SENSEX
NIFTY
GOLD
USD/INR

Weather

28    C
...

ಮಂಗಳೂರು | ಫೆ.20ರಿಂದ 25: ಜಪ್ಪು ಗುಡ್ಡೆಚಾವಡಿ ಪ್ರವೇಶೋತ್ಸವ-ಧರ್ಮನೇಮ

ಮಂಗಳೂರು, ಫೆ.16: 'ಜಪ್ಪು ಗುಡ್ಡೆ ಚಾವಡಿ'ಯೆಂದೇ ಕರೆಯಲಾಗುವ ಜಪ್ಪು ಗುಡ್ಡೆಗುತ್ತು ಮನೆಯನ್ನು ನವೀಕರಣಗೊಳಿಸಲಾಗಿದ್ದು, ಇದರ ಪ್ರವೇಶೋತ್ಸವ ಹಾಗೂ ಧರ್ಮ ನೇಮ ಧಾರ್ಮಿಕ ಕಾರ್ಯಕ್ರಮಗಳು ಫೆ. 20ರಿಂದ 25ರವರೆಗೆ ನಡೆಯಲಿದೆ ಎಂದು ಜಪ್ಪು ಗುಡ್ಡೆಗುತ್ತು ಭುಜಂಗ ಶೆಟ್ಟಿ ತಿಳಿಸಿದರು. ನಗರದ ಪ್ರೆಸ್ಕ್ಲಬ್ ನಲ್ಲಿ ಸೋಮವಾರ ಈ ಬಗ್ಗೆ ಮಾಹಿತಿ ನೀಡಿದ ಅವರು, ಫೆ.20ರಿಂದ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಆರಂಭಗೊಂಡು, ಫೆ.22ರಂದು ಚಾವಡಿ ಪ್ರವೇಶೋತ್ಸವ ನಡೆಯಲಿದೆ. ಬೆಳಗ್ಗೆ 6 ಗಂಟೆಗೆ ಜಪ್ಪು ಗುಡ್ಡೆಗುತ್ತು ಚಾವಡಿಯಲ್ಲಿ ಗಣಪತಿ ಹೋಮ, 7.40ಕ್ಕೆ ಗೃಹ ಪ್ರವೇಶ, ದೈವ ದೇವರುಗಳ ಪ್ರತಿಷ್ಠಾಪನೆ ಹಾಗೂ ಇತರ ವೈದಿಕ ಪ್ರಕ್ರಿಯೆಗಳು ನಡೆಯಲಿವೆ. ಪೂ. 11.30ಕ್ಕೆ ಮುಂಡಿತ್ತಾಯ ವೈದ್ಯನಾಥ ದೈವದರ್ಶನ ಬಳಿಕ ಮಹಾ ಅನ್ನ ಸಂತರ್ಪಣೆ ನಡೆಯಲಿದೆ. ಸಂಜೆ 6 ಗಂಟೆಯಿಂದ ಹಾಗೂ ಪರಂಪರಾಗತವಾಗಿ ಆರಾಧಿಸಲ್ಪಡುವ ಮುಂಡಿತ್ತಾಯ ವೈದ್ಯನಾಥ ಮತ್ತು ಪರಿವಾರ ದೈವಗಳ ಧರ್ಮನೇಮ ನಡೆಯಲಿದೆ ಎಂದು ಅವರು ಹೇಳಿದರು. ಪ್ರವೇಶೋತ್ಸವದ ಫೆ. 23ರಂದು ಸಂಜೆ 4.30ರಿಂದ ಕುಣಿತ ಭಜನೆ, ಫೆ. 24ರಂದು ಶ್ರೀದೇವಿ ಮಹಾತ್ಮೆ ಯಕ್ಷಗಾನ ಬಯಲಾಟ ಆಯೋಜಿಸಲಾಗಿದೆ. ಮಂಗಳೂರು ಹೋಬಳಿಯ ಕೊಡಿಯಾಲಗುತ್ತು, ಜಪ್ಪುಗುಡ್ಡೆಗುತ್ತು ಮತ್ತು ಬಡಿಗುತ್ತು ಮನೆತನಗಳವರ ನೇತೃತ್ವದಲ್ಲಿ ಈ ಕಾರ್ಯಕ್ರಮ ನಡೆಯಲಿದೆ ಎಂದು ಅವರು ತಿಳಿಸಿದರು. ಜಪ್ಪು ಗುಡ್ಡೆಗುತ್ತು ಬಂಟ ಸಮುದಾಯದಕ್ಕೆ ಸೇರಿದ ಮನೆತನವಾಗಿದ್ದು, ತುಳುನಾಡಿನ ಉದ್ದಗಲದಲ್ಲೂ ಕುಟುಂಬಗಳನ್ನು ಹೊಂದಿದೆ. ಜಪ್ಪುಗುಡ್ಡೆಗುತ್ತು ಮನೆತನದ ಪಟ್ಟ ಸ್ವೀಕರಿಸಿದ ಯಜಮಾನರು ‘ಸುಬ್ಬಯ್ಯ ಭಂಡ್ರಿಯಾಲ್’ ಎಂಬ ಹೆಸರಿನಲ್ಲಿ ಕರೆಯಲ್ಪಡುತ್ತಾರೆ. ರಾಜರ ಆಳ್ವಿಕೆಯ ಸಂದರ್ಭ ರಾಜರ ಅನುಪಸ್ಥಿತಿಯಲ್ಲಿ ಆ ಊರಿಗೆ ಸಂಬಂಧಿಸಿದ ವಿಚಾರದಲ್ಲಿ ರಾಜರ ತೀರ್ಮಾನವನ್ನು ಈ ಮನೆತನ ನಡೆಸುವ ಅಧಿಕಾರ ಹೊಂದಿತ್ತು. ಸ್ವಾತಂತ್ರ್ಯ ನಂತರವೂ ಧಾರ್ಮಿಕ ವಿಚಾರಗಳಲ್ಲಿ ಈ ಮನೆತನದ ಹಿರಿಯರ ಸಮ್ಮುಖದಲ್ಲಿ ತೀರ್ಮಾನ ಕೈಗೊಳ್ಳಲಾಗುತ್ತಿದೆ ಎಂದವರು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಮಾಲಾಡಿ ಅಜಿತ್ ಕುಮಾರ್ ರೈ ಕೊಡಿಯಾಲ್ ಗುತ್ತು, ನಿಟ್ಟೆ ಗುತ್ತು ರವಿರಾಜ್ ಶೆಟ್ಟಿ, ಜಪ್ಪು ಗುಡ್ಡೆಗುತ್ತು ಗಣೇಶ್ ಶೆಟ್ಟಿ, ತಿರುವೈಲು ಗುತ್ತು ಪ್ರವೀಣ್ ಚಂದ್ರ ಆಳ್ವ, ಡಾ. ಸಾಯಿಗೀತಾ ಹೆಗ್ಡೆ, ದಿಲ್ರಾಜ್ ಆಳ್ವ ಉಪಸ್ಥಿತರಿದ್ದರು.

ವಾರ್ತಾ ಭಾರತಿ 16 Feb 2026 3:15 pm

ಮಂಗಳ ಅಲುಮ್ನಿ ಅಸೋಸಿಯೇಶನ್ ನಿಂದ ಮಾ.1ರಂದು ‘ಸ್ಮೃತಿ ಸಂಗಮ’ 2026’

ಮಂಗಳೂರು, ಫೆ.16: ಕೊಣಾಜೆಯ ಮಂಗಳೂರು ವಿಶ್ವವಿದ್ಯಾನಿಲಯದ ಮಂಗಳ ಅಲುಮ್ನಿ ಅಸೋಸಿಯೇಶನ್ (ಮಾ) ವತಿಯಿಂದ ‘ಸ್ಮತಿ ಸಂಗಮ 2026’ ಅಲುಮ್ನಿ ಮಹಾಸಂಗಮ ಮಾ.1ರಂದು ಬೆಳಗ್ಗೆ 8:30ರಿಂದ ಮಂಗಳಗಂಗೋತ್ರಿ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದೆ.ಬೆಳಗ್ಗೆ 8.30ರಿಂದ 10.30ರವರೆಗೆ ವಿವಿಧ ಕ್ರೀಡಾಸ್ಪರ್ಧೆಗಳು ನಡೆಯಲಿವೆ. ಬೆಳಗ್ಗೆ 10.30ಕ್ಕೆ ಕಾರ್ಯಕ್ರಮವನ್ನು ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಉದ್ಘಾಟಿಸುವರು. ಮಂಗಳೂರು ವಿಶ್ವವಿದ್ಯಾನಿಲಯ ಕುಲಪತಿ ಪ್ರೊ.ಪಿ.ಎಲ್. ಧರ್ಮ ಅಧ್ಯಕ್ಷತೆ ವಹಿಸುವರು. ಕರ್ನಾಟಕ ವಿಶ್ವವಿದ್ಯಾನಿಲಯ ಕುಲಪತಿ ಪ್ರೊ.ಎ.ಎಂ. ಖಾನ್, ಕಣಚೂರು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಅಧ್ಯಕ್ಷ ಯು.ಕೆ. ಮೋನು, ಕಾಲೇಜು ಶಿಕ್ಷಣ ಇಲಾಖೆ ಮಂಗಳೂರು ಜಂಟಿ ನಿರ್ದೇಶಕಿ ಕವಿತಾ ಕೆ.ಆರ್. ಮುಖ್ಯ ಅತಿಥಿಯಾಗಿ ಭಾಗವಹಿಸುವರು ಎಂದು ಮಾ ಅಧ್ಯಕ್ಷ ರಾಮಕೃಷ್ಣ ರಾವ್ ಕೆ.ಎನ್. ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಪೂ. 11.45ರಿಂದ ಸಾಂಸ್ಕೃತಿಕ ಕಾರ್ಯಕ್ರಮ, ಅಪರಾಹ್ನ 3ಕ್ಕೆ ಬಹುಮಾನ ವಿತರಣೆ ಮತ್ತು ಸಮಾರೋಪ, ಅಪರಾಹ್ನ 3.30ರಿಂದ ಸಂಜೆ 4.30ರವರೆಗೆ ಹಳೆ ವಿದ್ಯಾರ್ಥಿಗಳ ವಿಭಾಗವಾರು ಸಂವಾದ ನಡೆಯಲಿದೆ. ಬೆಳಗ್ಗೆ 8.30ರಿಂದ ಲಗೋರಿ, ಹಗ್ಗಜಗ್ಗಾಟ, ಪುರುಷರಿಗೆ ಕ್ರಿಕೆಟ್, ಮಹಿಳೆಯರಿಗೆ ತ್ರೋಬಾಲ್ ಪಂದ್ಯಾಟ ಏರ್ಪಡಿಸಲಾಗಿದೆ. ಮಂಗಳ ಅಲುಮ್ನಿ ಅಸೋಸಿಯೇಶನ್ ನಲ್ಲಿ 25000ಕ್ಕೂ ಅಧಿಕ ಮಂದಿ ಸದಸ್ಯರಿದ್ದು, ಹಳೆ ವಿದ್ಯಾರ್ಥಿಗಳ ಬೆಂಬಲದೊಂದಿಗೆ ಹಲವು ಕಾರ್ಯಕ್ರಮಗಳನ್ನು ಆಯೋಜಿಸುವ ದೃಷ್ಟಿಯಿಂದ ಸ್ಮತಿ ಸಂಗಮ ಹಮ್ಮಿಕೊಳ್ಳಲಾಗಿದೆ. ಮಾ ಹಳೆ ವಿದ್ಯಾರ್ಥಿಗಳು ಭಾಗವಹಿಸಬೇಕು ಎಂದರು. ಸುದ್ದಿಗೋಷ್ಠಿಯಲ್ಲಿ ಮಾ ಕಾರ್ಯಕಾರಿ ಸಮಿತಿ ಸದಸ್ಯರಾದ ರಾಜಾರಾಮ್ ರಾವ್, ಪ್ರದೀಪ್ ಡಿಸೋಜ, ನಾಗೇಶ್ ಹಿರೇಗೌಡರ್ ಉಪಸ್ಥಿತರಿದ್ದರು.

ವಾರ್ತಾ ಭಾರತಿ 16 Feb 2026 3:11 pm

Kavya Gowda: ನಟಿ ಕಾವ್ಯಾ ಗೌಡಗೆ ಸಣ್ಣ ರಿಲೀಫ್, ಪ್ರಕರಣಕ್ಕೆ ಕರ್ನಾಟಕ ಹೈಕೋರ್ಟ್‌ನಿಂದ ಮಧ್ಯಂತರ ತಡೆ

Kavya Gowda: ಕೌಟುಂಬಿಕ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ಕಾವ್ಯಾಗೌಡ ಹಾಗೂ ಅವರ ಪತಿ ಸೋಮಶೇಖರ್ ಅವರಿಗೆ ಹೈಕೋರ್ಟ್ ರಿಲೀಫ್ ಕೊಟ್ಟಿದೆ. ಕೌಟುಂಬಿಕ ವ್ಯಾಜ್ಯಕ್ಕೆ ಸಂಬಂಧಿಸಿದಂತೆ ನಟಿ ಕಾವ್ಯಗೌಡ ಹಾಗೂ ಸೋಮಶೇಖರ್ ಅವರ ಮೇಲೆ ಎಫ್‌ಐಆರ್ ಹಾಗೂ ಪ್ರಕರಣದ ತನಿಖೆಗೆ ಸಂಬಂಧಿಸಿದಂತೆ ಹೈಕೋರ್ಟ್ ಮಧ್ಯಂತರ ತಡೆ ನೀಡಿದೆ. ಇನ್ನು ಈ ಪ್ರಕರಣದಲ್ಲಿ ಎಫ್‌ಐಆರ್‌ಗೆ ತಡೆ ನೀಡುವಂತೆ ಕೋರಿ ಕಾವ್ಯ

ಒನ್ ಇ೦ಡಿಯ 16 Feb 2026 3:09 pm

Breaking: ಕರ್ನಾಟಕದ ವಿವಿಧ ಕೋರ್ಟ್‌ಗಳಿಗೆ ಬಾಂಬ್ ಬೆದರಿಕೆ, ಕಲಾಪಗಳು ಮೊಟಕು, ಎಲ್ಲೆಡೆ ಆತಂಕ

ಬೆಂಗಳೂರು: ಕರ್ನಾಟಕದ ವಿವಿಧ ಜಿಲ್ಲೆಗಳ ಕೋರ್ಟ್‌ಗಳಿಗೆ ಇ-ಮೇಲ್ ಮೂಲಕ ಬಾಂಬ್ ಬೆದರಿಕೆ ಹಾಕಲಾಗಿದೆ. ಈ ಸಂಬಂಧ ನ್ಯಾಯಾಲಗಳ ಇಂದಿನ ಕಲಾಪಗಳು ಮೊಟಕುಕೊಂಡಿದ್ದು, ಕೋರ್ಟ್ ಆವರಣದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.

ಒನ್ ಇ೦ಡಿಯ 16 Feb 2026 3:09 pm

ದ್ವೇಷ ಭಾಷಣ ಆರೋಪ | Assam ಸಿಎಂ ವಿರುದ್ಧ ಎಫ್ಐಆರ್ ಕೋರಿ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಸುಪ್ರೀಂ ಕೋರ್ಟ್

► ಹೈಕೋರ್ಟ್ ಮೊರೆ ಹೋಗುವಂತೆ ಸುಪ್ರೀಂ ಕೋರ್ಟ್ ಸೂಚನೆ►‘ಹೈಕೋರ್ಟ್ ಅಧಿಕಾರವನ್ನು ದುರ್ಬಲಗೊಳಿಸಬೇಡಿ’ ಎಂದ ಸಿಜೆಐ ಸೂರ್ಯ ಕಾಂತ್

ವಾರ್ತಾ ಭಾರತಿ 16 Feb 2026 3:00 pm

ಕಾಂಗ್ರೆಸ್ ಹೈಕಮಾಂಡ್ ಅಸಹಾಯಕವಲ್ಲ, ಸಮಯ ಬಂದಾಗ ಸೂಕ್ತ ತೀರ್ಮಾನ: ಬಿ ಕೆ ಹರಿಪ್ರಸಾದ್

ಕಾಂಗ್ರೆಸ್‌ ಹೈಕಮಾಂಡ್‌ ನಾಯಕರು ಅಸಹಾಯಕರಲ್ಲ. ನಾಯಕತ್ವ ಬದಲಾವಣೆಯ ಬಗ್ಗೆ ಸಮಯ ಬಂದಾಗ ಸೂಕ್ತ ನಿರ್ಧಾರವನ್ನು ದೆಹಲಿ ನಾಯಕರು ಕೈಗೊಳ್ಳುತ್ತಾರೆ ಎಂದು ಹಿರಿಯ ಕಾಂಗ್ರೆಸ್ ನಾಯಕ ಬಿ ಕೆ ಹರಿಪ್ರಸಾದ್ ಹೇಳಿದರು. ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಚರ್ಚೆ ತೀವ್ರ ಸ್ವರೂಪವನ್ನು ಪಡೆದುಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಬಿಕೆ ಹರಿಪ್ರಸಾದ್ ಹೇಳಿಕೆ ಮಹತ್ವ ಪಡೆದುಕೊಂಡಿದೆ. ಇದೇ ಸಂದರ್ಭದಲ್ಲಿ ವಂದೇ ಮಾತರಂ ಗೀತೆಯನ್ನು ಹಾಡುವುದು ಕಡ್ಡಾಯ ಮಾಡಿರುವ ವಿಚಾರವಾಗಿಯೂ ಅವರು ಮಾತನಾಡಿದ್ದಾರೆ. ಈ ಕುರಿತಾಗಿ ಮತ್ತಷ್ಟು ವಿವರ ಇಲ್ಲಿದೆ.

ವಿಜಯ ಕರ್ನಾಟಕ 16 Feb 2026 2:51 pm

ಹಾವೇರಿ, ಮಂಡ್ಯ, ಕೊಡಗು-ದಾವಣಗೆರೆ ನ್ಯಾಯಾಲಯಗಳಿಗೆ ಬಾಂಬ್ ಬೆದರಿಕೆ: ಕೋರ್ಟ್ ಕಲಾಪಗಳ ಮೊಟಕು

ರಾಜ್ಯದ ಹಲವು ಜಿಲ್ಲೆಗಳ ಕೋರ್ಟ್ ಕಲಾಪಗಳು ಅರ್ಧಕ್ಕೆ ನಿಂತಿವೆ. ಸಾರ್ವಜನಿಕರು ಹಾಗೂ ವಕೀಲರು ಕೋರ್ಟ್‌ನಿಂದ ಹೊರಗೆ ಓಡಿಬಂದಿದ್ದಾರೆ. ಬಾಂಬ್ ತಪಾಸಣ ದಳ, ಅಗ್ನಿಶಾಮಕ ದಳದವರು ಕೋರ್ಟ್ ಆವರಣದಲ್ಲಿ ಮೊಕ್ಕಾಂ ಹೂಡಿದ್ದಾರೆ. ಕೆಲವೆಡೆ ಈ ಬೆದರಿಕೆ ಈಮೇಲ್ ಸುಳ್ಳು ಎಂಬುದು ದೃಢವಾಗಿದೆ.

ವಿಜಯ ಕರ್ನಾಟಕ 16 Feb 2026 2:37 pm

ಹಾಸನ ಜಿಲ್ಲಾ ನ್ಯಾಯಾಲಯಕ್ಕೆ ಮತ್ತೊಮ್ಮೆ ಹುಸಿ ಬಾಂಬ್ ಬೆದರಿಕೆ ಇ-ಮೇಲ್

ಶ್ವಾನದಳ, ಬಾಂಬ್ ನಿಷ್ಕ್ರಿಯ ದಳದಿಂದ ಸುದೀರ್ಘ ತಪಾಸಣೆ

ವಾರ್ತಾ ಭಾರತಿ 16 Feb 2026 2:37 pm

ಧಾರವಾಡ ಹೈಕೋರ್ಟ್ ಪೀಠಕ್ಕೆ ಹುಸಿ ಬಾಂಬ್ ಬೆದರಿಕೆ: ಪರಿಶೀಲನೆ ಬಳಿಕ ಕಲಾಪ ಮುಂದುವರಿಕೆ

ಧಾರವಾಡ: ಧಾರವಾಡ ಹೈಕೋರ್ಟ್ ಪೀಠಕ್ಕೆ ಇಮೇಲ್ ಮೂಲಕ ಇಂದು ಮುಂಜಾನೆ ಹುಸಿ ಬಾಂಬ್ ಬೆದರಿಕೆ ಸಂದೇಶ ಬಂದಿರುವ ಹಿನ್ನೆಲೆಯಲ್ಲಿ ಕೋರ್ಟ್ ಆವರಣದಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿತ್ತು. ಕೋರ್ಟ್ ಕಟ್ಟಡವನ್ನು ಹಾಗೂ ಆವರಣದ ಸುತ್ತಲು ಸಂಪೂರ್ಣವಾಗಿ ಪರಿಶೀಲಿಸಿದ ನಂತರ ಪೊಲೀಸರಿಗೆ ಯಾವುದೇ ಸ್ಫೋಟಕ ವಸ್ತುಗಳು ಪತ್ತೆಯಾಗದ ಹಿನ್ನೆಲೆಯಲ್ಲಿ ಮತ್ತೆ ಕೋರ್ಟ್ ಕಲಾಪಕ್ಕೆ ಆರಂಭವಾಗಿದೆ. ಧಾರವಾಡ ಹೈಕೋರ್ಟ್ ಪೀಠಕ್ಕೆ ಇಂದು ಮುಂಜಾನೆ ಬಂದಿರುವ ಇ ಮೇಲ್ ಮಧ್ಯಾಹ್ನ 1-15ಕ್ಕೆ ಬಾಂಬ್ ಸ್ಫೋಟಿಸುವುದಾಗಿ ಹೇಳಲಾಗಿದ್ದು, ಸ್ಥಳಕ್ಕೆ ಗರಗ ಪೊಲೀಸ್ ಠಾಣೆ ಪೊಲೀಸರು, ಬಾಂಬ್ ನಿಷ್ಕ್ರಿಯ ದಳ ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ, ಪರಿಶೀಲನೆ ನಡೆಸಿದರು. ಕೋರ್ಟ್ ಆವರಣದಲ್ಲಿದ್ದ ಕಕ್ಷಿಗಾರರು, ವಕೀಲರನ್ನು ಹೈಕೋರ್ಟ್ನಿಂದ ಹೊರಗಡೆ ಕಳುಹಿಸಿ ತಪಾಸಣೆ ನಡೆಸಿದರು. ಪೊಲೀಸರ ತನಿಖೆಯ ಬಳಿಕ ಇದೀಗ ಅದು ಸುಳ್ಳು ಬಾಂಬ್ ಬೆದರಿಕೆ ಎನ್ನುವುದು ಗೊತ್ತಾಗಿದೆ. ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗುಂಜನ್ ಆರ್ಯ ಸಹ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಳಿಕ ಎಂದಿನಂತೆ ಹೈಕೋರ್ಟ್ ಕಲಾಪ ಪುನರ್ ಆರಂಭವಾಗಿದೆ. ''ಕೋರ್ಟ್ ಆವರಣದೊಳಗೆ ಬರುವ ಪ್ರತಿಯೊಬ್ಬ ವ್ಯಕ್ತಿ ಹಾಗೂ ವಾಹನಗಳನ್ನು ತಪಾಸಣೆ ಮಾಡಿಯೇ ಒಳಗೆ ಬಿಡಬೇಕು ಎಂದು ಸಾಕಷ್ಟು ಸಲ ನಾವು ಮನವಿ ಮಾಡಿದ್ದೇವೆ. ಆದರೆ ಸರಕಾರ ಇನ್ನು ಎಚ್ಚೆತ್ತುಕೊಂಡಿಲ್ಲ. ಕಳೆದ ತಿಂಗಳು ಈ ರೀತಿ ಬಾಂಬ್ ಬೆದರಿಕೆ ಇ-ಮೇಲ್ ಬಂದಿತ್ತು. ಹೈಕೋರ್ಟ್ ಪೀಠಕ್ಕೆ ಭದ್ರತೆ ಹೆಚ್ಚಿಸಬೇಕು. ಬೆದರಿಕೆ ಇ-ಮೇಲ್ ಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಹೈಕೋರ್ಟ್ ಪೀಠಗಳಿಗೂ ಭದ್ರತೆಯನ್ನು ಒದಗಿಸಬೇಕು. ಇಲ್ಲವಾದಲ್ಲಿ ನಾವು ಹೋರಾಟ ಪ್ರಾರಂಭಿಸುತ್ತೇವೆ ಎಂದು ವಕೀಲರ ಸಂಘದ ಅಧ್ಯಕ್ಷ ಬಿ.ಡಿ. ಹಿರೇಮಠ ಹೇಳಿದ್ದಾರೆ.

ವಾರ್ತಾ ಭಾರತಿ 16 Feb 2026 2:25 pm

ಸಂಪಾದಕೀಯ | ‘ಅನ್ಯ’ರಾಗುತ್ತಿರುವ ವಲಸೆ ಕಾರ್ಮಿಕರು!

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

ವಾರ್ತಾ ಭಾರತಿ 16 Feb 2026 2:09 pm

Bhubaneswar | ಮನೆಯ ಮೇಲ್ಛಾವಣಿಯಲ್ಲಿ ಭೀಕರ ಸ್ಫೋಟ; ಚಿಕಿತ್ಸೆ ವೇಳೆ ತಾಯಿ–ಮಗ ಮೃತ್ಯು; ಎನ್ಐಎ ತನಿಖೆ ಆರಂಭ

ಭುವನೇಶ್ವರ: ಒಡಿಶಾ ರಾಜಧಾನಿ ಭುವನೇಶ್ವರದ ಸುಂದರಪಾದ ಪ್ರದೇಶದಲ್ಲಿ ಜನವರಿ 27ರಂದು ಸಂಭವಿಸಿದ ಭೀಕರ ಸ್ಫೋಟದ ಸಿಸಿಟಿವಿ ದೃಶ್ಯಾವಳಿಗಳು ಬಹಿರಂಗವಾಗಿದ್ದು, ಘಟನೆಯ ತೀವ್ರತೆಯನ್ನು ಅನಾವರಣಗೊಳಿಸಿವೆ. ಸ್ಫೋಟದಲ್ಲಿ ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದು, ಚಿಕಿತ್ಸೆ ಪಡೆಯುತ್ತಿದ್ದವರಲ್ಲಿ ಒಬ್ಬ ಮಹಿಳೆ ಮತ್ತು ಅವರ ಪುತ್ರ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ವಸತಿ ಕಟ್ಟಡದ ಮೇಲ್ಛಾವಣಿಯಲ್ಲಿ ಅಳವಡಿಸಿದ್ದ ನೀರಿನ ಟ್ಯಾಂಕ್ ಗಳ ಹಿಂದಿನಿಂದ ಹಠಾತ್ ಜ್ವಾಲೆಗಳು ಎದ್ದು ದಟ್ಟ ಹೊಗೆ ಆಕಾಶಕ್ಕೇರಿರುವುದು ಸಿಸಿಟಿವಿ ದೃಶ್ಯಗಳಲ್ಲಿ ಕಂಡುಬಂದಿದೆ. ಸ್ಫೋಟದ ಆಘಾತದಿಂದ ಸುತ್ತಮುತ್ತಲಿನ ಮನೆಗಳಲ್ಲಿ ದೊಡ್ಡ ಮಟ್ಟದ ಕಂಪನವುಂಟಾಗಿದೆ. ಕಿವಿಗವುಚುವ ಶಬ್ದ ಕೇಳುತ್ತಿದ್ದಂತೆಯೇ ಜನರು ಭಯಭೀತರಾಗಿ ಮನೆಗಳಿಂದ ಹೊರಗೆ ಓಡಿಬಂದರು ಎನ್ನಲಾಗಿದೆ. ಮನೆಯ ಛಾವಣಿಯಲ್ಲಿ ಸ್ಫೋಟಕ ವಸ್ತುಗಳನ್ನು ನಿರ್ವಹಿಸುವ ವೇಳೆ ಈ ಘಟನೆ ಸಂಭವಿಸಿರಬಹುದು ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಗಾಯಗೊಂಡ ನಾಲ್ವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕೆಲವು ದಿನಗಳ ಚಿಕಿತ್ಸೆ ಬಳಿಕ ಇಬ್ಬರು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಅಕ್ರಮ ಬಾಂಬ್ ತಯಾರಿಕಾ ಶಂಕೆ ಈ ಪ್ರಕರಣದಲ್ಲಿ ಶಹನವಾಝ್ ಮಲಿಕ್ ನನ್ನು ಪ್ರಮುಖ ಆರೋಪಿಯಾಗಿ ಗುರುತಿಸಿರುವ ಭುವನೇಶ್ವರ ಉಪ ಪೊಲೀಸ್ ಆಯುಕ್ತರು, ಅಕ್ರಮ ಬಾಂಬ್ ತಯಾರಿಕೆಯ ಶಂಕೆಯಲ್ಲಿ ತನಿಖೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ಶಹನವಾಝ್ ಮಲಿಕ್, ಆತನ ತಾಯಿ ಅಮಿಯಾ ಮಲಿಕ್, ಹಾಗೂ ಮತ್ತೊಬ್ಬ ವ್ಯಕ್ತಿ ಮನೆಯಲ್ಲಿ ಸ್ಫೋಟಕ ಸಾಧನ ತಯಾರಿಕೆಯಲ್ಲಿ ತೊಡಗಿಕೊಂಡಿದ್ದರೆಂಬ ಸುಳಿವುಗಳು ಲಭಿಸಿವೆ ಎಂದು ತಿಳಿಸಿದ್ದಾರೆ. ಘಟನಾ ಸ್ಥಳದಿಂದ ಗನ್ ಪೌಡರ್ ವಶಪಡಿಸಿಕೊಳ್ಳಲಾಗಿದ್ದು, ಬಾಂಬ್ ತಯಾರಿಕಾ ಚಟುವಟಿಕೆ ನಡೆದಿರುವ ಶಂಕೆ ಮತ್ತಷ್ಟು ಬಲಗೊಂಡಿದೆ ಎಂದು ಪೊಲೀಸರು ಹೇಳಿದ್ದಾರೆ. “ಗಾಯಗೊಂಡ ಪ್ರಮುಖ ವ್ಯಕ್ತಿಗೆ ಈ ಹಿಂದೆ ಕ್ರಿಮಿನಲ್ ದಾಖಲೆ ಇತ್ತು. ಅವರು ಯಾವುದೋ ರೀತಿಯ ಅಪರಾಧ ಚಟುವಟಿಕೆಗೆ ಸಂಚು ರೂಪಿಸುತ್ತಿದ್ದರೆಂಬ ಅನುಮಾನವಿದೆ. ಸ್ಫೋಟಕಗಳನ್ನು ತಯಾರಿಸುವ ವೇಳೆಯಲ್ಲಿಯೇ ಸ್ಫೋಟ ಸಂಭವಿಸಿದೆ,” ಎಂದು ಡಿಸಿಪಿ ಜಗಮೋಹನ್ ಮೀನಾ ತಿಳಿಸಿದ್ದಾರೆ. ಸಂಗ್ರಹಿಸಿದ ಸ್ಫೋಟಕ ವಸ್ತುಗಳ ಬಗ್ಗೆ ಹೆಚ್ಚಿನ ಶೋಧ ಹಾಗೂ ಪರೀಕ್ಷೆ ನಡೆಯಲಿದೆ ಎಂದೂ ಹೇಳಿದ್ದಾರೆ. ಶಹನವಾಝ್ ಮಲಿಕ್ ವಿರುದ್ಧ ಹಿಂದಿನ ಪ್ರಕರಣಗಳೂ ದಾಖಲಾಗಿವೆ ಎಂದು ಪೊಲೀಸರು ದೃಢಪಡಿಸಿದ್ದಾರೆ. ಘಟನೆಯ ಗಂಭೀರತೆಯನ್ನು ಪರಿಗಣಿಸಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಪ್ರಕರಣವನ್ನು ಕೈಗೆತ್ತಿಕೊಂಡಿದ್ದು, ವಿವರವಾದ ತನಿಖೆ ಆರಂಭಿಸಿದೆ. ಕೇಂದ್ರ ಸಂಸ್ಥೆ ಮಧ್ಯಪ್ರವೇಶಿಸುವ ಮೊದಲು ಸ್ಥಳೀಯ ಪೊಲೀಸರು ವಿಶೇಷ ತನಿಖಾ ತಂಡವನ್ನು ರಚಿಸಿದ್ದರು. ಸ್ಫೋಟದ ನಿಖರ ಕಾರಣ ಪತ್ತೆಹಚ್ಚಲು ಹಾಗೂ ಇದರ ಹಿಂದೆ ಯಾವುದೇ ದೊಡ್ಡ ಪಿತೂರಿ ಇದೆಯೇ ಎಂಬುದರ ಕುರಿತು ಮಾಹಿತಿ ಕಲೆಹಾಕಲು ಅಧಿಕಾರಿಗಳು ಸಿಸಿಟಿವಿ ದೃಶ್ಯಾವಳಿಗಳನ್ನು ಸೂಕ್ಷ್ಮವಾಗಿ ವಿಶ್ಲೇಷಿಸುತ್ತಿದ್ದಾರೆ. ವಿಧಿವಿಜ್ಞಾನ ಸಾಕ್ಷ್ಯ ಸಂಗ್ರಹವೂ ನಡೆಯುತ್ತಿದ್ದು, ಸುಂದರಪಾದ ಹಾಗೂ ಸುತ್ತಮುತ್ತ ಪ್ರದೇಶಗಳಲ್ಲಿ ಭದ್ರತೆಯನ್ನು ಬಿಗಿಗೊಳಿಸಲಾಗಿದೆ.

ವಾರ್ತಾ ಭಾರತಿ 16 Feb 2026 2:08 pm

ರ ಎಂದರೆ ಠ ಎನ್ನಲು ಬಾರದ ವ್ಯಕ್ತಿ; ಪಿಸಿಬಿ ಮುಖ್ಯಸ್ಥ ಮೊಹ್ಸಿನ್‌ ನಖ್ವಿಗೆ ಕ್ರಿಕೆಟ್‌ ಗೊತ್ತಿಲ್ಲ ಎಂದ ಶೋಯೆಬ್‌ ಅಖ್ತರ್!

ಪಾಕಿಸ್ತಾನದ ಮಾಜಿ ವೇಗಿ ಶೋಯೆಬ್‌ ಅಖ್ತರ್‌ ಒಂದು ರೀತಿಯಲ್ಲಿ ಹಾರ್ಟ್‌ಗೂ, ನಾಲಿಗೆಗೂ ಫಿಲ್ಟರ್‌ ಇಲ್ಲದ ವ್ಯಕ್ತಿ. ಮನಸ್ಸಿನಲ್ಲಿ ಏನಿದೆಯೋ ಅದನ್ನು ನೇರವಾಗಿ ಹೇಳುವ ಶೋಯೆಬ್‌ ಅಖ್ತರ್‌, ಕ್ರಿಕೆಟ್‌ ವಿಷಯಕ್ಕೆ ಬಂದರೆ ತಮ್ಮವರನ್ನೂ ಬಿಡದೇ ಕ್ಲಾಸ್‌ ತೆಗೆದುಕೊಳ್ಳುತ್ತಾರೆ. ಅದೇ ರೀತಿ ನಿನ್ನೆ (ಫೆ.15-ಭಾನುವಾರ) ಕೊಲಂಬೊದಲ್ಲಿ ನಡೆದ ಟಿ-20 ಪಂದ್ಯದಲ್ಲಿ ಭಾರತದ ವಿರುದ್ಧದ ಪಾಕಿಸ್ತಾನ ಸೋಲಿಗೆ, ಪಿಸಿಬಿ ಮುಖ್ಯಸ್ಥ ಮೊಹ್ಸಿನ್‌ ನಖ್ವಿ ವಿರುದ್ಧ ಶೋಯೆಬ್‌ ಅಖ್ತರ್‌ ಕಿಡಿಕಾರಿದ್ದಾರೆ.ಈ ಕುರಿತು ಇಲ್ಲಿದೆ ಹೆಚ್ಚಿನ ಮಾಹಿತಿ.

ವಿಜಯ ಕರ್ನಾಟಕ 16 Feb 2026 2:07 pm

ಬೆಂಗಳೂರಿನ ರಸ್ತೆಗುಂಡಿಗೆ ಕೆಲಸಕ್ಕೆ ಹೊರಟಿದ್ದ ಮಹಿಳೆ, 2 ವರ್ಷದ ಮಗು ಬಲಿ

ಬೆಂಗಳೂರಿನ ರಸ್ತೆ ಗುಂಡಿಗಳಿಗೆ ವಾಹನ ಸವಾರರು ಅಪಘಾತಕ್ಕೀಡಾಗುತ್ತಿದ್ದಾರೆ. ಆದರೆ ಅಧಿಕಾರಿಗಳದ್ದು ಮಾತ್ರ ಅದೇ ನಿರ್ಲಕ್ಷ್ಯ. ಆಡುಗೋಡಿಯ ಬಾಷ್ ಕಂಪನಿಯ ಮುಂಭಾಗದ ರಸ್ತೆಯಲ್ಲಿ ರಸ್ತೆ ಗುಂಡಿಗೆ ಆನೆಪಾಳ್ಯ ಮೂಲದ 49 ವರ್ಷದ ಅಮಲಾ ಎನ್ನುವವರು ಬಲಿಯಾಗಿದ್ದಾರೆ. ಗುಂಡಿಯನ್ನು ತಪ್ಪಿಸಲು ಹೋಗಿ ಆಯತಪ್ಪಿ ಕೆಳಗೆ ಬಿದ್ದಿದ್ದಾರೆ. ಹಿಂದಿನಿಂದ ಬಂದ ಟಿಪ್ಪರ್ ಅವರ ಮೇಲೆ ಹರಿದು ಸಾವನ್ನಪ್ಪಿದ್ದಾರೆ.

ವಿಜಯ ಕರ್ನಾಟಕ 16 Feb 2026 2:06 pm

ಜಾತ್ರೆಯಲ್ಲಿ ವ್ಯಾಪಾರಿಗೆ ʼಫುಡ್ ಜಿಹಾದ್ʼ ಎಂದು ಕಿರುಕುಳ | ಬನ್ ವ್ಯಾಪಾರಿ ಶೇಖ್ ಶಾ ಬೆಂಬಲಕ್ಕೆ ನಿಂತ ಆಂಧ್ರ ಪ್ರದೇಶ ಸಚಿವ ನಾರಾ ಲೋಕೇಶ್

“ನೀವು ಇದನ್ನು ಸಹಿಸಿಕೊಳ್ಳಬೇಕಾಗಿ ಬಂದಿದ್ದಕ್ಕೆ ನನಗೆ ವಿಷಾದವಿದೆ” ಎಂದ ಸಚಿವ

ವಾರ್ತಾ ಭಾರತಿ 16 Feb 2026 1:52 pm

ಕರ್ನಾಟಕದ ಕರಾವಳಿಗೆ ಬರಲು ಐಟಿ - ಬಿಟಿ ಕಂಪನಿಗಳ ಹಿಂದೇಟು ಚರ್ಚೆ, ಸೋಷಿಯಲ್ ಮೀಡಿಯಾದಲ್ಲಿ ವಾಕ್ಸಮರ

ಕರ್ನಾಟಕದ ಕರಾವಳಿಗೆ ಬರಲು ಐಟಿ - ಬಿಟಿ ಕಂಪನಿಗಳ ಹಿಂದೇಟು ಹಾಕುತ್ತಿವೆ. ಈ ಭಾಗದಲ್ಲಿ ಹೂಡಿಕೆ ಮಾಡುವುದಕ್ಕೆ ಹಿಂದೇಟು ಹಾಕುತ್ತಿದ್ದು ಚಿಂತಿಸುತ್ತಿವೆ. ಇದಕ್ಕೆ ಮುಖ್ಯವಾಗಿ ಕೋಮುಗಲಭೆಯೇ ಕಾರಣ ಎಂದು ಸಚಿವ ಪ್ರಿಯಾಂಕ್ ಖರ್ಗೆ ಅವರು ಹೇಳಿದ್ದು, ಪರ - ವಿರೋಧ ಚರ್ಚೆಗೆ ಕಾರಣವಾಗಿದೆ. ಕರಾವಳಿಯ ಮಣ್ಣಿನ ಗುಣ ಮತ್ತು ಅಲ್ಲಿನ ಜನರ ಉದ್ಯಮಶೀಲತೆಯನ್ನು, ಪ್ರಗತಿಯನ್ನು, ತಮ್ಮ ಕೀಳು

ಒನ್ ಇ೦ಡಿಯ 16 Feb 2026 1:50 pm

Karnataka Weather: ಫೆ.17 -18 ಕ್ಕೆ ಕರಾವಳಿ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್: ಕಾರವಾರ, ಬಳ್ಳಾರಿ, ಕಲಬುರಗಿಯಲ್ಲೂ ಭಾರಿ ಬಿಸಿಲು

ರಾಜ್ಯದ ಹಲವು ಜಿಲ್ಲೆಗಳಲ್ಲಿ ಗರಿಷ್ಠ ತಾಪಮಾನ 36 ಡಿಗ್ರಿ ಸೆಲ್ಸಿಯಸ್ ಗೆ ಏರಿದ್ದರೆ, ತೇವಾಂಶ-ಆರ್ದ್ರತೆಯ ವಾತಾವರಣ ಕರಾವಳಿಯಲ್ಲಿ 85% ಗೆ ಹೆಚ್ಚಳಗೊಂಡಿದ್ದು, ಬೇಸಿಗೆಯ ಅನುಭವ ನೀಡುತ್ತಿದೆ. ನಿಮ್ಮ ಜಿಲ್ಲೆಗೆ ಹವಾಮಾನ ಮುನ್ಸೂಚನೆಗಳು ಏನಿವೆ ತಿಳಿದುಕೊಳ್ಳಿ..

ವಿಜಯ ಕರ್ನಾಟಕ 16 Feb 2026 1:37 pm

ಶಶಿ ತರೂರ್‌ಗೆ ವಿದೇಶಾಂಗ ಸಚಿವರಾಗಬೇಕು, ಪವನ್‌ ಖೇರಾ ಕೈಗೊಂಬೆ; ಕಾಂಗ್ರೆಸ್‌ ನಾಯಕರ ʻಅಸಲಿಯತ್ತುʼ ಬಿಚ್ಚಿಟ್ಟ ಮಣಿಶಂಕರ್‌ ಅಯ್ಯರ್‌!

ಕಾಂಗ್ರೆಸ್‌ ನಾಯಕ ಮತ್ತು ಮಾಜಿ ಕೇಂದ್ರ ಸಚಿವ ಮಣಿಶಂಕರ್‌ ಅಯ್ಯರ್‌ ಮಾತಿಗೆ ನಿಂತರ ಸಾಕು,ಕೈಪಾಳೆಯದಲ್ಲಿ ಢವಢವ ಶುರುವಾಗುತ್ತೆ. ಏಕೆಂದರೆ ಒಂದು ಕಾಲದ ತಮ್ಮ ಸ್ವಂತ ಪಕ್ಷ ಮತ್ತು ಅದರ ನಾಯಕರ ವಿರುದ್ಧ ಮಣಿಶಂಕರ್‌ ಅಯ್ಯರ್‌ ಯಾವುದೇ ಹಿಂಜರಿಕೆ ಇಲ್ಲದೇ ವಾಗ್ದಾಳಿ ನಡೆಸುತ್ತಾರೆ. ಅದೇ ರೀತಿ ಕೇರಳದಲ್ಲಿ ಈ ಬಾರಿ ಕಾಂಗ್ರೆಸ್‌ ಅಧಿಕಾರಕ್ಕೆ ಬಾರದು ಎಂದಿರುವ ಅಯ್ಯರ್‌, ಸಿಪಿಎಂ ನಾಯಕಜ ಪಿಣರಾಯಿ ವಿಜಯನ್‌ ಮತ್ತೆ ಸಿಎಂ ಆಗಲಿ ಎಂದು ಹಾರೈಸಿದ್ದಾರೆ. ಇದೇ ವೇಳೆ ಶಶಿ ತರೂರ್‌, ಪವನ್‌ ಖೇರಾ ಬಗ್ಗೆ ಅಯ್ಯರ್‌ ಆಡಿರುವ ಮಾತುಗಳು ಸಂಚಲನ ಸೃಷ್ಟಿಸಿವೆ.

ವಿಜಯ ಕರ್ನಾಟಕ 16 Feb 2026 1:18 pm

ಬೆಂಗಳೂರಿಗೆ ಆಗಮಿಸಿದ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್

ಬೆಂಗಳೂರು : ಬೆಂಗಳೂರಿನ ವಿವಿಧ ಕಾರ್ಯಕ್ರಮಗಳು ಹಾಗೂ ಸಭೆಗಳಲ್ಲಿ ಭಾಗವಹಿಸುವ ಸಲುವಾಗಿ ಎರಡು ದಿನಗಳ ಬೆಂಗಳೂರು ಪ್ರವಾಸ ಕೈಗೊಂಡಿರುವ ಕೇಂದ್ರ ರಕ್ಷಣಾ ಸಚಿವರಾದ ರಾಜನಾಥ್ ಸಿಂಗ್ ಅವರು ಇಂದು ವಿಶೇಷ ವಿಮಾನದ ಮೂಲಕ ಬೆಂಗಳೂರಿನ eಚ್.ಎ.ಎಲ್ ವಿಮಾನ ನಿಲ್ದಾಣಕ್ಕೆ ಆಗಮಿಸಿದರು. ಕೇಂದ್ರ ರಕ್ಷಣಾ ಸಚಿವರನ್ನು ಎಚ್.ಎ.ಎಲ್.ಸಿ. ಎಂಡಿ ಡಾ‌ ಸುನೀಲ್, ಬಿ.ಇ.ಎಲ್. ಸಿಎಂಡಿ ಮನೋಜ್ ಜೈನ್, ಬಿ.ಇ.ಎಂ.ಎಲ್ ಸಿ.ಎಂ.ಡಿ ಶಾಂತನುರಾಯ್, ಬಿ.ಡಿಎಲ್ ಸಿಎಂಡಿ ಮದೇವ್ ರಾವ್, ಲೆಫ್ಟಿನೆಂಟ್‌ ಜನರಲ್‌ ಜೆ.ಕೆ. ಗೇರಾ, ಸೇರಿದಂತೆ ಹಿರಿಯ ಅಧಿಕಾರಿಗಳು ಸ್ವಾಗತಿಸಿದರು.

ವಾರ್ತಾ ಭಾರತಿ 16 Feb 2026 1:15 pm

Uttar Pradesh | ಕಾರಿನ ಮೇಲೆ ಬಿದ್ದ ಹೈಮಾಸ್ಟ್ ಕಂಬ; ಸಮಾಜವಾದಿ ಪಕ್ಷದ ನಾಯಕ ಸ್ಥಳದಲ್ಲೇ ಮೃತ್ಯು

ಲಕ್ನೋ: ಉತ್ತರ ಪ್ರದೇಶದ ಪ್ರತಾಪ್ಗಢ ಜಿಲ್ಲೆಯ ಅಂತು ಪ್ರದೇಶದಲ್ಲಿ 1,000 ಕೆಜಿ ತೂಕದ ಹೈಮಾಸ್ಟ್ ಲೈಟಿಂಗ್ ಕಂಬವೊಂದು ಚಲಿಸುತ್ತಿದ್ದ ಎಸ್ಯುವಿ ಕಾರಿನ ಮೇಲೆ ಬಿದ್ದ ಪರಿಣಾಮ ಸಮಾಜವಾದಿ ಪಕ್ಷದ ನಾಯಕ ಲಾಲ್ ಬಹದ್ದೂರ್ ಯಾದವ್ (47) ಸ್ಥಳದಲ್ಲೇ ಮೃತಪಟ್ಟ ಘಟನೆ ರವಿವಾರ ಮಧ್ಯಾಹ್ನ ನಡೆದಿದೆ. ಬಾಬುಗಂಜ್ ಮಾರುಕಟ್ಟೆ ಸಮೀಪದ ಪೆಟ್ರೋಲ್ ಪಂಪ್ ಎದುರು ಮಧ್ಯಾಹ್ನ ಸುಮಾರು 1 ಗಂಟೆ ಸುಮಾರಿಗೆ ಘಟನೆ ಸಂಭವಿಸಿದೆ. ಆ ವೇಳೆ ಕಾರ್ಮಿಕರು ಹೈಮಾಸ್ಟ್ ಕಂಬವನ್ನು ಅಳವಡಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಪ್ರತ್ಯಕ್ಷದರ್ಶಿಗಳ ಹೇಳಿಕೆಯಂತೆ, ಅಳವಡಿಕೆ ವೇಳೆ ಭಾರೀ ಗಾತ್ರದ ಕಂಬವು ಇದ್ದಕ್ಕಿದ್ದಂತೆ ಸಮತೋಲನ ಕಳೆದುಕೊಂಡು ರಸ್ತೆ ಮೂಲಕ ಸಾಗುತ್ತಿದ್ದ ಕಾರಿನ ಮೇಲೆ ಬಿದ್ದಿದೆ.  ಮೃತ ಲಾಲ್ ಬಹದ್ದೂರ್ ಯಾದವ್ ಅವರು 2022ರ ನಗರ ಪಂಚಾಯತ್ ಚುನಾವಣೆಯಲ್ಲಿ ಅಂತು ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಸಮಾಜವಾದಿ ಪಕ್ಷದೊಂದಿಗೆ ಸಂಪರ್ಕ ಹೊಂದಿದ್ದ ಅವರು ಲೋಕೋಪಯೋಗಿ ಇಲಾಖೆ ಪಿಡಬ್ಲ್ಯೂಡಿ ಗುತ್ತಿಗೆದಾರರಾಗಿದ್ದರು. ಘಟನೆ ಸಂಭವಿಸಿದ ವೇಳೆ ತಮ್ಮ ಹುಂಡೈ ಕ್ರೆಟಾ ಕಾರಿನಲ್ಲಿ ನಗರದ ಕಡೆಗೆ ತೆರಳುತ್ತಿದ್ದರು ಎಂದು ತಿಳಿದು ಬಂದಿದೆ. ಸುದ್ದಿ ತಿಳಿದ ಕೂಡಲೇ ಪೊಲೀಸರು ಸ್ಥಳಕ್ಕೆ ಧಾವಿಸಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದರು. ಘಟನೆ ಸ್ಥಳೀಯರಲ್ಲಿ ಆತಂಕ ಉಂಟುಮಾಡಿದ್ದು, ಹೈಮಾಸ್ಟ್ ಅಳವಡಿಕೆ ಕಾರ್ಯದ ವೇಳೆ ನಿರ್ಲಕ್ಷ್ಯ ತೋರಲಾಗಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸುರಕ್ಷತಾ ಮಾನದಂಡಗಳ ಪಾಲನೆ ಕುರಿತು ಗಂಭೀರ ಕಳವಳ ವ್ಯಕ್ತವಾಗಿದೆ. ಪ್ರತಾಪ್ಗಢ ಜಿಲ್ಲಾ ಪೊಲೀಸ್ ಅಧೀಕ್ಷಕ ದೀಪಕ್ ಭುಕರ್ ಪ್ರಕರಣ ಸಂಬಂಧ ಎಫ್ಐಆರ್ ದಾಖಲಿಸುವ ಪ್ರಕ್ರಿಯೆ ಆರಂಭಿಸಲಾಗಿದ್ದು, ಸಂಬಂಧಪಟ್ಟವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ. Disturbing video. Lal Bahadur Yadav was driving his car when a pole installed at a petrol pump suddenly collapsed onto his vehicle. He died on the spot. Just yesterday in , a portion of a metro pillar fell onto a busy road, crushing one person to death. How are such fatal… pic.twitter.com/tfv16OD7Ng — Satyendra Kumar Behera (@imskbehera) February 15, 2026

ವಾರ್ತಾ ಭಾರತಿ 16 Feb 2026 12:58 pm

Gold Rate Feb 16: ಚಿನ್ನದ ಬೆಲೆ 13,100 ರೂ., ಬೆಳ್ಳಿ ಬೆಲೆ 7,000 ರೂ. ಭರ್ಜರಿ ಇಳಿಕೆ, ಇಂದಿನ ಚಿನ್ನ - ಬೆಳ್ಳಿ ಬೆಲೆ

Gold Rate Feb 16: ಚಿನ್ನದ ಬೆಲೆಯು ಸೋಮವಾರದಂದು ಭರ್ಜರಿ ಇಳಿಕೆಯಾಗಿದೆ. ಕಳೆದ ಒಂದು ವಾರದಿಂದಲೂ ಅಲ್ಪ ಪ್ರಮಾಣದಲ್ಲಿ ಚಿನ್ನದ ಬೆಲೆ ಇಳಿಕೆಯಾಗುತ್ತಿತ್ತು. ಆದರೆ ಕಳೆದ ಮೂರು ದಿನಗಳಿಂದ ಚಿನ್ನದ ಬೆಲೆ ಭರ್ಜರಿ ಇಳಿಕೆ ಕಂಡಿದೆ. ಕಳೆದ ಮೂರು ತಿಂಗಳಿನಿಂದಲೂ ಚಿನ್ನದ ಬೆಲೆಯಲ್ಲಿ ಭಾರೀ ಏರಿಳಿತ ಕಂಡು ಬರುತ್ತಿತ್ತು. ಆದರೆ ಇದೀಗ ಜಗತ್ತಿನಾದ್ಯಂತ ಶಾಂತಿಯ ವಾತಾವರಣ ನಿರ್ಮಾಣವಾಗುತ್ತಿರುವುದರಿಂದ

ಒನ್ ಇ೦ಡಿಯ 16 Feb 2026 12:58 pm

Chikkamagaluru | ಕಾಡಾನೆ ದಾಳಿಗೆ ಕೂಲಿ ಕಾರ್ಮಿಕ ಬಲಿ

ಚಿಕ್ಕಮಗಳೂರು : ಕಾಡಾನೆ ದಾಳಿಗೆ ಕೂಲಿ ಕಾರ್ಮಿಕನೊಬ್ಬ ಮೃತಪಟ್ಟಿರುವ ಘಟನೆ ಚಿಕ್ಕಮಗಳೂರು ತಾಲೂಕಿನ ಹುಣಸೇಹಳ್ಳಿ ಸಮೀಪದ ಪುರ ಗ್ರಾಮದಲ್ಲಿ ನಡೆದಿರುವುದು ವರದಿಯಾಗಿದೆ. ಮೃತರನ್ನು ಹಾವೇರಿ ಜಿಲ್ಲೆ ಹಾನಗಲ್ ಸಮೀಪದ ತಿರುವಳ್ಳಿ ಮೂಲದ ಯಲ್ಲಪ್ಪ (45) ಎಂದು ಗುರುತಿಸಲಾಗಿದೆ. ತೋಟದ ಹಾದಿಯಲ್ಲಿ ಮನೆಗೆ ಹೋಗುವಾಗ ಕಾಡಾನೆ ದಾಳಿ ನಡೆಸಿದೆ ಎಂದು  ತಿಳಿದು ಬಂದಿದೆ. ಸ್ಥಳಕ್ಕೆ ಅರಣ್ಯ ಅಧಿಕಾರಿಗಳು, ಪೊಲೀಸರ ಭೇಟಿ ನೀಡಿ, ಪರಿಶೀಲನೆ  ನಡೆಸಿದ್ದಾರೆ. ಬಾಳೆಹೊನ್ನೂರು ಸರಕಾರಿ ಆಸ್ಪತ್ರೆಗೆ ಮೃತದೇಹ ರವಾನಿಸಲಾಗಿದೆ.

ವಾರ್ತಾ ಭಾರತಿ 16 Feb 2026 12:52 pm

ಹಂಪಿ ಜನವಸತಿ ಪ್ರದೇಶದಲ್ಲಿ ಚಿರತೆ ಪ್ರತ್ಯಕ್ಷ ; ಸ್ಥಳೀಯರಲ್ಲಿ ತೀವ್ರ ಭೀತಿ

ಇತ್ತೀಚಿಗೆ ಚಿರತೆ ದಾಳಿ, ಚಿರತೆ ಪ್ರತ್ಯಕ್ಷ ಪ್ರಕರಣಗಳು ವರದಿಯಾಗುತ್ತಿದೆ. ಐತಿಹಾಸಿಕ ತಾಣ ಹಂಪಿಯಲ್ಲಿ ಚಿರತೆ ಪ್ರತ್ಯಕ್ಷವಾಗಿದೆ. ಪ್ರವಾಸಿಗರು ಸ್ಥಳೀಯರಲ್ಲಿ ತೀವ್ರ ಭೀತಿ ಸೃಷ್ಟಿಸಿದೆ. ಚಿರತೆಯನ್ನು ಸೆರೆಹಿಡಿದು ಬೇರೆಡೆಗೆ ಸ್ಥಳಾಂತರಿಸಬೇಕೆಂದು ಹಂಪಿ ನಿವಾಸಿಗಳು ಆಗ್ರಹಿಸಿದ್ದಾರೆ. ಸಿಸಿಟಿವಿಯಲ್ಲಿ ಚಿರತೆಯ ಚಲನವಲನಗಳು ದಾಖಲಾಗಿವೆ. ​

ವಿಜಯ ಕರ್ನಾಟಕ 16 Feb 2026 12:51 pm

ವಿಟ್ಲ | ಕಾರು ಢಿಕ್ಕಿ ಹೊಡೆದ ರಭಸಕ್ಕೆ ಮುರಿದು ಬಿದ್ದ ವಿದ್ಯುತ್ ಕಂಬ

ವಿಟ್ಲ: ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದ ಪರಿಣಾಮ ವಿದ್ಯುತ್ ಕಂಬವೇ ಮುರಿದುಬಿದ್ದ ಘಟನೆ ವಿಟ್ಲ ಸಮೀಪದ ಉಕ್ಕುಡದಲ್ಲಿ ಸೋಮವಾರ ನಡೆದಿದೆ. ಢಿಕ್ಕಿಯ ರಭಸಕ್ಕೆ ಕಾರಿನ ಮುಂಭಾಗ ಸಂಪೂರ್ಣ ಜಖಂಗೊಂಡಿದ್ದರೆ, ವಿದ್ಯುತ್ ಕಂಬ ಮುರಿದುಬಿದ್ದಿದೆ. ಕಾರಿನಲ್ಲಿದ್ದವರು ಸಣ್ಣ ಪುಟ್ಟ ಗಾಯಗಳಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ. ವಿದ್ಯುತ್ ಕಂಬ ಮುರಿದುಬಿದ್ದ ಪರಿಣಾಮ ವಿದ್ಯುತ್ ಪ್ರವಹಿಸುತ್ತಿದ್ದ ತಂತಿಗಳು ರಸ್ತೆಗೆ ಬಿದ್ದಿದ್ದು, ಈ ವೇಳೆ ಯಾವುದೇ ವಾಹನ ಅಥವಾ ಜನ ಸಂಚಾರವಿಲ್ಲದ ಕಾರಣ ಯಾವುದೇ ಅಪಾಯ ಸಂಭವಿಸಿಲ್ಲ.

ವಾರ್ತಾ ಭಾರತಿ 16 Feb 2026 12:41 pm

Karnataka Budget 2026: 10,000 ಸರ್ಕಾರಿ ಶಾಲೆಗಳಲ್ಲಿ ಎಲ್‌ಕೆಜಿ, ಯುಕೆಜಿ ವಿಸ್ತರಣೆ ಸಾಧ್ಯತೆ

Karnataka Budget 2026: ಸರ್ಕಾರಿ ಶಾಲೆಗಳಲ್ಲಿ ವರ್ಷದಿಂದ ವರ್ಷಕ್ಕೆ ದಾಖಲಾತಿತಗ್ಗುತ್ತಿದ್ದು, ದಾಖಲಾತಿ ಪ್ರಮಾಣವನ್ನು ಹೆಚ್ಚಿಸಲು ಹಾಗೂ ಶಿಕ್ಷಣದ ಗುಣಮಟ್ಟವನ್ನು ಸುಧಾರಿಸಲು ರಾಜ್ಯ ಸರ್ಕಾರ ಹೊಸ ಹೆಜ್ಜೆಯಿಟ್ಟಿದೆ. ಪೂರ್ವ ಪ್ರಾಥಮಿಕ ತರಗತಿಗಳ (LKG-UKG) ಮೂಲಕವೇ ಸರ್ಕಾರಿ ಶಾಲೆಗಳಿಗೆ ಮರುಜೀವ ನೀಡಲು ಮುಂದಾಗಿದೆ. 2026ರ ಬಜೆಟ್‌ನಲ್ಲಿ ರಾಜ್ಯದ 10 ಸಾವಿರ ಶಾಲೆಗಳಿಗೆ ಎಲ್‌ಕೆಜಿ ಹಾಗೂ ಯುಕೆಜಿ ತರಗತಿಗಳನ್ನು ವಿಸ್ತರಿಸುವ ನಿರೀಕ್ಷೆಯಿದೆ.

ಒನ್ ಇ೦ಡಿಯ 16 Feb 2026 12:41 pm

Madikeri ನ್ಯಾಯಾಲಯಕ್ಕೆ ಬಾಂಬ್ ಬೆದರಿಕೆ ಇಮೇಲ್; ಪರಿಶೀಲನೆ

ಮಡಿಕೇರಿ : ಮಡಿಕೇರಿಯ ಜಿಲ್ಲಾ ನ್ಯಾಯಾಲಯಕ್ಕೆ ಬಾಂಬ್ ಬೆದರಿಕೆಯ ಇ-ಮೇಲ್ ಬಂದಿದೆ. ಇಂದು ಮಧ್ಯಾಹ್ನ 12:30ಕ್ಕೆ ನ್ಯಾಯಾಲಯವನ್ನು ಸ್ಪೋಟಿಸುವುದಾಗಿ ಬೆದರಿಕೆ ಹಾಕಲಾಗಿದೆ. ಇಮೇಲ್ ಗಮನಿಸಿದ ನ್ಯಾಯಾಲಯದ ಅಧಿಕಾರಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ನ್ಯಾಯಾಲಯದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದವರು ನ್ಯಾಯಾಲಯದಿಂದ ಹೊರಬಂದಿದ್ದಾರೆ. ಬಾಂಬ್ ನಿಗ್ರಹದಳ ಪರಿಶೀಲನೆ ನಡೆಸುತ್ತಿದೆ. 

ವಾರ್ತಾ ಭಾರತಿ 16 Feb 2026 12:33 pm

ಕಾಂಗ್ರೆಸ್ ಶಾಸಕರ ವಿದೇಶ ಪ್ರವಾಸ ಫಿಕ್ಸ್: ಆಸ್ಟ್ರೇಲಿಯಾ ಟೂರ್‌ಗೆ ಸಿದ್ದರಾಗಿ ನಿಂತ 27 ಮಂದಿ

27 ಮಂದಿ ಕಾಂಗ್ರೆಸ್ ಶಾಸಕರ ತಂಡ ವಿದೇಶ ಪ್ರವಾಸಕ್ಕೆ ಸಿದ್ದವಾಗಿ ನಿಂತಿದೆ. ಮಂಗಳವಾರ (ಫೆಬ್ರವರಿ 17) ರಂದು ಆಸ್ಟ್ರೇಲಿಯಾಗೆ ಟೂರ್ ಮಾಡಲು ಸಿದ್ದರಾಗಿ ನಿಂತಿದ್ದಾರೆ. ನಂತರದಲ್ಲಿ ನ್ಯೂಜಿಲ್ಯಾಂಡ್ ಪ್ರವಾಸವನ್ನು ಕೈಗೊಳ್ಳಲಿದ್ದಾರೆ ಎಂಬ ಮಾಹಿತಿ ಇದೆ. ಶಾಸಕರ ವಿದೇಶ ಪ್ರಸಾಸ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಇದರ ಪರ ಹಾಗೂ ವಿರೋಧ ಅಭಿಪ್ರಾಯಗಳು ವ್ಯಕ್ತವಾಗುತ್ತಿದ್ದವು. ಇದು ತೀವ್ರ ಸ್ವರೂಪ ಪಡೆದುಕೊಂಡ ಹಿನ್ನೆಲೆಯಲ್ಲಿ ಕೆಲವು ಶಾಸಕರು ವಿದೇಶ ಪ್ರವಾಸಕ್ಕೆ ತೆರಳುವುದನ್ನು ಕೈಬಿಟ್ಟಿದ್ದರು. ಹಾಗಿದ್ದರೂ 27 ಮಂದಿ ಶಾಸಕರು ಇದೀಗ ಸಿದ್ದರಾಗಿದ್ದಾರೆ.

ವಿಜಯ ಕರ್ನಾಟಕ 16 Feb 2026 12:30 pm

Chitrdurga | ಶಾಲಾ ಕಟ್ಟಡದಿಂದ ಜಿಗಿದು 10ನೇ ತರಗತಿ ವಿದ್ಯಾರ್ಥಿ ಆತ್ಮಹತ್ಯೆ

ಚಿತ್ರದುರ್ಗ, ಫೆ.16: ಹತ್ತನೇ ತರಗತಿಯ ವಿದ್ಯಾರ್ಥಿಯೋರ್ವ ಶಾಲಾ ಕಟ್ಟಡದಿಂದ 3ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಚಿತ್ರದುರ್ಗ ತಾಲೂಕಿನ ಭರಮಸಾಗರದಲ್ಲಿ ಇಂದು ನಡೆದಿದೆ. ಭರಮಸಾಗರದ ಡಿ.ವಿ.ಎಸ್. ವಸತಿ ಶಾಲೆಯ 10ನೇ ತರಗತಿ ವಿದ್ಯಾರ್ಥಿ, ಕರಿಮ್ಮನಹಳ್ಳಿ ಗ್ರಾಮದ ನಿವಾಸಿ ಕೋಟ್ರೇಶ್(16) ಮೃತಪಟ್ಟ ಬಾಲಕ. ಕೋಟ್ರೇಶ್ ಕಟ್ಟಡದಿಂದ ಜಿಗಿಯುತ್ತಿರುವ ದೃಶ್ಯ ಶಾಲೆಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಆತ್ಮಹತ್ಯೆಗಿಂತ ಮೊದಲು ಕೋಟ್ರೇಶ್ ಶಾಲೆಯ 3ನೇ ಮಹಡಿಯಲ್ಲಿರುವ ತರಗತಿಯ ಹೊರಾಂಗಣದಲ್ಲಿ ಯಾವುದೋ ಚಿಂತೆಯಲ್ಲಿದ್ದಂತೆ ಅತ್ತಿಂದಿತ್ತ ನಡೆಯುತ್ತಿರುವುದು ಸಿಸಿಟಿವಿ ದೃಶ್ಯದಲ್ಲಿ ಕಾಣಿಸುತ್ತದೆ. ಈತ ಶಾಲೆಯ ಹಾಸ್ಟಲ್ ನಲ್ಲಿ ಇದ್ದುಕೊಂಡು ವಿದ್ಯಾಭ್ಯಾಸ ಮಾಡುತ್ತಿದ್ದ ಎಂದು ತಿಳಿದುಬಂದಿದೆ. ಆತ್ಮಹತ್ಯೆಗೆ ನಿಖರವಾದ ಕಾರಣ ತಿಳಿದುಬಂದಿಲ್ಲ. ಭರಮಸಾಗರ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ. ಆತ್ಮಹತ್ಯೆಯ ಯೋಚನೆ ಬಂದಾಗ ಅದನ್ನು ನಿಗ್ರಹಿಸಲು ರಾಜ್ಯ ಸರಕಾರದ ಅರೋಗ್ಯ ಇಲಾಖೆಯ ಹೆಲ್ಪ್ ಲೈನ್ 104 ಸಹಾಯ ಮಾಡುತ್ತದೆ. ಅದರ ಜೊತೆಗೆ Tele-MANAS ನ 14416 ಅನ್ನೂ ಸಂಪರ್ಕಿಸಬಹುದು.

ವಾರ್ತಾ ಭಾರತಿ 16 Feb 2026 12:27 pm

ಮೋದಿ-ಟ್ರಂಪ್ ಒಪ್ಪಂದ ಇಲ್ಲಿವೆ ನಮ್ಮ ರೈತರ ಸಂಕಷ್ಟದ ಸುಳಿವುಗಳು!

ಅಮೆರಿಕ ಜೊತೆ ಮೋದಿ ಸರಕಾರ ಮಾಡಿಕೊಂಡಿರುವ ಹೊಸ ವ್ಯಾಪಾರ ಒಪ್ಪಂದ ಭಾರತದ ರೈತರ ಪಾಲಿಗೆ ಮರಣಶಾಸನವಾಗಲಿದೆಯೇ? ಇದು ನಿಜವೇ ಆದಲ್ಲಿ, ಭಾರತದ ಆರ್ಥಿಕತೆ ಸರ್ವನಾಶವಾಗುವುದರಲ್ಲಿ ಸಂಶಯವಿಲ್ಲ. ಯಾಕೆಂದರೆ, ಭಾರತವು ಕೃಷಿ ಪ್ರಧಾನ ರಾಷ್ಟ್ರ. ನಮ್ಮ ದೇಶದ ಒಟ್ಟಾರೆ ಜಿಡಿಪಿಗೆ ಅತಿಹೆಚ್ಚು ಕೊಡುಗೆ ನೀಡುತ್ತಿರುವುದೇ ಕೃಷಿ. 2023-24ರ ಅಂಕಿಅಂಶಗಳ ಪ್ರಕಾರ ಜಿಡಿಪಿಯ ಶೇ. 18.2 ಪಾಲು, ಕೃಷಿ ಮತ್ತು ಪೂರಕ ಕ್ಷೇತ್ರಗಳಿಂದ ಬರುತ್ತಿದೆ. ಜೊತೆಗೆ ದೇಶದ ಶೇ. 42.3 ಜನರಿಗೆ ಪ್ರತ್ಯಕ್ಷ ಮತ್ತು ಪರೋಕ್ಷ ಉದ್ಯೋಗಗಳನ್ನು ಕೃಷಿ ನೀಡುತ್ತಿದೆ. ಭಾರತವು ಬೇರೆ ದೇಶಗಳಿಗೆ ರಫ್ತು ಮಾಡುವ ಒಟ್ಟಾರೆ ಉತ್ಪನ್ನಗಳಲ್ಲಿ ಕೃಷಿ ಉತ್ಪನ್ನಗಳ ಪಾಲು ಶೇ. 11ರಿಂದ 13 ಇದೆ. 2025ರ ಆರ್ಥಿಕ ವರ್ಷದಲ್ಲಿ ಕೃಷಿ ರಫ್ತಿನಿಂದಲೇ ಭಾರತ 4,40,000 ಕೋಟಿ ರೂ.ಗಳ ರಫ್ತು ಆದಾಯ ಗಳಿಸಿದೆ. ಸರಕಾರಗಳು ಕೃಷಿಯೆಡೆಗೆ ನಿರ್ಲಕ್ಷ್ಯ ವಹಿಸುತ್ತಿದ್ದರೂ, ಈ ದೇಶದ ಆರ್ಥಿಕತೆಗೆ ದೊಡ್ಡ ಚೈತನ್ಯ ತುಂಬುತ್ತಿರುವುದು ನಮ್ಮ ರೈತರು. ಅಂತಹ ರೈತರನ್ನೇ ಈ ಒಪ್ಪಂದದ ಮೂಲಕ ಸಂಕಷ್ಟಕ್ಕೆ ತಳ್ಳಲು ಕೇಂದ್ರ ಸರಕಾರ ಮುಂದಾದರೆ, ದೇಶದ ಆರ್ಥಿಕ ಪರಿಸ್ಥಿತಿ ಏನಾಗಬೇಡ? ಇದು ಪಕ್ಷ ರಾಜಕಾರಣವನ್ನು ಹೊರಗಿಟ್ಟು ಯೋಚಿಸಬೇಕಾದ ಗಂಭೀರ ಸಂಗತಿ. ಯಾಕೆಂದರೆ ಬಿಜೆಪಿ ಸಮರ್ಥಕರಲ್ಲೂ ಲಕ್ಷಾಂತರ ಕೃಷಿ ಹಿನ್ನೆಲೆಯವರಿದ್ದಾರೆ. ಕೃಷಿ ಮತ್ತು ರೈತ ಉಳಿದರೆ ಮಾತ್ರ ದೇಶ ಉಳಿಯುವುದು. ದೇಶ ಉಳಿದರಷ್ಟೆ ಅಲ್ಲವೇ (ಆರ್ಥಿಕ ಸಶಕ್ತಿಯ ಆಯಾಮದಿಂದ) ರಾಜಕಾರಣದ ಚರ್ಚೆ! ದುರದೃಷ್ಟವಶಾತ್, ಮೋದಿ ಸರಕಾರ ಅಮೆರಿಕ ಜೊತೆ ಮಾಡಿಕೊಂಡಿದೆ ಎನ್ನಲಾದ ಈ ಒಪ್ಪಂದ ನಮ್ಮ ರೈತರ ಹಿತ ಬಲಿಕೊಡುವ ಸಾಕಷ್ಟು ಸುಳಿವು ನೀಡುತ್ತಿದೆ. ಈ ಹೊಸ ಒಪ್ಪಂದದ ಪ್ರಕಾರ ಭಾರತದಿಂದ ಅಮೆರಿಕಕ್ಕೆ ತೆರಳುವ ಸರಕುಗಳಿಗೆ ಅಮೆರಿಕವು ಶೇ. 18 ತೆರಿಗೆ ವಿಧಿಸಿ, ಅಲ್ಲಿನ ಮಾರುಕಟ್ಟೆ ಪ್ರವೇಶಕ್ಕೆ ಅನುಮತಿ ನೀಡಲಿದೆ. ಆದರೆ ಭಾರತಕ್ಕೆ ಬರುವ ಅಮೆರಿಕ ಸರಕುಗಳಿಗೆ ನಮ್ಮ ದೇಶ ಅತ್ಯಂತ ಕಡಿಮೆ, ಬಹಳಷ್ಟು ಸರಕುಗಳಿಗೆ ಶೇ. 0 ತೆರಿಗೆ ವಿಧಿಸಿ, ನಮ್ಮ ಮಾರುಕಟ್ಟೆಯನ್ನು ಮುಕ್ತವಾಗಿಸಲಿದೆ. ಸಹಜವಾಗಿಯೇ ಕಡಿಮೆ ಬೆಲೆಗೆ ಅಲ್ಲಿನ ಸರಕುಗಳು ಇಲ್ಲಿ ಲಭ್ಯವಾಗುತ್ತವೆ. ಅಮೆರಿಕಕ್ಕೆ ಹೋಲಿಸಿದರೆ ನಮ್ಮಲ್ಲಿ ಉತ್ಪಾದನಾ ವೆಚ್ಚ ಹೆಚ್ಚಿರುವುದರಿಂದ ನಮ್ಮ ದೇಸೀ ಉತ್ಪನ್ನಗಳ ಬೆಲೆ ಹೆಚ್ಚಿರುತ್ತವೆ. ಕಡಿಮೆ ಬೆಲೆಯ ಅಮೆರಿಕ ಸರಕುಗಳು ಸಿಗುವಾಗ ಗ್ರಾಹಕ ಯಾಕೆ ದುಬಾರಿ ಬೆಲೆಯ ದೇಸೀ ಉತ್ಪನ್ನಗಳನ್ನು ಖರೀದಿಸುತ್ತಾನೆ? ನಮ್ಮ ಸರಕುಗಳು ನಮ್ಮ ನೆಲದಲ್ಲೇ ಮಾರುಕಟ್ಟೆಯನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕುತ್ತವೆ. ಮುಖ್ಯವಾಗಿ ಮೆಕ್ಕೆಜೋಳ, ಸೋಯಾಬೀನ್, ಕಡಲೆಕಾಳು, ಶೇಂಗಾ, ಸೂರ್ಯಕಾಂತಿ, ಬೇಳೆಕಾಳುಗಳು ಮೊದಲಾದ ಬೆಳೆಗಳನ್ನು ಬೆಳೆಯುವ ಇಲ್ಲಿನ ರೈತರು ತತ್ತರಿಸಿಹೋಗಲಿದ್ದಾರೆ. ಆತ್ಮನಿರ್ಭರ (ಸ್ವಾವಲಂಬಿ) ಭಾರತವನ್ನು ನಿರ್ಮಿಸುತ್ತೇನೆ ಎಂದು ಕೆಲ ವರ್ಷಗಳ ಹಿಂದೆ ಮೋದಿ ಘೋಷಿಸಿದ್ದು ಇದೇನಾ? ಭಾರತವನ್ನು ಸುಸ್ಥಿರ ಉತ್ಪಾದನಾ ಆರ್ಥಿಕತೆಯಿಂದ ಅಸ್ಥಿರ ಛಿoಟಿsumeಡಿ eಛಿoಟಿomಥಿ ಕಡೆಗೆ ಕೊಂಡೊಯ್ಯುವುದು ಆತ್ಮನಿರ್ಭರವೇ? ಕೇವಲ ದರ ವ್ಯತ್ಯಾಸಗಳನ್ನು ಮಾತ್ರ ಮಾನದಂಡವಾಗಿ ಬಳಸಿ, ಈ ಒಪ್ಪಂದದ ಲಾಭ-ನಷ್ಟಗಳನ್ನು ತೂಗಲು ಮುಂದಾಗುವುದು ಪರಿಪೂರ್ಣವೆನಿಸದು. ಅಲ್ಲಿನ ಮತ್ತು ನಮ್ಮ ರೈತರ ನಡುವಿನ ವ್ಯತ್ಯಾಸವೇನು? ಅಮೆರಿಕದ ಕೃಷಿ ಸಾಮರ್ಥ್ಯ ಮತ್ತು ಭಾರತದ ಕೃಷಿ ಸಾಮರ್ಥ್ಯದ ಅಂತರವೆಷ್ಟು? ಆಯಾ ಸರಕಾರಗಳು ರೈತರಿಗೆ ನೀಡುತ್ತಿರುವ ಪ್ರೋತ್ಸಾಹಗಳೆಂತದ್ದು? ಎಂಬ ಸಂಗತಿಗಳನ್ನು ತುಲನೆ ಮಾಡಿ ನೋಡಿದಾಗ ಮಾತ್ರ, ಈ ಒಪ್ಪಂದ ಭಾರತ ರೈತರ ಪಾಲಿಗೆ ಎಂಥಾ ಮರಣಶಾಸನವಾಗಲಿದೆ ಎಂಬ ಅಪಾಯದ ಆಳ ಅರಿವಾಗುತ್ತದೆ. ಮೊದಲನೆಯದಾಗಿ, ರೈತ ಎಂದಾಕ್ಷಣ ನಾವು ನಮ್ಮ ಸರಾಸರಿ ರೈತನ ಸ್ಥಿತಿಗತಿಗಳಲ್ಲೇ ಅಮೆರಿಕ ರೈತನನ್ನೂ ಕಲ್ಪಿಸಿಕೊಳ್ಳಲು ಮುಂದಾಗುತ್ತೇವೆ. ಇದು ದೊಡ್ಡ ತಪ್ಪು. ದೇವರಾಜ ಅರಸು ಮತ್ತು ಇಂದಿರಾಗಾಂಧಿಯವರು ಭೂ ಸುಧಾರಣೆ ಕಾಯ್ದೆ ಜಾರಿಗೆ ತರುವುದಕ್ಕೂ ಹಿಂದಿನ ಕಾಲಘಟ್ಟದ ಒಂದು ಹಳ್ಳಿಯನ್ನು ಕಲ್ಪಿಸಿಕೊಳ್ಳಿ. ಅಲ್ಲೊಬ್ಬ ಹತ್ತಾರು ಹಳ್ಳಿಗಳನ್ನು ನಿಯಂತ್ರಿಸುವ, ನೂರಾರು ಎಕರೆ ಜಮೀನು ಹೊಂದಿದ ಜಮೀನುದಾರ ಇರುತ್ತಿದ್ದ. ಅದೇ ಊರಿನಲ್ಲಿ ತುಂಡು ಗೇಣಿ ಜಮೀನಿನಲ್ಲಿ ಕಷ್ಟಪಟ್ಟು ದುಡಿದು ಹೊಟ್ಟೆಬಟ್ಟೆಗೆ ಪರದಾಡುತ್ತಿದ್ದ ಒಬ್ಬ ಬಡರೈತನೂ ಇರುತ್ತಿದ್ದ. ಕಸುಬಿನಿಂದ ಇಬ್ಬರೂ ರೈತರೇ. ಹಾಗಂತ ಅವರಿಬ್ಬರನ್ನು ಒಂದೇ ತಕ್ಕಡಿಯಲ್ಲಿ ತೂಗಲು ಸಾಧ್ಯವೇ? ಆ ಜಮೀನುದಾರನ ಜೊತೆ ಈ ಗೇಣಿ ರೈತ ಸ್ಪರ್ಧಿಸುವುದು ತರವೇ? ಇವತ್ತಿನ ಭಾರತೀಯ ಸರಾಸರಿ ರೈತನಿಗೂ, ಅಮೆರಿಕದ ಸರಾಸರಿ ರೈತನಿಗೂ ಅಜಗಜಾಂತರವಿದೆ. ಅಲ್ಲಿನ ಒಬ್ಬ ಸಣ್ಣ/ಮಧ್ಯಮ ಸಾಮರ್ಥ್ಯದ ರೈತ ಇಲ್ಲಿನ ಜಮೀನುದಾರನಿಗೆ ಸಮ! ಕೆಳಗಿನ ವಿವರ ಓದಿದರೆ ಇದು ನಿಮಗೆ ಮನದಟ್ಟಾಗುತ್ತದೆ. ಭಾರತದ ಒಟ್ಟಾರೆ ರೈತರಲ್ಲಿ ಶೇ.88-89ರಷ್ಟು ರೈತರು ಸಣ್ಣ ಮತ್ತು ಅಂಚಿನ ರೈತರು. ಅಂದರೆ 2 ಹೆಕ್ಟೇರ್‌ಗಿಂತ ಕಡಿಮೆ ಭೂಮಿ ಹೊಂದಿದವರು. ಆದರೆ ಅಮೆರಿಕದಲ್ಲಿ ಸಣ್ಣ ರೈತನೆಂದು ಕರೆಯುವ ರೈತನ ಬಳಿ ಕನಿಷ್ಠ 180 ಹೆಕ್ಟೇರ್ ಜಮೀನು ಇರುತ್ತದೆ! ನಮ್ಮ ಭಾರತದ ರೈತರ ಸರಾಸರಿ ಜಮೀನು ಹಂಚಿಕೆ 0.74 ಹೆಕ್ಟೇರ್ ಇದ್ದರೆ, ಅಮೆರಿಕದ ಸರಾಸರಿ ಜಮೀನು ಹಂಚಿಕೆ ಪ್ರತೀ ರೈತನಿಗೆ 188.5 ಎಕರೆ!! ಎಷ್ಟೇ ಅತಿಸಣ್ಣ ರೈತನೆಂದರೂ ಅವನ ಬಳಿ 50-100 ಎಕರೆ ಜಮೀನಿರುತ್ತದೆ. ನಿಯಂತ್ರಿತ ಜನಸಂಖ್ಯೆ ಮತ್ತು ಆರ್ಥಿಕ ಸಮಾನ ಹಂಚಿಕೆಯಿಂದಾಗಿ ಇಷ್ಟು ದೊಡ್ಡ ಹಿಡುವಳಿ ಹೊಂದಲು ಅಮೆರಿಕ ರೈತರಿಗೆ ಸಾಧ್ಯವಾಗಿದೆ. 9.38 ಮಿಲಿಯನ್ ಚದರ ಕಿ.ಮೀ. ವಿಸ್ತೀರ್ಣ ಹೊಂದಿರುವ ಅಮೆರಿಕದಲ್ಲಿ 34.9 ಕೋಟಿ ಜನ ಮಾತ್ರ ವಾಸಿಸುತ್ತಿದ್ದಾರೆ. ಆದರೆ ಅಮೆರಿಕಕ್ಕಿಂತ ಮೂರು ಪಟ್ಟು ಕಡಿಮೆ ಗಾತ್ರವಿರುವ ನಮ್ಮ ಭಾರತದಲ್ಲಿ, ಅಂದರೆ 3.29 ಮಿಲಿಯನ್ ಚದರ ಕಿ.ಮೀ. ವಿಸ್ತೀರ್ಣದಲ್ಲಿ, 147 ಕೋಟಿ ಜನ (ಅಂದರೆ ಅಮೆರಿಕಕ್ಕಿಂತ ನಾಲ್ಕುಪಟ್ಟು ಹೆಚ್ಚು) ವಾಸಿಸುತ್ತಿದ್ದಾರೆ. ಹಾಗಾಗಿ ಅಮೆರಿಕ ರೈತರ ಬಳಿ ನೂರಾರು ಎಕರೆಗಟ್ಟಲೆ ಜಮೀನಿರುವುದು ಸಾಮಾನ್ಯ ಸಂಗತಿ. ಈಗ ಹೇಳಿ, ಇಂತಹ ಬಲಾಢ್ಯ ಭೂಮಾಲಕ ಕೋಟ್ಯಧಿಪತಿ ರೈತನ ಜೊತೆಗೆ ನಮ್ಮ ಬಡ ಬೋರ, ತಿಮ್ಮ, ಕೆಂಚಪ್ಪಂದಿರು ಪೈಪೋಟಿ ನಡೆಸಲು ಸಾಧ್ಯವೇ? ಇನ್ನು, ಕೃಷಿ ಸಾಮರ್ಥ್ಯದ ವಿಚಾರಕ್ಕೆ ಬರೋಣ. ಅಮೆರಿಕದ ಕೃಷಿ ಅತ್ಯಧಿಕ ಯಾಂತ್ರೀಕೃತವಾಗಿದೆ ಜಿಪಿಎಸ್ ಆಧಾರಿತ ಟ್ರ್ಯಾಕ್ಟರ್‌ಗಳು, ನಿಖರ ಬೀಜ ಬಿತ್ತನೆ ಯಂತ್ರಗಳು, ಕಂಬೈನ್ ಹಾರ್ವೆಸ್ಟರ್‌ಗಳು, ಸ್ವಯಂಚಾಲಿತ ನೀರಾವರಿ ವ್ಯವಸ್ಥೆಗಳು, ಉಪಗ್ರಹ ಆಧಾರಿತ ಮಣ್ಣು ವಿಶ್ಲೇಷಣೆ, ಎಐ ಆಧಾರಿತ ಉತ್ಪಾದನಾ ನಿಯಂತ್ರಣ ಇತ್ಯಾದಿ. ಒಬ್ಬ ರೈತ ನೂರಾರು ಹೆಕ್ಟೇರ್ ಭೂಮಿಯನ್ನು ಕಡಿಮೆ ಕೃಷಿ ಕಾರ್ಮಿಕರನ್ನು ಅವಲಂಬಿಸಿ ಸುಲಭವಾಗಿ ಕೃಷಿ ಮಾಡಬಲ್ಲನು. ಭಾರತದಲ್ಲಿ ಕೃಷಿ ಇನ್ನೂ ಬಹುಪಾಲು ಪಾರಂಪರಿಕ ಶ್ರಮ ಆಧಾರಿತವಾದದ್ದು. ಮೊದಲೇ ವಿವರಿಸಿದಂತೆ ಇಲ್ಲಿನ ಕೃಷಿಕರು ಸಣ್ಣಸಣ್ಣ ಭೂ ಹಂಚಿಕೆ ಹೊಂದಿರುವುದರಿಂದ ಅವರು ಯಾಂತ್ರೀಕರಣಕ್ಕೆ ಹೆಚ್ಚು ಬಂಡವಾಳ ಹೂಡುವಷ್ಟು ಸಶಕ್ತರಾಗಿಲ್ಲ. ಸಣ್ಣ ರೈತರಿಗೆ ಇಂತಹ ವೈಯಕ್ತಿಕ ಯಾಂತ್ರೀಕರಣವು ಲಾಭದಾಯಕವೂ ಅಲ್ಲ. ಸಾಮೂಹಿಕ ಅಥವಾ ಸಹಕಾರಿ ಯಾಂತ್ರೀಕರಣ ವ್ಯವಸ್ಥೆ ನಮ್ಮಲ್ಲಿ ವ್ಯಾಪಿಸಿಲ್ಲವಾದ್ದರಿಂದ ರೈತರು ಪಾರಂಪರಿಕ ವಿಧಾನಗಳ ಮೊರೆಹೋಗಬೇಕಾಗಿದೆ. ಪಂಜಾಬ್ ಮತ್ತು ಹರ್ಯಾಣಗಳನ್ನು ಹೊರತುಪಡಿಸಿದರೆ ನಮ್ಮ ದೇಶದ ಕೃಷಿ ಯಾಂತ್ರೀಕರಣ ತುಂಬಾ ಹಿಂದುಳಿದಿದೆ. ಇದರಿಂದಾಗಿ ಭಾರತದ ರೈತರ ಇಳುವರಿ ಸಾಮರ್ಥ್ಯವೂ ಕಡಿಮೆ, ಪ್ರತಿಯಾಗಿ ಪ್ರತೀ ಎಕರೆಗೆ ಹೂಡಿಕೆ ವೆಚ್ಚವೂ ಹೆಚ್ಚು. ಅಮೆರಿಕದಲ್ಲಿ ಒಂದು ಹೆಕ್ಟೇರ್‌ನಲ್ಲಿ 1,012 ಟನ್ ಮೆಕ್ಕೆಜೋಳ ಬೆಳೆಯಲಾಗುತ್ತದೆ. ಆದರೆ ಭಾರತದಲ್ಲಿ ಅದು ಸರಾಸರಿ 34 ಟನ್ ಮಾತ್ರ. ಸೋಯಾಬೀನ್ ಉತ್ಪಾದನೆಯೂ ಅಮೆರಿಕದಲ್ಲಿ ನಮ್ಮಲ್ಲಿಗಿಂತ ದುಪ್ಪಟ್ಟು. ಕಡಿಮೆ ಬಂಡವಾಳ ಹೂಡಿಕೆಯಲ್ಲಿ ಹೆಚ್ಚು ಉತ್ಪಾದನೆ ಮಾಡಿದಾಗ, ಸಹಜವಾಗಿಯೇ ಆ ಉತ್ಪನ್ನಗಳ ಮಾರುಕಟ್ಟೆಯ ದರವನ್ನೂ ನೀವು ಕಡಿಮೆ ನಿಗದಿ ಮಾಡಿ ಮಾರಾಟ ಮಾಡಬಹುದು. ಅದರಿಂದ ಆ ಉತ್ಪನ್ನಗಳಿಗೆ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ ಬರುತ್ತದೆ. ಅಮೆರಿಕದ ಕೃಷಿ ಉತ್ಪನ್ನಗಳು ಜಾಗತಿಕ ಮಾರುಕಟ್ಟೆಯಲ್ಲಿ ಸ್ಪರ್ಧಾತ್ಮಕ ಬೆಲೆಯಲ್ಲಿ ಲಭ್ಯವಾಗುತ್ತಿರುವುದೇ ಈ ಕಾರಣಕ್ಕೆ. ಈಗ ಅಂತಹ ಅಗ್ಗದ ಕೃಷಿ ಉತ್ಪನ್ನಗಳಿಗೆ ತೆರಿಗೆಯೇ ಇಲ್ಲದೆ ನಮ್ಮ ಮಾರುಕಟ್ಟೆಯನ್ನು ತೆರೆದಿಟ್ಟರೆ, ಇಲ್ಲಿ ದುಬಾರಿ ಹೂಡಿಕೆ ಮಾಡಿ ಬೆಳೆದು, ಹೂಡಿಕೆಗೆ ತಕ್ಕಂತೆ ಬೆಲೆಯ ನಿರೀಕ್ಷೆ ಮಾಡುವ ದೇಸೀ ರೈತರ ಗತಿಯೇನಾಗಬೇಡ? ಹೀಗೆ ರೈತರನ್ನು ಏಕಾಏಕಿ ಸಂಕಷ್ಟಕ್ಕೆ ತಳ್ಳುತ್ತಿರುವ ನಮ್ಮ ಸರಕಾರ, ಕಡೇಪಕ್ಷ ರೈತರಿಗೆ ಸರಿಯಾದ ಪ್ರೋತ್ಸಾಹವನ್ನಾದರೂ ಕೊಡುತ್ತಿದೆಯೇ? ಅಮೆರಿಕ ಸರಕಾರಗಳಿಗೆ ಹೋಲಿಸಿದರೆ, ನಿರಾಸೆಯೇ ಉತ್ತರವಾಗಿ ನಮಗೆ ಅಪ್ಪಳಿಸುತ್ತದೆ. ಕೃಷಿ ಕ್ಷೇತ್ರಕ್ಕೆ ಸಾಕಷ್ಟು ಅನುದಾನ ನೀಡಿಕೆಯನ್ನು ಖಾತ್ರಿ ಪಡಿಸುವುದಕ್ಕೆಂದೇ ಅಮೆರಿಕದಲ್ಲಿ ಕೃಷಿ ಕಾಯ್ದೆಯನ್ನು ಜಾರಿಗೆ ತರಲಾಗಿದೆ. ಇದನ್ನು ಪ್ರತೀ ಆರು ವರ್ಷಗಳಿಗೊಮ್ಮೆ ಪರಿಷ್ಕರಣೆ ಮಾಡಲಾಗುತ್ತದೆ. ರೈತರಿಗೆ ಸೂಕ್ತ ಬೆಂಬಲ ಬೆಲೆ, ಬೆಳೆವಿಮೆ, ದಾಸ್ತಾನು ನೆರವು, ಪ್ರಕೃತಿ ವಿಕೋಪ ನೆರವು, ಗ್ರಾಮೀಣಾಭಿವೃದ್ಧಿ, ಕೃಷಿಭೂಮಿ ಪೌಷ್ಟೀಕರಣವನ್ನು ಸರಕಾರ ಕಾಲಕಾಲಕ್ಕೆ ಒದಗಿಸುವುದನ್ನು ಈ ಕಾಯ್ದೆ ಖಾತ್ರಿಪಡಿಸುತ್ತದೆ. Price Loss Coverage (PLC), Agricultural Risk Coverage (ARC) ಹಾಗೂ Commodity Credit Corporation ಮೂಲಕ ಬೆಂಬಲ ಬೆಲೆ, ಭಾರೀ ಪ್ರಮಾಣದ ಬೆಳೆ ವಿಮೆ ಯೋಜನೆಗಳ ಮೂಲಕ ಮಾರುಕಟ್ಟೆ ಬೆಲೆ ಕುಸಿದರೂ ರೈತರಿಗೆ ಆದಾಯ ಕುಸಿಯದಂತೆ ಅಲ್ಲಿ ಖಾತರಿ ಒದಗಿಸಲಾಗಿದೆ. ಆಸಕ್ತಿಯ ಸಂಗತಿಯೆಂದರೆ, ಬೆಳೆವಿಮೆಗೆ ಒಳಪಡದ ಬೆಳೆಗಳೂ ಗಣನೀಯ ಪ್ರಮಾಣದಲ್ಲಿ ವಿಕೋಪಕ್ಕೆ ತುತ್ತಾದಾಗ Non-insured Crop Disaster Assistance Program (NAP) ಮೂಲಕ ವಿಮೆಯನ್ನು ನೀಡಿ ರೈತರಿಗೆ ರಕ್ಷಣೆ ಒದಗಿಸಲಾಗುತ್ತದೆ. ಇಂತಹ ಪ್ರೋತ್ಸಾಹಕಾರಿ ವಾತಾವರಣವಿದ್ದಾಗ ರೈತರು ಕೃಷಿಯಲ್ಲಿ ಹೆಚ್ಚೆಚ್ಚು ಹೂಡಿಕೆ ಮಾಡುವ ಧೈರ್ಯ ತೋರುತ್ತಾರೆ. ಇಳುವರಿಯೂ ಹೆಚ್ಚಾಗುತ್ತದೆ. ಆರ್ಥಿಕತೆಯೂ ಉತ್ತಮಗೊಳ್ಳುತ್ತದೆ. ಸ್ವಾವಲಂಬನೆಯೂ ಸಾಧ್ಯವಾಗುತ್ತದೆ. ಆದರೆ ಭಾರತದಲ್ಲಿ ಈ ಪರಿಸ್ಥಿತಿ ಇದೆಯೇ? ನ್ಯಾಷನಲ್ ಕ್ರೈಮ್ ರೆಕಾರ್ಡ್ ಬ್ಯೂರೋ ಅಂಕಿಅಂಶಗಳ ಪ್ರಕಾರ ಕಳೆದ 10 ವರ್ಷಗಳಲ್ಲಿ ದೇಶದಲ್ಲಿ 1,12,000 ಕೃಷಿ ಅವಲಂಬಿತರು ಆತ್ಮಹತ್ಯೆ (ವಾಸ್ತವ ಸಂಖ್ಯೆ ಇದಕ್ಕಿಂತಲೂ ಹೆಚ್ಚು ಎಂದು ರೈತ ಸಂಘಟನೆಗಳು ಹೇಳುತ್ತವೆ) ಮಾಡಿಕೊಂಡಿದ್ದಾರೆ. ಕೃಷಿಗೆ ನಮ್ಮಲ್ಲಿ ಸಿಗುತ್ತಿರುವ ಪ್ರೋತ್ಸಾಹ ಎಂತಹದ್ದು ಎಂಬುದಕ್ಕೆ ಈ ಆತ್ಮಹತ್ಯೆಗಳೇ ಉತ್ತರ. ಇಲ್ಲಿ ಕೆಲವೇ ಕೆಲವು ಬೆಳೆಗಳಿಗೆ ಮಾತ್ರ ಕನಿಷ್ಠ ಬೆಂಬಲ ಬೆಲೆ ನೀಡಲಾಗುತ್ತಿದೆ. ಅದು ಕೂಡಾ ಎಂ.ಎಸ್. ಸ್ವಾಮಿನಾಥನ್ ಆಯೋಗ ಶಿಫಾರಸು ಮಾಡಿದ್ದ ಅ2+50ಶೇ. ಮಾನದಂಡಕ್ಕೆ ಅನುಗುಣವಾಗಿ ಅಲ್ಲ. ಕೃಷಿಬೀಜ ಮತ್ತು ರಸಗೊಬ್ಬರಗಳಿಗೆ ಸಬ್ಸಿಡಿ ನೀಡಲಾಗುತ್ತಿದೆಯಾದರೂ, ಅದು ಸಮರ್ಪಕವಾಗಿಲ್ಲ. ಇವುಗಳಿಗಾಗಿ ರೈತರು ಸರದಿಯಲ್ಲಿ ನಿಂತು ಪರದಾಡಿ, ಗೋಲಿಬಾರ್‌ನಲ್ಲಿ ಮೃತಪಟ್ಟ ಘಟನೆಗಳು ನಮ್ಮ ಕಣ್ಣಮುಂದಿವೆ. ಕೃಷಿ ಸಾಲ ವಸೂಲಾತಿಯ ನಿಯಮಗಳು ರೈತರನ್ನು ಸಾವಿನಂಚಿಗೆ ತಳ್ಳುತ್ತಿವೆ. ಇನ್ನು ಬೆಳೆವಿಮೆ ಯೋಜನೆಗಳು ರೈತರಿಗೆ ಅನುಕೂಲ ಮಾಡಿಕೊಡುವುದಕ್ಕಿಂತ ಖಾಸಗಿ ವಿಮಾ ಕಂಪೆನಿಗಳಿಗೆ ಲಾಭ ತರುತ್ತಿವೆ ಎಂಬ ಆರೋಪಗಳಿವೆ. PM-KISAN ಯೋಜನೆಯಡಿ ವರ್ಷಕ್ಕೆ ರೂ. 6,000 ನೀಡುತ್ತಿರುವುದು ರೈತರ ಮೇಲಿನ ಹೊರೆ ಕಡಿಮೆ ಮಾಡುವಲ್ಲಿ ಯಾವುದಕ್ಕೂ ಸಾಲದು. 2025-26ರ ಕೇಂದ್ರ ಸರಕಾರದ ಬಜೆಟ್‌ನಲ್ಲಿ ಕೃಷಿಗೆ 1,37,757 ಕೋಟಿ ರೂ. ಅನುದಾನವನ್ನು ನೀಡಲಾಗಿತ್ತು. ಇತ್ತೀಚೆಗೆ ಮಂಡಿಸಲಾದ 2026-27ರ ಬಜೆಟ್‌ನಲ್ಲಿ ಅದನ್ನು 1,32,561 ಕೋಟಿ ರೂ.ಗೆ ಇಳಿಕೆ ಮಾಡಲಾಗಿದೆ. ಅಂದರೆ ಬರೋಬ್ಬರಿ 5,000 ಕೋಟಿ ರೂ. ಕಡಿತ! ಇದು ಈ ದೇಶದಲ್ಲಿ ಕೃಷಿಗೆ ನೀಡಲಾಗುತ್ತಿರುವ ಪ್ರೋತ್ಸಾಹಕ್ಕೆ ಹಿಡಿದ ಕನ್ನಡಿ ಎನ್ನಬಹುದು.

ವಾರ್ತಾ ಭಾರತಿ 16 Feb 2026 12:22 pm

ಸ್ಥಿರವಾದ ಚಿನ್ನ, ಕುಸಿಯುತ್ತಿರುವ ಬೆಳ್ಳಿ; ಇಂದಿನ ದರವೆಷ್ಟು?

ಅಮೆರಿಕ, ಚೀನಾ ಮತ್ತು ಏಷ್ಯಾದ ಇತರ ಭಾಗಗಳಲ್ಲಿ ರಜಾದಿನಗಳು ನಡೆಯುತ್ತಿರುವ ಕಾರಣ ವ್ಯಾಪಾರವನ್ನು ತಟಸ್ಥಗೊಳಿಸಿದೆ. ಜನವರಿಯಲ್ಲಿ ಅಭೂತಪೂರ್ವ ಏರಿಕೆ ಕಂಡ ನಂತರ ಫೆಬ್ರವರಿ ಮೊದಲೆರಡು ವಾರದಲ್ಲಿ ಚಿನ್ನ ವಿಪರೀತ ಏರಿಳಿತ ಕಾಣದೆ ಪ್ರತಿ ಗ್ರಾಂಗೆ 15 ಸಾವಿರದಿಂದ 16 ಸಾವಿರದ ನಡುವೆ ಸ್ಥಿರವಾಗಿ ನಿಂತಿದೆ. ಶನಿವಾರ ಅಲ್ಪ ಏರಿಕೆ ಕಂಡಿದ್ದ ಚಿನ್ನದ ಬೆಲೆ ಇಂದು ಸೋಮವಾರ ಫೆಬ್ರವರಿ 16ರಂದು ಅಲ್ಪ ಕುಸಿತ ಕಂಡಿದೆ. ಅಮೆರಿಕ, ಚೀನಾ ಮತ್ತು ಏಷ್ಯಾದ ಇತರ ಭಾಗಗಳಲ್ಲಿ ರಜಾದಿನಗಳು ನಡೆಯುತ್ತಿರುವ ಕಾರಣ ವ್ಯಾಪಾರವನ್ನು ತಟಸ್ಥಗೊಳಿಸಿದೆ. ಇದೇ ಕಾರಣಕ್ಕೆ ಅಮೆರಿಕದ ಬಡ್ಡಿದರಗಳಲ್ಲಿ ಅನಿಶ್ಚಿತತೆಯ ನಡುವೆಯೂ ಚಿನ್ನ ಔನ್ಸ್ಗೆ 5000 ಡಾಲರ್ ನಲ್ಲಿ ಸ್ಥಿರವಾಗಿ ನಿಂತಿದೆ. ಫೆಬ್ರವರಿ 16ರಂದು ಸೋಮವಾರ ಮಾರುಕಟ್ಟೆಗಳಲ್ಲಿ 24 ಕ್ಯಾರೆಟ್ ಶುದ್ಧ ಚಿನ್ನದ ಬೆಲೆ ಗ್ರಾಂಗೆ 131 ರೂ. ಕುಸಿದು ಹತ್ತು ಗ್ರಾಂ ಬೆಲೆ 1,56,440 ಕ್ಕೆ ಬಂದು ನಿಂತಿದೆ. ಆಭರಣ ಚಿನ್ನವಾದ 22 ಕ್ಯಾರೆಟ್ ಬೆಲೆಯು ಗ್ರಾಂಗೆ 120 ರೂ. ಕುಸಿದು ಹತ್ತು ಗ್ರಾಂಗೆ 1,43,400 ರೂ.ಗೆ ಬಂದು ನಿಂತಿದೆ. 18 ಕ್ಯಾರೆಟ್ ಚಿನ್ನವು ಪ್ರತಿ ಗ್ರಾಂಗೆ 98 ರೂ. ಕುಸಿದು ಹತ್ತು ಗ್ರಾಂಗೆ 1,17,330 ರೂ.ಗೆ ಬಂದು ನಿಂತಿದೆ. ಮಂಗಳೂರಿನಲ್ಲಿ ಇಂದಿನ ಚಿನ್ನದ ದರವೆಷ್ಟು? ಫೆಬ್ರವರಿ 16ರಂದು ಸೋಮವಾರ ಬೆಳಗಿನ 11 ಗಂಟೆಯ ವಹಿವಾಟಿನಲ್ಲಿ ಮಂಗಳೂರಿನಲ್ಲಿ ಚಿನ್ನದ ಬೆಲೆ ಮತ್ತೆ ಕುಸಿತ ಕಂಡಿದೆ. ಬೆಳಗಿನ ವಹಿವಾಟಿನಲ್ಲಿ ಒಂದು ಗ್ರಾಂ 24 ಕ್ಯಾರೆಟ್ ಚಿನ್ನದ ದರ 15,644 (-131) ರೂ. ನಷ್ಟಿದೆ. ಒಂದು ಗ್ರಾಂ 22 ಕ್ಯಾರೆಟ್ ಚಿನ್ನದ ದರ 14,340 (-120) ರೂ. ಮತ್ತು ಒಂದು ಗ್ರಾಂ 18 ಕ್ಯಾರೆಟ್ ಚಿನ್ನದ ದರ 11,733 (-98) ರೂ. ಬೆಲೆಗೆ ತಲುಪಿದೆ. ಸತತ ಕುಸಿಯುತ್ತಿರುವ ಬೆಳ್ಳಿ ಫೆಬ್ರವರಿ ಆರಂಭದಲ್ಲಿ ಸತತ ಕುಸಿತ ಕಂಡಿದ್ದ ಬೆಳ್ಳಿ ಕಳೆದ ವಾರದ ಆರಂಭದಲ್ಲಿ ಸೋಮವಾರ ಅಲ್ಪ ಏರಿಕೆ ಕಂಡಿತ್ತು. ಆದರೆ ಮಂಗಳವಾರ-ಬುಧವಾರ ಮತ್ತೆ ಕುಸಿದಿದೆ. ಗುರುವಾರ ಪ್ರತಿ ಗ್ರಾಂಗೆ 5 ರೂ. ನಷ್ಟು ಅಲ್ಪ ಏರಿದ ಬೆಳ್ಳಿ ಕೆಜಿಗೆ 2,95,000 (+5,000) ಲಕ್ಷ ರೂ. ಗೆ ಬಂದು ನಿಂತಿತ್ತು. ಶುಕ್ರವಾರ ಮತ್ತು ಶನಿವಾರ ಸತತ ಕುಸಿತ ಕಂಡಿದ್ದ ಚಿನ್ನ ಪ್ರತಿ ಕೆಜಿಗೆ 2,75,000 ರೂ.ಗೆ ಬಂದು ನಿಂತಿತ್ತು. ಇದೀಗ ಸೋಮವಾರವೂ ಮಾರುಕಟ್ಟೆ ತೆರೆದ ತಕ್ಷಣ ಪ್ರತಿ ಗ್ರಾಂಗೆ 7 ರೂ. ಕುಸಿತ ಕಂಡಿರುವ ಬೆಳ್ಳಿ ಕೆಜಿಗೆ 2,68,000 ರೂ. ಗೆ ಬಂದು ನಿಂತಿದೆ. ವಿವಿಧ ನಗರಗಳಲ್ಲಿ 1 ಗ್ರಾಮ್ ಚಿನ್ನದ ದರ (ಬೆಳಗಿನ ವಹಿವಾಟು) ಹೇಗಿದೆ? ದಿಲ್ಲಿ: 24 ಕ್ಯಾರೆಟ್ ಚಿನ್ನದ ದರ 15,659 (-131) ರೂ., 22 ಕ್ಯಾರೆಟ್ ಚಿನ್ನದ ದರ 14,355 (-120) ರೂ. ಮುಂಬೈ: 24 ಕ್ಯಾರೆಟ್ ಚಿನ್ನದ ದರ 15,644 (-131) ರೂ., 22 ಕ್ಯಾರೆಟ್ ಚಿನ್ನದ ದರ 14,340 (-120) ರೂ. ಅಹಮದಾಬಾದ್: 24 ಕ್ಯಾರೆಟ್ ಚಿನ್ನದ ದರ 15,649 (-131) ರೂ., 22 ಕ್ಯಾರೆಟ್ ಚಿನ್ನದ ದರ 14,345 (-120) ರೂ ಚೆನ್ನೈ: 24 ಕ್ಯಾರೆಟ್ ಚಿನ್ನದ ದರ 15,753 (-131) ರೂ., 22 ಕ್ಯಾರೆಟ್ ಚಿನ್ನದ ದರ 14,440 (-120) ರೂ. ಕೋಲ್ಕತ್ತಾ: 24 ಕ್ಯಾರೆಟ್ ಚಿನ್ನದ ದರ 15,644 (-131) ರೂ., 22 ಕ್ಯಾರೆಟ್ ಚಿನ್ನದ ದರ 14,340 (-120) ರೂ. ಹೈದರಾಬಾದ್: 24 ಕ್ಯಾರೆಟ್ ಚಿನ್ನದ ದರ 15,644 (-131) ರೂ., 22 ಕ್ಯಾರೆಟ್ ಚಿನ್ನದ ದರ 14,340 (-120) ರೂ. ಜೈಪುರ: 24 ಕ್ಯಾರೆಟ್ ಚಿನ್ನದ ದರ 15,659 (-131) ರೂ., 22 ಕ್ಯಾರೆಟ್ ಚಿನ್ನದ ದರ 14,355 (-120) ರೂ. ಭೋಪಾಲ್: 24 ಕ್ಯಾರೆಟ್ ಚಿನ್ನದ ದರ 15,649 (-131) ರೂ., 22 ಕ್ಯಾರೆಟ್ ಚಿನ್ನದ ದರ 14,345 (-120) ರೂ. ಚಂಡೀಗಢ: 24 ಕ್ಯಾರೆಟ್ ಚಿನ್ನದ ದರ 15,659 (-131) ರೂ., 22 ಕ್ಯಾರೆಟ್ ಚಿನ್ನದ ದರ 14,355 (-120) ರೂ. ಲಕ್ನೋ: 24 ಕ್ಯಾರೆಟ್ ಚಿನ್ನದ ದರ 15,659 (-131) ರೂ., 22 ಕ್ಯಾರೆಟ್ ಚಿನ್ನದ ದರ 14,355 (-120) ರೂ.

ವಾರ್ತಾ ಭಾರತಿ 16 Feb 2026 12:20 pm

ಆರ್ ಟಿಸಿ ಎಡವಟ್ಟು; ಪ್ರಸಕ್ತ ಸಾಲಿನ ರೈತರ ಕೃಷಿ ಸಾಲ ಸೌಲಭ್ಯಕ್ಕೆ ಕತ್ತರಿ

ಸೆಪ್ಟೆಂಬರ್‌ ತಿಂಗಳಿನಿಂದ ಅಕ್ಟೋಬರ್‌ ತಿಂಗಳ ಕೊನೆವರೆಗೆ ಮುಂಗಾರು ಹಂಗಾಮಿನ ಬೆಳೆ ಸಮೀಕ್ಷೆ ನಡೆಯುತ್ತದೆ. ಸಿಬ್ಬಂದಿ ನಡೆಸುವ ಈ ಸಮೀಕ್ಷೆ ಕಾರ‍್ಯ ಪರಿಪೂರ್ಣವಾಗದೆ ತಪ್ಪುಗಳಾಗಿರುವುದು ಆರ್‌ಟಿಸಿ ದಾಖಲೆಯಲ್ಲಿ ಕಂಡುಬಂದಿದೆ. ಆರ್‌ಟಿಸಿ ದಾಖಲೆಯ ಬೆಳೆ ಕಾಲಂನಲ್ಲಿ ಅನೇಕ ವರ್ಷದಿಂದ ಇದ್ದ ಅಡಕೆ ಬೆಳೆ ಈ ವರ್ಷ ಭತ್ತ ಎಂದು ದಾಖಲಾಗಿದೆ. ಕಾಳು ಮೆಣಸು, ಕೊಕೊ, ಬಾಳೆ, ಲವಂಗ, ಜಾಯಿಕಾಯಿ ಬೆಳೆ ವಿವರ ನಮೂದಾಗಿಲ್ಲ.

ವಿಜಯ ಕರ್ನಾಟಕ 16 Feb 2026 12:04 pm

ಅಕ್ರಮ ಹಣ ವರ್ಗಾವಣೆ ಪ್ರಕರಣ: SDPI ಅಧ್ಯಕ್ಷ ಎಂ.ಕೆ. ಫೈಝಿಗೆ ಜಾಮೀನು

ಹೊಸದಿಲ್ಲಿ: ಜಾರಿ ನಿರ್ದೇಶನಾಲಯ (ED) ದಾಖಲಿಸಿದ್ದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (SDPI) ರಾಷ್ಟ್ರೀಯ ಅಧ್ಯಕ್ಷ ಎಂಕೆ ಫೈಝಿ ಎಂದೇ ಕರೆಯಲ್ಪಡುವ ಮೊಯ್ದೀನ್ ಕುಟ್ಟಿ ಕೆ ಅವರಿಗೆ ದಿಲ್ಲಿ ಹೈಕೋರ್ಟ್ ಸೋಮವಾರ ಜಾಮೀನು ಮಂಜೂರು ಮಾಡಿದೆ ಎಂದು barandbench.com ವರದಿ ಮಾಡಿದೆ. ಎಸ್ಡಿಪಿಐಯು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ಐ) ಸಂಘಟನೆಯ ರಾಜಕೀಯ ಮುಖವಾಣಿಯಾಗಿ ಕಾರ್ಯನಿರ್ವಹಿಸುತ್ತಿದೆ ಎಂಬ ಆರೋಪ ಪ್ರಕರಣದಲ್ಲಿ ಉಲ್ಲೇಖವಾಗಿದ್ದು, ಪಿಎಫ್ಐ ಸಂಘಟನೆಯನ್ನು ಕೇಂದ್ರ ಸರ್ಕಾರವು 2022ರಲ್ಲಿ ನಿಷೇಧಿಸಿತ್ತು. ಪಿಎಫ್ಐಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆಯ ತನಿಖೆಯ ಭಾಗವಾಗಿ, ಎಂಕೆ ಫೈಝಿಯವರನ್ನು 2025ರ ಮಾರ್ಚ್ ತಿಂಗಳಲ್ಲಿ ಹೊಸದಿಲ್ಲಿಯ ಇಂದಿರಾ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ED ಅಧಿಕಾರಿಗಳು ಬಂಧಿಸಿದ್ದರು. ನಂತರ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು. ಫೈಝಿ ಅವರ ಬಂಧನಕ್ಕೂ ಮುನ್ನ ED ನೀಡಿದ್ದ ಹಲವು ಸಮನ್ಸ್ ಗಳಿಗೆ ಹಾಜರಾಗಿಲ್ಲ ಎಂಬ ಆರೋಪದ ಹಿನ್ನೆಲೆಯಲ್ಲಿ, ಅವರ ವಿರುದ್ಧ ಜಾಮೀನು ರಹಿತ ವಾರಂಟ್ ಹೊರಡಿಸಲಾಗಿತ್ತು ಎಂದು ತನಿಖಾ ಸಂಸ್ಥೆ ತಿಳಿಸಿದೆ. ಎಂಕೆ ಫೈಝಿ ಪರವಾಗಿ ಹಿರಿಯ ವಕೀಲ ಸಿದ್ಧಾರ್ಥ್ ಅಗರ್ವಾಲ್ ವಾದ ಮಂಡಿಸಿದರು. ಅವರೊಂದಿಗೆ ವಕೀಲರಾದ ರಜತ್ ಭಾರದ್ವಾಜ್, ಅಂಕಿತಾ ಎಂ. ಭಾರದ್ವಾಜ್, ದುಷ್ಯಂತ್ ಚೌಧರಿ, ಮುಹಮ್ಮದ್ ಫಿಯಾಜ್, ವಿಶ್ವಜೀತ್ ಸಿಂಗ್ ಹಾಗೂ ಸಿದ್ಧಾರ್ಥ್ ಸಿಂಗ್ ನ್ಯಾಯಾಲಯದಲ್ಲಿ ಹಾಜರಿದ್ದರು.

ವಾರ್ತಾ ಭಾರತಿ 16 Feb 2026 11:50 am

ಬೆಂಗಳೂರು ಅಷ್ಟೇ ಅಲ್ಲ, ಮಂಗಳೂರಿನಲ್ಲೂ ಡ್ರಗ್ಸ್ ಹಾವಳಿ ಜೋರು: 3 ವರ್ಷಗಳಲ್ಲಿ 2731 ಪ್ರಕರಣ ದಾಖಲು

ಎನ್.ಡಿ.ಪಿ.ಎಸ್ ಕಾಯ್ದೆ ಜಾರಿಗೊಳಿಸುವ ಸಂಬಂಧ ಇತರೆ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸಿ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಗೃಹ ಇಲಾಖೆ ತಿಳಿಸಿದೆ. ಎನ್.ಡಿ.ಪಿ.ಎಸ್ ಪ್ರಕರಣಗಳಲ್ಲಿ ಭಾಗಿಯಾಗುವ ವಿದೇಶಿ ಪ್ರಜೆಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುತ್ತಿದೆ. ಭಾಗಿಯಾಗುವ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿ ಕ್ರಮ ಜರುಗಿಸಲಾಗುತ್ತಿದೆ ಹಾಗೂ ಗಡಿಪಾರು ಮಾಡಲು ಕ್ರಮ ಕೈಗೊಳ್ಳಲಾಗುತ್ತಿದೆ. ಮಾದಕ ದ್ರವ್ಯಗಳ ಅಕ್ರಮ ಸಾಗಾಣಿಕೆ, ಮಾದಕ ದ್ರವ್ಯ ಜಾಲ ಕುರಿತು ಸ್ಥಳೀಯ ಬಾತ್ಮೀದಾರರು, ಅಪರಾಧ ವಿಭಾಗದ ಸಿಬ್ಬಂದಿಗಳು ಹಾಗೂ ಬೀಟ್ ಸಿಬ್ಬಂದಿಗಳಿಂದ ಮಾಹಿತಿ ಕಲೆ ಹಾಕಲಾಗುತ್ತಿದೆ ಎಂದು ಮಾಹಿತಿ ನೀಡಿದೆ.

ವಿಜಯ ಕರ್ನಾಟಕ 16 Feb 2026 11:50 am

ರಾಜಕೀಯ ಹಿಂದುತ್ವ ಮತ್ತು ಧಾರ್ಮಿಕ ಹಿಂದುತ್ವ

ಆರೆಸ್ಸ್ಸೆಸ್ ಶತಮಾನೋತ್ಸವ ಸಂದರ್ಭದಲ್ಲಿ ದೇಶಾದ್ಯಂತ ಪ್ರತಿಯೊಂದು ಊರಿನಲ್ಲಿ ಹಿಂದೂ ಸಮಾವೇಶಗಳು ನಡೆಯುತ್ತಿವೆ. ಈ ಸಮಾವೇಶಗಳಲ್ಲಿ ಹಿಂದೂ ಧರ್ಮ ಅಪಾಯದಲ್ಲಿದೆ, ಅದನ್ನು ಕಾಪಾಡಲು ಹಿಂದೂಗಳು ಒಂದಾಗಬೇಕೆಂದು ಕರೆ ನೀಡಲಾಗುತ್ತಿದೆ.ಇಂಥ ಸಮಾವೇಶಗಳಲ್ಲಿ ಹಿಂದೂಗಳನ್ನು ಹಿಂದುತ್ವವಾದಿಗಳನ್ನಾಗಿ ಮಾಡಲು ಸಾಧ್ಯವಾಗಿಲ್ಲವಲ್ಲ ಎಂಬ ಹತಾಶೆ ಕಂಡುಬರುತ್ತಿದೆ. ವಾಸ್ತವವಾಗಿ ಹಿಂದೂ ಧರ್ಮ ಅಪಾಯದಲ್ಲಿರುವುದು ಕೋಮು ಉನ್ಮಾದವನ್ನು ಕೆರಳಿಸುತ್ತಿರುವ, ಶ್ರೇಣೀಕೃತ ಜಾತಿ ಪದ್ಧತಿಯನ್ನು ಮತ್ತೆ ಭಾರತದ ಮೇಲೆ ಹೇರಲು ಹೊರಟ, ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ದಮನ ಮಾಡಲು ಮಸಲತ್ತು ನಡೆಸಿರುವ ಕೋಮುವಾದಿಗಳಿಂದ. ಹಿಂದೂ ಧರ್ಮ ಅಪಾಯದಲ್ಲಿದೆ ಎಂದು ಹೇಳಿದರೆ ತಪ್ಪಿಲ್ಲ. ಕಳೆದ ಹನ್ನೊಂದು ವರ್ಷಗಳಿಂದ ಮಾತ್ರವಲ್ಲ ಅದಕ್ಕಿಂತ ಮೊದಲಿನಿಂದಲೂ ಇವರಿಂದ ಏನೇನಾಗಿದೆ ಎಂಬುದನ್ನು ಬರೆಯುತ್ತ ಹೋದರೆ ಈ ಅಂಕಣದ ಜಾಗ ಸಾಲುವುದಿಲ್ಲ. ಬಹಳ ಹಿಂದೇನಲ್ಲ, ಕಳೆದ ವಾರ ದಿಲ್ಲಿಯ ವಿಶ್ವ ವಿದ್ಯಾನಿಲಯದಲ್ಲಿ ಉಪನ್ಯಾಸ ನೀಡಲು ಬಂದಿದ್ದ ಅಂತರ್‌ರಾಷ್ಟ್ರೀಯ ಖ್ಯಾತಿಯ ಇತಿಹಾಸಜ್ಞ ಡಾ. ಇರ್ಫಾನ್ ಹಬೀಬ್ ಅವರ ತಲೆಯ ಮೇಲೆ ಬಕೆಟ್ ನೀರನ್ನು ಇವರು ಸುರಿದರು. 94 ವರ್ಷದ ಇರ್ಫಾನ್ ಹಬೀಬ್ ನೀರಲ್ಲಿ ತೊಯ್ದ ಒದ್ದೆ ಬಟ್ಟೆಯಲ್ಲೇ ಚಳಿಯಲ್ಲೇ ತಮ್ಮ ಉಪನ್ಯಾಸವನ್ನು ಮುಂದುವರಿಸಿದರು.ಹಿಂದೆ ಸ್ವಾಮಿ ಅಗ್ನಿವೇಶ್, ಮೇಧಾ ಪಾಟ್ಕರ್, ಪ್ರಶಾಂತ ಭೂಷಣ್ ಅವರ ಮೇಲೆ ಇವರು ಯಾವ ಪರಿ ಹಲ್ಲೆ ಮಾಡಿದರೆಂಬುದನ್ನು ವಿವರಿಸಬೇಕಾಗಿಲ್ಲ.ಗಾಂಧಿ ಹತ್ಯೆ ಹಳೆಯದಾಯಿತು. ಇತ್ತೀಚಿನ ವರ್ಷಗಳಲ್ಲಿ ನಡೆದ ಡಾ. ನರೇಂದ್ರ ದಾಭೋಲ್ಕರ್ , ಕಮ್ಯುನಿಸ್ಟ್ ನಾಯಕ ಗೋವಿಂದ ಪಾನ್ಸರೆ, ಡಾ.ಎಂ.ಎಂ. ಕಲಬುರರ್ಗಿ, ಗೌರಿ ಲಂಕೇಶ್ ಹತ್ಯೆಗಳ ವಿವರಗಳೂ ಕೂಡ ಇಲ್ಲಿ ಅನಗತ್ಯ. ಹಂತಕರಿಗೆ ಯಾವ ಸಿದ್ಧಾಂತ ಪ್ರೇರಣೆ ನೀಡಿತೆಂಬುದು ಎಲ್ಲರಿಗೂ ತಿಳಿದ ಸಂಗತಿ. ಧರ್ಮ ರಕ್ಷಣೆಯ ಸೋಗು ಹಾಕಿದ ಫ್ಯಾಶಿಸಮ್ ಈ ಪರಿ ಬೆಳೆಯುತ್ತಿರಬೇಕಾದರೆ, ಇದನ್ನು ಒಂದಾಗಿ ವಿರೋಧಿಸಬೇಕಾದ ಜಾತ್ಯತೀತ ಪಕ್ಷಗಳಲ್ಲಿ ಸ್ಪಷ್ಟವಾದ ತಾತ್ವಿಕ ನಿಲುವು ಈ ವರೆಗೆ ಒಡಮೂಡಿಲ್ಲ. ಎಡಪಂಥೀಯ ಪಕ್ಷಗಳನ್ನು ಹೊರತು ಪಡಿಸಿ ಕಾಂಗ್ರೆಸ್ ಸೇರಿದಂತೆ ಸೆಕ್ಯುಲರ್ ಎಂದು ಕರೆದುಕೊಳ್ಳುವ ಪಕ್ಷಗಳು ಇನ್ನೂ ಗೊಂದಲದಲ್ಲಿವೆ. ಕಾಂಗ್ರೇಸ್‌ನ ಹಿರಿಯ ನಾಯಕರು ಕೋಮುವಾದಿಗಳನ್ನು ಟೀಕಿಸುತ್ತಿದ್ದರೂ ಕೆಲವು ಸ್ಥಳೀಯ ನಾಯಕರು ಅವರ ಕಾರ್ಯಕ್ರಮಗಳಲ್ಲಿ ಬಹಿರಂಗವಾಗಿ ಪಾಲ್ಗೊಳ್ಳುತ್ತಿದ್ದಾರೆ. ಉದಾಹರಣೆಗೆ ಬೆಳಗಾವಿ ಜಿಲ್ಲೆಯ ಚೆನ್ನಮ್ಮನ ಕಿತ್ತೂರಿನಲ್ಲಿ ಕಳೆದ ರವಿವಾರ ಹಿಂದೂ ಸಮಾಜ್ಯೋತ್ಸವದ ಶೋಭಾಯಾತ್ರೆ ನಡೆಯಿತು. ಈ ಶೋಭಾ ಯಾತ್ರೆಯಲ್ಲಿ ಸ್ಥಳೀಯ ಕಾಂಗ್ರೆಸ್ ಶಾಸಕ ಬಾಬಾ ಸಾಹೇಬ ಪಾಟೀಲ ಮತ್ತು ಕೆಲ ಕಾಂಗ್ರೆಸ್ ನಾಯಕರು ಕೊರಳಿಗೆ ಕೇಸರಿ ಪಟ್ಟಿ ಧರಿಸಿಕೊಂಡು ಭಾಗವಹಿಸಿದ್ದರು,ಇದನ್ನು ಮಾಧ್ಯಮಗಳು ವಿಶೇಷ ಆಸಕ್ತಿ ವಹಿಸಿ ಪ್ರಕಟಿಸಿವೆ. ಕಾಂಗ್ರೆಸ್ ಶಾಸಕರು ಇಂಥ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದು ಇದೇ ಮೊದಲ ಸಲವೇನಲ್ಲ. ಮೂಡಿಗೆರೆಯ ಕಾಂಗ್ರೆಸ್ ಶಾಸಕಿ ನಯನಾ ಮೊಟಮ್ಮನವರು ಇತ್ತೀಚೆಗೆ ಇಂಥ ಕಾರ್ಯಕ್ರಮವೊಂದರಲ್ಲಿ ಪ್ರಮೋದ್ ಮುತಾಲಿಕ್‌ರೊಂದಿಗೆ ಭಾಗವಹಿಸಿದ್ದರು ಹಾಗೂ ಅದನ್ನು ಸಮರ್ಥಿಸಿಕೊಂಡಿದ್ದರು._ ಅಯೋಧ್ಯೆಯ ರಾಮ ಮಂದಿರ ನಿರ್ಮಾಣದ ಶಿಲಾನ್ಯಾಸ ಕಾರ್ಯಕ್ರಮದ ಸಂದರ್ಭದಲ್ಲಿ ಜಮಖಂಡಿಯ ಮಾಜಿ ಶಾಸಕ ಆನಂದ ನ್ಯಾಮಗೌಡರು ಕೂಡ ಕೊರಳಿಗೆ ಕೇಸರಿ ಶಾಲು ಸುತ್ತಿಕೊಂಡು ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದ್ದರು. ಕೆಲವರು ನೇರವಾಗಿ ಪಾಲ್ಗೊಳ್ಳದಿದ್ದರೂ ಸಂಘ ಪರಿವಾರದ ಸಂಘಟನೆಗಳಿಗೆ ಗುಟ್ಟಾಗಿ ಹಣಕಾಸಿನ ನೆರವನ್ನೂ ನೀಡುತ್ತಾರೆ ಎಂಬುದು ಗುಟ್ಟಿನ ಸಂಗತಿಯಲ್ಲ. ಪಿ.ವಿ.ನರಸಿಂಹರಾವ್ ಅವರು ಪ್ರಧಾನಿಯಾಗಿದ್ದಾಗ ಅಯೋಧ್ಯೆಯಲ್ಲಿ ಬಾಬರಿ ಮಸೀದಿ ನೆಲಸಮಗೊಂಡ ನಂತರ ಭಾರತದ ರಾಜಕೀಯ ಚಿತ್ರವೇ ಬದಲಾಗಿ ಹೋಯಿತು.ಅದಕ್ಕಿಂತ ಮುಂಚೆ 1975ರ ಜೆಪಿ ಚಳವಳಿಯ ಕಾಲದಲ್ಲಿ ಅವರ ಆಶೀರ್ವಾದದಿಂದ ಮುಂಚೂಣಿಗೆ ಬಂದ ಸಂಘ ಪರಿವಾರ ವರ್ಷದಿಂದ ವರ್ಷಕ್ಕೆ ಬೆಳೆಯುತ್ತಲೇ ಬಂತು.ಗಾಂಧಿ ಹತ್ಯೆಯ ನಂತರ ಜನರಿಂದ ತಿರಸ್ಕರಿಸಲ್ಪಟ್ಟಿದ್ದ ಸಂಘಟನೆ ಜೆಪಿ ಚಳವಳಿಯಲ್ಲಿ ಸೇರಿ ಮಾನ್ಯತೆ ಪಡೆಯಿತು.ನಂತರದ ತೊಂಭತ್ತರ ದಶಕದ ಆರಂಭದಲ್ಲಿ ಜಾಗತೀಕರಣ ಬಂತು. ಅದೇ ಕಾಲದಲ್ಲಿ ಮಾರುಕಟ್ಟೆ ಆರ್ಥಿಕತೆಯಿಂದ ಆಕರ್ಷಿತರಾದ ಹೊಸಾ ಪೀಳಿಗೆಯೂ ಬಂತು. ಈ ಹೊಸ ಪೀಳಿಗೆ ಮತ್ತು ನಂತರ ಬಂದ ಪೀಳಿಗೆಯನ್ನು ಆಕರ್ಷಿಸುವಲ್ಲಿ ಸಂಘ ಪರಿವಾರ ಯಶಸ್ವಿಯಾಯಿತು.ಅದೇ ಕಾಲಘಟ್ಟದಲ್ಲಿ ಕಾಂಗ್ರೆಸ್‌ನಲ್ಲಿ ಮೃದು ಹಿಂದುತ್ವದ ಪ್ರವೃತ್ತಿ ಕಾಣಿಸಿಕೊಂಡಿತು. ವಿಶ್ವ ಹಿಂದೂ ಪರಿಷತ್, ಹಿಂದೂ ಜಾಗರಣ ವೇದಿಕೆಯಂಥ ಸಂಘಟನೆಗಳ ಮೂಲಕ ಬಹುಸಂಖ್ಯಾತರನ್ನು ಒಟ್ಟುಗೂಡಿಸುವ ತಂತ್ರವನ್ನು ರೂಪಿಸಲಾಯಿತು. ರಾಜಕೀಯಕ್ಕೂ ತಮಗೂ ಸಂಬಂಧವಿಲ್ಲ ತಮ್ಮದು ಹಿಂದು ಧಾರ್ಮಿಕ ಸಂಘಟನೆ ಎಂದು ಪರಿಚಯಿಸಿಕೊಳ್ಳುತ್ತ ಬರಲಾಯಿತು. ಇಂಥ ಕಾರ್ಯಕ್ರಮಗಳಿಗೆ ಮಠಾಧೀಶರು, ಧಾರ್ಮಿಕ ಗುರುಗಳು, ಕಾಂಗ್ರೆಸ್ , ಜೆಡಿಎಸ್‌ನಂತಹ ಪಕ್ಷಗಳ ಸ್ಥಳೀಯ ನಾಯಕರನ್ನು ಆಹ್ವಾನಿಸಲಾಯಿತು. ಅವರೂ ಭಾಗವಹಿಸ ತೊಡಗಿದರು.ಅನೇಕ ಕಡೆ ಕಾಂಗ್ರೆಸ್ ನಾಯಕರು ಸಂಘ ಪರಿವಾರದ ಹಿಂದೂ ಸಂಘಟನೆಗಳಿಗೆ ಪದಾಧಿಕಾರಿಗಳಾದರು. ಕಾಂಗ್ರೆಸ್‌ನಲ್ಲಿ ಮೊದಲ ಬಾರಿ ಮಲ್ಲಿಕಾರ್ಜುನ ಖರ್ಗೆಯವರು ಕೆಪಿಸಿಸಿ ಅಧ್ಯಕ್ಷರಾಗಿದ್ದಾಗ ಇದನ್ನು ತಡೆಯಲು ಯತ್ನಿಸಲಾಯಿತು.ಆದರೂ ಇದು ಹಾಗೇ ನಡೆದುಕೊಂಡು ಬಂತು. ಸಿದ್ದರಾಮಯ್ಯನವರು ಸಂಘ ಪರಿವಾರದ ಬಗ್ಗೆ ನೇರವಾಗಿ ಮಾತಾಡುತ್ತಾರೆ. ಆದರೆ ಅವರ ಪಕ್ಷದಲ್ಲಿ ಅವರನ್ನು ಬೆಂಬಲಿಸಿ ಮಾತಾಡುವವರು ತುಂಬಾ ಕಡಿಮೆ. ಸದನದಲ್ಲಿ ಕೋಮುವಾದಿಗಳ ವಿರುದ್ಧ ಮಾತಾಡುವಾಗ ಬಿಜೆಪಿ ಶಾಸಕರು ಕೂಗಾಟ ಆರಂಭಿಸಿದರೆ ,ಕಾಂಗ್ರೆಸ್ ಶಾಸಕರು ತೆಪ್ಪಗೆ ಕುಳಿತಿರುತ್ತಾರೆ. ಇತ್ತೀಚೆಗೆ ಸ್ವತಃ ಮುಖ್ಯಮಂತ್ರಿ ಗಳೇ ತಮ್ಮ ಪಕ್ಷದ ಶಾಸಕರಿಗೆ ನೀವೇಕೆ ಸುಮ್ಮನಿದ್ದೀರಿ, ನೀವೂ ಏಳಿ ಎಂದು ಹೇಳಬೇಕಾಯಿತು. ಕಾಂಗ್ರೆಸ್ ಜಾತ್ಯತೀತ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಂಬಿಕೆಯಿರುವ ಪಕ್ಷವಾಗಿದ್ದರೂ ಸ್ವಾತಂತ್ರ್ಯಾ ನಂತರ ಅಧಿಕಾರಕ್ಕಾಗಿ ಅಲ್ಲಿ ಸೇರಿದವರಿಗೆ ಯಾವ ಸಿದ್ಧಾಂತವೂ ಇಲ್ಲ.ಇದನ್ನು ಬಿಟ್ಟರೆ ಸಮಾಜವಾದದಲ್ಲಿ ನಂಬಿಕೆಯಿರುವ ಪುಟ್ಟ ಗುಂಪು ಕೂಡ ಕಾಂಗ್ರೆಸ್‌ನಲ್ಲಿದೆ. ಸೆಕ್ಯುಲರ್ ತತ್ವಗಳಿಗೆ ಈಗಲೂ ಬದ್ಧವಾಗಿರುವ ಏಕೈಕ ಪ್ರಭಾವೀ ಶಕ್ತಿಯೆಂದರೆ ಗಾಂಧಿ,ನೆಹರೂ ಮನೆತನದವರು.ಆಧುನಿಕ ಭಾರತದ ಶಿಲ್ಪಿ ನೆಹರೂ ಹಾಕಿಕೊಟ್ಟ ಮಾರ್ಗದಲ್ಲೇ ಭಾರತ ಈಗಲೂ ಸಾಗಿದೆ. ಅಂತಲೇ ತಮ್ಮ ಅಜೆಂಡಾಕ್ಕೆ ಅಡ್ಡಿಯಾಗಿರುವ ನೆಹರೂ ಕಂಡರೆ ಇವರಿಗೆ ಆಗುವುದಿಲ್ಲ. ಅರುವತ್ತು ವರ್ಷಗಳ ಹಿಂದೆ ನಿರ್ಗಮಿಸಿದ ನೆಹರೂ ಈಗಲೂ ಅವರಿಗೆ ಪ್ರಧಾನ ಶತ್ರು. ತಾನು ಶ್ರೇಷ್ಠ ಹಿಂದೂ ಎಂದು ಹೇಳಿಕೊಳ್ಳುತ್ತಿದ್ದ ಮಹಾತ್ಮಾ ಗಾಂಧೀಜಿ ಕೂಡ ಇವರಿಗೆ ಇನ್ನೊಬ್ಬ ಮುಖ್ಯ ಶತ್ರು. ಭಾರತೀಯರು ಅದರಲ್ಲೂ ಹಿಂದೂಗಳೆಂದು ಕರೆಯಲ್ಪಡುವವರು ತುಂಬಾ ಭಾವುಕರು. ದೇವರು , ಧರ್ಮದ ವಿಷಯ ಬಂದರೆ ತಮ್ಮನ್ನೇ ತಾವು ಮರೆತು ಬಿಡುತ್ತಾರೆ. ಪೆರಿಯಾರ ರಾಮಸ್ವಾಮಿ ನಾಯ್ಕರ್ ಅವರ ವೈಚಾರಿಕ ಜಾಗೃತಿ ಮೂಡಿಸಿದ ತಮಿಳುನಾಡಿನಂಥ ರಾಜ್ಯದಲ್ಲಿ ಕೂಡ ದೇವಾಲಯಗಳು ತುಂಬಿ ತುಳುಕುತ್ತಿವೆ. ಈ ದೇವಾಲಯಗಳಿಗೆ ಹೋಗುವ ಅಮಾಯಕ ಜನ ಧಾರ್ಮಿಕವಾಗಿ ಹಿಂದೂಗಳು, ರಾಜಕೀಯವಾಗಿ ದ್ರಾವಿಡ ಪಕ್ಷಗಳ ಬೆಂಬಲಿಗರು. ಈ ಧಾರ್ಮಿಕ ಹಿಂದೂಗಳನ್ನು ರಾಜಕೀಯ ಹಿಂದೂಗಳನ್ನಾಗಿ ಮಾಡಲು ಸಂಘ ಪರಿವಾರ ಇಲ್ಲಿ ಅನೇಕ ವರ್ಷಗಳಿಂದ ಕೆಲಸ ಮಾಡುತ್ತ ಬಂದಿದೆ. ಗುಡಿ ಗುಂಡಾರಗಳಲ್ಲಿ, ಹಾಗೂ ಸುತ್ತಮುತ್ತಲಿನ ಪರಿಸರದಲ್ಲಿ ಅದು ತಳವೂರಲು ಯತ್ನಿಸುತ್ತಿದೆ.ಆದರೆ ದೇವರಿಗೆ ಕೈ ಮುಗಿಯುವ ,ಅಭಿಷೇಕ ಮಾಡಿಸುವ ಜನರನ್ನು ರಾಜಕೀಯ ಹಿಂದೂಗಳಾನ್ನಾಗಿ ಮಾಡಿ ಓಟಿನ ಬೆಳೆ ತೆಗೆಯುವ ಕೋಮುವಾದಿಗಳ ಮಸಲತ್ತುಈ ವರೆಗೆ ಯಶಸ್ವಿಯಾಗಿಲ್ಲ. ಸಾಮಾನ್ಯವಾಗಿ ಅತ್ಯಂತ ಧಾರ್ಮಿಕರು,ದೇವಿ ಉಪಾಸಕರು, ಕೋಮುವಾದಿಗಳಾಗಿರುವುದಿಲ್ಲ. ಆಳದಲ್ಲಿ ಜಾತಿಯ ಮಡಿವಂತಿಕೆ ಇದ್ದರೂ ಬಹಿರಂಗವಾಗಿ ವ್ಯಕ್ತಪಡಿಸುವುದಿಲ್ಲ. ಇವರು ತಮ್ಮ ಪಾಡಿಗೆ ತಾವಿರುತ್ತಾರೆ. ಚುನಾವಣೆ ಬಂದಾಗ ಪಕ್ಷಭೇದ ವಿಲ್ಲದೇ ಒಳ್ಳೆಯ ಅಭ್ಯರ್ಥಿಯನ್ನು ಬೆಂಬಲಿಸುತ್ತಾರೆ.ಬಹುಸಂಖ್ಯಾತರಾಗಿರುವ ಇಂಥವರ ಮೇಲೆ ಕಣ್ಣು ಹಾಕಿರುವ ಬಿಜೆಪಿ ಈ ಧಾರ್ಮಿಕ ಹಿಂದೂಗಳನ್ನು ರಾಜಕೀಯ ಹಿಂದೂಗಳನ್ನಾಗಿ ಮಾಡಲು ನಾನಾ ವಿಧದ ಮಸಲತ್ತುಗಳನ್ನು ಮಾಡುತ್ತ ಬಂದಿದೆ . ಕರಾವಳಿಯ ಮಂಗಳೂರು ಮತ್ತು ಉಡುಪಿಯಂಥ ಜಿಲ್ಲೆಗಳಲ್ಲಿ ಅದು ದೇವಾಲಯಗಳ ಪರಿಸರದಲ್ಲಿ ಆಳವಾಗಿ ಬೇರು ಬಿಟ್ಟಿದೆ. ನಮ್ಮದು ಬಹು ಧರ್ಮಗಳ ,ಬಹು ಭಾಷೆಗಳ ವಿಭಿನ್ನ ಆಚಾರ ವಿಚಾರಗಳ ಒಕ್ಕೂಟ ದೇಶ.ಇಲ್ಲಿ ದೇವಾಲಯಗಳಿಗೆ ಹೋಗುವ ಅಲ್ಪಸಂಖ್ಯಾತರಿದ್ದಾರೆ. ದರ್ಗಾಗಳಿಗೆ ಹೋಗುವ ಬಹುಸಂಖ್ಯಾತರಿದ್ದಾರೆ.ಜಾತ್ರೆಗಳಲ್ಲಿ ಅಂಗಡಿಗಳನ್ನಿಟ್ಟು ವ್ಯಾಪಾರ ಮಾಡುವ ಮುಸಲ್ಮಾನರಿರುವಂತೆ ,ಉರೂಸುಗಳಲ್ಲಿ ವ್ಯಾಪಾರ ವಹಿವಾಟುಗಳನ್ನು ನಡೆಸುವ ಹಿಂದೂಗಳೆಂದು ಕರೆದುಕೊಳ್ಳುವವರು ಸೇರಿದಂತೆ ಎಲ್ಲ ಜಾತಿಗಳ ಜನರೂ ಇದ್ದಾರೆ.ಇದು ರಾಜಕೀಯವಾಗಿ ಹಿಂದುತ್ವದವರಿಗೆ ಅವರ ಕಾರ್ಯಸೂಚಿಯನ್ನು ಜಾರಿಗೆ ತರಲು ಅಡ್ಡಿಯಾಗಿದೆ.ಅಂತಲೇ ಹಿಂದೂ ಜಾತ್ರೆ, ಉತ್ಸವಗಳಲ್ಲಿ ಮುಸಲ್ಮಾನರು ಅಂಗಡಿಗಳನ್ನು ಇಡಬಾರದೆಂದು ನಿರ್ಬಂಧಿಸಲು ಯತ್ನಿಸುತ್ತಿದ್ದಾರೆ. ಆದರೆ ದೇವಾಲಯಗಳ ಭಕ್ತರಿಂದಲೇ ಇದಕ್ಕೆ ತೀವ್ರ ವಿರೋಧ ಬರುತ್ತಿದೆ. ರಾಷ್ಟ್ರೀಯ ಸ್ವಯಂ ಸೇವಕ ಸಂಘ ಬಹಿರಂಗವಾಗಿ ಏನನ್ನೇ ಹೇಳಲಿ ಅದರ ಒಳಗುರಿ ಪ್ರಜಾಪ್ರಭುತ್ವದ ಬಹುತ್ವ ಭಾರತವನ್ನು ಮನುವಾದಿ ಹಿಂದೂ ರಾಷ್ಟ್ರವನ್ನಾಗಿ ಮಾಡುವುದಾಗಿದೆ.ಅದಕ್ಕಾಗಿ ಶೇಕಡ 90 ರಷ್ಟಿರುವ ಹಿಂದೂಗಳನ್ನು ಒಟ್ಟುಗೂಡಿಸಿ ಮುಸ್ಲಿಮರು ಹಾಗೂ ಕ್ರೈಸ್ತರನ್ನು ಪ್ರತ್ಯೇಕಿಸುವ ಪ್ರಯತ್ನ ನಡೆಸಿದೆ. ಇದನ್ನು ಗುರು ಗೋಳ್ವಾಲ್ಕರ್ ತಮ ್ಮ‘ಬಂಚ್ ಆಫ್ ಥಾಟ್ಸ್ ’ ಪುಸ್ತಕ ಸೇರಿದಂತೆ ಹಲವಾರು ಪುಸ್ತಕಗಳಲ್ಲಿ ಸ್ಪಷ್ಟವಾಗಿ ಹೇಳಿದ್ದಾರೆ.ಅವರ ದೃಷ್ಟಿ ಯಲ್ಲಿ ಮುಸಲ್ಮಾನರು, ಕ್ರೈಸ್ತರು ಮತ್ತು ಕಮ್ಯುನಿಸ್ಟರು ಅವರ ಪ್ರಧಾನ ಶತ್ರುಗಳಾಗಿದ್ದಾರೆ. ಅದೇ ಮಾತನ್ನು ಈಗ ಆರೆಸ್ಸೆಸ್ ಸಂಘ ಚಾಲಕ ಮೋಹನ್ ಭಾಗವತರು ನಯವಾದ ಭಾಷೆಯಲ್ಲಿ ಹಾಗೂ ಕೇಂದ್ರ ಗೃಹ ಮಂತ್ರಿ ಅಮಿತ್ ಶಾ ಒರಟಾದ ಭಾಷೆಯಲ್ಲಿ ಹೇಳಿದ್ದಾರೆ. ಭಾರತದಲ್ಲಿ ಇರುವವರೆಲ್ಲ ಹಿಂದೂಗಳು ಎಂದು ಭಾಗವತ್ ಹೇಳಿದರೆ,ಕಮ್ಯುನಿಸ್ಟ್ ಮುಕ್ತ ಭಾರತ ತಮ್ಮ ಮುಂದಿನ ಎಂದು ಅಮಿತ್ ಶಾ ಹೇಳಿದ್ದಾರೆ. ಬುಡಕಟ್ಟು ಸಮುದಾಯಗಳನ್ನು ಸ್ವಾಧೀನ ಪಡಿಸಿಕೊಳ್ಳುವ ಅದರ ಗುರಿ ಈಡೇರಿಲ್ಲ.ಉತ್ತರ ಭಾರತದಂತೆ ದಕ್ಷಿಣ ಭಾರತವನ್ನು ಗೆಲ್ಲಲು ಆಗುತ್ತಿಲ್ಲ. ಮುಖ್ಯವಾಗಿ ಕೇರಳ ಮತ್ತು ತಮಿಳುನಾಡುಗಳಲ್ಲಿ ನೆಲೆಯೂರಲು ಅದು ಹರಸಾಹಸ ಮಾಡುತ್ತಿದೆ.ಈ ರಾಜ್ಯಗಳ ಲ್ಲಿನ ಸಾಕ್ಷರತೆ ಮತ್ತು ಭಾಷೆ ಅದಕ್ಕೆ ದೊಡ್ಡ ಅಡ್ಡಿಯಾಗಿವೆ.ದಕ್ಷಿಣದಲ್ಲಿ ಅದಕ್ಕೆ ಇರುವ ಏಕೈಕ ಭರವಸೆ ಅಂದರೆ ಕರ್ನಾಟಕ. ಇಲ್ಲೂ ಸ್ವಂತ ಶಕ್ತಿಯಿಂದ ನಿಚ್ಚಳ ಬಹುಮತವನ್ನು ಪಡೆದು ಅಧಿಕಾರಕ್ಕೆ ಬರಲು ಬಿಜೆಪಿಗೆ ಸಾಧ್ಯವಾಗಿಲ್ಲ. ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲೂ ಜನರು ಅದನ್ನು ಒಪ್ಪಲು ತಯಾರಿಲ್ಲ. ಹೀಗಾಗಿ ಬಿಜೆಪಿ ಈಗ ಚುನಾವಣಾ ಆಯೋಗದ ಮೂಲಕ ಮತ ದಾರರ ಪಟ್ಟಿಯ ತೀವ್ರ ಪರಿಷ್ಕರಣೆಯ ಮೂಲಕ ( ಎಸ್.ಐ.ಆರ್ ) ಬಡವರು ಮತ್ತು ಮುಸಲ್ಮಾನರ ನಾಗರಿಕತ್ವದ ಹಕ್ಕನ್ನೇ ಕಸಿಯಲು ಹೊರಟಿದೆ.ತಮಿಳುನಾಡಿನಲ್ಲಿ 90 ಲಕ್ಷ ಮತದಾರರನ್ನು ಮತದಾರರ ಪಟ್ಟಿಯಿಂದ ಕೈ ಬಿಡಲಾಗಿದೆ .ಚುನಾವಣಾ ಆಯೋಗ ಸೇರಿದಂತೆ ಬಹುತೇಕ ಸಾಂವಿಧಾನಿಕ ಸಂಸ್ಥೆಗಳ ಮೇಲೆ ಅದು ಹಿಡಿತ ಸಾಧಿಸಿದೆ.ಸಂವಿಧಾನ ಮತ್ತು ಪ್ರಜಾಪ್ರಭುತ್ವಕ್ಕೆ ಅಪಾಯ ಎದುರಾಗಿರುವ ಇಂಥ ಸಂದರ್ಭದಲ್ಲಿ ಕಾಂಗ್ರೆಸ್‌ನಂಥ ಸೆಕ್ಯುಲರ್ ಎಂದು ಕರೆದುಕೊಳ್ಳುವ ಪಕ್ಷಗಳು ತನ್ನ ಕಾರ್ಯಕರ್ತರು, ಶಾಸಕರು ,ಚುನಾಯಿತ ಸದಸ್ಯರು ದಾರಿ ತಪ್ಪದಂತೆ ನೋಡಿಕೊಳ್ಳುವುದು ಅತ್ಯಗತ್ಯವಾಗಿದೆ.ಕಾರ್ಯಕರ್ತರಿಗೆ ತಾತ್ವಿಕ ಮತ್ತು ರಾಜಕೀಯ ತಿಳುವಳಿಕೆ ನೀಡಬೇಕಾಗಿದೆ. ಸಂವಿಧಾನ ಮತ್ತು ಪ್ರಜಾಪ್ರಭುತ್ವದ ರಕ್ಷಣೆ ಇಂದಿನ ತುರ್ತು ಅಗತ್ಯವಾಗಿದೆ. ಲೋಕಸಭೆಯ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸೇರಿದಂತೆ ಕೆಲವರು ಮಾತಾಡಿದರೆ ಸಾಲದು ಇಡೀ ಪಕ್ಷವೇ ದೊಡ್ಡ ಧ್ವನಿಯಲ್ಲಿ ಮಾತಾ ಡಬೇಕಾಗಿದೆ.ದೊಡ್ಡ ಪಕ್ಷವಾಗಿ ಎಲ್ಲ ಜಾತ್ಯತೀತ, ಪ್ರಜಾಪ್ರಭುತ್ವವಾದಿ ಶಕ್ತಿಗಳನ್ನು ಒಟ್ಟುಗೂಡಿಸಬೇಕಾಗಿದೆ.ಅದೊಂದೇ ಉಳಿದ ದಾರಿಯಾಗಿದೆ. ಒಂದು ಪ್ರಬಲ ಜಾತ್ಯತೀತ ಶಕ್ತಿ ರೂಪುಗೊಂಡರೆ ಜನರೂ ಜೊತೆಗೆ ಬರುತ್ತಾರೆ. ಭಾರತೀಯರನ್ನು ಹಿಂದೂಗಳನ್ನಾಗಿ ಮಾಡುವುದಲ್ಲ,ಭಾರತೀಯರನ್ನು ನೈಜ ಭಾರತೀಯರನ್ನಾಗಿ ಮಾಡಬೇಕಾಗಿದೆ.

ವಾರ್ತಾ ಭಾರತಿ 16 Feb 2026 11:50 am

Breaking News: ಶಬರಿಮಲೆ ದೇಗುಲಕ್ಕೆ ಮಹಿಳೆಯರ ಪ್ರವೇಶ; ಏಪ್ರಿಲ್ 7 ರಿಂದ ಮರುಪರಿಶೀಲನಾ ಅರ್ಜಿ ವಿಚಾರಣೆ

ನವದೆಹಲಿ: ಶಬರಿಮಲೆ ದೇಗುಲಕ್ಕೆ ಮಹಿಳೆಯರ ಪ್ರವೇಶಕ್ಕೆ ಅವಕಾಶ ಕಲ್ಪಿಸುವ ಸೆಪ್ಟೆಂಬರ್ 2018 ರ ತೀರ್ಪು ಮರುಪರಿಶೀಲನಾ ಅರ್ಜಿಯನ್ನು ಸುಪ್ರೀಂ ಕೋರ್ಟ್ ಅಂಗೀಕರಿಸಿದೆ. ಏಪ್ರಿಲ್ 7 ರಿಂದ 9 ನ್ಯಾಯಮೂರ್ತಿಗಳ ಪ್ರತ್ಯೇಕ ನ್ಯಾಯಪೀಠವು ಅರ್ಜಿಯ ವಿಚಾರಣೆ ನಡೆಸಲಿದೆ. ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶ ಸೂರ್ಯ ಕಾಂತ್, ನ್ಯಾಯಮೂರ್ತಿಗಳಾದ ಜೊಯ್‌ಮಲ್ಯಾ ಬಾಗ್‌ಚಿ ಮತ್ತು ವಿಪುಲ್ ಎಂ ಪಂಚೋಲಿ ಅವರಿದ್ದ ನ್ಯಾಯಪೀಠವು

ಒನ್ ಇ೦ಡಿಯ 16 Feb 2026 11:41 am

ಫೆಬ್ರವರಿ 16ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್‌, ಡೀಸೆಲ್‌ ದರ ಎಷ್ಟಿದೆ ತಿಳಿಯಿರಿ

Petrol, Diesel Price: ಪೆಟ್ರೋಲ್, ಡೀಸೆಲ್‌ ದರದಲ್ಲಿ ಜಾಸ್ತಿ ಅಲ್ಲದಿದ್ದರೂ, ಸ್ವಲ್ಪ ಪ್ರಮಾಣದಲ್ಲಾದರೂ, ಏರಿಳಿತ ಆಗುತ್ತಿರುತ್ತದೆ. ಹಾಗಾದರೆ, ಇಂದು (ಫೆಬ್ರವರಿ 16) ಬೆಂಗಳೂರು ಸೇರಿದಂತೆ ರಾಜ್ಯದ ಉಳಿದ ಜಿಲ್ಲೆಗಳಲ್ಲಿ ಲೀಟರ್‌ ಪೆಟ್ರೋಲ್‌, ಡೀಸೆಲ್‌ ಬೆಲೆ ಎಷ್ಟಿದೆ ಎನ್ನುವ ಅಂಕಿಅಂಶಗಳನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ. ಶಕ್ತಿಯ ಮೂಲಗಳು ಎನಿಸಿಕೊಂಡಿರುವ ಪೆಟ್ರೋಲ್ ಮತ್ತು ಡೀಸೆಲ್ ಇಂಧನ ಅತ್ಯವಶ್ಯಕವಾಗಿ ಬೇಕಾಗುವ ಸಂಪನ್ಮೂಲಗಳಾಗಿವೆ.

ಒನ್ ಇ೦ಡಿಯ 16 Feb 2026 11:39 am

ಕಲಬುರಗಿಯ ಅಭಿವೃದ್ಧಿಯತ್ತ ತುರ್ತು ಗಮನಹರಿಸಿ, ನಂತರ ಕರಾವಳಿ ಬಗ್ಗೆ ಮಾತನಾಡಿ: ಬಿ.ವೈ.ವಿಜಯೇಂದ್ರ

ಬಿಜೆಪಿ ರಾಜ್ಯಾಧ್ಯಕ್ಷ - ಸಚಿವ ಪ್ರಿಯಾಂಕ್ ಖರ್ಗೆ ಮಧ್ಯೆ 'ಎಕ್ಸ್'ನಲ್ಲಿ ವಾಗ್ಯುದ್ಧ!

ವಾರ್ತಾ ಭಾರತಿ 16 Feb 2026 11:12 am

ಮೈದಾನದಲ್ಲಿ ಹಾರ್ದಿಕ್‌ ಪಾಂಡ್ಯ, ಸೂರ್ಯಕುಮಾರ್‌ ಜೊತೆ ಕುಲದೀಪ್‌ ಯಾದವ್‌ ವಾಗ್ವಾದ; ಆಲ್‌ ಓಕೆ ಬ್ಲೂ ಬಾಯ್ಸ್?‌

ಕೊಲಂಬೊದಲ್ಲಿ ನಡೆದ ಟಿ-20 ಪಂದ್ಯದಲ್ಲಿ ಭಾರತ ತಂವು ಪಾಕಿಸ್ತಾನಕ್ಕೆ ತಂಡಕ್ಕೆ ಸೋಲಿನ ರುಚಿ ತೋರಿಸಿದೆಯಾದರೂ, ಪಂದ್ಯದ ವೇಳೆ ಮೈದಾನದಲ್ಲಿ ಭಾರತೀಯ ಆಟಗಾರರಾದ ಹಾರ್ದಿಕ್‌ ಪಾಂಡ್ಯ, ಕುಲದೀಪ್‌ ಯಾದವ್‌ ಮತ್ತು ಸೂರ್ಯಕುಮಾರ್‌ ಯಾದವ್‌ ನಡುವಿನ ವಾಗ್ವಾದ, ನಮ್ಮ ರಾಷ್ಟ್ರೀಯ ತಂಡದಲ್ಲಿ ಎಲ್ಲವೂ ಸರಿ ಇದೆಯಾ ಎಂಬ ಪ್ರಶ್ನೆ ಉದ್ಭವಿಸುವಂತೆ ಮಾಡಿದೆ. ಅಷ್ಟಕ್ಕೂ ಮೈದಾನದಲ್ಲಿ ನಡೆದಿದ್ದಾದರೂ ಏನು? ಹಾರ್ದಿಕ್‌ ಕುಲದೀಪ್‌ ನಡುವೆ ಮಾತಿನ ಚಕಮಕಿಗೆ ಏನು ಕಾರಣ? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.

ವಿಜಯ ಕರ್ನಾಟಕ 16 Feb 2026 11:11 am

Race Course Shifting : ಬೆಂಗಳೂರು ಡರ್ಬಿ ರೇಸ್ ಕುದುರೆ ಕುಣಿಗಲ್ ಕಡೆಗೆ ಓಡಿದಾಗ..

Shifting of Bangalore Turf Club : ಬೆಂಗಳೂರು ನಗರಕ್ಕೆ ಕಳಶಪ್ರಾಯದಂತಿದ್ದ ನಗರದ ರೇಸ್’ಕೋರ್ಸ್ ಕೊನೆಗೂ ಸಿಲಿಕಾನ್ ಸಿಟಿಯಿಂದ ಹೊರಹೋಗಲಿದೆ. ಈ ಬಗ್ಗೆ, ಸಿದ್ದರಾಮಯ್ಯನವರ ಸರ್ಕಾರ ಮಹತ್ವದ ಕ್ಯಾಬಿನೆಟ್ ನಿರ್ಧಾರವನ್ನು ತೆಗೆದುಕೊಂಡಿದೆ. ಈ ಟರ್ಫ್ ಕ್ಲಬ್ ಇತಿಹಾಸ, ಪ್ರಮುಖ ವಿದ್ಯಮಾನಗಳು, ಬೆಂಗಳೂರಿನಿಂದ ಹೊರ ಹೋಗುತ್ತಿರುವುದಕ್ಕೆ ಕಾರಣಗಳೇನು ಎನ್ನುವುದನ್ನು ಇಲ್ಲಿ ವಿವರಿಸುವ ಪ್ರಯತ್ನವನ್ನು ಮಾಡಲಾಗಿದೆ.

ವಿಜಯ ಕರ್ನಾಟಕ 16 Feb 2026 10:51 am

'ವಂದೇ ಮಾತರಂ'ಗೆ ರಾಷ್ಟ್ರಗೀತೆಯ ಸರಿಸಮಾನ ಸ್ಥಾನಮಾನ ನೀಡುವುದು ರಾಷ್ಟ್ರಗೀತೆಯ ಘನತೆ, ಸ್ಥಾನಮಾನ ಕುಗ್ಗಿಸುವ ಅಪಾಯಕಾರಿ ಪ್ರಯತ್ನ: ಬಿ.ಕೆ.ಹರಿಪ್ರಸಾದ್

ಬೆಂಗಳೂರು: ವಂದೇ ಮಾತರಂ ಹಾಡಿಗೆ ರಾಷ್ಟ್ರಗೀತೆಯ ಸರಿಸಮಾನವಾದ ಸ್ಥಾನಮಾನ ನೀಡುವುದು ರಾಷ್ಟ್ರಗೀತೆಯ ಘನತೆ ಹಾಗೂ ಸ್ಥಾನಮಾನವನ್ನೇ ಕುಗ್ಗಿಸುವ ಅಪಾಯಕಾರಿ ಪ್ರಯತ್ನ ಎಂದು ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಹೇಳಿದ್ದಾರೆ. ಭಾರತದ ರಾಷ್ಟ್ರಗೀತೆಯಾದ ಜನ ಗಣ ಮನ ಕುರಿತು ಆರೆಸ್ಸೆಸ್ ಆರಂಭದಿಂದಲೇ ಹೊಂದಿಕೊಂಡು ಬಂದಿರುವ ಅಸಮ್ಮತಿ ಹೊಸದಲ್ಲ. ಸಂಘ ಪರಿವಾರದ ಎರಡನೇ ಸರಸಂಘ ಚಾಲಕ ಮಾಧವ ಸದಾಶಿವ ಗೋಳ್ವಾಲ್ಕರ್ ಅವರು 1966ರಲ್ಲಿ ಪ್ರಕಟಿಸಿದ ಬಂಚ್ ಆಫ್ ಥಾಟ್ಸ್ ಕೃತಿಯಲ್ಲೇ ಈ ಭಿನ್ನಮತ ಸ್ಪಷ್ಟವಾಗಿ ದಾಖಲಾಗಿದೆ. ವಂದೇ ಮಾತರಂಗೆ ಆದ್ಯತೆ ನೀಡುವ ಆ ಮನೋಭಾವನೆ, ಆರು ದಶಕಗಳ ನಂತರ ಕೇಂದ್ರ ಸರಕಾರದ ಅಧಿಕೃತ ಕ್ರಮಗಳ ಮೂಲಕ ಮತ್ತೆ ತಲೆದೋರುತ್ತಿರುವುದು ಗಂಭೀರ ಆತಂಕಕ್ಕೆ ಕಾರಣವಾಗಿದೆ ಎಂದು ಅವರು ತಿಳಿಸಿದ್ದಾರೆ. 2026ರ ಫೆಬ್ರವರಿ 11ರಂದು ಕೇಂದ್ರ ಗೃಹ ಸಚಿವಾಲಯವು ವಂದೇ ಮಾತರಂ ಕುರಿತಂತೆ 10 ಪುಟಗಳ ಮಾರ್ಗಸೂಚಿಗಳನ್ನು ಪ್ರಕಟಿಸಿದೆ. ಈ ಮಾರ್ಗಸೂಚಿಗಳಲ್ಲಿನ ಹಲವು ಅಂಶಗಳು, ರಾಷ್ಟ್ರಗೀತೆಗೆ ಸಂವಿಧಾನಾತ್ಮಕವಾಗಿ ಒದಗಿಸಿರುವ ಸ್ಥಾನಮಾನವನ್ನು ಪರೋಕ್ಷವಾಗಿ ಕುಂದಿಸುವ ಪ್ರಯತ್ನಗಳು ಸ್ಪಷ್ಟವಾಗಿ ಕಾಣುತ್ತವೆ. ಮಾರ್ಗಸೂಚಿಗಳ ಪ್ರಕಾರ, ಸಂವಿಧಾನ ಸಭೆ ಮಾನ್ಯತೆ ನೀಡಿರುವ ಎರಡು ಅಂತಸ್ತುಗಳ ಬದಲಾಗಿ ವಂದೇ ಮಾತರಂ ಅನ್ನು ಸಂಪೂರ್ಣ ಆರು ಅಂತಸ್ತುಗಳಲ್ಲಿ ಹಾಡಬೇಕೆಂದು ಸೂಚಿಸಲಾಗಿದೆ. ಶಾಲೆಗಳಲ್ಲಿ ತರಗತಿಗಳ ಆರಂಭಕ್ಕೂ, ಸಾರ್ವಜನಿಕವಾಗಿಯೂ ಹಾಗೂ ಸರಕಾರಿ ಕಾರ್ಯಕ್ರಮಗಳಲ್ಲಿ ರಾಷ್ಟ್ರಪತಿಯ ಆಗಮನ-ನಿರ್ಗಮನದ ಸಂದರ್ಭಗಳಿಗೂ ವಂದೇ ಮಾತರಂ ಕಡ್ಡಾಯವಾಗಬೇಕು ಎನ್ನಲಾಗಿದೆ. ಅಲ್ಲದೆ, ರಾಷ್ಟ್ರಗೀತೆ ಹಾಡುವ ಸಂದರ್ಭದ ಮೊದಲೇ ವಂದೇ ಮಾತರಂ ಹಾಡಿದ ನಂತರವೇ ರಾಷ್ಟ್ರಗೀತೆ ಹಾಡುವ ಕ್ರಮವನ್ನು ಸೂಚಿಸಲಾಗಿದೆ. ಈ ಸೂಚನೆಗಳು, ರಾಷ್ಟ್ರಧ್ವಜಾರೋಹಣದ ನಂತರ ಹಾಗೂ ರಾಷ್ಟ್ರಪತಿ ಅಥವಾ ರಾಜ್ಯಪಾಲರ ಆಗಮನ-ನಿರ್ಗಮನದ ವೇಳೆ ರಾಷ್ಟ್ರಗೀತೆ ವಾದ್ಯಗೊಳ್ಳಬೇಕೆಂಬ ದೀರ್ಘಕಾಲದಿಂದ ಪಾಲಿಸಿಕೊಂಡು ಬಂದಿರುವ ಅಧಿಕೃತ ಶಿಷ್ಟಾಚಾರದ ವಿರುದ್ಧವಾಗಿವೆ. ಇದು ಕೇವಲ ವಿಧಾನಾತ್ಮಕ ಬದಲಾವಣೆ ಅಲ್ಲ; ರಾಷ್ಟ್ರಗೀತೆಯ ಪ್ರಾತಿನಿಧಿಕ ಹಾಗೂ ಸಂವಿಧಾನಾತ್ಮಕ ಸ್ಥಾನಮಾನವನ್ನು ಕುಗ್ಗಿಸುವ ಸ್ಪಷ್ಟ ಸೂಚನೆಯಾಗಿದೆ ಎಂದವರು ಅಭಿಪ್ರಾಯಿಸಿದ್ದಾರೆ. ರಾಷ್ಟ್ರಗೀತೆಯ ಗೌರವ ಮತ್ತು ರಕ್ಷಣೆಗೆ 1971ರಲ್ಲಿ ಜಾರಿಗೆ ಬಂದಿರುವ ರಾಷ್ಟ್ರೀಯ ಗೌರವ ಅವಮಾನ ತಡೆ ಕಾಯ್ದೆ ಸ್ಪಷ್ಟವಾದ ಕಾನೂನು ಚೌಕಟ್ಟನ್ನು ಒದಗಿಸಿದೆ. ಈ ಕಾಯ್ದೆಯಲ್ಲಿ ರಾಷ್ಟ್ರಗೀತೆಗೆ ಪ್ರತ್ಯೇಕ ವಿಧಿಯನ್ನು ಮೀಸಲಿಟ್ಟಿರುವುದು ಅದರ ವಿಶಿಷ್ಟ ಸ್ಥಾನವನ್ನು ತೋರಿಸುತ್ತದೆ. 1976ರ ಸಂವಿಧಾನದ 42ನೇ ತಿದ್ದುಪಡಿಯ ಮೂಲಕ ಸೇರಿಸಲಾದ ಕಲಂ 51-ಎಯಲ್ಲಿ, ಸಂವಿಧಾನ, ರಾಷ್ಟ್ರಧ್ವಜ ಮತ್ತು ರಾಷ್ಟ್ರಗೀತೆಯನ್ನು ಗೌರವಿಸುವುದು ಪ್ರತಿಯೊಬ್ಬ ನಾಗರಿಕನ ಮೂಲಭೂತ ಕರ್ತವ್ಯವೆಂದು ಸ್ಪಷ್ಟವಾಗಿ ಹೇಳಲಾಗಿದೆ. 1950ರ ಜನವರಿ 24ರಂದು ಸಂವಿಧಾನ ಸಭೆ ಜನ ಗಣ ಮನವನ್ನು ರಾಷ್ಟ್ರಗೀತೆಯಾಗಿ ಏಕಮತದಿಂದ ಅವಿರೋಧವಾಗಿ ಅಂಗೀಕರಿಸಿತು. ಅದೇ ಸಂದರ್ಭದಲ್ಲಿ ವಂದೇ ಮಾತರಂ ಮತ್ತು ಸಾರೆ ಜಹಾನ್ ಸೆ ಅಚ್ಚಾ ಹಾಡನ್ನು ರಾಷ್ಟ್ರಗೀತೆಗಳೆಂದು ಗುರುತಿಸಲಾಯಿತು. ಈ ನಿರ್ಣಯದ ಸಂದರ್ಭದಲ್ಲಿ ದೇಶದ ಅಗ್ರಗಣ್ಯ ನಾಯಕರು ಹಾಜರಿದ್ದು, ಯಾವುದೇ ವಿರೋಧ ವ್ಯಕ್ತವಾಗಿರಲಿಲ್ಲ. ಹಾಗಿದ್ದರೆ, ಇಂದಿನ ವಿವಾದದ ಅಗತ್ಯವೇನು ಎಂಬ ಪ್ರಶ್ನೆ ಸಹಜವಾಗಿ ಉದ್ಭವಿಸುತ್ತದೆ ಎಂದು ಬಿ.ಕೆ.ಹರಿಪ್ರಸಾದ್ ಹೇಳಿದ್ದಾರೆ. ವಂದೇ ಮಾತರಂ ಕುರಿತು ಇತಿಹಾಸ ಸಂಪೂರ್ಣವಾಗಿ ಸ್ಪಷ್ಟವಾಗಿದೆ. 1875ರಲ್ಲಿ ಬಂಕಿಂಚಂದ್ರ ಚಟ್ಟೋಪಾಧ್ಯಾಯರು ರಚಿಸಿದ ಮೂಲ ಗೀತೆಯಲ್ಲಿ ಕೇವಲ ಎರಡು ಅಂತಸ್ತುಗಳಿದ್ದವು. 1882ರಲ್ಲಿ ಅವರು ಬರೆದ ಆನಂದ ಮಠ ಕಾದಂಬರಿಯಲ್ಲಿ, ನಿರ್ದಿಷ್ಟ ಐತಿಹಾಸಿಕ-ಸಾಹಿತ್ಯಿಕ ಸನ್ನಿವೇಶಕ್ಕೆ ತಕ್ಕಂತೆ ನಾಲ್ಕು ಹೆಚ್ಚುವರಿ ಅಂತಸ್ತುಗಳನ್ನು ಸೇರಿಸಲಾಯಿತು. ಆದರೆ ಸಾರ್ವಜನಿಕ ಜೀವನದಲ್ಲಿ, ರಾಜಕೀಯ ಮತ್ತು ರಾಷ್ಟ್ರೀಯ ಕಾರ್ಯಕ್ರಮಗಳಲ್ಲಿ, ಸದಾ ಎರಡು ಅಂತಸ್ತುಗಳನ್ನೇ ಬಳಸಿಕೊಂಡು ಬರಲಾಗಿದೆ. 1896ರಲ್ಲಿ ಎಐಸಿಸಿ ಅಧಿವೇಶನದಲ್ಲಿ ರವೀಂದ್ರನಾಥ ಟಾಗೋರ್ ಅವರು ಹಾಡಿದರೂ, ಅದೇ ಎರಡು ಅಂತಸ್ತುಗಳ ರೂಪವೇ ಆಗಿತ್ತು. ಕಳೆದ 130 ವರ್ಷಗಳಿಂದ ಈ ಪದ್ಧತಿ ಅಚಲವಾಗಿ ಮುಂದುವರಿದಿದೆ. 1937ರ ಕೊಲ್ಕತ್ತಾ ಎಐಸಿಸಿ ಅಧಿವೇಶನದಲ್ಲಿಯೂ ಈ ವಿಷಯ ಚರ್ಚೆಗೆ ಬಂದಾಗ, ವಂದೇ ಮಾತರಂ ಎರಡು ಅಂತಸ್ತುಗಳಿಗೆ ಸೀಮಿತ ಎಂಬ ನಿರ್ಣಯವನ್ನು ಅಧಿಕೃತವಾಗಿ ಅಂಗೀಕರಿಸಲಾಯಿತು. ಅಂದಿನ ನಾಯಕರ ಸ್ಪಷ್ಟ ನಿಲುವು ಈ ವಿಚಾರದಲ್ಲಿ ಯಾವುದೇ ಗೊಂದಲಕ್ಕೆ ಅವಕಾಶವಿಲ್ಲ ಎಂಬುದನ್ನು ತೋರಿಸುತ್ತದೆ. ವಂದೇ ಮಾತರಂ ಮತ್ತು ಜನ ಗಣ ಮನ—ಎರಡೂ ಬಂಗಾಳಿ ಭಾಷೆಯ ಶ್ರೇಷ್ಠ ಕವಿಗಳ ಸೃಷ್ಟಿಗಳು. ಒಂದನ್ನು ಮತ್ತೊಂದರ ವಿರುದ್ಧ ನಿಲ್ಲಿಸಿ ಕೃತಕ ವಿವಾದ ನಿರ್ಮಿಸುವ ಪ್ರಯತ್ನಗಳು ರಾಷ್ಟ್ರದ ಸಾಂಸ್ಕೃತಿಕ ಪರಂಪರೆಗೆ ಅವಮಾನವೇ ಸರಿ ಎಂದು ಹರಿಪ್ರಸಾದ್ ಪ್ರತಿಪಾದಿಸಿದ್ದಾರೆ. ರವೀಂದ್ರನಾಥ ಟಾಗೋರ್ ರಚಿಸಿದ ಜನ ಗಣ ಮನ ಕೇವಲ ಒಂದು ಗೀತೆ ಅಲ್ಲ; ಅದು ಭಾರತದ ಭೌಗೋಳಿಕ ವೈವಿಧ್ಯ, ಸಾಂಸ್ಕೃತಿಕ ಸಮೃದ್ಧಿ ಮತ್ತು ಆಧ್ಯಾತ್ಮಿಕ ಏಕತೆಯನ್ನು ಪ್ರತಿಬಿಂಬಿಸುವ ರಾಷ್ಟ್ರಚೇತನೆಯ ಘೋಷಣೆ. ಅದನ್ನು ದುರ್ಬಲಗೊಳಿಸುವ ಯಾವುದೇ ಪ್ರಯತ್ನಗಳು, ದೇಶದ ಏಕತೆಗೆ ಧಕ್ಕೆಯುಂಟು ಮಾಡುವ ಅಪಾಯವನ್ನು ಹೊತ್ತುಕೊಂಡಿವೆ. ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಈ ವಿವಾದವನ್ನು ಉದ್ದೇಶಪೂರ್ವಕವಾಗಿ ಉತ್ಕರ್ಷಗೊಳಿಸಲಾಗುತ್ತಿದೆಯೇ ಎಂಬ ಅನುಮಾನವನ್ನು ತಳ್ಳಿಹಾಕಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ. ರಾಷ್ಟ್ರಗೀತೆಯ ಬದಲಾವಣೆ ಅಥವಾ ಅದರ ಸ್ಥಾನಮಾನ ಕುಗ್ಗಿಸುವ ಪ್ರಯತ್ನಗಳು ಕೇವಲ ರಾಜಕೀಯ ತಂತ್ರವಾಗದೇ, ದೀರ್ಘಕಾಲೀನ ಸಂವಿಧಾನಾತ್ಮಕ ಪರಿಣಾಮಗಳನ್ನು ಉಂಟುಮಾಡುವ ಸಾಧ್ಯತೆ ಹೊಂದಿವೆ. ರಾಷ್ಟ್ರಗೀತೆ ಕುರಿತಾಗಿ ಈಗ ನಡೆಯುತ್ತಿರುವ ಈ ಚರ್ಚೆ, ಕೇವಲ ಸಂಗೀತ ಅಥವಾ ಪದಗಳ ಪ್ರಶ್ನೆಯಲ್ಲ; ಅದು ಭಾರತೀಯ ಗಣರಾಜ್ಯದ ಆತ್ಮ ಮತ್ತು ಮೌಲ್ಯಗಳ ಕುರಿತ ಗಂಭೀರ ಪ್ರಶ್ನೆಯಾಗಿದೆ ಎಂದು ಬಿ.ಕೆ.ಹರಿಪ್ರಸಾದ್ ಹೇಳಿಕೆಯಲ್ಲಿ ಆತಂಕ ವ್ಯಕ್ತಪಡಿಸಿದ್ದಾರೆ.

ವಾರ್ತಾ ಭಾರತಿ 16 Feb 2026 10:19 am

ಬಂತು ’ಡಿಜಿಟಲ್ ಆಹಾರ ಕರೆನ್ಸಿ’ : ರೇಷನ್ ಕಾರ್ಡ್ ವ್ಯವಸ್ಥೆಯಲ್ಲಿ ಹೊಸ ದಾಖಲೆ ಬರೆದ ಸರ್ಕಾರ

Ration Card Revolutionary : ಸೆಂಟ್ರಲ್ ಬ್ಯಾಂಕ್ ಡಿಜಿಟಲ್ ಕರೆನ್ಸಿ ಆಧಾರಿತವಾಗಿ ಡಿಜಿಟಲ್ ಆಹಾರ ಕೂಪನ್ ವ್ಯವಸ್ಥೆಯಲ್ಲಿ ಹೊಸ ಹೆಜ್ಜೆಯನ್ನು ಕೇಂದ್ರ ಸರ್ಕಾರ ಇಟ್ಟಿದೆ. ಈ ಬಗ್ಗೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಮಾಹಿತಿಯನ್ನು ನೀಡಿದ್ದಾರೆ. ಗುಜರಾತ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಆರ್‌ಬಿಐ ಕಾರ್ಯನಿರ್ವಾಹಕ ನಿರ್ದೇಶಕಿ ಪಿ.ವಾಸುದೇವನ್, ಗಾಂಧಿನಗರದ ಮೇಯರ್ ಮೀರಬೆನ್ ಪಟೇಲ್ ಸೇರಿ ಹಲವರು ಉಪಸ್ಥಿತರಿದ್ದರು.

ವಿಜಯ ಕರ್ನಾಟಕ 16 Feb 2026 10:12 am

ಶಾಹೀನ್‌ ಶಾ ಅಫ್ರಿದಿ ಭಾರತದ 12th ಮ್ಯಾನ್‌; ಪೂರ್ತಿ 4 ಓವರ್‌ ಹಾಕಲಾಗದ ಪಾಕಿಸ್ತಾನದ ಬೌಲರ್‌ ಸಿಕ್ಕಾಪಟ್ಟೆ ಟ್ರೋಲ್‌!

ಅಬ್ಬಬ್ಬಾ! ಟಿ-20 ವಿಶ್ವಕಪ್‌ 2026ರ ಪಂದ್ಯಾವಳಿಯಲ್ಲಿ ಭಾರತ ವಿರುದ್ಧದ ಪಂದ್ಯದಲ್ಲಿ ಹೀನಾಯ ಸೋಲು ಕಂಡಿರುವ ಪಾಕಿಸ್ತಾನ, ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಟ್ರೋಲ್‌ಗೆ ಒಳಗಾಗುತ್ತಿದೆ. ಅದರಲ್ಲೂ ಪಾಕ್‌ ಸ್ಟಾರ್‌ ಬೌಲರ್‌ ಶಾಹೀನ್‌ ಶಾ ಅಫ್ರಿದಿ ಅವರನ್ನು ನೆಟ್ಟಿಗರು ಬಿಡುತ್ತಲೇ ಇಲ್ಲ. ತಮ್ಮ ನಿಗದಿತ ನಾಲ್ಕು ಓವರ್‌ಗಳನ್ನೂ ಕಂಪ್ಲೀಟ್‌ ಮಾಡದ ಶಾಹೀನ್‌ ಶಾ ಅಫ್ರಿದಿ ನಗೆಪಾಟಲಿಗೆ ಗುರಿಯಾಗಿದ್ದು, ಭಾರತೀಯ ಮಕ್ಕಳು ಕೂಡ ಪಾಕ್‌ ಬೌಲರ್‌ನ ಕಾಲೆಳೆದಿದ್ದಾರೆ. ಈ ಕುರಿತು ಇಲ್ಲಿದೆ ಹೆಚ್ಚಿನ ಮಾಹಿತಿ.

ವಿಜಯ ಕರ್ನಾಟಕ 16 Feb 2026 10:07 am

ವಿಶ್ವದ ಗಮನ ಸೆಳೆಯುತ್ತಿದೆ ಕಾಸರಗೋಡಿನ ಕೈಮಗ್ಗದ ಸ್ಯಾರೀಸ್:‌ ಕರಾವಳಿ ಸಂಸ್ಕೃತಿ ಬಿಂಬಿಸುವ ಜಿಐ ಮಾನ್ಯತೆಯ ಸೀರೆಗಳಿಗಿದೆ ಭಾರಿ ಡಿಮ್ಯಾಂಡ್‌

ಕಾಸರಗೋಡಿನಲ್ಲಿ ಕೈಮಗ್ಗದಿಂದ ತಯಾರಿಸಲಾಗುತ್ತಿರುವ ಸಂಪ್ರದಾಯಿಕ ಸೀರೆಗಳು ಸದ್ಯ ವಿಶ್ವದಾದ್ಯಂತ ಹಲವರ ಗಮನ ಸೆಳೆಯುವ ಮೂಲಕ ರಾಜ್ಯ ದೇಶಗಳ ಗಡಿಯನ್ನು ಮೀರಿ ಕರಾವಳಿ ಶೈಲಿಯ ಸಂಪ್ರದಾಯಿಕ ಉಡುಗೆಯನ್ನು ಪ್ರಸಿದ್ದಿಗೊಳಿಸುತ್ತಿದೆ. ಸರಳವಾಗಿ ಕಾಣುವ ಈ ಸೀರೆಗಳು ಕರಾವಳಿಯ ಶೈಲಿಯನ್ನು ಹೊದ್ದುಕೊಂಡಂತಿದ್ದು, ಇದರ ಅತ್ಯತ್ತಮ ಗುಣಮಟ್ಟ ಹಾಗೂ ಇದರ ಕರಕುಶಲತೆಯಿಂದಾಗಿ ಜಿಐ ಮಾನ್ಯತೆಯನ್ನು ಸಹ ಪಡೆದಿದ್ದು, ಕರಾವಳಿಯ ಸಂಸ್ಕೃತಿಯನ್ನು ಗಡಿ ಮೀರಿ ಜಗತ್ತಿನೆಲ್ಲೆಡೆ ಪಸರಿಸುವಂತೆ ಮಾಡುತ್ತಿದೆ ಎಂದರೆ ತಪ್ಪಾಗದು.

ವಿಜಯ ಕರ್ನಾಟಕ 16 Feb 2026 10:06 am

ಭಾರತದ ವಿರುದ್ಧದ ಟಿ20 ಪಂದ್ಯದ 18 ಓವರ್ ಗಳನ್ನು ಸ್ಪಿನ್ ಬೌಲಿಂಗ್ ಮಾಡಿದ ಪಾಕಿಸ್ತಾನ

ಗರಿಷ್ಠ ಸ್ಪಿನ್ ಓವರ್ ದಾಖಲೆಯನ್ನು ಸರಿಗಟ್ಟಿದ ಪಾಕಿಸ್ತಾನ

ವಾರ್ತಾ ಭಾರತಿ 16 Feb 2026 10:00 am

Gold Rate Fall : ವಾರದ ಆರಂಭದಲ್ಲಿ 1310 ರೂ. ಕುಸಿದ ಚಿನ್ನದ ಬೆಲೆ- ಬೆಳ್ಳಿ ಬೆಲೆಯೂ ಭಾರಿ ಇಳಿಕೆ

ಚಿನ್ನದ ಬೆಲೆಯ ಏರಿಳಿತ ಮುಂದುವರಿದಿದೆ. ವಾರದ ಆರಂಭದಲ್ಲಿ ಭಾರಿ ಇಳಿಕೆಯಾಗಿದ್ದು, ಇದು ಚಿನ್ನಾಭರಣ ಪ್ರಿಯರಿಗೆ ಸಿಹಿಸುದ್ದಿಯಾಗಿದೆ.

ವಿಜಯ ಕರ್ನಾಟಕ 16 Feb 2026 9:52 am

IND Vs PAK : ಪಾಕಿಸ್ತಾನಕ್ಕೆ ಭಾರಿ ಮುಖಭಂಗ - ಸೋಲುವ ಮುನ್ನವೇ ಮೊಹ್ಸಿನ್ ನಖ್ವಿ ಎಸ್ಕೇಪ್

India Vs Pakistan : ಟಿ20 ವಿಶ್ವಕಪ್ ಪಂದ್ಯದ ಬಹು ನಿರೀಕ್ಷಿತ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯದಲ್ಲಿ ಟೀಂ ಇಂಡಿಯಾ ನಿರಾಯಾಸವಾಗಿ ಗೆಲುವನ್ನು ಸಾಧಿಸಿದೆ. ಇಶಾನ್ ಕಿಶನ್ ಅಬ್ಬರದ ಬ್ಯಾಟಿಂಗ್, ಬೌಲರ್’ಗಳ ಶಿಸ್ತುಬದ್ದ ಪ್ರದರ್ಶನದ ನಡುವೆ, ಪಾಕ್ ಸುಲಭವಾಗಿ ಮ್ಯಾಚ್ ಕೈಚೆಲ್ಲಿದೆ. ಪಂದ್ಯ ಸೋಲು ಖಚಿತವಾಗುತ್ತಿದ್ದಂತೆಯೇ, ಪಿಸಿಬಿ ಮುಖ್ಯಸ್ಥ ಮೊಹ್ಸಿನ್ ನಖ್ವಿ, ಮೈದಾನದಿಂದ ಕಾಲ್ಕಿತ್ತಿದ್ದಾರೆ.

ವಿಜಯ ಕರ್ನಾಟಕ 16 Feb 2026 9:37 am

T20 2026: ಭಾರತದ ವಿಜಯಕ್ಕೆ ಪಾಕಿಸ್ತಾನದಲ್ಲೂ ಸಂಭ್ರಮಾಚರಣೆ, ವಿಡಿಯೋ ವೈರಲ್ Viral Video

ಶ್ರೀಲಂಕಾದ ಕೊಲಂಬೊದಲ್ಲಿ ನಡೆದ 2026ರ ಟಿ20 ವಿಶ್ವಕಪ್ ಪಂದ್ಯದಲ್ಲಿ ಭಾರತ, ಪಾಕಿಸ್ತಾನದ ವಿರುದ್ಧ ಭರ್ಜರಿ ಗೆಲುವು ದಾಖಲಿಸಿದೆ. ಪಾಕಿಸ್ತಾನವನ್ನು 61 ರನ್‌ಗಳಿಂದ ಸೋಲಿಸಿ ತನ್ನ ದಾಖಲೆಯನ್ನು ಮುಂದುವರಿಸಿದೆ. ಭಾರತ ಹಾಗೂ ಪಾಕಿಸ್ತಾನದ ಕ್ರಿಕೆಟ್ ಪಂದ್ಯದ ಬಗ್ಗೆ ಇದೀಗ ಸಾಕಷ್ಟು ಚರ್ಚೆಗಳು ನಡೆದಿವೆ. ಆನ್‌ಲೈನ್ ಟ್ರೋಲ್ ಹಾಗೂ ಮೀಮ್ಸ್‌ಗಳು ಶುರುವಾಗಿವೆ. ವೀರೇಂದ್ರ ಸೆಹ್ವಾಗ್ ಹಾಗೂ ದೇವೇಂದ್ರ ಫಡ್ನವಿಸ್ ಸೇರಿದಂತೆ

ಒನ್ ಇ೦ಡಿಯ 16 Feb 2026 9:32 am

ಅಂತರ್‌ರಾಜ್ಯ ಗಡಿ ಗ್ರಾಮ ನೆಲ್ಲೂರಿನ 40 ದಲಿತ ಕುಟುಂಬಗಳಿಗಿಲ್ಲ ಸೂರು

ಚಾಮರಾಜನಗರ : ಕರ್ನಾಟಕ, ತಮಿಳುನಾಡು ಗಡಿ ಗ್ರಾಮವಾಗಿರುವ ಚಾಮರಾಜನಗರ ಜಿಲ್ಲೆಯ ಹನೂರು ವಿಧಾನ ಸಭಾ ಕ್ಷೇತ್ರದ ನೆಲ್ಲೂರು ಗ್ರಾಮದ ಪಾಲಾರ್ ಹಳ್ಳದ ಬಳಿ ವಾಸಿಸುವ 40 ದಲಿತ (ಆದಿ ಜಾಂಬವರು) ಕುಟುಂಬಗಳಿಗೆ ವಾಸಿಸಲು ಮನೆಯಿಲ್ಲದ ಪರಿಣಾಮ ಸೂರಿಲ್ಲದವರು ಗ್ರಾಮ ತೊರೆಯುವ ಸ್ಥಿತಿ ನಿರ್ಮಾಣವಾಗಿದೆ. ಹನೂರು ವಿಧಾನ ಸಭಾ ಕ್ಷೇತ್ರದ ಹೂಗ್ಯಂ ಗ್ರಾಮ ಪಂಚಾಯತ್ ವ್ಯಾಪ್ತಿಯ ನೆಲ್ಲೂರು ಗ್ರಾಮದಲ್ಲಿ 80ಕ್ಕೂ ಹೆಚ್ಚು ಬಡ ದಲಿತ ಕುಟುಂಬಗಳು ನೆರೆಯ ತಮಿಳುನಾಡಿಗೆ ಹೊಂದಿಕೊಂಡಂತಿರುವ ಪಾಲಾರ್ ನದಿ ಹಳ್ಳದ ಬಳಿ ಹಲವು ವರ್ಷಗಳಿಂದಲೂ ಕೂಲಿಯನ್ನೇ ನಂಬಿಕೊಂಡು ಜೀವನ ನಡೆಸುತ್ತಿದ್ದಾರೆ. 20ವರ್ಷಗಳ ಹಿಂದೆ ನೆಲ್ಲೂರು ಗಾಮದಲ್ಲಿ ಕೂಲಿ ಕಾರ್ಮಿಕರಾಗಿರುವ ಆದಿಜಾಂಬವ ಸಮುದಾಯದವರಿಗೆ ಮನೆಯನ್ನು ನಿರ್ಮಿಸಿ ಕೊಡಲಾಗಿದೆ. ಆದರೆ ಎರಡು ದಶಕಗಳ ಹಿಂದೆ ಕೊಟ್ಟಿದ್ದ ಬಹುತೇಕ ಮನೆಗಳು ಶಿಥಿಲ ಹಂತವನ್ನು ತಲುಪಿದ್ದರೆ, ಇನ್ನು ಕೆಲವು ಮನೆಗಳಲ್ಲಿ 2-3 ಕುಟುಂಬಗಳು ವಿಧಿಯಿಲ್ಲದೇ ವಾಸಿಸಬೇಕಾದ ಸ್ಥಿತಿಯಿದೆ. ಮನೆ ನಿರ್ಮಿಸಿ ಕೊಡುವಂತೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಲ್ಲಿ ಕಳೆದ 5 ವರ್ಷಗಳಿಂದಲೂ ಮನವಿ ಮಾಡಿದರೂ ಯಾವುದೇ ಪ್ರಯೋಜನವಿಲ್ಲವಾಗಿದೆ. ಇದರಿಂದ ಇಲ್ಲಿನ ಜನರು ವಾಸಿಸಲು ಸೂರಿಲ್ಲದೇ ಸಮಸ್ಯೆಯ ನಡುವೆ ಜೀವನ ಸಾಗಿಸುತ್ತಿರುವುದು ವಿಪರ್ಯಾಸವಾಗಿದೆ. ಮನೆಯಿಲ್ಲದೇ ತಮಿಳುನಾಡಿಗೆ ವಲಸೆ : ನೆಲ್ಲೂರು ಗ್ರಾಮದಲ್ಲಿ ವಾಸ ಮಾಡುವ ಆದಿ ಜಾಂಬವ ಸಮುದಾಯದವರು ಹಿಂದೆ ನಿರ್ಮಿಸಿದ್ದ ಮನೆಯಲ್ಲೇ ವಾಸಿಸುತ್ತಿದ್ದರು. ಯಾವುದೇ ಸಮಸ್ಯೆ ಇರಲಿಲ್ಲ. ವರ್ಷಗಳು ಕಳೆದಂತೆ ಕುಟುಂಬದಲ್ಲಿ ಜನಸಂಖ್ಯೆ ಹೆಚ್ಚಾದಂತೆ ಮನೆಯ ಸಮಸ್ಯೆ ಬಂತು. ಅದೇ ಮನೆಯಲ್ಲಿ ಇಕ್ಕಟ್ಟಿನ ಪರಿಸ್ಥಿತಿಯಲ್ಲಿ ವಾಸಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಕೆಲವರು ಮನೆ ಮುಂಭಾಗದಲ್ಲಿ ಶೆಡ್ ನಿರ್ಮಿಸಿಕೊಂಡು ಮಳೆ, ಚಳಿ ಗಾಳಿ ಎನ್ನದೇ ವಾಸಿಸಬೇಕಿದೆ. ಇದರಿಂದ ಸುಮಾರು 40 ಕುಟುಂಬಗಳಿಗೆ ಮನೆ ಅಗತ್ಯವಾಗಿದೆ. ಆದರೆ ನಿವೇಶನವಿಲ್ಲ. ಗ್ರಾಮದಲ್ಲಿ ಬಾಡಿಗೆಗೆ ದೊರೆಯುವ ಮನೆಗಳು ಸಹ ಇಲ್ಲ. ಹಾಗಾಗಿ ಇಲ್ಲಿನ ಜನರಿಗೆ ಮನೆಯದ್ದೇ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಇದರಿಂದ ಕೆಲವು ಕುಟುಂಬಗಳು ಗ್ರಾಮ ತೊರೆದು ತಮಿಳುನಾಡಿಗೆ ವಲಸೆ ಹೋಗಿದ್ದು, ಕೂಲಿ ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ. ನೆಲ್ಲೂರಿನಲ್ಲಿರುವ ಆದಿ ಜಾಂಬವ ಸಮುದಾಯದಲ್ಲಿರುವವರು ಶಿಕ್ಷಣದಿಂದ ವಂಚಿತರಾಗಬಾರದು ಎನ್ನುವ ಉದ್ದೇಶದಿಂದ ತಮ್ಮ ಮಕ್ಕಳನ್ನು ಸಂಬಂಧಿಕರ ಮನೆಯಲ್ಲಿರಿಸಿ ಹೋಗಿದ್ದಾರೆ. ಇನ್ನು ಕೆಲವರು ತಮಿಳುನಾಡಿಗೆ ತೆರಳುವ ಸಿದ್ಧತೆಯಲ್ಲಿದ್ದಾರೆ. ಈ ಬಗ್ಗೆ ಸಂಬಂಧಪಟ್ಟವರು ಗಮನಹರಿಸದಿರುವುದು ನಿವಾಸಿಗಳಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ. ಹಳ್ಳ ತುಂಬಿದರೆ ಸಂಬಂಧಿಕರ ಮನೆಗೆ ಹೋಗಬೇಕು : ನೆಲ್ಲೂರು ಗ್ರಾಮದ ನಿವಾಸಿಗಳು ವಾಸಿಸುತ್ತಿರುವ ಸಮೀಪದಲ್ಲೇ ಪಾಲಾರ್ ನದಿಯ ಹಳ್ಳವಿದ್ದು, ಬೇಸಿಗೆ ವೇಳೆ ಯಾವುದೇ ಸಮಸ್ಯೆ ಇಲ್ಲ. ಆದರೆ ಮಳೆಗಾಲದಲ್ಲಿ ಹೆಚ್ಚು ಮಳೆಯಾದ ಸಂದರ್ಭದಲ್ಲಿ ಹಳ್ಳವು ಮೈದುಂಬಿ ಹರಿಯುತ್ತದೆ. ಈ ವೇಳೆ ಬದಿಯಲ್ಲಿರುವ ಮನೆಗಳಿಗೆ ನೀರು ನುಗ್ಗುತ್ತದೆ. ಜೀವಭಯದಿಂದ ಇಲ್ಲಿನ ಜನರು ಕುಟುಂಬದೊಂದಿಗೆ ಮುಖ್ಯ ರಸ್ತೆ ಮೇಲ್ಭಾಗದಲ್ಲಿ ವಾಸಿಸುವ ಸಂಬಂಧಿಕರ ಮನೆಗಳಿಗೆ ಅಗತ್ಯ ವಸ್ತುಗಳನ್ನು ಹೊತ್ತು ಆಶ್ರಯಕ್ಕಾಗಿ ತೆರಳುವಂತಾಗಿದೆ ಎಂಬುದು ನಿವಾಸಿಗಳ ಅಳಲಾಗಿದೆ. ಮನೆಯಿಲ್ಲದೇ ಹಲವು ವರ್ಷಗಳಿಂದಲೂ ಸಂಕಷ್ಟ ಅನುಭವಿಸುತ್ತಿದ್ದೇವೆ. ಹಳ್ಳಕ್ಕೆ ತಡೆಗೋಡೆ ನಿರ್ಮಿಸುವಂತೆ ಹಲವು ಬಾರಿ ಮನವಿ ಮಾಡಿದ್ದರೂ ಪ್ರಯೋಜನವಾಗಿಲ್ಲ. ಜನರಿಗೆ ಮನೆ ಸೌಕರ್ಯವನ್ನು ಒದಗಿಸುವುದು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಕರ್ತವ್ಯ. ಆದ್ದರಿಂದ ಸಂಬಂಧಪಟ್ಟವರು ಈ ಬಗ್ಗೆ ಗಮನಹರಿಸಿ ಸೂರಿನ ಸೌಕರ್ಯ ಕಲ್ಪಿಸಬೇಕು ಎಂದು ಸ್ಥಳೀಯ ನಿವಾಸಿಗಳಾದ ರತ್ನಮ್ಮ, ರೇವತಿ, ಸೆಲ್ಲಮ್ಮ, ಈಶ್ವರಿ, ಚಿನ್ನದಮ್ಮ, ಗಾಂಧಿ, ಚಂದ್ರಮ್ಮ, ಚಿನ್ನರಾಸು, ಪಾಂಡಿ ಇನ್ನಿತರರು ಮನವಿ ಮಾಡಿದ್ದಾರೆ. ಹನೂರು ವಿಧಾನಸಭಾ ಕ್ಷೇತ್ರದ ನೆಲ್ಲೂರು ಗ್ರಾಮದಲ್ಲಿ 20 ವರ್ಷಗಳ ಹಿಂದೆ ನಿರ್ಮಿಸಿರುವ ಮನೆಯನ್ನು ಬಿಟ್ಟರೆ ಇಲ್ಲಿನ ಕುಟುಂಬಗಳಿಗೆ ಯಾವುದೇ ಮನೆ ನೀಡಿಲ್ಲ. ಇದರಿಂದ ಒಂದೇ ಮನೆಯಲ್ಲೇ 2-3 ಕುಟುಂಬಗಳು ವಾಸಿಸುತ್ತಿವೆ. ಕೆಲವರು ಮನೆಯಿಲ್ಲದೆ ತಮಿಳುನಾಡಿಗೆ ತೆರಳಿದ್ದಾರೆ. ಈ ಬಗ್ಗೆ ಹಲವು ವರ್ಷಗಳಿಂದಲೂ ಜನಪ್ರತಿನಿಧಿಗಳಿಗೆ ಹಾಗೂ ಅಧಿಕಾರಿಗಳಿಗೆ ತಿಳಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. -ರೇವತಿ, ನಿವಾಸಿ, ನೆಲ್ಲೂರು ಗ್ರಾಮ ಹನೂರು ತಾಲೂಕಿನ ಹೂಗ್ಯಂ ಗ್ರಾಮ ಪಂಚಾಯತ್ ವ್ಯಾಪ್ತಿಯ ನೆಲ್ಲೂರು ಗ್ರಾಮಕ್ಕೆ ಮನೆ ಮಂಜೂರು ಸಂಬಂಧ ಈಗಾಗಲೇ ಪ್ರಧಾನಮಂತ್ರಿ ಅವಾಸ್ ಯೋಜನೆಯಡಿ ಫಲಾನುಭವಿಗಳ ಪಟ್ಟಿ ತಯಾರಿಸಿ ಸರಕಾರಕ್ಕೆ ಕಳುಹಿಸಿ ಕೊಡಲಾಗಿದೆ. ಮನೆಗಳು ಮಂಜೂರಾದ ಬಳಿಕ ಈ ಬಗ್ಗೆ ಅಗತ್ಯ ಕ್ರಮವಹಿಸಲಾಗುವುದು. -ಉಮೇಶ್, ತಾಪಂ ಇಒ, ಹನೂರು

ವಾರ್ತಾ ಭಾರತಿ 16 Feb 2026 9:14 am

ಪ್ರವಾಸಿಗರ ನೆಚ್ಚಿನ ತಾಣ ಚಿಕ್ಕಬಳ್ಳಾಪುರದ ನಂದಿ ಬೆಟ್ಟ

ವರ್ಷಪೂರ್ತಿ ತಂಪಾದ ಹವಾಮಾನ, ಆಕರ್ಷಿಸುವ ಹಸಿರು ಕಾಡು, ಕಲ್ಲುಬಂಡೆಗಳು

ವಾರ್ತಾ ಭಾರತಿ 16 Feb 2026 8:56 am

ಖಜಾನೆ ಇಲಾಖೆಯಲ್ಲಿ 104 ಹುದ್ದೆಗಳು ರದ್ದು?

► ಆರ್ಥಿಕ ಇಲಾಖೆಗೆ ಸಚಿವ ಸತೀಶ್ ಜಾರಕಿಹೊಳಿ ಪತ್ರ ►ಪದೋನ್ನತಿಯಲ್ಲಿ ಅವೈಜ್ಞಾನಿಕತೆ ಮತ್ತು ತಾರತಮ್ಯ: ಆರೋಪ

ವಾರ್ತಾ ಭಾರತಿ 16 Feb 2026 8:48 am

ಕ್ಯಾಲಿಫೋರ್ನಿಯಾದ ಅಂಜಾ ಸರೋವರದಲ್ಲಿ ಲೀನವಾದ ಸಾಕೇತ್‌ ಶ್ರೀನಿವಾಸಯ್ಯ ಒಂಟಿತನ; ಅಮೆರಿಕ ಕನಸಿಗೆ ತೆರಬೇಕಾದ ಬೆಲೆ?

ಅಮೆರಿಕ ಕನಸು ಹೊತ್ತು ಲಗೇಜ್‌ ಪ್ಯಾಕ್‌ ಮಾಡಿಕೊಳ್ಳುವ ಸಾವಿರಾರು ಭಾರತೀಯ ಯುವಕ/ಯುವತಿಯರಿಗೆ, ಕ್ಯಾಲಿಫೋರ್ನಿಯಾದಲ್ಲಿ ಕರ್ನಾಟಕದ 22 ವರ್ಷದ ಸಾಕೇತ್‌ ಶ್ರೀನಿವಾಸಯ್ಯ ಅವರ ನಿಗೂಢ ಸಾವು ಆಘಾತವನ್ನುಂಟು ಮಾಡಿದೆ. ಅಮೆರಿಕದಲ್ಲಿ ಉನ್ನತ ಶಿಕ್ಷಣ ಮತ್ತು ಉದ್ಯೋಗದ ಕನಸು ಹೊತ್ತು ಬರುವ ಭಾರತೀಯ ವಿದ್ಯಾರ್ಥಿಗಳು, ಅಸಲಿಗೆ ಇಲ್ಲಿ ಸರಳ ಜೀವನ ನಡೆಸುತ್ತಿದ್ದಾರಾ ಎಂಬ ಪ್ರಶ್ನೆ ಎದುರಾಗಿದೆ. ತಮ್ಮ ಮಕ್ಕಳ ಮಾನಸಿಕ ಸ್ಥಿತಿಗತಿ ಬಗ್ಗೆ ಪೋಷಕರಲ್ಲೂ ಚಿಂತೆಯ ಗೆರೆಗಳು ಮೂಡತೊಡಗಿವೆ. ಹಾಗಿದ್ದರೆ ಸಾಕೇತ್‌ ಶ್ರೀನಿವಾಸ್‌ ಜೊತೆ ಆಗಿದ್ದೇನು? ಇಲ್ಲಿದೆ ಮಾಹಿತಿ..

ವಿಜಯ ಕರ್ನಾಟಕ 16 Feb 2026 8:48 am

Gold: ಚಿನ್ನ ಎಂದಿಗೂ ನಿದ್ರಿಸುವುದಿಲ್ಲ: ಚಿನ್ನದ ಬೆಲೆ 1905ರಿಂದ 2026ರ ವರೆಗೆ ಎಷ್ಟಾಗಿದೆ, 120 ವರ್ಷದ ವಿವರ ಇಲ್ಲಿದೆ

Gold: ಚಿನ್ನದ ಮೇಲಿನ ಹೂಡಿಕೆಯನ್ನು ಅತ್ಯಂತ ಸುರಕ್ಷಿತ ಹೂಡಿಕೆಗಳಲ್ಲಿ ಒಂದು ಎಂದೇ ಪರಿಗಣಿಸಲಾಗುತ್ತದೆ. ಚಿನ್ನದ ಬೆಲೆಯು ಕಳೆದ 10 ವರ್ಷಗಳಲ್ಲಿ ಭಾರೀ ಹೆಚ್ಚಳವಾಗಿದೆ. ಇನ್ನು 1905ರಿಂದ 2026ರ ವರೆಗೆ ಚಿನ್ನದ ಬೆಲೆ ಎಷ್ಟು ಹೆಚ್ಚಳವಾಗಿದೆ. ಇಂದು ಚಿನ್ನದ ಬೆಲೆ ಎಷ್ಟಾಗಿದೆ ಎನ್ನುವ ಸಂಪೂರ್ಣ ವಿವರ ಇಲ್ಲಿದೆ. ಭಾರತದ ಮಟ್ಟಿಗೆ ಚಿನ್ನವು ಆಪ್ತಕಾಲದ ಗೆಳೆಯ ಎಂದೇ ಹೇಳಬಹುದು. ಸಂಕಷ್ಟದ

ಒನ್ ಇ೦ಡಿಯ 16 Feb 2026 8:41 am

ತೆಂಗು ಬೆಳೆಗಾರರಿಗೆ ಸವಾಲಾಗಿರುವ ಕೆಂಚಳಿಲು ಕಾಟ

ಸದ್ದಿಲ್ಲದೆ ಕಲ್ಪವೃಕ್ಷಕ್ಕೆ ಲಗ್ಗೆ ಇಡುವ ಭಕ್ಷಕ

ವಾರ್ತಾ ಭಾರತಿ 16 Feb 2026 8:40 am

ಇಬ್ಬರು ಹಿಂದೂಗಳು ಸೇರಿ ನಾಲ್ವರು ಅಲ್ಪಸಂಖ್ಯಾತರು ಬಾಂಗ್ಲಾ ಸಂಸತ್ತಿಗೆ ಆಯ್ಕೆ

ಢಾಕಾ: ಬಾಂಗ್ಲಾದೇಶ ಸಂಸತ್ತಿನ 299 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಇಬ್ಬರು ಹಿಂದೂಗಳು ಸೇರಿದಂತೆ ಅಲ್ಪಸಂಖ್ಯಾತ ಸಮುದಾಯಗಳಿಗೆ ಸೇರಿದ ನಾಲ್ವರು ಆಯ್ಕೆಯಾಗಿದ್ದಾರೆ. ಇವರೆಲ್ಲರೂ ಮಂಗಳವಾರ ಸರ್ಕಾರ ರಚನೆ ಮಾಡಲಿರುವ ಬಾಂಗ್ಲಾದೇಶ ನ್ಯಾಷನಲಿಸ್ಟ್ ಪಾರ್ಟಿ (ಬಿಎನ್‍ಪಿ)ಗೆ ಸೇರಿದವರು. ಗೋಯೇಶ್ವರ ಚಂದ್ರ ರಾಯ್ ಮತ್ತು ನಿತ್ಯ ರಾಯ್ ಚೌಧರಿ ಹಿಂದೂ ಅಭ್ಯರ್ಥಿಗಳಾಗಿ ಬಿಎನ್‍ಪಿ ಟಿಕೆಟ್‍ನಲ್ಲಿ ಗೆಲುವು ಸಾಧಿಸಿದ್ದಾರೆ. ಢಾಕಾ ಮತ್ತು ಪಶ್ಚಿಮ ಮಗೂರಾ ಕ್ಷೇತ್ರಗಳಿಂದ ಇವರು ಜಮಾತ್ ಇ ಇಸ್ಲಾಮಿ ಅಭ್ಯರ್ಥಿಗಳನ್ನು ಸೋಲಿಸಿ ಸಂಸತ್ತಿಗೆ ಆಯ್ಕೆಯಾಗಿದ್ದಾರೆ. ರಾಯ್ ಅವರು ಬಿಎನ್‍ಪಿಯ ಅತ್ಯುನ್ನತ ನೀತಿ ನಿರ್ಧಾರ ವಿಭಾಗವಾಗಿರುವ ಸ್ಥಾಯಿ ಸಮಿತಿ ಸದಸ್ಯರಾಗಿದ್ದರೆ, ಚೌಧರಿಯವರು ಪಕ್ಷದ ಉಪಾಧ್ಯಕ್ಷ ಹಾಗೂ ಹಿರಿಯ ಸಲಹೆಗಾರ ಮತ್ತು ತಂತ್ರಗಾರ. ಮೂರನೇ ಅಲ್ಪಸಂಖ್ಯಾತ ಅಭ್ಯರ್ಥಿಯಾಗಿ ಸಂಸತ್ತಿಗೆ ಆಯ್ಕೆಯಾಗಿರುವ ಹಿರಿಯ ಬಿಎನ್‍ಪಿ ಮುಖಂಡ ಸಚಿಂಗ್ ಪ್ರೂ ಬೌದ್ಧ ಸಮುದಾಯಕ್ಕೆ ಸೇರಿದ್ದಾರೆ. ಮರ್ಮಾ ಬುಡಕಟ್ಟು ಸಮುದಾಯಕ್ಕೆ ಸೇರಿರುವ ದಕ್ಷಿಣದ ಬಂದ್ರಬನ್ ಕ್ಷೇತ್ರದಿಂದ ಆಯ್ಕೆಯಾಗಿದ್ದಾರೆ. ನಾಲ್ಕನೇ ಅಲ್ಪಸಂಖ್ಯಾತ ಅಭ್ಯರ್ಥಿ ದೀಪೇನ್ ದೇವನ್, ಬೌದ್ಧ ಪ್ರಾಬಲ್ಯದ ಚಕ್ಮಾ ಬುಡಕಟ್ಟು ಸಮುದಾಯಕ್ಕೆ ಸೇರಿದವರು. ದಕ್ಷಿಣ ರಂಗಾಮತಿ ಬೆಟ್ಟ ಜಿಲ್ಲೆಯಿಂದ ಇವರು ಆಯ್ಕೆಯಾಗಿದ್ದಾರೆ. ಆದರೆ ಅವರ ಜಾತಿಯ ಬಗ್ಗೆ ಅಸ್ಪಷ್ಟತೆ ಇದ್ದು, ಅವರನ್ನು ಹಿಂದೂ ಎಂದು ಹಲವರು ಬಣ್ಣಿಸಿದ್ದಾರೆ. ಬಾಂಗ್ಲಾದೇಶದ 17 ಕೋಟಿ ಮತದಾರರ ಪೈಕಿ ಶೇಕಡ 8ರಷ್ಟು ಹಿಂದೂಗಳಿದ್ದಾರೆ.

ವಾರ್ತಾ ಭಾರತಿ 16 Feb 2026 8:20 am

ಇಟ್ಟಿಗೆಯ ಲಾಭದ ಹಿಂದೆ ಅಡಗಿದೆ ನೂರಾರು ಜನರ ಅನಾರೋಗ್ಯದ ಕಥೆ!

ಕರ್ನಾಟಕದ ಉತ್ತರ ತುದಿಯಲ್ಲಿರುವ ರಾಯಚೂರು ಜಿಲ್ಲೆಯ ಶಕ್ತಿನಗರದ ಹೆಸರು ಕೇಳದ ಕನ್ನಡಿಗರಿಲ್ಲ. ರಾಜ್ಯದ ಮನೆಮನೆಗೆ ಬೆಳಕು ನೀಡುವ ಈ ಕೇಂದ್ರವು ಕೇವಲ ಒಂದು ಕಾರ್ಖಾನೆಯಲ್ಲ, ಅದು ಲಕ್ಷಾಂತರ ಜನರ ಬದುಕಿಗೆ ಆಸರೆಯಾಗಿರುವ ಒಂದು ಬೃಹತ್ ಇಂಧನ ಲೋಕ. ಕೃಷ್ಣಾ ನದಿಯ ತಟದಲ್ಲಿ ತಲೆಯೆತ್ತಿ ನಿಂತಿರುವ ಈ ವಿದ್ಯುತ್ ಸ್ಥಾವರವು ಕಳೆದ ನಾಲ್ಕು ದಶಕಗಳಿಂದ ಕರ್ನಾಟಕದ ಕತ್ತಲೆಯನ್ನು ಓಡಿಸುತ್ತಿದೆ. ಶಕ್ತಿನಗರದ ಈ ಘಟಕವು ಕರ್ನಾಟಕದ ಮೊದಲ ಶಾಖೋತ್ಪನ್ನ ವಿದ್ಯುತ್ ಕೇಂದ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದು, ಇದರ ವಿಶೇಷತೆಗಳು ಹಲವಾರು. ಬೃಹತ್ ಉತ್ಪಾದನಾ ಸಾಮರ್ಥ್ಯ : ಇಲ್ಲಿ ಒಟ್ಟು 8 ಘಟಕಗಳಿದ್ದು, ಸುಮಾರು 1720 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಒಂದು ಕಾಲದಲ್ಲಿ ಕರ್ನಾಟಕದ ಒಟ್ಟು ವಿದ್ಯುತ್ ಬೇಡಿಕೆಯ ಅರ್ಧಕ್ಕಿಂತ ಹೆಚ್ಚು ಪಾಲನ್ನು ಇದೊಂದೇ ಕೇಂದ್ರ ಪೂರೈಸುತ್ತಿತ್ತು. ಕೃಷ್ಣಾ ನದಿಯ ಆಸರೆ: ವಿದ್ಯುತ್ ಉತ್ಪಾದನೆಗೆ ಅಗತ್ಯವಿರುವ ನೀರನ್ನು ಕೃಷ್ಣಾ ನದಿಯಿಂದ ಪಡೆಯಲಾಗುತ್ತದೆ. ನದಿಯ ಪಕ್ಕದಲ್ಲೇ ಇರುವುದರಿಂದ ನೀರು ಸರಬರಾಜು ಸುಲಭವಾಗಿದೆ. ಕಲ್ಲಿದ್ದಲು ಆಧಾರಿತ ತಂತ್ರಜ್ಞಾನ: ಇಲ್ಲಿ ಕಲ್ಲಿದ್ದಲನ್ನು ಸುಟ್ಟು ಅದರಿಂದ ಬರುವ ಹಬೆಯ ಮೂಲಕ ಟರ್ಬೈನ್ ತಿರುಗಿಸಿ ವಿದ್ಯುತ್ ತಯಾರಿಸುತ್ತದೆ. ಇಲ್ಲಿಗೆ ದಿನನಿತ್ಯ ಸಾವಿರಾರು ಟನ್ ಕಲ್ಲಿದ್ದಲು ರೈಲುಗಳ ಮೂಲಕ ಬರುತ್ತದೆ. ಉದ್ಯೋಗಾವಕಾಶ: ಈ ಕೇಂದ್ರವು ಸಾವಿರಾರು ಕುಟುಂಬಗಳಿಗೆ ನೇರ ಮತ್ತು ಪರೋಕ್ಷ ಉದ್ಯೋಗ ನೀಡಿದೆ. ರಾಯಚೂರು ಜಿಲ್ಲೆಯ ಆರ್ಥಿಕತೆಗೆ ಇದು ದೊಡ್ಡ ಬೆನ್ನೆಲುಬಾಗಿದೆ. ಶಕ್ತಿನಗರದ ಒಳಗಿನ ಲೋಕ ಹೇಗಿದೆ? ನೀವು ಎಂದಾದರೂ ಶಕ್ತಿನಗರದ ಹತ್ತಿರ ಹೋದರೆ, ದೂರದಿಂದಲೇ ಆಕಾಶಕ್ಕೆ ಮುಖ ಮಾಡಿ ನಿಂತಿರುವ ಬೃಹತ್ ಚಿಮಣಿಗಳು ಕಾಣಿಸುತ್ತವೆ. ಅಲ್ಲಿನ ವಾತಾವರಣವೇ ವಿಭಿನ್ನ. ಅಲ್ಲಿ ಸದಾ ಕಾಲ ಕೇಳಿಸುವ ಯಂತ್ರಗಳ ಗುಂಯ್ ಎಂಬ ಶಬ್ದ, ಬೃಹತ್ ಕನ್ವೇಯರ್ ಬೆಲ್ಟ್‌ಗಳ ಮೇಲೆ ಚಲಿಸುವ ಕಲ್ಲಿದ್ದಲು ಮತ್ತು ಅಲ್ಲಿನ ಕಾರ್ಮಿಕರ ಅವಿರತ ಶ್ರಮ ನೋಡಿದರೆ ನಮಗೆ ನಾವು ಬಳಸುವ ಪ್ರತಿ ಯೂನಿಟ್ ವಿದ್ಯುತ್ತಿನ ಬೆಲೆ ತಿಳಿಯುತ್ತದೆ. ಆದರೆ, ಈ ಬೆಳಕಿನ ಹಿಂದೆ ಒಂದು ಕರಾಳ ಮುಖವೂ ಇದೆ. ಅಲ್ಲಿನ ಜನರ ಅನುಭವದ ಮಾತುಗಳನ್ನು ಕೇಳಿದರೆ ಅಭಿವೃದ್ಧಿಯ ಜೊತೆಗಿನ ಅನಿವಾರ್ಯ ನೋವುಗಳು ಅರ್ಥವಾಗುತ್ತವೆ. ಶಕ್ತಿನಗರ ಎಂದರೆ ಒಂದು ಕಾಲದಲ್ಲಿ ಸಮೃದ್ಧಿಯ ಸಂಕೇತವಾಗಿತ್ತು. ಆದರೆ ಇಂದು ಅದು ಬೂದಿಯ ಕವಚ ಹೊದ್ದಿರುವ ರೋಗಗ್ರಸ್ತ ನಗರವಾಗಿ ಮಾರ್ಪಟ್ಟಿದೆ. ಶಕ್ತಿನಗರ ಎದುರಿಸುತ್ತಿರುವ ಗಂಭೀರ ಸಮಸ್ಯೆಗಳು: ಯಾವುದೇ ಒಂದು ಬೃಹತ್ ಯೋಜನೆಯಿಂದ ಲಾಭವಿರುವಂತೆ, ಪರಿಸರದ ಮೇಲೆ ಅದರ ಪರಿಣಾಮಗಳು ಅಷ್ಟೇ ಗಾಢವಾಗಿರುತ್ತವೆ. ಶಕ್ತಿನಗರದ ಸುತ್ತಮುತ್ತಲ ಜನ ಇಂದು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ: ಬೂದಿಯ ಮಳೆ: ಆಕಾಶದಿಂದ ಸುರಿಯುವ ಮೃತ್ಯು ಇಲ್ಲಿನ ಜನರ ಅತಿದೊಡ್ಡ ಶತ್ರು ಎಂದರೆ ಕಲ್ಲಿದ್ದಲಿನ ಬೂದಿ (Fly Ash). ಕಲ್ಲಿದ್ದಲನ್ನು ಸುಟ್ಟು ವಿದ್ಯುತ್ ತೆಗೆದ ಮೇಲೆ ಉಳಿಯುವ ಈ ಬೂದಿಯನ್ನು ಸಂಗ್ರಹಿಸಲು ಬೃಹತ್ ಬೂದಿ ಕೊಳಗಳನ್ನು (Ash Ponds) ನಿರ್ಮಿಸಲಾಗಿದೆ. ಆದರೆ, ಗಾಳಿ ಬೀಸಿದಾಗ ಈ ಕೊಳಗಳಿಂದ ಏಳುವ ಬೂದಿಯ ಧೂಳು ಇಡೀ ಆಕಾಶವನ್ನೇ ಮುಚ್ಚಿ ಬಿಡುತ್ತದೆ. ಜನರ ಮನೆಗಳು, ಗಿಡಮರಗಳು, ಬಟ್ಟೆಬರೆಗಳ ಮೇಲೆಲ್ಲಾ ಬಿಳಿ ಬೂದಿಯ ಪದರ ಕಾಣಸಿಗುತ್ತದೆ. ಊಟ ಮಾಡಲು ಕುಳಿತರೆ ತಟ್ಟೆಯಲ್ಲಿ ಬೂದಿ, ಕುಡಿಯುವ ಲೋಟದ ನೀರಿನ ಮೇಲೆ ಬೂದಿಯ ತೇಲು ಪದರ. ನಾವು ತಿನ್ನುವ ಅನ್ನದ ಜೊತೆಗೂ ಇಲ್ಲಿನ ಜನ ಬೂದಿಯ ಕಣಗಳನ್ನು ನುಂಗುತ್ತಿದ್ದಾರೆ. ಇದರಿಂದ ಜನರಿಗೆ ಉಸಿರಾಟದ ತೊಂದರೆ, ಅಸ್ತಮಾ ಮತ್ತು ಚರ್ಮದ ಕಾಯಿಲೆಗಳು ಸಾಮಾನ್ಯ ಎಂಬಂತಾಗಿವೆ. ಇಲ್ಲಿನ ಕಾರ್ಮಿಕರು ಮತ್ತು ಸ್ಥಳೀಯರಲ್ಲಿ ಶ್ವಾಸಕೋಶದ ಕಾಯಿಲೆಗಳು ಹೆಚ್ಚಾಗಿ ಕಂಡುಬರುತ್ತಿವೆ. ಬೂದಿಯ ಸಣ್ಣ ಕಣಗಳು ಶ್ವಾಸಕೋಶಕ್ಕೆ ಸೇರಿ ದೀರ್ಘಕಾಲದ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡುತ್ತಿವೆ. ಶಾಖದ ತೀವ್ರತೆ: ರಾಯಚೂರು ಮೊದಲೇ ಬಿಸಿಲ ಊರು. ಅದರಲ್ಲೂ ಶಕ್ತಿನಗರದ ವಿದ್ಯುತ್ ಕೇಂದ್ರದಿಂದ ಹೊರಬರುವ ಬೃಹತ್ ಪ್ರಮಾಣದ ಶಾಖವು ಸುತ್ತಮುತ್ತಲಿನ ತಾಪಮಾನವನ್ನು ಇನ್ನೂ 2-3 ಡಿಗ್ರಿ ಹೆಚ್ಚಿಸಿದೆ. ಬೇಸಿಗೆಯಲ್ಲಂತೂ ಇಲ್ಲಿನ ಜನರ ಬದುಕು ಅಕ್ಷರಶಃ ಕೆಂಡದ ಮೇಲಿಟ್ಟಂತಾಗುತ್ತದೆ. ಇಟ್ಟಿಗೆ ತಯಾರಿಕೆ: ಲಾಭವೋ ಅಥವಾ ಕಣ್ಣೊರೆಸುವ ತಂತ್ರವೋ? ಈ ಬೂದಿಯನ್ನು ಬಳಸಿಕೊಂಡು ಇಟ್ಟಿಗೆಗಳನ್ನು ತಯಾರಿಸುವ ಘಟಕಗಳಿವೆ. ಕಲ್ಲಿದ್ದಲು ಬೂದಿಯಿಂದ ಇಟ್ಟಿಗೆ ಮಾಡುವುದು ಪರಿಸರ ಸ್ನೇಹಿ ಎಂದು ಹೇಳಲಾಗುತ್ತದೆಯಾದರೂ, ಈ ಪ್ರಕ್ರಿಯೆಯಲ್ಲಿ ಹಾರುವ ಧೂಳನ್ನು ನಿಯಂತ್ರಿಸುವಲ್ಲಿ ವ್ಯವಸ್ಥೆ ಸಂಪೂರ್ಣ ವಿಫಲವಾಗಿದೆ. ಬೂದಿ ಸಾಗಿಸುವ ಲಾರಿಗಳು ಸರಿಯಾಗಿ ಮುಚ್ಚಲ್ಪಟ್ಟಿರುವುದಿಲ್ಲ, ಇದರಿಂದ ರಸ್ತೆಯುದ್ದಕ್ಕೂ ಬೂದಿ ಚೆಲ್ಲುತ್ತಾ ಸಾಗುತ್ತದೆ. ಈ ಇಟ್ಟಿಗೆ ಭಟ್ಟಿಗಳ ಸುತ್ತಮುತ್ತ ವಾಸಿಸುವ ಜನರ ಸ್ಥಿತಿಯಂತೂ ಹೇಳತೀರದು. ಅನಾರೋಗ್ಯದ ಸುಳಿಯಲ್ಲಿ ಬದುಕು: ಶಕ್ತಿನಗರದ ಆಸ್ಪತ್ರೆಗಳಿಗೆ ಒಮ್ಮೆ ಭೇಟಿ ನೀಡಿದರೆ ಅಲ್ಲಿನ ವಾಸ್ತವ ಅರ್ಥವಾಗುತ್ತದೆ. ಅಲ್ಲಿ ಬರುವ ಶೇ. 80 ರೋಗಿಗಳು ಎದುರಿಸುತ್ತಿರುವ ಸಮಸ್ಯೆಗಳು ಹೀಗಿವೆ: ಶ್ವಾಸಕೋಶದ ಕಾಯಿಲೆ: ಅಸ್ತಮಾ, ಬ್ರಾಂಕೈಟಿಸ್ ಮತ್ತು ಟಿಬಿ ಮಾದರಿಯ ಲಕ್ಷಣಗಳು ಇಲ್ಲಿನ ಪ್ರತಿಯೊಬ್ಬರನ್ನೂ ಕಾಡುತ್ತಿದೆ. ಬೂದಿಯ ಸಣ್ಣ ಕಣಗಳು ನೇರವಾಗಿ ಶ್ವಾಸಕೋಶದ ಆಳಕ್ಕೆ ಇಳಿದು ಉಸಿರಾಟವನ್ನೇ ಕಷ್ಟಕರವಾಗಿಸಿದೆ. ಚರ್ಮದ ಸಮಸ್ಯೆ: ಗಾಳಿಯಲ್ಲಿರುವ ರಾಸಾಯನಿಕ ಮಿಶ್ರಿತ ಬೂದಿಯಿಂದಾಗಿ ಜನರಿಗೆ ನಿರಂತರವಾಗಿ ತುರಿಕೆ, ಕಪ್ಪು ಕಲೆಗಳು ಮತ್ತು ಚರ್ಮದ ಅಲರ್ಜಿ ಕಾಡುತ್ತಿದೆ. ದೃಷ್ಟಿ ದೋಷ: ಕಣ್ಣುಗಳಲ್ಲಿ ಸದಾ ಉರಿ ಮತ್ತು ಕೆಂಪಾಗುವಿಕೆ ಇಲ್ಲಿನ ಜನರಿಗೆ ಸಾಮಾನ್ಯವಾಗಿದೆ. ‘ನಾವು ಉಸಿರಾಡುತ್ತಿಲ್ಲ, ಬೂದಿಯನ್ನು ನುಂಗುತ್ತಿದ್ದೇವೆ’ ಇಲ್ಲಿನ ಸ್ಥಳೀಯ ಹಿರಿಯರೊಬ್ಬರು ಹೇಳುವ ಮಾತು ಕರುಳು ಹಿಂಡುವಂತಿದೆ: ‘ಸರಕಾರಕ್ಕೆ ಬೆಂಗಳೂರಿನ ಲೈಟುಗಳು ಮುಖ್ಯ, ಆದರೆ ಆ ಲೈಟು ಉರಿಯಲು ನಮ್ಮ ಶ್ವಾಸಕೋಶಗಳು ಕಲ್ಲಿದ್ದಲಿನ ಒಲೆಯಾಗುತ್ತಿವೆ. ನಮ್ಮ ಮಕ್ಕಳಿಗೆ ಆಟವಾಡಲು ಮಣ್ಣಿಲ್ಲ, ಬರೀ ಬೂದಿಯಿದೆ. ನಾವು ಕುಡಿಯುವ ನೀರು ನಮಗೆ ಅಮೃತವಾಗಬೇಕಿತ್ತು, ಆದರೆ ಅದು ಸಾವಿನ ದಾರಿಯಾಗುತ್ತಿದೆ’. ಕಾರ್ಖಾನೆಯ ಚಿಮಣಿಗಳಿಂದ ಬರುವ ಹೊಗೆ ಕೇವಲ ಆಕಾಶಕ್ಕೆ ಹೋಗುವುದಿಲ್ಲ, ಅದು ಜನರ ಆಯಸ್ಸನ್ನು ಪ್ರತಿದಿನ ಕುಗ್ಗಿಸುತ್ತಿದೆ. ಇಲ್ಲಿನ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಕಣ್ಣು ಮುಚ್ಚಿ ಕುಳಿತಿದೆ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶಕ್ತಿನಗರದ ವಿದ್ಯುತ್ ಕೇಂದ್ರವು ಕರ್ನಾಟಕದ ಆಸ್ತಿ ಎಂಬುದು ನಿಜ. ಆದರೆ ಆ ಬೆಳಕಿಗಾಗಿ ಅಲ್ಲಿನ ಜನರು ತಮ್ಮ ಆರೋಗ್ಯ ಮತ್ತು ಪರಿಸರವನ್ನು ಬಲಿ ಕೊಡುತ್ತಿದ್ದಾರೆ. ಈಗಿನ ಕಾಲದಲ್ಲಿ ಕಲ್ಲಿದ್ದಲು ಆಧಾರಿತ ವಿದ್ಯುತ್‌ಗಿಂತ ಸೌರಶಕ್ತಿ ಮತ್ತು ಪವನಶಕ್ತಿಯಂತಹ ನವೀಕರಿಸಬಹುದಾದ ಇಂಧನಗಳತ್ತ ನಾವು ಹೆಚ್ಚು ಗಮನ ಹರಿಸಬೇಕಿದೆ. ಅಲ್ಲದೆ, ಸರಕಾರವು ಇಲ್ಲಿನ ‘ಬೂದಿ ಕೊಳ’ಗಳನ್ನು ಸರಿಯಾಗಿ ನಿರ್ವಹಿಸಿ, ಬೂದಿ ಹಳ್ಳಿಗಳಿಗೆ ಹರಡದಂತೆ ತಡೆಯಲು ಆಧುನಿಕ ತಂತ್ರಜ್ಞಾನ ಬಳಸಬೇಕಿದೆ. ಸ್ಥಳೀಯ ಜನರಿಗೆ ಉತ್ತಮ ವೈದ್ಯಕೀಯ ಸೌಲಭ್ಯ ನೀಡುವುದು ಸರಕಾರದ ಆದ್ಯತೆಯಾಗಬೇಕು. ನಮಗೆ ವಿದ್ಯುತ್ ಬೇಕು, ಆದರೆ ಅದು ಜನರ ಪ್ರಾಣದ ಬೆಲೆಯ ಮೇಲಲ್ಲ. ಶಕ್ತಿನಗರದ ಜನರು ಕರ್ನಾಟಕಕ್ಕೆ ಬೆಳಕು ನೀಡುತ್ತಿದ್ದಾರೆ. ಅದಕ್ಕೆ ಬದಲಾಗಿ ಅವರಿಗೆ ಉತ್ತಮ ಪರಿಸರ ನೀಡುವುದು ನಮ್ಮೆಲ್ಲರ ಜವಾಬ್ದಾರಿ. ಕುಡಿಯುವ ನೀರು ಮತ್ತು ಕಲುಷಿತ ಒಡಲು ಕಲ್ಲಿದ್ದಲು ಬೂದಿಯಲ್ಲಿ ಸೀಸ, ಆರ್ಸೆನಿಕ್ ಮತ್ತು ಕ್ಯಾಡ್ಮಿಯಂನಂತಹ ಭಾರೀ ಲೋಹಗಳಿರುತ್ತವೆ. ಸಂಗ್ರಹಣೆ ಮಾಡಲಾದ ಈ ಬೂದಿ ಗಾಳಿಗೆ ಹಾರಿ ಹೋಗಿ ನೇರವಾಗಿ ಕೃಷ್ಣಾ ನದಿಗೆ ಮತ್ತು ಸ್ಥಳೀಯ ಕುಡಿಯುವ ನೀರಿನ ಹೊಂಡಗಳಿಗೆ ಸೇರುತ್ತಿದೆ. ಜನರು ಅನಿವಾರ್ಯವಾಗಿ ಇದೇ ನೀರನ್ನು ಕುಡಿಯುತ್ತಿದ್ದಾರೆ. ಈ ವಿಷಕಾರಿ ಕಣಗಳು ದೇಹದೊಳಗೆ ಸೇರಿದಾಗ ಅವು ಮೂಳೆಗಳಲ್ಲಿ, ಶ್ವಾಸಕೋಶದಲ್ಲಿ ಮತ್ತು ರಕ್ತದಲ್ಲಿ ಶೇಖರಣೆಯಾಗುತ್ತವೆ. ಇದರಿಂದಾಗಿ ಚಿಕ್ಕ ವಯಸ್ಸಿನಲ್ಲೇ ಜನರು ಕಿಡ್ನಿ ವೈಫಲ್ಯ, ಮೂಳೆಗಳ ಸವೆತ ಮತ್ತು ನಿರಂತರವಾದ ಮೈಕೈ ನೋವಿನಿಂದ ಬಳಲುತ್ತಿದ್ದಾರೆ. ಶಕ್ತಿನಗರದ ಹಳ್ಳಿಯೊಂದರ ಮಗುವಿನ ಮುಖ ಸದಾ ಬಿಳಿಯಾಗಿರುವುದು ಆರೋಗ್ಯದಿಂದಲ್ಲ, ಅದು ಅಂಟಿಕೊಂಡಿರುವ ಬೂದಿಯಿಂದ!

ವಾರ್ತಾ ಭಾರತಿ 16 Feb 2026 8:20 am

ಚಾಮರಾಜನಗರ | ವರದಕ್ಷಿಣೆ ಕಿರುಕುಳ ಆರೋಪ: ಗೃಹಿಣಿ ಅನುಮಾನಾಸ್ಪದ ಸಾವು

ಚಾಮರಾಜನಗರ: ಚಾಮರಾಜನಗರ ಹನೂರು ತಾಲೂಕಿನ ಮಾರ್ಟಳ್ಳಿ ಸಮೀಪದ ಕೋಟೆಪೊದೆ ಗ್ರಾಮದಲ್ಲಿ ಗೃಹಿಣಿಯೋರ್ವರು ಅನುಮಾನಾಸ್ಪದವಾಗಿ ಮೃತಪಟ್ಟಿರುವ ಘಟನೆ ಬೆಳಕಿಗೆ ಬಂದಿದ್ದು, ಮೃತಳ ತಂದೆ ವರದಕ್ಷಿಣೆ ಕಿರುಕುಳದಿಂದಲೇ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ರಾಮಾಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಮೃತ ಮಹಿಳೆಯನ್ನು ಪ್ರಿಯಾ (ಶಿವಕುಮಾರ್ ಪತ್ನಿ) ಎಂದು ಗುರುತಿಸಲಾಗಿದೆ. ಮೃತಳ ತಂದೆ ನೀಡಿದ  ದೂರಿನ ಪ್ರಕಾರ, ಪತಿ ಶಿವಕುಮಾರ್ ಫೈನಾನ್ಸ್ ಸಂಸ್ಥೆಯಿಂದ ಸಾಲ ಪಡೆದಿದ್ದು, ಅದರ ಕಂತುಗಳನ್ನು ತಂದೆಯಿಂದ ತರಿಸಿಕೊಳ್ಳುವಂತೆ ಪ್ರಿಯಾಳಿಗೆ ಹಿಂಸೆ ನೀಡುತ್ತಿದ್ದನು ಎನ್ನಲಾಗಿದೆ. ಈ ಕುರಿತು ಒಂದು ತಿಂಗಳ ಹಿಂದೆ ಬಂಧುಗಳು ಸೇರಿ ಬುದ್ಧಿವಾದ ಹೇಳಿದ್ದರೂ, ವರದಕ್ಷಿಣೆಗಾಗಿ ಒತ್ತಡ ಮುಂದುವರಿದಿತ್ತು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. 2025ರ ಡಿಸೆಂಬರ್‌ನಲ್ಲಿ 50,000 ರೂ. ನಗದು ನೀಡಿದ್ದಾಗಿ ಮೃತಳ ತಂದೆ ತಿಳಿಸಿದ್ದಾರೆ. ಫೆ.14ರ, 2026ರಂದು ಮಧ್ಯಾಹ್ನ ತಮ್ಮ ಮಕ್ಕಳು ಪ್ರಿಯಾಳನ್ನು ಭೇಟಿಯಾದಾಗ ಹೆಚ್ಚುವರಿ ವರದಕ್ಷಿಣೆಗಾಗಿ ಕಿರುಕುಳ ನೀಡುತ್ತಿರುವ ವಿಷಯ ತಿಳಿಸಿದ್ದಾಳೆ ಎನ್ನಲಾಗಿದೆ. ಸಂಜೆ ತಂದೆಯೊಂದಿಗೆ ದೂರವಾಣಿ ಮೂಲಕವೂ ಇದೇ ವಿಷಯವನ್ನು ಹಂಚಿಕೊಂಡಿದ್ದಾಳೆ ಎಂದು ದೂರಿನಲ್ಲಿ ಹೇಳಲಾಗಿದೆ. ರಾತ್ರಿ ವೇಳೆ ಶಿವಕುಮಾರ್ ಮನೆ ಹೊರಗೆ ಹೋಗಿದ್ದಾಗ, ಸುಮಾರು 10 ಗಂಟೆ ಸುಮಾರಿಗೆ ಪ್ರಿಯಾ ಮನೆಯ ಕೋಣೆಯ ಫ್ಯಾನಿಗೆ ವೇಲಿನಿಂದ ನೇಣು ಬಿಗಿದ ಸ್ಥಿತಿಯಲ್ಲಿ ಕಂಡುಬಂದಿದ್ದಾಳೆ ಎಂದು ಪಕ್ಕದ ಮನೆಯವರು ತಿಳಿಸಿದ್ದಾರೆ. ಬಳಿಕ ಕುಟುಂಬದವರು ಮೃತದೇಹವನ್ನು ಕೆಳಗಿಳಿಸಿದ್ದಾರೆ. “ವರದಕ್ಷಿಣೆ ಕಿರುಕುಳದಿಂದ ಬೇಸತ್ತು ನನ್ನ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಶಿವಕುಮಾರ್ ಮತ್ತು ಅವನ ತಾಯಿ ಶಾಂತಿ ಸಾವಿಗೆ ಕಾರಣರು” ಎಂದು ಮೃತಳ ತಂದೆ ಆರೋಪಿಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶಶಿಧರ್ ಘಟನೆ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಕಲೆಹಾಕಿದ್ದಾರೆ. ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

ವಾರ್ತಾ ಭಾರತಿ 16 Feb 2026 8:12 am

ಮೇಘಗಳ ನಾಡಲ್ಲಿ ಪ್ರಕೃತಿಯೇ ಬದುಕು!

ಅಧ್ಯಯನ ಪ್ರವಾಸ ಅನುಭವ

ವಾರ್ತಾ ಭಾರತಿ 16 Feb 2026 8:00 am

2026 ರಲ್ಲಿ 10 ಸಾವಿರ ಸರಕಾರಿ ಶಾಲೆಗಳಲ್ಲಿ ಎಲ್‌ಕೆಜಿ-ಯುಕೆಜಿ ವಿಸ್ತರಣೆ : ಬಜೆಟ್‌ನಲ್ಲಿ ಘೋಷಣೆ ಸಾಧ್ಯತೆ

ಸರಕಾರಿ ಶಾಲೆಗಳಲ್ಲಿ ಸೌಲಭ್ಯಗಳ ಕೊರತೆ, ಕನ್ನಡ ಮಾಧ್ಯಮಗಳಿಗೆ ಮಕ್ಕಳನ್ನು ಸೇರಿಸಲು ಪೋಷರು ಹಿಂದೇಟು ಹಾಕುತ್ತಿದ್ದಾರೆ. ದಾಖಲಾತಿ ಹೆಚ್ಚಿಸಲು ಪೂರ್ವ ಪ್ರಾಥಮಿಕ ಶಾಲೆಗಳನ್ನು ಆರಂಭಿಸಲು ಸರಕಾರ ಯೋಚಿಸುತ್ತಿದ್ದು, ಈ ವರ್ಷದ ಬಜೆಟ್‌ನಲ್ಲಿ ಘೋಷಿಸಲುವ ನಿರೀಕ್ಷೆ ಇದೆ.

ವಿಜಯ ಕರ್ನಾಟಕ 16 Feb 2026 7:52 am

ಕೇರಳ | ಸರಕಾರಿ ಗೌರವದೊಂದಿಗೆ ಅತ್ಯಂತ ಕಿರಿಯ ಅಂಗಾಂಗ ದಾನಿಯ ಅಂತ್ಯಸಂಸ್ಕಾರ

ಪಟ್ಟಣಂತಿಟ್ಟ: ರಾಜ್ಯದ ಅತ್ಯಂತ ಕಿರಿಯ ಅಂಗಾಂಗ ದಾನಿ ಎನಿಸಿಕೊಂಡಿದ್ದ 10 ತಿಂಗಳ ಮಗು ಆಲಿನ್ ಶೆರೀನ್ ಅಬ್ರಹಾಂ ಅಂತ್ಯಸಂಸ್ಕಾರವನ್ನು ಜನಸಾಗರದ ನಡುವೆ ಭಾನುವಾರ ಸಂಜೆ ನೆಡುಂಗಡಪಲ್ಲಿ ಸೆಂಟ್ ಥಾಮಸ್ ಸಿಎಸ್‍ಐ ಚರ್ಚ್‍ನಲ್ಲಿ ಸಕಲ ಸರಕಾರಿ ಗೌರವಗಳೊಂದಿಗೆ ನೆರವೇರಿಸಲಾಯಿತು. ಶುಕ್ರವಾರ ಮೆದುಳು ನಿಷ್ಕ್ರಿಯಗೊಂಡಿದ್ದಾಗಿ ಘೋಷಿಸಲಾಗಿದ್ದ ಆಲಿಯನ್ ಅಂಗಾಂಗ ದಾನದ ಮೂಲಕ ನಾಲ್ಕು ಮಕ್ಕಳಿಗೆ ಜೀವ ನೀಡಿದ್ದಳು. ಆಕೆಯ ಲಿವರ್, ಕಿಡ್ನಿ, ಕಣ್ಣು ಮತ್ತು ಹೃದಯ ಕವಾಟಗಳನ್ನು ದಾನ ಮಾಡಲಾಗಿತ್ತು. ಕುಟುಂಬಕ್ಕೆ ಆದ ತುಂಬಲಾರದ ನಷ್ಟವನ್ನು ಇತರ ಮಕ್ಕಳಿಗೆ ಜೀವದಾನ ಮಾಡುವ ಮೂಲಕ ತುಂಬಿಕೊಳ್ಳಲು ಪೋಷಕರು ನಿರ್ಧರಿಸಿದ್ದರು. ಕೊಟ್ಟಾಯಂನಲ್ಲಿ ಫೆ.5ರಂದು ಪೋಷಕರು ಹಾಗೂ ಸಂಬಂಧಿಕರ ಜತೆಗೆ ಈ ಮಗು ಪ್ರಯಾಣಿಸುತ್ತಿದ್ದ ಕಾರು ಅಪಘಾತಕ್ಕೀಡಾಗಿ ಮಗುವಿಗೆ ತೀವ್ರ ಗಾಯಗಳಾಗಿದ್ದವು. ಪುಟ್ಟ ಮಗುವಿನ ಅಂಗಾಂಗ ದಾನಕ್ಕೆ ಕಾರಣರಾದ ತಂದೆ ಅರುಣ್ ಅಬ್ರಹಾಂ ಮತ್ತು ಶೆರೀನ್ ಆ್ಯನ್ ಜಾನ್ ಅವರ ಮಾನವೀಯತೆಯನ್ನು ಗೌರವಿಸುವ ಸಲುವಾಗಿ ಮಲ್ಲಪಳ್ಳಿ ಬಳಿಯ ನೆಡುಂಗದಪಳ್ಳಿಯ ವೆಲುಮನ್ನಿಲಿಗೆ ಜನಸಾಗರವೇ ಭಾನುವಾರ ಬೆಳಿಗ್ಗೆಯಿಂದ ಹರಿದಿತ್ತು. ಬೆಳಿಗ್ಗೆ 7.45ರ ವೇಳೆಗೆ ಆಲಿನ್ ಮೃತದೇಹವನ್ನು ತರಲಾಗಿತ್ತು. ಮಲ್ಲಿಗೆಯಿಂದ ಸುತ್ತಲಾಗಿದ್ದ ಪುಟ್ಟ ಮೃತದೇಹಪೆಟ್ಟಿಗೆಯಲ್ಲಿ ಪುಟ್ಟ ದಾನಿಯ ಮೃತದೇಹವನ್ನು ಇರಿಸಲಾಗಿತ್ತು. ಶೋಕಸಾಗರದ ನಡುವೆ ಪೋಷಕರು ಹಾಗೂ ಬಂಧುಗಳು ಮೃತದೇಹಪೆಟ್ಟಿಗೆಯ ಪಕ್ಕ ಇದ್ದರು. ಸಚಿವರಾದ ವೀಣಾ ಜಾರ್ಜ್, ವಿ.ಎನ್.ವಾಸವನ್, ಸಂಸದ ಸುರೇಶ್ ಗೋಪಿ ಹಾಗೂ ಹಲವು ಮಂದಿ ಜನಪ್ರತಿನಿಧಿಗಳು ಮನೆಗೆ ಭೇಟಿ ನೀಡಿ ಪುಟ್ಟ ಆತ್ಮಕ್ಕೆ ಶಾಂತಿ ಕೋರಿದರು. ಪೋಷಕರ ನಿರ್ಧಾರದ ಬಗ್ಗೆ ಮಾಧ್ಯಮಗಳ ಮೂಲಕ ತಿಳಿದು ರಾಜ್ಯದ ಮೂಲೆಮೂಲೆಗಳಿಂದ ಜನ ಆಗಮಿಸಿ ಪುಟ್ಟ ಮಗುವಿಗೆ ಅಂತಿಮ ನಮನ ಸಲ್ಲಿಸಿದರು. ಮಧ್ಯಾಹ್ನ 3 ಗಂಟೆ ವೇಳೆಗೆ ಅಪಾರ ಅಭಿಮಾನಿಗಳೊಂದಿಗೆ ಚರ್ಚ್ ಆವರಣಕ್ಕೆ ಶವಯಾತ್ರೆ ತಲುಪಿತು. ಉಕ್ಕಿ ಬರುತ್ತಿದ್ದ ಕಣ್ಣೀರಿನ ನಡುವೆಯೂ, ನಾಲ್ವರು ಮಕ್ಕಳಿಗೆ ಜೀವದಾನ ಮಾಡಿದ ಹೆಮ್ಮೆ ಇದೆ ಎಂದು ಅಜ್ಜ ರಾಜಿ ಸ್ಯಾಮ್ಯುಯೆಲ್ ಹೇಳಿದರು.

ವಾರ್ತಾ ಭಾರತಿ 16 Feb 2026 7:35 am

Karnataka Weather: ಕರ್ನಾಟಕದಲ್ಲಿ ಮುಂದಿನ 3 ದಿನ ಹೇಗಿರಲಿದೆ ಹವಾಮಾನ, ಇಲ್ಲಿದೆ ಮಾಹಿತಿ

Karnataka Weather: ಬೆಂಗಳೂರು ಸೇರಿದಂತೆ ಕರ್ನಾಟಕದಾದ್ಯಂತ ಬಹುತೇಕ ಒಣಹವೆ ಮುಂದುವರಿದಿದೆ. ರಾಜ್ಯದಾದ್ಯಂತ ಚಳಿ ಪ್ರಮಾಣ ಬಹುತೇಕ ಇಳಿಕೆಯಾಗಿದ್ದು, ಮುಂಜಾನೆ ಮತ್ತು ಸಂಜೆ ಸಮಯದಲ್ಲಿ ಮಾತ್ರ ಅಲ್ಪ ಪ್ರಮಾಣದ ಚಳಿ ಇದೆ. ಉಳಿದಂತೆ ಬಹುತೇಕ ಒಣಹವೆ ಮುಂದುವರಿದಿದ್ದು, ಮುಂದಿನ ಐದು ದಿನಗಳ ವರೆಗೆ ಇದೇ ವಾತಾವರಣ ಮುಂದುವರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆಯು ಮುನ್ಸೂಚನೆ ನೀಡಿದೆ. ಇನ್ನು ಈ

ಒನ್ ಇ೦ಡಿಯ 16 Feb 2026 7:24 am

ಮುಹಮ್ಮದ್ ಅಲಿ ‌

ಮಂಗಳೂರು: ಮೂಲತಃ ನಗರದ ಜೆಪ್ಪುವಿನ ಪ್ರಸಕ್ತ ಕುತ್ತಾರ್ ಶಾಂತಿಭಾಗ್‌ನಲ್ಲಿ ವಾಸವಾಗಿದ್ದ ಮುಹಮ್ಮದ್ ಅಲಿ ರವಿವಾರ ಸಂಜೆ ನಿಧನರಾದರು. ಮೃತರು ವಾರ್ತಾಭಾರತಿಯ ಉದ್ಯೋಗಿಯಾಗಿರುವ ಪುತ್ರ ತ್ವಾಹಿರ್ ಮತ್ತು ಅಪಾರ ಬಂಧುಬಳಗವನ್ನು ಅಗಲಿದ್ದಾರೆ. ವಿದೇಶದಲ್ಲಿ ಉದ್ಯೋಗಿಯಾಗಿದ್ದ ಅವರು ಕೆಲವು ವರ್ಷಗಳ ಹಿಂದೆ ಊರಿಗೆ ಬಂದು ನೆಲೆಸಿದ್ದರು. ಸೋಮವಾರ ಬೆಳಗ್ಗೆ ಕುತ್ತಾರ್ ಮದನಿನಗರ ಜುಮಾ ಮಸೀದಿಯ ಆವರಣದಲ್ಲಿ ದಫನ ಮಾಡಲಾಯಿತು ಎಂದು ಕುಟುಂಬದ ಮೂಲಗಳು ತಿಳಿಸಿವೆ.

ವಾರ್ತಾ ಭಾರತಿ 16 Feb 2026 7:19 am

‘ಅನ್ಯ’ರಾಗುತ್ತಿರುವ ವಲಸೆ ಕಾರ್ಮಿಕರು!

ದೇಶದಲ್ಲಿ ದಲಿತರ ಮೇಲೆ ದೌರ್ಜನ್ಯಗಳಿಗೆ ಸಮಾಜ ಅನಧಿಕೃತವಾಗಿ ಮಾನ್ಯತೆಯನ್ನು ನೀಡುತ್ತಾ ಬಂದಿದೆ. ಇಂದು ಇಂತಹ ದೌರ್ಜನ್ಯಗಳ ವಿರುದ್ಧ ಕಾನೂನುಗಳನ್ನು ರಚಿಸಲು ಮುಂದಾದಾಗ, ಮೇಲ್‌ಜಾತಿಯ ಕೆಲವು ಗುಂಪುಗಳು ಯಾವ ಕೀಳರಿಮೆಯೂ ಇಲ್ಲದೆ ಬೀದಿಗಿಳಿದು ಪ್ರತಿಭಟನೆ ನಡೆಸುವಷ್ಟರ ಮಟ್ಟಿಗೆ ಲಜ್ಜೆಯನ್ನು ಕಳೆದುಕೊಂಡಿವೆ. ಮಹಿಳೆಯರ ಮೇಲಿನ ದೌರ್ಜನ್ಯಗಳು, ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯಗಳು ಭಾರತದ ಸಾಂಸ್ಕೃತಿಕ ಹಿರಿಮೆಗಳ ಭಾಗ ಎಂಬಂತೆ ಬಿಂಬಿತವಾಗುತ್ತಿದೆ. ಇಷ್ಟಕ್ಕೂ ಗುಜರಾತ್‌ನಲ್ಲಿ ನಡೆದ ಸಾಮೂಹಿಕ ಹತ್ಯಾಕಾಂಡ, ಅತ್ಯಾಚಾರಗಳನ್ನು ‘ಸಾಂಸ್ಕೃತಿಕ ಪುನರುತ್ಥಾನ’ದ ಹೆಸರಿನಲ್ಲಿ ಸಮರ್ಥಿಸಿಕೊಂಡ ದೇಶ ನಮ್ಮದು. ದೋಷಿಗಳು ಎಂದು ನ್ಯಾಯಾಲಯದಿಂದ ಘೋಷಿತರಾಗಿ ಶಿಕ್ಷೆ ಅನುಭವಿಸುತ್ತಿದ್ದ ಸಾಮೂಹಿಕ ಅತ್ಯಾಚಾರ, ಕೊಲೆ ಆರೋಪಿಗಳಾಗಿರುವ 11 ಮಂದಿ ದುಷ್ಕರ್ಮಿಗಳನ್ನು ಗುಜರಾತ್ ಸರಕಾರವೇ ಬಿಡುಗಡೆಗೊಳಿಸಿದಾಗ ಆ ಆರೋಪಿಗಳಿಗೆ ಹೂಹಾರ ಹಾಕಿ, ಆರತಿ ಎತ್ತಿ ಸ್ವಾಗತಿಸಿದ ಸುದ್ದಿಗಳು ದೇಶದ ಮಾನವನ್ನು ಹರಾಜಿಗಿಟ್ಟಿತ್ತು. ಮಹಿಳೆಯರ ಮೇಲಿನ ದೌರ್ಜನ್ಯಗಳಿಗೆ ಕಠಿಣ ಕಾನೂನುಗಳನ್ನು ಮಾಡಿದಾಗಲೂ, ಅದನ್ನು ವಿರೋಧಿಸುವ ಗುಂಪುಗಳು ನಮ್ಮ ನಡುವೆ ಇವೆ. ಮತಾಂತರ ಕಾಯ್ದೆ, ಗೋಹತ್ಯೆ ನಿಷೇಧ ಕಾಯ್ದೆಗಳು ಈ ದೇಶದಲ್ಲಿ ಅಲ್ಪಸಂಖ್ಯಾತರ ಅದರಲ್ಲೂ ಮುಸ್ಲಿಮರ ಮೇಲೆ ದಾಳಿ ನಡೆಸಲು ದುಷ್ಕರ್ಮಿಗಳಿಗೆ ನೀಡಿದ ಪರೋಕ್ಷ ಪರವಾನಿಗೆಯೇ ಆಗಿವೆ. ಇದೀಗ ದೇಶ ವಲಸೆ ಕಾರ್ಮಿಕರ ಮೇಲಿನ ಹಲ್ಲೆಗಳಿಗಾಗಿ ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗುತ್ತಿದೆ. ಈ ವರ್ಷದ ಎರಡು ತಿಂಗಳಲ್ಲಿ ವಲಸೆ ಕಾರ್ಮಿಕರ ಮೇಲೆ ಬೇರೆ ಬೇರೆ ಕಾರಣಗಳಿಗಾಗಿ 20ಕ್ಕೂ ಅಧಿಕ ಹಲ್ಲೆ ಪ್ರಕರಣಗಳು ವಿವಿಧ ಠಾಣೆಗಳಲ್ಲಿ ದಾಖಲಾಗಿವೆ. ಹಲವೆಡೆ ಗುಂಪುಗಳಿಂದ ಕಾರ್ಮಿಕರ ಹತ್ಯೆಗಳು ನಡೆದಿವೆ. ಕಳೆದ ವರ್ಷ ನಾಲ್ಕು ಹೊಸ ಕಾರ್ಮಿಕ ಕಾಯ್ದೆಗಳನ್ನು ಘೋಷಿಸಿದಾಗ, ವಲಸೆ ಕಾರ್ಮಿಕರ ಬದುಕನ್ನು ಮೇಲೆತ್ತುವ ಬಗ್ಗೆ ಸರಕಾರ ಭರವಸೆಗಳನ್ನು ನೀಡಿತ್ತು. ಕಾರ್ಮಿಕರಿಗೆ ನೇಮಕಾತಿ ಪತ್ರ, ಸಾಮಾಜಿಕ ಭದ್ರತೆ, ಕನಿಷ್ಠ ವೇತನ ಇತ್ಯಾದಿ ಭರವಸೆಗಳೂ ವಲಸೆ ಕಾರ್ಮಿಕರಿಗೆ ದೊರೆತಿದ್ದವು. ಎಲ್ಲಕ್ಕಿಂತ ಮುಖ್ಯವಾಗಿ ಜುಲೈ 2026ರಿಂದ ಜೂನ್ 2027ರವರೆಗೆ ವಲಸೆ ಕಾರ್ಮಿಕರ ಸ್ಥಿತಿಗತಿಯನ್ನು ಅವಲೋಕಿಸಲು ಬೃಹತ್ ಸಮೀಕ್ಷೆಯನ್ನು ಹಮ್ಮಿಕೊಂಡಿದೆ. ವಿಪರ್ಯಾಸವೆಂದರೆ, ದೇಶಾದ್ಯಂತ ಈಗಾಗಲೇ ಈ ಸಮೀಕ್ಷೆಯನ್ನು ಕೇಸರಿಧಾರಿ ಸಂಘಪರಿವಾರ ಕಾರ್ಯಕರ್ತರು ನಡೆಸುತ್ತಿದ್ದಾರೆ. ಕಂಡ ಕಂಡ ಗುಡಿಸಲುಗಳಿಗೆ ನುಗ್ಗಿ ಅವರ ದಾಖಲೆಗಳನ್ನು ಕೇಳುವುದು ಒಂದೆಡೆಯಾದರೆ, ವಲಸೆ ಕಾರ್ಮಿಕರನ್ನು ಯಾರೂ ತಡೆದು ನಿಲ್ಲಿಸಿ ಅವರ ಪೌರತ್ವವನ್ನು ಪ್ರಶ್ನಿಸಬಹುದು ಎನ್ನುವ ಸ್ಥಿತಿ ದೇಶದಲ್ಲಿ ನಿರ್ಮಾಣವಾಗಿದೆ. ಚುನಾವಣಾ ಆಯೋಗವು ಹಮ್ಮಿಕೊಂಡಿರುವ ಮತದಾರರ ಪಟ್ಟಿಯ ತೀವ್ರ ಪರಿಷ್ಕರಣೆ ನೇರವಾಗಿ ವಲಸೆ ಕಾರ್ಮಿಕರನ್ನೇ ಗುರಿಯಾಗಿಸಿಕೊಂಡಿದೆ. ಮತದಾರರ ಪಟ್ಟಿಯಿಂದ ಹೊರಬೀಳುತ್ತಿರುವ ಕೋಟ್ಯಂತರ ಜನರಲ್ಲಿ ವಲಸೆ ಕಾರ್ಮಿಕರೇ ಅಗ್ರ ಸ್ಥಾನದಲ್ಲಿದ್ದಾರೆ. ಸರಕಾರವು ವಲಸೆ ಕಾರ್ಮಿಕರಿಗೆ ಯೋಜನೆಗಳನ್ನು ರೂಪಿಸುವುದು ಬದಿಗಿರಲಿ, ಅವರ ಮತದಾನದ ಹಕ್ಕುಗಳನ್ನೇ ಕಿತ್ತುಕೊಳ್ಳುವುದಕ್ಕೆ ಯೋಜನೆ ರೂಪಿಸುತ್ತಿದೆ. ಮತದಾರರ ಪಟ್ಟಿಯಿಂದ ಹೊರ ಬೀಳುವ ಈ ವಲಸೆ ಕಾರ್ಮಿಕರು ಭವಿಷ್ಯದಲ್ಲಿ ದೇಶದ ಪಾಲಿಗೆ ಶಾಶ್ವತವಾಗಿ ಅನ್ಯರಾಗಲಿದ್ದಾರೆ. ಕಳೆದ ವಾರ ಪಂಜಾಬ್‌ನ ಮೊಗಾ ಜಿಲ್ಲೆಯಲ್ಲಿ ವಲಸೆ ಕಾರ್ಮಿಕರ ತಂಡದ ಮೇಲೆ ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳು ಯದ್ವಾತದ್ವಾ ಗುಂಡು ಹಾರಿಸಿದರು. ಈ ವಲಸೆ ಕಾರ್ಮಿಕರು ಪಾಕಿಸ್ತಾನಕ್ಕೋ, ಬಾಂಗ್ಲಾಕ್ಕೋ ಸೇರಿದವರಾಗಿರಲಿಲ್ಲ. ಎಲ್ಲರೂ ಬಿಹಾರ ಮೂಲದವರಾಗಿದ್ದರು. ಇದೀಗ ಪೊಲೀಸರು ದಾಳಿ ನಡೆಸಿದ ಜೋಬಲ್ ಪ್ರೀತ್ ಮತ್ತು ಆತನ ಸಹಚರ ಆಕಾಶ್ ದೀಪ್ ಎಂಬವರನ್ನು ಬಂಧಿಸಿದ್ದಾರೆ. ಮಹಾರಾಷ್ಟ್ರದ ಪುಣೆಯಲ್ಲಿ ಕಳೆದವಾರ ಪಶ್ಚಿಮ ಬಂಗಾಳದ ಪುರುಲಿಯಾ ಮೂಲದ ಸುಖೇನ್ ಮಮತೋ ಎಂಬ 24 ವರ್ಷದ ಕಾರ್ಮಿಕನನ್ನು ದುಷ್ಕರ್ಮಿಗಳು ಹತ್ಯೆ ಮಾಡಿದ್ದಾರೆ. ಈ ವಲಸೆ ಕಾರ್ಮಿಕ ಮಾಡಿದ ಮಹಾಪರಾಧ ಎಂದರೆ ಬಂಗಾಳಿ ಭಾಷೆ ಮಾತನಾಡಿರುವುದು. ಪೊಲೀಸರು ಈ ಸಂಬಂಧ ಇಬ್ಬರನ್ನು ಬಂಧಿಸಿದ್ದು, ವೈಯಕ್ತಿಕ ಗಲಾಟೆಯೇ ಕೊಲೆಗೆ ಕಾರಣ ಎಂದು ಎಫ್‌ಐಆರ್‌ನಲ್ಲಿ ಹೇಳಿದ್ದಾರೆ. ಜನಾಂಗೀಯ ದ್ವೇಷ ಈ ಹತ್ಯೆಗೆ ಕಾರಣವಾಗಿರುವುದನ್ನು ಪೊಲೀಸರು ಮರೆ ಮಾಚಿದ್ದಾರೆ. ಇದು ಬರೆ ಉತ್ತರ ಭಾರತಕ್ಕೆ ಸೀಮಿತ ಕೃತ್ಯಗಳಲ್ಲ. ತಮಿಳುನಾಡಿನ ಕೊಯಮತ್ತೂರು, ತಿರುವಳ್ಳೂರು ಮತ್ತು ಚೆನ್ನೈ ಭಾಗಗಳಲ್ಲಿ ಉತ್ತರ ಭಾರತದ ಕಾರ್ಮಿಕರ ಮೇಲೆ ತೀವ್ರ ದಾಳಿಗಳು ನಡೆದಿರುವುದು ವರದಿಯಾಗಿವೆ. ಇತ್ತೀಚೆಗೆ ತಮಿಳುನಾಡಿನಲ್ಲಿ ಪಶ್ಚಿಮ ಬಂಗಾಳದ ಸೂರಜ್ ಎಂಬ ಕಾರ್ಮಿಕನ ಮೇಲೆ ಅಪ್ರಾಪ್ತ ವಯಸ್ಕರು ಕೊಡಲಿಯಿಂದ ದಾಳಿ ಮಾಡಿದ ವೀಡಿಯೊ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ರೈಲು ಪ್ರಯಾಣದ ಸಂದರ್ಭದಲ್ಲೂ ಇಂತಹ ಹಲ್ಲೆಗಳು ನಡೆದಿರುವುದು ಮಾಧ್ಯಮಗಳಲ್ಲಿ ವರದಿಯಾಗಿವೆ. ಇತ್ತೀಚೆಗೆ ‘ಬುದ್ಧಿವಂತರ ಜಿಲ್ಲೆ’ಯಲ್ಲೂ ವಲಸೆ ಕಾರ್ಮಿಕನ ಮೇಲೆ ನಡೆದ ಹಲ್ಲೆ ಸುದ್ದಿಯಾಯಿತು. ಜಾರ್ಖಂಡ್ ಮೂಲದ ಕಾರ್ಮಿಕನ ಮೇಲೆ ನಾಲ್ವರು ಯುವಕರು ಹಲ್ಲೆ ನಡೆಸಿದ್ದೇ ಅಲ್ಲದೆ ಆತನನ್ನು ಬಾಂಗ್ಲಾ ನುಸುಳುಕೋರ ಎಂದು ನಿಂದಿಸಿದ್ದರು. ವಲಸೆ ಕಾರ್ಮಿಕರು ಬಂಗಾಳಿ ಮಾತನಾಡುವುದೇ ಅಪರಾಧ ಎನ್ನುವಂತಹ ಸ್ಥಿತಿ ನಿರ್ಮಾಣವಾಗಿದೆ. ಮಂಗಳೂರು, ಬೆಂಗಳೂರಿನಂತಹ ನಗರಗಳು ತಲೆಯೆತ್ತಿ ನಿಂತಿರುವುದು ಈ ವಲಸೆ ಕಾರ್ಮಿಕರ ಬೆವರು, ರಕ್ತದಿಂದ. ನಮ್ಮ ರಸ್ತೆಗಳು, ಸೇತುವೆಗಳು ಈ ವಲಸೆ ಕಾರ್ಮಿಕರಿಂದಲೇ ನಿರ್ಮಾಣಗೊಂಡಿವೆ. ಚಿಕ್ಕಮಗಳೂರು, ಕೊಡಗಿನಲ್ಲಿ ಕಾಫಿ ಎಸ್ಟೇಟ್‌ನಲ್ಲಿ ಅಸ್ಸಾಂ, ಪಶ್ಚಿಮಬಂಗಾಳದಿಂದ ಬಂದ ಕಾರ್ಮಿಕರ ಬೆವರುಗಳಿವೆ. ಇವರೇನೂ ತಾವಾಗಿಯೇ ಬಂದವರಲ್ಲ. ಕಡಿಮೆ ವೇತನಕ್ಕೆ ದುಡಿಸಬಹುದು ಎನ್ನುವ ಒಂದೇ ಕಾರಣಕ್ಕಾಗಿ ಇವರನ್ನು ಎಸ್ಟೇಟ್ ಮಾಲಕರು, ಗುತ್ತಿಗೆದಾರರು ತಾವಾಗಿಯೇ ಕರೆಸಿಕೊಂಡು ಆಶ್ರಯ ನೀಡುತ್ತಾರೆ. ಯಾವುದೇ ವೈದ್ಯಕೀಯ ಸವಲತ್ತು, ಪಿಎಫ್ ಮೊದಲಾದ ಸವತ್ತುಗಳಿಲ್ಲದೆ ದುಡಿಯುತ್ತಾರೆ. ಕೆಲಸದ ಸಂದರ್ಭದಲ್ಲಿ ದುರಂತಕ್ಕೀಡಾದರೆ ಅದಕ್ಕೆ ಸೂಕ್ತ ಪರಿಹಾರವೂ ಇವರಿಗೆ ದೊರಕುವುದಿಲ್ಲ. ಮಾಲಕರು, ಗುತ್ತಿಗೆದಾರರು ತಮ್ಮ ಕಾರ್ಯ ಮುಗಿದ ಬಳಿಕ ಅವರನ್ನು ಅತ್ಯಂತ ಅಮಾನವೀಯವಾಗಿ ತಿರಸ್ಕರಿಸುತ್ತಾರೆ. ಆಗ ಅವರಿಗೆ ‘ನುಸುಳು ಕೋರರು’ ‘ಬಾಂಗ್ಲಾ ವಲಸಿಗರು’ ಎನುವ ಹಣೆಪಟ್ಟಿ ಲಗತ್ತಿಸಲಾಗುತ್ತದೆ. ಈ ವಲಸೆ ಕಾರ್ಮಿಕರು ವೇತನ ಹೆಚ್ಚಳದ ಬಗ್ಗೆ ಮಾತನಾಡಿದರೆ ಅಥವಾ ತಮ್ಮ ಹಕ್ಕುಗಳನ್ನು ಕೇಳಿದರೆ ತಕ್ಷಣ ಅವರ ತಲೆಗೆ ದೇಶದ್ರೋಹದ ಕಿರೀಟವನ್ನು ತೊಡಿಸಲಾಗುತ್ತದೆ. ಎಷ್ಟೋ ಎಸ್ಟೇಟ್‌ಗಳಲ್ಲಿ ಜೀತದ ಬದುಕು ನಡೆಸುತ್ತಿರುವ ವಲಸೆ ಕಾರ್ಮಿಕರಿದ್ದಾರೆ. ಪ್ರಾದೇಶಿಕ ವಾದ, ಭಾಷಾವಾದಕ್ಕೂ ಮೊದಲು ಬಲಿಯಾಗುವುದು ಇದೇ ವಲಸೆ ಕಾರ್ಮಿಕರು. ಈ ಜನಾಂಗೀಯ ದ್ವೇಷ ಇತ್ತೀಚಿನ ದಿನಗಳಲ್ಲಿ ಸರಕಾರಿ ಪ್ರಾಯೋಜತ್ವವನ್ನು ಪಡೆದುಕೊಂಡಿರುವುದು ಆತಂಕಕಾರಿಯಾಗಿದೆ. ವಲಸೆ ಕಾರ್ಮಿಕರ ಮೇಲೆ ನಡೆಯುತ್ತಿರುವ ಈ ಜನಾಂಗೀಯ ದೌರ್ಜನ್ಯಗಳ ವಿರುದ್ಧ ಸರಕಾರ ಮಾತನಾಡದೆ ಇದ್ದರೆ ಭವಿಷ್ಯದಲ್ಲಿ ಭಾರತ ಮೂಲದ ಅನಿವಾಸಿಗಳ ವಿರುದ್ಧ ಇತರ ದೇಶಗಳೂ ಇದೇ ಮಾದರಿಯನ್ನು ಅನುಸರಿಸುವ ದಿನ ದೂರವಿಲ್ಲ.

ವಾರ್ತಾ ಭಾರತಿ 16 Feb 2026 6:49 am

ಲಕ್ಷಾಂತರ ಭಕ್ತಸಾಗರದ ನಡುವೆ ಆರ್ಟ್ ಆಫ್ ಲಿವಿಂಗ್ ಅಂತಾರಾಷ್ಟ್ರೀಯ ಕೇಂದ್ರದಲ್ಲಿ ಮಹಾಶಿವರಾತ್ರಿ ಮಹೋತ್ಸವ

ಆರ್ಟ್ ಆಫ್ ಲಿವಿಂಗ್ ಅಂತಾರಾಷ್ಟ್ರೀಯ ಕೇಂದ್ರದಲ್ಲಿ ನಿನ್ನೆ (ಫೆ.15-ಭಾನುವಾರ) ಮಹಾಶಿವರಾತ್ರಿ ಉತ್ಸವವನ್ನು ಅದ್ದೂರಿಯಾಗಿ ಆಚರಿಸಲಾಯಿತು. ಗುರುದೇವ್‌ ಶ್ರೀ ರವಿ ಶಂಕರ್‌ ಅವರ ಸಾನಿಧ್ಯದಲ್ಲಿ ನಡೆದ ಈ ಉತ್ಸವದಲ್ಲಿ ಲಕ್ಷಾಂತರ ಭಕ್ತರು ಭಾಗವಹಿಸಿದ್ದರು. ಈ ವೇಳೆ ಮಾತನಾಡಿದ ರವಿ ಶಂಕರ್‌ ಅವರು, ಮಹಾಶಿವರಾತ್ರಿಯನ್ನು “ಆತ್ಮವು ಭೌತಿಕತೆಯನ್ನು ಮೀರಿ ದೈವಿಕತೆಯತ್ತ ಏರಿಹೋಗುವ ಕ್ಷಣ” ಎಂದು ಬಣ್ಣಿಸಿದರು. ಇದೇ ವೇಳೆ ಭಕ್ತರಿಗೆ ಮೂಲ ಸೋಮನಾಥ ಜ್ಯೋತಿರ್ಲಿಂಗದ ಇತ್ತೀಚೆಗೆ ಪತ್ತೆಯಾದ ಅವಶೇಷಗಳ ದರ್ಶನದ ಭಾಗ್ಯ ದೊರೆತಿದ್ದು ವಿಶೇಷವಾಗಿತ್ತು.

ವಿಜಯ ಕರ್ನಾಟಕ 16 Feb 2026 6:15 am

ಭಾರತ vs ಪಾಕಿಸ್ತಾನ ಫಲಿತಾಂಶ ಯಾವಾಗಲೂ ಒಂದೇ; ʻಬಾಪ್‌, ಬಾಪ್‌ ಹೋತಾ ಹೈʼ ಎಂದ ಅಮಿತ್‌ ಶಾ!

ಶ್ರೀಲಂಕಾದ ಕೊಲೊಂಬೊದಲ್ಲಿರುವ ಪ್ರೇಮದಾಸ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಭಾರತ vs ಪಾಕಿಸ್ತಾನ ಟಿ-20 ಪಂದ್ಯ, ಕ್ರಿಕೆಟ್‌ ಮೈದಾನದಲ್ಲಿ ಭಾರತದ ಸಾರ್ವಭೌಮತ್ವವನ್ನು ಮತ್ತೊಮ್ಮೆ ಸಾಬೀತುಪಡಿಸಿದೆ. ಐಸಿಸಿ ಪಂದ್ಯಾವಳಿಗಳಲ್ಲಿ ಪಾಕಿಸ್ತಾನ ವಿರುದ್ಧ ಗೆಲುವಿನ ನಾಗಾಲೋಟ ಮುಂದುವರೆಸಿರುವ ಭಾರತ, 8-1 ಅಂತರದ ಗೆಲುವಿನ ಮೂಲಕ ಬಾಪ್‌, ಬಾಪ್‌ ಹೋತಾ ಹೈ ಎಂಬುದನ್ನು ಸಾರಿ ಹೇಳಿದೆ. ಕೇಂದ್ರ ಗೃಹ ಸಚಿವ ಅಮಿತ್‌ ಶಾ ಕೂಡ ಟೀಂ ಇಂಡಿಯಾಗೆ ಅಭಿನಂದನೆ ಸಲ್ಲಿಸಿದ್ದು, ತಮ್ಮ ಎಕ್ಸ್‌ ಪೋಸ್ಟ್‌ನಲ್ಲಿ ಪಾಕಿಸ್ತಾನದ ಕಾಲೆಳೆದಿದ್ದಾರೆ.

ವಿಜಯ ಕರ್ನಾಟಕ 16 Feb 2026 5:31 am

ಪಾಕ್ ಹೀನಾಯ ಸೋಲಿಗೆ ಜಾಲತಾಣಗಳಲ್ಲಿ ಮೂದಲಿಕೆ; ಡ್ಯಾನಿಶ್ ಕನೇರಿಯಾ ಒನ್ ಲೈನ್ ಟ್ವೀಟ್ ಈಗ ವೈರಲ್!

ಪಾಕಿಸ್ತಾನ ತಂಡ ಭಾರತದ ವಿರುದ್ಧ ಹೀನಾಯ ಸೋಲು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಚರ್ಚೆಯ ಸಂಗತಿಯಾಗಿಬಿಟ್ಟಿದೆ. ಅನೇಕ ಮಾಜಿ ಕ್ರಿಕೆಟಿಗರು, ಕ್ರಿಕೆಟ್ ತಜ್ಞರು, ಕ್ರಿಕೆಟ್ ಪ್ರೇಮಿಗಳು ಈ ಬಗ್ಗೆ ತರಹೇವಾರಿ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಇನ್ನು ಟ್ರೋಲಿಗರಿಗಂತೂ ಪಾಕ್ ತಂಡದ ಸೋಲು ಬಹಳ ದೊಡ್ಡ ಆಹಾರ ಆಗಿ ಬಿಟ್ಟಿದೆ. ಏತನ್ಮಧ್ಯೆ ಪಾಕಿಸ್ತಾನ ತಂಡದ ಮಾಜಿ ಸ್ಪಿನ್ನರ್ ಡ್ಯಾನಿಶ್ ಕನೇರಿಯಾ ಅವರು ಮಾಡಿರುವ ಕೇವಲ ಒಂದೇ ವಾಕ್ಯದ ಎಕ್ಸ್ ಪೋಸ್ಟ್ ತೀವ್ರ ವೈರಲ್ ಆಗಿದೆ. ಅವರು ನೇರವಾಗಿ ಪಾಕಿಸ್ತಾನ ಹೀಗೆ ಸೋಲುವುದಕ್ಕಿಂತ ಬಹಿಷ್ಕಾರಕ್ಕೇ ಅಂಟಿಕೊಂಡಿದ್ದರೇ ಚೆನ್ನಾಗಿರುತ್ತಿತ್ತು ಎಂದು ಅಭಿಪ್ರಾಯಪಟ್ಟಿದ್ದಾರೆ. ಈ ವಿಚಾರವಾಗಿ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ `ಹೀಗೆ ಸೋಲನುಭವಿಸಿ ಮುಜುಗರಕ್ಕೊಳಗಾಗುವುದಕ್ಕಿಂತ ಪಾಕಿಸ್ತಾನ ತಂಡ ಪಂದ್ಯ ಬಹಿಷ್ಕಾರ ಮಾಡಿದ್ದರೇ ಚೆನ್ನಾಗಿರುತ್ತಿತ್ತು' ಎಂದು ಕಾಲೆಳೆಧಿದ್ದಾರೆ. ಅದಕ್ಕೆ ಬಾರೀ ಪ್ರತಿಕ್ರಿಯೆ ವ್ಯಕ್ತವಾಗಿದೆ. ಒಬ್ಬ ನೆಟ್ಟಿಗರು ಸದ್ಯದ ಪರಿಸ್ಥಿತಿಯಲ್ಲಿ ಪಾಕಿಸ್ತಾನ ತಂಡ ಭಾರತದ ವಿರುದ್ಧ ಸೋಲುವುದರ ಬದಲಾಗಿ ಪಂದ್ಯವನ್ನು ಬಾಯ್ಕಾಟ್ ಮಾಡಿದರೇ ಉತ್ತಮ ಎಂದು ಅಭಿಪ್ರಾಯಪಟ್ಟಿದ್ದಾರೆ. ಮತ್ತೊಬ್ಬರು ` ತೆಗೆದುಕೊಂಡದ್ದಕ್ಕಾಗಿ ಪಾಕಿಸ್ತಾನ ತಂಡ ಈಗ ದೂಷಿಸಬೇಕಷ್ಟೇ'' ಎಂದು ಕುಟುಕಿದ್ದಾರೆ. ಡ್ಯಾನಿಶ್ ಕನೇರಿಯಾ ಅವರು ಎಂದಿನಂತೆ ಪಾಕಿಸ್ತಾನವನ್ನು ಹುರಿಯುತ್ತಿದ್ದಾರೆ ಎಂಬುದು ಮತ್ತೊಂದು ಹಾಸ್ಯಮಿಶ್ರಿತ ಅಭಿಪ್ಪಾಯವಾಗಿದೆ. ಟ್ರಂಪ್ ಮಧ್ಯಸ್ಥಿಕೆ ಇವೆಲ್ಲದರ ಮಧ್ಯೆ ಪಾಕಿಸ್ತಾನದ ಈ ಸೋಲಿಗೆ ಅಫ್ಘಾನಿಸ್ತಾನದಲ್ಲಿ ಸಂಭ್ರಮಾಚರಣೆ ನಡೆಯುತ್ತಿದೆ ಎಂದು ಪ್ರತಿಕ್ರಿಯಿಸಿದ್ದಾರೆ. ಇದಕ್ಕಿಂತಲೂ ಗಮ್ಮತ್ತು ಎಂದರೆ ಟ್ರಂಪ್ ವಿಚಾರ ಬಂದಿರುವುದು. ತಂಡ 6 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದ್ದರೆ, ಅಮೆರಿಕ 4 ಅಂಕಗಳೊಂದಿಗೆ 2ನೇ ಸ್ಥಾನದಲ್ಲಿದೆ. ಅಷ್ಟೇ ಅಂಕ ಹೊಂದಿದ್ದರೂ ರನ್ ರೇಟ್ ಕಡಿಮೆ ಇರುವ ಪಾಕಿಸ್ತಾನ ತಂಡ 3ನೇ ಸ್ಥಾನಿಯಾಗಿದೆ. ಹೀಗಾಗಿ ಭಾರತ ಮತ್ತು ಪಾಕಿಸ್ತಾನದ ಮಧ್ಯೆ ಟ್ರಂಪ್ ಮಧ್ಯಸ್ಥಿಕೆ ವಹಿಸಿದ್ದಾರೆ ಎಂದು ಒಬ್ಬರು ಕಾಲೆಳೆದಿದ್ದಾರೆ. ಟಿ20 ವಿಶ್ವಕಪ್ ಪ್ರಾರಂಭಕ್ಕೂ ಮುನ್ನ ಫೆಬ್ರವರಿ 15ರಂದು ಭಾರತದ ವಿರುದ್ಧ ಎ ಗುಂಪಿನ ಪಂದ್ಯವನ್ನು ಬಹಿಷ್ಕರಿಸುವುದಾಗಿ ಪಾಕಿಸ್ತಾನ ಘೋಷಿಸಿತ್ತು. ಬಾಂಗ್ಲಾದೇಶವನ್ನು ಟೂರ್ನಿಯಿಂದ ಹೊರಗಿಟ್ಟದ್ದನ್ನು ವಿರೋಧಿಸಿ ಈ ಕ್ರಮಕ್ಕೆ ಮುಂದಾಗಿತು. ಆದರೆ ತನ್ನ ಈ ನಿರ್ಧಾರವನ್ನು ಐಸಿಸಿಗೆ ಲಿಖಿತ ರೂಪದಲ್ಲಿ ನೀಡಿರಲಿಲ್ಲ. ಇನ್ನೇನು ಪಂದ್ಯ ಶುರುವಾಗಲು ಒಂದು ವಾರ ಇರುವಾಗ ಲಾಹೋರ್ ನಲ್ಲಿ ಐಸಿಸಿ, ಬಿಸಿಬಿ ಮತ್ತು ಪಿಸಿಬಿ ಅಧಿಕಾರಿಗಳು ಕುಳಿದು ದೀರ್ಘಕಾಲ ಸಭೆ ನಡೆಸಿದರು. ಈ ಸಭೆಯ ಬಳಿಕ ಪಾಕಿಸ್ತಾನ ತಂಡ ಭಾರತದ ವಿರುದ್ಧ ಆಡುವುದಾಗಿ ಪಾಕಿಸ್ತಾನ ಸರ್ಕಾರವೇ ಘೋಷಿಸಿತು. ಕ್ರಿಕೆಟ್ ನ ಒಳಿತಿಗಾಗಿ ತಾನು ಈ ನಿರ್ಧಾರ ಕೈಗೊಂಡಿರುವುದಾಗಿಯೂ ತಿಳಿಸಿತು. ಭಾರತ ತಂಡ ಪುಲ್ವಾಮಾ ದಾಳಿಗೆ ಪ್ರತೀಕಾರವಾಗಿ ಶುರುಮಾಡಿದ್ದ ವನ್ನು ಕೊಲಂಬೊ ಪಂದ್ಯದಲ್ಲೂ ಮುಂದುವರಿಸುತ್ತಾ ಎಂಬ ಕುತೂಹಲ ಎಲ್ಲಿರಿಗೂ ಇತ್ತು. ಈ ಬಾರಿಯೂ ಸೂರ್ಯಕುಮಾರ್ ಯಾದವ್ ಅವರು ಪಾಕಿಸ್ತಾನ ತಂಡದ ನಾಯಕ ಸಲ್ಮಾನ್ ಅಲಿ ಆಘಾ ಅವರ ಹಸ್ತಲಾಘವ ಮಾಡಲೇ ಇಲ್ಲ.

ವಿಜಯ ಕರ್ನಾಟಕ 16 Feb 2026 1:43 am

‘ಕಬ್ಬಿಣದ ಕುದುರೆಗಳು’ ಅಧ್ಯಯನ ಆಸಕ್ತರಿಗೆ ಪಠ್ಯವಾಗುವ ಕೃತಿ : ಪ್ರೊ.ಬರಗೂರು ರಾಮಚಂದ್ರಪ್ಪ

ಬೆಂಗಳೂರು: ‘ಲೇಖಕ ಹನೂರು ಚನ್ನಪ್ಪರಚಿಸಿರುವ ‘ಕಬ್ಬಿಣದ ಕುದುರೆಗಳು’ ಕಾದಂಬರಿಯು ಭಾಷಾ ವಿಜ್ಞಾನ ಮತ್ತು ಸಾಮಾಜಿಕ ನೆಲೆಯ ದೃಷ್ಟಿಯಿಂದ ಅಧ್ಯಯನ ಆಸಕ್ತರಿಗೆ ಪಠ್ಯವಾಗುವ ಕೃತಿಯಾಗಿದೆ ಎಂದು ಹಿರಿಯ ಸಾಹಿತಿ ಪ್ರೊ.ಬರಗೂರು ರಾಮಚಂದ್ರಪ್ಪ ಅಭಿಪ್ರಾಯಪಟ್ಟಿದ್ದಾರೆ. ರವಿವಾರ ನಗರದ ಜ್ಞಾನಭಾರತಿ ಆವರಣದಲ್ಲಿರುವ ವೆಂಕಟಗಿರಿಗೌಡ ಸ್ಮಾರಕ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಹನೂರು ಚನ್ನಪ್ಪ ರಚಿಸಿರುವ ‘ಕಬ್ಬಿಣದ ಕುದುರೆಗಳು’ ಕಾದಂಬರಿ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕನ್ನಡ ಕಥನ ಕ್ಷೇತ್ರದಲ್ಲಿ ನಡೆಯುತ್ತಿರುವ ಪ್ರಯೋಗಗಳ ಒಂದು ಮಾದರಿಯಾಗಿ ಕೃತಿಯನ್ನು ನೋಡಬೇಕಾಗುತ್ತದೆ. ಕಾದಂಬರಿ ಕ್ಷೇತ್ರ ವೈವಿಧ್ಯಮಯವಾದದ್ದು ಎಂದರು. ಅಭಿವ್ಯಕ್ತಿಯ ವಿನ್ಯಾಸದಲ್ಲಿ ನಿರೂಪಣೆ ತಂತ್ರ ಮತ್ತು ಭಾಷಾ ವೈವಿಧ್ಯತೆ ಸೇರಿರುತ್ತದೆ. ಈ ಹಿನ್ನೆಲೆಯಲ್ಲಿ ಕನ್ನಡ ಕಾದಂಬರಿ ಪ್ರಪಂಚ ಎಲ್ಲ ರೀತಿಯ ಮಾದರಿಗಳನ್ನು ತನ್ನಲ್ಲಿ ಅಂತರ್ಗತ ಮಾಡಿಕೊಂಡು ವಿಕಾಸಹೊಂದಿದ, ಬೆಳೆದಂತ, ಕೆಲವೊಮ್ಮೆ ಸ್ಥಿತ್ಯಂತರಕ್ಕೆ ಕಾರಣವಾದಂತ ಕ್ಷೇತ್ರವಾಗಿದೆ. ಕೆಲವು ಪ್ರಯೋಗಗಳು ಮ್ಯೂಸಿಯಂ ಮಾದರಿಯಲ್ಲಿರುತ್ತದೆ. ಪ್ರಾದೇಶಿಕತೆ ತೋರಿಸುತ್ತೇವೆಂದು ಹೇಳಿ ಪ್ರಜ್ಞಾಪೂರ್ವಕವಾಗಿ ಕೆಲವರು ಹಳ್ಳಿ ಭಾಷೆೆಯನ್ನು ಬಳಸುವಂತಹ ಕವಿಗಳು, ಕಾದಂಬರಿಕಾರರು ನಮ್ಮಲ್ಲಿದ್ದಾರೆ ಎಂದು ಬರಗೂರು ರಾಮಚಂದ್ರಪ್ಪತಿಳಿಸಿದರು. ಎಲ್ಲಿ ಬದುಕು ಸ್ಥಗಿತವಾಗಿರುವುದನ್ನು ಹೇಳುತ್ತದೋ ಅಂತಹ ಕೃತಿಗಳು ಮ್ಯೂಸಿಯಂ ಮಾದರಿಯಲ್ಲಿರುತ್ತದೆ. ಎಲ್ಲಿ ಬದುಕಿನ ಚಲನಶೀಲತೆಯನ್ನು ಗ್ರಹಿಸಿ, ಆ ಬುದಕಿನ ಚಲನಶೀಲತೆಯನ್ನು ತನ್ನ ಆತ್ಮಶಕ್ತಿಯಾಗಿ ಪಡೆದುಕೊಂಡಿರುತ್ತದೊ, ಅಂತಹ ಕಾದಂಬರಿಗಳು ಪ್ರಯೋಗಗಳಾಗಿ ಮಾತ್ರ ಉಳಿಯುವುದಿಲ್ಲ. ಯಾವಾಗ ಶಕ್ತಿ ರಾಜಕಾರಣ ಸಾಹಿತ್ಯ ಕ್ಷೇತ್ರದ ವಿಮರ್ಶಾ ಮಾನದಂಡಗಳಾಗಿ ರೂಪುಗೊಳ್ಳುತ್ತದೊ, ಅಂತಹ ಸಂದರ್ಭದಲ್ಲಿ ನಿಜವಾದ ಸಾಹಿತ್ಯ ಕೃತಿಗಳ ಬಗ್ಗೆ ನಡೆಯಬೇಕಾದ ಚರ್ಚೆ ಅದೆಲ್ಲವೂ ನಿರ್ಲಕ್ಷಕ್ಕೆ ಒಳಗಾಗುತ್ತದೆ ಎಂದು ಅವರು ಹೇಳಿದರು. ಪ್ರಯೋಗಗಳೇ ಪರಂಪರೆಯಾದಾಗ ಅದಕ್ಕೆ ಸಾಹಿತ್ಯ ಕ್ಷೇತ್ರದಲ್ಲಿ ಒಂದು ಗಟ್ಟಿಯಾದ ನೆಲೆಯಿರುತ್ತದೆ. ಪ್ರಯೋಗ ಪ್ರಯೋಗಕ್ಕಷ್ಟೇ ಸೀಮಿತವಾದರೆ, ಅದು ತಾತ್ಕಾಲಿಕವಾಗಿರುತ್ತದೆ. ಆದರೆ ಅದಕ್ಕೆ ನಿರಂತರತೆ ಇರುವುದಿಲ್ಲ. ಆದರೆ ನಿಜವಾದ ಪ್ರಯೋಗಗಳು ಒಂದು ಪರಂಪರೆಯಾಗುವ ಶಕ್ತಿಯನ್ನು ಪಡೆದುಕೊಳ್ಳಬೇಕಾಗಿರುತ್ತದೆ. ಕನ್ನಡ ಕಾದಂಬರಿ ಕ್ಷೇತ್ರ ಎಷ್ಟು ಪ್ರಯೋಗ ಶೀಲವಾಗಿದೆ ಎಂದರೆ ಸರಳತೆಯಿಂದಲೇ ಸಂಕೀರ್ಣ ವಿಷಯಗಳನ್ನು ಹೇಳಿದ ಕಾದಂಬರಿಗಳು ನಮ್ಮಲ್ಲಿ ಇದ್ದಾವೆ ಎಂದು ಬರಗೂರು ರಾಮಚಂದ್ರಪ್ಪ ನುಡಿದರು. ಕಾರ್ಯಕ್ರಮದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಆಯುಕ್ತ ಕೆ.ಎ.ದಯಾನಂದ, ಅಂಕಣಕಾರ ರಘುನಾಥ್ ಚ.ಹ., ಸಾಹಿತ್ಯ ಅಕಾಡಮಿ ಅಧ್ಯಕ್ಷ ಎಲ್.ಎನ್.ಮುಕುಂದರಾಜ್, ಕೃತಿಕಾರ ಹನೂರು ಚನ್ನಪ್ಪ ಭಾಗವಹಿಸಿದ್ದರು.

ವಾರ್ತಾ ಭಾರತಿ 16 Feb 2026 12:51 am

ಶ್ರೀನಿವಾಸ ಜೋಕಟ್ಟೆಯವರ ‘ಅದೆಲ್ಲಾ ಬಿಟ್ಟು’ ಕೃತಿಗೆ ʼಕೆ.ವಾಸುದೇವಾಚಾರ್ ದತ್ತಿ ಪ್ರಶಸ್ತಿʼ

ಬೆಂಗಳೂರು : ಪತ್ರಕರ್ತ ಶ್ರೀನಿವಾಸ ಜೋಕಟ್ಟೆ ಅವರು ರಚಿಸಿರುವ ‘ಅದೆಲ್ಲಾ ಬಿಟ್ಟು’ ಕಥಾಸಂಕಲನಕ್ಕೆ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ ನೀಡುವ ಕೆ.ವಾಸುದೇವಾಚಾರ್ ದತ್ತಿ ಪ್ರಶಸ್ತಿಗೆ ಆಯ್ಕೆಯಾಗಿದೆ. ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ ಬೆಂಗಳೂರು ಇವರು ಜನವರಿಯಿಂದ ಡಿಸೆಂಬರ್ 2024ರ ಅಂತ್ಯದವರೆಗೆ ಪ್ರಕಟವಾದ ಒಟ್ಟು 54 ಪ್ರಕಾರದ ದತ್ತಿಗಳ 58 ಪ್ರಶಸ್ತಿಗಳಿಗೆ ಕೃತಿಗಳನ್ನು ಬರಹಗಾರರಿಂದ ಆಹ್ವಾನಿಸಿದ್ದರು. ರಾಜ್ಯ, ದೇಶ ಮತ್ತು ವಿದೇಶಗಳಿಂದ ಸುಮಾರು 900 ಕೃತಿಗಳು ಸ್ಪರ್ಧೆಗೆ ಬಂದಿದ್ದು, ಸಾಹಿತಿ ಡಾ.ಕೆ.ಮರುಳಸಿದ್ದಪ್ಪ ಅವರ ಅಧ್ಯಕ್ಷತೆಯಲ್ಲಿ 19 ಜನ ಪರಿಣಿತ ಸದಸ್ಯರನ್ನೊಳಗೊಂಡ ಸಮಿತಿಯಲ್ಲಿ ಆಯಾ ಪ್ರಕಾರಗಳಲ್ಲಿ ವಿದ್ವತ್ ಹೊಂದಿದ ಸದಸ್ಯರ 5 ತಂಡಗಳನ್ನು ರಚಿಸಿ ಪುಸ್ತಕಗಳನ್ನು ಆಯ್ಕೆ ಮಾಡಲಾಗಿದೆ. ಶ್ರೀನಿವಾಸ ಜೋಕಟ್ಟೆ ಈಗಾಗಲೇ 46 ಕೃತಿಗಳನ್ನು ಪ್ರಕಟಿಸಿದ್ದು, ಅವರ ಏಳು ಕೃತಿಗಳಿಗೆ ಈ ತನಕ ವಿವಿಧ ಪ್ರಶಸ್ತಿಗಳು ದೊರೆತಿವೆ. ಮಂಗಳೂರು ವಿವಿ ದ್ವಿತೀಯ ಬಿಕಾಂ ಪಠ್ಯದಲ್ಲೂ ಇವರ ಕತೆ ಆಯ್ಕೆಯಾಗಿತ್ತು. ಕರ್ನಾಟಕ ಸಾಹಿತ್ಯ ಅಕಾಡಮಿ ಪುಸ್ತಕ ಪ್ರಶಸ್ತಿ, ವರ್ಧಮಾನ ಸಾಹಿತ್ಯ ಪ್ರಶಸ್ತಿ, ಸಾಹಿತ್ಯಸೇತು ಪ್ರಶಸ್ತಿ, ವಿಶ್ವೇಶ್ವರಯ್ಯ ರಾಷ್ಟ್ರೀಯ ಸಾಹಿತ್ಯ ಪ್ರಶಸ್ತಿ, ವಿಕಾಸ ಪುಸ್ತಕ ಬಹುಮಾನ, ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನದ ಸಾಹಿತ್ಯ ಪ್ರಶಸ್ತಿ, ಇದೀಗ ಕಸಾಪದ ಕೆ.ವಾಸುದೇವಾಚಾರ್ ದತ್ತಿ ಪ್ರಶಸ್ತಿ ದೊರೆತಿದೆ ಎಂದು ಆಡಳಿತಾಧಿಕಾರಿ ಕೆ.ಎಂ.ಗಾಯಿತ್ರಿ ಮಾಹಿತಿ ನೀಡಿದ್ದಾರೆ.

ವಾರ್ತಾ ಭಾರತಿ 16 Feb 2026 12:47 am

ರಣಜಿ ಟ್ರೋಫಿ ಮೊದಲ ಸೆಮಿ ಫೈನಲ್: ಉತ್ತರಾಖಂಡ ವಿರುದ್ಧ ಕರ್ನಾಟಕಕ್ಕೆ 355/2

ಲಕ್ನೊ, ಫೆ.15: ನಾಯಕ ದೇವದತ್ತ ಪಡಿಕ್ಕಲ್(ಔಟಾಗದೆ 148, 236 ಎಸೆತ, 16 ಬೌಂಡರಿ, 2 ಸಿಕ್ಸರ್)ಹಾಗೂ ಕೆ.ಎಲ್.ರಾಹುಲ್(141 ರನ್, 211 ಎಸೆತ, 11 ಬೌಂಡರಿ, 5 ಸಿಕ್ಸರ್)ಶತಕಗಳ ಸಹಾಯದಿಂದ ಕರ್ನಾಟಕ ಕ್ರಿಕೆಟ್ ತಂಡ ಉತ್ತರಾಖಂಡ ವಿರುದ್ಧ ರಣಜಿ ಟ್ರೋಫಿ ಟೂರ್ನಿಯ ಮೊದಲ ಸೆಮಿ ಫೈನಲ್ ಪಂದ್ಯದಲ್ಲಿ ಬೃಹತ್ ರನ್ ಗಳಿಸುವತ್ತ ದಿಟ್ಟ ಹೆಜ್ಜೆ ಇಟ್ಟಿದೆ. ರವಿವಾರ ಟಾಸ್ ಸೋತು ಮೊದಲು ಬ್ಯಾಟಿಂಗ್ಗೆ ಇಳಿಸಲ್ಪಟ್ಟ ಕರ್ನಾಟಕ ತಂಡ ಮೊದಲ ದಿನದಾಟದಂತ್ಯಕ್ಕೆ 90 ಓವರ್ಗಳಲ್ಲಿ 2 ವಿಕೆಟ್ಗಳ ನಷ್ಟಕ್ಕೆ 355 ರನ್ ಗಳಿಸಿದೆ. ಕರ್ನಾಟಕ ತಂಡವು 9ನೇ ಓವರ್ನಲ್ಲಿ 18 ರನ್ ಗಳಿಸುವಷ್ಟರಲ್ಲಿ ಆರಂಭಿಕ ಬ್ಯಾಟರ್ ಮಯಾಂಕ್ ಅಗರ್ವಾಲ್(5 ರನ್)ವಿಕೆಟನ್ನು ಕಳೆದುಕೊಂಡಿತು. ಆಗ ಎರಡನೇ ವಿಕೆಟ್ಗೆ 278 ರನ್ ಜೊತೆಯಾಟ ನಡೆಸಿದ ರಾಹುಲ್ ಹಾಗೂ ಪಡಿಕ್ಕಲ್ ತಂಡವನ್ನು ಆಧರಿಸಿದರು. 2005-06ರ ಋತುವಿನ ನಂತರ ಕರ್ನಾಟಕ ತಂಡವು ಎರಡನೇ ವಿಕೆಟ್ಗೆ ಎರಡನೇ ಗರಿಷ್ಠ ಜೊತೆಯಾಟ ನಡೆಸಿದೆ. ಆಫ್ ಸ್ಪಿನ್ನರ್ ಅವ್ನೀಶ್ ಸುಧಾ ಎಸೆತದಲ್ಲಿ ಒಂದು ರನ್ ಗಳಿಸಿದ ರಾಹುಲ್ ಪ್ರಸಕ್ತ ಋತುವಿನಲ್ಲಿ ಸತತ ಎರಡನೇ ಶತಕ ದಾಖಲಿಸಿದರು. ಕರ್ನಾಟಕದ ಮಾಜಿ ಎಡಗೈ ಸ್ಪಿನ್ನರ್ ಜೆ.ಸುಚಿತ್ ಬೌಲಿಂಗ್ನಲ್ಲಿ ಸಿಕ್ಸರ್ ಸಿಡಿಸಿದ ಪಡಿಕ್ಕಲ್ ಶತಕ ಪೂರೈಸಿದರು. 75ನೇ ಓವರ್ನಲ್ಲಿ ರಾಹುಲ್ ವಿಕೆಟ್ ಒಪ್ಪಿಸಿದರು. ಮೂರನೇ ವಿಕೆಟ್‌ಗೆ ಮುರಿಯದ ಜೊತೆಯಾಟದಲ್ಲಿ 59 ರನ್ ಸೇರಿಸಿದ ಪಡಿಕ್ಕಲ್ ಹಾಗೂ ಕರುಣ್ ನಾಯರ್(ಔಟಾಗದೆ 37 ರನ್, 65 ಎಸೆತ, 5 ಬೌಂಡರಿ, 1 ಸಿಕ್ಸರ್)ಕ್ರೀಸ್ ಕಾಯ್ದುಕೊಂಡಿದ್ದಾರೆ. ಕರ್ನಾಟಕದ ಮೊತ್ತವನ್ನು 355ಕ್ಕೆ ತಲುಪಿಸಿದ್ದಾರೆ. ಉತ್ತರಾಖಂಡ ತಂಡದ ಪರ 18ರ ವಯಸ್ಸಿನ ಆದಿತ್ಯ ರಾವತ್ (2-73)ಯಶಸ್ವಿ ಪ್ರದರ್ಶನ ನೀಡಿದರು. ಎರಡನೇ ಸೆಮಿ ಫೈನಲ್: ಸುದೀಪ್ ಶತಕ, ಬಂಗಾಳ 249/5 ಸುದೀಪ್ ಕುಮಾರ್ ಘರಮಿ(ಔಟಾಗದೆ 136, 227 ಎಸೆತ, 19 ಬೌಂಡರಿ, 1 ಸಿಕ್ಸರ್)ಭರ್ಜರಿ ಶತಕದ ಸಹಾಯದಿಂದ ಬಂಗಾಳ ಕ್ರಿಕೆಟ್ ತಂಡವು ರಣಜಿ ಟ್ರೋಫಿ ಟೂರ್ನಿಯ ಎರಡನೇ ಸೆಮಿ ಫೈನಲ್ ಪಂದ್ಯದಲ್ಲಿ ಜಮ್ಮು-ಕಾಶ್ಮೀರ ತಂಡದ ವಿರುದ್ಧ 5 ವಿಕೆಟ್ಗಳ ನಷ್ಟಕ್ಕೆ 249 ರನ್ ಗಳಿಸಿದೆ. ಬಂಗಾಳ ತಂಡ ಆರಂಭಿಕ ಆಟಗಾರ ಸುದೀಪ್ ಚಟರ್ಜಿ(0)ವಿಕೆಟನ್ನು ಬೇಗನೆ ಕಳೆದುಕೊಂಡಿತು. ಆಗ ಎರಡನೇ ವಿಕೆಟ್ಗೆ 85 ರನ್ ಸೇರಿಸಿದ ಸುದೀಪ ಕುಮಾರ್ ಹಾಗೂ ನಾಯಕ ಅಭಿಮನ್ಯು ಈಶ್ವರನ್(49 ರನ್, 96 ಎಸೆತ, 6 ಬೌಂಡರಿ, 1 ಸಿಕ್ಸರ್)ತಂಡಕ್ಕೆ ಆಸರೆಯಾದರು. ಆದರೆ ಅಭಿಮನ್ಯು ಹಾಗೂ ಸೂರಜ್ ಸಿಂಗ್(0)ಬೆನ್ನುಬೆನ್ನಿಗೆ ಔಟಾದರು. ಅನುಸ್ತುಪ್ ಮಜುಂದಾರ್(14 ರನ್)ಹಾಗೂ ಶಹಬಾಝ್ ಅಹ್ಮದ್(42 ರನ್, 91 ಎಸೆತ)ಅವರೊಂದಿಗೆ ಕ್ರಮವಾಗಿ 55 ರನ್ ಹಾಗೂ 94 ರನ್ ಜೊತೆಯಾಟ ನಡೆಸಿದ ಸುದೀಪ್ ಕುಮಾರ್ ತಂಡದ ಮೊತ್ತವನ್ನು 249ಕ್ಕೆ ತಲುಪಿಸಿದರು. ಜಮ್ಮು-ಕಾಶ್ಮೀರದ ಆಕಿಬ್ ನಬಿ(2-48)ಹಾಗೂ ಸುನೀಲ್ ಕುಮಾರ್(2-31)ತಲಾ ಎರಡು ವಿಕೆಟ್ಗಳನ್ನು ಉರುಳಿಸಿದರು.

ವಾರ್ತಾ ಭಾರತಿ 16 Feb 2026 12:19 am

ಪಡಿತರ ವ್ಯವಸ್ಥೆಗೆ ‘ಡಿಜಿಟಲ್ ಕರೆನ್ಸಿ’ಯ ಸ್ಪರ್ಶ

ಹೊಸದಿಲ್ಲಿ : ಪಾರದರ್ಶಕತೆ ಮತ್ತು ತ್ವರಿತ ಸೇವೆಗಾಗಿ ಡಿಜಿಟಲೀಕರಣಕ್ಕೆ ಒತ್ತು ನೀಡಿರುವ ಕೇಂದ್ರ ಸರಕಾರ, ಇದೀಗ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯಲ್ಲಿ ಡಿಜಿಟಲೀಕರಣದ ಮೂಲಕ ಹೊಸದೊಂದು ಮುನ್ನುಡಿ ಬರೆದಿದೆ. ಪ್ರಧಾನಿ ಮೋದಿ ಮಾರ್ಗದರ್ಶನ ಹಾಗೂ ಕೇಂದ್ರ ಆಹಾರ ಸಚಿವ ಪ್ರಹ್ಲಾದ್ ಜೋಶಿಯವರ ದೂರದೃಷ್ಟಿಯಂತೆ ಈಗಾಗಲೇ ‘ಒನ್ ನೇಷನ್ ಒನ್ ರೇಷನ್ ಕಾರ್ಡ್’, ಅನ್ನಚಕ್ರ ಹೀಗೆ ವಿವಿಧ ಮಹತ್ವದ ಕಾರ್ಯಕ್ರಮ ಅನುಷ್ಠಾನಕ್ಕಿಳಿದ ಕೇಂದ್ರ ಸರಕಾರ, ಇದೀಗ ಇದೇ ಮೊದಲ ಬಾರಿ ಸೆಂಟ್ರಲ್ ಬ್ಯಾಂಕ್ ಡಿಜಿಟಲ್ ಕರೆನ್ಸಿ ಆಧಾರಿತವಾಗಿ ‘ಡಿಜಿಟಲ್ ಆಹಾರ ಕೂಪನ್ ವ್ಯವಸ್ಥೆ ರೂಪದಲ್ಲಿ ಮಹತ್ವದ ಮೈಲಿಗಲ್ಲು ಸ್ಥಾಪಿಸಿದೆ. ಕೆಲ ವರ್ಷಗಳಲ್ಲಿ ಕೇಂದ್ರ ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆ, ದೇಶದಲ್ಲಿ ಪಡಿತರ ವ್ಯವಸ್ಥೆಯ ಸಮಗ್ರ ಡಿಜಿಟಲ್ ರೂಪಾಂತರ ಕೈಗೊಂಡಿದ್ದು, ಪಾರದರ್ಶಕತೆ, ಪೋರ್ಟಬಿಲಿಟಿ ವ್ಯವಸ್ಥೆ ಪಡಿತರ ವಿತರಣೆಯನ್ನು ಅತ್ಯಂತ ಪಾರದರ್ಶಕ ಮತ್ತು ತ್ವರಿತಗೊಳಿಸಿದೆ. ಇದರಿಂದ ನ್ಯಾಯ ಬೆಲೆ ಅಂಗಡಿಯವರಿಗೆ ತಕ್ಷಣವೇ ಕಮಿಷನ್ ಹಂಚಿಕೆ, ಫಲಾನುಭವಿಗಳಿಗೆ ಕ್ಷಣಾರ್ಧದಲ್ಲೇ ರೇಷನ್ ವಿತರಣೆ...ಹೀಗೆ ಪಡಿತರದ ಸಂಪೂರ್ಣ ವ್ಯವಸ್ಥೆ ಡಿಜಿಟಲ್ ಕರೆನ್ಸಿಗೆ ರೂಪಾಂತರವಾಗಿ ಪಾರದರ್ಶಕತೆಯತ್ತ ಇಟ್ಟ ದಿಟ್ಟ ಹೆಜ್ಜೆಯಾಗಿ ಗುರುತಿಸಿಕೊಳ್ಳುತ್ತಿದೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಪಾತ್ರವೂ ಇದರಲ್ಲಿ ಅಡಕವಾಗಿದೆ ಎಂಬುದು ವಿಶೇಷ. ಎಲ್ಲೆಲ್ಲಿ ಯೋಜನೆ? ಭಾರತೀಯ ರಿಸರ್ವ್ ಬ್ಯಾಂಕ್ ಮತ್ತು ಗುಜರಾತ್ ರಾಜ್ಯ ಸರಕಾರದ ಸಹಯೋಗದೊಂದಿಗೆ ಸದ್ಯಕ್ಕೆ ಮೊದಲನೇ ಹಂತದಲ್ಲಿ ಅಹಮದಾಬಾದ್, ಆನಂದ್, ದಾಹೋದ್ ಮತ್ತು ಸಬರಮತಿ ಜಿಲ್ಲೆಗಳಲ್ಲಿ ಈ ‘ಡಿಜಿಟಲ್ ಆಹಾರ ಕರೆನ್ಸಿ’ ಪ್ರಾರಂಭವಾಗಿದೆ. ಮುಂದಿನ ಹಂತದಲ್ಲಿ ಪುದುಚೇರಿ, ಚಂಡೀಗಢ, ದಾದ್ರಾ ಮತ್ತು ನಗರ ಹವೇಲಿ ಕೇಂದ್ರಾಡಳಿತ ಪ್ರದೇಶಗಳಲ್ಲಿ ಪ್ರಾರಂಭಿಸಲಾಗುವುದು ಎಂದು ಸಚಿವ ಜೋಶಿ ಘೋಷಿಸಿದರು.

ವಾರ್ತಾ ಭಾರತಿ 16 Feb 2026 12:17 am

ಮಹಿಳೆಯರ ಟಿ-20 ಪಂದ್ಯ : ಆಸ್ಟ್ರೇಲಿಯ ವಿರುದ್ಧ ಭಾರತಕ್ಕೆ ಜಯ

ಸಿಡ್ನಿ, ಫೆ.15: ಮಳೆಬಾಧಿತ ಮೊದಲ ಮಹಿಳೆಯರ ಟಿ-20 ಪಂದ್ಯದಲ್ಲಿ ಭಾರತ ಕ್ರಿಕೆಟ್ ತಂಡವು ಆತಿಥೇಯ ಆಸ್ಟ್ರೇಲಿಯ ತಂಡವನ್ನು ಡಿಎಲ್ಎಸ್ ನಿಯಮದಡಿ 21 ರನ್‌ಗಳ ಅಂತರದಿಂದ ಮಣಿಸಿತು. ರವಿವಾರ ನಡೆದ ಪಂದ್ಯದಲ್ಲಿ ಆಸ್ಟ್ರೇಲಿಯ ತಂಡವನ್ನು 133 ರನ್ಗಳಿಗೆ ನಿಯಂತ್ರಿಸಿದ ಭಾರತ ತಂಡವು ರನ್ ಚೇಸ್ ವೇಳೆ 5.1 ಓವರ್ಗಳಲ್ಲಿ 1 ವಿಕೆಟ್ ನಷ್ಟಕ್ಕೆ 50 ರನ್ ಗಳಿಸಿದಾಗ ಪಂದ್ಯಕ್ಕೆ ಮಳೆ ಅಡ್ಡಿಯಾಯಿತು. ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ಮೊದಲು ಫೀಲ್ಡಿಂಗ್ ಆಯ್ದುಕೊಂಡ ಭಾರತ ತಂಡವು ಪರಿಣಮಕಾರಿ ಬೌಲಿಂಗ್ ಮಾಡಿ ಆತಿಥೇಯರನ್ನು ಕಟ್ಟಿ ಹಾಕಿತು. ನಾಲ್ಕು ವಿಕೆಟ್ ಗೊಂಚಲು ಪಡೆದ ಅರುಂಧತಿ ರೆಡ್ಡಿ (4-22)ಬೌಲಿಂಗ್ ದಾಳಿಯ ಸಾರಥ್ಯ ವಹಿಸಿದರು. ಆಸ್ಟ್ರೇಲಿಯವು 18 ಓವರ್ಗಳಲ್ಲಿ ಗಂಟುಮೂಟೆ ಕಟ್ಟಿತು. ಬೆಥ್ ಮೂನಿ(5 ರನ್) ಅವರು ರೇಣುಕಾ ಸಿಂಗ್ ಬೌಲಿಂಗ್‌ನಲ್ಲಿ ವಿಕೆಟ್ ಒಪ್ಪಿಸಿದರು. ಜಾರ್ಜಿಯಾ ವೊಲ್(18 ರನ್, 10 ಎಸೆತ) ಉತ್ತಮ ಆರಂಭ ಸದುಪಯೋಗಪಡಿಸಿಕೊಳ್ಳುವಲ್ಲಿ ವಿಫಲರಾದರು. ಅಂತರ್ರಾಷ್ಟ್ರೀಯ ಕ್ರಿಕೆಟ್‌ನಲ್ಲಿ 20ನೇ ವರ್ಷಕ್ಕೆ ಕಾಲಿಟ್ಟಿರುವ ಎಲ್ಲಿಸ್ ಪೆರ್ರಿ (20 ರನ್) ಅವರು ಲಿಚ್ಫೀಲ್ಡ್ (26 ರನ್) ಅವರೊಂದಿಗೆ ಐದನೇ ವಿಕೆಟ್‌ಗೆ ನಿರ್ಣಾಯಕ 41 ರನ್ ಜೊತೆಯಾಟ ನಡೆಸಿದರು. ಗೆಲ್ಲಲು 134 ರನ್ ಬೆನ್ನಟ್ಟಿದ ಭಾರತ ಪರ ಶೆಫಾಲಿ ವರ್ಮಾ 11 ಎಸೆತಗಳಲ್ಲಿ 21 ರನ್ ಗಳಿಸಿದರು. ಜೋರಾಗಿ ಮಳೆ ಸುರಿದಾಗ ಸ್ಮತಿ ಮಂಧಾನ (ಔಟಾಗದೆ 16, 17 ಎಸೆತ) ಹಾಗೂ ಜೆಮಿಮಾ ರೋಡ್ರಿಗಸ್(ಔಟಾಗದೆ 9, 3 ಎಸೆ) ಒಂದು ವಿಕೆಟ್ ನಷ್ಟಕ್ಕೆ 50 ರನ್ ಕಲೆ ಹಾಕಿದರು. ಡಿಎಲ್ಎಸ್ ಲೆಕ್ಕಾಚಾರದ ಪ್ರಕಾರ ಮುನ್ನಡೆಯಲ್ಲಿತ್ತು.

ವಾರ್ತಾ ಭಾರತಿ 16 Feb 2026 12:17 am

ಪಾಕಿಸ್ತಾನ ವಿರುದ್ಧ ಮೂರನೇ ವೇಗದ ಅರ್ಧಶತಕ| ಯುವರಾಜ್ ಸಿಂಗ್ ದಾಖಲೆ ಮುರಿದ ಇಶಾನ್ ಕಿಶನ್

ಕೊಲಂಬೊ, ಫೆ.15: ಭಾರತ ಕ್ರಿಕೆಟ್ ತಂಡವು ಅರಂಭಿಕ ಆಟಗಾರ ಅಭಿಷೇಕ್ ಶರ್ಮಾರನ್ನು ಶೂನ್ಯಕ್ಕೆ ಕಳೆದುಕೊಂಡಾಗ ತಂಡವನ್ನು ಆಧರಿಸಿದ ಇನ್ನೋರ್ವ ಆರಂಭಿಕ ಆಟಗಾರ ಇಶಾನ್ ಕಿಶನ್ ಪಾಕಿಸ್ತಾನದ ವಿರುದ್ಧ ಟಿ-20 ಅಂತಾರಾಷ್ಟ್ರೀಯ ಪಂದ್ಯದಲ್ಲಿ ಮೂರನೇ ವೇಗದ ಅರ್ಧಶತಕ ಗಳಿಸಿ ಗಮನ ಸೆಳೆದರು. ಅಬ್ರಾರ್ ಅಹ್ಮದ್ ಎಸೆದ ಏಳನೇ ಓವರ್ನ ಎರಡನೇ ಎಸೆತವನ್ನು ಬೌಂಡರಿ ಗೆರೆ ದಾಟಿಸಿದ ಕಿಶನ್ 27 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಭಾರತ ತಂಡವು ಪವರ್ಪ್ಲೇ ಅಂತ್ಯದಲ್ಲಿ 1 ವಿಕೆಟ್ ನಷ್ಟಕ್ಕೆ 52 ರನ್ ಗಳಿಸಿತು. ಕಿಶನ್ ಮೊದಲ ಓವರ್‌ನ ಕೊನೆಯ ಎಸೆತದಲ್ಲಿ ವಿಕೆಟ್ ಒಪ್ಪಿಸಿದಾಗ ತಂಡವನ್ನು ಆಧರಿಸಿದ ಕಿಶನ್ 40 ಎಸೆತಗಳಲ್ಲಿ 77 ರನ್ ಗಳಿಸಿದರು.

ವಾರ್ತಾ ಭಾರತಿ 16 Feb 2026 12:03 am

ಪಾಕ್ ಗೆ ಮತ್ತೆ ಔಟ್ ಆಫ್ ಸಿಲಬಸ್ ಸಮಸ್ಯೆ! ಅಭಿಷೇಕ್ ಶರ್ಮಾ ಬೇಗ ಔಟಾದ್ರೂ ಕಬ್ಬಿಣದ ಕಡಲೆಯಾದ ಇಶಾನ್ ಕಿಶನ್

ಪಾಕಿಸ್ತಾನ ತಂಡಕ್ಕೆ ಈ ಔಟ್ ಆಫ್ ಸಿಲಬಸ್ ಸಮಸ್ಯೆ ಮುಗಿಯುವ ಲಕ್ಷಣ ಕಾಣಿಸುತ್ತಿಲ್ಲ. ಏಷ್ಯಾ ಕಪ್ ಪೈನಲ್ ಪಂದ್ಯದಲ್ಲಿ ಅಭಿಷೇಕ್ ಶರ್ಮಾಗೆ ವ್ಯೂಹ ರಚಿಸಿ ಯಶಸ್ವಿಯಾಗಿದ್ದ ಸಲ್ಮಾನ್ ಆಘಾ ಬಳಗಕ್ಕೆ ತಿಲಕ್ ವರ್ಮಾ ಆಘಾತ ನೀಡದ್ದರು. ಇದೀಗ ಟಿ20 ವಿಶ್ವಕಪ್ 2026ರ ಎ ಬಣದ ಲೀಗ್ ಪಂದ್ಯದಲ್ಲೂ ಪಾಕಿಸ್ತಾನಕ್ಕೆ ಭಯ ಇದ್ದುದು ಅಭಿಷೇಕ್ ಶರ್ಮಾ ಅವರ ಬಗ್ಗೆಯೇ. ಆದರೆ ಅದರ ಎಣಿಕೆಗೂ ಮೀರಿ ಪಂದ್ಯದ ಗತಿಯನ್ನೇ ಬದಲಾಯಿಸಿದ್ದು ಭಾರತದ ವಿಕೆಟ್ ಕೀಪರ್ ಬ್ಯಾಟರ್ ಇಶಾನ್ ಕಿಶನ್! ಕೊಲಂಬೊದಲ್ಲಿ ಭಾನುವಾರ ಸಂಜೆ ನಡೆದ ಪಂದ್ಯದಲ್ಲಿ ಕೇವಲ 40 ಎಸೆತಗಳಲ್ಲಿ 71 ರನ್ ಗಳಿಸಿದರು.10 ಬೌಂಡರಿ ಬಾರಿಸಿದ ಅವರು 3 ಬಾರಿ ಚೆಂಡನ್ನು ಸಿಕ್ಸರ್ ಗೆತ್ತಿದರು. ಅಭಿಷೇಕ್ ಶರ್ಮಾ ಅವರ ವಿಕೆಟ್ ಮೊದಲ ಓವರ್ ನಲ್ಲೇ ಬಿದ್ದರೂ ನಿರ್ಭೀತ ಬ್ಯಾಟಿಂಗ್ ಪ್ರದರ್ಶಿಸಿದ ಅವರು ಅರ್ಹವಾಗಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು. ಪಾಕಿಸ್ತಾನ ಅಭಿಷೇಕ್ ಶರ್ಮಾ ಅವರನ್ನು ಔಟ್ ಮಾಡಿದರೂ ಇಶಾನ್ ಕಿಶನ್ ಕಬ್ಬಿಣದ ಕಡಲೆಯಾದರು. () ಏಷ್ಯಾಕಪ್ ನಲ್ಲಿ ತಿಲಕ್ ವರ್ಮಾ! ನಿಮಗೆ ನೆನಪಿರಬಹುದು, ಕಳೆದ ವರ್ಷ ಏಷ್ಯಾ ಕಪ್ ಫೈನಲ್ ಪಂದ್ಯದಲ್ಲಿ ಪಾಕಿಸ್ತಾನ ತಂಡದ ಅರೆಕಾಲಿಕ ಮಧ್ಯಮ ವೇಗಿ ಫಹೀಮ್ ಅಶ್ರಫ್ ಅವರು 2ನೇ ಓವರ್ ನ ಮೊದಲ ಎಸೆತದಲ್ಲೇ 5 ರನ್ ಗಳಿಸಿದ್ದ ಅಭಿಷೇಕ್ ಶರ್ಮಾ ಅವರನ್ನು ಬೇಗನೇ ಔಟ್ ಮಾಡುವಲ್ಲಿ ಯಶಸ್ವಿಯಾಗಿತ್ತು. ಆಗಲೇ ಅದು ಅರ್ಧ ಪಂದ್ಯ ಗೆದ್ದ ಸಂಭ್ರಮದಲ್ಲಿತ್ತು. ಆದರೆ ಟಿ10 ಸ್ಪೆಷಲಿಸ್ಟ್ ಬ್ಯಾಟರ್ ತಿಲಕ್ ವರ್ಮಾ ಸಲ್ಮಾನ್ ಆಘಾ ಬಳಗ ಅಂದುಕೊಳ್ಳದ ರೀತಿಯಲ್ಲಿ ಆಡಿದರು. 53 ಎಸೆತಗಳಿಂದ ಅಜೇಯ 69 ರನ್ ಗಳಿಸಿ ಭಾರತ ತಂಡವನ್ನು ಗೆಲುವಿನ ದಡ ಸೇರಿಸಿದ್ದರು. ಇಶಾನ್ ಕಿಶನ್ ನಿರ್ಭೀತ ಬ್ಯಾಟಿಂಗ್ ಇದೀಗ ಟಿ20 ವಿಶ್ವಕಪ್ ಎ ಬಣದ ಪಂದ್ಯದಲ್ಲೂ ಅದೇ ರೀತಿ ನಡೆಯಿತು. ೆಪಾಕಿಸ್ತಾನ ತಂಡದ ನಾಯಕ ಸಲ್ಮಾನ್ ಆಘಾ ಅಭಿಷೇಕ್ ಶರ್ಮಾ ಅವರನ್ನು ಮೊದಲನೇ ಓವರ್ ನಲ್ಲೇ ಖಾತೆ ತೆರೆಯುವ ಮುನ್ನವೇ ಔಟಾದರು. ಆದರೆ ಇಶಾನ್ ಕಿಶನ್ ಅವರು ಪಾಕಿಸ್ತಾನ ತಂಡಕ್ಕೆ ಅಕ್ಷರಶಃ ಕಬ್ಬಿಣದ ಕಡಲೆಯಾದರು. ಮೊದಲ ಓವರ್ ನಲ್ಲೇ ಅಬಿಷೇಕ್ ಶರ್ಮಾ ಅವರ ವಿಕೆಟ್ ಬಿದ್ದರೂ ಕ್ಯಾರೇ ಎನ್ನದೆ ಬ್ಯಾಟಿಂಗ್ ಮಾಡಿದ ಅವರು 2ನೇ ಓವರ್ ನಲ್ಲೇ ಪಾಕಿಸ್ತಾನದ ಪ್ರಧಾನ ವೇಗದ ಬೌಲರ್ ಶಾಹಿನ್ ಶಾ ಅಫ್ರಿದಿ ಬೌಲಿಂಗ್ ವಿರುದ್ಧ ಆಕ್ರಮಣಕಾರಿ ಬ್ಯಾಟಿಂಗ್ ನಡೆಸಿದರು. ಲಾಂಗ್ ಆನ್ ನಲ್ಲಿ ಭರ್ಜರಿ ಸಿಕ್ಸ್ ಅನ್ನು ಸಹ ಎತ್ತಿದರು. ಪವರ್ ಪ್ಲೇನ 6 ಓವರ್ ಗಳಲ್ಲಿ ತಂಡದ ಮೊತ್ತ 50 ದಾಟಿಸಿದರು. ತಿಲಕ್ ವರ್ಮಾ ಅವರ ಜೊತೆಗೆ 2ನೇ ವಿಕೆಟ್ ಗೆ 87 ರನ್ ಗಳ ಮಹತ್ವದ ಜೊತೆಯಾಟವಾಡಿದರು. ಇದು ಪಾಕಿಸ್ತಾನ ತಂಡದ ಆತ್ಮವಿಶ್ವಾಸಕ್ಕೆ ಭಾರೀ ಹೊಡೆತ ನೀಡಿತು. ಮಾತ್ರವಲ್ಲದೆ ಟಾಸ್ ಗೆದ್ದು ಭಾರತವನ್ನು ಬ್ಯಾಟಿಂಗ್ ಗೆ ಇಳಿಸಿ ಅಲ್ಪಮೊತ್ತಕ್ಕೆ ಕಟ್ಟಿ ಹಾಕಬಹುದು ಎಂದು ಅಂದುಕೊಂಡಿದ್ದ ಪಾಕಿಸ್ತಾನದ ಲೆಕ್ಕಾಚಾರವೆಲ್ಲಾ ಬುಡಮೇಲು ಆಯಿತು. ಅಂತಿಮವಾಗಿ . ಮಾತ್ರವಲ್ಲದೆ ಲೀಗ್ ಹಂತದಲ್ಲಿ ಇನ್ನೂ ಒಂದು ಪಂದ್ಯ ಬಾಕಿ ಉಳಿದಿರುವಂತೆ ಸೂಪರ್ 8 ಹಂತಕ್ಕೇರಿತು.

ವಿಜಯ ಕರ್ನಾಟಕ 15 Feb 2026 11:59 pm

ಇರಾನ್ ಮೇಲೆ ಒತ್ತಡ ಹೆಚ್ಚಿಸುವ ಬಗ್ಗೆ ಟ್ರಂಪ್, ನೆತನ್ಯಾಹು ಚರ್ಚೆ: ವರದಿ

ವಾಷಿಂಗ್ಟನ್, ಫೆ.15: ಅಮೆರಿಕವು ಇರಾನ್ ಮೇಲಿನ ಆರ್ಥಿಕ ಒತ್ತಡವನ್ನು, ವಿಶೇಷವಾಗಿ ಚೀನಾಕ್ಕೆ ಇರಾನ್‍ನ ತೈಲ ರಫ್ತನ್ನು ಗುರಿಯಾಗಿಸಿಕೊಂಡು, ತೀವ್ರಗೊಳಿಸಬೇಕು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಒಪ್ಪಿಕೊಂಡಿದ್ದಾರೆ ಎಂದು `ಆಕ್ಸಿಯೋಸ್' ವರದಿ ಮಾಡಿದೆ. ಈ ವಾರ ಟ್ರಂಪ್ ಮತ್ತು ನೆತನ್ಯಾಹು ನಡುವೆ ಶ್ವೇತಭವನದಲ್ಲಿ ನಡೆದ ಮಾತುಕತೆಯು ಚೀನಾಕ್ಕೆ ಕಚ್ಛಾ ತೈಲವನ್ನು ಮಾರುವ ಇರಾನ್‍ನ ಸಾಮಥ್ರ್ಯವನ್ನು ನಿಗ್ರಹಿಸುವುದನ್ನು ಕೇಂದ್ರೀಕರಿಸಿತ್ತು. ಇರಾನ್ ವಿರುದ್ಧ ಗರಿಷ್ಠ ಒತ್ತಡದ ಜೊತೆ ಪೂರ್ಣ ಬಲದೊಂದಿಗೆ ಹೋಗಲು ನಾವು ಒಪ್ಪಿಕೊಂಡಿದ್ದೇವೆ ಎಂದು ಶ್ವೇತಭವನದ ಉನ್ನತ ಅಧಿಕಾರಿಯನ್ನು ಉಲ್ಲೇಖಿಸಿದ ವರದಿ ಹೇಳಿದೆ. ಇರಾನ್‍ನ ಪರಮಾಣು ಕಾರ್ಯಕ್ರಮವನ್ನು ವಿರೋಧಿಸಿ ಅಮೆರಿಕಾ ವಿಧಿಸಿರುವ ನಿರ್ಬಂಧವು ಜಾಗತಿಕ ತೈಲ ಮಾರುಕಟ್ಟೆಗೆ ಇರಾನ್‍ನ ತೈಲದ ಪ್ರವೇಶಾವಕಾಶವನ್ನು ಸೀಮಿತಗೊಳಿಸಿದೆ. ಆದರೆ ಇರಾನ್ ಜಲಮಾರ್ಗದ ಮೂಲಕ ನಡೆಸುವ ಕಚ್ಛಾತೈಲ ರಫ್ತಿನ 80%ಕ್ಕೂ ಹೆಚ್ಚನ್ನು ಚೀನಾ ಖರೀದಿಸುತ್ತಿದೆ. 2025ರಲ್ಲಿ ಪ್ರತೀ ದಿನ ಇರಾನ್‍ನಿಂದ 1.38 ದಶಲಕ್ಷ ಬ್ಯಾರೆಲ್‍ಗಳಷ್ಟು ಕಚ್ಛಾ ತೈಲವನ್ನು ಚೀನಾ ಖರೀದಿಸಿರುವುದಾಗಿ ವರದಿಯಾಗಿದೆ. ಏಕಪಕ್ಷೀಯ ನಿರ್ಬಂಧವನ್ನು ತಾನು ಮಾನ್ಯ ಮಾಡುವುದಿಲ್ಲ ಎಂದು ಚೀನಾ ಹೇಳುತ್ತಿದ್ದು ಇರಾನ್ ಜೊತೆಗಿನ ವ್ಯಾಪಾರವು ಕಾನೂನುಬದ್ಧವಾಗಿದೆ ಎಂದು ಪ್ರತಿಪಾದಿಸುತ್ತಿದೆ.

ವಾರ್ತಾ ಭಾರತಿ 15 Feb 2026 11:57 pm

ತೈವಾನ್ ಕುರಿತ ಅಮೆರಿಕದ `ಸಂಚು' ಘರ್ಷಣೆಗೆ ಕಾರಣ ಆಗಬಹುದು: ಚೀನಾ ಎಚ್ಚರಿಕೆ

ಮ್ಯೂನಿಚ್, ಫೆ.15: ತೈವಾನ್ ವಿಷಯದಲ್ಲಿ `ಸಂಚು' ಹೂಡುವುದು ಘರ್ಷಣೆಗೆ ಕಾರಣವಾಗಬಹುದು. ತೈವಾನ್‍ನ ಮೂಲಕ ಚೀನಾವನ್ನು ವಿಭಜಿಸುವ ದುಸ್ಸಾಹಸಕ್ಕೆ ಕೈಹಾಕಬಾರದು ಎಂದು ಚೀನಾ ಅಮೆರಿಕಕ್ಕೆ ಎಚ್ಚರಿಕೆ ನೀಡಿದೆ. ಮ್ಯೂನಿಚ್ ಭದ್ರತಾ ಸಮ್ಮೇಳನದಲ್ಲಿ ಮಾತನಾಡಿದ ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ `ಭವಿಷ್ಯದಲ್ಲಿ ಅಮೆರಿಕವು ಚೀನಾದ ಕೆಂಪುಗೆರೆಯನ್ನು ದಾಟಿ, ತೈವಾನ್ ಮೂಲಕ ಚೀನಾವನ್ನು ವಿಭಜಿಸಲು ಪ್ರಚೋದನೆ ಮತ್ತು ಸಂಚು ಒಳಗೊಂಡಿರುವ ಚೀನಾ ನೀತಿಯನ್ನು ಅಳವಡಿಸಿಕೊಳ್ಳಬಹುದು. ಇದು ಚೀನಾ ಮತ್ತು ಅಮೆರಿಕ ನಡುವೆ ಘರ್ಷಣೆಗೆ ಕಾರಣವಾಗಬಹುದು' ಎಂದು ಹೇಳಿದ್ದಾರೆ. ಅಮೆರಿಕ ಧನಾತ್ಮಕ ಮತ್ತು ಪ್ರಾಯೋಗಿಕ ವಿಧಾನವನ್ನು ಅನುಸರಿಸುತ್ತದೆ ಎಂದು ಭಾವಿಸುತ್ತೇವೆ. ಆದರೆ ನಾವು ವಿವಿಧ ಅಪಾಯಗಳನ್ನು ಎದುರಿಸಲೂ ಸಿದ್ಧವಿದ್ದೇವೆ' ಎಂದವರು ಹೇಳಿರುವುದಾಗಿ ವರದಿಯಾಗಿದೆ. ಅಮೆರಿಕದಲ್ಲಿನ ಕೆಲವು ಧ್ವನಿಗಳು ಚೀನಾದ ಮೇಲೆ ದಾಳಿ ಮತ್ತು ಕಳಂಕ ಹೊರಿಸುವುದನ್ನು ಮುಂದುವರಿಸಿದ್ದರೂ ಎರಡು ರಾಷ್ಟ್ರಗಳ ನಡುವಿನ ಸಹಕಾರ ನಮ್ಮೆದುರು ಇರುವ ಉತ್ತಮ ಮಾರ್ಗವಾಗಿದೆ. ಜೊತೆಯಾಗಿ ಕೆಲಸ ಮಾಡುವುದು ಎರಡೂ ದೇಶಗಳ ಹಿತಾಸಕ್ತಿಗೆ ಪೂರಕವಾಗಿದೆ ಎಂದು ವಾಂಗ್ ಯಿ ಹೇಳಿದ್ದು ಆರ್ಥಿಕತೆಯನ್ನು ಅಸ್ತವ್ಯಸ್ತಗೊಳಿಸುವ ಅಥವಾ ಪೂರೈಕೆ ಸರಪಳಿಗಳನ್ನು ಅಡ್ಡಿಪಡಿಸುವ ಪ್ರಯತ್ನಗಳ ವಿರುದ್ಧ ಎಚ್ಚರಿಕೆ ನೀಡಿದ್ದಾರೆ. ಉಕ್ರೇನ್ ಶಾಂತಿ ಮಾತುಕತೆಯ ಬಗ್ಗೆ ಉಲ್ಲೇಖಿಸಿದ ವಾಂಗ್ ಯಿ `ಉಕ್ರೇನ್‍ನ ಭವಿಷ್ಯದ ಕುರಿತ ಮಾತುಕತೆಗಳಲ್ಲಿ ತೊಡಗಿಸಿಕೊಳ್ಳಲು ಯುರೋಪ್‍ಗೆ ಎಲ್ಲಾ ಹಕ್ಕುಗಳಿವೆ. ಯುರೋಪ್ ಈ ಪ್ರಕ್ರಿಯೆಯನ್ನು (ಉಕ್ರೇನ್ ಶಾಂತಿ ಮಾತುಕತೆ) ಪಕ್ಕದಲ್ಲಿ ನಿಂತು ನೋಡಬಾರದು. ಅವರಿಗೆ ಮಾತುಕತೆಯ ಮೇಜಿನ ಎದುರು ಕುಳಿತುಕೊಳ್ಳುವ ಅಧಿಕಾರವಿದೆ' ಎಂದು ಪ್ರತಿಪಾದಿಸಿದ್ದಾರೆ.

ವಾರ್ತಾ ಭಾರತಿ 15 Feb 2026 11:54 pm

ಉಕ್ರೇನ್‌ನ 12 ಹಳ್ಳಿಗಳನ್ನು ವಶಪಡಿಸಿಕೊಂಡ ರಷ್ಯಾ, ತಿಕ್ಕಾಟ ಮತ್ತಷ್ಟು ತೀವ್ರ | Russia Military

ರಷ್ಯಾ ಸೇನೆ ಉಕ್ರೇನ್ ಮೇಲೆ ಯುದ್ಧ ಮಾತ್ರ ಮಾಡುತ್ತಿಲ್ಲ, ಇದರ ಜೊತೆಗೆ ಉಕ್ರೇನ್‌ಗೆ ಸೇರಿರುವ ದೊಡ್ಡ ದೊಡ್ಡ ಪ್ರದೇಶವನ್ನೇ ತನ್ನ ವಶಕ್ಕೆ ಪಡೆಯುತ್ತಿದೆ. ಚಳಿಗಾಲದ ಸಮಯದಲ್ಲಿ ರಷ್ಯಾ &ಉಕ್ರೇನ್‌ನ ನಡುವೆ ತೀವ್ರಗೊಂಡ ತಿಕ್ಕಾಟದಲ್ಲಿ ಜನರು ನಲುಗಿ ಹೋಗಿದ್ದಾರೆ. ಇದರ ಜೊತೆಗೆ ಉಕ್ರೇನ್ ಕೂಡ ಅಪಾರ ಪ್ರಮಾಣದಲ್ಲಿ ನಷ್ಟ ಅನುಭವಿಸಿದ್ದು, ಭವಿಷ್ಯದಲ್ಲಿ ಈ ಪೆಟ್ಟಿನಿಂದ ಸುಧಾರಿಸಿಕೊಳ್ಳಲು ಭಾರಿ

ಒನ್ ಇ೦ಡಿಯ 15 Feb 2026 11:53 pm

ಜಿನೆವಾದಲ್ಲಿ ಅಮೆರಿಕಾ-ಇರಾನ್ ಪರಮಾಣು ಮಾತುಕತೆ: ವರದಿ

ಜಿನೆವಾ, ಫೆ.15: ಇರಾನ್‍ನ ಪರಮಾಣು ಕಾರ್ಯಕ್ರಮದ ಕುರಿತು ಅಮೆರಿಕಾ- ಇರಾನ್ ನಡುವಿನ ಎರಡನೇ ಸುತ್ತಿನ ಮಾತುಕತೆ ಈ ವಾರ ಜಿನೆವಾದಲ್ಲಿ ನಡೆಯಲಿದೆ ಎಂದು ಸ್ವಿಝರ್ಲ್ಯಾಂಡ್‍ನ ವಿದೇಶಾಂಗ ಸಚಿವಾಲಯ ಹೇಳಿದೆ. ಫೆಬ್ರವರಿ 6ರಂದು ಮಸ್ಕತ್‍ನಲ್ಲಿ ನಡೆದಿದ್ದ ಪ್ರಥಮ ಸುತ್ತಿನ ಮಾತುಕತೆಯನ್ನು ವ್ಯವಸ್ಥೆ ಮಾಡಿದ್ದ ಒಮಾನ್ ಜಿನೆವಾದಲ್ಲಿ ನಡೆಯಲಿರುವ ಮಾತುಕತೆಗೂ ಮಧ್ಯಸ್ಥಿಕೆ ವಹಿಸುತ್ತದೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದು ಸಭೆಯ ನಿಖರವಾದ ದಿನಾಂಕದ ಬಗ್ಗೆ ಮಾಹಿತಿ ನೀಡಿಲ್ಲ. ಅಮೆರಿಕ ಮತ್ತು ಇರಾನ್ ನಡುವೆ ಮಾತುಕತೆಗೆ ಅನುಕೂಲವಾಗುವ ಎಲ್ಲಾ ವ್ಯವಸ್ಥೆಗಳನ್ನು ನಡೆಸಲು ಸ್ವಿಝರ್ಲ್ಯಾಂಡ್ ಯಾವತ್ತೂ ಸಿದ್ಧವಿದೆ. ಮಾತುಕತೆಗೆ ಸಂಬಂಧಿಸಿದ ಎಲ್ಲಾ ಪಕ್ಷದವರೊಂದಿಗೆ ಸಚಿವಾಲಯ ಸಂಪರ್ಕದಲ್ಲಿದೆ ಮತ್ತು ಉದ್ವಿಗ್ನತೆ ಶಮನಗೊಳಿಸುವ ಯಾವುದೇ ರಾಜತಾಂತ್ರಿಕ ಉಪಕ್ರಮವನ್ನು ಬೆಂಬಲಿಸುತ್ತದೆ' ಎಂದು ವಿದೇಶಾಂಗ ಸಚಿವಾಲಯದ ವಕ್ತಾರರು ಹೇಳಿದ್ದಾರೆ.

ವಾರ್ತಾ ಭಾರತಿ 15 Feb 2026 11:52 pm

ಐಎಎಸ್‌ನಲ್ಲಿ ಓಬಿಸಿ ಕೇವಲ 4.3%, ಸಾಮಾನ್ಯ ವರ್ಗ 92% : ಕೇಂದ್ರದ ಅಂಕಿ-ಅಂಶ ಹಂಚಿಕೊಂಡ ಬಿ.ಕೆ.ಹರಿಪ್ರಸಾದ್

ಬೆಂಗಳೂರು : ದೇಶದ ಪ್ರಮುಖ ನಾಗರಿಕ ಸೇವೆಗಳಾದ ಐಎಎಸ್, ಐಪಿಎಸ್ ಮತ್ತು ಐಎಫ್‌ಎಸ್‌ನಲ್ಲಿ ವಿವಿಧ ವರ್ಗಗಳ ಪ್ರಾತಿನಿಧ್ಯದ ಕುರಿತು ಹಿರಿಯ ಕಾಂಗ್ರೆಸ್‌ ಮುಖಂಡ ಬಿ.ಕೆ.ಹರಿಪ್ರಸಾದ್ ಅವರು, ರಾಜ್ಯಸಭೆಯಲ್ಲಿ ಮಂಡಿಸಲಾದ ಅಂಕಿ-ಅಂಶಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ರಾಜ್ಯಸಭೆಯಲ್ಲಿ ಸರಕಾರ ಇಟ್ಟಿರುವ ಅಂಕಿ-ಅಂಶಗಳು ಒಂದು ಬೆಚ್ಚಿಬೀಳಿಸುವ ಸತ್ಯವನ್ನು ಬಹಿರಂಗಪಡಿಸುತ್ತವೆ. ಓಬಿಸಿಗಳು ಭಾರತದ ಜನಸಂಖ್ಯೆಯ ಸುಮಾರು 55%,  ಎಸ್‌ಸಿ 24% ಮತ್ತು ಎಸ್‌ಟಿ 10% ಇದ್ದರೂ: ಐಎಎಸ್ ನಲ್ಲಿ – ಓಬಿಸಿ ಕೇವಲ 4.3%, ಐಪಿಎಸ್ ನಲ್ಲಿ – ಓಬಿಸಿ ಕೇವಲ 5.5%, ಐಎಫ್‌ಎಸ್‌  ನಲ್ಲಿ – ಓಬಿಸಿ ಕೇವಲ 10.6% ಎಂದು ಮಾಹಿತಿ ನೀಡಿದ್ದಾರೆ. ಐಎಎಸ್ ನಲ್ಲಿ 92%, ಐಪಿಎಸ್ ನಲ್ಲಿ 90% ಮತ್ತು ಐಎಫ್‌ಎಸ್‌ ನಲ್ಲಿ 82% ಜನರು ಸಾಮಾನ್ಯ ವರ್ಗದಿಂದಿದ್ದಾರೆ. ದೇಶದ ನಿಜವಾದ ಅಧಿಕಾರದ ರಚನೆ ಆಗಿರುವ ಬ್ಯೂರೋಕ್ರಸಿ ಇಷ್ಟು ಏಕಪಕ್ಷೀಯವಾಗಿದ್ದಾಗ, ಆಡಳಿತವನ್ನು ಎಲ್ಲರನ್ನು ಒಳಗೊಂಡದ್ದೆಂದು ಹೇಗೆ ಕರೆಯಬಹುದು? ಇದು ಪ್ರತಿನಿಧಿತ್ವವಲ್ಲ. ಇದು ಹೊರತಳ್ಳುವಿಕೆ ಮತ್ತು ಸಾಮಾಜಿಕ ನ್ಯಾಯದ ಸಂಪೂರ್ಣ ನಿರ್ಲಕ್ಷ್ಯ ಎಂದು ಅವರು ಎಕ್ಸ್‌ ಪೋಸ್ಟ್‌ನಲ್ಲಿ ಉಲ್ಲೇಖಿಸಿದ್ದಾರೆ. ರಾಜ್ಯಸಭೆಯಲ್ಲಿ ಸರ್ಕಾರ ಇಟ್ಟಿರುವ ಅಂಕಿ-ಅಂಶಗಳು ಒಂದು ಬೆಚ್ಚಿಬೀಳಿಸುವ ಸತ್ಯವನ್ನು ಬಹಿರಂಗಪಡಿಸುತ್ತವೆ. OBCಗಳು ಭಾರತದ ಜನಸಂಖ್ಯೆಯ ಸುಮಾರು 55%, SCಗಳು 24% ಮತ್ತು STಗಳು 10% ಇದ್ದರೂ: • IAS ನಲ್ಲಿ – OBC ಕೇವಲ 4.3% • IPS ನಲ್ಲಿ – OBC ಕೇವಲ 5.5% • IFS ನಲ್ಲಿ – OBC ಕೇವಲ 10.6% IAS ನಲ್ಲಿ 92%, IPS ನಲ್ಲಿ 90%… — Hariprasad.B.K. (@HariprasadBK2) February 15, 2026

ವಾರ್ತಾ ಭಾರತಿ 15 Feb 2026 11:52 pm

'ಕನಿಷ್ಠ ಬ್ಯಾಲೆನ್ಸ್' ದಂಡಕ್ಕೆ ವಿರೋಧ: ಬೆಂಗಳೂರಿನ ಉದ್ಯಮಿಯ ಹೋರಾಟಕ್ಕೆ ಸಂಸದೀಯ ಸಮಿತಿಯ ಶಿಫಾರಸಿನ ಬೆಂಬಲ

ಬೆಂಗಳೂರು, ಫೆ.15: ಉಳಿತಾಯ ಖಾತೆಗಳಲ್ಲಿ ಕನಿಷ್ಠ ಬ್ಯಾಲೆನ್ಸ್ ಮಾನದಂಡವನ್ನು ಕಾಯ್ದುಕೊಳ್ಳದ ಗ್ರಾಹಕರಿಗೆ ಬ್ಯಾಂಕುಗಳು ವಿಧಿಸುತ್ತಿದ್ದ ದಂಡ ಪದ್ಧತಿಯನ್ನು ನಿಲ್ಲಿಸಬೇಕು ಎಂದು ಸಂಸದೀಯ ಸಮಿತಿ ಇತ್ತೀಚೆಗೆ ಶಿಫಾರಸು ಮಾಡಿರುವ ಹಿನ್ನೆಲೆಯಲ್ಲಿ, ಈ ಕ್ರಮದ ಹಿಂದೆ ಬೆಂಗಳೂರಿನ ಉದ್ಯಮಿಯೊಬ್ಬರ ಹೋರಾಟ ಕಾರಣವಾಗಿದೆ ಎಂಬ ಸಂಗತಿ ಇದೀಗ ಬೆಳಕಿಗೆ ಬಂದಿದೆ. ತಿರುವನಂತಪುರಂ ಮೂಲದ ಪರಮೇಶ್ವರನ್ ಕೃಷ್ಣ ಅಯ್ಯರ್ ಅವರು ಬಿದಿರು ಹಾಗೂ ಇತರ ಸುಸ್ಥಿರ ವಸ್ತುಗಳಿಂದ ಜೀವನಶೈಲಿ ಉತ್ಪನ್ನಗಳನ್ನು ತಯಾರಿಸುವ ‘ಬಂಬೂಪೆಕರ್’ ಸಂಸ್ಥೆಯ ಸ್ಥಾಪಕರು. ತಮ್ಮ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಬುಡಕಟ್ಟು ಸಮುದಾಯದ ಕಾರ್ಮಿಕರು ಬ್ಯಾಂಕ್ ಖಾತೆಗಳಲ್ಲಿ ಕನಿಷ್ಠ ಬ್ಯಾಲೆನ್ಸ್ ಇರದ ಕಾರಣ ಪದೇಪದೇ ದಂಡ ಕಳೆದುಕೊಳ್ಳುತ್ತಿರುವುದನ್ನು ಗಮನಿಸಿದ ಅವರು, ಈ ವಿಚಾರದ ವಿರುದ್ಧ ಹೋರಾಟ ಆರಂಭಿಸಿದರು. “ದಯವಿಟ್ಟು ನಮ್ಮ ಸಂಬಳವನ್ನು ಬ್ಯಾಂಕ್ ಖಾತೆಗಳ ಮೂಲಕವಲ್ಲ, ನಗದು ರೂಪದಲ್ಲಿ ನೀಡಿ” ಎಂದು ಕಾರ್ಮಿಕರು ಮನವಿ ಮಾಡಿದ ಸಂದರ್ಭ ಕಾರಣ ತಿಳಿದು ಅವರಿಗೆ ಆಘಾತವಾಯಿತು. 2008ರಲ್ಲಿ ಬುಡಕಟ್ಟು ಹಾಗೂ ಅಶಿಕ್ಷಿತ ಕಾರ್ಮಿಕರಿಗೆ ಉದ್ಯೋಗ ನೀಡುವ ಉದ್ದೇಶದಿಂದ ಸಂಸ್ಥೆ ಆರಂಭಿಸಿದ್ದ ಅವರು, ಕೋವಿಡ್ ಸಾಂಕ್ರಾಮಿಕಕ್ಕಿಂತ ಹಲವು ವರ್ಷಗಳ ಮೊದಲು ಬ್ಯಾಂಕ್ ಖಾತೆಗಳ ಮೂಲಕವೇ ಸಂಬಳ ಪಾವತಿಸುವ ವ್ಯವಸ್ಥೆ ಮಾಡಿದ್ದರು. ಸಂಬಳ ಜಮಾ ಆದ ತಕ್ಷಣ ಕಾರ್ಮಿಕರು ಬಹುತೇಕ ಹಣವನ್ನು ಕುಟುಂಬಗಳಿಗೆ ಕಳುಹಿಸುತ್ತಿದ್ದರು. ಇದರ ಪರಿಣಾಮವಾಗಿ ತಿಂಗಳ ಬಹುಪಾಲು ದಿನಗಳು ಖಾತೆಗಳಲ್ಲಿ ಕನಿಷ್ಠ ಬ್ಯಾಲೆನ್ಸ್ ಉಳಿಯದೇ ಹೋಗುತ್ತಿತ್ತು. ಮುಂದಿನ ತಿಂಗಳ ಸಂಬಳ ಬಂದಾಗ ಅದರಲ್ಲಿನ ಗಮನಾರ್ಹ ಭಾಗ ದಂಡವಾಗಿ ಕಡಿತಗೊಳ್ಳುತ್ತಿತ್ತು. ತಿಂಗಳಿಗೆ ₹15,000 ರಿಂದ ₹20,000 ಗಳಿಸುವ ಕಾರ್ಮಿಕರಿಗೆ ₹1,000ರಷ್ಟು ದಂಡ ಭಾರೀ ಹೊರೆ ಆಗುತ್ತಿತ್ತು ಎಂದು ಪರಮೇಶ್ವರನ್ ತಿಳಿಸಿದ್ದಾರೆ. ಈ ಪದ್ಧತಿಯನ್ನು ತೀವ್ರ ಅನ್ಯಾಯಕರವೆಂದು ಅವರು ಅಭಿಪ್ರಾಯಪಟ್ಟಿದ್ದಾರೆ. “ವೈಯಕ್ತಿಕ ಸಾಲಗಳಿಗೆ ಬ್ಯಾಂಕುಗಳು ಶೇಕಡಾ 4ರಿಂದ 7ರವರೆಗೆ ಬಡ್ಡಿ ವಿಧಿಸುತ್ತವೆ. ಆದರೆ ಕನಿಷ್ಠ ಬ್ಯಾಲೆನ್ಸ್ ಕೊರತೆಗೆ ₹800ರಿಂದ ₹1,000ವರೆಗೆ ದಂಡ ಕಡಿತಗೊಳಿಸುತ್ತವೆ. ಇದು ಒಂದು ತಿಂಗಳ ಅವಧಿಯಲ್ಲಿ ಶೇಕಡಾ 100ಕ್ಕಿಂತ ಹೆಚ್ಚು ಹೊರೆ ಆಗುತ್ತದೆ” ಎಂದು ಅವರು ಟೀಕಿಸಿದ್ದಾರೆ. ಷೇರು ಮಾರುಕಟ್ಟೆಯ ಮಾಜಿ ಉದ್ಯೋಗಿಯಾಗಿದ್ದ ಪರಮೇಶ್ವರನ್ ಕೇವಲ ದೂರು ನೀಡುವುದರಿಂದ ಪ್ರಯೋಜನವಿಲ್ಲ ಎಂದು ತಿಳಿದು, ಸಮಗ್ರ ಅಧ್ಯಯನದ ಬಳಿಕ ಕನಿಷ್ಠ ಬ್ಯಾಲೆನ್ಸ್ ದಂಡದ ಆರ್ಥಿಕ ಹೊರೆ ಕುರಿತು ವಿವರವಾದ ಪ್ರಾತಿನಿಧ್ಯ ಸಿದ್ಧಪಡಿಸಿ 2024ರ ಏಪ್ರಿಲ್‌ನಲ್ಲಿ ಲೋಕಸಭಾ ಸ್ಪೀಕರ್‌ಗೆ ಸಲ್ಲಿಸಿದರು. “ದೂರು ಸ್ವೀಕೃತಿಯ ದೃಢೀಕರಣವೂ ಸಿಗಲಿಲ್ಲ. ಆದರೆ ಧ್ವನಿ ಇಲ್ಲದ ಜನರ ಪರವಾಗಿ ಏನಾದರೂ ಮಾಡಿದ್ದೇನೆ ಎಂಬ ತೃಪ್ತಿ ಇತ್ತು” ಎಂದು ಅವರು ಹೇಳಿದ್ದಾರೆ. ಈ ದೂರವನ್ನು ಲೋಕಸಭಾ ಅರ್ಜಿ ಸಮಿತಿಯು ಪರಿಗಣಿಸಿತು. ಹಣಕಾಸು ಸಚಿವಾಲಯದ ಅಂಕಿಅಂಶಗಳ ಪ್ರಕಾರ, 2024–25ನೇ ಹಣಕಾಸು ವರ್ಷದಲ್ಲೇ ಬ್ಯಾಂಕುಗಳು ಕನಿಷ್ಠ ಬ್ಯಾಲೆನ್ಸ್ ದಂಡದ ಮೂಲಕ ₹4,817.9 ಕೋಟಿ ಸಂಗ್ರಹಿಸಿವೆ. 2020ರಿಂದ 2025ರವರೆಗೆ ಸಾರ್ವಜನಿಕ ವಲಯದ ಬ್ಯಾಂಕುಗಳು ₹11,535.99 ಕೋಟಿ ಸಂಗ್ರಹಿಸಿದ್ದು, ಖಾಸಗಿ ಬ್ಯಾಂಕುಗಳು 2024–25ರಲ್ಲಿ ಮಾತ್ರ ₹2,772.2 ಕೋಟಿ ದಂಡ ವಸೂಲಿ ಮಾಡಿವೆ. ಆರ್‌ಬಿಐ ಮಾರ್ಗಸೂಚಿಗಳು ಆಗಸ್ಟ್ 2015ರಿಂದ ಕನಿಷ್ಠ ಬ್ಯಾಲೆನ್ಸ್ ಕಾಯ್ದುಕೊಳ್ಳದ ಖಾತೆಗಳಿಗೆ ದಂಡ ವಿಧಿಸಲು ಭಾರತೀಯ ರಿಸರ್ವ್ ಬ್ಯಾಂಕ್ ಅನುಮತಿ ನೀಡಿದೆ. ಮಾರ್ಗಸೂಚಿಗಳ ಪ್ರಕಾರ ದಂಡವು ನಿಜವಾದ ಬ್ಯಾಲೆನ್ಸ್ ಮತ್ತು ಕನಿಷ್ಠ ಬ್ಯಾಲೆನ್ಸ್ ನಡುವಿನ ಕೊರತೆಯ ಸ್ಥಿರ ಶೇಕಡಾವಾರು ಆಗಿರಬೇಕು. ಭೌಗೋಳಿಕ ಪ್ರದೇಶ ಹಾಗೂ ಗ್ರಾಹಕ ವರ್ಗದ ಆಧಾರದ ಮೇಲೆ ಸ್ಲ್ಯಾಬ್‌ವಾರು ಶುಲ್ಕ ವಿಧಿಸಬಹುದು. ಖಾತೆ ತೆರೆಯುವಾಗಲೇ ಗ್ರಾಹಕರಿಗೆ ಕನಿಷ್ಠ ಬ್ಯಾಲೆನ್ಸ್ ಮಾಹಿತಿ ನೀಡಬೇಕು ಹಾಗೂ ಬದಲಾವಣೆಗಳನ್ನೂ ತಿಳಿಸಬೇಕು. ಮುಂಚಿತ ಸೂಚನೆ ನೀಡಿ ಒಂದು ತಿಂಗಳೊಳಗೆ ಬ್ಯಾಲೆನ್ಸ್ ತುಂಬದಿದ್ದರೆ ಮಾತ್ರ ದಂಡ ವಿಧಿಸಬೇಕು. ದಂಡದಿಂದ ಖಾತೆ ಮೈನಸ್ ಬ್ಯಾಲೆನ್ಸ್‌ಗೆ ಜಾರಬಾರದು ಎಂಬುದೂ ನಿಯಮವಾಗಿದೆ. ಈ ಎಲ್ಲಾ ಅಂಶಗಳನ್ನು ಪರಿಗಣಿಸಿದ ಸಂಸದೀಯ ಸಮಿತಿಯು, ವಿಶೇಷವಾಗಿ ಮೂಲ ಉಳಿತಾಯ ಖಾತೆಗಳಲ್ಲಿ ಕನಿಷ್ಠ ಬ್ಯಾಲೆನ್ಸ್ ಕಾಯ್ದುಕೊಳ್ಳದ ಗ್ರಾಹಕರಿಗೆ ದಂಡ ವಿಧಿಸುವುದನ್ನು ನಿಲ್ಲಿಸುವ ಏಕರೂಪ ನೀತಿ ಅಳವಡಿಸಬೇಕೆಂದು ಶಿಫಾರಸು ಮಾಡಿದೆ. ಹೆಚ್ಚಿನ ಬ್ಯಾಲೆನ್ಸ್‌ಗಳಿಗೆ ರಿವಾರ್ಡ್ ಪಾಯಿಂಟ್‌ಗಳು, ಶುಲ್ಕ ವಿನಾಯಿತಿ ಹಾಗೂ ಹೆಚ್ಚುವರಿ ಬಡ್ಡಿದರದಂತಹ ಪ್ರೋತ್ಸಾಹ ನೀಡಬಹುದು ಎಂದು ಸೂಚಿಸಿದೆ. ಸಹಕಾರಿ ಬ್ಯಾಂಕುಗಳು ಹಾಗೂ ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳಿಗೂ ಅಗತ್ಯ ಮಾರ್ಗಸೂಚಿ ನೀಡುವಂತೆ ಹಣಕಾಸು ಸೇವೆಗಳ ಇಲಾಖೆ ಹಾಗೂ ಆರ್‌ಬಿಐಗೆ ಮನವಿ ಮಾಡಲಾಗಿದೆ. ಶಿಫಾರಸು ಸಾರ್ವಜನಿಕವಾದ ಬಳಿಕ ಪರಮೇಶ್ವರನ್ ತಮ್ಮ ಪ್ರಯತ್ನದ ಪರಿಣಾಮ ಅರಿತು ಸಂತಸಪಟ್ಟಿದ್ದಾರೆ. “ನಮ್ಮಂತಹ ಸಾಮಾನ್ಯ ಜನರೂ ಬದಲಾವಣೆ ತರಬಹುದು ಎಂಬುದಕ್ಕೆ ಇದು ಸಾಕ್ಷಿ” ಎಂದು ಅವರು ಹೇಳಿದ್ದಾರೆ. ಉದ್ಯಮಿಯ ಪಯಣ ತಿರುವನಂತಪುರದ ವಲಿಯಸಲೈ ಮೂಲದ ಪರಮೇಶ್ವರನ್ 2008ರವರೆಗೆ ಷೇರು ಮಾರುಕಟ್ಟೆಯಲ್ಲಿ ಕೆಲಸ ಮಾಡಿದರು. ಬಳಿಕ ಬೆಂಗಳೂರಿಗೆ ಬಂದು ಇದೇ ಕ್ಷೇತ್ರದಲ್ಲಿ ಮುಂದುವರಿದ ಅವರು, ಭಾರತದ ಮಾಜಿ ರಾಷ್ಟ್ರಪತಿ ಎ.ಪಿ.ಜೆ. ಅಬ್ದುಲ್ ಕಲಾಂ ಅವರಿಗೆ ಪತ್ರ ಬರೆದು ಬಿದಿರು ಆಧಾರಿತ ಉದ್ಯಮ ಆರಂಭಿಸುವ ಆಶಯ ವ್ಯಕ್ತಪಡಿಸಿದ್ದರು. ಕಲಾಂ ಅವರ ಪ್ರೋತ್ಸಾಹವೇ ‘ಬಂಬೂಪೆಕರ್’ ಸ್ಥಾಪನೆಗೆ ಪ್ರೇರಣೆಯಾಯಿತು. 2009ರಲ್ಲಿ ಸ್ಥಾಪಿತವಾದ ಈ ಸಂಸ್ಥೆ ಇಂದು ಬಿದಿರು ಆಧಾರಿತ ಉತ್ಪನ್ನಗಳಲ್ಲಿ ಪ್ರಮುಖ ಸಂಸ್ಥೆಯಾಗಿ ಬೆಳೆದಿದೆ. ಬುಡಕಟ್ಟು ಸಮುದಾಯದ ಕಾರ್ಮಿಕರಿಗೆ ತರಬೇತಿ ನೀಡಿ ನ್ಯಾಯಸಮ್ಮತ ಹಾಗೂ ಸುಸ್ಥಿರ ವೇತನ ವ್ಯವಸ್ಥೆ ಒದಗಿಸುವುದು ಇದರ ಉದ್ದೇಶ. ಪೀಠೋಪಕರಣ, ಲೈಫ್ ಸ್ಟೈಲ್ ಉತ್ಪನ್ನಗಳು ಹಾಗೂ ಕರಕುಶಲ ವಸ್ತುಗಳ ತಯಾರಿಕೆಯಲ್ಲಿ ತೊಡಗಿಸಿಕೊಂಡಿರುವ ಸಂಸ್ಥೆ, ನೈಸರ್ಗಿಕ ವಸ್ತುಗಳ ಸಂಯೋಜನೆಯಿಂದ ವಿವಿಧ ರಚನೆಗಳ ನಿರ್ಮಾಣದಲ್ಲೂ ಪರಿಣತಿ ಹೊಂದಿದೆ. ಪ್ರಸ್ತುತ ಬೆಂಗಳೂರಿನಲ್ಲಿ ಎರಡು ಘಟಕಗಳನ್ನು ನಿರ್ವಹಿಸುತ್ತಿರುವ ಬಂಬೂಪೆಕರ್, ಈಶಾನ್ಯ ರಾಜ್ಯಗಳು, ಛತ್ತೀಸ್‌ಗಢ ಹಾಗೂ ತಿರುವನಂತಪುರಕ್ಕೆ ವಿಸ್ತರಣೆ ಮಾಡುವ ಯೋಜನೆ ಹೊಂದಿದೆ. “ಮುಂದಿನ ಮೂರು ವರ್ಷಗಳ ಆರ್ಡರ್ ಗಳಿವೆ. ಪೂರೈಕೆ ಸೀಮಿತವಾದರೂ ಬೇಡಿಕೆ ಹೆಚ್ಚಿದೆ” ಎಂದು ಪರಮೇಶ್ವರನ್ ತಿಳಿಸಿದ್ದಾರೆ. ಸೌಜನ್ಯ:onmanorama.com

ವಾರ್ತಾ ಭಾರತಿ 15 Feb 2026 11:47 pm

ಹಂಪಿ ಉತ್ಸವವು ಜನೋತ್ಸವವಾಗಿ ಮಾರ್ಪಟ್ಟಿದೆ : ಶಾಸಕಿ ಲತಾ ಮಲ್ಲಿಕಾರ್ಜುನ್

ಹಂಪಿ ಉತ್ಸವದ ಸಮಾರೋಪ ಸಮಾರಂಭ

ವಾರ್ತಾ ಭಾರತಿ 15 Feb 2026 11:36 pm

ಬಳ್ಳಾರಿ | ಕುರುಗೋಡು ಉತ್ಸವಕ್ಕೆ ಚಾಲನೆ

ಬಳ್ಳಾರಿ : ಐತಿಹಾಸಿಕ ನಾಡು ಕುರುಗೋಡು ಪಟ್ಟಣದಲ್ಲಿ ಚೊಚ್ಚಲ ಕುರುಗೋಡು ಉತ್ಸವ–2026ರ ಮೊದಲ ದಿನ ಭಾನುವಾರ ಹಬ್ಬದ ವಾತಾವರಣ ಮನೆಮಾಡಿತು. ಉತ್ಸವವನ್ನು ಜನಾಕರ್ಷಕಗೊಳಿಸಲು ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕುರುಗೋಡು ತಾಲ್ಲೂಕು ಆಡಳಿತದಿಂದ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಉತ್ಸವದ ಅಂಗವಾಗಿ ಸದೃಢ ಆರೋಗ್ಯದ ಸಂದೇಶ ಸಾರುವ ಮ್ಯಾರಥಾನ್ ಓಟವನ್ನು ಹಮ್ಮಿಕೊಳ್ಳಲಾಯಿತು. ಪಟ್ಟಣದ ಹೊರವಲಯದ ವದ್ದಟ್ಟಿ ಕ್ರಾಸ್‌ನಿಂದ ಶ್ರೀ ದೊಡ್ಡ ಬಸವೇಶ್ವರ ದೇವಸ್ಥಾನದವರೆಗೆ ನಡೆದ ಓಟಕ್ಕೆ ಕಂಪ್ಲಿ ಶಾಸಕ ಹಾಗೂ ಕರ್ನಾಟಕ ರಾಜ್ಯ ಸಹಕಾರ ಕೈಮಗ್ಗ ನೇಕಾರರ ಮಹಾಮಂಡಳಿ ನಿಯಮಿತ (ಕಾವೇರಿ ಹ್ಯಾಂಡ್‌ಲೂಮ್ಸ್) ಅಧ್ಯಕ್ಷ ಜೆ.ಎನ್. ಗಣೇಶ್ ಚಾಲನೆ ನೀಡಿದರು. ಯುವಕರು, ಯುವತಿಯರು ಹಾಗೂ 40 ವರ್ಷ ಮೇಲ್ಪಟ್ಟ ಪುರುಷರ ವಿಭಾಗಗಳಲ್ಲಿ ಸ್ಪರ್ಧೆ ನಡೆಯಿತು. ಶಾಸಕರು ಸಹ ಓಟದಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು. ಮುಖ್ಯ ವೃತ್ತದಲ್ಲಿ ಮೊದಲಾಗಿ ತಲುಪಿದವರಿಗೆ ಬಹುಮಾನ ವಿತರಿಸಲಾಯಿತು. ಗ್ರಾಮೀಣ ಸೊಗಡನ್ನು ಪ್ರತಿಬಿಂಬಿಸುವ ಎತ್ತಿನಬಂಡಿ ಪ್ರದರ್ಶನ ಉತ್ಸವದ ಪ್ರಮುಖ ಆಕರ್ಷಣೆಯಾಗಿತ್ತು. ತಾಲ್ಲೂಕಿನ ವಿವಿಧ ಗ್ರಾಮಗಳಿಂದ ರೈತರು ಜೋಡಿ ಎತ್ತುಗಳನ್ನು ಸಿಂಗರಿಸಿಕೊಂಡು ಭಾಗವಹಿಸಿದರು. ಮಿನಿ ವಿಧಾನಸೌಧದ ಬಳಿ ಶಾಸಕ ಜೆ.ಎನ್. ಗಣೇಶ್ ಚಾಲನೆ ನೀಡಿದರು. 60ಕ್ಕೂ ಹೆಚ್ಚು ಎತ್ತಿನಬಂಡಿಗಳು ಸಾಲಾಗಿ ಸಾಗಿದ್ದು ನೋಡುಗರ ಗಮನ ಸೆಳೆಯಿತು. ಮಹಿಳೆಯರಿಗಾಗಿ ಆಯೋಜಿಸಿದ್ದ ರಂಗೋಲಿ ಸ್ಪರ್ಧೆಯಲ್ಲಿ 130ಕ್ಕೂ ಹೆಚ್ಚು ಮಂದಿ ಭಾಗವಹಿಸಿದರು. ದೇವಸ್ಥಾನ ಎದುರುಗಡೆಯಿಂದ ಕಂಪ್ಲಿ ರಸ್ತೆಯವರೆಗೆ ಬಣ್ಣಬಣ್ಣದ ರಂಗೋಲಿ ಚಿತ್ತಾರಗಳು ಮೂಡಿಬಂದವು. ದೊಡ್ಡ ಬಸವೇಶ್ವರ–ನೀಲಮ್ಮಳ ಆಕೃತಿ, ದೇವಸ್ಥಾನದ ಗೋಪುರ, ಸಾಮಾಜಿಕ ಸಂದೇಶ ಸಾರುವ ಚಿತ್ರಗಳು ಸೇರಿದಂತೆ ವಿವಿಧ ವಿನ್ಯಾಸಗಳು ಗಮನಸೆಳೆದವು. ವಿಜೇತರಿಗೆ ಪ್ರಥಮ, ದ್ವಿತೀಯ ಮತ್ತು ತೃತೀಯ ಬಹುಮಾನ ವಿತರಿಸಲಾಯಿತು. ಕೃಷಿ ಸಂಸ್ಕೃತಿಯನ್ನು ಪ್ರತಿಬಿಂಬಿಸುವಂತೆ ಬಾದನಹಟ್ಟಿ ರಸ್ತೆಯ ಪೆಟ್ರೋಲ್ ಬಂಕ್ ಎದುರಿನ ಜಮೀನಿನಲ್ಲಿ ಪುರುಷರಿಗಾಗಿ ಕೆಸರು ಗದ್ದೆ ಓಟ ಆಯೋಜಿಸಲಾಯಿತು. ಶಾಸಕರು ಸ್ಪರ್ಧೆಗೆ ಚಾಲನೆ ನೀಡಿ ತಾವೂ ಭಾಗವಹಿಸಿದರು. ಮಹಿಳೆಯರಿಗಾಗಿ ಹಗ್ಗಜಗ್ಗಾಟ ಸ್ಪರ್ಧೆ ಮನರಂಜನೆ ನೀಡಿತು. ಇದೇ ವೇಳೆ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಚಿಣ್ಣರ ಚಿತ್ರಕಲಾ ಉತ್ಸವ ಹಾಗೂ ದೇವಸ್ಥಾನ ಮುಂಭಾಗ ಹವ್ಯಾಸಿ ಕಲಾವಿದರ ಚಿತ್ರಕಲಾ ಪ್ರದರ್ಶನ ಜರುಗಿದವು. ಉತ್ಸವದಲ್ಲಿ ಕುರುಗೋಡು ಪುರಸಭೆ ಅಧ್ಯಕ್ಷ ಟಿ. ಶೇಖಣ್ಣ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಬಸವನಗೌಡ, ತಹಶೀಲ್ದಾರ್‌ ನರಸಪ್ಪ ಸೇರಿದಂತೆ ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.    

ವಾರ್ತಾ ಭಾರತಿ 15 Feb 2026 11:31 pm

ಗಾಜಾ ಮರುನಿರ್ಮಾಣಕ್ಕೆ 5 ಬಿಲಿಯನ್ ಡಾಲರ್ ನೆರವು, ಶಾಂತಿ ಮಂಡಳಿ ಮಹತ್ವದ ತೀರ್ಮಾನ | Gaza Peace

ಗಾಜಾ ಈಗಷ್ಟೇ ಶಾಂತವಾಗುತ್ತಿದ್ದು, ಕಳೆದ ಕೆಲವು ವರ್ಷಗಳಿಂದ ಅಶಾಂತಿಗೆ ಸಿಲುಕಿ ಒದ್ದಾಡಿಬಿಟ್ಟಿದೆ. ಹಮಾಸ್ ಮತ್ತು ಇಸ್ರೇಲ್ ನಡುವೆ ಶುರುವಾಗಿದ್ದ ಯುದ್ಧವೇ ಇಡೀ ಗಾಜಾ ಪಟ್ಟಿಯನ್ನ ಧೂಳ್ ಧೂಳ್ ಮಾಡಿದೆ. ಹಮಾಸ್ ವಿರುದ್ಧದ ಯುದ್ಧದಲ್ಲಿ ಅಮಾಯಕರು ಕೂಡ ಸಂಕಷ್ಟಕ್ಕೆ ಸಿಲುಕಿದ್ದಾರೆ, ಹೀಗೆ ಅಮಾಯಕರಿಗೆ ತೊಂದರೆ ಮಾಡಲಾಗಿದೆ ಎಂದು ಇಸ್ರೇಲ್ ವಿರುದ್ಧ ಆಕ್ರೋಶ ಕೂಡ ಮೊಳಗುತ್ತಿದೆ. ಇದೇ ಸಮಯದಲ್ಲಿ ಅಮೆರಿಕ

ಒನ್ ಇ೦ಡಿಯ 15 Feb 2026 11:30 pm

ದೇಶದ ಕಾರ್ಮಿಕರ ಜೀವನ ಅಭದ್ರವಾಗಿದೆ: ಸಾಮಾಜಿಕ ಕಾರ್ಯಕರ್ತ ಹರ್ಷ ಮಂದರ್ ಕಳವಳ

ದಕ್ಷಿಣ ಕನ್ನಡ ಜಿಲ್ಲಾ ಸಮಿತಿಯ ಆಶ್ರಯದಲ್ಲಿ ವಲಸೆ ಕಾರ್ಮಿಕರ ಸಮ್ಮೇಳನ

ವಾರ್ತಾ ಭಾರತಿ 15 Feb 2026 11:29 pm

ಹಂಪಿ ಉತ್ಸವ : ಮಹಿಳಾ ಕುಸ್ತಿ ಪಂದ್ಯಾವಳಿ

ಮಹಿಳಾ ಕಂಠೀರವ ಪ್ರಶಸ್ತಿ ಮುಡಿಗೇರಿಸಿಕೊಂಡ ರಾಧಿಕಾ

ವಾರ್ತಾ ಭಾರತಿ 15 Feb 2026 11:26 pm

ಪ್ರಸಕ್ತ ಸಾಲಿನ ಕೇಂದ್ರ ಬಜೆಟ್ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗುವ ಭಾರತದ ಹಂಬಲವನ್ನು ಪ್ರತಿಬಿಂಬಿಸುತ್ತದೆ: ಪ್ರಧಾನಿ ನರೇಂದ್ರ ಮೋದಿ

ಹೊಸದಿಲ್ಲಿ,ಫೆ.16: ಪ್ರಸಕ್ತ ಸಾಲಿನ ಕೇಂದ್ರ ಬಜೆಟ್ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗುವ ಕುರಿತಾದ ಭಾರತದ ಹಂಬಲವನ್ನು ಪ್ರತಿಬಿಂಬಿಸುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ರವಿವಾರ ಹೇಳಿದ್ದಾರೆ. ನೂತನ ಬಜೆಟ್ ಬಲವಂತವಾಗಿ ರೂಪುಗೊಂಡಿದ್ದಲ್ಲ, ಬದಲಾಗಿ ಸಿದ್ಧತೆ ಮತ್ತು ಸ್ಫೂರ್ತಿಯಿಂದ ಸೃಷ್ಟಿಯಾದುದ್ದಾಗಿದೆ ಎಂದು ಪ್ರತಿಪಾದಿಸಿದ್ದಾರೆ. ಪಿಟಿಐ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು ಭಾರತವು ಬ್ರಿಟನ್, ಯುರೋಪ್ ಒಕ್ಕೂಟ ಮತ್ತಿತರ 38 ದೇಶಗಳ ಜೊತೆ ಏರ್ಪಡಿಸಿರುವ ವ್ಯಾಪಾರ ಒಪ್ಪಂದಗಳ ಕುರಿತಾಗಿ ಪ್ರತಿಕ್ರಿಯಿಸುತ್ತಾ ರಾಜಕೀಯ ಸ್ಥಿರತೆ ಹಾಗೂ ರಾಜಕೀಯ ಊಹಿಸುವಿಕೆಯ ಸಾಮರ್ಥ್ಯವು ಭಾರತದಲ್ಲಿ ಹೂಡಿಕೆದಾರರ ಆತ್ಮವಿಶ್ವಾಸವನ್ನು ಮರುಸ್ಥಾಪಿಸಿದೆ. ಪ್ರಬಲ ಉತ್ಪಾದನೆ, ಸೇವೆಗಳು ಹಾಗೂ ಸೂಕ್ಷ್ಮ,ಕಿರು, ಮಧ್ಯಮ ಕೈಗಾರಿಕೆಗಳು ಭಾರತವನ್ನು ಬ್ರಿಟನ್ ಮತ್ತು ಯುರೋಪ್ ಒಕ್ಕೂಟ ಮತ್ತಿತರ ದೇಶಗಳೊಂದಿಗೆ ವ್ಯಾಪಾರ ಒಪ್ಪಂದವನ್ನು ಏರ್ಪಡಿಸುವಲ್ಲಿ ಶಕ್ತಿಯುತ ಸ್ಥಾನಮಾನವನ್ನು ದೊರಕಿಸಿಕೊಟ್ಟಿವೆಯೆಂದು ಅವರು ಹೇಳಿದ್ದಾರೆ. ಭಾರತದ ಮುಕ್ತ ವ್ಯಾಪಾರ ಒಪ್ಪಂದಗಳು ಜವಳಿ ಚರ್ಮೋದ್ಯಮ, ರಾಸಾಯನಿಕಗಳು, ಕರಕುಶಲವಸ್ತುಗಳು, ಹರಳು ಮತ್ತಿತರ ವಲಯಗಳಲ್ಲಿ ಮಾರುಕಟ್ಟೆಯ ಲಭ್ಯತೆಯನ್ನು ವಿಸ್ತರಿಸಿವೆಯೆಂದು ಹೇಳಿದ್ದಾರೆ. ಹಿಂದಿನ ಯುಪಿಎ ಸರಕಾರವು ಆರ್ಥಿಕತೆಯನ್ನು ಕೆಟ್ಟದ್ದಾಗಿ ನಿರ್ವಹಿಸಿದ್ದರಿಂದ ಭಾರತವು ಆತ್ಮವಿಶ್ವಾಸದಿಂದ ವ್ಯಾಪಾರ ಒಪ್ಪಂದಗಳನ್ನು ಏರ್ಪಡಿಸುವ ನಿಟ್ಟಿನಲ್ಲಿ ಮಾತುಕತೆಗಳನ್ನು ನಡೆಸುವುದಕ್ಕೆ ಸಾಧ್ಯವಾಗುತ್ತಿರಲಿಲ್ಲ ಎಂದವರು ಹೇಳಿದ್ದಾರೆ. ಸುಧಾರಣೆಯು ತನ್ನ ಸರಕಾರದ ಬದ್ಧತೆಯಾಗಿದ್ದು, ಅದನ್ನು ಮಾತು ಹಾಗೂ ಕೃತಿಯಲ್ಲಿ ಸಾಬೀತುಪಡಿಸಲಾಗಿದೆ ಎಂದರು. ಮುಂದಿನ ಹಂತದ ಆರ್ಥಿಕ ಪರಿವರ್ತನೆಗೆ ಖಾಸಗಿ ವಲಯವು ಅತ್ಯಂತ ಮಹತ್ವದ್ದಾಗಿದೆಯೆಂದು ಹೇಳಿದ ಪ್ರಧಾನಿಯವರು, ಈ ಬಗ್ಗೆ ಅವರಿಂದ ನಿರ್ಣಾಯಕವಾದ ಪ್ರತಿಕ್ರಿಯೆಯನ್ನು ಕೋರಿರುವುದಾಗಿ ತಿಳಿಸಿದರು. ಖಾಸಗಿ ವಲಯವು ಲಾಭದ ಗುರಿಯನ್ನು ಉಳಿಸಿಕೊಳ್ಳುವ ಬಗ್ಗೆ ಕಡಿಮೆ ಗಮನಹರಿಸಬೇಕು. ಮತ್ತು ಸಂಶೋಧನೆ, ಅಭಿವೃದ್ಧಿ, ಪೂರೈಕೆ ಸರಪಣಿ ಮತ್ತು ಗುಣಮಟ್ಟದ ಬಗ್ಗೆ ಗಮನಹರಿಸಬೇಕು. ಸಂಶೋಧನೆ, ದೀರ್ಘಾವಧಿಯ ಸಾಮಥರ್ಧ್ಯ ಮತ್ತು ಜಾಗತಿಕ ಸ್ಪರ್ಧಾತ್ಮಕತೆಯಲ್ಲಿ ದಿಟ್ಟವಾದ ಹೂಡಿಕೆಯು ವಿಕಸಿತ ಭಾರತದೆಡೆಗೆ ಮುಂದಿನ ಜಿಗಿತವಾಗಿದೆ ಎಂದು ಪ್ರಧಾನಿ ಹೇಳಿದರು. ಮೋದಿ ಸಂದರ್ಶನದ ಹೈಲೈಟ್ಸ್ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗುವತ್ತ ಭಾರತದ ಪ್ರಯಾಣದಲ್ಲಿ ಮಹಿಳೆಯರು ಪ್ರಮುಖ ಪಾತ್ರವನ್ನು ವಹಿಸಿದ್ದಾರೆ. ಬೆಳವಣಿಗೆಯು ಸುಸ್ಥಿರವಾಗಿರಬೇಕಾದರೆ, ಅದರ ಲಾಭಗಳನ್ನು ವೇತನಗಳ ಹೆಚ್ಚಳ ಮತ್ತು ಕೌಶಲ್ಯ ವಿಕಸನದ ಮೂಲಕ ಕಾರ್ಮಿಕರೊಂದಿಗೆ ನ್ಯಾಯಯುತವಾಗಿ ಹಂಚಬೇಕಾಗುತ್ತದೆ. ಕೃತಕ ಬುದ್ಧಿಮತ್ತೆ ಹಾಗೂ ಡಿಜಿಟಲ್ ತಂತ್ರಜ್ಞಾನದ ಕೇಂದ್ರವಾಗುವ ನಿಟ್ಟಿನಲ್ಲಿ ಭಾರತ ಶ್ರಮಿಸಬೇಕಾಗಿದೆ. ಹೊಸ ಹೊಸ ಭದ್ರತಾ ಸವಾಲುಗಳನ್ನು ಎದುರಿಸಲು ಭಾರತವು ಸನ್ನದ್ಧವಾಗಿರಬೇಕಾಗಿದೆ. ಇದಕ್ಕಾಗಿ ರಕ್ಷಣಾಪಡೆಗಳ ನಿರಂತರ ಆಧುನೀಕರಣ ಅಗತ್ಯವಾಗಿದೆ.

ವಾರ್ತಾ ಭಾರತಿ 15 Feb 2026 11:22 pm

Bidar | ಬಸವ ಮಂಟಪದಲ್ಲಿ ಶಿವರಾತ್ರಿ ಪ್ರಯುಕ್ತ ಇಷ್ಟಲಿಂಗ ಪೂಜೆ

ಬೀದರ್ : ನಗರದ ಬಸವ ಮಂಟಪದಲ್ಲಿ ರಾಷ್ಟ್ರೀಯ ಬಸವ ದಳ, ಲಿಂಗಾಯತ ಧರ್ಮ ಮಹಾಸಭಾ, ಕ್ರಾಂತಿ ಗಂಗೋತ್ರಿ ಅಕ್ಕನಾಗಲಾಂಬಿಕಾ ಮಹಿಳಾ ಗಣ ವತಿಯಿಂದ ರವಿವಾರ ಆಯೋಜಿಸಿದ್ದ ಸಾಮೂಹಿಕ ಇಷ್ಟಲಿಂಗ ಪೂಜೆ ನಡೆಯಿತು. ಈ ವೇಳೆ ಬೆಂಗಳೂರಿನ ಚನ್ನಬಸವೇಶ್ವರ್ ಜ್ಞಾನಪೀಠದ ಪೀಠಾಧ್ಯಕ್ಷ ಜಗದ್ಗುರು ಡಾ. ಚನ್ನಬಸವಾನಂದ್ ಸ್ವಾಮೀಜಿ, ಬಸವ ಮಂಟಪದ ಸದ್ಗುರು ಮಾತೆ ಸತ್ಯಾದೇವಿ ಅವರು ಮಾತನಾಡಿದರು. ಯಾದಗಿರಿ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಮಹೇಶ್ ಬಿರಾದಾರ್ ಧ್ವಜಾರೋಹಣ ನೆರವೇರಿಸಿದರು. ಪ್ರೊ.ವೀರಶೆಟ್ಟಿ ಮೈಲೂರಕರ್ ಬಸವಪೂಜೆ ನೆರವೇರಿಸಿ ಪ್ರಸಾದ ದಾಸೋಹಗೈದರು. ಈ ವೇಳೆ ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಕೂಡಲ ಸಂಗಮ ಸುಕ್ಷೇತ್ರದಲ್ಲಿ ನೂತನವಾಗಿ ನಿರ್ಮಾಣ ಮಾಡುತ್ತಿರುವ ಲಿಂಗಾಯತ ಧರ್ಮ ಮಹಾಪೀಠದ ಕಾರ್ಯಯೋಜನೆಯ ಭಿತ್ತಿಪತ್ರ ಹಾಗೂ ಗಂಗಾವತಿಯಲ್ಲಿ ಮಾ.22 ರಂದು ನಡೆಯಲಿರುವ ಮಹಾದಂಡನಾಯಕರ ಸ್ಮರಣೋತ್ಸವ ಕಾರ್ಯಕ್ರಮದ ಕರಪತ್ರ ಬಿಡುಗಡೆ ಮಾಡಲಾಯಿತು. ಈ ಕಾರ್ಯಕ್ರಮದ ವೇದಿಕೆ ಮೇಲೆ ಅಖಿಲ ಭಾರತ ಲಿಂಗಾಯತ ಸಮನ್ವಯ ಸಮಿತಿಯ ರಾಜ್ಯ ಸಂಚಾಲಕ ಶ್ರೀಕಾಂತ್ ಸ್ವಾಮಿ, ಪಶುವೈದ್ಯಕೀಯ ವಿ.ವಿ.ಯ ನಿವೃತ್ತ ಡೀನ್ ಡಾ. ಸುರೇಶ್ ಪಾಟೀಲ್, ಉದ್ಯಮಿ ನಾಗಶೆಟ್ಟಿ ದಾಡಗಿ, ಡಾ. ವೀರಶೆಟ್ಟಿ ಮೈಲೂರಕರ್, ಶಿವಶರಣಪ್ಪ ಪಾಟೀಲ್ ಹಾರೂರಗೇರಿ, ನಿರ್ಮಲಾ ನಿಲಂಗೆ, ಶಿವಕುಮಾರ್ ಪಾರಾ, ನ್ಯಾಯವಾದಿ ಅಶೋಕ್ ಮಾನೂರೆ, ಬಸವರಾಜ್ ಲಾಧಾ, ಬಸವರಾಜ್ ಸಂಗಮದ, ಮನ್ಮಥಯ್ಯ ಸ್ವಾಮಿ, ಗಣಪತಿ ಬಿರಾದಾರ್ ಹಾಗೂ ಶ್ರೀನಾಥ್ ಕೋರೆ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಕಲ್ಯಾಣರಾವ್ ಬಂಬುಳಗಿ ವಚನ ಗಾಯನ ಮಾಡಿದರು. ಮಹಾರುದ್ರ ಡಾಕುಳಗೆ ಸ್ವಾಗತಿಸಿದರು. ಸತೀಶ್ ಪಾಟೀಲ್ ನಿರೂಪಿಸಿದರು. ಬಸವಕುಮಾರ್ ಚಟನಳ್ಳಿ ವಂದಿಸಿದರು.  

ವಾರ್ತಾ ಭಾರತಿ 15 Feb 2026 11:21 pm

ರಾಹುಲ್ ಗಾಂಧಿ ಫೋಟೋ ಅಳಿಸಲು ಕ್ರಿಕೆಟಿಗ ಸಚಿನ್ ತೆಂಡುಲ್ಕರ್ ಮೇಲೆ ಒತ್ತಡ: ಕೇರಳ ಕಾಂಗ್ರೆಸ್ ಆರೋಪ

ಸದ್ದಿಲ್ಲದೆ ಮಧ್ಯರಾತ್ರಿ ಫೋಟೋ ರಿಪೋಸ್ಟ್!

ವಾರ್ತಾ ಭಾರತಿ 15 Feb 2026 11:18 pm

ಸೇಡಂ | ಮಹಾಶಿವರಾತ್ರಿ ಅಂಗವಾಗಿ ಯಾನಗುಂದಿ ಬೆಟ್ಟದಲ್ಲಿ ಧಾರ್ಮಿಕ ಕಾರ್ಯಕ್ರಮಗಳು

ಸೇಡಂ : ತಾಲೂಕಿನ ಸುಕ್ಷೇತ್ರ ಯಾನಗುಂದಿ ಬೆಟ್ಟದಲ್ಲಿ ಮಹಾಶಿವರಾತ್ರಿ ಪ್ರಯುಕ್ತ ಲಿಂಗೈಕ್ಯ ಅಹಿಂಸಾ ವೀರ ಧರ್ಮಜ ಮಹಾ ಯೋಗಿನಿ ಮಾತೆ ಮಾಣಿಕೇಶ್ವರಿ ಅಮ್ಮನವರ ಸನ್ನಿಧಿಯಲ್ಲಿ ಭಾನುವಾರ ಬೆಳಗ್ಗೆ 8ರಿಂದ ಮಧ್ಯಾಹ್ನ 2ರವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಭಕ್ತಿಭಾವದಿಂದ ಜರುಗಿದವು. ಅಮ್ಮನವರ ಪಾದುಕಾ ಪೂಜೆ, ಮಹಾರುದ್ರಾಭಿಷೇಕ ಹಾಗೂ ಮಂಗಳಾರತಿ ಕಾರ್ಯಕ್ರಮಗಳು ನೆರವೇರಿದ್ದು, ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದರು. ಈ ಸಂದರ್ಭದಲ್ಲಿ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ, ವಿಧಾನ ಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರ, ಶಾಸಕ ಅಲ್ಲಮಪ್ರಭು ಪಾಟೀಲ, ಟ್ರಸ್ಟ್ ಅಧ್ಯಕ್ಷ ಶಿವಯ್ಯಸ್ವಾಮಿ, ಸಕ್ಕರೆ ಆಯುಕ್ತ ಗೋವಿಂದರೆಡ್ಡಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. ಸಿದ್ರಾಮಪ್ಪ ಸಣ್ಣೂರ, ಭೀಮಣ್ಣ ಸಾಲಿ, ಶಿವಕುಮಾರ (ಜಿಕೆ) ಪಾಟೀಲ ತೆಲ್ಕೂರ, ಜಯಪ್ರಕಾಶ ಕಮಕನೂರ, ಚನ್ನಮಲ್ಲಪ್ಪ ಗಂಟಿ (ಗುರಮಿಠಕಲ್), ಭೀಮರಾವ್ ವಕೀಲ, ಮೌಲಾಲಿ ಅನಪೂರ, ಪರ್ವತರೆಡ್ಡಿ ಪಾಟೀಲ, ಲಲಿತಾ ಅನಪೂರ, ರವೀಂದ್ರ ನಂದಿಗಾಮ, ಕಿಷ್ಟಪ್ಪ ಮಾಸ್ತರ್, ಗುಂಡಪ್ಪ ಇಟಕಲ್, ತಿಮ್ಮಪ್ಪ ನಿಂಗಾವೋಳ್, ಪರುಷರಾಮರೆಡ್ಡಿ ಗಂಗಾ (ರಾವಲಪಲ್ಲಿ), ಶಿವಕುಮಾರ ಕಾನಾಗಡ್ಡಾ, ರಮೇಶ ಅಸ್ಟೂರ, ನರಸಿಂಹರೆಡ್ಡಿ (ಹೈದರಾಬಾದ್), ಸೂರ್ಯಕಾಂತ ಅವರಾದಿ, ಅಮೀನಾಬೇಗಂ, ರುದ್ರು ಪಿಲ್ಲಿ, ಮಹಾದೇವಪ್ಪ ಗೋಣಿ ಸೇರಿದಂತೆ ಲಕ್ಷಾಂತರ ಭಕ್ತರು ಆಗಮಿಸಿದ್ದರು.

ವಾರ್ತಾ ಭಾರತಿ 15 Feb 2026 11:18 pm

ಫೆಬ್ರವರಿ 15ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್‌, ಡೀಸೆಲ್‌ ದರ ಎಷ್ಟಿದೆ ತಿಳಿಯಿರಿ

Petrol, Diesel Price: ಪೆಟ್ರೋಲ್, ಡೀಸೆಲ್‌ ದರದಲ್ಲಿ ಜಾಸ್ತಿ ಅಲ್ಲದಿದ್ದರೂ, ಸ್ವಲ್ಪ ಪ್ರಮಾಣದಲ್ಲಾದರೂ, ಏರಿಳಿತ ಆಗುತ್ತಿರುತ್ತದೆ. ಹಾಗಾದರೆ, ಇಂದು (ಫೆಬ್ರವರಿ 15) ಬೆಂಗಳೂರು ಸೇರಿದಂತೆ ರಾಜ್ಯದ ಉಳಿದ ಜಿಲ್ಲೆಗಳಲ್ಲಿ ಲೀಟರ್‌ ಪೆಟ್ರೋಲ್‌, ಡೀಸೆಲ್‌ ಬೆಲೆ ಎಷ್ಟಿದೆ ಎನ್ನುವ ಅಂಕಿಅಂಶಗಳನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ. ಶಕ್ತಿಯ ಮೂಲಗಳು ಎನಿಸಿಕೊಂಡಿರುವ ಪೆಟ್ರೋಲ್ ಮತ್ತು ಡೀಸೆಲ್ ಇಂಧನ ಅತ್ಯವಶ್ಯಕವಾಗಿ ಬೇಕಾಗುವ ಸಂಪನ್ಮೂಲಗಳಾಗಿವೆ.

ಒನ್ ಇ೦ಡಿಯ 15 Feb 2026 11:16 pm

Kalaburagi | ಪಕ್ಷಭೇದ ಮರೆತು ಸಮಾಜಕ್ಕಾಗಿ ಒಂದಾಗಿ : ಶಾಸಕ ಡಾ.ಅವಿನಾಶ್ ಜಾಧವ

ಸಂತ ಶ್ರೀ ಸೇವಾಲಾಲ್ ಮಹಾರಾಜರ 287ನೆಯ ಜಯಂತಿ

ವಾರ್ತಾ ಭಾರತಿ 15 Feb 2026 11:13 pm

Gold: ಚಿನ್ನದ ಬೆಲೆಯಲ್ಲಿ ದಾಖಲೆಯ ಕುಸಿತ: ಬರೋಬ್ಬರಿ ₹24,500 ಇಳಿಕೆ; ಆಭರಣ ಪ್ರಿಯರಿಗೆ ನೆಮ್ಮದಿ

ಬೆಂಗಳೂರು: ಭಾರತ ಸೇರಿದಂತೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲೂ ಚಿನ್ನದ ದರವುಇತ್ತೀಚಿನ ದಿನಗಳಲ್ಲಿ ಭಾರಿ ಏರಿಳಿತ ಕಾಣುತ್ತಿದೆ. 2025ರಲ್ಲಿ ಹೂಡಿಕೆದಾರರಿಗೆ ಭರ್ಜರಿ ಲಾಭ ತಂದುಕೊಟ್ಟಿದ್ದ ಬಂಗಾರದ ಬೆಲೆ 2026ರ ಜನವರಿಯಲ್ಲಿ 10 ಗ್ರಾಂಗೆ ರೂಪಾಯಿ 1,80,779 ತಲುಪಿ ದಾಖಲೆ ಸೃಷ್ಟಿಸಿತ್ತು. ಇದೀಗ ಅದರ ಬೆಲೆಯಲ್ಲಿ ಸುಮಾರು ರೂಪಾಯಿ 24,500 ಕುಸಿದಿದ್ದು, ಬರೋಬ್ಬರಿ 13.50ರಷ್ಟು ಕಡಿಮೆ ಆಗಿದೆ. ಸದ್ಯ ಮಾರುಕಟ್ಟೆಯಲ್ಲಿ 10

ಒನ್ ಇ೦ಡಿಯ 15 Feb 2026 11:07 pm