟ್ಟು ರಿಫಾಯಿ ಜುಮಾ ಮಸ್ಜಿದ್ ಆಡಳಿತ ಸಮಿತಿಯ ಸಹಯೋಗದೊಂದಿಗೆ ಡಿ.20ರಂದು ದ.ಕ. ಜಿಲ್ಲಾ ಮಟ್ಟದ ದಫ್ ಸ್ಪರ್ಧೆಯನ್ನು ಆಯೋಜಿಸಿದೆ. ಬೆಳ್ತಂಗಡಿ ತಾಲೂಕಿನ ಜೋಗಿಬೆಟ್ಟು ರಿಫಾಯಿ ಜುಮಾ ಮಸ್ಜಿದ್ ಆವರಣದಲ್ಲಿ ನಡೆಯಲಿರುವ ಕಾರ್ಯಕ್ರಮವನ್ನು ರಿಫಾಯಿ ಜುಮಾ ಮಸ್ಜಿದ್‌ನ ಖತೀಬ್ ಅಲ್‌ಹಾಜ್ ಯು.ಕೆ.ಖಲಂದರ್ ಮದನಿ ಉದ್ಘಾಟಿಸಲಿದ್ದಾರೆ. ಬ್ಯಾರಿ ಅಕಾಡಮಿಯ ಅಧ್ಯಕ್ಷ ಉಮರ್ ಯು.ಎಚ್. ಅಧ್ಯಕ್ಷತೆ ವಹಿಸಲಿದ್ದಾರೆ. ರಿಫಾಯಿ ಜುಮಾ ಮಸ್ಜಿದ್ ಆಡಳಿತ ಸಮಿತಿಯ ಅಧ್ಯಕ್ಷ ಎಂ.ಜಿ. ಅಬೂಬಕರ್ ಪುತ್ತು ಸ್ಪರ್ಧೆಯ ನೇತೃತ್ವ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಬಿ ಹ್ಯೂಮನ್ ಅಧ್ಯಕ್ಷ ಹಾಜಿ ಬಿ.ಎಂ. ಶರೀಫ್ ವೈಟ್‌ಸ್ಟೋನ್, ಹಿದಾಯ ಫೌಂಡೇಶನ್ ಅಧ್ಯಕ್ಷ ಹಾಜಿ ಮುಹಮ್ಮದ್ ಹನೀಫ್ ಗೋಳ್ತಮಜಲು, ಎಂ. ಫ್ರೆಂಡ್ಸ್ ಚಾರಿಟೆಬಲ್ ಟ್ರಸ್ಟ್ ಸ್ಥಾಪಕ ರಶೀದ್ ವಿಟ್ಲ, ಪೊಲೀಸ್ ಇನ್‌ಸ್ಪೆಕ್ಟರ್ ರವಿ ಬಿ.ಎಸ್., ಉದ್ಯಮಿಗಳಾದ ಉಮರ್ ಹಾಜಿ, ಅಬ್ದುಲ್ ಸಲೀಂ ದಾವೂದ್, ಅಶ್ರಫ್, ಜೋಗಿಬೆಟ್ಟು ಖುವ್ವತುಲ್ ಇಸ್ಲಾಂ ಯಂಗ್‌ಮೆನ್ಸ್ ಅಧ್ಯಕ್ಷ ಅಶ್ರಫ್ ಎಂ.ಜಿ. ಭಾಗವಹಿಸಲಿದ್ದಾರೆ. ದ.ಕ. ಜಿಲ್ಲೆಯ ತಾಲೂಕು ಮಟ್ಟಗಳಲ್ಲಿ ಅಕಾಡಮಿಯು ಹಮ್ಮಿಕೊಂಡಿದ್ದ ದಫ್ ಸ್ಪರ್ಧೆಗಳಲ್ಲಿ ಮೊದಲ ಮತ್ತು ಎರಡನೇಯ ಸ್ಥಾನ ಗಳಿಸಿರುವ ತಂಡಗಳು ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಲಿವೆ ಎಂದು ಅಕಾಡಮಿಯ ಪ್ರಕಟನೆ ತಿಳಿಸಿದೆ.

ವಾರ್ತಾ ಭಾರತಿ 19 Dec 2025 7:15 pm

ಯಾದಗಿರಿ | ಮಾದಕ ವಸ್ತುಗಳ ಸೇವನೆ ಮಾಡಿ ವಾಹನ ಚಲಾಯಿಸಬೇಡಿ : ಪಿಐ ಶಿವಾನಂದ ಎಂ.ಮರಡಿ

ಯಾದಗಿರಿ/ ಸೈದಾಪುರ: ವಾಹನ ಚಾಲಕರು ಚಾಲನೆ ಸಮಯದಲ್ಲಿ ಮಾದಕ ವಸ್ತುಗಳ ಸೇವನೆ ಮಾಡಿ ವಾಹನ ಚಲಾಯಿಸಿಬೇಡಿ ಎಂದು ಸೈದಾಪುರ ಪೊಲೀಸ್ ಠಾಣೆಯ ಪಿಐ ಶಿವಾನಂದ ಎಂ.ಮರಡಿ ತಿಳಿಸಿದರು. ಪಟ್ಟಣಕ್ಕೆ ಹತ್ತಿ ತುಂಬಿಕೊಂಡು ಆಗಮಿಸಿದ ಟ್ರಾಕ್ಟರ್, ಬೊಲೇರೋ, ಟೆಂಪೋ ವಾಹನ ಚಾಲಕರನ್ನು ಹಾಗೂ ರೈತರನ್ನು ಒಂದೆಡೆ ಸೇರಿಸಿ ಅಪರಾಧ ತಡೆ ಮಾಸಾಚರಣೆ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿ ಅವರು ಮಾತನಾಡಿದರು.  ವಾಹನ ಚಾಲಕರು, ಯುವಜನತೆ ಮಾದಕ ವಸ್ತುಗಳ ಸೇವನೆಯಿಂದ ಸಾಕಷ್ಟು ದುಷ್ಪರಿಣಾಮಗಳು ಉಂಟಾಗುತ್ತವೆ. ನಷೆ, ಅಮಲು ಪದಾರ್ಥಗಳ ಸೇವೆನೆಯ ಸಮಯದಲ್ಲಿ ಅಪರಾಧಗಳ ಹೆಚ್ಚಾಗಿ ನಡೆಯುತ್ತವೆ. ಅಷ್ಟೇ ಅಲ್ಲದೆ ಮಾದಕ ವಸ್ತು ಮಾರಾಟ, ಸಾಗಣೆ, ಹಾಗೂ ಸೇವನೆ ಕೂಡ ಅಪರಾಧವಾಗಿದ್ದು, ನಿದ್ದೆ ಮಂಪರಿನಲ್ಲಿ ಅಮಲು ಪದಾರ್ಥಗಳ ಸೇವನೆ ಮಾಡಿ ವಾಹನಗಳನ್ನು ಚಲಾಯಿಸಬಾರದು, ಚಾಲಕರು ಕಡ್ಡಾಯವಾಗಿ ಪರವಾನಗಿ ತೆಗೆದುಕೊಂಡಿರಬೇಕು ಎಂದರು. ಈ ಸಂದರ್ಭದಲ್ಲಿ ಅಪರಾಧ ವಿಭಾಗದ ಪಿಎಸ್ಐ ಅಲ್ಲಾಭಕ್ಷ, ಪೊಲೀಸ್ ಪೇದೆ ನೂರಂದು ನೈಕೋಡಿ ಸೇರಿದಂತೆ ಇತರರಿದ್ದರು. 

ವಾರ್ತಾ ಭಾರತಿ 19 Dec 2025 7:13 pm

ರೈತರು ಕಬ್ಬು ಬೆಳೆಯದಿದ್ದರೆ ಫ್ಯಾಕ್ಟರಿಗಳನ್ನಿಟ್ಟುಕೊಂಡು ಏನು ಮಾಡುತ್ತೀರಿ? : ಸಕ್ಕರೆ ಕಾರ್ಖಾನೆ ಮಾಲೀಕರಿಗೆ ಹೈಕೋರ್ಟ್ ತರಾಟೆ

ಬೆಂಗಳೂರು : ರಾಜ್ಯ ಸರಕಾರ ಕಬ್ಬಿಗೆ ನಿಗದಿಪಡಿಸಿರುವ ದರ ಪಾವತಿಸಲು ಮೀನಮೇಷ ಎಣಿಸುತ್ತಿರುವ ಸಕ್ಕರೆ ಕಾರ್ಖಾನೆಗಳ ಮಾಲೀಕರನ್ನು ತೀವ್ರ ತರಾಟೆಗೆ ತೆಗೆದುಕೊಂಡಿರುವ ಹೈಕೋರ್ಟ್‌ , ರೈತರು ಕಬ್ಬು ಬೆಳೆಯುವುದನ್ನು ನಿಲ್ಲಿಸಿದರೆ ನಿಮ್ಮ ಕಾರ್ಖಾನೆಗಳನ್ನಿಟ್ಟುಕೊಂಡು ಏನು ಮಾಡುವಿರಿ? ಹಣ ನೀಡಲು ಸಾಧ್ಯವಾಗದಿದ್ದರೆ ಕಬ್ಬು ಬೆಳಯಬೇಡಿ ಎಂದು‌ ರೈತರಿಗೆ ಹೇಳಿ, ಅವರು ಬೇರೆ ಏನನ್ನಾದರೂ ಬೆಳೆಯುತ್ತಾರೆ ಎಂದು ಕಿಡಿಕಾರಿದೆ. ಪ್ರಸಕ್ತ ಸಾಲಿನಲ್ಲಿ ಪ್ರತಿ ಟನ್‌ ಕಬ್ಬಿಗೆ ಕೇಂದ್ರ ಸರಕಾರ ನಿಗದಿಪಡಿಸಿರುವ ನ್ಯಾಯಯುತ ಮತ್ತು ಲಾಭದಾಯಕ ದರಕ್ಕಿಂತಲೂ (ಎಫ್‌ಆರ್‌ಪಿ) ಹೆಚ್ಚಿನ ದರ ನಿಗದಿಪಡಿಸಿ ರಾಜ್ಯ ಸರಕಾರ ನವೆಂಬರ್‌ 8ರಂದು ಹೊರಡಿಸಿರುವ ಅಧಿಸೂಚನೆ ರದ್ದು ಕೋರಿ ಸೌತ್‌ ಇಂಡಿಯನ್‌ ಶುಗರ್‌ ಮಿಲ್ಸ್‌ ಅಸೋಸಿಯೇಷನ್ಸ್‌, ಬಿಜೆಪಿ ನಾಯಕ ಮುರುಗೇಶ್‌ ನಿರಾಣಿ ಒಡೆತನದ ನಿರಾಣಿ ಶುಗರ್ಸ್‌ ಲಿಮಿಟೆಡ್‌, ರೇಣುಕಾ ಶುಗರ್ಸ್‌, ಜೆಮ್‌ ಶುಗರ್ಸ್‌, ಕೆಪಿಆರ್‌ ಶುಗರ್ಸ್‌ ಆ್ಯಂಡ್‌ ಅಪರಾಲ್ಸ್‌ ಲಿಮಿಟೆಡ್‌ ಹಾಗೂ ಗೋದಾವರಿ ಬಯೋ ರಿಫೈನರೀಸ್‌ ಲಿಮಿಟೆಡ್‌ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಸೂರಜ್‌ ಗೋವಿಂದರಾಜ್‌ ಅವರಿದ್ದ ಏಕಸದಸ್ಯ ನ್ಯಾಯಪೀಠ ಶುಕ್ರವಾರ ವಿಚಾರಣೆ ನಡೆಸಿತು. ಅರ್ಜಿದಾರರ ಪರ ಹಿರಿಯ ವಕೀಲ ಎಚ್‌.ಎನ್‌. ಶಶಿಧರ್‌ ವಾದ ಮಂಡಿಸಿ ದಕ್ಷಿಣ ಕರ್ನಾಟಕದಲ್ಲಿ 81 ಕಾರ್ಖಾನೆಗಳ ಪೈಕಿ 19 ಕಾರ್ಖಾನೆಗಳು ಈಗಾಗಲೇ ಹಣ ಪಾವತಿಸಿವೆ. ಉಳಿದ 62ರಲ್ಲಿ 12 ಸಂಸ್ಥೆಗಳು ನ್ಯಾಯಾಲಯದ ಮುಂದೆ ಬಂದಿವೆ. ಸೌತ್‌ ಇಂಡಿಯನ್‌ ಶುಗರ್ಸ್‌ ಸಂಸ್ಥೆಯು 50 ಕಾರ್ಖಾನೆಗಳನ್ನು ಪ್ರತಿನಿಧಿಸುತ್ತದೆ. ನಾವು ಎಫ್‌ಆರ್‌ಪಿಯನ್ನು ಪಾವತಿಸಿದ್ದೇವೆ. ರಾಜ್ಯ ಸರಕಾರ ಹೆಚ್ಚುವರಿಯಾಗಿ ನಿಗದಿಪಡಿಸಿರುವ ದರವನ್ನು ಪಾವತಿಸುವಂತೆ ಆದೇಶಿಸಿದರೆ ಸಾಕಷ್ಟು ಕಾರ್ಖಾನೆಗಳು ದಿವಾಳಿಯಾಗಲಿವೆ. ಆದ್ದರಿಂದ, ನ್ಯಾಯಾಲಯ ನಮ್ಮ ನೆರವಿಗೆ ಧಾವಿಸಬೇಕು ಎಂದು ಕೋರಿದರು. ಹಿರಿಯ ವಕೀಲ ಪ್ರಭುಲಿಂಗ ನಾವದಗಿ ಅವರು, ರಾಜ್ಯ ಸರಕಾರ ಹೆಚ್ಚುವರಿಯಾಗಿ ಪ್ರತಿ ಟನ್‌ ಕಬ್ಬಿಗೆ 200 ರೂ. ದರ ಹೆಚ್ಚಿಸಿರುವುದಕ್ಕೆ ಸಂಬಂಧಿಸಿದಂತೆ ಸಕ್ಕರೆ ನಿಯಂತ್ರಣ ಮಂಡಳಿಗೆ ಅರ್ಜಿದಾರ ಸಕ್ಕರೆ ಕಾರ್ಖಾನೆಗಳು ಮತ್ತು ಸೌತ್‌ ಇಂಡಿಯನ್‌ ಶುಗರ್‌ ಮಿಲ್ಸ್‌ ಅಸೋಸಿಯೇಷನ್ಸ್‌ 10 ದಿನಗಳಲ್ಲಿ ಮನವಿ ಸಲ್ಲಿಸಲಿವೆ. ಕಬ್ಬು ಬೆಳೆಗಾರರಿಗೆ ತಕ್ಷಣ ಹಣ ಬಿಡುಗಡೆ ಮಾಡುವುದಕ್ಕೆ ಸಕ್ಕರೆ ಕಾರ್ಖಾನೆಗಳಿಗೆ ಎದುರಾಗಿರುವ ಸಮಸ್ಯೆಗೆ ಸಂಬಂಧಿಸಿದಂತೆ ರಾಜ್ಯ ಸರಕಾರಕ್ಕೆ ಪ್ರತ್ಯೇಕವಾಗಿ ಮನವಿ ಸಲ್ಲಿಸಲಾಗುವುದು. ಈ ಕುರಿತು ನಿರ್ಧಾರ ಕೈಗೊಳ್ಳಲು ಆದೇಶಿಸಬೇಕು ಎಂದರು. ರಾಜ್ಯ ಸರಕಾರದ ಪರ ಹಾಜರಿದ್ದ ಅಡ್ವೊಕೇಟ್‌ ಜನರಲ್‌ ಕೆ. ಶಶಿಕಿರಣ್‌ ಶೆಟ್ಟಿ ಅವರು, ಸರಕಾರಕ್ಕೆ ಸಲ್ಲಿಸುವ ಮನವಿ ಸಂಬಂಧ ನಿರ್ಧಾರ ಕೈಗೊಳ್ಳಲು ತಿಂಗಳು ಕಾಲಾವಕಾಶ ನೀಡಬೇಕು ಎಂದರು. ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ, ಕರ್ನಾಟಕ ಕಬ್ಬು (ಖರೀದಿ ಮತ್ತು ಪೂರೈಕೆ ನಿಯಂತ್ರಣ) ಕಾಯ್ದೆ-2013ರ ಅನ್ವಯ ಸಕ್ಕರೆ ಕಾರ್ಖಾನೆಗಳು ಮತ್ತು ಸೌತ್‌ ಇಂಡಿಯನ್‌ ಶುಗರ್‌ ಮಿಲ್ಸ್‌ ಅಸೋಸಿಯೇಷನ್ಸ್‌ ಸಲ್ಲಿಸುವ ಮನವಿ ಕುರಿತು ಸಕ್ಕರೆ ನಿಯಂತ್ರಣ ಮಂಡಳಿಯು ಆದಷ್ಟು ಶೀಘ್ರವಾಗಿ ಸೂಕ್ತ ಆದೇಶ ಹೊರಡಿಸಬೇಕು. ಸಕ್ಕರೆ ಕಾರ್ಖಾನೆಗಳು ಸಲ್ಲಿಸುವ ಮನವಿ ಸಂಬಂಧ ಸರಕಾರ 3 ವಾರಗಳಲ್ಲಿ ನಿರ್ಧಾರ ಕೈಗೊಳ್ಳಬೇಕು ಎಂದು ನಿರ್ದೇಶಿಸಿ, ವಿಚಾರಣೆಯನ್ನು ಜನವರಿ ತಿಂಗಳ ಕೊನೆಯ ವಾರಕ್ಕೆ ಮುಂದೂಡಿತು.

ವಾರ್ತಾ ಭಾರತಿ 19 Dec 2025 7:07 pm

ಕುರ್ಚಿ ಕಾಳಗ; ಸಿದ್ದರಾಮಯ್ಯ ಜೊತೆಗೆ ಒಪ್ಪಂದ ಆಗಿದ್ದು, ನಿಜ: ‌ಅಚ್ಚರಿ ಸತ್ಯ ಬಿಚ್ಚಿಟ್ಟ ಡಿ ಕೆ ಶಿವಕುಮಾರ್

ಗೋಕರ್ಣ, ಡಿಸೆಂಬರ್‌ 19: ನನ್ನ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ನಡುವೆ ಒಂದು ಒಪ್ಪಂದವಾಗಿದೆ. ಹೈಕಮಾಂಡ್ ಒಂದು ಒಪ್ಪಂದಕ್ಕೆ ತಂದಿದೆ. ಆ ಪ್ರಕಾರ ನಾವಿಬ್ಬರೂ ನಡೆದುಕೊಂಡು ಹೋಗುತ್ತೇವೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು. ನಮ್ಮ ಮಧ್ಯೆ ಎರಡೂವರೆ ವರ್ಷದ ಒಪ್ಪಂದ ಆಗಿಲ್ಲ ಎಂಬ ಸಿಎಂ ಹೇಳಿಕೆ ಕುರಿತು ಗೋಕರ್ಣದಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಅವರು, ಅವರು

ಒನ್ ಇ೦ಡಿಯ 19 Dec 2025 7:06 pm

ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ : ಬಿ.ನಾಗೇಂದ್ರಗೆ ಸೇರಿದ 8 ಕೋಟಿ ರೂ. ಮೌಲ್ಯದ ಆಸ್ತಿ ಜಪ್ತಿ

ಬೆಂಗಳೂರು : ಜಾರಿ ನಿರ್ದೇಶನಾಲಯವು(ಈ.ಡಿ.) ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಲ್ಲಿ(ಕೆಎಂವಿಎಸ್‍ಟಿಡಿಸಿಎಲ್) ನಡೆದಿರುವ ಹಗರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಬಿ.ನಾಗೇಂದ್ರ ಅವರಿಗೆ ಸೇರಿದ ಸುಮಾರು 8 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಜಪ್ತಿ ಮಾಡಿದೆ. ಶುಕ್ರವಾರ ಜಾರಿ ನಿರ್ದೇಶನಾಲಯವು ಪ್ರಕಟನೆ ಹೊರಡಿಸಿದ್ದು, ನಿಗಮದ ನಿಧಿಯ ದುರುಪಯೋಗ ಮತ್ತು ಬೇರೆಡೆಗೆ ವರ್ಗಾವಣೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ 2002ರ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯ(ಪಿಎಂಎಲ್‍ಎ) ನಿಬಂಧನೆಗಳ ಅಡಿಯಲ್ಲಿ ಮಾಜಿ ಸಚಿವ ಬಿ. ನಾಗೇಂದ್ರ ಅವರಿಗೆ ಸೇರಿದ ವಸತಿ, ವಾಣಿಜ್ಯ ಭೂಮಿ ಮತ್ತು ಕಟ್ಟಡ ಸೇರಿದಂತೆ ನಾಲ್ಕು ಸ್ಥಿರ ಆಸ್ತಿಗಳನ್ನು ತಾತ್ಕಾಲಿಕವಾಗಿ ಜಪ್ತಿ ಮಾಡಲಾಗಿದೆ ಎಂದು ತಿಳಿಸಿದೆ. ನಿಗಮದಿಂದ ಹಣದ ದುರುಪಯೋಗ ಅಪರಾಧಗಳಿಗೆ ಸಂಬಂಧಿಸಿದಂತೆ ಕರ್ನಾಟಕ ಪೊಲೀಸ್ ಮತ್ತು ಸಿಬಿಐನಲ್ಲಿ ದಾಖಲಿಸಿರುವ ವಿವಿಧ ಎಫ್‍ಐಆರ್‍ಗಳ ಆಧಾರದ ಮೇಲೆ ಈ.ಡಿ. ತನಿಖೆಯನ್ನು ಪ್ರಾರಂಭಿಸಿತು. ಮೊದಲು, ಕರ್ನಾಟಕ ಮತ್ತು ಇತರ ರಾಜ್ಯಗಳಾದ್ಯಂತ ವಿವಿಧ ಸ್ಥಳಗಳಲ್ಲಿ ಪಿಎಂಎಲ್‍ಎ ಅಡಿಯಲ್ಲಿ ಶೋಧ ಕಾರ್ಯಾಚರಣೆಗಳನ್ನು ನಡೆಸಲಾಯಿತು. ಪ್ರಕರಣದಲ್ಲಿ ಬಿ. ನಾಗೇಂದ್ರ ಸೇರಿದಂತೆ 6 ಮಂದಿ ಆರೋಪಿಗಳನ್ನು ಬಂಧಿಸಿ, ಜಾಮೀನಿನ ಮೇಲೆ ಜೈಲಿನಿಂದ ಬಿಡುಗಡೆ ಮಾಡಲಾಗಿದೆ. ಇದಕ್ಕೂ ಮುನ್ನ ಇತರ ಆರೋಪಿಗಳಿಗೆ ಸೇರಿದ 4.94 ಕೋಟಿ ರೂ.ಗಳ ಚರ ಮತ್ತು ಸ್ಥಿರ ಆಸ್ತಿಗಳನ್ನು ಜಪ್ತಿ ಮಾಡಲಾಗಿತ್ತು. ಈಗ ಬಿ. ನಾಗೇಂದ್ರ ಅವರಿಗೆ ಸೇರಿದ ನಾಲ್ಕು ಸ್ಥಿರ ಆಸ್ತಿಗಳನ್ನು ಜಪ್ತಿ ಮಾಡಲಾಗಿದೆ ಎಂದು ಈ.ಡಿ. ತಿಳಿಸಿದೆ. ಈ ಆಸ್ತಿಗಳನ್ನು ಪಿಎಂಎಲ್‍ಎ ಅಡಿಯಲ್ಲಿ ‘ಅಪರಾಧದ ಆದಾಯ’ ಎಂದು ಈ.ಡಿ. ಗುರುತಿಸಿದೆ. ಅಪರಾಧದ ಉಳಿದ ಆದಾಯವನ್ನು ಪತ್ತೆಹಚ್ಚಲು ಸಾಧ್ಯವಾಗಲಿಲ್ಲ. ಅವುಗಳಿಗೆ ಬಿ ನಾಗೇಂದ್ರ ಈಗಾಗಲೇ ಬೇರೆ ವ್ಯವಸ್ಥೆ ಮಾಡಿರಬಹುದು ಅಥವಾ ಮರೆಮಾಡಿರಬಹುದು ಎಂದು ಈ.ಡಿ. ಪ್ರಕಟನೆಯಲ್ಲಿ ಹೇಳಿದೆ.

ವಾರ್ತಾ ಭಾರತಿ 19 Dec 2025 7:01 pm

ಸಂಚಾರ ದಂಡ ಪ್ರಕ್ರಿಯೆ| ಸೈಬರ್ ವಂಚಕರ ಬಲೆಗೆ ಬೀಳದಂತೆ ಕಮಿಷನರ್ ಎಚ್ಚರಿಕೆ

ಮಂಗಳೂರು, ಡಿ.19: ರಾಜ್ಯದಲ್ಲಿ ಸಂಚಾರ ನಿಯಮ ಉಲ್ಲಂಘನೆಗೆ ಸಂಬಂಧಿಸಿದ ದಂಡವನ್ನು ಶೇ.50 ರಿಯಾಯಿತಿಯಲ್ಲಿ ಕಟ್ಟಲು ರಾಜ್ಯ ಸರಕಾರ ಅವಕಾಶ ನೀಡಿರುವುದನ್ನೇ ಸೈಬರ್ ವಂಚಕರು ದುರುಪಯೋಗ ಪಡಿಸುತ್ತಿದ್ದಾರೆ. ಹಾಗಾಗಿ ದಂಡದ ನೆಪದಲ್ಲಿ ಮೋಸದ ಬಲೆಗೆ ಬೀಳದಿರಿ ಎಂದು ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಸಾರ್ವಜನಿಕರಿಗೆ ಎಚ್ಚರಿಕೆಯ ಸಂದೇಶ ನೀಡಿದ್ದಾರೆ. ಸಂಚಾರ ನಿಯಮ ಉಲ್ಲಂಘನೆ ದಂಡ ಕಟ್ಟಲು ಯಾವುದೇ ಆ್ಯಪ್‌ಗಳಿಲ್ಲ. ಎಪಿಕೆ ಮಾದರಿ ಫೈಲ್‌ಗಳನ್ನು ಯಾವತ್ತೂ ಕೂಡ ಡೌನ್ಲೋಡ್ ಮಾಡಬಾರದು. ಒಂದು ವೇಳೆ ಮಾಡಿದರೆ ನಿಮ್ಮ ಮೊಬೈಲ್ ಹ್ಯಾಕ್ ಆಗಬಹುದು ಮತ್ತು ಮೊಬೈಲ್ ಸಂಪರ್ಕದಲ್ಲಿರುವ ಬ್ಯಾಂಕ್ ಖಾತೆಗಳ ವಿವರಗಳು ಸೈಬರ್ ವಂಚಕರಿಗೆ ಸಿಗಬಹುದು. ಸಾರಿಗೆ ಇಲಾಖೆಯ ವೆಬ್‌ಸೈಟ್ ಅಥವಾ ಕರ್ನಾಟಕ ವನ್ ಸೆಂಟರ್ ಮೂಲಕ ದಂಡವನ್ನು ಪಾವತಿಸಿ. ಈಗಾಗಲೆ ಮೆಸೇಜ್ ಮೂಲಕ ಎಪಿಕೆ ಫೈಲ್ಸ್ ಲಿಂಕ್‌ನ್ನು ಮಂಗಳೂರಿನ ಇಬ್ಬರು ಡೌನ್ಲೋನ್ ಮಾಡಿ ತೊಂದರೆ ಸಿಲುಕಿದ್ದಾರೆ. ಹಾಗಾಗಿ ಸಾರ್ವಜನಿಕರು ಹೆಚ್ಚಿನ ಎಚ್ಚರಿಕೆ ವಹಿಸಬೇಕು ಎಂದು ಕಮಿಷನರ್ ಸಾರ್ವಜನಿಕರಿಗೆ ಎಂದು ಕಮಿಷನರ್ ಸೂಚಿಸಿದ್ದಾರೆ.

ವಾರ್ತಾ ಭಾರತಿ 19 Dec 2025 7:01 pm

ಯಾದಗಿರಿ | ಸರಕಾರದ ಬೆಂಬಲ ಬೆಲೆ ಯೋಜನೆಯಡಿ ತೊಗರಿ ಕಾಳು ಖರೀದಿ ಕೇಂದ್ರ ಸ್ಥಾಪನೆ : ಡಿಸಿ ಹರ್ಷಲ್ ಭೋಯರ್

ಯಾದಗಿರಿ: ಜಿಲ್ಲೆಯ ರೈತ ಭಾಂಧವರು ಸರಕಾರದ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ಎಫ್.ಎ.ಕ್ಯೂ ಗುಣಮಟ್ಟದ ತೊಗರಿ ಕಾಳು, ಪ್ರತಿ ಕ್ವಿಂಟಾಲ್‌ಗೆ 8,000 ರೂ. ನಂತೆ ಪ್ರತಿ ಎಕರೆಗೆ 4 ಕ್ವಿಂಟಲ್‌ ಗರಿಷ್ಠ ತೊಗರಿ ಕಾಳು ಹಾಗೂ ಪ್ರತಿ ರೈತರಿಂದ ಫ್ರೂಟ್ಸ್ ತಂತ್ರಾಂಶದಲ್ಲಿ ನಮೂದಿಸಿರುವ ಜಮೀನಿನ ಪ್ರಮಾಣದಂತೆ ರೈತರ ನೋಂದಣಿ ಕಾಲಾವಧಿಯನ್ನು 80 ದಿನಗಳವರೆಗೆ ಹಾಗೂ ಖರೀದಿ ಅವಧಿಯನ್ನು 90 ದಿನಗಳ ವರೆಗೆ ನಿಗಧಿಪಡಿಸಿದೆ ಎಂದು ಜಿಲ್ಲಾಧಿಕಾರಿ ಹರ್ಷಲ್ ಭೋಯರ್ ಅವರು ತಿಳಿಸಿದ್ದಾರೆ. ರೈತರು POS ಯಂತ್ರಗಳ ಮೂಲಕ ರೈತರ ನೊಂದಣಿ ಹಾಗೂ ಖರೀದಿ ಪ್ರಕ್ರಿಯೆಯಲ್ಲಿ UIDAI ಬಯೋಮೆಟ್ರಿಕ್ ಮೂಲಕ ಸಂಬಂಧಿಸಿದ ಖರೀದಿ ಕೇಂದ್ರಗಳಲ್ಲಿ ನೊಂದಾಯಿಸುವುದು ಕಡ್ಡಾಯವಾಗಿರುತ್ತದೆ. ಹುಟ್ಟುವಳಿ ಮಾರಾಟ ಮಾಡಿದ ರೈತರಿಗೆ DBT ಮೂಲಕ ಹಣ ಪಾವತಿಸಲಾಗುವುದು. ಈ ಕೆಳಕಾಣಿಸಿದ ಖರೀದಿ ಕೇಂದ್ರಗಳನ್ನು ತೆರೆಯಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಸಂಬಂಧಿಸಿದ ಕೇಂದ್ರಗಳಿಗೆ ಸಂಪರ್ಕಿಸಿ, ಸದರಿ ಯೋಜನೆಯ ಲಾಭ ಪಡೆಯಲು ಅವರು ಕೋರಿದ್ದಾರೆ. ಯಾದಗಿರಿ ತಾಲೂಕಿನ ಪಿಎಸಿಎಸ್ ಹತ್ತಿ ಕುಣಿ 7892741116, ಯಾದಗಿರಿ ಟಿಎಪಿಸಿಎಮ್‌ಎಸ್ - 7019524908 ಹಾಗೂ ಪಿಎಸಿಎಸ್ ರಾಮಸಮುದ್ರ -9945405710 ಗೆ ಸಂಪರ್ಕಿಸಬಹುದು. ಶಹಾಪುರ ತಾಲೂಕಿನ ಶಹಾಪುರ ಟಿಎಪಿಸಿಎಮ್‌ಎಸ್ -9448577858, ಪಿಎಸಿಎಸ್ ಚಾಮನಾಳ- 80882886797, ಹೊಸಕೇರಾ ಪಿಎಸಿಎಸ್ -9741138687, ಎಫ್ ಪಿ ಓ ಗಂಗನಾಳ -9902623346, ಪಿಎಸಿಎಸ್ ದೋರನಹಳ್ಳಿ -9902124640 , ಪಿಎಸಿಎಸ್ ಮದ್ರಕಿ 9980944446 ಗೆ ಸಂಪರ್ಕಿಸಬೇಕು. ಸುರಪುರ ತಾಲೂಕಿನ ಟಿಎಪಿಸಿಎಮ್‌ಎಸ್ 7259688231, ಕೆಂಭಾವಿ ಪಿಎಸಿಎಸ್-(1) ,8970100234, ಕೆಂಭಾವಿ ಪಿಎಸಿಎಸ್ (2)-9741854971 , ಪಿಎಸಿಎಸ್ ಮಾಲಗತ್ತಿ-9108636156, ಪಿಎಸಿಎಸ್ ಮುನಿರ್ ಬೊಮ್ಮನಹಳ್ಳಿ 9663157756, ಪಿಎಸಿಎಸ್ ನಗನೂರ್ 9880456797 ಹಾಗೂ ಪಿಎಸಿಎಸ್ ಯಾಳಗಿ - 9945767305 ಗೆ ಸಂಪರ್ಕಿಸಬಹುದು. ಹುಣಸಗಿ ತಾಲೂಕಿನ ಟಿ ಎಪಿಸಿಎಂಎಸ್ ಹುಣಸಗಿ- 9535220396, ಪಿಎಸಿಎಸ್ ಕೊಡೆಕಲ್ 7349666155, ಪಿಎಸಿಎಸ್ ರಾಜನ್ ಕೊಳೂರು- 9741764178, ಪಿಎಸಿಎಸ್ ಹಗರಟಗಿ 9361935156 ಸಂಪರ್ಕಿಸಬೇಕು. ವಡಗೇರಾ ತಾಲೂಕಿನ ಪಿಎಸಿಎಸ್ ಬೆಂಡೆಗಂಬಳಿ 9902813005, ಪಿಎಸಿಎಸ್ ಹೈಯಾಳ ಬಿ 9110603122, ಪಿಎಸಿಎಸ್ ನಾಯ್ಕಲ್ - 974161655 , ಗುರುಮಠಕಲ್ ತಾಲೂಕಿನ ಪಿಎಸಿಎಸ್ ಚಪೇಟ್ಲ 7259543708, ಎಫ್‌ಪಿಓ ಗುರುಮಠಕಲ್ 7259543708, ಸೈದಾಪುರ ಎಫ್‌ಪಿಓ 7022192270, ಎಫ್‌ಪಿಓ ಕೊಂಕಲ್- 7204922282 ಸಂಪರ್ಕಿಸಲು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಾರ್ತಾ ಭಾರತಿ 19 Dec 2025 6:58 pm

ಅಬ್ದುಲ್ ರಹ್ಮಾನ್ ಕೊಲೆ ಪ್ರಕರಣ| ಮಂಗಳೂರು: ಸರಕಾರದ ವೈಫಲ್ಯ ಖಂಡಿಸಿ ಎಸ್‌ಡಿಪಿಐ ಪ್ರತಿಭಟನೆ

ಮಂಗಳೂರು: ಬಂಟ್ವಾಳ ತಾಲೂಕಿನ ಕೊಳತ್ತಮಜಲುವಿನಲ್ಲಿ ಅಬ್ದುಲ್ ರಹ್ಮಾನ್‌ರ ಕೊಲೆ ಪ್ರಕರಣದ ಆರೋಪಿಗಳ ವಿರುದ್ಧ ಕಠಿಣ ಕ್ರಮಕೈಗೊಳ್ಳುವಲ್ಲಿ ಪೊಲೀಸ್ ಇಲಾಖೆ ಮತ್ತು ರಾಜ್ಯ ಸರಕಾರದ ವೈಫಲ್ಯ ಖಂಡಿಸಿ ಎಸ್‌ಡಿಪಿಐ ದ.ಕ. ಜಿಲ್ಲಾ ಸಮಿತಿಯು ಶುಕ್ರವಾರ ನಗರದ ಕ್ಲಾಕ್ ಟವರ್ ಬಳಿ ಪ್ರತಿಭಟನೆ ನಡೆಸಿತು. ಎಸ್‌ಡಿಪಿಐ ದ.ಕ.ಜಿಲ್ಲಾ ಉಪಾಧ್ಯಕ್ಷ ಮುನೀಶ್ ಅಲಿ ಮಾತನಾಡಿ ರಹ್ಮಾನ್ ಕೊಲೆ ಪ್ರಕರಣದಲ್ಲಿ ರಾಜ್ಯ ಸರಕಾರ ಮತ್ತು ಪೊಲೀಸ್ ಇಲಾಖೆಯು ನ್ಯಾಯ ದೊರಕಿಸಿಕೊಡುವಲ್ಲಿ ವಿಫಲವಾಗಿದೆ. ನ್ಯಾಯಕ್ಕಾಗಿ ಕೊಲೆಯಾದ ರಹ್ಮಾನ್ ಮತ್ತು ಗಾಯಾಳು ಕಲಂದರ್ ಶಾಫಿ ಕುಟುಂಬಸ್ಥರು ಇನ್ನೂ ಕೂಡ ಅಲೆದಾಡುತ್ತಿದೆ. ರಹ್ಮಾನ್ ಕೊಲೆ ಆರೋಪಿಗಳ ವಿರುದ್ಧ ದಾಖಲಿಸಲಾದ ಕೊಕ ಕಾಯ್ದೆಗೆ ಸಂಬಂಧಿಸಿ ಸರಕಾರಿ ಅಭಿಯೋಜಕರ ತರಾತುರಿಯ ಪ್ರಕ್ರಿಯೆ ಅಚ್ಚರಿ ಹುಟ್ಟಿಸಿದೆ ಎಂದು ಹೇಳಿದರು. ಎಸ್‌ಡಿಪಿಐ ರಾಷ್ಟ್ರೀಯ ಕಾರ್ಯದರ್ಶಿ ರಿಯಾಝ್ ಫರಂಗಿಪೇಟೆ ಮಾತನಾಡಿ ಕಾಂಗ್ರೆಸ್ ಪಕ್ಷ ಮತ್ತು ಸರಕಾರ ಮುಸ್ಲಿಮರಿಗೆ ನ್ಯಾಯ ದೊರಕಿಸಿಕೊಡುವಲ್ಲಿ ಎಡವಿದೆ. ದ.ಕ.ಜಿಲ್ಲೆಯ ವಿದ್ಯಮಾನದ ಬಗ್ಗೆ ಅವಲೋಕಿಸಲು ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್‌ರನ್ನು ಕೂಡ ದಾರಿ ತಪ್ಪಿಸಲಾಗಿದೆ ಎಂದರಲ್ಲದೆ, ದಕ್ಷ ಪೊಲೀಸ್ ಅಧಿಕಾರಿ ಎಂದು ಗುರುತಿಸಲ್ಪಟ್ಟ ದ.ಕ.ಜಿಲ್ಲಾ ಎಸ್ಪಿಯ ದಕ್ಷತೆಯು ರಹ್ಮಾನ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಯಾಕಿಲ್ಲ? ಅವರ ಕರ್ತವ್ಯ ನಿಷ್ಠೆ ಏನಾಯಿತು? ಎಂದು ಪ್ರಶ್ನಿಸಿದರು. ಎಸ್‌ಡಿಪಿಐ ರಾಜ್ಯ ಕಾರ್ಯದರ್ಶಿ ರಿಯಾಝ್ ಕಡಂಬು ಮಾತನಾಡಿ ಕೊಲೆಯಾದ ರಹ್ಮಾನ್ ಕುಟುಂಬಕ್ಕೆ ನ್ಯಾಯ ಸಿಗುವವರೆಗೆ ಹೋರಾಟ ಮುಂದುವರಿಯಲಿದೆ. ಜಾನುವಾರು ಸಾಗಾಟ ಪ್ರತಿಬಂಧಕ ಕಾಯ್ದೆಯ ಬಗ್ಗೆ ಜಿಲ್ಲೆಯ ಪೊಲೀಸ್ ಅಧಿಕಾರಿಗಳು ತೋರುವ ಆಸಕ್ತಿಯು ಕೊಳತ್ತಮಜಲಿನ ರಹ್ಮಾನ್ ಕೊಲೆಗೆ ಪ್ರಕರಣಕ್ಕೆ ಇಲ್ಲದಿರುವುದು ವಿಷಾದನೀಯ ಎಂದರು. ಎಸ್‌ಡಿಪಿಐ ದ.ಕ.ಜಿಲ್ಲಾ ಅಧ್ಯಕ್ಷ ಅನ್ವರ್ ಸಾದಾತ್ ಬಜತ್ತೂರು ಅಧ್ಯಕ್ಷತೆ ವಹಿಸಿದ್ದರು. ಎಸ್‌ಡಿಪಿಐ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಮಾಲ್ ಜೋಕಟ್ಟೆ ಸ್ವಾಗತಿಸಿದರು.      

ವಾರ್ತಾ ಭಾರತಿ 19 Dec 2025 6:53 pm

ಬೀದರ್ | ವಿಬಿ-ಜಿ ರಾಮ್ ಜಿ ಮಸೂದೆ ಹಿಂಪಡೆಯದಿದ್ದರೆ ರಾಜ್ಯದಾದ್ಯಂತ ಹೋರಾಟ : ಸಪ್ನದೀಪಾ ಎಚ್ಚರಿಕೆ

ಬೀದರ್ : ಕೇಂದ್ರ ಸರಕಾರ ವಿಬಿ-ಜಿ ರಾಮ್ ಜಿ ಮಸೂದೆ ಹಿಂಪಡೆಯದಿದ್ದರೆ ರಾಜ್ಯದಾದ್ಯಂತ ಹೋರಾಟ ನಡೆಸಲಾಗುವುದು ಎಂದು ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆ ಅಧ್ಯಕ್ಷೆ ಸಪ್ನದೀಪಾ ಅವರು ಎಚ್ಚರಿಸಿದರು. ಶುಕ್ರವಾರ ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ವಿಕಸಿತ ಭಾರತ-ರೋಜಗಾರ ಮತ್ತು ಅಜೀವಿಕಾ ಮಿಷನ್ (ಗ್ರಾಮೀಣ) (VB-G RAM G) 2025 ಮಸೂದೆಯನ್ನು ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆ ಖಂಡಿಸುತ್ತದೆ. ಕಾರ್ಮಿಕರು ಮತ್ತು ಯಾವುದೇ ಕಾರ್ಮಿಕ ಗುಂಪುಗಳ ಜೊತೆ ಸಮಾಲೋಚನೆ ನಡೆಸದೆ ಈ ಮಸೂದೆಯನ್ನು ರಚಿಸಿದೆ. ಈ ಮಸೂದೆ MGNREGA-2025 ಅನ್ನು ಪೂರ್ಣ ಪ್ರಮಾಣದಲ್ಲಿ ಕಿತ್ತೊಗೆಯುವ ಹುನ್ನಾರವಾಗಿದೆ ಎಂದು ಆರೋಪಿಸಿದರು. ಉದ್ಯೋಗ ಖಾತ್ರಿಯನ್ನು ಕೇಂದ್ರ ಸರಕಾರದ ಬಿಗಿ ಮುಷ್ಠಿಯಿಂದ ಕೇಂದ್ರಿಕೃತ, ವಿವೇಚನಾಯುಕ್ತ ಬಜೆಟ್ ಅನ್ನು ನಿಯಂತ್ರಿಸುವ ಯೋಜನೆಯನ್ನಾಗಿ ಬದಲಾಯಿಸಲು ಹೊರಟಿದೆ. ಹಾಗಾಗಿ ಬಡವರ ಉದ್ಯೋಗದ ಹಕ್ಕನ್ನು ಕಸಿದುಕೊಳ್ಳುವ ಪ್ರಯತ್ನ ಇದಾಗಿದೆ ಎಂದು ಅವರು ಆರೋಪಿಸಿದರು. ಈ ಮಸೂದೆಯ ಪ್ರಕಾರ ಪ್ರತಿ ವರ್ಷ ರಾಜ್ಯವಾರು ಬಜೆಟ್ ಹಂಚಿಕೆಯನ್ನು ಕೇಂದ್ರ ಸರಕಾರ ನಿರ್ಧರಿಸುತ್ತದೆ. ಹಾಗೆಯೇ ಯಾವುದೇ ಹೆಚ್ಚುವರಿ ವೆಚ್ಚವನ್ನು ರಾಜ್ಯ ಸರಕಾರಗಳೇ ಭರಿಸಬೇಕು. ಪ್ರತಿ ರಾಜ್ಯದಲ್ಲಿ ಒದಗಿಸಲಾಗುವ ಮಾನವ ದಿನಗಳ ಸಂಖ್ಯೆಯ ಮೇಲೆ ಮಿತಿಯನ್ನು ಹೇರುತ್ತದೆ. ಈಗಿರುವ ಬಜಟ್‌ನಲ್ಲಿ ಕೇಂದ್ರ ಸರಕಾರವು ಪ್ರತಿ ಕುಟುಂಬಕ್ಕೆ ವರ್ಷಕ್ಕೆ 50 ದಿನಗಳ ಕೆಲಸವನ್ನು ಒದಗಿಸಲು ಸಾಧ್ಯವಾಗುತ್ತಿಲ್ಲ. ಬಜೆಟ್‌ನ್ನು ಕೇಂದ್ರ ಸರಕಾರವೆ ಮಿತಿಗೊಳಿಸುತ್ತ ಹಣವನ್ನು ಸಂಗ್ರಹಿಸಲು ರಾಜ್ಯಗಳ ಮೇಲೆ ಇನ್ನಷ್ಟು ಹಣದ ಹೊರೆ ಹಾಕುವ ಮೂಲಕ ಬಿಜೆಪಿ ಸರಕಾರ 125 ದಿನಗಳ ಉದ್ಯೋಗದ ಹುಸಿ ಭರವಸೆ ನೀಡುತ್ತಿದೆ ಎಂದು ತಿಳಿಸಿದರು. ಕೆಲಸದಿಂದ ಡಿಜಿಟಲ್ ಹಾಜರಾತಿ NMMS ಮತ್ತು ಆಧಾರ್ ಕಾರ್ಡ್ ಆಧಾರಿತ ಪಾವತಿಗಳು ABPS, ಬಯೋಮೇಟ್ರಿಕ್ ದೃಢೀಕರಣದ ಮೂಲಕ ತಾಂತ್ರಿಕ ನಿಯಂತ್ರಣದಂತಹ ತಂತ್ರಜ್ಞಾನ ಉಪಕ್ರಮಗಳಿಂದ ದೊಡ್ಡ ಪ್ರಮಾಣದಲ್ಲಿ ಕಾರ್ಮಿಕರನ್ನು ಹೊರಗಿಡಲಾಗುತ್ತಿದೆ. ವಿಕೇಂದ್ರಿಕರಣ ಮೇಲ್ವಿಚಾರಣೆ ಮತ್ತು ಪ್ರತಿ ವರ್ಷ MGNREGA ಅಡಿಯಲ್ಲಿ ನಡೆಸಲಾಗುವ ಗ್ರಾಮ ಸಭೆಯ ನೇತೃತ್ವದ ಸಾಮಾಜಿಕ ಲೆಕ್ಕ ಪರಿಶೋಧನೆಯ ಪರಿಶೀಲನೆಗಳ ಮೇಲೆ ವಾಸ್ತವವಾಗಿ ಕಾರ್ಯನಿರ್ವಹಿಸುವ ಮೂಲಕ ಭ್ರಷ್ಟಾಚಾರ ನಿಯಂತ್ರಿಸಬಹುದು. ಆದರೆ, ಕಾರ್ಮಿಕರ ಹಕ್ಕುಗಳನ್ನು ನಿರಾಕರಿಸುವ ಹಾಗೂ ಗ್ರಾಮ ಪಂಚಾಯತ್ ಗಳನ್ನು ದುರ್ಬಲಪಡಿಸುವ ಮೂಲಕ ಸಾಮಾಜಿಕ ನ್ಯಾಯವನ್ನೇ ಅಣಕಿಸುವ ಈ ಮಸೂದೆಯನ್ನು ಧಿಕ್ಕರಿಸಿ ಈ ವರ್ಷಾಂತ್ಯದಲ್ಲಿ ಮಸೂದೆ ಕೈ ಬಿಡದಿದ್ದರೆ ಬೀದಿ ಬೀದಿಗಳಲ್ಲಿ ಅನಿರ್ಧಿಷ್ಟಾವಧಿ ಮುಷ್ಕರ ಹಮ್ಮಿಕೊಳ್ಳುವುದಾಗಿ ಅವರು ಎಚ್ಚರಿಕೆ ನೀಡಿದರು. ಈ ಸಂದರ್ಭದಲ್ಲಿ ಗ್ರಾಕೂಸ್ ಸಂಘಟನೆಯ ಪದಾಧಿಕಾರಿಗಳಾದ ಭೀಮ್, ರೇಖಾ, ಗೀತಾ, ಸುರೇಖಾ ಹಾಗೂ ರಾಜಕುಮಾರ್ ಸೇರಿದಂತೆ ಇತರರು ಇದ್ದರು.

ವಾರ್ತಾ ಭಾರತಿ 19 Dec 2025 6:50 pm

ಇಂಡಿಯನ್ ನ್ಯಾಷನಲ್ ಭೀಮ್ ಆರ್ಮಿಯ ಔರಾದ್ ತಾಲೂಕು ಪದಾಧಿಕಾರಿಗಳ ನೇಮಕ

ಬೀದರ್ : ಇಂಡಿಯನ್ ನ್ಯಾಷನಲ್ ಭೀಮ್ ಆರ್ಮಿ ಸಂಘಟನೆಯ ಔರಾದ್ ತಾಲೂಕು ಘಟಕವನ್ನು ರಚಿಸಿ, ಪದಾಧಿಕಾರಿಗಳ ನೇಮಕ ಮಾಡಲಾಯಿತು. ಔರಾದ್ ತಾಲೂಕಿನ ಪ್ರವಾಸಿ ಮಂದಿರದಲ್ಲಿ ಗುರುವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಸಂಘಟನೆಯ ಸಂಸ್ಥಾಪಕ ರಾಜ್ಯಾಧ್ಯಕ್ಷ ದೀಲಿಪಕುಮಾರ್ ವರ್ಮಾ ಅವರು ನೇತೃತ್ವ ವಹಿಸಿದ್ದರು. ಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ನೇಮಕ ಮಾಡಲಾಯಿತು. ಔರಾದ ತಾಲೂಕು ಘಟಕದ ಪದಾಧಿಕಾರಿಗಳು : ಸಂಪತ್‌ಕುಮಾರ್ ಸಕ್ಪಾಲ್ (ಗೌರವಾಧ್ಯಕ್ಷ), ಪ್ರವೀಣ್ ಕಾರಂಜೆ (ತಾಲೂಕು ಅಧ್ಯಕ್ಷ), ಸಂತೋಷ್ ಸೂರ್ಯವಂಶಿ (ಉಪಾಧ್ಯಕ್ಷ), ದಿನೇಶ್ ಶಿಂಧೆ(ಪ್ರಧಾನ ಕಾರ್ಯದರ್ಶಿ), ಸುಂದರ್ ಮೇತ್ರೆ(ಖಜಾಂಚಿ), ಸಿದ್ಧಾರ್ಥ ಭೋಸ್ಲೆ (ಕಾರ್ಯದರ್ಶಿ), ಗಂಗಾರಾಮ್ (ಸಹ ಕಾರ್ಯದರ್ಶಿ), ಪ್ರೇಮ್ ಗೋಡಬೋಲೆ (ಜಂಟಿ ಕಾರ್ಯದರ್ಶಿ) ಹಾಗೂ ಸಂಘಟನಾ ಕಾರ್ಯದರ್ಶಿಗಳಾಗಿ ಅಮೀತ್ ಶಿಂಧೆ, ಸತ್ಯಪಾಲ್ ವಾಘಮಾರೆ, ಗಂಗಾಧರ್ ಸೂರ್ಯವಂಶಿ, ಸತೀಶ್ ಸೂರ್ಯವಂಶಿ, ರಾಹುಲ್ ಸೋನಕಾಂಬಳೆ, ಕಾಂತೇಶ್ ಭಾಲ್ಕೆ, ರಾಹುಲ್ ಭೋರೆ, ಸುಮೀತ್ ಶಿಂಧೆ, ಉತ್ತಮ್ ಗಾಯಕವಾಡ್ ಅವರನ್ನು ನೇಮಿಸಲಾಗಿದೆ. ಸಭೆಯನ್ನು ಉದ್ದೇಶಿಸಿ ಮಾತನಾಡಿದ ದೀಲಿಪಕುಮಾರ್ ವರ್ಮಾ ಅವರು, ಸಂಘಟನೆಯ ತತ್ವ ಸಿದ್ಧಾಂತಗಳ ಅನುಗುಣವಾಗಿ ಸಂಘಟನೆಯನ್ನು ಬಲಪಡಿಸಿ, ಜನಪರ, ದಲಿತಪರ, ರೈತಪರ, ಕಾರ್ಮಿಕಪರ, ಮಹಿಳಾ ಹಾಗೂ ವಿದ್ಯಾರ್ಥಿಪರ ಹೋರಾಟಗಳನ್ನು ಹಮ್ಮಿಕೊಳ್ಳುವ ಮೂಲಕ ಸಂಘಟನೆಯನ್ನು ಸದೃಢಗೊಳಿಸಬೇಕು ಎಂದು ನೂತನ ಪದಾಧಿಕಾರಿಗಳಿಗೆ ಸೂಚನೆ ನೀಡಿದರು.

ವಾರ್ತಾ ಭಾರತಿ 19 Dec 2025 6:46 pm

ರಾಯಚೂರು | ತುರವಿಹಾಳದಲ್ಲಿ ಉಪ ಚುನಾವಣೆ : ಶಸ್ತ್ರಗಳನ್ನು ಠಾಣೆಯಲ್ಲಿಡಲು ಆದೇಶ

ರಾಯಚೂರು : ನಗರ ಸ್ಥಳೀಯ ಸಂಸ್ಥೆ ಸಾರ್ವತ್ರಿಕ ಹಾಗೂ ಉಪ ಚುನಾವಣೆ-2025ರ ಚುನಾವಣಾ ವೇಳಾಪಟ್ಟಿ ಘೋಷಣೆಯಾಗಿರುವ ಹಿನ್ನಲೆಯಲ್ಲಿ ಈ ಚುನಾವಣೆಯು ಶಾಂತಿಯುತವಾಗಿ ನಡೆಸಲು ಮುಂಜಾಗ್ರತೆ ಕ್ರಮವಾಗಿ (ರಾಷ್ಟ್ರೀಕೃತ ಬ್ಯಾಂಕುಗಳು ಹಾಗೂ ರಿಜರ್ವ ಬ್ಯಾಂಕ್ ಅವರಿಂದ ಅನುಮೋದಿಸಿದ ಶೆಡ್ಯೂಲ್ಡ್ ಬ್ಯಾಂಕುಗಳ ಸೆಕ್ಯೂರಟಿ ಗಾರ್ಡಗಳ, ಆಯುಧಗಳನ್ನು ಹೊರತುಪಡಿಸಿ) ಚುನಾವಣಾ ಪ್ರಕ್ರಿಯೆ ಮುಗಿಯುವರೆಗೆ ಸಿಂಧನೂರು ತಾಲೂಕಿನ ತುರ್ವಿಹಾಳ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಆಯುಧಗಳನ್ನು ಪರವಾನಿಗೆದಾರರು ಸಾರ್ವಜನಿಕ ಸ್ಥಳಗಳಲ್ಲಿ ಹೊತ್ತು ಪ್ರದರ್ಶನ ಮಾಡುವುದನ್ನು ನಿಷೇಧಿಸಿ ಹಾಗೂ ಆಯುಧಗಳನ್ನು ಸಂಬಂಧಪಟ್ಟ ಪೊಲೀಸ್ ಠಾಣೆಗೆ ಠೇವಣಿ ಮಾಡುವಂತೆ ಜಿಲ್ಲಾ ದಂಡಾಧಿಕಾರಿಗಳು ಆಗಿರುವ ಜಿಲ್ಲಾಧಿಕಾರಿಗಳಾದ ನಿತೀಶ್ ಕೆ. ಅವರು ಆದೇಶ ಹೊರಡಿಸಿದ್ದಾರೆ.

ವಾರ್ತಾ ಭಾರತಿ 19 Dec 2025 6:33 pm

ಮಂಗನ ಕಾಯಿಲೆ ನಿಯಂತ್ರಣಕ್ಕೆ ರಾಜ್ಯ ಸರ್ಕಾರದಿಂದ ಮಾರ್ಗಸೂಚಿ ಪ್ರಕಟ: ಸಂಪೂರ್ಣ ಮಾಹಿತಿ ಇಲ್ಲಿದೆ

ಬೆಂಗಳೂರು: ಸಾಮಾನ್ಯವಾಗಿ ಮಲೆನಾಡು ಭಾಗದಲ್ಲಿ ಮಂಗನ ಕಾಯಿಲೆ ಹೆಚ್ಚಾಗಿ ಕಂಡು ಬರುತ್ತದೆ. ಚಳಿಗಾಲ ಅಂತ್ಯವಾಗಿ, ಬಿಸಿಲು ಹೆಚ್ಚಾಗುವುದರೊಂದಿಗೆ ಮಲೆನಾಡಿನಲ್ಲಿ ಮಂಗನ ಕಾಯಿಲೆ ವ್ಯಾಪಕವಾಗುತ್ತದೆ. ಆದರೆ, ಈ ಬಾರಿ ಚಳಿಗಾಲದಲ್ಲೇ ಶಿವಮೊಗ್ಗ, ಚಿಕ್ಕಮಗಳೂರು, ಉತ್ತರ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ ಅರಣ್ಯದಂಚಿನ ಗ್ರಾಮಗಳಲ್ಲಿ ಆತಂಕದ ಛಾಯೆ ಆವರಿಸಿದೆ. ರಾಜ್ಯದಲ್ಲಿ ಕೆಎಫ್‌ಡಿ (ಕ್ಯಾಸನೂರು ಫಾರೆಸ್ಟ್ ಡಿಸೀಸ್- ಮಂಗನ ಕಾಯಿಲೆ) ಪತ್ತೆಯಾಗಿ

ಒನ್ ಇ೦ಡಿಯ 19 Dec 2025 6:33 pm

ನನ್ನ ಕಚೇರಿಯ ಬಾಗಿಲು ನಿಮಗೆ ತೆರೆದಿರುತ್ತದೆ : ಸಂಸತ್ತಿನಲ್ಲಿ ಗಡ್ಕರಿ - ಪ್ರಿಯಾಂಕ ಗಾಂಧಿ ಪ್ರಶ್ನೋತ್ತರಕ್ಕೆ ಎಲ್ಲರೂ ಫಿದಾ

Nitin Gadkari Vs Priyanka Gandhi : ಸಂಸತ್ತಿನಲ್ಲಿ ಕಾಂಗ್ರೆಸ್ಸಿನ ತಿರುವನಂತಪುರಂ ಲೋಕಸಭಾ ಕ್ಷೇತ್ರದ ಸಂಸದೆ ಪ್ರಿಯಾಂಕ ಗಾಂಧಿ, ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರನ್ನು ಕೇಳಿದ ಪ್ರಶ್ನೆ ಮತ್ತು ಅದಕ್ಕೆ ಸಚಿವರು ಕೊಟ್ಟ ಉತ್ತರ, ಎಲ್ಲರ ಗಮನ ಸೆಳೆಯಿತು. ನೀವು ಅಪಾಯಿಂಟ್ಮೆಂಟ್ ತೆಗೆದುಕೊಳ್ಳದೇ ನನ್ನ ಕಚೇರಿಗೆ ಬರಬಹುದು ಎಂದು ಸಚಿವರು ಹೇಳಿದ್ದಾರೆ.

ವಿಜಯ ಕರ್ನಾಟಕ 19 Dec 2025 6:31 pm

ರಾಯಚೂರು | ಹಣ ನೀಡುವಂತೆ ಪೀಡಿಸಿ ಬಿಸ್ಕೇಟ್ ಮಾರಾಟಗಾರನ ಹತ್ಯೆ

ರಾಯಚೂರು: ನಗರದ ಆಕಾಶವಾಣಿ ಎದುರುಗಡೆ ರಸ್ತೆ ಬದಿಯಲ್ಲಿ ಬಿಸ್ಕೇಟ್ ಮಾರಾಟ ಮಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ಹಣ ನೀಡುವಂತೆ ಪೀಡಿಸಿ ಹತ್ಯೆ ಮಾಡಿದ ಘಟನೆ ಇಂದು ಬೆಳಗಿನ ಜಾವ ನಡೆದಿದೆ. ಹತ್ಯೆಯಾದ ವ್ಯಕ್ತಿಯನ್ನು ಆಂಧ್ರಪ್ರದೇಶದ ಕಡಪ ಮೂಲದ ಇಮಾಮ್ ಹುಸೇನ್ (32) ಎಂದು ಗುರುತಿಸಲಾಗಿದೆ. ಘಟನಾ ಸ್ಥಳಕ್ಕೆ ಸದರ್ ಬಜಾರ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಆರೋಪಿಗಳ ಬಂಧನಕ್ಕೆ ಜಾಲ ಬೀಸಿದ್ದಾರೆ. ಈ ಕುರಿತು ಎಸ್‌ಪಿ ಎಂ. ಪುಟ್ಟಮಾದಯ್ಯ ಅವರು ಮಾಹಿತಿ ನೀಡಿದ್ದು, ಇಮಾಮ್ ಹುಸೇನ್ ಸೇರಿದಂತೆ ಒಟ್ಟು 9 ಮಂದಿ ಬ್ರೆಡ್ ಹಾಗೂ ಬಿಸ್ಕೇಟ್ ಭಟ್ಟಿಯಲ್ಲಿ ತಯಾರಿಸಿ ನಗರದ ಪ್ರಮುಖ ರಸ್ತೆಗಳಲ್ಲಿ ಮಾರಾಟ ಮಾಡುತ್ತಿದ್ದರು. ಗುರುವಾರ ರಾತ್ರಿ ಸುಮಾರು 10 ಗಂಟೆಯವರೆಗೆ ಇಮಾಮ್ ಹುಸೇನ್ ಸೇರಿ ಐವರು ಭಟ್ಟಿಯ ಶಾಪ್ ಸಮೀಪ ರಸ್ತೆ ಬದಿಯಲ್ಲಿ ಕುಳಿತು ಮಾತನಾಡುತ್ತಿದ್ದರು. ಈ ವೇಳೆ ನಾಲ್ವರು ಆರೋಪಿಗಳು ಹಣ ನೀಡುವಂತೆ ಒತ್ತಾಯಿಸಿ ಪೀಡಿಸಿದ್ದಾರೆ. ಹಣ ನೀಡಲು ನಿರಾಕರಿಸಿದಾಗ ಬಡಿಗೆಗಳಿಂದ ಹೊಡೆದು ಹಲ್ಲೆ ನಡೆಸಿದ್ದು, ಈ ವೇಳೆ ಎರಡು ಗುಂಪುಗಳ ನಡುವೆ ನೂಕಾಟ–ತಳ್ಳಾಟ ನಡೆದಿದೆ. ಬಳಿಕ ಮಧ್ಯರಾತ್ರಿ ಸುಮಾರು 12 ಗಂಟೆ ವೇಳೆಗೆ ಮತ್ತೆ ಸ್ಥಳಕ್ಕೆ ಬಂದ ಆರೋಪಿಗಳ ಪೈಕಿ ಒಬ್ಬನು ಕಲ್ಲಿನಿಂದ ಇಮಾಮ್ ಹುಸೇನ್ ಅವರ ಮುಖಕ್ಕೆ ಹೊಡೆದ ಪರಿಣಾಮ ಗಂಭೀರ ಗಾಯಗೊಂಡು ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಎಸ್‌ಪಿ ತಿಳಿಸಿದ್ದಾರೆ.

ವಾರ್ತಾ ಭಾರತಿ 19 Dec 2025 6:28 pm

ರಾಯಚೂರು | ಬೀದಿಬದಿ ವ್ಯಾಪಾರಿಯ ಕೊಲೆ : ಪ್ರಕರಣ ದಾಖಲು

ರಾಯಚೂರು : ದುಷ್ಕರ್ಮಿಗಳ ಗುಂಪೊಂದು ಬೀದಿಬದಿ ವ್ಯಾಪಾರಿಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಕಲ್ಲಿನಿಂದ ಜಜ್ಜಿ ಕೊಲೆ ಮಾಡಿರುವ ಘಟನೆ ನಗರದ ರೇಡಿಯೋ ಸ್ಟೇಷನ್ ಸಮೀಪದಲ್ಲಿ ನಿನ್ನೆ ರಾತ್ರಿ ನಡೆದಿದೆ. ಕೊಲೆಯಾದ ಯುವಕನನ್ನು ಆಂಧ್ರಪ್ರದೇಶದ ಕಡಪ ಮೂಲದ ಇಮಾಮ್ ಹುಸೇನ್ (24) ಎಂದು ಗುರುತಿಸಲಾಗಿದೆ. ಕೊಲೆಯಾದ ಇಮಾಮ್ ಹುಸೇನ್ ಕಳೆದ 15 ದಿನಗಳಿಂದ ನಗರದ ಬೀದಿಬದಿಯಲ್ಲಿ ಡೈ ಫುಡ್ಸ್ ಮಾರಾಟ ಮಾಡಿ ಕೊಂಡಿದ್ದರು. ನಿನ್ನೆ ತಡರಾತ್ರಿ ಏಕಾಏಕಿ ದುಷ್ಕರ್ಮಿಗಳ ಗುಂಪೊಂದು ದಾಳಿ ನಡೆಸಿದೆ ಎಂದು ತಿಳಿದು ಬಂದಿದೆ. ಈ ವೇಳೆ ಇಮಾಮ್ ಹುಸೇನ್ ಮೃತಪಟ್ಟಿದ್ದು, ಮತ್ತೊರ್ವನನ್ನು ಚಿಕಿತ್ಸೆಗಾಗಿ ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ. ಘಟನೆ ನಡೆದ ಸ್ಥಳಕ್ಕೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎಂ. ಪುಟ್ಟಮಾದಯ್ಯ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾಹಿತಿ ಪಡೆದಿದ್ದಾರೆ. ಕೊಲೆಗೆ ನಿಖರವಾದ ಕಾರಣವೇನು ಎಂಬುದು ಇನ್ನು ತಿಳಿದುಬಂದಿಲ್ಲ. ಸದರ್‌ ಬಜಾ‌ರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತಲೆಮರೆಸಿಕೊಂಡಿರುವ ಆರೋಪಿಗಳ ಪತ್ತೆಗಾಗಿ ಪೊಲೀಸರು ತೀವ್ರ ಶೋಧ ನಡೆಸಿದ್ದಾರೆ.

ವಾರ್ತಾ ಭಾರತಿ 19 Dec 2025 6:28 pm