ಮಿಝೋರಾಂ ಫಲಿತಾಂಶ: ಸೋಲು ಕಂಡ ಮುಖ್ಯಮಂತ್ರಿ ಝೊರಾಂಥಾಂಗ, ಬಹುಮತ ಗೆದ್ದ ZPM
ಮಿಝೋರಾಂ: ಮಿಝೋರಾಂನಲ್ಲಿ ZPM ಪಕ್ಷ ನೂತನ ಸರ್ಕಾರವನ್ನು ರಚಿಸಲು ಸಿದ್ಧವಾಗಿದೆ. ZPM ಪಕ್ಷವು 40 ಸ್ಥಾನಗಳಲ್ಲಿ 22 ಸ್ಥಾನಗಳನ್ನು ಗೆದ್ದಿದೆ ಎಂದು ಭಾರತೀಯ ಚುನಾವಣಾ ಆಯೋಗವು ತಿಳಿಸಿದೆ. ಇನ್ನೂ ಐದು ಸ್ಥಾನಗಳಲ್ಲಿ ZPM ಮುನ್ನಡೆಯನ್ನು ಸಾಧಿಸಿದೆ. ಅಲ್ಲದೆ, ಪೂರ್ವ ಐಜ್ವಾಲ್ ನಲ್ಲಿ ಪ್ರತಿಸ್ಪರ್ಧಿ ZPM ಅಭ್ಯರ್ಥಿ ಎದುರು ಮಿಝೋರಾಂ ಮುಖ್ಯಮಂತ್ರಿ ಸೋತಿದ್ದು, ZPM ಗೆ ಭಾರೀ ಮೈಲಿಗಲ್ಲನ್ನು ಸೃಷ್ಟಿಸಿದೆ. ಮುಖ್ಯಮಂತ್ರಿ ಝೊರಾಂಥಾಂಗ ವಿರುದ್ಧ ZPM ಅಭ್ಯರ್ಥಿ ಲಾಲತನಸಂಗ 2,101 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ZPM ನ ಮುಖ್ಯಮಂತ್ರಿ ಅಭ್ಯರ್ಥಿ ಲಾಲ್ದುಹೋಮ ಅವರು ಸರ್ಚಿಪ್ನಲ್ಲಿ MNF ಅಭ್ಯರ್ಥಿಯನ್ನು 2,982 ಮತಗಳ ಅಂತರದಿಂದ ಸೋಲಿಸಿದ್ದಾರೆ. ಆಡಳಿತಾರೂಢ ಎಂಎನ್ಎಫ್ ಏಳು ಸ್ಥಾನಗಳನ್ನು ಗೆದ್ದಿದ್ದು, ಪ್ರಸ್ತುತ ಐದು ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಬಿಜೆಪಿ ಎರಡು ಗೆಲುವು ಸಾಧಿಸಿದ್ದು, ಕಾಂಗ್ರೆಸ್ ಒಂದು ಸ್ಥಾನದಲ್ಲಿ ಮುನ್ನಡೆ ಸಾಧಿಸಿದೆ.
ಬೆಳಗಾವಿ ಅಧಿವೇಶನ: ಕಲಾಪಕ್ಕೆ ತಡವಾಗಿ ಆಗಮಿಸಿದ ವಿಪಕ್ಷ ನಾಯಕ ಆರ್.ಅಶೋಕ್
ಬೆಳಗಾವಿ: ಇಲ್ಲಿನ ಸುವರ್ಣ ವಿಧಾನ ಸೌಧದಲ್ಲಿ ಇಂದಿನಿಂದ ಎರಡು ವಾರಗಳ ನಡೆಯಲಿರುವ ಚಳಿಗಾಲದ ಅಧಿವೇಶನ ಇಂದು ಆರಂಭಗೊಂಡಿದ್ದು, ಮೊದಲನೇ ದಿನವೇ ವಿಪಕ್ಷ ನಾಯಕ ಆರ್.ಅಶೋಕ್ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಿಧಾನಸಭೆ ಕಲಾಪಕ್ಕೆ ತಡವಾಗಿ ಆಗಮಿಸಿದರು. ವಂದೇ ಮಾತರಂ ಗೀತೆ ಆರಂಭವಾದ ಬಳಿಕ ವಿಧಾನ ಸಭೆ ಪ್ರವೇಶಿಸಿದ ವಿಪಕ್ಷ ನಾಯಕ ಆರ್.ಅಶೋಕ್, ಜತೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ತಡವಾಗಿ ಆಗಮಿಸಿದರು. ಶಿಷ್ಟಾಚಾರ ಪ್ರಕಾರ ವಿಪಕ್ಷ ನಾಯಕರ ಕುರ್ಚಿ ಬಳಿ ಬರದೆ ಆರ್.ಅಶೋಕ್ ಬಾಗಿಲ ಬಳಿಯೇ ನಿಂತು ಗೌರವ ಸಲ್ಲಿಸಿದರು. ವಿಧಾನ ಮಂಡಲ ಅಧಿವೇಶನ ವಿಳಂಬವಾಗಿ ಆರಂಭ: ಕಲಾಪವು ನಿಗದಿತ ಸಮಯಕ್ಕಿಂತ ವಿಳಂಬವಾಗಿ ಆರಂಭಗೊಂಡಿದೆ ಎಂದು ಸದಸ್ಯರು ಸ್ಪೀಕರ್ ಬಳಿ ಅಸಮಾಧಾನ ವ್ಯಕ್ತಪಡಿಸಿದ ಘಟನೆ ನಡೆಯಿತು.ಅಧಿವೇಶನ ಆರಂಭಗೊಳ್ಳುತ್ತಿದ್ದಂತೆ ಮಾತನಾಡಿದ ಮಾಜಿ ಸಚಿವ ಸುರೇಶ್ ಕುಮಾರ್, ಮೊದಲ ದಿನವೇ ಕಲಾಪ ಒಂದು ಗಂಟೆ ವಿಳಂಬವಾದರೆ ಹೇಗೆ ? ಇದರಿಂದ ರಾಜ್ಯಕ್ಕೆ ನಾವು ಯಾವ ಸಂದೇಶ ಕಳುಹಿಸುತ್ತಾ ಇದ್ದೇವೆ? ಏನೂ ಕಾರಣವಿಲ್ಲದೆ ಇಷ್ಟು ವಿಳಂಬ ಮಾಡುವುದು ಸರಿಯಲ್ಲ ಎಂದು ಆಕ್ಷೇಪಿಸಿದರು.
Belagavi Winter Session: ಬೆಳಗಾವಿ ಅಧಿವೇಶನದಲ್ಲಿ ಈ 18 ಬಿಲ್ ಮಂಡನೆ ಸಾಧ್ಯತೆ
Belagavi Winter Session: ಕಳೆದ ಕೆಲವು ಸಚಿವ ಸಂಪುಟದಲ್ಲಿ ಹಲವು ವಿಧೇಯಕ ಸಂಬಂಧ ಪ್ರಮುಖ ನಿರ್ಣಯಗಳನ್ನು ತೆಗೆದುಕೊಳ್ಳಲಾಗಿದೆ. ಈಗಾಗಲೇ ಅಲ್ಲಿ ಅನುಮೋದನೆಯನ್ನು ಪಡೆದುಕೊಳ್ಳಲಾಗಿದ್ದು, ಈಗ ವಿಧಾನಸಭೆ ಹಾಗೂ ವಿಧಾನ ಪರಿಷತ್ನಲ್ಲಿ ಮಂಡಿಸಿ ಒಪ್ಪಿಗೆ ಪಡೆಯಲು ರಾಜ್ಯ ಸರ್ಕಾರ ನಿರ್ಧರಿಸಿದೆ. The post Belagavi Winter Session: ಬೆಳಗಾವಿ ಅಧಿವೇಶನದಲ್ಲಿ ಈ 18 ಬಿಲ್ ಮಂಡನೆ ಸಾಧ್ಯತೆ first appeared on Vistara News .
ಪ್ರಧಾನಿಯಾಗಲು ಹೋಗಿ ಸಿಎಂ ಸ್ಥಾನವನ್ನೇ ಕಳೆದುಕೊಂಡ ಕೆಸಿಆರ್; ತೃತೀಯ ರಂಗಕ್ಕೆ ಎಳ್ಳುನೀರು?
ತೆಲಂಗಾಣದ ನಿರ್ಗಮಿತ ಸಿಎಂ ಕೆ ಚಂದ್ರಶೇಖರ್ ರಾವ್ ಅವರ ಕನಸಿನ ಓಟಕ್ಕೆ ಕೊನೆಗೂ ತೆರೆ ಬಿದ್ದಿದೆ. ರಾಷ್ಟ್ರ ರಾಜಕಾರಣಕ್ಕೆ ಕಾಲಿಟ್ಟು ಎಚ್ಡಿ ದೇವೇಗೌಡರ ಮಾದರಿಯಲ್ಲಿ ಪ್ರಧಾನಿ ಹುದ್ದೆಯ ಕನಸು ಕಾಣುತ್ತಿದ್ದ ಅವರು ಇದೀಗ ಮುಖ್ಯಮಂತ್ರಿ ಸ್ಥಾನವನ್ನೇ ಕಳೆದುಕೊಂಡಿದ್ದಾರೆ. 'ತಾನೊಂದು ಬಗೆದರೆ ದೈವವೊಂದು ಬಗೆಯಿತು' ಎಂಬಂತೆ ಪ್ರಧಾನಿ ಸ್ಥಾನದ ಕನಸು ಕಾಣುತ್ತಿದ್ದ ಕೆಸಿಆರ್ ಇದೀಗ ರಾಜ್ಯದಲ್ಲೇ ಸೋಲು ಅನುಭವಿಸಿ ಮುಖಭಂಗಕ್ಕೀಡಾಗಿದ್ದಾರೆ.
ತೆಲಂಗಾಣದಲ್ಲಿ ಪತನವಾದ ವಾಯುಪಡೆಯ ವಿಮಾನದಲ್ಲಿದ್ದ ಇಬ್ಬರು ಪೈಲಟ್ಗಳು ಸಾವು
ಹೊಸದಿಲ್ಲಿ: ತೆಲಂಗಾಣದ ಮೇದಕ್ ಜಿಲ್ಲೆಯಲ್ಲಿ ಪತನಗೊಂಡ ತರಬೇತಿ ವಿಮಾನದಲ್ಲಿದ್ದ ಭಾರತೀಯ ವಾಯುಪಡೆಯ ಇಬ್ಬರು ಪೈಲಟ್ಗಳು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಅಪಘಾತದ ಕಾರಣವನ್ನು ತಿಳಿಯಲು ತನಿಖೆಗೆ ಆದೇಶಿಸಲಾಗಿದೆ. ವಿಮಾನವು ಎಂದಿನಂತೆ ತರಬೇತಿಗಾಗಿ ಹೈದರಾಬಾದ್ನಲ್ಲಿರುವ ಏರ್ ಫೋರ್ಸ್ ಅಕಾಡೆಮಿಯಿಂದ (ಎಎಫ್ಎ) ಹೊರಟಿದ್ದಾಗ ಅಪಘಾತ ಸಂಭವಿಸಿದೆ. ವಿಮಾನ ಪತನಗೊಂಡಾಗ ಒಬ್ಬ ತರಬೇತುದಾರ ಮತ್ತು ತರಬೇತಿ ಪೈಲಟ್ ವಿಮಾನದೊಳಗೆ ಇದ್ದರು ಮತ್ತು ಇಬ್ಬರೂ ಸಾವನ್ನಪ್ಪಿದ್ದಾರೆ ಎಂದು ndtv.com ವರದಿ ಮಾಡಿದೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಮೃತ ಪೈಲಟ್ಗಳ ಕುಟುಂಬಗಳಿಗೆ ಸಾಂತ್ವನ ಹೇಳಿದ್ದಾರೆ. ಹೈದರಾಬಾದ್ ಬಳಿ ನಡೆದ ಈ ಅಪಘಾತದಿಂದ ದುಃಖವಾಗಿದೆ. ಇಬ್ಬರು ಪೈಲಟ್ಗಳು ಪ್ರಾಣ ಕಳೆದುಕೊಂಡಿರುವುದು ತುಂಬಾ ದುಃಖಕರವಾಗಿದೆ. ಈ ದುರಂತ ಸಮಯದಲ್ಲಿ, ನನ್ನ ಪ್ರಾರ್ಥನೆಗಳು ದುಃಖಿತ ಕುಟುಂಬಗಳೊಂದಿಗೆ ಇವೆ ಎಂದು ರಾಜನಾಥ್ ಸಿಂಗ್ ಹೇಳಿದ್ದಾರೆ.
ಭಾರತದ ಯುವ ಸ್ಪಿನ್ನರ್ಗಳ ಸಾಮರ್ಥ್ಯ ವಿವರಿಸಿದ ಮುತ್ತಯ್ಯ ಮುರಳೀಧರನ್!
Muttiah Muralitharan lauded on India's spinners: ಆಸ್ಟ್ರೇಲಿಯಾ ವಿರುದ್ಧ ಮುಕ್ತಾಯಗೊಂಡ 5 ಪಂದ್ಯಗಳ ಟಿ20-ಐ ಸರಣಿಯಲ್ಲಿ ಟೀಮ್ ಇಂಡಿಯಾ 4-1 ರಿಂದ ಸರಣಿ ವಶಪಡಿಸಿಕೊಂಡಿದೆ. ಸರಣಿಯಲ್ಲಿ ಅದ್ಭುತ ಬೌಲಿಂಗ್ ಪ್ರದರ್ಶನ ತೋರಿದ ಭಾರತ ತಂಡದ ಯುವ ಸ್ಪಿನ್ನರ್ ಗಳಾದ ಅಕ್ಷರ್ ಪಟೇಲ್ ಹಾಗೂ ರವಿ ಬಿಷ್ಣೋಯ್ ಅವರ ಬೌಲಿಂಗ್ ಪ್ರದರ್ಶನವನ್ನು ಶ್ರೀಲಂಕಾದ ಸ್ಪಿನ್ ದಿಗ್ಗಜ ಮುತ್ತಯ್ಯ ಮುರಳೀಧರನ್ ಮುಕ್ತ ಕಂಠದಿಂದ ಗುಣಗಾಣ ಮಾಡಿದ್ದಾರೆ. ಆಸೀಸ್ ವಿರುದ್ಧದ ಸರಣಿಯಲ್ಲಿ ರವಿ ಬಿಷ್ಣೋಯ್ ಸರಣಿ ಶ್ರೇಷ್ಠ ಗೌರವ ಪಡೆದರು.
ವಿಧಾನ ಮಂಡಲ ಅಧಿವೇಶನ ವಿಳಂಬವಾಗಿ ಆರಂಭ: ಸದಸ್ಯರಿಂದ ಆಕ್ಷೇಪ
ಬೆಳಗಾವಿ, ಡಿ.4: ಇಲ್ಲಿನ ಸುವರ್ಣ ವಿಧಾನ ಸೌಧದಲ್ಲಿ ಇಂದಿನಿಂದ ಎರಡು ವಾರಗಳ ನಡೆಯಲಿರುವ ಚಳಿಗಾಲದ ಅಧಿವೇಶನ ಇಂದು ಆರಂಭಗೊಂಡಿದೆ. ಕಲಾಪವು ನಿಗದಿತ ಸಮಯಕ್ಕಿಂತ ವಿಳಂಬವಾಗಿ ಆರಂಭಗೊಂಡಿದೆ ಎಂದು ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದ ಘಟನೆ ನಡೆಯಿತು. ಅಧಿವೇಶನ ಆರಂಭಗೊಳ್ಳುತ್ತಿದ್ದಂತೆ ಮಾತನಾಡಿದ ಮಾಜಿ ಸಚಿವ ಸುರೇಶ್ ಕುಮಾರ್, ಮೊದಲ ದಿನವೇ ಕಲಾಪ ಒಂದು ಗಂಟೆ ವಿಳಂಬವಾದರೆ ಹೇಗೆ ? ಇದರಿಂದ ರಾಜ್ಯಕ್ಕೆ ನಾವು ಯಾವ ಸಂದೇಶ ಕಳುಹಿಸುತ್ತಾ ಇದ್ದೇವೆ? ಏನೂ ಕಾರಣವಿಲ್ಲದೆ ಇಷ್ಟು ವಿಳಂಬ ಮಾಡುವುದು ಸರಿಯಲ್ಲ ಎಂದು ಆಕ್ಷೇಪಿಸಿದರು. ಇದಕ್ಕೆ ಧ್ವನಿಗೂಡಿಸಿದ ಕಾಂಗ್ರೆಸ್ ಶಾಸಕ ಬಸವರಾಜ ರಾಯರೆಡ್ಡಿ, ಸದನ ವಿಳಂಬವಾಗುವುದು ಬೇಡ, ಸರಿಯಾದ ಸಮಯಕ್ಕೆ ಶುರುವಾಗಲಿ ಮನವಿ ಮಾಡಿದರು. ಬೆಳಗಾವಿಯಲ್ಲಿ ಅಧಿವೇಶನ ಯಾವಾಗಲೂ ಸರಿಯಾಗಿ ನಡೆಯುವುದಿಲ್ಲ ಎಂದು ಪತ್ರಿಕೆಗಳಲ್ಲಿ ಬರುತ್ತವೆ, ಜನರೂ ಮಾತನಾಡಿಕೊಳ್ಳುತ್ತಾರೆ. ಇದರಿಂದ ಉತ್ತರ ಕರ್ನಾಟಕಕ್ಕೆ ಕೆಟ್ಟ ಹೆಸರು ಬರುತ್ತದೆ. ಆದ್ದರಿಂದ ನಿಗದಿತ ಸಮಯಕ್ಕೆ ಕಲಾಪ ಆರಂಭಿಸುವ ಅಧಿಕಾರ ಇದೆ. ಯಾರು ಬರಲಿ ಬರದಿರಲಿ, ನೀವು ಸರಿಯಾದ ಸಮಯಕ್ಕೆ ಕಲಾಪ ಆರಂಭಿಸಿ ಎಂದು ಸ್ಪೀಕರ್ ರಲ್ಲಿ ರಾಯರೆಡ್ಡಿ ಮನವಿ ಮಾಡಿದರು.
Belagavi Winter Session: ಚಳಿಗಾಲದ ಅಧಿವೇಶನಕ್ಕೆ ಶಾಸಕರ ಕೊರತೆ; ತೆಲಂಗಾಣದಲ್ಲಿ ಡಿಕೆಶಿ, ಜಮೀರ್!
Belagavi Winter Session : ಮೊದಲ ದಿನದ ಅಧಿವೇಶನಕ್ಕೆ ಹಲವಾರು ಸಚಿವರು ಹಾಗೂ ಶಾಸಕರು ಗೈರಾಗಿದ್ದಾರೆ. ಇದರಿಂದ ಸದನ ನಡೆಸುವುದು ಹೇಗೆ ಎಂದು ಸಭಾಪತಿ ಬಸವರಾಜ ಹೊರಟ್ಟಿ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. The post Belagavi Winter Session: ಚಳಿಗಾಲದ ಅಧಿವೇಶನಕ್ಕೆ ಶಾಸಕರ ಕೊರತೆ; ತೆಲಂಗಾಣದಲ್ಲಿ ಡಿಕೆಶಿ, ಜಮೀರ್! first appeared on Vistara News .
ತೆಲಂಗಾಣದಲ್ಲಿ ಐಎಎಫ್ನ ತರಬೇತಿ ವಿಮಾನ ಅಪಘಾತ: ಇಬ್ಬರು ಪೈಲಟ್ಗಳ ದುರ್ಮರಣ
IAF Aircraft Crash in Telangana: ಭಾರತೀಯ ವಾಯು ಪಡೆಯ ಹೊಸ ಪೈಲಟ್ಗಳಿಗೆ ಪ್ರಾಥಮಿಕ ತರಬೇತಿ ನೀಡುವ ಪೈಲಾಟಸ್ ಯುದ್ಧ ವಿಮಾನವು ಸೋಮವಾರ ಬೆಳಿಗ್ಗೆ ತೆಲಂಗಾಣದ ಮೇದಕ್ನಲ್ಲಿ ಅಪಘಾಕ್ಕೀಡಾಗಿದೆ. ಇದರ ಪರಿಣಾಮ ವಿಮಾನದಲ್ಲಿದ್ದ ಇಬ್ಬರೂ ಪೈಲಟ್ಗಳು ಮೃತಪಟ್ಟಿದ್ದಾರೆ.
ತೆಲಂಗಾಣದಲ್ಲಿ ಐಎಎಫ್ನ ತರಬೇತಿ ವಿಮಾನ ಅಪಘಾತ: ಇಬ್ಬರು ಪೈಲಟ್ಗಳ ದುರ್ಮರಣ
IAF Aircraft Crash in Telangana: ಭಾರತೀಯ ವಾಯು ಪಡೆಯ ಹೊಸ ಪೈಲಟ್ಗಳಿಗೆ ಪ್ರಾಥಮಿಕ ತರಬೇತಿ ನೀಡುವ ಪೈಲಾಟಸ್ ಯುದ್ಧ ವಿಮಾನವು ಸೋಮವಾರ ಬೆಳಿಗ್ಗೆ ತೆಲಂಗಾಣದ ಮೇದಕ್ನಲ್ಲಿ ಅಪಘಾಕ್ಕೀಡಾಗಿದೆ. ಇದರ ಪರಿಣಾಮ ವಿಮಾನದಲ್ಲಿದ್ದ ಇಬ್ಬರೂ ಪೈಲಟ್ಗಳು ಮೃತಪಟ್ಟಿದ್ದಾರೆ.
Viral News : ಚಾಲಕರ ನಡುವೆ ಕಿರಿಕ್; ಇನೋವಾ ಕಾರನ್ನೇ ಇನ್ನೊಬ್ಬನ ಮೇಲೆ ಹರಿಸಲು ಯತ್ನಿಸಿದ ಡ್ರೈವರ್
Viral News : ಬೆಂಗಳೂರಿನ ಹೆಬ್ಬಾಳ ಫ್ಲೈ ಓವರ್ನಲ್ಲಿ ಕಾರು ಚಾಲಕನೊಬ್ಬ ಇನ್ನೊಬ್ಬ ಚಾಲಕನ ಮೇಲೆಯೇ ಕಾರು ಹಾಯಿಸಲು ಯತ್ನಿಸಿದ ಘಟನೆ ನಡೆದಿದೆ. The post Viral News : ಚಾಲಕರ ನಡುವೆ ಕಿರಿಕ್; ಇನೋವಾ ಕಾರನ್ನೇ ಇನ್ನೊಬ್ಬನ ಮೇಲೆ ಹರಿಸಲು ಯತ್ನಿಸಿದ ಡ್ರೈವರ್ first appeared on Vistara News .
ಮಂಗಳೂರು, ಡಿ.4: ಚಿಕ್ಕಮಗಳೂರಿನಲ್ಲಿ ವಕೀಲ ಪ್ರೀತಂ ಎಂಬವರ ಮೇಲೆ ನಡೆದಿರುವ ಪೊಲೀಸ್ ದೌರ್ಜನ್ಯ ಖಂಡಿಸಿ ಸೋಮವಾರ ಮಂಗಳೂರಿನಲ್ಲಿ ವಕೀಲರ ಸಂಘದ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು. ನ್ಯಾಯಾಲಯದ ಆವರಣದಲ್ಲಿ ಪ್ರತಿಭಟನೆ ನಡೆಸಿದ ವಕೀಲರು ದೌರ್ಜನ್ಯ ನಡೆಸಿದ ಪೊಲೀಸರ ಮೇಲೆ ಕ್ರಮ ಕೈಗೊಳ್ಳಬೇಕು. ಇಲಾಖಾ ತನಿಖೆಯಾಗಬೇಕು ಎಂದು ಆಗ್ರಹಿಸಿದರು. ವಕೀಲರ ಸಂಘದ ಅಧ್ಯಕ್ಷ ಪೃಥ್ವಿರಾಜ್ ರೈ, ಉಪಾಧ್ಯಕ್ಷ ಮನೋರಾಜ್ ರಾಜೀವ್, ಕಾರ್ಯದರ್ಶಿ ಶ್ರೀಧರ ಎಣ್ಮಕಜೆ ಈ ಸಂದರ್ಭದಲ್ಲಿ ಮಾತನಾಡಿದರು. ಹಿರಿಯ ವಕೀಲರಾದ ಶಂಭು ಶರ್ಮ, ನರಸಿಂಹ ಹೆಗ್ಡೆ, ಟಿ.ನಾರಾಯಣ ಪೂಜಾರಿ, ಎಂ.ಆರ್.ಬಳ್ಳಾಲ್, ಸುಬ್ಬಯ ರೈ ಮತ್ತಿತರರು ಪಾಲ್ಗೊಂಡಿದ್ದರು.
ನಾಯಂಡಹಳ್ಳಿ ರಸ್ತೆಯಲ್ಲಿ ಕಾರು-ಬಸ್ಸಿನ ನಡುವೆ ಅಪಘಾತ: ಹೊತ್ತಿ ಉರಿದ ಕಾರು, ಬಿಎಂಟಿಸಿ ಬಸ್ ಹಿಂಬದಿ ಭಸ್ಮ
ಕಾರು ಹಾಗೂ ಬಸ್ ನಡುವೆ ಅಪಘಾತ ಸಂಭವಿಸಿ, ಬೆಳ್ಳಂಬೆಳಗ್ಗೆ ಸಿಲಿಕಾನ್ ಸಿಟಿಯಲ್ಲಿ ಕಾರು ಹಾಗೂ ಬಿಎಂಟಿಸಿ ಬಸ್ ಹಿಂಬದಿ ಹೊತ್ತಿ ಉರಿದ ಘಟನೆ ನಡೆದಿದೆ.
ʼದಿ ನ್ಯೂಸ್ ಮಿನಿಟ್ʼ ಮುಖ್ಯ ಸಂಪಾದಕಿ ಧನ್ಯಾ ರಾಜೇಂದ್ರನ್ಗೆ ಪ್ರತಿಷ್ಠಿತ ʼರೆಡ್ಇಂಕ್ʼ ಪ್ರಶಸ್ತಿ
ಹೊಸದಿಲ್ಲಿ: ದಿ ನ್ಯೂಸ್ ಮಿನಿಟ್ ಆನ್ಲೈನ್ ಸುದ್ದಿ ತಾಣದ ಸಹ-ಸ್ಥಾಪಕಿ ಮತ್ತು ಮುಖ್ಯ ಸಂಪಾದಕಿ ಧನ್ಯಾ ರಾಜೇಂದ್ರನ್ ಅವರಿಗೆ ಮುಂಬೈ ಪ್ರೆಸ್ ಕ್ಲಬ್ “ಜರ್ನಿಲಿಸ್ಟ್ ಆಫ್ ದಿ ಇಯರ್” ಎಂದು ಘೋಷಿಸಿ ತನ್ನ 2022 ನ್ಯಾಷನಲ್ ರೆಡ್ಇಂಕ್ ಅವಾರ್ಡ್ಗೆ ಆಯ್ಕೆಮಾಡಿದೆ. 2023 ವಿಧಾನಸಭಾ ಚುನಾವಣೆಗೆ ಮುನ್ನ ಕರ್ನಾಟಕದಲ್ಲಿ ಮತದಾರ ಡೇಟಾವನ್ನು ತಿರುಚಿದ ಪ್ರಕರಣವನ್ನು ಬಹಿರಂಗಗೊಳಿಸಿದ ತನ್ನ ತಂಡದ ನೇತೃತ್ವ ವಹಿಸಿದ್ದಕ್ಕಾಗಿ ಅವರನ್ನು ಈ ಪ್ರಶಸ್ತಿಗೆ ಆಯ್ಕೆಮಾಡಲಾಗಿದೆ. ಧನ್ಯಾ ಅವರ ಜೊತೆಗೆ ಸ್ವತಂತ್ರ ಪತ್ರಕರ್ತ ಶರದ್ ವ್ಯಾಸ್ ಅವರನ್ನೂ ʼಜರ್ನಲಿಸ್ಟ್ ಆಫ್ ದಿ ಇಯರ್ʼಪ್ರಶಸ್ತಿಗೆ ಆಯ್ಕೆಮಾಡಲಾಗಿದೆ. ಧನ್ಯಾ ಮತ್ತು ಅವರ ತಂಡದ ತನಿಖಾ ವರದಿಯ ಆಧಾರದಲ್ಲಿ ಚುನಾವಣಾ ಆಯೋಗವು ಬೆಂಗಳೂರಿನ ಮೂರು ಕ್ಷೇತ್ರಗಳಲ್ಲಿ ಮತದಾರರ ಪಟ್ಟಿಯ ಮರುಪರಿಶೀಲನೆಗೆ ಸೂಚಿಸಿತ್ತು. ಈ ವರದಿಯ ಪರಿಣಾಮವಾಗಿ ಮತದಾರರ ಡೇಟಾ ವಂಚನೆ ಹಿಂದಿದ್ದ ಚಿಲುಮೆ ಎನ್ಜಿಒ ಇದರ ನಿರ್ದೇಶಕ ಕೃಷ್ಣಪ್ಪ ರವಿಕುಮಾರ್ ಅವರ ಬಂಧನವೂ ಆಗಿತ್ತು. ಕಳೆದೆರಡು ದಶಕಗಳಿಂದ ಪತ್ರಿಕೋದ್ಯಮ ಕ್ಷೇತ್ರದಲ್ಲಿರುವ ಧನ್ಯಾ 2014ರಲ್ಲಿ ʼದಿ ನ್ಯೂಸ್ ಮಿನಿಟ್ʼ ಅನ್ನು ಸಹ-ಸ್ಥಾಪಿಸಿದ್ದರು ಹಾಗೂ ಈ ಮೂಲಕ ದಕ್ಷಿಣ ಭಾರತದ ಸುದ್ದಿಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಿದ್ದರು. “ಜರ್ನಲಿಸ್ಟ್ ಆಫ್ ದಿ ಇಯರ್” ಪ್ರಶಸ್ತಿ ಪಡೆದ ಶರದ್ ವ್ಯಾಸ್ ಅವರು ಭಾರತ ಸರ್ಕಾರದ ಗುಪ್ತಚರ ಬ್ಯುರೋ ಇಸ್ರೇಲಿ ಕಂಪೆನಿ ಪೆಗಾಸಸ್ನಿಂದ ಸ್ಪೈ ಸಾಫ್ಟ್ವೇರ್ ಹೇಗೆ ಪಡೆದುಕೊಂಡಿತ್ತು ಎಂಬ ಕುರಿತು ವರದಿ ಪ್ರಕಟಿಸಿದ್ದರು. ಹಿರಿಯ ಪತ್ರಕರ್ತೆ, ಅಂಕಣಗಾರ್ತಿ ಮತ್ತು ಲೇಖಕಿ ನೀರಜಾ ಚೌಧುರಿ ಅವರಿಗೆ ರೆಡ್ ಇಂಕ್ ಜೀವಮಾನ ಸಾಧನೆ ಪ್ರಶಸ್ತಿ ನೀಡಲಾಗಿದೆ.
BBK SEASON 10: ʻಎಲ್ಲೇ ಹೋದ್ರೂ ಗುಂಡಿ ತೋಡೇ ಬರೋದು; ಸಂಗೀತಾಳ ಅನುಕರಣೆ ಮಾಡಿದ ತುಕಾಲಿ!
BBK SEASON 10: ಬೇರೊಬ್ಬರ ರೀತಿ ಮಾತನಾಡುವುದು ಅಥವಾ ನಾಯಿ ಅಳುವ ರೀತಿ ಅಳುವುದು, ಮಿಮಿಕ್ರಿ ಮಾಡುವ ಟಾಸ್ಕ್ಗಳನ್ನು ಬಿಗ್ ಬಾಸ್ ನೀಡಿದ್ದರು. ಇದೀಗ ಈ ಪ್ರೋಮೊ ವೈರಲ್ ಆಗುತ್ತಿದ್ದು ತಮಾಷೆ ಹೋಗಿ ಅಮಾಸೆ ಆಗುತ್ತಾ ಟಾಸ್ಕ್? ಎನ್ನುತ್ತಿದ್ದಾರೆ ನೆಟ್ಟಿಗರು. The post BBK SEASON 10: ʻಎಲ್ಲೇ ಹೋದ್ರೂ ಗುಂಡಿ ತೋಡೇ ಬರೋದು; ಸಂಗೀತಾಳ ಅನುಕರಣೆ ಮಾಡಿದ ತುಕಾಲಿ! first appeared on Vistara News .
ಹಾವೇರಿಯಲ್ಲಿ ಹೆಚ್ಚಾಗುತ್ತಿರುವ `ಆಲೆಮನೆ'; ರೈತರಿಗೆ ಅಧಿಕ ಲಾಭ ತರುತ್ತಿದೆಯೇ ಬೆಲ್ಲ ಉತ್ಪಾದನೆ?
ಪ್ರತಿವರ್ಷವೂ ಕಬ್ಬು ಬೆಳೆಗಾರರ ನೋವನ್ನು ಕೇಳುವವರಿಲ್ಲ. ದರ ಅಧಿಕವಿದ್ದಾಗ ಇಳುವರಿ ಕಡಿಮೆ, ಇಳುವರಿ ಅಧಿಕವಿದ್ದಾಗ ದರ ಕಡಿಮೆ. ಹಾಗೂ ಹೀಗಿ ಕಾರ್ಖಾನೆಗೆ ಕಬ್ಬು ಸಾಗಹಾಕಿದರೆ ಅದರ ಹಣ ಯಾವತ್ತು ಸಿಗುತ್ತದೆ ಎಂಬ ಬಗ್ಗೆ ಯಾವುದೇ ಖಾತ್ರಿ ಇರುವುದಿಲ್ಲ. ಹೀಗೆ ತಾಪತ್ರಯ ಒಂದೋ ಎರಡೋ.....! ಇದ್ಯಾವುದರ ತಾಪತ್ರಯವೇ ಬೇಡ ಎಂದು ಹಾವೇರಿಯ ರೈತರ ತಂಡವೊಂದು ಜಿಲ್ಲೆಯ ಹಾನಗಲ್ ತಾಲೂಕಿನ ವಿವಿಧೆಡೆ ಆಲೆಮನೆಗಳನ್ನು ನಿರ್ಮಿಸಿದೆ. ಇದರಿಂದ ರೈತರಿಗೇನು ಲಾಭ? ಇಲ್ಲಿದೆ ನೋಡಿ ವಿವರ.....
Jio: 100 ರೂ. ಒಳಗೆ ಮೊಬೈಲ್ ರಿಚಾರ್ಜ್ ಪ್ಲ್ಯಾನ್, ಇಲ್ಲಿದೆ ಜಿಯೋ ಕಂಪೆನಿಯ ಬೆಸ್ಟ್ ಆಫರ್
ಜಿಯೋ (Jio) ಕಂಪೆನಿ ಕೂಡ ವಿವಿಧ ರಿಚಾರ್ಜ್ ಸೌಲಭ್ಯ ಪರಿಚಯಿಸಿದ್ದು ಇದೀಗ ನೂರು ರೂಪಾಯಿಗಿಂತ ಕಡಿಮೆ ಬೆಲೆಯ ರಿಚಾರ್ಜ್ ಸೌಲಭ್ಯವೊಂದು ಜನರಿಗೆ ತುಂಬಾ ಕನೆಕ್ಟ್ ಆಗುತ್ತಿದೆ. ಜಿಯೋ ಕಂಪೆನಿಯ ಅಗ್ಗದ ದರ ಎಂದು ಕರೆಯಲ್ಪಡುವ ಈ ಪ್ಲ್ಯಾನ್ ನಲ್ಲಿ ನೀವು 75 ರೂಪಾಯಿ ರೀಚಾರ್ಜ್ ಮಾಡಬಹುದು. The post Jio: 100 ರೂ. ಒಳಗೆ ಮೊಬೈಲ್ ರಿಚಾರ್ಜ್ ಪ್ಲ್ಯಾನ್, ಇಲ್ಲಿದೆ ಜಿಯೋ ಕಂಪೆನಿಯ ಬೆಸ್ಟ್ ಆಫರ್ appeared first on Karnataka Times .
Murder Case : ಸರಿಯಾಗಿ ನೋಡಿಕೊಳ್ತಿಲ್ಲ ಎಂದು ಪತ್ನಿಯನ್ನೇ ಕೊಂದ ಮಧುಮೇಹ ರೋಗಿ!
Murder Case : ಬಳ್ಳಾರಿಯ ಸಿರುಗುಪ್ಪದಲ್ಲಿ ವ್ಯಕ್ತಿಯೊಬ್ಬ ತನ್ನ ಪತ್ನಿಯನ್ನು ಕೊಲೆ ಮಾಡಿದ್ದಾನೆ. ಮಧು ಮೇಹ ರೋಗಿಯಾಗಿರುವ ತನ್ನನ್ನು ಆಕೆ ಸರಿಯಾಗಿ ನೋಡಿಕೊಳ್ಳುತ್ತಿಲ್ಲ ಎನ್ನುವುದು ಅವನ ಸಿಟ್ಟು. The post Murder Case : ಸರಿಯಾಗಿ ನೋಡಿಕೊಳ್ತಿಲ್ಲ ಎಂದು ಪತ್ನಿಯನ್ನೇ ಕೊಂದ ಮಧುಮೇಹ ರೋಗಿ! first appeared on Vistara News .
ಕೊಡಗಿನ ‘ಲಿಚ್ಚಿ’ಗೆ ಹೆಚ್ಚಿದ ಬೇಡಿಕೆ
ಮಡಿಕೇರಿ: ಕೊಡಗಿನ ಲಿಚ್ಚಿ ಹಣ್ಣಿಗೆ ಬೆಂಗಳೂರು, ಕೇರಳ ಹಾಗೂ ತಮಿಳುನಾಡಿನಲ್ಲಿ ಭಾರೀ ಬೇಡಿಕೆ ಸೃಷ್ಟಿಯಾಗಿದೆ. ಪ್ರತೀ ಕೆ.ಜಿ.ಗೆ 250 ರಿಂದ 300 ರೂ.ವರೆಗೆ ಮಾರಾಟ ವಾಗುತ್ತಿವೆ. ಜಿಲ್ಲೆಯ ಕುಶಾಲನಗರ ತಾಲೂಕಿನ ಚೆಟ್ಟಳ್ಳಿ ಕೇಂದ್ರೀಯ ತೋಟಗಾರಿಕೆ ಇಲಾಖೆಯಲ್ಲಿ ಕಳೆದ 20 ವರ್ಷಗಳಿಂದ ಲಿಚ್ಚಿ ಹಣ್ಣು ಬೆಳೆಯಲಾಗುತ್ತಿದೆ. 50 ಕ್ಕೂ ಹೆಚ್ಚು ಮರಗಳಲ್ಲಿ ಲಿಚ್ಚಿ ಹಣ್ಣು ಬೆಳೆದಿದ್ದು ಉತ್ತಮ ಫಸಲು ಕೂಡ ನೀಡುತ್ತಿವೆ. ► ಕೊಡಗಿನ ಲಿಚ್ಚಿಗೆ ಭಾರೀ ಬೇಡಿಕೆ: ಲಿಚ್ಚಿ ಹಣ್ಣಿನ ಮೂಲ ದಕ್ಷಿಣ ಚೀನಾದ ಓಮನ್ ಪ್ರಾಂತ್ಯವಾಗಿದೆ. ಮ್ಯಾನ್ಮಾರ್, ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ,ಥಾಯ್ಲೆಂಡ್ ಹಾಗೂ ಹಾಂಕಾಂಗ್ ದೇಶಗಳಲ್ಲಿ ಲಿಚ್ಚಿ ಹಣ್ಣನ್ನು ಅಲ್ಲಿನ ವಾತಾವರಣಕ್ಕೆ ತಕ್ಕಂತೆ ಬೆಳೆಯಲಾಗುತ್ತಿದೆ. ಉತ್ತರ ಭಾರತದ ರಾಜ್ಯಗಳಾದ ಬಿಹಾರ, ಉತ್ತರಪ್ರದೇಶ, ಜಾರ್ಖಂಡ್, ಪಂಜಾಬ್, ಪಶ್ಚಿಮ ಬಂಗಾಳ,ಅಸ್ಸಾಂ,ತ್ರಿಪುರ ಹಾಗೂ ಒಡಿಶಾದಲ್ಲಿ ಶೇ. 50ಕ್ಕೂ ಹೆಚ್ಚು ಭಾಗದಲ್ಲಿ ಲಿಚ್ಚಿ ಹಣ್ಣು ಬೆಳೆಯಲಾಗುತ್ತಿದೆ. ವಿಶೇಷವೇನೆಂದರೆ ಉತ್ತರ ಭಾರತದ ರಾಜ್ಯದಲ್ಲಿ ಅಲ್ಲಿನ ವಾತಾವರಣಕ್ಕೆ ಅನುಗುಣವಾಗಿ, ಎಪ್ರಿಲ್ ಅಥವಾ ಮೇ ತಿಂಗಳಲ್ಲಿ ಲಿಚ್ಚಿ ಕೊಯ್ಲಿಗೆ ಬರುತ್ತದೆ. ಆ ಸಮಯದಲ್ಲಿ ಲಿಚ್ಚಿಗೆ ಬೇಡಿಕೆ ಕಡಿಮೆಯಿರುವುದರಿಂದ ಕೆಜಿಗೆ ಬರೀ 60 ರೂ.ಗೆ ಮಾರಾಟವಾಗುತ್ತದೆ. ಆದರೆ ಕೊಡಗು ಜಿಲ್ಲೆಯಲ್ಲಿ ನವೆಂಬರ್ ಹಾಗೂ ಡಿಸೆಂಬರ್ ತಿಂಗಳಲ್ಲಿ ಲಿಚ್ಚಿ ಕೊಯ್ಲಿಗೆ ಬರುತ್ತದೆ. ಈ ಸಮಯದಲ್ಲಿ ದೇಶದ ಯಾವ ಭಾಗದಲ್ಲಿಯೂ ಲಿಚ್ಚಿ ಫಸಲು ಇರುವುದಿಲ್ಲ. ಆದ್ದರಿಂದ ಕೊಡಗಿನ ಲಿಚ್ಚಿ ಬೆಳೆಯುವವರು ಹಾಗೂ ವ್ಯಾಪಾರಿಗಳು ಉತ್ತಮ ಲಾಭಗಳಿಸುತ್ತಿದ್ದಾರೆ ಎನ್ನಲಾಗುತ್ತಿದೆ. ಜಿಲ್ಲೆಯಲ್ಲಿ ಅತೀ ಹೆಚ್ಚು ಲಿಚ್ಚಿ ಬೆಳೆಯುತ್ತಿರುವುದು, ಚೆಟ್ಟಳ್ಳಿಯ ಕೇಂದ್ರೀಯ ತೋಟಗಾರಿಕಾ ಇಲಾಖೆಯಾಗಿದೆ. ಬೆಂಗಳೂರು ಹಾಗೂ ಕೊಡಗಿನ ವಿವಿಧ ಕಡೆಗಳಲ್ಲಿ ಲಿಚ್ಚಿ ಹಣ್ಣು ಕೆಜಿಗೆ 350ರೂ.ಗೆ ಮಾರಾಟವಾಗುತ್ತಿದೆ. ► ಬಾವಲಿ ಕಾಟ,ರಾತ್ರಿ ಕಾವಲು: ಚೆಟ್ಟಳ್ಳಿಯ ಕೇಂದ್ರೀಯ ತೋಟಗಾರಿಕಾ ಇಲಾಖೆಯ ಲಿಚ್ಚಿಹಣ್ಣನ್ನು ಟೆಂಡರ್ ಪಡೆದಿರುವ ಲಿಚ್ಚಿ ಹಣ್ಣಿನ ವ್ಯಾಪಾರಿಗಳು, ಲಿಚ್ಚಿ ಉಳಿಸಲು ಹರಸಾಹಸ ಪಡುವಂತಾಗಿದೆ. ಲಿಚ್ಚಿಗೆ ಬಾವಲಿ ಕಾಟ ತಪ್ಪಿದ್ದಲ್ಲ. ಬಾವಲಿ ಕಾಟ ತಪ್ಪಿಸಲು ವ್ಯಾಪಾರಿಗಳು ಲಿಚ್ಚಿ ಮರಕ್ಕೆ ಬಲೆ ಹಾಕಿ ಹಣ್ಣನ್ನು ಬಾವಲಿಯಿಂದ ಸಂರಕ್ಷಿಸುತ್ತಿದ್ದಾರೆ. ► ಉತ್ತಮ ವಾತಾವರಣ: ಸಮಶೀತೋಷ್ಣ ವಲಯದಲ್ಲಿ ಉತ್ತಮ ಫಲ ನೀಡುವುದರಿಂದ, ಕೊಡಗಿನ ವಾತಾವರಣವು ಲಿಚ್ಚಿ ಬೆಳೆಗೆ ಪೂರಕವಾಗಿದೆ. ಕಸಿ ಮಾಡಿ ಗಿಡಗಳನ್ನು ಬೆಳೆಸಿದರೆ, ಮೂರ್ನಾಲ್ಕು ವರ್ಷಗಳಲ್ಲಿ ಲಿಚ್ಚಿ ಹಣ್ಣು ಫಸಲಿಗೆ ಬರುತ್ತದೆ. ಕೊಡಗಿನಲ್ಲಿ ಲಿಚ್ಚಿ ಹಣ್ಣಿನ ಫಸಲು ಕೊಯ್ಲಿಗೆ ಬರುವುದು ಚಳಿಗಾಲದಲ್ಲಿ. ಸಾಮಾನ್ಯವಾಗಿ ಜಿಲ್ಲೆಯಲ್ಲಿ ನವೆಂಬರ್ ತಿಂಗಳಿನಿಂದ ಚಳಿಗಾಲ ಪ್ರಾರಂಭವಾಗುತ್ತದೆ. ನವೆಂಬರ್ ಹಾಗೂ ಡಿಸೆಂಬರ್ ತಿಂಗಳಲ್ಲಿ ಜಿಲ್ಲೆಯಲ್ಲಿ ಲಿಚ್ಚಿ ಕೊಯ್ಲಿಗೆ ಬರುತ್ತದೆ. ಲಿಚ್ಚಿ ಹಣ್ಣು ಡಿಸೆಂಬರ್ ತಿಂಗಳ 15ರ ನಂತರ ಪೂರ್ಣ ಪ್ರಮಾಣದಲ್ಲಿ ಹಣ್ಣಾಗುತ್ತದೆ. ಇದೀಗ ಹಣ್ಣಾಗಿರುವ ಲಿಚ್ಚಿಯನ್ನು ಮಾತ್ರ ಕೊಯ್ಲು ಮಾಡಿ ಮಾರಾಟ ಮಾಡುತ್ತಿದ್ದೇವೆ. ಡಿಸೆಂಬರ್ ತಿಂಗಳಲ್ಲಿ ಲಿಚ್ಚಿ ಪೂರ್ಣ ಪ್ರಮಾಣದಲ್ಲಿ ಹಣ್ಣಾಗುತ್ತದೆ. ಇದೀಗ ಕೊಡಗಿನಲ್ಲಿ ಮಾತ್ರ ಮಾರಾಟ ಮಾಡುತ್ತಿದ್ದೇವೆ. ಜಿಲ್ಲೆಗೆ ಭೇಟಿ ನೀಡುವ ಪ್ರವಾಸಿಗರು ಲಿಚ್ಚಿ ಹಣ್ಣು ಖರೀದಿಸಲು ಬರುತ್ತಿದ್ದಾರೆ. ► ಮಜೀದ್ ಪೊನ್ನತ್ಮೊಟ್ಟೆ, ಲಿಚ್ಚಿ ಹಣ್ಣು ವ್ಯಾಪಾರಿ ರಸ್ತೆ ಬದಿ ಹಾಗೂ ಅಂಗಡಿಗಳಲ್ಲಿ ಮಾರಾಟ ಕೇಂದ್ರೀಯ ತೋಟಗಾರಿಕಾ ಇಲಾಖೆಯಿಂದ ಲಿಚ್ಚಿ ಹಣ್ಣು ಟೆಂಡರ್ ಪಡೆದು,ವ್ಯಾಪಾರ ನಡೆಸುತ್ತಿರುವುದರಿಂದ ಜಿಲ್ಲೆಯ ವಿವಿಧ ಭಾಗಗಳ ಹಣ್ಣಿನ ವ್ಯಾಪಾರಿಗಳು ಲಿಚ್ಚಿ ಹಣ್ಣನ್ನು ಖರೀದಿಸಿ,ರಸ್ತೆ ಬದಿಗಳಲ್ಲಿ ಹಾಗೂ ಅಂಗಡಿಗಳಲ್ಲಿ 300 ರಿಂದ 350 ರೂ.ವರೆಗೆ ಪ್ರತಿ ಕೆಜಿಗೆ ಮಾರಾಟ ಮಾಡುತ್ತಿದ್ದಾರೆ. ಕೊಡಗಿಗೆ ವಿವಿಧ ರಾಜ್ಯಗಳಿಂದ ಆಗಮಿಸುತ್ತಿರುವ ಪ್ರವಾಸಿಗರು ಕೊಡಗಿನ ರುಚಿಕರವಾದ ಲಿಚ್ಚಿ ಹಣ್ಣನ್ನು ಖರೀದಿಸುತ್ತಿದ್ದಾರೆ. ಲಾಭದಾಯಕ ಬೆಲೆ, ಆಸಕ್ತಿ ತೋರದ ಜಿಲ್ಲೆಯ ಬೆಳೆಗಾರರು ಲಿಚ್ಚಿ ಲಾಭದಾಯಕ ಬೆಳೆಯಾಗಿದೆ. ಲಿಚ್ಚಿ ಮರವನ್ನು ನೆಟ್ಟು ಸಂರಕ್ಷಿಸಿದರೆ,4 ರಿಂದ 5 ವರ್ಷದೊಳಗೆ ಲಿಚ್ಚಿ ಹಣ್ಣು ಫಸಲು ನೀಡುತ್ತದೆ. ಮೊದಲಿಗೆ ಒಂದು ಮರದಲ್ಲಿ 20 ರಿಂದ 40 ಕೆಜಿ ಹಾಗೂ ಏಳೆಂಟು ವರ್ಷದಲ್ಲಿ ಕೇವಲ ಒಂದೇ ಮರದಲ್ಲಿ 100 ಕೆಜಿಗೂ ಅಧಿಕ ಲಿಚ್ಚಿ ಹಣ್ಣು ಬೆಳೆಯಬಹುದು. ಆದರೆ ಜಿಲ್ಲೆಯ ಬೆಳೆಗಾರರಿಗೆ ಲಿಚ್ಚಿ ಬೆಳೆಯ ಬಗ್ಗೆ ಸರಿಯಾದ ಮಾಹಿತಿ ಇಲ್ಲ. ಹಾಗೂ ಯಾರೂ ಕೂಡ ಇದುವರೆಗೆ ಲಿಚ್ಚಿ ಬೆಳೆಯತ್ತ ಪೂರ್ಣಪ್ರಮಾಣದಲ್ಲಿ ತೊಡಗಿಸಿಕೊಂಡಿಲ್ಲ. ಕಾಫಿ,ಕರಿಮೆಣಸಿನ ಬೆಲೆ ಕುಸಿತ ನಿರ್ವಹಣೆ ಸಮಸ್ಯೆಯಿಂದ ತೊಂದರೆಗೀಡಾಗಿರುವ ಜಿಲ್ಲೆಯ ಬೆಳೆಗಾರರು ಲಾಭದಾಯಕ ಬೆಳೆಯಾದ ಲಿಚ್ಚಿ ಬೆಳೆಯತ್ತ ಮುಖಮಾಡಿದರೆ,ಖಂಡಿತ ಲಾಭಗಳಿಸಬಹುದಾಗಿದೆ. ► ಟೆಂಡರ್ಗಾಗಿ ಬಿಗ್ ಫೈಟ್: ನವೆಂಬರ್ ಹಾಗೂ ಡಿಸೆಂಬರ್ ತಿಂಗಳಲ್ಲಿ ಭಾರತ ದೇಶದಲ್ಲಿ ಲಿಚ್ಚಿ ಹಣ್ಣು ಲಭ್ಯವಾಗುವ ಏಕೈಕ ಜಿಲ್ಲೆ ಕೊಡಗು ಮಾತ್ರ. ಜಿಲ್ಲೆಯಲ್ಲಿ ಅತೀ ಹೆಚ್ಚು ಲಿಚ್ಚಿ ಬೆಳೆಯುವ ಸ್ಥಳ ಚೆಟ್ಟಳ್ಳಿಯ ಕೇಂದ್ರೀಯ ತೋಟಗಾರಿಕಾ ಇಲಾಖೆಯಾಗಿದೆ. ಪ್ರತೀ ವರ್ಷ ಅಕ್ಟೋಬರ್ ತಿಂಗಳಲ್ಲಿ ಕೇಂದ್ರೀಯ ತೋಟಗಾರಿಕಾ ಇಲಾಖೆ ಬಹಿರಂಗವಾಗಿ ಟೆಂಡರ್ ಮುಖಾಂತರ ಲಿಚ್ಚಿ ಹಣ್ಣನ್ನು ಮಾರಾಟ ಮಾಡುತ್ತದೆ. ಲಿಚ್ಚಿ ಹಣ್ಣಿನ ಹಾಗೂ ಬೇರೆ ವ್ಯಾಪಾರಿಗಳು ಲಿಚ್ಚಿ ಹಣ್ಣು ಟೆಂಡರ್ ಪಡೆಯಲು ಪೈಪೋಟಿ ನಡೆಸುತ್ತಿದ್ದಾರೆ. ಈ ಬಾರಿ 20ಕ್ಕೂ ಅಧಿಕ ಮಂದಿ ಲಿಚ್ಚಿ ಹಣ್ಣು ಟೆಂಡರ್ ಪಡೆಯಲು ಪೈಪೋಟಿ ನಡೆಸಿದ್ದರು. ಕೊನೆಗೆ ಚೀಟಿ ಮುಖಾಂತರ ಲಿಚ್ಚಿ ಹಣ್ಣು ಟೆಂಡರ್ ಮುಕ್ತಾಯಗೊಂಡಿದ್ದು. ಈ ಬಾರಿ 5 ಲಕ್ಷ ರೂ.ಗೆ ಲಿಚ್ಚಿ ಹಣ್ಣು ಟೆಂಡರ್ ಪಡೆದಿದ್ದಾರೆ ಎನ್ನಲಾಗಿದೆ. ಲಿಚ್ಚಿ ಬೆಳೆ ಲಾಭದಾಯಕವಾಗಿದೆ. ಜಿಲ್ಲೆಯಲ್ಲಿ ಚಳಿಗಾಲದ ವಾತಾವರಣದಲ್ಲಿ ಕೊಯ್ಲಿಗೆ ಬರುವುದರಿಂದ ಕೊಡಗಿನ ಲಿಚ್ಚಿ ಹಣ್ಣಿಗೆ ಉತ್ತಮ ಬೇಡಿಕೆಯಿದೆ. ಕಳೆದ 20 ವರ್ಷಗಳಿಂದ ಕೇಂದ್ರೀಯ ತೋಟಗಾರಿಕೆ ಇಲಾಖೆಯಲ್ಲಿ ಲಿಚ್ಚಿ ಹಣ್ಣು ಬೆಳೆಯಲಾಗುತ್ತಿದೆ. ಲಿಚ್ಚಿ ಹಣ್ಣಿನ ಮರಗಳು ಸರಿಯಾದ ಸಮಯಕ್ಕೆ ಹೂ ಬಿಡುತ್ತಿಲ್ಲ. ಹೂ ಬಿಡಲು ಎಲ್ಲ ಆಧುನಿಕ ತಂತ್ರಜ್ಞಾನಗಳನ್ನು ಬಳಸಲಾಗುತ್ತಿದೆ. ಕೊಡಗಿನಲ್ಲಿ ಲಿಚ್ಚಿ ಹಣ್ಣು ಬೆಳೆಯಲು ಉತ್ತಮ ವಾತಾವರಣವಿದೆ. ► ಮುರಳೀಧರ್, ವಿಜ್ಞಾನಿ ಕೇಂದ್ರೀಯ ತೋಟಗಾರಿಕಾ ಇಲಾಖೆ ಚೆಟ್ಟಳ್ಳಿ.
ವಿಧಾನಸಭೆಯಲ್ಲಿ ಸಾವರ್ಕರ್ ಭಾವಚಿತ್ರ ತೆರವು ಸ್ಪೀಕರ್ ಗೆ ಬಿಟ್ಟಿದ್ದು: ಸಿದ್ದರಾಮಯ್ಯ
ಬೆಳಗಾವಿ ಅಧಿವೇಶನ ಆರಂಭಕ್ಕೂ ಮುನ್ನ ಮಾಧ್ಯಮಗಳ ಜೊತೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಬಿಜೆಪಿ ಅವಧಿಯಲ್ಲಿ ಸುವರ್ಣಸೌಧ ಅಧಿವೇಶನ ಹಾಲ್ನಲ್ಲಿ ಅಳವಡಿಸಿರುವ ಸಾವರ್ಕರ್ ಭಾವಚಿತ್ರ ತೆರವು ಮಾಡುವ ಬಗ್ಗೆ ಯುಟಿ ಖಾದರ್ ಅವರೇ ನಿರ್ಧರಿಸುತ್ತಾರೆ ಎಂದಿದ್ದಾರೆ. ಅಲ್ಲದೆ, ಮೂರು ರಾಜ್ಯಗಳಲ್ಲಿ ಕಾಂಗ್ರೆಸ್ ಸೋತಿದ್ದು, ಜನಾಶೀರ್ವಾದ ಸ್ವೀಕರಿಸಿದ್ದೇವೆ. ಜನರ ತೀರ್ಪು ಅಂತಿಮವಾಗಿದೆ ಎಂದರು.
ಮಿಝೋರಾಂ ಚುನಾವಣಾ ಫಲಿತಾಂಶ: ಸ್ಪಷ್ಟ ಬಹುಮತದತ್ತ ಝಡ್ಪಿಎಂ
ಮಿಜೋರಾಂ: ಮಿಝೋರಾಂ ವಿಧಾನಸಭಾ ಚುನಾವಣಾ ಫಲಿತಾಂಶಗಳು ಇನ್ನೇನು ಹೊರ ಬೀಳಲಿದ್ದು, ಆರಂಭಿಕ ಮತ ಎಣಿಕೆಯಲ್ಲಿ ಝೋರಾಮ್ ಪೀಪಲ್ಸ್ ಮೂವ್ಮೆಂಟ್ (ZPM) 26 ಕ್ಷೇತ್ರಗಳಳ್ಲಿ ಮುನ್ನಡೆ ಸಾಧಿಸಿದೆ. 40 ವಿಧಾನಸಭಾ ಸ್ಥಾನಗಳಿರುವ ಮಿಝೋರಾಂನಲ್ಲಿ ಬಹುಮತಕ್ಕೆ 21 ಸ್ಥಾನಗಳ ಅಗತ್ಯವಿದೆ. ZPM ಪಕ್ಷ ಬಹುಮತಕ್ಕೆ ಅಗತ್ಯವಿರುವುದಕ್ಕಿಂತ ಹೆಚ್ಚಿನ ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಮಿಜೋ ನ್ಯಾಷನಲ್ ಫ್ರಂಟ್ (MNF) ಪಕ್ಷ 11 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದು, ಬಿಜೆಪಿ 2ರಲ್ಲಿ ಮತ್ತು ಕಾಂಗ್ರೆಸ್ ಒಂದು ಸ್ಥಾನದಲ್ಲಿ ಮುನ್ನಡೆ ಸಾಧಿಸಿದೆ. ನವೆಂಬರ್ 7 ರಂದು ಮಿಝೋರಾಂ ವಿಧಾನಸಭಾ ಚುನಾವಣೆಯ ಮತದಾನ ನಡೆದಿದ್ದು, 80.66% ರಷ್ಟು ಮತದಾನವಾಗಿದೆ. ಚುನಾವಣೋತ್ತರ ಸಮೀಕ್ಷೆಗಳು ಮಿಝೋರಾಂನಲ್ಲಿ ತೀವ್ರ ಪೈಪೋಟಿಯ ಸ್ಪರ್ಧೆ ಇರಬಹುದು ಎಂದು ಹೇಳಿತ್ತಾದರೂ, ಆಡಳಿತರೂಢ ಎಂಎನ್ಎಫ್ ಪಕ್ಷವನ್ನು ಝಡ್ಪಿಎಂ ಪಕ್ಷ ಸೋಲಿಸುವ ಸಾಧ್ಯತೆಗಳು ಕಾಣಿಸತೊಡಗಿವೆ.
ಅಪಹರಣವಾಗಿದ್ದ ಸಿಪಿ ಯೋಗೇಶ್ವರ್ ಬಾವನ ಕಾರು ಚಾಮರಾಜನಗರದಲ್ಲಿ ಪತ್ತೆ, ಡಿಕ್ಕಿಯಲ್ಲಿ ರಕ್ತದ ಕಲೆ
ಶನಿವಾರ ತಮ್ಮ ತೋಟದ ಮನೆಯಿಂದ ನಾಪತ್ತೆಯಾಗಿದ್ದ ಮಾಜಿ ಸಚಿವ ಸಿಪಿ ಯೋಗೇಶ್ವರ್ ಅವರ ಬಾವ ಮಹದೇವಯ್ಯ ಕಾರು ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ರಾಮಾಪುರ ಗ್ರಾಮದಲ್ಲಿ ಪತ್ತೆಯಾಗಿದೆ. ರಾಮಾಪುರ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು, ಈ ವೇಳೆ ಡಿಕ್ಕಿಯಲ್ಲಿ ರಕ್ತದ ಕಲೆಗಳು ಪತ್ತೆಯಾಗಿವೆ. ಕಾರು ಇರುವ ಸ್ಥಳಕ್ಕೆ ಎಫ್ಎಸ್ಎಲ್ ತಂಡ, ಬೆರಳಚ್ಚು ತಜ್ಞರು, ಶ್ವಾನ ದಳ ಭೇಟಿ ನೀಡಿದ್ದು, ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
Karnataka Live News : ಬರ ವೈಫಲ್ಯ ಬಗ್ಗೆ ವಿಪಕ್ಷಗಳಿಂದ ಮೊದಲ ದಿನವೇ ನಿಲುವಳಿ ನೋಟಿಸ್!
Karnataka Live News : ರಾಜಕೀಯ ವಿದ್ಯಮಾನ, ಸರ್ಕಾರದ ಪ್ರಮುಖ ನಿರ್ಧಾರ, ಅಪಘಾತ, ಅಪರಾಧ, ಹವಾಮಾನ, ಶೈಕ್ಷಣಿಕ, ಸಾಮಾಜಿಕ ಇತ್ಯಾದಿ ನಾಡಿನ ಪ್ರಮುಖ ಸಂಗತಿಗಳ ತ್ವರಿತ ಅಪ್ಡೇಟ್ಸ್ ಇಲ್ಲಿವೆ. The post Karnataka Live News : ಬರ ವೈಫಲ್ಯ ಬಗ್ಗೆ ವಿಪಕ್ಷಗಳಿಂದ ಮೊದಲ ದಿನವೇ ನಿಲುವಳಿ ನೋಟಿಸ್! first appeared on Vistara News .
BBK SEASON 10: ಸುದೀಪ್ ಅವರು ಸ್ನೇಹಿತ್ ಅವರಿಗೆ ಮಾತಿನಲ್ಲಿಯೇ ತಿವಿದಿದ್ದಾರೆ. ಲಕ್ಷುರಿ ಬಜೆಟ್ ವಿಚಾರ ವೇದಿಕೆಯಲ್ಲಿ ಪಸ್ತಾವನೆ ಆದಾಗ ಸುದೀಪ್ ಅವರು ಸ್ನೇಹಿತ್ ಅವರಿಗೆ ತಿರುಗೇಟು ನೀಡಿದರು. The post BBK SEASON 10:ಸಂಗೀತಾ ಜಾಗದಲ್ಲಿ ನಮ್ರತಾ ಇದ್ದಿದ್ದರೆ ʻಪನೀರ್ʼ ಕಥೆ ಏನಾಗ್ತಿತ್ತು? ಸ್ನೇಹಿತ್ಗೆ ಚಿವುಟಿದ ಸುದೀಪ್! first appeared on Vistara News .
ಮಾಚಿ ಸಚಿವ ಯೋಗೇಶ್ವರ್ ಬಾವ ಮಹದೇವಯ್ಯ ನಿಗೂಢ ನಾಪತ್ತೆ ಪ್ರಕರಣ: ಪತ್ತೆಯಾದ ಕಾರಿನಲ್ಲಿ ರಕ್ತದ ಕಲೆ
ಚಾಮರಾಜನಗರ, ಡಿ.4: ಮೂರು ದಿನಗಳ ಹಿಂದೆ ರಾಮನಗರ ಜಿಲ್ಲೆಯ ಚನ್ನಪಟ್ಟಣದಿಂದ ನಿಗೂಡವಾಗಿ ಕಾಣೆಯಾಗಿರಯವ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಅವರ ಬಾವ ಮಹದೇವಯ್ಯರ ಕಾರು ಹನೂರು ತಾಲೂಕಿನ ರಾಮಾಪುರ ಪತ್ತೆಯಾಗಿದ್ದು, ಕಾರಿನಲ್ಲಿ ರಕ್ತದ ಕಲೆಗಳು ಪತ್ತೆಯಾಗಿರುವುದಾಗಿ ತಿಳಿದುಬಂದಿದೆ. ಸ್ಥಳಕ್ಕೆ ಸಿ.ಪಿ.ಯೋಗೇಶ್ವರ್ ಭೇಟಿ ನೀಡಿದ್ದಾರೆ. ಚನ್ನಪಟ್ಟಣ ಪೊಲೀಸರು ಕೂಡ ಸ್ಥಳಕ್ಕೆ ಆಗಮಿಸಿದ್ದು ಬೆರಳಚ್ಚು ತಜ್ಞರು ಕೂಡ ಕಾರನ್ನು ಪರಿಶೀಲನೆ ನಡೆಸಿದ್ದಾರೆ. ಮಹದೇವಯ್ಯ ಬಳಸುತ್ತಿದ್ದ ಕಾರು ರವಿವಾರ ರಾತ್ರಿ ರಾಮಾಪುರದ ಪ್ರಾಥಮಿಕ ಆರೋಗ್ಯ ಕೇಂದ್ರದ ಬಳಿ ಪತ್ತೆಯಾಗಿದ್ದು, ಮಹದೇವಯ್ಯರ ಸುಳಿವು ಪತ್ತೆಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಚನ್ನಪಟ್ಟಣ ತಾಲೂಕಿನ ಚಕ್ಕರೆ ಗ್ರಾಮದ ಮಹದೇವಯ್ಯ ತಮ್ಮ ತೋಟದ ಮನೆಯಿಂದ ಮೂರು ದಿನಗಳ ಹಿಂದೆ ನಿಗೂಢವಾಗಿ ಕಾಣೆಯಾಗಿದ್ದಾರೆ. ಅವರನ್ನು ಯಾರೋ ಅಪಹರಿಸಿರುವ ಶಂಕೆ ವ್ಯಕ್ತವಾಗಿದೆ. ಈ ಬಗ್ಗೆ ಚನ್ನಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Belagavi Winter Session: ಬರ ವೈಫಲ್ಯ ಬಗ್ಗೆ ವಿಪಕ್ಷಗಳಿಂದ ಮೊದಲ ದಿನವೇ ನಿಲುವಳಿ ನೋಟಿಸ್!
Belagavi Winter Session : ರಾಜ್ಯವು ಬರಗಾಲಕ್ಕೆ ತುತ್ತಾಗುವ ಸ್ಪಷ್ಟ ಸೂಚನೆ ಇದ್ದರೂ ಬರ ಪರಿಸ್ಥಿತಿಯನ್ನು ಎದುರಿಸಲು ಕೈಗೊಳ್ಳಬೇಕಾಗಿದ್ದ ಮುಂಜಾಗ್ರತೆ ಕ್ರಮಗಳನ್ನು ಕೈಗೊಳ್ಳದ ಸರ್ಕಾರದ ವೈಫಲ್ಯದ ಕುರಿತು ಸದನದಲ್ಲಿ ಚರ್ಚಿಸಲು ಅವಕಾಶ ನೀಡಬೇಕೆಂದು ಬಿಜೆಪಿ ಹಾಗೂ ಜೆಡಿಎಸ್ ತನ್ನ ನಿಲುವಳಿ ಸೂಚನೆಯಲ್ಲಿ ಕೋರಿವೆ. The post Belagavi Winter Session: ಬರ ವೈಫಲ್ಯ ಬಗ್ಗೆ ವಿಪಕ್ಷಗಳಿಂದ ಮೊದಲ ದಿನವೇ ನಿಲುವಳಿ ನೋಟಿಸ್! first appeared on Vistara News .
Post Office Schemes: ಹೂಡಿಕೆ ಮಾಡಿ ಅತಿ ಹೆಚ್ಚು ಲಾಭ ಗಳಿಸಲು ಅಂಚೆ ಕಚೇರಿಯ ಈ ಯೋಜನೆಗಳು ಎಲ್ಲವುದಕ್ಕಿಂತ ಉತ್ತಮ
ಅಂಚೆ ಕಚೇರಿ (Post Office) ಯಲ್ಲಿ ವಿವಿಧ ವಿಧವಾದ ಸುರಕ್ಷಿತ ಹೂಡಿಕೆಯ ಆಯ್ಕೆಗಳಿದ್ದರೂ ಅದು ಸಾಮಾನ್ಯ ಜನರಿಗೆ ಮಾತ್ರ ಅಷ್ಟಾಗಿ ತಿಳಿದುಬಂದಿಲ್ಲ ಹಾಗಾಗಿ ಈ ಲೇಖನದ ಮೂಲಕ ಅಂಚೆ ಕಚೇರಿಯಲ್ಲಿ ಲಭ್ಯ ಇರುವ ವಿವಿಧ ಹೂಡಿಕೆ ಯೋಜನೆ (Post Office Schemes) ಬಗ್ಗೆ ನಾವಿಂದು ತಿಳಿಸಲಿದ್ದೇವೆ. The post Post Office Schemes: ಹೂಡಿಕೆ ಮಾಡಿ ಅತಿ ಹೆಚ್ಚು ಲಾಭ ಗಳಿಸಲು ಅಂಚೆ ಕಚೇರಿಯ ಈ ಯೋಜನೆಗಳು ಎಲ್ಲವುದಕ್ಕಿಂತ ಉತ್ತಮ appeared first on Karnataka Times .
ಕರ್ನಾಟಕ-ತಮಿಳುನಾಡು ಗಡಿ ಭಾಗದ ರಮಣೀಯ ಸಫಾರಿ
ಚಾಮರಾಜನಗರ: ಕರ್ನಾಟಕ ತಮಿಳುನಾಡು ಮತ್ತು ಕೇರಳ ರಾಜ್ಯಗಳ ಗಡಿ ಭಾಗ ಹೊಂದಿರುವ ಜೊತೆಗೆ ಅತ್ಯಧಿಕ ಅರಣ್ಯ ಪ್ರದೇಶವನ್ನು ಹೊಂದಿರುವ ಜಿಲ್ಲೆ ಚಾಮರಾಜನಗರಜಿಲ್ಲೆ. ಅರಣ್ಯ ಪ್ರದೇಶದ ರಮಣೀಯ ಸೌಂದರ್ಯ ಸವಿಯಲು ಅರಣ್ಯ ಇಲಾಖೆ ಪ್ರವಾಸಿಗರಿಗೆ ಸಫಾರಿ ಭಾಗ್ಯವನ್ನು ಕಲ್ಪಿಸುವಲ್ಲಿ ದಿಟ್ಟ ಹೆಜ್ಜೆ ಇಟ್ಟಿದೆ. ಚಾಮರಾಜನಗರ ಜಿಲ್ಲೆಯಲ್ಲಿ ಇದುವರೆಗೂ ಬಂಡೀಪುರ ಮತ್ತು ಕೆ.ಗುಡಿ ಭಾಗದಲ್ಲಿ ಸಫಾರಿಯನ್ನು ಆಯೋಜಿಸಿದ್ದ ಅರಣ್ಯ ಇಲಾಖೆಗೆ ಇದೀಗ ಮತ್ತೆರಡು ಸಫಾರಿಯನ್ನು ಅನುಷ್ಠಾನಗೊಳಿಸಿದೆ. ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದ ಬಳಿ ಇರುವ ಹೊಗನೇಕಲ್ ಗೆ ತೆರಳುವ ಮಾರ್ಗಮಧ್ಯೆ ಗೋಪಿನಾಥಂ ಬಳಿ ದಿ.ಪಿ.ಶ್ರೀನಿವಾಸ್ ಹೆಸರಿನಲ್ಲಿ ಸಫಾರಿ ಹಾಗೂ ಕೊಳ್ಳೇಗಾಲದ ಶ್ರೀ ಮಲೆ ಮಹದೇಶ್ವರ ವನ್ಯಜೀವಿಧಾಮ ವ್ಯಾಪ್ತಿಯ ಲೊಕ್ಕನಹಳ್ಳಿ ಬಳಿ ಪಿ.ಜಿ.ಪಾಳ್ಯ ವಲಯದಲ್ಲಿ ಸಫಾರಿಗೆ ಡಿ.2ರಂದು ಅಧಿಕೃತವಾಗಿ ಹಸಿರು ನಿಶಾನೆ ನೀಡಲಾಗಿದೆ. ಜಿಲ್ಲೆಯ ಮಲೆ ಮಹದೇಶ್ವರ ವನ್ಯಜೀವಿ ವಿಭಾಗವು ಕೊಳ್ಳೇಗಾಲ ಮತ್ತು ಹನೂರು ತಾಲೂಕಿನಲ್ಲಿ 949.469 ಚದರ ಕಿ.ಮೀ ಗಳಷ್ಟು ಅರಣ್ಯ ಪ್ರದೇಶವನ್ನು ಒಳಗೊಂಡಿದ್ದು, ಹುಲಿ, ಆನೆ, ಚಿರತೆ, ಜಿಂಕೆ, ಕಡವೆ, ಕಾಡೆಮ್ಮೆ, ಕರಡಿ, ತೆರಕರಡಿ, ತೋಳ, ನರಿ ಮುಂತಾದ ಪ್ರಾಣಿಗಳು ಸಫಾರಿ ಕೈಗೊಳ್ಳುವ ಪ್ರದೇಶದಲ್ಲಿ ವಾಸಿಸುತ್ತಿವೆ. ಪಿ.ಜಿ ಪಾಳ್ಯ ವನ್ಯಜೀವಿ ವಲಯದ ಲೊಕ್ಕನಹಳ್ಳಿ ಕಳ್ಳಬೇಟೆ ತಡೆ ಶಿಬಿರದ ಮಾರ್ಗದ ಒಟ್ಟು 18 ಕಿ.ಮೀ. ವ್ಯಾಪ್ತಿಯಲ್ಲಿ ಸಫಾರಿಯಲ್ಲಿ ರಮಣೀಯ ಸೌಂದರ್ಯ ಸವಿಯಬಹುದಾಗಿದೆ. ಪ್ರವಾಸೋದ್ಯಮಕ್ಕೆ ಹೆಚ್ಚಿನ ಅವಕಾಶವಿರುವ ಈ ವಲಯದಲ್ಲಿ ಅರಣ್ಯ ಸೌಂದರ್ಯ ಕಣ್ತುಂಬಿಸಿಕೊಂಡು ಅರಣ್ಯ ಸಂಪತ್ತನ್ನು ಉಳಿಸುವ ಹೊಣೆ ಎಲ್ಲರಿಗೂ ಸೇರಿದ್ದಾಗಿದೆ. ಮಲೆ ಮಹದೇಶ್ವರ ವನ್ಯಜೀವಿ ವಿಭಾಗ ವ್ಯಾಪ್ತಿಯ ಪಿಜಿ ಪಾಳ್ಯ ವನ್ಯಜೀವಿ ವಲಯದಲ್ಲಿ ಸಫಾರಿ ಆರಂಭವಾಗಿರುವುದರಿಂದ ಪ್ರವಾಸೋದ್ಯಮ ಅಭಿವೃದ್ಧಿಗೆ ಹೆಚ್ಚಿನ ಅವಕಾಶವಾಗಲಿದೆ. ಈ ಭಾಗದ ಪ್ರವಾಸಿ ಸ್ಥಳಗಳಿಗೆ ಭೇಟಿ ನೀಡುವುದರಿಂದ ಸ್ಥಳೀಯರಿಗೆ ಉದ್ಯೋಗ ಅವಕಾಶಗಳು ಲಭಿಸಲಿವೆ. ಹೀಗಾಗಿ ಸಫಾರಿ ಆರಂಭವಾಗಿರುವುದು ಉತ್ತಮ ಹೆಜ್ಜೆಯಾಗಿದೆ. ► ಎಂ.ಆರ್.ಮಂಜುನಾಥ್, ಹನೂರು ಕ್ಷೇತ್ರದ ಶಾಸಕ ಪಿ.ಜಿ ಪಾಳ್ಯ ವಲಯದ ಸಫಾರಿಯು ಪ್ರತೀ ದಿನ ಬೆಳಗ್ಗೆ 6ರಿಂದ 9ರವರೆಗೆ, ಮಧ್ಯಾಹ್ನ 3ರಿಂದ ಸಂಜೆ 6ಗಂಟೆಯವರೆಗೆ ಸಫಾರಿಗೆ ಸಮಯ ನಿಗದಿಪಡಿಸಲಾಗಿದೆ. ವಯಸ್ಕರಿಗೆ 400 ರೂ., ಮಕ್ಕಳಿಗೆ 200 ರೂ., ಸಫಾರಿ ಶುಲ್ಕ ಇದೆ. ಹೆಚ್ಚಿನ ಮಾಹಿತಿಗಾಗಿ ಮೊ.ಸಂ 9481995509 ಮತ್ತು 9008581495, ಸಂಪರ್ಕಿಸಬೇಕು. ► ಡಾ.ಸಂತೋಷ್ ಕುಮಾರ್, ಅರಣ್ಯ ಸಂರಕ್ಷಣಾಧಿಕಾರಿ ಮಲೆ ಮಹದೇಶ್ವರ ವನ್ಯಜೀವಿ ವಿಭಾಗ
ಬೆಳಗಾವಿ: ಉತ್ತರ ಕರ್ನಾಟಕಕ್ಕೆ ನ್ಯಾಯ ಕೊಡುವ ವರೆಗೆ ಬಿಜೆಪಿ ಶಾಸಕಾಂಗ ಸಭೆಗೆ ಹಾಜರಾಗಲ್ಲ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ. ಬೆಳಗಾವಿಯಲ್ಲಿ ಸೋಮವಾರ ಮಾತನಾಡಿದ ಅವರು, ಬಿಜೆಪಿಯಲ್ಲಿ ಉತ್ತರ ಕರ್ನಾಟಕಕ್ಕೆ ಪ್ರಾತಿನಿಧ್ಯ ನೀಡಿಲ್ಲ. ದಕ್ಷಿಣ ಕರ್ನಾಟಕದವರ ಗುಲಾಮರು ನಾವಲ್ಲ ಎಂದು ಬಿಜೆಪಿ ಅಧ್ಯಕ್ಷ ಸ್ಥಾನ ಹಾಗೂ ಶಾಸಕಾಂಗ ಪಕ್ಷದ ನಾಯಕನ ಆಯ್ಕೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ನರೇಂದ್ರ ಮೋದಿ ನಾಯಕತ್ವ ಇಡೀ ದೇಶದ ಜನರು ಒಪ್ಪಿಕೊಂಡಿದ್ದಾರೆ. ನರೇಂದ್ರ ಮೋದಿ ದೇಶಕ್ಕೆ ಗ್ಯಾರಂಟಿ ಇರುವುದಿಂದ ಗೆಲುವು ನಮ್ಮದಾಗಿದೆ. ಹೊಂದಾಣಿಕೆ ಇಲ್ಲದ ರಾಜಕಾರಣ, ಹಿಂದುತ್ವ ಅಭಿವೃದ್ಧಿ ಕಾರಣವಾಗಿದೆ ಎಂದರು. ಕುಟುಂಬ ರಾಜಕಾರಣ ಕಿತ್ತು ಹಾಕಬೇಕು. ಇಡೀ ದೇಶದಲ್ಲಿ ಕುಟುಂಬ ರಾಜಕಾರಣ ಅಂತ್ಯವಾಗುತ್ತದೆ. ವಂಶವಾದವನ್ನು ನಿರ್ಮೂಲನೆ ಮಾಡುವುದೇ ನನ್ನ ಗುರಿ. ಇನ್ನು ಮೇಲೆ ಬದಲಾವಣೆ ಆಗುತ್ತದೆ. ಲೋಕಸಭೆ ಚುನಾವಣೆ ಬಳಿಕ ಬದಲಾವಣೆ! ಇನ್ನು ಇದೇ ಸಂದರ್ಭದಲ್ಲಿ ಲೋಕಸಭೆ ಚುನಾವಣೆ ಬಳಿಕ ಬದಲಾವಣೆ ಆಗಲಿದೆ ಎಂದು ಯತ್ನಾಳ್ ಭವಿಷ್ಯ ನುಡಿದಿದ್ದಾರೆ. ಪ್ರಾಮಾಣಿಕರು ಹಾಗೂ ಹಿಂದೂ ವಿಚಾರಧಾರೆ ಹೊಂದಿರುವವರು ಆಡಳಿತ ನಡೆಸಬೇಕು ಎಂದರು.
'ಸಾಯಂಗಿದ್ರೆ ಬಸ್ಸಿಗೆ ಸಿಕ್ಕಾಕೊಂಡು ಸಾಯಬೇಕಿತ್ತು, ನನ್ನ ಕಾರು ಡ್ಯಾಮೇಜ್ ಮಾಡೋಕೆ ನೀನ್ಯಾವನು?'
ಮೈಸೂರು, ಡಿ.4: ಬೈಕೊಂದು ತನ್ನ ಕಾರಿಗೆ ಢಿಕ್ಕಿ ಹೊಡೆದಿದ್ದರಿಂದ ಆಕ್ರೋಶಗೊಂಡ ಜೆಡಿಎಸ್ ನಾಯಕಿ ಭವಾನಿ ರೇವಣ್ಣ ಬೈಕ್ ಸವಾರನನ್ನು ಅವಾಚ್ಯವಾಗಿ ನಿಂದಿಸಿ ಹಿಗ್ಗಾಮುಗ್ಗಾ ತರಾಟೆಗೈದ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ರವಿವಾರ ವೈರಲ್ ಆಗಿದೆ. ಭವಾನಿ ರೇವಣ್ಣ ಅವರು ಸಾಲಿಗ್ರಾಮದಿಂದ ಹೊಳೆನರಸೀಪುರಕ್ಕೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ರಾಂಪುರ ಗ್ರಾಮದ ಗೇಟ್ ಬಳಿ ಈ ಘಟನೆ ನಡೆದಿದೆ. ವಿರುದ್ಧ ದಿಕ್ಕಿನಿಂದ ಬೈಕ್ ಭವಾನಿ ರೇವಣ್ಣರ ಕಾರಿಗೆ ಢಿಕ್ಕಿ ಹೊಡೆದಿದೆ. ಇದರಿಂದ ಕೆಂಡಾಮಂಡಲವಾದ ಭವಾನಿ, ‘ಸುಟ್ರು ಹಾಕ್ರೋ ಈ ಗಾಡಿನ’ ಎಂದು ಅವಾಚ್ಯ ಶಬ್ದಗಳಿಂದ ರೇಗಾಡಿದ್ದಾರೆ. ‘ಅಂತಹ ಅರ್ಜೆಂಟ್ ಏನಿತ್ತು? ಗಾಡಿಗೆ ಎಷ್ಟು ಡ್ಯಾಮೇಜ್ ಆಗಿದೆ, ರೆಡಿ ಮಾಡಿಸುವುದು ಹೇಗೆ?’ ಎಂದು ಸಿಟ್ಟಿನಿಂದ ತರಾಟೆಗೈದಿದ್ದಾರೆ. ಈ ವೇಳೆ ಮಧ್ಯಪ್ರವೇಶಿಸಿದ ಸ್ಥಳೀಯರ ಮೇಲೂ ರೇಗಿದ ಭವಾನಿ ರೇವಣ್ಣ, ‘ರಿಪೇರಿ ಮಾಡ್ಸಕ್ಕೇ ಕೊಡ್ತಿಯಾ ಐದು ಲಕ್ಷ ರೂ.? ಹಣ ಕೊಡಂಗಿದ್ರೆ ನ್ಯಾಯ ಮಾತಾಡಕ್ಕ್ ಬನ್ನಿ’ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ. ಅಷ್ಟಕ್ಕೂ ಸುಮ್ಮನಾಗದ ಭವಾನಿ ರೇವಣ್ಣ, ಅಪಘಾತಕ್ಕೆ ಕಾರಣವಾದ ಬೈಕ್ ಸವಾರನ ಮೊಬೈಲ್ ಫೋನ್ ಕಸಿದುಕೊಂಡು, ಗಾಡಿ ಸೀಜ್ ಮಾಡು. ಸಾಲಿಗ್ರಾಮ ಎಸ್ಸೈ ಬರೋಕೆ ಹೇಳಿ’ ಎಂದು ಸಹಾಯಕರಿಗೆ ತಿಳಿಸಿರುವುದು ವೀಡಿಯೊದಲ್ಲಿದೆ. ''1.50 ಕೋಟಿ ರೂ. ಗಾಡಿ ಇದು. ಡ್ಯಾಮೇಜ್ ಮಾಡಿಟ್ಟವ್ನಲ್ಲ, ದೇಶ ಮುಳುಗಿ ಹೋಗಿತ್ತಾ, ರೈಟಲ್ಲಿ ಬಂದು ಗುದ್ದಿದ್ದೀಯಲ್ಲಾ. ಸಾಯಂಗಿದ್ರೆ ಬಸ್ಸಿಗೆ ಸಿಕ್ಕಾಕೊಂಡು ಸಾಯಬೇಕಿತ್ತು. ನನ್ನ ಕಾರು ಡ್ಯಾಮೇಜ್ ಮಾಡೋಕೆ ನೀನ್ಯಾವನು?’ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ. ‘ಅವ್ನು ಸತ್ತೋಯ್ತನೆ ಅಂತ, ಅವ್ನ್ ಬಗ್ಗೆ ಯೋಚ್ನೆ ಮಾಡ್ತಾ ಇದ್ದೀಯಲ್ಲಾ, ಒಂದೂವರೆ ಕೋಟಿ ರೂಪಾಯಿ ಗಾಡಿ ಡ್ಯಾಮೇಜ್ ಯಾರ್ ಕಟ್ಕೊಡ್ತಾರೆ?’ ಎಂದೂ ಸ್ಥಳೀಯರ ಮೇಲೂ ವಾಗ್ದಾಳಿ ಮಾಡಿದ್ದಾರೆ. ಕೊನೆಗೆ ಬೈಕ್ ಸವಾರ ಹಾಗೂ ಜೊತೆಗಿದ್ದವರನ್ನು ಕಾರು ಹಾಗೂ ದ್ವಿಚಕ್ರ ವಾಹನದ ಬಳಿ ನಿಲ್ಲಿಸಿ ತಮ್ಮ ಮೊಬೈಲ್ ಫೋನ್ ನಲ್ಲಿ ಫೋಟೊ ತೆಗೆದುಕೊಂಡಿದ್ದಾರೆ. ಘಟನೆಯ ಬಗ್ಗೆ ಬೈಕ್ ಸವಾರನ ವಿರುದ್ಧ ಸಾಲಿಗ್ರಾಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಿರಿಯ ನಾಯಕರನ್ನು ನಿಯಂತ್ರಿಸಲು ವಿಫಲವಾದದ್ದೇ ಕಾಂಗ್ರೆಸ್ ಸೋಲಿಗೆ ಕಾರಣ!
ಹೊಸದಿಲ್ಲಿ: ಚುನಾವಣೆ ನಡೆಯುವ ರಾಜ್ಯಗಳಲ್ಲಿ ಅನುಕೂಲಕರ ವಾತಾವರಣ ಇದ್ದರೂ, ಪಂಚರಾಜ್ಯ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷ ಸೋಲು ಅನುಭವಿಸಿದ ಬಗ್ಗೆ ವಿಶ್ಲೇಷಣೆಗಳು ಆರಂಭವಾಗಿವೆ. ಮಧ್ಯಪ್ರದೇಶ, ಛತ್ತೀಸ್ಗಢ ಮತ್ತು ರಾಜಸ್ಥಾನದಲ್ಲಿ ಕಾಂಗ್ರೆಸ್ ಪಕ್ಷ ತನ್ನ ಪ್ರಚಾರದಲ್ಲಿ ಪ್ರಚಾರದ ಅಂತರವನ್ನು ಕಡೆಗಣಿಸಿದ್ದು ಮತ್ತು ಅಭ್ಯರ್ಥಿ ಆಯ್ಕೆ ಹಾಗೂ ಚುನಾವಣಾ ಸಂಬಂಧಿ ಅಭಿಪ್ರಾಯಗಳನ್ನು ಪಡೆಯುವ ವೇಳೆ ಹಿರಿಯ ಮುಖಂಡರನ್ನು ನಿಯಂತ್ರಿಸಲು ಹೈಕಮಾಂಡ್ ವಿಫಲವಾಗಿದ್ದು, ಕೊನೆ ಹಂತದಲ್ಲಿ ಹಿನ್ನಡೆಗೆ ಕಾರಣವಾಯಿತು ಎಂದು timesofindia ವರದಿ ಮಾಡಿದೆ. ಮಧ್ಯಪ್ರದೇಶದಲ್ಲಿ ಅಧಿಕಾರ ವಿರೋಧಿ ಅಲೆ ದಟ್ಟವಾಗಿ ಇರುವ ಹಿನ್ನೆಲೆಯಲ್ಲೇ ಬಿಜೆಪಿ ಶಿವರಾಜ್ ಸಿಂಗ್ ಚೌಹಾಣ್ ಅವರನ್ನು ತನ್ನ ಸಿಎಂ ಅಭ್ಯರ್ಥಿ ಎಂದು ಬಿಂಬಿಸಲೇ ಇಲ್ಲ. ಆದರೆ ಕಾಂಗ್ರೆಸ್ ರಾಜ್ಯ ಘಟಕದ ಅಧ್ಯಕ್ಷ ಕಮಲನಾಥ್ ಅವರು, ಇದರ ಪ್ರಯೋಜನ ಪಡೆಯುವ ಕಾರ್ಯತಂತ್ರ ರೂಪಿಸುವಲ್ಲಿ ವಿಫಲರಾದರು. ಸ್ಥಳೀಯವಾಗಿ ತೀವ್ರ ಪ್ರಚಾರಕ್ಕೆ ಒತ್ತು ನೀಡದ ಅವರು, ಸರ್ಕಾರದ ಮೇಲಿದ್ದ ಭ್ರಷ್ಟಾಚಾರ, ನಿರುದ್ಯೋಗ ಮತ್ತು ಸಿಎಂ ಬಗೆಗಿನ ವಿರೋಧ ತಮ್ಮ ಪಕ್ಷಕ್ಕೆ ವರದಾನವಾಗುತ್ತದೆ ಎಂಬ ಅತಿಯಾದ ವಿಶ್ವಾಸ ಹೊಂದಿದ್ದರು. ಕೇಂದ್ರ ನಾಯಕರ ಸೂಚನೆಯ ಮೇರೆಗೆ ಸೆಪ್ಟೆಂಬರ್ ನಲ್ಲಿ ಏಳು ಪ್ರದೇಶಗಳಲ್ಲಿ ಹಮ್ಮಿಕೊಂಡಿದ್ದ ʼಜನ ಆಕ್ರೋಶ ಯಾತ್ರೆʼಗೂ ಕಮಲನಾಥ್ ಒಲವು ಹೊಂದಿರಲಿಲ್ಲ ಎಂದು ಹೇಳಲಾಗುತ್ತಿದೆ. ಕಮಲ್ ನಾಥ್ ಜತೆಗೆ ಕಾರ್ಯನಿರ್ವಹಿಸುವುದು ಕಷ್ಟಸಾಧ್ಯ ಎಂಬ ಕಾರಣಕ್ಕೆ ಹಿರಿಯ ಮುಖಂಡರಾದ ಮುಕುಲ್ ವಾಸ್ನಿಕ್ ಹಾಗೂ ಜೆ.ಪಿ.ಅಗರ್ವಾಲ್ ಅವರು ಮಧ್ಯಪ್ರದೇಶ ಚುನಾವಣೆಯ ಎಐಸಿಸಿ ಉಸ್ತುವಾರಿ ಹೊಣೆಯಿಂದ ಮುಕ್ತಗೊಳಿಸುವಂತೆ ಮನವಿ ಮಾಡಿಕೊಂಡಿದ್ದು, ಈ ಹಿನ್ನೆಲೆಯಲ್ಲಿ ರಣದೀಪ್ ಸುರ್ಜೇವಾಲಾ ಅವರನ್ನು ಕೊನೆಕ್ಷಣದಲ್ಲಿ ನಿಯೋಜಿಸಲಾಗಿತ್ತು. ಚುನಾವಣಾ ತಂತ್ರಗಾರ ಸುನೀಲ್ ಕನೊಗುಲು ಅವರು ರಾಜ್ಯದಲ್ಲಿ ಕಾರ್ಯನಿರ್ವಹಿಸಲು ಒಪ್ಪಿಕೊಳ್ಳದ ಕಮಲನಾಥ್ ತಮ್ಮದೇ ಏಜೆನ್ಸಿಗಳ ಮೂಲಕ ಕಾರ್ಯಾಚರಣೆಗೆ ಮುಂದಾಗಿದ್ದು, ಈ ಹಂತದಲ್ಲಿ ರಾಹುಲ್ ಗಾಂಧಿಯವರು ಅವಕಾಶ ನೀಡಬಾರದಿತ್ತು ಎನ್ನುವ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. ಚುನಾವಣೆಗೆ ಸಂಬಂಧಿಸಿದ ಅಭಿಪ್ರಾಯಗಳು ಕೂಡಾ ತಪ್ಪುದಾರಿಗೆ ಎಳೆಯುವಂಥವು ಹಾಗೂ ಕೇಂದ್ರ ನಾಯಕತ್ವ ಕೂಡಾ ಇದನ್ನು ನಂಬಿದ್ದು, ಪಕ್ಷಕ್ಕೆ ಮುಳುವಾಯಿತು.
ಯತ್ನಾಳ್ ಹೊಸ ಬಾಂಬ್: ಉತ್ತರ ಕರ್ನಾಟಕಕ್ಕೆ ನ್ಯಾಯ ಕೊಡುವವರೆಗೆ ಬಿಜೆಪಿ ಶಾಸಕಾಂಗ ಸಭೆಗೆ ಹಾಜರಾಗಲ್ಲ ಎಂದ ಶಾಸಕ!
ಪ್ರತಿಪಕ್ಷ ನಾಯಕ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಗಳ ಆಯ್ಕೆ ವಿಚಾರವಾಗಿ ಆಕ್ಷೇಪ ವ್ಯಕ್ತಪಡಿಸಿದ್ದ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಇದೀಗ ಹೊಸ ಬಾಂಬ್ ಸಿಡಿಸಿದ್ದಾರೆ. ಉತ್ತರ ಕರ್ನಾಟಕಕ್ಕೆ ನ್ಯಾಯ ಕೊಡುವ ವವೆಗೂ ಬಿಜೆಪಿ ಶಾಸಕಾಂಗ ಸಭೆಗೆ ಹಾಜರಾಗುವುದಿಲ್ಲ ಎಂದು ಶಪಥ ಮಾಡಿದ್ದಾರೆ. ಬಿಜೆಪಿಯಲ್ಲಿ ಉತ್ತರ ಕರ್ನಾಟಕಕ್ಕೆ ಪ್ರಾತಿನಿಧ್ಯ ನೀಡಿಲ್ಲ, ನಾವೇನೂ ದಕ್ಷಿಣ ಕರ್ನಾಟಕದವರ ಗುಲಾಮರಲ್ಲ. ವಂಶವಾದವನ್ನು ನಿರ್ಮೂಲನೆ ಮಾಡುವುದೇ ನನ್ನ ಗುರಿ ಎಂದು ಗುಡುಗಿದ್ದಾರೆ.
ರಾಜಸ್ಥಾನ: ಮುಖ್ಯಮಂತ್ರಿ ಹುದ್ದೆಗೆ ವಸುಂಧರಾ ರಾಜೇ ಸಹಿತ 6 ಆಕಾಂಕ್ಷಿಗಳು
ಹೊಸದಿಲ್ಲಿ: ರಾಜಸ್ಥಾನ ವಿಧಾನಸಭೆಯಲ್ಲಿ ಬಿಜೆಪಿಯ ವಿಜಯದ ಬೆನ್ನಲ್ಲೇ ಅಲ್ಲಿ ಮುಖ್ಯಮಂತ್ರಿ ಆಯ್ಕೆಯ ಕಸರತ್ತು ಆರಂಭಗೊಂಡಿದೆ. ಬಿಜೆಪಿ ರಾಷ್ಟ್ರೀಯ ನಾಯಕತ್ವ ಹೊಸ ಮುಖ್ಯಮಂತ್ರಿ ಹೆಸರನ್ನು ಶೀಘ್ರ ಘೋಷಿಸುವ ಸಾಧ್ಯತೆಯಿದೆ. ಸಿಎಂ ಹುದ್ದೆಗೆ ಪ್ರಸಕ್ತ ಐದು ಪ್ರಮುಖ ಹೆಸರುಗಳು ಕೇಳಿ ಬಂದಿವೆ. ಮಾಜಿ ಮುಖ್ಯಮಂತ್ರಿ ವಸುಂಧರಾ ರಾಜೇ ಸಿಂಧಿಯಾ, ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೇಖಾವತ್, ಹಿಂದಿನ ಜೈಪುರ ರಾಜಮನೆತನದ ಸದಸ್ಯೆ ದಿಯಾ ಕುಮಾರಿ, ಆಳ್ವಾರ್ ಸಂಸದ ಬಾಬಾ ಬಾಲಕನಾಥ್, ಹಿರಿಯ ಬಿಜೆಪಿ ನಾಯಕ ಕಿರೋಡಿ ಲಾಲ್ ಮೀನಾ ಹಾಗೂ ರಾಜಸ್ಥಾನ ಬಿಜೆಪಿ ಅಧ್ಯಕ್ಷ ಜಿ ಪಿ ಜೋಷಿ ಅವರ ಹೆಸರುಗಳು ಸಿಎಂ ಹುದ್ದೆಯ ಆಕಾಂಕ್ಷಿಗಳ ಪಟ್ಟಿಯಲ್ಲಿದೆ. ವಸುಂಧರಾ ರಾಜೇ ಸಿಂಧಿಯಾ ಅವರಿಗೆ ರಾಜ್ಯದಲ್ಲಿ ವ್ಯಾಪಕ ಬೆಂಬಲವಿದ್ದು ರಾಜ್ಯದಲ್ಲಿ ಎರಡು ಬಾರಿ ಬಿಜೆಪಿ ಗೆಲುವಿಗೆ 70 ವರ್ಷದ ನಾಯಕಿ ಶ್ರಮಿಸಿದ್ದಾರೆ. 1984ರಲ್ಲಿ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಣಿ ಸದಸ್ಯೆಯಾಗಿ ಆಯ್ಕೆಗೊಂಡಿದ್ದ ಅವರು ಮುಂದೆ ಧೋಲಪುರ್ ಶಾಸಕಿಯಾಗಿ ಆಯ್ಕೆಯಾಗಿದ್ದರು. 2003ರಲ್ಲಿ ಆಕೆ ರಾಜಸ್ಥಾನದ ಮೊದಲ ಮಹಿಳಾ ಸೀಎಂ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಮೂರು ಬಾರಿ ಶಾಸಕಿಯಾಗಿ ಹಾಗೂ ಐದು ಬಾರಿ ಸಂಸದೆಯಾಗಿ ಆಯ್ಕೆಯಾಗಿರುವ ಅವರು ವಾಜಪೇಯಿ ಸರ್ಕಾರದ ಅವಧಿಯಲ್ಲಿ ಕೇಂದ್ರ ಸಚಿವೆಯಾಗಿಯೂ ಸೇವೆ ಸಲ್ಲಿಸಿದ್ದಾರೆ. ಗಜೇಂದ್ರ ಸಿಂಗ್ ಶೇಖಾವತ್ ಅವರು ರಾಜ್ಯ ಚುನಾವಣಾ ಅಭಿಯಾನದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. 2019 ಚುನಾವಣೆಯಲ್ಲಿ ಅವರು ಮಾಜಿ ಸಿಎಂ ಅಶೋಕ್ ಗೆಹ್ಲೋಟ್ ಅವರ ಪುತ್ರ ವೈಭಲ್ ಗೆಹ್ಲೋಟ್ ಅವರನ್ನು ಸೋಲಿಸಿದ್ದರು. ದಿಯಾ ಕುಮಾರಿ ಅವರು 2013ರಲ್ಲಿ ಬಿಜೆಪಿಗೆ ಸೇರಿದ ನಂತರ ಮೂರು ಚುನಾವಣೆಯಲ್ಲಿ ಗೆದ್ದಿದ್ದಾರೆ. 2019 ಲೋಕಸಭಾ ಚುನಾವಣೆಯಲ್ಲಿ ಅವರು 5.51 ಲಕ್ಷ ಮತಗಳ ಅಂತರದಿಂದ ಗೆದ್ದಿದ್ದರು. “ಜೈಪುರದ ಮಗಳು” ಎಂದು ಕರೆಯಲ್ಪಡುವ ಅವರು ಜನಪ್ರಿಯರೂ ಆಗಿದ್ದಾರೆ. ಬಾಬಾ ಬಾಲಕನಾಥ್ ಅವರನ್ನು ರಾಜಸ್ಥಾನದ ಯೋಗಿ ಎಂದೂ ಕರೆಯಲಾಗುತ್ತದೆ. 40 ವರ್ಷದ ಅವರು ತಿಜಾರ ಕ್ಷೇತ್ರದಿಂದ ಗೆದ್ದಿದ್ದಾರೆ ಹಾಗೂ ತಮ್ಮ ವಿವಾದಾತ್ಮಕ ಹೇಳಿಕೆಗಳಿಂದ ಸುದ್ದಿಯಾಗಿದ್ದಾರೆ. ಎಪ್ಪತ್ತೆರಡು ವರ್ಷದ ಕಿರೋಡಿ ಲಾಲ್ ಮೀನಾ ಅವರು ಪೂರ್ವ ರಾಜಸ್ಥಾನದಲ್ಲಿ ಪಕ್ಷದ ಗೆಲುವಿಗೆ ಶ್ರಮಿಸಿದ್ದರು. ಡಾಕ್ಟರ್ ಸಾಹಬ್ ಮತ್ತು ಬಾಬಾ ಎಂದೂ ಕರೆಯಲ್ಪಡುವ ಅವರು ಸಿಎಂ ಹುದ್ದೆ ಆಕಾಂಕ್ಷಿ ಎಂದು ತಿಳಿಯಲಾಗಿದೆ. ರಾಜಸ್ಥಾನ ಬಿಜೆಪಿ ಅಧ್ಯಕ್ಷ, 48 ವರ್ಷದ ಸಿ ಪಿ ಜೋಷಿ ಅವರಿಗೆ ಈ ಹುದ್ದೆ ಈ ವರ್ಷದ ಮಾರ್ಚ್ ತಿಂಗಳಲ್ಲಿ ನೀಡಲಾಗಿತ್ತು.ಆಡಳಿತ ವಿರೋಧಿ ಅಲೆ ಹಾಗೂ ಕಾಂಗ್ರೆಸ್ ವೈಫಲ್ಯಗಳನ್ನು ಎತ್ತಿ ತೋರಿಸಿ ಅವರು ಪಕ್ಷದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.
ರಾಹುಲ್ ಗಾಂಧಿ ಕುರಿತು ಅವಹೇಳನಕಾರಿ ಹೇಳಿಕೆ ನೀಡಿದ ಕಾಳಿ ಮಠದ ಋಷಿಕುಮಾರ ಸ್ವಾಮಿ
ಮೈಸೂರು: ವಿವಾದಾತ್ಮಕ ಹೇಳಿಕೆಗಳಿಗೆ ಕುಖ್ಯಾತಿ ಪಡೆದಿರುವ ಕಾಳಿ ಮಠದ ಋಷಿಕುಮಾರ ಸ್ವಾಮೀಜಿ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ದ ಅವಹೇಳನಕಾರಿಯಾಗಿ ಮಾತನಾಡಿರುವ ವಿಡಿಯೋ ವೈರಲ್ ಆಗಿದೆ. ಋಷಿಕುಮಾರ ಸ್ವಾಮೀಜಿ ಈ ವಿಡಿಯೋದಲ್ಲಿ “ರಾಹುಲ್ ಗಾಂಧಿ ಓರ್ವ ಬುದ್ಧಿಮಾಂದ್ಯ, ಅಂಗವಿಕಲ” ಎಂದು ಹೇಳಿಕೆ ನೀಡಿದ್ದಾರೆ. ವೈರಲ್ ಆಗಿರುವ ವಿಡಿಯೋದಲ್ಲಿ ಋಷಿಕುಮಾರ ಸ್ವಾಮಿ ರಾಹುಲ್ ಗಾಂಧಿ ಅವರನ್ನು ಮಹಾಭಾರತದ ಧೃತರಾಷ್ಟ್ರಗೆ ಹೋಲಿಸಿದ್ದಾರೆ. ಧೃತರಾಷ್ಟ್ರ ಒಬ್ಬ ಅಂಗವಿಕಲನಾದ ಕಣ್ಣು ಕಾಣದ ದೊರಯಾಗಿದ್ದ, ಆದರೂ ಅವನಿಗೆ ಅಧಿಕಾರ ನೀಡಲಾಗಿತ್ತು. ಇದರಿಂದ ಮಹಾಭಾರತವೇ ನಡೆದು ಹೋಯಿತು ಎಂದು ಹೇಳಿದ ಅವರು, ಆಗ ಆಗಿದ್ದೇ ಸಾಕು. ಈಗ ಒಬ್ಬ ಬುದ್ಧಿಮಾಂದ್ಯನನ್ನು ಪ್ರಧಾನಿಯನ್ನಾಗಿ ಮಾಡಲು ಸಾಧ್ಯವೇ ಇಲ್ಲ. ಸನಾತನ ಧರ್ಮದಲ್ಲಿ ಇದಕ್ಕೆ ಒಪ್ಪಿಗೆಯಿಲ್ಲ. ಆದರೂ ರಾಹುಲ್ ಗಾಂಧಿ ಬಗ್ಗೆ ನನಗೆ ಅನುಕಂಪವಿದೆ ಎಂದಿದ್ದಾರೆ. ಮತ್ತೆ ಮುಂದುವರಿದು ಆ ದೇವರು ರಾಹುಲ್ ಗಾಂಧಿಗೆ ಯಾಕೆ ಬುದ್ದಿ ಕೊಡಲಿಲ್ಲ? ಮುಂದಿನ ಜನ್ಮದಲ್ಲಿ ದೇವರು ಅವರಿಗೆ ಬುದ್ದಿ ಶಕ್ತಿ ನೀಡಲಿ. ಆದರೆ ರಾಹುಲ್ ಗಾಂಧಿ ಈಗ ಒಬ್ಬ ಬುದ್ಧಿಮಾಂದ್ಯ ವ್ಯಕ್ತಿಯಾಗಿದ್ದಾರೆ. ಆದರೆ ಆತನ ತಾಯಿಗೆ ಆತನನ್ನು ಕಂಡರೆ ಬಲು ಇಷ್ಟ. ನನ್ನ ಮಗ ಬುದ್ದಿವಂತ ಎಂದು ಅಂದುಕೊಂಡಿದ್ದಾರೆ ಎಂದು ಮಾತನಾಡಿದ್ದಾರೆ.
Gold Rate Today: ಚಿನ್ನದ ಬೆಲೆ ದಿಢೀರನೆ 40 ರೂ. ಏರಿಕೆ; ಇಷ್ಟಿದೆ ಇಂದಿನ ದರ
Gold Rate Today: ಬೆಂಗಳೂರಿನಲ್ಲಿ ಸೋಮವಾರ ಚಿನ್ನದ ಬೆಲೆ ದಿಢೀರನೆ ಜಾಸ್ತಿಯಾಗಿದೆ. ಹಾಗಾಗಿ, ಇಂದು ಚಿನ್ನ ಖರೀದಿಸುವವರಿಗೆ ಬೆಲೆಯು ತುಸು ಹೆಚ್ಚೇ ಹೊರೆಯಾಗಲಿದೆ. The post Gold Rate Today: ಚಿನ್ನದ ಬೆಲೆ ದಿಢೀರನೆ 40 ರೂ. ಏರಿಕೆ; ಇಷ್ಟಿದೆ ಇಂದಿನ ದರ first appeared on Vistara News .
ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ನಿರ್ಮಾಣವಾಗುತ್ತಿದೆ ವಿಶ್ವದ ಮೊದಲ ಎಲ್ಇಡಿ ತಾರಾಲಯ
ಮೈಸೂರು: ಗ್ರಹ, ನಕ್ಷತ್ರಗಳ ಅಧ್ಯಯನಕ್ಕೆ ವಿದ್ಯಾರ್ಥಿಗಳನ್ನು ಆಕರ್ಷಿಸಿ ಉದಯೋನ್ಮುಖ ಖಗೋಳಶಾಸ್ತ್ರಜ್ಞರು, ಸಂಶೋಧಕರಿಗೆ ನೆರವಾಗಲು ಚಾಮುಂಡಿಬೆಟ್ಟದ ತಪ್ಪಲಿನಲ್ಲಿ ನಿರ್ಮಿಸುತ್ತಿರುವ ವಿಶ್ವದ ಮೊದಲ ಎಲ್ಇಡಿ ಗುಮ್ಮಟ (ತಾರಾಲಯ) ನಿರ್ಮಾಣ ಕಾಮಗಾರಿ ಬಿರುಸಿನಿಂದ ಸಾಗಿದೆ. ಮೈಸೂರು ವಿಶ್ವವಿದ್ಯಾನಿಲಯದ ಚಾಮುಂಡಿಬೆಟ್ಟದ ಕ್ಯಾಂಪಸ್ನಲ್ಲಿ ಕಾಸಾಲಜಿ ಶಿಕ್ಷಣ ಮತ್ತು ಸಂಶೋಧನಾ-ತರಬೇತಿ ಕೇಂದ್ರದ ನಿರ್ಮಾಣವು ಗಮನಾರ್ಹ ಪ್ರಗತಿಯನ್ನು ಸಾಧಿಸುತ್ತಿದೆ. 2022ರಲ್ಲಿ ಆರಂಭವಾದ ಕಾಮಗಾರಿಯೂ 2024ರಲ್ಲಿ ಪೂರ್ಣಗೊಳ್ಳಲಿದೆ. ಎಲ್ಇಡಿ ಡೋಮ್ನ ಅಭಿವೃದ್ಧಿ ಮತ್ತು ಸಿವಿಲ್ ನಿರ್ಮಾಣ ಕೆಲಸವು ಪ್ರಗತಿಯಲ್ಲಿದೆ. 8ಕೆ ರೆಸಲ್ಯೂಶನ್ ಹೊಂದಿರುವ ಹೈಟೆಕ್ 15-ಮೀಟರ್ ಎಲ್ಇಡಿ ಗುಮಟ ತಾರಾಲಯವು ವಿಶ್ವದ ಮೊದಲ ಗುಮ್ಮಟ ತಾರಾಲಯ ಎಂಬ ಪ್ರಸಿದ್ಧಿಗೆ ಪಾತ್ರವಾಗಲಿದೆ. 8ಕೆ ರೆಸಲ್ಯೂಶನ್ ಹೊಂದಿರುವ ಕಾಸೊಸ್ ಹೈಟೆಕ್ 15-ಮೀಟರ್ ಎಲ್ಇಡಿ ಗುಮ್ಮಟ ತಾರಾಲಯವು ವಿಶ್ವದ ಮೊದಲ ಓರೆಯಾದ ಎಲ್ಇಡಿ ಗುಮ್ಮಟ ತಾರಾಲಯವಾಗಿದೆ. ಅಂದಾಜು 86 ಕೋಟಿ ರೂ. ಆಯವ್ಯಯದೊಂದಿಗೆ ಈ ಯೋಜನೆಯು ನಿರ್ಮಾಣ ಮತ್ತು ಕಾರ್ಯಾಚರಣೆಗಾಗಿ ಮೈಸೂರು ವಿಶ್ವವಿದ್ಯಾನಿಲಯದೊಂದಿಗೆ ಒಪ್ಪಂದದ ಮೂಲಕ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಆಸ್ಟ್ರೋಫಿಸಿಕ್ಸ್ ಮೂಲಕ ಕಾರ್ಯಗತಗೊಳಿಸಲಾಗಿದೆ. ಎಲ್ಇಡಿ ಗುಮಟವನ್ನು ಕೊನಿಕಾ-ಮಿನೋಲ್ಟಾ (ಜಪಾನ್), ಆಎರ್ಸ್ ಎ-ಕಾಸೊಸ್ (ಫ್ರಾನ್ಸ್) ಮತ್ತು ಮೆಸರ್ಸ್ ಆರ್ಬಿಟ್-ಅನಿಮೇಟ್ (ಇಂಡಿಯಾ) ಕನ್ಸೋರ್ಟಿಯಂ ಅಭಿವೃದ್ಧಿಪಡಿಸುತ್ತಿವೆ. ಎಲ್ಇಡಿ ಗುಮ್ಮಟ: ಪ್ರಪಂಚದಾದ್ಯಂತ ಹೆಚ್ಚಿನ ತಾರಾಲಯಗಳು ಚಿತ್ರಗಳನ್ನು ಮತ್ತು ಚಲನಚಿತ್ರಗಳನ್ನು ನಿಷ್ಕ್ರಿಯ ಗುಮಟದ ಮೇಲೆ ಬಿತ್ತರಿಸಲು ಪ್ರೊಜೆಕ್ಟರ್ ಅವಲಂಬಿಸಿವೆ. ಮೈಸೂರಿನಲ್ಲಿ ಸ್ಥಾಪಿಸುತ್ತಿರುವ ತಾರಾಲಯದಲ್ಲಿ ಪ್ರೊಜೆಕ್ಟರ್ ಬಳಸುತ್ತಿಲ್ಲ. ಬದಲಾಗಿ ಗುಮಟವನ್ನು ಎಲ್ಇಡಿ ದೀಪಗಳ ಫಲಕಗಳಿಂದ ನಿರ್ಮಿಸಲಾಗುವುದು. ಅದು ಕಂಪ್ಯೂಟರ್ ಸಿಸ್ಟಂನಿಂದ ನಿಯಂತ್ರಿಸಲ್ಪಡುತ್ತದೆ. ಅತ್ಯಾಧುನಿಕ ತಾರಾಲಯ ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗೆ ಡೇಟಾ ವಿಶ್ಲೇಷಣೆ ತರಬೇತಿ ಮತ್ತು ಸಂಪನ್ಮೂಲ ಕೇಂದ್ರವನ್ನು ಒಳಗೊಂಡಿರುತ್ತದೆ. ಇಲ್ಲಿ ಕಾಲೇಜು-ಶಾಲಾ ವಿದ್ಯಾರ್ಥಿಗಳಿಗೆ ಖಗೋಳಶಾಸ್ತ್ರದ ಮಾತುಕತೆ, ದತ್ತಾಂಶ ವಿಶ್ಲೇಷಣೆ ಕಾರ್ಯಾಗಾರ, ಗಾಮೀಣ ಶಾಲೆಗಳಿಗೆ ಶೈಕ್ಷಣಿಕ ನೆರವು, ಸಾರ್ವಜನಿಕರಿಗೆ ದೂರದರ್ಶಕ ವೀಕ್ಷಣೆ ಮಾಡಬಹುದಾಗಿದೆ. 5 ಕೋಟಿ ರೂ. ಅನುದಾನ ಮೈಸೂರಿನಲ್ಲಿ ತಾರಾಲಯ ನಿರ್ಮಾಣಕ್ಕೆ ಕೇಂದ್ರದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ತಮ್ಮ ಸಂಸದರ ನಿಧಿಯಿಂದ 5 ಕೋಟಿ ರೂ. ಅನುದಾನ ನೀಡುವ ಮೂಲಕ ವಿನಿಯೋಗಿಸಿದ್ದಾರೆ ಮತ್ತು ಮಾರ್ಚ್ 2022ರಲ್ಲಿ ಶಿಲಾನ್ಯಾಸ ನೆರವೇರಿಸಿದ್ದರು. ಕರ್ನಾಟಕದ ಯುವಜನರಲ್ಲಿ ಬಾಹ್ಯಾಕಾಶ ಮತ್ತು ವಿಶ್ವ ವಿಜ್ಞಾನದ ಬಗ್ಗೆ ಆಸಕ್ತಿಯನ್ನು ಬೆಳೆಸಲು ಡಿಜಿಸ್ಟಾರ್ 7 ತಾರಾಲಯವನ್ನು ಸ್ಥಾಪಿಸುವ ಕಲ್ಪನೆಯಲ್ಲಿ ಅವರು ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಚಾಮುಂಡಿಬೆಟ್ಟದ ತಪ್ಪಲಿನ ಮೈಸೂರು ವಿವಿ ಕ್ಯಾಂಪಸ್ನ 3 ಎಕರೆ ಜಾಗದಲ್ಲಿ ನಿರ್ಮಾಣವಾಗುತ್ತಿರುವ ವಿಶ್ವದ ಮೊದಲ ಅತ್ಯಾಧುನಿಕ ತಾರಾಲಯ ಕಟ್ಟಡ ನಿರ್ಮಾಣ ಕಾಮಗಾರಿ 2024ರ ಆಗಸ್ಟ್ನಲ್ಲಿ ಪೂರ್ಣಗೊಳ್ಳಲಿದೆ. ಅನನ್ಯ ಶೈಕ್ಷಣಿಕ ಮತ್ತು ತರಬೇತಿ ಕಾರ್ಯಕ್ರಮಗಳನ್ನು ಸಂಘಟಿಸಲು ಉತ್ಸುಕರಾಗಿದ್ದೇವೆ. <ಪ್ರೊ.ಅನ್ನಪೂರ್ಣಿ ಸುಬ್ರಹ್ಮಣ್ಯಂ, ಭಾರತೀಯ ಖಗೋಳ ಭೌತಶಾಸ್ತ್ರ ಸಂಸ್ಥೆಯ ನಿರ್ದೇಶಕಿ
CP Yogeshwar : ಸಿ.ಪಿ ಯೋಗೇಶ್ವರ್ ಬಾವನ ಕಾರಿನ ಡಿಕ್ಕಿಯಲ್ಲಿ ನೆತ್ತರ ಕಲೆ; ನಡೆದಿದ್ಯಾ ಕೊಲೆ?
CP Yogeshwar : ಮೂರು ದಿನಗಳ ಹಿಂದೆ ನಾಪತ್ತೆಯಾಗಿದ್ದ ಸಿ.ಪಿ. ಯೋಗೇಶ್ವರ್ ಅವರ ಬಾವ ಮಹದೇವಯ್ಯ ಅವರ ಕಾರು ಪತ್ತೆಯಾಗಿದೆ, ಅದರಲ್ಲಿ ರಕ್ತದ ಕಲೆಗಳಿವೆ. ಹೀಗಾಗಿ ಹಲವು ಅನುಮಾನಗಳು ಹುಟ್ಟಿಕೊಂಡಿವೆ. The post CP Yogeshwar : ಸಿ.ಪಿ ಯೋಗೇಶ್ವರ್ ಬಾವನ ಕಾರಿನ ಡಿಕ್ಕಿಯಲ್ಲಿ ನೆತ್ತರ ಕಲೆ; ನಡೆದಿದ್ಯಾ ಕೊಲೆ? first appeared on Vistara News .
ಕೋಮು ದ್ವೇಷದ ಹಿಂದುತ್ವವನ್ನು ಸೋಲಿಸಿದ ಕರ್ನಾಟಕದ ಗ್ಯಾರಂಟಿ ಎಂಬ ಜನಕಲ್ಯಾಣದ ಕಾರ್ಯಕ್ರಮಗಳನ್ನು ನೋಡಿ ತನ್ನ ಚುನಾವಣಾ ತಂತ್ರಗಳನ್ನು ಬದಲಿಸಿಕೊಂಡ ಬಿಜೆಪಿ ನಾಲ್ಕು ರಾಜ್ಯಗಳಲ್ಲಿ ಈಗ ಮಹಿಳೆಯರಿಗೆ ಮಾಸಾಶನ, ಉಚಿತ ಆಹಾರ ಧಾನ್ಯ, ಉಚಿತ ವಿದ್ಯುತ್ ನೀಡಲು ಹೊರಟಿದೆ. ನಾಗಪುರ ಶಾಲೆಯ ಪಾಠ ಎಲ್ಲ ಸಂದರ್ಭಗಳಲ್ಲೂ ಉಪಯೋಗಕ್ಕೆ ಬರುವುದಿಲ್ಲ ಎಂದು ಅರಿತ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಕರ್ನಾಟಕ ಕಾಂಗ್ರೆಸ್ನ ಗೆಲುವಿನ ತಂತ್ರಗಳನ್ನು ಮಾದರಿಯಾಗಿಟ್ಟುಕೊಂಡು ಹೊಸ ರಾಜಕಾರಣ ಮಾಡಲು ಹೊರಟಿದ್ದಾರೆ.
ಸರ್ಕಾರ ರಚನೆಗೆ ಹಕ್ಕು ಮಂಡಿಸಲು ತೆಲಂಗಾಣ ರಾಜ್ಯಪಾಲರನ್ನು ಭೇಟಿಯಾದ ಕಾಂಗ್ರೆಸ್
ಹೈದರಾಬಾದ್: ತೆಲಂಗಾಣದ 119 ಸ್ಥಾನಗಳ ಪೈಕಿ 64 ಸ್ಥಾನಗಳನ್ನು ಗೆದ್ದಿರುವ ಕಾಂಗ್ರೆಸ್ ರಾಜ್ಯ ಘಟಕದ ಮುಖ್ಯಸ್ಥ ರೇವಂತ್ ರೆಡ್ಡಿ ಮತ್ತು ಕರ್ನಾಟಕದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ರವಿವಾರ ರಾತ್ರಿ ರಾಜ್ಯಪಾಲರನ್ನು ಭೇಟಿ ಮಾಡಿ ರಾಜ್ಯದಲ್ಲಿ ಸರ್ಕಾರ ರಚನೆಗೆ ಹಕ್ಕು ಮಂಡಿಸಿದ್ದಾರೆ. ಶನಿವಾರ, ಶಿವಕುಮಾರ್ ಅವರನ್ನು ತೆಲಂಗಾಣ ರಾಜ್ಯ ಶಾಸಕಾಂಗ ಪಕ್ಷದ ಸಭೆಗೆ ವೀಕ್ಷಕರನ್ನಾಗಿ ನೇಮಿಸಲಾಗಿತ್ತು. ಮತ ಎಣಿಕೆಗೆ ಮುಂಚಿತವಾಗಿ ತನ್ನ ಶಾಸಕರನ್ನು ಒಟ್ಟಾಗಿ ಇರಿಸಲು ಕಾಂಗ್ರೆಸ್ ಸಿದ್ಧತೆ ನಡೆಸಿತ್ತು. ರಾಜ್ಯಪಾಲ ತಮಿಳಿಸೈ ಸೌಂದರರಾಜನ್ ಅವರನ್ನು ಭೇಟಿ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಡಿಕೆ ಶಿವಕುಮಾರ್, ಈ ಹೊಸ ಚುನಾಯಿತ ಸದನದಲ್ಲಿ ನಾವು 65 ಸದಸ್ಯರೊಂದಿಗೆ ಸರ್ಕಾರ ರಚಿಸಲು ಹಕ್ಕು ಸಾಧಿಸಿದ್ದೇವೆ. ನಾವು ನಾಳೆ ಬೆಳಿಗ್ಗೆ 9.30 ಕ್ಕೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯನ್ನು ಕರೆದಿದ್ದೇವೆ ಎಂದು ಹೇಳಿದರು.
ಸುಳ್ಯ ಗಡಿಗ್ರಾಮಗಳಲ್ಲಿ ನಿರಂತರ ಆನೆಗಳ ಉಪಟಳ
ಸುಳ್ಯ: ದ.ಕ. ಜಿಲ್ಲೆಯ ಹಲವೆಡೆ ಕಾಡಾನೆಗಳ ಹಾವಳಿ ವಿಪರೀತವಾಗುತ್ತಿದ್ದು, ರೈತರು ತಾವು ಬೆಳೆದ ಬೆಳೆಗಳನ್ನು ರಕ್ಷಿಸಲು ಹರಸಾಹಸ ಪಡಬೇಕಾದ ಪರಿಸ್ಥಿತಿ ಇದೆ. ಹಾಗಿದ್ದರೂ ಅರಣ್ಯ ಇಲಾಖೆ ಸಕಾಲಕ್ಕೆ ರೈತರ ನೆರವಿಗೆ ಧಾವಿಸುತ್ತಿಲ್ಲ ಎಂಬುದು ಸಂತ್ರಸ್ತರ ಅಳಲು. ಪಕ್ಕದ ರಾಜ್ಯ ಕೇರಳದಲ್ಲಿ ಅರಣ್ಯ ಇಲಾಖೆ ರೈತರ ಸಂಕಷ್ಟಕ್ಕೆ ಕ್ಷಿಪ್ರಗತಿಯಲ್ಲಿ ಸ್ಪಂದಿಸಲು ಸಾಧ್ಯವಾಗುವುದಾದರೆ ಕರ್ನಾಟಕದಲ್ಲಿ ಏಕೆ ಸಾಧ್ಯವಾಗುತ್ತಿಲ್ಲ ಎಂಬುದು ಈ ಭಾಗದ ರೈತರ ಪ್ರಶ್ನೆ. ಕೇರಳದಲ್ಲಿ ರ್ಯಾಪಿಡ್ ರೆಸ್ಪಾನ್ಸ್ ಟೀಂ (ಆರ್ಆರ್ಪಿ) ಎಂಬ ತಂವವೊಂದು ಸರಕಾರದ ವತಿಯಿಂದಲೇ ಕಾರ್ಯಾಚರಿಸುತ್ತಿದ್ದು, ಈ ತಂಡದ ಸದಸ್ಯರು ಆನೆಗಳು ರೈತರ ಕೃಷಿ ತೋಟಕ್ಕೆ ನುಗ್ಗಲೆತ್ನಿಸುವಾಗಲೇ ಸ್ಥಳಕ್ಕೆ ಧಾವಿಸಿ ಅವುಗಳನ್ನು ಮತ್ತೆ ಕಾಡಿಗೆ ಅಟ್ಟುತ್ತಾರೆ. ಕೇರಳದಲ್ಲಿ ಆನೆಗಳು ಕೃಷಿ ಬೆಳೆಗಳನ್ನು ನಾಶ ಪಡಿಸುವಾಗ ರೈತರಿಗಿಂತಲೂ ಮುಂದೆ ನಿಂತು ಅರಣ್ಯಾಧಿಕಾರಿಗಳು ಕಾರ್ಯಾಚರಣೆಯಲ್ಲಿ ತೊಡಗಿದರೆ ಕರ್ನಾಟಕದಲ್ಲಿ ಇದಕ್ಕೆ ವ್ಯತಿರಿಕ್ತ ಪರಿಸ್ಥಿತಿ ಇದೆ ಎನ್ನುತ್ತಾರೆ ಇಲ್ಲಿನ ರೈತರು. ಕೇರಳದ ಗಡಿ ಹಂಚಿಕೊಂಡಿರುವ ಆಲೆಟ್ಟಿ, ಮಂಡೆಕೋಲು ಗ್ರಾಮಗಳಲ್ಲಿ ಕೃಷಿಕರು ಆನೆಗಳನ್ನು ತಮ್ಮ ತೋಟದಿಂದ ಅಟ್ಟಿ ಕೇರಳಕ್ಕೆ ಹಾಗೂ ಕೇರಳ ಭಾಗದ ರೈತರು ಕರ್ನಾಟಕದ ಗಡಿಯಂಚಿಗೆ ಅಟ್ಟುವುದರಿಂದ ಆನೆಗಳು ಒಂದರ್ಥದಲ್ಲಿ ಕಾಲ್ಚೆಂಡಿನಂತಾಗಿವೆ. ಹಾಗಿದ್ದರೂ ಇಲ್ಲಿನ ಅರಣ್ಯ ಇಲಾಖೆ ಹೆಚ್ಚು ಮುತುವರ್ಜಿ ವಹಿಸದ ಕಾರಣ ವರ್ಷದ ಹೆಚ್ಚಿನ ಸಮಯದಲ್ಲಿ ಆನೆಗಳು ಕರ್ನಾಟಕದ ರೈತರಿಗೇ ಹೆಚ್ಚು ತೊಂದರೆ ಕೊಡುತ್ತಿರುವುದು ಸುಳ್ಳಲ್ಲ. ದ.ಕ ಜಿಲ್ಲೆಯ ಬೆಳ್ತಂಗಡಿ, ಕಡಬ ಹಾಗೂ ಸುಳ್ಯ ತಾಲೂಕಿನ ಹಲವೆಡೆ ಹೆಚ್ಚಿನ ಸಂಖ್ಯೆಯಲ್ಲಿ ಆನೆಗಳು ರೈತರ ಕೃಷಿ ತೋಟಕ್ಕೆ ದಾಂಗುಡಿ ಇಡುತ್ತಲೇ ಇರುತ್ತವೆ. ಅದೆಷ್ಟೋ ವರ್ಷಗಳಿಂದ ಜತನವಾಗಿ ಕಾದು ಅಡಿಕೆ, ತೆಂಗು, ಬಾಳೆಗಳನ್ನು ಬೆಳೆಸುವ ರೈತರಿಗೆ ಕಾಡಾನೆಗಳ ದಾಂಧಲೆ ಕೈಗೆ ಬಂದ ತುತ್ತು ಬಾಯಿಗಿಲ್ಲದಂತಾಗುವ ಪರಿಸ್ಥಿತಿ ಇದೆ. ಹೆಚ್ಚಿನ ಕೃಷಿ ತೋಟಗಳು ಅರಣ್ಯ ಭಾಗಕ್ಕೆ ತಾಗಿಕೊಂಡೇ ಇರುವ ಕಾರಣ ಈ ಉಪಟಳ ಸರ್ವೇ ಸಾಮಾನ್ಯ ಎಂಬಂತಾಗಿದೆ. ಕಾಡುಪ್ರಾಣಿಗಳ ಉಪಟಳದ ಬಗೆಗಿನ ರೈತರ ಮೊರೆಗೆ ಶೀಘ್ರ ಸ್ಪಂದಿಸಬೇಕೆಂಬ ಸರಕಾರದ ಆದೇಶ ಇದ್ದರೂ ಅರಣ್ಯ ಇಲಾಖೆಯ ಮೇಲಾಧಿಕಾರಿಗಳು ಕೆಳಸ್ತರದ ಅಧಿಕಾರಿಗಳಿಗೆ ಸೂಚನೆ ನೀಡುತ್ತಾರೆ. ಆದರೆ ದೂರು ಬಂದ ರೈತರ ತೋಟದ ಸನಿಹಕ್ಕೆ ಸುಳಿಯದ ಅಧಿಕಾರಿಗಳು, ತಾತ್ಕಾಲಿಕ ನೆಲೆಯಲ್ಲಿ ಕೆಲಸ ಮಾಡುವ ಅರಣ್ಯ ವೀಕ್ಷಕರನ್ನು ಸ್ಥಳಕ್ಕೆ ತೆರಳುವಂತೆ ಸೂಚಿಸುತ್ತಾರೆ. ಆದರೆ, ಆನೆಗಳನ್ನು ಅಟ್ಟಲು ರಾತ್ರಿ ವೇಳೆ ಒಬ್ಬಂಟಿ ಅರಣ್ಯ ವೀಕ್ಷಕರು ಸ್ಥಳಕ್ಕೆ ತೆರಳಲು ಹಿಂಜರಿಯುತ್ತಾರೆ. ಜೊತೆಗೆ ಆನೆಗಳನ್ನು ಹಿಮ್ಮೆಟ್ಟಿಸಲು ಇಲಾಖೆಯಲ್ಲಿ ಇರಲೇ ಬೇಕಾದ ಸೌಲಭ್ಯಗಳ ಕೊರತೆಯೂ ಇದಕ್ಕೆ ಪ್ರಮುಖ ಕಾರಣ. ► ಶಾಶ್ವತ ಪರಿಹಾರಕ್ಕೆ ರೈತರ ಮೊರೆ ಹಾಗೆಂದು ರೈತರ ಕೂಗಿಗೆ ಅರಣ್ಯ ಇಲಾಖೆ ಸ್ಪಂದಿಸುತ್ತಲೇ ಇಲ್ಲ ಎಂಬುದು ಸರಿಯಲ್ಲ. ಅರಣ್ಯ ಇಲಾಖೆಯ ವತಿಯಿಂದ ಆನೆ ನಿರೋಧಕ ಸೋಲಾರ್ ಬೇಲಿ, ಕಾಂಕ್ರಿಟ್ ಬೇಲಿ, ಕಂದಕಗಳ ನಿರ್ಮಾಣ, ರೈಲ್ವೆ ಹಳಿಯ ಬೇಲಿ .., ಹೀಗೆ ಹತ್ತು ಹಲವು ಯೋಜನೆಗಳ ಮುಖಾಂತರ ರೈತರ ನೆರವಿಗೆ ಧಾವಿಸಿದೆ. ಜೊತೆಗೆ ಬೆಳೆ ನಾಶಗೊಂಡರೆ ಅದಕ್ಕೆ ಸಣ್ಣ ಮೊತ್ತದ ಪರಿಹಾರಧನವನ್ನೂ ವಿತರಿಸುತ್ತದೆ. ಇವಿಷ್ಟೇ ಅಲ್ಲ ಕಾಡಾನೆಗಳ ಉಪಟಳ ತಡೆಗಟ್ಟಲು ಶಾಶ್ವತ ಪರಿಹಾರ ಕಲ್ಪಿಸಬೇಕು ಎಂಬುದು ರೈತರ ಬೇಡಿಕೆಯಾಗಿದೆ. ► ಅರಣ್ಯ ಇಲಾಖೆ ಯಲ್ಲಿ ಸಿಬ್ಬಂದಿ ಕೊರತೆ: ಮಂಗಳೂರು ಅರಣ್ಯ ವಲಯಕ್ಕೆ ಸಂಬಂಧಪಟ್ಟಂತೆ ಮಂಜೂರಾಗಿರುವ ಒಟ್ಟು 62 ಅರಣ್ಯ ವೀಕ್ಷಕರ(ವಾಚರ್) ಪೈಕಿ ಖಾಯಂಗೊಂಡ ವೀಕ್ಷಕರಿರುವುದು ಇಬ್ಬರು ಮಾತ್ರ. ಮಂಜೂರಾಗಿರುವ ಒಟ್ಟು ಗಾರ್ಡ್ಗಳ ಪೈಕಿ ಇಲಾಖೆಯಿಂದ ನೇಮಕಗೊಂಡಿರುವ ಗಾರ್ಡ್ ಗಳು ಇರುವುದು ಕೇವಲ 85 ಮಾತ್ರ. ಈ ಸಿಬ್ಬಂದಿ ಕೊರತೆಯ ಕಾರಣ ಮಾನವ-ಪ್ರಾಣಿ ಸಂಘರ್ಷದ ಪ್ರಕರಣಗಳಲ್ಲಿ ಅರಣ್ಯ ಇಲಾಖೆಯಿಂದ ಸೂಕ್ತ ಸ್ಪಂದನ ಸಾಧ್ಯವಾಗುತ್ತಿಲ್ಲ ಎಂಬುದು ರೈತರ ಅಳಲು. ಸರಕಾರ ರೈತರ ಈ ಸಮಸ್ಯೆಯನ್ನು ಪರಿಹರಿಸಲು ತಕ್ಷಣ ಕಾರ್ಯೋನ್ಮುಖವಾಗಬೇಕು ಎಂದು ರೈತರ ಆಗ್ರಹವಾಗಿದೆ. ಪಕ್ಕದ ಕೇರಳ ರಾಜ್ಯಕ್ಕೆ ಹೋಲಿಸಿದರೆ ಕರ್ನಾಟಕದಲ್ಲಿ ರಾಪಿಡ್ ರೆಸ್ಪಾನ್ಸ್ ಟೀಂ ನಂತಹ ಪರಿಣಾಮಕಾರಿ ತಂಡ ಇಲ್ಲ ನಿಜ. ಹಾಗಿದ್ದರೂ ಲಭ್ಯವಿರುವ ವ್ಯವಸ್ಥೆಯಡಿ ಆನೆ ಮುಂತಾದ ವನ್ಯ ಮೃಗಗಳಿಂದ ರೈತರ ಕೃಷಿ ಬೆಳೆಗಳನ್ನು ರಕ್ಷಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಉಳಿದಂತೆ ಆನೆಗಳ ಉಪಟಳ ತಡೆಯಲು ಸೋಲಾರ್ ಬೇಲಿ, ಕಂದಕಗಳ ನಿರ್ಮಾಣ, ಕಾಂಕ್ರಿಟ್ ಬೇಲಿಗಳ ನಿರ್ಮಾಣವನ್ನು ಮಾಡಲಾಗುತ್ತಿದೆ. ಆನೆಗಳು ರೈತರ ಕೃಷಿ ಭೂಮಿಗೆ ದಾಳಿ ಇಡುವ ಸಂದರ್ಭ ಅರಣ್ಯ ಇಲಾಖಾ ಅಧಿಕಾರಿಗಳು ಇತರ ಸಿಬ್ಬಂದಿ ಜೊತೆ ಸ್ಥಳಕ್ಕೆ ಅಗತ್ಯ ತೆರಳುವಂತೆ ಸೂಚನೆ ನೀಡಲಾಗುವುದು. ► ಅಂತೋನಿ ಎಸ್. ಮರಿಯಪ್ಪ, ಉಪ ಅರಣ್ಯ ಸಂರಕ್ಷಣಾಧಿಕಾರಿ, ಮಂಗಳೂರು ಆನೆಗಳ ನಿರಂತರ ಉಪಟಳದಿಂದಾಗಿ ಇತ್ತೀಚೆಗೆ ಕೃಷಿ ಬೆಳೆಗಳನ್ನು ರಕ್ಷಿಸಿಕೊಳ್ಳುವುದು ಸವಾಲಾಗಿ ಪರಿಣಮಿಸಿದೆ. ಹಗಲು ಮಂಗಗಳ ಹಾವಳಿಯಾದರೆ, ರಾತ್ರಿ ಆನೆಗಳ ದಾಳಿ ತಡೆಯಲು ನಿದ್ದೆಗೆಡುವ ಪರಿಸ್ಥಿತಿ ಉಂಟಾಗಿದೆ. ಅರಣ್ಯ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಇದ್ದರೆ ಕೂಡಲೇ ಸಮರ್ಪಕ ಸಿಬ್ಬಂದಿಯನ್ನು ನೇಮಕಗೊಳಿಸಿ ರೈತರ ನೆರವಿಗೆ ಬಂದರಷ್ಟೇ ಬಡ ರೈತರು ಬದುಕಲು ಸಾಧ್ಯ. ► ಧನಂಜಯ ಪಡ್ಪು, ಕೃಷಿಕ
ಭಾರತೀಯ ವಾಯುಪಡೆಯ ತರಬೇತಿ ವಿಮಾನ ಪತನ
ಮೇದಕ್: ಭಾರತೀಯ ವಾಯುಪಡೆಯ (ಐಎಎಫ್) ತರಬೇತಿ ವಿಮಾನವು ತೂಪ್ರಾನ್ನ ರಾವೆಲ್ಲಿ ಗ್ರಾಮದ ಹೊರವಲಯದಲ್ಲಿ ಸೋಮವಾರ ಬೆಳಗ್ಗೆ ಪತನಗೊಂಡಿದೆ. ವಿಮಾನದಲ್ಲಿ ಎಷ್ಟು ಮಂದಿ ಇದ್ದರು ಎಂಬುದು ತಕ್ಷಣಕ್ಕೆ ಖಚಿತವಾಗಿಲ್ಲ. ಅಪಘಾತದ ನಂತರ ವಿಮಾನಕ್ಕೆ ಬೆಂಕಿ ಹೊತ್ತಿಕೊಂಡಿದ್ದು , ಕೆಲವೇ ನಿಮಿಷಗಳಲ್ಲಿ ವಿಮಾನವು ಸುಟ್ಟು ಬೂದಿಯಾಗಿದೆ. ಸ್ಥಳೀಯ ಪೊಲೀಸರು ಸ್ಥಳಕ್ಕೆ ಆಗಮಿಸಿ ಐಎಎಫ್ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಪೈಲಟ್ ವಿಮಾನದಿಂದ ಹೊರಗೆ ಜಿಗಿದಿದ್ದಾರೆಯೇ ಎಂಬುದು ಪೊಲೀಸರಿಗೆ ಖಚಿತವಾಗಿಲ್ಲ.
ಸಿ.ಪಿ.ಯೋಗೇಶ್ವರ್ ಬಾವ ಮಹದೇವಯ್ಯ ಅಪಹರಣ ಪ್ರಕರಣ: ಚಾಮರಾಜನಗರದಲ್ಲಿ ಕಾರು ಪತ್ತೆ
ಚಾಮರಾಜನಗರ, ಡಿ.4: ಮೂರು ದಿನಗಳ ಹಿಂದೆ ರಾಮನಗರ ಜಿಲ್ಲೆಯ ಚನ್ನಪಟ್ಟಣದಿಂದ ಅಪಹರಣಕ್ಕೀಡಾಗಿರುವ ಮಾಜಿ ಸಚಿವ ಹಾಗೂ ಹಾಲಿ ವಿಧಾನ ಪರಿಷತ್ ಬಿಜೆಪಿ ಸದಸ್ಯ ಸಿ.ಪಿ.ಯೋಗೇಶ್ವರ್ ಅವರ ಬಾವ ಮಹದೇವಯ್ಯರ ಕಾರು ಚಾಮರಾಜನಗರ ಜಿಲ್ಲೆಯಲ್ಲಿ ಪತ್ತೆಯಾಗಿದೆ. ಚನ್ನಪಟ್ಟಣ ತಾಲೂಕಿನ ಚಕ್ಕರೆ ಗ್ರಾಮದ ಮಹದೇವಯ್ಯ ಅವರು ತಮ್ಮ ತೋಟದ ಮನೆಯಿಂದ ಮೂರು ದಿನಗಳ ಹಿಂದೆ ಬಿಳಿ ಬಣ್ಣದ ಕಾರು ಸಮೇತ ಕಾಣೆಯಾಗಿದ್ದರು. ಅವರನ್ನು ಯಾರೋ ಅಪಹರಿಸಿರುವ ಶಂಕೆ ವ್ಯಕ್ತವಾಗಿದೆ. ಈ ಬಗ್ಗೆ ಚನ್ನಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಬಗ್ಗೆ ತನಿಖೆ ಕೈಗೆತ್ತಿಕೊಂಡ ಪೊಲೀಸರಿಗೆ ಹನೂರು ತಾಲೂಕಿನ ರಾಮಪುರ ಪೊಲೀಸ್ ಠಾಣೆ ಸಮೀಪದ ರಾಮಪುರ ಪ್ರಾಥಮಿಕ ಆರೋಗ್ಯ ಕೇಂದ್ರದ ಮುಂಭಾಗದಲ್ಲಿ ಶನಿವಾರ ರಾತ್ರಿ ಮಹದೇವಯ್ಯರ ಕಾರು ಪತ್ತೆಯಾಗಿದೆ. ಆದರೆ ಮಹದೇವಯ್ಯರ ಬಗ್ಗೆ ಮಾಹಿತಿ ಸಿಕ್ಕಿಲ್ಲ. ತನಿಖೆ ಮುಂದುವರೆದಿದೆ ಎಂದು ಸ್ಥಳಕ್ಕೆ ಧಾವಿಸಿರುವ ಚನ್ನಪಟ್ಟಣ ಗ್ರಾಮಾಂತರ ಠಾಣಾ ಪೊಲೀಸರು ತಿಳಿಸಿದ್ದಾರೆ.
ಮಿಝೋರಾಂ ಫಲಿತಾಂಶ: ಝೆಡ್ಪಿಎಂಗೆ ಮುನ್ನಡೆ; ಆಡಳಿತಾರೂಢ ಎಂಎನ್ಎಫ್ಗೆ ಹಿನ್ನಡೆ
ಹೊಸದಿಲ್ಲಿ: ನವೆಂಬರ್ 7ರಂದು ಮತದಾನ ನಡೆದ ಮಿಝೋರಾಂ ವಿಧಾನಸಭಾ ಚುನಾವಣೆಯ ಮತ ಎಣಿಕೆ ಕಾರ್ಯ ಪ್ರಗತಿಯಲ್ಲಿದ್ದು, ಆಡಳಿತಾರೂಢ ಎಂಎನ್ಎಫ್ ಆರಂಭಿಕ ಹಿನ್ನಡೆ ಗಳಿಸಿದೆ. 16 ಸ್ಥಾನಗಳಲ್ಲಿ ಮುನ್ನಡೆ ಸಾಧಿಸುವ ಮೂಲಕ ಝೆಡ್ಪಿಎಂ ಅಗ್ರಸ್ಥಾನಿಯಾಗಿದೆ. 40 ಸದಸ್ಯಬಲದ ವಿಧಾನಸಭೆಯ ಸದಸ್ಯರ ಪ್ರಸಕ್ತ ಅಧಿಕಾರಾವಧಿ ಈ ತಿಂಗಳ 17ರಂದು ಮುಕ್ತಾಯವಾಗಲಿದೆ. ಕಳೆದ ಚುನಾವಣೆಯಲ್ಲಿ ಎಂಎನ್ಎಫ್ 40 ಸ್ಥಾನಗಳ ಪೈಕಿ 28ನ್ನು ಗೆದ್ದುಕೊಂಡಿತ್ತು. 1987ರ ಫೆಬ್ರವರಿ 20ರಂದು ಅಸ್ತಿತ್ವಕ್ಕೆ ಬಂದ ಮಿಜೋರಾಂ ರಾಜ್ಯವನ್ನು ಪ್ರಸ್ತುತ ಮಿಜೋ ನ್ಯಾಷನಲ್ ಫ್ರಂಟ್ನ ಝೋರಂಥಂಗಾ ಸರ್ಕಾರ ಆಳುತ್ತಿದೆ. 2008ರ ಚುನಾವಣೆಯಲ್ಲಿ 1998ರಿಂದ ಅಧಿಕಾರದಲ್ಲಿದ್ದ ಎಂಎನ್ಎಫ್ ಅನ್ನು ಸೋಲಿಸಿತ್ತು. ಐದು ವರ್ಷದ ಬಳಿಕ ಕಾಂಗ್ರೆಸ್ 34 ಸ್ಥಾನವನ್ನು ಗೆದ್ದರೆ ಎಂಎನ್ಎಫ್ ಕೇವಲ 5 ಸ್ಥಾನಕ್ಕೆ ತೃಪ್ತಿಪಟ್ಟಿತ್ತು. ಇತ್ತೀಚಿನ ವರದಿಗಳು ಬಂದಾಗ ಝೆಡ್ಪಿಎಂ 16, ಎಂಎನ್ಎಫ್ 11, ಕಾಂಗ್ರೆಸ್ 9, ಬಿಜೆಪಿ 2 ಸ್ಥಾನಗಳಲ್ಲಿ ಮುನ್ನಡೆ ಗಳಿಸಿದೆ.
Bhavani Revanna : ಸಾಯೋಕೆ ನನ್ನ 1.5 ಕೋಟಿ ಕಾರೇ ಬೇಕಾ?; ಭವಾನಿ ರೇವಣ್ಣ ದರ್ಪಕ್ಕೆ ಎಲ್ಲೆಡೆ ಆಕ್ರೋಶ
Bhavani Revanna : ಭವಾನಿ ರೇವಣ್ಣ ಅವರ ರೌದ್ರಾವತಾರಕ್ಕೆ ಜನರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೈಕ್ ಕಾರಿಗೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದಾಗ ಸಂಯಮ ಕಳೆದುಕೊಂಡ ಅವರ ನಡೆ ಚರ್ಚೆಗೆ ಕಾರಣವಾಗಿದೆ. The post Bhavani Revanna : ಸಾಯೋಕೆ ನನ್ನ 1.5 ಕೋಟಿ ಕಾರೇ ಬೇಕಾ?; ಭವಾನಿ ರೇವಣ್ಣ ದರ್ಪಕ್ಕೆ ಎಲ್ಲೆಡೆ ಆಕ್ರೋಶ first appeared on Vistara News .
ಬೆಳಗಾವಿ ಅಧಿವೇಶನ: ಕಾಂಗ್ರೆಸ್ ಅನ್ನು ಇಕ್ಕಟ್ಟಿಗೆ ಸಿಲುಕಿಸಲು ವಿಪಕ್ಷ ಬಿಜೆಪಿ- ಜೆಡಿಎಸ್ ಬಳಿಯಿರುವ ಅಸ್ತ್ರಗಳಾವುವು?
ವಿರೋಧ ಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ಇದೀಗ ಜಂಟಿಯಾಗಿ ಆಡಳಿತ ಪಕ್ಷವಾಗಿರುವ ಕಾಂಗ್ರೆಸ್ ಪಕ್ಷವನ್ನು ಬೆಳಗಾವಿ ಅಧಿವೇಶನಲ್ಲಿ ಇಕ್ಕಟ್ಟಿಗೆ ಸಿಲುಕಿಸಲು ಸಜ್ಜಾಗಿ ನಿಂತಿವೆ. ಕಳೆದ ಅಧಿವೇಶನದಲ್ಲಿ ಆಡಳಿತದ ವೈಫಲ್ಯಗಳನ್ನು ಎತ್ತಿ ತೋರಿಸಲು ವಿರೋಧ ಪಕ್ಷದ ನಾಯಕನೇ ಇರಲಿಲ್ಲ. ಆದರೆ ಕೊನೆಗೂ ಬೆಳಗಾವಿ ಅಧಿವೇಶನಕ್ಕೂ ಮುನ್ನವೇ ಬಿಜೆಪಿ ತನ್ನ ವಿಪಕ್ಷ ನಾಯಕನನ್ನು ನೇಮಿಸಿದೆ. ಜೊತೆಗೆ ಜೆಡಿಎಸ್ ಮೈತ್ರಿ ಬಲವೂ ಜೊತೆಗಿದೆ. ಹೀಗಾಗಿ ಈ ಬಾರಿ ಅಧಿವೇಶನದಲ್ಲಿ ಪ್ರತಿಪಕ್ಷಗಳು ಕಾಂಗ್ರೆಸ್ ವಿರುದ್ಧ ಈ ಎಲ್ಲಾ ಅಸ್ತ್ರಗಳನ್ನು ಪ್ರಯೋಗಿಸುವ ಸಾಧ್ಯತೆಗಳಿವೆ.
ಸಂಪಾದಕೀಯ | ಶಾಲೆಗಳಿಗೆ ಬಾಂಬ್ ಬೆದರಿಕೆ: ಉನ್ನತ ತನಿಖೆ ಅಗತ್ಯ
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
BBK SEASON 10: ವಿನಯ್ಗಿಂತ ಸಂಗೀತಾಗೆ ಕೊಬ್ಬು ಜಾಸ್ತಿ; ಟಾನಿಕ್ ಕುಡಿಸಿದ ಮೇಲೆ ಒದ್ದಾಟ-ಗುದ್ದಾಟ!
BBK SEASON 10: ದುರಂಹಕಾರಕ್ಕೆ ಔಷಧ, ನಾಲಗೆ ಬಿಗಿ ಹಿಡಿಯಲು ಔಷಧ, ನಂಬಿಕೆ ದ್ರೋಹ ಮಾಡದಿರಲು ಔಷಧ, ನಾಲಿಗೆಗೆ ಲಗಾಮು ಹಾಕುವ ಔಷಧ ಹೆಸರಿನಲ್ಲಿ ಮನೆಯಲ್ಲಿ ತರಸಲಾಗಿತ್ತು. The post BBK SEASON 10: ವಿನಯ್ಗಿಂತ ಸಂಗೀತಾಗೆ ಕೊಬ್ಬು ಜಾಸ್ತಿ; ಟಾನಿಕ್ ಕುಡಿಸಿದ ಮೇಲೆ ಒದ್ದಾಟ-ಗುದ್ದಾಟ! first appeared on Vistara News .
BBK SEASON 10: ಬಿಗ್ ಬಾಸ್ ಇತಿಹಾಸದಲ್ಲೇ ಮೊದಲು; ಈ ವಾರ ನೋ ಎಲಿಮಿನೇಶನ್! ಸ್ನೇಹಿತ್- ಮೈಕಲ್ ಸೇಫ್!
BBK SEASON 10: ಈ ವಾರ ಮನೆಯೊಳಗೆ ಇಬ್ಬರು ವೈಲ್ಡ್ ಕಾರ್ಡ್ ಸ್ಪರ್ಧಿಗಳು ಬಂದಿದ್ದಾರೆ. ಮೊದಲ ವಾರ ಎಂಬ ಕಾರಣಕ್ಕೆ ಅವರು ನಾಮಿನೇಟ್ ಆಗಿರಲಿಲ್ಲ. ಹಾಗಾಗಿ, ಅವರಿಬ್ಬರು ಈ ವಾರ ಸೇಫ್. ಆದರೆ 50ಕ್ಕೂ ಹೆಚ್ಚು ದಿನ ಆಟ ಆಡಿಕೊಂಡು ಬಂದ ಸ್ನೇಹಿತ್ ಮತ್ತು ಮೈಕಲ್ ಅವರಲ್ಲಿ ಒಬ್ಬರು ಇದೇ ವಾರ ಮನೆಯಿಂದ ಆಚೆ ಹೋಗಬೇಕು ಎಂಬುದು ಸುದೀಪ್ಗೆ ಅಷ್ಟು ಸರಿ ಎನಿಸಲಿಲ್ಲ. The post BBK SEASON 10: ಬಿಗ್ ಬಾಸ್ ಇತಿಹಾಸದಲ್ಲೇ ಮೊದಲು; ಈ ವಾರ ನೋ ಎಲಿಮಿನೇಶನ್! ಸ್ನೇಹಿತ್- ಮೈಕಲ್ ಸೇಫ್! first appeared on Vistara News .
ಗಜೇಂದ್ರಗಡದ 11 ಕೆರೆಗಳಿಗೆ ಕೃಷ್ಣಾ ಬಿ ಸ್ಕೀಂ ಭಾಗ್ಯ!: ಬರದಿಂದ ತತ್ತರಿಸಿರುವ ಗ್ರಾಮಗಳಿಗೆ ವರ
ಮುಂಗಾರು, ಹಿಂಗಾರು ಮಳೆಗರೆರಡೂ ಕೈಕೊಟ್ಟಿರುವುದರಿಂದ ರಾಜ್ಯದಲ್ಲಿ ಚಳಿಗಾಲಕ್ಕೆ ಮುನ್ನವೇ ಬರ ಆವರಿಸಿದ್ದು ರೈತರು ಅಕ್ಷರಶಃ ತತ್ತರಿಸಿ ಹೋಗಿದ್ದಾರೆ, ಹೀಗಿರುವಾಗ ಗದಗ ಜಿಲ್ಲೆಯ ಗಜೇಂದ್ರಗಡ ತಾಲೂಕಿನ ರೈತರಲ್ಲಿ ಕೊಂಚ ಆಶಾಭಾವ ಮೂಡಿದೆ. ಇಲ್ಲಿನ 11 ಗ್ರಾಮಗಳ ಕೆರೆಗಳಿಗೆ ಕೃಷ್ಣಾ ಬಿ ಸ್ಕೀಂನ ನೀರು ಪ್ರವೇಶಿಸಿದೆ. ಕೃಷ್ಣಾಭಾಗ್ಯ ಜಲ ಮಂಡಳಿ ನಿಗಮದ ಬಿ ಸ್ಕೀಂನ 3ನೇ ಹಂತದ ಮೇಲ್ದಂಡೆ ಕೊಪ್ಪಳ ಏತ ನೀರಾವರಿ ಯೋಜನೆಯ ಫಲವಿದು.
ಮಿಝೋರಾಂನಲ್ಲಿ ಮತ ಎಣಿಕೆ ಆರಂಭ :ಆಡಳಿತಾರೂಢ ಎಂ ಎನ್ ಎಫ್ ಗೆ ಆರಂಭಿಕ ಮುನ್ನಡೆ
ಹೊಸದಿಲ್ಲಿ, ಡಿ ೪ : ಮಿಝೋರಾಂ ವಿಧಾನಸಭಾ ಚುನಾವಣೆಯ ಮತ ಎಣಿಕೆ ಸೋಮವಾರ ಬೆಳಗ್ಗೆ 8 ಗಂಟೆಗೆ ಆರಂಭವಾಗಿದ್ದು ಅಲ್ಲಿನ ಆಡಳಿತಾರೂಢ ಎಂ ಎನ್ ಎಫ್ 4 ಸ್ಥಾನಗಳಲ್ಲಿ ಹಾಗು ಝಡ್ ಪಿ ಎಂ 3 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿರುವುದಾಗಿ ವರದಿ ಬಂದಿದೆ. ಇದು ಆರಂಭಿಕ ಮುನ್ನಡೆ ಮಾತ್ರ. ಕಾಂಗ್ರೆಸ್ ಒಂದು ಸ್ಥಾನದಲ್ಲಿ ಮುನ್ನಡೆ ಸಾಧಿಸಿದೆ. ಮಿಝೋರಾಂ ವಿಧಾನಸಭೆ 40 ಸದಸ್ಯ ಬಲವನ್ನು ಹೊಂದಿದೆ. ಮಧ್ಯ ಪ್ರದೇಶ, ರಾಜಸ್ತಾನ, ಛತ್ತೀಸ್ ಗಢ ಹಾಗು ತೆಲಂಗಾಣಗಳ ಜೊತೆಗೆ ಮಿಝೋರಾಂ ಗೆ ಚುನಾವಣೆ ನಡೆದಿತ್ತು. ಆ ನಾಲ್ಕು ರಾಜ್ಯಗಳಲ್ಲಿ ನಿನ್ನೆ ಮತ ಎಣಿಕೆ ನಡೆದಿತ್ತು. ಮಿಝೋರಾಂ ನಲ್ಲಿ ಇವತ್ತು ಮತ ಎಣಿಕೆ ನಡೆಯುತ್ತಿದೆ.
ಕೊಡಗು ಜಿಲ್ಲೆಯ ಹೊಳೆಯಲ್ಲಿ ತಾಯಿ, ಇಬ್ಬರು ಯುವತಿಯರ ಶವ ಪತ್ತೆ; ಸಾವಿಗೆ ಕಾರಣ?
ಕೊಡಗು ಜಿಲ್ಲೆಯ ಹೈಸೂಡ್ಳೂರು ಗ್ರಾಮದ ಕೂಟಿಯಾಲ ಹೊಳೆಯಲ್ಲಿ ತಾಯಿ ಹಾಗೂ ಇಬ್ಬರು ಪುತ್ರಿಯರ ಶವ ಪತ್ತೆಯಾಗಿವೆ. ಇವರ ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ. The post ಕೊಡಗು ಜಿಲ್ಲೆಯ ಹೊಳೆಯಲ್ಲಿ ತಾಯಿ, ಇಬ್ಬರು ಯುವತಿಯರ ಶವ ಪತ್ತೆ; ಸಾವಿಗೆ ಕಾರಣ? first appeared on Vistara News .
ದೇಶದ 3ನೇ ಅತಿದೊಡ್ಡ ನಂದಿವಿಗ್ರಹ, ಮೈಸೂರು ಚಾಮುಂಡಿ ಬೆಟ್ಟದ ನಂದಿಗೆ ಮಹಾಮಜ್ಜನ
ಹಾಲು, ಚಂದನ, ಶ್ರೀಗಂಧ, ಬಿಲ್ವಪತ್ರೆ, ಖರ್ಜೂರ, ಕೊಬ್ಬರಿ, ಅರಶಿನ, ಕುಂಕುಮದಿಂದ ಮೈಸೂರಿನ ಚಾಮುಂಡಿಬೆಟ್ಟದ ನಂದಿ ವಿಗ್ರಹಕ್ಕೆ ಮಹಾಭಿಷೇಕ ನಡೆಸಲಾಯಿತು. ಭಾನುವಾರವಾದ್ದರಿಂದ ನೆರೆದಿದ್ದ ಅಪಾರ ಭಕ್ತರ ನಡುವೆ ಮಹಾಮಜ್ಜನ ಅದ್ಧೂರಿಯಾಗಿ ನೆರವೇರಿತು. 18 ನೇ ಬಾರಿಗೆ ಮಹಾಭಿಷೇಕ ಆಯೋಜಿಸಿದ ಬೆಟ್ಟದ ಬಳಗ ಚಾರಿಟೇಬಲ್ ಟ್ರಸ್ಟ್ ಪ್ರತೀವರ್ಷ ಆಯೋಜಿಸಿಕೊಂಡು ಬಂದಿದೆ.
ತೆಲಂಗಾಣದಲ್ಲಿ ಯಶ ನೀಡಿದ ಕಾಂಗ್ರೆಸ್ನ ’ಕರ್ನಾಟಕ ಯೋಜನೆ’
ಬೆಂಗಳೂರು: ತೆಲಂಗಾಣದಲ್ಲಿ ಆಡಳಿತಾರೂಢ ಬಿಆರ್ಎಸ್ ಪಕ್ಷವನ್ನು ಸದೆಬಡಿದು ಕಾಂಗ್ರೆಸ್ ಪಕ್ಷ ಅಧಿಕಾರದ ಗದ್ದುಗೆ ಹಿಡಿದಿರುವುದರಿಂದ, ಪಂಚ ಭರವಸೆಗಳ ತಂತ್ರ ಅನುಸರಿಸುವ ಪಕ್ಷದ ಕರ್ನಾಟಕ ರಾಜ್ಯ ಘಟಕ ’ಲಿಟ್ಮಸ್ ಪರೀಕ್ಷೆ’ ಯಲ್ಲಿ ಯಶ ಸಾಧಿಸಿದಂತಾಗಿದೆ. ಕರ್ನಾಟಕ ಮುಖಂಡರು ಪಕ್ಕದ ರಾಜ್ಯದ ಚುನಾವಣಾ ಪ್ರಚಾರದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಸಿಎಂ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಾಕಷ್ಟು ಪ್ರಯತ್ನ ಹಾಕಿದ್ದರು. ಕರ್ನಾಟಕದಲ್ಲಿ ಪಕ್ಷ ಜಾರಿಗೆ ತಂದಿರುವ ನೀತಿಗಳ ಬಗ್ಗೆ ಪಕ್ಕದ ರಾಜ್ಯದ ಮತದಾರರಿಗೆ ಮನವರಿಕೆ ಮಾಡಿಕೊಟ್ಟಿರುವುದು ತೆಲಂಗಾಣದ ಯಶಸ್ಸಿಗೆ ಪ್ರಮುಖ ಕಾರಣ ಎನ್ನುವುದು ಕರ್ನಾಟಕ ಕಾಂಗ್ರೆಸ್ ಮುಖಂಡರ ನಿಲುವು. ಕರ್ನಾಟಕದಲ್ಲಿ ಅಧಿಕಾರ ಸ್ವೀಕರಿಸಿದ ಬಳಿಕ ಕಾಂಗ್ರೆಸ್ ಸರ್ಕಾರ, ತಾನು ಭರವಸೆ ನೀಡಿದ ಕಲ್ಯಾಣ ಯೋಜನೆಗಳನ್ನು ಅನುಷ್ಠಾನಗೊಳಿಸಲು ಆರಂಭಿಸಿತು. ಇದರಲ್ಲಿ ವಿದ್ಯುತ್ ಸಬ್ಸಿಡಿ, ಕುಟುಂಬಗಳ ಮಹಿಳಾ ಮುಖ್ಯಸ್ಥರಿಗೆ 2000 ರೂಪಾಯಿ ನೆರವು, ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಹಾಗೂ 10 ಕೆಜಿ ಉಚಿತ ಅಕ್ಕಿ ನೀಡುವ ಯೋಜನೆಗಳು ಸೇರಿವೆ. ಇದೇ ರೀತಿ ತೆಲಂಗಾಣ ಕಾಂಗ್ರೆಸ್ ಕೂಡಾ ಭರವಸೆಗಳನ್ನು ನೀಡಿ, ಬಿಆರ್ಎಸ್ ಯೋಜನೆಗಳನ್ನು ಸಮರ್ಥವಾಗಿ ಎದುರಿಸಿತು. ದಿನೇಶ್ ಗುಂಡೂರಾವ್, ಪ್ರಿಯಾಂಕ್ ಖರ್ಗೆ, ಕೆ.ಎಚ್.ಮುನಿಯಪ್ಪ, ಕೃಷ್ಣ ಬೈರೇಗೌಡ, ಈಶ್ವರ್ ಖಂಡ್ರೆ, ಎಂ.ಸಿ.ಸುಧಾಕರ್, ಶರಣ ಪ್ರಕಾಶ್ ಪಾಟೀಲ್ ಮತ್ತು ಬಿ.ನಾಗೇಂದ್ರ ಸೇರಿದಂತೆ ಹಲವು ಮುಖಂಡರು ತೆಲಂಗಾಣದಲ್ಲಿ ತಳಮಟ್ಟದಲ್ಲಿ ಸಾಕಷ್ಟು ಕೆಲಸ ಮಾಡಿದ್ದರು. ಚುನಾವಣಾ ಆಶ್ವಾಸನೆಗಳನ್ನು ಹೇಗೆ ಯಶಸ್ವಿಯಾಗಿ ಅನುಷ್ಠಾನಗೊಳಿಸಲಾಗಿದೆ ಎಂಬ ಅಂಶವನ್ನು ಈ ಮುಖಂಡರು ಪ್ರಮುಖವಾಗಿ ಬಿಂಬಿಸಿದ್ದರು. ಈ ಯೋಜನೆಗಳು ಕರ್ನಾಟಕದಲ್ಲಿ ವಿಫಲವಾಗಿವೆ ಎಂಬ ಬಿಆರ್ಎಸ್ನ ಆರೋಪದ ನಡುವೆಯೂ ಜನರ ವಿಶ್ವಾಸ ಗಳಿಸುವಲ್ಲಿ ಕಾಂಗ್ರೆಸ್ ಯಶಸ್ವಿಯಾಗಿದೆ. ಕಾಂಗ್ರೆಸ್ ಕಾರ್ಯತಂತ್ರವನ್ನು ವಿಫಲಗೊಳಿಸುವ ಉದ್ದೇಶದಿಂದ ಬಿಆರ್ಎಸ್, ಕನ್ನಡಿಗ ರೈತರು ಎದುರಿಸುತ್ತಿರುವ ಸಮಸ್ಯೆಗಳ ಅಧ್ಯಯನಕ್ಕೆ ಚುನಾವಣಾ ಪೂರ್ವದಲ್ಲಿ ಕರ್ನಾಟಕಕ್ಕೆ ನಿಯೋಗವನ್ನು ಕಳುಹಿಸಿತ್ತು.
ಮೂರು ರಾಜ್ಯಗಳ ಚುನಾವಣೆಯಲ್ಲಿ ನೆಲಕಚ್ಚಿದ `ಪೊರಕೆ'; ನೋಟಾಕ್ಕಿಂತಲೂ ಕಡಿಮೆ ವೋಟ್ ಗಳಿಸಿದ ಆಪ್ ನ ಮುಂದಿನ ನಿಲುವೇನು?
ದಿಲ್ಲಿ ಗದ್ದುಗೆ ಗಟ್ಟಿಗೊಳಿಸಿಕೊಂಡ ಬಳಿಕ ಪಂಜಾಬ್ ನಲ್ಲೂ ಅಧಿಕಾರ ಹಿಡಿದಿದ್ದ ಆಮ್ ಆದ್ಮಿ ಪಕ್ಷ ಇಡೀ ಭಾರತದಲ್ಲಿ ಬೆಳೆಯುವ ಸೂಚನೆ ನೀಡಿತ್ತು.ಗುಜರಾತ್ ನಲ್ಲೂ 5 ಸೀಟ್ ಗೆದ್ದ ಬಳಿಕ ಪಕ್ಷದ ಮುಖ್ಯಸ್ಥ ಅರವಿಂದ ಕೇಜ್ರೀವಾಲ್ ಪಕ್ಷದ ಬೆಳವಣಿಗೆಯ ಬಗ್ಗೆ ಭರವಸೆಯ ಮಾತುಗಳನ್ನು ಆಡಿದ್ದರು. ಆದರೆ ಕರ್ನಾಟಕದ ಆಪ್ ಇದೀಗ ಛತ್ತೀಸ್ ಗಢ, ರಾಜಸ್ಥಾನ, ಮಧ್ಯಪ್ರದೇಶಗಳಲ್ಲೂ ಸಂಪೂರ್ಣವಾಗಿ ನೆಲಕಚ್ಚಿದೆ. ಇದೀಗ I N D I A ಒಕ್ಕೂಟದ ಭಾಗವಾಗಿ ಮುಂದುವರಿಯುತ್ತದಾ ಆಪ್?
Complaint to CM : ಸಿಎಂಗೆ ದೂರು ನೀಡಬೇಕೇ? ಈ ನಂಬರ್ಗೆ ಕರೆ ಮಾಡಿ!
Complaint to CM : ತಮ್ಮ ಸಮಸ್ಯೆಗಳಿಗೆ ಸರ್ಕಾರಿ ವ್ಯವಸ್ಥೆಯಲ್ಲಿ ಪರಿಹಾರ ಸಿಗದೇ ಇದ್ದಾಗ ನಾಗರಿಕರು ಅನಿವಾರ್ಯವಾಗಿ ಮುಖ್ಯಮಂತ್ರಿಯತ್ತ ದೃಷ್ಟಿ ನೆಡುತ್ತಾರೆ. ಹೇಗಾದರೂ ಮಾಡಿ ಅವರಿಗೊಂದು ದೂರು ಕೊಡಬೇಕು ಎಂದು ಅಂದುಕೊಳ್ಳುತ್ತಾರೆ. ಆದರೆ, ಇದಕ್ಕೆ ಅವರಿಗೆ ಯಾವ ಮಾರ್ಗ ಎಂಬುದು ಮಾತ್ರ ತಿಳಿದಿರುವುದಿಲ್ಲ. ಇದಕ್ಕೆ ಈಗ ಎರಡು ಮಾರ್ಗಗಳು ಇವೆ. ಸಹಾಯವಾಣಿಗೆ ಕರೆ ಮಾಡಿ ದೂರು ನೀಡುವುದು ಸರಳ ಮಾರ್ಗವಾಗಿದೆ. The post Complaint to CM : ಸಿಎಂಗೆ ದೂರು ನೀಡಬೇಕೇ? ಈ ನಂಬರ್ಗೆ ಕರೆ ಮಾಡಿ! first appeared on Vistara News .
Karnataka Weather : ಮಳೆಯೊಂದಿಗೆ 30 ಕಿ.ಮೀ ವೇಗದಲ್ಲಿ ಬೀಸಲಿದೆ ಗಾಳಿ
Rain News : ಇನ್ನೆರಡು ದಿನಗಳು ಹಗುರ ಮಳೆಯೊಂದಿಗೆ ಥಂಡಿ ಗಾಳಿಯು ಬೀಸಲಿದೆ ಎಂದು ಹವಾಮಾನ ಇಲಾಖೆ (Karnataka Weather Forecast) ಮುನ್ಸೂಚನೆಯನ್ನು ನೀಡಿದೆ. The post Karnataka Weather : ಮಳೆಯೊಂದಿಗೆ 30 ಕಿ.ಮೀ ವೇಗದಲ್ಲಿ ಬೀಸಲಿದೆ ಗಾಳಿ first appeared on Vistara News .
Weather Alert: ದಕ್ಷಿಣ ಒಳನಾಡು ಹಾಗೂ ಕರಾವಳಿಗೆ ಹಗುರ ಮಳೆ: ಉತ್ತರ ಒಳನಾಡಿಗೆ ಒಣ ಹವೆ
ಈ ವಾರ ಮಳೆಯ ಪ್ರಮಾಣ ರಾಜ್ಯದಲ್ಲಿ ಕಡಿಮೆಯಾಗಲಿದೆ. ಬಂಗಾಳಕೊಲ್ಲಿ ವಾಯುಭಾರ ಕುಸಿತವೂ ರಾಜ್ಯಕ್ಕೆ ರಾಜ್ಯದ ಮೇಲೆ ಪರಿಣಾಮ ಬೀಳುವುದಿಲ್ಲ. ಹೀಗಾಗಿ ದಕ್ಷಿಣ ಒಳನಾಡಲ್ಲಿ 2 ದಿನ, ಕರಾವಳಿಗೆ 1 ದಿನ ಹಗುರ ಮಳೆಯಾಗಲಿದೆ. ಉತ್ತರ ಒಳನಾಡಲ್ಲಿ ಬಿಸಿಲು ಇರಲಿದೆ ಎಂದು ಹವಾಮಾನ ಇಲಾಖೆ ತಜ್ಞರಾದ ಪ್ರಸಾದ್ ಹೇಳಿದ್ದಾರೆ.
ರಾಜಸ್ಥಾನದಲ್ಲಿ 20 ಮಹಿಳಾ ಅಭ್ಯರ್ಥಿಗಳು ಗೆಲುವು, ವಿಧಾನಸಭೆಯಲ್ಲಿ ಕಡಿಮೆಯಾದ ನಾರಿ ಬಲ
ರಾಜಸ್ಥಾನದ ನೂತನ ಸರ್ಕಾರದಲ್ಲಿ ನಾರಿ ಬಲ ಕಡಿಮೆಯಾಗಲಿದೆ. ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಕಣಕ್ಕಿಳಿದಿದ್ದ 50 ಮಹಿಳಾ ಅಭ್ಯರ್ಥಿಗಳ ಪೈಕಿ 20 ಮಂದಿ ಗೆಲುವು ಸಾಧಿಸಿದ್ದಾರೆ. ವಿಸರ್ಜಿಸಲ್ಪಡುವ ವಿಧಾನಸಭೆಗೆ ಹೋಲಿಸಿದರೆ ಸದನದಲ್ಲಿ ಮಹಿಳೆಯರ ಬಲವು ಸ್ವಲ್ಪಮಟ್ಟಿಗೆ ಕಡಿಮೆಯಾಗಿದೆ. ಗೆದ್ದ ಮಹಿಳಾ ಅಭ್ಯರ್ಥಿಗಳ ಪೈಕಿ ತಲಾ ಒಂಬತ್ತು ಮಂದಿ ಬಿಜೆಪಿ ಮತ್ತು ಕಾಂಗ್ರೆಸ್ ಹಾಗೂ ಇಬ್ಬರು ಪಕ್ಷೇತರರಿದ್ದಾರೆ.
ಧಾರವಾಡದಲ್ಲಿ ಮಾರಕಾಸ್ತ್ರಗಳಿಂದ ಕೊಚ್ಚಿ ವ್ಯಕ್ತಿಯ ಬರ್ಬರ ಹತ್ಯೆ
ಧಾರವಾಡದ ಕೊಪ್ಪದಕೇರಿಯ ಶಿವಾಲಯದ ಬಳಿ ಮಾರಕಾಸ್ತ್ರಗಳಿಂದ ಕೊಚ್ಚಿ ವ್ಯಕ್ತಿಯ ಬರ್ಬರ ಹತ್ಯೆ ಮಾಡಲಾಗಿದೆ. The post ಧಾರವಾಡದಲ್ಲಿ ಮಾರಕಾಸ್ತ್ರಗಳಿಂದ ಕೊಚ್ಚಿ ವ್ಯಕ್ತಿಯ ಬರ್ಬರ ಹತ್ಯೆ first appeared on Vistara News .
ಬೈಕ್ನಲ್ಲಿ ತೆರಳುತ್ತಿದ್ದ ವ್ಯಕ್ತಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಹತ್ಯೆ
ಶಿವಮೊಗ್ಗ: ಬೈಕ್ನಲ್ಲಿ ತೆರಳುತ್ತಿದ್ದ ವ್ಯಕ್ತಿಯೊಬ್ಬರನ್ನು ಅಡ್ಡಗಟ್ಟಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಹತ್ಯೆ ಮಾಡಿರುವ ಘಟನೆ ತಾಲೂಕಿನ ಬೆಳಲಕಟ್ಟೆಯಲ್ಲಿ ನಡೆದಿದೆ. ಮೇಲಿನ ಹನಸವಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೆಳಲಕಟ್ಟೆ ಗ್ರಾಮದ ನಿವಾಸಿ ಮಹೇಶಪ್ಪ (60) ಮೃತ ವ್ಯಕ್ತಿಯಾಗಿದ್ದು, ಬಿಕ್ಕೋನಹಳ್ಳಿಯ ಮಗಳ ಮನೆಯಿಂದ ಮಹೇಶಪ್ಪ ದ್ವಿಚಕ್ರ ವಾಹನದಲ್ಲಿ ಬೆಳಲಕಟ್ಟೆಕ್ಕೆ ತೆರಳುತ್ತಿದ್ದರು. ಈ ವೇಳೆ ಅವರನ್ನು ರಸ್ತೆಯಲ್ಲಿ ಅಡ್ಡಗಟ್ಟಿ ಪೆಟ್ರೋಲ್ ಎರಚಿ ಬೆಂಕಿ ಹಚ್ಚಲಾಗಿದೆ ಎಂದು ಆರೋಪಿಸಲಾಗಿದೆ. ಬೆಂಕಿಯ ಕೆನ್ನಾಲಗೆಗೆ ಕೆಲವೇ ನಿಮಿಷದಲ್ಲಿ ಮಹೇಶಪ್ಪ ಸಂಪೂರ್ಣ ಸುಟ್ಟು ಹೋಗಿದ್ದರು. ವಿಷಯ ತಿಳಿಯುತ್ತಿದ್ದಂತೆ ಸ್ಥಳೀಯರು ಮಹೇಶಪ್ಪ ಅವರನ್ನು ಕೂಡಲೆ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮಹೇಶಪ್ಪ ಕೊನೆಯುಸಿರೆಳೆದಿದ್ದಾರೆ.ಇನ್ನು, ಬೆಂಕಿಯ ತೀವ್ರತೆಗೆ ದ್ವಿಚಕ್ರ ವಾಹನ ಸಂಪೂರ್ಣ ಸುಟ್ಟು ಹೋಗಿದೆ. ಮಹೇಶಪ್ಪ ಮತ್ತು ಅವರ ಸಹೋದರ ಕುಮಾರ್ ಮಧ್ಯೆ ಆಸ್ತಿ ವಿವಾದವಿತ್ತು. ಇದೆ ಕಾರಣಕ್ಕೆ ಕುಮಾರ್ ಮತ್ತು ಆತನ ಪುತ್ರ ಕಾರ್ತಿಕ್ ಎಂಬುವವರು ಕೃತ್ಯ ಎಸಗಿದ್ದಾರೆ ಎಂದು ಮಹೇಶಪ್ಪ ಅವರ ಕುಟುಂಬ ಆರೋಪಿಸಿ ದೂರು ನೀಡಿದೆ. ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಆರೋಪಿ ಕಾರ್ತಿಕ್ ಮತ್ತು ಕುಮಾರಪ್ಪ ತಲೆ ಮರೆಸಿಕೊಂಡಿದ್ದು, ಪೊಲೀಸರು ಆರೋಪಿಗಳ ಪತ್ತೆಗೆ ಹುಡುಕಾಟ ನಡೆಸುತ್ತಿದ್ದಾರೆ.
ತೆಲಂಗಾಣ: ಸಚಿವ ಶಿವರಾಜ್ ತಂಗಡಗಿ ಜವಾಬ್ದಾರಿ ಹೊತ್ತಿದ್ದ ಆರು ಕ್ಷೇತ್ರದ ಪೈಕಿ ಐದರಲ್ಲಿ 'ಕೈ' ಗೆಲುವು
ತೆಲಂಗಾಣದಲ್ಲಿ ಕಾಂಗ್ರೆಸ್ ಗೆಲುವಿನ ಹಾರವನ್ನು ತನ್ನದಾಗಿಸಿಕೊಂಡಿದೆ. ಈ ಗೆಲುವಿನಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಶಿವರಾಜ್ ತಂಗಡಗಿ ಕೊಡುಗೆಯೂ ಸೇರಿಕೊಂಡಿದೆ. ತೆಲಂಗಾಣದ ಭೋಂಗಿರ್, ತುಂಗತುರ್ಥಿ, ಜಾಂಗೋನ್, ಅಲೈರ್ ದೋಮಕಲ್, ಮೆಹಬೂಬಾಬಾದ್ ಕ್ಷೇತ್ರಗಳ ಜವಾಬ್ದಾರಿಯನ್ನು ಪಕ್ಷ ಶಿವರಾಜ್ ತಂಗಡಗಿ ಅವರಿಗೆ ನೀಡಿತ್ತು. ಹನ್ನೆರಡು ದಿನಗಳ ಕಾಲ ಈ ಕ್ಷೇತ್ರಗಳಲ್ಲಿ ಪ್ರಚಾರ ನಡೆಸಿದ ಸಚಿವರು, ನಿರಂತರವಾಗಿ ಹಿಂದುಳಿದ ವರ್ಗಗಳ ಮುಖಂಡರ ಸಭೆ ನಡೆಸಿ, ಆ ಸಮುದಾಯಗಳ ಮತವನ್ನು ಕ್ರೋಢಿಕರಿಸುವಲ್ಲಿ ಸಫಲರಾಗಿದ್ದಾರೆ.
Bhavani Revanna Clash With Public : ಭವಾನಿ ರೇವಣ್ಣ ಅವರ ಕಾರು ಹಾಗೂ ರಸ್ತೆಯಲ್ಲಿ ಬರುತ್ತಿದ್ದ ಬೈಕ್ ನಡುವೆ ಅಪಘಾತ ಸಂಭವಿಸಿದೆ. ಘಟನೆ ಬಳಿಕ ಭವಾನಿ ರೇವಣ್ಣ ಅವರು ಬೈಕ್ ಸವಾರನನ್ನು ಅವ್ಯಾಚ ಪದಗಳಿಂದ ಬೈದಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ.
ಮಂಗಳೂರು: ದೇರಳಕಟ್ಟೆಯ ಕಿನ್ಯಾದ ಕುರಿಯಕ್ಕಾರ್ ತರವಾಡ್ನ ಮೂಸ ಕುಞಿ- ನಫೀಸಾ ದಂಪತಿಯ ಪುತ್ರಿ ಆಯಿಷಾ ಎಂ.ಎಸ್ (ವಫಾ) ಮತ್ತು ಕಾಸರಗೋಡು ಕಯ್ಯಾರ್ನ ಅಬ್ದುಲ್ಲಾ ಕುಞಿ ಪುತ್ರ ಅಮೀರ್ ಅನ್ಸಾಫ್ ವಿವಾಹವು ರವಿವಾರ ಮಂಜೇಶ್ವರ ಮೊರತ್ತಣೆಯ ಎ.ಎಚ್. ಪ್ಯಾಲೇಸ್ನಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಬಂಧುಗಳು ಮತ್ತು ಮಿತ್ರರು ನವ ವಧು ವರರಿಗೆ ಶುಭ ಹಾರೈಸಿದರು.
ಕಲಬುರಗಿ ಓಪನ್ ಪ್ರಶಸ್ತಿ ಗೆದ್ದ ರಾಮ್ಕುಮಾರ್ ರಾಮನಾಥನ್
ಕಲ್ಬುರ್ಗಿ : ಕರ್ನಾಟಕದ ಕಲ್ಬುರ್ಗಿಯಲ್ಲಿ ನಡೆದ ಕಲಬುರಗಿ ಓಪನ್ ಟೆನಿಸ್ ಪಂದ್ಯಾವಳಿಯ ಪುರುಷರ ಸಿಂಗಲ್ಸ್ ಫೈನಲ್ನಲ್ಲಿ ಆಸ್ಟ್ರಿಯದ ಡೇವಿಡ್ ಪಿಚ್ಲರ್ರನ್ನು ಸೋಲಿಸಿದ ಭಾರತದ ರಾಮ್ಕುಮಾರ್ ರಾಮನಾಥನ್ ಪ್ರಶಸ್ತಿ ಎತ್ತಿದ್ದಾರೆ. ರವಿವಾರ ನಡೆದ ಫೈನಲ್ನಲ್ಲಿ ಅವರು ತನ್ನ ಎದುರಾಳಿಯನ್ನು 6-2, 6-1 ನೇರ ಸೆಟ್ಗಳಿಂದ ಸೊಲಿಸಿದರು. ಇದು 57 ದಿನಗಳ ಅವಧಿಯಲ್ಲಿ ರಾಮ್ಕುಮಾರ್ರ ಮೂರನೇ ಐಟಿಎಫ್ ಪ್ರಶಸ್ತಿಯಾಗಿದೆ. ಕಳೆದ ವಾರ ಐಟಿಎಫ್ ಮುಂಬೈ ಓಪನ್ ಪ್ರಶಸ್ತಿಯನ್ನು ಗೆದ್ದಿರುವ ರಾಮ್ಕುಮಾರ್, ಕಲಬುರಗಿ ಓಪನ್ನಲ್ಲಿ ತನ್ನ ಎದುರಾಳಿಯನ್ನು ಸೋಲಿಸಲು ಕೇವಲ 64 ನಿಮಿಷಗಳನ್ನು ತೆಗೆದುಕೊಂಡರು. ಭಾರತೀಯ ಡೇವಿಸ್ ಕಪ್ ತಂಡದ ಸದಸ್ಯರಾಗಿರುವ ರಾಮ್ಕುಮಾರ್ 3,200 ಡಾಲರ್ (ಸುಮಾರು 2.66 ಲಕ್ಷ ರೂಪಾಯಿ) ಪ್ರಶಸ್ತಿ ಮೊತ್ತವನ್ನು ಸ್ವೀಕರಿಸಿದ್ದಾರೆ. ಜೊತೆಗೆ ಅಮೂಲ್ಯ 25 ಎಟಿಪಿ ಅಂಕಗಳನ್ನು ಪಡೆದಿದ್ದಾರೆ. ರನ್ನರ್ಸ್ ಅಪ್ಗೆ 2120 ಡಾಲರ್ (ಸುಮಾರು 1.76 ಲಕ್ಷ ರೂ.) ನಗದು ಬಹುಮಾನ ಮತ್ತು 16 ಎಟಿಪಿ ಅಂಕಗಳು ಲಭಿಸಿವೆ.
2029ರ ವಿಶ್ವ ಅತ್ಲೆಟಿಕ್ಸ್ ಚಾಂಪಿಯನ್ಶಿಪ್ಸ್ ಗೆ ಬಿಡ್ ಸಲ್ಲಿಸಲು ಭಾರತ ಉತ್ಸುಕ
ಹೊಸದಿಲ್ಲಿ: 2027ರ ವಿಶ್ವ ಅತ್ಲೆಟಿಕ್ಸ್ ಚಾಂಪಿಯನ್ಶಿಪ್ಸ್ ಕ್ರೀಡಾಕೂಟದ ಆತಿಥ್ಯ ವಹಿಸುವ ಇರಾದೆಯಿಂದ ಹಿಂದೆ ಸರಿದ ಬಳಿಕ, 2029ರ ಆವೃತ್ತಿಯ ಕ್ರೀಡಾಕೂಟದ ಆಯೋಜನೆಗೆ ಬಿಡ್ ಸಲ್ಲಿಸಲು ಭಾರತ ಮುಂದಾಗಿದೆ. ಈ ವಿಷಯವನ್ನು ರವಿವಾರ ಭಾರತೀಯ ಅತ್ಲೆಟಿಕ್ಸ್ ಫೆಡರೇಶನ್ನ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 2027ರ ವಿಶ್ವ ಅತ್ಲೆಟಿಕ್ಸ್ ಚಾಂಪಿಯನ್ಶಿಪ್ಸ್ ಆಯೋಜನೆಯ ಹಕ್ಕುಗಳಿಗಾಗಿ ಬಿಡ್ ಸಲ್ಲಿಸಲು ಭಾರತೀಯ ಅತ್ಲೆಟಿಕ್ಸ್ ಫೆಡರೇಶನ್ ಮೊದಲು ಪರಿಶೀಲನೆ ನಡೆಸಿತ್ತು. ಆದರೆ, ಫೆಡರೇಶನ್ ಈ ಯೋಜನೆಯನ್ನು ಕೈಬಿಟ್ಟು, 2029ರ ಆವೃತ್ತಿಯ ಕ್ರೀಡಾಕೂಟದ ಆತಿಥ್ಯ ವಹಿಸುವ ಬಗ್ಗೆ ಪರಿಶೀಲನೆ ನಡೆಸುತ್ತಿದೆ ಎನ್ನುವ ವಿಷಯ ಈಗ ಬಹಿರಂಗವಾಗಿದೆ. “2029ರ ವಿಶ್ವ ಅತ್ಲೆಟಿಕ್ಸ್ ಚಾಂಪಿಯನ್ಶಿಪ್ಸ್ ಗೆ ಬಿಡ್ ಸಲ್ಲಿಸಲು ನಾವು ಉತ್ಸುಕರಾಗಿದ್ದೇವೆ’’ ಎಂದು ಫೆಡರೇಶನ್ನ ಹಿರಿಯ ಉಪಾಧ್ಯಕ್ಷೆ ಅಂಜು ಬಾಬಿ ಜಾರ್ಜ್ ಪಿಟಿಐಗೆ ತಿಳಿಸಿದ್ದಾರೆ. ಅವರು ಫೆಡರೇಶನ್ನ ವಾರ್ಷಿಕ ಮಹಾಸಭೆಯ ನೇಪಥ್ಯದಲ್ಲಿ ಈ ವಿಷಯವನ್ನು ತಿಳಿಸಿದರು. “2036ರ ಒಲಿಂಪಿಕ್ಸ್ ಮತ್ತು 2030ರ ಯುವ ಒಲಿಂಪಿಕ್ಸ್ಗಳನ್ನು ಆಯೋಜಿಸುವ ಆಸಕ್ತಿಯನ್ನೂ ಭಾರತ ವ್ಯಕ್ತಪಡಿಸಿದೆ’’ ಎಂದು ಅವರು ಹೇಳಿದರು. “2029ರ ವಿಶ್ವ ಅತ್ಲೆಟಿಕ್ಸ್ ಚಾಂಪಿಯನ್ಶಿಪ್ಸ್ ಪಂದ್ಯಾವಳಿಯನ್ನು ಆಯೋಜಿಸಲು ನಮಗೆ ಸಾಧ್ಯವಾದರೆ ಅದು ನಮ್ಮ ಬೆಳವಣಿಗೆಗೆ ಪೂರಕವಾಗಲಿದೆ’’ ಎಂದು ಮಾಜಿ ಲಾಂಗ್ಜಂಪ್ ಪಟು ಹೇಳಿದರು.
ತಮ್ಮ ಕಾರಿಗೆ ಡಿಕ್ಕಿ ಹೊಡೆದ ಬೈಕ್ ಸುಟ್ಟು ಹಾಕಿ ಎಂದ ಭವಾನಿ ರೇವಣ್ಣ! ವಿಡಿಯೊ ನೋಡಿ
ಅಪಘಾತ ನಡೆದಾಗ ಬೈಕ್ ಸವಾರನನ್ನು ಸಂತೈಸುವುದು ಬಿಟ್ಟು ಹಿಗ್ಗಾಮುಗ್ಗಾ ಬೈಯುವ ಮೂಲಕ ಮಾನವೀಯತೆ ಮರೆತ ಭವಾನಿ ರೇವಣ್ಣ ವಿರುದ್ಧ ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ. The post ತಮ್ಮ ಕಾರಿಗೆ ಡಿಕ್ಕಿ ಹೊಡೆದ ಬೈಕ್ ಸುಟ್ಟು ಹಾಕಿ ಎಂದ ಭವಾನಿ ರೇವಣ್ಣ! ವಿಡಿಯೊ ನೋಡಿ first appeared on Vistara News .
ಎಫ್ಐಎಚ್ ಜೂನಿಯರ್ ಮಹಿಳಾ ಹಾಕಿ ವಿಶ್ವಕಪ್ ; ಭಾರತವನ್ನು ಸೋಲಿಸಿದ ಬೆಲ್ಜಿಯಮ್
ಸಾಂಟಿಯಾಗೊ (ಚಿಲಿ): ಚಿಲಿ ದೇಶದ ರಾಜಧಾನಿ ಸಾಂಟಿಯಾಗೊದಲ್ಲಿ ನಡೆಯುತ್ತಿರುವ ಎಫ್ಐಎಚ್ ಜೂನಿಯರ್ ಮಹಿಳಾ ಹಾಕಿ ವಿಶ್ವಕಪ್ನಲ್ಲಿ ಶನಿವಾರ ಬೆಲ್ಜಿಯಮ್ ತಂಡವು ಭಾರತವನ್ನು 3-2 ಗೋಲುಗಳಿಂದ ಸೋಲಿಸಿದೆ. ‘ಸಿ’ ಗುಂಪಿನ ತೀವ್ರ ಹಣಾಹಣಿಯ ಪಂದ್ಯದಲ್ಲಿ ಅನು ಬಾರಿಸಿದ ಅವಳಿ ಗೋಲುಗಳು ವ್ಯರ್ಥವಾದವು. ಇದು ಈ ಪಂದ್ಯಾವಳಿಯಲ್ಲಿ ಭಾರತದ ಸತತ ಎರಡನೇ ಸೋಲಾಗಿದೆ. ಅನು ನಾಲ್ಕು ನಿಮಿಷಗಳ ಅಂತರದಲ್ಲಿ ಎರಡು ಗೋಲುಗಳನ್ನು ಬಾರಿಸಿ ಅಂಕಪಟ್ಟಿಯನ್ನು ಸಮಬಲಗೊಳಿಸಿದರು. ಅವರು 47ನೇ ನಿಮಿಷದಲ್ಲಿ ಪೆನಾಲ್ಟಿ ಕಾರ್ನರ್ನಿಂದ ಗೋಲು ಬಾರಿಸಿದರೆ, 51ನೇ ನಿಮಿಷದಲ್ಲಿ ಪೆನಾಲ್ಟಿ ಸ್ಟ್ರೋಕ್ ಮೂಲಕ ಗೋಲು ಗಳಿಸಿದರು. ಅದಕ್ಕೂ ಮೊದಲು, ಐದನೇ ನಿಮಿಷದಲ್ಲಿ ನೋವಾ ಶ್ರೋವರ್ಸ್ ಮತ್ತು 42ನೇ ನಿಮಿಷದಲ್ಲಿ ಫ್ರಾನ್ಸ್ ಡಿ ಮೋಟ್ ಬಾರಿಸಿದ ಗೋಲುಗಳ ಮೂಲಕ ಬೆಲ್ಜಿಯಮ್ 2-0 ಮುನ್ನಡೆಯಲ್ಲಿತ್ತು. ಅನುವಿನ ಸಾಹಸದಿಂದಾಗಿ ಭಾರತ ಅಂಕಪಟ್ಟಿಯನ್ನು 2-2ರ ಸಮಬಲಕ್ಕೆ ತಂದಿತು. ಆದರೆ, ಅದು ಭಾರತದ ದಿನವಾಗಿರಲಿಲ್ಲ. 52ನೇ ನಿಮಿಷದಲ್ಲಿ ಬೆಲ್ಜಿಯಮ್ನ ಆ್ಯಸ್ಟ್ರಿಡ್ ಬೊನಾಮಿ ಪೆನಾಲ್ಟಿ ಸ್ಟ್ರೋಕ್ ಮೂಲಕ ತಂಡದ ವಿಜಯದ ಗೋಲನ್ನು ಬಾರಿಸಿದರು. ಶುಕ್ರವಾರ ರಾತ್ರಿ ಜರ್ಮನಿಯು ಭಾರತವನ್ನು 4-3 ಗೋಲುಗಳಿಂದ ಸೋಲಿಸಿತ್ತು. ಆರಂಭದಲ್ಲಿ ಎರಡು ಗೋಲುಗಳ ಮುನ್ನಡೆಯಲ್ಲಿದ್ದರೂ ಕೊನೆಯವರೆಗೂ ಅದನ್ನು ಕಾಯ್ದುಕೊಂಡು ಹೋಗಲು ಭಾರತೀಯ ಮಹಿಳೆಯರಿಗೆ ಸಾಧ್ಯವಾಗಲಿಲ್ಲ. ಭಾರತೀಯ ಮಹಿಳೆಯರು, ಕೆನಡವನ್ನು 12-0 ಗೋಲುಗಳಿಂದ ಸೋಲಿಸುವ ಮೂಲಕ ತಮ್ಮ ಅಭಿಯಾನವನ್ನು ಭರ್ಜರಿಯಾಗಿಯೇ ಆರಂಭಿಸಿದ್ದರು. ಭಾರತ ಈಗ ಮೂರು ಪಂದ್ಯಗಳಿಂದ ಮೂರು ಅಂಕಗಳನ್ನು ಗಳಿಸಿದ್ದು, ‘ಸಿ’ ಗುಂಪಿನಲ್ಲಿ ಎರಡನೇ ಸ್ಥಾನದಲ್ಲಿದೆ. ಅದೇ ವೇಳೆ, ತಾನಾಡಿರುವ ಎಲ್ಲಾ ಮೂರು ಪಂದ್ಯಗಳನ್ನು ಗೆದ್ದಿರುವ ಬೆಲ್ಜಿಯಮ್ ಗುಂಪಿನಲ್ಲಿ ಅಗ್ರ ಸ್ಥಾನದಲ್ಲಿದೆ.
ಹುಟ್ಟಿದ ದಿನದಂದು ಬಾಲ್ಯದ ಕೋಚನ್ನು ಸ್ಮರಿಸಿದ ಸಚಿನ್
ಮುಂಬೈ: ಕ್ರಿಕೆಟಿಗ ಸಚಿನ್ ತೆಂಡುಲ್ಕರ್ ರವಿವಾರ ತನ್ನ ಬಾಲ್ಯದ ಕೋಚ್ ರಮಾಕಾಂತ ಅಚ್ರೇಕರ್ರನ್ನು ಅವರ ಹುಟ್ಟಿದ ದಿನದ ಸಂದರ್ಭದಲ್ಲಿ ಸ್ಮರಿಸಿಕೊಂಡಿದ್ದಾರೆ. ತನ್ನ ದಿವಂಗತ ಕೋಚ್ಗೆ ಅವರು ಸಾಮಾಜಿಕ ಮಾಧ್ಯಮ ಎಕ್ಸ್ ಮೂಲಕ ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ. ಕ್ರಿಕೆಟ್ನಲ್ಲಿ ನಾನು ಏನಾಗಿದ್ದೇನೋ ಹಾಗೆ ನನ್ನನ್ನು ಮಾಡಿದ್ದು ಅವರು ಎಂದು ಸಚಿನ್ ಹೇಳಿದ್ದಾರೆ. ಬಾಲಕನಾಗಿದ್ದಾಗ ತನ್ನ ಪ್ರೀತಿಯ ಕೋಚ್ನಿಂದ ಬ್ಯಾಟಿಂಗ್ ಪಾಠಗಳನ್ನು ಕಲಿತುಕೊಳ್ಳುವುದನ್ನು ತೋರಿಸುವ ಚಿತ್ರವೊಂದನ್ನೂ ಅವರು ಹಾಕಿದ್ದಾರೆ. “ನನ್ನನ್ನು ಕ್ರಿಕೆಟಿಗನಾಗಿ ಮಾಡಿದ ವ್ಯಕ್ತಿಗೆ! ಅವರು ಕಲಿಸಿದ ಪಾಠಗಳು ನನ್ನ ಬದುಕಿನುದ್ದಕ್ಕೂ ನನ್ನೊಂದಿಗೆ ಇವೆ. ನಿಮ್ಮ ಹುಟ್ಟಿದ ದಿನದಂದು ನಿಮ್ಮನ್ನು ಹೆಚ್ಚಾಗಿ ಜ್ಞಾಪಿಸಿಕೊಳ್ಳುತ್ತಿದ್ದೇನೆ. ನೀವು ನನಗಾಗಿ ಮಾಡಿದ ಪ್ರತಿಯೊಂದಕ್ಕೂ ನಾನು ನಿಮಗೆ ಆಭಾರಿಯಾಗಿದ್ದೇನೆ, ಅಚ್ರೇಕರ್ ಸರ್’’ ಎಂಬುದಾಗಿ ಸಚಿನ್ ಬರೆದಿದ್ದಾರೆ. ರಮಾಕಾಂತ ಅಚ್ರೇಕರ್ 2019 ಜನವರಿ 2ರಂದು 87ರ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಕೋಚ್ ಆಗಿ ಕ್ರಿಕೆಟ್ಗೆ ನೀಡಿದ ಕೊಡುಗೆಗಾಗಿ ಅವರಿಗೆ 1990ರಲ್ಲಿ ದ್ರೋಣಾಚಾರ್ಯ ಪ್ರಶಸ್ತಿ ನೀಡಲಾಗಿತ್ತು. ಅವರು 2010ರಲ್ಲಿ ಪದ್ಮಶ್ರೀ ಪ್ರಶಸ್ತಿಯನ್ನೂ ಸ್ವೀಕರಿಸಿದ್ದರು. ಸಚಿನ್ ಟೆಸ್ಟ್ ಕ್ರಿಕೆಟ್ನಲ್ಲಿ ಗರಿಷ್ಠ ರನ್ಗಳನ್ನು ಗಳಿಸಿದ ದಾಖಲೆಯನ್ನು ಹೊಂದಿದ್ದಾರೆ. ಅವರು 200 ಪಂದ್ಯಗಳಲ್ಲಿ 53ಕ್ಕೂ ಹೆಚ್ಚಿನ ಸರಾಸರಿಯಲ್ಲಿ 15,921 ರನ್ಗಳನ್ನು ಗಳಿಸಿದ್ದಾರೆ. ಇದರಲ್ಲಿ 51 ಶತಕಗಳು ಮತ್ತು 68 ಅರ್ಧ ಶತಕಗಳಿವೆ. ಅವರು 463 ಏಕದಿನ ಪಂದ್ಯಗಳಲ್ಲಿ 44.83ರ ಸರಾಸರಿಯಲ್ಲಿ 18,426 ರನ್ಗಳನ್ನು ಗಳಿಸಿದ್ದಾರೆ. ಅದರಲ್ಲಿ 49 ಶತಕಗಳು ಮತ್ತು 96 ಅರ್ಧ ಶತಕಗಳಿವೆ. ಅವರು ಒಂದು ಟ್ವೆಂಟಿ20 ಪಂದ್ಯವನ್ನೂ ಆಡಿದ್ದು, 10 ರನ್ಗಳನ್ನು ಗಳಿಸಿದ್ದಾರೆ. ಎಲ್ಲಾ ಮೂರು ಮಾದರಿಗಳ ಕ್ರಿಕೆಟ್ನಲ್ಲಿನ ಅವರ ರನ್ಗಳನ್ನು ಒಟ್ಟು ಸೇರಿಸಿದರೆ, ಸಚಿನ್ ಅಂತರ್ರಾಷ್ಟ್ರೀಯ ಕ್ರಿಕೆಟ್ನಲ್ಲಿ ಅತ್ಯಧಿಕ ರನ್ ಗಳಿಕೆದಾರರಾಗಿದ್ದಾರೆ. ಅವರು ಒಟ್ಟು 664 ಪಂದ್ಯಗಳಿಂದ 48.52ರ ಸರಾಸರಿಯಲ್ಲಿ 34,357 ರನ್ಗಳನ್ನು ಗಳಿಸಿದ್ದಾರೆ. ಇದರಲ್ಲಿ 100 ಶತಕಗಳು ಮತ್ತು 164 ಅರ್ಧ ಶತಕಗಳಿವೆ. 100 ಅಂತರ್ರಾಷ್ಟ್ರೀಯ ಶತಕಗಳನ್ನು ಬಾರಿಸಿದ ಏಕೈಕ ಆಟಗಾರ ಅವರಾಗಿದ್ದಾರೆ.
Pro Kabaddi : ತಲೈವಾಸ್, ಗುಜರಾತ್ ಜಯಂಟ್ಸ್ಗೆ ಗೆಲುವು
Pro Kabaddi : ಬೆಂಗಳೂರು ಬುಲ್ಸ್ ತಂಡ ತನ್ನ ಮೊದಲನೇ ಪಂದ್ಯದಲ್ಲಿ ಸೋಲುವ ಮೂಲಕ ನಿರಾಸೆ ಎದುರಿಸಿತು. The post Pro Kabaddi : ತಲೈವಾಸ್, ಗುಜರಾತ್ ಜಯಂಟ್ಸ್ಗೆ ಗೆಲುವು first appeared on Vistara News .
ರಿಂಕು ಸಿಂಗ್ಗೆ ಟಿ20 ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯುವ ಉಜ್ವಲ ಅವಕಾಶವಿದೆ : ಆಶಿಶ್ ನೆಹ್ರಾ
ಮುಂಬೈ: ಮುಂದಿನ ವರ್ಷ ನಡೆಯಲಿರುವ ಟ್ವೆಂಟಿ20 ವಿಶ್ವಕಪ್ ಪಂದ್ಯಾವಳಿಯಲ್ಲಿ ಆಡುವ ಭಾರತೀಯ ಕ್ರಿಕೆಟ್ ತಂಡದಲ್ಲಿ ಸ್ಥಾನ ಪಡೆಯುವ ಉಜ್ವಲ ಅವಕಾಶ ಮಧ್ಯಮ ಕ್ರಮಾಂಕದ ಬ್ಯಾಟರ್ ರಿಂಕು ಸಿಂಗ್ಗೆ ಇದೆ ಎಂದು ಭಾರತೀಯ ತಂಡದ ಮಾಜಿ ವೇಗಿ ಆಶಿಶ್ ನೆಹ್ರಾ ಅಭಿಪ್ರಾಯಪಟ್ಟಿದ್ದಾರೆ. ಆದರೆ, ಆಡುವ 11ರ ಬಳಗದಲ್ಲಿ ಫಿನಿಶರ್ ಪಾತ್ರವನ್ನು ಪಡೆಯಲು ಅವರು ಭಾರೀ ಪೈಪೋಟಿಯನ್ನು ಎದುರಿಸುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ. ಹಾಲಿ ನಡೆಯುತ್ತಿರುವ ಆಸ್ಟ್ರೇಲಿಯ ವಿರುದ್ಧದ ಟ್ವೆಂಟಿ20 ಸರಣಿಯಲ್ಲಿ, ರಿಂಕು ಇನಿಂಗ್ಸ್ ಕೊನೆಯಲ್ಲಿ ಫಿನಿಶರ್ ಆಗಿ ತಂಡದಲ್ಲಿ ತನ್ನ ಸ್ಥಾನವನ್ನು ಬಲಪಡಿಸುತ್ತಿದ್ದಾರೆ. ಇನಿಂಗ್ಸ್ ಕೊನೆಯಲ್ಲಿ ಅವರು ಉತ್ತಮ ಪ್ರದರ್ಶನವನ್ನು ನೀಡುತ್ತಿದ್ದಾರೆ. ವಿಶಾಖಪಟ್ಟಣಂಲ್ಲಿ ನಡೆದ ಪಂದ್ಯದಲ್ಲಿ 14 ಎಸೆತಗಳಲ್ಲಿ ಅವರು ಗಳಿಸಿದ 22 ರನ್ಗಳು 209 ರನ್ಗಳ ಗುರಿಯನ್ನು ತಲುಪುವಲ್ಲಿ ಮಹತ್ವದ ಪಾತ್ರ ವಹಿಸಿದ್ದವು. ತಿರುವನಂತಪುರಂನಲ್ಲಿ ಕೇವಲ 9 ಎಸೆತಗಳಲ್ಲಿ 31 ರನ್ಗಳನ್ನು ಗಳಿಸಿ ಅಜೇಯರಾಗಿ ಉಳಿದಿದ್ದರು ಮತ್ತು ರಾಯ್ಪುರದಲ್ಲಿ 29 ಎಸೆತಗಳಲ್ಲಿ 46 ರನ್ ಮಾಡಿದ್ದರು. ರಿಂಕು ತನ್ನ ದೊಡ್ಡ ಹೊಡೆತಗಳ ಇನಿಂಗ್ಸನ್ನು ಪರಿಣಾಮಕಾರಿಯಾಗಿ ಪ್ರದರ್ಶಿಸಿದ್ದಾರೆ. ಐಪಿಎಲ್ನಲ್ಲಿ ಕೋಲ್ಕತಾ ನೈಟ್ ರೈಡರ್ಸ್ ಪರವಾಗಿ ಮತ್ತು ದೇಶಿ ಕ್ರಿಕೆಟ್ನಲ್ಲಿ ಉತ್ತರಪ್ರದೇಶದ ಪರವಾಗಿ ಅವರು ತನ್ನ ಈ ಕೌಶಲವನ್ನು ಕಾರ್ಯರೂಪಕ್ಕೆ ಈಗಾಗಲೇ ತಂದಿದ್ದಾರೆ. “ಭಾರತದ ಟಿ20 ತಂಡದಲ್ಲಿ ಸ್ಥಾನ ಪಡೆಯುವ ಸ್ಪರ್ಧೆಯಲ್ಲಿ ರಿಂಕು ಸಿಂಗ್ ಇದ್ದಾರೆ ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ. ಆದರೆ ವಿಶ್ವಕಪ್ ಇನ್ನೂ ದೂರವಿದೆ ಮತ್ತು ಅವರು ಸ್ಪರ್ಧಿಸುತ್ತಿರುವ ಸ್ಥಾನಕ್ಕೆ ಹಲವಾರು ಸ್ಪರ್ಧಿಗಳಿದ್ದಾರೆ. ವಿಕೆಟ್ಕೀಪರ್ ಬ್ಯಾಟರ್ ಜಿತೇಶ್ ಶರ್ಮ ಮತ್ತು ತಿಲಕ್ ವರ್ಮ ಕೂಡ ಈ ಸ್ಪರ್ಧೆಯಲ್ಲಿದ್ದಾರೆ’’ ಎಂದು ನೆಹ್ರಾ ಹೇಳಿದರು.
ವಿಧಾನಮಂಡಲದ ಚಳಿಗಾಲದ ಅಧಿವೇಶನಕ್ಕೆ ಸಿದ್ಧತೆಗಳು ಪೂರ್ಣ: ಸ್ಪೀಕರ್ ಯು.ಟಿ.ಖಾದರ್
ಬೆಳಗಾವಿ: ವಿಧಾನಮಂಡಲದ ಚಳಿಗಾಲದ ಅಧಿವೇಶನವು ಡಿ.4ರಿಂದ 15ರವರೆಗೆ ನಡೆಯಲಿದ್ದು, ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಈ ಬಾರಿಯ ಅಧಿವೇಶನದಲ್ಲಿ ರಾಜ್ಯದ ಎಲ್ಲ ಭಾಗಗಳ ವಿಷಯಗಳ ಚರ್ಚೆಯ ಜೊತೆಗೆ ಉತ್ತರ ಕರ್ನಾಟಕ ಭಾಗಕ್ಕೆ ಪ್ರಯೋಜನವಾಗುವ ಚರ್ಚೆಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ಸ್ಪೀಕರ್ ಯು.ಟಿ.ಖಾದರ್ ತಿಳಿಸಿದರು. ರವಿವಾರ ಸುವರ್ಣ ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಸದನದ ಕಲಾಪಗಳಲ್ಲಿ ರಾಜ್ಯದ ಸರ್ವಾಂಗೀಣ ಅಭಿವೃದ್ಧಿಯ ವಿಷಯಗಳೊಂದಿಗೆ ಉತ್ತರ ಕರ್ನಾಟಕದ ಪ್ರಗತಿಯ ಕುರಿತ ಚರ್ಚೆಗನ್ನು ಕೈಗೆತ್ತಿಕೊಳ್ಳಲಾಗುವುದು. ಅಧಿವೇಶನಕ್ಕೆ ಆಗಮಿಸುವ ಸಚಿವರು, ಶಾಸಕರು, ಅಧಿಕಾರಿಗಳು, ಮಾಧ್ಯಮ ಪ್ರತಿನಿಧಿಗಳಿಗೆ ಆಹಾರ, ವಸತಿ ಸೇರಿದಂತೆ ಎಲ್ಲ ರೀತಿಯ ಉತ್ತಮ ಗುಣಮಟ್ಟದ ಸೌಕರ್ಯಗಳನ್ನು ಒದಗಿಸಲಾಗಿದೆ ಎಂದರು. ಸುವರ್ಣ ವಿಧಾನಸೌಧದ ಸೌಂದರ್ಯ ಹೆಚ್ಚಿಸಲು ಈ ವೈಭವಯುತ ಕಟ್ಟಡಕ್ಕೆ ಕಾಯಂ ಎಲ್ಇಡಿ ವಿದ್ಯುತ್ ದೀಪಗಳನ್ನು ಅಳವಡಿಸಲಾಗಿದ್ದು, ಮುಂದಿನ 10 ವರ್ಷಗಳ ಕಾಲ ನಿರ್ವಹಣೆಗೆ ಕ್ರಮವಹಿಸಲಾಗಿದೆ. ಈ ಮುಂಚೆ ಅಧಿವೇಶನದ ಸಂದರ್ಭದಲ್ಲಿ ಮಾತ್ರ ವಿದ್ಯುತ್ದೀಪ ಅಲಂಕಾರ ಮಾಡಲಾಗುತ್ತಿತ್ತು. ಇನ್ನುಮುಂದೆ ಅಧಿವೇಶನದ ಜೊತೆಗೆ ಶನಿವಾರ, ರವಿವಾರ ಮತ್ತು ರಾಷ್ಟ್ರೀಯ ಹಬ್ಬಗಳ ದಿನಗಳಂದು ವಿದ್ಯುತ್ದೀಪಗಳ ಅಲಂಕಾರ ಮಾಡುವ ಮುಖಾಂತರ ವಿದ್ಯಾರ್ಥಿಗಳು, ಪ್ರವಾಸಿಗರನ್ನು ಆಕರ್ಷಿಸಲಾಗುವುದು ಎಂದು ಅವರು ತಿಳಿಸಿದರು. ಕಲಾಪಗಳ ವೀಕ್ಷಣೆ ವಿದ್ಯಾರ್ಥಿಗಳ ಅವಧಿ ಹೆಚ್ಚಳ: ಈ ಹಿಂದೆ ವಿಧಾನಮಂಡಲದ ಉಭಯ ಸದನಗಳ ಕಲಾಪಗಳ ವೀಕ್ಷಣೆಗೆ ವಿದ್ಯಾರ್ಥಿಗಳಿಗೆ ಕೇವಲ 10 ನಿಮಿಷಗಳ ಅವಧಿ ನೀಡಲಾಗುತ್ತಿತ್ತು. ಈ ಬಾರಿ ಈ ಅವಧಿಯನ್ನು 20 ರಿಂದ 30 ನಿಮಿಷಗಳಿಗೆ ಹೆಚ್ಚಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಸ್ಪೀಕರ್ ತಿಳಿಸಿದರು. ಕಲಾಪಗಳ ವೀಕ್ಷಣೆಗೆ ಆಗಮಿಸುವ ವೀಕ್ಷಕರಿಗೆ ಕಲಾಪಗಳ ವೀಕ್ಷಣೆಗೂ ಮುನ್ನ ಆಡಿಟೋರಿಯಂನಲ್ಲಿ ಸಂಪನ್ಮೂಲ ವ್ಯಕ್ತಿಗಳಿಂದ ಸಂವಿಧಾನದ ಮೌಲ್ಯಗಳು, ಪ್ರಜಾಪ್ರಭುತ್ವದ ವ್ಯವಸ್ಥೆ ಕುರಿತು ತಿಳಿಸಿಕೊಡಲಾಗುವುದು ಮತ್ತು ಸಾಕ್ಷ್ಯಚಿತ್ರದ ಮೂಲಕ ಅವರಿಗೆ ಅರಿವು ಮೂಡಿಸಲಾಗುವುದು. ಈ ಸಂದರ್ಭದಲ್ಲಿ ಮಕ್ಕಳಿಗೆ ತಂಪುಪಾನೀಯ ಮತ್ತು ಚಾಕ್ಲೇಟ್ಗಳನ್ನು ನೀಡಿ ಜನತಂತ್ರ ವ್ಯವಸ್ಥೆಯ ಬಗ್ಗೆ ಮಕ್ಕಳಲ್ಲಿ ಪ್ರೀತಿ ಹೆಚ್ಚಿಸಲಾಗುವುದು ಎಂದು ಯು.ಟಿ.ಖಾದರ್ ಹೇಳಿದರು. ಬೇಗ ಬರುವ ಶಾಸಕರಿಗೆ ಬಹುಮಾನ: ವಿಧಾನಸಭಾ ಕಲಾಪಕ್ಕೆ ಅಗತ್ಯವಿರುವ ಕೋರಂ ಹಾಜರಾತಿಯನ್ನು ನಿಗದಿತ ಸಮಯದೊಳಗೆ ಸೇರುವಂತೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಮೊದಲು ಬರುವ 25 ಶಾಸಕರಿಗೆ ಅವರು ಬೇಗ ಬಂದ ದಿನಗಳ ಹಾಜರಾತಿ ಆಧರಿಸಿ ಭಾರತ ಸರಕಾರ ಮತ್ತು ಕರ್ನಾಟಕ ಸರಕಾರದ ಲಾಂಛನಗಳಿರುವ ಟೀ ಕಪ್ ಮತ್ತು ಸಾಸರ್ ಗಳನ್ನು ಬಹುಮಾನವಾಗಿ ನೀಡಲಾಗುವುದು ಎಂದು ಅವರು ತಿಳಿಸಿದರು. ಈ ಬಾರಿಯ ಚಳಿಗಾಲದ ಅಧಿವೇಶನಕ್ಕೆ ಇದುವರೆಗೆ 2512 ಪ್ರಶ್ನೆಗಳು ಮತ್ತು ಗಮನಸೆಳೆಯುವ ಸೂಚನೆಗಳು ಸ್ವೀಕೃತವಾಗಿವೆ. 3 ಸುಗ್ರೀವಾಜ್ಞೆಗಳು ಮಸೂದೆ ರೂಪದಲ್ಲಿ ಮಂಡನೆಯಾಗಲಿವೆ. ಕಲಾಪ ಸಲಹಾ ಸಮಿತಿ ಸಭೆಯ ಮುಂದೆ ಹೆಚ್ಚಿನ ಮಸೂದೆಗಳು, ಬಿಲ್ಗಳು ಬರುವ ನಿರೀಕ್ಷೆ ಇದೆ ಎಂದು ಯು.ಟಿ.ಖಾದರ್ ಹೇಳಿದರು. ಸಾಂಸ್ಕತಿಕ ಕಲೆಗಳ ಪ್ರದರ್ಶನ: ರಾಜ್ಯಕ್ಕೆ ಕರ್ನಾಟಕವೆಂದು ನಾಮಕರಣವಾಗಿ 50 ವರ್ಷಗಳಾಗಿರುವ ಈ ಸುವರ್ಣ ಸಂಭ್ರಮದ ಆಚರಣೆಯ ಭಾಗವಾಗಿ ಸುವರ್ಣ ವಿಧಾನಸೌಧದ ವೈಭವೋಪೇತ ಮೆಟ್ಟಿಲುಗಳ ಮುಂಭಾಗದಲ್ಲಿ ಈ ಬಾರಿ ಪ್ರತಿದಿನ ಬೆಳಗ್ಗೆ 9ರಿಂದ 11 ರವರೆಗೆ ವಿದ್ಯಾರ್ಥಿಗಳಿಂದ ರಾಜ್ಯದ ವಿವಿಧಭಾಗಗಳ ಸಾಂಸ್ಕತಿಕ ಕಲೆಗಳ ಬಿಂಬಿಸುವ ಪ್ರದರ್ಶನ ನಡೆಯಲಿದೆ. ಡಿ.12ರಂದು ಆಳ್ವಾಸ್ ಸಂಸ್ಥೆಯ ಕಲಾತಂಡಗಳಿಂದ ವೈವಿಧ್ಯಮಯ ಸಾಂಸ್ಕೃತಿಕ ಕಲೆಗಳ ಅನಾವರಣಗೊಳ್ಳಲಿವೆ ಎಂದು ಸ್ಪೀಕರ್ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ವಿಧಾನಸಭಾ ಕಾರ್ಯದರ್ಶಿ ವಿಶಾಲಾಕ್ಷಿ, ವಿಧಾನಪರಿಷತ್ ಕಾರ್ಯದರ್ಶಿ ಮಹಾಲಕ್ಷ್ಮಿ, ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಮತ್ತಿತರರು ಉಪಸ್ಥಿತರಿದ್ದರು.
ಅಲ್ಪಸಂಖ್ಯಾತರು ಈಗ ಕಾಂಗ್ರೆಸ್ ಅಜೆಂಡಾದಲ್ಲಿಲ್ಲ: ಗುಲಾಂ ನಬಿ ಆಝಾದ್
ಶ್ರೀನಗರ: ಕಾಂಗ್ರೆಸ್ ತನ್ನ ಅಜೆಂಡಾದಲ್ಲಿ ಅಲ್ಪಸಂಖ್ಯಾತರ ಸಮಸ್ಯೆಗಳನ್ನು ಹೊಂದಿಲ್ಲ ಮತ್ತು ಇದರಿಂದಾಗಿಯೇ ಅದು ಹೆಚ್ಚಿನ ವಿಧಾನಸಭಾ ಚುನಾವಣೆಗಳಲ್ಲಿ ಸೋಲನ್ನಪ್ಪಿದೆ ಎಂದು ಕಾಂಗ್ರೆಸ್ ನ ಮಾಜಿ ನಾಯಕ ಹಾಗೂ ಡೆಮಾಕ್ರಟಿಕ್ ಪ್ರೊಗ್ರೆಸಿವ್ ಆಝಾದ್ ಪಾರ್ಟಿಯ ಅಧ್ಯಕ್ಷ ಗುಲಾಂ ನಬಿ ಆಝಾದ್ ಅವರು ರವಿವಾರ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ದೇಶಾದ್ಯಂತ ಅಲ್ಪಸಂಖ್ಯಾತರು ಎದುರಿಸುತ್ತಿರುವ ಸಮಸ್ಯೆಗಳನ್ನು ಕಾಂಗ್ರೆಸ್ ಉಲ್ಲೇಖಿಸಿಲ್ಲ. ಅಲ್ಪಸಂಖ್ಯಾತರ ಪರ ಹೋರಾಟಗಾರ ಎಂದು ಪರಿಗಣಿಸಲ್ಪಟ್ಟಿರುವ ಕಾಂಗ್ರೆಸ್ ಅಲ್ಪಸಂಖ್ಯಾತರ ಬಗ್ಗೆ ಮಾತನಾಡಿಲ್ಲ ಎನ್ನುವುದನ್ನು ನಾನು ಕಳೆದ 20-25 ದಿನಗಳಿಂದ ಗಮನಿಸಿದ್ದೇನೆ. ಈಗ ಕಾಂಗ್ರೆಸ್ನ ಅಜೆಂಡಾದಲ್ಲಿ ಅಲ್ಪಸಂಖ್ಯಾತರಿಲ್ಲ’ ಎಂದರು.
ಮಿಲಿಟರಿ ವೆಚ್ಚವನ್ನು ಹವಾಮಾನ ನಿಧಿಗೆ ವಿನಿಯೋಗಿಸಿ : ಸಿಒಪಿ28 ಶೃಂಗಸಭೆಗೆ ಕಾರ್ಯಕರ್ತರ ಆಗ್ರಹ
ದುಬೈ: ವಿಶ್ವದ ಬಲಾಢ್ಯ ಮತ್ತು ಶ್ರೀಮಂತ ದೇಶಗಳು ಮಿಲಿಟರಿ ವೆಚ್ಚದ ಕನಿಷ್ಟ 5%ವನ್ನಾದರೂ ಹವಾಮಾನ ವೈಪರೀತ್ಯ ಸಮಸ್ಯೆಯನ್ನು ನಿಯಂತ್ರಿಸುವ ನಿಧಿಗೆ ವಿನಿಯೋಗಿಸಬೇಕು ಎಂದು ದುಬೈಯಲ್ಲಿ ನಡೆಯುತ್ತಿರುವ ಸಿಒಪಿ28 ಶೃಂಗಸಭೆಯನ್ನು ಹವಾಮಾನ ಕಾರ್ಯಕರ್ತರು ಒತ್ತಾಯಿಸಿದ್ದಾರೆ. ಹವಾಮಾನ ಬಿಕ್ಕಟ್ಟು ಪ್ರದೇಶಗಳನ್ನು ಯುದ್ಧದ ಅಪಾಯಕ್ಕೆ ಒಳಪಡಿಸುತ್ತವೆ ಎಂಬುದಕ್ಕೆ ಪುರಾವೆಗಳು ಹೆಚ್ಚುತ್ತಿದ್ದು ವಿಶ್ವದ ಮಿಲಿಟರಿಗಳು ಕನಿಷ್ಟ 5.5% ಹೊರಸೂಸುವಿಕೆಯನ್ನು ಉತ್ಪಾದಿಸುತ್ತವೆ. ಶ್ರೀಮಂತ ರಾಷ್ಟ್ರಗಳು ತಮ್ಮ ಮಿಲಿಟರಿ ಬಜೆಟ್ನ 5%ವನ್ನು ಹವಾಮಾನ ನಿಧಿಗೆ ವಿನಿಯೋಗಿಸಬೇಕು. ಜಾಗತಿಕ ಮಿಲಿಟರಿ ಬಜೆಟ್ನ ಕೇವಲ 5%ವನ್ನು ಬೇರೆಡೆಗೆ ತಿರುಗಿಸುವ ಮೂಲಕ ಹವಾಮಾನ ನಿಧಿಗಾಗಿ ಪ್ರಪಂಚವು 110.4 ಶತಕೋಟಿ ಡಾಲರ್ ಮೊತ್ತವನ್ನು ಸಂಗ್ರಹಿಸಬಹುದು. ಈ ಶತಮಾನದಲ್ಲಿ ರಾಷ್ಟ್ರೀಯ ಮತ್ತು ಜಾಗತಿಕ ಭದ್ರತೆಯು ತಾಪಮಾನದ ಏರಿಕೆಯನ್ನು ಸೀಮಿತಗೊಳಿಸುವುದರ ಮೇಲೆ ಅವಲಂಬಿತವಾಗಿರುತ್ತದೆ ಎಂದು ಪರಿಸರ ಕಾರ್ಯಕರ್ತ ಬಿಲ್ ಮೆಕಿಬನ್ ಒತ್ತಾಯಿಸಿದ್ದಾರೆ. “ರವಿವಾರ ಸಿಒಪಿ28 ಶೃಂಗಸಭೆಯಲ್ಲಿ ‘ಪರಿಹಾರ, ಚೇತರಿಕೆ ಮತ್ತು ಶಾಂತಿ’ ಎಂಬ ವಿಷಯದ ಮೇಲೆ ನಡೆದ ಅಧಿವೇಶನದಲ್ಲಿ ಜಾಗತಿಕ ಮುಖಂಡರು ಹೆಚ್ಚು ದುರ್ಬಲ, ಸೂಕ್ಷ್ಮ ಮತ್ತು ಸಂಘರ್ಷ ಪೀಡಿತ ಸಮುದಾಯಗಳಿಗೆ ನೇರ ಸಹಾಯದ ಅಗತ್ಯವನ್ನು ಚರ್ಚಿಸಿದ್ದಾರೆ. ಆದರೆ ಹವಾಮಾನ ಮತ್ತು ಸಂಘರ್ಷದಿಂದ ಸಮುದಾಯಗಳನ್ನು ನಿಜವಾಗಿಯೂ ರಕ್ಷಿಸಲು ಆದ್ಯತೆಗಳಲ್ಲಿ ಬದಲಾವಣೆಯ ಅಗತ್ಯವಿದೆ” ಎಂದು ಅಂತರಾಷ್ಟ್ರೀಯ ಸಂಶೋಧನೆ ಮತ್ತು ಸಲಹಾ ಸಂಸ್ಥೆ ‘ಟ್ರಾನ್ಸ್ನ್ಯಾಷನಲ್ ಇನ್ಸ್ಟಿಟ್ಯೂಟ್’ ಪ್ರತಿಪಾದಿಸಿದೆ. ಜಾಗತಿಕ ಅನಿಲ ಹೊರಸೂಸುವಿಕೆಯ ಕನಿಷ್ಟ 5.5%ದಷ್ಟನ್ನು ವಿಶ್ವದ ಮಿಲಿಟರಿಗಳು ಉತ್ಪಾದಿಸುತ್ತವೆ. ಮಿಲಿಟರಿ ವೆಚ್ಚವು ಕಳೆದ ದಶಕದಲ್ಲಿ 25%ಕ್ಕಿಂತಲೂ ಹೆಚ್ಚಿದ್ದು ಇದೇ ಅವಧಿಯಲ್ಲಿ ಹವಾಮಾನ ನಿಧಿಗೆ ಹಣ ಕ್ರೋಢೀಕರಿಸುವ ಪ್ರಯತ್ನ ಕುಂಠಿತಗೊಂಡಿದೆ ಎಂದು 2022ರ ಒಂದು ಸಮೀಕ್ಷೆಯ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಸಾಹಿತ್ಯ ಸಮ್ಮೇಳನಗಳು ಮಕ್ಕಳಿಗೆ ಪ್ರೇರಣೆ ನೀಡುವ ಕ್ಷೇತ್ರವಾಗಿದೆ: ಸುನಿಲ್ ಕುಮಾರ್
ಕಾರ್ಕಳ: ಸಾಹಿತ್ಯ ಸಮ್ಮೇಳನಗಳು ಮಕ್ಕಳಿಗೆ ಪ್ರೇರಣೆ ನೀಡುವ ಕ್ಷೇತ್ರವಾಗಿದೆ ಎಂದು ಮಾಜಿ ಸಚಿವ ವಿ. ಸುನಿಲ್ ಕುಮಾರ್ ಹೇಳಿದರು. ಅವರು ಕಾರ್ಕಳ ಗಣಿತ ನಗರ ಜ್ಞಾನ ಸುಧ ಕಾಲೇಜು ಸಭಾಂಗಣದಲ್ಲಿ ನಡೆದ ಸಾಹಿತ್ಯ ಸಮ್ಮೇಳನದಲ್ಲಿ ಸಾಂಸ್ಕೃತಿಕ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದರು. ಕನ್ನಡ ಸಾಹಿತ್ಯ ಲೋಕದಲ್ಲಿ ಪ್ರೇರಣೆ, ಜಾಗೃತಿ , ಹಾಗೂ ಸಾಂಸ್ಕೃತಿಕ ವೈಭವವನ್ನು ಸಾರುವ ಕೆಲಸವಾಗಿದೆ , ಹೊಸ ಪೀಳಿಗೆಯ ಯುವ ಬರಹಗಾರರಿಗೆ ತಾಲೂಕು ಬರಹಗಾರರ ಸಮ್ಮೇಳನ ನಡೆಸುವ ಕಾರ್ಯವಾಗಲಿ, ಕಳೆದ ಬಾರಿ ನಡೆದ ರಾಜ್ಯ ಮಟ್ಟದ ಯಕ್ಷಗಾನ ಸಮ್ಮೇಳನವು ಸರಕಾರವು ಮುಂದುವರೆಸಲಿ ಎಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು. ಕಾರ್ಕಳ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷ, ಹಿರಿಯ ಸಾಹಿತಿ ಸೂಡ ಸದಾನಂದ ಶೆಣೈ ಮಾತನಾಡಿ, ಭಾಷೆ ಹಾಗೂ ಸಾಹಿತ್ಯಗಳು ನಮ್ಮೆಲ್ಲರನ್ನೂ ಒಂದುಗೂಡಿಸುವ ಸಾಧನಗಳು. ಮುಖ್ಯವಾಗಿ ತುಳು, ಕೊಂಕಣಿ, ಬ್ಯಾರಿ ಇತ್ಯಾದಿ ಭಾಷೆಗಳನ್ನು ಆಡುವವರ ಆಶ್ರಯದಲ್ಲಿ ಇಲ್ಲಿ ಕನ್ನಡ ಸಾಹಿತ್ಯಕ್ಕೆ ಬಹಳ ಪ್ರೋತ್ಸಾಹವಿದೆ. ತುಳುನಾಡಿನಲ್ಲಿ ವಿವಿಧ ಭಾಷಿಗರ ನಡುವಿನ ಸಂಪರ್ಕ ಭಾಷೆಯೇ ಕನ್ನಡ. ಮುಂದಿನ ದಿನಗಳಲ್ಲಿ ಕನ್ನಡದ ಸ್ಥಾನವನ್ನು ಇಂಗ್ಲಿಷ್ ಆಕ್ರಮಿಸಿಕೊಳ್ಳದ ಹಾಗೆ ನಾವು ಎಚ್ಚರದಲ್ಲಿರಬೇಕು. ಮಕ್ಕಳ ಸಾಹಿತ್ಯವನ್ನು ಪ್ರೋತ್ಸಾಹಿಸಿದರೆ ಕನ್ನಡವನ್ನು ಉಳಿಸಲು ಸಾಧ್ಯವಾಗುತ್ತದೆ ಎನ್ನುವುದು ನನ್ನ ನಂಬಿಕೆ. ಕನ್ನಡವನ್ನು ಉಳಿಸಿ ಬೆಳೆಸಲು ಸಿದ್ಧರಾಗಬೇಕು ಎಂದರು. ಕರ್ನಾಟಕ ರಾಜ್ಯ ಫೆಡರೇಶನ್ ಆಫ್ ಕರ್ನಾಟಕ ಕ್ವಾರಿ ಸ್ಟೋನ್ ಕ್ರಷರ್ ಓನರ್ಸ್ ಅಸೋಸಿಯೇಶನ್ (ರಿ.)ನ ರಾಜ್ಯಾಧ್ಯಕ್ಷ ಡಾ| ರವೀಂದ್ರ ಶೆಟ್ಟಿ, ಬಜಗೋಳಿ ಮಾತನಾಡಿ,ಮುಂದಿನ ದಿನಗಳಲ್ಲಿ ಕನ್ನಡ ಶಾಲೆಗಳ ಉಳಿಸುವ ಸಲುವಾಗಿ ತಾಲೂಕಿನ ಉತ್ತಮ ಕನ್ನಡ ಶಾಲೆಗಳನ್ನು ಗುರುತಿಸಿ ಸಿರಿಗನ್ನಡ ಸಿರಿ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗು ವುದು ಎಂದರು. ಈ ಸಂದರ್ಭದಲ್ಲಿ ಕಾರ್ಕಳದ ಸಾಹಿತಿ ಅವನಿ ಉಪಾದ್ಯಾ ಬರೆದ ಶ್ರೀ ರಾಮಾಯಣ ಸಿರಿ ಪುಸ್ತಕ ಬಿಡುಗಡೆ ಗೊಳಿಸಿ ಮಾತನಾಡಿದ ಅಜೆಕಾರು ಪದ್ಮಗೋಪಾಲ್ ಟ್ರಸ್ಟ್ ಅಧ್ಯಕ್ಷ ಸುಧಾಕರ ಶೆಟ್ಟಿ ರವಿ ಕಾಣದ್ದನ್ನು ಕವಿ ಕಾಣುತ್ತಾನೆ ಎನ್ನುವುದು ಸಾಹಿತ್ಯವೇ ಸಾಕ್ಷಿಯಾಗಿದೆ. ಮುಂದಿನ ದಿನಗಳಲ್ಲಿ ಜಿಲ್ಲಾ ಮಟ್ಟದಲ್ಲಿ ನಡೆಯುವ ಸಾಹಿತ್ಯ ಸಮ್ಮೇಳನದಲ್ಲಿ ಕಾರ್ಕಳ ಹಿರಿಯ ಸಾಹಿತಿ ದಿವಂಗತ ಎಂ ರಾಮಚಂದ್ರ ಅವರ ಹೆಸರಿನಲ್ಲಿ ಬಾಲಕವಿಗಳಿಗೆ ಹಾಗೂ , ಸರಳ ಸಜ್ಜನಿಕೆಯ ರಾಜಕಾರಣಿ ದಿವಂಗತ ಎಚ್ ಗೋಪಾಲ ಭಂಡಾರಿ ಯವರ ಹೆಸರಿನಲ್ಲಿ ಕನ್ನಡ ಸಾಹಿತ್ಯದ ಕ್ಷೇತ್ರದಲ್ಲಿ ಸೇವೆಗೈಯುವ ಸಂಘ ಸಂಸ್ಥೆಗಳನ್ನು ಗುರುತಿಸಿ ಜ್ಞಾನ ಸುಧಾ ಸಂಸ್ಥೆಯಿಂದ ಪ್ರಶಸ್ತಿ ನೀಡಲಾಗುವುದು ಎಂದರು. ಎಸ್.ಕೆ.ಎಸ್. ಪ್ರೊಜೆಕ್ಟ್ ಪ್ರೈ ಲಿ ಸಂಸ್ಥಾಪಕ ,ಉದ್ಯಮಿ ಸುಜಯ್ ಕುಮಾರ್ ಶೆಟ್ಟಿ, ಎಸ್.ವಿ. ಟಿ ಎಜ್ಯುಕೇಶನ್ ಟ್ರಸ್ಟ್ (ರಿ)ನ ಕಾರ್ಯದರ್ಶಿ ಕೆ.ಪಿ ಶೆಣೈ , ಕಾರ್ಕಳ ವಕೀಲರ ಸಂಘ ಅಧ್ಯಕ್ಷ ಸುನಿಲ್ ಕುಮಾರ್ ಶೆಟ್ಟಿ, ಕಾರ್ಕಳ ರಂಗ ಸಂಸ್ಕೃತಿ ಅದ್ಯಕ್ಷ ನಿತ್ಯಾನಂದ ಪೈ, ಬೈಲೂರಿನ ಉದ್ಯಮಿ ಸಂತೋಷ ವಾಗ್ಗೆ, ಕ್ಷೇತ್ರ ಶಿಕ್ಷಣಾಧಿಕಾರಿ ಭಾಸ್ಕರ ಟಿ. ,ಕಾರ್ಕಳ ತಹಶಿಲ್ದಾರ್ ನರಸಪ್ಪ , ಉಡುಪಿ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕಿ ಪೂರ್ಣಿಮಾ, ಕಸಾಪ ಕಾಪು ತಾಲೂಕು ಅಧ್ಯಕ್ಷ ಪುಂಡಲೀಕ ಮರಾಠೆ ಉಪಸ್ಥಿತರಿದ್ದರು. ಕನ್ನಡ ಸಾಹಿತ್ಯ ಪರಿಷತ್ತು, ಉಡುಪಿ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಆಶಯ ನುಡಿಗಳನ್ನಾಡಿದರು . ಎಂ ರಾಮ ಚಂದ್ರ ಅವರ ಹೆಸರಿನಲ್ಲಿ ಬಾಲಕವಿಗಳಿಗೆ ನೀಡುವ ಪ್ರಶಸ್ತಿಯನ್ನು ಅವನಿ ಉಪಾದ್ಯಾಯ ಅವರಿಗೆ ನೀಡಲಾಯಿತು. ಕಾರ್ಕಳ ಕಸಾಪ ಅಧ್ಯಕ್ಷ ಪ್ರಭಾಕರ್ ಶೆಟ್ಟಿ ಕೊಂಡಳ್ಳಿ ಪ್ರಸ್ತಾವಿತ ಮಾತನಾಡಿ ಸ್ವಾಗತಿಸಿದರು. ಸಂಗೀತ ಕುಲಾಲ್ , ಕಾರ್ಯಕ್ರಮ ನಿರೂಪಿಸಿದರು, ಕಾಲೇಜಿನ ಸಾರ್ವಜನಿಕ ಸಂಪರ್ಕ ಅಧಿಕಾರಿ ಜ್ಯೋತಿ ಪದ್ಮನಾಭ ಬಂಡಿ ಧನ್ಯವಾದ ವಿತ್ತರು. ಸಮಾರೋಪ ಸಮಾರಂಭ ಎಸ್.ಕೆ.ಎಫ್. ಮೂಡಬಿದ್ರೆ ಗೋಧಾಮ, ಮುನಿಯಾಲು ಸಂಸ್ಥಾಪಕ ಡಾ. ರಾಮಕೃಷ್ಣ ಆಚಾರ್, ನಿವೃತ್ತ ಕನ್ನಡ ಉಪನ್ಯಾಸಕ ರಾಮ ಭಟ್, ಸಮ್ಮೇಳನಾಧ್ಯಕ್ಷ ಸದಾನಂದ ಶೆಣೈ ಸೂಡ, ವಿಧಾನ ಪರಿಷತ್ ಸದಸ್ಯ ಎಸ್. ಎಲ್. ಭೋಜೇಗೌಡ, ಮುನಿಯಾಲು ಉದಯಕುಮಾರ್ ಶೆಟ್ಟಿ , ಬಿಲ್ಲವ ಸಂಘದ ಅಧ್ಯಕ್ಷ ಡಿ. ಆರ್. ರಾಜು, ಕಾರ್ಕಳ ಡಾ. ಪಿ. ಬಾಲಕೃಷ್ಣ ಆಳ್ವ, ಲ। ಎನ್. ಎಮ್. ಹೆಗ್ಡೆ, ಲಯನ್ಸ್ ಪೂರ್ವ ಜಿಲ್ಲಾ ಗವರ್ನರ್ ಶ್ರೀ ಅರುಣ್ ಕುಮಾರ್, ಟೀಚರ್ಸ್ ಕೋ-ಆಪರೇಟಿವ್ ಬ್ಯಾಂಕ್ ನಿರ್ದೇಶಕ ರವೀಂದ್ರ ಹೆಗ್ಡೆ, ತಾಲೂಕು ಪಂಚಾಯತ ಕಾರ್ಯ ನಿರ್ವಹಣಾಧಿಕಾರಿ ಗುರುದತ್ ಎಂ. ಎನ್. ಕಾರ್ಕಳ ಪುರಸಭೆ ಮುಖ್ಯಾಧಿಕಾರಿ ರೂಪಾ ಟಿ. ಶೆಟ್ಟಿ, ಮೊದಲಾದವರು ಉಪಸ್ಥಿತರಿದ್ದರು. ಈ ಸಂಧರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಹರ್ಷಿಣಿ ಕೆ. ಬಾಬು ಕೆ., ಇನ್ನಾ ರವೀಂದ್ರ ಕುಮಾರ್ , ವೆಲೇರಿಯನ್ ಲೋಬೋ ಸಾಣೂರು , ಬಾಲಕೃಷ್ಣ ಭೀಮಗುಳಿ ಮೋಹನ, ರಮಣ ಆಚಾರ್ ಜನಾರ್ದನ ಆಚಾರ್ಯ ವಸಂತ ಮೂಲ್ಯ ಬೆಳ್ಳಣ್ ಮೊಹಮ್ಮದ್ ಗೌಸ್ ,ಹಾಗೂ ಸಂಘಸಂಸ್ಥೆಗಳಾದ ಛತ್ರಪತಿ ಫೌಂಡೇಶನ್, ಕಾರ್ಕಳ ಹೊಸಬೆಳಕು” ಕಣಜಾರು ಸನ್ಮಾನಿಸಲಾಯಿತು. ಗೋಷ್ಠಿ ಗಳು: ಗೋಷ್ಠಿಯ ಬದುಕಿನ ಸಾಧನೆಗೆ ಸಾಹಿತ್ಯದ ಪ್ರೇರಣೆ ಎಂಬ ವಿಷಯದಲ್ಲಿ ನ್ಯಾಯವಾದಿ ಸಹಾನ ಕುಂದಾರ್ , ಗಂಗಾಧರ ಪಣಿಯೂರು, ವಿದ್ಯಾರ್ಥಿ ಗೋಷ್ಠಿ ನಿಧಿಯಲ್ಲಿ ಹೊಸ್ಮನೆ , ತೇಜಸ್ವಿನಿ, ಸಂದರ್ಶಿನಿ, ಕಾರ್ತಿಕ ,,, ಸೌಮ್ಯ ಕುಂದಾರ್, ಅದಿತಿ, ಸಿಧ್ಧರಾಜ್ , ದೀಕ್ಷಿತ್, ಪ್ರಾರ್ಥನಾ ಪೈ ಭಾಗವಹಿಸಿದರು. ಖ್ಯಾತ ಕವಿ ಪ್ರದೀಪ ಹೆಬ್ರಿ ಬರೆದ 511 ನೆ ಕೃತಿ ಶರಣ ಶ್ರೇಷ್ಠರು ಭಾಗ 2. ಲೋಕಾರ್ಪಣೆ ಗೊಳಿಸಿ ದಿಕ್ಸೂಚಿ ಉಪನ್ಯಾಸ ನೀಡಿದರು. ಮೆರವಣಿಗೆ: ಕಾರ್ಕಳ ಗಣಿತನಗರದ ಜ್ಞಾನ ಸುಧಾ ಸಭಾಂಗಣದಲ್ಲಿ ನಡೆದ ಹತ್ತೊಂಬತ್ತನೆ ಸಾಹಿತ್ಯ ಸಮ್ಮೇಳನದ ಅದ್ಯಕ್ಷರನ್ನು ದುರ್ಗಾದೇವಿ ಹಿರಿಯ ಪ್ರಾಾಥಮಿಕ ಶಾಲೆಯಿಂದ ಸಮ್ಮೇಳನಾಧ್ಯಕ್ಷರನ್ನು ಸ್ವಾಗತಿಸಿ, ಭವ್ಯ ಮೆರವಣಿಗೆ ಯಲ್ಲಿ ವೇದಿಕೆ ಕರೆ ತರಲಾಯಿತು.. . ನಾಡು, ನುಡಿಯ ಭಾವಚಿತ್ರ ಹಿಡಿದ ವಿದ್ಯಾರ್ಥಿಗಳು, ಎನ್ ಸಿಸಿ ಕೆಡೆಟ್ ಗಳು, ಸ್ಕೌಟ್ಸ್ ಗೈಡ್ಸ್ ತಂಡ, ಕೀಲು ಕುದುರೆ, ವಿವಿಧ ವೇಷ ಭೂಷಣಗಳು, ಚೆಂಡೆವಾದನ, ವಿವಿಧ ಶಿಕ್ಷಣ ಸಂಸ್ಥೆಗಳ ಬ್ಯಾಂಡ್ ಸೆಟ್, ನೃತ್ಯದೊಂದಿಗೆ ಸಾಹಿತಿಗಳು, ಕನ್ನಡ ಶಾಲು ಧರಿಸಿ ಗಣ್ಯರು, ಸಾಹಿತ್ಯಾಭಿಮಾನಿಗಳು, ಸಾರ್ವಜನಿಕರು ಮೆರವಣಿಗೆಯಲ್ಲಿ ಸಾಗಿದರು. ವಿದ್ಯಾಸಂಸ್ಥೆಗಳ ವಿವಿಧ ವೇಷಭೂಷಣಗಳು ಮೆರವಣಿಗೆಯಲ್ಲಿದ್ದವು.. ಸಾಹಿತ್ಯಸಕ್ತರರು ಉಪಸ್ಥಿತರಿದ್ದರು. ಕರ್ನಾಟಕ ರಾಜ್ಯ ಫೆಡರೇಶನ್ ಆಫ್ ಕರ್ನಾಟಕ ಕ್ವಾರಿ ಸ್ಟೋನ್ ಕ್ರರ್ಷ ಓನರ್ಸ್ ಅಸೋಸಿಯೇಶನ್ ಅಧ್ಯಕ್ಷ ರವೀಂದ್ರ ಶೆಟ್ಟಿ ಬಜಗೋಳಿ ಮೆರವಣಿಗೆಗೆ ಚಾಲನೆ ನೀಡಿದರು. ಅಜೆಕಾರು ಪದ್ಮಗೋಪಾಲ ಎಜ್ಯುಕೇಶನ್ ಟ್ರಸ್ಟಿ ಅನಿಲ್ ಕುಮಾರ್ ಜೈನ್, ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಘಟಕದ ಅಧ್ಯಕ್ಷ ಪ್ರಭಾಕರ ಶೆಟ್ಟಿ ಕೊಂಡಳ್ಳಿ, ಕುಕ್ಕುಂದೂರು ಗ್ರಾಾ. ಪಂ. ಅಧ್ಯಕ್ಷೆ ಉಷಾ ಕೆ., ಜ್ಞಾನಸುಧಾ ಶಿಕ್ಷಣ ಸಂಸ್ಥೆೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ದಿನೇಶ್ ಎಂ. ಕೊಡವೂರು, ಉಡುಪಿ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ನಿರ್ದೆಶಕಿ ಪೂರ್ಣಿಮಾ, ಸಾರ್ವಜನಿಕ ಸಂಪರ್ಕಾಧಿಕಾರಿ ಜ್ಯೋತಿ ಪದ್ಮನಾಭ ಭಂಡಿ, ಜಿಲ್ಲಾ ಸಾಹಿತ್ಯ ಪರಿಷತ್, ತಾಲೂಕು ಘಟಕದ ಪದಾಧಿಕಾರಿಗಳು ಉಪಸ್ಥಿತರಿದ್ದರು. ಸೆಕ್ರೆಡ್ ಹಾರ್ಟ್ ಶಾಲೆ , ಜ್ಞಾನ ಸುಧಾ ಸಂಸ್ಥೆಯ ಎನ್ ಸಿಸಿ ಘಟಕ ವಿದ್ಯಾರ್ಥಿಗಳು ಮೆರವಣಿಗೆ ಯಲ್ಲಿ ಮೆರಗು ನೀಡಿದರು. ಅಜೆಕಾರು ಪದ್ಮಗೋಪಾಲ ಎಜ್ಯುಕೇಶನ್ ಟ್ರಸ್ಟಿ ಅನಿಲ್ ಕುಮಾರ್ ಜೈನ್ ರಾಷ್ಟ್ರ ಧ್ವಜಾರೋಹಣ ನೆರವೇರಿಸಿದರು. ಕರ್ನಾಟಕ ಸಾಹಿತ್ಯ ಪರಿಷತ್ ಕಾರ್ಕಳ ತಾಲೂಕು ಘಟಕದ ಅಧ್ಯಕ್ಷ ಪ್ರಭಾಕರ ಶೆಟ್ಟಿ ಕೊಂಡಳ್ಳಿ ಕನ್ನಡ ದ್ವಜ ಧ್ವಜಾರೋಹಣಗೈದರು. ಕುಕ್ಕುಂದೂರು ಗ್ರಾ.ಪಂ. ಅಧ್ಯಕ್ಷೆ ಉಷಾ ಕೆ., ಉಪಸ್ಥಿತರಿದ್ದರು.
ನಾಳೆಯಿಂದ ಕುಂದಾ ನಗರಿ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ
►ವಿಪಕ್ಷಗಳಿಗೆ ತಿರುಗೇಟು ನೀಡಲು ಸರಕಾರದ ಸಿದ್ಧತೆ ಬೆಂಗಳೂರು: ಕುಂದಾನಗರ ಬೆಳಗಾವಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರಕಾರದ ಮೊದಲ ಚಳಿಗಾಲದ ಅಧಿವೇಶನ ಡಿ.4 ರಿಂದ 15ರವರೆಗೆ ನಡೆಯಲಿದ್ದು, ಸದನದಲ್ಲಿ ಸರಕಾರದ ವಿರುದ್ಧ ಹೋರಾಡಲು ಪ್ರತಿಪಕ್ಷಗಳಾದ ಬಿಜೆಪಿ ಹಾಗೂ ಜೆಡಿಎಸ್ ಕೈ ಜೋಡಿಸಿವೆ. ವಿಪಕ್ಷಗಳ ಆರೋಪಗಳಿಗೆ ತಿರುಗೇಟು ನೀಡಲು ಸರಕಾರವು ಸಿದ್ಧತೆಗಳನ್ನು ಮಾಡಿಕೊಂಡಿದೆ. ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಮಾಡಿಕೊಂಡ ಬಳಿಕ ಇದೇ ಮೊದಲ ಬಾರಿಗೆ ಸದನದ ಒಳಗೆ ಸರಕಾರದ ವಿರುದ್ಧ ಜಂಟಿ ಹೋರಾಟ ನಡೆಸಲಿವೆ. ಇದೇ ಮೊದಲ ಬಾರಿಗೆ ವಿರೋಧ ಪಕ್ಷದ ನಾಯಕನಾಗಿ ಆಯ್ಕೆಯಾಗಿರುವ ಆರ್.ಅಶೋಕ್ ಅವರಿಗೆ ಇದು ಹೊಸ ಸವಾಲಾಗಿದೆ. ವಿಪಕ್ಷಗಳ ಬತ್ತಳಕೆಯಲ್ಲಿನ ಅಸ್ತ್ರಗಳು?: ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿರುದ್ಧದ ಸಿಬಿಐ ತನಿಖೆಯನ್ನು ಹಿಂಪಡೆಯಲು ಸಚಿವ ಸಂಪುಟ ನಿರ್ಧರಿಸಿರುವುದು. ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಸಮೀಕ್ಷೆ ವರದಿ(ಜಾತಿ ಜನಗಣತಿ)ಯ ಮೂಲ ಪ್ರತಿ ನಾಪತ್ತೆಯಾಗಿರುವುದಾಗಿ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಸರಕಾರಕ್ಕೆ ಬರೆದಿರುವ ಪತ್ರ. ಸರಕಾರಿ ಅಧಿಕಾರಿಗಳ ವರ್ಗಾವಣೆ ಪ್ರಕ್ರಿಯೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪುತ್ರ ಮಾಜಿ ಶಾಸಕ ಡಾ.ಯತೀಂದ್ರ ಹಸ್ತಕ್ಷೇಪ ಮಾಡುವ ಆರೋಪ. ರಾಜ್ಯದ 200ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಬರಗಾಲ ಇದ್ದರೂ, ಸಮಪರ್ಕವಾಗಿ ನಿರ್ವಹಿಸಲು ಸರಕಾರ ವಿಫಲವಾಗಿದೆ ಎಂಬ ಆರೋಪ. ಹೆಣ್ಣು ಭ್ರೂಣ ಹತ್ಯೆ ಪ್ರಕರಣಗಳನ್ನು ತಡೆಯುವಲ್ಲಿ ವಿಫಲ, ಗ್ಯಾರಂಟಿ ಯೋಜನೆಗಳ ಸಮರ್ಪಕ ಅನುಷ್ಠಾನದಲ್ಲಿ ಲೋಪ, ಶಾಸಕರ ಪ್ರದೇಶಾಭಿವೃದ್ಧಿ ನಿಧಿಗೆ ನೀಡುತ್ತಿದ್ದ ಅನುದಾನ ಕಡಿತದ ಆರೋಪಗಳನ್ನು ಮುಂದಿಟ್ಟುಕೊಂಡು ಹೋರಾಡಲು ಪ್ರತಿಪಕ್ಷಗಳು ಸಜ್ಜಾಗಿವೆ. ಅಲ್ಲದೆ, ಸಚಿವರ ವಿರುದ್ಧ ಶಾಸಕ ಬಿ.ಆರ್.ಪಾಟೀಲ್ ಮುಖ್ಯಮಂತ್ರಿಗೆ ಬರೆದಿರುವ ಪತ್ರ, ಬೆಂಗಳೂರಿನ ಪ್ರತಿಷ್ಠಿತ ಶಾಲೆಗಳಿಗೆ ಬಂದಿರುವ ಬಾಂಬ್ ಬೆದರಿಕೆ ಪತ್ರ ಬಂದಿರುವುದು ಸೇರಿದಂತೆ ಇನ್ನೂ ಅನೇಕ ವಿಚಾರಗಳೆ ಸರಕಾರದ ವಿರುದ್ಧ ಮುಗಿಬೀಳಲು ವಿರೋಧ ಪಕ್ಷಗಳ ಬತ್ತಳಕೆಯಲ್ಲಿನ ಪ್ರಮುಖ ಅಸ್ತ್ರಗಳಾಗಿವೆ. ಝಮೀರ್ ವಿರುದ್ಧ ಹಕ್ಕುಚ್ಯುತಿ?: ತೆಲಂಗಾಣ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಸ್ಪೀಕರ್ ಸ್ಥಾನದ ಬಗ್ಗೆ ಉಲ್ಲೇಖಿಸಿ ವಿಪಕ್ಷಗಳ ಸದಸ್ಯರನ್ನು ಟೀಕಿಸಿದ ಆರೋಪದ ಹಿನ್ನೆಲೆಯಲ್ಲಿ ಸಚಿವ ಝಮೀರ್ ಅಹ್ಮದ್ ಖಾನ್ ವಿರುದ್ಧ ಹಕ್ಕುಚ್ಯುತಿ ಮಂಡಿಸಲು ವಿಪಕ್ಷಗಳಾದ ಬಿಜೆಪಿ ಹಾಗೂ ಜೆಡಿಎಸ್ ನಿರ್ಧರಿಸಿವೆ. ಅಧಿವೇಶನದ ಮೊದಲ ದಿನವೇ ಝಮೀರ್ ಅಹ್ಮದ್ ರಾಜೀನಾಮೆಗೆ ಒತ್ತಾಯಿಸಿ ಪ್ರತಿಪಕ್ಷಗಳು ಧರಣಿ ನಡೆಸುವ ಸಾಧ್ಯತೆಗಳಿವೆ. ವಿಪಕ್ಷಗಳಿಗೆ ತಿರುಗೇಟು ನೀಡಲು ಸರಕಾರದ ಸಿದ್ಧತೆ: ಯಡಿಯೂರಪ್ಪ ಸರಕಾರದ ಅವಧಿಯಲ್ಲಿ ಅಡ್ವೊಕೇಟ್ ಜನರಲ್ ಸಲಹೆಯನ್ನು ಕಡೆಗಣಿಸಿ, ಡಿ.ಕೆ.ಶಿವಕುಮಾರ್ ವಿರುದ್ಧದ ಆದಾಯ ಮೀರಿ ಆಸ್ತಿಗಳಿಕೆ ಆರೋಪದ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಿದ್ದು ಕಾನೂನು ಬಾಹಿರವೆಂದು ಹಿಂಪಡೆದಿರುವುದು ಎಂಬುದು ಸರಕಾರದ ಸಮರ್ಥನೆ. ರಾಜ್ಯದಲ್ಲಿ 200ಕ್ಕೂ ಹೆಚ್ಚು ತಾಲೂಕುಗಳು ಬರಪೀಡಿತವಾಗಿದ್ದರೂ ಕೇಂದ್ರ ಸರಕಾರ ರಾಜ್ಯಕ್ಕೆ ಎನ್ಡಿಆರ್ ಎಫ್ ನಿಯಮಾವಳಿಗಳ ಅನ್ವಯ ಈವರೆಗೆ ಪರಿಹಾರ ಬಿಡುಗಡೆ ಮಾಡದೆ ಇರುವುದು, ಯತೀಂದ್ರ ವಿರುದ್ಧದ ಆರೋಪ ನಿರಾಕರಣೆ, ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಕುರಿತು ವಿವರಣೆ ನೀಡಲು ಸರಕಾರ ಸಿದ್ಧತೆ ಮಾಡಿಕೊಂಡಿದೆ. ಪ್ರತಿಪಕ್ಷಗಳ ಆರೋಪಗಳಿಗೆ ಸಮರ್ಥವಾಗಿ ಪ್ರತ್ಯುತ್ತರ ನೀಡುವಂತೆ ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಎಲ್ಲ ಸಚಿವರಿಗೆ ಸೂಚನೆಗಳನ್ನು ನೀಡಿದ್ದಾರೆ. ತಳಮಟ್ಟದಲ್ಲಿ ಜನರ ಸಮಸ್ಯೆಗಳಿಗೆ ಸ್ಪಂದಿಸಿರುವುದು, ಕೇಂದ್ರ ಸರಕಾರದಿಂದ ಆಗುತ್ತಿರುವ ಅಸಹಕಾರದ ವಿಚಾರವನ್ನು ಪ್ರಧಾನವಾಗಿ ಸದನದಲ್ಲಿ ಬಿಂಬಿಸುವಂತೆ ಅವರು ತಿಳಿಸಿದ್ದಾರೆ ಎನ್ನಲಾಗಿದೆ. ಸರಕಾರ ಅಧಿಕಾರಕ್ಕೆ ಬಂದು ಆರು ತಿಂಗಳು ಪೂರ್ಣಗೊಂಡಿರುವುದರಿಂದ ಗ್ಯಾರೆಂಟಿ ಯೋಜನೆಗಳ ಅನುಷ್ಠಾನ, ರಾಜ್ಯದ ಆರ್ಥಿಕ ಪರಿಸ್ಥಿತಿ, ಸರಕಾರದ ಸಾಧನೆಗಳ ಬಗ್ಗೆಯೂ ಸದನದಲ್ಲಿ ವಿಪಕ್ಷಗಳಿಗೆ ಮನವರಿಕೆ ಮಾಡಿಕೊಡುವ ಪ್ರಯತ್ನವನ್ನು ಸರಕಾರ ಮಾಡಲಿದೆ ಎಂದು ತಿಳಿದು ಬಂದಿದೆ. ಉತ್ಸಾಹ ಹೆಚ್ಚಿಸಿದ ಪಂಚರಾಜ್ಯಗಳ ಚುನಾವಣಾ ಫಲಿತಾಂಶ: ಮುಂಬರುವ ಲೋಕಸಭಾ ಚುನಾವಣೆಗೆ ಸೆಮಿ ಫೈನಲ್ ಎಂದೇ ಬಿಂಬಿಸಲ್ಪಟ್ಟಿದ್ದ ರಾಜಸ್ತಾನ, ತೆಲಂಗಾಣ, ಛತ್ತೀಸ್ಗಡ, ಮಧ್ಯಪ್ರದೇಶ ಹಾಗೂ ಮಿಝೋರಾಂ ರಾಜ್ಯಗಳ ಚುನಾವಣಾ ಫಲಿತಾಂಶವು ಪ್ರತಿಪಕ್ಷಗಳ ಪಾಳಯದಲ್ಲಿ ಉತ್ಸಾಹ ತುಂಬಿಸಿದೆ. ವಿಧಾನಮಂಡಲ ಅಧಿವೇಶನದ ಹಿನ್ನೆಲೆಯಲ್ಲಿ ಬೆಳಗಾವಿಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದ್ದು, ಐದು ಸಾವಿರ ಪೊಲೀಸರನ್ನು ನಿಯೋಜಿಸಲಾಗಿದೆ. ಸುಮಾರು ಎರಡು ಸಾವಿರ ಪೊಲೀಸರ ವಾಸ್ತವ್ಯಕ್ಕೆ ಸುವರ್ಣ ವಿಧಾನಸೌಧದ ಸಮೀಪ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಲಾಗಿದೆ. ಪೊಲೀಸರ ವಾಸ್ತವ್ಯಕ್ಕೆ ಅಲ್ಲಿ ಜರ್ಮನ್ ಟೆಂಟ್, ಕುಡಿಯುವ ನೀರು, ಶೌಚಾಲಯ, ಬಿಸಿ ನೀರಿನ ವ್ಯವಸ್ಥೆಯನ್ನು ಮಾಡಲಾಗಿದೆ.
4 ರಾಜ್ಯಗಳ ವಿಧಾನಸಭೆ ಚುನಾವಣಾ ಫಲಿತಾಂಶ | ಚಿತ್ರಗಳಲ್ಲಿ ನೋಡಿ
Delete Edit Delete Edit
ಗಾಝಾದಲ್ಲಿ ಕದನವಿರಾಮ ಜಾರಿಯಾಗದೆ ಕೈದಿಗಳ ವಿನಿಮಯ ಸಾಧ್ಯವಿಲ್ಲ: ಹಮಾಸ್
ಗಾಝಾ: ಗಾಝಾದಲ್ಲಿ ಕದನ ವಿರಾಮ ಜಾರಿಗೊಳ್ಳದೆ ಒತ್ತೆಯಾಳು-ಕೈದಿಗಳ ವಿನಿಮಯ ಸಾಧ್ಯವಿಲ್ಲ ಎಂದು ಹಮಾಸ್ ಉಪಮುಖ್ಯಸ್ಥ ಸಲೇಹ್ ಅಲ್-ಅರೌರಿಯನ್ನು ಉಲ್ಲೇಖಿಸಿ ಅಲ್ಜಝೀರಾ ವರದಿ ಮಾಡಿದೆ. ಇಸ್ರೇಲಿ ಯೋಧರು ಮತ್ತು ಇಸ್ರೇಲ್ ಸೇನೆಯಲ್ಲಿ ಕಾರ್ಯನಿರ್ವಹಿಸಿದ್ದ ಇಸ್ರೇಲ್ ನಾಗರಿಕರು ಇನ್ನೂ ಒತ್ತೆಯಾಳುಗಳಾಗಿದ್ದಾರೆ. ಗಾಝಾದಲ್ಲಿ ಕದನ ವಿರಾಮ ಜಾರಿಯಾಗದೆ ಮತ್ತು ಎಲ್ಲಾ ಫೆಲೆಸ್ತೀನಿಯನ್ ಕೈದಿಗಳು ಬಿಡುಗಡೆಗೊಳ್ಳದೆ ಇವರನ್ನು ಬಿಡುಗಡೆ ಮಾಡಲು ಸಾಧ್ಯವಿಲ್ಲ. ಯುದ್ಧ ಅದರದ್ದೇ ದಿಕ್ಕಿನಲ್ಲಿ ಸಾಗಲಿ. ಈ ನಿರ್ಧಾರ ಅಂತಿಮ. ನಾವು ರಾಜಿ ಮಾಡಿಕೊಳ್ಳಲು ಸಾಧ್ಯವಿಲ್ಲ’ ಎಂದವರು ಹೇಳಿದ್ದಾರೆ. ಈ ಮಧ್ಯೆ, ರವಿವಾರ ಉತ್ತರ ಗಾಝಾದ ಹಮಾಸ್ ನೆಲೆಯನ್ನು ಗುರಿಯಾಗಿಸಿ ಇಸ್ರೇಲ್ ವಾಯುಪಡೆ ಹಾಗೂ ಫಿರಂಗಿ ದಳ ಬೃಹತ್ ದಾಳಿ ನಡೆಸಿದೆ. ಗಾಝಾದಿಂದ ಇಸ್ರೇಲ್ ಪ್ರದೇಶದತ್ತ ಹಾರಿಬಿಡಲಾದ ರಾಕೆಟ್ಗಳನ್ನು ಇಸ್ರೇಲ್ ವಾಯುರಕ್ಷಣಾ ವ್ಯವಸ್ಥೆ ತುಂಡರಿಸಿದೆ. ಗಾಝಾದ ಮೇಲೆ ನಡೆಸಿದ ಡ್ರೋನ್ ದಾಳಿಯಲ್ಲಿ ಹಮಾಸ್ನ ಐವರು ಸದಸ್ಯರು ಮೃತಪಟ್ಟಿದ್ದಾರೆ. ಯುದ್ಧವಿಮಾನಗಳು ಹಾಗೂ ಹೆಲಿಕಾಪ್ಟರ್ಗಳು ಹಮಾಸ್ನ ರಹಸ್ಯ ಕಾರ್ಯಾಚರಣೆ ಕೇಂದ್ರ ಹಾಗೂ ಶಸ್ತ್ರಾಸ್ತ್ರ ಸಂಗ್ರಹ ವ್ಯವಸ್ಥೆಯನ್ನು ನಾಶಗೊಳಿಸಿವೆ ಎಂದು ಇಸ್ರೇಲ್ ಸೇನೆ ಹೇಳಿದೆ. ಶುಕ್ರವಾರ ಕದನ ವಿರಾಮ ಅಂತ್ಯಗೊಂಡ ಬಳಿಕ ಇಸ್ರೇಲ್ನ ದಾಳಿಯಿಂದ ಕನಿಷ್ಟ 240 ಫೆಲೆಸ್ತೀನೀಯರು ಮೃತಪಟ್ಟಿರುವುದಾಗಿ ಗಾಝಾದ ಆರೋಗ್ಯ ಸಚಿವಾಲಯ ಹೇಳಿದೆ. ಶನಿವಾರ ಉತ್ತರ ಗಾಝಾದಲ್ಲಿನ ಜಬಾಲ ನಿರಾಶ್ರಿತರ ಶಿಬಿರದ ಪ್ರದೇಶದಲ್ಲಿನ 6 ಮಹಡಿಯ ಕಟ್ಟಡದ ಮೇಲೆ ಮತ್ತು ಪಕ್ಕದಲ್ಲಿರುವ ಗಾಝಾ ನಗರದ ಮೇಲೆ ನಡೆದ ದಾಳಿಯಲ್ಲಿ ಕನಿಷ್ಟ 160 ಫೆಲೆಸ್ತೀನೀಯರು ಮೃತಪಟ್ಟಿದ್ದಾರೆ ಎಂದು ವಿಶ್ವಸಂಸ್ಥೆ ಮಾನವೀಯ ವ್ಯವಹಾರಗಳಿಗೆ ಸಂಬಂಧಿಸಿದ ಸಮಿತಿ ವರದಿ ಮಾಡಿದೆ.
ರಾಷ್ಟ್ರೀಯ ಸಾಂಸ್ಕೃತಿಕ ಯಾತ್ರೆ- ಕರ್ನಾಟಕ: ಎರಡನೇ ದಿನ ದೋಣಿಯಲ್ಲಿ ಹರೇಕಳಕ್ಕೆ ಪಯಣ
ಮಂಗಳೂರು: ‘ಪತ್ತೆಪ್ಪೆ ಜೋಕುಲು ಒಂಜಿ ಮಟ್ಟೆಲ್ಡ್ ’-ರಾಷ್ಟ್ರೀಯ ಸಾಂಸ್ಕೃತಿಕ ಯಾತ್ರೆ- ಕರ್ನಾಟಕ ಇದರ ಎರಡನೇ ದಿನದ ಪಯಣ ತುಳುನಾಡಿನ ವೀರರಾಗಿದ್ದ ಕೋಟಿ-ಚೆನ್ನಯರಿಗೆ ಸಮರ್ಪಿತವಾಗಿರುವ, ಮಹಾತ್ಮ ಗಾಂಧಿಯವರ ಪ್ರತಿಮೆಗೆ ನಿತ್ಯ ಪೂಜೆಯು ಸಲ್ಲುತ್ತಿರುವ ಶ್ರೀ ಬ್ರಹ್ಮ ಬೈದರ್ಕಳ ಗರಡಿ ಕ್ಷೇತ್ರದಲ್ಲಿ ಮಹಾನ್ ಚೇತನಗಳಿಗೆ ಗೌರವಾರ್ಪಣೆ ಮಾಡುವ ಮೂಲಕ ಆರಂಭಗೊಂಡಿತು. ಇದೇ ವೇಳೆ ಹಾಡು, ವಾಣಿ ಪೆರಿಯೋಡಿ ಅವರಿಂದ ಗಾಂಧಿ ಕಥನ ನಡೆಯಿತು. ಶ್ರೀವೈದ್ಯನಾಥ ದೇವಸ್ಥಾನ ಜಪ್ಪಿನಮೊಗರು ಕಂರ್ಬಿಸ್ಥಾನ, 1950-60ರ ದಶಕಗಳಲ್ಲಿ ರೈತ ಕಾರ್ಮಿಕ ಚಳವಳಿಗಳ ಮುಂಚೊಣಿ ನಾಯಕರ ಕರ್ಮಭೂಮಿಯಲ್ಲಿ ಗೌರವಾರ್ಪಣೆ, ಹಾಡು, ನುಡಿಮನ ಅರ್ಪಿಸಲಾಯಿತು. ಮಂಗಳೂರಿನ ಸಾಮಾಜಿಕ, ಸಾಂಸ್ಕೃತಿಕ , ಆರ್ಥಿಕ, ರಾಜಕೀಯ ರಂಗಳಿಗೆ ಅನನ್ಯ ಕೊಡುಗೆಗಳನ್ನು ನೀಡಿದ್ದ ಅನ್ನದಾತ ದಿ.ಜೆ.ರಾಮಪ್ಪ ಅವರಿಗೆ, ಸ್ಮಾರಕಕ್ಕೆ ತೆರಳಿ ಗೌರವಾರ್ಪಣೆ ಮಾಡಲಾಯಿತು. ತೆನೆಹಬ್ಬಕ್ಕೆ ಉಚಿತ ತೆನೆ ವಿತರಿಸುವ ಕೃಷಿಕ ಹರ್ಬರ್ಟ್ ಡಿ ಸೋಜ ಅವರೊಂದಿಗೆ ಸಂವಾದ ಬಳಿಕ ನೇತ್ರಾವತಿ ನದಿಯಲ್ಲಿ ದೋಣಿ ಮೂಲಕ ಹರೇಕಳಕ್ಕೆ ಪಯಣ ಮುಂದುವರಿಯಿತು. ಹರೇಕಳದ ಹಸಿರು ಸಂತ 70ರ ದಶಕದಲ್ಲಿ ರೈತ ಚಳವಳಿಗಳ ನೇತಾರರಾಗಿದ್ದ ದಿ.ಹರೇಕಳ ಮೊಯಿದ್ದೀನ್ ನೆನಪು, ಗೌರವಾರ್ಪಣೆ , ಜನಸಂವಾದ ಕಾರ್ಯಕ್ರಮ ಇದೇ ಸಂದರ್ಭದಲ್ಲಿ ನಡೆಯಿತು. ಹರೇಕಳದಲ್ಲಿ ಗ್ರಾಮೀಣ ಆರ್ಥಿಕತೆ, ಸಬಲೀಕರಣ,ಸಹಬಾಳ್ವೆಗಳ ಪ್ರತೀಕ ಮೈಮೂನಾರ ಹೈನೋದ್ಯಮದ ಸಾಧನೆಯ ಬಗ್ಗೆ ಸಂವಾದ ನಡೆಯಿತು. ಹೊಸಪಡ್ಪು ಶಾಲೆಯಲ್ಲಿ ಪದ್ಮಶ್ರೀ ಹರೇಕಳ ಹಾಜಬ್ಬರೊಂದಿಗೆ ಸಂವಾದದೊಂದಿಗೆ ಎರಡನೇ ದಿನದ ಯಾತ್ರೆ ಸಮಾಪ್ತಿಗೊಂಡಿತು.
ಆಸ್ಟ್ರೇಲಿಯವನ್ನು ಸೋಲಿಸಿ ಸರಣಿ ಜಯಗಳಿಸಿದ ಭಾರತ
ಬೆಂಗಳೂರು : ಇಲ್ಲಿನ ಎಂ.ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಟಿ20 ಸರಣಿಯ ಕೊನೆಯ ಪಂದ್ಯದಲ್ಲಿ ಭಾರತ ತಂಡ ಆಸ್ಟ್ರೇಲಿಯ ವಿರುದ್ಧ 6 ರನ್ ಗಳಿಂದ ಜಯಗಳಿಸಿದೆ. ಭಾರತ ನೀಡಿದ 160 ರನ್ ಗಳ ಬೆನ್ನತ್ತಿದ ಆಸ್ಟ್ರೇಲಿಯ 2.3 ನೇ ಓವರ್ ನಲ್ಲಿ ಜೋಶ್ ಪಿಲಿಪ್ (4) ವಿಕೆಟ್ ಕಳೆದುಕೊಂಡಿತು. ಆರಂಭಿಕ ಆಟಗಾರ ಟ್ರಾವೆಸ್ ಹೆಡ್ 28 ರನ್ ಗಳಿಸಿ ಉತ್ತಮ ಹೋರಾಟದ ಆಟ ಪ್ರದರ್ಶಿಸಿದರು. ಆದರೆ ರವಿ ಬಿಷ್ಣೋಯೊ ಎಸೆತದಲ್ಲಿ ಕ್ಲೀನ್ ಬೌಲ್ಡ್ ಆಗಿ, ಆಸ್ಟ್ರೇಲಿಯಕ್ಕೆ ಆಘಾತ ನೀಡಿದರು. ಮೂರನೇ ಕ್ರಮಾಂಕದಲ್ಲಿ ಕ್ರೀಸ್ ಗೆ ಬಂದ ಬೆನ್ ಮೆಕ್ಡರ್ಮಾಟ್ 36 ಎಸೆತಗಳಲ್ಲಿ 5 ಸಿಕ್ಸರ್ ಸಹಿತ 54 ರನ್ ಗಳಿಸಿ ಸ್ಪೋಟಕ ಬ್ಯಾಟಿಂಗ್ ಪ್ರದರ್ಶಿಸಿ ಆಸ್ಟ್ರೇಲಿಯಾಗೆ ಗೆಲುವಿನ ಭರವಸೆ ನೀಡಿದರು. ಬೆನ್ ಅವರು 14.6 ನೇ ಓವರ್ನಲ್ಲಿ ಅರ್ಷದೀಪ್ ಸಿಂಗ್ ಎಸೆತದಲ್ಲಿ ರಿಂಕು ಸಿಂಗ್ ಗೆ ಕ್ಯಾಚಿತ್ತು ವಿಕೆಟ್ ಒಪ್ಪಿಸಿದರು.
ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಮೋದಿ ಸೆಲ್ಫಿ ಪಾಯಿಂಟ್ ಸ್ಥಾಪಿಸುವ ಯುಜಿಸಿ ಸೂಚನೆಗೆ ಆಕ್ಷೇಪ
ಬೆಂಗಳೂರು: ದೇಶದ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಸೆಲ್ಫಿ ಪಾಯಿಂಟ್ಗಳನ್ನು ಸ್ಥಾಪಿಸಲು ಯುಜಿಸಿಯು ಸೂಚನೆ ನೀಡಿದೆ. ಆಡಳಿತ ಪಕ್ಷದ ನಾಯಕರನ್ನು ಬಿಂಬಿಸುವ ಯುಜಿಸಿಯ ಈ ಸೂಚನೆಯು ಪ್ರಜಾತಾಂತ್ರಿಕವಲ್ಲ ಎಂದು ಎಐಡಿಎಸ್ಒ(ಆಲ್ ಇಂಡಿಯಾ ಡೆಮೋಕ್ರಾಟಿಕ್ ಸ್ಟೂಡೆಂಟ್ಸ್ ಆರ್ಗಾನೈಜೇಷನ್ನ) ರಾಜ್ಯ ಕಾರ್ಯದರ್ಶಿ ಅಜಯ್ ಕಾಮತ್ ಖಂಡಿಸಿದ್ದಾರೆ. ರವಿವಾರ ಪ್ರಕಟನೆ ಹೊರಡಿಸಿರುವ ಅವರು, ದೇಶದ ಶೈಕ್ಷಣಿಕ ವ್ಯವಸ್ಥೆಯು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸುವುದರ ಬದಲು, ಒಬ್ಬ ನಾಯಕರ ವ್ಯಕ್ತಿ ಪೂಜೆ, ಒಂದು ವಿಚಾರಧಾರೆ, ಸೇರಿದಂತೆ ಏಕಮುಖ ಚಿಂತನೆಯಲ್ಲಿ ದೇಶದ ವಿದ್ಯಾರ್ಥಿ ಯುವಜನತೆಯನ್ನು ಮುಳುಗಿಸುವ ಅಪಾಯಕಾರಿ ನಡೆ ಇದಾಗಿದೆ. ಇದರ ಬದಲಾಗಿ, ಶಿಕ್ಷಣದ ವ್ಯಾಪಾರಿಕರಣ, ಖಾಸಗಿಕರಣ ಸೇರಿದಂತೆ ವ್ಯವಸ್ಥೆಯು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಬೇಕು ಎಂದಿದ್ದಾರೆ. ಯಾವುದೋ ಒಬ್ಬ ರಾಜಕೀಯ ನಾಯಕರನ್ನು ಬಿಂಬಿಸುವ ಬದಲಿಗೆ ದೇಶದ ಶಿಕ್ಷಣದ ಏಳಿಗೆಗಾಗಿ ಶ್ರಮಿಸಿದ ನವೋದಯ ಹರಿಕಾರರಾದ ಈಶ್ವರ ಚಂದ್ರ ವಿದ್ಯಾಸಾಗರ್, ರಾಜಾರಾಮ್ ಮೋಹನ ರಾಯ್, ಜ್ಯೋತಿಬಾ ಫುಲೆ, ಸಾವಿತ್ರಿಬಾಯಿ ಫುಲೆ ಹಾಗೂ ಸ್ವಾತಂತ್ರ್ಯ ಸಂಗ್ರಾಮದ ಕ್ರಾಂತಿಕಾರಿಗಳಾದ ಭಗತ್ ಸಿಂಗ್ ನೇತಾಜಿ ಸುಭಾಷ್ ಚಂದ್ರ ಬೋಸ್ ಮುಂತಾದವರ ಚಿಂತನೆಗಳನ್ನು ವಿದ್ಯಾರ್ಥಿಗಳ ಮಧ್ಯ ಹರಡುವ ಪ್ರಯತ್ನ ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ತೆಲಂಗಾಣ ವಿಧಾನಸಭಾ ಚುನಾವಣೆ: ಮೂವರು ಬಿಜೆಪಿ ಸಂಸದರಿಗೆ ಸೋಲು
ಹೈದರಾಬಾದ್: ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿದ್ದ ಬಿಜೆಪಿಯ ಎಲ್ಲ ಮೂರೂ ಸಂಸದರು ಸೋಲನ್ನಪ್ಪಿದ್ದಾರೆ. ಬಿಜೆಪಿಯ ಸಂಸದ ಹಾಗೂ ಪಕ್ಷದ ಮಾಜಿ ರಾಜ್ಯಾಧ್ಯಕ್ಷ ಬಂಡಿ ಸಂಜಯಕುಮಾರ್, ಡಿ.ಅರವಿಂದ ಮತ್ತು ಸೋಯಂ ಬಾಪುರಾವ್ ಅವರು ಬಿಆರ್ಎಸ್ ಅಭ್ಯರ್ಥಿಗಳಿಂದ ಪರಾಭವಗೊಂಡಿದ್ದಾರೆ. ವಿವಾದಾತ್ಮಕ ಶಾಸಕ ಟಿ.ರಾಜಾ ಸಿಂಗ್ ಹೈದರಾಬಾದ್ ನಗರದಲ್ಲಿ ಗೆಲುವು ಸಾಧಿಸಿರುವ ಏಕೈಕ ಬಿಜೆಪಿ ಅಭ್ಯರ್ಥಿಯಾಗಿದ್ದಾರೆ. ಅವರು ಘೋಷಮಹಲ್ ವಿಧಾನಸಭಾ ಕ್ಷೇತ್ರದಿಂದ ಸತತ ಮೂರನೇ ಬಾರಿಗೆ ಗೆದ್ದಿದ್ದಾರೆ. ಸೋದರರ ಗೆಲುವು: ಕಾಂಗ್ರೆಸ್ನ ಕೋಮಟಿರೆಡ್ಡಿ ರಾಜಗೋಪಾಲ ರೆಡ್ಡಿಯವರು ಮನುಗೋಡ ಕ್ಷೇತ್ರದಿಂದ ಮತ್ತು ಅವರ ಸೋದರ ಕೋಮಟಿರೆಡ್ಡಿ ವಂಕಟರೆಡ್ಡಿ ನಲ್ಗೊಂಡಾ ಕ್ಷೇತ್ರದಿಂದ ಗೆದ್ದಿದ್ದಾರೆ.
ವಿಕಲಚೇತನರು ಸಮಾಜಕ್ಕೆ ಹೊರೆ ಅಲ್ಲ; 4000 ವಿಶೇಷ ಚೇತನರಿಗೆ ಯಂತ್ರಚಾಲಿತ ದ್ವಿಚಕ್ರ ವಾಹನ : ಸಿಎಂ ಸಿದ್ದರಾಮಯ್ಯ
Disabilities Two Wheelers : ವಿಕಲಚೇತನರಿಗೆ ಪ್ರಸಕ್ತ ಸಾಲಿನಲ್ಲಿ 4000 ಬೈಕ್ಗಳನ್ನು ವಿತರಿಸಲು ಕ್ರಮಕೈಗೊಳ್ಳಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಮಾಹಿತಿ ನೀಡಿದ್ದಾರೆ. ಈ ಬಗ್ಗೆ ಹೆಚ್ಚಿನ ವಿವರ ಇಲ್ಲಿದೆ.
ಪಾಕಿಸ್ತಾನ ಪರ ಘೋಷಣೆ ಆರೋಪ: ಇಬ್ಬರ ಬಂಧನ
ಬೆಂಗಳೂರು: ಭಾರತ ಮತ್ತು ಆಸ್ಟ್ರೇಲಿಯ ನಡುವಿನ 4ನೇ ಟಿ20 ಪಂದ್ಯದ ಸಂದರ್ಭದಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿರುವ ಆರೋಪದಡಿ ಇಬ್ಬರು ಆರೋಪಿಗಳನ್ನು ಇಲ್ಲಿನ ಜೆ.ಪಿ.ನಗರ ಠಾಣಾ ಪೊಲೀಸರು ಬಂಧಿಸಿರುವುದಾಗಿ ವರದಿಯಾಗಿದೆ. ಇನಾಯತ್ ಉಲ್ಲಾಖಾನ್ ಹಾಗೂ ಸೈಯ್ಯದ್ ಮುಬಾರಕ್ ಎಂಬುವರನ್ನು ಬಂಧಿತ ಆರೋಪಿಗಳೆಂದು ಗುರುತಿಸಲಾಗಿದೆ. ಡಿ.1ರಂದು ಶುಕ್ರವಾರ ನಡೆದ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಪಂದ್ಯದ ವೇಳೆ ಜೆ.ಪಿ.ನಗರದ ಮೊದಲನೇ ಹಂತದಲ್ಲಿರುವ ಪಬ್ ಒಂದರಲ್ಲಿ ಕುಳಿತಿದ್ದ ಆರೋಪಿಗಳು ಪಾಕಿಸ್ತಾನದ ಪರ ಘೋಷಣೆ ಕೂಗಿದ್ದರು ಎನ್ನಲಾಗಿದೆ. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ಇತರ ಗ್ರಾಹಕರು, ಜೆ.ಪಿ.ನಗರ ಠಾಣಾ ಪೊಲೀಸರಿಗೆ ಮಾಹಿತಿ ರವಾನಿಸಿದ್ದರು. ಆರೋಪಿಗಳನ್ನು ವಶಕ್ಕೆ ಪಡೆದಿದ್ದ ಜೆ.ಪಿ.ನಗರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ವಿಚಾರಣೆ ವೇಳೆ ಆರೋಪಿಗಳು ‘ಮದ್ಯದ ನಶೆಯಲ್ಲಿ ಕೂಗಿದ್ದಾಗಿ' ಪೊಲೀಸರ ಮುಂದೆ ಹೇಳಿಕೆ ನೀಡಿರುವುದಾಗಿ ತಿಳಿದು ಬಂದಿದೆ. ಈ ಬಗ್ಗೆ ಗಲಭೆಗೆ ಪ್ರಚೋದನೆ, ಸಾರ್ವಜನಿಕ ಸ್ಥಳದಲ್ಲಿ ಶಾಂತಿಭಂಗ ಆರೋಪದಡಿ ಪ್ರಕರಣ ದಾಖಲಾಗಿದೆ.
ಪ್ಯಾರಿಸ್: ಜರ್ಮನ್ ಪ್ರವಾಸಿಗನ ಇರಿದು ಹತ್ಯೆ; ಇಬ್ಬರಿಗೆ ಗಾಯ
ಪ್ಯಾರಿಸ್: ಫ್ರಾನ್ಸ್ನ ಈಫೆಲ್ ಗೋಪುರದ ಬಳಿ ಪ್ರವಾಸಿಗರ ಮೇಲೆ ದಾಳಿ ನಡೆಸಿದ ವ್ಯಕ್ತಿಯೊಬ್ಬ ಜರ್ಮನ್ ಪ್ರವಾಸಿಗನನ್ನು ಇರಿದು ಹತ್ಯೆ ಮಾಡಿದ್ದು ಇತರ ಇಬ್ಬರನ್ನು ಗಾಯಗೊಳಿಸಿದ್ದು ಬಳಿಕ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಮೂಲಗಳು ವರದಿ ಮಾಡಿವೆ. ಆರೋಪಿಗೆ ಮಾನಸಿಕ ಆರೋಗ್ಯ ಸಮಸ್ಯೆಯಿದ್ದು ಈ ಹಿಂದೆ 2016ರಲ್ಲಿ ಇದೇ ರೀತಿಯ ದಾಳಿಗೆ ವಿಫಲ ಪ್ರಯತ್ನ ನಡೆಸಿದ ಅಪರಾಧಕ್ಕೆ 4 ವರ್ಷದ ಜೈಲುಶಿಕ್ಷೆ ಅನುಭವಿಸಿ ಬಿಡುಗಡೆಗೊಂಡಿದ್ದ ಮತ್ತು ಪೊಲೀಸರ ‘ನಿಗಾ ಪಟ್ಟಿ’ಯಲ್ಲಿ ಸೇರಿದ್ದ. ಶನಿವಾರ ರಾತ್ರಿ ಈಫೆಲ್ ಗೋಪುರ ವೀಕ್ಷಣೆಗೆ ಆಗಮಿಸಿದ್ದ ಪ್ರವಾಸಿಗರ ಮೇಲೆ ಈತ ದಾಳಿ ನಡೆಸಿ ಒಬ್ಬನನ್ನು ಚೂರಿಯಿಂದ ಇರಿದು ಹತ್ಯೆ ಮಾಡಿದ್ದಾನೆ. ಬಳಿಕ ಸಿಯೆನ್ ನದಿಯ ದಡದತ್ತ ತೆರಳಿ ಅಲ್ಲಿ ಸುತ್ತಿಗೆಯಿಂದ ಒಬ್ಬನ ಮೇಲೆ ದಾಳಿ ನಡೆಸಿದ್ದು ಇಬ್ಬರು ಗಾಯಗೊಂಡಿದ್ದಾರೆ. ಬಳಿಕ ಆತನನ್ನು ಬೆನ್ನಟ್ಟಿದ ಪೊಲೀಸರು ಆತನನ್ನು ಬಂಧಿಸಿದ್ದಾರೆ. ಅಫ್ಘಾನ್ ಮತ್ತು ಗಾಝಾದಲ್ಲಿ ಮುಸ್ಲಿಮರ ಹತ್ಯೆಯಾಗುತ್ತಿರುವುದನ್ನು ಖಂಡಿಸಿ ಈ ದಾಳಿ ನಡೆಸಿರುವುದಾಗಿ ಆರೋಪಿ ಹೇಳಿದ್ದಾನೆ ಎಂದು ವರದಿಯಾಗಿದೆ.
ಮನುಷ್ಯನಲ್ಲಿರುವ ದಿವ್ಯತೆಯನ್ನು ಹೊರತರುವುದೇ ಸನಾತನ ಧರ್ಮದ ಗುರಿ: ಸ್ವಾಮಿ ನಿರ್ಭಯಾನಂದ ಸರಸ್ವತಿ
ಮಂಗಳೂರು :ಸನಾತನ ಧರ್ಮ ಶಾಶ್ವತವಾದುದು ಮತ್ತು ಅದು ವೇದ ಮತ್ತು ಉಪನಿಷತ್ತುಗಳನ್ನು ಆಧರಿಸಿದ ಜೀವನ ಕ್ರಮ. ಮನುಷ್ಯನಲ್ಲಿರುವ ದಿವ್ಯತೆಯನ್ನು ಹೊರತರುವುದೇ ಅದರ ಗುರಿ ಎಂದು ಗದಗ ಹಾಗೂ ವಿಜಯಪುರದ ರಾಮಕೃಷ್ಣ ಆಶ್ರಮದ ಅಧ್ಯಕ್ಷ ಸ್ವಾಮಿ ನಿರ್ಭಯಾನಂದ ಸರಸ್ವತಿ ಹೇಳಿದ್ದಾರೆ. ರಾಮಕೃಷ್ಣ ಮಿಷನ್ ಮಾರ್ಗದರ್ಶನದಲ್ಲಿ ಸ್ವಚ್ಛ ಮಂಗಳೂರು ಫೌಂಡೇಷನ್ಮತ್ತು ಎಸ್ಸಿಎಸ್ ಆಸ್ಪತ್ರೆ, ಮಂಗಳೂರು ಸಹಯೋಗದೊಂದಿಗೆ ಮಂಗಳೂರು ರಾಮಕೃಷ್ಣ ಮಠದ ಸ್ವಾಮಿ ವಿವೇಕಾನಂದ ಸಭಾಭವನದಲ್ಲಿ ನಡೆದ ಉಪನ್ಯಾಸ ಮಾಲಿಕೆಯ ಎರಡನೇ ಉಪನ್ಯಾಸದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಮಂಗಳೂರು ರಾಮಕೃಷ್ಣ ಮಠದ ಅಧ್ಯಕ್ಷ ಸ್ವಾಮಿಜಿತ ಕಾಮಾನಂದಜಿ ಕಾರ್ಯಕ್ರಮವನ್ನು ಉದ್ಘಾಟಿಸಿ, ಆಶೀರ್ವಚನ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿ ‘ಭಾರತ ಪುರಾತನ ಕಾಲದಿಂದಲೂ ಜಗತ್ತಿಗೆ ಬಹಳಷ್ಟು ಕೊಡುಗೆಗಳನ್ನು ನೀಡುತ್ತಾ ಬಂದಿದೆ. ಜಗತ್ತಿನ ಬೆಳವಣಿಗೆಯಲ್ಲಿ ಇಂದಿಗೂ ಭಾರತದ್ದು ಸಿಂಹಪಾಲು. ಭಾರತದ ಸಂಸ್ಕೃತಿ, ಪರಂಪರೆ ಹಾಗೂ ಮೌಲ್ಯಗಳು, ಆಧ್ಯಾತ್ಮಿಕ ಪರಂಪರೆಯ ಬಗ್ಗೆ ಜನರಿಗೆ ತಿಳಿಯಪಡಿಸಲು ಹಾಗೂ ಇವುಗಳನ್ನು ಪಸರಿಸಲು ನಮ್ಮ ಸ್ವಯಂಸೇವಕರತಂಡ ಈ ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದು ನುಡಿದರು. ಎಸ್ಸಿಎಸ್ ಆಸ್ಪತ್ರೆ ಇದರ ಚೇರ್ಮನ್ಡಾ. ಜೀವರಾಜ ಸೊರಕೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಭಾ ಕಾರ್ಯಕ್ರಮದ ಸುಮೇಧಾ ಮೈತ್ರಿಮ್ ಭಜತ ಎಂಬ ಹಾಡನ್ನು ಹಾಡಿದರು. ಮುಖ್ಯ ಭಾಷಣಕಾರ ಸ್ವಾಮಿ ನಿರ್ಭಯಾನಂದ ಸರಸ್ವತಿ ಭಾಷಣ ಸಂವಾದ ಕಾರ್ಯಕ್ರಮ ನಡೆಯಿತು. ಸಂವಾದವನ್ನು ಮಂಗಳೂರು ವಿಶ್ವವಿದ್ಯಾನಿಲಯದ ನಿವೃತ್ತ ಪ್ರಾಧ್ಯಾಪಕ ಡಾ. ರವಿಶಂಕರ್ ನಡೆಸಿದರು. ಕಾರ್ಯಕ್ರಮದಲ್ಲಿ ಡಾ. ಚಂದ್ರಶೇಖರ ಸೊರಕೆ, ಶಿಕಾರಿಪುರ ಕೃಷ್ಣಮೂರ್ತಿ, ಜಗದೀಶ್ ಶೇಣವ, ರವೀಂದ್ರನಾಥ ಶ್ಯಾನುಭೋಗ್, ವಿರೂಪಾಕ್ಷ ದೇವರಮನೆ, ಅಜಯ್ ಶೆಟ್ಟಿ, ಉಮಾನಾಥ್ ಕೋಟೆಕಾರ್, ಮುಂತಾದವರು ಉಪಸ್ಥಿತರಿದ್ದರು. ಜಿಜ್ಞಾಸಾದ ಸಂಯೋಜಕ ಮತ್ತು ಭಾರತೀಯ ಸೇನೆಯ ನಿವೃತ್ತಯೋಧ ಕ್ಯಾಪ್ಟನ್ ಗಣೇಶ್ ಕಾರ್ಣಿಕ ಸ್ವಾಗತಿಸಿದರು, ಜಿಜ್ಞಾಸಾದ ಸಹ ಸಂಯೋಜಕ ಮತ್ತು ನಿಟ್ಟೆ ಇನ್ಸ್ಟಿಟ್ಯೂಟ್ಆಫ್ ಫಿಜಿಯೋಥೆರಫಿ ಪ್ರಾಂಶುಪಾಲ ಪ್ರೊ.ಧನೇಶ್ಕುಮಾರ್ ವಂದಿಸಿದರು, ಪ್ರಾಧ್ಯಾಪಕ ಸಂತೋಷ್ ಆಳ್ವ ಎಕ್ಕಾರು ಕಾರ್ಯಕ್ರಮ ನಿರ್ವಹಿಸಿದರು. ಇತ್ತೀಚಿಗೆ ಕಾಶ್ಮೀರದ ರಜೌರಿ ಸೆಕ್ಟರ್ನಲ್ಲಿ ಉಗ್ರಗಾಮಿಗಳನ್ನು ಹತ್ತಿಕ್ಕುವ ಸಂದರ್ಭದಲ್ಲಿ ಮಡಿದ ಭಾರತೀಯ ಸೇನೆಯ ಯೋಧರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಗೌರವ ಸಲ್ಲಿಸಲಾಯಿತು.
ಚೀನಾ ನಮ್ಮ ಮಿತ್ರನಲ್ಲ, ನಮಗಿರುವ ಅತೀ ದೊಡ್ಡ ಬೆದರಿಕೆ: ಅಮೆರಿಕ ಸಚಿವೆ ಗಿನಾ
ವಾಷಿಂಗ್ಟನ್: ಚೀನಾ ನಮ್ಮ ಮಿತ್ರನಲ್ಲ. ನಮಗೆ ಎದುರಾಗಿರುವ ಅತೀ ದೊಡ್ಡ ಬೆದರಿಕೆ ಎಂದು ಅಮೆರಿಕದ ವಾಣಿಜ್ಯ ಸಚಿವೆ ಗಿನಾ ರೇಮಂಡೊ ಹೇಳಿದ್ದಾರೆ. ಕ್ಯಾಲಿಫೋರ್ನಿಯಾದ ಸಿಮಿವ್ಯಾಲಿಯಲ್ಲಿ ನಡೆದ ರಾಷ್ಟ್ರೀಯ ರಕ್ಷಣಾ ವೇದಿಕೆಯ ವಾರ್ಷಿಕ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಷ್ಟ್ರೀಯ ಭದ್ರತೆಗೆ ಪ್ರಮುಖವಾಗಿರುವ ಸೆಮಿಕಂಡಕ್ಟರ್ಗಳು ಹಾಗೂ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಚೀನಾ ಪಡೆಯುವುದನ್ನು ತಡೆಯುವಂತೆ ಸಂಸದರು, ತಂತ್ರಜ್ಞಾನ ಸಂಸ್ಥೆಗಳು ಮತ್ತು ಅಮೆರಿಕದ ಮಿತ್ರರನ್ನು ಒತ್ತಾಯಿಸಿದರು. ಈ ಸಭೆಯಲ್ಲಿ ಹಾಜರಿರುವ ಕಂಪ್ಯೂಟರ್ ಚಿಪ್ ಉತ್ಪಾದಿಸುವ ಸಂಸ್ಥೆಗಳ ಸಿಇಒಗಳಿಗೆ ನನ್ನ ಆಗ್ರಹ ಇಷ್ಟವಾಗದು ಎಂಬುದು ತಿಳಿದಿದೆ. ಆದರೆ ನಮಗೆ ಆದಾಯಕ್ಕಿಂತಲೂ ರಾಷ್ಟ್ರೀಯ ಹಿತಾಸಕ್ತಿ, ರಾಷ್ಟ್ರೀಯ ಭದ್ರತೆಯ ರಕ್ಷಣೆ ಮುಖ್ಯ ಎಂಬುದನ್ನು ಮರೆಯಬಾರದು. ನಿಮ್ಮ ವ್ಯವಹಾರಗಳಿಗೆ ಪ್ರಜಾಪ್ರಭುತ್ವ ಒಳ್ಳೆಯದು, ಇಲ್ಲಿ ಹಾಗೂ ಪ್ರಪಂಚದಾದ್ಯಂತ ಎಲ್ಲರಿಗೂ ಸಮಾನವಾದ ಕಾನೂನು ಇರುವುದು ನಿಮ್ಮ ವ್ಯವಹಾರಕ್ಕೆ ಒಳ್ಳೆಯದು’ ಎಂದು ಗಿನಾ ಪ್ರತಿಪಾದಿಸಿದ್ದಾರೆ. ‘ನಮ್ಮ ರಫ್ತು ನಿಯಂತ್ರಣವನ್ನು ಹೇಗೆ ಅಂತ್ಯಗೊಳಿಸಬೇಕು ಎಂದು ಲೆಕ್ಕಾಚಾರ ಮಾಡಲು ಪ್ರತೀ ದಿನ, ಪ್ರತೀ ಕ್ಷಣ ಚೀನಾ ಪ್ರಯತ್ನಿಸುತ್ತಿದೆ. ನಾವು ಆ ನಿಯಂತ್ರಣವನ್ನು ಬಿಗಿಗೊಳಿಸಬೇಕು ಮತ್ತು ನಮ್ಮ ಮಿತ್ರರೂ ನಿಯಂತ್ರಣ ಕ್ರಮಗಳನ್ನು ಜಾರಿಗೊಳಿಸಲು ಗಂಭೀರ ಪ್ರಯತ್ನ ನಡೆಸಬೇಕಾಗಿದೆ’ ಎಂದ ಅವರು, ವಾಣಿಜ್ಯ ಇಲಾಖೆಗೆ ಇನ್ನಷ್ಟು ಬಜೆಟ್ ಅನುದಾನ ದೊರೆಯಬೇಕೆಂದು ಆಗ್ರಹಿಸಿದರು. ಕೃತಕ ಬುದ್ಧಿಮತ್ತೆ(ಎಐ) ಕ್ಷೇತ್ರದಲ್ಲಿ ಅಮೆರಿಕ ವಿಶ್ವದಲ್ಲಿ ಮುಂಚೂಣಿ ಸ್ಥಾನದಲ್ಲಿದೆ. ಅತ್ಯುನ್ನತ ಸೆಮಿಕಂಡಕ್ಟರ್ ವಿನ್ಯಾಸದಲ್ಲೂ ಅಮೆರಿಕ ಅಗ್ರಗಣ್ಯವಾಗಿದೆ. ಇದಕ್ಕೆ ಕಾರಣ ನಮ್ಮ ಖಾಸಗಿ ಕ್ಷೇತ್ರ. ನಮಗೆ ಸಮಾನವಾಗಿ ನಿಲ್ಲಲು ಚೀನಾಕ್ಕೆ ಅವಕಾಶ ನೀಡುವ ಮಾತೇ ಇಲ್ಲ ಎಂದು ಗಿನಾ ಹೇಳಿದರು.
ಫಿಲಿಪ್ಪೀನ್ಸ್ನಲ್ಲಿ ಪ್ರಬಲ ಬಾಂಬ್ಸ್ಫೋಟ: 4 ಮಂದಿ ಮೃತ್ಯು; ಕನಿಷ್ಟ 50 ಮಂದಿಗೆ ಗಾಯ
ಮನಿಲಾ: ದಂಗೆ ಬಾಧಿತ ದಕ್ಷಿಣ ಫಿಲಿಪ್ಪೀನ್ನಲ್ಲಿ ರವಿವಾರ ಪ್ರಾರ್ಥನೆಗೆ ಸೇರಿದ್ದ ಕ್ಯಾಥೊಲಿಕ್ ಕ್ರಿಶ್ಚಿಯನ್ನರನ್ನು ಗುರಿಯಾಗಿಸಿ ನಡೆದ ಬಾಂಬ್ ದಾಳಿಯಲ್ಲಿ ಕನಿಷ್ಟ 4 ಮಂದಿ ಮೃತಪಟ್ಟಿದ್ದು 50ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವುದಾಗಿ ವರದಿಯಾಗಿದೆ. ದಕ್ಷಿಣ ಫಿಲಿಪ್ಪೀನ್ಸ್ನ ಲನಾವೊ ಡೆಲ್ಸುರ್ ಪ್ರಾಂತದ ರಾಜಧಾನಿ ಮರಾವಿ ನಗರದ ಯುನಿವರ್ಸಿಟಿ ಜಿಮ್ನಲ್ಲಿ ಬಾಂಬ್ ಸ್ಫೋಟಿಸಿದೆ. ಈ ನಗರವನ್ನು ಐಸಿಸ್ ಜತೆ ಸಂಪರ್ಕದಲ್ಲಿರುವ ಬಂಡುಗೋರ ಸಶಸ್ತ್ರ ಹೋರಾಟಗಾರರ ಗುಂಪು 2017ರಲ್ಲಿ 5 ತಿಂಗಳು ವಶಪಡಿಸಿಕೊಂಡಿತ್ತು. ಕಳೆದ ತಿಂಗಳು ಈ ಪ್ರದೇಶದಲ್ಲಿ ಸೇನೆ ನಿರಂತರ ಕಾರ್ಯಾಚರಣೆ ನಡೆಸಿ ಬಂಡುಗೋರ ಪಡೆಯ ಮುಖ್ಯಸ್ಥನನ್ನು ಹತ್ಯೆ ಮಾಡಿತ್ತು. ಇದಕ್ಕೆ ಪ್ರತೀಕಾರವಾಗಿ ನಡೆದ ದಾಳಿ ಇದಾಗಿರಬಹುದು. ಪೊಲೀಸ್ ಠಾಣೆಗಳು ಹಾಗೂ ಚೆಕ್ಪೋಸ್ಟ್ಗಳನ್ನು ಗರಿಷ್ಟ ಎಚ್ಚರಿಕೆಯ ಸ್ಥಿತಿಯಲ್ಲಿರಿಸಲಾಗಿದ್ದು ಬಂದರುಗಳು ಹಾಗೂ ಕರಾವಳಿ ತೀರಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ ಎಂದು ಸಶಸ್ತ್ರ ಪಡೆಗಳ ಮುಖ್ಯಸ್ಥ ರೋಮಿಯೊ ಬ್ರಾವ್ನರ್ ಹೇಳಿದ್ದಾರೆ. ಮುಂದಿನ ಸೂಚನೆಯವರೆಗೆ ತರಗತಿಗಳನ್ನು ಅಮಾನತುಗೊಳಿಸಿರುವುದಾಗಿ ಯುನಿವರ್ಸಿಟಿ ಪ್ರಕಟಣೆ ತಿಳಿಸಿದೆ. ಫಿಲಿಪ್ಪೀನ್ಸ್ ಅಧ್ಯಕ್ಷ ಫರ್ಡಿನಾಂಡ್ ಮಾರ್ಕೋಸ್ ಜ್ಯೂ. ಬಾಂಬ್ ದಾಳಿಯನ್ನು ಖಂಡಿಸಿದ್ದು ವಿದೇಶಿ ಉಗ್ರರು ಈ ಸ್ಫೋಟ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ.
ಫಾದರ್ ಮುಲ್ಲರ್ನಲ್ಲಿ ಮಹಿಳಾ ಮಾನಸಿಕ ಆರೋಗ್ಯ- ಪೆರಿನಾಟಲ್ ಸೈಕಿಯಾಟ್ರಿ ರಾಷ್ಟ್ರೀಯ ವಿಚಾರ ಸಂಕಿರಣ
ಮಂಗಳೂರು: ಮಾನಸಿಕ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಮಹಿಳೆಯರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಕಾರ್ಯಕ್ರಮ ರೂಪಿಸಬೇಕಾಗಿದೆ ಎಂದು ಇಂಡಿಯನ್ ಸೈಕಿಯಾಟ್ರಿಕ್ ಸೊಸೈಟಿಯ ಪ್ರಧಾನ ಕಾರ್ಯದರ್ಶಿ ಡಾ. ಅರಬಿಂದ ಬ್ರಹ್ಮಾವರ ಅಭಿಪ್ರಾಯಪಟ್ಟಿದ್ದಾರೆ. ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜಿನ ರಜತ ಮಹೋತ್ಸವದ ಅಂಗವಾಗಿ ಇಂಡಿಯನ್ ಸೈಕಿಯಾಟ್ರಿಕ್ ಸೊಸೈಟಿಯ ಮಹಿಳಾ ಮತ್ತು ಮಾನಸಿಕ ಆರೋಗ್ಯ ವಿಶೇಷ ವಿಭಾಗ ಮತ್ತು ಪೆರಿನಾಟಲ್ ಸೈಕಿಯಾಟ್ರಿ ಸ್ಪೆಷಾಲಿಟಿ ಆಶ್ರಯದಲ್ಲಿ ನಡೆದ ಮಹಿಳಾ ಮಾನಸಿಕ ಆರೋಗ್ಯ ಮತ್ತು ಪೆರಿನಾಟಲ್ ಸೈಕಿಯಾಟ್ರಿ ಬಗ್ಗೆ ಫಾದರ್ ಮುಲ್ಲರ್ ಸಂಸ್ಥೆಯ ದಶಮಾನೋತ್ಸವ ಸಭಾಂಗಣದಲ್ಲಿ ನಡೆದ 7ನೇ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದರು. ಮಹಿಳೆಯರ ಆರೋಗ್ಯ ಮತ್ತು ಪ್ರಸವಪೂರ್ವ ಆರೈಕೆಯು ಎರಡು ಪ್ರಮುಖ ಕ್ಷೇತ್ರಗಳಾಗಿವೆ. ಈ ವಿಚಾರದಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಇನ್ನಷ್ಟು ವಿಚಾರ ಸಂಕಿರಣಗಳ ಅಗತ್ಯವಿದೆ ಎಂದು ಅವರು ಹೇಳಿದರು. ಫಾದರ್ ಮುಲ್ಲರ್ ಚಾರಿಟೇಬಲ್ ಸಂಸ್ಥೆಗಳ ನಿರ್ದೇಶಕ ವಂ. ರಿಚರ್ಡ್ ಅಲೋಶಿಯಸ್ ಕೊಯೆಲ್ಹೊ ಮುಖ್ಯ ಅತಿಥಿಯಾಗಿ ಮಾತನಾಡಿ ‘ಮಾನಸಿಕ ಆರೋಗ್ಯ ಚಿಕಿತ್ಸೆಗೆ ಸಂಬಂಧಿಸಿ ಕರ್ನಾಟಕದಲ್ಲೇ ಸುಸಜ್ಜಿತ ಸೌಲಭ್ಯ ಹೊಂದಿದ ಮೊದಲ ಆಸ್ಪತ್ರೆಯಾಗಿದೆ ಫಾದರ್ ಮುಲ್ಲರ್. ಇಂದಿನ ದಿನಗಳಲ್ಲಿ ಮಾನಸಿಕ ಆರೋಗ್ಯದ ವಿಚಾರದಲ್ಲಿ ನಾವು ಹೆಚ್ಚಿನ ಕಾಳಜಿ ವಹಿಸಬೇಕಾಗಿದೆ. ಆದರೆ ಕೆಲವರು ಮಾನಸಿಕ ಕಾಯಿಲೆ ಇದ್ದರೂ ಮನೋವೈದ್ಯರ ಬಳಿ ಸಹಾಯ ಪಡೆಯಲು ಹಿಂದೇಟು ಹಾಕುತ್ತಾರೆ. ನಮ್ಮಲ್ಲಿ ಇಂದು ವಿಚ್ಛೇದನದ ಪ್ರಮಾಣವು ಗಣನೀಯವಾಗಿ ಹೆಚ್ಚುತ್ತಿದೆ ಮತ್ತು ವಿಚ್ಛೇದನದ ನಂತರ ಮಹಿಳೆಯರು ಪುರುಷರಿಗಿಂತ ಹೆಚ್ಚು ತೊಂದರೆ ಅನುಭವಿಸುತ್ತಾರೆ ಎಂದರು. ಮಾನಸಿಕ ಆರೋಗ್ಯ ಸಮಸ್ಯೆಯನ್ನು ಪುರುಷರಷ್ಟೇ ಮಹಿಳೆಯರು ಅನುಭವಿಸುತ್ತಾರೆ. ಈ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕಾಗಿದೆ ಎಂದರು. ಇಂಡಿಯನ್ ಸೈಕಿಯಾಟ್ರಿಕ್ ಸೊಸೈಟಿಯ ಸಂಪಾದಕ ಡಾ ಓಂಪ್ರಕಾಶ ಈ ಸಂದರ್ಭದಲ್ಲಿ ಮಾತನಾಡಿದರು. ಮಹಿಳಾ ಮತ್ತು ಮಾನಸಿಕ ಆರೋಗ್ಯ ವಿಶೇಷ ವಿಭಾಗದ ಅಧ್ಯಕ್ಷ ಡಾ.ಬಿ.ಕೆ ವಾರಾಯಿಚ್ ಸ್ವಾಗತಿಸಿ, ಸಂಘಟನಾ ಅಧ್ಯಕ್ಷೆ ಡಾ.ಸುಪ್ರಿಯಾ ಹೆಗ್ಡೆ ಆರೂರ್ ವಂದಿಸಿದರು. ಸಂಘಟನಾ ಕಾರ್ಯದರ್ಶಿ ಡಾ.ಅರುಣಾ ಯಡಿಯಾಲ್ ಕಾರ್ಯಕ್ರಮ ನಿರೂಪಿಸಿದರು.
ಕೃಷ್ಣಾಪುರ ಎ.ಎಂ.ಎ. ಓಲ್ಡ್ ಸ್ಟೂಡೆಂಟ್ ಅಸೋಸಿಯೇಷನ್ ವತಿಯಿಂದ ವಿಕಲಚೇತನರ ದಿನಾಚರಣೆ
ಸುರತ್ಕಲ್, ಡಿ.3: ಕೃಷ್ಣಾಪುರ ಎಂಟನೇ ಎ ಬ್ಲಾಕ್ ಎ.ಎಂ.ಎ. ಓಲ್ಡ್ ಸ್ಟೂಡೆಂಟ್ ಅಸೋಸಿಯೇಷನ್ ವತಿಯಿಂದ ವಿಕಲಚೇತನರ ದಿನಾಚರಣೆಯ ಪ್ರಯುಕ್ತ ಅಲ್ ಹುದಾ ಮಸೀದಿ ವಠಾರದಲ್ಲಿ ದ್ವಿಚಕ್ರ ವಾಹನ ವಿತರಿಸಲಾಯಿತು. ಈ ವೇಳೆ ಮಾತನಾಡಿದ ಆಲ್ ಹುದಾ ಜುಮಾ ಮಸೀದಿ ಖತೀಬ್ ಮುಹಮ್ಮದ್ ಮುಸ್ತಫಾ ಅಝ್ಅರಿ ಅವರು, ಎ.ಎಂ.ಎ ಓಲ್ಡ್ ಸ್ಟೂಡೆಂಟ್ ಅಸೋಸಿಯೇಷನ್ ಅನೇಕ ಮಾನವೀಯತೆ ಸೇವೆಗಳನ್ನು ನಿರಂತರವಾಗಿ ನಡೆಸಿಕೊಂಡು ಬರುತ್ತಿದ್ದು, ಜಾತಿ ಧರ್ಮಗಳನ್ನು ಮೀರಿ ಮಾನವೀಯ ನೆಲೆಗಟ್ಟಿನಲ್ಲಿ ಇಂದಿಗೂ ಪ್ರಚಾರ ಬಯಸದೆ ಸೇವೆ ನೀಡುತ್ತಿರುವುದು ನಿಜಕ್ಕೂ ಶ್ಲಾಘನೀಯವಾಗಿದೆ ಎಂದರು. ಇದೇ ವೇಳೆ ಇತ್ತೀಚಿಗೆ ರಸ್ತೆ ಅಪಘಾತದಲ್ಲಿ ಅಂಗ ವೈಫಲ್ಯ ಸಮಸ್ಯೆ ಎದುರಿಸುತ್ತಿರುವ ಅಬ್ದುಲ್ ರೆಹಮಾನ್ ಅವರಿಗೆ ದ್ವಿಚಕ್ರ ವಾಹನಕ್ಕೆ ನೆರವಾಗುವ ಚಕ್ರಗಳನ್ನು ಅಳವಡಿಸಿ ವೀಲ್ ಬೇಸ್ ಸ್ಕೂಟರನ್ನು ಸಂಘಟನೆಯ ಅಧ್ಯಕ್ಷ ಟಿ. ಮೋಹಿದ್ದಿನ್ ವಿತರಿಸಿದರು. ಸಂಘಟನೆಯ ಉಪಾಧ್ಯಕ್ಷ ಅಬ್ದುಲ್ ರಿಯಾಝ್, ಕೋಶಾಧಿಕಾರಿ ಮಹಮ್ಮದ್ ಕಬೀರ್, ಕಾರ್ಯದರ್ಶಿ ಅಹ್ಮದ್ ಕಬೀರ್, ಉಪ ಕಾರ್ಯದರ್ಶಿ ಅಬೂಬಕರ್ ಸಿದ್ದಿಕ್(ಟೀವಿಸ್), ಗ್ರೀನ್ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ಮುಹಮ್ಮದ್ ಇಸ್ಮಾಯಿಲ್, ಅಬ್ದುಲ್ ರೆಹಮಾನ್, ಮುಹಮ್ಮದ್ ಇಕ್ಬಾಲ್, ಅಬ್ದುಲ್ ಸತ್ತಾರ್, ನೌಫಾಲ್, ಮುಹಮದ್ ಶಫಿ ಮೊದಲಾದವರು ಉಪಸ್ಥಿತರಿದ್ದರು.