ಅಮೆರಿಕ ಮತ್ತು ಬ್ರಿಟನ್ ನಡುವೆ ಬಿರುಕು, ಡೊನಾಲ್ಡ್ ಟ್ರಂಪ್ ತೀವ್ರ ಅಸಮಾಧಾನ | Operation Roaring Lion
ಅಮೆರಿಕ ಮತ್ತು ಯುನೈಟೆಡ್ ಕಿಂಗ್ಡಮ್ ನಡುವೆ ದಿನದಿಂದ ದಿನಕ್ಕೆ ಸಂಬಂಧ ಹಳಸುತ್ತಿದ್ದು, ಈ ಮೂಲಕ ಎರಡೂ ಒಕ್ಕೂಟಗಳು ಈಗ ದೂರವಾಗುತ್ತಿವೆ. ಒಂದು ಕಡೆ ಚೀನಾ ಜೊತೆಗೆ ಯುನೈಟೆಡ್ ಕಿಂಗ್ಡಮ್ ವ್ಯಾಪಾರ ಒಪ್ಪಂದ ಮಾಡಿಕೊಂಡ ನಂತರ ರೊಚ್ಚಿಗೆದ್ದಿದ್ದ ಡೊನಾಲ್ಡ್ ಟ್ರಂಪ್ ಅವರು, ಎಚ್ಚರಿಕೆ ಸಂದೇಶವನ್ನ ರವಾನೆ ಮಾಡಿದ್ದರು. ಅಲ್ಲದೆ ಚೀನಾ ಜೊತೆಗೆ ನೀವು ಸೇರಿದಂತೆ ಅವರಿಂದಲೇ ನಿಮಗೆ ದೊಡ್ಡ
ಅಂದು ದೇವೇಗೌಡ್ರ ಪ್ರಧಾನಿ ಪಟ್ಟ ಉರುಳಿದ್ದು ಹೇಗೆ? ’ವಿಷಾದನೀಯ ವಾಸ್ತವ’ ಎಂದು ಸತ್ಯ ಬಿಚ್ಚಿಟ್ಟ ಸಿದ್ದರಾಮಯ್ಯ
Reason behind Deve Gowda step down from PM Post : ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಫೋನ್ ಕದ್ದಾಲಿಕೆಯ ವಿಚಾರ, ಆಡಳಿತ ಪಕ್ಷ ಮತ್ತು ವಿರೋಧ ಪಕ್ಷಗಳ ನಡುವಿನ ವಾಕ್ಸಮರಕ್ಕೆ ಕಾರಣವಾಗುತ್ತಿದೆ. ದೇವೇಗೌಡ್ರು ಅಂದು ಪ್ರಧಾನಿ ಪಟ್ಟವನ್ನು ಕಳೆದುಕೊಂಡಿದ್ದು ಹೇಗೆ ಎನ್ನುವ ವಿವರಣೆಯನ್ನು ಒಂದು ಕಾಲದ ಅವರ ಶಿಷ್ಯ ಸಿಎಂ ಸಿದ್ದರಾಮಯ್ಯ ವಿವರಿಸಿದ್ದಾರೆ.
ಸಿಕ್ಕಲಿ, ಶವರ, ಕಂದಲಿ, ಕತ್ತರಿ ಮಾಡುವ ಸಿಕ್ಕಲಿಗರು ಅಥವಾ ಶಿಕ್ಕಲಿಗರು
ಸಿಕ್ಕಲಿಗ ಅಥವಾ ಶಿಕ್ಕಲಿಗರು ಯಾವುದೇ ಧರ್ಮಕ್ಕೆ ಸೇರಿದ್ದರೂ ಅವರ ಕಾಯಕ ಒಂದೇ ಆಗಿದೆ. ಕುಲುಮೆಗಳಲ್ಲಿ ಕಬ್ಬಿಣದ ಕೆಲಸ ಮಾಡಿ ರೈತಾಪಿ ಜನಕ್ಕೆ ಕೃಷಿ ಉಪಯೋಗಿ ಸಲಕರಣೆಗಳನ್ನು ಮಾಡುತ್ತಿದ್ದವರು. ಕುಲುಮೆಗಳು ನಿಂತ ಮೇಲೆ ಹೊಟ್ಟೆಪಾಡಿಗಾಗಿ ಬೀದಿಗೆ ಬಿದ್ದು ಸಿಕ್ಕಸಿಕ್ಕ ಕೂಲಿನಾಲಿ ಕೆಲಸಗಳನ್ನು ಮಾಡುತ್ತಾ ಹೊಟ್ಟೆ ಹೊರೆಯುತ್ತಿದ್ದಾರೆ. ಇವರಿಗೆ ತುಂಡು ಭೂಮಿಯಿಲ್ಲ, ನೆಲೆನಿಲ್ಲಲು ಸೂರಿಲ್ಲ, ನಿರ್ದಿಷ್ಟ ಉದ್ಯೋಗವಿಲ್ಲ. ಈ ಸಮುದಾಯದ ಒಬ್ಬರಿಗೂ ಸರಕಾರದ ಕನಿಷ್ಠ ನಾಲ್ಕನೇ ದರ್ಜೆಯ ನೌಕರಿ ಇಲ್ಲ. ಮಕ್ಕಳಿಗೆ ವಿದ್ಯಾಭ್ಯಾಸವಿಲ್ಲ, ಈ ಸಮುದಾಯ ಹಿಂದೂ, ಮುಸ್ಲಿಮ್, ಸಿಖ್ ಧರ್ಮಗಳಲ್ಲಿ ಹಂಚಿಹೋಗಿರುವುದರಿಂದ ಇವರಿಗೆ ಎಲ್ಲೂ ಜಾತಿ ಪ್ರಮಾಣ ಪತ್ರ ಸಿಗುತ್ತಿಲ್ಲ. ಹುಬ್ಬಳ್ಳಿಯ ಕೇಶಾಪುರದ ಹಿಂಭಾಗ ಗೊಪ್ಪನಕೊಪ್ಪ ಪ್ರದೇಶದ ಸಣ್ಣ ಓಣಿಯಲ್ಲಿ ತೂರಿ ಒಂದಷ್ಟು ದೂರ ಹೋದಾಗ ಸಿಖ್ ಸಮುದಾಯದ ಸಿಕ್ಕಲಿಗರ ಲೋಕ ನನ್ನ ಕಣ್ಣ ಮುಂದೆ ತೆರೆದುಕೊಂಡಿತು. ಹಂದಿಗೂಡಿನಂತಹ ಸಣ್ಣ ಮನೆಗಳಲ್ಲಿ ತುಂಬಿತುಳುಕುತ್ತಿದ್ದ ಮಹಿಳೆಯರು, ಪುಟ್ಟ ತಲೆಗಳಿಗೆ ಸಿಖ್ ಪೇಟ ಸುತ್ತಿಕೊಂಡು ಕೊಳಕಾದ ಬಟ್ಟೆಗಳಲ್ಲಿ ಕಾಣಿಸಿಕೊಂಡ ಪುಟ್ಟ ಮಕ್ಕಳು, ಮುದುಕರು ತುಂಬಿದ್ದರೆ, ಅದೇ ಸಿಖ್ ಪೇಟ ಧರಿಸಿ, ಬನೀನು ಚೆಡ್ಡಿಗಳಲ್ಲಿನ ಗಂಡಸರು ಮನೆ ಮುಂದೆ ದೊಡ್ಡ ಟಾರ್ ಡ್ರಮ್ಮುಗಳನ್ನು ಹಾಕಿಕೊಂಡು ತಮ್ಮ ಬಲವನ್ನೆಲ್ಲ ಪ್ರಯೋಗಿಸಿ, ಆ ಡ್ರಮ್ಮುಗಳನ್ನು ಸಿಗಿಯುತ್ತ, ದೊಡ್ಡ ಸುತ್ತಿಗೆಗಳಲ್ಲಿ ತಟ್ಟುತ್ತಾ, ಏದುಸಿರು ಬಿಡುತ್ತಾ, ಬೆವರಿಳಿಸಿಕೊಂಡು ಮರಳು ಬಾಚುವ ಬಾಂಡಲೆಗಳನ್ನು ಮಾಡುತ್ತಿದ್ದರು. ಸುಡುಬಿಸಿಲಿನಲ್ಲಿ ಅವರು ಪಡುತ್ತಿದ್ದ ಕಲ್ಪಿಸಿಕೊಳ್ಳಲಿಕ್ಕೂ ಆಗದಷ್ಟು ಶ್ರಮವನ್ನು ನೋಡಿ ದಂಗುಬಡಿದುಹೋದೆ! ಇಷ್ಟೊಂದು ಕಷ್ಟ ಪಡುವ ಕಷ್ಟಜೀವಿಗಳ ಬದುಕು ತೀರಾ ಹಸಿವು, ಬಡತನದಿಂದ ಕೂಡಿತ್ತು. ಅವರನ್ನು ಮಾತಾಡಿಸಿದಾಗ ಟಾರು ಡ್ರಮ್ಮುಗಳನ್ನು ಹೊತ್ತು ತರುವುದರಿಂದ ಹಿಡಿದು ಅವನ್ನು ಸಿಗಿದು ಬಾಂಡಲೆ ಮಾಡಿ ಮಾರುವವರೆಗಿನ ಅವರ ಶ್ರಮದ ಬದುಕನ್ನು ನನ್ನ ಕಣ್ಣ ಮುಂದೆ ತೆರೆದಿಟ್ಟರು. ದುರಂತವೆಂದರೆ ಇವರಿಗೆ ಸರಕಾರ ಎಂಬುದೊಂದು ಇದೆ, ಇದರಿಂದ ನಮ್ಮ ಬದುಕಿಗೆ ಏನಾದರೂ ಸಹಾಯವಾಗುತ್ತೆ ಎಂಬ ಕನಿಷ್ಠ ಅರಿವೂ ಇದ್ದಂತಿರಲಿಲ್ಲ! ಸಿಖ್ ಸಿಕ್ಕಲಿಗರಂತೆಯೇ ಮುಸ್ಲಿಮ್ ಸಿಕ್ಕಲಿಗರ ಗೋಳನ್ನು ಆ ಸಮುದಾಯವನ್ನು ಸಂಘಟಿಸುತ್ತಿರುವ ನಿಸಾರ್ ಅಹಮದ್ ಹೇಳತೊಡಗಿದರು. ‘‘ಸರ್, ನಮ್ಮ ಗೋಳು ಯಾರಿಗೂ ಬೇಡ.. ಯಾವುದೋ ಕಾಲದಲ್ಲಿ ಹಾವೇರಿ ಜಿಲ್ಲೆ ರಟ್ಟೆಹಳ್ಳಿ ತಾಲೂಕಿಗೆ ಒಂಟೆಗಳ ಮೇಲೆ ಬಂದವರು ನಾವು, ಈಗ ಸುಮಾರು ಇನ್ನೂರು ಮನೆಗಳಿದ್ದೇವೆ. ರೈತರಿಗೆ ಕೃಷಿಗೆ ಬೇಕಾದ ಬಂಡಿಯ ಚಕ್ಕಡಿ, ಕುರಿಗೆ ಬಂಡ ತೆಗೆಯುವ ಕತ್ತರಿ, ಕೋಣ ಕಡಿಯುವ ಕಂದಲಿ, ಬಡಿಗೇರರು ಬಳಸುವ ಬಾಚಿ ಮುಂತಾದ ಹತಾರಗಳನ್ನು ಮಾಡುತ್ತಿದ್ದೆವು..ನಮ್ಮ ಅಜ್ಜಾರು ಬೀಗದ ಕೈ ಮಾಡುತ್ತಿದ್ದರಂತೆ. ಕಬ್ಬಿಣದ್ದು ಏನು ಹೇಳಿದರೂ ಮಾಡಿಕೊಡುತ್ತಿದ್ದೆವು. ಈಗ ಇದ್ದಿಲು ಸಿಗಲ್ಲ, ಬತ್ತದ ಹೊಟ್ಟೂ ಸಿಗಲ್ಲ. ಈ ಕಾರಣಕ್ಕೆ ಕುಲುಮೆಗಳನ್ನು ನಿಲ್ಲಿಸಿ ಬಿಟ್ಟಿದ್ದೇವೆ.. ಈಗ ಈ ಹತಾರಗಳನ್ನು ಕೊಳ್ಳುವವರೂ ಇಲ್ಲ ಬಿಡಿ..’’ ಎಂದು ಹೇಳಿ ನಿಟ್ಟುಸಿರು ಬಿಟ್ಟರು. ‘‘ಈಗ ನಿಮ್ಮ ಸಮುದಾಯ ಕುಲವೃತ್ತಿಯನ್ನು ಕಳಕೊಂಡು ಬದುಕಿಗಾಗಿ ಏನು ಮಾಡುತ್ತಿದೆ..?’’ ಎಂದೆ. ‘‘ಸರ್, ನೀವು ಆಯೋಗದ ಅಧ್ಯಕ್ಷರಾಗಿದ್ದಾಗ ಬಂದು ನಮ್ಮ ಗೋಳು ಕೇಳಿಸಿಕೊಂಡು ಸರಕಾರಕ್ಕೆ ವರದಿ ನೀಡಿದಿರಿ.. ಆದರೂ ಈವರೆಗೂ ನಮ್ಮ ಕಡೆ ಸರಕಾರದಿಂದ ಯಾರೂ ಬಂದಿಲ್ಲ.. ಮಕ್ಕಳಿಗೆ ಸ್ಕೂಲಿಗೆ ಸೇರಿಸಲು ಜಾತಿ ಸರ್ಟಿಫಿಕೇಟ್ ಕೇಳುತ್ತಾರೆ. ನಾವು ಹಿಂದುಳಿದ ವರ್ಗದ ಪ್ರವರ್ಗ ಒಂದರಲ್ಲಿ ಇದ್ದರೂ ನಮಗೆ ಅಧಿಕಾರಿಗಳು ಸರ್ಟಿಫಿಕೇಟ್ ಕೊಡಲ್ಲ, ‘ಎರಡು-ಬಿ’ ಯಲ್ಲಿ ತಗೊಳ್ಳಿ ಅಂತಾರೆ, ಅಲ್ಲಿ ದೊಡ್ಡ ಮುಸ್ಲಿಮ್ ಸಮುದಾಯ ಇದೆ. ಮುಸ್ಲಿಮ್ ಅಲೆಮಾರಿಗಳಾದ ನಮ್ಮಂತಹವರಿಗೆ ಅವಕಾಶ ಸಿಗಲ್ಲ, ಇನ್ನು ಸಾಲಸೋಲ, ಅನುದಾನ, ಸವಲತ್ತು ನಮಗೆ ಏನೂ ಸಿಗಲ್ಲ..’’ ಎಂದರು. ನಮ್ಮ ಆಯೋಗದಲ್ಲಿ ಸಿಕ್ಕಲಿಗರ ಕುರಿತು ವಿಸ್ತೃತ ಅಧ್ಯಯನ ಮಾಡಿ, ಅವರ ವಾಸ ಸ್ಥಳಗಳಿಗೆಲ್ಲ ಹೋಗಿ ಈ ಸಮುದಾಯಕ್ಕೆ ವಿಶೇಷ ಪ್ಯಾಕೇಜ್ ನೀಡಬೇಕೆಂದು ಸರಕಾರಕ್ಕೆ ವರದಿ ನೀಡಿದ್ದೆವು. ಕನಿಷ್ಠ ನಾವು ಶಿಫಾರಸು ಮಾಡಿದ ಪ್ಯಾಕೇಜ್ ಅನ್ನು ಸರಕಾರ ಅಂದೇ ನೀಡಿದ್ದರೆ ಈ ಸಮುದಾಯ ಒಂದಷ್ಟು ಉಸಿರಾಡಲಾದರೂ ಸಾಧ್ಯವಿರುತಿತ್ತು. ಸಿಖ್ ಮತ್ತು ಮುಸ್ಲಿಮ್ ಸಿಕ್ಕಲಿಗರನ್ನು ಭೇಟಿಯಾದ ನಂತರ ಹಿಂದೂ ಸಿಕ್ಕಲಿಗರ ಕುರಿತು ಒಂದಷ್ಟು ಅಧ್ಯಯನ ಮಾಡಿರುವ ಪ್ರಕಾಶ ದಿಲಾನ ಅವರನ್ನು ಮಾತಾಡಿಸಿದಾಗ ಹಿಂದೂ ಸಿಕ್ಕಲಿಗರ ಹಿಂದುಳಿದಿರುವಿಕೆಯ ಕಾರಣಗಳನ್ನು ಅವರು ವಿವರಿಸಿದರು. ಅವರ ಪ್ರಕಾರ ಮೂಲತಃ ಸಿಕ್ಕಲಿಗ ಸಮುದಾಯದವರು ಯುದ್ಧಯೋಧರಂತೆ, ರಾಣಾ ಪ್ರತಾಪಸಿಂಹನ ಸೈನ್ಯದಲ್ಲಿದ್ದರಂತೆ, ಇವರಲ್ಲಿ ೧೭೮ ಉಪಜಾತಿಗಳಿದ್ದವಂತೆ. ರಾಣಾ ಪ್ರತಾಪಸಿಂಹ ಮೊಗಲರ ವಿರುದ್ಧ ಯುದ್ಧದಲ್ಲಿ ಸೋತಾಗ ಶಿಕ್ಕಲಿಗರು ಮೊಗಲರ ಯುದ್ಧ ಕೈದಿಗಳಾಗಿ ಆಗ ಅನೇಕ ಜನ ಮುಸ್ಲಿಮ್ ಧರ್ಮಕ್ಕೆ ಮತಾಂತರವಾದರಂತೆ. ಇನ್ನೂ ಕೆಲವರು ಪಂಜಾಬ್ಗೆ ಹೋಗಿ ಸಿಖ್ ಸಿಕ್ಕಲಿಗರಾದರಂತೆ, ಮಿಕ್ಕ ಹಿಂದೂ ಸಿಕ್ಕಲಿಗರು ಹುಬ್ಬಳ್ಳಿ, ಬಾಗಲಕೋಟೆ, ಬಿಜಾಪುರ, ಬೆಳಗಾವಿ, ಕಾರವಾರ ಮುಂತಾದೆಡೆ ಹಂಚಿಹೋದರು. ಆಯೋಗದಿಂದ ನಾವು ಸಿಕ್ಕಲಿಗರನ್ನು ನೋಡಲು ಹೋದಾಗ, ಹುಬ್ಬಳ್ಳಿಯ ಗುಳೇದ ಗುಡ್ಡದ ಭಾಗದಲ್ಲಿ ಹಂದಿಗಳ ಮಲವನ್ನು ತಂದು ಅದನ್ನು ಬಿಸಿಲಿಗೆ ಹಾಕಿ ಒಣಗಿಸಿ, ಅದು ಒಣಗಿದ ನಂತರ ಅದನ್ನು ಉರುವಲನ್ನಾಗಿ ಉಪಯೋಗಿಸಿ, ಆ ಬೆಂಕಿಯಲ್ಲಿ ಅನ್ನ ಬೇಯಿಸಿ ಉಣ್ಣುವಂತಹ ಹೀನಾಯ ಪರಿಸ್ಥಿತಿಯನ್ನು ಕಂಡೆವು! ತಮ್ಮ ವೃತ್ತಿಯಿಂದ ವಂಚಿತರಾದ ಸಿಕ್ಕಲಿಗರು ಈಗ ಹೆಚ್ಚಾಗಿ ಕೂಲಿಯನ್ನೇ ನಂಬಿಕೊಂಡಿದ್ದಾರೆ. ಪುರಸಭೆಯಲ್ಲಿ ಕಸ ಹೊಡೆಯುವುದು, ಪಿಟ್ ಗುಂಡಿ ಸ್ವಚ್ಛ ಮಾಡುವುದನ್ನೇ ಕಾಯಕ ಮಾಡಿಕೊಂಡಿದ್ದಾರೆ. ಹುಬ್ಬಳ್ಳಿಯ ಹೇಸಿಗೆ ಮಂಡಿಯಲ್ಲಿ ಊರಿನ ಕಸವನ್ನು ತಂದು ಹಾಕುವ ಈ ಜನ ಬೆಳಗಿನ ಜಾವಕ್ಕೆ ಎದ್ದು ಹೋಗಿ ಆ ಕಸದ ರಾಶಿಯಲ್ಲಿ ಕಬ್ಬಿಣದ ಚೂರುಗಳು, ಪ್ಲಾಸ್ಟಿಕ್, ಖಾಲಿ ಬಾಟಲಿಗಳು, ಚಿಲ್ಲರೆ ಕಾಸಿಗಾಗಿ ಹುಡುಕಾಡಿ, ಅಲ್ಲಿ ಸಿಕ್ಕಿದ್ದನ್ನು ಮಾರಿ ಜೀವನ ಸಾಗಿಸುತ್ತಿದ್ದರು. ಹುಬ್ಬಳ್ಳಿ ಮತ್ತು ಗದಗದಲ್ಲಿ ಈ ಸಮುದಾಯದ ಜನ ದನ ಕರುಗಳಿಗೆ ಶವರ ಅಥವ ಗೊರಸು (ಪಾದ ಸವೆಯದಿರಲೆಂದು ದನಗಳ ಪಾದಗಳಿಗೆ ಕಬ್ಬಿಣದ ತುಂಡನ್ನು ಹಾಕುವ ಕೆಲಸ) ಹಾಕಲು ಸುತ್ತಮುತ್ತಲ ಊರುಗಳನ್ನು ಸುತ್ತುತ್ತಾ ಅಲೆಮಾರಿ ಜೀವನ ನಡೆಸುತಿದ್ದರು. ಸಿಕ್ಕಲಿಗ ಅಥವಾ ಶಿಕ್ಕಲಿಗರು ಯಾವುದೇ ಧರ್ಮಕ್ಕೆ ಸೇರಿದ್ದರೂ ಅವರ ಕಾಯಕ ಒಂದೇ ಆಗಿದೆ. ಕುಲುಮೆಗಳಲ್ಲಿ ಕಬ್ಬಿಣದ ಕೆಲಸ ಮಾಡಿ ರೈತಾಪಿ ಜನಕ್ಕೆ ಕೃಷಿ ಉಪಯೋಗಿ ಸಲಕರಣೆಗಳನ್ನು ಮಾಡುತ್ತಿದ್ದವರು. ಕುಲುಮೆಗಳು ನಿಂತ ಮೇಲೆ ಹೊಟ್ಟೆಪಾಡಿಗಾಗಿ ಬೀದಿಗೆ ಬಿದ್ದು ಸಿಕ್ಕಸಿಕ್ಕ ಕೂಲಿನಾಲಿ ಕೆಲಸಗಳನ್ನು ಮಾಡುತ್ತಾ ಹೊಟ್ಟೆ ಹೊರೆಯುತ್ತಿದ್ದಾರೆ. ಇವರಿಗೆ ತುಂಡು ಭೂಮಿಯಿಲ್ಲ, ನೆಲೆನಿಲ್ಲಲು ಸೂರಿಲ್ಲ, ನಿರ್ದಿಷ್ಟ ಉದ್ಯೋಗವಿಲ್ಲ. ಈ ಸಮುದಾಯದ ಒಬ್ಬರಿಗೂ ಸರಕಾರದ ಕನಿಷ್ಠ ನಾಲ್ಕನೇ ದರ್ಜೆಯ ನೌಕರಿ ಇಲ್ಲ. ಮಕ್ಕಳಿಗೆ ವಿದ್ಯಾಭ್ಯಾಸವಿಲ್ಲ, ಈ ಸಮುದಾಯ ಹಿಂದೂ, ಮುಸ್ಲಿಮ್, ಸಿಖ್ ಧರ್ಮಗಳಲ್ಲಿ ಹಂಚಿಹೋಗಿರುವುದರಿಂದ ಇವರಿಗೆ ಎಲ್ಲೂ ಜಾತಿ ಪ್ರಮಾಣ ಪತ್ರ ಸಿಗುತ್ತಿಲ್ಲ. ಸಿಕ್ಕಲಿಗ, ಶಿಕ್ಕಲಿಗ ಸಮುದಾಯದ ಸಾಮಾಜಿಕ, ಶೈಕ್ಷಣಿಕ, ಔದ್ಯೋಗಿಕ ಹಾಗೂ ಆರ್ಥಿಕ ಹಿನ್ನೆಲೆಯನ್ನು ಕೂಲಂಕಶವಾಗಿ ಪರಿಶೀಲಿಸಿ, ಕರ್ನಾಟಕದಾದ್ಯಂತ ಇವರು ಬದುಕಿರುವ ಸ್ಥಳಗಳಿಗೆ ಭೇಟಿ ನೀಡಿ ಇವರ ಬದುಕು ಮತ್ತು ಬವಣೆಗಳನ್ನು ಪರಿಶೀಲಿಸಿ, ಈ ನಿರ್ಗತಿಕ ಸಮುದಾಯದ ಉನ್ನತಿಗಾಗಿ ಸುಮಾರು ಹತ್ತು ಪರಿಹಾರೋಪಾಯಗಳನ್ನು ಪಟ್ಟಿಮಾಡಿ, ಸರಕಾರಕ್ಕೆ ಶಿಫಾರಸು ನೀಡಿ ಹದಿನಾರು ವರ್ಷಗಳಾದವು! ಯಾವುದೇ ಸರಕಾರ ತನ್ನ ಸರಕಾರವೇ ನೇಮಿಸಿದ ಹಿಂದುಳಿದ ವರ್ಗಗಳ ಆಯೋಗ ನೀಡಿರುವ ವರದಿಯನ್ನು ತೆರೆದು ಕೂಡ ನೋಡದಿರುವುದು ವಿಪರ್ಯಾಸ ಮತ್ತು ದುರಂತ.
ಮಧ್ಯಪ್ರಾಚ್ಯ ಧಗಧಗ: ಯಶ್ ನಟನೆಯ ‘ಟಾಕ್ಸಿಕ್’ ಚಿತ್ರ ಮುಂದೂಡಿಕೆ, ಜೂನ್ 4 ರಂದು ಬಿಡುಗಡೆ
ಮಾರ್ಚ್ 19 ರಂದು 'ಟಾಕ್ಸಿಕ್' ಸಿನಿಮಾ ವಿಶ್ವದಾದ್ಯಂತ ತೆರೆಗೆ ಅಪ್ಪಳಿಸಬೇಕಿತ್ತು. ಆದರೆ, ಪ್ರಸ್ತುತ ಮಧ್ಯಪ್ರಾಚ್ಯದಲ್ಲಿ ಕ್ಷಿಪಣಿಗಳು ಅಪ್ಪಳಿಸುತ್ತಿವೆ. ಹೀಗಾಗಿ, 'ಟಾಕ್ಸಿಕ್' ಚಿತ್ರದ ರಿಲೀಸ್ ಡೇಟ್ ಅನ್ನು ಪೋಸ್ಟ್ ಪೋನ್ ಮಾಡಲಾಗಿದೆ. ಜೂನ್ 4ಕ್ಕೆ 'ಟಾಕ್ಸಿಕ್' ಮುಂದೂಡಲಾಗಿದೆ. ಚಿತ್ರದ ಪ್ರಚಾರ ಕಾರ್ಯಗಳಿಗೆ ತಾತ್ಕಾಲಿಕ ಫುಲ್ ಸ್ಟಾಪ್ ಬಿದ್ದಿದೆ.
Gold Rate Fall: ಏರಿದಷ್ಟೇ ವೇಗವಾಗಿ ಕುಸಿದ ಚಿನ್ನದ ಬೆಲೆ: ಬೆಳ್ಳಿ ಬೆಲೆಯಲ್ಲೂ ಇಳಿಕೆ
ಚಿನ್ನ ಬೆಳ್ಳಿ ದರದಲ್ಲಿ ಭಾರಿ ಇಳಿಕೆ ದಾಖಲಿಸಿದೆ. ಚಿನ್ನದ ದರದಲ್ಲಿ ಇಂದು 3, 110 ರೂ ಇಳಿಕೆ ಆಗಿದ್ದರೆ, ಬೆಳ್ಳಿ ಬೆಲೆಯಲ್ಲಿ 10 ಸಾವಿರ ಇಳಿದಿದೆ.
ಇರಾನ್ ಮೇಲೆ ಇಸ್ರೇಲ್ ಹಾಗೂ ಅಮೆರಿಕ ಯುದ್ಧ ಸಾರಿದ ಕೇವಲ ಮೂರು ದಿನಗಳಲ್ಲೇ ಅದರ ನೇರ ಹಾಗೂ ತೀವ್ರವಾದ ಪರಿಣಾಮ ಕರ್ನಾಟಕದ ಹೈನೋದ್ಯಮ, ಕುಕ್ಕುಟೋದ್ಯಮ ಹಾಗೂ ಕೃಷಿ ವಲಯದ ಮೇಲೆ ಬೀರಿದೆ. ಮಧ್ಯಪ್ರಾಚ್ಯದಲ್ಲಿ ಭುಗಿಲೆದ್ದಿರುವ ಈ ಯುದ್ಧದಿಂದಾಗಿ ವಿಮಾನಗಳ ಸಂಚಾರ ಹಾಗೂ ಹಡಗು ಮಾರ್ಗಗಳು ಸಂಪೂರ್ಣವಾಗಿ ಸ್ಥಗಿತಗೊಂಡಿವೆ. ಇದರ ಪರಿಣಾಮವಾಗಿ, ಗಲ್ಫ್ ರಾಷ್ಟ್ರಗಳಿಗೆ ರಫ್ತಾಗಬೇಕಿದ್ದ ಕೋಟ್ಯಂತರ ರೂಪಾಯಿ
ಹೊರ್ಮುಜ್ ಜಲಸಂಧಿಯಲ್ಲಿ ಸಿಲುಕಿದ ತೈಲ ಟ್ಯಾಂಕರ್ ರಕ್ಷಣೆಗೆ US ಸಿದ್ದ: ತೈಲಬೆಲೆ ಏರಿಕೆ ಬೆನ್ನಲ್ಲೇ ಟ್ರಂಪ್ ಘೋಷಣೆ!
ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಹೆಚ್ಚಳವಾಗುತ್ತಿದ್ದು, ಇದರ ಪರಿಣಾಮ ಹೊರ್ಮುಜ್ ಜಲಸಂಧಿಯ ಮೇಲೆ ಹೆಚ್ಚಾಗಿದೆ. ಇದರಿಂದಾಗಿ ಹೊರ್ಮುಜ್ ಜಲಸಂಧಿಯಲ್ಲಿ ಭಾರತ ಸೇರಿದಂತೆ ಹಲವು ದೇಶಗಳಿಗೆ ಇಂಧನಟ್ಯಾಂಕರ್ ಸೇರಿದಂತೆ ಸರಕುಗಳನ್ನು ಹೊತ್ತುಬರುತ್ತಿದ್ದ ನೂರಾರು ಹಡಗುಗಳು ಅಲ್ಲೇ ಸ್ಥಗಿತವಾಗಿದ್ದು, ಸದ್ಯ ಇದು ಜಾಗತಿಕ ಅಮರುಕಟ್ಟಯ ಮೇಲೆ ಭಾರಿ ಪರಿಣಾಮ ಬೀಳುವಂತೆ ಮಾಡಿದೆ. ಈಗಾಗಲೇ ಜಾಗತಿಕ ಕಚ್ಚಾ ತೈಲ ಬೆಲೆ ಪ್ರತಿ ಬ್ಯಾರೆಲ್ ಗೆ $85 ತಲುಪಿದ್ದು, ಇದರಿಂದಾಗಿ ಹಣದುಬ್ಬರದ ಆತಂಕವನ್ನು ಸಹ ಹೆಚ್ಚಿಸಿದೆ. ಹಿನ್ನಲೆಯಲ್ಲಿ ಹೊರ್ಮುಜ್ ಜಲಸಂಧಿಯಲ್ಲಿರುವ ತೈಲ ಹಡುಗುಗಳು ಸೇರಿದಂತೆ ವಿವಿಧ ಹಡಗುಗಳ ರಕ್ಷಣೆಗೆ ಅಮೆರಿಕಾ ನೌಕಾಪಡೆಯನ್ನು ನಿಯೋಜಿಸುವುದಾಗಿ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ.
ಇರಾನ್ ನ ಪರಮೋಚ್ಛ ನಾಯಕನಾಗಿ ಆಯತೊಲ್ಲಾ ಪುತ್ರ ಮೊಜ್ತಬಾ ಖಮೇನಿ ಆಯ್ಕೆ: ತಂದೆಗಿಂತ ಭಿನ್ನ ಹೇಗೆ? ಆಯ್ಕೆಗೆ ಕಾರಣಗಳಿವು!
ಅಮೆರಿಕ- ಇಸ್ರೇಲ್ ನಿರಂತರ ದಾಳಿ ಮಧ್ಯೆಯೂ ಇರಾನ್ ಗೆ ನೂತನ ಪರಮೋಚ್ಛ ನಾಯಕನ ಆಯ್ಕೆಯಾಗಿದೆ. 56 ವರ್ಷದ ಮೊಜ್ತಬಾ ಖಮೇನಿ, ಮಿಲಿಟರಿ ವ್ಯವಸ್ಥೆಗಳ ನಿರ್ವಹಣೆಯಲ್ಲಿ ಉತ್ತಮ ಹಿಡಿತವಿದೆ ಎನ್ನಲಾಗಿದೆ.
PC : PTI ಬೆಂಗಳೂರು : ವಿಪತ್ತುಗಳ ಅಪಾಯವನ್ನು ತಡೆಗಟ್ಟುವುದು ಮತ್ತು ಕಡಿಮೆ ಮಾಡುವ ಉದ್ದೇಶದಿಂದ ಕರ್ನಾಟಕ ಸೇರಿದಂತೆ ಒಟ್ಟು 12 ರಾಜ್ಯಗಳು ತಮಗೆ ಹಂಚಿಕೆಯಾಗಿದ್ದ 1,200 ಕೋಟಿ ರೂ. ಅನುದಾನದ ಬಳಕೆ ಮಾಡಿರುವ ಪ್ರಮಾಣ ಪತ್ರಗಳನ್ನು ಸಲ್ಲಿಸಿಲ್ಲ. ಕೇಂದ್ರ ಗೃಹ ಸಚಿವಾಲಯದ ವಿಪತ್ತು ನಿರ್ವಹಣೆ ವಿಭಾಗವು ಕರ್ನಾಟಕ ಸೇರಿದಂತೆ ದೇಶದ 12 ರಾಜ್ಯ ಸರಕಾರಗಳಿಗೆ 2026ರ ಫೆ. 6ರಂದೇ ಈ ಕುರಿತು ಪತ್ರ ಬರೆದಿದೆ. ಈ 12 ರಾಜ್ಯಗಳಿಗೆ ತಲಾ 100 ಕೋಟಿ ರೂ. ನಂತೆ 1,200 ಕೋಟಿ ರೂ. ಅನುದಾನ ಹಂಚಿಕೆ ಮಾಡಿತ್ತು. ಆದರೆ ಅನುದಾನ ಬಳಕೆ ಮಾಡಿರುವ ಪ್ರಮಾಣ ಪತ್ರಗಳನ್ನು ಸಲ್ಲಿಸಿಲ್ಲ. ಹೀಗಾಗಿ ಕೇಂದ್ರ ಸರಕಾರವು ರಾಜ್ಯಗಳಿಗೆ ಪತ್ರ ಬರೆದಿದೆ. ಈ ಪತ್ರವನ್ನಾಧರಿಸಿ ಕರ್ನಾಟಕ ಸರಕಾರದ ಕಂದಾಯ ಇಲಾಖೆಯ ವಿಪತ್ತು ನಿರ್ವಹಣೆ ವಿಭಾಗವು ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಮತ್ತು ಕರ್ನಾಟಕ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಪೊಲೀಸ್ ಮಹಾನಿರ್ದೇಶಕರಿಗೆ 2026ರ ಫೆ.26ರಂದು ಪತ್ರ ಬರೆದಿದೆ. ಈ ಪತ್ರಗಳು he-file.inಗೆ ಲಭ್ಯವಾಗಿದೆ. ಕರ್ನಾಟಕ ಅಗ್ನಿಶಾಮಕ ಹಾಗೂ ತುರ್ತು ಸೇವೆಗಳಿಗೆ ಎನ್ಡಿಆರ್ಎಫ್ರಲ್ಲಿ ನಿಗದಿಪಡಿಸಿದ್ದ ಮಾನದಂಡಗಳ ಅನ್ವಯ ಸ್ವಯಂ ಸೇವಕರ ತರಬೇತಿ, ಇಆರ್ಕೆಗಳ ಸಂಗ್ರಹಣೆ, ಯುವ ಆಪದ್ ಮಿತ್ರ ಯೋಜನೆ ಅನುಷ್ಠಾನ, ಎಂಐಎಸ್ ನವೀಕರಣ, ವಿಮಾ ರಕ್ಷಣೆ ಒಪ್ಪಂದಗಳಿಗೆ ಸಹಿ ಹಾಕುವುದು ಸೇರಿದಂತೆ ಪ್ರಮುಖ ಕಾರ್ಯಗಳನ್ನು ತ್ವರಿತವಾಗಿ ಕೈಗೆತ್ತಿಕೊಳ್ಳಬೇಕು. ಇದಕ್ಕಾಗಿ 3ನೇ ಕಂತಿನ ಅನುದಾನ ಹಂಚಿಕೆ ಮಾಡಬೇಕಿದೆ. ಅಂತಿಮ ಕಂತಿನ ಬಿಡುಗಡೆಗೆ ಅನುವು ಮಾಡಿಕೊಡಲು 2026ರ ಮಾ.15ರೊಳಗೇ ಎನ್ಡಿಎಂಎಗೆ ಬಾಕಿ ಇರುವ ಹಣ ಬಳಕೆ ಪ್ರಮಾಣ ಪತ್ರಗಳನ್ನು ಸಲ್ಲಿಸಬೇಕು ಎಂದು ಕಂದಾಯ ಇಲಾಖೆಯು ಸೂಚಿಸಿದೆ. ವಿಪತ್ತುಗಳ ಅಪಾಯವನ್ನು ತಡೆಗಟ್ಟಲು ಕಡಿಮೆ ಮಾಡಲು ಮತ್ತು ಸನ್ನದ್ಧತೆಯನ್ನು ಹೆಚ್ಚಿಸಲು ಭಾರತ ಸರಕಾರವು ರಾಷ್ಟ್ರೀಯ ವಿಪತ್ತು ತಗ್ಗಿಸುವಿಕೆ ನಿಧಿ ಸ್ಥಾಪಿಸಿದೆ. 15ನೇ ಹಣಕಾಸು ಆಯೋಗದ ಶಿಫಾರಸಿನ ಮೇರೆಗೆ ಎನ್ಡಿಆರ್ಎಫ್ ಜೊತೆಗೆ ವಿಶೇಷವಾಗಿ ತಗ್ಗಿಸುವಿಕೆಯ ಯೋಜನೆಗಳಿಗಾಗಿ ಈ ಪ್ರತ್ಯೇಕ ನಿಧಿಯನ್ನು ರಚಿಸಿದೆ. 15ನೇ ಹಣಕಾಸು ಆಯೋಗವು ತನ್ನ ವರದಿಯಲ್ಲಿ ಪರಿಹಾರ ನಿಧಿಗಳನ್ನು ಸ್ಥಾಪಿಸಲು ಶಿಫಾರಸುಗಳನ್ನು ಮಾಡಿತ್ತು. ಮತ್ತು ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದಲ್ಲಿ ಹಂಚಿಕೆಗಳನ್ನು ಸೂಚಿಸಿತ್ತು. ಹಣಕಾಸು ಆಯೋಗದ ಶಿಫಾರಸುಗಳನ್ನು ಅಂಗೀಕರಿಸಿದ್ದ ಕೇಂದ್ರ ಸರಕಾರವು 2021-22 ರಿಂದ 2025-26ರ ಅವಧಿಗೆ ರಾಷ್ಟ್ರೀಯ ವಿಪತ್ತು ತಗ್ಗಿಸುವಿಕೆ ನಿಧಿಗೆ 13,693 ಕೋಟಿ ರೂ. ಮತ್ತು ರಾಜ್ಯ ವಿಪತ್ತು ತಗ್ಗಿಸುವಿಕೆ ನಿಧಿಗೆ 32,030.60 ಕೋಟಿ ರೂ.ಗಳನ್ನು ನಿಗದಿಪಡಿಸಿತ್ತು. 15ನೇ ಹಣಕಾಸು ಆಯೋಗದ ಮಧ್ಯಂತರ ಶಿಫಾರಸುಗಳ ಆಧಾರದ ಮೇಲೆ 2020-21ರ ಅವಧಿಗೆ ಎಸ್ಡಿಎಂಎಫ್ಗೆ 5,796.60 ಕೋಟಿ ರೂ.ಗಳನ್ನು ಹಂಚಿಕೆ ಮಾಡಿದೆ. 2021-22ರಲ್ಲಿ ಎನ್ಡಿಆರ್ಎಂಎಫ್ ಅಡಿಯಲ್ಲಿ 12,390 ಕೋಟಿ ರೂ. ಮತ್ತು ಎನ್ಡಿಎಂಎಫ್ಗೆ 2,478.00 ಕೋಟಿ ರೂ. , 2022-23ರಲ್ಲಿ ಎನ್ಡಿಆರ್ಎಂಎಫ್ಗೆ 13,010 ಕೋಟಿ ರೂ. , ಎನ್ಡಿಎಂಎಫ್ಗೆ 2,602 ಕೋಟಿ ರೂ., 2023-24ರಲ್ಲಿ ಎನ್ಆರ್ಎಂಎಫ್ಗೆ 13,660 ಕೋಟಿ ರೂ. , ಎನ್ಎಂಎಫ್ಗೆ 2,732 ಕೋಟಿ ರೂ., 2024-25ರಲ್ಲಿ ಎನ್ಆರ್ಎಂಎಫ್ಗೆ 14,343 ಕೋಟಿ ರೂ., ಎನ್ಡಿಎಂಎಫ್ಗೆ 2,869 ಕೋಟಿ ರೂ., 2025-26ರಲ್ಲಿ ಎನ್ಎಆರ್ಎಂಎಫ್ಗೆ 15,060 ಕೋಟಿ ರೂ. ಸೇರಿ ಒಟ್ಟಾರೆ 68,463 ಕೋಟಿ ರೂ. ಅನುದಾನ ಹಂಚಿಕೆ ಮಾಡಿತ್ತು. ಅದೇ ರೀತಿ ಎನ್ಡಿಎಂಎಫ್ಗೆ 2026-26ರಲ್ಲಿ 3,012 ಕೋಟಿ ರೂ. ಸೇರಿ ಒಟ್ಟಾರೆ 13,693 ಕೋಟಿ ರೂ. ಹಂಚಿಕೆ ಮಾಡಿತ್ತು. ಅಲ್ಲದೇ ಬರ ಪೀಡಿತ ಕರ್ನಾಟಕ, ಬಿಹಾರ, ಗುಜರಾತ್, ಜಾರ್ಖಂಡ್, ಮಧ್ಯ ಪ್ರದೇಶ, ಮಹಾರಾಷ್ಟ್ರ, ಒಡಿಶಾ, ರಾಜಸ್ಥಾನ, ತಮಿಳುನಾಡು, ತೆಲಂಗಾಣ, ಉತ್ತರ ಪ್ರದೇಶ ಸೇರಿದಂತೆ ಒಟ್ಟು 12 ರಾಜ್ಯಗಳಿಗೆ ತಲಾ 100 ಕೋಟಿ ರೂ. ನಂತೆ ಒಟ್ಟಾರೆ 1,200 ಕೋಟಿ ರೂ. ಗಳನ್ನು ಬರ ತಗ್ಗಿಸುವಿಕೆ ನಿಧಿಯಡಿ 2021-26ರವರೆಗೆ ಹಂಚಿಕೆಮಾಡಿದೆ. ಅದೇ ರೀತಿ ಭೂಕಂಪ ಮತ್ತು ಭೂ ಕುಸಿತಗಳನ್ನು ತಡೆಗಟ್ಟಲು 2021-22ರಿಂದ 2025-26ರವರೆಗೆ ಹಿಮಾಚಲ ಪ್ರದೇಶ, ಉತ್ತರಾಖಂಡ್ ಮತ್ತು ಈಶಾನ್ಯ ರಾಜ್ಯಗಳಿಗೆ ತಲಾ 250 ಕೋಟಿ ರೂ. ನಂತೆ ಒಟ್ಟಾರೆ 750 ಕೋಟಿ ರೂ. ಗಳನ್ನು ಹಂಚಿಕೆ ಮಾಡಿದೆ. ಹಾಗೆಯೇ ಬೆಂಗಳೂರು ನಗರ, ಮುಂಬೈ, ಚೆನ್ನೈ, ಕೋಲ್ಕತ್ತಾ, ಹೈದರಾಬಾದ್, ಅಹಮದಾಬಾದ್ ಮತ್ತು ಪುಣೆ ರಾಜ್ಯಕ್ಕೆ ವಾರ್ಷಿಕವಾಗಿ 500 ಕೋಟಿ ರೂ.ಹಂಚಿಕೆ ಮಾಡಿತ್ತು. 2021-26ರ ಅವಧಿಯಲ್ಲಿ ಈ ನಗರಗಳಿಗೆ ಒಟ್ಟಾರೆ 2,500 ಕೋಟಿ ರೂ. ಅನುದಾನ ಹಂಚಿಕೆಯಾಗಿದೆ. ಇದರಲ್ಲಿ ಬೆಂಗಳೂರು ನಗರಕ್ಕೆ ವಾರ್ಷಿಕ 50 ಕೋಟಿ ರೂ. ನಂತೆ 2021-26ರವರೆಗೆ 250 ಕೋಟಿ ರೂ. ಹಂಚಿಕೆ ಮಾಡಿದೆ. ಮೊದಲ ಬಾರಿಗೆ ಸರಕಾರವು ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದಲ್ಲಿ ವಿಪತ್ತು ಅಪಾಯಗಳನ್ನು ತಗ್ಗಿ ಸಲು ಮಾತ್ರ ಹಣವನ್ನು ಹಂಚಿಕೆ ಮಾಡಿತ್ತು. ಇದು ವಿಪತ್ತುಗಳ ಪರಿಣಾಮವನ್ನು ಕಡಿಮೆ ಮಾಡಲು ತಗ್ಗಿಸುವ ಚಟುವಟಿಕೆಗಳನ್ನು ಕೈಗೊಳ್ಳಲು ರಾಜ್ಯಗಳಿಗೆ ಸಹಾಯ ಮಾಡಲಿದೆ. ಕೇಂದ್ರ ಸರಕಾರವು ಎಸ್ಡಿಎಂಫ್ಎಫ್ನಲ್ಲಿ ಕೇಂದ್ರದ ಪಾಲಾಗಿ ಎಲ್ಲ ರಾಜ್ಯಗಳಿಗೆ ಶೇ 75 (ಈಶಾನ್ಯ ಮತ್ತು ಹಿಮಾಲಯನ್ ರಾಜ್ಯಗಳಿಗೆ ಶೇ 90) ಕೊಡುಗೆ ನೀಡುತ್ತಿದೆ. 2013-14ರಿಂದ 2022-23ರವರೆಗೆ ರಾಜ್ಯದಲ್ಲಿ ಕಂದಾಯ ಇಲಾಖೆಯು ನೀಡಿದ್ದ ಒಟ್ಟು 43.37 ಕೋಟಿ ರೂ.ಗಳಲ್ಲಿ 23.68 ಕೋಟಿ ರೂ.ಖರ್ಚಾಗಿದೆ. ಎನ್ಡಿಆರ್ಎಫ್ನಲ್ಲಿ 7.69 ಕೋಟಿ ರೂ. ಉಳಿದಿತ್ತು. ಆದರೆ 2022-23ರಲ್ಲಿ ಹಂಚಿಕೆಯಾಗಿದ್ದ ನಿಧಿಯ ಒಟ್ಟು 12 ಕೋಟಿ ರೂ. ಕಳೆದು ಹೋಗಿದೆ ಎಂದು ಗಮನಿಸಿದೆ ಎಂದು ಸಿಎಜಿಯು ತನ್ನ ವರದಿಯಲ್ಲಿ ಉಲ್ಲೇಖಿಸಿದೆ. ಸಾವು, ಗಾಯ, ವರ್ಗಗಳ ಆಧಾರದ ಮೇಲೆ ಜನಸಂಖ್ಯೆ, ಶಿಕ್ಷಣ, ಆರೋಗ್ಯ, ವಸತಿ, ಕೃಷಿ, ಕೈಗಾರಿಕೆಗಳು, ರಸ್ತೆಗಳು, ಸೇತುವೆಗಳು, ಕಟ್ಟಡಗಳಂತಹ ನಿರ್ಣಾಯಕ ಮೂಲಸೌಕರ್ಯಗಳ, ಸಾಂಸ್ಕೃತಿಕ ಪರಂಪರೆಗಳು ಮತ್ತಿತರ ಕ್ಷೇತ್ರಗಳಲ್ಲಿನ ಆರ್ಥಿಕ ನಷ್ಟಗಳ ಕುರಿತು ರಾಜ್ಯ ಅಧಿಕಾರಿಗಳು, ಆಯಾ ಜಿಲ್ಲೆಗಳು ತಮ್ಮ ಸ್ಥಳೀಯ ವಿಪತ್ತುಗಳ ಕುರಿತು ದತ್ತಾಂಶವನ್ನು ನಮೂದಿಸಬೇಕು. ಆದರೆ ಇಂತಹ ಜವಾಬ್ದಾರಿಯು ಪರಿಣಾಮಕಾರಿಯಾಗಿ ನಿಭಾಯಿಸಿಲ್ಲ ಎಂದು ಸಿಎಜಿಯು ಪತ್ತೆ ಹಚ್ಚಿತ್ತು. ಹೆಸರಿಗಷ್ಟೇ ಆಪ್ತಮಿತ್ರ! ಸಿದ್ದರಾಮಯ್ಯ ಅವರ ಮೊದಲ ಅವಧಿಯಲ್ಲಿ(2016-17) ಕೇಂದ್ರ ಸರಕಾರವು ಆಪ್ತಮಿತ್ರ ಯೋಜನೆಯನ್ನು ಅನುಮೋದಿಸಿತ್ತು. ಆದರೆ ಈ ಯೋಜನೆಯಡಿಯಲ್ಲಿ ತರಬೇತಿ ಪಡೆದಿದ್ದ ಸ್ವಯಂ ಸೇವಕರಿಗೆ ತುರ್ತು ಪ್ರತಿಸ್ಪಂದಕ ಕಿಟ್ಗಳನ್ನೇ ನೀಡಿರಲಿಲ್ಲ. ಹೀಗಾಗಿ ಈ ಯೋಜನೆಯು ಹೆಸರಿಗಷ್ಟೇ ಆಪ್ತಮಿತ್ರವಾಗಿತ್ತು. ಈ ಯೋಜನೆಯಡಿಯಲ್ಲಿ 2022ರ ಜೂನ್ನಿಂದ ಆಗಸ್ಟ್ವರೆಗೆ 11 ಜಿಲ್ಲೆಗಳಲ್ಲಿ 3,400 ಸ್ವಯಂ ಸೇವಕರಿಗೆ ತರಬೇತಿ ನೀಡಿತ್ತು. ಇದಕ್ಕಾಗಿ 4.14 ಕೋಟಿ ರೂ. ವೆಚ್ಚವಾಗಿತ್ತು ಎಂದು ದಾಖಲೆಗಳಲ್ಲಿ ತೋರಿಸಿತ್ತು. ಆದರೆ ತುರ್ತು ಪ್ರತಿಸ್ಪಂದಕ ಕಿಟ್ಗಳನ್ನು ಖರೀದಿಸಿ ಯಾವುದೇ ಪ್ರಶಿಕ್ಷಣಾರ್ಥಿಗಳಿಗೆ ವಿತರಿಸಿಲ್ಲ ಎಂದು ಲೆಕ್ಕ ಪರಿಶೋಧನೆಯು ಗಮನಿಸಿದೆ. ಅಲ್ಲದೇ ತರಬೇತಿ ಪಡೆದಿದ್ದ ಸ್ವಯಂ ಸೇವಕರ ಸೇವೆಯನ್ನು ಅಪಾಯದ ಸಮಯದಲ್ಲಿ ರಕ್ಷಣಾ ಕಾರ್ಯಾಚರಣೆಗೆ ಬಳಸಲಾಗಿದೆ ಎಂದು ಸೂಚಿಸುವ ಯಾವುದೇ ಪರೀಕ್ಷಾ ತನಿಖೆ ನಡೆಸಿದ ಜಿಲ್ಲೆಗಳಲ್ಲಿ ಯಾವುದೇ ದಾಖಲೆಗಳೂ ಲಭ್ಯವಿಲ್ಲ ಎಂದು ಸಿಎಜಿ ವರದಿಯು ಪತ್ತೆ ಹಚ್ಚಿತ್ತು.
ಮಧ್ಯಪ್ರಾಚ್ಯ ಬಿಟ್ಟು ತಕ್ಷಣ ಹೊರಡಿ, ಅಮೆರಿಕ ಪ್ರಜೆಗಳಿಗೆ ಟ್ರಂಪ್ ಸರ್ಕಾರದ ಸೂಚನೆ | Operation Roaring Lion
ಎಲ್ಲೆಲ್ಲೂ ಬೀಳುತ್ತಿರುವ ಮಿಸೈಲ್ &ಬಾಂಬ್ಗಳು, ಜೀವ ಉಳಿಸಿಕೊಳ್ಳಲು ಪರದಾಡುತ್ತಿರುವ ಜನರು... ಅಂದಹಾಗೆ, ಇದು ಮಧ್ಯಪ್ರಾಚ್ಯ ಭಾಗದಲ್ಲಿ ಇದೀಗ ಕಂಡುಬರುತ್ತಿರುವ ಸಾಮಾನ್ಯ ದೃಶ್ಯಗಳು ಇವು. ಇರಾನ್ ಮೇಲೆ ಅಮೆರಿಕ ಇನ್ನಷ್ಟು ದೊಡ್ಡ ಮಟ್ಟದಲ್ಲಿ ದಾಳಿ ನಡೆಸುತ್ತಿದ್ದು, ಇಸ್ರೇಲ್ ಸೇನೆ ಜೊತೆ ಸೇರಿ ಇರಾನ್ ರಾಜಧಾನಿ ತೆಹ್ರಾನ್ ಧೂಳ್ ಧೂಳ್ ಮಾಡುತ್ತಿದೆ ಅಮೆರಿಕ. ತಾನು ಇಟ್ಟಿರುವ ಗುರಿ ತಲುಪುವ
ಷೇರು ಮಾರುಕಟ್ಟೆಗೆ ತಟ್ಟಿದ ಯುದ್ಧದ ಬಿಸಿ: ಸೆನ್ಸೆಕ್ಸ್ 78,500 ಮಟ್ಟಕ್ಕೆ ಕುಸಿತ, ನಿಫ್ಟಿಗೂ ಬಲವಾದ ಪೆಟ್ಟು
ಭಾರತೀಯ ಷೇರು ಮಾರುಕಟ್ಟೆಯಲ್ಲಿ ಇಂದು ಭೀಕರ ಕುಸಿತ ಕಂಡುಬಂದಿದೆ. ಅಮೆರಿಕ-ಇರಾನ್ ನಡುವಿನ ಯುದ್ಧದ ಭೀತಿ ಮತ್ತು ಕಚ್ಚಾ ತೈಲ ಬೆಲೆ ಏರಿಕೆಯ ಪರಿಣಾಮವಾಗಿ ಬುಧವಾರ ಬೆಳಗ್ಗೆ ವಹಿವಾಟು ಆರಂಭವಾಗುತ್ತಿದ್ದಂತೆ ಸೆನ್ಸೆಕ್ಸ್ ಮತ್ತು ನಿಫ್ಟಿ ಪಾತಾಳಕ್ಕೆ ಕುಸಿದಿವೆ. ಬಿಎಸ್ಇ ಸೆನ್ಸೆಕ್ಸ್ ಬರೋಬ್ಬರಿ 1,750 ಪಾಯಿಂಟ್ಸ್ ಕುಸಿತ ಕಂಡು 78,480.63 ಮಟ್ಟಕ್ಕೆ ತಲುಪಿದೆ. ಎನ್ಎಸ್ಇ ನಿಫ್ಟಿ 500 ಪಾಯಿಂಟ್ಸ್ಗಿಂತಲೂ ಹೆಚ್ಚು
ಇರಾನ್ನ ನೂತನ ಸರ್ವೋಚ್ಚ ನಾಯಕನಾಗಿ ಅಲಿ ಖಮೇನಿ ಪುತ್ರ ಮೊಜ್ತಬಾ ಖಮೇನಿ ಆಯ್ಕೆ
ಟೆಹ್ರಾನ್: ಅಮೆರಿಕ ಮತ್ತು ಇಸ್ರೇಲ್ ನಡೆಸಿದ ಭೀಕರ ವೈಮಾನಿಕ ದಾಳಿಯಲ್ಲಿ ಇರಾನ್ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಹತ್ಯೆಯಾದ ಬೆನ್ನಲ್ಲೇ, ಅವರ ಪುತ್ರ ಮೊಜ್ತಬಾ ಖಮೇನಿ ಅವರನ್ನು ದೇಶದ ನೂತನ ಸರ್ವೋಚ್ಚ ನಾಯಕನನ್ನಾಗಿ (Supreme Leader) ನೇಮಿಸಲಾಗಿದೆ. ಈ ಮಹತ್ವದ ಬೆಳವಣಿಗೆಯು ಇರಾನ್ನ ರಾಜಕೀಯ ಭವಿಷ್ಯ ಮತ್ತು ಇಡೀ ಮಧ್ಯಪ್ರಾಚ್ಯದ (Middle East) ಪ್ರಾದೇಶಿಕ ಸ್ಥಿರತೆಯ
ಉಬರ್ನ ಸಾರಿಗೆ ಸಂಗ್ರಾಹಕ ಪರವಾನಗಿಯನ್ನು 2026 ರ ಡಿಸೆಂಬರ್ 30 ರವರೆಗೆ ನವೀಕರಿಸಿದ ರಾಜ್ಯ ಸರ್ಕಾರ
ಕರ್ನಾಟಕದಲ್ಲಿ ಉಬರ್ನ ಸಾರಿಗೆ ಸಂಗ್ರಾಹಕ ಪರವಾನಗಿಯನ್ನು ಡಿಸೆಂಬರ್ 30, 2026 ರವರೆಗೆ ರಾಜ್ಯ ಸರ್ಕಾರ ನವೀಕರಿಸಿದೆ. ಆನ್-ಡಿಮಾಂಡ್ ಸಾರಿಗೆ ಸಂಗ್ರಾಹಕ ನಿಯಮಗಳು, 2016 ರ ಅಡಿಯಲ್ಲಿ, ಡಿಸೆಂಬರ್ 31, 2021 ರಿಂದ ಜಾರಿಗೆ ಬರುವಂತೆ ಐದು ವರ್ಷಗಳ ಅವಧಿಗೆ ಸಾರಿಗೆ ಸಂಗ್ರಾಹಕ ಪರವಾನಗಿಯನ್ನು ನವೀಕರಿಸಲಾಗಿದೆ.
ಅಮೆರಿಕ ಅಧ್ಯಕ್ಷರ ಯುದ್ಧಾಧಿಕಾರ ನಿರ್ಣಯದ ಮೇಲೆ ಸೆನೆಟ್ ನಲ್ಲಿ ಇಂದು ಮತದಾನ
ಇರಾನ್ ವಿರುದ್ಧ 'ಟ್ರಂಪ್ ಮಿಲಿಟರಿ' ಕಾರ್ಯಾಚರಣೆಗೆ ಅಂಕುಶ?
ಒಕ್ಕೂಟ ವ್ಯವಸ್ಥೆ ಸಂವಿಧಾನದ ಮೂಲಭೂತ ರಚನೆಯ ಭಾಗ: ತಮಿಳುನಾಡು ಸಿಎಂ ಸ್ಟಾಲಿನ್ ಪತ್ರಕ್ಕೆ ಸಿದ್ದರಾಮಯ್ಯ ಉತ್ತರ
ಭಾರತದ ಪ್ರಜಾಪ್ರಭುತ್ವದ ಅಡಿಪಾಯವಾಗಿರುವ 'ಒಕ್ಕೂಟ ವ್ಯವಸ್ಥೆ' ಇಂದು ಹೊಸ ಚರ್ಚೆಗೆ ನಾಂದಿ ಹಾಡಿದೆ. ಕೇಂದ್ರ ಮತ್ತು ರಾಜ್ಯಗಳ ನಡುವಿನ ಸಂಬಂಧಗಳ ಪುನರ್ ವಿಮರ್ಶೆಗಾಗಿ ತಮಿಳುನಾಡು ಸರ್ಕಾರ ರಚಿಸಿದ್ದ ಉನ್ನತ ಮಟ್ಟದ ಸಮಿತಿಯ ವರದಿಯ ಹಿನ್ನೆಲೆಯಲ್ಲಿ, ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮಿಳುನಾಡು ಸಿಎಂ ಎಂ.ಕೆ. ಸ್ಟಾಲಿನ್ ಅವರಿಗೆ ಪತ್ರ ಬರೆಯುವ ಮೂಲಕ ತಮ್ಮ ಬೆಂಬಲ ಮತ್ತು ಸೈದ್ಧಾಂತಿಕ
ಇರಾನ್ ಮನಬಂದಂತೆ ಅರಬ್ ರಾಷ್ಟ್ರಗಳ ಮೇಲೂ ದಾಳಿ ಮಾಡುತ್ತಿರುವುದರಿಂದ ಮುನ್ನೆಚ್ಚರಿಕಾ ಕ್ರಮವಾಗಿ ದುಬೈ ಅಲರ್ಟ್ ಸಂದೇಶಗಳನ್ನು ನಾಗರಿಕರಿಗೆ ಕಳಿಸುತ್ತಿದೆ. ಅಲ್ಲದೆ ಸೈರನ್ ಕೊಡುತ್ತಿದೆ. ಸದ್ಯದ ಮಟ್ಟಿಗೆ ನಾರಿಕರ ಸುರಕ್ಷತೆಗೆ ಹೆಚ್ಚಿನ ಆದ್ಯತೆ ಕೊಟ್ಟು, ಜನಜೀವನ ಅಸ್ತವ್ಯಸ್ತ ಆಗದಂತೆ ನೋಡಿಕೊಳ್ಳಲಾಗಿದೆ. ಆದರೆ ಭಾರತಕ್ಕೆ ಮರಳಲು ಯಾವುದೇ ಕ್ಷಣದಲ್ಲಿ ಸಿದ್ಧವಿರುವಂತೆ, ರಾಯಭಾರ ಕಚೇರಿ ಸೂಚನೆ ಕೊಟ್ಟಿದೆ.
ಡಿಸಿಎಂ ಫೋನ್ ಕದ್ದಾಲಿಕೆ ಆಗುತ್ತಿದೆಯಾ - ಸಿಎಂ ವಿರುದ್ದ ತಿರುಗಿಬಿದ್ದ HDK : ಕುರ್ಚಿ ಸಮರಕ್ಕೆ ಹೊಸ ಟ್ವಿಸ್ಟ್?
DCM Phone Tapping : ಕಾಂಗ್ರೆಸ್ ನಲ್ಲಿನ ಆಂತರಿಕ ಪ್ರಜಾಪ್ರಭುತ್ವದ ವ್ಯಾಸ, ತ್ರಿಜ್ಯದ ಬಗ್ಗೆ ಅಳತೆ ಮಾಡುವ ತೆವಲು ನನಗಿಲ್ಲ. ಪ್ರಜಾಪ್ರಭುತ್ವ ಎಂದರೆ ಶಾಸಕರು ಬೀದಿಯಲ್ಲಿ ಮುಖ್ಯಮಂತ್ರಿಯನ್ನು ಬೈಯ್ಯುವುದಲ್ಲ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ. ಡಿಸಿಎಂ ಡಿಕೆ ಶಿವಕುಮಾರ್ ಅವರ ಫೋನ್ ಕದ್ದಾಲಿಕೆಯ ಆರೋಪ, ರಾಜ್ಯ ರಾಜಕಾರಣದಲ್ಲಿ ಭಾರೀ ಸದ್ದನ್ನು ಮಾಡಲಾರಂಭಿಸಿದೆ.
ಲಿವ್ ಇನ್ ರಿಲೇಶನ್ಶಿಪ್ನಲ್ಲಿದ್ದ ಪ್ರೇಮಿಗಳ ಬಂಧನ: 18 ಕೋಟಿ ಮೌಲ್ಯದ ಡ್ರಗ್ಸ್ ಜಪ್ತಿ
ಬೆಂಗಳೂರಿನಲ್ಲಿ ಡ್ರಗ್ಸ್ ದಂಧೆಯಲ್ಲಿ ತೊಡಗಿದ್ದ ಪ್ರೇಮಿಗಳನ್ನು ಬಂಧಿಸಿ 18 ಕೋಟಿ ರೂಪಾಯಿ ಮೌಲ್ಯದ ಮಾದಕ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಅಪಾರ್ಟ್ಮೆಂಟ್ನಲ್ಲಿ ಲಿವ್-ಇನ್ ರಿಲೇಶನ್ನಲ್ಲಿದ್ದ ಅಶ್ವಿನ್ ಹಾಗೂ ಮುಬೀನಾ ಬಂಧಿತ ಆರೋಪಿಗಳು.
Saudi Arabia | 9 ಡ್ರೋನ್ಗಳನ್ನು ಹೊಡೆದುರುಳಿಸಿದ ವಾಯು ರಕ್ಷಣಾ ಪಡೆ
ರಿಯಾದ್: ಸೌದಿ ಅರೇಬಿಯಾದ ವಾಯುಪ್ರದೇಶವನ್ನು ಪ್ರವೇಶಿಸಲು ಯತ್ನಿಸಿದ 9 ಡ್ರೋನ್ ಗಳನ್ನು ದೇಶದ ವಾಯು ರಕ್ಷಣಾ ಪಡೆಗಳು ಹೊಡೆದುರುಳಿಸಿವೆ ಎಂದು ಸೌದಿ ಅರೇಬಿಯಾದ ರಕ್ಷಣಾ ಸಚಿವಾಲಯ ತಿಳಿಸಿದೆ. ದೇಶದ ಭದ್ರತೆಯನ್ನು ಗಮನದಲ್ಲಿಟ್ಟುಕೊಂಡು ವಾಯು ರಕ್ಷಣಾ ವ್ಯವಸ್ಥೆಗಳು ತಕ್ಷಣ ಕಾರ್ಯಾಚರಣೆ ನಡೆಸಿ ಡ್ರೋನ್ಗಳನ್ನು ತಡೆದು ನಾಶಪಡಿಸಲಾಗಿದೆ ಎಂದು ಸಚಿವಾಲಯ ಹೇಳಿದೆ ಎಂದು Aljazeera ವರದಿ ಮಾಡಿದೆ. ಈ ಡ್ರೋನ್ಗಳು ಯಾವ ಪ್ರದೇಶದಿಂದ ಹಾರಿಸಲ್ಪಟ್ಟವು ಮತ್ತು ದಾಳಿಯ ಹಿಂದೆ ಯಾರ ಕೈವಾಡವಿದೆ ಎಂಬುದರ ಬಗ್ಗೆ ಅಧಿಕಾರಿಗಳು ಹೆಚ್ಚಿನ ಮಾಹಿತಿ ನೀಡಿಲ್ಲ.
ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಆಂಧ್ರದ ಅಡ್ಡಗಾಲು: ಡಿಸಿಎಂ ಡಿಕೆ ಶಿವಕುಮಾರ್ ಆಕ್ಷೇಪ
ಆಲಮಟ್ಟಿ ಡ್ಯಾಮ್ ಎತ್ತರ ಹೆಚ್ಚಳಕ್ಕೆ ಅನುಮತಿ ಕೊಡಬಾರದು ಎಂದು ಕೇಂದ್ರ ಸರ್ಕಾರಕ್ಕೆ ಆಂಧ್ರ ಪ್ರದೇಶ ಸರ್ಕಾರ ಪತ್ರ ಬರೆದಿದೆ. ಈ ವಿಚಾರವಾಗಿ ಆಂಧ್ರ ಪ್ರದೇಶ ಸರ್ಕಾರ ಮತ್ತು ಮಹಾರಾಷ್ಟ್ರ ಸರ್ಕಾರ ಮಧ್ಯಪ್ರವೇಶ ಮಾಡುವುದು ಸರಿಯಿಲ್ಲ ಎಂದು ಡಿಸಿಎಂ ಡಿಕೆ ಶಿವಕುಮಾರ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
Karnataka: ರಾಜ್ಯಾದ್ಯಂತ ಸರ್ಕಾರಿ ವೈದ್ಯರ ಮುಷ್ಕರ, ಸಂಪೂರ್ಣ ಒಪಿಡಿ ಸೇವೆ ಬಂದ್ಗೆ ನಿರ್ಧಾರ
ಬೆಂಗಳೂರು: ರಾಜ್ಯ ಸರ್ಕಾರದ ವಿರುದ್ಧ ತಿರುಗಿಬಿದ್ದಿರುವ ಸರ್ಕಾರಿ ವೈದ್ಯರು, ತಮ್ಮ ಬಹುಕಾಲದ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯಾದ್ಯಂತ ಬೃಹತ್ ಮುಷ್ಕರಕ್ಕೆ ಇಳಿದಿದ್ದಾರೆ. ಉದ್ಯೋಗಾಕಾಂಕ್ಷಿಗಳು ಹಾಗೂ ಗುತ್ತಿಗೆದಾರರ ಪ್ರತಿಭಟನೆಯ ಬಿಸಿಯಲ್ಲಿದ್ದ ರಾಜ್ಯ ಸರ್ಕಾರಕ್ಕೆ ಇದೀಗ ವೈದ್ಯರ ಮುಷ್ಕರ ಮತ್ತೊಂದು ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಕರ್ನಾಟಕ ಸರ್ಕಾರಿ ವೈದ್ಯಾಧಿಕಾರಿಗಳ ಸಂಘ (KGMOA) ಮತ್ತು ಆರೋಗ್ಯ ಇಲಾಖೆಯ ನೌಕರರ ಸಂಘಗಳ ನೇತೃತ್ವದಲ್ಲಿ
ಇರಾನ್ ನ ಸರ್ವೋಚ್ಚ ನಾಯಕನಾಗಿ ಮೊಜ್ತಬಾ ಖಾಮಿನೈ ನೇಮಕ
ಟೆಹ್ರಾನ್: ಇರಾನಿನ ಮಾಜಿ ಸರ್ವೋಚ್ಚ ನಾಯಕ ಅಯತುಲ್ಲಾ ಅಲಿ ಖಾಮಿನೈ ಅವರ ಪುತ್ರ ಮೊಜ್ತಬಾ ಖಾಮಿನೈ ಅವರನ್ನು ಇರಾನ್ನ ಹೊಸ ಸರ್ವೋಚ್ಚ ನಾಯಕರಾಗಿ ನೇಮಕ ಮಾಡಲಾಗಿದೆ ಎಂದು ಬುಧವಾರದ ಮಾಧ್ಯಮ ವರದಿ ತಿಳಿಸಿದೆ. ಇರಾನ್ನ ತಜ್ಞರ ಸಭೆಯು (Assembly of Experts) ಅವರನ್ನು ಉತ್ತರಾಧಿಕಾರಿಯಾಗಿ ಆಯ್ಕೆ ಮಾಡಿದ್ದು, ಪ್ರಭಾವಿ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (ಐಆರ್ಜಿಸಿ) ಒತ್ತಡದ ಮೇರೆಗೆ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ‘ಇರಾನ್ ಇಂಟರ್ನ್ಯಾಷನಲ್’ ವರದಿ ಹೇಳಿದೆ. 56 ವರ್ಷದ ಮೊಜ್ತಬಾ ಖಾಮಿನೈ, ದಿವಂಗತ ಅಲಿ ಖಾಮಿನೈ ಅವರ ಎರಡನೇ ಪುತ್ರರು. ಹಲವು ವರ್ಷಗಳಿಂದ ತೆರೆಮರೆಯಲ್ಲಿ ಪ್ರಭಾವಿ ಶಕ್ತಿಯಾಗಿ ಕಾರ್ಯನಿರ್ವಹಿಸುತ್ತಿದ್ದರು ಎಂದು ಹೇಳಲಾಗುತ್ತದೆ. ಐಆರ್ಜಿಸಿ ಹಾಗೂ ಬಸಿಜ್ ಅರೆಸೈನಿಕ ಜಾಲಗಳ ಮೇಲೆ ಆಳವಾದ ಪ್ರಭಾವ ಹೊಂದಿದ್ದಾರೆ ಎಂಬ ವರದಿಗಳಿವೆ. ಇರಾನ್–ಇರಾಕ್ ಯುದ್ಧದ ಅನುಭವಿಯೂ ಆಗಿರುವ ಅವರು, ದೇಶದ ಭದ್ರತಾ ವ್ಯವಸ್ಥೆಯೊಂದಿಗೆ ನಿಕಟ ಸಮನ್ವಯ ಹೊಂದಿದ್ದಾರೆ ಎನ್ನಲಾಗಿದೆ. ಆದರೆ ಧರ್ಮಗುರುಗಳ ವಲಯದಲ್ಲಿ ಆನುವಂಶಿಕ ಉತ್ತರಾಧಿಕಾರದ ಬಗ್ಗೆ ವಿರೋಧ ವ್ಯಕ್ತವಾಗುತ್ತಿದೆ. ಸರ್ವೋಚ್ಚ ಸ್ಥಾನಕ್ಕೇರಲು ಸಾಂಪ್ರದಾಯಿಕವಾಗಿ ಅಗತ್ಯವಿರುವ ಉನ್ನತ ಧಾರ್ಮಿಕ ಪದವಿ ಹಾಗೂ ಔಪಚಾರಿಕ ನಾಯಕತ್ವದ ಅನುಭವ ಮೊಜ್ತಬಾ ಅವರಿಗೆ ಇಲ್ಲ ಎಂಬ ಟೀಕೆಗಳು ಕೇಳಿಬಂದಿವೆ. ಇರಾನ್ನ ಸರ್ವೋಚ್ಚ ನಾಯಕ ಸ್ಥಾನವು ಶಿಯಾದ ಕೇಂದ್ರಬಿಂದುವಾಗಿದ್ದು, ದೇಶದ ಎಲ್ಲಾ ಪ್ರಮುಖ ವಿಷಯಗಳ ಮೇಲೆ ಅಂತಿಮ ನಿರ್ಧಾರಾಧಿಕಾರ ಹೊಂದಿದೆ. ಈ ಹುದ್ದೆಯಲ್ಲಿ ಸಶಸ್ತ್ರ ಪಡೆಗಳು ಹಾಗೂ ಐಆರ್ಜಿಸಿಯ ಕಮಾಂಡರ್-ಇನ್-ಚೀಫ್ ಆಗಿ ಕಾರ್ಯನಿರ್ವಹಿಸುವ ಜವಾಬ್ದಾರಿಯೂ ಸೇರಿದೆ. ಶನಿವಾರ ಇಸ್ರೇಲ್–ಅಮೆರಿಕ ಸಂಯುಕ್ತ ದಾಳಿಯಲ್ಲಿ ಅಲಿ ಖಾಮಿನೈ ಹತ್ಯೆಯಾಗಿದ್ದು, ಈ ಬೆಳವಣಿಗೆ ಇಡೀ ಪ್ರದೇಶವನ್ನು ಇತ್ತೀಚಿನ ವರ್ಷಗಳಲ್ಲೇ ಅತ್ಯಂತ ತೀವ್ರ ಸಂಘರ್ಷದ ದಿಕ್ಕಿನಲ್ಲಿ ತಳ್ಳಿತು. 1989ರಲ್ಲಿ ಇಸ್ಲಾಮಿಕ್ ಗಣರಾಜ್ಯದ ಸ್ಥಾಪಕ ಅಯತುಲ್ಲಾ ರುಹೊಲ್ಲಾ ಖಾಮಿನೈ ಅವರ ನಿಧನದ ಬಳಿಕ ಅಲಿ ಖಾಮಿನೈ ದೇಶದ ನೇತೃತ್ವ ವಹಿಸಿದ್ದರು. ಟೆಹ್ರಾನ್ ಹಾಗೂ ಇತರ ನಗರಗಳ ಮೇಲಿನ ದಾಳಿಗಳ ನಂತರ, ಇರಾನ್ ಈ ಪ್ರದೇಶದಲ್ಲಿ ಅಮೆರಿಕ ಸೈನಿಕ ಚಟುವಟಿಕೆಗಳಿಗೆ ಬೆಂಬಲ ನೀಡುತ್ತಿರುವ ಗಲ್ಫ್ ರಾಷ್ಟ್ರಗಳನ್ನು ಗುರಿಯಾಗಿಸಲು ಆರಂಭಿಸಿದೆ. ಇದರ ಪರಿಣಾಮವಾಗಿ ಸೌದಿ ಅರೇಬಿಯಾ, ಬಹ್ರೇನ್, ಖತರ್ ಹಾಗೂ ಯುನೈಟೆಡ್ ಅರಬ್ ಎಮಿರೇಟ್ಸ್ ಸೇರಿದಂತೆ ಪ್ರಮುಖ ಗಲ್ಫ್ ರಾಷ್ಟ್ರಗಳು ಇರಾನಿನ ದಾಳಿಗಳ ನಂತರ ಸಂಭವಿಸಿದ ಸ್ಫೋಟಗಳಿಂದ ನಡುಗಿವೆ ಎಂದು ವರದಿಗಳು ತಿಳಿಸಿವೆ.
Gold Rate: ಮಾರುಕಟ್ಟೆಯಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಹೀಗಿದೆ, ನಿಮ್ಮ ನಗರದ ದರ ಪರಿಶೀಲಿಸಿ
ಜಾಗತಿಕ ಮಟ್ಟದ ಭೌಗೋಳಿಕ ರಾಜಕೀಯ ಉದ್ವಿಗ್ನತೆಗಳು, ಡಾಲರ್ ಮೌಲ್ಯದ ಬದಲಾವಣೆ ಮತ್ತು ಹೂಡಿಕೆದಾರರು ಚಿನ್ನವನ್ನು ಸುರಕ್ಷಿತ ಹೂಡಿಕೆಯಾಗಿ ಪರಿಗಣಿಸುತ್ತಿರುವ ಪರಿಣಾಮವಾಗಿ ಇಂದು ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಗಗನಕ್ಕೇರಿದೆ. ಮಾರ್ಚ್ 4, 2026 ರ ಇಂದಿನ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿ ದರಗಳಲ್ಲಿ ಭಾರಿ ಏರಿಕೆ ಕಂಡುಬಂದಿದ್ದು, ಸಾರ್ವಕಾಲಿಕ ದಾಖಲೆಯ ಮಟ್ಟದಲ್ಲಿ ವಹಿವಾಟು ಮುಂದುವರಿದಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯ ಟ್ರೆಂಡ್ಗಳು
Uttarpradesh| ಯಮುನಾ ಎಕ್ಸ್ಪ್ರೆಸ್ ಹೈವೇಯಲ್ಲಿ ಅಪಘಾತ ; ಆರು ಮಂದಿ ಮೃತ್ಯು
ಆಗ್ರಾ: ಹೋಳಿ ಹಬ್ಬಕ್ಕಾಗಿ ಮನೆಗೆ ಬರುತ್ತಿದ್ದ ವ್ಯಾನ್ ಗೆ ಬಸ್ ಢಿಕ್ಕಿ ಹೊಡೆದು ಸಂಭವಿಸಿದ ಅಪಘಾತದಲ್ಲಿ ಎರಡು ದಂಪತಿಗಳು ಸೇರಿದಂತೆ ಆರು ಮಂದಿ ಮೃತಪಟ್ಟಿದ್ದು, ಇತರ ಏಳು ಮಂದಿ ಗಾಯಗೊಂಡಿದ್ದಾರೆ. ಅಪಘಾತದಲ್ಲಿ ಮೃತಪಟ್ಟವರನ್ನು ದಿನೇಶ್ ಸಿಂಗ್ (45), ಪತ್ನಿ ಸುನೀತಾ ದೇವಿ (40), ಲೋಕೇಶ್ (30), ವಿಜಯ್ ಬಘೇಲ್ (30) ಅವರ ಪತ್ನಿ ಪಿಂಕಿ ಬಘೇಲ್ (28) ಸಂಬಂಧಿ ನಾತುದೇವಿ (35) ಎಂದು ಗುರುತಿಸಲಾಗಿದೆ. ಮಂಗಳವಾರ ಮುಂಜಾನೆ ಯಮುನಾ ಎಕ್ಸ್ಪ್ರೆಸ್ ಹೈವೇಯಲ್ಲಿ ಹತ್ರಾಸ್ ಬಳಿ 13 ಪ್ರಯಾಣಿಕರನ್ನು ಹೊಂದಿದ್ದ ವ್ಯಾನ್ ಗೆ ವೇಗವಾಗಿ ಬಂದ ಸ್ಲೀಪರ್ ಬಸ್ ಢಿಕ್ಕಿ ಹೊಡೆದು ಈ ದುರಂತ ಸಂಭವಿಸಿದೆ. ಸಂತ್ರಸ್ತ ಪ್ರಯಾಣಿಕರು ರಾಜಸ್ಥಾನದ ಧೋಲ್ಪುರ ಜಿಲ್ಲೆಯಿಂದ ಹೋಳಿ ಹಬ್ಬದ ಸಂಭ್ರಮಕ್ಕಾಗಿ ದೆಹಲಿಗೆ ಆಗಮಿಸುತ್ತಿದ್ದರು. ಮುಂಜಾನೆ 4.15ರ ಸುಮಾರಿಗೆ 141ನೇ ಮೈಲುಗಲ್ಲು ಬಳಿ ಈ ದುರಂತ ಸಂಭವಿಸಿದೆ. ವ್ಯಾನ್ ಒಂದನ್ನು ಹಿಂದಿಕ್ಕುವ ರಭಸದಲ್ಲಿ ಮುನ್ನುಗ್ಗಿದ ಖಾಸಗಿ ಬಸ್ಸು ಚಾಲಕನ ನಿಯಂತ್ರಣ ಕಳೆದುಕೊಂಡು ಈ ದುರಂತ ಸಂಭವಿಸಿದೆ ಎಂದು ಪ್ರಾಥಮಿಕ ವರದಿಗಳು ಹೇಳಿವೆ. ಬಸ್ಸಿನಲ್ಲಿದ್ದ ಪ್ರಯಾಣಿಕರಿಗೆ ಯಾವುದೇ ಗಾಯಗಳಾಗಿಲ್ಲ. ವ್ಯಾನ್ ನಲ್ಲಿದ್ದ ಗಾಯಾಳುಗಳನ್ನು ಖಂದೌಲಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿದ ಬಳಿಕ ಆಗ್ರಾಗೆ ಕರೆದೊಯ್ಯಲಾಗಿದೆ.
Karnataka Weather: ರಾಜ್ಯದಲ್ಲಿ ಏರುತ್ತಿದೆ ಬಿಸಿಲಿನ ಝಳ; ಬೆಂಗಳೂರಿನ ತಾಪಮಾನ 34 ಡಿಗ್ರಿಗೆ ಏರಿಕೆ
ಬೆಂಗಳೂರು: ಕರ್ನಾಟಕದಲ್ಲಿ ಬೇಸಿಗೆಯ ಬಿಸಿಲಿನ ಝಳ ದಿನದಿಂದ ದಿನಕ್ಕೆ ಏರಿಕೆ ಕಾಣಲು ಶುರುವಾಗಿದೆ. ಮಾರ್ಚ್ 4, 2026 ರ ಇಂದಿನ ಹವಾಮಾನ ವರದಿಯ ಪ್ರಕಾರ, ರಾಜ್ಯಾದ್ಯಂತ ತಾಪಮಾನದಲ್ಲಿ ಗಣನೀಯ ಏರಿಕೆಯಾಗುತ್ತಿದ್ದು, ಸಂಪೂರ್ಣ ಒಣ ಹವೆ ಮುಂದುವರಿದಿದೆ. ಭಾರತೀಯ ಹವಾಮಾನ ಇಲಾಖೆ (IMD) ನೀಡಿರುವ ದತ್ತಾಂಶಗಳ ಪ್ರಕಾರ, ಮುಂಬರುವ ದಿನಗಳಲ್ಲಿ ತಾಪಮಾನವು ವಾಡಿಕೆಗಿಂತ ಹೆಚ್ಚಾಗುವ ನಿರೀಕ್ಷೆಯಿದೆ. ಕರಾವಳಿ, ಉತ್ತರ
ಬಂಡೀಪುರದ ಮೇಲೆ ಎಐ ನಿಗಾ ; 360 ಡಿಗ್ರಿ ಚಿತ್ರಣ ತೋರಿಸುವ ಕ್ಯಾಮೆರಾ ಕಣ್ಗಾವಲು
ಬಂಡೀಪುರ ಹುಲಿ ರಕ್ಷಿತಾರಣ್ಯದ ಮೇಲೆ ಎಐ ಕಣ್ಗಾವಲು ಇಟ್ಟಿದೆ. ಮಾನವ- ಪ್ರಾಣಿ ಸಂಘರ್ಷ ತಡೆಯುವ ನಿಟ್ಟಿನಲ್ಲಿ ಎಐ ತಂತ್ರಜ್ಞಾನ ಅಳವಡಿಸಿಕೊಳ್ಳಲು ಅಧಿಕಾರಿಗಳು ಮುಂದಾಗಿದ್ದಾರೆ. ಸದ್ಯ ಒಂದು ಹಂತಕ್ಕೆ ಪ್ರಾಯೋಗಿಕವಾಗಿ ಅದರಲ್ಲಿ ಯಶಸ್ಸನ್ನು ಸಹ ಕಾಣುತ್ತಿದ್ದಾರೆ.
ಅಮೆರಿಕದಿಂದ ದಾಳಿಯ ಮೂರನೇ ಅಲೆ ಬಾಕಿಯಿದೆ; ಅದು ಇನ್ನೂ ದೊಡ್ಡದು: ಟ್ರಂಪ್
ವಾಷಿಂಗ್ಟನ್: ಕಳೆದ 24 ಗಂಟೆಗಳಲ್ಲಿ ಅಮೆರಿಕದಿಂದ ಹಲವಾರು ದಾಳಿಯ ಅಲೆಗಳು ನಡೆದಿವೆ. ಆದರೆ ಮೂರನೇ ಅಲೆ ಇನ್ನೂ ಬರಬೇಕಿದ್ದು, ಅದು ಇದುವರೆಗೆ ನಡೆದ ದಾಳಿಗಳಿಗಿಂತ ದೊಡ್ಡದಾಗಿರಲಿದೆ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಈ ಕುರಿತು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ ಕೂಡ ಉಲ್ಲೇಖಿಸಿದ್ದಾಗಿ ಟ್ರಂಪ್ ಹೇಳಿದ್ದಾರೆ. “ದಾಳಿಗಳ ಸರಣಿ ಮುಗಿದಿಲ್ಲ. ಮುಂದಿನ ಹಂತ ಇನ್ನಷ್ಟು ವ್ಯಾಪಕವಾಗಿರಲಿದೆ” ಎಂದು ಅವರು ಹೇಳಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಜಂಟಿ ಮುಖ್ಯಸ್ಥರ ಸಮಿತಿಯ ಅಧ್ಯಕ್ಷ ಡಾನ್ ಕೇನ್ ಪ್ರತಿಕ್ರಿಯಿಸಿ, ಪ್ರದೇಶಕ್ಕೆ ಹೆಚ್ಚುವರಿ ಸೈನಿಕ ಯಂತ್ರಾಂಶಗಳನ್ನು ಕಳುಹಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ. ಮುಂದಿನ ಕಾರ್ಯಾಚರಣೆಗಳ ಹಿನ್ನೆಲೆಯಲ್ಲಿ ಹಡಗುಗಳು, ಯುದ್ಧವಿಮಾನಗಳು ಹಾಗೂ ಸೈನಿಕರನ್ನು ಸ್ಥಳಾಂತರಿಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.
ಮಾರ್ಚ್ ಅಂತ್ಯಕ್ಕೆ ಪುರ್ವ ಮುಂಗಾರು ಆರಂಭವಾಗುವ ಮುನ್ಸೂಚನೆ ಇದ್ದರೂ, ಮಾರ್ಚ್ ತಿಂಗಳು ಪೂರ್ತಿ ಭಾರಿ ಬಿಸಿಲಿನ ಝಳ ಇರುವ ಬಗ್ಗೆ ಹವಾಮಾನ ಇಲಾಖೆ ಮುನ್ಸೂಚನೆ ಕೊಟ್ಟಿದೆ. ಬಿಸಿಲಿನ ತೀವ್ರತೆಯ ಪರಿಣಾಮಗಳನ್ನು ಎದುರಿಸಲು ಸಹಾಯವಾಗುವ 5 ಸಲಹೆಗಳನ್ನು ಇಲ್ಲಿ ಕೊಡಲಾಗಿದೆ.
Oman | ಮಸ್ಕತ್ ಸಮೀಪ ಹಡಗಿನ ಬಳಿ ಸ್ಫೋಟ: ವರದಿ
ಮಸ್ಕತ್: ಒಮಾನ್ ರಾಜಧಾನಿ ಮಸ್ಕತ್ ನ ಪೂರ್ವ ಭಾಗದಲ್ಲಿ ಸಾಗುತ್ತಿದ್ದ ವಾಣಿಜ್ಯ ಹಡಗಿನ ಸಮೀಪ ಸ್ಫೋಟ ಸಂಭವಿಸಿರುವ ಬಗ್ಗೆ ಯುಕೆ ಮೆರಿಟೈಮ್ ಟ್ರೇಡ್ ಆಪರೇಷನ್ಸ್ (UKMTO) ಮಾಹಿತಿ ನೀಡಿದೆ. ಮಸ್ಕತ್ ನಿಂದ ಸುಮಾರು 137 ನಾಟಿಕಲ್ ಮೈಲು ದೂರದಲ್ಲಿ ಈ ಘಟನೆ ನಡೆದಿರುವುದಾಗಿ UKMTO ಹೇಳಿದೆ. ಹಡಗಿನ ಸಮೀಪದಲ್ಲಿ ದೊಡ್ಡ ಸ್ಫೋಟ ಸಂಭವಿಸಿದ ನಂತರ ಸಮುದ್ರದ ನೀರಿನಲ್ಲಿ ಹೊಗೆ ಕಾಣಿಸಿಕೊಂಡಿದೆ ಎಂದು ಹಡಗಿನ ಮಾಸ್ಟರ್ ವರದಿ ನೀಡಿದ್ದಾರೆ. ಘಟನೆಯಿಂದ ಹಡಗು ಹಾಗೂ ಅದರಲ್ಲಿದ್ದ ಸಿಬ್ಬಂದಿಗೆ ಯಾವುದೇ ಹಾನಿಯಾಗಿಲ್ಲ. ಎಲ್ಲರೂ ಸುರಕ್ಷಿತರಾಗಿದ್ದಾರೆ ಎಂದು ಪ್ರಾಥಮಿಕ ವರದಿ ತಿಳಿಸಿದೆ ಎಂದು Aljazeera ವರದಿ ಮಾಡಿದೆ.
ನಾಗರಿಕರ ಪಾಲಿಗೆ ಭಯಾನಕವಾಗುತ್ತಿರುವ ಮಧ್ಯಪ್ರಾಚ್ಯದ ಯುದ್ಧ: ವಿಶ್ವಸಂಸ್ಥೆ ಕಳವಳ
ನ್ಯೂಯಾರ್ಕ್: ಮಧ್ಯಪ್ರಾಚ್ಯದಲ್ಲಿ ಮುಂದುವರಿದಿರುವ ಯುದ್ಧ ಪರಿಸ್ಥಿತಿ ಸುಮಾರು ಒಂದು ಡಝನ್ ದೇಶಗಳ ನಾಗರಿಕರಿಗೆ ‘ಹೆಚ್ಚಾಗಿ ಭಯಾನಕ’ವಾಗಿ ಪರಿಣಮಿಸಿದೆ ಎಂದು ವಿಶ್ವಸಂಸ್ಥೆಯ ಮಾನವೀಯ ವ್ಯವಹಾರಗಳ ಮುಖ್ಯಸ್ಥ ಟಾಮ್ ಫ್ಲೆಚರ್ ಕಳವಳ ವ್ಯಕ್ತಪಡಿಸಿದ್ದಾರೆ. “ಮಧ್ಯಪ್ರಾಚ್ಯದಲ್ಲಿ ಸಾಮಾನ್ಯ ಜನರು ನಿರಂತರ ದಾಳಿಗಳ ಹೊಡೆತಕ್ಕೆ ಒಳಗಾಗುತ್ತಿದ್ದಾರೆ. ನಾಗರಿಕರನ್ನು ರಕ್ಷಿಸುವುದು ಎಲ್ಲ ಪಕ್ಷಗಳ ಕಡ್ಡಾಯ ಜವಾಬ್ದಾರಿ. ಆದರೆ ವಾಸ್ತವದಲ್ಲಿ ಮನೆಗಳು, ಆಸ್ಪತ್ರೆಗಳು ಮತ್ತು ಶಾಲೆಗಳಂತಹ ನಾಗರಿಕ ಬಳಕೆಯ ಕಟ್ಟಡಗಳೇ ಗುರಿಯಾಗುತ್ತಿವೆ. ಇದರಿಂದ ನಿರಪರಾಧಿಗಳು ಜೀವಹಾನಿ ಮತ್ತು ಆಸ್ತಿನಷ್ಟ ಅನುಭವಿಸುತ್ತಿದ್ದಾರೆ,” ಎಂದು ಫ್ಲೆಚರ್ ತಿಳಿಸಿದ್ದಾರೆ. ಇರಾನ್, ಲೆಬನಾನ್, ಸಿರಿಯಾ, ಆಕ್ರಮಿತ ಫೆಲೆಸ್ತೀನಿನ ಪ್ರದೇಶಗಳು, ಇಸ್ರೇಲ್, ಯುನೈಟೆಡ್ ಅರಬ್ ಎಮಿರೇಟ್ಸ್, ಬಹ್ರೇನ್, ಖತರ್, ಕುವೈತ್, ಸೌದಿ ಅರೇಬಿಯಾ ಸೇರಿದಂತೆ ಅದರಾಚೆಗಿನ ಪ್ರದೇಶಗಳಲ್ಲಿಯೂ ನಾಗರಿಕರು ಮತ್ತು ನಾಗರಿಕ ಮೂಲಸೌಕರ್ಯಗಳ ಮೇಲೆ ದಾಳಿಗಳು ನಡೆದಿವೆ ಎಂದು ಫ್ಲೆಚರ್ ತಿಳಿಸಿದ್ದಾರೆ. ಈ ಬೆಳವಣಿಗೆಗಳು ಮಾನವೀಯ ಪರಿಸ್ಥಿತಿಯನ್ನು ಮತ್ತಷ್ಟು ಸಂಕೀರ್ಣಗೊಳಿಸುತ್ತಿವೆ. ಇರಾನ್ ಹಾಗೂ ಹತ್ತಿರದ ಇತರ ದೇಶಗಳಲ್ಲಿ ತುರ್ತು ಯೋಜನೆಗಳನ್ನು ಸಕ್ರಿಯಗೊಳಿಸಲಾಗಿದೆ. ಆದರೆ ಇರಾನ್ನಲ್ಲಿ ಈಗಾಗಲೇ ಸೀಮಿತ ಮಟ್ಟದಲ್ಲಿ ಮಾತ್ರ ಅಂತರರಾಷ್ಟ್ರೀಯ ಸಂಸ್ಥೆಗಳ ಉಪಸ್ಥಿತಿ ಇರುವುದರಿಂದ ನೆರವು ಕಾರ್ಯಕರ್ತರ ಮುಂದಿರುವ ಸವಾಲುಗಳು ಹೆಚ್ಚಿವೆ ಎಂದು ಅವರು ಹೇಳಿದ್ದಾರೆ. ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಅಸ್ಥಿರತೆ ಮತ್ತು ಭದ್ರತಾ ಅಪಾಯಗಳ ನಡುವೆಯೂ ನಾಗರಿಕರ ರಕ್ಷಣೆ ಅತ್ಯಂತ ಆದ್ಯತೆಯಾಗಿರಬೇಕು. ಮಾನವೀಯ ನೆರವು ನಿರ್ಬಂಧವಿಲ್ಲದೆ ತಲುಪಲು ಎಲ್ಲಾ ಪಕ್ಷಗಳು ಅಂತರರಾಷ್ಟ್ರೀಯ ಮಾನವೀಯ ಕಾನೂನುಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ವಿಶ್ವಸಂಸ್ಥೆ ಕರೆ ನೀಡಿದೆ.
ಮಧ್ಯಪ್ರಾಷ್ಯ ರಾಷ್ಟ್ರಗಳಿಗೆ ಒಟ್ಟು 80 ಲಕ್ಷ ಮೊಟ್ಟೆ ರಫ್ತಾಗುತ್ತಿದ್ದ ಪೈಕಿ, ಕರ್ನಾಟಕದ ಬಳ್ಳಾರಿ, ಮೈಸೂರು, ಮಂಡ್ಯ, ದಾವಣಗೆರೆ ಸೇರಿದಂತೆ ಇತರೆ ಜಿಲ್ಲೆಗಳಿಂದ 15 ರಿಂದ 20 ಲಕ್ಷ ಮೊಟ್ಟೆ ರಫ್ತಾಗುತ್ತಿತ್ತು. ಇದೀಗ ಯುದ್ಧದ ಕಾರಣದಿಂದ ರಫ್ತು ಸ್ಥಗಿತಗೊಂಡು ರೈತರಿಗೆ ಭಾರಿ ಹೊಡೆತ ಬೀಳುವ ಸಾಧ್ಯತೆ ಇದೆ.
ತಕ್ಷಣ ಇರಾಕ್ ತೊರೆಯಿರಿ: ತನ್ನ ನಾಗರಿಕರಿಗೆ ಅಮೆರಿಕದ ರಾಯಭಾರಿ ಕಚೇರಿ ತುರ್ತು ಸೂಚನೆ
ಬಾಗ್ದಾದ್: ಇರಾಕ್ ನಲ್ಲಿರುವ ಅಮೆರಿಕದ ರಾಯಭಾರಿ ಕಚೇರಿಯು ಅಲ್ಲಿನ ಅಮೆರಿಕದ ನಾಗರಿಕರಿಗೆ ತಕ್ಷಣ ದೇಶ ತೊರೆಯುವಂತೆ ಸೂಚಿಸಿದೆ. ಜೊತೆಗೆ, “ಯಾವುದೇ ಕಾರಣಕ್ಕೂ” ಇರಾಕ್ ಗೆ ಪ್ರಯಾಣಿಸಬಾರದು ಎಂದು ಕಠಿಣ ಎಚ್ಚರಿಕೆ ನೀಡಿದೆ ಎಂದು Aljazeera ವರದಿ ಮಾಡಿದೆ. ರಾಯಭಾರಿ ಕಚೇರಿಯು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ ಹೇಳಿಕೆಯಲ್ಲಿ, “ಯಾವುದೇ ಕಾರಣಕ್ಕಾಗಿಯೂ ಇರಾಕ್ ಗೆ ಪ್ರಯಾಣಿಸದಂತೆ ಅಮೆರಿಕದ ನಾಗರಿಕರಿಗೆ ಸೂಚಿಸಲಾಗಿದೆ. ಪ್ರಸ್ತುತ ಇರಾಕ್ ನಲ್ಲಿರುವವರು ಸಾಧ್ಯವಾದಷ್ಟು ಬೇಗ ನಿರ್ಗಮಿಸಲು ಕ್ರಮ ಕೈಗೊಳ್ಳಬೇಕು. ಸುರಕ್ಷಿತ ನಿರ್ಗಮನ ಪರಿಸ್ಥಿತಿಗಳು ಲಭ್ಯವಾಗುವವರೆಗೆ ಸ್ಥಳದಲ್ಲೇ ಆಶ್ರಯ ಪಡೆಯಿರಿ” ಎಂದು ತಿಳಿಸಿದೆ. ಇದೇ ವೇಳೆ, ಇರಾಕ್ ಅಧಿಕಾರಿಗಳು ಯಾವುದೇ ಸಮಯದಲ್ಲಿ ಅಲ್ಪಾವಧಿಯ ಸೂಚನೆಯೊಂದಿಗೆ ವಾಯುಪ್ರದೇಶವನ್ನು ಮುಚ್ಚುವ ಅಥವಾ ಮರುತೆರೆಯುವ ಸಾಧ್ಯತೆ ಇರುವುದಾಗಿ ಹೇಳಲಾಗಿದೆ. ವಿಮಾನ ಸಂಚಾರದ ಕುರಿತ ಮಾಹಿತಿಗಾಗಿ ಸಂಬಂಧಿತ ವಿಮಾನಯಾನ ಸಂಸ್ಥೆಯನ್ನು ಸಂಪರ್ಕಿಸುವಂತೆ ರಾಯಭಾರಿ ಕಚೇರಿ ಮನವಿ ಮಾಡಿದೆ. ಇದಕ್ಕೂ ಮೊದಲು, ಇರಾನ್ ಪರ ಪ್ರತಿಭಟನಾಕಾರರು ಬಾಗ್ದಾದ್ನಲ್ಲಿರುವ ಅಮೆರಿಕದ ರಾಯಭಾರಿ ಕಚೇರಿಗೆ ಪ್ರವೇಶಿಸಲು ಯತ್ನಿಸಿದ ಘಟನೆ ನಡೆದಿತ್ತು. ಜೊತೆಗೆ, ಇರಾನ್ ಬೆಂಬಲಿತ ಸಂಘಟನೆಗಳು ಇರಾಕ್ ನಲ್ಲಿನ ಅಮೆರಿಕದ ನೆಲೆಗಳ ಮೇಲಿನ ದಾಳಿಗಳಿಗೆ ಜವಾಬ್ದಾರಿಯನ್ನೂ ಹೊತ್ತುಕೊಂಡಿರುವುದಾಗಿ ಹೇಳಿಕೊಂಡಿವೆ.
Qatar | ಅಮೆರಿಕದ ಪಡೆಗಳಿರುವ ಅಲ್ ಉದೈದ್ ವಾಯುನೆಲೆಗೆ ಅಪ್ಪಳಿಸಿದ ಇರಾನ್ ಕ್ಷಿಪಣಿ
ದೋಹಾ: ಖತರ್ ನ ಅಲ್ ಉದೈದ್ ವಾಯುನೆಲೆಯನ್ನು ಗುರಿಯಾಗಿಸಿ ಇರಾನ್ ನಿಂದ ಎರಡು ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಹಾರಿಸಲಾಗಿದೆ ಎಂದು ಖತರ್ ರಕ್ಷಣಾ ಸಚಿವಾಲಯ ತಿಳಿಸಿದೆ. ಘಟನೆಯಲ್ಲಿ ಯಾವುದೇ ಸಾವುನೋವುಗಳು ಸಂಭವಿಸಿಲ್ಲ ಎಂದು ಅಧಿಕೃತ ಪ್ರಕಟಣೆ ಸ್ಪಷ್ಟಪಡಿಸಿದೆ ಎಂದು Aljazeera ವರದಿ ಮಾಡಿದೆ. ಹಾರಿಸಲಾದ ಎರಡು ಕ್ಷಿಪಣಿಗಳಲ್ಲಿ ಒಂದನ್ನು ವಾಯು ರಕ್ಷಣಾ ವ್ಯವಸ್ಥೆ ಮಧ್ಯಾಕಾಶದಲ್ಲೇ ತಡೆಹಿಡಿದಿದೆ. ಮತ್ತೊಂದು ಕ್ಷಿಪಣಿ ಅಮೆರಿಕ ಪಡೆಗಳಿರುವ ಅಲ್ ಉದೈದ್ ವಾಯುನೆಲೆಯ ಪ್ರದೇಶಕ್ಕೆ ಅಪ್ಪಳಿಸಿದೆ ಎಂದು ಸಚಿವಾಲಯ ಹೇಳಿದೆ. ದಾಳಿಯಿಂದ ಉಂಟಾದ ಹಾನಿಯ ಪ್ರಮಾಣ ಕುರಿತು ತಕ್ಷಣದ ವಿವರಗಳು ಲಭ್ಯವಾಗಿಲ್ಲ. ರಾಜಧಾನಿ ದೋಹಾ ಸಮೀಪ ಸರಣಿ ಸ್ಫೋಟಗಳ ಶಬ್ದಗಳು ಕೇಳಿಬಂದ ಕೆಲವೇ ಗಂಟೆಗಳ ಬಳಿಕ ರಕ್ಷಣಾ ಸಚಿವಾಲಯ ಅಧಿಕೃತ ಹೇಳಿಕೆ ನೀಡಿತು. ಪರಿಸ್ಥಿತಿ ಸಂಪೂರ್ಣ ನಿಯಂತ್ರಣದಲ್ಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. “ದೇಶ ಮತ್ತು ಅದರ ಭೌಗೋಳಿಕ ಸಾರ್ವಭೌಮತ್ವವನ್ನು ರಕ್ಷಿಸಲು ನಮ್ಮ ಸಶಸ್ತ್ರ ಪಡೆಗಳು ಪೂರ್ಣ ಸಿದ್ಧತೆಯಲ್ಲಿವೆ. ಯಾವುದೇ ಬೆದರಿಕೆಯನ್ನು ಎದುರಿಸಲಾಗುವುದು,” ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. pic.twitter.com/GwzZ49ebSg — وزارة الدفاع - دولة قطر (@MOD_Qatar) March 3, 2026
ಹಾರ್ಮುಜ್ ಜಲಸಂಧಿಯಲ್ಲಿ ಟ್ಯಾಂಕರ್ ಗಳಿಗೆ ಅಮೆರಿಕ ನೌಕಾಪಡೆಯ ಬೆಂಗಾವಲು: ಟ್ರಂಪ್ ಘೋಷಣೆ
ವಾಷಿಂಗ್ಟನ್: ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ತೀವ್ರಗೊಂಡಿರುವ ಹಿನ್ನೆಲೆಯಲ್ಲಿ ಹಾರ್ಮುಜ್ ಜಲಸಂಧಿಯ ಮೂಲಕ ಸಂಚರಿಸುವ ತೈಲ ಟ್ಯಾಂಕರ್ ಗಳಿಗೆ ಅಮೆರಿಕದ ನೌಕಾಪಡೆಯು ಭದ್ರತಾ ಬೆಂಗಾವಲು ಒದಗಿಸಲಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿಳಿಸಿದ್ದಾರೆ ಎಂದು Aljazeera ವರದಿ ಮಾಡಿದೆ. ತಮ್ಮ ಸಾಮಾಜಿಕ ಜಾಲತಾಣ ಟ್ರುತ್ ಸೋಶಿಯಲ್ನಲ್ಲಿ ಪ್ರಕಟಿಸಿದ ಹೇಳಿಕೆಯಲ್ಲಿ, ಹಾರ್ಮುಜ್ ಜಲಸಂಧಿಯ ಮೂಲಕ ಸಾಗುವ ಟ್ಯಾಂಕರ್ಗಳಿಗೆ “ಸಾಧ್ಯವಾದಷ್ಟು ಬೇಗ” ನೌಕಾಪಡೆ ಕಾವಲು ನೀಡಲು ಆರಂಭಿಸಲಾಗುತ್ತದೆ ಎಂದು ಹೇಳಿದ್ದಾರೆ. “ಜಗತ್ತಿಗೆ ಇಂಧನದ ಮುಕ್ತ ಹರಿವನ್ನು ಖಚಿತಪಡಿಸುವುದು ಅಮೆರಿಕದ ಕರ್ತವ್ಯ. ಅಮೆರಿಕದ ಆರ್ಥಿಕ ಹಾಗೂ ಮಿಲಿಟರಿ ಶಕ್ತಿ ವಿಶ್ವದಲ್ಲೇ ಶ್ರೇಷ್ಠವಾಗಿದೆ. ಅಗತ್ಯವಿದ್ದರೆ ಇನ್ನಷ್ಟು ಕ್ರಮಗಳು ಕೈಗೊಳ್ಳಲಾಗುತ್ತದೆ,” ಎಂದು ಅವರು ಎಚ್ಚರಿಸಿದ್ದಾರೆ. ಇರಾನ್ ವಿರುದ್ಧ ಅಮೆರಿಕ ಹಾಗೂ ಇಸ್ರೇಲ್ ಜಂಟಿ ದಾಳಿಗಳು ಆರಂಭವಾದ ಬಳಿಕ ಜಾಗತಿಕ ಮಾರುಕಟ್ಟೆಯಲ್ಲಿ ತೈಲ ಬೆಲೆಗಳು 15 ಶೇಕಡಕ್ಕಿಂತ ಹೆಚ್ಚು ಏರಿಕೆ ಕಂಡಿವೆ. ಮೂರು ದಿನಗಳ ಹಿಂದೆ ಆರಂಭವಾದ ಮಿಲಿಟರಿ ಕ್ರಮಗಳ ಪರಿಣಾಮವಾಗಿ ಗಲ್ಫ್ ಪ್ರದೇಶದಲ್ಲಿ ಭದ್ರತಾ ಆತಂಕ ಹೆಚ್ಚಿದೆ. ಇರಾನ್ ಹಾರ್ಮುಜ್ ಜಲಸಂಧಿಯನ್ನು ಮುಚ್ಚುವ ಸಾಧ್ಯತೆ ಹಾಗೂ ಗಲ್ಫ್ ನಾದ್ಯಂತ ಇಂಧನ ಸ್ಥಾಪನೆಗಳ ಮೇಲೆ ದಾಳಿಯ ಭೀತಿ ಹಿನ್ನೆಲೆಯಲ್ಲಿ ಜಾಗತಿಕ ತೈಲ ಪೂರೈಕೆ ವ್ಯತ್ಯಯಗೊಳ್ಳುವ ಆತಂಕ ಎದುರಾಗಿದೆ. ಇದರ ಪರಿಣಾಮವಾಗಿ ಇಂಧನ ವೆಚ್ಚಗಳು ಇನ್ನಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಮಾರುಕಟ್ಟೆ ವಲಯಗಳು ಅಭಿಪ್ರಾಯಪಟ್ಟಿವೆ.
ಬಾಗ್ದಾದ್ ವಿಮಾನ ನಿಲ್ದಾಣ ಸಮೀಪ ಡ್ರೋನ್ ಹೊಡೆದುರುಳಿಸಿದ ಭದ್ರತಾ ಪಡೆ
ಬಾಗ್ದಾದ್: ಇರಾಕ್ ರಾಜಧಾನಿ ಬಾಗ್ದಾದ್ನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಅನುಮಾನಾಸ್ಪದ ಡ್ರೋನ್ನ್ನು ಭದ್ರತಾ ಪಡೆಗಳು ಹೊಡೆದುರುಳಿಸಿದ ಘಟನೆ ನಡೆದಿದೆ. ಘಟನೆಯಲ್ಲಿ ಯಾವುದೇ ಸಾವು–ನೋವು ಸಂಭವಿಸಿಲ್ಲ ಎಂದು ಇರಾಕಿ ಸರ್ಕಾರಿ ಸುದ್ದಿ ಸಂಸ್ಥೆ ವರದಿ ಮಾಡಿದೆ ಎಂದು Aljazeera ಉಲ್ಲೇಖಿಸಿದೆ. ವಿಮಾನ ನಿಲ್ದಾಣದ ವಾಯುಪ್ರದೇಶದತ್ತ ಚಲಿಸುತ್ತಿದ್ದ ಡ್ರೋನ್ನ್ನು ರಕ್ಷಣಾ ವ್ಯವಸ್ಥೆಗಳು ಗುರಿಯಾಗಿಸಿ ನಾಶಪಡಿಸಿದ್ದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಡ್ರೋನ್ ಪತನಗೊಂಡ ಬಳಿಕ ಭದ್ರತಾ ಸಿಬ್ಬಂದಿ ಸ್ಥಳವನ್ನು ಸುತ್ತುವರಿದು ಪರಿಶೀಲನೆ ನಡೆಸಿದರು. ವಿಮಾನ ಸಂಚಾರಕ್ಕೆ ವ್ಯತ್ಯಯ ಉಂಟಾಗಿಲ್ಲ ಎಂದು ಮೂಲಗಳು ತಿಳಿಸಿವೆ.
ಮಧ್ಯಪ್ರಾಚ್ಯದಿಂದ 9 ಸಾವಿರ ಅಮೆರಿಕನ್ನರ ಸ್ಥಳಾಂತರ: ವರದಿ
ವಾಷಿಂಗ್ಟನ್: ಇರಾನ್ ಮೇಲೆ ಅಮೆರಿಕ–ಇಸ್ರೇಲ್ ಜಂಟಿ ದಾಳಿಗಳು ಆರಂಭವಾದ ನಂತರ ಮಧ್ಯಪ್ರಾಚ್ಯದಿಂದ ಸುಮಾರು 9 ಸಾವಿರ ಅಮೆರಿಕನ್ನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ ತಿಳಿಸಿದ್ದಾರೆ ಎಂದು Aljazeera ವರದಿ ಮಾಡಿದೆ. ದುಬೈನಲ್ಲಿರುವ ಅಮೆರಿಕ ರಾಯಭಾರ ಕಚೇರಿಯ ಪಕ್ಕದ ಪಾರ್ಕಿಂಗ್ ಪ್ರದೇಶದಲ್ಲಿ ಡ್ರೋನ್ ದಾಳಿ ನಡೆದ ಬಳಿಕ ಅಲ್ಲಿನ ಎಲ್ಲಾ ಅಮೆರಿಕ ಸಿಬ್ಬಂದಿಯನ್ನು ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲಾಗಿದೆ. ಘಟನೆಯ ನಂತರ ಭದ್ರತಾ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಲಾಗಿದೆ ಎಂದು ರುಬಿಯೊ ತಿಳಿಸಿದ್ದಾರೆ. ಇನ್ನೂ ಸುಮಾರು 1,600 ಅಮೆರಿಕ ನಾಗರಿಕರು ಮಧ್ಯಪ್ರಾಚ್ಯದಲ್ಲೇ ಸಹಾಯ ಕೋರಿ ಸಂಪರ್ಕದಲ್ಲಿದ್ದಾರೆ. ಅವರನ್ನು ಸುರಕ್ಷಿತವಾಗಿ ಹೊರತೆಗೆದುಕೊಳ್ಳಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಅಮೆರಿಕದ ವಿದೇಶಾಂಗ ಇಲಾಖೆ ಸ್ಪಷ್ಟಪಡಿಸಿದೆ.
ಗಲ್ಫ್ನಲ್ಲಿ ಯುದ್ಧದ ಸನ್ನಿವೇಶ | ಮಧ್ಯಪ್ರಾಚ್ಯ ಬಿಟ್ಟು ತೆರಳಲು ದಾರಿಯಿಲ್ಲ; ಸಂಕಷ್ಟದಲ್ಲಿ ಸಾವಿರಾರು ಮಂದಿ
ದುಬೈ/ದೋಹಾ: ಗಲ್ಫ್ ಪ್ರದೇಶದಲ್ಲಿ ಯುದ್ಧದ ಸನ್ನಿವೇಶ ತೀವ್ರಗೊಂಡ ಹಿನ್ನೆಲೆಯಲ್ಲಿ ಸಾವಿರಾರು ಮಂದಿ ಅಲ್ಲಿಂದ ತೆರಳಲು ದಾರಿ ಕಾಣದೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದ್ದಕ್ಕಿದ್ದಂತೆ ಉಲ್ಬಣಗೊಂಡ ದಾಳಿಗಳಿಂದ ಯುದ್ಧಾವೃತ ಪ್ರದೇಶವನ್ನು ತೊರೆಯಲು ಕೆಲವೇ ಆಯ್ಕೆಗಳು ಉಳಿದಿವೆ ಎಂದು Aljazeera ವರದಿ ಮಾಡಿದೆ. ಇರಾನ್ ಮೇಲೆ ಅಮೆರಿಕ–ಇಸ್ರೇಲ್ ದಾಳಿಗಳು ಆರಂಭವಾದ ನಂತರ ಖತರ್ ತನ್ನ ವಾಯುಪ್ರದೇಶವನ್ನು ತಾತ್ಕಾಲಿಕವಾಗಿ ಮುಚ್ಚಿದೆ. ಇದರ ಪರಿಣಾಮವಾಗಿ ಇನ್ನೇನು ಪ್ರಯಾಣಿಸಬೇಕಿದ್ದ ಸುಮಾರು 8,000 ಪ್ರಯಾಣಿಕರು ಅಲ್ಲೇ ಸಿಲುಕಿಕೊಂಡಿದ್ದಾರೆ. ವಿಮಾನ ಸಂಚಾರ ಸ್ಥಗಿತಗೊಂಡ ಕಾರಣ ವಿಮಾನ ನಿಲ್ದಾಣಗಳಲ್ಲಿ ಅನಿಶ್ಚಿತತೆ ಮತ್ತು ಆತಂಕದ ವಾತಾವರಣ ಮನೆಮಾಡಿದೆ. ಸೋಮವಾರದಿಂದ ಯುನೈಟೆಡ್ ಅರಬ್ ಎಮಿರೇಟ್ಸ್ನಿಂದ ಹೊರಡುವ ವಿಮಾನಗಳಿಗೆ ಕಟ್ಟುನಿಟ್ಟಿನ ನಿಯಂತ್ರಣ ಹೇರಲಾಗಿದೆ. ಸೀಮಿತ ಸಂಖ್ಯೆಯ ವಿಮಾನಗಳಿಗೆ ಮಾತ್ರ ಅನುಮತಿ ನೀಡಲಾಗುತ್ತಿದ್ದು, ಉಳಿದವರು ಪರ್ಯಾಯ ವ್ಯವಸ್ಥೆಗಳಿಗಾಗಿ ಹರಸಾಹಸ ಪಡುತ್ತಿದ್ದಾರೆ. ಇದೇ ವೇಳೆ ಇರಾನ್ ಗಲ್ಫ್ ಪ್ರದೇಶದಲ್ಲಿ ಪ್ರತಿದಾಳಿ ಆರಂಭಿಸಿದ ಪರಿಣಾಮ ಪ್ರವಾಸಿಗರು ಹಾಗೂ ವಲಸಿಗರು ಸುರಕ್ಷಿತ ದಾರಿ ಹುಡುಕುತ್ತ ಪರದಾಡುವಂತಾಗಿದೆ. ದುಬೈ ಹಾಗೂ ನೆರೆಯ ದೋಹಾ ನಗರಗಳು ಪೂರ್ವ–ಪಶ್ಚಿಮ ವಾಯು ಪ್ರಯಾಣದ ಪ್ರಮುಖ ಅಡ್ಡಹಾದಿಯಲ್ಲಿ ಇರುವುದರಿಂದ ಯುರೋಪ್–ಏಷ್ಯಾ ನಡುವಿನ ದೀರ್ಘ ದೂರದ ವಿಮಾನ ಸಂಚಾರಕ್ಕೆ ಕೇಂದ್ರೀಯ ಕೇಂದ್ರಗಳಾಗಿವೆ. ಪ್ರತಿದಿನ ಹತ್ತಾರು ಸಾವಿರ ಪ್ರಯಾಣಿಕರನ್ನು ನಿರ್ವಹಿಸುವ ಈ ನಗರಗಳಲ್ಲಿ ವಾಯುಪ್ರದೇಶ ನಿರ್ಬಂಧದ ಪರಿಣಾಮ ಅಂತರರಾಷ್ಟ್ರೀಯ ಸಂಚಾರ ವ್ಯವಸ್ಥೆ ಅಸ್ತವ್ಯಸ್ತಗೊಂಡಿದೆ. ಯುದ್ಧದ ಭೀತಿ ನಡುವೆ ಗಲ್ಫ್ನಿಂದ ತೆರಳಲು ಮಾಡಲು ಬಯಸುವ ಜನರಿಗೆ ಸ್ಪಷ್ಟ ಹಾಗೂ ಸುಗಮ ಮಾರ್ಗ ಲಭ್ಯವಿಲ್ಲದಿರುವುದು ಮಾನವೀಯ ಸಂಕಷ್ಟವನ್ನು ಮತ್ತಷ್ಟು ಗಂಭೀರಗೊಳಿಸಿದೆ. ತಮ್ಮ ನಾಗರಿಕರ ಸುರಕ್ಷಿತ ವಾಪಸಾತಿಗಾಗಿ ಸಂಬಂಧಿತ ರಾಷ್ಟ್ರಗಳು ಏರ್ ಲಿಫ್ಟ್ ನಂತಹ ತುರ್ತು ಕ್ರಮ ಕೈಗೊಳ್ಳಬೇಕೆಂಬ ಒತ್ತಾಯಗಳು ಕೇಳಿಬರುತ್ತಿವೆ.
ಮಧ್ಯಪ್ರಾಚ್ಯ ಸಂಘರ್ಷ | ಖತರ್, ಯುಎಇ ನಾಯಕರೊಂದಿಗೆ ಝೆಲೆನ್ಸ್ಕಿ ಚರ್ಚೆ
ಇರಾನಿನ ಡ್ರೋನ್ ಮತ್ತು ಕ್ಷಿಪಣಿಗಳನ್ನು ಹೊಡೆದು ಹಾಕಲು ನೆರವಾಗಲಿರುವ ಉಕ್ರೇನ್
ಯಾವ ಗ್ರಹಣವೂ ಮನುಷ್ಯನ ಮೇಲೆ ದುಷ್ಪರಿಣಾಮ ಬೀರಲ್ಲ : ಹುಲಿಕಲ್ ನಟರಾಜ್
‘ನಮ್ಮ ನಡಿಗೆ-ವಿಜ್ಞಾನದೆಡೆಗೆ, ಮೂಢನಂಬಿಕೆ ತೊಲಗಲಿ-ವೈಚಾರಿಕತೆ ಬೆಳೆಯಲಿ’ ವೈಜ್ಞಾನಿಕ ಕಾರ್ಯಕ್ರಮ
ಮಧ್ಯಪ್ರಾಚ್ಯದಲ್ಲಿ ಮಕ್ಕಳ ಮೇಲೆ ಯುದ್ಧದ ಪರಿಣಾಮ: ಅಮೆರಿಕ–ಇಸ್ರೇಲ್ ಕ್ರಮಗಳನ್ನು ಖಂಡಿಸಿದ ವಿಶ್ವಸಂಸ್ಥೆ
ವಾಷಿಂಗ್ಟನ್: ಮಧ್ಯಪ್ರಾಚ್ಯದಲ್ಲಿ ಅಮೆರಿಕ–ಇಸ್ರೇಲ್ ಮಿಲಿಟರಿ ಕಾರ್ಯಾಚರಣೆಯ ನಡುವೆಯೇ ಮಕ್ಕಳ ಮೇಲಿನ ಪರಿಣಾಮದ ಬಗ್ಗೆ ವಿಶ್ವಸಂಸ್ಥೆ ತೀವ್ರ ಆತಂಕ ವ್ಯಕ್ತಪಡಿಸಿದೆ. ಇರಾನ್ ನ ಮಿಲಿಟರಿ ಹಾಗೂ ನಾಗರಿಕ ಮೂಲಸೌಕರ್ಯಗಳ ಮೇಲೆ ನಡೆದ ದಾಳಿಗಳ ಹಿನ್ನೆಲೆಯಲ್ಲಿ ಪ್ರದೇಶದ ಮಕ್ಕಳ ಭದ್ರತೆಯು ಗಂಭೀರ ಅಪಾಯಕ್ಕೆ ಒಳಗಾಗಿದೆ ಎಂದು ಸಂಸ್ಥೆ ಹೇಳಿದೆ ಎಂದು Aljazeera ವರದಿ ಮಾಡಿದೆ. “ಇರಾನ್ ಮತ್ತು ಪ್ರದೇಶದಾದ್ಯಂತ ನಡೆಯುತ್ತಿರುವ ಸೈನಿಕ ಕಾರ್ಯಾಚರಣೆಗಳು ವಿನಾಶಕಾರಿ. ಇವು ಮಕ್ಕಳಿಗೆ ಗಂಭೀರ ಅಪಾಯವನ್ನುಂಟು ಮಾಡುತ್ತಿವೆ,” ಎಂದು ವಿಶ್ವಸಂಸ್ಥೆ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ನಾಗರಿಕರು, ಶಾಲೆಗಳು ಹಾಗೂ ಆಸ್ಪತ್ರೆಗಳು ದಾಳಿಗೆ ಗುರಿಯಾಗಬಾರದು ಎಂದು ಹೇಳಿದ ಸಂಸ್ಥೆ, ಪ್ರತಿಯೊಬ್ಬ ಮಗುವಿಗೂ ಭಯವಿಲ್ಲದೆ ಬದುಕುವ ಹಕ್ಕು ಇದೆ ಎಂದು ಒತ್ತಿ ಹೇಳಿದೆ. ಇರಾನ್ ನ ದಕ್ಷಿಣ ಭಾಗದ ಮಿನಾಬ್ ನಗರದಲ್ಲಿರುವ ಬಾಲಕಿಯರ ಶಾಲೆಯ ಮೇಲೆ ಅಮೆರಿಕ–ಇಸ್ರೇಲಿನಿಂದ ದಾಳಿ ನಡೆದಿದೆ ಎಂದು ಇರಾನ್ ಆರೋಪಿಸಿದೆ. ಈ ದಾಳಿಯಲ್ಲಿ ಮೃತಪಟ್ಟ 165 ವಿದ್ಯಾರ್ಥಿನಿಯರು ಮತ್ತು ಸಿಬ್ಬಂದಿಗೆ ಮಂಗಳವಾರ ಸಾಮೂಹಿಕ ಅಂತ್ಯಕ್ರಿಯೆ ನೆರವೇರಿಸಲಾಯಿತು. ಟೆಹ್ರಾನ್ ವಿರುದ್ಧ ನಡೆಯುತ್ತಿರುವ ಪ್ರಸ್ತುತ ಮಿಲಿಟರಿ ಅಭಿಯಾನದಲ್ಲಿ ಇದುವರೆಗಿನ ಅತ್ಯಂತ ಮಾರಕ ಘಟನೆ ಇದಾಗಿದೆ ಎಂದು ಇರಾನ್ ಅಧಿಕಾರಿಗಳು ತಿಳಿಸಿದ್ದಾರೆ.
ಪತ್ರಕರ್ತರ ಕ್ಷೇಮಾಭಿವೃದ್ಧಿ ನಿಧಿಗೆ 100 ಕೋಟಿ ರೂ. ಮೀಸಲಿಡಿ : ಮುಖ್ಯಮಂತ್ರಿಗೆ ಕೆಯುಡಬ್ಲೂಜೆ ಆಗ್ರಹ
ಬೆಂಗಳೂರು : ಮುಖ್ಯಮಂತ್ರಿಗಳ ಮಾಧ್ಯಮ ಆರೋಗ್ಯ ಸಂಜೀವಿನಿ ಯೋಜನೆಯನ್ನು ಎಲ್ಲ ಪತ್ರಕರ್ತರಿಗೂ ವಿಸ್ತರಿಸಬೇಕು. ಪತ್ರಕರ್ತರ ಕ್ಷೇಮಾಭಿವೃದ್ಧಿ ನಿಧಿಗೆ 100 ಕೋಟಿ ರೂ.ಅನುದಾನ ಬಜೆಟ್ನಲ್ಲಿ ಒದಗಿಸಬೇಕು ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (ಕೆಯುಡಬ್ಲೂಜೆ) ಒತ್ತಾಯಿಸಿದೆ. ಮಂಗಳವಾರ ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಈ ಬಗ್ಗೆ ಮನವಿ ಸಲ್ಲಿಸಿರುವ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು, ಜಿಲ್ಲಾ ಪತ್ರಕರ್ತರ ಸಂಘಗಳ ಕ್ಷೇಮಾಭಿವೃದ್ಧಿ ನಿಧಿಗೆ ತಲಾ 25ಲಕ್ಷ ರೂ. ಅನುದಾನ ಹಾಗೂ ತಾಲೂಕು ಪತ್ರಿಕಾ ಭವನಗಳಿಗೆ ತಲಾ 10ಲಕ್ಷ ರೂ.ಅನುದಾನ ಒದಗಿಸಬೇಕು ಎಂದು ಮನವಿ ಮಾಡಿದ್ದಾರೆ. ಕೋವಿಡ್ ಸಂದರ್ಭದಲ್ಲಿ ಮೃತ ಕುಟುಂಬಗಳಿಗೆ ತಲಾ 5ಲಕ್ಷ ರೂ.ಪರಿಹಾರವನ್ನು ಸರಕಾರದಿಂದ ಸಂತ್ರಸ್ತ ಕುಟುಂಬಗಳಿಗೆ ಕೊಡಿಸಲಾಗಿತ್ತು. ಅದೇ ರೀತಿಯಲ್ಲಿ ವೃತ್ತಿನಿರತ ಪತ್ರಕರ್ತರು ಮೃತಪಟ್ಟಲ್ಲಿ ಸಂತ್ರಸ್ತ ಕುಟುಂಬಗಳಿಗೆ 5ಲಕ್ಷ ರೂ.ಪರಿಹಾರ ನೀಡುವ ಯೋಜನೆಯನ್ನು ಜಾರಿ ಮಾಡಬೇಕು ಎಂದು ಅವರು ಕೋರಿದ್ದಾರೆ. ಜಿಲ್ಲಾ ಮತ್ತು ತಾಲೂಕು ಮಟ್ಟದ ಪತ್ರಕರ್ತರಿಗೆ ಸೌಲಭ್ಯವಾಗಿ ನಿವೇಶನ/ಮನೆ ನೀಡುವ ಪ್ರಾಧಿಕಾರದಲ್ಲಿ ಬೋರ್ಡ್ ಮತ್ತು ಇತರ ಸಂಘಗಳಲ್ಲಿ ಪತ್ರಕರ್ತರಿಗೆ ಶೇ.5ರಷ್ಟು ಮೀಸಲಿಡಬೇಕು. ಪತ್ರಕರ್ತರ ಸಂಘ ಶತಮಾನೋತ್ಸವ ಹೊಸ್ತಿಲಿಗೆ ಕಾಲಿಡುತ್ತಿದೆ. ಅದಕ್ಕಾಗಿ ಡಿವಿಜಿ ಶತಮಾನ ಸಂಭ್ರಮ ಕಾರ್ಯಕ್ರಮವನ್ನು ಪ್ರತಿ ಜಿಲ್ಲೆಯಲ್ಲಿ ಸರ್ಕಾರದಿಂದ ಆಚರಣೆ ಮಾಡಬೇಕು ಎಂದು ಅವರು ವಿನಂತಿಸಿದ್ದಾರೆ.
ದೂರು ದಾಖಲಿಸುವಲ್ಲಿ ವಿಳಂಬ ಖುಲಾಸೆಗೆ ಆಧಾರವಾಗದು; ಅಳಿಯನ ಕೊಂದ ಮಾವನ ಶಿಕ್ಷೆ ಎತ್ತಿಹಿಡಿದ ಹೈಕೋರ್ಟ್
ಬೆಂಗಳೂರು : ಕೊಲೆ ಪ್ರಕರಣದಲ್ಲಿ ದೂರು ದಾಖಲಿಸುವಲ್ಲಿ ಆಗಿರುವ ವಿಳಂಬವು ಆರೋಪಿಯನ್ನು ಖುಲಾಸೆಗೊಳಿಸಲು ಆಧಾರವಾಗುವುದಿಲ್ಲ. ಅಪರಾಧ ಕೃತ್ಯ ನಡೆದ ತಕ್ಷಣ ಸಂತ್ರಸ್ತರ ಕುಟುಂಬ ಗಾಯಾಳುವನ್ನು ಉಳಿಸುವ ಬಗ್ಗೆ ಕಾಳಜಿ ತೋರುತ್ತದೆಯೇ ಹೊರತು ಪೊಲೀಸರಿಗೆ ದೂರು ನೀಡುವ ಬಗ್ಗೆ ಅಲ್ಲ ಎಂದು ಅಭಿಪ್ರಾಯಪಟ್ಟಿರುವ ಹೈಕೋರ್ಟ್, ಅಳಿಯನನ್ನು ಕೊಲೆ ಮಾಡಿದ್ದ ಪ್ರಕರಣದಲ್ಲಿ ಮಾವನಿಗೆ ವಿಚಾರಣಾ ನ್ಯಾಯಾಲಯ ವಿಧಿಸಿದ್ದ ಜೀವಾವಧಿ ಶಿಕ್ಷೆ ಎತ್ತಿಹಿಡಿದಿದೆ. ವಿಚಾರಣಾ ನ್ಯಾಯಾಲಯದ ಆದೇಶ ಪ್ರಶ್ನಿಸಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಮಂಜಪ್ಪ ಸಲ್ಲಿಸಿದ್ದ ಮೇಲ್ಮನವಿ ವಜಾಗೊಳಿಸಿರುವ ನ್ಯಾಯಮೂರ್ತಿ ಎಚ್.ಪಿ. ಸಂದೇಶ್ ಹಾಗೂ ನ್ಯಾಯಮೂರ್ತಿ ವೆಂಕಟೇಶ್ ಟಿ. ನಾಯಕ್ ಅವರಿದ್ದ ವಿಭಾಗೀಯ ನ್ಯಾಯಪೀಠ ಈ ಆದೇಶ ಮಾಡಿದೆ. ಹೈಕೋರ್ಟ್ ಆದೇಶವೇನು? ವೈದ್ಯಕೀಯ ಸಾಕ್ಷ್ಯಾಧಾರಗಳನ್ನು ಪರಿಶೀಲಿಸಿದ ನ್ಯಾಯಾಲಯ, ಇದೊಂದು ನರಹತ್ಯೆಯ ಸಾವು ಎಂಬುದು ಸ್ಪಷ್ಟವಾಗುತ್ತದೆ. ದಾಖಲೆಯಲ್ಲಿರುವ ಅಂಶಗಳನ್ನು ಗಮನಿಸಿದರೆ, ವಿಚಾರಣಾ ನ್ಯಾಯಾಲಯದ ನೀಡಿರುವ ತೀರ್ಪು ರದ್ದುಗೊಳಿಸಲು ಯಾವುದೇ ಆಧಾರಗಳು ಕಂಡುಬರುವುದಿಲ್ಲ. ಒಂದು ವೇಳೆ, ತೀರ್ಪು ರದ್ದುಪಡಿಸಿ, ವಿಭಿನ್ನ ತೀರ್ಪು ನೀಡಬೇಕೆಂದರೆ ಬಲವಾದ ಪುರಾವೆಗಳು ಇರಬೇಕಾಗುತ್ತದೆ. ಪ್ರಸ್ತುತ ಪ್ರಕರಣದಲ್ಲಿ ಅಂಥ ಯಾವುದೇ ಪುರಾವೆಗಳು ಇಲ್ಲ. ಮೇಲ್ಮನವಿದಾರನ ವಿರುದ್ಧ ಸುಳ್ಳು ಆರೋಪ ಹೊರಿಸಲು ಯಾವುದೇ ಸಾಕ್ಷಿಗಳು ಆತನ ಬಗ್ಗೆ ದ್ವೇಷವನ್ನೂ ಹೊಂದಿಲ್ಲ ಎಂದು ಹೇಳಿದೆ. ಪ್ರಕರಣದಲ್ಲಿ ನ್ಯಾಯಾಲಯಕ್ಕೆ ಸಹಕರಿಸಲು ಅಮೈಕಸ್ ಕ್ಯೂರಿಯಾಗಿ ನೇಮಕಗೊಂಡಿದ್ದ ವಕೀಲ ಸಂಪಂಗಿ ರಾಮಯ್ಯ ಅವರು, ಘಟನೆ ನಡೆದ ಕೂಡಲೇ ದೂರನ್ನು ಸಲ್ಲಿಸಿಲ್ಲ. ಗಾಯಗೊಂಡಿದ್ದ ವ್ಯಕ್ತಿಯ ಮರಣದ ನಂತರ ದೂರು ದಾಖಲಿಸಲಾಗಿದೆ ಮತ್ತು ದೂರು ವಿಳಂಬಕ್ಕೆ ಕಾರಣಗಳನ್ನು ನೀಡಿಲ್ಲವೆಂದು ತಿಳಿಸಿದ್ದಾರೆ. ಆದರೆ, ಆರೋಪಿ ಬೇರೆ ಯಾರೂ ಅಲ್ಲ. ಮೂರನೇ ಪ್ರತ್ಯಕ್ಷದರ್ಶಿಯ ತಂದೆ ಮತ್ತು 7ನೇ ಪ್ರತ್ಯಕ್ಷದರ್ಶಿಯ ಪತಿಯಾಗಿದ್ದಾರೆ. ಘಟನೆ ನಡೆದ ಸಂದರ್ಭದಲ್ಲಿ ಕುಟುಂಬ ಸದಸ್ಯರು ಗಾಯಾಳುವನ್ನು ಆಸ್ಪತ್ರೆಗೆ ಸಾಗಿಸಲು ಆದ್ಯತೆ ನೀಡಿರುವುದು ಸಹಜವಾಗಿಯೇ ಇದೆ. ಆದ್ದರಿಂದ, ದೂರು ದಾಖಲಿಸುವುದರಲ್ಲಿ ವಿಳಂಬವಾಗಿದ್ದು, ಈ ವಿಳಂಬ ಆರೋಪಿಯನ್ನು ಖುಲಾಸೆಗೊಳಿಸಲು ಆಧಾರವಲ್ಲ ಎಂದಿರುವ ನ್ಯಾಯಪೀಠ, ವಿಚಾರಣಾ ನ್ಯಾಯಾಲಯದ ತೀರ್ಪು ಎತ್ತಿ ಹಿಡಿದಿದೆ.
ಖಾಸಗಿ ಶಾಲೆಗಳ ಶುಲ್ಕ ಶೇ.15ರಷ್ಟು ಹೆಚ್ಚಳ
ಬೆಂಗಳೂರು : ಶಾಲಾ ಶಿಕ್ಷಕರ ವೇತನ ಪರಿಷ್ಕರಣೆ, ಮಾನ್ಯತಾ ಶುಲ್ಕ ಪಾವತಿ ಸೇರಿದಂತೆ ವಿವಿಧ ಕಾರಣಗಳಿಂದ ಖಾಸಗಿ ಶಾಲೆಗಳು 2026-27ನೇ ಶೈಕ್ಷಣಿಕ ಸಾಲಿನಲ್ಲಿ ಶೇ.15ರವರೆಗೆ ಶುಲ್ಕವನ್ನು ಹೆಚ್ಚಳ ಮಾಡಲಾಗುತ್ತಿದೆ ಎಂದು ಖಾಸಗಿ ಶಾಲೆಗಳ ಸಂಘಗಳು ತಿಳಿಸಿವೆ. ಕ್ಯಾಮ್ಸ್ ನ ಪ್ರಧಾನ ಕಾರ್ಯದರ್ಶಿ ಶಶಿಕುಮಾರ್ ಮಾತನಾಡಿ, ಪ್ರತಿ ವರ್ಷ ಶೇ. 8ರಿಂದ 10ರಷ್ಟು ಶುಲ್ಕ ಹೆಚ್ಚಳ ಮಾಡಲಾಗುತ್ತಿತ್ತು. 2026-27ನೇ ಸಾಲಿಗೆ ಕೆಲವು ಶಾಲೆಗಳು ತಮ್ಮ ಅನುಕೂಲಕ್ಕೆ ತಕ್ಕ ಹಾಗೆ ಶುಲ್ಕ ಏರಿಕೆ ಮಾಡಲಿವೆ. ಕನಿಷ್ಠ ಶೇ.8 ರಿಂದ ಗರಿಷ್ಠ 15ರವರೆಗೂ ಶುಲ್ಕ ಹೆಚ್ಚಳವಾಗಲಿದೆ ಎಂದು ತಿಳಿಸಿದ್ದಾರೆ. ಕೃಪಾ ಸಂಘಟನೆಯ ಅಧ್ಯಕ್ಷ ಲೋಕೇಶ್ ತಾಳಿಕಟ್ಟೆ ಪ್ರಕಟನೆ ಹೊರಡಿಸಿದ್ದು, ಶಾಲಾ ಶಿಕ್ಷಕರು ತಮ್ಮ ವೇತನವನ್ನು ಶೇ.20ರಷ್ಟು ಹೆಚ್ಚಳ ಮಾಡಬೇಕು ಎಂದು ಬೇಡಿಕೆ ಇಟ್ಟಿದ್ದು, ಅವರ ವೇತನವನ್ನು ಅಷ್ಟು ಪ್ರಮಾಣದಲ್ಲಿ ಹೆಚ್ಚಳ ಮಾಡಲು ಸಾಧ್ಯವಿಲ್ಲ. ಆದರೆ 2026-27ರಲ್ಲಿ ಶಿಕ್ಷಕ ವೇತನವನ್ನು ಪರಿಷ್ಕರಣೆ ಮಾಡಬೇಕಾಗಿದೆ. ಅಲ್ಲದೆ ಶಾಲೆಗಳ ನಿರ್ವಹಣೆಯನ್ನು ಮಾಡಬೇಕಾಗಿದೆ. ಹೀಗಾಗಿ ಖಾಸಗಿ ಶಾಲೆಗಳ ಶುಲ್ಕ ಶೇ.15ರಷ್ಟು ಹೆಚ್ಚಳ ಮಾಡಲಾಗುತ್ತಿದೆ ಎಂದರು.
ಖಾಮಿನೈ ಹತ್ಯೆ ಖಂಡಿಸಿ ಪ್ರತಿಭಟನೆ | ನಿಗಾ ವಹಿಸುವ ಪರಿಸ್ಥಿತಿ ಸದ್ಯಕ್ಕೆ ಕಂಡು ಬಂದಿಲ್ಲ : ಜಿ.ಪರಮೇಶ್ವರ್
ಬೆಂಗಳೂರು : ಇರಾನ್ ದೇಶದ ಪರಮೋಚ್ಚ ನಾಯಕ ಆಯತುಲ್ಲಾ ಅಲಿ ಖಾಮಿನೈ ಅವರ ಹತ್ಯೆ ಖಂಡಿಸಿ ರಾಜ್ಯದಲ್ಲಿ ಪ್ರತಿಭಟನೆ ನಡೆಸುತ್ತಿರುವವರ ಮೇಲೆ ನಿಗಾ ವಹಿಸುವ ಪರಿಸ್ಥಿತಿ ಸದ್ಯಕ್ಕೆ ಕಂಡು ಬಂದಿಲ್ಲ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಸ್ಪಷ್ಟಪಡಿಸಿದ್ದಾರೆ. ಮಂಗಳವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಯತುಲ್ಲಾ ಅಲಿ ಖಾಮಿನೈ ಹತ್ಯೆಯ ಬಳಿಕ ಪ್ರತಿಭಟನೆ ನಡೆಸುತ್ತಿರುವವರ ಮೇಲೆ ನಿಗಾ ಇಡುವಂತೆ ಕೇಂದ್ರ ಸರಕಾರ ಸೂಚನೆ ನೀಡಿರುವ ಬಗ್ಗೆ ನನಗೆ ಮಾಹಿತಿ ಇಲ್ಲ. ಈ ಬಗ್ಗೆ ಕೆಲ ಪತ್ರಿಕೆಗಳಲ್ಲಿ ಮಾತ್ರ ಸುದ್ದಿ ಬಂದಿದೆ. ಒಂದು ವೇಳೆ ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿಯವರಿಗೆ ಮಾಹಿತಿ ಬಂದಿರಬಹುದು. ಆದರೆ, ಪೊಲೀಸ್ ಮಹಾನಿರ್ದೇಶಕರು ಇಲ್ಲಿಯವರೆಗೂ ಅಂತಹ ವಿಚಾರವನ್ನು ಗಮನಕ್ಕೆ ತಂದಿಲ್ಲ ಎಂದರು. ಕೆಲವೊಂದು ವಿಚಾರಗಳು ರಾಜನೀತಿಗಳಾಗಿವೆ. ಒಂದೊಂದು ಸರಕಾರಕ್ಕೆ ತನ್ನದೇ ಆದ ನೀತಿಗಳಿರುತ್ತವೆ. ಕಾಂಗ್ರೆಸ್ ಸರಕಾರ ಇದ್ದಾಗ ಒಂದು ರೀತಿಯ ವಿದೇಶಾಂಗ ನೀತಿಯಿತ್ತು. ಈಗ ಬಿಜೆಪಿ ಸರಕಾರ ಇದೆ. ಅವರದ್ದು ಒಂದು ರೀತಿಯ ವಿದೇಶಾಂಗ ನೀತಿ ಇರುತ್ತದೆ. ಅದರ ಆಧಾರದ ಮೇಲೆ ಕೇಂದ್ರ ಸರಕಾರ ರಾಜ್ಯ ಸರಕಾರಗಳಿಗೆ ಮಾಹಿತಿ ನೀಡುತ್ತದೆ. ಸದ್ಯಕ್ಕೆ ಕೇಂದ್ರ ಸರಕಾರ ಸೂಚನೆ ನೀಡುವಂತಹ ಸನ್ನಿವೇಶಗಳು ಕಂಡು ಬಂದಿಲ್ಲ ಎಂದು ಅವರು ಮಾಹಿತಿ ನೀಡಿದರು. ಬೆಂಗಳೂರಿನಲ್ಲಿ ಫ್ರೀಡಂಪಾರ್ಕ್ ಹೊರತು ಪಡಿಸಿ ಬೇರೆ ಕಡೆ ಪ್ರತಿಭಟನೆ ನಡೆಸಿರುವುದು ಹೈಕೋರ್ಟಿನ ತೀರ್ಪಿನ ಉಲ್ಲಂಘನೆಯಾಗಿದ್ದು, ಈ ಸಂಬಂಧ ಪ್ರತಿಭಟನೆ ನಡೆಸಿದವರ ವಿರುದ್ಧ ಕ್ರಮ ಕೈ ಗೊಳ್ಳುವ ಬಗ್ಗೆ ಪರಿಶೀಲನೆ ನಡೆಸಲಾಗುವುದು ಎಂದ ಅವರು, ದುಬೈನಲ್ಲಿ ಕನ್ನಡಿಗರೊಬ್ಬರ ಸಾವಿನ ಬಗ್ಗೆ ನನಗೆ ಅಧಿಕೃತವಾಗಿ ಯಾವುದೇ ಮಾಹಿತಿ ಬಂದಿಲ್ಲ. ಕನ್ನಡಿಗರ ರಕ್ಷಣೆ ಸಂಬಂಧ ಮುಖ್ಯಮಂತ್ರಿ ಅವರು ಕೇಂದ್ರ ಸರಕಾರಕ್ಕೆ ಪತ್ರ ಬರೆದಿದ್ದು, ಕನ್ನಡಿಗರನ್ನು ಸುರಕ್ಷಿತವಾಗಿ ರಾಜ್ಯಕ್ಕೆ ವಾಪಸ್ ಕರೆ ತರಲು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ ಎಂದರು.
Chikkaballapura| ಲಂಚ ಪಡೆಯುತ್ತಿದ್ದಾಗಲೇ ಲೋಕಾಯುಕ್ತ ಬಲೆಗೆ ಬಿದ್ದ ಇನ್ಸ್ಪೆಕ್ಟರ್, ಎಎಸ್ಐ
ಚಿಕ್ಕಬಳ್ಳಾಪುರ : ಪ್ರಕರಣವೊಂದಕ್ಕೆ ಸಂಬಂಧಿಸಿ ಬಿ ರಿಪೋರ್ಟ್ ಹಾಕಲು ಲಂಚಕ್ಕೆ ಬೇಡಿಕೆಯಿಟ್ಟ ಆರೋಪದಡಿ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಮತ್ತು ಓರ್ವ ಎಎಸ್ಐ ಲಂಚ ಪಡೆಯುತ್ತಿದ್ದಾಗಲೇ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಗ್ರಾಮಾಂತರ ಪೊಲೀಸ್ ಠಾಣೆಯ ಪಿಎಸ್ಐ ಶರಣಪ್ಪ ಹಾಗೂ ಸಹಾಯಕ ಸಬ್ ಇನ್ಸ್ಪೆಕ್ಟರ್ ವೆಂಕಟೇಶ್ ಲೋಕಾಯುಕ್ತ ಬಲೆಗೆ ಬಿದ್ದಿರುವ ಅಧಿಕಾರಿಗಳು. ತಾಲೂಕಿನ ಮೊಟ್ಲೊರು ಗ್ರಾಮದ ರಾಘವೇಂದ್ರ ಎಂಬವರ ಪ್ರಕರಣ ಒಂದರ ಬಿ ರಿಪೋರ್ಟ್ ಹಾಕಲು ಲಂಚಕ್ಕೆ ಬೇಡಿಕೆಯಿಟ್ಟಿದ್ದರು ಎನ್ನಲಾಗಿದೆ. ರಾಘವೇಂದ್ರ ಅವರಿಂದ 1 ಲಕ್ಷ ರೂ.ಗ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ. ಈ ನಿಟ್ಟಿನಲ್ಲಿ 80 ಸಾವಿರ ರೂ. ಪಡೆಯುವಾಗ ಕನ್ನಡ ಭವನದಲ್ಲಿ ಬಳಿ ವೆಂಕಟೇಶಪ್ಪ ಮತ್ತು ನಗರ ಹೊರವಲಯದ ಚಿತ್ರಾವತಿ ಬಳಿ ಶರಣಪ್ಪ ಅವರನ್ನು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ.ಲೋಕಾಯುಕ್ತ ಎಸ್ಪಿ ಆಂಟೋನಿ ಜಾನ್,ಡಿವೈಎಸ್ಪಿ ವಿಜಯೇಂದ್ರ ಕುಮಾರ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿದ್ದು, ಗ್ರಾಮಾಂತರ ಠಾಣೆಯಲ್ಲಿ ಈ ಇಬ್ಬರು ಪೊಲೀಸರನ್ನು ತನಿಖೆಗೆ ಒಳಪಡಿಸಿದ್ದಾರೆ.
Hassan | ನಿಧಾನವಾಗಿ ಕಾರು ಚಲಾಯಿಸುವಂತೆ ಸೂಚಿಸಿದ್ದಕ್ಕೆ ವ್ಯಕ್ತಿಯ ಹತ್ಯೆ
ಹಾಸನ : ಅತೀವೇಗದಲ್ಲಿ ಕಾರು ಚಲಾಯಿಸುತ್ತಿದ್ದ ಚಾಲಕನಿಗೆ ‘‘ನಿಧಾನವಾಗಿ ಹೋಗು’’ ಎಂದು ಹೇಳಿದ ಕಾರಣಕ್ಕೆ ಕೋಪಗೊಂಡ ವ್ಯಕ್ತಿಯೊಬ್ಬ ಕಾರನ್ನು ಹಿಂದಿರುಗಿಸಿ ನೇರವಾಗಿ ಯುವಕರ ಮೇಲೆ ಗುದ್ದಿದ ಪರಿಣಾಮ 27 ವರ್ಷದ ಯುವಕನೊಬ್ಬ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಸೂರನಹಳ್ಳಿ ಗ್ರಾಮದಲ್ಲಿ ನಿನ್ನೆ ಮಧ್ಯರಾತ್ರಿ ಸಂಭವಿಸಿರುವುದು ವರದಿಯಾಗಿದೆ. ಮೃತ ಯುವಕನನ್ನು ಮನು ಎಂದು ಗುರುತಿಸಲಾಗಿದೆ. ಮಾಹಿತಿಯ ಪ್ರಕಾರ, ಸೋಮವಾರ ರಾತ್ರಿ ಮನು, ಅಭಿಷೇಕ್ ಸೇರಿದಂತೆ ಇನ್ನಿಬ್ಬರು ಯುವಕರು ಗ್ರಾಮದಲ್ಲಿ ರಸ್ತೆಬದಿಯಲ್ಲಿ ಮಾತನಾಡುತ್ತ ನಿಂತಿದ್ದರು. ಇದೇ ವೇಳೆ ವೇಗವಾಗಿ ಬರುತ್ತಿದ್ದ ಕಾರನ್ನು ಗಮನಿಸಿದ ಮನು ಹಾಗೂ ಅಭಿಷೇಕ್ ಚಾಲಕನಿಗೆ ನಿಧಾನವಾಗಿ ಸಾಗುವಂತೆ ಸೂಚಿಸಿದ್ದಾರೆ. ಇದರಿಂದ ಆಕ್ರೋಶಗೊಂಡ ಚಾಲಕ ಸ್ವಲ್ಪ ದೂರ ಹೋಗಿ, ಬಳಿಕ ಕಾರನ್ನು ತಿರುಗಿಸಿಕೊಂಡು ಬಂದು ಮಾತನಾಡುತ್ತಿದ್ದ ಯುವಕರ ಮೇಲೆ ಉದ್ದೇಶಪೂರ್ವಕವಾಗಿ ಗುದ್ದಿದನೆಂದು ತಿಳಿದುಬಂದಿದೆ. ಢಿಕ್ಕಿಯ ತೀವ್ರತೆಗೆ ಮನು ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ. ಅಭಿಷೇಕ್, ರಾಕೇಶ್ ಹಾಗೂ ಕುಶಾಲ್ ಗಾಯಗೊಂಡಿದ್ದು, ಇವರಲ್ಲಿ ಅಭಿಷೇಕ್ ಮತ್ತು ರಾಕೇಶ್ ಅವರಿಗೆ ಗಂಭೀರ ಗಾಯಗಳಾಗಿವೆ. ಕುಶಾಲ್ಗೆ ಸಣ್ಣಪುಟ್ಟ ಗಾಯಗಳಾಗಿವೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆಯ ಬಳಿಕ ಕಾರು ನಿಲ್ಲಿಸದೆ ಚಾಲಕ ಪರಾರಿಯಾಗಿದ್ದು, ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಹೊಳೆನರಸೀಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಬಂಧಿಸಲು ತೀವ್ರ ಶೋಧ ಕಾರ್ಯಾಚರಣೆ ಕೈಗೊಳ್ಳಲಾಗಿದೆ.
ಕೊಯಿಲ| ಮುಂದಿನ ವರ್ಷದಲ್ಲಿ ಪಶು ವೈದ್ಯಕೀಯ ಕಾಲೇಜು ಆರಂಭಕ್ಕೆ ಪ್ರಯತ್ನ: ಸಚಿವ ವೆಂಕಟೇಶ್
ಕಡಬ: ಕಡಬ ತಾಲೂಕು ಕೊಯಿಲದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಪಶುವೈದ್ಯಕೀಯ ಕಾಲೇಜಿನಲ್ಲಿ ಮುಂದಿನ ಶೈಕ್ಷಣಿಕ ವರ್ಷದಿಂದ ತರಗತಿಗಳನ್ನು ಪ್ರಾರಂಭಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಪಶುಸಂಗೋಪನೆ ಮತ್ತು ರೇಶ್ಮೆ ಸಚಿವ ಕೆ. ವೆಂಕಟೇಶ್ ಹೇಳಿದ್ದಾರೆ. ಅವರು ಮಂಗಳವಾರದಂದು ಕೊಯಿಲ ಪಶುವೈದ್ಯಕೀಯ ಕಾಲೇಜು ಹಾಗೂ ಜಾನುವಾರು ತಳಿ ಸಂವರ್ಧನಾ ಮತ್ತು ತರಬೇತಿ ಕೇಂದ್ರಕ್ಕೆ ಭೇಟಿ ನೀಡಿದ ನಂತರ ಇಲಾಖಾ ಪ್ರಗತಿ ಪರಿಶೀಲನಾ ಸಭೆ ನಡೆಸಿ ಮಾತನಾಡಿದರು. ಕೊಯಿಲ ಪಶುವೈದ್ಯಕೀಯ ಕಾಲೇಜು ಕಟ್ಟಡಕ್ಕೆ 2016ರಲ್ಲಿ ಅಂದಿನ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಶಂಕುಸ್ಥಾಪನೆ ನೆರವೇರಿಸಿದ್ದು, ಪ್ರಸ್ತುತ ಕಾಮಗಾರಿ ಪೂರ್ಣಗೊಂಡಿದೆ. ಕಾಲೇಜಿಗೆ ಅಗತ್ಯವಿರುವ ಬೋಧಕ ಮತ್ತು ಬೋಧಕೇತರ ಹುದ್ದೆಗಳನ್ನು ಮಂಜೂರುಗೊಳಿಸಲಾಗಿದೆ. ಈ ನಿಟ್ಟಿನಲ್ಲಿ ಮುಂದಿನ ಶೈಕ್ಷಣಿಕ ವರ್ಷದಿಂದ ಪ್ರಥಮ ವರ್ಷದ ತರಗತಿಗಳನ್ನು ಪ್ರಾರಂಭಿಸಲು ಗಂಭೀರವಾಗಿ ಪ್ರಯತ್ನಿಸಲಾಗುತ್ತಿದೆ ಎಂದು ಸಚಿವರು ಹೇಳಿದರು. ಕಾಲೇಜು, ಹಾಸ್ಟೆಲ್ ಕಟ್ಟಡ, ಪ್ರಯೋಗಾಲಯ ಸೇರಿದಂತೆ ಅಗತ್ಯ ಮೂಲ ಸೌಲಭ್ಯಗಳು ಈಗಾಗಲೇ ಪೂರ್ಣಗೊಂಡಿದೆ. 13 ಉಪನ್ಯಾಸಕರ ಹುದ್ದೆ, 32 ಇತರೆ ಸಿಬ್ಬಂದಿ ಹುದ್ದೆಗಳು ಮಂಜೂರುಗೊಳಿಸಲಾಗಿದೆ. ಕಾಲೇಜಿಗೆ ಭಾರತೀಯ ಪಶುವೈದ್ಯಕೀಯ ಪರಿಷತ್ (ವಿ.ಸಿ.ಐ) ಅನುಮತಿ ದೊರಕುವುದು ಬಾಕಿ ಇದ್ದು, ಶೀಘ್ರದಲ್ಲಿ ಈ ಪ್ರಕ್ರಿಯೆ ಪೂರ್ಣಗೊಳಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ತಿಳಿಸಿದರು. ಜಾನುವಾರು ಸಂವರ್ಧನಾ ತರಬೇತಿ ಕೇಂದ್ರದಲ್ಲಿ ಅಪರೂಪದ ಜಾನುವಾರು ತಳಿಗಳನ್ನು ಬೆಳೆಸಲು ಹೆಚ್ಚು ಆದ್ಯತೆ ನೀಡಬೇಕು. ಜಾನುವಾರು ಮತ್ತು ಕುಕ್ಕುಟಗಳ ಮೌಲ್ಯವರ್ಧಿತ ಉತ್ಪನ್ನಗಳ ತಯಾರಿಕೆ ಹೆಚ್ಚಿಸಬೇಕು. ಹೊಸ ಹೊಸ ತಳಿ ಗಳನ್ನು ಪರಿಚಯಿಸಬೇಕು ಎಂದು ಸಚಿವರು ತಿಳಿಸಿದರು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜಾನುವಾರು ಸಾಕಾಣಿಕೆ ಸಂಖ್ಯೆಯು ಕುಸಿಯುತ್ತಿರುವುದರಿಂದ ಹೈನುಗಾರಿಕೆಯನ್ನು ಪ್ರೋತ್ಸಾಹಿಸಲು ಇಲಾಖೆಯ ವತಿಯಿಂದ ಕಾರ್ಯಕ್ರಮ ಆಯೋಜಿಸಲು ಅಧಿಕಾರಿಗಳಿಗೆ ಸೂಚಿಸಿದರು. ಜಿಲ್ಲೆಯ ವಿವಿಧೆಡೆ ಮಂಜೂರುಗೊಂಡಿರುವ ಪಶುವೈದ್ಯಕೀಯ ಆಸ್ಪತ್ರೆಗಳಿಗೆ ಜಮೀನು ಲಭ್ಯವಿಲ್ಲದಿದ್ದಲ್ಲಿ ಅದನ್ನು ಬೇರೆಡೆಗೆ ಸ್ಥಳಾಂತರಿಸುವಂತೆ ಸಚಿವರು ತಿಳಿಸಿದರು. ಜಾನುವಾರು ವಿಮೆಗಳ ಕ್ಲೈಮ್ ಸಂದರ್ಭದಲ್ಲಿ ವಿಮಾ ಕಂಪನಿಗಳು ರೈತರಿಗೆ ಸ್ಪಂದಿಸುವುದಿಲ್ಲ ಎಂಬ ದೂರಿನ ಹಿನ್ನೆಲೆಯಲ್ಲಿ, ಕೇಂದ್ರ ಕಚೇರಿಯಿಂದ ಸೂಕ್ತ ಕ್ರಮ ಕೈಗೊಳ್ಳುವಂತೆ ಸಚಿವರು ತಿಳಿಸಿದರು. ಪುತ್ತೂರಿಗೆ ಪಶುಸಂಗೋಪನೆ ಪಾಲಿ ಕ್ಲಿನಿಕ್ ಮಂಜೂರಾಗಿದ್ದು, ಶೀಘ್ರದಲ್ಲಿಯೇ ವಿವಿಧ ಕಟ್ಟಡ ಕಾಮಗಾರಿಗೆ ಚಾಲನೆ ನೀಡುವಂತೆ ಸಚಿವ ವೆಂಕಟೇಶ್ ತಿಳಿಸಿದರು. ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಮಾತನಾಡಿ, ಸುಳ್ಯ ತಾಲೂಕು ಗೋಶಾಲೆ ನಿರ್ಮಾಣಕ್ಕೆ ಕಟ್ಟಡ ಕಾಮಗಾರಿ ಪೂರ್ಣಗೊಂಡಿದ್ದು, ಇತರ ಮೂಲ ಸೌಕರ್ಯಗಳ ನಿರ್ಮಾಣಕ್ಕೆ ಹೆಚ್ಚುವರಿ ಅನುದಾನ ಬಿಡುಗಡೆ ಮಾಡಬೇಕು ಎಂದರು. ಕೊೈಲ ಜಾನುವಾರು ಕೇಂದ್ರದಲ್ಲಿ ದೊರಕುವ ಹಾಲು ಸ್ಥಳೀಯರಿಗೆ ದೊರಕುವಂತಾಗಬೇಕು. ಪಶು ವೈದ್ಯಕೀಯ ಕಾಲೇಜಿನ ತರಗತಿಯನ್ನು ಆದಷ್ಟು ಶೀಘ್ರವೇ ಆರಂಭಿಸುವಂತೆ ಸಚಿವರಲ್ಲಿ ಆಗ್ರಹಿಸಿದರು. ಕೊೈಲ ಜಾನುವಾರು ಸಂವರ್ಧನಾ ಕೇಂದ್ರವು 1951 ರಲ್ಲಿ ಸ್ಥಾಪನೆಯಾಗಿದೆ. ಇಲ್ಲಿನ 247 ಎಕರೆ ಜಮೀನನ್ನು ಪಶುವೈದ್ಯಕೀಯ ಕಾಲೇಜು ನಿರ್ಮಾಣಕ್ಕೆ ಹಾಗೂ 98 ಎಕರೆ ಜಮೀನನ್ನು ಜಿಲ್ಲಾ ಗೋಶಾಲೆ ನಿರ್ಮಾಣಕ್ಕೆ ನೀಡಲಾಗಿದೆ. ಜಿಲ್ಲಾ ಗೋಶಾಲೆಗೆ ರಾಜ್ಯ ಸರಕಾರದಿಂದ ಈವರೆಗೆ ರೂ.1.91 ಕೋಟಿ ಅನುದಾನ ಬಂದಿದೆ. ಪ್ರಸ್ತುತ ಈ ಗೋಶಾಲೆಯಲ್ಲಿ 154 ಜಾನುವಾರುಗಳು ಇವೆ ಎಂದು ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು. ಪಶುಸಂಗೋಪನೆ ಮತ್ತು ಮೀನುಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ವಿನೋತ್ ಪ್ರಿಯಾ, ಪಶು ಸಂಗೋಪನೆ ಇಲಾಖೆ ಆಯುಕ್ತೆ ಶಿಲ್ಪಾ ನಾಗ್, ಬೀದರ್ ಪಶುವೈದ್ಯಕೀಯ ವಿಶ್ವವಿದ್ಯಾನಿಲಯದ ಉಪಕುಲಪತಿ ಡಾ.ಕೆ.ಸಿ. ವೀರಣ್ಣ, ಡಾ.ಸುಶಾಂತ್ ರೈ, ಮತ್ತಿತರರು ಉಪಸ್ಥಿತರಿದ್ದರು. ಪಶುಸಂಗೋಪನಾ ಇಲಾಖೆ ಉಪನಿರ್ದೇಶಕ ಡಾ.ಅರುಣ್ ಕುಮಾರ್ ಶೆಟ್ಟಿ ಸಭೆಗೆ ಇಲಾಖಾ ಮಾಹಿತಿ ನೀಡಿದರು. ಜಾನುವಾರ ತಳಿ ಸಂವರ್ಧನ ಮತ್ತು ತರಬೇತಿ ಕೇಂದ್ರದ ಉಪನಿರ್ದೇಶಕ ಡಾ.ಚಿದಾನಂದ ಸ್ವಾಗತಿಸಿದರು. ಇದಕ್ಕೂ ಮೊದಲು ಸಚಿವರು ಪಶು ವೈದ್ಯಕೀಯ ಕಾಲೇಜು ಕಟ್ಟಡ, ಜಿಲ್ಲಾ ಗೋಶಾಲೆ, ಹಾಗೂ ಜಾನುವಾರು ಸಂವರ್ಧನ ತರಬೇತಿ ಕೇಂದ್ರದ ವಿವಿಧ ಕಟ್ಟಡಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.
ಚಿನ್ನಸ್ವಾಮಿ ಕಾಲ್ತುಳಿತ ಪ್ರಕರಣ; ಅಂತಿಮ ವರದಿ ಸಲ್ಲಿಕೆಗೆ ನೀಡಿದ್ಧ ಮಧ್ಯಂತರ ತಡೆ ವಿಸ್ತರಿಸಿದ ಹೈಕೋರ್ಟ್
ಬೆಂಗಳೂರು: ಆರ್ಸಿಬಿ ವಿಜಯೋತ್ಸವ ಆಚರಣೆ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸಂಭವಿಸಿದ್ದ ಕಾಲ್ತುಳಿತದಲ್ಲಿ 11 ಜನ ಮೃತಪಟ್ಟ ಪ್ರಕರಣದಲ್ಲಿ ವಿಚಾರಣಾ ನ್ಯಾಯಾಲಯಕ್ಕೆ ಅಂತಿಮ ವರದಿ ಸಲ್ಲಿಸದಂತೆ ನೀಡಿರುವ ಮಧ್ಯಂತರ ತಡೆಯಾಜ್ಞೆಯನ್ನು ಹೈಕೋರ್ಟ್ ವಿಸ್ತರಿಸಿದೆ. ಎಫ್ಐಆರ್ ರದ್ದು ಕೋರಿ ಆರ್ಸಿಬಿ, ಕೆಎಸ್ಸಿಎ ಮತ್ತು ಡಿಎನ್ಎ ಸಂಸ್ಥೆಗಳು ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು. ರಾಜ್ಯ ಸರ್ಕಾರದ ಪರ ಹಾಜರಿದ್ದ ಎಸ್ಪಿಪಿ ಬಿ.ಟಿ. ವೆಂಕಟೇಶ್ ಅವರು, ಪ್ರಕರಣದಲ್ಲಿ ಆರೋಪಪಟ್ಟಿ ಸಲ್ಲಿಸಲು ಅನುಮತಿ ಕೋರಿ ಸರ್ಕಾರ ಮೆಮೊ ಸಲ್ಲಿಸಿದೆ. ಅದನ್ನು ಪರಿಗಣಿಸಿ ಅನುಮತಿ ನೀಡಬೇಕು ಎಂದು ನ್ಯಾಯಪೀಠಕ್ಕೆ ಮನವಿ ಮಾಡಿದರು. ಸರ್ಕಾರದ ಮನವಿಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಆರ್ಸಿಬಿ ಪರ ವಕೀಲರು, ಅಂತಿಮ ವರದಿ ಸಲ್ಲಿಸದಂತೆ ಹೈಕೋರ್ಟ್ ಮಧ್ಯಂತರ ಆದೇಶವಿದೆ. ಆದ್ದರಿಂದ, ಎಫ್ಐಆರ್ ರದ್ದು ಕೋರಿರುವ ನಮ್ಮ ವಾದ ಮೊದಲು ಪರಿಗಣಿಸಬೇಕು. ಕ್ರೀಡಾಂಗಣದ ಹೊರಗಿನ ಘಟನೆಗೆ ಸಂಸ್ಥೆಗಳನ್ನು ಹೊಣೆ ಮಾಡಬಾರದು. ನಮ್ಮ ಅರ್ಜಿ ತೀರ್ಮಾನಿಸದೇ ಆರೋಪಪಟ್ಟಿ ಸಲ್ಲಿಸಲು ಅನುಮತಿ ನೀಡಬಾರದು ಎಂದು ಕೋರಿದರು. ಇದನ್ನು ಆಲಿಸಿದ ನ್ಯಾಯಪೀಠ ವಿಚಾರಣೆಯನ್ನು ಮಾರ್ಚ್ 16ಕ್ಕೆ ಮುಂದೂಡಿತಲ್ಲದೆ, ಅಂತಿಮ ವರದಿ ಸಲ್ಲಿಸದಂತೆ ಈ ಹಿಂದೆ ನೀಡಿದ್ದ ಮಧ್ಯಂತರ ಆದೇಶವನ್ನು ಅರ್ಜಿಯ ಮುಂದಿನ ವಿಚಾರಣೆವರೆಗೆ ವಿಸ್ತರಿಸಿತು. ಜತೆಗೆ ಮಾರ್ಚ್ 14ರೊಳಗೆ ಆಕ್ಷೇಪಣೆ ಮತ್ತು ದಾಖಲೆಗಳನ್ನು ಸಲ್ಲಿಸುವಂತೆ ಸರ್ಕಾರಕ್ಕೆ ಸೂಚಿಸಿತು.
ವಾಷಿಂಗ್ಟನ್: ಇರಾನ್ ವಿರುದ್ಧ ಅಮೆರಿಕ ಕೈಗೊಂಡಿರುವ ಯುದ್ಧ ಕ್ರಮಕ್ಕೆ ಬೆಂಬಲ ನೀಡಲು ಯುನೈಟೆಡ್ ಕಿಂಗ್ಡಮ್ ನಿರಾಕರಿಸಿರುವ ಹಿನ್ನೆಲೆಯಲ್ಲಿ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಯುಕೆ ಪ್ರಧಾನಿ ಕೀರ್ ಸ್ಟಾರ್ಮರ್ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. “ವಿಶೇಷ ಸಂಬಂಧ” ಎಂದು ಕರೆಯಲ್ಪಡುವ ಅಮೆರಿಕ–ಯುಕೆ ಮೈತ್ರಿ ಇದೀಗ ಒತ್ತಡಕ್ಕೆ ಒಳಗಾಗಿದೆ ಎಂದು ಅವರು ಹೇಳಿದ್ದಾರೆ. ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಟ್ರಂಪ್, ಯುಕೆಯ ನಿಲುವಿನ ಬಗ್ಗೆ ತೀವ್ರ ನಿರಾಶೆ ವ್ಯಕ್ತಪಡಿಸಿದರು. ನಿಕಟ ಮಿತ್ರ ರಾಷ್ಟ್ರದಿಂದ ಇಂತಹ ಪ್ರತಿಕ್ರಿಯೆ ಬರುತ್ತದೆ ಎಂದು ತಾನು ನಿರೀಕ್ಷಿಸಿರಲಿಲ್ಲ ಎಂದರು. “ಅವರು ಸಹಕಾರಿಯಾಗಿಲ್ಲ. ಯುಕೆಯಿಂದ ಈ ರೀತಿಯ ನಿಲುವು ಬರುತ್ತದೆ ಎಂದು ನಾನು ಎಂದಿಗೂ ಭಾವಿಸಿರಲಿಲ್ಲ,” ಎಂದು ಹೇಳಿದರು. ಈ ಬೆಳವಣಿಗೆಯಿಂದ ಅಮೆರಿಕ–ಯುಕೆ ನಡುವಿನ ಪರಂಪರಾಗತ ಮೈತ್ರಿ ಸಂಬಂಧಕ್ಕೆ ಬಿರುಕು ಬಿದ್ದಿದೆ ಎಂದು ಟ್ರಂಪ್ ಅಭಿಪ್ರಾಯಪಟ್ಟರು. ಹಿಂದೆ ಅತ್ಯಂತ ಘನ ಮತ್ತು ನಿಕಟ ಸಹಕಾರ ಹೊಂದಿದ್ದ ಸಂಬಂಧ ಈಗ ಹಿಂದಿನಂತಿಲ್ಲ ಎಂದು ಅವರು ಹೇಳಿದರು. ಮಧ್ಯಪ್ರಾಚ್ಯದಲ್ಲಿ ತನ್ನ ಯುದ್ಧಗಳನ್ನು ನಡೆಸಲು ಅಮೆರಿಕ ಇನ್ನು ಮುಂದೆ ಯುಕೆಯನ್ನು ಅವಲಂಬಿಸಿಲ್ಲ ಎಂಬ ಸಂದೇಶವನ್ನೂ ಅವರು ನೀಡಿದರು. ಇದು ಅಪ್ರಸ್ತುತವಾಗಬಹುದು, ಆದರೆ ಅವರು ಮಾಡಬೇಕಾಗಿತ್ತು ಎಂದು ಟ್ರಂಪ್ ಪುನರುಚ್ಚರಿಸಿದರು.
ಶೇ.15ರಲ್ಲೇ ಒಳಮೀಸಲಾತಿ ನೀಡಿ, ನೇಮಕಾತಿ ಮಾಡಿ : ಮಾದಿಗ ಸಮುದಾಯದ ಮುಖಂಡರ ಒತ್ತಾಯ
ಮಾ.5ರ ಸಂಪುಟ ಸಭೆಯಲ್ಲಿ ಸ್ಪಷ್ಟ ತೀರ್ಮಾನ ಮಾಡುವುದಾಗಿ ಸಿಎಂ ಭರವಸೆ : ಕೆ.ಎಚ್.ಮುನಿಯಪ್ಪ
ಖಮೇನಿ ಆಯ್ತು ಈಗ ಇರಾನ್ ನೂತನ ಸರ್ವಾಧಿಕಾರಿಗೂ ಜೀವಭಯ ಶುರು | Operation Roaring Lion
ಮಧ್ಯಪ್ರಾಚ್ಯ ಎಂಬುದು ಇದೀಗ ಕುಲುಮೆಗೆ ಬಿದ್ದ ಕಬ್ಬಿಣದ ರೀತಿ ಕೆಂಪಗೆ ಆಗಿದೆ, ಒಂದು ಕಡೆ ಈ ಜಾಗದಲ್ಲಿ ಅಮೆರಿಕ ದೊಡ್ಡ ಮಟ್ಟದಲ್ಲಿ ಸೇನಾ ಕಾರ್ಯಾಚರಣೆ ನಡೆಸುತ್ತಿದೆ. ಇನ್ನೊಂದು ಕಡೆ ತನ್ನ ಮೇಲೆ ದಾಳಿ ಮಾಡಿದರು ಎಂಬ ಕಾರಣಕ್ಕೆ ಇರಾನ್ ಕೂಡ ಕಂಡ ಕಂಡ ಅರಬ್ ದೇಶಗಳ ಮೇಲೆ ಅಟ್ಯಾಕ್ ಮಾಡುತ್ತಾ ಸೇಡು ತೀರಿಸಿಕೊಳ್ಳುತ್ತಿದೆ. ಇರಾನ್ ಸರ್ವಾಧಿಕಾರಿ ಖಮೇನಿ
ಇರಾನ್ ಮೇಲಿನ ದಾಳಿಗೆ ತನ್ನ ನೆಲೆ ಬಳಸಲು ನಿರಾಕರಿಸಿದ ಸ್ಪೇನ್ನೊಂದಿಗೆ ಎಲ್ಲಾ ವ್ಯಾಪಾರ ಕಡಿತಕ್ಕೆ ಮುಂದಾದ ಅಮೆರಿಕ
ಸ್ಪೇನ್ ನ ನಿಲುವು ಅಮೆರಿಕದ ಭದ್ರತಾ ಹಿತಾಸಕ್ತಿಗಳಿಗೆ ಧಕ್ಕೆ ತಂದಿದೆ ಎಂದ ಟ್ರಂಪ್
ʼಕಂದಾಯ ಇಲಾಖೆʼ ಹತ್ತಾರು ವರ್ಷಗಳ ಕೆಲಸ ಸಾವಿರ ದಿನದಲ್ಲಿ ಮುಗಿದಿದೆ : ಕೃಷ್ಣಭೈರೇಗೌಡ
ಬೆಂಗಳೂರು : ಕಂದಾಯ ಇಲಾಖೆ ವ್ಯಾಪ್ತಿಯೊಳಗೆ ಹತ್ತಾರು ವರ್ಷಗಳಿಂದ ಪೂರ್ಣಗೊಳ್ಳದ ಕೆಲಸಗಳು ಕಳೆದ ಒಂದು ಸಾವಿರ ದಿನಗಳಲ್ಲಿ ಮುಗಿಸಲಾಗಿದೆ ಎಂದು ಕಂದಾಯ ಸಚಿವ ಕೃಷ್ಣ ಭೈರೇಗೌಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮಂಗಳವಾರ ವಿಕಾಸಸೌಧದಲ್ಲಿ ನಡೆದ ಜಿಲ್ಲಾಧಿಕಾರಿಗಳ ಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಕಂದಾಯ ಇಲಾಖೆಗೆ ಸೀಮಿತವಾಗಿರುವ ಎಲ್ಲ ಪ್ರಕ್ರಿಯೆ, ಸೇವೆಗಳನ್ನು ಆನ್ಲೈನ್ ವ್ಯಾಪ್ತಿಗೆ ತರಲಾಗಿದೆ. ಇದನ್ನು ಸಾಧ್ಯವಾಗಿಸಲು ಎಲ್ಲ ಜಿಲ್ಲಾಧಿಕಾರಿಗಳ ಪರಿಶ್ರಮ ಗಣನೀಯವಾಗಿದೆ ಎಂದು ಉಲ್ಲೇಖಿಸಿದರು. ಕಂದಾಯ ಇಲಾಖೆಯ ಪ್ರಗತಿ ಬಗ್ಗೆ ಜನರೇ ಮೆಚ್ಚುಗೆ ಮಾತುಗಳನ್ನಾಡುತ್ತಿರುವುದು ವಿಶೇಷ. ನಾವು ಇಲಾಖೆಯಲ್ಲಿ ತಂದಿರುವ ಸುಧಾರಣಾ ಕ್ರಮಗಳು ಜನರಿಗೆ ಅನುಕೂಲವಾಗಿವೆ. ಈ ಹಿಂದೆ ನಮ ಇಲಾಖೆಯ ಬಗ್ಗೆ ಜನರ ಮನಸ್ಸಿನಲ್ಲಿದ್ದಂತಹ ಭಾವನೆಗಳು ಈಗ ಬದಲಾಗಿದ್ದು, ಇಲಾಖೆಯನ್ನು ಗೌರವದಿಂದ ನೋಡುವಂತಾಗಿದೆ ಎಂದ ಅವರು, ಸಾವಿರ ದಿನಗಳಲ್ಲಿ ನಮೆಲ್ಲರ ಒಗ್ಗಟ್ಟಿನ ಕೆಲಸದ ಪರಿಣಾಮದಿಂದಾಗಿ ಜನರಲ್ಲಿ ಇಲಾಖೆಯ ಬಗ್ಗೆ ಗೌರವ ಭಾವನೆ ಮೂಡಿದೆ. ಇದು ಸಲೀಸಾಗಿ ಆಗಿದ್ದಲ್ಲ. ಸಾಕಷ್ಟು ಪರಿಶ್ರಮದಿಂದ ಈ ದೂರವನ್ನು ನಾವು ಸಾಗಿದ್ದೇವೆ. ಇಲಾಖೆಯಲ್ಲಿ ಬದಲಾವಣೆ ಆರಂಭ ಮಾಡಿದಾಗ ಯಾವ್ಯಾವ ಕೆಲಸಗಳು ಬಾಕಿ ಉಳಿದಿವೆ ಎಂಬ ಮಾಹಿತಿಯೇ ಇರಲಿಲ್ಲ ಎಂದು ತಿಳಿಸಿದರು. ಪ್ರಾರಂಭದಲ್ಲಿ ಸರಕಾರಿ ಕಚೇರಿಗಳಲ್ಲಿ ಟಪಾಲು ವಿಭಾಗದಲ್ಲಿ ಸ್ವೀಕರಿಸುವ ಅರ್ಜಿಗಳೇ ಈ ಕಚೇರಿ ಮೂಲಕ ದಾಖಲಾಗಲಿ ಎಂದು ಹೇಳಿದಾಗ ಎಲ್ಲರೂ ದಿಗ್ಬ್ರಮೆಗೊಂಡಿದ್ದರು.ಈಗ ಗ್ರಾಮ ಲೆಕ್ಕಿಗರಿಂದ ಸರ್ವೆಯರ್ವರೆಗೂ ಎಲ್ಲವೂ ಈ ಕಚೇರಿಯಲ್ಲಿಯೇ ಆಡಳಿತ ನಡೆಯುತ್ತಿದೆ. ಈ ಮಟ್ಟದಲ್ಲಿ ಸುಧಾರಣೆಗಾಗಿ ಅಧಿಕಾರಿಗಳ ಪರಿಶ್ರಮ ಸಾಕಷ್ಟಿದೆ ಎಂದು ಸಚಿವರು ತಿಳಿಸಿದರು. ಸಭೆಯಲ್ಲಿ ಕಂದಾಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಟಾರಿಯ, ಪ್ರಧಾನ ಕಾರ್ಯದರ್ಶಿ (ವಿಪತ್ತು ನಿರ್ವಹಣೆ) ಮುನೀಶ್ ಮೌದ್ಗಿಲ್ ಸೇರಿದಂತೆ ಹಿರಿಯ ಅಧಿಕಾರಿಗಳು ಇದ್ದರು.
ವಿಮಾನ ರದ್ದು: ಗ್ರಾಹಕರಿಗೆ ಮರುಪಾವತಿ ಮಾಡುವಂತೆ ಮಲೇಶಿಯಾ ಏರ್ ಲೈನ್ಸ್ಗೆ ಆದೇಶ
ಮೇಕ್ ಮೈ ಟ್ರಿಪ್ಗೂ ದಂಡ ವಿಧಿಸಿದ ಜಿಲ್ಲಾ ಗ್ರಾಹಕರ ಆಯೋಗ
ಕಂದಾಯ ಸೇವೆಗಳನ್ನು ಆನ್ಲೈನ್ ಮಾಡಿದ್ದು ಸಾವಿರ ದಿನದ ಸಾಧನೆ: ಕೃಷ್ಣ ಬೈರೇಗೌಡ
ಬೆಂಗಳೂರು : ಪೋಡಿ ದುರಸ್ಥಿ, ಫೌತಿಖಾತಾ, ಭೂ ಸುರಕ್ಷಾ ಅಭಿಯಾನ ಸೇರಿದಂತೆ ಎಲ್ಲ ಕಂದಾಯ ಸೇವೆಗಳನ್ನೂ ಆನ್ಲೈನ್ ಡಿಜಿಟಲೀಕರಣ ಮಾಡಿ, ಆ ಮೂಲಕ ಇಲಾಖೆಯ ಹತ್ತಾರು ಪ್ರಮುಖ ಸೇವೆಗಳನ್ನು ಜನ ಸಾಮಾನ್ಯರ ಮನೆ ಬಾಗಿಲಿಗೆ ತಲುಪಿಸಿದ್ದು ನಮ್ಮ ಸಾವಿರ ದಿನಗಳ ಆಡಳಿತದ ಸಾಧನೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು. ಮಂಗಳವಾರ ವಿಕಾಸಸೌಧದಲ್ಲಿ ನಡೆದ ಎಲ್ಲ ಜಿಲ್ಲಾಧಿಕಾರಿಗಳ ಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಈ ಹಿಂದೆ ಜಮೀನು ಮಂಜೂರು ಮಾಡಿದ್ದ ಸರಕಾರಗಳು ಕೇವಲ ಆರ್.ಟಿ.ಸಿ ಮಾತ್ರ ಮಾಡಿಕೊಟ್ಟು ರೈತರ ಜುಟ್ಟನ್ನು ತಮ್ಮ ಕೈಯಲ್ಲಿ ಇಟ್ಟುಕೊಂಡಿದ್ದವು. ಹೀಗಾಗಿ ಪಕ್ಕಾ ದಾಖಲೆ ಇಲ್ಲದೆ ರೈತರ ಬದುಕು ಅತಂತ್ರ ಸ್ಥಿತಿಯಲ್ಲೇ ಇತ್ತು ಎಂದು ಹೇಳಿದರು. ನಾನು ಕಂದಾಯ ಇಲಾಖೆ ಜವಾಬ್ದಾರಿ ವಹಿಸಿಕೊಂಡ ಮೇಲೆ ಈ ವಿಚಾರವನ್ನು ಮನಗಂಡು ಬಡವರಿಗೆ ಪಕ್ಕಾ ದಾಖಲೆ ಮಾಡಿಕೊಡಲು ಸಂಕಲ್ಪ ಮಾಡಿದ್ದೆ. ಸರಕಾರದಿಂದ ಮಂಜೂರಾದ ಜಮೀನುಗಳಿಗೆ ದರಖಾಸ್ತು ಪೋಡಿ ದುರಸ್ತು ಮಾಡಿಕೊಡುವ ಅಭಿಯಾನ ಆರಂಭಿಸಿದ್ದೇವೆ. ಈ ಹಿಂದಿನ 5 ವರ್ಷಗಳ ಅವಧಿಯಲ್ಲಿ ಒಟ್ಟಾರೆಯಾಗಿ 8,500 ಮಂಜೂರಿ ಜಮೀನುಗಳಿಗೆ ಮಾತ್ರ ಪೋಡಿ ದುರಸ್ತು ಮಾಡಲಾಗಿತ್ತು ಎಂದು ಕೃಷ್ಣ ಬೈರೇಗೌಡ ಹೇಳಿದರು. ರೈತರು ಅರ್ಜಿ ಸಲ್ಲಿಸುವುದಕ್ಕೆ ಬದಲಾಗಿ, ಅಧಿಕಾರಿಗಳೇ ಮಂಜೂರಾಗಿರುವ ಎಲ್ಲ ರೈತರ ಮಾಹಿತಿ ಹಾಗೂ ದಾಖಲೆಗಳನ್ನು ಕಲೆಹಾಕಿ ಕಡತಗಳನ್ನು ಆನ್ಲೈನ್ ನಲ್ಲಿ ತಯಾರಿಸಿ, ರೈತರ ಜಮೀನಿಗೆ ತೆರಳಿ ಮಂಜೂರಾದ ಜಮೀನುಗಳಿಗೆ ಸರ್ವೆ ಮಾಡಿ, ಸ್ಕೇಚ್ ತಯಾರಿಸಿ, ಆರ್.ಟಿ.ಸಿ, ಇಂಡೀಕರಣ ಮಾಡಿ ಸಂಪೂರ್ಣ ಪಕ್ಕಾ ದಾಖಲೆಗಳನ್ನು ರೈತರಿಗೆ ನೀಡಿ ಮಾಲಕತ್ವದ ಭೂಗ್ಯಾರಂಟಿ ನೀಡುವ ಅಭಿಯಾನವನ್ನು ನಮ್ಮ ಸರಕಾರ ಮಾಡುತ್ತಿದೆ ಎಂದು ಅವರು ತಿಳಿಸಿದರು. ಒಂದು ವರ್ಷದಲ್ಲಿ 2,05,757 ರೈತರ ಜಮೀನುಗಳ ಸರ್ವೆ ಕೈಗೆತ್ತಿಕೊಳ್ಳಲಾಗಿದೆ. ಬರುವ ಮೂರು ತಿಂಗಳಲ್ಲಿ ಒಂದು ಲಕ್ಷ ಜಮೀನುಗಳನ್ನು ಸರ್ವೆಗೆ ಕೈಗೆತ್ತಿಕೊಳ್ಳಬೇಕು. ಇದಲ್ಲದೆ, 1,07,217 ರೈತರ ಕಡತಗಳು ಮಿಸ್ಸಿಂಗ್ ರೇಕಾರ್ಡ್ ಕಮಿಟಿಗೆ ಕಳುಹಿಸಲಾಗಿದೆ. ಇಲ್ಲಿ ಈಗಾಗಲೇ 3,662 ರೈತರ ಕಡತಗಳನ್ನು ವಿಲೇ ಮಾಡಲಾಗಿದೆ. ಇನ್ನು 50 ಸಾವಿರ ಕಡತಗಳನ್ನು 3 ತಿಂಗಳಲ್ಲಿ ವಿಲೇಗೊಳಿಸಬೇಕು ಎಂದು ಅಧಿಕಾರಿಗಳಿಗೆ ಕೃಷ್ಣ ಬೈರೇಗೌಡ ಗಡುವು ನೀಡಿದರು. ಇದಲ್ಲದೇ 1.06 ಲಕ್ಷ ರೈತರ ದಾಖಲೆಗಳು ಮಂಜೂರು ವಿಸ್ತೀರ್ಣ ಲಭ್ಯ ಜಮೀನಿಗಿಂತ ಹೆಚ್ಚು ಇದ್ದು ಇವುಗಳನ್ನು ಕೂಡಲೇ ವಾಸ್ತವ ಅನುಭವವನ್ನು ಸ್ಥಳದಲ್ಲಿಯೇ ಸರ್ವೆ ಮಾಡಿ ಇತ್ಯರ್ಥ ಮಾಡಬೇಕು. ಇನ್ನೂ 3.50 ಲಕ್ಷ ರೈತರ ಮಂಜೂರು ಕಡತಗಳನ್ನು ತಯಾರಿಸಲು ಬಾಕಿ ಇದ್ದು ಅವುಗಳನ್ನು ಒಂದು ತಿಂಗಳೊಳಗೆ ತಯಾರಿಸಬೇಕು. ಹೀಗೆ 20-50 ವರ್ಷಗಳ ಹಿಂದೆ ಮಂಜೂರಾಗಿದ್ದ ಸುಮಾರು 11,74,226 ರೈತರ ದಾಖಲೆಗಳನ್ನು ತಯಾರಿಸಿ, ಅರ್ಹ ರೈತರಿಗೆ ಪಕ್ಕ ದಾಖಲೆಗಳನ್ನು ಒದಗಿಸುವ ಅಭಿಯಾನಕ್ಕೆ ವೇಗ ನೀಡಬೇಕು ಎಂದು ಅವರು ಸೂಚಿಸಿದರು. ಫೌತಿ ಖಾತಾ ಅಭಿಯಾನ: ರಾಜ್ಯದಲ್ಲಿ ಸುಮಾರು 49 ಲಕ್ಷ ಜಮೀನುಗಳು ಮೃತರ ಹೆಸರಿನಲ್ಲಿರುವುದರಿಂದ ಅವರ ವಾರಸುದಾರು ಕ್ರಯ, ಸಾಲ, ವಿಭಾಗ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಇ-ಫೌತಿ ಖಾತಾ ಅಭಿಯಾನವನ್ನು ಕಂದಾಯ ಇಲಾಖೆ ಜರುಗಿಸುತ್ತಿದೆ ಎಂದು ಅವರು ಹೇಳಿದರು. ಈಗಾಗಲೇ 13 ಲಕ್ಷ ಜಮೀನುಗಳನ್ನು ವಾರಸುದಾರರ ಮನೆ ಬಾಗಿಲಿಗೆ ಹೋಗಿ ಖಾತಾ ಮಾಡಿಕೊಡಲಾಗಿದೆ. ಕುಟುಂಬಗಳಲ್ಲಿ ವ್ಯಾಜ್ಯವಿರುವ ಪ್ರಕರಣಗಳನ್ನು ಹೊರತುಪಡಿಸಿ ಉಳಿದ ಜಮೀನುಗಳನ್ನು ಫೌತಿ ಖಾತಾ ಮಾಡಬೇಕು. ಈ ಅಭಿಯಾನದ ಅಡಿ ಅತಿ ಹೆಚ್ಚು ಫೌತಿ ಖಾತಾ ಮಾಡಿರುವ ಗ್ರಾಮ ಆಡಳಿತಾಧಿಕಾರಿ ಹಾಗೂ ಗ್ರಾಮ ಸಹಾಯಕರಿಗೆ 5 ಕೋಟಿ ರೂ. ಪೃಓ ತ್ಸಾಹಧನ ಸರಕಾರದಿಂದ ನೀಡುವುದಾಗಿಯೂ ಘೋಷಿಸಿದರು. ಭೂ ಸುರಕ್ಷಾ ಅಭಿಯಾನ: ಭೂ ಸುರಕ್ಷಾ ಅಭಿಯಾನದ ಅಡಿಯಲ್ಲಿ ಈವರೆಗೆ 71.19 ಕೋಟಿ ಪುಟಗಳನ್ನು ಸ್ಕ್ಯಾನ್ ಮಾಡಿ ಡಿಜಿಟಲೀಕರಿಸಲಾಗಿದೆ. ಇನ್ನೂ 30 ಕೋಟಿ ಪುಟಗಳ ಸ್ಕ್ಯಾನ್ ಮಾಡುವ ಕೆಲಸ ಬಾಕಿ ಇದ್ದು, ಪ್ರತಿ ದಿನ ಸುಮಾರು 17,500 ಪುಟ ಸ್ಕ್ಯಾನ್ ಮಾಡಲಾಗುತ್ತಿದೆ. ಈ ವರ್ಷದ ಎಪ್ರಿಲ್ ಕೊನೆಯ ಒಳಗೆ ಈ ಕೆಲಸವನ್ನು ಮುಗಿಸಬೇಕು. ಈಗಾಗಲೇ ಜನ ಸಾಮಾನ್ಯರಿಗೆ 52.70 ಲಕ್ಷ ಪುಟಗಳನ್ನು ಆನ್ಲೈನ್ ಮೂಲಕ ವಿತರಿಸಲಾಗಿದ್ದು, ಶೀಘ್ರದಲ್ಲಿ ಎಲ್ಲ ಭೂ ದಾಖಲೆಗಳೂ ಆನ್ಲೈನ್ ಮೂಲಕ ವಿತರಿಸುವಂತಾಗಬೇಕು ಎಂದು ಅವರು ತಾಕೀತು ಮಾಡಿದರು. ಸರ್ವೇ ಇಲಾಖೆಗೂ ಸರ್ಜರಿ: ಸರ್ವೇ ಇಲಾಖೆಗೂ ಚಿಕಿತ್ಸಕ ಬದಲಾವಣೆ ನೀಡುವ ಉದ್ದೇಶದಿಂದ ಇಡೀ ಇಲಾಖೆಯನ್ನು ಡಿಜಿಟಲೀಕರಣಗೊಳಿಸುವ ಸಂಬಂಧ ನೂತನ ಕಾರ್ಯ ಯೋಜನೆಯನ್ನು ಇಂದಿನ ಸಭೆಯಲ್ಲಿ ಸರ್ವೇ ಇಲಾಖೆ ನೂತನ ಆಯುಕ್ತ ವೆಂಕಟರಾಜು ಪ್ರಸ್ತುತಪಡಿಸಿದರು. ಬಳಿಕ ಮಾತನಾಡಿದ ಕೃಷ್ಣ ಬೈರೇಗೌಡ, ರೋವರ್ ಮೂಲಕ ಸರ್ವೇ ಪೂರ್ಣಗೊಳಿಸಿದರೆ ಸ್ಕೆಚ್, ಟಿಪ್ಪಣಿ, ಆಖಾರ್ ಬಂದ್, ಕೈಬರಹ ಸೇರಿ ಪ್ರತಿಯೊಂದೂ ಡಿಜಿಟಲ್ ಪ್ರತಿ ಲಭ್ಯವಾಗುತ್ತದೆ. ಈ ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕು. ಆ ಮೂಲಕ ಈ ವರ್ಷಾಂ ತ್ಯದಲ್ಲಿ ಇಡೀ ಇಲಾಖೆಯನ್ನು ಸಂಪೂರ್ಣ ಕಾಗದ ರಹಿತಗೊಳಿಸಬೇಕು, ಎಂಡ್ ಟು ಎಂಡ್ ಡಿಜಿಟಲೀಕರಣಗೊಳಿಸಬೇಕು ಎಂದು ಸೂಚಿಸಿದರು. ಸಭೆಯಲ್ಲಿ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಟಾರಿಯಾ, ನೋಂದಣಿ ಮತ್ತು ಮುದ್ರಾಂಕ ಇಲಾಖೆ ಪ್ರಧಾನ ಕಾರ್ಯದರ್ಶಿ ಮೌನಿಶ್ ಮುದ್ಗಿಲ್, ಕಂದಾಯ ಆಯುಕ್ತ ಮೀನಾ ನಾಗರಾಜ್, ಭೂ ದಾಖಲೆಗಳು ಮತ್ತು ಸರ್ವೆ ಇಲಾಖೆಯ ಆಯುಕ್ತ ವೆಂಕಟರಾಜು ಉಪಸ್ಥಿತರಿದ್ದರು.
ವಾರಣಾಸಿ: ರೈಲುಗಳ ಅಪಘಾತ ತಡೆಗಟ್ಟುವ ನಿಟ್ಟಿನಲ್ಲಿ ಬನಾರಸ್ ರೈಲು ಇಂಜಿನ್ ಕಾರ್ಖಾನೆಯಿಂದ ತಯಾರಾಗಲಿರುವ ಎಲ್ಲ ರೈಲು ಇಂಜಿನ್ ಗಳಿಗೂ ಮುಂದಿನ ಎಪ್ರಿಲ್ 1ರಿಂದ ಸ್ವಯಂಚಾಲಿತ ರೈಲು ಸುರಕ್ಷತಾ ತಂತ್ರಜ್ಞಾನ ವ್ಯವಸ್ಥೆ 'ಕವಚ' ವನ್ನು ಅಳವಡಿಸಲಾಗುವುದು ಎಂದು ತಂಡ ಬನಾರಸ್ ರೈಲು ಇಂಜಿನ್ ಕಾರ್ಖಾನೆಯ (ಬಿಎಲ್ ಡಬ್ಯು) ಮಹಾಪ್ರಬಂಧಕರಾದ ಅಶುತೋಷ್ ಪಂತ್ ತಿಳಿಸಿದ್ದಾರೆ. ವಾರ್ತಾ ಮತ್ತು ಪ್ರಸಾರ ಬೆಂಗಳೂರು ವಾರ್ತಾ ಶಾಖೆಯ ನೇತೃತ್ವದಲ್ಲಿ ಉತ್ತರ ಭಾರತ ಅಧ್ಯಯನ ಪ್ರವಾಸ ಕೈಗೊಂಡಿರುವ ಕರ್ನಾಟಕದ ಪತ್ರಕರ್ತರೊಂದಿಗೆ ಮಂಗಳವಾರ ಮಾತನಾಡಿದರು. ತಂಡದಲ್ಲಿ ಪಿಐಬಿಯ ಇಬ್ಬರು ಅಧಿಕಾರಿಗಳು ಹಾಗೂ ರಾಜ್ಯದ 10 ಮಂದಿ ಪತ್ರಕರ್ತರು ಇದ್ದಾರೆ. ಬಿ.ಎಲ್.ಡಬ್ಲ್ಯೂ ಕೇವಲ ಭಾರತೀಯ ರೈಲ್ವೆಯ ಹೆಚ್ಚುತ್ತಿರುವ ಬೇಡಿಕೆಗಳನ್ನು ಪೂರೈಸುವುದಲ್ಲದೆ, ಅಂತರ್ ರಾಷ್ಟ್ರೀಯ ಮಾರುಕಟ್ಟೆಯಲ್ಲಿ ತಾಂತ್ರಿಕ ವಿಶ್ವಾಸಾರ್ಹತೆಯನ್ನು ಗಳಿಸಿಕೊಂಡಿದೆ ಎಂದು ಹೇಳಿದರು. 11 ದೇಶಗಳಿಗೆ ರಫ್ತು; ಮೇಕ್ ಇನ್ ಇಂಡಿಯಾ - ಮೇಕ್ ಫಾರ್ ದಿ ವರ್ಲ್ಡ್” ದೃಷ್ಟಿಕೋನದ ಸಾಕಾರವಾಗಿ ಬಿಎಲ್ಡಬ್ಲ್ಯೂ ಇದುವರೆಗೆ 11 ದೇಶಗಳಿಗೆ 182 ಡೀಸೆಲ್ ರೈಲು ಇಂಜಿನ್ ಗಳನ್ನು ಯಶಸ್ವಿಯಾಗಿ ರಫ್ತು ಮಾಡಿದೆ ಎಂದು ಮಾಹಿತಿ ನೀಡಿದರು. ಮೊಝಾಬಿಕ್ ಗೆ ಬಿಎಲ್ ಡಬ್ಲ್ಯುನ 10ನೇ 3300 ಎಚ್ ಪಿ ಎಸಿ ಡಿಸೇಲ್ -ಎಸಿ ಡಿಸೇಲ್ ಇಲೆಕ್ಟ್ರಿಕ್ ಲೋಕೋಮೋಟಿವ್ ವನ್ನು 2026 ಫೆ.21ರಂದು ಯಶಸ್ವಿಯಾಗಿ ರಫ್ತು ಮಾಡಲಾಗಿದೆ ಎಂದರು. ಬಿಎಲ್ ಡಬ್ಲ್ಯೂ ಕೇವಲ ಭಾರತೀಯ ರೈಲ್ವೆಯಲ್ಲಿ ಮಾತ್ರವಲ್ಲ ವಿಶ್ವದ ರೈಲ್ವೇ ಮಾರುಕಟ್ಟೆಯಲ್ಲಿ ಶಕ್ತಿಯಾಗಿ ತನ್ನ ಹೊರಹೊಮ್ಮಿದೆ. ಈವರೆಗೆ ಮೊಝಾಂಬಿಕಾ, ಸುಡಾನ್, ಅಂಗೊಲಾ, ಮಯನ್ಮಾರ್, ತಾಂಜಾನಿಯಾ, ವಿಯೆಟ್ನಾಂ, ಬಾಂಗ್ಲಾದೇಶ, ಶ್ರೀಲಂಕಾ, ಮಲೇಷ್ಯಾ, ಸೆನೆಗಲ್, ಮಾಲಿ ಸೇರಿದಂತೆ 11 ದೇಶಗಳಿಗೆ ರೈಲು ಇಂಜಿನ್ ಗಳನ್ನು ರಫ್ತು ಮಾಡಲಾಗಿದೆ ಎಂದರು. ಬಿಎಲ್ ಡಬ್ಲ್ಯು ಪ್ಯಾಸೆಂಜರ್ ಲೋಕೋಮೋಟಿವ್ (ಡಬ್ಲ್ಯೂ ಎಪಿ 7), ಸರಕು ಸಾಗಣೆ ಇಲೆಕ್ಟ್ರಿಕ್ ಲೋಕೊಮೋಟಿವ್, ಅಮೃತ ಭಾರತ್ ಲೋಕೋಮೋಟಿವ್ ಸೇರಿದಂತೆ ಮೂರು ವಿಧದ ರೈಲು ಇಂಜಿನ್ ಗಳನ್ನು ತಯಾರಿಸುತ್ತದೆ ಎಂದು ವಿವರಿಸಿದರು. ಪ್ರಧಾನ ಮುಖ್ಯ ಇಲೆಕ್ಟ್ರಿಕ್ ಇಂಜಿನಿಯರ್ ಸುಶೀಲ್ ಕುಮಾರ್ ಶ್ರೀವಾಸ್ತವ, ಪ್ರಧಾನ ಮುಖ್ಯ ಮೆಕ್ಯಾನಿಕಲ್ ಇಂಜಿನಿಯರ್ ವಿವೇಕ್ ಶೀಲ್, ಉಪ ಜನರಲ್ ಮ್ಯಾನೇಜರ್ ಸಾಗರ್, ಸಾರ್ವಜನಿಕ ಸಂಪರ್ಕ ಅಧಿಕಾರಿ ರಾಜೇಶ್ ಕುಮಾರ್, ಬಿಎಲ್ ಡಬ್ಲ್ಯೂನ ಮುಖ್ಯ ವಿದ್ಯುತ್ ಇಂಜಿನಿಯರ್ (ಲೋಕೋ) ಅರವಿಂದ್ ಕುಮಾರ್ ಜೈನ್ ಉಪಸ್ಥಿತರಿದ್ದರು. ಬಿ.ಎಲ್.ಡಬ್ಲೂನಲ್ಲಿ ಪ್ರಯಾಣಿಕರ ಎಲೆಕ್ಟ್ರಿಕ್ ಇಂಜಿನ್ WAP-7, ಸರಕು ಸಾಗಣೆ ಎಲೆಕ್ಟ್ರಿಕ್ ಇಂಜಿನ್ WAG-9, ಅಮೃತ್ ಭಾರತ್ ರೈಲು ಇಂಜಿನ್ ಮುಂತಾದ ಎಲೆಕ್ಟ್ರಿಕ್ ಇಂಜಿನ್ ಗಳ ತಯಾರಿಕಾ ಪ್ರಕ್ರಿಯೆಯನ್ನು ಪತ್ರಕರ್ತರು ಪಡೆದರು. ಲೊಕೋಮೋಟಿವ್ ಇಲೆಕ್ಟ್ರಿಕ್ ಇಂಜಿನಿಯರ್ ಅರವಿಂದ್ ಕುಮಾರ್ ಜೈನ್ ಅವರು ಮಾಹಿತಿ ನೀಡಿದರು. 10 ಮಂದಿ ಪತ್ರಕರ್ತರ ತಂಡವು ಡೀಸೆಲ್ ಇಂಜಿನ್ ಗಳ ಉತ್ಪಾದನೆ, ಚಾಲಕ ಸ್ನೇಹಿ ವಿನ್ಯಾಸ, ಡಿಜಿಟಲ್ ನಿಯಂತ್ರಣ ವ್ಯವಸ್ಥೆ ಮತ್ತು ಸುಧಾರಿತ ಸುರಕ್ಷತಾ ವೈಶಿಷ್ಟ್ಯಗಳನ್ನು ಹೊಂದಿರುವ ಆಧುನಿಕ ಇಂಜಿನ್ ಕ್ಯಾಬ್ ಗಳನ್ನು ವೀಕ್ಷಿಸಿ, ಮಾಹಿತಿ ಪಡೆದುಕೊಂಡರು. ಈ ಸಂದರ್ಭದಲ್ಲಿ ಪಿಐಬಿ ಬೆಂಗಳೂರಿನ ಸಹಾಯಕ ನಿರ್ದೇಶಕರಾದ ಕರಿಷ್ಮಾ ಪಂತ್, ಬಿ.ಎಲ್.ಡಬ್ಲ್ಯೂನ ಅಧಿಕಾರಿಗಳು ಉಪಸ್ಥಿತರಿದ್ದರು.
ಎಸೆಸೆಲ್ಸಿ ಪರೀಕ್ಷೆ: ಅಂತಿಮ ಪ್ರವೇಶ ಪತ್ರಗಳನ್ನು ವಿತರಿಸುವಂತೆ ಸೂಚನೆ
ಬೆಂಗಳೂರು : ಇದೇ ಮಾ.18ರಿಂದ ಎಸೆಸೆಲ್ಸಿ ಪರೀಕ್ಷೆಯು ನಡೆಯಲಿದ್ದು, ಪರೀಕ್ಷೆಗೆ ಹಾಜರಾಗುತ್ತಿರುವ ವಿದ್ಯಾರ್ಥಿಗಳಿಗೆ ಅಂತಿಮ ಪ್ರವೇಶ ಪತ್ರಗಳನ್ನು ವಿತರಿಸುವಂತೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯು ಶಾಲೆಗಳಿಗೆ ಸೂಚನೆ ನೀಡಿದೆ. ಮಂಗಳವಾರ ಮಂಡಳಿಯು ಸುತ್ತೋಲೆ ಹೊರಡಿಸಿದ್ದು, ಎಸೆಸೆಲ್ಸಿ ಪರೀಕ್ಷೆ-1ಕ್ಕೆ ಹಾಜರಾಗುತ್ತಿರುವ ವಿದಾ-್ಯರ್ಥಿಗಳ ಅಂತಿಮ ಪ್ರವೇಶ ಪತ್ರಗಳನ್ನು ಮಂಡಳಿಯ ಜಾಲತಾಣದ ಶಾಲಾ ಲಾಗಿನ್ನಲ್ಲಿ ಅಪ್ಲೋಡ್ ಮಾಡಲಾಗಿದೆ. ಶಾಲಾ ಮುಖ್ಯೋಪಾಧ್ಯಾಯರು ವಿದ್ಯಾರ್ಥಿಗಳ ಪ್ರವೇಶ ಪತ್ರಗಳನ್ನು ಮಂಡಲಿಯ ಜಾಲತಾಣದ ಶಾಲಾ ಲಾಗಿನ್ ಮೂಲಕ ಡೌನ್ಲೋಡ್ ಮಾಡಿಕೊಂಡು ವಿದ್ಯಾರ್ಥಿಗಳಿಗೆ ಸಕಾಲದಲ್ಲಿ ವಿತರಿಸಬೇಕು ಎಂದು ತಿಳಿಸಿದೆ. ತಮ್ಮ ಶಾಲೆಯ ಮುಖಾಂತರ ನೋಂದಾಯಿಸಿದ ವಿದ್ಯಾರ್ಥಿಗಳ ಸಂಖ್ಯೆಯು ಡೌನ್ಲೋಡ್ ಮಾಡಿಕೊಂಡ ಪ್ರವೇಶ ಪತ್ರಗಳ ಸಂಖ್ಯೆಗೆ ಸರಿ ಹೊಂದುತ್ತಿದೆಯೇ ಎಂದು ಪರಿಶೀಲಿಸಿಕೊಳ್ಳಬೇಕು. ಒಂದು ವೇಳೆ ವಿದ್ಯಾರ್ಥಿಯ ಪ್ರವೇಶ ಪತ್ರ ಬಂದಿಲ್ಲದಿದ್ದರೆ, ಆ ವಿದ್ಯಾರ್ಥಿಯ ವಿವರವನ್ನು ಸಮರ್ಥನೆ ಮತ್ತು ದಾಖಲೆಗಳೊಂದಿಗೆ ಪರಿಶೀಲನಾ ಶಾಖೆಯ ಶಾಖಾಧಿಕಾರಿಗಳನ್ನು ಕೂಡಲೇ ಸಂಪರ್ಕಿಸಬೇಕು ಎಂದು ಹೇಳಿದೆ. ಪರೀಕ್ಷೆಗೆ ಖಾಸಗಿಯಾಗಿ ನೋಂದಣಿಯಾಗಿರುವ ವಿದ್ಯಾರ್ಥಿಗಳು ತಮ್ಮದೇ ಲಾಗಿನ್ ಮೂಲಕ ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದು, ಈ ವಿದ್ಯಾರ್ಥಿಗಳ ಪ್ರವೇಶ ಪತ್ರಗಳನ್ನು ವಿದ್ಯಾರ್ಥಿ ಲಾಗಿನ್ ಹಾಗೂ ಶಾಲಾ ಲಾಗಿನ್ ಮೂಲಕ ಲಭ್ಯಗೊಳಿಸಲಾಗಿದೆ. ಪ್ರವೇಶ ಪತ್ರಗಳನ್ನು ಡೌನ್ಲೋಡ್ ಮಾಡಿದ ನಂತರ ಸಂಬಂದಿಸಿದ ಮುಖ್ಯಶಿಕ್ಷಕರಿಂದ ಸಹಿ ಮತ್ತು ಮೊಹರನ್ನು ಪಡೆದು ವಿದ್ಯಾರ್ಥಿಯು ಪರೀಕ್ಷಾ ಕೇಂದ್ರಕ್ಕೆ ಹಾಜರಾಗುವುದು ಕಡ್ಡಾಯವಾಗಿರುತ್ತದೆ ಎಂದು ಮಂಡಳಿಯು ಸ್ಪಷ್ಟಪಡಿಸಿದೆ. ಇನ್ನು ವಿಭಿನ್ನ ಸಾಮಥ್ರ್ಯವುಳ್ಳ ವಿದ್ಯಾರ್ಥಿಗಳಿಗೆ ವಿಶೇಷ ಸೌಲಭ್ಯ/ವಿನಾಯಿತಿ ನೀಡುವ ಸಂಬಂಧ ಉಪನಿರ್ದೇಶಕರ ಜ್ಞಾಪನದನ್ವಯ ದೈಹಿಕ ಸ್ಥಿತಿ, ಭಾಷಾ ವಿನಾಯಿತಿ, ಬದಲಿ ವಿಷಯಗಳ ಮಾಹಿತಿಗಳು ಪ್ರವೇಶ ಪತ್ರದಲ್ಲಿ ಮುದ್ರಿತವಾಗಿರುವ ಬಗ್ಗೆ ಮುಖ್ಯಶಿಕ್ಷಕರು ಖಚಿತಪಡಿಸಿಕೊಳ್ಳಬೇಕು ಎಂದು ಹೇಳಿದೆ.
ಮಾ.6ಕ್ಕೆ ಗ್ರೇಟರ್ ಬೆಂಗಳೂರು ನಗರ ಪಾಲಿಕೆಗಳ ಗುತ್ತಿಗೆದಾರರ ಮುಷ್ಕರ
ಬೆಂಗಳೂರು : ಗ್ರೇಟರ್ ಬೆಂಗಳೂರು ಪ್ರಾಧಿಕಾರವು ಗುತ್ತಿಗೆದಾರರಿಗೆ ಪಾವತಿ ಮಾಡಬೇಕಿದ್ದ ಅನುದಾನವನ್ನು ಕೂಡಲೇ ಬಿಡುಗಡೆ ಮಾಡುವಂತೆ ಒತ್ತಾಯಿಸಿ, ಗ್ರೇಟರ್ ಬೆಂಗಳೂರು ನಗರ ಪಾಲಿಕೆಗಳ ಗುತ್ತಿಗೆದಾರರ ಸಂಘವು ಮಾ.6ರಂದು ಮುಷ್ಕರಕ್ಕೆ ಕರೆ ನೀಡಿದೆ. ಮಂಗಳವಾರ ಸಂಘದ ಅಧ್ಯಕ್ಷ ಜಿ.ಎಂ. ನಂದಕುಮಾರ್ ಪ್ರಕಟನೆ ಹೊರಡಿಸಿದ್ದು, ಈಗಾಗಲೇ ಜಿಬಿಎ (ಹಿಂದಿನ ಬಿಬಿಎಂಪಿ) ಅನುದಾನದಲ್ಲಿ ಕೈಗೊಂಡಿರುವ ಕಾಮಗಾರಿಗಳಿಗೆ 26 ತಿಂಗಳ ಸುಮಾರು 1,100 ಕೋಟಿ ರೂ. ಬಿಲ್ ಪಾವತಿ ಬಾಕಿ ಇದೆ. ಬಾಕಿ ಇರುವ ಅನುದಾನದ ಕಾಮಗಾರಿಗಳ ಬಿಲ್ಲುಗಳನ್ನು ಜಿಬಿಎಯಿಂದ ಪಾವತಿ ಆಗಿರುವುದಿಲ್ಲ. ಹಾಗಯೇ ರಾಜ್ಯ ಸರಕಾರದ ಅನುದಾನದಲ್ಲಿ ಸುಮಾರು 700 ಕೋಟಿ ರೂ. ಬಿಲ್ ಪಾವತಿ ಬಾಕಿ ಇರುತ್ತದೆ ಎಂದು ತಿಳಿಸಿದ್ದಾರೆ. ಸುಮಾರು 5 ವರ್ಷಗಳ ಹಿಂದೆ ಪೂರ್ಣಗೊಳಿಸಿರುವ ಕಾಮಗಾರಿಗಳ ಬಿಲ್ ಪಾವತಿ ಸಮಯದಲ್ಲಿ ಪಡೆಯಲಾದ ಶೇ.10 ಭದ್ರತಾ ಠೇವಣಿ ಮೊತ್ತವನ್ನು ಹಿಂಪಾವತಿಸಿರುವುದಿಲ್ಲ. ಈ ಮೊತ್ತವನ್ನು ಪಾವತಿ ಮಾಡಬೇಕು. ಪ್ಯಾಕೇಜ್ ಪದ್ಧತಿಯು ಹೆಚ್ಚಾಗುತ್ತಿರುವ ಕಾರಣ ಸಣ್ಣ ಮತ್ತು ಮದ್ಯಮ ಗುತ್ತಿಗೆದಾರರಿಗೆ ತುಂಬಾ ತೊಂದರೆ ಉಂಟಾಗಿರುತ್ತದೆ. ಹೀಗಾಗಿ ಪ್ಯಾಕೇಜ್ ಪದ್ಧತಿಯನ್ನು ರದ್ದು ಮಾಡಬೇಕು ಎಂದು ಅವರು ಆಗ್ರಹಿಸಿದ್ದಾರೆ. ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಯಮಿತ(ಕೆ.ಆರ್.ಐ.ಡಿ.ಎಲ್) ಸಂಸ್ಥೆ ವತಿಯಿಂದ ನಿರ್ವಹಿಸಲಾದ ಕಾಮಗಾರಿಗಳಿಗೆ ಶೇ.25ರಷ್ಟು ಮೊತ್ತವನ್ನು ಬಿಡುಗಡೆ ಮಾಡಿರುವುದಿಲ್ಲ. ಈ ಮೊತ್ತವನ್ನು ಬಿಡಗಡೆ ಮಾಡಬೇಕು. ಈ ನಿಟ್ಟಿನಲ್ಲಿ ಮುಷ್ಕರ ನಡೆಸುತ್ತಿದ್ದು, ಎಲ್ಲಾ ಗುತ್ತಿಗೆದಾರರು ನಗರದಾದ್ಯಂತ ನಡೆಯುತ್ತಿರುವ ಕಾಮಗಾರಿಗಳನ್ನು ಸ್ಥಗಿತಗೊಳಿಸಿ ಮುಷ್ಕರದಲ್ಲಿ ಭಾಗಿಯಾಗಲಿದ್ದಾರೆ ಎಂದು ಅವರು ಹೇಳಿದರು.
1990ರ ಆಗಸ್ಟ್ನಲ್ಲಿ ಇರಾಕ್ ಕುವೈತ್ ಮೇಲೆ ಆಕ್ರಮಣ ಮಾಡಿದ ಸ್ವಲ್ಪ ಸಮಯದ ನಂತರ, ಆಗಿನ ವಿದೇಶಾಂಗ ಸಚಿವ ಐ.ಕೆ. ಗುಜ್ರಾಲ್ ಅವರು ಬಾಗ್ದಾದ್ಗೆ ಭೇಟಿ ನೀಡಿದ ಸಂದರ್ಭದಲ್ಲಿ ಸದ್ದಾಂ ಹುಸೇನ್ ಅವರನ್ನು ಆಲಿಂಗಿಸಿದ್ದರು. ಈ ಆಲಿಂಗನಕ್ಕೆ ಸಾಕಷ್ಟು ಟೀಕೆಗಳು ವ್ಯಕ್ತವಾದವು. ಆದರೆ ಅದು ಕುವೈತ್ನಲ್ಲಿದ್ದ 1.7 ಲಕ್ಷ ಭಾರತೀಯರಿಗೆ ನಿರ್ಣಾಯಕ ಹಂತವಾಗಿತ್ತು. ಇರಾಕಿ ಅಧಿಕಾರಿಗಳು ಭಾರತೀಯರನ್ನು ಸ್ಥಳಾಂತರಿಸಲು ಅನುಮತಿ ನೀಡಿದರು. 63 ದಿನಗಳಲ್ಲಿ 488 ಏರ್ ಇಂಡಿಯಾ ವಿಮಾನಗಳು ‘ಆಪರೇಷನ್ ಏರ್ ಲಿಫ್ಟ್’ ಭಾಗವಾಗಿ 1 ಲಕ್ಷಕ್ಕೂ ಹೆಚ್ಚು ಭಾರತೀಯರನ್ನು ವಾಪಸ್ ಕರೆತಂದವು. ಪಶ್ಚಿಮ ಏಷ್ಯಾದಲ್ಲಿನ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಇರಾನ್ ನ ರಾಜಧಾನಿ ಟೆಹ್ರಾನ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಇರುವ ಸುಮಾರು 10,000 ವಿದ್ಯಾರ್ಥಿಗಳು ಮತ್ತು ವೃತ್ತಿಪರರು ಆತಂಕದಲ್ಲಿದ್ದಾರೆ. ಭಾರತದ ಯಶಸ್ವಿ ರಕ್ಷಣಾ ಕಾರ್ಯಾಚರಣೆಗಳ ಇತಿಹಾಸವು ಭರವಸೆ ನೀಡಿದರೂ, ಪ್ರಸ್ತುತ ಪರಿಸ್ಥಿತಿ ಭಿನ್ನವಾಗಿದೆ. ವಾಯುಪ್ರದೇಶ ಮುಚ್ಚಿರುವುದರಿಂದ ಅಲ್ಲಿನ ಭಾರತೀಯರನ್ನು ವಾಪಸ್ ಕರೆತರವುದು ಸವಾಲಾಗಿದೆ. ಇರಾನ್ ನಲ್ಲಿ ಪ್ರಸ್ತುತ ಎಷ್ಟು ಭಾರತೀಯರು ವಾಸಿಸುತ್ತಿದ್ದಾರೆ? ಪ್ರಸ್ತುತ ವಿದ್ಯಾರ್ಥಿಗಳು, ಕಾರ್ಮಿಕರು, ಯಾತ್ರಿಕರು, ಪ್ರವಾಸಿಗರು, ಉದ್ಯಮಿಗಳು ಹಾಗೂ ನಾವಿಕರು ಸೇರಿ ಸುಮಾರು 9,000–10,000 ಭಾರತೀಯರು ಇರಾನ್ ನ 16 ಪ್ರಾಂತ್ಯಗಳಲ್ಲಿ ವಾಸಿಸುತ್ತಿದ್ದಾರೆ ಎಂದು ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ಫೆಬ್ರವರಿ 6ರಂದು ತೃಣಮೂಲ ಕಾಂಗ್ರೆಸ್ ಸಂಸದ ಸೌಗತ ರಾಯ್ ಅವರ ಪ್ರಶ್ನೆಗೆ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ. ಇರಾನ್ ನಲ್ಲಿನ ರಾಜಕೀಯ ಅಶಾಂತಿಯು ಅಲ್ಲಿ ವಾಸಿಸುವ ಭಾರತೀಯರ ಮೇಲೆ ಬೀರುವ ಪರಿಣಾಮ, ಅವರ ಸಂಭಾವ್ಯ ವಾಪಸಾತಿ ಹಾಗೂ ಪ್ರಸ್ತುತ ಸಂಖ್ಯೆಯ ಬಗ್ಗೆ ಸರ್ಕಾರ ಅಂದಾಜು ಮಾಡಿದ್ದೆಯೇ ಎಂಬುದರ ಕುರಿತು ರಾಯ್ ಮಾಹಿತಿ ಕೇಳಿದ್ದರು. ಕಳೆದ ಕೆಲವು ವರ್ಷಗಳಿಂದ ಇರಾನ್ ನಲ್ಲಿರುವ ಭಾರತೀಯರ ಸಂಖ್ಯೆಯಲ್ಲಿ ಸ್ಥಿರ ಏರಿಕೆ ದಾಖಲಾಗಿದೆ. ವಿದೇಶಾಂಗ ವ್ಯವಹಾರಗಳ ಸಮಿತಿಯ (2024–25) ಇತ್ತೀಚಿನ ದತ್ತಾಂಶವು ಇರಾನ್ ನಲ್ಲಿನ ಭಾರತೀಯರ ಸಂಖ್ಯೆಯಲ್ಲಿ ಗಮನಾರ್ಹ ಏರಿಕೆಯನ್ನು ತೋರಿಸಿದೆ. ಕೇವಲ ಒಂದು ವರ್ಷದಲ್ಲಿ ಒಟ್ಟು ಸಂಖ್ಯೆ 4,700ಕ್ಕೂ ಹೆಚ್ಚು ಏರಿಕೆಯಾಗಿದೆ. ಜನವರಿ 2023ರಿಂದ ಜನವರಿ 2024ರ ನಡುವೆ ಅನಿವಾಸಿ ಭಾರತೀಯರ (NRI) ಸಂಖ್ಯೆ 5,600ರಿಂದ 10,320ಕ್ಕೆ ಏರಿಕೆಯಾಗಿ ಬಹುತೇಕ ದ್ವಿಗುಣವಾಗಿದೆ. ಭಾರತೀಯ ಮೂಲದ ವ್ಯಕ್ತಿಗಳ (PIO) ಸಂಖ್ಯೆಯಲ್ಲಿಯೂ ಸ್ವಲ್ಪ ಏರಿಕೆ ಕಂಡುಬಂದಿದೆ. ಈ ಬೆಳವಣಿಗೆಯಿಂದ ಒಟ್ಟು ಭಾರತೀಯ ಸಮುದಾಯದ ಸಂಖ್ಯೆ 10,765ಕ್ಕೆ ಏರಿಕೆಯಾಗಿದೆ. ಹಿಂದಿನ ವರ್ಷ ಇದು 6,018 ಆಗಿತ್ತು. ಗಲ್ಫ್ ದೇಶಗಳಲ್ಲಿ ಎಷ್ಟು ಭಾರತೀಯರು ಇದ್ದಾರೆ? ಸರ್ಕಾರಿ ಮೂಲಗಳ ಪ್ರಕಾರ, ಗಲ್ಫ್ ಪ್ರದೇಶದಲ್ಲಿ ಅಂದಾಜು 1 ಕೋಟಿ ಭಾರತೀಯರು ವಾಸಿಸುತ್ತಿದ್ದಾರೆ. ವಾಯುಪ್ರದೇಶ ಮುಚ್ಚುವಿಕೆ ಹಾಗೂ ಭದ್ರತಾ ಸವಾಲುಗಳ ನಡುವೆ ಇಷ್ಟೊಂದು ಜನರನ್ನು ಸ್ಥಳಾಂತರಿಸುವುದು ದೊಡ್ಡ ವ್ಯವಸ್ಥಾಪನಾ ಸವಾಲಾಗಿದೆ. ಆದ್ದರಿಂದ ಅವರ ಸುರಕ್ಷತೆಗಾಗಿ ಪರ್ಯಾಯ ಕ್ರಮಗಳನ್ನು ಅನ್ವಯಿಸುವ ಅಗತ್ಯ ಎದುರಾಗಬಹುದು. ಅಧಿಕೃತ ಅಂಕಿ ಅಂಶಗಳ ಪ್ರಕಾರ, ಇತ್ತೀಚಿನ ವರ್ಷಗಳಲ್ಲಿ ಉದ್ಯೋಗಕ್ಕಾಗಿ ವಿದೇಶಕ್ಕೆ ಹೋದ ಭಾರತೀಯ ಕಾರ್ಮಿಕರಲ್ಲಿ 96% ಕ್ಕೂ ಹೆಚ್ಚು ಜನರು ಆರು ಗಲ್ಫ್ ರಾಷ್ಟ್ರಗಳಿಗೆ ತೆರಳಿದ್ದಾರೆ. ಜನವರಿ 2020ರಿಂದ ಜೂನ್ 2025ರವರೆಗೆ ವಲಸೆ ಪರಿಶೀಲನೆ ಅಗತ್ಯವಿರುವ (ECR) ಪಾಸ್ ಪೋರ್ಟ್ ಹೊಂದಿದ್ದ ಸುಮಾರು 16 ಲಕ್ಷ ಕಾರ್ಮಿಕರಲ್ಲಿ 15.4 ಲಕ್ಷ ಮಂದಿ ಸೌದಿ ಅರೇಬಿಯಾ, ಯುಎಇ, ಕುವೈತ್, ಬಹರೇನ್, ಒಮಾನ್ ಹಾಗೂ ಖತರ್ ದೇಶಗಳಲ್ಲಿ ನೆಲೆಸಿದ್ದಾರೆ. ಈ ಅವಧಿಯಲ್ಲಿ ಬಹರೇನ್ ಗೆ 40,407, ಇರಾನ್ ಗೆ 8,275, ಕುವೈತ್ಗೆ 2,01,959, ಒಮಾನ್ ಗೆ 1,16,840, ಖತರ್ಗೆ 1,53,501, ಸೌದಿ ಅರೇಬಿಯಾಕ್ಕೆ 6,95,269 ಹಾಗೂ ಯುಎಇಗೆ 3,41,365 ಮಂದಿ ವಲಸೆ ಪರಿಶೀಲನೆ ಪಡೆದಿದ್ದಾರೆ. ಸ್ಥಳಾಂತರ ಕಾರ್ಯಾಚರಣೆ ಯೋಜನೆಯಲ್ಲಿದೆಯೇ? ಪ್ರಸ್ತುತ ವಿದೇಶಾಂಗ ಸಚಿವಾಲಯವು ಯಾವುದೇ ಸ್ಥಳಾಂತರ ಕಾರ್ಯಾಚರಣೆ ಘೋಷಿಸಿಲ್ಲ. ಕಳೆದ ಎರಡು ದಿನಗಳಿಂದ ದುಬೈ ಮತ್ತು ಅಬುಧಾಬಿ ವಾಯುಪ್ರದೇಶ ಮುಚ್ಚಿರುವ ಹಿನ್ನೆಲೆಯಲ್ಲಿ ತಕ್ಷಣದ ಸ್ಥಳಾಂತರ ಕಾರ್ಯಸಾಧ್ಯವಾಗಿಲ್ಲ. ಯಾವುದೇ ವಾಪಸಾತಿ ಕ್ರಮ ಕೈಗೊಳ್ಳುವ ಮೊದಲು ಭಾರತ ಮುಂದಿನ ಎರಡು–ಮೂರು ದಿನಗಳವರೆಗೆ ಪರಿಸ್ಥಿತಿ ಗಮನಿಸುವ ಸಾಧ್ಯತೆಯಿದೆ. ಅಬುಧಾಬಿಯಲ್ಲಿ ಸೀಮಿತ ವಿಮಾನ ಸಂಚಾರ ಮರುಪ್ರಾರಂಭಗೊಂಡಿದ್ದರೂ, ಬಹರೇನ್, ಖತರ್ ಹಾಗೂ ಕುವೈತ್ನ ವಿಮಾನ ನಿಲ್ದಾಣಗಳು ಮುಚ್ಚಲ್ಪಟ್ಟಿವೆ. ಆದರೆ ಒಮಾನ್ ವಾಯುಪ್ರದೇಶ ತೆರೆದಿರುವುದರಿಂದ, ದುಬೈ, ಶಾರ್ಜಾ ಹಾಗೂ ಅಬುಧಾಬಿಯಿಂದ ಕೆಲವು ಭಾರತೀಯರು ಮಸ್ಕತ್ ಮೂಲಕ ಪ್ರಯಾಣಿಸುತ್ತಿದ್ದಾರೆ. ಒಮಾನ್ ಮಾನ್ಯ ಯುಎಸ್/ಯುಕೆ ವೀಸಾ ಹೊಂದಿರುವ ಭಾರತೀಯರಿಗೆ ಆಗಮನದ ವೇಳೆ ವೀಸಾ ನೀಡುತ್ತದೆ; ಇತರರು ಆನ್ಲೈನ್ ಇ-ವೀಸಾ ಪಡೆಯಬೇಕು. ಪ್ರಯಾಣಿಕರು ರಸ್ತೆಮಾರ್ಗವಾಗಿ ಸುಮಾರು 200 ಕಿ.ಮೀ ದೂರದ ಹಟ್ಟಾ ಗಡಿಯನ್ನು ತಲುಪಿ, ಸುಮಾರು ಎರಡು ಗಂಟೆಗಳ ವಲಸೆ ಪ್ರಕ್ರಿಯೆ ಪೂರ್ಣಗೊಳಿಸಿ, ಇನ್ನೂ ನಾಲ್ಕು ಗಂಟೆಗಳಲ್ಲಿ ಮಸ್ಕತ್ ವಿಮಾನ ನಿಲ್ದಾಣ ತಲುಪಬಹುದು. ಇತ್ತೀಚಿನ ಕಾರ್ಯಾಚರಣೆಗಳು ಕಳೆದ ಐದು ವರ್ಷಗಳಲ್ಲಿ ಕೋವಿಡ್ ಸಾಂಕ್ರಾಮಿಕದಿಂದ ರಷ್ಯಾ–ಉಕ್ರೇನ್ ಯುದ್ಧದವರೆಗಿನ ಬಿಕ್ಕಟ್ಟುಗಳ ಸಂದರ್ಭದಲ್ಲಿ ಭಾರತವು ವಿಶ್ವದಾದ್ಯಂತ ನೆಲೆಸಿದ್ದ 3.2 ಕೋಟಿಗೂ ಹೆಚ್ಚು ನಾಗರಿಕರನ್ನು ವಾಪಸ್ ಕರೆತಂದಿದೆ. ‘ವಂದೇ ಭಾರತ್ ಮಿಷನ್’ ಭಾರತದ ಅತಿ ದೊಡ್ಡ ಸ್ಥಳಾಂತರ ಕಾರ್ಯಾಚರಣೆಯಾಗಿ ಗುರುತಿಸಲಾಗಿದೆ. ಕೋವಿಡ್ ಅವಧಿಯಲ್ಲಿ ಸಿಲುಕಿದ್ದ ನಾಗರಿಕರನ್ನು ವಾಪಸ್ ಕರೆತರಲು ಪ್ರಾರಂಭಿಸಲಾದ ಈ ಮಿಷನ್ ಮಾರ್ಚ್ 2022ರಲ್ಲಿ ಮುಕ್ತಾಯಗೊಂಡಿತು. ವಿಶೇಷ ವಿಮಾನಗಳು ಹಾಗೂ ‘ಏರ್ ಬಬಲ್’ ವ್ಯವಸ್ಥೆಯ ಮೂಲಕ 3.20 ಕೋಟಿ ಜನರಿಗೆ ಪ್ರಯಾಣ ಸೌಲಭ್ಯ ಕಲ್ಪಿಸಲಾಯಿತು. ಭಾರತೀಯ ಸಮುದಾಯ ಕಲ್ಯಾಣ ನಿಧಿಯಿಂದ ₹22.54 ಕೋಟಿ ವೆಚ್ಚ ಮಾಡಲಾಗಿದೆ. ಜೂನ್ 2025ರಲ್ಲಿ ನಡೆದ ‘ಆಪರೇಷನ್ ಸಿಂಧು’ ಮೂಲಕ ಇರಾನ್ನಿಂದ 3,597 ಹಾಗೂ ಇಸ್ರೇಲ್ನಿಂದ 818 ಸೇರಿ ಒಟ್ಟು 4,415 ಭಾರತೀಯರನ್ನು ರಕ್ಷಿಸಲಾಯಿತು. 19 ವಿಶೇಷ ವಿಮಾನಗಳು, ಅದರಲ್ಲೂ ಭಾರತೀಯ ವಾಯುಪಡೆಯ ಮೂರು ಸಿ-17 ಹೆವಿ-ಲಿಫ್ಟ್ ವಿಮಾನಗಳನ್ನು ಬಳಸಲಾಗಿತ್ತು. ಸ್ಥಳಾಂತರ ಕಾರ್ಯಾಚರಣೆಗಳನ್ನು ಹೇಗೆ ಯೋಜಿಸಲಾಗುತ್ತದೆ? ವಿದೇಶಾಂಗ ಸಚಿವಾಲಯದ ಪ್ರಕಾರ, ಸಂಘರ್ಷ ಅಥವಾ ತುರ್ತು ಪರಿಸ್ಥಿತಿಗಳ ಸಂದರ್ಭದಲ್ಲಿ ದೇಶದೊಳಗಿನ ಭಾರತೀಯರ ಸಂಖ್ಯೆ, ಅವರ ಭೌಗೋಳಿಕ ವಿಸ್ತರಣೆ, ನೆಲಮಟ್ಟದ ಭದ್ರತಾ ಪರಿಸ್ಥಿತಿ, ಲಭ್ಯ ನಿರ್ಗಮನ ಮಾರ್ಗಗಳು ಹಾಗೂ ನೆರೆಯ ರಾಷ್ಟ್ರಗಳ ಸಹಕಾರ ಸೇರಿದಂತೆ ಹಲವು ಅಂಶಗಳನ್ನು ಪರಿಗಣಿಸಿ ಸ್ಥಳಾಂತರ ಯೋಜನೆ ರೂಪಿಸಲಾಗುತ್ತದೆ. ಅಗತ್ಯವಿದ್ದರೆ ಭಾರತೀಯರಿಗೆ ಸೂಕ್ತ ಸಲಹೆಗಳು ನೀಡಲಾಗುತ್ತದೆ. ಇತರ ಪ್ರಮುಖ ಕಾರ್ಯಾಚರಣೆಗಳು 2021ರಲ್ಲಿ ತಾಲಿಬಾನ್ ಅಧಿಕಾರಕ್ಕೆ ಬಂದ ಬಳಿಕ ‘ಆಪರೇಷನ್ ದೇವಿ ಶಕ್ತಿ’ ಮೂಲಕ 438 ಭಾರತೀಯರು ಸೇರಿ 565 ಮಂದಿಯನ್ನು ಅಫ್ಘಾನಿಸ್ತಾನದಿಂದ ರಕ್ಷಿಸಲಾಯಿತು. 2022ರಲ್ಲಿ ‘ಆಪರೇಷನ್ ಗಂಗಾ’ ಮೂಲಕ ಉಕ್ರೇನ್ ಯುದ್ಧದ ಸಂದರ್ಭದಲ್ಲಿ 18,282 ಭಾರತೀಯರನ್ನು 90 ವಿಮಾನಗಳ ಮೂಲಕ ಕರೆತರಲಾಯಿತು. 2023ರಲ್ಲಿ ‘ಆಪರೇಷನ್ ಕಾವೇರಿ’ ಮೂಲಕ ಸುಡಾನ್ ನಿಂದ 4,097 ಮಂದಿಯನ್ನು ರಕ್ಷಿಸಲಾಯಿತು. ಅದೇ ವರ್ಷ ಅಕ್ಟೋಬರ್ನಲ್ಲಿ ‘ಆಪರೇಷನ್ ಅಜಯ್’ ಮೂಲಕ ಇಸ್ರೇಲ್ ನಿಂದ 1,343 ಮಂದಿಯನ್ನು ಸ್ವದೇಶಕ್ಕೆ ಕರೆತರಲಾಯಿತು. ಹಿಂದಿನ ವರ್ಷಗಳಲ್ಲಿ 2011ರಲ್ಲಿ ಲಿಬಿಯಾದಿಂದ 15,000 ಭಾರತೀಯರನ್ನು ‘ಆಪರೇಷನ್ ಸೇಫ್ ಹೋಮ್ಕಮಿಂಗ್’ ಮೂಲಕ ರಕ್ಷಿಸಲಾಗಿತ್ತು. 2006ರಲ್ಲಿ ಲೆಬನಾನ್ನಿಂದ 2,280 ಮಂದಿಯನ್ನು ಹಾಗೂ 2003ರಲ್ಲಿ ಇರಾಕ್ನಿಂದ 5,705 ಮಂದಿಯನ್ನು ಸ್ಥಳಾಂತರಿಸಲಾಗಿತ್ತು.
ಉಡುಪಿ: ಹಿಂದುತ್ವ ಸಂಘಟನೆಯ ಮುಖಂಡ ಮಂಜು ಕೊಳಗೆ ಚೂರಿ ಇರಿತ
ಉಡುಪಿ: ಪ್ರೀತಿಯ ವಿಚಾರದಲ್ಲಿ ರಾಜಿ ಪಂಚಾಯತಿ ನಡೆಸಲು ತೆರಳಿದ್ದ ವೇಳೆ ಹಿಂದುತ್ವ ಸಂಘಟನೆಯ ಮುಖಂಡ ಉಡುಪಿ ನಗರಸಭೆಯ ಮಾಜಿ ಉಪಾಧ್ಯಕ್ಷೆ ಲಕ್ಷ್ಮೀ ಮಂಜುನಾಥ್ ಅವರ ಪತಿ ಮಂಜು ಕೊಳ ಅವರಿಗೆ ಯುವಕನೋರ್ವ ಚೂರಿ ಇರಿದ ಘಟನೆ ಮಲ್ಪೆಯಲ್ಲಿ ಮಂಗಳವಾರ ರಾತ್ರಿ ನಡೆದಿದೆ. ಮಾಹಿತಿಗಳ ಪ್ರಕಾರ ಮಂಜು ಕೊಳ ಅವರು ಮಂಗಳವಾರ ಸಂಜೆ ಮಲ್ಪೆ ಬೀಚ್ ಬಳಿ ಪಲಿಮಾರು ಭಾಗ ಜೋಡಿಯೊಂದರ ಪ್ರೀತಿಯ ವಿಚಾರದಲ್ಲಿ ರಾಜಿ ಪಂಚಾಯತಿ ನಡೆಸಲು ಕರೆದಿದ್ದರು ಎನ್ನಲಾಗಿದೆ. ಈ ವೇಳೆ ಪರಸ್ಪರ ಮಾತಿಗೆ ಮಾತು ಬೆಳೆದು ಯುವಕನೋರ್ವ ಮಂಜು ಕೊಳ ಅವರಿಗೆ ಚೂರಿ ಇರಿದಿದ್ದಾನೆ. ಹೊಟ್ಟೆಯ ಭಾಗಕ್ಕೆ ಇರಿದ ಪರಿಣಾಮ ಮಂಜು ಕೊಳ ಅವರು ಕುಸಿದು ಬಿದ್ದಿದ್ದು, ಅವರನ್ನು ಕೂಡಲೇ ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.
ಕಲಬುರಗಿ | ವಿಶ್ವ ವನ್ಯಜೀವಿ ದಿನಾಚರಣೆ : ವೈಲ್ಡ್ ಲೈಫ್ ಫೋಟೋಗ್ರಾಫಿ ಪ್ರದರ್ಶನ
ಕಲಬುರಗಿ : ಶರಣಬಸವೇಶ್ವರ ವಿಜ್ಞಾನ ಮಹಾವಿದ್ಯಾಲಯದ ಪ್ರಾಣಿ ಶಾಸ್ತ್ರ ವಿಭಾಗದ ‘ಅಸೋಸಿಯೇಷನ್ ಆಫ್ ಜುವಾಲಜಿಸ್ಟ್’ ವತಿಯಿಂದ ವಿಶ್ವ ವನ್ಯಜೀವಿ ದಿನದ ಅಂಗವಾಗಿ ಮಂಗಳವಾರ ವೈಲ್ಡ್ ಲೈಫ್ ಫೋಟೋಗ್ರಾಫಿ ಪ್ರದರ್ಶನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮವನ್ನು ಅರಣ್ಯ ಇಲಾಖೆಯ ಉಪವಲಯ ಸಂರಕ್ಷಣಾಧಿಕಾರಿಗಳಾದ ರಮೇಶ್ ಹಾಳ್ಕೇರಿ ಮತ್ತು ಮಹಾವಿದ್ಯಾಲಯದ ಪ್ರಾಂಶುಪಾಲರು ರಿಬ್ಬನ್ ಕಟ್ ಮಾಡುವ ಮೂಲಕ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಕಲಬುರಗಿಯ ವಿವಿಧ ಪರಿಸರ ವಲಯಗಳಲ್ಲಿ ಕ್ಲಿಕ್ ಮಾಡಲಾದ ಪಕ್ಷಿಗಳು, ಕೀಟಗಳು ಹಾಗೂ ಇತರ ವನ್ಯಜೀವಿಗಳ ಆಕರ್ಷಕ ಛಾಯಾಚಿತ್ರಗಳನ್ನು ಪ್ರದರ್ಶಿಸಲಾಯಿತು. ಈ ವೇಳೆ ಮಾತನಾಡಿದ ಪ್ರಾಂಶುಪಾಲರಾದ ಡಾ.ಬಿ.ರಾಮಕೃಷ್ಣ ರೆಡ್ಡಿ, ವನ್ಯಜೀವಿಗಳ ಉಳಿವು ನಮ್ಮೆಲ್ಲರ ಬದುಕಿನೊಂದಿಗೆ ಅವಿಭಾಜ್ಯವಾಗಿ ಸಂಬಂಧಿಸಿದೆ. ವನ್ಯಜೀವಿ ಸಂಪತ್ತಿನ ಸಂರಕ್ಷಣೆಯ ಬಗ್ಗೆ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವುದು ನಮ್ಮ ಕರ್ತವ್ಯವಾಗಿದ್ದು, ಈ ನಿಟ್ಟಿನಲ್ಲಿ ವಿಶ್ವ ವನ್ಯಜೀವಿ ದಿನಾಚರಣೆಯನ್ನು ಆಚರಿಸಲಾಗುತ್ತಿದೆ ಎಂದರು. ವನ್ಯಜೀವಿಗಳು ಪ್ರಕೃತಿಯ ಸಮತೋಲನ ಕಾಯ್ದುಕೊಳ್ಳುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ. ಪ್ರತಿಯೊಬ್ಬರೂ ವನ್ಯಜೀವಿ ಹಾಗೂ ಪರಿಸರ ಸಂರಕ್ಷಣೆಗೆ ಸಂಕಲ್ಪ ಮಾಡಬೇಕು ಎಂದು ಅವರು ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಕಾರ್ಯಕ್ರಮದ ವೇಳೆ ವಿದ್ಯಾರ್ಥಿಗಳು ಕುತೂಹಲದಿಂದ ಪ್ರಾಣಿ, ಪಕ್ಷಿ ಹಾಗೂ ಕೀಟಗಳ ಬಗ್ಗೆ ಪ್ರಶ್ನೆಗಳನ್ನು ಕೇಳಿ ಮಾಹಿತಿಯನ್ನು ಪಡೆದುಕೊಂಡರು. ಅಭಿಷೇಕ್ ಉಪ್ಪಾರ್, ಪವನ್ ಮೋಹನ್ ರಾವ್ ಹಾಗೂ ಕೆ.ಎಸ್. ಐಶ್ವರ್ಯ ಅವರು ಛಾಯಾಚಿತ್ರಗಳ ಕೊಡುಗೆ ನೀಡಿ ಮಾಹಿತಿಯನ್ನು ಹಂಚಿಕೊಂಡರು. ಕಾರ್ಯಕ್ರಮದಲ್ಲಿ ಪ್ರಾಧ್ಯಾಪಕರಾದ ಡಾ. ಲತಾದೇವಿ ಕೆ, ಡಾ. ಜಗದೇವಿ ಗುಡ್ಡ, ಡಾ. ಬಸವರಾಜೇಶ್ವರಿ ಇಂದೂರ, ಡಾ. ಕರುಣಾ ಇಂಗನ್, ಪ್ರದೀಪ್ ಕುಮಾರ್ ಹಾಗೂ ವಿಭಾಗದ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಯುದ್ಧ ಇನ್ನೂ ನಿಂತಿಲ್ಲ, ಇರಾನ್ ಸೇನೆಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಕೆ | Operation Roaring Lion
ಅಮೆರಿಕ ಹಾಗೂ ಇಸ್ರೇಲ್ ಜಂಟಿಯಾಗಿ ಇರಾನ್ ವಿರುದ್ಧ ಭೀಕರ ಯುದ್ಧ ಸಾರಿದ್ದು, ದೊಡ್ಡದಾಗಿ ದಾಳಿ ನಡೆಸುತ್ತಿವೆ. ಇಂತಹ ಸಮಯದಲ್ಲೇ ಅಮೆರಿಕದ ಮುಂದಿನ ನಡೆ ಏನು? ಎಂಬ ಬಗ್ಗೆ ಚರ್ಚೆ ಜೋರಾಗಿದೆ. ಇರಾನ್ ಸರ್ವಾಧಿಕಾರಿ ಖಮೇನಿ ಹತ್ಯೆ ನಂತ ಯುದ್ಧ ನಿಂತು ಹೋಗುತ್ತಾ? ಎನ್ನುವ ಚರ್ಚೆಗಳು ನಡೆಯುತ್ತಿರುವ ಸಮಯದಲ್ಲೇ ದಿಢೀರ್ ಸುದ್ದಿಗೋಷ್ಠಿ ನಡೆಸಿರುವ ಅಮೆರಿಕ ಅಧ್ಯಕ್ಷರು ಇರಾನ್ ಸೇನೆಗೆ
ಶಹಾಬಾದ್ | ಶಾಸಕ ಮತ್ತಿಮಡು ಹುಟ್ಟು ಹಬ್ಬ : ಆಟೋ ಚಾಲಕರಿಗೆ, ಪತ್ರಕರ್ತರಿಗೆ ಹೆಲ್ಮೇಟ್ ವಿತರಣೆ
ಶಹಾಬಾದ್ : ಶಾಸಕ ಬಸವರಾಜ ಹುಟ್ಟು ಹಬ್ಬದ ಸವಿ ನೆನಪಿನಲ್ಲಿ ನಾವೆಲ್ಲರೂ ಆಟೋ ಚಾಲಕರಿಗೆ, ಟಿ-ಶರ್ಟ್, ಪತ್ರಕರ್ತರಿಗೆ ಹಾಗೂ ಸಾರ್ವಜನಿಕರಿಗೆ ಹೆಲ್ಮೇಟ್ ವಿತರಣೆ ಮಾಡಿದ್ದೇವೆ ಎಂದು ಬಿಜೆಪಿ ಅಧ್ಯಕ್ಷ ನಿಂಗಣ್ಣ ಹುಳಗೋಳಕರ್ ಹೇಳಿದರು. ಅವರು ಮಂಗಳವಾರ ಕಲಬುರಗಿ ಗ್ರಾಮೀಣ ಮತಕ್ಷೇತ್ರದ ಜನಪ್ರಿಯ ಶಾಸಕರಾದ ಬಸವರಾಜ ಮತ್ತಿಮಡು ಅವರ ಜನ್ಮದಿನ ಪ್ರಯುಕ್ತ ನಗರದ ಶ್ರೀರಾಮ ವೃತ್ತದಲ್ಲಿ ಮತ್ತಿಮಡು ಅಭಿಮಾನಿ ಬಳಗದವರು ಆಯೋಜಿಸಲಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಶಾಸಕರು ಮುಗಿದ ಕರವ, ಬಾಗಿದ ಶಿರವ ಎಂಬಂತೆ ಎಲ್ಲರೊಂದಿಗೆ ಬೆರೆಯುವ ಹಾಗೂ ಅಪ್ಪಿಕೊಳ್ಳುವ ವ್ಯಕ್ತಿತ್ವ. ಅಂತಹ ಜನಪ್ರಿಯ ಶಾಸಕರ ಹುಟ್ಟು ಹಬ್ಬವನ್ನು ನಮ್ಮ ಬಿಜೆಪಿ ಕಾರ್ಯಕರ್ತರು ಸಾರ್ವಜನಿಕರೊಂದಿಗೆ ಆಚರಿಸಿಕೊಂಡಿರುವುದು ನಿಜಕ್ಕೂ ಸಂತೋಷದಾಯಕ ಕ್ಷಣ ಎಂದರು. ಮುಖoಡರಾದ ಚಂದ್ರಕಾoತ ಗೊಬ್ಬೂರಕರ್, ಪಿಐ ಪರಶುರಾಮ ವನ್ನಂಜೆಕರ್, ರಮೇಶ ಭಟ್ಟ ಮಾತನಾಡಿದರು. ಮುಖಂಡರಾದ ಗೋರಖನಾಥ ಶಾಖಾಪುರೆ, ನರೇಂದ್ರ ವರ್ಮಾ, ಶಿವಕುಮಾರ ಇಂಗಿನಶೆಟ್ಟಿ, ಅರುಣ ಪಟ್ಟಣಕರ, ಭಾಗಿರಥಿ ಗುನ್ನಾಪೂರ ಇದ್ದರು. ದೇವದಾಸ ಜಾಧವ ನಿರೂಪಿಸಿದರು,ಸಿದ್ರಾಮ ಕುಸಾಳೆ ಸ್ವಾಗತಿಸಿದರು. ದಿನೇಶ ಗೌಳಿ ವಂದಿಸಿದರು.
ಆಳಂದ | ಕೇಂದ್ರೀಯ ವಿವಿ ವಿದ್ಯಾರ್ಥಿಗಳಿಗೆ ಭೂಮಿ ಫೌಂಡೇಶನ್ ಫೆಲೋಶಿಪ್
ಆಳಂದ : “ನಮ್ಮ ಎಲ್ಲಾ ವಿದ್ಯಾರ್ಥಿಗಳು ವಿಶ್ವವಿದ್ಯಾಲಯದಿಂದ ಹೊರಡುವ ಮೊದಲು ಉದ್ಯೋಗ ಪಡೆಯುವಂತೆ ಮಾಡುವುದು ನಮ್ಮ ಗುರಿಯಾಗಿದೆ” ಎಂದು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ (ಸಿಯುಕೆ) ಕುಲಪತಿ ಬಟ್ಟಸ್ ಸತ್ಯನಾರಾಯಣ ಹೇಳಿದರು. ತಾಲೂಕಿನ ಕಡಗಂಚಿ ಬಳಿಯ ಸಿಯುಕೆಯಲ್ಲಿ ಚೆನ್ನೈ ಮೂಲದ ಭೂಮಿ ಫೌಂಡೇಶನ್ ನಲ್ಲಿ ಸ್ಥಾನ ಪಡೆದಿರುವ ಸಮಾಜ ವಿಜ್ಞಾನ (ಎಂಎಸ್ಡಬ್ಲ್ಯೂ) ಮತ್ತು ಮನೋವಿಜ್ಞಾನ ವಿದ್ಯಾರ್ಥಿಗಳಿಗೆ ಫೆಲೋಶಿಪ್ ಪತ್ರ ವಿತರಿಸಿ ಅವರು ಮಾತನಾಡಿದರು. ವಿದ್ಯಾರ್ಥಿಗಳು ಕಷ್ಟಪಟ್ಟು ಕೆಲಸ ಮಾಡಿ ವಿಶ್ವವಿದ್ಯಾಲಯಕ್ಕೆ ಹೆಸರು ತರುವಂತೆ ಶ್ರಮಿಸಬೇಕು. ಇದರಿಂದ ಸಂಸ್ಥೆಗಳು ಮತ್ತೆ ಬಂದು ನಮ್ಮ ವಿದ್ಯಾರ್ಥಿಗಳನ್ನು ನೇಮಿಸಿಕೊಳ್ಳಲು ಆಸಕ್ತಿ ತೋರುತ್ತವೆ. ಈ ಸಾಧನೆ ವಿಶ್ವವಿದ್ಯಾಲಯದ ಶೈಕ್ಷಣಿಕ ಶ್ರೇಷ್ಠತೆ ಹಾಗೂ ಸಾಮಾಜಿಕ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ ಎಂದು ಕುಲಪತಿ ಹೇಳಿದರು. ಭೂಮಿ ಫೌಂಡೇಶನ್ ಶಿಕ್ಷಣ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುವ ಸಾಮಾಜಿಕ ಸಂಸ್ಥೆಯಾಗಿದ್ದು, ಆಯ್ಕೆಯಾದ ಏಳು ಅಭ್ಯರ್ಥಿಗಳಲ್ಲಿ ನಾಲ್ವರು ಸಮಾಜ ಕಾರ್ಯ ವಿಭಾಗ (ಎಂಎಸ್ಡಬ್ಲ್ಯೂ) ಹಾಗೂ ಮೂವರು ಮನೋವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿದ್ದಾರೆ. ಆಯ್ಕೆಯಾದವರು ಎರಡು ವರ್ಷಗಳ ಕಾಲ ಪೂರ್ಣಾವಧಿ ಉದ್ಯೋಗಿಗಳಾಗಿ ತಿಂಗಳಿಗೆ ₹30,000 ಫೆಲೋಶಿಪ್ ಪಡೆಯಲಿದ್ದಾರೆ. ನಂತರ ಸಂಸ್ಥೆಯಲ್ಲಿ ಮುಂದುವರಿಯುವ ಅಥವಾ ಇತರ ಉದ್ಯೋಗ ಅವಕಾಶಗಳನ್ನು ಹುಡುಕುವ ಅವಕಾಶವಿದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಭೂಮಿ ಫೌಂಡೇಶನ್ ಕಾರ್ಯಕ್ರಮ ವ್ಯವಸ್ಥಾಪಕಿ ನಂದನ ಉಪಸ್ಥಿತರಿದ್ದರು. ಪ್ರೊ. ಚನ್ನವರ್ ಆರ್.ಎಂ., ಸಮಾಜ ಕಾರ್ಯ ವಿಭಾಗದ ಮುಖ್ಯಸ್ಥೆ ಪ್ರೊ. ಪವಿತ್ರಾ ಆರ್. ಆಲೂರ್ ಹಾಗೂ ಮನೋವಿಜ್ಞಾನ ವಿಭಾಗದ ಮುಖ್ಯಸ್ಥ ಪ್ರೊ. ವಿಜೇಂದ್ರ ಪಾಂಡೆ ಅವರು ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸಿದರು.
ದೇವದುರ್ಗ | ಸಾಮಾನ್ಯ ಜನರಿಗೆ ಮನೆಕಟ್ಟಲು ಅಗತ್ಯ ಮರಳು ಪೂರೈಕೆ ಆಗಬೇಕು : ಶಾಸಕಿ ಕರೆಮ್ಮ ಜಿ.ನಾಯಕ
ದೇವದುರ್ಗ: ಅಕ್ರಮ ಮರಳು ಸಾಗಾಣೆಗೆ ತರಾಟೆ – ಮೂಲಸೌಕರ್ಯಕ್ಕೆ ಆದ್ಯತೆ ನೀಡಲು ಶಾಸಕಿ ಕರೆಮ್ಮ ನಾಯಕ್ ಸೂಚನೆ ದೇವದುರ್ಗ ಪಟ್ಟಣದ ಸಾಮಾನ್ಯ ಜನರಿಗೆ ಮೂಲಸೌಕರ್ಯ, ಕುಡಿಯುವ ನೀರು ಹಾಗೂ ಅಗತ್ಯ ಮರಳು ಪೂರೈಕೆ ತಕ್ಷಣ ಒದಗಿಸಬೇಕೆಂದು ತ್ರೈಮಾಸಿಕ ಕೆ.ಡಿ.ಪಿ. ಪ್ರಗತಿ ಪರಿಶೀಲನೆ ಸಭೆಯಲ್ಲಿ ಶಾಸಕಿಯರಾದ ಕರೆಮ್ಮ ಜಿ.ನಾಯಕ ಸೂಚಿಸಿದರು. ಸಭೆಯಲ್ಲಿ ಮಧ್ಯರಾತ್ರಿ ರಾಯಲ್ಟಿ ಇಲ್ಲದೆ ಅಕ್ರಮ ಮರಳು ಸಾಗಾಣೆ ನಡೆಯುತ್ತಿರುವ ಬಗ್ಗೆ ಸದಸ್ಯರು ಆಕ್ಷೇಪಿಸಿದರು. ಪೊಲೀಸ್ ಹಾಗೂ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳು ಬೇಜವಾಬ್ದಾರಿ ತೋರಿಸುತ್ತಿದ್ದಾರೆ ಎಂದು ರಾಮಣ್ಣ ನಾಯಕ್ ಮತ್ತು ಶಿವಪ್ಪ ದೂರಿದರು. ನಾಮಫಲಕ ಮತ್ತು ಪರವಾನಗಿ ಇಲ್ಲದ ಟಿಪ್ಪರ್ಗಳಿಗೆ ಹೇಗೆ ರಾಯಲ್ಟಿ ನೀಡಲಾಗುತ್ತಿದೆ ಎಂದು ಪ್ರಶ್ನಿಸಿದರು. ಪಟ್ಟಣದಿಂದ ಕೇವಲ 6 ಕಿ.ಮೀ. ದೂರದಲ್ಲಿ ಕೃಷ್ಣಾ ನದಿ ಇದ್ದರೂ ಸ್ಥಳೀಯರಿಗೆ ಮರಳು ಲಭ್ಯವಾಗುತ್ತಿಲ್ಲ. ಬೇರೆ ಜಿಲ್ಲೆ ಮತ್ತು ರಾಜ್ಯಗಳಿಗೆ ಅಕ್ರಮ ಸಾಗಾಟವಾಗುತ್ತಿದೆ. ಸ್ಥಳೀಯರು ಮರಳು ಕೇಳಿದರೆ ಒಂದು ಟಿಪ್ಪರ್ಗೆ ₹70 ಸಾವಿರ ಕೇಳಲಾಗುತ್ತಿದೆ ಎಂದು ಗ್ಯಾರಂಟಿ ಯೋಜನೆ ಅಧ್ಯಕ್ಷ ಲಕ್ಷ್ಮಣ ಜ್ಯೋತಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಸ್ಥಳೀಯರಿಗೆ ಮರಳು ವ್ಯವಸ್ಥೆ ತಕ್ಷಣ ಕಲ್ಪಿಸಬೇಕು ಎಂದು ಒತ್ತಾಯಿಸಿದರು. ಶಾಸಕಿ ಕರೆಮ್ಮ ಜಿ. ನಾಯಕ್ ಮಾತನಾಡಿ, ಬೇಸಿಗೆಯಲ್ಲಿ ಕುಡಿಯುವ ನೀರು, ಸ್ವಚ್ಛತೆ, ಶಿಕ್ಷಣ ಮತ್ತು ಮೂಲಸೌಕರ್ಯಗಳಿಗೆ ಆದ್ಯತೆ ನೀಡಬೇಕು. ಯಾವುದೇ ದೂರು ಬಂದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು. ಎಸ್ಎಸ್ಎಲ್ಸಿ ಪರೀಕ್ಷೆಗಳು ಸಮೀಪಿಸುತ್ತಿದ್ದು, ಜಿಲ್ಲೆಗೆ ಉತ್ತಮ ಫಲಿತಾಂಶ ಬರಬೇಕು. ವಿದ್ಯಾರ್ಥಿಗಳಿಗೆ ಸಮಯಕ್ಕೆ ಸರಿಯಾಗಿ ಬಸ್ ಸೌಲಭ್ಯ ಕಲ್ಪಿಸಬೇಕು ಎಂದು ಡಿಪೊ ವ್ಯವಸ್ಥಾಪಕರಿಗೆ ಸೂಚಿಸಿದರು. ಒಟ್ಟಾರೆ ಶಿಕ್ಷಣ, ಆರೋಗ್ಯ ಮತ್ತು ಮೂಲಸೌಕರ್ಯ ಅಭಿವೃದ್ಧಿಗೆ ಅಧಿಕಾರಿಗಳು ವಿಶೇಷ ಗಮನ ಹರಿಸಬೇಕು ಎಂದು ಸಭೆಯಲ್ಲಿ ನಿರ್ದೇಶನ ನೀಡಿದರು. ಇದೇ ಸಂದರ್ಭದಲ್ಲಿ ಆಡಳಿತಾಧಿಕಾರಿ ತಾಲೂಕು ಪಂಚಾಯತ್, ಶರಣಬಸವರಾಜ, ತಹಶೀಲ್ದಾರ್ ನಾಗಮ್ಮಕಟ್ಟಿಮನಿ,ಕಾರ್ಯನಿರ್ವಾಕ ಅಧಿಕಾರಿ ಬಸವರಾಜ, ಅಣ್ಣಾರಾವ್,ವಲಯ ಅರಣ್ಯಾಧಿಕಾರಿ ಅಲಿಯುದ್ದೀನ್, ಕ್ಷೇತ್ರ ಶಿಕ್ಷಣಾಧಿಕಾರಿ ಮಲ್ಲಿಕಾರ್ಜುನ, ಸಿ.ಡಿ.ಪಿ.ಓ ಮಹೇಶ್, ಆದನಗೌಡ ಬುಂಕಲದೊಡ್ಡಿ,ಶರಣಗೌಡ ಮದರಕಲ್,ಲಕ್ಷಣ ಜ್ಯೋತಿ,ಶರಣಗೌಡ ಹಂಚಿನಾಳ,ಶಿವಪ್ಪ,ರಾಮಣ್ಣ ನಾಯಕ,ಬಸನಗೌಡ ಮತ್ತಿತರು ಇದ್ದರು.
ಮಹಿಳೆಯರ ಏಕದಿನ ಬ್ಯಾಟಿಂಗ್ ರ್ಯಾಂಕಿಂಗ್: ಅಗ್ರ ಸ್ಥಾನಕ್ಕೇರಿದ ಸ್ಮೃತಿ ಮಂಧಾನ, ಬೌಲಿಂಗ್ನಲ್ಲಿ ಅಲನಾ ಕಿಂಗ್
ಹೊಸದಿಲ್ಲಿ: ಭಾರತದ ಆರಂಭಿಕ ಆಟಗಾತಿ ಸ್ಮೃತಿ ಮಂಧಾನ ಇತ್ತೀಚೆಗೆ ಕೊನೆಗೊಂಡಿರುವ ಆಸ್ಟ್ರೇಲಿಯ ವಿರುದ್ಧದ ಮೂರು ಪಂದ್ಯಗಳ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿದ ಹಿನ್ನೆಲೆಯಲ್ಲಿ ಮಂಗಳವಾರ ಬಿಡುಗಡೆಯಾಗಿರುವ ಮಹಿಳೆಯರ ಐಸಿಸಿ ಏಕದಿನ ರ್ಯಾಂಕಿಂಗ್ ನಲ್ಲಿ ಅಗ್ರ ಸ್ಥಾನಕ್ಕೇರಿದ್ದಾರೆ. 790 ಪಾಯಿಂಟ್ಸ್ ಗಳಿಸಿರುವ ಸ್ಮತಿ ದಕ್ಷಿಣ ಆಫ್ರಿಕಾದ ಲೌರಾ ವೊಲ್ವಾರ್ಟ್(782)ಅವರನ್ನು ಹಿಂದಿಕ್ಕಿದರು. ಮಾರ್ಚ್ ಹಾಗೂ ಎಪ್ರಿಲ್ನಲ್ಲಿ ನ್ಯೂಝಿಲ್ಯಾಂಡ್ ತಂಡವನ್ನು ಎದುರಿಸಲಿರುವ ವೋಲ್ವಾರ್ಟ್ಗೆ ಅಗ್ರ ಸ್ಥಾನವನ್ನು ಮತ್ತೆ ವಶಪಡಿಸಿಕೊಳ್ಳುವ ಅವಕಾಶವಿದೆ. ತನ್ನ ಕೊನೆಯ ಏಕದಿನ ಪಂದ್ಯದಲ್ಲಿ ಶತಕವನ್ನು ದಾಖಲಿಸರುವ ಅಲಿಸಾ ಹೀಲಿ(744 ಅಂಕ)ನಾಲ್ಕನೇ ಸ್ಥಾನದೊಂದಿಗೆ ತನ್ನ ವೃತ್ತಿಜೀವನ ಕೊನೆಗೊಳಿಸಿದರು. ಬೆತ್ ಮೂನಿ(749)ಹಾಗೂ ಅಶ್ಲೆ ಗಾರ್ಡ್ನರ್(724)ನಡುವಿನ ಸ್ಥಾನ ಪಡೆದಿದ್ದಾರೆ. ಭಾರತದ ನಾಯಕಿ ಹರ್ಮನ್ಪ್ರೀತ್ ಕೌರ್ 9ನೇ ಸ್ಥಾನ ಪಡೆಯುವುದರೊಂದಿಗೆ ಅಗ್ರ-10ರಲ್ಲಿ ಸ್ಥಾನ ಪಡೆದ ಇನ್ನೋರ್ವ ಭಾರತೀಯ ಆಟಗಾರ್ತಿಯಾಗಿದ್ದಾರೆ. ಜೆಮಿಮಾ ರೋಡ್ರಿಗ್ಸ್ 12ನೇ ಸ್ಥಾನದಲ್ಲಿದ್ದಾರೆ. ಇದೇ ವೇಳೆ ಅಲನಾ ಕಿಂಗ್(775 ಅಂಕ)ಅವರು ಮಹಿಳೆಯರ ಏಕದಿನ ಬೌಲಿಂಗ್ ರ್ಯಾಂಕಿಂಗ್ನಲ್ಲಿ ಅಗ್ರ ಸ್ಥಾನಕ್ಕೆ ಜಿಗಿದಿದ್ದಾರೆ. ಸುಮಾರು ನಾಲ್ಕು ವರ್ಷಗಳಿಂದ ರ್ಯಾಂಕಿಂಗ್ನಲ್ಲಿ ಅಗ್ರ ಸ್ಥಾನದಲ್ಲಿದ್ದ ಸೋಫಿ ಎಕ್ಲೆಸ್ಟೋನ್ ಅವರ ಪ್ರಾಬಲ್ಯವನ್ನು ಅಂತ್ಯಗೊಳಿಸಿದರು. ಲೆಗ್ ಸ್ಪಿನ್ನರ್ ಅಲನಾ ಕಿಂಗ್ ಭಾರತ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಒಟ್ಟು ಏಳು ವಿಕೆಟ್ಗಳನ್ನು ಕಬಳಿಸಿದ್ದರು. ಮೂರನೇ ಏಕದಿನ ಪಂದ್ಯದಲ್ಲಿ 10 ಓವರ್ಗಳಲ್ಲಿ 33 ರನ್ಗೆ ನಾಲ್ಕು ವಿಕೆಟ್ಗಳನ್ನು ಉರುಳಿಸಿ ಆಸ್ಟ್ರೇಲಿಯಕ್ಕೆ 185 ರನ್ಗಳ ಗೆಲುವನ್ನು ತಂದುಕೊಟ್ಟಿದ್ದರು. ಈ ಸಾಧನೆಯ ಮೂಲಕ ಅಲನಾ ಮೊದಲ ಬಾರಿ ನಂ.1 ಸ್ಥಾನ ಪಡೆದರು. ವೃತ್ತಿಜೀವನದಲ್ಲಿ ಇದೇ ಮೊದಲ ಬಾರಿ 775 ರೇಟಿಂಗ್ ಪಾಯಿಂಟ್ಸ್ ಪಡೆದಿದ್ದಾರೆ. ಕಿಂಗ್ ಅವರನ್ನು ಅಗ್ರ 8ರಲ್ಲಿ ಆಸ್ಟ್ರೇಲಿಯದ ನಾಲ್ವರು ಬೌಲರ್ಗಳಾದ-ಗಾರ್ಡ್ನರ್(ಮೂರನೇ), ಅನಬೆಲ್ ಸದರ್ಲ್ಯಾಂಡ್(ಐದನೇ), ಮೆಗಾನ್ ಶೆಟ್(ಏಳನೇ)ಹಾಗೂ ಕಿಮ್ ಗರ್ತ್(ಎಂಟನೇ)ಸೇರಿಕೊಂಡಿದ್ದಾರೆ. ಬೌಲರ್ಗಳ ಪೈಕಿ ದೀಪ್ತಿ ಶರ್ಮಾ ಅಗ್ರ-10ರಲ್ಲಿ ಸ್ಥಾನ ಪಡೆದಿರುವ ಭಾರತದ ಏಕೈಕ ಆಟಗಾರ್ತಿಯಾಗಿದ್ದಾರೆ. ಏಕದಿನ ಆಲ್ರೌಂಡರ್ಗಳ ರ್ಯಾಂಕಿಂಗ್ನಲ್ಲಿ ಗಾರ್ಡ್ನರ್(516)ನಂ.1 ಸ್ಥಾನ ಉಳಿಸಿಕೊಂಡಿದ್ದಾರೆ. ಎರಡನೇ ಸ್ಥಾನದಲ್ಲಿರುವ ವೆಸ್ಟ್ಇಂಡೀಸ್ನ ಹ್ಯಾಲಿ ಮ್ಯಾಥ್ಯೂಸ್(418)ಗಿಂತ ಸುಮಾರು 100 ರೇಟಿಂಗ್ ಪಾಯಿಂಟ್ಗಳಿಂದ ಮುಂದಿದ್ದಾರೆ. ಟಾಪ್-10 ಆಲ್ರೌಂಡರ್ಗಳ ರ್ಯಾಂಕಿಂಗ್ನಲ್ಲಿ ದೀಪ್ತಿ ಐದನೇ ಸ್ಥಾನ ಪಡೆದಿದ್ದಾರೆ.
ಮಸ್ಕತ್ನಿಂದ ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿಳಿದ ಪ್ರಯಾಣಿಕರು
ಮಂಗಳೂರು, ಮಾ.3: ಗಲ್ಫ್ ಯುದ್ಧದಿಂದ ಸ್ಥಗಿತಗೊಂಡಿದ್ದ ವಿಮಾನ ಸಂಚಾರವು ಮಂಗಳವಾರ ಮತ್ತೆ ಆರಂಭಗೊಂಡಿದೆ. ಮಂಗಳವಾರ ಸಂಜೆ ಸುಮಾರು 5:30ಕ್ಕೆ ಮಸ್ಕತ್ನಿಂದ 169 ಪ್ರಯಾಣಿಕರನ್ನು ಹೊತ್ತಿದ್ದ ಏರ್ ಇಂಡಿಯಾ ಎಕ್ಸ್ಪ್ರೆಸ್ 818 ವಿಮಾನವು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿಯಿತು. ಮಸ್ಕತ್ನಲ್ಲಿ ನಮಗೆ ಯಾವುದೇ ತೊಂದರೆಯಾಗಿಲ್ಲ. ಆದರೆ ವಿಮಾನ ಸಂಚಾರ ರದ್ದಾಗಿದ್ದರಿಂದ ತುಂಬಾ ಆತಂಕವಾಗಿತ್ತು. ಮಂಗಳೂರು ವಿಮಾನ ಸಂಚಾರವು ಸೋಮವಾರ ರಾತ್ರಿ ಖಚಿತವಾಗಿತ್ತು ಎಂದು ಪ್ರಯಾಣಿಕರೊಬ್ಬರು ಪ್ರತಿಕ್ರಿಯಿಸಿದ್ದಾರೆ. ಮಂಗಳವಾರ ಬೆಳಗ್ಗೆ 9:20ಕ್ಕೆ ಏರ್ಇಂಡಿಯಾ ಎಕ್ಸ್ಪ್ರೆಸ್ 817 ಮಂಗಳೂರಿನಿಂದ ಮಸ್ಕತ್ಗೆ 147 ಪ್ರಯಾಣಿಕರನ್ನು ಕರೆದೊಯ್ದಿದೆ ಎಂದು ಮೂಲಗಳು ತಿಳಿಸಿವೆ.
ಶಬರಿಮಲೆ ದೇವಾಲಯಕ್ಕೆ ಮಹಿಳೆಯರ ಪ್ರವೇಶ ವಿರೋಧಿಸಿ ಸುಪ್ರಿಂ ಕೋರ್ಟ್ಗೆ ಅಫಿಡವಿಟ್ ಸಲ್ಲಿಸಲು ಆಡಳಿತ ಮಂಡಳಿ ನಿರ್ಧಾರ
ತಿರುವನಂತಪುರ: ಮಹಿಳೆಯರ ಶಬರಿಮಲೆ ದೇವಾಸ್ಥಾನ ಪ್ರವೇಶದ ಕುರಿತು ಅಸ್ತಿತ್ವದಲ್ಲಿರುವ ಸಂಪ್ರದಾಯಗಳನ್ನು ಸಂರಕ್ಷಿಸಲು ತಿರುವಾಂಕೂರು ದೇವಸ್ವಂ ಮಂಡಳಿ ಸುಪ್ರೀಂ ಕೋರ್ಟ್ನಲ್ಲಿ ಅಫಿಡವಿಟ್ ಸಲ್ಲಿಸಲಿದೆ. 10ರಿಂದ 50 ವರ್ಷದ ಒಳಗಿನ ಮಹಿಳೆಯರ ಪ್ರವೇಶ ನಿಷೇಧವನ್ನು ಮುಂದುವರಿಸಬೇಕು ಎಂದು ಸೋಮವಾರ ನಡೆದ ಆಡಳಿತ ಮಂಡಳಿಯ ಸಭೆಯಲ್ಲಿ ನಿರ್ಧರಿಸಲಾಗಿದೆ. ಈ ಕುರಿತು ಆಡಳಿತ ಮಂಡಳಿ ಸುಪ್ರೀಂ ಕೋರ್ಟ್ಗೆ ಅಫಿಡವಿಟ್ ಸಲ್ಲಿಸಲಿದೆ ಎಂದು ಆಡಳಿತ ಮಂಡಳಿಯ ಅಧ್ಯಕ್ಷ ಕೆ. ಜಯ ಕುಮಾರ್ ಸೋಮವಾರ ತಿಳಿಸಿದ್ದಾರೆ. ಋತುಸ್ರಾವವಾಗುವ ಮಹಿಳೆಯರಿಗೆ ಕೂಡ ಶಬರಿಮಲೆ ದೇವಸ್ಥಾನ ಪ್ರವೇಶಿಸುವ ಹಕ್ಕಿದೆ ಎಂದು ಸುಪ್ರೀಂ ಕೋರ್ಟ್ 2018 ಸೆಪ್ಟಂಬರ್ನಲ್ಲಿ ತೀರ್ಪು ನೀಡಿತ್ತು.
ಹೋರಾಟಗಳ ಮೂಲಕ ಪಾಠ ಕಲಿತು ಬಂದವನು ನಾನು: ಡಿಸಿಎಂ ಡಿ.ಕೆ. ಶಿವಕುಮಾರ್ | DK Shivakumar
ಕರ್ನಾಟಕ ಕಾಂಗ್ರೆಸ್ ಪಕ್ಷದಲ್ಲಿ ಒಂದು ಕಡೆ ಸಿಎಂ ಬದಲಾವಣೆ ವಿಚಾರ ದೊಡ್ಡ ಚರ್ಚೆಗೆ ವೇದಿಕೆಯನ್ನ ಒದಗಿಸಿದೆ. ಇದೇ ಸಮಯದಲ್ಲಿ ಒಂದು ಕಡೆ ಸಿಎಂ ಬಣ ಹಾಗೂ ಡಿಸಿಎಂ ಬಣ ಎಂದು ಕಾಂಗ್ರೆಸ್ ಪಕ್ಷ ಎರಡು ಭಾಗವಾಗಿದೆ ಎಂದು ವಿರೋಧ ಪಕ್ಷ ಬಿಜೆಪಿ &ಜೆಡಿಎಸ್ ನಾಯಕರು ಆರೋಪ ಮಾಡ್ತಾ ಇದ್ದಾರೆ. ಇಂತಹ ಸಮಯದಲ್ಲೇ ಡಿಸಿಎಂ ಡಿ.ಕೆ. ಶಿವಕುಮಾರ್
ಭಟ್ಕಳ: ಶಾಲಾ ವಾಹನ ಪಲ್ಟಿ; 13 ವಿದ್ಯಾರ್ಥಿಗಳಿಗೆ ಗಾಯ
ಭಟ್ಕಳ: ತಾಲೂಕಿನ ಬೆಳಲಖಂಡ ಗ್ರಾಮದ ಕಡಸಲಗದ್ದೆ ಪುರಸಭೆ ಕಸ ಹಾಕುವ ಸ್ಥಳದ ಸಮೀಪದ ರಾಜ್ಯ ಹೆದ್ದಾರಿ–50 ಭಟ್ಕಳ–ಸಾಗರ ರಸ್ತೆಯಲ್ಲಿ ಶಾಲಾ ವಾಹನ ಪಲ್ಟಿಯಾದ ಘಟನೆ ಮಂಗಳವಾರ ಬೆಳಿಗ್ಗೆ ಸಂಭವಿಸಿದೆ. ಮಾಹಿತಿ ಪ್ರಕಾರ, ನಾಗುವಳ್ಳಿ ಹಾಗೂ ಹಾಡುವಳ್ಳಿ, ಕುಂಟವಾಣಿ ಭಾಗದ ಶಾಲಾ ಮಕ್ಕಳನ್ನು ಭಟ್ಕಳದತ್ತ ಕರೆದುಕೊಂಡು ಬರುತ್ತಿದ್ದ ವೇಳೆ ವಾಹನವನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಲಾಗುತ್ತಿತ್ತು ಎನ್ನಲಾಗಿದೆ. ಈ ಸಂದರ್ಭದಲ್ಲಿ ವಾಹನ ನಿಯಂತ್ರಣ ತಪ್ಪಿ ರಸ್ತೆಯ ಬದಿಯಲ್ಲಿದ್ದ ಮರಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ. ಅಪಘಾತದ ಪರಿಣಾಮವಾಗಿ ವಾಹನದಲ್ಲಿದ್ದ 13 ಮಂದಿ ಶಾಲಾ ವಿದ್ಯಾರ್ಥಿಗಳಿಗೆ ಸಣ್ಣ ಪ್ರಮಾಣದ ಗಾಯಗಳಾಗಿವೆ. ಗಾಯಗೊಂಡ ವಿದ್ಯಾರ್ಥಿಗಳಲ್ಲಿ ವಾಸುಕಿ (7), ಪ್ರದ್ವಿತ್ (12), ನಕ್ಷಾ (8), ಅಕಾಂಶ (11), ಅಭಿನಂದನ (6), ಜೋಸ್ಮಿನ್ (11), ಜಿಯೋನಾ ರೆಜಿ (12), ಟ್ರೇಸಾ (14), ದಿಶಾ (6), ತಮನ್ನಾ (10), ಸನಾತ್ (9), ಅರವ್ (5) ಹಾಗೂ ವಂಶಿತಾ (11) ಸೇರಿದ್ದಾರೆ. ಚಾಲಕನಿಗೂ ಗಾಯಗಳಾಗಿದ್ದು, ಗಾಯಾಳುಗಳನ್ನೆಲ್ಲ ಭಟ್ಕಳ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ ಎಂದು ತಿಳಿದುಬಂದಿದೆ. ನಾಗುವಳ್ಳಿ ಮೂಲದ ಚಾಲಕ ಮಂಜುನಾಥ ಜಟ್ಟಪ್ಪ ನಾಯ್ಕ ವಿರುದ್ಧ ಭಟ್ಕಳ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
IPL ವೇಳಾಪಟ್ಟಿ ಬಿಡುಗಡೆಗೆ ವಿಧಾನಸಭಾ ಚುನಾವಣೆ ತಡೆ
ಮುಂಬೈ: ಅಸ್ಸಾಮ್, ಪಶ್ಚಿಮಬಂಗಾಳ ಮತ್ತು ತಮಿಳುನಾಡು ವಿಧಾನಸಭೆಗಳಿಗೆ ನಡೆಯಲಿರುವ ಚುನಾವಣೆಯ ಹಿನ್ನೆಲೆಯಲ್ಲಿ, ಮುಂಬರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನ ವೇಳಾಪಟ್ಟಿಯ ಘೋಷಣೆಯನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ)ಯು ತಡೆಹಿಡಿದಿದೆ. ಮತದಾನ ನಡೆಯುವ ದಿನಾಂಕಗಳು ಮತ್ತು ಹಂತಗಳ ಬಗ್ಗೆ ಸ್ಪಷ್ಟತೆ ಲಭಿಸಿದ ಬಳಿಕ, ಎಷ್ಟು ಸಾಧ್ಯವೋ ಅಷ್ಟು ಬೇಗ ವೇಳಾಪಟ್ಟಿಯನ್ನು ಪ್ರಕಟಿಸಲಾಗುವುದು ಎಂದು ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯ ‘ಸ್ಪೋರ್ಟ್ಸ್ಟಾರ್’ಗೆ ತಿಳಿಸಿದ್ದಾರೆ. ಅಲ್ಲಿಯವರೆಗೆ, ಆಟಗಾರರ ಪ್ರಯಾಣ ಮತ್ತು ಭದ್ರತಾ ವ್ಯವಸ್ಥೆಗಳ ಬಗ್ಗೆ ತಂಡಗಳು ಕಾದು ನೋಡಬೇಕಾಗಿದೆ. ವಿಳಂಬವು ತಂಡಗಳ ವೇಳಾಪಟ್ಟಿಯನ್ನು ಅಸ್ತವ್ಯಸ್ತಗೊಳಿಸಿದೆ. ಹಾಗಾಗಿ, ಹಿಂದಿನ ಚುನಾವಣಾ ವರ್ಷಗಳ ಅನುಭವಗಳ ಆಧಾರದಿಂದ ತಂಡಗಳು ವಿಳಂಬಕ್ಕೆ ಹೊಂದಿಕೊಳ್ಳಲು ಆಂತರಿಕ ವ್ಯವಸ್ಥೆಗಳನ್ನು ಮಾಡಿಕೊಳ್ಳುತ್ತಿವೆ. ಹಂತಗಳಲ್ಲಿ ಶಿಬಿರಗಳನ್ನು ಹಮ್ಮಿಕೊಳ್ಳಲಾಗಿದೆ ಹಾಗೂ ಕಾರ್ಯಾಚರಣಾ ಕಾರ್ಯಸೂಚಿಯನ್ನು ಸಿದ್ಧಪಡಿಸಲಾಗುತ್ತಿದೆ. ‘‘ಸಮಯದ ಮಿತಿ ಎದುರಾಗಿದೆ. ಆದರೆ ಇಂಥ ಸಂಗತಿಗಳು ಯಾರ ನಿಯಂತ್ರಣದಲ್ಲೂ ಇಲ್ಲ’’ ಎಂದು ತಂಡವೊಂದರ ಹಿರಿಯ ಅಧಿಕಾರಿಯೊಬ್ಬರು ಹೇಳಿದರು. ಒಮ್ಮೆ ಚುನಾವಣಾ ವೇಳಾಪಟ್ಟಿ ಹೊರಬಿದ್ದ ಬಳಿಕ, ಸಿದ್ಧತೆಗಳು ಭರದಿಂದ ನಡೆಯುತ್ತವೆ ಎಂದು ಅವರು ಹೇಳುತ್ತಾರೆ. 2026ರ ಆವೃತ್ತಿಯ ಐಪಿಎಲ್ ಮಾರ್ಚ್ 28ರಂದು ಆರಂಭಗೊಳ್ಳಲಿದೆ.
Rajasthan | ದಲಿತ ವಿದ್ಯಾರ್ಥಿನಿಗೆ ಜಾತಿ ನಿಂದನೆ ಆರೋಪ: ಇಬ್ಬರು ಪ್ರಾದ್ಯಾಪಕರ ವಿರುದ್ಧ ಪ್ರಕರಣ ದಾಖಲು
ಚುರು (ರಾಜಸ್ಥಾನ): ರಾಜಸ್ಥಾನದ ಚುರುವಿನ ಸರಕಾರಿ ಕಾನೂನು ಕಾಲೇಜಿನ 30 ವರ್ಷದ ವಿದ್ಯಾರ್ಥಿನಿಯೋರ್ವಳು ತನ್ನ ಇಬ್ಬರು ಪ್ರಾದ್ಯಾಪಕರ ವಿರುದ್ಧ ಜಾತಿ ತಾರತಮ್ಯ ಎಸಗಿರುವುದಾಗಿ ಹಾಗೂ ಪರೀಕ್ಷೆಯಲ್ಲಿ ಅನುತ್ತೀರ್ಣಗೊಳಿಸಿರುವುದಾಗಿ ಆರೋಪಿಸಿದ್ದಾಳೆ ಎಂದು ವರದಿಯಾಗಿದೆ. ಪ್ರಾದ್ಯಾಪಕರಾದ ಅಪೂರ್ವ ಶರ್ಮಾ ಹಾಗೂ ಅನಿಲ್ ಸಾರ್ವಜನಿಕ ಸ್ಥಳದಲ್ಲಿ ತನಗೆ ಜಾತಿ ನಿಂದನೆ ಮಾಡಿದ್ದಾರೆ ಎಂದು ಆರೋಪಿಸಿ ವಿದ್ಯಾರ್ಥಿನಿ ಮೀನಾ ಮೇಘವಾಲ್ ಕೊಟ್ವಾಲಿ ಪೊಲೀಸ್ ಠಾಣೆಯಲ್ಲಿ ಫೆಬ್ರವರಿ 27ರಂದೂ ದೂರು ದಾಖಲಿಸಿದ್ದಾರೆ. ‘‘ನನ್ನನ್ನು ಅನುತ್ತೀರ್ಣಗೊಳಿಸುವುದಾಗಿ ಅವರು ಬೆದರಿಕೆ ಹಾಕಿದ್ದರು ಎಂದು ಮೇಘವಾಲ್ ಅವರು ದೂರಿನಲ್ಲಿ ಆರೋಪಿಸಿದ್ದಾರೆ. ಮೇಘವಾಲ್ ಅವರು ಕಾನೂನು ಕಾಲೇಜಿನ ಮೂರನೇ ಸೆಮಿಸ್ಟರ್ನ ವಿದ್ಯಾರ್ಥಿನಿ. 2025 ಡಿಸೆಂಬರ್ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮೇಘವಾಲ್ ಕೇಳಿದ ಪ್ರಶ್ನೆಯಿಂದ ಅಪೂರ್ವ ಶರ್ಮಾ ಅವರು ಕೋಪಗೊಂಡಿದ್ದರು. ಮೇಘವಾಲ್ ಅವರ ಹೇಳಿಕೆಯ ಪ್ರಕಾರ, ಅಪೂರ್ವ ಶರ್ಮಾ ಅವರು ಆಕೆಗೆ ತಿರಸ್ಕಾರದಿಂದ ಉತ್ತರ ನೀಡಿದರು ಹಾಗೂ ದೂರ ತಳ್ಳಿದರು. ಅಪೂರ್ವ ಶರ್ಮಾ ಅವರು ‘ಚಮಾರಿ’ಯಂತಹ ಜಾತಿ ನಿಂದನೆಯ ಪದ ಬಳಸಿದರು. ‘‘ನೀನು ಕೆಳ ಜಾತಿಯಿಂದ ಬಂದಿದ್ದೀಯ. ನೀನು ಎಲ್ಎಲ್ಬಿ ಮಾಡಲು ಸಾಧ್ಯವಿಲ್ಲ. ಇದು ನಿನ್ನ ಕೆಲಸವಲ್ಲ’’ ಎಂದು ಅವರು ಹೇಳಿದ್ದರು. ‘‘ಎಲ್ಲಾ ವಿದ್ಯಾರ್ಥಿಗಳ ಎದುರು ಚಮಾರಿ ಎಂದು ಕರೆದಿರುವುದರಿಂದ ನನಗೆ ಅವಮಾನವಾಯಿತು’’ ಎಂದು ಮೇಘವಾಲ್ ತಿಳಿಸಿದ್ದಾರೆ. ಪ್ರಾದ್ಯಾಪಕರಾದ ಅಪೂರ್ವ ಶರ್ಮಾ ಅವರು ತನ್ನ ವಿರುದ್ಧ ಜಾತಿ ದ್ವೇಷ ಹೊಂದಿದ್ದರು. ತನ್ನನ್ನು ನಿರಂತರ ಅವಮಾನಿಸುತ್ತಿದ್ದರು. ತನ್ನನ್ನು ಅನುತ್ತೀರ್ಣ ಕೂಡ ಮಾಡಿದರು ಎಂದು ಅವರು ಹೇಳಿದ್ದಾರೆ. ‘‘ಪ್ರಾಯೋಗಿಕ ಪರೀಕ್ಷೆಯಲ್ಲಿ ಕಡಿಮೆ ಅಂಕಗಳನ್ನು ನೀಡುವ ಮೂಲಕ ನಾನು ಅನುತ್ತೀರ್ಣವಾಗುವಂತೆ ಅವರು ಮಾಡಿದ್ದಾರೆ’’ ಎಂದು ಅವರು ತಿಳಿಸಿದ್ದಾರೆ. ಮೇಘವಾಲ್ ಅವರ ದೂರಿನ ಆಧಾರದಲ್ಲಿ ಪೊಲೀಸರು ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ದೌರ್ಜನ್ಯ ತಡೆ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ತೆಲಂಗಾಣ: ಸರಕಾರಿ ಆಸ್ಪತ್ರೆಯ ಶವಾಗರದಲ್ಲಿರಿಸಿದ್ದ ಮೃತದೇಹ ಕಚ್ಚಿ ತಿಂದ ಬೀದಿ ನಾಯಿ!
ಜಡಚೇರ್ಲ: ತೆಲಂಗಾಣದ ಜಡಚೇರ್ಲಾ ಸರಕಾರಿ ಆಸ್ಪತ್ರೆಯ ಶವಾಗಾರದಲ್ಲಿ ಬೀದಿ ನಾಯಿಯೊಂದು ವ್ಯಕ್ತಿಯೊಬ್ಬರ ದೇಹವನ್ನು ಕಚ್ಚಿ ತಿಂದ ಆಘಾತಕಾರಿ ಘಟನೆ ನಡೆದಿದೆ. ಇದು ಆಸ್ಪತ್ರೆಯ ಭದ್ರತೆ ಹಾಗೂ ಮೂಲಭೂತ ಸೌಕರ್ಯಗಳಲ್ಲಿ ಗಂಭೀರ ಲೋಪವನ್ನು ಬಹಿರಂಗಪಡಿಸಿದೆ. ಈ ಘಟನೆ ಸರಕಾರಿ ಜಿಲ್ಲಾಸ್ಪತ್ರೆಯಲ್ಲಿ ಸೋಮವಾರ ನಡೆದಿದೆ. ಜಡಚೇರ್ಲ ಮಂಡಲದ ನಾಗಸಾಲಾ ಗ್ರಾಮದ ಲಾರಿ ಚಾಲಕ ಪೋಲೆ ಭೀಮೇಶ್ವರ್ (32) ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಶವಾಗಾರದಲ್ಲಿ ಇರಿಸಲಾಗಿತ್ತು. ಸಮರ್ಪಕ ವ್ಯವಸ್ಥೆಯ ಕೊರತೆಯಿಂದ ಮೃತದೇಹವನ್ನು ನೆಲದ ಮೇಲೆ ಇರಿಸಲಾಗಿತ್ತು. ಬೀದಿ ನಾಯಿಯೊಂದು ಶವಾಗಾರದ ಒಳಗೆ ಪ್ರವೇಶಿಸಿದೆ ಹಾಗೂ ಮೃತದೇಹದ ಕೈಯನ್ನು ಕಚ್ಚಿದೆ. ಸಿಸಿಟಿವಿ ಕೆಮರಾದಲ್ಲಿ ಸೆರೆಯಾದ ಈ ದೃಶ್ಯ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಅನಂತರ ಇದು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಮರಣೋತ್ತರ ಪರೀಕ್ಷೆಯ ಸಿಬ್ಬಂದಿ ಆಗಮಿಸಿದಾಗ ನಾಯಿ ಓಡಿತು. ಆಸ್ಪತ್ರೆಯ ಸಿಬ್ಬಂದಿ ನಾಯಿಯನ್ನು ದೂರ ಓಡಿಸಿದರು ಎಂದು ಆಸ್ಪತ್ರೆಯ ಅಧೀಕ್ಷಕರಾದ ಚಂದ್ರಕಲಾ ಅವರು ತಿಳಿಸಿದ್ದಾರೆ.
ಗರಿಷ್ಠ ಮುನ್ನೆಚ್ಚರಿಕೆ ವಹಿಸಬೇಕು: ಟೆಹರಾನ್ ನಲ್ಲಿರುವ ಭಾರತೀಯರಿಗೆ ಕೇಂದ್ರ ಸರಕಾರ ಮನವಿ
ಟೆಹರಾನ್: ಅಮೆರಿಕ ಹಾಗೂ ಇಸ್ರೇಲ್ ಜಂಟಿ ಸೇನಾ ಕಾರ್ಯಾಚರಣೆಯಿಂದಾಗಿ ಪರ್ಶಿಯನ್ ಕೊಲ್ಲಿ ರಾಷ್ಟ್ರವಾದ ಇರಾನ್ನಲ್ಲಿ ಭದ್ರತಾ ಪರಿಸ್ಥಿತಿ ತೀವ್ರ ಹದಗೆಟ್ಟಿರುವುದರಿಂದ ರಾಜಧಾನಿ ಟೆಹರಾನ್ನಲ್ಲಿರುವ ಭಾರತೀಯರು ಗರಿಷ್ಠ ಮುನ್ನೆಚ್ಚರಿಕೆಯನ್ನು ವಹಿಸಬೇಕು ಹಾಗೂ ಸಾಧ್ಯವಾದಷ್ಟು ಮಟ್ಟಿಗೆ ಮನೆ, ಕಟ್ಟಡದೊಳಗೆ ಉಳಿದುಕೊಳ್ಳಬೇಕೆಂದು ಭಾರತವು ತನ್ನ ಪ್ರಜೆಗಳಿಗೆ ಸಲಹೆ ನೀಡಿದೆ. ಪರಿಸ್ಥಿತಿಯ ಬೆಳವಣಿಗೆಯ ಹಿನ್ನೆಲೆಯಲ್ಲಿ, ಎಲ್ಲಾ ಭಾರತೀಯ ಪ್ರಜೆಗಳು ಅನಗತ್ಯವಾಗಿ ಹೊರಗೆ ಸಂಚರಿಸುವುದನ್ನು ತಪ್ಪಿಸಬೇಕು ಹಾಗೂ ಸಾಧ್ಯವಿದ್ದಷ್ಟು ಮಟ್ಟಿಗೆ ಮನೆಯೊಳಗೆ ಉಳಿದುಕೊಳ್ಳಬೇಕು’’ ಎಂದು ಟೆಹರಾನ್ನಲ್ಲಿರುವ ಭಾರತೀಯ ರಾಯಭಾರಿ ಕಚೇರಿ ತಿಳಿಸಿದೆ. ‘‘ಭಾರತೀಯರು ಸುದ್ದಿಗಳ ಮೇಲೆ ನಿಗಾವಿರಿಸುತ್ತಿರಬೇಕು, ಸಾದಂರ್ಭಿಕ ಜಾಗರೂಕತೆಯನ್ನು ಕಾಪಾಡಿಕೊಳ್ಳಬೇಕು ಹಾಗೂ ಭಾರತೀಯ ರಾಯಭಾರಿ ಕಚೇರಿಯ ಮಾರ್ಗದರ್ಶನಗಳನ್ನು ಪಾಲಿಸಬೇಕು’’ ಎಂದು ಅದು ಹೇಳಿದೆ. ಪ್ರಸಕ್ತ ಇರಾನ್ನಲ್ಲಿ ವಿದ್ಯಾರ್ಥಿಗಳು ಸೇರಿದಂತೆ ಸುಮಾರು 9 ಸಾವಿರ ಮಂದಿ ಭಾರತೀಯರು ಸಿಕ್ಕಿಹಾಕಿಕೊಂಡಿರಬೇಕೆಂದು ಶಂಕಿಸಲಾಗಿದೆ.
“ದುಬೈ ಪರಿಸ್ಥಿತಿ ಕುರಿತು ಕನ್ನಡ ಟಿವಿ ಚಾನೆಲ್ ಗಳು ಬಿತ್ತರಿಸುತ್ತಿರುವ ಕಪೋಲಕಲ್ಪಿತ ಸುದ್ದಿಗಳನ್ನು ನಿಲ್ಲಿಸಿ”
'ವಾರ್ತಾ ಭಾರತಿ' ಚಾನಲ್ ಚರ್ಚೆಯಲ್ಲಿ ಡಾ.ರೊನಾಲ್ಡ್ ಕೊಲಾಸೊ ಮನವಿ
‘ಆಲಮಟ್ಟಿ ಎತ್ತರ ಹೆಚ್ಚಳಕ್ಕೆ ಆಂಧ್ರ ಅಡ್ಡಗಾಲು’; ಕೇಂದ್ರ ಸರಕಾರ ಮಧ್ಯ ಪ್ರವೇಶಿಸಲಿ : ಡಿ.ಕೆ.ಶಿವಕುಮಾರ್
‘ಸರ್ವಪಕ್ಷ ನಿಯೋಗ ಕೊಂಡೊಯ್ಯಲು ತಯಾರಿ’
ಪ್ರಶಸ್ತಿ ಪುರಸ್ಕೃತ ಇರಾಕ್ನ ಮಹಿಳಾ ಹಕ್ಕುಗಳ ಕಾರ್ಯಕರ್ತೆಯ ಗುಂಡಿಕ್ಕಿ ಹತ್ಯೆ
ಬಾಗ್ದಾದ್: ಪ್ರಶಸ್ತಿ ಪುರಸ್ಕೃತ ಇರಾಕ್ನ ಮಹಿಳಾ ಹಕ್ಕುಗಳ ಕಾರ್ಯಕರ್ತೆ ಯಾನಾರ್ ಮೊಹಮ್ಮದ್ ಅವರನ್ನು ಬಾಗ್ದಾದ್ನಲ್ಲಿ ಸೋಮವಾರ ಗುಂಡಿಕ್ಕಿ ಹತ್ಯೆಗೈಯಲಾಗಿದೆ ಎಂದು ಅವರು ನಡೆಸುತ್ತಿದ್ದ ಸಂಘಟನೆಯೊಂದು ತಿಳಿಸಿದೆ. ಬೆಳಗ್ಗೆ 9:00 ಗಂಟೆಯ ವೇಳೆಗೆ ಮೋಟಾರ್ಸೈಲ್ನಲ್ಲಿ ಆಗಮಿಸಸಿದ ಇಬ್ಬರು ಬಂದೂಕುಧಾರಿಗಳು ಆಕೆಯ ನಿವಾಸದ ಹೊರಗೆ ಗುಂಡುಹಾರಾಟ ನಡೆಸಿದರೆಂದು, ಇರಾಕ್ನಲ್ಲಿನ ಮಹಿಳಾ ಹಕ್ಕುಗಳ ಸಂಘಟನೆ (ಒಡಬ್ಲ್ಯುಎಫ್ಐ) ವರದಿ ಮಾಡಿದೆ. ಗುಂಡಿನ ದಾಳಿಯಲ್ಲಿ ಯಾನಾರ್ ಅವರಿಗೆ ಗಂಭೀರವಾದ ಗಾಯಗಳಾಗಿದ್ದು, ಆಕೆಯನ್ನು ತಕ್ಷಣವೇ ಆಸ್ಪತ್ರೆಗೆ ಕೊಂಡೊಯ್ಯಲಾಯಿತಾದರೂ,ಅಲ್ಲಿ ಅವರು ಕೊನೆಯುಸಿರೆಳೆದರೆಂದು’’ ಓಡಬ್ಲ್ಯುಎಫ್ಐ ಹೇಳಿಕೆ ತಿಳಿಸಿದೆ. ಹಿಂಸಾಚಾರದಿಂದ ಸಂತ್ರಸ್ತರಾದ ಮಹಿಳೆಯರಿಗೆ ರಕ್ಷಣೆನ್ನು ನೀಡುವ ಉದ್ದೇಶದೊಂದಿಗೆ 2003ರಲ್ಲಿ ಸ್ಥಾಪನೆಯಾದ ಓಡಬ್ಲ್ಯುಎಫ್ಐಗೆ ಯಾನಾರ್ ಅವರು ಸಹಸಂಸ್ಥಾಪಕಿಯಾಗಿದ್ದರು. ಇರಾಕ್ನಲ್ಲಿ ಅಲ್ಪಸಂಖ್ಯಾತರು ಹಾಗೂ ಲೈಂಗಿಕ ದೌರ್ಜನ್ಯಕ್ಕೊಳಗಾದ ಮಹಿಳೆಯರಿಗೆ ನೆರವಾಗುವಲ್ಲಿ ಯಾನಾರ್ ಅವರ ಸಾಧನೆಯನ್ನು ಪರಿಗಣಿಸಿ 2016ರಲ್ಲಿ ನಾರ್ವೆಯ ಮಾನವಹಕ್ಕುಗಳಿಗಾಗಿನ ಪ್ರತಿಷ್ಠಿತ ರಾಫ್ಟೊ ಪ್ರಶಸ್ತಿಯನ್ನು ಯಾನಾರ್ ಅವರಿಗೆ ನೀಡಲಾಗ್ತಿು.
ಅಡ್ಡೂರು ಸೆಂಟ್ರಲ್ ಕಮಿಟಿಯಿಂದ ರಮಝಾನ್ ಕಿಟ್ ವಿತರಣೆ
ಬಜ್ಪೆ: ಅಡ್ಡೂರು ಸೆಂಟ್ರಲ್ ಕಮಿಟಿ ವತಿಯಿಂದ ಪ್ರತಿ ವರ್ಷದಂತೆ ಈ ಬಾರಿ ಆಯ್ದ 350 ಕುಟುಂಬಗಳಿಗೆ ರವಿವಾರ ಅಡ್ಡೂರು ಕಮ್ಯೂನಿಟಿ ಸೆಂಟರ್ ನಲ್ಲಿ ರಮಝಾನ್ ಕಿಟ್ ವಿತರಣೆ ಮಾಡಲಾಯಿತು. ಈ ಸಂದರ್ಭ ಮಾತನಾಡಿದ ಉಪಾಧ್ಯಕ್ಷ ಇಬ್ರಾಹೀಂ ಅಲಕೆ, ರಂಝಾನ್ ತಿಂಗಳು ದಾನ, ಸಹಾನುಭೂತಿ ಮತ್ತು ಸಹೋದರತ್ವದ ಸಂಕೇತವಾಗಿದೆ. ಸಮಿತಿಯ ಸಮಾಜಮುಖಿ ಚಟುವಟಿಕೆಗಳ ಭಾಗವಾಗಿ ಅಡ್ಡೂರು ಆಸುಪಾಸಿನ ಒಟ್ಟು 350 ಅಗತ್ಯವಿರುವ ಕುಟುಂಬಗಳಿಗೆ ರಂಜಾನ್ ಕಿಟ್ಗಳನ್ನು ವಿತರಿಸಲಾಯಿತು. ಉಪವಾಸ ಆಚರಿಸುವ ಕುಟುಂಬಗಳಿಗೆ ಆಹಾರ ಮತ್ತು ದಿನನಿತ್ಯದ ಅವಶ್ಯಕ ವಸ್ತುಗಳ ನೆರವು ದೊರಕಬೇಕು ಎಂಬ ಆಶಯದಿಂದ ಯೋಜನೆ ರೂಪಿಸಿ, ಪ್ರತಿ ಕಿಟ್ ಕೂಡಾ ಒಂದು ಕುಟುಂಬಕ್ಕೆ ರಂಝಾನ್ ಅವಧಿಯಲ್ಲಿ ಉಪಯುಕ್ತವಾಗುವಂತೆ ಸಮರ್ಪಕ ಪ್ರಮಾಣದಲ್ಲಿ ಸಿದ್ಧಪಡಿಸಲಾಗಿದೆ. ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ನೆರವಾಗುವ ಉದ್ದೇಶದಿಂದ ಸಮಿತಿ ಈ ಸೇವಾ ಕಾರ್ಯವನ್ನು ಕೈಗೊಳ್ಳುತ್ತಿದ್ದು, ನಿರಂತರವಾಗಿ ಈ ಕಾರ್ಯಕ್ರಮ ಮುಂದುವರಿಸಲಾಗುವುದು ಎಂದು ನುಡಿದರು. ಈ ಸಂದರ್ಭ ಸಮಿತಿಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಖಾದರ್, ಪದಾಧಿಕಾರಿಗಳಾದ ಅಬ್ದುಲ್ ಸಲಾಮ್, ಅಬ್ದುಲ್ ಅಝಾಕ್ ಮಂಜೆಟ್ಟಿ, ರಮ್ಲಾನ್, ಅಬ್ದುಲ್ ಖಾದರ್ ಎ.ಕೆ., ಅಬ್ದುಲ್ ಅಝಾಕ್ ಪಿ., ಮುಸ್ತಫಾ, ಕಮಲ್ ಮೊದಲಾದವರು ಉಪಸ್ಥಿತರಿದ್ದರು.
ಐರೋಪ್ಯ ಒಕ್ಕೂಟಕ್ಕೂ ವಿಸ್ತರಿಸಿದ ಸಮರ ಭೀತಿ: ಅಮೆರಿಕ-ಇಸ್ರೇಲ್ಗೆ ಫ್ರಾನ್ಸ್, ಜರ್ಮನಿ, ಬ್ರಿಟನ್ ಸಾಥ್
ಟೆಹ್ರಾನ್: ಇರಾನ್ ವಿರುದ್ಧ ಅಮೆರಿಕ- ಇಸ್ರೇಲ್ ನಡೆಸಿದ ಜಂಟಿ ವಾಯುದಾಳಿ ನಂತರ ಭುಗಿಲೆದ್ದ ಸಂಘರ್ಷದ ಕಿಚ್ಚು ಮಧ್ಯಪ್ರಾಚ್ಯದ ನಂತರ ಈಗ ಐರೋಪ್ಯ ಒಕ್ಕೂಟಕ್ಕೂ ತಾಗುವ ಭೀತಿ ಎದುರಾಗಿದೆ. ಅಮೆರಿಕ- ಇಸ್ರೇಲ್ ಶನಿವಾರ ನಡೆಸಿದ 'ಆಪರೇಷನ್ ಎಪಿಕ್ ಫ್ಯೂರಿ' ಹೆಸರಿನ ಏರ್ಸ್ಟ್ರೈಕ್ನಲ್ಲಿ ಪರಮೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಹತ್ಯೆಯಾದ ನಂತರ ಕುದಿಯುತ್ತಿರುವ ಇರಾನ್ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್(ಐಆರ್ಜಿಸಿ) ಕೊಲ್ಲಿರಾಷ್ಟ್ರಗಳಲ್ಲಿರುವ ಅಮೆರಿಕ ಸೇನಾ ನೆಲೆಗಳು, ರಾಯಭಾರ ಕಚೇರಿಗಳನ್ನು ಗುರಿಯಾಗಿಸಿಕೊಂಡು ಮಂಗಳವಾರವೂ ದಾಳಿ ಮುಂದುವರಿಸಿದೆ. ದೋಹಾ, ಮನಾಮ, ದುಬೈನ ಹಲವು ಇರಾನ್ ಕ್ಷಿಪಣಿ, ಡ್ರೋನ್ ದಾಳಿ ನಡೆಸಿದೆ.ಇದರ ಮಧ್ಯೆ, ಕೊಲ್ಲಿರಾಷ್ಟ್ರಗಳ ಮೇಲಿನ ಇರಾನ್ ದಾಳಿಯನ್ನು ಖಂಡಿಸಿರುವ ಐರೋಪ್ಯ ಒಕ್ಕೂಟದ ಫ್ರಾನ್ಸ್, ಜರ್ಮನಿ, ಬ್ರಿಟನ್ ಜಂಟಿ ಹೇಳಿಕೆ ಬಿಡುಗಡೆ ಮಾಡಿ, ಅಮೆರಿಕ-ಇಸ್ರೇಲ್ಗೆ ಬೆಂಬಲ ನೀಡುವುದಾಗಿ ಘೋಷಿಸಿವೆ. ''ಇರಾನ್ ಕ್ಷಿಪಣಿ ಸಾಮರ್ಥ್ಯ ನಾಶಪಡಿಸಲು ಅಗತ್ಯ ರಕ್ಷಣಾತ್ಮಕ ಕ್ರಮ ಕೈಗೊಳ್ಳಲು ನಾವು ಸಿದ್ಧರಾಗಿದ್ದೇವೆ. ನಮ್ಮ ಕೊಲ್ಲಿಮಿತ್ರ ರಾಷ್ಟ್ರಗಳನ್ನು ರಕ್ಷಿಸಲು ನಾವು ಅಗತ್ಯ ನೆರವು ನೀಡುತ್ತೇವೆ,'' ಎಂದು ಹೇಳಿವೆ. ಮಧ್ಯಪ್ರಾಚ್ಯ ಸಂಘರ್ಷದಲ್ಲಿ ಯುಎಸ್ ಪರ ನಿಂತಿರುವ ಬ್ರಿಟನ್ ಪ್ರಧಾನಿ ಕೀರ್ ಸ್ಟಾರ್ಮರ್ ಅವರು ಅವಶ್ಯಕತೆ ಬಿದ್ದರೆ ಹಿಂದೂ ಮಹಾಸಾಗರದಲ್ಲಿರುವ ಡಿಯಾಗೋ ಗಾರ್ಸಿಯಾ ಮತ್ತು ಇಂಗ್ಲೆಂಡ್ನ ಗ್ಲೌಸೆಸ್ಟರ್ಶೈರ್ನಲ್ಲಿರುವ ಆರ್ಎಎಫ್ ವಾಯುನೆಲೆಗಳನ್ನು ಬಳಸಿಕೊಳ್ಳುವಂತೆ ಟ್ರಂಪ್ಗೆ ಅನುಮತಿ ನೀಡಿದ್ದಾರೆಂದೂ ವರದಿಗಳು ಹೇಳಿವೆ. 3 ರಫೇಲ್ ರವಾನಿಸಿದ ಫ್ರಾನ್ಸ್ ಇರಾನ್ ದಾಳಿಯಿಂದ ಯುಎಇಯಲ್ಲಿರುವ ತನ್ನ ವಾಯುನೆಲೆಗಳನ್ನು ರಕ್ಷಿಸಿಕೊಳ್ಳಲು ಫ್ರಾನ್ಸ್ ಅಬುಧಾಬಿ ಸಮೀಪದ ದಾಫ್ರಾ ಏರ್ಬೇಸ್ಗೆ ಮೂರು ರಫೇಲ್ ಫೈಟರ್ ಜೆಟ್ಗಳನ್ನು ರವಾನಿಸಿದೆ. ಈ ಬೆಳವಣಿಗೆಯ ಬೆನ್ನಲ್ಲೇ ರೊಚ್ಚಿಗೆದ್ದಿರುವ ಇರಾನ್ ವಿದೇಶಾಂಗ ಸಚಿವಾಲಯ, ''ಇಸ್ರೇಲ್ ಮತ್ತು ಅಮೆರಿಕ ವಿರುದ್ಧದ ನಮ್ಮ ಸಮರದಲ್ಲಿ ನೀವೇನಾದರೂ ಭಾಗಿಯಾದರೆ ದೊಡ್ಡ ಬೆಲೆ ತೆರಬೇಕಾಗುತ್ತದೆ,'' ಎಂದು ಐರೋಪ್ಯ ಒಕ್ಕೂಟದ ಈ ಮೂರೂ ರಾಷ್ಟ್ರಗಳಿಗೆ ಎಚ್ಚರಿಸಿದೆ.ಲೆಬನಾನ್ ಮೇಲೆ ಭೂದಾಳಿ: ಹೆಜ್ಬುಲ್ಲಾಬಂಡುಕೋರರನ್ನು ಹೊಂದಿರುವ ಲೆಬನಾನ್ನಲ್ಲಿ ಹೆಚ್ಚುವರಿ ಕಾರ್ಯತಂತ್ರಗಳ ಸಾಧನ ಮೂಲಕ ಹಿಡಿತ ಸಾಧಿಸುವಂತೆ ಇಸ್ರೇಲ್ ರಕ್ಷಣಾ ಸಚಿವರು ಯೋಧರಿಗೆ ಸೂಚನೆ ನೀಡಿದ ಬೆನ್ನಲ್ಲೇ, ಇಸ್ರೇಲ್ ಪಡೆಗಳು ದಕ್ಷಿಣ ಲೆಬನಾನ್ ಗಡಿಯಲ್ಲಿಭೂದಾಳಿ ಆರಂಭಿಸಿವೆ. ಅಮೆರಿಕ ರಾಯಭಾರಿ ಕಚೇರಿ ಧ್ವಂಸ ಸೌದಿ ಅರೇಬಿಯಾದ ರಿಯಾದ್, ಕುವೈತ್ನ ಕುವೈತ್ ಸಿಟಿ, ಜೋರ್ಡಾನ್ನ ಅಮಾನ್ನಲ್ಲಿರುವ ಅಮೆರಿಕದ ರಾಯಭಾರ ಕಚೇರಿಗಳನ್ನು ಹಾಗೂ ಕುವೈತ್ನ ಅಮೆರಿಕ ಮಿಲಿಟರಿ ನೆಲೆ ಅರಿಫ್ಜನ್ ಕ್ಯಾಂಪ್ ಗುರಿಯಾಗಿಸಿಕೊಂಡು ಇರಾನ್ನ 'ಇಸ್ಲಾಮಿಕ್ ರೆವೆಲ್ಯೂಷನರಿ ಗಾರ್ಡ್ ಕಾಫ್ಸ್ರ್' ಡ್ರೋನ್ ದಾಳಿ ನಡೆಸಿದೆ. ಈ ದಾಳಿಯ ಬೆನ್ನಲ್ಲೇ ರಾಯಭಾರ ಕಚೇರಿಗಳನ್ನು ಬಂದ್ ಮಾಡಲಾಗಿದ್ದು, ತುರ್ತು ಸೇವೆಗಳನ್ನಷ್ಟೇ ನೀಡಲಾಗುತ್ತಿದೆ. ಬಹರೇನ್, ಜೋರ್ಡಾನ್, ಕತಾರ್, ಕುವೈತ್, ಸೌದಿ ಅರೇಬಿಯಾ ಸೇರಿದಂತೆ ಕೊಲ್ಲಿರಾಷ್ಟ್ರಗಳಲ್ಲಿರುವ ಅಮೆರಿಕ ರಾಯಭಾರ ಕಚೇರಿ ಸಿಬ್ಬಂದಿ, ಇತರ ಇಲಾಖೆಯ ಅಧಿಕಾರಿಗಳೂ ಹಾಗೂ ಅಮೆರಿಕ ಪ್ರಜೆಗಳು ಅಲ್ಲಿಂದ ತೊರೆಯುವಂತೆ ಅಮೆರಿಕ ವಿದೇಶಾಂಗ ಸಚಿವಾಲಯ ಸೂಚನೆ ನೀಡಿದೆ. ಯುಎಸ್ ರೇಡಾರ್ ನಾಶ? ಕೊಲ್ಲಿರಾಷ್ಟ್ರ ಕತಾರ್ನಲ್ಲಿರುವ ಅಮೆರಿಕದ ಅತಿದೊಡ್ಡ 'ಎಎನ್/ಎಫ್ಪಿಎಸ್-132' ರೇಡಾರ್ಅನ್ನು ಇರಾನ್ ಸೇನೆ ಸಂಪೂರ್ಣ ನಾಶಪಡಿಸಿದೆ ಎಂದು 'ಟೆಹ್ರಾನ್ ಟೈಮ್ಸ್' 'ಎಕ್ಸ್'ನಲ್ಲಿ ಹೇಳಿಕೊಂಡಿದೆ. ಈ ರೇಡಾರ್ 5,000 ಕಿಲೋಮೀಟರ್ ವ್ಯಾಪ್ತಿಯವರೆಗೆ ಟ್ರ್ಯಾಕಿಂಗ್ ಮಾಡುವ ಸಾಮರ್ಥ್ಯ ಹೊಂದಿತ್ತು. ಕತಾರ್ನ ಅಲ್ ಉದೈದ್ ವಾಯುನೆಲೆಯಲ್ಲಿ ಅಮೆರಿಕವು 2013ರಲ್ಲಿ1.1 ಬಿಲಿಯನ್ ಡಾಲರ್ ವೆಚ್ಚದಲ್ಲಿಈ ರೇಡಾರ್ಅನ್ನು ನಿರ್ಮಿಸಿತ್ತು. ಖಂಡಾಂತರ ಕ್ಷಿಪಣಿಗಳನ್ನು ಪತ್ತೆಹಚ್ಚಲು ಮತ್ತು ತಡೆಯಲು ಈ ರೇಡಾರ್ ಅತ್ಯಗತ್ಯವಾಗಿತ್ತು. ಇದರ ನಾಶದ ಕುರಿತು ಅಮೆರಿಕ ಯಾವುದೇ ಸ್ಪಷ್ಟನೆ ನೀಡಿಲ್ಲ.
ರೈಲು ಢಿಕ್ಕಿ ಹೊಡೆದು ವ್ಯಕ್ತಿ ಮೃತ್ಯು
ಉಳ್ಳಾಲ: ರೈಲು ಡಿಕ್ಕಿಯಾಗಿ ವ್ಯಕ್ತಿ ಯೊಬ್ಬರು ಮೃತಪಟ್ಟ ಘಟನೆ ತೊಕ್ಕೊಟ್ಟು ಓವರ್ ಬ್ರಿಡ್ಜ್ ಬಳಿ ಸಂಭವಿಸಿದೆ. ಮೃತ ಪಟ್ಟ ವ್ಯಕ್ತಿ ಯನ್ನು ಕುಂಪಲ ಲಕ್ಷ್ಮಿಗುಡ್ಡೆ ನಿವಾಸಿ ಕಿರಣ(47) ಎಂದು ಗುರುತಿಸಲಾಗಿದೆ. ಅವರು ರೈಲು ಟ್ರ್ಯಾಕ್ ಬಳಿ ಕುಳಿತಿದ್ದ ವೇಳೆ ರೈಲು ಡಿಕ್ಕಿಯಾಗಿ ಈ ದುರ್ಘಟನೆ ಸಂಭವಿಸಿದೆ. ಘಟನಾ ಸ್ಥಳಕ್ಕೆ ರೈಲ್ವೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಈ ವೇಳೆ ಮೃತ ವ್ಯಕ್ತಿಯ ಕಿಸೆಯಲ್ಲಿ ಮೊಬೈಲ್ ಪತ್ತೆ ಆಗಿದೆ. ಈ ಮೊಬೈಲ್ ಆಧಾರದಲ್ಲಿ ಗುರುತು ಪತ್ತೆ ಹಚ್ಚಿದ ಪೊಲೀಸರು ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದಾರೆ. ಈ ಬಗ್ಗೆ ರೈಲ್ವೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ
ಗಲ್ಫ್ನಲ್ಲಿನ ಅಮೆರಿಕದ ಅತಿ ದೊಡ್ಡ ರಾಡಾರ್ ವ್ಯವಸ್ಥೆ ಧ್ವಂಸ: ಇರಾನ್
ಟೆಹರಾನ್,ಮಾ.3: ಗಲ್ಫ್ ಪ್ರದೇಶದಲ್ಲಿರುವ ಅಮೆರಿಕದ ಅತಿ ದೊಡ್ಡ ರಾಡಾರ್ ವ್ಯವಸ್ಥೆ ಎಎನ್/ಎಫ್ಪಿಎಸ್-132 ಅನ್ನು ನಾಶಪಡಿಸಿರುವುದಾಗಿ ಇರಾನ್ ಘೋಷಿಸಿದೆ. 5 ಸಾವಿರ ಕಿ.ಮೀ.ವರೆಗಿನ ಟ್ರ್ಯಾಕಿಂಗ್ ಸಾಮರ್ಥ್ಯವನ್ನು ಈ ರಾಡಾರ್ ಹೊಂದಿತ್ತು. ಅತ್ಯಾಧುನಿಕ ವಾಯುರಕ್ಷಣಾ ವ್ಯವಸ್ಥೆಗೆ ಎಎನ್/ಎಫ್ಪಿಎಸ್-132ನಂತಹ ರಾಡಾರ್ಗಳು ಅತ್ಯಗತ್ಯವಾಗಿದೆ. 1.1 ಶತಕೋಟಿ ಡಾಲರ್ ವೆಚ್ಚದ ಈ ರಾಡಾರ್ ಅನ್ನು ಅಮೆರಿಕವು 2013ರಲ್ಲಿ ಸ್ಥಾಪಿಸಿತ್ತು. ನಿಖರವಾಗಿ ನಡೆಸಲಾದ ಕ್ಷಿಪಣಿ ದಾಳಿಯೊಂದರಲ್ಲಿ ರಾಡಾರ್ ಅನ್ನು ಸಂಪೂರ್ಣವಾಗಿ ನಾಶಪಡಿಸಿರುವುದಾಗಿ ಐಆರ್ಜಿಸಿಯು ಹೇಳಿಕೊಂಡಿದೆ. ಆನಂತರ ಕತಾರಿ ಅಧಿಕಾರಿಗಳು ಕೂಡಾ ಅದನ್ನು ಒಪ್ಪಿಕೊಂಡಿದ್ದಾರೆ. ಇದರಿಂದಾಗಿ ಅಮೆರಿಕದ ಕಣ್ಗಾವಲು ಕಾರ್ಯಾಚರಣೆಯಲ್ಲಿ ತೀವ್ರ ವ್ಯತ್ಯಯವುಂಟಾಗಿರುವುದಾಗಿ ವರದಿಗಳು ತಿಳಿಸಿವೆ. ರಾಜಧಾನಿ ಟೆಹರಾನ್ನಲ್ಲಿರುವ ಆಸ್ಪತ್ರೆಯೊಂದರ ಮೇಲೆ ಕ್ಷಿಪಣಿ ದಾಳಿ ನಡೆದಿರುವ ಬಗ್ಗೆ ವರದಿಯಾಗಿದೆ. ಕೆರ್ಮಾನ್ ಸೇನಾ ನೆಲೆಯ ಮೇಲೆ ನಡೆದ ದಾಳಿಯಲ್ಲಿ 13 ಮಂದಿ ಇರಾನಿಯನ್ ಸೈನಿಕರು ಸಾವನ್ನಪ್ಪಿದ್ದಾರೆ ಒಂದು ಮಿಲಿಟರಿ ಹೆಲಿಕಾಪ್ಟರ್ ಮೇಲೂ ದಾಳಿ ನಡೆಸಲಾಗಿದೆಯೆಂದು ವರದಿಗಳು ತಿಳಿಸಿವೆ.
ಮಾ.6-8: ದಕ್ಷಿಣ ಮಧ್ಯಭಾರತ ರಾಜ್ಯಗಳ ಜಾನಪದ ಉತ್ಸವ
ಉಡುಪಿ, ಮಾ.3: ರಂಗಭೂಮಿ ಉಡುಪಿ ಹಾಗೂ ಕರ್ನಾಟಕ ಜಾನಪದ ಪರಿಷತ್ ಉಡುಪಿ ಜಿಲ್ಲಾ ಘಟಕಗಳು ದಕ್ಷಿಣ ಮಧ್ಯ ಭಾರತ ರಾಜ್ಯಗಳ ಜಾನಪದ ಉತ್ಸವವನ್ನು ಇದೇ ಮಾ.6 ರಿಂದ 8ರವರೆಗೆ ಉಡುಪಿ ಎಂಜಿಎಂ ಕಾಲೇಜಿನ ಮುದ್ದಣ ಮಂಟಪದಲ್ಲಿ ಆಯೋಜಿಸಿದೆ ಎಂದು ರಂಗಭೂಮಿ ಅಧ್ಯಕ್ಷ ಹಾಗೂ ತಲ್ಲೂರ್ಸ್ ಫ್ಯಾಮಿಲಿ ಟ್ರಸ್ಟ್ನ ತಲ್ಲೂರು ಶಿವರಾಮ ಶೆಟ್ಟಿ ತಿಳಿಸಿದ್ದಾರೆ. ಈ ಜಾನಪದ ಉತ್ಸವದಲ್ಲಿ ದಕ್ಷಿಣ ಮಧ್ಯ ವಲಯ ಸಾಂಸ್ಕೃತಿಕ ಕೇಂದ್ರ ನಾಗಪುರದ ವತಿಯಿಂದ ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರ, ಮಧ್ಯಪ್ರಗದೇಶ ಹಾಗೂ ಛತ್ತೀಸಗಢ ರಾಜ್ಯಗಳ ಜಾನಪದ ಕಲಾ ವೈಭವದ ವೈವಿಧ್ಯತೆ ಮೂರು ದಿನಗಳ ಕಾಲ ಪ್ರದರ್ಶನಗೊಳ್ಳಲಿದೆ ಎಂದರು. ಜಾನಪದ ಉತ್ಸವವನ್ನು ಉಡುಪಿ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಅವರು ಮಾ.6ರ ಸಂಜೆ 5:30ಕ್ಕೆ ಉದ್ಘಾಟಿಸಲಿ ದ್ದಾರೆ. ತಲ್ಲೂರು ಶಿವರಾಮ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಸಮಾರಂಭದಲ್ಲಿ ದಕ್ಷಿಣ ಮಧ್ಯವಲಯ ಸಾಂಸ್ಕೃತಿಕ ಕೇಂದ್ರದ ನಿರ್ದೇಶಕಿ ಅಸ್ಥಾ ಎಂ.ಕಾರ್ಲೇಕರ್, ಉಡುಪಿ ಶಾಕ ಯಶಪಾಲ್ ಸುವರ್ಣ, ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಪೂರ್ಣಿಮಾ ಹಾಗೂ ಎಂಜಿಎಂ ಸಂಧ್ಯಾ ಕಾಲೇಜಿನ ಪ್ರಾಂಶುಪಾಲರಾದ ಡಾ.ದೇವಿದಾಸ್ ನಾಯ್ಕ್ ಉಪಸ್ಥಿತರಿರುವರು. ಉದ್ಘಾಟನಾ ಕಾರ್ಯಕ್ರಮದ ಬಳಿಕ ವಿವಿಧ ರಾಜ್ಯಗಳ ಜಾನಪದ ಕಲಾ ವೈವಿಧ್ಯತೆ ಪ್ರದರ್ಶನಗೊಳ್ಳಲಿದೆ. ಮಾ.7ರ ಶನಿವಾರ ಸಹ ಜಾನಪದ ಕಲಾ ವೈವಿಧ್ಯ-2 ಪ್ರದರ್ಶನಗೊಳ್ಳುತ್ತದೆ ಎಂದವರು ಹೇಳಿದರು. ಮಾ.8ರಂದು ಜಾನಪದ ಉತ್ಸವದ ಸಮಾರೋಪ ಹಾಗೂ ಜಾನಪದ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಇದರಲ್ಲಿ ರಾಜ್ಯ ಮಾನವ ಹಕ್ಕು ಆಯೋಗದ ಅಧ್ಯಕ್ಷರೂ ಆಗಿರುವ ಕಲಾ ಪೋಷಕ ಡಾ.ಕೆ.ಶ್ಯಾಮ್ ಭಟ್ ಅವರನ್ನು ಜಾನಪದ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ತಲ್ಲೂರು ತಿಳಿಸಿದರು. ಕಾರ್ಯಕ್ರಮವನ್ನು ಅಂಬಲಪಾಡಿ ದೇವಳದ ಧರ್ಮದರ್ಶಿ ಡಾ.ನಿ.ಬೀ.ವಿಜಯ ಬಲ್ಲಾಳ್ ಉದ್ಘಾಟಿಸುವರು. ಗುಜ್ಜಾಡಿ ವರುಣ್ ನಾಯಕ್ ಹಾಗೂ ಆಸ್ಥಾ ಕಾರ್ಲೇಕರ್ ಮುಖ್ಯ ಅತಿಥಿಗಳಾಗಿರುವರು ಎಂದರು. ಜಾನಪದ ಉತ್ಸವದಲ್ಲಿ ಆಂಧ್ರದ ಗುರುಮುಲು ನೃತ್ಯ, ತೆಲಂಗಾಣದ ಗುಸ್ಸಾದಿ ನೃತ್ಯ, ಮಹಾರಾಷ್ಟ್ರದ ಲಾವಣಿ, ಕೋಳಿ ನೃತ್ಯ, ತರ್ಪಾ ಕುಣಿತ, ಛತ್ತೀಸ್ಗಢದ ಪಂಥಿ ಕುಣಿತ, ಮಧ್ಯಪ್ರದೇಶದ ಬಧಾಯಿ ಮತ್ತು ನೊರ್ಟಾ ನೃತ್ಯ, ಕರ್ನಾಟಕದ ಗೋಂದೋಲು, ಕಂಗೀಲು ಹಾಗೂ ಕೊರಗರ ಸಾಂಸ್ಕೃತಿಕ ನೃತ್ಯ ಪ್ರದರ್ಶನಗೊಳ್ಳಲಿದೆ.
ಕೊಟ್ಟೂರು | ರೇಣುಕಾಚಾರ್ಯ ಜಯಂತಿ ಆಚರಣೆ
ಕೊಟ್ಟೂರು : ರೇಣುಕಾಚಾರ್ಯರು ಮಹಾನ್ ಚೇತನ್ಯದ ಗುರುವಾಗಿ ಸಮಾಜಕ್ಕೆ ಮಾರ್ಗದರ್ಶನ ಮಾಡಿದ್ದಾರೆ. ಅವರ ಸಂದೇಶವನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಹಶೀಲ್ದಾರ ಅಂಬರೀಶ್ ಜಿ.ಕೆ. ಹೇಳಿದರು. ತಾಲೂಕು ಕಚೇರಿಯ ಮಹಾತ್ಮ ಗಾಂಧೀಜಿ ಸಭಾಂಗಣದಲ್ಲಿ ಆಯೋಜಿಸಿದ್ದ ರೇಣುಕಾಚಾರ್ಯ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪೂಜ್ಯ ರೇಣುಕಾಚಾರ್ಯರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಬೆಣ್ಣೆಹಳ್ಳಿ ಹಿರೇಮಠದ ಪಂಚಾಕ್ಷರಿ ಶಿವಾಚಾರ್ಯ ಸ್ವಾಮೀಜಿ ಉಪನ್ಯಾಸ ನೀಡಿದರು. ಕಟ್ಟಿಮನಿ ಹಿರೇಮಠದ ಯೋಗಿ ರಾಜೇಂದ್ರ ಶಿವಾಚಾರ್ಯ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಈ ಸಂದರ್ಭದಲ್ಲಿ ತಾಲೂಕು ಜಂಗಮ ಸಮಾಜದ ಅಧ್ಯಕ್ಷ ಅಡಿಕಿ ಮಂಜುನಾಥ, ಅಯ್ಯನಹಳ್ಳಿ ಕೊಟ್ರಯ್ಯ, ಎಂಎಂಜೆ ಮೂಗಣ್ಣ, ಕೆ.ಎಂ. ಮಲ್ಲಿಕಾರ್ಜುನ, ಆಟವಾಳಿಗೆ ಭೋಜರಾಜ, ಶಿರಸ್ತೇದಾರ್ ಅನ್ನದಾನೇಶ ಪತ್ತಾರ, ಚಂದ್ರ ನಾಯ್ಕ, ಕಂದಾಯ ನಿರೀಕ್ಷಕ ಡಿ. ಶಿವಕುಮಾರ, ಗ್ರಾಮ ಆಡಳಿತಾಧಿಕಾರಿ ಹರೀಶ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಇರಾನ್ ವಿರುದ್ಧದ ಕಾರ್ಯಾಚರಣೆಯಲ್ಲಿ ಭೂಸೇನೆ ಬಳಕೆಯ ಸಾಧ್ಯತೆಯಿಲ್ಲ: ಇಸ್ರೇಲ್
ಟೆಹರಾನ್: ಇರಾನ್ ವಿರುದ್ಧ ಸೇನಾ ಕಾರ್ಯಾಚರಣೆಯನ್ನು ಹಲವು ವಾರಗಳ ತನಕ ನಡೆಸಲು ಇಸ್ರೇಲ್ ಸೇನೆ ಸಜ್ಜಾಗಿದೆ. ಆದರೆ ಯುದ್ಧದಲ್ಲಿ ಭೂಸೇನೆಯನ್ನು ಬಳಸುವ ಸಾಧ್ಯತೆಯಿಲ್ಲವೆಂದು ಇಸ್ರೇಲ್ ಸೇನೆಯ ವಕ್ತಾರರೊಬ್ಬರು ಸುದ್ದಿಗಾರರಿಗೆ ತಿಳಿಸಿದ್ದಾರೆ. ‘‘ಇರಾನ್ ವಿರುದ್ಧ ವಾರಗಟ್ಟಲೆ ಯುದ್ಧ ನಡೆಯುವ ಸಾಧ್ಯತೆಯಿದ್ದು, ಅದಕ್ಕಾಗಿ ಸನ್ನದ್ಧರಾಗಿದ್ದೇವೆ’’ ಎಂದು ಲೆ.ಕ. ನಾದನ್ ಷೋಷಾನಿ ತಿಳಿಸಿದ್ದಾರೆ.ಆದರೆ ಪರಿಸ್ಥಿತಿಯ ಬೆಳವಣಿಗೆಗಳನ್ನು ಅವಲಂಭಿಸಿ ಸೇನಾ ಕಾರ್ಯಾಚರಣೆಯ ಅವಧಿ ಬದಲಾಗಲೂ ಬಹುದು ಎಂದವರು ಹೇಳಿದ್ದಾರೆ.ಈವರೆಗೆ ಯುದ್ಧದಲ್ಲಿ ಇಸ್ರೇಲ್ ಸಾಧಿಸಿರುವ ಪ್ರಗತಿ ಸಕಾರಾತ್ಮಕವಾಗಿದೆ ಎಂದವರು ಸುದ್ದಿಗಾರರಿಗೆ ತಿಳಿಸಿದ್ದಾರೆ. ಇರಾನ್ನಲ್ಲಿ ಭೂಸೇನೆಯನ್ನು ನಿಯೋಜಿಸುವ ಸಾಧ್ಯತೆಯಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು,‘‘ ಸದ್ಯದ ಮಟ್ಟಿಗೆ ಇಸ್ರೇಲಿನ ಭೂಸೇನಾಪಡೆಗಳನ್ನು ನಿಯೋಜಿಸುವ ಸಾಧ್ಯತೆಯಿಲ್ಲ. ಅದು ಈ ಹೊತ್ತಿಗೆ ಕಾರ್ಯಸಾಧ್ಯವೂ ಅಲ್ಲ’’ ಎಂದು ಅವರು ಹೇಳಿದರು.
ವಿಜಯನಗರ | ಮಾ.7ರಂದು ತುಂಗಭದ್ರಾ ಕಾರ್ಮಿಕರ ಹಕ್ಕೊತ್ತಾಯ ಸಮಾವೇಶ
ವಿಜಯನಗರ / ಹೊಸಪೇಟೆ : ತುಂಗಭದ್ರಾ ನೀರಾವರಿ ಕಾರ್ಮಿಕರಿಗೆ ಉದ್ಯೋಗ ಭದ್ರತೆ ಒದಗಿಸಬೇಕು ಎಂಬ ಆಗ್ರಹದೊಂದಿಗೆ ಮಾರ್ಚ್ 7ರಂದು ರಾಯಚೂರು ನಗರದ ಪಂಡಿತ್ ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಹಕ್ಕೊತ್ತಾಯ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ತುಂಗಭದ್ರಾ ನೀರಾವರಿ ಕಾರ್ಮಿಕರ ಸಂಘ (ಎಐಸಿಸಿಟಿಯು) ತಿಳಿಸಿದೆ. ಸಮಾವೇಶದ ಪೋಸ್ಟರ್ ಅನ್ನು ಹೊಸಪೇಟೆಯಲ್ಲಿ ಸಂಘದ ಅಧ್ಯಕ್ಷ ಕೆ. ನಾಗಲಿಂಗಸ್ವಾಮಿ ಬಿಡುಗಡೆ ಮಾಡಿದರು. ಸಮಾವೇಶವನ್ನು ಮಾಜಿ ಕಾರ್ಮಿಕ ಸಚಿವರು ಹಾಗೂ ಹಿರಿಯ ಕಾರ್ಮಿಕ ನಾಯಕ ಎಸ್. ಕೆ. ಕಾಂತ್ ಉದ್ಘಾಟಿಸಲಿದ್ದು, ಎಐಸಿಸಿಟಿಯು ರಾಷ್ಟ್ರೀಯ ಉಪಾಧ್ಯಕ್ಷ ಕ್ಲಿಫ್ಟನ್ ಡಿ'ರೊಜಾರಿಯೊ ಹಾಗೂ ರಾಜ್ಯ ಪ್ರಧಾನ ಕಾರ್ಯದರ್ಶಿ ಮೈತ್ರೇಯಿ ಕೃಷ್ಣನ್ ಪ್ರಮುಖ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ತುಂಗಭದ್ರಾ ನೀರಾವರಿ ಯೋಜನೆಯಲ್ಲಿ ಖಾಯಂ ಹುದ್ದೆಗಳು ಇದ್ದರೂ ಕಾರ್ಮಿಕರಿಗೆ ವರ್ಷಪೂರ್ತಿ ಕೆಲಸ ನೀಡದೆ ಅನ್ಯಾಯ ಮಾಡಲಾಗುತ್ತಿದೆ ಎಂದು ಸಂಘ ಆರೋಪಿಸಿದೆ. ಸರ್ಕಾರದ ನಿರ್ದೇಶನ ಹಾಗೂ ಕರ್ನಾಟಕ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕರ ಅನುಮೋದನೆ ಇದ್ದರೂ ಕಾರ್ಮಿಕರನ್ನು ಕೆಲಸದಲ್ಲಿ ಮುಂದುವರೆಸುವ ಕ್ರಮ ಜಾರಿಯಾಗಿಲ್ಲವೆಂದು ಅಸಮಾಧಾನ ವ್ಯಕ್ತಪಡಿಸಲಾಗಿದೆ. ಕಳೆದ 25–30 ವರ್ಷಗಳಿಂದ ದುಡಿಯುತ್ತಿರುವ ಕಾರ್ಮಿಕರಿಗೆ ನಿರಂತರ ಕೆಲಸ ನೀಡಿ ಖಾಯಂ ಕೆಲಸಗಾರರಾಗಿ ಪರಿಗಣಿಸಿ ಬದುಕುವ ವೇತನ ಸೇರಿದಂತೆ ಎಲ್ಲಾ ಹಕ್ಕುಗಳನ್ನು ರಕ್ಷಿಸಬೇಕು ಎಂಬುದು ಸಮಾವೇಶದ ಪ್ರಮುಖ ಒತ್ತಾಯವಾಗಿದೆ. ಸಿಲ್ಟ್ ತೆರವು ಮತ್ತು ಸೇವಾ ರಸ್ತೆ ಸುಧಾರಣೆ ಕಾಮಗಾರಿಗಳನ್ನು ಗುತ್ತಿಗೆದಾರರಿಗೆ ನೀಡುವ ಬದಲು ಕಾರ್ಮಿಕರ ಕೈಗಳಿಗೆ ನೀಡಬೇಕು ಎಂದು ಸಂಘ ಆಗ್ರಹಿಸಿದೆ. ಯರಮರಸ್, ಸಿರಿವಾರ, ಸಿಂಧನೂರು, ವಡ್ಡರಟ್ಟಿ, ಬಳ್ಳಾರಿ, ಮುಂಡರಗಿ ಹಾಗೂ ಮುನಿರಾಬಾದ್ ವಿಭಾಗದ ಕಾರ್ಮಿಕರು ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ ಎಂದು ಸಂಘ ತಿಳಿಸಿದೆ.
ನಂದಿಕೂರು: ಎಂ11ಎನರ್ಜಿ ಘಟಕ ಮುಚ್ಚಲು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಆದೇಶ
ಪಡುಬಿದ್ರಿ, ಮಾ.3: ಇಲ್ಲಿಗೆ ಸಮೀಪದ ನಂದಿಕೂರಿನಲ್ಲಿ ಕಾರ್ಯಾಚರಿ ಸುತ್ತಿರುವ ಬಯೋ ಡೀಸೆಲ್, ಪಾಮ್ ಆಯಿಲ್ ಹಾಗೂ ಗ್ಲಿಸರಿನ್ ಉತ್ಪಾದನಾ ಘಟಕ ಮೆಸರ್ಸ್ ಎಂ11 ಎನರ್ಜಿಟ್ರಾನ್ಸಿಸನ್ ಪ್ರೈವೆಟ್ ಲಿ.ನ್ನು ಮುಂದಿನ ಆದೇಶದವರೆಗೆ ಮುಚ್ಚುವಂತೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಆದೇಶಿಸಿದೆ. ಕರ್ನಾಟಕ ವಾಟರ್ (ಪ್ರಿವೆನ್ಶನ್ ಆ್ಯಂಡ್ ಕಂಟ್ರೋಲ್ ಆಫ್ ಪೊಲ್ಯೂಶನ್) ಆ್ಯಕ್ಟ್ನ 34ನೇ ನಿಯಮದಡಿ ಈ ಘಟಕದ ಕಾರ್ಯಾಚರಣೆ ಯನ್ನು ನಿಲ್ಲಿಸಲು ಮಂಡಳಿ ನಿರ್ದೇಶನ ನೀಡಿದೆ. ನಂದಿಕೂರು ಕೈಗಾರಿಕಾ ಪ್ರದೇಶದ ಪ್ಲಾಟ್ ನಂ.155 ಮತ್ತು 169ರಲ್ಲಿ ಈ ಘಟಕ ಕಾರ್ಯಾಚರಿ ಸುತ್ತಿತ್ತು. ಕಾಯ್ದೆಯ ನಿಬಂಧನೆಗಳನ್ನು ಪಾಲಿಸದಿರುವ ಹಿನ್ನೆಲೆಯಲ್ಲಿ ಈ ಆದೇಶವನ್ನು ಹೊರಡಿಸಲಾಗಿದೆ ಎಂದು ಮಂಡಳಿ ತಿಳಿಸಿದೆ. ಘಟಕದಿಂದ ಆಗುತ್ತಿರುವ ವಿವಿಧ ರೀತಿಯ ಮಾಲಿನ್ಯ ಹಾಗೂ ಅದರಿಂದ ಹೊರಬರುತ್ತಿರುವ ದುರ್ವಾಸನೆಯಿಂದ ಸ್ಥಳೀಯರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ ಎಂದು ಆರೋಪಿಸಿ ಗ್ರಾಮಸ್ಥರು, ಈ ಸಂಬಂಧ ಹಲವು ಬಾರಿ ಪ್ರತಿಭಟನೆ ನಡೆಸಿದ್ದರು. ಕಳೆದ ಪಲಿಮಾರು ಗ್ರಾಮಸಭೆ ಯಲ್ಲೂ ಕಂಪೆನಿ ವಿರುದ್ಧ ನಿರ್ಣಯ ಕೈಗೊಳ್ಳಲಾಗಿತ್ತು. ದುರ್ವಾಸನೆ ಸಮಸ್ಯೆ ಕುರಿತು ಗುರ್ಮೆ ಸುರೇಶ್ ಶೆಟ್ಟಿ ಕಂಪೆನಿ ಪರಿಸರಕ್ಕೆ ಭೇಟಿ ನೀಡಿ, ಪರಿಸ್ಥಿತಿಯನ್ನು ಪರಿಶೀಲಿಸಿ ಸಂಬಂಧಿತ ಅಧಿಕಾರಿಗಳಿಗೆ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದರು. ಸ್ಥಳೀಯರ ದೂರಿನ ಮೇರೆಗೆ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳು ಹಲವು ಬಾರಿ ಘಟಕಕ್ಕೆ ಭೇಟಿ ನೀಡಿ ನೀರಿನ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆಗೆ ಕೊಂಡೊಯ್ದಿದ್ದರು. ತಜ್ಞರ ವರದಿ ಆಧರಿಸಿ ಕಂಪೆನಿಯ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುವಂತೆ ಮಂಡಳಿ ಆದೇಶಿಸಿದ್ದು, ಕಂಪೆನಿಗೆ ವಿದ್ಯುತ್ ಸರಬರಾಜು ಸ್ಥಗಿತಗೊಳಿಸಲು ಮಂಗಳೂರು ವಿದ್ಯುತ್ ಸರಬರಾಜು ಕಂಪನಿ (ಮೆಸ್ಕಾಂ) ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಈ ಬಗ್ಗೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಫೆ.18ರಂದು ಆದೇಶವನ್ನು ಹೊರಡಿಸಿದೆ. ಮುಂದಿನ ಆದೇಶದವರೆಗೆ ಕಾರ್ಯಾಚರಣೆ ಯನ್ನು ಸ್ಥಗಿತಗೊಳಿಸಿ ಘಟಕವನ್ನು ಮುಚ್ಚುವಂತೆ ತಿಳಿಸಲಾಗಿದೆ. ಉಡುಪಿ ಜಿಲ್ಲಾಧಿಕಾರಿ ಅವರು ಇಲ್ಲಿ ಯಾವುದೇ ಚಟುವಟಿಕೆ ನಡೆಯದಂತೆ ನೋಡಿ ಕೊಳ್ಳುವಂತೆ ಸೂಚಿಸಲಾಗಿದೆ. ಘಟಕದ ವಿದ್ಯುತ್ ಸಂಪರ್ಕವನ್ನು ಕೂಡಲೇ ನಿಲ್ಲಿಸುವಂತೆ ಮೆಸ್ಕಾಂನ ಆಡಳಿತ ನಿರ್ದೇಶಕರಿಗೂ ಸೂಚಿಸಲಾಗಿದೆ. ಪರಿಸರ ಮಂಡಳಿ ಪದೇ ಪದೇ ನೀಡಿದ ಆದೇಶವನ್ನು ಪಾಲಿಸದೇ ಉಲ್ಲಂಘಿಸಲಾಗಿದ್ದು, ಮಾಲಿನ್ಯವನ್ನು ತಡೆ ಯಲು, ಮಾಲಿನ್ಯಕಾರಕ ತ್ಯಾಜ್ಯದ ನೀರನ್ನು ಆವರಣದ ಹೊರಗೆ ಬಿಡದಂತೆ ಸೂಚಿಸಿದ್ದರೂ ಆದೇಶವನ್ನು ಉಲ್ಲಂಘಿಸಿ ತ್ಯಾಜ್ಯದ ನೀರನ್ನು ಹೊರಗೆ ಬಿಡಲಾಗುತ್ತಿತ್ತು. ತ್ಯಾಜ್ಯದ ನೀರನ್ನು ಆವರಣದೊಳಗೆ ಮುಕ್ತವಾಗಿ ಸಂಗ್ರಹಿಸಿರುವುದು ಮಂಡಳಿಯ ಸ್ಥಳೀಯ ಅಧಿಕಾರಿಗಳು ತನಿಖೆಗಾಗಿ ಬಂದಾಗ ಕಂಡುಬಂದಿತ್ತು ಎಂದೂ ಮಂಡಳಿ ತಿಳಿಸಿದೆ.
ಪಾಕ್ ಪಡೆಗಳಿಂದ 67 ತಾಲಿಬಾನ್ ಯೋಧರ ಹತ್ಯೆ
ಕಾಬೂಲ್,ಮಾ.3: ಅಫ್ಘಾನ್ ಗಡಿಯಲ್ಲಿ ಸೇನಾ ಕಾರ್ಯಾಚರಣೆಯನ್ನು ತೀವ್ರಗೊಳಿಸಿರುವ ಪಾಕಿಸ್ತಾನಿ ಭದ್ರತಾ ಪಡೆಗಳು ಸೋಮವಾರ ರಾತ್ರಿಯಿಡೀ ನಡೆಸಿದ ಕಾರ್ಯಾಚರಣೆಯಲ್ಲಿ 67 ಅಫ್ಘಾನ್ ತಾಲಿಬಾನ್ ಯೋಧರನ್ನು ಹತ್ಯೆಗೈದಿವೆ ಹಾಗೂ 16 ಪ್ರದೇಶಗಳಲ್ಲಿ ದಾಳಿಗಳನ್ನು ಹಿಮ್ಮೆಟ್ಟಿಸಿವೆ. ಪಾಕಿಸ್ತಾನದ ಮಾಹಿತಿ ಸಚಿವ ಅತಾವುಲ್ಲಾ ತರಾರ್ ಅವರು ಅಫ್ಘಾನಿಸ್ತಾನದ ತಾಲಿಬಾನ್ ವಿರುದ್ಧ ಫೆಬ್ರವರಿ 26ರಿಂದ ಆರಂಭಿಸಿರುವ ‘ಆಪರೇಶನ್ ಗಝಬ್ಲಿಲ್ ಹಕ್’ ಕಾರ್ಯಾಚರಣೆಯ ವಿವರಗಳನ್ನು ಇಸ್ಲಾಮಾಬಾದ್ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ನೀಡಿದರು. ಖೈಬರ್ಪಖ್ತೂನ್ಖ್ವಾ ಪ್ರಾಂತದುದ್ದಕ್ಕೂ ರಾತ್ರೋರಾತ್ರಿ ನಡೆಸಿದ ಕಾರ್ಯಾಚರಣೆಯಲ್ಲಿ 40 ತಾಲಿಬಾನ್ ಯೋಧರು ಸಾವನ್ನಪ್ಪಿರುವುದಾಗಿ ತರಾರ್ ತಿಳಿಸಿದ್ದಾರೆ. ಪಾಕಿಸ್ತಾನದ ಭದ್ರತಾಪಡೆಗಳು ಈವರೆಗೆ 435 ಅಫ್ಘಾನ್ ಬಂಡುಕೋರರನ್ನು ಹತ್ಯೆಗೆದಿದ್ದು, ಅವರಲ್ಲಿ 630 ಮಂದಿ ಗಾಯಗೊಂಡಿದ್ದಾರೆಂದು ಅವರು ಹೇಳಿದರು.
ವಿಜಯನಗರ | 74 ಫಲಾನುಭವಿಗಳಿಗೆ ನಿವೇಶನ ಹಕ್ಕುಪತ್ರ ವಿತರಣೆ
ವಿಜಯನಗರ (ಹೊಸಪೇಟೆ) : ಮುಖ್ಯಮಂತ್ರಿ ಗ್ರಾಮೀಣ ನಿವೇಶನ ಯೋಜನೆಯಡಿ ನಿವೇಶನ ರಹಿತ ಅರ್ಹ 74 ಫಲಾನುಭವಿಗಳಿಗೆ ಕಾನೂನುಬದ್ಧವಾಗಿ ನಿವೇಶನ ಹಕ್ಕುಪತ್ರ ವಿತರಿಸಲಾಗಿದೆ ಎಂದು ಶಾಸಕ ಎಚ್.ಆರ್.ಗವಿಯಪ್ಪ ತಿಳಿಸಿದ್ದಾರೆ. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ತಾಲ್ಲೂಕು ಪಂಚಾಯಿತಿ ಹಾಗೂ ಪಾಪಿನಾಯಕನಹಳ್ಳಿ ಗ್ರಾಮ ಪಂಚಾಯಿತಿ ಸಂಯುಕ್ತಾಶ್ರಯದಲ್ಲಿ ಮಂಗಳವಾರ ಪಾಪಿನಾಯಕನಹಳ್ಳಿಯ ಚಿಂದುಲ ನಾಗಮ್ಮ ಕಲ್ಯಾಣ ಮಂಟಪದಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಕ್ಕುಪತ್ರ ವಿತರಿಸಿ ಅವರು ಮಾತನಾಡಿದರು. ಸುಪ್ರೀಂ ಕೋರ್ಟ್ ಆದೇಶದಂತೆ ನಿವೇಶನ ರಹಿತರಿಗೆ ಮೂಲ ಸೌಕರ್ಯಗಳೊಂದಿಗೆ ನಿವೇಶನ ಒದಗಿಸುವುದರ ಜೊತೆಗೆ ಮನೆ ನಿರ್ಮಾಣ ವ್ಯವಸ್ಥೆಯೂ ಮಾಡಲಾಗಿದೆ. ಈ ಯೋಜನೆಯನ್ನು ಹೊರ ರಾಜ್ಯಗಳಿಂದ ಬಂದವರಿಗಷ್ಟೇ ಅಲ್ಲದೆ ಸ್ಥಳೀಯರಿಗೂ ಅವಕಾಶ ಕಲ್ಪಿಸಲು ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಹೇಳಿದರು. ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಮತ್ತು ಉತ್ತಮ ಸಂಸ್ಕಾರ ನೀಡುವಂತೆ ಪೋಷಕರಿಗೆ ಸಲಹೆ ನೀಡಿದರು. ಪಾಪಿನಾಯಕನಹಳ್ಳಿ ಗ್ರಾಮಸಭೆಯಲ್ಲಿ 97 ಫಲಾನುಭವಿಗಳು ಆಯ್ಕೆಯಾಗಿದ್ದು, ಈ ಪೈಕಿ 74 ಮಂದಿಗೆ ಹಕ್ಕುಪತ್ರ ವಿತರಿಸಲಾಗಿದೆ. ಉಳಿದ 23 ನಿವೇಶನಗಳಲ್ಲಿ 3 ಮಂದಿಗೆ ರೇಷನ್ ಕಾರ್ಡ್ ಇಲ್ಲದ ಕಾರಣ, 6 ಮಂದಿಗೆ ದಾಖಲೆಗಳ ಕೊರತೆಯಿಂದ ಹಾಗೂ 3 ಪ್ರಕರಣಗಳು ತಾಲ್ಲೂಕು ಪಂಚಾಯಿತಿಯಲ್ಲಿ ಬಾಕಿ ಇರುವುದರಿಂದ ಹಕ್ಕುಪತ್ರ ನೀಡಲಾಗಿಲ್ಲ. ಇವುಗಳಿಗೆ ಶೀಘ್ರ ಕ್ರಮ ಕೈಗೊಳ್ಳಲಾಗುವುದು. ಇನ್ನೂ 11 ಅರ್ಜಿಗಳು ಇತರ ವಸತಿ ಯೋಜನೆಗಳಡಿ ಅರ್ಜಿ ಸಲ್ಲಿಸಿರುವ ಹಿನ್ನೆಲೆಯಲ್ಲಿ ತಿರಸ್ಕರಿಸಲಾಗಿದೆ ಎಂದು ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ತಾಲ್ಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಆಲಂ ಭಾಷಾ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಭೀರಪ್ಪ, ವಸತಿ ಇಲಾಖೆಯ ನೋಡಲ್ ಅಧಿಕಾರಿ ಮಹೇಶ್, ಆಡಳಿತಾಧಿಕಾರಿ ಸಿಂಧು ಅಂಗಡಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
ಭಾರತದ ಬಳಿ 25 ದಿನಕ್ಕಾಗುವಷ್ಟು ಕಚ್ಚಾ ತೈಲ ಮತ್ತು ಸಂಸ್ಕರಿತ ತೈಲಗಳ ದಾಸ್ತಾನು: ವರದಿ
ಹೊಸದಿಲ್ಲಿ: ಇಸ್ರೇಲ್ ಮತ್ತು ಅಮೆರಿಕ ಇರಾನ್ ವಿರುದ್ಧ ನಡೆಸುತ್ತಿರುವ ಜಂಟಿ ದಾಳಿಯಿಂದಾಗಿ ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನ ಸ್ಥಿತಿ ಮನೆ ಮಾಡಿದೆ. ಈ ನಡುವೆ, ಭಾರತದ ಬಳಿ 25 ದಿನಗಳಿಗೆ ಸಾಕಾಗುವಷ್ಟು ಕಚ್ಚಾ ತೈಲ ಮತ್ತು ಸಂಸ್ಕರಿತ ತೈಲಗಳ ದಾಸ್ತಾನು ಇದೆ. ಕಚ್ಚಾ ತೈಲ, ಎಲ್ಪಿಜಿ ಹಾಗೂ ಎಲ್ಎನ್ಜಿ ಆಮದು ಮಾಡಲು ಪರ್ಯಾಯ ಮೂಲಗಳನ್ನು ಶೋಧಿಸಲಾಗುತ್ತಿದೆ ಎಂದು ಮಂಗಳವಾರ ಸರಕಾರಿ ಮೂಲಗಳು ತಿಳಿಸಿವೆ ಎಂದು ANI ಸುದ್ದಿ ಸಂಸ್ಥೆ ವರದಿ ಮಾಡಿದೆ. ಮೂಲಗಳ ಪ್ರಕಾರ, ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ತಲೆದೋರಿದ್ದರೂ, ಈಗಲೇ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ಮಾಡುವ ಯಾವುದೇ ಯೋಜನೆ ಇಲ್ಲ ಎಂದು ಹೇಳಲಾಗಿದೆ. ಮಧ್ಯಪ್ರಾಚ್ಯದಲ್ಲಿ ತಲೆದೋರಿರುವ ಉದ್ವಿಗ್ನತೆಯ ಹಿನ್ನೆಲೆಯಲ್ಲಿ ಸೋಮವಾರ ಬೆಳಿಗ್ಗೆ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಪುರಿ ಅವರು ಸಚಿವಾಲಯ ಹಾಗೂ ಸಾರ್ವಜನಿಕ ವಲಯದ ಕಂಪನಿಗಳ ಹಿರಿಯ ಅಧಿಕಾರಿಗಳೊಂದಿಗೆ ಕಚ್ಚಾ ತೈಲ, ಎಲ್ಪಿಜಿ ಮತ್ತು ಇತರೆ ಪೆಟ್ರೋಲಿಯಂ ಉತ್ಪನ್ನಗಳ ಸರಬರಾಜು ಪರಿಸ್ಥಿತಿಯ ಕುರಿತು ಪರಾಮರ್ಶೆ ನಡೆಸಿದರು. ಬದಲಾಗುತ್ತಿರುವ ಪರಿಸ್ಥಿತಿಯ ಮೇಲೆ ನಿರಂತರ ನಿಗಾ ಇಡಲಾಗುತ್ತಿದ್ದು, ದೇಶದಲ್ಲಿ ಪ್ರಮುಖ ಪೆಟ್ರೋಲಿಯಂ ಉತ್ಪನ್ನಗಳ ಲಭ್ಯತೆ ಮತ್ತು ಕೈಗೆಟುಕುವಿಕೆಯನ್ನು ಖಚಿತಪಡಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಪೆಟ್ರೋಲಿಯಂ ಸಚಿವಾಲಯ ತಿಳಿಸಿದೆ. ಭಾರತವು ಮಧ್ಯಪ್ರಾಚ್ಯ ರಾಷ್ಟ್ರಗಳಿಂದ ಕಚ್ಚಾ ತೈಲ ಮತ್ತು ನೈಸರ್ಗಿಕ ಅನಿಲವನ್ನು ಆಮದು ಮಾಡಿಕೊಳ್ಳುವ ಪ್ರಮುಖ ದೇಶವಾಗಿದೆ.
ಬಳ್ಳಾರಿ | ಕೈವಾರ ತಾತಯ್ಯ ಜಯಂತಿ ಆಚರಣೆ
ಯುವಪೀಳಿಗೆ ಶಿಕ್ಷಣದಿಂದ ಮಾತ್ರ ಮುಂಚೂಣಿಗೆ ಬರಲು ಸಾಧ್ಯ : ಪಿ.ಗಾದೆಪ್ಪ

28 C