ನಾಟಕ: ಪ್ರತಿ ಗಂಧರ್ವ ಮೂಲ ಕೃತಿ: ಡಾ. ರಹಮತ್ ತರೀಕೆರೆ ರಂಗರೂಪ: ಡಾ. ರಾಜಪ್ಪ ದಳವಾಯಿ ವಿನ್ಯಾಸ, ನಿರ್ದೇಶನ: ಮಾಲತೇಶ ಬಡಿಗೇರ ಸಂಗೀತ: ರವಿ ಮೂರೂರು ವಸ್ತ್ರಾಲಂಕಾರ: ಛಾಯಾ ಭಾರ್ಗವಿ ಪ್ರಸ್ತುತಿ: ವೃತ್ತಿ ರಂಗಭೂಮಿ ರಂಗಾಯಣ, ದಾವಣಗೆರೆ ರಂಗದ ಮೇಲೆ: ಸುರೇಂದ್ರಗೌಡ ಗೋಕರ್ಣ, ಡಾ. ಶೃತಿ ರಾಜ್, ಬಿ. ಸುಜಾತಾ ನೀಲಗುಂದ, ಕಲ್ಪನಾ ನಾಕೋಡ, ಸೋಮಶೇಖರ್ ಕಾರಿಗನೂರು, ಸಂತೋಷ್ ಸಂಗನಾಳ, ವೈ.ಶ್ವೇತಾ, ಜಿ.ಎಂ. ಪ್ರಕೃತಿ, ಬಸವರಾಜ ಕಡ್ಲೇಬಾಳು, ಕರಣಕುಮಾರ್, ಮುಖೇಶಕುಮಾರ್, ಅಮಿತ್ಕುಮಾರ್. ದಾವಣಗೆರೆಯ ವೃತ್ತಿ ರಂಗಭೂಮಿ ರಂಗಾಯಣದ ಮೊದಲ ನಾಟಕ ‘ಪ್ರತಿ ಗಂಧರ್ವ’ ಬಹಳ ಮಹತ್ವವಾದುದು. ಏಕೆಂದರೆ ಪ್ರಸ್ತುತ ಸಂದರ್ಭದಲ್ಲಿ ವೃತ್ತಿ ರಂಗಭೂಮಿಯ ಅನೇಕ ನಾಟಕಗಳು ದ್ವಂದ್ವ ಸಂಭಾಷಣೆ, ಐಟಂ ಸಾಂಗ್, ಸಿನೆಮಾ ಹಾಡುಗಳ ಮೂಲಕ ಪ್ರದರ್ಶನ ಗೊಳ್ಳುತ್ತಿರುವಾಗ ‘ಪ್ರತಿ ಗಂಧರ್ವ’ ನಾಟಕವು ತನ್ನ ಗಂಧದಿಂದ ಪರಿಮಳ ಸೂಸುತ್ತ ಗಮನ ಸೆಳೆಯುತ್ತದೆ. ಕಳೆದ ವಾರ ಮೈಸೂರಿನಲ್ಲಿ ನಿರಂತರ ರಂಗೋತ್ಸವ ತಂಡದ ನಾಟಕೋತ್ಸವ ಹಾಗೂ ಬಹುರೂಪಿಗೆ ಮುನ್ನುಡಿಯಾಗಿ ಮೈಸೂರು ರಂಗಾಯಣದ ವತಿಯಿಂದ ಪ್ರದರ್ಶನಗೊಂಡ ಈ ನಾಟಕ ಚೆನ್ನಾಗಿದೆ. ರಾಜಪ್ಪ ದಳವಾಯಿ ಅವರ ಸತ್ವಯುತ ನಾಟಕಕ್ಕೆ ಪೂರಕವಾಗಿ ಹಾಡು, ದೃಶ್ಯಗಳಿವೆ. ದಾವಣಗೆರೆ ರಂಗಾಯಣದ ನಿರ್ದೇಶಕ ಮಲ್ಲಿಕಾರ್ಜುನ ಕಡಕೋಳ ಅವರ ಮಾತು ಗಮನಾರ್ಹ ‘‘ಕಂಪೆನಿ ಶೈಲಿಯ ರಂಗಸಂವೇದನೆಗಳನ್ನು ವರ್ತಮಾನೀಕರಿಸುವ ಸಮನ್ವಯದ ವಿಭಿನ್ನ ಯತ್ನವಿದು. ಬಯೋಪಿಕ್ ಕಥನವೊಂದನ್ನು ರಂಗಪಠ್ಯ ಆಗಿಸುವುದು ಸವಾಲಿನ ಕೆಲಸವೇ. ಒಂದೆಡೆ ಕನ್ನಡ-ಮರಾಠಿ ಮತ್ತು ಹಿಂದೂ-ಮುಸ್ಲಿಮ್ ಧರ್ಮಗಳ ಸಂಕೀರ್ಣತೆಗಳ ಗುದಮುರಗಿ. ಮತ್ತೊಂದೆಡೆ ಪ್ರೀತಿಪ್ರೇಮಗಳ ಸಾಮರಸ್ಯ, ಸೌಹಾರ್ದ. ಗಂಧರ್ವ ಮತ್ತು ಪ್ರತಿಗಂಧರ್ವ ಎಂಬ ನಾಟ್ಯಸಂಗೀತ ವ್ಯಕ್ತಿತ್ವಗಳ ಅನಾವರಣ. ಶತಮಾನದ ಹಿಂದೆ ಜರುಗುವ ಕನ್ನಡ, ಮರಾಠಿ ರಂಗಭೂಮಿಯ ಆನುಷಂಗಿಕ ಸಂಕಥನಗಳ ಹೂರಣ’’ ಇಂಥ ನಾಟಕ ಆರಂಭವಾಗುವುದೇ ಕೋಲ ಶಾಂತಪ್ಪ ಅವರ ನಾಂದಿ ಪದ್ಯದ ಮೂಲಕ. ಅದು ಹೀಗಿದೆ: ಪಾಹಿ ಶಾಂತಃ ಭುವನೇಶ್ವರ ಸುಮನೋಹರ ಭುವನತಾರ ಪಾಪಹಾರ ಆನಂದಸಾರ ವಿಕಾರ ದೂರ ಭವಸಂಹಾರ ಪಾಹಿ ಶಾಂತಃ ಭುವನೇಶ್ವರ ಸುಮನೋಹರ ಭುವನತಾರ ಗೌರೀನಾಥ ಶಿವಪಾನ ನಿತ್ಯಜ್ಞಾನ ಪರಿಶೋಧನ ದೇವ ದೇವ ಅಘನಾಶನ ಶಮದನವಿಭು ಸೌಖ್ಯಸಾರ ಪಾಹಿಶಾಂತಃ ಭುವನೇಶ್ವರ ಸುಮನೋಹರ ಭುವನತಾರ... ಈ ಹಾಡು ಹಾಡಿದ ನಂತರ ಎಲ್ಲ ಕಲಾವಿದರು ದಾವಣಗೆರೆ ವೃತ್ತಿ ರಂಗಭೂಮಿ ರಂಗಾಯಣಕ್ಕೆ ಜೈಕಾರ ಹಾಕುತ್ತಾರೆ. ನಾಟಕ ಮುಗಿದ ನಂತರವೂ ಈ ಜೈಕಾರ ಹಾಕುತ್ತಾರೆ. ಇದು ಕಂಪೆನಿ ನಾಟಕಗಳಲ್ಲಿ ‘‘ವೃತ್ತಿ ರಂಗಭೂಮಿಗೆ ಜಯವಾಗಲಿ’’ ಎಂದು ಹೇಳುವ ಹಾಗೆ. ಆಮೇಲೆ ಶಕ್ತನು ನೀನು ಭಕ್ತನು ನೀನು ಲಗುಣಗೊಂಡೆವು ಇನ್ನೇನು ಎಂದು ಬೀಳಗಿ ಸೋದರಿಯರಾದ ಗೋಹರ ಹಾಗೂ ಅಮೀರ ಹಾಡುತ್ತಾರೆ. ಇವರಿಗೆ ಹಾರ್ಮೋನಿಯಂ ಸಾಥ್ ನೀಡುವ ಅವರ ಸೋದರಮಾವ, ರಂಗಭೂಮಿ ಕಲಾವಿದರಾದ ಬೇವೂರ ಬಾದಷಾ ಮಾಸ್ತರ ಸೂಕ್ತ ಸಲಹೆಗಳನ್ನೂ ನೀಡುತ್ತಾರೆ. ಆಮೇಲೆ ಗೋಹರ ಹಾಗೂ ಅಮೀರ ಅವರು ನಾಟಕದಲ್ಲಿ ಪಾತ್ರಗಳಿಗೆ ಬಣ್ಣ ಹಚ್ಚಿದ ದೃಶ್ಯಗಳಿವೆ. ಮುಂದೆ ಬಸವರಾಜ ಮನ್ಸೂರ ಅವರ ಕಂಪೆನಿ ಸೇರುತ್ತಾರೆ. ಆಗ ಬಸವರಾಜ ಮನ್ಸೂರ ಅವರೊಂದಿಗೆ ಗೋಹರಬಾಯಿ ‘‘ನಾ ಮನಸ ಇಟ್ಟೀನಿ ಮಾಲಕರ, ನೀವೂ ಮನಸ್ಸು ಕೊಟ್ಟೀರಿ. ಅಡ್ಡಿಗಳ್ನ ಕಡ್ಡಿ ಮುರದಂಗ ತಗೀಬೇಕ್ರಿ’’ ಎಂದು ಹೇಳಿ ‘‘ಪ್ರೀತಿ ಮಾಡಿದ ಮ್ಯಾಲ ಮಾನಪಮಾನ ಎಲ್ಲ್ಯದ ಜಾತಿಪಾತಿ ಎಲ್ಲ್ಯದ, ಧರ್ಮ ಎಲ್ಲ್ಯದ?’’ ಎಂದು ಹಾಡುವ ಹಾಡು ಪ್ರೇಕ್ಷಕರನ್ನು ಸೆಳೆಯುತ್ತದೆ. ಮುಂದೆ ಮುಂಬೈಯಿಂದ ಬಂದ ನಟ ಹಾಗೂ ದಲ್ಲಾಳಿ ನಾನಾ ಚಾಪೇಕರ್ ಪರಿಚಯವಾಗಿ, ಮುಂಬೈಗೆ ಹಾಡಲು ಸೋದರಿಯರು ತೆರಳುತ್ತಾರೆ. ಅಲ್ಲಿ ಎಚ್ಎಂವಿ ಕಂಪೆನಿಯ ಧ್ವನಿಪರೀಕ್ಷೆಯಲ್ಲಿ ಗೋಹರ ಪಾಸಾದ ನಂತರ ಹಾಡುಗಳ ರೆಕಾರ್ಡಿಂಗ್ ನಡೆಯುತ್ತದೆ. ಅಲ್ಲಿಂದ ಹಿಂದಿ ಸಿನೆಮಾಗಳಿಗೂ ಗೋಹರಬಾಯಿ ಬಣ್ಣ ಹಚ್ಚುತ್ತಾರೆ. ಹೀಗಿದ್ದಾಗ ಬಸವರಾಜ ಮನ್ಸೂರ ಅವರ ಕಂಪೆನಿಯು ಬೆಳಗಾವಿಯಲ್ಲಿದ್ದಾಗ ಸುಟ್ಟು ಹೋದಾಗ ಅವರನ್ನು ನಾನಾ ಚಾಪೇಕರ್ ಗೋಹರಬಾಯಿ ಬಳಿ ಕರೆತರುತ್ತಾನೆ. ಆಮೇಲೆ ಗೋಹರಬಾಯಿ ಅವರೊಂದಿಗೆ ಬಸವರಾಜ ಅವರು ಕೂಡಾ ಹಿಂದಿ ಸಿನೆಮಾಗಳಲ್ಲಿ ನಟಿಸುತ್ತಾರೆ. ಹೀಗೆ ಬಾಗಲಕೋಟೆ ಜಿಲ್ಲೆಯ ಬೀಳಗಿ ಸೋದರಿಯರಾದ ಗೋಹರಬಾಯಿ ಕರ್ನಾಟಕಿ ಹಾಗೂ ಅಮೀರಬಾಯಿ ಕರ್ನಾಟಕಿ ಅವರು ‘ಕರ್ನಾಟಕಿ’ ಎಂದು ಹೆಸರಿಟ್ಟುಕೊಂಡು ಮುಂಬೈಯಲ್ಲಿ ಮಿಂಚುತ್ತಾರೆ. ಆದರೆ ಬಾಲಗಂಧರ್ವರು ಹಾಡುತ್ತಿದ್ದ ಹಾಡುಗಳನ್ನು ಗೋಹರಬಾಯಿ ಹಾಡಿದ ಪರಿಣಾಮ ಕೋರ್ಟ್ನಲ್ಲಿ ಬಾಲಗಂಧರ್ವರು ದಾವೆ ಹೂಡುತ್ತಾರೆ. ವಿಚಾರಣೆ ನಂತರ ಬಾಲಗಂಧರ್ವರು ಸೋಲುತ್ತಾರೆ. ಈ ಸೋಲಿನಿಂದಲೇ ಬಾಲಗಂಧರ್ವರು ಗೋಹರಬಾಯಿಗೆ ಸೋಲುತ್ತಾರೆ. ಮುಂದೆ ಅವರ ಕಂಪೆನಿಯನ್ನು ಗೋಹರಬಾಯಿ ಸೇರಿದರೆ, ಅಮೀರಬಾಯಿಗೆ ಹಿಮಾಲಯವಾಲಾನೊಂದಿಗೆ ಪ್ರೀತಿ ಅರಳುತ್ತದೆ. ಆದರೆ ಹಿಮಾಲಯವಾಲಾ ಕೈಕೊಟ್ಟಾಗ ‘‘ನಿನ್ನನೇ ನೆನೆಯುತೆ ರಾತ್ರಿಯ ಕಳೆದೆ ಪ್ರೀತಿಯ ಮಾತಿಗೆ ನಾ ಮರುಳಾದೆ ಸುಡುತಿರುವುದು ಆ ಪ್ರೀತಿಯ ಬೇಗೆ ವಿರಹದ ಜಾವವ ಕಳೆಯುವುದು ಹೇಗೆ?’’ ಎಂದು ಅಳುತ್ತಾಳೆ. ಅಮೀರಬಾಯಿ ಪಾತ್ರ ಪೊರೆದ ಸುಜಾತಾ ನೀಲಗುಂದ ಅಕ್ಷರಶಃ ಅಳುತ್ತ ಹಾಡುತ್ತಾರೆ. ಬಳಿಕ ಬರುವ ನಾನಾ ಚಾಪೇಕರ್ ಸಮಾಧಾನಿಸುತ್ತಾನೆ. ಆಗ ಅವನ ಮಗಳ ಮದುವೆಗೆ ತನ್ನ ಚಿನ್ನಾಭರಣ ನೀಡುವ ಅಮೀರಬಾಯಿ, ತನ್ನ ಗಾಯನ ಮುಂದುವರಿಸುವುದಾಗಿ ಹೇಳುತ್ತಾಳೆ. ಅತ್ತ ಬಾಲಗಂಧರ್ವ ಕಂಪೆನಿಯಲ್ಲಿ ಮಿಂಚುವ ಗೋಹರಬಾಯಿ ‘‘ಮಾನಾಪಮಾನ ಜೀವನ ಯಾನ ಗೆಲುವು ಸೋಲುಗಳ ಸಹಯಾನ’’ ಎಂದು ಹಾಡುತ್ತ, ನಟಿಸುತ್ತ, ನರ್ತಿಸುತ್ತ ಕಂಪೆನಿ ಮುನ್ನಡೆಸುತ್ತಾಳೆ. ಆಗ 63 ವರ್ಷ ವಯಸ್ಸಿನ ಬಾಲಗಂಧರ್ವರು 40 ವರ್ಷ ವಯಸ್ಸಿನ ಗೋಹರಬಾಯಿಯನ್ನು ಮದುವೆಯಾಗುತ್ತಾರೆ. ಇದರಿಂದ ಅವರ ಸೋದರ ಕಂಪೆನಿ ಬಿಟ್ಟು ಹೋಗುತ್ತಾರೆ. ಅವರ ಮೊದಲ ಪತ್ನಿಯೂ ದೂರಾಗುತ್ತಾರೆ. ಆದರೆ ನಷ್ಟದಲ್ಲಿದ್ದ ಕಂಪೆನಿಯನ್ನು ಗೋಹರಬಾಯಿ ಮುನ್ನಡೆಸುತ್ತಾಳೆ. ಮುಂದೆ ಬಾಲಗಂಧರ್ವರು ಅನಾರೋಗ್ಯಕ್ಕೀಡಾಗುತ್ತಾರೆ. ಜೊತೆಗೆ ಹಿಂದೂ-ಮುಸ್ಲಿಮ್ ಕೋಮುದಳ್ಳುರಿಯಲ್ಲಿ ಮುಂಬೈ ಬೇಯುವಾಗ ಅವರ ನಾಟಕ ಕಂಪೆನಿಯು ನಷ್ಟ ಅನುಭವಿಸುತ್ತದೆ. ಆರ್ಥಿಕ ಅಡಚಣೆಯಿಂದ ಬಾಲಗಂಧರ್ವರು ನರಳುತ್ತಾರೆ. ಆಗ ಪುಣೆಯ ಬ್ರಾಹ್ಮಣ ಸಮುದಾಯದವರು ಸನ್ಮಾನಿಸಿ, ನಿಧಿ ಅರ್ಪಿಸಲು ಆಹ್ವಾನಿಸುತ್ತಾರೆ. ಆದರೆ ಗೋಹರಬಾಯಿಯನ್ನು ಕಾರ್ಯಕ್ರಮಕ್ಕೆ ಕರೆದುಕೊಂಡು ಹೋಗಲು ಬಾಲಗಂಧರ್ವರು ಮುಂದಾಗುತ್ತಾರೆ. ಇದಕ್ಕೆ ಸಂಘಟಕರು ‘ಕಾನಡಿ ದೇಶದಾಕಿ, ಮುಸಲರಕಿ ಅದಾಳ’ ಎಂದು ಗೋಹರಬಾಯಿಯನ್ನು ಕರೆತರಬಾರದೆಂದು ಕಟ್ಟಪ್ಪಣೆ ಮಾಡಿದಾಗ ಬಾಲಗಂಧರ್ವರು ಗೋಹರಬಾಯಿ ಬಂದರೆ ಸನ್ಮಾನಕ್ಕೆ ಹೋಗುವೆನೆಂದು ಹಟ ಹಿಡಿಯುತ್ತಾರೆ. ಕೊನೆಗೆ ಗೋಹರಬಾಯಿ ದೂರ ನಿಂತು ಕಾರ್ಯಕ್ರಮ ನೋಡುವೆ ಎಂದಾಗ ಒಪ್ಪುತ್ತಾರೆ. ಸಮಾರಂಭದ ದಿನ ಸನ್ಮಾನ ಸ್ವೀಕರಿಸಿ ಹಾಡುವಾಗ ಕುಸಿದು ಬೀಳುವ ಬಾಲಗಂಧರ್ವರ ಬದಲು ಗೋಹರಬಾಯಿ ಹಾಡಲು ಮುಂದಾದಾಗ ಪ್ರೇಕ್ಷಕರು ತಿರಸ್ಕರಿಸುತ್ತಾರೆ. ಆಗ ತಮಗೆ ಸನ್ಮಾನಿಸಿದಾಗ ಕೊಟ್ಟಿದ್ದೆಲ್ಲವನ್ನೂ ಹಿಂದಿರುಗಿಸಲು ಬಾಲಗಂಧರ್ವರು ಮುಂದಾಗುತ್ತಾರೆ. ಆಗ ಸಂಘಟಕರು ಬೇಡವೆಂದು ಮನವಿ ಮಾಡಿಕೊಂಡಾಗ ಯಾವುದಾದರೂ ದೇವಸ್ಥಾನಕ್ಕೊ, ಮಸೀದಿಗೊ ದೇಣಿಗೆ ಕೊಟ್ಟುಬಿಡು ಎಂದು ಬಾಲಗಂಧರ್ವರು ಚಾಪೇಕರ್ಗೆ ಹೇಳುತ್ತಾರೆ. ಬಾಲಗಂಧರ್ವರ ನಂತರ ಗೋಹರಬಾಯಿ ಬದುಕಿರುವವರೆಗೂ ಹಾಡು ಹಾಡುತ್ತಾಳೆ. ಇಂಥ ಅಪರೂಪದ ನಾಟಕಕ್ಕೆ ಕಂಪೆನಿಯವರು ಬಳಸುವ ಹಾಗೆ ಪರದೆಗಳನ್ನು ಬಳಸಿದ್ದು ಮೆಚ್ಚತಕ್ಕ ಅಂಶ. ಆದರೆ ಕೆಲ ಕಲಾವಿದರ ಅಭಿನಯದ ಕೊರತೆಯಿಂದ ನಾಟಕ ಕಳೆಗಟ್ಟುವುದಿಲ್ಲ. ಅದರಲ್ಲೂ ಗೋಹರಬಾಯಿ ಪಾತ್ರ ಪೊರೆದ ಡಾ.ಶೃತಿ ರಾಜ್ ಅವರು ಕಾಲರ್ ಮೈಕ್ ಬಳಸಿದರೂ ಅವರ ಧ್ವನಿ ಪ್ರೇಕ್ಷಕರನ್ನು ತಲುಪುವುದು ಕಷ್ಟಸಾಧ್ಯವಿತ್ತು. ಆದರೆ ಬಾಲಗಂಧರ್ವ ಪಾತ್ರಧಾರಿ ಸುರೇಂದ್ರಗೌಡ ಗೋಕರ್ಣ, ಅಮೀರಬಾಯಿ ಪಾತ್ರಕ್ಕೆ ಬಣ್ಣ ಹಚ್ಚಿದ ಸುಜಾತಾ ನೀಲಗುಂದ, ನಾನಾ ಚಾಪೇಕರ್ ಪಾತ್ರಧಾರಿ ಸೋಮಶೇಖರ ಕಾರಿಗನೂರು ತಮ್ಮ ಅಭಿನಯದ ಮೂಲಕ ಪ್ರೇಕ್ಷಕರ ಮನಸ್ಸು ಗೆಲ್ಲುತ್ತಾರೆ. ಅದರಲ್ಲೂ ಬೇಸ್ ಧ್ವನಿಯ ಸುರೇಂದ್ರಗೌಡ ಅವರು ಬಾಲಗಂಧರ್ವ ಪಾತ್ರಕ್ಕೆ ಕಳೆ ತಂದಿದ್ದಾರೆ. ಮಹಾರಾಷ್ಟ್ರದ ಸಾಂಗಲಿ ಜಿಲ್ಲೆಯ ನಾಗಠಾಣದ ನಾರಾಯಣರಾವ್ ರಾಜಹಂಸನನ್ನು ಬಾಲಗಂಧರ್ವರೆಂದು ಕರೆದವರು ಲೋಕಮಾನ್ಯ ಬಾಲಗಂಗಾಧರನಾಥ ತಿಲಕರು. ಮಹಾರಾಷ್ಟ್ರದ ರಂಗಭೂಮಿಗೆ ಬಾಲಗಂಧರ್ವರ ಕೊಡುಗೆ, ಗೋಹರಬಾಯಿ ಹಾಗೂ ಅಮೀರಬಾಯಿ ಸೋದರಿಯರು ಮಹಾರಾಷ್ಟ್ರದಲ್ಲಿ ಮಿಂಚಿದ್ದು, ಅದರಲ್ಲೂ ಬಾಲಗಂಧರ್ವರಿಗೆ ಪ್ರತಿಗಂಧರ್ವಳಾಗಿ ಗೋಹರಬಾಯಿ ಮೆರೆದದ್ದು, ಕನ್ನಡ-ಮರಾಠಿ ಕೊಡುಕೊಳ್ಳುವಿಕೆ, ಕಂಪೆನಿ ಉಳಿಸುವ ಸಲುವಾಗಿ ನಟಿಯನ್ನು ಮದುವೆಯಾಗುವ ಅನಿವಾರ್ಯತೆ, ಪ್ರೀತಿ-ಪ್ರೇಮ, ವಿರಹ... ಇಂಥ ಹತ್ತಾರು ಅಂಶಗಳನ್ನು ಈ ನಾಟಕ ಅನಾವರಣಗೊಳಿಸುತ್ತದೆ. ಕನ್ನಡಿಗರಾದ ಬೀಳಗಿ ಸೋದರಿಯರು ಹಾಗೂ ಮರಾಠಿಯ ಬಾಲಗಂಧರ್ವರನ್ನು ಹೊಸಬಗೆಯ ಪ್ರೇಕ್ಷಕರಿಗೆ ತಲುಪಿಸಿದ ಹೆಗ್ಗಳಿಕೆ ಮಲ್ಲಿಕಾರ್ಜುನ ಕಡಕೋಳ ಅವರದು. ಆದರೆ ಈ ನಾಟಕ ಇನ್ನಷ್ಟು ಪರಿಣಾಮಕಾರಿಯಾಗಬೇಕಾದ ಜರೂರಿದೆ.
ತೊಗರಿಗೆ 12 ಸಾವಿರ ರೂ. ಬೆಂಬಲ ಬೆಲೆ: ರೈತ ಸಂಘ ಒತ್ತಾಯ
ಕನಕಗಿರಿ : ತೊಗರಿ ಬೆಳೆಗೆ ಕೇಂದ್ರ ಸರ್ಕಾರದ ಎಂ.ಎಸ್.ಪಿ ದರ ಪ್ರತಿ ಕ್ವಿಂಟಲ್ಗೆ ರೂ. 8000 ಜೊತೆಗೆ ರಾಜ್ಯ ಸರ್ಕಾರದ ಸಹಾಯ ಧನವನ್ನು ಘೋಷಿಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶರಣಪ್ಪ ಗದ್ದಿ ಹೇಳಿದರು. ಇಲ್ಲಿನ ತಶೀಲ್ದಾರ್ ಕಚೇರಿಯಲ್ಲಿ ತಶೀಲ್ದಾರ್ ವಿಶ್ವಾನಾಥ ಮುರುಡಿ ಮೂಲಕ ಮಾನ್ಯ ಮುಖ್ಯ ಕಾರ್ಯದರ್ಶಿಗಳು ವಿಧಾನಸೌಧ, ಮೂರನೇ ಮಹಡಿ ಬೆಂಗಳೂರು ಅವರಿಗೆ ಮನವಿ ಸಲ್ಲಿಸಿ ಮಾತನಾಡಿದರು. ಜಿಲ್ಲೆಯ ವ್ಯಾಪ್ತಿಯಲ್ಲಿ ಅತಿ ಹೆಚ್ಚು ತೊಗರಿ ಬೆಳೆಯನ್ನು ರೈತರು ಬೆಳೆದಿದ್ದು, ಮಾರುಕಟ್ಟೆಯಲ್ಲಿ ಬೆಲೆ ಕುಸಿತದಿಂದ ರೈತರು ಕಂಗಾಲಾಗಿದ್ದಾರೆ. ತೊಗರಿ ಬೆಳೆಯಲು ರೈತರು ಒಂದು ಎಕರೆಗೆ ಕನಿಷ್ಠ 15 ರಿಂದ 20 ಸಾವಿರ ರೂಪಾಯಿಗಳನ್ನು ಖರ್ಚು ಮಾಡುತ್ತಿದ್ದಾರೆ. ಆದರೆ ತೊಗರಿ ಬೆಳೆಗೆ ಬೆಂಬಲ ಬೆಲೆ ಕೇವಲ ಪ್ರತಿ ಕ್ವಿಂಟಲ್ಗೆ 8000 ರೂಪಾಯಿಯನ್ನು ಕೇಂದ್ರ ಸರ್ಕಾರ ನಿಗದಿ ಮಾಡಿದ್ದು, ಇದರಿಂದ ರೈತರಿಗೆ ಆರ್ಥಿಕ ಹೊರೆಯಾಗಿದೆ ಎಂದರು. ಕೇಂದ್ರ ಸರ್ಕಾರದ ಬೆಂಬಲ ಬೆಲೆಯ ಜೊತೆಗೆ ರಾಜ್ಯ ಸರ್ಕಾರವು ತನ್ನ ಅವರ್ತ ನಿಧಿಯಿಂದ ಕನಿಷ್ಠ ಪ್ರತಿ ಕ್ವಿಂಟಲ್ಗೆ 4 ಸಾವಿರ ರೂಪಾಯಿಗಳನ್ನು ಸಹಾಯ ಧನವನ್ನಾಗಿ ಘೋಷಿಸಿ, ಈಗಾಗಲೇ ರೈತರಿಗೆ ಕೇಂದ್ರ ಸರಕಾರ ಘೋಷಿಸಿದ ಎಂ ಎಸ್ ಪಿ ದರ 8000 ಸಾವಿರ ರೂಪಾಯಿಗಳು ಹಾಗೂ ರಾಜ್ಯ ಸರಕಾರದ 4 ಸಾವಿರ ರುಪಾಯಿಗಳು ಸೇರಿ ಒಟ್ಟು 12 ಸಾವಿರ ರೂಪಾಯಿಗಳಿಗೆ ರೈತರು ಬೆಳೆದ ತೊಗರಿಯನ್ನು ಖರೀದಿಸಿ ರೈತರ ಅಕೌಂಟ್ಗೆ ಜಮಾ ಮಾಡಬೇಕು ಎಂದು ಆಗ್ರಹಿಸಿದರು. ಗ್ಯಾರಂಟಿ ಯೋಜನೆಗಳಿಂದಾಗಿ ಈ ವರ್ಷ ತೊಗರಿ ಬೆಳೆದ ರೈತರಿಗೆ ರಾಜ್ಯ ಸರ್ಕಾರ ಅನ್ಯಾಯ ಎಸಗಿದೆ. ರೈತರ ಸಂಕಷ್ಟವನ್ನು ಅರಿತುಕೊಂಡು ರಾಜ್ಯ ಸರ್ಕಾರವು ತನ್ನ ಪಾಲಾದ ಸಹಾಯಧನವನ್ನು ತ್ವರಿತವಾಗಿ ಘೋಷಿಸಲೇಬೇಕೆಂದು ತಮ್ಮ ಮೂಲಕ ವಿನಂತಿಸಿಕೊಳ್ಳುತ್ತೇವೆ. ಒಂದು ವೇಳೆ ವಾರದೊಳಗೆ ಘೋಷಣೆಯಾಗದಿದ್ದರೆ, ಮಾನ್ಯ ತಹಶೀಲ್ದಾರರ ಕಚೇರಿಯ ಮುಂದೆ ಉಗ್ರವಾದ ಹೋರಾಟ ಮಾಡಲಾಗುವುದು ಎಂದರು. ರೈತರಾದ ಸೋಮನಾಥ ನಾಯಕ, ಶಿವುಕುಮಾರ, ಶೇಖರಪ್ಪ, ಹನುಮಂತ ಇತರರು ಇದ್ದರು.
ಕಲಬುರಗಿ: ಅಪರಿಚಿತ ವಾಹನ ಢಿಕ್ಕಿ; ಬೈಕ್ ಸವಾರ ಮೃತ್ಯು
ಕಲಬುರಗಿ: ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರರೊಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು, ಓರ್ವ ಗಾಯಗೊಂಡಿರುವ ಘಟನೆ ಅಫಜಲಪುರ - ದುಧನಿ ಮಾರ್ಗಮಧ್ಯೆ ಇರುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಶುಕ್ರವಾರ ಬೆಳಗ್ಗೆ ನಡೆದಿದೆ. ಅಫಜಲಪುರ ಪಟ್ಟಣದ ನಿವಾಸಿ ಅನ್ವರ್ ಸಾಬ್ ಬನ್ನಟ್ಟಿ(50) ಮೃತ ವ್ಯಕ್ತಿ. ಸಹಸವಾರ ಉಮರ್ ಅಲಿ ಗಾಯಗೊಂಡಿದ್ದು, ಅವರನ್ನು ಕಲಬುರಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಸ್ಕೂಟಿಯಲ್ಲಿ ಅನ್ವರ್ ಹಾಗೂ ಉಮರ್ ಅಲಿ ಅವರು ಅಫಜಲಪುರ ದಿಂದ ಅಕ್ಕಲಕೋಟೆ ಕಡೆಗೆ ಹೋಗುತ್ತಿದ್ದ ವೇಳೆ ಅಪರಿಚಿತ ವಾಹನ ಢಿಕ್ಕಿ ಹೊಡೆದಿದೆ ಎಂದು ತಿಳಿದುಬಂದಿದೆ. ಈ ಕುರಿತು ಅಫಜಲಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೊಸ ವರ್ಷದ ಸಂಭ್ರಮಕ್ಕೆ ಭದ್ರತೆಗಾಗಿ ಖಾಕಿ ಸಿದ್ದತೆ: ಹಿರಿಯ ಪೊಲೀಸ್ ಅಧಿಕಾರಿಗಳ ಸಭೆ ಕರೆದ ಪರಮೇಶ್ವರ್
ಬೆಂಗಳೂರು ನಗರದಲ್ಲಿ ಹೊಸ ವರ್ಷದ ಸಂಭ್ರಮ ಶುರುವಾಗುತ್ತಿದೆ. ಹೊಸ ವರ್ಷದ ಆಚರಣೆಯ ಹಿನ್ನೆಲೆಯಲ್ಲಿ ಸಾಕಷ್ಟು ಮುಂಜಾಗರೂಕತಾ ಕ್ರಮಗಳನ್ನು ಕೈಗೊಳ್ಳಲು ಗೃಹ ಇಲಾಖೆ ಮುಂದಾಗಿದೆ. ಈಗಾಗಲೇ ಪೊಲೀಸ್ ಅಧಿಕಾರಿಗಳು ಜನನಿಬಿಡ ಪ್ರದೇಶಗಳಲ್ಲಿ ಪರಿಶೀಲನೆ ನಡೆಸಿದ್ದಾರೆ. ಇಲಾಖೆ ಕೈಗೊಂಡಿರುವ ಕ್ರಮಗಳ ಕುರಿತಾಗಿ ಪರಿಶೀಲನೆ ನಡೆಸಲು ಗೃಹ ಸಚಿವ ಡಾ. ಜಿ ಪರಮೇಶ್ವರ್ ಅವರು ಭಾನುವಾರ ಹಿರಿಯ ಪೊಲೀಸ್ ಅಧಿಕಾರಿಗಳ ಸಭೆಯನ್ನು ಕರೆದಿದ್ದಾರೆ. ಸಭೆಯಲ್ಲಿ ಭದ್ರತಾ ವ್ಯವಸ್ಥೆಯ ಬಗ್ಗೆ ಮಾಹಿತಿ ಪಡೆದುಕೊಳ್ಳಲಿದ್ದಾರೆ. ಮತ್ತಷ್ಟು ವಿವರ ಇಲ್ಲಿದೆ.
Aadhaar - PAN Linking : ಸಮೀಪಿಸುತ್ತಿರುವ ಡೆಡ್ಲೈನ್ - ದಂಡ ಎಷ್ಟು, ಬ್ಯಾಂಕ್ ಅಕೌಂಟ್ ಫ್ರೀಜ್?
Important Aadhaar PAN Linking : ಮುಂದಿನ ವರ್ಷದ ಮೊದಲ ದಿನದಿಂದ ಹಲವು ಬದಲಾವಣೆಗಳು ಜಾರಿಗೆ ಬರಲಿದೆ. ಅದರಲ್ಲಿ ಪ್ರಮುಖವಾದದ್ದು ಆಧಾರ್ ಮತ್ತು ಪ್ಯಾನ್ ಲಿಂಕಿಂಗ್. ಇದರ ಗಡುವು ಮುಗಿಯುತ್ತಾ ಬಂದಿದ್ದು, ಲಿಂಕ್ ಮಾಡದಿದ್ದರೆ ದಂಡ ಪಾವತಿಸಬೇಕಾಗುತ್ತದೆ. ಲಿಂಕಿಂಗ್’ಗೆ ಮಾಡಬೇಕಾಗಿರುವುದು ಏನು?
Ration: ರಾಜ್ಯದ ಬಿಪಿಎಲ್ ಕಾರ್ಡ್ದಾರರಿಗೆ ಆಹಾರ ಸಚಿವ ಕೆ.ಎಚ್.ಮುನಿಯಪ್ಪ ಮಹತ್ವದ ಮಾಹಿತಿ
Ration: ರಾಜ್ಯದಲ್ಲಿ ನಕಲಿ ದಾಖಲೆ ಸೃಷ್ಟಿಸಿ ಪಡೆದ ಬಿಪಿಎಲ್ ಕಾರ್ಡ್ಗಳನ್ನು ರದ್ದುಪಡಿಸಿ ಎಪಿಎಲ್ಗೆ ವರ್ಗಾಯಿಸುವ ಕೆಲಸವನ್ನು ಸರ್ಕಾರ ಮುಂದುವರೆಸಿದೆ. ಈ ನಡುವೆಯೇ ಇದೀಗ ಇಂದಿರಾ ಕಿಟ್ ವಿತರಣೆ ಯಾವಾಗಿನಿಂದ ಆರಂಭ ಮಾಡಲಾಗಿತ್ತದೆ ಎನ್ನುವ ಅಪ್ಡೇಟ್ ಮಾಹಿತಿಯನ್ನು ಆಹಾರ ಸಚಿವ ಕೆ.ಎಚ್.ಮುನಿಯಪ್ಪ ಅವರು ನೀಡಿದ್ದಾರೆ. ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ. ಸಾಮಾನ್ಯವಾಗಿ ಬಿಪಿಎಲ್ ಪಡಿತರ ಚೀಟಿಯನ್ನು ಬಡತನ
Gold Price Today: ಚಿನ್ನದ ಬೆಲೆ ಮತ್ತೆ ಭಾರೀ ಏರಿಕೆ, ಇಂದಿನ ದರಗಳು ಹೀಗಿದೆ
ಚಿನ್ನದ ದರಗಳು ಈ ವಾರವಿಡೀ ಏರಿಕೆ ಕಂಡಿವೆ. ಸೋಮವಾರದಿಂದಲೂ ನಿರಂತರವಾಗಿ ದರ ಗಗನಕ್ಕೇರುತ್ತಿದ್ದು, ನಿನ್ನೆಯೂ ಒಂದು ಗ್ರಾಂ ಚಿನ್ನದ ಮೇಲೆ 32 ರೂಪಾಯಿವರೆಗೆ ಏರಿಕೆ ಕಂಡಿತ್ತು. ಈ ವಾರಾಂತ್ಯದ ವೇಳೆಗೆ ಚಿನ್ನದ ದರಗಳು ಕುಸಿಯುವ ನಿರೀಕ್ಷೆಯಲ್ಲಿದ್ದರು ಚಿನ್ನ ಖರೀದಿದಾರರು. ಆದರೆ ಶುಕ್ರವಾರವೂ ದರ ಏರತೊಡಗಿದೆ. ಬೆಂಗಳೂರಿನಲ್ಲಿ ಇಂದು 24 ಕ್ಯಾರೆಟ್, 22 ಕ್ಯಾರೆಟ್, 18 ಕ್ಯಾರೆಟ್ ಚಿನ್ನದ
ಮೈಸೂರಿನಲ್ಲಿ ಸಿಲಿಂಡರ್ ಸ್ಪೋಟ: ವರದಿ ನೀಡುವಂತೆ ಪರಮೇಶ್ವರ್ ಸೂಚನೆ
ಬೆಂಗಳೂರು: ಮೈಸೂರು ಅರಮನೆ ದ್ವಾರದ ಮುಂಭಾಗದಲ್ಲಿ ನಿನ್ನೆ ಸಂಭವಿಸಿದ ಹೀಲಿಯಂ ಸಿಲಿಂಡರ್ ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿ ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ ಅವರು ಹೇಳಿದರು. ಗೃಹಕಚೇರಿ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಘಟನೆಯಲ್ಲಿ ಬಲೂನ್ ಮಾರುತ್ತಿದ್ದ ಲಕ್ನೋ ಮೂಲದ ಎನ್ನಲಾದ ವ್ಯಕ್ತಿ ಮೃತಪಟ್ಟಿದ್ದಾನೆ. ಸಣ್ಣಪುಟ್ಟ ವಸ್ತುಗಳ ಮಾರಾಟ
26 Km ಮೈಲೇಜ್ ನೀಡುವ ಈ ಕಾರಿನ ಮೇಲೆ 1.85 ಲಕ್ಷದವರೆಗೆ ಟ್ಯಾಕ್ಸ್ ಕಡಿತಗೊಳಿಸಿದ ಕಂಪನಿ
ಭಾರತದ ಮಾರುಕಟ್ಟೆಯಲ್ಲಿ 7-ಸೀಟರ್ ಕಾರುಗಳಿಗೆ, ಅದರಲ್ಲೂ ವಿಶೇಷವಾಗಿ ಕುಟುಂಬ ಪ್ರಯಾಣಕ್ಕೆ ಹೇಳಿ ಮಾಡಿಸಿದಂತಿರುವ ಎಂಪಿವಿ (MPV) ಕಾರುಗಳಿಗೆ ಎಲ್ಲಿಲ್ಲದ ಬೇಡಿಕೆ ಇದೆ. ಸದ್ಯ ಟೊಯೋಟಾ ಕಂಪನಿಯ ಪ್ರಸಿದ್ಧ ಕಾರೊಂದು ಲಕ್ಷಾಂತರ ರೂಪಾಯಿ ಕಡಿಮೆ ಬೆಲೆಗೆ ಲಭ್ಯವಿದ್ದು, ಇದರ ಹೊಸ ದರ ಪಟ್ಟಿ ಬಿಡುಗಡೆಯಾಗಿದೆ. ಆದರೆ ಈ ಆಫರ್ ಎಲ್ಲರಿಗೂ ಸಿಗುವುದಿಲ್ಲ. ಹಾಗಾದರೆ ಯಾರು ಈ ಲಾಭ ಪಡೆಯಬಹುದು? ಬೆಲೆ ಎಷ್ಟು ಕಡಿಮೆ ಆಗಲಿದೆ? ಇಲ್ಲಿದೆ ಸಂಪೂರ್ಣ ಮಾಹಿತಿ. ಕುಟುಂಬ ಸಮೇತ ಪ್ರಯಾಣಿಸಲು ಆರಾಮದಾಯಕವಾದ ಮತ್ತು ಉತ್ತಮ ಮೈಲೇಜ್ ... Read more The post 26 Km ಮೈಲೇಜ್ ನೀಡುವ ಈ ಕಾರಿನ ಮೇಲೆ 1.85 ಲಕ್ಷದವರೆಗೆ ಟ್ಯಾಕ್ಸ್ ಕಡಿತಗೊಳಿಸಿದ ಕಂಪನಿ appeared first on Karnataka Times .
‘ಬೆಂಗಳೂರಿನ ನಿಮ್ಹಾನ್ಸ್ ವೈದ್ಯರು ನನ್ನ ಪಾಲಿನ ದೇವರು’ ಎನ್ನುತ್ತಾ ‘ಅಮೆರಿಕ ಆಸ್ಪತ್ರೆಗಳ ಲಾಭಕೋರತನ ತೆರೆದಿಟ್ಟ NRI
ಅಮೆರಿಕದಲ್ಲಿ ನೆಲೆಸಿದ್ದ ಭಾರತೀಯರೊಬ್ಬರು ಅಲ್ಲಿನ ವೈದ್ಯಕೀಯ ಕ್ಷೇತ್ರದ ಲಾಭಕೋರತನವನ್ನು ಬಯಲು ಮಾಡಿದ್ದಾರೆ. 2017ರಲ್ಲಿ ತಮಗೆ ಕಾಣಿಸಿಕೊಂಡ ಆರೋಗ್ಯ ಸಮಸ್ಯೆಗೆ ಅಮೆರಿಕದಲ್ಲಿ ಸರಿಯಾದ ಚಿಕಿತ್ಸೆ ಸಿಗಲಿಲ್ಲ. ಬೆಂಗಳೂರಿನ ನಿಮ್ಹ್ಯಾನ್ಸ್ ಆಸ್ಪತ್ರೆಯಲ್ಲಿ ಉತ್ತಮ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ. ಭಾರತದಲ್ಲಿ ವಿಶ್ವದರ್ಜೆಯ ವೈದ್ಯಕೀಯ ಸೇವೆಗಳು ಕಡಿಮೆ ವೆಚ್ಚದಲ್ಲಿ ಲಭ್ಯವಿವೆ ಎಂದು ಅವರು ಹೇಳಿದ್ದಾರೆ. ಇದು ಹಲವರ ಮೆಚ್ಚುಗೆಗೆ ಪಾತ್ರವಾಗಿದೆ.
ಅಮೆರಿಕಾದ ಪೆಂಟಗಾನ್ ವರದಿ ಭಾರತ-ಚೀನಾ ಸಂಬಂಧದ ಬಗ್ಗೆ ಹೊಸ ತಿರುವು ನೀಡಿದೆ. ಭಾರತದೊಂದಿಗೆ ಸಂಬಂಧ ಸುಧಾರಿಸುತ್ತಿರುವಾಗಲೇ, ಚೀನಾ ಭಾರತದ ಭೂಭಾಗವನ್ನು ಆಕ್ರಮಿಸಿಕೊಳ್ಳಲು ಯೋಜನೆ ರೂಪಿಸುತ್ತಿದೆ ಎಂದು ವರದಿ ಹೇಳಿದೆ. ಈ ವರದಿಗೆ ಚೀನಾ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಪಾಕಿಸ್ತಾನಕ್ಕೆ ಚೀನಾ ನೀಡುತ್ತಿರುವ ಬೆಂಬಲದ ಬಗ್ಗೆಯೂ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಭಾರತದ ನೆರೆಯ ರಾಷ್ಟ್ರವಾದ ಚೀನಾ ತನ್ನ ತಂತ್ರಗಳ ಮೂಲಕ ಭಾರತವನ್ನು ಅಮೆರಿಕಾದಿಂದ ದೂರ ಸರಿಸುವ ಪ್ರಯತ್ನ ಮಾಡುತ್ತಿದೆ ಎಂದು ವರದಿ ತಿಳಿಸಿದೆ. ಆದರೆ ನಾವು ಭಾರತದೊಂದಿಗೆ ನಿಕಟ ಹಾಗೂ ಸ್ಥಿರವಾದ ಸಂಬಂಧ ಮುಂದುವರೆಸುತ್ತೇವೆ ಎಂದು ಚೀನಾ ತಿರುಗೇಟು ನೀಡಿದೆ.
ಧೈರ್ಯ, ದೃಢನಿಶ್ಚಯ, ಸದಾಚಾರದ ದಿನ: ವೀರ ಬಾಲ ದಿವಸ್ನಲ್ಲಿ ಪ್ರಧಾನಿ ಮೋದಿ
ವೀರ್ ಬಾಲ ದಿವಸದಂದು ಪ್ರಧಾನಿ ನರೇಂದ್ರ ಮೋದಿ ಅವರು ಸಾಹಿಬ್ಜಾದೆಗಳ ತ್ಯಾಗ ಮತ್ತು ಧೈರ್ಯವನ್ನು ಸ್ಮರಿಸಿದರು. ಮಾತಾ ಗುಜ್ರಿ ಜಿ ಅವರ ನಂಬಿಕೆ ಮತ್ತು ಗುರು ಗೋವಿಂದ ಸಿಂಗ್ ಜಿ ಅವರ ಬೋಧನೆಗಳನ್ನು ನೆನಪಿಸಿಕೊಳ್ಳಲಾಯಿತು. ದೇಶಾದ್ಯಂತ ಕಾರ್ಯಕ್ರಮಗಳು ನಡೆದವು. ಸಾಹಿಬ್ಜಾದೆಗಳ ತ್ಯಾಗವು ಯುವ ಪೀಳಿಗೆಗೆ ಸ್ಫೂರ್ತಿ ನೀಡುತ್ತದೆ. ಡಿಸೆಂಬರ್ 26 ರಂದು ಈ ದಿನವನ್ನು ಆಚರಿಸಲಾಗುತ್ತದೆ.
ಆರೋಪಿ ಬಾಲಮುರುಗನ್ ತನ್ನ ಪತ್ನಿಯ ಕೊಲೆಗೆ ವ್ಯವಸ್ಥಿತವಾಗಿ ಸಂಚು ರೂಪಿಸಿದ್ದಾನೆ. ಈ ಕೊಲೆಗೆ ಸುಮಾರು ಒಂದು ವರ್ಷದಿಂದ ಪ್ಲ್ಯಾನ್ ಮಾಡಿಕೊಂಡಿದ್ದ. ಹತ್ಯೆ ನಡೆಸಲು ಬಿಹಾರದಿಂದ ಪಿಸ್ತೂಲ್ ಖರೀದಿ ಮಾಡಿಕೊಂಡಿದ್ದ. ಅಲ್ಲದೆ ಅದನ್ನು ಬಳಸಲು ತರಬೇತಿಯನ್ನು ಪಡೆದುಕೊಂಡಿದ್ದ. ಒಂದು ವೇಳೆ ಪಿಸ್ತೂಲ್ ಕೈಕೊಟ್ಟರೆ ಹತ್ಯೆಗೆ ಬಳಸಲು ಚಾಕುವನ್ನು ಸಹ ಖರೀದಿಸಿದ್ದ ಎಂದು ಪೊಲೀಸರು ನಡೆಸುತ್ತಿರುವ ತನಿಖೆಯಿಂದ ತಿಳಿದುಬಂದಿದೆ. ಇನ್ನು ಪಿಸ್ತೂಲ್ ನ್ನು ಬಿಹಾರದಿಂದಲೇ ಖರೀದಿ ಮಾಡಿದ್ದಾನಾ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ.
ಓಲಾ, ಉಬರ್, ರ್ಯಾಪಿಡೋ ಸೇರಿ ರೈಡಿಂಗ್ ಪ್ಲಾಟ್ಫಾರ್ಮ್ಗಳಿಗೆ ಕೇಂದ್ರದ ಖಡಕ್ ಆದೇಶ: ಮಹಿಳೆಯರಿಗೆ ಅನುಕೂಲ
Ride-Hailing Apps: ದೇಶದಲ್ಲಿ ಓಲಾ, ಉಬರ್, ರ್ಯಾಪಿಡೋ ಸೇರಿದಂತೆ ಎಲ್ಲಾ ಪ್ರಮುಖ ರೈಡ್-ಹೇಲಿಂಗ್ ಪ್ಲಾಟ್ಫಾರ್ಮ್ಗಳಿಗೆ ಕೇಂದ್ರ ಸರ್ಕಾರ ಖಡಕ್ ಆದೇಶ ಹೊರಡಿಸಿದೆ. ಜೊತೆಗೆ ಮಹಿಳಾ ಪ್ರಯಾಣಿಕರ ಸುರಕ್ಷತೆ ಕುರಿತು ಕೂಡ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ಹಾಗಾದ್ರೆ, ಅದೇನು ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ. ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಬಹುತೇಕ ಪ್ರಯಾಣಿಕರು ಓಲಾ,
Chamarajanagar | ಬಿಆರ್ಟಿ ಹುಲಿ ಸಂರಕ್ಷಿತ ಪ್ರದೇಶದ ಎರೆಕಟ್ಟೆ ಬಳಿ ಗಂಡಾನೆಯ ಕಳೇಬರ ಪತ್ತೆ
ಚಾಮರಾಜನಗರ : ಚಾಮರಾಜನಗರ ಜಿಲ್ಲೆಯ ಬಿಳಿಗಿರಿರಂಗನಾಥಸ್ವಾಮಿ ಹುಲಿ ಸಂರಕ್ಷಿತ ಪ್ರದೇಶದ ಯಳಂದೂರು ಅರಣ್ಯ ವಲಯದ ಪುರಾಣಿ ಶಾಖೆ ವ್ಯಾಪ್ತಿಯ ಎರೆಕಟ್ಟೆ ಕೆರೆ ಸಮೀಪ ಗಂಡು ಆನೆಯೊಂದು ಸಾವನ್ನಪ್ಪಿರುವುದು ಬೆಳಕಿಗೆ ಬಂದಿದೆ. ಸುಮಾರು 30-35 ವರ್ಷ ವಯಸ್ಸಿನ ಗಂಡು ಆನೆ (ಟಸ್ಕರ್) ಇದಾಗಿದ್ದು, ಮತ್ತೊಂದು ಗಂಡು ಆನೆಯೊಂದಿಗೆ ನಡೆದ ಆಂತರಿಕ ಕಾಳಗವೇ ಸಾವಿಗೆ ಕಾರಣವಾಗಿರಬಹುದೆಂಬ ಶಂಕೆ ಅರಣ್ಯ ಇಲಾಖೆಯಿಂದ ವ್ಯಕ್ತವಾಗಿದೆ. ಅರಣ್ಯ ಸಿಬ್ಬಂದಿಗಳು ಪುರಾಣಿ ಶಾಖೆಯ ವ್ಯಾಪ್ತಿಯಲ್ಲಿ ನಡೆಸಿದ ನಿಯಮಿತ ಗಸ್ತು ಕಾರ್ಯದ ವೇಳೆ ಪ್ರದೇಶದಲ್ಲಿ ತೀವ್ರ ದುರ್ವಾಸನೆ ಕಂಡುಬಂದ ಹಿನ್ನೆಲೆಯಲ್ಲಿ ಶೋಧ ಕಾರ್ಯ ಕೈಗೊಂಡಾಗ ಆನೆಯ ಮೃತದೇಹ ಪತ್ತೆಯಾಗಿದೆ. ಘಟನಾ ಸ್ಥಳದ ಸುತ್ತಮುತ್ತ ವ್ಯಾಪಕವಾಗಿ ಹೆಜ್ಜೆ ಗುರುತುಗಳು, ಮಣ್ಣಿನ ಕಾಳಗ ಅಲುಗಾಡಿಕೆ ಹಾಗೂ ಸಂಘರ್ಷದ ಗುರುತುಗಳು ಕಂಡುಬಂದಿದ್ದು, ಆನೆಗಳ ನಡುವೆ ನಡೆದಿರುವುದನ್ನು ಸ್ಪಷ್ಟಪಡಿಸುತ್ತದೆ. ಮಾಹಿತಿ ಪಡೆದ ತಕ್ಷಣ ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮರಣೋತ್ತರ ನಂತರ ನಿಖರ ಸಾವಿನ ಕಾರಣ ಸ್ಪಷ್ಟವಾಗಲಿದೆ ಎಂದು ತಿಳಿಸಿದ್ದಾರೆ.
ಝಕರಿಯಾ ಹಾಜಿ ಜೋಕಟ್ಟೆ ಅವರಿಗೆ 'ಖ್ವಾಜಾ ಗರೀಬ್ ನವಾಝ್ ಪ್ರಶಸ್ತಿ'
ಬಂಟ್ವಾಳ: ದಾರುಲ್ ಇರ್ಶಾದ್ ಅಧೀನದ ಕೆ.ಜಿ.ಎನ್. ದಅವಾ ಕಾಲೇಜು ಮಿತ್ತೂರಿನಲ್ಲಿ ಬೃಹತ್ ಅಜ್ಮೀರ್ ಮೌಲಿದ್ ಮತ್ತು ಸನದುದಾನ ಸಮಾರಂಭ ಇಂದು ನಡೆಯಲಿದೆ. ಪ್ರಸ್ತುತ ಸಮಾರಂಭದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಉದ್ಯಮಿ ಝಕರಿಯಾ ಹಾಜಿ ಜೋಕಟ್ಟೆ ಅವರಿಗೆ 'ಖ್ವಾಜಾ ಗರೀಬ್ ನವಾಝ್ ಪ್ರಶಸ್ತಿ'ಯನ್ನು ಪ್ರದಾನ ಮಾಡಲಾಗುತ್ತದೆ. ಕೇರಳ ಮುಸ್ಲಿಮ್ ಜಮಾಅತ್ ಪ್ರಧಾನ ಕಾರ್ಯದರ್ಶಿ ಅಸ್ಸಯ್ಯಿದ್ ಬದ್ರುಸ್ಸಾದಾತ್ ಖಲೀಲುಲ್ ಬುಖಾರಿ ತಂಙಳ್, ಸಮಸ್ತ ಕೇರಳ ಜಮ್ಇಯ್ಯತುಲ್ ಉಲಮಾ ಕಾರ್ಯದರ್ಶಿ ಪೇರೋಡ್ ಅಬ್ದುರ್ರಹ್ಮಾನ್ ಸಖಾಫಿ, ಕರ್ನಾಟಕ ಜಮ್ಇಯ್ಯತುಲ್ ಉಲಮಾ ಅಧ್ಯಕ್ಷ ಝೈನುಲ್ ಉಲಮಾ ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿ ಮೊದಲಾದವರು ಭಾಗವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
ʼಸಾಂತಾಕ್ಲಾಸ್ ಸ್ಕಿಟ್ʼ: ಧಾರ್ಮಿಕ ಭಾವನೆಗಳಿಗೆ ಧಕ್ಕೆ ಆರೋಪದಲ್ಲಿ ಆಪ್ ನಾಯಕರ ವಿರುದ್ಧ ಪ್ರಕರಣ ದಾಖಲು
ಹೊಸದಿಲ್ಲಿ: ವಾಯು ಮಾಲಿನ್ಯದ ಕುರಿತು ಸಾಂತಾಕ್ಲಾಸ್ ಸ್ಕಿಟ್ ವೀಡಿಯೊ ಹಂಚಿಕೊಂಡ ಬೆನ್ನಲ್ಲೆ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪದಲ್ಲಿ ಆಪ್ ನಾಯಕರಾದ ಸೌರಭ್ ಭಾರದ್ವಾಜ್, ಸಂಜೀವ್ ಝಾ ಮತ್ತು ಆದಿಲ್ ಅಹ್ಮದ್ ಖಾನ್ ವಿರುದ್ಧ ದಿಲ್ಲಿ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈ ಕುರಿತು ಮೂವರು ಆಪ್ ನಾಯಕರ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 299, 302(3) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ವಕೀಲೆ ಖುಷ್ಬೂ ಜಾರ್ಜ್ ಅವರು ಈ ಕುರಿತು ದೂರು ದಾಖಲಿಸಿದ್ದಾರೆ. ಮೂವರು ನಾಯಕರ ನಡೆಯು ಕ್ರೈಸ್ತ ಸಮುದಾಯದ ಧಾರ್ಮಿಕ ಭಾವನೆಗಳಿಗೆ ಆಳವಾದ ನೋವುಂಟುಮಾಡಿದೆ. ದಿಲ್ಲಿಯಲ್ಲಿ ಕೋಮು ಸಾಮರಸ್ಯಕ್ಕೆ ಬೆದರಿಕೆ ಹಾಕಿದೆ ಎಂದು ಹೇಳಿದ್ದಾರೆ. ಪ್ರಪಂಚದಾದ್ಯಂತ ಕ್ರೈಸ್ತರ ಗೌರವಯುತ ಧಾರ್ಮಿಕ ಮತ್ತು ಸಾಂಸ್ಕೃತಿಕ ಪ್ರತೀಕವಾಗಿರುವ ಸಾಂತಾಕ್ಲಾಸ್ ವೇಷ ಧರಿಸಿದ ವ್ಯಕ್ತಿಯನ್ನು ಅವಮಾನಕರ ಮತ್ತು ಗೇಲಿ ಮಾಡುವ ರೀತಿಯಲ್ಲಿ ಚಿತ್ರಿಸಲಾಗಿದೆ ಎಂದು ದೂರುದಾರರು ಆರೋಪಿಸಿದ್ದಾರೆ. ಡಿಸೆಂಬರ್ 17ರಂದು ಆಪ್ ನಾಯಕರು ತಮ್ಮ ಅಧಿಕೃತ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಒಂದು ವ್ಯಂಗ್ಯ ವೀಡಿಯೊವನ್ನು ಹಂಚಿಕೊಂಡಿದ್ದರು. ಈ ವೀಡಿಯೊದಲ್ಲಿ ವಾಯು ಮಾಲಿನ್ಯದಿಂದ ಸಾಂತಾ ಕ್ಲಾಸ್ ಮೂರ್ಛೆ ಹೋಗುವುದನ್ನು ತೋರಿಸಲಾಗಿತ್ತು.
ಆರ್ಸಿಬಿ ಕ್ರಿಕೆಟಿಗ ಯಶ್ ದಯಾಳ್ಗೆ ಪೋಕ್ಸೋ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ನಿರಾಕರಣೆಯಾಗಿದೆ. ಅಪ್ರಾಪ್ತ ಬಾಲಕಿಯ ಮೇಲಿನ ಅತ್ಯಾಚಾರ ಆರೋಪ ಪ್ರಕರಣದಲ್ಲಿ ನ್ಯಾಯಾಲಯ ಈ ತೀರ್ಪು ನೀಡಿದೆ. ಇದರಿಂದಾಗಿ ಯಶ್ ದಯಾಳ್ಗೆ ಬಂಧನದ ಭೀತಿ ಎದುರಾಗಿದೆ. ಕ್ರಿಕೆಟ್ ವೃತ್ತಿ ಜೀವನ ರೂಪಿಸಿಕೊಡುವುದಾಗಿ ನಂಬಿಸಿ ಲೈಂಗಿಕ ದೌರ್ಜನ್ಯ ಎಸಗಿದ ಆರೋಪವಿದೆ. ಸಾಕ್ಷ್ಯಗಳು ಲಭ್ಯವಿದ್ದು, ತನಿಖೆ ನಡೆಯುತ್ತಿದೆ. ತನ್ನ ಮೇಲಿನ ಆರೋಪಗಳೆಲ್ಲಾ ಸುಳ್ಳು, ನನ್ನನ್ನು ಆರ್ಥಿಕವಾಗಿ ಶೋಷಿಸಲು ಹೀಗೆ ಮಾಡಲಾಗುತ್ತಿದೆ ಎಂದು ದಯಾಳ್ ಹೇಳಿಕೊಂಡಿದ್ದು, ಈ ನಡುವೆ ಜೈಪುರ ಪೋಕ್ಸೋ ನ್ಯಾಯಲಯದ ತೀರ್ಪು ಶಾಕ್ ನೀಡಿದ್ದು ಯಾವುದೇ ಕ್ಷಣದಲ್ಲಿ ಬಂಧನವಾಗುವ ಸಾಧ್ಯತೆಯಿದೆ.
ಹೊಸ ವರ್ಷಕ್ಕೆ ಮೊದಲು ದಾಖಲೆ ಏರಿಕೆ ಕಂಡ ಚಿನ್ನ-ಬೆಳ್ಳಿ!
ಕಳೆದೆರಡು ದಿನಗಳಲ್ಲಿ ಸ್ವಲ್ಪ ಮಟ್ಟಿಗೆ ಏರಿಕೆ ಕಂಡಿದ್ದ ಚಿನ್ನ ಇದೀಗ ಶುಕ್ರವಾರ ದಾಖಲೆ ಏರಿಕೆ ಕಂಡಿದೆ. ಮಂಗಳೂರು ಮತ್ತು ವಿವಿಧ ನಗರಗಳಲ್ಲಿ ಚಿನ್ನದ ಬೆಲೆಯಷ್ಟು ಎಂಬ ವಿವರ ಇಲ್ಲಿದೆ. ಕ್ರಿಸ್ಮಸ್ ಹಬ್ಬ ಮುಗಿದು ಇನ್ನೇನು ಕೆಲವೇ ದಿನಗಳಲ್ಲಿ ಹೊಸ ವರ್ಷ ಬರಲಿದೆ. ಸಾಮಾನ್ಯವಾಗಿ ಹೊಸ ವರ್ಷದ ಆರಂಭದಲ್ಲಿ ಚಿನ್ನದ ಬೆಲೆ ಏರುವುದು ವಾಡಿಕೆ. ಕಳೆದೆರಡು ದಿನಗಳಲ್ಲಿ ಅಲ್ಪಮಟ್ಟಿಗೆ ಏರಿಕೆಯಾಗಿದ್ದ ಚಿನ್ನ ಇಂದು ಶುಕ್ರವಾರ ಸಾರ್ವಕಾಲಿಕ ಏರಿಕೆ ಕಂಡುಬಂದಿದೆ. ಫೆಡ್ ದರ ಕಡಿತದ ಬೆಟ್ ಗಳಲ್ಲಿ ಏರಿಕೆಯಾಗಿರುವುದು ಮತ್ತು ಅಮೆರಿಕ- ವೆನೆಜುವೆಲಾ ನಡುವಿನ ಉದ್ವಿಗ್ನತೆಯಿಂದಾಗಿ ಬೆಳ್ಳಿಯ ದರದಲ್ಲೂ ಶೇ 4ರಷ್ಟು ಏರಿಕೆಯಾಗಿದೆ. ಶುಕ್ರವಾರ ಚಿನ್ನ ಶೇ 0.65 ರಷ್ಟು ಏರಿಕೆಯಾಗಿ 10 ಗ್ರಾಂಗೆ 1,38,994 ರೂ. ದಾಖಲೆಯ ಗರಿಷ್ಠ ಮಟ್ಟವನ್ನು ತಲುಪಿದರೆ, ಬೆಳ್ಳಿ ಶುಕ್ರವಾರದಂದು ಶೇ 4 ರಷ್ಟು ಏರಿಕೆಯಾಗಿ ಪ್ರತಿ ಕೆಜಿಗೆ 2,32,741 ರೂ. ದಾಖಲೆಯ ಗರಿಷ್ಠ ಮಟ್ಟವನ್ನು ತಲುಪಿವೆ. ಮಂಗಳೂರಿನಲ್ಲಿ ಇಂದು ಚಿನ್ನದ ದರವೆಷ್ಟು? ಶುಕ್ರವಾರ ಡಿಸೆಂಬರ್ 26ರಂದು ಮಂಗಳೂರಿನಲ್ಲಿ ಚಿನ್ನದ ಬೆಲೆ ಮತ್ತೆ ದಾಖಲೆ ಏರಿಕೆಯಾಗಿದೆ. ಬೆಳಗಿನ ವಹಿವಾಟಿನಲ್ಲಿ ಒಂದು ಗ್ರಾಂ 24 ಕ್ಯಾರೆಟ್ ಚಿನ್ನಕ್ಕೆ 14,002 (+77) ರೂ., ಒಂದು ಗ್ರಾಂ 22 ಕ್ಯಾರೆಟ್ ಚಿನ್ನಕ್ಕೆ 12,835(+70) ರೂ., ಮತ್ತು ಒಂದು ಗ್ರಾಂ 18 ಕ್ಯಾರೆಟ್ ಚಿನ್ನ 10,502 (+58) ರೂ. ಬೆಲೆಗೆ ತಲುಪಿದೆ. ಭಾರತದಲ್ಲಿ ಇಂದಿನ ಚಿನ್ನದ ಬೆಲೆ ಬೆಳಗಿನ ವಹಿವಾಟಿನಲ್ಲಿ ಹತ್ತು ಗ್ರಾಂ 24 ಕ್ಯಾರೆಟ್ ಚಿನ್ನಕ್ಕೆ 1,39,220 ರೂ., ಹತ್ತು ಗ್ರಾಂ 22 ಕ್ಯಾರೆಟ್ ಚಿನ್ನಕ್ಕೆ 1,27,640 ರೂ., ಮತ್ತು ಹತ್ತು ಗ್ರಾಂ 18 ಕ್ಯಾರೆಟ್ ಚಿನ್ನ 1,04,410 ರೂ. ಬೆಲೆಗೆ ತಲುಪಿದೆ. ಬೆಂಗಳೂರು 24 ಕ್ಯಾರಟ್: 1,39,260 ರೂ. 22 ಕ್ಯಾರಟ್: 1,27,660 ರೂ. ದೆಹಲಿ 24 ಕ್ಯಾರಟ್: 1,39,410 ರೂ. 22 ಕ್ಯಾರಟ್: 1,27,810 ರೂ. ಚೆನ್ನೈ 24 ಕ್ಯಾರಟ್: 1,39,870 ರೂ. 22 ಕ್ಯಾರಟ್: 1,28,210 ರೂ. ಹೈದರಾಬಾದ್ 24 ಕ್ಯಾರಟ್: 1,39,260 ರೂ. 22 ಕ್ಯಾರಟ್: 1,27,660 ರೂ. ವಿಜಯವಾಡ / ವಿಶಾಖಪಟ್ಟಣಂ 24 ಕ್ಯಾರಟ್: 1,39,260 ರೂ. 22 ಕ್ಯಾರಟ್: 1,27,660 ರೂ. ಬೆಳ್ಳಿ ಬೆಲೆಯಲ್ಲೂ ದಾಖಲೆ ಏರಿಕೆ ಚಿನ್ನದ ಬೆಲೆಗೆ ಸಮಾನವಾಗಿ ಬೆಳ್ಳಿಯ ದರವೂ ಹೊಸ ದಾಖಲೆಗಳನ್ನು ತಲುಪುತ್ತಿದೆ. ಕೈಗಾರಿಕಾ ಬಳಕೆ ಹಾಗೂ ಹೂಡಿಕೆ ಆಸಕ್ತಿ ಹೆಚ್ಚುತ್ತಿರುವುದರಿಂದ ಬೆಳ್ಳಿ ದರ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಬೆಂಗಳೂರು: ಕಿಲೋ ಬೆಳ್ಳಿ 2,34,100 ರೂ. ಹೈದರಾಬಾದ್: ಕಿಲೋ ಬೆಳ್ಳಿ 2,45,100 ರೂ. ವಿಜಯವಾಡ / ವಿಶಾಖಪಟ್ಟಣಂ: 2,45,100 ರೂ. ಚೆನ್ನೈ: 2,45,100 ರೂ.
ಕ್ರೈಸ್ತರ ಆಚರಣೆಗಳ ಮೇಲಿನ ದಾಳಿ ಸಂವಿಧಾನದ ಮೌಲ್ಯಗಳ ಮೇಲಿನ ದಾಳಿಯಾಗಿದೆ: ಶಶಿ ತರೂರ್ ಕಳವಳ
ಹೊಸದಿಲ್ಲಿ: ಕ್ರೈಸ್ತ ಸಂಪ್ರದಾಯಗಳ ಮೇಲಿನ ದಾಳಿಗಳು ಕೇವಲ ಒಂದು ಸಮುದಾಯದ ಮೇಲಿನ ದಾಳಿಯಲ್ಲ. ಬದಲಿಗೆ ಭಾರತದ ಸಂವಿಧಾನಾತ್ಮಕ ಮೌಲ್ಯಗಳ ಮೇಲಿನ ದಾಳಿಯಾಗಿದೆ ಎಂದು ಕಾಂಗ್ರೆಸ್ ಸಂಸದ ಶಶಿ ತರೂರ್ ಹೇಳಿದ್ದಾರೆ. ಕ್ರಿಸ್ಮಸ್ ದಿನದ ಅಂಗವಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಶಶಿ ತರೂರು, ಕ್ರೈಸ್ತ ಸಂಪ್ರದಾಯಗಳ ಮೇಲಿನ ಇತ್ತೀಚಿನ ದಾಳಿಗಳು ಕೇವಲ ಒಂದು ಸಮುದಾಯದ ಮೇಲಿನ ದಾಳಿಯಲ್ಲ. ಬದಲಾಗಿ ಭಾರತದ ಸಾಂವಿಧಾನಿಕ ಮೌಲ್ಯಗಳ ಮೇಲಿನ ದಾಳಿಗಳಾಗಿವೆ. ಆರಾಧನ ಸ್ವಾತಂತ್ರ್ಯಕ್ಕೆ ಬೆದರಿಕೆ ಎದುರಾದಾಗ ಪ್ರತಿಯೊಬ್ಬ ಭಾರತೀಯನ ಮೇಲೂ ದಾಳಿ ನಡೆಯುತ್ತಿದೆ ಎಂದು ಹೇಳಿದರು. ಸಾಂಪ್ರದಾಯಿಕವಾಗಿ ಕ್ರಿಸ್ಮಸ್ ವೇಳೆ ಹಲವು ಚರ್ಚ್ ಗಳಿಗೆ ಭೇಟಿ ನೀಡುತ್ತೇನೆ. ಆದರೆ, ಈ ವರ್ಷ ವಿಮಾನ ವಿಳಂಬವಾದ ಕಾರಣ ಎಲ್ಲಾ ಚರ್ಚ್ಗಳಿಗೆ ಭೇಟಿ ನೀಡಲು ಸಾಧ್ಯವಾಗಿಲ್ಲ. ನನಗೆ, ನನ್ನ ಕ್ಷೇತ್ರದ ಸದಸ್ಯರೊಂದಿಗೆ ಐಕ್ಯತೆ ಪ್ರದರ್ಶಿಸುವುದು ಮತ್ತು ಎಲ್ಲಾ ಸಮುದಾಯಗಳ ಸಾಂಸ್ಕೃತಿಕ ಹಾಗೂ ಧಾರ್ಮಿಕ ಸಂಪ್ರದಾಯಗಳನ್ನು ಗೌರವಿಸುವುದು ಕೇರಳ ರಾಜಕಾರಣಕ್ಕೆ ಕೇಂದ್ರಬಿಂದುವಾಗಿದೆ. ದುಃಖಕರವೆಂದರೆ, ದೇಶದ ವಿವಿಧ ಭಾಗಗಳಲ್ಲಿ ಕ್ರೈಸ್ತ ಸಮುದಾಯದ ಜನರ ಮೇಲೆ ದಾಳಿಗಳು ನಡೆಯುತ್ತಿರುವುದನ್ನು ನಾವು ನೋಡುತ್ತಿದ್ದೇವೆ. ನಮ್ಮ ಸಂಪ್ರದಾಯಗಳ ಮೇಲೆ ದಾಳಿಯಾದಾಗ, ಕೇವಲ ಕ್ರೈಸ್ತ ಸಮುದಾಯದ ಜನರ ಮೇಲೆಯಲ್ಲ. ನಮ್ಮೆಲ್ಲರ ನಮ್ಮೆಲ್ಲರ ಮೇಲೂ ದಾಳಿ ನಡೆಯುತ್ತದೆ. ಪ್ರತಿಯೊಬ್ಬ ಭಾರತೀಯನ ಮೇಲೂ ದಾಳಿ ನಡೆಯುತ್ತದೆ ಎಂದು ಹೇಳಿದರು. ಕೇರಳದ ಪಾಲಕ್ಕಾಡ್ ಜಿಲ್ಲೆಯ ಪುದುಶ್ಶೇರಿಯಲ್ಲಿ ಕ್ರಿಸ್ಮಸ್ ಸಂಭ್ರಮದಲ್ಲಿದ್ದ ಗುಂಪಿನ ಮೇಲೆ ನಡೆದ ಹಲ್ಲೆಯು ನಿಜವಾಗಿಯೂ ಆಘಾತಕಾರಿ. ಬಿಜೆಪಿ ಕಾರ್ಯಕರ್ತ ಹಲ್ಲೆ ನಡೆಸಿದ್ದಾನೆ. ಸಂಗೀತ ವಾದ್ಯಗಳಿಗೆ ಹಾನಿ ಮಾಡಿದ್ದಾನೆ ಎಂದು ಹೇಳಲಾಗಿದೆ. ಇದು ಜಾತ್ಯತೀತ ಸಂಪ್ರದಾಯದ ಮೇಲಿನ ದಾಳಿಯಾಗಿದ್ದು, ರಾಜ್ಯವನ್ನೇ ಬೆಚ್ಚಿಬೀಳಿಸಿದೆ ಎಂದು ಶಶಿ ತರೂರ್ ಹೇಳಿದ್ದಾರೆ.
ಮೈಸೂರು ಅರಮನೆಯ ಮುಂಭಾಗದಲ್ಲಿ ಸಿಲಿಂಡರ್ ಸ್ಫೋಟ: ಘಟನೆಯ ಬಗ್ಗೆ ಮಹತ್ವದ ಮಾಹಿತಿ ಕೊಟ್ಟ ಜಿ ಪರಮೇಶ್ವರ್
ಮೈಸೂರು ಅರಮನೆಯ ಜಯಮಾರ್ತಾಂಡ ದ್ವಾರದ ಬಳಿ ಗುರುವಾರ ಸಂಜೆ ಹೀಲಿಯಂ ಸಿಲಿಂಡರ್ ಸ್ಫೋಟಗೊಂಡಿದೆ. ಇದರ ಪರಿಣಾಮ ಬಲೂನ್ ಮಾರುತ್ತಿದ್ದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. ಅಲ್ಲದೆ ಈ ಘಟನೆಯಲ್ಲಿ ನಾಲ್ವರು ಗಾಯಗೊಂಡಿದ್ದಾರೆ. ಕ್ರಿಸ್ಮಸ್ ಹಿನ್ನೆಲೆಯಲ್ಲಿ ಪ್ರವಾಸಿಗರು ಹೆಚ್ಚಿದ್ದಾಗ ಈ ಘಟನೆ ನಡೆದಿದೆ. ಘಟನೆಯಲ್ಲಿ ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಸಂಬಂಧಿಸಿದಂತೆ ಮೈಸೂರು ನಗರ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಘಟನೆಯ ಬಗ್ಗೆ ಗೃಹ ಸಚಿವ ಡಾ. ಜಿ ಪರಮೇಶ್ವರ್ ಅವರು ಕೆಲವೊಂದು ಮಹತ್ವದ ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ.
ಊರ ಬಾಗಿಲಿಗೆ ಬಂದು ನಿಂತರೆ ಇಡಿಯ ಊರಿನ ಚಹರೆಯೇ ಬದಲಾಗಿ ಹೋಗಿದೆ. ಗೂಡಂಗಡಿಯಿದ್ದ ಜಾಗದಲ್ಲಿ ಬಹುಮಹಡಿಗಳ ಕಟ್ಟಡ ಎದ್ದುನಿಂತಿದೆ. ತಂಪು ಪಾನೀಯಗಳಿಂದ ಹಿಡಿದು ಜಿಮ್ನವರೆಗೆ ಎಲ್ಲ ಸವಲತ್ತುಗಳೂ ಆ ಕಟ್ಟಡದಡಿಯಲ್ಲಿಯೇ ಇವೆ. ಒಂದೇ ಕೋಣೆಯ ಶಾಲೆ ವಿಸ್ತಾರಗೊಂಡು ಕಣ್ಣು ತುಂಬುವವರೆಗೂ ಚಾಚಿಕೊಂಡಿದೆ. ಸಂಕ ದಾಟುವ ಜಾಗದಲ್ಲಿ ಸೇತುವೆಗಳು ಎದ್ದುನಿಂತಿವೆ. ಬಿರುಬೇಸಿಗೆಯಲ್ಲೂ ತುಂಬಿ ಹರಿಯುತ್ತಿದ್ದ ಹೊಳೆ ಅದರೊಡಲಿನಲ್ಲಿ ತೇಲಿಬಿಟ್ಟ ನೂರಾರು ಪಂಪುಗಳ ಬಾಲದ ಹೊಡೆತಕ್ಕೆ ನಲುಗಿ ಬತ್ತಿಹೋಗಿದೆ. ಸುಧಾ ಆಡುಕಳ ಪ್ರಸ್ತುತ ಉಡುಪಿಯ ಬಾಲಕಿಯರ ಪದವಿಪೂರ್ವ ಕಾಲೇಜಿನಲ್ಲಿ ಗಣಿತ ಉಪನ್ಯಾಸಕರಾಗಿ ಕೆಲಸ ನಿರ್ವಹಿಸುತ್ತಿರುವ ಸುಧಾ ಆಡುಕಳ ಅವರು ರಾಧಾ, ನೃತ್ಯಗಾಥಾ, ಆನಂದಭಾವಿನಿ, ಮಾಧವಿ ಮೊದಲಾದ ಏಕವ್ಯಕ್ತಿ ನಾಟಕಗಳನ್ನು, ಮಕ್ಕಳ ರವೀಂದ್ರ, ಕನಕ-ಕೃಷ್ಣ, ಮಕ್ಕಳ ರಾಮಾಯಣ, ಬ್ರಹ್ಮರಾಕ್ಷಸ ಮತ್ತು ಕಥೆ, ಮರ ಮತ್ತು ಮನುಷ್ಯ ಮೊದಲಾದ ಮಕ್ಕಳ ನಾಟಕಗಳನ್ನು ರಚಿಸಿರುತ್ತಾರೆ. ರವೀಂದ್ರನಾಥ ಟ್ಯಾಗೋರರ ಕೆಂಪು ಕಣಗಿಲೆ, ಚಿತ್ರಾ ಮತ್ತು ಅವಳ ಕಾಗದ ನಾಟಕಗಳನ್ನು, ’ಗೀತಾಂಜಲಿ’ ಕವನ ಸಂಕಲನವನ್ನು ಕನ್ನಡಕ್ಕೆ ರೂಪಾಂತರಿಸಿದ್ದಾರೆ ಜೊತೆಗೆ ಎಂದೂ ಹುಟ್ಟದ ಮಗುವಿಗೆ ಪತ್ರ ಎಂಬ ಪುಸ್ತಕವನ್ನೂ ಅನುವಾದಿಸಿದ್ದಾರೆ. ಬಕುಲದ ಬಾಗಿಲು, ಒಂದು ಇಡಿಯ ಬಳಪ, ಮಗುವಿನ ಭಾಷೆ ಮತ್ತು ಶಿಕ್ಷಕ, ನೀಲಿ ಮತ್ತು ಸೇಬು ಎಂಬ ಕೃತಿಗಳನ್ನು ರಚಿಸಿದ್ದಾರೆ. ಪುಟ್ಟ ಹಕ್ಕಿಯೊಂದು ಅಮ್ಮ-ಅಪ್ಪ ಕಟ್ಟಿದ ಗೂಡಲ್ಲಿ ಬೆಚ್ಚಗೆ ಮಲಗಿರುತ್ತದೆ. ಹುಳ ಹುಪ್ಪಟೆಗಳನ್ನು ಹಿಡಿದು ಬರುವ ಅವರ ದಾರಿ ಕಾಯುತ್ತದೆ. ಹತ್ತಿರ ಬಂದವೆಂಬ ಸುಳಿವು ಸಿಕ್ಕಿದರೆ ಸಾಕು, ಬ್ರಹ್ಮಾಂಡವನ್ನೇ ನುಂಗಿಬಿಡುವ ಹಸಿವೆಯನ್ನು ಕೊಕ್ಕಿಗೆ ತಂದುಕೊಂಡು ಗೂಡಿನ ಹೊರಗೆ ಬಾಯಿ ಚಾಚುತ್ತವೆ. ಒಮ್ಮೆ ಮರಿಗಳು ಬಂದವೆಂದರೆ ಅಪ್ಪನಿಗೆ ಗೂಡಿನಲ್ಲಿ ಮತ್ತೆ ಜಾಗವಿಲ್ಲ. ಬೆಚ್ಚನೆಯ ಅಪ್ಪುಗೆಗಾಗಿ ಅಮ್ಮ ಮಾತ್ರವೇ ಕೆಲಸಮಯ ಗೂಡಿನಲ್ಲಿ ತುಸು ಜಾಗ ಮಾಡಿಕೊಳ್ಳುತ್ತದೆ. ನೋಡನೋಡುತ್ತಿದ್ದಂತೆ ರೆಕ್ಕೆ ಬೆಳೆಸಿಕೊಂಡ ಹಕ್ಕಿಗಳನ್ನು ಬಲವಂತವಾಗಿ ಗೂಡಿನಾಚೆಗೆ ದೂಡುತ್ತದೆ. ಕುಯ್ಯೋ... ಕುರ್ರೋ ಅನ್ನುತ್ತಲೇ ಗಾಳಿಯ ಮಡಿಲಿಗೆ ತನ್ನ ಭಾರವನ್ನು ತೇಲಿಬಿಡುವ ಮರಿಹಕ್ಕಿಗಳು ಹಗುರಾಗುವ ಹೊಸ ದಾರಿಗಳನ್ನು ಕಂಡುಕೊಳ್ಳುತ್ತವೆ. ಬಯಲಿಗೆ ಜಾರಿದ ಮರಿಹಕ್ಕಿ ಮತ್ತೆಂದೂ ತನ್ನ ಹಳೆಯ ಗೂಡಿಗೆ ಮರಳಲಾರದು. ಬೇಕೆನಿಸಿದರೆ ತನಗೆಂದು ಹೊಸಗೂಡೊಂದನ್ನು ಕಟ್ಟಿಕೊಳ್ಳುವುದು. ಸಿಟ್ಟು ಬಂದರೂ ಒಬ್ಬರಿಗೊಬ್ಬರು ದೂರವಿರಲಾರದಂತಹ ಪುಟ್ಟ ಗೂಡಿನಿಂದ ಹೊರಬಂದ ನಮ್ಮೆಲ್ಲರ ಸ್ಥಿತಿಯೂ ಪುಟ್ಟ ಹಕ್ಕಿಗಳಿಗಿಂತ ಬೇರೆಯೇನಲ್ಲ. ಆದರೆ ಹಕ್ಕಿಯಂತೆ ರೆಕ್ಕೆ ಬಲಿತ ಮೇಲೆ ಹುಟ್ಟಿಬೆಳೆದ ಗೂಡನ್ನು ಮರೆತು ಬಯಲಾಗಿಬಿಡುವ ಜಂಗಮತನ ನಮಗಿನ್ನೂ ದಕ್ಕಿಲ್ಲ. ಮತ್ತೆ, ಮತ್ತೆ ಅದೇ ಗೂಡಿಗೆ ಮರಳುವ, ಬಾಲ್ಯದ ಹಸಿತನವನ್ನು ಅನುಭವಿಸಬೇಕೆನ್ನುವ ತುಡಿತಕ್ಕೆ ಕೊನೆಯೆಂಬುದಿದೆಯೇ? ಮನಸ್ಸಿನ ಗೋಡೆಯ ಮೇಲೆ ಬಾಲ್ಯದ ನೆನಪುಗಳ ಚಿತ್ರ ಮಾಸುವುದೇ ಇಲ್ಲ. ಮನೆಯೆಂಬ ಪುಟ್ಟ ಗೂಡಿನ ಅಂಗಳದಲ್ಲಿ ನಿಂತು ನೋಡಿದರೆ ಒಂದು ಬದಿಯಲ್ಲಿ ಎತ್ತರೆತ್ತರಕ್ಕೆ ಎದ್ದುನಿಂತ ಪರ್ವತಗಳ ಸಾಲು, ಇನ್ನೊಂದು ಬದಿಯಲ್ಲಿ ಸಳಸಳವೆಂದು ಸದ್ದು ಮಾಡುತ್ತಾ ಹರಿಯುವ ಹೊಳೆ, ಮತ್ತೊಂದು ಬದಿಯಲ್ಲಿ ಹಸುರುಟ್ಟು ನಳನಳಿಸುವ ಹಸಿರು ಗದ್ದೆಯ ಬಯಲು. ಕೆಲಸಗಳ ಭರಾಟೆಯಲ್ಲಿ ಕಳೆದು ಹೋಗುವ ಹಗಲು, ಸಂಜೆಯಿಳಿಯಿತೆಂದರೆ ತೆರೆದುಕೊಳ್ಳುವ ಕಿನ್ನರ ಲೋಕದ ಬೆಡಗು. ಝಗಮಗಿಸುವ ವಿದ್ಯುದ್ದೀಪಗಳಿನ್ನೂ ಆ ಪುಟ್ಟ ಹಳ್ಳಿಯನ್ನು ತಲುಪಿರದ ದಿನಗಳವು. ರಾತ್ರಿಯ ಕತ್ತಲನ್ನು ಕಳೆಯಲು ಸೀಮೆಎಣ್ಣೆಯ ಬುಡ್ಡಿಗಳು ಹೊರಗಿಣುಕುತ್ತಿದ್ದವು. ಎಣ್ಣೆ ತೀರಿತೆಂದರೆ ಪುಟ್ಟ ಹಣತೆಗಳದೇ ಕಾರುಬಾರು. ದೀಪದ ಬೆಳಕಿನಲ್ಲಿ ಆ ಪುಟ್ಟ ಗೂಡಿನ ಒಳಗಿರುವ ವಸ್ತುಗಳೆಲ್ಲವೂ ತಮ್ಮ ನೆರಳನ್ನು ಅಡ್ಡಾದಿಡ್ಡಿಯಾಗಿ ಹರಿಬಿಟ್ಟು ಗೋಡೆ, ನೆಲದ ಮೇಲೆಲ್ಲ ಹೊಸ ಚಿತ್ರಗಳನ್ನು ಮೂಡಿಸುತ್ತಿದ್ದವು. ಬೀಸುವ ಗಾಳಿಯ ಅಲೆಗೆ ತಲೆಯಲ್ಲಾಡಿಸುವ ದೀಪದ ಕುಡಿಯ ತಾಳಕ್ಕೆ ತಕ್ಕಂತೆ ಅಲುಗಾಡುತ್ತ ಜೀವ ಪಡೆದುಕೊಳ್ಳುತ್ತಿದ್ದವು. ದೀಪದ ಸುತ್ತಲೂ ಬಟ್ಟಲನ್ನಿಟ್ಟು ಊಟ ಮುಗಿಸಿದ ಮೇಲೆ ತಾಂಬೂಲದ ತಟ್ಟೆ ಕೈಬೀಸಿ ಕರೆಯುತ್ತಿತ್ತು. ಹಸಿರೆಲೆ, ಕಂದು ಅಡಿಕೆ, ಬಿಳಿಯ ಸುಣ್ಣ, ಕಪ್ಪು ತಂಬಾಕಿನ ಚೂರು ಎಲ್ಲವೂ ಬಾಯೊಳಗೆ ಅರೆದು ಕೆಂಪಾಗುವ ಹೊತ್ತಿನಲ್ಲಿ ಗಿಳಿಗೂಟಕ್ಕೆ ತೂಗುಬಿಟ್ಟ ಮದ್ದಲೆ ‘ಬಾ ನನ್ನ ಬಾರಿಸು’ ಎಂದು ಅಪ್ಪನನ್ನು ಕರೆಯುತ್ತಿತ್ತು. ಬಾಯಿತುಂಬಿದ ಕೆಂಪುರಸವನ್ನು ಪಿಚಕ್ಕನೆ ಉಗಿದು ಮದ್ದಲೆಯನ್ನು ಮಗುವಂತೆ ಹಗುರಾಗಿ ಇಳಿಸಿ ತೊಡೆಗೇರಿಸಿಕೊಳ್ಳುವ ಹೊತ್ತಿಗೆ ಮನಸ್ಸಿನ ಭಾವಕ್ಕೆ ತಕ್ಕಂತೆ ಯಕ್ಷಗಾನದ ಆಲಾಪವೊಂದು ಅವರ ಗಂಟಲಿನಿಂದ ಹೊರಬರುತ್ತಿತ್ತು. ಹಾಡಿನ ರಾಗಕ್ಕೆ ತಕ್ಕಂತೆ ಬೆರಳುಗಳು ಮದ್ದಲೆಯ ಮೇಲೆ ನಲಿಯುತ್ತಿದ್ದವು. ಕತ್ತಲೆಯನ್ನು ಸೀಳಿಕೊಂಡು ಹೊರಡುವ ಯಕ್ಷಗಾನದ ರಾಗ ಸುತ್ತಲಿನವರ ಮನೆಯ ಬಾಗಿಲು ಬಡಿದಾಗ ಮನೆಯೆದುರು ಬಿದ್ದ ಮಡಲಿನ ಸೂಡಿ ಕಟ್ಟುವ ಆಟದ ಮಳ್ಳರು ಪುಟ್ಟ ಗೂಡಿನೆಡೆಗೆ ದೌಡಾಯಿಸುತ್ತಿದ್ದರು. ಬೆಂಕಿ ಹೊತ್ತಿಸಿದ ಸೂಡಿಯನ್ನು ಬೀಸುತ್ತಾ ಅವರು ಗದ್ದೆಯ ಹಾದಿಯಲ್ಲಿ ನಡೆದು ಬರುತ್ತಿದ್ದರೆ ಬೆಂಕಿಯ ಚೆಂಡುಗಳು ಉರುಳಿ ಬರುತ್ತಿರುವಂತೆ ಕಾಣುತ್ತಿತ್ತು. ಅಂಗಳದ ಸುತ್ತ ನೆರೆದು ಅಪ್ಪನ ಭಾಗವತಿಕೆಯನ್ನು ಮೈದುಂಬಿಸಿಕೊಳ್ಳುವ ಅವರು ಹಾಡು ಮುಗಿದೊಡನೇ ಕವಳವನ್ನು ಬಾಯ್ತುಂಬಿಸಿಕೊಂಡು ಬಂದ ಹಾದಿಯಲ್ಲಿ ಮರಳುತ್ತಿದ್ದರು. ನಾಳೆಗಾಗಿ ಎಣ್ಣೆಯುಳಿಸಲು ಹೊಂಚು ಹಾಕುತ್ತಿದ್ದ ಅಮ್ಮ ‘ಮಾತಾಡಲು ಬೆಳಕು ಬೇಕಿಲ್ಲ’ ಎನ್ನುತ್ತಲೇ ನಮ್ಮ ಮಾತುಕತೆಯ ನಡುವೆಯೇ ದೀಪವಾರಿಸುತ್ತಿದ್ದಳು. ಮತ್ತೆ ತಾಸುಗಟ್ಟಲೆ ಮುಂದುವರಿಯುವ ಮಾತುಕತೆಗಳು ಮನದ ಕತ್ತಲೆ ಕಳೆದು ಬೆಳಕು ತುಂಬುತ್ತಿದ್ದವು. ಆ ಪುಟ್ಟ ಗೂಡಿನ ಬಗ್ಗೆ ಇಷ್ಟೇ ನೆನಪುಗಳಿದ್ದರೆ ಮತ್ತೆ, ಮತ್ತೆ ಅಲ್ಲಿಗೆ ಹೊಕ್ಕಿಬರುವ ಹುಕಿಗೆ ಕೊನೆಯೆಂಬುದೇ ಇರುತ್ತಿರಲಿಲ್ಲ. ಹಸಿದ ಹಾವೊಂದು ಗೂಡಿಗೆ ದಾಳಿಯಿಟ್ಟರೆ ಹಕ್ಕಿಯ ಗೂಡು ಛಿದ್ರವಾಗುವಂತೆ ಮೃತ್ಯುವೆಂಬ ಹಾವು ತಾಯಿ ಹಕ್ಕಿಯನ್ನು ಕಚ್ಚಿಹೋಯಿತು. ಸಂಗಾತಿಯನ್ನು ಕಳಕೊಂಡ ಗಂಡುಹಕ್ಕಿ ಹಾಡುವುದನ್ನೇ ಮರೆತು ಮೌನವಾಯಿತು. ಸಡಿಲಗೊಂಡ ಮನೆ ಬೀಳಲು ಗಾಳಿಯ ನೆವವೂ ಸಾಕು. ಒಂದೊಂದೇ ಗೋಡೆಗಳುರುಳುತ್ತ ಮನೆಯೆಂಬುದು ಬಯಲಾಗಿಹೋಯ್ತು. ಸುರಿವ ಕಷ್ಟದ ಮಳೆಯಿಂದ ಬಚಾವಾಗಲು ಹಕ್ಕಿಗಳೆಲ್ಲವು ದಿಕ್ಕಾಪಾಲಾದವು. ಹೀಗೆ ಹಕ್ಕಿಯಂತೆ ಹಾರಿದವರು ಮನುಷ್ಯರಾಗಿರುವುದರಿಂದಲೇ ಮತ್ತೆ, ಮತ್ತೆ ಆ ಗೂಡನ್ನು, ಕಾಡನ್ನು ನೆನಪಿಸಿಕೊಳ್ಳುತ್ತಲೇ ಇದ್ದರು. ಒಮ್ಮೊಮ್ಮೆ ಅದೊಂದು ಸ್ವರ್ಗ ಸದೃಶ ಜಾಗವಾಗಿ ಮನದುಂಬುವುದು, ಮರುಗಳಿಗೆಯಲ್ಲಿಯೇ ಅಮ್ಮನನ್ನು ಕಸಿದುಕೊಂಡ ಮೃತ್ಯುಕೂಪ ಅಂತಲೂ ಅನಿಸುವುದು, ಇನ್ನೊಮ್ಮೆ ಅಲ್ಲಿ ನಮ್ಮದೆನ್ನುವುದು ಏನೂ ಇಲ್ಲವೆಂಬ ಶೂನ್ಯಭಾವ ಮೊಳೆಯುವುದು, ಮರುಕ್ಷಣದಲ್ಲಿಯೇ ಅಮ್ಮನಿನ್ನೂ ಅಲ್ಲಿಯೇ ಮಲಗಿದ್ದಾಳೆ ಎಂಬ ಆಪ್ತಭಾವ ಮೊಳೆಯುವುದು. ಈ ಭಾವಗಳ ತಾಕಲಾಟ ಅದೆಷ್ಟು ತೀವ್ರವಾಗಿತ್ತೆಂದರೆ ಎರಡು ದಶಕಗಳ ಕಾಲ ಆ ಜಾಗಕ್ಕೆ ಮರಳುವ ಧೈರ್ಯವೇ ಬರಲಿಲ್ಲ. ಅದೆಷ್ಟೋ ಸಲ ಹತ್ತಿರದವರೆಗೆ ಹೋಗಿ ಮೇಲಿನಿಂದ ಇಣುಕಿ, ಹೊಳೆಯಂಚಿನವರೆಗೂ ಸಾಗಿ ದಾಟಲಾರದೇ ಮರಳಿದ್ದೂ ಇದೆ. ಆತ್ಮದ ತುಣುಕೊಂದನ್ನು ಹೂಳಿದ್ದ ಜಾಗವದು ಎಂದೆನಿಸಿದ್ದು ಅದೆಷ್ಟು ಬಾರಿಯೋ. ತಹಬಂದಿಗೆ ತರಲಾರದ ತಾಕಲಾಟಗಳ ನಂತರ ಅದೊಂದು ಪುಟ್ಟ ಜಾಗ ನನ್ನ ನೆನಪಿನ ಕೋಶದ ಭಾಗವಾಗಿ ಹಾಗೇ ಉಳಿದುಬಿಡಲೆಂದು ಮರುಪ್ರಯಾಣದ ಯೋಚನೆಯನ್ನೇ ಬಿಟ್ಟುಬಿಟ್ಟಿದ್ದೆ. ಕಾಲಕ್ಕೆ ಎಲ್ಲವನ್ನೂ ಮರೆಸುವ ಮಾಂತ್ರಿಕ ಶಕ್ತಿಯಿದೆ. ನನ್ನ ಮಾತು-ಕತೆಗಳಲ್ಲಿ ಮತ್ತೆ, ಮತ್ತೆ ಬರುವ ಆ ಊರನ್ನು ತಮ್ಮದೇ ಕಾಲ್ಪನಿಕ ಲೋಕದಲ್ಲಿ ಕಟ್ಟಿಕೊಂಡ ಮಕ್ಕಳು ಅಲ್ಲಿಗೊಮ್ಮೆ ಭೇಟಿನೀಡುವ ಉತ್ಸಾಹ ತೋರಿದಾಗ ಇಲ್ಲವೆನ್ನಲಾಗದೇ ಹೊರಟಿದ್ದೆ. ಇಷ್ಟು ವರ್ಷಗಳ ನಂತರವೂ ಕರುಳ ಬಂಧದ ಎಳೆಗಳನ್ನು ಬೆಸೆದುಕೊಂಡಿರುವ ಜೀವಗಳಿಗೆ, ನಮ್ಮ ಪುಟ್ಟ ಗೂಡನ್ನು ತಮ್ಮದಾಗಿಸಿಕೊಂಡು ಇಮಾರತನ್ನು ಕಟ್ಟಿ ಬದುಕುತ್ತಿರುವ ಖರೀದಿದಾರರಿಗೆ ನಮ್ಮ ಬರವಿನ ಬಗ್ಗೆ ಮೊದಲೇ ತಿಳಿಸಿದ್ದೆ. ನಾನು ಓದಿದ ಸಣ್ಣ ಶಾಲೆಯಿಂದು ಅಮಿತೋತ್ಸಾಹದ ಶಿಕ್ಷಕರಿಂದಾಗಿ ರಾಜ್ಯದಲ್ಲಿಯೇ ಹೆಸರಾಗಿದ್ದುದರ ಬಗ್ಗೆ ಮೊದಲೇ ತಿಳಿದಿದ್ದೆ. ನಮ್ಮೂರ ಹೆಂಗಸರ ಆಪ್ತ ಗೆಳತಿಯರಂತಿದ್ದ ಮಾರಿಯಮ್ಮ, ದೇವಿಯಮ್ಮರಿಗೆಂದು ಅವರಿಗಿಷ್ಟದ ಕುಂಕುಮ, ಹಸಿರು ಬಳೆಗಳನ್ನು ಖರೀದಿಸಿದ್ದೆ. ಇಷ್ಟಾಗಿಯೂ ನಮ್ಮ ಕಾರು ಹೆದ್ದಾರಿಯನ್ನು ಬಿಟ್ಟು ಆ ಊರಿಗೆ ತಿರುಗುವಾಗ ಹೊಟ್ಟೆಯೊಳಗಿಂದ ನೋವು ಎದ್ದುಬಂದಂತಹ ತಳಮಳ. ‘ಅಂದು ಹೋದವಳು ಇಂದು ಬಂದೆಯೇನು?’ ಎಂದು ಅಮ್ಮನೇ ಎದುರು ನಿಂತು ಕೇಳಿದಷ್ಟು ಕಳವಳ. ಊರ ಬಾಗಿಲಿಗೆ ಬಂದು ನಿಂತರೆ ಇಡಿಯ ಊರಿನ ಚಹರೆಯೇ ಬದಲಾಗಿಹೋಗಿದೆ. ಗೂಡಂಗಡಿಯಿದ್ದ ಜಾಗದಲ್ಲಿ ಬಹುಮಹಡಿಗಳ ಕಟ್ಟಡ ಎದ್ದುನಿಂತಿದೆ. ತಂಪು ಪಾನೀಯಗಳಿಂದ ಹಿಡಿದು ಜಿಮ್ ನವರೆಗೆ ಎಲ್ಲ ಸವಲತ್ತುಗಳೂ ಆ ಕಟ್ಟಡದಡಿಯಲ್ಲಿಯೇ ಇವೆ. ಒಂದೇ ಕೋಣೆಯ ಶಾಲೆ ವಿಸ್ತಾರಗೊಂಡು ಕಣ್ಣು ತುಂಬುವವರೆಗೂ ಚಾಚಿಕೊಂಡಿದೆ. ಸಂಕ ದಾಟುವ ಜಾಗದಲ್ಲಿ ಸೇತುವೆಗಳು ಎದ್ದುನಿಂತಿವೆ. ಬಿರುಬೇಸಿಗೆಯಲ್ಲೂ ತುಂಬಿ ಹರಿಯುತ್ತಿದ್ದ ಹೊಳೆ ಅದರೊಡಲಿನಲ್ಲಿ ತೇಲಿಬಿಟ್ಟ ನೂರಾರು ಪಂಪುಗಳ ಬಾಲದ ಹೊಡೆತಕ್ಕೆ ನಲುಗಿ ಬತ್ತಿಹೋಗಿದೆ. ಎಂಟು ಮೈಲಿ ನಡೆದು ಪೇಟೆಯ ಮುಖನೋಡುತ್ತಿದ್ದ ಹೈದರೆಲ್ಲ ಮನೆಯಿಂದ ಗದ್ದೆಗೆ ಹೋಗಲೂ ಸ್ಕೂಟರನ್ನೇರುತ್ತಾರೆ. ಅರೆ! ನನ್ನ ಊರೂ ನಾಗರಿಕತೆಯೊಂದಿಗೆ ಮುನ್ನಡೆಯುತ್ತಿದೆ ಎಂದು ಸಂಭ್ರಮಿಸುತ್ತಲೇ ತಂಪಾದ ಐಸ್ ಕ್ರೀಮನ್ನು ಸವಿಯತೊಡಗಿದೆ. ಕಲಿತ ಶಾಲೆಯ ಎದುರಿಗೊಂದು ಫೋಟೊ ಹೊಡೆಸಿಕೊಂಡು, ಸುತ್ತ ಹತ್ತಾರು ಹಳ್ಳಿಗಳಿಂದ ಬರುವ ನೂರಾರು ಮಕ್ಕಳು ಶಾಲೆಯಂಗಳದಲ್ಲಿ ಆಡುವ ದೃಶ್ಯವನ್ನು ಕಣ್ತುಂಬಿಕೊಂಡಾಯಿತು. ಅಷ್ಟರಲ್ಲಿ ಬಂದ ಊರಿನ ಹೊಸ ಮುಖಂಡ ಇಲ್ಲಿರುವ ಕಟ್ಟಡವೆಲ್ಲ ತನ್ನದೇ ಎಂದು ಎದೆಯುಬ್ಬಿಸಿ ಹೇಳುತ್ತ, ಇದನ್ನೆಲ್ಲ ಕಟ್ಟಲು ಬೇಕಾದ ಸಾಲದ ಮಂಜೂರಾತಿಗಾಗಿ ಇಡಿಯ ಊರನ್ನೇ ಪಟ್ಟಣ ಪಂಚಾಯಿತಿಯ ವ್ಯಾಪ್ತಿಗೆ ತಂದಿರುವುದಾಗಿ ಹೇಳಿದ. ಶಾಲೆಗೆ ಬರುವ ಮಕ್ಕಳಿಗೆ ಬಸ್ಸಿನ ಸೌಲಭ್ಯವಿದೆಯೆ? ಎಂದು ಕೇಳಿದರೆ, ‘‘ಬಸ್ ಎಲ್ಲ ಈಗ ಯಾರು ಹತ್ತುತ್ತಾರೆ? ಎಲ್ಲರಿಗೂ ಅವರವರದೇ ವೆಹಿಕಲ್ ಗಳಿವೆ’’ ಎಂದವನ ಮಾತನ್ನು ತುಂಡರಿಸುತ್ತಾ, ‘‘ಇಲ್ಲದವರಿಗೆ?’’ ಎಂಬ ಪ್ರಶ್ನೆಯ ಬಾಣವನ್ನು ತೂರಿದೆ. ‘‘ರಿಕ್ಷಾ, ಗಿಕ್ಷಾ ವ್ಯವಸ್ಥೆ ಮಾಡಿಕೊಳ್ತಾರೆ.’’ ಉಡಾಫೆಯ ಮಾತು ತೂರಿದ. ಜಿಲ್ಲಾ ಕೇಂದ್ರದ ಮಗ್ಗುಲಿನಲ್ಲಿಯೇ ಇರುವ ಊರಿನವರೂ ತಮ್ಮ ಮಕ್ಕಳಿಗೆ ಗ್ರಾಮೀಣ ಪ್ರಮಾಣಪತ್ರ ಬೇಕೆಂದು ಹಂಬಲಿಸಿ ಪಡೆದುಕೊಳ್ಳುತ್ತಿರುವಾಗ ಈಗಷ್ಟೇ ಅಕ್ಷರ ಲೋಕಕ್ಕೆ ಕಾಲಿಡುತ್ತಿರುವ ಈ ಮಕ್ಕಳು ಆ ಸೌಲಭ್ಯದಿಂದ ವಂಚಿತರಾಗುತ್ತಿರುವ ಬಗ್ಗೆ ಕೇಳಿದಾಗ ಖೇದವೆನಿಸಿತು. ವ್ಯಾಪಾರಿ ಮನಸ್ಥಿತಿಗೆ ಬಡತನವೂ ವ್ಯಾಪಾರದ ಸರಕೆ! ಮನೆಯಲ್ಲಿ ಮಾಡಿದ ಕೆಂಪಕ್ಕಿಯ ಅನ್ನ, ಹುಳಿಮಾವಿನ ಹಣ್ಣಿನ ಸಿಹಿಗೊಜ್ಜು, ಎಣ್ಣೆಯಲ್ಲಿ ಕರಿದ ಹಲಸಿನ ಹಪ್ಪಳ, ಮನೆಯಲ್ಲೇ ಬೆಳೆದ ಅಳಸಂಡೆಯ ಪಲ್ಯ, ಊರ ಹಸುವಿನ ಹಾಲಿನ ಸಿಹಿಮೊಸರು, ಮಿಡಿಮಾವಿನ ಕಾಯಿಯ ಉಪ್ಪಿನ ಕಾಯಿಯೊಂದಿಗೆ ಚಪ್ಪರಿಸಿ ಉಣ್ಣುವಾಗ ಮತ್ತದೇ ಹಕ್ಕಿಯ ಗುಟುಕಿನ ನೆನಪು. ಹಸಿಯಡಿಕೆಯ ಕವಳ ತಿಂದು ಪಟ್ಟಾಂಗಕ್ಕೆ ಕೂತರೆ ಬಿಡಿಸಲಾರದ ಸಿಕ್ಕುಗಳ ಸುರಿಮಳೆ. ಇಪ್ಪತ್ತು ವರ್ಷಗಳಾದರೂ ಖಾತಾ ಆಗದ ಜಮೀನು, ಸತ್ತು ಹೋದೆನೆಂದರೂ ಕೈಗೆಟುಕದ ವೈದ್ಯಕೀಯ ಸೌಲಭ್ಯಗಳು, ಮನೆಯಿಂದ ಶಾಲೆಗೆ ಹುಡುಗಿಯೊಬ್ಬಳು ಮೊದಲಿನಂತೆ ನಡೆದುಹೋಗಲಾಗದ ಹೆದರಿಕೆ, ಮೈಲುಗಳಾಚೆಯ ಶಾಲೆಗೆ ಕಳಿಸುವ ರಿಕ್ಷಾಕ್ಕೆ ಸಾವಿರದ ಲೆಕ್ಕದಲ್ಲಿ ಸುರಿಯಬೇಕಾದ ನೋಟುಗಳು, ಬತ್ತಿದ ಹೊಳೆಯಿಂದಾಗಿ ಬಣಗುಡುವ ತೋಟ, ಸುಣ್ಣ ಕಾಣದೇ ಬಿರುಕು ಬಿಟ್ಟ ಮನೆಯ ಗೋಡೆಗಳು..... ಹಳ್ಳಿಗಳ ಬವಣೆ ತೀರುವುದೇ ಇಲ್ಲ ಎನಿಸಿ ಖಿನ್ನವಾಯಿತು ಮನಸ್ಸು. ವರ್ಷಕ್ಕೊಮ್ಮೆ ಮಹಾನವಮಿಯ ದಿನ ಪೂಜಾರಿಯ ಮೈದುಂಬುತ್ತಿದ್ದ ಮಾರಿಯೀಗ ವಾರಕ್ಕೆರಡು ದಿನ ಬಂದು ಊರ, ಪರವೂರಿನವರ ದುಃಖ ಪರಿಹರಿಸುವಳಂತೆ. ದೇವಿ ಗುಡಿಯ ಸುತ್ತಲೂ ಈಗ ವಿಶಾಲ ಬಯಲು, ಪ್ರತಿ ವರ್ಷವೂ ಜಾತ್ರೆ ನೆರೆಯುವುದಂತೆ. ಕೆಂಗಣ್ಣು ಬಿಟ್ಟು ಕುಳಿತ ಮಾರಮ್ಮನ ಗುಡಿಗೆ ಅಮ್ಮನೊಡನೆ ಬಂದು ದೇವಿಯ ನೋಟಕ್ಕೆ ಹೆದರುತ್ತಲೇ ಅಮ್ಮನ ಸೆರಗ ಹಿಡಿದು ನಿಂತು ನಮಿಸುತ್ತಿದ್ದುದು ನೆನಪಾಗಿ ಕೈಮುಗಿದೆ. ಸುತ್ತ ಸೋಕಿದ ಗಾಳಿಯಲ್ಲಿ ಅಮ್ಮನ ಉಸಿರಿನ ಘಮವಿತ್ತೆ? ಎಷ್ಟು ನೆನಪಿಸಿಕೊಂಡರೂ ನೆನಪಾಗುತ್ತಿಲ್ಲ ಈ ಹೊತ್ತು.
ಕರ್ನಾಟಕದಲ್ಲಿ ಕುರ್ಚಿ ಕದನ; ಡಿಕೆ ಬಣದ ವಿರುದ್ಧ ಅಹಿಂದ ಸಮಾವೇಶಕ್ಕೆ ಸಿದ್ದು ಪ್ಲಾನ್: ಡಿಕೆಶಿ ಸಿಎಂ ಕನಸು ಭಗ್ನ!
ಬೆಂಗಳೂರು: ಮೈಕೊರೆಯುವ ಚಳಿಯಲ್ಲೂ ಕರ್ನಾಟಕ ರಾಜಕಾರಣದಲ್ಲಿ ಕುರ್ಚಿ ಕದನ ಕಾವೇರಿದೆ. ಮುಖ್ಯಮಂತ್ರಿ ಸ್ಥಾನದ ಕುರ್ಚಿ ಹಗ್ಗಜಗ್ಗಾಟ ಸದ್ಯ ತಾರಕಕ್ಕೇರಿಗೆ. ರಾಜ್ಯ ರಾಜಕೀಯದಲ್ಲಿ ನವೆಂಬರ್ ಕ್ರಾಂತಿಯಾಗಲಿದೆ ಎಂಬ ಚರ್ಚೆ ಕೇವಲ ಚರ್ಚೆಯಾಗಿಯೇ ಉಳಿದಿದೆ. ನವೆಂಬರ್ ಆಯ್ತು, ಡಿಸೆಂಬರ್ ಆಯ್ತು. ಸದ್ಯ ಇದೀಗ ಜನವರಿಯ ಸಂಕ್ರಾಂತಿ ನಡೆಯಲಿದೆ ಎಂಬ ಚರ್ಚೆ ಕೈ ಪಾಳಯದಲ್ಲಿಯೇ ಶುರುವಾಗಿದೆ. ಮುಖ್ಯಮಂತ್ರಿ ಸ್ಥಾನಕ್ಕಾಗಿ ಡಿ ಕೆ
ಎಸ್ ಜೆ ಎಂ ಮದ್ರಸ ವಿದ್ಯಾರ್ಥಿಗಳ ಪ್ರತಿಭೋತ್ಸವ 2026;ನಿರ್ವಹಣಾ ಸಮಿತಿ ಆಯ್ಕೆ
ಮಂಗಳೂರು: ಸುನ್ನೀ ಜಂಇಯ್ಯತುಲ್ ಮುಅಲ್ಲಿಮೀನ್ ಎಸ್ ಜೆ ಎಂ ಕರ್ನಾಟಕ ಇದರ ಅಧೀನದಲ್ಲಿ ನಡೆಯಲಿರುವ ಮದ್ರಸಾ ವಿದ್ಯಾರ್ಥಿಗಳ ಪ್ರತಿಭೋತ್ಸವ 2026 ಇದರ ನಿರ್ವಹಣಾ ರಾಜ್ಯ ಸಮಿತಿಯನ್ನು ಇತ್ತೀಚೆಗೆ ನಡೆದ ಎಸ್ ಜೆ ಎಂ ರಾಜ್ಯ ಕಾರ್ಯಕಾರಿಣಿ ಸಮಿತಿ ಸಭೆಯಲ್ಲಿ ಅಸ್ತಿತ್ವಕ್ಕೆ ತರಲಾಯಿತು. ಚೇರ್ಮಾನಾಗಿ ಸಿರಾಜುದ್ದೀನ್ ಸಖಾಫಿ ಮಠ, ಉಪ ಚೇರ್ಮಾನಾಗಿ ಅಬ್ದುಲ್ಲ ಸಖಾಫಿ ಕೊಳಕೇರಿ, ಚೀಫ್ ಕನ್ವೀನರಾಗಿ ಅಬೂಬಕರ್ ಮುಸ್ಲಿಯರ್ ಕುಕ್ಕಾಜೆ, ಜೊತೆ ಕನ್ವೀನರಾಗಿ ಶರೀಫ್ ಸಖಾಫಿ ನೆಕ್ಕಿಲ್ ಆಯ್ಕೆಗೊಂಡರು. ಸದಸ್ಯರುಗಳಾಗಿ ಎನ್ ಎ ಅಬ್ದುಲ್ ರಹ್ಮಾನ್ ಮದನಿ ಜೆಪ್ಪು, ಪಿ ಎಂ ಮಹಮ್ಮದ್ ಮದನಿ, ರಶೀದ್ ಸಖಾಫಿ ಮಜೂರು, ಹಾಫಿಲ್ ಹನೀಫ್ ಮಿಸ್ಬಾಹಿ, ಇಬ್ರಾಹಿಂ ಸಖಾಫಿ ಪುಂಡೂರ್, ಇಸ್ಮಾಯಿಲ್ ಸಅದಿ ಉರುಮಣೆ, ಇಬ್ರಾಹಿಂ ನಈಮಿ ಇವರನ್ನು ಆರಿಸಲಾಯಿತು. ಮದ್ರಸ, ರೇಂಜ್, ಜಿಲ್ಲೆ, ರಾಜ್ಯ ಮಟ್ಟದಲ್ಲಿ ಪ್ರತಿಭೋತ್ಸವ ಕಾರ್ಯಕ್ರಮ ನಡೆಯಲಿದೆಯೆಂದು ನಿರ್ವಹಣಾ ಸಮಿತಿ ಚೀಫ್ ಕನ್ವೀನರ್ ಅಬೂಬಕರ್ ಮುಸ್ಲಿಯಾರ್ ಕುಕ್ಕಾಜೆ ತಿಳಿಸಿದರು.
ಜಿಬನ್ ಘೋಷಲ್ ಎಂಬ ಮಿಂಚು: ಇವರಾರೂ ಕ್ಷಮೆ ಯಾಚಿಸಲಿಲ್ಲ!
ಸ್ವಾತಂತ್ರ್ಯ ಯಜ್ಞಕುಂಡಕ್ಕೆ ಧುಮುಕಿದವರು!
ಹೊಸವರ್ಷಕ್ಕೆ ಪುಂಡಾಟಿಕೆ ತೋರಿದಲ್ಲಿ ತಕ್ಕ ಶಾಸ್ತಿ; ಹೋಮ್ಸ್ಟೇ, ಹೋಟೆಲ್ ಮಾಲೀಕರಿಗೆ ಸೂಚನೆ
ಹೊಸ ವರ್ಷದ ಸಂಭ್ರಮಾಚರಣೆಗೆ ವಿಜಯನಗರ ಜಿಲ್ಲಾ ಪೊಲೀಸ್ ಪಡೆ ಸಜ್ಜಾಗಿದೆ. ಹಂಪಿ ಸೇರಿದಂತೆ ಜಿಲ್ಲೆಯ ಪ್ರಮುಖ ಸ್ಥಳಗಳಲ್ಲಿ ಅಹಿತಕರ ಘಟನೆಗಳು ನಡೆಯದಂತೆ ನಿಗಾ ವಹಿಸಲಾಗಿದ್ದು, ಸಿಸಿ ಕ್ಯಾಮೆರಾಗಳ ಅಳವಡಿಕೆ, ಹೆಚ್ಚುವರಿ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ಕುಡಿದು ವಾಹನ ಚಲಾಯಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು.
ರಾಯಚೂರು : ರಾಷ್ಟ್ರೀಯ ಪತ್ರಿಕಾ ದಿನಾಚರಣೆ ಅಂಗವಾಗಿ ಕ್ರಿಕೆಟ್ ಪಂದ್ಯಾವಳಿ
ಕ್ರೀಡೆಯಿಂದ ಮಾನಸಿಕ ಹಾಗೂ ದೈಹಿಕ ಸದೃಡತೆ: ಪುರುರಾಜ ಸಿಂಗ್ ಸೋಲಂಕಿ
ಚಿತ್ರದುರ್ಗ ಬಸ್ ದುರಂತ ಪ್ರಕರಣ : ಚಿಕಿತ್ಸೆ ಫಲಕಾರಿಯಾಗದೆ ಚಾಲಕ ಮೃತ್ಯು
ಹುಬ್ಬಳ್ಳಿ: ಚಿತ್ರದುರ್ಗದ ಹಿರಿಯೂರು ತಾಲೂಕಿನ ಜವಗೊಂಡನಹಳ್ಳಿ ಸಮೀಪದ ಆನೆಸಿದ್ರಿ ಕ್ರಾಸ್ ಬಳಿ ಬುಧವಾರ ತಡರಾತ್ರಿ ನಡೆದ ಬಸ್ ದುರಂತದಲ್ಲಿ ಗಂಭೀರ ಗಾಯಗೊಂಡಿದ್ದ ಚಾಲಕ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ವರದಿಯಾಗಿದೆ. ಸೀ ಬರ್ಡ್ ಬಸ್ ಚಾಲಕ ಮಹಮದ್ ರಫೀಕ್ ಮೃತ ವ್ಯಕ್ತಿ. ಬಸ್ ದುರಂತದಲ್ಲಿ ಮಹಮದ್ ರಫೀಕ್ ತೀವ್ರವಾಗಿ ಗಾಯಗೊಂಡಿದ್ದರು. ಘಟನೆಯಲ್ಲಿ ಎರಡು ಕಾಲು, ಒಂದು ಕೈ ಮುರಿತಕ್ಕೊಳಗಾಗಿತ್ತು. ಇವರನ್ನು ಹುಬ್ಬಳಿ ಕಿಮ್ಸ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಆದರೆ ಗುರುವಾರ ರಾತ್ರಿ ಆಪರೇಷನ್ ವೇಳೆ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಸಂಪಾದಕೀಯ | ನಾಲಗೆ ಕತ್ತರಿಸಲ್ಪಟ್ಟ ಮೂಗ ವರ್ಷ
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
Year Ender 2025: 'ಸಂವತ್ಸರದಲ್ಲಿ ಅಗ್ನಿದುರಂತಗಳು ಹೆಚ್ಚಾಗಲಿವೆ' ಎನ್ನುವ ಭವಿಷ್ಯ ನುಡಿದಿದ್ದ ಕೋಡಿಶ್ರೀ
Kodi Mutt Swamiji Fire accident prediction : ರಾಜಕೀಯ ಬೆಳವಣಿಗೆ ಮತ್ತು ಪ್ರಾಕೃತಿಕವಾಗಿ ನಡೆಯುವ ದುರಂತದ ಭವಿಷ್ಯ ನುಡಿಯುವ ಕೋಡಿಮಠದ ಸ್ವಾಮೀಜಿ, ವರ್ಷದಲ್ಲಿ ಹಲವು ಅಗ್ನಿ ಅವಘಡಗಳು ಸಂಭವಿಸಲಿದೆ ಎಂದು ಹೇಳಿದ್ದರು. ಅದರಂತೆಯೇ, ಈ ವರ್ಷದಲ್ಲಿ (2025) ಹಲವು ದುರಂತಗಳು ಸಂಭವಿಸಿದೆ.
‘ಗ್ರೀನ್ ಕ್ರೆಡಿಟ್’ನಿಂದ ಯಾರಿಗೆ ಲಾಭ?
2023ರಲ್ಲಿ ಮೋದಿ ಸರಕಾರ ‘ಗ್ರೀನ್ ಕ್ರೆಡಿಟ್’ ಎಂಬ ಕಾರ್ಯಕ್ರಮ ಪ್ರಾರಂಭಿಸಿತು. ಅದು ಪರಿಸರ ಸಂರಕ್ಷಣೆಗೆ ಆಧುನಿಕ ವಿಧಾನ ಎಂದು ಜಾಗತಿಕ ಮಟ್ಟದಲ್ಲಿ ಹೇಳಲಾಯಿತು. ಕ್ಷೀಣಗೊಂಡ ಅರಣ್ಯ ಭೂಮಿ ಗುರುತಿಸಲು ಈ ಕಾರ್ಯಕ್ರಮದ ಅಡಿಯಲ್ಲಿ ಕೇಂದ್ರ ಸರಕಾರ ರಾಜ್ಯ ಸರಕಾರಗಳಿಗೆ ಆದೇಶಿಸುತ್ತದೆ. ಅಂದರೆ, ದಟ್ಟವಾದ ಅರಣ್ಯ ಪ್ರದೇಶವನ್ನು ಹೊಂದಿರದ, ಆದರೆ ಮರಗಳನ್ನು ಬೆಳೆಸಿ ಮರಳಿ ಕಾಡು ಸೃಷ್ಟಿಸಬಹುದಾದ ಪ್ರದೇಶಗಳನ್ನು ಗುರುತಿಸುವುದು ಇದರ ಉದ್ದೇಶವೆನ್ನಲಾಗಿತ್ತು. ಕೇಂದ್ರ ಸರಕಾರ ‘ಭಾರತೀಯ ಅರಣ್ಯ ಸಂಶೋಧನೆ ಮತ್ತು ಶಿಕ್ಷಣ ಮಂಡಳಿ’ಗೆ (ICFRE) ಅಂತಹ ಎಲ್ಲಾ ಭೂಮಿಯನ್ನು ನೋಂದಾಯಿಸುವ ಭೂ ಬ್ಯಾಂಕ್ ಅನ್ನು ರಚಿಸುವ ಕೆಲಸ ವಹಿಸಿತು. ಈ ಭೂಮಿಯನ್ನು ಕಂಪೆನಿಗಳು ಮತ್ತು ಇತರ ಸಂಸ್ಥೆಗಳಿಗೆ ಅರಣ್ಯೀಕರಣಕ್ಕಾಗಿ ನೀಡಬೇಕಾಗಿತ್ತು. ಕಂಪೆನಿಗಳು ವಿವಿಧ ಯೋಜನೆ, ಕಾರ್ಖಾನೆ ಅಥವಾ ಗಣಿಗಳನ್ನು ಪ್ರಾರಂಭಿಸಿದಾಗ, ಅಭಿವೃದ್ಧಿಯ ಹೆಸರಿನಲ್ಲಿ ಮರಗಳನ್ನು ಕತ್ತರಿಸಲಾಗುತ್ತದೆ ಮತ್ತು ಕಾಡು ನಾಶಮಾಡಲಾಗುತ್ತದೆ. ಇದರಿಂದಾದ ಪರಿಸರ ಹಾನಿ ಸರಿದೂಗಿಸಲು, ಕಂಪೆನಿಗಳು ಗೊತ್ತುಪಡಿಸಿದ ಪ್ರದೇಶದಲ್ಲಿ ಕಡ್ಡಾಯವಾಗಿ ಮರಗಳನ್ನು ನೆಡಬೇಕಾಗುತ್ತದೆ. ಆದ್ದರಿಂದ ಕಂಪೆನಿಗಳು ಕತ್ತರಿಸಿದ ಅದೇ ಪ್ರಮಾಣದ ಅರಣ್ಯವನ್ನು ಮರಳಿ ನಿರ್ಮಿಸುವುದು ಈ ಯೋಜನೆಯ ಮೇಲ್ನೋಟದ ಉದ್ದೇಶವಾಗಿತ್ತು. ಗ್ರೀನ್ ಕ್ರೆಡಿಟ್ ಕಾರ್ಯಕ್ರಮ ಗಣಿಗಾರಿಕೆ, ಕಾರ್ಖಾನೆ ಮತ್ತು ಯೋಜನೆಗಳನ್ನು ಪ್ರಾರಂಭಿಸುವ ಉದ್ಯಮಿಗಳು ಸ್ವತಃ ಮರಗಳನ್ನು ನೆಡುವ ಬದಲು, ಇತರ ಕಂಪೆನಿಗಳು ಅಥವಾ ಅರಣ್ಯ ಇಲಾಖೆ ಬೆಳೆಸಿದ್ದನ್ನು ‘ಕ್ರೆಡಿಟ್’ ರೂಪದಲ್ಲಿ ಖರೀದಿಸಲು ಅನುವು ಮಾಡಿಕೊಡುವ ಕಾರ್ಯಕ್ರಮವಾಗಿದೆ. ಆದರೆ, ಪರಿಸರ ರಕ್ಷಣೆಗೆ ಎಂದು ಹೇಳಿಕೊಳ್ಳಲಾಗಿದ್ದ ಗ್ರೀನ್ ಕ್ರೆಡಿಟ್ ಕಾರ್ಯಕ್ರಮದ ಹಿಂದಿನ ವಾಸ್ತವವೇ ಬೇರೆಯಿತ್ತು. ಅದಾನಿಯಂತಹ ಉದ್ಯಮಿಗಳಿಗೆ ಕಾಡುಗಳನ್ನು ಸರಾಗವಾಗಿ ಹಸ್ತಾಂತರಿಸಲೆಂದೇ ಈ ಕಾರ್ಯಕ್ರಮದ ನಿಯಮಗಳನ್ನು ತಿರುಚಲಾಗಿದೆಯೇ ಎಂಬ ಅನುಮಾನಗಳು ಬಲವಾಗಿವೆ. ಪರಿಸರ ಕಾಳಜಿ ವಿಷಯವಾಗಿ ಭಾರತ ಮುಂಚೂಣಿಯಲ್ಲಿದೆ ಎಂದು ವಿದೇಶಿ ವೇದಿಕೆಗಳಲ್ಲಿ ಬಿಂಬಿಸುತ್ತಿದ್ದ ಮೋದಿ ಸರಕಾರ, ಅದಾನಿಗೆ ಕಾಡುಗಳನ್ನು ಹಸ್ತಾಂತರಿಸುವ ಮೂಲಕ ದೇಶದ ಜನರ ಕಿವಿಯ ಮೇಲೆ ಹೂ ಇಡಲು ಯೋಜನೆಗಳನ್ನು ರೂಪಿಸುತ್ತಿತ್ತು. ಭಾರತದ ಪರಿಸರ ರಕ್ಷಣೆ ಬಗ್ಗೆ ಮೋದಿ ಎಷ್ಟು ಗಂಭೀರವಾಗಿದ್ದಾರೆ ಎಂದು ಜಗತ್ತಿಗೆ ತೋರಿಸಲು ವೀಡಿಯೊ ನಿರ್ಮಾಣಕ್ಕಾಗಿ ಸುಮಾರು 35 ಲಕ್ಷ ರೂಗಳನ್ನು ಖರ್ಚು ಮಾಡಲಾಗಿದೆ ಎಂದು ‘ರಿಪೋರ್ಟರ್ಸ್ ಕಲೆಕ್ಟಿವ್’ ತನಿಖಾ ವರದಿ ಹೇಳುತ್ತದೆ. ಆದರೆ, ವಾಸ್ತವದಲ್ಲಿ ಅದಾನಿಗೆಂದೇ ರೂಪಿಸಲಾಗಿದ್ದ ಯೋಜನೆಗಳ ಮೇಲೆ ಗುಟ್ಟಾಗಿ ಕೆಲಸ ನಡೆಯುತ್ತಿತ್ತು ಎನ್ನುತ್ತದೆ ಆ ವರದಿ. ಎಲ್ಲೆಲ್ಲೂ ಹಸಿರು ಎಂದು ತೋರಿಸಿ ಜಗತ್ತಿನ ಕಣ್ಣಿಗೆ ಮಣ್ಣೆರಚಲು ಗ್ರೀನ್ ಕ್ರೆಡಿಟ್ ಕಾರ್ಯಕ್ರಮವನ್ನು ತರಾತುರಿಯಲ್ಲಿ ಪ್ರಾರಂಭಿಸಲಾಯಿತು. ಅದರ ಅಡಿಯಲ್ಲಿ, ದೇಶಾದ್ಯಂತ ಹಲವಾರು ರಾಜ್ಯಗಳು ಹೆಚ್ಚಿನ ಮರಗಳನ್ನು ನೆಡಲು ಬಳಸಬಹುದಾದ ಭೂಮಿಯನ್ನು ನೋಂದಾಯಿಸಿದವು. ರಿಪೋರ್ಟರ್ಸ್ ಕಲೆಕ್ಟಿವ್ ವರದಿ ಪ್ರಕಾರ, ಗುಜರಾತ್ ಸರಕಾರ ಹಲವಾರು ಅರಣ್ಯ ಭಾಗಗಳನ್ನು ನೋಂದಾಯಿಸಿದ ಪ್ರಮುಖ ರಾಜ್ಯವಾಗಿದೆ. ಆದರೆ ನಂತರ, ಅದಾನಿ ಇಚ್ಛೆಯ ಮೇರೆಗೆ ಗುಜರಾತ್ ಸರಕಾರ ಆ ಅರಣ್ಯ ಭೂಮಿಯನ್ನು ಗ್ರೀನ್ ಕ್ರೆಡಿಟ್ ಪಟ್ಟಿಯಿಂದ ಕೈಬಿಟ್ಟಿತು ಎಂಬ ಆಘಾತಕಾರಿ ಮಾಹಿತಿ ಹೊರಬಿದ್ದಿದೆ. ಗುಜರಾತ್ ಸರಕಾರ ತಾನು ನೋಂದಾಯಿಸಿದ್ದ ಅರಣ್ಯ ಪ್ರದೇಶಗಳನ್ನು ತೆಗೆದುಹಾಕಲು ಕೇಂದ್ರ ಸರಕಾರಕ್ಕೆ ಪತ್ರ ಬರೆಯುತ್ತದೆ ಮತ್ತು ಗುಜರಾತ್ ಸರಕಾರದ ಮನವಿಯನ್ನು ಕೇಂದ್ರ ಕೂಡಲೇ ಒಪ್ಪಿಕೊಳ್ಳುತ್ತದೆ. ಜುಲೈ 2024ರಲ್ಲಿ ಗುಜರಾತ್ ಅರಣ್ಯ ಇಲಾಖೆ ICFREಗೆ ಪತ್ರ ಬರೆದಿತ್ತೆಂಬುದನ್ನು ವರದಿ ಸಾಕ್ಷ್ಯ ಸಮೇತ ಹೇಳುತ್ತದೆ. ಆ ಪತ್ರದಲ್ಲಿ, ಗ್ರೀನ್ ಕ್ರೆಡಿಟ್ ಕಾರ್ಯಕ್ರಮದ ಅಡಿಯಲ್ಲಿ ಸೇರಿಸಲಾದ 13 ಅರಣ್ಯ ಪ್ರದೇಶಗಳನ್ನು ಗ್ರೀನ್ ಕ್ರೆಡಿಟ್ ಲ್ಯಾಂಡ್ ಬ್ಯಾಂಕ್ನಿಂದ ತೆಗೆದುಹಾಕಬೇಕೆಂದು ಗುಜರಾತ್ ಸರಕಾರ ವಿನಂತಿಸಿತ್ತು. ಈ ಭೂಮಿಗಳಲ್ಲಿ ಮರಗಳನ್ನು ನೆಡುವುದು ಸಾಧ್ಯವಿಲ್ಲ ಎಂದು ಕುಂಟುನೆಪ ನೀಡಲಾಯಿತು. ಕೆಲವು ಸ್ಥಳಗಳಲ್ಲಿ ಭೂಮಿ ತುಂಬಾ ಕಲ್ಲಿನಿಂದ ಕೂಡಿದೆ ಎಂದು ಹೇಳಲಾಯಿತು. ಭೂಪ್ರದೇಶ ತುಂಬಾ ಕಡಿದಾಗಿದೆ ಎಂದು ಮತ್ತೆ ಕೆಲವು ಪ್ರದೇಶಗಳ ಬಗ್ಗೆ ಹೇಳಲಾಯಿತು. ಭೂಮಿಯನ್ನು ತಪ್ಪಾಗಿ ಎರಡು ಬಾರಿ ನೋಂದಾಯಿಸಲಾಗಿದೆ ಎಂದು ಮತ್ತೆ ಕೆಲವು ಪ್ರದೇಶಗಳ ಬಗ್ಗೆ ಸಬೂಬು ನೀಡಲಾಯಿತು. ಅಂತೂ, ಮರ ಬೆಳೆಸಲು ಸೂಕ್ತ ಎಂದಿದ್ದ ಪ್ರದೇಶಗಳನ್ನೇ ಆ ಪಟ್ಟಿಯಿಂದ ತೆಗೆಯಲು ಏನೇನು ಕಾರಣ ಕೊಡಬಹುದೋ ಅವೆಲ್ಲವನ್ನೂ ಮಾಡಿ, ಪ್ರಶ್ನೆಗಳು ಬಂದರೆ ತಪ್ಪಿಸಿಕೊಳ್ಳಲು ನೆಪ ಹುಡುಕಿಕೊಳ್ಳಲಾಯಿತು. ಇಲ್ಲಿ ಕಾಡುವ ಪ್ರಶ್ನೆಯೆಂದರೆ, ಅದಾನಿ ಗ್ರೂಪ್ ಆ ಭೂಮಿಯ ಮೇಲೆ ಕಣ್ಣು ಹಾಕುವವರೆಗೂ ಅದು ಅರಣ್ಯೀಕರಣಕ್ಕೆ ಯೋಗ್ಯವಾಗಿತ್ತು. ಆದರೆ ಅದಾನಿಯ ಪ್ರಸ್ತಾವನೆ ಬಂದ ತಕ್ಷಣ ಅದೇ ಭೂಮಿ ಕಲ್ಲಿನಿಂದ ಕೂಡಿದ, ನಿಷ್ಪ್ರಯೋಜಕ ಭೂಮಿಯಾಗಿ ಬದಲಾದದ್ದು ಹೇಗೆ? ಆದರೂ, ಈ ಪಟ್ಟಿಯಲ್ಲಿಯೇ, ಸ್ಪಷ್ಟ ಕಾರಣಗಳ ಉಲ್ಲೇಖವಿತ್ತು. ಅದಾನಿ ಕಂಪೆನಿಯ ಅರಣ್ಯ ತೆರವು ಪ್ರಸ್ತಾವನೆಯಲ್ಲಿ ಅದನ್ನು ರದ್ದುಗೊಳಿಸಲು ವಿನಂತಿಸಲಾಗಿರುವುದರಿಂದ ನಾಲ್ಕು ಅರಣ್ಯ ಪ್ರದೇಶಗಳನ್ನು ಗ್ರೀನ್ ಕ್ರೆಡಿಟ್ ಪಟ್ಟಿಯಿಂದ ತೆಗೆಯಲಾಗಿದೆ ಎಂಬ ಉಲ್ಲೇಖವಿತ್ತು. ಗುಜರಾತ್ ಸರಕಾರವೇ ಈ ಮೊದಲು ಅರಣ್ಯ ವಿಸ್ತರಣೆಗಾಗಿ ಗುರುತಿಸಿದ್ದ ಮತ್ತು ಅಲ್ಲಿ ಮರಗಳನ್ನು ಸುಲಭವಾಗಿ ನೆಡಬಹುದು ಎನ್ನಲಾಗಿದ್ದ ಪ್ರದೇಶವೇ ಇದ್ದಕ್ಕಿದ್ದಂತೆ ಮರಗಳನ್ನು ನೆಡಲು ಯೋಗ್ಯವಲ್ಲದ ಭೂಮಿಯಾಯಿತು. ಆದರೆ ಕಥೆ ಅಷ್ಟಕ್ಕೇ ಮುಗಿಯುವುದಿಲ್ಲ. ಗುಜರಾತ್ ಸರಕಾರದ ಪತ್ರದ ನಂತರ, ವಿಷಯ ICFRE ಅಂಗಳವನ್ನು ತಲುಪಿತು. ಈ ವಿಷಯದ ಬಗ್ಗೆ ICFRE ನಿರ್ಧರಿಸುವುದು ಸುಲಭವಲ್ಲದಿದ್ದರೂ, ಸಂಸ್ಥೆಯೊಳಗೆ ಹಲವಾರು ಸುತ್ತಿನ ಚರ್ಚೆಗಳು ನಡೆದವು. ಗುಜರಾತ್ ಸರಕಾರದ ಬೇಡಿಕೆಗಳು ವಿರೋಧಾಭಾಸದಿಂದ ಕೂಡಿವೆ ಎಂದು ಸ್ವತಃ ಅಧಿಕಾರಿಗಳೇ ಭಾವಿಸಿದರು. ICFRE ಅಧಿಕಾರಿಯೊಬ್ಬರು ಸಹ, ಈ ಹಿಂದೆ ಮರ ಬೆಳೆಸಬಹುದು ಎನ್ನಲಾಗಿದ್ದ ಭೂಮಿಯೇ ಈಗ ಮರ ಬೆಳೆಸಲು ಯೋಗ್ಯವಲ್ಲ ಎಂದು ಹೇಗಾಯಿತು? ಎಂಬ ಪ್ರಶ್ನೆಯನ್ನೇ ಆಂತರಿಕವಾಗಿ ಎತ್ತಿದರು. ಒಂದು ವೇಳೆ ಕಂಪೆನಿ ಈಗಾಗಲೇ ಆ ಅರಣ್ಯ ಪ್ರದೇಶಗಳ ಮೇಲೆ ಹಕ್ಕು ಹೊಂದಿದ್ದರೆ, ಮೊದಲೇ ಅವುಗಳನ್ನು ಯೋಜನೆಯಲ್ಲಿ ಏಕೆ ಸೇರಿಸಲಾಯಿತು ಎಂಬ ಗೊಂದಲವೂ ಇತ್ತು. ಗ್ರೀನ್ ಕ್ರೆಡಿಟ್ ಪೋರ್ಟಲ್ನಲ್ಲಿ ಭೂಮಿಯನ್ನು ತೆಗೆದುಹಾಕಲು ಅಥವಾ ತಿರಸ್ಕರಿಸಲು ಸ್ಪಷ್ಟ ಆಯ್ಕೆಯಿಲ್ಲ ಎಂಬುದನ್ನು ಅಧಿಕಾರಿಗಳು ಗಮನಿಸಿದರು. ಅಂದರೆ, ಮಧ್ಯದಲ್ಲಿಯೇ ಈ ಕಾಡುಗಳನ್ನು ಯೋಜನೆಯಿಂದ ಹೊರಗಿಡಲು ಅನುಮತಿ ನೀಡುವ ನಿಯಮಗಳು ಇರಲಿಲ್ಲ. ಆಗಸ್ಟ್ 2024 ರ ಹೊತ್ತಿಗೆ, ICFRE ಈ ಪ್ರಕರಣದ ವಿವರಗಳನ್ನು ಪರಿಶೀಲಿಸಿತ್ತು. ಅದಾನಿ ಆ ಅರಣ್ಯ ಭೂಮಿಗಾಗಿ ಬೇಡಿಕೆ ಇಟ್ಟಿದ್ದರು. ಹಾಗಾಗಿ, ವಿಷಯ ಸಂಕೀರ್ಣವಾಗಿತ್ತು ಮತ್ತು ರಾಜಕೀಯ ಒತ್ತಡವಿತ್ತು. ಅಧಿಕಾರಿಗಳು ಕೂಡ ಅದೇ ಕಾರಣಕ್ಕಾಗಿ ಈ ವಿಷಯದ ಬಗ್ಗೆ ನೇರ ನಿರ್ಧಾರ ತೆಗೆದುಕೊಳ್ಳುವುದನ್ನು ತಪ್ಪಿಸುತ್ತಿದ್ದರು. ಅಂತಿಮ ನಿರ್ಧಾರ ಪರಿಸರ ಸಚಿವಾಲಯದಿಂದಲೇ ಬರಬೇಕು ಎಂದು ಅಧಿಕಾರಿಗಳು ಕೈತೊಳೆದುಕೊಂಡರು. ಅಂದರೆ, ಎಲ್ಲವನ್ನೂ ಸಚಿವಾಲಯದ (ರಾಜಕೀಯ) ನಿರ್ಣಯಕ್ಕೆ ಬಿಡಲಾಯಿತು. ಸೆಪ್ಟಂಬರ್ 2024ರಲ್ಲಿ ICFRE ಈ ವಿಷಯವನ್ನು ಪರಿಸರ ಸಚಿವಾಲಯಕ್ಕೆ ಕಳುಹಿಸಿತು. ಡಿಸೆಂಬರ್ 2024ರಲ್ಲಿ ಗುಜರಾತ್ ಸರಕಾರ ಹೊಸ ವಾದವನ್ನು ಮಂಡಿಸಿತು. ಅದಾನಿ ಗ್ರೂಪ್ ಅನ್ನು ಹೆಸರಿಸದೆ, ಯಾರೂ ಗ್ರೀನ್ ಕ್ರೆಡಿಟ್ ಕಾರ್ಯಕ್ರಮದಡಿ ಮರಗಳನ್ನು ನೆಡದ ಅಥವಾ ಮರಗಳನ್ನು ನೆಡಲು ಆಸಕ್ತಿ ವ್ಯಕ್ತಪಡಿಸದ ಭೂಮಿಯನ್ನು ಯೋಜನೆಯಿಂದ ಸಂಪೂರ್ಣವಾಗಿ ತೆಗೆದುಹಾಕಬೇಕು ಎಂದು ಹೇಳಿತು. ಕೇಂದ್ರ ಸರಕಾರ ತಡಮಾಡದೆ ಈ ಭೂಮಿಯನ್ನು ಗ್ರೀನ್ ಕ್ರೆಡಿಟ್ ಲ್ಯಾಂಡ್ ಬ್ಯಾಂಕ್ನಿಂದ ತೆಗೆದುಹಾಕಿತು. ದಾಖಲೆಗಳು ಇದನ್ನು ಆಡಳಿತಾತ್ಮಕ ನಿರ್ಧಾರವೆಂದು ತೋರಿಸಿದವು. ಆದರೆ, ಇದು ವಾಸ್ತವವಾಗಿ ಅದಾನಿ ಗ್ರೂಪ್ಗೆ ಈಗಾಗಲೇ ಮೀಸಲಿಟ್ಟಿದ್ದ ಅದೇ ನಾಲ್ಕು ಅರಣ್ಯ ಪ್ರದೇಶಗಳನ್ನು ಹೊರಗಿಟ್ಟಿತ್ತು. ಆರ್ಟಿಐ ಮೂಲಕ ಗುಜರಾತ್ ಸರಕಾರವನ್ನು ಇದರ ಬಗ್ಗೆ ಕೇಳಿದಾಗ, ಸರಕಾರ ಅದನ್ನು ಸ್ಪಷ್ಟವಾಗಿ ನಿರಾಕರಿಸಿತು. ಗ್ರೀನ್ ಕ್ರೆಡಿಟ್ ಪ್ರೋಗ್ರಾಂನಿಂದ ಯಾವುದೇ ಅರಣ್ಯ ಭೂಮಿಯನ್ನು ತೆಗೆದುಹಾಕಲು ಅದಾನಿ ಗ್ರೂಪ್ ಎಂದಿಗೂ ಕೇಳಿಲ್ಲ ಎಂದು ಅದು ಹಸಿ ಸುಳ್ಳು ಹೇಳಿತು. ಸರಕಾರದ ಬಾಯಲ್ಲಿ ಒಂದು ಮಾತು, ಕಡತಗಳಲ್ಲಿ ಇನ್ನೊಂದು ಕಥೆ. ಸಾರ್ವಜನಿಕವಾಗಿ ನಿರಾಕರಿಸುತ್ತಲೇ, ಗುಟ್ಟಾಗಿ ಕಾರ್ಪೊರೇಟ್ ಪ್ರಸ್ತಾವನೆಗಳಿಗೆ ಕೆಂಪು ಹಾಸು ಹಾಸುತ್ತಿರುವುದು ಇಲ್ಲಿ ಸ್ಪಷ್ಟವಾಗುತ್ತದೆ. ಗುಜರಾತ್ ಸರಕಾರ ಭೂಮಿ ತೆರವುಗೊಳಿಸಲು ವಿನಂತಿಸಿದ್ದು ಮಾತ್ರವಲ್ಲದೆ, ಆ ಭೂಮಿ ಎಫ್ಸಿಎ ಅಡಿಯಲ್ಲಿ ಅದಾನಿ ಕಂಪೆನಿಗಳ ಪ್ರಸ್ತಾವನೆಯ ಭಾಗವಾಗಿದೆ ಎಂದು ಹೇಳಿದೆ ಎಂಬುದನ್ನೇ ಪರಿಸರ ಸಚಿವಾಲಯ ಮತ್ತು ICFREನ ಆಂತರಿಕ ದಾಖಲೆಗಳು ಸ್ಪಷ್ಟವಾಗಿ ತೋರಿಸುತ್ತವೆ ಎಂದು ವರದಿ ಹೇಳುತ್ತದೆ. ಆರ್ಟಿಐ ಅಡಿಯಲ್ಲಿ ಪಡೆದ ಈ ದಾಖಲೆಗಳನ್ನು ಗುಜರಾತ್ ಸರಕಾರಕ್ಕೆ ತೋರಿಸಿದಾಗ, ಅದು ಯಾವುದೇ ಸ್ಪಷ್ಟೀಕರಣ ನೀಡಿಲ್ಲ ಅಥವಾ ನಿರಾಕರಿಸಿಯೂ ಇಲ್ಲ, ಮೌನಕ್ಕೆ ಶರಣಾಗಿದೆ. ಕೇಂದ್ರ ಸರಕಾರ ಮತ್ತು ICFRE ಕೂಡ ಇದೇ ಮೌನವನ್ನು ಅನುಸರಿಸಿವೆ. ICFRE ತಾನು ಸ್ವತಃ ಅರಣ್ಯ ತೆರವು ಪ್ರಕ್ರಿಯೆಯಲ್ಲಿ ಭಾಗಿಯಾಗಿಲ್ಲ ಮತ್ತು ಹಾಗಾಗಿ ಕಂಪೆನಿಗಳ ಪ್ರಸ್ತಾವನೆಗಳ ಬಗ್ಗೆ ಯಾವುದೇ ಅರಿವು ಇಲ್ಲ ಎಂದು ಮತ್ತೊಂದು ಆರ್ಟಿಐ ಉತ್ತರದಲ್ಲಿ ಹೇಳಿದೆ. ಅಂದರೆ, ಇಡೀ ಗ್ರೀನ್ ಕ್ರೆಡಿಟ್ ಪ್ರೋಗ್ರಾಂ ಅನ್ನು ಮೇಲ್ವಿಚಾರಣೆ ಮಾಡುವ ಸಂಸ್ಥೆಗೇ ಯಾರಿಗೆ ಅಥವಾ ಏಕೆ ಅರಣ್ಯಗಳನ್ನು ಹಂಚಿಕೆ ಮಾಡಲಾಗುತ್ತಿದೆ ಎಂದು ತಿಳಿದಿಲ್ಲ! ಅಥವಾ ಹಾಗೆಂದು ಅದು ಹೇಳಿಕೊಳ್ಳುತ್ತಿದೆ. ಅದಾನಿ ಗ್ರೂಪ್ನ ಪ್ರತಿಕ್ರಿಯೆಯೂ ಜಾರಿಕೊಳ್ಳುವ ರೀತಿಯದ್ದಾಗಿದೆ ಎಂದು ವರದಿ ಹೇಳುತ್ತದೆ. ಅಕ್ಟೋಬರ್ 2023ರಲ್ಲಿ ಪ್ರಧಾನಿ ನರೇಂದ್ರ ಮೋದಿ ಗ್ರೀನ್ ಕ್ರೆಡಿಟ್ ಕಾರ್ಯಕ್ರಮ ಪ್ರಾರಂಭಿಸಿದ ಕೆಲವೇ ತಿಂಗಳುಗಳ ನಂತರ, ಆಹಾರ ಮತ್ತು ಕೃಷಿ ಸಂಸ್ಥೆಯ ವರದಿ ಬಂತು. ಒಟ್ಟು ಅರಣ್ಯ ಪ್ರದೇಶದ ವಿಷಯದಲ್ಲಿ ಭಾರತ ಒಂಭತ್ತನೇ ಸ್ಥಾನದಲ್ಲಿದೆ ಮತ್ತು ವಾರ್ಷಿಕ ಅರಣ್ಯ ಬೆಳವಣಿಗೆ ವಿಷಯದಲ್ಲಿ ಮೂರನೇ ಸ್ಥಾನದಲ್ಲಿದೆ ಎಂದಿತು. ಪರಿಸರ ಸಚಿವ ಭೂಪೇಂದ್ರ ಯಾದವ್, ಇದಕ್ಕೆ ಮೋದಿ ಸರಕಾರದ ನೀತಿಗಳು ಮತ್ತು ರಾಜ್ಯಗಳು ಕೈಗೊಂಡ ಬೃಹತ್ ಪ್ಲಾಂಟೇಷನ್ ಪ್ರಯತ್ನಗಳು ಕಾರಣ ಎಂದು ಎದೆಯುಬ್ಬಿಸಿ ಹೇಳಿದರು. ಆದರೆ ವಾಸ್ತವ ಬೇರೆಯೇ ಇದೆ. ಸರಕಾರ ಸಹಜ ಕಾಡುಗಳನ್ನು ಏಕಜಾತಿಯ ಪ್ಲಾಂಟೇಷನ್ಗಳ ಜೊತೆ ಸಮೀಕರಿಸುತ್ತಿದೆ. ಪರಿಸರ ವಿಜ್ಞಾನದ ಪ್ರಕಾರ, ಒಂದೇ ಜಾತಿಯ ನೀಲಗಿರಿ ಅಥವಾ ಅಕೇಶಿಯಾ ಮರಗಳನ್ನು ನೆಡುವುದು ಕಾಡಾಗುವುದಿಲ್ಲ. ಅದು ‘ಹಸಿರು ಮರುಭೂಮಿ’ ಇದ್ದಂತೆ. ಅಲ್ಲಿ ಜೀವವೈವಿಧ್ಯವಿರುವುದಿಲ್ಲ. ಆದರೆ ಸರಕಾರದ ಲೆಕ್ಕದಲ್ಲಿ, ಜೀವವೈವಿಧ್ಯವಿರುವ ನೈಸರ್ಗಿಕ ಕಾಡುಗಳು ನಾಶವಾಗುತ್ತಿದ್ದರೂ, ರಸ್ತೆಬದಿಗಳಲ್ಲಿ ಅಥವಾ ಖಾಲಿ ಭೂಮಿಯಲ್ಲಿ ನೆಟ್ಟ ವಾಣಿಜ್ಯ ಮರಗಳನ್ನು ಸಹ ‘ಕಾಡು’ಗಳೆಂದು ಪರಿಗಣಿಸಿ ಅಂಕಿಅಂಶಗಳನ್ನು ಉಬ್ಬಿಸಲಾಗುತ್ತದೆ. ದಾಖಲೆಗಳಲ್ಲಿ ಮಾತ್ರ ಹಸಿರೋ ಹಸಿರು. ಆದರೆ ವಾಸ್ತವದಲ್ಲಿ ಶತಮಾನದಷ್ಟು ಹಳೆಯ ಕಾಡುಗಳು ನಾಶವಾಗುತ್ತಿವೆ. 2014-15ರಿಂದ 2023-24 ರ ನಡುವೆ ಕೇಂದ್ರ ಸರಕಾರ 1.74 ಲಕ್ಷ ಹೆಕ್ಟೇರ್ ಅರಣ್ಯವನ್ನು ಕಡಿಯಲು ಅನುಮೋದನೆ ನೀಡಿತು. ಪ್ರತೀ ವರ್ಷ, ಗ್ರೀನ್ ಕ್ರೆಡಿಟ್ ಕಾರ್ಯಕ್ರಮದಡಿ ಕಂಪೆನಿಗಳಿಗೆ ಬೇರೆಡೆ ಮರಗಳನ್ನು ನೆಡಲು ಅಥವಾ ಗ್ರೀನ್ ಕ್ರೆಡಿಟ್ ಪಡೆಯಲು ಅವಕಾಶ ನೀಡಲಾಗುತ್ತದೆ. ಇದಕ್ಕೆ ಪ್ರತಿಯಾಗಿ ಅತ್ಯಮೂಲ್ಯವಾದ ನೈಸರ್ಗಿಕ ಕಾಡುಗಳನ್ನು ಕಡಿಯುವುದನ್ನು ಮುಂದುವರಿಸಲಾಗುತ್ತದೆ. ಗ್ರೀನ್ ಕ್ರೆಡಿಟ್ ಪ್ರೋಗ್ರಾಂ ಆಧುನಿಕ ಪರಿಸರ ಸಂರಕ್ಷಣಾ ಯೋಜನೆಯಂತೆ ದಾಖಲೆಗಳಲ್ಲಿ ಕಂಡುಬಂದರೂ, ವಾಸ್ತವದಲ್ಲಿ ಅದನ್ನು ಅರಣ್ಯ ಸಂರಕ್ಷಣೆಗಿಂತ ಅರಣ್ಯನಾಶಕ್ಕೇ ಹೆಚ್ಚು ಬಳಸಲಾಗುತ್ತಿರುವಂತೆ ಕಾಣುತ್ತಿದೆ. ‘ಅವನತಿ ಹೊಂದಿದ ಕಾಡುಗಳನ್ನು ಮತ್ತೆ ನಿರ್ಮಿಸಬೇಕಿದ್ದ’ ಯೋಜನೆಯೇ, ಈಗ ಅರಣ್ಯ ನಾಶಕ್ಕೆ ಅಡಿಪಾಯವಾಗಿದೆ ಮತ್ತು ಅವುಗಳನ್ನು ಕಾರ್ಪೊರೇಟ್ಗಳಿಗೆ ತೆರೆದಿಟ್ಟಿದೆ. ಗುಜರಾತ್ ಪ್ರಕರಣ ಕೇವಲ ಒಂದು ತಾಂತ್ರಿಕ ದೋಷವಲ್ಲ. ಬದಲಿಗೆ ಸರಕಾರದ ಪರಿಸರ ನೀತಿ ಹೇಗೆ ವ್ಯವಸ್ಥಿತವಾಗಿ ಕಾರ್ಪೊರೇಟ್ ಹಿತಾಸಕ್ತಿಗಳ ಪರವಾಗಿ ವಾಲುತ್ತಿದೆ ಎಂಬುದಕ್ಕೆ ಜ್ವಲಂತ ಸಾಕ್ಷಿಯಾಗಿದೆ.
ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಗೆ ಡಿಕೆಶಿಗಿಲ್ಲ ಆಹ್ವಾನ, ದೆಹಲಿ ವಿಮಾನ ಏರಲಿರುವ ಸಿದ್ದರಾಮಯ್ಯ!
ಡಿಸೆಂಬರ್ 27 ಅಂದರೆ ಶನಿವಾರ ದೆಹಲಿಯಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕಾರಿ ಸಮಿತಿ ಸಭೆಯನ್ನು ಹಮ್ಮಿಕೊಳ್ಳಲಾಗಿದೆ. ಈ ಸಭೆಗೆ ಸಿಎಂ ಸಿದ್ದರಾಮಯ್ಯ ಅವರಿಗೆ ಆಹ್ವಾನ ನೀಡಲಾಗಿದೆ. ಆದರೆ ಕೆಪಿಸಿಸಿ ಅಧ್ಯಕ್ಷ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಅವರಿಗೆ ಸಭೆಗೆ ಆಹ್ವಾನ ಸಿಕ್ಕಿಲ್ಲ. ಸಭೆಯಲ್ಲಿ ಭಾಗಿಯಾಗಲು ಸಿಎಂ ಸಿದ್ದರಾಮಯ್ಯ ಅವರು ಶುಕ್ರವಾರ ಸಂಜೆ ದೆಹಲಿಗೆ ತೆರಳಲಿದ್ದಾರೆ. ದೆಹಲಿಯಲ್ಲಿ ಇದೇ ಸಂದರ್ಭದಲ್ಲಿ ಹೈಕಮಾಂಡ್ ನಾಯಕರನ್ನು ಅವರು ಭೇಟಿ ಮಾಡಿ ಮಾತುಕತೆ ನಡೆಸುವ ಸಾಧ್ಯತೆ ಇದೆ.
ಭಾರತ ಹಾಗೂ ಚೀನಾದ ನಡುವೆ ಸುದೀರ್ಘವಾಗಿ ಇದ್ದ ಎಲ್ಲ ಅಡೆತಡೆಗಳು ದೂರವಾಗಿ ಮತ್ತೆ ಸಂಬಂಧ ವೃದ್ದಿಯಾಗುತ್ತಿದೆ ಎಂಬ ಹೊತ್ತಿನಲ್ಲೇ ಅಮೆರಿಕಾದ ಪೆಂಟಗಾನ್ ಶಾಕಿಂಗ್ ವರಿಯೊಂದನ್ನು ನೀಡಿದೆ. ಈ ವರದಿ ಪ್ರಕಾರ, ಚೀನಾ ಪಾಕಿಸ್ತಾನಕ್ಕೆ 36 J-10C ಯುದ್ಧ ವಿಮಾನಗಳು ಮತ್ತು ನಾಲ್ಕು ಯುದ್ಧನೌಕೆಗಳನ್ನು ನೀಡುತ್ತಿದೆ. ಇದು ಭಾರತದ ರಾಫೇಲ್ ವಿಮಾನಗಳಿಗೆ ಸರಿಸಮಾನವಾಗಿದ್ದು, ಪಾಕಿಸ್ತಾನವನ್ನು ಭಾರತದ ವಿರುದ್ಧ ಯುದ್ಧಕ್ಕೆ ಸಜ್ಜುಗೊಳಿಸುವ ಪ್ರಯತ್ನ ಎಂದು ವಿಶ್ಲೇಷಿಸಲಾಗಿದೆ. ಅಲ್ಲದೆ, ಪಹಲ್ಗಾಮ್ ದಾಳಿಗೂ ಕೆಲದಿನಗಳ ಮುನ್ನವೇ ಚೀನಾ ತನ್ನ ಮಿತ್ರ ಪಾಕಿಸ್ತಾನಕ್ಕೆ PL-17 ಏರ್-ಟು-ಏರ್ ಕ್ಷಿಪಣಿ ಪಾಕಿಸ್ತಾನಕ್ಕೆ ರವಾನಿಸಿತಂತೆ . ಇದನ್ನು ಪಾಕಿಸ್ತಾನ ಆಪರೇಷನ್ ಸಿಂಧೂರದ ಸಮಯದಲ್ಲಿ ಉಪಯೋಗಿಸಿತ್ತು. ಹೀಗೆ ಚೀನಾದ ಈ ಕ್ರಮಗಳು ದಕ್ಷಿಣ ಏಷ್ಯಾದಲ್ಲಿನ ಭದ್ರತಾ ಪರಿಸ್ಥಿತಿ ಗಂಭೀರವಾಗಿಸುತ್ತಿದ್ದು, ಭಾರತ ತನ್ನ ರಕ್ಷಣಾ ಸಾಮರ್ಥ್ಯವನ್ನು ಬಲಪಡಿಸಿಕೊಳ್ಳಬೇಕಿದೆ ಎಂದು ತಿಳಿಸಿದೆ.
Canada| ಟೊರಂಟೊ ವಿವಿ ಕ್ಯಾಂಪಸ್ ಬಳಿ ಭಾರತೀಯ ವಿದ್ಯಾರ್ಥಿಯ ಹತ್ಯೆ
ಟೊರಂಟೊ: ಕೆನಡಾದ ಟೊರಂಟೊ ವಿಶ್ವವಿದ್ಯಾಲಯದ ಸ್ಕಾರ್ಬರೋ ಕ್ಯಾಂಪಸ್ ಬಳಿ ಭಾರತೀಯ ವಿದ್ಯಾರ್ಥಿಯೋರ್ವನನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಭಾರತೀಯ ಮೂಲದ ಸಂಶೋಧನಾ ವಿದ್ಯಾರ್ಥಿ ಶಿವಾಂಕ್ ಅವಸ್ಥಿ(20) ಹತ್ಯೆಯಾದವರು. ಘಟನೆಯನ್ನು ಟೊರಂಟೊದಲ್ಲಿರುವ ಭಾರತೀಯ ರಾಯಭಾರಿ ಕಚೇರಿ ದೃಢಪಡಿಸಿದ್ದಾರೆ. ಟೊರಂಟೊ ವಿಶ್ವವಿದ್ಯಾಲಯದ ಸ್ಕಾರ್ಬರೋ ಕ್ಯಾಂಪಸ್ ಬಳಿ ನಡೆದ ಗುಂಡಿನ ದಾಳಿಯಲ್ಲಿ ಭಾರತೀಯ ಸಂಶೋಧನಾ ವಿದ್ಯಾರ್ಥಿ ಶಿವಾಂಕ್ ಅವಸ್ಥಿ ಅವರ ನಿಧನದ ಬಗ್ಗೆ ತೀವ್ರ ದುಃಖ ವ್ಯಕ್ತಪಡಿಸುತ್ತೇವೆ. ಈ ನೋವಿನ ಸಮಯದಲ್ಲಿ ದುಃಖಿತ ಕುಟುಂಬದೊಂದಿಗೆ ನಾವು ಸಂಪರ್ಕದಲ್ಲಿದ್ದೇವೆ. ಸ್ಥಳೀಯ ಅಧಿಕಾರಿಗಳ ಸಮನ್ವಯದೊಂದಿಗೆ ಅಗತ್ಯವಿರುವ ಎಲ್ಲಾ ಸಹಾಯವನ್ನು ನೀಡುತ್ತಿದ್ದೇವೆ ಎಂದು ಟೊರಂಟೊದಲ್ಲಿರುವ ಭಾರತೀಯ ರಾಯಭಾರಿ ಕಚೇರಿ ಎಕ್ಸ್ನಲ್ಲಿ ತಿಳಿಸಿದೆ.
28 Km ವರೆಗೆ ಮೈಲೇಜ್ ನೀಡುವ ಬಡವರ ಈ ಕಾರುಗಳ ಮೇಲೆ 2 ಲಕ್ಷದವರೆಗೆ ಡಿಸ್ಕೌಂಟ್
ನೀವು ಹೊಸ ಕಾರು ಖರೀದಿಸುವ ಕನಸು ಕಾಣುತ್ತಿದ್ದೀರಾ? ಹಾಗಿದ್ದರೆ ಈ ಸುದ್ದಿ ನಿಮಗಾಗಿ. ವರ್ಷದ ಅಂತ್ಯದಲ್ಲಿ ಕಾರು ತಯಾರಕ ಕಂಪನಿಗಳು ಗ್ರಾಹಕರಿಗೆ ಭರ್ಜರಿ ಸಿಹಿ ಸುದ್ದಿ ನೀಡಿವೆ. ಸ್ಟಾಕ್ ಕ್ಲಿಯರೆನ್ಸ್ (Stock Clearance) ಹಿನ್ನೆಲೆಯಲ್ಲಿ ಲಕ್ಷ ಲಕ್ಷ ರೂಪಾಯಿ ಉಳಿಸುವ ಅವಕಾಶ ಈಗ ನಿಮ್ಮ ಮುಂದಿದೆ. ಈ ಡಿಸೆಂಬರ್ ತಿಂಗಳು ಕಾರು ಪ್ರಿಯರಿಗೆ ನಿಜಕ್ಕೂ ಹಬ್ಬದಂತಿದೆ. ದೇಶದ ಅತಿದೊಡ್ಡ ಕಾರು ತಯಾರಕ ಕಂಪನಿಯಾದ ಮಾರುತಿ ಸುಜುಕಿ (Maruti Suzuki), ತನ್ನ ಗ್ರಾಹಕರಿಗೆ ಬರೋಬ್ಬರಿ ₹2.19 ಲಕ್ಷದವರೆಗಿನ ರಿಯಾಯಿತಿಗಳನ್ನು ... Read more The post 28 Km ವರೆಗೆ ಮೈಲೇಜ್ ನೀಡುವ ಬಡವರ ಈ ಕಾರುಗಳ ಮೇಲೆ 2 ಲಕ್ಷದವರೆಗೆ ಡಿಸ್ಕೌಂಟ್ appeared first on Karnataka Times .
ರಿತ್ವಿಕ್ ಘಟಕ್ 100: ನೋವಿಗದ್ದಿದ, ಸ್ಪಂದನಶೀಲ ಕ್ಯಾಮರಾ
ರಿತ್ವಿಕ್ ಘಟಕ್ ಹುಟ್ಟಾ ಮೂರ್ತಿಭಂಜಕ. 50ನೇ ವಯಸ್ಸಿನಲ್ಲಿ ಸಾಯುವ ಮುನ್ನ ಭಾರತೀಯ ಚಿತ್ರರಂಗದಲ್ಲಿ ಅಳಿಸಲಾಗದ ಹೆಜ್ಜೆ ಗುರುತು ಮೂಡಿಸಿದ್ದರು. ಅವರ ಕೊಡುಗೆಗಳಿಗೆ ಪರ್ಯಾಯವೇ ಇಲ್ಲ; ಸ್ಪರ್ಧಿಗಳು ಇಲ್ಲ ಹಾಗೂ ನಕಲು ಮಾಡುವವರು ಕೂಡ ಇಲ್ಲ. ‘ಬಾರಿ ಥೇಕೆ ಪಾಲಿಯೆ’(1958)ರಿಂದ ಆರಂಭಗೊಂಡ ಅವರ ಚಿತ್ರಯಾನದಲ್ಲಿ ಮೂಡಿದ ಎಲ್ಲ ಕೃತಿಗಳೂ ರಾಜಿಯಾಗದ ಪ್ರವೃತ್ತಿ, ಸೈದ್ಧಾಂತಿಕ ಬದ್ಧತೆ, ಸ್ವಾತಂತ್ರ್ಯದ ಹಂಬಲ, ನಿರಾಶ್ರಿತರು-ಜನಸಾಮಾನ್ಯರ ಬಗ್ಗೆ ಕಾಳಜಿ ಮತ್ತು ನಿರಂತರ ಹೋರಾಟದ ಪ್ರತೀಕವಾಗಿವೆ. ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಜೀವವಿಮೆ ಕ್ಷೇತ್ರದಲ್ಲಿ ವಿದೇಶಿ ಹೂಡಿಕೆ, ಸುರಕ್ಷತೆಯ ಖಾತರಿಯಿಲ್ಲದ ಅಣುಶಕ್ತಿ ಕ್ಷೇತ್ರದಲ್ಲಿ ಖಾಸಗಿಯವರಿಗೆ ಅನುಮತಿ ನೀಡುವಿಕೆ ಮಸೂದೆಯಲ್ಲದೆ, ಗ್ರಾಮೀಣರ ಜೀವನಾಡಿಯಾಗಿದ್ದ ನರೇಗಾದ ಹೆಸರು ಬದಲಿಸಿ ವಿರೂಪಗೊಳಿಸಲಾಗಿದೆ. ಜನಸಾಮಾನ್ಯರ ಹಿತಾಸಕ್ತಿಗೆ ಧಕ್ಕೆ ತರುವ ಇಂಥ ಮಸೂದೆಗಳ ನಡುವೆಯೇ ಕಟ್ಟಾ ಸಿದ್ಧಾಂತಿ, ಮೂರ್ತಿಭಂಜಕ ಮತ್ತು ಸಿನೆಮಾ ಮಾಧ್ಯಮವನ್ನು ಮಾನವೀಯಗೊಳಿಸಿದ ಚಿತ್ರ ನಿರ್ದೇಶಕ ರಿತ್ವಿಕ್ ಘಟಕ್ ನೂರು ವರ್ಷ(ನವೆಂಬರ್ 4, 1925- ಫೆಬ್ರವರಿ 6, 1976) ಪೂರೈಸಿದ್ದಾರೆ. ಬಂಗಾಳದ ಖ್ಯಾತ ತ್ರಿವಳಿ ನಿರ್ದೇಶಕರಲ್ಲಿ ಘಟಕ್ ಕಿರಿಯರು(ಸತ್ಯಜಿತ್ ರೇ, ಮೃಣಾಲ್ ಸೇನ್ ಇನ್ನಿಬ್ಬರು). ರಾಜಕೀಯ ನಂಬಿಕೆಯಷ್ಟೇ ತೀವ್ರತೆ-ಬದ್ಧತೆಯಿಂದ ಸಿನೆಮಾ ಮಾಡುತ್ತಿದ್ದ ಅವರ ಜತೆಗಾರರಿಗೆ ಕೂಡ ಅವರ ತೀವ್ರ ಕ್ರಾಂತಿಕಾರಿ ಆಲೋಚನೆಗಳನ್ನು ಅರಗಿಸಿಕೊಳ್ಳಲು ಆಗುತ್ತಿರಲಿಲ್ಲ; ಹೀಗಾಗಿ, ಸೈದ್ಧಾಂತಿಕ ಏಕಾಂಗಿತನ ಅನುಭವಿಸಬೇಕಾಯಿತು. ಘಟಕ್ ಹುಟ್ಟಾ ಮೂರ್ತಿಭಂಜಕ. 50ನೇ ವಯಸ್ಸಿನಲ್ಲಿ ಸಾಯುವ ಮುನ್ನ ಭಾರತೀಯ ಚಿತ್ರರಂಗದಲ್ಲಿ ಅಳಿಸಲಾಗದ ಹೆಜ್ಜೆ ಗುರುತು ಮೂಡಿಸಿದ್ದರು. ಅವರ ಕೊಡುಗೆಗಳಿಗೆ ಪರ್ಯಾಯವೇ ಇಲ್ಲ; ಸ್ಪರ್ಧಿಗಳು ಇಲ್ಲ ಹಾಗೂ ನಕಲು ಮಾಡುವವರು ಕೂಡ ಇಲ್ಲ. ‘ಬಾರಿ ಥೇಕೆ ಪಾಲಿಯೆ’(1958)ರಿಂದ ಆರಂಭಗೊಂಡ ಅವರ ಚಿತ್ರಯಾನದಲ್ಲಿ ಮೂಡಿದ ಎಲ್ಲ ಕೃತಿಗಳೂ ರಾಜಿ ಯಾಗದ ಪ್ರವೃತ್ತಿ, ಸೈದ್ಧಾಂತಿಕ ಬದ್ಧತೆ, ಸ್ವಾತಂತ್ರ್ಯದ ಹಂಬಲ, ನಿರಾಶ್ರಿತರು-ಜನಸಾಮಾನ್ಯರ ಬಗ್ಗೆ ಕಾಳಜಿ ಮತ್ತು ನಿರಂತರ ಹೋರಾಟದ ಪ್ರತೀಕವಾಗಿವೆ. ಚಿತ್ರಯಾನ ರಿತ್ವಿಕ್ ತಂದೆ ಸುರೇಶ್ ಚಂದ್ರ ಘಟಕ್ ಜಿಲ್ಲಾ ಮ್ಯಾಜಿಸ್ಟ್ರೇಟ್, ಕವಿ ಮತ್ತು ನಾಟಕಕಾರ; ತಾಯಿ ಇಂದುಬಾಲಾ ದೇವಿ. ದೇಶ ವಿಭಜನೆ ಬಳಿಕ ಢಾಕಾದಿಂದ ಭಾರತಕ್ಕೆ ವಲಸೆ. ಪತ್ನಿ ಸುರಮಾ ಮತ್ತು ಮಕ್ಕಳು ಸಂಹಿತಾ(ಸಾಕ್ಷ್ಯಚಿತ್ರ ನಿರ್ದೇಶಕಿ), ಸುಶ್ಮಿತಾ ಹಾಗೂ ಮಗ ರಿತಬನ್(ಚಿತ್ರ ನಿರ್ಮಾಪಕ). ಘಟಕ್ ಅವರಿಗೆ ವೇದ, ಭಾರತೀಯ ಸಂಸ್ಕೃತಿ/ ಸಂಪ್ರದಾಯಗಳ ಆಳವಾದ ಜ್ಞಾನ ಇದ್ದಿತ್ತು. ಅವರ ಚಿತ್ರಗಳಲ್ಲಿ ಬಂಗಾಳದ ವಿಭಜನೆ, ಅದರ ಮಾನುಷ ದುರಂತಗಳು ಮತ್ತು ಸಾಂಸ್ಕೃತಿಕ ನಷ್ಟ ಮತ್ತೆ ಮತ್ತೆ ಕಾಣಿಸಿಕೊಳ್ಳುತ್ತವೆ. ಸ್ಪ್ಯಾನಿಷ್ ಮತ್ತು ಮೆಕ್ಸಿಕೋ ಚಿತ್ರ ನಿರ್ದೇಶಕ ಲೂಯಿಸ್ ಬುನುಯಲ್ ಅವರ ಸಿನೆಮಾ ‘ನಜರಿನ್’ (1959) ಅವರ ಮೆಚ್ಚಿನ ಚಿತ್ರ. ಸ್ವೀಡಿಷ್ ನಿರ್ದೇಶಕ ಇಂಗ್ಮರ್ ಬರ್ಗ್ಮನ್ ಸಿನೆಮಾಗಳ ಬಗ್ಗೆ ಅವರಿಗೆ ಹೆಚ್ಚು ಒಲವು ಇರಲಿಲ್ಲ; ಬರ್ಗ್ಮನ್ ಸಿನೆಮಾಗಳಲ್ಲಿನ ಧಾರ್ಮಿಕತೆಯನ್ನು ತಳ್ಳಿ ಹಾಕಿದ್ದರು. ಬಾರಿ ಥೇಕೆ ಪಾಲಿಯೆ, ಅಜಾಂತ್ರಿಕ್(1958), ಮೇಘೆ ಡಾಕಾ ತಾರಾ(1960), ಕೋಮಲ್ ಗಾಂಧಾರ್(1961), ಸುಬರ್ಣರೇಖಾ(1965), ತಿತಾಸ್ ಏಕ್ತಿ ನದಿರ್ ನಾಮ್(1973), ನಾಗರಿಕ್ ಮತ್ತು ಜುಕ್ಟಿ ತಕ್ಕೋ ಔರ್ ಗಪ್ಪೊ(1977). ನಾಗರಿಕ್ 1952ರಲ್ಲೇ ನಿರ್ಮಾಣಗೊಂಡಿದ್ದರೂ ಬಿಡುಗಡೆಯಾಗಿದ್ದು ಸೆಪ್ಟಂಬರ್ 20, 1977ರಲ್ಲಿ. 7 ಚಿತ್ರಗಳಿಗೆ ಕಥೆ/ಚಿತ್ರಕತೆ(ಮುಸಾಫಿರ್, ಮಧುವತಿ, ಸ್ವರಲಿಪಿ, ಕುಮಾರಿ ಮೋನ್, ದೀಪರ್ ನಾಮ್ ತಿಯಾ ರೊಂಗ್, ರಾಜ್ಕನ್ಯಾ, ಹೀರೆರ್ ಪ್ರಜಾಪತಿ) ಬರೆದಿದ್ದಾರೆ. ಸಾಕ್ಷ್ಯಚಿತ್ರಗಳೆಂದರೆ, ದ ಲೈಫ್ ಆಫ್ ಆದಿವಾಸಿಸ್ ಮತ್ತು ಪ್ಲೇಸಸ್ ಆಫ್ ಹಿಸ್ಟಾರಿಕಲ್ ಇಂಟೆರೆಸ್ಟ್ ಇನ್ ಬಿಹಾರ್ 1955, ಒರಾನ್ 1957, ಸಿಸರ್ಸ್ 1962, ಉಸ್ತಾದ್ ಅಲ್ಲಾವುದ್ದೀನ್ ಖಾನ್ 1963, ಫಿಯರ್/ರೆಂಡೆವೋ ಮತ್ತು ಸಿವಿಲ್ ಡಿಫೆನ್ಸ್ 1965, ಸೈಂಟಿಸ್ಟ್ಸ್ ಆಫ್ ಟುಮಾರೋ 1967, ಯೆಕ್ಯೋ/ಅಮರ್ ಲೆನಿನ್/ಪುರುಲಿಯರ್ ಚೌ 1970 ಹಾಗೂ ದರ್ಬಾರ್ ಗತಿ ಪದ್ಮಾ 1971. ಅಪೂರ್ಣ ಚಿತ್ರ/ಸಾಕ್ಷ್ಯಚಿತ್ರಗಳು 6 ಮತ್ತು 25 ಚಿತ್ರಕತೆಗಳು ಚಿತ್ರೀಕರಣಕ್ಕೆ ಮುನ್ನವೇ ನಿಲುಗಡೆಯಾದವು. ಬಿಮಲ್ ರಾಯ್ ಅವರ ಚಿತ್ರ ಮಧುಮತಿ(1958)ಗೆ ಘಟಕ್ ಕಥೆ-ಚಿತ್ರಕತೆ ಬರೆದಿದ್ದಾರೆ(ಸಹಲೇಖಕ ರಾಜಿಂದರ್ ಸಿಂಗ್ ಬೇಡಿ). ಇದು ಕ್ಲಾಸಿಕ್ಗಳಲ್ಲಿ ಒಂದು. ಅನೂಪ್ ಸಿಂಗ್ ನಿರ್ದೇಶಿತ ಏಕ್ತಿ ನದಿರ್ ನಾಮ್ ಮತ್ತು ಕಮಲೇಶ್ವರ್ ನಿರ್ದೇಶನದ ಮೇಘೆ ಡಾಕಾ ತಾರಾ(2013) ಅವರನ್ನು ಕುರಿತ ಚಿತ್ರಗಳು. ಘಟಕ್ ಅವರ ಸಿನೆಮಾಗಳು ಅನಿರ್ದಿಷ್ಟ ಮೋಹಕತೆ, ಕಲ್ಪನೆಯಲ್ಲಿ ನಾವೀನ್ಯತೆ, ಅಂಕುಶವಿಲ್ಲದ ಕ್ರಿಯಾಶೀಲ ಚೈತನ್ಯ ಮತ್ತು ದಿನನಿತ್ಯದ ಬದುಕಿನ ನಿಷ್ಕೃಷ್ಟ ಚಿತ್ರಣದಿಂದ ಸೆಳೆಯುತ್ತವೆ. ಸಾಮಾನ್ಯ ನಿರ್ದೇಶಕನ ಕೈಯಲ್ಲಿ ಮೆಲೋಡ್ರಾಮಾ(ಭಾವೋದ್ರೇಕ, ಗೋಳು ಕರೆಯುವಿಕೆ) ಆಗಬಹುದಾದ ಚಿತ್ರಗಳನ್ನು ಉನ್ನತ ಕಲೆಯನ್ನಾಗಿಸುವ ಪ್ರತಿಭೆ ಅವರಲ್ಲಿ ಇತ್ತು. ಹಿನ್ನೆಲೆ ಶಬ್ದ, ಸಂಗೀತ ಮತ್ತು ದೃಶ್ಯತೆಯನ್ನು ಅಸಾಂಪ್ರದಾಯಿಕವಾಗಿ ಬಳಸುತ್ತಿದ್ದರು. ಜನ ನಾಟ್ಯ ಮಂಚ್ ಹಾಗೂ ಇಪ್ಟಾ(ಇಂಡಿಯನ್ ಪೀಪಲ್ಸ್ ಥಿಯೇಟರ್ ಅಸೋಸಿಯೇಷನ್)ದಲ್ಲಿ ಕಲಿತ ರಂಗಭೂಮಿಯ ತಂತ್ರಗಳನ್ನು ಸಿನೆಮಾದಲ್ಲಿ ಬಳಸಿದರು. ಪಠ್ಯಕತೆಯನ್ನು ಆಧರಿಸಿ, ಒಂದು ದೃಶ್ಯ ಇಲ್ಲವೇ ದೃಶ್ಯಾವಳಿಯನ್ನು ವಿಸ್ತರಿಸಲಾಗುತ್ತದೆ. ಆದರೆ, ಘಟಕ್ ಇದನ್ನು ತದ್ವಿರುದ್ಧವಾಗಿ ಮಾಡುತ್ತಿದ್ದರು. ಅಪರಿಚಿತ ಕೋನ, ಮಸೂರ, ನೆರಳು-ಬೆಳಕಿನ ಬಳಕೆ, ಸಂಗೀತದ ಮೂಲಕ ತೀವ್ರತೆ ತರುತ್ತಿದ್ದರು. ಅವರ ಸಿನೆಮಾಗಳಲ್ಲಿ ದೃಶ್ಯತೆಯಷ್ಟೇ ಮುಖ್ಯ ಸ್ಥಾನ ಹಿನ್ನೆಲೆ ಶಬ್ದ-ಸಂಗೀತಕ್ಕೆ ಇದೆ. ಅವುಗಳನ್ನು ನಾಟಕೀಯ ಪರಿಣಾಮಕ್ಕಾಗಿ ಬಳಸುತ್ತಿದ್ದರು. ಹಲವು ಪದರಗಳ ಶಬ್ದಗಳು, ಸಂಗೀತ, ಸಂಭಾಷಣೆಯನ್ನು ಒಳಗೊಂಡ ಸೌಂಡ್ ಟ್ರ್ಯಾಕ್ನಿಂದ ದೃಶ್ಯ ಹಾಗೂ ಸಿನೆಮಾದ ಒಟ್ಟಾರೆ ಪರಿಣಾಮ ಹೆಚ್ಚುತ್ತಿತ್ತು. ಅವರ ಚಿತ್ರಗಳ ಸಂಗೀತ ನಿರ್ದೇಶಕ ಅವರೇ! ರೇ-ಘಟಕ್ ಸಂಬಂಧ ರೇ ಮತ್ತು ಘಟಕ್ ನಡುವೆ ವೈಮನಸ್ಸು ಇತ್ತು; ಸೌಹಾರ್ದ ಸಂಬಂಧ ಇರಲಿಲ್ಲ ಎಂಬ ತಪ್ಪು ಕಲ್ಪನೆ ಬಹಳ ಜನರಲ್ಲಿ ಇದೆ. ಆದರೆ, ಅದು ಸುಳ್ಳು. ಘಟಕ್ 1963ರಲ್ಲಿ ಪುಣೆಯ ಫಿಲಂ ಇನ್ಸ್ಟಿಟ್ಯೂಟ್ಗೆ ಉಪಪ್ರಾಚಾರ್ಯ ಮತ್ತು ಸಿನೆಮಾ ನಿರ್ದೇಶನದ ಪ್ರಾಧ್ಯಾಪಕರಾಗಿ ನೇಮಕಗೊಂಡರು. ಅವರನ್ನು ಫಿಲ್ಮ್ ಇನ್ಸ್ಟಿಟ್ಯೂಟ್ಗೆ ನೇಮಕ ಮಾಡಬೇಕೆಂದು ಆಗಿನ ವಾರ್ತಾ ಮತ್ತು ಪ್ರಚಾರ ಸಚಿವೆ ಇಂದಿರಾ ಗಾಂಧಿ ಅವರಿಗೆ ರೇ ಶಿಫಾರಸು ಮಾಡಿದ್ದರು. ರೇ ಒಮ್ಮೆ ‘‘ಘಟಕ್ ರಕ್ತನಾಳದಲ್ಲೇ ಸಿನೆಮಾ ಹರಿಯುತ್ತಿದೆ’’ ಎಂದು ಶ್ಲಾಘಿಸಿದ್ದರು. ನಿರ್ದಿಷ್ಟ ಸನ್ನಿವೇಶವೊಂದರ ಪರಿಣಾಮವನ್ನು ಹಿನ್ನೆಲೆ ಶಬ್ದ-ಸಂಗೀತ ಹೇಗೆ ವರ್ಧಿಸುತ್ತದೆ ಮತ್ತು ವೀಕ್ಷಕರಿಗೆ ಹೊಸ ಆಯಾಮವನ್ನು ನೀಡುತ್ತದೆ ಎಂಬುದನ್ನು ಹಾಗೂ ಸಿನೆಮಾ ಕಟ್ಟುವಿಕೆ ಕುರಿತ ರಾಜಿಯಾಗದ ಮನೋಭಾವ ಮತ್ತು ಭಾವತೀವ್ರತೆ(ಮೆಲೋಡ್ರಾಮಾ) ಕುರಿತು ವಿದ್ಯಾರ್ಥಿಗಳಿಗೆ ಕಲಿಸಿದರು. ತರಗತಿಯಲ್ಲಿ ಒಮ್ಮೆ ಸತ್ಯಜಿತ್ ರೇ ಅವರ ‘ಅಪರಾಜಿತೊ’ ಪ್ರದರ್ಶನದ ವೇಳೆ ‘‘ಇದು ಒಂದು ಮಹಾನ್ ಚಿತ್ರ’’ ಎಂದು ಶ್ಲಾಘಿಸಿದ್ದರು. ಹೀಗಿದ್ದರೂ, ಇಬ್ಬರ ನಡುವಿನ ಸಂಬಂಧ ಕುರಿತ ತಪ್ಪು ಕಲ್ಪನೆಗಳು ಉಳಿದೇ ಇದ್ದವು. ‘‘ಮೃತ ಘಟಕ್ ಅವರನ್ನು ನೋಡಲು ಆಸ್ಪತ್ರೆಗೆ ಹೋಗಿದ್ದ ನನ್ನನ್ನು ನೋಡಿದ ಕೆಲವರು, ನೀನು ಅವರನ್ನು ಕೊಂದೆ ಎಂದು ದೂಷಿಸಿದರು’’ ಎಂದು ರೇ, ಖ್ಯಾತ ನಿರ್ದೇಶಕ ಆಡೂರ್ ಗೋಪಾಲಕೃಷ್ಣನ್ ಅವರಿಗೆ ಒಮ್ಮೆ ಹೇಳಿದ್ದರು. ಘಟಕ್ ಕುರಿತ ಇನ್ನೊಂದು ತಪ್ಪು ಕಲ್ಪನೆ-ಮದ್ಯಪಾನಕ್ಕೆ ಸಂಬಂಧಿಸಿದೆ. ಆದರೆ, ಒಂದೇ ಒಂದು ದಿನ ಅವರು ತರಗತಿಗೆ ಮದ್ಯ ಸೇವಿಸಿ ಬಂದಿರಲಿಲ್ಲ ಎಂದು ಆಡೂರ್ ಹೇಳುತ್ತಾರೆ. ರೇ, ಸೇನ್ ಮತ್ತು ಘಟಕ್ ಮೂವರೂ ನಗರ ಕುರಿತು ಬೇರೆಯದೇ ಸಂವೇದನೆ ಹೊಂದಿದ್ದಾರೆ. ರೇ ಅವರಿಗೆ ಕೋಲ್ಕತಾ ಸಾಮಾಜಿಕೋ-ರಾಜಕೀಯ ಘಟಕವಾಗಿದ್ದು, ಅಲ್ಲಿ ಮನುಷ್ಯರು ತಮ್ಮ ಪಾತ್ರ ನಿರ್ವಹಿಸುತ್ತಿರುತ್ತಾರೆ; ಸೇನ್ ಅವರಿಗೆ ಕೋಲ್ಕತಾ ಒಂದು ಮಾಂತ್ರಿಕ ಮತ್ತು ನಿಗೂಢ ನಗರ. ಆದರೆ, ಘಟಕ್ ಅವರಿಗೆ ಕೋಲ್ಕತಾ ಒಂದು ಪಾತ್ರ. ನಿರ್ವಸಿತರಿಗೆ ನೆಲೆ ನೀಡಿರುವಂಥದ್ದು; ಮೇಲ್ನೋಟಕ್ಕೆ ಕರುಣೆರಹಿತ ಹಾಗೂ ಕ್ಷೇಮದ ಕಡೆಗೆ ಗಮನವಿಲ್ಲದ ಕಠಿಣನಂತೆ ಕಾಣಿಸಿದರೂ, ಹುದುಗಿದ ಮಾನವೀಯ ಮಿಡಿತಗಳಿರುವ ನಗರ. ಅವರ ಮೊದಲ ಚಿತ್ರ ‘ಬಾರಿ ಥೇಕೆ ಪಾಲಿಯೆ’ಯಲ್ಲಿ ತಂದೆಯನ್ನು ಇಷ್ಟಪಡದ ತುಂಟ ಬಾಲಕನೊಬ್ಬ ಇದ್ದಾನೆ. ಆತ ‘ರಾತ್ರಿ ಕೂಡ ಬೆಳಕು ಇರುವ ನಗರ’ಕ್ಕೆ ಓಡಿಹೋಗುತ್ತಾನೆ. ಸೂರ್ಯ ಮೂಡುತ್ತಿರುವ ಹೌರಾ ಸೇತುವೆ ಮೂಲಕ ಕೋಲ್ಕತಾವನ್ನು ಪರಿಚಯಿಸಲಾಗುತ್ತದೆ. ಇಂದಿಗೂ ನೂರಾರು ಚಿತ್ರಗಳಲ್ಲಿ ಕೋಲ್ಕತಾವನ್ನು ತೋರಿಸುವುದು ಹೀಗೆಯೇ; ಕನಸುಗಳು ನನಸಾಗದೆ ಇದ್ದರೂ, ಬದುಕುಳಿಯುವ ತಾಣದಂತೆ. ಟ್ರಾಮ್ಗಳ ನಾಪತ್ತೆ ಮತ್ತು ಸರ್ವವ್ಯಾಪಿಯಾಗಿರುವ ಮೊಬೈಲ್ ಹೊರತುಪಡಿಸಿದರೆ, 1958ರ ಕೋಲ್ಕತಾ ಹೆಚ್ಚೇನೂ ಬದಲಾಗಿಲ್ಲ; ಸಂಜೆ ವೇಳೆ ಹೌರಾ ಮೇಲೆ ಕಿಕ್ಕಿರಿದ ಜನ, ಹೊರೆ ಹೊತ್ತ ಕಾರ್ಮಿಕರ ನಡಿಗೆ ಮತ್ತು ಓಟದ ನಡುವಿನ ಚಲನೆ, ಚೀಲ ತುಂಬಿದ ಗಾಡಿ ಎಳೆಯುವ ವ್ಯಕ್ತಿ ಇತ್ಯಾದಿ ಬಿಂಬಗಳು ಅಂತೆಯೇ ಇವೆ. ಬಹುಮಹಡಿ ಕಟ್ಟಡಗಳ ಎದುರು ಪೆಟ್ಟಿಗೆ ಅಂಗಡಿಗಳು, ಸಣ್ಣ ವ್ಯಾಪಾರಿಗಳು, ಚಪ್ಪಲಿ-ಕೊಡೆ ರಿಪೇರಿ ಮಾಡುವವರು ಇದ್ದಾರೆ. ಕಾರ್ಮಿಕರು ನಿಂತರೆ ಕೋಲ್ಕತಾ ಸ್ತಬ್ಧವಾಗುತ್ತದೆ. ಜನದಟ್ಟಣೆಯಿಂದ ತುಳುಕುತ್ತಿರುವ ರಸ್ತೆಯಲ್ಲಿರುವ ಪ್ರತಿಯೊಬ್ಬರಲ್ಲೂ ಇನ್ನೊಂದು ಮೇಘೆ ಡಾಕಾ ತಾರಾ ಇಲ್ಲವೇ ಸುಬರ್ಣರೇಖದಂಥ ಕತೆ ಇರಬಹುದು. ಇದು ಕೋಲ್ಕತಾ ಮಾತ್ರವಲ್ಲ; ಎಲ್ಲ ನಗರಗಳಿಗೂ ಅನ್ವಯಿಸುವ ಸಾರ್ವಕಾಲಿಕ ಸತ್ಯ. ಆದರೆ, ಹೌರಾ ಸೇತುವೆಯಡಿ ಸಾಕಷ್ಟು ನೀರು ಹರಿದಿದೆ. ಆಗಿನ ವಲಸಿಗರು ಈಗ ಸಿಟಿ ಆಫ್ ಜಾಯ್ ಭಾಗವಾಗಿದ್ದಾರೆ; ಆದರೆ, ಅವರಲ್ಲಿ ಎಲ್ಲರನ್ನೂ ನಗರ ಒಳಗೊಂಡಿದೆಯೇ? ಪ್ರಾಯಶಃ ಇಲ್ಲ. ಹಿಂದಿ ಸಿನೆಮಾ ಮೇಲೆ ಛಾಯೆ ನವ್ಯ(ಹೊಸ ಅಲೆ, ಆರ್ಟ್ ಹೌಸ್) ಸಿನೆಮಾಗಳು ಯುದ್ಧೋತ್ತರ ಇಟಲಿಯ ನವವಾಸ್ತವವಾದ ಮತ್ತು ಫ್ರೆಂಚ್ ನವ್ಯ ಅಲೆಯಿಂದ ಸ್ಫೂರ್ತಿ ಪಡೆದಿವೆ. ವಾಸ್ತವವಾದಿ ಸಿನೆಮಾದಲ್ಲಿ ಸರಳವಾದ, ರೇಖಾತ್ಮಕವಾದ ದೃಶ್ಯಾವಳಿಗಳ ಸರಣಿ ಇರುತ್ತದೆ. ಘಟಕ್ ಅವರ ವಾಸ್ತವವಾದಿ ಸಿನೆಮಾಗಳಲ್ಲಿಯೂ ಮೆಲೋಡ್ರಾಮಾ ಇರುತ್ತಿತ್ತು. ಎಫ್ಟಿಟಿಐಯಲ್ಲಿ ಶಿಕ್ಷಕರಾಗಿದ್ದರಿಂದ ಮತ್ತು ಭಾವಾತಿರೇಕವನ್ನು ಸಂವಹನಕ್ಕೆ ಬಳಸಿದ್ದರಿಂದ, ಅವರ ಛಾಯೆಯನ್ನು ಹಲವು ನಿರ್ದೇಶಕರಲ್ಲಿ ನೋಡಬಹುದು. ಅಡೂರ್ ಗೋಪಾಲಕೃಷ್ಣನ್, ಮಣಿ ಕೌಲ್, ಕುಮಾರ್ ಶಹಾನಿ, ಸಯೀದ್ ಅಖ್ತರ್ ಮಿರ್ಜಾ ಮಾತ್ರವಲ್ಲದೆ, ಸಂಜಯ್ ಲೀಲಾ ಬನ್ಸಾಲಿ, ವಿಧು ವಿನೋದ್ ಛೋಪ್ರಾ ಅವರ ಪ್ರಭಾವಕ್ಕೆ ಸಿಲುಕಿದವರು. ಪಾಯಲ್ ಕಪಾಡಿಯಾ ಅವರ ಸಾಕ್ಷ್ಯಚಿತ್ರ ‘ಎ ನೈಟ್ ಆಫ್ ನೋಯಿಂಗ್ ನಥಿಂಗ್’ನಲ್ಲಿ ಎಫ್ಟಿಟಿಐಯಲ್ಲಿರುವ ಘಟಕ್ ಅವರ ಮ್ಯೂರಲ್ ಇದೆ. ಘಟಕ್ ತಮ್ಮ ಚಿತ್ರಗಳಲ್ಲಿ ಶಬ್ದವನ್ನು ಮನಶಾಸ್ತ್ರೀಯ ತಂತ್ರವಾಗಿ ಬಳಸುತ್ತಿದ್ದರು. ಮೇಘೆ ಡಾಕಾ ತಾರಾದಲ್ಲಿ ನಾಯಕಿ ನೀತಾ(ಸುಪ್ರಿಯಾ ಚೌಧುರಿ) ಕೃತಘ್ನ ಕುಟುಂಬದ ಜವಾಬ್ದಾರಿ ಹೊರಲು ವಿದ್ಯಾಭ್ಯಾಸ ನಿಲ್ಲಿಸುತ್ತಾಳೆ; ಸ್ನೇಹಿತ ಅವಳನ್ನು ತೊರೆದು, ಆಕೆಯ ತಂಗಿಯನ್ನು ವಿವಾಹವಾಗುತ್ತಾನೆ; ಅಷ್ಟಲ್ಲದೆ, ಕ್ಷಯಕ್ಕೆ ತುತ್ತಾಗುತ್ತಾಳೆ! ಅವಳ ನೋವನ್ನು ತೋರಿಸಲು ಘಟಕ್, ಚಾಟಿ ಶಬ್ದವನ್ನು ಬಳಸುತ್ತಾರೆ. ಸ್ನೇಹಿತನ ಅಪಾರ್ಟ್ಮೆಂಟಿನಲ್ಲಿ ಬೇರೆ ಹುಡುಗಿ ಇರುವುದನ್ನು ಗ್ರಹಿಸಿ, ಮೆಟ್ಟಿಲಿನಿಂದ ಇಳಿಯುವಾಗ ಚಾಟಿ ಸದ್ದು ಕೇಳಿಬರುತ್ತದೆ. ತಂಗಿಯ ವಿವಾಹದಲ್ಲಿ ಹಾಡಲು ಅಭ್ಯಾಸ ಮಾಡುತ್ತಿರುವಾಗ ಕುಸಿಯುತ್ತಾಳೆ. ಆಗ ಪದೇಪದೇ ಚಾಟಿ ಸದ್ದು ಅನುರಣಿಸುತ್ತದೆ. ಸುಬರ್ಣರೇಖಾ ಚಿತ್ರದ ನಾಯಕಿ ಸೀತಾ(ಮಾಧಬಿ ಮುಖರ್ಜಿ), ಸಹೋದರ ಈಶ್ವರನಿಂದ ಬೇರೆಯಾಗುತ್ತಾಳೆ; ದುರಂತವೊಂದರಲ್ಲಿ ಪತಿಯನ್ನು ಕಳೆದುಕೊಳ್ಳುತ್ತಾಳೆ ಮತ್ತು ಬದುಕಲು ವೇಶ್ಯಾವೃತ್ತಿಯನ್ನು ಅವಲಂಬಿಸುತ್ತಾಳೆ; ಆಕಸ್ಮಿಕವೋ ಎಂಬಂತೆ ಆಕೆಯ ಮೊದಲ ಗಿರಾಕಿಯೇ ಸೋದರ! ಇಂಥ ನಾಟಕೀಯ-ಭಾವನಾತ್ಮಕ ದೃಶ್ಯಗಳು ಬಾಲಿವುಡ್ನಲ್ಲಿ ದಂಡಿಯಾಗಿರುತ್ತವೆ. ಬನ್ಸಾಲಿ ಅವರ ದೇವದಾಸ್ ಚಿತ್ರದಲ್ಲಿ ನಾಯಕ ತಂದೆಯನ್ನು ಧಿಕ್ಕರಿಸಿ, ಮನೆ ಬಿಟ್ಟು ಹೊರಟಾಗ ಇಂಥದ್ದೇ ಸದ್ದು ಕೇಳಿಬರುತ್ತದೆ. ಮೇಘೆ ಡಾಕಾ ತಾರಾ, ಸುಬರ್ಣರೇಖಾ, ತಿತಾಶ್ ಏಕ್ತಿ ನದಿರ್ ನಾಮ್ ಚಿತ್ರಗಳಲ್ಲಿ ನಾಯಕ/ನಾಯಕಿ ಸಾಯುತ್ತಾರೆ, ಇಲ್ಲವೇ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಇದನ್ನು ಬನ್ಸಾಲಿ ಅವರ ಚಿತ್ರಗಳಲ್ಲೂ ಕಾಣಬಹುದು. ಜೊತೆಗೆ, ಪಾತ್ರಗಳಲ್ಲಿ ಹುಚ್ಚುತನದ ಎಳೆಗಳು ಇರುತ್ತವೆ- ಗೆಳತಿ ಪಾರೋಳನ್ನು ತಂದೆ ಅವಮಾನಿಸಿದ್ದರಿಂದ, ಮದ್ಯ ಸೇವಿಸಿ ಸಾಯುವ ದೇವದಾಸ್(ಶಾರುಕ್ ಖಾನ್) ಇಲ್ಲವೇ ಮೃತ ತಂದೆಯೊಂದಿಗೆ ಮಾತಾಡುವ ಸಮೀರ್(ಸಲ್ಮಾನ್ ಖಾನ್, ಹಮ್ ದಿಲ್ ಚುಕೆ ಸನಂ) ಅಥವಾ ಪತ್ನಿ ಮಸ್ತಾನಿಯನ್ನು ತಾಯಿ ಮತ್ತು ಹಿರಿಯ ಮಗ ನಾನಾ ಸಾಹೇಬ್ ಸೆರೆಯಲ್ಲಿಟ್ಟಿದ್ದಾರೆ; ಅವರ ವಿರುದ್ಧ ಹೋರಾಡುತ್ತಿದ್ದೇನೆ ಎಂದು ಭ್ರಮಿಸುತ್ತ ಸಾಯುವ ಒಂದನೇ ಬಾಜಿರಾಯ(ರಣವೀರ್ ಕಪೂರ್) ಇವರೆಲ್ಲರೂ ಚಂಚಲ-ದುರ್ಬಲ ಮನಸ್ಥಿತಿಯವರು. ಜೊತೆಗೆ, ಘಟಕ್ ಬಾಲಿವುಡ್ನಲ್ಲಿ ಸಾಕಷ್ಟು ಬಳಕೆಯಾಗಿರುವ ಪುನರ್ಜನ್ಮ ಕಲ್ಪನೆಯನ್ನು ಬಿಮಲ್ ರಾಯ್ ಅವರ ‘ಮಧುಮತಿ’ ಸಿನೆಮಾದ ಚಿತ್ರಕತೆಯಲ್ಲಿ ಅಳವಡಿಸಿದ್ದರು. ಈ ಸಿನೆಮಾದ ನೆರಳು ಸುಭಾಷ್ ಘಾಯ್ ಅವರ ಕರ್ಜ್(1980) ಮತ್ತು ಫರಾ ಖಾನ್ ಅವರ ಓ ಶಾಂತಿ ಓಂ(2007)ರಲ್ಲಿ ಇದೆ. ಬಾಲ್ಯ ಸ್ನೇಹಿತರು ಆನಂತರ ಪ್ರೇಮಿಗಳಾಗುವುದು ಇನ್ನೊಂದು ಥೀಮ್; ಸುಬರ್ಣರೇಖಾದಲ್ಲಿ ಸೀತಾ ಮತ್ತು ಅಭಿರಾಂ ಬಾಲ್ಯ ಸ್ನೇಹಿತರಾಗಿದ್ದು, ದೊಡ್ಡವರಾದ ಬಳಿಕ ಪ್ರೀತಿಸುತ್ತಾರೆ. ಮೇಘೆ ಡಾಕಾ ತಾರಾದಲ್ಲಿ ಸೀತಾ, ಶಿಕ್ಷಕ ತಂದೆಯ ವಿದ್ಯಾರ್ಥಿಯಾಗಿದ್ದ ಸನತ್ನ ಗೆಳೆತನ ಮಾಡುತ್ತಾಳೆ. ಇದನ್ನು ವಿಧು ವಿನೋದ್ ಛೋಪ್ರಾ ಅನುಸರಿಸಿದ್ದಾರೆ. ಪರಿಂದಾದಲ್ಲಿ ಕರಣ್(ಅನಿಲ್ ಕಪೂರ್) ಮತ್ತು ಪಾರೋ(ಮಾಧುರಿ ದೀಕ್ಷಿತ್) ಹಾಗೂ ಮಿಷನ್ ಕಾಶ್ಮೀರ್ನಲ್ಲಿ ಅಲ್ತಾಫ್(ಹೃತಿಕ್ ರೋಷನ್) ಮತ್ತು ಸೂಫಿಯಾ (ಪ್ರೀತಿ ಜಿಂಟಾ) ಬಾಲ್ಯ ಸ್ನೇಹಿತರು. ಬದುಕಿದ್ದಾಗ ಸಿಗದ ಗೌರವ ಜೀವಿತಾವಧಿಯಲ್ಲಿ ಅವರ ಸಿನೆಮಾಗಳು ಯಾವುದೇ ಅಂತರ್ರಾಷ್ಟ್ರೀಯ ಚಿತ್ರೋತ್ಸವದಲ್ಲಿ ಪ್ರದರ್ಶನಗೊಳ್ಳಲಿಲ್ಲ ಮತ್ತು ಅವರು ವಿದೇಶ ಪ್ರವಾಸ ಮಾಡಲಿಲ್ಲ. ಚಿತ್ರ ವಿಮರ್ಶಕಿ ಅಲಕಾ ಸಹಾನಿ ತಮ್ಮ ಲೇಖನ ‘ಎ ರಿವರ್ ನೇಮ್ಡ್ ರಿತ್ವಿಕ್’(ಇಂಡಿಯನ್ ಎಕ್ಸ್ ಪ್ರೆಸ್ನಲ್ಲಿ ಪ್ರಕಟಿತ)ದಲ್ಲಿ ರಿತ್ವಿಕ್ ಸಾವಿಗೆ ಕೆಲ ದಿನಗಳ ಮುನ್ನ ಮಗಳು ಸಂಹಿತಾಗೆ ‘ಸಾವಿನ ಬಳಿಕ ನನ್ನ ಚಿತ್ರಗಳನ್ನು ಶ್ಲಾಘಿಸುತ್ತಾರೆ ಎಂದು ಸಮಾಧಾನ ಪಡಿಸಿದ್ದರು’ ಎಂದಿದ್ದಾರೆ. ಮರಣಾನಂತರ ಸಾಲುಸಾಲು ಚಿತ್ರೋತ್ಸವಗಳಲ್ಲಿ ಅವರ ಚಿತ್ರಗಳ ರೆಟ್ರಾ ಸ್ಪೆಕ್ಟಿವ್ಗಳು ನಡೆದವು. ಈ ಜೀವನದಲ್ಲಿ ನ್ಯಾಯ ಪಡೆಯುವುದು ಕಷ್ಟ ಎಂದು ತಮ್ಮ ಕೃತಿಗಳ ಮೂಲಕ ಹೇಳಿದ್ದ ಘಟಕ್, ಸಾವಿನ ನಂತರ ತಮ್ಮನ್ನು ಜನ ಶ್ಲಾಘಿಸುತ್ತಾರೆ ಎಂದು ಸರಿಯಾಗಿಯೇ ಊಹಿಸಿದ್ದರು. ನಾನು ಅವರ ಬಹುತೇಕ ಸಿನೆಮಾಗಳನ್ನು ನೋಡಿದ್ದು ಬೆಂಗಳೂರಿನ ಬದಾಮಿ ಹೌಸ್ನಲ್ಲಿ(ಜಾರ್ಜ್ ಓಕ್ಸ್ ಕಟ್ಟಡ); ಅದೀಗ ಇತಿಹಾಸ ಸೇರಿದೆ. ಆದರೆ, ಜಗತ್ತಿನಲ್ಲಿ ಸಿನೆಮಾಗಳು ಇರುವವರೆಗೆ ಘಟಕ್ ಚಿರಸ್ಥಾಯಿಯಾಗಿರುತ್ತಾರೆ ಮತ್ತು ಅವರ ಚಿತ್ರಗಳು ಬಡವರು-ವಲಸಿಗರ ಕಣ್ಣೀರು ಒರೆಸುತ್ತಲೇ ಇರುತ್ತವೆ. ಪ್ರೊಪಗಾಂಡಾ ಸಿನೆಮಾಗಳು ಕಸದ ಬುಟ್ಟಿ ಸೇರುತ್ತವೆ!
ಸಾವಿನ ಅಂಚಿಗೆ ಜಾರಿದ ಸಾವಿರಾರು ಅಡಕೆ ಮರಗಳು; ಬೆಳೆಗಾರರ ಸ್ಥಿತಿ ಸಂಕಷ್ಟದಲ್ಲಿ
ತೀರ್ಥಹಳ್ಳಿಯ ಪ್ರಸಿದ್ಧ ದೇಶಾವರಿ ಅಡಕೆಗೆ ಎಲೆಚುಕ್ಕಿ ರೋಗ ಆವರಿಸಿದ್ದು, ಇಳುವರಿ ಕುಸಿತದಿಂದ ರೈತರ ಆರ್ಥಿಕತೆ ತೀವ್ರ ಸಂಕಷ್ಟಕ್ಕೆ ಸಿಲುಕಿದೆ. ಹಲವು ವರ್ಷಗಳಿಂದ ಕಾಡುತ್ತಿರುವ ಈ ರೋಗಕ್ಕೆ ಪರಿಹಾರ ಸಿಗದೆ, ಮರಗಳು ನಾಶವಾಗುತ್ತಿವೆ. ಸರ್ಕಾರದಿಂದ ಸೂಕ್ತ ಸ್ಪಂದನೆ ಹಾಗೂ ಸಂಶೋಧನೆಗೆ ಪ್ರೋತ್ಸಾಹದ ಕೊರತೆ ಎದ್ದು ಕಾಣುತ್ತಿದೆ. ಇದರಿಂದಾಗಿ ಜನಜೀವನ ಅಸ್ತವ್ಯಸ್ತವಾಗುವ ಭೀತಿ ಎದುರಾಗಿದೆ.
ಟೊರಾಂಟೊ ವಿಶ್ವವಿದ್ಯಾಲಯದ ಬಳಿ 20 ವರ್ಷದ ಭಾರತೀಯ ಡಾಕ್ಟರೇಟ್ ವಿದ್ಯಾರ್ಥಿ ಶಿವಾಂಕ್ ಅವಸ್ಥಿ ಗುಂಡೇಟಿಗೆ ಬಲಿಯಾಗಿದ್ದಾರೆ. ಈ ವರ್ಷ ಟೊರಾಂಟೊದಲ್ಲಿ ಇದು 41ನೇ ಗುಂಡೇಟಿನ ಪ್ರಕರಣವಾಗಿದೆ. ಆರೋಪಿ ಪರಾರಿಯಾಗಿದ್ದು, ಪೊಲೀಸರು ಶೋಧ ನಡೆಸುತ್ತಿದ್ದಾರೆ. ಭಾರತೀಯ ರಾಯಭಾರ ಕಚೇರಿ ತೀವ್ರ ಸಂತಾಪ ಸೂಚಿಸಿದ್ದು, ಕುಟುಂಬಕ್ಕೆ ನೆರವು ಒದಗಿಸುತ್ತಿದೆ. ಈ ಹಿಂದೆ ಕಳೆದ ವಾರವಷ್ಟೇ, 30 ವರ್ಷದ ಹಿಮಾಂಶಿ ಖುರನಾ ಎಂಬ ಭಾರತೀಯ ಮಹಿಳೆಯೊಬ್ಬರು ಗುಂಡೇಟಿಗೆ ಬಲಿಯಾಗಿದ್ದರು.ಘಟನೆ ಮಾಸುವ ಮುನ್ನವೇ ಮತ್ತೊಂದು ಪ್ರಕರಣ ನಡೆದಿದ್ದು, ಹೀಗೆ ದಿನದಿಂದ ದಿನಕ್ಕೆ ಕೆನಡಾದಲ್ಲಿ ಭಾರತೀಯರ ಮೇಲಿನ ಹಿಂಸಾಚಾರ ಹೆಚ್ಚುತ್ತಿರುವುದು ಆತಂಕ ಮೂಡಿಸಿದೆ.
CM vs DCM: ಸಿಎಂ ಬದಲಾವಣೆ ಚರ್ಚೆ ನಡುವೆ ಡಿ.ಕೆ ಸುರೇಶ್ ಮಾರ್ಮಿಕ ಪೋಸ್ಟ್ ವೈರಲ್
ಬೆಂಗಳೂರು: 2023ರ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಸ್ಪಷ್ಟ ಬಹುತದೊಂದಿಗೆ ಅಧಿಕಾರಕ್ಕೆ ಬಂದ ದಿನವೇ ಸಿಎಂ ಸ್ಥಾನಕ್ಕಾಗಿ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ನಡುವೆ ಬಿಗ್ ಫೈಟ್ ಏರ್ಪಟ್ಟಿತ್ತು. ಅಂತಿಮವಾಗಿ ಸಿಎಂ ಪಟ್ಟ ಸಿದ್ದರಾಮಯ್ಯ ಪಾಲಾಯಿತು. ಸದ್ಯ ಸರ್ಕಾರ ಎರಡವರೆ ವರ್ಷ ಪೂರೈಸಿದ್ದು, ಮುಖ್ಯಮಂತ್ರಿ ಸ್ಥಾನಕ್ಕಾಗಿ ಮತ್ತೆ ಡಿಸಿಎಂ ಡಿ ಕೆ ಶಿವಕುಮಾರ್ ಭರ್ಜರಿ ಪೈಪೋಟಿ
IMD Weather: ಈ ಭಾಗಗಳಲ್ಲಿ ನಾಳೆಯಿಂದ ಗುಡುಗು ಸಹಿತ ಮಳೆ ಸಾಧ್ಯತೆ, ಚಳಿಯೂ ಹೆಚ್ಚು
ಡಿಸೆಂಬರ್ 27ರಿಂದ 31ರವರೆಗೆ ಜಮ್ಮು-ಕಾಶ್ಮೀರ-ಲಡಾಖ್-ಗಿಲ್ಗಿಟ್-ಬಾಲ್ಟಿಸ್ತಾನ್-ಮುಜಫರಾಬಾದ್ನಲ್ಲಿ ಚದುರಿದಂತೆ ಮಳೆ, ಹಿಮಪಾತವಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ಇದೇ ಅವಧಿಯಲ್ಲಿ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಬಿರುಗಾಳಿಯ ವೇಗ 30-40 ಕಿಮೀನೊಂದಿಗೆ ಗುಡುಗು ಸಹಿತ ಮಳೆ ಮತ್ತು ಮಿಂಚು ಬೀಳುವ ಸಾಧ್ಯತೆ ಇದೆ ಎಂದು ಹೇಳಿದೆ. ತೆಲಂಗಾಣದ ಹಲವು ಭಾಗಗಳು, ದಕ್ಷಿಣ ಒಳನಾಡು ಕರ್ನಾಟಕ, ಉತ್ತರ
ನಾಲಗೆಯಿದ್ದೂ ಮಾತನಾಡಲಾಗದ ಮೂಗ ವರ್ಷವೆಂದು ೨೦೨೫ ಗುರುತಿಸಲ್ಪಡುತ್ತಿದೆ. ಈ ಹಿಂದಿಗಿಂತ ಅತಿ ಹೆಚ್ಚು ವಾಕ್ ಸ್ವಾತಂತ್ರ್ಯ ಅಥವಾ ಅಭಿವ್ಯಕ್ತಿ ಸ್ವಾತಂತ್ರ್ಯದ ಉಲ್ಲಂಘನೆಯಾಗಿರುವ ವರ್ಷ ಇದು ಎಂದು ಫ್ರೀ ಸ್ಪೀಚ್ ಕಲೆಕ್ಟಿವಲ್ ತನ್ನ ವರದಿಯಲ್ಲಿ ತಿಳಿಸಿದೆ. ೨೦೨೫ರಲ್ಲಿ ವಾಕ್ ಸ್ವಾತಂತ್ರ್ಯದ ಉಲ್ಲಂಘನೆಯ ಸುಮಾರು ೧೪,೮೭೫ ಪ್ರಕರಣಗಳು ದಾಖಲಾಗಿವೆ. ಎಲ್ಲಕ್ಕಿಂತ ಮುಖ್ಯವಾಗಿ ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕನ್ನು ಎತ್ತಿ ಹಿಡಿದ ಕಾರಣಕ್ಕಾಗಿಯೇ ಈ ದೇಶದಲ್ಲಿ ಎಂಟು ಪತ್ರಕರ್ತರು ಮತ್ತು ಒಬ್ಬ ಸಾಮಾಜಿಕ ಮಾಧ್ಯಮ ವ್ಯಕ್ತಿಯ ಹತ್ಯೆಗಳಾಗಿವೆ ಎಂದು ಫ್ರೀ ಸ್ಪೀಚ್ ಕಲೆಕ್ಟಿವ್ ಮಂಗಳವಾರ ಬಿಡುಗಡೆ ಮಾಡಿದ ತನ್ನ ವರದಿಯನ್ನು ವಿವರಿಸಿದೆ. ವಾಕ್ ಸ್ವಾತಂತ್ರ್ಯದ ಪ್ರಕರಣಗಳಲ್ಲಿ ಸೆನ್ಸರ್ಶಿಪ್, ನ್ಯಾಯಾಂಗ ನಿಷೇಧ ಆದೇಶಗಳು, ಶೈಕ್ಷಣಿಕ ಸ್ವಾತಂತ್ರ್ಯದ ನಿಯಂತ್ರಣ, ಚಲನಚಿತ್ರ ಪ್ರಮಾಣೀಕರಣಕ್ಕೆ ಸಂಬಂಧಿಸಿದ ನಿರ್ಬಂಧಗಳೂ ಸೇರಿವೆ. ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಎತ್ತಿ ಹಿಡಿದ ಕಾರಣಕ್ಕಾಗಿ ೧೧೭ ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಎಲ್ಲಕ್ಕಿಂತ ಮುಖ್ಯವಾಗಿ ಅಭಿವ್ಯಕ್ತಿ ಸ್ವಾತಂತ್ರ್ಯ ಉಲ್ಲಂಘನೆಗೆ ಸಂಬಂಧಿಸಿದ ೪೦ ದಾಳಿಗಳಲ್ಲಿ ೩೩ ಪತ್ರಕರ್ತರನ್ನು ಗುರಿಯಾಗಿಸಲಾಗಿದೆ. ೧೯ ಪ್ರಕರಣಗಳಲ್ಲಿ ೧೪ ಪತ್ರಕರ್ತರಿಗೆ ಮಾನಸಿಕ ದೈಹಿಕ ಕಿರುಕುಳವನ್ನು ನೀಡಲಾಗಿದೆ. ಪತ್ರಕರ್ತರು ತಮ್ಮ ಕೆಲಸದ ಸಮಯದಲ್ಲಿ ಬೆದರಿಕೆಗಳನ್ನು ಸ್ವೀಕರಿಸಿದ ೧೨ ಪ್ರಕರಣಗಳು ದಾಖಲಾಗಿವೆ. ಎಂಟು ಪತ್ರಕರ್ತರನ್ನು ಹತ್ಯೆ ಮಾಡಲಾಗಿದ್ದು ಅವರಲ್ಲಿ ಇಬ್ಬರು ಉತ್ತರ ಪ್ರದೇಶ ರಾಜ್ಯಕ್ಕೆ ಸೇರಿದವರು. ಅಂಡಮಾನ್-ನಿಕೋಬಾರ್, ಛತ್ತೀಸ್ಗಡ, ಹರ್ಯಾಣ, ಕರ್ನಾಟಕ, ಒಡಿಶಾ ಹಾಗೂ ಉತ್ತರಾಖಂಡದಲ್ಲಿ ತಲಾ ಒಬ್ಬರನ್ನು ಹತ್ಯೆಗೈಯಲಾಗಿದೆ. ಪಂಜಾಬ್ನಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ಬರೆದ ಕಾರಣಕ್ಕಾಗಿ ವ್ಯಕ್ತಿಯನ್ನು ಕೊಂದು ಹಾಕಲಾಗಿದೆ. ಕಾಶ್ಮೀರ ಸೇರಿದಂತೆ ಈಶಾನ್ಯ ಭಾರತದ ಪತ್ರಕರ್ತರು ಬಾಯಿ ತೆರೆದರೆ ಅವರನ್ನು ಯುಎಪಿಎ ಕಾಯ್ದೆಯಲ್ಲಿ, ದೇಶದ್ರೋಹಿಗಳೆಂಬಂತೆ ಬಿಂಬಿಸಿ ಸುಲಭದಲ್ಲಿ ಬಂಧಿಸಲಾಗುತ್ತದೆ. ತಮ್ಮ ನಿರಪರಾಧಿತ್ವವನ್ನು ಸಾಬೀತು ಮಾಡುವುದು ಅವರ ಪಾಲಿಗೆ ದುಸ್ಸಾಧ್ಯ ಎನ್ನುವಂತಹ ಸ್ಥಿತಿ ನಿರ್ಮಾಣವಾಗಿದೆ. ವಾಕ್ ಸ್ವಾತಂತ್ರ್ಯದ ಉಲ್ಲಂಘನೆಯ ಹೆಸರಿನಲ್ಲಿ ಗುಜರಾತ್ನಲ್ಲಿ ಅತ್ಯಧಿಕ ೧೦೮ ಪ್ರಕರಣಗಳು ದಾಖಲಾಗಿದ್ದರೆ, ಉತ್ತರ ಪ್ರದೇಶದಲ್ಲಿ ೮೩ ಹಾಗೂ ಕೇರಳದಲ್ಲಿ ೭೮ ವಾಕ್ ಸ್ವಾತಂತ್ರ್ಯ ಉಲ್ಲಂಘನೆಯ ಪ್ರಕರಣಗಳು ದಾಖಲಾಗಿವೆ ಎಂದು ವರದಿಗಳು ಹೇಳುತ್ತಿವೆ. ವಾಕ್ ಸ್ವಾತಂತ್ರ್ಯದ ನೇರ ಬಲಿಪಶುಗಳು ಪತ್ರಕರ್ತರಾಗಿದ್ದಾರೆ. ಇತ್ತೀಚಿನ ದಿನಗಳಲ್ಲಿ ಪತ್ರಕರ್ತರ ಧ್ವನಿ ಕ್ಷೀಣವಾಗುತ್ತಿದೆ. ಬೃಹತ್ ಮಾಧ್ಯಮಗಳು ಕಾರ್ಪೊರೇಟ್ ತೆಕ್ಕೆಗೆ ಬೀಳುತ್ತಿರುವ ಸಂದರ್ಭದಲ್ಲಿ ಪ್ರಭುತ್ವದ ವಿರುದ್ಧ ಕಟುವಾಗಿ ಮಾತನಾಡುವ ಪತ್ರಕರ್ತರು ಅಲ್ಲಿಂದ ಬಲವಂತವಾಗಿ ಹೊರದಬ್ಬಲ್ಪಡುತ್ತಿದ್ದಾರೆ ಅಥವಾ ಅನಿವಾರ್ಯವಾಗಿ ಅಲ್ಲಿಂದ ತೆರಳುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಸಾಮಾಜಿಕ ಮಾಧ್ಯಮಗಳು ಪರ್ಯಾಯ ಮಾಧ್ಯಮಗಳೆಂದು ಗುರುತಿಸಲ್ಪಡುತ್ತಿವೆಯಾದರೂ, ಅವುಗಳು ಪೂರ್ಣ ಪ್ರಮಾಣದಲ್ಲಿ ಸ್ವತಂತ್ರ ಪತ್ರಕರ್ತರ ಧ್ವನಿಯಾಗಲು ವಿಫಲವಾಗುತ್ತಿವೆ. ಅವುಗಳೂ ಪರೋಕ್ಷವಾಗಿ ಹಿತಾಸಕ್ತಿಗಳ ಸೂತ್ರಕ್ಕೆ ತಕ್ಕಂತೆ ಕುಣಿಯುತ್ತಿವೆ. ಪ್ರಭುತ್ವದ ವಿರುದ್ಧ ಮಾತನಾಡುವ ಪತ್ರಕರ್ತ ವರ್ಷದಿಂದ ವರ್ಷಕ್ಕೆ ಒಂಟಿಯಾಗುತ್ತಿದ್ದಾನೆ. ಆತನನ್ನು ಬಲಿಪಶುವನ್ನಾಗಿಸುವುದು ವ್ಯವಸ್ಥೆಗೆ ಸುಲಭವಾಗುತ್ತಿದೆ. ಇದೇ ಸಂದರ್ಭದಲ್ಲಿ ಮಾಹಿತಿ ಹಕ್ಕು ಕಾಯ್ದೆಯನ್ನು ಸರಕಾರ ದುರ್ಬಲಗೊಳಿಸಿದೆ. ಮಾಹಿತಿ ಹಕ್ಕು ಕಾರ್ಯಕರ್ತರು ಕೂಡ ಜೀವವನ್ನು ಒತ್ತೆಯಿಟ್ಟು ಕೆಲಸ ಮಾಡುವ ಸ್ಥಿತಿ ನಿರ್ಮಾಣವಾಗಿದೆ. ಇತ್ತೀಚೆಗೆ ರಾಜ್ಯದ ಅಧಿವೇಶನದಲ್ಲಿ ಮಾಹಿತಿ ಹಕ್ಕು ಕಾರ್ಯಕರ್ತರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಶಾಸಕರು ಪಕ್ಷಭೇದ ಮರೆತು ಒತ್ತಾಯ ಮಾಡಿದ ಘಟನೆ ನಡೆದಿತ್ತು. ಇದೇ ಸಂದರ್ಭದಲ್ಲಿ ಸಾಮಾಜಿಕ ಹೋರಾಟಗಾರರು, ಕಾರ್ಯಕರ್ತರು ಜಾತೀಯತೆ, ಅಸ್ಪಶ್ಯತೆ, ಕೋಮುವಾದ ಇವುಗಳ ಬಗ್ಗೆ ಮಾತನಾಡಿದರೆ ಅವರನ್ನು ಬಾಯಿ ಮುಚ್ಚಿಸುವ ಕೆಲಸ ಪರಿಣಾಮಕಾರಿಯಾಗಿ ನಡೆಯುತ್ತಿದೆ. ಕಾಂಗ್ರೆಸ್ ಮುಖಂಡ ರಾಹುಲ್ಗಾಂಧಿಯವರ ಮೇಲೆಯೇ ಹಲವು ಪ್ರಕರಣಗಳನ್ನು ದಾಖಲಿಸಲಾಗಿದೆ. ಇನ್ನು ಸಾಮಾನ್ಯರ ಸ್ಥಿತಿಯೇನಾಗಬೇಕು? ಆತಂಕಕಾರಿ ಅಂಶವೆಂದರೆ, ಒಂದೆಡೆ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ದಮನ ಮಾಡಲಾಗುತ್ತಿದೆಯಾದರೆ ಇನ್ನೊಂದೆಡೆ ದ್ವೇಷ ಭಾಷಣವನ್ನು, ಕೋಮುವಾದಿ ಹೇಳಿಕೆಗಳನ್ನು ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಸಮರ್ಥಿಸಲಾಗುತ್ತಿದೆ. ಸಂವಿಧಾನ ವಿರೋಧಿ ಶಕ್ತಿಗಳನ್ನು ಖಂಡಿಸಿದರೆ, ಮನುವಾದಿ, ಕೋಮುವಾದಿ ಶಕ್ತಿಗಳನ್ನು ಟೀಕಿಸಿದರೆ ಅವರ ವಿರುದ್ಧ ಅವಸರದಿಂದ ಕ್ರಮ ತೆಗೆದುಕೊಳ್ಳುವ ಕಾನೂನು ವ್ಯವಸ್ಥೆ, ಸಮಾಜವನ್ನು ಒಡೆಯುವ, ಕೋಮು ಉದ್ವಿಗ್ನತೆಯನ್ನು ಸೃಷ್ಟಿಸುವ ಭಾಷಣಗಳಿಗೆ ಕಿವುಡನಂತೆ ನಟಿಸುತ್ತಿದೆ. ಇತ್ತೀಚೆಗೆ ರಾಜ್ಯ ಸರಕಾರ ದ್ವೇಷ ಭಾಷಣಗಳ ವಿರುದ್ಧ ಕಠಿಣ ಕಾನೂನೊಂದನ್ನು ಜಾರಿಗೊಳಿಸಿದೆ. ಆದರೆ ಈ ಕಾನೂನನ್ನು ಬಿಜೆಪಿ ಮತ್ತು ಸಂಘಪರಿವಾರ ಅಭಿವ್ಯಕ್ತಿ ಸ್ವಾತಂತ್ರ್ಯದ ದಮನ ಎಂದು ಬಿಂಬಿಸಲು ಮುಂದಾಗಿದೆ. ವಾಕ್ ಸ್ವಾತಂತ್ರ್ಯದ ಮೇಲೆ ನಡೆಯುತ್ತಿರುವ ದಾಳಿಯಿದು ಎಂದು ವಾದಿಸುತ್ತಿದೆ. ‘ನಾಳೆ ನಾವು ಅಧಿಕಾರಕ್ಕೆ ಬಂದರೆ ಇದೇ ಕಾನೂನನ್ನು ನಿಮ್ಮ ವಿರುದ್ಧ ಬಳಸುತ್ತೇವೆ’ ಎಂದು ಬೆದರಿಸುತ್ತಿದೆ. ಇದು ಅಸಾಧ್ಯವೇನೂ ಅಲ್ಲ. ಈಗಾಗಲೇ ಇರುವ ಕಠಿಣ ಕಾನೂನುಗಳನ್ನು ಕೇಂದ್ರ ಸರಕಾರ ಸಂವಿಧಾನಪರ, ಜನಪರ ಹೋರಾಟಗಾರರ ವಿರುದ್ಧ ಬಳಸುವಲ್ಲಿ ಯಶಸ್ವಿಯಾಗಿದೆ. ಆ ಕಾರಣದಿಂದಲೇ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಎತ್ತಿ ಹಿಡಿದ ನೂರಾರು ಕಾರ್ಯಕರ್ತರು ಜೈಲಿನಲ್ಲಿ ಕಂಬಿ ಎಣಿಸುತ್ತಿದ್ದಾರೆ. ಯಾವುದು ದ್ವೇಷ ಭಾಷಣ, ಯಾವುದು ಅಲ್ಲ ಎನ್ನುವುದನ್ನು ನಿರ್ಧರಿಸುವುದು ಕಾನೂನು ವ್ಯವಸ್ಥೆ. ಆ ಕಾನೂನು ವ್ಯವಸ್ಥೆ ಸಂವಿಧಾನದ ಪರವಾಗಿರುವವರ ನಿಯಂತ್ರಣದಲ್ಲಿದ್ದರೆ ವಾಕ್ ಸ್ವಾತಂತ್ರ್ಯವನ್ನು ದುರಪಯೋಗಪಡಿಸಿ, ಸಮಾಜವನ್ನು ವಿಭಜಿಸುವವರ ಮೇಲೆ ಕ್ರಮ ತೆಗೆದುಕೊಳ್ಳಬಹುದು. ಇಲ್ಲವಾದರೆ, ಸಂವಿಧಾನದ ಪರವಾಗಿ, ಜನಪರವಾಗಿ, ಜಾತ್ಯತೀತತೆಯ ಪರವಾಗಿ ಮಾತನಾಡುವುದೇ ಅಪರಾಧವಾಗಿ ದ್ವೇಷ ಭಾಷಣ ಕಾಯ್ದೆಯನ್ನು ಜನಪರ ಹೋರಾಟಗಾರರ ವಿರುದ್ಧವೇ ಬಳಸಬಹುದು. ರಾಜ್ಯ ಜಾರಿಗೆ ತಂದಿರುವ ದ್ವೇಷ ಭಾಷಣ ವಿರೋಧಿ ಕಾಯ್ದೆ ಭವಿಷ್ಯದಲ್ಲಿ ದುರುಪಯೋಗವಾಗುವ ಎಲ್ಲ ಸಾಧ್ಯತೆಗಳು ಇವೆ ಎಂದು ಜನಪರ ಹೋರಾಟಗಾರರು, ಮಾಧ್ಯಮಗಳು ಆತಂಕ ಪಡುತ್ತಿರುವುದು ಈ ಕಾರಣಕ್ಕೆ. ಈ ಕಾರಣದಿಂದಲೇ ೨೦೨೬ ವಾಕ್ ಸ್ವಾತಂತ್ರ್ಯದ ಪಾಲಿಗೆ ಇನ್ನಷ್ಟು ದುರ್ಗಮ ವರ್ಷವಾಗಲಿದೆಯೇ ಎಂದು ಆತಂಕಪಡುವಂತಾಗಿದೆ.
ಚಿಮುಲ್ ಎಲೆಕ್ಷನ್ ಅಖಾಡದಲ್ಲಿ ಫೈಟ್ ಜೋರು; ಶುರುವಾಗಿದೆ ಕ್ರೆಡಿಟ್ ವಾರ್
ಕೋಚಿಮುಲ್ನಿಂದ ಪ್ರತ್ಯೇಕ ಹಾಲು ಒಕ್ಕೂಟವಾಗಿ ಚಿಮುಲ್ ಆದ ನಂತರ ಇದೇ ಮೊದಲ ಬಾರಿಗೆ ಚುನಾವಣೆ ಎದುರಾಗಿದೆ. ಹೀಗಾಗಿ ಚಿಮುಲ್ ಚುನಾವಣೆ ಅಖಾಡ ಸಾಕಷ್ಟು ಕುತೂಹಲವನ್ನು ಹುಟ್ಟು ಹಾಕಿದೆ. ಪ್ರತ್ಯೇಕ ಒಕ್ಕೂಟ ಮಾಡಿದ ಕ್ರೆಡಿಟ್ ಹಿಡಿದು ಅಖಾಡಕ್ಕಿಳಿದಿರುವ ಘಟಾನುಘಟಿಗಳು ಶತಾಯಗತಾಯ ಅಧಿಕಾರದ ಚುಕ್ಕಾಣಿ ಹಿಡಿಯಲು ನಾನಾ ಕಸರತ್ತುಗಳನ್ನು ಶುರು ಮಾಡಿದ್ದಾರೆ. ಈ ಎಲ್ಲಬೆಳವಣಿಗೆಗಳ ಮೇಲೆ ಬೆಳಕು ಚೆಲ್ಲುವ ಸರಣಿ ವರದಿ ಇಂದಿನಿಂದ.
ಬರೀ 180 ರೂ. ಕೊಟ್ಟು ಅಮೆರಿಕ ಲಾಟರಿ ಖರೀದಿಸಿದ ವ್ಯಕ್ತಿಗೆ 15 ಸಾವಿರ ಕೋಟಿ ರೂ. ಬಂಪರ್ ಬಹುಮಾನ!
ಅರ್ಕಾನ್ಸಾಸ್ನಲ್ಲಿ ಕ್ರಿಸ್ಮಸ್ ಈವ್ ರಂದು ನಡೆದ ಪವರ್ ಬಾಲ್ ಲಾಟರಿ ಟಿಕೆಟ್ ಲಕ್ಕಿ ಡ್ರಾನಲ್ಲಿ ಅರ್ಕನ್ಸಾಸ್ ಎಂಬ ನಿವಾಸಿಯೊಬ್ಬರಿಗೆ 1.7 ಶತಕೋಟಿ ಡಾಲರ್ ಪವರ್ಬಾಲ್ ಬಂಪರ್ ಪ್ರೈಸ್ ಲಭ್ಯವಾಗಿದೆ. ಅವರು ಖರೀದಿಸಿದ್ದ 19 ಕ್ರಮಸಂಖ್ಯೆ ಇದ್ದ ಟಿಕೆಟ್ ಗೆ ಈ ಬಂಪರ್ ಬಹುಮಾನ ಹೊಡೆದಿದೆ. ಇದು ಅಮೆರಿಕಾದ ಇತಿಹಾಸದಲ್ಲಿ ಎರಡನೇ ಅತಿ ದೊಡ್ಡ ಬಹುಮಾನವಾಗಿದ್ದು, ಅರ್ಕನ್ಸಾಸ್ ನ ಲಿಟಲ್ ರಾಕ್ ಎಂಬಲ್ಲಿನ ಕ್ಯಾಬೋಟ್ ಎಂಬ ಪುಟ್ಟ ಗ್ರಾಮದವರೊಬ್ಬರು ಟಿಕೆಟ್ ಮಾರಾಟವಾಗಿರುವುದಾಗಿ ಪವರ್ ಬಾಲ್ ಕಂಪನಿ ತಿಳಿಸಿದೆ. ಆದರೆ, ಬಹುಮಾನ ಗೆದ್ದವರ ವಿವರಗಳನ್ನು ಕಂಪನಿ ಪ್ರಕಟಿಸಿಲ್ಲ.
ಡಿಸೆಂಬರ್ 26ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ
Petrol, Diesel Price: ಪೆಟ್ರೋಲ್, ಡೀಸೆಲ್ ದರದಲ್ಲಿ ಜಾಸ್ತಿ ಅಲ್ಲದಿದ್ದರೂ, ಸ್ವಲ್ಪ ಪ್ರಮಾಣದಲ್ಲಾದ್ರೂ ಏರಿಳಿತ ಆಗುತ್ತಿರುತ್ತದೆ. ಹಾಗಾದರೆ, ಇಂದು (ಡಿಸೆಂಬರ್ 26) ಬೆಂಗಳೂರು ಸೇರಿದಂತೆ ರಾಜ್ಯದ ಉಳಿದ ಜಿಲ್ಲೆಗಳಲ್ಲಿ ಲೀಟರ್ ಪೆಟ್ರೋಲ್, ಡೀಸೆಲ್ ಬೆಲೆ ಎಷ್ಟಿದೆ ಎನ್ನುವ ಅಂಕಿಅಂಶಗಳನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ. ಶಕ್ತಿಯ ಮೂಲಗಳು ಎನಿಸಿಕೊಂಡಿರುವ ಪೆಟ್ರೋಲ್ ಮತ್ತು ಡೀಸೆಲ್ ಇಂಧನ ಅತ್ಯವಶ್ಯಕವಾಗಿ ಬೇಕಾಗುವ ಸಂಪನ್ಮೂಲಗಳಾಗಿವೆ.
ಇಂದಿನಿಂದ ರೈಲ್ವೆ ಟಿಕೆಟ್ ದರ ಹೆಚ್ಚಳ, ಪ್ರಯಾಣಿಕರು ತಿಳಿದುಕೊಳ್ಳಲೇಬೇಕಾದ ಮಾಹಿತಿ ಇಲ್ಲಿದೆ
ರೈಲ್ವೆ ಸಚಿವಾಲಯವು ಪ್ರಯಾಣ ದರವನ್ನು ಹೆಚ್ಚಳ ಮಾಡಿದ್ದು, ಇಂದಿನಿಂದಲೇ ಪರಿಷ್ಕೃತ ದರಗಳು ಜಾರಿಯಾಗಲಿವೆ. 215 ಕಿ.ಮೀ.ಗಿಂತ ಹೆಚ್ಚಿನ ಪ್ರಯಾಣದ ಸಾಮಾನ್ಯ ದರ್ಜೆಗೆ ಪ್ರತಿ ಕಿ.ಮೀ.ಗೆ 1 ಪೈಸೆ ಮತ್ತು ಎಕ್ಸ್ಪ್ರೆಸ್ ರೈಲುಗಳ ನಾನ್ ಎಸಿ ಕ್ಲಾಸ್ಗಳು ಮತ್ತು ಎಲ್ಲ ರೈಲುಗಳ ಎಸಿ ಕ್ಲಾಸ್ಗಳಿಗೆ ಅನ್ವಯವಾಗುವಂತೆ ಪ್ರತಿ ಕಿ.ಮೀ.ಗೆ 2 ಪೈಸೆ ಹೆಚ್ಚಳವನ್ನು ಅಧಿಕೃತವಾಗಿ ಪ್ರಕಟಿಸಿದೆ. ಡಿಸೆಂಬರ್ 21ರಂದು
ಸಿಕ್ಕಿಂ ಆಟಗಾರ ರೋಹಿತ್ ಶರ್ಮಾರ ಪಾದ ಮುಟ್ಟಿ ನಮಸ್ಕರಿಸಿದ್ದು ನಿಜವೇ?
ಮುಂಬೈ: ಮುಂಬೈ ವಿರುದ್ಧದ ವಿಜಯ್ ಹಜಾರೆ ಟ್ರೋಫಿ ಪಂದ್ಯದಲ್ಲಿ ಸಿಕ್ಕಿಂ ಆಟಗಾರರೊಬ್ಬರು ಭಾರತದ ಸ್ಟಾರ್ ಕ್ರಿಕೆಟರ್ ರೋಹಿತ್ ಶರ್ಮಾ ಅವರ ಪಾದಮುಟ್ಟಿ ನಮಸ್ಕರಿಸಿದ್ದಾರೆ ಎಂದು ಬಿಂಬಿಸುವ ವಿಡಿಯೊ ಬಧವಾರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಸಿಕ್ಕಿಂ ಆಟಗಾರ ರೋಹಿತ್ ಅವರ ಪಾದ ಸ್ಪರ್ಶಿಸಲು ಬಾಗಿದಂತೆ ವಿಡಿಯೊದಲ್ಲಿ ಕಂಡುಬರುತ್ತಿತ್ತು. ಆದರೆ ವಾಸ್ತವವಾಗಿ ರೋಹಿತ್ ಶರ್ಮಾ ಅವರ ಕೈ ಕುಲುಕುವ ವೇಳೆ ಬಿದ್ದ ಟೊಪ್ಪಿಯನ್ನು ಹೆಚ್ಚಿಕೊಳ್ಳಲು ಈ ಆಟಗಾರ ಬಾಗಿರುವುದು ವಿಡಿಯೊವನ್ನು ಸೂಕ್ಷ್ಮವಾಗಿ ವೀಕ್ಷಿಸಿದಾಗ ಕಂಡುಬರುತ್ತಿದೆ. ಹಿರಿಯ ಕ್ರಿಕೆಟಿಗ ರೋಹಿತ್ ಶರ್ಮಾ ಆಗ ಈ ಆಟಗಾರನ ಬೆನ್ನುತಟ್ಟಿದರು. ಈ ಪಂದ್ಯದಲ್ಲಿ ಕೇವಲ 94 ಎಸೆತಗಳಲ್ಲಿ 155 ರನ್ ಸಿಡಿಸುವ ಮೂಲಕ ರೋಹಿತ್ ತಮ್ಮ ಸಾಮರ್ಥ್ಯ ಸಾಬೀತುಪಡಿಸಿದ್ದರು. 9 ಸಿಕ್ಸರ್ ಹಾಗೂ 18 ಬೌಂಡರಿಗಳ ಸಹಿತ 164.89 ಸ್ಟ್ರೈಕ್ ರೇಟ್ ನೊಂದಿಗೆ ಅಚ್ಚರಿ ಮೂಡಿಸಿದ್ದರು. ಆರಂಭಿಕ ಆಟಗಾರ ಅಂಕ್ರಿಶ್ ರಘುವಂಶಿ ಜತೆಗೆ 141 ರನ್ ಗಳ ಜತೆಯಾಟ ಹಾಗೂ ಮುಶೀರ್ ಖಾನ್ ಜತೆ 85 ರನ್ ಗಳ ಜತೆಯಾಟ ನೀಡುವ ಮೂಲಕ ರೋಹಿತ್, ಮುಂಬೈ ತಂಡದ ಸುಲಭ ಜಯಕ್ಕೆ ಕಾರಣರಾಗಿದ್ದರು.
ಖಾಸಗಿ ಬಸ್ಗಳಲ್ಲಿ ಡೇಂಜರ್ ಲಗೇಜು ; ಜಂಟಿ ಕಾರ್ಯಾಚರಣೆಯೇ ಪರಿಹಾರ
ಖಾಸಗಿ ಬಸ್ಗಳಲ್ಲಿ ನಿಯಮ ಮೀರಿ ಸರಕು ಸಾಗಾಟ ಮಾಡುತ್ತಿರುವುದು ಪ್ರಯಾಣಿಕರ ಸುರಕ್ಷತೆಗೆ ಅಪಾಯ ತಂದೊಡ್ಡಿದೆ. ಇತ್ತೀಚೆಗೆ ನಡೆದ ಬೆಂಕಿ ಅವಘಡಗಳು, ಸ್ಫೋಟಗಳು ಈ ಸಮಸ್ಯೆಯ ಗಂಭೀರತೆಯನ್ನು ಎತ್ತಿ ತೋರಿಸಿವೆ. ಅಧಿಕಾರಿಗಳು ಜಂಟಿ ಕಾರ್ಯಾಚರಣೆ ನಡೆಸಿ, ಅಪಾಯಕಾರಿ ವಸ್ತುಗಳ ಸಾಗಾಟಕ್ಕೆ ಕಡಿವಾಣ ಹಾಕಬೇಕಿದೆ.
ಚಿತ್ರದುರ್ಗ ಬಸ್ ಅಪಘಾತದಲ್ಲಿ ಬಲಿಯಾದ ಗೆಳತಿಯರ ದುರಂತ ಕಥೆ, ಕಮರಿದ ಕನಸು
ಬೆಂಗಳೂರಿನಲ್ಲಿ ವಾಸವಿದ್ದ ಮೂವರು ಸ್ನೇಹಿತೆಯರಲ್ಲಿ ಇಬ್ಬರು, ಶಿವಮೊಗ್ಗದ ಸಿಗಂದೂರು ದೇವಸ್ಥಾನಕ್ಕೆ ಪ್ರವಾಸ ಹೋಗುತ್ತಿದ್ದಾಗ ಭೀಕರ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಅಮರನಾಥ್ ನವ್ಯಾ (26) ಮತ್ತು ಹರದೇಶಿ ಮಂಜುಳಾ (27) ಮೃತಪಟ್ಟಿದ್ದು, ಮಿಲನಾ ನಾರಾಯಣಮೂರ್ತಿ (26) ಪಾರಾಗಿದ್ದಾರೆ. ಇಬ್ಬರೂ ಸಾಫ್ಟ್ವೇರ್ ಇಂಜಿನಿಯರ್ಗಳಾಗಿದ್ದು, ಮದುವೆಗೆ ಸಿದ್ಧರಾಗಿದ್ದರು.
ನೈಜೀರಿಯಾದ ಐಸಿಸ್ ನೆಲೆಗಳ ಮೇಲೆ ದಾಳಿಗೆ ಟ್ರಂಪ್ ಆದೇಶ
ವಾಷಿಂಗ್ಟನ್: ವಾಯವ್ಯ ನೈಜೀರಿಯಾದಲ್ಲಿ ಐಸಿಸ್ ಉಗ್ರರ ನೆಲೆಗಳ ಮೇಲೆ ಪ್ರಬಲ ಮತ್ತು ಮಾರಕ ದಾಳಿ ನಡೆಸುವಂತೆ ಆದೇಶಿಸಿರುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರಕಟಿಸಿದ್ದಾರೆ. ಈ ಭಾಗದಲ್ಲಿ ಕ್ರಿಶ್ಚಿಯನ್ನರನ್ನು ಗುರಿ ಮಾಡಿ ಐಸಿಸ್ ಉಗ್ರರು ಹತ್ಯೆ ಮಾಡುತ್ತಿರುವುದಕ್ಕೆ ಪ್ರತೀಕಾರವಾಗಿ ದಾಳಿ ನಡೆಸಲಾಗುತ್ತಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಟ್ರುತ್ ಸೋಶಿಯಲ್ ನಲ್ಲಿ ಈ ಬಗ್ಗೆ ಪೋಸ್ಟ್ ಮಾಡಿರುವ ಟ್ರಂಪ್, ಕಮಾಂಡರ್ ಇನ್ ಚೀಫ್ ಆಗಿ ನಾನು ನೀಡಿದ ನಿರ್ದೇಶನದನ್ವಯ ದಾಳಿ ನಡೆಸಲಾಗಿದೆ ಎಂದು ಹೇಳಿದ್ದಾರೆ. ಐಸಿಸ್ ಉಗ್ರರನ್ನು ಗುರಿ ಮಾಡಿ ದಾಳಿ ನಡೆಸಲಾಗಿದೆ ಎಂದಿದ್ದಾರೆ. ಅಮಾಯಕ ಕ್ರಿಶ್ಚಿಯನ್ನರನ್ನು ಮಾರಕವಾಗಿ ಹತ್ಯೆ ಮಾಡಲಾಗುತ್ತಿದ್ದು, ಹಲವು ವರ್ಷಗಳಲ್ಲಿ ಮಾತ್ರವಲ್ಲ; ಹಲವು ಶತಮಾನಗಳಲ್ಲಿ ಕೂಡಾ ಇಂಥ ಹತ್ಯೆಯ ಮಟ್ಟವನ್ನು ಕಂಡಿಲ್ಲ ಎಂದಿದ್ದಾರೆ. ಕ್ರಿಶ್ಚಿಯನ್ನರ ಹತ್ಯೆಯನ್ನು ನಿಲ್ಲಿಸದಿದ್ದರೆ, ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಈ ಹಿಂದೆಯೇ ಎಚ್ಚರಿಕೆ ನೀಡಿದ್ದೆ ಎಂದು ಟ್ರಂಪ್ ವಿವರಿಸಿದ್ದಾರೆ. ಯುದ್ಧ ಇಲಾಖೆ ಅಸಂಖ್ಯಾತ ನಿಖರ ದಾಳಿಗಳನ್ನು ನಡೆಸಿದೆ. ಕೇವಲ ಅಮೆರಿಕಕ್ಕೆ ಮಾತ್ರ ಅದನ್ನು ಮಾಡುವ ಸಾಮರ್ಥ್ಯ ಇದೆ ಎಂದು ಹೇಳಿಕೊಂಡಿದ್ದಾರೆ. ತಮ್ಮ ಆಡಳಿತಾವಧಿಯಲ್ಲಿ ಉಗ್ರರು ಬೆಳೆಯಲು ಅವಕಾಶ ನೀಡುವುದಿಲ್ಲ ಎಂದು ಅವರು ಹೇಳಿದ್ದಾರೆ. ನಮ್ಮ ಸೇನೆಯನ್ನು ದೇವರು ಆಶೀರ್ವದಿಸಲಿ. ಎಲ್ಲರಿಗೂ ಕ್ರಿಸ್ಮಸ್ ಶುಭಾಶಯಗಳು. ಕ್ರಿಶ್ಚಿಯನ್ನರ ಹತ್ಯೆ ನಿಲ್ಲದಿದ್ದರೆ ಇನ್ನಷ್ಟು ಇಂಥ ದಾಳಿಗಳು ನಡೆಯಲಿವೆ ಎಂದು ಎಚ್ಚರಿಸಿದ್ದಾರೆ.
Karnataka Weather: ಡಿ.31ರಂದು ಈ ಜಿಲ್ಲೆಗಳಲ್ಲಿ ಲಘು ಮಳೆಯಾಗುವ ಸಾಧ್ಯತೆ
ರಾಜ್ಯದ ಉತ್ತರ ಒಳನಾಡಿನಲ್ಲಿ ಸದ್ಯ ಶೀತಲ ಅಲೆಯ ಪರಿಸ್ಥಿತಿ ಮುಂದುವರಿದಿದ್ದು, ಚಳಿ ತೀವ್ರಗೊಂಡಿದೆ. ಮುಂದಿನ ಐದು ದಿನಗಳವರೆಗೆ ಇದೇ ಪರಿಸ್ಥಿತಿ ಬಹುತೇಕ ಜಿಲ್ಲೆಗಳಲ್ಲಿ ಇರಲಿದೆ. ಡಿಸೆಂಬರ್ 31ರಂದು ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆಯಾಗುವ ಮುನ್ಸೂಚನೆ ಇದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಈ ವರ್ಷದ ಕೊನೆಯ ಕೊನೆಯ ದಿನದಂದು ರಾಜ್ಯದ ಜನ ಮಳೆ ಕಾಣಲಿದ್ದಾರೆ. ಯಾವೆಲ್ಲ
ನೈಜೀರಿಯಾದಲ್ಲಿ ಕ್ರಿಶ್ಚಿಯನ್ನರ ಹತ್ಯೆಗೈದ ಐಸಿಸ್ ಉಗ್ರರ ಮೇಲೆ ಮಾರಕ ದಾಳಿಗೆ ಟ್ರಂಪ್ ಆದೇಶ
ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಈಶಾನ್ಯ ನೈಜೀರಿಯಾದಲ್ಲಿ ಕ್ರೈಸ್ತರನ್ನು ಗುರಿಯಾಗಿಸಿಕೊಂಡು ಹತ್ಯೆ ಮಾಡುತ್ತಿರುವ ISIS ಭಯೋತ್ಪಾದಕರ ವಿರುದ್ಧ ಶಕ್ತಿಶಾಲಿ ದಾಳಿ ನಡೆಸಲು ಆದೇಶಿಸಿದ್ದಾರೆ. ತಮ್ಮ 'ಟ್ರೂತ್ ಸೋಶಿಯಲ್' ಖಾತೆಯಲ್ಲಿ ಈ ಬಗ್ಗೆ ತಿಳಿಸಿದ ಅವರು, ಉಗ್ರರನ್ನು 'ಭಯೋತ್ಪಾದಕ ತ್ಯಾಜ್ಯ' ಎಂದು ಕರೆದಿದ್ದಾರೆ. ಕ್ರೈಸ್ತರ ಹತ್ಯೆ ನಿಲ್ಲದಿದ್ದರೆ ನರಕವನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
(ವಿಕ ಫೋಕಸ್) ಭಾರತ ಮಾಡಿದ ಉಪಕಾರಗಳನ್ನೆಲ್ಲಾ ಮರೆತ ಬಾಂಗ್ಲಾದೇಶದ ಯುವ ಪೀಳಿಗೆ
ಭಾರತವು ಬಾಂಗ್ಲಾದೇಶಕ್ಕೆ ನೀಡಿದ್ದ ಸ್ನೇಹ ಮತ್ತು ಬೆಂಬಲ ಈಗ ಬದಲಾಗಿದೆ. ಬಾಂಗ್ಲಾದೇಶದ ರಾಜಕೀಯ ಪರಿಸ್ಥಿತಿ ಅಸ್ಥಿರವಾಗಿದ್ದು, ಚುನಾವಣೆಗಳು ಮುಂದೂಡಲ್ಪಡುವ ಸಾಧ್ಯತೆ ಇದೆ. ಯೂನಸ್ ಅವರ ನಾಯಕತ್ವದ ಬಗ್ಗೆ ಪ್ರಶ್ನೆಗಳೆದ್ದಿವೆ. ಭಾರತದ 'ಚಿಕನ್ ನೆಕ್' ಪ್ರದೇಶದ ಬಗ್ಗೆ ಬಾಂಗ್ಲಾದೇಶದ ಬೆದರಿಕೆಗಳು ಉಲ್ಲೇಖಗೊಂಡಿವೆ. ಮಾಲ್ಡೀವ್ಸ್ ನಂತೆ ಬಾಂಗ್ಲಾದೇಶವೂ ತನ್ನ ತಪ್ಪುಗಳನ್ನು ತಿದ್ದಿಕೊಂಡು ಭಾರತದೊಂದಿಗೆ ಮತ್ತೆ ಸ್ನೇಹ ಬೆಳೆಸಿಕೊಳ್ಳುತ್ತದೆಯೇ ಕಾದು ನೋಡಬೇಕು.
ಮೈಸೂರು ಗಸ್ತು ವ್ಯವಸ್ಥೆ ಬದಲು - ನಿರ್ಜನ ಪ್ರದೇಶದಲ್ಲೂ ಅನೈತಿಕ ಚಟುವಟಿಕೆ ನಡೆಸುವವರ ಮುಖ ಇನ್ನು ನಿಖರವಾಗಿ ಗೋಚರ
ಮೈಸೂರು ನಗರ ಪೊಲೀಸರು ಈಗ ಡ್ರೋನ್ಗಳ ಸಹಾಯದಿಂದ ಗಸ್ತು ತಿರುಗುತ್ತಿದ್ದಾರೆ. ಇದರಿಂದ ಅಪರಾಧ ಚಟುವಟಿಕೆಗಳನ್ನು ನಿಯಂತ್ರಿಸಲು ಮತ್ತು ಕಾನೂನು ಸುವ್ಯವಸ್ಥೆ ಕಾಪಾಡಲು ಅನುಕೂಲವಾಗಲಿದೆ. ಜನಸಂದಣಿ ಇರುವ ಪ್ರದೇಶಗಳಲ್ಲಿ ಮತ್ತು ತಲುಪಲು ಕಷ್ಟಕರವಾದ ಸ್ಥಳಗಳಲ್ಲಿಯೂ ಡ್ರೋನ್ಗಳ ಮೂಲಕ ನಿಗಾ ಇಡಬಹುದು. ಇದು ಅಪರಾಧಿಗಳನ್ನು ಪತ್ತೆ ಹಚ್ಚಲು ಮತ್ತು ಅವರ ಚಲನವಲನಗಳನ್ನು ಗುರುತಿಸಲು ಸಹಕಾರಿಯಾಗಿದೆ. ಈ ಹೊಸ ತಂತ್ರಜ್ಞಾನವು ಪೊಲೀಸ್ ವ್ಯವಸ್ಥೆಯನ್ನು ಬಲಪಡಿಸಲಿದೆ.
ಮೈಸೂರಲ್ಲಿ ಮಾಜಿ ಎಂಎಲ್ಸಿ ಸಿದ್ದರಾಜುಗೆ ಸೇರಿದ ಭೂಮಿ ಕಬಳಿಸಲು ಯತ್ನ - 22 ಸೈಟ್ ಮಾರಾಟಕ್ಕೆ ಮುಂದು - ಕಡೆಗೆ ಪರಾರಿ!
ಮೈಸೂರಿನಲ್ಲಿ 30 ಕೋಟಿ ರೂ. ಮೌಲ್ಯದ 22 ನಿವೇಶನಗಳನ್ನು ನಕಲಿ ದಾಖಲೆ ಸೃಷ್ಟಿಸಿ ಪರಭಾರೆ ಮಾಡಲು ಭೂಗಳ್ಳರ ಯತ್ನ ವಿಫಲವಾಗಿದೆ. ವಿಧಾನ ಪರಿಷತ್ ಮಾಜಿ ಸದಸ್ಯ ಸಿದ್ದರಾಜು ಅವರ ಹೆಸರಿನಲ್ಲಿ ನಕಲಿ ವ್ಯಕ್ತಿಯನ್ನು ಕರೆತಂದು ನೋಂದಣಿ ಮಾಡಲು ಮುಂದಾಗಿದ್ದರು. ಆದರೆ, ಸಬ್ ರಿಜಿಸ್ಟ್ರಾರ್ ಕಚೇರಿ ಸಿಬ್ಬಂದಿ ಎಚ್ಚೆತ್ತುಕೊಂಡು ನೋಂದಣಿ ತಡೆದು, ಸಿದ್ದರಾಜು ಅವರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಆರೋಪಿಗಳು ಪರಾರಿಯಾಗಿದ್ದಾರೆ.
ಹುಣಸೂರು | ಪ್ರಗತಿಪರ ಸಂಘಟನೆಗಳಿಂದ ಮನುಸ್ಮೃತಿ ದಹನ
ಹುಣಸೂರು : ಡಾ.ಬಿ.ಆರ್.ಅಂಬೇಡ್ಕರ್ ಅವರು ಮನುಸ್ಮೃತಿಯನ್ನು ದಹಿಸಿದ ದಿನದ ಅಂಗವಾಗಿ ದಸಂಸ ಮತ್ತು ಪ್ರಗತಿಪರ ಸಂಘಟನೆಗಳ ವತಿಯಿಂದ ನಗರ ಸಂವಿಧಾನ ವೃತ್ತದಲ್ಲಿ ಮನುಸ್ಮೃತಿಯನ್ನು ದಹಿಸಲಾಯಿತು. ಸಂವಿಧಾನ ವೃತ್ತದಲ್ಲಿ ಜಮಾವಣೆಗೊಂಡ ಕಾರ್ಯಕರ್ತರು ಅಂಬೇಡ್ಕರ್ ಚಿರಾಯುವಾಗಲಿ, ಜೀವ ವಿರೋಧಿ ಮನುಸ್ಮೃತಿಗೆ ಧಿಕ್ಕಾರ. ಪ್ರಗತಿಪರ ಸಂಘಟನೆಗಳ ಹೋರಾಟಕ್ಕೆ ಜಯವಾಗಲಿ ಎಂದು ಮುಂತಾದ ಘೋಷಣೆ ಕೂಗಿ ಮನುಸ್ಮೃತಿಯನ್ನು ದಹಿಸಲಾಯಿತು. ಈ ಸಂದರ್ಭದಲ್ಲಿ ದಲಿತ ಹಿರಿಯ ಹೋರಾಟಗಾರ ಜೆ.ಮಹದೇವು ಮಾತನಾಡಿ, ಜಾತಿ ವ್ಯವಸ್ಥೆಗೆ ಮತ್ತು ಅಸ್ಪೃಶ್ಯತೆಗೆ ಮುನ್ನುಡಿ ಬರೆದಿದ್ದ ಮನುಸ್ಮೃತಿಯನ್ನು ಬಹುಜನರಿಗೆ ಮಾರಕವಾಗಿದೆ ಎಂದು ಅರಿತ್ತಿದ್ದ ಅಂಬೇಡ್ಕರ್ ಅಂದೇ ಸುಟ್ಟು ಹಾಕಿದ್ದರು. ಆದರೂ ಇಂದಿನ ಸಮಾಜದಲ್ಲಿ ಜಾತಿ ವ್ಯವಸ್ಥೆ ಅಸ್ಪೃಶ್ಯತೆ, ಪಾಳೇಗಾರಿಕೆ ಸಂಸ್ಕೃತಿ, ಇನ್ನು ಜೀವಂತವಾಗಿದ್ದು ಹೆಚ್ಚು ಹೆಚ್ಚು ಜನಪರ ಸಂಘಟನೆಗಳು ಸಂಘಟಿತರಾಗಿ ಇದನ್ನು ಹಿಮ್ಮೆಟ್ಟಿಸಬೇಕಾಗಿದೆ ಎಂದರು. ಜಾತಿ ವ್ಯವಸ್ಥೆ ವಿರುದ್ಧ ಅಂದೇ ಧ್ವನಿ ಎತ್ತಿದ್ದ ಅಂಬೇಡ್ಕರ್ ಸಂವಿಧಾನದ ಮೂಲಕ ಸಮ ಸಮಾಜದ ಕನಸು ಕಂಡಿದ್ದರು. ಆದರೆ, ಇಲ್ಲಿನ ಕೋಮುವಾದಿ ಶಕ್ತಿಗಳು ಮನುಸ್ಮೃತಿಯನ್ನು ಮತ್ತೊಮ್ಮೆ ಸಮಾಜದ ಮೇಲೆ ಏರಲು ಹವಣಿಸುತ್ತಿದ್ದಾರೆ ಎಂದರು. ಕಾರ್ಯಕ್ರಮದಲ್ಲಿ ದಸಂಸ ತಾಲೂಕು ಸಂಚಾಲಕ ಅತ್ತಿಕುಪ್ಪೆ ರಾಮಕೃಷ್ಣ, ಸಿಪಿಐ(ಎಂ) ಮುಖಂಡ ವಿ.ಬಸವರಾಜು ಕಲ್ಕುಣಿಕೆ ಮಾತನಾಡಿದರು. ದಸಂಸ ನಗರ ಸಂಚಾಲಕ ರಾಜು ಚಿಕ್ಕಹುಣಸೂರು, ತಾಸಂ ಸಂಚಾಲಕ ಮುತ್ತು ರಾಯನ ಹೊಸಳ್ಳಿ ಶಿವರಾಜು, ಜಿಲ್ಲಾ ಸಂಯೋಜಕ ಪ್ರಕಾಶ್, ಖಜಾಂಚಿ ಸಿದ್ದೇಶ್ ಅತ್ತಿಕುಪ್ಪೆ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೀರನಹಳ್ಳಿ ಬಾಲಸುಂದರ್, ದಸಂಸ ತಾಲೂಕು ಮಹಿಳಾ ಸಂಚಾಲಾಕಿ ರುಕ್ಮಿಣಿ, ಹಳೇಪುರ ಕೃಷ್ಣ, ಚಲುವರಾಜು, ಸೋಮಯ್ಯ ತರಿಕಲ್ಲು ಕಿಟ್ಟಪ್ಪ, ಕೆಇಬಿ ರಾಜಪ್ಪ, ಪ್ರೊ. ಮಹದೇವ್, ಗಿರೀಶ್ ಬಿಳಿಕೆರೆ, ನಾರಾಯಣ, ವಕೀಲ ಅಶೋಕ್, ಪಾಸ್ಟಾರ್ ಸುರೇಶ್ ಕುಮಾರ್ ಕೆಎಂ ವಾಡಿ, ಸುಂದರ್ ಹೊಸಕೋಟೆ ಮುಂತಾದವರಿದ್ದರು. ಸಭೆಯಲ್ಲಿ ಹುಬ್ಬಳ್ಳಿಯಲ್ಲಿ ದಲಿತ ಯುವಕನನ್ನು ಮದುವೆಯಾದ ಕಾರಣಕ್ಕೆ ಗರ್ಭಿಣಿ ಮಾನ್ಯ ಪಾಟೀಲ್ ಅವರ ಅಮಾನುಷ ಕೊಲೆಯನ್ನು ತೀವ್ರವಾಗಿ ಖಂಡಿಸಿ ಕಠಿಣ ಶಿಕ್ಷೆಗೆ ಗುರಿ ಪಡಿಸುವಂತೆ ನಿರ್ಣಯ ಕೈಗೊಳ್ಳಲಾಯಿತು.
Chikkaballapur | ಟಿಪ್ಪರ್–ಬೈಕ್ ನಡುವೆ ಢಿಕ್ಕಿ; ನಾಲ್ವರು ಸ್ಥಳದಲ್ಲೇ ಮೃತ್ಯು
ಚಿಕ್ಕಬಳ್ಳಾಪುರ : ಟಿಪ್ಪರ್ ಲಾರಿ ಹಾಗೂ ದ್ವಿಚಕ್ರ ವಾಹನದ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ನಾಲ್ವರು ಯುವಕರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ನಗರದ ಹೊರವಲಯದ ಜಿಲ್ಲಾಡಳಿತ ಭವನದ ಕೂಗಳತೆ ದೂರದ ಅಜ್ಜವಾರ ಬಳಿ ಗುರುವಾರ ರಾತ್ರಿ ಸುಮಾರು 9.30ರ ವೇಳೆಗೆ ಸಂಭವಿಸಿರುವುದಾಗಿ ವರದಿಯಾಗಿದೆ. ಮೃತರನ್ನು ಚಿಕ್ಕಬಳ್ಳಾಪುರ ತಾಲೂಕಿನ ಅಜ್ಜವಾರ ಗ್ರಾಮದ ನಂದೀಶ್, ನರಸಿಂಹ, ಅರುಣ್ ಹಾಗೂ ಮನೋಜ್ ಎಂದು ಗುರುತಿಸಲಾಗಿದೆ. ನಾಲ್ವರೂ ಪರಸ್ಪರ ಸ್ನೇಹಿತರಾಗಿದ್ದು, ಚಿಕ್ಕಬಳ್ಳಾಪುರ ನಗರದಿಂದ ವಾಪಸ್ ಸ್ವಗ್ರಾಮಕ್ಕೆ ತೆರಳುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ ಎಂದು ತಿಳಿದು ಬಂದಿದೆ. ಶಿಡ್ಲಘಟ್ಟ ಕಡೆಯಿಂದ ಚಿಕ್ಕಬಳ್ಳಾಪುರದತ್ತ ಅತಿ ವೇಗವಾಗಿ ಬರುತ್ತಿದ್ದ ಟಿಪ್ಪರ್ ಲಾರಿ ದ್ವಿಚಕ್ರ ವಾಹನಕ್ಕೆ ಢಿಕ್ಕಿ ಹೊಡೆದ ಪರಿಣಾಮ ಬೈಕ್ನಲ್ಲಿದ್ದ ನಾಲ್ವರೂ ಗಂಭೀರ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎನ್ನಲಾಗಿದೆ. ವಿಷಯ ತಿಳಿದ ಕೂಡಲೇ ಚಿಕ್ಕಬಳ್ಳಾಪುರ ಗ್ರಾಮಾಂತರ ಠಾಣೆಯ ಪಿಎಸ್ಐ ಶರಣಪ್ಪ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮೃತದೇಹಗಳನ್ನು ಜಿಲ್ಲಾಸ್ಪತ್ರೆ ಶವಗಾರಕ್ಕೆ ಸಾಗಿಸಲಾಯಿತು. ಈ ಸಂಬಂಧ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Hardik Pandya Reaction- ಬ್ಯಾಡ್ ಬಾಯ್ ಇಮೇಜ್ ನಿಂದ ಹೊರಬಂದಿರುವ ಭಾರತದ ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ಇತ್ತೀಚಿನ ದಿನಗಳಲ್ಲಿ ಬಹಳ ಬದಲಾದಂತೆ ಕಂಡುಬರುತ್ತಿದ್ದಾರೆ. ಇದೀಗ ಅಭಿಮಾನಿಯೊಬ್ಬ ಸೆಲ್ಫಿ ನೀಡದ್ದಕ್ಕೆ ನಿಂದಿಸಿದರೂ ಶಾಂತಚಿತ್ತರಾಗಿದ್ದು ಪರಿಸ್ಥಿತಿಯನ್ನು ನಿಭಾಯಿಸಿದ್ದು ಇದಕ್ಕೆ ಸಾಕ್ಷಿ. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ಹಾರ್ದಿಕ್ ಪಾಂಡ್ಯ ಅವರ ವರ್ತನೆ ಪ್ರಶಂಸೆಗೆ ಪಾತ್ರವಾಗಿದೆ. ತಮ್ಮ ಗರ್ಲ್ ಫ್ರೆಂಡ್ ಜೊತೆ ಅವರು ಕ್ರಿಸ್ಮಸ್ ಔಟಿಂಗ್ ವೇಳೆ ಈ ಘಟನೆ ನಡೆದಿದೆ.
ಒಳಮೀಸಲಾತಿಯಲ್ಲೂ ನುಸುಳಿಕೊಂಡ ಮನುಸ್ಮೃತಿ : ಜ್ಞಾನ ಪ್ರಕಾಶ್ ಸ್ವಾಮೀಜಿ
ಮೈಸೂರಿನಲ್ಲಿ ಮನುಸ್ಮೃತಿ ದಹನ ದಿನಾಚರಣೆ
ವಿಜಯನಗರ | ಎತ್ತಿನ ಬಂಡಿಗೆ ಬೈಕ್ ಢಿಕ್ಕಿ : ಸ್ಥಳದಲ್ಲೇ ಇಬ್ಬರು ಮೃತ್ಯು
ವಿಜಯನಗರ : ಎತ್ತಿನ ಬಂಡಿಗೆ ಹಿಂಬದಿಯಿಂದ ಬೈಕ್ ಢಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಬೈಕ್ ಸವಾರಿಬ್ಬರು ಮೃತಪಟ್ಟ ಘಟನೆ ಹರಪನಹಳ್ಳಿ ತಾಲೂಕಿನ ಸಾಸಿವೆಹಳ್ಳಿ-ಹುಣಸಿಹಳ್ಳಿ ಹತ್ತಿರ ನಡೆದಿದೆ ಎಂದು ವರದಿಯಾಗಿದೆ. ಮೃತರನ್ನು ಶಿವಕುಮಾರ್ ( 37) ರವಿಕುಮಾರ್ (41) ಎಂದು ಗುರುತಿಸಲಾಗಿದೆ. ಘಟನೆಯ ಮಾಹಿತಿ ಪಡೆದ ವಿಜಯನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್. ಜಾಹ್ನವಿ ಹಾಗೂ ಹರಪನಹಳ್ಳಿ ಡಿವೈಎಸ್ಪಿ ಡಾ. ಸಂತೋಷ್ ಚೌವ್ಹಾಣ್ ಅವರು ಘಟನೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಚಿಗಟೇರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ ಎಂದು ವರದಿಯಾಗಿದೆ.
ಅಫಜಲಪುರ | ಮದರ್ ತೆರೇಸಾ ಪದವಿ ಪೂರ್ವ ಕಾಲೇಜಿನಲ್ಲಿ ಶೈಕ್ಷಣಿಕ ಕ್ಯಾಲೆಂಡರ್ ಬಿಡುಗಡೆ
ಅಫಜಲಪುರ : ಪಟ್ಟಣದ ಮದರ್ ತೆರೇಸಾ ಪದವಿ ಪೂರ್ವ ಕಲಾ ಮಹಾವಿದ್ಯಾಲಯದಲ್ಲಿ 2026ನೇ ಸಾಲಿನ ಕಾಲೇಜಿನ ಶೈಕ್ಷಣಿಕ ಕ್ಯಾಲೆಂಡರ್ ಬಿಡುಗಡೆ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಖಾಸಗಿ ಶಾಲಾ ಆಡಳಿತ ಮಂಡಳಿಯ ಸದಸ್ಯರಾದ ಆರ್.ಎಸ್. ನಂದೂರ ಗುಂಡೆರಾವ್ ದೇಶಮುಖ, ಸುರೇಶ್ ಘಂಟೆ, ಪತ್ರಕರ್ತ ಸಿದ್ದು ಶಿವಣಗಿ ಸಾಂಚಿ ಕಾಲೇಜಿನ ಪ್ರಾಂಶುಪಾಲ ಚಂದ್ರಕಾಂತ ಸಿಂಗೆ ಆನೂರ ಹಾಗೂ ಮಧ್ವರ್ ತೆರೇಸಾ ಸಂಸ್ಥೆ ಅಧ್ಯಕ್ಷ ಸಲೀಂ ಶೇಖ್ ಅವರು ಜಂಟಿಯಾಗಿ ಕ್ಯಾಲೆಂಡರ್ ಬಿಡುಗಡೆ ಮಾಡಿದರು. ಕ್ಯಾಲೆಂಡರ್ ಬಿಡುಗಡೆ ನಂತರ ಮಾತನಾಡಿದ ಮದರ್ ತೆರೇಸಾ ಸಂಸ್ಥೆ ಅಧ್ಯಕ್ಷ ಸಲೀಂ ಶೇಖ್ ಅವರು, ಶೈಕ್ಷಣಿಕ ಚಟುವಟಿಕೆಗಳನ್ನು ಸರಿಯಾದ ದಿಕ್ಕಿನಲ್ಲಿ ನಡೆಸಲು ಕ್ಯಾಲೆಂಡರ್ ಮಾರ್ಗಸೂಚಿಯಂತೆ ಕಾರ್ಯನಿರ್ವಹಿಸುತ್ತದೆ. ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆಯ ಜತೆಗೆ ಸರ್ವತೋಮುಖ ಅಭಿವೃದ್ಧಿಗೆ ಪಠ್ಯೇತರ ಚಟುವಟಿಕೆಗಳು ಅವಶ್ಯಕವಾಗಿದ್ದು, ಅವುಗಳನ್ನು ಸಮರ್ಪಕವಾಗಿ ರೂಪಿಸಲು ಈ ಕ್ಯಾಲೆಂಡರ್ ಸಹಕಾರಿಯಾಗಲಿದೆ ಎಂದು ಹೇಳಿದರು. ಪತ್ರಕರ್ತರಾದ ಸಿದ್ದು ಶಿವಣಗಿ ಮಾತನಾಡಿದರು.
ರಾಯಚೂರು | ಟೀ ಅಂಗಡಿಯಲ್ಲಿ ಶಾಟ್ ಸರ್ಕ್ಯೂಟ್ನಿಂದ ಅಗ್ನಿ ಅವಘಡ
ರಾಯಚೂರು : ನಗರದ ಮಂತ್ರಾಲಯ ರಸ್ತೆಯಲ್ಲಿ ಇರುವ ದಿ. ಟೀ ಟೋಸ್ಟ್ ಕೋ ಅಂಗಡಿಯಲ್ಲಿ ಇಂದು ಬೆಳಿಗ್ಗೆ ಶಾಟ್ ಸರ್ಕ್ಯೂಟ್ ಸಂಭವಿಸಿ ಅಗ್ನಿ ಅವಘಡ ಸಂಭವಿಸಿದೆ. ಬೆಳ್ಳಂಬೆಳಿಗ್ಗೆ ಅಂಗಡಿಯಲ್ಲಿ ಶಾಟ್ ಸರ್ಕ್ಯೂಟ್ನಿಂದ ಬೆಂಕಿ ಕಾಣಿಸಿಕೊಂಡಿದ್ದು, ಅಂಗಡಿಯಲ್ಲಿದ್ದ ಪೀಠೋಪಕರಣಗಳು, ಟೀ ಪೌಡರ್ ಸೇರಿದಂತೆ ಅನೇಕ ಸಾಮಗ್ರಿಗಳು ಬೆಂಕಿಗೆ ಆಹುತಿಯಾಗಿವೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎನ್ನಲಾಗಿದೆ.
ರಾಯಚೂರು | ನೈಜ ಪತ್ರಕರ್ತರ ಹಿತ ಕಾಪಾಡಲು ಸಂಘ ಸದಾ ಮುಂಚೂಣಿ : ಶಿವಾನಂದ ತಗಡೂರು
ರಾಯಚೂರಿನಲ್ಲಿ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದ ನೂತನ ಪದಾಧಿಕಾರಿಗಳ ಪದಗ್ರಹಣ
ರೈತರ ನೆರವಿಗೆ ಕ್ರೆಡಲ್ನಿಂದ ‘ಪಿಎಂ ಕುಸುಮ್ ಬಿ' ಸಹಾಯವಾಣಿ ಕೇಂದ್ರ
ಬೆಂಗಳೂರು : ಮಾಹಿತಿ ಕೊರತೆ ಅಥವಾ ತಾಂತ್ರಿಕ ತೊಂದರೆಗಳಿಂದಾಗಿ ಅರ್ಹ ರೈತರು ಪಿಎಂ ಕುಸುಮ್-ಬಿ ಯೋಜನೆಯಿಂದ ವಂಚಿತರಾಗಬಾರದೆಂಬ ಉದ್ದೇಶದಿಂದ ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತವು ನಾಗರಬಾವಿಯ ಕೇಂದ್ರ ಕಚೇರಿಯಲ್ಲಿ ಸಹಾಯವಾಣಿ ಕೇಂದ್ರ ಸ್ಥಾಪಿಸಿದೆ. ಡಿ.23ರಿಂದ ಇದೇ ತಿಂಗಳು 31ರವರೆಗೆ ಸಹಾಯವಾಣಿ ಕೇಂದ್ರ ಕಾರ್ಯನಿರ್ವಹಿಸಲಿದ್ದು, ಕುಸುಮ್ ಬಿ ಯೋಜನೆ ಕುರಿತಂತೆ ರೈತರು ತಮ್ಮ ಸಮಸ್ಯೆಗಳನ್ನು ದೂರವಾಣಿ ಕರೆಯ ಮೂಲಕ ಪರಿಹರಿಸಿಕೊಳ್ಳಬಹುದಾಗಿದೆ. ರಾಜ್ಯದ ಎಲ್ಲ ರೈತರು ಇದರ ನೆರವು ಪಡೆದುಕೊಳ್ಳಬಹುದಾಗಿದ್ದು, ಇದಕ್ಕಾಗಿ ಕ್ರೆಡಲ್ ಸಿಬ್ಬಂದಿ, ಪ್ರತಿದಿನ ಬೆಳಗ್ಗೆ 6 ರಿಂದ ರಾತ್ರಿ 9 ಗಂಟೆರವರೆಗೆ ರಜೆ ಇಲ್ಲದೆ ಎರಡು ಪಾಳಿಗಳಲ್ಲಿ ಕೆಲಸ ನಿರ್ವಹಿಸಲಿದ್ದಾರೆ. ಸಹಾಯವಾಣಿಯಲ್ಲಿ ಕುಸುಮ್ ಯೋಜನೆಯ ಕಾಂಪೋನೆಂಟ್ ಬಿ ಅಡಿ ಸೋಲಾರ್ ಪಂಪ್ಸೆಟ್ ಹಾಕಿಸಿಕೊಳ್ಳುವ ಕುರಿತು ಮಾಹಿತಿ, ಆನ್ಲೈನ್ ಪಾವತಿ ಮತ್ತು ಇತರ ಸಂಬಂಧಿತ ಪ್ರಶ್ನೆಗಳಿಗೆ ಉತ್ತರ ಸಿಗಲಿದೆ. ರೈತರು ಮಧ್ಯವರ್ತಿಗಳನ್ನು ಸಂಪರ್ಕಿಸದೆ ಸಹಾಯವಾಣಿಯ ಅಧಿಕೃತ ಫೋನ್ ಸಂಖ್ಯೆ 080-22202100 ಮತ್ತು 80951 32100ಅನ್ನು ನೇರವಾಗಿ ಸಂಪರ್ಕಿಸಬಹುದು. ಸೋಲಾರ್ ವಿದ್ಯುತ್ ಚಾಲಿತ ನೀರಾವರಿ ಪಂಪ್ ಸೆಟ್ಗಾಗಿ ರೈತರು ತಮ್ಮ ಪಾಲಿನ ವಂತಿಗೆ ಹೊರತುಪಡಿಸಿ ಯಾರಿಗೂ ಹಣ ಪಾವತಿಸಬೇಕಾಗಿಲ್ಲ ಎಂದು ಕ್ರೆಡಲ್ ಪ್ರಕಟನೆ ತಿಳಿಸಿದೆ. ಪಿಎಂ ಕುಸುಮ್ ಬಿ ಯೋಜನೆಗೆ ರೈತ ಸಮುದಾಯದಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, , www.souramitra.com ಪೋರ್ಟಲ್ ಮೂಲಕ ಈವರೆಗೆ 83,204 ರೈತರು ಆನ್ಲೈನ್ನಲ್ಲಿ ನೋಂದಾಯಿಸಿಕೊಂಡಿದ್ದಾರೆ. ಪೋರ್ಟಲ್ನಲ್ಲಿ ನೋಂದಾಯಿಸಿಕೊಂಡವರು ಲಭ್ಯವಿರುವ ಆಯ್ಕೆಗಳಿಂದ ತಮ್ಮ ಆದ್ಯತೆಯ ಮಾರಾಟಗಾರರು ಅಥವಾ ಏಜೆನ್ಸಿಯನ್ನು ಆಯ್ಕೆ ಮಾಡಿಕೊಡು ತಮ್ಮ ಪಾಲಿನ ವಂತಿಗೆಯನ್ನು ಆನ್ಲೈನ್ ಮೂಲಕ ಪಾವತಿಸುವ ಮೂಲಕ ಪ್ರಕ್ರಿಯೆಯನ್ನು ಪೂರ್ಣಗೊಳಿಸಬಹುದಾಗಿದೆ. ವಂತಿಗೆ ಪಾವತಿಗೆ ಡಿ.31 ಕೊನೆಯ ದಿನಾಂಕ ಆಗಿದ್ದು, ಪ್ರಮುಖ ಪತ್ರಿಕೆಗಳಲ್ಲಿ ಜಾಹೀರಾತಿನ ಮೂಲಕ ಕ್ರೆಡಲ್ ಈ ವಿಷಯವನ್ನು ರೈತರ ಗಮನಕ್ಕೆ ತಂದಿದೆ. ಅಂತಿಮ ದಿನಾಂಕದೊಳಗೆ ಪಾವತಿ ಮಾಡಲು ವಿಫಲವಾದರೆ ಯೋಜನೆಗೆ ಅನರ್ಹರಾಗುತ್ತಾರೆ ಎಂದು ಸ್ಪಷ್ಟಪಡಿಸಲಾಗಿದೆ. ನೀರಾವರಿ ಪಂಪ್ಸೆಟ್ಗಳಿಗೆ ಸೌರಶಕ್ತಿಯನ್ನು ಕೈಗೆಟುಕುವ ದರಲ್ಲಿ ಒದಗಿಸುವ ಮೂಲಕ ರೈತರ ಸಬಲೀಕರಣಗೊಳಿಸುವುದು ಕುಸುಮ್ ಬಿ ಯೋಜನೆಯ ಮೂಲ ಉದ್ದೇಶವಾಗಿದೆ. ಸಹಾಯವಾಣಿಯನ್ನು ಸ್ಥಾಪಿಸುವ ಮೂಲಕ, ಅರ್ಜಿ ಸಲ್ಲಿಸಿರುವ ಅರ್ಹ ರೈತರಿಗೆ ಸಕಾಲಿಕ ಮಾರ್ಗದರ್ಶನ ಮತ್ತು ಬೆಂಬಲವನ್ನು ಒದಗಿಸಲಾಗುತ್ತದೆ. ಆನ್ಲೈನ್ ಅರ್ಜಿ ಸಲ್ಲಿಕೆ ವೇಳೆ ರೈತರು ಎದುರಿಸಬಹುದಾದ ಗೊಂದಲವನ್ನು ನೇರ ಸಂಪರ್ಕದಿಂದ ನಿವಾರಿಸಲಾಗುತ್ತದೆ. ಮಧ್ಯವರ್ತಿಗಳಿಲ್ಲದೆ ಯೋಜನೆ ಪ್ರಯೋಜನಗಳನ್ನು ಪಡೆಯಬಹುದು. ರೈತರ ಕಲ್ಯಾಣದ ಜತೆಗೆ ಕೃಷಿ ಕ್ಷೇತ್ರದಲ್ಲೂ ನವೀಕರಿಸಬಹುದಾದ ಇಂಧನದ ಬಳಕೆಯನ್ನು ಉತ್ತೇಜಿಸಲು ಸರಕಾರ ಬದ್ಧವಾಗಿದೆ. -ಕೆ.ಜೆ. ಜಾರ್ಜ್,ಇಂಧನ ಸಚಿವ ರೈತರಿಗಾಗಿಯೇ ತೆರೆದಿರುವ ಈ ಸಹಾಯವಾಣಿ ಸ್ಥಾಪನೆಯು ಪಿಎಂ ಕುಸುಮ್ ಬಿ ಯೋಜನೆಯ ಸಮರ್ಪಕ ಅನುಷ್ಠಾನಕ್ಕೆ ಇಂಧನ ಇಲಾಖೆಯ ಬದ್ಧತೆಗೆ ಸಾಕ್ಷಿಯಾಗಿದೆ. ರೈತರ ಗೊಂದಲ ಪರಿಹರಿಸಿ, ವ್ಯವಸ್ಥೆಯಲ್ಲಿ ವಿಶ್ವಾಸವನ್ನು ಬಲಪಡಿಸುತ್ತದೆ. ಸುಸ್ಥಿರ ಇಂಧನ ಬಳಕೆ ಮತ್ತು ರೈತ ಕೇಂದ್ರಿತ ಯೋಜನೆಗಳನ್ನು ಸಾಕಾರಗೊಳಿಸಲು ಸಿಬ್ಬಂದಿ ಜತೆ ಕೃಷಿಕರು ಸಹಕರಿಸಬೇಕು. -ಗೌರವ್ ಗುಪ್ತ, ಅಪರ ಮುಖ್ಯ ಕಾರ್ಯದರ್ಶಿ,ಇಂಧನ ಇಲಾಖೆ ಪಿಎಂ ಕುಸುಮ್ ಬಿ ಯೋಜನೆಯ ಅನುಷ್ಠಾನದ ಈ ನಿರ್ಣಾಯಕ ಹಂತದಲ್ಲಿ ರೈತರ ಅನುಕೂಲಕ್ಕಾಗಿ ಸಹಾಯವಾಣಿ ಕೇಂದ್ರವನ್ನು ತೆರೆಯಲಾಗಿದೆ. ನಮ್ಮ ಸಮರ್ಪಿತ ತಂಡವು ತಾಂತ್ರಿಕ ಸಮಸ್ಯೆಗಳು, ಪಾವತಿ-ಸಂಬಂಧಿತ ಗೊಂದಲಗಳು ಮತ್ತು ಅರ್ಜಿ ಕುರಿತ ಯಾವುದೇ ಅನುಮಾನಗಳನ್ನು ಪರಿಹರಿಸಲು ದಿನದ 24 ಗಂಟೆಯೂ ಕೆಲಸ ಮಾಡುತ್ತಿದೆ. ರೈತರು ಮಾಹಿತಿ ಕೊರತೆ ಅಥವಾ ಕಾರ್ಯವಿಧಾನದ ತೊಡಕಿನಿಂದ ಯೋಜನೆಯ ಲಾಭದಿಂದ ವಂಚಿತರಾಗದಂತೆ ನೋಡಿಕೊಳ್ಳಲಾಗುವುದು. -ಕೆ.ಪಿ.ರುದ್ರಪ್ಪಯ್ಯ, ಕ್ರೆಡಲ್ ವ್ಯವಸ್ಥಾಪಕ ನಿರ್ದೇಶಕ ಕುಸುಮ್ ಯೋಜನೆಯ ಕಾಂಪೊನೆಂಟ್ ಬಿ ನೀರಾವರಿಗೆ ಸಾಂಪ್ರದಾಯಿಕ ವಿದ್ಯುತ್ ಅವಲಂಬನೆಯನ್ನು ಕಡಿಮೆ ಮಾಡಿ, ಸೌರಶಕ್ತಿಯ ಬಳಕೆ ಮೂಲಕ ರೈತರು ಸ್ವಾವಲಂಬನೆ ಸಾಧಿಸಲು ಈ ಪ್ರಧಾನ ಮಂತ್ರಿ ಕಿಸಾನ್ ಊರ್ಜಾ ಸುರಕ್ಷಾ ಏವಂ ಉತ್ಥಾನ್ ಮಹಾಭಿಯಾನ್ (ಕುಸುಮ್) ರೂಪಿಸಲಾಗಿದೆ. ಕುಸುಮ್ ಬಿ ಯೋಜನೆಯಡಿ ಜಾಲ ಮುಕ್ತ ಸೌರ ಕೃಷಿ ಪಂಪ್ಸೆಟ್ ಅಳವಡಿಸಲು ಒತ್ತು ನೀಡಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ರಾಜ್ಯ ಸರಕಾರವು ಸಬ್ಸಿಡಿ ಮೊತ್ತವನ್ನು ಶೇ.30ರಿಂದ 50ಕ್ಕೆ ಏರಿಸಿದೆ. ಕೇಂದ್ರ ಸರಕಾರ ಶೇ.30ರಷ್ಟು ಸಬ್ಸಿಡಿ ಒದಗಿಸುತ್ತಿದ್ದು, ರೈತರು ಪಾವತಿಸಬೇಕಿರುವುದು ಶೇ.20ರಷ್ಟು ಮಾತ್ರ. ಯೋಜನೆಯಡಿ ರೈತರಿಗೆ ಸೌರ ಫಲಕಗಳು, ಸಬ್ಮರ್ಸಿಬಲ್, ಸರ್ಫೇಸ್ ಡಿಸಿ ಪಂಪ್ಗಳು, ಮೌಂಟಿಂಗ್ ಸ್ಟ್ರಕ್ಚರ್, ಪ್ಯಾನಲ್ ಬೋರ್ಡ್, ಪೈಪ್ ಮತ್ತು ಕೇಬಲ್ ಸರಬರಾಜು ಮಾಡಲಾಗುತ್ತದೆ. ಸೋಲಾರ್ ಪಂಪ್ಗಳನ್ನು 5 ವರ್ಷಗಳ ಕಾಲ ಪೂರೈಕೆದಾರರೇ ಉಚಿತವಾಗಿ ನಿರ್ವಹಣೆ ಮಾಡಲಿದ್ದಾರೆ. ಸೌರ ಪಂಪ್ಸೆಟ್ಗಳ ಸ್ಥಾಪನೆ ಸುಲಭವಾಗಿದ್ದು, ದೀರ್ಘಕಾಲ ಬಾಳಿಕೆ ಬರುವ ಕಾರಣದಿಂದ ಗ್ರಾಮೀಣ ಪ್ರದೇಶಗಳಲ್ಲೂ ಸೌರ ತಂತ್ರಜ್ಞಾನ ಹೆಚ್ಚು ಜನಪ್ರಿಯವಾಗುತ್ತಿದೆ. ಸೌರ ಪಂಪ್ಸೆಟ್ ಬಳಕೆಯಿಂದ 8 ಗಂಟೆಗಳ ಕಾಲ ಹಗಲಿನ ವೇಳೆಯಲ್ಲಿ ವಿದ್ಯುತ್ ಪೂರೈಕೆಯಾಗಲಿದೆ.
ಯಾದಗಿರಿ | ಪ್ರಜಾಪ್ರಭುತ್ವ ಸಂರಕ್ಷಣೆಯಲ್ಲಿ ಪತ್ರಿಕೋದ್ಯಮದ ಪಾತ್ರ ಮಹತ್ತರ : ಬಿ.ವೆಂಕಟಸಿಂಗ್
ಪತ್ರಕರ್ತರ ಸಂಘದ ನೂತನ ಪದಾಧಿಕಾರಿಗಳ ಪದಗ್ರಹಣ
ಕ್ರೀಡಾ ಪ್ರಾಧಿಕಾರಗಳಿಗೆ ಇಂಟರ್ನ್ ಗಳ ನೇಮಕ; ಆಯ್ಕೆ ಮತ್ತು ತರಬೇತಿ ಪ್ರಕ್ರಿಯೆ ಹೇಗಿರುತ್ತದೆ?
ಯುವಜನ ಮತ್ತು ಕ್ರೀಡಾ ಸಚಿವಾಲಯ ಮತ್ತು ಅದರ ಸ್ವಾಯತ್ತ ಸಂಸ್ಥೆಗಳಿಗೆ ಸಮಗ್ರ ತರಬೇತಿ ನೀತಿ ಎಂದು ಅಧಿಕೃತವಾಗಿ ಹೆಸರಿಸಲಾಗಿರುವ ಯೋಜನೆಯು ಕ್ರೀಡೆಯ ವಿವಿಧ ಕ್ಷೇತ್ರಗಳಿಂದ ಯುವ ವೃತ್ತಿಪರರು ಮತ್ತು ವಿದ್ಯಾರ್ಥಿಗಳಿಗೆ ಆಡಳಿತಾತ್ಮಕ ತರಬೇತಿ ನೀಡುವ ಉದ್ದೇಶವನ್ನು ಹೊಂದಿದೆ ಕ್ರೀಡಾ ಸಚಿವಾಲಯವು ವಾರ್ಷಿಕ 5.30 ಕೋಟಿ ರೂ. ವೆಚ್ಚದಲ್ಲಿ ತರಬೇತಿ ಕಾರ್ಯಕ್ರಮವನ್ನು ಘೋಷಿಸಿದೆ. ತರಬೇತಿ ಕಾರ್ಯಕ್ರಮದಲ್ಲಿ ಪ್ರತಿ ವರ್ಷ ಎರಡು ಬಾರಿ ನೇಮಕಾತಿ ಆಗಲಿದೆ. ನೇಮಕಗೊಂಡವರು ಕ್ಷೇತ್ರದ ತಜ್ಞರಿಂದ ರಚನಾತ್ಮಕ ತರಬೇತಿ ಪಡೆಯುತ್ತಾರೆ. ಯುವಜನ ಮತ್ತು ಕ್ರೀಡಾ ಸಚಿವಾಲಯ ಕೆಲವು ಪ್ರಮುಖ ಕ್ರೀಡಾ ಸಂಸ್ಥೆಗಳಿಗೆ ಸಮಗ್ರ ತರಬೇತಿ ನೀತಿಯನ್ನು ಜಾರಿಗೆ ತಂದಿದೆ. ಕ್ರೀಡಾ ಆಡಳಿತ, ಕ್ರೀಡಾ ವಿಜ್ಞಾನ ಮತ್ತು ಸಂಬಂಧಿತ ಕ್ಷೇತ್ರದಲ್ಲಿ ಯುವ ವೃತ್ತಿಪರರನ್ನು ನೇಮಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ. ಈ ಯೋಜನೆಯಡಿ ಪ್ರತಿ ವರ್ಷ 452 ತರಬೇತಿ ಸ್ಥಾನಗಳನ್ನು ತುಂಬಲಾಗುವುದು. ಆಯ್ಕೆಯಾದ ಅಭ್ಯರ್ಥಿಗಳು ತಿಂಗಳಿಗೆ ರೂ 20,000 ಸ್ಟೈಪಂಡ್ ಪಡೆಯಲಿದ್ದಾರೆ. ಈ ಯೋಜನೆಯ ಒಟ್ಟು ಬಜೆಟ್ 5.30 ಕೋಟಿ ರೂ! “ಕ್ರೀಡೆಯ ಮೂಲಕ ರಾಷ್ಟ್ರನಿರ್ಮಾಣದ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಜಾರಿಗೆ ತರಲಾಗುತ್ತಿದೆ, ಕಾಲೇಜು ಮತ್ತು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಪ್ರಮುಖವಾಗಿ ಈ ಯೋಜನೆಯ ಲಾಭ ಪಡೆಯಲಿದ್ದಾರೆ. ರಾಷ್ಟ್ರೀಯ ಕ್ರೀಡಾ ನೀತಿ ಮತ್ತು ಖೇಲೋ ಭಾರತ್ ನೀತಿ 2025ರ ಅಡಿಯಲ್ಲಿ ಈ ಯೋಜನೆ ಜಾರಿಗೆ ಬರಲಿದೆ” ಎಂದು ಯುವಜನ ಮತ್ತು ಕ್ರೀಡಾ ಸಚಿವರಾದ ಡಾ ಮನ್ಸುಕ್ ಮಾಂಡವೀಯ ಹೇಳಿದ್ದಾರೆ. ►ಏನಿದು ಕ್ರೀಡಾ ಸಚಿವಾಲಯದ ತರಬೇತಿ ಕಾರ್ಯಕ್ರಮ? ಯುವಜನ ಮತ್ತು ಕ್ರೀಡಾ ಸಚಿವಾಲಯ (MYAS) ಮತ್ತು ಅದರ ಸ್ವಾಯತ್ತ ಸಂಸ್ಥೆಗಳಿಗೆ ಸಮಗ್ರ ತರಬೇತಿ ನೀತಿ ಎಂದು ಅಧಿಕೃತವಾಗಿ ಹೆಸರಿಸಲಾಗಿರುವ ಯೋಜನೆಯು ಕ್ರೀಡೆಯ ವಿವಿಧ ಕ್ಷೇತ್ರಗಳಿಂದ ಯುವ ವೃತ್ತಿಪರರು ಮತ್ತು ವಿದ್ಯಾರ್ಥಿಗಳಿಗೆ ರಚನಾತ್ಮಕ ತರಬೇತಿ ನೀಡುವ ಉದ್ದೇಶವನ್ನು ಹೊಂದಿದೆ. ಸಚಿವಾಲಯ ಹೇಳಿರುವ ಪ್ರಕಾರ, ಕ್ರೀಡಾ ಆಡಳಿತ, ಕ್ರೀಡಾ ವಿಜ್ಞಾನ, ಆ್ಯಂಟಿ-ಡೋಪಿಂಗ್ ಸಾಮರ್ಥ್ಯವನ್ನು ಬೆಳೆಸುವ ಉದ್ದೇಶವಿದೆ. ಪಂದ್ಯಾವಳಿ ಆಯೋಜಿಸುವುದು ಮತ್ತು ಅಥ್ಲೀಟ್ಗಳಿಗೆ ಬೆಂಬಲಿಸುವ ಸೇವೆಗಳನ್ನು ನಿರ್ವಹಿಸಲಿದ್ದಾರೆ. ತರಬೇತಿ ಪಡೆಯುವವರು ನೀತಿ ನಿರೂಪಣೆಯ ಕೆಲಸ ಮತ್ತು ಮೈದಾನದಲ್ಲಿ ಅದನ್ನು ಅಳವಡಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿದ್ದಾರೆ. ಭಾರತದ ಕ್ರೀಡಾ ಪರಿಸರ ವ್ಯವಸ್ಥೆಯು ಸಾಂಸ್ಥಿಕವಾಗಿ ಹೇಗೆ ಕಾರ್ಯನಿರ್ವಹಿಸುತ್ತದೆ ಎನ್ನುವ ಒಳನೋಟವನ್ನು ಅವರು ಪಡೆದುಕೊಳ್ಳಲಿದ್ದಾರೆ ಮತ್ತು ಜಾರಿಗೆ ತರಲಿದ್ದಾರೆ. ►ತರಬೇತಿ ಪಡೆಯುವವರು ಎಲ್ಲಿ ನೇಮಕಗೊಳ್ಳಲಿದ್ದಾರೆ? ತರಬೇತಿ ಪಡೆಯುವವರು ಯುವಜನ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯ ಮತ್ತು ಅದರ ಸ್ವಾಯತ್ತ ಮಂಡಳಿಗಳಲ್ಲಿ ಕೆಲಸ ಮಾಡಲಿದ್ದಾರೆ. ಭಾರತೀಯ ಕ್ರೀಡಾ ಪ್ರಾಧಿಕಾರ (ಎಸ್ಎಐ), ರಾಷ್ಟ್ರೀಯ ಆ್ಯಂಟಿ-ಡೋಪಿಂಗ್ ಏಜೆನ್ಸಿ (ಎನ್ಎಡಿಎ), ರಾಷ್ಟ್ರೀಯ ಡೋಪ್ ಟೆಸ್ಟಿಂಗ್ ಲ್ಯಾಬೋರೇಟರಿ (ಎನ್ಡಿಟಿಎಲ್) ಮೊದಲಾದೆಡೆ ತರಬೇತಿ ಪಡೆದವರು ಕೆಲಸ ಮಾಡಲಿದ್ದಾರೆ. ಕ್ರೀಡಾ ವ್ಯವಸ್ಥಾಪನೆ, ಕ್ರೀಡಾ ವಿಜ್ಞಾನ, ಪಂದ್ಯಾವಳಿ ಆಯೋಜನೆ, ಮಾಧ್ಯಮ ಮತ್ತು ಸಂವಹನ, ಕಾನೂನು ವ್ಯವಹಾರಗಳು, ಅಂತಾರಾಷ್ಟ್ರೀಯ ಕ್ರೀಡಾ ಆಡಳಿತ ಮತ್ತು ಆ್ಯಂಟಿ-ಡೋಪಿಂಗ್ ಮೊದಲಾದ 20 ಕಾರ್ಯಕಾರಿ ಕ್ಷೇತ್ರಗಳಲ್ಲಿ ತರಬೇತಿ ಪಡೆಯುವವರು ಕಾರ್ಯನಿರ್ವಹಿಸಲಿದ್ದಾರೆ. ಸಚಿವಾಲಯ ಹೇಳಿರುವ ಪ್ರಕಾರ ತರಬೇತಿ ಪಡೆಯುವವರು ನೇರವಾಗಿ ಖೇಲೋ ಇಂಡಿಯಾ, ಟಾರ್ಗೆಟ್ ಒಲಿಂಪಿಕ್ ಪೋಡಿಯಂ ಯೋಜನೆ (ಟಿಒಪಿಎಸ್), ಮತ್ತು ಟಾರ್ಗೆಟ್ ಏಷ್ಯನ್ ಗೇಮ್ಸ್ ಗ್ರೂಪ್ (ಟಿಎಜಿಜಿ)ಗಳಲ್ಲಿ ಕೆಲಸ ಮಾಡಲಿದ್ದಾರೆ. ಕ್ಷೇತ್ರವಾರು ಅನುಭವದಲ್ಲಿ ಎಸ್ಎಐ, ಪ್ರಾದೇಶಿಕ ಕೇಂದ್ರಗಳು ಹಾಗೂ ರಾಷ್ಟ್ರೀಯ ಸೆಂಟರ್ ಆಫ್ ಎಕ್ಸ್ಲೆನ್ಸ್ನಲ್ಲಿ ಕೆಲಸ ಮಾಡುವುದು ಸೇರಿದೆ. ಕ್ರೀಡಾ ವಿಜ್ಞಾನ ಮತ್ತು ಸ್ವಚ್ಛ ಕ್ರೀಡೆಗೆ ವಿಶೇಷವಾಗಿ ಒತ್ತು ನೀಡಲಾಗಿದೆ. ನಾಡಾದಲ್ಲಿ ತರಬೇತಿ ಪಡೆಯುವವರು ಆ್ಯಂಟಿ-ಡೋಪಿಂಗ್ ಜಾಗೃತಿ ಮೂಡಿಸುವಲ್ಲಿ ಸಹಕರಿಸಲಿದ್ದಾರೆ. ಕಾನೂನು ಅನುಸರಣೆ, ಪ್ರಕರಣಗಳನ್ನು ನಿರ್ವಹಿಸುವುದು, ನೀತಿಗೆ ಬೆಂಬಲಿಸುವುದು ಮೊದಲಾದ ಜವಾಬ್ದಾರಿ ಹೊರಲಿದ್ದಾರೆ. ಎನ್ಡಿಟಿಎಲ್ನಲ್ಲಿ ತರಬೇತಿ ಪಡೆಯುವವರು ಅತ್ಯಾಧುನಿಕ ಪ್ರಯೋಗಾಲಯದ ಆಧಾರಿತ ಆ್ಯಂಟಿ-ಡೋಪಿಂಗ್ ಪ್ರಕ್ರಿಯೆಗಳ ಜ್ಞಾನ ಗಳಿಸಲಿದ್ದಾರೆ. ಮಾದರಿ ವಿಶ್ಲೇಷಣೆ ಮತ್ತು ಸಂಶೋಧನೆಯಲ್ಲಿ ಕೆಲಸ ಮಾಡಲಿದ್ದಾರೆ. ಬಜೆಟ್ ಹಂಚಿಕೆ: 5.30 ಕೋಟಿ ರೂ. ಆಯವ್ಯಯ ಅಧಿಕೃತ ಬಜೆಟ್ ಬ್ರೇಕಪ್ ಪ್ರಕಾರ ಸರ್ಕಾರವು ಈ ಯೋಜನೆಗೆ ವಾರ್ಷಿಕವಾಗಿ 5.30 ರೂ. ಕೋಟಿಯನ್ನು ಮೀಸಲಿಡಲಿದೆ. ಇದರಲ್ಲಿ ತರಬೇತಿ ಪಡೆಯುವ 452 ಸಿಬ್ಬಂದಿಗಳಿಗೆ (ಇಂಟರ್ನ್) ಸ್ಟೈಪಂಡ್ ಕೂಡ ನೀಡಲಾಗುವುದು.ಯುವಜನ ಮತ್ತು ಕ್ರೀಡಾ ಸಚಿವಾಲಯಕ್ಕೆ 48 ಲಕ್ಷ ರೂ. ವೆಚ್ಚದಲ್ಲಿ 40 ಮಂದಿಯನ್ನು ನೇಮಿಸಿಕೊಳ್ಳಲಾಗುವುದು. ಭಾರತೀಯ ಕ್ರೀಡಾ ಪ್ರಾಧಿಕಾರಕ್ಕೆ 1.80 ಕೋಟಿ ರೂ. ವೆಚ್ಚದಲ್ಲಿ 160 ಮಂದಿ ತರಬೇತಿ ಪಡೆಯುವವರನ್ನು ನೇಮಿಸಲಾಗುವುದು. ಇದರಲ್ಲಿ ವಿಶ್ವವಿದ್ಯಾಲಯ ಮಟ್ಟದ ಕ್ರೀಡಾ ಚಟುವಟಿಕೆ ನಿಭಾಯಿಸುವುದು, ಮಾಧ್ಯಮ ನಿರ್ವಹಣೆಯಂತಹ ಹೊಣೆಗಾರಿಕೆಯೂ ಸೇರಿದೆ. ಎಸ್ಎಐನ ಕ್ರೀಡಾ ವಿಜ್ಞಾನ ವಿಭಾಗದಲ್ಲಿ 2.54 ಕೋಟಿ ರೂ. ವೆಚ್ಚದಲ್ಲಿ 212 ಇಂಟರ್ನ್ಗಳನ್ನು ನೇಮಿಸಿಕೊಳ್ಳಲಾಗುವುದು. ಎಸ್ಎಐ ಕೇಂದ್ರ ಕಚೇರಿ, ರಾಷ್ಟ್ರೀಯ ಎಕ್ಸ್ಲೆನ್ಸ್ ಕೇಂದ್ರಗಳು, ಪ್ರಾದೇಶಿಕ ಕೇಂದ್ರಗಳು ಮತ್ತು ಕ್ರೀಡಾ ವಿಜ್ಞಾನ ಸೌಲಭ್ಯಗಳು, ಎನ್ಐಎಸ್ಎಸ್ ಪಟಿಯಾಲ ಮತ್ತು ಎಸ್ಎಐ ಎನ್ಎಸ್ಎಸ್ಸಿ ಬೆಂಗಳೂರು ಮೊದಲಾದೆಡೆ ನೇಮಿಸಿಕೊಳ್ಳಲಾಗುವುದು. ರಾಷ್ಟ್ರೀಯ ಆ್ಯಂಟಿ-ಡೋಪಿಂಗ್ ಏಜೆನ್ಸಿ (ನಾಡಾ)ಯಲ್ಲಿ 24 ಲಕ್ಷ ರೂ.ನಲ್ಲಿ 20 ಇಂಟರ್ನ್ಗಳನ್ನು ನೇಮಿಸಿಕೊಳ್ಳಲಾಗುವುದು. ಪ್ರತಿ ವರ್ಷ ಆರು ತಿಂಗಳ ಅವಧಿಯ ಎರಡು ತಂಡಗಳನ್ನು ನೇಮಿಸಿಕೊಳ್ಳಲಾಗುವುದು. ರಾಷ್ಟ್ರೀಯ ಡೋಪ್ ಟೆಸ್ಟಿಂಗ್ ಲ್ಯಾಬೋರೇಟರಿಗೆ (ಎನ್ಡಿಟಿಎಲ್) 20 ಲಕ್ಷ ರೂ.ಗೆ 20 ಇಂಟರ್ನ್ಗಳನ್ನು ನೇಮಿಸಿಕೊಳ್ಳಲಾಗುವುದು. ಪ್ರತಿ ವರ್ಷ ಆರು ತಿಂಗಳ ಅವಧಿಯ ಎರಡು ತಂಡಗಳನ್ನು ನೇಮಿಸಿಕೊಳ್ಳಲಾಗುವುದು. ►ಆಯ್ಕೆ ಮತ್ತು ತರಬೇತಿ ಪ್ರಕ್ರಿಯೆ ಹೇಗೆ? ಪ್ರತಿ ವರ್ಷ ಜನವರಿ ಮತ್ತು ಜೂನ್ನಲ್ಲಿ ಎರಡು ಬಾರಿ ನೇಮಕಾತಿ ಮಾಡಿಕೊಳ್ಳಲಾಗುವುದು. ಆಯ್ಕೆಯಾದ ಇಂಟರ್ನ್ಗಳು ರಚನಾತ್ಮಕ ಆನ್ಬೋರ್ಡಿಂಗ್ ತರಬೇತಿ, ಕ್ಷೇತ್ರದ ತಜ್ಞರಿಂದ ತರಬೇತಿ ಪಡೆಯಲಿದ್ದಾರೆ. ನೀತಿ ನಿರೂಪಣೆ ಮತ್ತು ಅನುಷ್ಟಾನಕ್ಕೆ ಸಂಬಂಧಿಸಿ ತರಬೇತಿ ಪಡೆಯಲಿದ್ದಾರೆ. ಸಕ್ರಿಯವಾಗಿ ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸಲಿದ್ದಾರೆ.
ಶಹಾಬಾದ್ | ದೇಶದ ರೈತರನ್ನು ಗೌರವಿಸುವುದು ನಮ್ಮ ಆದ್ಯ ಕರ್ತವ್ಯ : ವಿನೋದ ಪೊದ್ದಾರ
ಶಹಾಬಾದ: ರೈತ ಮತ್ತು ಸೈನಿಕರು ದೇಶದ ಬೆನ್ನೆಲುಬಾಗಿದ್ದು, ಅವರನ್ನು ಗೌರವಿಸುವುದು ನಮ್ಮ ಆದ್ಯ ಕರ್ತವ್ಯ ಎಂದು ಎಸ್ಬಿಐ ಕ್ಷೇತ್ರಾಧಿಕಾರಿ ವಿನೋದ ಪೊದ್ದಾರ ಹೇಳಿದರು. ಅವರು ಹೊನಗುಂಟಾ ಗ್ರಾಮದಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ವತಿಯಿಂದ ಆಯೋಜಿಸಿಸಲಾದ ರೈತ ದಿನಾಚರಣೆ ಕಾರ್ಯಕ್ರಮದಲ್ಲಿ ರೈತರನ್ನು ಗೌರವಿಸಿ ಮಾತನಾಡಿದರು. ರೈತ ಬೆಳೆದರೆ ಮಾತ್ರ ಭೂಮಿಯ ಮೇಲಿರುವ ಎಲ್ಲರಿಗೂ ಆಹಾರ. ಅವರನ್ನು ನಾವು ದೇವರಂತೆ ಕಾಣಬೇಕು. ಆದರೆ ಇಂದು ಕೃಷಿ ಸಮಾಜವನ್ನು ಅತ್ಯಂತ ನಿಕೃಷ್ಠ ಭಾವನೆಯಿಂದ ಕಾಣುತ್ತಿದ್ದಾರೆ. ಇದು ಒಳ್ಳೆಯ ಬೆಳವಣಿಗೆಯೂ ಅಲ್ಲ. ಅಲ್ಲದೇ ಇದೊಂದು ಆತಂಕಕಾರಿ ಸಂದೇಶವಾಗಿದೆ. ಅನ್ನ ನೀಡುವ ರೈತ ನಮ್ಮ ಪಾಲಿಗೆ ದೇವರು ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ನಾವು ತಿನ್ನುವ ಒಂದೊಂದು ಅಗಳಿನಲ್ಲಿ ಅವರ ಶ್ರಮವಿದೆ. ಅದು ರೈತ ನಮಗೆ ಕೊಟ್ಟ ಬಿಕ್ಷೆ ಎಂಬುದನ್ನು ಯಾರು ಮರೆಯಕೂಡದು. ಅವರನ್ನು ಗೌರವಿಸುವುದು ನಮ್ಮ ಭಾಗ್ಯ ಎಂದು ಹೇಳಿದರು. ರವಿಕುಮಾರ ಅಲ್ಲಂಶೆಟ್ಟಿ ಮಾತನಾಡಿದರು. ಸಿದ್ದು ವಾರಕರ್, ಸಂಗಣ್ಣ ಇಜೇರಿ, ಮಾರ್ತಂಡ ಬುರ್ಲಿ, ಲಕ್ಷ್ಮಣ್ ಕೊಡಸಾ, ರಾಮಲಿಂಗ ಗುಡೂರ,ರಾಮು ಬಂಗಿ, ಬಸಲಿಂಗ, ನಾಗರಾಜ ಕುಂಬಾರ ಸೇರಿದಂತೆ ಗ್ರಾಮಸ್ಥರು ಹಾಜರಿದ್ದರು.
ಜೋಕಟ್ಟೆ ಗಂಭೀರ ಖಾಯಿಲೆಗಳ ಗೂಡಾಗಿದೆ: ನಾಗರಿಕ ಹೋರಾಟ ಸಮಿತಿ ಆಕ್ರೋಶ
ಸುರತ್ಕಲ್ : ಜೋಕಟ್ಟೆಯಲ್ಲಿ ಎಂಆರ್ಪಿಎಲ್ ನಿರ್ಮಿಸಿದ ನರಕ, ಮನೆಯ ಒಳಗಡೆಗೆ ಪೆಟ್ ಕೋಕ್ ಪೌಡರ್, ಊರು ಗಂಭೀರ ಖಾಯಿಲೆಗಳ ಗೂಡಾಗಿದೆ ಎಂದು ನಾಗರಿಕ ಹೋರಾಟ ಸಮಿತಿ ಜೋಕಟ್ಟೆ ಆಕ್ರೋಶ ವ್ಯಕ್ತಪಡಿಸಿದೆ. ಉದ್ಯೋಗ ಸೃಷ್ಟಿ, ಸಕಾರಾತ್ಮಕ ಅಭಿವೃದ್ಧಿಯ ಕನಸುಗಳನ್ನು ಬಿತ್ತಿ ತುಳುನಾಡಿನ ಸಾವಿರಾರು ಎಕರೆ ಅಮೂಲ್ಯ ಜಮೀನಿನಲ್ಲಿ ಸಾಮ್ರಾಜ್ಯ ಕಟ್ಟಿಕೊಂಡಿರುವ ಎಂ.ಆರ್.ಪಿ.ಎಲ್. ಉದ್ಯೋಗ ಸೃಷ್ಟಿಸಿದ್ದೂ ಕಡಿಮೆ, ಸ್ಥಳೀಯರಿಗೆ ನೀಡಿದ್ದು ಅತಿ ಕಡಿಮೆ. ಮೊದಲ ಹಂತಗಳಲ್ಲಿ ಜಮೀನು ಕಳೆದು ಕೊಂಡ ಕುಟುಂಬಗಳಿಗೆ ನಿಯಮಗಳ ಕಾರಣಕ್ಕೆ ಉದ್ಯೋಗ ಒದಗಿಸಿದ ಕಂಪೆನಿ ಈಗ ನಾಲ್ಕನೆ ಹಂತದಲ್ಲಿ ಸಾವಿರ ಎಕರೆ ಜಮೀನು ಸ್ವಾಧೀನದ ಸಂದರ್ಭ ಜಮೀನು ಕಳೆದುಕೊಂಡ ಕುಟುಂಬಗಳಿಗೆ ವಿವಿಧ ತಂತ್ರಗಳನ್ನು ಪ್ರಯೋಗಿಸಿ ಉದ್ಯೋಗ ನೀಡುವುದರಿಂದ ಅಧಿಕೃತವಾಗಿಯೆ ಜಾರಿಕೊಳ್ಳುತ್ತಿದೆ ಎಂದಿದೆ. ಅದೇ ಸಂದರ್ಭ ಸುತ್ತಲಿನ ಗ್ರಾಮಗಳನ್ನು ತನ್ನ ಪೆಟ್ರೋಕೆಮಿಕಲ್ ಮಾಲಿನ್ಯದಿಂದ ರೋಗಗಳ ಕೊಂಪೆಯಾಗಿಸಿದೆ. ಅಲ್ಲಿನ ಅಸಹಾಯಕ ಗ್ರಾಮಸ್ಥರ ಬದುಕನ್ನು ನರಕ ಸದೃಶಗೊಳಿಸಿದೆ. ಇಲ್ಲಿ ಕೇಳುವವರೂ ಇಲ್ಲ, ಹೇಳುವವರೂ ಇಲ್ಲ. 2014 ರಲ್ಲಿ ಮೂರನೆ ಹಂತದ ಪೆಟ್ ಕೋಕ್,ಸಲ್ಪರ್ ಘಟಕದಿಂದ ಚಳಿಗಾಲದ ಮಂಜಿನಂತೆ ಅಪಾಯಕಾರಿ ಕೋಕ್,ಸಲ್ಪರ್ ಹುಡಿ ಊರಿನ ಮೇಲೆ, ಬಾವಿಗಳು ಸಹಿತ ನೀರಿನ ಮೂಲಗಳ ಮೇಲೆ, ಮನೆಯ ಅಡುಗೆ ಮನೆ, ಊಟದ ಬಟ್ಟಲಿನ ಮೇಲೆ ಸುರಿಯುವುದು ಶುರುವಾದಾಗ ನಾವು ಪ್ರಬಲ ಹೋರಾಟ ನಡೆಸಿ ಕಂಪೆನಿಯನ್ನು ಮಣಿಸಿದ್ದೆವು. ರಾಜ್ಯ ಸರಕಾರ ಆರು ಅಂಶಗಳ ಪರಿಹಾರ ಕ್ರಮಗಳ ಆದೇಶ ಹೊರಡಿಸಿತ್ತು. ಅದರಲ್ಲಿ ಐದು ಆದೇಶಗಳನ್ನು ಕಂಪೆನಿ ಜಾರಿಗೆ ತಂದಿದೆ ಎಂದು ಹೇಳಿಕೊಳ್ಳುತ್ತಿದೆ. ಆರನೆ ಅಂಶವಾದ ಜನವಸತಿ ಹಾಗೂ ಕಂಪೆನಿಯ ನಡುವೆ ಹಸಿರು ವಲಯ ನಿರ್ಮಿಸುವ ಆದೇಶ ಜಾರಿಗೆ ತರಲು ಸತಾಯಿಸುತ್ತಿದೆ ಎಂದು ಅದು ಆಕ್ರೋಶ ವ್ಯಕ್ತಪಡಿಸಿದೆ. ಐದು ಅಂಶಗಳ ಜಾರಿಯ ತರುವಾಯವೂ ಶಬ್ದ, ವಾಸನೆ (ವಾಯು) ಮಾಲಿನ್ಯ ತೀರಾ ಕಡಿಮೆ ಏನೂ ಆಗಿರಲಿಲ್ಲ. ಸಾಧಾರಣ ಪ್ರಮಾಣದಲ್ಲಿ ಇಳಿಕೆಯಾಗಿತ್ತು. ಆದರೆ, ಅತಿ ಅಪಾಯಕಾರಿ ಕೋಕ್ ಪುಡಿ ಮಂಜಿನಂತೆ ಸುರಿಯು ವುದು ನಿಂತಿತ್ತು. ಗ್ರಾಮಸ್ಥರು ಒಂದಿಷ್ಟು ನೆಮ್ಮದಿಯ ನಿಟ್ಟುಸಿರು ಬಿಟ್ಟರೂ ಚರ್ಮದ ಖಾಯಿಲೆ, ಉಸಿರಾಟದ ಸಮಸ್ಯೆ, ಶ್ವಾಸಕೋಶದ ಖಾಯಿಲೆ, ಹೃದಯದ ಸಮಸ್ಯೆಗಳ ಸಹಿತ ಪೆಟ್ ಕೋಕ್, ಸಲ್ಪರ್ ಸಂಬಂಧಿಸಿ ವಿವಿಧ ಖಾಯಿಲೆಗಳು ಜನರನ್ನು ದೊಡ್ಡ ಪ್ರಮಾಣದಲ್ಲಿ ಕಾಡುತ್ತಿತ್ತು. ಎಂಆರ್ ಪಿಎಲ್ ಕಂಪೆನಿಗಂತು ಲಾಭ ಮಾತ್ರ ಮುಖ್ಯ. ಮಾಲಿನ್ಯ ನಿಯಂತ್ರಣ ಮಂಡಳಿ, ಜಿಲ್ಲಾಡಳಿತ, ಜಿಲ್ಲಾಧಿಕಾರಿ, ಜನಪ್ರತಿನಿಧಿಗಳಿಗೆ ಈ ಕುರಿತು ಕನಿಷ್ಠ ಕಾಳಜಿಯಾದರು ಇರಬೇಕಲ್ಲ ? ಜನತೆಯೂ ಮೈ ಕೊಡವಿ ಮಾತಾಡಬೇಕಲ್ಲ ? ಈ ಮಾರಕ ಪೆಟ್ ಕೋಕ್, ಸಲ್ಪರ್ ಮಾಲಿನ್ಯವನ್ನು ಅನ್ನ, ನೀರು, ಉಸಿರಾಟದ ಜೊತೆಗೆ ಹೊಟ್ಟೆ, ಶ್ವಾಸಕೋಶಕ್ಕೆ ಸೇರಿಸಿಕೊಂಡು ಜನರ ಆರೋಗ್ಯದ ಸ್ಥಿತಿ ಹೇಗಿರಬಹುದು, ಮಕ್ಕಳ ಆರೋಗ್ಯ ಏನಾಗಿರ ಬೇಡ ಎಂದು ಹೋರಾಟ ಸಮಿತಿ ಜಿಲ್ಲಾಡಳಿತವನ್ನು ಪ್ರಶ್ನಿಸಿದೆ. ಮಾತಾಡಬೇಕಾದವರು, ಜನರ ಆರೋಗ್ಯ, ಜೀವ ರಕ್ಷಿಸಬೇಕಾದವರು ಯಾರು ? ಎಂಆರ್ಪಿಎಲ್ ನ ವೇದಿಕೆಗಳಲ್ಲಿ ಮೆರೆಯುವವರು, ಅವರ ಕೊಡುಗೆಗಳನ್ನು ಕೊಂಡಾಡುವವರಿಗೆ ಎಂಆರ್ ಪಿ ಎಲ್ ಸೃಷ್ಟಿಸಿರುವ ಈ ನರಕಗಳು ಕಣ್ಣೆಗೆ ಬೀಳುವುದು ಯಾವಾಗ ಎಂದು ಅದು ಖಾರವಾಗಿ ತನ್ನ ಆಕ್ರೋಶವ್ಯಕ್ತಪಡಿಸಿದೆ. ಈ ಸಂಬಂಧ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ನೀಡಿದ ನಾಗರಿಕ ಹೋರಾಟ ಸಮಿತಿ ಜೋಕಟ್ಟೆ ಇದರ ಸಂಚಾಲಕ ಮುನೀರ್ ಕಾಟಿಪಳ್ಳ ಅವರು, ಜೋಕಟ್ಟೆಯ ನಲ್ಕೆಮಾರ್ ಪ್ರದೇಶಕ್ಕೆ ಹೋರಾಟ ಸಮಿತಿಯ ಪ್ರಮುಖರ ಜೊತೆ ಭೇಟಿ ನೀಡಿದಾಗ ಪೆಟ್ ಕೋಕ್ನ ಪೌಡರ್ ಮನೆಯ ಒಳಗಡೆ, ತೆರೆದ ಬಾವಿಗಳು, ಟೆರೇಸ್ ಗಳ ಮೇಲೆ, ಕಿಟಕಿಯ ಸಂಧಿಗಳಲ್ಲಿ ದಟ್ಟವಾಗಿ ಕೂತಿರುವುದನ್ನು ಸ್ಥಳೀಯರು ತೋರಿಸಿದರು. ಇದೇ ತೆರೆದ ಬಾವಿಯ ನೀರು ಕುಡಿದು ಬದುಕು ವ ಅಸಹಾಯಕತೆಯನ್ನು ಹೇಳಿಕೊಂಡರು. ತಮ್ಮ ದೂರು ಕೇಳಲು ಯಾರೂ ಸಿದ್ದರಿಲ್ಲದ ಹತಾಷ ಪರಿಸ್ಥಿತಿಯನ್ನು ನಮ್ಮ ಮುಂದಿಟ್ಟರು ಎಂದು ನಾಗರಿಕ ಹೋರಾಟ ಸಮಿತಿ ಜೋಕಟ್ಟೆಯ ಸಂಚಾಲಕ ಮುನೀರ್ ಕಾಟಿಪಳ್ಳ ಅಸಮಾಧ ವ್ಯಕ್ತಪಡಿಸಿದರು.
ಅರಾವಳಿ ಪರ್ವತ ಜನಾಂದೋಲನಕ್ಕೆ ಜಯ: ಹೊಸ ಗಣಿಗಾರಿಕೆ ಇಲ್ಲ ಎಂದ ಕೇಂದ್ರ ಸರ್ಕಾರ
ನವ ದೆಹಲಿ: ದೇಶದಲ್ಲಿ ಈಚೆಗೆ ಭಾರೀ ಸದ್ದು ಮಾಡಿದ್ದ ಹಾಗೂ ಜನಾಂದೋಲನಕ್ಕೆ ಕಾರಣವಾಗಿದ್ದ ಅರಾವಳಿ ಗಣಿಗಾರಿಕೆ ವಿಚಾರದಲ್ಲಿ ಕೇಂದ್ರ ಸರ್ಕಾರವು ಕೊನೆಗೂ ಜನರ ಆಂದೋಲನಕ್ಕೆ ಮಣಿದಿದೆ. ರಾಜಸ್ಥಾನ ಸೇರಿದಂತೆ ಉತ್ತರ ಭಾರತದ ನಾಲ್ಕು ರಾಜ್ಯಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದ್ದಂತಹ ಅರಾವಳಿ ಗಣಿಗಾರಿಕೆ ವಿಚಾರದಲ್ಲಿ ಕೇಂದ್ರ ಸರ್ಕಾರವು ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ. ಅದೇನು ಎನ್ನುವ ವಿವರ
WPL 2026- ಜನವರಿ 9ರಿಂದ ಬಹುನಿರೀಕ್ಷಿತ ಮಹಿಳಾ ಪ್ರೀಮಿಯರ್ ಲೀಗ್ ಶುರು; ಟಿಕೆಟ್ ಖರೀದಿ ಹೇಗೆ?
WPL 2026 Tickets- ಕ್ರಿಕಟ್ ಪ್ರೇಮಿಗಲು ಕಾತರದಿಂದ ಕಾಯುತ್ತಿರುವ ಮಹಿಳಾ ಪ್ರೀಮಿಯರ್ ಲೀಗ್ 2026 ಜನವರಿ 9 ರಂದು ಆರಂಭವಾಗಲಿದೆ. ಈ ಬಾರಿ ಎಲ್ಲಾ ಪಂದ್ಯಗಳೂ ನವಿ ಮುಂಬೈ ಮತ್ತು ವಡೋದರಾದ ಕ್ರೀಡಾಂಗಣಗಳಲ್ಲಿ ನಡೆಯಲಿವೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಮುಂಬೈ ಇಂಡಿಯನ್ಸ್ ನಡುವೆ ಉದ್ಘಾಟನಾ ಪಂದ್ಯ ನಡೆಯಲಿದೆ. ಡಿಸೆಂಬರ್ 26 ರಿಂದ ಟಿಕೆಟ್ ಮಾರಾಟ ಆರಂಭವಾಗಲಿದ್ದು ಡಬ್ಲ್ಯೂಪಿಎಲ್ ನ ಅಧಿಕೃತ ವೆಬ್ ಸೈಟ್ ಮತ್ತು District by Zomato ಲಭ್ಯವಿದೆ.
Davis Cup | ಶ್ರೀರಾಮ್ ಬಾಲಾಜಿ ಯಾವತ್ತೂ ರಾಷ್ಟ್ರೀಯ ತಂಡದ ಸದಸ್ಯ: ನಾಯಕ ರೋಹಿತ್ ರಾಜ್ ಪಾಲ್
ಹೊಸದಿಲ್ಲಿ, ಡಿ. 25: ಮುಂಬರುವ ನೆದರ್ ಲ್ಯಾಂಡ್ಸ್ ವಿರುದ್ಧದ ಡೇವಿಸ್ ಕಪ್ ಪಂದ್ಯಕ್ಕೆ ಅನುಭವಿ ಡಬಲ್ಸ್ ಆಟಗಾರ ಎನ್. ಶ್ರೀರಾಮ್ ಬಾಲಾಜಿಯನ್ನು ತಂಡದಿಂದ ಹೊರಗಿಟ್ಟರೂ ಅವರು ಯಾವಾಗಲೂ ರಾಷ್ಟ್ರೀಯ ತಂಡದಲ್ಲಿ ಆಡುವ ಅರ್ಹತೆಯನ್ನು ಹೊಂದಿದ್ದಾರೆ ಎಂದು ಭಾರತೀಯ ಡೇವಿಸ್ ಕಪ್ ತಂಡದ ನಾಯಕ ರೋಹಿತ್ ರಾಜ್ ಪಾಲ್ ಗುರುವಾರ ಹೇಳಿದ್ದಾರೆ. ತಂಡದ ಸಂಯೋಜನೆಯನ್ನು ಆಧರಿಸಿ ಆಟಗಾರರನ್ನು ಆಯ್ಕೆ ಮಾಡಲಾಗುತ್ತದೆ ಎಂದು ಅವರು ನುಡಿದರು. ಡಬಲ್ಸ್ ಪಂದ್ಯದಲ್ಲಿ ಡ್ಯೂಸ್- ಅಂಗಣದ ಪರಿಣತ ಆಟಗಾರನ ಅಗತ್ಯವಿತ್ತು, ಅದರ ಆಧಾರದಲ್ಲಿ ಡೇವಿಸ್ ಕಪ್ ತಂಡವನ್ನು ಆಯ್ಕೆಮಾಡಲಾಗಿದೆ ಎಂದು ರಾಜ್ ಪಾಲ್ ವಿವರಿಸಿದರು. ಈ ಸ್ಥಾನಕ್ಕೆ ಋತ್ವಿಕ್ ಬೊಲ್ಲಿಪಲ್ಲಿ ಅರ್ಹತೆ ಹೊಂದಿದ್ದಾರೆ. ಹಾಗಾಗಿ, ಯೂಕಿ ಭಾಂಬ್ರಿ ಜೊತೆಗಿನ ಡಬಲ್ಸ್ಗೆ ಅವರನ್ನು ಆಯ್ಕೆ ಮಾಡಲಾಯಿತು ಎಂದರು. ‘‘ತಂಡ ಸಂಯೋಜನೆಗಳನ್ನು ಗಮನದಲ್ಲಿಟ್ಟುಕೊಂಡು ನಾವು ಡ್ಯೂಸ್-ಅಂಗಣದ ಪರಿಣತ ಆಟಗಾರನ ಹುಡುಕಾಟದಲ್ಲಿದ್ದೆವು. ಯೂಕಿ ಆ್ಯಡ್- ಅಂಗಣದಿಂದ ಮಾತ್ರ ಆಡುತ್ತಾರೆ. ಹಾಗಾಗಿ ಡ್ಯೂಸ್-ಅಂಗಣ ಪರಿಣತ ಋತ್ವಿಕ್ರನ್ನು ಆಯ್ಕೆ ಮಾಡಲಾಯಿತು. ಬಾಲಾಜಿ ರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧೆಗೆ ಯಾವತ್ತೂ ಕಣದಲ್ಲಿರುತ್ತಾರೆ’’ ಎಂದು ಪಿಟಿಐಯೊಂದಿಗೆ ಮಾತನಾಡಿದ ರಾಜ್ ಪಾಲ್ ಹೇಳಿದರು. ಡ್ಯೂಸ್-ಅಂಗಣವೆಂದರೆ ಟೆನಿಸ್ ಅಂಗಣದ ಬಲ ಭಾಗ ಮತ್ತು ಆ್ಯಡ್ (ಅಡ್ವಾಂಟೇಜ್) ಅಂಗಣವೆಂದರೆ ಎಡ ಭಾಗ.
ಉಡುಪಿ: ಡಿ.26ರಂದು ಪಾರ್ಥಸಾರಥಿ ಸುವರ್ಣ ರಥ ಸಮರ್ಪಣೆ
ಉಡುಪಿ, ಡಿ.25: ತಮ್ಮ ಚತುರ್ಥ ವಿಶ್ವ ಗೀತಾ ಪರ್ಯಾಯದಲ್ಲಿ ಸಂಕಲ್ಪಿಸಿದಂತೆ ಪಾರ್ಥಸಾರಥಿ ಸುವರ್ಣ ರಥದ ಸಮರ್ಪಣೆ ನಾಳೆ ನಡೆಯಲಿದೆ ಎಂದು ಪರ್ಯಾಯ ಪುತ್ತಿಗೆ ಮಠದ ಶ್ರೀಸುಗುಣೇಂದ್ರ ತೀರ್ಥರು ತಿಳಿಸಿದ್ದಾರೆ. ಚತುರ್ಥ ಪರ್ಯಾಯದ ಅಂತಿಮ ಘಟ್ಟ ತಲುಪಿರುವ ಪುತ್ತಿಗೆಶ್ರೀಗಳು ಗೀತಾಮಂದಿರದಲ್ಲಿ ಕರೆದ ಪತ್ರಿಕಾ ಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು. ತಾವು ನಡೆಸಿದ ಕೋಟಿ ಗೀತ ಲೇಖನ ಯಜ್ಞದ ಸ್ಮರಣಾರ್ಥವಾಗಿ ಕೃಷ್ಣನಿಗೆ ಪಾರ್ಥಸಾರಥಿ ಸುವರ್ಣ ರಥವನ್ನು ಕೃಷ್ಣನಿಗೆ ಅರ್ಪಣೆ ಮಾಡುತ್ತಿರುವುದಾಗಿ ತಿಳಿಸಿದರು. ಶುಕ್ರವಾರ ಅಪರಾಹ್ನ 3:30ಕ್ಕೆ ನಗರದ ಜೋಡುಕಟ್ಟೆಯಿಂದ ಭವ್ಯ ಮೆರವಣಿಗೆಯಲ್ಲಿ ಮಂತ್ರಾಲಯ ಸ್ವಾಮೀಜಿಗಳ ಉಪಸ್ಥಿತಿಯಲ್ಲಿ ಸುವರ್ಣ ರಥವನ್ನು ಉಡುಪಿ ಶ್ರೀಕೃಷ್ಣ ಮಠಕ್ಕೆ ತರಲಾಗುವುದು. ಬಳಿಕ ರಾಜಾಂಗಣದಲ್ಲಿ ಇದರ ಸಮರ್ಪಣೆ ನಡೆಯಲಿದೆ ಎಂದು ಪುತ್ತಿಗೆಶ್ರೀಗಳು ತಿಳಿಸಿದರು. ಪಾರ್ಥಸಾರಥಿ ಸುವರ್ಣ ರಥದ ಪ್ರಥಮ ರಥೋತ್ಸವ ಡಿ.27ರ ಸಂಜೆ 6ಗಂಟೆಗೆ ನಡೆಯಲಿದೆ. ಅದಮಾರು ಮಠದ ಶ್ರೀವಿಶ್ವಪ್ರಿಯ ತೀರ್ಥರು ರಥದಲ್ಲಿ ಉತ್ಸವ ಮೂರ್ತಿಯನ್ನು ಪ್ರತಿಷ್ಠಾಪಿಸುವರು. ಬಳಿಕ ರಥಬೀದಿಯಲ್ಲಿ ರಥೋತ್ಸವ ನಡೆಯಲಿದೆ. ಮುಂದೆ ಪಾರ್ಥಸಾರಥಿ ಸುವರ್ಣ ರಥವನ್ನು ಶ್ರೀಕೃಷ್ಣ ಮಠದ ಸುತ್ತು ಪೌಳಿಯಲ್ಲಿ ರಥೋತ್ಸವಕ್ಕೆ ಬಳಸಲಾಗುವುದು ಎಂದೂ ಅವರು ಹೇಳಿದರು.
ರಾಜ್ಯದಲ್ಲಿ ಭೂ ಪರಿವರ್ತನೆ ನಿಯಮಗಳು ಸರಳೀಕರಣಗೊಂಡಿವೆ. ಮಾಸ್ಟರ್ಪ್ಲಾನ್ ಹೊರತಾದ ಭೂ ಪರಿವರ್ತನೆಗೂ 30 ದಿನಗಳ ಗಡುವು ನಿಗದಿಪಡಿಸಲಾಗಿದೆ. ಇಂಧನ ಇಲಾಖೆ ಅನುಮತಿ ಪಡೆದಿದ್ದರೆ ನವೀಕರಿಸಬಹುದಾದ ಇಂಧನ ಘಟಕ ಸ್ಥಾಪನೆಗೆ ಭೂ ಪರಿವರ್ತನೆಯಿಂದ ವಿನಾಯಿತಿ ಸಿಗಲಿದೆ. ಎರಡು ಎಕರೆವರೆಗಿನ ಕೃಷಿ ಭೂಮಿಯನ್ನು ಕೈಗಾರಿಕಾ ಉದ್ದೇಶಕ್ಕೆ ಬಳಸಲು ಅವಕಾಶ ನೀಡಲಾಗಿದೆ. ಆನ್ಲೈನ್ ಮೂಲಕ ಅರ್ಜಿ ಸಲ್ಲಿಕೆ ಮತ್ತು ಕಂದಾಯ ನ್ಯಾಯಾಲಯಗಳ ಕಾರ್ಯನಿರ್ವಹಣೆ ಸುಗಮವಾಗಲಿದೆ.
ನಿಮ್ಮ Gmail ವಿಳಾಸ ಇಷ್ಟವಿಲ್ಲವೆ? 2026ರಲ್ಲಿ ನಿಮಗೆ ವಿಳಾಸ ಬದಲಿಸುವ ಅವಕಾಶ ಸಿಗಲಿದೆ
Google ಸದ್ದಿಲ್ಲದೇ ಹೊಸ ಫೀಚರ್ ಒಂದನ್ನು ಪರಿಚಯಿಸುತ್ತಿದೆ. ಅದರಲ್ಲಿ ನಿಮ್ಮ Gmail ವಿಳಾಸವನ್ನು ಮೂರು ಬಾರಿ ಬದಲಿಸುವ ಅವಕಾಶ ನೀಡಲಾಗುತ್ತಿದೆ. ಆದರೆ ಸದ್ಯ ಎಲ್ಲರಿಗೂ ಈ ಸೌಲಭ್ಯ ಲಭ್ಯವಿಲ್ಲ. ಬಹಳ ವರ್ಷಗಳಿಂದ Gmail ವಿಳಾಸವೆಂದರೆ ಶಾಶ್ವತ ಡಿಜಿಟಲ್ ಗುರುತು ಆಗಿತ್ತು. ಅದನ್ನು ಒಮ್ಮೆ ಬಳಸಿದರೆ ಬದಲಿಸುವ ಅವಕಾಶವಿರಲಿಲ್ಲ. ಆದರೆ ಇದೀಗ ಆ ಹಳೇ ನಿಯಮವನ್ನು Gmail ಬದಲಿಸುವ ಸಾಧ್ಯತೆಯಿದೆ. Google ಇದೀಗ ಬಳಕೆದಾರರಿಗೆ ತಮ್ಮ Gmail ವಿಳಾಸವನ್ನು ಮಾರ್ಪಡಿಸುವ ಅವಕಾಶವನ್ನು ನೀಡುತ್ತಿದೆ. Gmail ಬಳಕೆದಾರರಿಗೆ ತಮ್ಮ ಹಳೇ ವಿಳಾಸವನ್ನು ಹೊಸದಾಗಿ ನವೀಕರಿಸುವ ಅವಕಾಶ ಸಿಗಲಿದೆ. ಸಂಪೂರ್ಣವಾಗಿ ಹೊಸ ಖಾತೆಯನ್ನು ತೆರೆಯುವ ಬದಲಾಗಿ ಹಳೆಯದಾದ ಬಳಸದ email ವಿಳಾಸವನ್ನೇ ಮತ್ತೆ ನವೀಕರಿಸಿಕೊಳ್ಳಬಹುದಾಗಿದೆ. email ವಿಳಾಸ ಬದಲಿಸುವ ಅವಕಾಶ ಹಿಂದಿಯಲ್ಲಿ ಪ್ರಕಟಿಸಿದ Gmail ಸಪೋರ್ಟ್ ಪುಟದಲ್ಲಿ ಅದು ಹೊಸ ಆಯ್ಕೆಯೊಂದನ್ನು ಬಳಕೆದಾರರಿಗೆ ನೀಡುತ್ತಿರುವುದಾಗಿ ತಿಳಿಸಿದೆ. “@gmail.com” ಎಂದೇ ಕೊನೆಯಾಗುತ್ತಿದ್ದರೂ ಬಳಕೆದಾರರು ಅದನ್ನು ಬದಲಿಸಬಹುದಾಗಿದೆ. ಈವರೆಗೆ Google ತೃತೀಯ ಪಕ್ಷದ email ವಿಳಾಸದಿಂದ ಸೈನಪ್ ಆದವರಿಗೆ ಮಾತ್ರ ಖಾತೆಯ email ಹೆಸರನ್ನು ಬದಲಿಸಲು ಅವಕಾಶ ಕೊಡುತ್ತಿತ್ತು. Gmail ವಿಳಾಸವನ್ನು ಮಾರ್ಪಡಿಸುವ ಅವಕಾಶವಿರಲಿಲ್ಲ. ಎರಡೂ ವಿಳಾಸ ಬಳಸಬಹುದು ಒಮ್ಮೆ ನೀವು ಹೊಸ email ವಿಳಾಸವನ್ನು ಆರಿಸಿದ ನಂತರ ನಿಮ್ಮ ಹಳೆಯ Gmail ವಿಳಾಸವನ್ನು Google ಅಲಿಯಾಸ್ ಎಂದು ಪರಿಗಣಿಸಬಹುದು. ಅಂದರೆ ನೀವು ಈ ಯಾವುದೇ ಎರಡು Google ಸೇವೆಗಳಿಂದ ಸೈನ್ ಇನ್ ಮಾಡಬಹುದಾಗಿದೆ. Gmail ಹೇಳುವ ಪ್ರಕಾರ ಬಳಕೆದಾರರು ಎರಡೂ ಹೊಸ ಮತ್ತು ಹಳೆಯ ವಿಳಾಸಗಳಿಗೆ ಇಮೇಲ್ ಗಳನ್ನು ಸ್ವೀಕರಿಸಬಹುದಾಗಿದೆ. ಹಳೇ ವಿಳಾಸದಲ್ಲಿರುವ ಫೋಟೋಗಳು ಮತ್ತು ಇಮೇಲ್ ಗಳಿಗೆ ಸಮಸ್ಯೆಯಾಗದು. ►ಈ ಕೆಳಗಿನ ಹಾದಿಯಲ್ಲಿ ನೀವು ಹೊಸ ವಿಳಾಸವನ್ನು ನವೀಕರಿಸಬಹುದಾಗಿದೆ. ►ಮೂರು ಬಾರಿ ಮಾತ್ರ ಬದಲಿಸಬಹುದು ಬಳಕೆದಾರರು ತಮ್ಮ ಹಳೇ Google ಖಾತೆಯ email ವಿಳಾಸವನ್ನು ಬಳಸಲು ಸಾಧ್ಯವಾಗುತ್ತಿದೆಯಾದರೂ, Google ನಿಮಗೆ ವರ್ಷದವರೆಗೆ ಹೊಸ email ವಿಳಾಸವನ್ನು ಸೃಷ್ಟಿಸಲು ಅವಕಾಶ ಕೊಡುವುದಿಲ್ಲ. ಬಳಕೆದಾರರು ತಮ್ಮ email ವಿಳಾಸವನ್ನು ಒಟ್ಟು ಮೂರು ಬಾರಿಯಷ್ಟೇ ಬದಲಿಸಬಹುದಾಗಿದೆ. ►ಸೌಲಭ್ಯ ಖಾತೆಗೆ ಬರಲು ತಡವಾಗಬಹುದು ಸಪೋರ್ಟ್ ಪುಟದಲ್ಲಿ ಇನ್ನೂ ಕೆಲವು ವಿವರಗಳು ಇವೆ. ಆದರೆ ಆ ಬದಲಾವಣೆಗಳು ಇನ್ನೂ ಕಾರ್ಯರೂಪಕ್ಕೆ ಬಂದಿಲ್ಲ. ಹೊಸ ವಿಳಾಸವನ್ನು ಆರಿಸುವ ಸಾಮರ್ಥ್ಯ ನೀಡುವುದನ್ನು ನಿಧಾನವಾಗಿ ಜಾರಿಗೆ ತರುವ ಸಾಧ್ಯತೆಯಿದೆ. ಆರಂಭದಲ್ಲಿ ಎಲ್ಲರಿಗೂ ಈ ಸೌಲಭ್ಯ ಸಿಗುವುದಿಲ್ಲ. ಹೀಗಾಗಿ ನಿಮ್ಮ ಖಾತೆಯಲ್ಲಿ ಅಂತಹ ಅವಕಾಶ ಬರಲು ನೀವು ಕಾಯಬೇಕಾಗುತ್ತದೆ.
ಮೈಸೂರು ಅರಮನೆ ಮುಂಭಾಗ ಗ್ಯಾಸ್ ಬಲೂನ್ ಸಿಲಿಂಡರ್ ಸ್ಪೋಟ : ಕನಿಷ್ಠ ಓರ್ವ ಮೃತ್ಯು, ಐವರಿಗೆ ಗಂಭೀರ ಗಾಯ
ಮೈಸೂರು, ಡಿ.25 : ಮೈಸೂರು ಅರಮನೆ ಮುಂಭಾಗದ ಜಯಮಾರ್ತಾಂಡ ಗೇಟ್ ಬಳಿ ಗ್ಯಾಸ್ ಬಲೂನ್ ಸಿಲಿಂಡರ್ ಸ್ಪೋಟಗೊಂಡ ಪರಿಣಾಮ ಓರ್ವ ಮೃತಪಟ್ಟು, ಐವರು ಗಂಭೀರ ಗಾಯಗೊಂಡ ಘಟನೆ ನಡೆದಿದೆ. ಅರಮನೆ ಆವರಣದಲ್ಲಿ ʼಮಾಗಿ ಉತ್ಸವʼ ನಡೆಯುತ್ತಿದ್ದು ಅದನ್ನು ನೋಡಲು ಮತ್ತು ಕ್ರಿಸ್ ಮಸ್ ಹಿನ್ನಲೆಯಲ್ಲಿ ಅರಮನೆ ವಿದ್ಯುತ್ ದೀಪಲಂಕಾರ ವೀಕ್ಷಣೆ ಮಾಡಲು ಸ್ಥಳೀಯರು ಸೇರಿದಂತೆ ಪ್ರವಾಸಿಗರು ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ್ದರು. ಈ ವೇಳೆ ಅರಮನೆ ಮುಂಭಾಗ ಬಲೂನ್ ಗೆ ಗ್ಯಾಸ್ ತುಂಬುವ ನೈಟ್ರೋಜನ್ ಸಿಲಿಂಡರ್ ಸ್ಪೋಟಗೊಂಡಿದೆ. ಪರಿಣಾಮ ಓರ್ವ ಮೃತಪಟ್ಟಿದ್ದು, ಐವರಿಗೆ ಗಂಭೀರ ಗಾಯವಾಗಿದೆ ಎಂದು ತಿಳಿದು ಬಂದಿದೆ. ಗಾಯಗೊಂಡವರನ್ನು ನಗರದ ಕೆ.ಆರ್. ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ. ಘಟನೆ ಸ್ಪೋಟಕ್ಕೆ ಅಲ್ಲಿದ್ದವರು ಗಾಬರಿಯಾಗಿ ಓಡಲಾರಂಭಿಸಿದ್ದಾರೆ. ಈ ರಸ್ತೆಯಲ್ಲಿ ವಾಹನ ಸಂಚಾರ ದಟ್ಟಣೆಯೂ ಹೆಚ್ಚಾಗಿದ್ದು, ಘಟನೆ ಕಂಡು ಅಲ್ಲಿದ್ದವರು ಬೆಚ್ಚಿಬಿದ್ದಿದ್ದಾರೆ. ಸ್ಥಳಕ್ಕೆ ಡಿಸಿಪಿ ಗಳಾದ ಬಿಂದುಮಣಿ, ಸುಂದರ್ ರಾಜ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದು, ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ.
ಹಣ ಹಾಗೂ ಚಿನ್ನಾಭರಣಕ್ಕಾಗಿ ನಿತ್ಯ ಕಿರುಕುಳ: ಎಂಬಿಎ ಪದವೀಧರೆ, ನವವಿವಾಹಿತೆ ಆತ್ಮಹತ್ಯೆ
ಬಾಗಲಗುಂಟೆ ಬಳಿ ವರದಕ್ಷಿಣೆ ಕಿರುಕುಳದಿಂದ ಬೇಸತ್ತು ನವವಿವಾಹಿತೆ ಐಶ್ವರ್ಯಾ (26) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಒಂದು ತಿಂಗಳ ಹಿಂದಷ್ಟೇ ಲಿಖಿತ್ ಎಂಬಾತನನ್ನು ಮದುವೆಯಾಗಿದ್ದ ಐಶ್ವರ್ಯಾಗೆ, ಗಂಡ ಮತ್ತು ಕುಟುಂಬದವರು ಹಣ ಹಾಗೂ ಚಿನ್ನಾಭರಣ ತರುವಂತೆ ಕಿರುಕುಳ ನೀಡುತ್ತಿದ್ದರು. ಇದರಿಂದ ಮನನೊಂದ ಐಶ್ವರ್ಯಾ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ನಕಲಿ ಚಿನ್ನ ನೀಡಿ ವಂಚನೆ: ಆರೋಪಿಯ ಬಂಧನ
ಕುಂದಾಪುರ, ಡಿ.25: ರಾಯಚೂರು ಜಿಲ್ಲೆ ಚಂದ್ರಬಂಡ ಗ್ರಾಮದ ಗೋಪಾಲ ಎಂಬವರಿಗೆ ಕಡಿಮೆ ಬೆಲೆಗೆ ಚಿನ್ನ ನೀಡುವುದಾಗಿ ನಂಬಿಸಿ ಲಕ್ಷಾಂತರ ರೂ.ವಂಚಿಸಿದ ಆರೋಪಿಯನ್ನು ಶಂಕರನಾರಾಯಣ ಪೊಲೀಸರು ಬಂಧಿಸಿದ್ದಾರೆ. ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ಗಾಂಧಿನಗರದ ಜಯಪ್ರಕಾಶ್ ಡಿ. ಬಂಧಿತ ಆರೋಪಿ. ಸಿದ್ದಾಪುರದ ಕಮಲಶಿಲೆ ರಸ್ತೆಯಲ್ಲಿ ಆರೋಪಿಗಳು ಗೋಪಾಲ ಎಂಬವರಿಗೆ 150 ಗ್ರಾಂ ಚಿನ್ನವೆಂದು ಹೇಳಿ 5 ಲಕ್ಷ ಪಡೆದುಕೊಂಡು ನಕಲಿ ಚಿನ್ನ ನೀಡಿ ಪರಾರಿಯಾಗಿದ್ದರು. ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಬಗ್ಗೆ ಕುಂದಾಪುರ ಉಪವಿಭಾಗದ ಡಿವೈಎಸ್ಪಿ ಎಚ್.ಡಿ.ಕುಲಕರ್ಣಿ ಮಾರ್ಗದರ್ಶನದಲ್ಲಿ ತನಿಖೆ ನಡೆಸಿದ ಶಂಕರನಾರಾಯಣ ಪೊಲೀಸರು, ಚಿತ್ರದುರ್ಗದ ಕೋಟೆ ಪ್ರದೇಶದಿಂದ ಆರೋಪಿಯನ್ನು ವಶಕ್ಕೆ ಪಡೆದು ಆತನಿಂದ 4,50,000 ರೂ. ನಗದು ಹಾಗೂ ಕೃತ್ಯಕ್ಕೆ ಬಳಸಿದ್ದ ಸುಮಾರು 10,00,000 ರೂ. ಮೌಲ್ಯದ ಕಾರನ್ನು ವಶಪಡಿಸಿಕೊಂಡು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
24 ವರ್ಷ ಜೈಲಿನಲ್ಲಿದ್ದ ದರೋಡೆ ಆರೋಪಿಯನ್ನು ಖುಲಾಸೆಗೊಳಿಸಿದ Allahabad High Court
“ಅಪರಾಧ ಸಾಬೀತುಪಡಿಸುವಲ್ಲಿ ವಿಚಾರಣಾ ನ್ಯಾಯಾಲಯ ವಿಫಲ”
ನವೀಕೃತ 20 ಅಂಶಗಳ ಶಾಂತಿ ಪ್ರಸ್ತಾಪ ಮುಂದಿರಿಸಿದ ಉಕ್ರೇನ್
►ಡೊನ್ಬಾಸ್ ಸೇನಾರಹಿತ ವಲಯವಾಗಲು ಸಮ್ಮತಿ►ರಶ್ಯದ ಪಡೆ ಹಿಂದೆ ಸರಿಯಬೇಕೆಂಬ ಷರತ್ತು
ಗಡಿನಾಡಿನ ಜನರ ನಿಜವಾದ ಸಾರಥಿಯಾಗಿ ವಾರ್ತಾಭಾರತಿ ಪತ್ರಿಕೆ ಕಾರ್ಯನಿರ್ವಹಿಸಲಿದೆ : ರಮೇಶ್ ಲೋಹಾರ್
ಆಳಂದದಲ್ಲಿ ‘ವಾರ್ತಾಭಾರತಿ’ ಪತ್ರಿಕೆ ಲೋಕಾರ್ಪಣೆ
Tanzania: ಏರ್ ಲಿಫ್ಟ್ ರಕ್ಷಣಾ ಕಾರ್ಯಾಚರಣೆ ಸಂದರ್ಭ ಹೆಲಿಕಾಪ್ಟರ್ ಪತನ; 5 ಮೃತ್ಯು
ಡೊಡೊಮಾ, ಡಿ.25: ತಾಂಝಾನಿಯಾದಲ್ಲಿ ರಕ್ಷಣಾ ಕಾರ್ಯಾಚರಣೆಯಲ್ಲಿದ್ದ ಹೆಲಿಕಾಪ್ಟರ್ ಆಫ್ರಿಕಾದ ಅತೀ ಎತ್ತರದ ಶಿಖರ ಕಿಲಿಮಂಜಾರೊ ಪರ್ವತದ ಮೇಲೆ ಪತನಗೊಂಡಿದ್ದು ಐದು ಮಂದಿ ಸಾವನ್ನಪ್ಪಿರುವುದಾಗಿ ವರದಿಯಾಗಿದೆ. ಅತ್ಯಂತ ಜನಪ್ರಿಯ ಚಾರಣ ಸ್ಥಳಗಳಲ್ಲಿ ಒಂದಾಗಿರುವ ಕಿಲಿಮಂಜಾರೊ ಪರ್ವತದಲ್ಲಿ ಸುಮಾರು 13,100 ಅಡಿಗಳ ಎತ್ತರದಲ್ಲಿರುವ ಸ್ಥಳದಲ್ಲಿ ಅಸ್ವಸ್ಥಗೊಂಡಿದ್ದ ಇಬ್ಬರು ಪರ್ವತಾರೋಹಿಯನ್ನು ಏರ್ ಲಿಫ್ಟ್ ಮೂಲಕ ಸ್ಥಳಾಂತರಿಸುವ ಕಾರ್ಯಾಚರಣೆ ಸಂದರ್ಭ ಹೆಲಿಕಾಪ್ಟರ್ ಪತನಗೊಂಡಿದೆ. ಇಬ್ಬರು ಅಸ್ವಸ್ಥ ಪರ್ವತಾರೋಹಿಗಳ ಸಹಿತ ಒಟ್ಟು ಐದು ಮಂದಿ ಮೃತಪಟ್ಟಿದ್ದಾರೆ ಎಂದು ಪ್ರಾದೇಶಿಕ ಪೊಲೀಸ್ ಕಮಾಂಡರ್ ಮಾಹಿತಿ ನೀಡಿದ್ದಾರೆ.
Bangladesh: ಯೂನುಸ್ ಅವರ ವಿಶೇಷ ಸಹಾಯಕ ಚೌಧರಿ ರಾಜೀನಾಮೆ
ಢಾಕ, ಡಿ.25: ಬಾಂಗ್ಲಾ ಮಧ್ಯಂತರ ಸರಕಾರದ ಮುಖ್ಯ ಸಲಹೆಗಾರ ಮುಹಮ್ಮದ್ ಯೂನುಸ್ ಅವರ ವಿಶೇಷ ಕಾರ್ಯದರ್ಶಿ(ಗೃಹ ಇಲಾಖೆ) ಖೋಡಾ ಬಕ್ಷ್ ಚೌಧರಿ ತನ್ನ ಹುದ್ದೆಗೆ ರಾಜೀನಾಮೆ ನೀಡಿರುವುದಾಗಿ ವರದಿಯಾಗಿದೆ. ಮಾಜಿ ಐಜಿಪಿ ಆಗಿದ್ದ ಚೌಧರಿಯನ್ನು 2024ರ ನವೆಂಬರ್ 10ರಂದು ಯೂನುಸ್ ಅವರ ವಿಶೇಷ ಸಹಾಯಕರಾಗಿ ನೇಮಿಸಲಾಗಿತ್ತು. ಅವರ ರಾಜೀನಾಮೆಯನ್ನು ಅಧ್ಯಕ್ಷ ಮುಹಮ್ಮದ್ ಶಹಾಬುದ್ದೀನ್ ಅಂಗೀಕರಿಸಿರುವುದಾಗಿ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಇದುವರೆಗೆ ಯೂನುಸ್ ಸರಕಾರಕ್ಕೆ ಮೂವರು ಸಲಹೆಗಾರರು ರಾಜೀನಾಮೆ ಸಲ್ಲಿಸಿದಂತಾಗಿದೆ. ಈ ಮಧ್ಯೆ, ಬುಧವಾರ ಢಾಕಾದ ಮೊಘ್ ಬಝಾರ್ ಪ್ರದೇಶದಲ್ಲಿ ಕಚ್ಛಾ ಬಾಂಬ್ ಸ್ಫೋಟದಲ್ಲಿ ಓರ್ವ ವ್ಯಕ್ತಿ ಸಾವನ್ನಪ್ಪಿರುವುದಾಗಿ ಪೊಲೀಸರು ಹೇಳಿದ್ದಾರೆ.
ರಾಷ್ಟ್ರ ಪ್ರೇರಣಾ ಸ್ಥಳವು ಭಾರತದ ಸ್ವಾಭಿಮಾನ, ಏಕತೆ ಮತ್ತು ಸೇವೆಯ ಸಂಕೇತವಾಗಿದೆ: ಪ್ರಧಾನಿ ಮೋದಿ
ಲಕ್ನೋ,ಡಿ.25: ಮಾಜಿ ಪ್ರಧಾನಿ, ಭಾರತ ರತ್ನ ಅಟಲ್ ಬಿಹಾರಿ ವಾಜಪೇಯಿಯವರ 101ನೇ ಜನ್ಮದಿನವಾದ ಗುರುವಾರ ಅವರ ಜೀವನ ಮತ್ತು ಆದರ್ಶಗಳನ್ನು ಗೌರವಿಸಲು ಮುಡಿಪಾಗಿರುವ ಪ್ರಮುಖ ರಾಷ್ಟ್ರೀಯ ಸ್ಮಾರಕ ಮತ್ತು ಸಂಕೀರ್ಣವನ್ನು ಪ್ರಧಾನಿ ನರೇಂದ್ರ ಮೋದಿಯವರು ಇಲ್ಲಿ ಉದ್ಘಾಟಿಸಿದರು. ಈ ಸ್ಮಾರಕವು ಭಾರತವನ್ನು ಸ್ವಾಭಿಮಾನ, ಏಕತೆ ಮತ್ತು ಸೇವೆಯತ್ತ ಮುನ್ನಡೆಸಿದ ದೃಷ್ಟಿಕೋನವನ್ನು ಸಂಕೇತಿಸುತ್ತದೆ ಎಂದು ಅವರು ಹೇಳಿದರು. ವಿಶಾಲ ಸಂಕೀರ್ಣವು ವಾಜಪೇಯಿಯವರ ಜೊತೆಗೆ ಬಿಜೆಪಿ ಸಿದ್ಧಾಂತಿಗಳಾದ ಶ್ಯಾಮ್ ಪ್ರಸಾದ್ ಮುಖರ್ಜಿ ಮತ್ತು ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಅವರ 65 ಅಡಿ ಎತ್ತರದ ಕಂಚಿನ ಪ್ರತಿಮೆಗಳನ್ನೂ ಒಳಗೊಂಡಿದೆ. ಕಮಲದ ಆಕಾರದಲ್ಲಿ ವಿನ್ಯಾಸಗೊಂಡಿರುವ ಸಂಕೀರ್ಣದಲ್ಲಿಯ ಅತ್ಯಾಧುನಿಕ ವಸ್ತು ಸಂಗ್ರಹಾಲಯವು 90,000 ಚ.ಅಡಿ.ಗೂ ಹೆಚ್ಚಿನ ಸ್ಥಳದಲ್ಲಿ ಹರಡಿಕೊಂಡಿದ್ದು, ರಾಷ್ಟ್ರ ನಿರ್ಮಾಣದಲ್ಲಿ ಈ ನಾಯಕರ ಕೊಡುಗೆಗಳನ್ನು ಅರಿತುಕೊಳ್ಳಲು ಸಂದರ್ಶಕರಿಗೆ ಅವಕಾಶವನ್ನು ಒದಗಿಸುತ್ತದೆ. ಉದ್ಘಾಟನೆಯ ಬಳಿಕ ಮೋದಿ ಅವರು ರಕ್ಷಣಾ ಸಚಿವ ರಾಜನಾಥ್ ಸಿಂಗ್,ರಾಜ್ಯಪಾಲರಾದ ಆನಂದಿಬೆನ್ ಪಟೇಲ್, ಮುಖ್ಯಮಂತ್ರಿಯೋಗಿ ಆದಿತ್ಯನಾಥ್ ಮತ್ತಿತರರೊಂದಿಗೆ ವಸ್ತುಸಂಗ್ರಹಾಲಯಕ್ಕೆ ಭೇಟಿ ನೀಡಿ ವಾಜಪೇಯಿ,ಮು ಖರ್ಜಿ ಮತ್ತು ಉಪಾಧ್ಯಾಯ ಅವರ ಬದುಕು ಮತ್ತು ಕೊಡುಗೆಗಳನ್ನು ಬಿಂಬಿಸುವ ಪ್ರದರ್ಶನಗಳನ್ನು ವೀಕ್ಷಿಸಿದರು. ರಾಷ್ಟ್ರೀಯ ಪ್ರೇರಣಾ ಸ್ಥಳವು 65 ಎಕರೆಗೂ ಅಧಿಕ ವಿಸ್ತೀರ್ಣದ ನಿವೇಶನದಲ್ಲಿ 230 ಕೋಟಿ ರೂ.ಗಳ ವೆಚ್ಚದಲ್ಲಿ ನಿರ್ಮಾಣಗೊಂಡಿದೆ.
ಫೀಲ್ದಿಂಗ್ ನಲ್ಲಿ ವಿಘ್ನೇಶ್ ಪುತ್ತೂರ್ ಹೊಸ ದಾಖಲೆ! ಇದು ಜಾಂಟಿ ರೋಡ್ಸ್ ನಿಂದಲೂ ಸಾಧ್ಯವಾಗದ ಸಾಧನೆ
Vignesh Puthur New Record- ಏಕದಿನ ಕ್ರಿಕಟ್ ನಲ್ಲಿ ಈವರೆಗೂ 5ಕ್ಕಿಂತ ಹೆಚ್ಚು ಕ್ಯಾಚ್ ಹಿಡಿದ ಫೀಲ್ಡರ್ ಇಲ್ಲ. ಜಗತ್ತಿನಲ್ಲಿ ಲಿಸ್ಟ್ ಎ ಕ್ರಿಕೆಟ್ ನಲ್ಲಿ ಈವರೆಗೆ ಐದು ಮಂದಿ ಇಂತಹ ಸಾಧನೆ ಮಾಡಿದ್ದರು. ಇದೀಗ ಕೇರಳದ ವಿಘ್ನೇಶ್ ಪುತ್ತೂರ್ ಅವರು ವಿಜಯ ಹಜಾರೆ ಟ್ರೋಫಿ ಪಂದ್ಯದಲ್ಲಿ 6 ಕ್ಯಾಚ್ ಹಿಡಿವ ಮೂಲಕ ಹೊಸ ದಾಖಲೆ ಬರೆದಿದ್ದಾರೆ. ತ್ರಿಪುರ ವಿರುದ್ಧ ಅವರು ಈ ಸಾಧನೆ ಮೆರೆದಿದ್ದಾರೆ.
Madhya Pradesh: ಬಿಜೆಪಿ ನಾಯಕಿಯ ಪುತ್ರನ ಮೇಲೆ ಅತ್ಯಾಚಾರ ಆರೋಪ ಹೊರಿಸಿದ ಮಹಿಳೆಯಿಂದ ಆತ್ಮಹತ್ಯೆಗೆ ಯತ್ನ
ಭೋಪಾಲ, ಡಿ. 25: ಬಿಜೆಪಿ ನಾಯಕಿ ಹಾಗೂ ಶಿವಪುರಿ ನಗರ ಸಭೆಯ ಅಧ್ಯಕ್ಷೆ ಗಾಯತ್ರಿ ಶರ್ಮಾ ಅವರ ಪುತ್ರ ರಜತ್ ಶರ್ಮಾ ತನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಆರೋಪಿಸಿರುವ ಮಹಿಳೆಯೋರ್ವರು ನಿದ್ರೆ ಮಾತ್ರೆ ಹಾಗೂ ಇಲಿ ವಿಷ ಸೇವಿಸಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಮಹಿಳೆಯನ್ನು ಕೂಡಲೇ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಯಿತು. ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ. ಮಹಿಳೆ ಎಪ್ರಿಲ್ 14ರಂದು ಕೊಟ್ವಾಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಅವರ ದೂರಿನ ಹಿನ್ನೆಲೆಯಲ್ಲಿ ರಜತ್ ಶರ್ಮಾ ವಿರುದ್ಧ ಅತ್ಯಾಚಾರ ಸೇರಿದಂತೆ ವಿವಿಧ ಸೆಕ್ಷನ್ ಗಳ ಅಡಿಯಲ್ಲಿ ಎಪ್ರಿಲ್ 30ರಂದು FIR ದಾಖಲಾಗಿದೆ. ಸುಮಾರು ಒಂದು ತಿಂಗಳ ಬಳಿಕ ರಜತ್ ಶರ್ಮಾ ಗೆ ಉಚ್ಚ ನ್ಯಾಯಾಲಯ ಜಾಮೀನು ನೀಡಿತ್ತು. ಮಹಿಳೆ ಆತ್ಮಹತ್ಯೆಗೆ ಪ್ರಯತ್ನಿಸುವ ಮುನ್ನ 6 ಪುಟಗಳ ಸುಸೈಡ್ ನೋಟ್ ಬರೆದಿದ್ದಾರೆ. ಅದರಲ್ಲಿ ತಾನು ಕಳೆದ 7 ತಿಂಗಳಿಂದ ಕಿರುಕುಳ ಹಾಗೂ ಬೆದರಿಕೆ ಎದುರಿಸಿದ್ದೇನೆ ಎಂದು ಮಹಿಳೆ ಆರೋಪಿಸಿದ್ದಾರೆ. ಸುಸೈಡ್ ನೋಟ್ ನಲ್ಲಿ ಅವರು ನಗರ ಸಭೆಯ ಅಧ್ಯಕ್ಷೆ ಗಾಯತ್ರಿ ಶರ್ಮಾ, ಅವರ ಪತಿ ಸಂಜಯ್ ದುಬೆ ಹಾಗೂ ಅವರ ಪುತ್ರ ರಜತ್ ಶರ್ಮಾ ತನ್ನನ್ನು ಈ ಮಾನಸಿಕ ಒತ್ತಡಕ್ಕೀಡು ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಕಾರ್ಕಳ: 'ಅಟಲ್ ಸ್ಮರಣೆ' ಕಾರ್ಯಕ್ರಮ
ಕಾರ್ಕಳ: ಅಟಲ್ ಬಿಹಾರಿ ವಾಜಪೇಯಿ ಅವರು ವೈವಿಧ್ಯಮಯ ಪ್ರತಿಭೆ. ಅವರು ಕೇವಲ ರಾಜಕಾರಣಿಯಾಗಿ ರಲಿಲ್ಲ. ಪತ್ರಕರ್ತ, ಶ್ರೇಷ್ಠ ಸಂಸದೀಯ ಪಟು, ಅದ್ಭುತ ಕವಿಯಾಗಿದ್ದ ಅವರು ಮೌಲ್ಯಾಧಾರಿತ ರಾಜಕಾರಣದ ಪ್ರತೀಕವಾಗಿದ್ದರು ಎಂದು ರಾಷ್ಟ್ರೀಯ ಬಿಜೆಪಿ ಸಂಘಟನ ಕಾರ್ಯದರ್ಶಿ ಬಿ ಎಲ್ ಸಂತೋಷ್ ಹೇಳಿದರು ಅವರು ಬಿಜೆಪಿ ಕಾರ್ಕಳ ವತಿಯಿಂದ ಕಾರ್ಕಳ ಕುಕ್ಕುಂದುರು ಪಂಚಾಯತ್ ಮೈದಾನದಲ್ಲಿ ನಡೆದ 'ಅಟಲ್ ಸ್ಮರಣೆ' ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. 1951ರಲ್ಲಿ ಜನಸಂಘ ಸ್ಥಾಪನೆಯಾದ ದಿನದಿಂದಲೂ ಅವರು ರಾಷ್ಟ್ರದ ಸಮಗ್ರ ಅಭಿವೃದ್ಧಿಯ ತತ್ವಕ್ಕೆ ಬದ್ಧರಾಗಿದ್ದರು. ಅಧಿಕಾರದ ಹಪಹಪಿ ಇರಲಿಲ್ಲ. ಬರೋಬ್ಬರಿ 51 ವರ್ಷಗಳ ಕಾಲ ಸಕ್ರಿಯ ರಾಜನೀತಿಯಲ್ಲಿದ್ದರೂ, ಅವರು ಎಂದಿಗೂ ವೈಯಕ್ತಿಕ ಲಾಭಕ್ಕಾಗಿ ಅಥವಾ ಕುರ್ಚಿಗಾಗಿ ಹಾತೊರೆದವರಲ್ಲ. 13 ದಿನಗಳ ಸರಕಾರ ಬಿದ್ದಾಗಲೂ ಅವರು ಎದೆಗುಂದದೆ ದೇಶ ಸೇವೆ, ಸಂಘಟನಾ ಚಟುವಟಿಕೆ ಮುಂದುವರಿಸಿದ್ದರು. ಶ್ರೇಷ್ಠ ವ್ಯಕ್ತಿತ್ವ, ಬದ್ಧತೆ ಇದ್ದರೇ ಎಂದಿಗೂ ಯಶಸ್ಸು ಕಟ್ಟಿಟ್ಟ ಬುತ್ತಿ. ದೇಶ ಮೊದಲು, ಪಕ್ಷ ಅನಂತರ ಎಂದು ದೇಶದ ಸಮಗ್ರ ಅಭಿವೃದ್ಧಿಗೆ ಶ್ರಮಿಸಿದ ವಾಜಪೇಯಿ ಅವರ ವ್ಯಕ್ತಿತ್ವ ನಮ್ಮೆಲ್ಲರಿಗೂ ದಾರಿದೀಪ ಎಂದರು. ಗ್ರಾಮ ಗ್ರಾಮ ಗಳಲ್ಲಿ ಕಮಲ ಅರಳುತಿದೆ ಕೆಲವೆಡೆ ನಾವು ಸೋತಿರಬಹುದು ಮತೊಮ್ಮೆ ಕಮಲ ಅರಳಿಸುತ್ತೇವೆ ಇಡೀ ದೇಶದಲ್ಲಿ ಕಮಲ ಅರಳಿಸಿಯೇ ತಿರುತ್ತೇವೆ ಇಂದು ಅಟಲ್ ಬಿಹಾರಿ ವಾಜಪೇಯಿ ಶ್ರದ್ದಾಂಜಲಿ, ಪುಷ್ಪಾoಜಲಿ, ಮಾತ್ರವಲ್ಲ ಕಾರ್ಯoಜಲಿ ಅರ್ಪಿಸಬೇಕಾಗಿದೆ ಎಂದರು. ಈ ಸಂದರ್ಭದಲ್ಲಿ ಸಂಸದ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ವಿ.ಸುನೀಲ್ ಕುಮಾರ್ .ಬಿಜೆಪಿ ಜಿಲ್ಲಾಧ್ಯಕ್ಷ ನವೀನ್ ಶೆಟ್ಟಿ ಕುತ್ಯಾರು, ಬಿಜೆಪಿ ಹಿರಿಯರಾದ ಬೋಳ ಪ್ರಭಾಕರ್ ಕಾಮತ್, ಗೇರು ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಮಣಿರಾಜ್ ಶೆಟ್ಟಿ ಉಪಸ್ಥಿತರಿದ್ದರು. ಕಾರ್ಕಳ ಅಟಲ್ ಬಿಹಾರಿ ವಾಜಪೇಯಿ ಪಾರ್ಕ್ನಲ್ಲಿರುವ ಅಟಲ್ ಅವರ ಮೂರ್ತಿಗೆ ಬಿ ಎಲ್ ಸಂತೋಷ್ ಹಾಗೂ ಇನ್ನಿತರ ಗಣ್ಯರು ಪುಷ್ಪಾರ್ಚನೆಗೈದರು. ಬಿಜೆಪಿ ಮಹಿಳಾ ಮೋರ್ಚಾ ವತಿಯಿಂದ ದೇಶಭಕ್ತಿ ಬಿಂಬಿಸುವ ಸಮೂಹ ಗೀತೆಗಳ ಗಾಯನ ನಡೆಯಿತು. ವಿವಿಧ ಭಾವಭಕ್ತಿಗೀತಾ ಕಾರ್ಯಕ್ರಮಗಳು ಜರುಗಿದವು. ವಾಜಪೇಯಿ ಅವರ ಜೀವನ ಚರಿತ್ರೆಯನ್ನು ಬಿಂಬಿಸುವ ವಿಡಿಯೋ ಪ್ರದರ್ಶನ ಏರ್ಪಡಿಸಲಾಗಿತ್ತು. ಕಾರ್ಯಕ್ರಮದಲ್ಲಿ ಸಂಸದ ಕೋಟ ಶ್ರೀನಿವಾಸ್ ಪೂಜಾರಿ, ಶಾಸಕ ಸುನಿಲ್ ಕುಮಾರ್, ಬಿಜೆಪಿ ಜಿಲ್ಲಾಧ್ಯಕ್ಷ ನವೀನ್ ಶೆಟ್ಟಿ ಕುತ್ಯಾರು, ಕಾರ್ಕಳದ ಆರ್ ಎಸ್ ಎಸ್ ಮುಖಂಡ ಬೋಳ ಪ್ರಭಾಕರ್ ಕಾಮತ್, ಬಿಜೆಪಿ ಮುಖಂಡ ಮಣಿರಾಜ್ ಶೆಟ್ಟಿ, ಸೇರಿದಂತೆ ಹಿರಿಯ ನಾಯಕರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪರಿಸರ ಪ್ರೇಮಿಯಾಗಿದ್ದ ಅಟಲ್ ಅವರ ನೆನಪಿನಲ್ಲಿ ಕಾರ್ಕಳದ ಅಟಲ್ ಬಿಹಾರಿ ವಾಜಪೇಯಿ ಪಾರ್ಕ್ ನಲ್ಲಿ ಬಿ ಎಲ್ ಸಂತೋಷ್, ಕೋಟ ಶ್ರೀನಿವಾಸ್ ಪೂಜಾರಿ, ಬೋಳ ಪ್ರಭಾಕರ್ ಕಾಮತ್ ಗಿಡ ನೆಡುವ ಮೂಲಕ ವರ್ಷಪೂರ್ತಿ ಮುಂದುವರಿಯುವ ಅಭಿಯಾನಕ್ಕೆ ಚಾಲನೆ ನೀಡಿದರು. ವಿಶೇಷವಾಗಿ 8ನೇ ತರಗತಿಯ ಹೈಸ್ಕೂಲು ವಿದ್ಯಾರ್ಥಿಗಳಿಗೆ ಗಿಡಗಳನ್ನು ನೀಡಿ, ಅವುಗಳನ್ನು ಪೋಷಿಸುವ ಜವಾಬ್ದಾರಿ ನೀಡಲಾಯಿತು. 2500ಕ್ಕೂ ಅಧಿಕ ಕಾರ್ಯಕರ್ತರೂ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ದೋಸೆ ಕ್ಯಾಂಪ್ ಆಯೋಜಿಸಲಾಗಿತ್ತು. ಬಿಜೆಪಿ ಕ್ಷೇತ್ರಾಧ್ಯಕ್ಷ ನವಿನ್ ನಾಯಕ್ ಸ್ವಾಗತಿಸಿ ಪ್ರಸ್ತಾವನೆಗೈದರು. ರವೀಂದ್ರ ಕುಕ್ಕುಂದೂರು, ಸತ್ಯಶಂಕರ ಶೆಟ್ಟಿ ಮುಂಡ್ಕೂರು ನಿರೂಪಿಸಿದರು.
ಭಾರತ VS ಶ್ರೀಲಂಕಾ ಮಹಿಳೆಯರ 3ನೇ T20; ಸರಣಿ ಕೈವಶದತ್ತ ಆತಿಥೇಯರ ಚಿತ್ತ
ತಿರುವನಂತಪುರಂ, ಡಿ. 25: T20 ಸರಣಿಯ ಮೂರನೇ ಪಂದ್ಯದಲ್ಲಿ ಶುಕ್ರವಾರ ಭಾರತೀಯ ಮಹಿಳಾ ಕ್ರಿಕೆಟ್ ತಂಡವು ಪ್ರವಾಸಿ ಶ್ರೀಲಂಕಾ ಮಹಿಳಾ ತಂಡವನ್ನು ಎದುರಿಸಲಿದೆ. ಐದು ಪಂದ್ಯಗಳ ಸರಣಿಯನ್ನು ಕೈವಶಪಡಿಸಿಕೊಳ್ಳುವತ್ತ ಪ್ರಬಲ ಭಾರತೀಯ ತಂಡವು ಮುನ್ನಡೆಯುತ್ತಿದೆ. ಮೊದಲ ಮತ್ತು ದ್ವಿತೀಯ T20 ಪಂದ್ಯಗಳಲ್ಲಿ ಭಾರತೀಯ ಮಹಿಳೆಯರು ಬ್ಯಾಟಿಂಗ್ ಮತ್ತು ಬೌಲಿಂಗ್ ನಲ್ಲಿ ಅತ್ಯುತ್ತಮ ನಿರ್ವಹಣೆ ನೀಡಿದ್ದಾರೆ. ಭಾರತವು ಮೊದಲ ಪಂದ್ಯವನ್ನು ಎಂಟು ವಿಕೆಟ್ ಗಳಿಂದ ಗೆದ್ದರೆ, ಎರಡನೇ ಪಂದ್ಯವನ್ನು ಏಳು ವಿಕೆಟ್ ಗಳಿಂದ ಜಯಿಸಿದೆ. ಇದು ಶ್ರೀಲಂಕಾ ವಿರುದ್ಧದ ಕಳೆದ 11 T20 ಅಂತರರಾಷ್ಟ್ರಿಯ ಪಂದ್ಯಗಳಲ್ಲಿ ಭಾರತದ ಒಂಭತ್ತನೇ ಗೆಲುವಾಗಿದೆ. 2024 ಜುಲೈಯಲ್ಲಿ ದಾಂಬುಲಾದಲ್ಲಿ ನಡೆದ ಪಂದ್ಯದಲ್ಲಿ ಶ್ರೀಲಂಕಾವು ಭಾರತದ ವಿರುದ್ಧ ಗೆಲುವು ದಾಖಲಿಸಿತ್ತು. ಭಾರತವು ಶ್ರೇಷ್ಠ ಬ್ಯಾಟಿಂಗ್ ಸರದಿಯನ್ನು ಹೊಂದಿದೆ. ಮೊದಲಿನ ಎರಡು ಪಂದ್ಯಗಳಲ್ಲಿ ಬೇರೆ ಬೇರೆ ಆಟಗಾರರು ಸಮಯಕ್ಕೆ ಸರಿಯಾದ ನಿರ್ವಹಣೆ ತೋರಿದ್ದಾರೆ. ಆರಂಭಿಕ ಪಂದ್ಯದಲ್ಲಿ ಜೆಮಿಮಾ ರೋಡ್ರಿಗ್ಸ್ ಮಿಂಚಿದರೆ, ಎರಡನೇ ಪಂದ್ಯದಲ್ಲಿ ಆರಂಭಿಕ ಆಟಗಾರ್ತಿ ಶಫಾಲಿ ವರ್ಮಾ ತನ್ನ ಪಾತ್ರವನ್ನು ಚೆನ್ನಾಗಿ ನಿಭಾಯಿಸಿದರು. ಬೌಲರ್ ಗಳು, ಅದರಲ್ಲೂ ಮುಖ್ಯವಾಗಿ ಸ್ಪಿನ್ನರ್ ಗಳು ಉತ್ತಮ ನಿರ್ವಹಣೆ ತೋರಿದ್ದಾರೆ. ಮೊದಲ ಪಂದ್ಯದಲ್ಲಿ ಭಾರತೀಯ ಬೌಲರ್ ಗಳು ಶ್ರೀಲಂಕಾ ಮಹಿಳೆಯರನ್ನು 6 ವಿಕೆಟ್ ಗಳ ನಷ್ಟಕ್ಕೆ 121 ರನ್ ಗೆ ನಿಯಂತ್ರಿಸಿದರೆ, ಎರಡನೇ ಪಂದ್ಯದಲ್ಲಿ 9 ವಿಕೆಟ್ ಗಳ ನಷ್ಟಕ್ಕೆ 128 ರನ್ ಗೆ ನಿಯಂತ್ರಿಸಿದ್ದಾರೆ. ಯುವ ಬೌಲರ್ ಗಳಾದ ಎನ್. ಶ್ರೀ ಚರಣಿ, ವೈಷ್ಣವಿ ಶರ್ಮಾ ಮತ್ತು ಕ್ರಾಂತಿ ಗೌಡ ಒತ್ತಡವನ್ನು ಸಮಾನವಾಗಿ ಹಂಚಿಕೊಂಡಿದ್ದಾರೆ. ಅವರು ಶಿಸ್ತು ಮತ್ತು ನಿಯಂತ್ರಣದೊಂದಿಗೆ ಬೌಲಿಂಗ್ ಮಾಡಿದ್ದಾರೆ. ಬೆನ್ನು ಬೆನ್ನಿಗೆ ಅನುಭವಿಸಿದ ಎರಡು ಬೃಹತ್ ಸೋಲುಗಳ ಬಳಿಕ, ಮೈದಾನದ ಬದಲಾವಣೆಯು ತನ್ನ ಪರಿಸ್ಥಿತಿಯಲ್ಲಿ ಬದಲಾವಣೆ ತರಬಹುದು ಎಂಬ ಆಶಯವನ್ನು ಶ್ರೀಲಂಕಾ ಹೊಂದಿದೆ. ಮೊದಲ ಎರಡು ಪಂದ್ಯಗಳಲ್ಲಿ, ದ್ವೀಪರಾಷ್ಟ್ರ ತಂಡದ ಬ್ಯಾಟಿಂಗ್ ದೃಢತೆಯನ್ನು ಕಳೆದುಕೊಂಡರೆ, ಬೌಲಿಂಗ್ ಮೊನಚು ಕಳೆದುಕೊಂಡಿತ್ತು. ‘‘ಪವರ್ ಪ್ಲೇಯಲ್ಲಿ ನಮ್ಮ ನಿರ್ವಹಣೆ ಚೆನ್ನಾಗಿತ್ತು. ಆದರೆ ಎರಡು ವಿಕೆಟ್ ಗಳನ್ನು ಕಳೆದುಕೊಂಡ ಬಳಿಕ, ಮಧ್ಯಮ ಓವರ್ ಗಳಲ್ಲಿ ನಾವು ಪರದಾಡಿದೆವು’’ ಎಂದು ಎರಡನೇ T20 ಪಂದ್ಯದ ಬಳಿಕ ಶ್ರೀಲಂಕಾ ತಂಡದ ನಾಯಕಿ ಚಾಮರಿ ಅತಪತ್ತು ಹೇಳಿದ್ದಾರೆ. ►ಪಂದ್ಯ ಆರಂಭ: ಸಂಜೆ 7 ಗಂಟೆ ►ತಂಡಗಳು ಭಾರತ : ಹರ್ಮನ್ಪ್ರೀತ್ ಕೌರ್ (ನಾಯಕಿ), ಸ್ಮತಿ ಮಂದಾನ (ಉಪನಾಯಕಿ), ದೀಪ್ತಿ ಶರ್ಮಾ, ಸ್ನೇಹ್ ರಾಣಾ, ಜೆಮಿಮಾ ರೋಡ್ರಿಗ್ಸ್, ಶಫಾಲಿ ವರ್ಮಾ, ಹರ್ಲೀನ್ ದೇವಲ್, ಅಮನ್ಜೋತ್ ಕೌರ್, ಅರುಂಧತಿ ರೆಡ್ಡಿ, ಕ್ರಾಂತಿ ಗೌಡ, ರೇಣುಕಾ ಸಿಂಗ್ ಠಾಕೂರ್, ರಿಚಾ ಘೋಷ್ (ವಿಕೆಟ್ ಕೀಪರ್), ಜಿ. ಕಮಲಿನಿ (ವಿಕೆಟ್ ಕೀಪರ್), ಎನ್. ಶ್ರೀ ಚರಣಿ, ವೈಷ್ಣವಿ ಶರ್ಮಾ. ಶ್ರೀಲಂಕಾ : ಚಾಮರಿ ಅತಪತ್ತು (ನಾಯಕಿ), ಹಸಿನಿ ಪೆರೇರ, ವಿಶ್ಮಿ ಗುಣರತ್ನೆ, ಹರ್ಷಿತಾ ಸಮರವಿಕ್ರಮ, ನೀಲಾಕ್ಷಿಕಾ ಡಿ ಸಿಲ್ವ, ಕವಿಶಾ ದಿಲ್ಹಾರಿ, ಇಮೇಶಾ ದುಲಾನಿ, ಕೌಶಿನಿ ನುತ್ಯಾಂಗನಾ, ಮಲ್ಶಾ ಶೆಹಾನಿ, ಇನೋಕಾ ರಣವೀರ, ಶಾಶಿನಿ ಗಿಮ್ಹಾನಿ, ನಿಮೇಶಾ ಮದುಶಾನಿ, ಕಾವ್ಯ ಕವಿಂದಿ, ರಶ್ಮಿಕಾ ಸೆವ್ವಾಂದಿ, ಮಾಲ್ಕಿ ಮದಾರಾ.
2025ರ ಸಾಲಿನಲ್ಲಿ ‘ಖೇಲ್ ರತ್ನʼಗಳಿಲ್ಲ!
24 ಕ್ರೀಡಾಳುಗಳಿಗೆ ಅರ್ಜುನ ಪ್ರಶಸ್ತಿ
ನವಿ ಮುಂಬೈ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಮೊದಲ ವಾಣಿಜ್ಯ ವಿಮಾನ ಹಾರಾಟ, ವಾಯುನೆಲೆ ಕಾರ್ಯಾಚರಣೆ ಪ್ರಾರಂಭ
ನವಿ ಮುಂಬೈ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವು ಇಂಡಿಗೋದ ಮೊದಲ ವಾಣಿಜ್ಯ ವಿಮಾನ ಹಾರಾಟದೊಂದಿಗೆ ವಾಯುಯಾನ ಕಾರ್ಯಾಚರಣೆಗಳನ್ನು ಪ್ರಾರಂಭಿಸಿತು. ಇದು ಮುಂಬೈನ ವಾಯುಯಾನದಲ್ಲಿ ಪ್ರಮುಖ ಮೈಲಿಗಲ್ಲನ್ನು ಸೂಚಿಸುತ್ತದೆ. ಈ ವಿಮಾನ ನಿಲ್ದಾಣದ ಉದ್ಘಾಟನೆಯು ಛತ್ರಪತಿ ಶಿವಾಜಿ ಮಹಾರಾಜ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ದಟ್ಟಣೆಯನ್ನು ಕಡಿಮೆ ಮಾಡಲಿದೆ. ಅಲ್ಲದೇ ಪ್ರಾದೇಶಿಕ ಸಂಪರ್ಕವನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ. ನವಿ ಮುಂಬೈ ಅಂತರರಾಷ್ಟ್ರೀಯ
Boxing Day Test | ಆಸ್ಟ್ರೇಲಿಯದ 12 ಆಟಗಾರರ ತಂಡ ಪ್ರಕಟ; ಮರಳಿದ ನಾಯಕ ಸ್ಟೀವ್ ಸ್ಮಿತ್
ಮೆಲ್ಬರ್ನ್, ಡಿ. 25: ಪ್ರವಾಸಿ ಇಂಗ್ಲೆಂಡ್ ವಿರುದ್ಧದ ಬಾಕ್ಸಿಂಗ್ ಡೇ ಟೆಸ್ಟ್ ಗೆ ಆಸ್ಟ್ರೇಲಿಯ ತಂಡಕ್ಕೆ ನಾಯಕ ಸ್ಟೀವ್ ಸ್ಮಿತ್ ಮರಳಿದ್ದಾರೆ. ಜೊತೆಗೆ, ಆಸ್ಟ್ರೇಲಿಯವು ತನ್ನ 12 ಆಟಗಾರರ ತಂಡಕ್ಕೆ ನಾಲ್ವರು ವೇಗದ ಬೌಲರ್ ಗಳನ್ನು ಸೇರಿಸಿಕೊಂಡಿದೆ. ಆದರೆ, ನತಾನ್ ಲಯೋನ್ ಸ್ಥಾನಕ್ಕೆ ತರಲಾಗಿರುವ ಸ್ಪಿನ್ನರ್ ಟಾಡ್ ಮರ್ಫಿಗೆ ತಂಡದಲ್ಲಿ ಸ್ಥಾನ ಸಿಕ್ಕಿಲ್ಲ. ವೇಗದ ಬೌಲರ್ ಝಯ್ ರಿಚರ್ಡ್ಸನ್ 2021ರ ಬಳಿಕ ಟೆಸ್ಟ್ ನಲ್ಲಿ ಆಡಿಲ್ಲ. ಆದರೆ, ಭುಜದ ಗಾಯದಿಂದ ಚೇತರಿಸಿಕೊಂಡ ಬಳಿಕ ಅವರು ದೇಶಿ ಕ್ರಿಕೆಟ್ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಹಾಗಾಗಿ ಅವರನ್ನು ಟೆಸ್ಟ್ ತಂಡಕ್ಕೆ ಮರಳಿ ತರಲಾಗಿದೆ. ಮೊದಲ ಎರಡು ಟೆಸ್ಟ್ಗಳಲ್ಲಿ ಆಡಿರುವ ಬ್ರೆಂಡನ್ ಡಾಗೆಟ್ ಮತ್ತು ಮೈಕೆಲ್ ನೇಸರ್ರನ್ನೂ ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ‘‘ಯಾವ ಮೈದಾನವನ್ನು ಆಡಲು ನಿಮಗೆ ಕೊಡಲಾಗುತ್ತದೆಯೋ ಅದರಲ್ಲಿ ಆಡಬೇಕು’’ ಎಂದು ಸುದ್ದಿಗಾರರೊಂದಿಗೆ ಮಾತನಾಡಿದ ಸ್ಮಿತ್ ಹೇಳಿದರು. ಅವರು ಅಸ್ವಸ್ಥತೆಯಿಂದಾಗಿ ಅಡಿಲೇಡ್ ಟೆಸ್ಟ್ ನಿಂದ ಹೊರಗಿದ್ದರು. ಬಾಕ್ಸಿಂಗ್ ಡೇ ಟೆಸ್ಟ್ ಶುಕ್ರವಾರ ಮೆಲ್ಬರ್ನ್ ಕ್ರೀಡಾಂಗಣದಲ್ಲಿ ಆರಂಭಗೊಳ್ಳಲಿದೆ. ಐದು ಟೆಸ್ಟ್ ಗಳ ಆ್ಯಶಸ್ ಸರಣಿಯ ಮೊದಲ ಮೂರು ಪಂದ್ಯಗಳನ್ನು ಗೆದ್ದಿರುವ ಆಸ್ಟ್ರೇಲಿಯ ಸರಣಿಯನ್ನು ಈಗಾಗಲೇ ಗೆದ್ದಿದೆ. ಅದು ಈಗ 3-0 ಅಂತರದಿಂದ ಮುಂದಿದೆ. ತಂಡ: ಟ್ರಾವಿಸ್ ಹೆಡ್, ಜೇಕ್ ವೆದರಾಲ್ಡ್, ಮಾರ್ನಸ್ ಲಾಬುಶಾನ್, ಸ್ಟೀವ್ ಸ್ಮಿತ್ (ನಾಯಕ), ಉಸ್ಮಾನ್ ಖ್ವಾಜಾ, ಅಲೆಕ್ಸ್ ಕ್ಯಾರಿ (ವಿಕೆಟ್ ಕೀಪರ್), ಕ್ಯಾಮರೂನ್ ಗ್ರೀನ್, ಮಿಚೆಲ್ ಸ್ಟಾರ್ಕ್, ಸ್ಕಾಟ್ ಬೊಲ್ಯಾಂಡ್, ಬ್ರೆಂಡನ್ ಡಾಗೆಟ್, ಮೈಕಲ್ ನೇಸರ್, ಝಯ್ ರಿಚರ್ಡ್ಸನ್.
ಮೈಸೂರು ಅರಮನೆ ಮುಂಭಾಗ ಭೀಕರ ಸ್ಫೋಟ! ಹಲವು ಸಾವು ನೋವು; ಸ್ಥಳಕ್ಕೆ ಪೊಲೀಸ್ ದೌಡು
ಮೈಸೂರು ಅರಮನೆ ಮುಂಭಾಗದ ಜಯಚಾಮರಾಜೇಂದ್ರ ಗೇಟ್ ಬಳಿ ಗುರುವಾರ ಸಂಜೆ ಭೀಕರ ಸ್ಪೋಟ ಸಂಭವಿಸಿದೆ. ನೈಟ್ರೋಜನ್ ಬಲೂನ್ ಸಿಲಿಂಡರ್ ಸ್ಪೋಟಗೊಂಡ ಪರಿಣಾಮ ಸ್ಥಳದಲ್ಲೇ ಕೆಲವರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಸಾವು ನೋವಿನ ಬಗ್ಗೆ ಇನ್ನೂ ಖಚಿತ ಮಾಹಿತಿ ಲಭ್ಯವಾಗಿಲ್ಲ.

24 C