ಕಲಬುರಗಿ | ನಾಪತ್ತೆಯಾಗಿದ್ದ ಯುವತಿಯ ಮೃತದೇಹ ಪತ್ತೆ : ಆರೋಪಿಯ ಬಂಧನ
ಕಲಬುರಗಿ : ನಾಪತ್ತೆಯಾಗಿದ್ದ ಯುವತಿಯೊರ್ವಳ ಮೃತದೇಹವು 11 ದಿನಗಳ ಬಳಿಕ ಪತ್ತೆಯಾಗಿದ್ದು, ತನಿಖೆಯ ನಂತರ ಕೊಲೆಯೆಂದು ತಿಳಿದು ಬಂದಿದೆ. ಘಟನೆಯು ಸೇಡಂ ತಾಲ್ಲೂಕಿನ ಮಳಖೇಡ ಪೊಲೀಸ್ ಠಾಣೆಯ ವ್ಯಾಪ್ತಿಯ ಅಲ್ಟ್ರಾಟೆಕ್ (ರಾಜಶ್ರೀ) ಸಿಮೆಂಟ್ ಕಾರ್ಖಾನೆಯ ಸೋಲಾರ ಗಾರ್ಡನ ಬಳಿಯ ಕಾಲುವೆಯಲ್ಲಿ ನಡೆದಿದೆ. ಮಳಖೇಡದ ನಿವಾಸಿ ಭಾಗ್ಯಶ್ರೀ ಚನ್ನವೀರ ಸೂಲಹಳ್ಳಿ(20) ಮೃತ ಯುವತಿ ಎಂದು ತಿಳಿದುಬಂದಿದ್ದು, ಅದೇ ಗ್ರಾಮದ ಮಂಜುನಾಥ್ ಎಂಬಾತ ಪ್ರಮುಖ ಆರೋಪಿಯಾಗಿದ್ದು, ಸದ್ಯ ಆತನನ್ನು ಬಂಧಿಸಿ, ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸಹೋದರನ ಆತ್ಮಹತ್ಯೆಗೆ ಸೇಡು: ಆರೋಪಿ ಮಂಜುನಾಥ್ನ ಸಹೋದರ ವಿನೋದ್ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ. ಶಾಶ್ವತ ಉದ್ಯೋಗ ಸಿಗದೇ ಆತ ಕಳೆದ ಆಗಸ್ಟ್ನಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದ. ಇದಕ್ಕೆ ಕಾರಣ, ಮೃತೆಯ ತಂದೆ ಹಾಗೂ ಕಾರ್ಮಿಕ ಸಂಘಟನೆಯ ಮುಖಂಡ ಚನ್ನವೀರನೆಂದು ಮಂಜುನಾಥ್ ಶಂಕಿಸಿದ್ದ. ಈ ಸೇಡಿನಿಂದಲೇ ಅವನು ಚನ್ನವೀರನ ಪುತ್ರಿ ಭಾಗ್ಯಶ್ರೀಯನ್ನೇ ಕೊಲೆ ಮಾಡಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಸೆಪ್ಟೆಂಬರ್ 11 ರಂದು ಯುವತಿ ನಾಪತ್ತೆಯಾಗಿದ್ದು, ಕುಟುಂಬವು 12ರಂದು ದೂರು ದಾಖಲಿಸಿತ್ತು. ಬಳಿಕ ಕಾರ್ಖಾನೆಯ ಕಾಲುವೆಯ ಬಳಿಯಲ್ಲಿ ಪತ್ತೆಯಾದ ಮೃತದೇಹವು ಭಾಗ್ಯಶ್ರೀಯದ್ದೇ ಎಂದು ದೃಢಪಟ್ಟಿದೆ. ಪೊಲೀಸರು ಮಂಜುನಾಥ್ ನನ್ನು ಬಂಧಿಸಿದ್ದು, ಈತನಿಗೆ ಇನ್ನೂ ಮೂವರು ಸಹಕಾರ ನೀಡಿದ್ದಾರೆಂಬ ಸುಳಿವು ಸಿಕ್ಕಿದೆ. ಶೀಘ್ರವೇ ಅವರನ್ನು ವಶಕ್ಕೆ ಪಡೆಯಲಾಗುವುದಾಗಿ ಮಳಖೇಡ ಠಾಣೆ ಪೊಲೀಸರು ತಿಳಿಸಿದ್ದಾರೆ.
ದಿಲ್ಲಿ ವಿವಿ ಚುನಾವಣೆಯಲ್ಲಿ ಎಬಿವಿಪಿಗೆ ಗೆಲುವು | ಭಾರಿ ಅಂತರದಲ್ಲಿ ಅಧ್ಯಕ್ಷ ಸ್ಥಾನ ಗೆದ್ದ ಆರ್ಯನ್ ಮಾನ್
ಹೊಸದಿಲ್ಲಿ: ದಿಲ್ಲಿ ವಿಶ್ವವಿದ್ಯಾಲಯ ವಿದ್ಯಾರ್ಥಿ ಒಕ್ಕೂಟ (DUSU) ಚುನಾವಣೆ ಫಲಿತಾಂಶದಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಭರ್ಜರಿ ಯಶಸ್ಸು ಸಾಧಿಸಿದೆ. ಆರೆಸ್ಸೆಸ್ ಬೆಂಬಲಿತ ಎಬಿವಿಪಿ ಅಭ್ಯರ್ಥಿ ಆರ್ಯನ್ ಮಾನ್, ಕಾಂಗ್ರೆಸ್ ಬೆಂಬಲಿತ ಎನ್ಎಸ್ಯುಐ (NSUI) ಅಭ್ಯರ್ಥಿ ಜೋಸ್ಲಿನ್ ನಂದಿತಾ ಚೌಧರಿ ಅವರನ್ನು 16,000 ಕ್ಕೂ ಹೆಚ್ಚಿನ ಮತಗಳ ಅಂತರದಿಂದ ಸೋಲಿಸಿ ಅಧ್ಯಕ್ಷ ಸ್ಥಾನವನ್ನು ತಮ್ಮದಾಗಿಸಿಕೊಂಡಿದ್ದಾರೆ. ಆರ್ಯನ್ ಮಾನ್ ಒಟ್ಟು 28,841 ಮತಗಳನ್ನು ಪಡೆದರೆ, ಜೋಸ್ಲಿನ್ 12,645 ಮತಗಳನ್ನು ಪಡೆದು ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟರು. ನಾಲ್ಕು ಹುದ್ದೆಗಳಲ್ಲಿ ಮೂರನ್ನು ಗೆಲ್ಲುವ ಮೂಲಕ ಎಬಿವಿಪಿ ಮೇಲುಗೈ ಸಾಧಿಸಿದೆ. ಉಪಾಧ್ಯಕ್ಷ ಸ್ಥಾನವನ್ನು ಎನ್ಎಸ್ಯುಐ ತನ್ನದಾಗಿಸಿಕೊಂಡಿದೆ. ಅಧ್ಯಕ್ಷರಾಗಿ ABVPಯ ಆರ್ಯನ್ ಮಾನ್ ಅಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ NSUI ನ ರಾಹುಲ್ ಝಾನ್ಸಲಾ ಆಯ್ಕೆಯಾದರು. ಕಾರ್ಯದರ್ಶಿಯಾಗಿ ABVPಯ ಕುನಾಲ್ ಚೌಧರಿ, ಜಂಟಿ ಕಾರ್ಯದರ್ಶಿಯಾಗಿ ದೀಪಿಕಾ ಝಾ ಜಯಗಳಿಸಿದರು. SFI ಮತ್ತು AISA ಯಾವುದೇ ಸ್ಥಾನವನ್ನು ಗಳಿಸಲು ವಿಫಲವಾದವು. ಫಲಿತಾಂಶದ ನಂತರ ಎನ್ಎಸ್ಯುಐ ಪ್ರಕಟಣೆ ನೀಡಿದ್ದು, “ಸಾವಿರಾರು ದಿಲ್ಲಿ ವಿವಿ ವಿದ್ಯಾರ್ಥಿಗಳು ನಮ್ಮೊಂದಿಗೆ ದೃಢವಾಗಿ ನಿಂತಿದ್ದಾರೆ. ಗೆಲುವು ಅಥವಾ ಸೋಲು ನಮ್ಮ ಹೋರಾಟವನ್ನು ತಡೆಯದು. ನಾವು ವಿದ್ಯಾರ್ಥಿ ಹಕ್ಕುಗಳು ಮತ್ತು ವಿಶ್ವವಿದ್ಯಾಲಯದ ಹಿತಕ್ಕಾಗಿ ಹೋರಾಟ ಮುಂದುವರಿಸುತ್ತೇವೆ” ಎಂದು ತಿಳಿಸಿದೆ. 2024ರ DUSU ಚುನಾವಣೆಯಲ್ಲಿ ಎನ್ಎಸ್ಯುಐ ಏಳು ವರ್ಷಗಳ ನಂತರ ಅಧ್ಯಕ್ಷ ಸ್ಥಾನವನ್ನು ಗೆದ್ದು ಇತಿಹಾಸ ನಿರ್ಮಿಸಿತ್ತು. ಎಬಿವಿಪಿ ಆ ಸಮಯದಲ್ಲಿ ಉಪಾಧ್ಯಕ್ಷ ಸ್ಥಾನವನ್ನು ಪಡೆದು, ಕಾರ್ಯದರ್ಶಿ ಹುದ್ದೆಯನ್ನು ಉಳಿಸಿಕೊಂಡಿತ್ತು. ಈ ಬಾರಿ ಸುಮಾರು 40% ಮತದಾನ ದಾಖಲಾಗಿದ್ದು, ದಿಲ್ಲಿ ವಿಶ್ವವಿದ್ಯಾಲಯದ ಚುನಾವಣೆಗಳು ದಶಕಗಳಿಂದ “ಮಿನಿ ಲೋಕಸಭೆ” ಎಂದೇ ಖ್ಯಾತಿ ಪಡೆದಿವೆ. ಅರುಣ್ ಜೇಟ್ಲಿ, ಅಜಯ್ ಮಾಕನ್ ಸೇರಿದಂತೆ ಅನೇಕ ರಾಷ್ಟ್ರೀಯ ನಾಯಕರಿಗೆ DUSU ಚುನಾವಣೆಯೇ ರಾಜಕೀಯ ಪಯಣದ ಪ್ರಾರಂಭ ಆಗಿತ್ತು.
ಪಾನಿಪುರಿ ತಂದ ಪೇಚಾಟ: ಎರಡು ಗೋಲ್ಗಪ್ಪಾ ಕಮ್ಮಿ ಕೊಟ್ಟಿದ್ದಕ್ಕೆ ಮಹಿಳೆಯಿಂದ ಟ್ರಾಫಿಕ್ ಬ್ಲಾಕ್
Golgappa trouble in Vadodara : ಗುಜರಾತ್ ರಾಜ್ಯದ ವಡೋದರದಲ್ಲಿ ತೀರಾ ವಿಲಕ್ಷಣ ಘಟನೆಯೊಂದು ನಡೆದಿದೆ. ಮಹಿಳೆಯೊಬ್ಬಳು ರಸ್ತೆಯಲ್ಲೇ ಪ್ರತಿಭಟನೆ ನಡೆಸಿ, ಪೊಲೀಸರು ಬಂದ ಮೇಲೆ ಅವರ ಗೋಳಿಟ್ಟಿದ್ದಾರೆ. ಇದಕ್ಕೆಲ್ಲಾ ಕಾರಣ ಪಾನಿಪುರಿಯ ಗೋಲ್ಗಪ್ಪ.
ಸಮೀಕ್ಷೆ ಬಗ್ಗೆ ಅಂತಿಮ ತೀರ್ಮಾನ ಹಿಂದುಳಿದ ವರ್ಗದ ಆಯೋಗವೇ ಕೈಗೊಳ್ಳಲಿದೆ : ಸಿಎಂ ಸಿದ್ದರಾಮಯ್ಯ
ʼʼಆರ್ಥಿಕ, ಸಾಮಾಜಿಕ ಸಮೀಕ್ಷೆಯಲ್ಲಿ ಬಿಜೆಪಿ ರಾಜಕಾರಣ ಮಾಡುತ್ತಿದೆʼʼ
India Vs Pakistan-`ನೋ ಹ್ಯಾಂಡ್ ಶೇಕ್' ವಿವಾದ: ಟಾಸ್ ಗೂ 4 ನಿಮಿಷ ಮೊದಲು ರೆಫ್ರಿಗೆ ಸಂದೇಶ ಕಳಿಸಿತ್ತು ಬಿಸಿಸಿಐ!
No Hand Shake Issue- ಭಾರತ ಮತ್ತು ಪಾಕಿಸ್ತಾನದ ನಡುವಿನ ಹಸ್ತಲಾಘವ ವಿವಾದ ಸದ್ಯಕ್ಕೆ ನಿಲ್ಲುವ ಹಾಗೆ ಕಾಣುತ್ತಿಲ್ಲ. ಪ್ರತಿದಿನವೂ ಹೊಸ ಹೊಸ ಸಂಗತಿಗಳು ಹೊರಬೀಳುತ್ತಿವೆ. ಪಾಕಿಸ್ತಾನ ಆಟಗಾರರೊಂದಿಗೆ ಹಸ್ತಲಾಘವ ಮಾಡುವುದಿಲ್ಲ ಎಂಬ ನಿರ್ಣಯ ಮೊದಲೇ ತೆಗೆದುಕೊಂಡದ್ದಾಗಿತ್ತು. ಈ ಬಗ್ಗೆ ಪಂದ್ಯದ ಟಾಸ್ ಗೆ 4 ನಿಮಿಷ ಮೊದಲು ರೆಫ್ರಿ ಆ್ಯಂಡಿ ಪೈಕ್ರಾಫ್ಟ್ ಗೆ ಸಂದೇಶ ಕಳುಹಿಸಿತ್ತು ಎಂದು ಈಗ ವರದಿಯಾಗಿದೆ. ಹಾಗಿದ್ದರೆ ಅಂದು ನಡೆದದ್ದೇನು? ಇಲ್ಲಿದೆ ನೋಡಿ ವರದಿ.
ಸಾಮಾಜಿಕ ನ್ಯಾಯದ ಬಗ್ಗೆ ಮಾಧ್ಯಮಗಳು ಜನರಲ್ಲಿ ಜಾಗೃತಿ ಮೂಡಿಸಲಿ : ಸಿಎಂ ಸಿದ್ದರಾಮಯ್ಯ
ʼʼದುರ್ಬಲ ವರ್ಗದವರ ಅಭಿವೃದ್ಧಿಯೇ ನಿಜವಾದ ಅಭಿವೃದ್ಧಿʼʼ
ರಾಯಚೂರು | ಐಟಿಐ ಪ್ರವೇಶಕ್ಕೆ ಅರ್ಜಿ ಆಹ್ವಾನ
ರಾಯಚೂರು : ರಾಯಚೂರು ಹಾಗೂ ದೇವದುರ್ಗ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಗಳಲ್ಲಿ (ಐಟಿಐ) ವಿವಿಧ ವೃತ್ತಿಗಳಿಗೆ 2025–26ನೇ ಶೈಕ್ಷಣಿಕ ಸಾಲಿನಲ್ಲಿ ಪ್ರವೇಶಕ್ಕಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಎಸ್ಎಸ್ಎಲ್ಸಿ ಉತ್ತೀರ್ಣರಾದ ವಿದ್ಯಾರ್ಥಿಗಳು ಅಂಕಪಟ್ಟಿ, ಇತ್ತೀಚಿನ ಎರಡು ಭಾವಚಿತ್ರಗಳು, ಜಾತಿ ಹಾಗೂ ಆದಾಯ ಪ್ರಮಾಣ ಪತ್ರ, 371 ಜೆ ಪ್ರಮಾಣ ಪತ್ರ, ಗ್ರಾಮೀಣ ಹಾಗೂ ವ್ಯಾಸಂಗ ಪ್ರಮಾಣ ಪತ್ರಗಳೊಂದಿಗೆ ನೇರವಾಗಿ ಸಂಸ್ಥೆಯಲ್ಲಿ ಸೆಪ್ಟೆಂಬರ್ 30ರೊಳಗೆ ಅರ್ಜಿ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ರಾಯಚೂರು ಐಟಿಐ ಮೊಬೈಲ್ ಸಂಖ್ಯೆ 9036684778, 9449185499 ಹಾಗೂ ದೇವದುರ್ಗ ಐಟಿಐ ಮೊಬೈಲ್ ಸಂಖ್ಯೆ 9740671796, 7676126770, 9731494209, 9113519543 ಗೆ ಸಂಪರ್ಕಿಸಬಹುದು ಎಂದು ಸಂಸ್ಥೆಯ ಪ್ರಾಚಾರ್ಯರು ತಿಳಿಸಿದ್ದಾರೆ.
ಹೊಸದಿಲ್ಲಿ: ಚುನಾವಣಾ ಆಯೋಗವು ದೇಶದಲ್ಲಿಯ ಎಲ್ಲ ಮತದಾರರ ವಿವರಗಳನ್ನು ಒಳಗೊಂಡಿರುವ ಡೇಟಾಬೇಸ್ನ್ನು ನಿರ್ವಹಿಸುತ್ತದೆ ಮತ್ತು ಚುನಾವಣೆಗಳನ್ನು ಪಾರದರ್ಶಕವಾಗಿ ಹಾಗೂ ಪರಿಣಾಮಕಾರಿಯಾಗಿ ನಡೆಸಲು ಮಾತ್ರ ಅದು ಈ ಡೇಟಾಬೇಸ್ನ್ನು ಬಳಸಬೇಕಾಗುತ್ತದೆ. ಇತ್ತೀಚಿಗೆ ಮುಖ್ಯ ಚುನಾವಣಾ ಆಯುಕ್ತ(ಸಿಇಸಿ) ಜ್ಞಾನೇಶ್ ಕುಮಾರ್ ಅವರು ಮಹಿಳಾ ಮತದಾರರ ಖಾಸಗಿತನವನ್ನು ರಕ್ಷಿಸಲು ಮತದಾನದ ವೀಡಿಯೊ ರೆಕಾರ್ಡಿಂಗ್ಗಳನ್ನು ಆಯೋಗವು ಹಂಚಿಕೊಳ್ಳುವುದಿಲ್ಲ ಎಂದು ಹೇಳಿದ್ದರು. ಆದಾಗ್ಯೂ, reporters-collective.in ನಡೆಸಿದ ತನಿಖೆಯು ಕನಿಷ್ಠ ಒಂದು ಸಂದರ್ಭದಲ್ಲಿ ಆಯೋಗವು ಛಾಯಾಚಿತ್ರಗಳು ಸೇರಿದಂತೆ ಮತದಾರರ ದತ್ತಾಂಶಗಳನ್ನು ತೆಲಂಗಾಣ ರಾಜ್ಯ ಸರಕಾರದೊಂದಿಗೆ ಹಂಚಿಕೊಂಡಿತ್ತು ಎನ್ನುವುದನ್ನು ಬಹಿರಂಗಗೊಳಿಸಿದೆ. ನವೆಂಬರ್ 2019ರಲ್ಲಿ ಆಗಿನ ಟಿಆರ್ಎಸ್(ಈಗ ಬಿಆರ್ಎಸ್) ನೇತೃತ್ವದ ತೆಲಂಗಾಣ ಸರಕಾರವು ಪಿಂಚಣಿದಾರರ ಲೈವ್ ವೆರಿಫಿಕೇಷನ್ ವ್ಯವಸ್ಥೆ(ಪಿಎಲ್ವಿಎಸ್)ಯನ್ನು ಆರಂಭಿಸಿತ್ತು. ಇದು ಪಿಂಚಣಿದಾರರ ಜನಸಂಖ್ಯಾ ವಿವರಗಳು ಮತ್ತು ಛಾಯಾಚಿತ್ರಗಳನ್ನು ಪರಿಶೀಲಿಸುವ ಸಾಫ್ಟ್ವೇರ್ ಪ್ರಕ್ರಿಯೆಯಾಗಿದೆ. ತೆಲಂಗಾಣ ಸರಕಾರವು ಸಾಫ್ಟ್ವೇರ್ ಅನ್ನು ಅಭಿವೃದ್ಧಿಗೊಳಿಸಲು, ಮಾರ್ಪಡಿಸಲು ಮತ್ತು ಪರೀಕ್ಷಿಸಲು ಖಾಸಗಿ ಕಂಪನಿಗಳೊಂದಿಗೆ ಒಪ್ಪಂದ ಮಾಡಿಕೊಂಡಿತ್ತು. ಇದು ಸ್ವತಂತ್ರ ಸಾಂವಿಧಾನಿಕ ಪ್ರಾಧಿಕಾರವಾಗಿರುವ ಚುನಾವಣಾ ಆಯೋಗವು ಖಾಸಗಿ ಸಂಸ್ಥೆಗಳನ್ನು ಒಳಗೊಂಡಿದ್ದ ಯೋಜನೆಗಾಗಿ ತನ್ನ ಮತದಾರರ ಡೇಟಾಬೇಸ್ ಅನ್ನು ರಾಜ್ಯ ಸರಕಾರವೊಂದರ ಜೊತೆಗೆ ಹಂಚಿಕೊಂಡ ಮೊದಲ ಪ್ರಕರಣವಾಗಿತ್ತು. ಚುನಾವಣಾ ಆಯೋಗವು ಯಾವ ನಿಬಂಧನೆಗಳಡಿ ಈ ಡೇಟಾವನ್ನು ಮೂರನೇ ಪಕ್ಷಗಳೊಂದಿಗೆ ಹಂಚಿಕೊಂಡಿತ್ತು ಎನ್ನುವುದು ಬಹಿರಂಗಗೊಂಡಿಲ್ಲ. ಕೇಂದ್ರೀಕೃತ ಡೇಟಾಬೇಸ್ ಆಗಿರುವ ಮತದಾರರ ಪಟ್ಟಿಗಳ ಉಸ್ತುವಾರಿ ಚುನಾವಣಾ ಆಯೋಗದ್ದಾಗಿದ್ದು, ಅದರ ಅನುಮತಿಯೊಂದಿಗೆ ಮಾತ್ರ ಅದನ್ನು ಪ್ರವೇಶಿಸಬಹುದು. 2019ರಲ್ಲಿ ಹೈದರಾಬಾದ್ನ ಟೆಕ್ ಸಂಸ್ಥೆ ಪೊಸಿಡೆಕ್ಸ್ ಟೆಕ್ನಾಲಜೀಸ್ ಪ್ರೈ.ಲಿ.ಪಿಎಲ್ವಿಎಸ್ನಲ್ಲಿ ಕೆಲಸ ಮಾಡಿತ್ತು ಎನ್ನುವುದನ್ನು ಮಾಹಿತಿ ಹಕ್ಕು ಕಾರ್ಯಕರ್ತ ಎಸ್.ಕ್ಯೂ.ಮಸೂದ್ ಅವರು ಸಲ್ಲಿಸಿದ್ದ ಆರ್ಟಿಐ ಅರ್ಜಿಗೆ ತೆಲಂಗಾಣದ ಮಾಹಿತಿ ಮತ್ತು ತಂತ್ರಜ್ಞಾನ ಇಲಾಖೆಯು ನೀಡಿರುವ ಉತ್ತರವು ಬಹಿರಂಗಗೊಳಿಸಿದೆ. ತೆಲಂಗಾಣ ಸರಕಾರವು ನಂತರ ಈ ಪ್ರಕ್ರಿಯೆಗೆ ರಿಯಲ್ ಟೈಮ್ ಡಿಜಿಟಲ್ ಅಥೆಂಟಿಕೇಷನ್ ಆಫ್ ಐಡೆಂಟಿಟಿ(ಆರ್ಟಿಡಿಎಐ) ಎಂದು ಮರುನಾಮಕರಣ ಮಾಡಿತ್ತು. ಪಿಂಚಣಿ ಫಲಾನುಭವಿಗಳು ತಮ್ಮ ಸೆಲ್ಫಿಗಳನ್ನು ಅಪ್ಲೋಡ್ ಮಾಡಬೇಕಾಗಿತ್ತು, ಅದು ಗುರುತಿನ ಮತ್ತು ಜೀವಿತ ಪುರಾವೆಯಾಗಿ ಕಾರ್ಯ ನಿರ್ವಹಿಸಿತ್ತು. ಆರ್ಟಿಐ ಕಾರ್ಯಕರ್ತ ಶ್ರೀನಿವಾಸ ಕೊಡಾಲಿ ಅವರು ಆ.28,2025ರಂದು ತೆಲಂಗಾಣದ ಮುಖ್ಯ ಚುನಾವಣಾಧಿಕಾರಿಗೆ ಸಲ್ಲಿಸಿರುವ ದೂರಿನಲ್ಲಿ, ತೆಲಂಗಾಣ ಸರಕಾರವು ಆರ್ಟಿಡಿಎಐ ಮೂಲಕ ತನ್ನ ಮುಖ ಗುರುತಿಸುವಿಕೆ ಆ್ಯಪ್ಗಳಿಗಾಗಿ ಮತದಾರರ ಪಟ್ಟಿಗಳಲ್ಲಿಯ ಛಾಯಾಚಿತ್ರಗಳು ಮತ್ತು ಹೆಸರುಗಳನ್ನು ಕಾನೂನಬಾಹಿರವಾಗಿ ಹಂಚಿಕೊಂಡಿದೆ ಮತ್ತು ದುರುಪಯೋಗಿಸಿಕೊಂಡಿದೆ ಎಂದು ಆರೋಪಿಸಿದ್ದಾರೆ. ಆರ್ಟಿಡಿಎಐ ತೆಲಂಗಾಣದ ಸಾರಿಗೆ, ಶಿಕ್ಷಣ ಇಲಾಖೆಗಳಿಂದ ಮತ್ತು ಸರಕಾರವು ಅಗತ್ಯವೆಂದು ಪರಿಗಣಿಸಿರುವ ಇತರ ಉದ್ದೇಶಗಳಿಗಾಗಿ ಬಳಕೆಯಾಗುತ್ತಿರುವ ಸಾಮಾನ್ಯ ಉದ್ದೇಶದ ಸಾಧನವಾಗಿ ಮಾರ್ಪಟ್ಟಿದೆ ಎಂದು ಅವರು ದೂರಿನಲ್ಲಿ ಬೆಟ್ಟು ಮಾಡಿದ್ದಾರೆ. ಚುನಾವಣಾ ಆಯೋಗವು ಯಾವಾಗ ಮೊದಲ ಬಾರಿಗೆ ತೆಲಂಗಾಣಕ್ಕೆ ಮತದಾರರ ಡೇಟಾಬೇಸ್ ಅನ್ನು ಲಭ್ಯವಾಗಿಸಿತ್ತು ಮತ್ತು ಅದು ಮುಂದುವರಿದಿದೆಯೇ ಎನ್ನುವುದು ಸ್ಪಷ್ಟವಾಗಿಲ್ಲ ಎಂದು reporters-collective.in ವರದಿ ಮಾಡಿದೆ. ತನ್ನ ದೂರಿನಲ್ಲಿ ತೆಲಂಗಾಣ ಸಿಇಒರಿಂದ ಆಡಿಟ್ ಅನ್ನು ಕೋರಿರುವ ಕೊಡಾಲಿ, ಸಿಇಒ ಕಚೇರಿ ಹೊರತುಪಡಿಸಿ ಬಾಹ್ಯ ಏಜೆನ್ಸಿಗಳಿಂದ ಎಲ್ಲ ಎಪಿಕ್(ಮತದಾರರ ಗುರುತಿನ ಚೀಟಿ) ಛಾಯಾಚಿತ್ರಗಳನ್ನು ತೆಗೆದುಹಾಕುವಂತೆ ಆಗ್ರಹಿಸಿದ್ದಾರೆ.
ರಾಯಚೂರು | ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಗೆ ನಾಗರಿಕರು ಸಹಕರಿಸಬೇಕು : ಅಪರ ಜಿಲ್ಲಾಧಿಕಾರಿ ಶಿವಾನಂದ
ರಾಯಚೂರು : ರಾಜ್ಯ ಹಿಂದುಳಿದ ವರ್ಗಗಳ ಆಯೋಗದಿಂದ ನಡೆಯುತ್ತಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ–2025 ಜಾಗೃತಿ ಅಭಿಯಾನದಲ್ಲಿ ಪ್ರತಿಯೊಬ್ಬ ನಾಗರಿಕರೂ ಭಾಗಿಯಾಗಬೇಕು ಎಂದು ಅಪರ ಜಿಲ್ಲಾಧಿಕಾರಿ ಶಿವಾನಂದ ಮನವಿ ಮಾಡಿದ್ದಾರೆ. ಸಮೀಕ್ಷೆಯ ಉದ್ದೇಶವು ರಾಜ್ಯದ ಎಲ್ಲಾ ವರ್ಗಗಳ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಸ್ಥಿತಿಗತಿಗಳ ಕುರಿತು ಸಮಗ್ರ ಅಂಕಿಅಂಶ ಸಂಗ್ರಹಿಸಿ, ಹಿಂದುಳಿದ ಅಥವಾ ದುರ್ಬಲ ವರ್ಗಗಳನ್ನು ಗುರುತಿಸಿ ಅವರ ಅಭಿವೃದ್ಧಿಗೆ ಕಾರ್ಯಕ್ರಮ ರೂಪಿಸುವುದಾಗಿದೆ. ಸೆಪ್ಟೆಂಬರ್ 22ರಿಂದ ನವೆಂಬರ್ 7ರವರೆಗೆ ಗಣಿತಿದಾರರು ಮನೆಮನೆಗೆ ಭೇಟಿ ನೀಡಿ ಸುಮಾರು 60 ಪ್ರಶ್ನೆಗಳ ಮಾಹಿತಿಯನ್ನು ಸಂಗ್ರಹಿಸಲಿದ್ದಾರೆ. ಪಡಿತರ ಚೀಟಿ, ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ, ವಿಕಲಚೇತನ ಯುಡಿಐಡಿ ಕಾರ್ಡ್ ದೃಢೀಕರಣಕ್ಕಾಗಿ ಅಗತ್ಯವಾಗಲಿದೆ. ಆಧಾರ್ ಕಾರ್ಡ್ ಕಡ್ಡಾಯವಾಗಿದ್ದು, ಪ್ರತಿಯೊಬ್ಬ ಸದಸ್ಯರ ಆಧಾರ್ ಮೊಬೈಲ್ ನಂಬರ್ಗೆ ಲಿಂಕ್ ಆಗಿರಬೇಕು. OTP ಮೂಲಕ ಇ-ಕೆವೈಸಿ ಪ್ರಕ್ರಿಯೆ ನಡೆಯಲಿದೆ. ಮೊಬೈಲ್ ನಂಬರ್ ಲಿಂಕ್ ಆಗಿರದಿದ್ದರೆ ತಕ್ಷಣವೇ ನವೀಕರಣ ಮಾಡಿಸಿಕೊಳ್ಳಬೇಕು. ಜಿಲ್ಲೆಯಲ್ಲಿ 4,75,000 ಕುಟುಂಬಗಳ ಸಮೀಕ್ಷೆಗೆ 3178 ಗಣಿತಿದಾರರು, 340 ಮೇಲ್ವಿಚಾರಕರು ಹಾಗೂ 68 ಮಾಸ್ಟರ್ ಟ್ರೈನರ್ಸ್ ನಿಯೋಜಿಸಲಾಗಿದೆ. ತಾಲೂಕು ಮಟ್ಟದಲ್ಲಿ ವಾರ್ ರೂಮ್ ಸ್ಥಾಪಿಸಲಾಗಿದ್ದು, ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಸಹಾಯವಾಣಿ ಸಂಖ್ಯೆ 8050770004 ಅಥವಾ kscbc.karnataka.gov.in ಜಾಲತಾಣವನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ಪ್ರಶ್ನಿಸಿದ ಪಿಐಎಲ್: ರಾಜ್ಯ, ಕೇಂದ್ರ ಸರಕಾಗಳಿಗೆ ಹೈಕೋರ್ಟ್ ನೋಟಿಸ್
ಬೆಂಗಳೂರು: ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗಳ ಸಮೀಕ್ಷೆಗೆ ರಾಜ್ಯ ಸರಕಾರ ಹೊರಡಿಸಿರುವ ಆದೇಶ ಪ್ರಶ್ನಿಸಿ ಸಲ್ಲಿಕೆಯಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ(ಪಿಐಎಲ್)ಗಳ ಸಂಬಂಧ ರಾಜ್ಯ ಹಾಗೂ ಕೇಂದ್ರ ಸರಕಾರಗಳಿಗೆ ಹೈಕೋರ್ಟ್ ನೋಟಿಸ್ ಜಾರಿಗೊಳಿಸಿದೆ. ಸಮೀಕ್ಷೆಗಾಗಿ ಆಗಸ್ಟ್ 13ರಂದು ಸರಕಾರ ಹೊರಡಿಸಿರುವ ಆದೇಶ ಪ್ರಶ್ನಿಸಿ ಮಾಜಿ ಶಾಸಕರೂ ಆದ ಹಿರಿಯ ವಕೀಲ ಕೆ.ಎನ್. ಸುಬ್ಬಾರೆಡ್ಡಿ, ರಾಜ್ಯ ಒಕ್ಕಲಿಗರ ಸಂಘ, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಮತ್ತಿತರರು ಸಲ್ಲಿಸಿರುವ ಪ್ರತ್ಯೇಕ ಪಿಐಎಲ್ಗಳನ್ನು ನ್ಯಾಯಮೂರ್ತಿ ಅನು ಸಿವರಾಮನ್ ಹಾಗೂ ನ್ಯಾಯಮೂರ್ತಿ ರಾಜೇಶ್ ರೈಯವರಿದ್ದ ವಿಭಾಗೀಯ ನ್ಯಾಯಪೀಠ ಶುಕ್ರವಾರ ವಿಚಾರಣೆ ನಡೆಸಿತು. ಅರ್ಜಿ ಕುರಿತು ಮಾಹಿತಿ ಪಡೆದುಕೊಂಡ ನ್ಯಾಯಪೀಠ, ಇಂದು ಅಡ್ವೊಕೇಟ್ ಜನರಲ್ ಲಭ್ಯವಿಲ್ಲದ ಕಾರಣ ಅರ್ಜಿಯನ್ನು ಸೋಮವಾರ ವಿಚಾರಣೆಗೆ ನಿಗದಿಪಡಿಸಲಾಗುವುದು ಎಂದು ತಿಳಿಸಿತಲ್ಲದೆ, ಎಲ್ಲ ಅರ್ಜಿಗಳಿಗೆ ಸಂಬಂಧಿಸಿದಂತೆ ರಾಜ್ಯ ಹಿಂದುಳಿದ ವರ್ಗಗಳ ಆಯೋಗ, ರಾಜ್ಯ ಸರಕಾರ, ಕೇಂದ್ರ ಸರಕಾರ ಹಾಗೂ ಭಾರತ ಜನಗಣತಿ ಆಯೋಗಕ್ಕೆ ನೋಟಿಸ್ ಜಾರಿಗೊಳಿಸಿ, ವಿಚಾರಣೆಯನ್ನು ಸೆ.22ಕ್ಕೆ ಮುಂದೂಡಿತು.
ಜಾತಿ ಗಣತಿ ವಿರೋಧ: ಗೊಂದಲ ನಿವಾರಣೆಗೆ ಸಿದ್ದರಾಮಯ್ಯ ಸೂಚನೆ, ಸೆ.22ಕ್ಕೆ ಸಮೀಕ್ಷೆ ಫಿಕ್ಸ್?
ಜಾತಿ ಗಣತಿಗೆ ಬಿಜೆಪಿ ನಾಯಕರಿಂದ ವಿರೋಧವಿದ್ದರೂ ಸಹ ಸೆ. 22ರಿಂದ ಜಾತಿಗಣತಿ ಸಮೀಕ್ಷೆ ಆರಂಭಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಜಾತಿಸಮೀಕ್ಷೆ ಹಿಂದೂಗಳ ಒಡೆಯುವ ಕೆಲಸ ಎಂದು ಬಿಜೆಪಿ ನಾಯಕರು ಆರೋಪಿಸುತ್ತಲೇ ಇದ್ದಾರೆ. ಇನ್ನು ಕಾಂಗ್ರೆಸ್ನ ಕೆಲವು ನಾಯಕರಿಂದಲೂ ಜಾತಿ ಗಣತಿ ತಡೆ ಹಿಡಿಯಲು ಮನವಿ ಮಾಡಲಾಗಿತ್ತು. ಈ ಎಲ್ಲದರ ಮಧ್ಯೆಯೂ ಜಾತಿ ಗಣತಿ ಸಮೀಕ್ಷೆ ಮುಂದುವರಿಸಲು ನಿರ್ಧರಿಸಲಾಗಿದೆ ಎನ್ನಲಾಗುತ್ತಿದೆ.
ದಾದಾಗಿರಿಯ ದಿನಗಳು ಮುಗಿದವು. ಮೊದಲು ರಸ್ತೆ ಗುಂಡಿ ಮುಚ್ಚಿ ಮಾನ ಕಾಪಾಡಿಕೊಳ್ಳಿ: ಡಿಕೆಶಿಗೆ ಜೆಡಿಎಸ್ ತರಾಟೆ
ಬೆಂಗಳೂರು: ಉದ್ಯಮಿಗಳಿಗೆ ಧಮ್ಕಿ ಹಾಕಿ, ದಾದಾಗಿರಿ ಮಾಡುವುದಕ್ಕೆ ನಿಮ್ಮನ್ನು ಡಿಸಿಎಂ ಮಾಡಿಲ್ಲ. ಕೆಲಸ ಮಾಡಿ ಎಂದು ಜನ ಕೂರಿಸಿದ್ದಾರೆ. ಹಳೆಯ ಚಾಳಿ ಬಿಡಿ. ದಾದಾಗಿರಿಯ ದಿನಗಳು ಮುಗಿದವು. ಮೊದಲು ರಸ್ತೆ ಗುಂಡಿ ಮುಚ್ಚಿ ಮಾನ ಕಾಪಾಡಿಕೊಳ್ಳಿ. ಕೈಯಲ್ಲಿ ಆಗಲಿಲ್ಲ ಎಂದರೆ, ಬೆಂಗಳೂರು ಉಸ್ತುವಾರಿ ಬಿಡಿ ಎಂದು ರಾಜ್ಯ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ರನ್ನು ಜೆಡಿಎಸ್ ತರಾಟೆಗೈದಿದೆ. ಈ ಬಗ್ಗೆ ತನ್ನ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಾಕಿರುವ ರಾಜ್ಯ ಜೆಡಿಎಸ್, ಡಿಸಿಎಂ ಡಿಕೆ ಶಿವಕುಮಾರ್ ಅವರೇ, ನಿಮ್ಮಲ್ಲೇನೋ ಮೂಲಭೂತ ಸಮಸ್ಯೆ ಇದೆ. ಬರೀ ಧಿಮಾಕು, ಎಲ್ಲವನ್ನೂ ಬಲ್ಲೆ ಎನ್ನುವ ಪೋಷಾಕು! ಅದಕ್ಕೆ ಏನೋ ಬೆಂಗಳೂರಿನ ಮೂಲಭೂತ ಸೌಕರ್ಯ ಎಕ್ಕುಟ್ಟಿ ಹೋಗಿದೆ. ಬಹುಶಃ, ನಿಮಗೆ ನೆಟ್ ವರ್ಕಿಂಗ್ ಸಮಸ್ಯೆ ಕಾಡುತ್ತಿರಬಹುದು. ನಿಮ್ಮ ಮಿದುಳು, ನಾಲಿಗೆಯ ನಡುವೆ ಲೈನಪ್ ಸರಿ ಇದ್ದಂತೆ ಇಲ್ಲ! ಏಕೆಂದರೆ, ಇನ್ನೊಬ್ಬರ ಹೇಳಿಕೆಯನ್ನು ಅರ್ಥೈಸಿಕೊಳ್ಳುವ ಬೌದ್ಧಿಕ ಸಾಮರ್ಥ್ಯ ನಿಮಗಿಲ್ಲ. ಅಸಂಬದ್ಧವಾಗಿ ಪ್ರತಿಕ್ರಿಯೆ ಕೊಡುತ್ತೀರಿ. ನಗೆಪಾಟಲಿಗೆ ತುತ್ತಾಗುತ್ತೀರಿ ಎಂದು ಟೀಕಿಸಿದೆ. ನಗರದ ಮೂಲಸೌಕರ್ಯದ ಬಗ್ಗೆ ಉದ್ಯಮಿಗಳು ಕಳವಳಗೊಂಡಾಗ ಅವರಿಗೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ನೈತಿಕ ಸ್ಥೈರ್ಯ ತುಂಬಿದ್ದಾರೆ. ಅದರಲ್ಲಿ ತಪ್ಪೇನಿದೆ? ಕೇಂದ್ರದ ಅನುದಾನ ತರಲಿ ಎನ್ನುತ್ತೀರಿ? ಟ್ವಿಟ್ಟರ್ ಗಿಟ್ಟರ್ ಎನ್ನುತ್ತೀರಿ.. ಆ ಬಗ್ಗೆ ಆಮೇಲೆ ಹೇಳೋಣ. ತೆರಿಗೆ ಬೀಜಾಸುರ ನಂತೆ ಬೆಂಗಳೂರು ಜನರ ರಕ್ತ ಹೀರಿ ತೆರಿಗೆ ಪೀಕುತ್ತಿದ್ದೀರಲ್ಲ.. ಮೊದಲು ಅದಕ್ಕೆ ಲೆಕ್ಕ ಮಡಗಿ. ಅದು ಯಾರಪ್ಪನ ದುಡ್ಡು ಅಲ್ಲ. ಜನರ ಬೆವರಿನ ಹಣ. ಆ ದುಡ್ಡು ಎಲ್ಲಿ ಹೋಗುತ್ತಿದೆ? ಅದನ್ನೇ ಕುಮಾರಸ್ವಾಮಿ ಅವರು ಕೇಳಿದ್ದು. ಉದ್ಯಮಿಗಳಿಗೆ ಧಮ್ಕಿ ಹಾಕಿ, ದಾದಾಗಿರಿ ಮಾಡುವುದಕ್ಕೆ ನಿಮ್ಮನ್ನು ಡಿಸಿಎಂ ಮಾಡಿಲ್ಲ ಮಿ. ಶಿವಕುಮಾರ್. ಕೆಲಸ ಮಾಡಿ ಎಂದು ಜನ ಕೂರಿಸಿದ್ದಾರೆ. ಆ ಹಳೆಯ ಚಾಳಿ ಬಿಡಿ. ದಾದಾಗಿರಿಯ ದಿನಗಳು ಮುಗಿದವು. ಮೊದಲು ರಸ್ತೆ ಗುಂಡಿ ಮುಚ್ಚಿ ಮಾನ ಕಾಪಾಡಿಕೊಳ್ಳಿ. ಕೈಯಲ್ಲಿ ಆಗಲಿಲ್ಲ ಎಂದರೆ, ಬೆಂಗಳೂರು ಉಸ್ತುವಾರಿ ಬಿಡಿ. ಟ್ವಿಟ್ಟರ್ ಗಿಟ್ಟರ್ ಎಂದು ನಾಲಿಗೆ ಜಾರಬೇಡಿ. ಜಗತ್ತಿನಲ್ಲಿ ಏನೇನು ಆಗುತ್ತಿದೆ ಎಂಬುದನ್ನು ಗಮನಿಸಿ ಎಂದು ಹೇಳಿದೆ.
ಪುತ್ತೂರು | ಬಿಜೆಪಿ ರಾಜ್ಯಾಧ್ಯಕ್ಷರ ನಿಂದನೆ ಆರೋಪ: ಪ್ರಕರಣ ದಾಖಲು
ಪುತ್ತೂರು : ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರರನ್ನು ಉದ್ದೇಶಿಸಿ ಅಶ್ಲೀಲ ಪದ ಬಳಸಿ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಪೋಸ್ಟ್ ಹಾಕಿರುವ ಆರೋಪದಲ್ಲಿ ಯುವಕನೋರ್ವನ ವಿರುದ್ದ ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪುತ್ತೂರು ಬಿಜೆಪಿ ನಗರ ಮಂಡಲ ಅಧ್ಯಕ್ಷ ಶಿವಕುಮಾರ್ ನೀಡಿದ ದೂರಿನಂತೆ ಒಳಮೊಗ್ರು ಗ್ರಾಮದ ಕೈಕಾರ ನಿವಾಸಿ ನವೀನ್ ಕೈಕಾರ ಎಂಬಾತನ ವಿರುದ್ದ ಪ್ರಕರಣ ದಾಖಲಾಗಿದೆ. ಸೆ.15 ರಂದು ಮೊಬೈಲ್ ನಲ್ಲಿ ಫೇಸ್ ಬುಕ್ ನೋಡುತ್ತಿದ್ದ ನವೀನ್ ರೈ ಕೈಕಾರ ಎಂಬಾತ ಆತನ ಫೇಸ್ ಬುಕ್ ಪೇಜ್ ನಲ್ಲಿ ಭಾರತೀಯ ಜನತಾ ಪಾರ್ಟಿಯ ರಾಜ್ಯಾಧ್ಯಕ್ಷ ವಿಜಯೇಂದ್ರರನ್ನು ಉದ್ದೇಶಿಸಿ ಅಶ್ಲೀಲವಾದ ಹಾಗೂ ಅಸಂಬಂದ್ಧವಾದ ಪದಗಳನ್ನು ಬಳಸಿ ವೀಡಿಯೋ ಮಾಡಿ ಅದನ್ನು ಪೇಸ್ ಬುಕ್ ನಲ್ಲಿ ಹರಿಯ ಬಿಟ್ಟಿದ್ದಾನೆ ಎಂದು ಶಿವಕುಮಾರ್ ದೂರಿನಲ್ಲಿ ಆರೋಪಿಸಿದ್ದಾರೆ. ಈ ಕುರಿತು ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಫೇಸ್ಬುಕ್ನಲ್ಲಿ ಪ್ರವಾದಿ ವಿರುದ್ಧ ಅವಹೇಳನಕಾರಿ ಕಾಮೆಂಟ್; ಸನಾತನಿ ಸಿಂಹ, ಚೇತನ್ ಹೊದ್ದೆಟ್ಟಿ ವಿರುದ್ಧ ದೂರು ದಾಖಲು
ಬೆಳ್ತಂಗಡಿ,(ಸೆ.19): ವಾರ್ತಾ ಭಾರತಿಯ ಫೇಸ್ಬುಕ್ ಪೋಸ್ಟ್ ನಲ್ಲಿ ಬೆಳ್ತಂಗಡಿ |ಬಂಗ್ಲೆಗುಡ್ಡ ಕಾಡಿನಲ್ಲಿ ಮುಂದುವರಿದ ಎಸ್ ಐ ಟಿ ಶೋಧ; ಮತ್ತೆರಡು ತಲೆ ಬುರುಡೆ ಪತ್ತೆ ಎಂಬ ಟೈಟಲ್ ನೊಂದಿಗೆ ಬಂದ ವರದಿಗೆ ಪ್ರವಾದಿ ವಿರುದ್ಧ ಅವಹೇಳನಕಾರಿ ಕಾಮೆಂಟ್ ಹಾಕಿರುವ ಬಗ್ಗೆ ದೂರು ದಾಖಲಿಸಲಾಗಿದೆ. ನ್ಯೂಸ್ನ ಕಾಮೆಂಟ್ ಬಾಕ್ಸ್ನಲ್ಲಿ ಸನಾತನಿ ಸಿಂಹ ಎಂಬ ಖಾತೆಯಿಂದ 'ಒಂದು ಪೈಗಂಬರದು ಇನ್ನೊಂದು ಆಯೇಷಾ ದು' ಎಂದು ಕಾಮೆಂಟ್ ಮಾಡಿದ್ದು, ಅದೇ ಕಾಮೆಂಟ್ ಬಾಕ್ಸ್ ನಲ್ಲಿ Chetan Hoddetty ಎಂಬಾತ 'ಒಂದು ಪೈಗಂಬರ್ ಇನ್ನೊಂದು ಆಯೇಷಾದು ಇರಬಹುದು' ಎಂದು ಕಾಮೆಂಟ್ ಹಾಕಿ ಧಾರ್ಮಿಕ ನಿಂದನೆ, ಅಶಾಂತಿ ಸೃಷ್ಟಿ, ಧಾರ್ಮಿಕ ಭಾವನೆ ಕೆರಳಿಸಿ ಕೋಮು ಗಲಭೆ ಮಾಡುವ ಷಡ್ಯಂತ್ರ ಮತ್ತು ಪಿತೂರಿ ನಡೆಸಿದ್ದಾರೆ ಎಂದು ಆರೋಪಿಸಿ ಸೋಶಿಯಲ್ ಡೆಮೋಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ಬೆಳ್ತಂಗಡಿ ವಿಧಾನಸಭಾಧ್ಯಕ್ಷ ಅಕ್ಬರ್ ಬೆಳ್ತಂಗಡಿ ಅವರು ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ಕೃತ್ಯವನ್ನು ನಡೆಸಿದ ಹಾಗೂ ಇದಕ್ಕೆ ಕುಮ್ಮಕ್ಕು ನೀಡಿದವರನ್ನು ಈ ಕೂಡಲೇ ಬಂಧಿಸಿ ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ಆಗ್ರಹಿಸಿದ್ದಾರೆ. ದೂರು ನೀಡುವ ಸಂದರ್ಭದಲ್ಲಿ ಬೆಳ್ತಂಗಡಿ ವಿಧಾನಸಭಾ ಸಮಿತಿ ಸದಸ್ಯ ಅಶ್ರಫ್ ಕಟ್ಟೆ, ಸಲೀಂ ಸುನ್ನತ್ ಕೆರೆ, ಇಮ್ತಿಯಾಝ್ ಜಿ.ಕೆ, ಆರಿಫ್ ಕುಂಟಿನಿ ಉಪಸ್ಥಿತರಿದ್ದರು.
School Holiday: ಶಾಲೆ ವಿದ್ಯಾರ್ಥಿಗಳಿಗೆ 18 ದಿನ ರಜೆ ಘೋಷಣೆ, ಕಾಲೇಜುಗಳ ಕಥೆ ಏನು?
ರಜೆ.. ರಜೆ.. ರಜೆ.. ಹೀಗೆ ಶಾಲೆ ವಿದ್ಯಾರ್ಥಿಗಳಿಗೆ ದಿಢೀರ್ ಅಂತಾ ಭರ್ಜರಿ ರಜೆ ಘೋಷಣೆ ಆಗಿದೆ. ಅದರಲ್ಲೂ ಈ ವರ್ಷ ಅಂದ್ರೆ 2025 ಶೈಕ್ಷಣಿಕ ವರ್ಷದಲ್ಲಿ ಕರ್ನಾಟಕದ ಶಾಲಾ &ಕಾಲೇಜುಗಳ ಲಕ್ಷ ಲಕ್ಷ ವಿದ್ಯಾರ್ಥಿಗಳಿಗೆ ಪದೇ ಪದೇ ರಜೆಗಳು ಸಿಕ್ಕಿವೆ. ಮಳೆ ಸೇರಿದಂತೆ ಹಲವು ಕಾರಣಗಳಿಗೆ ಶಾಲಾ &ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿತ್ತು. ಹೀಗೆ
Vote Theftಕಾಂಗ್ರೆಸ್ ಶಾಸಕ ಬಿ.ಆರ್.ಪಾಟೀಲ್ ಅವರು ಅಲಂದದಲ್ಲಿ ಮತ ಕಳ್ಳತನಕ್ಕೆ ಯತ್ನ ನಡೆದಿದೆ ಎಂದು ಆರೋಪಿಸಿದ್ದಾರೆ. 6018 ಮತದಾರರನ್ನು ಡಿಲೀಟ್ ಮಾಡಲು ಅರ್ಜಿ ಸಲ್ಲಿಸಲಾಗಿತ್ತು. ಈ ಬಗ್ಗೆ ಚುನಾವಣಾ ಆಯೋಗಕ್ಕೆ ದೂರು ನೀಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅವರು ದೂರಿದ್ದಾರೆ. ಈ ಪ್ರಕರಣದ ತನಿಖೆಯನ್ನು ಎಸ್ಐಟಿಗೆ ವಹಿಸುವಂತೆ ಸಿದ್ದರಾಮಯ್ಯನವರಿಗೆ ಮನವಿ ಮಾಡಲಾಗಿದೆ ಎಂದು ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಮದ್ದೂರು ಶಾಸಕ ಉದಯ್ ಟೀಕೆಗೆ ಪ್ರತಾಪ್ ಸಿಂಹ ಕೊಟ್ಟ ಪ್ರತಿಕ್ರಿಯೆ ಏನು ಗೊತ್ತಾ?
ಗಣೇಶ ಮೆರವಣಿಗೆಯ ಗಲಭೆ ವಿಷಯ ಸಂಬಂಧ ಆರಂಭಗೊಂಡ ಮಾಜಿ ಸಂಸದ ಪ್ರತಾಪ್ ಸಿಂಹ ಹಾಗೂ ಮದ್ದೂರು ಶಾಸಕ ಉದಯ್ ನಡುವೆ ಟೀಕಾಪ್ರಹಾರ ಮುಂದುವರಿದಿದೆ. ವಯಕ್ತಿಕವಾಗಿ ಟೀಕಿಸಿದ್ದ ಶಾಸಕ ಉದಯ್ ಅವರ ಬಗ್ಗೆ ಪ್ರತಾಪ್ ಸಿಂಹ ಆಕ್ರೋಶ ಹೊರಹಾಕಿದ್ದಾರೆ. ಮೈಯಕ್ತಿಕ ಟೀಕಿಗೆ ಇಳಿದ ಶಾಸಕ ಉದಯ್ ಪೊರ್ಕಿಗಳು ಆಡುವ ಭಾಷೆಯನ್ನು ಬಳಸಿದ್ದಾರೆಂದು ಕಿಡಿಕಾರಿದ್ದಾರೆ.
ಆ್ಯಪಲ್ ಕಂಪನಿ ತನ್ನ ಬಹುನಿರೀಕ್ಷಿತ iPhone 17 ಸರಣಿಯ ಮಾರಾಟ ಪ್ರಕ್ರಿಯೆಯನ್ನು ಭಾರತದಲ್ಲಿ ಆರಂಭಿಸಿದೆ. ಇಂದು (ಸೆ.19-ಶುಕ್ರವಾರ) ಬೆಳಗ್ಗೆಯಿಂದಲೇ ದೇಶದ ಪ್ರಮುಖ ನಗರಗಳಲ್ಲಿ ಆ್ಯಪಲ್ ಸ್ಟೋರ್ಗಳಿಗೆ ಜನರು ಲಗ್ಗೆ ಇಟ್ಟಿದ್ದಾರೆ. ಕರ್ನಾಟಕ ರಾಜಧಾನಿ ಬೆಂಗಳೂರಿನ ಫಿನಿಕ್ಸ್ ಮಾಲ್ ಆಫ್ ಏಷ್ಯಾದಲ್ಲಿರುವ ಆ್ಯಪಲ್ ಸ್ಟೋರ್ನಲ್ಲಿ ಜನರು ಸರತಿ ಸಾಲಿನಲ್ಲಿ ನಿಂತು iPhone 17 ಖರೀದಿಸುತ್ತಿದ್ದಾರೆ. ಈ ಮಧ್ಯೆ ದೆಹಲಿಯಲ್ಲಿ ಯುವಕನೋರ್ವ ನಾನೊಬ್ಬ ಮುಸ್ಲಿಂ ಆಗಿದ್ದರೂ ಭಗವಾ ರಂಗದ iPhone 17 ಖರೀದಿಸಿ ತುಂಬಾ ಖುಷಿಯಲ್ಲಿದ್ದೇನೆ ಎಂದು ಹೇಳಿರುವುದು ಗಮನ ಸೆಳೆದಿದೆ.
ಚುನಾವಣೆಯ ಕಾವಲುಗಾರನಿಂದಲೇ ಮತಗಳ್ಳರ ರಕ್ಷಣೆ: ಚುನಾವಣಾ ಆಯೋಗದ ವಿರುದ್ಧ ರಾಹುಲ್ ಗಾಂಧಿ ಮತ್ತೆ ವಾಗ್ದಾಳಿ
ಹೊಸದಿಲ್ಲಿ: ಮತಗಳ್ಳತನ ಆರೋಪಕ್ಕೆ ಸಂಬಂಧಿಸಿದಂತೆ ಭಾರತೀಯ ಚುನಾವಣಾ ಆಯೋಗದ ಮುಖ್ಯ ಆಯುಕ್ತ ಜ್ಞಾನೇಶ್ ಕುಮಾರ್ ವಿರುದ್ಧ ಲೋಕಸಭಾ ವಿಪಕ್ಷ ನಾಯಕ ರಾಹುಲ್ ಗಾಂಧಿ ಮತ್ತೊಮ್ಮೆ ವಾಗ್ದಾಳಿ ನಡೆಸಿದ್ದಾರೆ. ಈ ಕುರಿತು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿರುವ ರಾಹುಲ್ ಗಾಂಧಿ, “ಮತಗಳ್ಳರಿಗೆ ಚುನಾವಣೆಯ ಕಾವಲುಗಾರ ರಕ್ಷಣೆ ನೀಡುತ್ತಿದ್ದಾರೆ” ಎಂದು ಆರೋಪಿಸಿದ್ದಾರೆ. “ಬೆಳಗ್ಗೆ ನಾಲ್ಕು ಗಂಟೆಗೆ ಎದ್ದೇಳುವುದು, 36 ಸೆಕೆಂಡುಗಳಲ್ಲಿ ಇಬ್ಬರು ಮತದಾರರನ್ನು ಅಳಿಸಿ ಹಾಕುವುದು, ಮತ್ತೆ ನಿದ್ರೆಗೆ ಜಾರುವುದು. ಹೀಗೆ ಮತಗಳ್ಳತನ ನಡೆದಿದೆ” ಎಂದು ಅವರು ವ್ಯಂಗ್ಯವಾಡಿದ್ದಾರೆ. “ಈ ವೇಳೆ ಚುನಾವಣೆಯ ಕಾವಲುಗಾರ ಜಾಗೃತವಾಗಿಯೇ ಇದ್ದರು. ಕಳ್ಳತನ ಮಾಡುವುದನ್ನು ಗಮನಿಸುತ್ತಲೇ ಇದ್ದರು ಮತ್ತು ಕಳ್ಳರನ್ನು ರಕ್ಷಿಸುತ್ತಲೇ ಇದ್ದರು” ಎಂದು ಅವರು ಆಪಾದಿಸಿದ್ದಾರೆ. ಇದಕ್ಕೂ ಮುನ್ನ, ಗುರುವಾರ ಮತಗಳ್ಳತನ ಆರೋಪಕ್ಕೆ ಸಂಬಂಧಿಸಿದಂತೆ ಸುದ್ದಿಗೋಷ್ಠಿ ನಡೆಸಿದ್ದ ರಾಹುಲ್ ಗಾಂಧಿ, ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದರು. “ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ನಾಶಪಡಿಸುತ್ತಿರುವ ಶಕ್ತಿಗಳ ಜೊತೆಗೆ ಜ್ಞಾನೇಶ್ ಕುಮಾರ್ ಕೈಜೋಡಿಸಿದ್ದಾರೆ. ಅವರು ನೆಪಗಳನ್ನು ಹೇಳುವುದನ್ನು ನಿಲ್ಲಿಸಬೇಕು. ಮತಗಳ್ಳತನ ಮಾಡುವವರ ರಕ್ಷಣೆ ಮಾಡುವ ಕೆಲಸವನ್ನು ತಕ್ಷಣವೇ ಕೈಬಿಡಬೇಕು” ಎಂದು ಆಗ್ರಹಿಸಿದ್ದರು. ಕರ್ನಾಟಕದ ಆಳಂದ ವಿಧಾನಸಭಾ ಕ್ಷೇತ್ರದ ಮತಗಳವು ಯತ್ನ ಪ್ರಕರಣದ ತನಿಖೆ ನಡೆಸುತ್ತಿರುವ ಸಿಐಡಿಗೆ ಕೇಂದ್ರ ಚುನಾವಣಾ ಆಯೋಗವು ಅಗತ್ಯ ಸಾಕ್ಷ್ಯಗಳನ್ನು ವಾರದೊಳಗೆ ಒದಗಿಸಬೇಕು. ಇಲ್ಲದಿದ್ದರೆ, ಮತಗಳವು ಮಾಡುತ್ತಿರುವವರನ್ನು ಜ್ಞಾನೇಶ್ ಕುಮಾರ್ ರಕ್ಷಿಸುತ್ತಿದ್ದಾರೆ ಎಂಬ ಆರೋಪಕ್ಕೆ ಜನರಿಗೆ ಖಚಿತ ಪುರಾವೆ ಲಭ್ಯವಾದಂತಾಗಲಿದೆ ಎಂದು ಅವರು ಎಚ್ಚರಿಸಿದ್ದರು. ಆದರೆ, ರಾಹುಲ್ ಗಾಂಧಿಯ ಆರೋಪಗಳನ್ನು ಅಲ್ಲಗಳೆದಿದ್ದ ಚುನಾವಣಾ ಆಯೋಗ, ಅದೆಲ್ಲ ಆಧಾರರಹಿತ, ಸತ್ಯಕ್ಕೆ ದೂರ ಎಂದು ತಳ್ಳಿ ಹಾಕಿತ್ತು. सुबह 4 बजे उठो, 36 सेकंड में 2 वोटर मिटाओ, फिर सो जाओ - ऐसे भी हुई वोट चोरी! चुनाव का चौकीदार जागता रहा, चोरी देखता रहा, चोरों को बचाता रहा। #VoteChoriFactory pic.twitter.com/pLSKAXH1Eu — Rahul Gandhi (@RahulGandhi) September 19, 2025
ಧರ್ಮಸ್ಥಳ ಗ್ರಾ.ಪಂ ಉಪಾಧ್ಯಕ್ಷ ಶ್ರೀನಿವಾಸ ರಾವ್, ಮಾಜಿ ಅಧ್ಯಕ್ಷ ಕೇಶವ ಗೌಡರನ್ನು ವಿಚಾರಣೆ ನಡೆಸಿದ ಎಸ್.ಐ.ಟಿ
ಬೆಳ್ತಂಗಡಿ: ಮಾಧ್ಯಮಗಳಲ್ಲಿ ನೀಡಿದ ಹೇಳಿಕೆಗಳ ವಿಚಾರವಾಗಿ ಧರ್ಮಸ್ಥಳ ಗ್ರಾಮಪಂಚಾಯತಿನ ಮಾಜಿ ಅಧ್ಯಕ್ಷ ಕೇಶವ ಗೌಡ ಹಾಗೂ ಹಾಲಿ ಉಪಾಧ್ಯಕ್ಷ ಶ್ರೀನಿವಾಸ ರಾವ್ ಅವರಿಗೆ ಎಸ್.ಐ.ಟಿ ನೋಟೀಸ್ ನೀಡಿ ವಿಚಾರಣೆಗೆ ಕರೆಸಿಕೊಂಡಿದೆ. ಸೆ.19 ರಂದು ಬೆಳಗ್ಗೆ ಗ್ರಾ.ಪಂ ಉಪಾಧ್ಯಕ್ಷ ಶ್ರೀನಿವಾಸ ರಾವ್ ಹಾಗೂ ಮಾಜಿ ಅಧ್ಯಕ್ಷ ಕೇಶವ ಗೌಡ ಬೆಳಾಲು ಅವರು ವಿಚಾರಣೆಗೆ ಹಾಜರಾಗಿದ್ದು ಮಧ್ಯಾಹ್ನದ ವೇಳೆಗೆ ಇವರಿಬ್ನರೂ ವಿಚಾರಣೆ ಮುಗಿಸಿ ಹಿಂತಿರುಗಿದ್ದಾರೆ. ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ. ಕೇಶವ ಗೌಡ ಹಾಗೂ ಶ್ರೀನಿವಾಸ ರಾವ್ ಅವರು ಹಲವು ಬಾರಿ ಮಾದ್ಯಮಗಳಿಗೆ ಹೇಳಿಕೆ ನೀಡಿ ಧರ್ಮಸ್ಥಳ ಗ್ರಾಮದಲ್ಲಿ ನೂರಾರು ಅನಾಥ ಶವಗಳು ಸಿಕ್ಕಿದ್ದು ಅದರ ಎಲ್ಲ ದಾಖಲೆಗಳು ಗ್ರಾಮಪಂಚಾಯತಿನಲ್ಲಿದೆ ಎಂದು ಹೇಳಿಕೆ ನೀಡಿದ್ದರು. ಅದೇರೀತಿ ಕೇಶವ ಗೌಡ ಸ್ಮಶಾನಾಗುವ ಮೊದಲು ಬಂಗ್ಲೆ ಗುಡ್ಡ ಪರಿಸರಸಲ್ಲಿ ಮೃತದೇಹಗಳನ್ನು ಹೂತು ಹಾಕಿರುವುದಾಗಿ ಹೇಳಿಕೆ ನೀಡಿದ್ದರು. ಈ ಎಲ್ಲ ಹಿನ್ನಲೆಯಲ್ಲಿ ಇವರಿಬ್ಬರಿಗೂ ನೊಟೀಸ್ ನೀಡಿ ವಿಚಾರಣೆಗೆ ಕರೆಸಲಾಗಿದೆ.
ಹಿಂದೂ ಯುವತಿ ಜತೆ ಮದುವೆ; ಯುಟ್ಯೂಬರ್ ಮುಕಳೆಪ್ಪ ವಿರುದ್ಧ ಧಾರವಾಡ ಪೊಲೀಸ್ ಠಾಣೆಗೆ ದೂರು!
ಧಾರವಾಡದಲ್ಲಿ ಯೂಟ್ಯೂಬರ್ ಕ್ವಾಜಾ ವಿರುದ್ಧ ಬಜರಂಗದಳ ಕಾರ್ಯಕರ್ತರು ದೂರು ದಾಖಲಿಸಿದ್ದಾರೆ. ಲವ್ ಜಿಹಾದ್ ಆರೋಪದಡಿ, ಖ್ವಾಜಾ ಸುಳ್ಳು ದಾಖಲೆ ನೀಡಿ ಹಿಂದೂ ಯುವತಿಯನ್ನು ಮದುವೆಯಾಗಿದ್ದಾರೆ ಎಂದು ದೂರಲಾಗಿದೆ. ಖ್ವಾಜಾ ವೀಡಿಯೊಗಳಲ್ಲಿ ಹಿಂದೂ ಧರ್ಮವನ್ನು ಅವಮಾನಿಸುತ್ತಿದ್ದಾನೆ ಎಂದು ಆರೋಪಿಸಲಾಗಿದೆ. ಮುಕಳೆಪ್ಪ ಹಿಂದೂ ಯುವತಿಯರನ್ನು ಪ್ರೀತಿಯ ಬಲೆಗೆ ಬೀಳಿಸಿ ವಂಚಿಸುತ್ತಿದ್ದಾನೆ ಎಂದು ಬಜರಂಗದಳದವರು ಹೇಳಿದ್ದಾರೆ. ಈ ವರ್ಷ ಜೂನ್ 5ರಂದು ಮುಕಳೆಪ್ಪ ಗಾಯತ್ರಿ ಎಂಬುವರನ್ನು ವಿವಾಹವಾಗಿದ್ದಾರೆ. ಖ್ವಾಜಾ ವಿಳಾಸದಲ್ಲಿ ನಕಲಿ ದಾಖಲೆಗಳನ್ನು ನೀಡಿದ್ದಾನೆ ಎಂದು ಬಜರಂಗದಳ ಆರೋಪಿಸಿದೆ.
Dharmasthala Case: ಬಂಗ್ಲೆಗುಡ್ಡೆ ಶೋಧವೇಳೆ ಪತ್ತೆಯಾದ ತಲೆಬುರುಡೆಗಳೆಲ್ಲ ಪುರುಷರದ್ದು?
ಧರ್ಮಸ್ಥಳದ ಬಂಗ್ಲೆಗುಡ್ಡೆಯಲ್ಲಿ 50 ಕ್ಕೂ ಹೆಚ್ಚು ವಿವಿಧ ಇಲಾಖೆಯ ಸಿಬ್ಬಂದಿಗಳ ಜೊತೆ ಎಸ್ಐಟಿ ಅಸ್ಥಿಪಂಜರ ಶೋಧ ನಡೆಸಿತ್ತು. ಈ ವೇಳೆ ಮೇಲ್ಭಾಗದಲ್ಲೇ ಸುಮಾರು 7 ತಲೆಬುರುಡೆ, ಅಸ್ಥಿಪಂಜರಗಳು ಪತ್ತೆಯಾಗಿದ್ದವು ಎನ್ನಲಾಗಿದೆ. ಆದರೆ 2 ದಿನ ಶೋಧ ಸಂಪೂರ್ಣಗೊಮಡಿರುವ ಸಾಧ್ಯತೆ ಇದೆ. ಯಾಕೆಂದರೆ ಇಂದು ಶೋಧ ಕಾರ್ಯಾಚರಣೆಯನ್ನು ಎಸ್ಐಟಿ ನಡೆಸಿಲ್ಲ. ಜೊತೆಗೆ ಸಿಕ್ಕಿರುವ ತಲೆಬುರುಡೆಗಳ ಬಗ್ಗೆ ಊಹಾಪೋಹದ ಮಾತುಗಳೂ ಕೇಳಿಬರುತ್ತಿವೆ.
ಬಾನು ಮುಷ್ತಾಕ್ ಮೈಸೂರು ದಸರಾ ಉದ್ಘಾಟನೆ ವಿರೋಧಿಸಿ ಸಲ್ಲಿಸಿದ್ದ ಮೇಲ್ಮನವಿ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್!
ಹೊಸದಿಲ್ಲಿ: ಮಹತ್ವದ ಬೆಳವಣಿಗೆಯೊಂದರಲ್ಲಿ, ಲೇಖಕಿ ಮತ್ತು ಬೂಕರ್ ಪ್ರಶಸ್ತಿ ವಿಜೇತೆ ಬಾನು ಮುಷ್ತಾಕ್ ಅವರು ಮೈಸೂರು ದಸರಾ ಉದ್ಘಾಟಿಸುವುದನ್ನು ವಿರೋಧಿಸಿ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯನ್ನು ಸುಪ್ರೀಂಕೋರ್ಟ್ ವಜಾಗೊಳಿಸಿದೆ.
ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್ ಆಹ್ವಾನ ಪ್ರಶ್ನಿಸಿದ್ದ ಅರ್ಜಿ ಸುಪ್ರೀಂ ಕೋರ್ಟ್ನಲ್ಲಿ ವಜಾ
ಸರ್ಕಾರದ ನಿರ್ಧಾರಕ್ಕೆ ಹಸಿರು ನಿಶಾನೆ
ಆಶಾದೀಪ ಯೋಜನೆ; ಎಸ್ಸಿ- ಎಸ್ಟಿ ಅಭ್ಯರ್ಥಿಗಳ ಉದ್ಯೋಗಕ್ಕೆ ಸಿಗುವ ಪ್ರೋತ್ಸಾಹಧನ ಎಷ್ಟು? ಸೌಲಭ್ಯಗಳು ಏನೇನು?
ಇತ್ತೀಚಿಗೆ ಕೇಂದ್ರ ಸರ್ಕಾರ ವಿಕಸಿತ ಭಾರತ ಉದ್ಯೋಗ ಯೋಜನೆಯನ್ನು ಜಾರಿಗೊಗೊಳಿಸಿ, ಹೊಸದಾಗಿ ಕೆಲಸಕ್ಕೆ ಸೇರುವ ಉದ್ಯೋಗಿಗಳು ಹಾಗೂ ಉದ್ಯೋಗದಾತರಿಗೆ ಪ್ರೋತ್ಸಾಹಧನವನ್ನು ನೀಡುತ್ತಿದೆ. ಅದೇ ರೀತಿಯಲ್ಲಿ ಕರ್ನಾಟಕ ಸರ್ಕಾರ ಕೂಡ ಪರಿಶಿಷ್ಟ ಜಾತಿ (SC) ಮತ್ತು ಪರಿಶಿಷ್ಟ ಪಂಗಡ (ST) ಸಮುದಾಯದವರ ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಯನ್ನು ಸುಧಾರಿಸುವ ಉದ್ದೇಶದಿಂದ ಅಶಾದೀಪ ಯೋಜನೆಯನ್ನು ರೂಪಿಸಿದೆ. ಈ ಯೋಜನೆಯನ್ನು ಕರ್ನಾಟಕ ರಾಜ್ಯ ಕಾರ್ಮಿಕರ ಕಲ್ಯಾಣ ಮತ್ತು ಸಾಮಾಜಿಕ ಭದ್ರತಾ (ಅಶಾದೀಪ ಯೋಜನೆ) ಸೊಸೈಟಿ ಮೂಲಕ ಜಾರಿಗೊಳಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಏನಿದು ಆಶಾದೀಪ ಯೋಜನೆ? ಇದರಿಂದ ಏನೆಲ್ಲಾ ಪ್ರಯೋಜನಗಳಿವೆ? ಅರ್ಜಿ ಸಲ್ಲಿಸುವುದು ಹೇಗೆ ಎಂಬುದನ್ನು ತಿಳಿಯೋಣ.
ಮಹೇಶ್ ಶೆಟ್ಟಿ ತಿಮರೋಡಿ ಮನೆ ಗೋಡೆಗೆ ನೋಟಿಸ್ ಅಂಟಿಸಿದ ಪೊಲೀಸರು: ಸೆ.21 ಕ್ಕೆ ವಿಚಾರಣೆಗೆ ಹಾಜರಾಗಲು ಸೂಚನೆ
ಮಹೇಶ್ ಶೆಟ್ಟಿ ತಿಮರೋಡಿಗೆ ಸಾಲು ಸಾಲು ಸಂಕಷ್ಟ ಎದುರಾಗಿದ್ದು, ಚಿನ್ನಯ್ಯನಿಗೆ ಆಶ್ರಯ ಕೊಟ್ಟ ಹಿನ್ನೆಲೆ ಮನೆ ಮಹಜರು ನಡೆಸಿದ ವೇಳೆ ಮನೆಯಲ್ಲಿ ಬಂದೂಕು ತಲಾವಾರು ಪತ್ತೆಯಾದ ಹಿನ್ನೆಲೆ ಇದೀಗ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನಿಡಲಾಗಿದೆ.
ಸೆಪ್ಟೆಂಬರ್ 19ರಂದು ರಾಜ್ಯದಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ?: ಜಿಲ್ಲಾವರು ಅಂಕಿಅಂಶಗಳ ವಿವರ
Petrol, Diesel Price: ಪೆಟ್ರೋಲ್, ಡೀಸೆಲ್ ದರಲ್ಲಿ ಜಾಸ್ತಿ ಅಲ್ಲದಿದ್ದರೂ, ಸ್ವಲ್ಪ ಪ್ರಮಾಣದಲ್ಲಾದ್ರೂ ಏರಿಳಿತ ಆಗುತ್ತಿರುತ್ತದೆ. ಹಾಗಾದರೆ, ಇಂದು (ಸೆಪ್ಟೆಂಬರ್ 19) ಬೆಂಗಳೂರು ಸೇರಿದಂತೆ ರಾಜ್ಯದ ಉಳಿದ ಜಿಲ್ಲೆಗಳಲ್ಲಿ ಲೀಟರ್ ಪೆಟ್ರೋಲ್, ಡೀಸೆಲ್ ಬೆಲೆ ಎಷ್ಟಿದೆ ಎನ್ನುವ ಅಂಕಿಅಂಶಗಳನ್ನು ಇಲ್ಲಿ ನೀಡಲಾಗಿದೆ ಕಣ್ಣಾಡಿಸಿ. ಶಕ್ತಿಯ ಮೂಲ ಎನಿಸಿಕೊಂಡಿರುವ ಪೆಟ್ರೋಲ್ ಮತ್ತು ಡೀಸೆಲ್ ಇಂಧನ ಅತ್ಯವಶ್ಯಕವಾಗಿ ಬೇಕಾಗುವ ಸಂಪನ್ಮೂಲಗಳಲ್ಲಿ
ಫ್ರಾನ್ಸ್ ಅಧ್ಯಕ್ಷ ಇಮ್ಯಾನ್ಯುಯೆಲ್ ಮ್ಯಾಕ್ರನ್ ಅವರ ಲಿಂಗತ್ವ ವಿವಾದಕ್ಕೆ ಸಂಬಂಧಿಸಿದಂತೆ, ಅಮೆರಿಕದ ಬಲಪಂಥೀಯ ನಾಯಕಿ ಕ್ಯಾಂಡೇಸ್ ಓವೆನ್ಸ್ ಮಾಡಿರುವ ಆರೋಪಗಳಿಂದ ಮ್ಯಾಕ್ರನ್ ದಂಪತಿ ತೀವ್ರ ಮಾನಸಿಕ ಒತ್ತಡ ಅನುಭವಿಸುತ್ತಿರುವಂತೆ ಕಾಣುತ್ತಿದೆ. ಬ್ರಿಗಿಟ್ಟೆ ಮ್ಯಾಕ್ರನ್ ಪುರುಷನಿಂದ ಮಹಿಳೆಯಾಗಿ ಬದಲಾಗಿದ್ದಾರೆ ಎಂದ ಓವೆನ್ಸ್ ಆರೋಪಗಳಿಗೆ ಪ್ರತಿಯಾಗಿ, ತಮ್ಮ ಪತ್ನಿ ಓರ್ವ ಸಾಮಾನ್ಯ ಮಹಿಳೆ ಎಂದು ವೈಜ್ಞಾನಿಕವಾಗಿ ಸಾಬೀತುಪಡಿಸಲು ಇಮ್ಯಾನ್ಯುಯೆಲ್ ಮ್ಯಾಕ್ರನ್ ನಿರ್ಧಾರಿಸಿದ್ದಾರೆ. ಅಮೆರಿಕದ ನ್ಯಾಯಾಲಯಕ್ಕೆ ಈ ಕುರಿತು ಸಾಕ್ಷಿ ಒದಗಿಸಲು ಮ್ಯಾಕ್ರನ್ ದಂಪತಿ ತೀರ್ಮಾನಿಸಿದ್ದಾರೆ.
ಆ್ಯಪಲ್ ಐಫೋನ್ 17 ಬಿಡುಗಡೆ | ಮುಂಬೈ ಆ್ಯಪಲ್ ಸ್ಟೋರ್ ಹೊರಗೆ ಅಭಿಮಾನಿಗಳ ಘರ್ಷಣೆ
ಮುಂಬೈ: ಆ್ಯಪಲ್ ಕಂಪೆನಿಯ ಇತ್ತೀಚಿನ ಐಫೋನ್ 17 ಸರಣಿ ಶುಕ್ರವಾರ ಭಾರತದಲ್ಲಿ ಬಿಡುಗಡೆಯಾದ ಬೆನ್ನಲ್ಲೇ, ಮುಂಬೈ ಹಾಗೂ ದಿಲ್ಲಿಯ ಆ್ಯಪಲ್ ಸ್ಟೋರ್ಗಳ ಹೊರಗೆ ಭಾರೀ ಜನಸಂದಣಿ ಕಂಡುಬಂತು. ಮುಂಬೈನ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್ (BKC) ಶಾಖೆಯಲ್ಲಿ ಸಾಲಿನಲ್ಲಿ ನಿಂತಿದ್ದ ಕೆಲ ಅಭಿಮಾನಿಗಳ ನಡುವೆ ವಾಗ್ವಾದ ತೀವ್ರಗೊಂಡು ಘರ್ಷಣೆ ನಡೆಯಿತು. ಪಿಟಿಐ ಸುದ್ದಿ ಸಂಸ್ಥೆ ಹಂಚಿಕೊಂಡ ವೀಡಿಯೊದಲ್ಲಿ ಇಬ್ಬರು ವ್ಯಕ್ತಿಗಳು ಪರಸ್ಪರ ಹಲ್ಲೆ ನಡೆಸುತ್ತಿರುವುದು, ಇತರರು ಮಧ್ಯಪ್ರವೇಶಿಸಲು ಯತ್ನಿಸಿದರೂ ಫಲಕಾರಿಯಾಗದ ದೃಶ್ಯಗಳು ದಾಖಲಾಗಿವೆ. ಬಳಿಕ ಭದ್ರತಾ ಸಿಬ್ಬಂದಿ ತಕ್ಷಣವೇ ಕಾರ್ಯಪ್ರವೃತ್ತರಾಗಿ ಪರಿಸ್ಥಿತಿಯನ್ನು ಹತೋಟಿಗೆ ತಂದರು. ವಾಗ್ವಾದಕ್ಕೆ ನಿಖರವಾದ ಕಾರಣ ಇನ್ನೂ ತಿಳಿದುಬಂದಿಲ್ಲ. ಘರ್ಷಣೆಯ ಘಟನೆಯ ಹೊರತಾಗಿಯೂ, ಹೊಸ ಮಾದರಿಯನ್ನು ಪಡೆದ ಗ್ರಾಹಕರು ತಮ್ಮ ಸಂತೋಷವನ್ನು ಹಂಚಿಕೊಂಡರು. 82,900 ರೂಪಾಯಿಯಿಂದ 2,29,900 ರೂಪಾಯಿಯವರೆಗಿನ ಬೆಲೆಯ ಐಫೋನ್ 17 ಸರಣಿ ಸೆಪ್ಟೆಂಬರ್ 19ರಿಂದ ಭಾರತದಲ್ಲಿ ಮಾರಾಟಕ್ಕೆ ಲಭ್ಯವಾಯಿತು. ಮುಂಬೈನ ಮೊದಲ ಗ್ರಾಹಕರಲ್ಲೊಬ್ಬರಾದ ಅಮನ್ ಮೆಮನ್,“ನಾನು ನನ್ನ ಕುಟುಂಬಕ್ಕಾಗಿ ಮೂರು ಐಫೋನ್ಗಳನ್ನು ಖರೀದಿಸಿದ್ದೇನೆ. ಈ ವರ್ಷದ ವಿನ್ಯಾಸ ಮತ್ತು ಬಣ್ಣ ನನಗೆ ತುಂಬಾ ಇಷ್ಟವಾಗಿದೆ. ಬೆಳಿಗ್ಗೆ 3 ಗಂಟೆಯಿಂದಲೇ ಸಾಲಿನಲ್ಲಿ ನಿಂತಿದ್ದೆ. ಕಳೆದ ಆರು ತಿಂಗಳಿನಿಂದ ಈ ಫೋನ್ಗಾಗಿ ಕಾಯುತ್ತಿದ್ದೆ ಎಂದರು. ಮತ್ತೊಬ್ಬ ಗ್ರಾಹಕ ಇರ್ಫಾನ್, “ನಾನು ಕಿತ್ತಳೆ ಬಣ್ಣದ ಐಫೋನ್ 17 ಪ್ರೊ ಮ್ಯಾಕ್ಸ್ ಖರೀದಿಸಲು ರಾತ್ರಿ 8 ಗಂಟೆಯಿಂದ ಕಾಯುತ್ತಿದ್ದೇನೆ. ಈ ಬಾರಿ ಕ್ಯಾಮೆರಾ ಹಾಗೂ ಬ್ಯಾಟರಿ ಉತ್ತಮಗೊಂಡಿದ್ದು, ಡಿಸೈನ್ ಕೂಡ ವಿಭಿನ್ನವಾಗಿದೆ, ಎಂದು ಸಂತಸ ವ್ಯಕ್ತಪಡಿಸಿದರು. ದಿಲ್ಲಿಯ ಸಾಕೇತ್ ಆಪಲ್ ಸ್ಟೋರ್ ಮುಂದೆಯೂ ಸರತಿ ಸಾಲು ಕಂಡುಬಂದವು. VIDEO | iPhone 17 series launch: A scuffle broke out among a few people amid the rush outside the Apple Store at BKC Jio Centre, Mumbai, prompting security personnel to intervene. Large crowds had gathered as people waited eagerly for the iPhone 17 pre-booking. #iPhone17 … pic.twitter.com/cskTiCB7yi — Press Trust of India (@PTI_News) September 19, 2025
ಸಂಪಾದಕೀಯ | ಜಾತಿ ಗಣತಿ: ವಿರೋಧಿಗಳ ಮುಖವಾಡ ಬಯಲು
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಕೊರಗರ ಒಳಮೀಸಲಾತಿ ಮತ್ತು ಜಾರಿಯಲ್ಲಿರುವ ಒಳಮನುವಾದ
ಭಾಗ - 2 ಪ್ರಧಾನಿ ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರಕಾರವು ಅರಣ್ಯ ಹಕ್ಕು ಕಾಯ್ದೆ ಸೇರಿದಂತೆ ಅದಿವಾಸಿಗಳ ಹಕ್ಕುಗಳ ಬಗೆಗಿನ ಹಲವು ‘ನೀತಿ’ಗಳನ್ನು ಜಾರಿ ಮಾಡಿತ್ತು. ಅದರಲ್ಲಿ PTG (Primitive Tribal Group) (ಆದಿಮ ಬುಡಕಟ್ಟು)ಗಳನ್ನು ‘ವಿಶೇಷ ದುರ್ಬಲ ಬುಡಕಟ್ಟು ಗುಂಪು’ (PVTGs/ Particularly Vulnerable Tribal Groups) ಎಂದು ಮರು ನಾಮಕರಣ ಮಾಡಿದ್ದು ಪ್ರಮುಖವಾದ ನಡೆ. ಕರ್ನಾಟಕದಲ್ಲಿ ಕೊರಗರು ಮತ್ತು ಕೊಡಗಿನ ಜೇನು ಕುರುಬರು PTG (ಆದಿಮ ಬುಡಕಟ್ಟು) ಪೈಕಿ ‘ವಿಶೇಷ ದುರ್ಬಲ ಬುಡಕಟ್ಟು ಗುಂಪು’ (PVTGs/ Particularly Vulnerable Tribal Groups) ಎಂದು ಸರಕಾರ ಗುರುತಿಸಿದೆ. ಆದರೆ ಇಂತಹ Pಗಿಖಿಉ’s ಗಳಿಗೆ ಪ್ರತ್ಯೇಕ ಮೀಸಲಾತಿ ನೀಡಬೇಕಿದೆ. ಅಸ್ಪಶ್ಯತೆ, ಅಜಲು ಪದ್ಧತಿಗಳಿಂದ ನಲುಗಿರುವ ಕೊರಗ ಸಮುದಾಯಕ್ಕೆ ಒಳಮೀಸಲಾತಿ ಜಾರಿ ಎಷ್ಟು ಮುಖ್ಯವೇ, ಅವರನ್ನು ಬಾಧಿಸುತ್ತಿರುವ ಒಳಮನುವಾದವನ್ನು ಕಿತ್ತೊಗೆಯುವುದೂ ಅಷ್ಟೇ ಮುಖ್ಯ. ಕಾಂಗ್ರೆಸ್ ನೇತೃತ್ವದ ಕರ್ನಾಟಕ ರಾಜ್ಯ ಸರಕಾರದ ಸಮಾಜ ಕಲ್ಯಾಣ ಸಚಿವರಾಗಿದ್ದ ಕಾಗೋಡು ತಿಮ್ಮಪ್ಪರವರು 2000ನೇ ನವೆಂಬರ್ 8ರಂದು ‘ಕರ್ನಾಟಕ ಕೊರಗರ (ಅಜಲು ಪದ್ಧತಿ ನಿಷೇಧ) ವಿಧೇಯಕ 2000’ ಎಂಬ ಐತಿಹಾಸಿಕ ಕಾಯ್ದೆಯನ್ನು ವಿಧಾನಸಭೆಯಲ್ಲಿ ಮಂಡಿಸಿ ಅಂಗೀಕರಿಸಿಕೊಂಡರು. ನವೆಂಬರ್ 14, 2000ದಂದು ವಿಧಾನಪರಿಷತ್ನಲ್ಲಿ ಯಾವುದೇ ವಿರೋಧ, ತಿದ್ದುಪಡಿಗಳು ಇಲ್ಲದೆಯೇ ಕಾಯ್ದೆ ಅಂಗೀಕಾರಗೊಂಡಿತ್ತು. ಆದರೆ ಅಜಲು ಪದ್ಧತಿ, ಅಸ್ಪಶ್ಯತೆ ಸಂಪೂರ್ಣ ಕೊನೆಗೊಂಡಿದೆಯೇ? ಇಲ್ಲ! ಹಾಗಾಗಿ, ‘ವಿಶೇಷ ದುರ್ಬಲ ಬುಡಕಟ್ಟು ಗುಂಪು’ ಎನ್ನಿಸಿಕೊಂಡಿರುವ ಕೊರಗರು ಎದುರಿಸುತ್ತಿರುವ ಅಸ್ಪಶ್ಯತೆ ಮತ್ತು ಅಜಲು ಪದ್ಧತಿಯನ್ನು ಎದುರಿಸಲು ‘ನಿಷೇಧ ಮತ್ತು ಕಾನೂನು’ಗಳು ಸಾಕಾಗುವುದಿಲ್ಲ. ಹಾಗಾಗಿ ಅಜಲು ನಿಷೇಧ ಮತ್ತು ಕಾನೂನಿನ ಜೊತೆಜೊತೆಗೆ ಈ ಕೆಳಕಂಡ ಅಂಶಗಳ ಜಾರಿಗೆ ಸರಕಾರ ಮನಸ್ಸು ಮಾಡಬೇಕು. 1. ಅದೃಶ್ಯ ಅಸ್ಪಶ್ಯತೆ ನಿರ್ಮೂಲನ ಹಿಂದೆ ದೇವಸ್ಥಾನ, ದೈವಸ್ಥಾನಗಳ ಜಾತ್ರೆ, ನೇಮ, ಕೋಲದ ಸಂದರ್ಭದಲ್ಲಿ ಕೊರಗರು ದೂರದ ಗದ್ದೆಯಲ್ಲಿ ನಿಂತು ಡೋಲು ಬಾರಿಸಬೇಕಿತ್ತು. ಈಗ ಈ ರೀತಿ ಗದ್ದೆಯಲ್ಲಿ ನಿಂತು ಡೋಲು ಬಾರಿಸುವುದನ್ನು ನಿಲ್ಲಿಸಲಾಗಿದೆ. ಹಿಂದೆ ದೇವಸ್ಥಾನದ ಜಾತ್ರೆಯಲ್ಲಿ ಎಂಜಲು ಎಲೆಯನ್ನು ಆಯ್ದು ಕೊರಗರು ಊಟ ಮಾಡಬೇಕಿತ್ತು. ಈ ಪದ್ಧತಿಯೂ ಈಗ ನಿಂತಿದೆ. ಕಾನೂನಿನ ಭಯದಿಂದ ಈ ಪದ್ಧತಿಗಳು ನಿಂತಿದೆಯೇ ವಿನಹ ಅಸ್ಪಶ್ಯತೆಯ ಮನೋಭಾವ ನಿಂತಿಲ್ಲ. ದೇವಸ್ಥಾನದೊಳಗೆ ನುಡಿಸುವ ವಾದ್ಯ ಪರಿಕರಗಳಲ್ಲಿ ಕೊರಗರ ಡೋಲು ಕೂಡಾ ಸೇರ್ಪಡೆಯಾಗಬೇಕು. ದೇವಸ್ಥಾನದ ಉತ್ಸವಗಳಲ್ಲಿ, ಗರ್ಭಗುಡಿಯ ಪಕ್ಕದಲ್ಲಿ ನುಡಿಸುವ ವಾದ್ಯಮೇಳದ ತಂಡದಲ್ಲಿ ಕೊರಗರನ್ನೂ ಸೇರಿಸಿಕೊಳ್ಳಬೇಕು. ದೇವಸ್ಥಾನಕ್ಕೆ ವಂಶಪಾರಂಪರ್ಯ ವಾದ್ಯ ನುಡಿಸುವ ಶೇರಿಗಾರ್, ತಾಸೆ ಬಡಿಯುವವರು ಇರುವಂತೆಯೇ ವಂಶಪಾರಂಪರ್ಯವಾಗಿ ದೇವಸ್ಥಾನಕ್ಕೆ ಡೋಲು ಬಡಿಯುವ ಕೊರಗರನ್ನೂ ವಾದ್ಯಮೇಳದ ತಂಡದಲ್ಲಿ ಸೇರಿಸಿಕೊಳ್ಳಬೇಕು. ಕಂಬಳ, ಅರಸರ ಪಟ್ಟಾಭಿಷೇಕಗಳು ನಡೆಯುವಾಗ ದೂರದಲ್ಲಿ ಗದ್ದೆಯಲ್ಲಿ ಡೋಲು ಬಾರಿಸುತ್ತಿದ್ದ ಕೊರಗರನ್ನು ಕೊಂಬು ಕಹಳೆ ಊದುವ ತಂಡದ ಜೊತೆ ಸೇರಿಸಿಕೊಳ್ಳಬೇಕು. ಕೊರಗರ ಡೋಲು ಬೇಡ ಎನ್ನುವುದು ಅಜಲು ಸಮಸ್ಯೆಗೆ ಪರಿಹಾರವಲ್ಲ. ಕೊರಗರ ಡೋಲು ಒಂದು ವಾದ್ಯ ಪರಿಕರವಾಗಿದ್ದು, ಅದನ್ನು ಎಲ್ಲಾ ವಾದ್ಯಗಳೊಂದಿಗೆ ಸೇರಿಸಿಕೊಳ್ಳುವುದು ಪರಿಹಾರ. ದೇವಸ್ಥಾನದ ಜಾತ್ರೆಗಳಲ್ಲಿ ಸಹಪಂಕ್ತಿಯಲ್ಲಿ ಕೊರಗರು ಕುಳಿತು ಊಟ ಮಾಡುವ ವ್ಯವಸ್ಥೆಯನ್ನು ಸ್ಥಳೀಯ ಆಡಳಿತಗಳು ಖಾತ್ರಿಪಡಿಸಿಕೊಳ್ಳಬೇಕು. 2. ಅಜಲು ಪರಿಹಾರ ಅಜಲು ಪದ್ಧತಿಯ ಆಚರಣೆ ಕೊರಗರಿಗೆ ವಂಶಪಾರಂಪರ್ಯವಾಗಿರುತ್ತದೆ. ದೇವಸ್ಥಾನ, ದೈವಸ್ಥಾನಕ್ಕೆ ವಂಶಪಾರಂಪರ್ಯ ಅರ್ಚಕ ಹೇಗಿರುತ್ತಾನೋ ಅದೇ ರೀತಿ ಕರಾವಳಿಯ ದೇವಸ್ಥಾನ, ದೈವಸ್ಥಾನ, ಕಂಬಳ, ಜಾತ್ರೆ, ಕೋಲ, ನೇಮಗಳಿಗೆ ವಂಶಪಾರಂಪರ್ಯ ಅಜಲು ಕಾರ್ಯ ನಿರ್ವಹಿಸುವ ಕೊರಗ ಕುಟುಂಬಗಳಿರುತ್ತವೆ. ಅಂತಹ ಅಜಲು ನಿರ್ವಹಿಸುವ ಕೊರಗ ಕುಟುಂಬಗಳು ದೇವಸ್ಥಾನದ ಜಾತ್ರೆಯ ಸಂದರ್ಭ ಕದೋನಿ (ಸ್ಫೋಟಕ) ಹಾರಿಸುವುದು, ದೂರದ ಗದ್ದೆಯಲ್ಲಿ ನಿಂತು ಡೋಲು ಬಡಿಯುವುದು, ದೇವಸ್ಥಾನದೊಳಗೆ ಜಾತ್ರೆಯಾಗುವಾಗ ದೂರದ ಗದ್ದೆಯಲ್ಲಿ ನಿಂತು ಕೊಳಲು ಊದುವುದು ಇತ್ಯಾದಿ ಅಜಲು ಕೆಲಸಗಳನ್ನು ನಿರ್ವಹಿಸಬೇಕಿರುತ್ತದೆ. ಇದು ವೃತ್ತಿಯೂ ಹೌದು, ಶೋಷಣೆಯೂ ಹೌದು. ಅಜಲು ಪದ್ಧತಿ ನಿಷೇಧದ ಬಳಿಕ ಈ ವೃತ್ತಿಗೆ ನಿಷೇಧ ಹೇರಲಾಗಿದೆ. ಅದು ಸರಿಯಾಗಿದೆ. ಅಜಲು ಅಸ್ಪಶ್ಯತೆ ನಿವಾರಣೆ ಎಂದರೆ ‘ನೀವು ನಮ್ಮ ಕಡೆ ಬರೋದೇ ಬೇಡ. ಆಗ ಅಸ್ಪಶ್ಯತೆ/ಅಜಲಿನ ಪ್ರಶ್ನೆಯೇ ಇಲ್ಲ’ ಎಂದು ಕೊರಗರನ್ನು ದೂರ ತಳ್ಳುವುದಲ್ಲ. ವಿಪರ್ಯಾಸ ಎಂದರೆ ಅಜಲು ನಿಷೇಧ ಕಾಯ್ದೆ ಜಾರಿಯಾದ ಬಳಿಕ ದೂರದ ಗದ್ದೆಯಲ್ಲಿ ಡೋಲು ಬಡಿಯುತ್ತಿದ್ದ ಕೊರಗರನ್ನು ದೇವಸ್ಥಾನದೊಳಗೆ ಕರೆಯುವ ಬದಲು ಕಾನೂನಿನ ಜಾರಿಗಾಗಿ ಗದ್ದೆಗೆ ಪ್ರವೇಶ ನಿಷೇಧಿಸಲಾಯಿತು! ಅಜಲು ಅಸ್ಪಶ್ಯತೆ ನಿಷೇಧ ಎಂದರೆ ಕೊರಗರ ವೃತ್ತಿ, ಬದುಕನ್ನು ಎಲ್ಲರ ಜೊತೆಗೂಡಿ ಒಳಗೊಳ್ಳುವುದು ಎಂದರ್ಥ. ಆದರೆ ಅಜಲು ಪದ್ಧತಿ ನಿಷೇಧದ ಬಳಿಕ ದೇವಸ್ಥಾನದಲ್ಲಿ ಕೊರಗರ ಸಾಮಾಜಿಕ ಸ್ಥಾನಮಾನ ಬದಲಾಗಿದೆಯೇ? ಇಲ್ಲ, ಯಾಕೆಂದರೆ ಅಜಲು ನಿರ್ವಹಿಸುತ್ತಿದ್ದ ಕೊರಗರನ್ನು ಸಾಮಾಜಿಕವಾಗಿ ಒಳಗೊಳ್ಳುವ ಪ್ರಕ್ರಿಯೆ ಕಾನೂನು ಪ್ರಕಾರ ನಡೆಯಲಿಲ್ಲ. ಹಾಗಾಗಿ, ಯಾವೆಲ್ಲಾ ಕೊರಗ ಕುಟುಂಬಗಳು ದೇವಸ್ಥಾನದಲ್ಲಿ ಅಪ್ಪ, ತಾತ, ಮುತ್ತಾತಂದಿರ ಕಾಲದಲ್ಲಿ ಅಜಲು ಪದ್ಧತಿಯನ್ನು ಆಚರಿಸುತ್ತಿದ್ದರೋ ಅಂತಹ ಕುಟುಂಬದ ಒರ್ವ ಕೊರಗ ವ್ಯಕ್ತಿಯನ್ನು ದೇವಸ್ಥಾನದ ಆಡಳಿತ ಮಂಡಳಿಯಲ್ಲಿ ಸದಸ್ಯ/ನಿರ್ದೇಶಕರನ್ನಾಗಿ ನೇಮಿಸಬೇಕಿದೆ. ಬಂಟ, ಬ್ರಾಹ್ಮಣ, ಜೈನ, ಬಿಲ್ಲವರ ಮಧ್ಯೆ ಕೊರಗ ವ್ಯಕ್ತಿಯೂ ದೇವಸ್ಥಾನ, ದೈವಸ್ಥಾನ, ಕಂಬಳಗಳ ಆಡಳಿತ ಮಂಡಳಿಯಲ್ಲಿ ಕಡ್ಡಾಯ ಇರುವಂತೆ ಕಾನೂನು ತರಬೇಕಿದೆ. ಅದು ಶತಶತಮಾನಗಳಿಂದ ನಡೆದ ಅಜಲು ಶೋಷಣೆಗೆ ಪರಿಹಾರವೂ ಹೌದು, ವಂಶಪಾರಂಪರ್ಯವಾಗಿ ದೇವಸ್ಥಾನ/ದೈವಸ್ಥಾನದ ಜೊತೆ ಇದ್ದ ಸಂಬಂಧದ ಮುಂದುವರಿಕೆಯೂ ಹೌದು. ಇವೆಲ್ಲಕ್ಕಿಂತ ಮುಖ್ಯವಾಗಿ ಕೊರಗರು ತಾವು ಶೋಷಣೆಗೆ ಒಳಗಾದ ದೇವಸ್ಥಾನ, ದೈವಸ್ಥಾನ, ಕಂಬಳಗಳಲ್ಲಿ ಅಧಿಕಾರದ ಸ್ಥಾನಮಾನ ಪಡೆಯುವ ಮೂಲಕ ಸಮಾಜದಲ್ಲಿ ಪಡೆಯುವ ‘ಸಾಮಾಜಿಕ ನ್ಯಾಯ’ವೂ ಹೌದು. ಕೊರಗರಿಗಾಗಿ ಪ್ರತ್ಯೇಕ ಇಲಾಖೆ ಎಲ್ಲಕ್ಕಿಂತ ಮುಖ್ಯವಾಗಿ, ಅಳಿವಿನಂಚಿನಲ್ಲಿರುವ ಕೊರಗ ಸಮುದಾಯವನ್ನು ಉಳಿಸಿಕೊಳ್ಳಲು ಯುದ್ಧೋಪಾದಿಯ ತುರ್ತು ಕ್ರಮಗಳನ್ನು ಸರಕಾರ ತೆಗೆದುಕೊಳ್ಳಬೇಕಿದೆ. ಅದಕ್ಕಾಗಿ ಸರಕಾರ ‘ಕೊರಗರ ಅಭಿವೃದ್ಧಿಗೆಂದೇ ಪ್ರತ್ಯೇಕ ಇಲಾಖೆ’ ಸ್ಥಾಪಿಸಬೇಕಿದೆ. ಕೊರಗರ ಅಭಿವೃದ್ಧಿಗೆಂದೇ ಪ್ರತ್ಯೇಕ ಇಲಾಖೆ ಸ್ಥಾಪನೆ ಎನ್ನುವುದು ಅತಿಶಯೋಕ್ತಿಯಲ್ಲ. ಸಮಾಜ ಸುಧಾರಕ ರಾಜಕಾರಣಿ ಎಂದೇ ಖ್ಯಾತರಾಗಿದ್ದ ದೇವರಾಜ ಅರಸುರವರು ಮುಖ್ಯಮಂತ್ರಿಯಾಗಿದ್ದಾಗ ‘ಕೊರಗರಿಗಾಗಿ ಪ್ರತ್ಯೇಕ ಇಲಾಖೆ’ ಪ್ರಸ್ತಾವವನ್ನು ಸರಕಾರವೇ ಮುನ್ನೆಲೆಗೆ ತಂದಿತ್ತು. ‘ದಕ್ಷಿಣ ಕನ್ನಡ ಜಿಲ್ಲೆಯ ದೇವಸ್ಥಾನಗಳ ಜಾತ್ರೆಗಳಲ್ಲಿ, ಮದುವೆ ಮುಂಜಿ ಮುಂತಾದ ಧಾರ್ಮಿಕ ಸಮಾರಂಭಗಳಲ್ಲಿ ಊಟವಾದ ನಂತರ ಹೊರಗೆ ಹಾಕಿದ ಎಂಜಲು ಎಲೆಗಳನ್ನು ಕೊರಗರು ಆಯ್ದು ಎಂಜಲು ಅನ್ನವನ್ನು ತಿನ್ನುವುದು ಸರಕಾರದ ಗಮನಕ್ಕೆ ಬಂದಿದೆಯೇ?’ ಎಂಬ ಚರ್ಚೆ 11 ನವೆಂಬರ್ 1976ರಂದು ವಿಧಾನಸಭೆಯಲ್ಲಿ ನಡೆದಿತ್ತು. ತುಂಬಾ ಹೊತ್ತಿನ ಚರ್ಚೆಯ ಬಳಿಕ ಸಮಾಜ ಕಲ್ಯಾಣ ಸಚಿವರಾಗಿದ್ದ ವಿ.ಎಸ್. ಪಾಟೀಲ್ ರವರು ಸುದೀರ್ಘ ಉತ್ತರ ನೀಡಿದ್ದರು. ಈ ಉತ್ತರದ ಕೊನೆಯಲ್ಲಿ ‘‘ಈ ಬ್ಯಾಕ್ವರ್ಡ್ ಬುಡಕಟ್ಟು ಸಮುದಾಯಕ್ಕೆ ಬೇಕಾದ ಸೌಲಭ್ಯಗಳನ್ನು ಒದಗಿಸುವುದಕ್ಕೆ ಒಂದು ಇಲಾಖೆಯನ್ನೇ ಸ್ಥಾಪನೆ ಮಾಡಬೇಕೋ ಅಥವಾ ಯಾವ ರೀತಿ ಮಾಡಬೇಕು ಎಂದು ನಾವು ಯೋಚನೆ ಮಾಡುತ್ತಿದ್ದೇವೆ’’ ಎಂದಿದ್ದರು. ಕೊರಗರಿಗೆಂದೇ ಪ್ರತ್ಯೇಕ ಇಲಾಖೆ ಸ್ಥಾಪನೆಯ ಪ್ರಸ್ತಾವವಾಗಿ(2025ರ ವೇಳೆಗೆ) 50 ವರ್ಷಗಳಾಗಿವೆ. 1976ರಿಂದ ಇಲ್ಲಿಯವರೆಗೆ ಕೊರಗರ ಪರಿಸ್ಥಿತಿ ಏನೇನೂ ಬದಲಾವಣೆಯಾಗಿಲ್ಲ. ಅಸ್ಪಶ್ಯರಿಗೇ ಅಸ್ಪಶ್ಯರಾಗಿರುವ ಅತೀ ಸೂಕ್ಷ್ಮ ಸಮುದಾಯವಾಗಿರುವ ಕೊರಗ ಸಮುದಾಯವರಿಗೆ ಎಸ್ಸಿ/ಎಸ್ಟಿ ಕೋಟಾದ ಸೌಲಭ್ಯಗಳು ಮತ್ತು ಸಮಾನ ಅವಕಾಶಗಳು ದೊರಕಲು ಇನ್ನೂ ಹಲವು ವರ್ಷಗಳು ಬೇಕಾಗಬಹುದು. ಅಲ್ಲಿಯವರಿಗೆ ಅಳಿವಿನಂಚಿನಲ್ಲಿರುವ ಈ ಕೊರಗ ಜನಾಂಗ ಉಳಿಯಬೇಕಾದರೆ ಕೊರಗರಿಗೆ ಪ್ರತ್ಯೇಕ ಇಲಾಖೆ ಅಗತ್ಯವಿದೆ. ಕನಿಷ್ಠ, ಬ್ರಾಹ್ಮಣ ಅಭಿವೃದ್ಧಿ ನಿಗಮ ಇದ್ದಂತೆ ‘ಕೊರಗ ಅಭಿವೃದ್ಧಿ ನಿಗಮ’ವನ್ನಾದರೂ ಸರಕಾರ ಸ್ಥಾಪಿಸಬೇಕಿದೆ. ಕೊರಗರಿಗೆ ರಾಜಕೀಯ ಪ್ರಾತಿನಿಧ್ಯ ಕೆಲವೇ ಸಾವಿರ ಸಂಖ್ಯೆಯಲ್ಲಿರುವ, ವರ್ಷ ವರ್ಷ ಜನಸಂಖ್ಯೆ ಇಳಿಮುಖವಾಗುತ್ತಿರುವ ಸಮುದಾಯವಾಗಿರುವ ಕೊರಗರು ನೇರ ಚುನಾವಣಾ ಸ್ಪರ್ಧೆಯ ಮೂಲಕ ರಾಜಕೀಯ ಪ್ರಾತಿನಿಧ್ಯ ಪಡೆಯಲು ಸಾಧ್ಯವಿಲ್ಲ. ಕರಾವಳಿಯ ಎಲ್ಲಾ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಕೊರಗರಿಗೆ ಮೀಸಲಾತಿ ಇರಬೇಕು ಅಥವಾ ಸರಕಾರವೇ ಓರ್ವ ಕೊರಗ ಹೋರಾಟಗಾರರನ್ನು ಪಾಲಿಕೆ, ಜಿ.ಪಂ., ತಾ.ಪಂ.ಗಳಿಗೆ ನಾಮನಿರ್ದೇಶನ ಮಾಡಬೇಕು. ಭಾಷೆ ಮತ್ತು ಸಂಸ್ಕೃತಿ ಕೊರಗರ ಕೊರ್ರ ಭಾಷೆ ಮತ್ತು ವಿಭಿನ್ನ ಸಂಸ್ಕೃತಿ ಶ್ರೀಮಂತವಾಗಿವೆ. ಆರ್ಥಿಕವಾಗಿ, ಸಾಮಾಜಿಕವಾಗಿ, ರಾಜಕೀಯವಾಗಿ ಕೊರಗ ಸಮುದಾಯ ದುರ್ಬಲವಾಗಿದ್ದರೂ ಸಾಂಸ್ಕೃತಿಕವಾಗಿ ಶ್ರೀಮಂತವಾಗಿದೆ. ಸಮುದಾಯವೊಂದರ ಭಾಷೆ ಮತ್ತು ಸಂಸ್ಕೃತಿ ನಶಿಸಿದರೆ ಸಮುದಾಯವೂ ನಶಿಸಿಹೋಗುತ್ತದೆ. ಹಾಗಾಗಿ ಇಂತಹ ಸೂಕ್ಷ್ಮ ಸಮುದಾಯಗಳ ಭಾಷೆ ಮತ್ತು ಸಂಸ್ಕೃತಿಯ ಉಳಿವಿಗಾಗಿ ಪ್ರತ್ಯೇಕ ಸಮಿತಿ/ಪ್ರಾಧಿಕಾರವನ್ನು ರಚಿಸಬೇಕಿದೆ. ಕಾಸರಗೋಡು-ದಕ್ಷಿಣ ಕನ್ನಡ- ಉಡುಪಿ ಜಿಲ್ಲೆಗಳಲ್ಲಿ ಹರಡಿಕೊಂಡಿರುವ ಕೊರಗರ ಸಂಖ್ಯೆ ಇಳಿಮುಖವಾಗಲು ಎರಡು ಕಾರಣಗಳೇನೆಂದರೆ; ಹುಟ್ಟುವವರ ಸಂಖ್ಯೆಯ ಇಳಿಕೆ, ಸಾಯುವವರ ಸಂಖ್ಯೆಯ ಏರಿಕೆ! ಈ ಎರಡೂ ದುರ್ಘಟನೆಗಳಿಗೆ ಹಸಿವು, ಅಪೌಷ್ಟಿಕತೆಯೇ ಕಾರಣ. ಈ ಹಸಿವು ಅಪೌಷ್ಟಿಕತೆಗೆ ಮನುವಾದ ಕಾರಣ. ಹಾಗಾಗಿ, ಸರಕಾರವೇ ಘೋಷಿಸಿದ ‘ವಿಶೇಷ ದುರ್ಬಲ ಬುಡಕಟ್ಟು ಗುಂಪು’ (PVTGs/ Particularly Vulnerable Tribal Groups)ಗಳನ್ನು ಇತರ ಬುಡಕಟ್ಟು ಗುಂಪುಗಳೊಂದಿಗೆ ಹೋರಾಡಿ ಬದುಕುವುದಕ್ಕೆ ಅವಕಾಶ ಮಾಡಿಕೊಡದೆ ಕೊರಗರಿಗೆ ಪ್ರತ್ಯೇಕ ಒಳಮೀಸಲಾತಿ ಘೋಷಿಸಬೇಕಿದೆ. ಒಳಮೀಸಲಾತಿ ಘೋಷಿಸುವುದರೊಂದಿಗೆ ಅದೃಶ್ಯ ಅಸ್ಪಶ್ಯತೆ, ಅಜಲು ಪದ್ಧತಿಯನ್ನು ಜಾರಿಯಲ್ಲಿಟ್ಟಿರುವ ಒಳಮನುವಾದವನ್ನು ಕಿತ್ತೊಗೆಯಬೇಕಿದೆ. ಒಂದು ‘ಪುಟ್ಟ’ದಾದ ಅಳಿವಿನಂಚಿನಲ್ಲಿರುವ ಸಮುದಾಯವನ್ನು ಒಂದು ಸರಕಾರದಿಂದ ರಕ್ಷಿಸಲಾಗದೇ ಇದ್ದರೆ ಅದು ‘ಘನ ಸರಕಾರ’ ಎಂದು ಅನ್ನಿಸಿಕೊಳ್ಳುವುದಾದರೂ ಹೇಗೆ ?
ಹಿಂದುಳಿದ ಆಯೋಗದ ಸದಸ್ಯರಿಂದಲೇ ಜಾತಿ ಗಣತಿಗೆ ವಿರೋಧ! ಅಧ್ಯಕ್ಷರ ಕಾರ್ಯವೈಖರಿ ಬಗ್ಗೆಯೂ ಆಕ್ಷೇಪ
ರಾಜ್ಯದಲ್ಲಿ ಜಾತಿ ಗಣತಿ ಸಮೀಕ್ಷೆಯ ಪರ ವಿರೋಧದ ನಡುವೆ, ಹಿಂದುಳಿದ ಆಯೋಗದ ಅಧ್ಯಕ್ಷರ ಕಾರ್ಯವೈಖರಿಯ ಬಗ್ಗೆಯೇ ಈಗ ಸದಸ್ಯರು ಅಸಮಾಧಾನ ಹೊರಹಾಕಿದ್ದಾರೆ. ಜಾತಿ ಪಟ್ಟಿಯಲ್ಲಿನ ಗೊಂದಲಗಳನ್ನು ನಿವಾರಿಸದೆ ಸಮೀಕ್ಷೆ ನಡೆಸುತ್ತಿರುವ ಬಗ್ಗೆ ಆಕ್ಷೇಪಣೆಗಳು ಬಂದಿವೆ. ಸಂಪುಟ ಸಭೆಯಲ್ಲಿಯೂ ಈ ವಿಷಯವಾಗಿ ಭಿನ್ನಾಭಿಪ್ರಾಯಗಳು ವ್ಯಕ್ತವಾಗಿದ್ದು, ಸಮೀಕ್ಷೆಯನ್ನು ಮುಂದೂಡುವ ಸಾಧ್ಯತೆ ಇದೆ ಎನ್ನಲಾಗಿದೆ..
ಆಂಬ್ಯುಲೆನ್ಸ್ನಲ್ಲಿ ಆಕ್ಸಿಜನ್ ಖಾಲಿಯಾಗಿ ಕ್ಯಾನ್ಸರ್ ರೋಗಿ ಮೃತ್ಯು
ವೈದ್ಯರ ನಿರ್ಲಕ್ಷ್ಯ ಆರೋಪ
ರಾಯಚೂರು: ಆಂಬ್ಯುಲೆನ್ಸ್ನಲ್ಲಿ ಆಕ್ಸಿಜನ್ ಖಾಲಿಯಾಗಿ ಕ್ಯಾನ್ಸರ್ ರೋಗಿ ಮೃತ್ಯು; ಆರೋಪ
ರಾಯಚೂರು: ನಗರದ ಒಪೆಕ್ ಆಸ್ಪತ್ರೆಯಿಂದ ರಿಮ್ಸ್ ಆಸ್ಪತ್ರೆಗೆ ಸ್ಥಳಾಂತರಿಸುವಾಗ ಆಂಬ್ಯುಲೆನ್ಸ್ನಲ್ಲಿ ಆಕ್ಸಿಜನ್ ಖಾಲಿಯಾಗಿ ಕ್ಯಾನ್ಸರ್ ಪೀಡಿತ ರೋಗಿ ಗುರುವಾರ ರಾತ್ರಿ ಮೃತಪಟ್ಟಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ರಾಯಚೂರಿನ ಎಲ್ ಬಿಎಸ್ ನಗರದ ಶ್ರೀನಿವಾಸ (35) ಮೃತ ಯುವಕ. ಕೆಲ ವರ್ಷಗಳಿಂದ ಕ್ಯಾನ್ಸರ್ ನಿಂದ ಬಳಲುತಿದ್ದ ಶ್ರೀನಿವಾಸ್ ಅವರು, ನಾಲ್ಕನೇ ಹಂತದಲ್ಲಿದ್ದರು ಎನ್ನಲಾಗಿದ್ದು, ಚಿಕಿತ್ಸೆಗಾಗಿ ಒಪೆಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸಿಟಿ ಆಂಜಿಯೋ ಸ್ಕ್ಯಾನ್ ಮಾಡಿಸಲು ಆಸ್ಪತ್ರೆಯ ಸಿಬ್ಬಂದಿ ಗ್ಯಾಸ್ ಆಕ್ಸಿಜನ್ ಸೌಲಭ್ಯವಿರುವ ಆಂಬುಲೆನ್ಸ್ ಮೂಲಕ ಶ್ರೀನಿವಾಸ ಅವರನ್ನು ಅನತಿ ದೂರದಲ್ಲಿಯೇ ಇದ್ದ ರಿಮ್ಸ್ಗೆ ಕರೆದೊಯ್ಯುತ್ತಿದ್ದರು. ಈ ವೇಳೆ ಆಕ್ಸಿಜನ್ ಖಾಲಿಯಾದ ಕಾರಣ ಮೃತಪಟ್ಟಿದ್ದಾನೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಆಸ್ಪತ್ರೆ ಸಿಬ್ಬಂದಿ ನಿರ್ಲಕ್ಷ್ಯವೇ ಸಾವಿಗೆ ಕಾರಣ ಎಂದು ಆರೋಪಿಸಿ ಮೃತರ ಕುಟುಂಬಸ್ಥರು ಸ್ಥಳದಲ್ಲಿಯೇ ಪ್ರತಿಭಟನೆ ನಡೆಸಿದ್ದಾರೆ. ಈ ಕುರಿತು ಒಪೆಕ್ ಆಸ್ಪತ್ರೆಯ ವಿಶೇಷ ಅಧಿಕಾರಿ ಡಾ.ರಮೇಶ ಬಿ ಸಾಗರ್ ಅವರನ್ನು ಕೇಳಿದರೆ ಸಂಪರ್ಕ ಸಾಧ್ಯವಾಗಿಲ್ಲ.
ಅಮೆರಿಕ : ತೆಲಂಗಾಣದ ಯುವಕನನ್ನು ಗುಂಡಿಕ್ಕಿ ಹತ್ಯೆಗೈದ ಪೊಲೀಸರು
ಮೃತದೇಹವನ್ನು ತವರಿಗೆ ತರಲು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ನೆರವು ಕೋರಿದ ಕುಟುಂಬ
ಅಲ್ಲೊಂದು ವಿಚಿತ್ರ ಪ್ರಾಣಿಯಿದೆ, ಅದರ ಹೆಸರು ಟ್ರಂಪ್, ನಮ್ಮಲ್ಲೂ ಒಂದಿದೆ, ಅದರ ಹೆಸರು.. : ಯತ್ನಾಳ್ ವ್ಯಂಗ್ಯ
Yatnal On Rahul Gandhi : ಇತ್ತೀಚಿನ ದಿನಗಳಲ್ಲಿ ರಾಜ್ಯದ ವಿವಿದೆಡೆ ಸಂಚರಿಸುತ್ತಿರುವ ಸಕ್ರಿಯವಾಗಿರುವ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಲೋಕಸಭೆಯಲ್ಲಿ ವಿಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ದ ಕಿಡಿಕಾರಿದ್ದಾರೆ. ಅವರನ್ನು ಅಮೆರಿಕಾದ ಅಧ್ಯಕ್ಷರಿಗೆ ಹೋಲಿಸಿದ್ದಾರೆ.
ಸಂಪಾದಕೀಯ | ಚಾಮುಂಡೇಶ್ವರಿಗೆ ದಲಿತ ಮಹಿಳೆ ಯಾಕೆ ಪುಷ್ಪಾರ್ಚನೆ ಮಾಡಬಾರದು?
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಮಂಗಳೂರು | ಇನ್ ಸ್ಟ್ ಗ್ರಾಮ್ ಪೇಜ್ ನಲ್ಲಿ ಪ್ರಚೋದನಕಾರಿ ಸಂದೇಶ: ಆರೋಪಿಯ ಬಂಧನ
ಮಂಗಳೂರು: ಇನ್ ಸ್ಟ್ ಗ್ರಾಮ್ ಪೇಜ್ ನಲ್ಲಿ ಪ್ರಚೋದನಕಾರಿ ಸಂದೇಶಗಳನ್ನು ಪೋಸ್ಟ್ ಮಾಡಿರುವ ಆರೋಪದಲ್ಲಿ ಯುವಕನೋರ್ವನನ್ನು ಮಂಗಳೂರು ನಗರ ಸಿ.ಇ.ಎನ್ ಅಪರಾಧ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಮಲವಂತಿಗೆಯ ಕಿಲ್ಲೂರು ಮನೆ ನಿವಾಸಿ ಮುಹಮ್ಮದ್ ಕೈಫ್(22) ಬಂಧಿತ ಆರೋಪಿ. Karavali_tigers ಎಂಬ Instagram ಪೇಜ್ ಮುಖಾಂತರ ಪ್ರಚೋದನಕಾರಿ ಸಂದೇಶಗಳನ್ನು ಪೋಸ್ಟ್ ಮಾಡಿದ ಆರೋಪದಲ್ಲಿ ಕೈಫ್ ವಿರುದ್ಧ ಮಂಗಳೂರು ನಗರ ಸಿ.ಇ.ಎನ್ ಅಪರಾಧ ಠಾಣೆಯಲ್ಲಿ ಜುಲೈ 19ರಂದು ಪ್ರಕರಣ ದಾಖಲಾಗಿತ್ತು. ತಾಂತ್ರಿಕ ಸಾಕ್ಷ್ಯಗಳ ಮುಖಾಂತರ ಪತ್ತೆ ಮಾಡಿ, ಆರೋಪಿ ತಮಿಳುನಾಡಿಲ್ಲಿರುವ ಬಗ್ಗೆ ಮಾಹಿತಿ ಸಂಗ್ರಹಿಸಿದ ಪೊಲೀಸರು ಅಲ್ಲಿಗೆ ತೆರಳಿ ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದು, ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿ ಆದೇಶಿಸಿದೆ. Karavali_tigers ಎಂಬ ಪೇಜ್ ವಿರುದ್ಧ ಬಜ್ಪೆ ಪೊಲೀಸ್ ಠಾಣೆಯಲ್ಲೂ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಂಪಾದಕೀಯ | ಹಾಸನದ ದುರಂತ: ಯಾರು ಹೊಣೆ?
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಮಾರಣಾಂತಿಕವಾಗುತ್ತಿರುವ ‘ಮೆದುಳು ತಿನ್ನುವ ಅಮೀಬಾ’
ಅಮೀಬಿಕ್ ಮೆನಿಂಗೋ ಎನ್ ಸೆಫಲೈಟಿಸ್ ಎಂದು ಆಂಗ್ಲ ಭಾಷೆಯಲ್ಲಿ ಕರೆಯಲ್ಪಡುವ, ಮೆದುಳು ತಿನ್ನುವ ಅಮೀಬಾ ಎಂದು ಆಡುಭಾಷೆಯಲ್ಲಿ ಕುಖ್ಯಾತಿ ಪಡೆದಿರುವ ರೋಗ ಇತ್ತೀಚಿನ ದಿನಗಳಲ್ಲಿ ಕೇರಳದಲ್ಲಿ ಬಹಳಷ್ಟು ಸುದ್ದಿಮಾಡುತ್ತಿದೆ. ಅಮೀಬಾ ಎನ್ನುವುದು ಏಕಕೋಶಜೀವಿಯಾಗಿದ್ದು ಪರಾವಲಂಬಿ ಜೀವಿಯಾಗಿರುತ್ತದೆ. ಇತರ ಜೀವಿಗಳ ಸಹಾಯವಿಲ್ಲದೆ ಅದು ಬದುಕಲಾರದು. ಮೆದುಳಿನ ಉರಿಯೂತಕ್ಕೆ ಕಾರಣವಾಗಿ, ಮಾರಣಾಂತಿಕವಾಗಿ ಕಾಡುವ ಈ ಅಮೀಬಾ ಗುಂಪಿನ ನೆಗ್ಲೇರಿಯ ಫೌಲೇರಿ ಎಂಬ ಪರಾವಲಂಬಿ ಜೀವಿ ಹೆಚ್ಚಾಗಿ ಕಲುಷಿತ ಹೊಂಡ ಕೆರೆ, ಕುಂಟೆ, ನದಿಗಳ ಬೆಚ್ಚನೆಯ ನೀರಿನಲ್ಲಿ ಅಭಿವೃದ್ಧಿ ಹೊಂದುತ್ತದೆ. ನಿರ್ವಹಣೆ ಕೊರತೆ ಇರುವ ಈಜುಕೊಳದಲ್ಲಿಯೂ ಇರುತ್ತದೆ. ಈಜಾಡುವಾಗ ಮತ್ತು ಮೇಲಿನಿಂದ ನೀರಿನೊಳಗೆ ಧುಮುಕುವಾಗ ಮತ್ತು ಇನ್ನಿತರ ಕಾರಣಗಳಿಂದ ಮೂಗಿನ ಮುಖಾಂತರ ಈ ಜೀವಿ ಮನುಷ್ಯನ ದೇಹ ಪ್ರವೇಶಿಸಿ ಮೆದುಳನ್ನು ಸೇರಿ ಪ್ರಾಣಕ್ಕೆ ಕುತ್ತು ತರುವ ಮಾರಣಾಂತಿಕ ಮೆದುಳಿನ ಉರಿಯೂತ ಮತ್ತು ಬೆನ್ನು ಹುರಿಯ ಪೊರೆಯ ಉರಿಯೂತಕ್ಕೆ ಕಾರಣವಾಗುತ್ತದೆ. ಈ ರೋಗಾಣುವಿನಿಂದ ಸೋಂಕಿತರಾದ 98 ಶೇಕಡಾ ಮಂದಿ ಸಾವಿಗೀಡಾಗಿದ್ದಾರೆ ಮತ್ತು ನಮ್ಮ ದೇಹ ಸೇರಿದ 14 ರಿಂದ 18 ದಿನದ ಒಳಗೆ ಸಾವು ಸಂಭವಿಸುತ್ತದೆ. ಎಂದು ಅಂಕಿ ಅಂಶಗಳಿಂದ ತಿಳಿದು ಬಂದಿದೆ. ಈ ಸೋಂಕು ರಕ್ತದ ಮುಖಾಂತರ ವೇಗವಾಗಿ ವ್ಯಾಪಿಸುತ್ತದೆ. ಮತ್ತು ನರಗಳ ಮೇಲೆ ನೇರ ದಾಳಿ ನಡೆಯುತ್ತದೆ. ಆರಂಭಿಕ ಹಂತದಲ್ಲಿ ಗುರುತಿಸಿ ಚಿಕಿತ್ಸೆ ನೀಡಿದಲ್ಲಿ ಜೀವ ಉಳಿಸಲು ಸಾಧ್ಯವಾಗಬಹುದು. ಮೊದಲ ಬಾರಿಗೆ ಈ ಸೋಂಕು ಆಸ್ಟ್ರೇಲಿಯದ ಅಡಿಲೇಡಿನಲ್ಲಿ 1961-65ರಲ್ಲಿ ಕಾಣಿಸಿಕೊಂಡು 4 ಮಂದಿ ಮೃತರಾಗಿದ್ದರು. ಫೌಲೇರಿ ಎಂಬಾತ ಈ ಕಾಯಿಲೆಗೆ ಕಾರಣವಾದ ಫೌಲೇರಿ ಅಮೀಬಾವನ್ನು ಕಂಡುಹಿಡಿದಿರುತ್ತಾರೆ. ನೀರು ನಿಂತು ಕಲುಷಿತಗೊಂಡ ಜಲಮೂಲಗಳಲ್ಲಿ ಈ ಅಮೀಬಾ ಹೆಚ್ಚು ಕಾಣಿಸುತ್ತದೆ. ಬೆಚ್ಚಗಿನ ನೀರಿನಲ್ಲಿ ಈ ಪ್ರಭೇದದ ಅಮೀಬಾ ಹೆಚ್ಚು ಕ್ರಿಯಾತ್ಮಕವಾಗಿರುತ್ತದೆ. 40ರಿಂದ 45 ಡಿಗ್ರಿ ಸೆಲ್ಸಿಯಸ್ನ ಉಷ್ಣತೆಯಲ್ಲಿ ಈ ಅಮೀಬಾ ಬದುಕುತ್ತದೆ. ಆದರೆ ಸಮುದ್ರದ ಉಪ್ಪು ನೀರಿನಲ್ಲಿ ಬದುಕುವುದಿಲ್ಲ. ಮಕ್ಕಳಲ್ಲಿ ಆದರಲ್ಲೂ 10ರಿಂದ 15 ವರ್ಷದ ಮಕ್ಕಳಲ್ಲಿ ಈ ರೋಗ ಹೆಚ್ಚು ಕಂಡುಬರುತ್ತದೆ. ಸಾಂಕ್ರಾಮಿಕವಲ್ಲದ ಈ ರೋಗ ವ್ಯಕ್ತಿಯಿಂದ ವ್ಯಕ್ತಿಗೆ ಹರಡುವುದಿಲ್ಲ. ಅಮೀಬಾ ಇರುವ ನೀರು ಕುಡಿಯುವುದರಿಂದಲೂ ಹರಡಲು ಸಾಧ್ಯವಿಲ್ಲ. ಮುಂಜಾಗ್ರತೆ ಹೇಗೆ? ಹೆಚ್ಚು ಉಷ್ಣಾಂಶ ಮತ್ತು ತೇವಾಂಶ ಇರುವ ವಾತಾವರಣ ಅಮೀಬಾದ ಬೆಳವಣಿಗೆಗೆ ಪೂರಕವಾಗಿರುತ್ತದೆ. ಸಮುದ್ರ ತೀರದ ರಾಜ್ಯಗಳಲ್ಲಿ ಈ ರೀತಿಯ ವಾತಾವರಣ ಹೆಚ್ಚು ಇರುತ್ತದೆ. ಕೇರಳ ಮತ್ತು ಪಶ್ಚಿಮ ಬಂಗಾಳದಲ್ಲಿ ಹೆಚ್ಚು ಈ ರೋಗ ಕಾಣಸಿಗುತ್ತದೆ. ಜನರು ನದಿ, ಕೆರೆ, ಹಳ್ಳ-ತೋಡುಗಳಲ್ಲಿ ಸ್ನಾನ ಮಾಡುವುದು, ಬಟ್ಟೆ ಒಗೆಯುವುದು ಮತ್ತು ಪಾತ್ರೆ ತೊಳೆಯುವುದು ಇತ್ಯಾದಿ ಕಾರಣದಿಂದ ಅಮೀಬಾ ದೇಹಕ್ಕೆ ಸೇರುವ ಸಾಧ್ಯತೆ ಹೆಚ್ಚಾಗಿರುತ್ತದೆ. 1. ಕಲುಷಿತ ಕೆರೆ, ತೊರೆ, ನದಿ, ತೋಡುಗಳಲ್ಲಿ ಸ್ನಾನ ಮಾಡಬಾರದು. 2. ಮಲಿನವಾಗಿರುವ ನೀರಿನಲ್ಲಿ ಈಜಾಡಬಾರದು. 3. ನೀರಿನ ಥೀಮ್ ಪಾರ್ಕ್ ಮತ್ತು ಈಜುಕೊಳಗಳನ್ನು ನಿರಂತರವಾಗಿ ಕ್ಲೋರಿನ್ ಬಳಸಿ ಶುಚಿಗೊಳಿಸುತ್ತಿರಬೇಕು. 4. ಮಳೆಗಾಲದಲ್ಲಿ ಹೆಚ್ಚು ನೀರಿನ ಕ್ರೀಡೆಗಳನ್ನು ಆಡಬಾರದು. 5. ನೀರಿನಲ್ಲಿ ಆಟವಾಡುವಾಗ ಸಾಕಷ್ಟು ಮುಂಜಾಗರೂಕತೆ ವಹಿಸಬೇಕು. ರೋಗದ ಲಕ್ಷಣಗಳು ಜ್ವರ, ತಲೆನೋವು, ವಾಂತಿ, ಸುಸ್ತು, ವಾಕರಿಕೆ ಮತ್ತು ಕುತ್ತಿಗೆ ನೋವು ಆರಂಭಿಕವಾಗಿ ಕಾಣಿಸುತ್ತದೆ. ಮುಂದುವರಿದ ಹಂತದಲ್ಲಿ ರೋಗ ಲಕ್ಷಣಗಳು ತೀವ್ರವಾಗಿ ಕಾಡುತ್ತದೆ. ಅತಿಯಾದ ತಲೆನೋವು, ಅಪಸ್ಮಾರ, ಏಕಾಗ್ರತೆಯ ಕೊರತೆ, ದೃಷ್ಟಿ ಮಂದವಾಗುವುದು, ಮುಖದಲ್ಲಿ ಗುಳ್ಳೆಗಳು, ಮಾನಸಿಕ ಗೊಂದಲ, ಅಸ್ಥಿರತೆ, ಭ್ರಮೆ ಮತ್ತು ಭ್ರಾಂತಿ ಹುಚ್ಚಾಟ ಎಲ್ಲವೂ ಒಟ್ಟಾಗಿ ಕಾಣಿಸಿಕೊಂಡು ಕೊನೆ ಹಂತದಲ್ಲಿ ಕೋಮಾಕ್ಕೆ ತಲುಪುತ್ತಾರೆ. ಗಾಳಿ, ನೀರು, ಆಹಾರ ಮತ್ತು ದೈಹಿಕವಾದ ನಿಕಟ ಸಂಪರ್ಕದಿಂದ ರೋಗ ಹರಡುತ್ತದೆ ಎಂದು ತಿಳಿಯಲಾಗಿದೆ. ಪತ್ತೆ ಹಚ್ಚುವುದು ಹೇಗೆ? ಸೋಂಕಿತ ವ್ಯಕ್ತಿಯ ರೋಗದ ಚರಿತ್ರೆ ಅಧ್ಯಯನ ಮಾಡಿ ಸೂಕ್ಷ್ಮವಾಗಿ ದೇಹ ಪರಿಶೀಲನೆ ಮಾಡಬೇಕಾಗುತ್ತದೆ. ಮಲ ಪರೀಕ್ಷೆ, ಬೆನ್ನು ಹುರಿಯ ದ್ರವದ ಪರೀಕ್ಷೆ ಅಥವಾ ಸಿಎಸ್ಎಫ್ ಪರೀಕ್ಷೆ ಮಾಡಿ ಈ ಅಮೀಬಾದ ಇರುವಿಕೆಯನ್ನು ಪತ್ತೆ ಹಚ್ಚಲಾಗುತ್ತದೆ. ಪಿಸಿಆರ್ ಅಥವಾ ಪಾಲಿಮರೇಸ್ ಚೈನ್ ರಿಯಾಕ್ಷನ್ ಎಂಬ ಪರೀಕ್ಷೆ ಮುಖಾಂತರ ಆ್ಯಂಟಿಬಾಡಿ ಪತ್ತೆ ಹಚ್ಚಿ ರೋಗ ನಿರ್ಣಯ ಮಾಡಲಾಗುತ್ತದೆ. ಚಿಕಿತ್ಸೆ ಹೇಗೆ? ರೋಗಿಯನ್ನು ಒಳರೋಗಿಯಾಗಿ ದಾಖಲಿಸಿ ತೀವ್ರನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತದೆ. ರಕ್ತನಾಳಗಳ ಮುಖಾಂತರ ಆ್ಯಂಟಿಬಯಾಟಿಕ್, ಸ್ಟಿರಾಯ್ಡ್ ಮತ್ತು ಪೋಷಕಾಂಶಯುತ್ತ ದ್ರಾವಣಗಳನ್ನು ನೀಡಲಾಗುತ್ತದೆ. ರೋಗದ ಲಕ್ಷಣಗಳಿಗೆ ಅನುಗುಣವಾಗಿ ಔಷಧಿ ನೀಡಿ ಆರೈಕೆ ಮಾಡಲಾಗುತ್ತದೆ. ಇಷ್ಟರವರೆಗೆ ವರದಿಯಾದ 500ಕ್ಕಿಂತಲೂ ಹೆಚ್ಚು ಅಮೀಬಿಕ್ ಎನ್ಸೆಫಲೈಟಿಸ್ ರೋಗದಿಂದ ಬದುಕುಳಿದವರು ಕೆಲವೇ ಮಂದಿ ಮಾತ್ರ. ಅಮೆರಿಕದಲ್ಲಿ 1962ರಿಂದ 2021ರವರೆಗೆ ವರದಿಯಾದ 154 ಮಂದಿಯಲ್ಲಿ 4 ಮಂದಿ ಮಾತ್ರ ಬದುಕಿರುತ್ತಾರೆ. ಕೊನೆ ಮಾತು ನೆಗ್ಲೇರಿಯಾ ಪೌಲೇರಿ ಎಂಬ ಅಮಿಬಾ ಮೆದುಳನ್ನು ತಿನ್ನುವುದಿಲ್ಲ ಆದರೆ ಮೆದುಳು ಮತ್ತು ಮೆದುಳಿನ ಪೊರೆಯ ಉರಿಯೂತಕ್ಕೆ ಕಾರಣವಾಗಿ ಮಾರಣಾಂತಿಕವಾಗಿ ಕಾಡುತ್ತದೆ. ಕ್ಲೋರಿನ್ ದ್ರಾವಣಕ್ಕೆ ಈ ಅಮೀಬಾ ಬಹಳ ಸುಲಭವಾಗಿ ಶರಣಾಗುತ್ತದೆ ಮತ್ತು 9 ನಿಮಿಷದಲ್ಲಿ ಸಾಯುತ್ತದೆ. ಇತ್ತೀಚಿನ ದಿನಗಳಲ್ಲಿ ಕೇರಳದಲ್ಲಿ ಈ ರೋಗ ಮಗದೊಮ್ಮೆ ಸುದ್ದಿ ಮಾಡುತ್ತದೆ. ಅಂಬಾರ್ ಪಂಕ್ಚರ್ ಮುಖಾಂತರ ಬೆನ್ನಹುರಿದ್ರವ್ಯದಲ್ಲಿ ಅಮೀಬಾ ಪತ್ತೆ ಹಚ್ಚಿ ತಕ್ಷಣವೇ ಸೂಕ್ತ ಚಿಕಿತ್ಸೆ ನೀಡಿದಲ್ಲಿ ರೋಗಿಯ ಪ್ರಾಣ ಉಳಿಸಲು ಸಾಧ್ಯವಾಗಬಹುದು. ಒಟ್ಟಿನಲ್ಲಿ ಮಾರಣಾಂತಿಕವಾಗಿರುವ ಈ ಅಮೀಬಾದ ಸಂಪರ್ಕ ಬಾರದಂತೆ ಮುಂಜಾಗರೂಕತೆ ವಹಿಸುವುದರಲ್ಲಿಯೇ ಜಾಣತನ ಅಡಗಿದೆ.
ರಾಜಸ್ಥಾನ | ಗರ್ಭಧಾರಣೆಯಾಗದ ಕಾರಣಕ್ಕೆ ಮಹಿಳೆಯನ್ನು ಜೀವಂತವಾಗಿ ಸುಟ್ಟು ಹತ್ಯೆ!
ಪೊಲೀಸರ ಮೇಲೂ ದಾಳಿ
ಟಿ.ಎಂ.ಎ.ಪೈ.ರೋಟರಿ ಆಸ್ಪತ್ರೆಯಲ್ಲಿ ರಕ್ತದಾನ ಶಿಬಿರ
ಕಾರ್ಕಳ : ಟಿ.ಎಂ.ಎ.ಪೈ.ರೋಟರಿ ಆಸ್ಪತ್ರೆ ಕಾರ್ಕಳ ಮತ್ತು ರೋಟರಿ ಕ್ಲಬ್ ಕಾರ್ಕಳ ಇವರ ಸಹಭಾಗಿತ್ವದಲ್ಲಿ ಮಾಹೆಯ ಚಾನ್ಸಲರ್ ಡಾ, ರಾಮದಾಸ್ ಪೈ ಯವರ 90ನೇ ಹುಟ್ಟು ಹಬ್ಬದ ಪ್ರಯುಕ್ತ ರಕ್ತದಾನ ಶಿಬಿರವು ಕಾರ್ಕಳ ಟಿ.ಎಂ.ಎ.ಪೈ ರೋಟರಿ ಆಸ್ಪತ್ರೆಯಲ್ಲಿ ಜರುಗಿತು. ಶಿಬಿರವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಶುಭ ಹಾರೈಸಿ ಮಾತನಾಡಿದ ಕ್ಲಬ್ಬಿನ ಮೇಜರ್ ಡೋನರ್ ತುಕಾರಾಮ ನಾಯಕ್ ರವರು ಯುವ ಜನರಲ್ಲಿ ರಕ್ತದಾನದ ಬಗ್ಗೆ ಜಾಗೃತಿ ಮೂಡುತ್ತಿರುವುದು ಅಭಿನಂದನೀಯ ಎಂದರು. ಅಧ್ಯಕ್ಷತೆಯನ್ನು ವಹಿಸಿದ್ದ ಕ್ಲಬ್ಬಿನ ಅಧ್ಯಕ್ಷ ನವೀನ್ ಚಂದ್ರ ಶೆಟ್ಟಿ ಸ್ವಾಗತಿಸಿದರು. ರೋಟರಿಯ ಜಿಲ್ಲಾ ಮಾಜಿ ಗವರ್ನರ್ ಡಾ.ಭರತೇಶ್ ಆಧಿರಾಜ್, ಆಸ್ಪತ್ರೆಯ ಮುಖ್ಯಸ್ಥರಾದ ಡಾ.ಕೀರ್ತಿನಾಥ್ ಬಳ್ಳಾಲ್, ಡಾ.ಆಶಾ ಹೆಗ್ಡೆ ವೇದಿಕೆಯಲ್ಲಿ ಉಪಸ್ಥಿತರಿದ್ದು ಶುಭ ಹಾರೈಸಿದರು. ಕ್ಲಬ್ಬಿನ ಸಮುದಾಯ ಸೇವಾ ಚೇರ್ಮನ್ ವಸಂತ್ ಎಂ. ಕಾರ್ಯಕ್ರಮ ನಿರೂಪಿಸಿದರು.ಕಾರ್ಯದರ್ಶಿ ಚೇತನ್ ನಾಯಕ್ ವಂದಿಸಿದರು.
ತಮಿಳು ಹಾಸ್ಯ ನಟ ರೋಬೋ ಶಂಕರ್ ನಿಧನ
ಚೆನ್ನೈ: ತಮಿಳು ಹಾಸ್ಯ ನಟ ರೋಬೋ ಶಂಕರ್ ಗುರುವಾರ ರಾತ್ರಿ 9.05ರ ವೇಳೆಗೆ ಚೆನ್ನೈನ ಖಾಸಗಿ ಆಸ್ಪತ್ರೆಯೊಂದರಲ್ಲಿ ನಿಧನರಾಗಿದ್ದಾರೆ. ಸುದ್ದಿ ತಿಳಿಯುತ್ತಿದ್ದಂತೆಯೇ ರೋಬೊ ಶಂಕರ್ ಅವರ ವಲಸರವಕ್ಕಂನಲ್ಲಿನ ನಿವಾಸಕ್ಕೆ ಭೇಟಿ ನೀಡಿದ ನಟ ಧನುಶ್ ಹಾಗೂ ತಮಿಳುನಾಡು ಉಪ ಮುಖ್ಯಮಂತ್ರಿ ಉದಯನಿಧಿ ಸ್ಟಾಲಿನ್, ಅವರಿಗೆ ಅಂತಿಮ ನಮನ ಸಲ್ಲಿಸಿದರು. ಇವರೊಂದಿಗೆ ಕಾರ್ತಿ, ವಿಜಯ್ ಸೇತುಪತಿ, ರಾಘವ ಲಾರೆನ್ಸ್ ಹಾಗೂ ಇನ್ನಿತರ ಜನಪ್ರಿಯ ನಟರು ರೋಬೊ ಶಂಕರ್ ಅವರ ಅಂತಿಮ ದರ್ಶನ ಪಡೆದರು. ಈ ಕುರಿತು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಉದಯನಿಧಿ ಸ್ಟಾಲಿನ್, “ರೋಬೋ ಶಂಕರ್ ಅವರ ನಿವಾಸದಲ್ಲಿರಿಸಲಾಗಿದ್ದ ಅವರ ಪಾರ್ಥಿವ ಶರೀರಕ್ಕೆ ಮಾಲಾರ್ಪಣೆ ಮಾಡುವ ಮೂಲಕ ನಾವು ಅಂತಿಮ ಗೌರವ ಸಲ್ಲಿಸಿದೆವು. ರಂಗ ಕಲಾವಿದನಾಗಿ ತಮ್ಮ ವೃತ್ತಿ ಜೀವನ ಪ್ರಾರಂಭಿಸಿದ ರೋಬೋ ಶಂಕರ್, ಕಿರುತೆರೆಯ ಮೇಲೆ ಯಶಸ್ಸು ಸಂಪಾದಿಸಿದರು. ಚಲನಚಿತ್ರಗಳಲ್ಲಿ ತಮ್ಮ ನೈಜ ಹಾಸ್ಯದ ಮೂಲಕ ತಮಿಳು ಪ್ರೇಕ್ಷಕರನ್ನು ರಂಜಿಸಿದ ಸಹೋದರ ಶಂಕರ್ ನಿಜವಾಗಿಯೂ ಅದ್ಭುತ ವ್ಯಕ್ತಿ” ಎಂದು ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ನಟ ವಿಜಯ್ ಸೇತುಪತಿ, ನಟ-ನಿರ್ದೇಶಕ ರಾಘವ್ ಲಾರೆನ್ಸ್, ನಟ ಕಾರ್ತಿ, ನಟ-ನಿರ್ಮಾಪಕ ವಿಷ್ಣು ವಿಶಾಲ್, ನಟಿ ಸಿಮ್ರಾನ್, ಸಂಗೀತ ಸಂಯೋಜಕ ಸಂತೋಷ್ ನಾರಾಯಣನ್ ಮತ್ತಿತರ ಜನಪ್ರಿಯ ಸಿನಿಮಾ ತಾರೆಯರೂ ರೋಬೋ ಶಂಕರ್ ಅಗಲಿಕೆಗೆ ಸಂತಾಪ ವ್ಯಕ್ತಪಡಿಸಿದ್ದಾರೆ. ರೋಬೋ ಶಂಕರ್ ತಮ್ಮ ಪತ್ನಿ ಪ್ರಿಯಾಂಕಾ, ಪುತ್ರಿ ಇಂದ್ರಜಾ ಹಾಗೂ ಕುಟುಂಬದ ಸದಸ್ಯರನ್ನು ಅಗಲಿದ್ದಾರೆ.
ಕಾರ್ಕಳ : ರೋಟರಿ ಕ್ಲಬ್ ವತಿಯಿಂದ ಇಂಜಿನಿಯರ್ಸ್ ಡೇ, ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ
ಪ್ರಜಾಪ್ರಭುತ್ವ ಸ್ವೇಚ್ಛೆ ಆಗಬಾರದು: ಡಾ. ಸುರೇಂದ್ರ ಶೆಟ್ಟಿ
ಕೊಣಾಜೆ | ನ್ಯಾಯಾಲಯಕ್ಕೆ ಹಾಜರಾಗದೇ ಪರಾರಿಯಾಗಿದ್ದ ಆರೋಪಿಯ ಸೆರೆ
ಕೊಣಾಜೆ : ಕೊಲೆ, ಸುಲಿಗೆ, ದಾಳಿ, ಎನ್.ಡಿ.ಪಿಎಸ್ ಸೇರಿದಂತೆ ಒಟ್ಟು 8 ಗಂಭೀರ ಪ್ರಕರಣಗಳಲ್ಲಿ ಆರೋಪಿಯಾಗಿದ್ದ ಹಾಗೂ ನ್ಯಾಯಾಲಯಕ್ಕೆ ಹಾಜರಾಗದೇ ಪರಾರಿಯಾಗಿದ್ದ ಬಂಟ್ವಾಳ ತಾಲೂಕು ನರಿಗಾನ ಗ್ರಾಮದ ಪೊಟ್ಟೊಳಿಕೆ ನಿವಾಸಿ, ರೌಡಿ ಶೀಟರ್ ನಜೀಮ್ @ ನಜ್ಜು (30) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಈತನ ಮೇಲೆ ಕೊಣಾಜೆ, ಉಳ್ಳಾಲ, ಮಂಗಳೂರು ನಾರ್ತ್, ಬೆಂಗಳೂರು ನಗರದ ಬೇಗೂರು, ಭಟ್ಕಳ ಪೊಲೀಸ್ ಠಾಣೆಗಳಲ್ಲಿ ಹಲವು ಪ್ರಕರಣಗಳು ದಾಖಲಾಗಿದ್ದು, ಆರೋಪಿ ಜಾಮೀನು ಪಡೆದ ಬಳಿಕ ಒಂದೂವರೆ ವರ್ಷದಿಂದ ನ್ಯಾಯಾಲಯಕ್ಕೆ ಹಾಜರಾಗದೇ ಪರಾರಿಯಾಗಿದ್ದನು. ನಜೀಮ್ ವಿರುದ್ಧ ಹೊರಡಿಸಲಾಗಿದ್ದ ವಾರೆಂಟ್ ಹಾಗೂ ಪ್ರೋಕ್ಲಮೇಷನ್ ಬಾಕಿ ಇದ್ದ ಹಿನ್ನೆಲೆಯಲ್ಲಿ, ವಿಶೇಷ ಕ್ರಮ ಕೈಗೊಂಡು ಆತನನ್ನು ಬೆಂಗಳೂರು ನಗರದಿಂದ ಪತ್ತೆಹಚ್ಚಿ ಬಂಧಿಸಲಾಗಿದೆ. ಆರೋಪಿಯನ್ನು ಮಂಗಳೂರು ದಕ್ಷಿಣ ಉಪ ಆಯುಕ್ತರ ಮಾರ್ಗದರ್ಶನದಲ್ಲಿ ಕೊಣಾಜೆ ಪೊಲೀಸ್ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿಯಾದ ದಿನೇಶ್, ಶರೀಫ್ ಮತ್ತು ರಮೇಶ್ ರ ತಂಡ ಬೆಂಗಳೂರು ನಗರದಿಂದ ಬಂಧಿಸಿದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತರ ಪ್ರಕಟನೆ ತಿಳಿಸಿದೆ.
ಭರ್ಜರಿ ಗುಡ್ ನ್ಯೂಸ್: ರಾಜ್ಯದ ವಿದ್ಯಾರ್ಥಿನಿಯರಿಗೆ ₹30,000 ವಿದ್ಯಾರ್ಥಿವೇತನ!
ಬೆಂಗಳೂರು, ಸೆಪ್ಟೆಂಬರ್ 19: ರಾಜ್ಯದ ವಿದ್ಯಾರ್ಥಿನಿಯರಿಗೆ ಭರ್ಜರಿ ಗುಡ್ ನ್ಯೂಸ್ ಸಿಗಲಿದೆ. ರಾಜ್ಯದ ಉನ್ನತ ಶಿಕ್ಷಣ ಇಲಾಖೆ ಅಜೀಂ ಪ್ರೇಂಜಿ ಫೌಂಡೇಶನ್ನ ಸಹಭಾಗಿತ್ವದಲ್ಲಿ ದೀಪಿಕಾ ವಿದ್ಯಾರ್ಥಿವೇತನವನ್ನು ಸ್ಥಾಪಿಸುವ ಮೂಲಕ ರಾಜ್ಯದ ಉನ್ನತ ಶಿಕ್ಷಣದ ವಿದ್ಯಾರ್ಥಿನಿಯರಿಗಾಗಿ ಹೊಸ ದಿಗಂತವನ್ನು ತೆರೆದಿದೆ. 2025-26ನೇ ಸಾಲಿನಿಂದ ಈ ಆರ್ಥಿಕ ನೆರವು ರಾಜ್ಯದ ವಿದ್ಯಾರ್ಥಿನಿಯರ ಶೈಕ್ಷಣಿಕ ಪಥವನ್ನು ಬೆಳಗಲಿದೆ. ಅಜೀಂ ಪ್ರೇಂಜಿ ಫೌಂಡೇಶನ್
ನಿರ್ಮಾಪಕರ ಖಜಾನೆ ತುಂಬಲು ಪ್ರೇಕ್ಷಕರ ದುಡ್ಡೇ ಬೇಕಾ? ಪಕ್ಕದೂರಿನಲ್ಲಿ ಜಾರಿಯಾಗುವ ರೂಲ್ಸ್ ನಮಗೇಕಿಲ್ಲ?
ಏಳೆಂಟು ವರ್ಷಗಳ ಹಿಂದೆ ಇದೇ ಸಿಎಂ ಸಿದ್ದರಾಮಯ್ಯ ಅವರ ಸರ್ಕಾರ ಚಿತ್ರಮಂದಿರ ಮತ್ತು ಮಲ್ಟಿಪ್ಲೆಕ್ಸ್ನಲ್ಲಿ ಟಿಕೆಟ್ ದರವು ತೆರಿಗೆ ಹೊರತುಪಡಿಸಿ ಗರಿಷ್ಠ 200 ರೂ. ಇರಬೇಕು ಎಂಬ ಆದೇಶ ಜಾರಿ ಮಾಡಿತ್ತು. ಅದು ಸರಿಯಾಗಿ ಪಾಲನೆಯಾಗಿರಲಿಲ್ಲ. ಇದೀಗ ಮತ್ತೊಮ್ಮೆ ಆ ರೂಲ್ಸ್ ಅನ್ನು ಜಾರಿಗೆ ತಂದಿದೆ. ಆದರೆ ಈಗಲೂ ಅದನ್ನು ವಿರೋಧಿಸಿ, ಒಂದಷ್ಟು ಮಂದಿ ಕೋರ್ಟ್ ಮೆಟ್ಟಿಲೇರಿದ್ದಾರೆ. ಅರೇ, ಅಷ್ಟಕ್ಕೂ ಸಿನಿಮಾ ಮಂದಿಗೆ ಪ್ರೇಕ್ಷಕರನ್ನು ಲೂಟಿ ಮಾಡಲು ಯಾಕಿಷ್ಟು ಆತುರ?
ಅರುಂಧತಿ ಆತ್ಮಕಥನ: ಮೇರಿ ಅವರ ಕ್ರಾಂತಿ ಇನ್ನೂ ಅಪೂರ್ಣ
ಕೇರಳ ಬಹಳ ಪ್ರಗತಿಪರ ರಾಜ್ಯ. ಹೀಗಿದ್ದರೂ, ಮಹಿಳೆಯರಿಗೆ ಪಿತ್ರಾರ್ಜಿತ ಆಸ್ತಿಯ ಹಕ್ಕು ನಿರಾಕರಿಸಲಾಗಿತ್ತು. ಮೇರಿ ರಾಯ್ ಮಹಿಳೆಯರಿಗೆ ಆನುವಂಶಿಕ ಹಕ್ಕುಗಳನ್ನು ನಿರಾಕರಿಸಿದ್ದನ್ನು ಪ್ರಶ್ನಿಸಿ, ನ್ಯಾಯಾಲಯದಲ್ಲಿ ಹೋರಾಡಿದರು. 1986ರಲ್ಲಿ ಸುಪ್ರೀಂ ಕೋರ್ಟ್, ಕ್ರಿಶ್ಚಿಯನ್ ಸಮುದಾಯದ ಹೆಣ್ಣುಮಕ್ಕಳಿಗೆ ಸಹೋದರರಷ್ಟೇ ಹಕ್ಕುಗಳಿವೆ ಎಂದು ತೀರ್ಪು ನೀಡಿತು. ಇದು ಹೆಣ್ಣುಮಕ್ಕಳನ್ನು ಅವಲಂಬನೆ ಮತ್ತು ಅವಮಾನದಿಂದ ಮುಕ್ತಗೊಳಿಸಿದ ತೀರ್ಪಾಗಿತ್ತು. ಆದರೆ, ತೀರ್ಪು ಬಂದ ನಾಲ್ಕು ದಶಕಗಳ ನಂತರವೂ ಪರಿಸ್ಥಿತಿ ಬದಲಾಗಿಲ್ಲ. ಕುಟುಂಬಗಳಲ್ಲಿ ಪಿತೃಪ್ರಧಾನತೆ ಮುಂದುವರಿದಿದೆ. ಕಾನೂನು ಬದಲಾಯಿತು; ಆದರೆ, ಸಾಮಾಜಿಕ ಹಣೆಬರಹ ಬದಲಾಗಲಿಲ್ಲ. ನರ್ಮದಾ ಆಂದೋಲನ ಕುರಿತ ಅರುಂಧತಿ ರಾಯ್ ಅವರ ಲೇಖನಗಳ ಬಗ್ಗೆ ಪ್ರತಿಕ್ರಿಯಿಸಿದ್ದ ಬ್ರಿಟಿಷ್ ಲೇಖಕ ಮತ್ತು ಸಾಂಸ್ಕೃತಿಕ ಚಿಂತಕ ಜಾನ್ ಬರ್ಗರ್, ‘‘ನಿಮ್ಮ ಕಾದಂಬರಿಗಳು ಮತ್ತು ಕಾದಂಬರಿಯೇತರ ಬರಹಗಳು ನಿಮ್ಮೆರಡು ಕಾಲುಗಳಂತೆ ಜಗತ್ತಿನೆಲ್ಲೆಡೆ ಸುತ್ತುತ್ತವೆ’’ ಎಂದು ಹೇಳಿದ್ದರು. ಇದನ್ನು ‘ಮದರ್ ಮೇರಿ ಕಮ್ಸ್ ಟು ಮಿ’ ಹೊತ್ತಗೆಯಲ್ಲಿ ಉಲ್ಲೇಖಿಸಿರುವ ಅರುಂಧತಿ, ತಮ್ಮ ‘‘ಎರಡು ರೀತಿಯ ಬರಹಗಳು ಒಂದರೊಂದಿಗೆ ಇನ್ನೊಂದು ಸಂಘರ್ಷದಲ್ಲಿ ಇಲ್ಲ ಎಂಬುದನ್ನು ಗುರುತಿಸಿದ ಕೆಲವೇ ಕೆಲವು ಜನರಲ್ಲಿ ಬರ್ಗರ್ ಒಬ್ಬರು’’ ಎಂದು ಹೇಳಿಕೊಂಡಿದ್ದಾರೆ. ಅರುಂಧತಿ ಅವರ ಪುಸ್ತಕದ ನೆಪದಲ್ಲಿ: ಸುಜನ್ನಾ ಅರುಂಧತಿ ರಾಯ್, ಮೇಘಾಲಯದ ರಾಜಧಾನಿ ಶಿಲ್ಲಾಂಗ್ನಲ್ಲಿ ಜನಿಸಿದರು(ನವೆಂಬರ್ 24,1961). ತಾಯಿ ಮೇರಿ ರಾಯ್ ಕೇರಳದ ಸಿರಿಯನ್ ಕ್ರಿಶ್ಚಿಯನ್ ಮತ್ತು ತಂದೆ ರಂಜಿತ್ ರಾಯ್ ಬಂಗಾಲ ಮೂಲದ ಚಹಾ ತೋಟಗಾರ. ಬಾಲ್ಯವನ್ನು ಕೇರಳದ ಐಮನಮ್ದಲ್ಲಿ ಕಳೆದ ಅರುಂಧತಿ, ಕೊಟ್ಟಾಯಂನ ಕಾರ್ಪಸ್ ಕ್ರಿಸ್ಟಿ ಶಾಲೆ ಮತ್ತು ಆನಂತರ ತಮಿಳುನಾಡಿನ ನೀಲಗಿರಿಯ ಲವ್ಡೇಲ್ನ ಲಾರೆನ್ಸ್ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದರು. ಹೊಸದಿಲ್ಲಿಯ ಸ್ಕೂಲ್ ಆಫ್ ಪ್ಲಾನಿಂಗ್ ಆಂಡ್ ಆರ್ಕಿಟೆಕ್ಚರ್ನಲ್ಲಿ ಅಧ್ಯಯನ ಮಾಡುತ್ತಿರುವಾಗ, ವಾಸ್ತುಶಿಲ್ಪಿ ಗೆರಾರ್ಡ್ ಡ ಕುನ್ಹಾ ಅವರ ಭೇಟಿ; ಬಳಿಕ ಅವರನ್ನು ವಿವಾಹವಾದರು; ವಿಚ್ಛೇದನ ಪಡೆದರು. ಚಿತ್ರನಿರ್ಮಾಪಕ ಪ್ರದೀಪ್ ಕೃಷ್ಣ ಅವರ ಪ್ರಶಸ್ತಿ ಪುರಸ್ಕೃತ ಚಲನಚಿತ್ರ ‘ಮಾಸ್ಸೇ ಸಾಹಿಬ್’ನಲ್ಲಿ ಅರುಂಧತಿ ಹಳ್ಳಿ ಹುಡುಗಿಯ ಪಾತ್ರ ನಿರ್ವಹಿಸಿದ್ದರು(1984). ಬಳಿಕ ಪ್ರದೀಪ್ ಕೃಷ್ಣ ಅವರನ್ನು ವಿವಾಹವಾದರು. ‘ದಿ ಗಾಡ್ ಆಫ್ ಸ್ಮಾಲ್ ಥಿಂಗ್ಸ್’ ಹೊತ್ತಗೆಗೆ ಬೂಕರ್(1997) ಬಂದ ಬಳಿಕ ಅವರಿಗೆ ಆರ್ಥಿಕ ಸ್ಥಿರತೆ ಲಭಿಸಿತು. ನಿರ್ಭೀತ ಹಾಗೂ ಅಧಿಕಾರಸ್ಥರ ನಡೆಗಳನ್ನು ಖಂಡಿಸುವ ಅವರ ಬರಹಗಳು ಬಹಳಷ್ಟು ವಿವಾದಗಳಿಗೆ ಕಾರಣವಾಗಿವೆ; ದೇಶದ್ರೋಹ ಹಾಗೂ ಅಕ್ರಮ ಚಟುವಟಿಕೆ ತಡೆ ಕಾಯ್ದೆ(ಯುಎಪಿಎ) ಸೇರಿದಂತೆ ಹಲವು ಪ್ರಕರಣಗಳು ದಾಖಲಾಗಿವೆ. ಇದ್ಯಾವುದೂ ಅವರ ಧ್ವನಿಯನ್ನು ಹತ್ತಿಕ್ಕಲು ಆಗಿಲ್ಲ. ಪ್ರಜಾಪ್ರಭುತ್ವ, ಜನರ ಸಂವಿಧಾನದತ್ತ ಹಕ್ಕುಗಳು ಮತ್ತು ಸಂವಿಧಾನ ಶಿಲ್ಪಕ್ಕೆ ಧಕ್ಕೆ ತರುವ ಯಾವುದೇ ಪ್ರಯತ್ನಗಳ ವಿರುದ್ಧ ದಿಟ್ಟ ಧ್ವನಿ ಅವರದು. ‘ಲಿಸನಿಂಗ್ ಟು ಗ್ರಾಸ್ಹಾಪರ್ಸ್: ಫೀಲ್ಡ್ ನೋಟ್ಸ್ ಆನ್ ಡೆಮಾಕ್ರಸಿ’(2009), ‘ಬ್ರೋಕನ್ ರಿಪಬ್ಲಿಕ್-3 ಎಸ್ಸೇಸ್’(2011), ‘ದ ಎಂಡ್ ಆಫ್ ಇಮ್ಯಾಜಿನೇಷನ್’(1998, 2016), ‘ಕ್ಯಾಪಿಟಲಿಸಂ: ಎ ಗೋಸ್ಟ್ ಸ್ಟೋರಿ’(2014), ‘ಥಿಂಗ್ಸ್ ದಟ್ ಕ್ಯಾನ್ ಆಂಡ್ ಕೆನಾಟ್ ಬಿ ಸೆಡ್’(2016), ‘ದ ಮಿನಿಸ್ಟ್ರಿ ಆಫ್ ಅಟ್ಮೋಸ್ಟ್ ಹ್ಯಾಪಿನೆಸ್’(2017), ‘ಮೈ ಸೆಡೀಷಿಯಸ್ ಹಾರ್ಟ್’(2019), ‘ಆಝಾದಿ: ಫ್ರೀಡಂ ಫೇಸಿಸಂ ಫಿಕ್ಷನ್’(2020) ಅವರ ಪ್ರಮುಖ ಹೊತ್ತಗೆಗಳಲ್ಲಿ ಕೆಲವು. ಮೇರಿಯೆಂಬ ತಾಯಿ ಆಗಸ್ಟ್ 2025ರಲ್ಲಿ ಅರುಂಧತಿ ಅವರ ಆತ್ಮಕಥನ ‘ಮದರ್ ಮೇರಿ ಕಮ್ಸ್ ಟು ಮಿ’ ಪ್ರಕಟವಾದಾಗ, ತಾಯಿ ಕುರಿತ ವಿವರಗಳನ್ನು ಓದುಗರು ನಿರೀಕ್ಷಿಸಿದ್ದರು. ಆದರೆ, ಅವರಿಗೆ ಎದುರಾಗುವುದು ಬೇರೆಯದೇ ಪ್ರಪಂಚ. ‘ತಾಯಿ ಮೇರಿ ತಮ್ಮ ಮಕ್ಕಳಿಗೆ ಆಶ್ರಯ ಮತ್ತು ಯಾತನೆ, ಧೈರ್ಯ ಮತ್ತು ಗಾಯ ಎರಡನ್ನೂ ನೀಡಿದ ಮಹಿಳೆ’ ಎಂದು ಅರುಂಧತಿ ಹೇಳುತ್ತಾರೆ. ಈ ಕೃತಿ ಮುಖ್ಯವಾಗುವುದು ತಾಯಿ-ಮಗಳ ಅನ್ಯೋನ್ಯತೆ ಇಲ್ಲವೇ ರಾಗ-ದ್ವೇಷದ ಸಂಬಂಧದಿಂದ ಮಾತ್ರವಷ್ಟೇ ಅಲ್ಲ; ಬದಲಾಗಿ, ತಾಯಿ-ಮಗಳ ಚಲನಶೀಲತೆಯನ್ನೂ ಮೀರಿ, ಕೇರಳದಲ್ಲಿ ಪಿತೃಪ್ರಧಾನತೆ ಕುರಿತ ಸಂವಾದವೊಂದನ್ನು ಮತ್ತೆ ಮುನ್ನೆಲೆಗೆ ತಂದಿರುವುದರಿಂದ ಮುಖ್ಯವಾಗುತ್ತದೆ. ಕೇರಳ ಬಹಳ ಪ್ರಗತಿಪರ ರಾಜ್ಯ. ಹೀಗಿದ್ದರೂ, ಮಹಿಳೆಯರಿಗೆ ಪಿತ್ರಾರ್ಜಿತ ಆಸ್ತಿಯ ಹಕ್ಕು ನಿರಾಕರಿಸಲಾಗಿತ್ತು. ಮೇರಿ ರಾಯ್ ಮಹಿಳೆಯರಿಗೆ ಆನುವಂಶಿಕ ಹಕ್ಕುಗಳನ್ನು ನಿರಾಕರಿಸಿದ್ದನ್ನು ಪ್ರಶ್ನಿಸಿ, ನ್ಯಾಯಾಲಯದಲ್ಲಿ ಹೋರಾಡಿದರು. 1986ರಲ್ಲಿ ಸುಪ್ರೀಂ ಕೋರ್ಟ್, ಕ್ರಿಶ್ಚಿಯನ್ ಸಮುದಾಯದ ಹೆಣ್ಣುಮಕ್ಕಳಿಗೆ ಸಹೋದರರಷ್ಟೇ ಹಕ್ಕುಗಳಿವೆ ಎಂದು ತೀರ್ಪು ನೀಡಿತು. ಇದು ಹೆಣ್ಣುಮಕ್ಕಳನ್ನು ಅವಲಂಬನೆ ಮತ್ತು ಅವಮಾನದಿಂದ ಮುಕ್ತಗೊಳಿಸಿದ ತೀರ್ಪಾಗಿತ್ತು. ಆದರೆ, ತೀರ್ಪು ಬಂದ ನಾಲ್ಕು ದಶಕಗಳ ನಂತರವೂ ಪರಿಸ್ಥಿತಿ ಬದಲಾಗಿಲ್ಲ. ಕುಟುಂಬಗಳಲ್ಲಿ ಪಿತೃಪ್ರಧಾನತೆ ಮುಂದುವರಿದಿದೆ. ಕಾನೂನು ಬದಲಾಯಿತು; ಆದರೆ, ಸಾಮಾಜಿಕ ಹಣೆಬರಹ ಬದಲಾಗಲಿಲ್ಲ. ತಲೆಬಾಗಲು ನಿರಾಕರಿಸಿದರು ಮೇರಿ 1933ರಲ್ಲಿ ಕೊಟ್ಟಾಯಂ ಜಿಲ್ಲೆಯ ಮೀನಾಚಿಲ್ ನದಿಯ ದಡದಲ್ಲಿರುವ ಐಮನಮ್ ಎಂಬ ಹಳ್ಳಿಯಲ್ಲಿ ಜನಿಸಿದರು. ಆ ಹಳ್ಳಿಯ ಸೌಂದರ್ಯವನ್ನು ‘ದಿ ಗಾಡ್ ಆಫ್ ಸ್ಮಾಲ್ ಥಿಂಗ್ಸ್’ನಲ್ಲಿ ಅವರ ಮಗಳು ಅರುಂಧತಿ ಚಿರಸ್ಥಾಯಿಯಾಗಿಸಿದರು. ಶ್ರೀಮಂತ ಸಿರಿಯನ್ ಕ್ರಿಶ್ಚಿಯನ್ ಕುಟುಂಬಕ್ಕೆ ಸೇರಿದ ಆಕೆಯ ಬದುಕು ಅತ್ಯಂತ ಆರಾಮದಾಯಕವಾಗಿತ್ತು. ಆದರೆ, ಪ್ರತಿಭಟನೆ-ದಂಗೆಯಿಂದ ಗುರುತಿಸಲ್ಪಟ್ಟರು. ಮೊದಲ ಪ್ರತಿಭಟನೆ ಮದುವೆ ಮೂಲಕ ಬಂದಿತು. ಕುಟುಂಬದ ಇಚ್ಛೆಗೆ ವಿರುದ್ಧವಾಗಿ, ಬಂಗಾಳಿ ಹಿಂದೂ ರಂಜಿತ್ ರಾಯ್ ಅವರನ್ನು ವಿವಾಹವಾದರು. ಆದರೆ, ವಿವಾಹ ನೇರ್ಪಾಗದೆ ಮುರಿದುಬಿತ್ತು; ವಿಚ್ಛೇದನವನ್ನು ಅಪಮಾನ ಮತ್ತು ಅದಕ್ಕೆ ಮಹಿಳೆಯರೇ ಕಾರಣ ಎಂದು ಪರಿಗಣಿಸುವ ಸಂಪ್ರದಾಯವಾದಿ ಸಮಾಜದಲ್ಲಿ ಮಗಳು ಅರುಂಧತಿ ಮತ್ತು ಮಗ ಲಲಿತ್ ಜವಾಬ್ದಾರಿ ಹೊತ್ತು ಒಂಟಿ ತಾಯಿಯಾಗಿ ಉಳಿದು ಕೊಂಡರು. ಮಕ್ಕಳೊಂದಿಗೆ ಊಟಿಯಲ್ಲಿರುವ ಕುಟುಂಬದ ಮನೆಗೆ ಮತ್ತು ಆನಂತರ ಕೇರಳಕ್ಕೆ ಮರಳಿದರು. ಅಲ್ಲಿ ಅವರಿಗೆ ಸಹಾನುಭೂತಿಯ ಬದಲು ದ್ವೇಷ ಎದುರಾಯಿತು. ಸಂಬಂಧಿಕರು ಅವರ ನಿಲುವನ್ನು ಹಾಗೂ ಸಮಾಜ ಅವರ ಆಯ್ಕೆಯನ್ನು ಪ್ರಶ್ನಿಸಿತು. ಬದುಕುಳಿಯುವಿಕೆಯೇ ಹೋರಾಟವಾಗಿ, ಜೀವನ ನಿರ್ವಹಣೆಗೆ ಬೋಧನೆಯನ್ನು ಆಯ್ದುಕೊಂಡರು. ಮರುಮದುವೆಯಾಗಲು ಅಥವಾ ಬೇರೆಯವರನ್ನು ಅವಲಂಬಿಸಲು ನಿರಾಕರಿಸಿದರು. ಸಂಕಷ್ಟಗಳು ಅವರನ್ನು ದೃಢಗೊಳಿಸಿದವು. ಸಮಾಜ ಮಾತ್ರವಲ್ಲದೆ ಕಾನೂನು ಕೂಡ ಮಹಿಳೆಯರ ವಿರುದ್ಧ ಇದ್ದುದು ಅವರ ಅರಿವಿಗೆ ಬಂದಿತು; 1916ರ ತಿರುವಾಂಕೂರು ಕ್ರಿಶ್ಚಿಯನ್ ಉತ್ತರಾಧಿಕಾರ ಕಾಯ್ದೆಯಡಿ ಹೆಣ್ಣುಮಕ್ಕಳು ಆಸ್ತಿಯಲ್ಲಿ ಕೇವಲ ಸಾಂಕೇತಿಕ ಮೊತ್ತಕ್ಕೆ ಮಾತ್ರ ಅರ್ಹರಾಗಿದ್ದರು- ಕೆಲವೊಮ್ಮೆ 5 ರೂ.ನಷ್ಟು ಕಡಿಮೆ; ಆನಂತರ 5,000 ರೂ.ಗೆ ಹೆಚ್ಚಿಸಲಾಯಿತು. ಪ್ರತಿಯಾಗಿ, ಗಂಡು ಮಕ್ಕಳಿಗೆ ಆನುವಂಶಿಕವಾಗಿ ಸಂಪೂರ್ಣ ಆಸ್ತಿ ದತ್ತವಾಗುತ್ತಿತ್ತು. ವೈವಾಹಿಕ ವೈಫಲ್ಯದಿಂದ ಬಳಲುತ್ತಿದ್ದ ಮೇರಿಯಂತಹ ಮಹಿಳೆಯರಿಗೆ, ಇದು ಕೇವಲ ಅನ್ಯಾಯ ಮಾತ್ರವಾಗಿರಲಿಲ್ಲ; ಘನತೆಯ ನಿರಾಕರಣೆಯಾಗಿತ್ತು. ಹೆಣ್ಣುಮಕ್ಕಳು ಎಂಥದ್ದೇ ಸಾಧನೆಗೈದಿದ್ದರೂ ಅಥವಾ ನಿರ್ಗತಿಕಳಾಗಿದ್ದರೂ, ವಿವಾಹದ ನಂತರ ಆಕೆಯನ್ನು ಪರಕೀಯಳಂತೆ ಕಾಣಲಾಗುತ್ತಿತ್ತು; ಪಿತ್ರಾರ್ಜಿತ ಆಸ್ತಿಯ ಜನ್ಮಸಿದ್ಧ ಹಕ್ಕನ್ನು ಮದುವೆ ವೇಳೆ ನೀಡಿದ್ದ ಆಭರಣದ ಮೊತ್ತಕ್ಕೆ ಇಳಿಸಲಾಗಿತ್ತು. ಮೇರಿ ಇದನ್ನು ಪ್ರಶ್ನಿಸಲು ನಿರ್ಧರಿಸಿದರು. 1976ರಲ್ಲಿ ತಂದೆಯ ಆಸ್ತಿಯಲ್ಲಿ ತನ್ನ ಪಾಲು ಕೋರಿ, ಕೇರಳ ಹೈಕೋರ್ಟ್ನಲ್ಲಿ ಪ್ರಕರಣ ದಾಖಲಿಸಿದರು(ಮೇರಿ ರಾಯ್ v/s ಕೇರಳ ರಾಜ್ಯ). ಅವರಿಗೆ ಇದು ಆಸ್ತಿಗಿಂತ ಸಹಜ ನ್ಯಾಯದ ಪ್ರಶ್ನೆಯಾಗಿತ್ತು. ಆದರೆ, ಸಮುದಾಯವು ಅವರನ್ನು ದ್ರೋಹಿ ಎಂಬಂತೆ ನೋಡಿತು. ಕೊಟ್ಟಾಯಂನ ಕಾಫಿ ಹೌಸ್ಗಳು ಮತ್ತು ಚರ್ಚ್ ಕಾಂಪೌಂಡ್ಗಳಲ್ಲಿ ‘ಆ ಮಹಿಳೆ, ಕುಟುಂಬವನ್ನೇ ನ್ಯಾಯಾಲಯಕ್ಕೆ ಎಳೆದವಳು’ ಎಂದು ಟೀಕೆಗೆ ಗುರಿಯಾದರು. ‘ವೈಯಕ್ತಿಕ ವಿಷಯವನ್ನು ಸಾರ್ವಜನಿಕಗೊಳಿಸಿದ್ದಾಳೆ’ ಎಂದು ಸಂಬಂಧಿಕರು ಖಂಡಿಸಿದರು. ಪ್ರಕರಣ ಒಂದು ದಶಕ ಕಾಲ ಮುಂದುವರಿದು, ಸುಪ್ರೀಂ ಕೋರ್ಟ್ ಮೆಟ್ಟಿಲೇರಿತು. ಒಂಟಿತನ ಮತ್ತು ಹಿಂಸೆಯಿಂದ ಬಳಲಿದರೂ, ಅವರು ದಣಿಯಲಿಲ್ಲ. ಹೆಣ್ಣುಮಕ್ಕಳ ವೈಯಕ್ತಿಕ ಆನುವಂಶಿಕ ಹಕ್ಕು ಮಾತ್ರವಲ್ಲದೆ ಸಂಪ್ರದಾಯದಿಂದ ಮೌನಗೊಳಿಸಲ್ಪಟ್ಟ ಪ್ರತಿಯೊಬ್ಬ ಕ್ರಿಶ್ಚಿಯನ್ ಹೆಣ್ಣುಮಕ್ಕಳ ಘನತೆಗಾಗಿ ಸೆಣೆಸಿದರು. 1986ರಲ್ಲಿ ಅವರ ಹೋರಾಟಕ್ಕೆ ಪ್ರತಿಫಲ ಸಿಕ್ಕಿತು. ತಿರುವಾಂಕೂರು ಕಾನೂನನ್ನು ರದ್ದುಗೊಳಿಸಿದ ಸುಪ್ರೀಂ ಕೋರ್ಟ್, ಕೇರಳದ ಕ್ರಿಶ್ಚಿಯನ್ ಮಹಿಳೆಯರು ಭಾರತೀಯ ಉತ್ತರಾಧಿಕಾರ ಕಾಯ್ದೆಯಡಿ ಆನುವಂಶಿಕ ಆಸ್ತಿಯಲ್ಲಿ ಸಮಾನ ಹಕ್ಕು ಹೊಂದಿದ್ದಾರೆ ಎಂದು ಆದೇಶ ನೀಡಿತು. ಇದೊಂದು ಪಥದರ್ಶಕ ತೀರ್ಪು. ಪತ್ರಿಕೆಗಳು ಅವರನ್ನು ಮಾರ್ಗದರ್ಶಕಿ ಎಂದು ಬಣ್ಣಿಸಿದರೆ, ಮಹಿಳೆಯರಿಂದ ಧನ್ಯವಾದಗಳ ಮಳೆ ಸುರಿಯಿತು. ವಿರೋಧಾಭಾಸ ಆದರೆ, ಮನೆಗಳ ನಾಲ್ಕು ಗೋಡೆಗಳ ನಡುವೆ ಬೇರೆಯದೇ ಹುನ್ನಾರಗಳು ನಡೆದವು. ಪೋಷಕರು ಆಸ್ತಿಯನ್ನು ಸದ್ದಿಲ್ಲದೆ ಪುತ್ರರಿಗೆ ಹಂಚಿದರು; ಸಹೋದರರು ಅಕ್ಕ-ತಂಗಿಯರ ಮನವೊಲಿಸಿ, ಆಸ್ತಿ ಪತ್ರಗಳಿಗೆ ಸಹಿ ಮಾಡಿಸಿಕೊಂಡರು. ಮದುವೆಯಲ್ಲಿ ನೀಡುವ ವರದಕ್ಷಿಣೆ ಮತ್ತು ಚಿನ್ನದ ಆಭರಣ ಹೆಣ್ಣುಮಕ್ಕಳ ಪಾಲು ಎಂದು ಕುಟುಂಬಗಳು ವಾದಿಸಿದವು. ಚರ್ಚ್ ಈ ಬಗ್ಗೆ ಮೌನ ತಳೆಯಿತು. ಕಾನೂನು ಏನೇ ಹೇಳಿದರೂ, ಪಿತೃಪ್ರಧಾನತೆ ತನ್ನ ಹಿಡಿತ ಸಡಿಲಗೊಳಿಸಲಿಲ್ಲ. ಈಗಲೂ ಪಿತ್ರಾರ್ಜಿತ ಆಸ್ತಿಯಲ್ಲಿ ಪಾಲು ಕೇಳುವ ಹೆಣ್ಣುಮಕ್ಕಳಿಗೆ ಸ್ವಾರ್ಥಿ ಎಂದು ಹಣೆಪಟ್ಟಿ ಹಚ್ಚಲಾಗುತ್ತದೆ; ಪಾಲು ಕೇಳಿ ನ್ಯಾಯಾಲಯಕ್ಕೆ ಹೋದರೆ, ದ್ರೋಹಿಗಳು ಎಂದು ದೂರಲಾಗುತ್ತದೆ. ಪೋಷಕರು ಮರಣಕ್ಕೆ ಮುನ್ನವೇ ಆಸ್ತಿ ಪತ್ರ ಗಳನ್ನು ಪುತ್ರರ ಹೆಸರಿಗೆ ಮಾಡಿಟ್ಟಿರುತ್ತಾರೆ ಮತ್ತು ‘ಆಸ್ತಿ ಹಕ್ಕು ಬೇಡ’ ಎಂಬ ಪತ್ರವೂ ಹೆಣ್ಣುಮಕ್ಕಳ ಸಹಿಗೆ ಸಿದ್ಧವಾಗಿರುತ್ತದೆ. ಮದುವೆಯಿಂದ ತವರಿನ ಆಸ್ತಿ ಮೇಲಿನ ಹಕ್ಕುಗಳು ಇಲ್ಲವಾಗಲಿವೆ ಎಂದು ಹೆಣ್ಣುಮಕ್ಕಳನ್ನು ನಂಬಿಸಲಾಗಿದೆ. ಅವರು ಕಾನೂನುಬದ್ಧ ಪಾಲಿಗೆ ಬೇಡಿಕೆ ಇರಿಸಲು ಈಗಲೂ ಹಿಂಜರಿಯುತ್ತಿದ್ದಾರೆ. ಮೇರಿ ರಾಯ್ ಪ್ರಕರಣದಲ್ಲಿ ಗೆದ್ದರೂ, ಸಮುದಾಯ ಬಳಸು ಮಾರ್ಗ ಹಿಡಿಯಿತು. ಆದರೆ, ಕಾನೂನನ್ನು ಅಕ್ಷರಶಃ ಪಾಲಿಸಿದ ಪ್ರಗತಿಪರ ಪೋಷಕರೂ ಇದ್ದರು; ಈಗಲೂ ಇದ್ದಾರೆ. ಪಲ್ಲಿಕೂಡಂ ಎಂಬ ಶಾಲೆ ಮೇರಿ ರಾಯ್ ಅವರ ಪ್ರತಿಭಟನೆ ನ್ಯಾಯಾಲಯಕ್ಕೆ ಸೀಮಿತವಾಗಲಿಲ್ಲ. 1979ರಲ್ಲಿ ಅವರು ಕೊಟ್ಟಾಯಂನಲ್ಲಿ ಕಾರ್ಪಸ್ ಕ್ರಿಸ್ಟಿ ಪ್ರೌಢಶಾಲೆಯನ್ನು ಸ್ಥಾಪಿಸಿದರು; ಆನಂತರ ಅದಕ್ಕೆ ಪಲ್ಲಿಕೂಡಂ ಎಂದು ಮರುನಾಮಕರಣ ಮಾಡಲಾಯಿತು. ಮಾಮೂಲಿ ಶಾಲೆಗಳಲ್ಲಿದ್ದ ವಾಚ್ಯ ಕಲಿಕೆ ಸಂಸ್ಕೃತಿಯನ್ನು ಕೆಡವಲು ಪ್ರಯತ್ನಿಸಿದರು. ಪಲ್ಲಿಕೂಡಂ ಮುಕ್ತ ಚಿಂತನೆಯ ಪ್ರಯೋಗಶಾಲೆಯಾಯಿತು: ವಿದ್ಯಾರ್ಥಿಗಳು ಭಿತ್ತಿಚಿತ್ರಗಳನ್ನು ರಚಿಸಿದರು, ನಾಟಕ ಪ್ರದರ್ಶಿಸಿದರು, ರಾಜಕೀಯವನ್ನು ಚರ್ಚಿಸಿದರು ಮತ್ತು ಅವರಿಗೆ ಅಧಿಕಾರವನ್ನು ಪ್ರಶ್ನಿಸಲು ಕಲಿಸಲಾಯಿತು. ಮೇರಿ ಅವರ ವಿಧಾನಗಳು ರಾಜಿಯಾಗದಂಥವು; ಕಠಿಣ ಮತ್ತು ಸ್ಥಿತ್ಯಂತರಗೊಳಿಸುವಂಥವು ಎಂದು ಹಳೆಯ ವಿದ್ಯಾರ್ಥಿಗಳು ಸ್ಮರಿಸುತ್ತಾರೆ. ಶ್ರೇಷ್ಠತೆಯ ಆಗ್ರಹ, ಆಲಸ್ಯಕ್ಕೆ ಶಿಕ್ಷೆ ಮತ್ತು ಸ್ವಂತಿಕೆಯನ್ನು ಪ್ರೋತ್ಸಾಹಿಸಲಾಗುತ್ತಿತ್ತು. ಅವರ ಪ್ರಕಾರ, ಶಿಕ್ಷಣ ಎನ್ನುವುದು ಕೇವಲ ಅಂಕಪಟ್ಟಿಯಲ್ಲ; ನಿರ್ಭೀತ ನಾಗರಿಕರನ್ನು ರೂಪಿಸುವ ಪ್ರಕ್ರಿಯೆ. ಪಲ್ಲಿಕೂಡಂ ಮೂಲಕ ಅವರು ಕೇರಳದ ಮಕ್ಕಳಿಗೆ ತಲೆಬಾಗಲು ನಿರಾಕರಿಸುವ ಮತ್ತು ಭಿನ್ನಾಭಿಪ್ರಾಯವನ್ನು ಹೊಂದುವ ಧೈರ್ಯವನ್ನು ಕಲಿಸಿದರು. ಆದರೆ, ಮಗಳಿಗೆ ಮನೆಯಲ್ಲಿ ತಾಯಿಯ ಉಪಸ್ಥಿತಿಯು ಹೊರೆಯಾಗಿತ್ತು; ಇಬ್ಬರ ಸಂಬಂಧ ಪ್ರಕ್ಷುಬ್ಧತೆಯಿಂದ ಕೂಡಿತ್ತು. ನ್ಯಾಯಾಲಯದಲ್ಲಿ ಮೇರಿ ಸಾಧಿಸಿದ ಗೆಲುವಿನಿಂದ ಮನೆಯಲ್ಲಿ ಆಕೆಯನ್ನು ತಡೆಯುವುದು ಅಸಾಧ್ಯವಾಗಿತ್ತು. ‘ಅಮ್ಮ ನನಗೆ ಆಯುಧಗಳನ್ನು ಕೊಟ್ಟಳು; ಕೆಲವೊಮ್ಮೆ ಅವನ್ನು ನನ್ನ ಮೇಲೆಯೂ ಬಳಸುತ್ತಿದ್ದಳು. ಅವಳು ನೆರಳು ಮತ್ತು ಬಿರುಗಾಳಿ ಎರಡೂ ಹೌದು’ ಎಂದು ಅರುಂಧತಿ ಬರೆಯುತ್ತಾರೆ. ‘ದಿ ಗಾಡ್ ಆಫ್ ಸ್ಮಾಲ್ ಥಿಂಗ್ಸ್’ ನಲ್ಲಿ ತಾಯಿಯ ವ್ಯಕ್ತಿತ್ವದ ಕೆಲವು ತುಣುಕುಗಳನ್ನು ಕಾಲ್ಪನಿಕವಾಗಿ ರೂಪಿಸಿದ್ದ ಅರುಂಧತಿ, ಆತ್ಮಚರಿತ್ರೆಯಲ್ಲಿ ಅವರ ಬಹುಮುಖಿ ವ್ಯಕ್ತಿತ್ವ, ವಿರೋಧಾಭಾಸಗಳನ್ನು ಸಂಪೂರ್ಣ ಅನಾವರಣಗೊಳಿಸಿದ್ದಾರೆ. ಅಪೂರ್ಣ ಪರಂಪರೆ ಮೇರಿ ರಾಯ್ ಒಂದು ಶಾಲೆ, ಒಂದು ಅಭೂತಪೂರ್ವ ತೀರ್ಪು ಮತ್ತು ಅಸಾಧಾರಣ ವ್ಯಕ್ತಿತ್ವವುಳ್ಳ ಇಬ್ಬರು ಮಕ್ಕಳನ್ನು ನೆನಪಾಗಿ ಉಳಿಸಿ, ಸೆಪ್ಟಂಬರ್ 2022ರಲ್ಲಿ ನಿಧನರಾದರು(89 ವರ್ಷ). ಆದರೆ, ಅವರ ಕೆಲಸ ಇನ್ನೂ ಪೂರ್ಣಗೊಂಡಿಲ್ಲ. ಅವರ ಕಾನೂನು ಹೋರಾಟದಿಂದಾಗಿ ಆಸ್ತಿಯ ಹಕ್ಕು ಪಡೆದುಕೊಂಡ ಪ್ರತಿಯೊಬ್ಬ ಮಹಿಳೆಗೆ ಪ್ರತಿಯಾಗಿ ಅಸಂಖ್ಯಾತ ಹೆಣ್ಣುಮಕ್ಕಳು ಮೌನವಾಗಿದ್ದಾರೆ; ಮನೆಗಳಲ್ಲಿ ‘ಹೆಣ್ಣುಮಕ್ಕಳು ಕುಟುಂಬದ ಏಕತೆಯನ್ನು ಭಂಗಿಸಬಾರದು’ ಎಂಬ ಪಿಸುಮಾತು ಈಗಲೂ ಮಾರ್ದನಿಸುತ್ತಿದೆ. ಇದರಿಂದಾಗಿ ಅರುಂಧತಿಯವರ ಆತ್ಮಚರಿತ್ರೆ ವೈಯಕ್ತಿಕಕ್ಕಿಂತ ಹೆಚ್ಚಿನ ಮಹತ್ವಗಳಿಸುತ್ತದೆ; ತಾಯಿಯ ಮೂಲಕ ಅವರು ಕಾನೂನಿನ ಮಿತಿಗಳು ಮತ್ತು ಪಿತೃಪ್ರಧಾನತೆ ಬಗ್ಗೆ ಸಾರ್ವಜನಿಕ ಚರ್ಚೆಯನ್ನು ಮತ್ತೆ ಆರಂಭಿಸಿದ್ದಾರೆ. ಒಬ್ಬ ಮಹಿಳೆಯು ಚರ್ಚ್, ಕುಟುಂಬ ಮತ್ತು ವ್ಯವಸ್ಥೆ ವಿರುದ್ಧ ಗೆಲ್ಲಬಹುದು ಎಂದು ಮೇರಿ ಸಾಧಿಸಿದರು. ಅಸಮಾನತೆಯನ್ನು ಸಂಪೂರ್ಣವಾಗಿ ತೊಡೆಯಲು ಆಗದಿದ್ದರೂ, ಕ್ರಿಶ್ಚಿಯನ್ ಮಹಿಳೆಯರಿಗೆ ಸ್ವಾಭಿಮಾನದ ಪಾಠ ಕಲಿಸಿದರು. ಆದರೆ, ತೀರ್ಪು ಬಂದು ಸುಮಾರು 40 ವರ್ಷ ಬಳಿಕವೂ ಪಿತೃಪ್ರಧಾನತೆ ಇನ್ನೂ ಆಳುತ್ತಿದೆ; ಮನೆಗಳಲ್ಲಿ ಪ್ರತಿದಿನ ಚಕಮಕಿಗಳು ಮುಂದುವರಿದಿವೆ. ಹೀಗಾಗಿ, ಸಮದಾಯಗಳು ಪಿತೃಪ್ರಧಾನತೆಯನ್ನು ತ್ಯಜಿಸುವವರೆಗೆ ಕ್ರಾಂತಿ ಅಪೂರ್ಣವಾಗಿಯೇ ಇರುತ್ತದೆ. ಮೇರಿ ತಲೆಬಾಗಲು ನಿರಾಕರಿಸಿದರು; ಕಾನೂನುಗಳು ನ್ಯಾಯದೆಡೆಗಿನ ಮೊದಲ ಹೆಜ್ಜೆ ಮಾತ್ರ ಎಂದು ಸಾಬೀತುಪಡಿಸಿದರು. ಒಂದು ತೀರ್ಪಿನಿಂದ ನ್ಯಾಯ ದಕ್ಕುವುದಿಲ್ಲ; ಅದಕ್ಕೆ ಧೈರ್ಯ, ಪರಿಶ್ರಮ, ಸಮುದಾಯ ಪ್ರಜ್ಞೆ, ನಿರಂತರ ಹೋರಾಟ ಮತ್ತು ಹಕ್ಕುಗಳ ಅರಿವು ಇರಬೇಕಾಗುತ್ತದೆ ಎಂದು ಇತಿಹಾಸ ನಿರೂಪಿಸಿದೆ. ಮೇರಿ ರಾಯ್ ಪಿತೃಪ್ರಧಾನತೆಯ ಕಟ್ಟಡದ ಧ್ವಂಸವನ್ನು ಆರಂಭಿಸಿದರು; ನಾವೆಲ್ಲ ಸೇರಿಕೊಂಡು ಅದನ್ನು ನೆಲಸಮಗೊಳಿಸಬೇಕಿದೆ. ಮೇರಿ ತನ್ನ ವಿದ್ಯಾರ್ಥಿಗಳಿಗೆ ನೀಡಿದ ಬೆಳಕು ಅರುಂಧತಿ ಮತ್ತು ಮಗ ಎಲ್ಕೆಸಿ (ಲಲಿತ್ ಕುಮಾರ್ ಕ್ರಿಸ್ಟೋಫರ್ ರಾಯ್, ಕ್ಯಾನ್ಸರ್ ತಜ್ಞ. ಕಡಿಮೆ ವೆಚ್ಚದ ವೈದ್ಯಕೀಯ ಸಾಧನಗಳ ಅಭಿವೃದ್ಧಿ ಕ್ಷೇತ್ರದಲ್ಲಿ ನೀಡಿದ ಕೊಡುಗೆಗೆ ಪದ್ಮಶ್ರೀ ಪುರಸ್ಕೃತ)ಗೆ ಇಲ್ಲವಾಯಿತು ಎನ್ನಬಹುದೇನೋ? ಆದರೆ, ಅರುಂಧತಿ ರಾಯ್ ಹೇಳಿದಂತೆ ‘ಆ ಕತ್ತಲಿಗೆ ನಾನು ಚಿರಋಣಿ. ಏಕೆಂದರೆ, ಅದು ನಮಗೆ ಸ್ವಾತಂತ್ರ್ಯದ ಮಾರ್ಗವಾಗಿ ಪರಿಣಮಿಸಿತು’. ಪ್ರಜಾಪ್ರಭುತ್ವ, ವಾಕ್-ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಸಂವಿಧಾನ ಕುರಿತು ಕಾಳಜಿ ಇರುವವರು ಅರುಂಧತಿ ಅವರ ಹೊತ್ತಗೆಗಳನ್ನು ಓದಲೇಬೇಕು; ಅವು ಸಂವಾದಕ್ಕೆ, ಪ್ರಶ್ನೆ ಕೇಳಲು ಹಾಗೂ ಅಭಿವ್ಯಕ್ತಿಸಲು ಪ್ರೇರೇಪಿಸುತ್ತವೆ.
ಮಹಾರಾಷ್ಟ್ರ | ಕಾರ್ಖಾನೆಯಲ್ಲಿ ಸ್ಫೋಟ: ಓರ್ವ ಮೃತ್ಯು, ನಾಲ್ವರಿಗೆ ಗಾಯ
ಪಾಲ್ಘರ್: ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯ ರಾಸಾಯನಿಕ ಕಾರ್ಖಾನೆಯಲ್ಲಿ ಸಂಭವಿಸಿದ ಸ್ಫೋಟದಲ್ಲಿ ಒಬ್ಬ ಕಾರ್ಮಿಕ ಸಾವನ್ನಪ್ಪಿದ್ದು, ನಾಲ್ವರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ. ಗುರುವಾರ ಸಂಜೆ 7.30 ರ ಸುಮಾರಿಗೆ ಲಿಂಬಾನಿ ಸಾಲ್ಟ್ ಇಂಡಸ್ಟ್ರೀಸ್ನಲ್ಲಿ ಸ್ಫೋಟ ಸಂಭವಿಸಿದೆ ಎಂದು ಅವರು ತಿಳಿಸಿದ್ದಾರೆ. ಲೋಹ ಮತ್ತು ಆಮ್ಲ ಮಿಶ್ರಣದ ಸಮಯದಲ್ಲಿ ಐದು ಕಾರ್ಮಿಕರು ಸ್ಥಳದಲ್ಲಿದ್ದರು, ಇದು ಸ್ಫೋಟಕ್ಕೆ ಕಾರಣವಯಿತು ಎಂದು ಪಾಲ್ಘರ್ ಜಿಲ್ಲಾ ವಿಪತ್ತು ನಿರ್ವಹಣಾ ಕೋಶದ ಮುಖ್ಯಸ್ಥ ವಿವೇಕಾನಂದ ಕದಮ್ ಹೇಳಿದ್ದಾರೆ. ಕಾರ್ಮಿಕರಲ್ಲಿ ಒಬ್ಬರು ಸ್ಥಳದಲ್ಲೇ ಸಾವನ್ನಪ್ಪಿದರು. ಇನ್ನಿಬ್ಬರು ತೀವ್ರ ಸುಟ್ಟಗಾಯಗಳಿಗೆ ಒಳಗಾಗಿದ್ದರು ಮತ್ತು ಅವರನ್ನು ಹತ್ತಿರದ ಆಸ್ಪತ್ರೆಗೆ ಸಾಗಿಸಲಾಯಿತು. ಅಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಅವರು ಹೇಳಿದ್ದಾರೆ. ಸ್ವಲ್ಪ ದೂರದಲ್ಲಿ ನಿಂತಿದ್ದ ಇನ್ನೂ ಇಬ್ಬರು ಕಾರ್ಮಿಕರು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ ಮತ್ತು ಅವರ ಸ್ಥಿತಿ ಸ್ಥಿರವಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ. ಅಗ್ನಿಶಾಮಕ ದಳ ಮತ್ತು ವಿಪತ್ತು ನಿರ್ವಹಣಾ ಸಿಬ್ಬಂದಿ ಸೇರಿದಂತೆ ತುರ್ತು ತಂಡಗಳು ತ್ವರಿತವಾಗಿ ಸ್ಥಳಕ್ಕೆ ತಲುಪಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದವು. ಸ್ಥಳೀಯ ಪೊಲೀಸರು ಘಟನೆಯ ತನಿಖೆ ನಡೆಸುತ್ತಿದ್ದು, ವರದಿ ಸಲ್ಲಿಸಿದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರತಿಷ್ಠಿತ ಆ್ಯಪಲ್ ಕಂಪನಿ ಬಹುನಿರೀಕ್ಷಿತ iPhone 17 ಸರಣಿಯ ಮಾರಾಟವನ್ನು ಭಾರತದಲ್ಲಿ ಅಧಿಕೃತವಾಗಿ ಆರಂಭಿಸಿದೆ. ಕರ್ನಾಟಕ ರಾಜಧಾನಿ ಬೆಂಗಳೂರು ಸೇರಿದಂತ ದೇಶದ ಮಹಾನಗರಗಳ ಆ್ಯಪಲ್ ಸ್ಟೋರ್ನಲ್ಲಿ ಇಂದು (ಸೆ.19-ಶುಕ್ರವಾರ) ಬೆಳಗ್ಗೆಯಿಂದಲೇ ಹೊಸ ಮೊಬೈಲ್ಗಳ ಮಾರಾಟ ಪ್ರಕ್ರಿಯೆ ಆರಂಭವಾಗಿದೆ. ಬೆಂಗಳೂರಿನ ಫಿನಿಕ್ಸ್ ಮಾಲ್ ಆಫ್ ಏಷ್ಯಾದಲ್ಲಿ iPhone 17 ಕೊಳ್ಳಲು ಸಾವಿರಾರು ಜನ ನೆರೆದಿದ್ದರೆ, ಅತ್ತ ಮಹಾರಾಷ್ಟ್ರ ರಾಜಧಾನಿ ಮುಂಬೈನ ಆ್ಯಪಲ್ ಸ್ಟೋರ್ ಮುಂದೆ ನೂಕುನುಗ್ಗಲು ಉಂಟಾಗಿದೆ. ಇಲ್ಲಿದೆ ಹೆಚ್ಚಿನ ಮಾಹಿತಿ.
Caste Census: ಸಿದ್ದರಾಮಯ್ಯ ಕನಸಿಗೆ ವಿಘ್ನ, ಮತ್ತೆ ಮುಂದೂಡಿಕೆ - ಸಿಎಂ ಬೆಂಬಲಕ್ಕೆ ಬರೀ 5 ಸಚಿವರಾ?
ಜಾತಿ ಗಣತಿ : ಬಹು ನಿರೀಕ್ಷಿತ ಜಾತಿಗಣತಿ ವಿಚಾರದಲ್ಲಿ ಯಾಕೋ ಸರ್ಕಾರ ಹಿಡಿತ ಕಳೆದುಕೊಳ್ಳುತ್ತಿರುವಂತೆ ಕಾಣಿಸುತ್ತಿದೆ. ಯಾಕೆಂದರೆ, ನಿನ್ನೆಯ ಕ್ಯಾಬಿನೆಟ್ ಮೀಟಿಂಗ್ ನಲ್ಲಿ ಇದಕ್ಕೆ ಲಿಂಗಾಯತ ಸಮುದಾಯದ ಸಚಿವರುಗಳಿಂದ ಭಾರೀ ವಿರೋಧ ವ್ಯಕ್ತವಾಗಿದೆ. ಈ ಹಿನ್ನಲೆಯಲ್ಲಿ, ಸರ್ಕಾರ ಮತ್ತೆ ಇದನ್ನು ಮುಂದೂಡುವ ಸಾಧ್ಯತೆಯಿದೆ.
Gold Rate Today: ಶುಭ ಶುಕ್ರವಾರವೇ ಚಿನ್ನ-ಬೆಳ್ಳಿ ಖರೀದಿದಾರರಿಗೆ ಶಾಕ್, ಎಷ್ಟಿದೆ ಇಂದಿನ ದರ?
ಶುಭ ಶುಕ್ರವಾರದಂದು ಚಿನ್ನ ಖರೀದಿಗೆ ಜನ ಮುಂದಾಗುತ್ತಿದೆ. ಈ ದಿನ ಚಿನ್ನ ಖರೀದಿಸಿದರೆ ಒಳ್ಳೆಯದು ಎನ್ನುವ ನಂಬಿಕೆಯೂ ಇದೆ. ಆದರೆ ಕಳೆದ ಎರಡು ದಿನಗಳಿಂದ ಚಿನ್ನ ಹಾಗೂ ಬೆಳ್ಳಿಯ ದರಗಳು ಭಾರೀ ಇಳಿಕೆ ಕಂಡಿದ್ದವು. ಆದರೆ ಇಂದು ಚಿನ್ನದ ದರವು ದಿಢೀರ್ ಮತ್ತೆ ಏರಿಕೆ ಕಂಡಿದೆ. ಬೆಂಗಳೂರು ಸೇರಿದಂತೆ ವಿವಿಧ ಭಾಗಗಳಲ್ಲಿ ಇಂದಿನ 24 ಕ್ಯಾರೆಟ್, 22
ವಿಜಯಪುರ | ಸಿಂದಗಿಯಲ್ಲಿ ಒಂದೇ ದಿನ ಐದಾರು ಬಾರಿ ಭೂಮಿ ಕಂಪಿಸಿದ ಅನುಭವ!
ಭಯಭೀತರಾಗಿ ಮನೆಗಳಿಂದ ಹೊರಗೆ ಓಡಿ ಬಂದ ಜನತೆ
ರಾಹುಲ್ ಗಾಂಧಿ ಸಿಕ್ಕಾಪಟ್ಟೆ ತಮಾಷೆ ಮಾಡ್ತಾರೆ; ಆಳಂದ ಮತಗಳ್ಳತನ ಆರೋಪಕ್ಕೆ ಬಿಜೆಪಿ ತಿರುಗೇಟು!
ಕರ್ನಾಟಕದ ಆಳಂದ ಮತಕ್ಷೇತ್ರದಲ್ಲಿ ಮತಗಳ್ಳತನ ಆರೋಪಗಳ ಸೆಮಿ ಬಾಂಬ್ ಸಿಡಿಸಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು, ಆಡಳಿತಾರೂಢ ಬಿಜೆಪಿ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ. ರಾಹುಲ್ ಗಾಂಧಿ ಅವರ ಮತಗಳ್ಳತನ ಆರೋಪಗಳನ್ನು ಜೋಕ್ ಎಂದು ಕರೆದಿರುವ ಕೇಂದ್ರ ಸಚಿವ ಅನುರಾಗ್ ಠಾಕೂರ್, ರಾಹುಲ್ ಗಾಂಧಿ ಭಾರತವನ್ನು ನೇಪಾಳ ಮತ್ತು ಬಾಂಗ್ಲಾದೇಶವನ್ನಾಗಿ ಪರಿವರ್ತಿಸುವ ಹುನ್ನಾರ ನಡೆಸಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಇದೇ ವೇಳೆ ಚುನಾವಣಾ ಆಯೋಗವನ್ನು ಅನುರಾಗ್ ಠಾಕೂರ್ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ.
ಸರ್ಕಾರಕ್ಕೆ ಜಾತಿ ಸಮೀಕ್ಷೆ ತಲೆನೋವು! ಸಚಿವರಲ್ಲಿ ಭಿನ್ನಧ್ವನಿ, ಸಿದ್ದು ನಿವಾಸದಲ್ಲಿ ಹೈವೋಲ್ಟೇಜ್ ಸಭೆ
ಸಿಎಂ ಸಿದ್ದರಾಮಯ್ಯ ಅವರ ಜಾತಿ ಗಣತಿ ಸರ್ಕಾರಕ್ಕೆ ತಿರುಗುಬಾಣವಾಗುವ ಲಕ್ಷಣಗಳು ಕಾಣುತ್ತಿದ್ದು, ಸಾರ್ವಜನಿಕ ವಲಯದಲ್ಲಿ ಅಪಸ್ವರಗಳು ಕೇಳಿಬರುತ್ತಿವೆ. ಜಾತಿ ಗಣತಿಯಲ್ಲಿನ ಗೊಂದಲಗಳ ಬಗ್ಗೆ ಸಚಿವರು ಭಿನ್ನಾಭಿಪ್ರಾಯ ವ್ಯಕ್ತಪಡಿಸಿದ್ದು, ಸಮೀಕ್ಷೆಯನ್ನು ಮುಂದೂಡುವಂತೆ ಒತ್ತಾಯಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸಿಎಂ ಸರ್ಕಾರಿ ನಿವಾಸದಲ್ಲಿ ಹೈವೋಲ್ಟೇಜ್ ಸಭೆ ಕರೆಯಲಾಗಿದ್ದು, ಮಹತ್ವದ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ.
ಕರಾವಳಿಯಲ್ಲಿ ಅವಸಾನದತ್ತ ಗೇರು ಬೆಳೆ
100ಕ್ಕೂ ಅಧಿಕ ಫ್ಯಾಕ್ಟರಿಗಳು ಬಂದ್; 50ರಷ್ಟು ದಿವಾಳಿಯತ್ತ!
ಬಿಜೆಪಿ ಸರಕಾರದ ಅವಧಿಯಲ್ಲಿ ಸುತ್ತೋಲೆ ಉಲ್ಲಂಘಿಸಿ ಪುನರಾವರ್ತಿತ ಕಾಮಗಾರಿ
ಕೊಪ್ಪಳ ಜಿಲ್ಲೆಯ ಅಂಜನಾದ್ರಿ ಬೆಟ್ಟ ಪ್ರವಾಸೋದ್ಯಮ ಸ್ಥಳಗಳಲ್ಲಿ ಮೂಲಸೌಕರ್ಯ
ವಿಟ್ಲ | ಸಾಮಾಜಿಕ ಜಾಲತಾಣದಲ್ಲಿ ಕೋಮು ಸೌಹಾರ್ದಕ್ಕೆ ಧಕ್ಕೆಯುಂಟು ಮಾಡುವ ಕಮೆಂಟ್: ಪ್ರಕರಣ ದಾಖಲು
ವಿಟ್ಲ: ಸಾಮಾಜಿಕ ಜಾಲತಾಣದಲ್ಲಿ ಕೋಮು ಸೌಹಾರ್ದಕ್ಕೆ ಧಕ್ಕೆಯುಂಟು ಮಾಡುವಂತಹ ಕಮೆಂಟ್ ಹಾಕಿರುವ ವಿಚಾರವಾಗಿ ವಿಟ್ಲ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಬಂಟ್ವಾಳ ತಾಲೂಕು ನಿವಾಸಿ ಅಬ್ದುಲ್ ರಹಿಮಾನ್ ಎಂಬವರು ನೀಡಿದ ದೂರಿನಂತೆ 'ಸನಾತನಿ ಸಿಂಹ' ಎಂಬ ಫೇಸ್ ಬುಕ್ ಪೇಜ್ ವಿರುದ್ಧ ಅ.ಕ್ರ: 131/2025, ಕಲಂ 353(2) BNS 2023ರಂತೆ ಪ್ರಕರಣ ದಾಖಲಾಗಿದೆ. ಸೆ.18ರಂದು ಮೊಬೈಲ್ ನಲ್ಲಿ ಫೇಸ್ ಬುಕ್ ಅಪ್ಲಿಕೇಶನ್ ವೀಕ್ಷಿಸುತ್ತಿದ್ದ Vartha Bharati ಪೇಜ್ ನಲ್ಲಿ ಹಾಕಿದ್ದ ಸುದ್ದಿಗೆ ಸಂಬಂಧಿಸಿದ ಪೋಸ್ಟ್ಗೆ 'ಸನಾತನಿ ಸಿಂಹ' ಎಂಬ ಫೇಸ್ ಬುಕ್ ಪೇಜ್ ನಿಂದ ಸಮುದಾಯಗಳ ನಡುವೆ ಕೋಮು ಸೌಹಾರ್ದಕ್ಕೆ ಧಕ್ಕೆಯುಂಟು ಮಾಡುವ ರೀತಿಯ ಕಮೆಂಟ್ ಹಾಕಿರುವುದು ಕಂಡುಬಂದಿದೆ ಎಂದು ಅಬ್ದುಲ್ ರಹಿಮಾನ್ ಪೊಲೀಸ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ವಿಟ್ಲ ಠಾಣಾ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಭಾರತ ವಿರುದ್ಧದ ಸುಂಕಾಸ್ತ್ರ ಫಲ ನೀಡದು: ಅಮೆರಿಕಕ್ಕೆ ರಷ್ಯಾ ಎಚ್ಚರಿಕೆ
ಮಾಸ್ಕೊ: ಪ್ರಾಚೀನ ನಾಗರಿಕತೆಗಳಾದ ಭಾರತ ಮತ್ತು ಚೀನಾದಂಥ ದೇಶಗಳ ಮೇಲೆ ವಿಧಿಸಿರುವ ಸುಂಕಾಸ್ತ್ರ ಅಮೆರಿಕಕ್ಕೆ ಫಲ ನೀಡದು ಎಂದು ರಷ್ಯಾದ ವಿದೇಶಾಂಗ ಸಚಿವ ಸೆರ್ಗೀ ಲಾವ್ರೋವ್ ಅಮೆರಿಕದ ಮೇಲೆ ವಾಗ್ದಾಳಿ ನಡೆಸಿದ್ದಾರೆ. ರಷ್ಯಾದ ಪ್ರಮುಖ ಸುದ್ದಿವಾಹಿನಿ ಚಾನಲ್ 1 ಟಿವಿಯ ಗ್ರೇಟ್ ಗೇಮ್ ಕಾರ್ಯಕ್ರಮದಲ್ಲಿ ಮಾತನಾಡಿದ ಸೆರ್ಗಿ, ರಷ್ಯಾದಿಂದ ಇಂಧನ ಖರೀದಿ ಮಾಡುವುದನ್ನು ಸ್ಥಗಿತಗೊಳಿಸಬೇಕು ಎಂಬ ಅಮೆರಿಕದ ಬೇಡಿಕೆಯು, ಈ ದೇಶಗಳು ಬೇರೆ ಮೂಲದಿಂದ, ಹೊಸ ಇಂಧನ ಮಾರುಕಟ್ಟೆಯಿಂದ ಹೆಚ್ಚಿನ ಬೆಲೆಗೆ ಖರೀದಿಸುವಂತ ಮಾಡುತ್ತದೆ ಎಂದು ವಿಶ್ಲೇಷಿಸಿದ್ದಾರೆ. ಉಕ್ರೇನ್ ಜತೆಗಿನ ಯುದ್ಧದಲ್ಲಿ ತೊಡಗಿರುವ ರಷ್ಯಾದಿಂದ ಭಾರತ ಕಚ್ಚಾ ತೈಲ ಖರೀದಿ ಮಾಡುವುದನ್ನು ಸ್ಥಗಿತಗೊಳಿಸಬೇಕು ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಗ್ರಹಿಸಿದ ಬೆನ್ನಲ್ಲೇ ರಷ್ಯಾ ಸಚಿವರ ಹೇಳಿಕೆ ವಿಶೇಷ ಮಹತ್ವ ಪಡೆದಿದೆ. ಭಾರತ ಹಾಗೂ ಚೀನಾ ಪ್ರಾಚೀನ ನಾಗರೀಕತೆಗಳು. ಈ ದೇಶಗಳ ಜತೆ ನಾನು ಇದನ್ನು ಇಷ್ಟಪಡುವುದಿಲ್ಲ; ಆದ್ದರಿಂದ ತೈಲ ಖರೀದಿ ನಿಲ್ಲಿಸಿ ಇಲ್ಲವೇ ನಿಮ್ಮ ಮೇಲೆ ಸುಂಕ ವಿಧಿಸುತ್ತೇನೆ ಎಂಬ ಭಾಷೆ ಬಳಸುವುದರಿಂದ ಕಾರ್ಯಸಾಧನೆಯಾಗದು ಎಂದು ಸೆರ್ಗಿ ಅಣಕವಾಡಿದ್ದಾರೆ. ಅಮೆರಿಕ ಆಯ್ಕೆ ಮಾಡಿಕೊಂಡಿರುವ ಈ ನೀತಿಗೆ ನೈತಿಕ ಮತ್ತು ರಾಜಕೀಯ ವಿರೋಧವಿದೆ ಎಂದು ಅವರು ಸ್ಪಷ್ಟಪಡಿಸಿದರು. ಅಮೆರಿಕದ ಈ ನೀತಿ ಈ ದೇಶಗಳ ಆರ್ಥಿಕ ಕಲ್ಯಾಣವನ್ನು ಕಡೆಗಣಿಸಿರುವ ಜತೆಗೆ ಗಂಭೀರ ತೊಡಕುಗಳನ್ನೂ ತಂದೊಡ್ಡಿದೆ. ಈ ದೇಶಗಳು ದುಬಾರಿ ಬೆಲೆ ತೆತ್ತು ಹೊಸ ಮಾರುಕಟ್ಟೆಯನ್ನು, ಹೊಸ ಮೂಲವನ್ನು ಹುಡುಕುವಂತ ಮಾಡಿದೆ ಎಂದು ಹೇಳಿದ್ದಾರೆ.
2800 ಕೋಟಿ ರೂಪಾಯಿ ವಂಚನೆ ಪ್ರಕರಣ: ಅನಿಲ್ ಅಂಬಾನಿ ಸೇರಿ ಐವರ ವಿರುದ್ಧ ಆರೋಪಪಟ್ಟಿ
ಮುಂಬೈ: ನಕಲಿ ಸಾಲ ವ್ಯವಹಾರದಿಂದಾಗಿ ಯೆಸ್ ಬ್ಯಾಂಕ್ ಗೆ 2797 ಕೋಟಿ ರೂಪಾಯಿ ನಷ್ಟವಾಗಿದೆ ಎನ್ನಲಾದ ಪ್ರಕರಣದಲ್ಲಿ ಧೀರೂಬಾಯಿ ಅಂಬಾನಿ ಉದ್ಯಮ ಸಮೂಹದ ಅಧ್ಯಕ್ಷ ಅನಿಲ್ ಅಂಬಾನಿ, ಬ್ಯಾಂಕಿನ ಸಹ ಸಂಸ್ಥಾಪಕ ರಾಣಾ ಕಪೂರ್, ಆತನ ಪತ್ನಿ ಬಿಂದು, ಪುತ್ರಿಯರಾದ ರಾಧಾ ಕಪೂರ್ ಮತ್ತು ರೋಶನಿ ವಿರುದ್ಧ ಸಿಬಿಐ ಆರೋಪಪಟ್ಟಿ ಸಲ್ಲಿಸಿದೆ. ಕಪೂರ್ ನಿರ್ದೇಶನದಂತೆ ಎಡಿಎಯ ವಾಣಿಜ್ಯ ಫೈನಾನ್ಸ್ (ಆರ್ಸಿಎಫ್ಎಲ್) ಮತ್ತು ಗೃಹ ಫೈನಾನ್ಸ್ (ಆರ್ಎಚ್ಎಫ್ಎಲ್)ನ ಡಿಬೆಂಚರತ್ ಮತ್ತು ವಾಣಿಜ್ಯ ಸಾಲಪತ್ರಗಳಲ್ಲಿ ಬ್ಯಾಂಕ್ ಹೂಡಿಕೆ ಮಾಡಿತ್ತು. ಕ್ರೆಡಿಟ್ ರೇಟಿಂಗ್ ನಲ್ಲಿ ಇದರ ಕಳಪೆ ಸಾಧನೆ ಇದ್ದರೂ ಹೂಡಿಕೆ ಮಾಡಲಾಗತ್ತು. ಇದಕ್ಕೆ ಪ್ರತಿಯಾಗಿ ಹಣವನ್ನು ಎಸ್ಬ್ಯಾಂಕ್ ಪ್ರವರ್ತಕರ ಕಂಪನಿಗಳಿಗೆ ಎಡಿಎ ಕಂಪನಿಗಳಿಂದ ವರ್ಗಾಯಿಸಲಾಗಿದೆ ಎಂದು ಆರೋಪಿಸಲಾಗಿದೆ. ಯೆಸ್ ಬ್ಯಾಂಕಿಗೆ ವಂಚಿಸಿದ ಪ್ರಕರಣದಲ್ಲಿ ಸಿಬಿಐ ಈ ಮುನ್ನ ಡಿಎಚ್ಎಫ್ಎಲ್ ನ ಪ್ರವರ್ತಕ ಕಪಿಲ್ ವಾಧ್ವಾನಿ ಮತ್ತು ಸಹೋದರ ಧೀರಜ್ ವಾಧ್ವಾನಿ ಅವರ ವಿರುದ್ಧವೂ ತನಿಖೆ ನಡೆಸಿತ್ತು. ಅನಿಲ್ ಅಂಬಾನಿ ನೇತೃತ್ವದ ಕಂಪನಿಗಳ ವಹಿವಾಟಿಗೆ ಸಂಬಂಧಿಸಿದ ಎರಡು ಪ್ರಕರಣಗಳಲ್ಲ ಆರೋಪಪಟ್ಟಿ ಸಲ್ಲಿಸಿದ್ದಾಗಿ ಸಿಬಿಐ ಗುರುವಾರ ಪ್ರಕಟಿಸಿದೆ. ಆರೋಪಪಟ್ಟಿಯಲ್ಲಿ ಅನಿಲ್ ಅಂಬಾನಿ, ರಾಣಾ ಕಪೂರ್, ಬಿಂದು ಕಪೂರ್, ರಾಧಾ ಕಪೂರ್, ರೋಶನಿ ಕಪೂರ್, ಆರ್ಸಿಎಫ್ಎಲ್, ಆರ್ಎಚ್ಎಫ್ಎಲ್, ಆರ್ಎಬಿ ಎಂಟರ್ಪ್ರೈಸಸ್ ಲಿಮಿಟೆಡ್, ಇಮ್ಯಾಜಿಲ್ ಎಸ್ಟೇಟ್ ಪ್ರೈವೇಟ್ ಲಿಮಿಟೆಡ್, ಬ್ಲಿಸ್ ಹೌಸ್ ಪ್ರೈವೇಟ್ ಲಿಮಿಟೆಡ್, ಇಮ್ಯಾಜಿನ್ ಹೆಬಿಟೇಟ್ ಪ್ರೈವೇಟ್ ಲಿಮಿಟೆಡ್, ಇಮ್ಯಾಜಿನ್ ರೆಸಿಡೆನ್ಸ್ ಪ್ರೈವೇಟ್ ಲಿಮಿಟೆಡ್, ಮಾರ್ಗನ್ ಕ್ರೆಡಿಟ್ಸ್ ಪ್ರೈವೇಟ್ ಲಿಮಿಟೆಡ್ ವಿರುದ್ಧ ಆರೋಪ ಹೊರಿಸಲಾಗಿದೆ. ಹೆಸ್ ಬ್ಯಾಂಕಿನ ಮುಖ್ಯ ವಿಚಕ್ಷಣಾಅಧಿಕಾರಿ 2022ರಲ್ಲಿ ಅನಿಲ್ ಅಂಬಾನಿ ಮತ್ತು ರಾಣಾ ಕಪೂರ್ ಕಂಪನಿಗಳ ವಿರುದ್ಧ ಸಿಬಿಐಗೆ 2022ರಲ್ಲಿ ದೂರು ನೀಡಿದ್ದರು.
ಭಾರತದ ರಾಜಕಾರಣದಲ್ಲಿ ಬಿರುಗಾಳಿ ಏಳಲು ಕಾರಣವಾಗಬಹುದಾದ ಹೇಳಿಕೆಯೊಂದನ್ನು ಬಂಧಿತ ಜೆಕೆಎಲ್ಎಫ್ ನಾಯಕ ಯಾಸಿನ್ ಮಲ್ಲಿಕ್ ನೀಡಿದ್ದಾನೆ. ದೆಹಲಿ ಹೈಕೋರ್ಟ್ಗೆ ಸಲ್ಲಿಸಿದ ಅಫಿಡವಿಟ್ನಲ್ಲಿ, 2006ರಲ್ಲಿ ಪಾಕಿಸ್ತಾನದಲ್ಲಿ ಹಫೀದ್ ಸಯೀದ್ನನ್ನು ಭೇಟಿ ಮಾಡಿದ್ದಕ್ಕೆ, ಮಾಜಿ ಪ್ರಧಾನಿ ದಿವಂಗತ ಡಾ. ಮನಮೋಹನ್ ಸಿಂಗ್ ನನಗೆ ಧನ್ಯವಾಧ ಅರ್ಪಿಸಿದ್ದರು ಎಂದು ಯಾಸಿನ್ ಮಲಿಕ್ ಸ್ಪೋಟಕ ಹೇಳಿಕೆ ನೀಡಿದ್ದಾನೆ. ಭಾರತ-ಪಾಕಿಸ್ತಾನ ಶಾಂತಿ ಮಾತುಕತೆ ಪ್ರಯತ್ನದ ಭಾಗವಾಗಿ ಗುಪ್ತಚರ ದಳದ ಮುಖ್ಯಸ್ಥರ ಮನವಿಯ ಮೇರೆಗೆ ತಾನಿ ಹಫೀಜ್ ಸಯೀದ್ನನ್ನು ಭೇಟಿ ಮಾಡಿದ್ದಾಗಿ ಯಾಸಿನ್ ಮಲ್ಲಿಕ್ ತಿಳಿಸಿದ್ದಾನೆ.
IMD Weather Forecast: ಕರ್ನಾಟಕ ಸೇರಿ ಈ ರಾಜ್ಯಗಳಲ್ಲಿ ಚಂಡಮಾರುತದ ಪರಿಚಲನೆ, ಮಳೆ ಎಚ್ಚರಿಕೆ
ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ಮಳೆ ಮುಂದುವರಿದಿದೆ. ಮುಂಗಾರು ಮಾರುತಗಳ ಚಲನೆಯಿಂದಾಗಿ ಹಲವೆಡೆ ಧಾರಾಕಾರ ಮಳೆಯಾಗುತ್ತಿದೆ. ಉತ್ತರ ಭಾರತ, ದಕ್ಷಿಣ ಭಾರತ ಹಾಗೂ ಮಧ್ಯಭಾರತದ ರಾಜ್ಯಗಳಲ್ಲಿ ಸೆಪ್ಟೆಂಬರ್ 19ರಿಂದ 24ರವರೆಗೆ ಮಳೆ ಮುಂದುವರಿಯಲಿದೆ. ದಕ್ಷಿಣ ಒಳನಾಡಿನ ಕರ್ನಾಟಕದ ಮೇಲೆ ಮೇಲ್ಮುಖ ವಾಯುಭಾರ ಚಂಡಮಾರುತದ ಪರಿಚಲನೆ ಇರುತ್ತದೆ. ಪೂರ್ವ ಬಿಹಾರದ ಮೇಲೆ ಮೇಲ್ಮುಖ ವಾಯುಭಾರ ಚಂಡಮಾರುತದ ಪರಿಚಲನೆ ಮತ್ತು
ರಷ್ಯಾದಲ್ಲಿ ಭಾರೀ ಭೂಕಂಪ: ಕಮ್ಚಟ್ಕಾದಲ್ಲಿ ಸುನಾಮಿ ಭೀತಿ ಹುಟ್ಟಿಸಿದ 7.8 ತೀವ್ರತೆಯ ಕಂಪನ
ಪ್ರಬಲ ಭೂಕಂಪ ರಷ್ಯಾದ ಕಮ್ಚಟ್ಕಾ ಪ್ರದೇಶದಲ್ಲಿ ಉಂಟಾಗಿದೆ.
ಕೆಲ್ಸಕ್ಕೆ ಹೋಗುವವರ ಮೇಲೆ ಮಳೆರಾಯನಿಗೆ ಯಾಕೋ ಸಿಟ್ಟು : ಕರೆಕ್ಟಾಗಿ ಆಫೀಸ್ ಬಿಡೋ ಟೈಂಗೆ ಹಾಜರು!
Bangalore Rain : ಸದಾ ಉಲ್ಲಸಿತ ವಾತಾವರಣಕ್ಕೆ ಹೆಸರುವಾಸಿಯಾಗಿರುವ ಬೆಂಗಳೂರಿನಲ್ಲಿ ಸದ್ಯ ಯಾವಾಗ ನೋಡಿದಾಗಲೂ ಮೆಳೆ..ಮಳೆ. ಇತ್ತೀಚಿನ ದಿನಗಳಲ್ಲಿ ಹೇಗೆ ಆಗಿದೆ ಎಂದರೆ, ಮಳೆ ಬಂದರೆ ಸಾಕು, ಬೆಚ್ಚಿಬೀಳುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಅದು, ಕೂಡಾ ಕರೆಕ್ಟಾಗಿ ಸಂಜೆ ಹೊತ್ತಿನಲ್ಲಿ ಶುರುವಾಗುವ ಮಳೆ, ಬೆಂಗಳೂರಿಗರಿಗಂತೂ ನೈಟ್ ಮೇರ್ ರೀತಿಯಾಗಿದೆ.
ಲಿಂಗಾಂಬುದಿ ಕೆರೆ ಪುಷ್ಪಮೇಳದಲ್ಲಿ ಗಮನ ಸೆಳೆಯಲಿದೆ ಬೇಡರ ಕಣ್ಣಪ್ಪನ ಕಲಾಕೃತಿ
ಮೈಸೂರು ದಸರಾ ಮಹೋತ್ಸವದ ಅಂಗವಾಗಿ ಲಿಂಗಾಂಬುಧಿ ಕೆರೆ ಬೊಟಾನಿಕಲ್ ಗಾರ್ಡನ್ನಲ್ಲಿ ಪುಷ್ಪ ಮೇಳ ನಡೆಯಲಿದ್ದು, ಈ ಬಾರಿ ಶಿವ ಭಕ್ತ ಬೇಡರ ಕಣ್ಣಪ್ಪನ ಪರಿಕಲ್ಪನೆಯ ಕಲಾಕೃತಿಗಳು ಪ್ರಮುಖ ಆಕರ್ಷಣೆಯಾಗಲಿವೆ. 15 ಎಕರೆ ಪ್ರದೇಶದಲ್ಲಿ 40 ಸಾವಿರಕ್ಕೂ ಹೆಚ್ಚು ಹೂವಿನ ಗಿಡಗಳು, ಮಿನಿ ತೋಟಗಳು, ಸಸ್ಯ ಸುರಂಗಗಳು ಪ್ರವಾಸಿಗರನ್ನು ರಂಜಿಸಲಿವೆ.
1.4 ಕೋಟಿ ರೂ. ಸಾಲ ವಂಚಿಸಲು ಸಾವಿನ ನಾಟಕವಾಡಿದ ಬಿಜೆಪಿ ಮುಖಂಡನ ಪುತ್ರ; ಆರೋಪಿಯ ಬಂಧನ
ಭೋಪಾಲ್: ಮಧ್ಯಪ್ರದೇಶದ ರಾಜಗಢ ಜಿಲ್ಲೆಯ ಬಿಜೆಪಿ ಮುಖಂಡ ಮಹೇಶ್ ಸೋನಿ ಅವರ ಪುತ್ರ ವಿಶಾಲ ಸೋನಿ ಎಂಬಾತ ಬ್ಯಾಂಕಿನಿಂದ ಪಡೆದ ಸಾಲವನ್ನು ವಂಚಿಸುವ ಸಲುವಾಗಿ ನಕಲಿ ದಾಖಲೆ ಸೃಷ್ಟಿಸಿ ತಾನು ಮೃತಪಟ್ಟಿದ್ದಾಗಿ ಬಿಂಬಿಸಿದ ಪ್ರಕರಣ ಬೆಳಕಿಗೆ ಬಂದಿದೆ. ಮಹಾರಾಷ್ಟ್ರದಲ್ಲಿ ಅಡಗಿಕೊಂಡಿದ್ದ ಆರೋಪಿ ಕಾಳಿಸಿಂಧ್ ನದಿಯ ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗಿರುವುದಾಗಿ ವದಂತಿ ಹಬ್ಬಿಸಿದ್ದ. ಈ ಹಿನ್ನೆಲೆಯಲ್ಲಿ ಪೊಲೀಸರು, ಜಿಲ್ಲಾಡಳಿತ, ರಾಜ್ಯ ವಿಪತ್ತು ಸ್ಪಂದನೆ ಪಡೆ 10 ದಿನಗಳ ಕಾಲ ನದಿಯ 20 ಕಿಲೋಮೀಟರ್ ಉದ್ದಕ್ಕೂ ಶೋಧ ಕಾರ್ಯಾಚರಣೆ ನಡೆಸಿತ್ತು. ಸೆಪ್ಟೆಂಬರ್ 5ರಂದು ಕಾಳಿಸಿಂಧ್ ನದಿಯಲ್ಲಿ ಕಾರು ಮುಳುಗಿದೆ ಎಂಬ ಮಾಹಿತಿ ಪೊಲೀಸರಿಗೆ ಲಭ್ಯವಾದ ಹಿನ್ನೆಲೆಯಲ್ಲಿ ಈ ನಾಟಕೀಯ ಪ್ರಹಸನ ಆರಂಭವಾಗಿತ್ತು. ಮುಳುಗುತಜ್ಞರು ಕಾರನ್ನು ಪತ್ತೆ ಮಾಡಿದ್ದರು. ಆದರೆ ಕಾರು ಖಾಲಿ ಇದ್ದು, ಇದರಲ್ಲಿ ಇದ್ದ ಎನ್ನಲಾದ ವಿಶಾಲ್ ಸೋನಿಯ ಪತ್ತೆಗೆ ದೊಡ್ಡ ಪ್ರಮಾಣದ ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆ ಆರಂಭವಾಯಿತು. ವಿಶಾಲ್ ತಂದೆ ಮಾಡಿದ ನಿರ್ಲಕ್ಷ್ಯ ಆರೋಪದ ಹಿನ್ನೆಲೆಯಲ್ಲಿ ಸುಮಾರು ಎರಡು ವಾರಗಳ ಕಾಲ ಮೂರು ಪ್ರತ್ಯೇಕ ತಂಡಗಳು 20 ಕಿಲೋಮೀಟರ್ ಉದ್ದಕ್ಕೂ ಶೋಧ ಕಾರ್ಯಾಚರಣೆ ನಡೆಸಿದವು. ಎಂಟು ದಿನಗಳ ಕಾಲ ವಿಶಾಲ್ ಇರುವಿಕೆ ಬಗ್ಗೆ ಯಾವುದೇ ಸುಳಿವು ಸಿಗದಿದ್ದಾಗ ಸಂಶಯ ಮತ್ತಷ್ಟು ದಟ್ಟವಾಯಿತು. ಪೊಲೀಸ್ ಠಾಣಾಧಿಕಾರಿ ಆಕಾಂಕ್ಷ ಹಾಡಾ ಅವರು ವಿಶಾಲ್ ನ ಮೊಬೈಲ್ ಕರೆ ಮಾಹಿತಿ ಕಲೆ ಹಾಕಿದಾಗ ಆತ ಮಹಾರಾಷ್ಟ್ರದಲ್ಲಿ ಇರುವುದು ದೃಢಪಟ್ಟಿತು. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಮಹಾರಾಷ್ಟ್ರ ಪೊಲೀಸರ ಸಹಾಯದಿಂದ ಮಹಾರಾಷ್ಟ್ರದ ಸಂಭಾಜಿನಗರ ಜಿಲ್ಲೆಯ ಫರ್ದಾಪುರ ಠಾಣೆ ವ್ಯಾಪ್ತಿಯಲ್ಲಿ ವಿಶಾಲ್ ನನ್ನು ಬಂಧಿಸಿದರು. ತಾನು ಆರು ಟ್ರಕ್ ಹಾಗೂ ಎರಡು ಪ್ರಯಾಣಿಕ ವಾಹನಗಳನ್ನು ಹೊಂದಿದ್ದು, 1.40 ಕೋಟಿ ರೂಪಾಯಿ ಸಾಲ ಹೊಂದಿರುವುದಾಗಿ ವಿಚಾರಣೆ ವೇಳೆ ಆತ ಒಪ್ಪಿಕೊಂಡಿದ್ದಾನೆ.ನಾನು ಮರಣ ಪ್ರಮಾಣಪತ್ರ ಪಡೆದರೆ ಈ ಸಾಲ ಮನ್ನಾ ಆಗುತ್ತದೆ ಎಂದು ಹೇಳಿದ ಹಿನ್ನೆಲೆಯಲ್ಲಿ ಈ ನಾಟಕವಾಡಿದ್ದೆ ಎಂದು ತಪ್ಪೊಪ್ಪಿಕೊಂಡಿದ್ದಾನೆ. ಸೆಪ್ಟೆಂಬರ್ 5ರಂದು ಟ್ರಕ್ ಚಾಲಕನಿಂದ ಗೋಪಾಲಪುರ ಬಳಿ ಹಣ ಪಡೆದು ನದಿ ದಂಡೆಗೆ ಕಾರಿನಲ್ಲಿ ಪ್ರಯಾಣಿಸಿ ಕಾರಿನ ದೀಪಗಳನ್ನು ಆರಿಸಿ ವಾಹನವನ್ನು ನದಿಗೆ ತಳ್ಳಿ ಚಾಲಕನ ಬೈಕ್ ನಲ್ಲಿ ಪರಾರಿಯಾಗಿದ್ದ. ಪತ್ರಿಕೆಗಳಲ್ಲಿ ತನ್ನ ಸಾವಿನ ಸುದ್ದಿಯನ್ನು ಓದಿ, ಶಿರಡಿ ಹಾಗೂ ಶನಿಸಿಂಗಾನಪುರಕ್ಕೆ ಪ್ರಯಾಣ ಬೆಳೆಸಿದ್ದ. ಪೊಲೀಸರು ತನ್ನ ಜಾಡು ಹಿಡಿದದ್ದು ಗೊತ್ತಾದಾಗ ಬಟ್ಟೆ ಹರಿದುಕೊಂಡು ಅಪಹರಣದ ನಾಟಕವಾಡಿದ್ದುಕೂಡಾ ವಿಚಾರಣೆ ವೇಳೆ ದೃಢಪಟ್ಟಿದೆ.
ನೇಪಾಳ ಜೊತೆ ಗಟ್ಟಿಯಾಗುತ್ತಿದೆ ಭಾರತದ ಬಾಂಧವ್ಯ, ಜಾಗತಿಕ ಮಟ್ಟದಲ್ಲಿ ಚರ್ಚೆ...
ಭಾರತ ಏಷ್ಯಾದ ಅತಿದೊಡ್ಡ ರಾಷ್ಟ್ರವಾಗಿದ್ದರೂ ಅಕ್ಕಪಕ್ಕದ ದೇಶಗಳು ಒಂದೊಂದಾಗಿ ಬೇರೆ ಬೇರೆ ಹಾದಿ ಹಿಡಿದಿದ್ದವು. ಅದರಲ್ಲೂ ಭಾರತದ ಜೊತೆಗೆ ಗಟ್ಟಿಯಾದ ಬಾಂಧವ್ಯ ಹೊಂದಿದ್ದ ನೇಪಾಳದ ಪರಿಸ್ಥಿತಿ ಕೂಡ ಬದಲಾಗಿ ಹೋಗಿತ್ತು ಎನ್ನುವಾಗಲೇ ಅಲ್ಲೋಲ ಕಲ್ಲೋಲ ಉಂಟಾಗಿತ್ತು. ನೇಪಾಳ ದೇಶದಲ್ಲಿ ಹೊಸ ತಲೆಮಾರಿನ ಯುವಕರು ದೊಡ್ಡ ಹೋರಾಟ ಶುರು ಮಾಡಿದ್ದರು. ಮತ್ತೊಂದು ಕಡೆ ಈ ಹೋರಾಟ ದೊಡ್ಡದಾಗಿ ಕೊನೆಗೆ
ಅಮೆರಿಕದಲ್ಲಿ ಭಾರತೀಯ ಟೆಕ್ಕಿ ಎನ್ಕೌಂಟರ್; ಸಾಂತಾ ಕ್ಲಾರಾದ ಆ ರೂಮ್ನಲ್ಲಿ ಆ ರಾತ್ರಿ ನಡಿದಿದ್ದಾರೂ ಏನು?
ಕಳೆದ ಸೆ.3ರಂದು ಅಮೆರಿಕದ ಕ್ಯಾಲಿಫೋರ್ನಿಯದ ಸಾಂತಾ ಕ್ಲಾರಾದಲ್ಲಿ, ತೆಲಂಗಾಣ ಮೂಲದ 30 ವರ್ಷದ ಮೊಹಮ್ಮದ್ ನಿಜಾಮುದ್ದೀನ್ ಎಂಬ ಟೆಕ್ಕಿಯನ್ನು ಪೊಲೀಸರು ಗುಂಡಿಟ್ಟು ಹತ್ಯೆ ಮಾಡಿದ್ದರು. ನಿಜಾಮುದ್ದೀನ್ ತನ್ನ ರೂಮ್ಮೇಟ್ ಮೇಲೆ ಚಾಕುವಿನಿಂದ ಹಲ್ಲೆ ಮಾಡುತ್ತಿದ್ದ ವೇಳೆ ಗುಂಡು ಹಾರಿಸಿದ್ದಾಗಿ ಪೊಲೀಸರು ಹೇಳಿದ್ದರು. ಆದರೆ ನಿಜಾಮುದ್ದೀನ್ ಅವರ ಕುಟುಂಬ ಇದರಲ್ಲಿ ಜನಾಂಗೀಯ ನಿಂದನೆ ಅನುಮಾನ ವ್ಯಕ್ತಪಡಿಸಿದ್ದು, ಸೂಕ್ತ ತನಿಖೆಗೆ ಒತ್ತಾಯಿಸಿದೆ. ಸಾಂತಾ ಕ್ಲಾರಾದಲ್ಲಿ ಆ ದಿನ ರಾತ್ರಿ ನಡೆದಿದ್ದೇನು? ಇಲ್ಲಿದೆ ಮಾಹಿತಿ.
ಅನ್ನದಾತರ ದಸರೆಗೆ ಸಿದ್ಧತೆ: ಮೈಸೂರು ಜೆ.ಕೆ.ಮೈದಾನದಲ್ಲಿ ಮೂರು ದಿನ ರೈತರ ಸಂಭ್ರಮ, ಈ ಬಾರಿಯ ವಿಶೇಷತೆ ಏನು ಗೊತ್ತೇ?
ಮೈಸೂರಿನಲ್ಲಿ ರೈತ ದಸರಾಕ್ಕೆ ಸಿದ್ಧತೆ ಜೋರಾಗಿ ನಡೆಯುತ್ತಿದೆ, ಸೆಪ್ಟೆಂಬರ್ 26 ರಿಂದ 28 ರವರೆಗೆ ಜೆ.ಕೆ.ಮೈದಾನದಲ್ಲಿ ಕಾರ್ಯಕ್ರಮ ಸಜ್ಜಾಗಿದೆ. ಕೃಷಿ ಯಾಂತ್ರೀಕರಣ, ವೈಜ್ಞಾನಿಕ ಕೃಷಿ ಪದ್ಧತಿಗಳ ಪರಿಚಯವನ್ನು ರೈತರಿಗೆ ಮಾಡಿಕೊಡಲಾಗುತ್ತದೆ. ಅಲ್ಲದೆ ಸಮಗ್ರ ಕೃಷಿ ಮತ್ತು ಉಪ ಕಸುಬುಗಳಿಗೆ ಉತ್ತೇಜನ ನೀಡಲಾಗುತ್ತದೆ.
ಯಾರೂ ಕಾನೂನಿಗಿಂತ ಮಿಗಿಲಲ್ಲ: ರಾಜಕೀಯ ರ್ಯಾಲಿಗಳಿಗೆ ನಿಯಮಗಳನ್ನು ರೂಪಿಸಲು ಮದ್ರಾಸ್ ಹೈಕೋರ್ಟ್ ಆದೇಶ
ಚೆನ್ನೈ: ಸಾರ್ವಜನಿಕ ರ್ಯಾಲಿ ಹಾಗೂ ಸಭೆಗಳನ್ನು ನಡೆಸಲು ಅನುಮತಿ ಮಂಜೂರು ಮಾಡುವ ಮುನ್ನ ಎಲ್ಲ ರಾಜಕೀಯ ಪಕ್ಷಗಳಿಗ ಅನ್ವಯವಾಗುವಂತೆ ಏಕರೂಪ ನಿಯಮ ರೂಪಿಸುವಂತೆ ಮದ್ರಾಸ್ ಹೈಕೋರ್ಟ್, ತಮಿಳುನಾಡು ಸರ್ಕಾರಕ್ಕೆ ನಿರ್ದೇಶನ ನೀಡಿದೆ. ಜತೆಗೆ ಸಾರ್ವಜನಿಕ ಆಸ್ತಿ ಪಾಸ್ತಿಗಳಿಗೆ ಆಗಬಹುದಾದ ಸಂಭಾವ್ಯ ಹಾನಿಗೆ ಮುಂಚಿತವಾಗಿ ಭದ್ರತಾ ಠೇವಣಿಯನ್ನು ಪಕ್ಷಗಳಿಂದ ಸಂಗ್ರಹಿಸುವಂತೆಯೂ ಸೂಚನೆ ನೀಡಿದೆ. ಚಿತ್ರನಟ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ಈ ಸೂಚನೆ ನೀಡಿದೆ. ರಾಜಕೀಯ ರ್ಯಾಲಿಗಳಿಗೆ ಅನುಮತಿ ನೀಡುವ ವೇಳೆ ಇತರ ಯಾವುದೇ ಪಕ್ಷಗಳಿಗೆ ಅನ್ವಯವಾಗದ ಅತ್ಯಂತ ಕಠಿಣ ಹಾಗೂ ಈಡೇರಿಸಲು ಸಾಧ್ಯವಾಗದಂಥ ಷರತ್ತುಗಳನ್ನು ಪೊಲೀಸರು ವಿಧಿಸಿದ್ದಾರೆ ಎಂದು ವಿಜಯ್ ಆಪಾದಿಸಿದ್ದರು. ಟಿವಿಕೆ ಪರ ಹಾಜರಾದ ಹಿರಿಯ ವಕೀಲ ವಿ.ರಾಘವಾಚಾರಿ, ರ್ಯಾಲಿಯ ಬಳಿಕ ಜನರು ಹಾಗೂ ಕಾರ್ಯಕರ್ತರು ಹೇಗೆ ಎಲ್ಲಿ ಹೋಗಬೇಕು, ಭಾಗವಹಿಸಬಹುದಾದ ವಾಹನಗಳ ಸಂಖ್ಯೆ ಸೇರಿದಂತೆ ಅಧಿಕಾರಿಗಳು ತರ್ಕಬದ್ಧವಲ್ಲದ ನಿರ್ಬಂಧಗಳನ್ನು ವಿಧಿಸಿದ್ದಾರೆ. ಗರ್ಭಿಣಿ ಮಹಿಳೆಯರು ಮತ್ತು ಅಂಗವಿಕಲರು ಸಮಾರಂಭದಲ್ಲಿ ಭಾಗವಹಿಸಬಾರದು ಎಂದೂ ಸೂಚಿಸಲಾಗಿದೆ. ನೀವು ಬರಬಾರದು ಎಂದು ಹೇಗೆ ಹೇಳಲು ಸಾಧ್ಯ? ಎಂದು ಪ್ರಶ್ನಿಸಿದರು. ಈ ಆಯ್ದ ಷರತ್ತುಗಳು ತಾರತಮ್ಯಕ್ಕೆ ಎಡೆಮಾಡಿಕೊಡುತ್ತವ ಎಂದು ಆಪಾದಿಸಿದರು. ಈ ವಾದವನ್ನು ಆಲಿಸಿದ ನ್ಯಾಯಮೂರ್ತಿ ಎನ್.ಸತೀಶ್ ಕುಮಾರ್ ಅವರು ಎಲ್ಲ ರಾಜಕೀಯ ಪಕ್ಷಗಳಿಗೆ ಇದನ್ನು ಅನ್ವಯಿಸಲಾಗುತ್ತದೆಯೇ ಎಂದು ಪ್ರಶ್ನಿಸಿದರು. ಯಾರು ಕೂಡಾ ಕಾನೂನಿಗಿಂತ ಮೇಲಲ್ಲ; ಸಾರ್ವಜನಿಕ ಸಭೆ ಸಮಾರಂಭಗಳನ್ನು ಕಾನೂನಿನ ಇತಿಮತಿಯಲ್ಲಿ ಆಯೋಜಿಸಬೇಕು. ಸಂಚಾರ ದಟ್ಟಣೆ ಉಂಟಾದಲ್ಲಿ ಸಾರ್ವಜನಿಕರಿಗೆ ತೊಂದರೆಯಾಗುವುದಿಲ್ಲವೇ? ಎಂದು ನ್ಯಾಯಾಧೀಶರು ಪ್ರಶ್ನಿಸಿದರು.
ಭಾರತವನ್ನು ಹೆದರಿಸುತ್ತೇನೆ ಎಂಬುದು ನಿಮ್ಮ ಭ್ರಮೆ; ಡೊನಾಲ್ಡ್ ಟ್ರಂಪ್ ಅವರನ್ನು ರಷ್ಯನ್ ಮಂತ್ರಿಗಳೂ ಬಿಡ್ತಿಲ್ಲ!
ಭಾರತ ಮತ್ತು ಚೀನಾದಂತಹ ಪ್ರಾಚೀನ ನಾಗರಿಕತೆಗಳಿಗೆ ಈ ಜಗತ್ತಿನ ಯಾವುದೇ ಶಕ್ತಿ ಆದೇಶ ನೀಡಲು ಸಾಧ್ಯವಿಲ್ಲ, ಅವುಗಳೊಂದಿಗೆ ಏನಿದ್ದರೂ ಸೌಹಾರ್ದಯುತ ಸಂಬಂಧ ಬೆಳೆಸುವುದು ಮತ್ತು ಗೌರವಯುತ ಧ್ವನಿಯಲ್ಲಿ ಮಾತನಾಡುವುದೊಂದೇ ಮಾರ್ಗ ಇದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ರಷ್ಯಾ ವಿದೇಶಾಂಗ ಸಚಿವ ಸರ್ಗೆಯ್ಲ ಲಾವ್ರೊವ್ ಅವರು ನೀಡಿರುವ ಸಲಹೆ. ಭಾರತ ಮತ್ತು ಚೀನಾಗೆ ಸುಂಕ ಬೆರಿಕೆ ಹಾಕುತ್ತಿರುವ ಟ್ರಂಪ್ ವಿರುದ್ಧ ಲಾವ್ರೊವ್ ಕಿಡಿಕಾರಿದ್ದಾರೆ. ಇಲ್ಲಿದೆ ನೋಡಿ ಹೆಚ್ಚಿನ ಮಾಹಿತಿ.
Karnataka Rain: ನಿಲ್ಲದ ವರುಣಾರ್ಭಟ, ಇನ್ನೆಷ್ಟು ದಿನ ಎಲ್ಲೆಲ್ಲಿ ಭಾರೀ ಮಳೆ?
ಕರ್ನಾಟಕದ ಒಳನಾಡಿನಲ್ಲಿ ನೈರುತ್ಯ ಮಾನ್ಸೂನ್ ಬಿರುಸುಗೊಂಡಿದ್ದು, ಕರಾವಳಿ ಕರ್ನಾಟಕದಾದ್ಯಂತ ಸಾಮಾನ್ಯವಾಗಿತ್ತು. ಈ ಹಿನ್ನೆಲೆ ಕರಾವಳಿ ಭಾಗದ ಹೆಚ್ಚಿನ ಸ್ಥಳಗಳಲ್ಲಿ ಹಾಗೂ ಒಳನಾಡಿನಲ್ಲಿ ಭಾರೀ ಮಳೆ ದಾಖಲಾಗಿದೆ. ಸೆಪ್ಟೆಂಬರ್ 24ರವರೆಗೆ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಭಾರೀ ಮಳೆಯಾಗಲಿದ್ದು, ಅಲರ್ಟ್ ಕೂಡ ಘೋಷಣೆ ಮಾಡಲಾಗಿದೆ. ಮಾನ್ಸೂನ್ ಮಾರುತಗಳ ಚಲನೆಯ ಬಗ್ಗೆ ವಿವರಿಸಿರುವ ಹವಾಮಾನ ಇಲಾಖೆಯು ಕರ್ನಾಟಕದ ದಕ್ಷಿಣ ಒಳನಾಡಿನಲ್ಲಿ ಸರಾಸರಿ
Explained: ಹೊರಳು ಹಾದಿಯಲ್ಲಿ ಅಮೆರಿಕದ ರಾಜಕಾರಣ; ಬರಾಕ್ ಒಬಾಮ ʻವಿಭಜನೆʼ ಆತಂಕಕ್ಕೆ ಡೊನಾಲ್ಡ್ ಟ್ರಂಪ್ ಕಾರಣ?
ಅಮೆರಿಕದಲ್ಲಿ ಆಲ್ ಓಕೆ ಅಂತಾ ತಿಳಿದಿರುವವರಿಗೆ ಬಹುಶಃ ಅಲ್ಲಿನ ರಾಜಕಾರಣದ ಬಗ್ಗೆ ಹೆಚ್ಚಿನ ಮಾಹಿತಿ ಇರುವುದಿಲ್ಲ. ಅಮೆರಿಕದ ರಾಜಕಾರಣ ಜಗತ್ತಿನ ಅನ್ಯ ದೇಶಗಳ ರಾಜಕಾರಣಕ್ಕಿಂತ ಭಿನ್ನವಾಗಿಲ್ಲ. ಇದಕ್ಕೆ ಪೂರಕವೆಂಬಂತೆ ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮ ಅವರು ಪ್ರಸ್ತುತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ದೇಶವನ್ನು ವಿಭಜಿಸುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಚಾರ್ಲಿ ಕಿರ್ಕ್ ಹತ್ಯೆ ಬಳಿಕ ಅಮೆರಿಕದ ರಾಜಕಾರಣ ತಿರುವು ಪಡೆದುಕೊಳ್ಳುತ್ತಿದೆ ಎಂದು ಒಬಾಮ ಅಭಿಪ್ರಾಯಪಟ್ಟಿದ್ದಾರೆ. ಇಲ್ಲಿದೆ ಮಾಹಿತಿ.
ದರೋಡೆ ರಿಕವರಿಗೆ ಬ್ಯಾಂಕ್ ಗ್ಯಾರಂಟಿ ! ಚಿನ್ನ, ಹಣ ಇಟ್ಟ ಗ್ರಾಹಕರಿಗೆ ನೋ ವರಿ, ಬಂಗಾರಕ್ಕೆ ತತ್ಸಮಾನ ನಗದು ಸಂದಾಯ
ವಿಜಯಪುರ ಜಿಲ್ಲೆಯಲ್ಲಿ ಇತ್ತೀಚೆಗೆ ಎರಡು ಬ್ಯಾಂಕ್ಗಳಲ್ಲಿ ದರೋಡೆ ನಡೆದಿದ್ದು, ಠೇವಣಿದಾರರು ಆತಂಕಗೊಂಡಿದ್ದಾರೆ. ಆದರೂ, ರಾಷ್ಟ್ರೀಕೃತ ಬ್ಯಾಂಕ್ಗಳು ಗ್ರಾಹಕರ ವಿಶ್ವಾಸ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಕಳ್ಳತನವಾದ ಹಣ ಮತ್ತು ಒಡವೆಗಳನ್ನು ಮರುಪಾವತಿ ಮಾಡುತ್ತವೆ. ಮನಗೂಳಿಯ ಕೆನರಾ ಬ್ಯಾಂಕ್ ದರೋಡೆ ಪ್ರಕರಣದಲ್ಲಿ ಶೇ.90ರಷ್ಟು ಠೇವಣಿದಾರರಿಗೆ ಹಣ ಹಿಂದಿರುಗಿಸಿದ್ದು, ಗ್ರಾಹಕರು ಆತಂಕ ಪಡುವ ಅಗತ್ಯವಿಲ್ಲ ಎಂದು ಲೀಡ್ ಬ್ಯಾಂಕ್ ವ್ಯವಸ್ಥಾಪಕರು ತಿಳಿಸಿದ್ದಾರೆ.
ಕಂಬಳಕ್ಕೆ ರಾಜ್ಯ ಕ್ರೀಡೆ ಸ್ಥಾನಮಾನ : ಸರಕಾರದಿಂದ ಶೀಘ್ರ ಅಧಿಕೃತ ಪ್ರಕಟಣೆ, ತಿಂಗಳೊಳಗೆ ಅಸೋಸಿಯೇಷನ್ ಅಸ್ತಿತ್ವಕ್ಕೆ
ರಾಜ್ಯ ಸರ್ಕಾರವು ಕಂಬಳವನ್ನು ರಾಜ್ಯ ಕ್ರೀಡೆಯಾಗಿ ಅಧಿಕೃತವಾಗಿ ಘೋಷಿಸಲು ತ ಇದು ಕಂಬಳ ಕ್ರೀಡೆಗೆ ಒಂದು ಮಹತ್ವದ ಮೈಲಿಗಲ್ಲಾಗಲಿದೆ. ಇದರೊಂದಿಗೆ, ಕಂಬಳ ಅಸೋಸಿಯೇಶನ್ ರಚನೆಯಾಗಿದ್ದು, ಕಂಬಳ ಸಮಿತಿ ಅಧ್ಯಕ್ಷರೇ ಇದರ ಅಧ್ಯಕ್ಷರಾಗಿರುತ್ತಾರೆ. ಈ ಕ್ರಮವು ಕಂಬಳಕ್ಕೆ ಹೆಚ್ಚಿನ ಪ್ರೋತ್ಸಾಹ, ಅನುದಾನ ಮತ್ತು ಸೌಲಭ್ಯಗಳನ್ನು ಒದಗಿಸುವ ಗುರಿಯನ್ನು ಹೊಂದಿದೆ.
ಬಿಜೆಪಿಯವರೇ ಮತಗಳ್ಳತನ ಮಾಡುತ್ತಿದ್ದಾರೆ, ನನ್ನ ಬಳಿ ಅಧಿಕೃತ ದಾಖಲೆಗಳಿವೆ : ಪ್ರಿಯಾಂಕ್ ಖರ್ಗೆ
ಬೆಂಗಳೂರು, ಸೆ.18 : ಕಲಬುರಗಿ ಜಿಲ್ಲೆಯ ಆಳಂದ ವಿಧಾನಸಭಾ ಕ್ಷೇತ್ರದಲ್ಲಿ ಮತಗಳವು ಮಾಡಲಾಗಿದೆ ಎಂದು ಲೋಕಸಭೆಯ ವಿರೋಧ ಪಕ್ಷ ನಾಯಕ ರಾಹುಲ್ ಗಾಂಧಿ ಆರೋಪಕ್ಕೆ ರಾಜ್ಯ ಸರಕಾರದ ಅನೇಕ ಸಚಿವರು ಧ್ವನಿಗೂಡಿಸಿದ್ದು, ಚುನಾವಣಾ ಆಯೋಗ ಹಾಗೂ ಕೇಂದ್ರ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಗುರುವಾರ ಈ ಕುರಿತು ಪ್ರತಿಕ್ರಿಯಿಸಿದ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ, ‘ಬಿಜೆಪಿಯವರೇ ಮತಗಳ್ಳತನ ಮಾಡುತ್ತಿದ್ದಾರೆ. ನನ್ನ ಬಳಿ ಅಧಿಕೃತ ದಾಖಲೆಗಳಿವೆ. ಸ್ವಲ್ಪ ಸಮಯ ಬಂದಾಗ ಅದನ್ನು ನಿಮ್ಮ ಮುಂದಿಡುತ್ತೇವೆ. ಇದೇನಾದರೂ ಹೊರಗಡೆ ಬಂದರೆ ಸರಕಾರಗಳೇ ಬಿದ್ದು ಹೋಗುತ್ತವೆ’ ಎಂದು ಹೇಳಿದರು. ‘ಆಳಂದ ಮತ ಕ್ಷೇತ್ರದಲ್ಲಿ ಮತಗಳವು ಆರೋಪ ವಿಚಾರವಾಗಿ ಪ್ರತಿಕ್ರಿಯಿಸಿ, 2023ರ ಚುನಾವಣೆಗೂ ಮುನ್ನ 7,250 ಮತದಾರರ ಹೆಸರು ಏಕಾಏಕಿ ಮತದಾರರಿಗೆ ಗೊತ್ತಿಲ್ಲದೆ ತೆಗೆದು ಹಾಕಲಾಗಿತ್ತು. ಅದರ ಬಗ್ಗೆ ಶಾಸಕ ಬಿ.ಆರ್.ಪಾಟೀಲ್ ಮತ್ತು ನಾನು ಚುನಾವಣಾ ಆಯೋಗಕ್ಕೆ ದೂರು ಕೊಟ್ಟಿದ್ದೆವು. ಅದರ ಆಧಾರದ ಮೇಲೆ ಕಲಬುರಗಿಯಲ್ಲಿ ಎಫ್ಐಆರ್ ದಾಖಲಿಸಲಾಯಿತು. ಪರಿಶೀಲನೆ ಮಾಡಿದಾಗ ಮೊಬೈಲ್ ನಂಬರ್ಗಳು ಮಧ್ಯ ಪ್ರದೇಶ, ಬಿಹಾರ, ಗುಜರಾತ್ನಲ್ಲಿ ಪತ್ತೆಯಾಗಿತ್ತು. ಸಿಐಡಿ ತನಿಖಾಧಿಕಾರಿಗಳು ರಾಜ್ಯ ಮುಖ್ಯ ಚುನಾವಣಾಧಿಕಾರಿಗೆ ಪತ್ರ ಬರೆದಿದ್ದರು. ಮೊಬೈಲ್ ನಂಬರ್ ಐಪಿ ವಿಳಾಸ ಎಲ್ಲೆಲ್ಲಿದೆ ಎನ್ನುವ ಮಾಹಿತಿ ಕೇಳಿದ್ದರು. ಆದರೆ, ಚುನಾವಣಾ ಆಯೋಗ ಯಾವುದೇ ಮಾಹಿತಿ ನೀಡಿಲ್ಲ’ ಎಂದು ಅವರು ಆರೋಪಿಸಿದರು.
ಲಂಡನ್: ಲಂಡನ್ನ ವೆಂಬ್ಲಿ ಅರೆನಾದಲ್ಲಿ ನಡೆದ ‘ಟುಗೆದರ್ ಫಾರ್ ಫೆಲೆಸ್ತೀನ್’ ನಿಧಿ ಸಂಗ್ರಹಣಾ ಕಾರ್ಯಕ್ರಮದಲ್ಲಿ ಖ್ಯಾತ ಪತ್ರಕರ್ತ ಹಾಗೂ ಝೆಟೆಯೊ ಸಂಸ್ಥಾಪಕ ಮೆಹದಿ ಹಸನ್ ಅವರ ಮನಮಿಡಿಯುವ ಭಾಷಣ ಪ್ರೇಕ್ಷಕರನ್ನು ನಿಶ್ಶಬ್ದಗೊಳಿಸಿತು. ಸುಮಾರು 13,000 ಜನರ ಸಮೂಹದ ಮುಂದೆ ಮಾತನಾಡಿದ ಅವರು, ಫೆಲೆಸ್ತೀನಿನ ಪತ್ರಕರ್ತರ ವಿರುದ್ಧ ನಡೆಯುತ್ತಿರುವ ಹತ್ಯಾಕಾಂಡ ಹಾಗೂ ಪಾಶ್ಚಾತ್ಯ ಮಾಧ್ಯಮಗಳ ನಿರ್ಲಕ್ಷ್ಯವನ್ನು ಕಟುವಾಗಿ ಟೀಕಿಸಿದರು. ಈ ಕಾರ್ಯಕ್ರಮದಲ್ಲಿ ಹಾಲಿವುಡ್ ನಟರಾದ ಬೆನೆಡಿಕ್ಟ್ ಕಂಬರ್ ಬ್ಯಾಚ್, ರಿಜ್ ಅಹ್ಮದ್, ಗೈ ಪಿಯರ್ಸ್ ಮೊದಲಾದವರು ಪಾಲ್ಗೊಂಡಿದ್ದರು. ಜೊತೆಗೆ ಅಂತರರಾಷ್ಟ್ರೀಯ ಖ್ಯಾತಿಯ ಗಾಯಕರಾದ ಎಲಿಯಾನಾ, ಬಾಸ್ಟಿಲ್ ಹಾಗೂ ಸೇಂಟ್ ಲೆವಂಟ್ ವೇದಿಕೆ ಹಂಚಿಕೊಂಡರು. ಸಾವಿರಾರು ಜನರ ಚಪ್ಪಾಳೆ ಹಾಗೂ ಘೋಷಣೆಗಳ ನಡುವೆ, ಮೆಹದಿ ವೇದಿಕೆಗೆ ಬಂದು ಮಾತನಾಡಿದ ಕ್ಷಣವೇ ಸಭಾಂಗಣದಲ್ಲಿ ಗಂಭೀರ ಮೌನ ಆವರಿಸಿತು. “ನಮಗೆ ಸುಳ್ಳು ಹೇಳಲಾಗಿದೆ, ದಾರಿ ತಪ್ಪಿಸಲಾಗಿದೆ. ಫೆಲೆಸ್ತೀನಿನ ಪತ್ರಕರ್ತರ ಸಾವಿನ ಬಗ್ಗೆ ಮೌನವಾಗಿರುವ ಪಾಶ್ಚಾತ್ಯ ಮಾಧ್ಯಮಗಳಿಗೆ ನಾಚಿಕೆಯಾಗಬೇಕು. ತಮ್ಮದೇ ಸಹೋದ್ಯೋಗಿಗಳ ಸಾಮೂಹಿಕ ಹತ್ಯೆಯ ಕುರಿತಾಗಿ ಒಂದು ಮಾತನ್ನೂ ಆಡದ ಮಾಧ್ಯಮ ಸಂಸ್ಥೆಗಳು ಪತ್ರಿಕೋದ್ಯಮದ ನೈತಿಕತೆಯನ್ನೇ ಮರೆತಿವೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು. ಅಕ್ಟೋಬರ್ 7, 2023 ರಿಂದ ಇಸ್ರೇಲ್ ಗಾಝಾದಲ್ಲಿ 270 ಕ್ಕೂ ಹೆಚ್ಚು ಪತ್ರಕರ್ತರನ್ನು ಹತ್ಯೆ ಮಾಡಿದೆ. ಕೇವಲ 25 ಮೈಲು ಉದ್ದ ಮತ್ತು 6 ಮೈಲು ಅಗಲದ ಈ ಪ್ರದೇಶವು ಈಗ ವಿಶ್ವದ ಪತ್ರಕರ್ತರಿಗೆ ಅತ್ಯಂತ ಅಪಾಯಕಾರಿ ಸ್ಥಳವಾಗಿದೆ. “ಒಬ್ಬ ಪಾಶ್ಚಾತ್ಯ ಪತ್ರಕರ್ತನಾಗಿ ನಾನು ಹೇಳಬಲ್ಲೆ ಅವರು ಕೇವಲ ಯುದ್ಧ ಅಥವಾ ನರಮೇಧವನ್ನು ಮಾತ್ರ ವರದಿ ಮಾಡುವುದಿಲ್ಲ. ತಮ್ಮದೇ ನಾಶ, ತಮ್ಮದೇ ಹಸಿವು, ತಮ್ಮದೇ ಮರಣವನ್ನು ನೈಜ ಸಮಯದಲ್ಲಿ ದಾಖಲಿಸುತ್ತಿದ್ದಾರೆ,” ಎಂದು ಮೆಹದಿ ಭಾವನಾತ್ಮಕವಾಗಿ ಹೇಳಿದರು. ಗಾಝಾದ ಮೇಲೆ ಇಸ್ರೇಲ್ ನಡೆಸಿದ ಬಾಂಬ್ ದಾಳಿಗಳು ಈಗ ಎರಡನೇ ವರ್ಷಕ್ಕೆ ಮುಂದುವರಿಯುತ್ತಿವೆ. ತಜ್ಞರ ಅಂದಾಜಿನ ಪ್ರಕಾರ, ಆಕ್ರಮಿತ ಪ್ರದೇಶದ ಮೇಲೆ ಈಗಾಗಲೇ ಆರು ಪರಮಾಣು ಬಾಂಬ್ಗಳ ಶಕ್ತಿಗೆ ಸಮಾನವಾದ ದಾಳಿ ನಡೆದಿದೆ ಎಂದು ಅವರು ಹೇಳಿದರು.
Asia Cup 2025- ಅಫ್ಘಾನಿಸ್ತಾನದ ಸೂಪರ್ 4 ಆಸೆಗೆ ತಣ್ಣೀರೆರಚಿದ ಕುಸಾಲ್ ಮೆಂಡಿಸ್; ಬಾಂಗ್ಲಾದೇಶಕ್ಕೆ ಲಕ್!
ಮೊಹಮ್ಮದ್ ನಬಿ ಅವರ ಆಲ್ರೌಂಡ್ ಆಟದ ಹೊರತಾಗಿಯೂ ಶ್ರೀಲಂಕಾ ವಿರುದ್ಧ 6 ವಿಕೆಟ್ ಗಳ ಪರಾಭವ ಅನುಭವಿಸಿದ ಅಫ್ಘಾನಿಸ್ತಾನ ತಂಡ ಟೂರ್ನಿಯಿಂದ ಹೊರಬಿದ್ದಿದೆ. ಶ್ರೀಲಂಕಾ ತಂಡದ ಗೆಲುವಿನಿಂದಾಗಿ ಬಾಂಗ್ಲಾದೇಶ ತಂಡ ಸಹ ಇದೀಗ ಸೂಪರ್ 4 ಹಂತಕ್ಕೆ ತೇರ್ಗಡೆಗೊಂಡಿದೆ. ಹೀಗಾಗಿ ಏಷ್ಯಾಕಪ್ ನ ಸೂಪರ್ 4 ಹಂತದ 4 ತಂಡಗಳು ಇದೀಗ ಅಂತಿಮಗೊಂಡಿದೆ. ಎ ಬಣದಿಂದ ಭಾರತ ಮತ್ತು ಗಳು ಪ್ರವೇಶಿಸಿದ್ದರೆ, ಬಿ ಬಣದಿಂದ ಶ್ರೀಲಂಕಾ ಮತ್ತು ಬಾಂಗ್ಲೇದೇಶ ತಂಡಗಳು ಪ್ರವೇಶಿಸಿವೆ.ಅಬುಧಾಬಿಯಲ್ಲಿ ದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಅಫ್ಘಾನಿಸ್ತಾನ ತಂಡ ನಿಗದಿತ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 169 ರನ್ ಕಲೆ ಹಾಕಿತು. ಇದನ್ನು ಇನ್ನೂ 9 ಎಸೆತಗಳು ಬಾಕಿ ಉಳಿದಿರುವಂತೆ ಶ್ರೀಲಂಕಾ ತಂಡ ಗುರಿ ತಲುಪಿ ಜಯ ಗಳಿಸಿತು. ಆರಂಭಿಕನಾಗಿ ಕ್ರೀಸಿಗೆ ಆಗಮಿಸಿ ತಂಡವನ್ನು ವಿಜಯದ ದಡ ಸೇರಿಸಿದ ಕುಸಾಲ್ ಮೆಂಡಿಸ್ ಅವರು ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಶ್ರೀಲಂಕಾ ತಂಡ ಆರಂಭದಲ್ಲಿ ವೇಗವಾಗಿ ರನ್ ಗಳಿಸಿದರೂ 6ನೇ ಓವರ್ ನಲ್ಲಿ 47 ರನ್ ಗೆ 2 ವಿಕೆಟ್ ಗಳು ಬಿದ್ದಾಗ ಶ್ರೀಲಂಕಾ ರನ್ ಗಳಿಕೆಯ ವೇಗಕ್ಕೆ ಕಡಿವಾಣ ಬಿತ್ತು. ಈ ಹಂತದಲ್ಲಿ ಕುಸಾಲ್ ಪಿರೇರಾ(20 ಎಸೆತದಲ್ಲಿ 28) ಅವರ ಜೊತೆ ಸೇರಿದ ಆರಂಭಿಕ ಕುಸಾಲ್ ಮೆಂಡಿಸ್ ಮೂರನೇ ವಿಕೆಟ್ ಗೆ 45 ರನ್ ಗಳ ಜೊತೆಯಾಟವಾಡಿದರು. ಬಳಿಕ ನಾಯಕ ಚರಿತ ಅಸಲಂಕಾ(12 ಎಸತೆದಿಂದ 17) ಸಹ ವೇಗವಾಗಿ ರನ್ ಗಳಿಸುವ ಮೂಲಕ ಕುಸಾಲ್ ಮೆಂಡಿಸ್ ಗೆ ಸಾಥ್ ನೀಡಿದರು. ತಂಡದ ಮೊತ್ತ 15ನೇ ಓವರ್ ನಲ್ಲಿ 119 ಆಗಿರುವಾಗ ಚರಿತ ಅಸಲಂಕಾ ಅವರು ರಶೀದ್ ಖಾನ್ ಅವರು ಹಿಡಿದ ಅದ್ಭುತ ಕ್ಯಾಚ್ ಗೆ ಬಲಿಯಾದರು. ಇಲ್ಲಿಂದ ಬಳಿಕ ಬಾಕಿ ಉಳಿದ ಕೆಲಸವನ್ನು ಕುಸಾಲ್ ಮೆಂಡಿಸ್(51 ಎಸೆತದಲ್ಲಿ 70) ಮತ್ತು ಕಮಿಂಡು ಮೆಂಡಿಸ್(13 ಎಸೆತದಲ್ಲಿ 26) ಅವರೇ ಮುಗಿಸಿದರು. ಏಷ್ಯಾ ಕಪ್ ಟೂರ್ನಿಯಲ್ಲಿ ಅಚ್ಚರಿಯ ಫಲಿತಾಂಶ ನೀಡಬಲ್ಲರು ಎಂದೇ ಕ್ರಿಕಟ್ ಪಂಡಿತರು ಭವಿಷ್ಯ ನುಡಿದಿದ್ದರು. ಆದರೆ ರಶೀದ್ ಖಾನ್ ಬಳಗ ಗುಂಪು ಹಂತದಲ್ಲೇ ತನ್ನ ಅಭಿಯಾನ ಮುಗಿಸಿದೆ. ಅಫ್ಘಾನಿಸ್ತಾನ ಉತ್ತಮ ಆರಂಭ ಇದಕ್ಕೂ ಮೊದಲು ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಅಫ್ಗಾನಿಸ್ತಾನ ಉತ್ತಮ ಆರಂಭ ಪಡೆಯಿತು. ರಹ್ಮಾತುಲ್ಲಾ ಗುರ್ಬಾಝ್(8 ಎಸೆತದಲ್ಲಿ 14) ಮತ್ತು ಸೆದಿಕುಲ್ಲಾ ಅಟಲ್ (14 ಎಸೆತದಲ್ಲಿ 18) ಆಕ್ರಮಣಾರಿ ಆಟಕ್ಕೆ ಮುಂದಾಗಿದ್ದರಿಂದ ಮೊದಲ 2 ಓವರ್ ಗಳಲ್ಲೇ ಅಫ್ಘಾನಿಸ್ತಾನ ತಂಡ 26 ರನ್ ಪೇರಿಸಿತು. ಇವರಿಬ್ಬರೊಂದಿಗೆ ವನ್ ಡೌನ್ ಆಗಿ ಕ್ರೀಸಿಗಿಳಿದ ಕರೀಮ್ ಜನತ್ ಅವರು(1) ಅವರ ವಿಕೆಟ್ ಅನ್ನೂ ಎಗರಿಸಿದರು.40 ರನ್ ಗೆ 3 ವಿಕೆಟ್ ಉರುಳಿದ್ದರಿಂದ ಇಬ್ರಾಹಿಂ ಜರ್ದಾನ್ (27 ಎಸೆತದಲ್ಲಿ 24) ಜಾಗರೂಕತೆಯಿಂದ ಆಡಿದರು. ಮಧ್ಯಮ ಕ್ರಮಾಂಕದಲ್ಲಿ ಡಾರ್ವಿಶ್ ರಸೂಲಿ(16 ಎಸೆತದಲ್ಲಿ 9), ಅಝ್ಮತುಲ್ಲಾ ಒಮರಾಝೈ(4 ಎಸೆತದಲ್ಲಿ 6) ಅವರನ್ನು ಔಟ್ ಮಾಡಿದ ಚಾಮಿರ ಮತ್ತು ಶನುಕಾ ಅಫ್ಧಾನಿಸ್ತಾನದ ಮೇಲೆ ಒತ್ತಡ ಹೇರುವಲ್ಲಿ ಯಶಸ್ವಿಯಾದರು. 12ನೇ ಓವರ್ ನಲ್ಲಿ ಝದ್ರಾನ್ ಅವರ ವಿಕೆಟ್ ಸಹ ಪತನಗೊಂಡಿತು. 114ರ ರನ್ ಆಗುವಷ್ಟರಲ್ಲಿ ಉತ್ತಮವಾಗಿ ಆಡುತ್ತಿದ್ದ ನಾಯಕ ರಶೀದ್ ಖಾನ್(23 ಎಸೆತದಲ್ಲಿ 24 ರನ್) ಅವರ ವಿಕೆಟ್ ಈ ಹಂತದಲ್ಲಿ ಅಫ್ಘಾನಿಸ್ತಾನ ಹೆಚ್ಚೆಂದರೆ 135ರಿುಂದ 140 ರನ್ ಗಳಿಸುವ ಸಾಧ್ಯತೆ ಇತ್ತು ಕೊನೇ ಓವರ್ ನಲ್ಲಿ ನಬಿ 5 ಸಿಕ್ಸರ್! ಆದರೆ ಅಂತಿಮ ಹಂತದಲ್ಲಿ ಮೊಹಮ್ಮದ್ ನಬಿ ಅವರು ಬಹಳ ಆಕ್ರಮಣಕಾರಿಯಾಗಿ ಆಡಿದರು. ಕೇವಲ 22 ಎಸೆತಗಳಲ್ಲಿ 60 ರನ್ ಗಳಿಸಿದರು. ಅದರಲ್ಲಿ 3 ಬೌಂಡರಿ ಮತ್ತು 6 ಭರ್ಜರಿ ಸಿಕ್ಸರ್ ಗಳಿದ್ದವು. ಧುನಿತ್ ವೆಲ್ಲಲಗೆ ಅವರು ಎಸೆದ ಕೊನೆಯ ಓವರ್ ನಲ್ಲಿ ಅವರು ನಿರಂತರ 5 ಸಿಕ್ಸರ್ ಸೇರಿದಂತೆ ಒಟ್ಟು 32 ರನ್ ಗಳನ್ನು ಬಾಚಿದರು. ಕೇವಲ 20 ಎಸೆತಗಳಲ್ಲಿ 50 ರನ್ ಬಾರಿಸಿದ ಅವರು ಅಫ್ಘಾನಿಸ್ತಾನದ ಪರ ಅತಿ ವೇಗದ ಅರ್ಧಶತಕ ಬಾರಿಸಿದ ಗೌರವಕ್ಕೆ ಪಾತ್ರರಾದರು. ಶ್ರೀಲಂಕಾ ಪರ ವೇಗಿ ನುವಾನ್ ತುಷಾರ ಅವರು 18 ರನ್ ಗೆ 4 ವಿಕೆಟ್ ಎಗರಿಸಿದರು. ಸಂಕ್ಷಿಪ್ತ ಸ್ಕೋರ್ ಅಫ್ಘಾನಿಸ್ತಾನ 20 ಓವರ್ ಗಳಲ್ಲಿ 169/8, ಮೊಹಮ್ಮದ್ ನಬಿ 60(22), ರಶೀದ್ ಖಾನ್ 24(23), ಇಬ್ರಾಹಿಂ ಝದ್ಾನ್ 24(27), ನುವಾನ್ ತುಷಾರಾ 18ಕ್ಕೆ 4, ದಸುನ್ ಶನಕ 29ಕ್ಕೆ 1 ಶ್ರೀಲಂಕಾ 18.4 ಓವರ್ ಗಳಲ್ಲಿ 171/4, ಕುಸಾಲ್ ಮೆಂಡಿಸ್ ಅಜೇಯ 74(52), ಕುಸಾಲ್ ಪಿರೇರಾ 28(20), ಕಮಿಂದು ಮೆಂಡಿಸ್ ಅಜೇಯ 26(13), ಒಮರಾಝೈ 10ಕ್ಕೆ 1, ನಬಿ 20ಕ್ಕೆ 1
ದಸರಾ ಚಲನಚಿತ್ರೋತ್ಸವ; ಕಿರುಚಿತ್ರಗಳಿಗೆ ಪ್ರಶಸ್ತಿ ಪ್ರದಾನ
ಮೈಸೂರು, ಸೆ.18: ಮೈಸೂರು ದಸರಾ ಮಹೋತ್ಸವ-2025ರ ಹಿನ್ನೆಲೆ ನಗರದ ಮಾಲ್ ಆಫ್ ಮೈಸೂರಿನ ಐನಾಕ್ಸ್ ಮಲ್ಟಿಫ್ಲೆಕ್ಸ್ ಚಿತ್ರಮಂದಿರದಲ್ಲಿ ದಸರಾ ಚಲನಚಿತ್ರೋತ್ಸವದಲ್ಲಿ ಪ್ರದರ್ಶನ ಕಂಡ ಕಿರುಚಿತ್ರಗಳಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಸುತನ್ ನಿರ್ದೇಶನದ ‘ಲಕುಮಿ’ ಕಿರುಚಿತ್ರಕ್ಕೆ ಪ್ರಥಮ ಬಹುಮಾನ ಹಾಗೂ 20 ಸಾವಿರ ರೂ. ಗೌರವಧನ, ಮಣಿಕಂಠ ನಿರ್ದೇಶನದ ‘ಹಿಂಬಾಲಿಸು’ ಚಿತ್ರಕ್ಕೆ 2ನೇ ಬಹುಮಾನ ಹಾಗೂ 15 ಸಾವಿರ ರೂ. ಗೌರವಧನ ಮತ್ತು ಶಶಿಕುಮಾರ್ ಡಿ.ಎಸ್.ನಿರ್ದೇಶನದ ಹಬ್ಬದ ‘ಹಸಿವು’ ಚಿತ್ರಕ್ಕೆ 3ನೇ ಬಹುಮಾನ ಹಾಗೂ 10 ಸಾವಿರ ರೂ. ಗೌರವಧನ ನೀಡಲಾಯಿತು. ಅತ್ಯುತ್ತಮ ಛಾಯಾಗ್ರಹಣ ವಿಭಾಗದಲ್ಲಿ ಲಕುಮಿ ಹಾಗೂ ಅತ್ಯುತ್ತಮ ಸಂಕಲನಗಾರ ವಿಭಾಗದಲ್ಲಿ ಹಿಂಬಾಲಿಸು ಕಿರುಚಿತ್ರಕ್ಕೆ ಪ್ರಶಸ್ತಿ ದೊರೆಯಿತು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕಿರುತೆರೆ ನಟಿ ದೀಪಾ ರವಿಶಂಕರ್, ಕಿರುತೆರೆ ನಟ ಅಶ್ವಿನ್ ಕುಮಾರ್ ಹಾಗೂ ಹಿರಿಯ ಛಾಯಾಗ್ರಾಹಕ ಅಶ್ವತ್ನಾರಾಯಣರನ್ನು ಸನ್ಮಾನಿಸಲಾಯಿತು. ಚಲನಚಿತ್ರ ಉಪ ಸಮಿತಿ ಉಪಾಧ್ಯಕ್ಷ ಸಿದ್ಧರಾಜು, ಉಪ ವಿಭಾಗಾಧಿಕಾರಿ ವಿಜಯ್ ಕುಮಾರ್, ತೀರ್ಪುಗಾರರಾದ ಕಾವಾ ಕಾಲೇಜಿನ ಪ್ರಾಧ್ಯಾಪಕಿ ಚರಿತಾ, ಇ.ಎಂ.ಎಂ.ಆರ್.ಸಿ ತಂತ್ರಜ್ಞರಾದ ಗೋಪಿನಾಥ್, ಉಪ ಸಮಿತಿ ಉಪಾಧ್ಯಕ್ಷರು, ಸದಸ್ಯರು ಉಪಸ್ಥಿತರಿದ್ದರು.
ಹುಣಸೂರು | ಕಾರಾಗೃಹದಲ್ಲಿ ದಲಿತ ವ್ಯಕ್ತಿಯ ಸಾವು; ನಿಷ್ಪಕ್ಷ ತನಿಖೆಗೆ ದಸಂಸ ಆಗ್ರಹ
ಹುಣಸೂರು, ಸೆ.18: ಮೈಸೂರಿನ ಕೇಂದ್ರ ಕಾರಾಗೃಹದಲ್ಲಿ ಸಾವನಪ್ಪಿದ ದಲಿತ ವ್ಯಕ್ತಿ ಮಹದೇವನ ಸಾವಿನ ಪ್ರಕರಣವನ್ನು ಪೊಲೀಸ್ ಅಧಿಕಾರಿಗಳು ಹಾಗೂ ರಾಜ್ಯ ಮಾನವ ಹಕ್ಕುಗಳ ಆಯೋಗ ನಿಷ್ಪಕ್ಷವಾಗಿ ತನಿಖೆ ಮಾಡಬೇಕು ಎಂದು ದಸಂಸ ಜಿಲ್ಲಾ ಸಂಚಾಲಕ ನಿಂಗರಾಜ್ ಮಲ್ಲಾಡಿ ಮನವಿ ಮಾಡಿದ್ದಾರೆ. ಮೈಸೂರಿನ ಕೆ.ಆರ್. ಆಸ್ಪತ್ರೆಯ ಶವಾಗಾರದಲ್ಲಿದ್ದ ಮಹದೇವನ ಮೃತದೇಹವನ್ನು ವೀಕ್ಷಣೆ ಮಾಡಿದ ಬಳಿಕ ಮಾತನಾಡಿದ ಅವರು, 10 ತಿಂಗಳ ಹಿಂದೆ ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣವೊಂದರಲ್ಲಿ ಮೈಸೂರಿನ ಕೇಂದ್ರ ಕಾರಾಗೃಹದಲ್ಲಿ ವಿಚಾರಣಾ ಕೈದಿಯಾಗಿದ್ದ ತಾಲೂಕಿನ ಕಸಬಾ ಹೋಬಳಿ, ಬಲ್ಲೇನಹಳ್ಳಿ ಗ್ರಾಮದ ಪರಿಶಿಷ್ಟ ಮಾದಿಗ ಜಾತಿಗೆ ಸೇರಿದ ಲೇಟ್ ಶಿವಣ್ಣ ಎಂಬವರ ಪುತ್ರ ಮಹದೇವ (37) ಎಂಬವರು ಸೆ.16ರಂದು ಸಂಜೆ 5:30ರ ಸಮಯದಲ್ಲಿ ಮೈಸೂರಿನ ಕೇಂದ್ರ ಕಾರಾಗೃಹದಲ್ಲಿ ಸಾವನ್ನಪ್ಪಿದ್ದು, ಈತನ ಸಾವು ಅನುಮಾನಾಸ್ಪದವಾಗಿದೆ ಎಂದು ಈ ಬಗ್ಗೆ ಸೂಕ್ತ ಕ್ರಮಕ್ಕೆ ಮೈಸೂರು ಜಿಲ್ಲಾ ದಸಂಸ ಸರಕಾರವನ್ನು ಆಗ್ರಹಿಸುತ್ತದೆ ಎಂದು ಅವರು ತಿಳಿಸಿದರು. ಈ ಬಗ್ಗೆ ಮೈಸೂರಿನ ಮಂಡಿ ಮೊಹಲ್ಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತ ಮಹದೇವನಿಗೆ ಪತ್ನಿ, ಇಬ್ಬರು ಮಕ್ಕಳಿದ್ದು, ಸಂಕಷ್ಟದಲ್ಲಿರುವ ಇವರ ಕುಟುಂಬಕ್ಕೆ ಸರಕಾರದ ವತಿಯಿಂದ ಪರಿಹಾರ ಕಲ್ಪಿಸಿಕೊಟ್ಟು ಈ ನೊಂದ ದಲಿತ ಕುಟುಂಬಕ್ಕೆ ನೆರವಾಗಬೇಕು ಎಂದು ಮನವಿ ಮಾಡಿದರು. ಈ ಸಂದರ್ಭದಲ್ಲಿ ದಸಂಸದ ಜಿಲ್ಲಾ ಸಂಘಟನಾ ಸಂಚಾಲಕ ಬಸವನಗುಡಿ ನಂಜಪ್ಪ, ಬಲ್ಲೇನಹಳ್ಳಿ ಗ್ರಾಮ ಪಂಚಾಯತ್ ಸದಸ್ಯೆ ನಿಂಗಮ್ಮ, ಗ್ರಾಮದ ಪರಮೇಶ್, ವಿಜಿ, ಮೈಲಾರಿ, ಅಭಿಷೇಕ್, ಪಾಪಣ್ಣ, ಮೃತನ ಪತ್ನಿ ಗಿರಿಜಾ, ಮಗ ಅಭಿಷೇಕ್ ಮುಂತಾದವರು ಹಾಜರಿದ್ದರು.
ಡಿಜಿಪಿಯಾಗಿ ನೇಮಕಗೊಂಡಿದ್ದ ಉಮೇಶ್ ಕುಮಾರ್, ಅರುಣ್ ಚಕ್ರವರ್ತಿ ಭಡ್ತಿಗೆ ತಡೆ
ಬೆಂಗಳೂರು, ಸೆ.18: ಐಪಿಎಸ್ ಅಧಿಕಾರಿಗಳಾದ ಉಮೇಶ್ ಕುಮಾರ್ ಹಾಗೂ ಅರುಣ್ ಚಕ್ರವರ್ತಿ ಅವರನ್ನು ಡಿಜಿಪಿಯಾಗಿ ಭಡ್ತಿ ನೀಡಿ ಸರಕಾರ ಹೊರಡಿಸಿದ್ದ ಆದೇಶಕ್ಕೆ ಕೇಂದ್ರ ಆಡಳಿತಾತ್ಮಕ ನ್ಯಾಯ ಮಂಡಳಿ(ಸಿಎಟಿ) ತಡೆ ನೀಡಿರುವುದಾಗಿ ವರದಿಯಾಗಿದೆ. ಡಿಜಿಪಿ ಹುದ್ದೆಯ ಆಕಾಂಕ್ಷಿಯಾಗಿದ್ದ ಅಲೋಕ್ ಕುಮಾರ್, ತನಗೆ ಸೇವಾ ಹಿರಿತನವಿದ್ದರೂ ಸರಕಾರ ತನ್ನನ್ನು ಪರಿಗಣಿಸದೇ ತನಗಿಂತ ಕಿರಿಯ ಅಧಿಕಾರಿಗಳಾದ ಉಮೇಶ್ ಕುಮಾರ್ ಹಾಗೂ ಅರುಣ್ ಚಕ್ರವರ್ತಿ ಅವರಿಗೆ ನೀಡಿದ್ದ ಭಡ್ತಿಯನ್ನು ಪ್ರಶ್ನಿಸಿ ಸಿಎಟಿ ಮೊರೆ ಹೋಗಿದ್ದರು. ಅಲೋಕ್ ಕುಮಾರ್ ಅವರ ಅರ್ಜಿಗೆ ಸಂಬಂಧಿಸಿದಂತೆ ಸಿಎಟಿಯ ಇಬ್ಬರು ನ್ಯಾಯಮೂರ್ತಿಗಳು ಭಿನ್ನ ರೀತಿಯ ತೀರ್ಪುಗಳನ್ನು ನೀಡಿದ್ದು, ಮೂರನೇ ನ್ಯಾಯಮೂರ್ತಿ ಇಲಾಖೆ ವಿಚಾರಣೆ ಬಗ್ಗೆ ತೀರ್ಮಾನಿಸಬೇಕಿದೆ ಎಂದು ತಿಳಿದುಬಂದಿದೆ. ಇದರ ನಡುವೆ ಡಿಜಿಪಿಯಾಗಿ ನೇಮಕಗೊಂಡಿದ್ದ ಉಮೇಶ್ ಕುಮಾರ್ ಹಾಗೂ ಅರುಣ್ ಚಕ್ರವರ್ತಿ ಅವರ ಭಡ್ತಿಗೆ ಸಿಎಟಿ ತಡೆಯಾಜ್ಞೆ ನೀಡಿ ಆದೇಶ ಹೊರಡಿಸಿದೆ ಎಂದು ಮೂಲಗಳು ತಿಳಿಸಿವೆ. ಅಲೋಕ್ ಕುಮಾರ್ ಅವರ ವಿರುದ್ಧ ಇಲಾಖಾ ವಿಚಾರಣೆ ಬಾಕಿಯಿರುವ ಹಿನ್ನೆಲೆಯಲ್ಲಿ ಇದನ್ನು ಮುಂದಿಟ್ಟು ರಾಜ್ಯ ಸರಕಾರ ಅವರಿಗೆ ಮುಂಭಡ್ತಿ ನೀಡಿರಲಿಲ್ಲ ಎನ್ನಲಾಗಿದೆ.
ಕಲಬುರಗಿ: ಕಲ್ಯಾಣ ಕರ್ನಾಟಕ ಉತ್ಸವದಲ್ಲಿ ಭಾಗವಹಿಸಲು ಆಗಮಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ರಾಜ್ಯ ಕಬ್ಬು ಬೆಳೆಗಾರರ ಸಂಘ ಮತ್ತು ಅಫಜಲಪುರ ತಾಲೂಕು ಕಬ್ಬು ಬೆಳೆಗಾರರ ಸಂಘದ ಪದಾಧಿಕಾರಿಗಳು ಭೇಟಿಯಾಗಿ ಕಬ್ಬು ಬೆಳೆಗಾರರ ಸಮಸ್ಯೆಗಳ ಕುರಿತು ಮನವಿ ಪತ್ರ ಸಲ್ಲಿಸಿದರು. ರಾಜ್ಯ ಕಬ್ಬು ಬೆಳೆಗಾರರ ಸಂಘದ ಜಿಲ್ಲಾ ಅಧ್ಯಕ್ಷ ರಮೇಶ್ ಹೂಗಾರ್ ಮತ್ತು ಜಿಲ್ಲಾ ಕಾರ್ಯದರ್ಶಿ ಭಾಗಣ್ಣ ಕುಂಬಾರ್ ಮನವಿ ಸಲ್ಲಿಸಿ, 2025-26ನೇ ಸಾಲಿಗೆ ಕೇಂದ್ರ ಸರ್ಕಾರ ನಿಗದಿಪಡಿಸುವ ಎಫ್ಆರ್ಪಿ (FRP) ಬೆಲೆಯ ಹೊರತಾಗಿ, ರಾಜ್ಯ ಸರ್ಕಾರವು ಪ್ರತಿ ಟನ್ ಕಬ್ಬಿಗೆ 1,500 ರೂ. ಬೆಲೆ ನಿಗದಿ ಮಾಡಬೇಕೆಂದು ಒತ್ತಾಯಿಸಿದರು. ಇದೇ ವೇಳೆ, ಅತಿವೃಷ್ಟಿಯಿಂದ ಹಾನಿಗೊಳಗಾದ ಬೆಳೆಗಳಿಗೆ ಪರಿಹಾರವನ್ನು ತ್ವರಿತವಾಗಿ ರೈತರ ಖಾತೆಗೆ ಜಮಾ ಮಾಡಬೇಕು. ನೆರೆಹಾವಳಿಯಿಂದ ಬಾಧಿತರಾದ ರೈತರ ಸಾಲಗಳನ್ನು ಸಂಪೂರ್ಣ ಮನ್ನಾ ಮಾಡಬೇಕು. ಈ ಬಾರಿಯ ಮಳೆಗಾಲ ಮುಗಿದ ತಕ್ಷಣ ಕೆರೆಗಳಿಗೆ ಹೂಳೆತ್ತಿ ನೀರು ತುಂಬಿಸುವ ಕಾರ್ಯ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ. ಈ ಸಂದರ್ಭದಲ್ಲಿ ರೇವಣಸಿದ್ದಯ್ಯ ಮಠ, ಅನಿಲ್ ಪಾಟೀಲ್, ಮಲ್ಲುಗೌಡ ಮಾಲಿ ಪಾಟೀಲ್ ಕಲ್ಲೂರು ಸೇರಿದಂತೆ ಅನೇಕ ಕಬ್ಬು ಬೆಳೆಗಾರರು ಉಪಸ್ಥಿತರಿದ್ದರು.
ವಿವಾದಕ್ಕೆ ಗುರಿಯಾದ ಹೇಳಿಕೆ: ಎಲ್ಲಾ ಧರ್ಮಗಳ ಕುರಿತೂ ಸಮಾನ ಗೌರವ ಇದೆ - ಸಿಜೆಐ ಗವಾಯಿ ಸ್ಪಷ್ಟನೆ
ಭಗವಾನ್ ವಿಷ್ಣು ವಿಗ್ರಹ ಪುನರ್ ಸ್ಥಾಪನೆ ಕುರಿತ ಅರ್ಜಿಯ ವಿಚಾರಣೆಯ ವೇಳೆ ನೀಡಿದ ಹೇಳಿಕೆಗೆ ಟೀಕೆಗಳು ವ್ಯಕ್ತವಾದ ಹಿನ್ನೆಲೆಯಲ್ಲಿ, ಸಿಜೆಐ ಬಿ.ಆರ್. ಗವಾಯಿ ಅವರು ಗುರುವಾರ ಸ್ಪಷ್ಟನೆ ನೀಡಿದ್ದಾರೆ. ತಮ್ಮ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದ್ದು, ಎಲ್ಲಾ ಧರ್ಮಗಳನ್ನು ಗೌರವಿಸುವುದಾಗಿ ಅವರು ಈ ಸಂದರ್ಭದಲ್ಲಿ ತಿಳಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿನ ಟೀಕೆಗಳ ಬಗ್ಗೆ ವಿಷಾದ ವ್ಯಕ್ತಪಡಿಸಿ, ಯಾರನ್ನೂ ನೋಯಿಸುವ ಉದ್ದೇಶವಿರಲಿಲ್ಲ ಎಂದು ಮುಖ್ಯ ನ್ಯಾಯಮೂರ್ತಿಗಳು ಹೇಳಿದ್ದಾರೆ.
ಕರ್ನಾಟಕದ ಜನರಿಗೆ ಸಿಹಿ ಸುದ್ದಿ, ಸೋಮವಾರದಿಂದ ನಂದಿನಿ ಉತ್ಪನ್ನಗಳ ದರ ಕಡಿತ; ಯಾವುದರ ಬೆಲೆ ಎಷ್ಟು ಇಳಿಕೆ?
ಕೇಂದ್ರ ಸರಕಾರವು ಈಗಾಗಲೇ ಹಾಲಿನ ಉತ್ಪನ್ನಗಳ ಮೇಲಿನ ಜಿಎಸ್ಟಿ ದರವನ್ನು ಇಳಿಕೆ ಮಾಡಿದೆ. ಇದರಿಂದ ನಿರೀಕ್ಷೆಯಂತೆ ನಂದಿನಿ ತುಪ್ಪ, ಬೆಣ್ಣೆ, ಚೀಸ್ ಸೇರಿದಂತೆ ಹಲವು ಉತ್ಪನ್ನಗಳ ಬೆಲೆ ಕಡಿಮೆಯಾಗಲಿದೆ. ಸೆಪ್ಟೆಂಬರ್ 22ರಿಂದ ಪರಿಷ್ಕೃತ ದರಗಳು ಜಾರಿಗೆ ಬರಲಿದ್ದು, ಕೆಎಂಎಫ್ ಹಿರಿಯ ಅಧಿಕಾರಿಗಳ ಸಭೆ ನಡೆಸಿ ದರಗಳನ್ನು ಅಂತಿಮಗೊಳಿಸಲಿದ್ದಾರೆ. ಶೀಘ್ರದಲ್ಲೇ ಈ ಬಗ್ಗೆ ಆದೇಶ ಹೊರಡಿಸಲಾಗುವುದು ಎಂದು ಕೆಎಂಎಫ್ ಅಧಿಕಾರಿಗಳು ತಿಳಿಸಿದ್ದಾರೆ.
ಇಂಡಿಯಾ ಒಕ್ಕೂಟದ ʼಮತಗಳ್ಳತನʼ ಆರೋಪಕ್ಕೆ ತಿರುಗೇಟು ನೀಡಿ: ಬಿಹಾರದ ಬಿಜೆಪಿ ಕಾರ್ಯಕರ್ತರಿಗೆ ಅಮಿತ್ ಶಾ ಸೂಚನೆ
ಪಾಟ್ನಾ: ಮತಗಳ್ಳತನದ ಕುರಿತು ಕಟ್ಟುಕತೆಗಳನ್ನು ಹರಡುತ್ತಿರುವ ಇಂಡಿಯಾ ಮೈತ್ರಿಕೂಟದ ಆರೋಪಕ್ಕೆ ತಕ್ಕ ಪ್ರತ್ಯುತ್ತರ ನೀಡಬೇಕು ಹಾಗೂ ವಿರೋಧ ಪಕ್ಷವೇನಾದರೂ ಅಧಿಕಾರಕ್ಕೆ ಬಂದರೆ, ನುಸುಳುವಿಕೆ ಸಮಸ್ಯೆ ಹೆಚ್ಚಾಗಲಿದೆ ಎಂಬ ಬಗ್ಗೆ ಜನರಿಗೆ ಮನವರಿಕೆ ಮಾಡಿಕೊಡಿ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಬಿಹಾರದ ಬಿಜೆಪಿ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ. ಪಾಟ್ನಾದಿಂದ ಸುಮಾರು 50 ಕಿಮೀ ದೂರದಲ್ಲಿ ಹಮ್ಮಿಕೊಳ್ಳ ಲಾಗಿದ್ದ ಬಿಜೆಪಿ ಕಾರ್ಯಕರ್ತರ ಸಮ್ಮೇಳನವನ್ನುದ್ದೇಶಿಸಿ ಮಾತನಾಡಿದ ಅಮಿತ್ ಶಾ, ಕಾಂಗ್ರೆಸ್, ಆರ್ಜೆಡಿ ಹಾಗೂ ಎಡರಂಗ ಮೈತ್ರಿಕೂಟದ ವಿರುದ್ಧ ವಾಗ್ದಾಳಿ ನಡೆಸಿದರು. ಮುಂಬರುವ ಚುನಾವಣೆಯಲ್ಲಿ ಕೇವಲ ಸಾಮಾನ್ಯ ಜಯವಲ್ಲ; ಬದಲಿಗೆ 243 ಸದಸ್ಯ ಬಲದ ಬಿಹಾರ ವಿಧಾನಸಭೆಯಲ್ಲಿ ಮೂರನೆಯ ಎರಡರಷ್ಟು ಬಹುಮತವನ್ನು ಖಾತರಿಪಡಿಸಿ ಎಂದು ಅವರು ಬಿಜೆಪಿ ಕಾರ್ಯಕರ್ತರಿಗೆ ಕರೆ ನೀಡಿದರು. ಕಳೆದ ತಿಂಗಳು ಮುಕ್ತಾಯಗೊಂಡ ರಾಹುಲ್ ಗಾಂಧಿ ನೇತೃತ್ವದ ಮತ ಅಧಿಕಾರ ಯಾತ್ರೆಯ ಕುರಿತು ಪ್ರಸ್ತಾಪಿಸಿದ ಅಮಿತ್ ಶಾ, ಬಾಂಗ್ಲಾದೇಶದಿಂದ ನುಸುಳಿರುವ ಅಕ್ರಮ ವಲಸಿಗರನ್ನು ರಕ್ಷಿಸುವ ಉದ್ದೇಶವನ್ನು ಈ ಯಾತ್ರೆ ಹೊಂದಿತ್ತು ಎಂದು ಆರೋಪಿಸಿದರು. “ನುಸುಳುಕೋರರರಿಗೆ ನಮ್ಮ ದೇಶದಲ್ಲಿ ಮತ ಚಲಾಯಿಸುವ ಅಧಿಕಾರವಿರಬೇಕೆ? ಭಾರತೀಯ ಪ್ರಜೆಯು ಅನುಭವಿಸುವ ಎಲ್ಲ ಸೌಲಭ್ಯಗಳಿಗೆ ಅವರಿಗೂ ಪ್ರವೇಶವಿರಬೇಕೆ?” ಎಂದು ಪ್ರಶ್ನಿಸಿದರು. ಅದಕ್ಕೆ ಪ್ರತಿಯಾಗಿ, “ಇಲ್ಲ” ಎಂದು ಸಭಿಕರು ಉತ್ತರಿಸಿದರು.
ಬೆಂಗಳೂರು: ಆಳಂದ ವಿಧಾನಸಭಾ ಕ್ಷೇತ್ರದಲ್ಲಿ ಮತದಾರರ ಹೆಸರುಗಳನ್ನು ಅಕ್ರಮವಾಗಿ ಅಳಿಸಲಾಗಿದೆ ಎಂಬ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ಆರೋಪಕ್ಕೆ ಪ್ರತಿಕ್ರಿಯಿಸಿರುವ ಕರ್ನಾಟಕದ ಮುಖ್ಯ ಚುನಾವಣಾ ಅಧಿಕಾರಿ (ಸಿಇಒ), ಯಾವುದೇ ಅಕ್ರಮ ನಡೆದಿಲ್ಲ, ತಪ್ಪಾದ ಅರ್ಜಿಗಳನ್ನು ತಿರಸ್ಕರಿಸಲಾಗಿದೆ ಎಂದು ತಿಳಿಸಿದ್ದಾರೆ. 2023ರಲ್ಲಿ ಸಂಬಂಧಪಟ್ಟ ಪ್ರಕರಣದಲ್ಲಿ ಎಫ್ಐಆರ್ ಕೂಡ ದಾಖಲಿಸಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಸಿಇಒ ಕಚೇರಿ ಬಿಡುಗಡೆ ಮಾಡಿದ ವಿವರಗಳ ಪ್ರಕಾರ, ಆಳಂದ ಕ್ಷೇತ್ರದ ಚುನಾವಣಾ ನೋಂದಣಿ ಅಧಿಕಾರಿ (ಇಆರ್ಒ) ಡಿಸೆಂಬರ್ 2022ರಲ್ಲಿ ಒಟ್ಟು 6,018 ಫಾರ್ಮ್–7 ಅರ್ಜಿಗಳನ್ನು ಸ್ವೀಕರಿಸಿದ್ದರು. ಇವುಗಳನ್ನು ಎನ್ವಿಎಸ್ಪಿ (NVSP), ವಿಎಚ್ಎ (VHA) ಮತ್ತು ಗರುಡಾ (Garuda) ಸೇರಿದಂತೆ ವಿವಿಧ ಆನ್ಲೈನ್ ವೇದಿಕೆಗಳ ಮೂಲಕ ಸಲ್ಲಿಸಲಾಗಿತ್ತು. ಏಕಕಾಲದಲ್ಲಿ ಇಷ್ಟು ಹೆಚ್ಚಿನ ಸಂಖ್ಯೆಯ ಅರ್ಜಿಗಳು ಬಂದ ಹಿನ್ನೆಲೆ, ಅವುಗಳ ಪ್ರಾಮಾಣಿಕತೆ ಕುರಿತು ಅನುಮಾನ ವ್ಯಕ್ತವಾಗಿದ್ದು, ಪ್ರತಿ ಅರ್ಜಿಯನ್ನೂ ಸೂಕ್ಷ್ಮವಾಗಿ ಪರಿಶೀಲಿಸಲಾಯಿತು ಎಂದು ಅವರು ಹೇಳಿದ್ದಾರೆ. ಪರಿಶೀಲನೆಯ ಬಳಿಕ, ಕೇವಲ 24 ಅರ್ಜಿಗಳು ಮಾತ್ರ ನಿಜವಾದ ಅರ್ಜಿಗಳು ಎಂಬುದು ದೃಢಪಟ್ಟಿದೆ. ಉಳಿದ 5,994 ಅರ್ಜಿಗಳು ತಪ್ಪಾದವು, ಅಸಂಬದ್ಧ ಅಥವಾ ದುರುದ್ದೇಶಿತ ಅರ್ಜಿಗಳು ಎಂದು ಪತ್ತೆಯಾಗಿದೆ. ಆದ್ದರಿಂದ 24 ಅರ್ಜಿಗಳ ಆಧಾರದ ಮೇಲೆ ಮಾತ್ರ ಮತದಾರರ ಹೆಸರುಗಳನ್ನು ಅಳಿಸಲಾಗಿದ್ದು, ಉಳಿದ ಎಲ್ಲ ಅರ್ಜಿಗಳನ್ನು ತಿರಸ್ಕರಿಸಲಾಗಿದೆ. ತಪ್ಪಾದ ಅರ್ಜಿಗಳ ಆಧಾರದ ಮೇಲೆ ಯಾವುದೇ ಹೆಸರುಗಳನ್ನು ಅಳಿಸಲಾಗಿಲ್ಲ ಎಂದು ಹೇಳಿಕೆಯಲ್ಲಿ ಅವರು ಸ್ಪಷ್ಟಪಡಿಸಿದ್ದಾರೆ. ಇದಲ್ಲದೆ, ಫೆಬ್ರವರಿ 2023ರಲ್ಲಿ ವಿಚಾರಣೆ ಫಲಿತಾಂಶಗಳ ಆಧಾರದ ಮೇಲೆ ಆಳಂದ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದ್ದು, ಬಳಿಕ 2023ರ ಸೆಪ್ಟೆಂಬರ್ 6ರಂದು ಲಭ್ಯವಿರುವ ಎಲ್ಲಾ ಮಾಹಿತಿಗಳನ್ನು ಕಲಬುರಗಿ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿಗೆ ಹಸ್ತಾಂತರಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಬೆಂಗಳೂರಿನ ಜೆಸಿ ರಸ್ತೆ ವೈಟ್ಟಾಪಿಂಗ್ ಕಾಮಗಾರಿಗೆ ಡೆಡ್ಲೈನ್; ಅ.31ರೊಳಗೆ ಪೂರ್ಣಗೊಳಿಸುವ ಭರವಸೆ
ಕಳೆದ ಏಳು ತಿಂಗಳಿನ ಹಿಂದೆಯಿಂದ ಶುರು ಮಾಡಲಾಗಿದ್ದ ವೈಟ್ಟಾಪಿಂಗ್ ಕಾಮಗಾರಿ ಜೆಸಿ ರಸ್ತೆಯಲ್ಲಿ ಅಕ್ಟೋಬರ್ ಅಂತ್ಯಕ್ಕೆ ಪೂರ್ಣಗೊಳಿಸಲಾಗುವುದು ಎಂದು ತಾಂತ್ರಿಕ ನಿರ್ದೇಶಕ ಡಾ. ಬಿ.ಎಸ್.ಪ್ರಹ್ಲಾದ್ ಅವರು ಸ್ಪಷ್ಟನೆ ಕೊಟ್ಟಿದ್ದಾರೆ. ರಸ್ತೆಯ ಎರಡು ಭಾಗದಲ್ಲಿ ರಸ್ತೆ ಅಗೆದಿರುವ ಕಾರಣ ವ್ಯಾಪಾರ ಆಗುತ್ತಿಲ್ಲ. ನಿತ್ಯವೂ ರಸ್ತೆ ಧೂಳಾಗಿರುತ್ತದೆ. ಮಳೆ ಸುರಿದರೆ ಕೆಸರುಮಯವಾಗಿರುತ್ತದೆ ಎಂದು ಸ್ಥಳೀಯರು ಆರೋಪಿಸಿದ್ದರು. ವಾಹನ ಸವಾರರು ದಟ್ಟಣೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು. ಸದ್ಯ ಶೀಘ್ರವೇ ಬಳಕೆ ಸಿಗುತ್ತಿರುವುದರಿಂದ ಸವಾರರು ನಿರಾಳರಾಗಿದ್ದಾರೆ.
ದಲಿತ ಮಹಿಳೆಯರ ಬಗ್ಗೆ ಅವಹೇಳನ | ಶಾಸಕ ಸ್ಥಾನದಿಂದ ಯತ್ನಾಳ್ ವಜಾಕ್ಕೆ ಆಗ್ರಹ
ಬೆಂಗಳೂರು, ಸೆ.18: ದಲಿತ ಮಹಿಳೆಯರ ಬಗ್ಗೆ ಅವಹೇಳನ ಮಾಡಿ, ಅಸ್ಪೃಶ್ಯತೆ ಆಚರಿಸಿರುವ ಬಿಜೆಪಿಯ ಉಚ್ಛಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳರನ್ನು ಕೂಡಲೆ ಶಾಸಕ ಸ್ಥಾನದಿಂದ ವಜಾಗೊಳಿಸಿ, ಕಠಿಣ ಕಾನೂನು ಶಿಕ್ಷೆಗೆ ಗುರಿಪಡಿಸಬೇಕು ಎಂದು ಸಿಪಿಐಎಂಎಲ್ (ಲಿಬರೇಷನ್) ಆಗ್ರಹಿಸಿದೆ. ಗುರುವಾರ ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಪಕ್ಷದ ಜಿಲ್ಲಾ ಕಾರ್ಯದರ್ಶಿ ಮೈತ್ರೇಯಿ ಕೃಷ್ಣನ್, ‘ಚಾಮುಂಡೇಶ್ವರಿಗೆ ಹೂವು ಹಾಕಲು ಸನಾತನಿಗಳೇ ಆಗಬೇಕು, ಸಾಮಾನ್ಯ ದಲಿತ ಮಹಿಳೆಗೂ ಅವಕಾಶ ಇಲ್ಲ’ ಎಂದು ಸಾರ್ವಜನಿಕವಾಗಿ ಅಸ್ಪೃಶ್ಯತೆ ಆಚರಣೆ ಮಾಡಿದ್ದಲ್ಲದೇ, ಮಾಧ್ಯಮದಲ್ಲಿ ಅಸ್ಪೃಶ್ಯತೆ ಆಚರಣೆಗೆ ಕರೆ ನೀಡಿ, ದಲಿತ ಸಮುದಾಯವನ್ನು ಅವಮಾನಿಸಿ, ಜಾತಿ ನಿಂದನೆ ಮಾಡಿದ್ದಾರೆ. ಚುನಾಯಿತ ಪ್ರತಿನಿಧಿಯಾಗಿದ್ದುಕೊಂಡು ನಾಚಿಕೆಗೇಡಿತನದಿಂದ ವರ್ತಿಸಿರುವುದು ಖಂಡನಾರ್ಹವಾಗಿದ್ದು, ಶಿಕ್ಷಾರ್ಹ ಅಪರಾಧ ಎಂದು ಹೇಳಿದ್ದಾರೆ. ಜಾತಿಗಳ ನಡುವೆ, ಧರ್ಮಗಳ ನಡುವೆ ದ್ವೇಷ ಹರಡಿಸುವುದನ್ನೇ ಕೆಲಸವನ್ನಾಗಿಸಿಕೊಂಡಿರುವ ಯತ್ನಾಳ್, ಎರಡು ಮೂರು ತಿಂಗಳಲ್ಲಿ ಹತ್ತಾರು ಕಡೆ ದ್ವೇಷ ಭಾಷಣ ಮಾಡಿ ಸಮಾಜದಲ್ಲಿ ಶಾಂತಿ-ಸುವ್ಯವಸ್ಥೆ ಕದಡಿಸಿದ್ದಲ್ಲದೇ, ಅಶಾಂತಿಗೆ ಕಾರಣನಾಗಿದ್ದಾನೆ. ಇಷ್ಟಾದರೂ ಈತನ ಮೇಲೆ ಯಾವುದೇ ಕಾನೂನು ಕ್ರಮ ಆಗದೇ ಇರುವುದು ಸರಕಾರ, ಅಧಿಕಾರಿಗಳ ಹಾಗೂ ನ್ಯಾಯಾಂಗ ವ್ಯವಸ್ಥೆಯ ಮೇಲೆ ಅನುಮಾನ ಮೂಡಿದೆ. ದ್ವೇಷ ಭಾಷಣ ಮಾಡಿದಾಗ ನ್ಯಾಯಾಂಗವು ಕಠಿಣ ಕ್ರಮ ಜರುಗಿಸದಿರುವುದರಿಂದಲೇ, ಈತ ದ್ವೇಷ ಭಾಷಣವನ್ನು ರಾಜಾರೋಷವಾಗಿ ಮುಂದುವರಿಸಿರುವುದು ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ. ಮನುವಾದಿ ಯತ್ನಾಳ ಕಾನೂನು ಬಾಹಿರವಾಗಿ ಮನಬಂದಂತೆ ಮಾತನಾಡಿರುವುದು ಪ್ರಜಾಪ್ರಭುತ್ವದ ಅಣಕವಾಗಿದೆ. ಸಂವಿಧಾನದಲ್ಲಿ ರಾಜ್ಯವು ಯಾವುದೇ ನಾಗರಿಕನ ವಿರುದ್ಧ ಧರ್ಮ, ಮೂಲವಂಶ, ಜಾತಿ, ಲಿಂಗ, ಜನ್ಮಸ್ಥಳದ ಅಥವಾ ಅವುಗಳಲ್ಲಿ ಯಾವುದೇ ಒಂದರ ಆಧಾರದ ಮೇಲೆ ತಾರತಮ್ಯವನ್ನು ಮಾಡತಕ್ಕದ್ದಲ್ಲ ಎಂದು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ಸಂವಿಧಾನದ ಅಡಿಯಲ್ಲಿ ಆಯ್ಕೆಯಾಗಿ ಮತ್ತು ಅದರಡಿಯಲ್ಲಿ ರಚನೆಯಾಗಿರುವ ಕಾನೂನನ್ನೇ ಉಲ್ಲಂಘಿಸಿರುವ ಇವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರುಗಿಸಬೇಕು ಎಂದು ಮೈತ್ರೇಯಿ ಆಗ್ರಹಿಸಿದ್ದಾರೆ.
ಸತ್ಯವೊಂದೇ ಗೆಲ್ಲುತ್ತದೆ: ಹಿಂಡೆನ್ಬರ್ಗ್ ಆರೋಪಗಳಿಗೆ ಸೆಬಿ ಕ್ಲೀನ್ ಚಿಟ್ ಬೆನ್ನಲ್ಲೇ ಗೌತಮ್ ಅದಾನಿ ಪ್ರತಿಕ್ರಿಯೆ
ಹೊಸದಿಲ್ಲಿ: ಅಮೆರಿಕದ ಹೂಡಿಕೆ ಸಂಸ್ಥೆ ಹಿಂಡೆನ್ಬರ್ಗ್ ರೀಸರ್ಚ್ ಮಾಡಿದ್ದ ಆರೋಪಗಳಿಗೆ ಸಂಬಂಧಿಸಿದಂತೆ ಸೆಬಿ ಕ್ಲೀನ್ ಚಿಟ್ ನೀಡಿರುವುದನ್ನು ಸ್ವಾಗತಿಸಿರುವ ಅದಾನಿ ಗ್ರೂಪ್ ಅಧ್ಯಕ್ಷ ಗೌತಮ್ ಅದಾನಿಯವರು, ‘ಸತ್ಯವೊಂದೇ ಗೆಲ್ಲುತ್ತದೆ. ಆರಂಭದಿಂದಲೂ ಆರೋಪಗಳಿಗೆ ಯಾವುದೇ ಆಧಾರವಿಲ್ಲ ಎಂದು ನಾವು ಯಾವತ್ತೂ ಹೇಳುತ್ತಲೇ ಬಂದಿದ್ದೆವು. ಈಗ ಸೆಬಿ ಆದೇಶವು ಅದನ್ನು ದೃಢಪಡಿಸಿದೆ’ ಎಂದು ಹೇಳಿದ್ದಾರೆ. ಹಿಂಡೆನ್ಬರ್ಗ್ ವರದಿಯಿಂದಾಗಿ ನಷ್ಟವನ್ನು ಅನುಭವಿಸಿದ ಹೂಡಿಕೆದಾರರ ಕುರಿತು ಸಹಾನುಭೂತಿಯನ್ನೂ ಅದಾನಿ ವ್ಯಕ್ತಪಡಿಸಿದ್ದಾರೆ. ‘ವ್ಯಾಪಕ ತನಿಖೆಯ ಬಳಿಕ ಸೆಬಿ ಹಿಂಡೆನ್ಬರ್ಗ್ ಆರೋಪಗಳಲ್ಲಿ ಯಾವುದೇ ಹುರುಳಿಲ್ಲ ಎನ್ನುವುದನ್ನು ಎತ್ತಿ ಹಿಡಿದಿದೆ. ಪಾರದರ್ಶಕತೆ ಮತ್ತು ಪ್ರಾಮಾಣಿಕತೆ ನಮ್ಮ ಉದ್ಯಮ ಸಮೂಹದ ಮೂಲಮಂತ್ರವಾಗಿದೆ. ದುರುದ್ದೇಶಪೂರಿತ ಮತ್ತು ಸುಳ್ಳು ವರದಿಗಳಿಂದ ಹಣವನ್ನು ಕಳೆದುಕೊಂಡವರ ನೋವು ನಮಗೆ ಅರ್ಥವಾಗುತ್ತದೆ. ಇಂತಹ ಸುಳ್ಳು ಕಥೆಗಳನ್ನು ಹರಡಿದವರು ದೇಶದ ಕ್ಷಮೆ ಯಾಚಿಸಬೇಕಿದೆ ’ಎಂದು ಅದಾನಿ ಗುರುವಾರ ಎಕ್ಸ್ ಪೋಸ್ಟ್ನಲ್ಲಿ ಹೇಳಿದ್ದಾರೆ. ಭಾರತದ ಸಂಸ್ಥೆಗಳಿಗೆ,ಭಾರತದ ಜನತೆಗೆ ಮತ್ತು ದೇಶ ನಿರ್ಮಾಣಕ್ಕೆ ನಮ್ಮ ಬದ್ಧತೆಯು ಅಚಲವಾಗಿದೆ. ಸತ್ಯಮೇವ ಜಯತೇ. ಜೈಹಿಂದ್ ’ಎಂದೂ ಅದಾನಿ ಬರೆದಿದ್ದಾರೆ.
ಬೆಂಗಳೂರು, ಸೆ.18: ಬೆಂಗಳೂರು ನಗರದ ಯಶವಂತಪುರ ರೈಲು ನಿಲ್ದಾಣದಲ್ಲಿ ಶೋಧ ಕಾರ್ಯಾಚರಣೆ ನಡೆಸಿ, ಜಿಎಸ್ಟಿ ಕಾಯ್ದೆ ಉಲ್ಲಂಘಿಸಿದ 850ಕ್ಕೂ ಅಧಿಕ ಚೀಲಗಳ ಪಾನ್ ಮಸಾಲಾ ಹಾಗೂ ತಂಬಾಕು ಪದಾರ್ಥಗಳನ್ನು ವಾಣಿಜ್ಯ ತೆರಿಗೆ ಇಲಾಖೆಯ(ದಕ್ಷಿಣ ವಲಯ) ಜಾರಿ ವಿಭಾಗದ ಅಧಿಕಾರಿಗಳು ಗುರುವಾರ ವಶಪಡಿಸಿಕೊಂಡಿದ್ದಾರೆ. ಸೆ.18ರಂದು ವಿಶ್ವಾಸಾರ್ಹ ಮೂಲಗಳಿಂದ ಖಚಿತ ಮಾಹಿತಿಯ ಆಧಾರದಲ್ಲಿ, ವಾಣಿಜ್ಯ ತೆರಿಗೆ ಇಲಾಖೆಯ ಅಧಿಕಾರಿಗಳ ತಂಡವು ತ್ವರಿತವಾಗಿ ಯಶವಂತಪುರ ರೈಲು ನಿಲ್ದಾಣ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆ ನಡೆಸಿ, ಒಟ್ಟು 850ಕ್ಕೂ ಅಧಿಕ ಚೀಲಗಳ ಪಾನ್ ಮಸಾಲಾ ಹಾಗೂ ತಂಬಾಕು ಪದಾರ್ಥಗಳನ್ನು ವಶಪಡಿಸಿಕೊಂಡಿದ್ದು, ಅದರ ಮಾರುಕಟ್ಟೆ ಮೌಲ್ಯ ಸುಮಾರು 1 ಕೋಟಿ ರೂ. ಎಂದು ಅಂದಾಜಿಸಲಾಗಿದೆ. ಕಾರ್ಯಾಚರಣೆ ಸಂದರ್ಭದಲ್ಲಿ ಕಮಲಾ ಪಸಂದ್ ಪಾನ್ ಮಸಾಲಾ, ಹನ್ಸ್ ಚಾಪ್, ಚೈನಿ ಫಿಲ್ಟರ್ ತಂಬಾಕು ಹಾಗೂ ಶಿಖರ್ ಪಾನ್ ಮಸಾಲಾ ಎಂಬ ಪ್ರಸಿದ್ಧ ಬ್ರ್ಯಾಂಡ್ಗಳ ಪಾನ್ ಮಸಾಲಾ ಹಾಗೂ ತಂಬಾಕು ಪದಾರ್ಥಗಳನ್ನು ದಿಲ್ಲಿಯಿಂದ ಬೆಂಗಳೂರಿಗೆ ರೈಲಿನ ಮೂಲಕ ಸಾಗಿಸಲಾಗಿದ್ದು, ಅವುಗಳನ್ನು ಕೆಲವು ಸರಕು ವಾಹನಗಳಲ್ಲಿ ಹಾಗೂ ನಿಲ್ದಾಣದ ಪ್ಲಾಟ್ಫಾರ್ಮ್ನಲ್ಲಿರುವ ಚೀಲಗಳಲ್ಲಿ ಸೂಕ್ತ ದಾಖಲೆಗಳಿಲ್ಲದೇ ಸಂಗ್ರಹಿಸಿಟ್ಟಿರುವುದು ಪತ್ತೆಯಾಗಿದೆ. ವಶಪಡಿಸಿಕೊಂಡ ವಸ್ತುಗಳ ಜಿಎಸ್ಟಿ ನಿಯಮಾವಳಿ ಉಲ್ಲಂಘನೆಯ ಸ್ವರೂಪವನ್ನು ಖಚಿತಪಡಿಸಲು ಪರಿಶೀಲನಾ ಪ್ರಕ್ರಿಯೆ ಮುಂದುವರಿದಿದೆ. ಪ್ರಾಥಮಿಕ ತನಿಖೆಯಲ್ಲಿ, ಈ ವಸ್ತುಗಳನ್ನು ಜಿಎಸ್ಟಿ ನಿಯಮಗಳ ಅನುಸಾರ ಖರೀದಿ ಮಾಡದೇ ಸಾಗಾಟ ಮಾಡಿರುವುದು ಪತ್ತೆಯಾಗಿದ್ದು, ಇದರಿಂದಾಗಿ ಸರಕಾರದ ಬೊಕ್ಕಸಕ್ಕೆ ಗಣನೀಯ ಪ್ರಮಾಣದ ರಾಜಸ್ವ ನಷ್ಟ ಸಂಭವಿಸಿರುವ ಸಾಧ್ಯತೆಗಳಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸೂಕ್ತ ದಾಖಲೆಗಳಿಲ್ಲದೆ ಹಾಗೂ ತೆರಿಗೆ ಇನ್ವಾಯ್ಸ್ಗಳಿಲ್ಲದೆ ಸರಕುಗಳನ್ನು ಸಾಗಿಸುವ ಅನಧಿಕೃತ ಚಟುವಟಿಕೆಗಳನ್ನು ತಡೆಗಟ್ಟುವಲ್ಲಿ ವಾಣಿಜ್ಯ ತೆರಿಗೆ ಇಲಾಖೆ ಸದಾ ಕಟಿಬದ್ದವಾಗಿದೆ. ಇಂತಹ ಕಾರ್ಯಾಚರಣೆಗಳು ಸರಕಾರದ ಆದಾಯವನ್ನು ರಕ್ಷಿಸುವುದರ ಜೊತೆಗೆ ಜಿಎಸ್ಟಿ ಕಾಯ್ದೆಯ ಕಟ್ಟುನಿಟ್ಟಿನ ಅನುಷ್ಠಾ ನಕ್ಕೆ ಇಲಾಖೆ ಕೈಗೊಂಡಿರುವ ನಿರಂತರ ಪ್ರಯತ್ನಗಳ ಭಾಗವಾಗಿದೆ ಎಂದು ಬೆಂಗಳೂರು ದಕ್ಷಿಣ ವಲಯದ ವಾಣಿಜ್ಯ ತೆರಿಗೆಗಳ ಅಪರ ಆಯುಕ್ತರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.