SENSEX
NIFTY
GOLD
USD/INR

Weather

21    C
... ...View News by News Source

ಸಿಎಂ ಬದಲಾವಣೆ, ಸಂಪುಟ ವಿಸ್ತರಣೆ ಹೈಕಮಾಂಡ್‌ಗೆ ಬಿಟ್ಟ ವಿಚಾರ: ಸಚಿವ ಭೈರತಿ ಸುರೇಶ್

ಬಳ್ಳಾರಿ: ಸಿಎಂ ಬದಲಾವಣೆ ಮತ್ತು ಸಚಿವ ಸಂಪುಟ ವಿಸ್ತರಣೆ ವಿಚಾರಣೆ ಹೈಕಮಾಂಡ್ ಗೆ ಬಿಟ್ಟಿದ್ದು ಎಂದು ಸಚಿವ ಬೈರತಿ ಸುರೇಶ್ ಹೇಳಿದ್ದಾರೆ.   ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಬೈರತಿ ಸುರೇಶ್, ಸಿಎಂ, ಡಿಸಿಎಂ ಇಬ್ಬರೂ ನಮ್ಮ ಪಕ್ಷದವರೇ ಆಗಿದ್ದಾರೆ. ಅವರು ಜೊತೆಯಾಗಿ ಬ್ರೇಕ್ ಫಾಸ್ಟ್ ಮಾಡಿದ್ರೆ ತಪ್ಪೇನು? ಬಿಜೆಪಿ ಮತ್ತು ಜೆಡಿಎಸ್ ಪಕ್ಷದವರ ಜೊತೆಗೆ ಬ್ರೇಕ್ ಫಾಸ್ಟ್ ಮಾಡಿದ್ರೆ ಚರ್ಚೆ ಮಾಡಬೇಕು. ನಮ್ಮ ಪಕ್ಷದವರ ಮನೆಗೆ ಹೋದರೆ ವಿಶೇಷ ಏನೂ ಇಲ್ಲ ಎಂದು ಹೇಳಿದರು.   ನಾಗೇಂದ್ರ ಅವರಿಗೆ ಸಚಿವ ಸ್ಥಾನ ನೀಡುವುದು ಯಾವಾಗ ಎಂಬ ಪ್ರಶ್ನೆಗೆ ಉತ್ತರಿಸಿದ ಸಚಿವ ಬೈರತಿ ಸುರೇಶ್, ಹೈಕಮಾಂಡ್ ತೀರ್ಮಾನ ಮಾಡಿದರೆ ನಾಗೇಂದ್ರ ಕೂಡ ಸಚಿವರಾಗುತ್ತಾರೆ ಎಂದು ಹೇಳಿದ್ದಾರೆ.   ಈ ಸಂದರ್ಭದಲ್ಲಿ ಶಾಸಕ ನಾಗೇಂದ್ರ, ಶಾಸಕ ಭರತ್ ರೆಡ್ಡಿ, ಶಾಸಕ ಕಂಪ್ಲಿ ಗಣೇಶ್ ಮತ್ತಿತರರು ಉಪಸ್ಥಿತರಿದ್ದರು.  

ವಾರ್ತಾ ಭಾರತಿ 2 Dec 2025 10:02 pm

ಗೌತಮ್ ಗಂಭೀರ್‌ ರಿಂದ ಹೆಚ್ಚಿನ ಆದ್ಯತೆ ಪಡೆದ ಆರೋಪ: ಮೌನ ಮುರಿದ ಹರ್ಷಿತ್ ರಾಣಾ

ಹೊಸದಿಲ್ಲಿ, ಡಿ.2: ಗೌತಮ್ ಗಂಭೀರ್ ಮುಖ್ಯ ಕೋಚ್ ಆಗಿರುವ ಅವಧಿಯಲ್ಲೇ ಭಾರತ ಕ್ರಿಕೆಟ್ ತಂಡದ ಎಲ್ಲ ಮೂರು ಮಾದರಿಯ ಕ್ರಿಕೆಟ್‌ ನಲ್ಲಿ ಆಡುವ ಅವಕಾಶ ಪಡೆದಿದ್ದ ಹರ್ಷಿತ್ ರಾಣಾ ತನಗೆ ಹೆಚ್ಚಿನ ಆದ್ಯತೆ ಸಿಗುತ್ತಿದೆ ಎಂಬ ಆರೋಪದ ಕುರಿತು ಕೊನೆಗೂ ಮೌನ ಮುರಿದಿದ್ದಾರೆ. ನಾನು ಟೀಕೆಗಳಿಗೆಲ್ಲಾ ತಲೆ ಕೆಡಿಸಿಕೊಳ್ಳದೆ ಮೈದಾನದಲ್ಲಿ ತನ್ನ ಕೆಲಸದತ್ತ ಹೆಚ್ಚು ಗಮನ ನೀಡುವೆ ಎಂದು ವೇಗದ ಬೌಲರ್ ರಾಣಾ ಹೇಳಿದ್ದಾರೆ. ಭಾರತದ ಮುಖ್ಯ ಕೋಚ್ ಗೌತಮ್ ಗಂಭೀರ್ ತನಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆಂಬ ಆರೋಪಕ್ಕೆ ಗಮನ ನೀಡುವುದಿಲ್ಲ. ಇದು ನನ್ನ ಪ್ರದರ್ಶನದ ಮೇಲೆ ಪರಿಣಾಮಬೀರುವುದಿಲ್ಲ. ನಾನು ನನ್ನ ಕ್ರಿಕೆಟ್‌ನತ್ತ ಹೆಚ್ಚಿನ ಗಮನ ನೀಡುವೆ ಎಂದು ರಾಣಾ ಹೇಳಿದ್ದಾರೆ. 23ರ ವಯಸ್ಸಿನ ರಾಣಾ ಅವರು ಗಂಭೀರ್ ಕೋಚ್ ಹುದ್ದೆವಹಿಸಿಕೊಂಡ ಬಳಿಕ ಕಳೆದ ವರ್ಷ ಆಸ್ಟ್ರೇಲಿಯ ಪ್ರವಾಸದ ವೇಳೆ ಪರ್ತ್‌ ನಲ್ಲಿ ತನ್ನ ಚೊಚ್ಚಲ ಟೆಸ್ಟ್ ಪಂದ್ಯವನ್ನಾಡಿದ್ದರು. ಈ ತನಕ ಅವರು ದೊಡ್ಡ ಯಶಸ್ಸು ಕಾಣದೇ ಇದ್ದರೂ ಗಂಭೀರ್ ಅವರ ಬೆಂಬಲಕ್ಕೆ ಗಟ್ಟಿಯಾಗಿ ನಿಂತಿದ್ದಾರೆ. ‘‘ನಾನು ಈ ಎಲ್ಲ ಆರೋಪಗಳನ್ನು ಕೇಳುತ್ತಾ ಕೂತರೆ, ಅದನ್ನು ಮನಸ್ಸಿಗೆ ತೆಗೆದುಕೊಂಡರೆ ಮೈದಾನದಲ್ಲಿ ಕ್ರಿಕೆಟ್ ಆಡಲು ಸಾಧ್ಯವಾಗುವುದಿಲ್ಲ. ನಾನು ಇದನ್ನು ಸಾಧ್ಯವಾದಷ್ಟು ತಪ್ಪಿಸಿಕೊಳ್ಳಲು ಬಯಸುವೆ. ನನ್ನ ಬಗ್ಗೆ ಏನೇ ಹೇಳಿದರೂ ಅದರ ಬಗ್ಗೆ ತಲೆ ಕೆಡಿಸಿಕೊಳ್ಳಲಾರೆ’’ಎಂದು ಎರಡನೇ ಏಕದಿನ ಪಂದ್ಯಕ್ಕಿಂತ ಮೊದಲು ರಾಣಾ ಹೇಳಿದ್ದಾರೆ. ರಾಣಾ ಅವರು ರಾಂಚಿಯಲ್ಲಿ ನಡೆದಿದ್ದ ಮೊದಲ ಏಕದಿನ ಪಂದ್ಯದಲ್ಲಿ 65 ರನ್‌ಗೆ 3 ವಿಕೆಟ್‌ಗಳನ್ನು ಉರುಳಿಸಿದ್ದರು. ಆ ನಂತರ ತನ್ನ ಹಿಡಿತ ಕಳೆದುಕೊಂಡಿದ್ದರು.

ವಾರ್ತಾ ಭಾರತಿ 2 Dec 2025 10:00 pm

ಜೂನಿಯರ್ ಹಾಕಿ ವಿಶ್ವಕಪ್ | ಬಾಂಗ್ಲಾದೇಶ ವಿರುದ್ಧ ಜಯ, ಕ್ವಾರ್ಟರ್ ಫೈನಲ್‌ ಗೆ ಫ್ರಾನ್ಸ್

ಚೆನ್ನೈ, ಡಿ.2: ಬಾಂಗ್ಲಾದೇಶ ತಂಡವನ್ನು 3-2 ಗೋಲುಗಳ ಅಂತರದಿಂದ ರೋಚಕವಾಗಿ ಜಯ ಸಾಧಿಸಿರುವ ಫ್ರಾನ್ಸ್ ತಂಡವು 2025ರ ಆವೃತ್ತಿಯ ಎಫ್‌ಐಎಚ್ ಹಾಕಿ ಜೂನಿಯರ್ ವಿಶ್ವಕಪ್ ಟೂರ್ನಿಯಲ್ಲಿ ಕ್ವಾರ್ಟರ್ ಫೈನಲ್‌ನಲ್ಲಿ ಸ್ಥಾನ ಪಡೆದಿದೆ. ಮೇಯರ್ ರಾಧಾಕೃಷ್ಣನ್ ಹಾಕಿ ಸ್ಟೇಡಿಯಂನಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಫ್ರಾನ್ಸ್ ತಂಡ ಈ ಸಾಧನೆ ಮಾಡಿದೆ. ‘ಎಫ್’ ಗುಂಪಿನ ಮತ್ತೊಂದು ಪಂದ್ಯದಲ್ಲಿ ಆಸ್ಟ್ರೇಲಿಯ ತಂಡವು ದಕ್ಷಿಣ ಕೊರಿಯಾ ತಂಡವನ್ನು 3-1 ಅಂತರದಿಂದ ಮಣಿಸಿತು. ಈ ಗೆಲುವಿನ ಹೊರತಾಗಿಯೂ ಆಸ್ಟ್ರೇಲಿಯನ್ನರು ಕ್ವಾರ್ಟರ್ ಫೈನಲ್ ರೇಸ್‌ನಿಂದ ನಿರ್ಗಮಿಸಿದೆ. ನಿರಂತರ ಮಳೆಯ ನಡುವೆಯೂ ಚಿಲಿ ತಂಡವು ಮಂಗಳವಾರ ನಡೆದ ‘ಬಿ’ ಗುಂಪಿನ ಪಂದ್ಯದಲ್ಲಿ ಒಮಾನ್ ತಂಡವನ್ನು 2-0 ಅಂತರದಿಂದ ಮಣಿಸಿತು. ಈ ಮೂಲಕ ಮೂರನೇ ಸ್ಥಾನ ಪಡೆಯಿತು. ಭಾರತ ಹಾಗೂ ಸ್ವಿಟ್ಸರ್‌ಲ್ಯಾಂಡ್ ತಂಡಗಳ ನಡುವಿನ ಕೊನೆಯ ಲೀಗ್ ಪಂದ್ಯ ಮದುರೈನಲ್ಲಿ ನಡೆಯಲಿದೆ. ಜರ್ಮನಿ, ಅರ್ಜೆಂಟೀನ, ಸ್ಪೇನ್, ನೆದರ್‌ಲ್ಯಾಂಡ್ಸ್ ಹಾಗೂ ಫ್ರಾನ್ಸ್ ತಂಡಗಳು ಈಗಾಗಲೇ ಕ್ವಾರ್ಟರ್ ಫೈನಲ್‌ನಲ್ಲಿ ಸ್ಥಾನ ಪಡೆದಿವೆ. ನ್ಯೂಝಿಲ್ಯಾಂಡ್ ಕೂಡ ಅಂತಿಮ-8ರಲ್ಲಿ ಸ್ಥಾನ ಪಡೆದಿದೆ.

ವಾರ್ತಾ ಭಾರತಿ 2 Dec 2025 9:54 pm

ಸಂಚಾರ ಸಾಥಿ ಆ್ಯಪ್: ಕೇಂದ್ರದ ತರ್ಕವನ್ನು ಪ್ರಶ್ನಿಸಿದ ತರೂರ್

ಹೊಸದಿಲ್ಲಿ,ಡಿ.2: ಮೊಬೈಲ್ ಫೋನ್ ತಯಾರಕರು ಎಲ್ಲ ನೂತನ ಹ್ಯಾಂಡ್‌ ಸೆಟ್‌ಗಳ ಮಾರಾಟಕ್ಕೆ ಮುನ್ನ ಅವುಗಳಲ್ಲಿ ಸಂಚಾರ ಸಾಥಿ ಆ್ಯಪ್‌ ನ್ನು ಅಳವಡಿಸುವುದನ್ನು ಕಡ್ಡಾಯಗೊಳಿಸಿರುವ ದೂರಸಂಪರ್ಕ ಇಲಾಖೆಯ ಆದೇಶವನ್ನು ಮಂಗಳವಾರ ಟೀಕಿಸಿದ ಕಾಂಗ್ರೆಸ್ ಸಂಸದ ಶಶಿ ತರೂರ್ ಅವರು, ಇಂತಹ ಸಾಧನಗಳು ಐಚ್ಛಿಕವಾಗಿರಬೇಕೇ ಹೊರತು ಅವುಗಳನ್ನು ಕಡ್ಡಾಯಗೊಳಿಸಬಾರದು ಎಂದು ಒತ್ತಿ ಹೇಳಿದರು. ನೂತನ ನೀತಿಯ ಕಡ್ಡಾಯ ಸ್ವರೂಪದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಅವರು,’ನನ್ನ ಸಾಮಾನ್ಯ ಜ್ಞಾನದ ಪ್ರಕಾರ ಇಂತಹ ಆ್ಯಪ್‌ ಗಳು ಸ್ವಯಂಪ್ರೇರಿತವಾಗಿದ್ದರೆ ಉಪಯುಕ್ತವಾಗುತ್ತವೆ. ಅವುಗಳ ಅಗತ್ಯವಿರುವವರು ಅವುಗಳನ್ನು ಡೌನ್‌ಲೋಡ್ ಮಾಡಿಕೊಳ್ಳಬೇಕು. ಪ್ರಜಾಪ್ರಭುತ್ವದಲ್ಲಿ ಎಲ್ಲವನ್ನೂ ಕಡ್ಡಾಯಗೊಳಿಸುವುದು ತೊಂದರೆದಾಯಕವಾಗುತ್ತದೆ’ ಎಂದರು. ಇಂತಹ ಕ್ರಮಗಳನ್ನು ಜಾರಿಗೊಳಿಸುವ ಮುನ್ನ ಅದರ ಹಿಂದಿನ ತಾರ್ಕಿಕತೆಯನ್ನು ಸರಕಾರವು ವಿವರಿಸಬೇಕು ಎಂದ ಅವರು, ‘ಸರಕಾರವು ಮಾಧ್ಯಮ ವರದಿಗಳ ಮೂಲಕ ಆದೇಶವನ್ನು ಹೊರಡಿಸುವ ಬದಲು ಸಾರ್ವಜನಿಕರಿಗೆ ಪ್ರತಿಯೊಂದನ್ನೂ ವಿವರಿಸಬೇಕು. ನಾವು ಚರ್ಚೆ ನಡೆಸುವ ಅಗತ್ಯವಿದೆ ಮತ್ತು ಅಲ್ಲಿ ಸರಕಾರವು ನಿರ್ಧಾರದ ಹಿಂದಿನ ತರ್ಕವನ್ನು ವಿವರಿಸಬೇಕು’ ಎಂದು ಹೇಳಿದರು.

ವಾರ್ತಾ ಭಾರತಿ 2 Dec 2025 9:50 pm

ಡಿ.7ರಂದು ನಟ, ಆಂಧ್ರ ಡಿಸಿಎಂ ಪವನ್ ಕಲ್ಯಾಣ್ ಉಡುಪಿಗೆ

ಉಡುಪಿ: ಪರ್ಯಾಯ ಪುತ್ತಿಗೆಮಠದ ಶ್ರೀಸುಗುಣೇಂದ್ರ ತೀರ್ಥ ಶ್ರೀಪಾದರ ಚತುರ್ಥ ವಿಶ್ವ ಗೀತಾ ಪರ್ಯಾಯದಲ್ಲಿ ಕೃಷ್ಣಮಠದ ರಾಜಾಂಗಣದಲ್ಲಿ ನಡೆಯುತ್ತಿರುವ ಬೃಹತ್ ಗೀತೋತ್ಸವದ ಸಮಾರೋಪ ಸಮಾರಂಭದಲ್ಲಿ ಖ್ಯಾತ ತೆಲುಗು ಚಿತ್ರ ನಟ ಹಾಗೂ ಆಂಧ್ರ ಪ್ರದೇಶ ಉಪ ಮುಖ್ಯಮಂತ್ರಿಯೂ ಆಗಿರುವ ಪವನ್ ಕಲ್ಯಾಣ್ ಭಾಗವಹಿಸಲಿದ್ದಾರೆ. ಡಿ.7ರಂದು ಸಂಜೆ 4:00 ಗಂಟೆಗೆ ನಡೆಯುವ ಸಮಾರೋಪ ಸಮಾರಂಭದ ಮುಖ್ಯ ಅತಿಥಿಗಳಾಗಿ ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಹಾಗೂ ಪರಿಸರ, ಅರಣ್ಯ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಖಾತೆ ಸಚಿವ ಪವನ್ ಕಲ್ಯಾಣ್ ಆಗಮಿಸುವರು ಎಂದು ಪರ್ಯಾಯ ಪುತ್ತಿಗೆ ಮಠದ ದಿವಾನರಾದ ನಾಗರಾಜ ಆಚಾರ್ಯ ಮತ್ತು ಕಾರ್ಯದರ್ಶಿ ಪ್ರಸನ್ನ ಆಚಾರ್ಯ ತಿಳಿಸಿದ್ದಾರೆ. ನ.8ರಂದು ಪೇಜಾವರ ಮಠದ ಶ್ರೀವಿಶ್ವಪ್ರಸನ್ನತೀರ್ಥ ಶ್ರೀಪಾದರಿಂದ ಉದ್ಘಾಟನಗೊಂಡ ಬೃಹತ್ ಗೀತೋತ್ಸವ ಒಂದು ತಿಂಗಳ ಪರ್ಯಂತ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆದಿದ್ದು, ವಿಶ್ವ ದಾಖಲೆಗೆ ಪಾತ್ರವಾದ ಲಕ್ಷಕಂಠ ಗೀತಾ ಪಾರಾಯಣ ಕಾರ್ಯಕ್ರಮದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಭಾಗವಹಿಸಿರುವುದನ್ನು ಸ್ಮರಿಸಬಹುದು ಎಂದು ಮಠದ ಪ್ರಕಟನೆ ತಿಳಿಸಿದೆ.

ವಾರ್ತಾ ಭಾರತಿ 2 Dec 2025 9:45 pm

ಸುರಕ್ಷತಾ ಪ್ರಮಾಣ ಪತ್ರವಿಲ್ಲದೆ ಪದೇ ಪದೇ ಹಾರಾಟ: Air India ವಿರುದ್ಧ ತನಿಖೆ ನಡೆಸಲಿರುವ DGCA

ಹೊಸದಿಲ್ಲಿ: ಸುರಕ್ಷತಾ ಮಾನದಂಡಗಳ ದಾಖಲೆಯಾದ ಮಾನ್ಯತೆ ಹೊಂದಿದ ವಾಯುಮೌಲ್ಯ ಪರಾಮರ್ಶೆ ಪ್ರಮಾಣ ಪತ್ರವಿಲ್ಲದೆ ಎಂಟು ಬಾರಿ ತನ್ನ ಎ-320 ಏರ್‌ ಬಸ್ ವಿಮಾನದ ಹಾರಾಟ ನಡೆಸಿರುವ ಏರ್ ಇಂಡಿಯಾ ವಿಮಾನ ಯಾನ ಸಂಸ್ಥೆಯ ತನಿಖೆ ನಡೆಸಲಾಗುವುದು ಎಂದು ನಾಗರಿಕ ವಿಮಾನ ಯಾನ ನಿಯಂತ್ರಣ ಪ್ರಾಧಿಕಾರವಾದ ನಾಗರಿಕ ವಿಮಾನ ಯಾನ ಪ್ರಧಾನ ನಿರ್ದೇಶನಾಲಯ (DGCA) ಮಂಗಳವಾರ ಪ್ರಕಟಿಸಿದೆ. ಈ ವಿಮಾನವನ್ನು ಹಾರಾಟ ನಡೆಸದಂತೆ ಸೂಚಿಸಲಾಗಿದೆ ಹಾಗೂ ಸಂಬಂಧಿತ ಸಿಬ್ಬಂದಿಯನ್ನು ಸೇವಾ ಪಾಳಿಯಿಂದ ಹೊರಗಿಡಲಾಗಿದೆ ಎಂದೂ ಅದು ಹೇಳಿದೆ. ಆದರೆ, ಆ ವಿಮಾನ ಯಾವ ಮಾದರಿಯದ್ದು ಹಾಗೂ ಅದರ ತಯಾರಕರು ಯಾರು ಎಂಬುದರ ಕುರಿತು ನಾಗರಿಕ ವಿಮಾನ ಯಾನ ಮಹಾ ನಿರ್ದೇಶನಾಲಯ ನಿರ್ದಿಷ್ಟವಾಗಿ ಯಾವುದೇ ಮಾಹಿತಿ ನೀಡಿಲ್ಲ. ಆದರೆ ಆ ವಿಮಾನವು ಸಿಂಗಲ್ ಇಂಜಿನ್ ಏರ್‌ಬಸ್ ವಿಮಾನ ಎಂದು ವಿಶ್ವಾಸಾರ್ಹ ಮೂಲಗಳು ತಿಳಿಸಿವೆ ಎಂದು Reuters ಸುದ್ದಿ ಸಂಸ್ಥೆ ವರದಿ ಮಾಡಿದೆ. ಇದು ಏರ್ ಇಂಡಿಯಾ ವಿಮಾನ ಯಾನ ಸಂಸ್ಥೆಯ ಇತ್ತೀಚಿನ ಸುರಕ್ಷತಾ ಲೋಪವಾಗಿದೆ. ಈ ಹಿಂದೆ ಕೂಡಾ ಸಿಬ್ಬಂದಿಗಳ ಆಲಸ್ಯಕಾರಿ ನಿರ್ವಹಣೆ ಮತ್ತು ತರಬೇತಿ ಸೇರಿದಂತೆ ವಿವಿಧ ಲೋಪಗಳಿಗಾಗಿ ಏರ್ ಇಂಡಿಯಾ ವಿಮಾನ ಯಾನ ಸಂಸ್ಥೆಗೆ ನಾಗರಿಕ ವಿಮಾನ ಯಾನ ಪ್ರಧಾನ ನಿರ್ದೇಶನಾಲಯ ಎಚ್ಚರಿಕೆ ನೀಡಿತ್ತು.

ವಾರ್ತಾ ಭಾರತಿ 2 Dec 2025 9:41 pm

ಮುಂದಿನ 5-10 ವರ್ಷಗಳಲ್ಲಿ ಮಹಾ ಯುದ್ಧ ನಡೆಯಲಿದೆ: ಎಲಾನ್ ಮಸ್ಕ್ ಎಚ್ಚರಿಕೆ

ಹೊಸದಿಲ್ಲಿ,ಡಿ.2: ಜಗತ್ತು ಶೀಘ್ರವೇ ಜಾಗತಿಕ ಸಂಘರ್ಷದಲ್ಲಿ ಸಿಲುಕಲಿದೆ ಎಂದು ಟೆಕ್ ಬಿಲಿಯಾಧೀಶ ಎಲಾನ್ ಮಸ್ಕ್ ಸಾರ್ವಜನಿಕವಾಗಿ ಭವಿಷ್ಯ ನುಡಿದಿದ್ದಾರೆ. ಜಾಗತಿಕ ಆಡಳಿತದ ಮೇಲೆ ಪರಮಾಣು ತಡೆಗಟ್ಟುವಿಕೆಯ ಪರಿಣಾಮವನ್ನು ಎಕ್ಸ್‌ ನಲ್ಲಿ ಚರ್ಚಿಸಿದ ಬಳಕೆದಾರರೊಬ್ಬರಿಗೆ ಮಸ್ಕ್ ಹೀಗೆ ಪ್ರತಿಕ್ರಿಯಿಸಿದ್ದಾರೆ. ಹಂಟರ್ ಆ್ಯಷ್ ಎಂಬ ಎಕ್ಸ್ ಬಳಕೆದಾರರು, ಯುದ್ಧದ ಯಾವುದೇ ಬಾಹ್ಯ ಬೆದರಿಕೆಯಿಲ್ಲದೆ ವಿಶ್ವಾದ್ಯಂತ ಸರಕಾರಗಳು ನಿರುಮ್ಮಳವಾಗಿದ್ದು,ಆಡಳಿತದಲ್ಲಿ ಕಡಿಮೆ ಪರಿಣಾಮಕಾರಿಯಾಗಿವೆ ಎಂದು ಪ್ರತಿಪಾದಿಸಿದ್ದರು. ► ಯುದ್ಧ ಅನಿವಾರ್ಯ ಅಣ್ವಸ್ತ್ರಗಳು ಬಲಿಷ್ಠ ದೇಶಗಳ ನಡುವೆ ಯುದ್ಧವನ್ನು ಅಥವಾ ಯುದ್ಧದ ಬೆದರಿಕೆಯನ್ನೂ ತಡೆಯುತ್ತಿರುವುದರಿಂದ ಸರಕಾರಗಳು ಆಡಳಿತದಲ್ಲಿ ಜಡವಾಗಿವೆ. ಹೀಗಾಗಿ ಅವು ಗಂಭೀರವಾಗಿರಲು ಯಾವುದೇ ಬಾಹ್ಯ/ವಿಕಸನಶೀಲ/ಮಾರುಕಟ್ಟೆ ಒತ್ತಡಗಳು ಇಲ್ಲ ಎಂದು ಅವರು ಬರೆದಿದ್ದರು. ಇದಕ್ಕೆ ಸ್ಪಷ್ಟವಾಗಿ ಉತ್ತರಿಸಿರುವ ಮಸ್ಕ್,ಯುದ್ಧ ನಡೆಯುವುದು ಖಚಿತ. ಯಾವಾಗ ಎಂದು ನೀವು ಕೇಳಬಹುದು. ನನ್ನ ಪ್ರಕಾರ 2030ರೊಳಗೆ. ಯುದ್ಧ ಅನಿವಾರ್ಯ, ಐದು ವರ್ಷಗಳಲ್ಲಿ, ಹೆಚ್ಚೆಂದರೆ 10 ವರ್ಷಗಳಲ್ಲಿ ಅದು ನಡೆಯಲಿದೆ ಎಂದು ಹೇಳಿದ್ದಾರೆ. ಆದರೆ ಮಸ್ಕ್ ತನ್ನ ಹೇಳಿಕೆಯ ಬಗ್ಗೆ ನಿರ್ದಿಷ್ಟವಾಗಿ ಅಥವಾ ವಿವರವಾಗಿ ಏನನ್ನೂ ಹೇಳಿಲ್ಲ, ತನ್ಮೂಲಕ ಶೀಘ್ರದಲ್ಲಿಯೇ ಏನು ಸಂಭವಿಸಲಿದೆ ಎಂಬ ಬಗ್ಗೆ ಎಕ್ಸ್ ಬಳಕೆದಾರರನ್ನು ಕತ್ತಲೆಯಲ್ಲಿ ಇರಿಸಿದ್ದಾರೆ. ಬಹುಶ ಸರಕಾರಗಳು ಶೀಘ್ರದಲ್ಲೇ ಎದುರಾಗಬಹುದಾದ ಭವಿಷ್ಯದ ಸಂಕಷ್ಟಕ್ಕೆ ಸಜ್ಜಾಗಲು ತಮ್ಮ ಪ್ರಯತ್ನಗಳನ್ನು ಹೆಚ್ಚಿಸುವುದು ಅಗತ್ಯವಾಗಬಹುದು ಎಂದು ಸೂಚಿಸಲು ಮಸ್ಕ್ ಈ ರೀತಿಯಲ್ಲಿ ಸೂಚಿಸಿರಬಹುದು. ಆದರೆ ಗಣ್ಯವ್ಯಕ್ತಿಯಾಗಿ ಮಸ್ಕ್ ಅವರ ಪ್ರಭಾವ ಮತ್ತು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಡಿ ಸರಕಾರಿ ದಕ್ಷತೆ ಇಲಾಖೆಯ ಮುಖ್ಯಸ್ಥರಾಗಿ ಅವರ ಅನುಭವವನ್ನು ಪರಿಗಣಿಸಿ ಅವರ ಈ ಹೇಳಿಕೆ ಎಲ್ಲರ ಗಮನವನ್ನು ಸೆಳೆದಿದೆ.

ವಾರ್ತಾ ಭಾರತಿ 2 Dec 2025 9:35 pm

ದೇವನಹಳ್ಳಿ | ಯಾವುದೇ ಷರತ್ತುಗಳಿಲ್ಲದೆ ಭೂ ಸ್ವಾಧೀನ ಪ್ರಕ್ರಿಯೆ ಕೈಬಿಡಲು ಆಗ್ರಹ

ದೇವನಹಳ್ಳಿ : ದೇವನಹಳ್ಳಿ ತಾಲೂಕು ಚನ್ನರಾಯಪಟ್ಟಣ ಹೋಬಳಿಯ 13 ಗ್ರಾಮಗಳ 1,777 ಎಕರೆ ಭೂಸ್ವಾಧೀನ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ಕೈಬಿಡಲಾಗುವುದು, ರೈತರ ಇಚ್ಛೆಯಂತೆ ಕೃಷಿ ಭೂಮಿಯನ್ನಾಗಿ ಮುಂದುವರೆಸಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಘೋಷಿಸಿರುವುದರಿಂದ ಯಾವುದೇ ಷರತ್ತುಗಳಿಲ್ಲದೆ ಭೂಸ್ವಾಧೀನವನ್ನು ಕೂಡಲೇ ರದ್ದುಪಡಿಸಬೇಕು ಎಂದು ಭೂ ಸ್ವಾಧೀನ ವಿರೋಧಿ ಹೋರಾಟ ಸಮಿತಿ ಆಗ್ರಹಿಸಿದೆ. ಮಂಗಳವಾರ 1,339 ದಿನಗಳಿಂದ ನಡೆಯುತ್ತಿರುವ ಧರಣಿ ಸ್ಥಳದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಶಿಫಾರಾಸ್ಸಿನ ಪತ್ರದ ಬಗ್ಗೆ ರೈತರು ಚರ್ಚಿಸಿ, ಶಾಶ್ವತ ವಿಶೇಷ ಕೃಷಿ ವಲಯ ಎಂದು ಘೋಷಿಸುವ ಮತ್ತು ಪಹಣಿಯಲ್ಲಿ ದಾಖಲಿಸುವ ನಿಯಮಗಳನ್ನು ರೂಪಿಸಲು ಸಮಿತಿ ರಚಿಸಲು ಸಲ್ಲಿಸಿರುವ ಪ್ರಸ್ತಾವನೆಗಳನ್ನು ಭೂಸ್ವಾಧೀನ ವಿರೋಧಿ ಸಮಿತಿಯು ವಿರೋಧಿಸುತ್ತದೆ ಮತ್ತು ಖಂಡಿಸುತ್ತದೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆಯಲ್ಲಿ ಹೋರಾಟಗಾರ್ತಿ ಪ್ರಭಾ ಬೆಳವಂಗಲ ಮಾತನಾಡಿ, ಇದು ರೈತರ ಹಿತರಕ್ಷಣೆಯಲ್ಲ, ಬದಲಿಗೆ ಭೂಮಿ ನೀಡದ ರೈತರ ಮೇಲೆ ಸೇಡು ತೀರಿಸಿಕೊಳ್ಳುವ ತಂತ್ರವಾಗಿದೆ. ‘ಶಾಶ್ವತ ವಿಶೇಷ ಕೃಷಿ ವಲಯ'ದ ಹೆಸರಿನಲ್ಲಿ ರೈತರ ಕೃಷಿ ಭೂಮಿಯ ಮೌಲ್ಯವನ್ನು ಕುಗ್ಗಿಸಿ, ಅವರ ಮೇಲೆ ಒತ್ತಡ ಹೇರಿ ಭೂಮಿಯನ್ನು ಕಸಿಯುವ ಹುನ್ನಾರ ಎಂದು ಟೀಕಿಸಿದರು. ಹೋರಾಟಗಾರ ಕಾರಳ್ಳಿ ಶ್ರೀನಿವಾಸ್ ಮಾತನಾಡಿ, ಸರಕಾರ ಯಾವುದೇ ರೀತಿಯ ನಿರ್ಬಂಧಗಳನ್ನು ಹೇರದೆ, 13 ಗ್ರಾಮಗಳ 1,777 ಎಕರೆ ಭೂಮಿಯನ್ನು ಪ್ರಸ್ತುತ ಇರುವಂತೆ ಕೃಷಿ ವಲಯವನ್ನಾಗಿ ಮುಂದುವರಿಸಿ, ಕೂಡಲೇ ಭೂಸ್ವಾಧೀನ ಪ್ರಕ್ರಿಯೆಯನ್ನು ಕೈ ಬಿಡುವ ಅಧಿಕೃತ ಆದೇಶವನ್ನು ಹೊರಡಿಸಬೇಕು ಎಂದು ಒತ್ತಾಯಿಸಿದರು. ಹೋರಾಟದಲ್ಲಿ ಸಮಿತಿಯ ಮುಖಂಡ ನಲ್ಲಪನಹಳ್ಳಿ ನಂಜಪ್ಪ, ರೈತರಾದ ವೆಂಕಟಮ್ಮ, ಅಶ್ಥತಪ್ಪ, ತಿಮ್ಮರಾಯಪ್ಪ, ಗೋಪಿನಾಥ್, ವೆಂಕಟರಮಣಪ್ಪ, ದೇವರಾಜು, ಲೋಕೇಶ್, ನಂಜೇಗೌಡ, ಮುನಿರಾಜು, ಮುನಿಶ್ಯಾಮಪ್ಪ ಮುಕುಂದ, ಶ್ರೀನಿವಾಸ್, ಪ್ರಮೋದ್, ಗೋಪಾಲಗೌಡ, ಕೃಷ್ಣಪ್ಪ, ನಾರಾಯಣಮ್ಮ, ಲಕ್ಷ್ಮಮ್ಮ, ಮಂಜುನಾಥ್, ವೆಂಕಟೇಶ್, ಮುನಿವೆಂಕಟಮ್ಮ, ಪಿಳ್ಳಪ್ಪ, ಕೃಷ್ಣಪ್ಪ, ಸೇರಿದಂತೆ 13ಹಳ್ಳಿಗಳ ರೈತ ಮುಖಂಡರು ಭಾಗವಹಿಸಿದ್ದರು.

ವಾರ್ತಾ ಭಾರತಿ 2 Dec 2025 9:33 pm

ಮಂಗಳೂರು: ಮಂಗಳವಾರವೂ ಮುಷ್ಕರ ನಡೆಸಿದ ಬಿಸಿಯೂಟ ನೌಕರರು

ಮಂಗಳೂರು: ಮಾತೆ ಮಾತೆ ಎನ್ನುತ್ತಾ ಗೋವನ್ನು ಕಡಿದು ಗೋಮಾಂಸ ಮಾರಾಟ ಮಾಡುತ್ತಿರುವ ಕೇಂದ್ರದ ಬಿಜೆಪಿ ಸರಕಾರ ಅಡುಗೆ ಸಿಬ್ಬಂದಿಯರನ್ನೂ ಮಾತೆ ಮಾತೆ ಎನ್ನುತ್ತಾ ಸಂಬಳ ನೀಡದೆ ನಮ್ಮ ದೇಹದಲ್ಲಿ ರಕ್ತ, ಮಾಂಸ ಇಲ್ಲದಂತೆ ಮಾಡಿ ಅವರ ಬದುಕನ್ನೇ ನಾಶ ಮಾಡುತ್ತಿದೆ ಎಂದು ಸಿಐಟಿಯು ದ.ಕ. ಜಿಲ್ಲಾಧ್ಯಕ್ಷ ಬಿ.ಎಂ.ಭಟ್ ಹೇಳಿದರು. ನಗರದ ಕ್ಲಾಕ್ ಟವರ್ ಮುಂದೆ ಬಿಸಿಯೂಟ ತಯಾರಕರ ಸಂಬಳ ಏರಿಕೆ, ಕೆಲಸದ ಭದ್ರತೆಗೆ ಆಗ್ರಹಿಸಿ ನಡೆಯುತ್ತಿರುವ ಅನಿರ್ಧಿಷ್ಟ ಹೋರಾಟದ ಎರಡನೇ ದಿನದ ಧರಣಿಯನ್ನು ಮಂಗಳವಾರ ಉದ್ಘಾಟಿಸಿ ಅವರು ಮಾತಾಡುತ್ತಿದ್ದರು. ಕಳೆದ 2014ರಿಂದ ಅಧಿಕಾರದಲ್ಲಿರುವ ನರೇಂದ್ರ ಮೋದಿ ಸರಕಾರ ಬಿಸಿಯೂಟ ತಯಾರಿಸುವ ಸಿಬ್ಬಂದಿಗೆ ಕನಿಷ್ಟ ಸಂಬಳವನ್ನೂ ಏರಿಸದಿರುವುದು ಯಾವ ಸೀಮೆಯ ಬೇಟಿ ಬಚಾವೋ ಎಂದು ಪ್ರಶ್ನಿಸಿದ ಅವರು ಕೇರಳ ಸರಕಾರ ಬಿಸಿಯೂಟ ಸಿಬ್ಬಂದಿಗಳಿಗೆ ದಿನಕ್ಕೆ 600 ರೂ. ಸಂಬಳ ನೀಡುತ್ತಿದ್ದರೂ ಈ ಬಿಜೆಪಿ, ಕಾಂಗ್ರೆಸ್ ಸರಕಾರಗಳಿಗೆ ಯಾಕೆ ಕಾಣುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಸಿಐಟಿಯು ಮುಖಂಡರಾದ ಬಾಲಕೃಷ್ಣ ಶೆಟ್ಟಿ, ಪದ್ಮಾವತಿ ಶೆಟ್ಟಿ, ಯೋಗೀಶ್ ಜಪ್ಪಿನಮೊಗರು, ಬಿ.ಕೆ. ಇಮ್ತಿಯಾಝ್ ಅಕ್ಷರ ದಾಸೋಹ ಸಂಘದ ಕಡಬ ತಾಲೂಕು ಕಾರ್ಯದರ್ಶಿ ಸುಲೋಚನ, ಡಿವೈಎಫ್‌ಐ ಮುಖಂಡ ಅಭಿಷೇಕ್ ಬೆಳ್ತಂಗಡಿ ಮಾತಾಡಿದರು. ಸಂಘದ ಪುತ್ತೂರು ತಾಲೂಕು ಅಧ್ಯಕ್ಷೆ ರಂಜಿತ, ಕಾರ್ಯದರ್ಶಿ ಲತಾ, ಬೆಳ್ತಂಗಡಿ ತಾಲೂಕು ನಾಯಕಿಯರಾದ ಸುನೀತಾ, ವಿನೋದ, ಜಾನಕಿ ಸಿಐಟಿಯು ಮುಖಂಡರಾದ ಪ್ರಮೋದಿನಿ, ಅಕ್ಷರ ದಾಸೋಹ ಸಂಘದ ಮುಖಂಡರಾದ ಬಬಿತ, ಝರೀನ, ರೇಖಾ, ಭವಾನಿ, ಮಮತ, ಹೇಮಲತ ಕಡಬ ಉಪಸ್ಥಿತರಿದ್ದರು.

ವಾರ್ತಾ ಭಾರತಿ 2 Dec 2025 9:33 pm

3 ಸಾವಿರ ವಾಣಿಜ್ಯ ವಾಹನ ಚಾಲನಾ ತರಬೇತಿದಾರರ ಪರವಾನಗಿ ರದ್ದತಿಗೆ ಆಮೆರಿಕ ಚಿಂತನೆ!

ಅಮೆರಿಕದಲ್ಲಿನ ಸಾವಿರಾರು ಭಾರತೀಯ ಟ್ರಕ್ ಚಾಲಕರಿಗೆ ಸಂಕಷ್ಟ

ವಾರ್ತಾ ಭಾರತಿ 2 Dec 2025 9:32 pm

ಡಬ್ಲ್ಯುಎಫ್‌ಐ ಚುನಾವಣೆ ಪ್ರಶ್ನಿಸಿದ ಬಜರಂಗ್ ಪುನಿಯ, ವಿನೇಶ್ ಫೋಗಾಟ್ ಅರ್ಜಿ ವಜಾಗೊಳಿಸಿದ ದಿಲ್ಲಿ ಹೈಕೋರ್ಟ್

ಹೊಸದಿಲ್ಲಿ, ಡಿ. 2: ರಾಷ್ಟ್ರೀಯ ಕುಸ್ತಿ ಒಕ್ಕೂಟ (ಡಬ್ಲುಎಫ್‌ಐ) 2023 ಡಿಸೆಂಬರ್‌ನಲ್ಲಿ ನಡೆಸಿದ ಚುನಾವಣೆಯನ್ನು ಪ್ರಶ್ನಿಸಿ ಕುಸ್ತಿಪಟುಗಳಾದ ಬಜರಂಗ್ ಪುನಿಯಾ, ಸಾಕ್ಷಿ ಮಲಿಕ್, ವಿನೇಶ್ ಫೋಗಾಟ್ ಹಾಗೂ ಸತ್ಯವೃತ ಕಾದಿಯಾನ್ ಸಲ್ಲಿಸಿದ ಅರ್ಜಿಯನ್ನು ದಿಲ್ಲಿ ಉಚ್ಚ ನ್ಯಾಯಾಲಯ ತಳ್ಳಿ ಹಾಕಿದೆ. ಡಬ್ಲುಎಫ್‌ಐಗೆ ಆಗ ನಡೆದ ಚುನಾವಣೆಯಲ್ಲಿ ಸಂಜಯ್ ಸಿಂಗ್ ಅವರು ಅನಿತ ಶ್ಯೋರಾಣಾ ಅವರನ್ನು ಸೋಲಿಸಿದ್ದರು. ಅನಿತಾ ಶ್ಯೋರಾಣಾ ಅವರಿಗೆ ಬಜರಂಗ್ ಪುನಿಯಾ, ಸಾಕ್ಷಿ ಮಲಿಕ್, ವಿನೇಶ್ ಫೋಗಾಟ್ ಬೆಂಬಲ ನೀಡಿದ್ದರು. ನ್ಯಾಯಮೂರ್ತಿ ಮಿನಿ ಪುಷ್ಕರನಾ ನವೆಂಬರ್ 27ರಂದು ಪ್ರಕರಣದ ವಿಚಾರಣೆ ನಡೆಸಿದರು. ಪ್ರಕರಣ ವಿಚಾರಣೆಗೆ ಬಂದಾಗ ಅರ್ಜಿದಾರರು ಯಾರೂ ಹಾಜರಿರಲಿಲ್ಲ ಎಂಬುದನ್ನು ಅವರು ಗಮನಿಸಿದರು. ಹಿಂದಿನ ಎರಡು ವಿಚಾರಣೆಗಳಿಗೆ ಕೂಡ ಅವರು ಗೈರು ಹಾಜರಾಗಿದ್ದಾರೆ ಎಂದು ಅವರು ದಾಖಲಿಸಿದರು. ‘‘ಅರ್ಜಿದಾರರು ಪ್ರಸಕ್ತ ಪ್ರಕರಣಗಳನ್ನು ವಿಚಾರಣೆಗೆ ಒಳಪಡಿಸುವ ಆಸಕ್ತಿ ಹೊಂದಿದಂತೆ ಕಾಣುತ್ತಿಲ್ಲ ಎಂದು ನ್ಯಾಯಾಲಯ ತನ್ನ ಆದೇಶದಲ್ಲಿ ಹೇಳಿದೆ. ರಾಷ್ಟ್ರೀಯ ಕುಸ್ತಿ ಒಕ್ಕೂಟದ ಚುನಾವಣೆಯನ್ನು ನ್ಯಾಯಯುತ ಹಾಗೂ ಪಾರದರ್ಶಕ ವಿಧಾನದಲ್ಲಿ ನಡೆಸಿಲ್ಲ ಎಂದು ಆರೋಪಿಸಿ ಕುಸ್ತಿ ಪಟುಗಳು ಉಚ್ಚ ನ್ಯಾಯಾಲಯದ ಮೆಟ್ಟಿಲೇರಿದ್ದರು. ಚುನಾವಣಾ ಪ್ರಕ್ರಿಯೆಯ ಕಾರ್ಯ ವಿಧಾನದಲ್ಲಿ ಲೋಪಗಳು ಹಾಗೂ ಭ್ರಷ್ಟಾಚಾರದ ಹಿನ್ನೆಲೆಯಲ್ಲಿ ಮಧ್ಯಪ್ರವೇಶಿಸುವಂತೆ ಅವರು ಅರ್ಜಿಯಲ್ಲಿ ಕೋರಿದ್ದರು. ಅರ್ಜಿದಾರರು ನಿರಂತರ ಹಾಜರಾಗದೇ ಇರುವುದರಿಂದ ನ್ಯಾಯಾಲಯ ಅರ್ಜಿಯನ್ನು ವಜಾಗೊಳಿಸಿತು.

ವಾರ್ತಾ ಭಾರತಿ 2 Dec 2025 9:26 pm

ಡಿ.6-7 ರಂದು ಉಡುಪಿಯಲ್ಲಿ ಕರಾವಳಿ ಭಜನಾ ಸಮಾವೇಶ

ಉಡುಪಿ: ಬೆಂಗಳೂರಿನ ಸಂತಕವಿ ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರ, ಉಡುಪಿಯ ಕನಕದಾಸ ಅಧ್ಯಯನ ಸಂಶೋದನಾ ಪೀಠ ಹಾಗೂ ರಾಷ್ಟ್ರಕವಿ ಗೋವಿಂದ ಪೈ ಸಂಶೋದನಾ ಕೇಂದ್ರಗಳ ಸಹಯೋಗದಲ್ಲಿ ಕಾಸರಗೋಡು ಸೇರಿದಂತೆ ಕರಾವಳಿ ಜಿಲ್ಲೆಗಳನ್ನೊಳಗೊಂಡ ಭಜನಾ ಸಮಾವೇಶ ಡಿ.6 ಮತ್ತು 7ರಂದು ಉಡುಪಿಯಲ್ಲಿ ನಡೆಯಲಿದೆ. ಸಂತಕವಿ ಕನಕದಾಸ ಹಾಗೂ ತತ್ವಪದಕಾರರ ಅಧ್ಯಯನ ಕೇಂದ್ರದ ಸದಸ್ಯ ಸಂಚಾಲಕಿ ಹಾಗೂ ಕಾರ್ಯಾನುಷ್ಠಾನ ಮಂಡಳಿ ಸದಸ್ಯೆ, ಕವಯಿತ್ರಿ ಡಾ. ಕಾತ್ಯಾಯಿನಿ ಕುಂಜಿಬೆಟ್ಟು ಇಂದು ಇಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು. ಎರಡು ದಿನಗಳ ಭಜನಾ ಸಮಾವೇಶದಲ್ಲಿ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಹಾಗೂ ಕಾಸರಗೋಡು ಜಿಲ್ಲೆಗಳ ಒಟ್ಟು 13 ಭಜನಾ ತಂಡಗಳು ಪಾಲ್ಗೊಳ್ಳಲಿವೆ. ಸಮಾವೇಶ ಡಿ.6-7ರಂದು ಉಡುಪಿ ಎಂಜಿಎಂ ಕಾಲೇಜಿನ ಆವರಣದಲ್ಲಿರುವ ಟಿ.ಮೋಹನದಾಸ ಪೈ ಅಮೃತ ಸೌಧ ಸಭಾಂಗಣದಲ್ಲಿ ನಡೆಯಲಿದೆ ಎಂದವರು ತಿಳಿಸಿದರು. ಭಾರತದ ಆರಾಧನಾ ಗಾಯನ ಕಲೆಗಳಲ್ಲಿ ಭಜನೆಗಳು ಬಹುಮುಖ್ಯವಾ ದುದು. ತತ್ವಪದಗಳೂ ಭಕ್ತಿಯ ಇನ್ನೊಂದು ಮಾರ್ಗವಾಗಿದೆ. ಇವುಗಳು ಆರಾಧನಾ ಹಾಗೂ ಆಚರಣೆಯ ಸಂದರ್ಭಗಳಲ್ಲಿ ಹೆಚ್ಚಾಗಿ ಕಂಡುಬರುತ್ತವೆ.ದೇಸಿ ಸಂಸ್ಕೃತಿ ಸ್ವರೂಪದಲ್ಲಿರುವ ಭಜನೆಗಳು ಅಂತರಂಗ ಮತ್ತು ಬಹಿರಂಗ ಶುದ್ಧಿಗಳ ಆಶಯವನ್ನು ಒಳಗೊಂಡಿವೆ ಎಂದು ಡಾ. ಕಾತ್ಯಾಯಿನಿ ವಿವರಿಸಿದರು. ಡಿ.6ರಂದು ಬೆಳಗ್ಗೆ 10ಗಂಟೆಗೆ ಮಂಗಳೂರು ವಿವಿಯ ವಿಶ್ರಾಂತ ಕುಲಪತಿ ಹಾಗೂ ಹಿರಿಯ ವಿದ್ವಾಂಸರಾದ ಡಾ.ಬಿ.ಎ.ವಿವೇಕ ರೈ ಅವರು ಸಮಾವೇಶವನ್ನು ಉದ್ಘಾಟಿಸಲಿದ್ದಾರೆ. ಸಂತ ಕವಿ ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರದ ಅಧ್ಯಕ್ಷ ಕಾ.ತ.ಚಿಕ್ಕಣ್ಣ ಅಧ್ಯಕ್ಷತೆ ವಹಿಸಲಿದ್ದಾರೆ. ಮಾಹೆಯ ಸಹಕುಲಪತಿ ಡಾ.ನಾರಾಯಣ ಸಭಾಹಿತ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದರು. ಸಮಾರಂಭದಲ್ಲಿ ಎಂಜಿಎಂ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ವನಿತಾ ಮಯ್ಯ, ಎಂಜಿಎಂ ಸಂಧ್ಯಾ ಕಾಲೇಜಿನ ಪ್ರಾಂಶುಪಾಲರಾದ ಡಾ.ದೇವಿದಾಸ ನಾಯ್ಕ್, ಎಂಜಿಎಂ ಕಾಲೇಜಿನ ಉಪಪ್ರಾಂಶುಪಾಲ ಡಾ.ವಿಶ್ವನಾಥ ಪೈ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಉಪಸ್ಥಿತರಿರುವರು. ಡಿ.7ರಂದು ಉಡುಪಿಯ ಸಂಗೀತ, ಸಾಂಸ್ಕೃತಿಕ ಚಿಂತಕಿ ಪ್ರತಿಭಾ ಎಂ.ಎಲ್. ಸಾಮಗ ಸಮಾರೋಪ ಭಾಷಣ ಮಾಡಲಿದ್ದಾರೆ. ರಮೇಶ ಕಲ್ಮಾಡಿ ಹಾಗೂ ಜ್ಯೋತಿ ದೇವಾಡಿಗರ ಸಂಯೋಜನೆಯಲ್ಲಿ ನಡೆಲಿರುವ ಭಜನಾ ಮೇಳದಲ್ಲಿ 13 ಭಜನಾ ತಂಡಗಳು ಭಜನೆಗಳನ್ನು ಹಾಡಲಿವೆ. ಕೊನೆಯಲ್ಲಿ ಸಂವಾದವೂ ನಡೆಯಲಿದೆ ಎಂದೂ ಡಾ.ಕಾತ್ಯಾಯಿನಿ ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಸಂಯೋಜಕ ರವಿರಾಜ್ ಎಚ್.ಪಿ., ಉಡುಪಿ ಕನಕದಾಸ ಅಧ್ಯಯನ ಸಂಶೋದನಾ ಕೇಂದ್ರದ ಆಡಳಿತಾಧಿಕಾರಿ ಡಾ.ಬಿ. ಜಗದೀಶ್ ಶೆಟ್ಟಿ, ಡಾ.ಅರುಣ್‌ಕುಮಾರ್ ಉಪಸ್ಥಿತರಿದ್ದರು.

ವಾರ್ತಾ ಭಾರತಿ 2 Dec 2025 9:26 pm

ಕೆಎಸ್ಸಾರ್ಟಿಸಿಗೆ ಜರ್ಮನಿಯ ನಿಯೋಗ ಭೇಟಿ

ಬೆಂಗಳೂರು : ಜರ್ಮನಿ ಸರಕಾರದ ಫೆಡರಲ್ ಸಚಿವಾಲಯ ಎಕಾನಾಮಿಕ್ ಕೋಆಪರೇಶನ್ ಆಂಡ್ ಡೆವಲಪ್‍ಮೆಂಟ್‍ನ ಉನ್ನತ ಮಟ್ಟದ ನಿಯೋಗವು ಭಾರತದ ಪ್ರವಾಸದ ಭಾಗವಾಗಿ ನಗರದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ(ಕೆಎಸ್ಸಾರ್ಟಿಸಿ)ಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿತು. ನಿಯೋಗದ ಸದಸ್ಯರು ದೃಷ್ಟಿ ದೋಷ ಹೊಂದಿದ ಪ್ರಯಾಣಿಕರ ಸಾರ್ವಜನಿಕ ಸಾರಿಗೆಯ ಬಳಕೆಯನ್ನು ಹೆಚ್ಚಿಸುವ ಉದ್ದೇಶದಿಂದ ವಿನ್ಯಾಸಗೊಳಿಸಲಾದ ಸಹಾಯಕ ಧ್ವನಿ-ನೇವಿಗೇಶನ್ ಪರಿಹಾರ ‘ಧ್ವನಿ ಸ್ಪಂದನ-ಆನ್‍ಬೋರ್ಡ್’ ಬಗ್ಗೆ ಮಾಹಿತಿ ಪಡೆದರು. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ವ್ಯವಸ್ಥಾಪಕ ನಿರ್ದೇಶಕ ಅಕ್ರಂ ಪಾಷ ಅವರು ಧ್ವನಿ ಸ್ಪಂದನ ಯೋಜನೆಯ ಕುರಿತು ವಿವರವಾಗಿ ಮಾಹಿತಿ ನೀಡಿ, ಈ ಯೋಜನೆಗೆ ಭಾರತ ಸರಕಾರದಿಂದ ದೊರೆತ ಪ್ರಶಸ್ತಿಗಳನ್ನು ತೋರಿಸಿದರು. ಈ ನಿಯೋಗದಲ್ಲಿ ಬಿಎಂಝೆಡ್‍ನ ಮಹಾ ನಿರ್ದೇಶಕಿ ಕ್ರಿಸ್ಟೀನ್ ಟೋಟ್‍ಝ್ಕೆ, ಬಾರ್ಬರಾ ಶಾಫರ್, ಕ್ರಿಸ್ಟೋಫ್ ವಾನ್ ಸ್ಟೆಕೋವ್ ಹಾಜರಿದ್ದರು. ರೈಸ್ಡ್‌ ಲೈನ್ಸ್ ಫೌಂಡೇಶನ್ ಅಭಿವೃದ್ಧಿಪಡಿಸಿದ ಮತ್ತು ಜಿಐಝೆಡ್‍ನ ಗ್ರೀನ್ ಅರ್ಬನ್ ಮೊಬಿಲಿಟಿ ಇನೋವೇಶನ್ ಮುಂದಾಳತ್ವದಲ್ಲಿ ವಿಸ್ತರಿಸಲ್ಪಟ್ಟ ಆನ್‍ಬೋರ್ಡ್ ವ್ಯವಸ್ಥೆಯ ಜಾರಿಗೆ ಸಂಬಂಧಿಸಿದ ಮಾಹಿತಿಯನ್ನು ನಿಯೋಗಕ್ಕೆ ನೀಡಲಾಯಿತು. ಈ ಸಂದರ್ಭದಲ್ಲಿ ಜರ್ಮನ್ ರಾಯಭಾರ ಕಚೇರಿ ನವದಿಲ್ಲಿಯ ಗೊಟ್‍ಫ್ರೈಡ್ ವಾನ್ ಗೆಮಿಂಗನ್, ಪಾಮೇಲಾ ಬೈಜಲ್, ಜೋಹಾನ್ಸ್ ಶ್ನೈಡರ್, ಶೀನಂ ಪುರಿ, ಜಾಸ್ಮಿನ್ ಕೌರ್, ಜಿಐಝಡ್ ದೇಶ ನಿರ್ದೇಶಕಿ ಜುಲಿ ರೆವಿಯರ್ ಮತ್ತಿತರರು ಉಪಸ್ಥಿತರಿದ್ದರು.

ವಾರ್ತಾ ಭಾರತಿ 2 Dec 2025 9:26 pm

ಇಮ್ರಾನ್ ಖಾನ್ ಜೀವಂತ : ಜೈಲಿನಲ್ಲಿ ಭೇಟಿಯಾದ ಸಹೋದರಿ - ಹೊರಗೆ ಬಂದು ಹೇಳಿದ್ದು ಭಯಾನಕ ಸುದ್ದಿ!

Imran Khan Safe : ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಜೀವಂತವಾಗಿದ್ದಾರೆ ಮತ್ತು ಸುರಕ್ಷಿತವಾಗಿದ್ದಾರೆ ಎಂದು ಅವರ ಸಹೋದರಿ ಹೇಳಿದ್ದಾರೆ. ಜೈಲಿನಲ್ಲಿ ಸಹೋದರನನ್ನು ಭೇಟಿಯಾದ ನಂತರ, ಮಾಧ್ಯಮಗಳ ಮುಂದೆ ಈ ಸ್ಪಷ್ಟನೆಯನ್ನು ನೀಡಿದ್ದಾರೆ. ಜೈಲಿನಲ್ಲಿ ಕೊಡುತ್ತಿರುವ ಭಯಾನಕ ಹಿಂಸೆಯನ್ನು ಅವರು ವಿವರಿಸಿದ್ದಾರೆ.

ವಿಜಯ ಕರ್ನಾಟಕ 2 Dec 2025 9:24 pm

Channapatna| ಹೆಡ್ ಕಾನ್ಸ್‌ಟೇಬಲ್ ಅನುಮಾನಾಸ್ಪದ ಸಾವು; ಕೆರೆಯಲ್ಲಿ ಮೃತದೇಹ ಪತ್ತೆ

ಬೆಂಗಳೂರು : ಬೆಂಗಳೂರು ದಕ್ಷಿಣ ಜಿಲ್ಲೆಯ ಚನ್ನಪಟ್ಟಣ ಸಂಚಾರಿ ಪೊಲೀಸ್ ಠಾಣೆಯಲ್ಲಿ ಹೆಡ್ ಕಾನ್ಸ್‌ಟೇಬಲ್ ಆಗಿ ಕೆಲಸ ಮಾಡುತ್ತಿದ್ದ ಲಕ್ಷ್ಮಣ್ ಎಂಬವರ ಮೃತದೇಹ ಕೆರೆಯಲ್ಲಿ ಪತ್ತೆಯಾಗಿದೆ. ಸೋಮವಾರ ಕರ್ತವ್ಯಕ್ಕೆ ಗೈರು ಹಾಜರಾಗಿದ್ದ ಅವರು, ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದರು. ಮಂಗಳವಾರ ಬೆಳಗ್ಗೆ ಕೆರೆಯಲ್ಲಿ ಲಕ್ಷ್ಮಣ್ ಶವವಾಗಿ ಪತ್ತೆಯಾಗಿದ್ದಾರೆ. ಕೆರೆ ಪಕ್ಕದಲ್ಲೇ ಅವರ ಬೈಕ್ ಪತ್ತೆಯಾಗಿದೆ. ಘಟನಾ ಸ್ಥಳಕ್ಕೆ ಚನ್ನಪಟ್ಟಣ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದು ಆತ್ಮಹತ್ಯೆಯೋ ಅಥವಾ ಆಕಸ್ಮಿಕವಾಗಿ ಕಾಲು ಜಾರಿಬಿದ್ದಿರಬಹುದಾ ಎಂಬ ಬಗ್ಗೆ ಶಂಕೆ ವ್ಯಕ್ತವಾಗಿದೆ. ಸದ್ಯ ಮೃತದೇಹವನ್ನು ಕೆರೆಯಿಂದ ಮೇಲೆತ್ತಿ ಮರಣೋತ್ತರ ಪರೀಕ್ಷೆಗಾಗಿ ತಾಲೂಕು ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ವರದಿಯಾಗಿದೆ.

ವಾರ್ತಾ ಭಾರತಿ 2 Dec 2025 9:22 pm

ಎಸ್.ಎನ್.ಸೇತುರಾಮ್‌ಗೆ ‘ಶಾರದಾಕೃಷ್ಣ ಪ್ರಶಸ್ತಿ’

ಉಡುಪಿ: ಬೆಂಗಳೂರಿನ ಹಿರಿಯ ನಟ, ರಂಗ ನಿರ್ದೇಶಕ, ಕನ್ನಡ ಕಿರುತೆರೆಯ ನಟ ಎಸ್.ಎನ್.ಸೇತುರಾಮ್ ಅವರು ಉಡುಪಿಯ ಸಂಸ್ಕೃತಿ ವಿಶ್ವ ಪ್ರತಿಷ್ಠಾನ, ಹೆಬ್ರಿಯ ಶ್ರೀರಾಘವೇಂದ್ರ ಚಾರಿಟೇಬಲ್ ಟ್ರಸ್ಟ್‌ನ ಪ್ರಾಯೋಜಕತ್ವದಲ್ಲಿ ನೀಡಲಾಗುವ 2026ನೇ ಸಾಲಿನ ‘ಶಾರದಾ ಕೃಷ್ಣ ಪ್ರಶಸ್ತಿ’ಗೆ ಆಯ್ಕೆಯಾಗಿದ್ದಾರೆ ಎಂದು ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಅಧ್ಯಕ್ಷ ಪ್ರೊ.ಶಂಕರ್ ತಿಳಿಸಿದ್ದಾರೆ. ಇಂದು ಇಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಈ ವಿಷಯ ಪ್ರಕಟಿಸಿದ ಅವರು 50,000ರೂ.ಗಳ ನಗದು ಸಹಿತ ಪ್ರಶಸ್ತಿ ಪತ್ರ, ಫಲಕದೊಂದಿಗೆ ನೀಡಲಾಗುವ ಈ ಪ್ರಶಸ್ತಿಯನ್ನು ಮುಂದಿನ ಜನವರಿ ತಿಂಗಳ 24ರಿಂದ 26ರವರೆಗೆ ನಡೆಯಲಿರುವ ಸಂಸ್ಕೃತಿ ಉತ್ಸವದ ಮೊದಲ ದಿನ ಪ್ರದಾನ ಮಾಡಲಾಗುವುದು ಎಂದರು. ಸಂಸ್ಕೃತಿ ವಿಶ್ವ ಪ್ರತಿಷ್ಠಾನ 2024ರಿಂದ ಈ ಪ್ರಶಸ್ತಿಯನ್ನು ನೀಡುತಿದ್ದು, ರಂಗಕರ್ಮಿ ಕಾಸರಗೋಡು ಚಿನ್ನ ಹಾಗೂ ಜೀವನರಾಂ ಸುಳ್ಯ ಅವರು ಈಗಾಗಲೇ ಈ ಪ್ರಶಸ್ತಿಯನ್ನು ಪಡೆದಿದ್ದಾರೆ ಎಂದು ಸಂಸೃತಿ ವಿಶ್ವ ಪ್ರತಿಷ್ಠಾನದ ಸಂಚಾಲಕ ರವಿರಾಜ್ ಎಚ್.ಪಿ. ತಿಳಿಸಿದರು. 72 ವರ್ಷ ವಯಸ್ಸಿನ ಸೇತುರಾಮ್ ಕಳೆದ ಸುಮಾರು 45 ವರ್ಷಗಳಿಂದ ಕರ್ನಾಟಕ ಹವ್ಯಾಸಿ ರಂಗಭೂಮಿಯೊಂದಿಗೆ ವಿವಿಧ ರೀತಿಯಲ್ಲಿ ಸಂಬಂಧ ವನ್ನು ಹೊಂದಿದ್ದಾರೆ. ನಟರಾಗಿ ‘ಯಯಾತಿ’, ‘ಭಾರತೀಪುರ’, ‘ಕೇಳು ಜನಮೇಜಯ’ ಮುಂತಾದ ನಾಟಕಗಳಲ್ಲಿ ನಟಿಸಿದ್ದಾರೆ. ಅಲ್ಲದೇ ಕನ್ನಡ ಪ್ರಮುಖ ನಿರ್ದೇಶಕರಾದ ಸಿಜಿಕೆ, ಆರ್.ನಾಗೇಶ್‌ಗೆ ಸಹಾಯಕ ನಿರ್ದೇಶಕ ರಾಗಿಯೂ ಕೆಲಸ ಮಾಡಿದ್ದು, ಹಲವು ನಾಟಕಗಳನ್ನು ತಾವೇ ಬರೆದು ನಿರ್ದೇಶಿಸಿದ್ದಾರೆ ಎಂದರು. ಸೇತುರಾಮ್ ಕಿರುತೆರೆಯ ಜನಪ್ರಿಯ ನಟರಾಗಿದ್ದು, ಕನ್ನಡದ ಹಲವು ಧಾರಾವಾಹಿಗಳಲ್ಲಿ ನಟೆಸಿದ್ದು, ಇವರಿಗೆ ನಾಟಕ ಅಕಾಡೆಮಿ ಪುರಸ್ಕಾರವೂ ದೊರೆತಿದೆ. ಇವರ ಸಣ್ಣ ಕಥಾಸಂಕಲನಕ್ಕೆ ‘ಮಾಸ್ತಿ ಕಥಾ ಪುರಸ್ಕಾರ’ ಲಭಿಸಿದೆ ಎಂದು ರವಿರಾಜ್ ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಸ್ಥಾಪಕಾಧ್ಯಕ್ಷ ಉಡುಪಿ ವಿಶ್ವನಾಥ್ ಶೆಣೈ, ಉಪಾಧ್ಯಕ್ಷೆ ಡಾ.ಭಾರ್ಗವಿ ಐತಾಳ್, ವಾಸುದೇವ ಅಡಿಗ ಉಪಸ್ಥಿತರಿದ್ದರು.

ವಾರ್ತಾ ಭಾರತಿ 2 Dec 2025 9:20 pm

ಯಾದಗಿರಿ| ಡಿ.3ರಿಂದ ರಾಜ್ಯ ಮಟ್ಟದ ಯುವಜನೋತ್ಸವ

ಯಾದಗಿರಿ: ಕೇಂದ್ರ ಕ್ರೀಡಾ ಇಲಾಖೆ ಸ್ವಾಮಿ‌ ವಿವೇಕಾನಂದ ಅವರ ಜನ್ಮ ದಿನಾಚರಣೆ ಅಂಗವಾಗಿ ಜ.12 ರಿಂದ 16ರವಗೆ  ರಾಷ್ಟ್ರೀಯ ಯುವಜನೋತ್ಸವ ಆಯೋಜಿಸುತ್ತಿರುವ ಹಿನ್ನೆಲೆ ಡಿ.3 ಮತ್ತು 4 ರಂದು ರಾಜ್ಯ ಮಟ್ಟದ ಯುವಜನೋತ್ಸವ ಕಾರ್ಯಕ್ರಮ ಆಯೋಜಿಸಲಾಗಿದೆ. ಇದರಲ್ಲಿ ವಿಜೇತರನ್ನು ರಾಷ್ಟ್ರಮಟ್ಟಕ್ಕೆ ಕಳುಹಿಸಲಾಗುವುದೆಂದು ಜಿಲ್ಲಾಧಿಕಾರಿ ಹರ್ಷಲ್ ಬೋಯರ್ ಹೇಳಿದರು. ಮಂಗಳವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹರ್ಷಲ್ ಬೋಯರ್, ಕ್ರೀಡಾಂಗಣ ಸೇರಿದಂತೆಯೇ ಏಳು ಕಡೆ ಏಳು ಸ್ಪರ್ಧೆಗಳು ನಡೆಯಲಿವೆ. ಜಾನಪದ, ಚಿತ್ರಕಲೆ, ಕಥೆ ಬರೆಯುವುದು, ವಿಜ್ಞಾನ ಮೇಳ, ಕವಿತೆ ಬರೆಯುವುದು ಮತ್ತು ಘೋಷಣೆ ಸ್ವರ್ಧೆಗಳು ನಡೆಯಲಿವೆ. 31 ಜಿಲ್ಲೆಗಳಿಂದ ಒಂದು ಸಾವಿರಕ್ಕೂ ಅಧಿಕ ಜನರು ಆಗಮಿಸಲಿದ್ದಾರೆ. 40 ನಿರ್ಣಾಯಕರು ಇರಲಿದ್ದಾರೆ. 31 ಜನ ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದೆ. ಬಂದವರಿಗೆ ಉಳಿದುಕೊಳ್ಳಲು ನಗರದ ವಿವಿಧ ವಸತಿ ನಿಲಯಗಳಲ್ಲಿ ವ್ಯವಸ್ಥೆ ಮಾಡಲಾಗಿದೆ. ಅಲ್ಲಿ ಅಗತ್ಯ ಸೌಲಭ್ಯಗಳನ್ನು ಒದಗಿಸಲು ಸೂಚಿಸಲಾಗಿದೆ ಎಂದರು. ಕ್ರೀಡಾ ಇಲಾಖೆ ಅಂಗ ಸಂಸ್ಥೆಯಾದ ಜನರಲ್ ತಿಮ್ಮಯ್ಯ ರಾಷ್ಟ್ರೀಯ ಸಾಹಸ ಅಕಾಡೆಮಿಯಿಂದ ಸ್ಕೂಬಾ ಡೈವಿಂಗ್ ಮತ್ತು ಕೋಟೆಯಲ್ಲಿ ರಾಕ್ ಕ್ಲೈಂಬಿಂಗ್ ಸಾಹಸ ಕ್ರೀಡೆಗಳನ್ನು ಮತ್ತು ಮಲ್ಲಕಂಬ, ಕರಾಟೆ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ ಎಂದರು. ವೈಯಕ್ತಿಕ ತಲಾ ಮೂರು ಬಹುಮಾನ ಹಾಗೂ ತಲಾ ಮೂರು ಗುಂಪು ಸ್ಪರ್ಧೆಗಳಿಗೆ ನಗದು ಬಹುಮಾನ ನೀಡಲಾಗುವುದು. ಯುವ‌ಜನೋತ್ಸವಕ್ಕೆ ರಾಜ್ಯ ಸರಕಾರ 75 ಲಕ್ಷ ರೂ. ಬಿಡುಗಡೆ ಮಾಡಿದೆ ಎಂದು ಜಿಲ್ಲಾಧಿಕಾರಿಗಳು ಹೇಳಿದರು. ಡಿ.3 ರಂದು ಬೆಳಗ್ಗೆ 11ಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಶಾಸಕ ಚನ್ನಾರೆಡ್ಡಿ ಪಾಟೀಲ್ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಜಿಲ್ಲೆಯ ಜನಪ್ರತಿನಿಧಿಗಳು, ಹಿರಿಯ ಅಧಿಕಾರಿಗಳು ಭಾಗವಹಿಸಲಿದ್ದಾರೆಂದು ಅವರು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಕ್ರೀಡಾಧಿಕಾರಿಗಳಾದ ರಾಜು ಬಾವಿಹಳ್ಳಿ, ಶ್ರೀನಿವಾಸ ಸೇರಿದಂತೆ ಹಲವರು ಉಪಸ್ಥಿತರಿದ್ದರು.  

ವಾರ್ತಾ ಭಾರತಿ 2 Dec 2025 9:19 pm

ನಾರಾಯಣಗುರು ಅಭಿವೃದ್ಧಿ ನಿಗಮಕ್ಕೆ 500 ಕೋಟಿ ರೂ.ಅನುದಾನ ನೀಡಿ: ಮುಖ್ಯಮಂತ್ರಿಗೆ ಅಧ್ಯಕ್ಷರ ಮನವಿ

ಉಡುಪಿ: ಶೋಷಿತ ಸಮುದಾಯಗಳ ಶ್ರೇಯೋಭಿವೃದ್ಧಿಗಾಗಿ ಹಾಗೂ ಹಿಂದುಳಿದ ಸಮಾಜದ 26 ಪಂಗಡಗಳನ್ನು ಮುಖ್ಯವಾಹಿನಿಗೆ ತರಲು ಹೊಸದಾಗಿ ಕಾಂಗ್ರೆಸ್ ಸರಕಾರದಿಂದ ಹೊಸದಾಗಿ ಅಸ್ತಿತ್ವಕ್ಕೆ ಬಂದಿರುವ ನಾರಾಯಣಗುರು ಅಭಿವೃದ್ಧಿ ನಿಗಮಕ್ಕೆ ಮುಂದಿನ ಬಜೆಟ್‌ನಲ್ಲಿ 500 ಕೋಟಿ ರೂ.ಗಳ ಅನುದಾನವನ್ನು ಮೀಸಲಿರಿಸುವಂತೆ ನಿಗಮದ ಅಧ್ಯಕ್ಷ ಮಂಜುನಾಥ ಪೂಜಾರಿ ಮುದ್ರಾಡಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಲ್ಲಿ ಮನವಿ ಮಾಡಿದ್ದಾರೆ. ಉಡುಪಿ ಪ್ರೆಸ್‌ಕ್ಲಬ್‌ನಲ್ಲಿ ಇಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾಳೆ ಮಂಗಳೂರಿನಲ್ಲಿ ನಡೆಯುವ ಗುರು-ಗಾಂಧಿ ಸಂವಾದ ಶತಮಾನೋತ್ಸವ ಸಮಾರಂಭದ ಉದ್ಘಾಟನೆಗೆ ಆಗಮಿಸುವ ಮುಖ್ಯಮಂತ್ರಿ ಗಳಿಗೆ ಈ ಕುರಿತು ನಿಗಮದ ವತಿಯಿಂದ ಮನವಿಯನ್ನು ಸಲ್ಲಿಸಲಾಗುವುದು ಎಂದರು. ನಿಗಮ ಈಗಾಗಲೇ 26 ಪಂಗಡಗಳ ಅಭಿವೃದ್ಧಿಗೆ ನೀಲ ನಕ್ಷೆಯೊಂದನ್ನು ಸಿದ್ಧಪಡಿಸಿದೆ ಎಂದ ಅವರು ಇವುಗಳಲ್ಲಿ ಶಿಕ್ಷಣ, ಉದ್ಯೋಗ, ಉದ್ಯಮ, ಮಹಿಳಾ ಸಬಲೀಕರಣ, ಧಾರ್ಮಿಕ ಹಾಗೂ ಇತರ ಯೋಜನೆಗಳಿವೆ ಎಂದು ವಿವರಿಸಿದರು. ನಾರಾಯಣ ಗುರುಗಳ ಸಂದೇಶ, ತತ್ವ-ಆದರ್ಶಗಳನ್ನು ಅನುಷ್ಠಾನ ಗೊಳಿಸಲು ನಿಗಮ ಪ್ರಾಮಾಣಿಕ ಪ್ರಯತ್ನ ನಡೆಸಲಿದೆ ಎಂದ ಅವರು, ಗುರುಗಳು ಹೇಳಿದಂತೆ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಉತ್ತಮ ಶಿಕ್ಷಣ ದೊರಕಿಸುವಲ್ಲಿ ನಿಗಮ ಶ್ರಮಿಸಲಿದೆ ಎಂದರು. ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ, ವಿದೇಶದಲ್ಲಿ ಉನ್ನತ ಶಿಕ್ಷಣ ಪಡೆಯಲು ಸಹಕಾರ, ವಿದ್ಯಾರ್ಥಿ ನಿಲಯಗಳ ಸ್ಥಾಪನೆ, ಅರ್ಹ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ವಿತರಣೆ, ವೃತ್ತಿ ಮಾರ್ಗದರ್ಶನ ತರಬೇತಿ, ಐಎಎಸ್, ಐಪಿಎಸ್‌ಗೆ ತರಬೇತಿ ಯೋಜನೆಗಳನ್ನು ಜಾರಿಗೊಳಿಸಲು ನಿಗಮ ಶ್ರಮಿಸಲಿದೆ ಎಂದರು. ಸ್ವಉದ್ಯೋಗ ನಡೆಸಲು ತರಬೇತಿ ಹಾಗೂ ಸಾಲಸೌಲಭ್ಯ, ಸಮುದಾಯಗಳ ಕುಲಕಸುಬಾದ ನೀರಾ ಉತ್ಪಾದನೆಗೆ ಪ್ರೋತ್ಸಾಹ, ಶೇಂದಿ ಇಳಿಸಲು ಸೂಕ್ತ ತರಬೇತಿಗೆ ಆಧುನಿಕ ಸ್ಪಶರ್ರ್ ನೀಡುವುದು, ನಾಟಿವೈದ್ಯ ಹಾಗೂ ಆಯುರ್ವೇದಕ್ಕೆ ಪ್ರೋತ್ಸಾಹ ನೀಡಲಾಗುವುದು. ಕಲ್ಪರಸ ಉತ್ಪಾದನಾ ಉದ್ಯಮ, ಪ್ರವಾಸೋದ್ಯಮ, ಸೇವಾಧಾರಿತ ಉದ್ಯಮ ಸೇರಿದಂತೆ ವಿವಿಧ ಉದ್ಯಮಗಳ ಸ್ಥಾಪನೆಗೆ ತರಬೇತಿಯೊಂದಿಗೆ ಸಬ್ಸಿಡಿ ಸಹಿತ ಬೆಂಬಲ ನೀಡಲಾಗುವುದು ಎಂದವರು ವಿವರಿಸಿದರು. ಬಿಲ್ಲವ ಸಮುದಾಯದ ಕುಲಕಸಬಾದ ಶೇಂದಿ, ಕಲ್ಪರಸ ತಯಾರಿ ಉದ್ಯಮದ ಮೌಲ್ಯವರ್ಧನೆಗಾಗಿ ಸಂಶೋಧನಾ ಮತ್ತು ಅಭಿವೃದ್ಧಿ ಕೇಂದ್ರದ ಸ್ಥಾಪನೆ, ಡಿಜಿಟಲೀಕರಣದ ಮಾಹಿತಿ, ಮಾರ್ಗದರ್ಶನ ನೀಡಲು ತರಬೇತಿ ಕೇಂದ್ರವನ್ನೂ ತೆರೆಯಲು ಉದ್ದೇಶಿಸಲಾಗಿದೆ ಎಂದರು. ಗರಡಿ ಅರ್ಚಕರಿಗೆ ಮಾಸಾಶನ: ಸಮುದಾಯದ ಹಿರಿಯರು ಆರಾಧಿಸಿ ಕೊಂಡು ಬಂದಿರುವ ಗರಡಿಗಳ ಅರ್ಚಕರಿಗೆ ಹಾಗೂ ಸಮುದಾಯಕ್ಕೆ ಸಂಬಂಧಿಸಿದ ಧಾರ್ಮಿಕ ಕೇಂದ್ರಗಲ ಅರ್ಚಕರಿಗೆ, ಸಹಾಯಕರಿಗೆ ಮಾಸಾಶನ ನೀಡಲು, 60 ವರ್ಷ ಮೇಲ್ಪಟ್ಟವರಿಗೆ ಪಿಂಚಣಿ ಸೌಲಭ್ಯ ನೀಡುವ ಗುರಿಯಿದೆ, ಮಹಿಳೆಯರ ಸಬಲೀಕರಣಕ್ಕೂ ವಿವಿಧ ಯೋಜನೆಗಳನ್ನು ರೂಪಿಸಲಾಗಿದೆ ಎಂದರು. ಇವು ಸೇರಿದಂತೆ ಸಮುದಾಯಗಳ ವಿವಿಧ ಯೋಜನೆಗಳನ್ನು ಅನುಷ್ಠಾನಕ್ಕೆ ತರಲು 500 ಕೋಟಿ ರೂ.ಗಳ ಅನುದಾನದ ಅಗತ್ಯವಿದೆ. ಇದಕ್ಕಾಗಿ ನಾಳೆ ಮುಖ್ಯಮಂತ್ರಿಗಳಿಗೆ ನಿಗಮದ ವತಿಯಿಂದ ಮನವಿ ಸಲ್ಲಿಸಲಾಗುತ್ತಿದೆ ಎಂದೂ ಮಂಜುನಾಥ ಪೂಜಾರಿ ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಬಿಲ್ಲವ ಸಮುದಾಯದ ಮುಖಂಡರಾದ ಅಶೋಕ ಪೂಜಾರಿ, ಮಹೇಶ್ ಆಂಚನ್ ಹಾಗೂ ಡಾ.ಸಂತೋಷ ಕುಮಾರ್ ಬೈರಂಪಳ್ಳಿ ಉಪಸ್ಥಿತರಿದ್ದರು.

ವಾರ್ತಾ ಭಾರತಿ 2 Dec 2025 9:16 pm

SIR ಒತ್ತಡದಿಂದ ಮೃತಪಟ್ಟ ಮತಗಟ್ಟೆ ಅಧಿಕಾರಿಗಳು ಸೇರಿದಂತೆ 39 ಮೃತರ ಕುಟುಂಬಗಳಿಗೆ ತಲಾ 2 ಲಕ್ಷ ರೂ‌. ಪರಿಹಾರ: ಮಮತಾ ಬ್ಯಾನರ್ಜಿ ಘೋಷಣೆ

  ಕೋಲ್ಕತಾ: ಆತ್ಮಹತ್ಯೆ ಪ್ರಕರಣಗಳು ಸೇರಿದಂತೆ ವಿಶೇಷ ತೀವ್ರ ಮತಪಟ್ಟಿ ಪರಿಷ್ಕರಣೆ ಅಭಿಯಾನದ ಕೆಲಸದ ಒತ್ತಡದಿಂದ ಮೃತಪಟ್ಟ 39 ಮಂದಿಯ ಕುಟುಂಬಗಳಿಗೆ ತಲಾ ಎರಡು ಲಕ್ಷ ರೂ. ಪರಿಹಾರ ನೀಡಲಾಗುವುದು ಎಂದು ಮಂಗಳವಾರ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಘೋಷಿಸಿದ್ದಾರೆ. ನಾಲ್ವರು ಮತಗಟ್ಟೆ ಅಧಿಕಾರಿಗಳು ಸೇರಿದಂತೆ 39 ಮೃತರ ಕುಟುಂಬಗಳಿಗೆ ತಲಾ ಎರಡು ಲಕ್ಷ ರೂ. ಪರಿಹಾರ ನೀಡಲಾಗುವುದು. ಇದೇ ವೇಳೆ ವಿಶೇಷ ತೀವ್ರ ಮತಪಟ್ಟಿ ಪರಿಷ್ಕರಣೆಯ ಕೆಲಸದ ಒತ್ತಡದಿಂದ ಅಸ್ವಸ್ಥಗೊಂಡಿರುವ ನಾಲ್ವರು ಮತಗಟ್ಟೆ ಅಧಿಕಾರಿಗಳು ಸೇರಿದಂತೆ 13 ಮಂದಿ ಅಧಿಕಾರಿಗಳಿಗೆ ತಲಾ ಒಂದು ಲಕ್ಷ ರೂ. ಪರಿಹಾರ ನೀಡಲಾಗುವುದು ಎಂದು ಅವರು ಪ್ರಕಟಿಸಿದ್ದಾರೆ. ನವೆಂಬರ್ 4ರಿಂದ ಜಾರಿಗೊಳಿಸಿರುವ ವಿಶೇಷ ತೀವ್ರ ಮತಪಟ್ಟಿ ಪರಿಷ್ಕರಣೆ ಅಭಿಯಾನದಿಂದ ಸಾರ್ವಜನಿಕರಲ್ಲಿ ವ್ಯಾಪಕ ಪ್ರಮಾಣದ ಭೀತಿ ಹಾಗೂ ಗಾಬರಿ ಸೃಷ್ಟಿಯಾಗಿದೆ ಎಂಬ ಸಂಗತಿ ಸರಕಾರದ ಮೌಲ್ಯಮಾಪನದ ವೇಳೆ ಕಂಡು ಬಂದಿದೆ ಎಂದೂ ಅವರು ಹೇಳಿದ್ದಾರೆ. ರಾಜ್ಯ ಸಚಿವಾಲಯ ನಬನ್ನಾದಲ್ಲಿ 14 ವರ್ಷಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮಮತಾ ಬ್ಯಾನರ್ಜಿ, ವಿಶೇಷ ತೀವ್ರ ಮತಪಟ್ಟಿ ಪರಿಷ್ಕರಣೆಯ ಗಾಬರಿಯಿಂದ ನಾಲ್ವರು ಮತಗಟ್ಟೆ ಅಧಿಕಾರಿಗಳು ಸೇರಿದಂತೆ 39 ಮಂದಿ ಸಾಮಾನ್ಯ ನಾಗರಿಕರು ಮೃತಪಟ್ಟಿದ್ದಾರೆ ಎಂದು ಮಾಹಿತಿ ನೀಡಿದ್ಸಾರೆ.

ವಾರ್ತಾ ಭಾರತಿ 2 Dec 2025 9:15 pm

ಬೆಂಗಳೂರು | ಲೈಂಗಿಕ ಸಮಸ್ಯೆಗೆ ಚಿಕಿತ್ಸೆ ನೀಡುವುದಾಗಿ 48 ಲಕ್ಷ ರೂ. ವಂಚನೆ; ಆರೋಪಿ ಬಂಧನ

ಬೆಂಗಳೂರು : ಲೈಂಗಿಕ ಸಮಸ್ಯೆಗೆ ಚಿಕಿತ್ಸೆ ನೀಡುವುದಾಗಿ ಐಟಿ ಉದ್ಯೋಗಿಯೊಬ್ಬರಿಗೆ ನಂಬಿಸಿ 48 ಲಕ್ಷ ರೂ. ವಸೂಲಿ ಮಾಡಿದ್ದ ಆರೋಪದಡಿ ವಿಜಯ್ ಗುರೂಜಿ ಎಂಬ ವ್ಯಕ್ತಿಯನ್ನು ಇಲ್ಲಿನ ಜ್ಞಾನಭಾರತಿ ಪೊಲೀಸ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಟೆಕ್ಕಿಯೊಬ್ಬರು ಲೈಂಗಿಕ ಸಮಸ್ಯೆಯಿಂದ ಬಳಲುತ್ತಿದ್ದು, ಚಿಕಿತ್ಸೆಗಾಗಿ ಕೆಂಗೇರಿಯ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗೆ ಹೋಗಿ ಬರುವಾಗ ರಸ್ತೆಪಕ್ಕದ ಟೆಂಟ್‍ನಲ್ಲಿ ‘ಲೈಂಗಿಕ ಸಮಸ್ಯೆಗೆ ಚಿಕಿತ್ಸೆ’ ಎಂಬ ಬೋರ್ಡ್ ನೋಡಿ ಒಳಗೆ ಹೋಗಿದ್ದರು. ಅಲ್ಲಿ ವಿಜಯ್ ಗುರೂಜಿಯನ್ನು ಭೇಟಿಯಾಗಿ ‘ದೇವರಾಜ್ ಬೂಟಿ’ ಎಂಬ 1 ಗ್ರಾಂ ಔಷಧಿಗೆ 1.60 ಲಕ್ಷ ರೂ. ದರ ನಿಗದಿ ಮಾಡಲಾಗಿತ್ತು. ಯಶವಂತಪುರದ ವಿಜಯಲಕ್ಷ್ಮೀ ಆಯುರ್ವೇದಿಕ್ ಶಾಪ್‍ಗೆ ಹೋಗಿ ಮಾತ್ರೆಗಳು ಮತ್ತು ‘ದೇವರಾಜ್ ಬೂಟಿ’ಯನ್ನು ಖರೀದಿಸುವಂತೆ ಸೂಚಿಸಲಾಗಿತ್ತು. ಆನ್‍ಲೈನ್ ಪೇಮೆಂಟ್ ಮಾಡಬಾರದು, ಯಾರನ್ನೂ ಜೊತೆಗೆ ಕರೆದುಕೊಂಡು ಬರಬಾರದು ಎಂದು ಕಟ್ಟುನಿಟ್ಟಿನ ಷರತ್ತು ಹಾಕಲಾಗಿತ್ತು ಎನ್ನಲಾಗಿದೆ. ಟೆಕ್ಕಿ ಹಲವಾರು ಬಾರಿ ‘ದೇವರಾಜ್ ಬೂಟಿ’ ಮತ್ತು ‘ಭವನ ಬೂಟಿ ತೈಲ’ಗಳನ್ನು ಖರೀದಿಸಿ, ಒಟ್ಟಿನಲ್ಲಿ 48 ಲಕ್ಷ ರೂ. ಖರ್ಚು ಮಾಡಿದ್ದರು. ಆದರೆ, ಔಷಧಿ ಸೇವಿಸಿದರೂ ಲೈಂಗಿಕ ಸಮಸ್ಯೆ ಪರಿಹಾರವಾಗಲಿಲ್ಲ. ಆರೋಗ್ಯ ಸ್ಥಿತಿ ಹದಗೆಟ್ಟ ಹಿನ್ನೆಲೆ ತೇಜಸ್ ರಕ್ತ ಪರೀಕ್ಷೆ ಮಾಡಿಸಿದಾಗ ಕಿಡ್ನಿಗೆ ಗಂಭೀರ ಸಮಸ್ಯೆ ಉಂಟಾಗಿದೆ ಎಂಬುದು ಪತ್ತೆಯಾಗಿದೆ. ಆಯುರ್ವೇದಿಕ್ ಮಿಶ್ರಣವೇ ಕಿಡ್ನಿ ಹಾನಿಗೆ ಕಾರಣ ಎಂದು ವೈದ್ಯರು ಸೂಚಿಸಿದ್ದಾರೆ. ತೇಜಸ್ ಚಿಕಿತ್ಸೆ ಪರಿಣಾಮಕಾರಿಯಲ್ಲ ಎಂದು ಪ್ರಶ್ನಿಸಿದಾಗ ವಿಜಯ್ ಗುರೂಜಿ ‘ಸಮಸ್ಯೆ ಇನ್ನೂ ಹೆಚ್ಚಾಗುವಂತೆ ಮಾಡುತ್ತೇನೆ’ ಎಂದು ಬೆದರಿಕೆ ಹಾಕಿದ್ದ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಘಟನೆಯ ಬಗ್ಗೆ ತೇಜಸ್ ಜ್ಞಾನಭಾರತಿ ಪೊಲೀಸರಿಗೆ ದೂರು ನೀಡಿದ್ದರು. ನಂತರ ತನಿಖೆ ನಡೆಸಿದ ಪೊಲೀಸರು ವಿಜಯ್ ಗುರೂಜಿಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ವಿಜಯಲಕ್ಷ್ಮೀ ಆಯುರ್ವೇದಿಕ್ ಶಾಪ್ ಬಗ್ಗೆಯೂ ತನಿಖೆ ಆರಂಭಿಸಲಾಗಿದೆ ಎಂದು ಪೋಲಿಸರು ಮಾಹಿತಿ ನೀಡಿದ್ದಾರೆ.

ವಾರ್ತಾ ಭಾರತಿ 2 Dec 2025 9:15 pm

ಶ್ರೀಲಂಕಾದ ಪ್ರವಾಹ ಸಂತ್ರಸ್ತರಿಗೆ ʻಎಕ್ಸ್‌ಪೈರಿ ಆಹಾರ, ಔಷಧಿʼ ಪೂರೈಕೆ ಮಾಡಿದ ಪಾಕ್; ಹಳೆ ಚಾಳಿ ಬಿಡಲ್ವಾ ಎಂದ ನೆಟ್ಟಿಗರು

ದಿತ್ವಾ ಚಂಡಮಾರುತದಿಂದಾಗಿ ಶ್ರೀಲಂಕಾದಲ್ಲಿ ಪ್ರವಾಹ, ಭೂಕಂಪ ಸಂಭವಿಸಿದ ಪರಿಣಾಮ ಸಾವು-ನೋವು ಮತ್ತು ಆಸ್ತಿ-ಪಾಸ್ತಿ ನಾಶವಾಗಿದೆ. ಇದರಿಂದ ಅಲ್ಲಿನ ಜನರು ತತ್ತರಿಸಿ ಹೋಗಿದ್ದಾರೆ. ಭಾರತವೂ ಆಪರೇಷನ್‌ ಸಾಗರ್‌ ಬಂಧು ಹೆಸರಲ್ಲಿ ನೆರವು ನೀಡುತ್ತಿದೆ. ಈ ಮಧ್ಯೆ ಪಾಕಿಸ್ತಾನವೂ ನೆರವು ಒದಗಿಸುವ ಭರದಲ್ಲಿ ಅವಧಿ ಮೀರಿದ ಆಹಾರ-ಔಷಧಿ ಕೊಟ್ಟು ಭಾರಿ ಪೇಚಿಗೆ ಸಿಲುಕಿರುವುದು ಕಂಡುಬಂದಿದೆ.

ವಿಜಯ ಕರ್ನಾಟಕ 2 Dec 2025 9:14 pm

ರಬ್ಬರ್‌ಗೆ ಬೆಂಬಲ ಬೆಲೆ ನೀಡಬೇಕು ಎಂದು ಆಗ್ರಹಿಸಿ ಕೇಂದ್ರ ಸಚಿವರಿಗೆ ದ.ಕ.ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಪತ್ರ

ಮಂಗಳೂರು: ರಬ್ಬರ್ ಬೆಳೆಯನ್ನು ಕೃಷಿ ಬೆಳೆಗಳ ಪಟ್ಟಿಗೆ ಸೇರ್ಪಡೆಗೊಳಿಸಬೇಕು ಮತ್ತು ಅದಕ್ಕೆ ಬೆಂಬಲ ಬೆಲೆ ನೀಡಬೇಕು ಎಂದು ದ.ಕ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್‌ಗೆ ಪತ್ರ ಬರೆದು ಮನವಿ ಮಾಡಿದ್ದಾರೆ. ಮಾರುಕಟ್ಟೆಯಲ್ಲಿನ ಅಸ್ಥಿರತೆಯಿಂದಾಗಿ ರಬ್ಬರ್ ಕೃಷಿಕರು ಸಂಕಷ್ಟ ಎದುರಿಸುತ್ತಿದ್ದಾರೆ. ರಬ್ಬರ್ ಉತ್ಪಾದನಾ ವೆಚ್ಚವು ಬೇಡಿಕೆಯ ಬೆಲೆಗಿಂತ ಹೆಚ್ಚಿದೆ. ಇದರಿಂದ ಕೃಷಿಕರು ತೀವ್ರ ತೊಂದರೆಗೊಳಗೆ ಒಳಗಾಗಿದ್ದಾರೆ. ಕೃಷಿ ಬೆಳೆಗಳ ಪಟ್ಟಿಯಿಂದ ನೈಸರ್ಗಿಕ ರಬ್ಬರ್ ಹೊರಗಿಡಲಾಗಿದೆ. ಹಾಗಾಗಿ ರಬ್ಬರ್‌ಗೆ ಯಾವುದೇ ಬೆಂಬಲ ಬೆಲೆ ನೀಡುತ್ತಿಲ್ಲ. ಕೇಂದ್ರ ಕೃಷಿ ರಾಜ್ಯ ಸಚಿವರು ಲೋಕಸಭೆಯಲ್ಲಿ ನೈಸರ್ಗಿಕ ರಬ್ಬರನ್ನು ಕೃಷಿ ಉತ್ಪನ್ನವೆಂದು ಪರಿಗಣಿಸಲಾಗುವುದಿಲ್ಲ. ಇದನ್ನು ಕೈಗಾರಿಕಾ ಉದ್ದೇಶಕ್ಕಾಗಿ ಕಚ್ಚಾ ವಸ್ತುವಾಗಿ ಮಾತ್ರ ಬಳಸಲಾಗುತ್ತದೆ ಎಂದು ಉತ್ತರಿಸಿದ್ದರು. ವಾಣಿಜ್ಯ ಇಲಾಖೆಯು 2019ರಲ್ಲಿ ರಾಷ್ಟ್ರೀಯ ರಬ್ಬರ್ ನೀತಿಯನ್ನು ಹೊರತಂದಿದೆ. ಆದರೆ ಅದರಲ್ಲಿನ ನ್ಯೂನ್ಯತೆಗಳಿಂದಾಗಿ ಬೆಳೆಗಾರರಿಗೆ ಪ್ರಯೋಜನವಾಗಿಲ್ಲ. ರಬ್ಬರ್ ಉದ್ಯಮದ ಮೇಲೆ ಕೇಂದ್ರ ಸರಕಾರ ಏಕೀಕೃತ ಮತ್ತು ಸಂಪೂರ್ಣ ನಿಯಂತ್ರಣವನ್ನು ಹೊಂದಿರುವುದರಿಂದ ಕೇಂದ್ರ ಸರಕಾರ ಮಾತ್ರ ರಬ್ಬರ್ ಕೃಷಿಕರ ಸಮಸ್ಯೆ ಬಗೆಹರಿಸಲು ಸಾಧ್ಯ. ಈ ನಿಟ್ಟಿನಲ್ಲಿ ನೈಸರ್ಗಿಕ ರಬ್ಬರನ್ನು ಕಡ್ಡಾಯ ಕೃಷಿ ಬೆಳೆಗಳ ಪಟ್ಟಿಗೆ ಸೇರಿಸಲು ಮತ್ತು ಗರಿಷ್ಠ ಬೆಂಬಲ ಬೆಲೆ ನಿಗದಿಪಡಿಸಲು ಕೇಂದ್ರ ಸರಕಾರ ಮುಂದಾಗಬೇಕು ಎಂದು ಸಚಿವ ದಿನೇಶ್ ಗುಂಡುರಾವ್ ಪತ್ರದಲ್ಲಿ ವಿನಂತಿಸಿದ್ದಾರೆ.

ವಾರ್ತಾ ಭಾರತಿ 2 Dec 2025 9:12 pm

ಉತ್ತರಪ್ರದೇಶ | ಇನ್ನೋರ್ವ ಬಿಎಲ್‌ಒ ಮೃತ್ಯು

ಎಸ್‌ಐಆರ್ ಕೆಲಸದ ಒತ್ತಡದ ಆರೋಪ

ವಾರ್ತಾ ಭಾರತಿ 2 Dec 2025 9:10 pm

ಮಂಗಳೂರು: ಕಾರಾಗೃಹದ ಕೈದಿಗೆ ನೀಡಲು ತಂದಿದ್ದ ಎಂಡಿಎಂಎ ವಶ; ಆರೋಪಿ ಸೆರೆ

ಮಂಗಳೂರು: ದ.ಕ.ಜಿಲ್ಲಾ ಕಾರಾಗೃಹದಲ್ಲಿರುವ ವಿಚಾರಣಾಧೀನ ಕೈದಿಯೊಬ್ಬನಿಗೆ ನೀಡಲು ತಂದಿದ್ದ ಎಂಡಿಎಂಎ ಮಾದರಿ ಪುಡಿ ಸಹಿತ ಒಬ್ಬನನ್ನು ಕಾರಾಗೃಹದ ಭದ್ರತೆಗೆ ನಿಯೋಜನೆ ಮಾಡಿರುವ ಪೊಲೀಸರು ವಶಕ್ಕೆ ಪಡೆದು ಬರ್ಕೆ ಠಾಣೆ ಪೊಲೀಸರಿಗೆ ಒಪ್ಪಿಸಿದ್ದಾರೆ. ಕಾರಾಗೃಹದ ಅಧೀಕ್ಷಕ ಶರಣಬಸಪ್ಪ ನೀಡಿದ ದೂರಿನಂತೆ ಆರೋಪಿ ಉರ್ವಸ್ಟೋರ್ ನಿವಾಸಿ ಆಶಿಕ್ ಎಂಬಾತನನ್ನು ಬಂಧಿಸಿದ್ದಾರೆ. ಕಾರಾಗೃಹದಲ್ಲಿ ವಿಚಾರಣಾಧೀನ ಕೈದಿ ಅನ್ವಿತ್ ಎಂಬಾತನನ್ನು ಭೇಟಿ ಮಾಡಲು ಸೋಮವಾರ ಮಧ್ಯಾಹ್ನ 12:45ರ ವೇಳೆಗೆ ಆಶಿಕ್ ಬಂದಿದ್ದ. ಕೈದಿಗೆ ನೀಡಲು ತಂದಿದ್ದ ಸಾಮಗ್ರಿಗಳನ್ನು ಪರಿಶೀಲನೆ ನಡೆಸಿದಾಗ ಟೂತ್‌ಪೇಸ್ಟ್ ಒಳಭಾಗದಲ್ಲಿ ಅನುಮಾನಾಸ್ಪದ ವಸ್ತುಗಳು ಇರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಸಹಾಯಕ ಕಮಾಂಡೆಂಟ್ ಅದನ್ನು ಪರಿಶೀಲಿಸಿದಾಗ ಎಂಡಿಎಂಎನಂತೆ ಕಾಣುವ ಬಿಳಿ ಬಣ್ಣದ ಹರಳಿನಂತಿರುವ ಅನುಮಾನಾಸ್ಪದ ಪುಡಿ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ಆಶಿಕ್ ಬಳಿ ವಿಚಾರಿಸಿದಾಗ ಕಾರಾಗೃಹದ ಮುಂಭಾಗದ ಜೆರಾಕ್ಸ್ ಅಂಗಡಿ ಹತ್ತಿರ ವ್ಯಕ್ತಿಯೊಬ್ಬ ಕೆಲವು ಬೇಕರಿ ತಿಂಡಿಗಳನ್ನು ನೀಡಲಿದ್ದು, ಅದನ್ನು ಅನ್ವಿತ್‌ಗೆ ನೀಡುವಂತೆ ಕಾರಾಗೃಹದಲ್ಲಿ ವಿಚಾರಣಾಧೀನ ಕೈದಿಯಾಗಿರುವ ಸಚಿನ್ ತಲಪಾಡಿ ಎಂಬಾತನ ಸೂಚನೆಯಂತೆ ತಂದಿರುವುದಾಗ ಹೇಳಿಕೊಂಡಿದ್ದಾನೆ ಎಂದು ಪ್ರಕರಣ ದಾಖಲಿಸಿರುವ ಬರ್ಕೆ ಠಾಣೆಯ ಪೊಲೀಸರು ತಿಳಿಸಿದ್ದಾರೆ.

ವಾರ್ತಾ ಭಾರತಿ 2 Dec 2025 9:08 pm

ಸಮಸ್ಯೆಗಳಿಗೆ ಉಪಹಾರ ಕೂಟ ಪರಿಹಾರವೇ?: ಎನ್.ರವಿಕುಮಾರ್

ಬೆಂಗಳೂರು: ‘ನಾಟಿಕೋಳಿ ಸಾರ್ ಮಾಡಿಸುತ್ತೀರಿ?, ಕುರಿ ಕೊಯಿಸುತ್ತೀರಾ? ಅಥವಾ ಇಡ್ಲಿ ವಡಾ, ಸಾಂಬಾರ್ ಅಥವಾ ಉಪ್ಪಿಟ್ಟಿನ ಸಿಂಪಲ್ ಉಪಹಾರಕ್ಕೆ ಮುಗಿಸುತ್ತೀರಾ?. ಕರ್ನಾಟಕದ ಸಮಸ್ಯೆ ಉಪಹಾರದಲ್ಲಿ ಮುಗಿಯುತ್ತದೆಯೇ? ಎಂದು ಪರಿಷತ್ ವಿಪಕ್ಷದ ಮುಖ್ಯ ಸಚೇತಕ ಎನ್.ರವಿಕುಮಾರ್ ಟೀಕಿಸಿದ್ದಾರೆ. ಮಂಗಳವಾರ ಮಲ್ಲೇಶ್ವರದ ಬಿಜೆಪಿ ಕಾರ್ಯಾಲಯ ಜಗನ್ನಾಥ ಭವನ”ದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾಧ್ಯಮಗಳಲ್ಲಿ ನಿನ್ನೆಯಿಂದ ನಾಟಿಕೋಳಿ ಬಗ್ಗೆ ಚರ್ಚೆ ನಡೆಯುತ್ತಿದೆ. ಕರ್ನಾಟಕದಲ್ಲಿ ಎಲ್ಲ ಸಮಸ್ಯೆ ಪರಿಹಾರ ಆಗುವುದಾದರೆ ಎಲ್ಲರಿಗೂ ನಾಟಿಕೋಳಿ ಕೊಟ್ಟು ಬಿಡಬಹುದು. ನಾಟಿಕೋಳಿಯಲ್ಲಿ ಪರಿಹಾರ ಇದೆಯೇ? ಎಂದು ಕೇಳಿದರು. ರಾಜ್ಯದಲ್ಲಿ ರೈತರ ಸಮಸ್ಯೆ, ರಸ್ತೆ ಗುಂಡಿ ಸಮಸ್ಯೆ ಸೇರಿ ಅನೇಕ ಸಮಸ್ಯೆಗಳಿವೆ. ರೈತರ ಹೋರಾಟ, ಶಿಕ್ಷಕರ-ಅತಿಥಿ ಉಪನ್ಯಾಸಕರ ಹೋರಾಟ ನಡೆಯುತ್ತಿದೆ. ಸರಣಿ ದರೋಡೆಗಳು ನಡೆಯುತ್ತಿವೆ. ಕಾನೂನು-ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟು ಹೋಗಿದೆ. ಇವುಗಳ ಬಗ್ಗೆ ಚರ್ಚೆ ನಡೆಯುತ್ತಿಲ್ಲ ಎಂದು ಅವರು ಆಕ್ಷೇಪಿಸಿದರು. ರೈತರ ಸಮಸ್ಯೆಗಳನ್ನು, ಬೆಂಗಳೂರಿನ ರಸ್ತೆ ಸಮಸ್ಯೆ ಉಪಹಾರದಲ್ಲಿ ಮುಗಿಸಿದ್ದೀರಾ? ಕೇಂದ್ರ ಸರಕಾರ ರೈತರ ಬೆಳೆಗಳಿಗೆ ಬೆಂಬಲ ಬೆಲೆ ಪ್ರಕಟಿಸಿ ಅನೇಕ ತಿಂಗಳಾಗಿದೆ. ಒಂದು ಕ್ವಿಂಟಾಲ್ ಮೆಕ್ಕೆಜೋಳಕ್ಕೆ 2,400ರೂ. ಘೋಷಿಸಿದ್ದರೂ ಖರೀದಿ ಕೇಂದ್ರಗಳನ್ನು ಈ ಸರಕಾರ ತೆರೆದಿಲ್ಲ ಎಂದು ರವಿಕುಮಾರ್ ಟೀಕಿಸಿದರು.

ವಾರ್ತಾ ಭಾರತಿ 2 Dec 2025 9:07 pm

ಇಂಗ್ಲೆಂಡ್ ಮಾಜಿ ಬ್ಯಾಟರ್ ರಾಬಿನ್ ಸ್ಮಿತ್ ನಿಧನ

ಲಂಡನ್, ಡಿ.2: ಇಂಗ್ಲೆಂಡ್ ಕ್ರಿಕೆಟ್ ತಂಡದ ಮಾಜಿ ಬ್ಯಾಟರ್ ರಾಬಿನ್ ಸ್ಮಿತ್ ತನ್ನ 62ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ ಎಂದು ಇಂಗ್ಲೀಷ್ ಕೌಂಟಿ ತಂಡ ಹ್ಯಾಂಪ್‌ ಶೈರ್ ಮಂಗಳವಾರ ಘೋಷಿಸಿದೆ. ಸ್ಮಿತ್ 1988 ಹಾಗೂ 1996ರ ನಡುವೆ ಸ್ಮಿತ್ 62 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. ಆಸ್ಟ್ರೇಲಿಯದ ದಕ್ಷಿಣ ಪರ್ತ್‌ನಲ್ಲಿ ತನ್ನ ಕುಟುಂಬದೊಂದಿಗೆ ನೆಲೆಸಿದ್ದ ಸ್ಮಿತ್ ಸೋಮವಾರ ಸ್ವಗ್ರಹದಲ್ಲಿ ಹಠಾತ್ತನೆ ನಿಧನರಾಗಿದ್ದಾರೆ. ನಿಧನಕ್ಕೆ ಕಾರಣ ತಿಳಿದುಬಂದಿಲ್ಲ ಎಂದು ಕುಟುಂಬ ಮೂಲಗಳು ತಿಳಿಸಿವೆ. ಸ್ಮಿತ್ ಅವರು ಇತ್ತೀಚೆಗೆ ಕೋಚ್ ಆ್ಯಂಡ್ರೆ ಫ್ಲಿಟಾಂಫ್ ಆಹ್ವಾನದ ಮೇರೆಗೆ ಮೊದಲ ಆ್ಯಶಸ್ ಟೆಸ್ಟ್‌ಗಿಂತ ಮೊದಲು ಪರ್ತ್‌ ನಲ್ಲಿ ಇಂಗ್ಲೆಂಡ್‌ ಲಯನ್ಸ್ ತಂಡವನ್ನು ಭೇಟಿಯಾಗಿದ್ದರು. 

ವಾರ್ತಾ ಭಾರತಿ 2 Dec 2025 9:06 pm

ಕಲಬುರಗಿ| ಪಿಎಂ- ವಿಶ್ವಕರ್ಮ ಯೋಜನೆಯ ಅರಿವು ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿಗಳಿಂದ ಚಾಲನೆ

ಕಲಬುರಗಿ: ಭಾರತ ಸರಕಾರದ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಚಿವಾಲಯ, ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಅಭಿವೃದ್ಧಿ ಮತ್ತು ಸಹಾಯ ಕಚೇರಿ ಹುಬ್ಬಳ್ಳಿ ಹಾಗೂ ಜಿಲ್ಲಾ ಕೈಗಾರಿಕಾ ಕೇಂದ್ರ ಸಂಯುಕ್ತಾಶ್ರಯದಲ್ಲಿ ಪಿಎಂ-ವಿಶ್ವಕರ್ಮ ಯೋಜನೆಯ ಅರಿವು ಮೂಡಿಸುವ ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿ ಫೌಝಿಯಾ ತರನ್ನುಮ್ ಚಾಲನೆ ನೀಡಿದರು. ಮಂಗಳವಾರ ನಗರದ ಸಣ್ಣ ಮತ್ತು ಮಧ್ಯಮ ಉದ್ಯಮಗಳ ಅಭಿವೃದ್ಧಿ ಮತ್ತು ಸಹಾಯ ಕಚೇರಿಯಲ್ಲಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಜಿಲ್ಲಾಧಿಕಾರಿ ಫೌಝಿಯಾ ತರನ್ನುಮ್, ಈ ಯೋಜನೆಯನ್ನು ಪರಿಣಾಮಕಾರಕವಾಗಿ ಅನುಷ್ಠಾನಗೊಳಿಸಲು ಸಂಬಂಧಪಟ್ಟ ಎಲ್ಲಾ ಇಲಾಖೆಗಳ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದರು. ಮುಂಬರುವ ದಿನಗಳಲ್ಲಿ ಪಿಎಂ-ವಿಶ್ವಕರ್ಮ ಯೋಜನೆಯ ಫಲಾನುಭವಿಗಳು ಇದರ ಸದುಪಯೋಗ ಪಡೆದುಕೊಂಡು ಜೀವನಮಾನ ಸುಧಾರಿಸಿಕೊಳ್ಳಲು ಕರೆ ನೀಡಿದರು. ತಯಾರಿಸಿದ ವಸ್ತುಗಳಿಗೆ ಉತ್ತೇಜನೆ ನೀಡಲು ವಸ್ತು ಪ್ರದರ್ಶನ ಆಯೋಜಿಸಲು ಅಧಿಕಾರಿಗಳಿಗೆ ಸೂಚಿಸಿದರು. ಕಲಬುರಗಿ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರಾದ ಅಬ್ದುಲ್ ಅಜೀಮ್ ಅವರು ಪ್ರಸ್ತಾವಿಕವಾಗಿ ಮಾತನಾಡಿ, ಯೋಜನೆಯ ಉದ್ದೇಶಗಳ ಬಗ್ಗೆ ವಿವರಿಸಿದರು. ಜಿಲ್ಲಾಧಿಕಾರಿಗಳು ತರಬೇತಿ ಪೂರೈಸಿದ ಫಲಾನುಭವಿಗಳಿಗೆ ಪ್ರಮಾಣ ಪತ್ರವನ್ನು ವಿತರಿಸಿದರು.

ವಾರ್ತಾ ಭಾರತಿ 2 Dec 2025 9:05 pm

2026ರ ಐಪಿಎಲ್ ಹರಾಜಿನಿಂದ ಹೊರಗುಳಿದ ಗ್ಲೆನ್ ಮ್ಯಾಕ್ಸ್‌ವೆಲ್!

ಹೊಸದಿಲ್ಲಿ, ಡಿ.2: ಆಸ್ಟ್ರೇಲಿಯದ ಆಲ್‌ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ 2026ರ ಆವೃತ್ತಿಯ ಐಪಿಎಲ್ ಟೂರ್ನಿಯ ಹರಾಜಿನ ಪಟ್ಟಿಯಲ್ಲಿ ತನ್ನ ಹೆಸರು ಇರುವುದಿಲ್ಲ ಎಂದು ಮಂಗಳವಾರ ಪ್ರಕಟಿಸಿದ್ದಾರೆ. ಈ ಮೂಲಕ ಅವರು ಅತ್ಯಂತ ಶ್ರೀಮಂತ ಟಿ20 ಲೀಗ್‌ನೊಂದಿಗೆ ತನ್ನ ನಂಟನ್ನು ತಾತ್ಕಾಲಿಕವಾಗಿ ಕಡಿದುಕೊಂಡಿದ್ದಾರೆ. ಮ್ಯಾಕ್ಸ್‌ವೆಲ್ 2025ರ ಐಪಿಎಲ್ ಹರಾಜಿನಲ್ಲಿ 4.2 ಕೋಟಿ ರೂ.ಗೆ ಪಂಜಾಬ್ ಕಿಂಗ್ಸ್ ಪಾಲಾಗಿದ್ದರು. ಆದರೆ ಅವರು ಬೆರಳುನೋವಿನಿಂದಾಗಿ ಪಂದ್ಯಾವಳಿಯನ್ನು ಅರ್ಧದಲ್ಲೇ ಮೊಟಕುಗೊಳಿಸುವ ಮೊದಲು 9 ಪಂದ್ಯಗಳಲ್ಲಿ ನಾಲ್ಕು ವಿಕೆಟ್‌ಗಳನ್ನು ಕಬಳಿಸಿದ್ದರು. ಕೇವಲ 78 ರನ್ ಗಳಿಸಲಷ್ಟೇ ಶಕ್ತರಾಗಿದ್ದರು. 2012ರಲ್ಲಿ ಐಪಿಎಲ್‌ಗೆ ಕಾಲಿಟ್ಟ ನಂತರ ಮ್ಯಾಕ್ಸ್‌ವೆಲ್ ವಿದೇಶದ ಸ್ಫೋಟಕ ಶೈಲಿಯ ಬ್ಯಾಟರ್‌ ಗಳ ಪೈಕಿ ಒಬ್ಬರಾಗಿದ್ದರು. 2014ರಲ್ಲಿ ಒಟ್ಟು 542 ರನ್ ಗಳಿಸಿ ಮಿಂಚಿದ್ದರು. ಅ ನಂತರ 2017(310 ರನ್), 2021(513 ರನ್), 2022(301 ರನ್)ಹಾಗೂ 2023(400)ಆವೃತ್ತಿಯ ಐಪಿಎಲ್‌ನಲ್ಲಿ ಆರ್ಭಟಿಸಿದ್ದರು. ‘‘ಐಪಿಎಲ್‌ನಲ್ಲಿ ಹಲವಾರು ಮರೆಯಲಾರದ ಋತುಗಳ ನಂತರ ಈ ವರ್ಷದ ಐಪಿಎಲ್ ಹರಾಜಿನಲ್ಲಿ ನನ್ನ ಹೆಸರನ್ನು ಹಾಕದಿರಲು ನಿರ್ಧರಿಸಿದ್ದೇನೆ. ಇದೊಂದು ಪ್ರಮುಖ ನಿರ್ಧಾರ. ಈ ಲೀಗ್ ನನಗೆ ನೀಡಿರುವ ಅವಕಾಶಕ್ಕಾಗಿ ಆಭಾರಿಯಾಗಿರುವೆ. ಕ್ರಿಕೆಟಿಗ ಹಾಗೂ ವ್ಯಕ್ತಿಯಾಗಿ ರೂಪುಗೊಳ್ಳಲು ಐಪಿಎಲ್ ನನಗೆ ನೆರವಾಗಿದೆ. ವಿಶ್ವ ದರ್ಜೆಯ ಸಹ ಆಟಗಾರರೊಂದಿಗೆ ಆಡುವ, ಉತ್ತಮ ಫ್ರಾಂಚೈಸಿಗಳನ್ನು ಪ್ರತಿನಿಧಿಸುವ ಅದೃಷ್ಟ ನನಗೆ ಲಭಿಸಿತ್ತು. ಇಷ್ಟು ವರ್ಷಗಳ ಕಾಲ ನನಗೆ ಬೆಂಬಲಿಸಿದ ಎಲ್ಲರಿಗೂ ಧನ್ಯವಾದಗಳು. ಮತ್ತೊಮ್ಮೆ ನಿಮ್ಮನ್ನು ನೋಡುವ ವಿಶ್ವಾಸದಲ್ಲಿದ್ದೇನೆ’’ ಎಂದು ಇನ್‌ಸ್ಟಾಗ್ರಾಮ್‌ನಲ್ಲಿ ಮ್ಯಾಕ್ಸ್‌ವೆಲ್ ಬರೆದಿದ್ದಾರೆ.

ವಾರ್ತಾ ಭಾರತಿ 2 Dec 2025 9:04 pm

ನೌಕರರಿಗೆ ಋತುಚಕ್ರ ರಜೆ: ಕರ್ನಾಟಕ ಸರ್ಕಾರದಿಂದ ಮಹತ್ವದ ಆದೇಶ; ಪ್ರತಿ ತಿಂಗಳು 1 ದಿನದ ಸೌಲಭ್ಯ; ಷರತ್ತುಗಳೇನು?

ರಾಜ್ಯ ಸರ್ಕಾರಿ ಮಹಿಳಾ ನೌಕರರ ಮನೋಸ್ಥೈರ್ಯ ಹೆಚ್ಚಿಸಲು, ಪ್ರತಿ ತಿಂಗಳು ಒಂದು ದಿನದ ಋುತುಚಕ್ರ ರಜೆ ಕಲ್ಪಿಸಲು ಆದೇಶ ಹೊರಡಿಸಿದೆ. 18 ರಿಂದ 52 ವರ್ಷ ವಯಸ್ಸಿನ ಮಹಿಳಾ ನೌಕರರು ಯಾವುದೇ ವೈದ್ಯಕೀಯ ಪ್ರಮಾಣ ಪತ್ರವಿಲ್ಲದೆ ಈ ರಜೆ ಪಡೆಯಬಹುದು. ಈ ರಜೆಯನ್ನು ಪ್ರತ್ಯೇಕವಾಗಿ ನಮೂದಿಸಬೇಕು ಮತ್ತು ಬೇರೆ ರಜೆಯೊಂದಿಗೆ ಸಂಯೋಜಿಸುವಂತಿಲ್ಲ.

ವಿಜಯ ಕರ್ನಾಟಕ 2 Dec 2025 9:03 pm

ವೈಭವ್ ಸೂರ್ಯವಂಶಿ ಐತಿಹಾಸಿಕ ಶತಕ ವ್ಯರ್ಥ; ಬಿಹಾರ ವಿರುದ್ಧ ಮಹಾರಾಷ್ಟ್ರಕ್ಕೆ ಗೆಲುವಿನ ಹಾರ

ಕೋಲ್ಕತಾ, ಡಿ.2: ಭಾರತದ ಯುವ ಪ್ರತಿಭೆ ವೈಭವ ಸೂರ್ಯವಂಶಿ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಟೂರ್ನಿಯ ಇತಿಹಾಸದಲ್ಲಿ ಶತಕ ಗಳಿಸಿದ ಅತ್ಯಂತ ಕಿರಿಯ ವಯಸ್ಸಿನ ಆಟಗಾರ ಎನಿಸಿಕೊಂಡು ಇತಿಹಾಸ ನಿರ್ಮಿಸಿದರು. ಮಂಗಳವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಬಿಹಾರ ತಂಡವು ನಿಗದಿತ 20 ಓವರ್‌ಗಳಲ್ಲಿ 3 ವಿಕೆಟ್‌ಗಳ ನಷ್ಟಕ್ಕೆ 176 ರನ್ ಗಳಿಸಿತು. 14ರ ವಯಸ್ಸಿನ ವೈಭವ್ ಕೇವಲ 61 ಎಸೆತಗಳಲ್ಲಿ 7 ಬೌಂಡರಿ ಹಾಗೂ 7 ಸಿಕ್ಸರ್‌ ಗಳ ಸಹಿತ ಔಟಾಗದೆ 108 ರನ್ ಗಳಿಸಿದರು. ಅರ್ಷಿನ್ ಕುಲಕರ್ಣಿ ಬೌಲಿಂಗ್‌ನಲ್ಲಿ ಬೌಂಡರಿ ಗಳಿಸಿದ ವೈಭವ್ 58 ಎಸೆತಗಳಲ್ಲಿ ಶತಕ ಪೂರೈಸಿದರು. ಗೆಲ್ಲಲು 177 ರನ್ ಗುರಿ ಪಡೆದ ಮಹಾರಾಷ್ಟ್ರ ತಂಡವು ನಾಯಕ ಪೃಥ್ವಿ ಶಾ(66 ರನ್, 30 ಎಸೆತ, 11 ಬೌಂಡರಿ,1 ಸಿಕ್ಸರ್)ಅರ್ಧಶತಕದ ನೆರವಿನಿಂದ 19.1 ಓವರ್‌ಗಳಲ್ಲಿ 7 ವಿಕೆಟ್‌ಗಳ ನಷ್ಟಕ್ಕೆ 182 ರನ್ ಗಳಿಸಿತು. ಅರ್ಷಿನ್ ಕುಲಕರ್ಣಿ(1 ರನ್)ವಿಕೆಟನ್ನು ಕಳೆದುಕೊಂಡ ಮಹಾರಾಷ್ಟ್ರ ತಂಡವು ಕಳಪೆ ಆರಂಭ ಪಡೆದಿತ್ತು. ಆಗ ಎರಡನೇ ವಿಕೆಟ್‌ಗೆ 57 ರನ್ ಜೊತೆಯಾಟ ನಡೆಸಿದ ಪೃಥ್ವಿ ಹಾಗೂ ಮಂದರ್ ಭಂಡಾರಿ(4 ರನ್)ತಂಡವನ್ನು ಆಧರಿಸಿದರು. ನೀರಜ್ ಜೋಶಿ(30 ರನ್, 24 ಎಸೆತ), ರಂಜೀತ್ ನಿಕಮ್(27 ರನ್, 16 ಎಸೆತ)ಹಾಗೂ ನಿಖಿಲ್ ನಾಯಕ್(22 ರನ್, 13 ಎಸೆತ)ಸಾಂದರ್ಭಿಕ ಬ್ಯಾಟಿಂಗ್ ಮೂಲಕ ಇನ್ನೂ ಐದು ಎಸೆತಗಳು ಬಾಕಿ ಇರುವಾಗಲೇ ಮಹಾರಾಷ್ಟ್ರ ತಂಡಕ್ಕೆ 3 ವಿಕೆಟ್‌ಗಳ ಅಂತರದ ಗೆಲುವು ತಂದುಕೊಟ್ಟರು.

ವಾರ್ತಾ ಭಾರತಿ 2 Dec 2025 9:01 pm

ಗ್ರೇಟರ್ ಬೆಂಗಳೂರು ಆಡಳಿತ ಅಧಿನಿಯಮ ಪ್ರಶ್ನಿಸಿ ಪಿಐಎಲ್; ರಾಜ್ಯ ಸರಕಾರಕ್ಕೆ ಹೈಕೋರ್ಟ್ ನೋಟಿಸ್

ಬೆಂಗಳೂರು : ಗ್ರೇಟರ್ ಬೆಂಗಳೂರು ಆಡಳಿತ ಅಧಿನಿಯಮ-2025ರ ಸಾಂವಿಧಾನಿಕ ಮಾನ್ಯತೆ ಪ್ರಶ್ನಿಸಿ ಸಲ್ಲಿಸಲಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಂಬಂಧ ರಾಜ್ಯ ಸರಕಾರಕ್ಕೆ ಹೈಕೋರ್ಟ್ ನೋಟಿಸ್ ಜಾರಿಗೊಳಿಸಿದೆ. ಗ್ರೇಟರ್ ಬೆಂಗಳೂರು ಆಡಳಿತ ಅಧಿನಿಯಮ-2024 ಹಾಗೂ ಗ್ರೇಟರ್ ಬೆಂಗಳೂರು ಆಡಳಿತ (ತಿದ್ದುಪಡಿ) ಅಧಿನಿಯಮ-2025 ಅನ್ನು ಅಸಂವಿಧಾನಿಕವೆಂದು ಘೋಷಿಸುವಂತೆ ಕೋರಿ ಪತ್ರಕರ್ತ ಹಾಗೂ ರಂಗ ಕಲಾವಿದ ಪ್ರಕಾಶ್ ಬೆಳವಾಡಿ ಮತ್ತಿತರರು ಸಲ್ಲಿಸಿರುವ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಹಾಗೂ ನ್ಯಾಯಮೂರ್ತಿ ಸಿ.ಎಂ. ಪೂಣಚ್ಚ ಅವರಿದ್ದ ವಿಭಾಗೀಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು. ವಿಚಾರಣೆ ವೇಳೆ ಸರಕಾರದ ಪರ ವಕೀಲರು, ಇದೇ ವಿಷಯಕ್ಕೆ ಸಂಬಂಧಿಸಿದ ಮತ್ತೊಂದು ಅರ್ಜಿಯು 2027ರ ಜನವರಿ 7ಕ್ಕೆ ವಿಚಾರಣೆಗೆ ನಿಗದಿಯಾಗಿದೆ ಎಂದು ನ್ಯಾಯಪೀಠದ ಗಮನಕ್ಕೆ ತಂದರು. ಇದನ್ನು ಪರಿಗಣಿಸಿದ ನ್ಯಾಯಪೀಠ, ಅರ್ಜಿಯಲ್ಲಿ ಪ್ರತಿವಾದಿಗಳಾದ ರಾಜ್ಯ ಸರಕಾರ, ನಗರಾಭಿವೃದ್ಧಿ ಇಲಾಖೆ, ಜಿಬಿಎಗೆ ನೋಟಿಸ್ ಜಾರಿಗೊಳಿಸಿ, ವಿಚಾರಣೆಯನ್ನು ಜನವರಿ 7ಕ್ಕೆ ಮುಂದೂಡಿತು. ಅರ್ಜಿದಾರರ ಮನವಿ ಏನು? ಗ್ರೇಟರ್ ಬೆಂಗಳೂರು ಆಡಳಿತ ಅಧಿನಿಯಮ-2024 ಹಾಗೂ ಗ್ರೇಟರ್ ಬೆಂಗಳೂರು ಆಡಳಿತ (ತಿದ್ದುಪಡಿ) ಅಧಿನಿಯಮ-2025 ಅನ್ನು ಅಸಾಂವಿಧಾನಿಕವೆಂದು ಘೋಷಿಸಬೇಕು. ಈ ಕಾಯ್ದೆ ಆಧರಿಸಿ ಹೊರಡಿಸಲಾದ ಎಲ್ಲ ಅಧಿಸೂಚನೆಗಳನ್ನು ರದ್ದುಪಡಿಸಬೇಕು. ಕಾಯ್ದೆಯ ಸಾಂವಿಧಾನಿಕ ಮಾನ್ಯತೆ ನಿರ್ಧಾರವಾಗುವ ತನಕ ಕಾಯ್ದೆಯಡಿ ಯಾವುದೇ ಪ್ರಾಧಿಕಾರ, ಸಮಿತಿಗಳನ್ನು ರಚಿಸದಂತೆ ರಾಜ್ಯ ಸರಕಾರವನ್ನು ನಿರ್ಬಂಧಿಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ. ಜತೆಗೆ, ಸುರಂಗ ರಸ್ತೆಗಳು, ಬೆಂಗಳೂರು ಬ್ಯುಸಿನೆಸ್ ಕಾರಿಡಾರ್, ಪೆರಿಫೆರಲ್ ರಿಂಗ್ ರಸ್ತೆ, ಫ್ಲೈವರ್‌ಗಳು, ಡಬಲ್ ಡೆಕ್ಕರ್ ಫ್ಲೈವರ್‌ಗಳು, ಎಲಿವೇಟೆಡ್ ಕಾರಿಡಾರ್‌ಗಳು, ಕೆರೆ ಮತ್ತು ರಾಜಕಾಲುವೆ ಬಫರ್ ವಲಯಗಳಲ್ಲಿನ ರಸ್ತೆಗಳ ಸಂಬಂಧ ಯೋಜನಾ ಅನುಮೋದನೆಗಳು, ಭೂಸ್ವಾಧೀನ, ಮರ ಕಡಿಯುವುದು ಸೇರಿ ಯಾವುದೇ ಕಾಮಗಾರಿಗಳಿಗೆ ಮುಂದಾಗಂದಂತೆ ಸರಕಾರ, ಜಿಬಿಎಗೆ ನಿರ್ದೇಶನ ನೀಡಬೇಕು ಎಂದು ಅರ್ಜಿದಾರರು ಮನವಿ ಮಾಡಿದ್ದಾರೆ.

ವಾರ್ತಾ ಭಾರತಿ 2 Dec 2025 8:54 pm

ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಜನಸಂದಣಿ ನಿಯಂತ್ರಣಕ್ಕೆ ಎಸ್‌ಒಪಿ ಸಿದ್ಧ; ಹೈಕೋರ್ಟ್‌ಗೆ ಸರಕಾರದ ಮಾಹಿತಿ

ಬೆಂಗಳೂರು : ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸಂಭವಿಸಿದ್ದ ಕಾಲ್ತುಳಿತದಂಥ ಘಟನೆಗಳು ಭವಿಷ್ಯದಲ್ಲಿ ಮರುಕಳಿಸದಂತೆ ತಡೆಯುವ ಸಲುವಾಗಿ ಸಾರ್ವಜನಿಕ ಸಮಾರಂಭಗಳಲ್ಲಿ ಜನಸಂದಣಿ ನಿಯಂತ್ರಣಕ್ಕೆ ಸಂಬಂಧಿಸಿದ ಪ್ರಮಾಣೀಕೃತ ಕಾರ್ಯಾಚರಣೆ ವಿಧಾನವನ್ನು (ಎಸ್‌ಒಪಿ) ಸಿದ್ಧಪಡಿಸಲಾಗಿದ್ದು, ಎಲ್ಲ ಪಕ್ಷಕಾರರಿಗೂ ಪ್ರತಿಯನ್ನು ಹಂಚಲಾಗುವುದು ಎಂದು ರಾಜ್ಯ ಸರಕಾರ ಹೈಕೋರ್ಟ್‌ಗೆ ತಿಳಿಸಿದೆ. ಆರ್‌ಸಿಬಿ ವಿಜಯೋತ್ಸವದ ವೇಳೆ ಉಂಟಾದ ಕಾಲ್ತುಳಿತದಲ್ಲಿ 11 ಮಂದಿ ಮೃತಪಟ್ಟ ಕುರಿತ ಮಾಧ್ಯಮಗಳ ವರದಿ ಆಧರಿಸಿ ಸ್ವಯಂಪ್ರೇರಿತವಾಗಿ ದಾಖಲಿಸಿಕೊಂಡಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಹಾಗೂ ನ್ಯಾಯಮೂರ್ತಿ ಸಿ.ಎಂ. ಪೂಣಚ್ಚ ಅವರಿದ್ದ ವಿಭಾಗೀಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು. ರಾಜ್ಯ ಸರಕಾರದ ಪರ ಹಾಜರಿದ್ದ ಅಡ್ವೊಕೇಟ್‌ ಜನರಲ್‌ ಕೆ. ಶಶಿಕಿರಣ್‌ ಶೆಟ್ಟಿ ಅವರು, ಸಾರ್ವಜನಿಕ ಸಮಾರಂಭಗಳಲ್ಲಿ ಜನಸಂದಣಿ ನಿಯಂತ್ರಿಸಲು ಎಸ್‌ಒಪಿ ಸಿದ್ಧವಾಗಿದ್ದು, ಅಮೈಕಸ್‌ ಕ್ಯೂರಿ ಎಸ್‌. ಸುಶೀಲಾ ಅವರು ನೀಡಿರುವ ಕೆಲ ಸಲಹೆಗಳನ್ನು ಅದರಲ್ಲಿ ಅಡಕಗೊಳಿಸಲಾಗುವುದು. ಜತೆಗೆ ಎಲ್ಲ ಪಕ್ಷಕಾರರಿಗೆ ಪ್ರತಿಯನ್ನು ಹಂಚಿ, ಅವರೆಲ್ಲರೂ ನೀಡುವ ಸಲಹೆಗಳನ್ನೂ ಅಡಕಗೊಳಿಸಿ, ನ್ಯಾಯಾಲಯಕ್ಕೆ ಸಲ್ಲಿಸಲಾಗುವುದು ಎಂದು ನ್ಯಾಯಪೀಠಕ್ಕೆ ತಿಳಿಸಿದರು. ಆಗ ನ್ಯಾಯಪೀಠ, ಎಸ್‌ಒಪಿಗೆ ಸೀಮಿತವಾಗಿ ಪ್ರಕರಣವನ್ನು ನೋಡಲಾಗುವುದು. ಅದನ್ನು ಮೀರುವುದಿಲ್ಲ. ಎಲ್ಲರಿಗೂ ಎಸ್‌ಒಪಿ ಪ್ರತಿಯನ್ನು ಹಂಚಬೇಕು ಎಂದು ರಾಜ್ಯ ಸರಕಾರಕ್ಕೆ ನಿರ್ದೇಶಿಸಿ, ವಿಚಾರಣೆಯನ್ನು 2026ರ ಜನವರಿ 20ಕ್ಕೆ ಮುಂದೂಡಿತು.

ವಾರ್ತಾ ಭಾರತಿ 2 Dec 2025 8:49 pm

ಮೈಸೂರಿನ ಕುಕ್ಕರಹಳ್ಳಿ ಕೆರೆ ಸ್ವಚ್ಛತೆಗೆ ಗೋವಾ ಬೋಟ್‌! ಟೆಂಡರ್‌ ಪ್ರಕ್ರಿಯೆ ಪೂರ್ಣ, ಆರಂಭ ಯಾವಾಗ?

ಮೈಸೂರು ವಿಶ್ವವಿದ್ಯಾಲಯ ಕುಕ್ಕರಹಳ್ಳಿ ಕೆರೆ ಸ್ವಚ್ಛತೆಗೆ ಮುಂದಾಗಿದೆ. ಗೋವಾದಿಂದ ವಿಶೇಷ ಬೋಟ್‌ಗಳನ್ನು ಖರೀದಿಸಲಾಗುತ್ತಿದೆ. ಈ ಬೋಟ್‌ಗಳ ಮೂಲಕ ಕೆರೆಯ ಕಸವನ್ನು ಸಂಗ್ರಹಿಸಿ ಹೊರಹಾಕಲಾಗುತ್ತದೆ. ವರುಣ ಕೆರೆಯಲ್ಲಿ ಯಶಸ್ವಿಯಾಗಿ ಸ್ವಚ್ಛತಾ ಕಾರ್ಯ ನಡೆಸಿದ ತಂಡದ ಸಹಕಾರ ಪಡೆಯಲಾಗುತ್ತಿದೆ. ತಜ್ಞರ ತಂಡದೊಂದಿಗೆ ತರಬೇತಿ ನೀಡಿ ಸ್ವಚ್ಛತಾ ಕಾರ್ಯ ಆರಂಭಿಸಲಾಗುವುದು. ಕೆರೆಯನ್ನು ಶಾಶ್ವತವಾಗಿ ಅಭಿವೃದ್ಧಿಪಡಿಸುವ ಗುರಿ ಇದೆ ಎಂದು ವಿವಿ ಕುಲಸಚಿವೆ ಹೇಳಿದ್ದಾರೆ.

ವಿಜಯ ಕರ್ನಾಟಕ 2 Dec 2025 8:48 pm

33 ಲಕ್ಷ ರೂ. ವೆಚ್ಚದಲ್ಲಿ ಎರಡು ಜಂಕ್ಷನ್‌ಗಲ್ಲಿ ಸಿಗ್ನಲ್ ಅಳವಡಿಕೆ: ಉಡುಪಿ ಎಸ್ಪಿ

ಮಣಿಪಾಲ ಸಿಂಡಿಕೇಟ್ ಸರ್ಕಲ್ ಟ್ರಾಫಿಕ್ ಸಿಗ್ನಲ್ ಸಿಸ್ಟಮ್ ಪರಿಶೀಲನೆ

ವಾರ್ತಾ ಭಾರತಿ 2 Dec 2025 8:45 pm

ಸಂಸತ್ತಿನಲ್ಲಿ ಎಸ್‌ಐಆರ್ ಕುರಿತು ಚರ್ಚೆಗೆ ಸಿದ್ಧ: ಕೇಂದ್ರ ಸರ್ಕಾರ

► ಸಮಯ ಮಿತಿಯನ್ನು ವಿಧಿಸದಂತೆ ಷರತ್ತು► ರಾಜ್ಯಸಭೆಯಲ್ಲಿ ಪ್ರತಿಪಕ್ಷಗಳಿಂದ ಸಭಾತ್ಯಾಗ► ಪ್ರತಿಭಟನೆಗಳ ಬಳಿಕ ಲೋಕಸಭೆ ಮುಂದೂಡಿಕೆ

ವಾರ್ತಾ ಭಾರತಿ 2 Dec 2025 8:45 pm

ಸೆಬಿ ರಿಲಯನ್ಸ್ ಇಂಡಸ್ಟೀಸ್‌ ಗೆ 30 ಲಕ್ಷ ರೂ.ದಂಡ ವಿಧಿಸಿದ್ದನ್ನು ಎತ್ತಿ ಹಿಡಿದ ಸುಪ್ರೀಂ ಕೋರ್ಟ್

ಹೊಸದಿಲ್ಲಿ,ಡಿ.2: 2020ರಲ್ಲಿ ಫೇಸ್‌ ಬುಕ್‌ ನಿಂದ ಜಿಯೋ ಪ್ಲ್ಯಾಟ್‌ ಫಾರ್ಮ್‌ ಗಳಲ್ಲಿ ಹೂಡಿಕೆ ಕುರಿತು ಮಾಹಿತಿಯನ್ನು ತ್ವರಿತವಾಗಿ ಬಹಿರಂಗಗೊಳಿಸುವಲ್ಲಿ ವೈಫಲ್ಯಕ್ಕಾಗಿ ರಿಲಯನ್ಸ್ ಇಂಡಸ್ಟ್ರೀಸ್ ಲಿ. (ಆರ್‌ಐಎಲ್) ಮತ್ತು ಅದರ ಇಬ್ಬರು ಹಿರಿಯ ಅಧಿಕಾರಿಗಳಿಗೆ ಸೆಬಿ 30 ಲಕ್ಷ ರೂ.ಗಳ ದಂಡ ವಿಧಿಸಿದ್ದನ್ನು ಸರ್ವೋಚ್ಚ ನ್ಯಾಯಾಲಯವು ಮಂಗಳವಾರ ಎತ್ತಿ ಹಿಡಿದಿದೆ. ಮಾರುಕಟ್ಟೆಯ ಋಜುತ್ವವು ಪ್ರಮುಖ ಕಾರ್ಪೊರೇಟ್ ಸಂಸ್ಥೆಗಳಿಂದ ಪಾರದರ್ಶಕತೆಯನ್ನು ಬಯಸುತ್ತದೆ ಎಂದು ಅದು ಒತ್ತಿ ಹೇಳಿದೆ. ಮುಖ್ಯ ನ್ಯಾಯಾಧೀಶ ಸೂರ್ಯಕಾಂತ್ ಮತ್ತು ನ್ಯಾ.ಜಾಯಮಾಲ್ಯಾ ಬಾಗ್ಚಿ ಅವರ ಪೀಠವು ಸೆಕ್ಯೂರಿಟೀಸ್ ಮೇಲ್ಮನವಿ ನ್ಯಾಯಮಂಡಳಿಯ ಮೇ 2,2025ರ ಆದೇಶವನ್ನು ಪ್ರಶ್ನಿಸಿದ್ದ ರಿಲಯನ್ಸ್‌ನ ಅರ್ಜಿಯನ್ನು ವಜಾಗೊಳಿಸಿತು. ಆರ್‌ಐಎಲ್ ಮಾಹಿತಿ ಬಹಿರಂಗವನ್ನು ವಿಳಂಬಿಸಿದೆ ಎಂಬ ಸೆಬಿ ಪ್ರತಿಪಾದನೆಯನ್ನು ನ್ಯಾಯಮಂಡಳಿಯು ದೃಢಪಡಿಸಿತ್ತು. ಇಷ್ಟೊಂದು ದೊಡ್ಡ ಪ್ರಮಾಣದ ಒಪ್ಪಂದದ ಸುದ್ದಿಗಳು ಹೊರಹೊಮ್ಮಿದಾಗ ಅವು ಶೇರು ಬೆಲೆಗಳ ಮೇಲೆ ತೀವ್ರ ಪ್ರಭಾವವನ್ನು ಬೀರುವ ಸಾಮರ್ಥ್ಯವನ್ನು ಹೊಂದಿರುತ್ತವೆ. ಹೀಗಿರುವಾಗ ಸಂಬಂಧಿಸಿದ ಕಂಪನಿಯು ಮೌನವಾಗಿರಲು ಸಾಧ್ಯವಿಲ್ಲ ಎಂದು ಸರ್ವೋಚ್ಚ ನ್ಯಾಯಾಲಯವು ಹೇಳಿತು. ದೃಢಪಡಿಸದ ಮಾಧ್ಯಮ ವರದಿಗಳೂ ನಿಮ್ಮ ವ್ಯವಹಾರದ ಮೇಲೆ ಪರಿಣಾಮ ಬೀರಿದರೆ ಅಂತಹ ಮಾಹಿತಿಯನ್ನು ಬಹಿರಂಗಗೊಳಿಸಲು ನೀವು ಬದ್ಧರಾಗಿರುತ್ತೀರಿ ಎಂದು ವಿಚಾರಣೆ ವೇಳೆ ರಿಲಯನ್ಸ್ ಪರ ಹಿರಿಯ ವಕೀಲ ರಿತಿನ್ ರಾಯ್‌ ಗೆ ತಿಳಿಸಿದ ಪೀಠವು, ಇವು ನೈತಿಕ ಮೌಲ್ಯಗಳ ಅಂಶಗಳಾಗಿವೆ ಮತ್ತು ಇಂತಹ ವಿಷಯಗಳಲ್ಲಿ ಯಾವುದೇ ಉದಾರತೆ ಅಥವಾ ಸಡಿಲಿಕೆ ಇರಲು ಸಾಧ್ಯವಿಲ್ಲ. ನೀವು ದೊಡ್ಡ ಸಂಸ್ಥೆಯಾಗಿದ್ದರೆ ನಿಮ್ಮ ಹೊಣೆಗಾರಿಕೆಯೂ ದೊಡ್ಡದೇ ಆಗಿರುತ್ತದೆ. ನೀವು ಎಲ್ಲ ನಿಯಮಗಳನ್ನು ಎಚ್ಚರಿಕೆಯಿಂದ ಪಾಲಿಸಬೇಕು ಎಂದು ಹೇಳಿತು. ಫೇಸ್‌ಬುಕ್ ಜಿಯೋ ಪ್ಲ್ಯಾಟ್‌ಫಾರ್ಮ್‌ಗಳಲ್ಲಿ ಶೇ.10ರಷ್ಟು ಪಾಲು ಬಂಡವಾಳವನ್ನು ಸ್ವಾಧೀನಪಡಿಸಿಕೊಳ್ಳುವ ಹಂತದಲ್ಲಿದೆ ಎಂದು ಮಾ.24,2020ರ ಫೈನಾನ್ಶಿಯಲ್ ಟೈಮ್ಸ್‌ ನಲ್ಲಿ ಪ್ರಕಟಗೊಂಡಿದ್ದ ವರದಿಯ ಸುತ್ತಲಿನ ಸಂದರ್ಭಗಳನ್ನು ನ್ಯಾಯಾಲಯವು ಗಮನಕ್ಕೆ ತೆಗೆದುಕೊಂಡಿತು. ದೇಶೀಯ ಮಾಧ್ಯಮಗಳು ಕೆಲವೇ ಗಂಟೆಗಳಲ್ಲಿ ಈ ಬೆಳವಣಿಗೆಗೆ ಹೆಚ್ಚಿನ ಪ್ರಚಾರವನ್ನು ನೀಡಿದ್ದವು ಮತ್ತು ಇದು ರಿಲಯನ್ಸ್‌ ನ ಶೇರು ಬೆಲೆಗಳಲ್ಲಿ ಶೇ.15ರಷ್ಟು ಜಿಗಿತಕ್ಕೆ ಕಾರಣವಾಗಿತ್ತು. ಆದರೂ ಕಂಪನಿಯು 2020,ಎ.22ರವರೆಗೂ ಸುದ್ದಿಯನ್ನು ದೃಢಪಡಿಸಿ ಅಥವಾ ನಿರಾಕರಿಸಿ ಯಾವುದೇ ಹೇಳಿಕೆಯನ್ನು ನೀಡಿರಲಿಲ್ಲ. ಎ.22ರಂದು ಅಂತಿಮ ಒಪ್ಪಂದವನ್ನು ಕಾರ್ಯಗತಗೊಳಿಸಲಾಗಿತ್ತು ಮತ್ತು ಔಪಚಾರಿಕವಾಗಿ ಪ್ರಕಟಿಸಲಾಗಿತ್ತು.ಇದು ಶೇರುಗಳ ಬೆಲೆಗಳು ಮತ್ತೆ ತೀವ್ರವಾಗಿ ಹೆಚ್ಚಲು ಕಾರಣವಾಗಿತ್ತು. ಬೃಹತ್ ಹೂಡಿಕೆಯಾಗುತ್ತಿದೆ ಎಂಬ ಸುದ್ದಿ ಪ್ರಕಟವಾದ ತಕ್ಷಣ ಅದು ಮಾರುಕಟ್ಟೆಗಳ ಮೇಲೆ ಪರಿಣಾಮ ಬೀರುತ್ತದೆ ಎನ್ನುವುದು ಗೊತ್ತಾದಾಗ ನೀವು ಜನರಿಗೆ ತಿಳಿಸಬೇಕಾಗಿತ್ತಲ್ಲವೇ ಎಂದು ಪೀಠವು ಪ್ರಶ್ನಿಸಿತು. ಒಪ್ಪಂದವು ಇನ್ನೂ ಮಾತುಕತೆಗಳ ಹಂತದಲ್ಲಿತ್ತು,ಹೀಗಾಗಿ ಬಹಿರಂಗಪಡಿಸುವುದು ಅಗತ್ಯವಾಗಿರಲಿಲ್ಲ ಎಂಬ ರಾಯ್ ವಾದವನ್ನು ತಿರಸ್ಕರಿಸಿದ ಪೀಠವು,ಈ ಮಾಹಿತಿಯನ್ನೂ ನೀವು ನಿಡಬೇಕಿತ್ತು. ಮಾತುಕತೆಗಳು ಅಂತಿಮಗೊಂಡಿಲ್ಲ ಎಂದು ನೀವು ತಿಳಿಸಬಹುದಿತ್ತು. ನಿಮ್ಮ ಕಡೆಯಿಂದ ಅಧಿಕೃತವಾದ ಹೇಳಿಕೆಯು ಜನರಿಗೆ ವಿಷಯವನ್ನು ಅರ್ಥ ಮಾಡಿಕೊಳ್ಳಲು ನೆರವಾಗುತ್ತಿತ್ತು. ಮೌನವಾಗಿರಲು ನೀವು ಆಯ್ಕೆ ಮಾಡಿಕೊಂಡಿದ್ದೇ ಸ್ವತಃ ಒಂದು ಉಲ್ಲಂಘನೆಯಾಗಿದೆ ಎಂದು ಹೇಳಿತು.

ವಾರ್ತಾ ಭಾರತಿ 2 Dec 2025 8:44 pm

ಬೆಂಗಳೂರಿನಲ್ಲಿ ಸಂಗಾತಿ ಕೊಂದು ಆತ್ಮಹತ್ಯೆಗೆ ಶರಣಾದ ಖಾಸಗಿ ಕಂಪನಿ ಉದ್ಯೋಗಿ!

ರಾಜಗೋಪಾಲನಗರದಲ್ಲಿ ಸಹಜೀವನ ನಡೆಸುತ್ತಿದ್ದ ಸಂಗಾತಿ ಲಲಿತಾ (49) ಅವರನ್ನು ಕೊಲೆಗೈದು, ಲಕ್ಷ್ಮೀನಾರಾಯಣ (51) ತಾನೂ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಅನುಮಾನ ಮತ್ತು ಜಗಳದಿಂದಾಗಿ ಈ ಕೃತ್ಯ ಎಸಗಿರುವ ಶಂಕೆ ವ್ಯಕ್ತವಾಗಿದೆ. ಪೊಲೀಸರು ಹಲವು ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ.

ವಿಜಯ ಕರ್ನಾಟಕ 2 Dec 2025 8:42 pm

ಬೆಂಗಳೂರು ಏರ್​​ಪೋರ್ಟ್ | 70ಕ್ಕೂ ಹೆಚ್ಚು ವಿಮಾನಗಳ ಸಂಚಾರದಲ್ಲಿ ವ್ಯತ್ಯಯ; ಕಾರಣವೇನು?

ಬೆಂಗಳೂರು : ಸೋಮವಾರ ತಡರಾತ್ರಿಯಿಂದ ಈವರೆಗೆ ಕೆಂಪೇಗೌಡ ವಿಮಾನ ನಿಲ್ದಾಣದಿಂದ ಹಾರಾಟ ನಡೆಸಬೇಕಿದ್ದ 70ಕ್ಕೂ ಹೆಚ್ಚು ವಿಮಾನಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ. ಇಂದು(ಡಿ.3) ಕೆಲ ವಿಮಾನಗಳ ಹಾರಾಟದಲ್ಲಿ ವಿಳಂಬವಾಗುವ ಸಾಧ್ಯತೆ ಇದೆ. ವಿಮಾನಗಳ ಸಾಫ್ಟ್‌ ವೇರ್ ಸಂಬಂಧಿತ ತಾಂತ್ರಿಕ ಕಾರಣಗಳಿಂದಾಗಿ ಒಟ್ಟು 22 ವಿಮಾನಗಳ ಹಾರಾಟ ಈವರೆಗೆ ರದ್ದಾಗಿದ್ದು, 50ಕ್ಕೂ ಅಧಿಕ ವಿಮಾನಗಳ ಸಂಚಾರದಲ್ಲಿ ವಿಳಂಬವಾಗಿದೆ. ಕೊಲ್ಕತ್ತಾ, ದಿಲ್ಲಿ, ಮುಂಬೈ, ಡೆಹ್ರಾಡೂನ್, ವಾರಣಾಸಿ, ಅಹಮದಾಬಾದ್, ಪುಣೆ, ಚೆನೈ, ಭೂಪಾಲ್ ಸೇರಿದಂತೆ ಹಲವು ಪ್ರದೇಶಗಳಿಗೆ ತೆರಳಬೇಕಿದ್ದ ವಿಮಾನಗಳ ಹಾರಾಟದಲ್ಲಿ ವ್ಯತ್ಯಯ ಉಂಟಾಗಿದೆ ಎಂದು ಮೂಲಗಳು ತಿಳಿಸಿವೆ.

ವಾರ್ತಾ ಭಾರತಿ 2 Dec 2025 8:40 pm

ಗೂಗಲ್ ನ AI ಉದ್ಯಮದಲ್ಲಿ ಹೂಡಿಕೆ ಮಾಡಲಿರುವ ಅದಾನಿ ಸಂಸ್ಥೆ

SUMMERY ಅದಾನಿ ಎಂಟರ್ಪ್ರೈಸಸ್ ಮತ್ತು ಖಾಸಗಿ ಡಾಟಾ ಸೆಂಟರ್ ಆಪರೇಟರ್ ‘ಎಡ್ಜ್ಕನೆಕ್ಸ್’ನ ಜಂಟಿ ಉದ್ಯಮವಾಗಿರುವ ‘ಅದಾನಿ ಕನೆಕ್ಸ್’ ಸಂಸ್ಥೆ ಗೂಗಲ್ ಪ್ರೊಜೆಕ್ಟ್ನಲ್ಲಿ 5 ಬಿಲಿಯನ್ ಡಾಲರ್ ಹೂಡಿಕೆ ಮಾಡುವುದಾಗಿ ತಿಳಿಸಿದೆ ಕೃತಕ ಬುದ್ಧಿಮತ್ತೆ ಅಥವಾ AI ರಂಗದ ತನ್ನ ಉದ್ಯಮವನ್ನು ವಿಸ್ತರಿಸಲು ಭಾರತದ ಅದಾನಿ ಸಂಸ್ಥೆ ನಿರೀಕ್ಷಿಸುತ್ತಿದೆ. ಇದೀಗ ಗೂಗಲ್ ಡಾಟಾ ಕೇಂದ್ರಕ್ಕೆ 5 ಬಿಲಿಯನ್ ಡಾಲರ್ ಹೂಡಿಕೆ ಮಾಡುವುದಾಗಿ ಪ್ರಕಟಿಸಿದೆ. ಆಲ್ಫಾಬೆಟ್ ಮಾಲೀಕತ್ವದಲ್ಲಿರುವ ಗೂಗಲ್ ನ ಇಂಡಿಯಾ AI ಡೇಟಾ ಸೆಂಟರ್ ಯೋಜನೆಯಲ್ಲಿ ಹೂಡಿಕೆ ಮಾಡುವ ಉದ್ದೇಶವಿದೆ ಎಂದು ಅದಾನಿ ಸಮೂಹದ ಅಧಿಕಾರಿಗಳು ತಿಳಿಸಿದ್ದಾರೆ. ಕಳೆದ ಅಕ್ಟೋಬರ್ನಲ್ಲಿ ಗೂಗಲ್ ಭಾರತದ ದಕ್ಷಿಣದ ರಾಜ್ಯವಾದ ಆಂಧ್ರಪ್ರದೇಶದಲ್ಲಿ ಕೃತಕ ಬುದ್ಧಿಮತ್ತೆಯ ಡಾಟಾ ಕೇಂದ್ರವನ್ನು ಸ್ಥಾಪಿಸಲು ಐದು ವರ್ಷಗಳ ಅವಧಿಯಲ್ಲಿ 15 ಬಿಲಿಯನ್ ಡಾಲರ್ ಹೂಡಿಕೆ ಮಾಡುವುದಾಗಿ ತಿಳಿಸಿತ್ತು. AI ಹೂಡಿಕೆಗೆ ಅಗಾಧವಾದ ಕಂಪ್ಯೂಟಿಂಗ್ ಶಕ್ತಿಯ ಅಗತ್ಯವಿದೆ. ಸಾವಿರಾರು ಚಿಪ್ ಗಳನ್ನು ಕ್ಲಸ್ಟರ್ಗಳಲ್ಲಿ ಲಿಂಕ್ ಮಾಡಲು ಅವಕಾಶ ಕೊಡುವ ವಿಶೇಷ ಡೇಟಾ ಸೆಂಟರ್ ಗಳ ಬೇಡಿಕೆ ಬರುತ್ತದೆ. ಇದೀಗ ಅದಾನಿ ಎಂಟರ್ಪ್ರೈಸಸ್ ಮತ್ತು ಖಾಸಗಿ ಡಾಟಾ ಸೆಂಟರ್ ಆಪರೇಟರ್ ಎಡ್ಜ್ಕನೆಕ್ಸ್ನ ಜಂಟಿ ಉದ್ಯಮವಾಗಿರುವ ‘ಅದಾನಿ ಕನೆಕ್ಸ್’ ಸಂಸ್ಥೆ ಇದೇ ಗೂಗಲ್ ಪ್ರೊಜೆಕ್ಟ್ನಲ್ಲಿ 5 ಬಿಲಿಯನ್ ಡಾಲರ್ ಹೂಡಿಕೆ ಮಾಡಲು ಇಚ್ಛಿಸುತ್ತಿದೆ ಎಂದು ಅದಾನಿ ಸಮೂಹದ ಸಿಎಫ್ಒ ಜುಗೇಶಿಂದರ್ ಸಿಂಗ್ ಮಾಧ್ಯಮಗಳಿಗೆ ತಿಳಿಸಿದ್ದಾರೆ. “ಗೂಗಲ್ ಮಾತ್ರವಲ್ಲ, ನಮ್ಮ ಜೊತೆಗೆ ಕೆಲಸ ಮಾಡಲು ಇತರ ಸಂಸ್ಥೆಗಳೂ ಮುಂದೆ ಬಂದಿವೆ. ಮುಖ್ಯವಾಗಿ ಡಾಟಾ ಸೆಂಟರ್ ನ ಸಾಮರ್ಥ್ಯವು ಗಿಗಾವಾಟ್ ಮತ್ತು ಇನ್ನಷ್ಟು ಹೆಚ್ಚಾದಾಗ ಇತರ ಕಂಪನಿಗಳೊಂದಿಗೆ ಸಹಯೋಗ ನಡೆಯಬಹುದು” ಎಂದು ಅವರು ತಿಳಿಸಿದ್ದಾರೆ. AI ಸೇವೆಗಳ ಬೇಡಿಕೆ ಹೆಚ್ಚಾಗುತ್ತಿರುವ ಸಂದರ್ಭದಲ್ಲಿ ಟೆಕ್ ಕಂಪನಿಗಳು ಭಾರೀ ಹೂಡಿಕೆ ಮಾಡುತ್ತಿರುವಾಗ ಈ ವರ್ಷ ಸುಮಾರು 85 ಬಿಲಿಯನ್ ಡಾಲರ್ ಅನ್ನು ತನ್ನ ಡೇಟಾ ಸೆಂಟರ್ ಸಾಮರ್ಥ್ಯವನ್ನು ಏರಿಸಲೆಂದೇ ವ್ಯಯಿಸಲು ಗೂಗಲ್ ನಿರ್ಧರಿಸಿದೆ. ಭಾರತದ ಉದ್ಯಮಿಗಳಾದ ಗೌತಮ್ ಅದಾನಿ ಮತ್ತು ಮುಖೇಶ್ ಅಂಬಾನಿ ಕೂಡ ಡೇಟಾ ಸೆಂಟರ್ ಸಾಮರ್ಥ್ಯವನ್ನು ನಿರ್ಮಿಸಲು ಹೂಡಿಕೆ ಮಾಡಲು ನಿರ್ಧರಿಸಿರುವುದನ್ನು ತಿಳಿಸಿದ್ದಾರೆ.

ವಾರ್ತಾ ಭಾರತಿ 2 Dec 2025 8:29 pm

ಮಂಗಳೂರು | ಗಾಂಜಾ, ಎಂಡಿಎಂಎ ಮಾರಾಟಕ್ಕೆ ಯತ್ನ: ಇಬ್ಬರು ಆರೋಪಿಗಳ ಬಂಧನ

ಮಂಗಳೂರು: ನಗರದ ಬಂಗ್ರ-ಕೂಳೂರು ಫಾಲ್ಗುಣಿ ನದಿಯ ಬಳಿ ಮಂಗಳವಾರ ಬೆಳಗ್ಗೆ ಗಾಂಜಾ ಮತ್ತು ಎಂಡಿಎಂಎ ಮಾರಾಟ ಯತ್ನಿಸುತ್ತಿದ್ದ ಇಬ್ಬರನ್ನು ಕಾವೂರು ಪೊಲೀಸರು ಬಂಧಿಸಿದ್ದಾರೆ. ತುಮಕೂರಿನ ಶಾಫಿ ಅಹ್ಮದ್ (40) ಮತ್ತು ಮುಹಮ್ಮದ್ ಸಮೀರ್ (20) ಬಂಧಿತ ಆರೋಪಿಗಳಾಗಿದ್ದಾರೆ. ಆರೋಪಿಗಳಿಂದ 70 ಸಾವಿರ ರೂ. ಮೌಲ್ಯದ 12 ಗ್ರಾಂ ಎಂಡಿಎಂ, 10 ಸಾವಿರ ರೂ. ಮೌಲ್ಯದ 275 ಗ್ರಾಂ ಗಾಂಜಾ ಮತ್ತು 2 ಮೊಬೈಲ್ ಪೋನ್ ವಶಪಡಿಸಲಾಗಿದೆ. ಆರೋಪಿಗಳು ಗಾಂಜಾ ಮತ್ತು ಎಂಡಿಎಂಎಯನ್ನು ಬೆಂಗಳೂರಿನಿಂದ ಖರೀದಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಮಂಗಳೂರು ಉತ್ತರ ವಲಯ ಎಸಿಪಿ ಶ್ರೀಕಾಂತ್ ಕೆ. ಕಾವೂರು ಠಾಣೆಯ ಪೊಲೀಸ್ ಇನ್‌ಸ್ಪೆಕ್ಟರ್ ರಾಘವೇಂದ್ರ ಬೈಂದೂರ್, ಎಸ್ಸೈ ಮಲ್ಲಿಕಾರ್ಜುನ್, ಎಎಸ್ಸೈ ಚಂದ್ರಶೇಖರ್, ಸಿಬ್ಬಂದಿಗಳಾದ ರೆಜಿ ಎಂ, ಹಾಲೇಶ್ ನಾಯ್ಕ್, ರಿಯಾಝ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಆರೋಪಿ ಶಾಫಿ ಅಹ್ಮದ್ ವಿರುದ್ಧ 9 ಪ್ರಕರಣಗಳು ದಾಖಲಾಗಿದೆ. ಹಲವು ಪ್ರಕರಣಗಳಲ್ಲಿ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ. ಮುಹಮ್ಮದ್ ಸಮೀರ್ ವಿರುದ್ಧ 1 ಪ್ರಕರಣ ದಾಖಲಾಗಿದೆ.

ವಾರ್ತಾ ಭಾರತಿ 2 Dec 2025 8:24 pm

Belagavi | ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ ಪ್ರಕರಣ: ಇಬ್ಬರು ಆರೋಪಿಗಳ ಬಂಧನ

ಬೆಳಗಾವಿ : ಜಿಲ್ಲೆಯ ಮುರಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 7ನೇ ತರಗತಿಯಲ್ಲಿ ಓದುತ್ತಿರುವ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಮಣಿಕಂಠ ದಿನ್ನಿಮನಿ (28) ಮತ್ತು ಈರಣ್ಣ ಸಂಕಮ್ಮನವರ್ (28) ಎಂದು ಗುರುತಿಸಲಾಗಿದೆ. ನವೆಂಬರ್ 23 ರಂದು ಘಟನೆಯು ನಡೆದಿದ್ದು, ಮನೆಯ ಸಮೀಪದ ಹಿಟ್ಟಿನ ಗಿರಣಿಗೆ ತೆರಳಿದ್ದ ಬಾಲಕಿಯನ್ನು ಇಬ್ಬರು ಆರೋಪಿಗಳು ಕಬ್ಬಿನ ಗದ್ದೆಗೆ ಎಳೆದೊಯ್ದು ಅತ್ಯಾಚಾರ ಎಸಗಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.   ಆರೋಪಿಗಳು ಜೀವ ಬೆದರಿಕೆ ಹಾಕಿದ್ದರಿಂದ ಬಾಲಕಿ ಹಾಗೂ ಕುಟುಂಬ ಸದಸ್ಯರು ದೂರು ನೀಡಲು ಹಿಂಜರಿದಿದ್ದು, ಡಿಸೆಂಬರ್ 1ರಂದು ದೂರು ದಾಖಲಾಗಿದೆ. ಇದರ ಆಧಾರದಲ್ಲಿ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಭೀಮಾಶಂಕರ ಗುಳೇದ ಮಾಹಿತಿ ನೀಡಿದ್ದು, ʼದೂರು ಸ್ವೀಕರಿಸಿದ ತಕ್ಷಣ ಇಬ್ಬರು ಆರೋಪಿಗಳನ್ನು ಬಂಧಿಸಿ ಮುಂದಿನ ತನಿಖೆ ಕೈಗೊಳ್ಳಲಾಗಿದೆ. ಪೊಲೀಸರು ಘಟನೆಯ ಬಗ್ಗೆ ಹೆಚ್ಚಿನ ಮಾಹಿತಿ ಸಂಗ್ರಹಿಸುತ್ತಿದ್ದು, ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ಮುಂದುವರಿಸಲಾಗಿದʼ ಎಂದು ಹೇಳಿದರು.

ವಾರ್ತಾ ಭಾರತಿ 2 Dec 2025 8:17 pm

ವಾಟ್ಸ್ಆ್ಯಪ್ ಬಳಸಬೇಕಾದರೆ ಮೊಬೈಲ್ ನಲ್ಲಿ ಸಿಮ್ ಸಕ್ರಿಯವಾಗಿರಬೇಕು!

ದೂರ ಸಂಪರ್ಕ ಸೈಬರ್ ಸುರಕ್ಷತಾ ತಿದ್ದುಪಡಿ 2025 ಅಡಿಯಲ್ಲಿ ಮೊತ್ತ ಮೊದಲ ಬಾರಿಗೆ ಆ್ಯಪ್ ಆಧಾರಿತ ಸಂವಹನ ಸೇವೆಗಳನ್ನು ಟೆಲಿಕಾಂ-ಶೈಲಿಯ ನಿಯಂತ್ರಣಗಳಿಗೆ ತರಲಾಗಿದೆ. ಹೀಗಾಗಿ ಇನ್ನು ಮುಂದೆ ಆ್ಯಪ್ ಆಧಾರಿತ ಸಂವಹನ ಸೇವೆಗಳನ್ನು ಸಕ್ರಿಯ ಸಿಮ್ ಇಲ್ಲದೆ ಬಳಸಲು ಸಾಧ್ಯವಿಲ್ಲ. ಭಾರತ ಸರ್ಕಾರ ಇದೀಗ ಸೈಬರ್ ಸುರಕ್ಷತೆಗಾಗಿ ಡಿಜಿಟಲ್ ಬಳಕೆದಾರರಿಗೆ ಮತ್ತೊಂದು ಏಟು ನೀಡಿದೆ. ವಾಟ್ಸ್ಆ್ಯಪ್, ಟೆಲಿಗ್ರಾಂ ಸೇರಿದಂತೆ ಅನೇಕ ಸಾಮಾಜಿಕ ಜಾಲ ತಾಣಗಳನ್ನು ಸಿಮ್ ಸಕ್ರಿಯವಾಗಿದ್ದರೆ ಮಾತ್ರ ಬಳಸಬಹುದು ಎನ್ನುವ ನೀತಿಯನ್ನು ದೂರ ಸಂಪರ್ಕ ಸೈಬರ್ ಸುರಕ್ಷತಾ ತಿದ್ದುಪಡಿ 2025ರ ಅಡಿಯಲ್ಲಿ ತರಲು ಸಿದ್ಧತೆ ನಡೆದಿದೆ. ಹೀಗಾಗಿ ಇನ್ನುಮುಂದೆ ಒಂದೇ ಸಿಮ್ ನಲ್ಲಿ ಹಲವು ಖಾತೆಗಳನ್ನು ಬಳಸುತ್ತಿರುವವರಿಗೆ ಏಟು ಬೀಳಲಿದೆ. ► ಸಿಮ್ ಲಿಂಕ್ ಕಡ್ಡಾಯ ಇನ್ನು ಮುಂದೆ ವಾಟ್ಸ್ಆ್ಯಪ್ ಖಾತೆ ಸಕ್ರಿಯ ಸಿಮ್ ಜೊತೆಗೆ ಲಿಂಕ್ ಆಗಿರಲೇಬೇಕು. ವಾಟ್ಸ್ಆ್ಯಪ್ ಮಾತ್ರವಲ್ಲದೆ, ಟೆಲಿಗ್ರಾಂ, ಸಿಗ್ನಲ್, ಸ್ನ್ಯಾಪ್ ಚಾಟ್, ಜಿಯೋಚಾಟ್, ಅರಟ್ಟೈ ಮತ್ತು ಜೋಶ್ ಗಳಿಗೂ ಈ ಹೊಸ ಬದಲಾವಣೆಗಳನ್ನು ಜಾರಿಗೆ ತರಲು 90 ದಿನಗಳ ಅವಕಾಶ ನೀಡಲಾಗಿದೆ. ದೂರ ಸಂಪರ್ಕ ಸೈಬರ್ ಸುರಕ್ಷತಾ ತಿದ್ದುಪಡಿ 2025 ಅಡಿಯಲ್ಲಿ ಮೊತ್ತ ಮೊದಲ ಬಾರಿಗೆ ಆ್ಯಪ್ ಆಧಾರಿತ ಸಂವಹನ ಸೇವೆಗಳನ್ನು ಟೆಲಿಕಾಂ-ಶೈಲಿಯ ನಿಯಂತ್ರಣಗಳಿಗೆ ತರಲಾಗಿದೆ. 90 ದಿನಗಳ ಒಳಗೆ ಎಲ್ಲಾ ಆ್ಯಪ್ ಆಧಾರಿತ ಸೇವೆಗಳನ್ನು ಸಕ್ರಿಯ ಸಿಮ್ ಜೊತೆಗೆ ಲಿಂಕ್ ಮಾಡಬೇಕಿದೆ. ಸಿಮ್ ತೆಗೆದರೆ ಅಥವಾ ನಿಷ್ಕ್ರಿಯಗೊಳಿಸಿದರೆ ಆರು ಗಂಟೆಗಳ ಒಳಗೆ ಅಪ್ಲಿಕೇಶನ್ ಲಾಗೌಟ್ ಆಗಲಿದೆ. ವೆಬ್ ಮೂಲಕ ಬಳಸುವ ಅಪ್ಲಿಕೇಶನ್ ಗಳು, ಅಂದರೆ ವೆಬ್ ವಾಟ್ಸ್ಆ್ಯಪ್ ನಂತಹ ಫೀಚರ್ ಗಳು ಪ್ರತಿ 6 ಗಂಟೆಗಳಿಗೊಮ್ಮೆ ಲಾಗೌಟ್ ಆಗಲಿವೆ. ಅದನ್ನು ಮರಳಿ ಕ್ಯುಆರ್ ಕೋಡ್ ಸ್ಕ್ಯಾನ್ ಮಾಡಿ ಸಕ್ರಿಯಗೊಳಿಸಬೇಕಾಗುತ್ತದೆ. ► ಸೈಬರ್ ಭದ್ರತೆಗೆ ಹೊಸ ನೀತಿ ದೂರಸಂಪರ್ಕ ಇಲಾಖೆಯ ಪ್ರಕಾರ, ಆ್ಯಪ್ ಆಧಾರಿತ ಸಂವಹನ ಸೇವೆಗಳನ್ನು ನೀಡುವ ಸಂಸ್ಥೆಗಳು ತಮ್ಮ ಬಳಕೆದಾರರನ್ನು ಪರಿಶೀಲಿಸುವಲ್ಲಿನ ಲೋಪದೋಷವನ್ನು ಪರಿಹರಿಸುವ ಉದ್ದೇಶದಿಂದ ಹೊಸ ನಿಯಂತ್ರಣವನ್ನು ತರಲಾಗಿದೆ. ಇದೀಗ ಬಹುತೇಕ ಆ್ಯಪ್ ಆಧಾರಿತ ಸಂವಹನ ಸೇವೆಗಳಲ್ಲಿ ಒಂದು ಬಾರಿ ಮೊಬೈಲ್ ಸಂಖ್ಯೆಯ ಜೊತೆಗೆ ಲಾಗಿನ್ ಮಾಡಿದ ನಂತರ ಸಿಮ್ ತೆಗೆದಲ್ಲಿ ಅಥವಾ ನಿಷ್ಕ್ರಿಯಗೊಂಡ ನಂತರವೂ ಅಪ್ಲಿಕೇಶನ್ ಕಾರ್ಯನಿರ್ವಹಿಸುತ್ತದೆ. ಬಳಕೆದಾರರ ಆ್ಯಪ್ ಆಧಾರಿತ ಸಂವಹನ ಸೇವೆಗಳು ಮತ್ತು ಸಿಮ್ ಕಾರ್ಡ್ ನಡುವೆ ಒಂದು ಬಾರಿ ಲಿಂಕ್ ಆದ ಮೇಲೆ ಆ್ಯಪ್ ಸ್ವತಂತ್ರವಾಗಿ ಕಾರ್ಯನಿರ್ವಹಿಸುತ್ತಿದೆ. ಬಳಕೆದಾರರ ಆ್ಯಪ್ ಆಧಾರಿತ ಸಂವಹನ ಸೇವೆಗಳು ಮತ್ತು ಸಿಮ್ ಕಾರ್ಡ್ ನಡುವೆ ಒಂದು ಬಾರಿ ಲಿಂಕ್ ಆದ ಮೇಲೆ ಆ್ಯಪ್ ಸ್ವತಂತ್ರವಾಗಿ ಕಾರ್ಯನಿರ್ವಹಿಸುತ್ತಿದೆ. ಇದರಿಂದಾಗಿ ದುರ್ಬಳಕೆಗೆ ಮೂಲವಾಗುತ್ತಿದೆ ಎಂದು ಆರೋಪಿಸಿವೆ. ► ಸಿಮ್ ಸಕ್ರಿಯವಾಗಿಡುವ ಹೊರೆ! ಬಹುತೇಕ ವಿದ್ಯಾರ್ಥಿಗಳು ಮತ್ತು ಕಡಿಮೆ ಆದಾಯ ಹೊಂದಿರುವವರು ಒಂದು ಬಾರಿ ಸಿಮ್ ಕಾರ್ಡ್ ತೆಗೆದುಕೊಂಡು ನಂತರ ಸಿಮ್ ಸಕ್ರಿಯವಾಗಿಡದೆ ಅಪ್ಲಿಕೇಶನ್ ಗಳನ್ನು ಬಳಸುವುದನ್ನು ಮುಂದುವರಿಸುತ್ತಿದ್ದರು. ಅಂತಹ ಬಳಕೆದಾರರಿಗೆ ಸಿಮ್ ಸಕ್ರಿಯವಾಗಿಡಲು ಹೆಚ್ಚುವರಿ ಹಣ ತೆರುವ ಹೊರೆ ಬೀಳಲಿದೆ. ► ಅಕ್ರಮಗಳನ್ನು ತಪ್ಪಿಸಬಹುದು ತಂತ್ರಜ್ಞಾನ ಕ್ಷೇತ್ರದಲ್ಲಿ ಪರಿಣತರ ಪ್ರಕಾರ, “ಸಕ್ರಿಯ ಸಿಮ್ ಇಲ್ಲದೆ ಬಳಕೆಗೆ ಅವಕಾಶ ನೀಡಿದರೆ ದುರ್ಬಳಕೆ ಮಾಡುವ ಸಾಧ್ಯತೆ ಹೆಚ್ಚಿದೆ. ಸಕ್ರಿಯ ಸಿಮ್ ಇದ್ದರೆ ಅಕ್ರಮಗಳು ನಡೆದರೆ ಪತ್ತೆ ಮಾಡುವುದು ಸುಲಭವಾಗಲಿದೆ. ಸಿಮ್ ಗಳನ್ನು ಆಧಾರ್ ಲಿಂಕ್ ಮಾಡಿರುವ ಕಾರಣದಿಂದ ಕ್ಲೋನ್ ಮಾಡುವ ಸಮಸ್ಯೆ ಇರದು. ಒಂದೇ ನಂಬರ್ 4-5 ಕಡೆಗೆ ಅಪ್ಲಿಕೇಶನ್ ಗಳಲ್ಲಿ ಬಳಕೆಯಾಗುವುದು ತಪ್ಪುತ್ತದೆ. ಚುನಾವಣೆಗಳಂತಹ ಸಂದರ್ಭಗಳಲ್ಲಿ ವಂಚನೆಗೆ ಅವಕಾಶವಿರುವುದಿಲ್ಲ.”

ವಾರ್ತಾ ಭಾರತಿ 2 Dec 2025 8:17 pm

ಯಕ್ಷಗಾನ ಪರಿಪೂರ್ಣ ಕಲಾಪ್ರಕಾರ: ಪ್ರಮೋದ್ ಮಧ್ವರಾಜ್

ಬ್ರಹ್ಮಾವರದಲ್ಲಿ ಕಿಶೋರ ಯಕ್ಷ ಸಂಭ್ರಮ ಸಮಾರೋಪ

ವಾರ್ತಾ ಭಾರತಿ 2 Dec 2025 8:12 pm

ರಾಜ್ಯ ಮಹಿಳಾ ಸರಕಾರಿ ನೌಕರರಿಗೆ ಋತುಚಕ್ರ ರಜೆ ಮಂಜೂರು : ಸರಕಾರ ಆದೇಶ

ಬೆಂಗಳೂರು : ರಾಜ್ಯ ಮಹಿಳಾ ಸರಕಾರಿ ನೌಕರರ ಮನೋಸ್ಥೈರ್ಯವನ್ನು ಹೆಚ್ಚಿಸುವ ಉದ್ದೇಶದಿಂದ ಪ್ರತಿ ತಿಂಗಳು ಒಂದು ದಿನದ ಋತುಚಕ್ರ ರಜೆಯ ಸೌಲಭ್ಯವನ್ನು ರಾಜ್ಯದ ಮಹಿಳಾ ಸರಕಾರಿ ನೌಕರರಿಗೂ ಕಲ್ಪಿಸಲು ತೀರ್ಮಾನಿಸಿ ತಕ್ಷಣದಿಂದಲೆ ಜಾರಿಗೆ ಬರುವಂತೆ ಸರಕಾರ ಮಂಗಳವಾರ ಆದೇಶ ಹೊರಡಿಸಿದೆ. 18-52 ವಯಸ್ಸಿನ ಮಹಿಳಾ ಸರಕಾರಿ ನೌಕರರು ಈ ರಜೆಯನ್ನು ಪಡೆಯಲು ಅರ್ಹರಿರುತ್ತಾರೆ. ಸಾಂದರ್ಭಿಕ ರಜೆಯನ್ನು ಮಂಜೂರು ಮಾಡಲು ಸಕ್ಷಮವಾದ ಪ್ರಾಧಿಕಾರಿಯು ಋತುಚಕ್ರ ರಜೆಯನ್ನು ಮಂಜೂರು ಮಾಡಬಹುದು. ಈ ರಜೆಯನ್ನು ಪಡೆಯಲು ಯಾವುದೆ ವೈದ್ಯಕೀಯ ಪ್ರಮಾಣ ಪತ್ರವನ್ನು ಒದಗಿಸುವ ಅಗತ್ಯವಿಲ್ಲ. ಈ ರಜೆಯನ್ನು ರಜೆ ಅಥವಾ ಹಾಜರಾತಿ ಪುಸ್ತಕದಲ್ಲಿ ಪ್ರತ್ಯೇಕವಾಗಿ ನಮೂದಿಸಬೇಕು ಹಾಗೂ ಋತುಚಕ್ರ ರಜೆಯನ್ನು ಬೇರೆ ಯಾವುದೆ ರಜೆಯೊಂದಿಗೆ ಸಂಯೋಜಿಸುವಂತಿಲ್ಲ ಎಂದು ರಾಜ್ಯ ಸರಕಾರದ ಆರ್ಥಿಕ ಇಲಾಖೆಯ ಅಧೀನ ಕಾರ್ಯದರ್ಶಿ ಆದೇಶ ಹೊರಡಿಸಿದ್ದಾರೆ. ರಾಜ್ಯದ ವಿವಿಧ ಕಾರ್ಮಿಕ ಕಾಯ್ದೆಗಳಡಿ ನೋಂದಣಿಯಾಗಿರುವ ಎಲ್ಲ ಕೈಗಾರಿಕೆಗಳು ಹಾಗೂ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ 18 ರಿಂದ 52 ವರ್ಷದ ವಯೋಮಿತಿಯ ಎಲ್ಲ ಖಾಯಂ, ಗುತ್ತಿಗೆ, ಹೊರಗುತ್ತಿಗೆ ಮಹಿಳಾ ನೌಕರರಿಗೆ ಋತುಚಕ್ರದ ಸಮಯದಲ್ಲಿ ಪ್ರತಿ ತಿಂಗಳು ಒಂದು ದಿನದಂತೆ ವಾರ್ಷಿಕ 12 ದಿನಗಳ ವೇತನ ಸಹಿತ ರಜೆಯ ಸೌಲಭ್ಯ ಅನ್ವಯವಾಗಲಿದೆ.

ವಾರ್ತಾ ಭಾರತಿ 2 Dec 2025 8:09 pm

ಕಲಬುರಗಿ| 76ನೇ ಸಂವಿಧಾನ ಸಮರ್ಪಣಾ ದಿನಾಚರಣೆ: ಸಾಧಕರಿಗೆ ಸನ್ಮಾನ ಕಾರ್ಯಕ್ರಮ

ಕಲಬುರಗಿ: ನಗರದ ಡಾ.ಎಸ್.ಎಂ.ಪoಡಿತ್ ರಂಗ ಮಂದಿರದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ, ಅರೆ ಸರ್ಕಾರಿ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ನೌಕರರ ಸಂಘ, ರಾಜ್ಯ ಘಟಕ, ಜಿಲ್ಲಾ ಘಟಕದಿಂದ 76ನೇ ಸಂವಿಧಾನ ಸಮರ್ಪಣಾ ದಿನಾಚರಣೆ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸಕರಾಗಿ ಮಾತನಾಡಿದ ರಮೇಶ್ ಮಾಡ್ಯಾಳಕರ್ ಅವರು, ಸಂವಿಧಾನದ ಬಗ್ಗೆ ಪ್ರತಿಯೊಬ್ಬರಿಗೂ ಜಾಗೃತಿ ಮೂಡಿಸುವುದು ನಮ್ಮ ಕರ್ತವ್ಯವಾಗಿದೆ, ಸಂವಿಧಾನ ಓದಬೇಕು ಅದನ್ನು ಅರ್ಥಮಾಡಿಕೊಳ್ಳಬೇಕು ಎಂದು ಹೇಳಿದರು.   ಶಿಕ್ಷಣದಿಂದಲೇ ಎಲ್ಲಾ ಸಾಧ್ಯ. ಶಿಕ್ಷಣ, ಸಂಘಟನೆ ಮತ್ತು ಹೋರಾಟದಿಂದ ಅನ್ಯಾಯಗಳನ್ನು ಎದುರಿಸಬೇಕು, ಓದಿ ತಿಳಿದುಕೊಂಡಿದ್ದರೆ ಸಾಕಾಗದು. ನಮ್ಮ ಸಮಾಜವನ್ನು ಪರಿವರ್ತನೆ ಮಾಡಬೇಕು ಎಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಸಂಘಟನೆಯ ರಾಜ್ಯಾಧ್ಯಕ್ಷ ಮಹೇಶ್ ಮಾತನಾಡಿ, ಪ್ರತಿಯೊಬ್ಬರಲ್ಲಿ ಸಂವಿಧಾನದ ಜಾಗೃತಿಯನ್ನು ಮೂಡಿಸಬೇಕು. ಸಾಧಾರಣ ವ್ಯಕ್ತಿಗೂ ಸಂವಿಧಾನ ಏನು ಎಂಬುದು ಅರ್ಥವಾಗಬೇಕು. ಹಕ್ಕುಗಳು ಮತ್ತು ಕರ್ತವ್ಯಗಳ ಬಗ್ಗೆ ತಿಳಿದುಕೊಳ್ಳಬೇಕು. ಆಗಲೇ ನಮ್ಮ ಸಮಾಜ ಸುಧಾರಣೆಯಾಗಲು ಸಾಧ್ಯವಾಗುತ್ತದೆ ಎಂದರು. ಈ ವೇಳೆ ಮಲ್ಲಿಕಾರ್ಜುನ್ ಹಲಗೇರಾ, ಡಾ. ಅಂಬಾರಾಯ ರುದ್ರವಾಡಿ, ಡಾ.ಶರಣಬಸಪ್ಪ ಖ್ಯಾತನಾಳ, ಸ್ವಾತಿ ದರ್ಗಿ, ವಿದ್ಯಾಧರ್ ಕಾಂಬಳೆ, ವಿಠ್ಠಲ್ ಗೋಳಾ, ಡಾ. ರುದ್ರವಾಡಿ, ಡಾ. ಶರಣಬಸಪ್ಪ ಖ್ಯಾತನಾಳ, ರವಿಕಾಂತಿ, ದೇವಮ್ಮ ಹುಲಿಮನಿ, ಸಂಜಯ ಕಪೂರ, ಡಾ.ಚಂದ್ರಕಾoತ ನರಿಬೋಳ, ಡಾ.ರಾಕೇಶ್‌ ಕಾಂಬಳೆ, ವಿದ್ಯಾಧರ ಕಾಂಬಳೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.   ಈ ವೇಳೆ ಡಾ.ಮಾರುತಿ ಬೇಂದ್ರೆ ನಿರೂಪಿಸಿದರು. ಕಾಶಿನಾಥ್ ಮುಖರ್ಜಿ ಸ್ವಾಗತಿಸಿದರು. ಗಜೇಂದ್ರ ಮಿಂಚಾ ಪ್ರಾರ್ಥಿಸಿದರು. ಸುಭಾಷ ಆರ್. ವಂದಿಸಿದರು.

ವಾರ್ತಾ ಭಾರತಿ 2 Dec 2025 8:06 pm

ರಾಜಕೀಯ ಬಿಟ್ಟು ರಾಜ್ಯದ ಆಡಳಿತದ ಕಡೆ ಗಮನ ಕೊಡಿ : ವಿಜಯೇಂದ್ರ

ಬೆಂಗಳೂರು : ‘ನಿಮ್ಮ ಸ್ವಾರ್ಥ ರಾಜಕೀಯದ ಪರಿಸ್ಥಿತಿ ಉತ್ತಮಗೊಳಿಸಲು, ನೀವುಗಳು ನಡೆಸುತ್ತಿರುವ ಉಪಹಾರ ಕೂಟಗಳನ್ನು ಬದಿಗಿಟ್ಟು, ರಾಜ್ಯದ ಹದಗೆಟ್ಟಿರುವ ಮೂಲಸೌಕರ್ಯಗಳತ್ತ ಗಮನಹರಿಸಿ. ರಾಜಕೀಯ ಬಿಟ್ಟು ರಾಜ್ಯದ ಆಡಳಿತದ ಕಡೆ ಗಮನ ಕೊಡಿ’ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆಗ್ರಹಿಸಿದ್ದಾರೆ. ಮಂಗಳವಾರ ಎಕ್ಸ್‌ ನಲ್ಲಿ ಪೋಸ್ಟ್ ಹಾಕಿರುವ ಅವರು, ‘ಜನರನ್ನು ಬಲಿ ತೆಗೆದುಕೊಳ್ಳುತ್ತಿರುವ ರಸ್ತೆ ಗುಂಡಿಗಳು. ಕಾಂಗ್ರೆಸ್ ಸರಕಾರದ ದುರಾಡಳಿತ, ಶೂನ್ಯ-ಅಭಿವೃದ್ಧಿಗೆ ರಾಜ್ಯದ ರಸ್ತೆಗಳೇ ಕನ್ನಡಿ ಹಿಡಿಯುತ್ತಿವೆ’ ಎಂದು ಗಮನ ಸೆಳೆದಿದ್ದಾರೆ. ‘ಬಲಿ ಪೀಠದಂತಾಗಿರುವ ರಸ್ತೆಗುಂಡಿಗಳು ಅಮಾಯಕ ನಾಗರಿಕರ ಜೀವಕ್ಕೆ ಸಂಚಕಾರ ಒಡ್ಡಿ, ನೂರಾರು ಜನರ ಪ್ರಾಣವನ್ನೇ ಆಹುತಿ ತೆಗೆದುಕೊಂಡಿದೆ. ಇದಕ್ಕೆ ಈ ಭ್ರಷ್ಟ ಕಾಂಗ್ರೆಸ್ ಸರಕಾರದ ದುರಾಡಳಿತವೇ ನೇರ ಕಾರಣ. ಅಭಿವೃದ್ಧಿಯ ಮಾತಿರಲಿ, ಕೇವಲ 11 ತಿಂಗಳಲ್ಲಿ, 5 ನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ಬಲಿಯಾದವರ ಸಂಖ್ಯೆ 558. ಇದೇ ಈ ಕಾಂಗ್ರೆಸ್ ಸರಕಾರದ ಸಾಧನೆ. ಅಮಾಯಕ ನಾಗರಿಕರ ಪ್ರಾಣಹಾನಿಗೆ ಉತ್ತರದಾಯಿ ಯಾರು ಮುಖ್ಯಮಂತ್ರಿಗಳೇ? ಜನರ ಪ್ರಾಣಕ್ಕೆ ಕುತ್ತು ತರುತ್ತಿರುವ ರಸ್ತೆಗಳನ್ನು ಸರಿಪಡಿಸಲಾಗದ ಈ ಕಾಂಗ್ರೆಸ್ ಸರಕಾರಕ್ಕೆ ಜನರೇ ಛೀಮಾರಿ ಹಾಕುತ್ತಿದ್ದಾರೆ ಎಂದು ಅವರು ದೂರಿದ್ದಾರೆ. ಜನರನ್ನು ಬಲಿ ತೆಗೆದುಕೊಳ್ಳುತ್ತಿರುವ ರಸ್ತೆ ಗುಂಡಿಗಳು! ಕಾಂಗ್ರೆಸ್ ಸರ್ಕಾರದ ದುರಾಡಳಿತ, ಶೂನ್ಯ-ಅಭಿವೃದ್ಧಿಗೆ ರಾಜ್ಯದ ರಸ್ತೆಗಳೇ ಕನ್ನಡಿ ಹಿಡಿಯುತ್ತಿವೆ. ಬಲಿ ಪೀಠದಂತಾಗಿರುವ ರಸ್ತೆಗುಂಡಿಗಳು ಅಮಾಯಕ ನಾಗರಿಕರ ಜೀವಕ್ಕೆ ಸಂಚಕಾರ ಒಡ್ಡಿ, ನೂರಾರು ಜನರ ಪ್ರಾಣವನ್ನೇ ಆಹುತಿ ತೆಗೆದುಕೊಂಡಿದೆ. ಇದಕ್ಕೆ ಈ ಭ್ರಷ್ಟ @INCKarnataka ಸರ್ಕಾರದ… pic.twitter.com/0Xbaw3Cfey — Vijayendra Yediyurappa (@BYVijayendra) December 2, 2025

ವಾರ್ತಾ ಭಾರತಿ 2 Dec 2025 7:55 pm

ಹೊಸ ಮೊಬೈಲ್‌ಗಳಲ್ಲಿ Sanchar Saathi App ಕಡ್ಡಾಯ: ಸರ್ಕಾರದ ಹೊಸ ನಿರ್ದೇಶನ.

ಹೊಸ ಮೊಬೈಲ್‌ಗಳಲ್ಲಿ ಈಗಿನಿಂದ Sanchar Saathi ಆ್ಯಪ್ ಕಡ್ಡಾಯ — ಇದು ಭಾರತ ಸರ್ಕಾರ ಹೊರಡಿಸಿರುವ ಹೊಸ ಸುರಕ್ಷತಾ ಸೂಚನೆ. ದೇಶದಲ್ಲಿ ಮೊಬೈಲ್ ಕಳ್ಳತನ ಮತ್ತು ಆನ್‌ಲೈನ್ ಮೋಸ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಈ ಕ್ರಮವನ್ನು ತಕ್ಷಣದಿಂದಲೇ ಜಾರಿಗೆ ತರಲಾಗಿದೆ. ದೂರಸಂಪರ್ಕ ಇಲಾಖೆ (DoT) ದೇಶದ ಎಲ್ಲಾ ಮೊಬೈಲ್ ತಯಾರಕರಿಗೆ ಹೊಸ ಆದೇಶ ಕಳುಹಿಸಿದೆ. ಇನ್ನು ಮುಂದೆ ಮಾರುಕಟ್ಟೆಗೆ ಬರುವ ಯಾವುದೇ ಹೊಸ ಮೊಬೈಲ್‌ನಲ್ಲಿ Sanchar Saathi ಆ್ಯಪ್ ಪೂರ್ವಸ್ಥಾಪನೆಗೊಳಿಸಲೇಬೇಕು. ಈ ಆ್ಯಪ್ ಅನ್ನು ಬಳಕೆದಾರರು ಅಳಿಸಲು […] The post ಹೊಸ ಮೊಬೈಲ್‌ಗಳಲ್ಲಿ Sanchar Saathi App ಕಡ್ಡಾಯ: ಸರ್ಕಾರದ ಹೊಸ ನಿರ್ದೇಶನ. appeared first on Karnataka Times .

ಕರ್ನಾಟಕ ಟೈಮ್ಸ್ 2 Dec 2025 7:48 pm

ಹೊಸ ವರ್ಷಕ್ಕೆ ಕಲಬುರಗಿ ಜನತೆಗೆ ಗುಡ್‌ನ್ಯೂಸ್;‌ ಇನ್ನು ಈ ಸಮಯಕ್ಕೆ ಸಿಗಲಿದೆ ವಂದೇ ಭಾರತ್‌ ಟ್ರೈನ್

ಪ್ರಯಾಣಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ರೈಲ್ವೆ ಇಲಾಖೆಯು ಕಲಬುರಗಿಯಿಂದ ಬೆಂಗಳೂರಿಗೆ ಸಂಚರಿಸುವ ವಂದೇ ಭಾರತ್‌ ರೈಲು ಓಡಾಟದ ಸಮಯದಲ್ಲಿ ಬದಲಾವಣೆ ತರಲಾಗಿದೆ. ಹಿಂದೆ ​5.15ಕ್ಕೆ ರೈಲು ಸಂಚರಿಸುತ್ತಿತ್ತು. ಆದರೆ ಜನವರಿ 1ರಿಂದ 6.10ಕ್ಕೆ ಕಲಬುರಗಿಯಿಂದ ಬೆಂಗಳೂರಿಗೆ ವಂದೇ ಭಾರತ್‌ ರೈಲು ಸಂಚರಿಸಲಿದೆ. ಮರಳಿ ರಾತ್ರಿ 11.30ರ ಬದಲು 10.45ಕ್ಕೇ ಕಲಬುರಗಿ ತಲುಪಲಿದೆ. ಎಂದು ರೈಲ್ವೆ ಇಲಾಖೆ ಮಾಹಿತಿ ನೀಡಿದೆ. ಸತ್ಯಸಾಯಿ ದರ್ಶನ ಮಾಡುವವರಿಗೆ ಅನುಕೂಲವಾಗುವಂತೆ ನಿಲುಗಡೆ ಸೌಲಭ್ಯವೂ ಇರಲಿದೆ ಎಂದು ಸಂಸದ ಜಾಧವ್‌ ಹರ್ಷ ಹೇಳಿದರು.

ವಿಜಯ ಕರ್ನಾಟಕ 2 Dec 2025 7:35 pm

ಮಂಗಳೂರು: 9/11 ಅರ್ಜಿಗಳನ್ನು ಕಾಲ ಮಿತಿಯಲ್ಲಿ ಇತ್ಯರ್ಥಕ್ಕೆ ಸ್ಪೀಕರ್ ಯು.ಟಿ ಖಾದರ್ ಸೂಚನೆ

ಮಂಗಳೂರು: ನಗರ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ಏಕನಿವೇಶನ ಹಾಗೂ 9/11 ಅರ್ಜಿಗಳನ್ನು ಅನಗತ್ಯ ವಿಳಂಬ ಮಾಡದೆ ಕಾಲಮಿತಿಯಲ್ಲಿ ಇತ್ಯರ್ಥಗೊಳಿಸುವಂತೆ ವಿಧಾನಸಭೆ ಸ್ಪೀಕರ್ ಯು.ಟಿ ಖಾದರ್ ಸೂಚಿಸಿದ್ದಾರೆ. ಅವರು ಮಂಗಳವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಉಳ್ಳಾಲ ತಾಲೂಕಿನ 9/11 ಸಮಸ್ಯೆಗಳ ಕುರಿತು ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿದರು. 9/11 ದಾಖಲೆಗಳಿಗೆ ಸಾರ್ವಜನಿಕರು ಸಲ್ಲಿಸುವ ಅರ್ಜಿಗಳನ್ನು ದೀರ್ಘಕಾಲದಲ್ಲಿ ಇಟ್ಟುಕೊಳ್ಳುತ್ತಿರುವ ಬಗ್ಗೆ ಹಾಗೂ ಕಚೇರಿಯಿಂದ ಕಚೇರಿಗೆ ಇದಕ್ಕಾಗಿ ಅಲೆದಾಡುವ ಬಗ್ಗೆ ಸಾರ್ವಜನಿಕರಿಂದ ವ್ಯಾಪಕ ದೂರುಗಳು ಬರುತ್ತಿರುವ ಬಗ್ಗೆ ಅವರು ಅಸಮಾಧಾನ ವ್ಯಕ್ತಪಡಿಸಿದರು. ಏಕನಿವೇಶನಕ್ಕೆ ಸಂಪರ್ಕ ರಸ್ತೆಯ ಬಗ್ಗೆ ಸ್ಪಷ್ಟವಾದ ತಿಳುವಳಿಕೆ ಇರಬೇಕು. ಸರಕಾರಿ ರಸ್ತೆ ಅಥವಾ ಖಾಸಗಿ ರಸ್ತೆಗಳ ಬಗ್ಗೆ ಸರಿಯಾದ ಮಾಹಿತಿಯನ್ನು ನಮೂದಿಸಬೇಕು ಎಂದು ಅವರು ಸೂಚಿಸಿದರು. ಸಭೆಯಲ್ಲಿ ನಗರಾಭಿವೃದ್ಧಿ ಇಲಾಖೆ ಸರ್ಕಾರದ ಪ್ರಧಾನ ಕಾರ್ಯದರ್ಶಿ ದೀಪಾ ಚೋಳನ್ ಮಾತನಾಡಿ, ಏಕನಿವೇಶನ ಅರ್ಜಿಗಳಲ್ಲಿ ರಸ್ತೆ ಬಗ್ಗೆ ಅಫಿದಾವಿತ್ ಪಡೆದು 9/11 ನೀಡುವ ಬಗ್ಗೆ ಶೀಘ್ರದಲ್ಲಿ ಸುತ್ತೋಲೆ ಹೊರಡಿಸಲಾಗುವುದು. 9/11 ಅರ್ಜಿಗಾಗಿ ಪದೇ ಪದೇ ವಿವಿಧ ಕಚೇರಿಗೆ ತೆರಳುವ ಬದಲು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಒಂದೇ ಬಾರಿ ಅನುಮೋದನೆ ನೀಡಿದ ಬಳಿಕ ಸಂಬಂಧಿಸಿದ ಗ್ರಾಮ ಪಂಚಾಯತ್‌ಗಳಿಗೆ ಕಳುಹಿಸಿಕೊಡಲಾಗುವುದು. ಇದರಿಂದ 2 ನೇ ಬಾರಿ ಮೂಡಾ ಅಥವಾ ನಗರ ಯೋಜನಾ ಸಮಿತಿಗಳಿಗೆ ಬರುವ ಅಗತ್ಯವಿರುವುದಿಲ್ಲ ಎಂದು ಅವರು ತಿಳಿಸಿದರು. ರಸ್ತೆ ಅಗಲೀಕರಣ ಉದ್ದೇಶವಿದ್ದರೆ ಅದನ್ನು 9/11 ನಲ್ಲಿ ನಮೂದಿಸಲಾಗುವುದು. ಗುಡ್ಡಗಾಡು ಪ್ರದೇಶದಲ್ಲಿ 3.65 ಮೀ. ಅಗಲದ ರಸ್ತೆ ಅವಕಾಶವಿದ್ದು, ಇದನ್ನು ಕರಾವಳಿ ಮತ್ತು ಮಲೆನಾಡಿಗೆ ಅನ್ವಯಿಸುವ ಬಗ್ಗೆ ಪರಿಶೀಲಿಸಲಾಗುವುದು ಎಂದು ತಿಳಿಸಿದರು. ಇನ್ನು ಮುಂದೆ ಪ್ರತಿ ತಿಂಗಳು ಒಂದು ತಾಲೂಕಿನಲ್ಲಿ ಅದಾಲತ್ ನಡೆಸಿ ಏಕ ನಿವೇಶನ ಮತ್ತು 9/11 ಸಾರ್ವಜನಿಕ ಅರ್ಜಿಯನ್ನು ಇತ್ಯರ್ಥ ಪಡಿಸಲಾಗುವುದು ಎಂದು ತಿಳಿಸಿದರು. 9/11 ನಿಯಮಗಳಲ್ಲಿ ಗೊಂದಲ ತಪ್ಪಿಸಲು ಗ್ರಾಮೀಣಾಭಿವೃದ್ಧಿ ಇಲಾಖೆ ಮತ್ತು ಪಂಚಾಯತ್ ರಾಜ್ ಇಲಾಖೆಯೊಂದಿಗೆ ಪರಸ್ಪರ ಸಮನ್ವಯದಿಂದ ಕಾರ್ಯನಿರ್ವಹಿಸಲಾಗುವುದು. ಸ್ಥಳೀಯ ಮಟ್ಟದ ಅಧಿಕಾರಿಗಳು ತ್ವರಿತವಾಗಿ 9/11 ಹಾಗೂ ಏಕನಿವೇಶನ ಅನುಮೋದನೆ ನೀಡಲು ಒಂದು ವಾರದಲ್ಲಿ ಸುತ್ತೋಲೆ ಹೊರಡಿಸಲಾಗುವುದು ಎಂದು ದೀಪಾ ಚೋಳನ್ ಹೇಳಿದರು. ಸ್ಥಳೀಯ ಅಧಿಕಾರಿಗಳಿಗೆ 9/11 ನಿಯಮಗಳ ಅರ್ಥೈಸುವಿಕೆಯಲ್ಲಿ ಉಂಟಾದ ಗೊಂದಲದಿಂದ ಸಾರ್ವಜನಿಕರಿಗೆ ಸಮಸ್ಯೆಯಾಗುತ್ತಿರುವುದು ಕಂಡು ಬಂದಿದೆ. 94 ಸಿ ಅಡಿ ಮಂಜೂರಾದ ನಿವೇಶನಗಳಲ್ಲಿ ಮನೆ ಕಟ್ಟಲು 9/11 ದಾಖಲೆಗಳನ್ನು 15 ದಿನದೊಳಗೆ ನೀಡಲು ಆನ್‌ಲೈನ್‌ನಲ್ಲಿ ಅಗತ್ಯ ವ್ಯವಸ್ಥೆ ಮಾಡಲಾಗಿದೆ. ಇದಕ್ಕಾಗಿ ನಾಗರಿಕರು ನೇರವಾಗಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು ಎಂದು ಅವರು ತಿಳಿಸಿದರು. ಈ ಬಗ್ಗೆ ಪಂಚಾಯತ್ ಅಧ್ಯಕ್ಷರು ಮತ್ತು ಸದಸ್ಯರಿಗೆ ಸೂಕ್ತ ಮಾಹಿತಿಯನ್ನು ಒದಗಿಸಬೇಕು. ಸಾರ್ವಜನಿಕರಿಗೆ ಈ ಸೌಲಭ್ಯದ ಮಾಹಿತಿ ದೊರೆಯುವಂತಾಗಬೇಕು. ವಿನಾ ಕಾರಣ ಜನಸಾಮಾನ್ಯರು ಕಚೇರಿಗಳಿಗೆ ಅಲೆದಾಡುವುದನ್ನು ತಪ್ಪಿಸಬೇಕು. ಅಧಿಕಾರಿಗಳು ಸಾರ್ವಜನಿಕರಿಗೆ ಅನುಕೂಲ ಆಗುವ ರೀತಿಯಲ್ಲಿ ಕಾರ್ಯ ನಿರ್ವಹಿಸಬೇಕು. 9/11 ಅರ್ಜಿಗಳನ್ನು ನಿಗದಿತ ಸಮಯದಲ್ಲಿ ಇತ್ಯರ್ಥಗೊಳಿಸಬೇಕು. ಸರಕಾರದ ಮಾರ್ಗಸೂಚಿಗಳು ಸರಿ ಇದ್ದರೂ ಅದನ್ನು ಸಮರ್ಪಕವಾಗಿ ಅನುಷ್ಟಾನಗೊಳಿಸುವಲ್ಲಿ ವಿಫಲವಾಗುತ್ತಿರುವುದರಿಂದ ಜನರಿಗೆ ಸಮಸ್ಯೆಯಾಗುತ್ತಿದೆ. ಈ ರೀತಿ ಸಮಸ್ಯೆಗಳಿಗೆ ಅವಕಾಶ ನೀಡದಂತೆ ಅಧಿಕಾರಿಗಳು ತಮ್ಮ ಕರ್ತವ್ಯ ನಿರ್ವಹಿಸಬೇಕು ಎಂದು ಯು.ಟಿ.ಖಾದರ್ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಸಾರ್ವಜನಿಕರಿಂದ ದೂರುಗಳ ಸರಮಾಲೆ 9/11ಗೆ ಸಂಬಂಧಿಸಿ ಜನಸಾಮಾನ್ಯರು ಪಡುತ್ತಿರುವ ತೊಂದರೆಗಳ ಬಗ್ಗೆ ಸಭೆಯಲ್ಲಿ ವಿವಿಧ ರೀತಿಯ ದೂರುಗಳು ವ್ಯಕ್ತವಾದವು. ನಾಲ್ಕೈದು ದಶಕಗಳಿಂದ ಒಂದೆಡೆ ನಿವೇಶನ ಹೊಂದಿದ್ದರೂ ಮನೆ ಕಟ್ಟಲು ಹೋದಾಗ, ಏಕನಿವೇಶನ, ರಸ್ತೆಗಾಗಿ ಹಲವು ತಿಂಗಳ ಕಾಲ ಅಲೆದಾಡಿಸಲಾಗುತ್ತದೆ. ಹಿಂದೆ ಭೂ ಪರಿವರ್ತನೆ ಆಗಿ ಮನೆ ಕಟ್ಟಿದ್ದರೂ ಮತ್ತೆ ಇರುವ ಸಣ್ಣ ಪುಟ್ಟ ನಿವೇಶನದಾರರೂ ರಸ್ತೆಗಾಗಿ ಜಾಗ ಬಿಡುವುದಾದರೂ ಹೇಗೆ ಎಂಬ ಬಗ್ಗೆಯೂ ಸಭೆಯಲ್ಲಿ ಸಾರ್ವಜನಿಕರಿಂದ ಅಸಮಾಧಾನದ ಮಾತುಗಳು ವ್ಯಕ್ತವಾಯಿತು. ಕಾರ್ಯಾಗಾರದಲ್ಲಿ ಮೂಡ ಅಧ್ಯಕ್ಷ ಸದಾಶಿವ ಉಳ್ಳಾಲ್, ಜಿಲ್ಲಾಧಿಕಾರಿ ದರ್ಶನ್ ಎಚ್.ವಿ., ಜಿ.ಪಂ. ಸಿಇಒ ನರ್ವಾಡೆ ವಿನಾಯಕ್ ಕಾರ್ಬಾರಿ ಸೇರಿದಂತೆ ಹಿರಿಯ ಅಧಿಕಾರಿಗಳು, ಮೂಡಾ ವ್ಯಾಪ್ತಿಯ ಗ್ರಾ.ಪಂ. ಅಧ್ಯಕ್ಷರು, ಪಿಡಿಓ, ತಾಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಉಪಸ್ಥಿತರಿದ್ದರು. ಭವಿಷ್ಯದ ಹಿತ ದೃಷ್ಟಿಯಿಂದ ಬಡಾವಣೆ(ಲೇಔಟ್)ಗಳಲ್ಲಿ ಆಟದ ಮೈದಾನ, ಉದ್ಯಾನವನ ಹಾಗೂ ನಾಗರಿಕ ಸೌಲಭ್ಯದ ನಿವೇಶನಗಳು ಅಗತ್ಯವಾಗಿದೆ. ಲೇಔಟ್ ಮಾಡುವವರು ಕೇವಲ ದುಡ್ಡು ಮಾಡುವುದು ಮಾತ್ರವಲ್ಲ. ಸಾಮಾಜಿಕ ಕಳಕಳಿಯನ್ನು ಹೊಂದಿರಬೇಕು. ಅವೈಜ್ಞಾನಿಕ ಕಟ್ಟಡ ನಿರ್ಮಾಣದಿಂದ ಸಮಸ್ಯೆಗಳು ಹೆಚ್ಚುತ್ತಿದೆ. ನಾಗರಿಕರ ಉತ್ತಮ ಜೀವನಕ್ಕಾಗಿ ನಿಯಮಗಳನ್ನು ತರಲಾಗುತ್ತದೆ. ಆದರೆ ಇದರ ಅನುಷ್ಟಾನದಲ್ಲಿ ಸಾರ್ವಜನಿಕರಿಗೆ ತೊಂದರೆ ನೀಡುವುದನ್ನು ಸಹಿಸುವುದಿಲ್ಲ ಎಂದು ಯು.ಟಿ.ಖಾದರ್ ಸಭೆಯಲ್ಲಿ ಸ್ಪಷ್ಟಪಡಿಸಿದರು.    

ವಾರ್ತಾ ಭಾರತಿ 2 Dec 2025 7:33 pm

ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ಸರಳ ವಿವಾಹ ಸಹಾಯಧನಕ್ಕೆ ಅರ್ಜಿ ಆಹ್ವಾನ

ರಾಯಚೂರು: ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ 2025-26ನೇ ಸಾಲಿನ ಆರ್ಥಿಕವಾಗಿ ಹಿಂದುಳಿದಿರುವ ಅಲ್ಪಸಂಖ್ಯಾತ ಸಮುದಾಯದ ಸರಳ ವಿವಾಹಗಳ ವೆಚ್ಚಗಳಿಗಾಗಿ ಪ್ರತಿ ಜೋಡಿಗೆ 50 ಸಾವಿರ ರೂ. ಸಹಾಯಧನಕ್ಕೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸುವ ವಧು-ವರರು ಕರ್ನಾಟಕ ರಾಜ್ಯಕ್ಕೆ ಸೇರಿದ ಅಲ್ಪಸಂಖ್ಯಾತರ ಸಮುದಾಯಗಳಿಗೆ (ಮುಸ್ಲಿಂ, ಕ್ರಿಶ್ಚಿಯನ್,ಜೈನ್,ಬೌದ್ದ, ಸಿಖ್ ಮತ್ತು ಪಾರ್ಸಿ) ಸೇರಿದವರಾಗಿರಬೇಕು. ಸಾಮೂಹಿಕ ವಿವಾಹಗಳಲ್ಲಿ ಕನಿಷ್ಠ 05 ಜೋಡಿಗಳು ಭಾಗವಹಿಸಿರತಕ್ಕದ್ದು. ಜಿಲ್ಲಾ ನೋಂದಣಿ/ವಕ್ಫ್ ಬೋರ್ಡ್ ಕಚೇರಿಗಳಲ್ಲಿ ಸಾಮೂಹಿಕ ವಿವಾಹಗಳ ಆಯೋಜಕರೆಂದು ನೋಂದಣಿಯಾಗಿರುವ ಖಾಸಗಿ ಟ್ರಸ್ಟಗಳು, ದೇವಸ್ಥಾನದ ಟ್ರಸ್ಟಗಳು, ಸಂಘಗಳು, ಸೊಸೈಟಿಗಳು ವಕ್ಫ ಸಂಸ್ಥೆಗಳು ಮತ್ತು ಖಾಸಗಿ ವ್ಯಕ್ತಿಗಳು ನಡೆಸುವ ಸಾಮೂಹಿಕ ವಿವಾಹ ಕಾರ್ಯಕ್ರಮಗಳಲ್ಲಿ ವಿವಾಹವಾದಲ್ಲಿ ಮಾತ್ರ ಅರ್ಜಿ ಸಲ್ಲಿಸಲು ಅರ್ಹರಿರುತ್ತಾರೆ. ಈ ಸೌಲಭ್ಯ ಪಡೆಯುವ ವಧುವಿಗೆ ಕನಿಷ್ಠ 18 ವರ್ಷದಿಂದ ಗರಿಷ್ಠ 42 ವರ್ಷಗಳು, ವರನಿಗೆ ಕನಿಷ್ಠ 21 ವರ್ಷದಿಂದ ಗರಿಷ್ಠ 45 ವರ್ಷ ವಯಸ್ಸು ಆಗಿರತಕ್ಕದ್ದು. ಈ ಯೋಜನೆಯಡಿ ಸಹಾಯಧನ ಬಯಸುವ ವಧು-ವರರ ವಾರ್ಷಿಕ ಆದಾಯ 5 ಲಕ್ಷ ರೂ.ಗಳನ್ನು ಮೀರಿರಬಾರದು.   ಅರ್ಜಿ ಸಲ್ಲಿಸುವ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ಆನ್‌ಲೈನ್‌ನಲ್ಲಿ ನಡೆಸಲಾಗುತ್ತಿದೆ. ಆದರೆ ತಾಂತ್ರಿಕ ಕಾರಣಗಳಿಂದ ಆನ್‌ಲೈನ್ ಅರ್ಜಿ ಸಲ್ಲಿಸಲು ತೊಂದರೆ ಉಂಟಾದಲ್ಲಿ ಅಂತಹ ಸಂದರ್ಭದಲ್ಲಿ ಮಾತ್ರ ಅನುಮೋದಿತ ಆಫ್‌ಲೈನ್ ಅರ್ಜಿ ನಮೂನೆಗಳನ್ನು ಜಿಲ್ಲಾ ಅಥವಾ ತಾಲೂಕು ಕಚೇರಿಯಿಂದ ಪಡೆದು ಸಲ್ಲಿಸಬಹುದಾಗಿದೆ.

ವಾರ್ತಾ ಭಾರತಿ 2 Dec 2025 7:27 pm

ಕಲಬುರಗಿ| ಡಿ.7ರಂದು ಸಜ್ಜನ ಸಿರಿ ಪ್ರಶಸ್ತಿ ಪ್ರದಾನ: ವಿಜಯಕುಮಾರ್‌ ತೇಗಲತಿಪ್ಪಿ

ಕಲಬುರಗಿ: ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿದ್ದ ಪತ್ರಕರ್ತ-ಸ್ನೇಹಜೀವಿ ಲಿಂ.ಗುರುಬಸಪ್ಪ ಸಜ್ಜನಶೆಟ್ಟಿ ಹೊನ್ನಕಿರಣಗಿ ಅವರ ಸ್ಮರಣಾರ್ಥ ಡಿ.7ರಂದು ನಗರದ ಕನ್ನಡ ಭವನದಲ್ಲಿ ವಿವಿಧ ಕ್ಷೇತ್ರದ ಪ್ರಮುಖರಿಗೆ ಸಜ್ಜನ ಸಿರಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ ಎಂದು ಕಸಾಪ ಜಿಲ್ಲಾಧ್ಯಕ್ಷ ವಿಜಯಕುಮಾರ್‌ ಪಾಟೀಲ್‌ ತೇಗಲತಿಪ್ಪಿ ತಿಳಿಸಿದ್ದಾರೆ. ಹಿರಿಯ ಸಾಹಿತಿ ಡಾ. ನಾಗೇಂದ್ರ ಮಸೂತಿ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದು, ಹಿರಿಯ ಲೇಖಕಿ ಪ್ರಮೀಳಾ ಜಾನಪ್ಪಗೌಡ ಚಿಂಚೋಳಿ, ಹಿರಿಯ ಪತ್ರಕರ್ತ ದೇವೇಂದ್ರ ಆವಂಟಿ ಹಾಗೂ ವಿಶೇಷ ಆಹ್ವಾನಿತರಾಗಿ ಜಗದೀಶ ಮರಪಳ್ಳಿ, ಕುಸನೂರ ಗ್ರಾಪಂ ಅಧ್ಯಕ್ಷ ಕುಪೇಂದ್ರ ಬರಗಾಲಿ, ರೇಣುಕಾ ಗುರುಬಸಪ್ಪ ಸಜ್ಜನಶೆಟ್ಟಿ, ಕೇಂದ್ರ ಕಸಾಪ ಪ್ರತಿನಿಧಿ ಸೈಯ್ಯದ್ ನಝೀರುದ್ದಿನ್ ಮುತ್ತವಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳ ಪ್ರಮುಖರಾದ ಕಲಬುರಗಿ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ-ಸಾಹಿತಿ ಎಸ್.ಪಿ. ಸುಳ್ಳದ, ಹಿರಿಯ ಪತ್ರಕರ್ತ ಶೇಷಮೂರ್ತಿ ಅವಧಾನಿ, ಎನ್.ವಿ. ಪಿಯು ಕಾಲೇಜಿನ ಉಪ ಪ್ರಾಚಾರ್ಯರಾದ ಡಾ. ಬಸವರಾಜ ಅಂಗಡಿ, ಗಾಯಕ ಮಧುಸೂಧನ ಮಲ್ಲಾಬಾದಿ, ಕೋಟನೂರ ಡಿ ಗ್ರಾಮದ ವಿ.ಎಸ್.ಎಸ್.ಎನ್. ಅಧ್ಯಕ್ಷ ಮಲ್ಲಿನಾಥ ನಾಗನಹಳ್ಳಿ, ಕವಯತ್ರಿ ನೀತಾ ಡಿ ಕಾಬಾ, ಕಾಂಗ್ರೇಸ್ ಯುವ ಅಧ್ಯಕ್ಷ ಶಿವಾನಂದ ಹೊನಗುಂಟಿ, ನ್ಯಾಯವಾದಿ ಸಂತೋಷಕುಮಾರ ರಾಂಪೂರೆ ಅವರಿಗೆ ಸಜ್ಜನ ಸಿರಿ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುವುದು ಎಂದು  ವಿಜಯಕುಮಾರ್‌ ಪಾಟೀಲ್‌ ಹೇಳಿದರು.  

ವಾರ್ತಾ ಭಾರತಿ 2 Dec 2025 7:20 pm

ಇಷ್ಟು ಸುದೀರ್ಘ ಕಾಲದ ಬಂಧನವು ಕ್ರಿಮಿನಲ್ ನ್ಯಾಯ ವ್ಯವಸ್ಥೆಯ ವಿಡಂಬನೆಯಾಗಲಿದೆ: ಸುಪ್ರೀಂ ಕೋರ್ಟ್‌ಗೆ ಹೇಳಿದ ದಿಲ್ಲಿ ಗಲಭೆ ಆರೋಪಿಗಳು

ಹೊಸದಿಲ್ಲಿ: ವಿಚಾರಣಾಧೀನ ಕೈದಿಗಳನ್ನು ಇಷ್ಟು ಸುದೀರ್ಘ ಕಾಲ ಬಂಧನದಲ್ಲಿಡುವುದು ಕ್ರಿಮಿನಲ್ ನ್ಯಾಯ ವ್ಯವಸ್ಥೆಯ ವಿಡಂಬನೆಯಾಗಲಿದೆ ಎಂದು ದಿಲ್ಲಿ ಗಲಭೆ ಪಿತೂರಿಯ ಆರೋಪಿಗಳ ಪೈಕಿ ಒಬ್ಬರಾಗಿರುವ ಗುಲ್ಫಿಶಾ ಫಾತಿಮಾ ಮಂಗಳವಾರ ಸುಪ್ರೀಂಕೋರ್ಟ್‌ಗೆ ತಿಳಿಸಿದ್ದಾರೆ. ಗುಲ್ಫಿಶಾ ಫಾತಿಮಾ ಪರವಾಗಿ ನ್ಯಾಯಾಲಯದಲ್ಲಿ ಹಾಜರಿದ್ದ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ, ಇಷ್ಟು ಸುದೀರ್ಘ ಕಾಲ ವಿಚಾರಣಾಧೀನ ಕೈದಿಗಳನ್ನು ಬಂಧನದಲ್ಲಿಡುವುದು ವಿಚಾರಣಾಪೂರ್ವ ಅಪರಾಧ ನಿಗದಿಗೆ ಸಮವಾಗಲಿದೆ ಎಂದು ನ್ಯಾ. ಅರವಿಂದ್ ಕುಮಾರ್ ಹಾಗೂ ನ್ಯಾ. ಎನ್.ವಿ.ಅಂಜಾರಿಯಾ ಅವರನ್ನೊಳಗೊಂಡ ನ್ಯಾಯಪೀಠದ ಗಮನಕ್ಕೆ ತಂದರು. ಇದು ಕ್ರಿಮಿನಲ್ ನ್ಯಾಯ ವ್ಯವಸ್ಥೆಯ ವಿಡಂಬನೆಯಾಗಲಿದೆ. ಅಪರಾಧಿಗಳು ಎಂದು ಘೋಷಣೆಯಾಗುವವರೆಗೂ ಯಾರೊಬ್ಬರೂ ಈ ರೀತಿ ಶಿಕ್ಷೆಗೊಳಗಾಗಬಾರದು. ಇದು ವಿಚಾರಣಾಪೂರ್ವ ಅಪರಾಧ ನಿಗದಿಯಾಗಿದೆ ಎಂದು ಅವರು ನ್ಯಾಯಾಲಯದೆದುರು ವಾದ ಮಂಡಿಸಿದರು. ಇದೇ ವೇಳೆ, ಆರೋಪಿಗಳಿಗೆ ಜಾಮೀನು ನಿರಾಕರಿಸಿದ ದಿಲ್ಲಿ ನ್ಯಾಯಾಲಯದ ಆದೇಶದ ವಿರುದ್ಧ ಬಲವಾದ ಆಕ್ಷೇಪ ವ್ಯಕ್ತಪಡಿಸಿದ ಅಭಿಷೇಕ್ ಮನು ಸಿಂಘ್ವಿ, ಅವಸರದ ವಿಚಾರಣೆಯು ಆರೋಪಿಗಳ ಪಾಲಿಗೆ ಮಾರಕವಾಗಲಿದೆ ಎಂದೂ ಅಸಮಾಧಾನ ವ್ಯಕ್ತಪಡಿಸಿದರು. ದಿಲ್ಲಿ ನ್ಯಾಯಾಲಯದ ಆದೇಶವನ್ನು ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಎಡಿಎಂ ಜಬಲ್ಪುರ್ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ನೀಡಿದ್ದ ಕುಖ್ಯಾತ ತೀರ್ಪಿನೊಂದಿಗೆ ಅವರು ಹೋಲಿಕೆ ಮಾಡಿದರು. ನಾನು ವಿಚಾರಣೆ ವಿಳಂಬಗೊಳ್ಳಲು ಜವಾಬ್ದಾರನಲ್ಲ. ಪದೇ ಪದೇ ಪೂರಕ ಆರೋಪ ಪಟ್ಟಿಗಳನ್ನು ಸಲ್ಲಿಸುತ್ತಿರುವ ಪೊಲೀಸರನ್ನು ಈ ವಿಳಂಬಕ್ಕೆ ಹೊಣೆಗಾರರನ್ನಾಗಿಸಬಹುದು ಎಂದು ಮತ್ತೊಬ್ಬ ಆರೋಪಿ ಉಮರ್ ಖಾಲಿದ್ ನ್ಯಾಯಾಲಯದೆದುರು ವಾದ ಮಂಡಿಸಿದರು. 2020ರ ಫೆಬ್ರವರಿಯಲ್ಲಿ ದಿಲ್ಲಿಯಲ್ಲಿ ಗಲಭೆಗಳು ನಡೆಯಲು ದೊಡ್ಡ ಮಟ್ಟದ ಪಿತೂರಿ ನಡೆಸಿದ್ದರು ಎಂಬ ಆರೋಪಕ್ಕೆ ಗುರಿಯಾಗಿ, ವಿಚಾರಣಾಧೀನ ಕೈದಿಗಳಾಗಿರುವ ಉಮರ್ ಖಾಲಿದ್, ಶಾರ್ಜೀಲ್ ಇಮಾಂ, ಗುಲ್ಫಿಶಾ ಫಾತಿಮಾ, ಮೀರನ್ ಹೈದರ್, ಶಾಬಾದ್ ಅಹ್ಮದ್ ಹಾಗೂ ಮುಹಮ್ಮದ್ ಸಲೀಮ್ ಖಾನ್ ಸಲ್ಲಿಸಿರುವ ಜಾಮೀನು ಅರ್ಜಿ ವಿಚಾರಣೆಯನ್ನು ಸುಪ್ರೀಂಕೋರ್ಟ್ ನಡೆಸುತ್ತಿದೆ.

ವಾರ್ತಾ ಭಾರತಿ 2 Dec 2025 7:18 pm

ಮಾದೇಶ್ವರನ ಗೀತೆ ಹಾಡಲು ಪತಿ ತೇಜಸ್ವಿ ಸೂರ್ಯ ಸ್ಪೂರ್ತಿ ಎಂದ ಶಿವ ಶ್ರೀ: ʻಅತ್ಗೆಮ್ಮ ಮಾತೆ ಇಲ್ಲʼಎಂದ ನೆಟ್ಟಿಗರು

ತೇಜಸ್ವಿ ಪತ್ನಿ ಶಿವಶ್ರೀ ಸ್ಕಂದ ಪ್ರಸಾದ್‌ ಅವರು ಮಾದೇಶ್ವರನ ಹಾಡು ಹಾಡಿ ಇನ್‌ಸ್ಟಾಗ್ರಾಮ್‌ ಮತ್ತು ಯೂಟ್ಯೂಬ್‌ನಲ್ಲಿ ಹಂಚಿಕೊಂಡಿದ್ದಾರೆ. ಇದಕ್ಕೆ ಸಾಕಷ್ಟು ವ್ಯೂವ್ಸ್‌ ಸಿಗುತ್ತಿದೆ. ನೆಟ್ಟಿಗರು ಸಹ ಭಾರಿ ಅಭಿನಂದನೆ ವ್ಯಕ್ತಪಡಿಸುತ್ತಿದ್ದಾರೆ. ಇನ್ನು ಹಾಡು ಹಾಡಲು ಕಾರಣ ಪತಿ ತೇಜಸ್ವಿ ಸೂರ್ಯ ಅವರೇ ಕಾರಣ ಎಂದು ಶಿವಶ್ರೀ ಹೇಳಿಕೊಂಡಿದ್ದಾರೆ. ಕೇವಲ ಹಾಡಲ್ಲ, ಇದೊಂದು ಪುಟ್ಟ ಪ್ರಾರ್ಥನೆ ಎಂದು ಹೇಳಿಕೊಂಡಿದ್ದಾರೆ.

ವಿಜಯ ಕರ್ನಾಟಕ 2 Dec 2025 7:11 pm

ರೈತರ ಸಮಸ್ಯೆಗಳ ಬಗ್ಗೆ ಬಿಜೆಪಿಗರು ಕೇಂದ್ರ ಸರಕಾರದ ಬಳಿ ಪ್ರಸ್ತಾಪಿಸಲಿ: ಸಚಿವ ಶಿವರಾಜ್ ತಂಗಡಗಿ

ಗಂಗಾವತಿ: ಡಿ.2: ತುಂಗಾಭದ್ರ ನೀರಿನ‌ ವಿಚಾರವಾಗಿ ಅನಗತ್ಯ ರಾಜಕೀಯ ಮಾಡುತ್ತಿರುವ ಬಿಜೆಪಿಗರು ರೈತರ ಸಮಸ್ಯೆಗಳ ಬಗ್ಗೆ ಕೇಂದ್ರ ಸರಕಾರದ ಬಳಿ ಧ್ವನಿ ಎತ್ತಲಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ ಹೇಳಿದರು. ಗಂಗಾವತಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಶಿವರಾಜ್ ತಂಗಡಗಿ, ಬಿಜೆಪಿಯವರಿಗೆ ಬೇರೆ ಏನೂ ಕೆಲಸ ಇಲ್ಲ. ರೈತರ ಬಗ್ಗೆ ಮಾತನಾಡಲು ಬಿಜೆಪಿಗರಿಗೆ ಯಾವುದೇ ಯೋಗ್ಯತೆ ಇಲ್ಲ. ಅಣೆಕಟ್ಟು ರಕ್ಷಣೆ ದೃಷ್ಟಿಯಿಂದ 80 ಟಿಎಂಸಿ ನೀರು ಮಾತ್ರ ಸಂಗ್ರಹಿಸಿ ಎಂದು ಹೇಳಿದವರು ಯಾರು? ರೈತರ ಪರ ರಾಜ್ಯ ಬಿಜೆಪಿ ನಾಯಕರು ಕೇಂದ್ರ ಸರ್ಕಾರದ ಬಳಿ ಧ್ವನಿ ಎತ್ತಲಿ. ಅವರು ಪ್ರಧಾನಿ ಮೋದಿ ಅವರ ಬಳಿ ಕುಣಿದರೆ ಸ್ವಲ್ಪ‌ ಉಪಯೋಗವಾಗಲಿದೆ ಎಂದು  ಹೇಳಿದರು. ಡ್ಯಾಂನ ಗೇಟ್ ಅಳವಡಿಕೆ ಸಂಬಂಧ ನಮ್ಮ ರಾಜ್ಯದ ಪಾಲಿನ ಹಣ ನೀಡಲು ಅಗತ್ಯ ಕ್ರಮಕೈಗೊಳ್ಳಲಾಗಿದ್ದು, ಕಡತ ಆರ್ಥಿಕ ಇಲಾಖೆಯಲ್ಲಿದೆ. ಶೀಘ್ರ ಹಣ ಬಿಡುಗಡೆಯಾಗಲಿದೆ. ಅಂಜನಾದ್ರಿ ಹನುಮಮಾಲಾ ವಿಸರ್ಜನೆಗೆ ಒಂದು ಲಕ್ಷ ಭಕ್ತಾದಿಗಳು ಆಗಮಿಸುವ ನಿರೀಕ್ಷೆ ಇದ್ದು, ಅಗತ್ಯ ಮುಂಜಾಗ್ರತಾ ಕ್ರಮಕೈಗೊಳ್ಳಲಾಗಿದೆ‌. ಪ್ರತಿಯಿಂದು ಸ್ಥಳದಲ್ಲಿಯೂ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿದ್ದು,ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ ಎಂದು ಎಂದು ಸಚಿವ ಶಿವರಾಜ್ ತಂಗಡಗಿ ಹೇಳಿದರು.

ವಾರ್ತಾ ಭಾರತಿ 2 Dec 2025 7:10 pm

ಪಾಕಿಸ್ತಾನ | ಇಮ್ರಾನ್ ಖಾನ್ ಸಹೋದರಿ ಉಝ್ಮಾ ಖಾನಮ್ ಗೆ ಅಡಿಯಾಲಾ ಜೈಲಿನಲ್ಲಿ ಭೇಟಿಗೆ ಅನುಮತಿ

ಆರೋಗ್ಯ ಸ್ಥಿತಿ ಕುರಿತ ಆತಂಕದ ಹಿನ್ನೆಲೆಯಲ್ಲಿ ಪಿಟಿಐ ಬೆಂಬಲಿಗರಿಂದ ಪ್ರತಿಭಟನೆ ತೀವ್ರ

ವಾರ್ತಾ ಭಾರತಿ 2 Dec 2025 6:57 pm

ಬೀದರ್‌| ಅಂಬೇಡ್ಕರ್ ಅವರ 69ನೇ ಪರಿನಿಬ್ಬಾಣ ದಿನದ ಅಂಗವಾಗಿ ನಡೆಸುವ ಬುದ್ಧ ಭಾರತ ನಿರ್ಮಾಣ ಸಂಕಲ್ಪ ಸಮಾವೇಶದ ಕರಪತ್ರ ಬಿಡುಗಡೆ

ಬೀದರ್ : ಡಾ. ಅಂಬೇಡ್ಕರ್ ಅವರ 69ನೇ ಮಹಾ ಪರಿನಿಬ್ಬಾಣ ದಿನದ ಅಂಗವಾಗಿ ಡಿ.6 ರಂದು ನಡೆಯುವ 'ಬುದ್ಧ ಭಾರತ ನಿರ್ಮಾಣ ಸಂಕಲ್ಪ ಸಮಾವೇಶ' ಕರಪತ್ರವನ್ನು ಬಿಡುಗಡೆಗೊಳಿಸಲಾಯಿತು. ನಗರದ ಅಂಬೇಡ್ಕರ್ ವೃತ್ತದಲ್ಲಿ ಸೋಮವಾರ ಬೆಳಿಗ್ಗೆ ದಲಿತ ಸಂಘಟನೆಗಳ ಮುಖಂಡರು ಹಾಗೂ ಸಮಾಜದ ಇತರರು ಡಿ. 6 ರಂದು ಡಾ. ಅಂಬೇಡ್ಕರ್ ಅವರ ಮಹಾ ಪರಿನಿಬ್ಬಾಣದ ಅಂಗವಾಗಿ ನಡೆಯುವ ಕಾರ್ಯಕ್ರಮದ ಕರಪತ್ರ ಬಿಡುಗಡೆಗೊಳಿಸಿದರು. ಅಂಬೇಡ್ಕರ್ ಅವರು ಬುದ್ಧ ಭಾರತ ನಿರ್ಮಾಣ ಮಾಡುವುದಕ್ಕಾಗಿ 1956ರಲ್ಲಿ 5 ಲಕ್ಷ ಅನುಯಾಯಿಗಳೊಂದಿಗೆ ಬೌದ್ಧ ಧಮ್ಮ ಸ್ವೀಕರಿಸಿದರು. ಅವರು ಕಂಡ ಸಮಾನತೆಯ ಕನಸು ನನಸು ಮಾಡಲು ನಾವೆಲ್ಲರೂ ಸಂಕಲ್ಪ ಮಾಡೋಣ. ಹಾಗಾಗಿ ಡಿ.6ರಂದು ನಡೆಯುವ ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಕರಪತ್ರದಲ್ಲಿ ಮನವಿ ಮಾಡಲಾಗಿದೆ.  ಈ ಸಂದರ್ಭದಲ್ಲಿ ಸಮಿತಿ ಅಧ್ಯಕ್ಷ ರಮೇಶ್ ಡಾಕುಳಗಿ, ಕಾರ್ಯಾಧ್ಯಕ್ಷ ಮಹೇಶ್ ಗೋರನಾಳಕರ್, ಗೌರವಾಧ್ಯಕ್ಷ ಪ್ರಕಾಶ್ ಮಾಳಗೆ, ಪ್ರಧಾನ ಕಾರ್ಯದರ್ಶಿ ಶಿವಕುಮಾರ್ ನಿಲಿಕಟ್ಟಿ, ಕಾರ್ಯದರ್ಶಿ ಅರುಣ್ ಪಟೇಲ್, ಸಲಹೆಗಾರರಾದ ಅನೀಲಕುಮಾರ್ ಬೆಲ್ದಾರ್, ಡಾ.ಕಾಶಿನಾಥ್ ಚೆಲ್ವಾ, ಬಾಬುರಾವ್ ಪಾಸ್ವಾನ್, ಕಲ್ಯಾಣರಾವ್ ಭೋಸ್ಲೆ, ಶ್ರೀಪತಿರಾವ್ ದೀನೆ, ದಶರಥ್ ಗುರು, ಬಕ್ಕಪ್ಪಾ ದಂಡಿನ್, ಪ್ರಮುಖರಾದ ಬಸವರಾಜ್ ಮಾಳಗೆ, ಸಮಿತಿಯ ಉಪಾಧ್ಯಕ್ಷ ರಂಜಿತಾ ಜೈನೋರ್, ಸುಧಾಮಣಿ ಗುಪ್ತಾ, ಲುಂಬಿಣಿ, ಸಂಗೀತಾ ಕಾಂಬಳೆ, ರಾಜಕುಮಾರ್ ಬನ್ನೆರ್, ಶಾಲಿವಾನ್ ಬಡಿಗೆರ್, ಬಾಬುರಾವ್ ಮಿಠಾರೆ, ಸುನೀಲ್ ಸಂಗಮ್, ಸಂಜುಕುಮಾರ್ ಮೇತ್ರೆ, ನರಸಿಂಗ್ ಸಾಮ್ರಾಟ, ಸಂದೀಪ್ ಕಾಂಟೆ, ಗೌತಮ್ ಭೊಸ್ಲೆ, ಗೌತಮ್ ಪ್ರಸಾದ್, ಪ್ರಕಾಶ್ ರಾವಣ, ಪುಟುರಾಜ್ ದಿನೆ, ಸತೀಶ್ ಲಕ್ಕಿ, ತುಕಾರಾಮ್ ಲಾಡಕರ್, ಸುರೇಶ್ ಜೊಜನಾಕರ್ ಹಾಗೂ ಅಂಬೇಡ್ಕರ್ ಸಾಗರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ವಾರ್ತಾ ಭಾರತಿ 2 Dec 2025 6:54 pm

‘ಮದ್ದೂರು ಪಟ್ಟಣದ ಟಿ.ಬಿ.ವೃತ್ತದಿಂದ ಕೊಲ್ಲಿ ವೃತ್ತದ ವರೆಗೆ ರಸ್ತೆ ಅಗಲೀಕರಣ’ : ಸಿಎಂ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಸಭೆ

ಬೆಂಗಳೂರು : ಮಂಡ್ಯ ಜಿಲ್ಲೆಯ ಮದ್ದೂರು ಪಟ್ಟಣದ ಟಿ.ಬಿ.ವೃತ್ತದಿಂದ ಕೊಲ್ಲಿ ವೃತ್ತದವರೆಗಿನ ರಸ್ತೆ ಅಗಲೀಕರಣ ಕಾಮಗಾರಿ ವಿಷಯ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಮಂಗಳವಾರ ವಿಧಾನಸೌಧದಲ್ಲಿ ಸಭೆ ನಡೆಯಿತು. 2025-26ನೆ ಸಾಲಿನ ವಾರ್ಷಿಕ ಬಜೆಟ್‍ನಲ್ಲಿ ಮದ್ದೂರು ನಗರದಲ್ಲಿ ರಸ್ತೆ ಅಗಲೀಕರಣಕ್ಕಾಗಿ ವಿಸ್ತೃತ ಯೋಜನಾ ವರದಿಗಳನ್ನು ತಯಾರಿಸಲು ಘೋಷಿಸಲಾಗಿತ್ತು. ಅದರಂತೆ ಲೋಕೋಪಯೋಗಿ ಇಲಾಖೆಯಿಂದ ವಿಸ್ತೃತ ಯೋಜನಾ ವರದಿಯನ್ನೂ ತಯಾರಿಸಲಾಗಿದೆ. ಮದ್ದೂರು ಪಟ್ಟಣದ ಟಿ.ಬಿ.ವೃತ್ತದಿಂದ ಕೊಲ್ಲಿ ವೃತ್ತದವರೆಗಿನ ರಸ್ತೆಯು ಜನನಿಬಿಡ ಹಾಗೂ ವಾಣಿಜ್ಯ ಚಟುವಟಿಕೆಯುಳ್ಳ ಜಿಲ್ಲಾ ಮುಖ್ಯ ರಸ್ತೆಯಾಗಿದ್ದು, ಅಧಿಕ ವಾಹನ ಸಂಚಾರವಿದ್ದು ಪುರಸಭೆಯ ಸುಪರ್ದಿಯಲ್ಲಿದೆ. ಬಿಎಂಐಸಿಎಪಿಎ ಅವರು ತಯಾರಿಸಿರುವ ಯೋಜನಾ ನಕ್ಷೆಯಲ್ಲಿ ಇದನ್ನು 100 ಅಡಿ ರಸ್ತೆಯನ್ನಾಗಿ ಅಭಿವೃದ್ಧಿಪಡಿಸಲು ಗುರುತಿಸಲಾಗಿದೆ. ರಸ್ತೆ ಅಗಲೀಕರಣ ಕಾಮಗಾರಿ ಯೋಜನಾ ವರದಿ ಪರಿಶೀಲಿಸಿದ ಮುಖ್ಯಮಂತ್ರಿ, ಈ ರಸ್ತೆಯನ್ನು 80 ಅಡಿ ವಿಸ್ತರಿಸಲು ಸಚಿವ ಸಂಪುಟ ಸಭೆಗೆ ಪ್ರಸ್ತಾವನೆ ಸಲ್ಲಿಸಲು ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಸಭೆಯಲ್ಲಿ ಮುಖ್ಯಮಂತ್ರಿಯ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್, ಮದ್ದೂರು ಶಾಸಕ ಕೆ.ಎಂ.ಉದಯ್, ಅಪರ ಮುಖ್ಯ ಕಾರ್ಯದರ್ಶಿ ಅಂಜುಮ್ ಪರ್ವೇಝ್ ಹಾಗೂ ಆರ್ಥಿಕ ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ವಾರ್ತಾ ಭಾರತಿ 2 Dec 2025 6:51 pm

15 ವರ್ಷಗಳಿಂದ ಕನ್ನಡ ಭಾಷೆ ಮಾತನಾಡುತ್ತಿದ್ದೇನೆ: ಜಿಲ್ಲಾಧಿಕಾರಿ ಹೇಳಿಕೆ ವೈರಲ್!

ಭಾಷೆ ಕಲಿಕೆಯ ವಿಚಾರವಾಗಿ ಸಾಕಷ್ಟು ಚರ್ಚೆಗಳು ನಡೆಯುತ್ತಿರುವಾಗಲೇ ಭಾಷೆ ಕಲಿಕೆ ಎನ್ನುವುದು ಕಷ್ಟದ ವಿಷಯವೇನು ಅಲ್ಲ. ನಾನು ಕಳೆದ 15 ವರ್ಷಗಳಿಂದ ಕನ್ನಡ ಮಾತನಾಡುತ್ತಿದ್ದೇನೆ ಎಂದು ರಾಜ್ಯದ ಪ್ರಮುಖ ಜಿಲ್ಲಾಧಿಕಾರಿಯೊಬ್ಬರು ಹೇಳಿದ್ದಾರೆ. ಈ ವಿಷಯ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಭಾಷೆ ಕಲಿಯುವುದು ತುಂಬಾ ಸರಳ ಯಾವುದೇ ಒಂದು ಭಾಷೆ ಕಲಿಯಬೇಕಾದರೆ ಆ ಭಾಷೆಯ ಮೇಲೆ

ಒನ್ ಇ೦ಡಿಯ 2 Dec 2025 6:42 pm

ನಕಲಿ ಜಾತಿ ಪ್ರಮಾಣ ಪತ್ರ ಪ್ರಕರಣ: ರವೀಂದ್ರ ಸ್ವಾಮಿ ವಿರುದ್ಧ ಅಟ್ರಾಸಿಟಿ ಪ್ರಕರಣ ದಾಖಲಿಸಿ ಗಡೀಪಾರು ಮಾಡಬೇಕು : ಮಾರುತಿ ಬೌದ್ಧೆ

ಬೀದರ್ : ಬೇಡ ಜಂಗಮ ಜಾತಿ ಪ್ರಮಾಣ ಪತ್ರಕ್ಕೆ ಸಂಬಂಧಿಸಿದಂತೆ ರವೀಂದ್ರ ಸ್ವಾಮಿ ಸಲ್ಲಿಸಿರುವ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ. ಹಾಗಾಗಿ ಅವರ ವಿರುದ್ಧ ಅಟ್ರಾಸಿಟಿ ಪ್ರಕರಣ ದಾಖಲಿಸಿ ಅವರನ್ನು ಬೀದರ್ ಜಿಲ್ಲೆಯಿಂದ ಗಡೀಪಾರು ಮಾಡಬೇಕು ಎಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕ ಮಾರುತಿ ಬೌದ್ಧೆ ಆಗ್ರಹಿಸಿದರು. ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮಾರುತಿ ಬೌದ್ಧೆ, 2016ರಲ್ಲಿ ನಗರಸಭೆಯ ಮಾಜಿ ಸದಸ್ಯ ರವೀಂದ್ರ ಸ್ವಾಮಿ ಅವರು ಬೇಡ ಜಂಗಮ ಜಾತಿ ಪ್ರಮಾಣ ಪತ್ರ ಪಡೆದುಕೊಂಡಿದ್ದರು. ಆದರೆ ಅದನ್ನು 2019ರಲ್ಲಿ ಅಂದಿನ ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಅವರು ತಿರಸ್ಕರಿಸಿದ್ದರು. ಆಗ ಜಿಲ್ಲಾಧಿಕಾರಿಗಳ ಆದೇಶದ ವಿರುದ್ಧ ರವೀಂದ್ರ ಸ್ವಾಮಿ ಅವರು ಹೈಕೋರ್ಟ್ ಮೊರೆ ಹೋಗಿದ್ದರು. ಆ ಸಂದರ್ಭದಲ್ಲಿ ಕೋರ್ಟ್ ಅರ್ಜಿ ಪರಿಶೀಲನೆಗೆ ಆದೇಶಿಸಿತು. ನಂತರ ಅಧಿಕಾರಿಗಳು ಆದೇಶವನ್ನು ಅಪಾರ್ಥ ಮಾಡಿಕೊಂಡು ಎಸ್ಸಿ ಜಾತಿ ಪ್ರಮಾಣ ವಿತರಿಸಿದ್ದರು ಎಂದು ಆರೋಪಿಸಿದರು. ನಂತರ ನ್ಯಾಯಾಲಯ ಎಸ್‌ಸಿ ಸರ್ಟಿಫಿಕೇಟ್ ರದ್ದು ಮಾಡಿತು. ಈ ಹಿನ್ನೆಲೆಯಲ್ಲಿ ರವಿ ಸ್ವಾಮಿ ಹೈ ಕೋರ್ಟ್ ಆದೇಶದ ವಿರುದ್ಧ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು. ಆದರೆ ಸುಪ್ರೀಂ ಕೋರ್ಟ್ ಎಲ್ಲ ವಾದ ವಿವಾದಗಳನ್ನು ಆಲಿಸಿ ರವಿ ಸ್ವಾಮಿ ಅವರ ಅರ್ಜಿಯನ್ನು ವಜಗೊಳಿಸಿದೆ ಎಂದರು. ನಾನು ಹಂತ ಹಂತವಾಗಿ ನಡೆಸಿದ ಹೋರಾಟಕ್ಕೆ ಕೊನೆಗೂ ಜಯ ಸಿಕ್ಕಿದೆ. ಸುಳ್ಳು ಜಾತಿ ಪ್ರಮಾಣ ಪತ್ರ ವಿತರಿಸಿದ ಅಧಿಕಾರಿಗಳನ್ನು ಸೇವೆಯಿಂದ ವಜಾಗೊಳಿಸಬೇಕು. ರವೀಂದ್ರ ಸ್ವಾಮಿ ವಿರುದ್ಧ ಅಟ್ರಾಸಿಟಿ ಪ್ರಕರಣ ದಾಖಲಿಸಿ ಅವರನ್ನು ಜಿಲ್ಲೆಯಿಂದ ಗಡಿಪಾರು ಮಾಡಬೇಕು ಎಂದು ಒತ್ತಾಯಿಸಿದರು. ವಿಠಲದಾಸ್ ಪ್ಯಾಗೆ ಅವರು ಮಾತನಾಡಿ, ಇತ್ತೀಚಿಗೆ ಎಸ್ಸಿ, ಎಸ್ಟಿ ಸೌಲಭ್ಯ ಪಡೆಯಲು ಸಾಕಷ್ಟು ಸುಳ್ಳು ಜಾತಿ ಪ್ರಮಾಣ ಪತ್ರ ಪಡೆಯುತ್ತಿದ್ದಾರೆ. ಇಂತವಹರನ್ನು ಕಡಿವಾಣ ಹಾಕಲು ಸರಕಾರ ಕಾಯ್ದೆ ಜಾರಿಗೆ ತಂದು ಕಠಿಣ ಶಿಕ್ಷೆಗೆ ಒಳಪಡಿಸಬೇಕು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಶಿವರಾಜ್ ತಡಪಳ್ಳಿ, ಕಾಶೀನಾಥ್ ಚೆಲ್ವಾ, ರಾಜು ವಾಘಮೋರೆ ಸೇರಿದಂತೆ ಇತರರು ಉಪಸ್ಥಿತರಿದ್ದರು.

ವಾರ್ತಾ ಭಾರತಿ 2 Dec 2025 6:41 pm

ಛತ್ತೀಸ್‌ಗಢ ಲೋಕ ಸೇವಾ ಆಯೋಗ ಪರೀಕ್ಷೆಗೆ ಅರ್ಜಿ ಅಹ್ವಾನ, ಇತರ ರಾಜ್ಯಗಳ ಅಭ್ಯರ್ಥಿಗಳಿಗೂ ಅವಕಾಶ

ಛತ್ತೀಸ್‌ಗಢ ಲೋಕ ಸೇವಾ ಆಯೋಗ (ಸಿಜಿಪಿಎಸ್ಸಿ), ರಾಜ್ಯದ ಸೇವಾ ಪರೀಕ್ಷೆ ಎಸ್ಎಸ್ಇ ಪೂರ್ವ ಪರೀಕ್ಷಾ ಹುದ್ದೆಯ ನೇಮಕಾತಿಗಾಗಿ ಅಧಿಕೃತ ವೆಬ್‌ಸೈಟ್‌ನಲ್ಲಿ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಈ ಬಾರಿ 238 ಹುದ್ದೆಗಳಿಗೆ ನೇಮಕಾತಿ ಮಾಡಲಾಗುತ್ತಿದೆ. ಸಿಜಿಪಿಎಸ್ಸಿ ಅರ್ಜಿ ನಮೂನೆ ವಿತರಣೆಯು 01 ಡಿಸೆಂಬರ್ 2025ರಂದು ಪ್ರಾರಂಭವಾಗಿದೆ ಮತ್ತು ಅಭ್ಯರ್ಥಿಗಳು 30 ಡಿಸೆಂಬರ್ 2025ರ ಒಳಗೆ ಅರ್ಜಿ ಸಲ್ಲಿಸಬಹುದು. ಅಗತ್ಯವಿರುವ ಕನಿಷ್ಠ ವಯಸ್ಸು 21 ವರ್ಷಗಳು ಮತ್ತು ಗರಿಷ್ಠ ವಯಸ್ಸು 01 ಜನವರಿ 2025ರಂತೆ 28-35 ವರ್ಷಗಳು (ಹುದ್ದೆಯನ್ನು ಅನ್ವಯಿಸಿರುತ್ತದೆ). ಜನರಲ್ ಅಭ್ಯರ್ಥಿಗಳಿಗೆ 103 ಹುದ್ದೆಗಳು, ಇಬಿಸಿಗೆ 31, ಪರಿಶಿಷ್ಟ ವರ್ಗದವರಿಗೆ 27 ಮತ್ತು ಪರಿಶಿಷ್ಟ ಪಂಗಡಗಳಿಗೆ 77 ಹುದ್ದೆಗಳು ಖಾಲಿ ಇರುತ್ತವೆ. ಅಭ್ಯರ್ಥಿಗಳು ಸಿಜಿಪಿಎಸ್ಸಿ ಎಸ್ಎಸ್ಇ ಪಿಸಿಎಸ್ ಪೂರ್ವ ನೇಮಕಾತಿ 2025 ರ ಸಂಪೂರ್ಣ ವಿವರಗಳನ್ನು ಈ ಕೆಳಗಿನ ಲಿಂಕ್ನಲ್ಲಿ ಪರಿಶೀಲಿಸಬಹುದು. https://sarkariresult.com.cm/cgpsc-sse-pcs-pre-recruitment-2025/ ಪ್ರಮುಖ ದಿನಾಂಕಗಳು * ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 01 ಡಿಸೆಂಬರ್ 2025 * ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 30 ಡಿಸೆಂಬರ್ 2025 * ಶುಲ್ಕ ಪಾವತಿಗೆ ಕೊನೆಯ ದಿನಾಂಕ: 30 ಡಿಸೆಂಬರ್ 2025 * ತಿದ್ದುಪಡಿ ದಿನಾಂಕ: 31 ಡಿಸೆಂಬರ್ 2025 – 02 ಜನವರಿ 2026 * ಪೂರ್ವ ಪರೀಕ್ಷಾ ದಿನಾಂಕ: 22 ಫೆಬ್ರವರಿ 2026 * ಮುಖ್ಯ ಪರೀಕ್ಷಾ ದಿನಾಂಕ:16 – 19 ಮೇ 2025 * ಪ್ರವೇಶ ಪತ್ರ: ಪರೀಕ್ಷೆಯ ಮೊದಲು * ಫಲಿತಾಂಶ ದಿನಾಂಕ: ಶೀಘ್ರದಲ್ಲೇ ತಿಳಿಸಲಾಗುತ್ತದೆ. * ಅಭ್ಯರ್ಥಿಗಳು ಸಿಜಿಪಿಎಸ್ಸಿ ಪೂರ್ವ ಅಧಿಕೃತ ವೆಬ್‌ಸೈಟ್‌ನಿಂದ ದೃಢೀಕರಿಸಲು ಸೂಚಿಸಲಾಗಿದೆ. ಅಪ್ಲಿಕೇಶನ್ ಶುಲ್ಕಗಳು ಇತರ ರಾಜ್ಯಗಳ ಅಭ್ಯರ್ಥಿಗಳು- ರೂ 400/ ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್, ಇಂಟರ್ನೆಟ್ ಬ್ಯಾಂಕಿಂಗ್, ಐಎಂಪಿಎಸ್, ಮೊಬೈಲ್ ವ್ಯಾಲೆಟ್ ಮೂಲಕ ಶುಲ್ಕ ಪಾವತಿಸಬಹುದು. ವಯಸ್ಸಿನ ಮಿತಿಗಳು * ಕನಿಷ್ಠ ವಯಸ್ಸು: 21 ವರ್ಷಗಳು * ಗರಿಷ್ಠ ವಯಸ್ಸು: 28 ವರ್ಷಗಳು (ಡಿಎಸ್ಪಿ ಹುದ್ದೆ) * ಗರಿಷ್ಠ ವಯಸ್ಸು: 30 ವರ್ಷಗಳು (ಇತರ ರಾಜ್ಯ ಅಭ್ಯರ್ಥಿಗಳು) * ಗರಿಷ್ಠ ವಯಸ್ಸು: 35 ವರ್ಷಗಳು (ಛತ್ತೀಸ್‌ಗಢ ನಿವಾಸ)

ವಾರ್ತಾ ಭಾರತಿ 2 Dec 2025 6:34 pm

ಕಲಬುರಗಿ -ಬೆಂಗಳೂರು ವಂದೇ ಭಾರತ್ ರೈಲು ಸಂಚಾರದ ವೇಳಾಪಟ್ಟಿಯಲ್ಲಿ ಬದಲಾವಣೆ: ಪ್ರಯಾಣಿಕರಿಗೆ ಹೊಸ ವರ್ಷದ ಉಡುಗೊರೆ ಎಂದ ಮಾಜಿ ಸಂಸದ ಉಮೇಶ್ ಜಾಧವ್

ಕಲಬುರಗಿ : ಬಹುಕಾಲದ ಬೇಡಿಕೆಯಾಗಿದ್ದ ಕಲಬುರಗಿ ಮತ್ತು ಬೆಂಗಳೂರು ನಡುವೆ ಸಂಚರಿಸುತ್ತಿದ್ದ ವಂದೇ ಭಾರತ್ ರೈಲು ಸಂಚಾರದ ಸಮಯವನ್ನು ಜನವರಿ ಒಂದರಿಂದ ಬದಲಾಯಿಸಲು ಕೇಂದ್ರ ರೈಲ್ವೆ ಇಲಾಖೆ ನಿರ್ಧರಿಸಿರುವುದು ಪ್ರಯಾಣಿಕರಿಗೆ ಹೊಸ ವರ್ಷದ ಉಡುಗೊರೆಯಾಗಿದೆ ಎಂದು ಮಾಜಿ ಸಂಸದ ಡಾ.ಉಮೇಶ್ ಜಾಧವ್ ಹೇಳಿದ್ದಾರೆ.   ಬಹುದಿನಗಳಿಂದ ಕಲಬುರಗಿಯಿಂದ ಬೆಂಗಳೂರಿಗೆ ಹೊರಡುವ ವಂದೇ ಭಾರತ್ ರೈಲಿನ ಸಮಯ ಬದಲಾವಣೆ ಮಾಡುವಂತೆ ಕೋರಿ ಪ್ರಯಾಣಿಕರು ಒತ್ತಾಯಿಸುತ್ತಿದ್ದು ರೈಲ್ವೆ ಇಲಾಖೆಯವರೊಂದಿಗೆ ಸತತವಾಗಿ ಚರ್ಚಿಸಿದ ಪರಿಣಾಮವಾಗಿ ಮುಂದಿನ ತಿಂಗಳು ಜನವರಿ 1 ರಿಂದ ಬೆಳಿಗ್ಗೆ 5.15 ರ ಬದಲು ಬೆಳಗ್ಗೆ 06:10 ಕ್ಕೆ ಹೊರಟು ಬೆಂಗಳೂರಿಗೆ ಮಧ್ಯಾಹ್ನ 02:10 ಕ್ಕೆ (ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೈಯಪ್ಪನಹಳ್ಳಿ) ತಲುಪಲಿದೆ ಎಂದು ಡಾ. ಉಮೇಶ್ ಜಾಧವ್ ತಿಳಿಸಿದ್ದಾರೆ ಬೆಂಗಳೂರಿನಿಂದ ಕಲಬುರಗಿಗೆ ಹೊರಡುವ ಸಮಯದಲ್ಲಿ ಯಾವುದೇ ಬದಲಾವಣೆ ಇಲ್ಲ. ಆದರೆ ಇದೀಗ ಈ ರೈಲು ಕಲಬುರಗಿಗೆ ಮೊದಲಿನಿಂದ 45 ನಿಮಿಷ ಬೇಗ ಅಂದರೆ ರಾತ್ರಿ 11.30 ಗಂಟೆಗೆ ಬದಲಾಗಿ ರಾತ್ರಿ 10.45 ಕ್ಕೆ ತಲುಪಲಿದೆ. ಒಟ್ಟಾರೆ ಪ್ರಯಾಣದ ಸಮಯ ಇದೀಗ 8 ಗಂಟೆಯಲ್ಲಿ ಪೂರ್ಣಗೊಳ್ಳಲಿದೆ. ಇನ್ನು ಮುಂದೆ ಪುಟ್ಟಪರ್ತಿ ಸತ್ಯಸಾಯಿ ದರ್ಶನ ಮಾಡುವ ಭಕ್ತರಿಗೆ ಅನುಕೂಲಕರವಾಗುವಂತೆ ಸತ್ಯಸಾಯಿ ಪ್ರಶಾಂತಿ ನಿಲಯಂ ನಲ್ಲಿ ವಂದೇ ಭಾರತ್ ಗೆ ನಿಲುಗಡೆ ಸೌಲಭ್ಯವನ್ನು ನೀಡಿರುವುದು ಇನ್ನಷ್ಟು ಖುಷಿಯ ಸಂಗತಿ ಎಂದು ಜಾಧವ್ ಹೇಳಿದ್ದಾರೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ, ರೈಲ್ವೆ ಖಾತೆಯ ಸಚಿವರಾದ ಅಶ್ವಿನಿ ವೈಷ್ಣವ್ ಮತ್ತು ರಾಜ್ಯ ಸಚಿವರಾದ ವಿ ಸೋಮಣ್ಣ ಅವರ ಪ್ರಯತ್ನದಿಂದಾಗಿ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದ್ದು ವಂದೇ ಭಾರತ್ ರೈಲು ಪ್ರಯಾಣಿಕರ ಬಹುಕಾಲದ ಬೇಡಿಕೆ ಈಡೇರಿದಂತಾಗಿದೆ. ಈ ಹಿಂದೆ ಬೆಳಗ್ಗೆ 5.10 ಕ್ಕೆ ಕಲಬುರಗಿಯಿಂದ ವಂದೇ ಭಾರತ್ ಸಂಚಾರ ಪ್ರಾರಂಭಿಸುತ್ತಿರುವುದರಿಂದ ಮಕ್ಕಳು, ಮಹಿಳೆಯರಿಗೆ ಹಾಗೂ ಹಿರಿಯ ನಾಗರಿಕರಿಗೆ ಸಂಚಾರಕ್ಕೆ ಅನಾನುಕೂಲವಾಗಿತ್ತು. ಬೀದರ್ ಮತ್ತಿತರ ಕಡೆಗಳಿಂದ ಆಗಮಿಸುತ್ತಿರುವ ಪ್ರಯಾಣಿಕರಿಗೂ ಕಷ್ಟ ಸಾಧ್ಯವಾಗಿದ್ದು ಇದೀಗ ನೂತನ ವೇಳಾಪಟ್ಟಿ ಅತ್ಯಂತ ಅನುಕೂಲಕರ ವಾಗಲಿದೆ. ಸಾರ್ವಜನಿಕರು ಒಂದೇ ಭಾರತ್ ರೈಲು ಸೇವೆಯನ್ನು ಪೂರ್ಣವಾಗಿ ಬಳಸಿಕೊಳ್ಳುವಂತೆ ಡಾ. ಜಾಧವ್ ತಿಳಿಸಿದ್ದಾರೆ .

ವಾರ್ತಾ ಭಾರತಿ 2 Dec 2025 6:30 pm

ಆಕ್ಸಿಜನ್ ದುರಂತ ಪ್ರಕರಣ | ಸಿಎಂಗೆ ಅಂತಿಮ ತನಿಖಾ ವರದಿ ಸಲ್ಲಿಸಿದ ನ್ಯಾ.ಕುನ್ಹಾ ಸಮಿತಿ

ಚಾಮರಾಜನಗರ : ಕಳೆದ ಐದು ವರ್ಷಗಳ ಹಿಂದೆ ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ನಡೆದಿದ್ದ ಆಕ್ಸಿಜನ್ ಕೊರತೆಯಿಂದಾಗಿ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸದಿಂತೆ ರಾಜ್ಯ ಸರಕಾರ ನಿಯೋಜಿಸಿದ್ದ ನಿವೃತ್ತ ನ್ಯಾ.ಮೈಕಲ್ ಡಿ ಕುನ್ಹಾ ರವರ ನೃತೃತ್ವದ ಸಮಿತಿ ಅಂತಿಮ ತನಿಖಾ ವರದಿಯನ್ನು ಬೆಂಗಳೂರಿನಲ್ಲಿ ಮುಖ್ಯಮಂತ್ರಿಗಳಿಗೆ ಸಲ್ಲಿಸಿದೆ. ಕಳೆದ ಐದು ವರ್ಷಗಳ ಹಿಂದೆ ಬಿಜೆಪಿ ಸರಕಾರದ ಅವಧಿಯಲ್ಲಿ ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಕೋವಿಡ್ ಸೊಂಕಿನಿಂದ ಬಳಲುತ್ತಿದ್ದ ಸೋಂಕಿತರಲ್ಲಿ ಆಕ್ಸಿಜನ್ ಕೊರತೆಯಿಂದ 36 ಮಂದಿ ಮೃತಪಟ್ಟಿದ್ದರು.  ಈ ಕುರಿತ ರಾಜ್ಯ ಸರಕಾರ ತನಿಖೆಗೆ ರಚಿಸಲಾಗಿದ್ದ ನ್ಯಾ. ಮೈಕಲ್ ಡಿ.ಕುನ್ಹಾನೇತೃತ್ವದ ಸಮಿತಿಯು ಇದೀಗ ಮುಖ್ಯಮಂತ್ರಿಗಳಿಗೆ ಅಂತಿಮ ವರದಿ ಸಲ್ಲಿಸಿದ್ದು, ದುರಂತ ಬಗ್ಗೆ ಯಾವ ಅಂಶಗಳನ್ನು ಉಲ್ಲೇಖಿಸಲಾಗಿದೆ ಹಾಗೂ ಯಾರನ್ನು ಹೊಣೆಗಾರರನ್ನಾಗಿ ಮಾಡಲಾಗಿದೆ ಎಂಬುದು ತೀವ್ರ ಕುತೂಹಲ ಕೆರಳಿಸಿದೆ. 2021ರ ಮೇ 2 ಹಾಗೂ 3 ರ ನಡುವ ನಡೆದ ಈ ದುರಂತದಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಹಲವು ರೋಗಿಗಳು ಮೃತಪಟ್ಟಿದ್ದರು. ಜಿಲ್ಲಾಡಳಿತ ಮತ್ತು ಆಸ್ಪತ್ರೆ ಅಧಿಕಾರಿಗಳ ನಿರ್ಲಕ್ಷ್ಯವೇ ದುರಂತಕ್ಕೆ ಕಾರಣ ಎಂದು ಆರೋಪ ಕೇಳಿ ಬಂದಿತ್ತು. ಈ ಘಟನೆ ಕುರಿತು ಆಗಿನ ಬಿಜೆಪಿ ಸರಕಾರ ನ್ಯಾಯಾಂಗ ಆಯೋಗದ ತನಿಖೆಗಾಗಿ ನ್ಯಾ. ಬಿ.ಎ.ಪಾಟೀಲ್ ಆಯೋಗ ರಚನೆ ಮಾಡಲಾಗಿತ್ತು. ಆದರೆ, ಆಯೋಗದ ವರದಿ ಬಗ್ಗೆ ಸಮಾಧಾನಗೊಳ್ಳದ ಈಗಿನ ಸರಕಾರ ಮರು ತನಿಖೆ ನಡೆಸಿ ವರದಿ ನೀಡುವಂತೆ ನ್ಯಾ.ಕುನ್ಹಾ ನೇತೃತ್ವದಲ್ಲಿ ತನಿಖಾ ಸಮಿತಿ ರಚಿಸಿತ್ತು. ಅದರಂತೆ ಸಮಿತಿಯು ತನಿಖೆ ನಡೆಸಿ ಅಂತಿಮ ವರದಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯರವರಿಗೆ ಸಲ್ಲಿಸಿದೆ. ನಿವೃತ್ತ ನಾ, ಮೈಕಲ್ ಡಿ. ಕುನ್ಹಾಅವರು ತನಿಖಾ ವರದಿ ಸಲ್ಲಿಸುವ ಸಂದರ್ಭದಲ್ಲಿ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್.ಪೊನ್ನಣ್ಣ, ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್‍ರವರು ಉಪಸ್ಥಿತರಿದ್ದರು.

ವಾರ್ತಾ ಭಾರತಿ 2 Dec 2025 6:27 pm

ಸರ್ಕಾರಿ ಜಾಗ ಒತ್ತುವರಿ ತೆರವಿಗೆ ತಿಂಗಳ ಗಡುವು ಕೊಟ್ಟ ಬೈರತಿ ಸುರೇಶ್, ಕಲುಷಿತ ನೀರು ಪೂರೈಸಿದರೆ ಕ್ರಮದ ಎಚ್ಚರಿಕೆ

ಬಳ್ಳಾರಿ ನಗರದಲ್ಲಿ ಪಾರ್ಕ್, ರಸ್ತೆ ಮತ್ತು ಸರ್ಕಾರಿ ಜಾಗದ ಒತ್ತುವರಿಯಾಗಿ ಸಾರ್ವಜನಿಕರ ದೈನಂದಿನ ಚಟುವಟಿಕೆಗಳಿಗೆ ತೊಂದರೆ ಆಗುತ್ತಿದೆ. ಈ ಹಿನ್ನೆಲೆಯಲ್ಲಿ ಸರ್ಕಾರಿ ಜಾಗ ಒತ್ತುವರಿ ತೆರವಿಗೆ ತಿಂಗಳ ಗಡುವು ನಗರಾಭಿವೃದ್ದಿ ಸಚಿವ ಬೈರತಿ ಸುರೇಶ್ ನೀಡಿದ್ದಾರೆ. ಅಷ್ಟೇ ಅಲ್ಲದೆ, ಜನರಿಗೆ ಕಲುಷಿತ ನೀರು ಪೂರೈಸಿದರೆ ಕ್ರಮದ ಎಚ್ಚರಿಕೆಯನ್ನು ಅಧಿಕಾರಿಗಳಿಗೆ ಇದೇ ಸಂದರ್ಭದಲ್ಲಿ ನೀಡಿದ್ದಾರೆ. ಮಂಗಳವಾರ ನಡೆದ ಸಭೆಯಲ್ಲಿ ಅವರು ಅಧಿಕಾರಿಗಳಿಗೆ ಏನಲ್ಲಾ ಸೂಚನೆಗಳನ್ನು ನೀಡಿದ್ದಾರೆ ಎಂಬುವುದರ ಸಂಪೂರ್ಣ ವಿವರ ಇಲ್ಲಿದೆ.

ವಿಜಯ ಕರ್ನಾಟಕ 2 Dec 2025 6:24 pm

ಯಾದಗಿರಿ| ರೈತರ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಡಿ.4ರಂದು ಬಿಜೆಪಿಯಿಂದ ಪ್ರತಿಭಟನೆ

ಯಾದಗಿರಿ: ರೈತರಿಗೆ ಸಮರ್ಪಕ ಬೆಳೆ ಪರಿಹಾರ ವಿತರಿಸುವಂತೆ ಹಾಗೂ ರೈತರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಡಿ.4 ರಂದು ನಗರದ ಸುಭಾಷಚಂದ್ರ ಬೋಸ ಸರ್ಕಲ್ ಬಳಿ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಬಸವರಾಜಪ್ಪ ವಿಭೂತಿಹಳ್ಳಿ ತಿಳಿಸಿದ್ದಾರೆ. ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ಸುದ್ದಿಗೊಷ್ಠಿಯಲ್ಲಿ ಮತನಾಡಿದ ಬಸವರಾಜಪ್ಪ ವಿಭೂತಿಹಳ್ಳಿ, ಬೆಳೆ ಪರಿಹಾರ ಸಂಪೂರ್ಣ ರೈತರಿಗೆ ಸಿಗುತ್ತಿಲ್ಲ. ತೊಗರಿ, ಭತ್ತದ ಕೇಂದ್ರಗಳು ತೆರೆದಿಲ್ಲ. ರೈತರಿಂದ ಖರೀದಿ ಮಾಡಲು ಇರುವ ಕಠಿಣ ನಿಯಮಗಳು ತೆರವುಗೊಳಿಸಬೇಕೆಂದು ಅವರು ರಾಜ್ಯ ಸರಕಾರಕ್ಕೆ ಆಗ್ರಹಿಸಿದರು. ಸುದ್ದಿಗೋಷ್ಠಿಯಲ್ಲಿ ಬಿಜೆಪಿ‌ ಮುಖಂಡರಾದ ರಾಚಣ್ಣಗೌಡ ಮುದ್ನಾಳ್, ಮಹೇಶ್ ಗೌಡ ಮುದ್ನಾಳ್ ಸಹಿತ ಹಲವರು ಉಪಸ್ಥಿತರಿದ್ದರು.

ವಾರ್ತಾ ಭಾರತಿ 2 Dec 2025 6:23 pm

ಯಾದಗಿರಿ| ರೈತನ ಜಮೀನಿನಲ್ಲಿ ಆಕಸ್ಮಿಕ ಬೆಂಕಿ: ಲಕ್ಷಾಂತರ ಮೌಲ್ಯದ ಹತ್ತಿ ಸುಟ್ಟು ಭಸ್ಮ

ಯಾದಗಿರಿ: ಸುರಪುರ ತಾಲೂಕಿನ ಕೆಂಭಾವಿ ಗ್ರಾಮದಲ್ಲಿ ರೈತನ ಜಮೀನಿನಲ್ಲಿ ಸಂಗ್ರಹಿಸಿಟ್ಟಿದ್ದ ಹತ್ತಿಗೆ ಆಕಸ್ಮಿಕ ಬೆಂಕಿ ತಗುಲಿ ಲಕ್ಷಾಂತರ ರೂ. ನಷ್ಟ ಸಂಭವಿಸಿದೆ.   ಶಿವಶರಣಪ್ಪ ಹುಣಶ್ಯಾಳ ಎಂಬ ರೈತನಿಗೆ ಸೇರಿದ ಸುಮಾರು 75 ಕ್ವಿಂಟಾಲ್ ಹತ್ತಿ ಬೆಂಕಿಗಾಹುತಿಯಾಗಿ 7 ಲಕ್ಷ ರೂ. ನಷ್ಟ ಆಗಿರುವುದು ಎಂದು ತಿಳಿದುಬಂದಿದೆ. ಸ್ಥಳಕ್ಕೆ ಅಗ್ನಿಶಾಮಕ ದಳ, ಕಂದಾಯ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಈ ಕುರಿತು ಕೆಂಭಾವಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ವಾರ್ತಾ ಭಾರತಿ 2 Dec 2025 6:18 pm

ತೆಲಂಗಾಣದಲ್ಲಿ ಪವನ್ ಕಲ್ಯಾಣ್ ಚಿತ್ರಗಳಿಗೆ ನಿಷೇಧದ ಬಿಸಿ; ಯಾಕೆ ? ಏನಾಯ್ತು?

ನಟ ಪವನ್ ಕಲ್ಯಾಣ್ ಅವರು ತೆಲಂಗಾಣ ಜನರ ವಿರುದ್ಧ ನೀಡಿರುವ ಅವಹೇಳನಕಾರಿ ಆರೋಪ ಈಗ ಅವರ ಚಿತ್ರಗಳಿಗೆ ಮುಳುವಾಗಿದೆ. ತೆಲಂಗಾಣ ಜನತೆಯ ಕ್ಷಮೆ ಕೇಳದಿದ್ದರೆ ತೆಲಂಗಾಣದಲ್ಲಿ ಅವರ ಚಿತ್ರಗಳನ್ನು ಬಿಡುಗಡೆಗೊಳಿಸುವುದಿಲ್ಲ ಎಂದು ತೆಲಂಗಾಣದ ಇಬ್ಬರು ಸಚಿವರು ಎಚ್ಚರಿಕೆ ನೀಡಿದ್ದಾರೆ. ಈ ಬಗ್ಗೆ ಪವನ್ ಕಲ್ಯಾಣ್ ಅವರಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.

ವಿಜಯ ಕರ್ನಾಟಕ 2 Dec 2025 6:15 pm

ಆಕ್ಸ್ಫರ್ಡ್ 2025ರ ಪದ ‘ರೇಜ್ ಬೇಟ್’ ಎಂದರೇನು?

ಸಾರ್ವಜನಿಕವಾಗಿ ಮತದಾನದ ನಂತರ ಅಂತಿಮವಾಗಿ ‘ರೇಜ್ ಬೇಟ್’ ವರ್ಷದ ಪದವಾಗಿ ಆಯ್ಕೆಯಾಗಿದೆ. ಡಿಜಿಟಲ್ ಪರಿಸರದಲ್ಲಿ ತೊಡಗಿಸಿಕೊಳ್ಳುವಿಕೆ ಹೆಚ್ಚಿಸಲು ಒತ್ತಡ ಹೇರುವ ತಂತ್ರವನ್ನು ಈ ಪದ ಉಲ್ಲೇಖಿಸುತ್ತದೆ. 2025ರ ವರ್ಷದ ಆಕ್ಸ್ಫರ್ಡ್ ಪದವಾಗಿ ‘ರೇಜ್ ಬೇಟ್’ ಅನ್ನು ಆಯ್ಕೆ ಮಾಡಲಾಗಿದೆ. ‘ರೇಜ್ ಬೇಟ್’ ಪದದ ಬಳಕೆ ಹೆಚ್ಚಾಗುತ್ತಿರುವುದು ಆನ್ಲೈನ್ ವಂಚನೆಯ ಕುಶಲ ತಂತ್ರಗಳ ಬಗ್ಗೆ ಜನರಲ್ಲಿನ ಜಾಗೃತಿಯನ್ನು ಸೂಚಿಸುತ್ತಿದೆ ಎಂದು ಆಕ್ಸ್ಫರ್ಡ್ ಭಾಷೆಗಳ ಅಧ್ಯಕ್ಷ ಕ್ಯಾಸ್ಪರ್ ಗ್ರಾಥ್ವೋಲ್ ತಿಳಿಸಿದ್ದಾರೆ. 2025 ಅನ್ನು ರೂಪಿಸಿದ ಕೆಲವು ಮನಸ್ಥಿತಿಗಳು ಮತ್ತು ಸಂಭಾಷಣೆಗಳನ್ನು ಪ್ರತಿಬಿಂಬಿಸುವ ಪದಗಳನ್ನು ಆಕ್ಸ್ಫರ್ಡ್ ವ್ಯಾಖ್ಯಾನಿಸುತ್ತದೆ. ಅಂತಹ ಉದ್ದೇಶದಿಂದ ಕೆಲವು ಪದಗಳನ್ನು ಆರಿಸಿಕೊಂಡಿದೆ. ವರ್ಷದ ಇತರ ಎರಡು ಪದಗಳಾದ ‘ಔರಾ ಫಾರ್ಮಿಂಗ್’ ಮತ್ತು ‘ಬಯೋ ಹ್ಯಾಕ್’ ನಡುವೆ ‘ರೇಜ್ ಬೇಟ್’ ಮೊದಲ ಸ್ಥಾನಗಳಿಸಿದೆ. ಡಿಜಿಟಲ್ ಪರಿಸರದಲ್ಲಿ ತೊಡಗಿಸಿಕೊಳ್ಳುವಿಕೆ ಹೆಚ್ಚಿಸಲು ಬಳಸುವ ತಂತ್ರವನ್ನು ಈ ಪದ ಉಲ್ಲೇಖಿಸುತ್ತದೆ. ಸಾರ್ವಜನಿಕವಾಗಿ ಮತದಾನದ ನಂತರ ಅಂತಿಮವಾಗಿ ‘ರೇಜ್ ಬೇಟ್’ ಆಯ್ಕೆಯಾಗಿದೆ. ‘ರೇಜ್ ಬೇಟ್’ ಎಂದರೇನು? ನಿಮ್ಮ ಸಾಮಾಜಿಕ ಮಾಧ್ಯಮದ ಫೀಡ್ ಅನ್ನು ನೋಡುತ್ತಾ ಹೋಗುತ್ತಿದ್ದಂತೆ ನಿಮಗೆ ಕಿರಿಕಿರಿ ಹೆಚ್ಚಾಗುತ್ತದೆಯೆ? ಹಾಗಿದ್ದರೆ, ನೀವು ರೇಜ್ ಬೇಟ್ನ ಸಂತ್ರಸ್ತರಾಗಿದ್ದೀರಿ ಎಂದು ಅರ್ಥ. ಆನ್ಲೈನ್ನಲ್ಲಿ ತೊಡಗಿಸಿಕೊಳ್ಳುವಿಕೆಯನ್ನು ಹೆಚ್ಚಿಸಲು ಬಳಸುವ ಕುಶಲ ತಂತ್ರಗಳನ್ನು ವಿವರಿಸುವ ಪದವಿದು. ಕಳೆದ ಒಂದು ವರ್ಷದಲ್ಲಿ ಈ ಪದದ ಬಳಕೆ ಮೂರುಪಟ್ಟು ಹೆಚ್ಚಾಗಿದೆ ಎಂದು ಆಕ್ಸ್ಫರ್ಡ್ ತಿಳಿಸಿದೆ. ನಿಮಗೆ ‘ರೇಜ್ ಬೇಟ್’ ಪದದ ಅರ್ಥ ಗೊತ್ತಿಲ್ಲದಿದ್ದರೂ ನೀವು ಸಾಮಾಜಿಕ ಮಾಧ್ಯಮದ ಬಳಕೆದಾರರಾಗಿದ್ದಲ್ಲಿ ನಿಮಗೆ ಅದರ ಅನುಭವವಾಗಿರಬಹುದು. ಆಕ್ಸ್ಫರ್ಡ್ ಇಂಗ್ಲಿಷ್ ನಿಘಂಟು ಪ್ರಕಟಿಸುವ ಆಕ್ಸ್ಫರ್ಡ್ ಯುನಿವರ್ಸಿಟಿ ಪ್ರೆಸ್ ಹೇಳಿರುವ ಪ್ರಕಾರ, ಇದನ್ನು “ಉದ್ದೇಶಪೂರ್ವಕವಾಗಿ ಕೋಪ ಅಥವಾ ಆಕ್ರೋಶವನ್ನು ಹುಟ್ಟುಹಾಕಲು, ನಿರಾಶಾದಾಯಕ, ಪ್ರಚೋದನಕಾರಿ ಅಥವಾ ಆಕ್ರಮಣಕಾರಿಯಾಗಿ ವಿನ್ಯಾಸಗೊಳಿಸಲಾದ ಆನ್ಲೈನ್ ವಿಷಯ” ಎಂದು ವ್ಯಾಖ್ಯಾನಿಸಲಾಗಿದೆ. ಇದು ಮತ್ತೊಂದು ಪದ ‘ಕ್ಲಿಕ್ಬೈಟ್’ಗೆ ಸಮಾನವಾಗಿದೆ. ‘ಕ್ಲಿಕ್ಬೈಟ್’ ಎಂದರೆ ಒಂದು ಲೇಖನ ಅಥವಾ ವಿಡಿಯೋವನ್ನು ವೀಕ್ಷಿಸಲು ರೋಚಕ ಹೆಡ್ಲೈನ್ ನೀಡಿ ಬಳಕೆದಾರರನ್ನು ಆಕರ್ಷಿಸುವುದು ಆಗಿರುತ್ತದೆ. ಆದರೆ ‘ರೇಜ್ ಬೇಟ್’ ಪದ ನಿರ್ದಿಷ್ಟವಾಗಿ ಗುರಿ ಮಾಡಿ ಕಂಟೆಂಟ್ ನೀಡುವುದಕ್ಕೆ ಸಂಬಂಧಪಟ್ಟಿದೆ. ಮೊದಲು ಕ್ಲಿಕ್ಗಳಿಂದ ಕುತೂಹಲಕ್ಕೆ ಎಡೆ ಮಾಡುವತ್ತ ಇಂಟರ್ನೆಟ್ ಗಮನಹರಿಸಿತ್ತು. ಆದರೆ ಇದೀಗ ಭಾವನೆಗಳು ಮತ್ತು ಅದಕ್ಕೆ ಹೇಗೆ ಪ್ರತಿಕ್ರಿಯಿಸುತ್ತೇವೆ ಎಂಬುದನ್ನು ಪ್ರಭಾವಿಸುವ ನಾಟಕೀಯ ಬದಲಾವಣೆಯನ್ನು ಕಂಡಿದ್ದೇವೆ. ಆದರೆ ‘ರೇಜ್ ಬೇಟ್’ ಪದ ಹೆಚ್ಚು ಚಾಲ್ತಿಯಲ್ಲಿರುವ ಕಾರಣದಿಂದ ಜನರಿಗೆ ಆನ್ಲೈನ್ ಕುಶಲತೆ ಅರ್ಥವಾಗುತ್ತಿದೆ ಮತ್ತು ಜಾಗೃತಿ ಬೆಳೆಯುತ್ತಿದೆ ಎಂದು ಅರ್ಥಮಾಡಿಕೊಳ್ಳಬಹುದು. “ರೇಜ್ ಬೇಟ್ ಪದದ ಪ್ರಯೋಗ ಹೆಚ್ಚಾಗಿರುವುದನ್ನು ಕಂಡರೆ, ತಂತ್ರಜ್ಞಾನ ಚಾಲಿತ ಜಗತ್ತಿನಲ್ಲಿ ಆನ್ಲೈನ್ ಸಂಸ್ಕೃತಿಯ ತೀವ್ರತೆಯ ನಡುವೆ ಮಾನವನಾಗಿರುವುದು ಎಂದರೇನು ಎನ್ನುವತ್ತ ಸಹಜವಾದ ಸಂವಾದದತ್ತ ಮುನ್ನುಗ್ಗುತ್ತಿದ್ದೇವೆ ಎನ್ನುವ ಅನುಭವವಾಗುತ್ತಿದೆ” ಎಂದು ಕ್ಯಾಸ್ಪರ್ ಗ್ರಾಥ್ವೋಲ್ ಹೇಳಿದ್ದಾರೆ.

ವಾರ್ತಾ ಭಾರತಿ 2 Dec 2025 6:14 pm

Chikkamagaluru | ಅಯ್ಯಪ್ಪ ಮಾಲೆ ಧರಿಸಿ ಬಂದವರನ್ನು ಕಾಲೇಜಿನಿಂದ ಹೊರ ಕಳುಹಿಸಿದ ಪ್ರಾಂಶುಪಾಲರು; ಆರೋಪ

ಚಿಕ್ಕಮಗಳೂರು : ಅಯ್ಯಪ್ಪಸ್ವಾಮಿ ಮಾಲೆ ಧರಿಸಿ ಕಾಲೇಜಿಗೆ ಬಂದಿದ್ದ ಮೂವರು ವಿದ್ಯಾರ್ಥಿಗಳನ್ನು ಪ್ರಾಂಶುಪಾಲರು ಕಾಲೇಜಿನಿಂದ ಹೊರಕಳಿಸಿದ ಘಟನೆ ನಗರದ ಎಂಇಎಸ್‌ ಕಾಲೇಜಿನಲ್ಲಿ ನಡೆದಿದೆ. ಕಾಲೇಜಿನ ನಡೆಗೆ ಹಿಂದುತ್ವ ಸಂಘಟನೆಗಳ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮೊದಲ ವರ್ಷದ ಪಿಯುಸಿ ಓದುತ್ತಿರುವ ಮೂವರು ವಿದ್ಯಾರ್ಥಿಗಳು ಅಯ್ಯಪ್ಪ ಸ್ವಾಮಿ ಮಾಲೆ ಧರಿಸಿ ಸೋಮವಾರ ಕಾಲೇಜಿಗೆ ಬಂದಿದ್ದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ಪ್ರಾಂಶುಪಾಲರು ವಿದ್ಯಾರ್ಥಿಗಳನ್ನು ತರಗತಿಯಲ್ಲಿ ಕೂರಲು ಅವಕಾಶ ಕೊಡದೆ ಹೊರಗೆ ಕಳಿಸಿದ್ದಾರೆ ಎಂದು ಆರೋಪಿಸಲಾಗಿದೆ. ಅಲ್ಲದೆ, ಅಯ್ಯಪ್ಪ ಸ್ವಾಮಿ ಮಾಲೆ ತೆಗೆದು ಬರುವಂತೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ಘಟನೆ ಬೆಳಕಿಗೆ ಬರುತ್ತಿದ್ದಂತೆ ಕಾಲೇಜಿಗೆ ಹಿಂದುತ್ವ ಸಂಘಟನೆಗಳ ಮುಖಂಡರು ಆಗಮಿಸಿ ಪ್ರಾಂಶುಪಾಲರ ತಾರತಮ್ಯದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ಪ್ರಾಂಶುಪಾಲರು, ಕಾಲೇಜಿನಲ್ಲಿ ಸಮವಸ್ತ್ರ ಬಿಟ್ಟರೆ ಬೇರೆ ಯಾವುದೇ ವಸ್ತ್ರಸಂಹಿತೆಗೆ ಅವಕಾಶವಿಲ್ಲ ಎಂದು ಸಮಜಾಯಿಷಿ ನೀಡಿದ್ದಾರೆ. ಅದಕ್ಕೆ ಅಸಮಾಧಾನಗೊಂಡ ಹಿಂದುತ್ವ ಸಂಘಟನೆಗಳ ಮುಖಂಡರು, ಮಾಲೆ ಧರಿಸಿದ ಹುಡುಗರು ಕಾಲೇಜಿನ ಸಮವಸ್ತ್ರದಲ್ಲಿಯೇ ಬಂದಿದ್ದಾರೆ. ಸಮವಸ್ತ್ರದ ಮೇಲೆ ಒಂದು ಕಪ್ಪುವಸ್ತ್ರ ಧರಿಸಿದ್ದಾರೆ ಅಷ್ಟೇ. ಇದು ನಿಮ್ಮ ವಸ್ತ್ರಸಂಹಿತೆಯ ಉಲ್ಲಂಘನೆ ಹೇಗಾಗುತ್ತದೆ?, ಉದ್ದೇಶ ಪೂರ್ವಕವಾಗಿ ಗುರಿಯಾಗಿರಿಸಿಕೊಂಡು ಈ ರೀತಿ ಕ್ರಮ ಕೈಗೊಳ್ಳುತ್ತಿದ್ದೀರಾ ಎಂದು ಆರೋಪಿಸಿ ಪ್ರಾಂಶುಪಾಲರೊಂದಿಗೆ ವಾಗ್ವಾದ ನಡೆಸಿದ್ದಾರೆ. ಬಳಿಕ ಮಾಲೆ ಧರಿಸಿ ಬಂದಿದ್ದ ವಿದ್ಯಾರ್ಥಿಗಳನ್ನು ಕಾಲೇಜಿಗೆ ಹೋಗಲು ಪ್ರಾಂಶುಪಾಲರು ಅನುಮತಿ ನೀಡಿದ್ದರಿಂದ ಪರಿಸ್ಥಿತಿ ತಿಳಿಗೊಂಡಿದೆ.

ವಾರ್ತಾ ಭಾರತಿ 2 Dec 2025 6:14 pm

ರಾಯಚೂರು| ಕಾಟನ್ ಜಿನ್ನಿಂಗ್ ಫ್ಯಾಕ್ಟರಿಯಲ್ಲಿ ಅಗ್ನಿ ಅವಘಡ

ರಾಯಚೂರು: ದೇವದುರ್ಗ ಪಟ್ಟಣದ ಕೊಪ್ಪರ ರಸ್ತೆಯಲ್ಲಿರುವ ಶ್ರೀ ಬಸವೇಶ್ವರ ಕಾಟನ್ ಜಿನ್ನಿಂಗ್ ಫ್ಯಾಕ್ಟರಿಯಲ್ಲಿ ಅಗ್ನಿ ಅವಘಡ ಸಂಭವಿಸಿದೆ.  ಅವಘಡದಲ್ಲಿ ಸುಮಾರು 1,500 ಸಾವಿರ ಕ್ವಿಂಟಲ್ ಹತ್ತಿ ಸುಟ್ಟು ಕರಕಲಾಗಿದೆ.  ಇದರ ಮೌಲ್ಯ ಸುಮಾರು 1 ಕೋಟಿ ರೂ. ಎಂದು ಅಂದಾಜಿಸಲಾಗಿದೆ.   ದೇವದುರ್ಗ ಮತ್ತು ಅರಕೇರ ಅಗ್ನಿ ಶಾಮಕ ದಳದ ಸಿಬ್ಬಂದಿ ಮತ್ತು ಸ್ಥಳಿಯ ಠಾಣೆ ಪೊಲೀಸರು ಸ್ಥಳಕ್ಕೆ ತೆರಳಿ ಬೆಂಕಿ ನಂದಿಸಿದ್ದಾರೆ. 

ವಾರ್ತಾ ಭಾರತಿ 2 Dec 2025 6:12 pm

SIR ವಿರುದ್ಧ ಖರ್ಗೆ, ಸೋನಿಯಾ, ರಾಹುಲ್ ಗಾಂಧಿ ಮತ್ತಿತರರಿಂದ ಸಂಸತ್ ಭವನದೆದುರು ಪ್ರತಿಭಟನೆ

ಹೊಸದಿಲ್ಲಿ: ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತಿತರ ವಿರೋಧ ಪಕ್ಷಗಳ ನಾಯಕರು ವಿಶೇಷ ತೀವ್ರ ಮತಪಟ್ಟಿ ಪರಿಷ್ಕರಣೆ ಅಭಿಯಾನದ (SIR) ವಿರುದ್ಧ ಸಂಸತ್ ಭವನದೆದುರು ಮಂಗಳವಾರ ಪ್ರತಿಭಟನೆ ನಡೆಸಿದ್ದು, ಚುನಾವಣಾ ಸುಧಾರಣೆಗಳ ಬಗ್ಗೆ ಸಂಸತ್ತಿನಲ್ಲಿ ಚರ್ಚೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ. ಈ ವೇಳೆ ವಿರೋಧ ಪಕ್ಷಗಳ ನಾಯಕರು ಮತಪಟ್ಟಿಗಳ ವಿಶೇಷ ತೀವ್ರ ಮತಪಟ್ಟಿ ಪರಿಷ್ಕರಣೆಯ ವಿರುದ್ಧ ಪೋಸ್ಟರ್‌ ಗಳನ್ನು ಹಿಡಿದುಕೊಂಡಿದ್ದರು. ಇದರೊಂದಿಗೆ, SIR ನಿಲ್ಲಿಸಿ - ಮತಗಳ್ಳತನವನ್ನು ಸ್ಥಗಿತಗೊಳಿಸಿ ಎಂಬ ಬೃಹತ್ ಬ್ಯಾನರ್ ಅನ್ನೂ ಪ್ರದರ್ಶಿಸಿದರು. ಇದೇ ವೇಳೆ ಸರಕಾರದ ವಿರುದ್ಧ ಘೋಷಣೆಗಳನ್ನೂ ಕೂಗಿದರು. ಸಂಸತ್ ಭವನದ ಮಕರ ದ್ವಾರದೆದುರು ನಡೆದ ಈ ಪ್ರತಿಭಟನೆಯಲ್ಲಿ ಖರ್ಗೆ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ವಾದ್ರಾ, ಡಿಎಂಕೆ ನಾಯಕರಾದ ಕನಿಮೋಳಿ ಹಾಗೂ ಟಿ.ಆರ್.ಬಾಲು ಸೇರಿದಂತೆ ವಿವಿಧ ವಿರೋಧ ಪಕ್ಷಗಳ ನಾಯಕರು ಪಾಲ್ಗೊಂಡಿದ್ದರು

ವಾರ್ತಾ ಭಾರತಿ 2 Dec 2025 6:10 pm

ಮೀಶೋ ಐಪಿಒಗೆ ಎಲ್ಲಿಲ್ಲದ ಬೇಡಿಕೆ, ಆ್ಯಂಕರ್ ಸುತ್ತಿನಲ್ಲಿ ಬರೋಬ್ಬರಿ ₹80,000 ಕೋಟಿ ಮೌಲ್ಯದ ಬಿಡ್ ಸಲ್ಲಿಕೆ!

ಪ್ರಖ್ಯಾತ ಇ-ಕಾಮರ್ಸ್ ಕಂಪನಿ ಮೀಶೋ ಷೇರು ಮಾರುಕಟ್ಟೆ ಪ್ರವೇಶಿಸಲು ಸಜ್ಜಾಗಿದ್ದು, ಐಪಿಒ ಆರಂಭಕ್ಕೂ ಮುನ್ನವೇ ಹೂಡಿಕೆದಾರರಿಂದ ಅಭೂತಪೂರ್ವ ಸ್ಪಂದನೆ ವ್ಯಕ್ತವಾಗಿದೆ. ಕಂಪನಿಯ ಆ್ಯಂಕರ್ ಹೂಡಿಕೆದಾರರ ವಿಭಾಗಕ್ಕೆ ನಿಗದಿಪಡಿಸಿದ ಪಾಲಿಗಿಂತ ಬರೋಬ್ಬರಿ 32 ಪಟ್ಟು ಹೆಚ್ಚು ಬೇಡಿಕೆ ಬಂದಿದೆ. ಎಸ್‌ಬಿಐ ಮ್ಯೂಚುವಲ್ ಫಂಡ್, ಟೈಗರ್ ಗ್ಲೋಬಲ್ ಮತ್ತು ಬ್ಲ್ಯಾಕ್‌ರಾಕ್‌ನಂತಹ ಜಾಗತಿಕ ದಿಗ್ಗಜ ಸಂಸ್ಥೆಗಳು ಸೇರಿ ಸುಮಾರು 80,000 ಕೋಟಿ ರೂ. ಮೌಲ್ಯದ ಬಿಡ್‌ಗಳನ್ನು ಸಲ್ಲಿಸಿವೆ. ಡಿಸೆಂಬರ್ 3 ರಂದು ಈ ಐಪಿಒ ಸಾರ್ವಜನಿಕರಿಗೆ ಮುಕ್ತವಾಗಲಿದೆ.

ವಿಜಯ ಕರ್ನಾಟಕ 2 Dec 2025 6:03 pm

12 ರೂ. ಅಷ್ಟೇ ಎಂದು BESCOM ನಕಲಿ ಆ್ಯಪ್ ಡೌನ್‌ಲೋಡ್‌ ಮಾಡಿಕೊಂಡು 14 ಲಕ್ಷ ರೂ. ಕಳೆದುಕೊಂಡ ಬೆಂಗಳೂರು ಪ್ರೋಫೆಸರ್!

ಬೆಂಗಳೂರಿನಲ್ಲಿ ನಿವೃತ್ತ ಪ್ರಾಧ್ಯಾಪಕಿಯೊಬ್ಬರು ನಕಲಿ ಬೆಸ್ಕಾಂ ಆ್ಯಪ್ ಡೌನ್‌ಲೋಡ್ ಮಾಡಿಕೊಂಡು 14.6 ಲಕ್ಷ ರೂ. ಕಳೆದುಕೊಂಡಿದ್ದಾರೆ. ವಿದ್ಯುತ್ ಬಿಲ್ ಅಪ್‌ಡೇಟ್ ನೆಪದಲ್ಲಿ ಬಂದ ಕರೆಗೆ ಮರುಳಾಗಿ, ಲಿಂಕ್ ಕ್ಲಿಕ್ ಮಾಡಿ ಆ್ಯಪ್ ಇನ್‌ಸ್ಟಾಲ್ ಮಾಡಿದ್ದರಿಂದ ಬ್ಯಾಂಕ್ ಖಾತೆಯಿಂದ ಹಣ ಮಾಯವಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ವಿಜಯ ಕರ್ನಾಟಕ 2 Dec 2025 6:00 pm

1,000 ಕೋಟಿ ಒಡೆಯ ವಿರಾಟ್ ಕೊಹ್ಲಿ ಅಭಿಮಾನಿಗಳಿಗೆ ದಿಢೀರ್ ಆಘಾತ, ಕಿಂಗ್ ಕೊಹ್ಲಿ ಬೆನ್ನಿಗೆ... Virat Kohli

ಕ್ರಿಕೆಟ್ ಲೋಕದ ಕಿಂಗ್ ಅಂತಾ ಬಿರುದು ಪಡೆದು ಅಭಿಮಾನಿಗಳ ಹೃದಯ ಗೆದ್ದಿರುವ ವಿರಾಟ್ ಕೊಹ್ಲಿ ಮೊನ್ನೆ ಮೊನ್ನೆ ತಾನೆ ಭರ್ಜರಿ 130 ರನ್ ಬಾರಿಸಿ ಇತಿಹಾಸ ನಿರ್ಮಿಸಿದ್ದರು. ಕೋಟಿ &ಕೋಟಿ ಅಭಿಮಾನಿಗಳು ಕುಣಿದು ಕುಪ್ಪಳಿಸಿದ್ದರು. ಅಲ್ದೆ ಕಿಂಗ್ ಕೊಹ್ಲಿ ಮತ್ತಷ್ಟು ಸೆಂಚ್ಯುರಿ ಬಾರಿಸಿ ಇನ್ನಷ್ಟು ದಾಖಲೆ ಪುಡಿ ಪುಡಿ ಮಾಡೋದು ಗ್ಯಾರಂಟಿ ಅಂತಾ ಕಾಯುತ್ತಿದ್ದರು. ಹೀಗಿದ್ದಾಗಲೇ,

ಒನ್ ಇ೦ಡಿಯ 2 Dec 2025 5:58 pm

ಸದ್ಯ ಸಿದ್ದರಾಮಯ್ಯ ಹಾಗೂ ಡಿಕೆಶಿ ಇಬ್ಬರೇ ತಿಂಡಿ ತಿನ್ನುತ್ತಿದ್ದಾರೆ, ನನ್ನನ್ನು ಕರೆದರೆ ಹೋಗ್ತೇನೆ: ಜಿ ಪರಮೇಶ್ವರ್

ಸದ್ಯ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಇಬ್ಬರೇ ತಿಂಡಿ ತಿನ್ನುತ್ತಿದ್ದಾರೆ, ನನ್ನನ್ನು ಕರೆದರೆ ಹೋಗ್ತೇನೆ. ಹೀಗಂದವರು ಗೃಹ ಸಚಿವ ಡಾ. ಜಿ ಪರಮೇಶ್ವರ್. ಬೆಂಗಳೂರಿನಲ್ಲಿ ಮಂಗಳವಾರ ಮಾತನಾಡಿದ ಅವರು, ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಅವರ ಬ್ರೇಕ್ ಫಾಸ್ಟ್ ಮೀಟಿಂಗ್ ಬಗ್ಗೆ ತಿರುಗೇಟು ನೀಡಿದರು. ಶನಿವಾರ ಸಿದ್ದರಾಮಯ್ಯ ನಿವಾಸದಲ್ಲಿ ಉಪಹಾರ ಸಭೆ ಹಮ್ಮಿಕೊಳ್ಳಲಾಗಿತ್ತು. ಅದರ ಬೆನಲ್ಲೇ ಮಂಗಳವಾರ ಡಿಸಿಎಂ ಡಿಕೆ ಶಿವಕುಮಾರ್ ಅವರ ನಿವಾಸದಲ್ಲಿ ಉಪಹಾರ ಸಭೆ ಹಮ್ಮಿಕೊಳ್ಳಲಾಗಿದೆ. ಇದು ಚರ್ಚೆಗೆ ಗ್ರಾಸವಾಗಿದೆ.

ವಿಜಯ ಕರ್ನಾಟಕ 2 Dec 2025 5:55 pm

ಮಂಗಳೂರು:‌ ಮುಸ್ಲಿಂ ಸೆಂಟ್ರಲ್ ಕಮಿಟಿಯ ವತಿಯಿಂದ ಸ್ಪೀಕರ್ ಯು.ಟಿ. ಖಾದರ್‌ ಗೆ ಸನ್ಮಾನ

ಮಂಗಳೂರು: ಪ್ರತಿಷ್ಠಿತ ಬೆಂಗಳೂರು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪದವಿ ಹಾಗೂ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ನೀಡುವ ಸಿಲ್ವರ್ ಎಲಿಫೆಂಟ್ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿಗೆ ಪಾತ್ರರಾಗಿರುವ ಸ್ಪೀಕರ್ ಡಾ. ಯು.ಟಿ. ಖಾದರ್ ಅವರಿಗೆ ದ.ಕ. ಮತ್ತು ಉಡುಪಿ ಜಿಲ್ಲಾ ಮುಸ್ಲಿಂ ಸೆಂಟ್ರಲ್ ಕಮಿಟಿಯ ವತಿಯಿಂದ ಸಂಸ್ಥೆಯ ಅಧ್ಯಕ್ಷರು ಹಾಗೂ ಮಾಜಿ ವಿಧಾನ ಪರಿಷತ್ ಸದಸ್ಯರಾದ ಅಲ್ ಹಾಜ್ ಕೆ ಎಸ್ ಮೊಹಮ್ಮದ್ ಮಸೂದ್ ರವರು ಅವರ ನಿವಾಸದಲ್ಲಿ ಮಂಗಳವಾರ ಸನ್ಮಾನಿಸಿದರು. ಈ ಸಂದರ್ಭದಲ್ಲಿ ಉಪಾಧ್ಯಕ್ಷರುಗಳಾದ ಮಾಜಿ ಮೇಯರ್ ಕೆ ಅಶ್ರಫ್, ಹಾಜಿ ಎಸ್. ಎಂ. ರಶೀದ್, ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಹನೀಫ್, ಕಾರ್ಯದರ್ಶಿಗಳಾದ ಹಾಜಿ ಅಹಮದ್ ಬಾವ ಪಡೀಲ್, ಹಾಜಿ ಬಿ ಅಬೂಬಕ್ಕರ್, ಡಿ.ಎಂ. ಅಸ್ಲಂ, ಡಾ. ಮೊಹಮ್ಮದ್ ಆರಿಫ್ ಮಸೂದ್, ಹಾಜಿ ರಿಯಾಝುದ್ದೀನ್, ಹಾಜಿ ಐ. ಮೊಯಿದಿನಬ್ಬ, ಸಿ.ಎಂ. ಹನೀಫ್, ನ್ಯಾಯವಾದಿ ನೂರುದ್ದೀನ್ ಸಾಲ್ಮರ, ಅಬ್ಬಾಸ್ ಉಚ್ಚಿಲ್, ಮಾಜಿ ಕಾರ್ಪೊರೇಟ್ ಗಳಾದ ಅಬ್ದುಲ್ ಲತೀಫ್ ಕಂದಕ್, ಹಾಜಿ ಶಂಸುದ್ದೀನ್ ಹೆಚ್.ಬಿ.ಟಿ, ಶಂಸುದ್ದೀನ್ ಬಂದರ್, ಮುಹಮ್ಮದ್ ಸಲೀಂ ಮನ್ನತ್, ಮೊದಲಾದವರು ಉಪಸ್ಥಿತರಿದ್ದರು

ವಾರ್ತಾ ಭಾರತಿ 2 Dec 2025 5:51 pm

\ಮಜಾವಾದಿ ಸಿದ್ದರಾಮಯ್ಯ ಕೈಯಲ್ಲಿ ಅಂದು ₹70 ಲಕ್ಷದ ವಾಚ್‌, ಇಂದು ₹43 ಲಕ್ಷದ್ದು\

ಸಿಎಂ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್‌ ಇಂದು ಮತ್ತೊಮ್ಮೆ ಬ್ರೇಕ್‌ಫಾಸ್ಟ್‌ ಮೀಟಿಂಗ್‌ ನಡೆಸಿದ್ದಾರೆ. ಇದರ ಬೆನ್ನಲ್ಲೇ ಸಿದ್ದರಾಮಯ್ಯ ಅವರ ಕೈಗಡಿಯಾರದ ವಿಚಾರವಾಗಿ ಬಿಜೆಪಿ ವಾಗ್ದಾಳಿ ನಡೆಸಿದೆ. ಅಂದು ₹70 ಲಕ್ಷ, ಇಂದು ₹43 ಲಕ್ಷ, ಕೈ ಗಡಿಯಾರ ಬದಲಾಗಿದೆ ಹೊರತು, ಮಜಾವಾದಿಯ ಮನಸ್ಥಿತಿ ಬದಲಾಗಿಲ್ಲ. ಸಮಾಜವಾದದ ಮುಖವಾಡ ಧರಿಸಿ ಮಜಾವಾದದ ಜೀವನ ನಡೆಸುತ್ತಿರುವ ಸಿದ್ದರಾಮಯ್ಯನವರೇ, ಇದೇನಾ ನಿಮ್ಮ ಸಾಮಾಜಿಕ

ಒನ್ ಇ೦ಡಿಯ 2 Dec 2025 5:49 pm

Chikkamagaluru | ಚಾಕುವಿನಿಂದ ಇರಿದು ಮಹಿಳೆಯ ಹತ್ಯೆ

ಚಿಕ್ಕಮಗಳೂರು : ಪತಿಯಿಂದ ಬೇರ್ಪಟ್ಟು ತವರು ಮನೆಯಲ್ಲಿ ವಾಸವಾಗಿದ್ದ ಮಹಿಳೆಯೊಬ್ಬರನ್ನು ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ತಾಲೂಕಿನ ಆಲ್ದೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮಂಗಳವಾರ ವರದಿಯಾಗಿದೆ. ಆಲ್ದೂರು ಪಟ್ಟಣ ಸಮೀಪದ ಅರೇನೂರು ಗ್ರಾಮದ ನೋಣಯ್ಯ, ಕವಿತಾ, ದಂಪತಿಯ ಪುತ್ರಿ ಸಂಧ್ಯಾ ರವಿ (32) ಕೊಲೆಯಾದ ಮಹಿಳೆಯಾಗಿದ್ದು, ಆಲ್ದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಂಧ್ಯಾಳನ್ನು ಕೆಲ ವರ್ಷಗಳ ಹಿಂದೆ ರವಿ ಎಂಬವರಿಗೆ ವಿವಾಹ ಮಾಡಿಕೊಡಲಾಗಿದ್ದು, ಕಳೆದ ಮೂರು ವರ್ಷಗಳಿಂದ ಸಂಧ್ಯಾ ಅವರು ಪತಿ ರವಿ ಅವರಿಂದ ಬೇರ್ಪಟ್ಟು ತವರು ಮನೆಯಲ್ಲಿ ನೆಲೆಸಿದ್ದರು.  ಮಂಗಳವಾರ ಮುಂಜಾನೆ ಮನೆಯಲ್ಲಿರುವ ಸದಸ್ಯರು ಕೆಲಸಕ್ಕೆ ತೆರಳಿದ್ದು, ಸಂಧ್ಯಾಳ ತಂದೆ, ಮಕ್ಕಳು ಹಾಗೂ ಓರ್ವ ಸಹೋದರ ಮನೆಯಲ್ಲಿದ್ದರು. ಸಂಧ್ಯಾಳ ಸಹೋದರ ಶೌಚಾಲಯಕ್ಕೆ ಹೋಗಿದ್ದ ಸಂದರ್ಭ ಮನೆಯ ಸ್ನಾನ ಗೃಹದ ಒಳಗಿರುವ ಬಟ್ಟೆ ಒಗೆಯುವ ಕಲ್ಲಿನ ಬಳಿ ಸಂಧ್ಯಾ ರಕ್ತದ ಮಡುವಿನಲ್ಲಿ ಬಿದ್ದಿದ್ದನ್ನು ಕಂಡಿದ್ದಾರೆ. ಅಪರಿಚಿತ ವ್ಯಕ್ತಿ ಸಂಧ್ಯಾಳ ಕುತ್ತಿಗೆಗೆ ಮಾರಕಾಸ್ತ್ರದಿಂದ ಇರಿದ ಪರಿಣಾಮ ತೀವ್ರ ರಕ್ತಸ್ರಾವವಾಗಿ ಸಂಧ್ಯಾ ಪ್ರಜ್ಞಾಹೀನಳಾಗಿ ನೆಲದ ಮೇಲೆ ಬಿದ್ದಿದ್ದರು. ಕೂಡಲೇ ಆಕೆಯನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಮಾರ್ಗ ಮಧ್ಯದಲ್ಲಿಯೇ ಮೃತಪಟ್ಟಿದ್ದಾಳೆಂದು ತಿಳಿದು ಬಂದಿದೆ. ಈ ಸಂಬಂಧ ಸಂಧ್ಯಾ ಸಹೋದರ ಸತೀಶ್ ಆಲ್ದೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಸಂಧ್ಯಾಳನ್ನು ಹತ್ಯೆ ಮಾಡಿದ ಆರೋಪಿಯಾರೆಂಬುದು ಪೊಲೀಸರ ತನಿಖೆಯಿಂದ ತಿಳಿದು ಬರಬೇಕಿದೆ.

ವಾರ್ತಾ ಭಾರತಿ 2 Dec 2025 5:44 pm

ವಿಜಯ್ ಹಜಾರೆ ಟೂರ್ನಿಗೆ ರೋಹಿತ್ ಶರ್ಮಾ ರೆಡಿ ಇದ್ದರೂ ವಿರಾಟ್ ಕೊಹ್ಲಿ ಹಿಂದೇಟು; ಏನೋ ಅಂದುಕೊಂಡಿದ್ದ ಬಿಸಿಸಿಐಗೆ ಇಕ್ಕಟ್ಟು!

BCCI And Virat Kohli- ಟೀಂ ಇಂಡಿಯಾ ಪರ ಏಕದಿನ ಮಾದರಿಯಲ್ಲಿ ಮಾತ್ರ ಆಡುತ್ತಿರುವ ಹಿರಿಯ ಆಟಗಾರರಾದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರನ್ನು ದೇಶೀಯ ಕ್ರಿಕೆಟ್ ನಲ್ಲಿ ಆಡಿಸಬೇಕೆಂದು ಅಂದುಕೊಂಡಿದ್ದ ಬಿಸಿಸಿಐಗೆ ಇದೀಗ ದೊಡ್ಡ ತಲೆನೋವು ಎದುರಾಗಿದೆ. ರೋಹಿತ್ ಶರ್ಮಾ ಏನೋ ಬಿಸಿಸಿಐ ಸೂಚನೆಗೆ ಮರು ಮಾತಿಲ್ಲದೆ ತಲೆ ಅಲ್ಲಾಡಿಸಿದ್ದಾರೆ. ಆದರೆ ವಿರಾಟ್ ಕೊಹ್ಲಿ ಅವರು ಮಾತ್ರ ಬಿಲ್ ಕುಲ್ ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಹೀಗಾಗಿ ಇದೀಗ ಆಯ್ಕೆ ಸಮಿತಿ ಸದಸ್ಯರಾಗಿರುವ ಪ್ರಗ್ಯಾನ್ ಓಜಾ ಅವರನ್ನು ಸಂಧಾನಕ್ಕೆ ಬಿಟ್ಟಿದೆ.

ವಿಜಯ ಕರ್ನಾಟಕ 2 Dec 2025 5:38 pm

ಡಾಲರ್ ಎದುರು ಪಾತಾಳಕ್ಕೆ ಕುಸಿದ ರೂಪಾಯಿ, 90ರ ಗಡಿ ದಾಟುವ ಭೀತಿಯಲ್ಲಿ ಭಾರತೀಯ ಕರೆನ್ಸಿ

ಡಿಸೆಂಬರ್ 2 ರಂದು ಭಾರತೀಯ ರೂಪಾಯಿ ಮೌಲ್ಯವು ಅಮೆರಿಕನ್ ಡಾಲರ್ ಎದುರು 89.92 ಕ್ಕೆ ಕುಸಿಯುವ ಮೂಲಕ ಹೊಸ ದಾಖಲೆ ಬರೆದಿದೆ. ಡಿಸೆಂಬರ್ 1 ರಂದು 89.7575 ರಷ್ಟಿದ್ದ ಮೌಲ್ಯವು, ಇದೀಗ 90ರ ಗಡಿಯತ್ತ ಸಾಗುತ್ತಿದೆ. ದೇಶದ ಜಿಡಿಪಿ ಅಂಕಿ-ಅಂಶಗಳು ಉತ್ತಮವಾಗಿದ್ದರೂ, ಆಮದುದಾರರಿಂದ ಡಾಲರ್ ಬೇಡಿಕೆ ಹೆಚ್ಚಿರುವುದರ ಪರಿಣಾಮ ಈ ಕುಸಿತ ಕಂಡುಬಂದಿದೆ. ಮುಂಬರುವ ದಿನಗಳಲ್ಲಿ ಆರ್‌ಬಿಐ ಹಸ್ತಕ್ಷೇಪ ಮಾಡದಿದ್ದರೆ ರೂಪಾಯಿ ಮೌಲ್ಯ 90ರ ಗಡಿ ದಾಟುವ ಸಾಧ್ಯತೆಯಿದೆ ಎಂದು ಮಾರುಕಟ್ಟೆ ತಜ್ಞರು ಎಚ್ಚರಿಸಿದ್ದಾರೆ.

ವಿಜಯ ಕರ್ನಾಟಕ 2 Dec 2025 5:28 pm

ರೈತರ ಸಮಸ್ಯೆ ಬಗೆಹರಿಸಿಲ್ಲ, ರಸ್ತೆಗುಂಡಿ ದುರಸ್ತಿ ಮಾಡಿಲ್ಲ, ಉಪಾಹಾರ ಸಭೆ ನಡೆಸಿದ್ದಾರೆ : ಆರ್‌.ಅಶೋಕ್‌

ಬೆಂಗಳೂರು : ಕಾಂಗ್ರೆಸ್‌ ಸರಕಾರ ರೈತರ ಸಮಸ್ಯೆ ಬಗೆಹರಿಸಿಲ್ಲ. ರಸ್ತೆಗುಂಡಿಗಳನ್ನು ದುರಸ್ತಿ ಮಾಡಿಲ್ಲ. ಆದರೆ ಸಿಎಂ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್‌ ತಮ್ಮ ನಡುವಿನ ಸಮಸ್ಯೆ ಬಗೆಹರಿಸಲು ಉಪಾಹಾರ ಸಭೆ ಮಾಡಿದ್ದಾರೆ ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ್ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹನುಮ ಜಯಂತಿಯ ದಿನದಂದು ಎಲ್ಲೆಡೆ ಸಂಭ್ರಮದ ಆಚರಣೆ ನಡೆಯುತ್ತಿದ್ದರೆ, ಸದಾಶಿವನಗರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಾಟಿಕೋಳಿಯ ಸಾರು ಸವಿದಿದ್ದಾರೆ. ಈ ಹಿಂದೆ ಅವರು ಮಾಂಸ ಸೇವಿಸಿ ಧರ್ಮಸ್ಥಳಕ್ಕೆ ಭೇಟಿ ನೀಡಿದ್ದರು. ಕೆಲವು ದಿನದ ಹಿಂದೆ ಸಿದ್ದರಾಮಯ್ಯ ಮನೆಯಲ್ಲಿ ಉಪಾಹಾರ ನಡೆದಿದ್ದರೆ, ಈಗ ಡಿ.ಕೆ.ಶಿವಕುಮಾರ್‌ ಮನೆಯಲ್ಲಿ ನಡೆದಿದೆ. ಸೋನಿಯಾ ಗಾಂಧಿ, ರಾಹುಲ್‌ ಗಾಂಧಿ ಹಾಗೂ ವೇಣುಗೋಪಾಲ್‌ ಈ ಪ್ರಹಸನವನ್ನು ನಿರ್ದೇಶನ ಮಾಡಿದ್ದಾರೆ. ಸಿದ್ದರಾಮಯ್ಯನವರ ಈ ನಡೆಯಿಂದ ಎಲ್ಲ ಹನುಮ ಭಕ್ತರ ಮನಸ್ಸಿಗೆ ನೋವಾಗಿದೆ ಎಂದರು. ನಾನು ಅಧಿಕಾರವನ್ನು ಒದ್ದು ಕಿತ್ತುಕೊಳ್ಳುತ್ತೇನೆಂದು ಡಿ.ಕೆ.ಶಿವಕುಮಾರ್‌ ಹೇಳಿದ್ದರು. ಆದರೆ ಈಗ ಅವರು ಉಪಾಹಾರ ಸವಿದಿದ್ದಾರೆ. ಈ ನಡುವೆ ಡಾ.ಜಿ.ಪರಮೇಶ್ವರ್‌ ಬಹಳ ನೋವಿನಿಂದ ಮಾತಾಡಿದ್ದಾರೆ. ರಾಜ್ಯದಲ್ಲಿ ಕಳೆದ 10 ತಿಂಗಳಲ್ಲಿ 580 ಕ್ಕೂ ಅಧಿಕ ಜನರು ರಸ್ತೆಗುಂಡಿಯಿಂದ ಸಾವನ್ನಪ್ಪಿದ್ದಾರೆ. ತಿಂಡಿ ತಿನ್ನುವ ಸಮಯವನ್ನು ರಸ್ತೆಗುಂಡಿ ಮುಚ್ಚಿಸಲು ವಿನಿಯೋಗಿಸಿದ್ದರೆ ಅಮಾಯಕ ಜೀವಗಳು ಉಳಿಯುತ್ತಿತ್ತು. ರೈತರ ಕಬ್ಬಿನ ದರದ ಸಮಸ್ಯೆ ಬಗೆಹರಿದಿಲ್ಲ. ಮೆಕ್ಕೆಜೋಳ ಖರೀದಿ ಕೇಂದ್ರದ ಸಮಸ್ಯೆ ಬಗೆಹರಿದಿಲ್ಲ. ಈ ಬಗ್ಗೆ ಯಾವುದೇ ಉಪಾಹಾರ ಸಭೆ ನಡೆಸಿಲ್ಲ. ಇವರಿಬ್ಬರ ನಡುವಿನ ಸಮಸ್ಯೆ ಬಗೆಹರಿಸಲು ಉಪಾಹಾರ ಸಭೆ ನಡೆಸಬೇಕಿತ್ತೇ? ಅಂಗನವಾಡಿ ಕಾರ್ಯಕರ್ತರು, ರೈತರು, ಉದ್ಯಮಿಗಳು, ದಲಿತರ ವಿಶ್ವಾಸವನ್ನು ಸರಕಾರ ಕಳೆದುಕೊಂಡಿದೆ ಎಂದರು. ಬಿಗ್‌ಬಾಸ್‌ನಲ್ಲಿ ವೈಲ್ಡ್‌ ಕಾರ್ಡ್‌ನಂತೆ ಸತೀಶ್‌ ಜಾರಕಿಹೊಳಿ ಹಾಗೂ ಡಾ.ಜಿ.ಪರಮೇಶ್ವರ್‌ ದಲಿತ ಬ್ರ್ಯಾಂಡ್‌ನಡಿ ಸಿಎಂ ಆಗಲು ಕಾಯುತ್ತಿದ್ದಾರೆ. ಇಡೀ ಸರಕಾರ ರಿಯಾಲಿಟಿ ಶೋನಂತೆ ಆಗಿದೆ. ಈ ರೀತಿ ಸಭೆ ನಡೆಸುವ ಬದಲು, ತುಂಗಭದ್ರಾ ಜಲಾಶಯದ ಗೇಟ್‌ಗಳನ್ನು ದುರಸ್ತಿ ಮಾಡಿಸಲು 12 ಕೋಟಿ ರೂ. ಬಿಲ್‌ ಪಾವತಿಸಿದ್ದರೆ ರೈತರಿಗೆ ನೀರಾವರಿ ಲಭ್ಯವಾಗುತ್ತಿತ್ತು. ಈ ಬಗ್ಗೆ ರೈತರ ಪರವಾಗಿ ಅಧಿವೇಶನದ ಸಮಯದಲ್ಲಿ ಹೋರಾಟ ಮಾಡಲಾಗುವುದು ಎಂದರು. ಉತ್ತರ ಕರ್ನಾಟಕದ ಅಭಿವೃದ್ಧಿಗೆ ಮಾತ್ರ ಅಲ್ಲ, ಯಾವುದೇ ಅಭಿವೃದ್ಧಿಗೆ ಸರಕಾರದ ಬಳಿ ಹಣವಿಲ್ಲ. ಸಿಎಂ ಸಿದ್ದರಾಮಯ್ಯ ಕಳೆದ ಬೆಳಗಾವಿ ಅಧಿವೇಶನದಲ್ಲಿ ಕೊಟ್ಟ ಮಾತನ್ನು ಈಡೇರಿಸಲಾಗಿದೆಯೇ ಎಂದು ನಾವು ಪ್ರಶ್ನೆ ಮಾಡುತ್ತೇವೆ. ಧರ್ಮಸ್ಥಳದಲ್ಲಿ ಬುರುಡೆ ತಂದವನಿಗೆ ಬಿರಿಯಾನಿ ಕೊಟ್ಟಿದ್ದೇ ಕಾಂಗ್ರೆಸ್‌ ಸರಕಾರ. ಆದರೆ ಅದನ್ನು ಸಾಬೀತುಪಡಿಸಲು ಇಂದಿಗೂ ಸಾಧ್ಯವಾಗಿಲ್ಲ ಎಂದರು.

ವಾರ್ತಾ ಭಾರತಿ 2 Dec 2025 5:22 pm

ನಾನು ಕೋಚ್ ಆಗಿದ್ದರೆ ಸೋಲಿನ ಹೊಣೆ ಮೊದಲು ನಾನು ಹೊರುತ್ತಿದ್ದೆ: ಗೌತಮ್ ಗಂಭೀರ್ ವಿರುದ್ಧ ರವಿ ಶಾಸ್ತ್ರಿ ವಾಗ್ದಾಳಿ

ಹೊಸದಿಲ್ಲಿ: ದಕ್ಷಿಣ ಆಫ್ರಿಕಾ ವಿರುದ್ಧ ಭಾರತ ತಂಡವು 0-2 ಅಂತರದಲ್ಲಿ ಪರಾಭವಗೊಂಡ ಬೆನ್ನಿಗೇ, ಭಾರತ ತಂಡದ ಮುಖ್ಯ ಕೋಚ್ ಗೌತಮ್ ಗಂಭೀರ್ ಅವರನ್ನು ತರಾಟೆಗೆ ತೆಗೆದುಕೊಂಡಿರುವ ಭಾರತ ತಂಡದ ಮಾಜಿ ಕೋಚ್ ರವಿ ಶಾಸ್ತ್ರಿ, ಈ ಸೋಲಿನ ಹೊಣೆಯನ್ನು ನಾನು ಮೊದಲು ಹೊರುತ್ತಿದ್ದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಗುವಾಹಟಿಯಲ್ಲಿ ದಕ್ಷಿಣ ಆಫ್ರಿಕಾ ತಂಡದ ವಿರುದ್ಧ ನಡೆದ ದ್ವಿತೀಯ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ ಹೀನಾಯವಾಗಿ ಪರಾಭವಗೊಂಡ ಬೆನ್ನಿಗೇ, ಭಾರತ ತಂಡದ ಮುಖ್ಯ ಕೋಚ್ ಗೌತಮ್ ಗಂಭೀರ್ ತೀವ್ರ ಟೀಕೆಗೆ ಗುರಿಯಾಗಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ರವಿಶಾಸ್ತ್ರಿ, ಪ್ರಥಮ ಇನಿಂಗ್ಸ್‌ ಬ್ಯಾಟಿಂಗ್‌ನಲ್ಲಿ ದಯನೀಯವಾಗಿ ವಿಫಲವಾದ ಹೊಣೆಯನ್ನು ಬ್ಯಾಟರ್‌ಗಳು ತೆಗೆದುಕೊಳ್ಳಬೇಕಾದ ಅಗತ್ಯವಿದೆ. ದಕ್ಷಿಣ ಆಫ್ರಿಕಾದ 489 ರನ್‌ಗಳಿಗೆ ಪ್ರತಿಯಾಗಿ, ಭಾರತ ತಂಡ ಕೇವಲ 201 ರನ್‌ಗಳಿಗೆ ಆಲೌಟಾಯಿತು ಎಂದು ʼಪ್ರಭಾತ್ ಖಬರ್ʼ ಸುದ್ದಿ ಸಂಸ್ಥೆಯೊಂದಿಗೆ ನಡೆಸಿರುವ ಪಾಡ್‌ಕಾಸ್ಟ್‌ನ ಟೀಸರ್‌ನಲ್ಲಿ ಅಭಿಪ್ರಾಯ ಪಟ್ಟಿದ್ದಾರೆ. ನೀವು ಗೌತಮ್ ಗಂಭೀರ್ ಅವರನ್ನು ರಕ್ಷಿಸುತ್ತಿದ್ದೀರಾ? ಎಂಬ ಸಂದರ್ಶಕರ ಪ್ರಶ್ನೆಗೆ, ನಾನು ಅವರನ್ನು ರಕ್ಷಿಸುತ್ತಿಲ್ಲ. ಶೇ. 100ರಷ್ಟು ಅವರೂ ಹೊಣೆಗಾರರು. ನಾನು ಬೇರೆ ಏನಾದರೂ ಹೇಳುತ್ತಿದ್ದೇನೆಯೆ? ಇದು ನನ್ನ ವಿಷಯದಲ್ಲಿ ಆಗಿದ್ದರೆ, ಅದರ ಹೊಣೆಯನ್ನು ಹೊರುತ್ತಿದ್ಧ ಮೊದಲ ವ್ಯಕ್ತಿ ನಾನೇ ಆಗಿರುತ್ತಿದ್ದೆ. ಆದರೆ, ಬಳಿಕ ನಡೆಯುತ್ತಿದ್ದ ತಂಡದ ಸಭೆಯಲ್ಲಿ ನಾನು ಆಟಗಾರರನ್ನೂ ಸುಮ್ಮನೆ ಬಿಡುತ್ತಿರಲಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಗುವಾಹಟಿ ಪಂದ್ಯದಲ್ಲಿ ಒಂದು ವಿಕೆಟ್‌ಗೆ 100 ರನ್ ಗಳಿಸಿದ್ದ ಭಾರತ ತಂಡ, ದಿಢೀರನೆ ಏಳು ವಿಕೆಟ್ ನಷ್ಟಕ್ಕೆ 130 ರನ್‌ಗೆ ಕುಸಿಯಿತು. ತಂಡ ಕೂಡಾ ಕೆಟ್ಟದಾಗಿರಲಿಲ್ಲ. ಅವರಲ್ಲಿ ಸಾಕಷ್ಟು ಪ್ರತಿಭೆಯಿತ್ತು. ಹೀಗಾಗಿ, ಸೋಲಿನ ಹೊಣೆಯನ್ನು ಆಟಗಾರರೂ ತೆಗೆದುಕೊಳ್ಳಲೇಬೇಕು. ನೀವು ಬಾಲ್ಯ ಕಾಲದಿಂದಲೂ ಸ್ಪಿನ್ ಬೌಲಿಂಗ್‌ಗೆ ಆಡಿದ್ದೀರಿ ಎಂದು ಅವರು ಬೊಟ್ಟು ಮಾಡಿದ್ದಾರೆ.

ವಾರ್ತಾ ಭಾರತಿ 2 Dec 2025 5:18 pm

'ದಿತ್ವಾ' ಪೀಡಿತ ಶ್ರೀಲಂಕಾಕ್ಕೆ ಅವಧಿ ಮೀರಿದ ಆಹಾರ ಪೊಟ್ಟಣಗಳ ಕಳಿಸಿದ ಪಾಕಿಸ್ತಾನ!

ಶ್ರೀಲಂಕಾದಲ್ಲಿ ದಿತ್ವಾ ಚಂಡಮಾರುತದಿಂದಾದ ಹಾನಿಗೆ ಭಾರತ ಸೇರಿದಂತೆ ಹಲವು ದೇಶಗಳು ನೆರವು ನೀಡಿವೆ. ಆದರೆ, ಪಾಕಿಸ್ತಾನ ಕಳುಹಿಸಿದ ಆಹಾರ ಪದಾರ್ಥಗಳು ಅವಧಿ ಮೀರಿದ್ದು, ಶ್ರೀಲಂಕಾದ ಅಧಿಕಾರಿಗಳು ಬೇಸರ ವ್ಯಕ್ತಪಡಿಸಿದ್ದಾರೆ. ಅವುಗಳ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಹಲವಾರು ಮಂದಿ ಪಾಕಿಸ್ತಾನದ ಈ ನಡೆಯನ್ನು ಖಂಡಿಸಿದ್ದಾರೆ.

ವಿಜಯ ಕರ್ನಾಟಕ 2 Dec 2025 5:13 pm

Rahul Gandhi: ಬಿಜೆಪಿ ಭದ್ರಕೋಟೆಯಲ್ಲಿ ಭೀಕರ ಸಮಸ್ಯೆ ಎದುರಾಗಿದೆ ಎಂದ ರಾಹುಲ್ ಗಾಂಧಿ!

Rahul Gandhi: ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ವೋಟ್ ಚೋರಿಯ ನಂತರ ಇದೀಗ ಗಂಭೀರವಾದ ಆರೋಪವೊಂದನ್ನು ಮಾಡಿದ್ದಾರೆ. ಮಹಾರಾಷ್ಟ್ರ, ಕರ್ನಾಟಕ, ಹರಿಯಾಣ ಹಾಗೂ ಬಿಹಾರದಲ್ಲಿ ಈಚೆಗೆ ನಡೆದ ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆಯಲ್ಲಿ ವೋಟ್ ಚೋರಿ (ಮತಕಳ್ಳತನ) ನಡೆದಿದೆ ಎಂದು ರಾಹುಲ್ ಗಾಂಧಿ ಅವರು ಗಂಭೀರವಾದ ಆರೋಪವನ್ನು ಮಾಡಿದ್ದರು. ಇದೀಗ ರಾಹುಲ್ ಗಾಂಧಿ ಅವರು

ಒನ್ ಇ೦ಡಿಯ 2 Dec 2025 4:54 pm

Fact check: ಇಮ್ರಾನ್‌ ಖಾನ್‌ ಜೈಲಿಗೆ ಹೋಗಲು ಪಾಕ್‌ ಗೆ ಭಾರತ ಪತ್ರ ಬರೆದಿತ್ತಾ? ಏನಿದು ನಕಲಿ ಪತ್ರದ ಸತ್ಯ?

ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಜೈಲಿಗೆ ಹೋಗಲು ಭಾರತವೇ ಕಾರಣ ಎಂದು ಸಾಮಾಜಿಕ ಜಾಲತಾಣದಲ್ಲಿ ನಕಲಿ ಪತ್ರ ಹರಿದಾಡುತ್ತಿದೆ. ಈ ಪತ್ರವನ್ನು ಭಾರತ ಸರ್ಕಾರ ಕಳುಹಿಸಿಲ್ಲ ಎಂದು PIB ಸ್ಪಷ್ಟಪಡಿಸಿದೆ. ಇದು ಪಾಕಿಸ್ತಾನದ ಸುಳ್ಳು ಮಾಹಿತಿ ಅಭಿಯಾನದ ಭಾಗವಾಗಿದೆ. ಈ ಹಿಂದೆ ಕೂಡ ಪಾಕಿಸ್ತಾನ ಇಂತಹ ನಕಲಿ ಪೋಸ್ಟ್‌ಗಳನ್ನು ಹರಡಿದೆ. ಡಿಜಿಟಲ್ ಜಾಗರೂಕತೆ ಅಗತ್ಯವಿದೆ ಎಂದು PIB ತಿಳಿಸಿದೆ.

ವಿಜಯ ಕರ್ನಾಟಕ 2 Dec 2025 4:50 pm

ದಳಪತಿ ವಿಜಯ್ ಬೆಂಬಲ ಯಾರಿಗೆ : ಬಿಜೆಪಿಗೆ ಹತ್ತಿರವೋ ದೂರವೋ - ಗೊಂದಲದಲ್ಲಿ ಅಮಿತ್ ಶಾ?

Tamil Nadu Assembly Election 2026 : ಮುಂದಿನ ವರ್ಷ ತಮಿಳುನಾಡಿನಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಎನ್‌ಡಿಎ ಮತ್ತು ಇಂಡಿಯಾ ಮೈತ್ರಿಕೂಟ ಪೂರ್ವ ಸಿದ್ದತೆಯನ್ನು ಮಾಡಿಕೊಳ್ಳುತ್ತಿದೆ. ಈ ಬಾರಿಯ ಚುನಾವಣೆಯಲ್ಲಿ ತಮಿಳು ಚಿತ್ರರಂಗದಲ್ಲಿ ಭಾರೀ ಹೆಸರನ್ನು ಮಾಡಿರುವ ದಳಪತಿ ವಿಜಯ್ ಅವರ ಪಾರ್ಟಿ ಎಂಟ್ರಿ ಕೊಟ್ಟಿರುವುದು ಕುತೂಹಲಕ್ಕೆ ಕಾರಣವಾಗಿದೆ.

ವಿಜಯ ಕರ್ನಾಟಕ 2 Dec 2025 4:49 pm

ಯಾದಗಿರಿ| ಹೈಕಮಾಂಡ್ ನಿರ್ಧಾರವೇ ಅಂತಿಮ : ಸಿಎಂ ಬದಲಾವಣೆ ಕುರಿತ ವಿವಾದದ ಬಗ್ಗೆ ಶಾಸಕ ಚೆನ್ನಾರೆಡ್ಡಿ ಪಾಟೀಲ್ ಪ್ರತಿಕ್ರಿಯೆ

ಯಾದಗಿರಿ: ರಾಜ್ಯದಲ್ಲಿ ಸಿಎಂ ಕುರ್ಚಿ ಬದಲಾವಣೆ ಬಗ್ಗೆ ನಡೆಯುತ್ತಿರುವ ರಾಜಕೀಯ ಚರ್ಚೆಯ ಬಗ್ಗೆ ಯಾದಗಿರಿ ಶಾಸಕ ಚೆನ್ನಾರೆಡ್ಡಿ ಪಾಟೀಲ್‌ ತುನ್ನೂರು ಪ್ರತಿಕ್ರಿಯಿಸಿದ್ದಾರೆ.   ರಾಜ್ಯ ಮಟ್ಟದ ಯುವಜನೋತ್ಸವ ಉದ್ಘಾಟನೆ ಸಮಾರಂಭದ ವೇದಿಕೆ ಪರಿಶೀಲನೆ ಮಾಡಿ ಮಾಧ್ಯಮಗಳ ಜೊತೆ ಮಾತನಾಡಿದ ಚೆನ್ನಾರೆಡ್ಡಿ ಪಾಟೀಲ್‌, ಕಾಂಗ್ರೆಸ್ ಹೈಕಮಾಂಡ್ ತೆಗೆದುಕೊಳ್ಳುವ ನಿರ್ಧಾರಕ್ಕೆ 140 ಶಾಸಕರು ಬದ್ದರಾಗಿದ್ದಾರೆ. ರಾಜ್ಯದಲ್ಲಿ ಯಾವುದು ಕುರ್ಚಿ ಖಾಲಿ ಇಲ್ಲ. ಯಾವುದೇ ಬದಲಾವಣೆ ಕೂಡಾ ಆಗುವುದಿಲ್ಲ ಎಂದು ಹೇಳಿದ್ದಾರೆ. ಸಚಿವ ಸಂಪುಟ ಪುನರ್‌ ರಚನೆ ಬಗ್ಗೆ ಮಾತನಾಡಿದ ಅವರು, ಮೊದಲು ಸಿಎಂ ಬದಲಾವಣೆಯ ಬಗ್ಗೆ ಹೈಕಮಾಂಡ್ ನಿರ್ಧಾರ ಮಾಡಬಹುದು ಅಥವಾ ಸಿಎಂ ಸಿದ್ದರಾಮಯ್ಯ ಮುಂದುವರಿದರೂ ನಂತರ ಸಂಪುಟ ಪುನರ್‌ ರಚನೆ ಆಗಬಹುದು. ನಾನು ಸಚಿವ ಸ್ಥಾನದ ಆಕಾಂಕ್ಷಿ ಅಲ್ಲ. ನಾನು ಕಿರಿಯ. ನಾಲ್ಕು ಐದು ಬಾರಿ ಗೆದ್ದವರಿಗೆ ಸಚಿವ ಸ್ಥಾನ ಕೊಡಬೇಕು ಎಂದು ಹೇಳಿದರು. ಕಾಂಗ್ರೆಸ್‌ನಲ್ಲಿ ಒಂದು ಬಣ ಇದ್ದರೆ ಅದು ಹೈಕಮಾಂಡ್ ಬಣ ಮಾತ್ರ. ಪಕ್ಷದಲ್ಲಿ ಯಾವುದೇ ಗೊಂದಲವೇ ಇಲ್ಲ. ಗೊಂದಲ ಬೇರೆ ಪಕ್ಷದಲ್ಲಿ ಇರಬಹುದು ಎಂದು ವ್ಯಂಗ್ಯವಾಡಿದರು.

ವಾರ್ತಾ ಭಾರತಿ 2 Dec 2025 4:45 pm

ಅಂಗನವಾಡಿಗಳಲ್ಲಿ ಎಲ್‌ಕೆಜಿ, ಯುಕೆಜಿ ಯೋಜನೆ: ಮಕ್ಕಳಿಗೆ ಸಿಗುವ ಸೌಲಭ್ಯಗಳೇನು? ಪಠ್ಯಕ್ರಮಗಳೇನು? ಇಲ್ಲಿದೆ ಸಂಪೂರ್ಣ ಮಾಹಿತಿ

ಕರ್ನಾಟಕದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಪೂರ್ವ ಪ್ರಾಥಮಿಕ ಶಿಕ್ಷಣವನ್ನು ಬಲಪಡಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಇಟ್ಟಿದೆ. ರಾಜ್ಯದ ಆಯ್ದ ಅಂಗನವಾಡಿ ಕೇಂದ್ರಗಳಲ್ಲಿ ಎಲ್‌ಕೆಜಿ (ಲೋವರ್ ಕಿಂಡರ್‌ಗಾರ್ಟನ್) ಮತ್ತು ಯುಕೆಜಿ (ಅಪ್ಪರ್ ಕಿಂಡರ್‌ಗಾರ್ಟನ್) ತರಗತಿಗಳನ್ನು ಆರಂಭಿಸುವ ಯೋಜನೆಗೆ ಚಾಲನೆ ನೀಡಲಾಗಿದೆ. ಈ ಯೋಜನೆಯಿಂದ ಮಕ್ಕಳಿಗೆ ದೊರೆಯುವ ಪ್ರಯೋಜನಗಳೇನು? ಯೋಜನೆಯ ಅನುಷ್ಠಾನ ಹೇಗೆ? ಇತ್ಯಾದಿ ಮಾಹಿತಿಗಳು ಇಲ್ಲಿವೆ.

ವಿಜಯ ಕರ್ನಾಟಕ 2 Dec 2025 4:41 pm

ಎಸ್‌ಒಪಿಗೆ ಹೊಂದಿಕೆಯಾಗದ ಜನನ, ಮರಣ ಪ್ರಮಾಣಪತ್ರಗಳನ್ನು ರದ್ದುಗೊಳಿಸಲು ಮಹಾರಾಷ್ಟ್ರ ಸರಕಾರ ಆದೇಶ

ಮುಂಬೈ: ಸ್ಟ್ಯಾಂಡರ್ಡ್‌ ಆಪರೇಟಿಂಗ್‌ ‌ಪ್ರೊಸೀಜರ್ (SOP) ಹೋಲಿಕೆಯಾಗದೆ, ತಪ್ಪಾಗಿ ವಿತರಿಸಲಾಗಿರುವ ಎಲ್ಲ ಜನನ ಮತ್ತು ಮರಣ ಪ್ರಮಾಣ ಪತ್ರಗಳ ತುರ್ತು ಪರಾಮರ್ಶೆ ನಡೆಸಿ, ಅಂಥವುಗಳನ್ನು ರದ್ದುಗೊಳಿಸುವಂತೆ ಮಹಾರಾಷ್ಟ್ರ ಸರಕಾರ ಆದೇಶಿಸಿದೆ. ಜನನ ವಿವರಗಳನ್ನು ತಿದ್ದುಪಡಿ ಮಾಡಲು ಆಧಾರ್ ಕಾರ್ಡ್ ಅನ್ನು ಸೂಕ್ತ ದಾಖಲೆಯನ್ನಾಗಿ ಪರಿಗಣಿಸುವ ಕ್ರಮವನ್ನು ಸ್ಥಗಿತಗೊಳಿಸಬೇಕು ಎಂದು ಸೋಮವಾರ ಅಧಿಕಾರಿಗಳಿಗೆ ಬಿಡುಗಡೆ ಮಾಡಿರುವ ಸರಕಾರಿ ನಿರ್ಣಯದಲ್ಲಿ ಸೂಚಿಸಲಾಗಿದೆ. ಅಮರಾವತಿ, ಜಲ್ನಾ, ಛತ್ರಪತಿ ಸಂಭಾಜಿನಗರ್, ಲಾತೂರ್, ಅಕೋಲಾ, ಪರ್ಭಾನಿ, ಬೀಡ್ ಮತ್ತು ನಾಶಿಕ್ ಜಿಲ್ಲೆಗಳು ಸೇರಿದಂತೆ ಹದಿನಾಲ್ಕು ಜಿಲ್ಲೆಗಳಲ್ಲಿ ಅತ್ಯಧಿಕ ಪ್ರಮಾಣದ ವಿಳಂಬಿತ ಜನನ ಮತ್ತು ಮರಣ ಪ್ರಮಾಣ ಪತ್ರಗಳು ಅಸಮರ್ಪಕವಾಗಿ ವಿತರಣೆಯಾಗಿರುವ ಹಿನ್ನೆಲೆಯಲ್ಲಿ ಈ ಆದೇಶ ಹೊರಡಿಸಲಾಗಿದೆ. ಈಗಾಗಲೇ ತಪ್ಪಾಗಿ ವಿತರಿಸಲಾಗಿರುವ ಪ್ರಮಾಣ ಪತ್ರಗಳನ್ನು ಪತ್ತೆ ಹಚ್ಚಿ, ಅವನ್ನು ಮತ್ತೆ ಪರಿಶೀಲಿಸಬೇಕು ಎಂದು ಕಂದಾಯ, ಆರೋಗ್ಯ ಹಾಗೂ ಸ್ಥಳೀಯ ಸಂಸ್ಥೆಗಳಿಗೆ ಸರಕಾರ ನಿರ್ದೇಶನ ನೀಡಿದೆ. ಕಾನೂನು ಮಾನದಂಡಗಳೊಂದಿಗೆ ಹೊಂದಾಣಿಕೆಯಾಗದ ಪ್ರಮಾಣ ಪತ್ರಗಳನ್ನು ಆದ್ಯತೆಯ ಮೇರೆಗೆ ರದ್ದುಗೊಳಿಸಲೇಬೇಕು ಹಾಗೂ ನಾಗರಿಕ ನೋಂದಣಿ ವ್ಯವಸ್ಥೆ ಪೋರ್ಟಲ್‌ನಲ್ಲಿರುವ ನೋಂದಣಿಗಳನ್ನು ತೆಗೆದು ಹಾಕಬೇಕು ಎಂದೂ ಸರಕಾರ ಆದೇಶಿಸಿದೆ. 

ವಾರ್ತಾ ಭಾರತಿ 2 Dec 2025 4:39 pm

`ಟಿ20 ಸೆಂಚುರಿ ಹೊಡೆದ ಅಭಿಮನ್ಯು ಈಶ್ವರನ್ ಈಗ ಟೆಸ್ಟ್ ತಂಡಕ್ಕೆ ಬರ್ತಾರೆ ನೋಡಿ'; ಆರ್ ಅಶ್ವಿನ್ ಸಕತ್ ಕಾಮಿಡಿ!

R Ashwin On Abhimanyu Eswaran- ದೇಶೀಯ ಕ್ರಿಕೆಟ್ ನಲ್ಲಿ ಉತ್ತಮ ಪ್ರದರ್ಶನ ತೋರುತ್ತಿದ್ದರೂ ಅಭಿಮನ್ಯು ಈಶ್ವರನ್ ಅವರು ಭಾರತದ ಪರ ಟೆಸ್ಟ್ ಪದಾರ್ಪಣೆ ಪಂದ್ಯವನ್ನಾಡಲು ಸಾಧ್ಯವಾಗಿಲ್ಲ. ಈ ಬಗ್ಗೆ ರವಿಚಂದ್ರನ್ ಅಶ್ವಿನ್ ಅವರು ಬಿಸಿಸಿಐ ಮುಖ್ಯ ಆಯ್ಕೆದಾರ ಅಜಿತ್ ಅಗರ್ಕರ್ ಮತ್ತು ಪ್ರಧಾನ ಕೋಚ್ ಗೌತಮ್ ಗಂಭೀರ್ ಅವರ ಕಾಲೆಳೆದಿದ್ದಾರೆ. ಆಯ್ಕೆ ಸಮಿತಿಯ ಮಾನದಂಡವನ್ನೇ ಪ್ಪಶ್ನಿಸಿದ್ದಾರೆ. ಇದೀಗ ಅಭಿಮನ್ಯು ಅವರು ಮುಷ್ತಾಕ್ ಅಲಿ ಅವರು ಸೆಂಚುರಿ ಬಾರಿಸಿರುವುದಕ್ಕೆ ಇವರೀಗ ಟೆಸ್ಟ್ ತಂಡಕ್ಕೆ ಆಯ್ಕೆ ಮಾಡಬಹುದು ಎಂದು ವ್ಯಂಗ್ಯವಾಡಿದ್ದಾರೆ.

ವಿಜಯ ಕರ್ನಾಟಕ 2 Dec 2025 4:37 pm

ಬೆಸ್ಕಾಂ ಸ್ಮಾರ್ಟ್‌ಮೀಟರ್ ಟೆಂಡರ್‌: ಮಹಾಂತೇಶ ಬೀಳಗಿ, KJ ಜಾರ್ಜ್‌ ಸೇರಿ ಹಲವರ ವಿರುದ್ಧದ ದೂರು ವಜಾಗೊಳಿಸಿದ ಹೈಕೋರ್ಟ್‌!

ಬೆಸ್ಕಾಂ ಸ್ಮಾರ್ಟ್ ಮೀಟರ್ ಟೆಂಡರ್‌ನಲ್ಲಿ ಅಕ್ರಮ ಆರೋಪ ಕೇಸ್‌ ರದ್ದಿಗೆ ಸಂಬಂಧಿಸಿದಂತೆ ಮೃತ ಐಎಎಸ್ ಅಧಿಕಾರಿ ಮಹಾಂತೇಶ ಬೀಳಗಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ಪುರಸ್ಕರಿಸಿದೆ. ಈ ಹಿನ್ನೆಲೆಯಲ್ಲಿ, ಸಚಿವ ಕೆ.ಜೆ. ಜಾರ್ಜ್ ಸೇರಿದಂತೆ ಹಲವರ ವಿರುದ್ಧ ಬಿಜೆಪಿ ಸಲ್ಲಿಸಿದ್ದ ಖಾಸಗಿ ದೂರು ರದ್ದುಗೊಂಡಿದೆ. ಈ ಆದೇಶವು ಬಿಜೆಪಿ ನಾಯಕರಿಗೆ ಹಿನ್ನಡೆಯಾಗಿದೆ.

ವಿಜಯ ಕರ್ನಾಟಕ 2 Dec 2025 4:37 pm