Government Employee: ಬೆಂಗಳೂರಲ್ಲಿ ನಿವೃತ್ತ ಸರ್ಕಾರಿ ನೌಕರರ ಸಮಾವೇಶ, ಬೇಡಿಕೆಗಳು
ಬೆಂಗಳೂರು, ಮಾರ್ಚ್ 27: ಕರ್ನಾಟಕ ಸರ್ಕಾರ ಸರ್ಕಾರಿ ನೌಕರರು/ ಅಧಿಕಾರಿಗಳಿಗೆ ಹಲವು ಯೋಜನೆಗಳ ಮೂಲಕ ಅಗತ್ಯ ನೆರವು ನೀಡುತ್ತಿದೆ. ಆದರೆ ನಿವೃತ್ತ ಸರ್ಕಾರಿ ನೌಕರರಿಗೆ ಸರಿಯಾದ ಸೌಲಭ್ಯಗಳನ್ನು ನೀಡುತ್ತಿಲ್ಲ ಎಂದು ಆರೋಪಿಸಲಾಗುತ್ತಿದೆ. ವಿವಿಧ ಬೇಡಿಕೆಗಳ ಕುರಿತು ಸರ್ಕಾರದ ಗಮನ ಸೆಳೆಯಲು ನಿವೃತ್ತ ಸರ್ಕಾರಿ ಉದ್ಯೋಗಿಗಳು ಬೆಂಗಳೂರಿನಲ್ಲಿ ಬೃಹತ್ ಸಮಾವೇಶನವನ್ನು ನಡೆಸಲಿದ್ದಾರೆ. ಸುಮಾರು 30 ಸಾವಿರ ಜನರು ಈ
RCB vc CSK: ಮಾರ್ಚ್ 28ರಂದು ನೋಡ್ಕೊತಿವಿ! ಆರ್ಸಿಬಿ ಬ್ಯಾಟರ್ ವಿರುದ್ಧ ಉರಿದುಬಿದ್ದ ಸಿಎಸ್ಕೆ ಅಭಿಮಾನಿಗಳು
ಮಾರ್ಚ್ 28ರಂದು ಶುಕ್ರವಾರ ಐಪಿಎಲ್ 2025ರ ಬಹುನಿರೀಕ್ಷಿತ ಪಂದ್ಯ ನಡೆಯಲಿದೆ. ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್ಕೆ) ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ತಂಡವನ್ನು ಎದುರಿಸಲಿದೆ. ಈ ಪಂದ್ಯಕ್ಕೆ ಮುನ್ನ ಸಿಎಸ್ಕೆ ಅಭಿಮಾನಿಗಳು ಆರ್ಸಿಬಿ ಬ್ಯಾಟರ್ ವಿರುದ್ಧ ಉರಿದುಬಿದ್ದಿದ್ದಾರೆ, ಪಂದ್ಯದ ದಿನ ನಿಮ್ಮನ್ನು ನೋಡಿಕೊಳ್ತಿವಿ ಎಂದಿದ್ದಾರೆ. ಮೊದಲ ಪಂದ್ಯದಲ್ಲಿ
Next CM of Karnataka : ಪವರ್ ಶೇರಿಂಗ್, ಹನಿಟ್ರ್ಯಾಪ್ ಗದ್ದಲದ ನಡುವೆ ಹಾಲುಮತದ ಗೊರವಯ್ಯ ಕಾರ್ಣಿಕ ಭವಿಷ್ಯ
Prediction On Next CM of Karnataka : ತುಮಕೂರು ಜಿಲ್ಲಾಧಿಕರಿ ಕಚೇರಿಗೆ ಅಚಾನಕ್ ಆಗಿ ಭೇಟಿಯಾಗಿದ್ದ ಹಾಲುಮತ ಸಮುದಾಯದ ಗೊರವಯ್ಯ ಕಾರ್ಣಿಕ ಭವಿಷ್ಯವನ್ನು ನುಡಿದಿದ್ದಾರೆ. ಮುಂದಿನ ಸಿಎಂ ಯಾರು ಎನ್ನುವ ಭವಿಷ್ಯವನ್ನು ಅವರು ನುಡಿದಿದ್ದು, ಸಿದ್ದರಾಮಯ್ಯನವರು ಸದ್ಯದಲ್ಲೇ ಇಳಿಯಲಿದ್ದಾರೆ ಮತ್ತು ಡಾ.ಪರಮೇಶ್ವರ್ ಅವರಿಗೆ ಸಿಎಂ ಭಾಗ್ಯ ಒಲಿದು ಬರಲಿದೆ ಎಂದು ಹೇಳಿದ್ದಾರೆ.
ಬೀದರ್ : ಹೆಚ್ಚಾಗಿ ಮೊಬೈಲ್ ಬಳಸಬೇಡ ಎಂದಿದ್ದಕ್ಕೆ ಬಾಲಕಿ ಆತ್ಮಹತ್ಯೆ
ಬೀದರ್ : ಹೆಚ್ಚಾಗಿ ಮೊಬೈಲ್ ಬಳಸಬೇಡ ಎಂದು ಬುದ್ದಿವಾದ ಹೇಳಿದಕ್ಕೆ 10ನೇ ತರಗತಿಯ ಬಾಲಕಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡ ಘಟನೆ ಬುಧವಾರ ಕಮಲನಗರ ತಾಲ್ಲೂಕಿನ ಡಿಗ್ಗಿ ಗ್ರಾಮದಲ್ಲಿ ನಡೆದಿದೆ. ಸೋನಿ (15) ಆತ್ಮಹತ್ಯೆ ಮಾಡಿಕೊಂಡ ಬಾಲಕಿ. ಹೆಚ್ಚಾಗಿ ಮೊಬೈಲ್ ಬಳಕೆ ಮಾಡಬೇಡ ಎಂದು ಆಕೆಯ ತಂದೆ ಸಂತೋಷ್ ಬುದ್ಧಿವಾದ ಹೇಳಿದ್ದರು. ಇದರಿಂದಾಗಿ ಮನನೊಂದ ಬಾಲಕಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ತಿಳಿದು ಬಂದಿದೆ. ಈ ಘಟನೆಗೆ ಸಂಬಂಧಿಸಿದಂತೆ ಕಮಲನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಟಿ ರನ್ಯಾ ತರುತ್ತಿದ್ದ ಚಿನ್ನ ವಿಲೇವಾರಿ ಮಾಡ್ತಿದ್ದ ವ್ಯಾಪಾರಿಯೂ ಅಂದರ್! ರನ್ಯಾ ಜಾಮೀನು ಭವಿಷ್ಯ ಗುರುವಾರ ನಿರ್ಧಾರ
ನಟಿ ಹರ್ಷವರ್ಧಿನಿ ರನ್ಯಾ ದುಬೈನಿಂದ ತರುತ್ತಿದ್ದ ಕೆ.ಜಿ.ಗಟ್ಟಲೆ ಚಿನ್ನವನ್ನು ಸಾಹಿಲ್ ಪಡೆದು ಬೇರೆ ಬೇರೆ ಕಡೆ ವಿಲೇವಾರಿ ಮಾಡುತ್ತಿದ್ದ ಸಂಗತಿ ತನಿಖೆಯಲ್ಲಿ ಬೆಳಕಿಗೆ ಬಂದಿತ್ತು. ಈ ಬೆನ್ನಲ್ಲೇ ಆರೋಪಿ ಸಾಹಿಲ್ರನ್ನು ಬಂಧಿಸಿರುವ ಡಿಆರ್ಐ ಅಧಿಕಾರಿಗಳು, ನ್ಯಾಯಾಲಯದ ಮುಂದೆ ಹಾಜರುಪಡಿಸಿ ಹೆಚ್ಚಿನ ತನಿಖೆಗಾಗಿ ಮೂರು ದಿನ ಕಸ್ಟಡಿಗೆ ಪಡೆದಿದ್ದಾರೆ.
ರಾಜ್ಯ ಬಿಜೆಪಿಯೊಳಗೆ ಯಡಿಯೂರಪ್ಪ ಬಣ ಮತ್ತೊಮ್ಮೆ ನಾಗಪುರದ ಸಂಚುಗಳನ್ನು ವಿಫಲಗೊಳಿಸಿ ತನ್ನ ಶಕ್ತಿಯನ್ನು ವರಿಷ್ಠರಿಗೆ ಪ್ರದರ್ಶಿಸಿದೆ. ಪರಿಣಾಮವಾಗಿ ಕೊನೆಗೂ, ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಬಿಜೆಪಿ ವರಿಷ್ಠರು ಒಲ್ಲದ ಮನಸ್ಸಿನಿಂದ ಉಚ್ಚಾಟಿಸಿದ್ದಾರೆ. ಈ ಮೂಲಕ ವಿಜಯೇಂದ್ರ ಅವರು ಮತ್ತೆ ಬಿಜೆಪಿ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾಗುವ ಹಾದಿ ಸುಗಮಗೊಂಡಂತಾಗಿದೆ. ಯತ್ನಾಳ್ರ ವಿರುದ್ಧ ಕ್ರಮ ಕೈಗೊಳ್ಳದೆ ನೂತನ ಅಧ್ಯಕ್ಷರನ್ನು ಆಯ್ಕೆ ಮಾಡುವ ಸ್ಥಿತಿ ರಾಜ್ಯದಲ್ಲಿ ಇರಲಿಲ್ಲ. ಬಿಜೆಪಿಯೊಳಗಿರುವ ಭಿನ್ನಮತವನ್ನು ಶಮನಗೊಳಿಸುವ ಪ್ರಯತ್ನದ ಕೊನೆಯ ಭಾಗವಾಗಿ, ಯಾರು ರಾಜ್ಯಾಧ್ಯಕ್ಷರಾಗಬೇಕು ಎನ್ನುವುದನ್ನು ಚುನಾವಣೆಯೇ ನಿರ್ಧರಿಸುತ್ತದೆ ಎಂದು ವರಿಷ್ಠರು ಘೋಷಿಸಿದ್ದರು. ಯಡಿಯೂರಪ್ಪ ಮತ್ತು ಅವರ ಪುತ್ರನ ವಿರುದ್ಧ ಮಾತನಾಡಲು ಯತ್ನಾಳ್ಗೆ ಕುಮ್ಮಕ್ಕು ನೀಡಿದವ ಯಾರೂ ಬಹಿರಂಗವಾಗಿ ಯತ್ನಾಳ್ ಜೊತೆಗೆ ಗುರುತಿಸಲು ಸಿದ್ಧರಿಲ್ಲದೇ ಇರುವುದು ವರಿಷ್ಠರನ್ನು ತೀವ್ರ ಇಕ್ಕಟ್ಟಿಗೆ ಸಿಲುಕಿಸಿತು. ಜಿಲ್ಲಾಮಟ್ಟದ ಅಧ್ಯಕ್ಷರ ಆಯ್ಕೆಯಲ್ಲಿ ವಿಜಯೇಂದ್ರ ಅವರ ಕೈ ಮೇಲಾಗುತ್ತಿದ್ದಂತೆಯೇ, ಯತ್ನಾಳ್ ಅವರು ಚುನಾವಣೆಯ ವಿಶ್ವಾಸಾರ್ಹತೆಯನ್ನು ಪ್ರಶ್ನಿಸತೊಡಗಿದರು. ‘‘ಈ ಚುನಾವಣೆಯಲ್ಲಿ ವಿಜಯೇಂದ್ರ ಅವರು ಹಣಬಲವನ್ನು ಬಳಸುತ್ತಿರುವುದರಿಂದ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ’’ ಎಂದು ಘೋಷಿಸಿ ಬಿಟ್ಟರು. ಒಂದೋ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲ್ಲಬೇಕು ಅಥವಾ ವಿಜಯೇಂದ್ರ ಅವರು ಅವಿರೋಧವಾಗಿ ರಾಜ್ಯಾಧ್ಯಕ್ಷರಾಗುವುದಕ್ಕೆ ಅವಕಾಶ ನೀಡಬೇಕು. ಇವೆರಡಕ್ಕೂ ಯತ್ನಾಳ್ ಸಿದ್ಧರಿಲ್ಲ ಎಂದಾಗ ವರಿಷ್ಠರಿಗೆ ಅವರನ್ನು ಉಚ್ಚಾಟಿಸುವುದಲ್ಲದೆ ಬೇರಾವ ಮಾರ್ಗವು ಇರಲಿಲ್ಲ. ಬಿಜೆಪಿಯೊಳಗಿನ ಬಣ ರಾಜಕೀಯಕ್ಕೆ ತಕ್ಷಣದ ತಡೆ ಹಾಕುವುದಕ್ಕೆ ಈ ಅಣಕು ಉಚ್ಚಾಟನೆ ವರಿಷ್ಠರಿಗೆ ಅನಿವಾರ್ಯವಾಗಿದೆ. ಯತ್ನಾಳ್ ಪಾಲಿಗೆ ಉಚ್ಚಾಟನೆ ಹೊಸದೇನೂ ಅಲ್ಲ. ಎರಡು ಬಾರಿ ಉಚ್ಚಾಟನೆಗೊಂಡರೂ ಮತ್ತೆ ಬಿಜೆಪಿ ಅವರನ್ನು ಹಾರ್ದಿಕವಾಗಿ ಸ್ವೀಕರಿಸಿತ್ತು. ‘ಉಚ್ಚಾಟನೆ’ಯೇ ಬಿಜೆಪಿಯೊಳಗೆ ಅವರಿಗಿರುವ ರಾಜಕೀಯ ಅರ್ಹತೆಯಾಗಿದೆ. ಯಡಿಯೂರಪ್ಪ ವಿರುದ್ಧ ಆರೆಸ್ಸೆಸ್ಗೆ ಬಳಸಿಕೊಳ್ಳಲು ಯತ್ನಾಳ್ಗಿಂತ ಯೋಗ್ಯ ಲಿಂಗಾಯತ ನಾಯಕರೊಬ್ಬರು ಸಿಗುವುದು ಕಷ್ಟ. ಪಕ್ಷದ ವರಿಷ್ಠರಿಂದ ಒದೆಸಿಕೊಳ್ಳುವುದೆಂದರೆ ಯತ್ನಾಳ್ ಪಾಲಿಗೆ ಬೆನ್ನು ತಟ್ಟಿಸಿಕೊಂಡಂತೆ. ಇಷ್ಟಕ್ಕೂ ಯತ್ನಾಳ್ ಅವರನ್ನು ಉಚ್ಚಾಟಿಸುವುದಕ್ಕೆ ಇಷ್ಟೊಂದು ಸಮಯ ತೆಗೆದುಕೊಂಡದ್ದಕ್ಕೂ ವರಿಷ್ಠರ ಬಳಿ ಕಾರಣಗಳಿರಲಿಲ್ಲ. ಪಕ್ಷಾಧ್ಯಕ್ಷರು ಮತ್ತು ಯಡಿಯೂರಪ್ಪರ ವಿರುದ್ಧ ಮೂರನೇ ದರ್ಜೆಯ ಭಾಷೆಯಲ್ಲಿ ಹೇಳಿಕೆಗಳನ್ನು ನೀಡುತ್ತಾ ಯತ್ನಾಳ್ ಓಡಾಡುತ್ತಿದ್ದರೆ ಅದನ್ನು ರಾಜ್ಯ ಮತ್ತು ಕೇಂದ್ರದಲ್ಲಿರುವ ಕೆಲವು ಬಿಜೆಪಿ ವರಿಷ್ಠರು ‘ಆನಂದಿ’ಸುತ್ತಿದ್ದರು. ತನ್ನ ವಿರುದ್ಧ ನಡೆಯುತ್ತಿರುವ ಸಂಚುಗಳಿಗೆ ವರಿಷ್ಠರು ಪರೋಕ್ಷ ಬೆಂಬಲ ನೀಡುತ್ತಿರುವುದನ್ನು ಅರಿತಿರುವುದರಿಂದಲೇ ಬಿಜೆಪಿಯನ್ನು ರಾಜ್ಯದಲ್ಲಿ ಬಲಾಢ್ಯಗೊಳಿಸಲು ಯಡಿಯೂರಪ್ಪ ಗುಂಪು ವಿಶೇಷ ಶ್ರಮ ತೆಗೆದುಕೊಳ್ಳಲಿಲ್ಲ. ಒಂದೆಡೆ ಯತ್ನಾಳ್ ಗುಂಪು ರಾಜ್ಯಾಧ್ಯಕ್ಷರಿಗೆ ಸವಾಲು ಹಾಕುವಂತೆ ರಾಜ್ಯಾದ್ಯಂತ ಪ್ರತ್ಯೇಕ ಸಮಾವೇಶ ಮಾಡುತ್ತಿರುವಾಗ, ಅದಕ್ಕೆ ನಿಯಂತ್ರಣ ಹೇರದೆ ಪಕ್ಷ ಕಟ್ಟುವ ವಿಷಯದಲ್ಲಿ ವಿಜಯೇಂದ್ರ ಅವರಿಂದ ವರಿಷ್ಠರು ನಿರೀಕ್ಷೆ ಮಾಡುವಂತೆಯೂ ಇಲ್ಲ. ಬಹುಶಃ ವರಿಷ್ಠರ ಈ ವರ್ತನೆಯೇ ರಾಜ್ಯ ಬಿಜೆಪಿಯ ಎಲ್ಲ ಗೊಂದಲಗಳಿಗೆ ಕಾರಣ. ಒಂದು ರೀತಿಯಲ್ಲಿ, ಯತ್ನಾಳ್ ಎನ್ನುವ ಸಮಸ್ಯೆಯನ್ನು ವರಿಷ್ಠರೇ ಹುಟ್ಟಿಸಿ ಹಾಕಿ, ಇದೀಗ ಉಚ್ಚಾಟನೆಯ ನಾಟಕವಾಡುತ್ತಿದ್ದಾರೆ. ಈ ನಾಟಕದ ಆಯಸ್ಸು ಎಷ್ಟು ದಿನ ಎನ್ನುವುದನ್ನು ಕಾಲವೇ ಹೇಳಬೇಕು. ಯತ್ನಾಳ್ ಅವರ ಉಚ್ಚಾಟನೆಯಿಂದ ಬಿಜೆಪಿಯೊಳಗಿರುವ ಭಿನ್ನಮತದ ಸಮಸ್ಯೆ ಮುಗಿಯುತ್ತದೆ ಎಂದು ನಿರೀಕ್ಷಿಸುವಂತೆ ಇಲ್ಲ. ಯಾಕೆಂದರೆ ವಿಜಯೇಂದ್ರ ಅವರ ನೇತೃತ್ವದ ಬಗ್ಗೆ ಅಸಮಾಧಾನ ಇರುವ ಇನ್ನಷ್ಟು ನಾಯಕರ ವಿರುದ್ಧ ಬಿಜೆಪಿ ವರಿಷ್ಠರು ಯಾವ ನಿರ್ಧಾರವನ್ನು ತಳೆಯಲಿದ್ದಾರೆ ಎನ್ನುವುದು ಕೂಡ ಮುಖ್ಯವಾಗುತ್ತದೆ. ರಮೇಶ್ ಜಾರಕಿ ಹೊಳಿ, ಕುಮಾರ ಬಂಗಾರಪ್ಪ ಸೇರಿದಂತೆ ಕೆಲವರು ಬಹಿರಂಗವಾಗಿ ಯಡಿಯೂರಪ್ಪ ವಿರುದ್ಧ ಕತ್ತಿ ಮಸೆಯುವವರಿದ್ದರೆ, ಒಳಗಿಂದೊಳಗೆ ಯಡಿಯೂರಪ್ಪ ವಿರುದ್ಧ ಸಂಚು ನಡೆಸುವ ಹಿರಿಯ ನಾಯಕರ ಸಂಖ್ಯೆ ಬಹುದೊಡ್ಡದಿದೆ. ಯತ್ನಾಳ್ರ ಉಚ್ಚಾಟನೆ ಇವರೆಲ್ಲರಿಗೂ ಬಹುದೊಡ್ಡ ಹಿನ್ನಡೆಯಾಗಿದೆ. ಈ ಹಿನ್ನಡೆಯನ್ನು ಅವರು ಹೇಗೆ ಸ್ವೀಕರಿಸುತ್ತಾರೆ ಎನ್ನುವ ಆಧಾರದ ಮೇಲೆ ರಾಜ್ಯ ಬಿಜೆಪಿಯ ಭವಿಷ್ಯ ನಿಂತಿದೆ. ಈಶ್ವರಪ್ಪ, ಸಿ.ಟಿ. ರವಿ, ಶೆಟ್ಟರ್, ಜೋಶಿ ಸೇರಿದಂತೆ ಹಲವು ಹಿರಿಯರು ಮುಂದಿನ ದಿನಗಳಲ್ಲಿ ವಿಜಯೇಂದ್ರ ಎನ್ನುವ ‘ಯುವ ನಾಯಕ’ನನ್ನು ಅನುಸರಿಸಲು, ಅವರ ಮಾತುಗಳನ್ನು ಒಪ್ಪಿಕೊಳ್ಳಲು ಸಿದ್ಧರಿದ್ದಾರೆಯೆ? ಯತ್ನಾಳ್ ಉಚ್ಚಾಟನೆಯ ಜೊತೆ ಜೊತೆಗೆ ಸೋಮಶೇಖರ್, ಶಿವರಾಮ್ ಹೆಬ್ಬಾರ್, ರೇಣುಕಾಚಾರ್ಯ ಸೇರಿದಂತೆ ಐವರಿಗೆ ಬಿಜೆಪಿ ಶೋಕಾಸ್ ನೋಟಿಸ್ ನೀಡಿದೆ. ಈ ನೋಟಿಸ್ಗಳಿಗೆ ನಿಜಕ್ಕೂ ಬಿಜೆಪಿಯೊಳಗಿರುವ ಭಿನ್ನಮತಗಳನ್ನು ಚಿವುಟಿ ಹಾಕುವಷ್ಟು ಸಾಮರ್ಥ್ಯವಿದೆಯೆ? ಎನ್ನುವುದನ್ನು ಕಾದು ನೋಡಬೇಕಾಗಿದೆ. ಯತ್ನಾಳ್ ಎನ್ನುವುದು ಯಾರಿಗೂ ಬೇಡವಾದ ಸರಕು. ಅದಕ್ಕೆ ಗಿರಾಕಿಗಳಿರುವುದು ಬಿಜೆಪಿಯೊಳಗೇ ಹೊರತು, ಅವರನ್ನು ಸೇರಿಸಿಕೊಳ್ಳಲು ಉಳಿದ ಯಾವ ಪಕ್ಷವೂ ಸಿದ್ಧವಿಲ್ಲ. ಅಷ್ಟರಮಟ್ಟಿಗೆ ಅವರು ತಮ್ಮ ವರ್ಚಸ್ಸು ಕೆಡಿಸಿಕೊಂಡಿದ್ದಾರೆ. ಲಿಂಗಾಯತ ಸಮುದಾಯಕ್ಕೆ ಸೇರಿದ್ದು, ಆರೆಸ್ಸೆಸನ್ನು ಓಲೈಸುವ ಭರದಲ್ಲಿ ಬಸವಣ್ಣ ಅವರ ಕುರಿತಂತೆ ಕೇವಲವಾಗಿ ಮಾತನಾಡಿ ಸಮುದಾಯದ ನಿಷ್ಠುರವನ್ನು ಯತ್ನಾಳ್ ಕಟ್ಟಿಕೊಂಡಿದ್ದಾರೆ. ಉತ್ತರ ಕರ್ನಾಟಕದ ಜನರ ಯಾವುದೇ ಮೂಲಭೂತ ಸಮಸ್ಯೆಗಳಿಗೆ ಸ್ಪಂದಿಸದೇ, ಬರೇ ಮುಸ್ಲಿಮ್ ದ್ವೇಷದ ರಾಜಕಾರಣದ ಮೂಲಕವೇ ತನ್ನ ರಾಜಕೀಯ ಅಸ್ತಿತ್ವವನ್ನು ಉಳಿಸಿಕೊಳ್ಳಲು ಯತ್ನಿಸಿದವರು. ತಳಸ್ತರದ ಜನರನ್ನು ತನ್ನೊಂದಿಗೆ ಕರೆದುಕೊಂಡು ರಾಜಕೀಯ ನಡೆಸಲು ಅವರು ಸಂಪೂರ್ಣ ವಿಫಲವಾಗಿದ್ದಾರೆ. ಯತ್ನಾಳ್ ಉಚ್ಚಾಟನೆಯಿಂದ ವೈಯಕ್ತಿಕವಾಗಿ ಬಿಜೆಪಿಗೆ ಯಾವುದೇ ನಷ್ಟವಿಲ್ಲ ಎನ್ನುವುದು ಸ್ಪಷ್ಟ. ಈಶ್ವರಪ್ಪ ಕೂಡ ನಾಚಿಕೊಳ್ಳುವಂತಹ ಅವರ ಮೂರನೇ ದರ್ಜೆಯ ಭಾಷೆ ಅವರ ವ್ಯಕ್ತಿತ್ವವನ್ನು ಈಗಾಗಲೇ ಹರಾಜಿಗಿಟ್ಟಿದೆ. ಇದೇ ಹೊತ್ತಿಗೆ, ಯತ್ನಾಳ್ ಬಳಸಿದ ಭಾಷೆಗೆ ಅಷ್ಟೇ ಪ್ರಬುದ್ಧತೆಯಿಂದ ಪ್ರತಿಕ್ರಿಯಿಸಿದ ಕಾರಣದಿಂದಲೇ, ವಿಜಯೇಂದ್ರ ಇಂದಿಗೂ ಬಿಜೆಪಿ ರಾಜ್ಯಾಧ್ಯಕ್ಷರಾಗುವ ಅರ್ಹತೆಯನ್ನು ಉಳಿಸಿಕೊಂಡಿದ್ದಾರೆ. ಎರಡು ಬಾರಿ ಉಚ್ಚಾಟನೆಗೊಂಡು ಮತ್ತೆ ಬಿಜೆಪಿಯ ನಾಯಕರಾಗಿ ಗುರುತಿಸಿಕೊಳ್ಳಲು ಯಶಸ್ವಿಯಾಗಿದ್ದ ಯತ್ನಾಳ್ ಅವರ ಈ ಬಾರಿಯ ‘ಉಚ್ಚಾಟನೆ’ಯ ಆಯಸ್ಸು ದೀರ್ಘವೇನಿಲ್ಲ. ಬಿಜೆಪಿಗೆ ಸವಾಲು ಹಾಕುವಂತೆ ಕಟು ಹಿಂದುತ್ವ ವಾದದ ಮೂಲಕ ವರಿಷ್ಠರ ಗಮನ ಸೆಳೆದು, ಮತ್ತೆ ತನ್ನನ್ನು ಒಪ್ಪಿಕೊಳ್ಳಲು ಬಿಜೆಪಿಗೆ ಅನಿವಾರ್ಯವಾಗಿಸುವ ಸಾಧ್ಯತೆಗಳಿದೆ. ಬಿಜೆಪಿ ರಾಜ್ಯಾಧ್ಯಕ್ಷರ ಆಯ್ಕೆಯೊಂದಿಗೆ ಬಿಜೆಪಿಯ ಬಣ ರಾಜಕೀಯದ ಎರಡನೆ ಇನ್ನಿಂಗ್ಸ್ ಆರಂಭವಾಗುವ ಎಲ್ಲ ಸಾಧ್ಯತೆಗಳೂ ಎದ್ದು ಕಾಣುತ್ತಿವೆ.
Karnataka Rains: ಇನ್ನೂ 2 ದಿನ ಮಳೆ ಮುನ್ಸೂಚನೆ, ಹೊಸನಗರದ ಕೋಡೂರಿನಲ್ಲಿ ರಾಜ್ಯದಲ್ಲೇ ಅತಿ ಹೆಚ್ಚು ಮಳೆ ದಾಖಲು
ಹಲವು ಜಿಲ್ಲೆಗಳಲ್ಲಿ ಕಳೆದ 24 ಗಂಟೆಯಲ್ಲಿ ಭಾರೀ ಮಳೆಯಾಗಿದ್ದು, ಇನ್ನೂ 2 ದಿನ ಕೆಲ ಜಿಲ್ಲೆಗಳಲ್ಲಿ ಮಳೆಯಾಗಲಿದೆ. ಸಾಗರ, ಹೊಸನಗರ, ತೀರ್ಥಹಳ್ಳಿ, ಸೊರಬ ಮತ್ತು ಶಿಕಾರಿಪುರದಲ್ಲಿ ಅಲ್ಲಲ್ಲಿ ಸಾಧಾರಣದಿಂದ ಜೋರು ಮಳೆ ಸುರಿದಿದೆ. ಕೆಲವೆಡೆ ಮಳೆಗಿಂತ ಗಾಳಿಯ ಆರ್ಭಟವೆ ಹೆಚ್ಚಾಗಿತ್ತು. ಬೆಳಗಾವಿ ನಗರ ಹಾಗೂ ಚಿಕ್ಕೋಡಿ, ನಿಪ್ಪಾಣಿ, ಕಿತ್ತೂರು, ಬೈಲಹೊಂಗಲ, ಸವದತ್ತಿಯಲ್ಲಿ ಧಾರಾಕಾರ ಮಳೆಯಾಗಿದೆ.
UPI Payment: ಕೈ ಕೊಟ್ಟ ಯುಪಿಐ ಪೇಮೆಂಟ್, ಪರದಾಡಿದ ಜನರು
ನವದೆಹಲಿ, ಮಾರ್ಚ್ 27: ದೇಶಾದ್ಯಂತ ಬುಧವಾ ರಾತ್ರಿ ಡಿಜಿಟಲ್ ವ್ಯವಹಾರಗಳಲ್ಲಿ ಭಾರೀ ಸಮಸ್ಯೆಗಳು ಕಂಡುಬಂದಿತು. ಯುಪಿಐ ಪಾವತಿ ವ್ಯವಸ್ಥೆಯಲ್ಲಿನ ವ್ಯತ್ಯಯದಿಂದ ಹಲವಾರು ಜನರು ಪರದಾಟ ನಡೆಸಿದರು. ಪೇಮೆಂಟ್ ಮಾಡಲು ಆಗದೇ, ಅದರ ಪ್ರಕ್ರಿಯೆ ಪೂರ್ಣಗೊಳ್ಳದೇ ಜೇಬಿನಲ್ಲಿರುವ ಹಣವನ್ನು ನೀಡಿ ಖರೀದಿ ಮಾಡಬೇಕಾದ ಪರಿಸ್ಥಿತಿ ಉಂಟಾಯಿತು. ಯುಪಿಐ ಬಳಕೆದಾರರು ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಹಲವಾರು ಪೋಸ್ಟ್ಗಳನ್ನು ಹಾಕಿಕದರು.
Government Employee: ಸಂಬಳ ಪ್ಯಾಕೇಜ್ ಖಾತೆ ಕಡ್ಡಾಯ, ಸರ್ಕಾರಿ ನೌಕರರ ಬೇಡಿಕೆಗಳು
ಬೆಂಗಳೂರು, ಮಾರ್ಚ್ 27: ಕರ್ನಾಟಕದ ಎಲ್ಲಾ ಸರ್ಕಾರಿ ನೌಕರರು/ ಅಧಿಕಾರಿಗಳು ಬ್ಯಾಂಕ್ ಮತ್ತು ಅಂಚೆ ಕಛೇರಿಗಳಲ್ಲಿ 'ಸಂಬಳ ಪ್ಯಾಕೇಜ್ ಖಾತೆ' ಕಡ್ಡಾಯವಾಗಿ ತೆರೆಯಬೇಕು ಎಂದು ಸೂಚನೆ ನೀಡಲಾಗಿದೆ. ಈ ಖಾತೆ ತೆರೆದ ಸರ್ಕಾರಿ ನೌಕರರಿಗೆ ಬ್ಯಾಂಕುಗಳು 1 ಕೋಟಿ ರೂ.ಗಳ ಅಪಘಾತ ವಿಮೆ ಸೇರಿದಂತೆ ವಿವಿಧ ಸೌಲಭ್ಯಗಳನ್ನು ನೀಡಲಿವೆ. 'ಸಂಬಳ ಪ್ಯಾಕೇಜ್ ಖಾತೆಯನ್ನು ತೆರೆಯುವ ಸರ್ಕಾರಿ ನೌಕರರು
ಡಿಕೆಶಿಗೆ ಬಿಗ್ ಶಾಕ್: ಮುಂದಿನ ಸಿಎಂ ಬಗ್ಗೆ ಹಾಲುಮತದ ಗೊರವಯ್ಯ ಸ್ಫೋಟಕ ಭವಿಷ್ಯ
ಬೆಂಗಳೂರು, ಮಾರ್ಚ್ 27: ರಾಜ್ಯ ರಾಜಕೀಯದಲ್ಲಿ ಮಹತ್ವದ ಬೆಳವಣಿಗಳು ಆಗುತ್ತಿದ್ದು, ವಿಪಕ್ಷಗಳ ಜೊತೆಗಿನ ರಾಜಕೀಯಕ್ಕಿಂತ ಪಕ್ಷ ಪಕ್ಷದೊಳಗಿನ ಗುದ್ದಾಟಗಳೇ ಹೆಚ್ಚಾಗಿದೆ. ಬಿಜೆಪಿಯಲ್ಲಿ ನಿನ್ನೆ ಮಹತ್ವದ ಬೆಳವಣಿಗೆ ಆಗಿದ್ದು, ಪಕ್ಷದ ನಾಯಕರ ವಿರುದ್ಧ ಬಹಿರಂಗವಾಗಿ ಅಸಮಾಧಾನ ಹೊರಹಾಕುತ್ತಿದ್ದ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಪಕ್ಷದಿಂದ 6 ವರ್ಷಗಳ ಉಚ್ಛಾಟನೆ ಮಾಡಲಾಗಿದೆ. ಇತ್ತ ಆಡಳಿತಾರೂಢ ಕಾಂಗ್ರೆಸ್ನಲ್ಲಿಯೂ ಕೂಡ
ನಗದು ಪತ್ತೆ ಪ್ರಕರಣ: ನ್ಯಾಯಮೂರ್ತಿ ನಿವಾಸದ ದಾಸ್ತಾನು ಕೊಠಡಿಗೆ 12 ದಿನಗಳ ಬಳಿಕ ಬೀಗಮುದ್ರೆ!
ಹೊಸದಿಲ್ಲಿ: ಹನ್ನೆರಡು ದಿನಗಳ ಹಿಂದೆ ನಡೆದ ಬೆಂಕಿ ಆಕಸ್ಮಿಕ ಸಂದರ್ಭದಲ್ಲಿ ಸುಟ್ಟ ನೋಟಿನ ಕಂತೆಗಳು ಪತ್ತೆಯಾಗಿವೆ ಎನ್ನಲಾದ ನ್ಯಾಯಮೂರ್ತಿ ಯಶವಂತ ವರ್ಮಾ ಅವರ ನಿವಾಸದ ದಾಸ್ತಾನು ಕೊಠಡಿಗೆ ಬುಧವಾರ ದೆಹಲಿ ಪೊಲೀಸರು ಬೀಗಮುದ್ರೆ ಹಾಕಿದ್ದಾರೆ. ನಿವಾಸದ ಆವರಣದ ವಿಡಿಯೊ ಚಿತ್ರೀಕರಣವನ್ನೂ ಮಾಡಿದ್ದಾರೆ. ನಗದು ಪತ್ತೆಯಾಗಿದೆ ಎಂಬ ಹೇಳಿಕೆಯನ್ನು ನ್ಯಾಯಮೂರ್ತಿ ಅಲ್ಲಗಳೆದಿರುವ ಹಿನ್ನೆಲೆಯಲ್ಲಿ ತನಿಖೆಯ ಭಾಗವಾಗಿ ಸಿಸಿಟಿವಿ ಕ್ಯಾಮೆರಾಗಳಿಂದ ದೃಶ್ಯಾವಳಿಗಳನ್ನು ಕೂಡಾ ಪೊಲೀಸರು ಸಂಗ್ರಹಿಸಿದ್ದಾರೆ. ಪೊಲೀಸರು ಹಾಗೂ ಅಗ್ನಿಶಾಮಕ ದಳದವರು ಬೆಂಕಿ ಅನಾಹುತದ ಕಾರಣದ ಬಗ್ಗೆ ಪ್ರತ್ಯೇಕ ತನಿಖೆ ನಡೆಸುತ್ತಿದ್ದಾರೆ. ನಿವಾಸಕ್ಕೆ ಅನಧಿಕೃತ ಪ್ರವೇಶದ ಬಗ್ಗೆ ಯಾವುದೇ ಹಂತದಲ್ಲಿ ಯಾವುದೇ ಪುರಾವೆ ಸಿಸಿಟಿವಿಯ ದೃಶ್ಯಾವಳಿಗಳ ಆರಂಭಿಕ ವಿಶ್ಲೇಷಣೆಯಿಂದ ಲಭ್ಯವಾಗಿಲ್ಲ ಎಂದು ಮೂಲಗಳು ಹೇಳಿವೆ. ಹಲವು ಕ್ಯಾಮೆರಾಗಳು ಪ್ರವೇಶದ್ವಾರವನ್ನು ಕೇಂದ್ರೀಕರಿಸಿಲ್ಲ ಹಾಗೂ ಪ್ರವೇಶ ಮತ್ತು ನಿರ್ಗಮನದ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ ಎಂದು ಹೇಳಲಾಗಿದೆ. ವಿಶೇಷ ತನಿಖಾ ತಂಡ ಮತ್ತು ವಿಶೇಷ ಘಟಕದ ಇಬ್ಬರು ಹೆಚ್ಚುವರಿ ಸಿಪಿ ಶ್ರೇಣಿಯ ಅಧಿಕಾರಿಗಳು ಸುಮಾರು 40 ಪುಟಗಳ ವರದಿಯನ್ನು ಸಿದ್ಧಪಡಿಸಿದ್ದು, ಇದರಲ್ಲಿ ನ್ಯಾಯಮೂರ್ತಿ ವರ್ಮಾ ಅವರ ಮೊಬೈಲ್ ಕರೆಯ ವಿವರಗಳು ಮತ್ತು ಇಂಟರ್ನೆಟ್ ಪ್ರೊಟೋಕಾಲ್ ವಿವರಗಳಿವೆ. ಇದನ್ನು ಸುಪ್ರೀಂಕೋರ್ಟ್ ನ ತನಿಖಾ ಆಯೋಗಕ್ಕೆ ಸಲ್ಲಿಸಲಾಗುತ್ತದೆ ಎಂದು ಮೂಲಗಳು ವಿವರಿಸಿವೆ. ಬುಧವಾರ ಮಧ್ಯಾಹ್ನ ಪೊಲೀಸ್ ತಂಡ ತುಘಲಕ್ ಕ್ರೆಸೆಂಟ್ ರಸ್ತೆಯಲ್ಲಿರುವ ನ್ಯಾಯಮೂರ್ತಿಗಳ ಅಧಿಕೃತ ನಿವಾಸಕ್ಕೆ ಭೇಟಿ ನೀಡಿದೆ. ಡಿಸಿಪಿ ದೇವೇಶ್ ಮಹ್ಲಾ, ಎಸಿಪಿ ವೀರೇಂದ್ರ ಜೈನ್ ಹಾಗೂ ಕ್ಯಾಮೆರಾ ತಂಡ ಎರಡು ಗಂಟೆ ಕಾಲ ಅಲ್ಲಿ ಮಾಹಿತಿ ಕಲೆ ಹಾಕಿತು. ಬೀಗಮುದ್ರೆ ಹಾಕುವ ಮುನ್ನ ದಾಸ್ತಾನು ಕೊಠಡಿಯ ವಿಡಿಯೊ ಚಿತ್ರೀಕರಣ ನಡೆಸಲಾಗಿದೆ.
ನಗದು ಪತ್ತೆ ಪ್ರಕರಣ: ನ್ಯಾಯಮೂರ್ತಿ ನಿವಾಸದ ದಾಸ್ತಾನು ಕೊಠಡಿಗೆ 11 ದಿನಗಳ ಬಳಿಕ ಬೀಗಮುದ್ರೆ!
ಹೊಸದಿಲ್ಲಿ: ಹನ್ನೆರಡು ದಿನಗಳ ಹಿಂದೆ ನಡೆದ ಬೆಂಕಿ ಆಕಸ್ಮಿಕ ಸಂದರ್ಭದಲ್ಲಿ ಸುಟ್ಟ ನೋಟಿನ ಕಂತೆಗಳು ಪತ್ತೆಯಾಗಿವೆ ಎನ್ನಲಾದ ನ್ಯಾಯಮೂರ್ತಿ ಯಶವಂತ ವರ್ಮಾ ಅವರ ನಿವಾಸದ ದಾಸ್ತಾನು ಕೊಠಡಿಗೆ ಬುಧವಾರ ದೆಹಲಿ ಪೊಲೀಸರು ಬೀಗಮುದ್ರೆ ಹಾಕಿದ್ದಾರೆ. ನಿವಾಸದ ಆವರಣದ ವಿಡಿಯೊ ಚಿತ್ರೀಕರಣವನ್ನೂ ಮಾಡಿದ್ದಾರೆ. ನಗದು ಪತ್ತೆಯಾಗಿದೆ ಎಂಬ ಹೇಳಿಕೆಯನ್ನು ನ್ಯಾಯಮೂರ್ತಿ ಅಲ್ಲಗಳೆದಿರುವ ಹಿನ್ನೆಲೆಯಲ್ಲಿ ತನಿಖೆಯ ಭಾಗವಾಗಿ ಸಿಸಿಟಿವಿ ಕ್ಯಾಮೆರಾಗಳಿಂದ ದೃಶ್ಯಾವಳಿಗಳನ್ನು ಕೂಡಾ ಪೊಲೀಸರು ಸಂಗ್ರಹಿಸಿದ್ದಾರೆ. ಪೊಲೀಸರು ಹಾಗೂ ಅಗ್ನಿಶಾಮಕ ದಳದವರು ಬೆಂಕಿ ಅನಾಹುತದ ಕಾರಣದ ಬಗ್ಗೆ ಪ್ರತ್ಯೇಕ ತನಿಖೆ ನಡೆಸುತ್ತಿದ್ದಾರೆ. ನಿವಾಸಕ್ಕೆ ಅನಧಿಕೃತ ಪ್ರವೇಶದ ಬಗ್ಗೆ ಯಾವುದೇ ಹಂತದಲ್ಲಿ ಯಾವುದೇ ಪುರಾವೆ ಸಿಸಿಟಿವಿಯ ದೃಶ್ಯಾವಳಿಗಳ ಆರಂಭಿಕ ವಿಶ್ಲೇಷಣೆಯಿಂದ ಲಭ್ಯವಾಗಿಲ್ಲ ಎಂದು ಮೂಲಗಳು ಹೇಳಿವೆ. ಹಲವು ಕ್ಯಾಮೆರಾಗಳು ಪ್ರವೇಶದ್ವಾರವನ್ನು ಕೇಂದ್ರೀಕರಿಸಿಲ್ಲ ಹಾಗೂ ಪ್ರವೇಶ ಮತ್ತು ನಿರ್ಗಮನದ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ ಎಂದು ಹೇಳಲಾಗಿದೆ. ವಿಶೇಷ ತನಿಖಾ ತಂಡ ಮತ್ತು ವಿಶೇಷ ಘಟಕದ ಇಬ್ಬರು ಹೆಚ್ಚುವರಿ ಸಿಪಿ ಶ್ರೇಣಿಯ ಅಧಿಕಾರಿಗಳು ಸುಮಾರು 40 ಪುಟಗಳ ವರದಿಯನ್ನು ಸಿದ್ಧಪಡಿಸಿದ್ದು, ಇದರಲ್ಲಿ ನ್ಯಾಯಮೂರ್ತಿ ವರ್ಮಾ ಅವರ ಮೊಬೈಲ್ ಕರೆಯ ವಿವರಗಳು ಮತ್ತು ಇಂಟರ್ನೆಟ್ ಪ್ರೊಟೋಕಾಲ್ ವಿವರಗಳಿವೆ. ಇದನ್ನು ಸುಪ್ರೀಂಕೋರ್ಟ್ನ ತನಿಖಾ ಆಯೋಗಕ್ಕೆ ಸಲ್ಲಿಸಲಾಗುತ್ತದೆ ಎಂದು ಮೂಲಗಳು ವಿವರಿಸಿವೆ. ಬುಧವಾರ ಮಧ್ಯಾಹ್ನ ಪೊಲೀಸ್ ತಂಡ ತುಘಲಕ್ ಕ್ರೆಸೆಂಟ್ ರಸ್ತೆಯಲ್ಲಿರುವ ನ್ಯಾಯಮೂರ್ತಿಗಳ ಅಧಿಕೃತ ನಿವಾಸಕ್ಕೆ ಭೇಟಿ ನೀಡಿದೆ. ಡಿಸಿಪಿ ದೇವೇಶ್ ಮಹ್ಲಾ, ಎಸಿಪಿ ವೀರೇಂದ್ರ ಜೈನ್ ಹಾಗೂ ಕ್ಯಾಮೆರಾ ತಂಡ ಎರಡು ಗಂಟೆ ಕಾಲ ಅಲ್ಲಿ ಮಾಹಿತಿ ಕಲೆ ಹಾಕಿತು. ಬೀಗಮುದ್ರೆ ಹಾಕುವ ಮುನ್ನ ದಾಸ್ತಾನು ಕೊಠಡಿಯ ವಿಡಿಯೊ ಚಿತ್ರೀಕರಣ ನಡೆಸಲಾಗಿದೆ.
ವಾಹನಗಳ ಆಮದಿನ ಮೇಲೆ 25% ಸುಂಕ ವಿಧಿಸಿದ ಟ್ರಂಪ್
ವಾಷಿಂಗ್ಟನ್: ಅಮೆರಿಕಕ್ಕೆ ಆಮದಾಗುವ ವಾಹನಗಳ ಮೇಲೆ ಶೇಕಡ 25ರಷ್ಟು ಸುಂಕ ವಿಧಿಸುವ ನಿರ್ಧಾರವನ್ನು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬುಧವಾರ ಪ್ರಕಟಿಸಿದ್ದಾರೆ. ಇದರು ದೇಶಿ ಉತ್ಪಾದನೆಯನ್ನು ಉತ್ತೇಜಿಸುವುದಲ್ಲದೇ ವಾರ್ಷಿಕ 100 ಶತಕೋಟಿ ಡಾಲರ್ ಆದಾಯ ಹೆಚ್ಚಿಸಲಿದೆ ಎಂದು ಅವರು ಹೇಳಿದ್ದಾರೆ. ಈ ಸುಂಕ ಏಪ್ರಿಲ್ 3ರಂದು ಜಾರಿಗೆ ಬರಲಿದ್ದು, ವಾಹನ ಉತ್ಪಾದಕರು ವೆಚ್ಚ ಹೆಚ್ಚಳ ಹಾಗೂ ಕಡಿಮೆ ಮಾರಾಟದ ಸಮಸ್ಯೆಯನ್ನು ಎದುರಿಸಲಿದ್ದಾರೆ. ಈ ನಡೆಯಿಂದಾಗಿ ಅಮೆರಿಕದಲ್ಲಿ ಫ್ಯಾಕ್ಟರಿಗಳು ಆರಂಭವಾಗಲಿವೆ ಎಂಬ ನಿರೀಕ್ಷೆಯನ್ನು ಟ್ರಂಪ್ ಹೊಂದಿದ್ದು, ಅಮೆರಿಕ, ಕೆನಡ ಮತ್ತು ಮೆಕ್ಸಿಕೋದಲ್ಲಿ ಹರಡಿರುವ ಕೆಟ್ಟ ಪೂರೈಕೆ ಸರಪಳಿ ಕಡಿತಗೊಳ್ಳಲಿದೆ ಎಂದು ಹೇಳಿದ್ದಾರೆ. ಇದು ಕಾಯಂ ವ್ಯವಸ್ಥೆ ಎಂದು ತಮ್ಮ ನಿಲುವನ್ನು ದೃಢಪಡಿಸಿದ್ದಾರೆ. ವಾಹನ ಆಮದು ಸುಂಕ ತಮ್ಮ ಅಧ್ಯಕ್ಷೀಯ ಅವಧಿಯ ಪ್ರಮುಖ ನೀತಿಗಳಲ್ಲೊಂದು ಎಂದು ಹೇಳುತ್ತಲೇ ಬಂದಿರುವ ಟ್ರಂಪ್, ಈ ಹೆಚ್ಚುವರಿ ವೆಚ್ಚವು ಅಮೆರಿಕದಲ್ಲಿ ಹೆಚ್ಚುವರಿ ಉತ್ಪಾದನೆಗೆ ಕಾರಣವಾಗಲಿದೆ ಮತ್ತು ವಿತ್ತೀಯ ಕೊರತೆಯನ್ನು ಕಡಿಮೆ ಮಾಡಲಿದೆ ಎಂಬ ನಿರೀಕ್ಷೆ ಹೊಂದಿದ್ದಾರೆ. ವಾಹನದ ಬೆಲೆ ಹೆಚ್ಚುವುದನ್ನು ನಾವು ಎದುರು ನೋಡುತ್ತಿದ್ದೇವೆ. ಆಯ್ಕೆಗಳು ಕಡಿಮೆಯಾಗಲಿವೆ...ಈ ಬಗೆಯ ತೆರಿಗೆಗಳು ಮಧ್ಯಮವರ್ಗ ಮತ್ತು ದುಡಿಯುವ ವರ್ಗದ ಮೇಲೆ ಪರಿಣಾಮ ಬೀರಲಿವೆ ಎಂದು ಅರ್ಥಶಾಸ್ತ್ರಜ್ಞ ಮತ್ತು ಪೀಟರ್ಸನ್ ಇನ್ಸ್ಟಿಟ್ಯೂಟ್ ಫಾರ್ ಇಂಟರ್ನ್ಯಾಷನಲ್ ಎಕನಾಮಿಕ್ಸ್ನ ಹಿರಿಯ ತಜ್ಞೆ ಮೇರಿ ಲವ್ಲಿ ವಿಶ್ಲೇಷಿಸಿದ್ದಾರೆ. ಈಗಾಗಲೇ ಸರಾಸರಿ ಕಾರು ಬೆಲೆ 49 ಸಾವಿರ ಡಾಲರ್ಗಳಷ್ಟಿರುವುದರಿಂದ ಹಲವು ಕುಟುಂಬಗಳು ಹೊಸ ಕಾರು ಮಾರುಕಟ್ಟೆಯಿಂದ ವಿಮುಖವಾಗಲಿವೆ ಮತ್ತು ಹಳೆಯ ವಾಹನಗಳನ್ನು ಇಟ್ಟುಕೊಳ್ಳುವುದು ಅನಿವಾರ್ಯವಾಗಲಿದೆ ಎಂದು ಹೇಳಿದ್ದಾರೆ. ಅಮೆರಿಕ ಕಳೆದ ವರ್ಷ ಪ್ರಮುಖವಾಗಿ ಮೆಕ್ಸಿಕೊ, ಜಪಾನ್ ಮತ್ತು ದಕ್ಷಿಣ ಕೊರಿಯಾದಿಂದ 80 ಲಕ್ಷ ಕಾರು ಹಾಗೂ ಲಘು ಟ್ರಕ್ಗಳನ್ನು ಆಮದು ಮಾಡಿಕೊಂಡಿದ್ದು, ಇವುಗಳ ಮೌಲ್ಯ ಸುಮಾರು 244 ಶತಕೋಟಿ ಡಾಲರ್. ಅಂತೆಯೇ 197 ಶತಕೋಟಿ ಡಾಲರ್ ಮೌಲ್ಯದ ವಾಹನ ಬಿಡಿಭಾಗಗಳನ್ನು ಕೂಡಾ ಆಮದು ಮಾಡಿಕೊಳ್ಳಲಾಗುತ್ತಿದ್ದು, ಮೆಕ್ಸಿಕೊ, ಕೆನಡಾ ಹಾಗೂ ಚೀನಾದಿಂದ ಹೆಚ್ಚು ಆಮದಾಗುತ್ತಿದೆ.
ಡಿಕೆಶಿ ವಿರುದ್ಧ ಯತ್ನಾಳ್ ದಾಖಲಿಸಿದ್ದ ಕೇಸ್ ನಲ್ಲಿ ತನ್ನ ಅಫಿಡವಿಟ್ ಹಿಂಪಡೆದ ರಾಜ್ಯ ಸರ್ಕಾರ!
ಡಿಕೆಶಿಯವರ ಅಕ್ರಮ ಆಸ್ತಿ ಗಳಿಕೆ ಕೇಸ್ ಅನ್ನು ಸಿಬಿಐಗೆ ವಹಿಸಬೇಕೆಂದು ಹಿಂದಿನ ಬಿಜೆಪಿ ಸರ್ಕಾರ 2019ರಲ್ಲಿ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿತ್ತು. ಆದರೆ, 2023ರಲ್ಲಿ ಅಧಿಕಾರಕ್ಕೆ ಬಂದಿದ್ದ ರಾಜ್ಯ ಸರ್ಕಾರ, ಆ ನಿರ್ಧಾರವನ್ನು ಹಿಂಪಡೆದಿತ್ತು. ಶಿಫಾರಸು ಹಿಂಪಡೆಯುವ ತನ್ನ ನಿರ್ಧಾರವನ್ನು ಸಮರ್ಥಿಸಿಕೊಂಡು 2024ರ ಸೆ. 17ರಂದು ಸುಪ್ರೀಂ ಕೋರ್ಟ್ ಗೆ ಕರ್ನಾಟಕ ಸರ್ಕಾರ ಅಫಿಡವಿಟ್ ಸಲ್ಲಿಸಿತ್ತು. ಈಗ ಆ ಅಫಿಡವಿಟ್ ಅನ್ನು ರಾಜ್ಯ ಸರ್ಕಾರ ಹಿಂಪಡೆದಿದೆ.
ಓಲಾ ಮಾದರಿಯಲ್ಲಿ ಕೇಂದ್ರ ಸರ್ಕಾರದಿಂದ ಟ್ಯಾಕ್ಸಿ ಸೇವೆ, ವಿವರ
ನವದೆಹಲಿ, ಮಾರ್ಚ್ 27: ಖಾಸಗಿ ಕಂಪನಿಗಳ ಅಪ್ಲಿಕೇಶನ್ ಆಧಾರಿತ ಟ್ಯಾಕ್ಸಿ ಸೇವೆಗಳು ಜನರನ್ನು ಸುಲಿಗೆ ಮಾಡುತ್ತವೆ ಎಂಬ ಆರೋಪಗಳಿವೆ. ಈ ಹಿನ್ನಲೆಯಲ್ಲಿ ವಿವಿಧ ನಗರದಲ್ಲಿ ಹಲವು ಬಾರಿ ಟ್ಯಾಕ್ಸಿ ಚಾಲಕರು, ಪ್ರಯಾಣಿಕರ ನಡುವೆ ಮಾತಿನ ಚಕಮಕಿ ನಡೆಯುತ್ತದೆ. ಈಗ ಕೇಂದ್ರ ಸರ್ಕಾರ ಟ್ಯಾಕ್ಸಿ ಸೇವೆಯನ್ನು ಆರಂಭಿಸಲು ತೀರ್ಮಾನಿಸಿದೆ. ಈ ಕುರಿತು ಲೋಕಸಭೆಯಲ್ಲಿ ಕೇಂದ್ರ ಗೃಹ ಮತ್ತು ಸಹಕಾರ
Karnataka Weather: ಬಿಸಿಲು ಹೆಚ್ಚಳ ಕರಾವಳಿ ಕಂಗಾಲು-ಕಟ್ಟಡ ಕೆಲಸಕ್ಕೂ ಕಾರ್ಮಿಕರ ಕೊರತೆ!
ದ.ಕ., ಉಡುಪಿ ಸೇರಿದಂತೆ ರಾಜ್ಯದೆಲ್ಲೆಡೆ ಪ್ರತಿನಿತ್ಯ 35ರಿಂದ 40 ಡಿಗ್ರಿ ಸೆಲ್ಸಿಯಸ್ಗಿಂತ ಹೆಚ್ಚಿನ ತಾಪಮಾನ ದಾಖಲಾಗುತ್ತಿದೆ. ದ.ಕ. ಜಿಲ್ಲೆಯಲ್ಲಿ ಕಳೆದೆರಡು ದಿನಗಳಲ್ಲಿ 36-38 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ಒಟ್ಟಾರೆ ತಾಪಮಾನದ ಏರಿಕೆ ಎಲ್ಲರಲ್ಲಿಯೂ ಬೆವರಿಳಿಸುತ್ತಾ ಸಾಗುತ್ತಿದೆ. ರಾಜ್ಯದಲ್ಲಿ ಏ.5ರವರೆಗೂ ಒಣ ಹವೆ ಮುಂದುವರಿಯಲಿದ್ದು, ಇದರ ನಡುವೆ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಲಘು ಪ್ರಮಾಣದಲ್ಲಿ ಮಳೆಯಾಗುವ ಸಾಧ್ಯತೆ ಇದೆ.
ಎಚ್-1ಬಿ ವೀಸಾ: ಅಮೆರಿಕದ ಟೆಕ್ ಕಂಪನಿಗಳದ್ದೇ ಪ್ರಾಬಲ್ಯ, ಭಾರತದ ಕಂಪನಿಗಳದ್ದೆಷ್ಟು ಪಾಲು?
ಭಾರತದ ಸಾಂಪ್ರದಾಯಿಕ ಕಂಪನಿಗಳನ್ನೂ ಮೀರಿ, ಅಮೆರಿಕದ ದೈತ್ಯ ಟೆಕ್ ಕಂಪನಿಗಳೇ ಅತಿಹೆಚ್ಚು ಎಚ್ -1ಬಿ ವೀಸಾಗಳಿಗೆ ಅನುಮೋದನೆ ಪಡೆದಿವೆ. ಪೌರತ್ವ ಮತ್ತು ವಲಸೆ ಸೇವೆಗಳ(ಯುಎಸ್ಸಿಐಎಸ್) ದತ್ತಾಂಶದ ಪ್ರಕಾರ, ಅಮೆಜಾನ್ 9,265 ಎಚ್-1ಬಿ ವೀಸಾಗಳಿಗೆ ಅನುಮೋದನೆ ಪಡೆದುಕೊಂಡಿದ್ದು ಮುಂಚೂಣಿಯಲ್ಲಿದೆ. ನಂತರದ ಸ್ಥಾನದಲ್ಲಿ ಕಾಗ್ನಿಜೆಂಟ್ ಟೆಕ್ನಾಲಜಿ ಸೊಲ್ಯೂಷಸ್ಸ್(6,321 ವೀಸಾಗಳು), ಗೂಗಲ್(5,364 ವೀಸಾಗಳು) ಇವೆ.
ಭಾರತ ತಂಡದ ಸೂಪರ್ ಸ್ಟಾರ್ ಸಂಸ್ಕೃತಿಗೆ ಬಿಸಿಸಿಐ ಕತ್ತರಿ?: ಸೀನಿಯರ್ ಆಟಗಾರರಿಗೂ ಎ ಟೀಂನಲ್ಲಿ ಟೆಸ್ಟ್!
BCCI Vs Star Players - ಭಾರತ ತಂಡ ಇಂದು ಐಸಿಸಿ ಚಾಂಪಿಯನ್ಸ್ ಟ್ರೋಫಿ ಗೆದ್ದಿರಬಹುದು. ಹಾಗಂತ ಈ ಹಿಂದಿನ ನ್ಯೂಜಿಲೆಂಡ್ ವಿರುದ್ಧ ಸರಣಿಯ ಹೀನಾಯ ಸೋಲನ್ನು ಭಾರತೀಯ ಕ್ರಿಕೆಟ್ ಮಂಡಳಿ(BCCI) ಮರೆತಿಲ್ಲ. ಮರೆಯುವ ಲಕ್ಷಣವೂ ಕಾಣುತ್ತಿಲ್ಲ. ತಂಡದಲ್ಲಿ ಸೂಪರ್ ಸ್ಟಾರ್ ಸಂಸ್ಕೃತಿಯನ್ನು ಕೊನೆಗಾಣಿಸುವ ಸಲುವಾಗಿ ಈ ಹಿಂದೆಯೇ ತಂಡದಲ್ಲಿ ಹಲವು ಕಟ್ಟುನಿಟ್ಟಾದ ನಿಯಮಗಳನ್ನು ತರಲಾಗಿದೆ. ಮಾತ್ರವಲ್ಲದೆ ದಶಕದಿಂದ ದೇಶೀಯ ಪಂದ್ಯಗಳ ಕಡೆಗೆ ತಲೆಹಾಕದ ಇಬ್ಬರು ಸೂಪರ್ ಸ್ಟಾರ್ ಕ್ರಿಕೆಟಿಗರನ್ನು ರಣಜಿ ಕಣಕ್ಕಟ್ಟಿ ಬಿಸಿ ಮುಟ್ಟಿಸಿದೆ. ಇದೀಗ ಅದರ ಮುಂದುವರಿದ ಭಾಗವಾಗಿ ಮತ್ತೊಂದು ಮಹತ್ವದ ಹೆಜ್ಜೆಯನ್ನಿಡಲು ಬಿಸಿಸಿಐ ಸಿದ್ಧವಾಗಿದೆ.
ಕಲಬುರಗಿ | ರಟಕಲ್ ಗ್ರಾಮ ಪಂಚಾಯತ್ನಲ್ಲಿ ಅವ್ಯವಹಾರದ ಆರೋಪ ಸುಳ್ಳು : ಗ್ರಾ.ಪಂ ಅಧ್ಯಕ್ಷ ಜಗದೀಪ ಮಾಳಗಿ
ಕಲಬುರಗಿ : ಕಾಳಗಿ ತಾಲೂಕಿನ ರಟಕಲ್ ಗ್ರಾ.ಪಂ ಸದಸ್ಯರಾದ ಸುಭಾಷ್ ಮುಕರಂಬಾ ಹಾಗೂ ಬಂಡಪ್ಪ ಮುಕರಂಬಾ ಅವರು ತಮ್ಮ ಸದಸ್ಯತ್ವವನ್ನು ಉಳಿಸಿಕೊಳ್ಳಲು ರಾಜಕೀಯ ದುರುದ್ದೇಶದಿಂದ ಗ್ರಾ.ಪಂ ಪಿಡಿಓ ಅವ್ಯವಹಾರ ಎಸಗಿದ್ದಾರೆ ಎಂದು ಸುಳ್ಳು ಆರೋಪ ಮಾಡಿದ್ದಾರೆ ಎಂದು ರಟಕಲ್ ಗ್ರಾ.ಪಂ ಅಧ್ಯಕ್ಷ ಜಗದೀಪ ಮಾಳಗಿ ತಿಳಿಸಿದ್ದಾರೆ. ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಬುಧವಾರ ಮಾತನಾಡಿದ ಅವರು, ಗ್ರಾ.ಪಂ ಸದಸ್ಯರು ಮಾಡಿರುವ ಎಲ್ಲಾ ಆರೋಪಗಳು ಸುಳ್ಳಾಗಿದ್ದು, ನಮ್ಮ ಅಧ್ಯಕ್ಷತೆ ಅವಧಿಯಲ್ಲಿ ಸುಮಾರು 8 ಸಾಮಾನ್ಯ ಸಭೆಗಳು ನಡೆದಿವೆ. ಅದರಲ್ಲಿ ಕೆಲವು ಸಭೆಗಳಿಗೆ ಹಾಜರಾಗಿ ಕೆಲವು ಸಭೆಗಳ ಹಾಜರಾತಿ ಹಾಕಿದ್ದಾರೆ, ಈ ಕುರಿತಾದ ಆಡಿಟ್ ಗೂ ಸಹ ನಾವು ಸಿದ್ಧರಿದ್ದೇವೆ ಎಂದು ಸವಾಲು ಹಾಕಿದ್ದಾರೆ. ಅಲ್ಲದೆ ಕಾನೂನು ಬಾಹಿರವಾಗಿ ಚೆಕ್ ಪಡೆದುಕೊಂಡು ನರೇಗಾ ಅಡಿಯಲ್ಲಿ ಪಂಚಾಯತ್ ಕಾರ್ಯಾಲಯವನ್ನು ಮಳಿಗೆ ಎಂದು ಅಧಿಕಾರ ದುರುಪಯೋಗ ಪಡಿಸಿಕೊಂಡು ಕರಾರು ಒಪ್ಪಂದಕ್ಕೆ ಸಹಿ ಮಾಡಿರುವವರ ಸದಸ್ಯತ್ವ ರದ್ದುಗೊಳಿಸುವಂತೆ ದೂರು ಕೊಟ್ಟಿದ್ದಾರೆ. ಹೀಗೆ ತನ್ನ ಸದಸ್ಯತ್ವವನ್ನು ಉಳಿಸಿಕೊಳ್ಳಲು ಪಿಡಿಓ ಅವ್ಯವಹಾರ ಮಾಡಿರುತ್ತಾರೆ ಎಂದು ಕೆಲವು ಸಂಘಟನೆಗಳ ಜೊತೆಗೂಡಿ ಹೆದರಿಸಿ ಹೈಡ್ರಾಮಾ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಪಿಡಿಓ ವಿರುದ್ಧ ಮಾಡುತ್ತಿರುವ ಎಲ್ಲಾ ಆರೋಪಗಳು ಸುಳ್ಳಾಗಿವೆ. ಇದಕ್ಕೆಲ್ಲ ತನಿಖೆಗೆ ನಾವು ಬದ್ಧರಾಗಿದ್ದೇವೆ ಎಂದರು. ಸುದ್ದಿಗೋಷ್ಠಿಯಲ್ಲಿ ಮಹೇಶ್ ಪಾಟೀಲ್, ಸಿದ್ಧಲಿಂಗ ಗಂಗಶ್ರೀ, ವಿಷ್ಣುಕಾಂತ್ ಸ್ವಾಮಿ, ಶರಣಬಸಪ್ಪ ರಾಂಪೂರೆ ಸೇರಿದಂತೆ ಮತ್ತಿತರರು ಇದ್ದರು.
ಮಂಗಳೂರು: ಫೇಸ್ಬುಕ್ನಲ್ಲಿ ಟೆಲಿಗ್ರಾಂ ಪೇಜ್ ನಂಬಿ ಮೋಸ ಹೋದ ವ್ಯಕ್ತಿ
ಮಂಗಳೂರು: ಫೇಸ್ಬುಕ್ನಲ್ಲಿ ಟೆಲಿಗ್ರಾಂ ಪೇಜ್ ನಂಬಿ ವ್ಯಕ್ತಿಯೊಬ್ಬರು ಮೋಸ ಹೋದ ಘಟನೆ ನಡೆದಿದ್ದು, ನಗರದ ಬರ್ಕೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಾ.1ರಂದು ತಾನು ಫೆಸ್ಬುಕ್ ಪೇಜ್ ನೋಡುವಾಗ ‘ವರ್ಕ್ ಫ್ರಂ ಹೋಂ’ ಜಾಹೀರಾತು ಕಂಡು ಅದನ್ನು ಕ್ಲಿಕ್ ಮಾಡಿದ್ದೆ. ಆಗ ಹೊಸ ಟೆಲಿಗ್ರಾಮ್ ಪೇಜ್ ತೆರೆದುಕೊಂಡಿತ್ತು. ಆ ಟೆಲಿಗ್ರಾಂ ಗ್ರೂಪ್ನಲ್ಲಿ ಕೆಲವು ಟಾಸ್ಕ್ ಮಾಡುವಂತೆ ತಿಳಿಸಲಾಯಿತು. ಗ್ರೂಪ್ಗೆ ಸೇರ್ಪಡೆಯಾಗಿರುವುದಕ್ಕಾಗಿ ತನ್ನ ಖಾತೆಗೆ 120 ರೂ. ಹಾಗೂ ನಂತರ 20 ಟಾಸ್ಕ್ ನಿರ್ವಹಿಸಿರುವುದಕ್ಕೆ 200 ರೂ.ಗಳನ್ನು ವರ್ಗಾಯಿಸಲಾಯಿತು. ಬಳಿಕ 800 ರೂ. ಪಾವತಿ ಮಾಡುವಂತೆ ಹಾಗೂ ಟಾಸ್ಕ್ ಪೂರ್ಣಗೊಳಿಸುವಂತೆ ಸೂಚಿಸಲಾಯಿತು. ಅದಕ್ಕೆ ಪ್ರತಿಯಾಗಿ ತನ್ನ ಖಾತೆಗೆ 1040 ರೂ.ಗಳನ್ನು ಪಾವತಿ ಮಾಡಲಾಯಿತು. ಮಾ.4ರಂದು ತಾನು 40,000 ರೂ.ಗಳನ್ನು ಅಪರಿಚಿತರು ನೀಡಿದ ಖಾತೆಗೆ ಪಾವತಿ ಮಾಡಿದ್ದೆ. ಅನಂತರವೂ ಅಧಿಕ ಲಾಭದ ಆಮಿಷಕ್ಕೆ ಒಳಗಾಗಿ ಮಾ.13ರವರೆಗೆ ಅಪರಿಚಿತರು ನೀಡಿದ ಬೇರೆ ಬೇರೆ ಖಾತೆಗಳಿಗೆ ಹಂತ ಹಂತವಾಗಿ 16.42 ಲಕ್ಷ ರೂ.ಗಳನ್ನು ಆನ್ಲೈನ್ ಮೂಲಕ ವರ್ಗಾಯಿಸಿದ್ದೆ. ಮಾ.18ರಂದು ಆ ಹಣವನ್ನು ವಾಪಸ್ ಕೇಳಿದಾಗ ನೀಡಲಿಲ್ಲ. ಆಗ ತಾನು ಮೋಸ ಹೋಗಿರುವುದು ಗೊತ್ತಾಗಿದೆ ಎಂದು ಹಣಕಳಕೊಂಡ ವ್ಯಕ್ತಿ ದೂರಿನಲ್ಲಿ ತಿಳಿಸಿದ್ದಾರೆ.
Donald Trump: ಡೊನಾಲ್ಡ್ ಟ್ರಂಪ್ ಹೊಸ ತೆರಿಗೆ ಯೋಜನೆ ಜಾರಿಗೆ ಕೌಂಟ್ಡೌನ್!
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಧಿಕಾರಕ್ಕೆ ಬಂದ ನಂತರ ಭಾರಿ ಸಂಚಲನ ಸೃಷ್ಟಿಸಿ ಸದ್ದು ಮಾಡಿರುವ ಹೊಸ ತೆರಿಗೆ ನೀತಿ ಇನ್ನೇನು ಜಾರಿಗೆ ಬರಲಿದೆ. ಹೀಗೆ ಹೊಸ ತೆರಿಗೆಯ ನೀತಿ ಜಾರಿಗೆ ಅಮೆರಿಕ ಸರ್ಕಾರ ಸಕಲ ಸಿದ್ಧತೆ ಮಾಡಿಕೊಂಡಿದೆ. ವಿರೋಧಿಗಳನ್ನು ಎದುರಿಸಿ ನಿಲ್ಲಲು &ಆರ್ಥಿಕವಾಗಿ ಅಮೆರಿಕದ ಬಲವರ್ಧನೆಗೆ ತೆರಿಗೆ ನೀತಿಯಲ್ಲಿ ಬದಲಾವಣೆ ಮಾಡಿ ಸಂಚಲನ ಸೃಷ್ಟಿಸಿದ್ದಾರೆ
Explainer: ಹಿಂದೂ ಹುಲಿಯನ್ನು ಕಾಡಿಗಟ್ಟಿದ ಕಮಲ ಪಡೆ; ಉತ್ತರ ಕರ್ನಾಟಕದಲ್ಲಿ ಬ್ಯಾಕ್ಫೈಯರ್ ಸಾಧ್ಯತೆ!
ಕರ್ನಾಟಕ ಬಿಜೆಪಿ ಘಟಕದ ಬಣ ಬಡಿದಾಟಕ್ಕೆ ಇಂದು ತಾರ್ಕಿಕ ಅಂತ್ಯವಲ್ಲದಿದ್ದರೂ, ತಾತ್ಕಾಲಿಕ ತಡೆಯಂತೂ ಖಂಡಿತ ದೊರೆತಿದೆ. ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರ ಉಚ್ಚಾಟನೆ, ಯತ್ನಾಳ್ vs ವಿಜಯೇಂದ್ರ ತಿಕ್ಕಾಟಗಳಿಗೆ ಬ್ರೇಕ್ ಹಾಕಿದೆ. ಆದರೆ ಇದು ತಾತ್ಕಾಲಿಕವಾಗಿದ್ದು, ಯತ್ನಾಳ್ ಬೇರೊಂದು ರೂಪದಲ್ಲಿ ಬಿಎಸ್ ಯಡಿಯೂರಪ್ಪ ಮತ್ತು ಬಿವೈ ವಿಜಯೇಂದ್ರ ಮೇಲೆ ಮುಗಿಬೀಳುವುದು ಶತಸಿದ್ಧ. ಇನ್ನು ಹಿಂದೂ ಹುಲಿಖ್ಯಾತಿಯ ಯತ್ನಾಳ್ ಅವರನ್ನು ಪಕ್ಷದಿಂದ ಹೊರಹಾಕಿ, ಉತ್ತರ ಕರ್ನಾಟಕ ಭಾಗದಲ್ಲಿ ಭುಗಿಲೇಳುವ ಅಸಮಾಧಾವನ್ನು ಎದುರಿಸಲು ಬಿಜೆಪಿ ಕೂಡ ಸಜ್ಜಾಗಲಿದೆ. ಈ ಎಲ್ಲ ಬೆಳವಣಿಗೆಗಳ ಕುರಿತು ಇಲ್ಲಿದೆ ವಿಶ್ಲೇಷಣೆ.
ಸ್ಕ್ಯಾನಿಂಗ್ ಸಂಸ್ಥೆಗಳ ವೈದ್ಯರ ನೋಂದಣಿ ಕಡ್ಡಾಯ: ಡಿಎಚ್ಒ
ಮಂಗಳೂರು: ಸ್ಕ್ಯಾನಿಂಗ್ ಮಾಡುವ ಯಾವುದೇ ತಜ್ಞ ವೈದ್ಯರು ನಿರ್ದಿಷ್ಟ ಸ್ಕ್ಯಾನಿಂಗ್ ಕೇಂದ್ರದಲ್ಲಿ ಸ್ಕ್ಯಾನಿಂಗ್ ಮಾಡಲು ಪ್ರತ್ಯೇಕವಾಗಿ ನೋಂದಣಿ ಮಾಡಿರಬೇಕು. ಇಲ್ಲದಿದ್ದರೆ ಅಂತಹ ವೈದ್ಯರಿಗೆ ಸ್ಕ್ಯಾನಿಂಗ್ ಕೇಂದ್ರದಲ್ಲಿ ಕಾರ್ಯನಿರ್ವಹಿಸಲು ಅವಕಾಶವಿಲ್ಲ. ನೋಂದಣಿ ಮಾಡಿದ ಕೇಂದ್ರ ಬಿಟ್ಟು ಬೇರೆಡೆ ಸ್ಕ್ಯಾನಿಂಗ್ ಮಾಡಿದರೂ ಅಂತಹ ಸ್ಕ್ಯಾನಿಂಗ್ ಯಂತ್ರಗಳನ್ನು ವಶಪಡಿಸಿ ಸ್ಕ್ಯಾನಿಂಗ್ ಕೇಂದ್ರವನ್ನು ಬಂದ್ ಮಾಡಲು ಪಿಸಿಪಿಎನ್ಡಿಟಿ ಕಾನೂನಿನಲ್ಲಿ ಅವಕಾಶವಿದೆ ಎಂದು ದ.ಕ.ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿ ಡಾ. ತಿಮ್ಮಯ್ಯ ಹೇಳಿದರು. ಜಿಲ್ಲಾ ಆರೋಗ್ಯ ಇಲಾಖೆಯ ಕಚೇರಿಯಲ್ಲಿ ಬುಧವಾರ ದ.ಕ.ಜಿಲ್ಲಾ ಸಲಹಾ ಸಮಿತಿ ಹಾಗೂ ಜಿಲ್ಲಾ ಮೇಲ್ವಿಚಾರಣಾ ಮತ್ತು ತಪಾಸಣಾ ಸಮಿತಿ ಸಭೆ (ಪಿ.ಸಿ.ಪಿ.ಎನ್.ಡಿ.ಟಿ.)ಯಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಜಿಲ್ಲಾ ಸಲಹಾ ಸಮಿತಿಯ ಅಧ್ಯಕ್ಷ ಡಾ.ಅಮೃತಾ ಭಂಡಾರಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಸಲಹಾ ಸಮಿತಿ ಹಾಗೂ ಜಿಲ್ಲಾ ಮೇಲ್ವಿಚಾರಣಾ ಮತ್ತು ತಪಾಸಣಾ ಸಮಿತಿ ಸದಸ್ಯರು ಉಪಸ್ಥಿತರಿದ್ದರು.
ಹೊಸತನದ ಕಥನ ಮಾರ್ಗದ ಅನಿವಾರ್ಯತೆ ಇಂದು ನಮ್ಮೆದುರಿಗಿದೆ
ವಿಶ್ವರಂಗಭೂಮಿ ದಿನದ ಸಂದೇಶ - 2025
ದ.ಕ.ಜಿಲ್ಲೆಯಲ್ಲಿ ನೀಟ್ ಪರೀಕ್ಷೆಗೆ 9,080 ವಿದ್ಯಾರ್ಥಿಗಳ ನೋಂದಣಿ
ಮಂಗಳೂರು: ವೈದ್ಯಕೀಯ ಪದವಿ ಕೋರ್ಸುಗಳ ಪ್ರವೇಶಕ್ಕೆ ಮೇಯಲ್ಲಿ ನಡೆಯಲಿರುವ ನೀಟ್ ಪರೀಕ್ಷೆಗೆ ಸಂಬಂಧಿಸಿದಂತೆ ಜಿಲ್ಲಾ ಮಟ್ಟದ ಸಮಿತಿ ಸಭೆಯು ಜಿಲ್ಲಾಧಿಕಾರಿ ಕಚೇರಿಯಲ್ಲಿ ಬುಧವಾರ ನಡೆಯಿತು. ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ದ.ಕ.ಜಿಪಂ ಸಿಇಒ ಡಾ. ಆನಂದ್ ಕೆ. ಸರಕಾರಿ ಮತ್ತು ಅನುದಾನಿತ ಕಾಲೇಜುಗಳಲ್ಲಿ ಮಾತ್ರ ನೀಟ್ ಪರೀಕ್ಷಾ ಕೇಂದ್ರಗಳಿವೆ. ಮೇ4ರಂದು ನೀಟ್ ಪರೀಕ್ಷೆ ನಡೆಯಲಿದೆ. ಪರೀಕ್ಷಾ ಕೇಂದ್ರಗಳ ಪಟ್ಟಿಯನ್ನು ತಯಾರಿಸಿ ಪರೀಕ್ಷಾ ಕೇಂದ್ರಗಳ ಕೊಠಡಿಯಲ್ಲಿ ಸಿ.ಸಿ ಕ್ಯಾಮೆರಾ ಹಾಗೂ ಪೀಠೋಪಕರಣದ ವ್ಯವಸ್ಥೆಯನ್ನು ಕಾಲೇಜಿಗೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು ಎಂದು ಸೂಚಿಸಿದರು. ಪರೀಕ್ಷಾ ಕೇಂದ್ರಗಳಲ್ಲಿ ಅಗತ್ಯ ಸೌಲಭ್ಯಗಳನ್ನು ಒದಗಿಸಬೇಕು. ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯ ಮಾರ್ಗಸೂಚಿಯ ಅನ್ವಯ ಕಟ್ಟುನಿಟ್ಟಿನ ಸಿದ್ಧತೆಗಳನ್ನು ಕೈಗೊಳ್ಳಲು ಡಾ. ಆನಂದ್ ಸೂಚಿಸಿದರು. ಅಪರ ಜಿಲ್ಲಾಧಿಕಾರಿ ಡಾ.ಜಿ ಸಂತೋಷ್ ಕುಮಾರ್ ಮಾತನಾಡಿ ಮೇ4ರಂದು ನಡೆಯುವ ನೀಟ್ ಪರೀಕ್ಷೆಗೆ ಜಿಲ್ಲೆಯಲ್ಲಿ 21 ಪರೀಕ್ಷಾ ಕೇಂದ್ರಗಳಿದೆ. 9,080 ಅಭ್ಯರ್ಥಿಗಳು ಪರೀಕ್ಷೆಗೆ ನೋಂದಣಿ ಮಾಡಿದ್ದಾರೆ ಎಂದು ಮಾಹಿತಿ ನೀಡಿದರು. ನೀಟ್ ಪರೀಕ್ಷೆ ಸುಗಮವಾಗಿ ನಡೆಯಲು ಎಲ್ಲ ರೀತಿಯ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು. ಪರೀಕ್ಷಾ ಕೇಂದ್ರಕ್ಕೆ ಪ್ರವೇಶಿಸುವ ಅಭ್ಯರ್ಥಿಗಳ ತಪಾಸಣೆ ಸೇರಿದಂತೆ ವಿವಿಧ ರೀತಿಯ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದರು.
ಕಲಬುರಗಿ | ಜನಪರ ಕಾಳಜಿಯುಳ್ಳ ಡಾ.ಶರಣಪ್ರಕಾಶ್ ಪಾಟೀಲ್ ಮುಂದಿನ ಸಿಎಂ ಆಗಲಿ : ಮೌನೇಶ್ ವಿಶ್ವಕರ್ಮ
ಕಲಬುರಗಿ : ಸೇಡಂ ಕ್ಷೇತ್ರದಲ್ಲಿ ಮೂಲಭೂತ ಸೌಕರ್ಯದಿಂದ ವಂಚಿತರಾಗದಂತೆ ಪಟ್ಟಣ ಹಾಗೂ ತಾಲೂಕಿನ ಪ್ರತಿಯೊಂದು ಗ್ರಾಮಗಳಲ್ಲಿ ಗಮನ ಹರಿಸಿ ಪ್ರಾಮಾಣಿಕ ಪ್ರಯತ್ನ ಮಾಡುವಲ್ಲಿ ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ಅವರು ಮುಂದಾಗಿದ್ದಾರೆ. ಅದೇ ರೀತಿ ಕರ್ನಾಟಕ ರಾಜ್ಯದ ಜನರ ಮನಸಿನಲ್ಲಿ ನೆಲೆಸಿದವರಾಗಿದ್ದಾರೆ. ಹಾಗಾಗಿ ಅವರೇ ಮುಂದಿನ ಮುಖ್ಯಮಂತ್ರಿಗಳಾಗಲಿ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಕಾರ್ಮಿಕ ವಿಭಾಗದ ತಾಲೂಕು ಕಾರ್ಯದರ್ಶಿ ಹಾಗೂ ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ಪದಾಧಿಕಾರಿ ಮೌನೇಶ್ ವಿಶ್ವಕರ್ಮ ಉಡಗಿ ಹೇಳಿದ್ದಾರೆ. ಪ್ರಕಟಣೆ ಮೂಲಕ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಡಾ.ಪಾಟೀಲ್ ಅವರು, ಸಾರ್ವಜನಿಕರ ಹಿತಾಸಕ್ತಿ ಕಾಪಾಡುವ ನಿಟ್ಟಿನಲ್ಲಿ ಮತ್ತು ಜನಪರ ಆಡಳಿತ ನೀಡಲು ಪ್ರಮಾಣಿಕ ಪ್ರಯತ್ನಕ್ಕೆ ಹೆಚ್ಚು ಒತ್ತು ನೀಡುತ್ತಿದ್ದಾರೆ, ತಾಲೂಕು ಮಟ್ಟದ ಅಧಿಕಾರಿಗಳು ಜನರ ಸಮಸ್ಯೆಗಳನ್ನು ಸ್ಪಂದಿಸಿ ಕೂಡಲೇ ಪರಿಹಾರ ಒದಗಿಸಲು ತಾಪಂ ಸಭಾಂಗಣದಲ್ಲಿ ಪ್ರತಿ ಟಾಸ್ಕ್ ಫೋರ್ಸ್ ಸಭೆಯಲ್ಲಿ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿ ಸೂಚನೆ ನೀಡುತ್ತಿದ್ದಾರೆ, ಸೇಡಂ ತಾಲೂಕಿನ ವ್ಯಾಪ್ತಿಯಲ್ಲಿ ಬರುವ ಪ್ರತಿ ಗ್ರಾಮಗಳಲ್ಲಿ ಸಿಸಿ ರಸ್ತೆ, ಒಳ್ಳ ಚರಂಡಿ, ಕುಡಿಯುವ ನೀರಿನ ಟ್ಯಾಂಕ್ ಪೂರೈಕೆ ಸೇರಿದಂತೆ ಹಲವು ಮೂಲಭೂತ ಸೌಕರ್ಯ ಒದಗಿಸಿದ ಅಭಿವೃದ್ಧಿ ಹರಿಕಾರ ಡಾ.ಶರಣಪ್ರಕಾಶ ಪಾಟೀಲ್ ಅವರು ಸ್ವಾಭಿಮಾನ ಸಂಕೇತ ಎಂದು ಹೇಳಿದ್ದಾರೆ. ಗ್ರಾಮಗಳಿಂದ ಆಗಮಿಸಿದ ಬಡ ಜನರ ಸಮಸ್ಯೆಗಳನ್ನು ಡಾ.ಶರಣಪ್ರಕಾಶ್ ಆರ್ ಪಾಟೀಲ್ ನಗು ನಗುತ್ತಾ ಮಾತನಾಡಿ, ದೂರವಾಣಿ ಕರೆ ಮಾಡಿ ಸಮಸ್ಯೆಗಳನ್ನು ಪರಿಹರಿಸಿ, ಕೆಲವೊಂದು ಸ್ಥಳದಲ್ಲೇ ಇರುವ ಅಧಿಕಾರಿಗಳಿಗೆ ಸಮಸ್ಯೆ ಬಗೆಹರಿಸಲು ಸೂಚನೆ ನೀಡುವರು ಅವರಾಗಿದ್ದಾರೆ ಎಂದು ಬಣ್ಣಿಸಿದ್ದಾರೆ.
ದಲಿತ ಅಪ್ರಾಪ್ತ ವಿದ್ಯಾರ್ಥಿಗೆ ಲೈಂಗಿಕ ದೌರ್ಜನ್ಯ; ಆರೋಪಿ ಬಿಜೆಪಿ ಮುಖಂಡ ಮಹೇಶ್ ಭಟ್ ಬಂಧನಕ್ಕೆ ಒತ್ತಾಯ
ಮಂಗಳೂರು, ಮಾ.೨೬: ಬಂಟ್ವಾಳ ತಾಲೂಕಿನ ವಿಟ್ಲದ ಮುರುವ ಎಂಬಲ್ಲಿ ದಲಿತ ಅಪ್ರಾಪ್ತ ವಿದ್ಯಾರ್ಥಿನಿಗೆ ಸ್ಥಳೀಯ ಬಿಜೆಪಿ ಮುಖಂಡ ಮಹೇಶ್ ಭಟ್ ಎಂಬಾತ ಲೈಂಗಿಕ ದೌರ್ಜನ್ಯ ಎಸಗಿದ್ದು, ತಕ್ಷಣ ಆತನನ್ನು ಬಂಧಿಸಬೇಕು ಎಂದು ಡಿಎಚ್ಎಸ್ ಜಿಲ್ಲಾ ಮುಖಂಡರಾದ ಈಶ್ವರಿ ಶಂಕರ್ ಪದ್ಮುಂಜ ಹಾಗೂ ಕೃಷ್ಣ ತಣ್ಣೀರುಬಾವಿ ಒತ್ತಾಯಿಸಿದ್ದಾರೆ. ಈ ಪ್ರಕರಣವನ್ನು ವಿಟ್ಲ ಪೊಲೀಸರು ಗಂಭೀರವಾಗಿ ಪರಿಗಣಿಸದೆ ನಿರ್ಲಕ್ಷವಹಿಸಿದ್ದರು. ತಕ್ಷಣ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಯನ್ನು ಸಂಪರ್ಕಿಸಿದ ಬಳಿಕ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಇದೀಗ ಆರೋಪಿ ಮಹೇಶ್ ಭಟ್ ಮೇಲೆ ಪೊಕ್ಸೊ ಪ್ರಕರಣದಡಿ ಕೇಸು ದಾಖಲಾಗಿದ್ದರೂ ತಲೆಮರೆಸಿಕೊಂಡಿದ್ದಾರೆ. ಆತನನ್ನು ಈವರೆಗೆ ಬಂಧಿಸದ ಪೊಲೀಸರ ಕ್ರಮ ಖಂಡನೀಯ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಕಲಬುರಗಿ | ಮೋಘಾ.ಕೆ, ಅಲ್ಲಾಪೂರ ಗ್ರಾಮದಲ್ಲಿ ಕುಡಿಯುವ ನೀರಿಗೆ ಹಾಹಾಕಾರ
ಕಲಬುರಗಿ : ಬೇಸಿಗೆ ಕಾಲ ಇನ್ನೂ ಪೂರ್ಣ ಪ್ರಮಾಣದಲ್ಲಿ ತನ್ನ ರೌದ್ರರೂಪ ತೋರಿಸುವ ಮೊದಲೇ, ತಾಲೂಕಿನ ಮೋಘಾ ಕೆ ಮತ್ತು ಅಲ್ಲಾಪೂರ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿ ಕಾಡತೊಡಗಿದೆ. ಅಲ್ಲಾಪೂರದಲ್ಲಿ ಒಂದು ಹನಿ ನೀರಿಗಾಗಿ ಗ್ರಾಮಸ್ಥರು ಪರದಾಡುವ ದುಸ್ಥಿತಿ ಎದುರಾಗಿದ್ದು, ಗ್ರಾಮಕ್ಕೆ ನೀರು ಪೂರೈಕೆಗೆ ತೆರೆದ ಬಾವಿಯನ್ನು ಸುಮಾರು 15 ವರ್ಷಗಳ ಹಿಂದೆ ತೋಡಿ ನೀರು ಪೂರೈಸಲಾಗಿತ್ತು. ಆದರೆ ಈ ಬಾವಿ ಖಾಸಗಿ ಜಮೀನಿನವರ ಸ್ಥಳದಲ್ಲಿದ್ದ ಕಾರಣ ಕಳೆದ ಮೂರು ತಿಂಗಳಿಂದ ಆ ಜಮೀನು ಮಾಲಕರು ನೀರು ಬಿಟ್ಟುಕೊಡದೆ ಈಗ ಗ್ರಾಮದಲ್ಲಿ ನೀರು ಪೂರೈಕೆಯಿಲ್ಲದೆ ಹಲವಾರು ಸಮಸ್ಯೆಗಳು ಎದುರಿಸುವಂತಾಗಿದೆ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡಿದ್ದಾರೆ. ಮತ್ತೊಂದಡೆ ಮೋಘಾ ಕೆ. ಗ್ರಾಮದ ಶ್ರೀ ಪರಮೇಶ್ವರ ದೇವರ ಜಾತ್ರೆ ನಡೆಯಲಿದೆ. ಈ ಜಾತ್ರೆಗೆ ಸಾವಿರಾರು ಭಕ್ತರು ಆಗಮಿಸಲಿದ್ದು, ನೀರಿನ ಕೊರತೆ ತಲೆದೋರಿರುವ ಆತಂಕ ಎದುರಾಗಿದೆ. ಮೋಘಾ.ಕೆ. ಗ್ರಾಮದಲ್ಲಿ ಗ್ರಾಮ ಪಂಚಾಯತ್ ಕಾರ್ಯನಿರ್ವಹಿಸುತ್ತಿದ್ದರೂ, ನೀರಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವಲ್ಲಿ ಯಾವುದೇ ಗಂಭೀರ ಪ್ರಯತ್ನ ನಡೆದಿಲ್ಲ ಎಂದು ಗ್ರಾಮದ ಸೂರ್ಯಕಾಂತ ವಗ್ಗಾಲೆ, ನಬೀಸಾಬ, ಪುಟರಾಜ ಅಮಾಣೆ ಅವರು ತಿಳಿಸಿದ್ದಾರೆ. ಗ್ರಾಮದಲ್ಲಿ ನಾಲ್ಕು ಜನ ಗ್ರಾಮ ಪಂಚಾಯತ್ ಸದಸ್ಯರಿದ್ದು, ಈ ಸಮಸ್ಯೆಯನ್ನು ಪಂಚಾಯತ್ ಅಧ್ಯಕ್ಷರು ಹಾಗೂ ಆಡಳಿತ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಆದರೆ, ಇದುವರೆಗೆ ಯಾವುದೇ ಸಕಾರಾತ್ಮಕ ಕ್ರಮ ಕೈಗೊಂಡಿಲ್ಲ ಎಂದರು. ಬೇಸಿಗೆ ತೀವ್ರವಾಗುವ ಮುನ್ನವೇ ಶಾಶ್ವತ ಪರಿಹಾರ ಕಂಡುಕೊಳ್ಳದಿದ್ದರೆ, ಮುಂದಿನ ದಿನಗಳಲ್ಲಿ ಪರಿಸ್ಥಿತಿ ಇನ್ನಷ್ಟು ಹದಗೆಡಬಹುದು. ಗ್ರಾಮದಲ್ಲಿ ಕುಡಿಯುವ ನೀರಿನ ಸರಬರಾಜು ಸರಿಯಾಗಿ ಇಲ್ಲದಿರುವುದು ಮಾತ್ರವಲ್ಲ, ಅಂತರ್ಜಲ ಮಟ್ಟ ಕುಸಿದಿರುವುದು ಮತ್ತು ಬೋರ್ವೆಲ್ ಗಳಲ್ಲಿ ನೀರು ಬತ್ತಿರುವುದು ಸಮಸ್ಯೆಯನ್ನು ಉಗ್ರಗೊಳಿಸಿದೆ. ಪ್ರತಿ ವರ್ಷ ಬೇಸಿಗೆಯಲ್ಲಿ ಈ ಸಮಸ್ಯೆ ಮರುಕಳಿಸುತ್ತದೆ, ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರವಾಗಿ ಜಲ ಸಂರಕ್ಷಣಾ ಯೋಜನೆಗಳನ್ನು ಜಾರಿಗೆ ತರಬೇಕು, ಜೊತೆಗೆ ತುರ್ತು ಪರಿಸ್ಥಿತಿಗೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡುವ ವ್ಯವಸ್ಥೆಯನ್ನು ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಸಮಸ್ಯೆ ನಿವಾರಣೆ ಯತ್ನ : ಅಲ್ಲಾಪೂರ ಗ್ರಾಮದಲ್ಲಿ ನೀರು ಪೂರೈಕೆ ಸರ್ಕಾರದಿಂದ ತೊಡಿದ ಬಾವಿಯನ್ನು ಖಾಸಗಿಯವರು ತಮ್ಮ ಜಮೀನಿನಲ್ಲಿ ಬಾವಿ ಇದೆ ಎಂದು ನೀರು ಕೊಡುತ್ತಿಲ್ಲ. ಹೀಗಾಗಿ ಮೂರು ತಿಂಗಳಿಂದ ನೀರಿಲ್ಲದೆ ಜನ ತೊಂದರೆ ಅನುಭವಿಸುತ್ತಿದ್ದಾರೆ. ಗ್ರಾಪಂನಿಂದಲೂ ಪಯಾರ್ಯ ವ್ಯವಸ್ಥೆ ಕೈಗೊಳ್ಳಲಾಗುತ್ತಿದೆ. ಕೊಳವೆ ಬಾವಿಯ ಮೊಟಾರ್ ದುರಸ್ಥಿ ಕಾರ್ಯಕೈಗೊಂಡು ತಕ್ಕಮಟ್ಟಿನ ನೀರು ಒದಗಿಸಲಾಗುತ್ತಿದೆ. ಮೋಘಾ ಕೆ. ಗ್ರಾಮದಲ್ಲೂ ನೀರಿನ ಅವ್ಯವಸ್ಥೆ ಎದುರಾದರೆ ಎಲ್ಲ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಮೋಘಾ ಕೆ. ಗ್ರಾಮ ಪಂಚಾಯತ್ ಅಧ್ಯಕ್ಷರಾದ ಅನುಸುಯಾ ಮಹಾದೇವ ಪೋತೆ ಭರವಸೆ ನೀಡಿದ್ದಾರೆ.
ಮಂಗಳೂರು: ಮಂಗಳೂರು ವಿ.ವಿ.ಕಾಲೇಜಿನ ನಿವೃತ್ತ ಇಂಗ್ಲಿಷ್ ಪ್ರಾಧ್ಯಾಪಕಿ ಪ್ರೊ.ಲೀಲಾ ನಾಯರ್ (72) ಮಂಗಳವಾರ ರಾತ್ರಿ ಮಂಗಳೂರಿನ ಸ್ವಗೃಹದಲ್ಲಿ ನಿಧನರಾದರು. ಅವರು ಮುಳಬಾಗಿಲಿನಲ್ಲಿ ಉಪನ್ಯಾಸಕ ವೃತ್ತಿ ಆರಂಭಿಸಿ, 1990ರಲ್ಲಿ ಮಂಗಳೂರು ವಿ.ವಿ.ಕಾಲೇಜಿಗೆ (ಆಗಿನ ಸರಕಾರಿ ಕಾಲೇಜು) ಉಪನ್ಯಾಸಕಿಯಾಗಿ ಆಗಮಿಸಿದರು. 24 ವರ್ಷ ಕರ್ತವ್ಯ ನಿರ್ವಹಿಸಿ ಆಂಗ್ಲ ಭಾಷಾ ವಿಭಾಗದ ಮುಖ್ಯಸ್ಥರಾಗಿ 2014ರಲ್ಲಿ ಸೇವಾ ನಿವೃತ್ತಿ ಹೊಂದಿದರು. ಅವರು ಪತಿ, ಮಂಗಳೂರು ವಿ.ವಿ. ಕಾಲೇಜಿನ ನಿವೃತ್ತ ಪ್ರಾಂಶುಪಾಲ ಪ್ರೊ. ನಾರಾಯಣನ್ ನಾಯರ್, ಇಬ್ಬರು ಹೆಣ್ಣುಮಕ್ಕಳನ್ನು ಅಗಲಿದ್ದಾರೆ. ಮೃದು ಮಾತಿನ ಲೀಲಾ ನಾಯರ್ ವಿದ್ಯಾರ್ಥಿಗಳ ಬಗ್ಗೆ ಪ್ರೀತಿ, ಮಮತೆ ಹೊಂದಿದ್ದ ಸರಳ ಸಜ್ಜನ ವ್ಯಕ್ತಿತ್ವ ಹೊಂದಿದ್ದರು.
KKR Vs RR: 97 ರನ್ ಸಿಡಿಸಿದ ಕ್ವಿಂಟನ್ ಡಿ ಕಾಕ್: ರಾಜಸ್ಥಾನ್ ವಿರುದ್ಧ ಕೆಕೆಆರ್ಗೆ ಸುಲಭದ ಜಯ
KKR Vs RR: ಐಪಿಎಲ್ 18 ಆವೃತ್ತಿಯ ಆರನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಕೆಕೆಆರ್ ಗೆದ್ದು ಬೀಗಿದೆ. ಆರ್ಆರ್ ನೀಡಿದ 152 ರನ್ಗಳ ಸುಲಭದ ಗುರಿಯನ್ನು 8 ವಿಕೆಟ್ಗಳಿಂದ 17.3 ಓವರ್ಗಳಿಗೆ ಮುಗಿಸಿ ಕೊಲ್ಕತ್ತಾ ಗೆಲುವಿನ ನಗೆ ಬೀರಿದೆ. ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡ ಕೊಲ್ಕತ್ತಾ ನೈಟ್ ರೈಡರ್ಸ್ ತಂಡ ರಾಜಸ್ಥಾನ್ ರಾಯಲ್ಸ್ ತಂಡವನ್ನು
ಉಳ್ಳಾಲ: ಜಾತಿ,ಪಂಗಡ ಗುರುತಿಸಿದೆ ಜತೆಯಾಗಿ ಇದ್ದರೆ ಮಾತ್ರ ಬಲಿಷ್ಠ ರಾಷ್ಟ್ರ ಕಟ್ಟಲು ಸಾಧ್ಯ ಎಂದು ಸ್ಪೀಕರ್ ಯುಟಿ ಖಾದರ್ ಹೇಳಿದರು ಅವರು ಕಿಂಗ್ಸ್ ಕಲ್ಲಾಪು ಇದರ ಆಶ್ರಯದಲ್ಲಿ ಕಲ್ಲಾಪು ಮೈದಾನದಲ್ಲಿ ನಡೆದ ಸೌಹಾರ್ದ ಇಫ್ತಾರ್ ಕೂಟ ಹಾಗೂ ಬಂಧುತ್ವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಸೌಹಾರ್ದತೆಯ ಇಫ್ತಾರ್ ಕೂಟ ಏರ್ಪಡಿಸುವ ಜೊತೆಗೆ ಸಮಾಜದಲ್ಲಿ ಇರುವ ಕಳಂಕ ದೂರ ಮಾಡಬೇಕು. ಐಕ್ಯತೆ ಎಂಬುದು ನಮ್ಮ ಸಂಕೇತ ಆಗಬೇಕು ಎಂದರು. ನಾವು ಮೊದಲು ಏಕತೆ ಸಹೋದರತೆ ಬೆಳೆಸಬೇಕು. ಇದನ್ನೇ ಪ್ರವಾದಿ ಕಲಿಸಿದ್ದಾರೆ. ಐಕ್ಯತೆ ಗೆ ಕೆಡುಕು ತರುವ ಕೆಲಸ ಮಾಡುವವನ ದುಆ ಅಲ್ಲಾಹ್ ಸ್ವೀಕರಿಸುವುದಿಲ್ಲ.ನಾವು ಹೃದಯ ಶುದ್ಧಿ ಮಾಡೋಣ ಎಂದು ದರ್ಗಾ ಮಾಜಿ ಅಧ್ಯಕ್ಷ ಹಾಜಿ ಅಬ್ದುಲ್ ರಶೀದ್ ಹೇಳಿದರು. ಲೇಖಕ ಎಕೆ ಕುಕ್ಕಿಲ ಮಾತನಾಡಿದರು . ಶರೀಫ್ ಸ ಅದಿ ದುಆ ನೆರವೇರಿಸಿದರು. ಕಾರ್ಯಕ್ರಮದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಶೆಟ್ಟಿ ಬೋಳಿಯಾರ್, ನಗರ ಸಭೆ ಅಧ್ಯಕ್ಷ ಶಶಿಕಲಾ, ಕಲ್ಲಾಪು ಜುಮಾ ಮಸೀದಿ ಅಧ್ಯಕ್ಷ ಹಮೀದ್ ಕಲ್ಲಾಪು, ಸುಲೈಮಾನ್ ಪುರ್ಖಾನ್, ಫಾದರ್ ರೊಡ್ನಾಪ್ ಪಿಂಟೊ, ತಾ.ಪಂ.ಮಾಜಿ ಅಧ್ಯಕ್ಷ ಮುಹಮ್ಮದ್ ಮೋನು ಮಲಾರ್, ಅರುಣ್ ಡಿ ಸೋಜ , ನಗರಸಭೆ ಉಪಾಧ್ಯಕ್ಷ ಸಪ್ನಾ ಹರೀಶ್ ,ಜಿ.ಎ.ಬಾವಾ ಮತ್ತಿತರರು ಉಪಸ್ಥಿತರಿದ್ದರು ಈ ಸಂದರ್ಭದಲ್ಲಿ ಬ್ಲಡ್ ಹೆಲ್ಪ್ ಲೈನ್ ಕಲ್ಲಾಪು ಇದರ ಆಶ್ರಯದಲ್ಲಿ ಅರ್ಹ ಫಲಾನುಭವಿಗಳಿಗೆ ಕನ್ನಡಕ ವಿತರಣೆ ಮಾಡಲಾಯಿತು.
ಸ್ಥೂಲದೇಹಿ ಮಕ್ಕಳು ಮತ್ತು ಪ್ರಧಾನ ಮಂತ್ರಿ ಪೋಷಣ ಅಭಿಯಾನ
ಕೊಬ್ಬು ಮತ್ತು ಲಿಪಿಡ್ಗಳು ಮಕ್ಕಳ ಆಹಾರದಲ್ಲಿನ ಅತಿ ಮುಖ್ಯ ಪೋಷಕಾಂಶಗಳು. ಆಹಾರದಲ್ಲಿ ಅವು ಇರಲೇಬೇಕು. ಜೀವಕೋಶಗಳ ಹೊರಪದರ ಆರೋಗ್ಯಕರವಾಗಿರುವುದಕ್ಕೆ, ಟೆಸ್ಟೋಸ್ಟೆರಾನ್ ಮತ್ತು ಈಸ್ಟ್ರೋಜೆನ್ ಹಾರ್ಮೋನುಗಳು ಸರಿಪ್ರಮಾಣದಲ್ಲಿ ಸೃವಿತವಾಗಿ ದೇಹದ ರೋಗನಿರೋಧಕ ಶಕ್ತಿ ಹೆಚ್ಚುವುದಕ್ಕೆ ಇದು ಬಹಳ ಮುಖ್ಯ. ಮನೆ ಅಥವಾ ಶಾಲೆಯಲ್ಲಿ ತಯಾರಿಸಿದ ಆಹಾರದಲ್ಲಿ ಇರುವ ಕೊಬ್ಬಿನಿಂದ ಮಕ್ಕಳಲ್ಲಿ ಕೊಬ್ಬು ಜಾಸ್ತಿಯಾಗುವುದರ ಬಗ್ಗೆ ಯಾವುದೇ ರೀತಿಯ ಅಧ್ಯಯನ, ಸಮೀಕ್ಷೆಗಳು ಆಗಿಲ್ಲ. ಪರಿಣತರನ್ನು ಕೇಳದೆಯೇ, ಅಧ್ಯಯನ ಮಾಡದೆಯೇ, ಇದ್ದಕ್ಕಿದ್ದಂತೆಯೇ ಎಣ್ಣೆಯ ಬಳಕೆಯನ್ನು ಕಡಿಮೆ ಮಾಡಿ ಎಂದು ಆದೇಶ ಹೊರಡಿಸುವುದು ಬೇಜವಾಬ್ದಾರಿತನದ ಹೇಳಿಕೆಯಾಗುತ್ತದೆ.
ದಮ್ಮಾಮ್: ತಾಂತ್ರಿಕ ಸಮಸ್ಯೆಯಿಂದಾಗಿ ಕಳೆದೊಂದು ದಿನದಿಂದ ದಮ್ಮಾಮ್ನಲ್ಲಿ ಬಾಕಿಯಾಗಿದ್ದ ವಿಮಾನವು ಬುಧವಾರ ರಾತ್ರಿ ಸಂಚಾರ ಆರಂಭಿಸಿದ್ದು, ಗುರುವಾರ ಮುಂಜಾನೆಯ ವೇಳೆಗೆ ಮಂಗಳೂರು ತಲುಪಲಿದೆ ಎಂದು ಮೂಲಗಳು ತಿಳಿಸಿವೆ. ಮಂಗಳವಾರ ರಾತ್ರಿ ಸುಮಾರು 10 ಗಂಟೆಗೆ ಸೌದಿ ಅರೇಬಿಯಾದ ದಮ್ಮಾಮ್ನಿಂದ ಮಂಗಳೂರಿಗೆ ಹೊರಡಬೇಕಿದ್ದ ಏರ್ ಇಂಡಿಯಾ ಎಕ್ಸ್ಪ್ರೆಸ್ ವಿಮಾನವು ತಾಂತ್ರಿಕ ಸಮಸ್ಯೆಯಿಂದ ಹಾರಾಟ ನಡೆಸಲಿಲ್ಲ. ಇದರಿಂದ ಪ್ರಯಾಣಿಕರು ಪರದಾಡುವಂತಾಗಿತ್ತು.
ಕಲಬುರಗಿ | ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಸೇನೆಯ ಮಹಿಳಾ ಘಟಕದ ಪದಾಧಿಕಾರಿಗಳ ಆಯ್ಕೆ
ಕಲಬುರಗಿ : ನಗರದ ಕನ್ನಡ ಭವನದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಸೇನೆಯ ಜಿಲ್ಲಾಧ್ಯಕ್ಷ ಪುನಿತರಾಜ ಸಿ. ಕವಡೆ ನೇತೃತ್ವದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಸೇನೆಯ ಸಭೆ ನಡೆಸಿ, ಸಭೆಯಲ್ಲಿ ರಾಜ್ಯಾಧ್ಯಕ್ಷ ನಿಂಗರಾಜಗೌಡ್ರು ಅವರ ಆದೇಶದ ಮೇರೆಗೆ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಸೇನೆಯ ಮಹಿಳಾ ಘಟಕದ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು. ಮಹಿಳಾ ಘಟಕದ ಕಲಬುರಗಿ ಜಿಲ್ಲಾಧ್ಯಕ್ಷರಾಗಿ ಸುಧಾರಾಣಿ ಪೂಜಾರಿ, ಸೇಡಂ ತಾಲೂಕಿನ ಮಹಿಳಾ ಘಟಕದ ಅಧ್ಯಕ್ಷರಾಗಿ ಭಾರತಮ್ಮಾ ಎಂ., ಸೇಡಂ ತಾಲೂಕಿನ ಮಹಿಳಾ ಘಟಕದ ಉಪಾಧ್ಯಕ್ಷರಾಗಿ ಆನಂದಮ್ಮ ರೆಸ್ಟಾಪೂರ, ಸೇಡಂ ತಾಲೂಕಿನ ಮಹಿಳಾ ಘಟಕದ ಪ್ರಧಾನ ಕಾರ್ಯದರ್ಶಿಯಾಗಿ ಅನುಷಾ ಸಕಲ್ಸಪಲ್ಲಿ ಅವರನ್ನು ಆಯ್ಕೆ ಮಾಡಲಾಯಿತು. ಇವರ ನಾಯಕತ್ವದ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಸೇನೆಯ ತತ್ವ ಸಿದ್ಧಾಂತಗಳನ್ನು ಒಪ್ಪಿಕೊಂಡು ಸಂಘಟನೆಯಲ್ಲಿ ಸಕ್ರೀಯವಾಗಿ ದುಡಿಯುತ್ತಿದ್ದಿರೆಂದು ನಿಮ್ಮ ಸೇವೆಯನ್ನು ಪರಿಗಣಿಸಿ ನೇಮಕ ಮಾಡಿ ಈ ನೇಮಕಾತಿ ಪತ್ರ ನೀಡಲಾಯಿತು. ನೀಡಿರುವ ಗುರುತರ ಜವಾಬ್ದಾರಿಯನ್ನು ನಾಡು, ನುಡಿಯ ಬಗ್ಗೆ ಕಾಳಜಿಯೊಂದಿಗೆ ಅತ್ಯಂತ ನಿಷ್ಠೆ ಮತ್ತು ಪ್ರಾಮಾಣಿಕತೆಯಿಂದ ನಿರ್ವಹಿಸಿ ಸ್ವಾಭಿಮಾನಿ ಸೇನೆಯ ಘೋಷ ವಾಕ್ಯವಾದ ಸಮಗ್ರ ಕರ್ನಾಟಕ ಅಭಿವೃದ್ಧಿಯೇ ನಮ್ಮ ಗುರಿ ಎನ್ನುವ ಉದ್ದೇಶ ಈಡೇರಿಕೆಗೆ ಶ್ರಮಿಸಲೆಂದು ಆಶಿಸುತ್ತೇವೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಸೇನೆಯ ಕಲ್ಯಾಣ ಕರ್ನಾಟಕ ವಿಭಾಗಿಯ ಅಧ್ಯಕ್ಷ ನಿಲಕಂಠಪ್ಪಗೌಡ ಎಸ್.ಪೊಲೀಸ್ ಪಾಟೀಲ್, ಜಿಲ್ಲಾ ಉಪಾಧ್ಯಕ್ಷ ಕಲ್ಯಾಣಿ ಎಸ್.ತಳವಾರ ಸೇರಿದಂತೆ ಕಾರ್ಯಕರ್ತರು ಇದ್ದರು.
ಕಲಬುರಗಿ | ಕಮ್ಮಾರ ಸಮುದಾಯದ ರಾಜ್ಯ ಮಟ್ಟದ ಸಭೆ ಯಶಸ್ವಿ
ಕಲಬುರಗಿ : ಬೆಂಗಳೂರಿನ ಗಾಂಧಿ ಭವನದಲ್ಲಿ ಬುಧವಾರ ಕಮ್ಮಾರ ಒಕ್ಕೂಟದ ಆಶ್ರಯದಲ್ಲಿ ಕಮ್ಮಾರ ಸಮುದಾಯದ ರಾಜ್ಯ ಮುಖಂಡರ ಸಭೆ ಯಶಸ್ವಿಯಾಗಿ ನಡೆಯಿತು. ಈ ಸಭೆಯ ಅಧ್ಯಕ್ಷತೆಯನ್ನು ಹಿರಿಯ ಮುಖಂಡ ರಮೇಶ್ ಲೋಹಾರ್ ವಹಿಸಿದ್ದರು. ಸಭೆಯಲ್ಲಿ ಸಮುದಾಯದ ಪ್ರಮುಖರು ಮತ್ತು ಯುವ ನಾಯಕರ ಜೊತೆಗೆ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ ಮುಖಂಡರು ಭಾಗವಹಿಸಿದ್ದರು. ಸಭೆಯಲ್ಲಿ ಟಿ.ರಂಗಸ್ವಾಮಿ, ತುಮಕೂರು ಮಂಜುನಾಥ್, ವಿಠ್ಠಲ್ ಕಂಬಾರ, ನಿಂಗಣ್ಣ ಕಂಬಾರ, ದ್ರಾಕ್ಷಾಯಿಣಿ ಮದ್ದೂರ್, ಮಹೇಶ್ ಕಂಬಾರ, ಮಹಾರುದ್ರ ಕಂಬಾರ್ ಸೇರಿದಂತೆ ಹಲವು ಪ್ರಮುಖರು ಉಪಸ್ಥಿತರಿದ್ದರು. ಇದೇ ವೇಳೆ ಬಂತೆ ಅಮರ ಜ್ಯೋತಿ ಅವರು ಸಾನಿಧ್ಯವೂ ವಹಿಸಿದ್ದರು. ಸಭೆಯಲ್ಲಿ ಕಮ್ಮಾರ ಸಮುದಾಯದ ಉನ್ನತಿಗಾಗಿ ಹಲವು ಮಹತ್ವದ ನಿರ್ಣಯಗಳನ್ನು ಕೈಗೊಳ್ಳಲಾಯಿತು. ಪ್ರಮುಖ ನಿರ್ಣಯಗಳು : ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆಗೆ ಒತ್ತಾಯ : ರಾಜ್ಯಾದ್ಯಂತ ಕಮ್ಮಾರ ಜನಾಂಗವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವಂತೆ ಸರ್ಕಾರದ ಮೇಲೆ ಒತ್ತಡ ತರುವ ನಿರ್ಧಾರವನ್ನು ಸಭೆಯಲ್ಲಿ ಅಂಗೀಕರಿಸಲಾಯಿತು. ಇದರಿಂದ ಸಮುದಾಯಕ್ಕೆ ಸಾಮಾಜಿಕ ಮತ್ತು ಆರ್ಥಿಕ ಸವಲತ್ತುಗಳು ದೊರೆಯಲಿವೆ ಎಂದು ಮುಖಂಡರು ತಿಳಿಸಿದರು. ಪ್ರತ್ಯೇಕ ನಿಗಮ ರಚನೆ : ಕಮ್ಮಾರ ವೃತ್ತಿಯಲ್ಲಿ ತೊಡಗಿರುವ ಜನರಿಗೆ ಪ್ರತ್ಯೇಕ ನಿಗಮ ರಚಿಸುವಂತೆ ಸರ್ಕಾರವನ್ನು ಒತ್ತಾಯಿಸಲು ತೀರ್ಮಾನಿಸಲಾಗಿದೆ. ಇದು ಸಮುದಾಯದ ಕುಶಲಕರ್ಮಿಗಳಿಗೆ ಆರ್ಥಿಕ ಬೆಂಬಲ ಮತ್ತು ಉದ್ಯೋಗಾವಕಾಶಗಳನ್ನು ಒದಗಿಸಲಿದೆ ಎಂಬ ಅಭಿಪ್ರಾಯ ವ್ಯಕ್ತವಾಯಿತು. ರಾಜ್ಯಾದ್ಯಂತ ಪ್ರವಾಸ ಮತ್ತು ಅಧ್ಯಯನ : ಸಮಾಜದ ಪ್ರಮುಖರು ರಾಜ್ಯಾದ್ಯಂತ ಪ್ರವಾಸ ಕೈಗೊಂಡು ಕಮ್ಮಾರ ಜನಾಂಗದ ಸ್ಥಿತಿಗತಿಯ ಬಗ್ಗೆ ಸಮಗ್ರ ಅಧ್ಯಯನ ನಡೆಸಲಿದ್ದಾರೆ. ಈ ಅಧ್ಯಯನದ ವರದಿಯನ್ನು ಸರ್ಕಾರದ ಗಮನಕ್ಕೆ ತಂದು ಅಗತ್ಯ ಕ್ರಮಕ್ಕೆ ಒತ್ತಾಯಿಸಲಾಗುವುದು. ದೊಡ್ಡ ಸಮಾವೇಶದ ಆಯೋಜನೆ : ಕಮ್ಮಾರ ಸಮುದಾಯದ ಒಗ್ಗಟ್ಟು ಮತ್ತು ಶಕ್ತಿಯನ್ನು ಪ್ರದರ್ಶಿಸಲು ರಾಜ್ಯ ಮಟ್ಟದಲ್ಲಿ ಬೃಹತ್ ಸಮಾವೇಶವೊಂದನ್ನು ಆಯೋಜಿಸುವ ತೀರ್ಮಾನ ಕೈಗೊಳ್ಳಲಾಗಿದೆ. ಯುವಕರಲ್ಲಿ ಜಾಗೃತಿ ಮತ್ತು ರಾಜಕೀಯ ಪ್ರಾತಿನಿಧ್ಯ : ಸಮಾಜದ ಯುವಕರಲ್ಲಿ ಜಾಗೃತಿ ಮೂಡಿಸುವ ಜೊತೆಗೆ ಕಮ್ಮಾರ ಜನಾಂಗಕ್ಕೆ ರಾಜಕೀಯ ಸ್ಥಾನಮಾನ ದೊರಕಿಸಿಕೊಡಲು ಕಾರ್ಯತಂತ್ರ ರೂಪಿಸಲು ಒತ್ತು ನೀಡಲಾಯಿತು. ಈ ಸಂದರ್ಭದಲ್ಲಿ ಮುಖಂಡ ರಮೇಶ್ ಲೋಹಾರ್ ಮಾತನಾಡಿ, ಕಮ್ಮಾರ ಸಮುದಾಯ ರಾಜಕೀಯವಾಗಿ ಸಬಲವಾಗಬೇಕು ಮತ್ತು ತನ್ನ ಹಕ್ಕುಗಳನ್ನು ಪಡೆದುಕೊಳ್ಳಬೇಕು ಎಂದು ಹೇಳಿದರು. ಚರ್ಚೆಗಳು ಮತ್ತು ಅಭಿಪ್ರಾಯಗಳು : ಸಭೆಯಲ್ಲಿ ಭಾಗವಹಿಸಿದ ಮುಖಂಡರು ಕಮ್ಮಾರ ಸಮುದಾಯದ ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕ ಸವಾಲುಗಳ ಬಗ್ಗೆ ತೀವ್ರ ಚರ್ಚೆ ನಡೆಸಿದರು. ಸಮುದಾಯದ ಯುವಕರಿಗೆ ಉದ್ಯೋಗಾವಕಾಶಗಳು ಮತ್ತು ತರಬೇತಿ ಒದಗಿಸುವ ಅಗತ್ಯತೆಯನ್ನು ಒತ್ತಿ ಹೇಳಲಾಯಿತು. ಜೊತೆಗೆ, ಸಾಂಪ್ರದಾಯಿಕ ಕಮ್ಮಾರಿಕೆ ವೃತ್ತಿಯನ್ನು ಆಧುನೀಕರಣಗೊಳಿಸಿ ಸಂರಕ್ಷಿಸುವ ಕುರಿತು ಸಲಹೆಗಳು ಮಂಡನೆಯಾದವು. ಒಟ್ಟಾರೆ ಪರಿಣಾಮ : ಈ ಸಭೆಯ ಮೂಲಕ ಕಮ್ಮಾರ ಸಮುದಾಯದ ಒಗ್ಗಟ್ಟು ಮತ್ತು ಧ್ವನಿಯನ್ನು ರಾಜ್ಯದಾದ್ಯಂತ ಮತ್ತು ಸರ್ಕಾರದ ಮಟ್ಟದಲ್ಲಿ ಮಂಡಿಸುವ ಗುರಿಯನ್ನು ಹೊಂದಲಾಗಿದೆ. ರಮೇಶ್ ಲೋಹಾರ್ ನೇತೃತ್ವದಲ್ಲಿ ನಡೆದ ಈ ಸಭೆಯು ಸಮುದಾಯದ ಭವಿಷ್ಯಕ್ಕಾಗಿ ಒಂದು ದಿಟ್ಟ ಹೆಜ್ಜೆ ಎಂದು ಪರಿಗಣಿಸಲಾಗಿದೆ. ಮುಂದಿನ ದಿನಗಳಲ್ಲಿ ಈ ನಿರ್ಣಯಗಳನ್ನು ಕಾರ್ಯಗತಗೊಳಿಸಲು ಸಮುದಾಯದ ಮುಖಂಡರು ಒಟ್ಟಾಗಿ ಶ್ರಮಿಸಲು ಈ ಒಂದು ಮೊದಲು ಬಾರಿಗೆ ನಡೆದ ಸಭೆಯಲ್ಲಿ ಘೋಷಿಸಲಾಯಿತು.
IPL 2025 - ಹೈದರಾಬಾದ್ ನಲ್ಲಿ ಮತ್ತೆ ರನ್ ಪ್ರವಾಹ? ಬಲಾಢ್ಯ ಸನ್ ರೈಸರ್ಸ್ ಗೆ ಸವಾಲಾಗಬಲ್ಲುದೇ ಲಖನೌ?
SRH Vs LSG - ಐಪಿಎಲ್ ನ ಅಷ್ಟೂ ತಂಡಗಳಲ್ಲಿ ಅತ್ಯಂತ ಬಲಾಢ್ಯ ಬ್ಯಾಟಿಂಗ್ ಹೊಂದಿರುವ ತಂಡ ಅದು ಖಂಡಿತವಾಗಿಯೂ ಸನ್ ರೈಸರ್ಸ್ ಹೈದರಾಬಾದ್, ಅಭಿಷೇಕ್ ಶರ್ಮಾ, ಟ್ರಾವಿಸ್ ಹೆಜ್, ಹೆನ್ರಿಚ್ ಕ್ಲಾಸನ್, ಇಶಾನ್ ಕಿಶನ್ ಹೀಗೆ ಒಬ್ಬರಿಗಿಂತ ಒಬ್ಬರು ಮಿಗಿಲು ಎಂಬ ಬ್ಯಾಟಿಂಗ್ ಪಡೆಯನ್ನು ಕಟ್ಟಿಹಾಕುವುದು ಹೇಗೆ ಎಂದು ಎಲ್ಲಾ ತಂಡಗಳೂ ಚಿಂತಿಸುತ್ತಿವೆ. ಹೀಗಿರುವಾಗ ಮೊದಲೇ ಪ್ರಮುಖ ಬೌಲರ್ ಗಳ ಅನುಪಸ್ಥಿತಿಯಲ್ಲಿ ಲಖನೌ ತಂಡ ಗುರುವಾರ ಏನು ಮಾಡಬಲ್ಲುದು ಎಂಬ ಕುತೂಹಲ ಎಲ್ಲರನ್ನೂ ಕಾಡುತ್ತಿದೆ.
ಕಲಬುರಗಿ | ಕಲ್ಯಾಣ ಕರ್ನಾಟಕ ಚಿಂತನ ಸಭೆ
ಕಲಬುರಗಿ : ನಗರದ ಖಾಸಗಿ ಸಭಾಂಗಣದಲ್ಲಿ ನಮ್ಮ ಕರ್ನಾಟಕ ಸೇನೆಯ ಕರಾಜ್ಯಾಧ್ಯಕ್ಷರಾದ ಬಸವರಾಜ್ ಎಂ.ಪಡಕೋಟೆ ಅವರ ಅಧ್ಯಕ್ಷತೆಯಲ್ಲಿ ರಾಜ್ಯ ಪ್ರಧಾನ ಸಂಚಾಲಕ ಭೀಮಣ್ಣ ಶಕಾಪುರ್ ಹಾಗೂ ಕಲಬುರಗಿ ಜಿಲ್ಲಾಧ್ಯಕ್ಷ ಸುಧೀಂದ್ರ ಎಂ ಈಜೇರಿ ನೇತೃತ್ವದಲ್ಲಿ ಕಲ್ಯಾಣ ಕರ್ನಾಟಕ ಚಿಂತನ ಸಭೆ ಜರುಗಿತು. ಈ ಸಂದರ್ಭದಲ್ಲಿ ರಾಜ್ಯಾಧ್ಯಕ್ಷರಾದ ಬಸವರಾಜ್ ಎಂ.ಪಡಕೋಟೆ ಮಾತನಾಡಿ, ಸಂಘಟನೆ ಚಟುವಟಿಕೆಗಳನ್ನು ಹೆಚ್ಚಿನ ರೀತಿಯಲ್ಲಿ ಬಲಪಡಿಸಬೇಕು, ಕಲ್ಯಾಣ ಕರ್ನಾಟಕ ಭಾಗದ ಶಿಕ್ಷಕರ ನೇಮಕಾತಿ ಮಾಡಬೇಕು, ಈ ಭಾಗದ ಜ್ವಲಂತ ಸಮಸ್ಯೆಗಳಾದ ಮಲ್ಲಾಬಾದ್ ನೀರಾವರಿ ಸಂಪೂರ್ಣ ಜಾರಿಯಾಗಬೇಕು, ಜೇವರ್ಗಿ ಫುಟ್ ಪಾರ್ಕ್ ಪ್ರಾರಂಭ ಮಾಡಬೇಕು, ಸರ್ಕಾರಿ ಶಾಲೆಗಳಲ್ಲಿ ಶೌಚಾಲಯಗಳು ನಿರ್ಮಾಣ ಮಾಡಬೇಕು, ಸರ್ಕಾರ ಕೂಡಲೇ ಈ ಎಲ್ಲಾ ಬೇಡಿಕೆಗಳನ್ನು ಶೀಘ್ರವೇ ಜಾರಿ ಮಾಡಬೇಕು ನಿರ್ಲಕ್ಷ್ಯ ಮಾಡಿದರೆ ನಮ್ಮ ಕರ್ನಾಟಕ ಸೇನೆ ಹೋರಾಟ ಮಾಡಲಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಕಲ್ಯಾಣ ಕರ್ನಾಟಕದ ಬಿದರ್ ಜಿಲ್ಲಾಧ್ಯಕ್ಷ ಗಣೇಶ್ ಪಾಟೀಲ್, ಯಾದಗಿರಿ ಅಧ್ಯಕ್ಷ ವಿಶ್ವರಾಜ ದಿಮ್ಮಿ, ರಾಯಚೂರ ಅಧ್ಯಕ್ಷ ಕೊಂಡಪ್ಪ ಕೆ. ಸೇರಿದಂತೆ ತಾಲೂಕು ಪದಾಧಿಕಾರಿಗಳು, ಮಹಿಳಾ ಪದಾಧಿಕಾರಿಗಳು, ಸಂಘಟನೆಯ ಕಾರ್ಯಕರ್ತರು ಇದ್ದರು.
ಕಲಬುರಗಿ | ಬೆಳೆ ವಿಮೆ ಶೂನ್ಯ ದಾಖಲೆ ಖಂಡಿಸಿ ನಿರಗುಡಿ ರೈತರ ಪ್ರತಿಭಟನೆ
ಕಲಬುರಗಿ : ಬೆಳೆ ನಷ್ಟವಾದರು ಬೆಳೆ ವಿಮೆ ಆ್ಯಪ್ ನಲ್ಲಿ ನಷ್ಟ ಶೂನ್ಯ ಎಂದು ದಾಖಲಿಸಿರುವ ಕ್ರಮವನ್ನು ಖಂಡಿಸಿ ತಾಲೂಕಿನ ನಿರಗುಡಿ ಗ್ರಾಪಂ ವ್ಯಾಪ್ತಿಯ ರೈತರು ಪಟ್ಟಣದ ತಾಲೂಕು ಆಡಳಿತಸೌಧ ಮುಂಭಾಗದಲ್ಲಿ ಮಿಂಚಿನ ಪ್ರತಿಭಟನೆ ಕೈಗೊಂಡು ಬುಧವಾರ ಆಕ್ರೋಶ ಹೊರಹಾಕಿದರು. ಆಳಂದ ತಾಲೂಕಿನ ನಿರಗುಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಮಟಕಿ, ನಿರಗುಡಿ ಮತ್ತು ತೀರ್ಥ ಗ್ರಾಮಗಳಲ್ಲಿ ಸುಮಾರು 3,000ಕ್ಕೂ ಹೆಚ್ಚು ರೈತರು ತಮ್ಮ ಉದ್ದು, ಹೆಸರು, ತೊಗರಿ, ಉಳ್ಳಾಗಡಿ ಮುಂತಾದ ಬೆಳೆಗಳಿಗೆ ವಿಮೆ ಮಾಡಿಸಿದ್ದರು. ಆದರೆ, ಅಧಿಕ ಮಳೆ, ನೆಟೆ ರೋಗ ಹಾಗೂ ನೈಸರ್ಗಿಕ ವಿಕೋಪಗಳಿಂದ ಬೆಳೆಗಳು ಹಾಳಾದರೂ, ಸಂರಕ್ಷಣೆ ಆಪ್ ನಲ್ಲಿ ಈ ಗ್ರಾಮಗಳ ಬೆಳೆ ವಿಮೆಯನ್ನು ಶೂನ್ಯ ಎಂದು ತೋರಿಸಲಾಗಿದೆ ಎಂದು ವ್ಯವಸ್ಥೆಯ ಕ್ರಮವನ್ನು ಖಂಡಿಸಿದರು. ಸರ್ವೇ ಅಧಿಕಾರಿಗಳು ಹೊಲಗಳಿಗೆ ಭೇಟಿ ನೀಡದೆ, ಕಚೇರಿಯಿಂದಲೇ ಸರ್ವೇ ಮಾಡಿ ಈ ತಪ್ಪು ವರದಿ ಸಲ್ಲಿಸಿದ್ದಾರೆ. ರೈತರು ತಮ್ಮ ಬೆಳೆ ನಷ್ಟಕ್ಕೆ ಸೂಕ್ತ ವಿಮೆ ಮಂಜೂರಾತಿ ಹಾಗೂ ಬೇಜವ್ದಾರಿ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮಕ್ಕೆ ಈ ಸಂದರ್ಭದಲ್ಲಿ ಅವರು ಒತ್ತಾಯಿಸಿದರು. ಹೊಲಗಳಲ್ಲಿ ನಮ್ಮ ಬೆಳೆ ಹಾಳಾಗಿದೆ, ಆದರೆ ಕಾಗದದಲ್ಲಿ ಎಲ್ಲವೂ ಸರಿ ಎಂದು ತೋರಿಸಲಾಗಿದೆ. ಇದು ರೈತರೊಂದಿಗೆ ಮಾಡುತ್ತಿರುವ ಅನ್ಯಾಯ. ಕೂಡಲೇ ನಷ್ಟವಾದ ಬೆಳೆಗೆ ವಿಮೆ ಪಾವತಿಸಬೇಕು. ಈ ಬಗ್ಗೆ ಕೂಲಂಕಷ ತನಿಖೆ ನಡೆಸಿ, ರೈತರಿಗೆ ನ್ಯಾಯ ಒದಗಿಸಬೇಕು ಎಂದು ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು. ಮನವಿ ಸ್ವೀಕರಿಸಿದ ತಹಶೀಲ್ದಾರ್ ಅಣ್ಣಾರಾವ್ ಪಾಟೀಲ ಅವರು, ಈ ಕುರಿತು ಪರಿಶೀಲಿಸಿ ಮುಂದಿನ ಕ್ರಮ ಅನುಸರಿಸಲಾಗುವುದು ಕಾಲಾವಕಾಶ ನೀಡಬೇಕು ಎಂದು ಕೇಳಿಕೊಂಡರು. ಈ ಸಂದರ್ಭದಲ್ಲಿ ನಿರಗುಡಿ ಪಿಕೆಪಿಎಸ್ ಅಧ್ಯಕ್ಷ ಆನಂದ ಎಸ್. ದೇಶಮುಖ, ಉಪಾಧ್ಯಕ್ಷ ಶಾಂತಪ್ಪ ಪಾಟೀಲ ತೀರ್ಥ, ಸಿದ್ಧಣ್ಣರಾವ್ ದೇಶಮುಖ, ಗ್ರಾಪಂ ಮಾಜಿ ಅಧ್ಯಕ್ಷ ಪಿಂಟು ಪಾಟೀಲ, ಸಿದ್ಧರಾಮ ಜಿ. ಬೆಳಮಗಿ, ಸಿದ್ಧರಾಮ ಬಿ.ಮುದಗಡೆ,ಅಪ್ಪಾರಾವ್ ದೇಶಮುಖ, ಸುಭಾಷ ಪಾಟೀಲ, ಗುಜಾರಲಾಲ ಪಾಟೀಲ, ರಾಮ ಪಾರಾಣೆ, ಹಣಮಂತರಾವ್ ಸರಾಟೆ, ಸಿದ್ಧರಾಮ ಬಂಡಗಾರ ಸೇರಿದಂತೆ ತೀರ್ಥ, ಮಟಕಿ ಮತ್ತು ನಿರಗುಡಿ ಗ್ರಾಮದ ರೈತರು ಭಾಗವಹಿಸಿದ್ದರು.
ಸ್ಮಾರ್ಟ್ ಮೀಟರ್ ಅಳವಡಿಕೆ ಹಗರಣ ಸರಕಾರದ ಮತ್ತೊಂದು ಸಾಧನೆ : ವಿ.ಸುನೀಲ್ ಕುಮಾರ್ ಟೀಕೆ
ಬೆಂಗಳೂರು : ವಿದ್ಯುತ್ ಸ್ಮಾರ್ಟ್ ಮೀಟರ್ ಅಳವಡಿಕೆ ಹಗರಣ ರಾಜ್ಯದ 60 ಪರ್ಸೆಂಟ್ ಸರಕಾರದ ಮತ್ತೊಂದು ಸಾಧನೆಯಾಗಿದ್ದು, ಇಂಧನ ಸಚಿವ ಕೆ.ಜೆ.ಜಾರ್ಜ್ ಅವರು ಎಷ್ಟೇ ಸ್ಪಷ್ಟೀಕರಣ ನೀಡಿದರೂ ಮುಚ್ಚಿಕೊಳ್ಳುವುದಕ್ಕೆ ಸಾಧ್ಯವಿಲ್ಲ ಎಂದು ಮಾಜಿ ಇಂಧನ ಸಚಿವ ವಿ.ಸುನೀಲ್ ಕುಮಾರ್ ಟೀಕಿಸಿದ್ದಾರೆ. ಬುಧವಾರ ಮಾಧ್ಯಮ ಹೇಳಿಕೆ ನೀಡಿರುವ ಅವರು, ಇದು ಇಂಧನ ಇಲಾಖೆಯಲ್ಲಿ ನಡೆದ ಅತಿದೊಡ್ಡ ಹಗರಣವಾಗಿದ್ದು, ದೇಶದ ಯಾವುದೇ ರಾಜ್ಯದಲ್ಲಿ 9,200 ರೂ. ಅನ್ನು ಸ್ಮಾರ್ಟ್ ಮೀಟರ್ ಅಳವಡಿಕೆಗೆ ನಿಗದಿ ಮಾಡಿದ ಉದಾಹರಣೆ ಇಲ್ಲ. ಇದು ಜನರ ಮೇಲೆ ಹೇರುತ್ತಿರುವ ಬೆಲೆ ಏರಿಕೆಯ ನೇರ ಬರೆಯಾಗಿದೆ ಎಂದರು. ಸಚಿವ ಕೆ.ಜೆ.ಜಾರ್ಜ್ ಅವರು ಎಷ್ಟೇ ಸಮರ್ಥನೆ ಮಾಡಿಕೊಂಡರೂ, ನಡೆದ ಅವ್ಯವಹಾರವನ್ನು ಮುಚ್ಚಿಡುವುದಕ್ಕೆ ಸಾಧ್ಯವೇ ಇಲ್ಲ. ಕಪ್ಪು ಪಟ್ಟಿಗೆ ಸೇರಿದ ಕಂಪನಿಯನ್ನು ಸಚಿವರು ಈ ಪರಿಯಾಗಿ ಸಮರ್ಥಿಸಿಕೊಳ್ಳುವುದು ‘ಕುಂಬಳ ಕಾಯಿ ಕಳ್ಳ’ನ ಕತೆಯಂತಾಗಿದೆ ಎಂದು ವಿ.ಸುನೀಲ್ ಕುಮಾರ್ ವ್ಯಂಗ್ಯವಾಡಿದರು. ವಿದ್ಯುತ್ ಸ್ಮಾರ್ಟ್ ಮೀಟರ್ ಹಗರಣ ಗ್ರಾಹಕರಿಗೆ ಕರೆಂಟ್ ಶಾಕ್ ಆಗಿದ್ದು, ಈ ಹಗರಣದ ಹಿಂದೆ ಕೆ.ಜೆ.ಜಾರ್ಜ್ ಅವರ ‘ಸನ್ ಸ್ಟ್ರೋಕ್’ ಹೆಚ್ಚು ಪ್ರಭಾವ ಬೀರಿದಂತೆ ಕಾಣುತ್ತಿದೆ ಎಂದು ಇಂಧನ ಇಲಾಖೆ ಮಾತನಾಡುತ್ತಿದೆ ಎಂದು ವಿ.ಸುನೀಲ್ ಕುಮಾರ್ ಆರೋಪಿಸಿದರು.
IPL 2025 - ಕ್ವಿಂಟನ್ ಡಿ ಕಾಕ್ ಸೆಂಚುರಿಯೂ ಜಸ್ಟ್ ಮಿಸ್!: ರಾಜಸ್ಥಾನ ರಾಯಲ್ಸ್ ಗೆ ನಿರಂತರ 2ನೇ ಶಾಕ್!
ಬೌಲರ್ ಗಳ ಸಂಘಟಿತ ದಾಳಿ ಮತ್ತು ವಿಕೆಟ್ ಕೀಪರ್ ಬ್ಯಾಟರ್ ಕ್ವಿಂಟನ್ ಡಿ ಕಾಕ್ ಅವರ ಆಕರ್ಷಕ ಅರ್ಧ ಶತಕಗಳ ನೆರವಿನಿಂದ ಕೋಲ್ಕತಾ ನೈಟ್ ರೈಡರ್ಸ್ ತಂಡ ರಾಜಸ್ಥಾನ ರಾಯಲ್ಸ್ ತಂಡವನ್ನು 8 ವಿಕೆಟ್ ಗಳಿಂದ ಪರಾಭವಗೊಳಿಸಿದೆ. ಆರ್ ಸಿಬಿ ವಿರುದ್ಧ ಆಡಿದ್ದ ಪ್ರಥಮ ಪಂದ್ಯದಲ್ಲಿ ಮುಖಭಂಗ ಅನುಭವಿಸಿದ್ದ ಕೋಲ್ಕತಾ ತಂಡ ಇದೀಗ ಸೀಸನ್ ನಲ್ಲಿ ಮೊದಲ ಜಯ ದಾಖಲಿಸಿದೆ. ಇದೇ ವೇಳೆ ಕಳೆದ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಪರಾಜಯ ಅನುಭವಿಸಿದ್ದ ರಾಜಸ್ಥಾನ ರಾಯಲ್ಸ್ ಇದೀಗ ನಿರಂತರ 2ನೇ ಪಂದ್ಯದಲ್ಲೂ ಪರಾಭವಗೊಂಡಿದೆ. ಬುಧವಾರ ಗುವಾಹಟಿಯಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ ತಂಡ 20 ಓವರ್ ಗಳಲ್ಲಿ 151 ರನ್ ಗಳಿಸಿದರು. ಇದನ್ನು ಕೋಲ್ಕತಾ ನೈಟ್ ರೈಡರ್ಸ್ ತಂಡ ಇನ್ನೂ 15 ಎಸೆತಗಳು ಬಾಕಿ ಇರುವಂತೆಯೇ ಗುರಿ ತಲುಪಿತು. ಆರಂಭಿಕ ಆಟಗಾರ ಮೊಯಿನ್ ಅಲಿ ಅವರು ತಂಡದ ಮೊತ್ತ 41 ಆಗಿದ್ದಾಗ ರನೌಟ್ ಆದರು. ಆದರೆ ಬಳಿಕ ಕ್ವಿಂಟನ್ ಡಿ ಕಾಕ್ ಅವರು ಅದ್ಭುತವಾಗಿ ಆಟವಾಡಿ ತಂಡದ ಜಯಕ್ಕೆ ಕಾರಣಕರ್ತರಾದರು. ಕೇವಲ 61 ಎಸೆತಗಳಿಂದ 97 ರನ್ ಗಳಿಸಿದ ಅವರು ಮಂಗಳವಾರದ ಪಂದ್ಯದಲ್ಲಿ ಶ್ರೇಯಸ್ ಅಯ್ಯರ್ ಅವರಂತೆಯೇ 3 ರನ್ ಗಳಿಂದ ಶತಕ ವಂಚಿತರಾದರು. ಕೋಲ್ಕತಾ ಸಂಘಟಿತ ದಾಳಿ ಇದಕ್ಕೂ ಮೊದಲು ಟಾಸ್ ಸೋತು ಬ್ಯಾಟಿಂಗ್ ಗೆ ಇಳಿಸಲ್ಪಟ್ಟ ರಾಜಸ್ಥಾನ ರಾಯಲ್ಸ್ ತಂಡ ಕೋಲ್ಕತಾ ನೈಟ್ ರೈಡರ್ಸ್ ತಂಡದ ಬೌಲರ್ ಗಳ ಬಿಗು ದಾಳಿಯಿಂದಾಗಿ ದೊಡ್ಡ ಮೊತ್ತ ಗಳಿಸಲು ಸಾಧ್ಯವಾಗಲಿಲ್ಲ. ವಿಕೆಟ್ ಕೀಪರ್ ಬ್ಯಾಯರ್ ಧ್ರುವ ಜ್ಯುರೆಲ್ 33, ಆರಂಭಿಕ ಯಶಸ್ವಿ ಜೈಸ್ವಾಲ್ 29, ನಾಯಕ ರಿಯಾನ್ ಪರಾದ್ ಅವರು ಇದ್ದಿದ್ದರಲ್ಲಿ ಚೆನ್ನಾಗಿ ಆಡಿದರು. ಆಧರೆ ರಿಯಾನ್ ಪರಾಗಿ ಹೊರತುಪಡಿಸಿದರೆ ಉಳಿದವರೆಲ್ಲರೂ ವೇಗವಾಗಿ ರನ್ ಗಳಿಸಲು ವಿಫಲರಾದರು. ಡೆತ್ ಓವರ್ ಗಳಲ್ಲಿ ಜೋಫ್ರಾ ಅರ್ಚರ್ ಎರಡು ಸಿಕ್ಸರ್ ಗಳನ್ನು ಸಿಡಿಸಿದ್ದರಿಂದ ತಂಡ 150ರ ಗಡಿ ದಾಟುವಂತಾಯಿತು. ಕೋಲ್ಕತಾ ಪರ ವೈಭವ್ ಅರೋರಾ, ಹರ್ಷಿತ್ ರಾಣಾ, ಮೊಯಿನ್ ಅಲಿ ಮತ್ತು ವರುಣ್ ಚಕ್ರವರ್ತಿ ತಲಾ 2 ವಿಕೆಚ್ ಗಳಿಸಿದರು. ಉಳಿದೊಂದು ವಿಕೆಟ್ ಸ್ಪೆನ್ಸರ್ ಜಾನ್ಸನ್ ಪಾಲಾಯಿತು. ಸಂಕ್ಷಿಪ್ತ ಸ್ಕೋರ್ ರಾಜಸ್ಥಾನ ರಾಯಲ್ಸ್ 20 ಓವರ್ ಗಳಲ್ಲಿ 151/9, ಧ್ರುವ ಜ್ಯುರೆಲ್ 33, ಯಶಸ್ವಿ ಜೈಸ್ವಾಲ್ 29, ರಿಯಾನ್ ಪರಾಗ್ 25, ವರುಣ್ ಚಕ್ರವರ್ತಿ 17ಕ್ಕೆ 2, ಮೊಯಿನ್ ಅಲಿ 23ಕ್ಕೆ 2 ಕೋಲ್ಕತಾ ನೈಟ್ ರೈಡರ್ಸ್ 17.3 ಓವರ್ ಗಳಲ್ಲಿ 153/2, ಕ್ವಿಂಟನ್ ಡಿ ಕಾಕ್ ಅಜೇಯ 97, ಅಂಗರಿಕ್ಷ್ ರಘುವಂಶಿ ಔಟಾಗದೆ 22, ವಹಿಂದು ಹಸರಂಗ 34ಕ್ಕೆ 1
ಉತ್ತರ ಕನ್ನಡ ಜಿಲ್ಲೆಯ ಗೋವಾ ಗಡಿಯಲ್ಲಿ ಎಚ್ಚರಿಕೆ ವಹಿಸಿ: ಗೃಹ ಸಚಿವ ಡಾ.ಜಿ. ಪರಮೇಶ್ವರ್
ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಗೋವಾ ಗಡಿ ಪ್ರದೇಶದ ಮೂಲಕ ರಾಜ್ಯಕ್ಕೆ ಮಾದಕ ವಸ್ತುಗಳ ಸಾಗಾಟ ನಡೆಯುವ ಬಗ್ಗೆ ಮತ್ತು ಅನಧಿಕೃತವಾಗಿ ಮದ್ಯ ಸಾಗಾಟವಾಗುವ ಬಗ್ಗೆ ಪರಿಶೀಲಿಸಿ, ಅತ್ಯಂತ ಕಟ್ಟು ನಿಟ್ಟಿನ ಪರಿಶೀಲನಾ ಕ್ರಮಗಳನ್ನು ಕೈಗೊಳ್ಳುವಂತೆ ಗೃಹ ಸಚಿವ ಡಾ.ಜಿ. ಪರಮೇಶ್ವರ್ ಸೂಚನೆ ನೀಡಿದರು. ಅವರು ಬುಧವಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯಲ್ಲಿ ನಡೆದ ಪೊಲೀಸ್ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ರಾಜ್ಯ ಸರ್ಕಾರವು ರಾಜ್ಯದಲ್ಲಿ ಮಾದಕ ವಸ್ತುಗಳ ನಿರ್ಮೂಲನೆ ಕುರಿತು ಯುದ್ದ ಸಾರಿದ್ದು, ಗಡಿಯ ಮೂಲಕ ರಾಜ್ಯದೊಳಗೆ ಮಾದಕ ವಸ್ತುಗಳ ಸರಬರಾಜು ನಡೆಯದಂತೆ ಪೊಲೀಸ್ ಇಲಾಖೆ ಹೆಚ್ಚು ಜಾಗೃತವಾಗಿ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಬೇಕು. ಉತ್ತರ ಕನ್ನಡ ಜಿಲ್ಲೆಯ ಎಲ್ಲಾ ಪೊಲೀಸ್ ಠಾಣೆಗಳ ಪೊಲೀಸ್ ಅಧಿಕಾರಿಗಳು ತಮ್ಮ ವ್ಯಾಪ್ತಿಯ ಶಾಲಾ ಕಾಲೇಜುಗಳಿಗೆ ನಿರಂತರವಾಗಿ ಭೇಟಿ ಮಾಡಿ ವಿದ್ಯಾರ್ಥಿಗಳಿಗೆ ಮಾದಕ ವಸ್ತುಗಳ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಬೇಕು. ಠಾಣಾ ವ್ಯಾಪ್ತಿಯಲ್ಲಿ ಮಾದಕ ವಸ್ತುಗಳು ಪತ್ತೆಯಾದಲ್ಲಿ ಸಂಬಂದಪಟ್ಟ ವ್ಯಾಪ್ತಿಯ ಪೊಲೀಸ್ ಅಧಿಕಾರಿಗಳ ವಿರುದ್ದ ಕಠಿಣ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು. ಉತ್ತರ ಕನ್ನಡ ಜಿಲ್ಲೆಯಲ್ಲಿ ಕಳೇದ 2.5 ವರ್ಷದಲ್ಲಿ ರಸ್ತೆ ಅಪಘಾತಗಳಿಂದ 589 ಜನ ಮರಣಹೊಂದಿದ್ದು, 3899 ಮಂದಿ ಗಾಯಾಳುಗಳಾಗಿದ್ದಾರೆ, ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಹೆಚ್ಚಿನ ಅಪಘಾತಗಳು ಸಂಭವಿಸುತ್ತಿದ್ದು, ಹೆದ್ದಾರಿಯಲ್ಲಿನ ಬ್ಲಾಕ್ ಸ್ಟಾಟ್ ಗಳಲ್ಲಿ ಅಗತ್ಯ ದುರಸ್ತಿಗಳನ್ನು ಮತ್ತು ಅಗತ್ಯವಿರುವಲ್ಲಿ ಸೂಚನಾ ಫಲಕಗಳನ್ನು ಅಳವಡಿಸುವ ಕಾರ್ಯಕ್ರಮವನ್ನು ಪೊಲೀಸ್ ಇಲಾಖೆ ಮತ್ತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಮೂಲಕ ತ್ವರಿತಗತಿಯಲ್ಲಿ ಕೈಗೊಳ್ಳುವಂತೆ ಸೂಚಿಸಿದ ಸಚಿವರು, ಅಪಘಾತದಲ್ಲಿ ಮರಣ ಹೊಂದಿದವರ ಮತ್ತು ಗಾಯಗೊಂಡವರ ಬಗ್ಗೆ ತೀವ್ರ ಮರುಕ ವ್ಯಕ್ತಪಡಿಸಿದರು. ಸೈಬರ್ ಕ್ರೈ ಅಪರಾಧಗಳ ಬಗ್ಗೆ ಜಿಲ್ಲೆಯಲ್ಲಿ ದಾಖಲಾಗಿರುವ ಪ್ರಕರಣಗಳು ಕಡಿಮೆ ಇದ್ದು, ಸೈಬರ್ ಅಪರಾಧಗಳ ವ್ಯಾಪ್ತಿಯನ್ನು ಅಧಿಕಾರಿಗಳು ಸರಿಯಗಿ ಅರ್ಥ ಮಾಡಿಕೊಂಡು ಪ್ರಕರಣಗಳನ್ನು ದಾಖಲಿಸುವಂತೆ ಮತ್ತು ಯಾವುದೇ ಠಾಣೆಗಳಲ್ಲಿ ಪ್ರಕರಣ ದಾಖಲಿಸಲು ವಿಳಂಬ ಮಾಡದಂತೆ ಹಾಗೂ ಎಲ್ಲಾ ಠಾಣೆಗಳಲ್ಲಿ ಸೈಬರ್ ಪ್ರಕರಣಗಳನ್ನು ದಾಖಲಿಸಿಕೊಳ್ಳುವಂತೆ ಸೂಚನೆ ನೀಡಿದ ಅವರು ಪೋಕ್ಸೋ ಪ್ರಕರಣಗಳು ನ್ಯಾಯಾಲಯದಲ್ಲಿ ಬೇಗನೆ ಇತ್ಯರ್ಥವಾಗಿ ಅಪರಾಧಿಗಳಿಗೆ ಶಿಕ್ಷೆಯಾಗುವ ನಿಟ್ಟಿನಲ್ಲಿ ಸರಕಾರಿ ಅಭಿಯೋಜಕರು ಕಾರ್ಯನಿರ್ವಹಿಸಬೇಕು.. ಸಮಾಜದಲ್ಲಿ ತಪ್ಪು ಸಂದೇಶ ಹರಡುವ ಫೇಕ್ ಸಂದೇಶಗಳ ಬಗ್ಗೆ ಇನ್ನಷ್ಟು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುವಂತೆ ಸೂಚಿಸಿದ ಅವರು, ಎಲ್ಲಾ ಪೊಲೀಸ್ ಠಾಣೆಗಳಲ್ಲಿ ಸೋಷಿಯಲ್ ಮಿಡಿಯಾ ಮಾನಿಟರಿಂಗ್ ಸೆಲ್ ಹೆಚ್ಚು ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸಬೇಕು. ರಾಜ್ಯದಲ್ಲಿನ ಅಂಕಿ ಅಂಶಗಳ ಮಾಹಿತಿಯಂತೆ ಉತ್ತರ ಕನ್ನಡ ಜಿಲ್ಲೆಯು ಫೇಕ್ ನ್ಯೂಸ್ ಹರಡುವಿಕೆಯಲ್ಲಿ 2 ಸ್ಥಾನದಲ್ಲಿದೆ ಎಂದು ಕಳವಳ ವ್ಯಕ್ತಪಡಿಸಿದರು. ಜಿಲ್ಲೆಯಲ್ಲಿರುವ ಅಧಿಕೃತ ಮತ್ತು ಅನಧಿಕೃತ ಹೋಂ ಸ್ಟೇ ಗಳ ಬಗ್ಗೆ ನಿಖರ ಮಾಹಿತಿ ಸಂಗ್ರಹಿಸುವಂತೆ ಸೂಚಿಸಿದ ಸಚಿವರು ಅನಧಿಕೃತ ಹೋ ಸ್ಟೇ ಗಳ ಬಗ್ಗೆ ಕ್ರಮ ಕೈಗೊಳ್ಳುವಂತೆ ಹಾಗೂ ಎಲ್ಲಾ ಹೋಂ ಸ್ಟೇ ಗಳಲ್ಲಿ ಮದ್ಯ ಸರಬರಾಜು ಮಾಡಲು ಸೂಕ್ತ ಅನುಮತಿ ಪಡೆದಿರುವ ಬಗ್ಗೆ ಪರಿಶೀಲಿಸಿ, ಜಿಲ್ಲೆಯಲ್ಲಿರುವ ವಿದೇಶಿ ವ್ಯಕ್ತಿಗಳ ಬಗ್ಗೆ ಮಾಹಿತಿ ಸಂಗ್ರಹಿಸಿ, ಅವರಲ್ಲಿರುವ ಅಧಿಕೃತ ದಾಖಲೆಗಳನ್ನು ಪರಿಶೀಲಿಸಿ. ಹೋಂ ಸ್ಟೇ, ರೆಸಾರ್ಟ್ಗಳಲ್ಲಿ ನಡೆಯುವ ಪಾರ್ಟಿಗಳಲ್ಲಿ ಮಾದಕ ವಸ್ತು ಬಳಕೆಯಾಗುವ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳಿ ಎಂದರು. ಅಗ್ನಿಶಾಮಕ ಇಲಾಖೆಗೆ ಶೀಘ್ರದಲ್ಲಿ ಹೊಸ ವಾಹನ ನೀಡಲಾಗುವುದು, ಕಾರವಾರದಲ್ಲಿರುವ ಜಿಲ್ಲಾ ಕಾರಾಗೃಹವನ್ನು ಸ್ಥಳಾಂತರಿಸಿ ಅಂಕೋಲ ಬಳಿ ಈಗಾಗಲೇ ಗುರುತಿಸಿರುವ ಜಾಗದಲ್ಲಿ ಹೊಸ ಕಾರಾಗೃಹ ನಿರ್ಮಾಣ ಮಾಡುವ ಬಗ್ಗೆ ಸೂಕ್ತ ಪ್ರಸ್ತಾವನೆಯಲ್ಲಿ ಸಲ್ಲಿಸುವಂತೆ ಸೂಚಿಸಿದರು. ಪೊಲೀಸ್ ಇಲಾಖೆಯ ಪ್ರತಿಯೊಂದು ಠಾಣಾ ವ್ಯಾಪ್ತಿಯಲ್ಲಿ ನಡೆಯುವ ಪ್ರಕರಣಗಳಿಗೆ ಠಾಣೆಯ ಅಧಿಕಾರಿಗಳೇ ಜವಾಬ್ದಾರರು ಆದ್ದರಿಂದ ಠಾಣಾ ವ್ಯಾಪ್ತಿಯಲ್ಲಿ ಬೀಟ್ ವ್ಯವಸ್ಥೆಯನ್ನು ಬಿಗಿಗೊಳಿಸಿ, ಗಂಭೀರ ಪ್ರಕರಣಗಳ ಸಂದರ್ಭದಲ್ಲಿ ಶಾಂತಿ ಸಭೆಗಳನ್ನು ನಡೆಸಿ ಸಾರ್ವಜನಿಕರ ಮನವೊಲಿಸಿ, ಮಟ್ಕಾ, ಮೈಕ್ರೋ ಪೈನಾನ್ಸ್ ಮತ್ತು ಮೀಟರ್ ಬಡ್ಡಿ ಹಾವಳಿ ಪ್ರಕರಣಗಳು ಕಂಡು ಬಂದಲ್ಲಿ ಕಠಿಣ ಕ್ರಮ ಕೈಗೊಳ್ಳಿ, ಜನಸ್ನೇಹಿಯಾಗಿ ಕಾನೂನು ಪ್ರಕಾರ ಕೆಲಸ ಮಾಡಿ, ಸರ್ಕಾರ ಮತ್ತು ಕಾನೂನು ಸದಾ ನಿಮ್ಮ ನೆರವಿಗೆ ಇರುತ್ತದೆ ಎಂದು ಪೊಲೀಸ್ ಅಧಿಕಾರಿಗಳಿಗೆ ತಿಳಿಸಿದರು. ಜಿಲ್ಲೆಯಲ್ಲಿ ಸಂಭವಿಸಿದ ಶಿರೂರು ಗುಡ್ಡ ಕುಸಿತ ಮತ್ತು ಕಾಳಿ ನದಿ ಸೇತುವೆ ಕುಸಿತ ಸಂದರ್ಭದಲ್ಲಿ ಪೊಲೀಸ್ ಇಲಾಖೆ ಕೈಗೊಂಡ ಕ್ರಮಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ನಾರಾಯಣ್ ಅವರು, ಜನಪ್ರತಿನಿಧಿಗಳು ಮತ್ತು ಸಾರ್ವಜನಿಕರೊಂದಿಗೆ ಉತ್ತಮ ಒಡನಾಟ ಇಟ್ಟುಕೊಳ್ಳುವ ಮೂಲಕ ಅತ್ಯಂತ ಪರಿಣಾಮಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇದು ರಾಜ್ಯದ ಎಲ್ಲಾ ಅಧಿಕಾರಿಗಳಿಗೆ ಉತ್ತಮ ಮಾದರಿಯಾಗಿದೆ ಈ ಹಿಂದೆ ಕೋಲಾರದಲ್ಲಿ ಎಸ್ಪಿ ಯಾಗಿದ್ದಾಗಲೂ ಸಹ ಇದೇ ರೀತಿ ಉತ್ತಮ ಬಾಂಧ್ಯವ್ಯ ಹೊಂದಿದ್ದು ಉತ್ತಮವಾಗಿ ಕಾರ್ಯನಿರ್ವಹಿಸಿದ್ದು ಅವರನ್ನು ಅಭಿನಂದಿಸುತ್ತೇನೆ ಎಂದರು. ಸಭೆಯಲ್ಲಿ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ಎಸ್ ವೈದ್ಯ, ಕರ್ನಾಟಕ ರಾಜ್ಯ ಮಾರ್ಕೇಟಿಂಗ್ ಕನ್ಸಲೆಂಟ ಅಂಡ್ ಏಜೆನ್ಸಿಸ್ ಅಧ್ಯಕ್ಷ ಸತೀಶ್ ಕೆ. ಸೈಲ್, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಸತೀಶ ನಾಯ್ಕ, ಪಶ್ಚಿಮ ವಲಯದ ಪೊಲೀಸ್ ಮಹಾನಿರೀಕ್ಷಕ ಅಮೀತ್ ಸಿಂಗ್, ಜಿಲ್ಲಾಧಿಕಾರಿ ಕೆ.ಲಕ್ಷ್ಮೀ ಪ್ರಿಯಾ, ಕೆನರಾ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ವಸಂತ ರೆಡ್ಡಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಈಶ್ವರ ಕಾಂದೂ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ. ನಾರಾಯಣ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕೃಷ್ಣಮೂರ್ತಿ ಉಪಸ್ಥಿತರಿದ್ದರು. ಜಿಲ್ಲೆಯ ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಪೊಲೀಸ್ ಅಧಿಕಾರಿಗಳು ಹಾಜರಿದ್ದರು.
ಶಬರಿಮಲೆಯಲ್ಲಿ ನಟ ಮಮ್ಮುಟ್ಟಿ ಹೆಸರಲ್ಲಿ ಪೂಜೆ ಮಾಡಿಸಿದ ಮೋಹನ್ಲಾಲ್; ಭುಗಿಲೆದ್ದ ವಿವಾದ!
ಮಾಲಿವುಡ್ ಸೂಪರ್ ಸ್ಟಾರ್ ಮೋಹನ್ಲಾಲ್ ಅವರು ಈಚೆಗೆ ಶಬರಿಮಲೆಗೆ ಭೇಟಿ ನೀಡಿ, ವಿಶೇಷ ಪೂಜೆ ಮಾಡಿಸಿದ್ದರು. ಅದೇ ಈಗ ವಿವಾದದ ಕೇಂದ್ರಬಿಂದು ಆಗಿದೆ. ಪೂಜೆ ಮಾಡಿಸಿದ್ದಕ್ಕೆ ವಿವಾದ ಆಯ್ತೇ ಅನ್ನಬೇಡಿ, ಮೋಹನ್ಲಾಲ್ ಅವರು ಪೂಜೆ ಮಾಡಿಸಿದ್ದು ನಟ ಮಮ್ಮುಟ್ಟಿ ಹೆಸರಿನಲ್ಲಿ! ಇಸ್ಲಾಂ ಧರ್ಮಕ್ಕೆ ಸೇರಿದ ನಟ ಮಮ್ಮುಟ್ಟಿ ಅವರ ಹೆಸರಿನಲ್ಲಿ ಮೋಹನ್ಲಾಲ್ ವಿಶೇಷ ಪೂಜೆ ಮಾಡಿಸಿದ್ದೇ ಈಗ ವಿವಾದಕ್ಕೆ ಕಾರಣವಾಗಿದೆ.
IPL 2025 | ರಾಜಸ್ಥಾನ್ ವಿರುದ್ಧ ಕೆಕೆಆರ್ಗೆ 8 ವಿಕೆಟ್ಗಳ ಭರ್ಜರಿ ಜಯ
ಗುವಾಹಟಿ : ಆಲ್ರೌಂಡ್ ಪ್ರದರ್ಶನ ನೀಡಿದ ಹಾಲಿ ಚಾಂಪಿಯನ್ ಕೋಲ್ಕತಾ ನೈಟ್ ರೈಡರ್ಸ್ ತಂಡ ಐಪಿಎಲ್ ಟಿ20 ಟೂರ್ನಿಯ 6ನೇ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ತಂಡವನ್ನು 8 ವಿಕೆಟ್ಗಳ ಅಂತರದಿಂದ ಮಣಿಸಿದೆ. ಈ ಮೂಲಕ 18ನೇ ಆವೃತ್ತಿಯ ಪಂದ್ಯಾವಳಿಯಲ್ಲಿ ಗೆಲುವಿನ ಖಾತೆ ತೆರೆಯಿತು. ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ನಡೆದ ಉದ್ಘಾಟನಾ ಪಂದ್ಯದಲ್ಲಿ ಸೋಲುಂಡಿದ್ದ ಕೆಕೆಆರ್, ಇನ್ನೂ 15 ಎಸೆತಗಳು ಬಾಕಿ ಇರುವಾಗಲೆ ಗೆಲುವಿನ ದಡ ಸೇರಿತು. ಬುಧವಾರ ನಡೆದ ಪಂದ್ಯದಲ್ಲಿ ಗೆಲ್ಲಲು 152 ರನ್ ಗುರಿ ಬೆನ್ನಟ್ಟಿದ ಕೆಕೆಆರ್ ತಂಡವು ಆರಂಭಿಕ ಬ್ಯಾಟರ್ ಕ್ವಿಂಟನ್ ಡಿಕಾಕ್(ಔಟಾಗದೆ 97, 61 ಎಸೆತ, 8 ಬೌಂಡರಿ, 6 ಸಿಕ್ಸರ್)ಹಾಗೂ ಎ.ರಘುವಂಶಿ(ಔಟಾಗದೆ 22, 17 ಎಸೆತ, 2 ಬೌಂಡರಿ)ನೆರವಿನಿಂದ 17.3 ಓವರ್ಗಳಲ್ಲಿ 2 ವಿಕೆಟ್ ನಷ್ಟಕ್ಕೆ 153 ರನ್ ಗಳಿಸಿತು. 6.1 ಓವರ್ಗಳಲ್ಲಿ 41 ರನ್ ಗಳಿಸಿದ ಡಿಕಾಕ್ ಹಾಗೂ ಮೊಯಿನ್ ಅಲಿ ಉತ್ತಮ ಆರಂಭ ಒದಗಿಸಿದರು. 5 ರನ್ ಗಳಿಸಿದ್ದಾಗ ಅಲಿ ರನೌಟಾದರು. ನಾಯಕ ಅಜಿಂಕ್ಯ ರಹಾನೆ 18 ರನ್ ಗಳಿಸಿ ಹಸರಂಗಗೆ ವಿಕೆಟ್ ಒಪ್ಪಿಸಿದರು. ಡಿಕಾಕ್ ಹಾಗೂ ರಘುವಂಶಿ ತಂಡವನ್ನು ಗೆಲುವಿನತ್ತ ಮುನ್ನಡೆಸಿದರು. ಟಾಸ್ ಸೋತು ಮೊದಲು ಬ್ಯಾಟಿಂಗ್ಗೆ ಇಳಿಸಲ್ಪಟ್ಟ ರಾಜಸ್ಥಾನ ತಂಡವು ಸ್ಪಿನ್ನರ್ಗಳಾದ ವರುಣ್ ಚಕ್ರವರ್ತಿ(2-17)ಹಾಗೂ ಮೊಯಿನ್ ಅಲಿ(2-23), ವೇಗಿಗಳಾದ ವೈಭವ್ ಅರೋರ(2-33), ಹರ್ಷಿತ್ ರಾಣಾ(2-36) ಅವರ ಕರಾರುವಾಕ್ ಬೌಲಿಂಗ್ ದಾಳಿಗೆ ತತ್ತರಿಸಿ ನಿಗದಿತ 20 ಓವರ್ಗಳಲ್ಲಿ 9 ವಿಕೆಟ್ಗಳ ನಷ್ಟಕ್ಕೆ 151 ರನ್ ಗಳಿಸಲಷ್ಟೇ ಶಕ್ತವಾಯಿತು. ವಿಕೆಟ್ಕೀಪರ್-ಬ್ಯಾಟರ್ ಧ್ರುವ್ ಜುರೆಲ್(33 ರನ್, 28 ಎಸೆತ), ಯಶಸ್ವಿ ಜೈಸ್ವಾಲ್(29 ರನ್, 24 ಎಸೆತ) ಹಾಗೂ ರಿಯಾನ್ ಪರಾಗ್(25 ರನ್, 15 ಎಸೆತ)ಅವರ ಪ್ರಯತ್ನದ ಫಲವಾಗಿ ರಾಜಸ್ಥಾನ ರಾಯಲ್ಸ್ ತಂಡವು 150ರ ಗಡಿ ದಾಟಿತು. ಅಲಿ ಹಾಗೂ ಚಕ್ರವರ್ತಿ ಒಟ್ಟು 8 ಓವರ್ಗಳಲ್ಲಿ 40 ರನ್ ನೀಡಿ 4 ವಿಕೆಟ್ಗಳನ್ನು ಪಡೆದರು. ಹೀಗಾಗಿ ಆಂಡ್ರೆ ರಸೆಲ್ ಬೌಲಿಂಗ್ ಮಾಡಬೇಕಾದ ಅಗತ್ಯ ಉಂಟಾಗಲಿಲ್ಲ. 1 ವಿಕೆಟ್ಗೆ 67 ರನ್ ಗಳಿಸಿದ್ದ ರಾಜಸ್ಥಾನ ತಂಡವು 82 ರನ್ಗೆ 5ನೇ ವಿಕೆಟ್ ಕಳೆದುಕೊಂಡು ಕುಸಿತ ಕಂಡಿತು. 7ನೇ ಕ್ರಮಾಂಕದಲ್ಲಿ ಇಂಪ್ಯಾಕ್ಟ್ ಆಟಗಾರನಾಗಿ ಕಣಕ್ಕಿಳಿದಿದ್ದ ಶುಭಮ್ ದುಬೆ 12 ಎಸೆತಗಳಲ್ಲಿ ಕೇವಲ 9 ರನ್ ಗಳಿಸಿ ಅರೋರಗೆ ವಿಕೆಟ್ ಒಪ್ಪಿಸಿದರು. ಇನಿಂಗ್ಸ್ ಆರಂಭಿಸಿದ ಯಶಸ್ವಿ ಜೈಸ್ವಾಲ್(29 ರನ್)ಹಾಗೂ ಸಂಜು ಸ್ಯಾಮ್ಸನ್(13 ರನ್)3.5 ಓವರ್ಗಳಲ್ಲಿ 33 ರನ್ ಸೇರಿಸಿದರು. ಸ್ಯಾಮ್ಸನ್ರನ್ನು ಕ್ಲೀನ್ಬೌಲ್ಡ್ ಮಾಡಿದ ಅರೋರ ಈ ಜೋಡಿಯನ್ನು ಬೇರ್ಪಡಿಸಿದರು. ಹಂಗಾಮಿ ನಾಯಕ ಪರಾಗ್ ತನ್ನ ತವರು ಮೈದಾನದಲ್ಲಿ 15 ಎಸೆತಗಳಲ್ಲಿ 3 ಸಿಕ್ಸರ್ಗಳ ನೆರವಿನಿಂದ 25 ರನ್ ಗಳಿಸಿ ಉತ್ತಮ ಆರಂಭ ಪಡೆದರು.ಆದರೆ ಇದನ್ನು ದೊಡ್ಡ ಮೊತ್ತವನ್ನಾಗಿಸುವಲ್ಲಿ ವಿಫಲರಾದರು. ಧ್ರುವ್ ಜುರೆಲ್ 28 ಎಸೆತಗಳಲ್ಲಿ 33 ರನ್ ಗಳಿಸಿ ಸರ್ವಾಧಿಕ ಸ್ಕೋರ್ ಗಳಿಸಿದರು. ನಿತಿಶ್ ರಾಣಾ(8 ರನ್), ವನಿಂದು ಹಸರಂಗ(4 ರನ್), ಶಿಮ್ರೊನ್ ಹೆಟ್ಮೆಯರ್(7 ರನ್) ಹಾಗೂ ಇಂಪ್ಯಾಕ್ಟ್ ಪ್ಲೇಯರ್ ಶುಭಂ ದುಬೆ(9 ರನ್)ವಿಫಲರಾದರು. ಬಾಲಂಗೋಚಿ ಜೋಫ್ರಾ ಆರ್ಚರ್ 7 ಎಸೆತಗಳಲ್ಲಿ 16 ರನ್ ಗಳಿಸಿ ತಂಡದ ಮೊತ್ತವನ್ನು 150ರ ಗಡಿ ದಾಟಲು ನೆರವಾದರು. *ನರೇನ್ ಬದಲಿಗೆ ಮೊಯಿನ್ ಅಲಿಗೆ ಅವಕಾಶ ಟಾಸ್ ಜಯಿಸಿದ ಕೆಕೆಆರ್ ನಾಯಕ ಅಜಿಂಕ್ಯ ರಹಾನೆ ಬೌಲಿಂಗ್ ಆಯ್ದುಕೊಂಡರು. ಸುನೀಲ್ ನರೇನ್ ಅಸ್ವಸ್ಥರಾಗಿರುವ ಹಿನ್ನೆಲೆಯಲ್ಲಿ ಆಡುವ 11ರ ಬಳಗದಲ್ಲಿ ಅನಿವಾರ್ಯವಾಗಿ ಒಂದು ಬದಲಾವಣೆ ಮಾಡಲಾಗಿದೆ. ನರೇನ್ ಬದಲಿಗೆ ಇಂಗ್ಲೆಂಡ್ನ ಮಾಜಿ ಆಲ್ರೌಂಡರ್ ಮೊಯಿನ್ ಅಲಿಗೆ ಕೆಕೆಆರ್ ಸಲಹೆಗಾರ ಡ್ವೆಯ್ನ್ ಬ್ರಾವೊ ಅವಕಾಶ ನೀಡಿದರು. ಎಡಗೈ ವೇಗಿ ಸ್ಪೆನ್ಸರ್ ಜಾನ್ಸನ್ ಆಡುವ 11ರ ಬಳಗದಲ್ಲಿ ತನ್ನ ಸ್ಥಾನ ಉಳಿಸಿಕೊಂಡಿದ್ದಾರೆ. ಹಾಲಿ ಚಾಂಪಿಯನ್ ಕೆಕೆಆರ್ ಹಾಗೂ ರಾಜಸ್ಥಾನ ತಂಡಗಳು ಟೂರ್ನಿಯಲ್ಲಿ ಆಡಿರುವ ತನ್ನ ಮೊದಲ ಪಂದ್ಯಗಳಲ್ಲಿ ಸೋತಿದ್ದವು.
4000 ರೂ.ವರೆಗೆ ತಲುಪಿದ ಟಿಕೆಟ್ ದರ; ಯುಗಾದಿ, ರಂಜಾನ್ಗೆ ಊರಿಗೆ ಹೊರಟವರಿಗೆ ಬಸ್ ದರ ಏರಿಕೆ ಶಾಕ್!
ಯುಗಾದಿ, ರಂಜಾನ್ ಹಬ್ಬದ ರಜೆ, ಬೇಸಿಗೆ ರಜೆ ಕಾರಣ ಜನರು ಬೆಂಗಳೂರಿನಿಂದ ಊರಿನತ್ತ ಪ್ರಯಾಣಿಸುತ್ತಿದ್ದಾರೆ. ಇದನ್ನು ಬಳಸಿಕೊಂಡು ಖಾಸಗಿ ಬಸ್ಗಳು ದರ ಹೆಚ್ಚಿಸಿ ಪ್ರಯಾಣಿಕರಿಂದ ಹೆಚ್ಚು ಹಣ ವಸೂಲಿ ಮಾಡುತ್ತಿವೆ. ಸರ್ಕಾರಿ ದ್ವಿಚಕ್ರ ವಾಹನ ದರ ಹೆಚ್ಚಳವನ್ನು ಖಾಸಗಿ ಬಸ್ ಮಾಲೀಕರು ಸಮರ್ಥನೆ ಮಾಡುತ್ತಿದ್ದಾರೆ. ಕೆಲವು ಊರುಗಳಿಗೆ 4,000 ರೂ.ವರೆಗೆ ಟಿಕೆಟ್ ದರ ಏರಿಕೆಯಾಗಿದ್ದು, ಸರಕಾರದ ನಿರ್ಲಕ್ಷ್ಯಕ್ಕೆ ಆಕ್ರೋಶ ವ್ಯಕ್ತವಾಗಿದೆ.
ಚಾಮರಾಜನಗರ ಆಕ್ಸಿಜನ್ ದುರಂತ ; ನ್ಯಾ.ಬಿ.ಎ.ಪಾಟೀಲ್ ವರದಿ ತಿರಸ್ಕಾರ : ಡಿಸಿಎಂ ಡಿ.ಕೆ.ಶಿವಕುಮಾರ್
ಬೆಂಗಳೂರು : ಕೋವಿಡ್ ಸಮಯದಲ್ಲಿ ನಡೆದಿದ್ದ ಚಾಮರಾಜನಗರ ಆಕ್ಸಿಜನ್ ದುರಂತದ ಬಗ್ಗೆ ಹೈಕೋರ್ಟ್ನ ನಿವೃತ್ತ ನ್ಯಾಯಮೂರ್ತಿ ಬಿ.ಎ.ಪಾಟೀಲ್ ಏಕಸದಸ್ಯ ನ್ಯಾಯಾಂಗ ಆಯೋಗ ನೀಡಿದ್ದ ವರದಿಯನ್ನು ತಿರಸ್ಕರಿಸಿ ನ್ಯಾ.ಕುನ್ಹಾ ಅವರಿಗೆ ಮರು ತನಿಖೆಯ ಜವಾಬ್ದಾರಿ ನೀಡಲಾಗಿದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ತಿಳಿಸಿದರು. ಸಚಿವ ಸಂಪುಟ ಉಪ ಸಮಿತಿ ಸಭೆ ನಂತರ ಮಾಧ್ಯಮದವರನ್ನು ಉದ್ದೇಶಿಸಿ ವಿಧಾನಸೌಧದಲ್ಲಿ ಬುಧವಾರ ಮಾತನಾಡಿದ ಅವರು, ಚಾಮರಾಜನಗರ ದುರಂತ ನಡೆದ ವೇಳೆ ನಾನು ಹಾಗೂ ಸಿದ್ದರಾಮಯ್ಯ ಅವರು ಸ್ಥಳಕ್ಕೆ ತೆರಳಿ ಸಂಪೂರ್ಣ ಮಾಹಿತಿಯನ್ನು ಕಲೆ ಹಾಕಿದ್ದೆವು. ಮೃತರ ಕುಟುಂಬ ವರ್ಗದವರನ್ನು ಸಹ ಭೇಟಿ ಮಾಡಲಾಗಿತ್ತು. ಈ ಬಗ್ಗೆ ಅಧಿಕಾರಿಗಳನ್ನು ಪ್ರಶ್ನಿಸಿದಾಗ ಅವರು ಯಾರ್ಯಾರ ತಪ್ಪಿದೆ ಎಂದು ಹೇಳಿದ್ದರು ಎಂದರು. ವರದಿಯಲ್ಲಿ ಕುನ್ಹಾ ಅವರು ಹೆಸರಿಸಿರುವ ಹಿಂದಿನ ಆರೋಗ್ಯ ಸಚಿವರ ಮೇಲೆ ಕ್ರಮ ತೆಗೆದುಕೊಳ್ಳಲಾಗುತ್ತದೆಯೇ ಎಂದು ಕೇಳಿದಾಗ, ಕೋವಿಡ್ ಅಕ್ರಮಗಳ ಬಗ್ಗೆ ಮೈಕೆಲ್ ಕುನ್ಹಾ ಅವರು ಅತ್ಯಂತ ಸಮಗ್ರವಾಗಿ ವರದಿಯನ್ನು ನೀಡಿದ್ದಾರೆ. ಅದನ್ನು ಕೂಲಂಕುಷವಾಗಿ ಅಧ್ಯಯನ ಮಾಡಬೇಕಾಗುತ್ತದೆ. ಇದರಲ್ಲಿ ಕಾನೂನು ಸಂಬಂಧಿತ, ಕ್ರಿಮಿನಲ್ ಸಂಬಂಧಿತ ವಿಚಾರಗಳನ್ನು ಗಮನಿಸಲು ಸಹಾಯ ತೆಗೆದುಕೊಳ್ಳಲಾಗುತ್ತಿದೆ ಎಂದರು. ಸುಮಾರು 29 ಜನ ಅಧಿಕಾರಿಗಳು ಸಮಿತಿ ನೀಡಿರುವ ನೋಟಿಸ್ ಗೆ ಉತ್ತರ ನೀಡಿಲ್ಲ. ಅವರ ವಿರುದ್ಧ ಶಿಸ್ತುಕ್ರಮ ತೆಗೆದುಕೊಳ್ಳಲಾಗುವುದು. ಕುನ್ಹಾ ಅವರು ವರದಿಯಲ್ಲಿ ಅನೇಕ ರಾಜಕಾರಣಿಗಳ ಹೆಸರನ್ನು ಪ್ರಸ್ತಾಪಿಸಿದ್ದಾರೆ. ಇದರ ಬಗ್ಗೆ ನಮಗೂ ಅರಿವಿದೆ. ಸೂಕ್ತಕಾಲದಲ್ಲಿ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು. 15 ದಿನಗಳಿಗೊಮ್ಮೆ ಸಭೆ, ಸಮಿತಿಗೆ ಹಿರಿಯ ಅಧಿಕಾರಿಗಳ ನೇಮಕ : ಮುಂದಿನ ದಿನಗಳಲ್ಲಿ ಪ್ರತಿ 15 ದಿನಗಳಿಗೊಮ್ಮೆ ಉಪಸಮಿತಿ ಸಭೆ ನಡೆಸಬೇಕು ಎನ್ನುವ ತೀರ್ಮಾನಕ್ಕೆ ಬರಲಾಗಿದೆ. ಅಧಿಕಾರಿಗಳ ಕೊರತೆ ಇರುವ ಕಾರಣಕ್ಕೆ ಹಿರಿಯ ಐಎಎಸ್, ಐಪಿಎಸ್ ಅಧಿಕಾರಿಗಳನ್ನು ಸಮಿತಿಗೆ ನೇಮಕ ಮಾಡಿ ಅವರಿಗೂ ಕೆಲವು ಜವಾಬ್ದಾರಿಗಳನ್ನು ನೀಡಬೇಕು ಎಂದು ತೀರ್ಮಾನ ಮಾಡಲಾಗಿದೆ ಎಂದರು. ಆರೋಗ್ಯ ಇಲಾಖೆ ನಡೆಸುವುದು ಪ್ರತಿ ದಿನವೂ ಸವಾಲಿನಿಂದ ಕೂಡಿರುವ ಕೆಲಸ. ಇಲಾಖೆ ಅಡಿಯಲ್ಲಿ 70 ಮೆಡಿಕಲ್ ಕಾಲೇಜುಗಳು ಬರುತ್ತವೆ. ದಿನವು ಹೊಸ ಸವಾಲುಗಳು ಎದುರಾಗುತ್ತವೆ. ಆದ ಕಾರಣ ಒಂದಷ್ಟು ಜವಾಬ್ದಾರಿಗಳನ್ನು ಹಿರಿಯ ಅಧಿಕಾರಿಗಳಿಗೆ ನೀಡಲಾಗುವುದು ಎಂದು ಹೇಳಿದರು. ಸಂಪುಟದ ಉಪ ಸಮಿತಿಯಿಂದ ಜಿಲ್ಲಾ ಆಸ್ಪತ್ರೆಗಳಿಗೆ ಭೇಟಿ : ಕೋವಿಡ್ ಸಮಯದಲ್ಲಿ ಖರೀದಿ ಮಾಡಿದ ಅನೇಕ ವೈದ್ಯಕೀಯ ಉಪಕರಣಗಳು ಕೆಲಸ ಮಾಡುತ್ತಿಲ್ಲ. ಅಲ್ಲದೇ ದಿನಾಂಕ ಮುಗಿದಿರುವ ಅನೇಕ ಔಷಧಿಗಳ ಬಗ್ಗೆ ಕೇಳಿದಾಗ, ನ್ಯಾ.ಕುನ್ಹಾ ಅವರ ವರದಿಯಲ್ಲಿ ಅನೇಕ ವಿಚಾರಗಳಿವೆ. ಆದರೂ ಸಮಿತಿಯವರು ಇದೆಲ್ಲವನ್ನು ನೇರವಾಗಿ ನೋಡಿ ಪ್ರಮಾಣಿಸಬೇಕು, ನಮಗೂ ಇದು ಅರ್ಥವಾಗಬೇಕು. ಇಡೀ ಸಮಿತಿಯ ಸದಸ್ಯರು ಔಷಧಿಗಳು, ಉಪಕರಣಗಳನ್ನು ವೀಕ್ಷಣೆ ಮಾಡುತ್ತಾರೆ. ಅನೇಕ ಕಡೆ ವೈದ್ಯಕೀಯ ಉಪಕರಣಗಳನ್ನು ಅಳವಡಿಸಿಲ್ಲ ಎಂದು ಹೇಳಲಾಗಿದೆ. ಹಾಗಾದರೆ ಅದು ಏನಾಗಿದೆ ಎಂದು ಪರಿಶೀಲನೆ ಮಾಡುತ್ತೇವೆ. ಒಂದಷ್ಟನ್ನು ಉಗ್ರಾಣಗಳಿಗೆ, ಜಿಲ್ಲಾ ಕೇಂದ್ರಗಳಿಗೆ ಕಳಿಸಲಾಗಿದೆ ಎನ್ನುವ ಮಾಹಿತಿಯಿದೆ. ಅದಕ್ಕೆ ಸಮಿತಿಯವರು ಜಿಲ್ಲಾ ಕೇಂದ್ರಗಳ ಆಸ್ಪತ್ರೆಗಳಲ್ಲಿ, ಬೆಂಗಳೂರಿನಲ್ಲೂ ಪರಿಶೀಲನೆ ನಡೆಸುತ್ತದೆ ಎಂದರು. ನಾನು ಕಾಂಗ್ರೆಸ್ ಪಕ್ಷದ ವಕ್ತಾರ : ಕುಮಾರಸ್ವಾಮಿ ಹಾಗೂ ದೇವೇಗೌಡರನ್ನು ಸತೀಶ್ ಜಾರಕಿಹೊಳಿ ಅವರು ಭೇಟಿ ಮಾಡಿರುವ ಬಗ್ಗೆ ಕೇಳಿದಾಗ, ನಾನು ಕಾಂಗ್ರೆಸ್ ಪಕ್ಷದ ವಕ್ತಾರ. ಕುಮಾರಸ್ವಾಮಿ ಹಾಗೂ ಸತೀಶ್ ಜಾರಕಿಹೊಳಿ ಅವರ ಬಳಿ ಈ ಬಗ್ಗೆ ಚರ್ಚೆ ಮಾಡಿದರೆ ಒಳ್ಳೆಯದು. ದೇಶ, ರಾಜ್ಯ, ವೈಯಕ್ತಿಕ ವಿಚಾರಗಳಿಗೆ ಭೇಟಿಯಾಗಿದ್ದರೋ ತಿಳಿದಿಲ್ಲ. ಇದರ ಬಗ್ಗೆ ಅವರನ್ನೇ ಕೇಳಿದರೆ ಬಹಳ ಉತ್ತಮ ಎಂದರು. ಯತ್ನಾಳ್ ಉಚ್ಚಾಟನೆ ಬಿಜೆಪಿ ಆಂತರಿಕ ವಿಚಾರ : ಯತ್ನಾಳ್ ಅವರನ್ನು 6 ವರ್ಷಗಳ ಕಾಲ ಉಚ್ಚಾಟನೆ ಮಾಡಿರುವ ಬಗ್ಗೆ ಕೇಳಿದಾಗ, ಬಿಜೆಪಿಯ ಆಂತರಿಕ ವಿಚಾರಗಳನ್ನು ನಾನು ಏಕೆ ಮಾತನಾಡಲಿ? ಅವರ ಪಕ್ಷದ ಮುತ್ತು ರತ್ನಗಳನ್ನು ಇಟ್ಟುಕೊಳ್ಳಲಿ ಅಥವಾ ಆಚೆಯಾದರೂ ಬಿಸಾಡಲಿ ಎಂದು ಕುಟುಕಿದರು. ಯತ್ನಾಳ್ ಅವರು ನಮ್ಮಲ್ಲಿ ಇದ್ದಿದ್ದರೆ ಇಷ್ಟೊತ್ತಿಗಾಗಲೇ ನಾನು ಪಕ್ಷದಿಂದ ಉಚ್ಚಾಟನೆ ಮಾಡುತ್ತಿದ್ದೆ ಎನ್ನುವ ಹಿಂದಿನ ಹೇಳಿಕೆ ಬಗ್ಗೆ ಕೇಳಿದಾಗ, ಒಂದಷ್ಟು ಜನ ಶೋಭೆಗೆ ಎಂದು ಓಲೆ, ಮೂಗುತಿ, ಹಣೆಗೆ ಕುಂಕುಮ ಇಟ್ಟುಕೊಳ್ಳುತ್ತಾರೆ. ಅದೇ ರೀತಿ ಒಂದಷ್ಟು ಜನ ಪಕ್ಷದಲ್ಲಿ ಇದ್ದರೆ ಒಳ್ಳೆಯದು ಎಂದು ಮಾರ್ಮಿಕವಾಗಿ ನುಡಿದರು.
ಯತ್ನಾಳ್ ಉಚ್ಚಾಟನೆ ವಿರೋಧಿಸಿ ಪಂಚಮಸಾಲಿ ಸಮಾಜ ಸಿಡಿದೆಳಲಿದೆ; ಬಸವಜಯ ಮೃತ್ಯುಂಜಯ ಸ್ವಾಮೀಜಿ ಎಚ್ಚರಿಕೆ!
ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಬಿಜೆಪಿ ಹೈಕಮಾಂಡ್ ಉಚ್ಚಾಟನೆ ಮಾಡಿರುವ ನಿರ್ಧಾರವನ್ನು, ಕೂಡಲ ಸಂಗಮ ಪಂಚಮಸಾಲಿ ಲಿಂಗಾಯತ ಪೀಠದ ಜಗದ್ಗುರು ಬಸವಜಯ ಮೃತ್ಯುಂಜಯ ಸ್ವಾಮೀಜಿ ತೀವ್ರವಾಗಿ ಖಂಡಿಸಿದ್ದಾರೆ. ಪ್ರಾಮಾಣಿಕ ರಾಜಕಾರಣಿ ಯತ್ನಾಳ್ ಅವರನ್ನು ಉಚ್ಚಾಟಿಸಿರುವುದು ಕೇವಲ ಪಂಚಮಸಾಲಿ ಸಮುದಾಯ ಮಾತ್ರವಲ್ಲದೇ, ಇಡೀ ಲಿಂಗಾಯತ ಸಮುದಾಯದ ಆಕ್ರೋಶಕ್ಕೆ ಕಾರಣವಾಗಿದೆ. ಬಿಜೆಪಿ ಹೈಕಮಾಂಡ್ ಪ್ರಾಮಾಣಿಕತೆಗೆ ಕೊಡುವ ಗೌರವ ಇದೆನಾ..? ಎಂದು ಬಸವಶ್ರೀ ಸ್ವಾಮೀಜಿ ಪ್ರಶ್ನಿಸಿದ್ದಾರೆ. ಇಲ್ಲಿದೆ ಮಾಹಿತಿ.
ಯುಟ್ಯೂಬ್ ನಿಂದ ‘ನಯಾ ಭಾರತ್’ ತೆಗೆದು ಹಾಕಲು ಕಾನೂನು ಕ್ರಮ
ಮುಂಬೈ: ಯುಟ್ಯೂಬ್ ನಲ್ಲಿರುವ ತನ್ನ ಇತ್ತೀಚೆಗಿನ ಸ್ಟಾಂಡ್ ಅಪ್ ವೀಡಿಯೊ ‘ನಯಾ ಭಾರತ್’ಗೆ ಹಕ್ಕು ಸ್ವಾಮ್ಯ ತಡೆ ಕಳುಹಿಸಿರುವುದಕ್ಕಾಗಿ ಸ್ಟಾಂಡ್ ಅಪ್ ಕಮೇಡಿಯನ್ ಸಂಗೀತ ಕಂಪೆನಿ ಟಿ ಸಿರೀಸ್ ಅನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ತನ್ನ ವೀಡಿಯೊದಲ್ಲಿ ಹಾಡಿನ ಮೂಲ ಸಾಹಿತ್ಯ ಅಥವಾ ಮೂಲ ಸಂಗೀತೋಪಕರಣಗಳನ್ನು ಬಳಸಿಲ್ಲ ಎಂದು ಕುನಾಲ್ ಕಾಮ್ರಾ ಪ್ರತಿಪಾದಿಸಿದ್ದಾರೆ. ‘‘ಹಲೋ ಟಿ ಸಿರೀಸ್, ಕೈಗೊಂಬೆಯಾಗಬೇಡಿ. ಸಾಹಿತ್ಯವನ್ನು ಬದಲಾಯಿಸಿದ ವಿಡಂಬನೆಯ ಹಾಡು ಕಾನೂನಾತ್ಮಕವಾಗಿ ನ್ಯಾಯಯುತ ಬಳಕೆಯ ಅಡಿಯಲ್ಲಿ ಬರುತ್ತದೆ. ನಾನು ವೀಡಿಯೊದಲ್ಲಿ ಹಾಡಿನ ಮೂಲ ಸಾಹಿತ್ಯ ಅಥವಾ ಮೂಲ ಸಂಗೀತೋಪಕರಣಗಳನ್ನು ಬಳಸಿಲ್ಲ’’, ಎಂದು ಅವರು ‘ಎಕ್ಸ್’ನ ಪೋಸ್ಟ್ನಲ್ಲಿ ಹೇಳಿದ್ದಾರೆ. ಕಂಟೆಂಟ್ ಕ್ರಿಯೇಟರ್ ಗಳನ್ನು ಸಿಲುಕಿಸುವ ಕುರಿತು ಕಳವಳ ವ್ಯಕ್ತಪಡಿಸಿರುವ ಅವರು, ಇಂತಹ ಕ್ರಮಗಳು ಅಪಾಯಕಾರಿ ಎಂದಿದ್ದಾರೆ. ಭಾರತದಲ್ಲಿರುವ ಪ್ರತಿಯೊಂದು ಏಕಸ್ವಾಮ್ಯವೂ ಮಾಫಿಯಾಕ್ಕಿಂತ ಕಡಿಮೆ ಅಲ್ಲ. ಆದುದರಿಂದ ಈ ವೀಡಿಯೊವನ್ನು ಯುಟ್ಯೂಬ್ ನಿಂದ ತೆಗೆದು ಹಾಕುವುದಕ್ಕಿಂತ ಮುನ್ನ ನೋಡಿ, ಡೌನ್ಲೋಡ್ ಮಾಡಿ ಎಂದು ಕಾಮ್ರಾ ಪ್ರತಿಪಾದಿಸಿದ್ದಾರೆ.
ಕಲಬುರಗಿ | ಸಹಕಾರ ಸಂಘದ ಅಧ್ಯಕ್ಷರಾಗಿ ಮಲ್ಲಿನಾಥ್ ನಾಗನಹಳ್ಳಿ ಅವಿರೋಧ ಆಯ್ಕೆ
ಕಲಬುರಗಿ : ಕೋಟನೂರ್ (ಡಿ) ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ ಅವಿರೋಧವಾಗಿ ಅಧ್ಯಕ್ಷರಾಗಿ ಮಲ್ಲಿನಾಥ್ ನಾಗನಹಳ್ಳಿ ಹಾಗೂ ಉಪಾಧ್ಯಕ್ಷರಾಗಿ ಶಿವರಾಜ್ ಸಿರಸಗಿ ಕೋಟನೂರ್ ಆಯ್ಕೆಯಾಗಿದ್ದಾರೆಂದು ಚುನಾವಣೆ ಅಧಿಕಾರಿ ಪರಸಪ್ಪ ಮಿಂಚಿನ ತಿಳಿಸಿದ ತಕ್ಷಣ ಗ್ರಾಮಸ್ಥರು ಅದ್ದೂರಿಯಾಗಿ ಸಂಭ್ರಮಾಚರಣೆ ಆಚರಿಸಿದರು. ಈ ಸಂದರ್ಭದಲ್ಲಿ ನಿರ್ದೇಶಕರಾದ ಅಶೋಕ ನಾಗನಹಳ್ಳಿ, ಗುರುದೇವಿ ಹಣಮಂತರಾವ್ ಪಾಟೀಲ್ ಕೋಟನೂರ್, ಶಾಮರಾವ್ ಪೊಲೀಸ್ ಪಾಟೀಲ್ ಶರಣಬಸಪ್ಪ ಕಣ್ಣಿ, ಭಿಮಾಶಂಕರ್ ನಾಯಕ , ದಸ್ತಯ್ಯ ಗುತ್ತೇದಾರ ಸಂಗಣ್ಣ ಗೌಡ ಅಲ್ಲಾಪುರ ಸೀತಾನೋರ, ಮಾಜಿ ತಾಲೂಕು ಪಂಚಾಯತ್ ಅಧ್ಯಕ್ಷರಾದ ಸಂಗಮೇಶ್ ನಾಗನಹಳ್ಳಿ , ಜಿಲ್ಲಾ ಪಂಚಾಯತ್ ಸದ್ಯಸರಾದ ರಾಜೇಂದ್ರ ಕರೆಕಲ್, ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಪವನ್ ವಳಕೇರಿ, ಪ್ರಕಾಶ್ ಪಾಟೀಲ್, ಹಣಮಂತರಾವ್ ಪಾಟೀಲ್ , ಗ್ರಾಮ ಪಂಚಾಯತ್ ಅಧ್ಯಕ್ಷರಾದ ಚಂದ್ರಕಾಂತ್ ಪೂಜಾರಿ, ಸದ್ಯಸರಾದ ಭೀಮಾಶಂಕರ ನಂದಿಕೂರ್ ನಾಗನಹಳ್ಳಿ, ಲಕ್ಷ್ಮಣ್ ಪೂಜಾರಿ, ನಾಗೇಂದ್ರಪ್ಪ ಗಚ್ಚಿನಮನಿ, ಹುಸನಯ್ಯ ಗುತ್ತೇದಾರ, ನಾಗೇಂದ್ರಪ್ಪ ಶರ್ಮಾ, ರಾಜೇಂದ್ರ ಮುದ್ದನಕರ, ಪ್ರಕಾಶ್ ಮಲ್ಲಬಾದಿ, ಅಣ್ಣಾರಾವ್ ಝಪುರ್ ಚಂದ್ರಶೇಖರ ಬೆಳೆಮಗಿ, ಬಸವರಾಜ್ ಮಹಾಗವಂಕರ್, ಶಿವಪುತ್ರ ಜಳಕಿ, ಶಿವಲಿಂಗಪ್ಪ ಮಹಾಗವಂಕರ್, ಶರಣು ಕರೆಕಲ್, ಶರಣು ನಂದಿಕೂರ್, ಶ್ರೀಕಾಂತ್ ನಾಗನಹಳ್ಳಿ, ರಾಜಶೇಖರ್ ಇಟಗಿ, ಈಶ್ವರ್ ರಾಠೋಡ್, ಮಲ್ಲಿಕಾರ್ಜುನ ಪಾಟೀಲ್, ದಯಾನಂದ ಪಾಟೀಲ್, ಸತೀಶ್ ಮಾಹುರ್, ಸಂಗು ಮಲಿಪಾಟೀಲ್,ಪ್ರಶಾಂತ್ ನಾಗನಹಳ್ಳಿ, ಶ್ರೀಧರ್ ನಾಗನಹಳ್ಳಿ, ಗುರುರಾಜ್ ಅಂಬಾಡಿ, ಆನಂದ್ ಕಣಸೂರ್, ಅಭಿಷೇಕ್ ನಾಗನಹಳ್ಳಿ ಸೇರಿದಂತೆ ಇತರರು ಉಪಸ್ಥಿತರಿದ್ದರು.
ತಾನೇ ನಿದ್ರೆ ಮಾತ್ರೆ ತಂದುಕೊಟ್ಟು ಕೊಲೆಯಾದ ರಿಯಲ್ ಎಸ್ಟೇಟ್ ಉದ್ಯಮಿ, ಪುಸ್ತಕ ಓದಿ ಕೊಲೆಗೈದ ಪತ್ನಿ!
37 ವರ್ಷದ ರಿಯಲ್ ಎಸ್ಟೇಟ್ ಉದ್ಯಮಿ ಲೋಕನಾಥ್ ಸಿಂಗ್ ಕೊಲೆ ರಹಸ್ಯ ಪೂರ್ಣವಾಗಿ ಬಯಲಾಗಿದೆ. ತನ್ನ ಪತ್ನಿ ಯಶಸ್ವಿನಿ ಮತ್ತು ಅತ್ತೆ ಹೇಮಾಬಾಯಿಯಿಂದ ಕೊಲೆಗೀಡಾಗಿರುವ ಲೋಕನಾಥ್ ಸಿಂಗ್, ತಮ್ಮ ಕೊಲೆಗೆ ಬಳಸಿದ ನಿದ್ರೆ ಮಾತ್ರೆಯನ್ನು ತಾವೇ ತಂದಿದ್ದರು. ಪತ್ನಿ ಯಶಸ್ವಿನಿ, ಕೊಲೆ ಕಾರ್ಯಕ್ಕಾಗಿ 'ಹೌ ಟು ಕಿಲ್' ಪುಸ್ತಕವನ್ನು ಖರೀದಿಸಿ ತಮ್ಮ ತಾಯಿಗೆ ಕೊಲ್ಲುವ ಸಲಹೆಗಳನ್ನು ನೀಡಿದ್ದಳು ಎಂದು ಗೊತ್ತಾಗಿದೆ.
ಪುತ್ತೂರು ಬ್ರಾಹ್ಮಣ ಮಹಾಸಭಾದಿಂದ ಮಹಿಳಾ ದಿನಾಚರಣೆ
ಉಡುಪಿ: ಪುತ್ತೂರು ಬ್ರಾಹ್ಮಣ ಮಹಾಸಭಾದ ವತಿಯಿಂದ ಮಹಿಳಾ ದಿನಾಚರಣೆಯನ್ನು ಭಗವತಿ ಶ್ರೀದುರ್ಗಾಪರಮೇಶ್ವರಿ ದೇವಸ್ಥಾನದ ಸಭಾಗೃಹದಲ್ಲಿ ಆಚರಿಸಲಾಯಿತು. ಡಾ.ಶ್ರೀಧರ ಬಾಯಿರಿ ನೇತೃತ್ವದ ದುರ್ಗಾ ಆರೋಗ್ಯ ಘಟಕದ ವತಿಯಿಂದ ಉಚಿತ ಆರೋಗ್ಯ ತಪಾಸಣೆಯನ್ನು ಹಮ್ಮಿಕೊಳ್ಳಲಾಗಿತ್ತು. ನಂತರ ಹಂಡೆದಾಸ ಪ್ರತಿಷ್ಠಾನದ ಸಂಸ್ಥಾಪಕಿ ರುಕ್ಮಿಣಿ ಹಂಡೆ ಇವರಿಂದ ಮಹಾಸತಿ ಅನುಸೂಯ ಎಂಬ ವಿಷಯದ ಬಗ್ಗೆ ಹರಿಕಥಾ ಕಾಲಕ್ಷೇಪ ನಡೆಯಿತು. ಸಾಧಕರಾದ ಕಾಂತಿ ರಾವ್, ಸುಮತಿ ಭಟ್ ಹಾಗೂ ರುಕ್ಮಿಣಿ ಹಂಡೆ ಅವರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಮಾಜಿ ಮಹಿಳಾ ಅಧ್ಯಕ್ಷರಾದ ಸರೋಜಾ ಭಟ್, ನಿರ್ಮಲಾ ಭಟ್ ಕೊಡಂಕೂರು, ಪ್ರಿಯಂವದಾ ಐತಾಳ್ ಹಾಗೂ ಮಾಜಿ ಕಾರ್ಯದರ್ಶಿಗಳಾದ ವೇದಾವತಿ ಭಟ್ ಮತ್ತು ಪದ್ಮಿನಿ ಭಟ್ ಅವರನ್ನು ಗೌರವಿಸಲಾಯಿತು. ಆಪದ್ಬಾಂಧವ ಸಮಿತಿಯ ವತಿಯಿಂದ ಅಶಕ್ತರಿಗೆ ವೈದ್ಯಕೀಯ ವೆಚ್ಚಕ್ಕಾಗಿ ಧನಸಹಾಯವನ್ನು ಯಶೋಧ ಪಿ.ಆರ್. ಹತ್ತಾಂತರಿಸಿದರು. ಮಹಾಸಭಾದ ಅಧ್ಯಕ್ಷ ಶುಭಾ ಬಾಳ್ತಿಲ್ಲಾಯ ಸ್ವಾಗತಿಸಿದರು. ಪದ್ಮಿನಿ ಭಟ್, ಅನ್ನಪೂರ್ಣ ಉಪ್ಪೂರ, ಜಯಂತಿ ಉಡುಪ, ಸುನೀತಾ ಚೈತನ್ಯ, ಶ್ರೀಲಕ್ಷ್ಮಿ ಸಹಕರಿಸಿದರು. ಆಪತ್ಬಾಂಧವ ಸಮಿತಿಯ ಸಂಚಾಲಕ ಸುಬ್ರಹ್ಮಣ್ಯ ಉಡುಪ, ವಿಜಯಕುಮಾರ್ ಉಪಸ್ಥಿತರಿದ್ದರು. ಗೀತಾ ಭಟ್ ಕಾರ್ಯಕ್ರಮ ನಿರೂಪಿಸಿ, ಕಾರ್ಯದರ್ಶಿ ಮಂಜುಳಾ ಪ್ರಸಾದ್ ವಂದಿಸಿದರು.
ಕಲಬುರಗಿ | ಅಟಲ್ ವಿರಾಸತ ಕಾರ್ಯಕ್ರಮದಡಿ ಸೋಮಯಾಜಿಗೆ ಸನ್ಮಾನ
ಕಲಬುರಗಿ : ಶಹಾಬಾದ್ ನಗರದ ಭಾರತೀಯ ಜನತಾ ಪಾರ್ಟಿ ಶಹಾಬಾದ ಮಂಡಲ ವತಿಯಿಂದ ಬುಧವಾರ ಮಾಜಿ ಪ್ರಧಾನಿಗಳಾದ ದಿ.ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮ ಶತಮಾನೋತ್ಸವದ ಅಂಗವಾಗಿ ಅಟಲ್ ವಿರಾಸತ ಕಾರ್ಯಕ್ರಮದಡಿ ದಿ.ಗಣಪತಭಟ್ಟ ಸೋಮಯಾಜಿ ಅವರ ಪರವಾಗಿ ಅವರ ಸುಪುತ್ರರಾದ ಅಶೋಕ ಗಣಪತಭಟ್ಟ ಸೋಮಯಾಜಿ ಅವರನ್ನು ಅವರ ಸ್ವಗ್ರಹದಲ್ಲಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಹಿರಿಯ ಮುಖಂಡ ಕನಕಪ್ಪ ದಂಡಗುಲಕರ್, ಗಣಪತ್ಭಟ್ಟ ಸೋಮಯಾಜಿ ಅವರು ಇಂದು ನಮ್ಮೊಂದಿಗೆ ಇಲ್ಲ. ಆದರೆ ಅವರು ಪಕ್ಷಕ್ಕೆ ಮಾಡಿದ ಕಾರ್ಯ ಅವಿಸ್ಮರಣಿಯವಾದುದು. ಅಟಲ್ ಬಿಹಾರಿ ವಾಜಪೇಯಿ ಅವರು ಶಹಾಬಾದ್ ನಗರಕ್ಕೆ ಮೂರು ಬಾರಿ ಬಂದಿದ್ದಾರೆ. ಅವರು ಬಂದಾಗ ಮೊದಲು ಗಣಪತಭಟ್ಟ ಸೋಮಯಾಜಿ ಅವರನ್ನು ಬೇಟಿ ಮಾಡುತ್ತಿದ್ದರು.ಆ ಕಾಲದಲ್ಲಿ ಗಣಪತಭಟ್ಟ ಸೋಮಯಾಜಿಯವರು ಪ್ರಭಾವಿ ವ್ಯಕ್ತಿಯಾಗಿದ್ದರು ಎಂದರು. ಬಿಜೆಪಿ ಉಪಾಧ್ಯಕ್ಷ ಸಿದ್ರಾಮ ಕುಸಾಳೆ, ದಿನೇಶ ಗೌಳಿ, ಕನಕಪ್ಪ ದಂಡಗುಲಕರ, ಭೀಮರಾವ ಸಾಳುಂಕೆ, ಅನೀಲ ಬೊರಗಾಂವಕರ, ನಾಗರಾಜ ಮೆಲಗಿರಿ, ಭಾನುದಾಸ ತುರೆ, ಶೀವಕುಮಾರ ಇಂಗಿನಶೆಟ್ಟಿ, ಬಸವರಾಜ ಬಿರಾದಾರ, ನಾರಾಯಣ ಕಂದಕೂರ, ರೇವಣಸಿದ್ದ ಮತ್ತಿಮಡು, ಜಗದೇವ ಸುಬೆದಾರ, ಅನೀಲದತ್ತ, ಶ್ರೀನಿವಾಸ ದೇವಕರ ಸೇರಿದಂತೆ ಇತರರು ಇದ್ದರು.
ಹೆಬ್ರಿಯ ಕೆರೆಬೆಟ್ಟು, ಶಿವಪುರಗಳಲ್ಲಿ ಹೊಸ ಕೈಗಾರಿಕಾ ಪ್ರದೇಶ: ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ
ಉಡುಪಿ: ಜಿಲ್ಲೆಯಲ್ಲಿ ಹೊಸ ಕೈಗಾರಿಕಾ ಪ್ರದೇಶ ನಿರ್ಮಾಣಕ್ಕೆ ಈಗಾಗಲೇ ಹೆಬ್ರಿ ತಾಲೂಕಿನ ಕೆರೆಬೆಟ್ಟು ಗ್ರಾಮದಲ್ಲಿ 31.28 ಎಕ್ರೆ ಹಾಗೂ ಶಿವಪುರ ಗ್ರಾಮದಲ್ಲಿ 45.75 ಎಕ್ರೆ ಜಮೀನು ಸೇರಿದಂತೆ ಒಟ್ಟು 77.03 ಎಕ್ರೆ ಖಾಸಗಿ ಜಮೀನಿನ ಭೂಮಾಲಕರಿಗೆ ಪೂರ್ಣ ಪರಿಹಾರಧನವನ್ನು ಪಾವತಿಸಿ, ನಿಯಮಾನುಸಾರ ಜಾಗವನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆಎಂದು ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ತಿಳಿಸಿದ್ದಾರೆ. ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಇಂದು ನಡೆದ ಕೈಗಾರಿಕಾ ಸ್ಪಂದನ ಸಮಿತಿ ಸಭೆ, ಜಿಲ್ಲಾ ಮಟ್ಟದ ಏಕಗವಾಕ್ಷಿ ಸಮಿತಿ ಸಭೆ ಹಾಗೂ ರಫ್ತು ಉತ್ತೇಜನ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು. ಹೆಬ್ರಿ ತಾಲೂಕಿನಲ್ಲಿ 36.56 ಎಕರೆ ಸರಕಾರಿ ಜಮೀನು ಮಂಜೂರಾತಿ ಪ್ರಕ್ರಿಯೆ ಬಾಕಿ ಇದ್ದು, ಈ ಭೂಮಿ ಇಕೋ ಸೆನ್ಸಿಟೀವ್ ಝೋನ್ನಲ್ಲಿ ಬರುವ ಬಗ್ಗೆ ಪರಿಶೀಲನೆಯನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ಮಾಡಬೇಕಾಗಿದೆ ಎಂದು ಜಿಲ್ಲಾಧಿಕಾರಿ ಹೇಳಿದರು. ಜಿಲ್ಲೆಯಲ್ಲಿ ಈಗಾಗಲೇ ಹೊಸ ಕೈಗಾರಿಕಾ ಪ್ರದೇಶಗಳ ನಿರ್ಮಾಣಕ್ಕೆ ವಿವಿಧ ತಾಲೂಕುಗಳಲ್ಲಿ ಭೂಮಿಯನ್ನು ಗುರುತಿಸಲಾಗಿದೆ. ಕೆಐಎಡಿಬಿ ಈ ಪ್ರದೇಶಗಳನ್ನು ಸ್ವಾಧೀನಪಡಿಸಿಕೊಂಡು ಕೈಗಾರಿಕೆಗಳ ಸ್ಥಾಪನೆಗೆ ಅಗತ್ಯವಿರುವ ಮೂಲಭೂತ ಸೌಕರ್ಯಗಳಾದ ವಿದ್ಯುಚ್ಛಕ್ತಿ ಸೌಕರ್ಯ, ರಸ್ತೆ, ಚರಂಡಿ ವ್ಯವಸ್ಥೆ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಕಲ್ಪಿಸಿ, ಹೊಸ ಕೈಗಾರಿಕೆಗಳು ಸ್ಥಾಪನೆಗೊಂಡು ಜಿಲ್ಲೆಜನರಿಗೆ ಉದ್ಯೋಗ ದೊರಕುವಂತಾಗಬೇಕು ಎಂದರು. ಜಿಲ್ಲೆಯಲ್ಲಿ ಕೈಗಾರಿಕಾ ಪ್ರದೇಶಗಳ ವಿಸ್ತೀರ್ಣಕ್ಕೆ ಗುರುತಿಸಲಾಗಿರುವ ಜಮೀನಿನ ಭೂ ಸ್ವಾಧೀನ ಪ್ರಕ್ರಿಯೆಯನ್ನು ತ್ವರಿತವಾಗಿ ಕೈಗೊಂಡು, ಹೊಸ ಕೈಗಾರಿಕೆಗಳ ಸ್ಥಾಪನೆಗೆ ಶೀಘ್ರವೇ ಅನುವು ಮಾಡಿಕೊಡಬೇಕು ಎಂದವರು ಸಂಬಂಧಿತ ಅಧಿಕಾರಿಗಳಿಗೆ ಸೂಚನೆ ನೀಡಿದರು. ಮಣಿಪಾಲದ ಶಿವಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಅನುಮತಿ ಪಡೆಯದೇ ಹಾಗೂ ಜಾಗಕ್ಕೆ ಸಂಬಂಧಿಸಿದಂತೆ ಅಗತ್ಯ ದಾಖಲಾತಿ ನೀಡದೇ ಆರ್ಎಂಸಿ ಚಟುವಟಿಕೆಗಳನ್ನು ನಡೆಸಲಾಗುತ್ತಿದೆ. ಈ ಬಗ್ಗೆ ಸಂಬಂಧ ಪಟ್ಟ ಮಾಲಕರಿಗೆ ನೋಟಿಸ್ ನೀಡುವಂತೆ ಸೂಚನೆ ನೀಡಿದ ಅವರು, ಡಾ.ಸರೋಜಿನಿ ಮಹಿಷಿ ವರದಿಯಂತೆ ಸ್ಥಳೀಯರಿಗೆ ಉದ್ಯೋಗಾವಕಾಶ ಕಲ್ಪಿಸಬೇಕು ಎಂದರು. ಬೆಳಪು ಕೈಗಾರಿಕಾ ಪ್ರದೇಶದ ಸಂಪರ್ಕ ರಸ್ತೆ ವಿಸ್ತರಣೆಗೆ ಅಗತ್ಯವಿರುವ ಭೂಸ್ವಾಧೀನ ಪ್ರಕ್ರಿಯೆಯನ್ನು ಶೀಘ್ರದಲ್ಲಿಯೇ ಪೂರ್ಣಗೊಳಿಸಿ, ಸಂಪರ್ಕ ರಸ್ತೆ ನಿರ್ಮಾಣಕ್ಕೆ ಮುಂದಾಗಬೇಕು. ಮಿಯ್ಯಾರು ಕೈಗಾರಿಕಾ ಪ್ರದೇಶದಲ್ಲಿ ಪ್ರತಿಯೊಂದು ಕೈಗಾರಿಕಾ ಘಟಕಗಳೂ ಮಳೆ ನೀರು ಕೊಯ್ಲನ್ನು ಅಳವಡಿಸಿಕೊಳ್ಳಬೇಕು. ಇದರಿಂದಾಗಿ ಸ್ಥಳೀಯವಾಗಿಯೇ ನೀರಿನ ಸಮಸ್ಯೆ ಬಗೆಹರಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದರು. ಜಿಲ್ಲೆಯಲ್ಲಿ ಒಟ್ಟು 22 ರಫ್ತು ಆಧಾರಿತ ಘಟಕಗಳು ಕಾರ್ಯ ನಿರ್ವಹಿಸುತ್ತಿದ್ದು, ವಿದೇಶಿ ರಫ್ತನ್ನು ಉತ್ತೇಜಿಸುವುದರೊಂದಿಗೆ ಚಟುವಟಿಕೆ ಗಳನ್ನು ಇನ್ನಷ್ಟು ಹೆಚ್ಚಿಸಬೇಕೆಂದರು. ಸಭೆಯಲ್ಲಿ ಕೈಗಾರಿಕಾ ಇಲಾಖೆಯ ಜಂಟಿ ನಿರ್ದೇಶಕ ನಾಗರಾಜ್ ನಾಯಕ್, ಕೆಐಎಡಿಬಿ ಅಭಿವೃದ್ಧಿ ಅಧಿಕಾರಿ ಶ್ರೀನಿವಾಸಮೂರ್ತಿ, ಸಣ್ಣ ಕೈಗಾರಿಕಾ ಸಂಘದ ಜಿಲ್ಲಾ ಅಧ್ಯಕ್ಷ ಹರೀಶ್ ಕುಂದರ್, ಜಿಲ್ಲಾ ಕೈಗಾರಿಕಾ ಕೇಂದ್ರದ ಉಪನಿರ್ದೇಶಕ ಸೀತಾರಾಮ ಶೆಟ್ಟಿ, ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಅರುಣ್ ಬಿ, ಶಿವಮೊಗ್ಗ ಕೆ.ಎಸ್.ಎಸ್.ಐ.ಡಿ.ಸಿ ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ ನಾಗಾಭರಣ ಕೆ.ಪಿ, ಜಿಲ್ಲೆಯ ಸಣ್ಣ ಕೈಗಾರಿಕಾ ಉದ್ದಿಮೆದಾರರು, ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
ಕಲಬುರಗಿ | ಅಂಬೇಡ್ಕರ್ ಜಯಂತ್ಯೋತ್ಸವನ್ನು ಅರ್ಥಪೂರ್ಣವಾಗಿ ಆಚರಿಸಲು ನಿರ್ಧಾರ
ಕಲಬುರಗಿ : ಶಹಾಬಾದ್ ನಗರದ ಸರಕಾರಿ ಬಾಲಕರ ಪ್ರೌಢಶಾಲೆಯ ಆವರಣದಲ್ಲಿ ಎ.22 ಸಾಯಂಕಾಲ 5 ಗಂಟೆಗೆ ಡಾ.ಬಾಬಾಸಾಹೇಬ ಅಂಬೇಡ್ಕರ್ ಅವರ 134ನೇ ಜಯಂತ್ಯೋತ್ಸವ ಕಾರ್ಯಕ್ರಮವನ್ನು ಅದ್ದೂರಿಯಾಗಿ ಮತ್ತು ಅರ್ಥಪೂರ್ಣವಾಗಿ ಆಚರಿಸಲು ನಿರ್ಧರಿಸಲಾಗಿದೆ ಎಂದು ಜಯಂತ್ಯೋತ್ಸವ ಸಮಿತಿಯ ಅಧ್ಯಕ್ಷ ಶಂಕರ ಅಳ್ಳೋಳಿ ತಿಳಿಸಿದರು. ಡಾ.ಬಾಬಾಸಾಹೇಬ ಅಂಬೇಡ್ಕರ್ ಅವರ 134 ನೇ ಜಯಂತ್ಯೋತ್ಸವ ಅಂಗವಾಗಿ ಪ್ರಬುದ್ಧ ಭಾರತ ನಿರ್ಮಾಣಕ್ಕಾಗಿ ಕಲ್ಯಾಣ ಕರ್ನಾಟಕದಲ್ಲಿ ಭೀಮ ಉತ್ಸವ ಹಾಗೂ ಬಿಹಾರದಲ್ಲಿ ಮಹಾಬೋಧಿ ಮಹಾ ವಿಹಾರದ ಮುಕ್ತಿ ಆಂದೋಲನದ ಬೋಧ ಗಯಾ ಟೆಂಪಲ್ ಆಕ್ಟ್ 1949 ರದ್ದುಗೊಳಿಸಲು ಒತ್ತಾಯಿಸಿ ಈ ಕಾರ್ಯಕ್ರಮ ನಡೆಸುತ್ತಿದ್ದೆವೆ. ಆದ್ದರಿಂದ ಎಲ್ಲಾ ಸಮಾಜದ ಬಂಧುಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕೆಂದು ಮನವಿ ಮಾಡಿದರು. ಜಯಂತ್ಯೋತ್ಸವ ಸಮಿತಿಯ ಗೌರವಾಧ್ಯಕ್ಷ ಸುರೇಶ ಮೆಂಗನ್ ಮಾತನಾಡಿದರು. ಇದೇ ಸಂದರ್ಭದಲ್ಲಿ ಜಯಂತ್ಯೋತ್ಸವದ ಕರಪತ್ರವನ್ನು ಬಿಡುಗಡೆ ಮಾಡಲಾಯಿತು. ನಾಗರಾಜ ಸಿಂಗೆ, ಭರತ್ ಧನ್ನಾ, ಅಲ್ಲಮಪ್ರಭು ಮಸ್ಕಿ, ಬಸವರಾಜ ಮಯೂರ, ರಾಜು ಜಂಬಗಿ, ಸತೀಶ್ ಕೋಬಾಳಕರ, ಮಲ್ಲಣ್ಣ ಮಸ್ಕಿ, ಪಿಎಸ ಮೇತ್ರಿ, ಪ್ರವೀಣ ರಾಜನ, ಶಿವಕುಮಾರ ಜಮಾದಾರ, ಮಲ್ಲಿಕಾರ್ಜುನ ಕಟ್ಟಿಮನಿ, ಸ್ನೇಹಿತ ಜಾಯಿ, ಶಿವಶಾಲ ಪಟ್ಟಣಕರ್, ಕೃಷ್ಣಪ್ಪ ಕರಣಿಕ, ಶರಣು ಪಗಲಾಪುರ, ರಾಜೇಶ ಯನಗುಂಟಿಕರ, ಮೋಹನ ಹಳ್ಳಿ, ಭರತ್ ಧನ್ನಾ, ಮನೋಹರ ಕೋಳೂರ, ಪುನೀತ ಹಳ್ಳಿ, ರಾಜು ಕಾಳನೂರ, ಮಲ್ಲಣ್ಣ ದೊಡ್ಡಿ, ರಾಜು ಭೋರಿ ಸೇರಿದಂತೆ ಅನೇಕರು ಇದ್ದರು.
ಕಲಬುರಗಿ | ತಂದೆಯ ನಿಧನದ ನೋವಿನಲ್ಲೂ ಎಸೆಸೆಲ್ಸಿ ಪರೀಕ್ಷೆ ಬರೆದ ಇಬ್ಬರು ಬಾಲಕಿಯರು
ಕಲಬುರಗಿ : ತಂದೆಯ ನಿಧನದ ನೋವಿನ ಮಧ್ಯೆಯೂ ಬಾಲಕಿಯರಿಬ್ಬರು ಎಸೆಸೆಲ್ಸಿ ಪರೀಕ್ಷೆ ಬರೆದಿರುವ ಘಟನೆ ನಗರದಲ್ಲಿ ನಡೆದಿದೆ. ಇಲ್ಲಿನ ಜಿಡಿಎ ಕಾಲೋನಿಯ ಫಿಲ್ಟರ್ ಬೆಡ್ ಪ್ರದೇಶದ ಕೃಷ್ಣ ನಗರದ ನಿವಾಸಿ ಪ್ರಕಾಶ್ ನಾಯಕ (50) ಹೃದಯಾಘಾತದಿಂದ ನಿಧನರಾಗಿದ್ದರು. ಅಗಲಿಕೆಯ ಸುದ್ದಿಯ ಮಧ್ಯೆಯೂ ಧೃತಿಗೆಡದ ವಿದ್ಯಾರ್ಥಿನಿಯರಾದ ವಿದ್ಯಾಶ್ರೀ ಮತ್ತು ವಾಣಿಶ್ರೀ ಅವರು ಎಸೆಸೆಲ್ಸಿ ಪರೀಕ್ಷೆಗೆ ಹಾಜರಾಗಿದ್ದಾರೆ. ಇಬ್ಬರೂ ಇಲ್ಲಿನ ಎಸ್ ಆರ್ ಮೆಹ್ತಾ ಸ್ಕೂಲಿನಲ್ಲಿ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.
ಗರ್ಭಕಂಠ ಕ್ಯಾನ್ಸರ್ ತಡೆಯಲು ಎಚ್ಪಿವಿ ಲಸಿಕೆ ವಿತರಣೆ : ದಿನೇಶ್ ಗುಂಡೂರಾವ್
ಬೆಂಗಳೂರು: ಮಹಿಳೆಯರನ್ನು ಸಂಭಾವ್ಯ ಗರ್ಭಕಂಠ ಕ್ಯಾನ್ಸರ್ ದಿಂದ ಪಾರು ಮಾಡುವ ಎಚ್ಪಿವಿ ಲಸಿಕಾ ಪ್ರಾಯೋಗಿಕ ಅಭಿಯಾನವನ್ನು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಅನುಷ್ಠಾನಗೊಳಿಸುವ ಬಗ್ಗೆ ಶೀಘ್ರವೇ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ. ಬುಧವಾರ ಇಲ್ಲಿನ ಖಾಸಗಿ ಹೋಟೆಲ್ನಲ್ಲಿ ಎಚ್ಡಿಆರ್ ಫೌಂಡೇಷನ್ ಮತ್ತು ಆರ್ಟಿಸ್ಟ್ ಫಾರ್ ಹರ್ ಸಂಸ್ಥೆ ಸಹಯೋಗದಲ್ಲಿ ‘ಗರ್ಭಕಂಠ ಕ್ಯಾನ್ಸರ್ ಮುಕ್ತ ಕರ್ನಾಟಕ’ ಧ್ಯೇಯದೊಂದಿಗೆ ‘ಕರ್ನಾಟಕದಲ್ಲಿ ಎಚ್ಪಿವಿ ಲಸಿಕಾ ಅಭಿಯಾನ: ಜಾಗೃತಿಯಿಂದ ಅನುಷ್ಠಾನದವರೆಗೆ’ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಹದಿಹರೆಯದ ಹೆಣ್ಣು ಮಕ್ಕಳಿಗೆ ಎಚ್ಪಿವಿ ಲಸಿಕೆ ಹಾಕುವುದರಿಂದ ಭವಿಷ್ಯದಲ್ಲಿ ಅವರಿಗೆ ಎದುರಾಗಬಹುದಾದ ಗರ್ಭಕಂಠ ಕ್ಯಾನ್ಸರ್ ತಡೆಗಟ್ಟಬಹುದು. ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಇದರ ಪ್ರಾಯೋಗಿಕ ಅನುಷ್ಠಾನಕ್ಕೆ ಸಂಬಂಧಿಸಿದ ಪ್ರಸ್ತಾವವು ಸರಕಾರದ ಮುಂದಿದ್ದು, ಶೀಘ್ರವೇ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಅವರು ಹೇಳಿದರು. ಗರ್ಭಕಂಠ ಕ್ಯಾನ್ಸರ್ ನಿರ್ಮೂಲನೆಗಾಗಿ ವಿಶ್ವ ಆರೋಗ್ಯ ಸಂಸ್ಥೆ ರೂಪಿಸಿರುವ 90-70-90 ಸೂತ್ರಕ್ಕೆ (14 ವರ್ಷದೊಳಗಿನ ಶೇ.90ರಷ್ಟು ಹೆಣ್ಣು ಮಕ್ಕಳಿಗೆ ಲಸಿಕೆ, ಇಪ್ಪತ್ತೈದು ವರ್ಷದ ನಂತರ ಶೇ.70ರಷ್ಟು ಮಹಿಳೆಯರ ಸ್ಕ್ರೀನಿಂಗ್, ಬಾಧಿತರ ಪೈಕಿ ಶೇ.90ರಷ್ಟು ಮಹಿಳೆಯರಿಗೆ ಚಿಕಿತ್ಸೆ ಲಭ್ಯತೆ) ಅನುಗುಣವಾಗಿ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಇದರ ಪ್ರಾಯೋಗಿಕ ಅನುಷ್ಠಾನ ನಡೆಯಲಿದೆ. ಈ ವಿಷಯದಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯು ರಾಜ್ಯಕ್ಕೆ ಮಾದರಿಯಾಗಬೇಕು ಎಂಬುದು ಸರಕಾರದ ಆಶಯವಾಗಿದೆ ಎಂದು ಅವರು ಹೇಳಿದರು. ಪ್ರಸಕ್ತ ವರ್ಷದ ಬಜೆಟ್ನಲ್ಲಿ ಕಲ್ಯಾಣ ಕರ್ನಾಟಕದ ಐದು ಜಿಲ್ಲೆಗಳ ವ್ಯಾಪ್ತಿಯಲ್ಲಿ ಈ ಲಸಿಕೆ ಹಾಕುವ ಕಾರ್ಯಕ್ರಮ ಪ್ರಕಟಿಸಿ ಹಣ ತೆಗೆದಿಡಲಾಗಿದೆ. ಈ ಕಲ್ಯಾಣ ಕರ್ನಾಟಕದ ಜಿಲ್ಲೆಗಳಲ್ಲಿ ಈ ವರ್ಷದ 14 ವರ್ಷ ಪೂರೈಸುವ ಹೆಣ್ಣು ಮಕ್ಕಳಿಗೆ ಲಸಿಕೆ ಹಾಕಲಾಗುವುದು. ಮುಂಬರುವ ದಿನಗಳಲ್ಲಿ ಈ ಲಸಿಕೆಯ ಬೆಲೆ ತಗ್ಗುವ ಸಾಧ್ಯತೆ ಇದ್ದು, ಎಲ್ಲ ಹೆಣ್ಣು ಮಕ್ಕಳಿಗೂ ಇದು ಲಭ್ಯವಾಗಬೇಕು ಎಂಬುದು ಸರಕಾರದ ಉದ್ದೇಶವಾಗಿದೆ ಎಂದರು. ರಾಜ್ಯದಲ್ಲಿ ಎಚ್ಪಿವಿ ಅಭಿಯಾನದ ರೂವಾರಿ ಡಾ.ಹೇಮಾ ದಿವಾಕರ್ ಮಾತನಾಡಿ, 3 ತಿಂಗಳಿಂದ ರಾಜ್ಯದ ವಿವಿಧೆಡೆ 14 ವರ್ಷದೊಳಗಿನ 4,560 ಬಾಲಕಿಯರಿಗೆ ಎಚ್ಡಿಆರ್ ಫೌಂಡೇಷನ್ ವತಿಯಿಂದ ಉಚಿತ ಎಚ್ಪಿವಿ ಲಸಿಕೆ ನೀಡುವ ಜೊತೆಗೆ 1,500 ಮಹಿಳೆಯರನ್ನು ಸ್ಕ್ರೀನಿಂಗ್ಗೆ ಒಳಪಡಿಸಲಾಗಿದೆ. ಇದೇ ವೇಳೆ, “ತಾಯಿಯನ್ನು ತಪಾಸಣೆಗೆ ಒಳಪಡಿಸಿ, ಮಗಳಿಗೆ ಲಸಿಕೆ ಹಾಕಿಸಿ”, “ಕ್ಯಾನ್ಸರ್ ನಿಮ್ಮನ್ನು ಕೊಲ್ಲುವ ಮುನ್ನ ನೀವು ಅದನ್ನು ಕೊಲ್ಲಿ” ಎಂಬ ಘೋಷವಾಕ್ಯಗಳ ಮೂಲಕ ಜಾಗೃತಿಯನ್ನೂ ಮೂಡಿಸಲಾಗುತ್ತಿದೆ ಎಂದರು. ಕಾರ್ಯಕ್ರಮದಲ್ಲಿ ಅಸೋಸಿಯೇಷನ್ ಆಫ್ ಹೆಲ್ತ್ ಕೇರ್ ಪ್ರೊವೈಡರ್ಸ್ ಇಂಡಿಯಾದ ಅಧ್ಯಕ್ಷ ಡಾ. ಅಲೆಕ್ಸ್ ಥಾಮಸ್, ಎಚ್ಡಿಆರ್ ಫೌಂಡೇಷನ್ನ ಡಾ.ದಿವಾಕರ್ ಸೇರಿದಂತೆ ಮತ್ತಿತರರು ಪಾಲ್ಗೊಂಡಿದ್ದರು.
ಬೆಂಗಳೂರು | ಡಿಕೆಶಿ ಹೇಳಿಕೆ ವಿರೋಧಿಸಿ ಪ್ರತಿಭಟನೆ : ಬಿಜೆಪಿ ಶಾಸಕ ಸೇರಿ ಹಲವರು ಪೊಲೀಸ್ ವಶಕ್ಕೆ
ಬೆಂಗಳೂರು : ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಂವಿಧಾನ ಬದಲಾವಣೆ ಹೇಳಿಕೆ ನೀಡಿದ್ದಾರೆಂದು ಆರೋಪಿಸಿ ಪ್ರತಿಭಟನೆ ನಡೆಸಿದ ಜಯನಗರ ಬಿಜೆಪಿ ಶಾಸಕ ಸಿ.ಕೆ.ರಾಮಮೂರ್ತಿ ಸೇರಿದಂತೆ ಪ್ರಮುಖರನ್ನು ಇಲ್ಲಿನ ಆಡುಗೋಡಿ ಠಾಣಾ ಪೊಲೀಸರು ವಶಕ್ಕೆ ಪಡೆದರು. ಬುಧವಾರ ಇಲ್ಲಿನ ಜಯನಗರದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಪುತ್ಥಳಿ ಬಳಿ ಶಾಸಕ ಸಿ.ಕೆ.ರಾಮಮೂರ್ತಿ ನೇತೃತ್ವದಲ್ಲಿ ಜಮಾಯಿಸಿದ ಬಿಜೆಪಿ ಕಾರ್ಯಕರ್ತರು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದರು. ಈ ವೇಳೆ ಸಿ.ಕೆ.ರಾಮಮೂರ್ತಿ ಮಾತನಾಡಿ, ಡಾ.ಬಾಬಾಸಾಹೇಬ ಅಂಬೇಡ್ಕರ್ ರಚಿಸಿರುವ ಸಂವಿಧಾನದ ಶೆಡ್ಯೂಲ್ನಲ್ಲಿ ಇಲ್ಲದ ಜನರಿಗೆ ಮೀಸಲಾತಿ ಕಲ್ಪಿಸುವ ಮೂಲಕ ಡಾ.ಅಂಬೇಡ್ಕರ್ ಅವರು ರಚಿಸಿದ ಸಂವಿಧಾನಕ್ಕೆ ಅಪಮಾನ ಮಾಡುವ ಕೆಲಸ ಕಾಂಗ್ರೆಸ್ ಸರಕಾರ ಮಾಡುತ್ತಿದೆ ಎಂದು ದೂರಿದರು. ಮೇಲ್ನೋಟಕ್ಕೆ ಶೇ.4 ಕಾಮಗಾರಿ ಗುತ್ತಿಗೆಗಳಲ್ಲಿ ಮೀಸಲಾತಿ ಕೊಡುವ ಕಾನೂನು ಮಾಡಿರಬಹುದು. ಆದರೇ ದೂರಗಾಮಿ ಪರಿಣಾಮ ಮೀಸಲಾತಿ ಚರ್ಚೆಗೆ ಧಕ್ಕೆ ತರುವಂತಹ ಹುನ್ನಾರಕ್ಕೆ ಕಾಂಗ್ರೆಸ್ ಸರಕಾರ ಕೈ ಹಾಕಿದ್ದು, ಇದಕ್ಕೆ ತಕ್ಕಂತೆ ಡಿಸಿಎಂ ಡಿ.ಕೆ.ಶಿವಕುಮಾರ್ ಸಂವಿಧಾನ ವಿರೋಧಿ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿದರು. ಈ ವೇಳೆಯಲ್ಲಿ ಬಿಬಿಎಂಪಿ ಮಾಜಿ ಸದಸ್ಯರಾದ ಆರ್.ಗೋವಿಂದ ನಾಯ್ಡು, ಚಂದ್ರಶೇಖರ್ ರಾಜು, ದೀಪಿಕಾ ಮಂಜುನಾಥ್ ರೆಡ್ಡಿ, ಚಿನ್ನಗಿರಿಯಪ್ಪ, ಮಂಡಲ ಅಧ್ಯಕ್ಷ ವೇಣುಗೋಪಾಲ್ ರೆಡ್ಡಿ, ನಾಯಕರಾದ ಮಂಜುನಾಥ್ ರೆಡ್ಡಿ, ಷಣ್ಮುಗಂ, ಯಶ್ವತ್ ರೆಡ್ಡಿ, ರಮಾದೇವಿ ಸೇರಿದಂತೆ ಪ್ರಮುಖರಿದ್ದರು.
ಅಮೆರಿಕಾ ಅಧ್ಯಕ್ಷರ ಆಧ್ಯಾತ್ಮಿಕ ಸಲಹೆಗಾರರಿಂದ ಎನ್ಆರ್ಐ ಫೋರಂ ಉಪಾಧ್ಯಕ್ಷೆ ಡಾ ಆರತಿ ಕೃಷ್ಣ ಭೇಟಿ
ಬೆಂಗಳೂರು: ಅಮರಿಕ ಅಧ್ಯಕ್ಷರಾದ ಡೊನಾಲ್ಡ್ ಟ್ರಂಪ್ ಅವರ ಆಧ್ಯಾತ್ಮಿಕ ಸಲಹೆಗಾರರಾದ ಜಾನ್ ಮಾರ್ಕ್ ಬರ್ನ್ಸ್ ಮಾರ್ಕ್ ಬರ್ನ್ಸ್ ಕಚೇರಿಯ (ಯುಎಸ್ಎ) ಮುಖ್ಯಸ್ಥೆ ಏಪ್ರಿಲ್ ಡೆನಿಸ್ ಫೆಲ್ಪ್ಸ್ ಮತ್ತು ಮಾರ್ಕ್ ಬರ್ನ್ಸ್ ಅವರ ಕಾರ್ಯದರ್ಶಿ ವರೋನಿಕಾ ಲಿನ್ ಒಶೀಲ್ಡ್ ಅವರು ಬೆಂಗಳೂರಿನಲ್ಲಿ ಕರ್ನಾಟಕ ಅನಿವಾಸಿ ಭಾರತೀಯ ವೇದಿಕೆಯ ಉಪಾಧ್ಯಕ್ಷರಾದ ಡಾ. ಆರತಿ ಕೃಷ್ಣ ಅವರನ್ನು ಬುಧವಾರ ಭೇಟಿಯಾಗಿ ಮಾತುಕತೆ ನಡೆಸಿದರು. ಈ ವೇಳೆ ಫೌಂಡೇಶನ್ ಫಾರ್ ಲೀಡರ್ಶಿಪ್ ಆ್ಯಂಡ್ ಗವರ್ನನ್ಸ್ನ ಸಿಇಒ ಜಯಕರ್ ರಾವ್ ಮತ್ತು ಕರ್ನಾಟಕದ ಮಾಜಿ ಶಾಸಕಿ ಹಾಗೂ ಕ್ರಿಶ್ಚಿಯನ್ ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷೆ ವಿನಿಶಾ ನೀರೋ ಉಪಸ್ಥಿತರಿದ್ದರು. ಆಧ್ಯಾತ್ಮಿಕ ಸಲಹೆಗಾರರೊಂದಿಗೆ ನಡೆದ ಈ ಭೇಟಿಯಲ್ಲಿ ಆಧ್ಯಾತ್ಮಿಕತೆ, ಭಾರತ ಮತ್ತು ಅಮೇರಿಕ ನಡುವಿನ ಸಂಬಂಧಗಳು, ಭಾರತೀಯ ವಲಸೆಗಾರರು ಮತ್ತು ಕರ್ನಾಟಕದ ಹೂಡಿಕೆ ಸಾಮರ್ಥ್ಯ ಸೇರಿದಂತೆ ಹಲವಾರು ವಿಷಯಗಳನ್ನು ಚರ್ಚಿಸಲಾಯಿತು. ಜಾಗತಿಕ ಸಾಮರಸ್ಯವನ್ನು ಬೆಳೆಸುವಲ್ಲಿ ನಂಬಿಕೆ ಮತ್ತು ಮೌಲ್ಯಗಳ ಪಾತ್ರವನ್ನು ಒತ್ತಿ ಹೇಳುವುದರ ಮೂಲಕ ಇಬ್ಬರೂ ತಮ್ಮ ತಮ್ಮ ರಾಷ್ಟ್ರಗಳ ಆಧ್ಯಾತ್ಮಿಕ ಸಂಪ್ರದಾಯಗಳ ಕುರಿತು ಮಾಹಿತಿ ವಿನಿಮಯ ಮಾಡಿಕೊಂಡರು. ಇದೇ ವೇಳೆ ನಿಯೋಗವು ವ್ಯಾಪಾರ ಅವಕಾಶಗಳಿಗೆ ದಾರಿ ಮಾಡಿಕೊಡಲು ತೀವು ಆಸಕ್ತಿಯನ್ನು ವ್ಯಕ್ತಪಡಿಸಿತು, ಮುಂದಿನ ದಿನಗಳಲ್ಲಿ ಇದೊಂದು ಉತ್ತಮ ಅವಕಾಶಗಳನ್ನು ಕಲ್ಪಿಸುವ ಭೇಟಿ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು ಎಂದು ಕರ್ನಾಟಕ ಅನಿವಾಸಿ ಭಾರತೀಯ ವೇದಿಕೆಯ ಉಪಾಧ್ಯಕ್ಷ ಡಾ. ಆರತಿ ಕೃಷ್ಣ ಕಚೇರಿಯ ಪ್ರಕಟನೆ ತಿಳಿಸಿದೆ.
ಕಲಬುರಗಿ | ಏ.1 ರಂದು ಪೊಲೀಸ್ ಆಯುಕ್ತರ ಕಚೇರಿಗೆ ಮುತ್ತಿಗೆ: ದಶರಥ ಕಲಗುರ್ತಿ
ಕಲಬುರಗಿ : ಸುರಕ್ಷಾ ಆಸ್ಪತ್ರೆ ಪರವಾನಿಗೆ ರದ್ದು ಪಡಿಸುವಂತೆ ಒತ್ತಾಯಿಸಿ ಹಾಗೂ ಎಂ.ಬಿ.ನಗರ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆ ಕ್ಟರ್ ಶಿವಾನಂದ ವಾಲೀಕರ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಇದೇ ಏ.1 ರಂದು ಬೆಳಗ್ಗೆ 11 ಗಂಟೆಗೆ ಡಾ.ಬಾಬು ಜಗಜೀವನರಾವ ಪುತ್ಥಳಿಯಿಂದ ಮೆರವಣಿಗೆ ಮೂಲಕ ತೆರಳಿ ನಗರ ಪೊಲೀಸ್ ಅಯುಕ್ತರ ಕಚೇರಿಗೆ ಮುತ್ತಿಗೆ ಹಾಕಲಾಗುವುದು ಎಂದು ಜಿಲ್ಲಾ ಮಾದಿಗ ಸಮಾಜದ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ದಶರಥ ಎಮ್.ಕಲಗುರ್ತಿ ತಿಳಿಸಿದ್ದಾರೆ. ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬಾಣಂತಿ ಸಾವಿಗೆ ನಗರದ ಕುಸನೂರು ರಸ್ತೆಯಲ್ಲಿರುವ ಸುರಕ್ಷಾ ಆಸ್ಪತ್ರೆಯ ಡಾ.ಚಂದ್ರಿಕಾ ಮತ್ತು ಸಿಬ್ಬಂದಿಯ ನಿರ್ಲಕ್ಷ್ಯವೇ ಕಾರಣರಾಗಿದ್ದು, ಆಸ್ಪತ್ರೆಯ ಪರವಾನಿಗೆ ರದ್ದು ಪಡಿಸುವಂತೆ ಒತ್ತಾಯಿಸಿ ಹಾಗೂ ಗುಂಡಾವರ್ತನೆ ತೋರಿ ಜಾತಿನಿಂದನೆ ಮಾಡಿದ ಪಿಐ ಶಿವಾನಂದ ವಾಲಿಕಾರ ಅವರ ಮೇಲೆ ಅಟ್ರಾಸಿಟಿ ಕೇಸ್ ದಾಖಲು ಮಾಡಬೇಕು ಎಂದು ಮಾ.12 ರಂದು ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರೂ, ಯಾವುದೇ ಕ್ರಮ ಕೈಗೊಳ್ಳದೇ ಇರುವುದರಿಂದ ಪೊಲೀಸ್ ಆಯುಕ್ತರ ಕಚೇರಿಗೆ ಮುತ್ತಿಗೆ ಹಾಕುವುದು ಅನಿರ್ವಾಯವಾಗಿದೆ ಎಂದರು. ಮಂಜು ನಾಲವಾರಕರ್ ಮಾತನಾಡಿ , ‘ಸುರಕ್ಷಾ ಹೆರಿಗೆ ಆಸ್ಪತ್ರೆಯಲ್ಲಿ ಮಾ.3ರಂದು ಡಾ.ಚಂದ್ರಿಕಾ ಅವರು ಜ್ಯೋತಿ ಕಟ್ಟಿಮನಿ ಎನ್ನುವ ಗರ್ಭಿಣಿಯನ್ನು ಹೆರಿಗೆಗಾಗಿ ದಾಖಲು ಮಾಡಿಕೊಂಡಿದ್ದರು. ಮಾ.4ರಂದು ಸಿಸೇರಿಯನ್ ಹೆರಿಗೆ ಆಗಿದೆ. ಮಾ.5ರಂದು ಬೆಳಗಿನ ಜಾವ ಬಾಣಂತಿ ಜ್ಯೋತಿ ಅವರು ತೀವ್ರ ರಕ್ತಸ್ರಾವದಿಂದ ಮೃತಪಟ್ಟಿದ್ದಾರೆ. ಬೆನ್ನು ನೋವು, ಉಸಿರಾಟದ ತೊಂದರೆಯಾದಾಗ ವೈದ್ಯರಿಗೆ, ಸಿಬ್ಬಂದಿಗೆ ತಿಳಿಸಿದರೂ, ಕಾಲಹರಣ ಮಾಡಿದ್ದಾರೆ. 4–5 ತಾಸು ಬಿಟ್ಟು ವೈದ್ಯರು ತಪಾಸಣೆ ಮಾಡಿದ್ದಾರೆ. ಡಾ.ಚಂದ್ರಿಕಾ ಸಮಯ ಮೀರಿದ ಮೇಲೆ ಚಿಕಿತ್ಸೆ ನೀಡಿದ್ದಾರೆ. ಚಿಕಿತ್ಸೆ ವಿಫಲವಾಗಿದ್ದರಿಂದ ಜ್ಯೋತಿ ಮೃತಪಟ್ಟಿದ್ದಾರೆ’ ಎಂದು ಆರೋಪಿಸಿದರು. ‘ಜ್ಯೋತಿ ಅವರ ಸಾವಿನಿಂದ ಕುಪಿತಗೊಂಡ ಕುಟುಂಬಸ್ಥರು ವೈದ್ಯರೊಂದಿಗೆ ಮಾತಿನ ಚಕುಮಕಿ ನಡೆಸಿದ್ದರು. ಈ ವೇಳೆ ಸ್ಥಳಕ್ಕೆ ಬಂದ ಎಂ.ಬಿ.ನಗರ ಠಾಣೆಯ ಪಿಐ ಶಿವಾನಂದ ವಾಲಿಕಾರ್ ಮೃತ ಮಹಿಳೆಯ ಕುಟಂಬಸ್ಥರಿಗೆ ಜಾತಿನಿಂದನೆ, ಹಲ್ಲೆ ಮಾಡಿದ್ದಾರೆ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯ ಮಾಡಿದರು. ಸುದ್ದಿಗೋಷ್ಠಿಯಲ್ಲಿ ಭೀಮಣ್ಣ ಬಿಲ್ಲವ, ಶಾಮ ನಾಟೇಕರ್, ರಾಜು ವಾಡೇಕರ, ರಮೇಶ ವಾಡಕೇರ, ರಂಜೀತಕುಮಾರ ಮೂಲಿಮನಿ, ಪ್ರದೀಪ್ ಭಾವೆ, ಪ್ರಹ್ಲಾದ್ ಹಡಗೀಲಕರ ಸೇರಿದಂತೆ ಇತರರು ಇದ್ದರು
Yatnal Expelled : 'ನಾಗಪುರದ ಬಿಜೆಪಿಯನ್ನು ಸೋಲಿಸಿದ ಕರ್ನಾಟಕ ಬಿಜೆಪಿ, ಈಗ 'ಸಂತೋಷ' ವಾಯಿತೇ?'
Karnataka Congress Tweet On Yatnal Expulsion : ನಾಗಪುರದ ಬಿಜೆಪಿಯನ್ನು ಸೋಲಿಸಿದ ಕರ್ನಾಟಕ ಬಿಜೆಪಿ! ಇಂದು ಇಲಿಯಾದ ಯತ್ನಾಳ್!’ ’ಈಗ 'ಸಂತೋಷ' ವಾಯಿತೇ? ಆ ಜೀ ಈ ಜೀ ಗಳ ಮಾತುಕೇಳಿ ರಾಜಕೀಯ ಜೀವನ ಹಾಳು ಮಾಡಿಕೊಂಡ ಯತ್ನಾಳ್! ಈ ರೀತಿಯ ಟ್ವೀಟ್ ಮೂಲಕ, ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಯತ್ನಾಳ್ ಅವರನ್ನು ಉಚ್ಚಾಟಿಸಿದ್ದಕ್ಕೆ ಪ್ರತಿಕ್ರಿಯೆಯನ್ನು ನೀಡಿದೆ.
ಮಂಗಳೂರು: ಅನಿರ್ವೇದ ಸಂಸ್ಥೆಯಿಂದ ‘ನೆರವಿನ ಶನಿವಾರ’ ಕಾರ್ಯಕ್ರಮಕ್ಕೆ ಚಾಲನೆ
ಮಂಗಳೂರು: ನಗರದ ಮಾನಸಿಕ ಯೋಗಕ್ಷೇಮ ಸಂಪನ್ಮೂಲ ಕೇಂದ್ರ ಹಾಗೂ ಸರ್ಕಾರೇತರ ಸಂಸ್ಥೆ ‘ಅನಿರ್ವೇದ’ವು ನಗರದ ವಿಶೇಷ ಅಗತ್ಯತೆಯ ಮಕ್ಕಳಿಗಾಗಿ ಉಚಿತ ಮತ್ತು ಅಂತರ್ಗತ ‘ನೆರವಿನ ಶನಿವಾರ’ ಎಂಬ ಉಪಕ್ರಮವನ್ನು ಪ್ರಾರಂಭಿಸಿದೆ. ಕರ್ನಾಟಕದ ಅಲೈಡ್ ಮತ್ತು ಹೆಲ್ತ್ ಕೇರ್ ಕೌನ್ಸಿಲ್ನ ಅಧ್ಯಕ್ಷ ಇಫ್ತಿಕಾರ್ ಆಲಿ ಅವರು ಮಂಗಳವಾರ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಪ್ರತಿಷ್ಠಾನದ ನಿರ್ದೇಶಕರಾದ ಡಾ. ಕೆ.ಟಿ ಶ್ವೇತಾ ಅವರು ಈ ಕುರಿತು ಮಾಹಿತಿ ನೀಡಿ, ‘ನೆರವಿನ ಶನಿವಾರ’ ಉಪಕ್ರಮವು ೨೦೨೫ರ ಮಾರ್ಚ್ ೨೯ರಿಂದ ಪ್ರತಿ ಶನಿವಾರದಂದು ಮೋರ್ಗನ್ಸ್ ಗೇಟ್ ನಲ್ಲಿರುವ ಅನಿರ್ವೇದ ಸಂಸ್ಥೆಯ ಆವರಣದಲ್ಲಿ ನಡೆಯಲಿದೆ ಎಂದು ತಿಳಿಸಿದರು. ‘ನೆರವಿನ ಶನಿವಾರ’ ಉಪಕ್ರಮವು ಆಟಿಸಂ ಸ್ಪೆಕ್ಟ್ರಮ್ ಡಿಸಾರ್ಡರ್ (ಎ.ಎಸ್.ಡಿ), ಎ.ಡಿ.ಎಚ್.ಡಿ, ಕಲಿಕಾ ನ್ಯೂನತೆಗಳು, ಬೌದ್ಧಿಕ ವೈಕಲ್ಯತೆಗಳು ಮತ್ತು ಬೆಳವಣಿಗೆಗೆ ಸಂಬಂಧಿಸಿದ ಇತರ ಸವಾಲುಗಳನ್ನು ಎದುರಿಸುತ್ತಿರುವ ಮಕ್ಕಳಿಗೆ ಸುರಕ್ಷಿತ ಮತ್ತು ಪೋಷಣೆಗೆ ಒತ್ತು ನೀಡುವ ಪರಿಸರವನ್ನು ಒದಗಿಸುವ ಗುರಿಯನ್ನು ಹೊಂದಿದೆ. ಪೋಷಕರು, ಆರೈಕೆ ಒದಗಿಸುವವರು ಮತ್ತು ಸಮುದಾಯದ ಸದಸ್ಯರು ಈ ಉಪಕ್ರಮದಲ್ಲಿ ಪಾಲ್ಗೊಳ್ಳಲು ವಿನಂತಿಸಲಾಗಿದೆ. ಪೋಷಕರ ತರಬೇತಿ ಮತ್ತು ಸಮಾನಸ್ಕಂಧ ನೆರವು ಸಹ ಈ ಮೂಲಕ ಲಭ್ಯವಿದ್ದು, ಸಹಯೋಗದಿಂದ ಕೂಡಿದ ನೆರವು ಜಾಲವನ್ನು ಈ ಮೂಲಕ ರೂಪಿಸಲಾಗುವುದು ಎಂದು ಸಂಸ್ಥೆಯ ಪ್ರಕಟನೆ ತಿಳಿಸಿದೆ.
ಬೀದರ್ | ಅರ್ಷದ್ ಅಲಿ ಅವರ ಸಾತ್ವಿಕತೆ ಯುವ ಪತ್ರಕರ್ತರಿಗೆ ಉಸಿರಾಗಲಿ : ಶಿವಶರಣಪ್ಪ ವಾಲಿ
ಬೀದರ್ : ದಿ.ಕಾಜಿ ಅರ್ಷದ್ ಅಲಿಯವರ ಸ್ವಾಭಿಮಾನ ಹಾಗೂ ಸಾತ್ವಿಕ ಗುಣಗಳು ಇಂದಿನ ಯುವ ಪತ್ರಕರ್ತರಿಗೆ ಉಸಿರಾಗಲಿ ಎಂದು ಹಿರಿಯ ಪತ್ರಕರ್ತ ಶಿವಶರಣಪ್ಪ ವಾಲಿ ಅವರು ತಿಳಿಸಿದರು. ಇಂದು ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಜಿಲ್ಲಾ ಘಟಕದಿಂದ ಆಯೋಜಿಸಿದ್ದ ಮಾಜಿ ವಿಧಾನ ಪರಿಷತ್ ಸದಸ್ಯರು ಹಾಗೂ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಮಾಜಿ ಜಿಲ್ಲಾಧ್ಯಕ್ಷರೂ ಆಗಿದ್ದ ದಿ.ಕಾಜಿ ಅರ್ಷದ್ ಅಲಿ ಅವರ ಶೃದ್ಧಾಂಜಲಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಪತ್ರಕರ್ತರಾದವರು ಅಧಿಕಾರಿಗಳೊಂದಿಗೆ ಸ್ನೇಹತ್ವ ಬೆಳೆಸಬೇಕೇ ವಿನಃ ಗುಲಾಮಗಿರಿ ಮಾಡಕೂಡದು. ನಮ್ಮ ವೃತ್ತಿಧರ್ಮ ಪ್ರಾಮಾಣಿಕತೆಯಿಂದ ಪಾಲಿಸಬೇಕು. ನಾವು ಇನ್ನೊಬ್ಬರಿಗೆ ಹೆದರಿಸುವ ಅಥವಾ ಬ್ಲ್ಯಾಕ್ ಮೇಲ್ ಮಾಡುವ ಪತ್ರಕರ್ತರಾಗದೆ ನಮ್ಮ ಬರವಣಿಗೆಗೆ ಜಾಗೃತಿ ಮೂಡಬೇಕು ಎಂದರು. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕ ಮಂಜುನಾಥ್ ಸುಳ್ಳೊಳ್ಳಿ ಅವರು ಮಾತನಾಡಿ, ಜ್ಞಾನದ ಹಾಗೂ ಧೈರ್ಯದ ಕೊರತೆಯಿಂದ ಇಂದು ಶ್ರೇಷ್ಠ ವರದಿಗಾರಿಕೆ ವಿಮುಖವಾಗುತ್ತಿದೆ. ಹೆಚ್ಚು ಅಧ್ಯಯನಶೀಲರಾಗಿ ಪುಸ್ತಕಗಳನ್ನು ಓದುವ ಅಭ್ಯಾಸ ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು. ಹಿರಿಯ ಪತ್ರಕರ್ತ ಗಂಧರ್ವ ಸೇನಾ ಅವರು ಮಾತನಾಡಿ, ಅರ್ಷದ ಅಲಿ ಅವರು ಒಂದು ವಿಶ್ವಕೋಶದಂತೆ ಇದ್ದರು. ಪರಿಪೂರ್ಣ ಅಧ್ಯಯನಗೈದು ಪ್ರಖರ ಸುದ್ದಿ ಬಿತ್ತರಿಸುವ ಅವರ ಕೌಶಲ್ಯ ಇಂದಿನ ಉದಯೋನ್ಮುಖ ಪತ್ರಕರ್ತರಿಗೆ ದಾರಿದೀಪವಾಗಲಿದೆ ಎಂದರು. ಈ ಸಂದರ್ಭದಲ್ಲಿ ಪತ್ರಕರ್ತ ಬಾಬು ವಾಲಿ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಡಿ.ಕೆ ಗಣಪತಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವಕುಮಾರ್ ಸ್ವಾಮಿ ವಾರ್ತಾ ಇಲಾಖೆಯ ವಿಜಯಕೃಷ್ಣ ಸೋಲಪುರ್, ಅರ್ಷದ ಅಲಿ ಅವರ ಕುಟುಂಬಸ್ಥ ಕಾಜಿ ಅಲಿಯೋದ್ದಿನ್, ಐ.ಎಫ್.ಡಬ್ಲೂ.ಜೆ ಸದಸ್ಯ ಅಪ್ಪಾರಾವ್ ಸೌದಿ, ಶಶಿಕುಮಾರ್ ಪಾಟೀಲ್,ಪತ್ರಕರ್ತರಾದ ದೀಪಕ್ ವಾಲಿ, ಚಂದ್ರಕಾಂತ್ ಪಾಟೀಲ್, ಶ್ರೀನಿವಾಸ್ ಚೌಧರಿ, ಪೃಥ್ವಿರಾಜ್ ಎಸ್., ನಾಗಶೆಟ್ಟಿ ಧರಂಪುರ್, ಅಬ್ದುಲ್ ಖದಿರ್, ಶಶಿ ಶೆಂಬೆಳ್ಳಿ, ವಿಜಯಕುಮಾರ ಬೆಲ್ದೆ, ಶಶಿಕಾಂತ್ ಬಂಬುಳಗಿ, ರೇವಣಸಿದ್ದಪ್ಪ ಪಾಟೀಲ್, ಗೋಪಿಚಂದ್ ತಾಂದಳೆ, ಎಂ.ಪಿ.ಮುಧಾಳೆ, ಸಂತೋಷ್ ಚೆಟ್ಟಿ ಹಾಗೂ ಮಹಾರುದ್ರ ಡಾಕುಳಗೆ ಸೇರಿದಂತೆ ಜಿಲ್ಲೆಯ ಇತರೆ ಪತ್ರಕರ್ತರು ಉಪಸ್ಥಿತರಿದ್ದರು.
ಬೀದರ್ | ಒಳಮೀಸಲಾತಿ ಜಾರಿ ಮಾಡದಿದ್ದಲ್ಲಿ ಮುಂದೆ ಆಗುವ ಅನಾಹುತಗಳಿಗೆ ಸರ್ಕಾರವೇ ನೇರ ಹೊಣೆ : ಭಾಸ್ಕರ್ ಪ್ರಸಾದ್
ಬೀದರ್ : ಏ.5 ರಂದು ಬಾಬು ಜಗಜೀವನರಾಮ್ ಅವರ ಜಯಂತಿ ಉತ್ಸವದ ಒಳಗೆ ಸರ್ಕಾರ ಒಳಮೀಸಲಾತಿ ಜಾರಿ ಮಾಡದಿದ್ದಲ್ಲಿ ವಿಧಾನಸೌಧದ ಮೆಟ್ಟಿಲು ಮೇಲೆ ನಮ್ಮ ಹೆಣಗಳು ನೋಡುವಿರಿ. ಮುಂದೆ ಆಗುವ ಅನಾಹುತಗಳಿಗೆ ಸರ್ಕಾರವೇ ನೇರ ಹೊಣೆಯಾಗಲಿದೆ ಎಂದು ಮಾದಿಗ ಹೋರಾಟ ಸಮನ್ವಯ ಸಮಿತಿಯ ರಾಜ್ಯ ಪ್ರಮುಖ ಭಾಸ್ಕರ್ ಪ್ರಸಾದ್ ಎಚ್ಚರಿಸಿದರು. ಇಂದು ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಒಳಮೀಸಲಾತಿ ಜಾರಿ ಮಾಡುವುದಕ್ಕೆ ಮುಖ್ಯಮಂತ್ರಿಗಳು ಈಗಾಗಲೇ ಒಂದು ವಾರ ಗಡುವು ಕೇಳಿದ್ದಾರೆ. ಆದರೆ ನಾವು ಸರ್ಕಾರಕ್ಕೆ 12 ದಿವಸ ಸಮಯಾವಕಾಶ ನೀಡುತ್ತಿದ್ದೇವೆ. ಅಷ್ಟರೊಳಗೆ ಒಳಮೀಸಲಾತಿ ಜಾರಿಯಾಗಬೇಕು ಎಂದು ಆಗ್ರಹ ಮಾಡಿದರು. ಪ್ರೊ. ಬಿ.ಕೃಷ್ಣಪ್ಪ ಅವರ ಸಮಾಧಿಯಿಂದ ಆರಂಭವಾದ ನಮ್ಮ ಪಾದಯಾತ್ರೆ ಬೆಂಗಳೂರಿನವರೆಗೆ ಸಾಗಿದೆ. ಮುನಿಯಪ್ಪ ಅವರು ಮೂರು ತಿಂಗಳ ಕಾಲಾವಕಾಶ ಕೇಳಿದ್ದರು. ಆದರೆ ಅದನ್ನು ನಾವು ಒಪ್ಪಲಿಲ್ಲ. ಹಾಗಾಗಿ ಸರ್ಕಾರ ಇವಾಗ ಒಂದು ವಾರದ ಗಡುವು ಕೇಳಿದೆ ಎಂದು ಹೇಳಿದರು. ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಒಂದೇ ದಿನದಲ್ಲಿ ಪ್ರತ್ಯೇಕ ಲಿಂಗಾಯತ ಧರ್ಮ ಮಾಡಲು ಹೊರಟಿದ್ದರು. ಮುಡಾ ಹಗರಣದಲ್ಲಿ ತಮ್ಮ ಮೈಮೇಲೆ ಆರೋಪ ಬಂದಿದೆ ಎಂದು ತರಾತುರಿಯಲ್ಲಿ ರಾತ್ರೋ ರಾತ್ರಿ 12 ನಿವೇಶನಗಳು ಸರ್ಕಾರಕ್ಕೆ ಹಿಂದಿರುಗಿಸಿದರು. ಆದರೆ ಒಳಮೀಸಲಾತಿ ಜಾರಿ ಮಾಡಲು ಇವರಿಗೇಕೆ ಕಾಲಾವಕಾಶಬೇಕು ಎಂದು ಪ್ರಶ್ನಿಸಿದರು. ಈಗಾಗಲೇ ನಾಗಮೋಹನದಾಸ್ ಅವರ ಆಯೋಗ ಎರಡು ತಿಂಗಳು ವಿಳಂಬ ಮಾಡಿದೆ. ಸದಾಶಿವ ಆಯೋಗದ ವರದಿ, ಮಾಧುಸ್ವಾಮಿ ವರದಿ ಹಾಗೂ ಕಾಂತರಾಜ ವರದಿ ಪ್ರಕಾರ ಆದರೂ ಒಳಮೀಸಲಾತಿ ಜಾರಿ ಮಾಡಿ. ಇದೂ ಸಹ ಸಾಧ್ಯವಿಲ್ಲವೆಂದರೆ ಹೊಸ ಜಾತಿಗಳ ದತ್ತಾಂಶ ಕ್ರೂಢಿಕರಿಸಿ ಒಳಮೀಸಲಾತಿ ಜಾರಿ ಮಾಡಿ. ಆದರೆ ಕುಂಟು ನೆಪ ಹೇಳಿ ಕಾಲಾಹರಣ ಮಾಡಿದರೆ ಸರ್ಕಾರ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದರು. ಈ ಸಂದರ್ಭದಲ್ಲಿ ಸಮಾಜದ ಮುಖಂಡರಾದ ದೇವಿದಾಸ್ ತುಮಕುಂಟೆ, ರಮೇಶ್ ಕಟ್ಟಿತೂಗಾಂವ್, ಕಲ್ಲಪ್ಪ ವೈದ್ಯ, ಸ್ವಾಮಿದಾಸ್ ಕೆಂಪೆನೋರ್, ಬಂಟಿ ದರ್ಬಾರೆ, ಪ್ರದೀಪ್ ಹೆಗಡೆ, ಪೀಠರ್ ಶ್ರೀಮಂಡಲ್, ಶಿವರಾಜ್ ನೆಲವಾಳಕರ್, ಡಾ. ಬಸವರಾಜ್ ಔರಾದೆ, ರಾಜಕುಮಾರ್ ಹಳ್ಳಿಖೇಡ, ಶಿವರಾಜ ಮುಗನೂರೆ ಹಾಗೂ ದಾವೀದ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಇಂಟರ್ನಲ್ ಮ್ಯಾಟರ್ ಯತ್ನಾಳ್ ಉಚ್ಚಾಟನೆಗೆ ಡಿಕೆಶಿ ಚುಟುಕು ರಿಯಾಕ್ಷನ್ ವೈರಲ್!
ಅಶಿಸ್ತು ಆರೋಪದ ಮೇಲೆ ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು, 6 ವರ್ಷಗಳ ಕಾಲ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಉಚ್ಚಾಟನೆ ಮಾಡಿ ಬಿಜೆಪಿ ಹೈಕಮಾಂಡ್ ಆದೇಶ ಹೊರಡಿಸಿದೆ. ಈ ಕುರಿತು ಚುಟುಕು ಪ್ರತಿಕ್ರಿಯೆ ನೀಡಿರುವ ಉಪಮುಖ್ಯಮಂತ್ರಿ ಮತ್ತು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಇದು ಬಿಜೆಪಿಯ ಇಂಟರ್ನಲ್ ಮ್ಯಾಟರ್.. ಎಂದು ಹೇಳಿದ್ದಾರೆ. ಬಿಜೆಪಿಯವರು ಯತ್ನಾಳ್ ಅವರನ್ನು ಪಕ್ಷದಲ್ಲಿ ಇಟ್ಟುಕೊಳ್ಳಲಿ ಅಥವಾ ಹೊರಹಾಕಲಿ, ಅದಕ್ಕೂ ನಮಗೂ ಯಾವ ಸಂಬಂಧವೂ ಇಲ್ಲ.. ಎಂದು ಡಿಕೆಶಿ ಹೇಳಿದ್ದಾರೆ.
ಯಾದಗಿರಿ | ಏ.15 ರವರಗೆ ಕಾಲುವೆಗೆ ನೀರು ಹರಿಸಲು ಆಗ್ರಹಿಸಿ ನಾರಾಯಣಪುರ ಜಲಾಶಯ ಬಳಿ ಪ್ರತಿಭಟನೆ
ಹುಣಸಗಿ : ಕೃಷ್ಣಾ ಎಡದಂಡೆ ಕಾಲುವೆಗಳಿಗೆ ಏ.15 ರವರೆಗೆ ನೀರು ಹರಿಸುವಂತೆ ಆಗ್ರಹಿಸಿ ಮಾಜಿ ಸಚಿವ ನರಸಿಂಹ ನಾಯಕ (ರಾಜುಗೌಡ) ನೇತೃತ್ವದಲ್ಲಿ ಹುಣಸಗಿ ಪಟ್ಟಣದಿಂದ ನಾರಾಯಣಪುರ ಬಸವಸಾಗರ ಜಲಾಶಯದ ವರೆಗೆ ಬೃಹತ್ ಟ್ರ್ಯಾಕ್ಟರ್ ರ್ಯಾಲಿ ನಡೆಸಲಾಯಿತು. ಹುಣಸಗಿ ಪಟ್ಟಣದಲ್ಲಿ ಮೊದಲು ಬಹಿರಂಗ ಸಮಾವೇಶ ನಡೆಸಿ ಮಾತನಾಡಿದ ರಾಜುಗೌಡ, ಜಲಾಶಯದಲ್ಲಿ ನೀರು ಇದ್ದರು ಕೂಡ ರೈತರಿಗೆ ಸರಕಾರ ನೀರು ಕೊಡುತ್ತಿಲ್ಲ ಎಂದು ಆರೋಪಿಸಿದರು. ರಾತ್ರೋರಾತ್ರಿ ಆಂಧ್ರಕ್ಕೆ ನೀರು ಬಿಡುವ ಸರಕಾರ ಇಲ್ಲಿಯ ರೈತರು ಬೆಳೆ ಒಣಗುತ್ತಿವೆ ಎಂದು ನಿರಂತರವಾಗಿ ಪ್ರತಿಭಟನೆ ನಡೆಸಿ ಸರಕಾರಕ್ಕೆ ಮನವಿ ಮಾಡುತ್ತಿದ್ದರು ಸರಕಾರ ನೀರು ಬಿಡುತ್ತಿಲ್ಲ. ಈಗ ಬೆಳೆಗಳಿಗೆ ನೀರಿನ ಅಗತ್ಯವಿದೆ, ಏ.15 ರವರೆಗೆ ನೀರು ಬಿಡದಿದ್ದಲ್ಲಿ ಲಕ್ಷಾಂತರ ಎಕರೆ ಬೆಳೆ ಹಾಳಾಗುತ್ತದೆ, ಇದರಿಂದ ರೈತರಿಗೆ ಸಾವೆ ಗತಿಯಾಗುತ್ತದೆ. ಆದ್ದರಿಂದ ನೀರು ಕೊಡಿ ಇಲ್ಲವಾದಲ್ಲಿ ಒಂದಿಷ್ಟು ವಿಷ ಕೊಡಿ ಎಂದರು. ನಂತರ ನಾರಾಯಣಪುರ ಜಲಾಶಯದ ವರೆಗೆ ರ್ಯಾಲಿ ನಡೆಸಿ ದಾರಿಯುದ್ದಕ್ಕೂ ರೈತರು ಜೊತೆಯಾದರು. ನಂತರ ಜಲಾಶಯದ ಬಳಿಯಲ್ಲಿ ಗೇಟ್ಗೆ ನುಗ್ಗಲು ಯತ್ನಿಸಿದ ರಾಜುಗೌಡ ಸೇರಿದಂತೆ ಹಲವರನ್ನು ಪೊಲೀಸರು ವಶಕ್ಕೆ ಪಡೆದು ನಂತರ ಬಿಡುಗಡೆಗೊಳಿಸಿದರು. ಸಾವಿರಾರು ಸಂಖ್ಯೆಯಲ್ಲಿ ಭಾಗವಹಿಸಿದ್ದ ಪ್ರತಿಭಟನಾಕಾರರನ್ನು ನಿಯಂತ್ರಿಸಲು ಪೊಲೀಸರು ಹರಸಾಹ ಪಡುವಂತಾಯಿತು. ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಧರಣೇಶ ಅವರ ನೇತೃತ್ವದಲ್ಲಿ ಭಾರಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿತ್ತು. ರೈತರಿಗಾಗಿ ಎಂತಹ ಹೋರಾಟಕ್ಕೂ ಸಿದ್ದರಿದ್ದೇವೆ, ಜಲಾಶಯದಲ್ಲಿ ನೀರು ಇದ್ದರೂ, ಸರಕಾರ ನೀರು ಬಿಡುತ್ತಿಲ್ಲ. ನೀರು ಬಿಡದಿದ್ದಲ್ಲಿ ನಿರಂತರವಾಗಿ ಹೋರಾಟ ನಡೆಯಲಿದೆ. ಸರಕಾರ ಕೂಡಲೇ ಏ.15 ರವರೆಗೆ ಕಾಲುವೆಗೆ ನೀರು ಹರಿಸಬೇಕು. - ರಾಜುಗೌಡ ಮಾಜಿ ಸಚಿವ ಕೃಷ್ಣಾ ಎಡದಂಡೆ ಕಾಲುವೆಗಳಿಗೆ ಏ.15 ರವರೆಗೆ ನಿರಂತರವಾಗಿ ನೀರು ಹರಿಸುವಂತೆ ಆಗ್ರಹಿಸಿ ನಡೆದ ಪ್ರತಿಭಟನೆಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆ, ನಮ್ಮ ಕರ್ನಾಟಕ ಸೇನೆ, ಕರ್ನಾಟಕ ರಾಜ್ಯ ರೈತ ಸಂಘ ಸೇರಿದಂತೆ ಅನೇಕ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿ ಸಾವಿರಾರು ಜನ ಭಾಗವಹಿಸಿದ್ದರು.
ಜಾರ್ಖಂಡ್: ರಾಮನವಮಿ ಮೆರವಣಿಗೆ ವೇಳೆ ಕೋಮು ಹಿಂಸಾಚಾರ
ರಾಂಚಿ: ಜಾರ್ಖಂಡ್ ನ ಹಝಾರಿಬಾಗ್ ನಲ್ಲಿ ರಾಮನವಮಿ ಆಚರಣೆಯ ಭಾಗವಾಗಿ ಮಂಗಳವಾರ ನಡೆದ ಧಾರ್ಮಿಕ ಮೆರವಣಿಗೆ ಸಂದರ್ಭ ಕೋಮು ಹಿಂಸಾಚಾರ ನಡೆದಿದೆ. ಧಾರ್ಮಿಕ ಮೆರವಣಿಗೆ ನಡೆಯುತ್ತಿದ್ದ ಸಂದರ್ಭ ಜಾಮಾ ಮಸೀದಿ ಚೌಕದಲ್ಲಿ ಮಂಗಳವಾರ ರಾತ್ರಿ 11 ಗಂಟೆಗೆ ಕಲ್ಲು ತೂರಾಟ ನಡೆಯಿತು. ಇದು ಘರ್ಷಣೆಗೆ ಕಾರಣವಾಯಿತು ಎಂದು ಸ್ಥಳೀಯರು ಮಾಹಿತಿ ನೀಡಿದ್ದರು. ಕೂಡಲೇ ಪೊಲೀಸರು ಸ್ಥಳಕ್ಕೆ ಧಾವಿಸಿದ್ದರು. ಪರಿಸ್ಥಿತಿ ನಿಯಂತ್ರಿಸಲು ಗಾಳಿಯಲ್ಲಿ ಗುಂಡು ಹಾರಿಸಲಾಯಿತು. ಈ ಪ್ರದೇಶದಲ್ಲಿ ಬುಧವಾರ ಬಿಗಿ ಭದ್ರತೆ ಏರ್ಪಡಿಸಲಾಗಿದೆ ಎಂದು ಹಝಾರಿಬಾಗ್ ಉಪ ವಿಭಾಗೀಯ ಪೊಲೀಸ್ ಅಧಿಕಾರಿ ಪರಮೇಶ್ವರ್ ಕಂಮ್ಟಿ ತಿಳಿಸಿದ್ದಾರೆ.
ಸೋನಿಯಾ ಗಾಂಧಿ ವಿರುದ್ಧ ಆಧಾರ ರಹಿತ ಆರೋಪ; ಅಮಿತ್ ಶಾ ಅವರಿಗೆ ಜೈರಾಮ್ ರಮೇಶ್ ನೋಟಿಸ್
ಹೊಸದಿಲ್ಲಿ: ರಾಷ್ಟ್ರೀಯ ಪ್ರಧಾನ ಮಂತ್ರಿ ಪರಿಹಾರ ನಿಧಿ (ಎನ್ಪಿಎಂಆರ್ಎಫ್) ಕಾರ್ಯನಿರ್ವಹಣೆಗೆ ಸಂಬಂಧಿಸಿ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿಯವರ ಹೆಸರು ಕೆಡಿಸಲು ಉದ್ದೇಶಪೂರ್ವಕ ಹೇಳಿಕೆ ನೀಡಿರುವುದಾಗಿ ಆರೋಪಿಸಿ ಗೃಹ ಸಚಿವ ಅಮಿತ್ ಶಾ ಅವರ ವಿರುದ್ಧ ಕಾಂಗ್ರೆಸ್ನ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಬುಧವಾರ ಹಕ್ಕುಚ್ಯುತಿ ನೋಟಿಸ್ ಸಲ್ಲಿಸಿದ್ದಾರೆ. ಸೋನಿಯಾ ಗಾಂಧಿ ವಿರುದ್ಧದ ಅಮಿತ್ ಶಾ ಅವರ ಹೇಳಿಕೆ ಸ್ಪಷ್ಟವಾಗಿ ಸುಳ್ಳು, ಮಾನ ಹಾನಿಕರ ಹಾಗೂ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ಜೈರಾಮ್ ರಮೇಶ್ ಹೇಳಿದ್ದಾರೆ. ಆದುದರಿಂದ ಅವರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಅವರು ರಾಜ್ಯಸಭೆಯ ಅಧ್ಯಕ್ಷ ಜಗದೀಪ್ ಧನ್ಕರ್ ಅವರನ್ನು ಆಗ್ರಹಿಸಿದ್ದಾರೆ. ವಿಪತ್ತು ನಿರ್ವಹಣಾ (ತಿದ್ದುಪಡಿ) ಮಸೂದೆ, 2024ರ ಕುರಿತ ಚರ್ಚೆಗೆ ತನ್ನ ಪ್ರತಿಕ್ರಿಯೆ ನೀಡುವ ಸಂದರ್ಭ ಅಮಿತ್ ಶಾ ಅವರು ನೀಡಿದ ಹೇಳಿಕೆಯನ್ನು ಜೈರಾಮ್ ರಮೇಶ್ ಅವರು ಉಲ್ಲೇಖಿಸಿದರು. ಚರ್ಚೆಯ ಸಂದರ್ಭ ಅಮಿತ್ ಶಾ ಅವರು ಎನ್ಪಿಎಂಆರ್ಎಫ್ ಅನ್ನು ಕಾಂಗ್ರೆಸ್ ಆಡಳಿತದ ಸಂದರ್ಭ ಸ್ಥಾಪಿಸಲಾಯಿತು. ಪಿಎಂ-ಕೇರ್ ಅನ್ನು ನರೇಂದ್ರ ಮೋದಿ ಸರಕಾರದ ಸಂದರ್ಭ ಸ್ಥಾಪಿಸಲಾಯಿತು ಎಂದು ಹೇಳಿದ್ದರು. ‘‘ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ನಿಧಿಯನ್ನು ಕುಟುಂಬವೊಂದು ನಿಯಂತ್ರಿಸುತ್ತಿತ್ತು. ಕಾಂಗ್ರೆಸ್ ಅಧ್ಯಕ್ಷೆ ಈ ಸಮಿತಿಯ ಸದಸ್ಯರಾಗಿದ್ದರು. ಕಾಂಗ್ರೆಸ್ ಅಧ್ಯಕ್ಷೆ ಸರಕಾರದ ನಿಧಿಯ ಭಾಗವಾಗಿದ್ದರು. ನಾವು ಜನರಿಗೆ ಏನು ಉತ್ತರ ನೀಡುವುದು? ಇದನ್ನು ಯಾರೂ ಓದಲಾರರು, ಯಾರೂ ಗಮನಿಸಲಾರರು ಎಂದು ಅವರು ಭಾವಿಸಿದ್ದರು’’ ಎಂದು ಅಮಿತ್ ಶಾ ರಾಜ್ಯ ಸಭೆಯಲ್ಲಿ ಮಂಗಳವಾರ ಹೇಳಿದ್ದರು.
ಯಾದಗಿರಿ | ಭೂಮಿಯನ್ನು ಸರಕಾರಿ ಬೆಲೆಯಲ್ಲಿ ಖರೀದಿಸಿ ವಿಕಲಚೇತನರಿಗೆ ನಿವೇಶನ ಹಂಚಿಕೆ ; ಜೀವನ ಕಟ್ಟಿಮನಿ
ಸುರಪುರ : ನಗರಸಭೆ ವ್ಯಾಪ್ತಿಯ ಒಳಗಡೆ ಇರುವ ಭೂಮಿಯನ್ನು ಸರಕಾರಿ ಬೆಲೆಯಲ್ಲಿ ನೀಡಿದರೆ ನಗರೋತ್ಥಾನ ಯೋಜನೆ ಅಡಿಯಲ್ಲಿ ಖರೀದಿಸಿ ವಿಕಲಚೇತನರಿಗೆ ಶೇ.5ರಷ್ಟು ಮೀಸಲಿನಡಿ ನಿವೇಶನ ಹಂಚಿಕೆ ಮಾಡಿಕೊಡಲಾಗುವುದು ಎಂದು ನಗರಸಭೆ ಪೌರಾಯುಕ್ತ ಜೀವನ ಕಟ್ಟಿಮನಿ ಹೇಳಿದರು. ನಗರಸಭೆ ಸಭಾಂಗಣದಲ್ಲಿ ನಡೆದ ವಿಕಲಚೇತನರ ಸಮನ್ವಯ ವಿಶೇಷ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ನಗರಸಭೆಗೆ 31 ವಾರ್ಡ್ ಗಳಲ್ಲಿರುವ ವಿಕಲಚೇತನರ ಸಂಪೂರ್ಣ ಮಾಹಿತಿಯಿರಬೇಕು. ಇದನ್ನು ಸಂಗ್ರಹಿಸಿ ನೀಡದಿದ್ದರೆ ಜಿಲ್ಲಾಧಿಕಾರಿಗೆ ಕ್ರಮಕ್ಕಾಗಿ ಪತ್ರ ಬರೆಯಲಾಗುವುದು ಎಂಬುದಾಗಿ ಅಂಗವಿಕಲರ ಡಾಟಾ ಸಂಗ್ರಹಿಸುವವರಿಗೆ ಎಚ್ಚರಿಕೆ ನೀಡಿದರು. ನಗರದ ಬಸ್ ನಿಲ್ದಾಣದ ಶೌಚಾಲಯದಲ್ಲಿ ರ್ಯಾಂಪ್ ಮಾಡಲಾಗುವುದು. ಅಂಗವಿಕಲರಿಗೆ ಸಾಮಗ್ರಿಗಳನ್ನು ಒದಗಿಸಲು ಕ್ರಮ ಕೈಗೊಳ್ಳಲಾಗುವುದು. ಅನರ್ಹ ಅಂಗವಿಕಲರು ಸರಕಾರಿ ಸೌಲಭ್ಯ ಪಡೆಯುತ್ತಿರುವ ಮನವಿಗಳು ಬಂದಿವೆ. ಇದನ್ನು ತೊಡೆದು ಹಾಕಲು ಶೀಘ್ರದಲ್ಲೇ ತಹಶೀಲ್ದಾರ್ ನೇತೃತ್ವದಲ್ಲಿ ಸಭೆ ಕರೆದು ಅರ್ಹ ಅಂಗವಿಕಲರ ಪಟ್ಟಿ ಮಾಡಲಾಗುವುದು. ಶೇ.75ರಷ್ಟು ಅಂಗವಿಕಲರ ದಾಖಲಾತಿ ಪರಿಶೀಲಿಸಿ ಪ್ರತಿ ತಿಂಗಳು 1,400 ರೂ. ಬರುವಂತೆ ತಹಶೀಲ್ದಾರರಿಗೆ ಮನವಿ ಮಾಡಲಾಗುವುದು ಎಂದು ತಿಳಿಸಿದರು. ಸಮನ್ವಯ ಸಂಘಟನಾಧಿಕಾರಿ ತಿಪ್ಪಮ್ಮ ಬಿರದಾರ ಮಾತನಾಡಿ, ಅಂಗವಿಕಲರಿಗೆ ಶೇ.5ರಷ್ಟು ಅನುದಾನ ಲಭ್ಯವಿದೆ. ಅದರ ಜತೆಗೆ ಹಲವಾರು ಯೋಜನೆಗಳಿದ್ದು, ಅವುಗಳ ಸೇವೆಯನ್ನು ಒದಗಿಸಿಕೊಡಲಾಗುವುದು ಎಂದರು. ಜಿಲ್ಲಾ ಎಪಿಡಿ ಸಂಸ್ಥೆಯ ಅಧಿಕಾರಿ ಗಿರೀಶ ಕುಲಕರ್ಣಿ ಮಾತನಾಡಿ, ಸಂಸ್ಥೆ ವತಿಯಿಂದ 3 ಲಕ್ಷ ಅಂಗವಿಕಲರಿಗೆ ಸಹಾಯ ಮಾಡಲಾಗಿದೆ. ಅಂಗವಿಕಲರಿಗೆ ಆರೈಕೆ ಭತ್ಯೆ, ಶೌಚಾಲಯಕ್ಕೆ ರ್ಯಾಂಪ್ ವ್ಯವಸ್ಥೆ, ಶೌಚಾಲಯ ವ್ಯವಸ್ಥೆ, ಸಾಲಸೌಲಭ್ಯ ಸೇರಿದಂತೆ ವಿವಿಧ ಸಹಕಾರಗಳನ್ನು ಮಾಡಿಕೊಡಬೇಕು ಎಂದು ಮನವಿ ಮಾಡಿದರು. ಅಂಗವಿಕಲರ ಒಕ್ಕೂಟದ ಅಧ್ಯಕ್ಷ ಶರಣಪ್ಪ ಬಡಿಗೇರಾ ಮಾತನಾಡಿದರು. ಸಂಪನ್ಮೂಲ ವ್ಯಕ್ತಿ ಗೀತಾ ಸ್ವಾಗತಿಸಿದರು. ಸಮನ್ವಯ ಸಂಘಟನಾಧಿಕಾರಿ ದುರ್ಗಪ್ಪ ನಾಯಕ ನಿರೂಪಿಸಿದರು. ಸಂಪನ್ಮೂಲ ವ್ಯಕ್ತಿ ಸುವರ್ಣ ವಂದಿಸಿದರು. ಎಇಇ ಶಾಂತಪ್ಪ ಹೊಸೂರ, ನಗರಸಭೆ ನಿರ್ವಾಹಕ ಯಲ್ಲಪ್ಪ ನಾಯಕ, ಆರೋಗ್ಯ ಅಧಿಕಾರಿ ಗುರುಸ್ವಾಮಿ, ಮಹೇಶ, ಮಾಳಪ್ಪ, ಪರಶುರಾಮ, ನಿಂಗಯ್ಯ, ಬಸವಯ್ಯ, ಲಕ್ಷ್ಮೀ, ಯುಆರ್ಡಬ್ಲ್ಯೂಂ ಜರೀನಾ ಬೇಗಂ, ಸಿಆರ್ಪಿಗಳಾದ ಶ್ರೀದೇವಿ, ಬಸಮ್ಮ, ಮೈನುದ್ದೀನ್ ಸೇರಿದಂತೆ ಇತರರಿದ್ದರು.
ಕ್ಲಿನಿಕಲ್ ಟ್ರಯಲ್ಗಾಗಿ ಮೊದಲ ದೇಶಿ ನಿರ್ಮಿತ ಎಂಆರ್ಐ ಸ್ಕ್ಯಾನರ್ ಸ್ಥಾಪನೆಗೆ ಏಮ್ಸ್-ದಿಲ್ಲಿ ಸಜ್ಜು
ಹೊಸದಿಲ್ಲಿ: ಭಾರತವು ತನ್ನ ಮೊದಲ ದೇಶಿ ನಿರ್ಮಿತ ಎಂಆರ್ಐ ಸ್ಕ್ಯಾನರ್ನ್ನು ಅಭಿವೃದ್ಧಿಗೊಳಿಸಿದ್ದು, ಅದನ್ನು ಕ್ಲಿನಿಕಲ್ ಟ್ರಯಲ್ ಗಳು ಮತ್ತು ಮೌಲ್ಯಮಾಪನಕ್ಕಾಗಿ ಅಕ್ಟೋಬರ್ನಲ್ಲಿ ಏಮ್ಸ್-ದಿಲ್ಲಿಯಲ್ಲಿ ಸ್ಥಾಪಿಸಲಾಗುವುದು. ದೇಶೀಯವಾಗಿ ನಿರ್ಮಿತ ಸ್ಕ್ಯಾನರ್ ಎಂಆರ್ಐ ತಪಾಸಣೆಗಳ ವೆಚ್ಚವನ್ನು ಮತ್ತು ಆಮದು ಯಂತ್ರಗಳ ಮೇಲಿನ ಅವಲಂಬನೆಯನ್ನು ಗಣನೀಯವಾಗಿ ತಗ್ಗಿಸಲಿದೆ. ತಪಾಸಣೆಗಳ ವೆಚ್ಚವೂ ಶೇ.೫೦ರಷ್ಟು ಕಡಿಮೆಯಾಗಲಿದೆ. 1.5 ಟೆಸ್ಲಾ ಎಂಆರ್ಐ ಸ್ಕ್ಯಾನರ್ ಸ್ಥಾಪನೆಗಾಗಿ ಏಮ್ಸ್-ದಿಲ್ಲಿ ಕೇಂದ್ರ ಸರಕಾರದ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದಡಿ ಸ್ವಾಯತ್ತವಾಗಿ ಕಾರ್ಯ ನಿರ್ವಹಿಸುವ ಮುಂಬೈನ ಸೊಸೈಟಿ ಫಾರ್ ಅಪ್ಲೈಡ್ ಮೈಕ್ರೋವೇವ್ ಇಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ ಆ್ಯಂಡ್ ರೀಸರ್ಚ್ (SAMEER) ಜೊತೆ ಒಡಂಬಡಿಕೆಗೆ ಸಹಿ ಹಾಕಿದೆ. ಭಾರತದಲ್ಲಿ ನಿರ್ಣಾಯಕ ಮತ್ತು ಶಸ್ತ್ರಚಿಕಿತ್ಸೆ ನಂತರದ ಆರೈಕೆ, ಐಸಿಯುಗಳು, ರೋಬೊಟಿಕ್ಸ್, ಎಂಆರ್ಐಗಳಲ್ಲಿ ಹೆಚ್ಚಿನ ಯಂತ್ರಗಳನ್ನು ಆಮದು ಮಾಡಿಕೊಳ್ಳಲಾಗಿದೆ ಎಂದು ಏಮ್ಸ್-ದಿಲ್ಲಿ ನಿರ್ದೇಶಕ ಡಾ.ಎಂ.ಶ್ರೀನಿವಾಸ್ ತಿಳಿಸಿದರು. ದೇಶೀಯ ಎಂಆರ್ಐ ಸ್ಕ್ಯಾನರ್ನ್ನು ಅಭಿವೃದ್ಧಿಗೊಳಿಸಿರುವುದು ವಿದೇಶಗಳಿಂದ ಆಮದಿತ ಸಾಧನಗಳ ಮೇಲೆ ಅವಲಂಬನೆಯನ್ನು ತಗ್ಗಿಸಲು ಆತ್ಮನಿರ್ಭರ ಭಾರತದತ್ತ ಪ್ರಮುಖ ಹೆಜ್ಜೆಯಾಗಿದೆ ಎಂದರು. ಎಂಆರ್ಐ ಸ್ಕ್ಯಾನರ್ಗಳು ಭಾರತದಲ್ಲಿ ತಯಾರಾಗುವುದಿಲ್ಲ, ಹೀಗಾಗಿ ಸದ್ಯ ದೇಶದಲ್ಲಿ ಅವುಗಳ ಕಾರ್ಯಕ್ಷಮತೆಯನ್ನು ಪರಿಶೀಲಿಸಲು ಮತ್ತು ಮೌಲ್ಯಮಾಪನಕ್ಕೆ ಯಾವುದೇ ಕಾರ್ಯವಿಧಾನವಿಲ್ಲ. ನಾವು ಸಿದ್ಧಪಡಿಸಿರುವ ಯಂತ್ರವನ್ನು ಏಮ್ಸ್-ದಿಲ್ಲಿಯಲ್ಲಿ ಕ್ಲಿನಿಕಲ್ ಟ್ರಯಲ್ಗೆ ಒಳಪಡಿಸಲಾಗುತ್ತದೆ ಮತ್ತು ಇದು ಯಶಸ್ವಿಯಾಗುವ ಭರವಸೆಯಿದೆ ಎಂದು SAMEER ಮಹಾ ನಿರ್ದೇಶಕ ಪಿ.ಎಚ್.ರಾವ್ ಹೇಳಿದರು. ಪ್ರಯೋಗಗಳ ಸಮಯದಲ್ಲಿಯೂ ರೋಗಿಗಳ ಮೇಲೆ ಎಂಆರ್ಐ ಸ್ಕ್ಯಾನರ್ ಬಳಕೆಗೆ ಅನುಮತಿ ನೀಡಲು ಅದರ ಮೌಲ್ಯಮಾಪನಕ್ಕಾಗಿ ಕೇಂದ್ರ ಆರೋಗ್ಯ ಸಚಿವಾಲಯವು ಮಾನದಂಡಗಳನ್ನು ರೂಪಿಸುತ್ತಿದೆ. ಕ್ಲಿನಿಕಲ್ ಮತ್ತು ಮಾನವ ಟ್ರಯಲ್ ಗಳನ್ನು ಆರಂಭಿಸಲು ಅನುಮತಿಗಾಗಿ ನಾವು ಕಾಯುತ್ತಿದ್ದೇವೆ ಎಂದು ರಾವ್ ತಿಳಿಸಿದರು.
ಯಾದಗಿರಿ | ಉಪವಾಸದಿಂದ ಮನಸ್ಸು, ದೇಹ ಶುದ್ದಿಯಾಗುತ್ತದೆ : ರಾಜಾ ವೇಣುಗೋಪಾಲ ನಾಯಕ್
ಸುರಪುರ: ನಗರದ ಬಡಿ ಮಸೀದಿಯಲ್ಲಿ ಪ್ರದೇಶ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಜಿಲ್ಲಾಧ್ಯಕ್ಷ ನದೀಮುಲ್ಲಾ ಹುಸೇನಿ ಇನಾಮದಾರವರು ಆಯೋಜಿಸಿರುವ ಇಫ್ತಾರ್ ಕೂಟದಲ್ಲಿ ಶಾಸಕರಾದ ರಾಜಾ ವೇಣುಗೋಪಾಲ ನಾಯಕ್ ಭಾಗವಹಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು, ಪವಿತ್ರ ರಮಝಾನ್ ಮಾಸದಲ್ಲಿ ಉಪವಾಸವಿರುವುದರಿಂದ ಮನಸ್ಸು ಮತ್ತು ದೇಹ ಶುದ್ದಿಯಾಗುವುದರ ಜೊತೆಗೆ ದಾನ ಧರ್ಮ ಮಾಡುವುದು ರಮಝಾನ್ ಹಬ್ಬದ ವಿಶೇಷತೆ, ಈ ಪವಿತ್ರ ಮಾಸದಲ್ಲಿ ಸರ್ವರಿಗೂ ಒಳ್ಳೆಯದಾಗಲಿ ಎಂದರು. ಈ ಕಾರ್ಯಕ್ರಮದಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ವಿಠ್ಠಲ್ ಯಾದವ್, ಪ್ರಮುಖರಾದ ವೆಂಕೋಬ ಯಾದವ್, ರಾಜಾ ಸುಶಾಂತ ನಾಯಕ, ಹಣಮಂತರಾಯ ಮಕಾಶಿ, ನಗರಸಭೆ ಸದಸ್ಯರಾದ ಮಹಬೂಬ್ ಖುರೇಷಿ, ಶಕೀಲಹಮ್ಮದ್ ಖುರೇಶಿ, ಮೌಲಾಲಿ ಸೌದಾಗರ್, ಅಬ್ದುಲ್ ಖಾದರ್ ಲೈನ್ ಪೀರ್, ಚಿನ್ನುಪಟೇಲ್, ಅಹಮದ್ ಖುರೇಷಿ, ಖಾಜಾಹುಸೇನ ಗುಡಗುಂಟಿ, ಅಬ್ಬಾಸ್ ಹಾಗೂ ಬಡಿ ಮಸೀದಿಯ ಅನೇಕ ಮುಸ್ಲಿಂ ಬಾಂಧವರು ಭಾಗವಹಿಸಿದ್ದರು
ಕೊಡಗಿನ ವಿವಿಧೆಡೆ ಮಳೆ : ರಸ್ತೆಗುರುಳಿದ ಬೃಹತ್ ಮರ
ಮಡಿಕೇರಿ: ಕೊಡಗಿನ ವಿವಿಧೆಡೆ ಕಳೆದ ಕೆಲವು ದಿನಗಳಿಂದ ಮಳೆಯಾಗುತ್ತಿದೆ. ಬುಧವಾರ ಸುರಿದ ಗಾಳಿ ಮಳೆಗೆ ಮಡಿಕೇರಿ ತಾಲ್ಲೂಕಿನ ಪಾರಾಣೆ ಗ್ರಾಮದಲ್ಲಿ ಸುಮಾರು 200 ವರ್ಷಗಳಷ್ಟು ಹಳೆಯದಾದ ಬೃಹತ್ ಮರ ರಸ್ತೆಗಡ್ಡ ಉರುಳಿ ಬಿದ್ದ ಘಟನೆ ನಡೆದಿದೆ. ಮಧ್ಯಾಹ್ನ 2.30 ಗಂಟೆಗೆ ಆರಂಭಗೊಂಡ ಭಾರೀ ಗಾಳಿ ಮಳೆಗೆ ಪಾರಾಣೆ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಬಳಿ ಭಾರೀ ಗಾತ್ರದ ಮರ ಬಿದ್ದಿದ್ದು, ಯಾವುದೇ ಅನಾಹುತ ಸಂಭವಿಸಿಲ್ಲ. ರಸ್ತೆಗಡ್ಡಲಾಗಿ ಬಿದ್ದ ಮರವನ್ನು ಅರಣ್ಯ ಇಲಾಖೆ ಸಿಬ್ಬಂದಿಗಳು ಹಾಗೂ ಗ್ರಾಮಸ್ಥರು ತೆರವುಗೊಳಿಸುವ ಕಾರ್ಯಾಚರಣೆ ನಡೆಸಿದರು. ಜಿಲ್ಲೆಯ ಇತರ ಭಾಗಗಳಲ್ಲಿ ಕೂಡ ಗುಡುಗು ಸಹಿತ ಮಳೆಯಾಗಿದೆ. ಕಾಫಿ ಕೊಯ್ಲಿನ ಬಳಿಕ ಮುಂದಿನ ಸಾಲಿನ ಫಸಲಿಗೆ ಅತ್ಯಗತ್ಯವಾದ ಹೂಮಳೆಯನ್ನು ಬೆಳೆಗಾರರು ನಿರೀಕ್ಷಿಸಿದ್ದರು.
ತಮಿಳುನಾಡಿಗೆ ನೀರು ಹರಿಸಲು ಕೆಆರ್ಎಸ್ ಗೇಟ್ ತೆರೆದಿರಲಿಲ್ಲ : ಚಲುವರಾಯಸ್ವಾಮಿ ಸ್ಪಷ್ಟನೆ
ಮಂಡ್ಯ: ತಾಂತ್ರಿಕ ನಿರ್ವಹಣೆ ವೇಳೆ ಕೆಆರ್ಎಸ್ ಅಣೆಕಟ್ಟೆಯ ಒಂದು ಗೇಟ್ ತೆರೆದುಕೊಂಡಿತ್ತು. ಅಧಿಕಾರಿಗಳು ಆದಷ್ಟು ಬೇಗ ಸರಿಪಡಿಸಿದ್ದಾರೆ. ತಮಿಳುನಾಡಿಗೆ ನೀರು ಹರಿಸಲು ಗೇಟ್ ತೆರೆದಿರಲಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಸ್ಪಷ್ಟಪಡಿಸಿದ್ದಾರೆ. ಬುಧವಾರ ಮಾಧ್ಯಮಗಳ ಜತೆ ಮಾತನಾಡಿದ ಅವರು, ಪ್ರತಿಯೊಂದರಲ್ಲೂ ತಪ್ಪು ಹುಡುಕುವುದೇ ವಿಪಕ್ಷದವರ ಕೆಲಸವಾಗಿಬಿಟ್ಟಿದೆ. ಇಂತಹ ಅವಘಡ ಸಂದರ್ಭದಲ್ಲಿ ಸಲಹೆ ಸೂಚನೆ ನೀಡಬೇಕೆ ಹೊರತು ಅದರಲ್ಲೂ ರಾಜಕೀಯ ಮಾಡುವುದು ಸರಿಯಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಈ ವರ್ಷ ಅಣಕೆಟ್ಟೆಯಲ್ಲಿ ಇನ್ನೂ 107 ಅಡಿ ನೀರಿದೆ. ನೀರು 80 ಅಡಿಗೆ ಇಳಿಯುವ ಮುಂಚೆ ಅಣೆಕಟ್ಟೆಯನ್ನು ನಿರ್ವಹಣೆ ಮಾಡುತ್ತಾರೆ. ಆ ವೇಳೆ ಅವಘಡ ಸಂಭವಿಸಿದೆ. ತಮಿಳುನಾಡಿನವರು ನೀರು ಕೇಳಿಯೇ ಇಲ್ಲವಾದ್ದರಿಂದ ನೀರುಹರಿಸುವ ಪ್ರಮೇಯ ಎಲ್ಲಿದೆ? ಎಂದು ಅವರು ಪ್ರಶ್ನಿಸಿದರು. ಗೇಟ್ ತೆರೆದುಕೊಂಡಿದ್ದರಿಂದ ಸುಮಾರು 700 ಕ್ಯೂಸೆಕ್ ನೀರು ಹರಿದುಹೋಗಿದೆ ಅಷ್ಟೆ. ಅಣೆಕಟ್ಟೆ ನಿರ್ಮಾಣವಾಗಿ ನೂರು ವರ್ಷ ಆಗುತ್ತಿದೆ. ಹಾಗಾಗಿ ಗೇಟ್ಗಳ ಪರಿಶೀಲನೆ ಆಗಬೇಕಿದೆ. ಪರಿಶೀಲನೆಗೆ ಜಲಸಂಪನ್ಮೂಲ ಸಚಿವರಾದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಕರೆದಿದ್ದೇನೆ ಎಂದು ಅವರು ಹೇಳಿದರು. ಹನಿಟ್ರ್ಯಾಪ್ ಯತ್ನಕ್ಕೆ ಸಂಬಂಧಿಸಿದಂತೆ ಗೃಹಸಚಿವರಿಗೆ ದೂರು ನೀಡಿರುವ ಬಗ್ಗೆ ಪ್ರತಿಕ್ರಿಯಿಸಿ, ಈ ಸಂಬಂಧ ಉನ್ನತ ಮಟ್ಟದ ತನಿಖೆ ನಡೆಸುವುದಾಗಿ ಸಿಎಂ ಹೇಳಿದ್ದಾರೆ. ಇಲ್ಲಿ ಪಕ್ಷಕ್ಕೆ ಮುಜುಗರದ ಪ್ರಶ್ನೆ ಮುಖ್ಯ ಅಲ್ಲ. ಏಕೆಂದರೆ, ಕೇಂದ್ರಮಟ್ಟದವರೂ ಈ ಬಲೆಯಲ್ಲಿ ಸಿಲುಕಿದ್ದಾರೆ ಎನ್ನಲಾಗಿದೆ. ಈ ಕಾರಣಕ್ಕೆ ಹಲವರು ಸ್ಟೇ ತಂದಿದ್ದಾರೆ ಎಂದರು. ಮಂಡ್ಯದಲ್ಲಿ ಕೃಷಿ ವಿವಿ ಆಗುತ್ತಿರುವುದು ರೈತರಿಗೆ ಹೆಚ್ಚು ಅನುಕೂಲವಾಗುತ್ತದೆ. ಆದರೆ, ಇದಕ್ಕೆ ವಿರೋಧ ವ್ಯಕ್ತಪಡಿಸುತ್ತಿರುವ ಸಹೋದರ ಎಚ್.ಡಿ.ರೇವಣ್ಣ ಅವರಿಗೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಬುದ್ದಿ ಹೇಳದೆ ಮೌನವಾಗಿದ್ದಾರೆ. ಏಕೆಂದರೆ, ಅವರು ಯಾವತ್ತೂ ಮಂಡ್ಯ ಅಭಿವೃದ್ಧಿ ಸಹಿಸುವುದಿಲ್ಲ ಎಂದು ಚಲುವರಾಯಸ್ವಾಮಿ ಟೀಕಿಸಿದರು.
ಸರಕಾರ ಅಧಿಕಾರಕ್ಕೆ ಬಂದ ನಂತರ 83 ಕಾಯ್ದೆಗಳ ಅಧಿಸೂಚನೆ : ಎಚ್.ಕೆ.ಪಾಟೀಲ್
ಬೆಂಗಳೂರು : ಕಾಂಗ್ರೆಸ್ ಸರಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ನಂತರ 83 ಕಾಯ್ದೆಗಳ ಅಧಿಸೂಚನೆಯನ್ನು ಹೊರಡಿಸಲಾಗಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ್ ತಿಳಿಸಿದ್ದಾರೆ. ಬುಧವಾರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಹಿಂದಿನ 22 ತಿಂಗಳ ಅವಧಿಯಲ್ಲಿ ನಮ್ಮ ಇಲಾಖೆ ಸಂತೃಪ್ತಿ ತರುವ ರೀತಿಯಲ್ಲಿ ಕಾರ್ಯ ನಿರ್ವಹಿಸಿದೆ ಎಂದರು. ಈ ಬಾರಿ ನಡೆದ ಬಜೆಟ್ ಅಧಿವೇಶನದಲ್ಲಿ ಗ್ರೇಟರ್ ಬೆಂಗಳೂರು, ಮೈಕ್ರೋ ಫೈನಾನ್ಸ್, ಬೆಂಗಳೂರು ಅರಮನೆ ಸೇರಿದಂತೆ 28 ವಿಧೇಯಕಗಳನ್ನು ವಿಧಾನಮಂಡಲದಲ್ಲಿ ಅಂಗೀಕರಿಸಲಾಗಿದ್ದು, ಇದರಲ್ಲಿ ಈಗಾಗಲೇ 5 ವಿಧೇಯಕಗಳಿಗೆ ರಾಜ್ಯಪಾಲರ ಅಂಕಿತವೂ ದೊರೆತಿದೆ ಎಂದು ಎಚ್.ಕೆ.ಪಾಟೀಲ್ ಹೇಳಿದರು. 2023ರ ಆಗಸ್ಟ್ ನಂತರ ಉಳಿದ 22 ವಿಧೇಯಕಗಳನ್ನು ಪರಿಶೀಲನಾ ಸಮಿತಿಯಿಂದ ಅನುಮೋದಿಸಿದ್ದು, 17 ವಿಧೇಯಕಗಳು ಉಭಯ ಸದನಗಳಲ್ಲಿ ಅನುಮೋದನೆ ಪಡೆದು ಅಧಿನಿಯಮಗಳಾಗಿ ರಾಜ್ಯಪತ್ರದಲ್ಲಿ ಅಧಿಕೃತವಾಗಿ ಪ್ರಕಟವಾಗಿವೆ. 2024ರಲ್ಲಿ 47 ವಿಧೇಯಕಗಳು ಅಧಿನಿಯಮಗಳಾಗಿ ಪ್ರಕಟವಾಗಿವೆ ಎಂದು ಎಚ್.ಕೆ.ಪಾಟೀಲ್ ತಿಳಿಸಿದರು. 2025ರಲ್ಲಿ 41 ವಿಧೇಯಕಗಳನ್ನು ಪರಿಶೀಲನಾ ಸಮಿತಿ ಅನುಮೋದಿಸಿದ್ದು, 28 ವಿಧೇಯಕಗಳು ಎರಡೂ ಸದನದಲ್ಲಿ ಅಂಗೀಕಾರಗೊಂಡಿವೆ. ರಾಜ್ಯಪಾಲರಿಂದ ಇನ್ನು ಸುಮಾರು 11 ವಿಧೇಯಕಗಳು ಅನುಮೋದನೆ ಆಗಬೇಕಿದೆ. 7 ವಿಧೇಯಕಗಳಿಗೆ ಸಂಬಂಧಿಸಿದಂತೆ ಸ್ಪಷ್ಟೀಕರಣವನ್ನು ಕೋರಿದ್ದಾರೆ. 5 ವಿಧೇಯಕಗಳು ರಾಷ್ಟ್ರಪತಿಗಳ ಅಂಕಿತಕ್ಕಾಗಿ ಬಾಕಿ ಉಳಿದಿವೆ. 20 ವಿಧೇಯಕಗಳನ್ನು ರಾಜ್ಯಪಾಲರಿಗೆ ಕಳುಹಿಸಲಾಗಿದೆ. ಒಟ್ಟಾರೆ 119 ವಿಧೇಯಕಗಳನ್ನು ಕಳುಹಿಸಿದ್ದು, 110 ವಿಧೇಯಕಗಳು ಅಧಿನಿಯಮವಾಗುವ ಸಾಧ್ಯತೆ ಇದೆ ಎಂದು ಎಚ್.ಕೆ.ಪಾಟೀಲ್ ವಿವರಿಸಿದರು. ಕಾನೂನು ನೀತಿಯನ್ನು ಜಾರಿಗೆ ತಂದು ಕಾನೂನು ಸುಧಾರಣೆಗೆ ಒತ್ತು ಕೊಟ್ಟಿದ್ದೇವೆ. ಸಾಮಾಜಿಕ ನ್ಯಾಯ, ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಗುತ್ತಿಗೆಯಲ್ಲಿ ಮೀಸಲಾತಿ ನೀಡುವುದು, ತಂಬಾಕು ಬೆಳೆಗಾರರ ಹಿತ ಕಾಪಾಡುವುದು, ವಕೀಲರ ಮೇಲಿನ ಹಿಂಸಾಚಾರ ತಡೆಯುವುದು, ಪರೀಕ್ಷಾ ಅಕ್ರಮ ತಡೆಯಲು 10 ವರ್ಷಗಳ ಕಠಿಣ ಶಿಕ್ಷೆ ವಿಧಿಸುವಂತಹ ವಿಧೇಯಕಗಳನ್ನು ತಂದಿದ್ದೇವೆ ಎಂದು ಎಚ್.ಕೆ.ಪಾಟೀಲ್ ಹೇಳಿದರು.
ಅಮೆರಿಕಕ್ಕೆ ಚೀನಾದಿಂದ ಹೆಚ್ಚಿನ ಮಿಲಿಟರಿ, ಸೈಬರ್ ಬೆದರಿಕೆ: ಅಮೆರಿಕದ ಗುಪ್ತಚರ ಸಂಸ್ಥೆ ವರದಿ
ವಾಷಿಂಗ್ಟನ್: ಅಮೆರಿಕದ ಗುಪ್ತಚರ ಏಜೆನ್ಸಿಗಳು ಚೀನಾವನ್ನು ಅಮೆರಿಕಕ್ಕೆ ಪ್ರಾಥಮಿಕ ಮಿಲಿಟರಿ ಮತ್ತು ಸೈಬರ್ ಬೆದರಿಕೆ ಎಂದು ಗುರುತಿಸಿದ್ದು, ಚೀನಾವು ತೈವಾನ್ ಮೇಲೆ ಹಿಡಿತ ಸಾಧಿಸುವ ಸಾಮರ್ಥ್ಯವನ್ನು ಹೆಚ್ಚಿಸುತ್ತಲೇ ಇದೆ ಎಂದು ಹೇಳಿರುವುದಾಗಿ `ತೈಪೆ ಟೈಮ್ಸ್' ವರದಿ ಮಾಡಿದೆ. ಏಜೆನ್ಸಿಗಳು ಅಮೆರಿಕಕ್ಕೆ ಬೆದರಿಕೆಯನ್ನು ಎರಡು ಪ್ರಮುಖ ಗುಂಪುಗಳಾಗಿ ವರ್ಗೀಕರಿಸಿವೆ. ಒಂದು ಗುಂಪಿನಲ್ಲಿ ರಾಷ್ಟ್ರೇತರ ಬಹುರಾಷ್ಟ್ರೀಯ ದೇಶೀಯ ಅಪರಾಧಿಗಳು ಮತ್ತು ಭಯೋತ್ಪಾದಕರು ಹಾಗೂ ಮತ್ತೊಂದು ಗುಂಪಿನಲ್ಲಿ ರಶ್ಯ, ಚೀನಾ, ಇರಾನ್ ಮತ್ತು ಉತ್ತರ ಕೊರಿಯಾಗಳನ್ನು ಒಳಗೊಂಡ ಪ್ರಮುಖ ರಾಷ್ಟ್ರಗಳಿವೆ ಎಂದು ವರದಿ ಹೇಳಿದೆ. ಚೀನಾವು ವಿಶ್ವದಾದ್ಯಂತದ ಅಮೆರಿಕದ ಹಿತಾಸಕ್ತಿಗಳಿಗೆ ಬೆದರಿಕೆಯೊಡ್ಡುವ ಹೆಚ್ಚಿನ ಸಾಮರ್ಥ್ಯವಿರುವ ದೇಶವೆಂದು ಗುರುತಿಸಲಾಗಿದೆ. ಚೀನಾದ ಮಿಲಿಟರಿಯು ಹೈಪರ್ಸಾನಿಕ್ ಆಯುಧಗಳು, ಸ್ಟೆಲ್ತ್ ವಿಮಾನಗಳು, ಅತ್ಯಾಧುನಿಕ ಸಬ್ಮೆರಿನ್ ಗಳು, ವರ್ಧಿತ ಬಾಹ್ಯಾಕಾಶ ಮತ್ತು ಸೈಬರ್ ಸಾಮರ್ಥ್ಯದಂತಹ ಅತ್ಯಾಧುನಿಕ ತಂತ್ರಜ್ಞಾನವನ್ನು ಹಾಗೂ ಪರಮಾಣು ಶಸ್ತ್ರಾಸ್ತ್ರಗಳ ದೊಡ್ಡ ದಾಸ್ತಾನುಗಳನ್ನು ಹೊಂದಿವೆ ಎಂದು ಅಮೆರಿಕದ ರಾಷ್ಟ್ರೀಯ ಗುಪ್ತಚರ ನಿರ್ದೇಶಕಿ ತುಳಸಿ ಗಬ್ಬಾರ್ಡ್ ಸಂಸತ್ ನ ಗುಪ್ತಚರ ಸಮಿತಿಯ ಎದುರು ಹೇಳಿಕೆ ನೀಡಿರುವುದಾಗಿ ತೈವಾನ್ ಟೈಮ್ಸ್ ವರದಿ ಹೇಳಿದೆ. ತುಳಸಿ ಗಬ್ಬಾರ್ಡ್ ಪ್ರಕಾರ, ಚೀನಾ ತನ್ನ ಮಿಲಿಟರಿ ಸಾಮರ್ಥ್ಯಗಳನ್ನು ಭಾಗಶಃ ಹೆಚ್ಚಿಸುತ್ತಿದೆ. ತೈವಾನ್ನೊಂದಿಗಿನ ಏಕೀಕರಣದ ಆಶಯವನ್ನು ಸಾಧಿಸುವ ಪ್ರಯತ್ನದಲ್ಲಿ ಅಮೆರಿಕದೊಂದಿಗಿನ ಸಂಭಾವ್ಯ ಮಿಲಿಟರಿ ಸಂಘರ್ಷದ ಸಂದರ್ಭದಲ್ಲಿ ಪ್ರಯೋಜನವನ್ನು ಪಡೆದುಕೊಳ್ಳುವುದು ಇದರ ಉದ್ದೇಶವಾಗಿದೆ. ತೈವಾನ್ ಮೇಲೆ ಹಿಡಿತ ಸಾಧಿಸಲು, ಅಮೆರಿಕದ ಮಿಲಿಟರಿಯನ್ನು ಎದುರಿಸಲು ಚೀನಾವು ತನ್ನ ಮಿಲಿಟರಿ ಸಾಮರ್ಥ್ಯವನ್ನು ಸ್ಥಿರವಾಗಿ ಮತ್ತು ಅಸಮವಾಗಿ ಅಭಿವೃದ್ಧಿಗೊಳಿಸುತ್ತಿದೆ. ತೈವಾನ್ ಅಧಿಕೃತವಾಗಿ ಸ್ವಾತಂತ್ರ್ಯವನ್ನು ಪಡೆಯುವ ಪ್ರಯತ್ನ ನಡೆಸಿದರೆ ಚೀನಾವು ತೈವಾನ್ ವಿರುದ್ಧದ ಆರ್ಥಿಕ ಒತ್ತಡವನ್ನು ತೀವ್ರಗೊಳಿಸುವ ನಿರೀಕ್ಷೆಯಿದೆ. ತೈವಾನ್ನಿಂದ ಆಮದನ್ನು ನಿಷೇಧಿಸುವ ಮೂಲಕ ಒತ್ತಡ ತೀವ್ರಗೊಳಿಸುವ ಸಾಧ್ಯತೆಯಿದೆ ಎಂದು ವರದಿ ಹೇಳಿದೆ.
‘ಹನಿಟ್ರ್ಯಾಪ್’ ಅನಿಷ್ಟ ಪದ್ಧತಿಯಿಂದ ರಾಜ್ಯಕ್ಕೆ ಕೆಟ್ಟ ಹೆಸರು: ಎಂ.ಬಿ.ಪಾಟೀಲ್
ಬೆಂಗಳೂರು : ಹನಿಟ್ರ್ಯಾಪ್ ಅನಿಷ್ಟ ಪದ್ಧತಿಯಾಗಿದೆ. ಇದರಿಂದ ರಾಜ್ಯಕ್ಕೆ ಕೆಟ್ಟ ಹೆಸರು ಬರುತ್ತಿದೆ ಎಂದು ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬುಧವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹನಿಟ್ರ್ಯಾಪ್ನಿಂದ ರಾಜ್ಯಕ್ಕೆ ಕೆಟ್ಟ ಹೆಸರು ಬರುತ್ತಿದೆ. ಸುಪ್ರೀಂ ಕೋರ್ಟ್ ಸಹ ಈ ಪ್ರಕರಣವನ್ನು ವಜಾ ಮಾಡಿದೆ ಎಂದು ಹೇಳಿದರು. ಸಚಿವ ಕೆ.ಎನ್.ರಾಜಣ್ಣ ವಿರುದ್ಧ ನಡೆದಿರುವ ಹನಿಟ್ರ್ಯಾಪ್ ಯತ್ನ ಪ್ರಕರಣದ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿದ ಎಂ.ಬಿ.ಪಾಟೀಲ್, ಒಬ್ಬರನ್ನು ರಾಜಕೀಯವಾಗಿ ಮುಗಿಸಲು, ಬೆದರಿಕೆ ಹಾಕುವುದಕ್ಕೆ ಹನಿಟ್ರ್ಯಾಪ್ ಬಳಸಿಕೊಳ್ಳುವುದು ಹೀನಕೃತ್ಯ. ಹನಿಟ್ರ್ಯಾಪ್ ವಿಚಾರವಾಗಿ ಕೆ.ಎನ್.ರಾಜಣ್ಣ ಪೊಲೀಸರಿಗೆ ದೂರು ನೀಡಲು ಹಿಂದೇಟು ಹಾಕಿರುವುದು ಅವರಿಗೆ ಬಿಟ್ಟ ವಿಚಾರವಾಗಿದೆ ಎಂದು ತಿಳಿಸಿದರು. ನಾರಾಯಣಪುರ ಡ್ಯಾಂ ನೀರು ಬಿಟ್ಟ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಎಂ.ಬಿ.ಪಾಟೀಲ್, 10 ಟಿಎಂಸಿ ನೀರು ಬಿಡಲು ಸಾಧ್ಯವಿಲ್ಲ. ಒಂದು ಟಿಎಂಸಿ ನೀರು ಬಿಟ್ಟಿರಬಹುದು ಎಂದು ಹೇಳಿದರು.
ದಕ್ಷಿಣ ಕೊರಿಯಾದಲ್ಲಿ ನಿಯಂತ್ರಣಕ್ಕೆ ಬಾರದ ಕಾಡ್ಗಿಚ್ಚು
ಸಿಯೋಲ್: ದಕ್ಷಿಣ ಕೊರಿಯಾ ತನ್ನ ಇತಿಹಾಸದಲ್ಲೇ ಅತ್ಯಂತ ವಿನಾಶಕಾರಿ ಕಾಡ್ಗಿಚ್ಚಿನ ಆಘಾತಕ್ಕೆ ತತ್ತರಿಸಿದ್ದು ಬಿರುಗಾಳಿಯಿಂದಾಗಿ ತೀವ್ರಗತಿಯಲ್ಲಿ ಹರಡುತ್ತಿರುವ ಜ್ವಾಲೆಗಳು ದೇಶದ ದಕ್ಷಿಣ ಪ್ರದೇಶಗಳನ್ನು ಸುಟ್ಟುಹಾಕಿದ್ದು ಕನಿಷ್ಠ 24 ಜೀವಗಳನ್ನು ಬಲಿ ಪಡೆದಿದೆ. 26 ಮಂದಿ ಗಾಯಗೊಂಡಿದ್ದು 27,000ಕ್ಕೂ ಅಧಿಕ ಮಂದಿಯನ್ನು ಸ್ಥಳಾಂತರಿಸಲಾಗಿದೆ ಎಂದು ಮೂಲಗಳನ್ನು ಉಲ್ಲೇಖಿಸಿದ ವರದಿ ಹೇಳಿದೆ. ಕಳೆದ ಶುಕ್ರವಾರ ಕಾಣಿಸಿಕೊಂಡಿದ್ದ ಕಾಡ್ಗಿಚ್ಚು ಮನೆಗಳು, ಫ್ಯಾಕ್ಟರಿಗಳು ಹಾಗೂ ಪುರಾತನ ಬೌದ್ಧ ದೇವಾಲಯ ಸೇರಿದಂತೆ 200ಕ್ಕೂ ಅಧಿಕ ರಚನೆಗಳನ್ನು ನಾಶಗೊಳಿಸಿದೆ. ಸುಮಾರು 43,330 ಎಕರೆ ಭೂಮಿಯನ್ನು ಸುಟ್ಟುಹಾಕಿದ್ದು ದಕ್ಷಿಣ ಕೊರಿಯಾದ ಅತೀ ಭೀಕರ ಕಾಡ್ಗಿಚ್ಚು ಎಂದು ಗುರುತಿಸಲಾಗಿದೆ. ಆಗ್ನೇಯ ಪಟ್ಟಣವಾದ ಯುಸೆಯೋಂಗ್ ನಲ್ಲಿ ಕಾಡ್ಗಿಚ್ಚು ನಿಯಂತ್ರಣ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದ ಹೆಲಿಕಾಪ್ಟರ್ ಪತನಗೊಂಡು ಪೈಲಟ್ ಮೃತಪಟ್ಟಿದ್ದಾನೆ. ಹೆಲಿಕಾಪ್ಟರ್ ನಲ್ಲಿ ಇತರ ಯಾವುದೇ ಸಿಬ್ಬಂದಿಗಳಿರಲಿಲ್ಲ ಎಂದು ಅಧಿಕಾರಿಗಳು ದೃಢಪಡಿಸಿದ್ದಾರೆ. ಕಾಡ್ಗಿಚ್ಚು ನಿಯಂತ್ರಿಸುವ ಕಾರ್ಯದಲ್ಲಿ ತೊಡಗಿದ್ದ ನಾಲ್ವರು ಅಗ್ನಿಶಾಮಕ ಸಿಬ್ಬಂದಿ ಹಾಗೂ ಸರಕಾರಿ ಸಿಬ್ಬಂದಿಗಳೂ ಮೃತಪಟ್ಟವರಲ್ಲಿ ಸೇರಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಕನಿಷ್ಠ 26 ಮಂದಿ ಗಾಯಗೊಂಡಿದ್ದು ಕಾಡ್ಗಿಚ್ಚನ್ನು ನಿಯಂತ್ರಿಸಲು ತುರ್ತು ಕಾರ್ಯಪಡೆ ಹರಸಾಹಸ ಪಡುತ್ತಿದೆ. 7ನೇ ಶತಮಾನದಲ್ಲಿ ನಿರ್ಮಿಸಲಾದ `ಗೌನ್ಸ' ಬೌದ್ಧ ದೇವಸ್ಥಾನದ ಒಂದು ಭಾಗ ಸುಟ್ಟುಹೋಗಿದೆ. ದೇವಸ್ಥಾನದ ಆವರಣದಲ್ಲಿದ್ದ ಸುಮಾರು 30 ರಚನೆಗಳಲ್ಲಿ ಅರ್ಧದಷ್ಟು ನಾಶವಾಗಿದ್ದು ಯುನೆಸ್ಕೋ ಪಟ್ಟಿಯಲ್ಲಿರುವ ಎರಡು `ಅಮೂಲ್ಯ ನಿಧಿ'ಗಳೂ ಇದರಲ್ಲಿ ಸೇರಿವೆ. ಆದರೆ, 8ನೇ ಶತಮಾನದ ಅವಧಿಗೆ ಸೇರಿದ ಕಲ್ಲಿನ ಬುದ್ಧನ ಪ್ರತಿಮೆಯನ್ನು ಯಶಸ್ವಿಯಾಗಿ ತೆರವುಗೊಳಿಸಿ ಸುರಕ್ಷಿತ ಸ್ಥಳದಲ್ಲಿ ಇರಿಸಲಾಗಿದೆ ಎಂದು ಸರ್ಕಾರದ ಮೂಲಗಳು ಹೇಳಿವೆ. 4,650 ಅಗ್ನಿಶಾಮಕ ಸಿಬ್ಬಂದಿ, ಯೋಧರು, ತುರ್ತು ಕಾರ್ಯ ಸಿಬ್ಬಂದಿಗಳು, 130 ಹೆಲಿಕಾಪ್ಟರ್ ಗಳನ್ನು ಕಾಡ್ಗಿಚ್ಚು ನಿಯಂತ್ರಣ ಕಾರ್ಯಕ್ಕೆ ಬಳಸಲಾಗಿದೆ. ಆದರೆ ರಾತ್ರಿ ವೇಳೆ ಬೀಸುವ ಬಲವಾದ ಗಾಳಿಗಳು ಕಾಡ್ಗಿಚ್ಚನ್ನು ಪ್ರಜ್ವಲಿಸುತ್ತಿದ್ದು ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ವ್ಯಾಪಕ ನಾಶ-ನಷ್ಟ ಸಂಭವಿಸಿದ್ದು ನಮ್ಮ ಎಲ್ಲಾ ಸಾಮರ್ಥ್ಯಗಳನ್ನು, ಮಾನವ ಸಂಪನ್ಮೂಲಗಳನ್ನು ಬಳಸಿ ಈ ವಾರಾಂತ್ಯದೊಳಗೆ ಕಾಡ್ಗಿಚ್ಚನ್ನು ನಿಯಂತ್ರಿಸುವ ವಿಶ್ವಾಸವಿದೆ' ಎಂದು ಟಿವಿ ವಾಹಿನಿಯಲ್ಲಿ ದೇಶವನ್ನುದ್ದೇಶಿಸಿ ಮಾತನಾಡಿದ ದಕ್ಷಿಣ ಕೊರಿಯಾದ ಹಂಗಾಮಿ ಅಧ್ಯಕ್ಷ ಹ್ಯಾನ್ ಡಕ್-ಸೂ ಹೇಳಿದ್ದಾರೆ. ಈ ಮಧ್ಯೆ, ಗುರುವಾರ ದಕ್ಷಿಣ ಕೊರಿಯಾದ ಹಲವೆಡೆ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಅಂಡಾಂಗ್, ಸ್ಯಾಂಚೆಯಾಂಗ್, ಯುಸೆಯಾಂಗ್, ಉಲ್ಸಾನ್ ಸೇರಿದಂತೆ ಹಲವಾರು ಆಗ್ನೇಯ ನಗರಗಳ ನಿವಾಸಿಗಳು ಸ್ಥಳಾಂತರಗೊಳ್ಳುವಂತೆ ಅಧಿಕಾರಿಗಳು ಸೂಚಿಸಿದ್ದಾರೆ. ಮುನ್ನೆಚ್ಚರಿಕೆ ಕ್ರಮವಾಗಿ ಚಿಯಾಂಗ್ ಸಾಂಗ್ ನ ಬಂಧನ ಕೇಂದ್ರದಿಂದ 500 ಮಂದಿಯನ್ನು ತೆರವುಗೊಳಿಸಲಾಗಿದೆ. ದಕ್ಷಿಣ ಕೊರಿಯಾದ ಅರಣ್ಯ ಸೇವಾ ಇಲಾಖೆಯು ರಾಷ್ಟ್ರೀಯ ಕಾಡ್ಗಿಚ್ಚು ಎಚ್ಚರಿಕೆಯನ್ನು `ಗಂಭೀರ ಮಟ್ಟ'ಕ್ಕೆ ಹೆಚ್ಚಿಸಿದೆ. ಅರಣ್ಯಗಳಿಗೆ ಪ್ರವೇಶವನ್ನು ನಿಷೇಧಿಸಲಾಗಿದ್ದು `ಗುಂಡಿನ ದಾಳಿ' ಅಭ್ಯಾಸವನ್ನು ಸ್ಥಗಿತಗೊಳಿಸುವಂತೆ ಮಿಲಿಟರಿ ತುಕಡಿಗಳಿಗೆ ಸೂಚಿಸಲಾಗಿದೆ. ►ಯುನೆಸ್ಕೋ ತಾಣಗಳಿಗೆ ಅಪಾಯ ಕಾಡ್ಗಿಚ್ಚಿನಿಂದ ಯುನೆಸ್ಕೋ(ವಿಶ್ವಸಂಸ್ಥೆಯ ಶೈಕ್ಷಣಿಕ, ವೈಜ್ಞಾನಿಕ ಮತ್ತು ಸಾಂಸ್ಕøತಿಕ ಸಂಸ್ಥೆ) ಗುರುತಿಸಿರುವ ಜನಪ್ರಿಯ ಪ್ರವಾಸೀ ತಾಣಗಳಾದ ಹಹೋ ಜಾನಪದ ಗ್ರಾಮ ಮತ್ತು ಬೈಯೊಂಗ್ಸನ್ ಸಿವೋನ್ ಗ್ರಾಮಗಳಿಗೆ ಅಪಾಯ ಎದುರಾಗಿದೆ. ಹುಲ್ಲಿನ ಛಾವಣಿಯ ಮನೆಗಳಿರುವ ಹಹೋ ಗ್ರಾಮದ ಕೇವಲ 5 ಕಿ.ಮೀ ದೂರದಲ್ಲಿ ಕಾಡ್ಗಿಚ್ಚು ಉರಿಯುತ್ತಿದೆ ಎಂದು ಬುಧವಾರ ಅಧಿಕಾರಿಗಳು ಹೇಳಿದ್ದಾರೆ.
ಸ್ಮಾರ್ಟ್ ಮೀಟರ್ ಪೂರೈಕೆ ಕಂಪೆನಿಗಳು ಕಪ್ಪು ಪಟ್ಟಿಯಲ್ಲಿಲ್ಲ: ಕೆ.ಜೆ.ಜಾರ್ಜ್ ಸ್ಪಷ್ಟನೆ
ಬೆಂಗಳೂರು : ರಾಜ್ಯದಲ್ಲಿ ಕಪ್ಪು ಪಟ್ಟಿಗೆ ಸೇರಿದ ಕಂಪೆನಿಗಳು ಸ್ಮಾರ್ಟ್ ವಿದ್ಯುತ್ ಮೀಟರ್ ಪೂರೈಕೆ ಮಾಡುತ್ತಿವೆ ಎನ್ನುವ ಬಿಜೆಪಿಗರ ಆರೋಪ ಸಂಪೂರ್ಣ ತಪ್ಪು. ಮೀಟರ್ ಪೂರೈಕೆ ಮಾಡುತ್ತಿರುವ ಕಂಪೆನಿಗಳು ಕಪ್ಪು ಪಟ್ಟಿಯಲ್ಲಿಲ್ಲ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ಸ್ಪಷ್ಟಪಡಿಸಿದ್ದಾರೆ. ಬುಧವಾರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಉತ್ತರ ಪ್ರದೇಶ ಸರಕಾರ ಎರಡು ವರ್ಷಗಳ ಕಾಲ ಕಂಪೆನಿಯನ್ನು ನಿರ್ಬಂಧಿಸಿದೆ ಆದರೆ, ಆ ಕಂಪೆನಿಯನ್ನು ಕಪ್ಪು ಪಟ್ಟಿಗೆ ಸೇರಿಸಲಾಗಿಲ್ಲ. ಇತರ 16 ರಾಜ್ಯಗಳು ಈ ಕಂಪೆನಿಗೆ ಗುತ್ತಿಗೆ ನೀಡಿವೆ ಎಂದರು. ಸ್ಮಾರ್ಟ್ ಮೀಟರ್ ಪೂರೈಕೆಗೆ ಬೆಸ್ಕಾಂನವರು ಟೆಂಡರ್ ಕರೆದಿದ್ದಾರೆ. ಮೂರು ವಿಭಾಗಗಳಲ್ಲಿ ಟೆಂಡರ್ ಕರೆದಿದ್ದಾರೆ. ಒಬ್ಬರು ಸ್ಮಾರ್ಟ್ ಮೀಟರ್ ಅಳವಡಿಸುತ್ತಾರೆ. ಸಿಮ್ ಕಾರ್ಡ್ ಹಾಕುವವರು ಬೇರೆ ಇರುತ್ತಾರೆ. ಟೆಂಡರ್ ಕೊಟ್ಟಿರುವುದರಲ್ಲಿ ತಪ್ಪಾಗಿದ್ದರೆ ತಡೆಯುತ್ತೇವೆ ಎಂದು ಕೆ.ಜೆ.ಜಾರ್ಜ್ ಹೇಳಿದರು. ಹೊಸ, ತಾತ್ಕಾಲಿಕ ವಿದ್ಯುತ್ ಸಂಪರ್ಕಕ್ಕೆ ಸ್ಮಾರ್ಟ್ ಮೀಟರ್ ಕಡ್ಡಾಯ: ರಾಜ್ಯದಲ್ಲಿ ಹೊಸ ಹಾಗೂ ತಾತ್ಕಾಲಿಕ ವಿದ್ಯುತ್ ಸಂಪರ್ಕಗಳಿಗೆ ಸ್ಮಾರ್ಟ್ ಮೀಟರ್ ವ್ಯವಸ್ಥೆ ಕಡ್ಡಾಯಗೊಳಿಸಲಾಗಿದೆ. ಕೇಂದ್ರ ಇಂಧನ ಸಚಿವಾಲಯವು ಫೆ.22ರಂದು ಹೊರಡಿಸಿದ್ದ ಅಧಿಸೂಚನೆಯನ್ವಯ ಕರ್ನಾಟಕ ಮತ್ತು ತೆಲಂಗಾಣ ಬಿಟ್ಟು ಬೇರೆ ಎಲ್ಲಾ ರಾಜ್ಯಗಳಲ್ಲಿ ಸ್ಮಾರ್ಟ್ ಮೀಟರ್ ಜಾರಿಗೆ ತರಲಾಗಿತ್ತು. ಇತ್ತೀಚಿಗೆ ಕೇಂದ್ರ ಇಂಧನ ಸಚಿವರನ್ನು ಭೇಟಿ ಮಾಡಿದಾಗ ಸ್ಮಾರ್ಟ್ ಮೀಟರ್ ಅಳವಡಿಸಲು ಸೂಚಿಸಿದರು ಎಂದು ಸಚಿವ ಕೆ.ಜೆ.ಜಾರ್ಜ್ ತಿಳಿಸಿದರು.
ಪುತ್ರಿಯ ಮೇಲೆ ಕಣ್ಣಿಡಲು ತಮ್ಮ ಪೊಲೀಸ್ ಹುದ್ದೆಯ ಪ್ರಭಾವ ಬಳಸಿಕೊಂಡಿದ್ದರೇ ಮಾಜಿ ಐಪಿಎಸ್ ಅಧಿಕಾರಿ ಕಿರಣ್ ಬೇಡಿ?
ಹೊಸದಿಲ್ಲಿ: 1972ರಲ್ಲಿ ಐಪಿಎಸ್ ಸೇವೆಗೆ ಸೇರ್ಪಡೆಗೊಂಡ ಪ್ರಪ್ರಥಮ ಮಹಿಳಾ ಅಧಿಕಾರಿ ಎಂಬ ಹೆಗ್ಗಳಿಕೆ ಹೊಂದಿರುವ ಹಾಗೂ ಪ್ರತಿಷ್ಠಿತ ರಾಮನ್ ಮ್ಯಾಗ್ಸೆಸೆ ಪ್ರಶಸ್ತಿ ಪುರಸ್ಕೃತರಾದ ಮಾಜಿ ಐಪಿಎಸ್ ಅಧಿಕಾರಿ ಹಾಗೂ ಮಾಜಿ ದಿಲ್ಲಿ ಲೆಫ್ಟಿನೆಂಟ್ ಗವರ್ನರ್ ಕಿರಣ್ ಬೇಡಿಯವರದ್ದು ವರ್ಣರಂಜಿತ ವೃತ್ತಿ ಬದುಕು. ಅವರು ತಿಹಾರ್ ಜೈಲಿನ ಅಧೀಕ್ಷಕರಾಗಿದ್ದಾಗ ಜಾರಿಗೊಳಿಸಿದ್ದ ಹಲವು ಸುಧಾರಣೆಗಳು ಆ ಕಾಲಕ್ಕೆ ಮನೆಮಾತಾಗಿದ್ದವು. ನಂತರ, ಅವರ ಸಾಧನೆಗೆ ಗರಿ ಸಿಕ್ಕಿಸಿದಂತೆ ವಿಶ್ವ ಸಂಸ್ಥೆಯ ಶಾಂತಿಪಾಲನಾ ಇಲಾಖೆಯ ನಾಗರಿಕ ಪೊಲೀಸ್ ಸಲಹೆಗಾರ್ತಿಯಾಗಿ ನೇಮಕಗೊಂಡಿದ್ದರು. ಈ ಹುದ್ದೆಗೆ ಈ ಹಿಂದೆಂದೂ ಭಾರತೀಯ ಮಹಿಳೆಯೊಬ್ಬರು ಏರಿರಲಿಲ್ಲ. ತಮ್ಮ ಮೂರು ದಶಕಗಳ ಪೊಲೀಸ್ ವೃತ್ತಿ ಜೀವನದಲ್ಲಿ ದಿಟ್ಟ ಪೊಲೀಸ್ ಅಧಿಕಾರಿಯೆಂದೇ ಹೆಸರಾಗಿದ್ದ ಕಿರಣ್ ಬೇಡಿ, ಇದೀಗ ತಮ್ಮ ಖಾಸಗಿ ವಿಷಯಕ್ಕಾಗಿ ಪೊಲೀಸ್ ಇಲಾಖೆಯ ಕೆಲ ಸಿಬ್ಬಂದಿಗಳನ್ನು ದುರ್ಬಳಕೆ ಮಾಡಿಕೊಂಡಿದ್ದ ಆರೋಪಕ್ಕೆ ಗುರಿಯಾಗಿದ್ದಾರೆ. 2003ರ ಸುಮಾರಿಗೆ ಬಾಲಿವುಡ್ ನಟಿ ಸಿಮಿ ಗರೆವಾಲ್ ರೊಂದಿಗೆ ಟಾಕ್ ಶೋನಲ್ಲಿ ಪಾಲ್ಗೊಂಡಿದ್ದ ಆಗ 20 ವರ್ಷ ವಯಸ್ಸಿನವರಾಗಿದ್ದ ಕಿರಣ್ ಬೇಡಿ ಅವರ ಪುತ್ರಿ ಸೈನಾ, ತಮ್ಮ ತಾಯಿಯ ವೃತ್ತಿ ಜೀವನ ಹಾಗೂ ತಮ್ಮಿಬ್ಬರ ನಡುವೆ ಇರುವ ಪರಸ್ಪರ ಪ್ರೀತಿಯ ಬಗ್ಗೆ ಮುಕ್ತವಾಗಿ ಮಾತನಾಡಿದ್ದರು. ಆದರೆ, ಸಿಮಿ ಗರೆವಾಲ್ ಟಾಕ್ ಶೋನಲ್ಲಿ ಸೈನಾ ಅವರು ತಮ್ಮ ತಾಯಿ ಕಿರಣ್ ಬೇಡಿ ಬಗ್ಗೆ ಹೇಳಿಕೊಂಡಿದ್ದಕ್ಕಿಂತ, ಅವರ ಖಾಸಗಿ ಬದುಕಿನ ಸಂಬಂಧ ಭಿನ್ನವಾಗಿತ್ತು. ಸೈನಾ ಅವರು ವಿವಾಹಿತ ಹೋಟೆಲ್ ಉದ್ಯಮಿಯಾದ ಗೋಪಿ ಸೂರಿಯೊಂದಿಗೆ ಸಂಬಂಧ ಹೊಂದಿರುವುದು, ಆತನೊಂದಿಗೆ ಅನುಮಾನಾಸ್ಪದ ವೀಸಾ ವ್ಯವಹಾರ ನಡೆಸುತ್ತಿರುವುದು ಹಾಗೂ ಆ ವೀಸಾ ವ್ಯವಹಾರಕ್ಕಾಗಿ ಪದೇ ಪದೇ ತಮ್ಮ ಹೆಸರನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವ ಬಗ್ಗೆ ಕಿರಣ್ ಬೇಡಿ ಅಸಮಾಧಾನಗೊಂಡಿದ್ದರು ಎನ್ನಲಾಗಿದೆ. 2003ರಲ್ಲಿ ಅವರು ವಿಶ್ವ ಸಂಸ್ಥೆಯ ಶಾಂತಿಪಾಲನಾ ಇಲಾಖೆಯ ನಾಗರಿಕ ಪೊಲೀಸ್ ಸಲಹೆಗಾರ್ತಿಯಾಗಿ ನೇಮಕಗೊಂಡ ನಂತರ, ತಮ್ಮ ಪುತ್ರಿಯ ನಡವಳಿಕೆಗಳ ಬಗ್ಗೆ ಅತೃಪ್ತಿ ಹೊಂದಿದ್ದ ಅವರು, ತಮ್ಮ ಕೆಲವು ಆಪ್ತ ಪೊಲೀಸ್ ಅಧಿಕಾರಿಗಳು ಹಾಗೂ ದಿಲ್ಲಿ ಪೊಲೀಸ್ ಸಿಬ್ಬಂದಿಗಳ ನೆರವಿನೊಂದಿಗೆ ತಮ್ಮ ಪುತ್ರಿಯ ಮೇಲೆ ಹದ್ದಿನ ಕಣ್ಣಿಟ್ಟಿದ್ದರು ಎಂಬ ಸಂಗತಿ ಇದೀಗ ಕಿರಣ್ ಬೇಡಿಯವರ ಸುಮಾರು 30 ಗಂಟೆಗಳ ಟೇಪ್ ನಿಂದ ಬಯಲಾಗಿದೆ ಎಂದು The News Minute ಹಾಗೂ News Laundry ಸುದ್ದಿ ಸಂಸ್ಥೆಗಳು ಜಂಟಿಯಾಗಿ ವರದಿ ಮಾಡಿವೆ. ನಿಮ್ಮ ತಾಯಿಯಿಂದ ನೀವು ಅನುವಂಶಿಕವಾಗಿ ಏನನ್ನು ಪಡೆದಿದ್ದೀರಿ ಎಂದು ಸಿಮಿ ಗರೆವಾಲ್ ಟಾಕ್ ಶೋನಲ್ಲಿ ಕೇಳಲಾಗಿದ್ದ ಪ್ರಶ್ನೆಗೆ, ‘ವಿಶ್ವಾಸಾರ್ಹತೆ’ ಎಂದು ಸೈನಾ ಉತ್ತರಿಸಿದ್ದರು. ಆದರೆ, ಹಿನ್ನೆಲೆಯಲ್ಲಿ ವಾಸ್ತವವೇ ಬೇರೆಯಾಗಿತ್ತು. ಇದಕ್ಕೂ ಮುನ್ನ, ‘ನಾನು ಕಾಳಜಿ ಇರುವ ತಾಯಿಯಾಗಿದ್ದೇನೆ” ಎಂದು ಅದೇ ಟಾಕ್ ಶೋನಲ್ಲಿ ಕಿರಣ್ ಬೇಡಿ ಕೂಡಾ ಹೇಳಿಕೊಂಡಿದ್ದರು. ಆದರೆ, ಈ ಮಾತು ಕಿರಣ್ ಬೇಡಿ ಹಾಗೂ ಅವರ ಪುತ್ರಿ ಸೈನಾರ ಖಾಸಗಿ ಜೀವನದಲ್ಲಿ ಯಥಾವತ್ತಾಗಿ ಅನ್ವಯವಾಗಿರಲಿಲ್ಲ ಎಂಬುದು ಇದೀಗ ಬಹಿರಂಗಗೊಂಡಿರುವ ಕಿರಣ್ ಬೇಡಿಯ ಟೇಪ್ ನಿಂದ ಬೆಳಕಿಗೆ ಬಂದಿದೆ. ಕಿರಣ್ ಬೇಡಿಯವರ ಬಯಲಾಗಿರುವ ಇಮೇಲ್ ಗಳ ಪ್ರಕಾರ, ಅವರ ಪುತ್ರಿ ಸೈನಾ, ಕೇಂದ್ರ ದಿಲ್ಲಿಯಲ್ಲಿರುವ ವಿವಾಹಿತ ಹೋಟೆಲ್ ಉದ್ಯಮಿ ಗೋಪಾಲ್ ಸುರೇಶ್ ರೊಂದಿಗೆ ಸಂಬಂಧ ಹೊಂದಿದ್ದರು. ಅಂತಾರಾಷ್ಟ್ರೀಯ ವೀಸಾದ ಅಗತ್ಯವಿರುವ ಜನರನ್ನು ಒಳಗೊಂಡ ಅನುಮಾನಾಸ್ಪದ ಹಣ ಮಾಡುವ ಯೋಜನೆಯಲ್ಲಿ ಅವರು ಭಾಗಿಯಾಗಿದ್ದರು. ಅದಕ್ಕಾಗಿ ಅವರು ಕಿರಣ್ ಬೇಡಿಯ ಹೆಸರನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದರು ಎಂಬ ಸಂಗತಿ ಬೆಳಕಿಗೆ ಬಂದಿದೆ. ತಮ್ಮ ಪುತ್ರಿ ಸೈನಾರ ಈ ವ್ಯವಹಾರಗಳ ಬಗ್ಗೆ ಅರಿವಿದ್ದ ಕಿರಣ್ ಬೇಡಿ, ಆಕೆಯ ವ್ಯವಹಾರಕ್ಕೆ ತಮ್ಮ ಸಮ್ಮತಿ ನೀಡಿರಲಿಲ್ಲ ಎನ್ನಲಾಗಿದೆ. ತಮ್ಮ ಒಂದು ಇಮೇಲ್ ನಲ್ಲಿ ಗೋಪಾಲ್ ಗೆ ಸೂರಿಯ ವ್ಯವಹಾರಕ್ಕೆ ಬೆಂಬಲ ನೀಡುವುದನ್ನು ಮುಂದುವರಿಸಿರುವ ತಮ್ಮ ಪುತ್ರಿಯ ನಡವಳಿಕೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಕಿರಣ್ ಬೇಡಿ, ಗೋಪಾಲ್ ಸೂರಿಯ ವ್ಯವಹಾರವನ್ನು ‘ಮಾನವ ಕಳ್ಳಸಾಗಣೆ’ ಎಂದೂ ತಮ್ಮ ಇಮೇಲ್ ನಲ್ಲಿ ಬಣ್ಣಿಸಿದ್ದಾರೆ. ಒಂದು ವೇಳೆ ಈ ವಿಚಾರದಲ್ಲಿ ತಮ್ಮ ಪುತ್ರಿ ಸೈನಾರನ್ನು ತನಿಖೆಗೊಳಪಡಿಸಿದರೆ, ತನ್ನ ಸಾರ್ವಜನಿಕ ವರ್ಚಸ್ಸಿಗೆ ಸರಿಪಡಿಸಲಾಗದಂಥ ಹಾನಿಯಾಗುವುದರ ಕುರಿತು ಅವರು ಆತಂಕಗೊಂಡಿರುವುದೂ ಆ ಇಮೇಲ್ ಗಳಲ್ಲಿ ವ್ಯಕ್ತವಾಗಿದೆ. ಒಂದು ಕಡೆ, ಹತಾಶ ತಾಯಿಯಂತೆ ತಮ್ಮ ಪುತ್ರಿಯ ನಡವಳಿಕೆಯನ್ನು ಬದಲಿಸಲು ಮುಂದಾಗಿರುವ ಕಿರಣ್ ಬೇಡಿ, ಅದಕ್ಕಾಗಿ ತಮಗೆ ನಿಕಟವಾಗಿದ್ದ ವ್ಯಕ್ತಿಗಳಿಂದ ಆಕೆಗೆ ತಿಳಿ ಹೇಳಿಸಿದ್ದರೆ, ಮತ್ತೊಂದು ಕಡೆ, ಓರ್ವ ಪೊಲೀಸ್ ಅಧಿಕಾರಿಯಾಗಿಯೂ ವರ್ತಿಸಿದ್ದಾರೆ. ಸಾರ್ವಜನಿಕ ಬದುಕಿನಲ್ಲಿ ಅವರು ತಮ್ಮನ್ನು ತಾವು ಭ್ರಷ್ಟಾಚಾರರಹಿತ ಪೊಲೀಸ್ ಅಧಿಕಾರಿ ಎಂದೇ ಬಿಂಬಿಸಿಕೊಂಡಿದ್ದರೂ, ತಮ್ಮ ಖಾಸಗಿ ಬದುಕಿನ ವಿಚಾರದಲ್ಲಿ ವ್ಯವಸ್ಥೆಯನ್ನು ತಮ್ಮ ಇಚ್ಛೆಗೆ ತಕ್ಕಂತೆ ಬಗ್ಗಿಸಿಕೊಂಡ ಶಕ್ತಿಶಾಲಿ ವ್ಯಕ್ತಿಯಂತೆಯೂ ವರ್ತಿಸಿರುವುದು ಬೆಳಕಿಗೆ ಬಂದಿದೆ. ವಿಶ್ವ ಸಂಸ್ಥೆಯ ಹುದ್ದೆಯನ್ನು ನಿರ್ವಹಿಸಲು ಅಮೆರಿಕಕ್ಕೆ ತೆರಳಿದ್ದ ಕಿರಣ್ ಬೇಡಿ, ಅಲ್ಲಿಂದಲೇ ದಿಲ್ಲಿಯಲ್ಲಿದ್ದ ತಮ್ಮ ಪುತ್ರಿಯ ಚಲನವಲನಗಳ ಮೇಲೆ ಹದ್ದಿನ ಕಣ್ಣಿಡಲು ತಮ್ಮ ಸ್ನೇಹಿತರು ಹಾಗೂ ಪೊಲೀಸ್ ಸಹೋದ್ಯೋಗಿಗಳ ನೆರವನ್ನು ಪಡೆದಿದ್ದಾರೆ. ಗೋಪಾಲ್ ಸೂರಿ ಹಾಗೂ ಸೈನಾರ ವಂಚನೆಯ ಬಗ್ಗೆ ಸಾರ್ವಜನಿಕರಿಗೆ ಎಚ್ಚರಿಕೆ ನೀಡುವ ಕ್ರಮವನ್ನೂ ಕಿರಣ್ ಬೇಡಿ ತೆಗೆದುಕೊಂಡಿರುವುದು ಅವರು ಹಾಗೂ ಮೇಲಿನ ವ್ಯಕ್ತಿಗಳ ನಡುವೆ ವಿನಿಮಯವಾಗಿರುವ ಕೆಲವು ಇಮೇಲ್ ಗಳಿಂದ ತಿಳಿದು ಬಂದಿದೆ. ಇದಲ್ಲದೆ, ಸೈನಾ ಹಾಗೂ ಗೋಪಾಲ್ ಸೂರಿ ದಂಪತಿಗಳ ಮೇಲೆ ಆಕ್ರಮಣಕಾರಿ ನಿಗಾವಣೆ ಇಡಲು ದಿಲ್ಲಿ ಪೊಲೀಸರೊಂದಿಗೆ ಅವರು ತಮ್ಮ ಅಧಿಕೃತ ಸಂಪರ್ಕಗಳನ್ನೂ ಬಳಸಿರುವುದು ಬಯಲಾಗಿದೆ. ಈ ನಿಗಾವಣೆ ಕಾರ್ಯಾಚರಣೆಯಲ್ಲಿ ಹಲವು ದಿಲ್ಲಿ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಭಾಗಿಯಾಗಿದ್ದು, ಈ ಪೈಕಿ ಸಹಾಯಕ ಪೊಲೀಸ್ ಆಯುಕ್ತರಾಗಿ ನಿವೃತ್ತರಾಗಿದ್ದ ವೇದ್ ಭೂಷಣ್, ಆಗ ಸಹಾಯಕ ಪೊಲೀಸ್ ಆಯಕ್ತರಾಗಿದ್ದ ರಾಜಿಂದರ್ ಸಿಂಗ್ ಹೆಸರುಗಳು ಪ್ರಮುಖವಾಗಿ ಕೇಳಿ ಬಂದಿವೆ. ಇದಲ್ಲದೆ, ತಮ್ಮ ಪುತ್ರಿ ಸೈನಾ ಹಾಗೂ ಆಕೆಯ ಸಂಗಾತಿ ಗೋಪಾಲ್ ಸೂರಿಯ ಚಲನವಲನಗಳ ಮೇಲೆ ನಿಗಾ ಇಡಲು ಖಾಸಗಿ ಪತ್ತೆದಾರರೊಬ್ಬರನ್ನೂ ಸುಮಾರು 20 ದಿನಗಳ ಕಾಲ ಬಳಸಿಕೊಂಡಿರುವುದು ಕಿರಣ್ ಬೇಡಿಯ ಇಮೇಲ್ ಗಳಿಂದ ಬಯಲಾಗಿದೆ. ದಕ್ಷ ಹಾಗೂ ದಿಟ್ಟ ಪೊಲೀಸ್ ಅಧಿಕಾರಿಯೆಂದೇ ಹೆಸರಾಗಿದ್ದ ಕಿರಣ್ ಬೇಡಿ, ತಮ್ಮ ಖಾಸಗಿ ವಿಷಯಕ್ಕೆ ದಿಲ್ಲಿ ಪೊಲೀಸರನ್ನು ಅನಧಿಕೃತವಾಗಿ ಬಳಸಿಕೊಂಡಿರುವುದು ಹಾಗೂ ತಮ್ಮ ಪುತ್ರಿ ಸೈನಾ ಹಾಗೂ ಆಕೆಯ ಸಂಗಾತಿ ಗೋಪಾಲ್ ಸೂರಿಯ ಚಲನವಲನಗಳ ಮೇಲೆ ಕಣ್ಗಾವಲು ಹಾಕುವ ಮೂಲಕ ಅವರ ಖಾಸಗಿ ಬದುಕನ್ನು ಉಲ್ಲಂಘಿಸಿರುವುದು ಈ ಇಮೇಲ್ ಗಳಿಂದ ಬಯಲಾಗಿದ್ದು, ಇದು ತೀವ್ರ ಚರ್ಚೆಗೆ ಗ್ರಾಸವಾಗಿದೆ. ಈ ಕುರಿತು The News Minute ಹಾಗೂ News Laundry ಸುದ್ದಿ ಸಂಸ್ಥೆಗಳು ಕಿರಣ್ ಬೇಡಿಯವರನ್ನು ಸಂಪರ್ಕಿಸಿದಾಗ, ಅವರು ತಮ್ಮ ಇಮೇಲ್ ಗಳನ್ನು ನಿರಾಕರಿಸಿಲ್ಲ. ಆದರೆ, ಕಿರಣ್ ಬೇಡಿ ಕಳಿಸಿದ್ದಾರೆನ್ನಲಾದ ಇಮೇಲ್ ಗಳು ತಮಗೆ ಸಂಬಂಧಪಟ್ಟಿವೆ ಎಂಬುದನ್ನು ನಿರಾಕರಿಸಿರುವ ನಿವೃತ್ತ ಸಹಾಯಕ ಪೊಲೀಸ್ ಆಯುಕ್ತ ವೇದ್ ಭೂಷಣ್, ಆ ಇಮೇಲ್ ಖಾತೆ ನನ್ನದಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಈ ನಡುವೆ, ಅನುಮಾನಾಸ್ಪದ ವೀಸಾ ವ್ಯವಹಾರದಲ್ಲಿ ತೊಡಗಿದ್ದ ಸೈನಾ ಹಾಗೂ ಗೋಪಾಲ್ ಸೂರಿ ಜೋಡಿ, ಆಂತಾರಾಷ್ಟ್ರೀಯ ವೀಸಾ ಕೋರಿ ತಮ್ಮ ಬಳಿ ಬರುವ ಗ್ರಾಹಕರಿಗೆ ವಂಚಿಸುತ್ತಿದ್ದರು ಹಾಗೂ ತಮ್ಮ ಗ್ರಾಹಕರಿಗೆ ವೀಸಾ ಒದಗಿಸಲು ರಾಜತಾಂತ್ರಿಕ ಅಧಿಕಾರಿಗಳಿಗೆ ಹೆಣ್ಣು, ಮದ್ಯ ಹಾಗೂ ಹಣದ ಆಮಿಷವೊಡ್ಡುತ್ತಿದ್ದರು ಎಂಬ ಗಂಭೀರ ಆರೋಪಗಳೂ ಈ ಇಮೇಲ್ ಗಳಲ್ಲಿ ವ್ಯಕ್ತವಾಗಿದೆ. ಕೃಪೆ: newslaundry.com
ಪತ್ರಕರ್ತನೊಂದಿಗೆ ಹಂಚಿಕೊಂಡ ಯೆಮನ್ ಯುದ್ಧಯೋಜನೆಯ ಸಂದೇಶ `ಅಧಿಕೃತ' ಆಗಿರಬಹುದು: ಅಮೆರಿಕ ಅಧಿಕಾರಿಯ ಹೇಳಿಕೆ
ವಾಷಿಂಗ್ಟನ್: ಯೆಮನ್ ನ ಹೌದಿಗಳ ಮೇಲೆ ಅಮೆರಿಕ ನಡೆಸಿದ ವೈಮಾನಿಕ ದಾಳಿಯ ಮಾಹಿತಿಯನ್ನು `ದಿ ಅಟ್ಲಾಂಟಿಕ್'ನ ಮುಖ್ಯ ಸಂಪಾದಕ ಜೆಫ್ರಿ ಗೋಲ್ಡ್ಬರ್ಗ್ ಜತೆ ಹಂಚಿಕೊಂಡಿರುವುದು `ಅಧಿಕೃತ' ಆಗಿರಬಹುದು ಎಂದು ಶ್ವೇತಭವನದ ಅಧಿಕಾರಿಯೊಬ್ಬರು ಹೇಳಿದ್ದಾರೆ. ಟ್ರಂಪ್ ಆಡಳಿತದ ಸದಸ್ಯರು ಅಸುರಕ್ಷಿತ `ಗ್ರೂಪ್ ಚಾಟ್'ನಲ್ಲಿ ಹೆಚ್ಚು ಸೂಕ್ಷ್ಮ ಯುದ್ಧ ಮಾಹಿತಿಗಳನ್ನು ಸಂಘಟಿಸಿದ್ದಾರೆ ಎಂದು ಗೋಲ್ಡ್ಬರ್ಗ್ ಸೋಮವಾರ ಪ್ರಕಟಗೊಂಡಿದ್ದ ವರದಿಯಲ್ಲಿ ಉಲ್ಲೇಖಿಸಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿರುವ ಶ್ವೇತಭವನದ ರಾಷ್ಟ್ರೀಯ ಭದ್ರತಾ ಮಂಡಳಿ ವಕ್ತಾರ ಬ್ರಿಯಾನ್ ಹ್ಯೂಸ್ ` ಈ ಸಮಯದಲ್ಲಿ ವರದಿಯಾದ `ಗ್ರೂಪ್ ಸಂದೇಶ' ಅಧಿಕೃತವೆಂದು ತೋರುತ್ತದೆ ಮತ್ತು ಈ ಗ್ರೂಪ್ ಗೆ ಅಜಾಗರೂಕ ಸಂಖ್ಯೆಯನ್ನು ಹೇಗೆ ಸೇರಿಸಲಾಗಿದೆ ಎಂಬುದನ್ನು ನಾವು ಪರಿಶೀಲಿಸುತ್ತಿದ್ದೇವೆ. `ಗ್ರೂಪ್' ಹಿರಿಯ ಅಧಿಕಾರಿಗಳ ನಡುವಿನ ಆಳವಾದ ಮತ್ತು ಚಿಂತನಶೀಲ ನೀತಿ ಸಮನ್ವಯದ ವೇದಿಕೆಯಾಗಿದೆ. ಹೌದಿ ಕಾರ್ಯಾಚರಣೆಯ ಯಶಸ್ಸು ನಮ್ಮ ಸೇವಾ ಸದಸ್ಯರಿಗೆ ಅಥವಾ ನಮ್ಮ ರಾಷ್ಟ್ರೀಯ ಭದ್ರತೆಗೆ ಯಾವುದೇ ಬೆದರಿಕೆಗಳಿಲ್ಲ ಎಂಬುದನ್ನು ತೋರಿಸುತ್ತದೆ' ಎಂದು ಹೇಳಿರುವುದಾಗಿ `ಎಬಿಸಿ ನ್ಯೂಸ್' ವರದಿ ಮಾಡಿದೆ. ಆದರೆ ರಕ್ಷಣಾ ಕಾರ್ಯದರ್ಶಿ ಪೀಟ್ ಹೆಗ್ಸೆಥ್ ಅವರು ಗೋಲ್ಡ್ಬರ್ಗ್ ಅವರ ಹೇಳಿಕೆಯನ್ನು ನಿರಾಕರಿಸಿದ್ದಾರೆ. ಗೋಲ್ಡ್ಬರ್ಗ್ ಅವರ ಹೇಳಿಕೆಯನ್ನು ನಾನು ಗಮನಿಸಿದ್ದೇನೆ. ಆದರೆ ಯುದ್ಧ ಯೋಜನೆಗಳನ್ನು ಯಾರಾದರೂ `ಗ್ರೂಪ್ ಚಾಟ್'ನಲ್ಲಿ ಹಂಚಿಕೊಳ್ಳುತ್ತಾರೆಯೇ? ಗೋಲ್ಡ್ಬರ್ಗ್ ಓರ್ವ ಮೋಸದ ಮತ್ತು ಅಪಖ್ಯಾತಿ ಪಡೆದ ಪತ್ರಕರ್ತರೆಂದೇ ಗುರುತಿಸಲ್ಪಟ್ಟವರು. ಅವರು ಆಗಿಂದಾಗ್ಗೆ ಇಂತಹ ವಂಚನೆಯನ್ನು ಮಾಡುತ್ತಾ ಇರುತ್ತಾರೆ. ಕಸದಲ್ಲಿ ಓಡಾಡುವ ವ್ಯಕ್ತಿ ಆತ. ಅವನು ಮಾಡುತ್ತಿರುವುದೂ ಇದನ್ನೇ' ಎಂದು ಟೀಕಿಸಿದ್ದಾರೆ. `ಗ್ರೂಪ್ ಚಾಟ್'ನಲ್ಲಿ ರಕ್ಷಣಾ ಕಾರ್ಯದರ್ಶಿ ಪೀಟ್ ಹೆಗ್ಸೆಥ್, ಉಪಾಧ್ಯಕ್ಷ ಜೆ.ಡಿ.ವ್ಯಾನ್ಸ್, ಶ್ವೇತಭವನದ ರಾಷ್ಟ್ರೀಯ ಭದ್ರತಾ ಸಲಹೆಗಾರ ಮೈಕ್ ವಾಲ್ಟ್ಸ್, ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಹಾಗೂ ಇತರರು ಇದ್ದಾರೆ ಎಂದು ಗೋಲ್ಡ್ಬರ್ಗ್ ಹೇಳಿದ್ದಾರೆ. ಯೆಮನ್ ನ ಹೌದಿಗಳ ವಿರುದ್ಧ ಬೃಹತ್ ಮಿಲಿಟರಿ ಕಾರ್ಯಾಚರಣೆಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾರ್ಚ್ 15ರಂದು ಚಾಲನೆ ನೀಡಿದ್ದರು. ದಾಳಿ ಆರಂಭವಾಗುವ ಕೆಲ ಗಂಟೆಗಳ ಮೊದಲು ರಕ್ಷಣಾ ಕಾರ್ಯದರ್ಶಿ ಪೀಟ್ ಹೆಗ್ಸೆಥ್ ಮೆಸೇಜಿಂಗ್ ಗ್ರೂಪ್ನಲ್ಲಿ ಯೋಜನೆಯ ಬಗ್ಗೆ, ಕಾರ್ಯಾಚರಣೆಯ ವಿವರಗಳನ್ನು, ಉದ್ದೇಶಿತ ಗುರಿಗಳ ಬಗ್ಗೆ, ಅಮೆರಿಕ ಬಳಸುವ ಶಸ್ತ್ರಾಸ್ತ್ರಗಳ ಬಗ್ಗೆ ಪೋಸ್ಟ್ ಮಾಡಿದ್ದಾರೆ. ಇದು ಸಿಗ್ನಲ್ ಚಾಟ್ನ ಆಘಾತಕಾರಿ ಅಜಾಗರೂಕ ಬಳಕೆ ಎಂದು ಗೋಲ್ಡ್ಬರ್ಗ್ ಹೇಳಿದ್ದಾರೆ. ಈ ಮಧ್ಯೆ, ತಪ್ಪಾಗಿ ಚಾಟ್ಗ್ರೂಪ್ ನಲ್ಲಿ ಹಂಚಿಕೊಂಡಿರುವ ದಾಳಿಯ ಯೋಜನೆಯನ್ನು ಬುಧವಾರದ ಸಂಚಿಕೆಯಲ್ಲಿ `ದಿ ಅಟ್ಲಾಂಟಿಕ್ ' ಸಂಪೂರ್ಣವಾಗಿ ಪ್ರಕಟಿಸಿದೆ. ಈ ವರದಿಯಲ್ಲಿ `ಮೈಕೆಲ್ ವಾಲ್ಟ್ಸ್ ಎಂದು ಗುರುತಿಸಿಕೊಂಡ ಬಳಕೆದಾರರು ಸಿಗ್ನಲ್ ಚಾಟ್ನಲ್ಲಿ ತನಗೆ ಸಂಪರ್ಕದ ಕೋರಿಕೆ ಕಳುಹಿಸಿದ್ದರು. ಎರಡು ದಿನಗಳ ಬಳಿಕ ತನ್ನನ್ನು `ಹೌದಿ ಪಿಸಿ ಸ್ಮಾಲ್ ಗ್ರೂಪ್'ಗೆ ಸೇರಿಸಲಾಗಿತ್ತು. ಈ ಗ್ರೂಪ್ ನ ಲ್ಲಿ ಸೂಕ್ಷ್ಮ ರಾಜಕೀಯ ವಿಷಯಗಳನ್ನು ಚರ್ಚಿಸಲಾಗುತ್ತಿತ್ತು ' ಎಂದು ಗೋಲ್ಡ್ಬರ್ಗ್ ಪ್ರತಿಪಾದಿಸಿದ್ದಾರೆ.
ಮಹಾದೇವ್ ಬೆಟ್ಟಿಂಗ್ ಆ್ಯಪ್ ಪ್ರಕರಣ | ಮಾಜಿ ಸಿಎಂ ಭೂಪೇಶ್ ಬಾಘೇಲ್ ನಿವಾಸದ ಮೇಲೆ ಸಿಬಿಐ ದಾಳಿ
ಹೊಸದಿಲ್ಲಿ: ಮಹಾದೇವ್ ಬೆಟ್ಟಿಂಗ್ ಆ್ಯಪ್ ಪ್ರಕರಣಕ್ಕೆ ಸಂಬಂಧಿಸಿ ಕಾಂಗ್ರೆಸ್ ನ ಪ್ರಧಾನ ಕಾರ್ಯದರ್ಶಿ ಹಾಗೂ ಚತ್ತೀಸ್ ಗಢದ ಮಾಜಿ ಮುಖ್ಯಮಂತ್ರಿ ಭೂಪೇಶ್ ಬಾಘೇಲ್ ಅವರ ನಿವಾಸಗಳ ಮೇಲೆ ಸಿಬಿಐ ಬುಧವಾರ ದಾಳಿ ನಡೆಸಿದೆ. ದಿಲ್ಲಿಯಲ್ಲಿರುವ ಕಾಂಗ್ರೆಸ್ ನ ಕೇಂದ್ರ ಕಚೇರಿಯಲ್ಲಿ ನಡೆಯುವ ಸಭೆಯಲ್ಲಿ ಪಾಲ್ಗೊಳ್ಳುವ ಮುನ್ನ ಭೂಪೇಶ್ ಬಾಘೇಲ್ ಅವರ ರಾಯ್ಪುರ ಹಾಗೂ ಭಿಲಾಯಿಯಲ್ಲಿರುವ ನಿವಾಸಗಳಿಗೆ ಸಿಬಿಐ ಅದಿಕಾರಿಗಳು ತಲುಪಿದ್ದಾರೆ ಎಂದು ಬಾಘೇಲ್ ಅವರ ಕಚೇರಿಯ ಟ್ವೀಟ್ ಹೇಳಿದೆ. ಮಹಾದೇವ್ ಬೆಟ್ಟಿಂಗ್ ಆ್ಯಪ್ಗೆ ಸಂಬಂಧಿಸಿ ರಾಜ್ಯಾದ್ಯಂತ ಹಲವು ಪೊಲೀಸ್ ಠಾಣೆಗಳಲ್ಲಿ ದಾಖಲಾಗಿರುವ 70 ಪ್ರಕರಣಗಳ ತನಿಖೆ ನಡೆಸಲು ಮಧ್ಯಪ್ರದೇಶ ಸರಕಾರ ಕಳೆದ ವರ್ಷ ಸಿಬಿಐಗೆ ಅನುಮತಿ ನೀಡಿತ್ತು. ‘‘ಈಗ ಸಿಬಿಐ ಬಂದಿದೆ. ಅಹ್ಮದಾಬಾದ್ (ಗುಜರಾತ್)ನಲ್ಲಿ ಎಪ್ರಿಲ್ 8 ಹಾಗೂ 9ರಂದು ಆಯೋಜಿಸಿರುವ ಎಐಸಿಸಿಯ ಸಭೆಗೆ ಕರಡು ಸಮಿತಿ ರೂಪಿಸುವ ಸಭೆಯಲ್ಲಿ ಪಾಲ್ಗೊಳ್ಳಲು ಭೂಪೇಶ್ ಬಾಘೇಲ್ ಅವರು ಇಂದು ದಿಲ್ಲಿಗೆ ತೆರಳಲಿದ್ದರು. ಅದಕ್ಕಿಂತ ಮುನ್ನ ಸಿಬಿಐ ಅವರ ರಾಯಪುರ ಹಾಗೂ ಭಿಲಾಯಿಯ ನಿವಾಸಗಳಿಗೆ ತಲುಪಿದೆ’’ ಎಂದು ಎಕ್ಸ್ನ ಪೋಸ್ಟ್ ಹೇಳಿದೆ. ಬಾಘೇಲ್ ವಿರುದ್ಧದ ಕ್ರಮಕ್ಕೆ ಬಿಜೆಪಿಯನ್ನು ತರಾಟೆಗೆ ತಗೆದುಕೊಂಡಿರುವ ರಾಜ್ಯ ಕಾಂಗ್ರೆಸ್ ಸಂವಹನ ಘಟಕದ ಮುಖ್ಯಸ್ಥ ಸುಶೀಲ್ ಆನಂದ್ ಶುಕ್ಲಾ, ಇದಕ್ಕೆ ಕಾಂಗ್ರೆಸ್ ಆಗಲಿ, ಪಕ್ಷದ ಹಿರಿಯ ನಾಯಕರಾಗಲಿ ಹೆದರುವುದಿಲ್ಲ ಎಂದಿದ್ದಾರೆ. ‘‘ಭೂಪೇಶ್ ಬಾಘೇಲ್ ಅವರು ಪಕ್ಷದ ಪಂಜಾಬ್ ನ ಉಸ್ತುವಾರಿ ಆದ ಬಳಿಕ ಬಿಜೆಪಿಗೆ ಭೀತಿ ಉಂಟಾಗಿದೆ. ಮೊದಲು ಅವರ ನಿವಾಸಕ್ಕೆ ಜ್ಯಾರಿ ನಿರ್ದೇಶನಾಲಯವನ್ನು ಕಳುಹಿಸಿತ್ತು. ಈಗ ಸಿಬಿಐಯನ್ನು ಕಳುಹಿಸಿದೆ. ಇದು ಬಿಜೆಪಿಯ ಭೀತಿಯನ್ನು ತೋರಿಸುತ್ತದೆ. ರಾಜಕೀಯವಾಗಿ ಹೋರಾಡಲು ವಿಫಲವಾದ ಸಂದರ್ಭ ಬಿಜೆಪಿ ತನ್ನ ವಿರೋಧಿಗಳ ವಿರುದ್ಧ ಕೇಂದ್ರ ತನಿಖಾ ಸಂಸ್ಥೆಗಳನ್ನು ಬಳಸುತ್ತದೆ’’ ಎಂದು ಅವರು ಹೇಳಿದ್ದಾರೆ. ಬಿಜೆಪಿಯ ದಮನಕಾರಿ ರಾಜಕೀಯದ ಬಗ್ಗೆ ದೇಶ ಹಾಗೂ ರಾಜ್ಯದ ಜನರಿಗೆ ಅರಿವಿದೆ ಎಂದು ಸುಶೀಲ್ ಆನಂದ್ ಶುಕ್ಲಾ ತಿಳಿಸಿದ್ದಾರೆ.
ಮರಾಠಿ ಮಾತನಾಡದ ಡಿ ಮಾರ್ಟ್ ಉದ್ಯೋಗಿಗೆ ಎಂಎನ್ಎಸ್ ಕಾರ್ಯಕರ್ತರಿಂದ ಕಪಾಳಮೋಕ್ಷ
ಮುಂಬೈ: ಮರಾಠಿ ಮಾತನಾಡದೇ ಇರುವುದಕ್ಕಾಗಿ ಮುಂಬೈಯಲ್ಲಿರುವ ಪ್ರಮುಖ ಸೂಪರ್ ಮಾರ್ಕೆಟ್ ಸ್ಟೋರ್ ನ ಉದ್ಯೋಗಿಯೊಬ್ಬರಿಗೆ ರಾಜ್ ಠಾಕ್ರೆ ನೇತೃತ್ವದ ಮಹಾರಾಷ್ಟ್ರ ನವ ನಿರ್ಮಾಣ ಸೇನೆ (ಎಂಎನ್ಎಸ್)ಯ ಕಾರ್ಯಕರ್ತರು ಕೆನ್ನೆಗೆ ಬಾರಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಅಂಧೇರಿ (ಪಶ್ಚಿಮ) ವೆರ್ಸೋವಾದಲ್ಲಿರುವ ಡಿ ಮಾರ್ಟ್ ಸ್ಟೋರ್ ನಲ್ಲಿ ಮಂಗಳವಾರ ಈ ಘಟನೆ ನಡೆದಿದೆ ಎಂದು ಅವರು ಹೇಳಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ವೀಡಿಯೊದಲ್ಲಿ ಸ್ಟೋರ್ ಉದ್ಯೋಗಿಯೊಬ್ಬರು ಗ್ರಾಹಕರಲ್ಲಿ ‘‘ನಾನು ಮರಾಠಿ ಮಾತನಾಡುವುದಿಲ್ಲ. ನಾನು ಹಿಂದಿ ಮಾತ್ರ ಮಾತನಾಡುತ್ತೇನೆ. ನಿಮೆಗೆ ಏನು ಮಾಡಬೇಕೋ ಅದನ್ನು ಮಾಡಿ’’ ಎಂದು ಹೇಳುತ್ತಿರುವುದು ಕೇಳಿ ಬಂದಿದೆ. ಉದ್ಯೋಗಿಯ ಹೇಳಿಕೆಯ ವಿಷಯ ಎಂಎನ್ಎಸ್ ತಿಳಿದ ಬಳಿಕ ಪಕ್ಷದ ವರ್ಸೋವಾ ಘಟಕದ ಅಧ್ಯಕ್ಷ ಸಂದೇಶ್ ದೇಸಾಯಿ ನೇತೃತ್ವದ ಕಾರ್ಯಕರ್ತರ ಗುಂಪು ಸ್ಟೋರ್ಗೆ ತೆರಳಿತು ಹಾಗೂ ಉದ್ಯೋಗಿಯ ಕೆನ್ನೆಗೆ ಬಾರಿಸಿತು. ಎನ್ಎನ್ಎಸ್ ಕಾರ್ಯಕರ್ತರು ಡಿ ಮಾರ್ಟ್ ಸ್ಟೋರ್ ನ ಉದ್ಯೋಗಿಯ ಕೆನ್ನೆಗೆ ಹೊಡೆಯುತ್ತಿರುವ ದೃಶ್ಯದ ವೀಡಿಯೊ ಕೂಡ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಅನಂತರ ಸ್ಟೋರ್ ನ ಉದ್ಯೋಗಿ ತನ್ನ ನಡತೆಗೆ ಕ್ಷಮೆ ಕೋರಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಪ್ರಾಪ್ತ ವಯಸ್ಸಿನವರಿಗೆ ಶಕ್ತಿ ಪಾನೀಯ ನಿಷೇಧಿಸಲಿರುವ ಪಂಜಾಬ್ ಸರಕಾರ
ಚಂಡಿಗಢ: ಅಪ್ರಾಪ್ತ ವಯಸ್ಸಿನವರಿಗೆ ಶಕ್ತಿ ಪಾನೀಯಗಳನ್ನು ಮಾರಾಟ ಮಾಡುವುದನ್ನು ನಿಷೇಧಿಸಲು ಪಂಜಾಬ್ ಸರಕಾರ ಸನ್ನದ್ದವಾಗಿದೆ. ಶಾಲೆಯ ಕ್ಯಾಂಟೀನ್, ಶಾಲೆಯ ಸುತ್ತಮುತ್ತಲಿನಲ್ಲಿರುವ ಅಂಗಡಿಗಳು ಸೇರಿದಂತೆ ಮಕ್ಕಳು ಆಗಾಗ ಭೇಟಿ ನೀಡುವ ಸ್ಥಳಗಳಲ್ಲಿ ಈ ಪಾನೀಯಗಳ ಮಾರಾಟ ನಿಷೇಧಿಸಲು ಪಂಜಾಬ್ ಸರಕಾರ ನಿರ್ಧರಿಸಿದೆ. ಮಾದಕ ವ್ಯಸನ ಶಾಲಾ ಮಟ್ಟದಲ್ಲೇ ಆರಂಭವಾಗುತ್ತದೆ. ತಾನು ವಿವಿಧ ಜಿಲ್ಲೆಗಳ ಶಾಲೆಗಳಿಗೆ ಇತ್ತೀಚೆಗೆ ಭೇಟಿ ನೀಡಿದ ಬಳಿಕ ವಿದ್ಯಾರ್ಥಿಗಳು ಈ ಶಕ್ತಿ ಪಾನೀಯ ಹಾಗೂ ಸ್ಟ್ರಾಬೆರಿ ಕ್ವಿಕ್ (ಸ್ಟ್ರಾಬೆರಿ ಕ್ಯಾಂಡಿಯಂತೆ ಕಾಣುವ ಹರಳು ಮಾದಕ ವಸ್ತು)ಗಳ ವ್ಯಸನಿಗಳಾಗುತ್ತಿರುವುದು ತಿಳಿಯಿತು ಎಂದು ಆರೋಗ್ಯ ಸಚಿವ ಡಾ. ಬಲ್ಬೀರ್ ಸಿಂಗ್ ತಿಳಿಸಿದ್ದಾರೆ. ‘‘ಸ್ಟ್ರಾಬೆರಿ ಕ್ವಿಕ್ ಶಾಲೆಗಳ ಸಮೀಪ ಮಾರಾಟವಾದರೆ, ಪ್ರತಿ ಬಾಟಲಿಗೆ ಕೇವಲ 10 ರೂ. ಬೆಲೆ ಇರುವ ಶಕ್ತಿ ಪಾನೀಯಗಳು ಹಲವು ಶಾಲಾ ಕ್ಯಾಂಟೀನ್, ವಿದ್ಯಾರ್ಥಿಗಳು ಆಗಾಗ ಭೇಟಿ ನೀಡುವ ಸ್ಥಳಗಳಲ್ಲಿರುವ ಅಂಗಡಿಗಳಲ್ಲಿ ಮಾರಾಟವಾಗುತ್ತದೆ. ಅವುಗಳ ಮಾರಾಟವನ್ನು ನಿಷೇಧಿಸುವುದಾಗಿ ನಾವು ಖಾತರಿ ನೀಡುತ್ತೇವೆ’’ ಎಂದು ಅವರು ಇಂದು ಹೇಳಿದ್ದಾರೆ. ಮಾದಕ ವಸ್ತುವಿನ ವಿರುದ್ಧ ರಾಜ್ಯ ಸರಕಾರದ ಹೋರಾಟದ ಮೇಲ್ವಿಚಾರಣೆಗೆ ರೂಪಿಸಲಾದ ಸಂಪುಟ ಸಮಿತಿಯ ಸದಸ್ಯರು ಈ ವಿಷಯದ ಕುರಿತು ಚರ್ಚೆ ನಡೆಸಿದ್ದಾರೆ ಎಂದು ಡಾ. ಬಲ್ಬೀರ್ ಸಿಂಗ್ ತಿಳಿಸಿದ್ದಾರೆ. ಮಕ್ಕಳಿಗೆ ಶಕ್ತಿ ಪಾನೀಯ ಮಾರಾಟ ಮಾಡುವುದಕ್ಕೆ ನಿಷೇಧ ವಿಧಿಸಲು ಆರೋಗ್ಯ ಸಚಿವರು ಅನುಮತಿ ನೀಡಿದ್ದಾರೆ ಎಂದು ಮೂಲಗಳು ದೃಢಪಡಿಸಿವೆ. ಈ ಪಾನೀಯಗಳು ಕೇವಲ ವ್ಯಸನಕಾರಿ ಮಾತ್ರವಲ್ಲದೆ, ಅತ್ಯಧಿಕ ಕೆಫೈನ್ ಹಾಗೂ ಟೌರಿನ್ ಅಂಶಗಳನ್ನು ಒಳಗೊಂಡಿರುವುದರಿಂದ ಅರೋಗ್ಯದ ಮೇಲೆ ಅಪಾಯ ಉಂಟು ಮಾಡುವ ಸಾಧ್ಯತೆ ಕೂಡ ಇದೆ ಎಂದು ಮೂಲಗಳು ತಿಳಿಸಿವೆ. ಆದರೆ, ಔಪಚಾರಿಕ ನೋಟಿಸ್ ನೀಡುವ ಮುನ್ನ, ನಾವು ಇದನ್ನು ತಜ್ಞರಿಂದ ಕಾನೂನು ಬದ್ಧವಾಗಿ ಪರಿಶೀಲಿಸುತ್ತಿದ್ದೇವೆ. ಭಾರತದಲ್ಲಿ ಇಂತಹ ನಿಷೇಧ ಹೇರುತ್ತಿರುವ ಮೊದಲ ರಾಜ್ಯ ಪಂಜಾಬ್ ಆಗಲಿದೆ. ಹೆಚ್ಚಿನ ಮತ್ತು ಪಡೆಯಲು ಮಕ್ಕಳು ಈ ಪಾನೀಯಗಳಿಗೆ ಹೆಚ್ಚು ಹೆಚ್ಚು ವ್ಯಸನಿಗಳಾಗುತ್ತಿದ್ದಾರೆ. ಅನಂತರ ಅವರು ಇತರ ಮಾದಕ ವಸ್ತುಗಳ ವ್ಯಸನಿಗಳಾಗುತ್ತಾರೆ ಎಂದು ಸರಕಾರಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇತರ ಪಾನೀಯಗಳಿಗೆ ಹೋಲಿಸಿದರೆ, ಈ ಪಾನೀಯಗಳು ಮೂರು ಪಟ್ಟು ಕೆಫೈನ್ ಅಂಶವನ್ನು ಒಳಗೊಂಡಿದೆ. ಇದು ಅನುಮತಿಸಲಾದ ಮಿತಿಗಿಂತ ಅತಿ ಹೆಚ್ಚಾಗಿದೆ. ವಿದೇಶಗಳಲ್ಲಿ ಇಂತಹ ಪಾನೀಯಗಳನ್ನು 15 ವರ್ಷಕ್ಕಿಂತ ಕೆಳಗಿನ ಮಕ್ಕಳಿಗೆ ನಿಷೇಧಿಸಿದ ನಿದರ್ಶನಗಳಿವೆ. ಔಪಚಾರಿಕ ನೋಟಿಸ್ ಜಾರಿಗೊಳಿಸುವ ಮುನ್ನ ಇದನ್ನು ಕಾನೂನು ಬದ್ಧವಾಗಿ ಜಾರಿಗೆ ತರುವ ಕುರಿತು ಕಾನೂನು ತಜ್ಞರು ಪರಿಶೀಲಿಸುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
’ಬಿಜೆಪಿ ನಾಯಕರು ಓವೈಸಿಯನ್ನು ಪಕ್ಷಕ್ಕೆ ಕರೆದುಕೊಂಡು ಬರಬೇಕು’ : ಸಾಮಾಜಿಕ ಜಾಲತಾಣದ ಪ್ರತಿಕ್ರಿಯೆ
Yatnal Supporters Reaction : ಯತ್ನಾಳ್ ಸಾಹೇಬ್ರೆ ನಿಮಗೆ ರಾಜ್ಯ ಬಿಜೆಪಿಯಿಂದ ತೊಂದ್ರೆ ಆಯ್ತು. ಅದು ತಾತ್ಕಾಲಿಕ ಬಿಡಿ. ದೈವ ಬಲ ಖಂಡಿತ ನಿಮಗಿದೆ. ಜನ ನಿಮ್ಮೊಂದಿಗೆ ಇದ್ದಾರೆ.ನಿಮ್ಮ ನಿಲುವು ಯಾವತ್ತೂ ಹೀಗೆ ಇರಲಿ. ಈಗ ನಿಮಗೆ ಯಾರ ಅಡೆತಡೆಯು ಇಲ್ಲ. ಅವರ ವಿರುದ್ಧ ಇರುವ ಎಲ್ಲ ಭ್ರಷ್ಟಾಚಾರ ವನ್ನು ಎತ್ತಿ ಹಿಡಿದು ರಾಜ್ಯಕ್ಕೆ ನ್ಯಾಯ ಒದಗಿಸಿ. ಜೈ ಶ್ರೀರಾಮ್, ಈ ರೀತಿಯ ಪ್ರತಿಕ್ರಿಯೆಗಳು, ಯತ್ನಾಳ್ ಉಚ್ಚಾಟನೆಗೆ ವಿರುದ್ದವಾಗಿ ಬಂದಿದೆ.
Hasan Nawaz: ಮೊನ್ನೆಯಷ್ಟೇ ಸ್ಫೋಟಕ ಶತಕ; ಈಗ 3ನೇ ಬಾರಿ ಡಕೌಟ್! ಪಾಕ್ ಬ್ಯಾಟರ್ ಹೆಸರಿಗಂಟಿಕೊಂಡ ಕೆಟ್ಟ ವಿಶ್ವದಾಖಲೆ
ಗ್ಲೆನ್ ಮ್ಯಾಕ್ಸ್ ವೆಲ್ 19 ಬಾರಿ ಡಕೌಟ್ ಆಗುವ ಮೂಲಕ ಹೊಸ ಐಪಿಎಲ್ ದಾಖಲೆ ಬರೆದ ಬೆನ್ನಲ್ಲೇ ಪಾಕಿಸ್ತಾನದ ಆರಂಭಿಕ ಆಟಗಾರ ಹಸನ್ ನವಾಝ್ ಅವರು ಶೂನ್ಯ ಸಂಪಾದನೆಯಲ್ಲಿ ಕೆಟ್ಟ ವಿಶ್ವದಾಖಲೆಯ ಒಡೆಯರಾಗಿದ್ದಾರೆ. ನ್ಯೂಜಿಲೆಂಡ್ ವಿರುದ್ಧ ಟಿ20 ಸರಣಿಯ ಮೊದಲನೇ ಮತ್ತು ಎರಡನೇ ಪಂದ್ಯಗಳಲ್ಲಿ ಡಕೌಟ್ ಆಗಿದ್ದ ಅವರು 5ನೇ ಪಂದ್ಯದಲ್ಲೂ ಖಾತೆ ತೆರೆಯುವ ಮುನ್ನವೇ ಔಟ್ ಆಗಿದ್ದಾರೆ. ಈ ಮೂಲಕ ದ್ವಿಪಕ್ಷೀಯ ಟಿ20 ಸರಣಿಯೊಂದರಲ್ಲಿ 3 ಬಾರಿ ಡಕೌಟ್ ಆದ ಟೆಸ್ಟ್ ಮಾನ್ಯತೆಯಿರುವ ದೇಶದ ಮೊದಲ ಆಟಗಾರನೆಂಬ ಅಪಖ್ಯಾತಿಗೆ ಪಾತ್ರರಾಗಿದ್ದಾರೆ.
ಸಂಸತ್ ನಲ್ಲಿ ಮಾತನಾಡಲು ಸ್ಪೀಕರ್ ಅವಕಾಶವನ್ನೇ ಕೊಡುತ್ತಿಲ್ಲ: ರಾಹುಲ್ ಗಾಂಧಿ
ಹೊಸದಿಲ್ಲಿ: ಸರಕಾರವು ಪ್ರತಿಪಕ್ಷದ ಧ್ವನಿಯನ್ನು ಹತ್ತಿಕ್ಕುತ್ತಿದೆ ಎಂದು ಲೋಕಸಭೆಯ ಪ್ರತಿಪಕ್ಷ ನಾಯಕ ಹಾಗೂ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಬುಧವಾರ ಆರೋಪಿಸಿದ್ದಾರೆ. ಹಲವು ದಿನಗಳಿಂದ ಸಂಸತ್ ನಲ್ಲಿ ಮಾತನಾಡಲು ತನಗೆ ಅವಕಾಶ ನೀಡಲಾಗಿಲ್ಲ ಎಂದು ಅವರು ಹೇಳಿದ್ದಾರೆ. ‘‘ಏನು ನಡೆಯುತ್ತಿದೆ ಎನ್ನುವುದು ನನಗೆ ಗೊತ್ತಾಗುತ್ತಿಲ್ಲ. ನನಗೆ ಮಾತನಾಡಲು ಅವಕಾಶ ಕೊಡಿ ಎಂದು ನಾನು ಸ್ಪೀಕರ್ ಗೆ ಮನವಿ ಮಾಡಿದ್ದೇನೆ. ಆದರೆ, ಅವರು ಓಡಿಹೋಗುತ್ತಿದ್ದಾರೆ. ಇದು ಸದನವನ್ನು ನಡೆಸುವ ರೀತಿಯಲ್ಲ. ಈ ವಿಷಯದ ಬಗ್ಗೆ ನಾನು ಮಾತನಾಡಿದಾಗಲೆಲ್ಲ ಸ್ಪೀಕರ್ ನುಣುಚಿಕೊಳ್ಳುತ್ತಾರೆ. ಅವರು ನನಗೆ ಮಾತನಾಡಲು ಅವಕಾಶ ನೀಡಿಲ್ಲ. ಅವರು ಸಾಬೀತಾಗದ ಏನನ್ನೋ ನನ್ನ ಬಗ್ಗೆ ಹೇಳಿದ್ದಾರೆ ಮತ್ತು ಸದನವನ್ನು ಮುಂದೂಡಿದ್ದಾರೆ. ಅದರ ಅಗತ್ಯವಿರಲಿಲ್ಲ’’ ಎಂದು ಸಂಸತ್ ನ ಹೊರಗೆ ಸುದ್ದಿಗಾರರೊಂದಿಗೆ ಮಾತನಾಡಿದ ರಾಹುಲ್ ಗಾಂಧಿ ಹೇಳಿದರು. ಬುಧವಾರ ಲೋಕಸಭೆಯಲ್ಲಿ ಮಾತನಾಡಲು ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಎದ್ದು ನಿಂತಾಗ ಸ್ಪೀಕರ್ ಹಠಾತ್ತನೆ ಸದನವನ್ನು ಮುಂದೂಡಿದರು. ‘‘ಪ್ರತಿಪಕ್ಷ ನಾಯಕರಿಗೆ ಮಾತನಾಡಲು ಅವಕಾಶ ನೀಡುವ ಸಂಪ್ರದಾಯವಿದೆ. ಆದರೆ, ಮಾತನಾಡಲು ನಾನು ಎದ್ದು ನಿಲ್ಲುವಾಗಲೆಲ್ಲ ನನಗೆ ಅನುಮತಿ ನಿರಾಕರಿಸಲಾಗುತ್ತಿದೆ. ಸದನವು ಹೇಗೆ ಕಾರ್ಯನಿರ್ವಹಿಸುತ್ತಿದೆ ಎಂದು ನನಗೆ ಗೊತ್ತಿಲ್ಲ, ನಮಗೆ ಏನನ್ನು ಹೇಳಬೇಕಾಗಿದೆಯೋ ಅದನ್ನು ಹೇಳಲು ಅವಕಾಶ ನೀಡಲಾಗುತ್ತಿಲ್ಲ’’ ಎಂದು ಕಾಂಗ್ರೆಸ್ ಸಂಸದ ನುಡಿದರು. ‘‘ಪ್ರಜಾಪ್ರಭುತ್ವದ ಆಶಯವನ್ನು ಗಾಳಿಗೆ ತೂರಲಾಗುತ್ತಿದೆ. ನಾನು ಮೌನವಾಗಿ ಕುಳಿತಿದ್ದೇನೆ. ಆದರೂ, ನನಗೆ ಮಾತನಾಡಲು ಅವಕಾಶವನ್ನೇ ನೀಡುತ್ತಿಲ್ಲ. ಇಲ್ಲಿ ಪ್ರತಿಪಕ್ಷಕ್ಕೆ ಸ್ಥಾನವಿಲ್ಲ, ಕೇವಲ ಸರಕಾರಕ್ಕೆ ಮಾತ್ರ ಇದೆ. ಪ್ರಧಾನಿಯವರು ಕುಂಭಮೇಳದ ಬಗ್ಗೆ ಮಾತನಾಡಿದ್ದಾರೆ. ನಾನು ಕೂಡ ಮಾತನಾಡಲು ಬಯಸಿದ್ದೆ. ನಿರುದ್ಯೋಗದ ಬಗ್ಗೆ ಮಾತನಾಡಲು ನಾನು ಬಯಸಿದ್ದೆ. ಆದರೆ, ನನಗೆ ಅವಕಾಶವನ್ನೇ ನೀಡಲಾಗಿಲ್ಲ. ಸ್ಪೀಕರ್ರ ಮನಸ್ಸಿನಲ್ಲಿ ಏನಿದೆ ಎಂದು ನನಗೆ ಗೊತ್ತಿಲ್ಲ. ನಾನು ಪ್ರತಿಪಕ್ಷ ನಾಯಕ ಮತ್ತು ನಮ್ಮ ಪಕ್ಷ ಪ್ರಧಾನ ಪ್ರತಿಪಕ್ಷ. ನಮಗೆ ಮಾತನಾಡಲು ಅವಕಾಶವಿಲ್ಲ’’ ಎಂದು ರಾಹುಲ್ ಗಾಂಧಿ ದೂರಿದ್ದಾರೆ. ರಾಹುಲ್ ಗಾಂಧಿ ಸದನದ ಘನತೆಯನ್ನು ಕಾಪಾಡಿಕೊಳ್ಳಬೇಕು ಎಂಬ ಸ್ಪೀಕರ್ ಹೇಳಿಕೆಯ ಬಗ್ಗೆ ಕೇಳಿದ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ‘‘ನಾನು ಏನೂ ಮಾಡಿಲ್ಲ. ಕಳೆದ 7 ಅಥವಾ 8 ದಿನಗಳಲ್ಲಿ ನನಗೆ ಮಾತನಾಡಲು ಅವಕಾಶವನ್ನೇ ಕೊಡಲಾಗಿಲ್ಲ. ಇದೊಂದು ಹೊಸ ವಿಧಾನ’’ ಎಂದರು. ►ಸದನದಲ್ಲಿ ಘನತೆ ಕಾಪಾಡಿಕೊಳ್ಳಬೇಕು: ಸ್ಪೀಕರ್ ಓಮ್ ಬಿರ್ಲಾ ಈ ನಡುವೆ, ಸದನದಲ್ಲಿ ಘನತೆಯನ್ನು ಕಾಪಾಡಿಕೊಳ್ಳುವ ಮತ್ತು ನಿಯಮಗಳನ್ನು ಅನುಸರಿಸುವ ಮಹತ್ವದ ಬಗ್ಗೆ ಲೋಕಸಭಾ ಸ್ಪೀಕರ್ ಓಮ್ ಬಿರ್ಲಾ ಬುಧವಾರ ಮಾತನಾಡಿದ್ದಾರೆ. ‘‘ಸಂಸದರ ವರ್ತನೆಯು ಈ ಸದನ ಅಪೇಕ್ಷಿಸುವ ಅತ್ಯುನ್ನತ ಮಾನದಂಡಗಳಿಗೆ ಹೊಂದಿಕೊಳ್ಳದಿರುವ ಹಲವು ಉದಾಹರಣೆಗಳು ನನ್ನ ಗಮನಕ್ಕೆ ಬಂದಿವೆ’’ ಎಂದು ಸ್ಪೀಕರ್ ಹೇಳಿದ್ದಾರೆ. ಅವರು ನಿಯಮ 349ನ್ನು ನಿರ್ದಿಷ್ಟವಾಗಿ ಉಲ್ಲೇಖಿಸಿದರು. ಇದು ಸದನದಲ್ಲಿ ಸದಸ್ಯರು ಅನುಸರಿಸಬೇಕಾದ ನಿಯಮಗಳಿಗೆ ಸಂಬಂಧಿಸಿದ್ದಾಗಿದೆ. ‘‘ಈ ಸದನದಲ್ಲಿ ತಂದೆ ಮತ್ತು ಮಗಳು, ತಾಯಿ ಮತ್ತು ಮಗಳು, ಗಂಡ ಮತ್ತು ಹೆಂಡತಿ ಸದಸ್ಯರಾಗಿದ್ದಾರೆ. ಈ ಹಿನ್ನೆಲೆಯಲ್ಲಿ, ಪ್ರತಿಪಕ್ಷ ನಾಯಕರು ನಿಯಮಗಳಿಗೆ ಅನುಗುಣವಾಗಿ ನಡೆದುಕೊಳ್ಳಬೇಕು ಎಂಬುದಾಗಿ ನಾನು ನಿರೀಕ್ಷಿಸುತ್ತೇನೆ’’ ಎಂದು ಅವರು ಹೇಳಿದರು. ►ಸ್ಪೀಕರ್ ಭೇಟಿಯಾದ ಕಾಂಗ್ರೆಸ್ ಸಂಸದರು ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿಗೆ ಲೋಕಸಭೆಯಲ್ಲಿ ಮಾತನಾಡಲು ಅವಕಾಶ ನಿರಾಕರಿಸುತ್ತಿರುವ ವಿಷಯದ ಬಗ್ಗೆ ಚರ್ಚಿಸಲು ಕಾಂಗ್ರೆಸ್ ಸಂಸದರು ಬುಧವಾರ ಸ್ಪೀಕರ್ ಓಮ್ ಬಿರ್ಲಾರನ್ನು ಭೇಟಿಯಾದರು. ಸದನದ ಘನತೆಯನ್ನು ಕಾಪಾಡಿಕೊಳ್ಳಲು ಸದಸ್ಯರು ಅನುಸರಿಸಬೇಕಾಗಿರುವ ನಿಯಮಗಳನ್ನು ಅನುಸರಿಸುವಂತೆ ರಾಹುಲ್ ಗಾಂಧಿಗೆ ಸ್ಪೀಕರ್ ಸೂಚಿಸಿದ ಬಳಿಕ, ಲೋಕಸಭೆಯಲ್ಲಿ ಕಾಂಗ್ರೆಸ್ ಉಪನಾಯಕ ಗೌರವ್ ಗೊಗೋಯಿ, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್, ಮುಖ್ಯ ಸಚೇತಕ ಮಣಿಕ್ಕಮ್ ಟಾಗೋರ್ ಮತ್ತು ಇತರ 70 ಸಂಸದರು ಸ್ಪೀಕರ್ ಬಿರ್ಲಾರನ್ನು ಭೇಟಿಯಾದರು.
ಆಹಾರ ಇಲಾಖೆ ಪರೀಕ್ಷೆ ವೇಳೆ ‘ಪನ್ನೀರ್ನ ಸ್ಯಾಂಪಲ್’ಗಳಲ್ಲಿ ಬ್ಯಾಕ್ಟೀರಿಯಾ ಅಂಶ ಪತ್ತೆ
ಬೆಂಗಳೂರು : ರಾಜ್ಯದ ವಿವಿಧ ಭಾಗಗಳಿಂದ ಪನ್ನೀರ್ ಆಹಾರ ಪದಾರ್ಥವನ್ನು ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಿದ್ದು, ಎರಡು ಸ್ಯಾಂಪಲ್ಗಳಲ್ಲಿ ಬ್ಯಾಕ್ಟೀರಿಯಾ ಅಂಶಗಳಿವೆ. ಹೀಗಾಗಿ ಸೇವನೆ ಮಾಡಲು ಹಾನಿಕಾರಕವಾಗಿದೆ ಎಂದು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಯು ತಿಳಿಸಿದೆ. ರಾಜ್ಯಾದ್ಯಂತ 231 ಪನ್ನೀರ್ ಸ್ಯಾಂಪಲ್ಸ್ ಅಧಿಕಾರಿಗಳು ಸಂಗ್ರಹ ಮಾಡಿದ್ದಾರೆ. ಅದರಲ್ಲಿ 16 ಸ್ಯಾಂಪಲ್ ಪರೀಕ್ಷೆಗೆ ಒಳಪಡಿಸಿದ್ದಾರೆ. 16 ಸ್ಯಾಂಪಲ್ಗಳಲ್ಲಿ 2 ವರದಿ ಬಂದಿದೆ. ಈ ಪನ್ನೀರ್ ಸ್ಯಾಂಪಲ್ಗಳಲ್ಲಿ ಬ್ಯಾಕ್ಟೀರಿಯಾ ಅಂಶಗಳು ಪತ್ತೆಯಾಗಿರುವುದು ದೃಢವಾಗಿದ್ದು, ಸ್ಯಾಂಪಲ್ಗಳು ಹಾನಿಕಾರಕವಾಗಿದೆ. ಇನ್ನು ಉಳಿದ ಪನ್ನೀರ್ ಸ್ಯಾಂಪಲ್ಗಳ ಸಂಪೂರ್ಣ ವರದಿ ಬರಬೇಕಿದೆ ಎಂದು ಇಲಾಖೆ ಹೇಳಿದೆ.
77 ಶೇ. ಹೈಕೋರ್ಟ್ ನ್ಯಾಯಾಧೀಶರು ಮೇಲ್ಜಾತಿಗಳಿಗೆ ಸೇರಿದವರು: ಸಂಸತ್ ಗೆ ಕಾನೂನು ಸಚಿವರಿಂದ ಮಾಹಿತಿ
ಹೊಸದಿಲ್ಲಿ: 2018ರ ಬಳಿಕ ಹೈಕೋರ್ಟ್ಗಳಿಗೆ ನೇಮಕಗೊಂಡಿರುವ ನ್ಯಾಯಾಧೀಶರ ಪೈಕಿ 77 ಶೇಕಡ ಮೇಲ್ಜಾತಿಗಳಿಗೆ ಸೇರಿದವರು ಎಂದು ಕಾನೂನು ಸಚಿವಾಲಯ ಬುಧವಾರ ಸಂಸತ್ ಗೆ ಮಾಹಿತಿ ನೀಡಿದೆ. ಇದಕ್ಕೆ ಹೋಲಿಸಿದರೆ, ಪರಿಶಿಷ್ಟ ಜಾತಿಯ 3 ಶೇಕಡ, ಪರಿಶಿಷ್ಟ ಪಂಗಡದ 2 ಶೇಕಡ, ಇತರ ಹಿಂದುಳಿದ ವರ್ಗ (ಒಬಿಸಿ)ಗಳ 12 ಶೇಕಡ ಮತ್ತು ಅಲ್ಪಸಂಖ್ಯಾತ ಸಮುದಾಯಗಳಿಂದ 5 ಶೇಕಡ ನ್ಯಾಯಾಧೀಸರು ಹೈಕೋರ್ಟ್ಗಳಿಗೆ ನೇಮಕಗೊಂಡಿದ್ದಾರೆ ಎಂದು ಅದು ತಿಳಿಸಿದೆ. 2018ರ ಬಳಿಕ, ಹೈಕೋರ್ಟ್ ನ್ಯಾಯಾಧೀಶ ಹುದ್ದೆಗಳಿಗೆ ನೇಮಕಗೊಳ್ಳುವವರು ತಮ್ಮ ಸಾಮಾಜಿಕ ಹಿನ್ನೆಲೆಗೆ ಸಂಬಂಧಿಸಿದ ವಿವರಗಳನ್ನು ಸಲ್ಲಿಸಬೇಕಾಗಿದೆ. ನ್ಯಾಯಾಂಗದಲ್ಲಿ ವೈವಿಧ್ಯತೆಗೆ ಸಂಬಂಧಿಸಿದಂತೆ ರಾಷ್ಟ್ರೀಯ ಜನತಾ ದಳದ ಸಂಸದ ಮನೋಜ್ ಕುಮಾರ್ ಝಾ ಕೇಳಿದ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಕಾನೂನು ಸಚಿವ ಅರ್ಜುನ್ ಕುಮಾರ್ ಮೇಘವಾಲ್, ‘‘2018ರ ಬಳಿಕ ನೇಮಕಗೊಂಡಿರುವ 715 ಹೈಕೋರ್ಟ್ ನ್ಯಾಯಾಧೀಶರ ಪೈಕಿ 551 ಮಂದಿ ಮೇಲ್ಜಾತಿಗಳಿಗೆ ಸೇರಿದವರಾಗಿದ್ದಾರೆ. ಉಳಿದಂತೆ, 22 ಮಂದಿ ಪರಿಶಿಷ್ಟ ಜಾತಿ, 16 ಮಂದಿ ಪರಿಶಿಷ್ಟ ಪಂಗಡ, 89 ಮಂದಿ ಒಬಿಸಿ ವರ್ಗ ಮತ್ತು 37 ಮಂದಿ ಅಲ್ಪಸಂಖ್ಯಾತ ಸಮುದಾಯಗಳಿಗೆ ಸೇರಿದ್ದಾರೆ’’ ಎಂದು ತಿಳಿಸಿದರು. ನ್ಯಾಯಾಧೀಶರ ನೇಮಕಾತಿ ಪ್ರಕ್ರಿಯೆಯನ್ನು ನಡೆಸುವ ಜವಾಬ್ದಾರಿ ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್ಗಳದ್ದಾಗಿದೆ ಎಂದು ಹೇಳಿದ ಸಚಿವರು, ಹೈಕೋರ್ಟ್ ನ್ಯಾಯಾಧೀಶರ ನೇಮಕಾತಿಯಲ್ಲಿ ಮೀಸಲಾತಿ ನೀಡಲು ಸಂವಿಧಾನದಲ್ಲಿ ಅವಕಾಶವಿಲ್ಲ ಎಂದರು. ಸುಪ್ರೀಂ ಕೋರ್ಟ್ ನ್ಯಾಯಾಧೀಶರು ಮತ್ತು ಹೈಕೋರ್ಟ್ಗಳ ಮುಖ್ಯ ನ್ಯಾಯಾಧೀಶರನ್ನು ನೇಮಿಸುವ ಜವಾಬ್ದಾರಿಯನ್ನು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶರು ಹೊಂದಿದ್ದಾರೆ ಎಂದು ಸಚಿವರು ತಿಳಿಸಿದರು. ನ್ಯಾಯಾಧೀಶರ ನೇಮಕಾತಿಯಲ್ಲಿ ವೈವಿಧ್ಯತೆಯನ್ನು ಕಾಪಾಡಿಕೊಂಡು ಬರುವ ಹೊಣೆ ಸುಪ್ರೀಂ ಕೋರ್ಟ್ನದ್ದಾಗಿದೆ ಎಂದು ಹೇಳಿದ ಅವರು, ‘‘ಸುಪ್ರೀಂ ಕೋರ್ಟ್ ಕೊಲೀಜಿಯಮ್ನಿಂದ ಶಿಫಾರಸುಗೊಂಡಿರುವ ನ್ಯಾಯಾಧೀಶರು ಮಾತ್ರ ಸುಪ್ರೀಂ ಕೋಟ್ ಮತ್ತು ಹೈಕೋರ್ಟ್ಗಳ ನ್ಯಾಯಾಧೀಶರಾಗುತ್ತಾರೆ’’ ಎಂದರು.
ಭಾರತದಲ್ಲಿ ಅಲ್ಪಸಂಖ್ಯಾತರಿಗೆ ಕಿರುಕುಳ ಆರೋಪ: ಯುಎಸ್ ವರದಿ ಕಸದ ಬುಟ್ಟಿಗೆ ಎಂದ ಮೋದಿ ಸರ್ಕಾರ!
ಅಮೆರಿಕದ ಧಾರ್ಮಿಕ ಸ್ವಾತಂತ್ರ್ಯ ಸಂಸ್ಥೆ (USCIRF)ಯು ಮತ್ತೊಮ್ಮೆ ತನ್ನ ಭಾರತ ವಿರೋಧಿ ನಿಲುವನ್ನು ಹೊರಹಾಕಿದ್ದು, ಭಾರತದಲ್ಲಿ ಅಲ್ಪಸಂಖ್ಯಾತರಿಗೆ ಕಿರಿಕುಳ ನೀಡಲಾಗುತ್ತಿದೆ.. ಎಂದು ವರದಿ ನೀಡಿದೆ. ಭಾರತ ಈ ವರದಿಯನ್ನು ಕಟುಶಬ್ಧಗಳಲ್ಲಿ ತಿರಸ್ಕರಿಸಿದ್ದು, USCIRF ಭಾರತದ ವಿರುದ್ದ ತಪ್ಪು ಕಲ್ಪನೆಗಳನ್ನು ಹರಡುತ್ತಿದೆ.. ಎಂದು ಕಿಡಿಕಾರಿದೆ. USCIRF ಭಾರತಕ್ಕೆ ಧಾರ್ಮಿಕ ಸಹಿಷ್ಣುತೆಯ ಪಾಠ ಮಾಡುತ್ತಿರುವುದು ಹಾಸ್ಯಾಸ್ಪದ ಎಂದು ಹೇಳಿರುವ ವಿದೇಶಾಂಗ ಸಚಿವಾಲಯ, ಪಕ್ಷಪಾತ ಮತ್ತು ರಾಜಕೀಯ ಪ್ರೇರಿತ ವರದಿಯನ್ನು ತಿರಸ್ಕರಿಸುವುದಾಗಿ ಕಿಡಿಕಾರಿದೆ. ಇಲ್ಲಿದೆ ಮಾಹಿತಿ.
ಎಸೆಸೆಲ್ಸಿ ಪರೀಕ್ಷೆ | ಬುಧವಾರ 18,554 ವಿದ್ಯಾರ್ಥಿಗಳು ಗೈರು: ಒಬ್ಬ ವಿದ್ಯಾರ್ಥಿ ಡಿಬಾರ್
ಬೆಂಗಳೂರು : ರಾಜ್ಯಾದ್ಯಂತ ಎಸೆಸೆಲ್ಸಿ ಪರೀಕ್ಷೆ ನಡೆಯುತ್ತಿದ್ದು, ಬುಧವಾರ ನಡೆದ ದ್ವಿತೀಯ ಭಾಷೆಗಳಾದ ಇಂಗ್ಲೀಷ್ ಮತ್ತು ಕನ್ನಡ ಭಾಷಾ ಪರೀಕ್ಷೆಗಳಲ್ಲಿ 18,554 ಮಂದಿ ವಿದ್ಯಾರ್ಥಿಗಳು ಗೈರಾಗಿದ್ದಾರೆ. ಒಬ್ಬ ವಿದ್ಯಾರ್ಥಿಯನ್ನು ಡಿಬಾರ್ ಮಾಡಲಾಗಿದೆ. ಪರೀಕ್ಷೆಗೆ 8,44,937 ಮಂದಿ ನೋಂದಣಿ ಮಾಡಿಕೊಂಡಿದ್ದು, 8,26,383 ಪರೀಕ್ಷೆಯನ್ನು ಬರೆದಿದ್ದಾರೆ. ಕಲಬುರಗಿಯಲ್ಲಿ 2,252 ವಿದ್ಯಾರ್ಥಿಗಳು, ರಾಯಚೂರಿನಲ್ಲಿ 1,158 ಮಂದಿ, ಬೀದರ್ನಲ್ಲಿ 1,168 ಮಂದಿ ವಿದ್ಯಾರ್ಥಿಗಳು ಗೈರಾಗಿದ್ದಾರೆ. ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿರುವ ಫೂಲ್ ಬನ್ ಉರ್ದು ಗರ್ಲ್ಸ್ ಹೈಸ್ಕೂಲ್ನಲ್ಲಿ ಪರೀಕ್ಷೆ ಬರೆಯುತ್ತಿದ್ದ ವಿದ್ಯಾರ್ಥಿ ಉತ್ತರವನ್ನು ನಕಲು ಮಾಡಿದ್ದರಿಂದ, ಆ ವಿದ್ಯಾರ್ಥಿಯನ್ನು ಡಿಬಾರ್ ಮಾಡಲಾಗಿದೆ.
ಕಾರ್ಕಳ| ಮಾಲ್ಟ್, 2 ಬಿಸ್ಕಿಟ್ ಗೆ 18ಸಾವಿರ ಬಿಲ್!; ಗ್ರಾಮ ಸಭೆಯಲ್ಲಿ ಸಾರ್ವಜನಿಕರ ಆಕ್ರೋಶ
ಕಾರ್ಕಳ: ಸಾರ್ವಜನಿಕರು, ಅಧಿಕಾರಿಗಳಿಗೆ ಉಪಹಾರಕ್ಕೆ ಮಾಲ್ಟ್, 2 ಬಿಸ್ಕಿಟ್ ಪೂರೈಸಿದ ಬಾಬ್ತು 18ಸಾವಿರ ಬಿಲ್ ಪಾವತಿ ಮಾಡಲಾಗಿದೆ ಆರೋಪಿಸಿ ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಘಟನೆ ಕಾರ್ಕಳ ತಾಲೂಕಿನ ಮಿಯ್ಯಾರು ಪಂಚಾಯತಿನ ಕೋರಂ ಇಲ್ಲದೆ ಮುಂದೂಡಲ್ಪಟ್ಟ ಗ್ರಾಮ ಸಭೆಯಲ್ಲಿ ಬುಧವಾರ ನಡೆಯಿತು. ಪಂಚಾಯತ್ ವ್ಯಾಪ್ತಿಯಲ್ಲಿ ಬೋರ್ವೆಲ್ ಪಂಪ್ ರಿಪೇರಿಗಾಗಿ 4 ಲಕ್ಷಕ್ಕೂ ಅದಿಕ ಹಣವನ್ನು ಖರ್ಚು ಮಾಡಲಾಗಿದೆ. ಇದರಿಂದ ನಾಲ್ಕೈದು ಪಂಪ್ ಖರೀದಿ ಮಾಡಬಹುದಿತ್ತು, ಫ್ಯಾನ್ ರಿಪೇರಿ ಸಂದರ್ಭದಲ್ಲಿಯೂ ಇದೇ ತರಹ ಅಧಿಕ ಬಿಲ್ಗಳನ್ನು ಪಾವತಿಸುವ ಮೂಲಕ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿದ ಗ್ರಾ ಪಂ ಸದಸ್ಯ ಡೆನಿಯಲ್ ರೇಂಜರ್, ಅಧ್ಯಕ್ಷ ಹಾಗೂ ಪಿಡಿಒ ರವರ ಮೇಲೆ ಹಕ್ಕುಚ್ಯುತಿ ಆರೋಪವಿರುವಾಗ ಅಧ್ಯಕ್ಷರು ಸಭೆಯ ಅಧ್ಯಕ್ಷತೆ ವಹಿಸಲು ಕಾನೂನಿನಲ್ಲಿ ಅವಕಾಶವಿಲ್ಲ ಎಂದರು. ಈ ಸಂದರ್ಭದಲ್ಲಿ ಮಾತನಾಡಿದ ಸದಸ್ಯ ಗಿರೀಶ್ ಅಮೀನ್, ಅದ್ಯಕ್ಷರ ಮೇಲೆ ಯಾವುದೇ ಅಂತಹ ಆರೋಪಗಳಿಲ್ಲ. ಅವರಿಗೆ ಅಧಿಕಾರಿಗಳಿಂದ ಯಾವುದೇ ನೋಟಿಸ್ ಜಾರಿಯಾಗಿಲ್ಲ ಎಂದು ಸ್ಪಷ್ಟನೆ ನೀಡಿದರು. ರಾ. ಹೆದ್ದಾರಿ ಬದಿಯಲ್ಲಿ ನಿಯಮ ಉಲ್ಲಂಘಿಸಿ ಅಕ್ರಮವಾಗಿ ಕಟ್ಟಡ ನಿರ್ಮಿಸಲಾಗುತ್ತಿದೆ. ಕಂದಾಯ ಇಲಾಖೆಯಲ್ಲಿ ನಕ್ಷೆೆಯಲ್ಲಿ ರಾಜ್ಯ ಹೆದ್ದಾಾರಿ ಎಂದು ತಪ್ಪಾಗಿ ನಮೂದಿಸಿದ್ದು, ಇದರ 9/11 ಖಾತೆ ಮುಟ್ಟುಗೋಲು ಅಥವಾ ತಡೆ ನೀಡಬೇಕು ಎಂದು ಆಗ್ರಹಿಸಿದ ಗ್ರಾಮಸ್ಥರು ಕಟ್ಟಡಕ್ಕೆೆ ಸಂಬಂಧಪಟ್ಟವರು ಕಂದಾಯ ಇಲಾಖೆಯಲ್ಲಿ ನಿಯಮಾವಳಿ ಉಲ್ಲಂಘಿಸಿದ್ದಾರೆ. ಇದಕ್ಕೆೆ ಕಂದಾಯ ಇಲಾಖೆ ಅಧಿಕಾರಿಗಳು ಸಹಕಾರ ನೀಡಿದ್ದಾರೆ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದರು. ಈ ಬಗ್ಗೆೆ ಲೋಪವಿದ್ದಲ್ಲಿ ಪರಿಶೀಲಿಸಿ ಮುಂದಿನ ಸಾಮಾನ್ಯ ಸಭೆಯಲ್ಲಿ ಕ್ರಮವಹಿಸುವ ಬಗ್ಗೆೆ ಗ್ರಾ. ಪಂ. ಅಧ್ಯಕ್ಷೆೆ ಸನ್ಮತಿ ನಾಯಕ್, ಪಿಡಿಒ ನಾಗರಾಜ್ ಎಂ. ಸ್ಪಷ್ಟನೆ ನೀಡಿದರು. ಮೋರಿ ಮತ್ತು ಕಾಲುಸಂಕ ನಿರ್ಮಾಣ, ವಿದ್ಯುತ್ ಸಂಪರ್ಕ, ಬೀದಿ ದೀಪದ ಬಗ್ಗೆೆ ಚರ್ಚೆ ನಡೆಯಿತು. 35 ಲಕ್ಷ ರೂ. ವೆಚ್ಚದಲ್ಲಿ ಬಾವಿ ನಿರ್ಮಿಸಿದ್ದು, ಗ್ರಾಮದಲ್ಲಿ ಜನರಿಗೆ ಈ ನೀರು ಸಮರ್ಪಕವಾಗಿ ಲಭ್ಯವಾಗುತ್ತಿಲ್ಲ. ಇದು ಎಲ್ಲ ಜನರಿಗೆ ಉಪಯೋಗವಾಗುವಂತೆ ಗ್ರಾ. ಪಂ. ಆಡಳಿತ ಮುತುವರ್ಜಿವಹಿಸಬೇಕು ಎಂದು ಜನರು ಒತ್ತಾಯಿಸಿದರು. ಗ್ರಾ. ಪಂ. ಕಚೇರಿಯಲ್ಲಿ ಸಂಬಂಧಪಟ್ಟ ದಾಖಲೆಗಳನ್ನು ಪಡೆಯಲು ವಿಳಂಬವಾಗುತ್ತಿರುವ ಬಗ್ಗೆೆ, ಪಂಪು ದುರಸ್ತಿ, ಚಹಾ ತಿಂಡಿಗೆ ಹೆಚ್ಚು ಬಿಲ್ ವ್ಯಯಿಸುತ್ತಿರುವ ಬಗ್ಗೆೆ ಸೂಕ್ತ ಪರಿಶೀಲನೆ ನಡೆಸಿ ಕ್ರಮ ವಹಿಸುವಂತೆ ಗ್ರಾಾ. ಪಂ. ಸದಸ್ಯರು, ಗ್ರಾಮಸ್ಥರು ಗ್ರಾ. ಪಂ. ಅಧ್ಯಕ್ಷರು, ನೋಡಲ್ ಅಧಿಕಾರಿಯನ್ನು ಒತ್ತಾಯಿಸಿದರು. ಪಿಡಿಒ ನಾಗರಾಜ್ ಅವರು ಸಾರ್ವಜನಿಕರಿಗೆ ಸಮರ್ಪಕ ಸ್ಪಂದನೆ ನೀಡುತ್ತಿಲ್ಲ. ಉದ್ದೇಶಪೂರ್ವಕವಾಗಿ ಕಡತ ವಿಲೇವಾರಿ ವಿಳಂಬ ಮಾಡುತ್ತಿದ್ದಾರೆ. ಕೇಳಿದರೆ ತಪ್ಪು ಮಾಹಿತಿ ನೀಡುತ್ತಾರೆ. ಅವ್ಯವಹಾರದಲ್ಲಿ ತೊಡಗಿಸಿಕೊಂಡಿದ್ದು, ಲೆಕ್ಕಪತ್ರಗಳ ಬಗ್ಗೆೆಯೂ ಸಮರ್ಪಕ ಉತ್ತರ ನೀಡುವುದಿಲ್ಲ. ಅವರನ್ನು ಮೇಲಾಧಿಕಾರಿಗಳು ಸೂಕ್ತ ತನಿಖೆಗೊಳಪಡಿಸಬೇಕು. ಪ್ರಶ್ನಿಸಿದರೆ ಹಲ್ಲೆಗೆ ಮುಂದಾಗುವ ಪಿಡಿಒ ನಮಗೇ ಬೇಡವೇ ಬೇಡ ಎಂದು ರಾಜೇಶ್ ಆಕ್ರೋಶ ವ್ಯಕ್ತಪಡಿಸಿದರು. ರಾ .ಹೆದ್ದಾರಿ ನಿರ್ಮಾಣ ಸಂದರ್ಭದಲ್ಲಿ ರಸ್ತೆಯ ಮದ್ಯೆ ಜೋಡುಕಟ್ಟೆಯಲ್ಲಿ ಡಿವೈಡರ್ ಅಳವಡಿಸಿರುವುದರಿಂದ ಜನರಿಗೆ ತುಂಬಾ ತೊಂದರೆಯಾಗುತ್ತಿದೆ. ಶಾಲಾ ವಾಹನ, ಡೈರಿಗೆ ಹಾಲು ತರುವವರು, ಪಂಚಾಯತ್ ಕಛೇರಿಗೆ ಬರುವವರು ಅರ್ಧ ಕಿಲೋ ಮೀಟರ್ ದೂರ ಹೋಗಿ ತಿರುಗಿ ಬರಬೇಕಾಗಿದೆ. ಸಂಬಂಧಪಟ್ಟ ಇಲಾಖೆಯವರು ಜೋಡುಕಟ್ಟೆ ಪೇಟೆಯಲ್ಲಿ ಡಿವೈಡರ್ ಬದಲಾವಣೆ ಮಾಡಿ ಜನಸಾಮಾನ್ಯರಿಗೆ ಉಪಯೋಗ ಮಾಡುವಂತೆ ವಿನಂತಿಸಿದರು ನೋಡಲ್ ಅಧಿಕಾರಿ ವಿಜಯ ನಾಯ್ಕ್ ಉಪಸ್ಥಿಿತರಿದ್ದರು. ವಿವಿಧ ಇಲಾಖೆ ಅಧಿಕಾರಿಗಳು ಇಲಾಖೆ ಯೋಜನೆಗಳ ಬಗ್ಗೆೆ ಮಾಹಿತಿ ನೀಡಿದರು. ಗ್ರಾಮ ಸಭೆಯಲ್ಲಿ ಗ್ರಾಮಾಂತರ ಪೊಲೀಸ್ ಠಾಣೆ ಸಂಬಂಧಿಸಿ ಜನರು ಅಹವಾಲು ಕೇಳಲು ಯಾರು ಇಲ್ಲದಿರುವ ಬಗ್ಗೆೆ ಸಭೆಯಲ್ಲಿ ಅಸಮಾದಾನ ವ್ಯಕ್ತವಾಯಿತು. ಈ ಬಗ್ಗೆೆ ವಿಷಯ ಪ್ರಸ್ತಾಪಿಸಿದ ಗ್ರಾಮಸ್ಥರು, ಗ್ರಾಮದಲ್ಲಿ ಕ್ರಿಕೆಟ್ ಬೆಟ್ಟಿಿಂಗ್ ಹಾವಳಿ ಜೋರಾಗಿದ್ದು, ಎಲ್ಲೆೆಂದರಲ್ಲಿ ಬೆಟ್ಟಿಿಂಗ್ ನಡೆಯುತ್ತಿದ್ದು, ಇದರ ನಿಯಂತ್ರಣಕ್ಕೆೆ ಪೊಲೀಸ್ ಇಲಾಖೆ ಸೂಕ್ತ ಕ್ರಮವಹಿಸಬೇಕಿದೆ ಎಂದು ಒತ್ತಾಯಿಸಿದರು.
ಬಸನಗೌಡ ಪಾಟೀಲ್ ಯತ್ನಾಳ್ ಉಚ್ಛಾಟನೆ ಆಯ್ತು; ಮುಂದಿನ ಸರದಿ ಎಸ್ ಟಿ ಸೋಮಶೇಖರ್, ಶಿವರಾಂ ಹೆಬ್ಬಾರ್?
High Command To BJP Leaders : ಬಸನಗೌಡ ಪಾಟೀಲ್ ಯತ್ನಾಳ್ ಉಚ್ಛಾಟನೆ ಬೆನ್ನಲ್ಲೆ ಎಸ್ ಟಿ ಸೋಮಶೇಖರ್, ಶಿವರಾಂ ಹೆಬ್ಬಾರ್ ಅವರಿಗೂ ಆತಂಕ ಎದುರಾಗಿದೆ. ಈಗಾಗಲೇ ಇಬ್ಬರಿಗೆ ಶಿಸ್ತು ಸಮಿತಿ ಶೋಕಾಸ್ ನೋಟಿಸ್ ಕೊಟ್ಟಿದೆ. ಬೆನ್ನಲ್ಲೆ ಶಿಸ್ತು ಸಮಿತಿ ಕೊಡುವ ನೋಟಿಸ್ಗೆ ಉತ್ತರ ನೀಡುವುದಾಗಿ ಎಸ್ ಟಿ ಸೋಮಶೇಖರ್ ಹೇಳಿದ್ದಾರೆ.