ಮ್ಯಾಂಡೆಲ್ಸನ್ ವಿರುದ್ಧ ತನಿಖೆಗೆ ಆದೇಶಿಸಿದ ಯುಕೆ ಪ್ರಧಾನಿ
ಕುಪ್ಪೆಪದವು: ಸಾರ್ವಜನಿಕ ರಕ್ತದಾನ ಶಿಬಿರ
ಮಂಗಳೂರು : ಬಡಜನ ಸೇವಾ ಫ್ರೆಂಡ್ಸ್ ಹಾಗೂ ಅಲ್-ಫತಹ್ ಫ್ರೆಂಡ್ಸ್ ಮತ್ತು ವಿವಿಧ ಸಂಘ–ಸಂಸ್ಥೆಗಳ ಜಂಟಿ ಆಶ್ರಯದಲ್ಲಿ, ಸೇವ್ ಲೈಫ್ ಚಾರಿಟೇಬಲ್ ಟ್ರಸ್ಟ್ (ರಿ.) ಹಾಗೂ ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ (ರಿ.) ಸಹಯೋಗದಲ್ಲಿ, ಫಾದರ್ ಮುಲ್ಲರ್ ಆಸ್ಪತ್ರೆ ಮಂಗಳೂರು ಅವರ ಸಹಭಾಗಿತ್ವದಲ್ಲಿ ಫೆಬ್ರವರಿ 1, 2026 (ಆದಿತ್ಯವಾರ)ರಂದು ಕಾವೇರಿ ವಿದ್ಯಾಲಯ, ಕುಪ್ಪೆಪದವಿನಲ್ಲಿ ಸಾರ್ವಜನಿಕ ರಕ್ತದಾನ ಶಿಬಿರ ಯಶಸ್ವಿಯಾಗಿ ನಡೆಯಿತು. ಶಿಬಿರದಲ್ಲಿ ಒಟ್ಟು 55 ಯುನಿಟ್ ರಕ್ತ ಸಂಗ್ರಹಿಸಲಾಯಿತು. ಕಾರ್ಯಕ್ರಮದಲ್ಲಿ ಅರ್ಜುನ್ ಭಂಡಾರ್ಕರ್, ಗಿರೀಶ್ ಆಳ್ವ, ನಿಜಾಮ್ ತೋಕೂರು, ಪ್ರಕಾಶ್ ಕೆ., ಹಸನ್ ಭಾವ ಮಣಿಪಲ್ಲ, ನೌಷಾದ್ ಮುತ್ತೂರು, ಅಜೀಜ್ ನಡುಪಲ್ಲ, ಜೋಯ್ ಕುಟಿನ್ಹ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. ಕಾರ್ಯಕ್ರಮದ ನಿರೂಪಣೆಯನ್ನು ಸಂದೀಪ್ ಆಳ್ವ ಅವರು ನೆರವೇರಿಸಿದ್ದು, ಶಫೀಕ್ ಅವರು ವಂದಿಸಿದರು.
ಕೇಂದ್ರ ಸರ್ಕಾರವು ರೈತರ ಆದಾಯ ಹೆಚ್ಚಿಸಲು ಮತ್ತು ಕೃಷಿಯನ್ನು ಆಧುನೀಕರಿಸಲು 'ಭಾರತ್-ವಿಸ್ತಾರ್' ಎಂಬ ಬಹುಭಾಷಾ AI ಉಪಕರಣವನ್ನು ಪರಿಚಯಿಸಲಿದೆ. ಶೀಘ್ರದಲ್ಲೇ ಈ ತಂತ್ರಾಂಶ ರೈತರ ಕೈ ಸೇರಲಿದೆ. ಇದು ರೈತರಿಗೆ ತಮ್ಮ ಭಾಷೆಯಲ್ಲಿ ನಿಖರವಾದ ಕೃಷಿ ಸಲಹೆಗಳನ್ನು ನೀಡುತ್ತದೆ. ಹವಾಮಾನ, ಕೀಟ ಬಾಧೆಗಳ ಬಗ್ಗೆ ಮುಂಚಿತವಾಗಿ ಎಚ್ಚರಿಕೆ ನೀಡುವ ಮೂಲಕ ಬೆಳೆ ನಷ್ಟವನ್ನು ತಡೆಯಲು ಸಹಾಯ ಮಾಡುತ್ತದೆ. ಇದರಿಂದ ರೈತರು ಉತ್ತಮ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಾಧ್ಯವಾಗುತ್ತದೆ.
ದೇರಳಕಟ್ಟೆ : ಶಾಂತಿಭಾಗ್ ದಾರುಸ್ಸಲಾಂ ಜುಮಾ ಮಸೀದಿಯ ನೂತನ ಸಮಿತಿ ಅಸ್ತಿತ್ವಕ್ಕೆ
ಹಾಜಿ ಮಹಮ್ಮದ್ ಪರಪ್ಪು 10ನೇ ಬಾರಿ ಅಧ್ಯಕ್ಷರಾಗಿ ಆಯ್ಕೆ
ವಾಕರಸಾ ಸಂಸ್ಥೆಯಲ್ಲಿ ‘ವಿಶೇಷ’ ಬಸ್ಪಾಸ್ಗೆ ನಿಯಮವೇ ಅಡ್ಡಿ; ಏನಿದು ಸಮಸ್ಯೆ?
ಹಾವೇರಿ ಸಾರಿಗೆ ಸಂಸ್ಥೆಯು ಪದೇಪದೆ ನಿಯಮ ಬದಲಾಯಿಸುತ್ತಿರುವುದರಿಂದ ವಿಶೇಷಚೇತನರು ಬಸ್ಪಾಸ್ ಪಡೆಯಲು ಸಂಕಷ್ಟ ಎದುರಿಸುತ್ತಿದ್ದಾರೆ. ಮೊದಲು 21 ಬಗೆಯ ವಿಕಲತೆಗಳನ್ನು ಗುರುತಿಸಿದ್ದ ಸಂಸ್ಥೆ, ಈಗ ಕೇವಲ 7 ಬಗೆಯ ವಿಕಲತೆಗಳಿಗೆ ಮಾತ್ರ ಪಾಸ್ ನೀಡುತ್ತಿದೆ. ಇದರಿಂದ ನೂರಾರು ವಿಶೇಷಚೇತನರು ತೊಂದರೆಗೆ ಒಳಗಾಗಿದ್ದಾರೆ.
ಬೇಸಿಗೆಗೂ ಮುನ್ನವೇ ಬೆಲೆ ಏರಿಕೆ ಬಿಸಿ: ಗಗನಕ್ಕೇರಿದ ಅಕ್ಕಿ, ಬೇಳೆ, ಮೆಣಸಿನಕಾಯಿ ದರ
ಬೆಂಗಳೂರು: ರಾಜ್ಯದ ಜನತೆಗೆ ಮತ್ತೊಂದು ಬೆಲೆ ಏರಿಕೆಯ ಬಿಸಿ ತಟ್ಟಿದೆ. ಈಗಾಗಲೇ ತರಕಾರಿ, ಹಣ್ಣು, ಚಿನ್ನ ಮತ್ತು ಬೆಳ್ಳಿ ದರಗಳ ಏರಿಕೆಯಿಂದ ಕಂಗೆಟ್ಟಿರುವ ಸಾಮಾನ್ಯ ಜನರಿಗೆ, ಇದೀಗ ದಿನನಿತ್ಯದ ಅನಿವಾರ್ಯ ವಸ್ತುಗಳಾದ ಅಕ್ಕಿ, ಬೇಳೆ ಮತ್ತು ಮೆಣಸಿನಕಾಯಿ ಬೆಲೆ ಗಗನಕ್ಕೇರಿರುವುದು ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಬೇಸಿಗೆ ಕಾಲ ಅಧಿಕೃತವಾಗಿ ಆರಂಭವಾಗುವ ಮುನ್ನವೇ ಮಾರುಕಟ್ಟೆಯಲ್ಲಿ ಅಗತ್ಯ ವಸ್ತುಗಳ ಬೆಲೆ
ಬೆಂಗಳೂರು-ಮೈಸೂರು ದಶಪಥ ರಸ್ತೆಯಲ್ಲಿ ಕಳೆದ ಮೂರು ವರ್ಷಗಳಲ್ಲಿ 215 ಮಂದಿ ಸಾವನ್ನಪ್ಪಿದ್ದು, 1674 ಅಪಘಾತಗಳು ಸಂಭವಿಸಿವೆ. ಹೆದ್ದಾರಿಯ ಎರಡನೇ ಹಂತದಲ್ಲಿ ಅತಿಹೆಚ್ಚು ಸಾವುಗಳು ಸಂಭವಿಸಿವೆ. ಅತಿ ವೇಗ, ಅಜಾಗರೂಕತೆ ಮತ್ತು ವೈದ್ಯಕೀಯ ಕೇಂದ್ರಗಳ ಕೊರತೆ ಸಾವಿನ ಸಂಖ್ಯೆ ಹೆಚ್ಚಳಕ್ಕೆ ಕಾರಣವಾಗಿದೆ.
ಸತತ ಕುಸಿತದ ಹಾದಿಯಲ್ಲಿರುವ ಚಿನ್ನ-ಬೆಳ್ಳಿ; ಇಂದಿನ ದರವೆಷ್ಟು?
ಪ್ರಧಾನಿ ಮೋದಿ ಮತ್ತು ಡೊನಾಲ್ಡ್ ಟ್ರಂಪ್ ಫೋನ್ ಸಂಭಾಷಣೆ ನಡೆಸಿದ ನಂತರ ಅಮೆರಿಕ ಸುಂಕವನ್ನು ಶೇ 18ಕ್ಕೆ ಇಳಿದಿದೆ. ಹೀಗಾಗಿ ಬಂಗಾರದ ಬೆಲೆಯಲ್ಲಿ ಭಾರೀ ಬದಲಾವಣೆಯಾಗುವ ಸಾಧ್ಯತೆಯಿದೆ. ಇಂದು ಮಂಗಳವಾರ ಫೆಬ್ರವರಿ 3ರಂದು ಬಂಗಾರ ಸ್ವಲ್ಪ ಮಟ್ಟಿಗೆ ಕುಸಿದಿದೆ. ಭಾರತ ಮತ್ತು ಅಮೆರಿಕದ ನಡುವೆ ವ್ಯಾಪಾರ ಒಪ್ಪಂದದ ನಂತರ ಚಿನ್ನದ ಬೆಲೆಯಲ್ಲಿ ಏರಿಳಿತವಾಗಿದೆ. ಪ್ರಧಾನಿ ಮೋದಿ ಮತ್ತು ಡೊನಾಲ್ಡ್ ಟ್ರಂಪ್ ಫೋನ್ ಸಂಭಾಷಣೆ ನಡೆಸಿದ ನಂತರ ಅಮೆರಿಕ ಸುಂಕವನ್ನು ಶೇ 18ಕ್ಕೆ ಇಳಿದಿದೆ. ಹೀಗಾಗಿ ಬಂಗಾರದ ಬೆಲೆಯಲ್ಲಿ ಭಾರೀ ಬದಲಾವಣೆಯಾಗುವ ಸಾಧ್ಯತೆಯಿದೆ. ಜನವರಿ 29ರಂದು ಗುರುವಾರ 22 ಕ್ಯಾರೆಟ್ ನ ಪ್ರತಿ ಗ್ರಾಂ ಚಿನ್ನ 17,885 ರೂ.ಗೆ ಏರಿತ್ತು. ಆದರೆ ನಂತರ ಸತತ ಕುಸಿಯುತ್ತಾ ಬಂದು ಇದೀಗ 15,175 ರೂ.ಗೆ ಬಂದು ನಿಂತಿದೆ. ಅಮೆರಿಕದ ಡಾಲರ್, ಯುದ್ಧ, ಭೌಗೋಳಿಕ ರಾಜಕೀಯಗಳು ಹಾಗೂ ಸುಂಕದ ರಾಜಕೀಯ ಚಿನ್ನದ ಬೆಲೆಯಲ್ಲಿ ಬದಲಾವಣೆ ತರುತ್ತಿದೆ. ಮಂಗಳೂರಿನಲ್ಲಿ ಇಂದಿನ ಚಿನ್ನದ ದರವೆಷ್ಟು? ಮಂಗಳವಾರ ಫೆಬ್ರವರಿ 03ರಂದು ಬೆಳಗಿನ 11 ಗಂಟೆಯ ವಹಿವಾಟಿನಲ್ಲಿ ಮಂಗಳೂರಿನಲ್ಲಿ ಚಿನ್ನದ ಬೆಲೆ ಮತ್ತೆ ಕುಸಿತ ಕಂಡಿದೆ. ಬೆಳಗಿನ ವಹಿವಾಟಿನಲ್ಲಿ ಒಂದು ಗ್ರಾಂ 24 ಕ್ಯಾರೆಟ್ ಚಿನ್ನದ ದರ 15,175 (-142) ರೂ. ಗೆ ಕುಸಿದಿದೆ. ಒಂದು ಗ್ರಾಂ 22 ಕ್ಯಾರೆಟ್ ಚಿನ್ನದ ದರ 13,910 (-130) ರೂ. ಮತ್ತು ಒಂದು ಗ್ರಾಂ 18 ಕ್ಯಾರೆಟ್ ಚಿನ್ನದ ದರ 11,381 (-107) ರೂ. ಬೆಲೆಗೆ ತಲುಪಿದೆ. ಬೆಳ್ಳಿಯ ಬೆಲೆಯಲ್ಲೂ ಕುಸಿತ ಮಂಗಳವಾರ ಮಾರುಕಟ್ಟೆ ತೆರೆದ ತಕ್ಷಣ ಬೆಳ್ಳಿಯ ಬೆಲೆ ಇನ್ನಷ್ಟು ಕುಸಿತ ಕಂಡಿದೆ. ಇಂದು ಗ್ರಾಂಗೆ 20 ರೂ.ನಷ್ಟು ಕುಸಿದ ಬೆಳ್ಳಿ ಕೆಜಿಗೆ 2,80,000 ಲಕ್ಷ ರೂ. ತಲುಪಿದೆ. ವಿವಿಧ ನಗರಗಳಲ್ಲಿ 1 ಗ್ರಾಮ್ ಚಿನ್ನದ ದರ (ಬೆಳಗಿನ ವಹಿವಾಟು) ಹೇಗಿದೆ? ದಿಲ್ಲಿ: 24 ಕ್ಯಾರೆಟ್ ಚಿನ್ನದ ದರ 15,190 (-142) ರೂ., 22 ಕ್ಯಾರೆಟ್ ಚಿನ್ನದ ದರ 13,925 (-130) ರೂ. ಮುಂಬೈ: 24 ಕ್ಯಾರೆಟ್ ಚಿನ್ನದ ದರ 15,175 (-142) ರೂ., 22 ಕ್ಯಾರೆಟ್ ಚಿನ್ನದ ದರ 13,910 (-130) ರೂ. ಅಹಮದಾಬಾದ್: 24 ಕ್ಯಾರೆಟ್ ಚಿನ್ನದ ದರ 15,180 (-142) ರೂ., 22 ಕ್ಯಾರೆಟ್ ಚಿನ್ನದ ದರ 13,915 (-130) ರೂ. ಚೆನ್ನೈ: 24 ಕ್ಯಾರೆಟ್ ಚಿನ್ನದ ದರ 15,306 (+88) ರೂ., 22 ಕ್ಯಾರೆಟ್ ಚಿನ್ನದ ದರ 14,030 (+ 80) ರೂ. ಕೋಲ್ಕತ್ತಾ: 24 ಕ್ಯಾರೆಟ್ ಚಿನ್ನದ ದರ 15,175 (-142) ರೂ., 22 ಕ್ಯಾರೆಟ್ ಚಿನ್ನದ ದರ 13,910 (-130) ರೂ. ಹೈದರಾಬಾದ್: 24 ಕ್ಯಾರೆಟ್ ಚಿನ್ನದ ದರ 15,175 (-142) ರೂ., 22 ಕ್ಯಾರೆಟ್ ಚಿನ್ನದ ದರ 13,910 (-130) ರೂ. ಜೈಪುರ: 24 ಕ್ಯಾರೆಟ್ ಚಿನ್ನದ ದರ 15,190 (-142) ರೂ., 22 ಕ್ಯಾರೆಟ್ ಚಿನ್ನದ ದರ 13,925 (-130) ರೂ. ಭೋಪಾಲ್: 24 ಕ್ಯಾರೆಟ್ ಚಿನ್ನದ ದರ 15,180 (-142) ರೂ., 22 ಕ್ಯಾರೆಟ್ ಚಿನ್ನದ ದರ 13,915 (-130) ರೂ. ಲಖನೌ: 24 ಕ್ಯಾರೆಟ್ ಚಿನ್ನದ ದರ 15,190 (-142) ರೂ., 22 ಕ್ಯಾರೆಟ್ ಚಿನ್ನದ ದರ 13,925 (-130) ರೂ. ಚಂಡೀಗಢ: 24 ಕ್ಯಾರೆಟ್ ಚಿನ್ನದ ದರ 15,190 (-142) ರೂ., 22 ಕ್ಯಾರೆಟ್ ಚಿನ್ನದ ದರ 13,925 (-130) ರೂ.
Gold Price Feb 03: ಚಿನ್ನ ಪ್ರಿಯರಿಗೆ ಕೊನೆಗೂ ಗುಡ್ನ್ಯೂಸ್: ಚಿನ್ನ - ಬೆಳ್ಳಿ ಬೆಲೆ ದಾಖಲೆಯ ಇಳಿಕೆ
Gold Price Feb 03: ಬಹಳ ದಿನಗಳ ನಂತರ ಚಿನ್ನದ ಬೆಲೆಯಲ್ಲಿ ಭರ್ಜರಿ ಇಳಿಕೆ ಆಗಿದೆ. ಕಳೆದ ಒಂದು ವಾರದಿಂದಲೂ ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಏರಿಳಿತವಾಗುತ್ತಿದೆ. 18 ಕ್ಯಾರೆಟ್, 22 ಕ್ಯಾರೆಟ್ ಹಾಗೂ 24 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಭರ್ಜರಿ ಇಳಿಕೆಯಾಗಿದೆ. ಅಮೆರಿಕ ಮತ್ತು ಭಾರತದ ನಡುವಿನ ಆರ್ಥಿಕ ಗೊಂದಲಗಳಿಗೆ ತೆರೆ ಬಿದ್ದಿರುವುದು. ಷೇರುಮಾರುಕಟ್ಟೆ ಚೇತರಿಕೆ,
ಅಡ್ಡೂರು ಸರಕಾರಿ ಶಾಲೆಯಲ್ಲಿ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ
ಮಂಗಳೂರು : ಅಡ್ಡೂರಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 2025-2026ನೇ ಸಾಲಿನ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ 'ಸಂಭ್ರಮ' ಶನಿವಾರ ಶಾಲಾ ಮೈದಾನದಲ್ಲಿ ನಡೆಯಿತು. ಗುರುಪುರ ಗ್ರಾಮ ಪಂಚಾಯತ್ ಅಧ್ಯಕ್ಷೆ ಸಫರಾ ನಾಸಿರ್ ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭ ಹಾರೈಸಿದರು. ಪ್ರಾಸ್ತಾವಿಕವಾಗಿ ಮಾತನಾಡಿದ ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ಹಿದಾಯತ್ ಶಾಲೆಯ ಭವಿಷ್ಯದ ಬೆಳವಣಿಗೆಯ ಬಗ್ಗೆ ಬೆಳಕು ಚೆಲ್ಲಿದರು. ಮಂಗಳೂರು ಶಿಕ್ಷಣ ವಿಭಾಗದ ಬಿಇಒ ಮತ್ತು ಸಿಆರ್ ಪಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು. ಯು.ಪಿ.ಇಬ್ರಾಹೀಂ ಮತ್ತು ಅಶ್ರಫ್ ನಡುಗುಡ್ಡೆ ಅತಿಥಿಗಳಾಗಿ ಭಾಗವಹಿಸಿದ್ದರು. ಮಕ್ಕಳ ಸಾಂಸ್ಕೃತಿಕ ಕಲಾ ಪ್ರತಿಭೆಯು ಕಾರ್ಯಕ್ರಮಕ್ಕೆ ಮೆರಗು ನೀಡಿತು. ಕ್ರೀಡೆ ಮತ್ತು ಇತರ ಸ್ಪರ್ಧೆಗಳಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಪುರಸ್ಕಾರ ನೀಡಲಾಯಿತು. ಕ್ರೀಡೆಯಲ್ಲಿ ವಿಶೇಷ ಸಾಧನೆಗಾಗಿ ಶಿಕ್ಷಕಿ ನಮೃತಾ, ಅನಿವಾಸಿ ಉದ್ಯಮಿ ಬಿಸಿಸಿಐ ಅಧ್ಯಕ್ಷ ಹಿದಾಯತ್, ಅಹ್ಮದ್ ಬಾವ ತೋಕೂರ್ ಅವರನ್ನು ಸನ್ಮಾನಿಸಲಾಯಿತು. ಎಸ್ ಡಿಎಂಸಿ ಕಮರುದ್ದೀನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕರಾದ ತನುಶ್ರೀ ಸ್ವಾಗತಿಸಿದರು. ಶ್ವೇತಾ ವಂದಿಸಿದರು. ನಮೃತಾ ಕಾರ್ಯಕ್ರಮ ನಿರೂಪಿಸಿದರು.
ವಾಷಿಂಗ್ಟನ್: ದಿಲ್ಲಿಯಲ್ಲಿರುವ ವಿಜಯ ಕಮಾನು ಇಂಡಿಯಾ ಗೇಟ್ ಫೋಟೊ ಹಂಚಿಕೊಂಡ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, “ನಾವು ಇದಕ್ಕಿಂತ ಅದ್ಭುತವಾದ ವಿಜಯ ಕಮಾನನ್ನು ವಾಷಿಂಗ್ಟನ್ ಡಿಸಿಯಲ್ಲಿ ನಿರ್ಮಿಸುತ್ತೇವೆ” ಎಂದು ಘೋಷಿಸಿದ್ದಾರೆ. ಇಂಡಿಯಾ ಗೇಟ್ ನ ಭಾವಚಿತ್ರವನ್ನು ಟ್ರೂತ್ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಹಂಚಿಕೊಂಡಿರುವ ಡೊನಾಲ್ಡ್ ಟ್ರಂಪ್, “ಭಾರತದ ಸುಂದರವಾದ ವಿಜಯ ಕಮಾನು. ನಮ್ಮದು ಅವರಿಗಿಂತ ಅದ್ಭುತವಾಗಿರಲಿದೆ!” ಎಂದು ಘೋಷಿಸಿದ್ದಾರೆ. ಅಮೆರಿಕ ರಾಜಧಾನಿ ವಾಷಿಂಗ್ಟನ್ ನಲ್ಲಿ ಕಮಾನನ್ನು ನಿರ್ಮಿಸಬೇಕು ಎಂಬ ಪರಿಷ್ಕೃತ ಪ್ರಯತ್ನ ಇದಾಗಿದ್ದು, ಈ ಕಮಾನನ್ನು ಸ್ವಾತಂತ್ರ್ಯ ಕಮಾನು ಎಂದು ಡೊನಾಲ್ಡ್ ಟ್ರಂಪ್ ಬಣ್ಣಿಸಿದ್ದಾರೆ. ಅಮೆರಿಕದಲ್ಲಿ ವಿಶ್ವದ ಅತಿ ದೊಡ್ಡ ವಿಜಯ ಕಮಾನನ್ನು ನಿರ್ಮಿಸಬೇಕು ಎಂಬ ತಮ್ಮ ಮಾತನ್ನು ಪುನರುಚ್ಚರಿಸಿರುವ ಡೊನಾಲ್ಡ್ ಟ್ರಂಪ್, ಇದು ದೇಶದ ಹೆಮ್ಮೆಯ ಸಂಕೇತವಾಗಿದೆ ಎಂದು ಹೇಳಿದ್ದಾರೆ. ಏರ್ ಫೋರ್ಸ್ ಒನ್ ವಿಮಾನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡೊನಾಲ್ಡ್ ಟ್ರಂಪ್, ಸುಮಾರು 200 ವರ್ಷಗಳಿಂದ ಇಂತಹ ಸ್ಮಾರಕವನ್ನು ನಿರ್ಮಿಸಬೇಕು ಎಂಬ ಯೋಜನೆಯಿದೆ. 200 ವರ್ಷಗಳಿಂದ ಕಮಾನೊಂದನ್ನು ನಿರ್ಮಿಸಬೇಕು ಎಂಬ ಬಯಕೆ ಇದೆ. ವಿಶ್ವದ ಕನಿಷ್ಠ 57 ನಗರಗಳಲ್ಲಿ ಈಗಾಗಲೇ ವಿಜಯ ಕಮಾನುಗಳಿವೆ. ಆದರೆ, ಅಂತಹ ಕಮಾನಿಲ್ಲದ ಪ್ರಮುಖ ನಗರವಾಗಿ ವಾಷಿಂಗ್ಟನ್ ಉಳಿದಿದೆ” ಎಂದೂ ತಿಳಿಸಿದ್ದಾರೆ. ಇದಕ್ಕೂ ಮುನ್ನ, ಪ್ರಸ್ತಾವಿತ ಕಮಾನಿನ ನಿರ್ಮಾಣ ಮುಂದಿನ ಕೆಲ ತಿಂಗಳಲ್ಲಿ ಪ್ರಾರಂಭಗೊಳ್ಳಲಿದೆ ಎಂದು ಅವರು ಪ್ರಕಟಿಸಿದ್ದರು.
Gold Price Drop: ಭಾರತ - ಅಮೆರಿಕ ಭಾಯಿ ಭಾಯಿ: ಷೇರುಮಾರುಕಟ್ಟೆಯಲ್ಲಿ ಹೊಸ ಹುಮ್ಮಸ್ಸು , ಚಿನ್ನದ ಬೆಲೆ ಇಳಿಕೆ!
Gold Price Drop: ಭಾರತ ಹಾಗೂ ಅಮೆರಿಕದ ನಡುವೆ ಆರ್ಥಿಕ ಸಂಬಂಧ ಸುಧಾರಿಸುತ್ತಿರುವ ಬೆನ್ನಲ್ಲೇ ಭಾರತದ ಷೇರುಮಾರುಕಟ್ಟೆ ಚೇತರಿಸಿಕೊಂಡಿದೆ. ಭಾರತದ ಮೇಲೆ ವಿಧಿಸಲಾಗಿದ್ದ ಆಮದು ಸುಂಕದ ಪ್ರಮಾಣವನ್ನು ಶೇ25 ರಿಂದ ಶೇ18 ಇಳಿಸಿರುವುದಾಗಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಹೇಳಿದ್ದಾರೆ. ಈ ಬಗ್ಗೆ ಸೋಷಿಯಲ್ ಮೀಡಿಯಾ ಎಕ್ಸ್ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಟ್ವೀಟ್ ಮಾಡಿದ್ದಾರೆ.
ಭಾರತದ ಮೇಲಿನ ಸುಂಕ ಇಳಿಸಿದ ಅಮೆರಿಕ - ಹೊಟ್ಟೆ ಉರಿದುಕೊಂಡ ಚೀನಾ, ಪಾಕಿಸ್ತಾನ, ಬಾಂಗ್ಲಾದೇಶ
ಭಾರತದೊಂದಿಗೆ ಯುರೋಪಿಯನ್ ಒಕ್ಕೂಟದ ವಾಣಿಜ್ಯ ಒಪ್ಪಂದಕ್ಕೆ ಪ್ರತಿಕ್ರಿಯೆಯಾಗಿ, ಅಮೆರಿಕ ಭಾರತದ ಮೇಲಿನ ತೆರಿಗೆಯನ್ನು ಶೇ. 50 ರಿಂದ ಶೇ. 18ಕ್ಕೆ ಇಳಿಸಿದೆ. ಇದು ಏಷ್ಯಾದ ಇತರ ರಾಷ್ಟ್ರಗಳಿಗಿಂತ ಕಡಿಮೆ ಸುಂಕವಾಗಿದ್ದು, ಭಾರತಕ್ಕೆ ದೊಡ್ಡ ಅವಕಾಶ. ಆದರೂ, ಯುಕೆ, ಯುರೋಪ್ ಒಕ್ಕೂಟ, ಜಪಾನ್, ದಕ್ಷಿಣ ಕೊರಿಯಾಗಳಿಗಿಂತ ಭಾರತದ ಮೇಲಿನ ಸುಂಕ ತುಸು ಹೆಚ್ಚಿದೆ. ಈ ಇಳಿಕೆ ಭಾರತೀಯ ರಫ್ತುದಾರರಿಗೆ ಆಶಾದಾಯಕವಾಗಿದೆ.
ಕರ್ನಾಟಕದಲ್ಲಿ ಸಿಜೆ ರಾಯ್ ಸಾವು, ಕೇರಳ ರಾಜಕೀಯದಲ್ಲಿ ಶುರುವಾಯ್ತು ಸಂಚಲನ... Political Repercussions
ಕರ್ನಾಟಕ ರಿಯಲ್ ಎಸ್ಟೇಟ್ ಸೇರಿದಂತೆ ಹಲವು ಉದ್ಯಮಗಳಲ್ಲಿ ದೊಡ್ಡ ಹೆಸರು ಮಾಡಿದ್ದ &ಜಗತ್ತಿನ ಹಲವು ಭಾಗದಲ್ಲಿ ಬ್ಯುಸಿನೆಸ್ ಹೊಂದಿದ್ದ ಉದ್ಯಮಿ ಸಿ.ಜೆ. ರಾಯ್ ಸಾವಿನ ಸುದ್ದಿ ಭಾರಿ ದೊಡ್ಡ ಕಲಹ ಎಬ್ಬಿಸಿದೆ. ಕಾನ್ಫಿಡೆಂಟ್ ಗ್ರೂಪ್ ಸಂಸ್ಥಾಪಕ ಸಿ.ಜೆ. ರಾಯ್ ಆತ್ಮಹತ್ಯೆ ಕೇಸ್ ಇದೀಗ ದಿನಕ್ಕೊಂದು ತಿರುವು ಪಡೆಯುತ್ತಿದೆ. ಸಾವಿರಾರು ಕೋಟಿ ರೂಪಾಯಿ ಆಸ್ತಿ ಹೊಂದಿದ್ದ, ಅತ್ಯಂತ
India-US Trade Deal: ನಮ್ದೇ ಜಮಾನಾ; ನರೇಂದ್ರ ಮೋದಿ ಅವರಿಗೆ ಎನ್ಡಿಎ ಸಂಸದೀಯ ಸಭೆಯಲ್ಲಿ ಸನ್ಮಾನ
ಭಾರತದ ಜೊತೆಗಿನ ವಾಣಿಜ್ಯ ಸಂಬಂಧದಲ್ಲಿ ಅಮೆರಿಕವು ಕ್ರಾಂತಿಕಾರಿ ಬದಲಾವಣೆ ಮಾಡಿಕೊಂಡಿದೆ. ಜಾಗತಿಕ ಸುಂಕ ಸಮರದ ಭಾಗವಾಗಿ ಭಾರತದ ಮೇಲೆ ಹೇರಲಾಗಿದ್ದ ಸುಂಕವನ್ನು, ಶೇ. 50ರಿಂದ ಶೇ. 18ಕ್ಕೆ ಟ್ರಂಪ್ ಆಡಳಿತ ಇಳಿಕೆ ಮಾಡಿದೆ. ಇಷ್ಟೇ ಅಲ್ಲದೇ ಭಾರತ-ಅಮೆರಿಕ ವ್ಯಾಪಾರ ಒಪ್ಪಂದದ ಬಗ್ಗೆಯೂ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಹತ್ವದ ಘೋಷಣೆ ಮಾಡಿದ್ದಾರೆ. ಸುಂಕ ಸಮರದಲ್ಲಿ ಭಾರತದ ಗೆಲುವನ್ನು ಸಂಭ್ರಮಿಸಲು, ಎನ್ಡಿಎ ಸಂಸದೀಯ ಸಭೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಸನ್ಮಾನಿಸಲಾಗಿದೆ.
ಗುಂಪು ದಾಳಿ ತಡೆಯಲು ಪ್ರಯತ್ನಿಸಿದ ಕನಿಷ್ಠ ಆರು ಪೊಲೀಸ್ ಸಿಬ್ಬಂದಿಗೆ ಗಾಯ
Gold Rate Fall : ಚಿನ್ನ ಬೆಳ್ಳಿ ದರದಲ್ಲಿ ಮತ್ತೆ ಕುಸಿತ: ಈ ವಾರ ಭಾರಿ ಏರಿಳಿತ ಸಾಧ್ಯತೆ
ಚಿನ್ನ ಬೆಳ್ಳಿ ಮಾರುಕಟ್ಟೆಯಲ್ಲಿ ಕ್ಷಿಪ್ರ ಬದಲಾವಣೆಗಳಾಗುತ್ತಿದ್ದು, ಹೂಡಿಕೆದಾರರು ಹೆಚ್ಚು ಮಾರಾಟದಲ್ಲಿ ತೊಡಗಿರುವುದರಿಂದ ಹಾಗೂ ಡಾಲರ್ ಮೌಲ್ಯ ಬಲಗೊಳ್ಳುತ್ತಿರುವುದರಿಂದ ಚಿನ್ನದ ಬೆಲೆ ಇಳಿಕೆಯಾಗುತ್ತಿದೆ. ಆದರೆ ಸದ್ಯದಲ್ಲೇ ಏರಿಳಿತ ಕಾಣುವ ಸಾಧ್ಯತೆಗಳೂ ದಟ್ಟವಾಗಿವೆ.
KASARGOD | ತೂಮಿನಾಡು ಕುಟುಂಬ ಕಲಹದಲ್ಲಿ ಕೊಲೆಗೀಡಾದವರ ಸಂಖ್ಯೆ 2ಕ್ಕೆ ಏರಿಕೆ
ಗಂಭೀರವಾಗಿ ಗಾಯಗೊಂಡಿದ್ದ ಶೇಕುಂಞಿ ಆಸ್ಪತ್ರೆಯಲ್ಲಿ ಕೊನೆಯುಸಿರು
Pakistan Army: ಪಾಕಿಸ್ತಾನಕ್ಕೆ ಆಘಾತ ನೀಡಿದ ಬಲೂಚ್ ಬಂಡುಕೋರರು, 177 ಜೀವ ಹಾನಿ ವರದಿ
ಪಾಕಿಸ್ತಾನ ತನ್ನ ನಿಜರೂಪ ತೋರಿಸುತ್ತಾ, ಉಗ್ರರಿಗೆ ಪದೇ ಪದೇ ಬೆಂಬಲ ನೀಡುತ್ತಾ ಬಂದಿದೆ. ಅಲ್ಲದೆ ತಾನು ಮಾಡಿದ ತಪ್ಪಿಗೆ ಸರಿಯಾದ ಶಿಕ್ಷೆ ಕೂಡ ಅನುಭವಿಸುತ್ತಿದೆ ಪಾಕಿಸ್ತಾನ. ಉಗ್ರರಿಗೆ ಬೆಂಬಲ ಕೊಟ್ಟ ಕಾರಣಕ್ಕೆ ಅದೇ ಉಗ್ರರಿಂದ ನಾಶವಾಗಿ ಹೋಗುವ ಹಂತಕ್ಕೆ ಬಂದಿದೆ ಭಾರತದ ಶತ್ರು ದೇಶ. ಇಂತಹ ಪರಿಸ್ಥಿತಿಯಲ್ಲೇ ಪಾಕಿಸ್ತಾನ ಸೇನೆ ದಂಗೆ ಪೀಡಿತ ಅಫ್ಘಾನಿಸ್ತಾನ ನೈಋತ್ಯ ಗಡಿಯಲ್ಲಿ
ಭ್ರಷ್ಟ ಅಧಿಕಾರಿಗಳ ನಿದ್ದೆಗೆಡಿಸಿದ ಲೋಕಾಯುಕ್ತ ಸಂಸ್ಥೆ: 3 ವರ್ಷಗಳಲ್ಲಿ 255 ಮಂದಿ ಬಲೆಗೆ, ಕೋಟ್ಯಂತರ ಆಸ್ತಿ ಜಪ್ತಿ
ಕಳೆದ ಮೂರು ವರ್ಷಗಳಲ್ಲಿ ಲೋಕಾಯುಕ್ತ ಅಧಿಕಾರಿಗಳು 255 ದಾಳಿಗಳನ್ನು ನಡೆಸಿ, ಹಲವು ಭ್ರಷ್ಟ ಸರ್ಕಾರಿ ನೌಕರರು ಮತ್ತು ಅಧಿಕಾರಿಗಳ ಬಣ್ಣ ಬಯಲು ಮಾಡಿದ್ದಾರೆ. ಈ ದಾಳಿಗಳಲ್ಲಿ ಅಪಾರ ಪ್ರಮಾಣದ ನಗದು, ಚಿನ್ನಾಭರಣ ಮತ್ತು ಆಸ್ತಿ ವಶಪಡಿಸಿಕೊಳ್ಳಲಾಗಿದೆ. ಆರೋಪಿತರ ವಿರುದ್ಧ ಭ್ರಷ್ಟಾಚಾರ ತಡೆ ಅಧಿನಿಯಮದಡಿ ಕ್ರಮ ಕೈಗೊಳ್ಳಲಾಗುತ್ತಿದೆ. ಹಾಗಾದ್ರೆ 3 ವರ್ಷಗಳಲ್ಲಿ ಯಾವೆಲ್ಲಾ ಭ್ರಷ್ಟ ಅಧಿಕಾರಿಗಳ ಮೇಲೆ ಲೋಕಾಯುಕ್ತ ದಾಳಿ ನಡೆಸಿದೆ ಎಂಬ ವಿವರ ಇಲ್ಲಿದೆ..
DK Shivakumar Tweet: ಕರ್ನಾಟಕ ರಾಜಕೀಯದಲ್ಲಿ ಸಂಚಲನ ಮೂಡಿಸಿದ ಡಿಸಿಎಂ ಡಿ.ಕೆ ಶಿವಕುಮಾರ್ ಟ್ವೀಟ್
DK Shivakumar Tweet: ಕರ್ನಾಟಕದಲ್ಲಿ ಮುಖ್ಯಮಂತ್ರಿ ಹುದ್ದೆ - ರಾಜಕೀಯ ಚರ್ಚೆಯು ಸದ್ದಿಲ್ಲದೆ ಕಾವು ಪಡೆದುಕೊಳ್ಳುತ್ತಿದೆ. ಮುಖ್ಯಮಂತ್ರಿಯಾಗಿ ಡಿ.ಕೆ ಶಿವಕುಮಾರ್ ಅವರು ಅಧಿಕಾರ ಸ್ವೀಕರಿಸಲಿದ್ದಾರೆ ಎನ್ನುವ ವಿಚಾರವು ಭಾರೀ ಚರ್ಚೆಗೆ ಕಾರಣವಾಗಿದೆ. ಇದೀಗ ಉಪ ಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ ಶಿವಕುಮಾರ್ ಅವರು ಸೋಷಿಯಲ್ ಮೀಡಿಯಾ ಎಕ್ಸ್ನಲ್ಲಿ ಮಾಡಿರುವ ಟ್ವೀಟ್ ಭಾರೀ ಚರ್ಚೆಗೆ ಕಾರಣವಾಗಿದೆ.
ಜನತಾಪಕ್ಷ ಮತ್ತು ಜನತಾದಳ ರಾಷ್ಟ್ರೀಯ ಪಕ್ಷಗಳೇ ಆಗಿದ್ದರೂ ಕರ್ನಾಟಕದಲ್ಲಿ ನೆಲೆ ಕಂಡುಕೊಂಡದ್ದು ‘ನಮ್ಮ ಆಡಳಿತ ದಿಲ್ಲಿಯಿಂದಲ್ಲ’ ಎಂದು ಹೇಳುವ ಮೂಲಕ. ಅವುಗಳ ಅಸ್ತಿತ್ವ ಉಳಿದಿದ್ದೇ ಪ್ರಾದೇಶಿಕ ಹಿತಾಸಕ್ತಿಗಳನ್ನು ಕಾಪಾಡುವ ಗುಣ ಅಂತರ್ಗತವಾಗಿದ್ದ ಕಾರಣಕ್ಕಾಗಿ. ಇದೇ ರೀತಿ 1999ರಲ್ಲಿ ಜನತಾದಳ ವಿಭಜನೆಯಾಗಿ ಜನ್ಮತಾಳಿದ ಜನತಾದಳ (ಜಾತ್ಯತೀತ) ಕೂಡ ಪೂರ್ಣ ಪ್ರಮಾಣದ ಪ್ರಾದೇಶಿಕ ಪಕ್ಷವಾಗುವ ನಿರೀಕ್ಷೆಗಳನ್ನು ಹುಟ್ಟುಹಾಕಿತ್ತು. ಆದರೆ 26 ವರ್ಷಗಳ ಬಳಿಕವೂ ನಿರೀಕ್ಷೆ ನಿಜವಾಗಿಲ್ಲ. 25 ವರ್ಷದಲ್ಲಿ ಆಚರಿಸಿಕೊಳ್ಳಬೇಕಾಗಿದ್ದ ಬೆಳ್ಳಿಹಬ್ಬವನ್ನು ಜೆಡಿಎಸ್ 26 ವರ್ಷಕ್ಕೆ ಆಚರಿಸಿಕೊಂಡಿದೆ. ಇದು ಆ ಪಕ್ಷದ ನಾಯಕರಾದ ಎಚ್.ಡಿ. ದೇವೇಗೌಡ ಮತ್ತು ಎಚ್.ಡಿ. ಕುಮಾರಸ್ವಾಮಿಯ ಅನುಕೂಲ ಸಿಂಧು ರಾಜಕಾರಣವಲ್ಲದೆ ಬೇರೇನೂ ಅಲ್ಲ. 25 ವರ್ಷ ತುಂಬಿದಾಗ ಅವರಿಗೆ ಬೆಳ್ಳಿಹಬ್ಬ ನೆನಪಾಗಿರಲಿಲ್ಲ ಎಂದಲ್ಲ, ಅವರಿಗೆ ಬೇಕಾಗಿರಲಿಲ್ಲ. ಆಗ ರಾಜ್ಯ ರಾಜಕಾರಣದ ಬಗ್ಗೆ ಸ್ಪಷ್ಟತೆ ಇರಲಿಲ್ಲ. ಬಿಜೆಪಿ-ಜೆಡಿಎಸ್ ಮೈತ್ರಿ ಮುಂದುವರಿಯುವ ಬಗ್ಗೆ ಬಲವಾದ ವಿಶ್ವಾಸವಿರಲಿಲ್ಲ. ಈಗ 26 ವರ್ಷ ತುಂಬುವ ಹೊತ್ತಿಗೆ ಬಿಹಾರದ ಫಲಿತಾಂಶ ಭರವಸೆ ಮೂಡಿಸಿದೆ. ಬಿಜೆಪಿ ರಾಷ್ಟ್ರೀಯ ನಾಯಕರಿಗೆ ಮೈತ್ರಿ ಅನಿವಾರ್ಯವೆನಿಸಿದೆ. ದಿಲ್ಲಿ ನಾಯಕತ್ವ ಇನ್ನಷ್ಟು ಹತ್ತಿರವಾಗಿದೆ. ರಾಜ್ಯ ಬಿಜೆಪಿ ನಾಯಕತ್ವ ಹಳ್ಳ ಹಿಡಿದಿದೆ. ಕುಮಾರಸ್ವಾಮಿಗೆ ಕರ್ನಾಟಕದ ಕನಸುಗಳು ಬೀಳಲಾರಂಭಿಸಿವೆ. ಜೆಡಿಎಸ್ ಪಕ್ಷದ ಬೆಳ್ಳಿಹಬ್ಬಕ್ಕೂ ಕುಮಾರಸ್ವಾಮಿ ರಾಜ್ಯ ರಾಜಕಾರಣಕ್ಕೆ ಮರಳುವ ಇಂಗಿತ ವ್ಯಕ್ತಪಡಿಸುವುದಕ್ಕೂ ಸಂಬಂಧ ಇಲ್ಲ ಎಂದು ಹೇಳಲು ಸಾಧ್ಯವೇ? ಬೆಳ್ಳಿಹಬ್ಬದ ಸಂದರ್ಭದಲ್ಲಾದರೂ ಜೆಡಿಎಸ್ ನಾಯಕರು ತಮ್ಮ ಪಕ್ಷಕ್ಕೆ ಇರುವ ಪ್ರಾಮುಖ್ಯತೆ ಏನು ಎನ್ನುವ ಬಗ್ಗೆ ಪರಾಮರ್ಶೆ ನಡೆಸಬೇಕಾಗಿತ್ತು. ಜೆಡಿಎಸ್ ಅನ್ನು ನಿಜವಾದ ಅರ್ಥದಲ್ಲಿ ಪ್ರಾದೇಶಿಕ ಪಕ್ಷವನ್ನಾಗಿ ರೂಪಿಸುವುದು ಹೇಗೆ ಎಂಬ ಚಿಂತನೆ ನಡೆಸಬೇಕಾಗಿತ್ತು. ಆದರೆ ಎಚ್.ಡಿ. ದೇವೇಗೌಡ ಮತ್ತು ಎಚ್.ಡಿ. ಕುಮಾರಸ್ವಾಮಿಗೆ ತಮ್ಮದು ಪ್ರಾದೇಶಿಕ ಪಕ್ಷ ಎಂಬುದೇ ಮರೆತುಹೋಗಿದೆ. ನೆನಪಿದ್ದರೆ ಬೆಳ್ಳಿಹಬ್ಬ ಉದ್ದೇಶಿಸಿ ಮಾತನಾಡಿದ ದೇವೇಗೌಡರು ಪ್ರಾದೇಶಿಕ ಪಕ್ಷದ ಅತ್ಯಗತ್ಯದ ಬಗ್ಗೆ ಹೇಳುವುದನ್ನು ಮರೆಯುತ್ತಿದ್ದರೆ? ದೇವೇಗೌಡರು ಮಾತನಾಡಿದ್ದು ತಮ್ಮ ಮೊಮ್ಮಗ ಪ್ರಜ್ವಲ್ ರೇವಣ್ಣನ ಲೈಂಗಿಕ ದೌರ್ಜನ್ಯದ ಬಗ್ಗೆ. ಸಣ್ಣದೊಂದು ವಿಷಾದವನ್ನೂ ವ್ಯಕ್ತಪಡಿಸದೆ ಪರೋಕ್ಷವಾಗಿ ಆತ ಮಾಡಿದ್ದೇ ಸರಿ ಎನ್ನುವ ರೀತಿಯಲ್ಲಿ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮ ಪುತ್ರ ಎಚ್.ಡಿ. ರೇವಣ್ಣಗೆ ಕಿರುಕುಳ ನೀಡಲಾಯಿತು ಎನ್ನುವ ಬಗ್ಗೆ ಹಾಗೂ ಇನ್ನೊಬ್ಬ ಮಗ ಕುಮಾರಸ್ವಾಮಿಯನ್ನು ಮತ್ತೊಮ್ಮೆ ಮುಖ್ಯಮಂತ್ರಿ ಮಾಡುವ ಬಗ್ಗೆ. ಪ್ರಜ್ವಲ್ ರೇವಣ್ಣನ ಲೈಂಗಿಕ ದೌರ್ಜನ್ಯದ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದೇ ತಪ್ಪು, ತನಿಖೆ ಮಾಡಿದ್ದೇ ತಪ್ಪು, ಪರೋಕ್ಷವಾಗಿ ನೆರವಾಗಿದ್ದ ಪುತ್ರನನ್ನು ಬಂಧಿಸಿ ವಿಚಾರಣೆ ನಡೆಸಿದ್ದೇ ತಪ್ಪು ಎಂದು ಆಕ್ರೋಶ ವ್ಯಕ್ತಪಡಿಸಿದ್ದ ದೇವೇಗೌಡರು ಅದಕ್ಕೋಸ್ಕರನಾ ಜೆಡಿಎಸ್ ಪಕ್ಷದ ಬೆಳ್ಳಿಹಬ್ಬವನ್ನು ಆಯೋಜನೆ ಮಾಡಿದ್ದು? ಒಬ್ಬ ಮಗನ ಬಗ್ಗೆ ಮರುಗಿ ಮತ್ತೊಬ್ಬ ಮಗನನ್ನು ಮುಖ್ಯಮಂತ್ರಿ ಮಾಡುವ ಪಣತೊಡಲೆಂದೇ ಆಯೋಜಿಸಿದ್ದ ಬೆಳ್ಳಿಹಬ್ಬದಲ್ಲಿ ಬಂಗಾರದಂಥ ಆಲೋಚನೆ ನಿರೀಕ್ಷಿಸುವುದು ದುಬಾರಿಯಾದೀತು. ಆದರೆ ಪ್ರಾದೇಶಿಕ ಪಕ್ಷ ದೇವೇಗೌಡ ಮತ್ತು ಕುಮಾರಸ್ವಾಮಿಗೆ ಬೇಡವಾಗಿದ್ದರೂ ರಾಜ್ಯಕ್ಕೆ ಬೇಕಾಗಿದೆ. ಪ್ರಾದೇಶಿಕ ಪಕ್ಷ ಏಕೆ ಬೇಕು ಎನ್ನುವುದಕ್ಕೆ ಅಕ್ಕಪಕ್ಕದ ತಮಿಳುನಾಡು ಮತ್ತು ಆಂಧ್ರ ಪ್ರದೇಶದ ಕಡೆ ನೋಡಬೇಕು. ದೂರದ ಪಶ್ಚಿಮ ಬಂಗಾಳ ಮತ್ತು ಗುಜರಾತ್ ಕಡೆಗೂ ನೋಡಬೇಕು. ತಮಿಳುನಾಡಿಗೆ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಒಪ್ಪಿಕೊಳ್ಳುವುದಿಲ್ಲ ಎಂದು ಕೇಂದ್ರ ಸರಕಾರದ ಮುಖಕ್ಕೆ ಹೊಡೆದಂತೆ ಹೇಳುವ ತಾಕತ್ತು ಇದೆ. ದಿಲ್ಲಿವಾಲಾಗಳು ಹಿಂದಿಯಲ್ಲಿ ಪತ್ರಬರೆದರೆ ತಮಿಳಿನಲ್ಲಿ ಉತ್ತರಿಸುವ ತಂತ್ರಗಾರಿಕೆ ಇದೆ. ರಾಜ್ಯಪಾಲ ಹುದ್ದೆಯೇ ಬೇಡ, ರಾಜ್ಯಪಾಲರೇ ಬೇಡ ಎನ್ನುವ ಎದೆಗಾರಿಕೆ ಇದೆ. ಅನುದಾನ ಹಂಚಿಕೆಯಲ್ಲಿ ಅನ್ಯಾಯ ಮಾಡಿದರೆ ಸುಪ್ರೀಂ ಕೋರ್ಟ್ ಕದ ತಟ್ಟುವ ಬದ್ಧತೆ ಇದೆ. ಕೇಂದ್ರ ಸರಕಾರ ಹೇಳಿದ್ದೆಲ್ಲವನ್ನೂ ಪರಾಮರ್ಶೆ ಮಾಡದೆ ಕೇಳಲು ಸಾಧ್ಯವಿಲ್ಲ ಎಂದು ಸೆಟೆದು ನಿಲ್ಲುವ ಧೈರ್ಯವೂ ಇದೆ. ಏಕೆಂದರೆ ಅಲ್ಲಿ ಆಳುತ್ತಿರುವುದು ಪ್ರಾದೇಶಿಕ ಪಕ್ಷಗಳು. ಆಂಧ್ರದ ವಿಷಯ ನೋಡುವುದಾದರೆ ಇದೇ ಜನವರಿ 19ರಂದು ರಾಷ್ಟ್ರೀಯ ಪ್ರಕೃತಿ ವಿಕೋಪ ನಿರ್ವಹಣಾ ಸಂಸ್ಥೆಯ (ಎನ್ಐಡಿಎಂ) ದಕ್ಷಿಣ ವಲಯದ ಕ್ಯಾಂಪಸ್ ಉದ್ಘಾಟನೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅಮಿತ್ ಶಾ ‘‘ಕೇಂದ್ರ ಸರಕಾರ ಕಳೆದ 6 ತಿಂಗಳ ಅವಧಿಯಲ್ಲಿ ಆಂಧ್ರದ ಬೆಳವಣಿಗೆಯ ದೃಷ್ಟಿಯಿಂದ 3 ಲಕ್ಷ ಕೋಟಿ ರೂ.ಗೂ ಹೆಚ್ಚು ಮೌಲ್ಯದ ಯೋಜನೆಗಳಿಗೆ ಅನುಮೋದನೆ ನೀಡಿದೆ’’ ಎಂದು ಹೇಳಿದ್ದಾರೆ. 3 ಲಕ್ಷ ಕೋಟಿ ರೂ. ಎಂದರೆ ಕರ್ನಾಟಕದ ಬಜೆಟ್ನ ಮುಕ್ಕಾಲು ಭಾಗ. ಈ ಸಲದ ಕೇಂದ್ರ ಬಜೆಟ್ ನಲ್ಲೂ ಕರ್ನಾಟಕಕ್ಕಿಂತ ಜಾಸ್ತಿ ಆಂಧ್ರಕ್ಕೆ ತೆರಿಗೆ ಮತ್ತು ಸುಂಕದ ಪಾಲಿನ ಹಣ ಹಂಚಿಕೆಯಾಗಿದೆ. ಅದು ಏಕೆ ಸಾಧ್ಯವಾಯಿತು ಎಂದರೆ ಅಲ್ಲಿರುವುದು ಟಿಡಿಪಿ ಎಂಬ ಪ್ರಾದೇಶಿಕ ಪಕ್ಷದ ಸರಕಾರ. ಆ ಸರಕಾರದಲ್ಲಿ ಬಿಜೆಪಿಯ ಪಾಲುದಾರಿಕೆಯೂ ಇದೆ, ಆದರೆ ಪ್ರಾಮುಖ್ಯತೆ ಕಮ್ಮಿ. ಇದೇ ರೀತಿ ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಪ್ರಾದೇಶಿಕ ಅಸ್ಮಿತೆಯ ರಾಜಕೀಯ ಮಾಡುತ್ತಿದ್ದಾರೆ. ಭಾರತ ಎಂಬುದು ಹಲವು ರಾಜ್ಯಗಳ ಒಕ್ಕೂಟ ಎನ್ನುವುದನ್ನೇ ಮರೆತು ದಿಲ್ಲಿ ಆದೇಶಗಳನ್ನು ಪಾಲಿಸಬೇಕೆಂಬ ಕೇಂದ್ರ ಸರಕಾರದ ಸರ್ವಾಧಿಕಾರಿ ನಡೆಯನ್ನು ಅಡಿಗಡಿಗೂ ಖಂಡಿಸುತ್ತಿದ್ದಾರೆ. ಆಪರೇಷನ್ ಕಮಲ, ತೆರಿಗೆ ಹಂಚಿಕೆಗೆ ಕತ್ತರಿ, ಅನುದಾನಗಳ ಕಡಿತ, ರಾಜ್ಯಪಾಲರ ಮೂಲಕ ಕಿರುಕುಳ ಮತ್ತು ಐಟಿ-ಈ.ಡಿ.-ಸಿಬಿಐ ದಾಳಿಗಳೆಲ್ಲವನ್ನೂ ದಿಟ್ಟವಾಗಿ ಎದುರಿಸುತ್ತಿದ್ದಾರೆ. ಏಕೆಂದರೆ ಅವರಿಗೆ ಅವರೇ ಹೈಕಮಾಂಡ್. ಮಮತಾ ಬ್ಯಾನರ್ಜಿ ‘ಜಿದ್ದಿ’ಯಾಗಿರುವ ಕಾರಣಕ್ಕಾಗಿ ಪ್ರಸಕ್ತ ಸಾಲಿನ ಬಜೆಟ್ನಲ್ಲಿ ಕೇಂದ್ರ ಸರಕಾರ ರಾಜ್ಯಗಳಿಗೆ ಹಂಚಿಕೆ ಮಾಡುವ ತೆರಿಗೆ ಪಾಲು ಮತ್ತು ಅನುದಾನಗಳ ವಿಷಯದಲ್ಲಿ ಪಶ್ಚಿಮ ಬಂಗಾಳ ನಾಲ್ಕನೇ ಸ್ಥಾನದಲ್ಲಿದೆ (ಉತ್ತರ ಪ್ರದೇಶ ಒಂದು, ಬಿಹಾರ ಎರಡು ಮತ್ತು ಮಧ್ಯಪ್ರದೇಶ ಮೂರನೇ ಸ್ಥಾನದಲ್ಲಿವೆ). ಗುಜರಾತ್ ಉದಾಹಣೆಯನ್ನು ಭಿನ್ನ ಆಯಾಮದಲ್ಲಿ ನೋಡಬೇಕು. ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ ರಾಜ್ಯಗಳನ್ನು ಗೆಲ್ಲಲು ‘ಡಬಲ್ ಇಂಜಿನ್’ ಎಂಬ ಅಭಿವೃದ್ಧಿಯ ಹುಸಿ ಕಲ್ಪನೆಯನ್ನು ಹೇಳುತ್ತದೆ. ಆದರೆ ಇದೇ ಬಿಜೆಪಿ ತನ್ನ ಪ್ಲಾನ್ ಬಿ (ಪ್ಲಾನ್ ಎ- ಕೋಮುವಾದ) ‘ಅಭಿವೃದ್ಧಿ’ ಬಗ್ಗೆ ಹೇಳಲು ಹೊರಟಿದ್ದು ‘ಗುಜರಾತ್ ಮಾಡೆಲ್’ ಮೂಲಕ. ಗುಜರಾತ್ ಅಭಿವೃದ್ಧಿ ಸಾಧಿಸಿರುವುದು ನಿಜವೇ ಆಗಿದ್ದರೆ ಬಿಜೆಪಿ ಆ ರಾಜ್ಯವನ್ನು ಆಳಿದ ಅವಧಿಯ ಪೈಕಿ ಕೇಂದ್ರದಲ್ಲಿ ಬಹುತೇಕ ಅಧಿಕಾರದಲ್ಲಿದ್ದದ್ದು ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರ. ಡಬಲ್ ಇಂಜನ್ ಸರಕಾರ ಇದ್ದರೆ ಮಾತ್ರ ಅಭಿವೃದ್ಧಿ ಎನ್ನುವುದು ನಿಜವಾಗಿದ್ದರೆ ‘ಬಿಮಾರು’ ರಾಜ್ಯಗಳಾದ ಬಿಹಾರ, ಮಧ್ಯಪ್ರದೇಶ, ರಾಜಸ್ಥಾನ ಮತ್ತು ಉತ್ತರ ಪ್ರದೇಶಗಳು ಈಗಲೂ ಇಷ್ಟು ದೈನೇಸಿ ಸ್ಥಿತಿಯಲ್ಲಿ ಇರುತ್ತಿರಲಿಲ್ಲ. ಹಾಗೆಯೇ ಕರ್ನಾಟಕ, ತಮಿಳುನಾಡು, ತೆಲಂಗಾಣ, ಆಂಧ್ರ ಮತ್ತು ಕೇರಳ ರಾಜ್ಯಗಳು ಇಷ್ಟು ಮುಂದುವರಿಯುವುದಕ್ಕೂ ಸಾಧ್ಯವಾಗುತ್ತಿರಲಿಲ್ಲ. ಈ ಉದಾಹರಣೆಗಳು ಕರ್ನಾಟಕಕ್ಕೆ ಪ್ರಾದೇಶಿಕ ಪಕ್ಷವೊಂದು ಅತ್ಯಗತ್ಯ ಎನ್ನುವುದನ್ನು ಒತ್ತಿ ಒತ್ತಿ ಹೇಳುತ್ತವೆ. ಅದು ಜೆಡಿಎಸ್ ಮೂಲಕ ಸಾಧ್ಯವಾಗಬೇಕು ಅಥವಾ ಹೊಸ ಪಕ್ಷವೊಂದು ಹುಟ್ಟಿ ಬೆಳೆಯಬೇಕು. ಆದರೆ ರಾಜ್ಯದಲ್ಲಿ ಪ್ರಾದೇಶಿಕ ಪಕ್ಷಗಳ ಪ್ರಯೋಗ ಹಿಂದಿನಿಂದಲೂ ಯಶಸ್ವಿಯಾಗಿಲ್ಲ. ಡಿ. ದೇವರಾಜ ಅರಸು ಮತ್ತು ಎಸ್. ಬಂಗಾರಪ್ಪ ಅವರಂಥ ಜನನಾಯಕರಿಂದಲೇ ಸಾಧ್ಯವಾಗಲಿಲ್ಲ. ಅಖಿಲ ಭಾರತ ಪ್ರಗತಿಪರ ಜನತಾದಳ ಹುಟ್ಟುಹಾಕಿದ್ದ ಸಿದ್ದರಾಮಯ್ಯ ಅದನ್ನು ಬೆಳೆಸುವ ಧೈರ್ಯ ತೋರದೆ ಕಾಂಗ್ರೆಸ್ ಪಾಲಾಗಿಬಿಟ್ಟರು. ಆತುರಗಾರ ಬಿ.ಎಸ್. ಯಡಿಯೂರಪ್ಪ ಪ್ರಾದೇಶಿಕ ಪಕ್ಷ ಕಟ್ಟುವ ಮತ್ತು ಕೆಡವುವ ಎರಡೂ ವಿಷಯದಲ್ಲೂ ಅವಸರವನ್ನೇ ಮಾಡಿದರು. ಇದರಿಂದಾಗಿ ಇರುವ ಜೆಡಿಎಸ್ ಪಕ್ಷವೇ ಸುಧಾರಣೆಯಾಗಬೇಕು. ಜೆಡಿಎಸ್ ಪಕ್ಷವೇ ಸುಧಾರಣೆಯಾಗಬೇಕು ಎಂದರೆ ಜೆಡಿಎಸ್ ನಾಯಕರಾದ ಎಚ್.ಡಿ. ದೇವೇಗೌಡ ಮತ್ತು ಎಚ್.ಡಿ. ಕುಮಾರಸ್ವಾಮಿ ಸುಧಾರಿಸಬೇಕು. ದೇವೇಗೌಡರಿಗೆ ಈಗಲೂ ಮಗನನ್ನು ಸಿಎಂ ಮಾಡುವುದೇ ಮುಖ್ಯವಾಗುವುದಾದರೆ, ಕುಮಾರಸ್ವಾಮಿಗೆ ನಿಖಿಲ್ ಕುಮಾರಸ್ವಾಮಿಯನ್ನು ಪಕ್ಷದ ರಾಜ್ಯಾಧ್ಯಕ್ಷ ಮಾಡುವುದೇ ಪ್ರಾಮುಖ್ಯವಾದರೆ ಜೆಡಿಎಸ್ ಕುಟುಂಬದ ಪಕ್ಷ ಎಂಬುದರಾಚೆಗೆ ಎಂದೂ ಬೆಳೆಯದು. ಇದಕ್ಕೂ ಮಿಗಿಲಾಗಿ ದೇವೇಗೌಡ ಮತ್ತು ಕುಮಾರಸ್ವಾಮಿ ತಮ್ಮದು ಪ್ರಾದೇಶಿಕ ಪಕ್ಷ ಎನ್ನುವುದನ್ನೇ ಮರೆತಿರುವುದು ಇನ್ನೂ ಹೆಚ್ಚು ಅಪಾಯಕಾರಿ. ಜೆಡಿಎಸ್ ಬಿಜೆಪಿಯ ಪಾಲುದಾರ ಪಕ್ಷ ಮಾತ್ರ, ಪಾಲುದಾರನಾದ ಮಾತ್ರಕ್ಕೆ ಎಲ್ಲವನ್ನೂ ಸಹಿಸಿಕೊಳ್ಳಬೇಕಾದ ಅಗತ್ಯ ಇರುವುದಿಲ್ಲ. ತಮ್ಮ ಅಸ್ತಿತ್ವವನ್ನು ಬಿಟ್ಟುಕೊಡಬೇಕಾದ ಅನಿವಾರ್ಯತೆಗಳೂ ಇರುವುದಿಲ್ಲ. ಕಾಲಾಳುವಿನಂತೆ ವರ್ತಿಸುವ ದರ್ದು ಖಂಡಿತಕ್ಕೂ ಇರುವುದಿಲ್ಲ. ಆದರೂ ಜೆಡಿಎಸ್ ಕೇಂದ್ರದ ಬಿಜೆಪಿ ನೇತೃತ್ವದ ಎನ್ಡಿಎ ಸರಕಾರ ಕರ್ನಾಟಕಕ್ಕೆ ಮಾಡುತ್ತಿರುವ ಘೋರ ಅನ್ಯಾಯದ ಬಗ್ಗೆ ಒಂದೇ ಒಂದು ಮಾತನಾಡುತ್ತಿಲ್ಲ. ಕೇಂದ್ರ ಸರಕಾರ ಕರ್ನಾಟಕಕ್ಕೆ ಮಾಡುತ್ತಿರುವ ಅನ್ಯಾಯಗಳ ಬಗ್ಗೆ ಸಿದ್ದರಾಮಯ್ಯ ತಮ್ಮ ‘ಘಿ’ ಖಾತೆಯಲ್ಲಿ ನೀಡಿರುವ ವಿವರಗಳ ಪ್ರಕಾರ 14ನೇ ಹಣಕಾಸು ಆಯೋಗ ಕರ್ನಾಟಕಕ್ಕೆ ಶೇ. 4.71ರಷ್ಟು ತೆರಿಗೆ ಪಾಲು ನೀಡುವಂತೆ ಶಿಫಾರಸು ಮಾಡಿತ್ತು. 15ನೇ ಹಣಕಾಸು ಆಯೋಗ ಇದನ್ನು ಶೇ. 3.64ರಷ್ಟಕ್ಕೆ ಇಳಿಸಿತು. ಇದರಿಂದ ಕರ್ನಾಟಕಕ್ಕೆ ಸುಮಾರು 80 ಸಾವಿರ ಕೋಟಿ ರೂ. ನಷ್ಟವಾಗುತ್ತಿದೆ. 80 ಸಾವಿರ ಕೋಟಿ ರೂ. ಅಂದರೆ ರಾಜ್ಯದ ಎಲ್ಲಾ ಗ್ಯಾರಂಟಿ ಯೋಜನೆಗಳಿಗೆ ಬಹುತೇಕ ಎರಡು ವರ್ಷಕ್ಕೆ ಬೇಕಾಗುವ ಹಣ. ಈಗ 16ನೇ ಹಣಕಾಸು ಆಯೋಗದ ಶಿಫಾರಸಿನಂತೆ ರಾಜ್ಯಕ್ಕೆ ನಿಗದಿಯಾಗಿರುವ ತೆರಿಗೆ ಪಾಲು ಶೇ. 4.1ರಷ್ಟು. ಹಿಂದೆ ನರೇಂದ್ರ ಮೋದಿ ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ರಾಜ್ಯಗಳ ಪಾಲನ್ನು ಶೇ. 5ಕ್ಕೆ ಏರಿಸುವಂತೆ ಆಗ್ರಹಿಸಿದ್ದರು. ಕರ್ನಾಟಕದ ವಾದ ಕೂಡ ಅದೇ ಆಗಿತ್ತು. ಆದರೀಗ ಕರ್ನಾಟಕ ಶೇ. 4.1ಕ್ಕೆ ತೃಪ್ತಿ ಪಟ್ಟುಕೊಳ್ಳಬೇಕಾಗಿದೆ. ಏಕೆಂದರೆ ಇಲ್ಲಿ ಪ್ರಾದೇಶಿಕ ಪಕ್ಷ ಜೆಡಿಎಸ್ ಇದ್ದೂ ಸತ್ತಂತಿದೆ. ಕೇಂದ್ರ ಸರಕಾರ ಕರ್ನಾಟಕದಿಂದ ತೆರಿಗೆ, ಸೆಸ್ ಮತ್ತಿತರ ರೂಪದಲ್ಲಿ ವರ್ಷಕ್ಕೆ ಸುಮಾರು 4.5 ಲಕ್ಷ ಕೋಟಿಯಿಂದ 5 ಲಕ್ಷ ಕೋಟಿ ರೂ.ವರೆಗೆ ಸಂಗ್ರಹ ಮಾಡುತ್ತಿದೆ. ಇಷ್ಟು ಹಣ ಪಡೆದೂ ಕರ್ನಾಟಕಕ್ಕೆ ಅನ್ಯಾಯ ಮಾಡುತ್ತಿದೆ. ಇದರ ಬಗ್ಗೆ ರಾಜ್ಯ ಸರಕಾರ ಮಾತ್ರ ಹೋರಾಟ ನಡೆಸಬೇಕೇ? ರಾಜ್ಯದ ಸಂಸದರಿಗೆ ಜವಾಬ್ದಾರಿ ಇಲ್ಲವೇ? ಅವರಿಗಿಂತಲೂ ಜಾಸ್ತಿ ಹೊಣೆಗಾರಿಕೆ ಇರುವುದು ತಮ್ಮದು ಪ್ರಾದೇಶಿಕ ಪಕ್ಷ ಎಂದು ಹೇಳಿಕೊಳ್ಳುವ ಜೆಡಿಎಸ್ ನಾಯಕರಿಗೆ. ಒಂದೋ ಅವರು ಕರ್ನಾಟಕದ ಇಂಥ ಜ್ವಲಂತ ಸಮಸ್ಯೆಗಳಿಗೆ ದನಿಯಾಗಬೇಕು. ಇಲ್ಲದಿದ್ದರೆ ತಮ್ಮದು ಕುಟುಂಬದ ಪಕ್ಷ ಎಂದು ಅಧಿಕೃತವಾಗಿ ಘೋಷಿಸಿಬಿಡಬೇಕು. 2028ಕ್ಕೆ ಅತಂತ್ರ ವಿಧಾನಸಭೆ ನಿರ್ಮಾಣವಾದರೆ ಜೆಡಿಎಸ್ ನಿರ್ಣಾಯಕ ಆಗಲೂಬಹುದು. ಆಗದೆಯೂ ಇರಬಹುದು. ಆದರೆ 2004ರಲ್ಲಿ 58, 2008ರಲ್ಲಿ 28, 2013ರಲ್ಲಿ 40 ಮತ್ತು 2018ರಲ್ಲಿ 37 ಸ್ಥಾನ ಗೆದ್ದಿದ್ದ ಜೆಡಿಎಸ್ 2023ರಲ್ಲಿ 19 ಸ್ಥಾನಕ್ಕೆ ಕುಸಿದಿತ್ತು. 19 ಸ್ಥಾನಕ್ಕೆ ಕುಸಿದ ಪಕ್ಷ ಸಿಂಗಲ್ ಡಿಜಿಟ್ಗೆ ಕುಸಿಯುವುದಿಲ್ಲ ಎನ್ನುವುದಕ್ಕೆ ಏನು ಗ್ಯಾರಂಟಿ? 2004ರಲ್ಲಿ 58 ಸ್ಥಾನ ಗೆಲ್ಲಲು ದೇವೇಗೌಡ ಮತ್ತು ಸಿದ್ದರಾಮಯ್ಯ ಎಂಬ ಪ್ರಬಲ ಜೋಡಿ ಜೆಡಿಎಸ್ ಬಂಡಿ ಎಳೆದಿತ್ತು. ಮುಂದೆ ಕುಮಾರಸ್ವಾಮಿ ಜೊತೆ ಅಥವಾ ನಿಖಿಲ್ ಜೊತೆ ಜೆಡಿಎಸ್ ರಥ ಎಳೆಯುವವರು ಯಾರು? ಸಿಂಗಲ್ ಡಿಜಿಟ್ಗೆ ಕುಸಿದರೆ ಪಕ್ಷ ಮತ್ತೆ ಪುಟಿದೇಳುತ್ತದೆ ಎನ್ನುವುದಕ್ಕೆ ಏನು ಗ್ಯಾರಂಟಿ? ಹಾಗಾದರೆ, ಅದು ದೇವೇಗೌಡ ಮತ್ತು ಕುಮಾರಸ್ವಾಮಿ ಕುಟುಂಬಕ್ಕೆ ಮಾತ್ರವಲ್ಲ ರಾಜ್ಯಕ್ಕೆ ಆಗುವ ನಷ್ಟ. ರಾಜ್ಯಕ್ಕೆ ಪ್ರಾದೇಶಿಕ ಪಕ್ಷದ ಅಗತ್ಯ ಈಗ ಹಿಂದಿಗಿಂತ ಹೆಚ್ಚಿದೆ. ಇದರ ಬಗ್ಗೆ ದೇವೇಗೌಡ ಮತ್ತು ಕುಮಾರಸ್ವಾಮಿ ಯೋಚಿಸಬೇಕು. ಇಲ್ಲದಿದ್ದರೆ ಕಾಲವೇ ಪ್ರಾದೇಶಿಕ ಪಕ್ಷದ ಹುಟ್ಟಿಗೆ ಕಾರಣವಾಗಬೇಕು. ಆಫ್ ದಿ ರೆಕಾರ್ಡ್! ಸಚಿವ ಸಂಪುಟ ಪುನರ್ ರಚನೆ ಯಾವಾಗ ಆಗುತ್ತದೆ ಎನ್ನುವ ಸುಳಿವೇ ಇಲ್ಲ. ಆದರೆ ಪುನರ್ ರಚನೆ ಆದಾಗ ಕೆ.ಎನ್. ರಾಜಣ್ಣಗೆ ಜಾಗ ಸಿಗದಿದ್ದರೆ ಅವರು ಕಾಂಗ್ರೆಸ್ ಪಕ್ಷದಿಂದಲೇ ಜಾಗ ಖಾಲಿ ಮಾಡುತ್ತಾರೆ ಎನ್ನುವ ಪುಕಾರು ಎದ್ದಿದೆ. ಈಗಾಗಲೇ ಕೆ.ಎನ್. ರಾಜಣ್ಣಗೆ ದೇವೇಗೌಡ ಫೋನ್ ಮಾಡಿದ್ದಾರೆ ಎನ್ನುವ ಮಾಹಿತಿಯೂ ಇದೆ. ಬೇರೆ ಪಕ್ಷಗಳಲ್ಲಿ ಮುನಿದವರನ್ನು ದೇವೇಗೌಡ ಮಾತನಾಡಿಸುವುದು ಹೊಸದಲ್ಲ.
ಅಮೆರಿಕಾ ಮತ್ತು ಇರಾನ್ ನಡುವಿನ ಉದ್ವಿಗ್ನ ಪರಿಸ್ಥಿತಿ ಶಮನಗೊಳ್ಳುವ ಲಕ್ಷಣಗಳು ಕಾಣುತ್ತಿವೆ. ಪ್ರಾದೇಶಿಕ ಶಕ್ತಿಗಳ ಮಧ್ಯಸ್ಥಿಕೆಯ ಬಳಿಕ ಉಭಯ ದೇಶಗಳು ಫೆಬ್ರವರಿ 6 ರಂದು ಟರ್ಕಿಯಲ್ಲಿ ಮಾತುಕತೆ ನಡೆಸಲು ಸಿದ್ಧವಾಗಿದ್ದು, ಶುಕ್ರವಾರ ಇಸ್ತಾನ್ ಬುಲ್ ನಲ್ಲಿ ಸಂಭಾವ್ಯ ಮಾತುಕತೆಗಳು ನಡೆಯಲಿವೆ ಎಂದು ಅರಬ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈ ಬೆಳವಣಿಗೆಯು ಪಶ್ಚಿಮ ಏಷ್ಯಾದಲ್ಲಿ ಯುದ್ಧದ ವಾತಾವರಣವನ್ನು ತಗ್ಗಿಸುವ ನಿರೀಕ್ಷೆ ಮೂಡಿಸಿದೆ. ಆದಾಗ್ಯೂ, ಈವರೆಗೂ ಈ ಕುರಿತಾಗಿ ಇರಾನ್-ಅಮೆರಿಕಾದಿಂದ ಯಾವುದೇ ಅಧಿಕೃತ ಹೇಳಿಕೆಗಳು ಬಂದಿಲ್ಲ.
ಆಗುಂಬೆ ಘಾಟಿಯಲ್ಲಿ ನಿತ್ಯ ಟ್ರಾಫಿಕ್ ಜಾಮ್ ; ಪ್ರಯಾಣಿಕರಿಗೆ ತಾಸುಗಟ್ಟಲೆ ಕಾಯುವ ಶಿಕ್ಷೆ
ಆಗುಂಬೆ ಘಾಟಿಯಲ್ಲಿ ಪ್ರತಿದಿನ ವಾಹನ ದಟ್ಟಣೆ ಹೆಚ್ಚಾಗುತ್ತಿದ್ದು, ಪ್ರಯಾಣಿಕರು ತಾಸುಗಟ್ಟಲೆ ಸಂಚಾರಕ್ಕೆ ಕಾಯಬೇಕಾದ ಪರಿಸ್ಥಿತಿ ಎದುರಾಗಿದೆ. ಕಡಿದಾದ ತಿರುವುಗಳು, ಇಕ್ಕಟ್ಟಾದ ರಸ್ತೆ ಮತ್ತು ನಿರಂತರ ಗುಡ್ಡ ಕುಸಿತದಿಂದಾಗಿ ಸುಗಮ ಸಂಚಾರಕ್ಕೆ ಅಡ್ಡಿಯಾಗುತ್ತಿದೆ. ರಸ್ತೆ ವಿಸ್ತರಣೆ ಮತ್ತು ಸುರಂಗ ಮಾರ್ಗ ನಿರ್ಮಾಣದ ಪ್ರಸ್ತಾಪಗಳಿದ್ದರೂ, ಪರಿಸರ ನಿಯಮಗಳಿಂದಾಗಿ ಕಾಮಗಾರಿ ವಿಳಂಬವಾಗುತ್ತಿದೆ.
ದಾವಣಗೆರೆ ಉಪಸಮರ : ಕಾಂಗ್ರೆಸ್’ಗೆ ಹೈದರಾಬಾದ್ ಶಾಕ್ - ಕೈಪಡೆ ಲೆಕ್ಕಾಚಾರ ಉಲ್ಟಾಪಲ್ಟಾ ಸಾಧ್ಯತೆ?
AIMIM in Davanagere South : ದಾವಣಗೆರೆಯ ಧಣಿ ಎಂದೇ ಹೆಸರಾಗಿರುವ ಶಾಮನೂರು ಶಿವಶಂಕರಪ್ಪನವರ ನಿಧನದ ನಂತರ, ಅವರು ಪ್ರತಿನಿಧಿಸುತ್ತಿದ್ದ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರಕ್ಕೆ ಚುನಾವಣೆ ನಡೆಯಬೇಕಿದೆ. ಕ್ಷೇತ್ರದಲ್ಲಿ ಮುಸ್ಲಿಮರು ನಿರ್ಣಾಯಕವಾಗಿರುವುದರಿಂದ, ಅಸಾದುದ್ದೀನ್ ಓವೈಸಿ, ತಮ್ಮ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಸಾಧ್ಯತೆಯ ಬಗ್ಗೆ ಮಾತುಗಳು ಕೇಳಿ ಬರುತ್ತಿದೆ.
Epstein Files: ಜೆಫ್ರಿ ಎಪ್ಸ್ಟೀನ್ ಫೈಲ್: ಈ ದ್ವೀಪ ಲೈಂಗಿಕ ದೌರ್ಜನ್ಯಗಳ ಸ್ವರ್ಗ: ಉದೈಫಾ ಆನಕ್ಕಲ್ ಬರಹ
Epstein Files: ಈಚೆಗೆ ಬಿಡುಗಡೆಯಾಗಿರುವ ಎಪ್ಸ್ಟೀನ್ ಫೈಲ್ಸ್ (Epstein Files) ವಿಶ್ವದಾದ್ಯಂತ ಭಾರೀ ಸಂಚಲನ ಸೃಷ್ಟಿ ಮಾಡಿದೆ. ಇದರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಹೆಸರು ಸಹ ಉಲ್ಲೇಖವಾಗಿರುವುದು ಭಾರೀ ಸಂಚಲನ ಮೂಡಿಸಿದೆ. ಭಾರತಕ್ಕೆ ಸಂಬಂಧಿಸಿದಂತೆ ಕೇಳಿ ಬಂದಿರುವ ಗಂಭೀರ ಆರೋಪವನ್ನು ಭಾರತವು ತಳ್ಳಿ ಹಾಕಿದೆ. ಎಪ್ಸ್ಟೀನ್ ಫೈಲ್ಸ್ (Epstein Files) ಹಾಗೂ ಲಿಟಲ್ ಸೇಂಟ್ ಜೇಮ್ಸ್
SSLC ವಿದ್ಯಾರ್ಥಿಗಳಿಗೆ ಮಾರ್ಚ್ 5ರಿಂದ ಪರೀಕ್ಷೆ ಪ್ರಾರಂಭ, ಮೇ 8ಕ್ಕೆ ಫಲಿತಾಂಶ
ಬೆಂಗಳೂರು: ರಾಜ್ಯದ ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯ ನಿರ್ಧರಿಸುವ ಪ್ರಮುಖ ಘಟ್ಟವಾದ ಎಸ್ಸೆಸ್ಸೆಲ್ಸಿ (10ನೇ ತರಗತಿ) ವಾರ್ಷಿಕ ಪರೀಕ್ಷೆಯ ವೇಳಾಪಟ್ಟಿಯನ್ನು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ (KSEAB) ಅಧಿಕೃತವಾಗಿ ಪ್ರಕಟಿಸಿದೆ. ಈ ಬಾರಿಯ ಪರೀಕ್ಷೆಗಳು ಮಾರ್ಚ್ 5ರಿಂದ ಆರಂಭಗೊಂಡು ಮಾರ್ಚ್ 30ರವರೆಗೆ ನಡೆಯಲಿದ್ದು, ಮೇ 8ರಂದು ಫಲಿತಾಂಶ ಪ್ರಕಟವಾಗಲಿದೆ ಎಂದು ಮಂಡಳಿ ತಿಳಿಸಿದೆ. ಪ್ರತಿ
ಉತ್ತರಪ್ರದೇಶ | ಮೊಮೋಸ್ ಆಮಿಷವೊಡ್ಡಿ ಬಾಲಕನಿಂದ 85 ಲಕ್ಷದ ಚಿನ್ನ ಲಪಟಾಯಿಸಿದ ವಂಚಕರು!
ಲಕ್ನೋ: ಏಳನೇ ತರಗತಿಯ ಬಾಲಕನಿಗೆ ಬೇಕಾದಷ್ಟು ಮೊಮೋಸ್ ನೀಡುವುದಾಗಿ ಆಮಿಷವೊಡ್ಡಿ ಮನೆಯ ತಿಜೋರಿಯಲ್ಲಿ ಇಡಲಾಗಿದ್ದ 85 ಲಕ್ಷ ರೂಪಾಯಿ ಮೌಲ್ಯದ ಚಿನ್ನವನ್ನು ಎಗರಿಸಿರುವ ವಿಚಿತ್ರ ಘಟನೆ ಪೂರ್ವ ಉತ್ತರಪ್ರದೇಶದಿಂದ ವರದಿಯಾಗಿದೆ. ಹನ್ನೆರಡು ವರ್ಷದ ಬಾಲಕ ವಂಚಕರ ಬಲೆಗೆ ಬಿದ್ದು, ಮೊಮೋಸ್ ತಿನ್ನುವ ಆಸೆಯಿಂದ ಮನೆಯಲ್ಲಿದ್ದ 85 ಲಕ್ಷ ರೂಪಾಯಿ ಮೌಲ್ಯದ ಚಿನ್ನವನ್ನು ಬೀದಿಬದಿಯಲ್ಲಿ ಮೊಮೋಸ್ ಮಾರುತ್ತಿದ್ದ ವ್ಯಾಪಾರಿಗಳಿಗೆ ಹಸ್ತಾಂತರಿಸಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ. ದಿಯೋರಿಯಾ ಸಮೀಪದ ದುಮಾರಿ ಚೌರಾಹಾ ಎಂಬಲ್ಲಿ ಈ ಘಟನೆ ನಡೆದಿದೆ. ಜೀವನ ಪರ್ಯಂತ ಉಚಿತವಾಗಿ ಮೊಮೋಸ್ ನೀಡುವುದಾಗಿ ಬಾಲಕನಿಗೆ ಆಸೆ ತೋರಿಸಿ ಮನೆಯಲ್ಲಿದ್ದ ಎಲ್ಲ ಚಿನ್ನ ತಂದುಕೊಡುವಂತೆ ಪುಸಲಾಯಿಸಿದ್ದರು ಎನ್ನಲಾಗಿದೆ. ಮನೆಯ ಕಪಾಟಿನಲ್ಲಿದ್ದ ಚಿನ್ನ ಮಾಯವಾಗುವುದರೊಂದಿಗೆ ವಿಚಾರಣೆ ಆರಂಭವಾಗಿತ್ತು. ತಾಯಿ ಹಾಗೂ ಚಿಕ್ಕಮ್ಮ ಹುಡುಕಾಟ ಆರಂಭಿಸಿದರು. ಬಳಿಕ ಬಾಲಕನನ್ನು ವಿಚಾರಿಸಿದರು. ಜೀವನ ಪರ್ಯಂತ ಉಚಿತ ಆಹಾರ ನೀಡುವುದಾಗಿ ಭರವಸೆ ನೀಡಿದ್ದಕ್ಕಾಗಿ ಎಲ್ಲ ಚಿನ್ನಾಭರಣಗಳನ್ನು ನೀಡಿದ್ದಾಗಿ ಬಾಲಕ ತಂದೆಯ ಬಳಿ ಒಪ್ಪಿಕೊಂಡ. ಅರ್ಚಕರಾಗಿದ್ದ ತಂದೆ ಈ ಬಗ್ಗೆ ಪೊಲೀಸರಿಗೆ ದೂರು ನೀಡಿದರು. ವಿಚಾರಣೆ ನಡೆಸಿದಾಗ ಬಾಲಕನಿಗೆ ರಸ್ತೆಬದಿಯ ಮೋಮೊ ತಿನ್ನುವ ಚಪಲ ಇದ್ದುದು ಗೊತ್ತಾಯಿತು. ಬಾಲಕನಿಗೆ ಉಚಿತವಾಗಿ ತಿನ್ನಿಸುವ ಮೂಲಕ ಆರೋಪಿಗಳು ಆತನ ವಿಶ್ವಾಸ ಗಳಿಸಿದ್ದರು. ಬಳಿಕ ಆಹಾರ, ಬಿಡಿಗಾಸು ನೀಡುವ ಆಫರ್ ಕೂಡಾ ಬಂತು. ಕ್ರಮೇಣ ಬಾಲಕ ಮನೆಯಿಂದ ಚಿನ್ನಾಭರಣಗಳನ್ನು ತಂದುಕೊಡಲು ಆರಂಭಿಸಿದ ಎಂದು ಪೊಲೀಸರು ಹೇಳಿದ್ದಾರೆ. ಚಿನ್ನದ ನೆಕ್ಲೇಸ್, ಉಂಗುರ, ಬಳೆ, ಮೂಗುತಿ, ಬೆಳ್ಳಿಯ ಆಭರಣಗಳು ಹೀಗೆ ಒಂದೊಂದಾಗಿಯೇ ವ್ಯಾಪಾರಿಗಳ ಕೈಸೇರಿದವು. ಇದನ್ನು ಬಹಿರಂಗಪಡಿಸಿದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಬಾಲಕನಿಗೆ ಮೊಮೋ ಮಾರಾಟಗಾರರು ಬೆದರಿಕೆ ಹಾಕಿದ್ದಾಗಿಯೂ ಅರ್ಚಕ ಫೆ.1ರಂದು ದೂರು ನೀಡಿದ್ದರು. ಇಬ್ಬರು ವಂಚಕರ ಪತ್ತೆಗೆ ಪೊಲೀಸರು ಕೃಯಾಚರಣೆ ಪ್ರಾರಂಭಿಸಿದ್ದಾರೆ.
ಮಾಹಿತಿ ಹಕ್ಕು ಕಾಯ್ದೆ ಸಮಾಧಿಗೆ ಮಸಲತ್ತು
ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಬಿಜೆಪಿ(ಎನ್ಡಿಎ) ಸರಕಾರ ದೇಶದ ಬಡವರ ಮೇಲೆ ಅಘೋಷಿತ ಸಮರವನ್ನು ಸಾರಿದೆ. ದುಡಿಯುವ ಬಡವರ ಅನುಕೂಲಕ್ಕಾಗಿ ರೂಪುಗೊಂಡ ಕಾನೂನುಗಳನ್ನು ಒಂದೊಂದಾಗಿ ಕಗ್ಗೊಲೆ ಮಾಡಿ ಸಮಾಧಿ ಮಾಡಲು ಮುಂದಾಗಿದೆ. ಅದರ ತೀರದ ದಾಹಕ್ಕೆ ಇತ್ತೀಚೆಗೆ ಬಲಿಯಾಗಿದ್ದು ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆ(ಮನರೇಗಾ). ಇದು ಕೇವಲ ಒಂದು ಕಲ್ಯಾಣ ಕಾರ್ಯಕ್ರಮ ಮಾತ್ರವಾಗಿರಲಿಲ್ಲ. ಉದ್ಯೋಗ ಭದ್ರತೆ ಮತ್ತು ಸಾಮಾಜಿಕ ನ್ಯಾಯದ ಸಂಕೇತವಾಗಿ ಗಮನ ಸೆಳೆದಿತ್ತು. ಮಹಾತ್ಮಾ ಗಾಂಧಿಯವರ ಹೆಸರನ್ನು ಇಟ್ಟಿರುವುದರಿಂದ ನೈತಿಕ ಮೌಲ್ಯದ ಆಯಾಮವೂ ಇದಕ್ಕೆ ದೊರಕಿತ್ತು. ಮನರೇಗಾ ಹೆಸರನ್ನು ಬದಲಿಸುವ ಮೂಲಕ ಅದರ ನಿಜವಾದ ಆಶಯಗಳನ್ನು ಮಣ್ಣುಗೂಡಿಸಲಾಯಿತು. ಈಗ ಇವರ ಹದ್ದಿನ ಕಣ್ಣು ಮಾಹಿತಿ ಹಕ್ಕು ಕಾಯ್ದೆಯ ಮೇಲೆ ಬಿದ್ದಿದೆ. ಮಾಹಿತಿ ಹಕ್ಕು ಕಾಯ್ದೆ ಜಾರಿಗೆ ಬಂದು ಇಪ್ಪತ್ತು ವರ್ಷಗಳಾದವು. ಈ ಕಾಯ್ದೆಯನ್ನು ಮರು ಪರಿಶೀಲನೆಗೆ ಒಳಪಡಿಸಬೇಕೆಂದು ಸಂಸತ್ತಿನಲ್ಲಿ ಗುರುವಾರ ಮಂಡಿಸಲಾಗಿರುವ ಆರ್ಥಿಕ ಸಮೀಕ್ಷೆ ಶಿಫಾರಸು ಮಾಡಿರುವುದರ ಹಿಂದಿನ ಉದ್ದೇಶವೇನು? ಗೌಪ್ಯ ವರದಿಗಳು ಹಾಗೂ ಕರಡು ಅಭಿಪ್ರಾಯಗಳನ್ನು ಬಹಿರಂಗಪಡಿಸಬಾರದು ಎಂದು ಸಮೀಕ್ಷೆಯಲ್ಲಿ ಯಾಕೆ ಹೇಳಲಾಗಿದೆ? ಎಂದು ತಿಳಿಯುವ ಹಕ್ಕು ಜನರಿಗೆ ಇದೆ. ಜನರು ಬಯಸುವ ಮಾಹಿತಿಯನ್ನು ನಿರಾಕರಿಸುವುದೇ ಇದರ ಉದ್ದೇಶವಾಗಿದೆಯೇ? ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರಕಾರ ಕೈಗೊಂಡ ಉದಾರೀಕರಣದ ಪರವಾಗಿರುವ ಆರ್ಥಿಕ ಸುಧಾರಣಾ ಕಾರ್ಯಗಳ ಜೊತೆಗೇ ಜಾರಿಗೆ ತಂದ ಮನರೇಗಾ ಮತ್ತು ಮಾಹಿತಿ ಹಕ್ಕುಗಳ ಕಾಯ್ದೆಗಳು ದೇಶವ್ಯಾಪಿ ಜನರ ಮೆಚ್ಚುಗೆ ಗಳಿಸಿದ್ದವು. ಅದರಲ್ಲೂ ವಿಶೇಷವಾಗಿ ಜನರಿಗೆ ತಾವು ನೀಡಿದ ತೆರಿಗೆ ಹಣದಿಂದ ಕಾರ್ಯ ನಿರ್ವಹಿಸುವ ಸರಕಾರದ ಲೋಪ ದೋಷಗಳು ಹಾಗೂ ಆಡಳಿತಾಂಗದಲ್ಲಿನ ಭ್ರಷ್ಟಾಚಾರದ ಹಗರಣಗಳ ಬಗ್ಗೆ ತಿಳಿಯುವ ಹಕ್ಕನ್ನು ಈ ಕಾಯ್ದೆ ಖಾತರಿ ಪಡಿಸಿತ್ತು. ಇದರಿಂದಾಗಿಯೇ ಹಲವಾರು ಇಲಾಖೆಗಳ ಭ್ರಷ್ಟಾಚಾರದ ಹಗರಣಗಳು ಬಯಲಿಗೆ ಬರತೊಡಗಿದವು. ಅಭಿವೃದ್ಧಿಯ ಹೆಸರಿನಲ್ಲಿ ಸರಕಾರಗಳು ಕೈಗೊಳ್ಳುವ ಯೋಜನೆಗಳಲ್ಲಿನ ಅಕ್ರಮಗಳು ಬಹಿರಂಗವಾಗತೊಡಗಿದವು. ಇದು ಭ್ರಷ್ಟ ರಾಜಕಾರಣಿಗಳು ಮತ್ತು ಅಧಿಕಾರಿಗಳಿಗೆ ಕಿರಿಕಿರಿ ಉಂಟು ಮಾಡುತ್ತಿತ್ತು. ಹಾಗಾಗಿಯೇ ಈ ಕಾಯ್ದೆಯನ್ನು ದುರ್ಬಲಗೊಳಿಸುವ ಹುನ್ನಾರ ನಡೆಯಲಾರಂಭಿಸಿತು. 2014ರ ನಂತರ ಅದರಲ್ಲೂ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರ ಅಸ್ತಿತ್ವಕ್ಕೆ ಬಂದಾಗಿನಿಂದ ಈ ಕಾಯ್ದೆಯ ವಿರುದ್ಧ ಮಸಲತ್ತು ನಡೆಯುತ್ತಲೇ ಬಂತು. 2023ರಲ್ಲಿ ತಂದ ದತ್ತಾಂಶ ರಕ್ಷಣಾ ಮಸೂದೆ ಖಾಸಗಿತನ ರಕ್ಷಣೆಯ ಹೆಸರಿನಲ್ಲಿ ಇದನ್ನು ನಾಶ ಮಾಡುವ ಉದ್ದೇಶವನ್ನೇ ಹೊಂದಿತ್ತು. ರಾಜ್ಯಸಭೆಯ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆಯವರು ಹೇಳಿದಂತೆ ಭ್ರಷ್ಟಾಚಾರ ಬಯಲಿಗೆಳೆಯಲು ಹಾಗೂ ಸತ್ಯಾನ್ವೇಷಣೆಗೆ ಹೊರಟವರನ್ನು ದಂಡನೆಗೆ ಗುರಿಪಡಿಸುವಂಥ ಭಯಾನಕ ವಾತಾವರಣವನ್ನು ಸಷ್ಟಿಸಲಾಗುತ್ತಿದೆ. ಕಳೆದ ಹನ್ನೊಂದು ವರ್ಷಗಳಿಂದ ಈ ವರೆಗೆ 100ಕ್ಕೂ ಹೆಚ್ಚು ಆರ್ಟಿಐ ಕಾರ್ಯಕರ್ತರ ಹತ್ಯೆಯಾಗಿದೆ. ದೇಶವ್ಯಾಪಿ ಸಾವಿರಾರು ಆರ್ಟಿಐ ಪ್ರಕರಣಗಳು ಬಾಕಿ ಉಳಿದಿವೆ. ಇಂಥ ಸನ್ನಿವೇಶದಲ್ಲಿ ಮಾಹಿತಿ ಹಕ್ಕು ಆಯುಕ್ತರ ಅಧಿಕಾರಾವಧಿ ಹಾಗೂ ವೇತನದ ಮೇಲೆ ನಿಯಂತ್ರಣವನ್ನು ಸಾಧಿಸಿ ತನಗೆ ವಿಧೇಯವಾಗಿರುವಂತೆ ಕೇಂದ್ರ ಸರಕಾರ ಕುತಂತ್ರ ನಡೆಸಿದೆಯೆಂದರೆ ತಪ್ಪಿಲ್ಲ. ಕೇಂದ್ರ ಸರಕಾರ ಮಾಹಿತಿ ಹಕ್ಕು ಕಾಯ್ದೆಯನ್ನು ಮರು ಪರಿಶೀಲಿಸಲು ಹೊರಟಿರುವುದರ ಉದ್ದೇಶವೇನು? ಕಳೆದ ಕೆಲ ತಿಂಗಳಿಂದ ಮಾಹಿತಿ ಹಕ್ಕು ಆಯೋಗ ಮಾಹಿತಿ ಅಯುಕ್ತರಿಲ್ಲದೆ ಕಾರ್ಯ ನಿರ್ವಹಿಸುತ್ತಿರುವುದು ಏಕೆ? ಉದ್ದೇಶ ಪೂರ್ವಕವಾಗಿಯೇ ಈ ಹುದ್ದೆಯನ್ನು ಖಾಲಿ ಇಡಲಾಗಿದೆಯೇ? ಮಾಹಿತಿ ನೀಡುವುದನ್ನು ತಡೆ ಹಿಡಿಯಲು ಸಚಿವಾಲಯಕ್ಕೆ ವಿಶೇಷ ಅಧಿಕಾರವನ್ನು ನೀಡಬೇಕೆಂದು ಸಮೀಕ್ಷೆ ಸೂಚಿಸಿರುವ ಉದ್ದೇಶವೇನು? ಇದೆಲ್ಲಾ ಜನರಿಗೆ ಗೊತ್ತಾಗಬೇಕಾಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರಿಂದ ಯಾವುದನ್ನೂ ಮುಚ್ಚಿಡಬಾರದು. ಎಲ್ಲವೂ ಪಾರದರ್ಶಕವಾಗಿರಬೇಕು. ಹಾಗಾಗಿ ಜನರು ಮಾಹಿತಿ ಹಕ್ಕು ಕಾಯ್ದೆಯ ಅಡಿಯಲ್ಲಿ ಮಾಹಿತಿ ಕೇಳಿದರೆ ವ್ಯಕ್ತಿಯ ಖಾಸಗಿತನಕ್ಕೆ ಚ್ಯುತಿ ಎಂಬ ನೆಪವನ್ನು ಮುಂದೆ ಮಾಡಿಕೊಂಡು ಮಾಹಿತಿಯನ್ನು ನೀಡಲು ಸರಕಾರ ನಿರಾಕರಿಸುವುದು ಸರಿಯಲ್ಲ. ಈಗ ಎಂಥ ಭ್ರಷ್ಟ ರಾಜಕಾರಣಿಯಾಗಲಿ, ಅಧಿಕಾರಿಯಾಗಲಿ ಈ ಮಾಹಿತಿ ಹಕ್ಕು ಕಾಯ್ದೆಗೆ ಹೆದರಿ ತೆಪ್ಪಗಿರುತ್ತಾರೆ. ಇದಿಲ್ಲವಾದರೆ ಭ್ರಷ್ಟರು ಅಟ್ಟಹಾಸದಿಂದ ಮೆರೆಯುತ್ತಾರೆ. ಸರಕಾರದ ಲೋಪ ದೋಷಗಳನ್ನು ಪ್ರಶ್ನೆ ಮಾಡುವವರನ್ನೆಲ್ಲ ನಗರ ನಕ್ಸಲರು ಎಂದು ದಮನ ಮಾಡಲು ಈಗಾಗಲೇ ಯತ್ನಿಸಲಾಗುತ್ತಿದೆ. ಇಂಥ ಸಂದರ್ಭದಲ್ಲಿ ಸರಕಾರದಲ್ಲಿರುವ ಲೋಪ ದೋಷಗಳ ಬಗ್ಗೆ ತಿಳಿದುಕೊಳ್ಳುವ ಜನರ ಬಳಿ ಇರುವ ಏಕೈಕ ಅಸ್ತ್ರವನ್ನು ಕಿತ್ತುಕೊಂಡರೆ ಹೇಗೆ? ಮಾಹಿತಿ ಹಕ್ಕು ಕಾರ್ಯಕರ್ತರು ಈ ಕಾಯ್ದೆಯನ್ನು ದುರುಪಯೋಗ ಮಾಡುತ್ತಾರೆ, ಬ್ಲ್ಯಾಕ್ ಮೇಲ್ ಮಾಡುತ್ತಾರೆ ಎಂಬ ಆರೋಪಗಳು ಇಲ್ಲವೆಂದಲ್ಲ.ಅಂಥವರನ್ನು ಗುರುತಿಸಿ ಕಾನೂನು ಕ್ರಮ ಕೈಗೊಳ್ಳಲು ಯಾರ ಆಕ್ಷೇಪವೂ ಇಲ್ಲ. ವಾಸ್ತವವಾಗಿ ಇದು ಜಾರಿಗೆ ಬಂದ ಕಳೆದ ಇಪ್ಪತ್ತು ವರ್ಷಗಳಲ್ಲಿ ಇದರಿಂದಾಗಿ ಯಾವುದೇ ವೈಯಕ್ತಿಕ ಇಲ್ಲವೇ ರಾಷ್ಟ್ರೀಯ ಹಿತಾಸಕ್ತಿಗೆ ಧಕ್ಕೆ ಉಂಟಾದ ಉದಾಹರಣೆಗಳಿಲ್ಲ. ಈ ಕಾಯ್ದೆಯನ್ನು ಉಪಯೋಗಿಸಿಕೊಂಡು ಯಾರೂ ಸರಕಾರದ ಆಂತರಿಕ ಭದ್ರತೆಗಾಗಲಿ ಇಲ್ಲವೇ ಯಾರದೇ ವೈಯಕ್ತಿಕ ಹಿತಾಸಕ್ತಿಗಾಗಲಿ ಹಾನಿ ಮಾಡಿದ ದೂರುಗಳಿಲ್ಲ. ಹೀಗಿರುವಾಗ ಸರಕಾರ ಮಾಹಿತಿ ಹಕ್ಕು ಕಾಯ್ದೆಯನ್ನು ಹೊಸಕಿ ಹಾಕಲು ಹೊರಟಿರುವ ಉದ್ದೇಶವೇನು? ಸಾಂವಿಧಾನಿಕ ಸಂಸ್ಥೆಗಳ ಮೇಲೆ ಸಂಪೂರ್ಣ ನಿಯಂತ್ರಣ ಸಾಧಿಸಲು ಹೊರಟಿರುವ ನರೇಂದ್ರ ಮೋದಿಯವರ ನೇತೃತ್ವದ ಕೇಂದ್ರ ಸರಕಾರ ಈಗಾಗಲೇ ಚುನಾವಣಾ ಆಯೋಗವನ್ನು ಬಹುತೇಕ ಕೈಗೊಂಬೆಯನ್ನಾಗಿ ಮಾಡಿಕೊಂಡಿದೆ.ಸಂಸತ್ತಿನಲ್ಲಿ ಚರ್ಚೆಗಳಿಲ್ಲದೆ ವಿಧೇಯಕಗಳು ಅಂಗೀಕಾರವಾಗುತ್ತಿವೆ. ರಾಜಕೀಯ ಮತ್ತು ಸೈದ್ಧಾಂತಿಕ ವಿರೋಧಿಗಳನ್ನು ಹತ್ತಿಕ್ಕಲು ಕೇಂದ್ರೀಯ ತನಿಖಾ ಸಂಸ್ಥೆಗಳು ಸರಕಾರದ ಅಸ್ತ್ರಗಳಾಗುತ್ತಿವೆ. ನ್ಯಾಯಾಲಯಗಳಿಂದಲೂ ವಿಚಿತ್ರ ತೀರ್ಪುಗಳು ಬರುತ್ತಿವೆ. ಇಂಥ ಸನ್ನಿವೇಶದಲ್ಲಿ ಮಾಹಿತಿ ಹಕ್ಕು ಕಾಯ್ದೆಯಂಥ ಸಾರ್ವಜನಿಕರ ಅಸ್ತ್ರವನ್ನು ಪ್ರಭುತ್ವ ಇಷ್ಟಪಡುವುದಿಲ್ಲ. ಸಂಸತ್ತಿನಲ್ಲಿ ತನಗಿರುವ ಬಹುಮತವನ್ನು ಬಳಸಿಕೊಂಡು ಇದನ್ನೂ ಮುಗಿಸಿದರೆ ಅಚ್ಚರಿ ಪಡಬೇಕಾಗಿಲ್ಲ. ಪ್ರತಿರೋಧ ಒಡ್ಡುವುದೊಂದೇ ಜನಸಾಮಾನ್ಯರಿಗೆ ಈಗ ಉಳಿದಿರುವ ಏಕೈಕ ದಾರಿಯಾಗಿದೆ.
ಚುನಾವಣಾ ಆಯೋಗವು ಅಸ್ಪಷ್ಟ ಭಾವಚಿತ್ರವಿರುವ 9.25 ಲಕ್ಷ ಮತದಾರರ ಗುರುತಿನ ಚೀಟಿಗಳನ್ನು ಪತ್ತೆ ಮಾಡಿ, ಮತದಾರರ ಇತ್ತೀಚಿನ ಭಾವಚಿತ್ರಗಳನ್ನು ಸಂಗ್ರಹಿಸಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ಕಾರ್ಯಾಚರಣೆ ಕೈಗೊಂಡಿದೆ. ಹೆಸರು, ಲಿಂಗ, ವಿಳಾಸ ಮುಂತಾದ ತಪ್ಪುಗಳನ್ನು ಸರಿಪಡಿಸಲಾಗುತ್ತಿದ್ದು, ಹಾವೇರಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಇಂತಹ ಸಮಸ್ಯೆ ಹೆಚ್ಚಾಗಿದೆ. ಭವಿಷ್ಯದಲ್ಲಿ ಬಣ್ಣದ ಗುರುತಿನ ಚೀಟಿ ವಿತರಣೆಗೆ ಸಿದ್ಧತೆ ನಡೆದಿದೆ.
ವಿಬಿ ಜಿ ರಾಮ್ ಜಿ ರದ್ದು ಮಾಡಿ, ‘ಮನರೇಗಾ’ ಮರುಜಾರಿಗೆ ವಿಧಾನಸಭೆಯಲ್ಲಿ ನಿರ್ಣಯ ಮಂಡನೆ ಸಾಧ್ಯತೆ
ಬೆಂಗಳೂರು, ಫೆ. 3: ಕರ್ನಾಟಕದ ಗ್ರಾಮೀಣ ಜನರ ಬದುಕಿನ ಹಕ್ಕನ್ನು ಕಾಪಾಡುವ ಉದ್ದೇಶದಿಂದ, ಒಕ್ಕೂಟ ತತ್ವಕ್ಕೆ ವಿರೋಧವಾಗಿರುವ, ರಾಜ್ಯದ ಬೊಕ್ಕಸಕ್ಕೆ ಹೊರೆ ಉಂಟುಮಾಡುವ ಹಾಗೂ ವಿಕೇಂದ್ರೀಕರಣ ತತ್ವಕ್ಕೆ ವಿರುದ್ಧವಾಗಿ ಗ್ರಾಮ ಪಂಚಾಯತಿಗಳ ಅಧಿಕಾರ ಮತ್ತು ಹಕ್ಕುಗಳನ್ನು ಕಸಿದುಕೊಂಡಿರುವ ವಿಕಸಿತ್ ಭಾರತ್ ಗ್ಯಾರಂಟಿ ಫಾರ್ ರೋಜ್ಗಾರ್ ಮತ್ತು ಆಜೀವಿಕಾ ಮಿಷನ್ (ಗ್ರಾಮೀಣ) – (VB-G RAM-G) ಕಾಯ್ದೆಯನ್ನು ಕೇಂದ್ರ ಸರ್ಕಾರವು ತಕ್ಷಣವೇ ರದ್ದುಗೊಳಿಸಬೇಕು. ಜೊತೆಗೆ ಗ್ರಾಮೀಣ ಆಸ್ತಿ ಸೃಜನೆಗೆ ಮತ್ತು ಬಡವರ ಸ್ವಾವಲಂಬನೆಗೆ ಕಾರಣವಾಗಿದ್ದ ‘ಮನರೇಗಾ’ ಯೋಜನೆಯನ್ನು ಅದರ ಮೂಲ ಸ್ವರೂಪದಲ್ಲಿಯೇ ಮರುಸ್ಥಾಪಿಸಬೇಕು ಎಂದು ಒತ್ತಾಯಿಸಿ ಮಹತ್ವದ ನಿರ್ಣಯವನ್ನು ವಿಧಾನಸಭೆಯಲ್ಲಿ ಮಂಡಿಸುವ ಸಾಧ್ಯತೆಗಳಿವೆ. ಮಂಗಳವಾರ ಕಲಾಪ ಆರಂಭಗೊಳ್ಳುತ್ತಿದ್ದಂತೆಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ನಿರ್ಣಯವನ್ನು ಮಂಡಿಸಲಿದ್ದಾರೆ ಎಂದು ವಿಧಾನಸಭೆಯ ಕಾರ್ಯಕಲಾಪ ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ. ಉದ್ಯೋಗ ಖಾತ್ರಿ ಕಾಯ್ದೆಯಲ್ಲಿ ಉದ್ಯೋಗವು ಪ್ರತಿಯೊಬ್ಬ ವ್ಯಕ್ತಿಯ ‘ಹಕ್ಕು’ ಮತ್ತು ‘ಬೇಡಿಕೆ ಆಧಾರಿತ’ವಾಗಿತ್ತು. ಆದರೆ ಹೊಸ ಕಾಯ್ದೆಯಲ್ಲಿ ಇದನ್ನು ಕೇಂದ್ರ ಸರ್ಕಾರ ರೂಪಿಸುವ ಮಾನದಂಡಗಳ ಅಧೀನಕ್ಕೆ ಒಳಪಡಿಸಿ ಜನರ ಹಕ್ಕನ್ನು ಕಸಿದುಕೊಳ್ಳಲಾಗಿದೆ. ದಿಲ್ಲಿಯ ದಂತಗೋಪುರಗಳಲ್ಲಿ ಕುಳಿತು ಯೋಜನೆಗಳನ್ನು ರೂಪಿಸುವ ಮೂಲಕ ಗ್ರಾಮಸಭೆಗಳ ಅಧಿಕಾರವನ್ನು ಕಿತ್ತುಕೊಳ್ಳಲಾಗಿದೆ. ಗ್ರಾಮ ಪಂಚಾಯತಿಗಳು ತಮ್ಮ ಅಗತ್ಯಕ್ಕೆ ತಕ್ಕಂತೆ ಕಾಮಗಾರಿಗಳನ್ನು ಆಯ್ಕೆ ಮಾಡುವ ಸ್ವಾತಂತ್ರ್ಯವನ್ನು ಕಳೆದುಕೊಂಡಿವೆ. ಕೇಂದ್ರ ಸರ್ಕಾರ ಆಯ್ಕೆ ಮಾಡಿದ ಪಂಚಾಯತಿಗಳಲ್ಲಿ ಮಾತ್ರ ಯೋಜನೆ ಜಾರಿಯಾಗುತ್ತಿದ್ದು, ಉಳಿದ ಪ್ರದೇಶಗಳಲ್ಲಿ ಉದ್ಯೋಗದ ಹಕ್ಕನ್ನು ನಿರಾಕರಿಸಲಾಗುತ್ತಿದೆ ಎಂದು ನಿರ್ಣಯದಲ್ಲಿ ಉಲ್ಲೇಖಿಸಲಾಗಿದೆ. ಉದ್ಯೋಗ ಖಾತ್ರಿ ಕಾಯ್ದೆಯಡಿ ನಮ್ಮ ಹೊಲ–ನಮ್ಮ ದಾರಿ, ದನದ ಕೊಟ್ಟಿಗೆ, ಕುರಿ ದೊಡ್ಡಿ, ಕಣ, ಶಾಲಾ ಕಾಂಪೌಂಡ್, ಶೌಚಾಲಯ, ಬದು, ಹೊಳಗಟ್ಟಿ, ಪಂಚಾಯತಿ ಕಟ್ಟಡಗಳು (ರಾಜೀವ ಗಾಂಧಿ ಸೇವಾ ಕೇಂದ್ರ), ತೋಟಗಾರಿಕೆ ಬೆಳೆಗಳು, ಆಟದ ಮೈದಾನ ಸೇರಿದಂತೆ ಸ್ಥಳೀಯವಾಗಿ ಅಗತ್ಯವಿರುವ ಗ್ರಾಮೀಣ ಆಸ್ತಿಗಳನ್ನು ನಿರ್ಮಿಸಲಾಗುತ್ತಿತ್ತು. ಆದರೆ ಹೊಸ ಕಾಯ್ದೆಯನ್ನು ‘ಪಿ.ಎಂ. ಗತಿಶಕ್ತಿ’ ಯೋಜನೆಗೆ ಜೋಡಿಸಿರುವುದರಿಂದ, ದೊಡ್ಡ ರಸ್ತೆಗಳು ಮತ್ತು ಹೆದ್ದಾರಿಗಳ ನಿರ್ಮಾಣಕ್ಕೆ ಬಳಸಲಾಗುತ್ತಿದ್ದು, ಇದು ಪರೋಕ್ಷವಾಗಿ ಗುತ್ತಿಗೆದಾರರು ಹಾಗೂ ಕಾರ್ಪೊರೇಟ್ ಕಂಪನಿಗಳಿಗೆ ಲಾಭ ಮಾಡಿಕೊಡುವ ಯೋಜನೆಯಾಗಿ ಮಾರ್ಪಟ್ಟಿದೆ. ಇದು ಬಡವರ ಕೈಯಿಂದ ಅನ್ನ ಕಸಿದುಕೊಂಡು ಉಳ್ಳವರನ್ನು ಇನ್ನಷ್ಟು ಶ್ರೀಮಂತರನ್ನಾಗಿಸುವ ಯೋಜನೆಯಾಗಿದೆ ಎಂದು ನಿರ್ಣಯದಲ್ಲಿ ಟೀಕಿಸಲಾಗಿದೆ. ಹೊಸ ಕಾಯ್ದೆಯು ವರ್ಷಕ್ಕೆ 12 ತಿಂಗಳ ಬದಲು ಕೇವಲ 10 ತಿಂಗಳು ಮಾತ್ರ ಕೆಲಸಕ್ಕೆ ಅವಕಾಶ ನೀಡುತ್ತದೆ. VB G RAM G ಕಾಯ್ದೆಯಡಿ ಎಲ್ಲಾ ಗ್ರಾಮ ಪಂಚಾಯತಿಗಳು ಸೇರ್ಪಡೆಗೊಳ್ಳುವ ಖಚಿತತೆ ಇಲ್ಲ. ಅಲ್ಲದೆ ಕಾರ್ಮಿಕರಿಗೆ ನೀಡಲಾಗುವ ಕೂಲಿ ದರದ ಬಗ್ಗೆ ಯಾವುದೇ ಖಚಿತತೆ ಅಥವಾ ಭರವಸೆ ಇಲ್ಲ. ಈ ಅನಿಶ್ಚಿತತೆಯಿಂದ ಗ್ರಾಮೀಣ ಭಾಗದ ಕೂಲಿ ಕಾರ್ಮಿಕರು—ವಿಶೇಷವಾಗಿ ಮಹಿಳೆಯರು, ಪರಿಶಿಷ್ಟ ಜಾತಿ ಮತ್ತು ಪಂಗಡದ ಕಾರ್ಮಿಕರು, ಆದಿವಾಸಿಗಳು ಹಾಗೂ ರೈತಾಪಿ ಜನರ ಹಕ್ಕುಗಳು ಕಸಿದುಕೊಳ್ಳಲ್ಪಡುತ್ತಿವೆ. ಗ್ರಾಮೀಣ ಕೂಲಿ ಕಾರ್ಮಿಕರನ್ನು ಆಧುನಿಕ ಗುಲಾಮಗಿರಿಯತ್ತ ತಳ್ಳುವ ಪ್ರಯತ್ನವಾಗಿದೆ ಎಂದು ಆರೋಪಿಸಲಾಗಿದೆ. ಆದ್ದರಿಂದ ಮೇಲ್ಕಂಡ ಪ್ರಮುಖ ಕಾರಣಗಳಿಂದ ಕೇಂದ್ರ ಸರ್ಕಾರದ ಈ ನಡೆಯನ್ನು ಈ ಸದನವು ತೀವ್ರವಾಗಿ ವಿರೋಧಿಸುತ್ತದೆ. ಮೇಲ್ಕಂಡ ಎಲ್ಲ ಗಂಭೀರ ಅಂಶಗಳನ್ನು ಪರಿಗಣಿಸಿ, ಭಾರತದ ಪ್ರಜಾಸತ್ತೆಯ ಭದ್ರ ಬುನಾದಿಯಾಗಿರುವ ಪಂಚಾಯತ್ ರಾಜ್ ವ್ಯವಸ್ಥೆ ಹಾಗೂ ಅಧಿಕಾರ ವಿಕೇಂದ್ರೀಕರಣದ ತತ್ವಗಳಿಗೆ ತನ್ನ ಸಂಪೂರ್ಣ ಬದ್ಧತೆಯನ್ನು ಈ ಸದನವು ಪುನರುಚ್ಚರಿಸುತ್ತದೆ. ಗ್ರಾಮೀಣ ಬಡವರ ಪಾಲಿನ ‘ಸಂಜೀವಿನಿ’ಯಾಗಿದ್ದ ಮತ್ತು ಗ್ರಾಮೀಣ ಬದುಕಿನ ಅವಿಭಾಜ್ಯ ಅಂಗವಾಗಿದ್ದ ‘ಮನರೇಗಾ’ ಯೋಜನೆಯನ್ನು ರದ್ದುಗೊಳಿಸಿರುವುದನ್ನು ಈ ಸದನವು ಅತ್ಯಂತ ಗಂಭೀರವಾಗಿ ಪರಿಗಣಿಸುತ್ತದೆ. ಕೇಂದ್ರ ಸರ್ಕಾರವು ಏಕಪಕ್ಷೀಯವಾಗಿ ಜಾರಿಗೆ ತಂದಿರುವ ಹೊಸ VB-GRAM-G ಕಾಯ್ದೆಯು ಒಕ್ಕೂಟ ವ್ಯವಸ್ಥೆಯ ಮೂಲ ಆಶಯಗಳಿಗೆ ಮತ್ತು ಗ್ರಾಮೀಣ ಜನರ ಜೀವನೋಪಾಯದ ಹಕ್ಕಿಗೆ ಮಾರಕವಾಗಿದೆ ಎಂದು ನಿರ್ಣಯದಲ್ಲಿ ತಿಳಿಸಲಾಗಿದೆ. ಗ್ರಾಮೀಣ ಬಡ ಕುಟುಂಬಗಳಿಗೆ ಆರ್ಥಿಕ ಭದ್ರತೆ ಒದಗಿಸುವ ಸಲುವಾಗಿ 2005ರಲ್ಲಿ ಅಂದಿನ ಡಾ. ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರ್ಕಾರವು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಕಾಯ್ದೆಯನ್ನು ಜಾರಿಗೆ ತಂದಿತ್ತು. ಈ ಯೋಜನೆಯು ನಿರುದ್ಯೋಗ ನಿವಾರಣೆ, ವಲಸೆ ತಡೆ, ಲಿಂಗತಾರತಮ್ಯವಿಲ್ಲದ ವೇತನ ವ್ಯವಸ್ಥೆ, ಪಂಚಾಯತ್ ವಿಕೇಂದ್ರೀಕರಣದ ಬಲವರ್ಧನೆ ಹಾಗೂ ಗ್ರಾಮೀಣ ಜನರ ವೈಯಕ್ತಿಕ ಮತ್ತು ಸಮುದಾಯ ಆಸ್ತಿಗಳ ಸೃಜನೆಯ ಮೂಲಕ ಕ್ರಾಂತಿಕಾರಿ ಬದಲಾವಣೆ ತಂದಿದೆ ಎಂದು ನಿರ್ಣಯದಲ್ಲಿ ಉಲ್ಲೇಖಿಸಲಾಗಿದೆ. ಹೊಸ ಕಾಯ್ದೆಯು ಸಂವಿಧಾನದ 21ನೇ ಅನುಚ್ಛೇದದಡಿ ಸಿಗುವ ಜೀವಿಸುವ ಹಕ್ಕು ಮತ್ತು ಜೀವನೋಪಾಯದ ಹಕ್ಕನ್ನು ಉಲ್ಲಂಘಿಸುತ್ತದೆ. ಜೊತೆಗೆ ಸಂವಿಧಾನದ 73ನೇ ತಿದ್ದುಪಡಿಯ ಮೂಲಕ ಗ್ರಾಮ ಪಂಚಾಯತಿಗಳಿಗೆ ನೀಡಲಾದ ಅಧಿಕಾರ ಮತ್ತು ಸ್ವಾಯತ್ತತೆಯನ್ನು ಕಸಿದುಕೊಳ್ಳುವ ಮೂಲಕ, 73ನೇ ತಿದ್ದುಪಡಿಯ ಆಶಯಕ್ಕೂ ಹಾಗೂ ರಾಷ್ಟ್ರಪಿತ ಮಹಾತ್ಮ ಗಾಂಧಿಯವರ ಗ್ರಾಮ ಸ್ವರಾಜ್ಯದ ಕಲ್ಪನೆಗೂ ವಿರುದ್ಧವಾಗಿದೆ. ಮನರೇಗಾ ಕಾಯ್ದೆಯಡಿ ಕೇಂದ್ರ ಸರ್ಕಾರವೇ 100 ಮಾನವ ದಿನಗಳ ಕೂಲಿ ವೆಚ್ಚವನ್ನು ಶೇ.100ರಷ್ಟು ಭರಿಸುತ್ತಿತ್ತು. ಆದರೆ ರಾಜ್ಯಗಳೊಂದಿಗೆ ಸಮಾಲೋಚನೆ ನಡೆಸದೆ, ಕೇಂದ್ರ ಸರ್ಕಾರವು ರಾಜ್ಯಗಳು ಶೇ.40ರಷ್ಟು ಅನುದಾನ ಭರಿಸಬೇಕೆಂಬ ನಿಯಮವನ್ನು ಏಕಾಏಕಿ ಹೇರಿದೆ. ಇದರಿಂದ ಹೊಸ ಕಾಯ್ದೆಯಲ್ಲಿ 125 ಮಾನವ ದಿನಗಳ ಕೆಲಸ ನೀಡುವುದಾಗಿ ಹೇಳಿದ್ದರೂ, ವಾಸ್ತವದಲ್ಲಿ 50 ಮಾನವ ದಿನಗಳ ವೆಚ್ಚವನ್ನು ರಾಜ್ಯ ಸರ್ಕಾರವೇ ಭರಿಸಬೇಕಾಗುತ್ತದೆ. ಇದು ಒಕ್ಕೂಟ ವ್ಯವಸ್ಥೆಯ ಮೇಲೆ ಗಂಭೀರ ಪರಿಣಾಮ ಬೀರುತ್ತದೆ ಹಾಗೂ ಸಂವಿಧಾನದ ಅನುಚ್ಛೇದ 258 ಮತ್ತು 280ರ ಸ್ಪಷ್ಟ ಉಲ್ಲಂಘನೆಯಾಗಿದೆ. ಕರ್ನಾಟಕವು ದೇಶದಲ್ಲೇ ಅತಿ ಹೆಚ್ಚು ತೆರಿಗೆ ಪಾವತಿಸುವ ರಾಜ್ಯಗಳಲ್ಲಿ ಎರಡನೇ ಸ್ಥಾನದಲ್ಲಿದೆ. ಗ್ರಾಮ ಪಂಚಾಯತಿಗಳ ತೆರಿಗೆ ಸಂಗ್ರಹದಲ್ಲೂ ಕರ್ನಾಟಕ ದೇಶದಲ್ಲೇ ಮೊದಲ ಸ್ಥಾನದಲ್ಲಿದೆ. ವಿಕೇಂದ್ರೀಕರಣ ವ್ಯವಸ್ಥೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಿರುವ ರಾಜ್ಯಗಳ ಪೈಕಿ ಕರ್ನಾಟಕವೂ ಮುಂಚೂಣಿಯಲ್ಲಿದೆ. 14ನೇ ಹಣಕಾಸು ಆಯೋಗದಲ್ಲಿ ಕರ್ನಾಟಕಕ್ಕೆ ಶೇ.4.71ರಷ್ಟು ತೆರಿಗೆ ಹಂಚಿಕೆಯನ್ನು ಶಿಫಾರಸು ಮಾಡಲಾಗಿತ್ತು. ಆದರೆ 15ನೇ ಹಣಕಾಸು ಆಯೋಗದಲ್ಲಿ ಇದು ಶೇ.3.64ಕ್ಕೆ ಇಳಿಯಿತು. ಇದೀಗ 16ನೇ ಹಣಕಾಸು ಆಯೋಗದ ಶಿಫಾರಸಿನಲ್ಲಿ ಶೇ.4.131ರಷ್ಟು ಹಂಚಿಕೆ ನೀಡಲಾಗಿದ್ದರೂ, ಅದು 14ನೇ ಹಣಕಾಸು ಆಯೋಗದ ಶಿಫಾರಸಿಗಿಂತ ಶೇ.14.1ರಷ್ಟು ಕಡಿಮೆಯಾಗಿದೆ. ಇಂತಹ ಸಂಕಷ್ಟದ ಸಂದರ್ಭದಲ್ಲಿ, ಹೊಸ ಕಾಯ್ದೆಯ ಮೂಲಕ ಯೋಜನೆಯ ಅನುಷ್ಠಾನದಲ್ಲಿ ಶೇ.40ರಷ್ಟು ಹೊರೆ ರಾಜ್ಯದ ಮೇಲೆ ಹೊರಿಸುವುದು ರಾಜ್ಯದ ಆರ್ಥಿಕ ಭದ್ರತೆ ಮತ್ತು ಅಭಿವೃದ್ಧಿಯನ್ನು ಅಪಾಯಕ್ಕೆ ದೂಡುವ ಹುನ್ನಾರವಾಗಿದೆ ಎಂದು ನಿರ್ಣಯದಲ್ಲಿ ಪ್ರತಿಪಾದಿಸಲಾಗಿದೆ.
Timeline: ಭಾರತದ ಮೇಲಿನ ಡೊನಾಲ್ಡ್ ಟ್ರಂಪ್ ಸುಂಕ ಸಮರ; ಏಪ್ರಿಲ್ 2025-ಫೆಬ್ರವರಿ 2026ರ ಮಧ್ಯೆ ಏನೆಲ್ಲಾ ಆಯ್ತು?
ಭಾರತದ ಮೇಲಿನ ಸುಂಕವನ್ನು ಶೇ. 18ಕ್ಕೆ ಇಳಿಕೆ ಮಾಡಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ತಮ್ಮ ಪರಮಾಪ್ತ ಮಿತ್ರ ಎಂದು ಕರೆದದ್ದಾರೆ. ಆದರೆ ಇತ್ತೀಚಿನವೆಗೆ ಭಾರತದ ವಿರುದ್ದ ಸುಂಕ ಸಮರದಲ್ಲಿ ನಿರತವಾಗಿದ್ದ ಅಮೆರಿಕ ಅಧ್ಯಕ್ಷರು, ಈಗ ಏಕಾಏಕಿ ಎಲ್ಲಾ ಅಡೆಗಡೆಗಳನ್ನು ನಿವಾರಿಸಿ ದ್ವಿಪಕ್ಷೀಯ ವ್ಯಾಪಾರ ಒಪ್ಪಂದವನ್ನು ಘೋಷಿಸಿದ್ದಾರೆ. ಸರಿಸುಮಾರು ಒಂದು ವರ್ಷ ನಡೆದ ಅಮೆರಿಕದ ಆರಂಭಿಸಿದ್ದ ಈ ಸುಂಕ ಸಮರದಲ್ಲಿ, ಭಾರತ ಅಂತಿಮವಾಗಿ ಜಯಗಳಿಸಿದೆ.
ಬೆಂಗಳೂರು : ಮಾರುಕಟ್ಟೆಯಲ್ಲಿ ಅಂದಾಜು 94 ಕೋಟಿ ರೂ.ಬೆಲೆಬಾಳುವ 11.83 ಎಕರೆ ವಿಸ್ತೀರ್ಣದ ಗೋಮಾಳ ಜಮೀನನ್ನು ಶ್ರೀ ಕಾಗಿನೆಲೆ ಮಹಾಸಂಸ್ಥಾನದ ಕನಕ ಗುರುಪೀಠ ಸೇರಿದಂತೆ ಒಟ್ಟು 22 ಸಂಘ ಸಂಸ್ಥೆಗಳು ಮತ್ತು ಮಠಗಳಿಗೆ ನಿಯಮ ಉಲ್ಲಂಘಿಸಿ ಮಂಜೂರು ಮಾಡಲು ಸಚಿವ ಸಂಪುಟವು ಅನುಮೋದಿಸಿದೆ. ಗ್ರೇಟರ್ ಬೆಂಗಳೂರು ವ್ಯಾಪ್ತಿಯಿಂದ 18 ಕಿಮೀ ವ್ಯಾಪ್ತಿಯೊಳಗೆ ಬರುವ ರಾವುತನಹಳ್ಳಿ ಗ್ರಾಮದಲ್ಲಿರುವ ಜಮೀನುಗಳಿಗೆ ಸರಕಾರಿ ಮಾರ್ಗಸೂಚಿ ಮೌಲ್ಯದ ಪ್ರಕಾರ ಎಕರೆಗೆ 4,85,62,000 ರೂ. ಬೆಲೆ ಇದೆ. ಇದರ ಪ್ರಕಾರವೇ 92.93 ಕೋಟಿ ರೂ.ನಷ್ಟು ಈ ಜಮೀನು ಬೆಲೆ ಬಾಳಲಿದೆ. ಈ ಜಮೀನನ್ನು ಮಂಜೂರು ಮಾಡಲು ಕಾನೂನು ಮತ್ತು ಆರ್ಥಿಕ ಇಲಾಖೆಯು ಅಸಮ್ಮತಿ ವ್ಯಕ್ತಪಡಿಸಿತ್ತು. ಆದರೂ ಸಹ ಸಿದ್ದರಾಮಯ್ಯ ಅವರ ನೇತೃತ್ವದ ಸಚಿವ ಸಂಪುಟವು ಮಂಜೂರಾತಿಗೆ ಅನುಮತಿ ನೀಡಿದೆ. ಈ ಮೊದಲು ಇವೇ ಸಂಘ ಸಂಸ್ಥೆ, ಮಠಗಳಿಗೆ ಸಿದ್ದರಾಮಯ್ಯ ಅವರ ಮೊದಲ ಅವಧಿಯಲ್ಲಿ ಮಾಚೋಹಳ್ಳಿ ಅರಣ್ಯ ಪ್ರದೇಶದಲ್ಲೇ ಜಮೀನುಗಳನ್ನು ಮಂಜೂರು ಮಾಡಿತ್ತು. ಈ ಮಂಜೂರಾತಿಯನ್ನು ಹೈಕೋರ್ಟ್ನಲ್ಲಿ ಪ್ರಶ್ನಿಸಲಾಗಿದೆಯಲ್ಲದೇ ಪ್ರಕರಣವು ವಿಚಾರಣೆ ಹಂತದಲ್ಲಿದೆ. ಹೀಗಾಗಿ ನ್ಯಾಯಾಲಯದಿಂದ ಛೀಮಾರಿ ತಪ್ಪಿಸಿಕೊಳ್ಳುವ ಭರದಲ್ಲಿ ಇವೇ ಸಂಘ ಸಂಸ್ಥೆ, ಮಠಗಳಿಗೆ ಗೋಮಾಳವನ್ನು ಮಂಜೂರು ಮಾಡಲು ಅನುಮತಿ ನೀಡಿ ಮತ್ತೊಂದು ವಿವಾದವನ್ನು ಮೈ ಮೇಲೆ ಎಳೆದುಕೊಂಡಿದೆ. ಇದಕ್ಕೆ ಸಂಬಂಧಿಸಿದಂತೆ ಸಚಿವ ಸಂಪುಟದ ರಹಸ್ಯ ಹಾಳೆಗಳು he-file.inಗೆ ಲಭ್ಯವಾಗಿವೆ. ಬೆಂಗಳೂರು ಉತ್ತರ ತಾಲೂಕು ದಾಸನಪುರ ಹೋಬಳಿಯಲ್ಲಿ ರಾವುತ್ತನಹಳ್ಳಿಯಲ್ಲಿ ಕೃಷಿ ಜಮೀನು ಮಾರ್ಗಸೂಚಿ ಮೌಲ್ಯದ ಪ್ರಕಾರ ಎಕರೆಗೆ ಒಂದು ಕೋಟಿ ರೂ. ಇದೆ. ಅಭಿವೃದ್ಧಿ ಹೊಂದದ ಕೃಷಿಯೇತರ ಜಮೀನು, ಎಕರೆಗೆ 1,80,00,000 ರೂ.ಇದೆ. ಅಭಿವೃದ್ಧಿ ಹೊಂದದ ಜಮೀನು ಮಾರ್ಗಸೂಚಿ ಮೌಲ್ಯದ ಪ್ರಕಾರ ಎಕರೆಗೆ 4,85,62,000ರೂ.ಇದೆ. ಮಾರುಕಟ್ಟೆ ಮೌಲ್ಯವು ಕನಿಷ್ಠ 6ರಿಂದ 8 ಕೋಟಿ ರೂ.ಯಷ್ಟು ಇದೆ. ಎಕರೆಗೆ 8 ಕೋಟಿ ರೂ.ಲೆಕ್ಕಾಚಾರದ ಪ್ರಕಾರ 11.83 ಎಕರೆಗೆ 94 ಕೋಟಿ ರೂ.ಬೆಲೆಬಾಳಲಿದೆ. ಬೆಂಗಳೂರು ನಗರ ಜಿಲ್ಲೆ ಉತ್ತರ ತಾಲೂಕಿನ ದಾಸನಪುರ ಹೋಬಳಿಯ ರಾವುತ್ತನಹಳ್ಳಿ ಗ್ರಾಮದ ಸರ್ವೇ ನಂಬರ್ 57 ಮತ್ತು 58ರಲ್ಲಿ ಸರಕಾರಿ ಗೋಮಾಳ ಜಮೀನಿದೆ. ಸರ್ವೇ ನಂಬರ್ 57ರಲ್ಲಿ ಆಕಾರ್ ಬಂದ್ ಪ್ರಕಾರ 34 ಎಕರೆ 9 ಗುಂಟೆ, ಸರ್ವೇ ನಂಬರ್ 58ರಲ್ಲಿ ಆಕಾರ್ ಬಂದ್ನಂತೆ 18 ಎಕರೆ 5 ಗುಂಟೆ ವಿಸ್ತೀರ್ಣವಿದೆ. ಈ ಜಮೀನಿನಲ್ಲಿ ಕಾಗಿನೆಲೆ ಮಹಾಸಂಸ್ಥಾನ ಕನಕಗುರುಪೀಠಕ್ಕೆ 1 ಎಕರೆ ವಿಸ್ತೀರ್ಣ ಸೇರಿದಂತೆ ಒಟ್ಟಾರೆ 22 ಸಂಘ ಸಂಸ್ಥೆಗಳಿಗೆ 40 ಎಕರೆ 16 ಗುಂಟೆ ಜಮೀನನ್ನು ಮಂಜೂರು ಮಾಡಲು ಪ್ರಸ್ತಾವಿಸಿತ್ತು. ಈ ಪೈಕಿ ಸಚಿವ ಸಂಪುಟವು 11.83 ಎಕರೆಯನ್ನು ಮಂಜೂರು ಮಾಡಿದೆ. 22 ಖಾಸಗಿ ಸಂಘ ಸಂಸ್ಥೆಗಳು ಒಟ್ಟಾರೆ 40.16 ಎಕರೆ ಮಂಜೂರಾತಿಗೆ ಮನವಿ ಸಲ್ಲಿಸಿದ್ದವು. ಈ ಪೈಕಿ ಸಚಿವ ಸಂಪುಟವು 11.83 ಎಕರೆಯನ್ನು ಮಾತ್ರ ಮಂಜೂರು ಮಾಡಿದೆ. ಸಂಘ ಸಂಸ್ಥೆ-ಮಠಗಳ ವಿವರ: ಕಾಗಿನೆಲೆ ಮಹಾಸಂಸ್ಥಾನದ ಕನಕಗುರುಪೀಠಕ್ಕೆ 1ಎಕರೆ, ಹೊಸದುರ್ಗದ ಜಗದ್ಗುರು ಅಖಿಲ ಕುಂಚಿಟಿಗ ಮಹಾಸಂಸ್ಥಾನ ಮಠಕ್ಕೆ 1ಎಕರೆ, ಚಿತ್ರದುರ್ಗದ ಎಂ.ಕೆ.ಹಟ್ಟಿಯ ಶ್ರೀ ಜಗದ್ಗುರು ಸಿದ್ದರಾಮೇಶ್ವರ ಮಹಾಸಂಸ್ಥಾನ ಬೋವಿ ಗುರುಪೀಠಕ್ಕೆ 1ಎಕರೆ, ಚಿತ್ರದುರ್ಗದ ದಾವಣಗೆರೆ ರಸ್ತೆಯಲ್ಲಿರುವ ಶ್ರೀ ಶಿವಶರಣ ಮಾದರ ಚೆನ್ನಯ್ಯ ಗುರುಪೀಠ ಟ್ರಸ್ಟ್ ಗೆ 1 ಎಕರೆ, ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ರಾಜನಹಳ್ಳಿ ಗ್ರಾಮದಲ್ಲಿರುವ ಶ್ರೀ ಮಹರ್ಷಿ ವಾಲ್ಮೀಕಿ ಗುರುಪೀಠ ಟ್ರಸ್ಟ್ಗೆ 1ಎಕರೆ , ಹೊಸದುರ್ಗ ಮಧುರೆಯಲ್ಲಿನ ಶ್ರೀ ಉಪವೀರ ಜಗದ್ಗುರು ವಿದ್ಯಾಸಂಸ್ಥೆಗೆ 1ಎಕರೆ, ಚಿತ್ರದುರ್ಗದ ಗೊಲ್ಲಗಿರಿಯಲ್ಲಿರುವ ಅಖಿಲ ಭಾರತ ಶ್ರೀ ಕೃಷ್ಣಯಾದವ ಮಹಾಸಂಸ್ಥಾನಕ್ಕೆ 0-31 ಗುಂಟೆ, ಬೆಂಗಳೂರಿನ ಶೇಷಾದ್ರಿಪುರಂನಲ್ಲಿರುವ ಕಾಳಿದಾಸ ಮತ್ತು ಸಂಗೊಳ್ಳಿ ರಾಯಣ್ಣ ವಿದ್ಯಾರ್ಥಿ ನಿಲಯದ ಹಳೇ ವಿದ್ಯಾರ್ಥಿಗಳ ಸಂಘಕ್ಕೆ 1 ಎಕರೆ, ತೀರ್ಥಹಳ್ಳಿಯ ಹುಂಚದಕಟ್ಟೆಯಲ್ಲಿರುವ ನಾರಾಯಣ ಗುರು ಮಹಾಸಂಸ್ಥಾನಕ್ಕೆ 0-31.08 ಎಕರೆ ಮಂಜೂರು ಮಾಡಿದೆ. ಅದೇ ರೀತಿ ಚಿತ್ರದುರ್ಗದ ದಾವಣಗೆರೆ ರಸ್ತೆಯಲ್ಲಿರುವ ಜಗದ್ಗುರು ಮಾಚಿದೇವ ಮಠಕ್ಕೆ 0-32 ಎಕರೆ, ಹಾವೇರಿ ಜಿಲ್ಲೆಯ ನರಸೀಪುರ ತಾಲೂಕಿನ ನಿಜಶರಣ ಅಂಬಿಗರ ಚೌಡಯ್ಯ ಗುರುಪೀಠಕ್ಕೆ 0-32 ಎಕರೆ, ವಿಜಯಪುರದ ಮುದ್ದೇಬಿಹಾಳದ ಶ್ರೀ ಹಡಪದ ಅಪ್ಪಣ್ಣ ದೇವರ ಮಹಾಸಂಸ್ಥಾನ ಟ್ರಸ್ಟ್ಗೆ -31 ಎಕರೆ ಬೆಳಗಾವಿಯ ಅಥಣಿ ತಾಲೂಕಿನ ತೆಲಸಂಗದ ಕುಂಬಾರ ಗುಂಡಯ್ಯ ಮಹಾಸಂಸ್ಥಾನ ಮಠಕ್ಕೆ 0-31 ಎಕರೆ, ಕಲವುರಗಿಯ ಚಿತ್ತಾಪುರ ತಾಲೂಕಿನ ಕೊಂಚೂರ ಗ್ರಾಮದಲ್ಲಿರುವ ಸವಿತಾ ಪೀಠ ಚಾರಿಟೇಬಲ್ ಟ್ರಸ್ಟ್ಗೆ 0-30 ಎಕರೆ, ಹರಿಹರ ತಾಲೂಕಿನ ಹೇಮಾ-ವೇಮಾ ಸದ್ಬಾವನ ಗುರುಪೀಠಕ್ಕೆ 0-23.12 ಎಕರೆ, ಬೆಂಗಳೂರಿನ ನಿಕೇತನ ಎಜುಕೇಷನ್ ಟ್ರಸ್ಟ್ಗೆ 1 ಎಕರೆ, ತುಮಕೂರಿನ ಎಸ್ವಿಎಸ್ ಊರುಗೋಲು ವೃದ್ಧಾಶ್ರಮ ಚಾರಿಟೇಬಲ್ ಟ್ರಸ್ಟ್ಗೆ 0-35.08 ಎಕರೆ, ಬೆಂಗಳೂರಿನ ವಿಜಯನಗರದಲ್ಲಿರುವ ಹಿಂದುಳಿದ ದಲಿತ ಮಠಾಧೀಶ್ವರ ಒಕ್ಕೂಟಕ್ಕೆ 0-35 ಎಕರೆ ಮಂಜೂರು ಮಾಡಿದೆ. ಹಾಗೆಯೇ ಕರ್ನಾಟಕ ರಾಜ್ಯ ಅಹಲ್ಯಾಬಾಯಿ ಹೋಲ್ಕರ್ ಮಹಿಳಾ ಸಂಘದ ಉದ್ದೇಶಿತ ಸಮುದಾಯ ಭವನ, ವಿದ್ಯಾರ್ಥಿ ನಿಲಯ ನಿರ್ಮಾಣಕ್ಕೆ 1 ಎಕರೆ, ಚಿತ್ರದುರ್ಗದ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಚಲವಾದಿ ಗುರುಪೀಠಕ್ಕೆ 0-32 ಎಕರೆ, ಚಿತ್ರದುರ್ಗದಲ್ಲಿರುವ ಅಖಿಲ ಕರ್ನಾಟಕ ಶ್ರೀ ಗುರು ಮೇದಾರ ಕೇತೇಶ್ವರ ಟ್ರಸ್ಟ್ ಗೆ 0-30 ಎಕರೆ, ಬೆಂಗಳೂರಿನ ತಾವರೆಕೆರೆಯಲ್ಲಿರುವ ಶ್ರೀ ಹಠಯೋಗಿ ಕಾಳಪ್ಪ ಸ್ವಾಮೀಜಿ ಮಠದ ಸೇವಾ ಟ್ರಸ್ಟ್ಗೆ 0-32 ಎಕರೆಯನ್ನು ಮಂಜೂರು ಮಾಡಿದೆ. ನಗರ ವ್ಯಾಪ್ತಿಯಲ್ಲಿದೆ 11.83 ಎಕರೆ ಪ್ರಸ್ತಾವಿತ ಸರ್ವೇ ನಂಬರ್ 57 ಮತ್ತು 58ರಲ್ಲಿನ ಜಮೀನುಗಳಿಗೆ ರಸ್ತೆ ಸಂಪರ್ಕವಿದೆ. ಕರ್ನಾಟಕ ಭೂ ಕಂದಾಯ ನಿಯಮಗಳು 1966ರ ನಿಯಮ 97ರ ಅಡಿಯಲ್ಲಿ ರಾಸುಗಳ ಮೇವಿಗಾಗಿ ಗೋಮಾಳವನ್ನು ಮೀಸಲಿರಿಸಲು ಬೇರೆ ಸರಕಾರಿ ಜಮೀನು ಲಭ್ಯವಿಲ್ಲ ಎಂದು ಜಿಲ್ಲಾಧಿಕಾರಿಗಳು ವರದಿಯಲ್ಲಿ ವಿವರಿಸಿದ್ದರು. ಅಲ್ಲದೇ ಈ ಸರ್ವೇ ನಂಬರ್ 57 ಮತ್ತು 58ರ ಜಮೀನುಗಳು ಅರ್ಕಾವತಿ ನದಿಗೆ ಹೊಂದಿಕೊಂಡಿವೆ. ಅಲ್ಲದೇ ಈ ಜಮೀನು ನಗರ ವ್ಯಾಪ್ತಿಯಲ್ಲಿದೆ. ಕರ್ನಾಟಕ ಭೂ ಮಂಜೂರಾತಿ ನಿಯಮಗಳು 1969ರ ನಿಯಮ 22-ಎ(2) ಪ್ರಕಾರ ನಗರ ಪೌರ ಸರಹದ್ದಿನೊಳಗೆ ಇರುವ ಸರಕಾರಿ ಭೂಮಿಯನ್ನು ಯಾವುದೇ ಖಾಸಗಿ ವ್ಯಕ್ತಿ, ಸಂಸ್ಥೆಗೆ ಮಂಜೂರು ಮಾಡಲು ಅವಕಾಶವಿಲ್ಲ. ಅಲ್ಲದೇ ಗೋಮಾಳ ಜಮೀನುಗಳನ್ನು ಖಾಸಗಿ ಸಂಘ ಸಂಸ್ಥೆಗಳಿಗೆ ಮಂಜೂರು ಮಾಡಲು ಅವಕಾಶವೇ ಇಲ್ಲ. ಸರ್ವೋಚ್ಛ ನ್ಯಾಯಾಲಯವು ಜಗಪಾಲ್ ಸಿಂಗ್/ಪಂಜಾಬ್ ರಾಜ್ಯ ಸರಕಾರ, ಜೋಗಿಂದರ್ ಮತ್ತು ಹರ್ಯಾಣ ರಾಜ್ಯ ಸರಕಾರದ ವಿಶೇಷ ಮೇಲ್ಮನವಿ ಪ್ರಕರಣದಲ್ಲಿ ಗೋಮಾಳ, ಜಲಮೂಲ ಜಮೀನುಗಳನ್ನು ಸಾರ್ವಜನಿಕ ಉಪಯೋಗಕ್ಕೆ ಸಂರಕ್ಷಿಸಿಡಬೇಕು. ಈ ಸಂಬಂಧ ಸುಪ್ರೀಂ ಕೋರ್ಟ್ ಸಹ ಎಲ್ಲ ರಾಜ್ಯಗಳ, ಕೇಂದ್ರಾಡಳಿತ ಪ್ರದೇಶಗಳ ಮುಖ್ಯ ಕಾರ್ಯದರ್ಶಿಗಳಿಗೆ ನಿರ್ದೇಶನವನ್ನೂ ನೀಡಿದೆ. ಹೀಗಾಗಿ 22 ಸಂಘ ಸಂಸ್ಥೆಗಳಿಗೆ ಈ ಜಮೀನು ಮಂಜೂರಾತಿಗೆ ಅವಕಾಶವಿಲ್ಲ ಎಂದು ಸಚಿವ ಸಂಪುಟ ಟಿಪ್ಪಣಿಯಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ.
ಹಳೆಯ ಸಿಮ್ ಕಾರ್ಡ್, ಮದರ್ ಬೋರ್ಡ್, ಪ್ರಾಸೆಸರ್ ಗಳಿಂದ 29 ಲಕ್ಷ ರೂ. ಮೌಲ್ಯದ ಚಿನ್ನದ ಹೊರತಗೆದ ಭೂಪ!
ಇಲ್ಲೊಬ್ಬ ವ್ಯಕ್ತಿ ಹಳೆಯ ಸಿಮ್ ಕಾರ್ಡ್ ಮತ್ತು ಕಂಪ್ಯೂಟರ್ ತ್ಯಾಜ್ಯದಿಂದ 191 ಗ್ರಾಂ ಚಿನ್ನವನ್ನು ಹೊರತೆಗೆದಿದ್ದಾರೆ. ಈ ಚಿನ್ನದ ಮೌಲ್ಯ ಭಾರತದಲ್ಲಿ ಸುಮಾರು 29 ಲಕ್ಷ ರೂಪಾಯಿಗಳಷ್ಟಿದೆ. ಅವರು ತಮ್ಮ ಪ್ರಯೋಗಾಲಯದಲ್ಲಿ ರಾಸಾಯನಿಕ ಪ್ರಕ್ರಿಯೆಗಳ ಮೂಲಕ ಚಿನ್ನವನ್ನು ಹೊರತೆಗೆದಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಜನರು ಇ-ತ್ಯಾಜ್ಯದಿಂದ ಚಿನ್ನ ಪಡೆಯುವ ಬಗ್ಗೆ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಈ ವಿಡಿಯೋದಲ್ಲೇನಿದೆ ಇತ್ಯಾದಿ ವಿವರಗಳು ಇಲ್ಲಿವೆ.
ವಲಯ ವರ್ಗೀಕರಣ ನಿಯಮ ಪಾಲಿಸದ ಉದ್ದಿಮೆಗಳ ಪರವಾನಗಿ ನವೀಕರಣಕ್ಕೆ ತಡೆ
ಬೆಂಗಳೂರಿನ 5 ನಗರ ಪಾಲಿಕೆ ವ್ಯಾಪ್ತಿಯಲ್ಲಿ ಫೆಬ್ರವರಿ 1 ರಿಂದ 28 ರವರೆಗೆ ದಂಡ ರಹಿತವಾಗಿ 2026-27ನೇ ಸಾಲಿನ ಉದ್ದಿಮೆ ಪರವಾನಗಿ ನವೀಕರಣಕ್ಕೆ ಅವಕಾಶ ನೀಡಲಾಗಿದೆ. ಉದ್ದಿಮೆದಾರರು 1 ರಿಂದ 5 ವರ್ಷಗಳವರೆಗೆ ನವೀಕರಿಸಬಹುದು. ಮಾರ್ಚ್ 1 ರಿಂದ 31 ರವರೆಗೆ ಶೇ. 25 ದಂಡ, ಏಪ್ರಿಲ್ 1 ರಿಂದ ಶೇ. 100 ದಂಡ ವಿಧಿಸಲಾಗುವುದು.
ಪಾಕಿಸ್ತಾನ, ಚೀನಾಕ್ಕಿಂತಲೂ ಕಡಿಮೆ ಸುಂಕ: ಭಾರತಕ್ಕೆ ಅಮೆರಿಕದಿಂದ ಅನುಕೂಲಕರ ನಿರ್ಧಾರ
ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಡುವಿನ ದೂರವಾಣಿ ಮಾತುಕತೆ ಬಳಿಕ ಉಭಯ ದೇಶಗಳ ನಡುವಿನ ವ್ಯಾಪಾರ ಒಪ್ಪಂದ ಅಂತಿಮಗೊಂಡಿರುವುದಾಗಿ ಪ್ರಕಟಿಸಲಾಗಿದೆ. ಇದರಂತೆ, ಭಾರತದಿಂದ ಅಮೆರಿಕಕ್ಕೆ ರಫ್ತು ಮಾಡುವ ಎಲ್ಲ ಸರಕು ಮತ್ತು ಸೇವೆಗಳ ಮೇಲೆ ವಿಧಿಸಲಾಗುತ್ತಿದ್ದ ಶೇಕಡ 25ರ ಪ್ರತಿಸುಂಕವನ್ನು ಶೇಕಡ 18ಕ್ಕೆ ಇಳಿಸಲಾಗಿದೆ. ಇದೇ ವೇಳೆ, ಅಮೆರಿಕದಿಂದ ಭಾರತಕ್ಕೆ ರಫ್ತು ಮಾಡುವ ಸರಕುಗಳ ಮೇಲಿನ ಸುಂಕವನ್ನು ಶೂನ್ಯಕ್ಕೆ ಇಳಿಸಲಾಗುವುದು ಎಂದು ಟ್ರಂಪ್ ಘೋಷಿಸಿದ್ದಾರೆ. ಅಮೆರಿಕ ಅಧ್ಯಕ್ಷರ ಈ ಘೋಷಣೆಯನ್ನು ಪ್ರಧಾನಿ ನರೇಂದ್ರ ಮೋದಿ ಸ್ವಾಗತಿಸಿದ್ದಾರೆ. ಸುಂಕ ಕಡಿತ ನಿರ್ಧಾರಕ್ಕಾಗಿ ಭಾರತದ 140 ಕೋಟಿ ಜನರ ಪರವಾಗಿ ಟ್ರಂಪ್ ಅವರಿಗೆ ಕೃತಜ್ಞತೆ ಸಲ್ಲಿಸುತ್ತಿದ್ದೇನೆ ಎಂದು ಮೋದಿ ಎಕ್ಸ್ ಪೋಸ್ಟ್ನಲ್ಲಿ ತಿಳಿಸಿದ್ದಾರೆ. ವಿಶ್ವದ ಅತಿದೊಡ್ಡ ಆರ್ಥಿಕತೆ ಹಾಗೂ ಅತಿದೊಡ್ಡ ಪ್ರಜಾಪ್ರಭುತ್ವ ವ್ಯವಸ್ಥೆ ಒಟ್ಟಾಗಿ ಕೆಲಸ ಮಾಡಿದಾಗ, ನಮ್ಮ ಜನರಿಗೆ ಲಾಭವಾಗಲಿದ್ದು, ಉಭಯ ರಾಷ್ಟ್ರಗಳಿಗೆ ಪ್ರಯೋಜನಕಾರಿಯಾದ ಸಹಕಾರದ ಅಪಾರ ಅವಕಾಶಗಳು ಅನಾವರಣಗೊಳ್ಳಲಿವೆ ಎಂದು ಅವರು ಹೇಳಿದ್ದಾರೆ. ಹೊಸ ನಿರ್ಧಾರದಂತೆ ಭಾರತ ಪಾವತಿಸಬೇಕಾದ ಸುಂಕ ತನ್ನ ನೆರೆಯ ಹಾಗೂ ಇತರ ರಾಷ್ಟ್ರಗಳಿಗಿಂತಲೂ ಕಡಿಮೆಯಾಗಿದೆ. ಉದಾಹರಣೆಗೆ, ಪಾಕಿಸ್ತಾನ ಮತ್ತು ಇಂಡೋನೇಷ್ಯಾ ಶೇಕಡ 19ರಷ್ಟು, ವಿಯೇಟ್ನಾಂ ಶೇಕಡ 20ರಷ್ಟು ಸುಂಕ ಪಾವತಿಸುತ್ತಿವೆ. ಇದೇ ವೇಳೆ ಬಾಂಗ್ಲಾದೇಶ ಶೇಕಡ 20ರಷ್ಟು ಸುಂಕವನ್ನು ಪಾವತಿಸುತ್ತಿದ್ದು, ಚೀನಾದಿಂದ ರಫ್ತಾಗುವ ವಸ್ತುಗಳು ಶೇಕಡ 30ರಿಂದ 35ರಷ್ಟು ಸುಂಕವನ್ನು ಆಕರ್ಷಿಸುತ್ತಿವೆ. ಅಮೆರಿಕದ ‘ವಿಮೋಚನಾ ದಿನ’ ಎಂದು ಕರೆಯಲ್ಪಡುವ 2025ರ ಏಪ್ರಿಲ್ನಲ್ಲಿ ಟ್ರಂಪ್ ಪ್ರತಿಸುಂಕ ಘೋಷಿಸಿದಾಗ, ಭಾರತದ ಮೇಲೆ ಶೇಕಡ 26ರಷ್ಟು ಸುಂಕ ವಿಧಿಸುವುದಾಗಿ ಪ್ರಕಟಿಸಿದ್ದರು. ವ್ಯಾಪಾರ ಒಪ್ಪಂದದ ಕುರಿತು ಮಾತುಕತೆಗಳು ನಡೆದ ಬಳಿಕ 2025ರ ಆಗಸ್ಟ್ನಿಂದ ಇದನ್ನು ಶೇಕಡ 25ಕ್ಕೆ ಇಳಿಸಲಾಗಿತ್ತು. ನಂತರ ರಷ್ಯಾದಿಂದ ತೈಲ ಆಮದು ಮಾಡುವ ಹಿನ್ನೆಲೆಯಲ್ಲಿ ಭಾರತದ ಮೇಲಿನ ಸುಂಕವನ್ನು ಶೇಕಡ 50ಕ್ಕೆ ಏರಿಸಲಾಗಿತ್ತು. ಇದೀಗ ಶೇಕಡ 18ರಷ್ಟು ಪ್ರತಿಸುಂಕವನ್ನು ಘೋಷಿಸಲಾಗಿದ್ದು, ರಷ್ಯಾದಿಂದ ತೈಲ ಆಮದು ಮಾಡುವ ಕಾರಣಕ್ಕಾಗಿ ವಿಧಿಸಿದ್ದ ಶೇಕಡ 25ರ ಹೆಚ್ಚುವರಿ ಸುಂಕವೂ ರದ್ದಾಗಲಿದೆ ಎನ್ನಲಾಗಿದೆ. ಆದರೆ ಈ ಬಗ್ಗೆ ಇನ್ನೂ ಅಧಿಕೃತ ಘೋಷಣೆ ಹೊರಬಿದ್ದಿಲ್ಲ. ಭಾರತ ರಷ್ಯಾದಿಂದ ತೈಲ ಖರೀದಿಯನ್ನು ನಿಲ್ಲಿಸಲಿದೆ ಹಾಗೂ ಅಮೆರಿಕದಿಂದ ರಫ್ತಾಗುವ ಸರಕುಗಳ ಮೇಲಿನ ಸುಂಕವನ್ನು ಶೂನ್ಯಕ್ಕೆ ಇಳಿಸಲು ಒಪ್ಪಿಕೊಂಡಿದೆ ಎಂದು ಟ್ರಂಪ್ ತಿಳಿಸಿದ್ದಾರೆ.
Proud Farmer: ಲಗ್ನ ಪತ್ರಿಕೆಯಲ್ಲಿ ಹೆಮ್ಮೆಯ ರೈತ ಎಂದು ಬರೆದುಕೊಂಡ ತುಮಕೂರಿನ ಕೆ.ಎನ್. ತೇಜೇಶ್ಕುಮಾರ್
Proud Farmer: ಕರ್ನಾಟಕದಲ್ಲಿ ರೈತರಿಗೆ ವಧು ಸಿಗುತ್ತಿಲ್ಲ ಎನ್ನುವುದು ಸಾಮಾನ್ಯ ಎನ್ನುವಂತೆ ಆಗಿದೆ. ವಿವಾಹ ವಯಸ್ಸು ಮೀರುತ್ತಿದ್ದರೂ ಹಲವು ರೈತರ ಮದುವೆ ಮುಂದೂಡಿಕೆ ಆಗುತ್ತಲೇ ಇದೆ. ಈ ಕಾರಣಕ್ಕೂ ಬಹಳಷ್ಟು ಜನ ಯುವಕರು ಕೃಷಿಯಿಂದ ಹಿಂದೆ ಸರಿಯುತ್ತಿದ್ದಾರೆ. ಕೋವಿಡ್ ಸಮಯದಲ್ಲಿ ಕೆಲಸ ಕಳೆದುಕೊಂಡ ಸಾವಿರಾರು ಜನ ಐಟಿ - ಬಿಟಿ ಉದ್ಯೋಗಿಗಳು ಸೇರಿದಂತೆ ಹಲವು ಖಾಸಗಿ ಸಂಸ್ಥೆಗಳಲ್ಲಿ
ಮಣಿಪುರದಲ್ಲಿ ಹೊಸ ಸರ್ಕಾರ ರಚನೆಗೆ ಸಿದ್ಧತೆ; ನಾಯಕನ ಆಯ್ಕೆಗೆ ಮುಂದಾದ ಬಿಜೆಪಿ ಶಾಸಕರು
ಹೊಸದಿಲ್ಲಿ: ಸುಮಾರು ಒಂದು ವರ್ಷದ ರಾಷ್ಟ್ರಪತಿ ಆಳ್ವಿಕೆಯ ಬಳಿಕ ಮಣಿಪುರದಲ್ಲಿ ಹೊಸ ಸರ್ಕಾರ ಅಸ್ತಿತ್ವಕ್ಕೆ ಬರಲು ವೇದಿಕೆ ಸಜ್ಜಾಗಿದೆ. ಫೆಬ್ರವರಿ 12ಕ್ಕೆ ರಾಷ್ಟ್ರಪತಿ ಆಡಳಿತದ ಅವಧಿ ಒಂದು ವರ್ಷ ಪೂರ್ಣಗೊಳ್ಳಲಿದ್ದು, ಬಿಜೆಪಿ ಶಾಸಕಾಂಗ ಪಕ್ಷ ಹೊಸ ನಾಯಕನನ್ನು ಆಯ್ಕೆ ಮಾಡುವ ಮೂಲಕ ಜನಪ್ರಿಯ ಸರ್ಕಾರ ರಚನೆಯ ಪ್ರಕ್ರಿಯೆಗೆ ನಾಂದಿ ಹಾಡಲಿದೆ. ರಾಷ್ಟ್ರ ರಾಜಧಾನಿಯಲ್ಲಿ ಬೀಡುಬಿಟ್ಟಿರುವ ಬಿಜೆಪಿ ಶಾಸಕರು ಹೊಸ ನಾಯಕನನ್ನು ಆಯ್ಕೆ ಮಾಡಲಿದ್ದು, ಶಾಸಕಾಂಗ ಪಕ್ಷದ ನೂತನ ನಾಯಕ ಹೊಸ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಶಾಸಕಾಂಗ ಪಕ್ಷದ ಸಭೆಯ ದಿನಾಂಕವನ್ನು ಬಿಜೆಪಿ ಅಧಿಕೃತವಾಗಿ ಪ್ರಕಟಿಸದಿದ್ದರೂ, ಪ್ರಧಾನ ಕಾರ್ಯದರ್ಶಿ ತರುಣ್ ಛುಗ್ ಅವರನ್ನು ಕೇಂದ್ರ ವೀಕ್ಷಕರಾಗಿ ನೇಮಕ ಮಾಡಲಾಗಿದೆ. 60 ಮಂದಿ ಸದಸ್ಯರ ವಿಧಾನಸಭೆಯಲ್ಲಿ ಬಿಜೆಪಿ ಬಹುಮತ ಹೊಂದಿದ್ದು, ಕುಕಿ ಮತ್ತು ಮೈತೈ ಜನಾಂಗಗಳ ನಡುವಿನ ಸಂಘರ್ಷದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಕಳೆದ ವರ್ಷದ ಫೆಬ್ರವರಿ 16ರಂದು ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಿತ್ತು. ಮುಖ್ಯಮಂತ್ರಿ ಬಿರೇನ್ ಸಿಂಗ್ ರಾಜೀನಾಮೆ ನೀಡಿದ ಕೆಲ ದಿನಗಳ ಬಳಿಕ ರಾಷ್ಟ್ರಪತಿ ಆಳ್ವಿಕೆ ಜಾರಿಗೊಂಡಿತ್ತು. 2017 ಮತ್ತು 2022ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಬಹುಮತ ಪಡೆದು ಸರ್ಕಾರ ರಚಿಸಿತ್ತು. ಜನಾಂಗೀಯ ಸಂಘರ್ಷ ಭುಗಿಲೆದ್ದ ಹಿನ್ನೆಲೆಯಲ್ಲಿ ಪಕ್ಷದ ನಾಯಕತ್ವವು ಸವಾಲಿನ ರಾಜಕೀಯ ಪರಿಸ್ಥಿತಿಗಳನ್ನು ಎದುರಿಸಬೇಕಾಯಿತು. ಸಂಘರ್ಷ ಶಮನಕ್ಕೆ ಕೇಂದ್ರ ಸರ್ಕಾರ ಎರಡೂ ಜನಾಂಗಗಳ ನಡುವೆ ಸಂಧಾನ ಮಾತುಕತೆ ನಡೆಸಿದ್ದು, ಕಳೆದ ಸೆಪ್ಟೆಂಬರ್ನಲ್ಲಿ ಪ್ರಧಾನಿ ನರೇಂದ್ರ ಮೋದಿ ರಾಜ್ಯಕ್ಕೆ ಭೇಟಿ ನೀಡಿದ್ದರು. ಕುಕಿಗಳು ಆಡಳಿತಾತ್ಮಕ ಸ್ವಾಯತ್ತತೆಗೆ ಆಗ್ರಹಿಸುತ್ತಿದ್ದರೆ, ಮೈತೈಗಳು ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ನನ್ನ ಅದ್ಭುತ ಗೆಳೆಯ: ನರೇಂದ್ರ ಮೋದಿಗೆ ವ್ಯಾಪಾರ ಒಪ್ಪಂದ ಗಿಫ್ಟ್ ನೀಡಿದ ಡೊನಾಲ್ಡ್ ಟ್ರಂಪ್; 5 ಪ್ರಮುಖ ಹೇಳಿಕೆಗಳು
ಭಾರತದೊಂದಿಗೆ ಸರಿಸುಮಾರು ಒಂದು ವರ್ಷಗಳ ಕಾಲ ಸುಂಕ ಸಮರ ನಡೆಸಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಅಂತಿಮವಾಗಿ ತಮ್ಮ ಶಸ್ತ್ರಗಳನ್ನು ಕೆಳಗಿಳಿಸಿದ್ದಾರೆ. ಭಾರತದ ಮೇಲಿನ ಸುಂಕವನ್ನು ಶೇ. 50ರಿಂದ ಶೇ. 18ಕ್ಕೆ ಇಳಿಕೆ ಮಾಡಿರುವ ಅಮೆರಿಕ, ಭಾರತದೊಂದಿಗಿನ ವ್ಯಾಪಾರ ಒಪ್ಪಂದ ಕೂಡ ಅಂತಿಮಗೊಂಡಿದೆ ಎಂದೂ ಘೋಷಿಸಿದೆ. ಈ ವಿಚಾರವಾಗಿ ಡೊನಾಲ್ಡ್ ಟ್ರಂಪ್ ಮತ್ತು ಪ್ರಧಾನಮಂತ್ರಿ ನರೇಂದ್ರ ಮೋದಿ ನಡುವೆ ದೂರವಾಣಿ ಮಾತುಕತೆ ನಡೆದಿದ್ದು, ವ್ಯಾಪಾರ ಒಪ್ಪಂದ ಜಾರಿಗೊಳಿಸುವ ಕುರಿತು ಮಹತ್ವದ ಚರ್ಚೆ ನಡೆಸಿದ್ದಾರೆ.
ಭಾರತಕ್ಕೆ ಶೇ. 25ರಷ್ಟು ರಷ್ಯಾ ಕಚ್ಚಾತೈಲ ಸುಂಕ ಹಿಂಪಡೆದ ಅಮೆರಿಕ; ಬೆಟ್ಟ ಅಗೆದು ಇಲಿ ಹಿಡಿದ ಡೊನಾಲ್ಡ್ ಟ್ರಂಪ್!
ಬೆಟ್ಟ ಅಗೆದು ಇಲಿ ಹಿಡಿಯೋದು ಅಂದರೆ ಇದೇ ಇರಬೇಕು. ರಷ್ಯಾದಿಂದ ಕಚ್ಚಾತೈಲ ಖರೀದಿ ಮಾಡುತ್ತಿರುವ ಭಾರತದ ಮೇಲೆ ಶೇ.25ರಷ್ಟು ದಂಡದ ರೂಪದ ಸುಂಕ ಹೇರಿದ್ದ ಅಮೆರಿಕ, ಈಗ ಆ ಸುಂಕವನ್ನು ಸಂಪೂರ್ಣವಾಗಿ ಹಿಂಪಡೆದಿದೆ. ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಪ್ರಧಾನಿ ಮೋದಿ ರಷ್ಯಾ ತೈಲ ಖರೀದಿ ನಿಲ್ಲಿಸವುದಾಗಿ ಭರವಸೆ ನೀಡಿದ್ದಾರೆ ಎಂದು ಹೇಳಿದ್ದಾರಾದರೂ, ಈ ಕುರಿತು ಭಾರತ ಇನ್ನೂ ಯಾವುದೇ ಸ್ಪಷ್ಟನೆ ನೀಡಿಲ್ಲ. ಈ ಕುರಿತು ಇಲ್ಲಿದೆ ಸಂಪೂರ್ಣ ಮಾಹಿತಿ.
(ವಿಶೇಷ ಸಂದರ್ಶನ) ಬಜೆಟ್ 2026ರಲ್ಲಿ ಕರುನಾಡಿಗೆ ಅನೇಕ ಕೊಡುಗೆ ನೀಡಿದ್ದೇನೆ - ನಿರ್ಮಲಾ ಸೀತಾರಾಮನ್
ಕೇಂದ್ರ ಬಜೆಟ್ನಲ್ಲಿ ಕರ್ನಾಟಕಕ್ಕೆ ವಿಶೇಷ ಕೊಡುಗೆ ನೀಡಲಾಗಿದೆ. ಹೈಸ್ಪೀಡ್ ರೈಲು ಯೋಜನೆಗಳು ಬರಲಿವೆ. ತೆಂಗು, ಗೋಡಂಬಿ, ಕೋಕೋ ಬೆಳೆಗಾರರ ಹಿತರಕ್ಷಣೆಗೆ ಒತ್ತು ನೀಡಲಾಗಿದೆ. ಬೆಂಗಳೂರು-ಹೈದರಾಬಾದ್ ಮತ್ತು ಬೆಂಗಳೂರು-ಚೆನ್ನೈ ನಡುವೆ ಹೈಸ್ಪೀಡ್ ರೈಲು ಸಂಪರ್ಕ ಸುಧಾರಿಸಲಿದೆ. ಗ್ರಾಮೀಣ ಜನರ ಆದಾಯ ವೃದ್ಧಿಗೆ ಯೋಜನೆ ರೂಪಿಸಲಾಗಿದೆ. ಇದು ರಾಜ್ಯದ ಸಮಗ್ರ ಅಭಿವೃದ್ಧಿಗೆ ಸಹಕಾರಿಯಾಗಲಿದೆ.
ಅವಕಾಶಗಳ ಬಾಗಿಲು ತೆರೆದ ಡೊನಾಲ್ಡ್ ಟ್ರಂಪ್ಗೆ ಧನ್ಯವಾದ; ಸುಂಕ ಸಮರ ಗೆದ್ದ ಖುಷಿಯಲ್ಲಿ ಫೋನ್ ಮಾಡಿದ ನರೇಂದ್ರ ಮೋದಿ
ಐತಿಹಾಸಿಕ ಬೆಳವಣಿಗೆಯೊಂದರಲ್ಲಿ ಅಮೆರಿಕವು ಭಾರತದ ಮೇಲೆ ಹೇರಿದ್ದ ಶೇ. 50ರಷ್ಟು ಸುಂಕವನ್ನು ಮರಳಿ ಪಡೆದಿದ್ದು, ಸುಂಕ ದರವನ್ನು ಕೇವಲ ಶೇ. 18ಕ್ಕೆ ಇಳಿಸಿದೆ. ಅಮೆರಿಕ ಆರಂಭಿಸಿದ್ದ ವ್ಯಾಪಾರ ಯುದ್ಧದಲ್ಲಿ ಭಾರತ ಅಂತಿಮವಾಗಿ ಜಯಶಾಲಿಯಾಗಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ದೂರವಾಣಿಯಲ್ಲಿ ಮಾತನಾಡಿದ್ದು, ಭಾರತದ ಮೇಲಿನ ಸುಂಕವನ್ನು ಇಳಿಕೆ ಮಾಡಿದ ಡೊನಾಲ್ಡ್ ಟ್ರಂಪ್ ಅವರಿಗೆ, ಪ್ರಧಾನಿ ಮೋದಿ ಧನ್ಯವಾದ ಅರ್ಪಿಸಿದ್ದಾರೆ. ಈ ಕುರಿತು ಇಲ್ಲಿದೆ ಹೆಚ್ಚಿನ ಮಾಹಿತಿ.
ಭಾರತದ ಮೇಲಿನ ಸುಂಕವನ್ನು ಶೇ. 18ಕ್ಕೆ ಇಳಿಸಿದ ಅಮೆರಿಕ; ಟ್ರೇಡ್ ವಾರ್ ಗೆದ್ದ ನ್ಯೂ ಇಂಡಿಯಾ!
ಇದು ನವಭಾರತ. ಯಾರಿಗೂ ಬಗ್ಗುವುದಿಲ್ಲ, ಯಾರಿಗೂ ಜಗ್ಗುವುದಿಲ್ಲ. ಯುದ್ಧ ಅಂತಾ ಬಂದರೆ ಅದು ಯಾವುದೇ ಸ್ವರೂಪದ ಯುದ್ಧವಾದರೂ ಸರಿ, ಎದುರಾಳಿಯನ್ನು ಸೋಲಿಸದೇ ಬಿಡುವುದಿಲ್ಲ. ಅದೇ ರೀತಿ ಭಾರತದ ಮೇಲೆ ಸುಂಕ ಯುದ್ಧ ಸಾರಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಕೊನೆಗೂ ತಮ್ಮ ಸೋಲನ್ನು ಒಪ್ಪಿಕೊಂಡಿದ್ದಾರೆ. ಭಾರತದ ಮೇಲಿನ ಸುಂಕವನ್ನು ಅಮೆರಿಕ ಶೇ. 50ರಿಂದ ಶೇ. 18ಕ್ಕೆ ಇಳಿಸಿದ್ದು, ಈ ಐತಿಹಾಸಿಕ ಕ್ಷಣ ನವಭಾರತದ ಶಕ್ತಿಗೆ ಸಾಕ್ಷಿಯಾಗಿದೆ. ಇಲ್ಲಿದೆ ಸಂಪೂರ್ಣ ಮಾಹಿತಿ.
ಗುಡಿಬಂಡೆ | ಚಿನ್ನಸೇರಿದಂತೆ ಇನ್ನಿತರ ಖನಿಜಗಳಿಗಾಗಿ ಹೆಲಿಕಾಪ್ಟರ್ ಮೂಲಕ ಶೋಧ ಕಾರ್ಯ
ಗುಡಿಬಂಡೆ : ತಾಲೂಕಿನ ಬೀಚಗಾನಹಳ್ಳಿ ಕ್ರಾಸ್ ಬಳಿಯ ಕೆಲ ಪ್ರದೇಶಗಳಲ್ಲಿ ಹೆಲಿಕಾಪ್ಟರ್ ಮೂಲಕ ಚಿನ್ನಕ್ಕಾಗಿ ಶೋಧ ಕಾರ್ಯವು ಸತತವಾಗಿ ಮೂರು ನಾಲ್ಕು ದಿನಗಳಿಂದ ನಡೆಯುತ್ತಿದೆ ಎನ್ನುವಂತಹ ಶಂಕೆ ಸಾರ್ವಜನಿಕರಲ್ಲಿ ಮೂಡಿರುವುದು ವರದಿಯಾಗಿದೆ. ಬೀಚಗಾನಹಳ್ಳಿ ಕ್ರಾಸ್ ಬಳಿ ಇರುವಂತಹ ಆದರ್ಶ ಶಾಲೆಯ ಆವರಣದ ಆಟದ ಮೈದಾನದಲ್ಲಿ ಹೆಲಿಕಾಪ್ಟರ್ನ್ನು ನಿಲ್ಲಿಸಿಕೊಂಡು ಅದರ ಮೂಲಕ ಚಿನ್ನ ಸೇರಿದಂತೆ ಇನ್ನಿತರ ಇಂಧನದ ರೂಪದ ವಸ್ತುಗಳಿಗೆ ಶೋಧ ಕಾರ್ಯವನ್ನು ಮಾಡುತ್ತಿದ್ದಾರೆ ಎಂಬ ಮಾತುಗಳು ಸಾರ್ವಜನಿಕ ವಲಯಗಳಲ್ಲಿ ವ್ಯಾಪಕ ಚರ್ಚೆಗಳು ಆಗುತ್ತಿವೆ. ಕೇಂದ್ರ ಸರಕಾರದ ಜಿಯಾಲಜಿಕಲ್ ಆಫ್ ಸರ್ವೇ ಇಲಾಖೆಯ ಆದೇಶದಂತೆ ಪ್ರಕೃತಿಯಲ್ಲಿ ಸಿಗುವಂತಹ ಖನಿಜ ಸಂಪನ್ಮೂಲಗಳಿಗಾಗಿ ಶೋಧ ಕಾರ್ಯವನ್ನು ಹೊಸ ತಂತ್ರಜ್ಞಾನ ಮೂಲಕ ಶೋಧ ಕಾರ್ಯ ಮಾಡುತ್ತಿದ್ದಾರೆ. ಇನ್ನೂ 20 ದಿನಗಳು ಗುಡಿಬಂಡೆ ತಾಲೂಕಿನಲ್ಲಿ ಶೋಧ ಕಾರ್ಯವು ನಡೆಯಲಿದೆ. ಸಿಗ್ಬತ್ವುಲ್ಲಾ, ತಹಶೀಲ್ದಾರ್, ಗುಡಿಬಂಡೆ
25 ವರ್ಷದಲ್ಲಿ ರೈತರಿಗೆ 111 ಲಕ್ಷ ಕೋಟಿ ರೂ.ನಷ್ಟ : ದೇವೇಂದರ ಶರ್ಮಾ
ಬೆಂಗಳೂರು : ವರದಿಗಳ ಪ್ರಕಾರ 25 ವರ್ಷಗಳ (2000-2025) ಅವಧಿಯಲ್ಲಿ ದೇಶದ ರೈತರಿಗೆ 111 ಲಕ್ಷ ಕೋಟಿ ರೂ.ನಷ್ಟವಾಗಿದೆ. ಭಾರತ ಮಾತ್ರವಲ್ಲದೇ ವಿದೇಶಗಳಲ್ಲೂ ಕೃಷಿ ಬಿಕ್ಕಟ್ಟಿನಿಂದ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಎಂದು ಸುಪ್ರೀಂ ಕೋರ್ಟ್ನ ಕೃಷಿ ಸುಧಾರಣಾ ಸಮಿತಿ ಅಧ್ಯಕ್ಷ ದೇವೇಂದರ ಶರ್ಮಾ ಮಾಹಿತಿ ನೀಡಿದ್ದಾರೆ. ಸೋಮವಾರ ನಗರದ ಕೃಷಿ ತಂತ್ರಜ್ಞರ ಸಂಸ್ಥೆಯಲ್ಲಿ ರೈತರ ಆತ್ಮಹತ್ಯೆಗಳ ತಡೆ ಸಮಿತಿಯ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, 2000 ರಿಂದ 2016ರ ಅವಧಿಯಲ್ಲಿ 45 ಲಕ್ಷ ಕೋಟಿ ರೂ. ರೈತರಿಗೆ ನಷ್ಟವಾಗಿತ್ತು. ನಂತರ ನಷ್ಟದ ಮೊತ್ತ ಮತ್ತಷ್ಟು ಹೆಚ್ಚಾಯಿತು. ಮಾರುಕಟ್ಟೆ ಏರಿಳಿತ, ಬೆಳೆ ನಷ್ಟ ಸೇರಿದಂತೆ ಅನೇಕ ಕಾರಣಗಳಿರಬಹುದು. ಈ ವಿಷಯದ ಬಗ್ಗೆ ಕೃಷಿ ವಿಶ್ವ ವಿದ್ಯಾನಿಲಯಗಳಾಗಲಿ, ಶಿಕ್ಷಣ ಸಂಸ್ಥೆಗಳಾಗಲಿ, ಸಂಸತ್ನಲ್ಲೂ ಚರ್ಚೆಯಾಗಲಿಲ್ಲ ಎಂದರು. ವರ್ಷದಿಂದ ವರ್ಷಕ್ಕೆ ಆದಾಯ ಕುಸಿಯುತ್ತಿದ್ದರೂ ವಿಶ್ವದಲ್ಲಿ ಭಾರತ ದೇಶದ ರೈತರು ಮಾತ್ರ ಬೆಳೆ ಉತ್ಪಾದನೆ ನಿಲ್ಲಿಸಿಲ್ಲ. ಬೆಳೆಗಳ ಬೆಲೆ ಕುಸಿತಕ್ಕೆ ಸಂಬಂಧಿಸಿದಂತೆ ಪರಿಹಾರ ಕಂಡುಕೊಳ್ಳಬೇಕು. ರೈತರ ಕಲ್ಯಾಣಕ್ಕೆ ಸರಕಾರ ಹಲವು ಕಾರ್ಯಕ್ರಮಗಳನ್ನು ರೂಪಿಸಿದರೂ ಅನ್ನದಾತರ ಆತ್ಮಹತ್ಯೆ ನಿಂತಿಲ್ಲ. ದೇಶದಲ್ಲಿ ಮಹಾರಾಷ್ಟ್ರ ರಾಜ್ಯದಲ್ಲಿ ಅತಿ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೃಷಿಯಲ್ಲಿ ಮುಂಚೂಣಿಯಲ್ಲಿರುವ ಪಂಜಾಬ್ನಲ್ಲೂ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಕರ್ನಾಟಕ, ಆಂದ್ರಪ್ರದೇಶ, ತಮಿಳುನಾಡು, ತೆಲಂಗಾಣ, ಕೇರಳದಲ್ಲೂ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ದೇವೇಂದರ ಶರ್ಮಾ ವಿವರಿಸಿದರು. ಈ ಸಮಸ್ಯೆ ಭಾರತಕ್ಕೆ ಮಾತ್ರ ಸೀಮಿತವಾಗಿಲ್ಲ. ಅಭಿವೃದ್ಧಿ ಹೊಂದಿರುವ ಅಮೆರಿಕ, ಆಸ್ಟ್ರೇಲಿಯಾ ಮತ್ತು ಯುರೋಪ್ನಲ್ಲಿಯೂ ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಅಮೆರಿಕದಲ್ಲಿ 8 ಸಾವಿರ ಹತ್ತಿ ಬೆಳೆಗಾರರಿಗೆ ಸರಕಾರ 1 ಲಕ್ಷ ಡಾಲರ್ ಸಬ್ಸಿಡಿ ನೀಡಿದೆ. ಆದರೆ ಭಾರತದಲ್ಲಿ 98 ಲಕ್ಷ ಹತ್ತಿ ಬೆಳೆಗಾರರಿಗೆ 27 ಸಾವಿರ ಡಾಲರ್ ಸಬ್ಸಿಡಿ ದೊರೆತಿದೆ. ಸಬ್ಸಿಡಿಯಿಂದಲೇ ರೈತರು ಉಳಿದುಕೊಂಡಿದ್ದಾರೆ. ಚೀನಾ ತನ್ನ ರೈತರಿಗೆ ಹೆಚ್ಚು ಸಬ್ಸಿಡಿ ನೀಡುತ್ತಿದೆ ಎಂದು ಅವರು ಹೇಳಿದರು. ಈ ಬಾರಿಯ ಕೇಂದ್ರ ಬಜೆಟ್ನಲ್ಲಿ ಕೃಷಿ ಕ್ಷೇತ್ರಕ್ಕೆ ಶೇ.3.4 ಅನುದಾನ ನೀಡಲಾಗಿದೆ. ಕಳೆದ ವರ್ಷ ಶೇ.3.15 ಇತ್ತು. ಎಲ್ಲ ಕ್ಷೇತ್ರಕ್ಕೂ ಸಮಾನ ಹಂಚಿಕೆ ಮಾಡಬೇಕೆಂದು ಭಾರತೀಯ ಕಿಸಾನ್ ಸಂಘ ಆಗ್ರಹಿಸಿದೆ. ಕರ್ನಾಟಕದ ನೀತಿ ನಿರೂಪಕರು ಸಹ ಕೃಷಿ ಕ್ಷೇತ್ರದ ಅಭಿವೃದ್ಧಿಗೆ ಕಾರ್ಯಕ್ರಮ ರೂಪಿಸಬೇಕು. ಸಾಲ ಪಡೆಯುವ ರೈತರಿಗೆ ರಾಷ್ಟ್ರೀಕೃತ ಬ್ಯಾಂಕಿನಲ್ಲಿ ಸಿಬಿಲ್ ಸ್ಕೋರ್ ಪರಿಗಣಿಸಬಾರದು, ವರ್ಷದ 12 ತಿಂಗಳೂ ಖರೀದಿ ಕೇಂದ್ರಗಳು ತೆರೆದಿರಬೇಕು ಮತ್ತು ರಾಜ್ಯದಲ್ಲಿ ರೈತರ ಆತ್ಮಹತ್ಯೆ ತಡೆಯಲು `ಋಣ ಮುಕ್ತ ಕಾಯ್ದೆ' ಜಾರಿ ತರಬೇಕು ಎಂದು ದೇವೇಂದರ ಶರ್ಮಾ ಒತ್ತಾಯಿಸಿದರು. ರಾಜ್ಯ ನೀತಿ ಮತ್ತು ಯೋಜನಾ ಆಯೋಗದ ಉಪಾಧ್ಯಕ್ಷ ಬಿ.ಆರ್.ಪಾಟೀಲ ಮಾತನಾಡಿ, ರೈತರ ಆತ್ಮಹತ್ಯೆಗೆ ಹಲವು ಕಾರಣಗಳಿವೆ. ಸರಕಾರಕ್ಕೆ ಆದಾಯ ಬರಲಿದೆ ಎಂಬ ಕಾರಣಕ್ಕೆ ಮದ್ಯ ಮಾರಾಟಕ್ಕೆ ಉತ್ತೇಜನ ನೀಡಬಾರದು. ರೈತರ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ನೀಡಬೇಕು. ಬಜೆಟ್ ಕುರಿತ ಮುಖ್ಯಮಂತ್ರಿ ಅವರೊಂದಿಗೆ ಚರ್ಚಿಸಲು ರೈತ ನಾಯಕರು, ತಜ್ಞರು ತಂಡವನ್ನು ಆಹ್ವಾನಿಸಲಾಗುವುದು ಎಂದು ತಿಳಿಸಿದರು. ಸಭೆಯಲ್ಲಿ ಮಾಜಿ ರಾಜ್ಯಸಭಾ ಸದಸ್ಯ ಡಾ.ಎಲ್.ಹನುಮಂತಯ್ಯ, ರೈತ ನಾಯಕ ಕೆ.ಟಿ.ಗಂಗಾಧರ್, ಭಾರತೀಯ ಆರ್ಥಿಕ ಮತ್ತು ಸಾಮಾಜಿಕ ಸಂಸ್ಥೆ ಡಾ.ಅಶೋಕ್ ದಳವಾಯಿ, ಕೃಷಿ ತಂತ್ರಜ್ಞರ ಸಂಸ್ಥೆ ಅಧ್ಯಕ್ಷ ಡಾ.ಎ.ಬಿ.ಪಾಟೀಲ, ರಾಜ್ಯ ಕೃಷಿ ಮಾರಾಟ ಮಂಡಳಿಯ ಬಸವರಾಜ ಹುಂಬರವಾಡಿ, ನಿವೃತ್ತ ಕೃಷಿ ಅಧಿಕರಿ ಬಿ.ಎಚ್.ಪಿಂಜಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
Modi-Trump Tariff Reduction: ಭಾರತ ಹಾಗೂ ಅಮೆರಿಕದ ನಡುವೆ ಕಳೆದ ಐದಾರು ತಿಂಗಳಿನಿಂದಲೂ ಸೃಷ್ಟಿಯಾಗಿದ್ದ ಗೊಂದಲಕ್ಕೆ ತೆರೆ ಬಿದ್ದಿದೆ. ಭಾರತ ಹಾಗೂ ಅಮೆರಿಕದ ನಡುವೆ ಕಳೆದ ಐದಾರು ತಿಂಗಳಿನಿಂದಲೂ ತೆರಿಗೆ ವಿಚಾರಕ್ಕೆ ಸಂಘರ್ಷ ಏರ್ಪಟ್ಟಿತ್ತು. ರಷ್ಯಾದಿಂದ ಭಾರತವು ಕಚ್ಚಾ ತೈಲವನ್ನು ಖರೀದಿ ಮಾಡುತ್ತಿರುವುದನ್ನು ವಿರೋಧಿಸಿದ್ದ ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ವಿಪರೀತವಾದ ತೆರಿಗೆಯನ್ನು ವಿಧಿಸಿದ್ದರು. ಇದೀಗ
ಕಲಬುರಗಿ: ನೀತಿ ಆಯೋಗ ಗುರುತಿಸಿರುವ ಜಿಲ್ಲೆಯ ಆಫಜಲಪುರ, ಕಾಳಗಿ ಹಾಗೂ ಶಹಾಬಾದ್ ತಾಲೂಕುಗಳಲ್ಲಿ ‘ಸಂಪೂರ್ಣತಾ ಅಭಿಯಾನ 2.0’ ಮೂಲಕ ಆರೋಗ್ಯ, ಅಪೌಷ್ಟಿಕತೆ ನಿವಾರಣೆ, ಶಿಕ್ಷಣ ಹಾಗೂ ಕೃಷಿ ಕ್ಷೇತ್ರಗಳಲ್ಲಿ ಶೇ.100ರಷ್ಟು ಪ್ರಗತಿ ಸಾಧಿಸುವುದು ಜಿಲ್ಲಾಡಳಿತದ ಗುರಿಯಾಗಿದೆ. ಇದನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಬಿ. ಫೌಝಿಯಾ ತರನ್ನುಮ್ ಅಧಿಕಾರಿಗಳಿಗೆ ಸೂಚಿಸಿದರು. ಸೋಮವಾರ ನಗರದ ಜಿಲ್ಲಾ ಪಂಚಾಯತ್ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ನೀತಿ ಆಯೋಗದ ಮಹತ್ವಾಕಾಂಕ್ಷಿ ಕಾರ್ಯಕ್ರಮ ‘ಸಂಪೂರ್ಣತಾ ಅಭಿಯಾನ 2.0’ಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಮೂರು ಆಕಾಂಕ್ಷಿ ಬ್ಲಾಕ್ಗಳಲ್ಲಿ ಯೋಜನೆಗಳು ಯಶಸ್ವಿಯಾಗಲು ವಿಭಾಗಗಳ ನಡುವಿನ ಸಮನ್ವಯ ಅತ್ಯಗತ್ಯ ಎಂದು ಹೇಳಿದರು. ಕ್ಷೇತ್ರಮಟ್ಟದಲ್ಲಿ ನಿರಂತರ ಮೇಲ್ವಿಚಾರಣೆ ಅಗತ್ಯವಿದ್ದು, ಪ್ರಮುಖವಾಗಿ ಜನರ ಸಹಭಾಗಿತ್ವ ಇಲ್ಲದೆ ಗುರಿ ಸಾಧನೆ ಸಾಧ್ಯವಿಲ್ಲ. ಯಾವುದೇ ಅರ್ಹ ಫಲಾನುಭವಿಯೂ ಸರ್ಕಾರದ ಯೋಜನೆಗಳು ಹಾಗೂ ಸೌಲಭ್ಯಗಳಿಂದ ಹೊರಗುಳಿಯದಂತೆ ಅಧಿಕಾರಿಗಳು ಎಚ್ಚರಿಕೆ ವಹಿಸಬೇಕು ಎಂದು ಅವರು ಸೂಚಿಸಿದರು. ಕಾಳಗಿ ನಮಗೆ ಪ್ರೇರಣೆ : ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭಂವಾರ್ ಸಿಂಗ್ ಮಾತನಾಡಿ, ನೀತಿ ಆಯೋಗದ ಸಂಪೂರ್ಣತಾ ಅಭಿಯಾನ 1.0ರಲ್ಲಿ ಕಾಳಗಿ ಆಕಾಂಕ್ಷಿ ಬ್ಲಾಕ್ 6 ಸೂಚಕಗಳಲ್ಲಿ 5 ಸೂಚಕಗಳಲ್ಲಿ ಶೇ.100 ಸಾಧನೆ ಮಾಡಿ ಬೆಳ್ಳಿ ಪದಕ ಪಡೆದಿರುವುದು ಜಿಲ್ಲೆಗೆ ಹೆಮ್ಮೆಯ ವಿಷಯ ಎಂದು ಹೇಳಿದರು. ಇದೇ ಸಾಧನೆ ಸಂಪೂರ್ಣತಾ ಅಭಿಯಾನ 2.0ಕ್ಕೆ ಪ್ರೇರಣೆಯಾಗಿದೆ ಎಂದರು. ಸಂಪೂರ್ಣತಾ ಅಭಿಯಾನ 2.0ರಲ್ಲಿ ಶೇ.100 ಗುರಿ ಸಾಧನೆಗಾಗಿ ಎಲ್ಲ ಇಲಾಖೆಗಳು ಸಂಕಲ್ಪದೊಂದಿಗೆ ಕೆಲಸ ಮಾಡಬೇಕು. ಪ್ರತಿ ಮೂರು ತಿಂಗಳಿಗೊಮ್ಮೆ ಕಾರ್ಯಯೋಜನೆ ರೂಪಿಸಬೇಕು, ಪ್ರತಿ ವಾರ ಪರಿಶೀಲನೆ, ಕ್ಷೇತ್ರ ಭೇಟಿ ಹಾಗೂ ನೈಜ ಫಲಿತಾಂಶ ಆಧಾರಿತ ಅನುಷ್ಠಾನಕ್ಕೆ ಆದ್ಯತೆ ನೀಡಬೇಕು. ದಾಖಲೆಗಿಂತ ನೆಲಮಟ್ಟದ ಸಾಧನೆ ಮುಖ್ಯ ಎಂಬುದನ್ನು ಅವರು ಸ್ಪಷ್ಟಪಡಿಸಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಯೋಜನಾ ನಿರ್ದೇಶಕ ಜಗದೇವಪ್ಪ, ಜಂಟಿ ಕೃಷಿ ನಿರ್ದೇಶಕ ಸಮದ್ ಪಟೇಲ್, ಜಿಲ್ಲಾ ಆರೋಗ್ಯಾಧಿಕಾರಿ ಡಾ. ಶರಣಬಸಪ್ಪ ಕ್ಯಾತನಾಳ, ಆಕಾಂಕ್ಷಿ ಬ್ಲಾಕ್ ಫೆಲೋ ಶಿವರಾಜ ಹೊಳ್ಕರ್ ಸೇರಿದಂತೆ ಕಾಳಗಿ, ಆಫಜಲಪೂರ ಹಾಗೂ ಶಹಾಬಾದ್ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳು, ಸಿಡಿಪಿಓಗಳು, ಸಹಾಯಕ ಕೃಷಿ ನಿರ್ದೇಶಕರು, ತಾಲೂಕು ಆರೋಗ್ಯಾಧಿಕಾರಿಗಳು ಹಾಗೂ ಜಿಲ್ಲಾ ಮತ್ತು ಬ್ಲಾಕ್ ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.
ದೇಶಕ್ಕೆ ಮೋದಿ ದ್ರೋಹ ಮಾಡಿದ್ದಾರೆ ಎಂದ ನಸೀರ್ ಅಹ್ಮದ್: ವಿಧಾನ ಪರಿಷತ್ನಲ್ಲಿ ಕೋಲಾಹಲ ಸೃಷ್ಟಿ
ಬೆಂಗಳೂರು : ಕಾಂಗ್ರೆಸ್ ಸದಸ್ಯ ನಸೀರ್ ಅಹ್ಮದ್ ಅವರು ದೇಶಕ್ಕೆ ಮೋದಿ ದ್ರೋಹ ಮಾಡಿದ್ದಾರೆ ಎಂದು ಹೇಳಿದ್ದು, ವಿಧಾನ ಪರಿಷತ್ನಲ್ಲಿ ಭಾರೀ ಕೋಲಾಹಲ ಸೃಷ್ಟಿಸಿತು. ಸೋಮವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯಪಾಲರ ವಂದನಾ ನಿರ್ಣಯಕ್ಕೆ ಸಂಬಂಧಿಸಿದಂತೆ ಉತ್ತರಿಸುವ ವೇಳೆ, ಪ್ರತಿಪಕ್ಷದವರು, ರಾಜ್ಯ ಸರಕಾರದ ಬಳಿ ಹಣವಿಲ್ಲ. ಆದ್ದರಿಂದ ವಿಬಿ-ಜಿ ರಾಮ್ ಜಿ ಕಾಯ್ದೆ ವಿರುದ್ಧ ರಾಜ್ಯದಲ್ಲಿ ದಂಗೆ ಏಳುತ್ತಿದ್ದಾರೆ ಎಂದು ಆರೋಪಿಸುತ್ತಿದ್ದಾರೆ ಎಂದರು. ಇದಕ್ಕೆ ಆಡಳಿತ ಪಕ್ಷದ ಸದಸ್ಯರೊಬ್ಬರು ಕೇಂದ್ರವೇ ದಿವಾಳಿ ಆಗಿದೆ ಎಂದರು. ಇದಕ್ಕೆ ಬಿಜೆಪಿ ಸದಸ್ಯೆ ಭಾರತಿ ಶೆಟ್ಟಿ ಅವರು, ಕೇಂದ್ರ ಸರಕಾರ ಆರ್ಥಿಕ ಸ್ಥಿತಿಯಲ್ಲಿ ನಾಲ್ಕನೆ ಸ್ಥಾನದಲ್ಲಿದೆ. ಮೋದಿ ಅವರಿಂದಲೇ ದೇಶ ಈ ಸ್ಥಿತಿಗೆ ಬಂದಿದೆ. ಮೋದಿಜೀಯಿಂದಲೇ ದೇಶ ಇದೆ ಎಂದು ಹೇಳಿದರು. ಇದಕ್ಕೆ ಕಾಂಗ್ರೆಸ್ ನಸೀರ್ ಅಹ್ಮದ್ ಅವರು, ದೇಶದ ಈ ಪರಿಸ್ಥಿತಿ ಮೋದಿಯಿಂದಲೇ ಬಂದಿದೆ. ದೇಶಕ್ಕೆ ಮೋದಿ ದ್ರೋಹ ಮಾಡಿದ್ದಾರೆ ಎಂದು ಕೂಗಿದರು. ಈ ವೇಳೆ ವಿರೋಧ ಪಕ್ಷದ ನಾಯಕ ಚಲವಾದಿ ನಾರಾಯಣಸ್ವಾಮಿ, ಎನ್.ರವಿಕುಮಾರ್, ಕೇಶವಪ್ರಸಾದ್, ಸಿ.ಟಿ.ರವಿ ಸೇರಿದಂತೆ ಪ್ರತಿಪಕ್ಷದ ಸದಸ್ಯರು ಪ್ರಧಾನಿಯವರನ್ನು ದೇಶ ದ್ರೋಹಿ ಎಂದ ನಸೀರ್ ಅಹ್ಮದ್ ಕ್ಷಮೆ ಕೇಳಬೇಕೆಂದು ಆಗ್ರಹಿಸಿದರು. ಸಭಾಪತಿ ಬಸವರಾಜ ಹೊರಟ್ಟಿ ಅವರು, ನಸೀರ್ ಅಹ್ಮದ್ ಅವರ ಹೇಳಿಕೆಯನ್ನು ಕಡತದಿಂದ ತೆಗೆಸಿದರೂ ಸಮಾಧಾನಗೊಳ್ಳದ ಬಿಜೆಪಿ ಸದಸ್ಯರು ಬಾವಿಗಿಳಿದು ಪ್ರತಿಭಟಿಸಿದರು.
ಟಿ-20 ಕ್ರಿಕೆಟ್ನಲ್ಲಿ ಗರಿಷ್ಠ ಅರ್ಧಶತಕ: ವಿರಾಟ್ ಕೊಹ್ಲಿ ದಾಖಲೆ ಹಿಂದಿಕ್ಕಿದ ಬಾಬರ್ ಆಝಂ
ಲಾಹೋರ್: ಟಿ-20 ಕ್ರಿಕೆಟ್ನಲ್ಲಿ ಅತ್ಯಂತ ಹೆಚ್ಚು ಅರ್ಧಶತಕಗಳನ್ನು ದಾಖಲಿಸಿ ಭಾರತದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಅವರ ದಾಖಲೆಯನ್ನು ಮುರಿದ ಪಾಕಿಸ್ತಾನದ ಹಿರಿಯ ಬ್ಯಾಟರ್ ಬಾಬರ್ ಆಝಂ ಇತಿಹಾಸ ನಿರ್ಮಿಸಿದ್ದಾರೆ. ಆಸ್ಟ್ರೇಲಿಯ ವಿರುದ್ಧ ರವಿವಾರ ಲಾಹೋರ್ನಲ್ಲಿ ನಡೆದಿದ್ದ ಮೂರನೇ ಹಾಗೂ ಅಂತಿಮ ಟಿ-20 ಪಂದ್ಯದಲ್ಲಿ ಔಟಾಗದೆ 50 ರನ್ ಗಳಿಸಿದ ಆಝಂ ಈ ಸಾಧನೆ ಮಾಡಿದರು. ಟಿ-20 ಸರಣಿಯನ್ನು 3-0 ಅಂತರದಿಂದ ಕ್ಲೀನ್ಸ್ವೀಪ್ಗೈದ ಪಾಕಿಸ್ತಾನವು ಟಿ-20 ವಿಶ್ವಕಪ್ ಟೂರ್ನಿಗಿಂತ ಮೊದಲು ಆತ್ಮವಿಶ್ವಾಸ ಹೆಚ್ಚಿಸಿಕೊಂಡಿದೆ. ಟಿ-20 ಕ್ರಿಕೆಟ್ನಲ್ಲಿ 39ನೇ ಬಾರಿ ಅರ್ಧಶತಕವನ್ನು ಗಳಿಸಿರುವ ಆಝಂ ಅವರು ಕೊಹ್ಲಿ(38 ಅರ್ಧಶತಕ)ದಾಖಲೆಯನ್ನು ಮುರಿದರು. ಏಕಪಕ್ಷೀಯವಾಗಿ ಸಾಗಿದ ಮೂರನೇ ಟಿ-20 ಪಂದ್ಯದಲ್ಲಿ 6 ವಿಕೆಟ್ಗಳ ನಷ್ಟಕ್ಕೆ 207 ರನ್ ಗಳಿಸಿದ ಪಾಕಿಸ್ತಾನ ತಂಡವು ಆಸ್ಟ್ರೇಲಿಯವನ್ನು ಕೇವಲ 96 ರನ್ಗೆ ನಿಯಂತ್ರಿಸಿ 111 ರನ್ ಅಂತರದಿಂದ ಜಯಶಾಲಿಯಾಗಿದೆ. 2010 ಹಾಗೂ 2018ರ ನಂತರ ಆಸ್ಟ್ರೇಲಿಯ ವಿರುದ್ಧ ಪಾಕಿಸ್ತಾನವು ಮೂರನೇ ಬಾರಿ ಸರಣಿ ಕ್ಲೀನ್ಸ್ವೀಪ್ಗೈದಿದೆ. ಫೆ.7ರಿಂದ ಭಾರತ ಹಾಗೂ ಶ್ರೀಲಂಕಾದಲ್ಲಿ ಆರಂಭವಾಗಲಿರುವ ಟಿ-20 ವಿಶ್ವಕಪ್ಗಿಂತ ಮೊದಲು ಭರ್ಜರಿ ಪ್ರದರ್ಶನ ನೀಡಿದೆ. ಸಯೀಮ್ ಅಯ್ಯೂಬ್ 37 ಎಸೆತಗಳಲ್ಲಿ 56 ರನ್ ಗಳಿಸಿದರು. ಆರಂಭಿಕ ವಿಕೆಟ್ಗಳು ಪತನಗೊಂಡಾಗ ತಂಡವನ್ನು ಆಧರಿಸಿದ ಬಾಬರ್ ಆಝಂ ಮೂರನೇ ವಿಕೆಟ್ಗೆ 69 ರನ್ ಸೇರಿಸಿದರು. ಶಾದಾಬ್ ಖಾನ್ ಕೇವಲ 19 ಎಸೆತಗಳಲ್ಲಿ 46 ರನ್ ಗಳಿಸಿ ಇನಿಂಗ್ಸ್ ಅಂತ್ಯದಲ್ಲಿ ಅಬ್ಬರಿಸಿದರು. ಪಾಕಿಸ್ತಾನವು ಕೊನೆಯ ಐದು ಓವರ್ಗಳಲ್ಲಿ 70 ರನ್ ಕಲೆ ಹಾಕಿ 207 ರನ್ ಗಳಿಸಿತ್ತು. ಮುಹಮ್ಮದ್ ನವಾಝ್ ಜೀವನಶ್ರೇಷ್ಠ ಬೌಲಿಂಗ್(5-18)ಪ್ರದರ್ಶಿಸಿ ಆಸ್ಟ್ರೇಲಿಯವನ್ನು ಕನಿಷ್ಠ ಮೊತ್ತಕ್ಕೆ ಕಟ್ಟಿಹಾಕುವಲ್ಲಿ ನೆರವಾದರು. ►ಟಿ-20 ಕ್ರಿಕೆಟ್ನಲ್ಲಿ ಗರಿಷ್ಠ ಅರ್ಧಶತಕ ಗಳಿಸಿದ ಆಟಗಾರರು 39-ಬಾಬರ್ ಆಝಂ 38-ವಿರಾಟ್ ಕೊಹ್ಲಿ 32-ರೋಹಿತ್ ಶರ್ಮಾ 30-ಮುಹಮ್ಮದ್ ರಿಝ್ವಾನ್ 28-ಡೇವಿಡ್ ವಾರ್ನರ್ ಹಾಗೂ ಜೋಸ್ ಬಟ್ಲರ್
ಯಾದಗಿರಿ : ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾದ ಪ್ರಿಯಾಂಕ್ ಖರ್ಗೆ ಅವರು ತುರ್ತಾಗಿ ಯಾದಗಿರಿ ಜಿಲ್ಲೆಗೆ ಭೇಟಿ ನೀಡಿ ಇಲಾಖೆ ಮಟ್ಟದ ಸಭೆ ನಡೆಸಬೇಕು. ಜಿಲ್ಲೆ ಮತ್ತು ವಿಶೇಷವಾಗಿ ಗುರುಮಠಕಲ್ ಮತಕ್ಷೇತ್ರದಲ್ಲಿ ಉಂಟಾಗಿರುವ ಕುಡಿಯುವ ನೀರಿನ ಹಾಗೂ ಆರ್ಒ ಪ್ಲಾಂಟ್ ಸಮಸ್ಯೆಗಳ ಗಂಭೀರತೆ ತಿಳಿದರೆ ಮಾತ್ರ ಶಾಶ್ವತ ಪರಿಹಾರ ಸಾಧ್ಯವಾಗಲಿದೆ ಎಂದು ಶಾಸಕ ಶರಣಗೌಡ ಕಂದಕೂರ ಒತ್ತಾಯಿಸಿದರು. ಸೋಮವಾರ ನಡೆದ ವಿಧಾನಸಭಾ ಅಧಿವೇಶನದಲ್ಲಿ ಮಾತನಾಡಿದ ಅವರು, ತಮ್ಮ ಮತಕ್ಷೇತ್ರದಲ್ಲಿ ದುರಸ್ತಿ ಆಗದೇ, ನಿರ್ವಹಣೆಗೆ ಹಣವಿಲ್ಲದೆ ಅನೇಕ ಆರ್ಒ ಪ್ಲಾಂಟ್ಗಳು ಬಂದ್ ಆಗಿವೆ. ಇದರಿಂದ ಕುಡಿಯುವ ನೀರಿನ ಸಮಸ್ಯೆ ತೀವ್ರಗೊಂಡಿದ್ದು, ಬೇಸಿಗೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಪರಿಸ್ಥಿತಿ ಇನ್ನಷ್ಟು ಗಂಭೀರವಾಗುವ ಆತಂಕವಿದೆ ಎಂದು ಹೇಳಿದರು. ಆರ್ಒ ಪ್ಲಾಂಟ್ಗಳ ದುರಸ್ತಿಗಾಗಿ ಈ ಹಿಂದೆ ಕೊರೆಸಿದ್ದ ಬೋರ್ವೆಲ್ಗಳಿಗೆ ಸಂಬಂಧಿಸಿದಂತೆ 1.13 ಕೋಟಿ ರೂ. ಬಿಲ್ ಇನ್ನೂ ಬಾಕಿಯಿದೆ. ಈ ಕಾರಣದಿಂದ ಕೆಲಸ ಮಾಡಿದ ಗುತ್ತಿಗೆದಾರರು ತೀವ್ರ ಸಂಕಷ್ಟದಲ್ಲಿದ್ದು, “ಬಿಲ್ ಮಾಡಿಸದಿದ್ದರೆ ವಿಷ ಕುಡಿಯುತ್ತೇವೆ” ಎಂದು ನನ್ನ ಬಳಿ ಅಳಲು ತೋಡಿಕೊಂಡಿದ್ದಾರೆ ಎಂಬ ವಿಷಯವನ್ನು ಶಾಸಕರು ಸಚಿವರ ಗಮನಕ್ಕೆ ತಂದರು. ಇಡಿ ಜಿಲ್ಲೆಯಲ್ಲಿ ಆರ್ಒ ಪ್ಲಾಂಟ್ಗಳ ದುರಸ್ತಿಗೆ ಸುಮಾರು 9 ಕೋಟಿ ರೂ. ಅನುದಾನ ಅಗತ್ಯವಿದೆ. ಈ ಕುರಿತು ಇದುವರೆಗೂ 20 ರಿಂದ 25 ಬಾರಿ ಹಿರಿಯ ಅಧಿಕಾರಿಗಳಿಗೆ ಪತ್ರ ಬರೆದರೂ ಯಾವುದೇ ಸ್ಪಂದನೆ ದೊರೆತಿಲ್ಲ. ಗುರುಮಠಕಲ್ ಕ್ಷೇತ್ರದಲ್ಲಿ ಕುಡಿಯುವ ನೀರಿನ ಸಮಸ್ಯೆ ಅತ್ಯಂತ ತೀವ್ರವಾಗಿದ್ದು, ಸರ್ಕಾರ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಮನವಿ ಮಾಡಿದರು. ಇದಕ್ಕೆ ಉತ್ತರಿಸಿದ ಸಚಿವ ಪ್ರಿಯಾಂಕ್ ಖರ್ಗೆ ಅವರು, ಆರ್ಒ ಪ್ಲಾಂಟ್ಗಳ ದುರಸ್ತಿ ಮತ್ತು ನಿರ್ವಹಣೆಯನ್ನು ಹೇಗೆ ಸಮರ್ಪಕವಾಗಿ ನಡೆಸಬೇಕು ಎಂಬುದಕ್ಕೆ ನನಗೂ ಸ್ಪಷ್ಟ ಉತ್ತರ ಸಿಗುತ್ತಿಲ್ಲ ಎಂಬುವುದನ್ನು ಪ್ರಮಾಣಿಕವಾಗಿ ಒಪ್ಪಿಕೊಳ್ಳುತ್ತೆನೆ ಎಂದರು. ಮುಂದುವರೆದು ಮಾತನಾಡಿದ ಅವರು, ಇಡೀ ರಾಜ್ಯದಲ್ಲೇ ಈ ಸಮಸ್ಯೆ ಇದೆ. ಆದ್ದರಿಂದ ಆರ್ಒ ಪ್ಲಾಂಟ್ಗಳ ನಿರ್ವಹಣೆಗೆ ಸಂಬಂಧಿಸಿದಂತೆ ಸ್ಪಷ್ಟ ನೀಲನಕ್ಷೆ ಹಾಗೂ ರೂಪರೇಷೆಗಳನ್ನು ಸಿದ್ಧಪಡಿಸಲಾಗುವುದು. ಅದಕ್ಕೆ ಅಗತ್ಯವಿರುವ ಅನುದಾನವನ್ನು ಒದಗಿಸಲಾಗುವುದು ಎಂದರು. ಈಗಾಗಲೇ ಗುರುಮಠಕಲ್ ಕ್ಷೇತ್ರಕ್ಕೆ ಆರ್ಒ ಪ್ಲಾಂಟ್ ದುರಸ್ತಿಗಾಗಿ 56.54 ಲಕ್ಷ ರೂ. ಅನುದಾನ ಬಿಡುಗಡೆ ಮಾಡಲಾಗಿದೆ. ಶಾಸಕರ ಬೇಡಿಕೆಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ಬಾಕಿ ಇರುವ ಬಿಲ್ಗಳನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಾಗುವುದು ಎಂದು ಸಚಿವರು ಸದನದಲ್ಲಿ ಭರವಸೆ ನೀಡಿದರು. ಜಲಧಾರೆ ಯೋಜನೆಗೆ ಸಂಬಂಧಿಸಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಯೋಜನೆಯಲ್ಲಿರುವ ಸಮಸ್ಯೆಗಳನ್ನೂ ಸರಿಪಡಿಸಲಾಗುವುದು ಎಂದು ತಿಳಿಸಿದರು.
ಎಪ್ಸ್ಟೀನ್, ಅನಿಲ್ ಅಂಬಾನಿ, ದಿಲ್ಲಿ ʼನಾಯಕತ್ವʼದ ನಡುವೆ ನಂಟು?: ಎಪ್ಸ್ಟೀನ್ ಕಡತಗಳಿಂದ ಬಹಿರಂಗ!; The Hindu ವರದಿ
ಹೊಸದಿಲ್ಲಿ: ಅಮೆರಿಕದ ಲೈಂಗಿಕ ಅಪರಾಧಿ ಹಾಗೂ ಮಾನವಕಳ್ಳಸಾಗಾಟದ ಆರೋಪಿ ಜೆಫ್ರಿ ಎಪ್ಸ್ಟೀನ್, ಭಾರತದ ಉದ್ಯಮಿ ಅನಿಲ್ ಅಂಬಾನಿಯನ್ನು ಅಮೆರಿಕದ ಅಧ್ಯಕ್ಷ ಡೊಲಾಲ್ಡ್ ಟ್ರಂಪ್ ಅವರ ಅಳಿಯ ಹಾಗೂ ಸಲಹೆಗಾರ ಜಾರೆಡ್ ಕುಶ್ನರ್ ಹಾಗೂ ರಿಪಬ್ಲಿಕನ್ ಪಕ್ಷದ ರಾಜಕಾರಣಿ ಸ್ಟೀವ್ ಬ್ಯಾನನ್ ಅವರಿಗೆ ಪರಿಚಯಿಸಬೇಕೆಂದು ದಿಲ್ಲಿಯ ‘ನಾಯಕತ್ವ’ ಬಯಸಿತ್ತೆಂದು ಇತ್ತೀಚೆಗೆ ಬಿಡುಗಡೆಗೊಂಡ ವಿವಾದಾತ್ಮಕ ಎಪ್ಸ್ಟೀನ್ ಕಡತಗಳಿಂದ ಬಹಿರಂಗಗೊಂಡಿದೆ ಎಂದು thehindu.com ವರದಿ ಮಾಡಿದೆ. ಅನಿಲ್ ಅಂಬಾನಿ ಅವರು ಎಪ್ಸ್ಟೀನ್ ಗೆ 2017 ಮಾರ್ಚ್ನಲ್ಲಿ ಈ ಕುರಿತಾಗಿ ಕಳುಹಿಸಿದ ಸಂದೇಶದಲ್ಲಿ ಈ ವಿಷಯವನ್ನು ಉಲ್ಲೇಖಿಸಲಾಗಿದೆ. ಎಪ್ಸ್ಟೀನ್ ಕಡತಗಳ ಹೊಸ ಕಂತನ್ನು ಅಮೆರಿಕದ ನ್ಯಾಯಾಂಗ ಇಲಾಖೆ ಶುಕ್ರವಾರ ಬಿಡುಗಡೆಗೊಳಿಸಿತ್ತು. 2017 ಜೂನ್ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಅಮೆರಿಕ ಭೇಟಿ ಸಂದರ್ಭದಲ್ಲೇ ಈ ಭೇಟಿಯನ್ನು ಆಯೋಜಿಸಲಾಗಿತ್ತು ಎನ್ನಲಾಗಿದೆ. 2017 ಜುಲೈಯಲ್ಲಿ ಇಸ್ರೇಲ್ಗೆ ಭೇಟಿ ನೀಡಲು ಮೋದಿಗೆ ನೆರವು ನೀಡಿರುವುದಾಗಿ ಎಪ್ಸ್ಟೀನ್ ನೀಡಿದ ಹೇಳಿಕೆಯನ್ನು ನಿರಾಕರಿಸಿರುವ ವಿದೇಶಾಂಗ ವ್ಯವಹಾರಗಳ ಸಚಿವಾಲಯ, ಆತನ ಹೇಳಿಕೆಯನ್ನು ‘‘ಶನಿವಾರ ಶಿಕ್ಷೆಗೊಳಗಾದ ಅಪರಾಧಿಯ ವ್ಯರ್ಥ ಪ್ರಲಾಪ’’ ಎಂದು ಕರೆದಿದೆ. ಆದರೆ, ಅಮೆರಿಕ ಭೇಟಿಯ ಕುರಿತ ಇತ್ತೀಚೆಗಿನ ಇಮೇಲ್ಗಳ ಕುರಿತು ಪ್ರತಿಕ್ರಿಯಿಸಲು ಅದು ನಿರಾಕರಿಸಿದೆ. ಇದಲ್ಲದೆ, ಅನಿಲ್ ಅಂಬಾನಿ ಅವರು 2019 ಮೇ 23ರಂದು ಬೆಳಗ್ಗೆ 9.25ಕ್ಕೆ ಎಪ್ಸ್ಟೀನ್ ಅನ್ನು ಭೇಟಿ ಮಾಡಿದಂತೆ ಕಾಣುತ್ತದೆ. ಎಪ್ಸ್ಟೀನ್ ಈ ಭೇಟಿಯ ನಂತರ ಬ್ಯಾನನ್ಗೆ ಸಂದೇಶ ಕಳುಹಿಸಿದ್ದಾನೆ. ಈ ಸಂದೇಶದಲ್ಲಿ ಆತ ತಾನು ಪ್ರಧಾನಿ ಮೋದಿಯ ‘ವ್ಯಕ್ತಿ’ಯನ್ನು ಭೇಟಿಯಾಗಿರುವುದಾಗಿ ತಿಳಿಸಿದ್ದಾನೆ. ವಾಷಿಂಗ್ಟನ್ನಲ್ಲಿ ಮೋದಿ ಅವರೊಂದಿಗೆ ಯಾರೂ ಮಾತನಾಡುವುದಿಲ್ಲ ಎಂದು ತನ್ನನ್ನು ಭೇಟಿಯಾದ ವ್ಯಕ್ತಿ ದೂರಿದ್ದಾನೆ ಎಂದು ಎಪ್ಸ್ಟೀನ್ ತಿಳಿಸಿದ್ದಾನೆ. ಈ ಸಂದೇಶಗಳು ಕೇಂದ್ರ ಸರಕಾರಕ್ಕೆ ಸಂಬಂಧಿಸಿವೆ ಎಂಬುದನ್ನು ಬಿಜೆಪಿ ನಿರಾಕರಿಸಿದೆ.
ಬೆಂಗಳೂರು : ‘ಕೇಂದ್ರ ಸರಕಾರ ತಂದಿರುವ ‘ವಿಬಿ-ಜಿ ರಾಮ್ ಜಿ’ ಕಾಯ್ದೆಯನ್ನು ಸಾರಾಸಗಟು ತಿರಸ್ಕರಿಸಬೇಕು ಹಾಗೂ ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತರಿ(ಮನರೇಗಾ)ಯೋಜನೆಯನ್ನೇ ಬಲಪಡಿಸಿ ಮುಂದುವರಿಸಬೇಕು’ ಎಂದು ರಾಜ್ಯದ ವಿವಿಧೆಡೆಗಳಿಂದ ಆಗಮಿಸಿದ್ದ ಸಾವಿರಾರು ಮಂದಿ ‘ಮನರೇಗಾ ಕೂಲಿ ಕಾರ್ಮಿಕರು’ ಒಕ್ಕೂರಲಿನಿಂದ ಆಗ್ರಹಿಸಿದ್ದಾರೆ. ಸೋಮವಾರ ನಗರದ ಫ್ರೀಡಂ ಪಾರ್ಕ್ನಲ್ಲಿ ಮನರೇಗಾ ರಕ್ಷಣಾ ಒಕ್ಕೂಟ-ಕರ್ನಾಟಕದ ವತಿಯಿಂದ ಆಯೋಜಸಿದ್ದ ‘ಮನರೇಗಾ ಕಾರ್ಮಿಕರ ಮಹಾ ಪಂಚಾಯತ್’ನಲ್ಲಿ ಜಮಾವಣೆಗೊಂಡಿದ್ದ ಕಾರ್ಮಿಕರು ವಿಬಿ-ಜಿ ರಾಮ್ ಜಿ ಕಾಯ್ದೆಯನ್ನು ರದ್ದುಗೊಳಿಸಿ, ಮನರೇಗಾ ಯೋಜನೆಯನ್ನೇ ಬಲಪಡಿಸುವಂತೆ ಒತ್ತಾಯಿಸಿದರು. ಗ್ರಾಮೀಣ ಬಡವರಿಗೆ ಬೆನ್ನೆಲುಬಾಗಿದ್ದ, ಸಂವಿಧಾನ ಬದ್ಧ ಹಕ್ಕಾಗಿದ್ದ, ಮನರೇಗಾ ಯೋಜನೆಯನ್ನು ಕೇಂದ್ರ ಸರಕಾರವು ರದ್ದುಗೊಳಿಸಿದೆ. ಅದರ ಜಾಗದಲ್ಲಿ ಜನರನ್ನು ಅತಂತ್ರಗೊಳಿಸುವ, ಪ್ರತಿಯೊಂದು ತೀರ್ಮಾನದ ಹಕ್ಕನ್ನೂ ತಾನೇ ವಶಪಡಿಸಿಕೊಳ್ಳುವ, ರಾಜ್ಯಗಳ ಮೇಲೆ ಜವಾಬ್ದಾರಿಯನ್ನು ಹೊರಿಸುವ ವಿಬಿ-ಜಿ ರಾಮ್ ಜಿ ಕಾಯ್ದೆ ಜಾರಿಗೆ ತಂದಿರುವುದು ದುಡಿಯುವ ಜನರ ವಿರೋಧಿ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕೇಂದ್ರ ಸರಕಾರ ಮನರೇಗಾ ಯೋಜನೆಯನ್ನು ಪುನರ್ ಸ್ಥಾಪಿಸುವ ವರೆಗೆ ಕೂಲಿ ಕಾರ್ಮಿಕರ ಹೋರಾಟವನ್ನು ಮುಂದುವರಿಸುವ ತೀರ್ಮಾನವನ್ನು ಮಾಡಿದೆ. ಈ ಕಾಯ್ದೆಯನ್ನು ತಿರಸ್ಕರಿಸಿ ಹಿಂದೆ ಕಳುಹಿಸುವಂತೆ ರಾಷ್ಟ್ರಪತಿಗಳಿಗೆ ಪತ್ರ ಬರೆಯಲಾಗುತ್ತದೆ ಎಂದು ತಿಳಿಸಿದರು. ಮನರೇಗಾ ಯೋಜನೆಯನ್ನು ಮರುಸ್ಥಾಪಿಸಿ, 200 ದಿನ ಕೆಲಸ ಕೊಡಬೇಕು ದುಡಿಯುವ ಕೈಗಳಿಗೆ ಕೆಲಸ ಕೊಡಲೇಬೇಕು. ಉದ್ಯೋಗ ಖಾತ್ರಿ ಯೋಜನೆಯಲ್ಲಿ ಹಣ ಕಡಿತ ಮಾಡಿರುವ ಕೇಂದ್ರ ಸರಕಾರಕ್ಕೆ ಧಿಕ್ಕಾರ ಎಂದು ಕಾರ್ಮಿಕರು ಆಕ್ರೋಶ ವ್ಯಕ್ತಪಡಿಸಿದರು. ಇದೇ ವೇಳೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಮುಖ್ಯಕಾರ್ಯದರ್ಶಿಗಳಿಗೆ ‘ವಿಬಿ ಜಿ-ರಾಮ್ ಜಿ ಹಿಂಪಡೆಯುವಂತೆ ಮನವಿ ಪತ್ರವನ್ನು ಸಲ್ಲಿಸಲಾಯಿತು. ಈ ವೇಳೆ ದಲಿತ ಸಂಘರ್ಷ ಸಮಿತಿಯ ಪ್ರಧಾನ ಸಂಚಾಲಕ ಮಾವಳ್ಳಿ ಶಂಕರ್, ಹೋರಾಟಗಾರ ನೂರ್ ಶ್ರೀಧರ್, ಗಾಯತ್ರಿ, ದೇವಿ, ಗುರುರಾಜ್, ಶಾರದಾ, ನವೀನ್, ಮೋಕ್ಷಮ್ಮ, ಮಹಾಂತೇಶ, ಸ್ವಪ್ನ ಮತ್ತಿತರರು ಹಾಜರಿದ್ದರು. ಪ್ರಮುಖ ನಿರ್ಣಯಗಳು: ಕರ್ನಾಟಕ ಸರಕಾರ ಅಧಿವೇಶನದಲ್ಲಿ ವಿಬಿ-ಜಿ ರಾಮ್ ಜಿ ಕಾಯ್ದೆಯನ್ನು ತಿರಸ್ಕರಿಸುವ ಮನರೇಗಾ ಯೋಜನೆಯನ್ನು ಮುಂದುವರಿಸುವ ತೀರ್ಮಾನ ತೆಗೆದುಕೊಳ್ಳಬೇಕೆಂದು ಒತ್ತಾಯಿಸುತ್ತೇವೆ. ಮನರೇಗಾ ರಕ್ಷಣಾ ಒಕ್ಕೂಟ ಬರೆದಿರುವ ಪತ್ರವನ್ನು ರಾಜ್ಯಪಾಲರ ಮೂಲಕ ರಾಷ್ಟ್ರಪತಿಗಳ ಗಮನಕ್ಕೆ ಬರುವಂತೆ ಕಳುಹಿಸಿಕೊಡಬೇಕು ಎಂದು ‘ಮನರೇಗಾ ಕಾರ್ಮಿಕರ ಮಹಾ ಪಂಚಾಯತ್’ನಲ್ಲಿ ನಿರ್ಣಯ ಕೈಗೊಳ್ಳಲಾಯಿತು. ‘ಮನರೇಗಾ ಯೋಜನೆಯನ್ನು ರದ್ದುಗೊಳಿಸಿ, ಬಿಜೆಪಿ ಸರಕಾರ ಸಂವಿಧಾನ ವಿರೋಧಿ, ಜನ, ಗ್ರಾಮೀಣಾಭಿವೃದ್ಧಿ ವಿರೋಧಿ ಕಾಯ್ದೆ ಜಾರಿ ಮಾಡಿದೆ. 125 ದಿನ ಎಂದು ಮೂಗಿಗೆ ತುಪ್ಪ ಹಚ್ಚಿದ್ದಾರೆ’ -ವಿ.ಎಸ್.ಉಗ್ರಪ್ಪ, ಮಾಜಿ ಸಂಸದ
ಜಿ.ಪಂ. ಚುನಾವಣೆ | ಶಿವಸೇನೆ ಗೆದ್ದರೆ ಅನುದಾನ ಕಡಿತಗೊಳಿಸುತ್ತೇವೆ: ಮಹಾರಾಷ್ಟ್ರ ಸಚಿವ ನಿತೇಶ್ ರಾಣೆ ಬೆದರಿಕೆ
ಮುಂಬೈ: ಮುಂಬರುವ ಜಿಲ್ಲಾ ಪರಿಷತ್ ಹಾಗೂ ಪಂಚಾಯತಿ ಸಮಿತಿ ಚುನಾವಣೆಯಲ್ಲಿ ಶಿವಸೇನೆ (ಉದ್ಧವ್ ಬಣ) ಅಭ್ಯರ್ಥಿಗಳು ಗೆಲುವು ಸಾಧಿಸಿದಲ್ಲಿ, ಅವರಿಗೆ ಮಂಜೂರು ಮಾಡಬೇಕಾದ ಅಭಿವೃದ್ಧಿ ನಿಧಿಗಳನ್ನು ತಡೆ ಹಿಡಿಯುತ್ತೇವೆ ಎಂದು ಮಹಾರಾಷ್ಟ್ರ ಸಚಿವ ನಿತೇಶ್ ರಾಣೆ ಬೆದರಿಕೆ ಒಡ್ಡಿದ್ದಾರೆ. ರವಿವಾರ ಸಿಂಧುದುರ್ಗ ಜಿಲ್ಲೆಯ ಕಂಕ್ಲಾವಿಯಾ ಪೋಂಡಾ ಕ್ಷೇತ್ರದಲ್ಲಿ ಆಯೋಜನೆಗೊಂಡಿದ್ದ ಚುನಾವಣಾ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಅವರು, “ನಮ್ಮ ಪಕ್ಷದ ಚಿಹ್ನೆಯನ್ನು ನೋಡಿದ ಬಳಿಕವೇ ಅನುದಾನ ಬಿಡುಗಡೆ ಮಾಡುತ್ತೇವೆ. ಕಮಲ ಅಥವಾ ಬಿಲ್ಲು ಮತ್ತು ಬಾಣ (ಬಿಜೆಪಿ ಮತ್ತು ಶಿವಸೇನೆಯ ಚುನಾವಣಾ ಚಿಹ್ನೆಗಳು) ಕಂಡರೆ ತಕ್ಷಣವೇ ಹಣವನ್ನು ಮಂಜೂರು ಮಾಡಲಾಗುತ್ತದೆ. ಒಂದು ವೇಳೆ ತಪ್ಪಾಗಿ ಪಂಜಿನ ಚಿಹ್ನೆ (ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ) ಕಂಡು ಬಂದರೆ, ಈಗಾಗಲೇ ಮಂಜೂರಾಗಿರುವ ಅನುದಾನವನ್ನೂ ಸಹ ಹಿಂಪಡೆಯುತ್ತೇವೆ” ಎಂದು ಎಚ್ಚರಿಕೆ ನೀಡಿದ್ದಾರೆ. “ಎಲ್ಲ ಸರಪಂಚರು ತಮ್ಮ ಗ್ರಾಮ ಪಂಚಾಯತ್ ಗಳನ್ನು ನಮಗೆ ಹಸ್ತಾಂತರಿಸಬೇಕೆಂದು ನಾವು ಸ್ಪಷ್ಟವಾಗಿ ತಿಳಿಸಿದ್ದೆವು. ಅವರಿಗೆ ಒಂದು ರೂಪಾಯಿಯ ಅನುದಾನವೂ ದೊರೆಯುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದೆವು. ಹೀಗಾಗಿಯೇ ಎಲ್ಲ ಸರಪಂಚರೂ ಲಗುಬಗೆಯಿಂದ ನಮ್ಮ ಪಕ್ಷಕ್ಕೆ ಸೇರ್ಪಡೆಯಾದರು” ಎಂದು ಅವರು ಹೇಳಿದ್ದಾರೆ. ಜಿಲ್ಲಾ ಪರಿಷತ್ ಮತ್ತು ಪಂಚಾಯತಿ ಸಮಿತಿ ಚುನಾವಣೆಗಳು ಏಕಪಕ್ಷೀಯವಾಗುತ್ತಿವೆ ಹಾಗೂ ಮತದಾರರು ಪ್ರತಿಪಕ್ಷಗಳನ್ನು ಬೆಂಬಲಿಸುವ ಅಗತ್ಯವನ್ನು ಪ್ರಶ್ನಿಸುತ್ತಿದ್ದಾರೆ ಎಂದೂ ಅವರು ಪ್ರತಿಪಾದಿಸಿದ್ದಾರೆ. ಸಂಸದ ನಾರಾಯಣ ರಾಣೆ ನೇತೃತ್ವದಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆಗಳು ನಡೆಯುತ್ತಿವೆ ಹಾಗೂ ಮುಂದಿನ ಐದು ವರ್ಷಗಳ ಕಾಲ ಸಿಂಧುದುರ್ಗ ಜಿಲ್ಲೆ ಅವರ ನಾಯಕತ್ವದಲ್ಲೇ ಉಳಿಯಲಿದೆ ಎಂದು ನಿತೇಶ್ ರಾಣೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ. “ಚುನಾವಣೆಯ ನಂತರ ಶಿವಸೇನೆಯ ನಾಯಕರು ನಮ್ಮ ಬಳಿಗೆ ಅನುದಾನಕ್ಕಾಗಿ ಬರಬೇಕಾಗುತ್ತದೆ” ಎಂದು ಅವರು ವ್ಯಂಗ್ಯವಾಡಿದ್ದಾರೆ. ಫೆಬ್ರವರಿ 7ರಂದು 12 ಜಿಲ್ಲಾ ಪರಿಷತ್ ಮತ್ತು 125 ಪಂಚಾಯತಿ ಸಮಿತಿಗಳಿಗೆ ಚುನಾವಣೆ ನಡೆಯಲಿದ್ದು, ಫೆಬ್ರವರಿ 9ರಂದು ಮತ ಎಣಿಕೆ ನಡೆಯಲಿದೆ.
ಭಾರತ ವಿರುದ್ಧದ ಪಂದ್ಯವನ್ನು ಬಹಿಷ್ಕರಿಸಿದ ಪಾಕಿಸ್ತಾನ: ಬಿಸಿಸಿಐ ಪ್ರತಿಕ್ರಿಯಿಸಿದ್ದು ಹೀಗೆ...
ಹೊಸದಿಲ್ಲಿ: ಟಿ-20 ಕ್ರಿಕೆಟ್ ವಿಶ್ವಕಪ್ನಲ್ಲಿ ಫೆಬ್ರವರಿ 15ರಂದು ನಿಗದಿಯಾಗಿರುವ ಭಾರತ ವಿರುದ್ಧದ ಗ್ರೂಪ್ ಹಂತದ ಪಂದ್ಯವನ್ನು ಬಹಿಷ್ಕರಿಸಲು ಪಾಕಿಸ್ತಾನ ತಂಡ ನಿರ್ಧರಿಸಿರುವುದಕ್ಕೆ ಪ್ರತಿಕ್ರಿಯಿಸಿರುವ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ), ಕ್ರೀಡಾ ಮನೋಭಾವದ ಕುರಿತು ಅಂತರ್ರಾಷ್ಟ್ರೀಯ ಕ್ರಿಕೆಟ್ ಮಂಡಳಿಯ (ಐಸಿಸಿ) ನಿಲುವಿಗೆ ನಮ್ಮ ಸಂಪೂರ್ಣ ಸಮ್ಮತಿ ಇದೆ. ಐಸಿಸಿಯೊಂದಿಗೆ ಔಪಚಾರಿಕವಾಗಿ ಚರ್ಚೆ ನಡೆಸುವ ತನಕ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಹೇಳಿದೆ. ‘‘ಐಸಿಸಿ ಒಂದು ದೊಡ್ಡ ಹೇಳಿಕೆಯೊಂದನ್ನು ನೀಡಿದೆ. ಅದರಲ್ಲಿ ಕ್ರೀಡಾ ಮನೋಭಾವದ ಬಗ್ಗೆ ಮಾತನಾಡಿದೆ. ಐಸಿಸಿಯ ನಿಲುವನ್ನು ನಾವು ಸಂಪೂರ್ಣವಾಗಿ ಒಪ್ಪುತ್ತೇವೆ. ಐಸಿಸಿ ಜೊತೆ ಮಾತನಾಡುವ ತನಕ ಯಾವುದೇ ಪ್ರತಿಕ್ರಿಯೆಗಳನ್ನು ನೀಡುವುದಿಲ್ಲ’’ಎಂದು ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ ಹೇಳಿದ್ದಾರೆ. ಆಯ್ದ ಪಂದ್ಯಗಳಲ್ಲಿ ಭಾಗವಹಿಸುವುದು ಜಾಗತಿಕ ಕ್ರೀಡಾಕೂಟದ ಮೂಲಭೂತ ಪ್ರಮೇಯಕ್ಕೆ ವಿರುದ್ಧವಾಗಿದೆ. ಪಾಕಿಸ್ತಾನದ ಸರಕಾರದ ಹೇಳಿಕೆಯನ್ನು ಗಮನಿಸಿದ್ದೇವೆ. ಪಾಕಿಸ್ತಾನ ಕ್ರಿಕೆಟ್ ಮಂಡಳಿಯಿಂದ(ಪಿಸಿಬಿ)ಅಧಿಕೃತ ಸಂವಹನಕ್ಕಾಗಿ ಕಾಯುತ್ತಿದ್ದೇವೆ. ಪ್ರಕಟಿತ ವೇಳಾಪಟ್ಟಿಯ ಪ್ರಕಾರವೇ ಎಲ್ಲ ಅರ್ಹ ತಂಡಗಳು ಸ್ಪರ್ಧಿಸುವ ನಿರೀಕ್ಷೆಯಿದೆ ಎಂದು ಐಸಿಸಿ ಪ್ರಕಟನೆಯೊಂದರಲ್ಲಿ ತಿಳಿಸಿದೆ.
ಆಡಿಯೊ ಬುಕ್ಗಾಗಿ ಮೊದಲ ಗ್ರ್ಯಾಮಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡ ದಲಾಯಿ ಲಾಮಾ
ಹೊಸದಿಲ್ಲಿ: ಟಿಬೆಟಿಯನ್ ಆಧ್ಯಾತ್ಮಿಕ ನಾಯಕ ದಲಾಯಿ ಲಾಮಾ ಅವರು ತನ್ನ ‘ಮೆಡಿಟೇಷನ್ಸ್:ದಿ ರಿಫ್ಲೆಕ್ಷನ್ಸ್ ಆಫ್ ಹೀಸ್ ಹೋಲಿನೆಸ್ ದಿ ದಲಾಯಿ ಲಾಮಾ’ ಆಡಿಯೊ ಬುಕ್ಗಾಗಿ ಪ್ರತಿಷ್ಠಿತ ಗ್ರ್ಯಾಮಿ ಪ್ರಶಸ್ತಿಯನ್ನು ಗೆದ್ದಿದ್ದು, ಇದು 68ನೇ ಗ್ರ್ಯಾಮಿ ಪ್ರಶಸ್ತಿಗಳಲ್ಲಿ ಗಮನಾರ್ಹ ಘಳಿಗೆಯಾಗಿ ಗುರುತಿಸಲ್ಪಟ್ಟಿದೆ. ದಲಾಯಿ ಲಾಮಾರ ಆಲ್ಬಮ್ ಅಮೆರಿಕದ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಕೇತಾಂಜಿ ಬ್ರೌನ್ ಜಾಕ್ಸನ್, ಕ್ಯಾಥಿ ಗಾರ್ವರ್ ಮತ್ತು ಫ್ಯಾಬ್ ಮೊರ್ವಾನ್ ಸೇರಿದಂತೆ ವಿವಿಧ ಕ್ಷೇತ್ರಗಳ ನಾಮನಿರ್ದೇಶಿತರನ್ನು ಹಿಂದಿಕ್ಕಿ ಸ್ಪೋಕನ್ ವರ್ಡ್ ವಿಭಾಗದಲ್ಲಿ ಅತ್ಯುನ್ನತ ಗೌರವಕ್ಕೆ ಪಾತ್ರವಾಗಿದೆ. ದಲಾಯಿ ಲಾಮಾ ಸಮಾರಂಭದಲ್ಲಿ ಭಾಗವಹಿಸಿರಲಿಲ್ಲ. ಗಾಯಕ-ಗೀತ ರಚನೆಕಾರ ರಫಸ್ ವೇನ್ರೈಟ್ ಅವರು ದಲಾಯಿ ಲಾಮಾ ಪರವಾಗಿ ಪ್ರಶಸ್ತಿಯನ್ನು ಸ್ವೀಕರಿಸಿದರು. ದಲಾಯಿ ಲಾಮಾರ ಈ ಆಲ್ಬಂ ನಿರ್ಮಾಣದಲ್ಲಿ ಖ್ಯಾತ ಸರೋದ್ ವಾದಕ ಅಮ್ಜದ್ ಅಲಿ ಖಾನ್,ಅವರ ಪುತ್ರರಾದ ಅಮಾನ್ ಅಲಿ ಬಂಗಾಶ್ ಮತ್ತು ಅಯಾನ್ ಅಲಿ ಬಂಗಾಶ ಸಹಕರಿಸಿದ್ದು, ಶಾಂತಿ,ಅನುಕಂಪ,ದಯೆ ಮತ್ತು ಭರವಸೆಯ ಸಾರ್ವತ್ರಿಕ ಮೌಲ್ಯಗಳನ್ನು ಬಿಂಬಿಸುವ ಪದಗಳು ಮತ್ತು ಸಂಗೀತ ಆಲ್ಬಮ್ನಲ್ಲಿ ಹದವಾಗಿ ಬೆರೆತುಕೊಂಡಿವೆ. ಪ್ರಶಸ್ತಿಯನ್ನು ಗೆದ್ದ ಬಳಿಕ ನೀಡಿದ ಹೇಳಿಕೆಯಲ್ಲಿ ದಲಾಯಿ ಲಾಮಾ, ‘ಈ ಗೌರವವನ್ನು ನಾನು ಕೃತಜ್ಞತೆ ಮತ್ತು ನಮ್ರತೆಯೊಂದಿಗೆ ಸ್ವೀಕರಿಸುತ್ತೇನೆ. ನಾನು ಇದನ್ನು ವೈಯಕ್ತಿಕ ವಿಷಯವನ್ನಾಗಿ ನೋಡುವುದಿಲ್ಲ,ನಾವು ಹಂಚಿಕೊಂಡಿರುವ ಸಾರ್ವತ್ರಿಕ ಜವಾಬ್ದಾರಿಗೆ ಸಿಕ್ಕ ಮಾನ್ಯತೆಯಾಗಿ ಪರಿಗಣಿಸುತ್ತೇನೆ. ಎಂಟು ಶತಕೋಟಿ ಮಾನವರ ಸಾಮೂಹಿಕ ಯೋಗಕ್ಷೇಮಕ್ಕೆ ಶಾಂತಿ,ಅನುಕಂಪ,ನಮ್ಮ ಪರಿಸರದ ಬಗ್ಗೆ ಕಾಳಜಿ ಹಾಗೂ ಮಾನವೀಯ ಏಕತೆಯ ತಿಳುವಳಿಕೆ ಅತ್ಯಗತ್ಯ ಎನ್ನುವುದು ನನ್ನ ನಿಜವಾದ ನಂಬಿಕೆಯಾಗಿದೆ. ಈ ಗ್ರ್ಯಾಮಿ ಗೌರವವು ಈ ಸಂದೇಶಗಳನ್ನು ವ್ಯಾಪಕವಾಗಿ ಹರಡಲು ನೆರವಾಗಲಿದೆ,ಅದಕ್ಕಾಗಿ ನಾನು ಕೃತಜ್ಞನಾಗಿದ್ದೇನೆ’ ಎಂದು ತಿಳಿಸಿದ್ದಾರೆ. ದಲಾಯಿ ಲಾಮಾ ಈ ವರ್ಷ ಮೊದಲ ಬಾರಿಗೆ ಗ್ರ್ಯಾಮಿ ಪ್ರಶಸ್ತಿ ಪಡೆದವರ ಪಟ್ಟಿಗೆ ಸೇರಿಕೊಂಡಿದ್ದು, ಕೆ-ಪಾಪ್ ಕಲಾವಿದರು ಮತ್ತು ಖ್ಯಾತ ಚಲನಚಿತ್ರ ನಿರ್ದೇಶಕ ಸ್ಟೀವನ್ ಸ್ಪಿಲ್ಬರ್ಗ್ ಕೂಡ ಈ ಪಟ್ಟಿಯಲ್ಲಿದ್ದಾರೆ.
ಬಳ್ಳಾರಿ | ಪಂಪಾಪತಿ ಹಂಪಮ್ಮದೇವಿ ಮಹಾರಥೋತ್ಸವ
ಬಳ್ಳಾರಿ : ಕಂಪ್ಲಿ-ಕೋಟೆಯ ತುಂಗಭದ್ರಾ ನದಿ ತೀರದಲ್ಲಿ ಪಂಪಾಪತಿ ಮತ್ತು ಹಂಪಮ್ಮದೇವಿ ಮಹಾರಥೋತ್ಸವವು ಸಂಭ್ರಮದಿಂದ ಜರುಗಿತು. ಮಹಾರಥೋತ್ಸವದ ಅಂಗವಾಗಿ ಕಂಕಣಧಾರಣೆ, ರಥಕ್ಕೆ ಕಳಸಧಾರಣೆ ಹಾಗೂ ಶ್ರೀ ಪಂಪಾಪತಿ ಹಂಪಮ್ಮದೇವಿಯ ಕಲ್ಯಾಣ ಮಹೋತ್ಸವವು ವಿಜೃಂಭಣೆಯಿಂದ ಜರುಗಿದವು. ರಾತ್ರಿ ಆಕರ್ಷಕ ಹೂವಿನ ಪಲ್ಲಕ್ಕಿ ಉತ್ಸವ ನಡೆಯಿತು. ಸಂಜೆ ರಥಕ್ಕೆ ಹೂಗಳು, ತಳಿರು ತೋರಣಗಳಿಂದ ಅಲಂಕರಿಸಿ ಮಹಾಮಂಗಳಾರತಿ ಮಾಡಲಾಯಿತು. ನಂತರ ಜಯಘೋಷಗಳೊಂದಿಗೆ ದೇವಸ್ಥಾನದ ಪದಾಧಿಕಾರಿಗಳು ಮಹಾರಥೋತ್ಸವಕ್ಕೆ ಚಾಲನೆ ನೀಡಿದರು. ಮಹಾರಥೋತ್ಸವದಲ್ಲಿ ವಿವಿಧ ಜಾನಪದ ಕಲಾತಂಡಗಳು, ಮಂಗಳವಾದ್ಯಗಳು ಭಾಗವಹಿಸಿದ್ದವು. ರಥೋತ್ಸವದಲ್ಲಿ ದೇವಸ್ಥಾನ ಸಮಿತಿ ಪದಾಧಿಕಾರಿಗಳು, ಕೋಟೆ, ಕಂಪ್ಲಿ ಹಾಗೂ ಸುತ್ತ ಮುತ್ತಲ ಗ್ರಾಮಗಳ ಸಾವಿರಾರು ಭಕ್ತರು ಭಾಗವಹಿಸಿದ್ದರು.
ಪುಣೆ ಪೋಶೆ ಕಾರು ಅಪಘಾತ ಪ್ರಕರಣ: ಮೂವರು ಆರೋಪಿಗಳಿಗೆ ಜಾಮೀನು
ಹೊಸದಿಲ್ಲಿ: ಮಹಾರಾಷ್ಟ್ರದ ಪುಣೆಯಲ್ಲಿ 2024ರಲ್ಲಿ ಇಬ್ಬರು ಯುವ ಸಾಫ್ಟ್ವೇರ್ ಇಂಜಿನಿಯರ್ಗಳನ್ನು ಬಲಿ ತೆಗೆದುಕೊಂಡಿದ್ದ ಪೋಶೆ ಕಾರು ಅಪಘಾತ ಪ್ರಕರಣದಲ್ಲಿ ಮೂವರು ಆರೋಪಿಗಳಿಗೆ ಸರ್ವೋಚ್ಚ ನ್ಯಾಯಾಲಯವು ಸೋಮವಾರ ಜಾಮೀನು ಮಂಜೂರು ಮಾಡಿದೆ. ಆಶಿಷ್ ಮಿತ್ತಲ್,ಆದಿತ್ಯ ಸೂದ್ ಮತ್ತು ಅಮರ ಗಾಯಕ್ವಾಡ್ ಕಳೆದ 18 ತಿಂಗಳುಗಳಿಂದಲೂ ಜೈಲಿನಲ್ಲಿದ್ದು,ಮದ್ಯದ ಅಮಲಿನಲ್ಲಿ ಕಾರನ್ನು ಚಲಾಯಿಸುತ್ತಿದ್ದ 17ರ ಹರೆಯದ ಬಾಲಕನ ರಕ್ತದ ಮಾದರಿಗಳನ್ನು ತಿರುಚಲು ನೆರವಾಗಿದ್ದ ಆರೋಪವನ್ನು ಎದುರಿಸುತ್ತಿದ್ದಾರೆ. ಆರೋಪಿಗಳಿಗೆ ಜಾಮೀನು ಮಂಜೂರು ಮಾಡಿದ ನ್ಯಾಯಮೂರ್ತಿಗಳಾದ ಬಿ.ವಿ.ನಾಗರತ್ನ ಮತ್ತು ಉಜ್ವಲ ಭುಯಾನ್ ಅವರ ಪೀಠವು,ಬಾಲಾಪರಾಧಿಗಳನ್ನು ಒಳಗೊಂಡ ಇಂತಹ ಪ್ರಕರಣಗಳಲ್ಲಿ ಮಕ್ಕಳನ್ನು ಬೆಳೆಸುವಲ್ಲಿ ಪೋಷಕರ ವೈಫಲ್ಯವನ್ನು ಬೆಟ್ಟು ಮಾಡಿತು. ಅಪಘಾತದ ಸಮಯದಲ್ಲಿ ಬಾಲಕ ಕುಡಿದಿರಲಿಲ್ಲ ಎಂದು ತೋರಿಸಲು ಆತನ ರಕ್ತದ ಮಾದರಿಗಳನ್ನು ಬದಲಿಸಲು ಪ್ರಯತ್ನಿಸಿದ್ದಕ್ಕಾಗಿ ಆತನ ಪೋಷಕರು,ಸರಕಾರಿ ಆಸ್ಪತ್ರೆಯ ವೈದ್ಯರು ಮತ್ತು ಇತರರನ್ನೂ ಬಂಧಿಸಲಾಗಿತ್ತು.
ಹೊಸದಿಲ್ಲಿ: 2026ರ ಜಾಗತಿಕ ಜಿಡಿಪಿಗೆ ಭಾರತವು ಎರಡನೇ ಅತಿದೊಡ್ಡ ಕೊಡುಗೆಯನ್ನು ನೀಡಲಿದೆ ಎಂದು ಅಂದಾಜಿಸಿರುವ ಜಾಗತಿಕ ಅಂಕಿಅಂಶಗಳ ವರದಿಗೆ ಟೆಸ್ಲಾ ಸಿಇಒ ಎಲಾನ್ ಮಸ್ಕ್ ಅವರ ಪ್ರತಿಕ್ರಿಯೆಯನ್ನು ಉಲ್ಲೇಖಿಸಿ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ ರಿಜಿಜು ಅವರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಳಿ ನಡೆಸಿದ್ದಾರೆ. ಸರಕಾರವನ್ನು ಟೀಕಿಸುವ ಭರದಲ್ಲಿ ಭಾರತದ ಅವಹೇಳನ ಮಾಡಬೇಡಿ ಎಂದು ರಾಹುಲ್ರನ್ನು ಆಗ್ರಹಿಸಿದ್ದಾರೆ. ಮಸ್ಕ್ ತನ್ನ ರವಿವಾರದ ಪೋಸ್ಟ್ನಲ್ಲಿ ‘ಶಕ್ತಿಯ ಸಮತೋಲನ ಬದಲಾಗುತ್ತಿದೆ’ ಎಂದು ಬರೆದಿದ್ದರು. ‘ಜಾಗತಿಕ ಬೆಳವಣಿಗೆಯಲ್ಲಿ ಭಾರತ ಮತ್ತು ಚೀನಾ ಒಟ್ಟಾಗಿ ಶೇ.43.6ರಷ್ಟು ಕೊಡುಗೆ ನೀಡುತ್ತಿವೆ’ ಎಂಬ @stats_feed ನ ಪೋಸ್ಟ್ ಅನ್ನು ಅವರು ಹಂಚಿಕೊಂಡಿದ್ದರು. ಭಾರತದ ಆರ್ಥಿಕತೆ ಸತ್ತಿದೆ ಎಂದು ಪುನರುಚ್ಚರಿಸಿದ್ದು ಮತ್ತು 2026-27ರ ಕೇಂದ್ರ ಬಜೆಟ್ಗೆ ಆಕ್ಷೇಪಣೆಗಳು ಸೇರಿದಂತೆ ಬಿಜೆಪಿ ನೇತೃತ್ವದ ಸರಕಾರವು ಆರ್ಥಿಕತೆಯನ್ನು ನಿರ್ವಹಿಸುತ್ತಿರುವ ಕುರಿತು ರಾಹುಲ್ರ ನಿರಂತರ ಟೀಕೆಗಳ ನಡುವೆ ರಿಜಿಜು ಅವರ ಹೇಳಿಕೆಗಳು ಹೊರಬಿದ್ದಿವೆ. ರಾಷ್ಟ್ರದ ಸಾಧನೆಯನ್ನು ಎತ್ತಿ ತೋರಿಸಲು ಮಾತ್ರ ತಾನು ಮಸ್ಕ್ ಹೇಳಿಕೆಯನ್ನು ಉಲ್ಲೇಖಿಸುತ್ತಿದ್ದೇನೆ ಎಂದು ಎಕ್ಸ್ನಲ್ಲಿ ಬರೆದಿರುವ ರಿಜಿಜು,‘ನಾನು ಸಾಮಾನ್ಯವಾಗಿ ಭಾರತೀಯರಲ್ಲದವರು ನೀಡುವ ಹೇಳಿಕೆಗಳಿಗೆ ಪ್ರತಿಕ್ರಿಯಿಸುವುದಿಲ್ಲ. ಸರಕಾರವನ್ನು ಟೀಕಿಸುವುದು ಪ್ರಜಾಸತ್ತಾತ್ಮಕ ಹಕ್ಕು,ಆದರೆ ಭಾರತವನ್ನು ಅವಮಾನಿಸಬೇಡಿ ಮತ್ತು ಭಾರತದ ಸಾಧನೆಯನ್ನು ಕೀಳಾಗಿ ನೋಡಬೇಡಿ. ಹೆಮ್ಮೆಯ ಭಾರತೀಯರಾಗಿ ಎಂದು ರಾಹುಲ್ ಗಾಂಧಿಯವರಿಗೆ ತಿಳಿಸಲು ಮಾತ್ರ ನಾನು ಮಸ್ಕ್ ಪೋಸ್ಟ್ನ್ನು ಉಲ್ಲೇಖಿಸುತ್ತಿದ್ದೇನೆ’ ಎಂದು ಹೇಳಿದ್ದಾರೆ. ಮಸ್ಕ್ ಹಂಚಿಕೊಂಡಿರುವ ಪೋಸ್ಟ್ ಐಎಂಎಫ್ ದತ್ತಾಂಶಗಳನ್ನು ಉಲ್ಲೇಖಿಸಿ ಅಗ್ರ 10 ದೇಶಗಳನ್ನು ಮತ್ತು 2026ರಲ್ಲಿ ಜಾಗತಿಕ ಜಿಡಿಪಿ ಬೆಳವಣಿಗೆಯಲ್ಲಿ ಅವುಗಳ ನಿರೀಕ್ಷಿತ ಕೊಡುಗೆಗಳನ್ನು ಪಟ್ಟಿ ಮಾಡಿದೆ. ಜೊತೆಗೆ,ಏಷ್ಯಾ-ಪೆಸಿಫಿಕ್ ಪ್ರದೇಶವು ಒಟ್ಟು ಜಾಗತಿಕ ಬೆಳವಣಿಗೆಯಲ್ಲಿ ಸುಮಾರು ಶೇ.50ರಷ್ಟು ಪಾಲನ್ನು ಹೊಂದಿದೆ ಎಂದು ಪೋಸ್ಟ್ನಲ್ಲಿ ಹೇಳಲಾಗಿದೆ. ಪಟ್ಟಿಯಲ್ಲಿ ಭಾರತವು ಶೇ.17ರಷ್ಟು ಜಿಡಿಪಿ ಕೊಡುಗೆ ಅಂದಾಜಿನೊಂದಿಗೆ ಅಮೆರಿಕಕ್ಕಿಂತ ಮೇಲಿನ ಸ್ಥಾನದಲ್ಲಿದೆ. ಇಂಡೋನೇಶ್ಯಾ,ಅಮೆರಿಕ,ಚೀನಾ ಮತ್ತು ಜರ್ಮನಿ ಅನುಕ್ರಮವಾಗಿ ಶೇ.3.8,ಶೇ.9.9,ಶೇ.26.6 ಮತ್ತು ಶೇ.0.9 ರಷ್ಟು ಕೊಡುಗೆಯನ್ನು ಸಲ್ಲಿಸುವ ನಿರೀಕ್ಷೆಯಿದೆ. ಈ ವರ್ಷದ ಜನವರಿಯಲ್ಲಿ ಐಎಂಎಫ್ 2025-26ರ ವಿತ್ತವರ್ಷಕ್ಕೆ ಭಾರತದ ಆರ್ಥಿಕ ಬೆಳವಣಿಗೆಯ ಅಂದಾಜನ್ನು ಶೇ.7.3ಕ್ಕೆ ಮತ್ತು 2026-27ಕ್ಕೆ ಶೇ.6.4ಕ್ಕೆ ಹೆಚ್ಚಿಸಿತ್ತು.
ಬಳ್ಳಾರಿ | ಸ್ವ-ಉದ್ಯೋಗದಿಂದ ಸ್ವಾವಲಂಬಿ ಜೀವನ: ಶಿಲ್ಪರಾಣಿ
ಮಾದಕ ವಸ್ತು ಜಾಗೃತಿ ಅಭಿಯಾನ
ವ್ಯಾಪಾರ ಒಪ್ಪಂದಕ್ಕೆ ನಾವು ಒಪ್ಪಿದ್ದೇವೆ: ಪ್ರಧಾನಿ ಮೋದಿ ಜೊತೆ ಕರೆಯ ಬಳಿಕ ಟ್ರಂಪ್ ಘೋಷಣೆ
ಭಾರತಕ್ಕೆ ಸುಂಕ ಶೇ.18ಕ್ಕೆ ಇಳಿಕೆ
ಬಲೂಚಿಸ್ತಾನದ ಗ್ವಾದರ್ ನಲ್ಲಿ ನೆಲದ ಕಾರ್ಯಾಚರಣೆ ಸ್ಥಗಿತಗೊಳಿಸಿದ ಚೀನಾ
ಬೀಜಿಂಗ್: ಬಲೂಚಿಸ್ತಾನದ ಗ್ವಾದರ್ ಸೇರಿದಂತೆ ವಿವಿಧೆಡೆ ಬಲೂಚಿಸ್ತಾನ್ ಪ್ರತ್ಯೇಕತಾವಾದಿ ಗುಂಪು ಬಿಎಲ್ಎ ಇತ್ತೀಚೆಗೆ ನಡೆಸಿದ ಸಂಘಟಿತ ದಾಳಿಯ ಬಳಿಕ ಪಾಕಿಸ್ತಾನದ ಆಯಕಟ್ಟಿನ ಬಂದರು ನಗರ ಗ್ವಾದರ್ನಲ್ಲಿ ಚೀನಾ ತನ್ನ ನೆಲದ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿರುವುದಾಗಿ ರಾಜತಾಂತ್ರಿಕ ಮೂಲಗಳನ್ನು ಉಲ್ಲೇಖಿಸಿ ಸಿಎನ್ಎನ್-ನ್ಯೂಸ್ 18 ವರದಿ ಮಾಡಿದೆ. ಗ್ವಾದರ್ನಲ್ಲಿ ನಿಯೋಜಿಸಲಾದ ಎಲ್ಲಾ `ಗ್ರೌಂಡ್ ಸ್ಟಾಫ್'ಗಳನ್ನು ವಿಶೇಷ ವಿಮಾನಗಳ ಮೂಲಕ ಸ್ಥಳಾಂತರಿಸಲಾಗಿದ್ದು ಈ ಪ್ರದೇಶದಲ್ಲಿ ಚೀನಾ ನೇತೃತ್ವದಲ್ಲಿ ನಡೆಯುತ್ತಿದ್ದ ನಿರ್ಮಾಣ ಕಾಮಗಾರಿಗಳನ್ನು ಸ್ಥಗಿತಗೊಳಿಸಲಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಈ ಕ್ರಮ ಕೈಗೊಂಡಿದ್ದು ಮುಂದಿನ ದಿನಗಳಲ್ಲಿ ಚೀನಾಕ್ಕೆ ಸಂಬಂಧಿಸಿದ ಯೋಜನೆಗಳನ್ನು ಪಾಕಿಸ್ತಾನದ ಸಿಬ್ಬಂದಿಗಳು ನಿರ್ವಹಿಸಲಿದ್ದು ಚೀನಾದ ತಂಡವು ಬೆಳವಣಿಗೆಗಳನ್ನು ಮೇಲುಸ್ತುವಾರಿ ನಡೆಸುತ್ತವೆ ಮತ್ತು ತಾಂತ್ರಿಕ ಹಾಗೂ ಆಡಳಿತಾತ್ಮಕ ಸಮಸ್ಯೆಗಳನ್ನು ದೂರದಿಂದಲೇ ಪರಿಹರಿಸುತ್ತವೆ ಎಂದು ಇಸ್ಲಮಾಬಾದ್ನಲ್ಲಿನ ಚೀನಾದ ರಾಯಭಾರಿ ಕಚೇರಿಯ ಮೂಲಗಳು ಹೇಳಿವೆ. ತಾನು ಸಿಪಿಇಸಿ(ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್) ಸಂಬಂಧಿಸಿದ ಯೋಜನೆಗಳಿಂದ ಹಿಂದೆ ಸರಿದಿಲ್ಲ. ಪ್ರಸ್ತುತ ಅಮಾನತು ತಾತ್ಕಾಲಿಕವಾಗಿದೆ, ಆದರೆ ಅದರ ಅವಧಿಯು ಹೊಸ ಭದ್ರತಾ ಕ್ರಮಗಳು ಮತ್ತು ಪ್ರಾದೇಶಿಕ ಸ್ಥಿರತೆಯನ್ನು ಅವಲಂಬಿಸಿದೆ ಎಂದು ಅಧಿಕಾರಿಗಳು ಹೇಳಿರುವುದಾಗಿ ವರದಿಯಾಗಿದೆ.
ಪರಮಾಣು ಒಪ್ಪಂದದ ಬಗ್ಗೆ ಅಮೆರಿಕಾ ಜೊತೆ ಮಾತುಕತೆ ಆರಂಭಿಸಲು ಇರಾನ್ ಆದೇಶ: ವರದಿ
ಟೆಹ್ರಾನ್: ಅಮೆರಿಕಾದೊಂದಿಗೆ ಮಾತುಕತೆ ಆರಂಭಿಸುವಂತೆ ಇರಾನ್ ಅಧ್ಯಕ್ಷ ಮಸೂದ್ ಪೆಜೆಷ್ಕಿಯಾನ್ ಆದೇಶಿಸಿರುವುದಾಗಿ ಉನ್ನತ ಮೂಲಗಳನ್ನು ಉಲ್ಲೇಖಿಸಿ `ಫಾರ್ಸ್' ಸುದ್ದಿಸಂಸ್ಥೆ ಸೋಮವಾರ ವರದಿ ಮಾಡಿದೆ. `ಪರಮಾಣು ವಿಷಯದ ಬಗ್ಗೆ ಇರಾನ್ ಮತ್ತು ಅಮೆರಿಕಾ ಮಾತುಕತೆ ನಡೆಸಲಿವೆ' ಎಂದು ವರದಿ ಹೇಳಿದ್ದು ದಿನಾಂಕದ ಬಗ್ಗೆ ಮಾಹಿತಿ ನೀಡಿಲ್ಲ. ಇದಕ್ಕೂ ಮುನ್ನ ಸುದ್ದಿಗಾರರ ಜೊತೆ ಮಾತನಾಡಿದ ಇರಾನ್ನ ವಿದೇಶಾಂಗ ಇಲಾಖೆಯ ವಕ್ತಾರ ಇಸ್ಮಾಯಿಲ್ ಬಘೈ `ಅಮೆರಿಕಾದೊಂದಿಗಿನ ಉದ್ವಿಗ್ನತೆಯನ್ನು ನಿರ್ವಹಿಸಲು ವಿವಿಧ ರಾಜತಾಂತ್ರಿಕ ಆಯ್ಕೆಗಳನ್ನು ಇರಾನ್ ಪರಿಶೀಲಿಸುತ್ತಿದೆ ಮತ್ತು ಮುಂದಿನ ದಿನಗಳಲ್ಲಿ ಫಲಿತಾಂಶಗಳನ್ನು ನಿರೀಕ್ಷಿಸುತ್ತದೆ. ಪ್ರಾದೇಶಿಕ ರಾಷ್ಟ್ರಗಳ ನಡುವೆ ವಿವಿಧ ಸಂದೇಶಗಳನ್ನು, ವಿವಿಧ ಅಂಶಗಳನ್ನು ವಿನಿಮಯ ಮಾಡಿಕೊಳ್ಳಲಾಗಿದೆ. ನಾವು ಪ್ರಸ್ತುತ ಪ್ರತೀ ರಾಜತಾಂತ್ರಿಕ ಪ್ರಕ್ರಿಯೆಯ ವಿವರಗಳನ್ನು ಪರಿಶೀಲಿಸುತ್ತಿದ್ದೇವೆ ' ಎಂದು ಹೇಳಿದ್ದರು. ಈ ಮಧ್ಯೆ, ಅಮೆರಿಕಾದ ವಿರುದ್ಧ ವಾಗ್ದಾಳಿ ಮುಂದುವರಿಸಿರುವ ಇರಾನ್ನ ಪರಮೋಚ್ಛ ನಾಯಕ ಆಯತುಲ್ಲಾ ಆಲಿ ಖಾಮಿನೈ `ಅಮೆರಿಕಾದ ಒತ್ತಡವನ್ನು ಪ್ರತಿರೋಧಿಸುವುದನ್ನು ಇರಾನ್ ಮುಂದುವರಿಸುತ್ತದೆ. ಇರಾನ್ ದೃಢವಾಗಿ ನಿಲ್ಲುತ್ತದೆ ಮತ್ತು ದೈವೇಚ್ಛೆಯಿದ್ದರೆ ಅಮೆರಿಕಾದ ಕಿಡಿಗೇಡಿತನ ಮತ್ತು ಕಿರುಕುಳ ಕೊನೆಗೊಳ್ಳುತ್ತದೆ' ಎಂದು ಹೇಳಿದ್ದಾರೆ. ಅಮೆರಿಕಾ ಮತ್ತು ಇರಾನ್ನ ನಡುವಿನ ಬಿಕ್ಕಟ್ಟಿಗೆ ಕಾರಣವೇನು ಎಂಬ ಪ್ರಶ್ನೆಗೆ ಉತ್ತರ ಸರಳವಿದೆ `ಅಮೆರಿಕಾವು ಇರಾನ್ ಅನ್ನು ಕಬಳಿಸಲು ಬಯಸುತ್ತಿದೆ ಮತ್ತು ಇರಾನ್ ರಾಷ್ಟ್ರ ಇದನ್ನು ತಡೆಯುತ್ತಿದೆ. ಅವರು ನಮ್ಮ ನೈಸರ್ಗಿಕ ಸಂಪನ್ಮೂಲಗಳು, ಕಾರ್ಯತಂತ್ರದ ಸ್ಥಾನವನ್ನು ಅಪೇಕ್ಷಿಸುತ್ತಿದ್ದಾರೆ'' ಎಂದು ಖಾಮಿನೈ ಪ್ರತಿಪಾದಿಸಿದ್ದಾರೆ. ಇರಾನ್ ಜೊತೆ ಒಪ್ಪಂದದ ಭರವಸೆಯಿದೆ ಎಂದ ಟ್ರಂಪ್: ಇರಾನ್ ಜೊತೆ ಒಪ್ಪಂದ ಮಾಡಿಕೊಳ್ಳುವ ಭರವಸೆಯಿದೆ ಎಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದು ರಾಜತಾಂತ್ರಿಕತೆ ವಿಫಲವಾದರೆ ಫಲಿತಾಂಶ ಸ್ಪಷ್ಟವಾಗಿದೆ ಎಂದು ಎಚ್ಚರಿಸಿದ್ದಾರೆ. ಫ್ಲೋರಿಡಾದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಟ್ರಂಪ್ ` ಆ ಪ್ರದೇಶದಲ್ಲಿ ನಾವು ಅತೀ ದೊಡ್ಡ, ವಿಶ್ವದಲ್ಲೇ ಅತ್ಯಂತ ಶಕ್ತಿಶಾಲಿ ಸಮರ ನೌಕೆಗಳನ್ನು ಹೊಂದಿದ್ದೇವೆ. ಮುಂದಿನ ಒಂದೆರಡು ದಿನಗಳಲ್ಲಿ ನಾವು ಒಪ್ಪಂದ ಮಾಡಿಕೊಳ್ಳುವ ಭರವಸೆಯಿದೆ. ಒಪ್ಪಂದ ಸಾಧ್ಯವಾಗದಿದ್ದರೆ, ಇರಾನ್ನ ನಾಯಕರು ಹೇಳಿದ ಮಾತು ಸರಿಯಾಗುತ್ತದಯೇ ಎಂಬುದನ್ನು ನೋಡಬೇಕಿದೆ' ಎಂದು ಹೇಳಿದರು. ಒಂದು ವೇಳೆ ಅಮೆರಿಕಾವು ಇರಾನ್ನ ಮೇಲೆ ದಾಳಿ ಮಾಡಿದರೆ ಅದು ಪ್ರಾದೇಶಿಕ ಸಂಘರ್ಷವಾಗುತ್ತದೆ ಎಂದು ಇರಾನ್ನ ಪರಮೋಚ್ಛ ನಾಯಕ ಆಯತುಲ್ಲಾ ಆಲಿ ಖಾಮಿನೈ ರವಿವಾರ ಎಚ್ಚರಿಸಿದ್ದರು.
ಬಾಂಗ್ಲಾ: ಪದಚ್ಯುತ ಪ್ರಧಾನಿ ಶೇಖ್ ಹಸೀನಾಗೆ 10 ವರ್ಷ ಜೈಲುಶಿಕ್ಷೆ
ಢಾಕ: ಸರ್ಕಾರಿ ವಸತಿ ಯೋಜನೆಯಲ್ಲಿ ಭೂಮಿ ಹಂಚಿಕೆಯಲ್ಲಿನ ಅಕ್ರಮಗಳಿಗೆ ಸಂಬಂಧಿಸಿದ ಎರಡು ಪ್ರತ್ಯೇಕ ಭ್ರಷ್ಟಾಚಾರ ಪ್ರಕರಣಗಳಲ್ಲಿ ಪದಚ್ಯುತ ಪ್ರಧಾನಿ ಶೇಖ್ ಹಸೀನಾಗೆ ಬಾಂಗ್ಲಾದೇಶದ ನ್ಯಾಯಾಲಯ ಸೋಮವಾರ 10 ವರ್ಷ ಜೈಲುಶಿಕ್ಷೆ ವಿಧಿಸಿದೆ. ಶೇಖ್ ಹಸೀನಾಗೆ ಪ್ರತೀ ಪ್ರಕರಣಗಳಲ್ಲಿ ಐದು ವರ್ಷದಂತೆ ಒಟ್ಟು 10 ವರ್ಷ ಜೈಲುಶಿಕ್ಷೆ ವಿಧಿಸಲಾಗಿದೆ ಎಂದು ಸರ್ಕಾರಿ ಸ್ವಾಮ್ಯದ ಬಿಎಸ್ಎಸ್ ಸುದ್ದಿಸಂಸ್ಥೆ ವರದಿ ಮಾಡಿದೆ. ಇದೇ ಪ್ರಕರಣಗಳಲ್ಲಿ ಹಸೀನಾ ಅವರ ಸೋದರಳಿಯ ರದ್ವಾನ್ ಮುಜಿಬ್ ಸಿದ್ದಿಕ್, ಸೋದರ ಸೊಸೆ ಅಜ್ಮಿನಾ ಸಿದ್ದಿಕ್ಗೆ ಒಟ್ಟು 7 ವರ್ಷ ಜೈಲುಶಿಕ್ಷೆ, ಸೋದರ ಸೊಸೆ, ಬ್ರಿಟನ್ ಸಂಸದೆ ಟುಲಿಪ್ ಸಿದ್ದಿಕ್ಗೆ ಒಟ್ಟು 4 ವರ್ಷ ಜೈಲು ಶಿಕ್ಷೆ ವಿಧಿಸಿ ಢಾಕಾದ ವಿಶೇಷ ನ್ಯಾಯಾಲಯ ತೀರ್ಪು ನೀಡಿದೆ. ಬಾಂಗ್ಲಾದೇಶದಲ್ಲಿ ಪ್ರತಿಭಟನೆ ವ್ಯಾಪಕಗೊಳ್ಳುತ್ತಿದ್ದಂತೆಯೇ ಕಳೆದ ವರ್ಷದ ಆಗಸ್ಟ್ 5ರಂದು ಭಾರತಕ್ಕೆ ಪಲಾಯನ ಮಾಡಿದ್ದ ಹಸೀನಾರನ್ನು ʼದೇಶಭ್ರಷ್ಟೆ' ಎಂದು ಈ ಹಿಂದೆ ನ್ಯಾಯಾಲಯ ಘೋಷಿಸಿತ್ತು.
ಕೊಪ್ಪಳ | ‘ಪೊಲೀಸ್ ಕೆಲಸಕ್ಕಿಂತ ಎಗ್ ರೈಸ್ ಮಾರೋದೇ ಮೇಲು’
ವಾಟ್ಸ್ ಆ್ಯಪ್ ಸ್ಟೇಟಸ್ ಮೂಲಕ ಅಸಮಾಧಾನ ಹೊರಹಾಕಿದ ಕೊಪ್ಪಳದ ಕಾನ್ಸ್ಟೇಬಲ್
ಬೆಂಗಳೂರು : ಭ್ರಷ್ಟಾಚಾರದಲ್ಲಿ ಭಾಗಿಯಾಗಿರುವ ಮತ್ತು ಸಂವಿಧಾನಕ್ಕೆ ಅಪಚಾರ ಎಸಗಿರುವ ಆಧಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೇರಿದಂತೆ 51 ಜನರನ್ನು ಅವರ ಹುದ್ದೆಗಳಿಂದ ವಜಾಗೊಳಿಸಿ ಸೂಕ್ತ ತನಿಖೆಗೆ ಆದೇಶಿಸಬೇಕು ಎಂದು ಕೋರಿ ವ್ಯಕ್ತಿಯೊಬ್ಬರು ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ. ನೇಲೋಗಿಯ ‘ಭ್ರಷ್ಟಾಚಾರ ವಿರೋಧ ಪಕ್ಷ’ದ ರಾಷ್ಟ್ರೀಯ ಅಧ್ಯಕ್ಷ ಕಲ್ಲಾಲಿಂಗ ಈ. ಹೂಗಾರ ಎಂಬುವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ, ಈ ಅರ್ಜಿಯು ವಿಚಾರಣಾ ಅರ್ಹತೆ (ಮೆರಿಟ್) ಹೊಂದಿಲ್ಲದಿರುವ ಕಾರಣ ವಜಾಗೊಳಿಸಲಾಗುತ್ತಿದೆ. ಅರ್ಜಿದಾರರಿಗೆ 10 ಲಕ್ಷ ರೂ. ದಂಡ ವಿಧಿಸಬೇಕಿತ್ತು. ಆದರೆ, ಅರ್ಜಿದಾರರು ಕೆಪಿಟಿಸಿಎಲ್ (ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ)ನಿಂದ ವಜಾಗೊಂಡ ನೌಕರರಾಗಿದ್ದಾರೆ. ಆದ ಕಾರಣ ದಂಡ ವಿಧಿಸದೇ ಸುಮ್ಮನೇ ಬಿಡುತ್ತಿರುವುದಾಗಿ ಹೇಳಿತು. ಅರ್ಜಿದಾರರ ಮನವಿ: ಚುನಾವಣಾ ಆಯೋಗವನ್ನು ದುರುಪಯೋಗಪಡಿಸುಕೊಳ್ಳುವ ಮೂಲಕ ಸಂವಿಧಾನಕ್ಕೆ ಅವಮಾನಿಸಿರುವ ಮತ್ತು ಭ್ರಷ್ಟಾಚಾರದಲ್ಲಿ ಭಾಗಿಯಾಗಿರುವ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್, ಜೇವರ್ಗಿ ಕ್ಷೇತ್ರದ ಶಾಸಕ ಡಾ.ಅಜಯ್ ಸಿಂಗ್, ಕಲಬುರಗಿ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ, ಕೆಪಿಟಿಸಿಎಲ್ ಮತ್ತು ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳೂ ಸೇರಿ ಒಟ್ಟು 51 ಜನರನ್ನು ಅವರ ಹುದ್ದೆಗಳಿಂದ ತಕ್ಷಣವೇ ವಜಾಗೊಳಿಸಬೇಕು. ಅವರ ವಿರುದ್ಧ ಸಿಬಿಐ, ಎನ್ಐಎ, ಚುನಾವಣಾ ಆಯೋಗ ಮತ್ತು ಆದಾಯ ತೆರಿಗೆ ಇಲಾಖೆಯಿಂದ ತುರ್ತು ತನಿಖೆಗೆ ನಿರ್ದೇಶಿಸಬೇಕು ಎಂದು ಅರ್ಜಿದಾರರು ಮನವಿ ಮಾಡಿದ್ದರು.
ದುಬೈಯಲ್ಲಿ ಸಿಲುಕಿದ ಜಾರ್ಖಂಡ್ನ ಕಾರ್ಮಿಕರು; ನೆರವು ನೀಡುವಂತೆ ವೀಡಿಯೊದಲ್ಲಿ ಕೋರಿಕೆ
ರಾಂಚಿ: ಜಾರ್ಖಂಡ್ನ ಗಿರಿಡಿಹ, ಹಝಾರಿಬಾಗ್ ಹಾಗೂ ಬೊಕಾರೊ ಜಿಲ್ಲೆಗಳಿಂದ ಉದ್ಯೋಗಕ್ಕಾಗಿ ತೆರಳಿದ್ದ 14 ವಲಸೆ ಕಾರ್ಮಿಕರು ಕಳೆದ ಕೆಲವು ತಿಂಗಳುಗಳಿಂದ ದುಬೈಯಲ್ಲಿ ಸಿಲುಕಿಕೊಂಡಿದ್ದಾರೆ. ತಮ್ಮ ಕುಟುಂಬದ ಸದಸ್ಯರಿಗೆ ವೀಡಿಯೊ ಸಂದೇಶ ಕಳುಹಿಸಿರುವ ಅವರು, ಕೂಡಲೇ ನೆರವು ನೀಡುವಂತೆ ಕೇಂದ್ರ ಹಾಗೂ ರಾಜ್ಯ ಸರಕಾರವನ್ನು ಕೋರಿದ್ದಾರೆ. ದುಬೈಯಲ್ಲಿ ಸಿಲುಕಿಕೊಂಡ ಕಾರ್ಮಿಕರು ವೀಡಿಯೊ ಸಂದೇಶದ ಮೂಲಕ ತಮ್ಮ ಸಂಕಷ್ಟಗಳನ್ನು ಹಂಚಿಕೊಡಿದ್ದಾರೆ ಹಾಗೂ ನೆರವು ನೀಡುವಂತೆ ಕೋರಿದ್ದಾರೆ. ವಲಸೆ ಕಾರ್ಮಿಕರಿಗೆ ಸಂಬಂಧಿಸಿದ ಸಮಸ್ಯೆಗಳ ಕುರಿತು ಕಾರ್ಯ ನಿರ್ವಹಿಸುತ್ತಿರುವ ಸಾಮಾಜಿಕ ಹೋರಾಟಗಾರ ಸಿಕಂದರ್ ಅಲಿ ಅವರಿಗೆ ಕೂಡ ಅವರು ವೀಡಿಯೊ ಕಳುಹಿಸಿದ್ದಾರೆ. ಅಲಿ ಅನಂತರ ಈ ವೀಡಿಯೊವನ್ನು ಮಾಧ್ಯಮದೊಂದಿಗೆ ಹಂಚಿಕೊಂಡಿದ್ದಾರೆ. ವೀಡಿಯೊ ಸಂದೇಶದಲ್ಲಿ ಕಾರ್ಮಿಕರು ತಮ್ಮನ್ನು ನೇಮಿಸಿಕೊಂಡ ಕಂಪೆನಿ ನಿಗದಿತ ಅವಧಿಗಿಂತ ಹೆಚ್ಚು ಸಮಯ ಕೆಲಸ ಮಾಡಲು ಒತ್ತಾಯಿಸುತ್ತಿದೆ. ತಮಗೆ ವೇತನ ಪಾವತಿಸುತ್ತಿಲ್ಲ ಎಂದು ಆರೋಪಿಸಿದ್ದಾರೆ. ಕಳೆದ ಮೂರು ತಿಂಗಳಿಂದ ವೇತನ ಪಾವತಿಸದೇ ಇರುವುದರಿಂದ, ಆಹಾರ, ವಸತಿ ಹಾಗೂ ಇತರ ಮೂಲಭೂತ ಅವಶ್ಯಕತೆಗಳನ್ನು ಈಡೇರಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಕಾರ್ಮಿಕರು ವೀಡಿಯೊದಲ್ಲಿ ಹೇಳಿದ್ದಾರೆ.
ಭಾರತೀಯ ಮೂಲದ ಪರಿಸರ ವಿಜ್ಞಾನಿ ರಾಮನಾಥನ್ಗೆ ಕ್ರಾಫರ್ಡ್ ಪ್ರಶಸ್ತಿ
ವಾಷಿಂಗ್ಟನ್: ಭಾರತೀಯ ಮೂಲದ ಹವಾಮಾನ ವಿಜ್ಞಾನಿ ವೀರಭದ್ರನ್ ರಾಮನಾಥನ್ ಅವರಿಗೆ ರಾಯಲ್ ಸ್ವೀಡಿಷ್ ಅಕಾಡೆಮಿ ಆಫ್ ಸೈನ್ಸ್ನಿಂದ ಭೂವಿಜ್ಞಾನದಲ್ಲಿ 2026ರ ಕ್ರಾಫರ್ಡ್ ಪ್ರಶಸ್ತಿಯನ್ನು ನೀಡಲಾಗಿದೆ. ಭೂವಿಜ್ಞಾನದ ನೊಬೆಲ್ ಎಂದು ಗುರುತಿಸಲಾಗುವ ಕ್ರಾಫರ್ಡ್ ಪ್ರಶಸ್ತಿಯು ರಾಮನಾಥನ್ ಅವರು ಎರಡು ದಶಕಗಳಿಂದ ಜಾಗತಿಕ ತಾಪಮಾನ ಏರಿಕೆ, ಕಂದು ಮೋಡಗಳ ಬಗ್ಗೆ ನಡೆಸಿದ ಸಂಶೋಧನೆಯನ್ನು ಗುರುತಿಸಿದೆ. 82 ವರ್ಷದ ರಾಮನಾಥನ್ ಮದುರೈಯಲ್ಲಿ ಜನಿಸಿದ್ದು ಅಣ್ಣಾಮಲೈ ವಿವಿ ಮತ್ತು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ನಲ್ಲಿ ಪದವಿ ಪಡೆದಿದ್ದಾರೆ. ಪ್ರಸ್ತುತ ಕ್ಯಾಲಿಫೋರ್ನಿಯಾ ವಿವಿಯಲ್ಲಿ ಗೌರವ ಪ್ರೊಫೆಸರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಕಲಬುರಗಿ | ಅಂತರರಾಜ್ಯ ಇರಾನಿ ಗ್ಯಾಂಗ್ ಬಂಧನ : 27.30 ಲಕ್ಷ ರೂ. ಮೌಲ್ಯದ ಸ್ವತ್ತು ವಶ
ಕಲಬುರಗಿ : ದೇಶದ ವಿವಿಧೆಡೆ ದರೋಡೆ ನಡೆಸಲು ಸಂಚು ರೂಪಿಸುತ್ತಿದ್ದ 7 ಮಂದಿಯನ್ನೊಳಗೊಂಡ ಅಂತರರಾಜ್ಯ ಕುಖ್ಯಾತ ಇರಾನಿ ಗ್ಯಾಂಗ್ ಅನ್ನು ನಗರ ಪೊಲೀಸರು ಬಂಧಿಸಿದ್ದು, ಅವರಿಂದ 27.30 ಲಕ್ಷ ರೂ. ಮೌಲ್ಯದ ವಾಹನಗಳು, ಬಂಗಾರದ ಆಭರಣಗಳು ಹಾಗೂ ಮಾರಕಾಸ್ತ್ರಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಬಂಧಿತರನ್ನು ಮಹಾರಾಷ್ಟ್ರದ ಬೀಡ್ ಜಿಲ್ಲೆಯ ಶಿವಾಜಿನಗರದ ನಿವಾಸಿಗಳಾದ ಜಹೀರ ಅಬ್ಬಾಸ್ ಅಲಿ, ಅಲಿ ರಝಾಕ್ ಬೇಗ್, ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಅಂಬೆವಿಲಿ, ಇಂದಿರಾನಗರದ ಲಾಲ ಸಮೀರ್ ಶೇಖ್, ಮಧ್ಯಪ್ರದೇಶದ ಭೂಪಾಲ ನಗರದ ಖಾಸಿಂ ಜೋಜೋ ಜಾಫ್ರಿ, ಮಹಾರಾಷ್ಟ್ರದ ಬೀಡ್ ಜಿಲ್ಲೆಯ ಶಿವಾಜಿನಗರ ಪರ್ಲಿ ನಿವಾಸಿ ಅಲಿಮಿರ್ಜಾ ದರಬೇಶ, ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಅಂಬೆವಿಲಿಯ ಪಟೇಲ್ ಕಾಲೋನಿ ನಿವಾಸಿ ಜಾಫರ ಅಲಿ ಸೈಯದ್ ಹಾಗೂ ಮಹಾರಾಷ್ಟ್ರದ ಬೆವೆಲಿಯ ನಿವಾಸಿ ಜಾಫರ ಆಝಾಮ್ ಸೈಯದ್ ಎಂದು ಗುರುತಿಸಲಾಗಿದೆ. ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಗರ ಪೊಲೀಸ್ ಆಯುಕ್ತ ಡಾ. ಶರಣಪ್ಪ ಎಸ್.ಡಿ, ಜ.23ರಂದು ಬೆಳಗಿನ ಜಾವ ಸಬ್ ಅರ್ಬನ್ ಪೊಲೀಸ್ ಠಾಣಾ ವ್ಯಾಪ್ತಿಯ ತಾವರಗೇರಾ ಕ್ರಾಸ್ ಸಮೀಪ ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಮಾರಕಾಸ್ತ್ರಗಳೊಂದಿಗೆ ವಾಹನ ಸವಾರರನ್ನು ತಡೆದು ದರೋಡೆ ನಡೆಸಲು ಯತ್ನಿಸುತ್ತಿರುವ ಕುರಿತು ಖಚಿತ ಮಾಹಿತಿ ಲಭಿಸಿತ್ತು. ತಕ್ಷಣ ತನಿಖಾ ತಂಡ ರಚಿಸಿ ಕಾರ್ಯಾಚರಣೆ ನಡೆಸಿದ ಪರಿಣಾಮ ಗ್ಯಾಂಗ್ ಬಂಧನಕ್ಕೆ ಒಳಪಟ್ಟಿದೆ ಎಂದು ತಿಳಿಸಿದರು. ಪೊಲೀಸ್ ಕಸ್ಟಡಿಯಲ್ಲಿ ನಡೆದ ವಿಚಾರಣೆಯಲ್ಲಿ, ಆರೋಪಿತರು ತೆಲಂಗಾಣದ ಮಹಬೂಬ್ನಗರ ಹಾಗೂ ಏವಲಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪೊಲೀಸರಂತೆ ನಟಿಸಿ ಬಂಗಾರದ ಆಭರಣಗಳನ್ನು ದೋಚಿರುವುದನ್ನು ಒಪ್ಪಿಕೊಂಡಿದ್ದಾರೆ ಎಂದು ಹೇಳಿದರು. ಆರೋಪಿಗಳಿಂದ 90 ಗ್ರಾಂ ಬಂಗಾರದ ಆಭರಣಗಳು (ಅಂದಾಜು ಮೌಲ್ಯ 15.30 ಲಕ್ಷ ರೂ.), ಟಾಟಾ ಹೆಕ್ಸಾ ಕಾರು, ಟಿವಿಎಸ್ ಅಪಾಚಿ 160, ಹೋಂಡಾ ಹಾರ್ನೆಟ್ ಬೈಕ್, ರಾಡು, ತಲವಾರು, ಖಾರದ ಪುಡಿ, ಕಪ್ಪು ಬಟ್ಟೆಗಳು ಸೇರಿದಂತೆ ಒಟ್ಟು 27.30 ಲಕ್ಷ ರೂ. ಮೌಲ್ಯದ ಸ್ವತ್ತುಗಳನ್ನು ವಶಪಡಿಸಿಕೊಂಡು, ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದರು. ಪ್ರಮುಖ ಆರೋಪಿ ಜಹೀರ ಅಬ್ಬಾಸ್ ಅಲಿ ವಿರುದ್ಧ ಉತ್ತರ ಪ್ರದೇಶದ ಸಹಾರನ್ಪುರದಲ್ಲಿ ಪ್ರಕರಣ ದಾಖಲಾಗಿದ್ದು, ಈತನ ಮಾಹಿತಿ ನೀಡಿದವರಿಗೆ 15 ಸಾವಿರ ರೂ. ಬಹುಮಾನ ಘೋಷಿಸಲಾಗಿತ್ತು. ಅಲ್ಲದೆ, ನಾಸಿಕ್ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಕಳುವಾದ ಮೋಟಾರ್ಸೈಕಲ್ ಕೂಡ ವಶಪಡಿಸಿಕೊಳ್ಳಲಾಗಿದೆ. ಬಂಧಿತರ ವಿರುದ್ಧ ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ಮಧ್ಯಪ್ರದೇಶ, ಮಹಾರಾಷ್ಟ್ರ, ತೆಲಂಗಾಣ ಮತ್ತು ಕರ್ನಾಟಕದ ವಿವಿಧ ಠಾಣೆಗಳಲ್ಲಿ ನಕಲಿ ಪೊಲೀಸ್ ವೇಷಧಾರಣೆ, ವಂಚನೆ, ಸುಲಿಗೆ ಹಾಗೂ ದರೋಡೆ ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸ್ ಆಯುಕ್ತರು ಮಾಹಿತಿ ನೀಡಿದರು. ಸುದ್ದಿಗೋಷ್ಠಿಯಲ್ಲಿ ಡಿಸಿಪಿ ಪ್ರವೀಣ ನಾಯಕ್ (ಅಪರಾಧ & ಸಂಚಾರ), ಸಬ್ ಅರ್ಬನ್ ಉಪವಿಭಾಗದ ಎಸಿಪಿ ಬಸವೇಶ್ವರ, ಪಿಐ ನಟರಾಜ ಲಾಡೆ ಸೇರಿದಂತೆ ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು.
Gruhalakshmi Scheme: ಗೃಹಲಕ್ಷ್ಮಿ ಯೋಜನೆಯು ರಾಜ್ಯ ಸರ್ಕಾರ ಜಾರಿಗೆ ತಂದಿರುವ ಪಂಚ ಗ್ಯಾರಂಟಿಗಳಲ್ಲಿ ಒಂದಾಗಿದೆ. ಇದರಡಿಯಲ್ಲಿ ಪ್ರತಿ ತಿಂಗಳು ಪ್ರತಿ ಮನೆ ಯಜಮಾನಿ ಬ್ಯಾಂಕ್ ಖಾತೆಗೆ 2,000 ರೂಪಾಯಿ ಹಣ ಹಾಕಲಾಗುತ್ತದೆ. ಇದೀಗ ಬಾಕಿ ಉಳಿದಿದ್ದ ಕಂತುಗಳ ಬಿಡುಗಡೆ ಆಗಿದ್ದು, ಇದನ್ನು ಯಾವಾಗ ಖಾತೆಗೆ ಹಾಕಲಾಗುತ್ತದೆ ಎನ್ನುವ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಬಿಗ್ ಅಪ್ಡೇಟ್
ಟಿ-20 ಕ್ರಿಕೆಟ್ ವಿಶ್ವಕಪ್ನಲ್ಲಿ ಭಾರತ-ಪಾಕಿಸ್ತಾನ ಪಂದ್ಯ ನಡೆಯದಿದ್ದರೆ ನಷ್ಟ ಎಷ್ಟು?
ಹೊಸದಿಲ್ಲಿ: ಐಸಿಸಿ ಪಂದ್ಯಾವಳಿಗಳಲ್ಲಿ ಭಾರತ-ಪಾಕಿಸ್ತಾನ ಪಂದ್ಯವೊಂದು 2,200 ಕೋಟಿ ರೂಪಾಯಿಗೂ ಅಧಿಕ ಮೊತ್ತದ ಆದಾಯವನ್ನು ಗಳಿಸುತ್ತದೆ. ಆದರೆ, ಮುಂಬರುವ ಐಸಿಸಿ ಟಿ20 ವಿಶ್ವಕಪ್ನಲ್ಲಿ ಈ ಪಂದ್ಯಗಳ ಅನುಪಸ್ಥಿತಿಯು ದೊಡ್ಡ ನಷ್ಟಕ್ಕೆ ಕಾರಣವಾಗಬಹುದು ಎಂಬ ಭೀತಿಯು ಸಂಘಟಕರನ್ನು ಕಾಡುತ್ತಿದೆ ಎಂದು ವರದಿಯಾಗಿದೆ. ನೆರೆಹೊರೆಯ ದೇಶಗಳ ನಡುವಿನ ರಾಜಕೀಯ ಸಂಬಂಧ ಹದಗೆಟ್ಟಿರುವುದರಿಂದ, ಉಭಯ ದೇಶಗಳ ಕ್ರಿಕೆಟ್ ತಂಡಗಳು ಬಹುದೇಶಗಳು ಭಾಗವಹಿಸುವ ಪಂದ್ಯಾವಳಿಗಳಲ್ಲಿ ಮಾತ್ರ ಮುಖಾಮುಖಿಯಾಗುತ್ತವೆ. ಭಾರತ-ಪಾಕ್ ಪಂದ್ಯಗಳು ವಾಣಿಜ್ಯಾತ್ಮಕವಾಗಿ ಎಷ್ಟು ಪ್ರಭಾವಶಾಲಿಯೆಂದರೆ, ಜಾಗತಿಕ ಪಂದ್ಯಾವಳಿಗಳಲ್ಲಿ ಅಂತರ್ರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ)ಯು ಈ ತಂಡಗಳನ್ನು ಒಂದೇ ಗುಂಪಿನಲ್ಲಿ ಆಡಿಸುತ್ತದೆ. ಫೆಬ್ರವರಿ 15ರಂದು ಕೊಲಂಬೊದಲ್ಲಿ ಭಾರತದ ವಿರುದ್ಧ ನಡೆಯಲು ನಿಗದಿಯಾಗಿರುವ ಪಾಕಿಸ್ತಾನದ ಪಂದ್ಯವನ್ನು ಬಹಿಷ್ಕರಿಸುವುದಾಗಿ ಪಾಕಿಸ್ತಾನ ಸರಕಾರ ರವಿವಾರ ಘೋಷಿಸಿದೆ. ತನ್ನ ಈ ನಿರ್ಧಾರಕ್ಕೆ ಪಾಕಿಸ್ತಾನ ಅಂಟಿಕೊಂಡರೆ, ಅದು ಕೋಟ್ಯಂತರ ರೂಪಾಯಿ ಹಣವನ್ನು ಕಳೆದುಕೊಳ್ಳುತ್ತದೆ. ಅದೇ ವೇಳೆ, ಈ ಪಂದ್ಯ ನಡೆಯದಿದ್ದರೆ ಐಸಿಸಿ ಮತ್ತು ಭಾರತದ ಮಾಧ್ಯಮ ಹಕ್ಕುಗಳನ್ನು ಹೊಂದಿರುವ ಜಿಯೋಸ್ಟಾರ್ ಮೇಲೂ ಗಣನೀಯ ಪ್ರಮಾಣದ ಆರ್ಥಿಕ ಹೊಡೆತ ಬೀಳುತ್ತದೆ. ಜಿಯೋಸ್ಟಾರ್ 200ರಿಂದ 250 ಕೋಟಿ ರೂ. ಜಾಹೀರಾತು ನಷ್ಟವನ್ನು ಅನುಭವಿಸಬಹುದಾಗಿದೆ. ಭಾರತ-ಪಾಕ್ ಐಸಿಸಿ ಪಂದ್ಯಗಳ ವೇಳೆ 10 ಸೆಕೆಂಡ್ಗಳ ಒಂದು ಜಾಹೀರಾತಿನ ಬೆಲೆ ಸುಮಾರು 40 ಲಕ್ಷ ರೂ.ಯಷ್ಟು ಆಗುತ್ತದೆ. ಈ ವಾಕೋವರ್ನಿಂದ ಭಾರತಕ್ಕೆ ಪೂರ್ಣ ಅಂಕಗಳು ಸಿಗುತ್ತದೆಯಾದರೂ, ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಮೇಲೆ ಆರ್ಥಿಕ ದಂಡವನ್ನು ವಿಧಿಸುವ ಅಧಿಕಾರ ಐಸಿಸಿಗೆ ಈಗಲೂ ಇದೆ. ಭಾರತ-ಪಾಕ್ ಪಂದ್ಯ ರದ್ದತಿಯ ಪರಿಣಾಮಗಳು ಭಾರತ-ಪಾಕಿಸ್ತಾನ ಐಸಿಸಿ ಪಂದ್ಯವೊಂದು ತರುವ ಆದಾಯ : 2,200 ಕೋಟಿ ರೂ.ಗೂ ಅಧಿಕ ನೇರಪ್ರಸಾರಕರ ಜಾಹೀರಾತು ನಷ್ಟ : ಸುಮಾರು 200- 250 ಕೋಟಿ ರೂ. ಪಂದ್ಯದ ವೇಳೆ 10 ಸೆಕೆಂಡ್ ಜಾಹೀರಾತೊಂದರ ದರ : ಸುಮಾರು 40 ಲಕ್ಷ ರೂ. ಜಾಗತಿಕ ವೀಕ್ಷಕರ ಸಂಖ್ಯೆ : 100 ಕೋಟಿಗೂ ಅಧಿಕ ಪಾಕ್ ನಿರ್ಧಾರವು ಕ್ರೀಡೆಯ ಆಶಯವನ್ನು ಕಡೆಗಣಿಸುತ್ತದೆ: ಐಸಿಸಿ ಐಸಿಸಿ ಪಂದ್ಯಾವಳಿಗಳಲ್ಲಿ ಆಯ್ದ ಪಾಲ್ಗೊಳ್ಳುವಿಕೆಯು ಕ್ರೀಡೆಯ ಆಶಯಗಳನ್ನು ಕಡೆಗಣಿಸುತ್ತದೆ ಎಂದು ಅಂತರ್ರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಸೋಮವಾರ ಹೇಳಿದೆ. ಭಾರತದ ವಿರುದ್ಧದ ಪಂದ್ಯವನ್ನು ಬಹಿಷ್ಕರಿಸುವ ಪಾಕಿಸ್ತಾನ ಕ್ರಿಕೆಟ್ ತಂಡದ ನಿರ್ಧಾರಕ್ಕೆ ಐಸಿಸಿ ಈ ಪ್ರತಿಕ್ರಿಯೆ ನೀಡಿದೆ. ‘‘ಈ ಆಯ್ದ ಪಾಲ್ಗೊಳ್ಳುವಿಕೆಯು ಜಾಗತಿಕ ಕ್ರೀಡಾ ಕೂಟವೊಂದರ ಪ್ರಾಥಮಿಕ ಆಶಯಕ್ಕೆ ಹೊಂದಿಕೊಳ್ಳುವುದಿಲ್ಲ. ಇಂಥ ಕ್ರೀಡಾಕೂಟಗಳಲ್ಲಿ ಎಲ್ಲಾ ಅರ್ಹ ತಂಡಗಳು ವೇಳಾಪಟ್ಟಿಯಂತೆ ಸಮಾನ ನೆಲೆಯಲ್ಲಿ ಸ್ಪರ್ಧಿಸಬೇಕೆಂದು ನಿರೀಕ್ಷಿಸಲಾಗುತ್ತದೆ’’ ಎಂದು ಅದು ಹೇಳಿದೆ. ‘‘ಕ್ರೀಡಾ ನೈತಿಕತೆ, ಸ್ಪರ್ಧಾತ್ಮಕತೆ, ಸ್ಥಿರತೆ ಮತ್ತು ನ್ಯಾಯಪರತೆಯ ಆಧಾರದಲ್ಲಿ ಐಸಿಸಿ ಪಂದ್ಯಾವಳಿಗಳನ್ನು ರೂಪಿಸಲಾಗಿದೆ. ಆಯ್ದ ಪಾಲ್ಗೊಳ್ಳುವಿಕೆಯು ಸ್ಪರ್ಧೆಗಳ ಆಶಯ ಮತ್ತು ಪಾವಿತ್ರ್ಯತೆಯನ್ನು ಕಡೆಗಣಿಸುತ್ತದೆ’’ ಎಂದು ಅದು ಅಭಿಪ್ರಾಯಪಟ್ಟಿದೆ.
ಕೌಶಲ ಅಭಿವೃದ್ಧಿ ಪ್ರಕರಣ: ಚಂದ್ರಬಾಬು ನಾಯ್ಡುಗೆ ಈಡಿ ಕ್ಲೀನ್ ಚಿಟ್
ಅಮರಾವತಿ: ಕೌಶಲ್ಯ ಅಭಿವೃದ್ಧಿ ನಿಗಮ ಪ್ರಕರಣದಲ್ಲಿ ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರಿಗೆ ಜಾರಿ ನಿರ್ದೇಶನಾಲಯ (ಈಡಿ) ಕ್ಲೀನ್ ಚಿಟ್ ನೀಡಿದೆ. ಅಪರಾಧದಲ್ಲಿ ಚಂದ್ರಬಾಬು ನಾಯ್ಡು ಅವರ ಪ್ರತ್ಯಕ್ಷ ಅಥವಾ ಪರೋಕ್ಷ ಪಾತ್ರವಿಲ್ಲ ಎಂದು ಅದು ಹೇಳಿದೆ. ವಿಶಾಖಪಟ್ಟಣಂನ ವಿಶೇಷ ಪಿಎಂಎಲ್ಎ ನ್ಯಾಯಾಲಯದ ಮುಂದೆ ಜನವರಿ 31ರಂದು ಸಲ್ಲಿಸಲಾದ ಪೂರಕ ಆರೋಪ ಪಟ್ಟಿಯಲ್ಲಿ ಜಾರಿ ನಿರ್ದೇಶನಾಲಯ, ಹಣ ಅಕ್ರಮ ವರ್ಗಾವಣೆಯೊಂದಿಗೆ ನಾಯ್ಡು ಅವರು ನಂಟು ಹೊಂದಿರುವ ಬಗ್ಗೆ ಯಾವುದೇ ಪುರಾವೆ ಇಲ್ಲ. ಈ ಪ್ರಕರಣದಲ್ಲಿ ಅವರನ್ನು ಆರೋಪಿ ಎಂದು ಹೆಸರಿಸಿಲ್ಲ ಎಂದು ಹೇಳಿದೆ. ಕೌಶಲ ಅಭಿವೃದ್ಧಿ ಯೋಜನೆಗೆ ಸಂಬಂಧಿಸಿದ ಭ್ರಷ್ಟಾಚಾರದಲ್ಲಿ ನಾಯ್ಡು ಅವರು ಭಾಗಿಯಾಗಿಲ್ಲ ಎಂದು ಈ ಹಿಂದೆ ಆಂಧ್ರಪ್ರದೇಶದ ಅಪರಾಧ ತನಿಖಾ ಇಲಾಖೆ (ಎಪಿ ಸಿಐಡಿ) ಕೂಡ ದೃಢಪಡಿಸಿತ್ತು. ವಿಜಯವಾಡ ಎಸಿಬಿ ನ್ಯಾಯಾಲಯ ಆರೋಪಗಳನ್ನು ಉಳಿಸಿಕೊಳ್ಳಲು ಯಾವುದೇ ಆಧಾರಗಳಿಲ್ಲ ಎಂದು ಪ್ರಕರಣವನ್ನು ಹಿಂಪಡೆಯುಲು ಅನುಮತಿ ನೀಡುವಾಗ ಸ್ಪಷ್ಟಪಡಿಸಿತ್ತು. ಕೌಶಲ್ಯ ಅಭಿವೃದ್ಧಿ ನಿಗಮ ಪ್ರಕರಣ 2023 ಸೆಪ್ಟಂಬರ್ನಲ್ಲಿ ನಾಯ್ಡು ಅವರ ಬಂಧನಕ್ಕೆ ಕಾರಣವಾಗಿತ್ತು. 2023 ಅಕ್ಟೋಬರ್ನಲ್ಲಿ ಜಾಮೀನು ಸಿಗುವ ವರೆಗೆ ಅವರು 53 ದಿನಗಳ ಕಾಲ ರಾಜಮುಂಡ್ರಿ ಕೇಂದ್ರ ಕಾರಾಗೃಹದಲ್ಲಿ ಕಳೆದಿದ್ದರು. ಈ ಪ್ರಕರಣ ಆಂಧ್ರಪ್ರದೇಶ ರಾಜ್ಯ ಕೌಶಲ್ಯ ಅಭಿವೃದ್ಧಿ ನಿಗಮ (ಎಪಿಎಸ್ಎಸ್ಡಿಸಿ)ದ ಹಣವನ್ನು ದುರುಪಯೋಗಪಡಿಸಿಕೊಂಡ ಆರೋಪಕ್ಕೆ ಸಂಬಂಧಿಸಿದೆ. ಇದರಿಂದ ರಾಜ್ಯ ಸರಕಾರಕ್ಕೆ 300 ಕೋಟಿ ರೂ. ಅಧಿಕ ನಷ್ಟ ಉಂಟಾಗಿದೆ ಎಂದು ಆರೋಪಿಸಲಾಗಿದೆ.
ಮತಾಂತರ ವಿರೋಧಿ ಕಾಯ್ದೆ ಪ್ರಶ್ನಿಸಿ ಪಿಐಎಲ್: ಕೇಂದ್ರ, ರಾಜ್ಯ ಸರಕಾರಗಳ ಪ್ರತಿಕ್ರಿಯೆ ಕೇಳಿದ ಸುಪ್ರೀಂ ಕೋರ್ಟ್
ಹೊಸದಿಲ್ಲಿ: ಮತಾಂತರ ವಿರೋಧಿ ಕಾನೂನುಗಳನ್ನು ಪ್ರಶ್ನಿಸಿ ನ್ಯಾಷನಲ್ ಕೌನ್ಸಿಲ್ ಆಫ್ ಚರ್ಚಸ್ ಇನ್ ಇಂಡಿಯಾ (ಎನ್ಸಿಸಿಐ) ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಕುರಿತಂತೆ ಸುಪ್ರೀಂ ಕೋರ್ಟ್ ಸೋಮವಾರ ಕೇಂದ್ರ ಸರಕಾರ ಹಾಗೂ ರಾಜಸ್ಥಾನ, ಅರುಣಾಚಲ ಪ್ರದೇಶ ಸೇರಿದಂತೆ 12 ರಾಜ್ಯಗಳ ಪ್ರತಿಕ್ರಿಯೆ ಕೇಳಿದೆ. ಈ ರಾಜ್ಯಗಳಲ್ಲಿ ಈ ಕಾನೂನುಗಳಿಗೆ ತಡೆ ನೀಡುವಂತೆ ಕೂಡ ನ್ಯಾಷನಲ್ ಕೌನ್ಸಿಲ್ ಆಫ್ ಚರ್ಚಸ್ ಇನ್ ಇಂಡಿಯಾ (ಎನ್ಸಿಸಿಐ)ವನ್ನು ಪ್ರತಿನಿಧಿಸಿದ ಹಿರಿಯ ನ್ಯಾಯವಾದಿ ಮೀನಾಕ್ಷಿ ಅರೋರಾ ಕೋರಿದ್ದಾರೆ. ಎನ್ಸಿಸಿಐಯ ಪ್ರತಿಪಾದನೆಯನ್ನು ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಹಾಗೂ ನ್ಯಾಯಮೂರ್ತಿ ಜೋಯ್ಮಲ್ಯ ಬಾಗ್ಚಿ ಅವರನ್ನು ಒಳಗೊಂಡ ಪೀಠ ಗಮನಕ್ಕೆ ತೆಗೆದುಕೊಂಡಿತು ಹಾಗೂ ಕೇಂದ್ರ ಸರಕಾರ, 12 ರಾಜ್ಯ ಸರಕಾರಗಳಿಂದ ನಾಲ್ಕು ವಾರಗಳ ಒಳಗೆ ಪ್ರತಿಕ್ರಿಯೆ ಸಲ್ಲಿಸುವಂತೆ ಸೂಚಿಸಿತು. ಹೊಸ ಅರ್ಜಿಯನ್ನು ಬಾಕಿ ಉಳಿದಿರುವ ಅರ್ಜಿಯೊಂದಿಗೆ ಸೇರಿಸುವಂತೆ ಆದೇಶಿಸಿದ ಮುಖ್ಯ ನ್ಯಾಯಮೂರ್ತಿ, ಮೂವರು ಸದಸ್ಯರ ಪೀಠ ಈ ಅರ್ಜಿಗಳನ್ನು ಒಟ್ಟಾಗಿ ಆಲಿಸಲಿದೆ ಎಂದರು. ಕೇಂದ್ರ ಸರಕಾರದ ಪರವಾಗಿ ಹಾಜರಾಗಿದ್ದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ರಾಜ್ಯ ಕಾನೂನನ್ನು ಪ್ರಶ್ನಿಸಿದ ಇದೇ ರೀತಿಯ ಅರ್ಜಿಗಳು ಬಾಕಿ ಇವೆ. ನಮ್ಮ ಪ್ರತಿಕ್ರಿಯೆ ಸಿದ್ಧವಿದೆ. ಶೀಘ್ರದಲ್ಲಿ ಸಲ್ಲಿಸಲಿದ್ದೇವೆ ಎಂದರು.
ಕಲಬುರಗಿ | ಕೇಂದ್ರ ಬಜೆಟ್ ಯುವಜನ–ಕಾರ್ಮಿಕ ವಿರೋಧಿ : ಡಿವೈಎಫ್ಐ ಖಂಡನೆ
ಕಲಬುರಗಿ : ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿರುವ 2026–27ರ ಕೇಂದ್ರ ಬಜೆಟ್ ಯುವಜನ ಮತ್ತು ಕಾರ್ಮಿಕ ವಿರೋಧಿಯಾಗಿದೆ ಎಂದು ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್ (DYFI) ರಾಜ್ಯಾಧ್ಯಕ್ಷೆ ಲವಿತ್ರ ವಸ್ತ್ರದ್ ಆರೋಪಿಸಿದ್ದಾರೆ. ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಜಾಗತಿಕ ಭೌಗೋಳಿಕ ರಾಜಕೀಯ ಪುನರ್ರಚನೆಗಳ ನಡುವೆ ಭಾರತದ ಆರ್ಥಿಕತೆ ನಿರ್ಣಾಯಕ ಘಟ್ಟದಲ್ಲಿದೆ ಎಂದು 2025–26ರ ಆರ್ಥಿಕ ಸಮೀಕ್ಷೆಯೇ ಒಪ್ಪಿಕೊಂಡಿದ್ದರೂ, ದೇಶ ಎದುರಿಸುತ್ತಿರುವ ನಿಜವಾದ ಸಮಸ್ಯೆಗಳಿಗೆ ಬಜೆಟ್ ಸ್ಪಂದಿಸಿಲ್ಲ ಎಂದರು. ಭಾರತವನ್ನು ಆರ್ಥಿಕ ಪ್ರಕ್ಷುಬ್ಧತೆಗೆ ಸಿದ್ಧಪಡಿಸುವ ಬದಲು, ಸರ್ಕಾರವು ಕಾರ್ಪೊರೇಟ್ ಹಿತಾಸಕ್ತಿಗಳನ್ನು ರಕ್ಷಿಸುವ ದಾರಿಯನ್ನು ಆಯ್ಕೆ ಮಾಡಿಕೊಂಡಿದ್ದು, ಅದರ ಪರಿಣಾಮವಾಗಿ ಕಾರ್ಮಿಕರು, ರೈತರು ಹಾಗೂ ನಿರುದ್ಯೋಗಿ ಯುವಕರ ಮೇಲೆ ಬಿಕ್ಕಟ್ಟಿನ ಹೊರೆ ಹೇರಲಾಗಿದೆ ಎಂದು ಟೀಕಿಸಿದರು. ಉದ್ಯೋಗ ಸೃಷ್ಟಿಯ ಕುರಿತು ಬಜೆಟ್ ಸಂಪೂರ್ಣ ಮೌನ ವಹಿಸಿದೆ. ಸಾರ್ವಜನಿಕ ವಲಯದ ಉದ್ಯೋಗ ವಿಸ್ತರಣೆಗೆ ಯಾವುದೇ ಪ್ರಸ್ತಾಪವಿಲ್ಲ. ಉದ್ಯೋಗ ಖಾತರಿ ಯೋಜನೆಗಳನ್ನು ಅರ್ಥಪೂರ್ಣವಾಗಿ ಬಲಪಡಿಸುವ ಕ್ರಮಗಳೂ ಕಾಣಿಸುತ್ತಿಲ್ಲ ಎಂದು ಹೇಳಿದರು. ʼಯುವ ಶಕ್ತಿʼ ಕುರಿತು ಹಣಕಾಸು ಸಚಿವರ ವಾಗ್ಮಿತೆ ಹಾಗೂ 2047ರ ಗುರಿಗಳನ್ನು ಮುಂದಿಟ್ಟುಕೊಂಡು ʼಶಿಕ್ಷಣದಿಂದ ಉದ್ಯೋಗ ಮತ್ತು ಉದ್ಯಮ”ದ ಕುರಿತು ಸ್ಥಾಯಿ ಸಮಿತಿ ರಚಿಸುವ ಪ್ರಸ್ತಾಪವು ವಂಚನೆಯಾಗಿಯೇ ಹೊರಹೊಮ್ಮಿದೆ. ಯುವಕರು ದೂರದ ಭರವಸೆಗಳು ಮತ್ತು ಸಮಿತಿಗಳ ಮೇಲೆ ಬದುಕಲು ಸಾಧ್ಯವಿಲ್ಲ; ಅವರಿಗೆ ಈಗಲೇ ಯೋಗ್ಯ ಉದ್ಯೋಗ ಅಗತ್ಯ ಎಂದು ಅವರು ಸ್ಪಷ್ಟಪಡಿಸಿದರು. ಗಿಗ್ ಕಾರ್ಮಿಕರ ಕಲ್ಯಾಣ, ಕಾನೂನು ಮಾನ್ಯತೆ ಅಥವಾ ಸಾಮಾಜಿಕ ಭದ್ರತೆ ಒದಗಿಸುವ ಕುರಿತು ಬಜೆಟ್ನಲ್ಲಿ ಯಾವುದೇ ಸ್ಪಷ್ಟತೆ ಇಲ್ಲ. ಕಾರ್ಮಿಕ ವಿರೋಧಿ ಕಾರ್ಮಿಕ ಸಂಹಿತೆಗಳನ್ನು ಜಾರಿಗೆ ಮುಂದಾಗುವ ಮೂಲಕ ಮತ್ತು ‘ಸುಧಾರಣೆ’ಗಳ ಹೆಸರಿನಲ್ಲಿ ನಿಯಂತ್ರಕ ಮಾನದಂಡಗಳನ್ನು ದುರ್ಬಲಗೊಳಿಸಲಾಗುತ್ತಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಜಿಲ್ಲಾ ಸಂಚಾಲಕ ಪ್ರಮೋದ ಪಾಂಚಾಳ, ಸಲ್ಮಾನ್ ಖಾನ್, ಸಾನಿಯಾ ಉಪಸ್ಥಿತರಿದ್ದರು.
Uttarakhand | ಧಾರ್ಮಿಕ ಮೆರವಣಿಗೆ ವೇಳೆ ವಿರೋಧಿ ಗುಂಪುಗಳ ನಡುವೆ ಘರ್ಷಣೆ: ಇಬ್ಬರು ಮೃತ್ಯು
ಡೆಹ್ರಾಡೂನ್: ಹರಿದ್ವಾರ ಜಿಲ್ಲೆಯ ರೂರ್ಕಿಯ ಭಗವಾನ್ಪುರ ಪ್ರದೇಶದಲ್ಲಿ ರವಿವಾರ ಧಾರ್ಮಿಕ ಮೆರವಣಿಗೆ ಸಂದರ್ಭದಲ್ಲಿ ಎರಡು ವಿರೋಧಿ ಗುಂಪುಗಳ ನಡುವೆ ಘರ್ಷಣೆ ನಡೆದಿದ್ದು,ಇಬ್ಬರು ಮೃತಪಟ್ಟಿದ್ದಾರೆ ಮತ್ತು ಇತರ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಪ್ರದೇಶದಲ್ಲಿ ಉದ್ವಿಗ್ನತೆಯಿದ್ದು, ಭಾರೀ ಪೋಲಿಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಬನಾರಸಿ ಗ್ರಾಮದಲ್ಲಿ ಸಂತ ರವಿದಾಸ ಶೋಭಾಯಾತ್ರೆಯ ಅಂಗವಾಗಿ ಮೆರವಣಿಗೆ ನಡೆದಿದ್ದು,ಸಾಮೂಹಿಕ ಭೋಜನದ ವೇಳೆ ಈ ಘಟನೆ ನಡೆದಿದೆ. ಸಂಜೆ ಐದು ಗಂಟೆಯ ಸುಮಾರಿಗೆ ದೀರ್ಘಕಾಲದ ದ್ವೇಷವನ್ನು ಹೊಂದಿರುವ ಎರಡು ಗುಂಪುಗಳ ನಡುವೆ ವಾಗ್ವಾದ ಆರಂಭಗೊಂಡಿತ್ತು. ಶೀಘ್ರವೇ ಅದು ಹಿಂಸೆಗೆ ತಿರುಗಿದ್ದು, ಪಿಸ್ತೂಲುಗಳನ್ನೂ ಬಳಸಲಾಗಿತ್ತು. ಗುಂಡೇಟಿನಿಂದ ತೀವ್ರವಾಗಿ ಗಾಯಗೊಂಡಿದ್ದ ಆನಂದ (28) ಎಂಬಾತ ಸ್ಥಳದಲ್ಲಿಯೇ ಸಾವನ್ನಪ್ಪಿದ್ದರೆ ರಾತ್ರಿ ಸಮೀಪದ ಹೊಲವೊಂದರಲ್ಲಿ ಎದುರಾಳಿ ಗುಂಪಿಗೆ ಸೇರಿದ ಮಾಂಗೆರಾಮ್ ಎಂಬಾತನ ಶವ ಪತ್ತೆಯಾಗಿತ್ತು. ಆತನನ್ನು ಥಳಿಸಿ ಕೊಲ್ಲಲಾಗಿದೆ ಎಂದು ಪ್ರಾಥಮಿಕ ವರದಿಗಳು ಸೂಚಿಸಿವೆ. ಮೃತ ಆನಂದನ ಕುಟುಂಬ ಸದಸ್ಯರು ಮತ್ತು ಸ್ಥಳೀಯ ನಿವಾಸಿಗಳು ರಸ್ತೆಯ ಮಧ್ಯೆ ಶವವನ್ನು ಇರಿಸಿ ಸಂಚಾರಕ್ಕೆ ತಡೆಯೊಡ್ಡಿ ಪ್ರತಿಭಟನೆ ನಡೆಸಿದ್ದರು. ಆರೋಪಿಗಳನ್ನು ಬಂಧಿಸುವವರೆಗೂ ಮರಣೋತ್ತರ ಪರೀಕ್ಷೆಗೆ ಅವಕಾಶ ನೀಡುವುದಿಲ್ಲ ಎಂದು ಪಟ್ಟು ಹಿಡಿದಿದ್ದರು. ಸ್ಥಳಕ್ಕೆ ಧಾವಿಸಿದ ಹಿರಿಯ ಪೋಲಿಸ್ ಅಧಿಕಾರಿಗಳು ಗುಂಪನ್ನು ಸಮಾಧಾನಗೊಳಿಸಿದ ಬಳಿಕ ತಡಸಂಜೆ ಶವವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿತ್ತು. ಗಾಯಗೊಡಿರುವ ಮೂವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ʼರೋಹಿತ್ ವೇಮುಲಾʼ ಕಾಯ್ದೆ ಜಾರಿಗೊಳಿಸುವಂತೆ ಆಗ್ರಹ
ಕ್ರೀಡೆಯನ್ನು ರಾಜಕೀಯಗೊಳಿಸಿರುವುದು ಅತ್ಯಂತ ಅವಮಾನಕರ: ಶಶಿ ತರೂರ್
ಹೊಸದಿಲ್ಲಿ: ಐಸಿಸಿ ಟಿ-20 ವಿಶ್ವಕಪ್ ಆರಂಭಕ್ಕೆ ಕೆಲವೇ ದಿನಗಳು ಬಾಕಿ ಉಳಿದಿದ್ದು, ಪಾಕಿಸ್ತಾನ ತಂಡವು ಫೆ.15ರಂದು ಭಾರತ ವಿರುದ್ಧದ ಪಂದ್ಯವನ್ನು ಬಹಿಷ್ಕರಿಸಿದೆ. ಪಾಕಿಸ್ತಾನದ ಈ ನಿರ್ಧಾರ ಕುರಿತು ವ್ಯಾಪಕ ಚರ್ಚೆ ನಡೆಯುತ್ತಿದ್ದು, ಇದೇ ವಿಚಾರವಾಗಿ ಕಾಂಗ್ರೆಸ್ ಸಂಸದ ಶಶಿ ತರೂರ್ ಪ್ರತಿಕ್ರಿಯೆ ನೀಡಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಭಾರತ ಹಾಗೂ ಪಾಕಿಸ್ತಾನದ ನಡುವೆ ರಾಜಕೀಯ ಉದ್ವಿಗ್ನತೆ ಹೆಚ್ಚುತ್ತಿರುವ ಕುರಿತು ಪ್ರತಿಕ್ರಿಯಿಸಿದ ತರೂರ್, ಕ್ರೀಡೆಯನ್ನು ರಾಜಕೀಯದಿಂದ ದೂರವಿಡಬೇಕು ಎಂದು ಪ್ರತಿಪಾದಿಸಿದರು. ‘‘ಉಭಯ ದೇಶಗಳು ಕ್ರೀಡೆಯನ್ನು ಈ ರೀತಿ ರಾಜಕೀಯಗೊಳಿಸಿರುವುದು ಅತ್ಯಂತ ಅವಮಾನಕರ ಸಂಗತಿ. ಪ್ರಾಮಾಣಿಕವಾಗಿ ಹೇಳಬೇಕೆಂದರೆ ಬಾಂಗ್ಲಾದೇಶದ ಕ್ರಿಕೆಟಿಗ ಮುಸ್ತಫಿಝುರ್ರಹ್ಮಾನ್ರನ್ನು ಕೆಕೆಆರ್ ಫ್ರಾಂಚೈಸಿ ಐಪಿಎಲ್ನಿಂದ ಹೊರ ಹಾಕಬಾರದಿತ್ತು. ಕ್ರೀಡೆಯಲ್ಲಿ ರಾಜಕೀಯ ಒಳ ನುಸುಳುವಿಕೆ ದುರದೃಷ್ಟಕರ. ರೆಹಮಾನ್ ಕುರಿತು ಬಾಂಗ್ಲಾದೇಶದ ಪ್ರತಿಕ್ರಿಯೆ ಕೂಡ ಅತಿರೇಕವಾಗಿತ್ತು’’ಎಂದು ತರೂರ್ ಹೇಳಿದರು. ‘‘ಕ್ರಿಕೆಟ್ ಎಲ್ಲರೂ ಇಷ್ಟಪಡುವ ಕ್ರೀಡೆಯಾಗಿದ್ದು, ಕನಿಷ್ಠ ಆಟದ ಮೈದಾನದಲ್ಲಾದರೂ ಇದು ನಮ್ಮನ್ನು ಒಟ್ಟುಗೂಡಿಸುವ ಒಂದು ಸಾಧನವಾಗಿರಬೇಕು. ಆತುರದ ನಿರ್ಧಾರ ತೆಗೆದುಕೊಂಡ ಎಲ್ಲರಿಗೂ ಇದೊಂದು ಎಚ್ಚರಿಕೆಯ ಕರೆಯಾಗಿದೆ. ಇದನ್ನು ಐಸಿಸಿ ಮಧ್ಯಸ್ಥಿಕೆವಹಿಸಿ ಬಿಕ್ಕಟ್ಟು ಬಗೆಹರಿಸಬೇಕು’’ಎಂದು ಹೇಳಿದ್ದಾರೆ.
ಬೇಡಿಕೆ ಈಡೇರಿಕೆಗೆ ಆಗ್ರಹ: ಫೆ. 5ಕ್ಕೆ ಶಿಕ್ಷಕರ ‘ದೆಹಲಿ ಚಲೋ’ ಹೋರಾಟಕ್ಕೆ ಐಟಾ ಬೆಂಬಲ
ಭಟ್ಕಳ: ಶಿಕ್ಷಕ ಸಮುದಾಯ ಎದುರಿಸುತ್ತಿರುವ ದೀರ್ಘಕಾಲದ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಅಖಿಲ ಭಾರತ ಶಿಕ್ಷಕರ ಜಂಟಿ ಕ್ರಿಯಾ ಸಮಿತಿ ಫೆಬ್ರುವರಿ 5ರಂದು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ‘ದೆಹಲಿ ಚಲೋ’ ಹೋರಾಟ ಹಮ್ಮಿಕೊಂಡಿದೆ. ಈ ಬೃಹತ್ ಚಳವಳಿಗೆ ಅಲ್ ಇಂಡಿಯಾ ಐಡಿಯಲ್ ಟೀಚರ್ಸ್ ಅಸೋಸಿಯೇಶನ್ (ಐಟಾ) ಸಂಪೂರ್ಣ ಬೆಂಬಲ ನೀಡಿದೆ ಎಂದು ಐಟಾ ಕರ್ನಾಟಕ ಘಟಕದ ರಾಜ್ಯಾಧ್ಯಕ್ಷ ಎಂ.ಆರ್. ಮಾನ್ವಿ ತಿಳಿಸಿದ್ದಾರೆ. ಪ್ರಾಥಮಿಕ ಶಾಲೆಯಿಂದ ವಿಶ್ವವಿದ್ಯಾಲಯ ಮಟ್ಟದವರೆಗೆ ವಿವಿಧ ಶಿಕ್ಷಕ ಸಂಘಟನೆಗಳು ಒಗ್ಗೂಡಿ ಅಖಿಲ ಭಾರತ ಶಿಕ್ಷಕರ ಜಂಟಿ ಕ್ರಿಯಾ ಸಮಿತಿಯನ್ನು ರಚಿಸಿಕೊಂಡಿದ್ದು, ಅದರ ನೇತೃತ್ವದಲ್ಲಿ ಫೆ.5ರಂದು ಬೆಳಿಗ್ಗೆ 10 ಗಂಟೆಯಿಂದ ದೆಹಲಿಯ ಜಂತರ್ ಮಂತರ್ನಲ್ಲಿ ಬೃಹತ್ ಧರಣಿ–ಸತ್ಯಾಗ್ರಹ ನಡೆಯಲಿದೆ. ಶಿಕ್ಷಕರ ಹಿತರಕ್ಷಣೆಗೆ ಸಂಬಂಧಿಸಿದಂತೆ ಈ ಹೋರಾಟದಲ್ಲಿ ಹಲವು ಪ್ರಮುಖ ಬೇಡಿಕೆಗಳನ್ನು ಮುಂದಿಟ್ಟಲಾಗಿದೆ. ಪ್ರಸ್ತುತ ಜಾರಿಯಲ್ಲಿರುವ ಹೊಸ ಪಿಂಚಣಿ ಯೋಜನೆಯನ್ನು (ಎನ್ಪಿಎಸ್) ರದ್ದುಗೊಳಿಸಿ ಹಳೆಯ ಪಿಂಚಣಿ ಯೋಜನೆಯನ್ನು (ಒಪಿಎಸ್) ಮರುಜಾರಿಗೊಳಿಸಬೇಕು, ಸೇವೆಯಲ್ಲಿರುವ ಶಿಕ್ಷಕರಿಗೆ ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ) ಯಿಂದ ವಿನಾಯಿತಿ ನೀಡಬೇಕು, ವಿಧಾನ ಪರಿಷತ್ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರಿಗೂ ಮತದಾನದ ಹಕ್ಕು ನೀಡಬೇಕು ಎಂಬುದು ಪ್ರಮುಖ ಬೇಡಿಕೆಗಳಾಗಿವೆ. ಇದಲ್ಲದೆ, 8ನೇ ವೇತನ ಆಯೋಗದ ವರದಿಯನ್ನು ನಿಗದಿತ ಅವಧಿಯಲ್ಲಿ ಜಾರಿಗೊಳಿಸಬೇಕು, ದೇಶಾದ್ಯಂತ ಖಾಲಿ ಇರುವ ಶಿಕ್ಷಕರ ಹುದ್ದೆಗಳನ್ನು ತಕ್ಷಣ ಭರ್ತಿ ಮಾಡಬೇಕು, ಅತಿಥಿ ಮತ್ತು ಗುತ್ತಿಗೆ ಆಧಾರಿತ ಶಿಕ್ಷಕರನ್ನು ಕಾಯಂಗೊಳಿಸಿ ಕನಿಷ್ಠ ವೇತನ ನಿಗದಿಪಡಿಸಬೇಕು ಎಂದು ಆಗ್ರಹಿಸಲಾಗಿದೆ. ನೂತನ ಶಿಕ್ಷಣ ನೀತಿಯಲ್ಲಿರುವ ವಿದ್ಯಾರ್ಥಿ ಮತ್ತು ಶಿಕ್ಷಕ ವಿರೋಧಿ ಅಂಶಗಳನ್ನು ಕೈಬಿಡಬೇಕು, ಸರ್ಕಾರಿ ಶಾಲೆಗಳ ವಿಲೀನ ಅಥವಾ ಮುಚ್ಚುವ ಪ್ರಕ್ರಿಯೆಯನ್ನು ನಿಲ್ಲಿಸಬೇಕು ಹಾಗೂ ಶಿಕ್ಷಕರನ್ನು ಬೋಧಕೇತರ ಕೆಲಸಗಳಿಂದ ಮುಕ್ತಗೊಳಿಸಬೇಕು ಎಂಬ ಬೇಡಿಕೆಗಳನ್ನೂ ಹೋರಾಟದಲ್ಲಿ ಮುಂದಿಡಲಾಗಿದೆ. ಈ ಮಹತ್ವದ ‘ದೆಹಲಿ ಚಲೋ’ ಕಾರ್ಯಕ್ರಮದಲ್ಲಿ ರಾಜ್ಯದ ಎಲ್ಲ ಶಿಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಹೋರಾಟವನ್ನು ಯಶಸ್ವಿಗೊಳಿಸಬೇಕೆಂದು ಎಂ.ಆರ್. ಮಾನ್ವಿ ಮನವಿ ಮಾಡಿದ್ದಾರೆ.
ಬೆಂಗಳೂರು ಸುರಂಗ ಮಾರ್ಗ ಯೋಜನೆಗೆ ಕಾರ್ಯಾದೇಶ ನೀಡುವು ಸುಳ್ಳು: ಹೈಕೋರ್ಟ್ಗೆ ಸರ್ಕಾರ ಮಾಹಿತಿ
ಬೆಂಗಳೂರಿನ ಹೆಬ್ಬಾಳದಿಂದ ಸಿಲ್ಕ್ ಬೋರ್ಡ್ವರೆಗೆ ಸುರಂಗ ಮಾರ್ಗ ನಿರ್ಮಾಣ ಕಾಮಗಾರಿ ಫೆಬ್ರವರಿ ಅಂತ್ಯಕ್ಕೆ ಆರಂಭವಾಗಲಿದೆ ಎಂಬ ವರದಿ ಸುಳ್ಳು ಎಂದು ರಾಜ್ಯ ಅಡ್ವೊಕೇಟ್ ಜನರಲ್ ಹೈಕೋರ್ಟ್ಗೆ ತಿಳಿಸಿದರು. ಈ ಕುರಿತು ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆ ನಡೆಯಿತು. ಸರಕಾರಕ್ಕೆ ಆಕ್ಷೇಪಣೆ ಸಲ್ಲಿಸಲು ನ್ಯಾಯಾಲಯ ಕಾಲಾವಕಾಶ ನೀಡಿತು. ವಿಚಾರಣೆ ಫೆ.23ಕ್ಕೆ ಮುಂದೂಡಲಾಗಿದೆ.
ಟ್ವೆಕಾಂಡೋ ಪಂದ್ಯ: ದ.ಕ.ಜಿಲ್ಲೆಗೆ ಚಿನ್ನ, ಬೆಳ್ಳಿ ಪದಕ
ಮಂಗಳೂರು: ಬೆಂಗಳೂರಿನ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಇತ್ತೀಚೆಗೆ ನಡೆದ ಕರ್ನಾಟಕ ರಾಜ್ಯ ಟ್ವೆಕಾಂಡೋ ಚಾಂಪಿಯನ್ ಶಿಪ್-2026 (8ನೇ ಕೆಟಿಎ ಕಪ್) ಕ್ರೀಡಾಕೂಟದಲ್ಲಿ ದ.ಕ. ಜಿಲ್ಲೆಯ ಟ್ವೆಕಾಂಡೋ ಕ್ರೀಡಾಪಟುಗಳು 2 ಚಿನ್ನ ಹಾಗೂ 2 ಬೆಳ್ಳಿ ಪದಕಗಳನ್ನು ಗಳಿಸಿದ್ದಾರೆ. 12 ವರ್ಷದೊಳಗಿನ ಬಾಲಕರ ವಿಭಾಗದಲ್ಲಿ ರಫಾನ್ ರಹ್ಮತುಲ್ಲಾ ಅಹ್ಮದ್ ಸುರತ್ಕಲ್ ಹಾಗೂ 14 ವರ್ಷದೊಳಗಿನ ಬಾಲಕರ ವಿಭಾಗದಲ್ಲಿ ವಿಷ್ಣು ಇಡ್ಯಾ-ಸುರತ್ಕಲ್ ಚಿನ್ನದ ಪದಕ ಗೆದ್ದುಕೊಂಡಿದ್ದಾರೆ. ರಫಾನ್ ಅವರು ರಹಮತುಲ್ಲಾ ಅಹ್ಮದ್-ಫಾತಿಮಾ ಫರ್ಝಾನಾ ದಂಪತಿಯ ಪುತ್ರ. ವಿಷ್ಣು ಅವರು ರವಿ-ಜ್ಯೋತಿ ದಂಪತಿಯ ಪುತ್ರ. 15 ವರ್ಷ ಮೇಲ್ಪಟ್ಟ ಬಾಲಕರ ವಿಭಾಗದಲ್ಲಿ ಆಯಾನ್ ಅಹ್ಮದ್ ಮಂಗಳೂರು ಹಾಗೂ 14 ವರ್ಷದೊಳಗಿನ ಬಾಲಕಿ ಯರ ವಿಭಾಗದಲ್ಲಿ ಕುಳಾಯಿಯ ಅವಂತಿಕಾ ಎಸ್. ಬೆಳ್ಳಿ ಪದಕ ಪಡೆದುಕೊಂಡಿದ್ದಾರೆ. ಅಯಾನ್ ಅಹ್ಮದ್ ಅವರು ನಜೀಮ್ ಅಹ್ಮದ್ - ಸುನೇನಾ ನಜೀಮ್ ದಂಪತಿಯ ಪುತ್ರ. ಅವಂತಿಕಾ ಅವರು ವಿನೋದ್ ಎಸ್.-ಸುಮಾ ಕೆ ದಂಪತಿಯ ಪುತ್ರಿ. ದ.ಕ. ಟ್ವೇಕಾಂಡೋ ಸಂಘದ ಪ್ರಧಾನ ಕಾರ್ಯದರ್ಶಿ ಇಶಾಕ್ ಇಸ್ಮಾಯಿಲ್ ನಂದಾವರ ಈ ಕ್ರೀಡಾಪಟು ವಿದ್ಯಾರ್ಥಿಗಳಿಗೆ ತರಬೇತಿ ನೀಡಿದ್ದಾರೆ.
ಮಂಗಳೂರು: ನಗರ ಹೊರವಲಯದ ಕಸಬಾ ಬೆಂಗ್ರೆಯ ನಿವಾಸಿ ಮುಹಮ್ಮದ್ ಸಫ್ವಾನ್ (28) ಎಂಬಾತ ಜ.28ರಂದು ತನ್ನ ಮನೆಯಿಂದ ಹೊರಟು ಹೋಗಿದ್ದು, ಮರಳಿ ಬಂದಿಲ್ಲ ಎಂದು ಪಣಂಬೂರು ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ. ಸುಮಾರು 5.6 ಅಡಿ ಎತ್ತರದ, ಸಾಧಾರಣ ಶರೀರದ, ಎಣ್ಣೆಕಪ್ಪು ಮೈಬಣ್ಣದ ಸಫ್ವಾನ್ ಕಾಣೆಯಾದ ಬಿಳಿ ಬಣ್ಣದ ಟೀ ಶರ್ಟ್ ಮತ್ತು ನೀಲಿ ಬಣ್ಣದ ಜೀನ್ಸ್ ಪ್ಯಾಂಟ್ ಧರಿಸಿದ್ದರು. ತುಳು, ಬ್ಯಾರಿ, ಕನ್ನಡ, ತುಳು ಭಾಷೆ ಮಾತನಾಡುತ್ತಾರೆ. ಈತನ ಬಗ್ಗೆ ಮಾಹಿತಿ ತಿಳಿದು ಬಂದಲ್ಲಿ ಪಣಂಬೂರು ಪೊಲೀಸ್ ಠಾಣೆಯನ್ನು ಸಂಪರ್ಕಿಸುವಂತೆ ಪ್ರಕಟನೆ ತಿಳಿಸಿದೆ.
ಕಾನೂನು ಸುವ್ಯವಸ್ಥೆ ಹಳಿ ತಪ್ಪಲು ಬಿಡುವುದಿಲ್ಲ: ಗೃಹ ಸಚಿವ ಜಿ.ಪರಮೇಶ್ವರ್
ಬೆಂಗಳೂರು : ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ನಿಯಂತ್ರಣದಲ್ಲಿದ್ದು, ಯಾವುದೇ ಕಾರಣಕ್ಕೂ ಹಳಿ ತಪ್ಪಲು ನಾನು ಬಿಡುವುದಿಲ್ಲ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದರು. ಸೋಮವಾರ ವಿಧಾನಸಭೆಯಲ್ಲಿ ರಾಜ್ಯಪಾಲರ ಭಾಷಣದ ಕುರಿತ ವಂದನಾ ನಿರ್ಣಯದ ಮೇಲೆ ನಡೆದ ಚರ್ಚೆಯಲ್ಲಿ ಪ್ರಸ್ತಾವಿಸಿದ ಕಾನೂನು ಸುವ್ಯವಸ್ಥೆ ವಿಚಾರಕ್ಕೆ ಉತ್ತರಿಸಿದ ಅವರು, ದೇಶದ 125 ನಗರಗಳಲ್ಲಿ ಸಮೀಕ್ಷೆ ನಡೆಸಿರುವ ಚೆನ್ನೈ ಮೂಲದ ಅವತಾರ್ ಸಂಸ್ಥೆಯು ಮಹಿಳೆಯರ ಸುರಕ್ಷತೆಯ ದೃಷ್ಟಿಯಿಂದ ಬೆಂಗಳೂರಿಗೆ ಪ್ರಥಮ ಸ್ಥಾನ ನೀಡಿದೆ ಎಂದು ಹೇಳಿದರು. ಮಾದಕ ವಸ್ತುಗಳ ವಿರುದ್ಧ ಸಮರ: ಮಾದಕ ವಸ್ತುಗಳು(ಡ್ರಗ್ಸ್) ತಯಾರಿಸುವಂತಹ ಅತೀ ಹೆಚ್ಚು ಲ್ಯಾಬೋರೇಟರಿಗಳು ಗುಜರಾತ್, ರಾಜಸ್ತಾನ ಹಾಗೂ ಮಹಾರಾಷ್ಟ್ರದಲ್ಲಿವೆ. ಮಾದಕ ವಸ್ತುಗಳ ನಿಯಂತ್ರಣದ ವಿಚಾರದಲ್ಲಿ ಯಾವುದೆ ರಾಜಿಯಿಲ್ಲ. ಈಗಾಗಲೆ ನಮ್ಮ ಸರಕಾರ ಸಾವಿರಾರು ಕೋಟಿ ರೂ.ಮೌಲ್ಯದ ಡ್ರಗ್ಸ್ ಅನ್ನು ಹಿಡಿದಿದೆ. ಪೆಡ್ಲರ್ಗಳು ಹಾಗೂ ಬಳಕೆದಾರರ ವಿರುದ್ಧ ಸಾವಿರಾರು ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಪರಮೇಶ್ವರ್ ತಿಳಿಸಿದರು. ಪೊಲೀಸರ ಮೂಲಕ ಶಾಲಾ, ಕಾಲೇಜುಗಳಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಸುಮಾರು 16 ಲಕ್ಷ ವಿದ್ಯಾರ್ಥಿಗಳನ್ನು ನಾವು ತಲುಪಿದ್ದೇವೆ. ಪೊಲೀಸ್ ಅಧಿಕಾರಿಗಳು ತಮ್ಮ ತಮ್ಮ ಠಾಣೆಯ ವ್ಯಾಪ್ತಿಯಲ್ಲಿ ಎಲ್ಲೆಲ್ಲಿ ಡ್ರಗ್ಸ್ ದಂಧೆ ನಡೆಯುತ್ತಿದೆ, ಅದರ ಲ್ಯಾಬೋರೇಟರಿಗಳು ಎಲ್ಲಿವೆ ಎಂಬುದರ ಕುರಿತು ನಿಗಾವಹಿಸಬೇಕು. ಅಲ್ಲದೇ, ಯಾವುದೆ ಹೊಸ ಕೆಮಿಕಲ್ ಫ್ಯಾಕ್ಟರಿ, ಲ್ಯಾಬೋರೇಟರಿಗಳು ಆರಂಭವಾದರೆ ಪೊಲೀಸರು ಹೋಗಿ ಪರಿಶೀಲನೆ ನಡೆಸಬೇಕೆಂದು ಸೂಚನೆ ನೀಡಲಾಗಿದೆ ಎಂದು ಅವರು ಹೇಳಿದರು. ಬಾಂಗ್ಲಾದೇಶಿಯರು ಅಕ್ರಮವಾಗಿ ಭಾರತದ ಗಡಿಯೊಳಗೆ ಹೇಗೆ ಪ್ರವೇಶಿಸುತ್ತಾರೆ? ದೇಶದ ಗಡಿಯನ್ನು ಕಾಯುವುದು ಯಾರು? ಇದರಲ್ಲಿ ಕೇಂದ್ರ ಸರಕಾರದ ಜವಾಬ್ದಾರಿ ಇಲ್ಲವೇ? ರಾಜ್ಯದಲ್ಲಿ ಲಕ್ಷಾಂತರ ಸಂಖ್ಯೆಯಲ್ಲಿ ಬಾಂಗ್ಲಾದೇಶಿಯರು ಅಕ್ರಮವಾಗಿ ನೆಲೆಸಿದ್ದಾರೆ ಎಂಬುದು ಸತ್ಯಕ್ಕೆ ದೂರವಾದ ಮಾತು. 370 ಮಂದಿ ಅಕ್ರಮ ಬಾಂಗ್ಲಾದೇಶಿಯರನ್ನು ಗುರುತಿಸಲಾಗಿದೆ. ಈ ಪೈಕಿ 196 ಜನರನ್ನು ಗಡಿಪಾರು ಮಾಡಲಾಗಿದೆ. ಉಳಿದವರ ವಿರುದ್ಧ ಕಾನೂನು ಪ್ರಕ್ರಿಯೆ ನಡೆಯುತ್ತಿದ್ದು, ಶೀಘ್ರವೆ ಅವರನ್ನು ಗಡಿಪಾರು ಮಾಡುತ್ತೇವೆ ಎಂದು ಪರಮೇಶ್ವರ್ ಹೇಳಿದರು. ಅಕ್ರಮವಾಗಿ ನಮ್ಮ ರಾಜ್ಯದಲ್ಲಿ ನೆಲೆಸಿರುವ ವಿದೇಶಿಯರನ್ನು ಪತ್ತೆ ಮಾಡಲು ವಿಶೇಷ ಅಭಿಯಾನ ನಡೆಸಲು ಉದ್ದೇಶಿಸಿದ್ದೇವೆ. ಸೈಬರ್ ಅಪರಾಧಗಳ ತಡೆಗೆ ಪೊಲೀಸ್ ಮಹಾನಿರ್ದೇಶಕರ ನೇತೃತ್ವದಲ್ಲಿ ಪ್ರತ್ಯೇಕ ವಿಭಾಗ ರಚನೆ ಮಾಡಿದ್ದೇವೆ. ಅದರಲ್ಲಿ, ಎಡಿಜಿ, ಐಜಿ ಮಟ್ಟದ ಅಧಿಕಾರಿಗಳಿದ್ದಾರೆ. ಪೊಲೀಸರ ಮಾನಸಿಕ ಸ್ಥೈರ್ಯ ಹೆಚ್ಚಿಸಲು ಕ್ರಮಗಳನ್ನು ಕೈಗೊಂಡಿದ್ದೇವೆ ಎಂದು ಅವರು ತಿಳಿಸಿದರು. ಭ್ರಷ್ಟಾಚಾರ ನಿಯಂತ್ರಣಕ್ಕೆ ಕ್ರಮಗಳನ್ನು ಕೈಗೊಂಡಿದ್ದೇವೆ. ಪೊಲೀಸ್ ಇಲಾಖೆಯಲ್ಲಿ ಶಿಸ್ತು ಇರಬೇಕು. ಅದನ್ನು ಉಲ್ಲಂಘಿಸುವವರಿಗೆ ಇಲಾಖೆಯಲ್ಲಿ ಇಟ್ಟುಕೊಂಡು ಏನು ಮಾಡಬೇಕು. ನಾವು ಹಿರಿಯ ಅಧಿಕಾರಿಗಳು ಸೇರಿದಂತೆ 125 ಮಂದಿ ಅಮಾನತ್ತು ಮಾಡಿದ್ದೇವೆ. ಭ್ರಷ್ಟಾಚಾರವನ್ನು ಸಂಪೂರ್ಣ ನಿಗ್ರಹಿಸಲು ಸಾಧ್ಯವಿಲ್ಲದಿದ್ದರೂ ನಿಯಂತ್ರಿಸಲು ಕ್ರಮ ಕೈಗೊಳ್ಳುತ್ತಿದ್ದೇವೆ ಎಂದು ಪರಮೇಶ್ವರ್ ಹೇಳಿದರು.
ಪೆರ್ನೆ ವ್ಯವಸಾಯ ಸೇವಾ ಸಹಕಾರಿ ಸಂಘದ ಆಡಳಿತ ಮಂಡಳಿಯ ನಿರ್ದೇಶಕರ ಸ್ಥಾನಕ್ಕೆ ಅವಿರೋಧ ಆಯ್ಕೆ
ಉಪ್ಪಿನಂಗಡಿ: ಪೆರ್ನೆ ವ್ಯವಸಾಯ ಸೇವಾ ಸಹಕಾರಿ ಸಂಘದ ಆಡಳಿತ ಮಂಡಳಿಯ 12 ನಿರ್ದೇಶಕರ ಸ್ಥಾನಕ್ಕೆ ಅವಿರೋಧ ಆಯ್ಕೆ ನಡೆದಿದ್ದು, ಕಾಂಗ್ರೆಸ್ ಬೆಂಬಲಿತ ಹಾಗೂ ಸಹಕಾರ ಭಾರತಿ ಬೆಂಬಲಿತ ಅಭ್ಯರ್ಥಿಗಳ ನಡುವೆ ನಡೆದ ಒಪ್ಪಂದದಂತೆ ಕಾಂಗ್ರೆಸ್ ಬೆಂಬಲಿತ 10 ಮಂದಿ ಅಭ್ಯರ್ಥಿಗಳು ಹಾಗೂ ಸಹಕಾರ ಭಾರತಿಯ ಇಬ್ಬರು ಅಭ್ಯರ್ಥಿಗಳು ನಿರ್ದೇಶಕ ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಐದು ವರ್ಷದ ಅವಧಿಗೆ ಆಡಳಿತ ಮಂಡಳಿಯ ನಿರ್ದೇಶಕ ಸ್ಥಾನಕ್ಕೆ ಫೆ.8ರಂದು ಮತದಾನ ನಿಗದಿಯಾಗಿತ್ತು. ಇದಕ್ಕಾಗಿ 25 ನಾಮಪತ್ರಗಳು ಸಲ್ಲಿಕೆಯಾಗಿತ್ತು. ನಾಮಪತ್ರ ಹಿಂಪಡೆಯುವ ದಿನವಾದ ಫೆ.2ರಂದು 10 ಮಂದಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳನ್ನು ಹಾಗೂ ಎರಡು ಮಂದಿ ಸಹಕಾರ ಭಾರತಿಯ ಅಭ್ಯರ್ಥಿಗಳನ್ನು ಉಳಿದವರು ನಾಮಪತ್ರ ಹಿಂದೆಗೆದುಕೊಂಡರು. ಅವಿರೋಧ ಆಯ್ಕೆಯಾದವರು: ನಿರ್ದೇಶಕ ಸ್ಥಾನಕ್ಕೆ ಸಾಲಗಾರ ಸಾಮಾನ್ಯದಿಂದ ಅಬ್ದುಲ್ ಲತೀಫ್, ನೀಲಪ್ಪ ಗೌಡ, ಡಾ. ರಾಜ್ಗೋಪಾಲ ಶರ್ಮಾಬಿ., ತೋಯಜಾಕ್ಷ ಶೆಟ್ಟಿ, ಜಾರಪ್ಪ ಗೌಡ ಆಯ್ಕೆಯಾಗಿದ್ದಾರೆ. ಸಾಲಗಾರ ಅನುಸೂಚಿತ ಜಾತಿಯಿಂದ ಶಾಂತಾ, ಸಾಲಗಾರ ಅನುಸೂಚಿತ ಪಂಗಡದಿಂದ ಲಕ್ಷ್ಮಣ ನಾಯ್ಕ, ಸಾಲಗಾರ ಮಹಿಳೆಯಿಂದ ಜಯಲಕ್ಷ್ಮೀ, ರೇವತಿ ಪಿ., ಸಾಲಗಾರ ಹಿಂದುಳಿದ ವರ್ಗ (ಬಿ)ಯಿಂದ ಸುನೀಲ್ ನೆಲ್ಸನ್ ಪಿಂಟೋ, ಸಾಲಗಾರ ಹಿಂದುಳಿದ ವರ್ಗ (ಎ)ಯಿಂದ ತನಿಯಪ್ಪ ಪೂಜಾರಿ, ಸಾಲಗಾರರಲ್ಲದ್ದರಿಂದ ಬೇಬಿ ಆಯ್ಕೆಯಾಗಿದ್ದಾರೆ. ಪೆರ್ನೆ ವ್ಯವಸಾಯ ಸೇವಾ ಸಹಕಾರಿ ಸಂಘವು 20 ವರ್ಷಗಳನ್ನು ಪೂರ್ಣಗೊಳಿಸಿದ್ದು, ಆಡಳಿತ ಮಂಡಳಿಯ ನಿರ್ದೇಶಕ ಸ್ಥಾನಕ್ಕೆ ಈ ಹಿಂದಿನ ನಾಲ್ಕು ಅವಧಿಗಳಲ್ಲೂ ಚುನಾವಣೆ ನಡೆದಿತ್ತು. ನಾಲ್ಕು ಅವಧಿಗಳಲ್ಲೂ ನಿರ್ದೇಶಕ ರಾಗಿ ಆಯ್ಕೆಯಾಗಿ ತೋಯಜಾಕ್ಷ ಶೆಟ್ಟಿಯವರೇ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದರಲ್ಲದೆ, ಸಂಘವನ್ನು ಪ್ರಗ ತಿಯ ಪಥದಲ್ಲಿ ಮುನ್ನಡೆಸಿದ್ದರು. ಆದರೆ ಈ ಬಾರಿ ಮಾತ್ರ ಹೊಂದಾಣಿಕೆಯೊಂದಿಗೆ ಸಾಗಿದ್ದು, ಹಾಗಾಗಿ ಅವಿರೋಧ ಆಯ್ಕೆ ನಡೆದಿದೆ. ಪೆರ್ನೆ ವ್ಯವಸಾಯ ಸೇವಾ ಸಹಕಾರಿ ಸಂಘದ ಆಡಳಿತ ಮಂಡಳಿಯ ನಿರ್ದೇಶಕರ ಸ್ಥಾನಕ್ಕೆ ಈ ಬಾರಿ ನಾವು ಸೌಹಾರ್ದತೆಯ ಒಪ್ಪಂದ ಮಾಡಿಕೊಂಡು ಚುನಾವಣೆ ನಡೆಯದೇ ಅವಿರೋಧ ಆಯ್ಕೆಯಾಗುವಂತೆ ನೋಡಿ ಕೊಂಡಿದ್ದೇವೆ. ಈ ಮೂಲಕ ಬ್ಯಾಂಕಿಗೆ ಆಗುವ ಖರ್ಚು ಕೂಡಾ ಉಳಿಯುವಂತಾಗಿದೆ. ಚುನಾವಣೆ ನಡೆದಾಗ ಬ್ಯಾಂಕಿಗೂ ಖರ್ಚು, ಅಭ್ಯರ್ಥಿಗೂ ಖರ್ಚು. ಚುನಾವಣೆಯಲ್ಲಿ ಎದುರು ಬದುರಾಗುವಾಗ ಪರಸ್ಪರ ಮನಸ್ತಾಪಗಳು ಸಹಜ. ಆದ್ದರಿಂದ ಈ ಬಾರಿ ನಾವು ಪರಸ್ಪರ ಮಾತನಾಡಿಕೊಂಡು 10+2ರ ಒಪ್ಪಂದ ಮಾಡಿಕೊಂಡಿದ್ದೆವು. ಎಲ್ಲರೂ ಜೊತೆಗೂಡಿ ಸಂಘವನ್ನು ಇನ್ನಷ್ಟು ಬೆಳೆಸುವುದೇ ನಮ್ಮ ಕನಸು. - ತೋಯಜಾಕ್ಷ ಶೆಟ್ಟಿ ನಿಕಟಪೂರ್ವಾಧ್ಯಕ್ಷರು, ಪೆರ್ನೆ ಸಿಎ ಬ್ಯಾಂಕ್
ಗ್ರಾಮ ಪಂಚಾಯಿತಿ ಚುನಾವಣೆ ಸಿದ್ಧತೆಗೆ ಜಿಲ್ಲಾಧಿಕಾರಿಗಳಿಗೆ ಆದೇಶ : ಪ್ರಿಯಾಂಕ್ ಖರ್ಗೆ
ಬೆಂಗಳೂರು : ಇದೇ ಮಾರ್ಚ್ ಅಂತ್ಯದೊಳಗೆ ಎಲ್ಲ ಗ್ರಾಮ ಪಂಚಾಯಿತಿ ಸದಸ್ಯರ ಅಧಿಕಾರ ಅವಧಿ ಮುಕ್ತಾಯವಾಗಲಿರುವುದರಿಂದ ಗ್ರಾಮ ಪಂಚಾಯಿತಿ ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳುವಂತೆ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಈಗಾಗಲೇ ಆದೇಶ ಹೊರಡಿಸಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದರು. ಗ್ರಾಮ ಪಂಚಾಯಿತಿ ಸದಸ್ಯರ ಅವಧಿಯು ಮುಕ್ತಾಯಗೊಳ್ಳುತ್ತಿರುವುದರಿಂದ ಮುಂದಿನ ಚುನಾವಣೆ ನಡೆಸುವವರೆಗೂ ಆಡಳಿತಾಧಿಕಾರಿಯನ್ನು ನೇಮಿಸುವ ಬದಲು ಈಗಿರುವ ಗ್ರಾಮ ಪಂಚಾಯಿತಿ ಸದಸ್ಯರನ್ನೇ ಮುಂದುವರೆಸಬೇಕೆಂದು ಸೋಮವಾರ ವಿಧಾನಸಭೆಯಲ್ಲಿ ಬಿಜೆಪಿ ಸದಸ್ಯ ದೊಡ್ಡನಗೌಡ ಪಾಟೀಲ್ ಗಮನ ಸೆಳೆದ ಸೂಚನೆಗೆ ಅವರು ಉತ್ತರಿಸಿದರು. ಚುನಾವಣೆ ನಡೆಸುವುದು ತುಂಬಾ ತಡವಾಗುವುದಾದರೆ ಮಾತ್ರ ಕಾನೂನಿನಡಿ ಗ್ರಾಮ ಪಂಚಾಯಿತಿ ಸದಸ್ಯರನ್ನೇ ಮುಂದುವರೆಸಲು ಅವಕಾಶವಿರುತ್ತದೆ. ಆದರೆ ಈಗಾಗಲೇ ಜಿಲ್ಲಾಧಿಕಾರಿಗಳಿಗೆ ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳುವಂತೆ ಸೂಚಿಸಲಾಗಿರುವುದರಿಂದ ಗ್ರಾಮ ಪಂಚಾಯಿತಿ ಸದಸ್ಯರನ್ನೇ ಮುಂದುವರೆಸುವ ಅವಶ್ಯಕತೆ ಬರುವುದಿಲ್ಲ. ಚುನಾವಣೆಯನ್ನು ಸರಕಾರ ಆದಷ್ಟು ಬೇಗ ನಡೆಸಲಿದೆ. ಆದಾಗ್ಯೂ ಚುನಾವಣೆ ನಡೆಸುವುದು ತಡವಾದಲ್ಲಿ ಸದಸ್ಯರ ಮನವಿ ಕುರಿತು ಕಾನೂನಿನಡಿ ಪರಿಶೀಲಿಸಲಾಗುವುದು ಎಂದು ಪ್ರಿಯಾಂಕ್ ಖರ್ಗೆ ಹೇಳಿದರು.
ಫೆ.4ರಿಂದ ಸಸಿಹಿತ್ಲು ಶ್ರೀ ಸಾರಂತಾಯ ಗರೋಡಿ ಉಳ್ಳಾಯ ದೈವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನೇಮೋತ್ಸವ
ಸುರತ್ಕಲ್ : ಪರಮಪವಿತ್ರ ಕ್ಷೇತ್ರ ಶ್ರೀ ಸಾರಂತಾಯ ಗರೋಡಿ ಉಳ್ಳಾಯ ದೈವಸ್ಥಾನ ಸಸಿಹಿತ್ಲು ಇದರ ಜೀರ್ಣೋದ್ಧಾರದ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು ಫೆ.4 ರಿಂದ 10ರ ವರೆಗೆ ನಿರಂತರ ವೈದಿಕ, ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಬ್ರಹ್ಮಕಲಶೋತ್ಸವ ಮತ್ತು ನೇಮೋತ್ಸವವು ಜರುಗಲಿದೆ. ಈ ಸಂಬಂಧ ದೈವಸ್ಥಾನದಲ್ಲಿ ಕರೆಯಲಾಗಿದ್ದ ಪತ್ರಿಕಾ ಗೋಷ್ಠಿಯಲ್ಲಿ ಮಾಹಿತಿ ನೀಡಿದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾದ ಸಿ.ಬಿ.ಕರ್ಕೇರ ಅವರು, ಬಡವರೇ ಇರುವ ಸಸಿಹಿತ್ಲು ಎಂಬ ಇಷ್ಟು ಸಣ್ಣ ಗ್ರಾಮದಲ್ಲಿ ನಾಲ್ಕು ಕರೆ ಸಮಾಜ ಒಟ್ಟಾಗಿ ಸುಮಾರು 3.5 ಕೋಟಿ ರೂ. ವೆಚ್ಚದ ಸಂಪೂರ್ಣ ಶಿಲಾಮಯ ದೈವಸ್ಥಾನ ನಿರ್ಮಾಣ ಮಾಡಲಾ ಗಿದ್ದು, ನಮ್ಮ ಹೃದಯಂತರಾಳದ ಮನವಿಗೆ ದಾನಿಗಳು ಸಕಾರಾತ್ಮವಾಗಿ ಸ್ಪಂದಿಸಿದ ಫಲ. ಅಲ್ಲದೆ, ಉಳ್ಳಾಯ ಮತ್ತು ಪರಿವಾರ ದೈವಗಳ ಕಾರಣಿಕ ಎಂದರು. ದೈವಸ್ಥಾನದ ಒಳಾಂಗಣದಲ್ಲಿ ಫೆ.4 ರಿಂದ 8 ರ ತನಕ ನಿರಂತರ ವೈದಿಕ ವಿಧಿ ವಿಧಾನಗಳು, ಋತ್ವಿಜರ ನೇತೃತ್ವ ದಲ್ಲಿ ನಡೆಯುತ್ತಿದ್ದರೆ ಹೊರಾಂಗಣದಲ್ಲಿ ಹಾಕಿರುವ ಎರಡು ವೇದಿಕೆಯಲ್ಲಿ ಪ್ರತ್ಯೇಕವಾಗಿ ಸಭಾ ಕಾರ್ಯಕ್ರಮ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಒಂದು ವೇದಿಕೆಗೆ ಉಳ್ಳಾಯ ಮದಿಪು ಚಾವಡಿ ಎಂಬ ಹೆಸರಿಡಲಾ ಗಿದ್ದು, ಸಾಂಸ್ಕೃತಿಕ ಕಾರ್ಯಕ್ರಮ ನಡೆಯುವ ವೇದಿಕೆಗೆ ಕಾಂತುಲಕಣ ಗಡಿಪ್ರದಾನ ಯಾನೆ ಪಠೇಲ್ ಯಾದವ ಜಿ. ಬಂಗೇರ ಸಾಂಸ್ಕೃತಿಕ ವೇದಿಕೆ ಎಂದು ಹೆಸರಿಡಲಾಗಿದೆ. ಫೆ.4ರಿಂದ 8ರ ವರೆಗೆ ನಿರಂತರ ಭಜನಾ ಕಾರ್ಯಕ್ರಮ ನಡೆಯಲಿದ್ದು, ಈ ವೇದಿಕೆಗೆ ಕಾಂತಾಬಾರೆ ಬುಧಾಬಾರೆ ಭಜಕ ವೇದಿಕೆ ಎಂದು ಹೆಸರಿಡಲಾಗಿದೆ ಎಂದರು. ಶ್ರೀ ಉಳ್ಳಾಯ ಹಾಗೂ ಪರಿವಾರ ಶಕ್ತಿಗಳಿಗೆ ಪ್ರಧಾನಗೊಂಡ ಕಾಂತಾಬಾರೆ ಬುಧಾಬಾರೆ ಮತ್ತು ಮಾಯಂದಾಳ ದೈವಕ್ಕೆ ಪ್ರತ್ಯೇಕ ಗುಡಿ ನಿರ್ಮಾಣ ಮಾಡಲಾಗಿದ್ದು, ಎದುರಿನ ಗೋಪುರ ನವೀಕರಣ ಹಾಗೂ ಪ್ರವೇಶದ್ವಾರ ಉದ್ಘಾಟನೆ ನಡೆಯಲಿದೆ. ಜೀರ್ಣೋದ್ಧಾರ ಯಶಸ್ಸಿಗೆ ಊರಿನ ಜೀರ್ಣೋದ್ಧಾರ, ಆಡಳಿತ ಹಾಗೂ ಮಹಿಳಾ ಸಮಿತಿ ಗಳ ಜೊತೆಗೆ ಮುಂಬೈ, ಬೆಂಗಳೂರು ಸೇರಿದಂತೆ ಹೊರನಾಡು ಸಮಿತಿಗಳ ಸಹಕಾರವೇ ಕಾರಣವಾಗಿದೆ. ವಿವಿಧ ಉಪಸಮಿತಿಗಳು ಜವಾಬ್ದಾರಿಯಿಂದ ಕಾರ್ಯನಿರ್ವಹಿಸುತ್ತಿವೆ ಎಂದು ಅವರು ಹೇಳಿದರು. ಕಾರ್ಯಕ್ರಮಕ್ಕೆ ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸುವ ನಿರೀಕ್ಷೆ ಇದ್ದು, ವಾಹನಗಳ ಪಾರ್ಕಿಂಗ್, ಭದ್ರತೆ ಸೇರಿದಂತೆ ಎಲ್ಲ ವ್ಯವಸ್ಥೆಗಳನ್ನು ಸಮರ್ಪಕವಾಗಿ ರೂಪಿಸಲಾಗಿದೆ ಎಂದು ನುಡಿದರು. ಸುದ್ದಿಗೋಷ್ಠಿಯಲ್ಲಿ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಸಿ.ಬಿ. ಕರ್ಕೇರ, ಗೌರವಾಧ್ಯಕ್ಷ ಮಿಥುನ್ ರೈ, ಗೌರವ ಸಲಹೆಗಾರರಾದ ಸತ್ಯಜಿತ್ ಸುರತ್ಕಲ್ ಮತ್ತು ಚಣ್ಯದ್ರಶೇಖರ ನಾನಿಲ್, ಕಾರ್ಯಾಧ್ಯಕ್ಷ ಪರಮಾನಂದ ವಿ. ಸಾಲ್ಯಾನ್, ಆಡಳಿತ ಸಮಿತಿಯ ಅಧ್ಯಕ್ಷ ಜಗನ್ನಾಥ ಆರ್. ಕೋಟ್ಯಾನ್, ಉಪಾಧ್ಯಕ್ಷ ಅನಿಲ್ ಪೂಜಾರಿ, ಕೋಶಾಧಿಕಾರಿ ಎಸ್. ದಯಾನಂದ್, ಜೀರ್ಣೋದ್ಧಾರ ಸಮಿತಿಯ ಕೋಶಾಧಿಕಾರಿ ಶ್ರೀಧರ ವಿ. ಸುವರ್ಣ, ಮುಂಬೈ ಸಮಿತಿಯ ಅಧ್ಯಕ್ಷ ಸತೀಶ್ ಎನ್. ಕೋಟ್ಯಾನ್ ಹಾಗೂ ಸಂಚಾಲಕ ಪದ್ಮನಾಭ ಸಸಿಹಿತ್ಲು, ಜೊತೆಗೆ ಗೌರವ ಸಲಹೆಗಾರರಾದ ಪದ್ಮನಾಭ ಬಂಗೇರ ಮತ್ತು ರಮೇಶ್ ಪಿ. ಸನಿಲ್, ಕಾಂತುಲಕಣ ಗಡಿಪುದಾನರಾದ ನಿರಂಜನ್ ಬಂಗೇರ ಹಾಗೂ ಲೀಲಾಧರ ಬಂಗೇರ, ಪ್ರಧಾನ ಅರ್ಚಕ ತೋಚೋಡಿ ಶೇಖರ ಪೂಜಾರಿ, ಅರ್ಚಕರಾದ ಸುರೇಶ್ ಪೂಜಾರಿ ಮತ್ತು ದಾಮೋದರ ಪೂಜಾರಿ, ಮಹಿಳಾ ಸಮಿತಿಯ ಅಧ್ಯಕ್ಷೆ ಶಕುಂತಳಾ ಭೋಜ ಬಂಗೇರ ಹಾಗೂ ಗೌರವಾಧ್ಯಕ್ಷೆ ಪುಷ್ಪಾ ದಯಾನಂದ್, ಜೀರ್ಣೋದ್ಧಾರ ಸಮಿತಿಯ ಕಾರ್ಯದರ್ಶಿ ಎಸ್.ಆರ್. ಪ್ರಭಾತ್, ಆಡಳಿತ ಸಮಿತಿಯ ಕಾರ್ಯದರ್ಶಿ ನವೀನ್ ಕುಮಾರ್, ಜೊತೆ ಕಾರ್ಯದರ್ಶಿ ಹರೀಶ್ ಕುಮಾರ್, ಜೊತೆ ಕೋಶಾಧಿಕಾರಿ ಯತೀಶ್ ಸಾಲ್ಯಾನ್ ಮತ್ತು ಮಾಧ್ಯಮ ಸಂಚಾಲಕ ಯಶೋಧರ ಕೋಟ್ಯಾನ್ ಭಾಗವಹಿಸಿದ್ದರು.
Bengaluru | ರಸ್ತೆಯಲ್ಲಿ ತೆರೆದಿದ್ದ ಕಾಂಕ್ರಿಟ್ ಚೇಂಬರ್ಗೆ ಬಿದ್ದು ಬಾಲಕ ಮೃತ್ಯು
ಬೆಂಗಳೂರು : ಬೆಂಗಳೂರಿನ ಕನಕಪುರ ಮಾರ್ಗದ ಪೈಪ್ಲೈನ್ ರಸ್ತೆಯಲ್ಲಿ ತೆರೆದಿದ್ದ ಕಾಂಕ್ರೀಟ್ ಚೇಂಬರ್ಗೆ ಬಿದ್ದು 9ನೇ ತರಗತಿಯ ಬಾಲಕನೊಬ್ಬ ಮೃತಪಟ್ಟಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಪ್ರೀತಂ (14) ಎಂಬಾತ ಮೃತ ಬಾಲಕ ಎಂದು ಗುರುತಿಸಲಾಗಿದೆ. ಮೂಲತಃ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲದ ರಜನಿಕಾಂತ್ ಮತ್ತು ಪುಷ್ಪಾ ದಂಪತಿಯ ಪುತ್ರ ಪ್ರೀತಂ, ಜ.28ರ ಬೆಳಗ್ಗೆ 9 ಗಂಟೆಗೆ ಮನೆಯಿಂದ ಆಟವಾಡಲು ಹೊರ ಹೋಗಿದ್ದ. ಆದರೆ, ಸಂಜೆಯಾದರೂ ಮಗ ಮನೆಗೆ ಬಾರದಿದ್ದಾಗ ಆತಂಕಗೊಂಡ ಪೋಷಕರು ಎಲ್ಲೆಡೆ ಹುಡುಕಾಟ ನಡೆಸಿದ್ದರು. ಬಳಿಕ ಮಗ ಕಾಣೆಯಾದ ಬಗ್ಗೆ ಕಗ್ಗಲೀಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಬಾಲಕ ನಾಪತ್ತೆಯಾದ ಮೂರು ದಿನಗಳ ನಂತರ, ಅಂದರೆ ಜ.31ರ ಶನಿವಾರ ರಾತ್ರಿ ಪೈಪ್ಲೈನ್ ರಸ್ತೆಯಲ್ಲಿರುವ ಜಲಮಂಡಳಿಯ ಚೇಂಬರ್ನಿಂದ ತೀವ್ರವಾದ ಕೊಳೆತ ವಾಸನೆ ಬರಲಾರಂಭಿಸಿದೆ. ಇದರಿಂದ ಅನುಮಾನಗೊಂಡ ಸ್ಥಳೀಯರು ಚೇಂಬರ್ ಒಳಗೆ ಇಣುಕಿ ನೋಡಿದಾಗ ಬಾಲಕನ ಶವ ತೇಲುತ್ತಿರುವುದು ಕಂಡುಬಂದಿದೆ. ತಕ್ಷಣವೇ ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಮೃತದೇಹವನ್ನು ಹೊರತೆಗೆದಿದ್ದಾರೆ. ಸದ್ಯ, ಬಾಲಕನ ಮೃತದೇಹವನ್ನು ರಾಜರಾಜೇಶ್ವರಿ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಅಂತಿಮ ಸಂಸ್ಕಾರಕ್ಕಾಗಿ ಕೊಳ್ಳೇಗಾಲಕ್ಕೆ ರವಾನಿಸಲಾಗಿದೆ. ನಿರ್ಲಕ್ಷ್ಯ ತೋರಿದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ. ಈ ಬಗ್ಗೆ ಮೃತ ಬಾಲಕನ ತಂದೆ ರಜನಿಕಾಂತ್ ಮಾತನಾಡಿ, ಚೇಂಬರ್ ಮುಚ್ಚಿದ್ದರೆ ಇಂತಹ ಘಟನೆ ನಡೆಯುತ್ತಿರಲಿಲ್ಲ. ಅಧಿಕಾರಿಗಳ ನಿರ್ಲಕ್ಷ್ಯವೇ ನನ್ನ ಮಗನ ಸಾವಿಗೆ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
‘ಹನುಮ ಕಲ್ಯಾಣ’ ಪೌರಾಣಿಕ ಆಖ್ಯಾನದ ಪ್ರದರ್ಶನ
ಬ್ರಹ್ಮಾವರ, ಫೆ.2: ನಂಚಾರಿನಲ್ಲಿರುವ ಕಾಮಧೇನು ಗೋಶಾಲಾ ಮಹಾ ಸಂಘ ಟ್ರಸ್ಟ್ನ ಗೋಶಾಲೆಗೆ ನೀರಿನ ಸಂಪರ್ಕ ಕಲ್ಪಿಸುವ ಉದ್ದೇಶದಿಂದ ನಾದ ನೂಪುರ ಯಕ್ಷೇತ್ಥಾನ ಟ್ರಸ್ಟ್ ವಂಡಾರು ವತಿಯಿಂದ ಶುಭಾಶಯ ಜೈನ್ ವಿರಚಿತ ಹನುಮ ಕಲ್ಯಾಣ ಎಂಬ ಪೌರಾಣಿಕ ಆಖ್ಯಾನದ ಪ್ರದರ್ಶನ ರವಿವಾರ ಮೈರ್ಕೊಮೆಯ ಸಪ್ತಪದಿ ಕನ್ವೆನ್ಷನ್ ಹಾಲ್ನಲ್ಲಿ ನಡೆಯಿತು. ಸಭಾ ಕಾರ್ಯಕ್ರಮದಲ್ಲಿ ಗೋಶಾಲೆಯ ಮುಖ್ಯಸ್ಥರಿಗೆ ಕಾರ್ಯಕ್ರಮ ದಿಂದ ಸಂಗ್ರಹವಾದ ಒಂದು ಲಕ್ಷ ರೂ. ಮೊತ್ತದ ದೇಣಿಗೆಯನ್ನು ಹಸ್ತಾಂತರಿಸಲಾಯಿತು. ಉಳಿದ ಒಂದು 1.30ಲಕ್ಷರೂ. ಮೊತ್ತವನ್ನೂ ಗೋಶಾಲೆಗೆ ಹಸ್ತಾಂತರಿಸುವ ಕುರಿತು ನಾದ ಟ್ರಸ್ಟ್ ಅಧ್ಯಕ್ಷ ಗೋವಿಂದ ವಂಡಾರು ಘೋಷಣೆ ಮಾಡಿದರು. ನಂಚಾರು ಕಾಮಧೇನು ಗೋಶಾಲಾ ಮಹಾಸಂಘ ಟ್ರಸ್ಟ್ ಮುಖ್ಯಸ್ಥ ರಾಜೇಂದ್ರ ಚಕ್ಕೆ, ಕುಂದಾಪುರ ಕನ್ನಡದ ರಾಯಭಾರಿ ಮನು ಹಂದಾಡಿ ಮಾತನಾಡಿದರು. ವೇದಿಕೆಯಲ್ಲಿ ಶ್ರೀಕ್ಷೇತ್ರ ಮಂದಾರ್ತಿ ದೇವಸ್ಥಾನದ ಅನುವಂಶೀಯ ಮೊಕ್ತೇಸರ ಧನಂಜಯ ಶೆಟ್ಟಿ, ಯಕ್ಷ ಪೋಷಕರಾದ ಚೋರಾಡಿಯ ರಾಜೀವ ಶೆಟ್ಟಿ, ಕೊಕ್ಕರ್ಣೆ ಸೇವಾ ಸಹಕಾರಿ ಸಂಘದ ಉಪಾಧ್ಯಕ್ಷ ಪ್ರವೀಣ್ ಶೆಟ್ಟಿ ವಂಡಾರು, ಯಕ್ಷಗಾನ ಪೋಷಕ ಆಂದ್ರೂ ಡಿಸಿಲ್ವ, ಕೊಕ್ಕರ್ಣೆಯ ರಾಮಚಂದ್ರ ಶಾಸ್ತ್ರಿ, ಪ್ರಸಂಗಕರ್ತೆ ಶುಭಾಶಯ ಜೈನ್ ಮತ್ತಿತರರು ಉಪಸ್ಥಿತರಿದ್ದರು. ಅಧ್ಯಾಪಕರಾದ ಶಶಿಧರ್ ಶೆಟ್ಟಿ ನಂಚಾರು ಕಾರ್ಯಕ್ರಮವನ್ನು ನಿರೂಪಿಸಿ ವಂದಿಸಿದರು.
ಬೆಂಗಳೂರಿಗೆ ಆಗಮಿಸಬೇಕಿದ್ದ Air India ವಿಮಾನದ ಇಂಧನ ನಿಯಂತ್ರಣ ಸ್ವಿಚ್ನಲ್ಲಿ ದೋಷ; ತಪ್ಪಿದ ಸಂಭಾವ್ಯ ಅನಾಹುತ
ಹೊಸದಿಲ್ಲಿ: ಕಳೆದ ವರ್ಷ ಅಹ್ಮದಾಬಾದ್ನಲ್ಲಿ ಸಂಭವಿಸಿದ್ದ ಏರ್ ಇಂಡಿಯಾ ವಿಮಾನ ಅಪಘಾತದ ಕುರಿತು ತನಿಖೆಯ ನಡುವೆಯೇ ಸೋಮವಾರ ಲಂಡನ್ನಿಂದ ಬೆಂಗಳೂರಿಗೆ ಆಗಮಿಸಬೇಕಿದ್ದ ಏರ್ ಇಂಡಿಯಾ ಬೋಯಿಂಗ್ 787 ಡ್ರೀಮ್ಲೈನರ್ ವಿಮಾನದ ಇಂಧನ ನಿಯಂತ್ರಣ ಸ್ವಿಚ್ನಲ್ಲಿ ದೋಷ ಕಂಡು ಬಂದಿದ್ದು, ವಿಮಾನವನ್ನು ಕಾರ್ಯಾಚರಣೆಯಿಂದ ಹಿಂದೆಗೆದುಕೊಳ್ಳಲಾಗಿದೆ ಎಂದು ವಾಯುಯಾನ ಸಂಸ್ಥೆಯ ವಕ್ತಾರರೋರ್ವರು ತಿಳಿಸಿದರು. ‘ಹಾರಾಟವನ್ನು ಆರಂಭಿಸುವ ಮುನ್ನ ತಪಾಸಣೆ ನಡೆಸಿದ್ದ ನಮ್ಮ ಪೈಲಟ್ ಓರ್ವರು ಇಂಧನ ಸ್ವಿಚ್ನಲ್ಲಿ ಸಂಭಾವ್ಯ ದೋಷವನ್ನು ಪತ್ತೆ ಹಚ್ಚಿದ್ದರು. ಇಂಜಿನ್ ಚಾಲೂ ಮಾಡುವ ಸಂದರ್ಭದಲ್ಲಿ ಸ್ವಿಚ್ ಎರಡು ಸಲ ‘ರನ್’ ಸ್ಥಿತಿಯಲ್ಲಿ ಇರಲು ವಿಫಲಗೊಂಡಿತ್ತು ಮತ್ತು ‘ಕಟ್ಆಫ್’ ಸ್ಥಿತಿಗೆ ಚಲಿಸಿತ್ತು. ಮಾಹಿತಿ ಲಭಿಸಿದ ತಕ್ಷಣ ನಾವು ವಿಮಾನದ ಹಾರಾಟವನ್ನು ನಿಲ್ಲಿಸಿದ್ದೇವೆ ಮತ್ತು ಸಂಪೂರ್ಣ ತಪಾಸಣೆ ನಡೆಸುತ್ತಿದ್ದೇವೆ. ನಾಗರಿಕ ವಾಯುಯಾನ ಮಹಾ ನಿರ್ದೇಶನಾಲಯಕ್ಕೆ (ಡಿಜಿಸಿಎ) ಈ ಬಗ್ಗೆ ಮಾಹಿತಿ ನೀಡಲಾಗಿದೆ’ ಎಂದರು. ಕಳೆದ ವರ್ಷದ ಅಪಘಾತದ ಬಳಿಕ ಡಿಜಿಸಿಎ ನಿರ್ದೇಶನದ ಮೇರೆಗೆ ಏರ್ ಇಂಡಿಯಾ ತನ್ನ ಎಲ್ಲ ಬೋಯಿಂಗ್ 787 ವಿಮಾನಗಳ ಇಂಧನ ನಿಯಂತ್ರಣ ಸ್ವಿಚ್ಗಳ ತಪಾಸಣೆ ನಡೆಸಿತ್ತು ಮತ್ತು ಯಾವುದೇ ಸಮಸ್ಯೆ ಕಂಡು ಬಂದಿರಲಿಲ್ಲ ಎಂದು ಅವರು ತಿಳಿಸಿದರು. ಜುಲೈ 2025ರಲ್ಲಿ ಅಹ್ಮದಾಬಾದ್ ವಿಮಾನ ನಿಲ್ದಾಣದ ಸಮೀಪ ಸಂಭವಿಸಿದ್ದ ಡ್ರೀಮ್ಲೈನರ್ ಅಪಘಾತ ಪ್ರಕರಣದಲ್ಲಿ ತನಿಖಾಧಿಕಾರಿಗಳ ಪ್ರಾಥಮಿಕ ವರದಿಯು, ವಿಮಾನವು ಟೇಕ್ಆಫ್ ಆದ ಕೆಲವೇ ಸೆಕೆಂಡ್ಗಳ ಬಳಿಕ ಇಂಧನ ನಿಯಂತ್ರಣ ಸ್ವಿಚ್ಗಳು ಅಲ್ಪಾವಧಿಗೆ ಆಫ್ ಆಗಿದ್ದರಿಂದ ಇಂಜಿನ್ಗೆ ಇಂಧನದ ಕೊರತೆಯಾಗಿತ್ತು ಎಂದು ಸೂಚಿಸಿತ್ತು. ಈ ದುರಂತದಲ್ಲಿ 260 ಜನರು ಸಾವನ್ನಪ್ಪಿದ್ದರು.
Bengaluru | ನಾಲ್ಕನೇ ಮಹಡಿಯಿಂದ ಬಿದ್ದು ವ್ಯಕ್ತಿ ಮೃತ್ಯು
ಬೆಂಗಳೂರು : ಕಟ್ಟಡದ ನಾಲ್ಕನೇ ಮಹಡಿಯಿಂದ ಬಿದ್ದು ವ್ಯಕ್ತಿಯೊಬ್ಬ ಅನುಮಾನಾಸ್ಪದವಾಗಿ ಮೃತಪಟ್ಟಿರುವ ಘಟನೆ ಬೆಂಗಳೂರಿನ ಭಾರತಿನಗರದ ಫ್ರೂಟ್ಸ್ ಮಾರ್ಕೆಟ್ ಬಳಿ ವರದಿಯಾಗಿದೆ. ಇರ್ಫಾನ್ ಮುಲ್ಲಾನಿ(26) ಮೃತ ವ್ಯಕ್ತಿ ಎಂದು ಗುರುತಿಸಲಾಗಿದೆ. ಜ.30ರಂದು ಘಟನೆ ನಡೆದಿದೆ. ಸಂಬಂಧಿಕರ ಮನೆಗೆ ಬಂದಿದ್ದ ಇರ್ಫಾನ್ ಇದ್ದಕ್ಕಿದ್ದಂತೆ ನಾಲ್ಕನೇ ಮಹಡಿಯಿಂದ ಕೆಳಗೆ ಬಿದ್ದು ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಘಟನೆ ಸಂಬಂಧ ಭಾರತಿನಗರ ಠಾಣೆಯಲ್ಲಿ ಅಸಹಜ ಸಾವು ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ ಬೆಂಗಳೂರಿಗೆ ವಿಶೇಷ ರೈಲು
ಉಡುಪಿ, ಫೆ.2: ಮಹಾಶಿವರಾತ್ರಿ ಹಬ್ಬದ ಸಂದರ್ಭದಲ್ಲಿ ಜನರ ವಿಶೇಷ ಬೇಡಿಕೆಯಂತೆ ಯಶವಂತಪುರ- ಮಡಗಾಂವ್ ಜಂಕ್ಷನ್- ಯಶವಂತಪುರ ನಡುವೆ ಕೊಂಕಣ ರೈಲ್ವೆಯ ಸಹಯೋಗದೊಂದಿಗೆ ನೈರುತ್ಯ ರೈಲ್ವೆ ವಿಶೇಷ ರೈಲನ್ನು ಓಡಿಸಲು ನಿರ್ಧರಿಸಿದೆ. ರೈಲು ನಂ.06507 ಯಶವಂತಪುರ- ಮಡಗಾಂವ್ ಜಂಕ್ಷನ್ ಎಕ್ಸ್ಪ್ರೆಸ್ ವಿಶೇಷ ರೈಲು ಫೆ.13ರಂದು ಶುಕ್ರವಾರ ಅಪರಾಹ್ನ 12:30ಕ್ಕೆ ಯಶವಂತಪುರ ದಿಂದ ಹೊರಟು ಮರುದಿನ ಮುಂಜಾನೆ 6:45ಕ್ಕೆ ಮಡಗಾಂವ್ ತಲುಪಲಿದೆ. ರೈಲು ನಂ.06508 ಮಡಗಾಂವ್ ಜಂಕ್ಷನ್- ಯಶವಂತಪುರ ಎಕ್ಸ್ಪ್ರೆಸ್ ರೈಲು ಫೆ.16ರ ಸೋಮವಾರ ಬೆಳಗ್ಗೆ 11 ಗಂಟೆಗೆ ಮಡಗಾಂವ್ ಜಂಕ್ಷನ್ನಿಂದ ಹೊರಟು ಮರುದಿನ ಮುಂಜಾನೆ 4:45ಕ್ಕೆ ಯಶವಂತಪುರ ತಲುಪಲಿದೆ. ಈ ರೈಲಿಗೆ ಚಿಕ್ಕಬಾಣಾವರ, ಚೆನ್ನರಾಯಪಟ್ಟಮ, ಹಾಸನ, ಸಕಲೇಶಪುರ, ಸುಬ್ರಹ್ಮಣ್ಯ ರೋಡ್, ಕಬಕ ಪುತ್ತೂರು, ಬಂಟ್ವಾಳ, ಸುರತ್ಕಲ್, ಮೂಲ್ಕಿ, ಬಾರಕೂರು, ಕುಂದಾಪುರ, ಮೂಕಾಂಬಿಕಾ ರೋಡ್ ಬೈಂದೂರು, ಭಟ್ಕಳ, ಮುರ್ಡೇಶ್ವರ, ಹೊನ್ನಾವರ, ಕುಮಟ, ಗೋಕರ್ಣ ರೋಡ್, ಅಂಕೋಲ ಹಾಗೂ ಕಾರವಾರಗಳಲ್ಲಿ ನಿಲುಗಡೆ ಇರಲಿದೆ. ಈ ರೈಲು ಒಟ್ಟು 20 ಕೋಚ್ಗಳನ್ನು ಹೊಂದಿರಲಿದೆ. ಇವುಗಳಲ್ಲಿ ಫಸ್ಟ್ ಕ್ಲಾಸ್ 2ಟಯರ್ 1ಕೋಚ್, 2ಟಯರ್ ಎಸಿ-2, 3ಟಯರ್ ಎಸಿ-2, ಸ್ಲೀಪರ್ ಕೋಚ್-9, ಜನರಲ್-4 ಹಾಗೂ ಎಸ್ಎಲ್ಆರ್-2 ಕೋಚ್ಗ ಳಿರುತ್ತವೆ ಎಂದು ಕೊಂಕಣ ರೈಲ್ವೆ ಪ್ರಕಟಣೆ ತಿಳಿಸಿದೆ.
Mudigere | ಚಾರ್ಮಾಡಿ ಅರಣ್ಯದಲ್ಲಿ ಭಾರೀ ಬೆಂಕಿ: ಪಶ್ಚಿಮ ಘಟ್ಟಗಳ ಸೂಕ್ಷ್ಮ ಹುಲ್ಲುಗಾವಲು ಭಸ್ಮ
ಚಿಕ್ಕಮಗಳೂರು : ದಕ್ಷಿಣ ಕನ್ನಡ–ಚಿಕ್ಕಮಗಳೂರು ಸಂಪರ್ಕಿಸುವ ಚಾರ್ಮಾಡಿ ಘಾಟಿ ವ್ಯಾಪ್ತಿಯ ಅರಣ್ಯ ಪ್ರದೇಶದಲ್ಲಿ ಭಾರೀ ಪ್ರಮಾಣದ ಬೆಂಕಿ ಕಾಣಿಸಿಕೊಂಡಿದೆ. ಮೂಡಿಗೆರೆ ಅರಣ್ಯ ವಲಯದೊಳಗೆ ಸಂಭವಿಸಿರುವ ಈ ಅಗ್ನಿ ಅವಘಡದಲ್ಲಿ ಪಶ್ಚಿಮ ಘಟ್ಟಗಳ ಸಾಲಿನ ಸೂಕ್ಷ್ಮ ಹುಲ್ಲುಗಾವಲು ಪ್ರದೇಶ ಸಂಪೂರ್ಣವಾಗಿ ಧಗಧಗಿಸಿ ಉರಿಯುತ್ತಿದೆ. ಗಾಳಿಯ ವೇಗ ಹೆಚ್ಚಿರುವುದರಿಂದ ಬೆಂಕಿ ಕ್ಷಿಪ್ರವಾಗಿ ಹರಡುತ್ತಿದೆ. ರಸ್ತೆಯ ಪಕ್ಕದಲ್ಲೇ ಬೆಂಕಿ ಕಾಣಿಸಿಕೊಂಡಿರುವುದರಿಂದ ಚಾರ್ಮಾಡಿ ಘಾಟಿಯಲ್ಲಿ ಸಂಚರಿಸುವ ವಾಹನ ಸವಾರರಲ್ಲಿ ಆತಂಕ ಮೂಡಿದೆ. ಕಿಡಿಗೇಡಿಗಳು ಉದ್ದೇಶಪೂರ್ವಕವಾಗಿ ಬೆಂಕಿ ಹಚ್ಚಿರುವ ಶಂಕೆ ವ್ಯಕ್ತವಾಗಿದ್ದು, ಮಾಹಿತಿ ಪಡೆದ ಕೂಡಲೇ ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿಗಳು ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳು ದೌಡಾಯಿಸಿದ್ದು, ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಪರಿಸ್ಥಿತಿಯನ್ನು ನಿರಂತರವಾಗಿ ನಿಗಾ ವಹಿಸಲಾಗುತ್ತಿದ್ದು, ಬೆಂಕಿ ಸಂಪೂರ್ಣ ನಿಯಂತ್ರಣಕ್ಕೆ ತರಲು ಪ್ರಯತ್ನಗಳು ಮುಂದುವರಿದಿವೆ.

25 C