SENSEX
NIFTY
GOLD
USD/INR

Weather

25    C
... ...View News by News Source

ಸುಪ್ರೀಂ ಕೋರ್ಟ್ ಆದೇಶಾನುಸಾರ ಕಾಲಮಿತಿಯೊಳಗೆ ಜಿಬಿಎ ಪಾಲಿಕೆಗಳ ಚುನಾವಣೆ: ಡಿ.ಕೆ. ಶಿವಕುಮಾರ್

''ನೇರ ಹಣಾಹಣಿಗೆ ಬಿಜೆಪಿ- ಜೆಡಿಎಸ್ ಒಂದಾಗಲಿ''

ವಾರ್ತಾ ಭಾರತಿ 13 Jan 2026 1:27 pm

ಅಧಿಕಾರ ಇದ್ದಾಗ ಅಭಿವೃದ್ಧಿ ಮಾಡಲಿಲ್ಲ, ಈಗ ಕಲ್ಯಾಣ ಕರ್ನಾಟಕಕ್ಕೆ ಅನುದಾನ ಬೇಡುವ ನಾಟಕ: ವಿಜಯೇಂದ್ರ

ಬೆಂಗಳೂರು: ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ಹೆಚ್ಚಿನ ಅನುದಾನ ಕೇಳಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್‌ ಖರ್ಗೆ ಅವರ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಟೀಕಿಸಿದ್ದಾರೆ. ಐದಾರು ದಶಕಗಳಿಂದ ಅಧಿಕಾರ ಅನುಭವಿಸಿ, ಒಂಬತ್ತು ಬಾರಿ ಶಾಸಕ, ಸಂಸದ, ಕೇಂದ್ರ ಸಚಿವರು, ರಾಜ್ಯಸಭೆ ವಿಪಕ್ಷ ನಾಯಕರು, ಎಐಸಿಸಿ ಅಧ್ಯಕ್ಷರಾಗಿರುವ ನಂತರವೂ ಕಲ್ಯಾಣ ಕರ್ನಾಟಕದ ಅಭಿವೃದ್ಧಿಗಾಗಿ ಮಲ್ಲಿಕಾರ್ಜುನ್‌ ಖರ್ಗೆ ಅವರು ಈಗ ಅಸಹಾಯಕರಂತೆ

ಒನ್ ಇ೦ಡಿಯ 13 Jan 2026 1:25 pm

ಚಿನ್ನದ ನಾಗಾಲೋಟ ಮುಂದುವರಿಕೆ; ಇಂದಿನ ಚಿನ್ನದ ದರವೆಷ್ಟು?

ಬೆಂಗಳೂರು ಸೇರಿದಂತೆ ಹಲವು ನಗರಗಳಲ್ಲಿ 1.40 ಲಕ್ಷ ಗಡಿ ದಾಟಿದ ಹತ್ತು ಗ್ರಾಂ ಚಿನ್ನದ ದರ! ಚಿನ್ನ ಮತ್ತು ಬೆಳ್ಳಿ ಸಾರ್ವಕಾಲಿಕ ಅತ್ಯಧಿಕ ದರದಲ್ಲಿ ಮುಂದುವರಿಯುತ್ತಿದೆ. ಮಂಗಳವಾರ ಜನವರಿ 13ರಂದು ಮತ್ತೆ ಚಿನ್ನದ ಬೆಲೆ ನಾಗಾಲೋಟದಲ್ಲಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯ ವಹಿವಾಟು, ಡಾಲರ್‌- ರೂಪಾಯಿ ಅಸ್ಥಿರತೆ ಮತ್ತು ಹೂಡಿಕೆದಾರರ ಸುರಕ್ಷಿತ ಹೂಡಿಕೆಯ ಆಸಕ್ತಿ ಕಾರಣದಿಂದ ದೇಶದಲ್ಲಿ ಚಿನ್ನ ಮತ್ತು ಬೆಳ್ಳಿ ದರಗಳಲ್ಲಿ ಏರಿಳಿತ ಮುಂದುವರಿದಿದೆ. ವಿಶ್ಲೇಷಕರ ಪ್ರಕಾರ ಭೌಗೋಳಿಕ-ರಾಜಕೀಯ ಸಂಘರ್ಷಗಳು ಮತ್ತು ಅಮೆರಿಕದ ಫೆಡರಲ್ ರಿಸರ್ವ್ ಬಡ್ಡಿ ದರಗಳನ್ನು ಕಡಿತ ಮಾಡುವ ಒತ್ತಡಕ್ಕೆ ಬೀಳಲಿದೆ ಎನ್ನುವ ನಿರೀಕ್ಷೆಯಿಂದಾಗಿ ಚಿನ್ನದ ದರ ಏರುತ್ತಿದೆ. ದಿಲ್ಲಿಯಲ್ಲಿ ಶುಕ್ರವಾರ 1,41,700 ರೂ. ಇದ್ದ ಹತ್ತು ಗ್ರಾಂ ಚಿನ್ನದ ಬೆಲೆ ಸೋಮವಾರ ರೂ. 2900 ಹೆಚ್ಚಳದೊಂದಿಗೆ 1,44600 ರೂ. ಆಗಿದೆ. ಬೆಂಗಳೂರಿನಲ್ಲೂ 1,40,460 ರೂ. ಇದ್ದ ಚಿನ್ನದ ದರ 1,690 ರೂ. ಹೆಚ್ಚಳದೊಂದಿಗೆ ಸೋಮವಾರ 1,42,150 ರೂ.ಗೆ ತಲುಪಿದೆ. ಮಂಗಳವಾರದ ಬೆಳಗಿನ ವಹಿವಾಟಿನಲ್ಲಿ 24 ಕ್ಯಾರೆಟ್ ಶುದ್ಧ ಚಿನ್ನದ ದರ ಬೆಂಗಳೂರಿನಲ್ಲಿ 1,42,160 ರೂ. ಇದ್ದರೆ, 22 ಕ್ಯಾರೆಟ್ ಆಭರಣ ಚಿನ್ನದ ದರ 1,30,310 ರೂ. ಇದೆ. ಜನವರಿ ಮೊದಲ ದಿನದಿಂದಲೇ ಚಿನ್ನ ಮತ್ತು ಬೆಳ್ಳಿ ದರಗಳಲ್ಲಿ ಏರಿಕೆ ಕಂಡುಬಂದಿತ್ತು. ಮಧ್ಯದಲ್ಲಿ ಒಂದೆರಡು ದಿನ ಅಲ್ಪ ಮಟ್ಟಿಗೆ ಕುಸಿತದ ನಂತರ ಚಿನ್ನ ಮತ್ತು ಬೆಳ್ಳಿ ದರಗಳು ನಾಗಾಲೋಟ ಮುಂದುವರಿಸಿವೆ. ಜನವರಿ 9ರ ನಂತರ ಚಿನ್ನದ ದರಗಳು ಮೇಲ್ಮುಖವಾಗಿಯೇ ಸಾಗುತ್ತಿವೆ. ಮಂಗಳೂರಿನಲ್ಲಿ ಇಂದಿನ ಚಿನ್ನದ ದರವೆಷ್ಟು? ಮಂಗಳವಾರ ಜನವರಿ 13ರಂದು ಬೆಳಗಿನ 11 ಗಂಟೆಯ ವಹಿವಾಟಿನಲ್ಲಿ ಮಂಗಳೂರಿನಲ್ಲಿ ಚಿನ್ನದ ಬೆಲೆ ಮತ್ತೆ ಸ್ವಲ್ಪ ಮಟ್ಟಿಗೆ ಏರಿಕೆ ಕಂಡಿದೆ. ಬೆಳಗಿನ ವಹಿವಾಟಿನಲ್ಲಿ ಒಂದು ಗ್ರಾಂ 24 ಕ್ಯಾರೆಟ್ ಚಿನ್ನದ ದರ 14,253 (+38) ರೂ. ಗೆ ತಲುಪಿದೆ. ಒಂದು ಗ್ರಾಂ 22 ಕ್ಯಾರೆಟ್ ಚಿನ್ನದ ದರ 13,065 (+35) ರೂ. ಮತ್ತು ಒಂದು ಗ್ರಾಂ 18 ಕ್ಯಾರೆಟ್ ಚಿನ್ನದ ದರ 10,690 (+29) ರೂ. ಬೆಲೆಗೆ ತಲುಪಿದೆ. ಭಾರತದ ವಿವಿಧ ನಗರಗಳಲ್ಲಿ ಚಿನ್ನದ ದರ (ಬೆಳಿಗ್ಗೆ) ಹೈದರಾಬಾದ್: 24 ಕ್ಯಾರೆಟ್ ಚಿನ್ನದ ದರ 1,42,160 ರೂ. ಆಗಿದ್ದರೆ, 22 ಕ್ಯಾರೆಟ್ ಚಿನ್ನದ ದರ 1,30,310 ರೂ. ವಿಜಯವಾಡ/ವಿಶಾಖಪಟ್ಟಣ: 24 ಕ್ಯಾರೆಟ್ ಚಿನ್ನದ ದರ 1,42,160 ರೂ. ಆಗಿದ್ದರೆ, 22 ಕ್ಯಾರೆಟ್ ಚಿನ್ನದ ದರ 1,30,310 ರೂ. ಚೆನ್ನೈ: 24 ಕ್ಯಾರೆಟ್ ಚಿನ್ನದ ದರ 1,43,140 ರೂ. ಆಗಿದ್ದರೆ, 22 ಕ್ಯಾರೆಟ್ ಚಿನ್ನದ ದರ 1,31,210 ರೂ. ದಿಲ್ಲಿ: 24 ಕ್ಯಾರೆಟ್ ಚಿನ್ನದ ದರ 1,42,310 ರೂ. ಆಗಿದ್ದರೆ, 22 ಕ್ಯಾರೆಟ್ ಚಿನ್ನದ ದರ 1,30,460 ರೂ. ಬೆಳ್ಳಿದರ ಪ್ರತಿ ಕೆಜಿಗೆ ಬೆಂಗಳೂರು: 2,70,100 ರೂ. ದಿಲ್ಲಿ: 2,70,100 ರೂ. ಹೈದರಾಬಾದ್: 2,87,100 ರೂ. ಚೆನ್ನೈ: 2,87,100 ರೂ.

ವಾರ್ತಾ ಭಾರತಿ 13 Jan 2026 1:19 pm

ಲಕ್ಕುಂಡಿಯಲ್ಲಿ ಮತ್ತೆ ಅಪರೂಪದ ಮುತ್ತು, ಹವಳ, ಸ್ಫಟಿಕ, ನೀಲಮಣಿ ಪತ್ತೆ!

ಗದಗ: ಗದಗ ಜಿಲ್ಲೆಯಲ್ಲಿಯ ಲಕ್ಕುಂಡಿಯಲ್ಲಿ ಈಚೆಗೆ ಮತ್ತೆ ಪುರಾತನ ವಸ್ತುಗಳು ಸಿಕ್ಕಿವೆ. ಐತಿಹಾಸಿಕ ಲಕ್ಕುಂಡಿಗೆ ಇತಿಹಾಸದಲ್ಲಿ ವಿಶೇಷ ಸ್ಥಾನವಿದೆ. ಈಚೆಗೆ ಈ ಭಾಗದಲ್ಲಿ ಮನೆ ನಿರ್ಮಾಣಕ್ಕೆ ಪಾಯ ತೆಗೆಯುವಾಗ 460 ಗ್ರಾಂ ಚಿನ್ನಾಭರಣ ಸಿಕ್ಕಿತ್ತು. ಈ ಚಿನ್ನಾಭರಣದ ವಿಚಾರವು ಚರ್ಚೆ ಆಗುತ್ತಿರುವಾಗಲೇ ಇನ್ನಷ್ಟು ಪುರಾತನ ವಸ್ತುಗಳನ್ನು ಪತ್ತೆಯಾಗಿದ್ದು, ಕುತೂಹಲ ಹೆಚ್ಚಿಸಿದೆ. ಗಂಗವ್ವ ರಿತ್ತಿ ಹಾಗೂ ಅವರ ಕುಟುಂಬವು

ಒನ್ ಇ೦ಡಿಯ 13 Jan 2026 1:16 pm

Explain: ಕಾಡಾನೆ ದಾಳಿಗೆ ಮತ್ತೊಂದು ಬಲಿ, ಯಶಸ್ವಿ ಆಗ್ತಿಲ್ಲ ಅರಣ್ಯ ಇಲಾಖೆಯ ಕ್ರಮ: 5 ವರ್ಷಗಳಲ್ಲಿ ಸತ್ತವರ ಸಂಖ್ಯೆಯೇ ಸಾಕ್ಷಿ

ರಾಜ್ಯದಲ್ಲಿ ವನ್ಯಜೀವಿ ಮತ್ತು ಮಾನವ ಸಂಘರ್ಷಕ್ಕೆ ಕೊನೆ ಬಿದ್ದಿಲ್ಲ. ಕಾಡಾನೆ, ಹುಲಿ ಸೇರಿದಂತೆ ಕಾಡು ಪ್ರಾಣಿಗಳ ದಾಳಿಗೆ ಹಳ್ಳಿಗಾಡಿನ ಜನರು ಬಲಿಯಾಗುತ್ತಿದ್ದಾರೆ. ಅಷ್ಟೇ ಅಲ್ಲದೆ, ಕೃಷಿ ನಾಶವೂ ಆಗುತ್ತಿದೆ. ಹಾಸನ ಜಿಲ್ಲೆಯಲ್ಲಿ ಕಾಡಾನೆ ದಾಳಿಗೆ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ. ರಾಜ್ಯದಲ್ಲಿ ಕಳೆದ ಐದು ವರ್ಷಗಳಲ್ಲಿ ಒಟ್ಟು 289 ಮಂದಿ ಕಾಡು ಪ್ರಾಣಿಗಳ ದಾಳಿಗೆ ಜೀವತೆತ್ತಿದ್ದಾರೆ. ಹಾಗಾದ್ರೆ ಅರಣ್ಯ ಇಲಾಖೆ ಏನು ಕ್ರಮ ಕೈಗೊಳ್ಳುತ್ತಿದೆ? ಸಮಸ್ಯೆ ನಿವಾರಣೆಗೆ ಏನು ಪರಿಹಾರ ? ಈ ಕುರಿತಾದ ವಿವರ ಇಲ್ಲಿದೆ.

ವಿಜಯ ಕರ್ನಾಟಕ 13 Jan 2026 1:13 pm

ಬಿಡಾಡಿ ದನಗಳ ಹಾವಳಿಯಿಂದ ಬೇಸತ್ತ ಕೆಂಭಾವಿ ಜನತೆ

ಯಾದಗಿರಿ/ಕೆಂಭಾವಿ: ಪಟ್ಟಣದಲ್ಲಿ ಬಿಡಾಡಿ ದನಗಳ ಹಾವಳಿ ಹೆಚ್ಚಾಗಿದ್ದು, ಈ ಕುರಿತು ಹಲವು ಬಾರಿ ಪುರಸಭೆ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗುತ್ತಿಲ್ಲ ಎಂದು ಸಾರ್ವಜನಿಕ ವಲಯದಲ್ಲಿ ಅಸಮಾಧಾನ ವ್ಯಕ್ತವಾಗಿದೆ. ದನಗಳು ಹಿಂಡು ಹಿಂಡಾಗಿ ರಸ್ತೆ ಮೇಲೆ ಬೀಡು ಬಿಡುತ್ತಿರುವುದರಿಂದ ವಾಹನ ಸವಾರರಿಗೆ ಕಂಟಕವಾಗಿ ಪರಿಣಮಿಸುತ್ತಿದೆ. ಅದರಲ್ಲೂ ಪಟ್ಟಣದ ಸರಕಾರಿ ಆಸ್ಪತ್ರೆ ಮುಂಭಾಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ದನಗಳು ಜಮಾವಣೆಯಾಗುವುದರಿಂದ ರೋಗಿಗಳನ್ನು ತುರ್ತು ಚಿಕಿತ್ಸೆಗೆಂದು ಕರೆತರುವಾಗ ಇಲ್ಲಿನ ದನಗಳ ಹಿಂಡು ತಡೆಯೊಡ್ಡಿಬಿಡುತ್ತದೆ. ಕೆಲವೊಮ್ಮೆ ವಾಹನಗಳು ರಸ್ತೆಗೆ ಅಡ್ಡಲಾಗಿ ಮಲಗಿದ ದನಗಳ ಕಾಲುಗಳ ಮೇಲೆಯೇ ಹಾಯಿಸಿಕೊಂಡು ಹೋದ ಘಟನೆಗಳೂ ನಡೆದಿವೆ. ದನಕರುಗಳ ಮಾಲಕರು ತಮ್ಮ ತಮ್ಮ ರಾಸುಗಳನ್ನು ಹತೋಟಿಯಲ್ಲಿ ಇಡುತ್ತಿಲ್ಲ. ಪಟ್ಟಣದ ಪ್ರಮುಖ ರಸ್ತೆಗಳ ಮಧ್ಯದಲ್ಲಿ ನಿತ್ಯ ಬೀಡು ಬಿಡುತ್ತಿರುವ ಬಿಡಾಡಿ ದನಗಳ ತಡೆಗೆ ಪುರಸಭೆ ಕ್ರಮಕ್ಕೆ ಮುಂದಾಗದೆ ಜಾಣ ಕುರುಡು ಪ್ರದರ್ಶಿಸುತ್ತಿದೆ. ಬೈಕ್, ಕಾರು, ಇತ್ಯಾದಿ ವಾಹನಗಳಲ್ಲಿ ಓಡಾಡುವ ಜನತೆ ಸೇರಿದಂತೆ ಪಾದಾಚಾರಿಗಳು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ರಸ್ತೆ ಮೇಲೆ ಅಡ್ಡಗಟ್ಟಿ ನಿಂತ ದನಗಳ ಪರಿಣಾಮವಾಗಿಯೇ ಅಪಘಾತ ಸಂಭವಿಸಿದ ಘಟನೆಗಳು ಕೂಡ ಹಲವು ಕಡೆ ನಡೆದಿವೆ. ಇನ್ನಾದರೂ ಸ್ಥಳೀಯ ಆಡಳಿತಾಧಿಕಾರಿಗಳು, ಪೊಲೀಸ್ ಇಲಾಖೆ ದನಗಳ ಮಾಲಕರಿಗೆ ನೋಟಿಸ್ ಜಾರಿ ಮಾಡಿ ಬೀದಿ ದನಗಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲಿ ಎಂಬುವುದು ಸಾರ್ವಜನಿಕರ ಆಗ್ರಹ. ಬಿಡಾಡಿ ದನಗಳ ಹಾವಳಿ ಕುರಿತು ದೂರುಗಳು ಬಂದಿವೆ. ಶೀಘ್ರವೇ ಈ ಬಗ್ಗೆ ಕ್ರಮ ಕೈಗೊಳ್ಳಲಾಗುವುದು. <ಮಹಮ್ಮದ್ ಯೂಸುಫ್ ಕೆಂಭಾವಿ ಪುರಸಭೆ ಮುಖ್ಯಾಧಿಕಾರಿ ಪಟ್ಟಣದ ಪ್ರಮುಖ ರಸ್ತೆಗಳ ಮೇಲೆ ಬಿಡಾಡಿ ದನಗಳ ಹಾವಳಿ ಹೆಚ್ಚುತ್ತಿದೆ. ಇದರಿಂದ ಅಪಘಾತ ಸಂಭವಿಸುವ ಸಾಧ್ಯತೆ ಹೆಚ್ಚು. ದನಗಳ ಮಾಲಕರು ಈ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಮಾಲಕರನ್ನು ಗುರುತಿಸಿ ನೋಟಿಸ್ ನೀಡಬೇಕು ಮತ್ತು ದನಗಳನ್ನು ಗೋಶಾಲೆಗೆ ಸೇರಿಸಬೇಕು. <ಬಸವರಾಜ ಸದಬ, ವಾಹನ ಸವಾರ

ವಾರ್ತಾ ಭಾರತಿ 13 Jan 2026 1:09 pm

ಚರಂಡಿ ನೀರಿನಲ್ಲೇ ರಸ್ತೆ ದಾಟುವ ವಿದ್ಯಾರ್ಥಿಗಳು

ಭೀಮರಾಯ ಕುಡ್ಡಳ್ಳಿ ಕಾಳಗಿ ಕಾಳಗಿ: ತಾಲೂಕಿನ ಕಂದಗೂಳ ಗ್ರಾಮದಲ್ಲಿ ಶಾಲೆ ಸ್ಥಾಪನೆಯಾಗಿ ದಶಕಗಳೇ ಕಳೆದರೂ ಮಕ್ಕಳ ಸಮಸ್ಯೆಗಳಿಗೆ ಮುಕ್ತಿ ಸಿಕ್ಕಿಲ್ಲ. ಇಲ್ಲಿನ ಸರಕಾರಿ ಶಾಲೆಗೆ ನಾಲ್ಕು ನೂರಕ್ಕೂ ಹೆಚ್ಚು ಮಕ್ಕಳು ಚರಂಡಿಯಲ್ಲಿ ನಡೆದುಕೊಂಡೇ ಹೋಗುವ ಪರಿಸ್ಥಿತಿ ಮುಂದುವರಿದಿದೆ. ಶಾಲೆಯೊಳಗೆ ಕಾಲಿಡಬೇಕು ಎಂದರೆ ಚರಂಡಿ ನೀರಿನಲ್ಲಿಯೇ ನಡೆದುಕೊಂಡು ಸಾಗಬೇಕಾದ ದುಸ್ಥಿತಿ ಮಕ್ಕಳಿಗೆ ಬಂದೊದಗಿದೆ. ಇಷ್ಟಾದರೂ ಯಾವೊಬ್ಬ ಅಧಿಕಾರಿಗಳು ಇತ್ತ ಗಮನ ಹರಿಸದಿರುವುದು ನಿರ್ಲಕ್ಷ್ಯಕ್ಕೆ ಹಿಡಿದ ಕೈಗನ್ನಡಿ. ಗ್ರಾಮ ಪಂಚಾಯಿತಿ ಕೇಂದ್ರ ಸ್ಥಾನವಾಗಿರುವ ಕಂದಗೂಳದಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆ ಇದೆ. ಇಲ್ಲಿಗೆ ಪಕ್ಕದ ಅರಣಕಲ್, ಹುಳಗೇರಾ, ಕಂದಗೂಳ ಗ್ರಾಮಗಳಿಂದ ಸುಮಾರು 400ಕ್ಕೂ ಹೆಚ್ಚು ವಿದ್ಯಾರ್ಥಿಗಳು ವಿದ್ಯಾಭ್ಯಾಸಕ್ಕೆಂದು ಬರುತ್ತಾರೆ. ಅವರು ಕಲಿಯಲು ಶಾಲೆಗೆ ಆಗಮಿಸುವ ರೀತಿ ಮಾತ್ರ ಚರಂಡಿ ನೀರಿನಲ್ಲಿ ನಡೆದುಕೊಂಡು ಬರುವ ಸ್ಥಿತಿ. ಸರಕಾರವು ಗ್ರಾಮೀಣ ಪ್ರದೇಶದ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎಂದು ಅವರಿಗೆ ಸುಸಜ್ಜಿತ ಶಾಲೆ, ಬೋಧಕ ಸಿಬ್ಬಂದಿ, ಪಠ್ಯಪುಸ್ತಕ, ಸಮವಸ್ತ್ರ ಹೀಗೆ ಹಲವು ಸೌಲಭ್ಯ ನೀಡಿ ಪ್ರೋತ್ಸಾಹ ನೀಡುತ್ತಿದೆ. ಆದರೆ, ಮೂಲ ಸೌಲಭ್ಯ ನೀಡಬೇಕಾದ ಶಿಕ್ಷಣ ಇಲಾಖೆ ಮತ್ತು ಗ್ರಾಮ ಪಂಚಾಯಿತಿ ಹಾಗೂ ಚುನಾಯಿತ ಜನಪ್ರತಿನಿಧಿಗಳು, ಮುಖಂಡರ ನಿರ್ಲಕ್ಷ್ಯದಿಂದಾಗಿ ಮಕ್ಕಳು ದಿನಾಲೂ ಚರಂಡಿ ನೀರಿನಲ್ಲಿ ಹೋಗಬೇಕಾದ ಅನಿವಾರ್ಯತೆ ನಿರ್ಮಾಣವಾಗಿದೆ. ತಮ್ಮ ಮಕ್ಕಳು ಸಾಂಕ್ರಾಮಿಕ ರೋಗಗಳಿಗೆ ತುತ್ತಾಗುತ್ತಾರೆನ್ನುವ ಭೀತಿ ಪಾಲಕ, ಪೋಷಕರಿಗೆ ಉಂಟಾಗಿದೆ. ಗ್ರಾಮದಿಂದ ಶಾಲೆಗೆ ಸಂಪರ್ಕ ಕಲ್ಪಿಸುವ ಏಕೈಕ ರಸ್ತೆ ಇದಾಗಿದೆ. ಈ ಸಿಮೆಂಟ್ ರಸ್ತೆಯು ತಗ್ಗು ಪ್ರದೇಶದಲ್ಲಿ ನಿರ್ಮಾಣ ಮಾಡಿರುವುದರಿಂದ ಚರಂಡಿ ನೀರೆಲ್ಲ ರಸ್ತೆಯ ಮೇಲೆ ನಿಂತು ಪಾಚಿಗಟ್ಟಿ ಕೆರೆಯಂತೆ ಭಾಸವಾಗುತ್ತಿದೆ. ಈ ರಸ್ತೆಯಲ್ಲಿ ಸಂಚರಿಸುವುದು ಮಕ್ಕಳಿಗೆ ಪ್ರತಿನಿತ್ಯ ಸಂಕಷ್ಟ ಎನಿಸುತ್ತದೆ. ಪ್ರತಿದಿನ ಒಬ್ಬರಿಲ್ಲೊಬ್ಬರು ವಿದ್ಯಾರ್ಥಿಗಳು ಕಾಲು ಜಾರಿ ಚರಂಡಿ ನೀರಿನಲ್ಲಿ ಬೀಳುವುದು ಮತ್ತು ಕಾಲುಗಳಿಗೆ ಚರಂಡಿ ನೀರು ತಾಗಿ ಸೋಂಕು ತಗುಲುವುದು ಸಾಮಾನ್ಯವಾಗಿದೆ. ಪಾಲಕರು ಮಕ್ಕಳ ಆರೋಗ್ಯದ ದುಷ್ಪರಿಣಾಮ ಕುರಿತು ಆತಂಕ ಎದುರಿಸುತ್ತಿದ್ದಾರೆ. ಆದಷ್ಟು ಬೇಗನೆ ಸಂಬಂಧಿಸಿದ ಅಧಿಕಾರಿಗಳು ಗಮನ ಹರಿಸಿ ಸಮಸ್ಯೆ ಬಗೆಹರಿಸಬೇಕು. ಇಲ್ಲದಿದ್ದರೆ ಗ್ರಾಮ ಪಂಚಾಯತ್‌ಗೆ ಮುತ್ತಿಗೆ ಹಾಕಿ ಪ್ರತಿಭಟನೆ ಮಾಡುವುದಾಗಿ ಮಕ್ಕಳ ಪಾಲಕರಾದ ಮಲ್ಲಿನಾಥ ಬಾದನ್, ವೀರಣ್ಣ ವಡ್ಡಿ, ಅಶೋಕುಮಾರ ನಾರಂಜಿ, ಪ್ರಭು ರಾಚಂಟ್ಟಿ, ಗುರುನಾಥ ಜಡಗಿ, ಉದಯಕುಮಾರ್ ಸ್ವಾಮಿ, ಮಂಜುನಾಥ ಜಡಗಿ, ಅನಿಲಕುಮಾರ ಕೇಶಟ್ಟಿ ಎಚ್ಚರಿಸಿದ್ದಾರೆ. ಕೊಳಚೆ ಚರಂಡಿ ಇರುವುದರಿಂದ ಮಕ್ಕಳನ್ನು ಶಾಲೆಗೆ ಕಳುಹಿಸುವುದೋ ಅಥವಾ ಬೇಡವೋ ಎನ್ನುವುದು ತಿಳಿಯುತ್ತಿಲ್ಲ. ಇದರ ಬಗ್ಗೆ ಸಾಕಷ್ಟು ಬಾರಿ ಗ್ರಾಮ ಪಂಚಾಯತಿ ಗಮನಕ್ಕೆ ತಂದರೂ ಕೂಡ ಯಾವುದೇ ರೀತಿ ಪ್ರಯೋಜನವಾಗಿಲ್ಲ. <ಚನ್ನಮ್ಮ ವಜ್ರಗಾಂವ್, ಸ್ಥಳೀಯ ನಿವಾಸಿ ಚರಂಡಿ, ಶೌಚಾಲಯದ ನೀರು ಅಲ್ಲದೆ ಮಳೆ ಬಂದಾಗ ಹೊಲಗಳಲ್ಲಿನ ನೀರು ಬಂದು ನಿಲ್ಲುತ್ತಿರುವುದರಿಂದ ಪ್ರತಿನಿತ್ಯ ಮಕ್ಕಳಿಗೆ ತೊಂದರೆ ಆಗುತ್ತಿದೆ. ಈ ಸಮಸ್ಯೆಯ ಬಗೆಹರಿಸುವಂತೆ ಒತ್ತಾಯಿಸಿದರೂ ಯಾವುದೇ ಕ್ರಮ ಜರುಗಿಸಿಲ್ಲ. <ಉದಯಕುಮಾರ್ ಮಠಪತಿ, ಎಸ್ಡಿಎಂಸಿ ಅಧ್ಯಕ್ಷ ದಿನಾಲೂ ಶಾಲೆಗೆ ಚರಂಡಿ ನೀರಿನಲ್ಲೇ ನಡೆದುಕೊಂಡು ಹೋಗಬೇಕು. ಎಷ್ಟೋ ಸಲ ಚರಂಡಿ ನೀರಿನಲ್ಲಿ ಬಿದ್ದು ಮೈಯೆಲ್ಲ ಕೊಳೆ ಮಾಡಿಕೊಂಡಿದ್ದೇವೆ. ಹಾಗೇ ಇದರಿಂದಾಗಿ ಹಲವು ಬಾರಿ ಶಾಲೆಗೂ ಹೋಗಿಲ್ಲ. <ದಾನೇಶ್ವರಿ, ವಿದ್ಯಾರ್ಥಿನಿ

ವಾರ್ತಾ ಭಾರತಿ 13 Jan 2026 1:04 pm

ಸುಪ್ರೀಂ ಕೋರ್ಟ್ ಆದೇಶದಂತೆ ಜಿಬಿಎ ಚುನಾವಣೆ; ಜಿಲ್ಲಾ, ತಾಲೂಕು ಪಂಚಾಯಿತ್‌ ಎಲೆಕ್ಷನ್‌ ಬಗ್ಗೆ ಮಾಹಿತಿ ಕೊಟ್ಟ ಡಿ ಕೆ ಶಿವಕುಮಾರ್

ಬೆಂಗಳೂರು: ಸುಪ್ರೀಂ ಕೋರ್ಟ್ ಆದೇಶದ ಅನುಸಾರ ನಿಗದಿತ ದಿನಾಂಕದ ಒಳಗೆ ಜಿಬಿಎ ಪಾಲಿಕೆಗಳ ಚುನಾವಣೆ ನಡೆಸಲಾಗುವುದು. ಈ ಸಂಬಂಧ ರಾಜ್ಯ ಚುನಾವಣಾ ಆಯೋಗಕ್ಕೆ ಅಗತ್ಯ ನಿರ್ದೇಶನ ನೀಡಲಾಗುವುದು ಎಂದು ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು. ಪಾಲಿಕೆಗಳ ಚುನಾವಣೆ ನಡೆಸಲು ಸುಪ್ರೀಂ ಕೋರ್ಟ್ ಗಡುವು ನೀಡಿರುವ ಕುರಿತು ಇಂದು (ಮಂಗಳವಾರ) ಅರಮನೆ ಮೈದಾನ

ಒನ್ ಇ೦ಡಿಯ 13 Jan 2026 1:00 pm

ಹೊರ ರಾಜ್ಯದಿಂದ ಬಂದು ದರೋಡೆ ಮಾಡುತ್ತಿದ್ದ ಮಹಿಳೆ ಬಂಧನ: ₹30 ಲಕ್ಷ ಮೌಲ್ಯದ ಚಿನ್ನಾಭರಣ ವಶ

ಚಿಕ್ಕಬಳ್ಳಾಪುರ: ಅಂತರರಾಜ್ಯ ಮಟ್ಟದಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದ ಕುಖ್ಯಾತ ಕಳ್ಳಿಯನ್ನು ಬಂಧಿಸುವಲ್ಲಿ ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸರು ಯಶಸ್ವಿಯಾಗಿದ್ದಾರೆ. ಈ ಪ್ರಕರಣವು 2025ರ ಸೆಪ್ಟೆಂಬರ್ 19ರಂದು ದಾಖಲಾಗಿತ್ತು. ಈ ಕಾರ್ಯಾಚರಣೆಯಲ್ಲಿ ಸುಮಾರು 240 ಗ್ರಾಂ ತೂಕದ ಹಾಗೂ ₹30 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ದೇವಾಲಯದ ಉತ್ಸವದ ಹಿನ್ನೆಲೆಯಲ್ಲಿ ಮಹಿಳೆಯೊಬ್ಬರು ತಮ್ಮ ಪೋಷಕರ ಮನೆಗೆ ತೆರಳುವ ವೇಳೆ, ಚಿನ್ನಾಭರಣಗಳನ್ನು

ಒನ್ ಇ೦ಡಿಯ 13 Jan 2026 12:55 pm

ದೇವಾಲಯ ನಗರಿಯಲ್ಲಿ ಪಾಳುಬಿದ್ದ ನೂರಾರು ಸ್ಮಾರಕಗಳು

ಕನಕಗಿರಿ: ಏಳುನೂರ ಒಂದು ಬಾವಿ, ಏಳುನೂರ ಒಂದು ದೇವಸ್ಥಾನ, ದೇವಾಲಯಗಳ ನಗರಿ ಎಂದು ಖ್ಯಾತಿ ಪಡೆದು ಹೊರ ರಾಜ್ಯಗಳ ಲಕ್ಷಾಂತರ ಭಕ್ತರನ್ನು ಕನಕಗಿರಿಗೆ ಭೇಟಿ ನೀಡುತ್ತಾರೆ. ಆದರೆ ಇಲ್ಲಿನ ಕನಕಾಚಲಪತಿ ದೇವಸ್ಥಾನ, ವೆಂಕಟಪತಿ ಬಾವಿ, ಚಿಕ್ಕಕನಕಪ್ಪನ ಬಾವಿ, ಕೊಂಡದಪೇಟೆಯ ಪುಷ್ಕರಣಿಗಳಂತಹ ಐತಿಹಾಸಿಕ ಸ್ಥಳಗಳು, ದೇವಸ್ಥಾನಗಳು, ದೊರೆಗಳ ಕೋಟೆಗಳು ಅಭಿವೃದ್ಧಿ ಕಾಣದೆ ಅನಾಥವಾಗಿವೆ. ಸಂರಕ್ಷಣೆ ಇಲ್ಲದೆ ಹಾಳಾಗುತ್ತಿದು,್ದ ಸ್ಮಾರಕಗಳ ಕೂಗು ಯಾರಿಗೂ ಕೇಳದಾಗಿ.ೆ ಬಸರಿಹಾಳ: ತಾಲೂಕಿನ ಬಸರಿಹಾಳ ಗ್ರಾಮದಲ್ಲಿ ನ ಕನಕರಾಯನ ಬಾವಿ, ಲಕ್ಷ್ಮೀದೇವಿ ದೇವಸ್ಥಾನ, ಗ್ರಾಮದ ಗುಡ್ಡದ ಮೇಲಿರುವ ನಾಲ್ಕು ಕಾಲಿನ ಒಂಟಿ, ಗಂಡುಗಲಿ ಕುಮಾರರಾಮನ ದೇವಾಲಯ, ವೀರಗಲ್ಲು, ಪುರತನ ಕಾಲದ ಕೆರೆ ದಂಡೆಯಲ್ಲಿರುವ ವೀರಣ್ಣ ದೇವಸ್ಥಾನ, ಕನಕಗಿರಿಯಿಂದ ಬಸರಿಹಾಳ ರಸ್ತೆಯ ಎಡಭಾಗದಲ್ಲಿ ಬಾವಿ ಮತ್ತು ಲಕ್ಷ್ಮೀ ದೇವಾಲಯ, ನಾಲ್ಕು ಕಾಲಿನ ಮಂಟಪ ಇದೆ. ಕನಕಗಿರಿ ಕೋಟೆ: ದೇವಸ್ಥಾನದ ರಸ್ತೆಯಲ್ಲಿರುವ ದ್ವಾರಬಾಗಿಲದ ಎಡ ಹಾಗೂ ಬಲಭಾಗದಲ್ಲಿ ಕನಕಗಿರಿ ಮನೆತನ ಆಳಿದ ಎರಡು ಕೋಟೆಗಳು ಕುಸಿದಿವೆ. ಪಟ್ಟಣದ ಮುಖ್ಯಾಧಿಕಾರಿಗಳು ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಅವರ ಅಧೀನದಲ್ಲಿ ಬರುವ ತ್ರಿವೇಣಿ ಸಂಗಮ ಕೂಡ ಸ್ವಚ್ಛ ಮಾಡಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ವೆಂಕಟಪತಿ ಬಾವಿ: ವಿಜಯನಗರ ಸಾಮ್ರಾಜ್ಯದ ಗತವೈಭವ ನೆನಪಿಸುವ ಕಲಾತ್ಮಕ ಬಾವಿ ಇದಾಗಿದ್ದು, ಬ್ರಹ್ಮ, ವಿಷ್ಣು, ಮಹೇಶ್ವರ ದೇವಾಲಯಗಳು, ಚಿಕ್ಕ ಶಿಲಾ ಪಟ್ಟಿಗೆಗಳು, ಆಕರ್ಷಕ ಶಿಲಾಚಿತ್ರಗಳು, ನಾಲ್ಕು ಪ್ರವೇಶ ದ್ವಾರಗಳು, ಶೇಷಮೂರ್ತಿ, ನೃತ್ಯಗಾರ್ತಿಯರ ಶಿಲಾಚಿತ್ರ, 111 ಸರಳ ಶಿಲಾ ಕಂಬಗಳನ್ನು ಒಳಗೊಂಡಿದೆ. ಸಂರಕ್ಷಣೆ ಇಲ್ಲದ್ದರಿಂದ ನಿಧಿಗಳ್ಳರ ಹಾವಳಿ, ಮೋಜು ಮಸ್ತಿಯ ತಾಣವಾಗಿದೆ. ಕಲಕೇರಿ: ತಾಲೂಕಿಗೆ ಐದು ಕಿ.ಮೀ. ದೂರದ ಕಲಕೇರಿ ಗ್ರಾಮದ ಕೂಡ ಐತಿಹಾಸಿಕ ಮಹತ್ವ ಹೊಂದಿದೆ. ಸೋಮಸಾಗರ, ಹುಲಿಹೈದರ, ಲಾಯದುಣಸಿ, ವರನಖೇಡಾ, ಗೋಡಿನಾಳ, ಸಿರಿವಾರ, ಹನುಮನಾಳ, ಕನಕಾಪುರ, ಬಂಕಾಪುರ, ರಾಂಪುರ, ಚಿಕ್ಕಮಾದಿನಾಳ, ನಾಗಲಾಪೂರ, ಕನ್ಯಾರಮಡಗು, ಮಲ್ಲಿಗೆವಾಡ, ಸುಳೇಕಲ್, ಬೇನಕನಾಳ ಇನ್ನೂ ಅನೇಕ ಕಡೆ ಸ್ಮಾರಕಗಳು, ಶಿಲೆಗಳು ಕಾವಲು ಇಲ್ಲದೆ ಅನಾಥವಾಗಿವೆ. ಕನಕಗಿರಿ ಇತಿಹಾಸಕ್ಕೆ ಮೂಲಾಧಾರಗಳಾದ ಶಾಸನಗಳು, ಸ್ಮಾರಕಗಳು, ಬಾವಿ, ದೇಗುಲ, ನಾಣ್ಯಗಳ ಸಂರಕ್ಷಣೆಗೆ ಪುರಾತತ್ವ ಇಲಾಖೆ ಅಧಿಕಾರಿಗಳು ಮುಂದಾಗುವುದು ಅತೀ ಅಗತ್ಯವಾಗಿದೆ. ಬಾಳಪ್ಪ ಸುಳೇಕಲ್, ಉಪನ್ಯಾಸಕರು ಇತಿಹಾಸ ವಿಭಾಗ ಕನಕಗಿರಿ ಐತಿಹಾಸಿಕ ಹಿನ್ನೆಲೆಯುಳ್ಳ ಕನಕಗಿರಿ ಪಟ್ಟಣವು ಗ್ರಾಮೀಣ ಭಾಗದಲ್ಲಿ ಧಾರ್ಮಿಕವಾಗಿ ಮಾತ್ರವಲ್ಲ ಪುರಾತನ ಸ್ಮಾರಕಗಳಿಂದ ಸಾಂಸ್ಕೃತಿಕವಾಗಿ ವೈಶಿಷ್ಟ್ಯ ಹೊಂದಿವೆ. ಪುರಾತತ್ವ ಇಲಾಖೆ ಮತ್ತು ಧಾರ್ಮಿಕ ದತ್ತಿ ಇಲಾಖೆಯನಿರ್ಲಕ್ಷ್ಯದಿಂದ ಪುರಾತನ ಸ್ಮಾರಕಗಳು, ದೇವಾಲಯಗಳು ಕ್ರಮೇಣ ಕಾಲಗರ್ಭಕ್ಕೆ ಸೇರುತ್ತಿರುವುದು ಪ್ರಜ್ಞಾವಂತ ನಾಗರಿಕರಲ್ಲಿ ಅತೀವ ಬೇಸರ ಮೂಡಿಸಿದೆ. ಹಾಲಿ ಸಚಿವ, ಶಿವರಾಜ ತಂಗಡಗಿ ಮೂರು ಬಾರಿ ಸಚಿವರಾಗಿ, ಬಸವರಾಜ ದಢೇಸುಗೂರು ಶಾಸಕರಾಗಿ ಇದೇ ಕ್ಷೇತ್ರದಿಂದ ಆಯ್ಕೆಯಾದರೂ ಈ ಪ್ರಾಚೀನ ಸ್ಮಾರಕಗಳ ಸಂರಕ್ಷಣೆಯ ಬಗ್ಗೆ ಯಾವುದೇ ಗಮನ ಹರಿಸಿಲ್ಲ. ದುರ್ಗದಾಸ ಯಾದವ,ಇತಿಹಾಸಕಾರರು ಕನಕಗಿರಿ

ವಾರ್ತಾ ಭಾರತಿ 13 Jan 2026 12:54 pm

ಕೋಗಿಲು ಬಡಾವಣೆಯ ಪಟ್ಟಿ ನೋಡಿದ್ದೇನೆ, ಸಂತ್ರಸ್ತರಲ್ಲಿ ಬಾಂಗ್ಲಾದೇಶಿಯರು ಇಲ್ಲ: ಪರಮೇಶ್ವರ್ ಸ್ಪಷ್ಟನೆ

ಕೋಗಿಲು ಬಡಾವಣೆಯಲ್ಲಿ ಬಾಂಗ್ಲಾದಿಂದ ಬಂದ ಅಕ್ರಮ ವಲಸಿಗರು ಇದ್ದಾರೆ ಎಂದು ಬಿಜೆಪಿ ಆರೋಪ ಮಾಡಿದೆ. ಈ ಕುರಿತಾಗಿ ಬಿಜೆಪಿ ಸತ್ಯಶೋಧನಾ ವರದಿಯನ್ನು ಬಿಡುಗಡೆ ಮಾಡಿದೆ. ಆದರೆ ಬಿಜೆಪಿ ಆರೋಪವನ್ನು ಗೃಹ ಸಚಿವ ಡಾ. ಜಿ ಪರಮೇಶ್ವರ್ ಅವರು ನಿರಾಕರಿಸಿದ್ದಾರೆ. ಕೋಗಿಲು ಬಡಾವಣೆಯ ಪಟ್ಟಿ ನೋಡಿದ್ದೇನೆ, ಸಂತ್ರಸ್ತರಲ್ಲಿ ಬಾಂಗ್ಲಾದೇಶಿಯರು ಇಲ್ಲ ಎಂದು ಅವರು ಸ್ಪಷ್ಟನೆ ನೀಡಿದ್ದಾರೆ. ಬೆಂಗಳೂರಿನಲ್ಲಿ ಮಂಗಳವಾರ ಈ ಕುರಿತಾಗಿ ಮಾತನಾಡಿರುವ ಅವರು, ಸತ್ಯಶೋಧನಾ ವರದಿಯಲ್ಲಿನ ಅಂಶವನ್ನು ನಿರಾಕರಿಸಿದ್ದಾರೆ. ಮತ್ತಷ್ಟು ವಿವರ ಇಲ್ಲಿದೆ.

ವಿಜಯ ಕರ್ನಾಟಕ 13 Jan 2026 12:53 pm

ಖ್ಯಾತ ಚಿಂತಕ, ಐಒಎಸ್ ಸಂಸ್ಥಾಪಕ ಡಾ. ಮುಹಮ್ಮದ್ ಮಂಝೂರ್ ಆಲಂ ನಿಧನ

ಹೊಸದಿಲ್ಲಿ: ಖ್ಯಾತ ಚಿಂತಕ, ಅರ್ಥಶಾಸ್ತ್ರಜ್ಞ ಹಾಗೂ ಸಮಾಜಸೇವಕ ಡಾ. ಮುಹಮ್ಮದ್ ಮಂಝೂರ್ ಆಲಂ (80) ಅವರು ಮಂಗಳವಾರ ಬೆಳಿಗ್ಗೆ ನಿಧನರಾದರು. ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಹೊಸದಿಲ್ಲಿಯಲ್ಲಿ ಕೊನೆಯುಸಿರೆಳೆದರು ಎಂದು ಕುಟುಂಬ ಮೂಲಗಳು ತಿಳಿಸಿವೆ. 1945ರ ಅಕ್ಟೋಬರ್ 9ರಂದು ಬಿಹಾರದಲ್ಲಿ ದಿವಂಗತ ಎಂ. ಅಬ್ದುಲ್ ಜಲೀಲ್ ಅವರ ಪುತ್ರರಾಗಿ ಜನಿಸಿದ ಡಾ. ಆಲಂ ಅವರು ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದಿಂದ ಅರ್ಥಶಾಸ್ತ್ರದಲ್ಲಿ ಪಿಎಚ್‌ಡಿ ಪಡೆದಿದ್ದಾರೆ. ಇಸ್ಲಾಮಿಕ್ ಅರ್ಥಶಾಸ್ತ್ರ, ಶಿಕ್ಷಣ, ಸಾಮಾಜಿಕ ನ್ಯಾಯ ಹಾಗೂ ಅಲ್ಪಸಂಖ್ಯಾತರ ಸಬಲೀಕರಣ ಕ್ಷೇತ್ರಗಳಲ್ಲಿ ಅವರು ದೇಶ–ವಿದೇಶಗಳಲ್ಲಿ ಗುರುತಿಸಿಕೊಂಡಿದ್ದರು. ಇಸ್ಲಾಮಿಕ್ ಸಾಮಾಜಿಕ ವಿಜ್ಞಾನ, ಆರ್ಥಿಕ ಸುಧಾರಣೆ ಹಾಗೂ ಸಾಮಾಜಿಕ ಪರಿವರ್ತನೆ ಕುರಿತ ಅಧ್ಯಯನ ಮತ್ತು ಚಿಂತನೆಗೆ ತಮ್ಮ ಜೀವನವನ್ನು ಸಮರ್ಪಿಸಿದ್ದ ಡಾ. ಆಲಂ ಅವರ ವೃತ್ತಿಜೀವನವು ಹಲವು ದೇಶಗಳು ಹಾಗೂ ಪ್ರತಿಷ್ಠಿತ ಸಂಸ್ಥೆಗಳನ್ನು ವ್ಯಾಪಿಸಿತ್ತು. ಸೌದಿ ಅರೇಬಿಯಾದ ಹಣಕಾಸು ಸಚಿವಾಲಯದಲ್ಲಿ ಆರ್ಥಿಕ ಸಲಹೆಗಾರರಾಗಿ, ರಿಯಾದ್‌ನ ಇಮಾಮ್ ಮುಹಮ್ಮದ್ ಬಿನ್ ಸೌದ್ ವಿಶ್ವವಿದ್ಯಾಲಯದಲ್ಲಿ ಇಸ್ಲಾಮಿಕ್ ಅರ್ಥಶಾಸ್ತ್ರದ ಸಹಾಯಕ ಪ್ರಾಧ್ಯಾಪಕರಾಗಿ ಅವರು ಸೇವೆ ಸಲ್ಲಿಸಿದ್ದರು. ಮದೀನಾದ ಕಿಂಗ್ ಫಹದ್ ಮುದ್ರಣ ಸಂಕೀರ್ಣದಲ್ಲಿ ಕುರಾನ್ ಅನುವಾದ ಕಾರ್ಯದ ಮುಖ್ಯ ಸಂಯೋಜಕರಾಗಿಯೂ ಅವರು ಕಾರ್ಯನಿರ್ವಹಿಸಿದ್ದರು. ಮಲೇಷ್ಯಾದ ಅಂತರರಾಷ್ಟ್ರೀಯ ಇಸ್ಲಾಮಿಕ್ ವಿಶ್ವವಿದ್ಯಾಲಯದಲ್ಲಿ ಭಾರತದ ಮುಖ್ಯ ಪ್ರತಿನಿಧಿಯಾಗಿಯೂ ಸೇವೆ ಸಲ್ಲಿಸಿದ್ದರು. ಜೊತೆಗೆ, ಇಸ್ಲಾಮಿಕ್ ಅಭಿವೃದ್ಧಿ ಬ್ಯಾಂಕ್‌ನ ವಿದ್ಯಾರ್ಥಿವೇತನ ಕಾರ್ಯಕ್ರಮ ಸಮಿತಿಯ ಸಕ್ರಿಯ ಸದಸ್ಯರಾಗಿದ್ದರು. 1986ರಲ್ಲಿ ಹೊಸದಿಲ್ಲಿಯಲ್ಲಿ ಇನ್ಸ್ಟಿಟ್ಯೂಟ್ ಆಫ್ ಆಬ್ಜೆಕ್ಟಿವ್ ಸ್ಟಡೀಸ್ (ಐಒಎಸ್) ಅನ್ನು ಸ್ಥಾಪಿಸಿದ ಡಾ. ಆಲಂ ಅವರು ಅದರ ಸ್ಥಾಪಕ ಹಾಗೂ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿ, ಭಾರತೀಯ ಮುಸ್ಲಿಮರು ಮತ್ತು ಇತರ ಅಂಚಿನಲ್ಲಿರುವ ಸಮುದಾಯಗಳ ಬೌದ್ಧಿಕ ಹಾಗೂ ಸಾಮಾಜಿಕ ಸಬಲೀಕರಣಕ್ಕಾಗಿ ಸಂಶೋಧನಾ ಆಧಾರಿತ ಚಿಂತಕರ ವೇದಿಕೆಯನ್ನು ರೂಪಿಸಿದರು. ಅವರ ನಾಯಕತ್ವದಲ್ಲಿ ಸಂಸ್ಥೆಯು ಶೈಕ್ಷಣಿಕ ಸಂಶೋಧನೆ, ನೀತಿ ವಿಶ್ಲೇಷಣೆ, ಅಂತರಧರ್ಮ ಸಂವಾದ ಹಾಗೂ ಅಲ್ಪಸಂಖ್ಯಾತರ ಹಕ್ಕುಗಳ ವಿಚಾರದಲ್ಲಿ ಪ್ರಮುಖ ಚಿಂತನಾ ಕೇಂದ್ರವಾಗಿ ಬೆಳೆಯಿತು. ಡಾ. ಆಲಂ ಅವರು ಆಲ್ ಇಂಡಿಯಾ ಮಿಲ್ಲಿ ಕೌನ್ಸಿಲ್‌ನ ಜನರಲ್ ಸೆಕ್ರೆಟರಿ, ಮುಸ್ಲಿಂ ಸೋಶಿಯಲ್ ಸೈನ್ಸಸ್ ಅಸೋಸಿಯೇಷನ್‌ನ ಅಧ್ಯಕ್ಷ ಸೇರಿದಂತೆ ಹಲವು ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಸಂಸ್ಥೆಗಳಲ್ಲಿ ನಾಯಕತ್ವ ಮತ್ತು ಸಲಹಾ ಹುದ್ದೆಗಳನ್ನು ವಹಿಸಿದ್ದರು. ಇಸ್ಲಾಮಿಕ್ ಅರ್ಥಶಾಸ್ತ್ರ, ಅಂತರಧರ್ಮ ಸಂವಾದ, ಅಲ್ಪಸಂಖ್ಯಾತರ ಸಬಲೀಕರಣ ಹಾಗೂ ಜ್ಞಾನದ ಇಸ್ಲಾಮೀಕರಣ ಕುರಿತಾಗಿ ಅವರ ಚಿಂತನೆಗಳು ಜಾಗತಿಕ ಮಟ್ಟದಲ್ಲಿ ಪ್ರಭಾವ ಬೀರಿವೆ. “ದಿ ಫೈನಲ್ ವೇಕಪ್ ಕಾಲ್” ಸೇರಿದಂತೆ ಹಲವು ಕೃತಿಗಳನ್ನು ಅವರು ರಚಿಸಿದ್ದು, ಮಾಧ್ಯಮ ಸ್ವಾತಂತ್ರ್ಯ ಮತ್ತು ಅಂಚಿನಲ್ಲಿರುವ ಧ್ವನಿಗಳ ಮಹತ್ವವನ್ನು ಪ್ರತಿಪಾದಿಸಿದ್ದಾರೆ. ನೂರಾರು ವಿದ್ವಾಂಸರು, ಸಂಶೋಧಕರು ಹಾಗೂ ಸಾಮಾಜಿಕ ಕಾರ್ಯಕರ್ತರಿಗೆ ಅವರು ಮಾರ್ಗದರ್ಶಕರಾಗಿದ್ದರು. ಡಾ. ಮುಹಮ್ಮದ್ ಮಂಝೂರ್ ಆಲಂ ಅವರ ನಿಧನಕ್ಕೆ ಅಖಿಲ ಭಾರತ ಮಿಲ್ಲಿ ಕೌನ್ಸಿಲ್‌ನ ಜನರಲ್ ಸೆಕ್ರೆಟರಿ ಶೇಖ್ ನಿಝಾಮುದ್ದೀನ್ ಸಂತಾಪ ವ್ಯಕ್ತಪಡಿಸಿದ್ದಾರೆ. ಡಾ. ಆಲಂ ಅವರು ಪತ್ನಿ, ಮಕ್ಕಳು ಹಾಗೂ ಅಪಾರ ಸಂಖ್ಯೆಯ ಶಿಷ್ಯವೃಂದವನ್ನು ಅಗಲಿದ್ದಾರೆ.

ವಾರ್ತಾ ಭಾರತಿ 13 Jan 2026 12:49 pm

ರಾಯಚೂರು ಜಿಲ್ಲೆಯ ಇತಿಹಾಸ, ವೈಶಿಷ್ಟ್ಯತೆ ಹಾಗೂ ಪ್ರವಾಸಿ ತಾಣಗಳು

ದೋ ಅಬ್ ಪ್ರದೇಶವೆಂದು ಕರೆಯಲ್ಪಡುವ ರಾಯಚೂರು ಜಿಲ್ಲೆ ನೈಸರ್ಗಿಕವಾಗಿ ಸಂಪತ್ಭರಿತವಾಗಿದೆ. ಜಿಲ್ಲೆಯ ಇತಿಹಾಸ ಕ್ರಿ.ಪೂ 3000 ವರ್ಷಗಳಷ್ಟು ಹಳೆಯದು. ಐತಿಹಾಸಿಕವಾಗಿ, ಸಾಂಸ್ಕೃತಿಕವಾಗಿ, ಭೌಗೋಳಿಕವಾಗಿ ತನ್ನದೇ ಆದ ಹಿರಿಮೆ ಹೊಂದಿದೆ. ಇತಿಹಾಸಕಾರರು, ಹಿರಿಯ ಸಾಹಿತಿಗಳ ಪ್ರಕಾರ ರಾಯಚೂರಿಗೆ ಈ ಹಿಂದೆ ರಾಜನೂರು, ರಾಚೂರು, ಪೆರ್ಮನ ರಾಚೂರು, ರಾಚೂರು ಸೀಮೆ ಎಂಬ ಹೆಸರುಗಳಿದ್ದವು. ಇಲ್ಲಿನ ಇತಿಹಾಸ ಮೌರ್ಯರು, ಶಾತವಾಹನರು, ಕಲ್ಯಾಣ ಚಾಳುಕ್ಯರು, ಕಲ್ಯಾಣದ ಕಲಚೂರಿಗಳು, ವಿಜಯನಗರ ಅರಸರು, ಬಹಮನಿ ಸುಲ್ತಾನರು, ಬಿಜಾಪುರದ ಆದಿಲ್ ಶಾಹಿಗಳು, ಮೊಘಲರು, ಮರಾಠರು, ಹೈದರಾಬಾದ್ ನಿಜಾಮರು ಹಾಗೂ ಇಂಗ್ಲಿಷರು ಜಿಲ್ಲೆಯಲ್ಲಿ ಆಳ್ವಿಕೆ ಮಾಡಿದ್ದರು. ಅಲ್ಲದೆ ಸ್ಥಳೀಯ ಪ್ರಭುಗಳೆಂದು ಕರೆಯಲ್ಪಡುವ ಸಾಲಗುಂದಿಯ ಸಿಂಧರು, ಅಯಗಯಣ ವಾಡಿಯ ಹೈಹಯರು, ಕರಡಕಲ್ಲಿನ ಕದಂಬರು, ಸಾಲಗುಂದಿಯ ಸಿಂಧರು, ಗುಡಗುಂಟಿಯ ನಾಯಕರು, ಗುಂತಗೋಳದ ನಾಯಕರೂ ಆಳಿದ್ದಾರೆ. ಮಸ್ಕಿಯ ಅಶೋಕ ಶಿಲಾಶಾಸನ: ಮೌರ್ಯರು ಪಾಟಲೀಪುತ್ರವನ್ನು ರಾಜಧಾನಿಯಾಗಿ ಮಾಡಿಕೊಂಡು ದಕ್ಷಿಣ ಭಾರತದವರೆಗೆ ಆಡಳಿತ ಮಾಡಿದ್ದರು. ಕ್ರಿ.ಪೂ. 300ರಲ್ಲಿ ರಾಯಚೂರು ಜಿಲ್ಲೆ ಅಶೋಕನ ಆಳ್ವಿಕೆ ಒಳಪಟ್ಟಿತ್ತು ಎಂಬ ಉಲ್ಲೇಖವಿದೆ. ಇತಿಹಾಸದಲ್ಲಿ ಮಾಸಂಗಿಪುರ ಎಂದು ಕರೆಯಲ್ಪಡುವ ಈಗಿನ ಮಸ್ಕಿ ತಾಲೂಕಿನಲ್ಲಿ ಅಶೋಕನ ಶಿಲಾಶಾಸನ ಪತ್ತೆಯಾಗಿದೆ. ಸಾಮ್ರಾಟ ಅಶೋಕನು ಧರ್ಮ ಪ್ರಸಾರಕ್ಕಾಗಿ ಶಾಸನಗಳನ್ನು ಕಲ್ಲು ಬಂಡೆಗಳ ಮೇಲೆ ಬರೆಸಿದ್ದು, ಕರ್ನಾಟಕದ 10 ಶಾಸನಗಳ ಪೈಕಿ ಕಲ್ಯಾಣ ಕರ್ನಾಟಕದ ಕೊಪ್ಪಳದಲ್ಲಿ 2 ಶಾಸನ ಹಾಗೂ ರಾಯಚೂರು ಜಿಲ್ಲೆಯ ಮಸ್ಕಿಯಲ್ಲಿ ಒಂದು ಪತ್ತೆಯಾಗಿದೆ. ಕ್ರಿ.ಶ 1915ರಲ್ಲಿ ಇಂಜಿನಿಯರ್ ಆಗಿದ್ದ ಸಿ.ಬಿಡನ್ ಎಂಬವರು ದೇವನಾಂಪ್ರಿಯ ಅಶೋಕನ ಶಾಸನ ಗುರುತಿಸಿದ್ದಾರೆ. ಅಶೋಕನು ಯಾವ ಶಾಸನದಲ್ಲಿಯೂ ತನ್ನ ಹೆಸರು ದಾಖಲಿಸಿಲ್ಲ. ಕೇವಲ ದೇವನಾಂಪ್ರಿಯ, ಪ್ರಿಯದರ್ಶಿ ಎಂಬ ನಾಮದೊಂದಿಗೆ ಬರೆಸಿದ್ದ. ಆದರೆ ಮಸ್ಕಿ ಶಾಸನದಲ್ಲಿ ಮಾತ್ರ ‘ದೇವನಾಂಪ್ರಿಯ ಅಶೋಕ’ ಎಂದು ಉಲ್ಲೇಖಿಸಿದ್ದಾನೆ. ದೇವನಾಂಪ್ರಿಯ ಅಶೋಕ ಏಕಶಿಲೆಯ ಕೆಳಗೆ ಇಡಲಾಗಿದೆ. ಇದನ್ನು ಬ್ರಹ್ಮಲಿಪಿಯಲ್ಲಿ ಕೆತ್ತಲಾಗಿದೆ. ಇಲ್ಲಿ ಶಿಲಾಯುಗದ ಅಸ್ತಿ ಪಂಜರಗಳು, ವೀರಗಲ್ಲುಗಳು, ಸಿಡಿಲು ಗುಂಡುಗಳು ಪತ್ತೆಯಾಗಿವೆ. ಮಾನ್ಯಖೇಟದ ರಾಷ್ಟ್ರಕೂಟರು ಜಿಲ್ಲೆಯನ್ನು ಆಳಿದ್ದಾರೆ. ಇಮ್ಮಡಿ ಕೃಷ್ಣನ ಅಧಿಕಾರವಧಿಯಲ್ಲಿ ಈತನ ಜಗತ್ತುಂಗ ಎಡದೊರೆ ಆಳಿದ್ದನು. ಮಾನ್ವಿ ತಾಲೂಕಿನ ಬಲ್ಲಟಗಿ, ಮಸ್ಕಿ ತಾಲೂಕಿನ ತಲೆಖಾನ್‌ನಲ್ಲಿ 3ನೇ ಇಂದ್ರನ ಕುರಿತ ಶಾಸನಗಳು ಮಾಹಿತಿ ನೀಡುತ್ತವೆ. ಕಲ್ಯಾಣದ ಚಾಳುಕ್ಯರೂ ಈ ನಾಡನ್ನು ಆಳ್ವಿಕೆ ಮಾಡಿದ್ದು, ಇರಿವಬೆಡಂಗ ಸತ್ಯಾಶ್ರಯ, ಅರಿಕೇಸರಿ, ಕೇತವಿಕಲ್ಲು ನೆಲವೀಡಿನಲ್ಲಿದಂತೆಯೂ ಅವನ ಕೈ ಕೆಳಗೆ ಅಜವರ್ಮ ಎಂಬವನು ಕೆಳವಾಡಿ 370ರ ಬಾಡವನ್ನು ಆಳುತ್ತಿದ್ದನು. ಮೊಸಂಗಿ, ಮಾಸಂಗಿಪುರ (ಈಗಿನ ಮಸ್ಕಿ)ವನ್ನು ತನ್ನ ರಾಜಧಾನಿಯಾಗಿ 5ನೇ ವಿಕ್ರಮಾದಿತ್ಯನ ಕಿರಿಯ ಸಹೋದರ ಜಯಸಿಂಹ ಮಾಡಿಕೊಂಡಿದ್ದನು ಎಂದು ಇತಿಹಾಸಕಾರರು ಹೇಳುತ್ತಾರೆ. ಕಲ್ಯಾಣ ಚಾಳುಕ್ಯರ ಆಳ್ವಿಕೆ ಮಹತ್ತರ ಘಟ್ಟವಾಗಿದೆ. ವಿಜಯನಗರದ ಅರಸರು ಜಿಲ್ಲೆಯನ್ನಾಳಿದ್ದು, ಜಿಲ್ಲೆಯ ಫಲವತ್ತಾದ ಮಣ್ಣಿಗಾಗಿ ವಿಜಯನಗ ಅರಸರು, ಬಹಮನಿ ಸುಲ್ತಾನರು ಹಲವಾರು ಯುದ್ಧ ಮಾಡಿದ್ದಾರೆ. ಇಲ್ಲಿ ಸುಮಾರು 13 ಯುದ್ಧಗಳು ನಡೆದಿವೆ. ಜಿಲ್ಲೆಯ ಲಿಂಗಸುಗುರು ತಾಲೂಕಿನ ಮುದಗಲ್ ಕೋಟೆ ಇಂದಿಗೂ ಅನೇಕ ಐತಿಹಾಸಿಕ ಘಟನೆಗಳಿಗೆ ಸಾಕ್ಷಿಯಾಗಿ ನಿಂತಿದೆ. ಮುದಗಲ್ 2ನೇ ದೇವರಾಯನ ಅಧೀನದಲ್ಲಿ ಇತ್ತು. ಆ ಸಂದರ್ಭದಲ್ಲಿ ವರದಣ್ಣ ನಾಯಕ ಮುದಗಲ್ ಆಳುತ್ತಿದ್ದ. ಆಗ ರಾವುತರಾವ್ ಈರಣ್ಣ ಎಂಬವನು ಮುದಗಲ್ ಬೆಟ್ಟದ ಕೋಟೆಯಲ್ಲಿನ ಬಂಗಾರದ ಕಳಸ ತೆಗೆದುಕೊಂಡು ಬಂದಾಗ ಸಂತೋಷಗೊಂಡ 2ನೇ ದೇವರಾಯ ಈರಣ್ಣನಿಗೆ ಭೂದಾನ ನೀಡಿದನು. ಅನಂತರ ಆಳಿದ ವಿಜಯನಗರದ ಅರಸ ಕೃಷ್ಣದೇವರಾಯ, ಇಸ್ಮಾಯಿಲ್ ಆದಿಲ್ ಶಾಹನನ್ನು ಸೋಲಿಸಿ ಕ್ರಿ.ಶ 1520ರಲ್ಲಿ ರಾಯಚೂರು ಕೋಟೆ ವಶಪಡಿಸಿಕೊಂಡನು. ಇದೇ ಸಂದರ್ಭದಲ್ಲಿ ಆತ ಮಾನುವೆ, ಹಾನಗಲ್ಲು, ಆಲಂಪೂರುಣ ರಾಚೂರು, ಮಾಗಡೆ ದುರ್ಗ ಗೆದ್ದಿದ್ದ. ಬಹಮನಿ ಸುಲ್ತಾನರು: ಕ್ರಿ.ಶ 1342ರಲ್ಲಿ ಹಸನಗಂಗು ಎಂಬವರಿಂದ ಸ್ಥಾಪಿಸಲ್ಪಟ್ಟ ಬಹಮನಿ ರಾಜ್ಯವೂ ಮುಂದೆ ಅಬ್ದುಲ್ ಪತ್ ಫಿರೋಜ್ ಷಾ, ಮಹಮ್ಮದ್ ಷಾ ಆಳಿದನು. ವಿಜಯನಗರ ಅರಸರ ಆಳ್ವಿಕೆಗೆ ಒಳಪಟ್ಟ ಮುದಗಲ್ ಅನ್ನು ಕ್ರಿ.ಶ 1513 ರಲ್ಲಿ ಬಹಮನಿ ಸುಲ್ತಾನರು ವಶಕ್ಕೆ ಪಡೆದರು. ರಾಯಚೂರು ಕೋಟೆಯ ಅನೇಕ ಭಾಗಗಳನ್ನು 2ನೇ ಇಬ್ರಾಹಿಂ ಆದಿಲ್ ಷಾ ಕಟ್ಟಿಸಿದ. ಕ್ರಿ.ಶ 1628ರಲ್ಲಿ ಮುಹಮ್ಮದ್ ಇಬ್ರಾಹಿಂ ಆಳ್ವಿಕೆ ಆರಂಭವಾಗಿ ಮೊಮ್ಮಗ ಔರಂಗಜೇಬನು ಅರಸನಾದ. ಕ್ರಿ.ಶ 1686ರಲ್ಲಿ ಮೊಘಲರ ಔರಂಗಜೇಬ ಬಿಜಾಪುರವನ್ನು ತನ್ನ ವಶಕ್ಕೆ ಪಡೆದ. ರಾಯಚೂರು ಜಿಲ್ಲೆ ಹೈದರಾಬಾದ್ ನಿಜಾಮರ ಆಳ್ವಿಕೆಗೂ ಒಳಪಟ್ಟಿತ್ತು. ಅಸಫ್ ಜಾಹ ನಿಜಾಮ್ ಉಲ್ ಮುಲ್ಕ್ ಎಂಬವನು ತನ್ನನ್ನು ಹೈದರಾಬಾದ್ ನವಾಬ್ ಎಂದು ಘೋಷಿಸಿಕೊಂಡಿದ್ದ. ಈತನ ನಂತರ ಮೀರ್ ನಿಜಾಂ ಅಲಿಖಾನ್ ಅಸಫ್ ಜಾಹ ಕ್ರಿ.ಶ 1762-1803ರವರೆಗೆ, ಅಕಬರ್ ಅಲಿಖಾನ್ ಸಿಕಂದರ್ ಷಾಹ್ ಕ್ರಿ.ಶ 1803-1829, ಮೀರ್ ತಹ್ ನಿಯತ್ ಅಲಿ ಖಾನ್ ಅಸಫುದ್ದದೌಲ ಅಸಫ್ ಜಾಹ ಆಳ್ವಿಕೆ ಮಾಡಿದ್ದ. ನಿಜಾಮ್ ಮೀರ್ ಉಸ್ಮಾನ್ ಅಲಿಖಾನ್ ಕ್ರಿ.ಶ. 1911ರಿಂದ ದೇಶಕ್ಕೆ ಸ್ವಾತಂತ್ರ್ಯ ದೊರೆತ ಒಂದು ವರ್ಷದವರೆಗೆ ಅಂದರೆ 1948ರವರೆಗೆ ಆಳ್ವಿಕೆ ನಡೆಸಿದ್ದ. ಅನಂತರ ದೇಶದ ಮೊದಲ ಗೃಹಮಂತ್ರಿ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರು ಅಪರೇಷನ್ ಪೋಲೊ ಕಾರ್ಯಾಚರಣೆ ನಡೆಸಿ ನಿಜಾಮರ ಆಡಳಿತದಿಂದ ಮುಕ್ತಿ ದೊರೆಕಿಸಿಕೊಟ್ಟರು. ರಾಯಚೂರು ಹಾಗೂ ಕೊಪ್ಪಳದಲ್ಲಿ ಬರಗಾಲ ಬಂದಾಗ ಹೈದರಾಬಾದ್ ನಿಜಾಮರು ಲಿಯೋನಾರ್ಡ್ ಮನ್ ಎಂಬ ಭೂಗರ್ಭಶಾಸ್ತ್ರಜ್ಞನ ಮೂಲಕ 1200ಕ್ಕೂ ಹೆಚ್ಚು ಬಾವಿ ತೋಡಿಸಿದ್ದರು. ಇದೇ ಕಾರಣಕ್ಕೆ ಲಿಯೋನಾರ್ಡ್ ಮನ್ ಮನ್ನಾಸಾಬ್, ಸಾವಿರ ಬಾವಿಗಳ ಸರದಾರ ಎನಿಸಿಕೊಂಡಿದ್ದ. ಈತನ ಸಮಾಧಿ ಲಿಂಗಸುಗೂರು ತಾಲೂಕಿನಲ್ಲಿದೆ. ಆರ್‌ಟಿಪಿಎಸ್ ಹಾಗೂ ವೈಟಿಪಿಎಸ್: ರಾಯಚೂರನ್ನು ಶಕ್ತಿ ಕೇಂದ್ರ ಎಂತಲೂ ಕರೆಯಲಾಗುತ್ತದೆ. ಏಕೆಂದರೆ ರಾಯಚೂರು ತಾಲೂಕಿನ ಶಕ್ತಿನಗರದಲ್ಲಿ ರಾಯಚೂರು ಥರ್ಮಲ್ ವಿದ್ಯುತ್ ಶಾಖೋತ್ಪನ್ನ ಕೇಂದ್ರ (ಆರ್ ಟಿಪಿಎಸ್) ಇದೆ. ರಾಜ್ಯದ ಒಟ್ಟು ವಿದ್ಯುತ್ ಉತ್ಪಾದನೆಯಲ್ಲಿ ಶೇ.70ರಷ್ಟು ಪಾಲನ್ನು ರಾಯಚೂರಿನ ಶಕ್ತಿನಗರದ ಬೃಹತ್ ಶಾಖೋತ್ಪನ್ನ ವಿದ್ಯುತ್  ಕೇಂದ್ರ ಹೊಂದಿದೆ. ಒಟ್ಟು 1,720 ಮೆಗಾವ್ಯಾಟ್ ಸಾಮರ್ಥ್ಯದ ವಿದ್ಯುತ್ ಕೇಂದ್ರ ಒಟ್ಟು ಎಂಟು ಘಟಕಗಳಲ್ಲಿ ಸರಿಸುಮಾರು 5 ಘಟಕಗಳು ನಿರಂತರವಾಗಿ ಕಾರ್ಯನಿರ್ವಹಿಸುತ್ತಿವೆ. ರಾಯಚೂರು ಜಿಲ್ಲೆಯಲ್ಲಿ ಕೃಷ್ಣಾ ಹಾಗೂ ತುಂಗಭದ್ರಾ ನದಿಗಳು ಹರಿಯುತ್ತಿದ್ದು, ಫಲವತ್ತಾದ ಕೃಷಿ ಭೂಮಿಯಿದೆ. ಕೃಷ್ಣಾ ಎಡದಂಡೆ ನಾಲೆ (ಟಿಎಲ್ ಬಿಸಿ) ಹಾಗೂ ನಾರಾಯಣಪುರ ನಾಲೆ ಯೋಜನೆ (ಎನ್‌ಆರ್‌ಬಿಸಿ) ಮೂಲಕ ನೀರಾವರಿ ಸೌಲಭ್ಯ ಕಲ್ಪಿಸಲಾಗಿದೆ. ತುಂಗಭದ್ರಾ ಜಲಾಶಯದಿಂದ 226 ಕಿ.ಮೀ. ಉದ್ದದ ವಿಸ್ತಾರ ಹೊಂದಿದೆ. ತುಂಗಭದ್ರಾ ಎಡದಂಡೆ ಕಾಲುವೆಯಿಂದ ನೀರಾವರಿ ಸೌಲಭ್ಯವಿರುವುದರಿಂದ ಸಿಂಧನೂರು, ಮಾನ್ವಿ, ದೇವದುರ್ಗ ತಾಲೂಕಿನ ಸುತ್ತಮುತ್ತ ರೈತರು ಭತ್ತ, ಜೋಳದ ಜೊತೆಗೆ ಸೂರ್ಯಕಾಂತಿ, ಹತ್ತಿ ಹೆಚ್ಚಾಗಿ ಬೆಳೆಯುತ್ತಾರೆ. 2024ರ ಜುಲೈ 9ರಂದು ಬೆಂಗಳೂರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ರಾಜ್ಯದ ಎಲ್ಲ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಸಭೆ ನಡೆಸಿ ಪ್ರವಾಸಿ ತಾಣಗಳ ಅಭಿವೃದ್ಧಿ ಸಾಧ್ಯತೆಗಳನ್ನು ಜಿಲ್ಲಾಧಿಕಾರಿಗಳೇ ಗುರುತಿಸಬೇಕು. ಖಾಸಗಿ ಸಹಭಾಗಿತ್ವ ಮಾತ್ರವಲ್ಲ, ಸರಕಾರದ ವತಿಯಿಂದಲೂ ಹೆಜ್ಜೆ ಇರಿಸಬೇಕು ಎಂದು ಸೂಚಿಸಿದ್ದರು. ಬಜೆಟ್ ಯೋಜನೆ ಸಿದ್ಧಪಡಿಸಬೇಕು. ಜಿಲ್ಲಾಧಿಕಾರಿ ಸಿದ್ಧಪಡಿಸುವ ಮಾಸ್ಟರ್ ಪ್ಲಾನ್‌ಗೆ ಹಣಕಾಸು ಒದಗಿಸಲಾಗುವುದು ಎಂದು ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ ಭರವಸೆ ಕೊಟ್ಟಿದ್ದರು. ಈ ದಿಸೆಯಲ್ಲಿ ‘ಜಿಲ್ಲೆಯಲ್ಲಿ ಪ್ರಸ್ತುತ 10 ಜತೆಗೆ 28 ಹೊಸ ತಾಣಗಳನ್ನು ಪಟ್ಟಿ ಮಾಡಿ ಕಳುಹಿಸಲಾಗಿತ್ತು. ಇವೆಲ್ಲವನ್ನೂ ಸರಕಾರ ಪ್ರವಾಸಿತಾಣವಾಗಿ ಪರಿಗಣಿಸಿ ಅನುಮೋದನೆ ಕೊಟ್ಟಿದೆ. ಮೊದಲ ಹಂತದಲ್ಲಿ ಮಸ್ಕಿ ಅಶೋಕನ ಶಿಲಾಶಾಸನ ಹಾಗೂ ಗೂಗಲ್ ತಾಣದ ಅಭಿವೃದ್ಧಿಗೆ ಕೆಕೆಆರ್‌ಡಿಬಿ ಹಾಗೂ ಪ್ರವಾಸೋದ್ಯಮ ಇಲಾಖೆಯಿಂದ ರೂ. 10 ಕೋಟಿ ಅನುದಾನ ಮಂಜೂರಾಗಿದೆ. ರಾಯಚೂರು ತಾಲೂಕಿನ ಕುರ್ವಕಲದ ದತ್ತಾತ್ರೇಯ ಮಂದಿರ, ದೇವಸುಗೂರಿನ ಸುಗೂರೇಶ್ವರ ದೇವಸ್ಥಾನ ಹಾಗೂ ಗಾಣದಾಳು ಪಂಚಮುಖಿ ಆಂಜನೇಯ ದೇವಸ್ಥಾನ ಅಭಿವೃದ್ಧಿಗೆ ಕೇಂದ್ರ ಸರಕಾರದ ಪ್ರಸಾದ್ ಯೋಜನೆಯಡಿ ಡಿಪಿಆರ್ ಸಿದ್ಧಪಡಿಸಲಾಗುತ್ತಿದೆ. ಕೇಂದ್ರ ಸರಕಾರ ಹಾಗೂ ಕೆಕೆಆರ್‌ಡಿಬಿಯಿಂದ ಅನುದಾನ ದೊರೆಯಲಿದೆ ಎಂದು ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ನಝೀರ್ ಅಹ್ಮದ್ ಹೇಳಿದ್ದಾರೆ. ಜಿಲ್ಲೆಯ ಹೊಸ ಪ್ರವಾಸಿ ತಾಣಗಳು: ರಾಯಚೂರು ತಾಲೂಕು: ನವರಂಗ ದರ್ವಾಜಾ, ಕಾಟೆ ದರ್ವಾಜಾ, ಮೆಕ್ಕಾ ದರ್ವಾಜಾ, ಪಂಚ ಬೀಬಿ ಪಹಾಡ್, ತೀನ್ ಕಂದಿಲ್, ನಾರದಗಡ್ಡೆ, ಮಲಿಯಾಬಾದ್ ಕೋಟೆ. ಕಲ್ಲಾನೆ, ಪಂಚಮುಖಿ ಆಂಜನೇಯ ದೇಗುಲ, ಮಾವಿನಕೆರೆ, ಕುರ್ವಾಕುಲದ ದತ್ತಾತ್ರೇಯ ದೇಗುಲ, ದೇವಸುಗೂರಿನ ಸುಗೂರೇಶ್ವರ, ಬಿಜ್ಜಾಲಿಯ ಏಕಶಿಲಾ ಬೃಂದಾವನ, ಮಂಚಲಾಪುರ ಕೆರೆ, ಶಕ್ತಿನಗರದ ವಿದ್ಯುತ್ ಉತ್ಪಾದನೆ ಘಟಕ-ಶಕ್ತಿನಗರ, ಕಲ್ಮಲಾ ಕರಿಯಪ್ಪ ತಾತನ ದೇಗುಲ. ಸಿಂಧನೂರು ತಾಲೂಕು: ಸೋಮಾಪುರದ ಅಂಬಾಮಠ, ಗಾಂಧಿನಗರದ ಶಿವಾಲಯ ದೇಗುಲ, ಉದ್ಬಾಳದ ಜೋಳದರಾಶಿ ಆಂಜನೇಯ ದೇವಸ್ಥಾನ. ಮಾನ್ವಿ ತಾಲೂಕು: ಕಲ್ಲೂರು ಮಹಾಲಕ್ಷ್ಮೀ, ಮಾನ್ವಿ ಕೋಟೆ, ನೀರ ಮಾನ್ವಿಯ ಯಲ್ಲಮ್ಮದೇವಿ, ಹರವಿಯ ಬಸವೇಶ್ವರ ದೇಗುಲ, ಗೋರ್ಕಲ್‌ದ ವೆಂಕಟೇಶ್ವರ ದೇಗುಲ, ರಾಜಲಬಂಡಾ ಬ್ಯಾರೇಜ್. ದೇವದುರ್ಗ ತಾಲೂಕು: ಗಬ್ಬೂರಿನ ದೇವಾಲಯಗಳು, ಕೊಪ್ಪುರು ನರಸಿಂಹ ದೇವಸ್ಥಾನ, ಗೂಗಲ್ ಅಲ್ಲಮಪ್ರಭು ದೇವಸ್ಥಾನ ಹಾಗೂ ಬ್ರಿಡ್ಜ್ ಕಮ್ ಬ್ಯಾರೇಜ್, ವೀರಗೋಟದ ಆದಿ ಮೌನಲಿಂಗೇಶ್ವರ ದೇಗುಲ- ತಿಂಥಣಿ ಶ್ರೀಕಾಗಿನಗೆಲ ಮಹಾಸಂಸ್ಥಾನ ಕನಕ ಪೀಠ. ಲಿಂಗಸುಗೂರು ತಾಲೂಕು: ಹಟ್ಟಿ ಚಿನ್ನದಗಣಿ-ಪಟ್ಟಿ, ಮುದಗಲ್ ಕೋಟೆ, ಗೋಲಪಲ್ಲಿಯ ಬಂಡಲಗುಂಡ ಜಲಪಾತ,, ಗುರುಗುಂಟಾ ಅಮರೇಶ್ವರ ದೇವಸ್ಥಾನ, ಅಂಕಲಿಮಠ, ಪಿಕಳಿಹಾಳ. ಮಸ್ಕಿ ತಾಲ್ಲೂಕು: ಮಸ್ಕಿ ಮಲ್ಲಿಕಾರ್ಜುನ ದೇಗುಲ, ಅಶೋಕನ ಶಿಲಾಶಾಸನ, ಮಲ್ಲಿಕಾರ್ಜುನ ದೇಗುಲ (ಎನ್‌ಸಿಇಆರ್ ಟಿ ಸಿಂಬಲ್), ಚಿಕ್ಕ ಸವದತ್ತಿ ಯಲ್ಲಮ್ಮ ದೇಗುಲ, ಅಶೋಕನ ಕನ್ನಡ ಶಿಲಾ ಶಾಸನ. ಐತಿಹಾಸಿಕ ತಾಣಗಳು ರಾಯಚೂರು ನಗರದ ತೀನ್ ಖಂದಿಲ್, ಕಲ್ಲಾನೆ, ಮಲಿಯಾಬಾದ್ ಕೋಟೆ, ಕಲ್ಲಾನೆಗಳು, ಆಮ್ ತಲಾಬ್, ಗುಬ್ಬೇರಬೆಟ್ಟ, ಪಂಚ್ ಬೀಬಿ ಪಹಾಡ್, ಏಕ್ ಮಿನಾರ್, ಆತ್ಕೂರಿನ ದತ್ತಾತ್ರೇಯ ದೇವಸ್ಥಾನ, ಖಾಜನಗೌಡ ಮಹಲ್, ಮಸ್ಕಿಯ ಅಶೋಕ ಶಿಲಾಶಾಸನ, ಪಂಚಮುಖಿ ಗಾಣಧಾಳ ಆಂಜನೇಯ ದೇವಸ್ಥಾನ ಇತ್ಯಾದಿ. ಇವುಗಳ ಜೊತೆಗೆ ಜಿಲ್ಲೆಯ 28 ಐತಿಹಾಸಿಕ ಹೊಸ ತಾಣ ಗುರುತಿಸಿ ಅಭಿವೃದ್ಧಿಗೆ ಯೋಜನೆ ರೂಪಿಸಿ ಕಾರ್ಯ ರೂಪಕ್ಕೆ ತರಲು ಮುಂದಾಗಿದೆ. ಜಿಲ್ಲೆಯಲ್ಲಿ ನೂರಾರು ಪುರಾತನ ಸ್ಮಾರಕಗಳಿದ್ದರೂ ಭಾರತೀಯ ಪುರಾತತ್ವ ಇಲಾಖೆ (ಎಎಸ್‌ಐ) ವ್ಯಾಪ್ತಿಗೆ ಒಂದೇ ಒಂದು ಸ್ಮಾರಕವನ್ನೂ ಸೇರಿಸಿಲ್ಲ. ಇದೀಗ ಪ್ರವಾಸೋದ್ಯಮ ಇಲಾಖೆಯು ರಾಯಚೂರು ಜಿಲ್ಲೆಯಲ್ಲಿ 28 ಹೊಸ ತಾಣಗಳನ್ನು ಗುರುತಿಸಿದ್ದು ಜನರಲ್ಲಿ ಹರ್ಷ ತಂದಿದೆ. ರಾಯಚೂರು ಜಿಲ್ಲೆಯ ಐತಿಹಾಸಿಕ ಕೋಟೆಗಳು ಯಾವುದೇ ಜಿಲ್ಲೆಯ ಇತಿಹಾಸವನ್ನು ಅಧ್ಯಯನ ಮಾಡುವುದಾದರೆ ಅಲ್ಲಿನ ಕೋಟೆಗಳು, ಸ್ಮಾರಕಗಳು, ಐತಿಹಾಸಿಕ ಕುರುಹುಗಳು ಕಾಣಬೇಕು ಎಂಬ ಮಾತಿದೆ. ಅದರಂತೆ ರಾಯಚೂರಿನ ಕೋಟೆಗಳ ಬಗ್ಗೆ ಅವಶ್ಯ ತಿಳಿಯಬೇಕಿದೆ. ರಾಯಚೂರು ಕೋಟೆ ಕೊತ್ತಲಗಳ ನಾಡಾಗಿದೆ. ಇಲ್ಲಿ ರಾಯಚೂರು ಕೋಟೆ, ಮಲಿಯಾಬಾದ್ ಕೋಟೆ, ಮುದಗಲ್ ಕೋಟೆ, ಜಲದುರ್ಗ ಕೋಟೆ ಪ್ರಮುಖವಾಗಿವೆ. ರಾಯಚೂರು ಕೋಟೆ: ರಾಯಚೂರು ಕೋಟೆ ತನ್ನದೇ ಆದ ಇತಿಹಾಸ ಹೊಂದಿದ್ದು, ಈ ಕೋಟೆಗಾಗಿ ಅನೇಕ ರಾಜಮನೆತನಗಳು ಕಾದಾಡಿವೆ.ರಾಯಚೂರು ಕೋಟೆಯನ್ನುವಾರಂಗಲ್ಲಿನ ಕಾಕತೀಯರಿಂದ ನಿರ್ಮಿಸಲಾಗಿದೆ ಎಂದು ಹೇಳಲಾಗುತ್ತದೆ. ಹೊಯ್ಸಳ ದೊರೆ ವಿಷ್ಣುವರ್ಧನ್ ಕ್ರಿ.ಶ. 1108-1142 ತನ್ನ ಉತ್ತರದ ದಿಗ್ವಿಜಯದ ಕಾಲದಲ್ಲಿ ಆಕ್ರಮಿಸಿಕೊಂಡ ಹಲವು ಕೋಟೆಗಳಲ್ಲಿ ರಾಯಚೂರು ಕೋಟೆಯೂ ಒಂದಾಗಿತ್ತು. ಇದಕ್ಕಿಂತ ಪೂರ್ವದಲ್ಲಿ ಬಾದಾಮಿ ಚಾಳುಕ್ಯರ ಕಾಲದಲ್ಲಿಯೂ ಈ ಕೋಟೆ ಇತ್ತೆಂದು ಡಾ.ಪಿ.ಬಿ.ದೇಸಾಯಿ ಅಭಿಪ್ರಾಯಪಟ್ಟಿದ್ದಾರೆ. ಕ್ರಿ.ಶ. 1294ರಲ್ಲಿ ರಚಿತವಾದ ಕಾಕತೀಯರ ಶಾಸನದ ಮೂಲಕ ತಿಳಿದುಬರುವುದೇನೆಂದರೆ ರಾಣಿ ರುದ್ರಮ್ಮದೇವಿಯ ಸಾಮಂತನಾದ ಗೋರೆಗನ್ನಯ ರೆಡ್ಡಿಯ ಸೇನಾಪತಿಯಾದ ವಿಠ್ಠಲನಾಥ ಈ ಪ್ರದೇಶ ಆಳುತ್ತಿದ್ದಾಗ ಪ್ರಜೆಗಳ ರಕ್ಷಣಾರ್ಥವಾಗಿ ಶಿಲಾದುರ್ಗ ರಚಿಸಿದನೆಂದು ತಿಳಿದು ಬರುತ್ತದೆ. ಇದೇ ಇಂದಿನ ಒಳ ಕೋಟೆಯಾಗಿದೆ. ಕಾಲಾಂತರದಲ್ಲಿ ಈ ಕೋಟೆ ದೆಹಲಿಯ ಸುಲ್ತಾನ ಅಲ್ಲಾವುದ್ದೀನ್ ಖಿಲ್ಜಿ, ಮುಹಮ್ಮದ್ ಬಿನ್ ತುಘಲಕ್ ಅವರ ವಶಕ್ಕೆ ಒಳಪಟ್ಟಿತ್ತು. ಬಳಿಕ ವಿಜಯನಗರ ಅರಸ ಕೃಷ್ಣದೇವರಾಯ, ಬಿಜಾಪುರದ ಆದಿಲ್ ಶಾಹಿಗಳು, ಬಹಮನಿ ಸುಲ್ತಾನರು, ಹೈದರಾಬಾದಿನ ನಿಜಾಮರು ಆಳ್ವಿಕೆ ಮಾಡಿದ್ದು ಕೋಟೆಯ ಜೀರ್ಣೋದ್ಧಾರ ಮಾಡಿದರು. ಕೋಟೆಯ ವಿವಿಧ ಒಳ ಕೋಟೆಗಳಲ್ಲಿ ಒಳಕೋಟೆ (ಅಂದ್ರೂನ್‌ಕಿಲಾ), ಹೊರಕೋಟೆ (ಬೇರೂನ್‌ಕಿಲಾ) ಕಾಟೆ ದರ್ವಾಜಾ, ಮಕ್ಕಾ ದರವಾಜಾ, ನವರಂಗ ದರ್ವಾಜಾ ಸೇರಿವೆ. ರಾಯಚೂರು ಜಿಲ್ಲೆಯ ವೈಶಿಷ್ಟ್ಯ ರಾಯಚೂರು ಜಿಲ್ಲೆ ಸಂಪತ್ಭರಿತ ನಾಡಾಗಿದೆ. ಲಿಂಗಸುಗೂರು ತಾಲೂಕಿನ ಹಟ್ಟಿ ರಾಜ್ಯದ ಏಕೈಕ ಚಿನ್ನ ಉತ್ಪಾದಿಸುವ ಗಣಿಯಾಗಿದೆ. ಈ ಹಿಂದೆ ಕೋಲಾರ ಗೋಲ್ಡ್ ಫೀಲ್ಡ್ (ಕೆಜಿಎಫ್) ಇತ್ತು. ಈಗ ಅದು ಮುಚ್ಚಿಹೋಗಿದೆ. ಹಟ್ಟಿ ಚಿನ್ನದ ಗಣಿ ಕಂಪೆನಿ ಸರಕಾರಿ ಸ್ವಾಮ್ಯದ ಸಂಸ್ಥೆಯಾಗಿದೆ. ವಾರ್ಷಿಕ 10ರಿಂದ 11ಲಕ್ಷ ಟನ್ ಅದಿರು ಉತ್ಪಾದಿಸಲಾಗುತ್ತದೆ. ಈ ವರ್ಷ ಅಂದರೆ 2025-26ನೆ ಸಾಲಿನಲ್ಲಿ 2.8 ಟನ್‌ನಿಂದ 3 ಟನ್ ಚಿನ್ನ ಉತ್ಪಾದಿಸುವ ಹಾಗೂ 3,000 ಕೋಟಿ ರೂ.ಗೂ ಅಧಿಕ ವಾರ್ಷಿಕ ವಹಿವಾಟು ಗುರಿಯಿದೆ. ಪ್ರಸಕ್ತ ವರ್ಷ 1700 ಕೆಜಿ ಚಿನ್ನ ಉತ್ಪಾದಿಸುವ ಗುರಿ ಹೊಂದಲಾಗಿದೆ. 6 ಮೀಟರ್ ಸುತ್ತಳತೆ ಹಾಗೂ 900 ಮೀಟರ್ ಆಳದ ನ್ಯೂ ಸರ್ಕ್ಯೂಲರ್ ಶಾಫ್ಟ್ ಹಾಗೂ ಪ್ರತಿ ಸಾಲಿನಲ್ಲಿ 6,83,701 ಟನ್ ಅದಿರು ಸಂಸ್ಕರಿಸಿ, 1606.30 ಕೆ.ಜಿ. ಚಿನ್ನ ಉತ್ಪಾದಿಸಲಾಗಿತ್ತು. ಹಿಂದಿನ ಆರ್ಥಿಕ ವರ್ಷಕ್ಕೆ ಹೋಲಿಸಿದರೆ ಶೇ.4.81ರಷ್ಟು ಕಡಿಮೆ ಅದಿರು ಉತ್ಪಾದಿಸಲಾಗಿದೆ. ಚಿನ್ನದ ಉತ್ಪಾದನೆಯಲ್ಲಿ ಶೇ.3.43ರಷ್ಟು ಹೆಚ್ಚಾಗಿದೆ. ಗಂಟೆಗೆ 50 ಟನ್ ಅದಿರು ಸಂಸ್ಕರಣೆಯ ಬಾಲ್ ಮಿಲ್‌ನಿಂದಾಗಿ ಅಧಿಕ ಚಿನ್ನ ಉತ್ಪಾದಿಸಲಾಗಿದೆ. 2024-25 ಹೆಚ್ಚಿನ ಉತ್ಪಾದನೆ ಜತೆಗೆ ಕಾರ್ಮಿಕರ ಕಲ್ಯಾಣಕ್ಕಾಗಿ ಅನೇಕ ಕಾರ್ಯಕ್ರಮ ರೂಪಿಸಲಾಗುತ್ತಿದೆ.

ವಾರ್ತಾ ಭಾರತಿ 13 Jan 2026 12:48 pm

ʻನಮಸ್ಕಾರ ಬೆಂಗಳೂರು, ಚೆನ್ನಾಗಿದ್ದೀರಾʼ ಎಂದು ಕನ್ನಡಿಗರ ಮನ ಗೆದ್ದ ಜಪಾನಿನ ಬೆಡಗಿ; ವಿಡಿಯೋ ವೈರಲ್

ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ 'ಅನಿಮೆ‌ ಕಾರ್ಯಕ್ರಮವೊಂದರಲ್ಲಿ ಜಪಾನಿ ಯುವತಿಯೊಬ್ಬರು ಕನ್ನಡದಲ್ಲಿ ಮಾತನಾಡಿ ಪ್ರೇಕ್ಷಕರನ್ನು ಸೆಳೆದಿದ್ದಾರೆ. ಹಿಂದಿ ಭಾಷೆಯನ್ನು ಬಲ್ಲ ಈಕೆ, ವೇದಿಕೆಯ ಮೇಲೆ ಕನ್ನಡದಲ್ಲಿ ಸಂವಹನ ನಡೆಸಿ ಸ್ಥಳೀಯರ ಮನಗೆದ್ದಿದ್ದಾರೆ. ಈ ವಿಡಿಯೋ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಮೆಚ್ಚುಗೆ ಪಡೆದಿದೆ.

ವಿಜಯ ಕರ್ನಾಟಕ 13 Jan 2026 12:40 pm

ಸ್ತ್ರೀ ಶಕ್ತಿ ಪ್ಯಾಕೇಜ್‌ ಯೋಜನೆ: ಸ್ವಂತ ಉದ್ಯೋಗ ಆರಂಭಿಸಲು ಮಹಿಳೆಯರಿಗೆ ಕಡಿಮೆ ಬಡ್ಡಿಗೆ 2 ರಿಂದ 25 ಲಕ್ಷ ರೂ.ವರೆಗೆ ಸಾಲ! ಅರ್ಜಿ ಸಲ್ಲಿಕೆ ಹೇಗೆ?

ಮಹಿಳಾ ಉದ್ಯಮಿಗಳಿಗೆ ಆರ್ಥಿಕ ನೆರವು ನೀಡಲು ಭಾರತೀಯ ಸ್ಟೇಟ್ ಬ್ಯಾಂಕ್‌ 'ಸ್ತ್ರೀ ಶಕ್ತಿ ಪ್ಯಾಕೇಜ್' ಯೋಜನೆ ಜಾರಿಗೆ ತಂದಿದೆ. ಈ ಯೋಜನೆಯಡಿ 25 ಲಕ್ಷ ರೂ.ವರೆಗೆ ಸಾಲ ಸಿಗಲಿದ್ದು, 10 ಲಕ್ಷ ರೂ.ವರೆಗೆ ಮೇಲಾಧಾರ ರಹಿತ ಸಾಲ ಲಭ್ಯವಿದೆ. ಉತ್ಪಾದನೆ, ಚಿಲ್ಲರೆ ವ್ಯಾಪಾರ ಮತ್ತು ಸೇವಾ ವಲಯಗಳಲ್ಲಿ ಮಹಿಳೆಯರು ತಮ್ಮ ಉದ್ಯಮಗಳನ್ನು ಬೆಳೆಸಲು ಇದು ಉತ್ತಮ ಅವಕಾಶ ನೀಡುತ್ತದೆ. ಈ ಕುರಿತ ವಿವರಗಳು ಇಲ್ಲಿವೆ.

ವಿಜಯ ಕರ್ನಾಟಕ 13 Jan 2026 12:18 pm

ದಲಿತರ ಆತ್ಮ ಗೌರವದ ಸಾಹಿತ್ಯ ಮತ್ತು ಚಳವಳಿಗೆ ಸುವರ್ಣ ಸಂಭ್ರಮ

ದಲಿತ ಸಾಹಿತ್ಯ ಮತ್ತು ಚಳವಳಿ ಒಂದು ನಾಣ್ಯದ ಎರಡು ಮುಖಗಳಿದ್ದಂತೆ. ಬೇರೆ ಬೇರೆಯಾಗಿ ನೋಡಲಾಗುವುದಿಲ್ಲ. ಇವೆರಡು ಭೂಮಿ ಮತ್ತು ಬೀಜ ಇದ್ದಂತೆ. ಆದರೆ ಅದರ ಬೆಳೆಯ ಇಳುವರಿ ಒಮ್ಮೆ ಹೆಚ್ಚಾಗಿರಬಹುದು ಇನ್ನೊಮ್ಮೆ ಕಡಿಮೆಯೂ ಆಗಿರಬಹುದು. ಇವು ಒಂದರೊಳಗೊಂದು ಸೇರಿ ಪೂರಕ ಪೋಷಕವಾಗಿ ಸ್ಫೂರ್ತಿ ನೀಡಿಕೊಂಡು ಹಬ್ಬಿವೆ. ಚಳವಳಿ ಹುಟ್ಟಿಗೆ ಕಾರಣವಾದದ್ದಾದರೂ ಏನು? ಚಳವಳಿಗೂ ಮತ್ತು ದಲಿತ ಸಾಹಿತ್ಯಕ್ಕೂ ಇರುವ ಬೆಸುಗೆ ಎಂತಹದ್ದು? ಸಾಂಸ್ಕೃತಿಕವಾಗಿ ಹದಗೊಂಡ ಕಾಲ ಎಂಥದ್ದು? ಎಂಬ ಪ್ರಶ್ನೆಗಳ ಹುಡುಕಾಟದಲ್ಲಿ ಹುಟ್ಟಿನ ಹಿನ್ನೆಲೆಯನ್ನು ಗುರುತಿಸಬಹುದಾಗಿದೆ ಕನ್ನಡದ ದಲಿತ ಸಾಹಿತ್ಯ ಮತ್ತು ಚಳವಳಿಗೆ ಅರ್ಧ ಶತಮಾನದ ದಾರಿಯನ್ನು ಕ್ರಮಿಸಿದೆ. ಈ ಹೊತ್ತಿನಲ್ಲಿ ನಡೆದು ಬಂದ ಹಾದಿಯ ಗುರುತುಗಳನ್ನು ಅವಲೋಕಿಸಿಕೊಳ್ಳಬೇಕಿದೆ. ಏಕೆಂದರೆ ಹೊಸ ತಲೆಮಾರಿಗೆ ವಿಸ್ತರಿಸಿಕೊಳ್ಳಬೇಕಾದ ಅನಿವಾರ್ಯತೆ ಇರುತ್ತದೆ. ಯಾವುದೇ ಚಾರಿತ್ರಿಕ ಚಳವಳಿಗಳು ಸಾಂಸ್ಕೃತಿಕ ಆಯಾಮವನ್ನು ಒಡಲೊಳಗಿಟ್ಟುಕೊಂಡೇ ಚಲಿಸಿರುತ್ತವೆ. ಪರಿಶೀಲನೆಗೆ ಸಿಂಹಾವಲೋಕನ ಅಂತಾರಲ್ಲ ಹಾಗೆ ಹಿಂದಣದ ಹೆಜ್ಜೆಗಳನ್ನು ಪರಿಚಯಿಸುವ ತುರ್ತಿದೆ. ಬಹಳ ಮುಖ್ಯವಾಗಿ ಚಳವಳಿಗಳನ್ನು ಮತ್ತು ದಲಿತ ಸಾಹಿತ್ಯವನ್ನು ಚಾರಿತ್ರಿಕವಾಗಿ ಅಷ್ಟೇ ನೋಡುವುದಲ್ಲ. ವರ್ತಮಾನ ಪ್ರಜ್ಞೆಯ ಅರಿವಾಗಿ ಎದುರುಗೊಳ್ಳಬೇಕಿದೆ. ಹುಟ್ಟಿನ ಹಿನ್ನೆಲೆ ನಿನ್ನೆಯನ್ನು ಮರೆತರೆ ನಾಳೆಗೆ ಬೆಲೆ ಇಲ್ಲ. ದಲಿತ ಸಾಹಿತ್ಯ ಮತ್ತು ಚಳವಳಿ ಒಂದು ನಾಣ್ಯದ ಎರಡು ಮುಖಗಳಿದ್ದಂತೆ. ಬೇರೆ ಬೇರೆಯಾಗಿ ನೋಡಲಾಗುವುದಿಲ್ಲ. ಇವೆರಡು ಭೂಮಿ ಮತ್ತು ಬೀಜ ಇದ್ದಂತೆ. ಆದರೆ ಅದರ ಬೆಳೆಯ ಇಳುವರಿ ಒಮ್ಮೆ ಹೆಚ್ಚಾಗಿರಬಹುದು ಇನ್ನೊಮ್ಮೆ ಕಡಿಮೆಯೂ ಆಗಿರಬಹುದು. ಇವು ಒಂದರೊಳಗೊಂದು ಸೇರಿ ಪೂರಕ ಪೋಷಕವಾಗಿ ಸ್ಫೂರ್ತಿ ನೀಡಿಕೊಂಡು ಹಬ್ಬಿವೆ. ಚಳವಳಿ ಹುಟ್ಟಿಗೆ ಕಾರಣವಾದದ್ದಾದರೂ ಏನು? ಚಳವಳಿಗೂ ಮತ್ತು ದಲಿತ ಸಾಹಿತ್ಯಕ್ಕೂ ಇರುವ ಬೆಸುಗೆ ಎಂತಹದ್ದು? ಸಾಂಸ್ಕೃತಿಕವಾಗಿ ಹದಗೊಂಡ ಕಾಲ ಎಂಥದ್ದು? ಎಂಬ ಪ್ರಶ್ನೆಗಳ ಹುಡುಕಾಟದಲ್ಲಿ ಹುಟ್ಟಿನ ಹಿನ್ನೆಲೆಯನ್ನು ಗುರುತಿಸಬಹುದಾಗಿದೆ. ಯಾವುದೇ ಚಳವಳಿ ಅದು ಸಾಹಿತ್ಯವಾಗಲಿ ಅಥವಾ ಇನ್ನಿತರದ್ದಾಗಲಿ ಆ ಕಾಲದ ತುರ್ತಿಗೆ ಉತ್ತರದಾಯಿತ್ವವಾಗಿರುತ್ತವೆ. ಅಂದಿನ ಸಾಮಾಜಿಕ ಮತ್ತು ರಾಜಕೀಯ ಒತ್ತಡಗಳಿಗೆ ಪ್ರತಿಕ್ರಿಯಾತ್ಮಕವಾಗಿ ಉತ್ತರಿಸುವ ಒಂದು ಭೂಮಿಕೆ ಸಿದ್ಧಗೊಳ್ಳುತ್ತದೆ. ಈ ಮಾತಿಗೆ ಕರ್ನಾಟಕವು ಹೊರತಲ್ಲ. ಕರ್ನಾಟಕ, ಸಾಮಾಜಿಕ ಚಳವಳಿಯ ತವರೂರು. ಬುದ್ಧನಿಂದ ಹಿಡಿದು ವಚನಕಾರರು, ಕನಕದಾಸರು, ನಾಲ್ವಡಿ ಕೃಷ್ಣರಾಜ ಒಡೆಯರು, ಶಾಹು ಮಹಾರಾಜ್, ಅಂಬೇಡ್ಕರ್ ಮತ್ತು ಕುವೆಂಪು ಇತ್ಯಾದಿಯಾಗಿ ಇವರ ಆಲೋಚನೆಗಳು, ಚಿಂತನೆಗಳು ಮತ್ತು ಆಡಳಿತಾತ್ಮಕವಾದ ಕ್ರಮಗಳು ಅನೇಕ ಬದಲಾವಣೆಗಳಿಗೆ, ಪಲ್ಲಟಗಳಿಗೆ ಅರಿವಿನ ಪ್ರಜ್ಞೆಯಾಗಿ ಪ್ರಭಾವಿಸಿವೆ. ಅಂದರೆ ಕರ್ನಾಟಕದ ನೆಲ ಅನೇಕ ಸಂಗತಿಗಳಿಂದ ಹದವರಿದ ಬೆದೆಯಲ್ಲಿತ್ತು ಎನ್ನುವುದಕ್ಕೆ ಮೇಲಿನ ಚಿಂತನೆಗಳು ದ್ರವ್ಯವಾಗಿವೆ. ಅಲ್ಲದೆ ಅಂದಿನ ಸಾಮಾಜಿಕ ಮತ್ತು ರಾಜಕೀಯ ಒತ್ತಡಗಳು ಕೂಡ ಕಾರಣವಾಗಿದ್ದವು. ಚಳವಳಿಗೆ ಅಂದಿನ ಪರಿಸರವು ವ್ಯಕ್ತಿಗಳನ್ನು ಹುರಿಗೊಳಿಸಿದೆ ಎಂದು ಹೇಳಬಹುದು. ದಲಿತ ಚಳವಳಿಗೆ ಬೀಜ ಮಂತ್ರ ಬೂಸಾ ಪ್ರಕರಣ. ಇದು 1973, ಆಗಸ್ಟ್, 25ರಂದು ನಡೆಯಿತು. ನೆಪ ಮಾತ್ರವಾದ ಘಟನೆ ಅಷ್ಟೇ. ಇದಕ್ಕೆ ಬೇರೆಯದೇ ಆದ ಆಯಾಮವಿದೆ. ನಡೆದಿದ್ದೇನು; ಹೊಸ ಅಲೆ ಎಂಬ ವಿಚಾರ ಸಂಕಿರಣದಲ್ಲಿ ಸಂಜೀವನ್ ಎಂಬವರು ಇಂಗ್ಲಿಷ್‌ನಲ್ಲಿ ‘ಅಂಬೇಡ್ಕರ್ ಥಾಟ್ಸ್’ ಕುರಿತು ಮಾತನಾಡುವಾಗ, ಅಲ್ಲಿನವರು ಕನ್ನಡ ಕನ್ನಡ ಎಂದು ಕೂಗಿದರು. ಆ ಸಂದರ್ಭದಲ್ಲಿದ್ದ ಬಿ. ಬಸವಲಿಂಗಪ್ಪನವರು- ‘‘ಕನ್ನಡದಲ್ಲಿ ಏನಿದೆ? ನಿಮ್ಮ ಬದುಕು ಬವಣೆ ಇದೆಯಾ? ಇರುವುದೆಲ್ಲ ಬೂಸಾ’’ ಎಂದು ಆಕಸ್ಮಿಕವಾಗಿ ಹೇಳಿದ ಮಾತು ತೀವ್ರತೆ ಪಡೆದುಕೊಂಡಿತು. ಪಟ್ಟಭದ್ರ ಹಿತಾಸಕ್ತಿ ಉಳ್ಳವರು, ಜಾತಿವಾದಿಗಳಿಗೆ ಅಸ್ಪಶ್ಯನೊಬ್ಬನ ಅಧಿಕಾರದ ಬಗ್ಗೆ ಅಸಹನೆ ಉಂಟಾಯಿತು. ರಾಜೀನಾಮೆ ಕೊಡಬೇಕಾಯಿತು. ದಲಿತರ ಆತ್ಮ ಗೌರವವನ್ನು ಕೆರಳಿಸಿತು. ಸಂಘಟಿತ ಚೈತನ್ಯವನ್ನು ಹುಟ್ಟು ಹಾಕಿತು. ಸಂಘಟನೆಯ ಹುರಿಯು ತೀವ್ರತೆ ಪಡೆಯಿತು. 1974ರಲ್ಲಿ ಮೈಸೂರಿನಲ್ಲಿ ಕರ್ನಾಟಕ ಬರಹಗಾರರ ಒಕ್ಕೂಟದ ಉದ್ಘಾಟಕರಾಗಿ ಕುವೆಂಪು ಅವರು ಮಾತನಾಡಿದ ಮಾತುಗಳು ಮನನೀಯ; ‘‘ಜಾತಿವಾದಿ ಬ್ರಾಹ್ಮಣರನ್ನು ಸುಮ್ಮನೆ ಕೆಣಕಬಾರದು. ಜೋಡು ನಳಿಗೆಯಿಂದ ಹೊಡೆಯಬೇಕು. ಒಂದು ಪುರೋಹಿತಶಾಹಿ ಹುಲಿಗೆ ಬೀಳಬೇಕು. ಇನ್ನೊಂದು ನಿಮ್ಮ ತಲೆಗೆ ಬೀಳಬೇಕು’’ ಎಂದರು. ಏಕೆಂದರೆ ಬ್ರಾಹ್ಮಣ್ಯತ್ವ ದಲಿತರಲ್ಲೂ ಇದೆ. ಅದು ಸಾಯಬೇಕು ಎಂದು ಅಂದು ಹೇಳಿದ ಮಾತು ಎಂದಿಗೂ ಕೂಡ ವಾಸ್ತವ ಎನಿಸುತ್ತದೆ. ಈ ಕಾಲಘಟ್ಟದಲ್ಲೂ ಪುನರಾವಲೋಕನಗೊಳಿಸುತ್ತದೆ. ಆನಂತರ ದಲಿತ ಕ್ರಿಯಾ ಸಮಿತಿ ಬೆಂಗಳೂರಿನಲ್ಲಿ ರಚನೆಯಾಯಿತು. ಇದೇ ಮೊದಲ ಸಂಘ. ಇದೇ ಕಾಲಕ್ಕೆ ಭದ್ರಾವತಿ ಕಾರ್ಖಾನೆಯ ಕ್ಯಾಂಟೀನ್‌ನಲ್ಲಿ ಅಸ್ಪಶ್ಯತೆ ಆಚರಣೆ ಆಗುತ್ತಿರುವ ಬಗ್ಗೆ, ಅಲ್ಲಿನ ನೌಕರ ಚೆಲುವಯ್ಯ (ಚಂದ್ರ ಪ್ರಸಾದ ತ್ಯಾಗಿ) ಪಂಚಮ ಪತ್ರಿಕೆಯಲ್ಲಿ ವರದಿ ಮಾಡುವಂತೆ ಮನವಿ ಮಾಡಿದ್ದರು. ಪ್ರಶ್ನೆ ಮಾಡಿದ್ದಕ್ಕೆ ಹಲ್ಲೆಯೂ ನಡೆದಿತ್ತು. 1976ರಲ್ಲಿ ಭದ್ರಾವತಿಯಲ್ಲಿ ಸಮಾವೇಶಗೊಂಡ ದಲಿತ ಲೇಖಕರ ಕಲಾವಿದರ ಸಂಘವು (ದಲೇಕಯುಸಂ) ತತ್ವ, ಮಾರ್ಗ ಮತ್ತು ಮುಂದಿನ ದಾರಿಯು ಗಂಭೀರ ಚರ್ಚೆಗೆ ಒಳಗಾಯಿತು. ಇದೇ ಸಂಘವು ದಲಿತ ದಲಿತ ಸಂಘರ್ಷ ಸಮಿತಿ ಎಂದು 1978ರಲ್ಲಿ ಸಾಂಸ್ಥಿಕ ರೂಪ ತಳೆದು ಅಸ್ತಿತ್ವಕ್ಕೆ ಬಂತು. ಒಮ್ಮತದಿಂದ ಬಿ. ಕೃಷ್ಣಪ್ಪನವರನ್ನು ಸಂಚಾಲಕರನ್ನಾಗಿ ಆಯ್ಕೆ ಮಾಡಲಾಯಿತು. ಇದು ಬೆಳೆದು ಬಂದ ದಾರಿಯ ಚಾರಿತ್ರಿಕ ಪರಂಪರೆ. ಸಾಮಾಜಿಕ ಚರಿತ್ರೆಯನ್ನು ಪಲ್ಲಟಗೊಳಿಸಲು ಯತ್ನಿಸಿತು. ಸ್ಥಾಪಿತ ಮೌಲ್ಯಗಳ ಪಲ್ಲಟಕ್ಕೆ ಶ್ರಮಿಸಿತು. ಸಮಾಜದ ಅಮಾನವೀಯ ಮುಖವಾಡಗಳನ್ನು ಬಯಲುಗೊಳಿಸಿ, ವರ್ಣ ವ್ಯವಸ್ಥೆಯನ್ನು ನಿಷ್ಠುರವಾದ ನಿಷ್ಕರ್ಷಗೆ ಒಡ್ಡಿತು. ಒಟ್ಟಿನಲ್ಲಿ ದಲಿತ ಸಾಹಿತ್ಯ ಮತ್ತು ಚಳವಳಿಗೆ ಅಂದಿನ ಸಾಮಾಜಿಕ, ರಾಜಕೀಯ ಒತ್ತಡಗಳಿಂದ ಹದಗೊಂಡು ಚಿಗುರಿತು. ಸಾಮೂಹಿಕ ಪ್ರಯತ್ನದ ಫಲವಾಗಿ ಉದ್ಭವಗೊಂಡಿತು. ಮೊದಲ ತಲೆಮಾರಿನ ಅಕ್ಷರಸ್ಥರು ಚಳವಳಿಯ ಸಂಗಾತಿಗಳಾದರು. ಬಿ. ಬಸವಲಿಂಗಪ್ಪನವರ ಹೇಳಿಕೆಯಿಂದ ಉಂಟಾದ ಒಂದು ಸಣ್ಣ ತರಂಗಕ್ಕೆ ಬಿ. ಕೃಷ್ಣಪ್ಪ, ಚಂದ್ರಪ್ರಸಾದ್ ತ್ಯಾಗಿ, ಎಚ್. ಗೋವಿಂದಯ್ಯ, ಕೋಟಗಾನಹಳ್ಳಿ ರಾಮಯ್ಯ, ಶಿವಾಜಿ ಗಣೇಶನ್, ರಾಕೆ, ಇಂದೂಧರ ಹೊನ್ನಾಪುರ, ಮೋಹನ್ ರಾಜ್, ದೇವನೂರ ಮಹಾದೇವ, ಸಿದ್ದಲಿಂಗಯ್ಯ ಮುಂತಾದವರ ದಣಿವರಿಯದ ಪಟ್ಟಿಯೇ ಸಿಗುತ್ತದೆ. ಸಂಘಟನೆ ಅನ್ನುವುದು ನಿರಂತರವಾದ ಪ್ರಕ್ರಿಯೆ. ಈ ಸಂಘಟನೆಗೆ ದುಡಿದ ಬಹುಜನರು ಇದ್ದಾರೆ. ಇಲ್ಲಿ ಮಹಿಳೆಯರ ಪಾತ್ರವು ಮರೆಯುವಂತಿಲ್ಲ. ಹುಚ್ಚ ಹನುಮಕ್ಕ, ಗಂಗರಾಜಮ್ಮ, ಅಂಜಿನಮ್ಮ ಅನುರಾಧ, ಗಂಗಮ್ಮ ಇತ್ಯಾದಿಯವರ ತಾಯ್ತನದ ಕೊಡುಗೆ ಇದೆ. ‘‘ಹೆಂಡ ಬೇಡ ಸ್ಕೂಲ್ ಬೇಕು’’ ಎಂಬ ಹೋರಾಟವನ್ನು ರೂಪಿಸಿದ ಹೆಗ್ಗಳಿಕೆಯಲ್ಲಿ ಇವರ ಪಾಲಿದೆ. ದಲಿತ ಚಳವಳಿ ಸಾಮಾಜಿಕ ಅಂಚಿನ ಸಮುದಾಯಗಳ ಬಿಡುಗಡೆಗಾಗಿ ಹಾಗೂ ಜನಸಮುದಾಯಗಳ ಅಸ್ಮಿತೆಯ ಕಾವಾಗಿ ರೂಪಗೊಂಡಿತು. ದಲಿತರ ಈ ಚಳವಳಿಗೆ ಹಸಿವೊಂದೇ ಅಸ್ಮಿತೆಯಾಗಿರಲಿಲ್ಲ. ಸಮತೆಯ ಸಾಂಸ್ಕೃತಿಕ ಅಸ್ಮಿತೆಯನ್ನು ಬಯಸಿತ್ತು. ಸ್ವಾಭಾವಿಕವಾದ ನೀರನ್ನು ಮುಟ್ಟುವ ಸಲುವಾಗಿಯೇ ಹೋರಾಟಗಳು ನಡೆದಿವೆ. ನೀರಿಗೂ ಇಲ್ಲಿ ಜಾತಿ ರಾಜಕಾರಣ. ಜಗತ್ತಿನ ಯಾವ ನಾಗರಿಕತೆಯಲ್ಲಿಯೂ ಇಂತಹ ಬರ್ಬರತೆ ಇದ್ದಿರಲಾರದು. ಅವಮಾನ, ಅಸ್ಪಶ್ಯತೆ, ಬಹಿಷ್ಕಾರ, ದೌರ್ಜನ್ಯ, ಕೊಲೆ, ದಹನ, ಸಾರ್ವಜನಿಕ ಸ್ಥಳಗಳ ನಿರ್ಬಂಧ ಇತ್ಯಾದಿಯಾದ ಬಗೆ ಬಗೆಯ ಕ್ರೌರ್ಯಗಳು ದಲಿತರನ್ನು ನಿದ್ದೆಗೆಡಿಸಿದವು. ಕಂಬಾಲಪಲ್ಲಿ, ಬೆಲ್ಜಿ ಹೀಗೆ ಪಟ್ಟಿ ಮಾಡುತ್ತಾ ಹೋದಂತೆಲ್ಲ ದೌರ್ಜನ್ಯಗಳ ದಾಖಲೀಕರಣಕ್ಕೆ ಸಂಪುಟಗಳೇ ಸಾಲದಾಗುತ್ತವೆ, ಪುಟಗಳು ನರಳುತ್ತವೆ. ಅಕ್ಷರಗಳು ರೋದಿಸುತ್ತವೆ! ಶಿಕ್ಷಣದ ಬಗ್ಗೆ ಅರಿವು ಮೂಡಿಸಿದ್ದು ಕೂಡ ಈ ಚಳವಳಿಯ ಭಾಗವೇ ಆಗಿದೆ. ಪ್ರತಿಫಲವಾಗಿ ನೂರಾರು ಶಾಲಾ ಕಾಲೇಜುಗಳು ಮತ್ತು ಹಾಸ್ಟೆಲ್‌ಗಳು ತೆರೆದುಕೊಂಡವು. ದಲಿತರು ಎಂದರೆ ಅಂದು ಎಸ್‌ಸಿ/ಎಸ್‌ಟಿಗಳು ಮಾತ್ರ ಆಗಿರಲಿಲ್ಲ. ದಲಿತೇತರ ಸಂಕಟಗಳಿಗೂ ಸ್ಪಂದಿಸಿವೆ. ಒಟ್ಟಾರೆ ಸಾಮಾಜಿಕ ಸಂದರ್ಭವನ್ನು ಮಾತ್ರ ಗಮನಿಸಿದ್ದಾರೆ; ಜಾತಿಯನ್ನಲ್ಲ. ಕೋಲಾರದ ಕುಂಬಾರ ಮಹಿಳೆ ಅನುಸೂಯಮ್ಮರ ಅತ್ಯಾಚಾರ ಆದಾಗ ಬಹುದೊಡ್ಡ ಹೋರಾಟವನ್ನು ರೂಪಿಸಿದೆ. ಹುಣಸೆ ಕೋಟೆಯ ಶೇಷಗಿರಿಯಪ್ಪನವರ ಕೊಲೆ ಆದಾಗಲೂ ಹೋರಾಟ ಬೆಳೆಸಿದೆ. ಭೂ ರಹಿತರಾದ ದಲಿತರಿಗೆ ಭೂಮಿಗಾಗಿ ಹೋರಾಟಗಳನ್ನು ಸಂಘಟಿಸಿತು. ಇದು ಬಹುದೊಡ್ಡ ಕ್ರಾಂತಿಕಾರಿ ನಿಲುವುಗಳಲ್ಲಿ ಒಂದು. ರಾಜಕೀಯ ಪ್ರಜ್ಞೆ ಬೆಳೆಸಿತು. ಪಲ್ಲಟಗೊಳಿಸುವ ಶಕ್ತಿ ಹೊಂದಿತ್ತು. ಈಗ ದಲಿತ ಚಳವಳಿಯು ಏನು ಮಾಡುತ್ತಿದೆ ಎಂಬ ನಿರೀಕ್ಷೆಯಲ್ಲಿ ಜನರು ಕಾದು ಕುಳಿತಿದ್ದಾರೆ ಎನ್ನುವುದನ್ನು ಮರೆಯುವಂತಿಲ್ಲ. ದಲಿತ ಸಾಹಿತ್ಯ ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ದಲಿತ ಸಾಹಿತ್ಯವು ಸಾಂಸ್ಕೃತಿಕ ದೃಷ್ಟಿಕೋನವನ್ನು ಕಟ್ಟಿಕೊಟ್ಟಿದೆ. ಸಾಹಿತ್ಯದ ಸತ್ವ ಸಂಕಟದ ಅಭಿವ್ಯಕ್ತಿ; ಮಾನವ ಘನತೆಯ ಹಂಬಲಿಕೆ. ಯಾವಾಗ ದಲಿತರ ಎದೆಗೆ ಅಕ್ಷರಗಳು ದಕ್ಕಲ್ಪಟ್ಟವೋ ಅಂದಿನಿಂದ ಅವರಲ್ಲಿ ಪ್ರಜ್ಞೆ, ಎಚ್ಚರ, ಸಂಘಟನೆ, ಹೋರಾಟಗಳು ಗೂಡು ಕಟ್ಟಿದವು. ಬಹಿಷ್ಕೃತರಾದ ಮೂಕ ಜನರಿಗೆ ದನಿ ಬಂತು. ದಲಿತ ಸಾಹಿತ್ಯ ಈ ನಾಡಿನ ಮಣ್ಣಲ್ಲಿ ಮಣ್ಣಾದವರ ಜನಸಾಮಾನ್ಯರ ಕಥೆಯನ್ನು ಹೇಳಲು ಹೊರಟವು. ಕಟ್ಟಿದ ಪದಪುಂಜ ಮತ್ತು ನುಡಿಗಟ್ಟುಗಳು ಮುಂಗಾರು ಮಳೆಯಂತೆ ಪ್ರವೇಶಿಸಿದವು. ದಲಿತ ಸಾಹಿತ್ಯಕ್ಕೆ ಚಳವಳಿಗಳೇ ತಾಯಿ ಬೇರು. ಹಾಗಾಗಿ ಇದಕ್ಕೊಂದು ಪ್ರತ್ಯೇಕವಾದ ಐಡೆಂಟಿಟಿ ಇದೆ. ಅಕ್ಷರದ ಮೂಲಕ ಮಾನವೀಯತೆಯ ಶಾಯಿಯಿಂದ ಸಮುದಾಯಗಳನ್ನು ಹೊಲಿಯುವ ಕೆಲಸ ಮಾಡಿತು. ದಲಿತ ಸಾಹಿತ್ಯವೆಂದರೆ, ಕಥೆ, ಕವನ, ಕಾದಂಬರಿ, ಆತ್ಮಕಥೆಗಳು ಮಾತ್ರವಲ್ಲ. ಪ್ರಕಟಿತ, ಅಪ್ರಕಟಿತ, ಗೋಚರ, ಅಗೋಚರ, ಮೂರ್ತ, ಅಮೂರ್ತ ಸಂಗತಿಗಳೂ ಆಗಿವೆ. ‘‘ನಾಡ ನಡುವಿನಿಂದ ಸಿಡಿದ ನೋವಿನ ಕೂಗೇ, ಆಕಾಶದ ಅಗಲಕ್ಕೂ ನಿಂತ ಆಲವೇ’’ ಎಂದದ್ದು ಕವಿ ಸಿದ್ದಲಿಂಗಯ್ಯನವರು. ಈ ಮಾತು ಸಾಹಿತ್ಯದ ಆಶಯ ಮತ್ತು ಚಳವಳಿಯ ಹಿನ್ನೆಲೆಯನ್ನು ಸ್ಪಷ್ಟಪಡಿಸುತ್ತದೆ. ಸಿಡಿದ ನೋವಿನ ಕೂಗು ನಾಡ ನಡುವಿನಿಂದಲೇ ಆಲದಂತೆ ವ್ಯಾಪಿಸಿಕೊಂಡಿದೆ. ಸಿದ್ದಲಿಂಗಯ್ಯನವರ ‘ಹೊಲೆ ಮಾದಿಗರ ಹಾಡು’, ದೇವನೂರ ಮಹಾದೇವ ಅವರ ‘ಒಡಲಾಳ’ ಮತ್ತು ‘ಕುಸುಮಬಾಲೆ’ ಸಂಚಲನವನ್ನು ಉಂಟು ಮಾಡಿದವು. ದಲಿತ ಚಳವಳಿಗೆ ಉತ್ತಮವಾದ ಮಾಧ್ಯಮವಾದದ್ದು ಹಾಡು. ಜನಾರ್ದನ, ಪಿಚ್ಚಳಿ ಶ್ರೀನಿವಾಸರಂತಹ ಹಾಡುಗಾರರನ್ನು ನೆನೆಯಲೇಬೇಕು. ತಮಟೆಯ ಮೂಲಕ ಮೂಕ ಜನರನ್ನು ತಲುಪುವ, ದಾಟಿಸುವ ಹೊಸ ಬಗೆಯ ಹುರುಪು ತಂದಿದೆ. ಹೋರಾಟಗಾರನೊಳಗೆ ಹಾಡುಗಾರನೂ ಇದ್ದ. ಸಾಹಿತಿಯೂ ಇದ್ದ. ಚಳವಳಿಯ ಉತ್ಪಾದನೆಯೇ ಸಾಹಿತ್ಯ. ಕವಿ ಸಿದ್ದಲಿಂಗಯ್ಯ, ದೇವನೂರ ಮಹಾದೇವ, ಕೆ.ಬಿ. ಸಿದ್ದಯ್ಯ, ಚೆನ್ನಣ್ಣ ವಾಲಿಕಾರ್, ದು. ಸರಸ್ವತಿ ಹೀಗೆ ಪರಂಪರೆಯಲ್ಲಿ ದೊಡ್ಡ ವರ್ಗವನ್ನೇ ಗುರುತಿಸಬಹುದು. ದಲಿತ ಸಂಘಟನೆಯ ವಾಸ್ತವತೆ ನೀರಿಗೆ ಬಿದ್ದ ಎಲೆಗಳು ಕೊಳೆತು ಹೋಗುತ್ತವೆಯೇ ವಿನಃ ನೀರು ಕೊಳೆಯುವುದಲ್ಲ. ಈ ಹೇಳಿಕೆಯಲ್ಲಿನ ಸೂಕ್ಷ್ಮತೆಯನ್ನು ಗಮನಿಸಬೇಕು. ನೀರು ಎಂದಿಗೂ ಕೊಳೆಯುವುದಿಲ್ಲ ಇದು ಸಾರ್ವತ್ರಿಕ ಸತ್ಯ. ಆದರೆ ಎಲೆ, ಕಸ, ಕಡ್ಡಿ ಇಂತಹವುಗಳಿಂದ ನೀರನ್ನು ಕಲುಷಿತಗೊಳಿಸಲು ಸಾಧ್ಯವಿದೆ. ಈ ಮಲಿನತೆಯನ್ನು ಬೇರ್ಪಡಿಸಿದರೆ ನೀರು ತನ್ನ ಮೂಲ ಶಕ್ತಿಯನ್ನು ಪಡೆದುಕೊಳ್ಳುತ್ತದೆ. ಇನ್ನೊಂದು ಸಾಧ್ಯತೆ, ಹರಿಯುವ ನೀರಿಗೆ ಕಸವನ್ನು ನೂಕ ಬಲ್ಲ ಶಕ್ತಿ ಇದೆ. ಅಂತಹ ಫೋರ್ಸ್ ಬೇಕು. ದಲಿತ ಸಂಘಟನೆಗಳಿಗೆ ಆತ್ಮವಿಮರ್ಶೆಯ ಕಾಲ. ಸಂಭ್ರಮದ ಕಾಲವಂತೂ ಅಲ್ಲ. ಸಾವಿನ ಮನೆಯಂತೆ ಆಗಿದೆ. ಸೂತಕದ ಛಾಯೆ ಕಾಡುತ್ತಿದೆ. ‘‘ಇಂದು ದಲಿತ, ದಲಿತನಾಗಿ ಉಳಿದಿಲ್ಲ. ಮಾದಿಗ, ಹೊಲೆಯ, ಕೊಲಂಬೋ ಆಗಿ ವಿಂಗಡಿಸಿ ಹೋಗಿದ್ದಾನೆ’’ ಎನ್ನುವ ಕೆ. ರಾಮಯ್ಯನವರ ಮಾತು ಈ ಸಂದರ್ಭಕ್ಕೆ ಸುಸಂಗತವೇ. ಚದುರಿ ನಿಂತಿದ್ದಾನೆ. ತಮ್ಮ ತಮ್ಮ ಸಮುದಾಯಗಳಲ್ಲಿ ವಿಘಟನೆಯಾಗಿ ನಿಂತಿದ್ದಾನೆ ಎನ್ನುವುದು ವಾಸ್ತವ. ಆತ್ಮ ಯಾವ ಸಿದ್ಧಾಂತಕ್ಕೆ ಅಂಟಿಕೊಂಡಿದೆ ಎನ್ನುವುದನ್ನು ಸ್ಪಷ್ಟಪಡಿಸಿಕೊಳ್ಳಬೇಕಿದೆ. ಇದರ ಮಧ್ಯೆ ಒಂದು ಸಮಾಧಾನದ ಸಂಗತಿ ಎಂದರೆ ಸಂಘಗಳು ಚದುರಿ ಹೋಗಿವೆ ಅಂತ ಮೇಲ್ನೋಟಕ್ಕೆ ಕಾಣಿಸಿದರೂ ತಾತ್ವಿಕ ವಿಚಾರಕ್ಕೆ ಒಂದಾಗುತ್ತಿವೆ. ಈ ಛಿದ್ರತೆಯನ್ನು ಸಾವಯವಗೊಳಿಸಲು, 1930ರಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಹೇಳಿದ ಮಾತಿಗೆ ಕಿವಿಗೊಡಬೇಕಿದೆ. ಆ ಕಾಲದಲ್ಲಿ ಎಲ್ಲರೂ ರಿಕನ್‌ಸ್ಟ್ರಕ್ಷನ್ ಬಗ್ಗೆ ಮಾತನಾಡಿದರೆ, ಬಾಬಾ ಸಾಹೇಬರು ರಿಜನರೇಷನ್ ಬಗ್ಗೆ ಮಾತನಾಡುತ್ತಾರೆ. ಅಂದಿನ ಈ ಚಿಂತನೆಯ ಮಾತು ಇಂದಿಗೆ ಬೇಕೆನಿಸುತ್ತದೆ. ಯಾವುದೇ ಚಳವಳಿಗಳಿಗೆ ನೈತಿಕತೆ ಮತ್ತು ಸ್ಫೂರ್ತಿ ಇಲ್ಲದೆ ಹೋದರೆ ಅವುಗಳಿಗೆ ಭವಿಷ್ಯವಿರುವುದಿಲ್ಲ. ಜೊತೆಗೆ ತಾತ್ವಿಕತೆಯನ್ನು ಎಂದೂ ಬಿಟ್ಟುಕೊಡಬಾರದು. ಬಿ. ಕೃಷ್ಣಪ್ಪನವರು ಹೇಳಿದ ಎಚ್ಚರಿಕೆ ಮಾತಿದು; ‘‘ದಲಿತರ ಗುಡಿಸಲಿನಲ್ಲಿ ಚಳವಳಿಯ ದೀಪ ಹಚ್ಚಿದ್ದೇನೆ. ಒಳಗೆ ಕತ್ತಲು ಹೊರಗೆ ಬಿರುಗಾಳಿ ಆರದಂತೆ ನೋಡಿಕೊಳ್ಳಿ’’. ಗಾಯಗಳು ನೋವು ಕೊಡುತ್ತವೆ, ಎಚ್ಚರವನ್ನು ಕೊಡುತ್ತವೆ. ಆದರೆ ಗಾಯಗಳು ಸಂತೋಷವನ್ನು ಕೊಡಬಾರದು! ದಲಿತ ಸಂಘಟನೆಗಳು ರಾಜಕೀಯ ಪ್ರಜ್ಞೆಯೇನೋ ಬೆಳೆಸಿತು. ರಾಜಕೀಯ ಅಧಿಕಾರವನ್ನು ದಕ್ಕಿಸಿ ಕೊಟ್ಟಿಲ್ಲ. ಇಂದಿಗೂ ಕರ್ನಾಟಕದಲ್ಲಿ ದಲಿತ ಮುಖ್ಯಮಂತ್ರಿ ಆಗುವ ಕೂಗು ಸಾಕಾರಗೊಂಡಿಲ್ಲ. ‘ದಲಿತರು ಬರುವರು ದಾರಿ ಬಿಡಿ; ದಲಿತರಿಗೆ ರಾಜ್ಯ ಕೊಡಿ’ ಎಂದ ಸಿದ್ದಲಿಂಗಯ್ಯನವರ ಕೂಗು ಇನ್ನೂ ಅಪೂರ್ಣವಾಗಿಯೇ ಇದೆ. (ಕರ್ನಾಟಕ ಸಾಹಿತ್ಯ ಅಕಾಡಮಿ ಮತ್ತು ಕನ್ನಡ ಅಧ್ಯಯನ ಕೇಂದ್ರ ಬೆಂಗಳೂರು ವಿಶ್ವವಿದ್ಯಾನಿಲಯದ ಸಹಯೋಗದಲ್ಲಿ ನಡೆದ ‘ದಲಿತ ಸಾಹಿತ್ಯ ಮತ್ತು ಚಳವಳಿ-50’ ವಿಷಯವಾಗಿ ಜನವರಿ 2, 3 ಮತ್ತು 4ನೇ ತಾರೀಕಿನವರೆಗೆ ನಡೆದ ರಾಜ್ಯಮಟ್ಟದ ಅಧ್ಯಯನ ಶಿಬಿರದ ಸ್ಥೂಲ ನೋಟವಿದು)

ವಾರ್ತಾ ಭಾರತಿ 13 Jan 2026 12:04 pm

ಧರ್ಮಸ್ಥಳ ಪ್ರಕರಣ | ಕುಸುಮಾವತಿ ಸಲ್ಲಿಸಿದ ಪಿಐಎಲ್ ವಿಚಾರಣೆ: ಸರಕಾರದ ಅಭಿಪ್ರಾಯ ಸಲ್ಲಿಸಲು ಹೈಕೋರ್ಟ್ ಸೂಚನೆ

ಬೆಂಗಳೂರು: ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾದ 74 ಅಸಹಜ ಸಾವು ಪ್ರಕರಣಗಳನ್ನು ಪ್ರತ್ಯೇಕ ಎಫ್ಐಆರ್ ಮಾಡಿ ತನಿಖೆ ನಡೆಸಲು ವಿಶೇಷ ತನಿಖಾ ತಂಡಕ್ಕೆ (SIT) ಸೂಚಿಸಬೇಕು ಎಂದು ಸೌಜನ್ಯ ತಾಯಿ ಕುಸುಮಾವತಿ ಅವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಇಂದು ಕರ್ನಾಟಕ ಹೈಕೋರ್ಟ್ ಮುಖ್ಯನ್ಯಾಯಮೂರ್ತಿ ಪೀಠದ ಮುಂದೆ ವಿಚಾರಣೆಗೆ ಬಂತು. ಹಿರಿಯ ವಕೀಲ ಎಸ್ ಬಾಲನ್ ಅವರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಧರ್ಮಸ್ಥಳ ಎಂಬ ಗ್ರಾಮದ ಸಣ್ಣ ಹೊರಠಾಣೆ ಪೋಲೀಸ್ ಠಾಣಾ ವ್ಯಾಪ್ತಿಯೊಂದರಲ್ಲೇ 74 ಅಸಹಜ ಸಾವು ಪ್ರಕರಣಗಳು ವರದಿಯಾಗಿದೆ. ಈ ಪ್ರಕರಣಗಳ ತನಿಖೆ ಮಾಡಲೆಂದೇ ರಾಜ್ಯ ಸರ್ಕಾರ ಎಸ್ಐಟಿ ರಚಿಸಿದೆ. ಆದರೆ, ಎಸ್ಐಟಿಯು ಕೇವಲ ಒಂದು ಎಫ್ಐಆರ್ ದಾಖಲಿಸಿದೆ. ಉಳಿದ 74 ಕೊಲೆ, ನಾಪತ್ತೆ, ಸಾವು ಪ್ರಕರಣಗಳಿಗೆ ಪ್ರತ್ಯೇಕ ಎಫ್ಐಆರ್ ದಾಖಲಿಸಿಲ್ಲ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿತ್ತು. ಇಂದು ಹೈಕೋರ್ಟ್ ಮುಖ್ಯನ್ಯಾಯಮೂರ್ತಿ ಪೀಠದಲ್ಲಿ ಈ ಕುರಿತು ವಾದ ಮಂಡಿಸಿದ ಎಸ್ ಬಾಲನ್, ಒಂದು ಸಣ್ಣ ಗ್ರಾಮದಲ್ಲಿ 74 ಅಸಹಜ ಸಾವು ಸಂಭವಿಸಿದ್ದು, ಒಂದು ಎಫ್ಐಆರ್ ಮೂಲಕ ಅದರ ಕ್ರಿಮಿನಲ್ ವಿಚಾರಣೆ ನಡೆದಿದೆ‌. ಇದು ಸರಿಯಾದ ಕ್ರಮವಲ್ಲ ಎಂದರು. ಸರ್ಕಾರದ ಪರ ವಕೀಲರು ಮಧ್ಯಪ್ರವೇಶಿಸಿ ಸರ್ಕಾರಕ್ಕೆ ಇನ್ನೂ ಪ್ರಕರಣದ ದಾಖಲೆ ಸಲ್ಲಿಸಿಲ್ಲ. ದಾಖಲೆ ಇಲ್ಲದೇ ಸರ್ಕಾರ ಅಭಿಪ್ರಾಯ ಹೇಳಲು ಹೇಗೆ ಸಾದ್ಯ? ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಹೈಕೋರ್ಟ್ ಮುಖ್ಯನ್ಯಾಯಮೂರ್ತಿಗಳು, ಪ್ರಕರಣ ಇರುವುದು, 74 ಅಸಹಜ ಸಾವುಗಳಿಗೆ ಪ್ರತ್ಯೇಕ ಎಫ್ಐಆರ್ ದಾಖಲಿಸಿಲ್ಲ ಎನ್ನುವುದು. ಸರ್ಕಾರವು ನ್ಯಾಯಾಲಯದಲ್ಲಿರುವ ದಾಖಲೆಯನ್ನೇ ಪಡೆದುಕೊಂಡು ಅಭಿಪ್ರಾಯ ಸಲ್ಲಿಸಿ ಎಂದು ಸರ್ಕಾರಕ್ಕೆ ಸೂಚಿಸಿತು. ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಫೆಬ್ರವರಿ 03 ಕ್ಕೆ ಮುಂದೂಡಿದ್ದು, ಅಂದು ವಿಸ್ತೃತ ವಿಚಾರಣೆ ನಡೆಯಲಿದೆ.

ವಾರ್ತಾ ಭಾರತಿ 13 Jan 2026 11:59 am

ಸಾರಿಗೆ ಬಸ್‌ಗಳಲ್ಲಿ ಪ್ರಯಾಣಿಸುವಾಗ 'ಚಿಲ್ಲರೆ ಜಗಳ' ಕ್ಕೆ ಫುಲ್ ಸ್ಟಾಪ್!

ರಾಯಚೂರು ಸಾರಿಗೆ ಬಸ್‌ಗಳಲ್ಲಿ ಇನ್ನು ಮುಂದೆ ಚಿಲ್ಲರೆ ಜಗಳಕ್ಕೆ ಗುಡ್‌ಬೈ ಹೇಳಬಹುದು. ಕ್ಯೂಆರ್‌ ಕೋಡ್‌ ಸ್ಕ್ಯಾನ್‌ ಅಥವಾ ಎಟಿಎಂ ಕಾರ್ಡ್‌ ಬಳಸಿ ಟಿಕೆಟ್‌ ಪಡೆಯುವ ಡಿಜಿಟಲ್‌ ಪಾವತಿ ವ್ಯವಸ್ಥೆ 10 ದಿನಗಳಲ್ಲಿ ಜಾರಿಗೆ ಬರಲಿದೆ. ಒಟ್ಟು 692 ಬಸ್‌ಗಳಲ್ಲಿ ಈ ಸೌಲಭ್ಯ ಲಭ್ಯವಾಗಲಿದ್ದು, ಪ್ರಯಾಣಿಕರಿಗೆ ಹಾಗೂ ನಿರ್ವಾಹಕರಿಗೆ ಅನುಕೂಲವಾಗಲಿದೆ.

ವಿಜಯ ಕರ್ನಾಟಕ 13 Jan 2026 11:46 am

1 ವರ್ಷದಲ್ಲೇ 1ಲಕ್ಷ ವೀಸಾ ರದ್ದುಗೊಳಿಸಿದ ಟ್ರಂಪ್‌ ಆಡಳಿತ: ಅಮೆರಿಕಾದ ಭದ್ರತೆಗಾಗಿ ವೀಸಾ ರದ್ದತಿ ಮುಂದುವರೆಸುವುದಾಗಿ ಹೇಳಿಕೆ

ಅಮೆರಿಕಾ ಫಸ್ಟ್‌ ನೀತಿಯನ್ನು ಅನುಸರಿಸುತ್ತಿರುವ ಅಮೆರಿಕಾ ಅಧ್ಯಕ್ಷ ಟ್ರಂಪ್ ಅಧಿಕಾರಕ್ಕೆ ಬಂದು 1 ವರ್ಷ ತುಂಬಲು ಇನ್ನು ಕೆಲದಿನಗಳು ಬಾಕಿ ಇದೆ. ಈ ಹಿನ್ನಲೆಯಲ್ಲಿ ಅಮೆರಿಕಾದ ವಿದೇಶಾಂಗ ಇಲಾಖೆ ಘೋಷಣೆಯೊಂದನ್ನು ಮಾಡಿದ್ದು, ಟ್ರಂಪ್ ಆಡಳಿತದಲ್ಲಿ ಕೇವಲ ಒಂದು ವರ್ಷದಲ್ಲಿ ಸುಮಾರು 1 ಲಕ್ಷ ವೀಸಾಗಳನ್ನು ರದ್ದುಪಡಿಸಲಾಗಿದೆ.ಇದರಲ್ಲಿ ಅಪರಾಧ ಹಿನ್ನೆಲೆಯುಳ್ಳವರಿಗೆ ನೀಡಿದ್ದ ವೀಸಾಗಳನ್ನು ಅತಿ ಹೆಚ್ಚಾಗಿ ರದ್ದು ಮಾಡಲಾಗಿದೆ.ಇನ್ನು, ವಿದ್ಯಾರ್ಥಿ ವೀಸಾಗಳು, ವಿಶೇಷ ವೀಸಾಗಳು ಕೂಡ ರದ್ದಾಗಿದ್ದು, ಅಮೆರಿಕಾದ ಭದ್ರತಾ ಕಾರಣಗಳಿಗಾಗಿ ಈ ಕ್ರಮ ಮುಂದುವರೆಯಲಿದೆ ಎಂದು ತಿಳಿಸಿದ್ದಾರೆ.

ವಿಜಯ ಕರ್ನಾಟಕ 13 Jan 2026 11:44 am

ಇಟಗಿ : ಸ್ವಾಮಿ ವಿವೇಕಾನಂದರ ಜಯಂತಿ ಆಚರಣೆ

ವಿವೇಕಾನಂದರ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ: ಶಿಕ್ಷಕ ಜಯಪ್ಪ

ವಾರ್ತಾ ಭಾರತಿ 13 Jan 2026 11:42 am

Gold Price Jan 13: ಚಿನ್ನದ ಬೆಲೆ 3,800 ರೂ. &ಬೆಳ್ಳಿ ಬೆಲೆ ಬರೋಬ್ಬರಿ 5,000 ರೂ. ಹೆಚ್ಚಳ

ಚಿನ್ನದ ಬೆಲೆಯು ನಿರಂತರವಾಗಿ ಹೆಚ್ಚಳವಾಗುತ್ತಿದ್ದು, ಚಿನ್ನದ ಬೆಲೆಯು ಮಂಗಳವಾರ ಜನವರಿ 13ರಂದು ಮತ್ತೆ ಹೆಚ್ಚಳ ಕಂಡಿದೆ. ಕಳೆದ ಕೆಲವು ದಿನಗಳಿಂದ ಚಿನ್ನದ ಬೆಲೆಯು ನಿರಂತರವಾಗಿ ಹೆಚ್ಚಳವಾಗುತ್ತಿದೆ. ಇದೀಗ ಭಾರತದ ಮೇಲೆ ಅಮೆರಿಕಾ ಬೇಕಾಬಿಟ್ಟಿ ಸುಂಕ ವಿಧಿಸುತ್ತಿದೆ. ಈ ಎಲ್ಲಾ ಕಾರಣಗಳಿಂದ ಚಿನ್ನದ ಬೆಲೆಯು ನಿರಂತರವಾಗಿ ಹೆಚ್ಚಳವಾಗುತ್ತಿದೆ. ಜನವರಿ 13ರ ಚಿನ್ನ ಮತ್ತು ಬೆಳ್ಳಿಯ ಬೆಲೆ ಎಷ್ಟಿದೆ ಎನ್ನುವ

ಒನ್ ಇ೦ಡಿಯ 13 Jan 2026 11:42 am

ಮದಗಜಗಳ ನಡುವೆ ಮೆಗಾ 'ಎಐ' ಒಪ್ಪಂದ, ಟೆಕ್‌ ವಲಯದಲ್ಲಿ ಸುನಾಮಿ ಎಬ್ಬಿಸಿದ ಆಪಲ್‌-ಗೂಗಲ್‌!

ಎಐ ತಂತ್ರಜ್ಞಾನದಲ್ಲಿ ಹಿಂದುಳಿದಿದ್ದ ಆಪಲ್ ಕಂಪನಿಯು, ತನ್ನ ಐಫೋನ್ ಮತ್ತು ಇತರೆ ಉತ್ಪನ್ನಗಳಲ್ಲಿ ಕೃತಕ ಬುದ್ಧಿಮತ್ತೆಯನ್ನು ಅಳವಡಿಸಲು ಎದುರಾಳಿ ಗೂಗಲ್ ಜೊತೆ ಮಹತ್ವದ ಒಪ್ಪಂದ ಮಾಡಿಕೊಂಡಿದೆ. ಇದರ ಅನ್ವಯ, ಆಪಲ್‌ನ 'ಸಿರಿ' ಮತ್ತು 'ಆಪಲ್ ಇಂಟೆಲಿಜೆನ್ಸ್' ಇನ್ಮುಂದೆ ಗೂಗಲ್‌ನ 'ಜೆಮಿನಿ' ಎಐ ಮಾಡೆಲ್ ಆಧಾರದ ಮೇಲೆ ಕಾರ್ಯನಿರ್ವಹಿಸಲಿವೆ. ಬಳಕೆದಾರರ ಗೌಪ್ಯತೆಗೆ ಧಕ್ಕೆಯಾಗದಂತೆ ಈ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವುದಾಗಿ ಆಪಲ್ ತಿಳಿಸಿದೆ. ಈ ಒಪ್ಪಂದದಿಂದ ಗೂಗಲ್‌ನ ಮಾರುಕಟ್ಟೆ ಮೌಲ್ಯ 4 ಟ್ರಿಲಿಯನ್ ಡಾಲರ್‌ಗೆ ಏರಿಕೆಯಾಗಿದ್ದರೆ, ಎಲಾನ್ ಮಸ್ಕ್ ಈ ನಡೆಯನ್ನು 'ಅಧಿಕಾರದ ಕೇಂದ್ರೀಕರಣ' ಎಂದು ಟೀಕಿಸಿದ್ದಾರೆ.

ವಿಜಯ ಕರ್ನಾಟಕ 13 Jan 2026 11:28 am

Government Employees: ರಾಜ್ಯ ಸರ್ಕಾರಿ ನೌಕರರಿಗೆ 15 ದಿನಗಳ ಗಳಿಕೆ ರಜೆ: ರಾಜ್ಯ ಸರ್ಕಾರ ಮಹತ್ವದ ಆದೇಶ

ಬೆಂಗಳೂರು: ಕರ್ನಾಟಕ ಸರ್ಕಾರ ರಾಜ್ಯ ಸರ್ಕಾರಿ ನೌಕರರಿಗೆ ಭರ್ಜರಿ ಗುಡ್‌ ನ್ಯೂಸ್‌ ನೀಡಿದೆ. ರಾಜ್ಯ ಸರ್ಕಾರವು 2026ನೇ ಸಾಲಿನ ಅವಧಿಗೆ ಗಳಿಕೆ ರಜೆಯನ್ನು ಆಧ್ಯರ್ಪಿಸಿ ನಗದೀಕರಣ ಪಡೆಯುವ ಸೌಲಭ್ಯವನ್ನು ನಿಯಮಿತಗೊಳಿಸಿ ಆದೇಶಿಸಿದೆ. ಈ ಕುರಿತಂತೆ ಆರ್ಥಿಕ ಇಲಾಖೆಯ ಸರ್ಕಾರ ಅಧೀನ ಕಾರ್ಯದರ್ಶಿ ನಡವಳಿಯನ್ನು ಹೊರಡಿಸಿದ್ದು, ದಿನಾಂಕ: 17.1.2025ರ ಸರ್ಕಾರಿ ಆದೇಶದಲ್ಲಿ 2025ನೇ ಸಾಲಿನ ಬ್ಲಾಕ್ ಅವಧಿಗೆ ಕರ್ನಾಟಕ

ಒನ್ ಇ೦ಡಿಯ 13 Jan 2026 11:25 am

ಸಿದ್ದರಾಮಯ್ಯ ವಿರುದ್ಧ ಹಳೇ ಲೆಕ್ಕಾ ಚುಕ್ತಾ ಮಾಡಲು ರೆಡ್ಡಿ ಬ್ರದರ್ಸ್ ಪ್ಲ್ಯಾನ್ : 310 ಕಿ.ಮೀ ಪಾದಯಾತ್ರೆಗೆ ಫಿಕ್ಸಾಗುತ್ತಾ ಮುಹೂರ್ತ?

ಬಳ್ಳಾರಿಯ ರೆಡ್ಡಿ ಸಹೋದರರ ವಿರುದ್ಧ ಹಾಲಿ ಸಿಎಂ ಸಿದ್ದರಾಮಯ್ಯ ಅವರು 2012 ರಲ್ಲಿ ಪಾದಯಾತ್ರೆ ನಡೆಸಿದ್ದರು. ಇದೊಂದು ಐತಿಹಾಸಿಕ ಪಾದಯಾತ್ರೆಯಾಗಿತ್ತು. ರಾಜ್ಯದಲ್ಲಿ ಹಲವು ರಾಜಕೀಯ ಪಲ್ಲಟಗಳಿಗೂ ಇದು ಕಾರಣವಾಗಿತ್ತು. ಇದೀಗ ಸಿದ್ದರಾಮಯ್ಯ ವಿರುದ್ಧ ಹಳೇ ಲೆಕ್ಕಾ ಚುಕ್ತಾ ಮಾಡಲು ರೆಡ್ಡಿ ಬ್ರದರ್ಸ್ ಪ್ಲ್ಯಾನ್ ಮಾಡಿಕೊಳ್ಳುತ್ತಿದ್ದಾರೆ. ಬಳ್ಳಾರಿಯಲ್ಲಿ ನಡೆದ ಗಲಾಟೆ ಹಿನ್ನೆಲೆಯಲ್ಲಿ ಸರ್ಕಾರದ ವಿರುದ್ಧ ಪಾದಯಾತ್ರೆಗೆ ಚಿಂತನೆ ನಡೆಯುತ್ತಿದೆ. ಆದರೆ ಈ ಪಾದಯಾತ್ರೆಗೆ ಇನ್ನು ಬಿಜೆಪಿ ರಾಜ್ಯ ನಾಯಕತ್ವ ಅನುಮತಿ ನೀಡಿಲ್ಲ.

ವಿಜಯ ಕರ್ನಾಟಕ 13 Jan 2026 11:25 am

ವೇದಿಕೆಯಲ್ಲೇ ಸಿಎಂ, ಡಿಸಿಎಂಗೆ ಮಾತಿನಲ್ಲಿ ’ಚುಚ್ಚಿದ’ ಎಐಸಿಸಿ ಅಧ್ಯಕ್ಷರು : ಖರ್ಗೆ ಅಸಮಾಧಾನಕ್ಕೆ ಕಾರಣವೇನು?

Kalyana Karnataka Development : ಕಲ್ಯಾಣ ಕರ್ನಾಟಕದ ಭಾಗಕ್ಕೆ ತೋರುತ್ತಿರುವ ತಾರತಮ್ಯದ ಬಗ್ಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವೇದಿಕೆಯಲ್ಲೇ ಅಸಮಾಧಾನವನ್ನು ವ್ಯಕ್ತ ಪಡಿಸಿದ ವಿದ್ಯಮಾನ ಕಲಬುರಗಿ ಜಿಲ್ಲೆಯ ಯಡ್ರಾಮಿಯಲ್ಲಿ ನಡೆದಿದೆ. ಅನುದಾನವು ಸರಿಯಾಗಿ ಹಂಚಿಕೆಯಾಗುತ್ತಿಲ್ಲ ಎನ್ನುವ ಕೋಪವನ್ನು ಅವರು ಪರೋಕ್ಷವಾಗಿ ಹೊರಹಾಕಿದ್ದಾರೆ.

ವಿಜಯ ಕರ್ನಾಟಕ 13 Jan 2026 11:23 am

ಮೌಲಾನಾ ಸಗೀರ್ ಅಹಮದ್ ಖಾನ್ ರಶಾದಿ ಪಾರ್ಥಿವ ಶರೀರಕ್ಕೆ ಸಿಎಂ ಸಿದ್ದರಾಮಯ್ಯ ಅಂತಿಮ ನಮನ

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದಾರುಲ್ ಉಲೂಮ್ ಸಬೀಲುರ್ ರಶಾದ್ ಸಂಸ್ಥೆಯ ಮುಖ್ಯಸ್ಥರಾಗಿದ್ದ ದಿವಂಗತ ಹಝ್ರತ್ ಮೌಲಾನಾ ಸಗೀರ್ ಅಹಮದ್ ಖಾನ್ ರಶಾದಿ ಅವರ ಪಾರ್ಥಿವ ಶರೀರಕ್ಕೆ ಅಂತಿಮ ಗೌರವ ಸಲ್ಲಿಸಿ, ಅವರ ಅಗಲಿಕೆಯಿಂದ ದುಃಖಿತವಾಗಿರುವ ಕುಟುಂಬದವರಿಗೆ ನೋವು ಭರಿಸುವ ಶಕ್ತಿ ನೀಡಲಿ ಎಂದು ಸಾಂತ್ವನ ಹೇಳಿದರು. ಈ ಸಂದರ್ಭದಲ್ಲಿ ಸಚಿವರಾದ ಕೆ.ಜೆ. ಜಾರ್ಜ್, ಜಮೀರ್ ಅಹಮದ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್, ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಅಂಜುಂ ಪರ್ವೇಜ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

ವಾರ್ತಾ ಭಾರತಿ 13 Jan 2026 11:19 am

SAKALESHPURA: ಕಾಡಾನೆ ದಾಳಿಗೆ ಮಹಿಳೆ ಬಲಿ

ಹಾಸನ: ಕಾಡಾನೆ ದಾಳಿ ಮಾಡಿ ಮಹಿಳೆಯೊಬ್ಬರನ್ನು ಕೊಂದು ಹಾಕಿರುವ ಘಟನೆ ಸಕಲೇಶಪುರ ತಾಲೂಕಿನ ಮೂಗಲಿ ಗ್ರಾಮದಲ್ಲಿ ಮಂಗಳವಾರ ಬೆಳಗ್ಗೆ ನಡೆದಿದೆ. ಮೃತರನ್ನು ಶೋಭಾ(40) ಎಂದು ಗುರುತಿಸಲಾಗಿದೆ. ಶೋಭಾ ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಏಕಾಏಕಿ ದಾಳಿ ಮಾಡಿದ ಕಾಡಾನೆ ತುಳಿದು ಕೊಂದಿದೆ. ಘಟನೆಯ ಮಾಹಿತಿ ಪಡೆದ ತಕ್ಷಣ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ತೆರಳಿದ್ದಾರೆ. ಹಾಸನ ಜಿಲ್ಲೆಯಲ್ಲಿ ಮಾನವ–ಕಾಡಾನೆ ನಡುವಿನ ಸಂಘರ್ಷ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿದ್ದು, ಗ್ರಾಮಸ್ಥರಲ್ಲಿ ಆತಂಕ ಹೆಚ್ಚಾಗಿದೆ.

ವಾರ್ತಾ ಭಾರತಿ 13 Jan 2026 11:17 am

Hubballi | ಅಪರಿಚಿತ ವಾಹನ ಢಿಕ್ಕಿ: ಬೈಕ್ ಸವಾರ ಮೃತ್ಯು, ಸಹಸವಾರ ಗಂಭೀರ

ಹುಬ್ಬಳ್ಳಿ: ಅಪರಿಚಿತ ವಾಹನವೊಂದು ಢಿಕ್ಕಿ ಹೊಡೆದ ಪರಿಣಾಮ ಓರ್ವ ಯುವಕ ಮೃತಪಟ್ಟು ಇನ್ನೋರ್ವ ಗಂಭೀರವಾಗಿ ಗಾಯಗೊಂಡ ಘಟನೆ ಕಿರೇಸೂರು ಗ್ರಾಮದ ಹತ್ತಿರ ರಾಷ್ಟ್ರೀಯ ಹೆದ್ದಾರಿಯಲ್ಲಿ ಇಂದು ಬೆಳಗಿನ ಜಾವ ನಡೆದಿದೆ. ಹುನಗುಂದ ತಾಲೂಕಿನ ಕೆಲೂರು ಗ್ರಾಮದ ಶರೀಫ್ ಸಾಬ್ ಬಾಬು ಸಾಬ್ ಸೀಮಿಕೇರಿ (35) ಮೃತಪಟ್ಟವರು. ಜೊತೆಗಿದ್ದ ಇದೇ ಗ್ರಾಮದ ದುರಗೇಶ್ ವಡ್ಡರ (30) ಎಂಬವರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಶರೀಫ್ ಸಾಬ್ ಬಾಬು ಸಾಬ್ ಸೀಮಿಕೇರಿ ಮತ್ತು ದುರಗೇಶ್ ವಡ್ಡರ ಇಂದು ಮುಂಜಾನೆ 4 ಗಂಟೆಯ ಬಳಿಕ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ವೇಳೆ ಕಿರೆಸೂರು ಗ್ರಾಮದ ಬಳಿ ಅಪರಿಚಿತ ವಾಹನವೊಂದು ಢಿಕ್ಕಿ ಹೊಡೆದು ಪರಾರಿಯಾಗಿದೆ. ಈ ವೇಳೆ ಇಬ್ಬರು ರಸ್ತೆಗೆ ಎಸೆಯಲ್ಪಟ್ಟಿದ್ದು, ತೀವ್ರ ಗಾಯಗಳಾಗಿದ್ದ ಶರೀಫ್ ಸಾಬ್ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಅಪಘಾತವೆಸಗಿ ಪರಾರಿಯಾದ ವಾಹನ ಮತ್ತು ಚಾಲಕನ ಪತ್ತೆಗಾಗಿ ತನಿಖೆ ಕೈಗೊಂಡಿದ್ದಾರೆ.

ವಾರ್ತಾ ಭಾರತಿ 13 Jan 2026 11:05 am

ಧಾರವಾಡದಿಂದ ಇಬ್ಬರು ಶಾಲಾ ಮಕ್ಕಳ ಅಪಹರಣ: ಉತ್ತರ ಕನ್ನಡ ಜಿಲ್ಲೆಯಲ್ಲಿ ಆರೋಪಿಯ ಬಂಧನ

ಬೈಕ್ ಅಪಘಾತಕ್ಕೀಡಾಗಿದ್ದರಿಂದ ಸಿಕ್ಕಿಬಿದ್ದ ಆರೋಪಿ

ವಾರ್ತಾ ಭಾರತಿ 13 Jan 2026 10:46 am

Gold Rate Rise: ಸತತ 4 ದಿನದಲ್ಲಿ ಬರೋಬ್ಬರಿ 4530 ರೂ ಏರಿಕೆ ಕಂಡ ಚಿನ್ನದ ಬೆಲೆ: ಬೆಳ್ಳಿ ಬೆಲೆಯೂ ಗಗನಕ್ಕೆ!

ಬೆಂಗಳೂರಿನಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆ ಗಣನೀಯವಾಗಿ ಏರಿಕೆಯಾಗಿದೆ. ಕೇವಲ ನಾಲ್ಕು ದಿನಗಳಲ್ಲಿ 10 ಗ್ರಾಂ ಶುದ್ಧ ಚಿನ್ನದ ಬೆಲೆ 4530 ರೂ. ಹೆಚ್ಚಳ ಕಂಡಿದೆ.

ವಿಜಯ ಕರ್ನಾಟಕ 13 Jan 2026 10:36 am

ನಾಯಕತ್ವ ಗದ್ದಲದ ನಡುವೆ ರಾಜ್ಯಕ್ಕೆ ರಾಹುಲ್ ಗಾಂಧಿ ಎಂಟ್ರಿ: ಸಿದ್ದು, ಡಿಕೆಶಿ ಜೊತೆಗೆ ಪತ್ಯೇಕ ಮಾತುಕತೆ?

ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಗೊಂದಲಕ್ಕೆ ಇನ್ನು ತೆರೆ ಬಿದ್ದಿಲ್ಲ. ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಅವರ ನಡುವೆ ನಾಯಕತ್ವ ವಿಚಾರವಾಗಿ ಫೈಟ್ ಮುಂದುವರಿದಿದೆ. ಈ ನಡುವೆ ರಾಜ್ಯಕ್ಕೆ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಎಂಟ್ರಿ ಕೊಡುತ್ತಿದ್ದಾರೆ. ಮಂಗಳವಾರ ಅವರು ಮೈಸೂರಿಗೆ ಆಗಮಿಸುತ್ತಿದ್ದಾರೆ. ಮೈಸೂರು ವಿಮಾನ ನಿಲ್ದಾಣದಲ್ಲಿ ರಾಹುಲ್ ಗಾಂಧಿ ಅವರನ್ನು ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಅವರು ಬರಮಾಡಿಕೊಳ್ಳಲಿದ್ದಾರೆ. ಈ ಸಂದರ್ಭದಲ್ಲಿ ಪ್ರತ್ಯೇಕ ಮಾತುಕತೆ ನಡೆಯುವ ಸಾಧ್ಯತೆ ಇದೆ.

ವಿಜಯ ಕರ್ನಾಟಕ 13 Jan 2026 10:33 am

ಮಮತಾ ಬ್ಯಾನರ್ಜಿಯವರ ಹೊಸ ತಂತ್ರ ಚುನಾವಣೆಯಲ್ಲಿ ಲಾಭ ನೀಡಲಿದೆಯೇ?

ಟಿಎಂಸಿಯ ಚುನಾವಣೆ ಸಲಹಾ ಸಂಸ್ಥೆಯಾದ ಐಪ್ಯಾಕ್ ಕಚೇರಿ ಮೇಲಿನ ಈ.ಡಿ. ದಾಳಿಯನ್ನು ಚುನಾವಣೆ ಎದುರಿಸುವ ಹೊಸ ತಂತ್ರವಾಗಿ ಮಮತಾ ಬ್ಯಾನರ್ಜಿ ಬದಲಿಸುತ್ತಿರುವ ಹಾಗೆ ಕಾಣಿಸುತ್ತಿದೆ. ‘‘ನೀವು ಬಂಗಾಳದ ಮೇಲೆ ಎಷ್ಟೇ ದಾಳಿ ಮಾಡಿದರೂ, ಬಂಗಾಳ ಗೆಲ್ಲುತ್ತದೆ’’ ಎಂದು ಅಬ್ಬರಿಸಲಾಗುತ್ತಿದೆ. ತಾವು ರೂಪಿಸುತ್ತಿದ್ದ ಚುನಾವಣಾ ತಂತ್ರದ ಎಲ್ಲಾ ದಾಖಲೆಗಳನ್ನು ಕದಿಯಲು ಯತ್ನಿಸಲಾಯಿತು ಎಂಬುದು ಮಮತಾ ಬ್ಯಾನರ್ಜಿಯವರ ಆರೋಪ. ‘‘ನನ್ನ ಪಕ್ಷದ ಎಲ್ಲಾ ದಾಖಲೆಗಳನ್ನು ಕಿತ್ತುಕೊಳ್ಳುವುದು ಈ.ಡಿ. ಮತ್ತು ಅಮಿತ್ ಶಾ ಅವರ ಕೆಲಸವೇ?’’ ಎಂದು ಮಮತಾ ಪ್ರಶ್ನಿಸಿದ್ದಾರೆ. ಮಮತಾ ಬ್ಯಾನರ್ಜಿಯವರ ಹೋರಾಟ ಈ.ಡಿ. ವಿರುದ್ಧ ಮಾತ್ರವಾಗಿ ಉಳಿದಿಲ್ಲ. ಅದು, ಕೇಂದ್ರ ಸರಕಾರ ಮತ್ತು ಅಮಿತ್ ಶಾ ವಿರುದ್ಧ ತಿರುಗಿರುವುದು ಸ್ಪಷ್ಟ. ಅಮಿತ್ ಶಾ ಹೆಸರನ್ನು ಮಮತಾ ನೇರವಾಗಿ ತೆಗೆದುಕೊಳ್ಳುತ್ತಿದ್ದಾರೆ. ದಿಲ್ಲಿಯಲ್ಲಿ ಅಮಿತ್ ಶಾ ಕಚೇರಿ ಎದುರೇ ಟಿಎಂಸಿ ಸಂಸದರು ಪ್ರತಿಭಟನೆ ನಡೆಸಿದರು. ಹಾಗಾಗಿ, ಇದು ಪಶ್ಚಿಮ ಬಂಗಾಳ ಚುನಾವಣೆಗಾಗಿ ನಡೆಯುವ ಯುದ್ಧವಾಗಿ ಬದಲಾಗಿದೆ. ಬಿಜೆಪಿಯೇ ಈ.ಡಿ. ದಾಳಿಗೆ ಕಾರಣ ಎಂಬುದನ್ನು ಮಮತಾ ನೇರವಾಗಿ ಹೇಳುತ್ತಿದ್ದಾರೆ. ಒಂದೆಡೆ, ಈ.ಡಿ. ಬಳಕೆ ಮೂಲಕ ಡೇಟಾ ಕಳುವಿನ ಆರೋಪ ಹೊರಿಸಲಾಗಿದ್ದು, ಮತ್ತೊಂದೆಡೆ ಬಂಗಾಳ ಸರಕಾರದ ಪೊಲೀಸರು ಈ.ಡಿ. ವಿರುದ್ಧ ಎಫ್‌ಐಆರ್ ಹಾಕಿರುವುದು ಈ ಸಂಘರ್ಷದ ತೀವ್ರತೆಯನ್ನು ತೋರಿಸುತ್ತದೆ. ಈಗ, ಈ.ಡಿ. ರೇಡ್ ವೇಳೆ ಮಮತಾ ಬ್ಯಾನರ್ಜಿ ನೇರವಾಗಿ ಆ ಸ್ಥಳಕ್ಕೇ ಹೋಗಿ ತಮ್ಮ ಪಕ್ಷದ ಫೈಲುಗಳನ್ನು ಎತ್ತಿಕೊಂಡು ಬಂದದ್ದು ಬಹಳ ದಿಟ್ಟ ನಡೆಯಾಗಿ ಕಾಣುತ್ತಿದೆ. ಯಾರೂ ತೋರಿಸದೇ ಇದ್ದ ಪ್ರತಿಕ್ರಿಯೆ ಇದು ಮತ್ತು ಈ ಮೂಲಕ, ಮಮತಾ ಈ.ಡಿ. ವಿರುದ್ಧ ಮತ್ತು ಮೋದಿ ಸರಕಾರದ ವಿರುದ್ಧ ಮೊದಲ ಸುತ್ತಿನಲ್ಲಿ ಗೆದ್ದ ಹಾಗೆ ಕಾಣುತ್ತಿದೆ. ಮುಂದಿನ ಸುತ್ತಿನಲ್ಲಿ ಏನಾಗುತ್ತದೆ ಎಂದು ಗೊತ್ತಿಲ್ಲ. ಆದರೆ, ಮಮತಾ ಬ್ಯಾನರ್ಜಿ ಸ್ಪಷ್ಟವಾಗಿ ಮೊದಲ ಸುತ್ತನ್ನು ಗೆದ್ದಿರುವುದಾಗಿ ವಿಶ್ಲೇಷಕರು ಹೇಳುತ್ತಿದ್ದಾರೆ. ಮಮತಾ ಬ್ಯಾನರ್ಜಿ ನರೇಂದ್ರ ಮೋದಿ, ಅವರ ಈ.ಡಿ. ಮತ್ತು ಅವರ ಎಲ್ಲಾ ಸರಕಾರಿ ಸಂಸ್ಥೆಗಳನ್ನು ಸ್ಪಷ್ಟವಾಗಿ ಸೋಲಿಸಿದ್ದಾರೆ ಎಂಬುದು ಅವರ ಅಭಿಪ್ರಾಯ. ದಿಲ್ಲಿಯಲ್ಲಿ ಅಮಿತ್ ಶಾ ಕಚೇರಿ ಎದುರು ಪ್ರತಿಭಟನೆ ನಡೆಸಿದ ಟಿಎಂಸಿ ಸಂಸದರು ನೇರವಾಗಿ ಶಾ ಅವರನ್ನು ಉಲ್ಲೇಖಿಸಿ ನಾಚಿಕೆಗೇಡು ಎಂದಿದ್ದನ್ನು ಗಮನಿಸಬೇಕು. ಬಂಗಾಳದ ರ್ಯಾಲಿ ಮೂಲಕವೂ ಬಿಜೆಪಿಯ ವಿರುದ್ಧವಾಗಿ ಈ ಆರೋಪಗಳನ್ನು ತಿರುಗಿಸಲಾಯಿತು. ಬಿಜೆಪಿ ಸಂಪೂರ್ಣವಾಗಿ ಗೊಂದಲಕ್ಕೊಳಗಾಗಿದೆ ಮತ್ತು ಅದಕ್ಕಾಗಿಯೇ ಈ.ಡಿ. ದಾಳಿಗಳು ನಡೆದಿವೆ ಎಂದು ಆರೋಪಿಸಲಾಗಿದೆ. ಬಿಜೆಪಿ ಬಂಗಾಳ ಘಟಕ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಹೇಳಲು ಯತ್ನಿಸಲಾಗುತ್ತಿದೆ. ಟಿಎಂಸಿಯ ಎಲ್ಲಾ ಸಂಸದರು ಮತ್ತು ಎಲ್ಲಾ ಜನರು ಮಮತಾ ಬ್ಯಾನರ್ಜಿಯವರನ್ನು ಬೆಂಬಲಿಸುತ್ತಿದ್ದಾರೆ ಎಂದು ತಿಳಿಸುವ ಪ್ರಯತ್ನ ಈ ಮೂಲಕ ಆಗಿದೆ. ಈ ಚುನಾವಣೆಗೆ ಟಿಎಂಸಿ ರೂಪಿಸಿರುವ ತಂತ್ರದಿಂದ ಬಿಜೆಪಿ ದಿಗ್ಭ್ರಮೆಗೊಂಡಿದೆ ಮತ್ತು ಬಿಜೆಪಿ ಅದನ್ನು ಎದುರಿಸಲು ಸಿದ್ಧವಾಗಿಲ್ಲ ಎಂಬಂತೆ ಬಿಂಬಿಸಲಾಗಿದೆ. ಮಮತಾ ಬ್ಯಾನರ್ಜಿ ಮೂರು ಬಾರಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯಾಗಿದ್ದು, ಈಗ ಮತ್ತೊಮ್ಮೆ ಹೋರಾಡಬೇಕಿರುವುದು ಸುಲಭದ ಕೆಲಸವಲ್ಲ. ನಾಲ್ಕನೇ ಬಾರಿಗೆ ಇಷ್ಟು ದೊಡ್ಡ ಪಕ್ಷದೊಂದಿಗೆ, ಅತ್ಯಂತ ಶ್ರೀಮಂತ ಪಕ್ಷದೊಂದಿಗೆ ಹೋರಾಡಬೇಕಿದೆ. ಚುನಾವಣಾ ನಿಧಿಯಲ್ಲಿ ಸುಮಾರು ಶೇ. 85ಕ್ಕಿಂತ ಹೆಚ್ಚನ್ನು ಪಡೆಯುತ್ತಿರುವುದು ಬಿಜೆಪಿ. ಇಂತಹ ಶ್ರೀಮಂತ ಪಕ್ಷ, ಮಾತ್ರವಲ್ಲದೆ, ದೇಶಾದ್ಯಂತ ರಾಷ್ಟ್ರೀಯ ಸಂಸ್ಥೆಗಳ ಮೇಲೆ ನಿಯಂತ್ರಣ ಹೊಂದಿರುವುದು ಕೂಡ ಬಿಜೆಪಿಯೇ ಆಗಿದೆ. ಇದರ ಹೊರತಾಗಿಯೂ, ಬಿಜೆಪಿಯಲ್ಲಿ ಕಂಡುಬರುವ ಆತಂಕ ಈಗ ಎದ್ದುಕಾಣತೊಡಗಿದೆ. ಈ ಒಟ್ಟಾರೆ ಬೆಳವಣಿಗೆ ಹೇಗೆ ಪಶ್ಚಿಮ ಬಂಗಾಳದ ಚುನಾವಣೆಗೆ ಮೊದಲು ರಾಜಕೀಯವಾಗಿ ಮುಖ್ಯವಾಗುತ್ತಿದೆ ಮತ್ತು ಅದು ಯಾವ ಬಗೆಯ ತಿರುವಿಗೆ ಕಾರಣವಾಗುತ್ತದೆ ಎನ್ನುವುದು ಕುತೂಹಲಕಾರಿಯಾಗಿದೆ. ಮಮತಾ ಬ್ಯಾನರ್ಜಿ ಹುಟ್ಟುಹಾಕಿರುವ ಸಂಘರ್ಷ, ಈಗಾಗಲೇ ಪಶ್ಚಿಮ ಬಂಗಾಳ ಚುನಾವಣೆ ಪೂರ್ಣ ಪ್ರಮಾಣದಲ್ಲಿ ಪ್ರಾರಂಭವಾಗಿರುವ ಭಾವನೆ ಮೂಡಿಸುವಂತಿದೆ. ಪಶ್ಚಿಮ ಬಂಗಾಳಕ್ಕೆ ಈ.ಡಿ. ಕಳುಹಿಸುವ ಮೂಲಕ ಕೇಂದ್ರ ಸರಕಾರ ಮತ್ತು ಬಿಜೆಪಿ ಇದನ್ನು ಪ್ರಾರಂಭಿಸಿವೆ. ಆದರೆ ಇದು ಬಂಗಾಳದೊಳಗೆ ಕಾಣಿಸುತ್ತಿರುವ ರೀತಿ ಎಂಥದು ಎಂಬುದನ್ನು ಹಿರಿಯ ಪತ್ರಕರ್ತೆ ಅರ್ಫಾ ಖಾನುಮ್ ಶೇರ್ವಾನಿ ಅವರು ಬಂಗಾಳದ ಇಬ್ಬರು ಪತ್ರಕರ್ತರ ಅಭಿಪ್ರಾಯಗಳ ಮೂಲಕ ನೋಡಿದ್ದಾರೆ. ಪತ್ರಕರ್ತೆ ಅಪರ್ಣಾ ಭಟ್ಟಾಚಾರ್ಯ ನೆನಪಿಸಿಕೊಳ್ಳುವ ಪ್ರಕಾರ, ಕಳೆದ ವರ್ಷವೂ ಮಮತಾ ಬ್ಯಾನರ್ಜಿ ಈ ರೀತಿಯ ಎರಡು ಮೂರು ಕೆಲಸಗಳನ್ನು ಮಾಡಿದ್ದರು. ಈ ಹಿಂದೆ ಕೆಲವೊಮ್ಮೆ ಅವರು ಕೇಂದ್ರ ಸರಕಾರದ ಪರವಾಗಿ ಮಾತಾಡಿದ್ದಿದೆ. ಈಗ ಚುನಾವಣಾ ಆಯೋಗ ಸೇರಿದಂತೆ ಎಲ್ಲಾ ಕೇಂದ್ರ ಸಂಸ್ಥೆಗಳು ಮತ್ತು ಕೇಂದ್ರ ಸರಕಾರ ಒಂದಾಗಲು ಪ್ರಯತ್ನಿಸುತ್ತಿವೆ. ಇದನ್ನು ವಿರೋಧಿಸುವುದು ಈಗ ಅವರಿಗೆ ಅನಿವಾರ್ಯವಾಗಿದೆ. ಇನ್ನೊಂದೆಡೆ ಅವರು ನಾಲ್ಕನೇ ಅವಧಿಗಾಗಿ ಹೊರಟಿದ್ದಾರೆ. 15 ವರ್ಷಗಳಿಂದ ಅವರು ಮುಖ್ಯಮಂತ್ರಿಯಾಗಿದ್ದಾರೆ. ಅವರ ಕೆಲಸ 15 ವರ್ಷಗಳಲ್ಲಿ ಮಾಡಿರಬೇಕಾದಷ್ಟು ಆಗಿಲ್ಲ ಎಂಬುದು ಕಾಣುತ್ತದೆ. ಆದರೆ ಚುನಾವಣೆ ನಡೆಯುತ್ತಿರುವಾಗ, ಮಮತಾ ಬ್ಯಾನರ್ಜಿ ವಾಸ್ತವವಾಗಿ ಕೇಂದ್ರ ಸರಕಾರಕ್ಕೆ ವಿರೋಧ ಪಕ್ಷ ಎಂಬುದು ಸ್ಪಷ್ಟವಾಗುತ್ತಿದೆ. ಅಮಿತ್ ಶಾ ವಿರುದ್ಧದ ಅವರ ಘೋಷಣೆಗಳು ಸಾಮಾನ್ಯವಾಗಿ ಯಾರಾದರೂ ಮಾಡಬಹುದಾದುದಕ್ಕಿಂತ ಭಿನ್ನವಾಗಿವೆ. ಅಮಿತ್ ಶಾ ಅವರನ್ನು ಮಮತಾ ಟಿಚಿughಣಥಿ ಎನ್ನುವುದು ಬಹಳ ದಿಟ್ಟ ಅಭಿಪ್ರಾಯ ಎಂದು ಅಪರ್ಣಾ ಹೇಳುತ್ತಾರೆ. ಇದು ಈ.ಡಿ.ಗೆ ವಿರುದ್ಧ ಮಾತ್ರವಲ್ಲ, ಕೇಂದ್ರ ಸರಕಾರದ ವಿರುದ್ಧವೂ ಆಗಿದೆ ಎಂಬುದನ್ನು ನೋಡುವುದು ಮುಖ್ಯ. ಸ್ವತಃ ಅಧಿಕಾರದಲ್ಲಿರುವ ಮಮತಾ ಅವರು, ಆಡಳಿತ ವಿರೋಧಿ ರಾಜಕೀಯವನ್ನು, ಅಂದರೆ ಕೇಂದ್ರ ಸರಕಾರದ ವಿರುದ್ಧ ರಾಜಕೀಯವನ್ನು ಪ್ರದರ್ಶಿಸುತ್ತಿದ್ದಾರೆ. ಮಮತಾ ಬ್ಯಾನರ್ಜಿಯವರು ಎರಡು ರೀತಿಯ ಧ್ರುವೀಕರಣ ರಾಜಕೀಯದಿಂದ ಪ್ರಯೋಜನ ಪಡೆಯುವಂತೆ ಕಾಣುತ್ತಿದೆ. ಮೊದಲು ಧ್ರುವೀಕರಣ ಸಂಪೂರ್ಣವಾಗಿ ಕೋಮು ಸ್ವರೂಪದ್ದಾಗಿತ್ತು. ಅದರಿಂದ ಮಮತಾ ಬ್ಯಾನರ್ಜಿ ಪ್ರಯೋಜನ ಪಡೆದಿದ್ದಾರೆ ಎಂದು ಅಪರ್ಣಾ ಹೇಳುತ್ತಾರೆ. ಏಕೆಂದರೆ ಮುಸ್ಲಿಮ್ ಮತಗಳೇ ಮುಖ್ಯವಾದ 100ಕ್ಕೂ ಹೆಚ್ಚು ವಿಧಾನಸಭಾ ಸ್ಥಾನಗಳಿವೆ. ಆ ಮತಗಳು ಧ್ರುವೀಕರಣಗೊಂಡರೆ, ಅದರಲ್ಲಿ ಹೆಚ್ಚಿನವು ಮಮತಾ ಮತ್ತು ಟಿಎಂಸಿಗೆ ಹೋಗುತ್ತವೆ. ಈಗ ಧ್ರುವೀಕರಣ ಮಮತಾಗೆ ಸಹಾಯ ಮಾಡುವುದಿಲ್ಲ ಎಂದಲ್ಲ. ಧ್ರುವೀಕರಣ ಅವರ ಪಾಲಿಗೆ ಒಳ್ಳೆಯದೇ ಆಗಿದೆ. ಮಮತಾ ಬ್ಯಾನರ್ಜಿ ಬಹಳಷ್ಟು ಸಂದರ್ಭದಲ್ಲಿ ಸಾಫ್ಟ್ ಹಿಂದುತ್ವ ಅಳವಡಿಸಿಕೊಂಡಿದ್ದಾರೆ. ಜಗನ್ನಾಥ ದೇವಸ್ಥಾನ, ದುರ್ಗಾ ದೇವಸ್ಥಾನ ಮತ್ತು ಮಹಾಕಾಳ ದೇವಸ್ಥಾನಗಳ ನಿರ್ಮಾಣ ಯೋಜನೆಗಳೆಲ್ಲ ಸಾಫ್ಟ್ ಹಿಂದುತ್ವದ ವಿಧಾನವೆಂಬುದು ಸ್ಪಷ್ಟ. ಹಾಗಾಗಿ, ಬಿಜೆಪಿ ಅನುಸರಿಸಲು ಬಯಸುವ ಧ್ರುವೀಕರಣ ರಾಜಕೀಯ ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿಗೆ ಪ್ರಯೋಜನ ನೀಡುತ್ತದೆ. ಅದೇ ವೇಳೆ ಅವರು ಈ.ಡಿ. ವಿರುದ್ಧ ಹೋರಾಡುವ ಮೂಲಕ ತಮ್ಮನ್ನು ಪಶ್ಚಿಮ ಬಂಗಾಳದ ದೊಡ್ಡ ನಾಯಕಿ ಅಥವಾ ಏಕೈಕ ನಾಯಕಿ ಎಂದು ಸ್ಥಾಪಿಸಲು ಪ್ರಯತ್ನಿಸುತ್ತಿದ್ದಾರೆ. ಇದು ಎಷ್ಟರ ಮಟ್ಟಿಗೆ ಬಿಜೆಪಿಯನ್ನು ಹಿಮ್ಮೆಟ್ಟಿಸಬಹುದು ಮತ್ತು ಮಮತಾ ಅವರಿಗೆ ಎಷ್ಟು ರಾಜಕೀಯ ಲಾಭ ತರಬಹುದು ಎಂಬುದು ಈಗಿನ ಪ್ರಶ್ನೆ.

ವಾರ್ತಾ ಭಾರತಿ 13 Jan 2026 10:30 am

ಹಿಂದೂಗಳು ಭಾರತದಲ್ಲಿ ಅನುಭವಿಸುತ್ತಿರುವ ಅಮಾನುಷ ದೌರ್ಜನ್ಯಗಳ ಚರ್ಚಾರ್ಹ ಸರಮಾಲೆ

NCRB ಪ್ರಕಾರ, 2023ರಲ್ಲಿ ಭಾರತದೊಳಗೆ ಪರಿಶಿಷ್ಟ ಜಾತಿಗೆ ಸೇರಿದ 1,250 ಮಂದಿ ಹಿಂದೂಗಳ ಹತ್ಯೆ ನಡೆದಿದೆ. 2024 ಡಿಸೆಂಬರ್ 11ರಂದು ಕೇಂದ್ರ ಗೃಹಖಾತೆಯ ರಾಜ್ಯಸಚಿವರು ರಾಜ್ಯಸಭೆಯಲ್ಲಿ ತಿಳಿಸಿದ ಪ್ರಕಾರ 2022ರಲ್ಲಿ ದೇಶದೊಳಗೆ ಪರಿಶಿಷ್ಟ ಜಾತಿ (SC)ಗೆ ಸೇರಿದ 954 ಹಿಂದೂಗಳ ಹತ್ಯೆ ನಡೆದಿದೆ. ಅದೇ ವರ್ಷ ದೇಶದಲ್ಲಿ ಪರಿಶಿಷ್ಟ ಪಂಗಡ (ST)ಕ್ಕೆ ಸೇರಿದ 217 ಮಂದಿ ಹಿಂದೂಗಳ ಹತ್ಯೆ ನಡೆದಿದೆ. ಅಂದರೆ ಭಾರತದಲ್ಲಿ ಒಂದೇ ವರ್ಷದಲ್ಲಿ ಒಟ್ಟು 1,171 ಮಂದಿ ದಲಿತ ಹಿಂದೂಗಳ ಹತ್ಯೆ ನಡೆದಿದೆ. ಈ ಪ್ರಕಾರ ಭಾರತದಲ್ಲಿ ಪ್ರತಿದಿನ ಕನಿಷ್ಠವೆಂದರೂ ಸರಾಸರಿ 3 ಮಂದಿ ದಲಿತ ಹಿಂದೂಗಳ ಹತ್ಯೆ ನಡೆಯುತ್ತಿದೆ. ಇತ್ತೀಚೆಗೆ ನಮ್ಮ ನೆರೆಯ ಬಾಂಗ್ಲಾದೇಶದಲ್ಲಿ ಹಿಂದೂಗಳ ವಿರುದ್ಧ ಅಮಾನುಷ ದೌರ್ಜನ್ಯದ ಹಲವಾರು ಘಟನೆಗಳು ನಡೆದಿವೆ. ಪ್ರಸ್ತುತ ಘನಘೋರ ದುರಂತಗಳ ಹಿನ್ನೆಲೆಯಲ್ಲಿ ಒಂದು ಸ್ವಾಗತಾರ್ಹ ಬೆಳವಣಿಗೆ ಕೂಡಾ ಎದ್ದುಕಂಡಿದೆ. ಅದೇನೆಂದರೆ, ಪ್ರಸ್ತುತ ದೌರ್ಜನ್ಯಗಳ ವಿರುದ್ಧ ನಮ್ಮ ದೇಶದಲ್ಲಿ ಭಾರೀ ಆಕ್ರೋಶ ಪ್ರಕಟವಾಗಿದೆ. ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ನಡೆದಿರುವ ದೌರ್ಜನ್ಯಗಳನ್ನು ಜಾತಿ-ಧರ್ಮ, ಪಕ್ಷ-ಪಂಗಡಗಳ ಭೇದವಿಲ್ಲದೆ ಎಲ್ಲ ಭಾರತೀಯರು ಒಕ್ಕೊರಲಿನಿಂದ, ಬಹಳ ಏರಿದ ಧ್ವನಿಯಲ್ಲಿ ಖಂಡಿಸಿದ್ದಾರೆ. ವಿಶೇಷವಾಗಿ, ಭಾರತೀಯ ಮಾಧ್ಯಮಗಳು ಈ ವಿಷಯದಲ್ಲಿ ತುಂಬಾ ಸಂವೇದನಾಶೀಲತೆಯನ್ನು ಮೆರೆದಿವೆ. ಅಲ್ಲಿ ನಡೆದ ದೌರ್ಜನ್ಯಗಳಿಗೆ ವ್ಯಾಪಕ ಕವರೇಜ್ ಕೊಟ್ಟಿವೆ. ಆ ಕುರಿತು ಬಿಸಿಬಿಸಿ ಚರ್ಚೆ, ಸಂವಾದಗಳನ್ನು ಏರ್ಪಡಿಸಿವೆ. ಟೈಮ್ಸ್ ಆಫ್ ಇಂಡಿಯಾದಲ್ಲಿ ಪ್ರಕಟವಾದ ಒಂದು ವರದಿಯ ಪ್ರಕಾರ, ವರ್ಷ 2024-2025ರಲ್ಲಿ ಬಾಂಗ್ಲಾದೇಶದಲ್ಲಿ ಅಲ್ಲಿನ ಧಾರ್ಮಿಕ ಅಲ್ಪಸಂಖ್ಯಾತರ ವಿರುದ್ಧ ದ್ವೇಷ ಆಧಾರಿತ ದೌರ್ಜನ್ಯದ 2,442 ಪ್ರಕರಣಗಳು ನಡೆದಿವೆ. ಅದೇ ಪತ್ರಿಕೆಯಲ್ಲಿ ಕಳೆದ ವಾರ (ಜನವರಿ 6) ಬಂದ ಒಂದು ವರದಿಯಲ್ಲಿ ‘‘ಕಳೆದ 24 ಗಂಟೆಗಳಲ್ಲಿ ಬಾಂಗ್ಲಾದೇಶದಲ್ಲಿ ಇಬ್ಬರು ಹಿಂದೂಗಳ ಹತ್ಯೆಯಾಗಿದೆ’’ ಎಂದು ತಿಳಿಸಲಾಗಿತ್ತು. ಅಷ್ಟೇ ಅಲ್ಲ, ‘‘ಕಳೆದ 18 ದಿನಗಳ ಅವಧಿಯಲ್ಲಿ ಅಲ್ಲಿ ಆರು ಮಂದಿ ಹಿಂದೂಗಳ ಹತ್ಯೆ ನಡೆದಿದೆ’’ ಎಂಬ ಹೃದಯ ವಿದ್ರಾವಕ ಮಾಹಿತಿಯೂ ಇತ್ತು. ಅದೇ ದಿನದ ಇಂಡಿಯಾ ಟುಡೇ ವೆಬ್‌ಸೈಟ್‌ನಲ್ಲಿ, ‘‘ಕಳೆದ 35 ದಿನಗಳಲ್ಲಿ ಬಾಂಗ್ಲಾದೇಶದಲ್ಲಿ 11 ಮಂದಿ ಹಿಂದೂಗಳ ಹತ್ಯೆ ನಡೆದಿದೆ’’ ಎಂಬ ಆಘಾತಕಾರಿ ಮಾಹಿತಿ ಇತ್ತು. ಇದೆಲ್ಲಾ ಪಕ್ಕದ ಬಾಂಗ್ಲಾದೇಶದಲ್ಲಿರುವ ಹಿಂದೂಗಳ ಕಥೆಯಾಯಿತು. ಅಲ್ಲಿ ಹಿಂದೂಗಳು ಅಲ್ಪಸಂಖ್ಯಾತರು. ಹಾಗಾದರೆ ಹಿಂದೂಗಳು ಬಹುಸಂಖ್ಯಾತರಾಗಿರುವ ಭಾರತದಲ್ಲಿ ಹಿಂದೂಗಳು ಸುರಕ್ಷಿತರಾಗಿದ್ದಾರೆಯೇ? ಖಂಡಿತ ಇಲ್ಲ. ಭಾರತದಲ್ಲಿ ಹಿಂದೂಗಳು ಅಪಾಯದಲ್ಲಿದ್ದಾರೆ ಎಂಬ ಕೂಗು ಬಹುಕಾಲದಿಂದ ಕೇಳಿಬರುತ್ತಿದೆ. ವಿಶೇಷವಾಗಿ ಸಂಘ ಪರಿವಾರ ಮತ್ತು ಅದರ ಬೆಂಬಲಿಗರು ಹಲವು ದಶಕಗಳಿಂದ ಪದೇಪದೇ, ಸಿಕ್ಕ ಸಿಕ್ಕ ಎಲ್ಲ ವೇದಿಕೆಗಳಲ್ಲಿ ಈ ಕೂಗನ್ನು ಮೊಳಗಿಸುತ್ತಲೇ ಬಂದಿದ್ದಾರೆ. ಸದಾ ಅಲ್ಪಸಂಖ್ಯಾತರನ್ನು ಓಲೈಸುವುದರಲ್ಲೇ ಮಗ್ನರಾಗಿರುವ ಸೆಕ್ಯುಲರ್ ಮತ್ತು ಎಡಪಂಥೀಯ ಪಕ್ಷಗಳು ಮಾತ್ರ ಅವರ ಈ ಕೂಗನ್ನು ಸತತವಾಗಿ ಕಡೆಗಣಿಸಿವೆ. ಸಾಲದ್ದಕ್ಕೆ ಭಾರತದಲ್ಲಿ ಹಿಂದೂಗಳಿಗೆ ಅಪಾಯವಿದೆ ಎಂಬ ಮಾತಿಗೆ ಯಾವ ಆಧಾರವೂ ಇಲ್ಲ ಎಂದು ಅದನ್ನು ತಳ್ಳಿಹಾಕಿವೆ. ಹಾಗಾದರೆ ನಿಜಕ್ಕೂ ಭಾರತದಲ್ಲಿ ಹಿಂದೂಗಳಿಗೆ ಅಪಾಯವಿಲ್ಲವೇ? ಹಿಂದೂಗಳ ಜೀವಗಳಿಗೆ ಭಾರತದಲ್ಲಿ ಅಪಾಯವಿದೆ ಎನ್ನುವುದಕ್ಕೆ ಯಾವುದೇ ಪುರಾವೆ ಇಲ್ಲವೇ? ನಿಜವಾಗಿ, ಭಾರತದಲ್ಲಿ ಹಿಂದೂಗಳು ತೀವ್ರ ಸ್ವರೂಪದ ಅಭದ್ರತೆಯನ್ನು ಎದುರಿಸುತ್ತಿದ್ದಾರೆ ಮತ್ತು ಅನೇಕ ಬಗೆಯ ಅಮಾನುಷ ದೌರ್ಜನ್ಯಗಳನ್ನು ಎದುರಿಸುತ್ತಿದ್ದಾರೆ ಎಂಬುದಕ್ಕೆ ಸಾಕ್ಷ್ಯಾಧಾರಗಳ ಯಾವ ಕೊರತೆಯೂ ಇಲ್ಲ. ಸಾಕ್ಷಾತ್ ಭಾರತದ ಕೇಂದ್ರ ಸರಕಾರವೇ ಈ ಕುರಿತು ಸಾಕಷ್ಟು ಅಧಿಕೃತ ಪುರಾವೆಗಳನ್ನು ಒದಗಿಸುತ್ತಾ ಬಂದಿದೆ. ಜೊತೆಗೆ, ಅನೇಕ ಸಾಮಾಜಿಕ ಹಾಗೂ ಸ್ವಯಂಸೇವಕ ಸಂಘಟನೆಗಳು ಕೂಡಾ ಈ ಕುರಿತು ಅಧ್ಯಯನ ಹಾಗೂ ಸಂಶೋಧನೆ ನಡೆಸಿ ಸವಿಸ್ತಾರ ವರದಿಗಳನ್ನು ಪ್ರಕಟಿಸುತ್ತಾ ಬಂದಿವೆ. ಕೆಲವು ಉದಾಹರಣೆಗಳನ್ನು ಗಮನಿಸಿ: ಭಾರತದ ರಾಷ್ಟ್ರೀಯ ಅಪರಾಧ ದಾಖಲೆ ಬ್ಯುರೋ (NCRB) ಬಿಡುಗಡೆಗೊಳಿಸಿದ ವರದಿಯನುಸಾರ ಭಾರತದಲ್ಲಿ ವರ್ಷ 2023ರಲ್ಲಿ ಪರಿಶಿಷ್ಟ ಜಾತಿ (SC)ಗೆ ಸೇರಿದ ಹಿಂದೂಗಳ ಮೇಲೆ ದೌರ್ಜನ್ಯ ನಡೆಸಲಾದ 57,789 ಪ್ರಕರಣಗಳು ಮತ್ತು ಪರಿಶಿಷ್ಟ ಪಂಗಡ (ST)ಕ್ಕೆ ಸೇರಿದ ಹಿಂದೂಗಳ ಮೇಲೆ ದೌರ್ಜನ್ಯ ಎಸಗಲಾದ 12,960 ಪ್ರಕರಣಗಳು ದಾಖಲಾಗಿವೆ. NCRB ಪ್ರಕಾರ, 2023ರಲ್ಲಿ ಭಾರತದೊಳಗೆ ಪರಿಶಿಷ್ಟ ಜಾತಿಗೆ ಸೇರಿದ 1,250 ಮಂದಿ ಹಿಂದೂಗಳ ಹತ್ಯೆ ನಡೆದಿದೆ. 2024 ಡಿಸೆಂಬರ್ 11ರಂದು ಕೇಂದ್ರ ಗೃಹಖಾತೆಯ ರಾಜ್ಯಸಚಿವರು ರಾಜ್ಯಸಭೆಯಲ್ಲಿ ತಿಳಿಸಿದ ಪ್ರಕಾರ 2022ರಲ್ಲಿ ದೇಶದೊಳಗೆ ಪರಿಶಿಷ್ಟ ಜಾತಿ (SC)ಗೆ ಸೇರಿದ 954 ಹಿಂದೂಗಳ ಹತ್ಯೆ ನಡೆದಿದೆ. ಅದೇ ವರ್ಷ ದೇಶದಲ್ಲಿ ಪರಿಶಿಷ್ಟ ಪಂಗಡ (ST)ಕ್ಕೆ ಸೇರಿದ 217 ಮಂದಿ ಹಿಂದೂಗಳ ಹತ್ಯೆ ನಡೆದಿದೆ. ಅಂದರೆ ಭಾರತದಲ್ಲಿ ಒಂದೇ ವರ್ಷದಲ್ಲಿ ಒಟ್ಟು 1,171 ಮಂದಿ ದಲಿತ ಹಿಂದೂಗಳ ಹತ್ಯೆ ನಡೆದಿದೆ. ಈ ಪ್ರಕಾರ ಭಾರತದಲ್ಲಿ ಪ್ರತಿದಿನ ಕನಿಷ್ಠವೆಂದರೂ ಸರಾಸರಿ 3 ಮಂದಿ ದಲಿತ ಹಿಂದೂಗಳ ಹತ್ಯೆ ನಡೆಯುತ್ತಿದೆ. NCRB ಒದಗಿಸಿರುವ ದತ್ತಾಂಶ ಪ್ರಕಾರ, 2020ರಲ್ಲಿ ದೇಶದಲ್ಲಿ ಪರಿಶಿಷ್ಟ ಜಾತಿಗೆ ಸೇರಿದ 855 ಮಂದಿ ಹಿಂದೂಗಳ ಹತ್ಯೆ ನಡೆದಿದೆ. ಅದರ ಹಿಂದಿನ ವರ್ಷಗಳಲ್ಲೂ ಪ್ರತಿವರ್ಷ ಪರಿಶಿಷ್ಟ ಜಾತಿಗೆ ಸೇರಿದ ಸುಮಾರು 800 ರಿಂದ 1,000ದಷ್ಟು ಹಿಂದೂಗಳ ಹತ್ಯೆ ನಡೆದಿದೆ. ಪರಿಶಿಷ್ಟ ಪಂಗಡ (ST)ಗಳಿಗೆ ಸೇರಿದ ಹಿಂದೂಗಳು ಹತರಾಗುವ ವೃತ್ತಾಂತ ಬೇರೆಯೇ ಇದೆ. ಗಮನಾರ್ಹ ಸಂಗತಿ ಏನೆಂದರೆ, ಇವೆಲ್ಲವೂ ಜಾತಿಯ ಕಾರಣಕ್ಕೆ ನಡೆದಿರುವ ಮತ್ತು ‘ಅನುಸೂಚಿತ ಜಾತಿಗಳ ಮತ್ತು ಅನುಸೂಚಿತ ಬುಡಕಟ್ಟುಗಳ (ದೌರ್ಜನ್ಯ ಪ್ರತಿಬಂಧ) ಅಧಿನಿಯಮ’ ಅಥವಾ Scheduled Castes and the Scheduled Tribes. (Prevention of Atrocities) Act,, ಅನ್ವಯ ದಾಖಲಾಗಿರುವ, ಹತ್ಯೆ ಪ್ರಕರಣಗಳು. ಉಳಿದಂತೆ, ಆರೋಪಿಗಳು ಹೆಚ್ಚು ಪ್ರಭಾವಶಾಲಿಗಳಾಗಿರುವಾಗ ಮತ್ತು ಪೊಲೀಸರು ಸ್ವತಃ ದಲಿತ ವಿರೋಧಿಗಳಾಗಿರುವಾಗ, ಇಂತಹ ಕೊಲೆ ಪ್ರಕರಣಗಳಲ್ಲಿ ಜಾತಿಗೆ ಯಾವುದೇ ಪಾತ್ರ ಇರಲಿಲ್ಲವೆಂಬ ಸಬೂಬನ್ನು ಮುಂದಿಟ್ಟು, ಜಾತಿಯನ್ನು ಕಡೆಗಣಿಸಿ, ಅಪರಾಧವನ್ನು ಭಾರತೀಯ ದಂಡಸಂಹಿತೆ (IPC)ಯ ಸೆಕ್ಷನ್ 302 ಅನ್ವಯ ಮಾತ್ರ ದಾಖಲಿಸಲಾದ, ದಲಿತ ಹಿಂದೂಗಳ ಹತ್ಯೆಯ ಪ್ರಕರಣಗಳು ಬೇರೆ ಇವೆ. ಅಂತಹ ಪ್ರಕರಣಗಳನ್ನೂ ಸೇರಿಸಿದರೆ 2022ರಲ್ಲಿ ಕೊಲೆಯಾದ ಪರಿಶಿಷ್ಟ ಜಾತಿಗೆ ಸೇರಿದ ಹಿಂದೂಗಳ ಸಂಖ್ಯೆ 1,450ಕ್ಕಿಂತಲೂ ಅಧಿಕವಾಗುತ್ತದೆ. 2022ರಲ್ಲಿ ‘ಅನುಸೂಚಿತ ಜಾತಿಗಳ ಮತ್ತು ಅನುಸೂಚಿತ ಬುಡಕಟ್ಟುಗಳ (ದೌರ್ಜನ್ಯ ಪ್ರತಿಬಂಧ) ಅಧಿನಿಯಮ’ದನ್ವಯ 67,000ಕ್ಕಿಂತಲೂ ಹೆಚ್ಚು ದೌರ್ಜನ್ಯ ಪ್ರಕರಣಗಳು ದಾಖಲಾಗಿದ್ದವು. ಈ ರೀತಿ ದೇಶದಲ್ಲಿ ದಲಿತರ ವಿರುದ್ಧ ನಡೆಯುತ್ತಿರುವ ಅಪರಾಧ ಹಾಗೂ ದೌರ್ಜನ್ಯದ ಪ್ರಕರಣಗಳು ಹೆಚ್ಚುತ್ತಿರುವ ಕುರಿತು ಸಂಸತ್ತಿನಲ್ಲಿ ಕೆಲವು ಸದಸ್ಯರು ಕಳವಳ ವ್ಯಕ್ತಪಡಿಸಿದ್ದರು. 2024 ಡಿಸೆಂಬರ್ 3ರಂದು ಕೇಂದ್ರದ ಸಾಮಾಜಿಕ ನ್ಯಾಯ ಹಾಗೂ ಸಬಲೀಕರಣ ಸಚಿವ ವೀರೇಂದ್ರ ಕುಮಾರ್ ಅವರು ಈ ಕುರಿತು ಸ್ಪಷ್ಟೀಕರಣ ನೀಡುತ್ತಾ, ಇತ್ತೀಚೆಗೆ ಜನರಲ್ಲಿ ಜಾಗೃತಿ ಬೆಳೆದಿರುವುದರಿಂದ, ಜನರು ಹೆಚ್ಚಿನ ಸಂಖ್ಯೆಯಲ್ಲಿ ವಿವಿಧ ಪ್ರಕರಣಗಳನ್ನು ಅಧಿಕೃತವಾಗಿ ದಾಖಲಿಸ ತೊಡಗಿದ್ದಾರೆ ಎಂದು ವಿವರಿಸಿದರು. ಹಿಂದೂ ದಲಿತರ ವಿರುದ್ಧ ಭಾರತದಲ್ಲಿ ನಡೆಯುವ ಅಪರಾಧಗಳು ಹತ್ಯೆಗೆ ಮಾತ್ರ ಸೀಮಿತವಾಗಿರದೆ ಅತ್ಯಾಚಾರ, ಸಾಮೂಹಿಕ ಅತ್ಯಾಚಾರ, ಲೈಂಗಿಕ ಕಿರುಕುಳ, ಹಲ್ಲೆ, ಅಪಮಾನ, ನಿಂದನೆ, ಬಹಿಷ್ಕಾರ ಹೀಗೆ ಹತ್ತು ಹಲವು ಸ್ವರೂಪಗಳಲ್ಲಿರುತ್ತವೆ ಮತ್ತು ಈ ಅಪರಾಧಗಳು ಅಲ್ಲಲ್ಲಿ ಪದೇ ಪದೇ ನಡೆಯುತ್ತಲೇ ಇರುತ್ತವೆ. NCRB ಮಾಹಿತಿ ಪ್ರಕಾರ 2022ರಲ್ಲಿ ಭಾರತದೊಳಗೆ ಪರಿಶಿಷ್ಟ ಜಾತಿಗಳಿಗೆ ಸೇರಿದ 3,300ಕ್ಕೂ ಹೆಚ್ಚಿನ ಮಹಿಳೆಯರು ಅತ್ಯಾಚಾರಕ್ಕೆ ಒಳಗಾಗಿದ್ದಾರೆ. ಅದೇ ಸಂಸ್ಥೆಯವರು ಬಿಡುಗಡೆಗೊಳಿಸಿರುವ ಮಾಹಿತಿಯನುಸಾರ, 2023ರಲ್ಲಿ ಪರಿಶಿಷ್ಟ ಜಾತಿಗೆ ಸೇರಿದ ಸುಮಾರು 4,000 ಮಹಿಳೆಯರ ಮೇಲೆ ಹಾಗೂ ಪರಿಶಿಷ್ಟ ಪಂಗಡಗಳಿಗೆ ಸೇರಿದ 1,189 ಮಹಿಳೆಯರ ಮೇಲೆ ಅತ್ಯಾಚಾರ ನಡೆದಿದೆ. ಮಧ್ಯಪ್ರದೇಶ ವಿಧಾನ ಸಭೆಯಲ್ಲಿ ಒದಗಿಸಲಾದ ಮಾಹಿತಿಯಂತೆ ಕೇವಲ ಆ ಒಂದು ರಾಜ್ಯದಲ್ಲೇ 2022 ಹಾಗೂ 2024ರ ನಡುವೆ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳಿಗೆ ಸೇರಿದ 7,418 ಮಹಿಳೆಯರ ಮೇಲೆ ಅತ್ಯಾಚಾರ ಹಾಗೂ 338 ಮಹಿಳೆಯರ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದೆ. ಇದೇ ಅವಧಿಯಲ್ಲಿ ಮಧ್ಯಪ್ರದೇಶದಲ್ಲಿ 558 ದಲಿತ ಮಹಿಳೆಯರ ಹತ್ಯೆ ನಡೆದಿದೆ. ಅವರಲ್ಲಿ 411 ಮಹಿಳೆಯರು ಬುಡಕಟ್ಟು ಸಮುದಾಯಗಳಿಗೆ ಸೇರಿದವರು. ಪ್ರಸ್ತುತ ಮೂರು ವರ್ಷಗಳ ಅವಧಿಯಲ್ಲಿ ಮಧ್ಯಪ್ರದೇಶದಲ್ಲಿ 5,983 (ಸರಾಸರಿ ಪ್ರತಿದಿನ 5 ಮಂದಿ) ದಲಿತ ಮಹಿಳೆಯರು ಲೈಂಗಿಕ ಕಿರುಕುಳವನ್ನು ಎದುರಿಸಿದ್ದಾರೆ. ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ಸೇರಿದ ಹಿಂದೂಗಳ ದೌರ್ಭಾಗ್ಯ (ಕರ್ಮಫಲ?) ಏನೆಂದರೆ ಅವರ ವಿರುದ್ಧ ನಡೆಯುವ ಘನಘೋರ ಅಪರಾಧಗಳ ಪೈಕಿ ಎಷ್ಟೋ ಅಪರಾಧಗಳು ಅಧಿಕೃತವಾಗಿ ಎಲ್ಲೂ ದಾಖಲಾಗುವುದೇ ಇಲ್ಲ. ದಾಖಲಾದ ಎಷ್ಟೋ ಪ್ರಕರಣಗಳು ಕೋರ್ಟಿನ ಮೆಟ್ಟಿಲ ತನಕ ತಲುಪುವುದಿಲ್ಲ. ಹೇಗಾದರೂ ಮಾಡಿ ಕೋರ್ಟುಗಳ ಒಳಗೆ ಪ್ರವೇಶ ಪಡೆದ ಪ್ರಕರಣಗಳಲ್ಲಿ ಶೇ. 90 ಪ್ರಕರಣಗಳು ಇತ್ಯರ್ಥವಾಗದೇ ಎಂದೆಂದಿಗೂ ‘ಬಾಕಿ’ ಆಗಿಯೇ ಉಳಿದಿರುತ್ತವೆ. ಇನ್ನು ವಿಚಾರಣೆಯ ಸೌಭಾಗ್ಯ ಪಡೆದ ಪ್ರಕರಣಗಳಲ್ಲೂ, ಆರೋಪಿಗಳಿಗೆ ಏನಾದರೂ ಶಿಕ್ಷೆಯಾಗುವ ಸಾಧ್ಯತೆ ಹೆಚ್ಚೆಂದರೆ ಸುಮಾರು ಶೇ. 36 ಪ್ರಕರಣಗಳಲ್ಲಿ ಮಾತ್ರ ಇರುತ್ತದೆ. ಶಿಕ್ಷೆಯ ಪ್ರಮಾಣದಲ್ಲಿ ತೋರಲಾಗುವ ಔದಾರ್ಯ, ಬೇರೆಯೇ ಒಂದು ಚರ್ಚಾವಿಷಯ. 2001ರಲ್ಲಿ ಗುಜರಾತ್‌ನ ದಲಿತ ನಾಯಕ ಹಾಗೂ ಮಾನವ ಹಕ್ಕು ಹೋರಾಟಗಾರ ಮಾರ್ಟಿನ್ ಮ್ಯಾಕ್ವಾನ್ ಅವರ ಒಂದು ಹೇಳಿಕೆ ಪ್ರಕಟವಾಗಿತ್ತು: ‘‘ನಾಝಿಗಳ ಕೈಯಲ್ಲಿ ನಡೆದ ಆರು ಕೋಟಿ ಯಹೂದಿಗಳ ಹತ್ಯಾಕಾಂಡದ ನೆನಪು ಒಂದು ದೊಡ್ಡ ಕಳಂಕವಾಗಿ ನಮ್ಮನ್ನು ಕಾಡುತ್ತಲೇ ಇರುತ್ತದೆ. ಏಕೆಂದರೆ ಆ ದುರಂತವು ಒಂದು ಸಂಕ್ಷಿಪ್ತ ಅವಧಿಯಲ್ಲಿ ನಡೆದು ಹೋಗಿತ್ತು. ಆದರೆ ನಮ್ಮಲ್ಲಿ ದಲಿತರ ‘ಸಮೂಹ ಹತ್ಯೆ’ಯು ವ್ಯವಸ್ಥೆಯ ಭಾಗವಾಗಿ, ನಿಧಾನಗತಿಯಲ್ಲಿ ನಡೆಯುತ್ತಿದೆ. ದಲಿತರ ವಿರುದ್ಧ ನಡೆಯುವ ಹತ್ಯೆ, ಅತ್ಯಾಚಾರ ಮತ್ತು ಹಲ್ಲೆಯ ಪ್ರಕರಣಗಳ ಕುರಿತು ಇತ್ತೀಚೆಗೆ ಸರಕಾರವು ಒದಗಿಸುತ್ತಿರುವ ಮಾಹಿತಿಗಳನ್ನೇ ಕಳೆದ 3,000 ವರ್ಷಗಳ ಇತಿಹಾಸಕ್ಕೆ ವಿಸ್ತರಿಸಿ ನೋಡಿದರೆ, ಭಾರೀ ಭಯಾನಕ ಚಿತ್ರವೊಂದು ಮೂಡುತ್ತದೆ. ಪ್ರಸ್ತುತ ಅವಧಿಯಲ್ಲಿ ಸುಮಾರು 21,90,000 ದಲಿತರ ಹತ್ಯೆ ನಡೆದಿದೆ, 32,85,000 ಮಂದಿ ದಲಿತ ಮಹಿಳೆಯರ ಮೇಲೆ ಅತ್ಯಾಚಾರ ನಡೆದಿದೆ ಮತ್ತು 7,50,00,000ಕ್ಕಿಂತಲೂ ಹೆಚ್ಚಿನ ದಲಿತರ ಮೇಲೆ ಹಲ್ಲೆಗಳು ನಡೆದಿವೆ ಎಂದು ನಂಬುವುದಕ್ಕೆ ಈ ಮಾಹಿತಿಗಳು ನಮಗೆ ಆಧಾರವನ್ನೊದಗಿಸುತ್ತವೆ.’’ ಈ ಹಿನ್ನೆಲೆಯಲ್ಲಿ, ಬಾಂಗ್ಲಾದೇಶದ ಹಿಂದೂಗಳ ಭದ್ರತೆಯ ಬಗ್ಗೆ ನಾವು ತೋರುತ್ತಿರುವ ಕಾಳಜಿಯ ಒಂದು ಸಣ್ಣ ಭಾಗವನ್ನಾದರೂ ಭಾರತೀಯ ಹಿಂದೂಗಳ ಭದ್ರತೆಯ ಬಗ್ಗೆ ತೋರಲೇಬೇಕಾಗಿದೆ.

ವಾರ್ತಾ ಭಾರತಿ 13 Jan 2026 10:08 am

ಕಾವೂರು | ಬಾಂಗ್ಲಾದೇಶಿಯೆಂದು ಆರೋಪಿಸಿ ವಲಸೆ ಕಾರ್ಮಿಕನಿಗೆ ಹಲ್ಲೆ ಪ್ರಕರಣ: ಮೂವರು ಆರೋಪಿಗಳ ಬಂಧನ

ಮಂಗಳೂರು, ಜ.13: ಬಾಂಗ್ಲಾದೇಶದ ಪ್ರಜೆ ಎಂದು ಆರೋಪಿಸಿ ಜಾರ್ಖಂಡ್ ಮೂಲದ ವಲಸೆ ಕಾರ್ಮಿಕನಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ಮಾಡಿ, ಕೊಲೆ ಯತ್ನ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿ ಮೂವರು ಆರೋಪಿಗಳನ್ನು ಕಾವೂರು ಪೊಲೀಸರು ಬಂಧಿಸಿದ್ದಾರೆ. ಮಂಗಳೂರು ತಾಲೂಕಿನ ಕೂಳೂರು ಗ್ರಾಮ ನಿವಾಸಿಗಳಾದ ರತೀಶ್ ದಾಸ್ ಯಾನೆ ಲಾಲು (32), ಧನುಷ್ (24) ಮತ್ತು ಸಾಗರ್ (24) ಬಂಧಿತ ಆರೋಪಿಗಳು ಎಂದು ಪೊಲೀಸರು ತಿಳಿಸಿದ್ದಾರೆ. ಜ. 11ರಂದು ಸಂಜೆ ಸುಮಾರು 6:05ರ ವೇಳೆಗೆ ನಾಲ್ವರು ಆರೋಪಿಗಳು ಜಾರ್ಖಂಡ್ ಮೂಲದ ದಿಲ್ಜಾನ್ ಅನ್ಸಾರಿ ಎಂಬವರನ್ನು ತಡೆದು ನಿಲ್ಲಿಸಿ, ನೀನು ಹಿಂದೂನಾ? ಮುಸ್ಲಿಮ್? ಎಂದು ಪ್ರಶ್ನಿಸಿ ಜನಾಂಗೀಯ ನಿಂದನೆ ಮಾಡಿದ್ದಲ್ಲದೆ, “ನೀನು ಬಾಂಗ್ಲಾದೇಶದವನು” ಎಂದು ಆಪಾದಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಸಾರಣೆ ಮಾಡುವ ತಾಪಿಯಿಂದ ತನ್ನ ಮೇಲೆ ಹಲ್ಲೆಗೈದು ಕೊಲೆಗೆ ಯತ್ನಿಸಿದ್ದಾರೆ ಎಂದು ಪೊಲೀಸ್ ದೂರಿನಲ್ಲಿ ಉಲ್ಲೇಖಿಸಲಾಗಿದೆ. ಈ ಸಂಬಂಧ ಜ. 12ರಂದು ಕಾವೂರು ಪೊಲೀಸ್ ಠಾಣೆಯಲ್ಲಿ ಠಾಣಾ ಅಪರಾಧ ಸಂಖ್ಯೆ 03/2026 ಕಲಂ 126(2), 352, 351(3), 353, 109, 118(1) ಹಾಗೂ 3(5) ಭಾರತೀಯ ನ್ಯಾಯ ಸಂಹಿತೆ–2023 ರ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿ ಮೂವರು ಆರೋಪಿಗಳನ್ನು ಸೋಮವಾರ ಪೊಲೀಸರು ಪತ್ತೆಹಚ್ಚಿ ಬಂಧಿಸಿದ್ದಾರೆ. ಪ್ರಕರಣದ ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ವಾರ್ತಾ ಭಾರತಿ 13 Jan 2026 10:07 am

ಸುಂಕದ ವಿರುದ್ದ ತೀರ್ಪು ಬಂದರೆ US ಆರ್ಥಿಕ ವ್ಯವಸ್ಥೆಗೆ ಸಂಕಷ್ಟ ಖಚಿತ - ಟ್ರಂಪ್‌: ಕಾನೂನಿಗೆ ಹೆದರದ ಸುಂಕನಾಯಕನಿಗೆ ಸುಪ್ರೀಂ ಸಂಕಷ್ಟ!

ನನಗೆ ಯಾವ ಕಾನೂನು ಬೇಡ ಎನ್ನುತ್ತಿದ್ದ ಟ್ರಂಪ್‌ ಈಗ ತನ್ನ ದೇಶದ ಕಾನೂನಿನ ಕುಣಿಕೆಯಲ್ಲಿ ಸಿಲುಕಿದ್ದು, ಅಮೆರಿಕಾ ಸುಪ್ರೀಂ ಕೋರ್ಟ್‌ನಲ್ಲಿ ಟ್ರಂಪ್‌ ಸುಂಕದ ಕಾನೂನುಬದ್ಧತೆಯ ವಿಚಾರಣೆ ನಡೆಯುತ್ತಿದ್ದು, ಬುಧವಾರ ಅಂತಿಮ ತೀರ್ಪು ಹೊರಬರುವ ಸಾಧ್ಯತೆಯಿದೆ. ಇದರಿಂದ ಸುಂಕನಾಯಕ ಟ್ರಂಪ್‌ ನ ಸುಂಕಗಳು ಕಾನೂನುಬದ್ಧವಲ್ಲ ಎಂದು ತೀರ್ಪು ಬಂದರೆ, ಅಮೆರಿಕಾದ ಕಂಪನಿಗಳಿಗೆ ನೂರಾರು ಶತಕೋಟಿ ಡಾಲರ್‌ಗಳನ್ನು ಮರುಪಾವತಿಸಬೇಕಾಗುತ್ತದೆ ಎಂದು ಟ್ರಂಪ್‌ ಆತಂಕ ವ್ಯಕ್ತಪಡಿಸಿದ್ದು,ಇದು ಪಾವತಿಸಲಾಗದಷ್ಟು ಹೊರೆಯನ್ನು ತಂದೊಡ್ಡಲಿದ್ದು, ಅಮೆರಿಕಾದ ಆರ್ಥಿಕ ವ್ಯವಸ್ಥೆಯನ್ನು ಅಸ್ತವ್ಯಸ್ತಗೊಳಿಸಬಹುದು, ಎಂದು ಟ್ಯಾರಿಫ್‌ ಕಿಂಗ್‌ ತಲೆಕೆಡಿಸಿಕೊಂಡಿದ್ದಾರೆ.

ವಿಜಯ ಕರ್ನಾಟಕ 13 Jan 2026 9:59 am

ರೇರ್‌ ಅರ್ಥ್‌ ಮ್ಯಾಗ್ನೆಟ್ಸ್ ಯೋಜನೆಗೆ 7,280 ಕೋಟಿ ರೂ ವೆಚ್ಚ:‌ ಉದ್ಯಮ ಪಾಲುದಾರರ ಜತೆ ಹೆಚ್.ಡಿ. ಕುಮಾರಸ್ವಾಮಿ ಚರ್ಚೆ

ನವದೆಹಲಿ: ಭೂಮಿಯಲ್ಲಿನ ಅಪರೂಪದ ಮ್ಯಾಗ್ನೆಟ್ʼಗಳ ಉತ್ಪಾದನೆ ಮತ್ತು ಬಳಕೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಕೇಂದ್ರದ ಬೃಹತ್‌ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವರಾದ ಹೆಚ್.ಡಿ. ಕುಮಾರಸ್ವಾಮಿ ಅವರು, ಯೋಜನೆಯ ಉದ್ಯಮ ಪಾಲುದಾರರ ಮಹತ್ವದ ಸಭೆಯನ್ನು ನಡೆಸಿದರು. ಬೃಹತ್‌ ಕೈಗಾರಿಕೆ ಸಚಿವಾಲಯದ ಕಚೇರಿಯಲ್ಲಿ ಸೋಮವಾರ ನಡೆದ ಈ ಸಭೆಯಲ್ಲಿ ಭಾರೀ ಕೈಗಾರಿಕೆಗಳ ಸಚಿವಾಲಯದ ಕಾರ್ಯದರ್ಶಿ, ಪರಮಾಣು ಇಂಧನ ಇಲಾಖೆಯ ಕಾರ್ಯದರ್ಶಿ,

ಒನ್ ಇ೦ಡಿಯ 13 Jan 2026 9:38 am

ಮೋಡ ಮುಸುಕಿದ ವಾತಾವರಣ, ತುಂತುರು ಮಳೆ; ಕಾಫಿ, ಭತ್ತದ ಬೆಳೆ ರಕ್ಷಣೆಯೇ ಸವಾಲು!

ಮಡಿಕೇರಿ ಜಿಲ್ಲೆಯಲ್ಲಿ ಮೋಡ ಮುಸುಕಿದ ವಾತಾವರಣ ಮತ್ತು ತುಂತುರು ಮಳೆಯಿಂದಾಗಿ ಕಾಫಿ ಮತ್ತು ಭತ್ತದ ಕೃಷಿಕರು ಸಂಕಷ್ಟ ಎದುರಿಸುತ್ತಿದ್ದಾರೆ. ಕಾಫಿ ಒಣಗಿಸುವಲ್ಲಿ ವಿಳಂಬ ಮತ್ತು ಶಿಲೀಂಧ್ರ ರೋಗಗಳ ಭೀತಿ ಎದುರಾಗಿದ್ದು, ಇನ್ನೂ ಕಟಾವಾಗದ ಭತ್ತಕ್ಕೂ ಹಾನಿಯ ಆತಂಕವಿದೆ.

ವಿಜಯ ಕರ್ನಾಟಕ 13 Jan 2026 9:35 am

Bangladesh ಹಿಂಸಾಚಾರ: ಆಟೊ ಚಾಲಕನಿಗೆ ಥಳಿಸಿ ಹತ್ಯೆ

ಢಾಕಾ: ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತರ ವಿರುದ್ಧದ ಹಿಂಸಾಚಾರ ಮುಂದುವರಿದಿದ್ದು, ರವಿವಾರ ರಾತ್ರಿ ಆಟೊ ಚಾಲಕ ಸಮೀರ್ ದಾಸ್ ಅವರನ್ನು ಥಳಿಸಿ ಹತ್ಯೆ ಮಾಡಲಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಅವರಿಗೆ 28 ವರ್ಷ ವಯಸ್ಸಾಗಿತ್ತು. ಚಿತ್ತಗಾಂಗ್ ಜಿಲ್ಲೆಯ ದಗನ್ಭೂಯಿಯಾನ್ ಪ್ರದೇಶದಲ್ಲಿ ರವಿವಾರ ರಾತ್ರಿ ಈ ಕರಾಳ ಹತ್ಯೆ ನಡೆದಿದೆ. ದಾಳಿಕೋರರು ಸಮೀರ್ ದಾಸ್ ಅವರನ್ನು ಅಮಾನುಷವಾಗಿ ಥಳಿಸಿ, ಚೂರಿಯಿಂದ ಇರಿದು ಕೊಂದಿದ್ದಾರೆ. ಹತ್ಯೆಯ ಬಳಿಕ ಅಪರಾಧಿಗಳು ಸಮೀರ್ ದಾಸ್‌ಗೆ ಸೇರಿದ ಬ್ಯಾಟರಿ ಚಾಲಿತ ರಿಕ್ಷಾವನ್ನು ಅಪಹರಿಸಿ ಪರಾರಿಯಾಗಿದ್ದಾರೆ. “ದೇಶಿ ನಿರ್ಮಿತ ಆಯುಧಗಳಿಂದ ಹೊಡೆದು ಮತ್ತು ಥಳಿಸಿ ಸಮೀರ್ ಅವರನ್ನು ಹತ್ಯೆ ಮಾಡಲಾಗಿದೆ. ಮೇಲ್ನೋಟಕ್ಕೆ ಇದು ಪೂರ್ವಯೋಜಿತ ಹತ್ಯೆಯಂತೆ ಕಾಣುತ್ತಿದೆ. ದಾಳಿಕೋರರು ಹತ್ಯೆಯ ಬಳಿಕ ಆಟೊರಿಕ್ಷಾವನ್ನು ಅಪಹರಿಸಿದ್ದಾರೆ. ಸಂತ್ರಸ್ತ ಕುಟುಂಬ ಎಫ್‌ಐಆರ್ ದಾಖಲಿಸಲಿದೆ. ಹಲ್ಲೆಕೋರರನ್ನು ಪತ್ತೆಹಚ್ಚಿ ಬಂಧಿಸಲು ಪೊಲೀಸ್ ಕಾರ್ಯಾಚರಣೆ ಆರಂಭವಾಗಿದೆ,” ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಬಾಂಗ್ಲಾದೇಶದಲ್ಲಿ ಸುಮಾರು 17 ಕೋಟಿ ಜನಸಂಖ್ಯೆ ಇದ್ದು, 2024ರಿಂದೀಚೆಗೆ ಹಿಂಸಾಚಾರ ನಡೆಯುತ್ತಿದೆ. ಸೂಫಿ ಮುಸ್ಲಿಮರು ಮತ್ತು ಹಿಂದೂಗಳು ಸೇರಿದಂತೆ ಅಲ್ಪಸಂಖ್ಯಾತರ ಮೇಲೆ ದಾಳಿ ನಡೆಯುತ್ತಿವೆ. ಒಟ್ಟು ಜನಸಂಖ್ಯೆಯಲ್ಲಿ ಶೇಕಡಾ 10ರಷ್ಟು ಅಲ್ಪಸಂಖ್ಯಾತರು ಇದ್ದಾರೆ.

ವಾರ್ತಾ ಭಾರತಿ 13 Jan 2026 8:57 am

ಭೂಮಿಯಲ್ಲಿ ಸಿಗುವುದು ಯಾರ ಆಸ್ತಿ: ಪುರಾತತ್ವ ಇಲಾಖೆ ಮಹತ್ವದ ಮಾಹಿತಿ

ಗದಗ: ಗದಗ ಜಿಲ್ಲೆಯ ಲಕ್ಕುಂಡಿ ಗ್ರಾಮದ ನಿಧಿ ಪ್ರಕರಣವು ದೇಶದ ಗಮನ ಸೆಳೆದಿದೆ. ಗದಗ ಜಿಲ್ಲೆಯ ಲಕ್ಕುಂಡಿಯಲ್ಲಿ 470 ಗ್ರಾಂ ನಿಧಿ ಸಿಕ್ಕಿದೆ. ಪುರತತ್ವ ಇಲಾಖೆಯು ಅಧಿಕಾರಿಯೊಬ್ಬರು ನೀಡಿದ್ದ ಹೇಳಿಕೆಯು ಭಾರೀ ಗೊಂದಲಕ್ಕೆ ಕಾರಣವಾಗಿತ್ತು. ಮುತ್ತಜ್ಜರ ಆಭರಣ ಇರಬಹುದು ಎಂದು ಭಾರತೀಯ ಪುರಾತತ್ವ ಇಲಾಖೆಯ ಅಧಿಕಾರಿ ರಮೇಶ್ ಮೂಲಿಮನಿ ಹೇಳಿದ್ದರು. ಇದು ಯಾವುದಾದರೂ ಜಾಗದಲ್ಲಿ ನಿಧಿ /

ಒನ್ ಇ೦ಡಿಯ 13 Jan 2026 8:55 am

ಷರತ್ತುಗಳಿಗೆ ಆಕ್ಷೇಪ, ಗೋಕರ್ಣ ಟೆಂಡರ್ ರದ್ದು, ಹೊಸ ನಿಯಮ ರೂಪಿಸಲು ಕ್ರಮ

ಗೋಕರ್ಣ ಜಲಸಾಹಸ ಕ್ರೀಡಾ ಟೆಂಡರ್‌ಗೆ ವಿಧಿಸಿದ್ದ ಹೊಸ ಷರತ್ತುಗಳಿಗೆ ವ್ಯಾಪಕ ಆಕ್ಷೇಪ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಪ್ರವಾಸೋದ್ಯಮ ಸಚಿವರ ಸೂಚನೆ ಮೇರೆಗೆ ಟೆಂಡರ್ ರದ್ದು ಮಾಡಲಾಗಿದೆ. ಪ್ರವಾಸೋದ್ಯಮ ಇಲಾಖೆ ಕೇಂದ್ರ ಕಚೇರಿಯ ಅಧಿಕಾರಿಗಳ ಸಮಿತಿ ಮೂಲಕ ನಿಯಮ ರೂಪಿಸಿ ಟೆಂಡರ್ ಕರೆಯಲು ನಿರ್ದೇಶನ ನೀಡಲಾಗಿದೆ. ಈವರೆಗೆ ಹಳೆಯ ದರದಲ್ಲಿ ಟೆಂಡರ್ ಮುಂದುವರಿಯಲಿದೆ.

ವಿಜಯ ಕರ್ನಾಟಕ 13 Jan 2026 8:54 am

ಬಳ್ಳಾರಿ ಜಿಲ್ಲೆಯಲ್ಲಿ ಮನರೇಗಾ ಅಕ್ರಮ ಕಡಿವಾಣಕ್ಕೆ ಇ-ಕೆವೈಸಿ ಅಸ್ತ್ರ: ಶೇ.91% ಕಾರ್ಮಿಕರಿಗೆ ಇ-ಕೆವೈಸಿ ವಿತರಣೆ ಯಶಸ್ವಿ

ಮನರೇಗಾ ಯೋಜನೆಯಲ್ಲಿ ನಕಲಿ ಜಾಬ್‌ ಕಾರ್ಡ್‌ ಮತ್ತು ಕಾರ್ಮಿಕರ ಹೆಸರಲ್ಲಿ ಅಕ್ರಮ ಹಾಜರಾತಿ ತಡೆಯಲು ಇ-ಕೆವೈಸಿ ಅಸ್ತ್ರ ಪ್ರಯೋಗಿಸಲಾಗಿದೆ. ಜಿಲ್ಲೆಯ 5.06 ಲಕ್ಷ ಕಾರ್ಮಿಕರಲ್ಲಿ 2.65 ಲಕ್ಷ ಕಾರ್ಮಿಕರ ಇ-ಕೆವೈಸಿ ಪೂರ್ಣಗೊಂಡಿದ್ದು, ಶೇ.91ರಷ್ಟು ಪ್ರಗತಿ ಸಾಧಿಸಲಾಗಿದೆ. ಇನ್ನೂ 24,652 ಕಾರ್ಮಿಕರು ಬಾಕಿಯಿದ್ದು, ವಲಸೆ, ಮರಣ ಕಾರಣಗಳಿಂದ ದೂರ ಉಳಿದಿದ್ದಾರೆ.

ವಿಜಯ ಕರ್ನಾಟಕ 13 Jan 2026 8:43 am

ಕರ್ನಾಟಕದ ನಾಯಕತ್ವ ಬಿಕ್ಕಟ್ಟು ಬೆನ್ನಲ್ಲೇ ಮಹತ್ವಪಡೆದ ರಾಹುಲ್‌ಗಾಂಧಿ, ಸಿದ್ದರಾಮಯ್ಯ, ಡಿಕೆಶಿಯವರ ಮೈಸೂರು ಭೇಟಿ!

ನಾಯಕತ್ವದ ಗೊಂದಲದ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ಇದೇ ಮೊದಲ ಬಾರಿಗೆ ಮಂಗಳವಾರ ಮೈಸೂರಿನಲ್ಲಿ ರಾಹುಲ್‌ ಗಾಂಧಿ ಅವರನ್ನು ಭೇಟಿಯಾಗಲಿದ್ದಾರೆ, ರಾಜ್ಯ ಕಾಂಗ್ರೆಸ್‌ನ ಬಿಕ್ಕಟ್ಟಿಗೆ ಪರಿಹಾರ ಸೂತ್ರ ದೊರಕಲಿದೆಯೇ ಎಂಬ ಕುತೂಹಲ ಮೂಡಿದೆ. ಸಂಪುಟ ಪುನಾರಚನೆ ಮತ್ತು ಅಧಿಕಾರ ಹಸ್ತಾಂತರದ ಬಗ್ಗೆ ಚರ್ಚೆ ನಡೆಯುವ ಸಾಧ್ಯತೆ ಇದೆ.

ವಿಜಯ ಕರ್ನಾಟಕ 13 Jan 2026 8:28 am

Bangladesh | ಪೊಲೀಸ್ ಕಸ್ಟಡಿಯಲ್ಲಿ ರಾಜಕಾರಣಿ ಮೃತ್ಯು

ಢಾಕಾ: ಖ್ಯಾತ ಗಾಯಕ ಹಾಗೂ ಅವಾಮಿ ಲೀಗ್ ಪಕ್ಷದ ಹಿರಿಯ ಪದಾಧಿಕಾರಿ ಪ್ರೊಲೋಯ್ ಚಾಕಿ ಬಾಂಗ್ಲಾದೇಶದಲ್ಲಿ ಪೊಲೀಸ್ ಕಸ್ಟಡಿಯಲ್ಲಿ ಮೃತಪಟ್ಟಿದ್ದಾರೆ. 60 ವರ್ಷ ವಯಸ್ಸಿನ ಚಾಕಿ ಅವರಿಗೆ ಜೈಲಿನಲ್ಲಿ ಅಗತ್ಯ ವೈದ್ಯಕೀಯ ಸೌಲಭ್ಯಗಳನ್ನು ನಿರಾಕರಿಸಿದ್ದೇ ಅವರ ಸಾವಿಗೆ ಕಾರಣ ಎಂದು ಕುಟುಂಬ ಸದಸ್ಯರು ಆರೋಪಿಸಿದ್ದಾರೆ. ಇದು ಸಹಜ ಸಾವು ಎಂಬ ಪೊಲೀಸರ ಹೇಳಿಕೆಯನ್ನು ಅವರು ತೀವ್ರವಾಗಿ ಅಲ್ಲಗಳೆದಿದ್ದಾರೆ. 2024ರಲ್ಲಿ ನಡೆದ ತಾರತಮ್ಯ ವಿರೋಧಿ ಹೋರಾಟದ ಸಂದರ್ಭದಲ್ಲಿ ನಡೆದ ಸ್ಫೋಟ ಪ್ರಕರಣವೊಂದಕ್ಕೆ ಸಂಬಂಧಿಸಿ ಪ್ರೊಲೋಯ್ ಅವರನ್ನು ಬಂಧಿಸಲಾಗಿತ್ತು. ಅವರು ರವಿವಾರ ರಾತ್ರಿ ಕೊನೆಯುಸಿರೆಳೆದಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಡಿಸೆಂಬರ್ 16ರಂದು ಪ್ರೊಲೋಯ್ ಅವರನ್ನು ದಿಲಾಲ್ಪುರದಲ್ಲಿರುವ ಅವರ ನಿವಾಸದಿಂದ ಪೊಲೀಸರು ಕರೆದೊಯ್ದಿದ್ದು, ಬಳಿಕ ಬಂಧನವಾಗಿದೆ ಎಂದು ತೋರಿಸಲಾಗಿದೆ ಎಂದು ಪಕ್ಷದ ಪಬ್ನಾ ಘಟಕದ ಸಾಂಸ್ಕೃತಿಕ ವ್ಯವಹಾರಗಳ ಕಾರ್ಯದರ್ಶಿ ತಿಳಿಸಿದ್ದಾರೆ. ದೇಶದಲ್ಲಿ ಅಲ್ಪಸಂಖ್ಯಾತ ವಿರೋಧಿ ಹಿಂಸಾಚಾರ ಮುಂದುವರಿದಿರುವ ನಡುವೆಯೇ ಪ್ರೊಲೋಯ್ ಚಾಕಿ ಸಾವು ಆತಂಕ ಮೂಡಿಸಿದೆ. ಅವಾಮಿ ಲೀಗ್‌ಗೆ ಸಂಪರ್ಕ ಹೊಂದಿರುವ ಗುಂಪುಗಳು, ಪಕ್ಷಗಳು ಮತ್ತು ಸಂಸ್ಥೆಗಳನ್ನು ಗುರಿಯಾಗಿಸಿ ಹಿಂಸಾಕೃತ್ಯಗಳು ನಡೆಯುತ್ತಿವೆ. ಹಿಂಸಾಚಾರದಲ್ಲಿ ಏಳು ಮಂದಿ ಹತ್ಯೆಗೀಡಾಗಿದ್ದು, ದೀಪು ಚಂದ್ರ ದಾಸ್ ಅವರನ್ನು ಡಿಸೆಂಬರ್ 18ರಂದು ಮೈಮೆನ್ಸಿಂಗ್ ನಲ್ಲಿ ಹತ್ಯೆ ಮಾಡಿದ ಬಳಿಕ ಅವರ ಆಸ್ತಿಪಾಸ್ತಿಗಳನ್ನೂ ನಾಶಪಡಿಸಲಾಗಿದೆ. ಮೃತ ಚಾಕಿ ಅವರು ಹೃದ್ರೋಗ ಹಾಗೂ ಮಧುಮೇಹ ಸೇರಿದಂತೆ ಹಲವು ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದರು ಎಂದು ಪಬ್ನಾ ಜೈಲು ಅಧೀಕ್ಷಕ ಮುಹಮ್ಮದ್ ಉಮರ್ ಫಾರೂಕ್ ಹೇಳಿದ್ದಾರೆ. “ಯಾವುದೇ ಪ್ರಕರಣ ಇಲ್ಲದಿದ್ದರೂ ನನ್ನ ತಂದೆಯನ್ನು ಬಂಧಿಸಲಾಗಿದೆ. ಅವರಿಗೆ ದೀರ್ಘಕಾಲದಿಂದ ಮಧುಮೇಹ ಮತ್ತು ಹೃದ್ರೋಗ ಇತ್ತು. ಜೈಲಿನಲ್ಲಿ ಅವರ ಆರೋಗ್ಯ ಸ್ಥಿತಿ ಹದಗೆಟ್ಟಿತ್ತು. ಆದರೆ ಅಧಿಕಾರಿಗಳು ಈ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ. ಇತರರಿಂದ ಮಾಹಿತಿ ಪಡೆದ ನಂತರ ಆಸ್ಪತ್ರೆಗೆ ಧಾವಿಸಿದ್ದೇವೆ. ಆದರೆ ಇಲ್ಲಿ ಸೂಕ್ತ ಚಿಕಿತ್ಸೆ ದೊರಕದ ಕಾರಣ ಅವರು ಮೃತಪಟ್ಟರು,” ಎಂದು ಪ್ರೊಲೋಯ್ ಅವರ ಪುತ್ರ ಆರೋಪಿಸಿದ್ದಾರೆ.

ವಾರ್ತಾ ಭಾರತಿ 13 Jan 2026 8:20 am

ಹೆಗ್ಗುಂಜೆ ಮನೆ ತೆರವು ಪ್ರಕರಣ: ಇಂದು ಬಿಜೆಪಿಯಿಂದ ಪ್ರತಿಭಟನೆ

ಬ್ರಹ್ಮಾವರ: ತಾಲೂಕಿನ ಹೆಗ್ಗುಂಜೆ ಗ್ರಾಪಂ ವ್ಯಾಪ್ತಿಯ ಸರಕಾರಿ ಸ್ಥಳದಲ್ಲಿ ನಿರ್ಮಿಸಲಾದ ಮನೆ ಮತ್ತು ಶೆಡ್ ಗಳನ್ನು ಬ್ರಹ್ಮಾವರ ತಹಶೀಲ್ದಾರ್ ನೇತೃತ್ವದಲ್ಲಿ ತೆರವು ಗೊಳಿಸಿದನ್ನು ವಿರೋಧಿಸಿ ಇಂದು ಬೆಳಗ್ಗೆ ಬ್ರಹ್ಮಾವರ ತಾಲೂಕು ಕಚೇರಿ ಎದುರು ಬೃಹತ್ ಪ್ರತಿಭಟನೆ ನಡೆಸಲು ಬಿಜೆಪಿ ನಿರ್ಧರಿಸಿದೆ. ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ ಮತ್ತು ಸಂಸದ ಕೋಟ ಶ್ರೀನಿವಾಸ ಪೂಜಾರಿ ನೇತೃತ್ವದಲ್ಲಿ ಈ ಪ್ರತಿಭಟನೆ ನಡೆಯಲಿದೆ. ಬಿಲ್ಲಾಡಿ ಗ್ರಾಮದ ದೇವಕಿ ಶೇಖರ ನಾಯ್ಕ ಅವರು ಸರಕಾರಿ ಜಾಗದಲ್ಲಿ ನಿರ್ಮಾಣ ಹಂತದ ಮನೆ ಹಾಗೂ ನಾಲ್ಕು ಕುಟುಂಬಗಳ ಶೆಡ್ ನ್ನು ಸೋಮವಾರ ಬ್ರಹ್ಮಾವರ ತಹಶೀಲ್ದಾರ್ ನೇತ್ರತ್ವದಲ್ಲಿ ತೆರವುಗೊಳಿಸಲಾಗಿತ್ತು.

ವಾರ್ತಾ ಭಾರತಿ 13 Jan 2026 8:10 am

ಅಡಕೆ ಎಲೆಚುಕ್ಕಿ ರೋಗಕ್ಕಿಲ್ಲ. ಪರಿಹಾರ: ಬೆಳೆಗಾರರು ಕಂಗಾಲ!

ಅಡಕೆ ಎಲೆಚುಕ್ಕಿ ರೋಗವನ್ನು ನೈಸರ್ಗಿಕ ರಾಷ್ಟ್ರೀಯ ವಿಪತ್ತು ಎಂದು ಘೋಷಿಸಲು ಕೇಂದ್ರ, ರಾಜ್ಯ ಸರಕಾರ ವಿಫಲವಾಗಿದೆ. ಹವಾಮಾನ ವೈಪರೀತ್ಯದಿಂದ ಉಂಟಾದ ಈ ರೋಗದಿಂದ ರೈತರು ಭಾರೀ ನಷ್ಟ ಅನುಭವಿಸುತ್ತಿದ್ದಾರೆ. ಬೆಳೆ ನಷ್ಟದ ಬಗ್ಗೆ ನಿಖರ ಮಾಹಿತಿ ಸಂಗ್ರಹಿಸಿ ಪರಿಹಾರ ನೀಡಲು ರೈತರು ಆಗ್ರಹಿಸಿದ್ದಾರೆ.

ವಿಜಯ ಕರ್ನಾಟಕ 13 Jan 2026 8:06 am

Property E-Asset: ಪ್ರಾಪರ್ಟಿಗಳ ನಮೂನೆ 11ಎ &ನಮೂನೆ 11ಬಿ ಎಂದರೇನು, ಇದನ್ನು ಪಡೆಯುವುದು ಹೇಗೆ ?

ಪ್ರಾಪರ್ಟಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರವು ಹಲವು ಮಹತ್ವದ ಬದಲಾವಣೆಗಳನ್ನು ತಂದಿದೆ. ಇದೀಗ ನಮೂನೆ 11ಎಗೆ ಸಂಬಂಧಿಸಿದಂತೆ ಮಹತ್ವದ ಗುಡ್‌ನ್ಯೂಸ್‌ವೊಂದನ್ನು ನೀಡಲಾಗಿದೆ. ಆನ್‌ಲೈನ್ ಮೂಲಕ ನಮೂನೆ 11ಎ ಪಡೆಯಲು ಅವಕಾಶ ನೀಡಲಾಗಿದೆ. ಹಾಗಾದರೆ ಏನಿದು ನಮೂನೆ 11ಎ, ಆಸ್ತಿಗಳಲ್ಲಿ ಇದು ಯಾಕೆ ತುಂಬಾ ಮುಖ್ಯವಾಗಿದೆ, ಪ್ರಾಪರ್ಟಿದಾರರು ನಮೂನೆ 11ಎ ಆನ್‌ಲೈನ್‌ನ ಮೂಲಕ ಪಡೆದುಕೊಳ್ಳುವುದು ಹೇಗೆ ಎನ್ನುವ ಸಂಪೂರ್ಣ ವಿವರ

ಒನ್ ಇ೦ಡಿಯ 13 Jan 2026 8:00 am

ರಾಷ್ಟ್ರ ರಾಜಧಾನಿಯಲ್ಲಿ ನಡುಗುವ ಚಳಿ; ಮೂರು ವರ್ಷಗಳಲ್ಲೇ ಕನಿಷ್ಠ ಉಷ್ಣಾಂಶ ದಾಖಲು

ಹೊಸದಿಲ್ಲಿ: ಶೀತಗಾಳಿಯಿಂದ ಕಂಗೆಟ್ಟಿರುವ ರಾಷ್ಟ್ರ ರಾಜಧಾನಿಯಲ್ಲಿ ಸೋಮವಾರ ತಾಪಮಾನ ಮತ್ತಷ್ಟು ಕುಸಿದಿದೆ. ಸಫ್ದರ್ಜಂಗ್ ನಲ್ಲಿ 3.2 ಡಿಗ್ರಿ ಸೆಲ್ಷಿಯಸ್ ಉಷ್ಣಾಂಶ ದಾಖಲಾಗಿದ್ದು, ಇದು ಮೂರು ವರ್ಷಗಳಲ್ಲೇ ಕನಿಷ್ಠ ಹಾಗೂ ವಾಡಿಕೆ ತಾಪಮಾನಕ್ಕಿಂತ ನಾಲ್ಕು ಡಿಗ್ರಿ ಕಡಿಮೆ ಎಂದು ಹವಾಮಾನ ಇಲಾಖೆ ಅಂಕಿ ಅಂಶಗಳಿಂದ ತಿಳಿದುಬಂದಿದೆ. ದೆಹಲಿಯ ಪ್ರಮುಖ ಚಳಿಮಾಪನಾ ಕೇಂದ್ರವಾಗಿರುವ ಸಫ್ದರ್ಜಂಗ್ ನಲ್ಲಿ 2023ರ ಜನವರಿ 18ರಂದು 2.6 ಡಿಗ್ರಿ ತಾಪಮಾನ ದಾಖಲಾಗಿತ್ತು. ಬುಧವಾರ ವರೆಗೂ ಇದೇ ಉಷ್ಣಾಂಶ ಮುಂದುವರಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಅಂದಾಜಿಸಿದೆ. ಆ ಬಳಿಕ ಪಶ್ಚಿಮ ಪ್ರಕ್ಷುಬ್ಧತೆಯ ಪ್ರಭಾವ ಈ ಭಾಗದ ಮೇಲೆ ಆಗಲಿದೆ ಎಂದು ಹೇಳಲಾಗಿದೆ. ಲೋಧಿ ರಸ್ತೆ ಪ್ರದೇಶ ರಾಜಧಾನಿಯ ಅತ್ಯಂತ ಶೀತ ಪ್ರದೇಶವಾಗಿದ್ದು, 3 ಡಿಗ್ರಿ ಸೆಲ್ಷಿಯಸ್ ಉಷ್ಣಾಂಶ ದಾಖಲಾಗಿದೆ. ಅಯನಗರದಲ್ಲಿ 3.2 ಡಿಗ್ರಿ ಹಾಗೂ ಪಾಲಂನಲ್ಲಿ 3.3 ಡಿಗ್ರಿ ತಾಪಮಾನದಾಖಲಾಗಿದೆ. ದೆಹಲಿಯ ಹಲವು ಮಾಪನಾ ಕೇಂದ್ರಗಳಲ್ಲಿ ಸೋಮವಾರ ಶೀತಗಾಳಿಯ ಅನುಭವ ಆಗಿದೆ. ಇದು ಮುಂದಿನ ಎರಡು ದಿನಗಳ ಕಾಲ ಮುಂದವರಿಯಲಿದೆ ಎಂದು ಐಎಂಡಿ ವಿಜ್ಞಾನಿ ಕೃಷ್ಣ ಮಿಶ್ರಾ ಹೇಳಿದ್ದಾರೆ. ಕನಿಷ್ಠ ತಾಪಮಾನ 10 ಡಿಗ್ರಿ ಸೆಲ್ಷಿಯಸ್ ಗಿಂತ ಕಡಿಮೆ ಇರುವ ಹಾಗೂ ವಾಡಿಕೆ ತಾಪಮಾನಕ್ಕಿಂತ 4.5 ಡಿಗ್ರಿಯಷ್ಟು ಕಡಿಮೆ ಉಷ್ಣಾಂಶ ಇರುವ ಪರಿಸ್ಥಿತಿಯನ್ನು ಶೀತಗಾಳಿ ಎಂದು ಪರಿಗಣಿಸಲಾಗುತ್ತದೆ. ಕನಿರ್ಷಠ ತಾಪಮಾನ ವಾಡಿಕೆಗಿಂತ 4 ಡಿಗ್ರಿಯಷ್ಟು ಕಡಿಮೆ ಇದ್ದಾಗ ಕೂಡಾ ಶೀತ ಅಲೆ ಎಂದು ಕರೆಯಲಾಗುತ್ತದೆ. ಈ ಋತುವಿನಲ್ಲಿ ಇದೇ ಮೊದಲ ಬಾರಿಗೆ ಸಫ್ದರ್ಜಂಗ್ ನಲ್ಲಿ ಶೀತ ಅಲೆ ಕಂಡುಬಂದಿದೆ.

ವಾರ್ತಾ ಭಾರತಿ 13 Jan 2026 7:59 am

ಇರಾನ್ ಜೊತೆ ವ್ಯವಹಾರ ನಡೆಸುವ ದೇಶಗಳಿಗೆ 25% ಹೆಚ್ಚುವರಿ ಸುಂಕ: ಟ್ರಂಪ್

ವಾಷಿಂಗ್ಟನ್: ಇರಾನ್ ಜತೆ ವಹಿವಾಟು ನಡೆಸುವ ಎಲ್ಲ ದೇಶಗಳ ಮೇಲೆ ಶೇಕಡ 25ರಷ್ಟು ಹೆಚ್ಚುವರಿ ಸುಂಕ ವಿಧಿಸಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆದೇಶ ಹೊರಡಿಸಿದ್ದಾರೆ. ಈ ಮೂಲಕ ಇರಾನ್ ಸರ್ಕಾರದ ಮೇಲೆ ಒತ್ತಡ ತಂದಿದ್ದಾರೆ. ಈ ಸುಂಕ ತಕ್ಷಣದಿಂದ ಜಾರಿಗೆ ಬರಲಿದೆ ಎಂದು ಟ್ರಂಪ್ ಸ್ಪಷ್ಟಪಡಿಸಿದ್ದಾರೆ. ತಕ್ಷಣದಿಂದ ಜಾರಿಯಾಗುವಂತೆ, ಇಸ್ಲಾಮಿಕ್ ರಿಪಬ್ಲಿಕ್ ಆಫ್ ಇರಾನ್ ಜತೆ ವ್ಯವಹಾರ ನಡೆಸುವ ಯಾವುದೇ ದೇಶಗಳು ಅಮೆರಿಕದ ಜತೆ ವಹಿವಾಟು ನಡೆಸುವ ವೇಳೆ ಶೇಕಡ 25ರಷ್ಟು ಸುಂಕವನ್ನು ತೆರಬೇಕಾಗುತ್ತದೆ ಎಂದು ಜಾಲತಾಣ ಪೋಸ್ಟ್ ನಲ್ಲಿ ವಿವರಿಸಿದ್ದಾರೆ. ಈ ಆದೇಶ ಅಂತಿಮ ಹಾಗೂ ನಿರ್ಣಯಾತ್ಮಕ ಎಂದು ಅವರು ಹೇಳಿದ್ದಾರೆ. ಇದಕ್ಕೂ ಮುನ್ನ ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಕರೋಲಿನ್ ಲೆವಿಟ್, ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಒಂದು ಉತ್ತಮ ಅಂಶವೆಂದರೆ, ಎಲ್ಲ ಆಯ್ಕೆಗಳನ್ನೂ ಮುಕ್ತವಾಗಿ ಇರಿಸಿರುತ್ತಾರೆ. ಹಲವು ಆಯ್ಕೆಗಳಲ್ಲಿ ವಾಯುದಾಳಿ ಒಂದು; ಕಮಾಂಡ್ ಇನ್ ಚೀಫ್ ಮುಂದೆ ಹಲವು ಆಯ್ಕೆಗಳಿವೆ. ಅಧ್ಯಕ್ಷರಿಗೆ ರಾಜತಾಂತ್ರಿಕತೆ ಯಾವಾಗಲೂ ಮೊದಲ ಆಯ್ಕೆ ಎಂದು ಹೇಳಿದ್ದರು.

ವಾರ್ತಾ ಭಾರತಿ 13 Jan 2026 7:52 am

Gold: ಲಕ್ಕುಂಡಿ ನಿಧಿ ಪ್ರಕರಣ; ಬಾಯ್ತಪ್ಪಿನ ಹೇಳಿಕೆಯಿಂದ ಗೊಂದಲ - ಜಿಲ್ಲಾಧಿಕಾರಿ

ಗದಗ: ಗದಗ ಜಿಲ್ಲೆಯ ಲಕ್ಕುಂಡಿ ಗ್ರಾಮದಲ್ಲಿ ಈಚೆಗೆ ಪತ್ತೆಯಾದ ನಿಧಿ (ಚಿನ್ನಾಭರಣ) ಪ್ರಕರಣಕ್ಕೆ ಸಂಬಂಧಿಸಿದಂತೆ ಪುರಾತತ್ವ ಇಲಾಖೆಯ ಅಧಿಕಾರಿ ನೀಡಿರುವ ಹೇಳಿಕೆಯು ಗೊಂದಲಕ್ಕೆ ಕಾರಣವಾಗಿತ್ತು. ಲಕ್ಕುಂಡಿಯಲ್ಲಿ ಸಿಕ್ಕಿರುವುದು ನಿಧಿ ಅಲ್ಲ ಎಂದು ಭಾರತೀಯ ಪುರಾತತ್ವ ಇಲಾಖೆ ಅಧಿಕಾರಿ ರಮೇಶ್ ಮೂಲಿಮನಿ ಹೇಳಿದ್ದರು. ಈ ಬಗ್ಗೆ ಗದಗ ಜಿಲ್ಲಾಧಿಕಾರಿ ಸಿ.ಎನ್‌.ಶ್ರೀಧರ್ ಅವರು ಸ್ಪಷ್ಟನೆ ನೀಡಿದ್ದಾರೆ. ಭಾರತೀಯ ಪುರಾತತ್ವ ಇಲಾಖೆ

ಒನ್ ಇ೦ಡಿಯ 13 Jan 2026 7:35 am

ಬಾಂಗ್ಲಾದಲ್ಲಿ ಆಟೋ ಚಾಲಕನ ಬರ್ಬರ ಹತ್ಯೆ; ಹಿಂದೂ ಅಲ್ಪಸಂಖ್ಯಾತರ ಮೇಲೆ ನಿಲ್ಲದ ದೌರ್ಜನ್ಯ

ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತ ಹಿಂದೂ ಸಮುದಾಯದವರ ಮೇಲೆ ಸರಣಿ ದಾಳಿ ಮುಂದುವರೆದಿದೆ. ಚಿತ್ತಗಾಂಗ್‌ನಲ್ಲಿ 28 ವರ್ಷದ ಹಿಂದೂ ಆಟೋ ಚಾಲಕ ಸಮೀರ್ ದಾಸ್ ಎಂಬುವವರನ್ನು ಕೊಂದು, ಆಟೋ ಲೂಟಿ ಮಾಡಿ ಪರಾರಿಯಾಗಿರುವುದು ಬೆಳಕಿಗೆ ಬಂದಿದೆ. ಸದ್ಯ ಪೊಲೀಸರು ಸಮೀರ್‌ ಕುಟುಂಬಸ್ಥರು ಕೊಟ್ಟ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತೇವೆ ಎಂದು ಭರವಸೆ ನೀಡಿದೆ

ವಿಜಯ ಕರ್ನಾಟಕ 13 Jan 2026 7:13 am

ಬಂಗಾಳಕೊಲ್ಲಿ ವಾಯುಭಾರ ಕುಸಿತ ಪರಿಣಾಮ: ಈ ಜಿಲ್ಲೆಗಳಲ್ಲಿ ಮಳೆ, ಕರ್ನಾಟಕದಲ್ಲಿ ಹೆಚ್ಚಾಯ್ತು ಚಳಿ

ಬಂಗಾಳ ಕೊಲ್ಲಿಯಲ್ಲಿ ಭಾರೀ ವಾಯುಭಾರ ಕುಸಿತವುಂಟಾಗಿದ್ದು, ಕರ್ನಾಟಕ ಹಾಗೂ ಆಂಧ್ರಪ್ರದೇಶ ಸೇರಿದಂತೆ ವಿವಿಧ ರಾಜ್ಯಗಳ ಮೇಲೆ ಪರಿಣಾಮ ಬೀರಿದೆ. ಆದರೆ, ವಾಯುಭಾರ ಕುಸಿತವು ಚಂಡಮಾರುತ ಸ್ವರೂಪವನ್ನು ಪಡೆದುಕೊಂಡಿಲ್ಲ. ವಾಯುಭಾರ ಕುಸಿತದ ಪ್ರಭಾವವು ತೀವ್ರವಾಗಿದೆ. ಇದರಿಂದ ಬೆಂಗಳೂರು ಸೇರಿದಂತೆ ಕರ್ನಾಟಕದ ವಿವಿಧ ಭಾಗಗಳಲ್ಲಿ ಧಾರಾಕಾರ ಮಳೆ ಮುಂದುವರಿದಿದೆ. ಬೆಂಗಳೂರಿನಲ್ಲಿ ಸೋಮವಾರ ಸಂಜೆ ಮಳೆಯಾಗಿದ್ದು, ಮಂಗಳವಾರವೂ ಮಳೆ ಆಗುವ ನಿರೀಕ್ಷೆ

ಒನ್ ಇ೦ಡಿಯ 13 Jan 2026 6:42 am

ನಾಟಿಕೋಳಿ ಮೊಟ್ಟೆಗೆ ಡಿಮ್ಯಾಂಡ್‌; ಮೊಟ್ಟೆಯೊಂದಕ್ಕೆ 15 ರಿಂದ 20 ರೂ. ಆದರೂ ಖರೀದಿಸಲು ಬಿಡದ ಜನ

ಆರೋಗ್ಯಕ್ಕೆ ಉತ್ತಮವೆಂದು ಪರಿಗಣಿಸಲಾಗುವ ನಾಟಿಕೋಳಿ ಮೊಟ್ಟೆಗೆ ಸದ್ಯ ಮಾರುಕಟ್ಟೆಗಳಲ್ಲಿ ಭಾರಿ ಬೇಡಿಕೆ ಹೆಚ್ಚಿದೆ. ಫಾರಂ ಕೋಳಿ ಮೊಟ್ಟೆಗಿಂತ ಎರಡರಿಂದ ಎರಡೂವರೆ ಪಟ್ಟು ಹೆಚ್ಚು ದರಕ್ಕೆ ಮಾರಾಟವಾಗುತ್ತಿದ್ದರೂ ಸಹ ಜಜನರು ಅದನ್ನು ಕೊಂಡುಕೊಳ್ಳುವುದನ್ನು ಬಿಟ್ಟಿಲ್ಲ. ಮೂಳೆಗಳ ಬಲವರ್ಧನೆಗೆ ನಾಟಿಕೋಳಿ ಮೊಟ್ಟೆ ಉತ್ತಮವೆಂದು ವೈದ್ಯರು ಸೂಚಿಸುತ್ತಿದ್ದು, ಔಷಧ ರೂಪದಲ್ಲೂ ಇದರ ಬಳಕೆ ಹೆಚ್ಚಾಗಿದೆ. ಫಾರಂ ಕೋಳಿ ಮೊಟ್ಟೆ ದರವೂ ಸ್ಥಿರತೆ ಸಾಧಿಸಿದೆ.

ವಿಜಯ ಕರ್ನಾಟಕ 13 Jan 2026 6:00 am

Vande Bharat Sleeper: ಕನ್ಫರ್ಮ್ ಟಿಕೆಟ್ ಇದ್ದವರಿಗಷ್ಟೇ ಪ್ರಯಾಣ, 400 ಕಿಮೀಗೆ ಕನಿಷ್ಠ ದರ, ಟಿಕೆಟ್ ದರಗಳು

ನವದೆಹಲಿ: ಭಾರತದ ಅತೀ ವೇಗದ ರೈಲು, ಬಹುನಿರೀಕ್ಷೆಯ ವಂದೇ ಭಾರತ್ ಸ್ಲೀಪರ್ ಎಕ್ಸ್‌ಪ್ರೆಸ್ ರೈಲು ಇದೇ ಜನವರಿ 17ರಂದು ಕಾರ್ಯಾಚರಣೆ ಆರಂಭಿಸಲಿದೆ. ಪ್ರಧಾನಿ ಮೋದಿಯವರು ಸಂಚಾರಕ್ಕೆ ಹಸಿರುವ ನಿಶಾನೆ ತೋರಿಸಲಿದ್ದಾರೆ. 400 ಕಿಲೋ ಮೀಟರ್ ದೂರದವರೆಗೂಕನಿಷ್ಠ ದರ ವಿಧಿಸಲಾಗಿದೆ. ವೇಟಿಂಗ್ ಲಿಸ್ಟ್, ಆರ್ಎಸಿ ಇದರಲ್ಲಿ ಲಭ್ಯವಿಲ್ಲ. ಇತರ ರೈಲುಗಳಿಗಿಂತ ಈ ರೈಲಿನ ಟಿಕೆಟ್ ದರ ಹೆಚ್ಚು ಎಂದು

ಒನ್ ಇ೦ಡಿಯ 13 Jan 2026 6:00 am

ಉಡುಪಿ: ಮನೆಬಿಟ್ಟು ಬಂದ ಹಳೆಬೀಡಿನ ಬಾಲಕಿಯ ರಕ್ಷಣೆ

ಉಡುಪಿ: ಅಸಹಾಯಕ ಸ್ಥಿತಿಯಲ್ಲಿದ್ದ ಅಪ್ರಾಪ್ತ ಬಾಲಕಿಯನ್ನು ಬನ್ನಂಜೆ ಮಹಾಲಿಂಗೇಶ್ವರ ದೇವಸ್ಥಾನದ ಬಳಿ ರಕ್ಷಿಸಿರುವ ಬಗ್ಗೆ ವರದಿಯಾಗಿದೆ. ಬನ್ನಂಜೆ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ದರ್ಶನಾರ್ಥಿಯಾಗಿ ತೆರಳಿದ್ದ, ಆದಿಉಡುಪಿಯ ಪ್ರೇಮ ರಾಮಚಂದ್ರ ಎಂಬವರಿಗೆ ಬಾಲಕಿ ಕಂಡು ಬಂದಿದ್ದು, ಆಕೆಯ ಚಲನ ವಲನದಲ್ಲಿ ಸಂಶಯಗೊಂಡು ವಿಚಾರಿಸಿದಾಗ, ಬಾಲಕಿ ಮನನೊಂದು ಮನೆ ಬಿಟ್ಟು ಬಂದಿರುವುದಾಗಿ ತಿಳಿದುಬಂದಿದೆ. ತಕ್ಷಣ ಅವರು ಸಮಾಜಸೇವಕ ನಿತ್ಯಾನಂದ ಒಳಕಾಡುವರಿಗೆ ಮಾಹಿತಿ ನೀಡಿದ್ದು, ಒಳಕಾಡು ನಗರ ಪೋಲಿಸ್ ಠಾಣೆಗೆ ಮಾಹಿತಿ ನೀಡಿ, ಬಾಲಕಿಯನ್ನು ರಕ್ಷಿಸಿ, ದೊಡ್ಡಣಗುಡ್ಡೆಯ ಬಾಲಕಿಯರ ಬಾಲ ಮಂದಿರದಲ್ಲಿ ಪುರ್ನವಸತಿ ಕಲ್ಪಿಸಲಾಗಿದೆ. ಈ ಕಾರ್ಯಾಚರಣೆಗೆ ಹರೀಶ್ ಪೂಜಾರಿ ಉದ್ಯಾವರ ಸಹಕರಿಸಿದರು. ಬಾಲಕಿ ನಾಪತ್ತೆಯಾದ ಬಗ್ಗೆ ಹಳೇಬೀಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಹಳೇಬೀಡು ಪೋಲಿಸರು ಬಾಲಕಿ ಉಡುಪಿಯಲ್ಲಿ ಪತ್ತೆಯಾಗಿರುವ ಮಾಹಿತಿ ತಿಳಿದು ಬಾಲಕಿಯ ತಾಯಿಯೊಂದಿಗೆ ಬಂದಿದ್ದಾರೆ. ಅದರಂತೆ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷರು ಬಾಲಕಿಯನ್ನು ಹಳೇಬೀಡಿನ ಪೋಲಿಸರಿಗೆ ಒಪ್ಪಿಸಿದರು. ತಾಯಿಯೊಂದಿಗೆ ತೆರಳಲು ಒಪ್ಪದ ಕಾರಣದಿಂದ ಬಾಲಕಿಗೆ ಚಿಕ್ಕಮಗಳೂರು ಬಾಲಕಿಯರ ಬಾಲ ಮಂದಿರದಲ್ಲಿ ಪುರ್ನವಸತಿ ಕಲ್ಪಿಸುವ ಪ್ರಕ್ರಿಯೆ ಮುಂದುವರಿದಿದೆ.

ವಾರ್ತಾ ಭಾರತಿ 13 Jan 2026 12:38 am

Mulki | ಹಣಕ್ಕೆ ಬೇಡಿಕೆಯಿಟ್ಟು ಕೃಷಿಕನ ಮೇಲೆ ದಾಳಿ: ಆರೋಪಿಗಳ ಮೇಲೆ ಕೋಕಾ ಕಾಯ್ದೆಯಡಿ ಪ್ರಕರಣ ದಾಖಲು

ಮುಲ್ಕಿ: ಇಲ್ಲಿನ ಅಂಗಾರಗುಡ್ಡೆಯ ಕೃಷಿಕರೊಬ್ಬರ ಮೇಲೆ ಹಣ ಸುಲಿಗೆ ಮಾಡುವ ಸಲುವಾಗಿ ದಾಳಿ ಮಾಡಿದ್ದ ಪ್ರಕರಣದ ಮೂವರು ಆರೋಪಿಗಳ ವಿರುದ್ಧ ಮುಲ್ಕಿ ಪೊಲೀಸರು ಕೋಕಾ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮುಲ್ಕಿ ಕೆರೆಕಾಡು ನಿವಾಸಿ ಶ್ಯಾಮ್ ಸುಂದರ್ ಶೆಟ್ಟಿ, ಆಕಾಶ್ ಪೂಜಾರಿ ಹಾಗೂ ಸುವೀನ್ ಎಂಬವರ ಮೇಲೆ ಕೋಕಾ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಹೇಳಿದ್ದಾರೆ. ಪ್ರಕರಣದಲ್ಲಿ ಭಾಗಿಯಾಗಿದ್ದ ಸುವೀನ್ ಮೇಲೆ 1 ಕೊಲೆ ಪ್ರಕರಣ, 2 ಕೊಲೆಯತ್ನಗಳು, 1 ಡಕಾಯಿತಿ ಮತ್ತು ಗಾಂಜಾ ಸಂಬಂಧ ಒಂದು ಪ್ರಕರಣಗಳು ದಾಖಲಾಗಿತ್ತು. ಮತ್ತೋರ್ವ ಆರೋಪಿ ಆಕಾಶ್ ವಿರುದ್ಧ ಕೊಲೆಯತ್ನ, ಜಾತಿ ನಿಂದನೆ, ಸರಕಾರಿ ಅಧಿಕಾರಿಗೆ ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಪ್ರಕರಣಗಳು ದಾಖಲಾಗಿತ್ತು. ಇವರ ಮೇಲಿನ ಹಲವು ಪ್ರಕರಣ ಬಾಕಿ ಇದ್ದವು. ಆರೋಪಿಗಳ ವಿರುದ್ಧ ಹಲವು ಪ್ರಕರಣಗಳು ದಾಖಲಾಗಿರುವ ಕಾರಣ ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೋಕಾ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳ ಲಾಗಿದ್ದು, ಮುಂದಿನ ಕಾನೂನು ಕ್ರಮ ಕೈಗೊಳ್ಳಲು ಸೂಚನೆ ನೀಡಲಾಗಿದೆ ಎಂದು ಪೊಲೀಸ್ ಆಯುಕ್ತರು ಮಾಹಿತಿ ನೀಡಿದ್ದಾರೆ. ಜ.1ರಂದು ಆರೋಪಿಗಳು ಕಂಬಳದ ಕೋಣಗಳ ಮಾಲಕರಾಗಿರುವ ಅಂಗಾರ ಗುಡ್ಡೆಯ ಶಂಸು ಸಾಹೇಬ್ ಎಂಬರ ಕೋಣಗಳನ್ನು ಕಟ್ಟಲಾಗಿದ್ದ ನೆರೆಮನೆಯ ಮೇಲೆ ದಾಳಿ ಮಾಡಿ 50 ಸಾವಿರ ರೂ. ನೀಡುವಂತೆ ಬೇಡಿಕೆ ಇಟ್ಟಿದ್ದರು. ಅವರು ಹಣ ನೀಡಲು ನಿರಾಕರಿಸಿದಾಗ ಶಂಸು ಸಾಹೇಬ್ ಮತ್ತು ಮಗನ ಮೇಲೆ ದಾಳಿ ಮಾಡಿದ್ದರು. ಈ ಸಂಬಂಧ ಶಂಸು ಸಾಹೇಬ್ ಅವರ ಮಗ ಸಹಾಬುದ್ದೀನ್ ಮುಲ್ಕಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ಸಂಬಂಧ ತೀವ್ರ ತನಿಖೆ ಕೈಗೊಂಡ ಪೊಲೀಸರು ಕೋಕಾ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವಾರ್ತಾ ಭಾರತಿ 13 Jan 2026 12:31 am

ವಲಸೆ ಕಾರ್ಮಿಕನ ಮೇಲೆ ಹಲ್ಲೆ ಪ್ರಕರಣ; ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮಕ್ಕೆ ಸಿಪಿಐಎಂ ಆಗ್ರಹ

ಮಂಗಳೂರು: ಕಾವೂರು ಪೊಲೀಸ್ ಠಾಣಾ ವ್ಯಾಪ್ತಿಯ ಕೂಳೂರು ಬಳಿ ಜಾರ್ಖಂಡ್ ಮೂಲದ ವಲಸೆ ಕಾರ್ಮಿಕನ ಮೇಲೆ ನಡೆದ ಹಲ್ಲೆಯನ್ನು ಸಿಪಿಐಎಂ ದ.ಕ. ಜಿಲ್ಲಾ ಸಮಿತಿ ಖಂಡಿಸಿದ್ದು, ದುಷ್ಕರ್ಮಿಗಳನ್ನು ಬಂಧಿಸಿ, ಕಠಿಣ ಕಾನೂನು ಕ್ರಮಗಳನ್ನು ಜರುಗಿಸಬೇಕು ಆಗ್ರಹಿಸಿದೆ. ಮಂಗಳೂರು ನಗರದ ಕೂಳೂರು ಬಳಿ ಜಾರ್ಖಂಡ್ ನ ವಲಸೆ ಕಾರ್ಮಿಕ ದಿಲ್ ಜಾನ್ ಅನ್ಸಾರಿಯನ್ನು ʼಬಾಂಗ್ಲಾ ನುಸುಳುಕೋರʼ ಎಂದು ಆಪಾದಿಸಿ ಹಲ್ಲೆ ನಡೆಸುವ ಸಂದರ್ಭ ಆತನಿಂದ ಹಲವು ಬಾರಿ ʼಜೈ ಶ್ರೀರಾಮ್ʼ ಘೋಷಣೆ ಹಾಕಿಸಿದ್ದಾರೆನ್ನಲಾಗಿದೆ. ಪೊಲೀಸರು ಈ ʼದೇಶಭಕ್ತʼ ಸೋಗಿನ ಕ್ರಿಮಿನಲ್ ಗಳ ಮೇಲೆ ಕೊಲೆಯತ್ನ ಸಹಿತ ಗಂಭೀರ ಸೆಕ್ಷನ್ ಗಳಡಿ ಪ್ರಕರಣ ದಾಖಲಿದ್ದಾರೆ. ತಕ್ಷಣ ಈ ದುಷ್ಕರ್ಮಿಗಳನ್ನು ಬಂಧಿಸಬೇಕು, ಮತ್ತಷ್ಟು ಕಠಿಣ ಕಾನೂನು ಕ್ರಮಗಳನ್ನು ಜರುಗಿಸಬೇಕು ಎಂದು ಸಿಪಿಐಎಂ ಆಗ್ರಹಿಸಿದೆ. ಜಿಲ್ಲಾಡಳಿತ ಸಂತ್ರಸ್ತ ವಲಸೆ ಕಾರ್ಮಿಕನಿಗೆ ಸೂಕ್ತ ರಕ್ಷಣೆ ಹಾಗು ಪರಿಹಾರ ಒದಗಿಸಬೇಕು ಎಂದು ಒತ್ತಾಯಿಸಿದೆ. ಈ ರೀತ ಬೀದಿ ವಿಚಾರಣೆ, ನ್ಯಾಯ ತೀರ್ಮಾನ ಅತಿ ಅಪಾಯಕಾರಿ ಆಗಿದ್ದು, ಮುಂದಿನ ದಿನಗಳಲ್ಲಿ ಮಂಗಳೂರಿನ ಅಭಿವೃದ್ದಿ, ಶಾಂತಿ, ಸೌಹಾರ್ದತೆಗೆ ಮತ್ತಷ್ಟು ಧಕ್ಕೆ ಉಂಟಾಗಲಿದೆ. ವಲಸೆ ಕಾರ್ಮಿಕರು, ಮತೀಯ ಪುಂಡರ ಅನುಮಾನಕ್ಕೆ ಒಳಗಾದ ಅಪರಿಚಿತರು ಮುಸ್ಲಿಮರು ಎಂದು ಗೊತ್ತಾದ ತಕ್ಷಣ ಜೈ ಶ್ರೀರಾಮ್ ಘೋಷಣೆ ಹಾಕಲು ಬಲವಂತ ಪಡಿಸುವುದು ಜಾತ್ಯಾತೀತತೆ, ಧಾರ್ಮಿಕ ಸ್ವಾತಂತ್ರ್ಯದ ಅಡಿಗಲ್ಲನ್ನೆ ಅಳುಗಾಡಿಸುವ ಅತಿ ಅಪಾಯಕಾರಿ ಬೆಳವಣಿಗೆ ಆಗಿದೆ. ಈ ಹಿಂದೆ ಕುಡುಪು ಬಳಿ ನಡೆದ ಅಶ್ರಫ್ ವಯನಾಡು ಗುಂಪು ಹತ್ಯೆಯ ಸಂದರ್ಭದಲ್ಲೂ ಇದೇ ರೀತಿಯ ಘಟನೆಗಳು ವರದಿಯಾಗಿತ್ತು. ಸರಕಾರ ಈ ಬೆಳವಣಿಗೆಗಳನ್ನು ಪೊಲೀಸರಿಗಷ್ಟೆ ಬಿಟ್ಟು ಬಿಡಬಾರದು. ಸೂಕ್ತ ಜಾಗೃತಿ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸಿಪಿಐಎಂ ಆಗ್ರಹಿಸಿದೆ.

ವಾರ್ತಾ ಭಾರತಿ 13 Jan 2026 12:22 am

ಸಂಸೆ ಗ್ರಾಮದಲ್ಲಿ ಮರೀಚಿಕೆಯಾದ ಸ್ವಚ್ಛತೆ | ಕ್ರಮ ಕೈಗೊಳ್ಳುವಲ್ಲಿ ಗ್ರಾಪಂ ನಿರ್ಲಕ್ಷ್ಯ: ಆರೋಪ

ಚಿಕ್ಕಮಗಳೂರು, ಜ.12: ಜಿಲ್ಲೆಯ ಕಳಸ ತಾಲೂಕಿನ ಸಂಸೆ ಗ್ರಾಮದಲ್ಲಿ ಸ್ವಚ್ಛತೆ ಎಂಬುದು ಮರೀಚಿಕೆಯಾಗಿದೆ. ಗ್ರಾಮದ ಎಲ್ಲೆಡೆ ಕಸದ ರಾಶಿಗಳು ಕಂಡು ಬರುತ್ತಿದ್ದು, ತ್ಯಾಜ್ಯದ ರಾಶಿಗಳನ್ನು ತೆರವುಗೊಳಿಸಿ ಗ್ರಾಮದಲ್ಲಿ ಶುಚಿತ್ವ ಕಾಪಾಡಬೇಕಾದ ಸ್ಥಳೀಯ ಗ್ರಾಮ ಪಂಚಾಯತ್ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ವಹಿಸುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಸಂಸೆ ಗ್ರಾಮದಲ್ಲಿ ಕಳೆದ ಒಂದು ವಾರದಿಂದ ಕಸದ ರಾಶಿಗಳನ್ನು ತೆರವು ಮಾಡದ ಪರಿಣಾಮ ಸದ್ಯ ಇಡೀ ಗ್ರಾಮ ಅಶುಚಿತ್ವದ ಬೀಡಾಗಿ ಮಾರ್ಪಟ್ಟಿದೆ. ಕಸ, ತ್ಯಾಜ್ಯದ ರಾಶಿಗಳಿಂದಾಗಿ ಇಡೀ ಗ್ರಾಮ ಸಾಂಕ್ರಾಮಿಕ ರೋಗಗಳಿಗೆ ತುತ್ತಾಗುವ ಆತಂಕ ಗ್ರಾಮಸ್ಥರದ್ದಾಗಿದೆ. ಕಸದ ರಾಶಿಗಳನ್ನು ಪ್ರತಿದಿನ ತೆರವು ಮಾಡಬೇಕಾದ ಗ್ರಾಪಂ ಆಡಳಿತ ಇದಕ್ಕೂ ತನಗೂ ಸಂಬಂಧವೇ ಇಲ್ಲ ಎಂಬಂತೆ ವರ್ತಿಸುತ್ತಿದ್ದು, ಕಸ ತೆರವಿಗೆ ಮನವಿ ಮಾಡಿದರೂ ಗ್ರಾಪಂ ಆಡಳಿತ ದಿವ್ಯ ನಿರ್ಲಕ್ಷ್ಯ ವಹಿಸಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಗ್ರಾಮ ಪಂಚಾಯತ್ ಇನ್ನಾದರೂ ಗ್ರಾಮದಲ್ಲಿ ಎಲ್ಲೆಂದರಲ್ಲಿ ಹರಡಿಕೊಂಡು ಬಿದ್ದಿರುವ ಕಸದ ರಾಶಿಗಳನ್ನು ಕೂಡಲೇ ತೆರವು ಮಾಡಬೇಕು, ತಪ್ಪಿದಲ್ಲಿ ಸಾರ್ವಜನಿಕರು ಸೇರಿ ಧರಣಿ ಹಮ್ಮಿಕೊಳ್ಳಲಾಗುವುದು ಎಂದು ಸ್ಥಳೀಯ ನಿವಾಸಿಗಳು ಎಚ್ಚರಿಕೆ ನೀಡಿದ್ದಾರೆ. ರೋಗಗಳಿಗೆ ತುತ್ತಾಗುವ ಭೀತಿ ಕಸ, ತ್ಯಾಜ್ಯದ ರಾಶಿಗಳಿಂದಾಗಿ ಎಲ್ಲೆಡೆ ಗಬ್ಬು ವಾಸನೆ ಬೀರುತ್ತಿದ್ದು, ಸಾರ್ವಜನಿಕರು ಮೂಗುಮುಚ್ಚಿ ಕೊಂಡು ತಿರುಗಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಗ್ರಾಮದ ಸರಕಾರಿ ಶಾಲೆ ಎದುರು ಕಳೆದೊಂದು ವಾರದಿಂದ ಕಸದ ರಾಶಿ ಹರಡಿಕೊಂಡು ಬಿದ್ದಿದ್ದು, ಪರಿಣಾಮ ಶಾಲಾ ಮಕ್ಕಳಲ್ಲೂ ಸಾಂಕ್ರಾಮಿಕ ರೋಗದ ಭೀತಿಯಲ್ಲಿದ್ದಾರೆ.

ವಾರ್ತಾ ಭಾರತಿ 13 Jan 2026 12:11 am

ತೆಂಗಿನ ಸಂಸ್ಕರಣಾ ಘಟಕ, ಉತ್ಪನ್ನ, ಮಾರುಕಟ್ಟೆಗಾಗಿ ಸಂಘಟಿತ ಪ್ರಯತ್ನ: ಸಂಸದ ಕೋಟ ಶ್ರೀನಿವಾಸ ಪೂಜಾರಿ

ಕೋಟೇಶ್ವರ: ತೆಂಗು ಬೆಳೆ ಮಾಹಿತಿ ಕಾರ್ಯಗಾರ

ವಾರ್ತಾ ಭಾರತಿ 13 Jan 2026 12:03 am

ಅಂತೂ ಐರಿಷ್ ಚೆಲುವೆ ಜೊತೆ ಶಿಖರ್ ಧವನ್ ವಿವಾಹ ನಿಶ್ಚಿತಾರ್ಥ; ಇನ್ ಸ್ಟಾಗ್ರಾಂನಲ್ಲಿ ಗಬ್ಬರ್ ಹೇಳಿದ್ದೇನು?

Shikhar Dhawan- Sophie Shine Engagement - ಕಳೆದ ವರ್ಷ ದುಬೈ ಕ್ರಿಕೆಟ್ ಕ್ರೀಡಾಂಗಣದಲ್ಲಿ ಕಳೆದ ವರ್ಷ ಐಸಿಸಿ ಚಾಂಪಿಯನ್ಸ್ ಟ್ರೋಫಿ ವೇಳೆ ಶಿಖರ್ ಧವನ್ ಅವರು ಒಬ್ಬಾಕೆ ಸುಂದರಿಯೊಂದಿಗೆ ಕಾಣಿಸಿಕೊಂಡದ್ದು ನೆನಪಿದೆಯಾ? ಇದೀಗ ಅದೇ ಯುವತಿಯನ್ನು ಶಿಖರ್ ವಿವಾಹವಾಗಲು ಸಜ್ಜಾಗಿದ್ದಾರೆ. ಐರಿಷ್ ಮೂಲದ ಸೋಫಿ ಶೈನ್ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಈ ಬಗ್ಗೆ ಇನ್ ಸ್ಟಾಂ ಗ್ರಾಂ ಪೋಸ್ಟ್ ಹಾಕುವ ಮೂಲಕ ಖಚಿತಪಡಿಸಿದ್ದಾರೆ. ವಿವಾಹದ ದಿನಾಂಕ ಇನ್ನೂ ತಿಳಿದು ಬಂದಿಲ್ಲ.

ವಿಜಯ ಕರ್ನಾಟಕ 12 Jan 2026 11:59 pm

ಕಡೆಗೂ 'ಲಕ್ಕುಂಡಿ ನಿಧಿ ವಿವಾದ' ಇತ್ಯರ್ಥ - ನಿಧಿ ಒಪ್ಪಿಸಿದ ಕುಟುಂಬಕ್ಕೆ ಕಾನೂನಿನ ಪ್ರಕಾರ ಸಿಗಲಿದೆ ಪಾಲು! ಎಷ್ಟು?

ಗದಗ/ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನಾಭರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಪುರಾತತ್ವ ಇಲಾಖೆ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದರು. 1962ರ ನಿಯಮದಂತೆ ಭೂಮಿಯಲ್ಲಿ ಸಿಕ್ಕ ಯಾವುದೇ ವಸ್ತು ಸರ್ಕಾರಕ್ಕೆ ಸೇರಿದ್ದು, ಶೇ.20ರಷ್ಟು ಹಣ ನಿಧಿ ಪತ್ತೆಯಾದ ಕುಟುಂಬಕ್ಕೆ ನೀಡಲಾಗುವುದು ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದರು. ಶಾಸಕ ಸಿ.ಸಿ. ಪಾಟೀಲ ಪ್ರಾಮಾಣಿಕತೆ ಮೆಚ್ಚಿ ಕುಟುಂಬವನ್ನು ಸನ್ಮಾನಿಸಿದರು.

ವಿಜಯ ಕರ್ನಾಟಕ 12 Jan 2026 11:41 pm

ಕಾರ್ಕಳ: ಡಿಜಿಟಲ್ ಇ ಸ್ಟ್ಯಾಂಪ್ ಕುರಿತ ಕಾರ್ಯಾಗಾರ

ಕಾರ್ಕಳ: ನೋಂದಣಿ ಮತ್ತು ಮುದ್ರಾಂಕ ಇಲಾಖಾ ವತಿಯಿಂದ ಡಿಜಿಟಲ್ ಇ ಸ್ಟ್ಯಾಂಪ್ ಕುರಿತು ದಸ್ತಾವೇಜು ಬರಹಗಾರರು, ವಕೀಲರು, ಸಹಕಾರಿ ಸಂಸ್ಥೆಗಳು ಹಾಗೂ ಸಾರ್ವಜನಿಕರಿಗೆ ಸೋಮವಾರ ವಿಶೇಷ ಕಾರ್ಯಾಗಾರವನ್ನು ಆಯೋಜಿಸಲಾಗಿತ್ತು. ಕಾರ್ಕಳ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆದ ಈ ಕಾರ್ಯಾಗಾರದಲ್ಲಿ ನೋಂದಣಿ ಸಂಬಂಧಿತ ಚಟುವಟಿಕೆಗಳಿಗೆ ಹಾಗೂ ಇನ್ನಿತರ ಸಾರ್ವಜನಿಕ ಕೆಲಸ ಕಾರ್ಯಗಳಿಗೆ ಡಿಜಿಟಲ್ ಇ ಸ್ಟ್ಯಾಂಪ್ ಪಡೆಯುವ ಬಗೆಗಿನ‌ ಕಾರ್ಯವಿಧಾನಗಳು ಮತ್ತು ಇತರ ಅವಶ್ಯಕ ವಿಷಯಗಳ ಬಗ್ಗೆ ಇಲಾಖಾ ಅಧಿಕಾರಿಗಳು ಹಾಗೂ ತಾಂತ್ರಿಕ ಸಿಬ್ಬಂದಿಯವರು ಮಾಹಿತಿ ನೀಡಿದರು. ಕಾರ್ಯಾಗಾರದಲ್ಲಿ ವಕೀಲರು, ದಸ್ತಾವೇಜು ಬರಹಗಾರರು, ಸಾರ್ವಜನಿಕರು, ಸಹಕಾರಿ ಸಂಘಗಳ ವ್ಯವಸ್ಥಾಪಕರು ಹಾಗೂ ಕಾರ್ಕಳ ಉಪನೋಂದಣಾಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

ವಾರ್ತಾ ಭಾರತಿ 12 Jan 2026 11:41 pm

ಮೂಡುಬಿದಿರೆ: 85ನೇ ಅಖಿಲ ಭಾರತ ಅಂತರ ವಿವಿ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್‌ಗೆ ಚಾಲನೆ

ಮೊದಲ ದಿನ ಚಿನ್ನ ಮುಡಿಗೇರಿಸಿದ ‘ಆಳ್ವಾಸ್’

ವಾರ್ತಾ ಭಾರತಿ 12 Jan 2026 11:32 pm

ಮುಂಭಡ್ತಿಗೆ ತಡೆ ಆರೋಪ : ರಾಜ್ಯಪಾಲರಿಗೆ ದೂರು ಸಲ್ಲಿಸಿದ ಅರಣ್ಯಾಧಿಕಾರಿ

ಬೆಂಗಳೂರು, ಜ.12: ಹದಿನಾಲ್ಕು ವರ್ಷ ಸೇವಾವಧಿ ಪೂರ್ಣಗೊಳಿಸಿದ್ದರೂ ಉದ್ದೇಶ ಪೂರಕವಾಗಿ ಮುಂಭಡ್ತಿ ತಡೆಹಿಡಿಯಲಾಗುತ್ತಿದೆ ಎಂದು ಆರೋಪಿಸಿ ಮಹಿಳಾ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಯೊಬ್ಬರು ರಾಜ್ಯಪಾಲರು ಹಾಗೂ ಮುಖ್ಯಮಂತ್ರಿಯವರಿಗೆ ಲಿಖಿತ ದೂರು ಸಲ್ಲಿಸಿದ್ದಾರೆ. ದೊರೆ ಸಾನಿಪಾಳ್ಯದ ಅರಣ್ಯ ಇಲಾಖೆ ಸಂಶೋಧನಾ ಕೇಂದ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಎಸಿಎಫ್ ಎಚ್. ಸೀಮಾ, ಸೇವಾ ನಿಯಮಗಳ ಅನ್ವಯ ಮುಂಭಡ್ತಿಗೆ ಅರ್ಹರಿದ್ದರೂ ವಿನಾಕಾರಣ ತಡೆಹಿಡಿಯಲಾಗಿದೆ ಎಂದು ರಾಜ್ಯಪಾಲರಿಗೆ ದೂರು ಸಲ್ಲಿಸಿದ್ದಾರೆ. 2011-13ನೇ ಸಾಲಿನಲ್ಲಿ ನೇರ ನೇಮಕಾತಿ ಮೂಲಕ ಎಸಿಎಫ್ ಆಗಿ ಇಲಾಖೆಗೆ ಸೇರಿದ್ದೆ. ಐದು ವರ್ಷ ಸೇವೆ ಸಲ್ಲಿಸಿದ ಬಳಿಕ ಉಪ ಅರಣ್ಯ ಸಂರಕ್ಷಣಾಧಿಕಾರಿ ಹುದ್ದೆ ಮುಂಭಡ್ತಿ ನೀಡಬೇಕು ಎಂಬ ನಿಯಮವನ್ನು ಉಲ್ಲಂಘಿಸಲಾಗಿದೆ. ಯಾವುದೇ ಪ್ರಕರಣದಲ್ಲಿ ಇಲಾಖಾ ವಿಚಾರಣೆ ಬಾಕಿ ಇಲ್ಲದಿದ್ದರೂ ಉದ್ದೇಶ ಪೂರ್ವಕವಾಗಿಯೇ ನನ್ನ ಮುಂಭಡ್ತಿ ತಡೆ ಹಿಡಿಯಲಾಗಿದೆ. ನನಗಿಂತ ಸೇವಾಕಿರಿತನ ಹೊಂದಿದವರಿಗೆ ಮುಂಭಡ್ತಿ ನೀಡಿ ಅನ್ಯಾಯ ಮಾಡಲಾಗಿದೆ ಎಂದು ಎಸಿಎಫ್ ಎಚ್.ಸೀಮಾ ಆರೋಪಿಸಿದ್ದಾರೆ. 2022ರಲ್ಲಿ ಕರ್ನಾಟಕ ಆಡಳಿತಾತ್ಮಕ ಮಂಡಳಿಯು ‘ಸೀಲ್ಡ್ ಕವರ್’ ತೆಗೆದು ಮುಂಭಡ್ತಿ ನೀಡುವಂತೆ ನಿರ್ದೇಶನ ನೀಡಿದೆ. ಜತೆಗೆ, ವಾರ್ಷಿಕ ಕಾರ್ಯ ನಿರ್ವಹಣಾ ವರದಿಯೂ ಲಭ್ಯವಿದೆ. ಇಷ್ಟಾದರೂ ಮುಂಭಡ್ತಿ ನೀಡದೆ ವಂಚಿಸಲಾಗುತ್ತಿದೆ. ಅದರಲ್ಲೂ, ನನ್ನ ಮುಂಭಡ್ತಿ ಕಡತಗಳನ್ನು ಹಿರಿಯ ಅಧಿಕಾರಿಗಳಿಗೆ ಸಲ್ಲಿಸದೆ ಅರಣ್ಯ ಇಲಾಖೆ ಅಧೀನ ಕಾರ್ಯದರ್ಶಿ ಗೀತಾ ಎಂ. ಪಾಟೀಲ, ಇವರ ಹಿರಿಯ ಸಹಾಯಕಿ ಪ್ರೇಮಾ ವಿಳಂಬ ಮಾಡುತ್ತಿದ್ದಾರೆ ಎಂದು ಎಸಿಎಫ್ ದೂರಿನಲ್ಲಿ ಉಲ್ಲೇಖ ಮಾಡಿದ್ದಾರೆ.

ವಾರ್ತಾ ಭಾರತಿ 12 Jan 2026 11:25 pm

ಕರ್ನಾಟಕದ ಈ ಜಿಲ್ಲೆಗೆ ಬಂಪರ್: 87 ಕಾಮಗಾರಿಗಳ ಶಂಕುಸ್ಥಾಪನೆ, ಯೋಜನೆಗಳಿಗೆ ಚಾಲನೆ: ಸಿದ್ದರಾಮಯ್ಯ

ಕಲಬುರಗಿ: ಜಿಲ್ಲೆ ವ್ಯಾಪ್ತಿಯಲ್ಲಿ ಇತ್ತೀಚೆಗೆ ಹೊಸದಾಗಿ ಯಡ್ರಾಮಿ ಅನ್ನು ಸರ್ಕಾರ ಹೊಸ ತಾಲೂಕಾಗಿ ಘೋಷಿಸಿದೆ. ಇದರ ಬೆನ್ನಲ್ಲೆ ಜೇವರ್ಗಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಜನರಿಗೆ ಭರ್ಜರಿ ಉಡುಗೊರೆ ನೀಡಿರುವ ಸರ್ಕಾರವು, ಬಹುಕೋಟಿ ವೆಚ್ಚದ ಬರೋಬ್ಬರಿ 87 ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಕೆಲವು ಕಾಮಗಾರಿಗಳನ್ನು ಉದ್ಘಾಟಿಸಿದೆ. ಈ ಭಾಗದಲ್ಲಿ ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಬೃಹತ್ ಅಭಿವೃದ್ಧಿಗೆ ಮುಂದಾಗಿದೆ.

ಒನ್ ಇ೦ಡಿಯ 12 Jan 2026 11:22 pm

Rajasthan | 12ನೇ ತರಗತಿ ವಿದ್ಯಾರ್ಥಿನಿಯ ಅಪಹರಣ; ಚಲಿಸುತ್ತಿರುವ ಕಾರಿನಲ್ಲಿ ಸಾಮೂಹಿಕ ಅತ್ಯಾಚಾರ

ಜೈಪುರ, ಜ. 12: ಹನ್ನೆರಡನೇ ತರಗತಿಯ ವಿದ್ಯಾರ್ಥಿನಿಯನ್ನು ಅಪಹರಿಸಿ ಚಲಿಸುತ್ತಿರುವ ಕಾರಿನೊಳಗೆ ಸಾಮೂಹಿಕ ಅತ್ಯಾಚಾರ ಎಸಗಿದ ಘಟನೆ ರಾಜಸ್ಥಾನದ ಬಿಕೇನರ್ ಜಿಲ್ಲೆಯಲ್ಲಿ ನಡೆದಿದೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ. ಈ ಘಟನೆ ನಪಸರ್ ಪ್ರದೇಶದಲ್ಲಿ ಜನವರಿ 6ರಂದು ಸಂಭವಿಸಿದೆ. ಆದರೆ ಯುವತಿಯ ಕುಟುಂಬ ದೂರು ನೀಡಿದ ಬಳಿಕ ಜನವರಿ 11ರಂದು ಪ್ರಕರಣ ದಾಖಲಿಸಲಾಗಿದೆ ಎಂದು ಅವರು ಹೇಳಿದ್ದಾರೆ. ಜನವರಿ 6ರಂದು ಬೆಳಗ್ಗೆ ಯುವತಿ ಮನೆಯಿಂದ ಶಾಲೆಗೆ ತೆರಳುತ್ತಿದ್ದಳು. ಈ ಸಂದರ್ಭ ಇಬ್ಬರು ಯುವಕರು ಆಕೆಯನ್ನು ತಡೆದು ಕಾರಿನಲ್ಲಿ ಅಪಹರಿಸಿ ದೂರಕ್ಕೆ ಕರೆದುಕೊಂಡು ಹೋಗಿದ್ದಾರೆ. ಆರೋಪಿಗಳು ಹಲವು ಗಂಟೆಗಳ ಕಾಲ ಕಾರನ್ನು ಚಲಾಯಿಸಿದ್ದಾರೆ. ಚಲಿಸುತ್ತಿರುವ ಕಾರಿನಲ್ಲೇ ಆಕೆಯ ಮೇಲೆ ಸಾಮೂಹಿಕವಾಗಿ ಅತ್ಯಾಚಾರ ಎಸಗಿದ್ದಾರೆ. ಆಕೆಗೆ ಬೆದರಿಕೆ ಒಡ್ಡಲಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಅನಂತರ ಕಾರು ಸಮೀಪದ ಗ್ರಾಮವೊಂದಕ್ಕೆ ಪ್ರವೇಶಿಸಿದಾಗ ಸ್ಥಳೀಯರಿಗೆ ಅನುಮಾನ ಉಂಟಾಯಿತು. ಅವರು ಕಾರನ್ನು ತಡೆದು ನಿಲ್ಲಿಸಿದರು. ಯುವತಿಯನ್ನು ಕಾರಿನಿಂದ ಬಲವಂತವಾಗಿ ಇಳಿಸಿದರು. ಈ ಸಂದರ್ಭ ಆರೋಪಿಗಳು ಸ್ಥಳದಿಂದ ಪರಾರಿಯಾದರು. ಗ್ರಾಮಸ್ಥರು ಯುವತಿಯ ಕುಟುಂಬಕ್ಕೆ ಮಾಹಿತಿ ನೀಡಿದರು. ಅವರು ಸ್ಥಳಕ್ಕೆ ಬಂದು ಯುವತಿಯನ್ನು ಮನೆಗೆ ಕರೆದುಕೊಂಡು ಹೋದರು ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆಗೆ ಸಂಬಂಧಿಸಿ ಭಾರತೀಯ ನ್ಯಾಯ ಸಂಹಿತೆಯ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ನಪಸರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಗಂಗಾಶಹರ್ ಸರ್ಕಲ್ ಅಧಿಕಾರಿ ಹಿಮಾಂಶು ಶರ್ಮಾ ತಿಳಿಸಿದ್ದಾರೆ. ವಿದ್ಯಾರ್ಥಿನಿಯ ವಯಸ್ಸು 18 ವರ್ಷವಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ಇದುವರೆಗೆ ಯಾರನ್ನೂ ಬಂಧಿಸಿಲ್ಲ. ತನಿಖೆ ಮುಂದುವರಿದಿದೆ ಎಂದು ಅವರು ಹೇಳಿದ್ದಾರೆ.

ವಾರ್ತಾ ಭಾರತಿ 12 Jan 2026 11:20 pm

ಶಬರಿಮಲೆ ಯಾತ್ರೆಗೆ ತೆರಳಿದ್ದ ಉಳ್ಳಾಲದ ವೃತಧಾರಿ ಎರಿಮಲೆಯಲ್ಲಿ ಹೃದಯಾಘಾತದಿಂದ ನಿಧನ

ಉಳ್ಳಾಲ: ಶಬರಿಮಲೆ ಯಾತ್ರೆ ಕೈಗೊಂಡಿದ್ದ ಉಳ್ಳಾಲ ತಾಲೂಕಿನ ಅಯ್ಯಪ್ಪ ಮಾಲಾ ವೃತಧಾರಿಯೊಬ್ಬರು ಕೇರಳದ ಎರಿಮಲೆಯಲ್ಲಿ ಹೃದಯಾಘಾತಕ್ಕೆ ಬಲಿಯಾದ ಘಟನೆ ಸೋಮವಾರ ಬೆಳಿಗ್ಗೆ ನಡೆದಿದೆ. ಸೋಮೇಶ್ವರ ಪುರಸಭಾ ವ್ಯಾಪ್ತಿಯ ಪಿಲಾರು ದೇಲಂತಬೆಟ್ಟು ನಿವಾಸಿ ಉದ್ಯಮಿ ಚಂದ್ರಹಾಸ್ ಶೆಟ್ಟಿ (55) ಮೃತಪಟ್ಟವರು. ಚಂದ್ರಹಾಸ್ ಅವರು ಇತರ ಅಯ್ಯಪ್ಪ ಮಾಲಾ ವೃತಧಾರಿಗಳ ಜೊತೆ ಶನಿವಾರದಂದು ನಗರದ ಅರ್ಕುಳ, ತುಪ್ಪೇಕಲ್ಲಿನಿಂದ ಶಬರಿಮಲೆ ಯಾತ್ರೆ ಕೈಗೊಂಡಿದ್ದರು. ಸೋಮವಾರ ಬೆಳಿಗ್ಗೆ ಚಂದ್ರಹಾಸ್ ಅವರು ಎರಿಮಲೆಯಿಂದ ಕಾಡಿನ ದಾರಿಯಾಗಿ ಪಂಪೆಗೆ ಪ್ರಯಾಣ ಬೆಳೆಸಿದ್ದ ವೇಳೆ ಕುಸಿದು ಬಿದ್ದು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಮರಣೋತ್ತರ ಪರೀಕ್ಷೆಯನ್ನು ತ್ವರಿತವಾಗಿ ನಡೆಸಿ ಉಳ್ಳಾಲಕ್ಕೆ ತರಲು ಸ್ಪೀಕರ್ ಯು.ಟಿ.ಖಾದರ್ ಅವರು ಕೇರಳದ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ್ದು, ಮಂಗಳವಾರ ಬೆಳಿಗ್ಗೆ ಪಾರ್ಥಿವ ಶರೀರವು ಉಳ್ಳಾಲ ತಲುಪಲಿದೆ. ಮೃತ ಚಂದ್ರಹಾಸ್ ಅವರು  ಮೂಲತ: ಬಾಕ್ರಬೈಲ್ ನಿವಾಸಿಯಾಗಿದ್ದು, ಮಿನರಲ್ ವಾಟರ್ ಪೂರೈಕೆಯ ಉದ್ಯಮ ನಡೆಸುತ್ತಿದ್ದರು. ಕಳೆದ ಹತ್ತು ವರುಷದ ಹಿಂದೆ ಪಿಲಾರಿನಲ್ಲೇ ಮನೆ ನಿರ್ಮಿಸಿ ವಾಸವಾಗಿದ್ದರು. ಮೃತರು ಪತ್ನಿ, ಪುತ್ರಿ, ಪುತ್ರನನ್ನು ಅಗಲಿದ್ದಾರೆ.

ವಾರ್ತಾ ಭಾರತಿ 12 Jan 2026 11:17 pm

ಹಾವೇರಿ | ಶಾಲಾ ಕಟ್ಟಡ ಒತ್ತುವರಿ ಪ್ರಕರಣ; ಶಾಲೆಗೆ ಬೀಗ ಹಾಕಿದ ದೂರುದಾರ : ಬಿಸಿಲಲ್ಲೇ ಕುಳಿತ ಮಕ್ಕಳು

ಹಾವೇರಿ : ಸರಕಾರಿ ಶಾಲೆಯ ಜಾಗಕ್ಕೆ ಸಂಬಂಧಿಸಿದ ವಿವಾದ ಶಾಲೆಯ ಬಾಗಿಲಿಗೆ ಬೀಗ ಹಾಕುವ ಹಂತಕ್ಕೆ ಬಂದಿರುವ ಘಟನೆ ಮಲ್ಲೂರು ಗ್ರಾಮದ ಸರಕಾರಿ ಹಿರಿಯ ಉರ್ದು ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ. ಈರಪ್ಪ ಕುಲಕರ್ಣಿ ಎಂಬ ವ್ಯಕ್ತಿ ಮಲ್ಲೂರು ಗ್ರಾಮದ ಸರಕಾರಿ ಹಿರಿಯ ಉರ್ದು ಪ್ರಾಥಮಿಕ ಶಾಲೆಯ ಗೇಟಿಗೆ ಬೀಗ ಹಾಕಿದ್ದರಿಂದ ಶಾಲಾ ಮಕ್ಕಳು ತರಗತಿಗಳಿಗೆ ಹಾಜರಾಗಲು ಸಾಧ್ಯವಾಗದೆ, ಶಾಲೆಯ ಹೊರ ಗಡೆ ಬಿಸಿಲಲ್ಲೇ ಕುಳಿತು ಪಾಠ ಕೇಳುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ತಿಳಿದು ಬಂದಿದೆ. ವಿವಾದದ ಹಿನ್ನೆಲೆ : ಈರಪ್ಪ ಕುಲಕರ್ಣಿ ತಂದೆ ಶಂಕ್ರಪ್ಪ ಕುಲಕರ್ಣಿ ಅವರು ಐದು ಗುಂಟೆ ಜಾಗವನ್ನು ಉರ್ದು ಶಾಲೆಗಾಗಿ ದಾನವಾಗಿ ನೀಡಿದ್ದರು. ಆದರೆ ಶಾಲೆ ಕಟ್ಟುವ ವೇಳೆ ದಾನವಾಗಿ ನೀಡಿದ ಜಾಗಕ್ಕಿಂತ ಹೆಚ್ಚುವರಿ ಜಾಗವನ್ನು ಒತ್ತುವರಿ ಮಾಡಿ ಕಟ್ಟಡ ನಿರ್ಮಿಸಲಾಗಿದೆ ಎಂದು ಈರಪ್ಪಕುಲಕರ್ಣಿ ಆರೋಪಿಸಿದ್ದರು. ಈ ವ್ಯಾಜ್ಯ ಹಲವು ವರ್ಷಗಳಿಂದ ನ್ಯಾಯಾಲಯದಲ್ಲಿದ್ದು, ಜಾಗ ಒತ್ತುವರಿ ಕುರಿತಂತೆ ಈಗಾಗಲೇ ವ್ಯಾಜ್ಯ ನಡೆಯುತ್ತಿದೆ. ಒತ್ತುವರಿ ಮಾಡಿಕೊಂಡಿರುವ ಹೆಚ್ಚುವರಿ ಜಾಗವನ್ನು ಬಿಟ್ಟುಕೊಡಬೇಕು ಎಂದು ಈರಪ್ಪಕುಲಕರ್ಣಿ ಸೋಮವಾರ ರೊಚ್ಚಿಗೆದ್ದು ಶಾಲೆಯ ಬಾಗಿಲಿಗೆ ಬೀಗ ಹಾಕಿದ್ದಾರೆ ಎಂದು ತಿಳಿದು ಬಂದಿದೆ. ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಬ್ಯಾಡಗಿ ತಹಶೀಲ್ದಾರ್ ಚಂದ್ರಶೇಖರ, ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಜಿ. ಕೋಟೆ ಹಾಗೂ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಬಂದು ಪರಿಸ್ಥಿತಿಯನ್ನು ಅವಲೋಕಿಸಿ ಮಕ್ಕಳ ಶಿಕ್ಷಣಕ್ಕೆ ಅಡ್ಡಿಯಾಗದಂತೆ ಕ್ರಮ ಕೈಗೊಳ್ಳಲು ಮುಂದಾದರು. ನಮ್ಮ ತಂದೆ ಶಾಲೆಗೆ ಐದು ಗುಂಟೆ ಜಾಗ ನೀಡುವುದಾಗಿ ಹೇಳಿದ್ದು ಸತ್ಯ. ಆದರೆ ಆ ಖರಾಬ್ ಜಾಗದಲ್ಲಿ ನಮ್ಮ ಹೆಸರು ದಾಖಲಾಗಿದೆ. ಸಮಸ್ಯೆ ಬಗೆಹರಿಯದಿದ್ದರೆ ಮತ್ತೆ ಶಾಲೆಗೆ ಬೀಗ ಹಾಕುವ ಪರಿಸ್ಥಿತಿ ಬರುತ್ತದೆ. ಆದರೂ ನಾವು ಮಕ್ಕಳಿಗೆ ಅನ್ಯಾಯ ಮಾಡುವುದಿಲ್ಲ. ನಾವು ಮೂರು ಜನ ಅಣ್ಣ ತಮ್ಮಂದಿರು ಒಪ್ಪಂದದಂತೆ ಎಂಟು ಗುಂಟೆ ಜಾಗವನ್ನು ಶಾಲೆಗೆ ನೀಡಲು ಸಿದ್ಧರಿದ್ದೇವೆ. ಆದರೆ ನಮಗೆ ಅನ್ಯಾಯವಾಗಿದೆ. ಅದಕ್ಕಾಗಿಯೇ ಬೀಗ ಹಾಕಬೇಕಾಯಿತು. -ಈರಪ್ಪಕುಲಕರ್ಣಿ

ವಾರ್ತಾ ಭಾರತಿ 12 Jan 2026 11:17 pm

ಅಕ್ರಮ ಪಂಪ್‌ಸೆಟ್‌ ಗಳಿಗೆ ಸಕ್ರಮ ಭಾಗ್ಯ - ನಾಲ್ಕೂವರೆ ಲಕ್ಷ ರೈತರಿಗೆ ಅನುಕೂಲ - ಇಂಧನ ಸಚಿವ ಕೆಜೆ ಜಾರ್ಜ್ ಭರವಸೆ

ತರೀಕೆರೆಯಲ್ಲಿ ನೂತನ ವಿದ್ಯುತ್ ಉಪಕೇಂದ್ರ ಉದ್ಘಾಟನೆ ಹಾಗೂ ಸೌರ ವಿದ್ಯುತ್ ಘಟಕಕ್ಕೆ ಶಂಕುಸ್ಥಾಪನೆ ನೆರವೇರಿತು. ಅಕ್ರಮ ಪಂಪ್‌ಸೆಟ್‌ಗಳನ್ನು ಸಕ್ರಮಗೊಳಿಸಲು ಸರಕಾರ ಸಿದ್ಧವಿದೆ ಎಂದು ಸಚಿವ ಕೆ.ಜೆ.ಜಾರ್ಜ್ ತಿಳಿಸಿದರು. ಕುಸುಮ್‌ ಸಿ ಯೋಜನೆಯಡಿ ರೈತರಿಗೆ ಸಮರ್ಪಕ ವಿದ್ಯುತ್ ನೀಡಲು ಉದ್ದೇಶಿಸಲಾಗಿದೆ. ಶಾಸಕ ಜಿ.ಎಚ್‌.ಶ್ರೀನಿವಾಸ ತಾಲೂಕಿನ ಅಭಿವೃದ್ಧಿಗೆ ಹಲವು ಪ್ರಸ್ತಾವನೆಗಳನ್ನು ಮುಂದಿಟ್ಟರು.

ವಿಜಯ ಕರ್ನಾಟಕ 12 Jan 2026 11:14 pm

ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲ ಕಮೆಂಟ್: ಶಾಸಕಿ ನಯನಾ ಆಕ್ರೋಶ

ಚಿಕ್ಕಮಗಳೂರು, ಜ.12: ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲ ಕಮೆಂಟ್ ಹಾಕುವವರ ವಿರುದ್ಧ ಮೂಡಿಗೆರೆ ಕ್ಷೇತ್ರದ ಶಾಸಕಿ ನಯನಾ ಮೋಟಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಯನಾ ಮೋಟಮ್ಮ ಅವರು ರಾಜಕೀಯ ಮತ್ತು ವೈಯಕ್ತಿಕ ವಿಚಾರಗಳಿಗೆ ಇನ್‌ಸ್ಟಾಗ್ರಾಮ್‌ನಲ್ಲಿ ಪ್ರತ್ಯೇಕ ಎರಡು ಖಾತೆಗಳನ್ನು ತೆರೆದಿದ್ದು, ಪ್ರವಾಸ ಹಾಗೂ ವೈಯಕ್ತಿಕ ಜೀವನಕ್ಕೆ ಸಂಬಂಧಿಸಿದ ಫೋಟೊಗಳನ್ನು ಹಂಚಿಕೊಂಡಿರುವ ಖಾತೆಯಲ್ಲಿ ಕಿಡಿಗೇಡಿಗಳು ಅವರ ಬಟ್ಟೆಯ ವಿಚಾರವಾಗಿ ಅಸಭ್ಯ ಸಂದೇಶಗಳನ್ನು ರವಾನಿಸಿದ್ದಾರೆ. ಈ ವಿಚಾರವಾಗಿ ಆಕ್ರೋಶಭರಿತರಾಗಿರುವ ಶಾಸಕಿ ನಯನಾ ಮೋಟಮ್ಮ ಅವರು, ಡ್ರೆಸ್, ಪ್ಯಾಂಟ್, ಜೀನ್ಸ್ ಅಥವಾ ಸ್ಲೀವ್‌ಲೆಸ್ ಬಟ್ಟೆಗಳನ್ನು ಧರಿಸಿದಾಗ ಕೆಲಸ ಮಾಡದ ರಾಜಕಾರಣ, ರಸ್ತೆಗಳ ಗುಂಡಿ ಮುಚ್ಚದ ಶಾಸಕರು, ತೆರಿಗೆದಾರರ ಹಣದಲ್ಲಿ ಬದುಕುವವರು ಎಂದು ಟೀಕಿಸಲಾಗುತ್ತಿದೆ ಎಂದು ಇನ್‌ಸ್ಟಾಗ್ರಾಮ್‌ನಲ್ಲಿ ಬರೆದುಕೊಂಡಿದ್ದಾರೆ. ಪುರುಷ ರಾಜಕಾರಣಿಗಳ ಉಡುಪಿನ ಬಗ್ಗೆ ಯಾರೂ ಎಂದಿಗೂ ಪ್ರಶ್ನೆ ಮಾಡುವುದಿಲ್ಲ. ಆದರೆ ಮಹಿಳೆಯರ ವಿಚಾರದಲ್ಲಿ ಇಂತಹ ಮನೋಭಾವವೇಕೆ ಎಂದು ಅವರು ಪ್ರಶ್ನಿಸಿದ್ದಾರೆ. ಕಮೆಂಟ್ ಮಾಡುವವರಲ್ಲಿ ಹೆಚ್ಚಿನವರು ಡಿಪಿ ಇಲ್ಲದ ಹಾಗೂ ಫೇಕ್ ಪ್ರೊಫೈಲ್‌ಗಳನ್ನು ಹೊಂದಿದ್ದಾರೆ ಎಂದು ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ. 2025ರಲ್ಲಿಯೂ ನಯನಾ ಮೋಟಮ್ಮ ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲ ಕಾಮೆಂಟ್ ಮಾಡಿದ ಆರೋಪದ ಮೇರೆಗೆ ರಾಮನಗರ ಜಿಲ್ಲೆ ಮೂಲದ ಯಕ್ಷಿತ್ ರಾಜ್ ಎಂಬಾತನನ್ನು ಮೂಡಿಗೆರೆ ಪೊಲೀಸರು ಬಂಧಿಸಿದ್ದರು. ಸೋಮವಾರ ಈ ಸಂಬಂಧ ಸುದ್ದಿಗಾರರೊಂದಿಗೆ ನಯನಾ ಮೋಟಮ್ಮ ಮಾತನಾಡಿ, ಇನ್‌ಸ್ಟಾಗ್ರಾಮ್ ಮತ್ತು ಫೇಸ್‌ಬುಕ್‌ನಲ್ಲಿ ವೈಯಕ್ತಿಕ ಖಾತೆ ಮತ್ತು ರಾಜಕೀಯಕ್ಕೆ ಸಂಬಂಧಿಸಿದ ಖಾತೆಯನ್ನು ಹೊಂದಿದ್ದು, ವೈಯಕ್ತಿಕ ವಿಚಾರ ಖಾತೆಯನ್ನು ಯಾವುದೇ ಸೆಕ್ಯೂರಿಟಿ ಇಟ್ಟುಕೊಳ್ಳದೆ ಪಬ್ಲಿಕ್ ಆಗಿ ಇಟ್ಟುಕೊಂಡಿದ್ದೇನೆ. ರಾಜಕೀಯ ಪ್ರವೇಶಕ್ಕೂ ಮುಂಚೆ ಹೇಗಿದ್ದೆನೋ ಅದೇ ರೀತಿಯಾಗಿ ಇರಲು ಪ್ರಯತ್ನಿಸುತ್ತಿದ್ದೇನೆ ಎಂದರು. ನಿಮ್ಮ ಜನಪ್ರತಿನಿಧಿಗಳು ಯಾವ ರೀತಿ ಇರಬೇಕು ಎಂದು ಯುವ ಪೀಳಿಗೆ ನಿರ್ಧಾರ ಮಾಡಬೇಕು. ಎಲ್ಲದಕ್ಕೂ ಚೌಕಟ್ಟು ಹಾಕಿದರೆ ಹೇಗೆ? ಜನಪ್ರತಿನಿಧಿಗಳಿಗೂ ವೈಯಕ್ತಿಕ ಜೀವನ ಇಲ್ಲವೇ? ಮಹಿಳೆಯರು ರಾಜಕಾರಣಕ್ಕೆ ಬರುವುದು ಕಡಿಮೆ ಇದೆ. ಅದರಲ್ಲೂ ರಾಜಕಾರಣಕ್ಕೆ ಬಂದ ಮಹಿಳೆಯರ ಬಗ್ಗೆ ಹೀಗೆ ಕಾಮೆಂಟ್ ಮಾಡಿದರೆ ಹೇಗೆ? ಚಲನಚಿತ್ರ ನಟಿಯರಿಗೂ ಈ ರೀತಿಯಾಗುತ್ತಿತ್ತು. ಈಗ ಮಹಿಳಾ ರಾಜಕಾರಣಿಯನ್ನು ಟಾರ್ಗೆಟ್ ಮಾಡಿದ್ದೀರಾ. ಅಸಭ್ಯವಾದ ಪದ ಬಳಕೆಯಿಂದ ಅವರ ಮನಸ್ಸಿನ ಮೇಲೆ ಏನು ಪ್ರಭಾವ ಬೀರಬಹುದು ಯೋಚಿಸಬೇಕಲ್ಲವೇ? ಎಂದ ಅವರು, ರಾಜಕಾರಣಿಗಳ ಪರ ಹಾಗೂ ವಿಶೇಷವಾಗಿ ಮಹಿಳೆಯರ ಪರವಾಗಿ ನಾನು ಧ್ವನಿ ಎತ್ತುತ್ತಿದ್ದೇನೆ ಎಂದು ಹೇಳಿದರು.

ವಾರ್ತಾ ಭಾರತಿ 12 Jan 2026 11:13 pm

ಬಂದಿದ್ದನ್ನು ಎದುರಿಸುತ್ತೇವೆ; ಅಮೆರಿಕ ಜೊತೆಗೆ ಮಾತುಕತೆ ಆಯ್ಕೆ ತಿರಸ್ಕರಿಸಿದ ಕ್ಯೂಬಾ! ಮುಂದೇನು?

ವೆನೆಜುವೆಲಾ ರೀತಿ ಅಮೆರಿಕವನ್ನು ಎದುರು ಹಾಕಿಕೊಳ್ಳದೇ ಒಪ್ಪಂದ ಮಾಡಿಕೊಳ್ಳಿ ಎಂಬ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಸಲಹೆಯನ್ನು, ಕ್ಯೂಬಾ ಸ್ಪಷ್ಟವಾಗಿ ತಿರಸ್ಕರಿಸಿದೆ. ಈ ಕುರಿತು ಮಾತನಾಡಿರುವ ಕ್ಯೂಬಾ ಅಧ್ಯಕ್ಷ ಮಿಗುಯೆಲ್‌ ಡಯಾಜ್-ಕ್ಯಾನೆಲ್‌, ಸರ್ವಾಧಿಕಾರಿ ಮತ್ತು ಸಾಮ್ರಾಜ್ಯಶಾಹೀ ಟ್ರಂಪ್‌ ಆಡಳಿತದೊಂದಿಗೆ ಯಾವುದೇ ಒಪ್ಪಂದ ಮಾಡಿಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಅಮೆರಿಕದಂತಹ ದೈತ್ಯ ಶಕ್ತಿಯನ್ನು ಎದುರಿಸುವುದಾಗಿ ಈ ಪುಟ್ಟ ಕೆರಿಬಿಯನ್‌ ದ್ವೀಪ ರಾಷ್ಟ್ರ ಘೋಷಿಸಿದೆ. ಹಾಗಿದ್ದರೆ ಡೊನಾಲ್ಡ್‌ ಟ್ರಂಪ್ ಕ್ಯೂಬಾ ಮೇಲೂ ದಾಳಿ ಮಾಡುತ್ತಾರಾ? ಇಲ್ಲಿದೆ ಮಾಹಿತಿ.

ವಿಜಯ ಕರ್ನಾಟಕ 12 Jan 2026 10:55 pm

WPL 2026- ಯುಪಿ ವಾರಿಯರ್ಸ್ ವಿರುದ್ಧ ಗ್ರೇಸ್ ಹ್ಯಾರಿಸ್- ಸ್ಮೃತಿ ಮಂದಾನ ಸವಾರಿ; RCBಗೆ ಸತತ 2ನೇ ಜಯಭೇರಿ!

RCB W Beat UPW W- ಗ್ರೇಸ್ ಹ್ಯಾರಿಸ್ ಮತ್ತು ಸ್ಮೃತಿ ಮಂದಾನ ಅವರ ಬಿರುಗಾಳಿ ಬ್ಯಾಟಿಂಗ್ ನಿಂದಾಗಿ ಯುಪಿ ವಾರಿಯರ್ಸ್ ತಂಡವನ್ನು ಇನ್ನೂ 47 ಎಸೆತಗಳು ಬಾಕಿ ಉಳಿದಿರುವಂತೆ ಸೋಲಿಸಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಇದೀಗ ಉತ್ತಮ ರನ್ ಧಾರಣೆಯೊಂದಿಗೆ ಅಂಕಪಟ್ಟಿಯಲ್ಲೂ ಅಗ್ರಸ್ಥಾನಕ್ಕೇರಿದೆ. ಈ ಬಾರಿಯ ಉದ್ಘಾಟನಾ ಪಂದ್ಯದಲ್ಲಿ ಸ್ಮೃತಿ ಮಂದಾನ ಪಡೆ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡವನ್ನು ಸೋಲಿಸಿ ಶುಭಾರಂಭ ಮಾಡಿತ್ತು. ಇದೀಗ ಯುಪಿ ವಾರಿಯರ್ಸ್ ವಿರುದ್ಧ 9 ವಿಕೆಟ್ ಗಳ ಗೆಲುವು ತಂಡದ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ.

ವಿಜಯ ಕರ್ನಾಟಕ 12 Jan 2026 10:54 pm

ಹಕ್ಕಿ ಬಡಿತ: ಬೆಂಗಳೂರಿಗೆ ಬರುತ್ತಿದ್ದ ಇಂಡಿಗೋ ವಿಮಾನ ವಾರಣಾಸಿಯಲ್ಲಿ ತುರ್ತು ಭೂಸ್ಪರ್ಶ

ಹೊಸದಿಲ್ಲಿ, ಜ.12: ರವಿವಾರ ಸಂಜೆ 216 ಪ್ರಯಾಣಿಕರೊಂದಿಗೆ ಬೆಂಗಳೂರಿಗೆ ತೆರಳುತ್ತಿದ್ದ ಇಂಡಿಗೋ ವಿಮಾನವು ಹಕ್ಕಿ ಬಡಿತದ ಪರಿಣಾಮ ವಾರಣಾಸಿಯಲ್ಲಿ ತುರ್ತು ಭೂಸ್ಪರ್ಶ ಮಾಡಿದೆ. ವಿಮಾನವು ಸಂಜೆ 6:25ಕ್ಕೆ ಗೋರಖ್‌ ಪುರ ವಿಮಾನ ನಿಲ್ದಾಣದಿಂದ ಹೊರಟಿತ್ತು. ಟೇಕ್‌ಆಫ್‌ ನ ಸುಮಾರು 15 ನಿಮಿಷಗಳ ಬಳಿಕ, ವಿಮಾನವು 16,000 ಅಡಿ ಎತ್ತರದಲ್ಲಿ ಹಾರುತ್ತಿದ್ದಾಗ ಜೌನಪುರದ ಬಳಿ ಹಕ್ಕಿಯೊಂದು ಅದಕ್ಕೆ ಡಿಕ್ಕಿ ಹೊಡೆದಿದೆ. ತಕ್ಷಣ ವಾರಣಾಸಿ ಏರ್ ಟ್ರಾಫಿಕ್ ಕಂಟ್ರೋಲ್ ಅನ್ನು ಸಂಪರ್ಕಿಸಿದ ಪೈಲಟ್, ವಿಮಾನವನ್ನು ವಾರಣಾಸಿಯತ್ತ ತಿರುಗಿಸಿ ಸಂಜೆ 6:56ಕ್ಕೆ ಅಲ್ಲಿನ ಲಾಲ್ ಬಹಾದೂರ್ ಶಾಸ್ತ್ರಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿದರು. ವಿವರಗಳ ಪ್ರಕಾರ, ಹಕ್ಕಿ ಬಡಿತದಿಂದ ವಿಮಾನದ ಮುಂಭಾಗಕ್ಕೆ ಹಾನಿಯಾಗಿದೆ. ರಾತ್ರಿ 8:40ರ ವೇಳೆಗೆ ಎಲ್ಲ ಪ್ರಯಾಣಿಕರನ್ನು ಸುರಕ್ಷಿತವಾಗಿ ಕೆಳಗಿಳಿಸಲಾಗಿದ್ದು, ಮುಂದಿನ ಪ್ರಯಾಣವನ್ನು ರದ್ದುಗೊಳಿಸಿದ ಇಂಡಿಗೋ ಸಂಸ್ಥೆ ಪ್ರಯಾಣಿಕರಿಗೆ ಸ್ಥಳೀಯ ಹೋಟೆಲ್‌ಗಳಲ್ಲಿ ವಸತಿ ವ್ಯವಸ್ಥೆ ಕಲ್ಪಿಸಿತು.

ವಾರ್ತಾ ಭಾರತಿ 12 Jan 2026 10:54 pm

‘ದೋಷಪೂರಿತ’ SIR ಬಗ್ಗೆ ಸಿಇಸಿಗೆ ಮಮತಾ ಐದನೇ ಪತ್ರ

ಕೋಲ್ಕತಾ, ಜ.12: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ರಾಜ್ಯದಲ್ಲಿ ನಡೆಯುತ್ತಿರುವ ವಿವಾದಾತ್ಮಕ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ (SIR) ಕುರಿತು ಮುಖ್ಯ ಚುನಾವಣಾ ಆಯುಕ್ತ (CEC) ಜ್ಞಾನೇಶ್ ಕುಮಾರ್ ಅವರಿಗೆ ಸೋಮವಾರ ಐದನೇ ಪತ್ರ ಬರೆದಿದ್ದಾರೆ. ಎಸ್‌ಐಆರ್ ಪ್ರಕ್ರಿಯೆ ‘ಮೂಲಭೂತವಾಗಿ ದೋಷಪೂರಿತವಾಗಿದೆ’ ಎಂದು ಪತ್ರದಲ್ಲಿ ಟೀಕಿಸಿರುವ ಮಮತಾ, 2002ರ ಮತದಾರರ ಪಟ್ಟಿಗಳ Ai - ಆಧಾರಿತ ಡಿಜಿಟಲೀಕರಣವು ದೊಡ್ಡ ಮಟ್ಟದಲ್ಲಿ ದತ್ತಾಂಶಗಳು ತಾಳೆಯಾಗದಿರುವುದಕ್ಕೆ ಹಾಗೂ ನಿಜವಾದ ಮತದಾರರನ್ನು ತಪ್ಪಾಗಿ ‘ತಾರ್ಕಿಕ ವ್ಯತ್ಯಾಸ’ಗಳ ವರ್ಗದಲ್ಲಿ ಸೇರಿಸಲು ಕಾರಣವಾಗಿದೆ ಎಂದು ಪ್ರತಿಪಾದಿಸಿದ್ದಾರೆ. ಚುನಾವಣಾ ಆಯೋಗವು ಕಳೆದ ಎರಡು ದಶಕಗಳಲ್ಲಿ ಅನುಸರಿಸಿದ್ದ ತನ್ನದೇ ಆದ ಶಾಸನಬದ್ಧ ಪ್ರಕ್ರಿಯೆಗಳನ್ನು ಕಡೆಗಣಿಸುತ್ತಿದೆ ಎಂದು ಆರೋಪಿಸಿರುವ ಅವರು, ಅರೆ-ನ್ಯಾಯಾಂಗ ವಿಚಾರಣೆಗಳ ಬಳಿಕ ಈಗಾಗಲೇ ತಿದ್ದುಪಡಿಗಳನ್ನು ಮಾಡಲಾಗಿದ್ದರೂ ತಮ್ಮ ಗುರುತನ್ನು ಮರುಸಾಬೀತುಪಡಿಸುವಂತೆ ಮತದಾರರನ್ನು ಬಲವಂತಗೊಳಿಸಲಾಗುತ್ತಿದೆ ಎಂದು ಹೇಳಿದ್ದಾರೆ. ಇಂತಹ ಧೋರಣೆ ನಿರಂಕುಶ, ಅತಾರ್ಕಿಕ ಹಾಗೂ ಭಾರತದ ಸಂವಿಧಾನದ ಆಶಯಕ್ಕೆ ವಿರುದ್ಧವಾಗಿದೆ ಎಂದು ಅವರು ಆರೋಪಿಸಿದ್ದಾರೆ. ಎಸ್‌ಐಆರ್ ಸಂದರ್ಭದಲ್ಲಿ ಮತದಾರರು ಸಲ್ಲಿಸುವ ದಾಖಲೆಗಳಿಗೆ ಸೂಕ್ತ ಸ್ವೀಕೃತಿ ಪತ್ರಗಳನ್ನೂ ನೀಡಲಾಗುತ್ತಿಲ್ಲ ಎಂದು ಪತ್ರದಲ್ಲಿ ಆರೋಪಿಸಿರುವ ಮಮತಾ, ಇಡೀ ಪ್ರಕ್ರಿಯೆಯೇ ಮೂಲಭೂತವಾಗಿ ದೋಷಪೂರಿತವಾಗಿದೆ ಎಂದು ಕಿಡಿಕಾರಿದ್ದಾರೆ.

ವಾರ್ತಾ ಭಾರತಿ 12 Jan 2026 10:54 pm

ಆರೋಗ್ಯದಲ್ಲಿ ಏರುಪೇರು: ಮಾಜಿ ಉಪರಾಷ್ಟ್ರಪತಿ ಜಗದೀಪ್ ಧನ್ಕರ್ ಆಸ್ಪತ್ರೆಗೆ ದಾಖಲು

ಹೊಸದಿಲ್ಲಿ, ಜ.12: ಮಾಜಿ ಉಪರಾಷ್ಟ್ರಪತಿ ಜಗದೀಪ್ ಧನ್ಕರ್ ಅವರು ಅನಾರೋಗ್ಯದಿಂದ ಬಳಲುತ್ತಿದ್ದು, ಸೋಮವಾರ ಅವರನ್ನು ಇಲ್ಲಿಯ ಏಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಶನಿವಾರ ಮನೆಯಲ್ಲಿನ ವಾಷ್‌ರೂಮ್‌ಗೆ ತೆರಳಿದ್ದ ವೇಳೆ ಧನ್ಕರ್ ಅವರು ಎರಡು ಸಲ ಪ್ರಜ್ಞಾಹೀನರಾಗಿದ್ದರು. ಇಂದು ಅವರು ತಪಾಸಣೆಗೆ ಏಮ್ಸ್‌ಗೆ ತೆರಳಿದ್ದು, ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುವಂತೆ ವೈದ್ಯರು ಸೂಚಿಸಿದ್ದರು ಎಂದು ಅಧಿಕಾರಿಯೋರ್ವರು ತಿಳಿಸಿದ್ದಾರೆ. ಆಸ್ಪತ್ರೆಗೆ ದಾಖಲಾಗಿರುವ ಕುರಿತು ಧನ್ಕರ್ ಅಥವಾ ಅವರ ಕುಟುಂಬವು ಅಧಿಕೃತವಾಗಿ ಇನ್ನೂ ದೃಢಪಡಿಸಿಲ್ಲ. ಧನ್ಕರ್ ಅವರು ಹಿಂದೆ ಉಪರಾಷ್ಟ್ರಪತಿಯಾಗಿದ್ದಾಗ ಹಲವಾರು ಸಂದರ್ಭಗಳಲ್ಲಿ ಬವಳಿಗೆ ಒಳಗಾಗಿದ್ದರು. ಧನ್ಕರ್ ಅವರು ಆರೋಗ್ಯ ಕಾರಣವನ್ನು ಉಲ್ಲೇಖಿಸಿ ಕಳೆದ ವರ್ಷದ ಜು.21ರಂದು ಉಪರಾಷ್ಟ್ರಪತಿ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದರು.

ವಾರ್ತಾ ಭಾರತಿ 12 Jan 2026 10:50 pm

ಸೇಡಂನಲ್ಲಿ ಬೇಳೆ ಕಾಳು ಅಭಿವೃದ್ಧಿ ಸಂಸ್ಥೆ ಸ್ಥಾಪಿಸಲು‌ ಸಚಿವ ಡಾ.ಶರಣಪ್ರಕಾಶ್‌ ಪಾಟೀಲ್ ಮನವಿ

ಕಲಬುರಗಿ: ಕಲಬುರಗಿ ಜಿಲ್ಲೆಯ ಒಟ್ಟಾರೆ ಬೇಳೆಕಾಳು ಉತ್ಪಾದನೆಯಲ್ಲಿ ಶೇ.50 ರಷ್ಟು ಪಾಲನ್ನು ಹೊಂದಿರುವ ಸೇಡಂ ಉಪವಿಭಾಗದಲ್ಲಿ, ಮಳೆ ವೈಪರೀತ್ಯದಿಂದ ಉತ್ಪಾದಕತೆ ಕುಸಿಯುತ್ತಿದೆ. ಇದನ್ನು ಸುಧಾರಿಸಲು ಬೆಳೆ ನಿರ್ವಹಣೆ ಹಾಗೂ ದಾಲ್ ಸಂಸ್ಕರಣೆ ಕುರಿತು ಸಂಶೋಧನೆ ನಡೆಸಲು ಸೇಡಂನಲ್ಲಿ 'ಬೇಳೆಕಾಳು ಅಭಿವೃದ್ಧಿ ಸಂಸ್ಥೆ'ಯನ್ನು ಸ್ಥಾಪಿಸಬೇಕು, ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ್ ಪಾಟೀಲ್‌ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬೇಡಿಕೆ ಸಲ್ಲಿಸಿದರು. ಸೋಮವಾರ ಸೇಡಂ ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕೆಕೆಆರ್‌ಡಿಬಿ ಸಂಯುಕ್ತಾಶ್ರಯದಲ್ಲಿ ನಡೆದ ಸುಮಾರು 688 ಕೋಟಿ ರೂ. ಮೊತ್ತದ ವಿವಿಧ ಕಾಮಗಾರಿಗಳ ಚಾಲನಾ ಕಾರ್ಯಕ್ರಮದಲ್ಲಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಸೇಡಂ ಉಪವಿಭಾಗದ ವ್ಯಾಪ್ತಿಗೆ ಬರುವ ಸೇಡಂ, ಚಿತ್ತಾಪುರ, ಚಿಂಚೋಳಿ, ಕಾಳಗಿ ಮತ್ತು ಶಹಾಬಾದ್ ತಾಲೂಕುಗಳು ಜಿಲ್ಲೆಯ ಪ್ರಮುಖ ಬೇಳೆಕಾಳು ಬೆಳೆಯುವ ಪ್ರದೇಶಗಳಾಗಿವೆ. ಈ ಭಾಗದ ಮಣ್ಣಿನಲ್ಲಿ ಕ್ಯಾಲ್ಸಿಯಂ ಮತ್ತು ಪೊಟ್ಯಾಶ್ ಅಂಶ ಹೆಚ್ಚಾಗಿದ್ದು, ನೀರನ್ನು ಹಿಡಿದಿಟ್ಟುಕೊಳ್ಳುವ ವಿಶಿಷ್ಟ ಸಾಮರ್ಥ್ಯ ಹೊಂದಿದೆ. ಉಪವಿಭಾಗದ ಒಟ್ಟು ಸಾಗುವಳಿ ಪ್ರದೇಶದ ಶೇ. 85 ರಷ್ಟು ಭಾಗದಲ್ಲಿ ಬೇಳೆಕಾಳುಗಳನ್ನೇ ಬೆಳೆಯಲಾಗುತ್ತಿದೆ, ಎಂದು ಸಚಿವರು ವಿವರಿಸಿದರು. ಇಡೀ ರಾಜ್ಯದ ಶೇ. 45 ರಷ್ಟು ತೊಗರಿಯನ್ನು ಕಲಬುರಗಿ ಜಿಲ್ಲೆಯಲ್ಲೇ ಬೆಳೆಯಲಾಗುತ್ತದೆ. ಅದರಲ್ಲೂ ಅರ್ಧದಷ್ಟು ಪಾಲು ಸೇಡಂ ಉಪವಿಭಾಗದ್ದಾಗಿದೆ. ಬೆಳಗಾವಿಯ ಸಕ್ಕರೆ ಸಂಸ್ಥೆಯ ಮಾದರಿಯಲ್ಲಿಯೇ, ಸೇಡಂ ಅನ್ನು ಕೇಂದ್ರಸ್ಥಾನವಾಗಿಸಿಕೊಂಡು ಬೇಳೆಕಾಳು ಅಭಿವೃದ್ಧಿ ಸಂಸ್ಥೆ ಸ್ಥಾಪಿಸಿದರೆ ರೈತಾಪಿ ಜನರಿಗೆ ಹಾಗೂ ದಾಲ್ ಸಂಸ್ಕರಣಾ ಉದ್ಯಮಕ್ಕೆ ಹೆಚ್ಚಿನ ಅನುಕೂಲವಾಗಲಿದೆ, ಎಂದು ಸಚಿವರು ಸಿಎಂಗೆ ಸಲ್ಲಿಸಿದ ಮನವಿ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ವಾರ್ತಾ ಭಾರತಿ 12 Jan 2026 10:43 pm

ಬಿಎಂಐಸಿ ಯೋಜನೆ ಮರು ಪರಿಶೀಲಿಸಿ; ರಾಜ್ಯ ಸರಕಾರಕ್ಕೆ ಹೈಕೋರ್ಟ್ ‌ನಿರ್ದೇಶನ

ಬೆಂಗಳೂರು : ಬೆಂಗಳೂರು-ಮೈಸೂರು ಮೂಲ ಸೌಕರ್ಯ ಕಾರಿಡಾರ್‌ (ಬಿಎಂಐಸಿ) ಯೋಜನೆಯನ್ನು ಮರು ಪರಿಶೀಲಿಸುವಂತೆ ರಾಜ್ಯ ಸರಕಾರಕ್ಕೆ ಹೈಕೋರ್ಟ್ ನಿರ್ದೇಶನ ನೀಡಿದೆ. ಬಿಎಂಐಸಿ ಯೋಜನೆಗಾಗಿ ವಶಪಡಿಸಿಕೊಂಡ ತಮ್ಮ ಜಮೀನಿಗೆ ಪರಿಹಾರ ವಿತರಿಸಲು ಸರಕಾರಕ್ಕೆ ನಿರ್ದೇಶಿಸುವಂತೆ ಕೋರಿ ಬೆಂಗಳೂರಿನ ಮಾರಪ್ಪ ಗಾರ್ಡನ್‌ ನಿವಾಸಿ ಚಂದ್ರಿಕಾ ಸಲ್ಲಿಸಿದ್ದ ರಿಟ್ ಅರ್ಜಿ ವಜಾಗೊಳಿಸಿದ ನ್ಯಾಯಮೂರ್ತಿ ಡಿ.ಕೆ.ಸಿಂಗ್‌ ಹಾಗೂ ನ್ಯಾಯಮೂರ್ತಿ ಟಿ.ವೆಂಕಟೇಶ್‌ ನಾಯ್ಕ್‌ ಅವರಿದ್ದ ವಿಭಾಗೀಯ ನ್ಯಾಯಪೀಠ ಈ ನಿರ್ದೇಶನ ನೀಡಿದೆ. ಬಿಎಂಐಎಸಿ ಯೋಜನೆಯಡಿ ಯೋಜನಾ ನಿರ್ಮಾಣಕಾರರು ಪೆರಿಫೆರಲ್‌ (ಬಾಹ್ಯ) ರಸ್ತೆಗಳು ಮತ್ತು ಟೋಲ್ ಪ್ಲಾಜಾಗಳನ್ನು ನಿರ್ಮಿಸುವ ಮೂಲಕ ಭಾರಿ ಸುಂಕ ಸಂಗ್ರಹಿಸುತ್ತಿದ್ದಾರೆ. ಅದಾಗ್ಯೂ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ವೇ ಮತ್ತು ಮೂಲಸೌಕರ್ಯ ಕಾರಿಡಾರ್ ಕೇವಲ ಕಾಗದಗಳಲ್ಲಿ ಮಾತ್ರ ಉಳಿದಿದೆ. ಯೋಜನಾ ನಿರ್ಮಾಣ ಮಾಡಬೇಕಿರುವವರು ದೊಡ್ಡ ಪ್ರಮಾಣದಲ್ಲಿ ಭೂಮಿಯನ್ನು ತಮ್ಮ ಸುಪರ್ದಿಯಲ್ಲಿ ಇಟ್ಟುಕೊಂಡಿದ್ದಾರೆ. ಆದರೆ, ಬೆಂಗಳೂರು ಮೈಸೂರು-ಎಕ್ಸ್‌ಪ್ರೆಸ್‌ ಮಾರ್ಗ ಇನ್ನೂ ಪೂರ್ಣ ಪ್ರಮಾಣದಲ್ಲಿ ನಿರ್ಮಿಸಿಲ್ಲ. ಭವಿಷ್ಯದಲ್ಲಿ ಅದನ್ನು ನಿರ್ಮಿಸುವ ಯಾವುದೇ ಸೂಚನೆಯಿಲ್ಲ. ಅದಕ್ಕೆ ಕಾರಣ ಭೂಮಿಯು ಸರಿಯಾಗಿ ಬಳಕೆಯಾಗಿಲ್ಲ. ಆದ್ದರಿಂದ, ಯೋಜನೆಯನ್ನು ಮರುಪರಿಶೀಲಿಸಬೇಕು ಮತ್ತು ಆ ನಿಟ್ಟಿನಲ್ಲಿ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುಬೇಕು ಎಂದು ರಾಜ್ಯ ಸರಕಾರಕ್ಕೆ ನ್ಯಾಯಪೀಠ ನಿರ್ದೇಶಿಸಿದೆ. ಉತ್ತಮ ನಾಗರಿಕ ಸೌಲಭ್ಯಗಳು ಮತ್ತು ವ್ಯಾಪಾರ ಮತ್ತು ವೃತ್ತಿಪರರಿಗೆ ಉತ್ತಮ ಅವಕಾಶಗಳೊಂದಿಗೆ ನಗರದ ದಟ್ಟಣೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ಬಿಎಂಐಸಿ ನಿರ್ಮಾಣ ಕೈಗೆತ್ತಿಕೊಳ್ಳಲಾಗಿತ್ತು. ಆದರೆ, ಈ ಉದ್ದೇಶವು ದೂರದ ಕನಸಾಗಿಯೇ ಉಳಿದಿದೆ. ವಾಸ್ತವವಾಗಿ ಟೋಲ್ ಪ್ಲಾಜಾ, ಪೆರಿಫೆರಲ್‌ ರಸ್ತೆಗಳನ್ನು ಹೊರತುಪಡಿಸಿ ಸುಮಾರು 25 ವರ್ಷಗಳಲ್ಲಿ ಕೇವಲ ಒಂದು ಕಿ.ಮೀ. ಎಕ್ಸ್‌ಪ್ರೆಸ್ ಮಾರ್ಗವನ್ನು ನಿರ್ಮಿಸಲಾಗಿದೆ ಎಂದು ನ್ಯಾಯಪೀಠ ಅಸಮಾಧಾನ ವ್ಯಕ್ತಪಡಿಸಿದೆ. ಪಿಟಿಆರ್ ಅಡಿಯಲ್ಲಿ ಕಲ್ಪಿಸಲಾದ ನಗರದ ಜನದಟ್ಟಣೆಯನ್ನು ಕಡಿಮೆ ಮಾಡುವ ಸುಂದರ ಮತ್ತು ಭವಿಷ್ಯದ ಪರಿಕಲ್ಪನೆಯನ್ನು ಯೋಜನೆಯ ವಿರೋಧಿಗಳು ನಾಶಪಡಿಸಿದ್ದಾರೆ. ವಾಸ್ತವವಾಗಿ ಈ ಪರಿಕಲ್ಪನೆ ಮತ್ತು ಒಪ್ಪಂದ ವಿಫಲವಾಗಿದೆ. 25 ವರ್ಷಗಳಿಗೂ ಅಧಿಕ ಅವಧಿಯಲ್ಲಿ ಕೇವಲ ಒಂದು ಕಿಲೋ ಮೀಟರ್ ಮಾತ್ರ ನಿರ್ಮಿಸಲಾಗಿರುವಾಗ, ಯೋಜನೆಯನ್ನು ಜೀವಂತವಾಗಿಡುವ ಯಾವುದೇ ಉದ್ದೇಶ ಈಡೇರುವುದಿಲ್ಲ. ನಗರ, ನಾಗರಿಕರು, ಪರಿಸರ ಮತ್ತು ಭವಿಷ್ಯದ ಹಿತದೃಷ್ಟಿಯಿಂದ ಯೋಜನೆಯನ್ನು ಮರುಪರಿಶೀಲಿಸಬೇಕಿದೆ. ಹಳೆಯ ಯೋಜನೆಯನ್ನು ತ್ಯಜಿಸಿ ಹೊಸ ಯೋಜನೆಗೆ ಸೂಕ್ತ ಕ್ರಮ ಕೈಗೊಳ್ಳುವುದು ಒಳ್ಳೆಯದು ಎಂದು ಪೀಠ ಹೇಳಿದೆ. ನಗರದ ಜನಸಂಖ್ಯೆ 1.40 ಕೋಟೂ ಅಧಿಕವಿದೆ. ದಿನನಿತ್ಯದ ಸಂಚಾರ ದಟ್ಟಣೆ ಸಾಮಾನ್ಯವಾಗಿದ್ದು, ನಗರದಲ್ಲಿ ಸ್ವಲ್ಪ ದೂರ ಪ್ರಯಾಣಿಸಲು ಗಂಟೆಗಳು ಬೇಕಾಗುತ್ತದೆ. ಮೂಲಸೌಕರ್ಯ ಸೌಲಭ್ಯಗಳು ಕುಸಿಯುತ್ತಿವೆ. ಪರಿಸರ ತೀವ್ರವಾಗಿ ಪರಿಣಾಮ ಬೀರುತ್ತಿದೆ. ಆದ್ದರಿಂದ, ರಾಜ್ಯ ಸರ್ಕಾರ ನಗರದ ಜೀವನ ಪರಿಸ್ಥಿತಿಗಳನ್ನು ಸುಧಾರಿಸಲು ಹೊಸ ಯೋಜನೆಗೆ ಅಗತ್ಯವಾದ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಹೇಳಿರುವ ನ್ಯಾಯಪೀಠ, ಅಂತಿಮವಾಗಿ ಪ್ರಕರಣದಲ್ಲಿ ಅರ್ಜಿದಾರರು ಈಗಾಗಲೇ ಪರಿಹಾರ ಪಡೆದಿರುವುದರಿಂದ ಅರ್ಜಿ ವಜಾಗೊಳಿಸಿ ಆದೇಶಿಸಿದೆ.

ವಾರ್ತಾ ಭಾರತಿ 12 Jan 2026 10:37 pm

KSRTC: ಕೆಎಸ್‌ಆರ್‌ಟಿಸಿ ಟಿಕೆಟ್ ಬುಕಿಂಗ್ ಇನ್ನೂ ಸುಲಭ: 'ಬೆಂಗಳೂರು-ಓನ್-ಕರ್ನಾಟಕ-ಓನ್' ಗೂ ವಿಸ್ತರಣೆ

ಬೆಂಗಳೂರು: ರಾಜ್ಯದ ಎಲ್ಲ ಕರ್ನಾಟಕ ರಾಜ್ಯ ರಸ್ತೆ, ಸಾರಿಗೆ ನಿಗಮ (KSRTC) ಪ್ರಯಾಣಿಕರಿಗೆ ಮಹತ್ವದ ಗುಡ್‌ ನ್ಯೂಸ್ ಸಿಕ್ಕಿದೆ. ಸಂಸ್ಥೆಯ ಅಧಿಕೃತ ವೆಬ್‌ಸೈಟ್ ಹಾಗೂ ಇತರ ಆನ್‌ಲೈನ್ ವೇದಿಕೆಗಳ ಮೂಲಕ ಬಸ್ ಬುಕ್ ಮಾಡುವ ವಿಧಾನಗಳ ಜೊತೆಗೆ ಇನ್ನು ಮುಂದೆ 'ಬೆಂಗಳೂರು-ಓನ್' ಮತ್ತು 'ಕರ್ನಾಟಕ-ಓನ್ ಕೇಂದ್ರ'ಗಳ ಮೂಲಕವೀ ಮುಂಗಡ ಟಿಕೆಟ್ ಕಾಯ್ದಿರಿಸುವುದನ್ನು ಸಾರಿಗೆ ಇಲಾಖೆ ಜಾರಿಗೊಳಿಸಿದೆ. ಕರ್ನಾಟಕ

ಒನ್ ಇ೦ಡಿಯ 12 Jan 2026 10:36 pm

ಕೆಇಎ ನೇಮಕಾತಿ ಪರೀಕ್ಷೆಯ ಕೀ ಉತ್ತರಗಳ ಪ್ರಕಟ

ಬೆಂಗಳೂರು : ಕರ್ನಾಟಕ ಪರೀಕ್ಷಾ ಪ್ರಾಧಿಕಾರವು(ಕೆಇಎ) ತಾಂತ್ರಿಕ ಶಿಕ್ಷಣ, ಬಿಡಿಎ, ಬೆಂಗಳೂರು ಜಲಮಂಡಳಿ, ಕೆಎಸ್ ಡಿಎಲ್, ಕೃಷಿ ಮಾರಾಟ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳಲ್ಲಿನ ಖಾಲಿ ಹುದ್ದೆಗಳ ನೇಮಕಾತಿಗೆ ಜ.10 ಮತ್ತು ಜ.11ರಂದು ನಡೆದ ಪರೀಕ್ಷೆಗಳ ಕೀ ಉತ್ತರಗಳನ್ನು ಪ್ರಕಟಿಸಿದೆ. https://cetonline.karnataka.gov.in/KEA   ವೆಬ್ ಸೈಟ್ ನಲ್ಲಿ ಕೀ ಉತ್ತರಗಳನ್ನು ಪ್ರಕಟಿದ್ದು, ಈ ಬಗ್ಗೆ ಏನೇ ಆಕ್ಷೇಪಣೆಗಳು ಇದ್ದಲ್ಲಿ ಜ.14ರ ಬೆಳಗ್ಗೆ 11 ಗಂಟೆ ಒಳಗೆ ಸಲ್ಲಿಸಬೇಕು. ಇದನ್ನು ಅಂತಿಮ ಫಲಿತಾಂಶ ಪ್ರಕಟಿಸಲಾಗುತ್ತದೆ ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ವಾರ್ತಾ ಭಾರತಿ 12 Jan 2026 10:26 pm

ರಾಯಚೂರು | ಕನ್ನಡ ಧ್ವಜದ ಕಟ್ಟೆ ಧ್ವಂಸ, ಸಾವರ್ಕರ್ ಪ್ರತಿಮೆ ಅಭಿವೃದ್ಧಿ

ರಾಯಚೂರು, ಜ.12: ನಗರದ ಐತಿಹಾಸಿಕ ಮಾವಿನಕೆರೆಯ ಅಭಿವೃದ್ಧಿ ಕಾಮಗಾರಿ ಭರದಿಂದ ಸಾಗಿರುವ ನಡುವೆ ಕೆರೆಗೆ ಹೊಂದಿಕೊಂಡ ಜಾಗದಲ್ಲಿದ್ದ ಕನ್ನಡದ ಧ್ವಜ ಕಟ್ಟೆ, ಛತ್ರಪತಿ ಶಿವಾಜಿಯ ನಾಮಫಲಕದ ಕಟ್ಟೆ ಧ್ವಂಸಗೊಳಿಸಲಾಗಿದೆ. ಆದರೆ ಸಾವರ್ಕರ್ ಪ್ರತಿಮೆಗೆ ದೊಡ್ಡದಾದ ಕಟ್ಟೆ ಮಾಡಿ ಅಭಿವೃದ್ಧಿಗೊಳಿಸಲು ಮುಂದಾಗಿರುವ ಸ್ಥಳೀಯ ಆಡಳಿತ ವಿರುದ್ಧ ಅಸಮಾಧಾನ ವ್ಯಕ್ತವಾಗಿದೆ. ಹಲವು ಹೋರಾಟಗಳ ಫಲವಾಗಿ ಅನೇಕ ವರ್ಷಗಳಿಂದ ಒತ್ತುವರಿಯಾಗುತ್ತಿದ್ದ ಮಾವಿನಕೆರೆ ಜಾಗವನ್ನು ಸಂರಕ್ಷಿಸಿ ಪ್ರವಾಸಿ ತಾಣ ಮಾಡಲು ಆಡಳಿತ ಸರಕಾರ ಮುಂದಾಗಿದೆ. ಆದರೆ ಅಭಿವೃದ್ಧಿಯ ನೆಪದಲ್ಲಿ, ಕರವೇ ನಿರ್ಮಿಸಿದ್ದ ಧ್ವಜಾರೋಹಣದ ಕಟ್ಟೆ, ಶಿವಾಜಿಯ ನಾಮಫಲಕ ತೆರವುಗೊಳಿಸಲಾಗಿತ್ತು. ಆದರೆ ಇದೆಲ್ಲದರ ನಡುವೆ ಸಾವರ್ಕರ್ ಪ್ರತಿಮೆಯನ್ನು ತೆರವುಗೊಳಿಸದೆ ದೊಡ್ಡ ಕಟ್ಟೆ ಮಾಡಿ ಉದ್ಯಾನ ಮಾಡಿ ಅಲಂಕಾರಗೊಳಿಸಲಾಗುತ್ತಿದೆ. ಇದು ಪ್ರಗತಿಪರರ ಆಕ್ರೋಶಕ್ಕೆ ಕಾರಣವಾಗಿದೆ. ‘ಸಾವರ್ಕರ್ ವಿವಾದಿತ ವ್ಯಕ್ತಿ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಾವರ್ಕರ ವಿಚಾರದ ವಿರುದ್ಧವಾಗಿದ್ದಾರೆ. ಕೆಲ ಸ್ಥಳೀಯ ಕಾಂಗ್ರೆಸ್ ನಾಯಕರು ಗಾಂಧಿ ಸಿದ್ಧಾಂತಕ್ಕೆ ತಿಲಾಂಜಲಿ ಇಟ್ಟು ಬ್ರಿಟಿಷರ ಓಲೈಸಿದ ವ್ಯಕ್ತಿಯ ಪ್ರತಿಮೆ ಅಭಿವೃದ್ಧಿ ಗೊಳಿಸುವ ಮೂಲಕ ತದ್ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾರೆ. ಕೂಡಲೇ ಪ್ರತಿಮೆ ತೆರವುಗೊಳಿಸಿ ಬಾಬಾ ಸಾಹೇಬ್ ಅಂಬೇಡ್ಕರ್, ಮಹಾತ್ಮ್ಮಾ ಗಾಂಧಿ, ಬಸವಣ್ಣ, ಅಥವಾ ಬುದ್ಧನ ಪ್ರತಿಮೆ ನಿರ್ಮಿಸಬೇಕು. ಇಲ್ಲದಿದ್ದರೆ ಹೋರಾಟ ಮಾಡಲಾಗುವುದು’ ಎಂದು ಸಿಪಿಐಎಂಎಲ್ ಲಿಬರೇಶನ್ ಪಕ್ಷದ ಜಿಲ್ಲಾ ಮುಖಂಡ ಅಜೀಜ್ ಜಾಗೀರದಾರ್ ಹೇಳಿದ್ದಾರೆೆ.

ವಾರ್ತಾ ಭಾರತಿ 12 Jan 2026 10:26 pm

ಲಿಕ್ಕರ್‌ ಲೈಸೆನ್ಸ್‌ ಇ-ಹರಾಜಿಗೆ ತಡೆ - ಹೈಕೋರ್ಟ್ ಹೇಳಿದ್ದೇನು?

ರಾಜ್ಯದಲ್ಲಿ 569 ಅಬಕಾರಿ ಸನ್ನದುಗಳ ಇ-ಹರಾಜಿಗೆ ನೀಡಿದ್ದ ತಡೆಯಾಜ್ಞೆಯನ್ನು ಹೈಕೋರ್ಟ್ ತೆರವುಗೊಳಿಸಲು ನಿರಾಕರಿಸಿದೆ. ಇದರಿಂದಾಗಿ ಮಂಗಳವಾರದಿಂದ ನಡೆಯಬೇಕಿದ್ದ 477 ಸಿಎಲ್-2 ಎ ಮದ್ಯ ಮಾರಾಟ ಮಳಿಗೆ ಮತ್ತು 92 ಸಿಎಲ್-9ಎ ರಿಫ್ರೆಶ್ ರೂಮ್ ಸನ್ನದುಗಳ ಹರಾಜು ಪ್ರಕ್ರಿಯೆಗೆ ತಡೆ ಬಿದ್ದಿದೆ. ಮುಂದಿನ ವಿಚಾರಣೆ ಫೆಬ್ರವರಿ 11ಕ್ಕೆ ನಿಗದಿಯಾಗಿದೆ.

ವಿಜಯ ಕರ್ನಾಟಕ 12 Jan 2026 10:24 pm

Dharwad | ಸಾಮೂಹಿಕ ಅತ್ಯಾಚಾರ ಪ್ರಕರಣ; ವರದಿ ಸಲ್ಲಿಸಲು ರಾಜ್ಯ ಮಹಿಳಾ ಆಯೋಗ ನಿರ್ದೇಶನ

ಬೆಂಗಳೂರು : ಇತ್ತೀಚೆಗೆ ಧಾರವಾಡದಲ್ಲಿ ದುಷ್ಕರ್ಮಿಗಳು ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ, ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ವರದಿಯನ್ನು ಸಲ್ಲಿಸಬೇಕು ಎಂದು ರಾಜ್ಯ ಮಹಿಳಾ ಆಯೋಗವು ಧಾರವಾಡ ಜಿಲ್ಲೆಯ ಪೊಲೀಸ್ ಆಯುಕ್ತರಿಗೆ ನಿರ್ದೇಶನ ನೀಡಿದೆ. ಸೋಮವಾರ ಆಯೋಗದ ಕಾರ್ಯದರ್ಶಿ ಪೊಲೀಸ್ ಆಯುಕ್ತರಿಗೆ ಪತ್ರ ಬರೆದಿದ್ದು, ಧಾರವಾಡದಲ್ಲಿರುವ ಹೆಗ್ಗೇರಿ ಮೈದಾನದ ಬಳಿ ಮಹಿಳೆಯನ್ನು ಆಟೋದಲ್ಲಿ ಕರೆದೊಯ್ದು, ಆಕೆಗೆ ಮದ್ಯಪಾನ ಮಾಡಿಸಿ, ಸಾಮೂಹಿಕ ಅತ್ಯಾಚಾರ ನಡೆಸಿರುವುದು ವರದಿಯಾಗಿದೆ. ಅಲ್ಲದೆ, ಅತ್ಯಾಚಾರ ನಡೆಸಿರುವುದನ್ನು ಮೊಬೈಲ್‍ನಲ್ಲಿ ಚಿತ್ರೀಕರಿಸಿ, ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿರುವ ಅಮಾನುಷ ಕೃತ್ಯದ ಬಗ್ಗೆಯೂ ವರದಿಯಾಗಿದೆ ಎಂದಿದ್ದಾರೆ. ಈ ಪ್ರಕರಣದ ಬಗ್ಗೆ ನಿಯಮಾನುಸಾರ ಪರಿಶೀಲಿಸಬೇಕು. ಇದಕ್ಕೆ ಕಾರಣಕರ್ತರಾದವರ ವಿರುದ್ಧ ಕಾನೂನು ಕ್ರಮ ಕೈಗೊಂಡು ವರದಿ ನೀಡಬೇಕು ಎಂದು ಸಂಬಂಧಪಟ್ಟ ಠಾಣಾಧಿಕಾರಿಯವರಿಗೆ ಸೂಚನೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

ವಾರ್ತಾ ಭಾರತಿ 12 Jan 2026 10:23 pm

ಯಾದಗಿರಿ | ಬಸವ ಗೀತೆ 9 ಸಂಪುಟ ಬಿಡುಗಡೆ

ಲೌಕಿಕ ಭೋಗ ಹಿತಾಸಕ್ತಿಗಳತ್ತ ಬದುಕಿನ ಪಯಣ : ಬಸವರಾಜಸ್ವಾಮಿ

ವಾರ್ತಾ ಭಾರತಿ 12 Jan 2026 10:23 pm

ಶಹಾಪುರ | ಜಯಮ್ಮ ಸಂಶಯಾಸ್ಪದ ಸಾವು ಪ್ರಕರಣ : ದುಷ್ಕರ್ಮಿಗಳ ಬಂಧನಕ್ಕೆ ಆಗ್ರಹಿಸಿ ಧರಣಿ

ಶಹಾಪುರ : ಗೋಗಿ (ಕೆ) ಗ್ರಾಮದ ಮಹಿಳೆ ಜಯಮ್ಮ ಎಂಬವರ ಅನುಮಾನಾಸ್ಪದ ಸಾವಿನ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು. ಅತ್ಯಾಚಾರ ನಡೆಸಿ ಕೊಲೆ ಮಾಡಿದ ದುಷ್ಕರ್ಮಿಗಳನ್ನು ಕೂಡಲೇ ಬಂಧಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪ್ರೊ.ಬಿ.ಕೃಷ್ಣಪ್ಪ ಸ್ಥಾಪಿತ) ವತಿಯಿಂದ ಧರಣಿ ನಡೆಸಲಾಯಿತು. ಜಿಲ್ಲಾ ಸಂಚಾಲಕ ನಿಂಗಣ್ಣ ಎಂ. ಗೋನಾಲ ಮಾತನಾಡಿ, ಜಯಮ್ಮ ಅವರು ತಮ್ಮ ಗಂಡ ಹಾಗೂ ಮೂವರು ಪುತ್ರರೊಂದಿಗೆ ಕೂಲಿ ನಾಲಿ ಮಾಡಿಕೊಂಡು ಜೀವನ ನಡೆಸುತ್ತಿದ್ದರು. 2025ರ ಡಿ. 23ರಂದು ಮಧ್ಯಾಹ್ನ 12:30ರ ಸುಮಾರಿಗೆ ಹಣ ವಿದ್‌ಡ್ರಾ ಮಾಡಿಕೊಂಡು ಬರುತ್ತೇನೆ ಎಂದು ಹೇಳಿ ಶಹಾಪುರಕ್ಕೆ ಬಂದ ಜಯಮ್ಮ ಮನೆಗೆ ಹಿಂದಿರುಗಲಿಲ್ಲ. ಮರುದಿನ ಅಂದರೆ ಡಿ.24ರಂದು ಬೆಳಗ್ಗೆ ಶಹಾಪುರ ನಗರದ ಇಂದಿರಾನಗರ ಹೊರವಲಯದಲ್ಲಿ ಜಾಲಿ ಮರಕ್ಕೆ ನೇಣು ಹಾಕಿಕೊಂಡ ಸ್ಥಿತಿಯಲ್ಲಿ ಮಹಿಳೆಯೊಬ್ಬರ ಶವ ಪತ್ತೆಯಾಗಿದೆ ಎಂಬ ಮಾಹಿತಿ ದೊರೆತ ಹಿನ್ನೆಲೆಯಲ್ಲಿ ಕುಟುಂಬಸ್ಥರು ಸ್ಥಳಕ್ಕೆ ಧಾವಿಸಿ ಪರಿಶೀಲಿಸಿದಾಗ, ಅದು ಜಯಮ್ಮ ಅವರದ್ದೇ ಎಂಬುದು ದೃಢಪಟ್ಟಿತು. ಈ ಸಂಬಂಧ ಶಹಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆದರೆ ಜಯಮ್ಮನ ಸಾವಿನ ಬಗ್ಗೆ ಅನುಮಾನಗಳು ಮೂಡಿವೆ ಎಂದರು. ಜಾಲಿ ಗಿಡದ ಕೊಂಬೆಗಳು ಬಲಿಷ್ಠವಾಗಿಲ್ಲ, ಶವದ ಕುತ್ತಿಗೆ ಮೇಲ್ಭಾಗದಲ್ಲಿ ಗುರುತುಗಳಿದ್ದು, ಕಾಲುಗಳು ನೆಲಕ್ಕೆ ಸಮೀಪದಲ್ಲಿದ್ದವು. ಈ ಎಲ್ಲ ಅಂಶಗಳನ್ನು ಗಮನಿಸಿದರೆ ಜಯಮ್ಮರ ಮೇಲೆ ಅತ್ಯಾಚಾರ ನಡೆಸಿ ಕೊಲೆ ಮಾಡಿ ಬಳಿಕ ನೇಣು ಬಿಗಿದಂತೆ ತೋರಿಸಲಾಗಿದೆ ಎಂಬ ಶಂಕೆ ವ್ಯಕ್ತವಾಗಿದೆ ಎಂದು ನಿಂಗಣ್ಣ ಹೇಳಿದರು. ಈ ಬಗ್ಗೆ ಡಿ.30ರಂದು ಶಹಾಪುರ ಪೊಲೀಸ್ ಠಾಣೆಯ ಆರಕ್ಷಕ ನೀರೀಕ್ಷಕರಿಗೆ ಮನವಿ ಸಲ್ಲಿಸಲಾಗಿತ್ತು. ಆದರೆ ಅವರು ಸಮರ್ಪಕ ಉತ್ತರ ನೀಡಿಲ್ಲ. ಜೊತೆಗೆ ಪ್ರಕರಣವನ್ನು ಮುಚ್ಚಿ ಹಾಕುವ ಪ್ರಯತ್ನ ನಡೆಯುತ್ತಿದೆ ಎಂದು ನಿಂಗಣ್ಣ ಆರೋಪಿಸಿದರು. ಆದ್ದರಿಂದ ಪ್ರಕರಣವನ್ನು ಕೂಲಂಕುಷವಾಗಿ ತನಿಖೆ ನಡೆಸಿ, ದುಷ್ಕರ್ಮಿಗಳನ್ನು ಬಂಧಿಸಿ, ಕರ್ತವ್ಯ ಲೋಪ ತೋರಿದ ಶಹಾಪುರ ಪೊಲೀಸ್ ಠಾಣಾಧಿಕಾರಿಗಳ ವಿರುದ್ಧ ಶಿಸ್ತಿನ ಕ್ರಮ ಕೈಗೊಳ್ಳಬೇಕು ಎಂದು ಅವರು ಮನವಿ ಮಾಡಿದರು. ಈ ಸಂದರ್ಭದಲ್ಲಿ ಚೆನ್ನಪ್ಪ ಆನೆಗುಂದಿ, ಎಸ್.ಎಂ. ಸಾಗರ, ದಾವಲ್ ಸಾಬ್ ನದಾಫ್, ಮಾದೇವಪ್ಪ ದಿಗ್ಗಿ, ಶಿವಕುಮಾರ್ ದೊಡ್ಡಮನಿ, ಮಾನಪ್ಪ ಮುದ್ರಿಕಿ, ಭೀಮಶಂಕರ್ ಕಟ್ಟೆಮನಿ, ದುರ್ಗಮ್ಮ ಕಟ್ಟಿಮನಿ, ರಮೇಶ್ ಗಾಂಜಿ, ಹಣಮಂತ ಕಟ್ಟಿಮನಿ, ತಾಯಪ್ಪ ಕನ್ನಳ್ಳಿ, ಬಸವರಾಜ ನಾಟೇಕರ, ಧರ್ಮಣ್ಣ ಧೀವಳಗುಡ್ಡ, ಭೀಮರಾಯ ರಾಜಾಪುರ ಮತ್ತಿತರರು ಉಪಸ್ಥಿತರಿದ್ದರು.

ವಾರ್ತಾ ಭಾರತಿ 12 Jan 2026 10:20 pm

ಬೆಂಗಳೂರಿನಲ್ಲಿ ಹತ್ತು ಪಿಜಿಗಳಿಗೆ ಬೀಗ

ಬೆಂಗಳೂರು : ಸೋಮವಾರದಂದು ಇಲ್ಲಿನ ಜಯನಗರ, ಬೆಂಗಳೂರು ದಕ್ಷಿಣ, ಬಿಟಿಎಂ ಲೇಔಟ್ ಬೊಮ್ಮನಹಳ್ಳಿ ಕ್ಷೇತ್ರಗಳಲ್ಲಿ ಶುಚಿತ್ವ ಇಲ್ಲದೆ ನಡೆಯುತ್ತಿದ್ದ 10 ಪೇಯಿಂಗ್ ಗೆಸ್ಟ್‌ ಗಳಿಗೆ(ಪಿ.ಜಿ.) ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಅಧಿಕಾರಿಗಳು ಬೀಗ ಹಾಕಿದ್ದಾರೆ. ಶುದ್ಧ ಕುಡಿಯುವ ನೀರು, ಶುಚಿತ್ವ, ಅಡುಗೆ ಕೋಣೆ ನೈರ್ಮಲ್ಯ, ಸುರಕ್ಷತೆ, ಉತ್ತಮ ಶೌಚಾಲಯ ವ್ಯವಸ್ಥೆ, ಅಗ್ನಿಶಾಮಕ ಸಾಧನಗಳು ಹಾಗೂ ಸಿ.ಸಿ.ಟಿ.ವಿ ಕ್ಯಾಮರಾ ಅಳವಡಿಕೆ ಮತ್ತು ಎಫ್‍ಎಸ್‍ಎಸ್‍ಎಐನ ಆಹಾರ ಸುರಕ್ಷತಾ ಪ್ರಮಾಣ ಪತ್ರ ಇತ್ಯಾದಿ ಮೂಲಭೂತ ಸೌಕರ್ಯಗಳು ಇರುವ ಬಗ್ಗೆ ಒಟ್ಟು 66 ಪಿಜಿಗಳನ್ನು ತಪಾಸಣೆ ನಡೆಸಲಾಗಿದೆ. ತಪಾಸಣೆ ನಡೆಸಿದ ಪಿ.ಜಿ. ಉದ್ದಿಮೆಗಳಲ್ಲಿ ಕಂಡು ಬಂದ ನ್ಯೂನ್ಯತೆಗಳಿಗೆ 22,500 ರೂ.ಗಳ ದಂಡವನ್ನು ವಿಧಿಸಲಾಗಿದೆ ಎಂದು ಗ್ರೇಟರ್ ಬೆಂಗಳೂರು ಪ್ರಾಧಿಕಾರ ಪ್ರಕಟನೆಯಲ್ಲಿ ತಿಳಿಸಿದೆ.

ವಾರ್ತಾ ಭಾರತಿ 12 Jan 2026 10:19 pm

ಇರಾನ್‌ನಲ್ಲಿ ಪ್ರತಿಭಟನೆ ತೀವ್ರ; ಮಿಲಿಟರಿ ದಾಳಿಗೆ ಸಜ್ಜಾದ ಟ್ರಂಪ್, ‘ನಾವು ಯುದ್ಧದಾಹಿಗಳಲ್ಲ’ ಎಂದ ಇರಾನ್; ಇಲ್ಲಿವರೆಗಿನ ಬೆಳವಣಿಗೆಗಳು

ಇರಾನ್ ಆಡಳಿತವನ್ನು ಪ್ರಶ್ನಿಸಿ ದೇಶದಾದ್ಯಂತ ನಡೆಯುತ್ತಿರುವ ಪ್ರತಿಭಟನೆಗಳು ಎರಡನೇ ವಾರವೂ ಮುಂದುವರಿದಿದ್ದು, ಸಾವಿನ ಸಂಖ್ಯೆ 544ಕ್ಕೆ ತಲುಪಿದೆ. ಈ ಪೈಕಿ 162 ಮಂದಿ ಪ್ರತಿಭಟನಕಾರರು, 41 ಮಂದಿ ಭದ್ರತಾ ಸಿಬ್ಬಂದಿ ಎಂದು ಮಾಧ್ಯಮಗಳು ವರದಿ ಮಾಡಿವೆ. ದೇಶಾದ್ಯಂತ ಇಂಟರ್ನೆಟ್ ಸ್ಥಗಿತ ಹಾಗೂ ಫೋನ್ ಲೈನ್‌ಗಳನ್ನು ಕಡಿತಗೊಳಿಸಿದ್ದರೂ ಪ್ರತಿಭಟನೆಗಳು ಹೆಚ್ಚುತ್ತಲೇ ಇವೆ ಎಂದು ಅಮೆರಿಕ ಮೂಲದ ಮಾನವ ಹಕ್ಕುಗಳ ಕಾರ್ಯಕರ್ತರ ಸುದ್ದಿ ಸಂಸ್ಥೆ ತಿಳಿಸಿದೆ. 10,681ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದೆ ಎಂದು ವರದಿಯಾಗಿದೆ. ಈ ನಡುವೆ, ಏರ್ ಫೋರ್ಸ್ ಒನ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಇರಾನ್ ಮಾತುಕತೆ ನಡೆಸಲು ಬಯಸುತ್ತಿದೆ ಎಂದು ಹೇಳಿದ್ದಾರೆ. ಇದೇ ವೇಳೆ, ಇರಾನ್‌ನಲ್ಲಿ ವ್ಯಾಪಕವಾದ ಪ್ರತಿಭಟನೆಗಳ ಪರಿಣಾಮಗಳು ಹಾಗೂ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್‌ನಲ್ಲಿ ಮಧ್ಯಪ್ರವೇಶಿಸುವುದಾಗಿ ಬೆದರಿಕೆ ಹಾಕುತ್ತಿರುವುದನ್ನು ಇಸ್ರೇಲ್ ಸೂಕ್ಷ್ಮವಾಗಿ ಗಮನಿಸುತ್ತಿದೆ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹೇಳಿದ್ದಾರೆ. ಇರಾನ್‌ನಲ್ಲಿ ಅಶಾಂತಿ ಮುಂದುವರಿದಿರುವ ಸಂದರ್ಭದಲ್ಲಿ ವಾಷಿಂಗ್ಟನ್ ಮಿಲಿಟರಿ ಹಸ್ತಕ್ಷೇಪ ಮಾಡಿದರೆ, ಅಮೆರಿಕದ ಮಿಲಿಟರಿ ಹಾಗೂ ವಾಣಿಜ್ಯ ನೆಲೆಗಳನ್ನು ಪ್ರತೀಕಾರಕ್ಕಾಗಿ ಕಾನೂನುಬದ್ಧ ಗುರಿಗಳಾಗಿ ಟೆಹ್ರಾನ್ ಪರಿಗಣಿಸುತ್ತದೆ ಎಂದು ಇರಾನ್ ಸಂಸತ್ತಿನ ಸ್ಪೀಕರ್ ಮೊಹಮ್ಮದ್ ಬಕರ್ ಖಲೀಬಾಫ್ ಎಚ್ಚರಿಸಿದ್ದಾರೆ. ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್, ಇರಾನ್ ಅಧಿಕಾರಿಗಳು ಗರಿಷ್ಠ ಸಂಯಮ ವಹಿಸಬೇಕು ಮತ್ತು ದೇಶದಲ್ಲಿ ಮಾಹಿತಿಗೆ ಪ್ರವೇಶವನ್ನು ಪುನಃ ಸಕ್ರಿಯಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ. ಇರಾನ್‌ ನಲ್ಲಿ ಏನಾಗುತ್ತಿದೆ? ಡಿಸೆಂಬರ್ 28ರಂದು ಇರಾನಿನ ಕರೆನ್ಸಿ ರಿಯಾಲ್ ಕುಸಿತ ಮತ್ತು ಬೆಲೆ ಏರಿಕೆಯ ವಿರುದ್ಧ ಪ್ರತಿಭಟನೆಗಳು ಆರಂಭವಾಗಿವೆ. ಇರಾನ್‌ನ ವಿವಾದಿತ ಪರಮಾಣು ಕಾರ್ಯಕ್ರಮದ ಮೇಲೆ ಹೇರಲಾದ ಅಂತರರಾಷ್ಟ್ರೀಯ ನಿರ್ಬಂಧಗಳಿಂದ ಆರ್ಥಿಕತೆ ಒತ್ತಡಕ್ಕೆ ಒಳಗಾಗಿದ್ದು, ಟೆಹ್ರಾನ್‌ನ ಕರೆನ್ಸಿ ಯುಎಸ್ ಡಾಲರ್‌ಗೆ 1.4 ಮಿಲಿಯನ್ ರಿಯಾಲ್‌ಗಳಿಗಿಂತ ಹೆಚ್ಚಿನ ಮಟ್ಟಕ್ಕೆ ಕುಸಿದಿದೆ. ಟೆಹ್ರಾನ್, ಮಶಾದ್ ಸೇರಿದಂತೆ ಹಲವು ನಗರಗಳಲ್ಲಿ ರಾತ್ರಿಯಿಡೀ ಪ್ರತಿಭಟನಾಕಾರರು ಬೀದಿಗಿಳಿದು ಘೋಷಣೆ ಕೂಗುತ್ತಾ, ಚಪ್ಪಾಳೆ ತಟ್ಟುತ್ತಾ ಮತ್ತು ಮೊಬೈಲ್ ಫೋನ್ ಟಾರ್ಚ್ ಬೆಳಗಿಸಿ ಪ್ರತಿಭಟನೆ ನಡೆಸಿದ್ದಾರೆ. ಬಹುತೇಕ ಶಿಯಾ ಸಮುದಾಯವೇ ಇರುವ ಇರಾನ್‌ನಲ್ಲಿ ಧಾರ್ಮಿಕ ಪ್ರಭುತ್ವ ಆಡಳಿತವಿದೆ. ಇಲ್ಲಿನ ಸರ್ವೋಚ್ಚ ನಾಯಕ ಆಯತೊಲ್ಲಾ ಖಮೇನಿ. ಮೊದಲ ಬಾರಿಗೆ ಅಲ್ಲಿನ ಜನರು ದೇವಪ್ರಭುತ್ವದ ವಿರುದ್ಧ ದೊಡ್ಡ ಮಟ್ಟದಲ್ಲಿ ಬೀದಿಗಿಳಿದಿದ್ದಾರೆ. ರಾಜಕೀಯ ಸ್ವಾತಂತ್ರ್ಯದ ಕೊರತೆ, ಆರ್ಥಿಕ ಕುಸಿತ ಮತ್ತು ಭ್ರಷ್ಟಾಚಾರವೇ ಜನಾಕ್ರೋಶಕ್ಕೆ ಕಾರಣಗಳೆಂದು ಹೇಳಲಾಗುತ್ತಿದ್ದು, ಸರ್ಕಾರವನ್ನು ಕಿತ್ತೊಗೆಯುವುದೇ ತಮ್ಮ ಗುರಿ ಎಂದು ಪ್ರತಿಭಟನಾಕಾರರು ಘೋಷಿಸಿದ್ದಾರೆ. ಇತ್ತ ಖಮೇನಿ ಪ್ರತಿಭಟನಾಕಾರರನ್ನು ದೊಂಬಿಕೋರರು ಎಂದು ಹೇಳಿದ್ದು, ಅಮೆರಿಕವನ್ನು ಮೆಚ್ಚಿಸಲು ಇವರು ಪ್ರತಿಭಟನೆ ನಡೆಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಎಎಫ್‌ಪಿ ಸುದ್ದಿ ಸಂಸ್ಥೆ ದೃಢೀಕರಿಸಿದ ವೀಡಿಯೊವೊಂದರಲ್ಲಿ, ಟೆಹ್ರಾನ್‌ನ ದಕ್ಷಿಣದಲ್ಲಿರುವ ಕಹ್ರಿಜಾಕ್‌ನ ಶವಾಗಾರದ ಹೊರಗೆ ಡಜನ್ಗಟ್ಟಲೆ ಶವಗಳಿರುವುದು ಕಾಣಿಸಿದೆ. ಈ ಹಿಂದೆ ಇರಾನ್‌ನ ಮಾನವ ಹಕ್ಕುಗಳ ಕೇಂದ್ರ (CHRI) ಅನ್ನು ಉಲ್ಲೇಖಿಸಿ ಎಎಫ್‌ಪಿ ವರದಿಯೊಂದು, ಪ್ರಸ್ತುತ ಇಂಟರ್ನೆಟ್ ಸ್ಥಗಿತದ ಸಮಯದಲ್ಲಿ ಇರಾನ್‌ನಾದ್ಯಂತ ನೂರಾರು ಪ್ರತಿಭಟನಾಕಾರರು ಸಾವನ್ನಪ್ಪಿರುವ ವಿಶ್ವಾಸಾರ್ಹ ವರದಿಗಳು ಲಭ್ಯವಾಗಿವೆ ಎಂದು ಹೇಳಿದೆ. ಇರಾನ್‌ನಲ್ಲಿ ಹತ್ಯಾಕಾಂಡ ನಡೆಯುತ್ತಿದೆ. ಮತ್ತಷ್ಟು ಜೀವಹಾನಿಯನ್ನು ತಡೆಯಲು ಜಗತ್ತು ಈಗಲೇ ಕಾರ್ಯನಿರ್ವಹಿಸಬೇಕು ಎಂದು CHRI ಹೇಳಿದೆ. ಮಿಲಿಟರಿ ದಾಳಿ ಬೆದರಿಕೆ ಹಾಕಿದ ಟ್ರಂಪ್ ಪ್ರತಿಭಟನೆಗಳು ತೀವ್ರಗೊಳ್ಳುತ್ತಿದ್ದಂತೆ, ಪ್ರತಿಭಟನಾಕಾರರ ಮೇಲೆ ದಮನಕ್ಕಾಗಿ ಇಸ್ಲಾಮಿಕ್ ಗಣರಾಜ್ಯದ ಮೇಲೆ ಮಿಲಿಟರಿ ದಾಳಿ ಮಾಡುವುದಾಗಿ ಬೆದರಿಕೆ ಹಾಕಿದ ಬಳಿಕ ಇರಾನ್ ಮಾತುಕತೆಗಳನ್ನು ಪ್ರಸ್ತಾಪಿಸಿದೆ ಎಂದು ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಮಿಲಿಟರಿ ಆಯ್ಕೆಗಳನ್ನು ಪರಿಶೀಲಿಸಲಾಗುತ್ತಿದೆ. “ನಾವು ಕೆಲವು ಬಲವಾದ ಆಯ್ಕೆಗಳನ್ನು ನೋಡುತ್ತಿದ್ದೇವೆ” ಎಂದು ಭಾನುವಾರ ರಾತ್ರಿ ಏರ್ ಫೋರ್ಸ್ ಒನ್‌ನಲ್ಲಿ ವರದಿಗಾರರಿಗೆ ಟ್ರಂಪ್ ತಿಳಿಸಿದ್ದಾರೆ ಎಂದು ಅಮೆರಿಕದ ಮಾಧ್ಯಮಗಳು ವರದಿ ಮಾಡಿವೆ. ಇರಾನ್‌ನ ಪ್ರತೀಕಾರದ ಬೆದರಿಕೆಗಳ ಬಗ್ಗೆ ಕೇಳಿದಾಗ, “ಅವರು ಹಾಗೆ ಮಾಡಿದರೆ, ನಾವು ಅವರ ಮೇಲೆ ಹಿಂದೆಂದೂ ದಾಳಿ ಮಾಡದ ಮಟ್ಟದಲ್ಲಿ ದಾಳಿ ಮಾಡುತ್ತೇವೆ” ಎಂದು ಟ್ರಂಪ್ ಹೇಳಿದ್ದಾರೆ. ಟೆಹ್ರಾನ್ ಜೊತೆ ಸಭೆ ನಡೆಸಲು ತಮ್ಮ ಆಡಳಿತ ಕಾರ್ಯನಿರ್ವಹಿಸುತ್ತಿದೆ ಎಂದು ಅವರು ಹೇಳಿದ್ದಾರೆ. “ಅವರು ಅಮೆರಿಕದಿಂದ ಹೊಡೆತ ತಿನ್ನುವುದರಿಂದ ಬೇಸತ್ತಿದ್ದಾರೆ ಎಂದು ನಾನು ಭಾವಿಸುತ್ತೇನೆ. ಇರಾನ್ ಮಾತುಕತೆ ನಡೆಸಲು ಬಯಸುತ್ತದೆ” ಎಂದು ಟ್ರಂಪ್ ಹೇಳಿದ್ದಾರೆ. ಟ್ರಂಪ್ ಮಂಗಳವಾರ ಹಿರಿಯ ಸಲಹೆಗಾರರನ್ನು ಭೇಟಿಯಾಗಿ ಮಿಲಿಟರಿ ದಾಳಿ, ಸೈಬರ್ ಕಾರ್ಯಾಚರಣೆ, ಕಠಿಣ ನಿರ್ಬಂಧಗಳು ಹಾಗೂ ಸರ್ಕಾರ ವಿರೋಧಿ ಗುಂಪುಗಳಿಗೆ ಆನ್‌ಲೈನ್ ಬೆಂಬಲ ಸೇರಿದಂತೆ ಹಲವು ಆಯ್ಕೆಗಳನ್ನು ಚರ್ಚಿಸುವ ಸಾಧ್ಯತೆ ಇದೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ. ಸ್ಟಾರ್‌ಲಿಂಕ್ ಮೂಲಕ ಇರಾನ್‌ನಲ್ಲಿ ಇಂಟರ್ನೆಟ್ ಪ್ರವೇಶವನ್ನು ಮರುಸ್ಥಾಪಿಸುವ ಕುರಿತು ಎಲೋನ್ ಮಸ್ಕ್ ಜೊತೆ ಮಾತನಾಡುವುದಾಗಿ ಟ್ರಂಪ್ ಹೇಳಿದ್ದಾರೆ. ನಾವು ಯುದ್ಧದಾಹಿಗಳಲ್ಲ: ಇರಾನ್ ಅಮೆರಿಕದೊಂದಿಗೆ ಸಂವಹನಕ್ಕೆ ಸಿದ್ಧವಾಗಿದ್ದೇವೆ. ನಾವು ಮುಖಾಮುಖಿ ಅಥವಾ ಸಂವಾದಕ್ಕೆ ಸಿದ್ಧ ಎಂದು ಇರಾನ್ ವಿದೇಶಾಂಗ ಸಚಿವರು ಸೋಮವಾರ ಹೇಳಿದ್ದಾರೆ. “ನಾವು ಯುದ್ಧದಾಹಿಗಳಲ್ಲ, ಆದರೆ ಯುದ್ಧಕ್ಕೆ ಸಿದ್ಧ. ಸಮಾನ ಹಕ್ಕುಗಳು ಮತ್ತು ಪರಸ್ಪರ ಗೌರವದೊಂದಿಗೆ ನ್ಯಾಯಯುತ ಮಾತುಕತೆಗಳಿಗೆ ಸಿದ್ಧ” ಎಂದು ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಘ್ಚಿ, ಇರಾನ್‌ನಲ್ಲಿನ ರಾಯಭಾರಿಗಳ ಸಭೆಯಲ್ಲಿ ಹೇಳಿದ್ದಾರೆ. ಟೆಹ್ರಾನ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಇರಾನ್ ವಿದೇಶಾಂಗ ಸಚಿವಾಲಯದ ವಕ್ತಾರ ಎಸ್ಮಾಯಿಲ್ ಬಘೈ, “ಸಂವಹನಕ್ಕೆ ನಾವು ಮುಕ್ತವಾಗಿದ್ದೇವೆ. ಅಗತ್ಯವಿದ್ದಾಗ ಸಂದೇಶಗಳನ್ನು ವಿನಿಮಯ ಮಾಡಿಕೊಳ್ಳಲಾಗುತ್ತದೆ. ಆದರೆ ಆ ಮಾತುಕತೆಗಳು ಪರಸ್ಪರ ಹಿತಾಸಕ್ತಿಗಳು ಮತ್ತು ಕಾಳಜಿಗಳ ಸ್ವೀಕಾರವನ್ನು ಆಧರಿಸಿರಬೇಕು; ಏಕಪಕ್ಷೀಯ ಅಥವಾ ಆಜ್ಞಾಧಾರಿತ ಮಾತುಕತೆಗಳಾಗಿರಬಾರದು” ಎಂದು ಹೇಳಿದ್ದಾರೆ. ಇರಾನ್ ಶಾಸಕರ ಎಚ್ಚರಿಕೆ ಇರಾನ್ ಮೇಲೆ ದಾಳಿ ನಡೆದರೆ, ಆಕ್ರಮಿತ ಪ್ರದೇಶಗಳು ಮತ್ತು ಈ ಪ್ರದೇಶದಲ್ಲಿನ ಎಲ್ಲಾ ಅಮೆರಿಕನ್ ಮಿಲಿಟರಿ ಕೇಂದ್ರಗಳು, ನೆಲೆಗಳು ಹಾಗೂ ಹಡಗುಗಳು ನಮ್ಮ ಕಾನೂನುಬದ್ಧ ಗುರಿಗಳಾಗಿರುತ್ತವೆ ಎಂದು ಸಂಸತ್ತಿನ ಸ್ಪೀಕರ್ ಮೊಹಮ್ಮದ್ ಬಕರ್ ಖಲೀಬಾಫ್ ಹೇಳಿದ್ದಾರೆ ಎಂದು ಇರಾನ್ ಇಂಟರ್ನ್ಯಾಷನಲ್ ವರದಿ ಮಾಡಿದೆ. “ನಾವು ಕ್ರಮದ ನಂತರ ಪ್ರತಿಕ್ರಿಯಿಸುವುದಕ್ಕೆ ಮಾತ್ರ ಸೀಮಿತವಿಲ್ಲ; ಬೆದರಿಕೆಯ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತೇವೆ” ಎಂದು ಅವರು ಹೇಳಿದ್ದಾರೆ. ಇರಾನ್ ಮೇಲೆ ಹೆಚ್ಚಿನ ನಿರ್ಬಂಧಗಳಿಗೆ ಯುರೋಪಿಯನ್ ಒಕ್ಕೂಟ ಸಿದ್ಧ ಅಗತ್ಯವಿದ್ದರೆ ಇರಾನ್ ಮೇಲೆ ಹೆಚ್ಚಿನ ನಿರ್ಬಂಧಗಳನ್ನು ವಿಧಿಸಲು ಸಿದ್ಧ ಎಂದು ಯುರೋಪಿಯನ್ ಒಕ್ಕೂಟ ಹೇಳಿದೆ. ಪ್ರತಿಭಟನಾಕಾರರ ಮೇಲಿನ ಹಿಂಸಾತ್ಮಕ ದಮನದ ಹಿನ್ನೆಲೆಯಲ್ಲಿ ಹೊಸ ಮತ್ತು ಹೆಚ್ಚು ಕಠಿಣ ನಿರ್ಬಂಧಗಳನ್ನು ಪ್ರಸ್ತಾಪಿಸಲು ನಾವು ಸಿದ್ಧ ಎಂದು ವಕ್ತಾರ ಅನೌರ್ ಎಲ್ ಅನೌನಿ ಹೇಳಿದ್ದಾರೆ. ಮಾನವ ಹಕ್ಕುಗಳಿಂದ ಹಿಡಿದು ಪರಮಾಣು ಚಟುವಟಿಕೆಗಳವರೆಗೆ ಹಲವು ವಿಷಯಗಳ ಕುರಿತು ಇರಾನ್ ಮೇಲೆ ಈಗಾಗಲೇ ನಿರ್ಬಂಧಗಳು ಜಾರಿಯಲ್ಲಿವೆ. ರಾಜಧಾನಿಯಲ್ಲಿ ಪ್ರಮುಖ ರ‍್ಯಾಲಿಯಲ್ಲಿ ಭಾಗವಹಿಸಿದ ಇರಾನ್ ಅಧ್ಯಕ್ಷರು ಟೆಹ್ರಾನ್‌ನಲ್ಲಿ ನಡೆದ ದೊಡ್ಡ ರ‍್ಯಾಲಿ ಸೇರಿದಂತೆ ವಿವಿಧ ನಗರಗಳಲ್ಲಿ ಸರ್ಕಾರಿ ಪರ ರ‍್ಯಾಲಿಗಳ ದೃಶ್ಯಗಳನ್ನು ಇರಾನಿನ ಮಾಧ್ಯಮಗಳು ಪ್ರಸಾರ ಮಾಡಿವೆ. ಸಾವಿರಾರು ಜನರು ಈ ರ‍್ಯಾಲಿಗಳಲ್ಲಿ ಭಾಗವಹಿಸಿದ್ದರು. ರಾಜಧಾನಿಯಲ್ಲಿ ನಡೆದ ರ‍್ಯಾಲಿಯಲ್ಲಿ ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಭಾಗವಹಿಸಿದ್ದ ವೀಡಿಯೊವನ್ನು ರಾಜ್ಯ ಸ್ವಾಮ್ಯದ ಮಾಧ್ಯಮಗಳು ಪ್ರಸಾರ ಮಾಡಿವೆ. ಎರಡು ವಾರಗಳ ಹಿಂದೆ ಆರಂಭವಾದ ಮಾರಕ ಹಿಂಸಾಚಾರವನ್ನು ಖಂಡಿಸಲು ಸೋಮವಾರ ನಡೆದ “ರಾಷ್ಟ್ರೀಯ ಪ್ರತಿರೋಧ ಮೆರವಣಿಗೆ”ಯಲ್ಲಿ ಭಾಗವಹಿಸಲು ಪೆಜೆಶ್ಕಿಯಾನ್ ಇರಾನಿಯನ್ನರನ್ನು ಒತ್ತಾಯಿಸಿದ್ದಾರೆ. ದೇಶದಲ್ಲಿ ಹೆಚ್ಚುತ್ತಿರುವ ಆರ್ಥಿಕ ಕುಂದುಕೊರತೆಗಳನ್ನು ಪರಿಹರಿಸುವುದಾಗಿ ಅವರು ಪ್ರತಿಜ್ಞೆ ಮಾಡಿದ್ದು, ತಮ್ಮ ಸರ್ಕಾರ ಪ್ರತಿಭಟನಾಕಾರರ ಮಾತುಗಳನ್ನು ಕೇಳಲು ಸಿದ್ಧವಿದೆ ಎಂದು ಹೇಳಿದ್ದಾರೆ. ಗಲಭೆಕೋರರು ಹಾಗೂ ಭಯೋತ್ಪಾದಕ ಶಕ್ತಿಗಳು ನಾಶನಷ್ಟ ಉಂಟುಮಾಡುವುದನ್ನು ತಡೆಯಬೇಕು ಎಂದು ಅವರು ಒತ್ತಾಯಿಸಿದ್ದಾರೆ. ಹೊರಗಿನ ಹಸ್ತಕ್ಷೇಪ ವಿರೋಧಿಸಿದ ಚೀನಾ ಅಂತರರಾಷ್ಟ್ರೀಯ ಸಂಬಂಧಗಳಲ್ಲಿ ಬಲಪ್ರಯೋಗವನ್ನು ವಿರೋಧಿಸುತ್ತೇವೆ. ಅಲ್ಲಿನ ಸರ್ಕಾರ ಮತ್ತು ಜನರು ಪ್ರಸ್ತುತ ತೊಂದರೆಗಳನ್ನು ನಿವಾರಿಸಲು ಹಾಗೂ ರಾಷ್ಟ್ರೀಯ ಸ್ಥಿರತೆಯನ್ನು ಕಾಪಾಡಿಕೊಳ್ಳಲು ಸಮರ್ಥರಾಗಿದ್ದಾರೆ ಎಂದು ಚೀನಾ ಹೇಳಿದೆ. ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಮಾವೋ ನಿಂಗ್ ಸೋಮವಾರ ಬೀಜಿಂಗ್‌ನಲ್ಲಿ ಮಾತನಾಡಿ, “ಇತರ ದೇಶಗಳ ಆಂತರಿಕ ವ್ಯವಹಾರಗಳಲ್ಲಿ ಹಸ್ತಕ್ಷೇಪವನ್ನು ಚೀನಾ ಯಾವಾಗಲೂ ವಿರೋಧಿಸುತ್ತದೆ. ಎಲ್ಲಾ ದೇಶಗಳ ಸಾರ್ವಭೌಮತ್ವ ಮತ್ತು ಭದ್ರತೆಯನ್ನು ಅಂತರರಾಷ್ಟ್ರೀಯ ಕಾನೂನಿನ ಅಡಿಯಲ್ಲಿ ಸಂಪೂರ್ಣವಾಗಿ ರಕ್ಷಿಸಬೇಕು. ಅಂತರರಾಷ್ಟ್ರೀಯ ಸಂಬಂಧಗಳಲ್ಲಿ ಬಲಪ್ರಯೋಗ ಅಥವಾ ಅದರ ಬೆದರಿಕೆಯನ್ನು ಚೀನಾ ವಿರೋಧಿಸುತ್ತದೆ” ಎಂದು ಹೇಳಿದ್ದಾರೆ.

ವಾರ್ತಾ ಭಾರತಿ 12 Jan 2026 10:16 pm

ಯಾದಗಿರಿ | ಫೇಸ್ಬುಕ್‌ನಲ್ಲಿ ದಲಿತರ ನಿಂದನೆ ಆರೋಪ : ಆರೋಪಿಯ ಬಂಧನಕ್ಕೆ ಒತ್ತಾಯ

ಯಾದಗಿರಿ, ಜ.12: ಡಾ.ಬಿ.ಆರ್.ಅಂಬೇಡ್ಕರ್ ಮತ್ತು ದಲಿತರಿಗೆ ಅವಮಾನ ಮಾಡುವ ರೀತಿಯಲ್ಲಿ ಪ್ರಚೋದನಕಾರಿ ಪೋಸ್ಟ್ ಮಾಡುತ್ತಿರುವ ‘ಗುಲಾಮರ ಅಪ್ಪ’ ಎನ್ನುವ ಫೇಸ್ಬುಕ್ ಕಿಡಿಗೇಡಿಯನ್ನು ಬಂಧಿಸಬೇಕೆಂದು ದಲಿತ ಸಂಘರ್ಷ ಸಮಿತಿ (ಭೀಮವಾದ) ಜಿಲ್ಲಾಧ್ಯಕ್ಷ ವಿಶ್ವ ನಾಟೇಕಾರ್ ಆಗ್ರಹಿಸಿದ್ದಾರೆ. ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಕಿಡಿಗೇಡಿಯೊಬ್ಬ ‘ಗುಲಾಮರ ಅಪ್ಪ’ ಎಂಬ ನಕಲಿ ಖಾತೆಯಲ್ಲಿ ಬಾಬಾಸಾಹೇಬ್ ಅಂಬೇಡ್ಕರ್ ಅವರನ್ನು ಮತ್ತು ದಲಿತ ಸಮುದಾಯವನ್ನು ಅತ್ಯಂತ ಕೆಟ್ಟ ಪದಗಳಲ್ಲಿ ನಿಂದಿಸುತ್ತಿದ್ದರೂ ಅಧಿಕಾರದಲ್ಲಿರುವವರು ಅದರ ಬಗ್ಗೆ ತಲೆಕೆಡಸಿಕೊಳ್ಳುತ್ತಿಲ್ಲ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಚಿತ್ರನಟಿ ರಮ್ಯಾಗೆ ಅಶ್ಲೀಲ ಸಂದೇಶ ಕಳುಹಿಸಿದ ಕಾರಣಕ್ಕೆ, ಪ್ರಿಯಾಂಕ್ ಖರ್ಗೆಯವರನ್ನು ಅಶ್ಲೀಲವಾಗಿ ಬೈದ ಅನ್ನೋ ಕಾರಣಕ್ಕೆ ದಿನಾ ಬೆಳಗಾಗುವುದರೊಳಗೆ ಪೊಲೀಸರು ಆರೋಪಿಗಳನ್ನು ಬಂಧಿಸುತ್ತಾರೆ. ಆದರೆ ಅಂಬೇಡ್ಕರ್, ಬುದ್ಧ ಹಾಗೂ ದಲಿತರನ್ನು ಪ್ರತಿನಿತ್ಯ ನಿಂದಿಸುವ ದುಷ್ಕರ್ಮಿಗಳು ಕಣ್ಣಿಗೆ ಬೀಳುತ್ತಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಾರ್ತಾ ಭಾರತಿ 12 Jan 2026 10:16 pm

ನಾಳೆ ಮೈಸೂರಿನಲ್ಲಿ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಲಿರುವ ಸಿಎಂ, ಡಿಸಿಎಂ

ಬೆಂಗಳೂರು : ರಾಜ್ಯದ ಆಡಳಿತಾರೂಢ ಕಾಂಗ್ರೆಸ್ ಪಕ್ಷದಲ್ಲಿ ‘ನಾಯಕತ್ವ ಬದಲಾವಣೆ’ಯ ಸುತ್ತ ಚರ್ಚೆ ನಡೆಯುತ್ತಿದ್ದು, ಬೆಂಬಲಿಗರ ಪರ-ವಿರೋಧ ಹೇಳಿಕೆಗಳು ಬಿರುಸುಗೊಂಡಿವೆ. ಈ ಮಧ್ಯೆ ನಾಳೆ (ಜ.13) ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಲೋಕಸಭೆ ಪ್ರತಿಪಕ್ಷ ನಾಯಕರೂ ಆಗಿರುವ ಎಐಸಿಸಿ ಮುಖಂಡ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡುತ್ತಿರುವುದು ರಾಜಕೀಯ ಕುತೂಹಲಕ್ಕೆ ಕಾರಣವಾಗಿದೆ. ತಮಿಳುನಾಡಿನ ನೀಲಗಿರಿಸ್ ಜಿಲ್ಲೆಯಲ್ಲಿ ನಡೆಯಲಿರುವ ಖಾಸಗಿ ಕಾರ್ಯಕ್ರಮ ನಿಮಿತ್ತ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರು ನಾಳೆ(ಜ.13) ಮಧ್ಯಾಹ್ನ 1:30ರ ಸುಮಾರಿಗೆ ಮೈಸೂರಿಗೆ ಆಗಮಿಸುತ್ತಿದ್ದು, ಸಿಎಂ ಹಾಗೂ ಡಿಸಿಎಂ ಅವರು, ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ನಾಯಕತ್ವ ಬದಲಾವಣೆ, ಸಚಿವ ಸಂಪುಟ ಪುನರ್ ರಚನೆ ಹಾಗೂ ‘ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ’ ಬದಲಾವಣೆ ಮಾಡಿರುವ ಕೇಂದ್ರ ಸರಕಾರದ ವಿರುದ್ಧ ಹೋರಾಟ ರೂಪಿಸುವ ಸಂಬಂಧ ರಾಹುಲ್ ಗಾಂಧಿ ಅವರೊಂದಿಗೆ ಉಭಯ ನಾಯಕರು ಸಮಾಲೋಚನೆ ನಡೆಸಲಿದ್ದಾರೆ ಎಂದು ತಿಳಿದು ಬಂದಿದೆ. ಆ ಹಿನ್ನೆಲೆಯಲ್ಲಿಯೇ ನಾಳೆ(ಜ.13) ಮಧ್ಯಾಹ್ನ 1ಗಂಟೆಯ ಸುಮಾರಿಗೆ ಇಲ್ಲಿನ ಎಚ್‍ಎಎಲ್ ವಿಮಾನ ನಿಲ್ದಾಣದಿಂದ ವಿಶೇಷ ವಿಮಾನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮೈಸೂರಿಗೆ ಪ್ರಯಾಣ ಬೆಳೆಸಲಿದ್ದು, ಮಧ್ಯಾಹ್ನ 1:30ರ ಸುಮಾರಿಗೆ ರಾಹುಲ್ ಗಾಂಧಿ ಅವರನ್ನು ಭೇಟಿಯಾಗುವ ಸಾಧ್ಯತೆಗಳಿವೆ. ಇದೇ ವೇಳೆ ಮೈಸೂರಿನಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಸಭೆ ನಡೆಸಲಿರುವ ಸಿಎಂ ಹಾಗೂ ಡಿಸಿಎಂ ಅವರು, ಸಂಜೆ 6:30ರ ಸುಮಾರಿಗೆ ಮೈಸೂರಿನಿಂದ ವಿಶೇಷ ವಿಮಾನ ನಿಲ್ದಾಣ ರಾಜಧಾನಿ ಬೆಂಗಳೂರಿಗೆ ಹಿಂದಿರುಗಲಿದ್ದಾರೆ ಎಂದು ಗೊತ್ತಾಗಿದೆ.

ವಾರ್ತಾ ಭಾರತಿ 12 Jan 2026 10:16 pm

ಆಗಸ್ಟ್ ವೇಳೆಗೆ ಬೆಂಗಳೂರಿನಲ್ಲಿ ಆಸ್ಟ್ರೇಲಿಯಾದ ನ್ಯೂಸೌತ್ ವೇಲ್ಸ್ ವಿವಿ ಕ್ಯಾಂಪಸ್ ಆರಂಭ | ಎಂ.ಬಿ.ಪಾಟೀಲ್‌ ಮತ್ತು ಡಾ.ಎಂ.ಸಿ.ಸುಧಾಕರ ಸಮ್ಮುಖದಲ್ಲಿ ಒಪ್ಪಂದಕ್ಕೆ ಸಹಿ

‘ಮಾನ್ಯತಾ ಟೆಕ್ ಪಾರ್ಕ್‍ನಲ್ಲಿ ಕ್ಯಾಂಪಸ್ : 4 ವಿಷಯಗಳಲ್ಲಿ ಪದವಿ, 1 ವಿಷಯದಲ್ಲಿ ಸ್ನಾತಕೋತ್ತರ ಪದವಿ’

ವಾರ್ತಾ ಭಾರತಿ 12 Jan 2026 10:07 pm

ಹೆಗ್ಗುಂಜೆ: ಅಧಿಕಾರಿಗಳಿಂದ ಅಕ್ರಮ ಮನೆ, ಶೆಡ್‌ಗಳ ತೆರವು ಕಾರ್ಯಾಚರಣೆ

ಬ್ರಹ್ಮಾವರ: ತಾಲೂಕಿನ ಹೆಗ್ಗುಂಜೆ ಗ್ರಾಮದ ನಿರ್ಜಡ್ಡು ಪ್ರದೇಶದಲ್ಲಿರುವ ಸರ್ವೆ ನಂಬರ್ 162/1 ಮತ್ತು 171/1ರ ಸರಕಾರಿ ಜಾಗದಲ್ಲಿ ಅಕ್ರಮವಾಗಿ ನಿರ್ಮಿಸಲಾಗಿದ್ದ 5 ತಾತ್ಕಾಲಿಕ ಶೆಡ್‌ಗಳು ಮತ್ತು ಒಂದು ಸ್ಪ್ಯಾಬ್ ಹಾಕಿದ ಮನೆಯನ್ನು ಸೋಮವಾರ ಬೆಳಿಗ್ಗೆ ತಹಶೀಲ್ದಾರ್ ನೇತೃತ್ವದಲ್ಲಿ ಅಧಿಕಾರಿಗಳು ತೆರವುಗೊಳಿಸಿದರು. ಬ್ರಹ್ಮಾವರ ತಹಶೀಲ್ದಾರ್ ಶ್ರೀಕಾಂತ್ ಎಸ್. ಹೆಗ್ಡೆ ನೇತೃತ್ವದಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು ಈ ಕಾರ್ಯಾಚರಣೆಯನ್ನು ನಡೆಸಿದರು. ಭೂಕಂದಾಯ ನ್ಯಾಯಾಲಯ ಮತ್ತು ಲೋಕಾಯುಕ್ತದ ಆದೇಶದ ಮೇರೆಗೆ ಈ ಅಕ್ರಮ ಕಟ್ಟಡಗಳನ್ನು ತೆರವುಗೊಳಿಸಲಾಗಿದೆ. ಈ ಜಾಗದ ಕುರಿತು ಭೂಕಂದಾಯ ನ್ಯಾಯಾಲಯ ಮತ್ತು ಲೋಕಾಯುಕ್ತದಲ್ಲಿ ಪ್ರಕರಣ ದಾಖಲಾಗಿತ್ತು. ಅಕ್ರಮ ಕಟ್ಟಡಗಳನ್ನು ತೆರವುಗೊಳಿಸುವಂತೆ ಕಂದಾಯ ಇಲಾಖೆಗೆ ನ್ಯಾಯಾಲಯದಿಂದ ಆದೇಶ ಬಂದಿತ್ತು. ಇದರ ಅನ್ವಯ, ಅಲ್ಲಿ ವಾಸವಾಗಿದ್ದವರಿಗೆ ತೆರವು ಮಾಡುವಂತೆ ನೋಟಿಸ್ ನೀಡಲಾಗಿದ್ದರೂ, ಅವರು ಜಾಗ ಖಾಲಿ ಮಾಡಿರಲಿಲ್ಲ. ಈ ಹಿನ್ನೆಲೆಯಲ್ಲಿ, ಕಳೆದ ಗುರುವಾರ ಮಧ್ಯಾಹ್ನ 3 ಗಂಟೆಗೆ ಅಧಿಕಾರಿಗಳು ತೆರವು ಕಾರ್ಯಾಚರಣೆಗೆ ತೆರಳಿದ್ದರು. ಆದರೆ, ಗ್ರಾಮಸ್ಥರಿಂದ ತೀವ್ರ ತಕರಾರು ಬಂದ ಕಾರಣ ಮತ್ತು ಕಾರ್ಯಾಚರಣೆಗೆ ಬಂದಿದ್ದ ಜೆಸಿಬಿಗಳು ಕೆಲಸ ಮಾಡಲು ನಿರಾಕರಿಸಿದ ಕಾರಣ, ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಮುಂದೂಡಲಾಗಿತ್ತು. ಸರ್ಕಾರಿ ಜಾಗದಲ್ಲಿ ಬೇರೊಬ್ಬರಿಗೆ ಹಣ ನೀಡಿ ಕುಡುಬಿ ಜನಾಂಗದ ಬೆಳ್ಳ ನಾಯ್ಡ್ ಎಂಬವರು ಈ ಫ್ಲ್ಯಾಬ್ ಮನೆ ನಿರ್ಮಾಣ ಮಾಡುತ್ತಿದ್ದರು. ಅನಾರೋಗ್ಯದ ಕಾರಣ, ಅವರು ಈ ಮನೆಯನ್ನು ತಮ್ಮ ಸಂಬಂಧಿ ದೇವಕಿ ಎಂಬವರಿಗೆ 2 ಲಕ್ಷ ರೂಪಾಯಿಗೆ ಮಾರಾಟ ಮಾಡಿದ್ದರು. ದೇವಕಿ ಅವರು 3 ಲಕ್ಷ ರೂಪಾಯಿ ಸಾಲ ಮಾಡಿ, ಕೇವಲ ಒಂದು ವಾರದ ಹಿಂದಷ್ಟೇ ಮನೆಗೆ ಸ್ಪ್ಯಾಬ್ ಹಾಕಿಸಿದ್ದರು. ತಹಶೀಲ್ದಾರ್ ಸ್ಪಷ್ಟೀಕರಣ ತಾಲೂಕಿನ ಹೆಗ್ಗುಂಜೆ ಗ್ರಾಮದ ನೀರ್ಜೆಡ್ಡು ಎಂಬಲ್ಲಿ ಸರ್ಕಾರಿ ಸ.ನಂ.162/1 ಹಾಗೂ 171/1ರ ಜಮೀನುಗಳಲ್ಲಿ ಅಂದಾಜು 2.00 ಎಕ್ರೆ ಸರ್ಕಾರಿ ಜಮೀನಿನಲ್ಲಿ ವಿಜಯ ಚೌಟ ಎಂಬವರು ಸರ್ಕಾರಿ ಜಮೀನನ್ನು ಕೆಲವರಿಗೆ ಹಣಕ್ಕೆ ಮಾರಾಟ ಮಾಡಲು ರಶೀದಿಯ ಮೂಲಕ ಮಾರಾಟ ಮಾಡಿ ಅದರಲ್ಲಿ ಅನಧಿಕೃತವಾಗಿ ಕಟ್ಟಡ ಕಟ್ಟಿದ ಬಗ್ಗೆ ಮಂದಾರ್ತಿ ಕೊಂಡಾಡಿಬೆಟ್ಟಿನ ವಿಜಯಲಕ್ಷ್ಮೀ ಇವರು ಕುಂದಾಪುರ ಉಪವಿಭಾಗದ ಸಹಾಯಕ ಕಮೀಷನರ್ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದರು ಎಂದು ಪ್ರಕರಮದ ಕುರಿತಂತೆ ಬ್ರಹ್ಮಾವರ ತಹಶೀಲ್ದಾರರು ಪತ್ರಿಕೆಗಳಿಗೆ ನೀಡಿರುವ ಸ್ಪಷ್ಟೀಕರಣದಲ್ಲಿ ತಿಳಿಸಿದ್ದಾರೆ. ಇದರಂತೆ ಕರ್ನಾಟಕ ಭೂ ಕಂದಾಯ ಕಾಯ್ದೆ 1964ರಡಿ ಕರ್ನಾಟಕ ಭೂ ಕಬಳಿಕೆ ( ನಿಷೇದ) ಅಧಿನಿಯಮ 2011 ಕಲಂ 5ರಂತೆ ಹಾಗೂ ಕಲಂ 7ರಂತೆ ಸ್ಥಾಪಿತವಾದ ವಿಶೇಷ ನ್ಯಾಯಾಲಯಕ್ಕೆ ಪ್ರಕರಣ ದಾಖಲು ಮಾಡುವಂತೆ ಬ್ರಹ್ಮಾವರ ತಹಶೀಲ್ದಾರರಿಗೆ ಆದೇಶ ನೀಡಲಾಗಿತ್ತು. ಇದರೊಂದಿಗೆ ವಿಜಯ ಲಕ್ಷ್ಮೀ ಅವರು 2019ರಲ್ಲಿ ಕರ್ನಾಟಕ ಸಾರ್ವಜನಿಕ ಜಮೀನುಗಳ ನಿಗಮ ನಿಯಮಿತ ನ್ಯಾಯಾಲಯದ ಕಛೇರಿಯಲ್ಲಿ ಸಹ ದೂರನ್ನು ಸಲ್ಲಿಸಿದ್ದರು. ಈ ಮಧ್ಯೆ ವಿಜಯಲಕ್ಷ್ಮೀ ಪ್ರಕರಣದ ಕುರಿತಂತೆ ಲೋಕಾಯುಕ್ತಕ್ಕೂ ದೂರು ಸಲ್ಲಿಸಿದ್ದರು. ವಿಶೇಷ ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿ ರುವುದರಿಂದ ವಿಶೇಷ ನ್ಯಾಯಾಲಯದ ತೀರ್ಪಿನ ಪ್ರಕಾರ ಕ್ರಮಗಳನ್ನು ತೆಗದುಕೊಳ್ಳುವಂತೆ ನಿರ್ದೇಶನ ನೀಡಿ ಲೋಕಾಯುಕ್ತ ಪ್ರಕರಣವನ್ನು ಮುಕ್ತಾಯಗೊಳಿಸಿತ್ತು. ಇದರ ನಂತರ ಮೋಜಣಿದಾರರಿಂದ ಮೋಜಣಿ ಕಾರ್ಯ ನಡೆಸಿ ಸರ್ಕಾರಿ ಜಮೀನನ್ನು ಒತ್ತುವರಿ ಮಾಡಿದ ಬಗ್ಗೆ ನಕ್ಷೆಯಲ್ಲಿ ಗುರುತಿಸಿ ಒತ್ತುವರಿದಾರರ ವಿರುದ್ದ 2021 ರಲ್ಲಿ ಕರ್ನಾಟಕ ಭೂ ಕಬಳಿಕೆ ವಿಶೇಷ ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿತ್ತು. ಕರ್ನಾಟಕ ಭೂ ಕಬಳಿಕೆ ವಿಶೇಷ ನ್ಯಾಯಾಲಯದಲ್ಲಿ ಪ್ರಕರಣಗಳ ವಿಚಾರಣೆ ನಡೆದು ಒತ್ತುವರಿ ಜಮೀನಿಗೆ ಸಂಬಂಧಿಸಿದಂತೆ ಕಾನೂನು ರೀತ್ಯಾ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ನಿರ್ದೇಶನವನ್ನು ನೀಡಲಾಗಿತ್ತು ಎಂದವರು ಹೇಳಿಕೆಯಲ್ಲಿ ತಿಳಿಸಿದ್ದಾರೆ. ಕರ್ನಾಟಕ ಭೂ ಕಬಳಿಕೆ ವಿಶೇಷ ನ್ಯಾಯಾಲಯದ ಆದೇಶದಂತೆ ಕ್ರಮ ಜರುಗಿಸಲು ಬಾಕಿ ಇರುವಾಗಲೀ ಒತ್ತುವರಿದಾರರಾದ ಬೆಳ್ಳ ನಾಯ್ಕ ಇತ್ತೀಚಿಗೆ ಒತ್ತುವರಿ ಸರ್ಕಾರಿ ಸ್ಥಳದಲ್ಲಿ ಕಟ್ಟಡ ಕಾಮಗಾರಿಯನ್ನು ಮುಂದುವರಿಸಿದ್ದು ಸ್ಥಳೀಯವಾಗಿ ದೂರು ಬಂದ ಹಿನ್ನಲೆಯಲ್ಲಿ ಹೆಗ್ಗುಂಜೆ ಗ್ರಾಮ ಆಡಳಿತ ಅಧಿಕಾರಿಯವರು ಪಂಚಾಯತ್ ಅಭಿವೃದ್ದಿ ಅಧಿಕಾರಿಯವರೊಂದಿಗೆ 2025ರ ನ.20ರಂದು ಸ್ಥಳ ತನಿಖೆ ಮಾಡಿ ಕಟ್ಟಡ ಕಾಮಗಾರಿ ನಿಲ್ಲಿಸುವಂತೆ ಬೆಳ್ಳಿ ನಾಯ್ಕರಿಗೆ ಮೌಖಿಕ ಸೂಚನೆ ನೀಡಿ ವರದಿ ಸಲ್ಲಿಸಿದ್ದರು. ಆದರೆ ಬೆಳ್ಳ ನಾಯ್ಕ ಕಾಮಗಾರಿ ನಿಲ್ಲಿಸದಿದ್ದಾಗ ಕಾಮಗಾರಿಯನ್ನು ನಿಲ್ಲಿಸುವಂತೆ ತಾಲೂಕು ಕಛೇರಿಯಿಂದ ತಿಳುವಳಿಕೆ ನೋಟೀಸನ್ನು ನೀಡಲಾಗಿತ್ತು. ಆದರೂ ಅವರು ಕಟ್ಟಡ ಕಾಮಗಾರಿ ಮುಂದುವರಿಸಿದ ಕಾರಣ ಅನಧಿಕೃತ ಕಟ್ಟಡ ಹಾಗೂ ವಾಸವಿಲ್ಲದ ಶೆಡ್‌ಗಳನ್ನು ಇದೇ ಜ.8ರಂದು ತೆರವು ಮಾಡುವಂತೆ ಆದೇಶವನ್ನು ನೀಡಲಾಗಿತ್ತು. ಜ.8ರಂದು ತೆರವುಗೊಳಿಸಲು ಹೋದ ಸಂದರ್ಭದಲ್ಲಿ ಹೆಗ್ಗುಂಜೆ ಗ್ರಾಪಂ ಅಧ್ಯಕ್ಷರಾದ ಗಣೇಶ ಶೆಟ್ಟಿ, ಸದಸ್ಯರಾದ ಲೋಕೇಶ್ ಹಾಗೂ ಒತ್ತುವರಿದಾರರು ತೆರೆವು ಕಾರ್ಯಕ್ಕೆ ಅಡ್ಡಿ ಮಾಡಿರುತ್ತಾರೆ ಈ ಕಾರಣದಿಂದ ತೆರವು ಕಾರ್ಯವನ್ನು ಸ್ಥಗತಗೊಳಿಸಲಾಗಿತ್ತು. ಹಾಗೂ ಒತ್ತುವರಿ ತೆರೆವು ಕಾರ್ಯಕ್ಕೆ ಅಡ್ಡಿಪಡಿಸಿದ ಬಗ್ಗೆ ಪೋಲೀಸ್ ಠಾಣೆಗೆ ದೂರನ್ನು ಸಲ್ಲಿಸಲಾಗಿತ್ತು. ಕರ್ನಾಟಕ ಭೂ ಕಬಳಿಕೆ ವಿಶೇಷ ನ್ಯಾಯಾಲಯದ ಆದೇಶದಂತೆ ಹಾಗೂ ಲೋಕಾಯುಕ್ತ ಪ್ರಕರಣದಲ್ಲಿ ನೀಡಿದ ನಿರ್ದೇಶನದಂತೆ ಸರ್ಕಾರಿ ಜಮೀನಿನಲ್ಲಿ ನಿರ್ಮಾಣ ಹಂತದ ಕಟ್ಟಡ ಹಾಗೂ ವಾಸವಿಲ್ಲದ 5 ಶೆಡ್ ಗಳನ್ನು ಇಂದು (12-01-2026ರಂದು) ಬೆಳಿಗ್ಗೆ ಒತ್ತುವರಿಯನ್ನು ತೆರವುಗೊಳಿಸಲಾಗಿದೆ ಎಂದು ತಹಶೀಲ್ದಾರ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.        

ವಾರ್ತಾ ಭಾರತಿ 12 Jan 2026 10:04 pm