ಕಾಮನ್ವೆಲ್ತ್ ಸ್ಪೀಕರ್ಗಳು, ಸಭಾಧ್ಯಕ್ಷರ ಸಮ್ಮೇಳನ ಉದ್ಘಾಟಿಸಿದ ಪ್ರಧಾನಿ ಮೋದಿ; ಸ್ಪೀಕರ್ ಯುಟಿ ಖಾದರ್ ಭಾಗಿ
ಹೊಸದಿಲ್ಲಿ: ದಿಲ್ಲಿಯ ಸಂಸತ್ ಭವನದ ಸಂಕೀರ್ಣದಲ್ಲಿರುವ ಸಂವಿಧಾನ್ ಸದನದ ಸೆಂಟ್ರಲ್ ಹಾಲ್ ನಲ್ಲಿ ಕಾಮನ್ ವೆಲ್ತ್ ಸ್ಪೀಕರ್ ಗಳು ಮತ್ತು ಸಭಾಧ್ಯಕ್ಷರ 28ನೇ ಸಮ್ಮೇಳನ ನಡೆಯಿತು. ಸಮ್ಮೇಳನದಲ್ಲಿ ಕರ್ನಾಟಕದ ಸ್ಪೀಕರ್ ಯುಟಿ ಖಾದರ್ ಭಾಗವಹಿಸಿದರು. ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಪ್ರಧಾನಿ ಮೋದಿ, ಸಂಸದೀಯ ಪ್ರಜಾಪ್ರಭುತ್ವದಲ್ಲಿ ಸ್ಪೀಕರ್ ಪಾತ್ರ ವಿಶಿಷ್ಟವಾಗಿದೆ. ಸ್ಪೀಕರ್ ಗೆ ಹೆಚ್ಚು ಮಾತನಾಡಲು ಅವಕಾಶವಿಲ್ಲ, ಆದರೆ ಅವರ ಜವಾಬ್ದಾರಿ ಇತರರ ಮಾತು ಗಳನ್ನು ಕೇಳುವುದು ಮತ್ತು ಪ್ರತಿಯೊಬ್ಬರೂ ಅವಕಾಶ ಪಡೆಯುವಂತೆ ನೋಡಿಕೊಳ್ಳುವುದು ಎಂದು ಹೇಳಿದರು. ತಾಳ್ಮೆಯು ಸ್ಪೀಕರ್ ಗಳ ಅತ್ಯಂತ ಸಾಮಾನ್ಯ ಲಕ್ಷಣವಾಗಿದೆ. ಗದ್ದಲ ಮಾಡುವ ಮತ್ತು ಅತಿಯಾದ ಉತ್ಸಾಹ ಭರಿತ ಸದಸ್ಯರನ್ನು ಕೂಡ ಅವರು ನಗುನಗುತ್ತಾ ನಿರ್ವಹಿಸುತ್ತಾರೆ ಎಂದು ಪ್ರಧಾನಿ ಹೇಳಿದರು. ಸ್ವಾತಂತ್ರ್ಯದ ನಂತರ 75 ವರ್ಷಗಳ ಕಾಲ ಈ ಕಟ್ಟಡವು ಭಾರತದ ಸಂಸತ್ತಾಗಿ ಕಾರ್ಯನಿರ್ವಹಿಸಿತ್ತು. ಇಲ್ಲಿ ದೇಶದ ಭವಿಷ್ಯವನ್ನು ರೂಪಿಸುವ ಹಲವಾರು ನಿರ್ಣಾಯಕ ನಿರ್ಧಾರಗಳು ಮತ್ತು ಚರ್ಚೆಗಳು ನಡೆದವು ಎಂದು ಪ್ರಧಾನಿ ಹೇಳಿದರು. ಭಾರತವು ಈಗ ಈ ಐತಿಹಾಸಿಕ ಸ್ಥಳವನ್ನು ಸಂವಿಧಾನ್ ಸದನ ಎಂದು ಹೆಸರಿಸುವ ಮೂಲಕ ಪ್ರಜಾಪ್ರಭುತ್ವಕ್ಕೆ ಅರ್ಪಿಸಿದೆ ಎಂದು ಮೋದಿ ಹೇಳಿದರು. ಇತ್ತೀಚೆಗೆ ಭಾರತವು ತನ್ನ ಸಂವಿಧಾನದ ಅನುಷ್ಠಾನದ 75 ವರ್ಷಗಳನ್ನು ಆಚರಿಸಿದೆ. ಸಂವಿಧಾನ್ ಸದನದಲ್ಲಿ ಎಲ್ಲಾ ಗಣ್ಯ ಅತಿಥಿಗಳ ಉಪಸ್ಥಿತಿಯು ಭಾರತದ ಪ್ರಜಾಪ್ರಭುತ್ವಕ್ಕೆ ಬಹಳ ವಿಶೇಷವಾದ ಕ್ಷಣವಾಗಿದೆ ಎಂದು ಪ್ರಧಾನಿ ಮೋದಿ ಹೇಳಿದರು. ಭಾರತದಲ್ಲಿ ಕಾಮನ್ವೆಲ್ತ್ ಸ್ಪೀಕರ್ಗಳು ಮತ್ತು ಸಭಾಧ್ಯಕ್ಷರ ಸಮ್ಮೇಳನ ನಡೆಯುತ್ತಿರುವುದು ಇದು ನಾಲ್ಕನೇ ಬಾರಿಯಾಗಿದೆ. ಸಂಸದೀಯ ಪ್ರಜಾಪ್ರಭುತ್ವದ ಪರಿಣಾಮಕಾರಿ ಅನುಷ್ಠಾನ ಈ ಸಮ್ಮೇಳನದ ಪ್ರಮುಖ ವಿಷಯ ಎಂದು ಪ್ರಧಾನಿ ಮೋದಿ ಹೇಳಿದರು.
Kerala | ಸಾಯ್ ಹಾಸ್ಟೆಲ್ ನಲ್ಲಿ ಇಬ್ಬರು ವಿದ್ಯಾರ್ಥಿನಿಯರು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ
ಕೊಲ್ಲಂ, ಜ.15: ಇಲ್ಲಿಯ ಭಾರತೀಯ ಕ್ರೀಡಾ ಪ್ರಾಧಿಕಾರದ (SAI) ಹಾಸ್ಟೆಲ್ ನಲ್ಲಿ ತರಬೇತಿ ಪಡೆಯುತ್ತಿದ್ದ ಇಬ್ಬರು ವಿದ್ಯಾರ್ಥಿನಿಯರು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಮೃತರನ್ನು ಕೋಝಿಕೋಡ್ನ ಸಾಂಡ್ರಾ (17) ಮತ್ತು ತಿರುವನಂತಪುರ ನಿವಾಸಿ ವೈಷ್ಣವಿ (15) ಎಂದು ಗುರುತಿಸಲಾಗಿದೆ. ಗುರುವಾರ ಬೆಳಿಗ್ಗೆ ಐದು ಗಂಟೆಯ ಸುಮಾರಿಗೆ ಈ ದುರಂತ ಬೆಳಕಿಗೆ ಬಂದಿದೆ. ಬಾಲಕಿಯರು ತರಬೇತಿಗೆ ಹಾಜರಾಗಿರಲಿಲ್ಲ. ಹೀಗಾಗಿ ಪರಿಶೀಲಿಸಲು ಅಧಿಕಾರಿಗಳು ಅವರ ಕೊಠಡಿಗೆ ತೆರಳಿದ್ದರು. ಪದೇಪದೇ ಕರೆದರೂ ಯಾವುದೇ ಪ್ರತಿಕ್ರಿಯೆ ದೊರೆಯದ ಕಾರಣ ಸಿಬ್ಬಂದಿಗಳು ಬಲಪ್ರಯೋಗದಿಂದ ಬಾಗಿಲು ತೆರೆದು ಒಳಪ್ರವೇಶಿಸಿ ನೋಡಿದಾಗ, ಬಾಲಕಿಯರ ಮೃತದೇಹಗಳು ಸೀಲಿಂಗ್ ಫ್ಯಾನ್ ಗಳಿಂದ ನೇತಾಡುತ್ತಿದ್ದವು. ಜೊತೆಯಲ್ಲಿ ತರಬೇತಿ ಪಡೆಯುತ್ತಿದ್ದ ಇತರ ವಿದ್ಯಾರ್ಥಿನಿಯರು, ಇಬ್ಬರೂ ಬಾಲಕಿಯರು ತಡರಾತ್ರಿ ಒಟ್ಟಿಗಿದ್ದನ್ನು ನೋಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಸಾವುಗಳ ಕುರಿತು ಪೊಲೀಸರು ತನಿಖೆ ಆರಂಭಿಸಿದ್ದು, ಸ್ಥಳದಲ್ಲಿ ಯಾವುದೇ ಆತ್ಮಹತ್ಯೆ ಚೀಟಿ ಪತ್ತೆಯಾಗಿಲ್ಲ. ಸಾವುಗಳಿಗೆ ಕಾರಣವೇನು ಎಂಬುದು ತಕ್ಷಣಕ್ಕೆ ತಿಳಿದುಬಂದಿಲ್ಲ. 12ನೇ ತರಗತಿಯಲ್ಲಿ ಓದುತ್ತಿದ್ದ ಸಾಂಡ್ರಾ ಅಥ್ಲೆಟಿಕ್ಸ್ ನಲ್ಲಿ ತರಬೇತಿ ಪಡೆಯುತ್ತಿದ್ದರೆ, ಕಬಡ್ಡಿ ಆಟಗಾರ್ತಿ ವೈಷ್ಣವಿ 10ನೇ ತರಗತಿಯ ವಿದ್ಯಾರ್ಥಿನಿಯಾಗಿದ್ದಳು. ಸಾಮಾನ್ಯವಾಗಿ ಬೇರೆ ಕೊಠಡಿಯಲ್ಲಿ ಉಳಿಯುತ್ತಿದ್ದ ವೈಷ್ಣವಿ, ಬುಧವಾರ ರಾತ್ರಿ ಸಾಂಡ್ರಾಳ ಕೊಠಡಿಯಲ್ಲಿ ತಂಗಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ. ಮರಣೋತ್ತರ ಪರೀಕ್ಷೆಗಳ ಬಳಿಕ ಪೊಲೀಸರು ಮೃತದೇಹಗಳನ್ನು ಕುಟುಂಬಗಳಿಗೆ ಹಸ್ತಾಂತರಿಸಿದ್ದಾರೆ.
Bengaluru | ದ್ವಿಚಕ್ರ ವಾಹನದಿಂದ ಬಿದ್ದು ಆರು ವರ್ಷದ ಬಾಲಕಿ ಮೃತ್ಯು
ಬೆಂಗಳೂರು 5: ತಂದೆಯೊಂದಿಗೆ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದ ಆರು ವರ್ಷದ ಬಾಲಕಿ ನಿಯಂತ್ರಣ ತಪ್ಪಿ ಕೆಳಗೆ ಬಿದ್ದು ಮೃತಪಟ್ಟಿರುವ ಘಟನೆ ವಿಜಯನಗರ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ನಂದಿನಿ ಲೇಔಟ್ ನಿವಾಸಿ ಪರಮೇಶ್ವರ್ ಎಂಬುವರ ಪುತ್ರಿ ಹಾರಿಕಾ(6) ಮೃತಪಟ್ಟ ಬಾಲಕಿ ಎಂದು ಗುರುತಿಸಲಾಗಿದೆ. ಪರಮೇಶ್ವರ್ ಅವರು ಬುಧವಾರ(ಜ.14) ಸಂಜೆ 6 ಗಂಟೆ ಸುಮಾರಿನಲ್ಲಿ ಮಗಳು ಹಾರಿಕಾಳನ್ನು ದ್ವಿಚಕ್ರ ವಾಹನದ ಹಿಂಬದಿ ಕೂರಿಸಿಕೊಂಡು ವೆಸ್ಟ್ ಆಫ್ ಕಾರ್ಡ್ ರಸ್ತೆಯ ಶಿವನಹಳ್ಳಿ ಡೌನ್ ರ್ಯಾಂಪ್ ಬಳಿ ಹೋಗುತ್ತಿದ್ದಾಗ ಬ್ರೇಕ್ ಹಾಕಿದ್ದಾರೆ. ಆ ವೇಳೆ ನಿಯಂತ್ರಣ ತಪ್ಪಿ ಕೆಳಗೆ ಬಿದ್ದ ಬಾಲಕಿ ಗಂಭೀರ ಗಾಯಗೊಂಡಿದ್ದು, ತಕ್ಷಣ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆಗೆ ದಾಖಲಿಸಿದರಾದರೂ ರಾತ್ರಿ 9 ಗಂಟೆ ಸುಮಾರಿನಲ್ಲಿ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾಳೆ. ಈ ಬಗ್ಗೆ ವಿಜಯನಗರ ಸಂಚಾರಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಜರುಗಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಮಹಾದೇವ ಬೆಟ್ಟಿಂಗ್ ಆ್ಯಪ್ ಪ್ರಕರಣ | EDಯಿಂದ 21.45 ಕೋಟಿ ರೂ. ಮೌಲ್ಯದ ಆಸ್ತಿ ಮುಟ್ಟುಗೋಲು
ಹೊಸದಿಲ್ಲಿ, ಜ.15: ಮಹಾದೇವ ಬೆಟ್ಟಿಂಗ್ ಆ್ಯಪ್ ಪ್ರಕರಣದ ತನಿಖೆಯನ್ನು ತೀವ್ರಗೊಳಿಸಿರುವ ಜಾರಿ ನಿರ್ದೇಶನಾಲಯ (ED)ವು 21.45 ಕೋಟಿ ರೂ. ಮೌಲ್ಯದ ಆಸ್ತಿಪಾಸ್ತಿಗಳಿಗೆ ಮುಟ್ಟುಗೋಲು ಹಾಕಿರುವುದಾಗಿ ರವಿವಾರ ವರದಿಯಾಗಿದೆ. 2002ರ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (PMLA) ಅಡಿಯಲ್ಲಿ ಈ ಆಸ್ತಿಗಳನ್ನು ತಾತ್ಕಾಲಿಕವಾಗಿ ಮುಟ್ಟುಗೋಲು ಹಾಕಲಾಗಿದೆ. ಅಕ್ರಮ ಬೆಟ್ಟಿಂಗ್ ದಂಧೆ ಹಾಗೂ ಅದಕ್ಕೆ ಸಂಬಂಧಿಸಿದಂತೆ ಭಾರತದ ವಿವಿಧ ರಾಜ್ಯಗಳಲ್ಲಿ ಹರಡಿರುವ ಅಕ್ರಮ ಹಣವರ್ಗಾವಣೆ ಚಟುವಟಿಕೆಗಳನ್ನು ಮಟ್ಟಹಾಕುವ ಪ್ರಯತ್ನಗಳ ಭಾಗವಾಗಿ ಜಾರಿ ನಿರ್ದೇಶನಾಲಯ ಈ ಕ್ರಮ ಕೈಗೊಂಡಿದೆ. ಛತ್ತೀಸ್ಗಢ, ಮಧ್ಯಪ್ರದೇಶ, ರಾಜಸ್ಥಾನ ಹಾಗೂ ಇತರ ಪ್ರಾಂತಗಳಲ್ಲಿ ಕಾರ್ಯಾಚರಿಸುತ್ತಿದ್ದ ಅಕ್ರಮ ಬೆಟ್ಟಿಂಗ್ ಜಾಲಕ್ಕೆ ಸಂಬಂಧಿಸಿದಂತೆ ಈ ತನಿಖೆ ನಡೆಯುತ್ತಿದೆ. ಮಹಾದೇವ ಬೆಟ್ಟಿಂಗ್ ಸಂಸ್ಥೆ ಪ್ರವರ್ತಕರು, ಸಮಿತಿಯ ನಿರ್ವಾಹಕರು ಹಾಗೂ ಏಜೆಂಟರ ಸಂಕೀರ್ಣ ಜಾಲದ ಮೂಲಕ ಕಾರ್ಯಾಚರಿಸುತ್ತಿತ್ತು. ಡಿಜಿಟಲ್ ಪ್ಲಾಟ್ಫಾರಂಗಳನ್ನು ಬಳಸಿಕೊಂಡು ಅಕ್ರಮ ಬೆಟ್ಟಿಂಗ್ ದಂಧೆಯನ್ನು ನಡೆಸುತ್ತಿದ್ದುದಾಗಿ ಜಾರಿ ನಿರ್ದೇಶನಾಲಯದ ತನಿಖೆಯಿಂದ ತಿಳಿದುಬಂದಿದೆ. ಬೋಗಸ್ ಕಂಪನಿಗಳು, ಬೇನಾಮಿ ಖಾತೆಗಳು ಹಾಗೂ ಅಕ್ರಮ ಹಣಕಾಸು ವರ್ಗಾವಣೆ ಸೇರಿದಂತೆ ವಿವಿಧ ವಿಧಾನಗಳ ಮೂಲಕ ನಿಧಿಗಳನ್ನು ಸಂಗ್ರಹಿಸುತ್ತಿತ್ತೆನ್ನಲಾಗಿದೆ. ಬೆಟ್ಟಿಂಗ್ ದಂಧೆಯಿಂದ ಲಭಿಸಿದ ಲಾಭಾಂಶದ ಪೈಕಿ ಶೇ.70ರಿಂದ ಶೇ.75ರಷ್ಟು ಹಣವು ಸ್ಕೀಮ್ನ ಮುಖ್ಯ ಪ್ರವರ್ತಕರಿಗೆ ಸೇರಿದ್ದು, ಉಳಿದ ಹಣವನ್ನು ಏಜೆಂಟರಿಗೆ ವಿತರಿಸಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿ ಮುಟ್ಟುಗೋಲು ಹಾಕಿದ ಆಸ್ತಿಗಳು ಬೆಟ್ಟಿಂಗ್ ಕಾರ್ಯಾಚರಣೆಗಳನ್ನು ನಿರ್ವಹಿಸುವ, ಖಾತೆಗಳನ್ನು ನಿಭಾಯಿಸುವ ಹಾಗೂ ಡಿಜಿಟಲ್ ಮತ್ತು ಸಾಮಾಜಿಕ ಜಾಲತಾಣಗಳ ಮೂಲಕ ಮಹಾದೇವ ಪ್ಲಾಟ್ಫಾರಂ ಅನ್ನು ಪ್ರಚಾರ ಮಾಡುತ್ತಿದ್ದವರಿಗೆ ಸೇರಿದವುಗಳಾಗಿವೆ ಎಂದು ಜಾರಿ ನಿರ್ದೇಶನಾಲಯದ ಮೂಲಗಳು ತಿಳಿಸಿವೆ.
ರಾಜಸ್ಥಾನ ರಾಜಧಾನಿಗೆ ಹರಿದುಬಂದ ವಿಶ್ವವಿಖ್ಯಾತ ಸಾಹಿತಿ–ಕಲಾವಿದರ ದಂಡು
Bangladesh ಕ್ರಿಕೆಟ್ ಬಿಕ್ಕಟ್ಟು: ನಿರ್ದೇಶಕ ಎಂ. ನಝ್ಮುಲ್ ಇಸ್ಲಾಂರನ್ನು ವಜಾಗೊಳಿಸಿದ ಬಿಸಿಬಿ
ಬಾಂಗ್ಲಾ ಕ್ರಿಕೆಟಿಗರು ದೇಶೀಯ ಕ್ರಿಕೆಟ್ ಬಹಿಷ್ಕಾರದ ಬೆದರಿಕೆ ಹಾಕಿದ ಹಿನ್ನೆಲೆಯಲ್ಲಿ ಕ್ರಮ
Maharashtra ಸ್ಥಳೀಯ ಸಂಸ್ಥೆ ಚುನಾವಣೆ | ಅಕ್ರಮಗಳು ನಡೆದಿವೆ; ಇದು ಪ್ರಜಾಪ್ರಭುತ್ವದ ಹತ್ಯೆ: ಉದ್ಧವ್ ಠಾಕ್ರೆ ಆರೋಪ
ಮುಂಬೈ: ಮಹಾರಾಷ್ಟ್ರದ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಅಕ್ರಮಗಳು ನಡೆದಿದ್ದು, ಇದು ಪ್ರಜಾಪ್ರಭುತ್ವದ ಹತ್ಯೆಗೆ ಮಾಡಿದ ಪ್ರಯತ್ನವಾಗಿದೆ ಎಂದು ಗುರುವಾರ ಶಿವಸೇನೆ (ಉದ್ಧವ್ ಬಣ)ದ ಮುಖ್ಯಸ್ಥ ಉದ್ಧವ್ ಠಾಕ್ರೆ ಆರೋಪಿಸಿದ್ದಾರೆ. ನಗರ ಪಾಲಿಕೆಗಳ ಚುನಾವಣೆಯಲ್ಲಿ ಅಕ್ರಮಗಳು ನಡೆದಿರುವ ಆರೋಪದ ಹಿನ್ನೆಲೆಯಲ್ಲಿ, ರಾಜ್ಯ ಮುಖ್ಯ ಚುನಾವಣಾ ಆಯುಕ್ತರನ್ನು ಸೇವೆಯಿಂದ ಅಮಾನತುಗೊಳಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಆಗ್ರಹಿಸಿದ್ದಾರೆ. ಗುರುವಾರ ಮುಂಬೈ ಸೇರಿದಂತೆ ಮಹಾರಾಷ್ಟ್ರ ರಾಜ್ಯದ 29 ನಗರ ಪಾಲಿಕೆಗಳ ಚುನಾವಣೆಗೆ ಮತದಾನ ನಡೆಯಿತು. ಸುದ್ದಿಗಾರರೊಂದಿಗೆ ಮಾತನಾಡಿದ ಉದ್ಧವ್ ಠಾಕ್ರೆ, ಚುನಾವಣಾ ಆಯೋಗವು ಸಂವಿಧಾನ ವಿರೋಧಿಯಾಗಿ ವರ್ತಿಸುತ್ತಿದೆ ಎಂದು ಆರೋಪಿಸಿದರು. ಚುನಾವಣಾ ಆಯೋಗ ಹಾಗೂ ಸರಕಾರ ಪರಸ್ಪರ ಕೈಜೋಡಿಸಿವೆ ಎಂದು ಆರೋಪಿಸಿದ ಅವರು, ರಾಜ್ಯ ಮುಖ್ಯ ಚುನಾವಣಾ ಆಯುಕ್ತ ದಿನೇಶ್ ವಾಘ್ಮರೆಯನ್ನು ಸೇವೆಯಿಂದ ಅಮಾನತುಗೊಳಿಸಬೇಕು ಎಂದು ಒತ್ತಾಯಿಸಿದರು.
ಕುಷ್ಟಗಿ | ಹಿರಿಯ ನಾಗರಿಕರಿಗಾಗಿ ಉಚಿತ ಆರೋಗ್ಯ ತಪಾಸಣೆ ಶಿಬಿರ
ಕುಷ್ಟಗಿ : ಗ್ರಾಮದ ಹಿರಿಯ ನಾಗರಿಕರ ಆರೋಗ್ಯ ಕಾಪಾಡುವ ಉದ್ದೇಶದಿಂದ ಹನುಮಸಾಗರದಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರವನ್ನು ಆಯೋಜಿಸಲಾಯಿತು. ಗ್ರಾಮ ಪಂಚಾಯತ್, ಆರೋಗ್ಯ ಇಲಾಖೆ, ಆಯುಷ್ ಇಲಾಖೆ ಹಾಗೂ ಕಲಿಕೆ–ಟಾಟಾ ಟ್ರಸ್ಟ್ ಸಂಸ್ಥೆಗಳ ಸಹಯೋಗದಲ್ಲಿ ನಡೆದ ಈ ಶಿಬಿರಕ್ಕೆ ಹಿರಿಯ ನಾಗರಿಕರಿಂದ ಉತ್ತಮ ಸ್ಪಂದನೆ ದೊರೆಯಿತು. ಕಾರ್ಯಕ್ರಮವನ್ನು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ನಿಂಗಪ್ಪ ಮೂಲಿಮನಿ ಉದ್ಘಾಟಿಸಿದರು. ಆಯುಷ್ ಇಲಾಖೆ ಆರೋಗ್ಯಾಧಿಕಾರಿ (ಕುಷ್ಟಗಿ) ಡಾ. ವಿಜಯಲಕ್ಷ್ಮಿ, ಹನುಮಸಾಗರದ ವೈದ್ಯಾಧಿಕಾರಿ ಡಾ.ದೀಪಿಕಾ, ಆಯುಷ್ ಫಾರ್ಮಸಿ ಅಧಿಕಾರಿ ಸುಧಾಕರ್ (ಕುಷ್ಟಗಿ), ಐಸಿಟಿಸಿ ಕೌನ್ಸಿಲರ್ ಚನ್ನಬಸಪ್ಪ ಹನುಮನಾಳ, ಐಸಿಟಿಸಿ ಲ್ಯಾಬ್ ಟೆಕ್ನಿಷಿಯನ್ ಎ.ಎಸ್. ಅಂತರಗಂಗಿ, ಸಿಎಚ್ಒ ಬೀರಪ್ಪ, ಗ್ರಾಮ ಪಂಚಾಯಿತಿ ಗ್ರಂಥಾಲಯದ ಗ್ರಂಥಪಾಲಕಿ ದುರ್ಗಮ್ಮ ಹಿರೇಮನಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಕಾರ್ಯಕ್ರಮದಲ್ಲಿ ಮಾತನಾಡಿದ ಡಾ.ವಿಜಯಲಕ್ಷ್ಮಿ ಅವರು, ಹಿರಿಯ ನಾಗರಿಕರು ಪ್ರತಿಮಾಸ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವುದು ಅತ್ಯಂತ ಅಗತ್ಯ. ಆಹಾರ ಪದ್ಧತಿಯಲ್ಲಿ ಬದಲಾವಣೆ ಮಾಡಿಕೊಂಡು ಸಮಯಕ್ಕೆ ಸರಿಯಾಗಿ ಊಟ, ಔಷಧ ಸೇವನೆ ಮಾಡಬೇಕು. ಸಕ್ಕರೆ ಕಾಯಿಲೆ, ರಕ್ತದೊತ್ತಡ, ಮೊಣಕಾಲು–ಕುತ್ತಿಗೆ ನೋವು, ಅಸಿಡಿಟಿ, ನಿದ್ರಾಭಂಗ ಹಾಗೂ ಏಕಾಂಗಿತನದಂತಹ ಸಮಸ್ಯೆಗಳಿಂದ ದೂರವಿರಲು ಕಲಿಕೆ–ಟಾಟಾ ಟ್ರಸ್ಟ್ ನೀಡಿರುವ ಉಪಕರಣಗಳನ್ನು ಬಳಸಿಕೊಂಡು ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು. ಉದ್ಘಾಟನಾ ಭಾಷಣದಲ್ಲಿ ನಿಂಗಪ್ಪ ಮೂಲಿಮನಿ ಅವರು, ಹಿರಿಯರು ನವಣೆ, ಸಾವಕ್ಕಿ ಮೊದಲಾದ ಪೌಷ್ಟಿಕ ಆಹಾರ ಸೇವನೆಗೆ ಆದ್ಯತೆ ನೀಡಬೇಕು. ಚಹಾ ಸೇವನೆ ಕಡಿಮೆ ಮಾಡಿ, ಕೆಟ್ಟ ಅಭ್ಯಾಸಗಳನ್ನು ತ್ಯಜಿಸಬೇಕು. ಹಿರಿಯ ನಾಗರಿಕರ ಕೇಂದ್ರಕ್ಕೆ ಬಂದು ಹೆಚ್ಚು ಸಮಯವನ್ನು ಉಪಯುಕ್ತವಾಗಿ ಕಳೆಯಬೇಕು. ಕಲಿಕೆ–ಟಾಟಾ ಟ್ರಸ್ಟ್ ಈಗಾಗಲೇ ನೀಡಿರುವ ಆರೋಗ್ಯ ಉಪಕರಣಗಳು ಗ್ರಾಮ ಪಂಚಾಯತ್ ಗ್ರಂಥಾಲಯದಲ್ಲಿ ಲಭ್ಯವಿದ್ದು, ಅವುಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಹೇಳಿದರು. ವೈದ್ಯಾಧಿಕಾರಿ ಡಾ. ದೀಪಿಕಾ ಅವರು ಮಾತನಾಡಿ, ಆರೋಗ್ಯ ಇಲಾಖೆ ಪ್ರತಿ ತಿಂಗಳು ಹಿರಿಯರಿಗಾಗಿ ಬಿಪಿ ಹಾಗೂ ಶುಗರ್ ತಪಾಸಣೆ ನಡೆಸುತ್ತಿದೆ. ಅಗತ್ಯ ಔಷಧಿಗಳನ್ನು ಉಚಿತವಾಗಿ ವಿತರಿಸಲಾಗುತ್ತಿದೆ. ಹಿರಿಯರು ಸಮಯಕ್ಕೆ ಸರಿಯಾಗಿ ತಪಾಸಣೆ ಹಾಗೂ ಔಷಧ ಸೇವನೆ ಮಾಡಬೇಕು ಎಂದು ಮನವಿ ಮಾಡಿದರು. ಐಸಿಟಿಸಿ ಕೌನ್ಸಿಲರ್ ಚನ್ನಬಸಪ್ಪ ಹನುಮನಾಳ ಅವರು ಅಸ್ತಮಾ, ಶ್ವಾಸಕೋಶ ಸಂಬಂಧಿ ರೋಗಗಳು, ಟಿಬಿ ಹಾಗೂ ಎಚ್ಐವಿ ಕುರಿತು ಮುಂಜಾಗ್ರತೆ ವಹಿಸುವಂತೆ ತಿಳಿಸಿದರು. ಕಲಿಕೆ–ಟಾಟಾ ಟ್ರಸ್ಟ್ ಸಂಯೋಜಕ ಸಿದ್ದಲಿಂಗ ರೆಡ್ಡಿ ಮಾತನಾಡಿದರು. ಕಾರ್ಯಕ್ರಮದ ನಿರೂಪಣೆಯನ್ನು ಸಿದ್ದಲಿಂಗ ರೆಡ್ಡಿ ವಹಿಸಿದ್ದರು. ಈ ಶಿಬಿರದಲ್ಲಿ ಸುಮಾರು 150ಕ್ಕೂ ಹೆಚ್ಚು ಹಿರಿಯ ನಾಗರಿಕರು ಭಾಗವಹಿಸಿ ಆರೋಗ್ಯ ತಪಾಸಣೆ ಮಾಡಿಕೊಂಡರು.
ಹೊಸದಿಲ್ಲಿ: ತನಗೆ ವಿಧಿಸಿರುವ ಶಿಕ್ಷೆಯನ್ನು ಪ್ರಶ್ನಿಸಿ ಅತ್ಯಾಚಾರ ಅಪರಾಧಿ ಕುಲ್ದೀಪ್ ಸಿಂಗ್ ಸೆಂಗರ್ ಸಲ್ಲಿಸಿರುವ ಮೇಲ್ಮನವಿಗೆ ಸಂಬಂಧಿಸಿ, ಮತ್ತಷ್ಟು ಸಾಕ್ಷ್ಯಗಳನ್ನು ನ್ಯಾಯಾಲಯದ ಮುಂದೆ ದಾಖಲಿಸಲು ಉನ್ನಾಂವ್ ಅತ್ಯಾಚಾರ ಸಂತ್ರಸ್ತೆ ಗುರುವಾರ ದಿಲ್ಲಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಬಿಜೆಪಿಯ ಮಾಜಿ ನಾಯಕ ಕುಲ್ದೀಪ್ ಸಿಂಗ್ ಸೆಂಗರ್ ಸಲ್ಲಿಸಿರುವ ಮೇಲ್ಮನವಿಗೆ ಸಂಬಂಧಿಸಿದಂತೆ ಅರ್ಜಿಯೊಂದನ್ನು ಸಲ್ಲಿಸಿರುವ ಸಂತ್ರಸ್ತೆ, ಇತ್ತೀಚಿನ ಬೆಳವಣಿಗೆಗಳು ಹಾಗೂ ನನಗೆ ಮತ್ತು ನನ್ನ ಕುಟುಂಬಕ್ಕೆ ಇರುವ ಬೆದರಿಕೆಯನ್ನು ತೋರಿಸಲು ನ್ಯಾಯಾಲಯದ ಮುಂದೆ ವಾಸ್ತವಾಂಶಗಳು ಮತ್ತು ದಾಖಲೆಗಳನ್ನು ಮಂಡಿಸಲು ಬಯಸಿದ್ದೇನೆ ಎಂದು ತಿಳಿಸಿದ್ದಾರೆ. ನನ್ನ ಜನ್ಮದಿನಾಂಕಕ್ಕೆ ಸಂಬಂಧಿಸಿ, ಉನ್ನಾಂವ್ ನಗರದಲ್ಲಿನ ನಾನು ವ್ಯಾಸಂಗ ಮಾಡುತ್ತಿದ್ದ ಶಾಲೆಯ ಇಬ್ಬರು ಅಧಿಕಾರಿಗಳ ಸಾಕ್ಷ್ಯವನ್ನು ದಾಖಲಿಸಿಕೊಳ್ಳುವಂತೆ ಸೂಚನೆ ನೀಡಬೇಕು ಎಂದು ಈ ಅರ್ಜಿಯಲ್ಲಿ ಮನವಿ ಮಾಡಲಾಗಿದೆ. ಸೆಂಗರ್ ತನಿಖೆಯ ಮೇಲೆ ಪ್ರಭಾವ ಬೀರಿದ್ದು, ಇದೀಗ ಮೇಲ್ಮನವಿಯೂ ಆಧರಿಸಿರುವ ನನ್ನ ವಯಸ್ಸಿಗೆ ಸಂಬಂಧಿಸಿದ ತಿದ್ದುಪಡಿ ಮಾಡಲಾದ ಹಾಗೂ ಸುಳ್ಳು ದಾಖಲೆಗಳನ್ನು ತನಿಖೆಯ ವೇಳೆ ಬಳಸಿಕೊಳ್ಳಲಾಗಿದೆ ಎಂದು ಸಂತ್ರಸ್ತೆ ಆರೋಪಿಸಿದ್ದಾರೆ. ಕುಲ್ದೀಪ್ ಸಿಂಗ್ ಸೆಂಗರ್ ಸಲ್ಲಿಸಿರುವ ಮೇಲ್ಮನವಿಯ ವಿಚಾರಣೆ ಅಂತಿಮ ಹಂತದಲ್ಲಿದೆ ಎಂಬುದನ್ನು ಗಮನಕ್ಕೆ ತೆಗೆದುಕೊಂಡ ನ್ಯಾ. ಪ್ರತಿಭಾ ಎಂ. ಸಿಂಗ್ ಮತ್ತು ನ್ಯಾ. ಮಧು ಜೈನ್ ಅವರನ್ನು ಒಳಗೊಂಡ ನ್ಯಾಯಪೀಠ, ಸಂತ್ರಸ್ತೆಯ ಅರ್ಜಿಯ ವಿಚಾರಣೆಯನ್ನು ಫೆಬ್ರವರಿ 25ಕ್ಕೆ ಪಟ್ಟಿ ಮಾಡಿದೆ.
ಲಡಾಖ್ ನಲ್ಲಿ ಖಾಮಿನೈ ಪರ ರ್ಯಾಲಿ: ಕಾರ್ಗಿಲ್ ನ ಲಾಲ್ ಚೌಕ್ ನಲ್ಲಿ ನೂರಾರು ಮಂದಿ ಜಮಾವಣೆ
ಹೊಸದಿಲ್ಲಿ: ಇರಾನ್ ನಲ್ಲಿ ಉಂಟಾಗಿರುವ ಆಂತರಿಕ ಪ್ರಕ್ಷುಬ್ಧತೆಯ ಹಿನ್ನೆಲೆಯಲ್ಲಿ, ಅದರ ಸರ್ವೋಚ್ಚ ನಾಯಕ ಖಾಮಿನೈ ಪರ ಬೆಂಬಲ ವ್ಯಕ್ತಪಡಿಸಲು ಇಮಾಮ್ ಖೊಮೇನಿ ಸ್ಮಾರಕ ಟ್ರಸ್ಟ್ ಕಾರ್ಗಿಲ್ನಲ್ಲಿ ರ್ಯಾಲಿಯೊಂದನ್ನು ಆಯೋಜಿಸಲಾಗಿತ್ತು ಎಂದು Times of India ವರದಿ ಮಾಡಿದೆ. ಇರಾನ್ ನ ಆಂತರಿಕ ಬೆಳವಣಿಗೆಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿರುವ ಹಿನ್ನೆಲೆ, ಅದರ ಸರ್ವೋಚ್ಚ ನಾಯಕ ಅಯತುಲ್ಲಾ ಸೈಯದ್ ಅಲಿ ಖಾಮಿನೈ ಪರ ಕಾರ್ಗಿಲ್ನ ವಿವಿಧ ಸ್ಥಳಗಳಲ್ಲಿ ರ್ಯಾಲಿಗಳನ್ನು ನಡೆಸಲಾಯಿತು. ಝೈನಾಬಿಯಾ ಚೌಕ್ನಿಂದ ಪ್ರಾರಂಭಗೊಂಡ ಮೆರವಣಿಗೆ ಘಾತಿಮಾ ಚೌಕ್ ಹಾಗೂ ಇಸ್ನಾ ಅಶಾರಿಯಾ ಚೌಕ್ ಮೂಲಕ ಸಾಗಿತು. ಮತ್ತೊಂದು ಮೆರವಣಿಗೆ ಜಾಮಿಯಾ ಮಸೀದಿಯಿಂದ ಆರಂಭಗೊಂಡು ಲಾಲ್ ಚೌಕ್ ಹಾಗೂ ಖೊಮೇನಿ ಚೌಕ್ ಮೂಲಕ ಹಾದು ಹೋಯಿತು. ಈ ಎಲ್ಲ ಮೆರವಣಿಗೆಗಳು ಮುಖ್ಯ ಸಭೆ ಆಯೋಜಿಸಲಾಗಿದ್ದ ಕಾರ್ಗಿಲ್ನ ಹಳೆಯ ಟ್ಯಾಕ್ಸಿ ಸ್ಟ್ಯಾಂಡ್ ಬಳಿ ನೆರೆದವು. ಈ ರ್ಯಾಲಿಯ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ದೊಡ್ಡ ಸಂಖ್ಯೆಯಲ್ಲಿ ನೆರೆದಿದ್ದ ಜನರು ಖಾಮಿನೈ ಅವರ ಬ್ಯಾನರ್ ಗಳನ್ನು ಹಿಡಿದು ಘೋಷಣೆಗಳನ್ನು ಕೂಗುತ್ತಿರುವುದು ಕಂಡು ಬಂದಿದೆ. ಇರಾನ್ ನಲ್ಲಿ ಮುಂದುವರಿದಿರುವ ಆಂತರಿಕ ಪ್ರಕ್ಷುಬ್ಧತೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿರುವ ನಡುವೆಯೇ ಈ ರ್ಯಾಲಿ ನಡೆದಿದೆ. ಈ ನಡುವೆ, ವಿಶ್ವ ಸಂಸ್ಥೆಯ ಭದ್ರತಾ ಮಂಡಳಿ ಹಾಗೂ ವಿಶ್ವ ಸಂಸ್ಥೆಯ ಪ್ರಧಾನ ಕಾರ್ಯದರ್ಶಿಗೆ ಮನವಿ ಸಲ್ಲಿಸಿರುವ ಇರಾನ್, ಅಮೆರಿಕ ಇರಾನ್ನಲ್ಲಿ ಹಿಂಸಾಚಾರಕ್ಕೆ ಕುಮ್ಮಕ್ಕು ನೀಡುತ್ತಿದೆ, ದೇಶದ ಆಂತರಿಕ ವ್ಯವಹಾರಗಳಲ್ಲಿ ಮಧ್ಯಪ್ರವೇಶಿಸುತ್ತಿದೆ ಮತ್ತು ಇರಾನ್ ಮೇಲೆ ಸೇನಾ ಕಾರ್ಯಾಚರಣೆ ನಡೆಸುವ ಬೆದರಿಕೆ ಒಡ್ಡುತ್ತಿದೆ ಎಂದು ಆರೋಪಿಸಿರುವ ಅಧಿಕೃತ ಪತ್ರವನ್ನು ಬುಧವಾರ ಹಂಚಿಕೊಂಡಿದೆ.
ದ.ಕ. ಜಿಲ್ಲೆಯಲ್ಲಿ ಕಾಂಗ್ರೆಸ್ನಿಂದ ‘ನರೇಗ ಬಜಾವ್ ಸಂಗ್ರಾಮ್’ ಆಂದೋಲನ
ಮಂಗಳೂರು, ಜ.15: ದ.ಕ.ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಹರೀಶ್ ಕುಮಾರ್ ಅಧ್ಯಕ್ಷತೆಯಲ್ಲಿ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ (ಮನರೇಗಾ) ಯೋಜನೆ ಬಚಾವ್ ಸಂಗ್ರಾಮ್ ಪೂರ್ವಭಾವಿ ಸಭೆ ಗುರುವಾರ ಮಲ್ಲಿಕಟ್ಟೆಯ ಕಾಂಗ್ರೆಸ್ ಭವನದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಗ್ರಾಮೀಣ ಭಾಗದ ಬಡ ಕಾರ್ಮಿಕರು ಹಾಗೂ ಪಂಚಾಯತ್ಗಳ ಅಭಿವೃದ್ಧಿಗೆ ಪೂರಕವಾಗಿದ್ದ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆಯನ್ನು ಕೇಂದ್ರ ಬಿಜೆಪಿ ಸರಕಾರ ಬದಲಿಸಿರುವುದನ್ನು ಖಂಡಿಸಿ ಮತ್ತು ಕಾಯ್ದೆ ಮರುಜಾರಿಗೆ ಆಗ್ರಹಿಸಿ ಎಐಸಿಸಿ ಯ ಸೂಚನೆ ಮೇರೆಗೆ ಹಾಗೂ ಕೆಪಿಸಿಸಿಯ ನಿರ್ದೇಶನದ ಮೇರೆಗೆ ‘ನರೇಗ ಬಜಾವ್ ಸಂಗ್ರಾಮ್’ ಆಂದೋಲನವನ್ನು ದ.ಕ. ಜಿಲ್ಲೆಯಾದ್ಯಂತ ನಡೆಸಲಾಗುವುದು ಎಂದು ತಿಳಿಸಿದರು. ವಿ.ಬಿ.ಜಿ.ರಾಮ್ ಜಿ ಯೋಜನೆಯ ಹೆಸರು ಬದಲಿಸುವುದು ಮಾತ್ರವಲ್ಲ ಜನರ ಜೀವನೋಪಾಯ ಹಾಗೂ ಪಂಚಾಯತ್ಗಳ ಅಧಿಕಾರವನ್ನು ಕೇಂದ್ರ ಸರಕಾರ ಕಸಿದುಕೊಂಡಿದೆ. ಇದು ದೇಶದ ಗ್ರಾಮೀಣ ಕಾರ್ಮಿಕರ ಪಾಲಿನ ಮರಣ ಶಾಸನವಾಗಿದೆ ಎಂದು ಹೇಳಿದರು. *ಸುಳ್ಯದಿಂದ ಮೂಲ್ಕಿ ತನಕ ಪಾದಯಾತ್ರೆ: ಜ.31ರ ಒಳಗಾಗಿ ಪ್ರತಿ ವಿಧಾನಸಭಾ ವ್ಯಾಪ್ತಿಗಳಲ್ಲಿ ‘ಮನರೇಗಾ ಬಜಾವ್ ಸಂಗ್ರಾಮ್’ ಪಾದಯಾತ್ರೆ ಆಯೋಜಿಸುವುದು, ಜ.21ರಂದು ಕುದ್ಮುಲ್ ರಂಗರಾವ್ ಪುರಭವನದ ಬಳಿ ಮಹಾತ್ಮಾ ಗಾಂಧಿ ಪ್ರತಿಮೆ ಎದುರು ಉಪವಾಸ ಸತ್ಯಾಗ್ರಹ, ಫೆ.9, 10 ಮತ್ತು 11ರಂದು ಸುಳ್ಯದಿಂದ ಮುಲ್ಕಿವರೆಗೆ ಮೂರು ದಿನಗಳ ಕಾಲ ಪಾದಯಾತ್ರೆ ನಡೆಸುವುದು, ಇತ್ತೀಚಿಗೆ ಕೆಪಿಸಿಸಿ ಸಭೆಯಲ್ಲಿ ನಡೆದ ಎಲ್ಲ ಕಾರ್ಯಕ್ರಮ ಮತ್ತು ಸೂಚನೆಗಳನ್ನು ಸುಸೂತ್ರವಾಗಿ ಅನುಷ್ಠಾನ ಮಾಡಲು ಸಭೆಯಲ್ಲಿ ನಿರ್ಣಯಿಸಲಾಯಿತು. ಈ ಸಂದರ್ಭ ಮಾಜಿ ಸಚಿವ ಬಿ.ರಮಾನಾಥ ರೈ, ವಿಧಾನ ಪರಿಷತ್ ಶಾಸಕ ಐವನ್ ಡಿಸೋಜ, ಕೆಪಿಸಿಸಿ ಮಾಜಿ ಪ್ರಧಾನ ಕಾರ್ಯದರ್ಶಿ ಪದ್ಮರಾಜ್ ಆರ್.ಪೂಜಾರಿ, ಮಾಜಿ ಶಾಸಕರಾದ ಜೆ.ಆರ್.ಲೋಬೊ, ಶಕುಂತಲಾ ಶೆಟ್ಟಿ, ಸುಳ್ಯ ವಿಧಾನಸಭಾ ಅಭ್ಯರ್ಥಿ ಜಿ.ಕೃಷ್ಣಪ್ಪ, ಮೂಡಾ ಅಧ್ಯಕ್ಷ ಸದಾಶಿವ್ ಉಳ್ಳಾಲ್, ಮಾಜಿ ಮೇಯರ್ ಶಶಿಧರ್ ಹೆಗ್ಡೆ, ಜಿಲ್ಲಾ ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಭರತ್ ಮುಂಡೋಡಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು, ತಾಲೂಕು ಗ್ಯಾರಂಟಿ ಯೋಜನೆ ಅಧ್ಯಕ್ಷರು, ನಗರ ಯೋಜನ ಪ್ರಾಧಿಕಾರದ ಅಧ್ಯಕ್ಷರು, ಜಿಲ್ಲಾ ಮುಂಚೂಣಿ ಘಟಕಾಧ್ಯಕ್ಷರು, ಬ್ಲಾಕ್ ಉಸ್ತುವಾರಿಗಳು ಉಪಸ್ಥಿತರಿದ್ದರು.
ಯಾದಗಿರಿ | ʼಕನ್ನಡ ಪಯಶ್ವಿನಿ ಅಚೀವ್ಮೆಂಟ್ ಪ್ರಶಸ್ತಿʼಗೆ ಲಕ್ಷ್ಮೀ ಎಸ್ ಆಯ್ಕೆ
ಯಾದಗಿರಿ : ಅಂತರರಾಜ್ಯ ಮಟ್ಟದ ಪ್ರತಿಷ್ಠಿತ ಕನ್ನಡ ಪಯಶ್ವಿನಿ ಅಚೀವ್ಮೆಂಟ್ ಪ್ರಶಸ್ತಿಗೆ ಯಾದಗಿರಿ ಮೂಲದ ಲಕ್ಷ್ಮೀ ಎಸ್. ಅವರು ಆಯ್ಕೆಯಾಗಿದ್ದಾರೆ. ಸಾಹಿತ್ಯ ಹಾಗೂ ಸಂಘಟನೆ ಕ್ಷೇತ್ರದಲ್ಲಿ ಅವರು ಸಲ್ಲಿಸಿರುವ ಮಹತ್ವದ ಮತ್ತು ನಿರಂತರ ಸೇವೆಯನ್ನು ಪರಿಗಣಿಸಿ ಈ ಗೌರವ ಪ್ರದಾನ ಮಾಡಲಾಗುತ್ತಿದೆ. ಜ.18ರಂದು ಕಾಸರಗೋಡು ಜಿಲ್ಲೆಯ ನುಳ್ಳಿಪಾಡಿಯಲ್ಲಿರುವ ಕನ್ನಡ ಭವನದಲ್ಲಿ ಆಯೋಜಿಸಲಾಗಿರುವ ‘ಕನ್ನಡ ಭವನ ರಜತ ಸಂಭ್ರಮ- ನಾಡು, ನುಡಿ ಹಬ್ಬ’ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಲಕ್ಷ್ಮೀ ಎಸ್. ಅವರಿಗೆ ಅಂತರರಾಜ್ಯ ಮಟ್ಟದ ಈ ಪ್ರತಿಷ್ಠಿತ ಪ್ರಶಸ್ತಿ ಲಭಿಸಿರುವುದಕ್ಕೆ ದಲಿತ ಸಂಘರ್ಷ ಸಮಿತಿ, ಯಾದಗಿರಿ ಜಿಲ್ಲಾ ಸಂಚಾಲಕ ಮರೆಪ್ಪ ಚಟ್ಟೇಕರ್ ಅವರು ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
ಯಾದಗಿರಿ | ಸಂಗಮೇಶ್ವರ, ಬಲಭೀಮೇಶ್ವರ ಜಾತ್ರೆ ನಿಮಿತ್ತ ಮದ್ಯ ಮಾರಾಟ ನಿಷೇಧ : ಜಿಲ್ಲಾಧಿಕಾರಿ ಆದೇಶ
ಯಾದಗಿರಿ: ಜಿಲ್ಲೆಯ ಶಹಾಪುರ ತಾಲೂಕಿನ ಶ್ರೀ ಸಂಗಮೇಶ್ವರ ಮತ್ತು ಬಲಭೀಮೇಶ್ವರ ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ, ನಗರ ವ್ಯಾಪ್ತಿಯಲ್ಲಿ ಮದ್ಯ ಮಾರಾಟ ನಿಷೇಧಿಸಿ ಜಿಲ್ಲಾಧಿಕಾರಿ ಹರ್ಷಲ್ ಭೋಯರ್ ಅವರು ಆದೇಶ ಹೊರಡಿಸಿದ್ದಾರೆ. ಜಾತ್ರೆಯ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ತಡೆಯಲು ಮತ್ತು ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ದೃಷ್ಟಿಯಿಂದ ಮುನ್ನೆಚ್ಚರಿಕೆ ಕ್ರಮವಾಗಿ ಈ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಕರ್ನಾಟಕ ಅಬಕಾರಿ ಕಾಯ್ದೆ 1965ರ ಕಲಂ 21ರ ಅಡಿಯಲ್ಲಿ ತಮಗೆ ಪ್ರದತ್ತವಾದ ಅಧಿಕಾರ ಚಲಾಯಿಸಿರುವ ಜಿಲ್ಲಾಧಿಕಾರಿಗಳು, 2026ರ ಜನವರಿ 15ರ ಬೆಳಿಗ್ಗೆ 6 ಗಂಟೆಯಿಂದ ಜನವರಿ 16ರ ಸಂಜೆ 6 ಗಂಟೆಯವರೆಗೆ ಶಹಾಪುರ ನಗರದ ಎಲ್ಲಾ ವೈನ್ಶಾಪ್, ಬಾರ್ ಮತ್ತು ರೆಸ್ಟೋರೆಂಟ್ಗಳಲ್ಲಿ ಸಗಟು ಹಾಗೂ ಚಿಲ್ಲರೆ ಮದ್ಯ ಮಾರಾಟವನ್ನು ಕಟ್ಟುನಿಟ್ಟಾಗಿ ನಿಷೇಧಿಸಿದ್ದಾರೆ. ಈ ಅವಧಿಯಲ್ಲಿ ಮದ್ಯ ಮಾರಾಟ ಅಥವಾ ಸಾಗಾಟ ಕಂಡುಬಂದಲ್ಲಿ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಗಾಂಜಾ ಮಾರಾಟಕ್ಕೆ ಯತ್ನ ಪ್ರಕರಣ: ಇಬ್ಬರ ಬಂಧನ
ಮಂಗಳೂರು, ಜ.15: ಯೆಯ್ಯಾಡಿ ಸಮೀಪದ ಹರಿಪದವು ಬಳಿ ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದ ಆರೋಪದಲ್ಲಿ ಇಬ್ಬರನ್ನು ಕದ್ರಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ ಅಂದಾಜು 35,000 ರೂ ಮೌಲ್ಯದ ಸುಮಾರು 1 ಕೆ.ಜಿ 85 ಗ್ರಾಂ ಗಾಂಜಾವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಜಗದೀಶ ಅಲಿಯಾಸ್ ಜಗ್ಗ (28) ಮತ್ತು ಚೇತನ್ (25) ಬಂಧಿತ ಆರೋಪಿಗಳು. ಜ.14ರಂದು ಸಂಜೆ 3.30ರ ವೇಳೆಗೆ ಕದ್ರಿ ಠಾಣೆ ಪೊಲೀಸ್ ಉಪ ನಿರೀಕ್ಷಕಿ ಪ್ರತಿಭಾ ಕೆ.ಎಚ್. ಅವರಿಗೆ ದೊರೆತ ಮಾಹಿತಿಯಂತೆ ಹರಿಪದವಿನ ಗುರುಬಾವು ಎಂಬ ಸ್ಥಳಕ್ಕೆ ದಾಳಿ ನಡೆಸಿದ್ದಾರೆ. ಈ ವೇಳೆ ಅಲ್ಲಿನ ಒಳರಸ್ತೆಯಲ್ಲಿ ದ್ವಿಚಕ್ರ ವಾಹನವೊಂದನ್ನು ನಿಲ್ಲಿಸಿ ಇಬ್ಬರು ಗಾಂಜಾ ಮಾರಾಟ ಮಾಡುತ್ತಿರುವುದು ಕಂಡು ಬಂದಿದೆ. ಕೂಡಲೇ ಅವರನ್ನು ವಶಕ್ಕೆ ಪಡೆದು ಅವರಲ್ಲಿದ್ದ ಮಾದಕವಸ್ತು ಗಾಂಜಾವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಆರೋಪಿಗಳ ವಿರುದ್ಧ ಕದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
U19 World Cup- ಹೆನಿಲ್ ಪಟೇಲ್ ದಾಳಿಗೆ ನಲುಗಿದ ಅಮೆರಿಕ; ಬೌಲಿಂಗ್ ನಲ್ಲಿ ಆಪತ್ಬಾಂಧವನಾದ ವೈಭವ್ ಸೂರ್ಯವಂಶಿ!
India U19 Vs USA U19- ಐಸಿಸಿ ಅಂಡರ್ 19 ಏಕದಿನ ವಿಶ್ವಕಪ್ ನಲ್ಲಿ ಆಯುಷ್ ಮ್ಹಾತ್ರೆ ನೇತೃತ್ವದ ಭಾರತ ತಂಡ ಶುಭಾರಂಭ ಮಾಡಿದೆ. ಬಿ ಬಣದಲ್ಲಿರುವ ಟೀಂ ಇಂಡಿಯಾ ತನ್ನ ಮೊದಲ ಪಂದ್ಯದಲ್ಲಿ ಅಮೆರಿಕ ತಂಡವನ್ನು ಸುಲಭವಾಗಿ ಸೋಲಿಸಿದೆ. ಹೆನಿಲ್ ಪಟೇಲ್ ಅವರ ಅದ್ಭುತ ಬೌಲಿಂಗ್ ನಿಂದ ಅಮೆರಿಕ 107 ರನ್ ಗಳಿಗೆ ಆಲೌಟ್ ಆಯಿತು. ಅಭಿಜ್ಞಾನ್ ಕುಂಡು ಅವರ ಅಜೇಯ 42 ರನ್ ಗಳಿಂದ ಭಾರತ ತಂಡ 6 ವಿಕೆಟ್ ಗಳಿಂದ ಸುಲಭ ಗೆಲುವು ಸಾಧಿಸಿತು.
ದಕ್ಷಿಣ ಕನ್ನಡದ ಸರಕಾರಿ ಶಾಲೆಗಳಿಗೆ ಇಸ್ರೇಲ್ನಿಂದ ಸ್ಮಾರ್ಟ್ ಬೋರ್ಡ್ಗಳ ಕೊಡುಗೆ
ಮಂಗಳೂರು, ಜ.15: ಇಸ್ರೇಲ್ ಸರ್ಕಾರದ ‘ಮಾಶಾವ್’ (ಅಖಏಅ್ಖ) ಕಾರ್ಯಕ್ರಮದಡಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಆಯ್ದ ಶಾಲೆಗಳನ್ನು ಗುರುತಿಸಿ ಅವುಗಳಿಗೆ ಸ್ಮಾರ್ಟ್ ಬೋರ್ಡ್ಗಳನ್ನು ವಿತರಿಸಲಾಗುತ್ತದೆ. ಅನಂತಾಡಿಯ ದ.ಕ.ಜಿ.ಪಂ. ಶಾಲೆಯಲ್ಲಿ ಗುರುವಾರ ಜರುಗಿದ ವಿಶೇಷ ಕಾರ್ಯಕ್ರಮದಲ್ಲಿ ಇಸ್ರೇಲ್ ಕಾನ್ಸುಲ್ ಜನರಲ್ ಓರ್ಲಿ ವೈಟ್ಜ್ಮನ್ ಸ್ಮಾರ್ಟ್ ಬೋರ್ಡ್ಗಳನ್ನು ಲೋಕಾರ್ಪಣೆ ಮಾಡಿದರು. ದಕ್ಷಿಣ ಕನ್ನಡ ಸಂಸದ ಬ್ರಿಜೇಶ್ ಚೌಟ ಅವರ ವಿಶೇಷ ಆಸಕ್ತಿ ಹಾಗೂ ಸತತ ಪ್ರಯತ್ನದ ಫಲವಾಗಿ ಇಸ್ರೇಲ್ ಸರಕಾರದ ಈ ಸೌಲಭ್ಯ ದೊರೆಯುವಂತಾಗಿದೆ. ಸಂಸದರಾಗಿ ಅಧಿಕಾರ ಸ್ವೀಕರಿಸಿದ ಆರಂಭಿಕ ದಿನಗಳಲ್ಲೇ ಬ್ರಿಜೇಶ್ ಚೌಟ ಅವರು ಇಸ್ರೇಲ್ ರಾಯಭಾರಿ ಕಚೇರಿಯೊಂದಿಗೆ ನಿರಂತರ ಸಂಪರ್ಕ ಸಾಧಿಸಿದ್ದರು. ಕೃಷಿ ಹಾಗೂ ಶಿಕ್ಷಣದಲ್ಲಿ ವಿಶ್ವ ಮಟ್ಟದ ತಂತ್ರಜ್ಞಾನ ಹೊಂದಿರುವ ಇಸ್ರೇಲ್ನ ಸಹಕಾರವನ್ನು ಜಿಲ್ಲೆಗೆ ತರುವ ಅವರ ಪ್ರಯತ್ನದ ಮೊದಲ ಭಾಗವಾಗಿ ಈ ಯೋಜನೆ ಅನುಷ್ಠಾನಗೊಂಡಿದೆ. ಸ್ಮಾರ್ಟ್ ಬೋರ್ಡ್ ಉದ್ಘಾಟನೆ ಬಳಿಕ ಬಳಿಕ ಮಾತನಾಡಿದ ಇಸ್ರೇಲ್ ಕಾನ್ಸುಲ್ ಜನರಲ್ ಓರ್ಲಿ ವೈಟ್ಜ್ಮನ್ ಅವರು ದಕ್ಷಿಣ ಕನ್ನಡ ಜಿಲ್ಲೆಯೊಂದಿಗೆ ಕೈಜೋಡಿಸುತ್ತಿರುವುದು ಸಂತಸದ ವಿಷಯ. ಈ ಸ್ಮಾರ್ಟ್ ಬೋರ್ಡ್ಗಳ ಮೂಲಕ ಡಿಜಿಟಲ್ ಶಿಕ್ಷಣಕ್ಕೆ ಹೊಸ ವೇಗ ಸಿಗಲಿದೆ. ವ್ಯಾಪಾರ ಹಾಗೂ ಸಾಂಸ್ಕೃತಿಕವಾಗಿಯೂ ಇಸ್ರೇಲ್ ಮತ್ತು ದಕ್ಷಿಣ ಕನ್ನಡದ ನಡುವಿನ ಸಂಬಂಧ ಮುಂದಿನ ದಿನಗಳಲ್ಲಿ ಇನ್ನಷ್ಟು ವೃದ್ಧಿಯಾಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಆ ಬಳಿಕ ಮಾತನಾಡಿದ ಸಂಸದ ಚೌಟ, ಭಾರತ ಮತ್ತು ಇಸ್ರೇಲ್ ರಾಷ್ಟ್ರಗಳ ನಡುವೆ ಸುದೀರ್ಘವಾದ ಸ್ನೇಹ ಸಂಬಂಧವಿದೆ. ವಿಶೇಷವಾಗಿ ಕೃಷಿ ಮತ್ತು ರಕ್ಷಣಾ ಕ್ಷೇತ್ರದಲ್ಲಿ ನಾವು ಉತ್ತಮ ಸಹಯೋಗ ಹೊಂದಿದ್ದೇವೆ. ನಾನು ಸಂಸದನಾಗಿ ಅಧಿಕಾರ ವಹಿಸಿಕೊಂಡ ಆರಂಭದ ದಿನಗಳಲ್ಲೇ ನಮ್ಮ ಜಿಲ್ಲೆಯ ಅಭಿವೃದ್ಧಿಗಾಗಿ ಈ ಜಾಗತಿಕ ಸಹಯೋಗವನ್ನು ಸ್ಥಳೀಯ ಮಟ್ಟಕ್ಕೆ ತರಬೇಕು ಎಂಬ ಗುರಿ ಹೊಂದಿದ್ದೆ. ಕೃಷಿ ಮತ್ತು ಶಿಕ್ಷಣ ಕ್ಷೇತ್ರಗಳಲ್ಲಿ ಇಸ್ರೇಲ್ನ ಅತ್ಯಾಧುನಿಕ ತಂತ್ರಜ್ಞಾನವನ್ನು ನಮ್ಮ ಜಿಲ್ಲೆಗೆ ಪರಿಚಯಿಸುವ ನಿಟ್ಟಿನಲ್ಲಿ ನಾವು ನಿರಂತರ ಸಂಪರ್ಕದಲ್ಲಿದ್ದೇವೆ. ಅದರ ಮೊದಲ ಹೆಜ್ಜೆಯಾಗಿ ಇಂದು ಇಸ್ರೇಲ್ ಸರ್ಕಾರದ ಕಾರ್ಯಕ್ರಮದ ಮೂಲಕ ಜಿಲ್ಲೆಯ ನಾಲ್ಕು ಶಾಲೆಗಳಿಗೆ ಸ್ಮಾರ್ಟ್ ಬೋರ್ಡ್ ಹಸ್ತಾಂತರಿಸಿದ್ದೇವೆ. ಶಿಕ್ಷಣದಲ್ಲಿ ತಂತ್ರಜ್ಞಾನದ ಅಳವಡಿಕೆಯು ನಮ್ಮ ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಕಲಿಕಾ ಮಟ್ಟವನ್ನು ಜಾಗತಿಕ ಮಟ್ಟಕ್ಕೆ ಏರಿಸಲಿದೆ ಎಂದು ಹೇಳಿದರು. ಈ ಮಹತ್ವದ ಸಹಕಾರಕ್ಕಾಗಿ ಭಾರತದ ಇಸ್ರೇಲ್ ರಾಯಭಾರಿ ರೆವೆನ್ ಅಜರ್ ಮತ್ತು ಕಾನ್ಸುಲ್ ಜನರಲ್ ಓರ್ಲಿ ವೈಟ್ಜ್ಮನ್ ಅವರಿಗೆ ಜಿಲ್ಲೆಯ ಸಮಸ್ತ ಜನರ ಪರವಾಗಿ ಹೃದಯಪೂರ್ವಕ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಮುಂದಿನ ದಿನಗಳಲ್ಲಿ ವ್ಯಾಪಾರ-ವಹಿವಾಟು, ಕೃಷಿ ಕ್ಷೇತ್ರ ಸೇರಿದಂತೆ ಇಸ್ರೇಲ್ ಮಾದರಿಯ ನೂತನ ತಂತ್ರಜ್ಞಾನ ಗಳನ್ನು ಜಿಲ್ಲೆಗೆ ತರುವ ನಿಟ್ಟಿನಲ್ಲಿ ನಮ್ಮ ಪ್ರಯತ್ನ ಮುಂದುವರಿಯಲಿದೆ ಎಂದರು. ಈ ಯೋಜನೆಯಡಿ ಒಟ್ಟು ನಾಲ್ಕು ಶಾಲೆಗಳಿಗೆ ತಲಾ 3.5 ಲಕ್ಷ ರೂ. ಅನುದಾನದಲ್ಲಿ ಸ್ಮಾರ್ಟ್ ಬೋರ್ಡ್ ನೀಡಲಾ ಗುತ್ತಿದೆ. ಅನಂತಾಡಿ ಬಂಟ್ರಿಂಜದ ದ.ಕ.ಜಿ.ಪಂ. ಪ್ರಾಥಮಿಕ ಶಾಲೆ, ವಿಟ್ಲದ ಮಾದರಿ ಹಿರಿಯ ಪ್ರಾಥಮಿಕ ಶಾಲೆ, ಸುಳ್ಯ ಜಾಲ್ಸೂರು ಗ್ರಾಮದ ವಿನೋಬನಗರದ ವಿವೇಕಾನಂದ ಶಿಕ್ಷಣ ಸಂಸ್ಥೆಗಳು, ಮಣ್ಣಗುಡ್ಡೆಯ ದ.ಕ.ಜಿ.ಪಂ. ಹಿರಿಯ ಪ್ರಾಥಮಿಕ ಶಾಲೆಗಳಿಗೆ ಸ್ಮಾರ್ಟ್ ಬೋರ್ಡ್ಗಳನ್ನು ಒದಗಿಸಲಾಗಿದೆ. ಕಾರ್ಯಕ್ರಮದಲ್ಲಿ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ , ಅನಂತಾಡಿಯ ದ.ಕ.ಜಿ.ಪಂ. ಶಾಲೆ ಮುಖ್ಯೋಪಾಧ್ಯಾಯ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.
ಕಾರಿನ ಸೈಲೆನ್ಸರ್ ಮಾರ್ಪಡಿಸಿ ರಸ್ತೆಯಲ್ಲಿ ಜನರಿಗೆ ಕಿರಿಕಿರಿ; 1.1 ಲಕ್ಷ ರೂ. ದಂಡ ವಿಧಿಸಿದ ಬೆಂಗಳೂರು ಪೊಲೀಸ್!
ಬೆಂಗಳೂರಿನಲ್ಲಿ ಕಾರಿನ ಸೈಲೆನ್ಸರ್ ಅಕ್ರಮವಾಗಿ ಮಾರ್ಪಡಿಸಿ, ಬೆಂಕಿ ಚಿಮ್ಮಿಸುತ್ತಾ, ವಿಪರೀತ ಶಬ್ದ ಮಾಡುತ್ತಿದ್ದ ಕೇರಳ ಮೂಲದ ವಿದ್ಯಾರ್ಥಿಗೆ 1.11 ಲಕ್ಷ ರೂ. ದಂಡ ವಿಧಿಸಲಾಗಿದೆ. ಕಾರಿನ ಬೆಲೆಗಿಂತ ಹೆಚ್ಚಿನ ದಂಡ ವಿಧಿಸಿ, ಕಾನೂನು ಉಲ್ಲಂಘನೆಗೆ ಬೆಂಗಳೂರು ಪೊಲೀಸರು ಕಠಿಣ ಕ್ರಮ ಕೈಗೊಂಡಿದ್ದಾರೆ. ಇದು ಇತರರಿಗೆ ಎಚ್ಚರಿಕೆಯಾಗಲಿದೆ.
ಯಾದಗಿರಿ | ಜ.17, 18 ರಂದು ದಲಿತ ಸಂಘರ್ಷ ಸಮಿತಿ ವಿಭಾಗೀಯ ಮಟ್ಟದ ಅಧ್ಯಯನ ಶಿಬಿರ : ಮಾಳಪ್ಪ ಕಿರದಳ್ಳಿ
ಯಾದಗಿರಿ: ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಕಲಬುರಗಿ ವಿಭಾಗದ ವತಿಯಿಂದ ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ತಾವರಗೇರಾ ಪಟ್ಟಣದಲ್ಲಿರುವ ಬುದ್ಧ ವಿಹಾರದಲ್ಲಿ ಜ.17 ಮತ್ತು 18ರಂದು ಎರಡು ದಿನಗಳ ಕಾಲ ಅಧ್ಯಯನ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಸಂಚಾಲಕ ಮಾಳಪ್ಪ ಕಿರದಳ್ಳಿ ತಿಳಿಸಿದ್ದಾರೆ. ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಸಂಘಟನೆಯ ರಾಜ್ಯ ಪ್ರಧಾನ ಸಂಚಾಲಕರಾದ ಮಾವಳ್ಳಿ ಶಂಕರ್ ಅವರ ನೇತೃತ್ವದಲ್ಲಿ ಈ ವಿಭಾಗೀಯ ಮಟ್ಟದ ಶಿಬಿರ ಜರುಗಲಿದೆ. ಇದರಲ್ಲಿ ಕಲಬುರಗಿ ವಿಭಾಗದ ಎಲ್ಲಾ ಜಿಲ್ಲೆ ಮತ್ತು ತಾಲೂಕುಗಳ ಪದಾಧಿಕಾರಿಗಳು ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು. ಎರಡು ದಿನಗಳ ಕಾಲ ನಡೆಯುವ ಈ ಶಿಬಿರದಲ್ಲಿ ನಾಡಿನ ಅನೇಕ ಪ್ರಖ್ಯಾತ ಚಿಂತಕರು ಮತ್ತು ಸೈದ್ಧಾಂತಿಕ ಹಿರಿಯರು ಪಾಲ್ಗೊಂಡು ವಿವಿಧ ಸಾಮಾಜಿಕ ಮತ್ತು ರಾಜಕೀಯ ವಿಷಯಗಳ ಕುರಿತು ವಿಚಾರ ಮಂಡನೆ ಮಾಡಲಿದ್ದಾರೆ. ಸಂಘಟನೆಯನ್ನು ಬಲಪಡಿಸುವ ಮತ್ತು ಅಂಬೇಡ್ಕರ್ ವಾದದ ಆಳವಾದ ಅಧ್ಯಯನ ಮಾಡುವ ನಿಟ್ಟಿನಲ್ಲಿ ಈ ಶಿಬಿರ ಮಹತ್ವದ್ದಾಗಿದೆ ಎಂದು ಅವರು ವಿವರಿಸಿದರು. ಯಾದಗಿರಿ ಜಿಲ್ಲೆಯ ಜಿಲ್ಲಾ ಮಟ್ಟದ ಪದಾಧಿಕಾರಿಗಳು ಹಾಗೂ ಎಲ್ಲಾ ತಾಲೂಕುಗಳ ಸಂಚಾಲಕರು ಮತ್ತು ಸದಸ್ಯರು ಕಡ್ಡಾಯವಾಗಿ ಈ ಅಧ್ಯಯನ ಶಿಬಿರದಲ್ಲಿ ಭಾಗವಹಿಸಬೇಕು ಎಂದು ಮಾಳಪ್ಪ ಕಿರದಳ್ಳಿ ಮನವಿ ಮಾಡಿಕೊಂಡಿದ್ದಾರೆ.
ಶಿಡ್ಲಘಟ್ಟ ನಗರಸಭೆ ಪೌರಾಯುಕ್ತೆಗೆ ನಿಂದನೆ ಆರೋಪ; ರಾಜೀವ್ ಗೌಡಗೆ ಕೆಪಿಸಿಸಿ ನೋಟಿಸ್
ಬೆಂಗಳೂರು : ‘ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟ ನಗರಸಭೆ ಪೌರಾಯುಕ್ತೆಗೆ ನಿಂದನೆ ಮಾಡಿದ ಆರೋಪದ ಹಿನ್ನೆಲೆಯಲ್ಲಿ ಶಿಡ್ಲಘಟ್ಟ ಕ್ಷೇತ್ರದ 2023ರ ಕಾಂಗ್ರೆಸ್ ಅಭ್ಯರ್ಥಿ ರಾಜೀವ್ ಗೌಡ ಅವರಿಗೆ ಒಂದು ವಾರದಲ್ಲಿ ಘಟನೆ ಸಂಬಂಧ ಸೂಕ್ತ ಸಮಜಾಷಿ ನೀಡಬೇಕು. ಇಲ್ಲವಾದರೆ ಈ ಬಗ್ಗೆ ಶಿಸ್ತು ಕ್ರಮ ಕೈಗೊಳ್ಳಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿ, ಕೆಪಿಸಿಸಿ ವತಿಯಿಂದ ನೋಟಿಸ್ ನೀಡಲಾಗಿದೆ. ಗುರುವಾರ ಕೆಪಿಸಿಸಿ ಕಾರ್ಯಾಧ್ಯಕ್ಷ ಜಿ.ಸಿ.ಚಂದ್ರಶೇಖರ್, ನೋಟಿಸ್ ನೀಡಿದ್ದು, ಶಿಡ್ಲಘಟ್ಟ ವ್ಯಾಪ್ತಿಯಲ್ಲಿ ಖಾಸಗಿ ಕಾರ್ಯಕ್ರಮದ ಸಭೆಯೊಂದಕ್ಕೆ ಸಂಬಂಧಪಟ್ಟಂತೆ ತಾವುಗಳು ಬ್ಯಾನರ್ಗಳನ್ನು ನಗರಸಭೆ ವ್ಯಾಪ್ತಿಯಲ್ಲಿ ಹಾಕಿರುವುದರ ಬಗ್ಗೆ ಸದರಿ ನಗರಸಭೆ ಪೌರಾಯುಕ್ತರೊಂದಿಗೆ ದೂರವಾಣಿ ಸಂಭಾಷಣೆ ನೆಡೆಸುವಾಗ ವ್ಯಕ್ತಿಗತ ನಿಂದನೆ ಮಾಡಿ, ಕೆಟ್ಟ ಪದಗಳನ್ನು ಉಪಯೋಗಿಸಿ ನಿಂದನೆ ಮಾಡಿರುವ ವಿಷಯಗಳು ಮಾಧ್ಯಮಗಳಲ್ಲಿ ಬಿತ್ತರಗೊಂಡಿದೆ’ ಎಂದು ಉಲ್ಲೇಖಿಸಿದ್ದಾರೆ. ‘ತಮ್ಮ ಈ ವರ್ತನೆ ಹಾಗೂ ತಾವು ಸದರಿ ನಗರಸಭೆ ಪೌರಾಯುಕ್ತರೊಂದಿಗೆ ಆಡಿರುವ ಮಾತುಗಳಿಂದ ಪಕ್ಷಕ್ಕೆ ಮುಜುಗರ ಉಂಟುಮಾಡುತ್ತದೆ. ಅಲ್ಲದೆ, ತಾವುಗಳು ಪಕ್ಷದ ಶಿಸ್ತನ್ನು ಉಲ್ಲಂಘನೆ ಮಾಡಿರುತ್ತೀರಿ ಎಂದು ತಿಳಿದು ಕಾರಣ ಕೇಳಿ ನೋಟೀಸು ನೀಡುತ್ತಿದ್ದು, ಒಂದು ವಾರದ ಒಳಗಾಗಿ ಈ ಬಗ್ಗೆ ಸೂಕ್ತ ಉತ್ತರ ನೀಡಬೇಕು’ ಎಂದು ಚಂದ್ರಶೇಖರ್ ಸೂಚನೆ ನೀಡಿದ್ದಾರೆ.
ಸನಾತನ ಧರ್ಮದ ಬಗ್ಗೆ ಪ್ರಚಾರ ನಿಲ್ಲಿಸುತ್ತೇನೆ: ಹರ್ಷ ರಿಚಾರಿಯಾ
ಮಹಾಕುಂಭ ಮೇಳದ ವೇಳೆ ವೈರಲ್ ಆಗಿದ್ದ ಮಾಡೆಲ್
'ಈ ಸಲ ಬುಲೆಟ್ ಮಿಸ್ ಆಗಲ್ಲ……' - ಟ್ರಂಪ್ ಗೆ ನೇರವಾಗಿ ಬೆದರಿಕೆ ಹಾಕಿದ ಇರಾನ್! ಏನು ಈ ಮಾತಿನ ಅರ್ಥ?
ಇರಾನ್ ಸರ್ಕಾರಿ ಟಿವಿ ಚಾನೆಲ್ನಲ್ಲಿ ಪ್ರಸಾರವಾದ ವಿಡಿಯೋವೊಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ಗೆ ಬೆದರಿಕೆ ಹಾಕಿದೆ. 2024ರ ಚುನಾವಣಾ ರ್ಯಾಲಿಯಲ್ಲಿ ಟ್ರಂಪ್ಗೆ ಗುಂಡು ತಗುಲಿದ ಘಟನೆಯ ವಿಡಿಯೋವನ್ನು ತೋರಿಸಿ, ಈ ಬಾರಿ ಗುಂಡು ಗುರಿಯನ್ನು ತಪ್ಪಲ್ಲ ಎಂದು ಹೇಳಿದೆ. ಅಮೆರಿಕ ಇರಾನ್ ಮೇಲೆ ಮಿಲಿಟರಿ ದಾಳಿ ನಡೆಸುವ ಚಿಂತನೆಯಲ್ಲಿರುವಾಗ ಈ ಬೆದರಿಕೆ ಬಂದಿದೆ. ಇರಾನ್ನ ಆಂತರಿಕ ಗಲಭೆಯನ್ನು ನೆಪವೊಡ್ಡಿ ದಾಳಿ ನಡೆಸಲು ಅಮೆರಿಕ ಯೋಚಿಸುತ್ತಿದೆ ಎಂದು ಇರಾನ್ ಆರೋಪಿಸಿದೆ.
ಜ.25ರಿಂದ ಕಾರ್ಕಳ ಸಂತ ಲಾರೆನ್ಸ್ ಬಸಿಲಿಕದ ವಾರ್ಷಿಕ ಮಹೋತ್ಸವ
ಕಾರ್ಕಳ, ಜ.15: ಕಾರ್ಕಳದ ಸಂತ ಲೋರೆನ್ಸ್ ಬಸಿಲಿಕದ ವಾರ್ಷಿಕ ಮಹೋತ್ಸವ ಜ.25, 26, 27, 28 ಹಾಗೂ 29ರಂದು ಜರಗಲಿದೆ. ಈ ಬಗ್ಗೆ ಎಲ್ಲಾ ಪೂರ್ವಭಾವಿ ಸಿದ್ಧತೆಗಳು ನಡೆದಿದ್ದು, ಬಸಿಲಿಕದ ವತಿಯಿಂದ ವಾರ್ಷಿಕ ಮಹೋತ್ಸವದ ಆಚರಣೆಗೆ ಸನ್ನದ್ಧರಾಗಿದ್ದೇವೆ ಎಂದು ಬಸಿಲಿಕಾದ ನಿರ್ದೇಶಕ ವಂ.ಆಲ್ಬನ್ ಡಿಸೋಜ ಹೇಳಿದ್ದಾರೆ. ಕಾರ್ಕಳ ಪ್ರೆಸ್ಕ್ಲಬ್ನಲ್ಲಿ ಗುರುವಾರ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನಾನು ನಿನ್ನನ್ನು ಪ್ರೀತಿಸುತ್ತಿದ್ದೇನೆ’ ಎಂಬ ಧ್ಯೇಯ ವಾಕ್ಯದೊಂದಿಗೆ ವಾರ್ಷಿಕ ಮಹೋತ್ಸವಕ್ಕೆ ಚಾಲನೆಯನ್ನು ನೀಡುವ ನವದಿನಗಳ ಪ್ರಾರ್ಥನೆ ಜ.16ರಿಂದ ಆರಂಭಗೊಂಡು ಜ.24ರವರೆಗೆ ನಡೆಯಲಿದೆ. ಜ.24ರಂದು ಬೆಳಗ್ಗೆ 9ಗಂಟೆಗೆ ಆರಾಧನೆ ಹಾಗೂ 9.30ಕ್ಕೆ ಅಸ್ವಸ್ಥರಿಗಾಗಿ ವಿಶೇಷ ಬಲಿಪೂಜೆ ಜರಗಲಿದೆ ಎಂದರು. ಜ.25ರಂದು ಅಪರಾಹ್ನ 3ಗಂಟೆಗೆ ಮಕ್ಕಳಿಗಾಗಿ ವಿಶೇಷ ಬಲಿಪೂಜೆ ಹಾಗೂ ಪ್ರಾರ್ಥನೆ ನಡೆಯಲಿದೆ. ವಾರ್ಷಿಕ ಮಹೋತ್ಸವದ ದಿನಗಳಲ್ಲಿ ಕೊಂಕಣಿ ಭಾಷೆಯಲ್ಲಿ 36 ಹಾಗೂ ಕನ್ನಡ ಭಾಷೆಯಲ್ಲಿ 9 ಹೀಗೆ ಒಟ್ಟು 45 ದಿವ್ಯ ಪೂಜೆಗಳನ್ನು ಅರ್ಪಿಸಲಾಗುತ್ತದೆ. ವಾರ್ಷಿಕ ಮಹೋತ್ಸವದ ದಿನಗಳಲ್ಲಿ ಉಡುಪಿ, ಮಂಗಳೂರು, ಕಾರವಾರ, ಅಲಹಾಬಾದ್, ಅಜ್ಮೀರ್ ಧರ್ಮಕ್ಷೇತ್ರದ ಧರ್ಮಾಧ್ಯಕ್ಷರು ಮತ್ತು ಮಂಗಳೂರು ಧರ್ಮಕ್ಷೇತ್ರದ ನಿವೃತ್ತ ಧರ್ಮಾಧ್ಯಕ್ಷರು ಆಗಮಿಸಿ ದಿವ್ಯ ಪೂಜೆಯನ್ನು ಅರ್ಪಿಸಲಿದ್ದಾರೆ. ಭಕ್ತಾಧಿಗಳ ಸುರಕ್ಷತೆಗಾಗಿ ಬಸಿಲಿಕಾದ ಒಳಗಡೆ ಹಾಗೂ ಬಸಿಲಿಕದ ವಠಾರದಲ್ಲಿ 72ಸಿಸಿ ಕ್ಯಾಮರಗಳನ್ನು ಅಳವಡಿಸಲಾಗಿದೆ. ಬಸಿಲಿಕಾದ ’ಪವಾಡ ಮೂರ್ತಿ’ ಪ್ರತಿಷ್ಠಾಪಿಸಿದ ಸಮೀಪ ಕಥೋಲಿಕ್ ಕ್ರೈಸ್ತರಿಗೆ ಪಾಪ ನಿವೇದನೆಗೆ ವ್ಯವಸ್ಥೆ ಮಾಡಲಾಗಿದೆ. ದೇವಾಲಯದ ಒಳಗೆ ಪ್ರಾರ್ಥನೆಗಾಗಿ ಮಾತ್ರ ಅವಕಾಶ ನೀಡಲಾಗಿದೆ. ಬಸಿಲಿಕದ ವಠಾರದಲ್ಲಿ ಬಸಿಲಿಕದ ಅಧಿಕೃತ ಸ್ಟಾಲ್ನಲ್ಲಿ ಮಾತ್ರ ಮೊಂಬತ್ತಿ ಮಾರಾಟ ಮಾಡಲು ಅವಕಾಶ ಮಾಡಲಾಗಿದೆ. ಇತರರಿಗೆ ಬಸಿಲಿಕಾ ವಠಾರದಲ್ಲಿ ಮೊಂಬತ್ತಿ ಮಾರಾಟ ಮಾಡಲು ಸಂಪೂರ್ಣವಾಗಿ ನಿಷೇಧಿಸ ಲಾಗಿದೆ. ಭಕ್ತರ ಸುರಕ್ಷತೆ, ಕಾನೂನು ಮತ್ತು ಸುವ್ಯವಸ್ಥೆಗಾಗಿ ಗರಿಷ್ಟ ಸಂಖ್ಯೆಯ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿ ಕರ್ತವ್ಯ ನಿರ್ವಹಿಸಲಿದ್ದಾರೆ. ಏಕಶಿಲಾ ಕಲ್ಲಿನಿಂದ ಕೆತ್ತಿದ ಸಂತ ಲೋರೆನ್ಸರ ಅತೀ ದೊಡ್ಡ ಮೂರ್ತಿ ಯನ್ನು ಬಸಿಲಿಕದಲ್ಲಿ ಪ್ರತಿಷ್ಠಾಪಿಸಲಾಗಿದೆ. ಜ.29ರಂದು ಸಂಜೆ 6ಗಂಟೆಗೆ ಬಲಿಪೂಜೆಯ ನಂತರ ಬಸಿಲಿಕಾ ವಠಾರದಲ್ಲಿ ಅತಿಥಿ ಕಲಾವಿದರ ಕೂಡುವಿಕೆ ಯೊಂದಿಗೆ ಜಿ.ಕೆ.ಶ್ರೀನಿವಾಸ್ ಸಾಲ್ಯಾನ್ ವಿರಚಿತ ಸತ್ಯ ದರ್ಶನ ಎಂಬ ಕನ್ನಡ ಯಕ್ಷಗಾನ ಪ್ರಸಂಗ ನಡೆಯಲಿದೆ. ಸುದ್ದಿಗೋಷ್ಠಿಯಲ್ಲಿ ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷ ಸಂತೋಷ್ ಡಿಸಿಲ್ವಾ, ಕಾರ್ಯದರ್ಶಿ ರೊನಾಲ್ಡ್ ನೊರೊನ್ಹಾ, ಸದಸ್ಯರಾದ ವಂದೀಶ್ ಮಥಾಯಸ್, ಮೆಲ್ವಿನ್ ಕ್ಯಾಸ್ತಲಿನೊ, ಜೋನ್ಸನ್ ಡಿಸಿಲ್ವಾ ಉಪಸ್ಥಿತರಿದ್ದರು. ವಾಹನ ನಿಲುಗಡೆಗೆ ವ್ಯವಸ್ಥೆ ಕಾಬೆಟ್ಟು ದ್ವಾರದ ಮೂಲಕ ಬರುವ ವಾಹನಗಳ ದಟ್ಟಣೆಯಿಂದ ಆಗುವ ಅಡಚಣೆಯನ್ನು ನಿವಾರಿಸಲು, ಪುಕ್ಕೇರಿ ಯಿಂದ ದೂಪದಕಟ್ಟೆ ಮೂಲಕ ವಾಹನಗಳನ್ನು ಕಳುಹಿಸಿ ದೂಪದಕಟ್ಟೆ ದ್ವಾರ ಪ್ರವೇಶಿಸುವಾಗ ಎಡಬದಿಗೆ ವಿಸ್ತಾರವಾದ ವಾಹನ ನಿಲುಗಡೆ ಸ್ಥಳ, ಗಾರ್ಡನ್ ಹೌಸ್ ಹತ್ತಿರ ತಿರುವಿನಲ್ಲಿ ಎಡಬದಿಯಲ್ಲಿ ಹಾಗೂ ಗಾರ್ಡನ್ ಹೌಸ್ ದಾಟಿದ ನಂತರ ಎಡಬದಿಯಲ್ಲಿ ವಾಹನ ನಿಲುಗಡೆಗೆ ಅವಕಾಶ ಕಲ್ಪಿಸಲಾಗಿದೆ. ಅಲ್ಲಿಂದ ಮುಂದೆ ಬ್ಯಾರಿಕೇಡ್ ಹಾಕಿರುವ ತನಕ ಮಾತ್ರ ರಿಕ್ಷಾ ಸಂಚಾರಕ್ಕೆ ಅವಕಾಶವಿದೆ. ಅಲ್ಲಿಂದ ಮುಂದಕ್ಕೆ ವಾಹನಗಳಿಗೆ ಪ್ರವೇಶವಿಲ್ಲ ಎಂದು ವಂ.ಆಲ್ಬನ್ ಡಿಸೋಜ ಮಾಹಿತಿ ನೀಡಿದರು. ಕಾಬೆಟ್ಟು ಕಡೆಯಿಂದ ಬರುವ ವಾಹನಗಳಿಗೆ ಪ್ರಸಾದ್ ಟೈಲರ್ ಜಂಕ್ಷನ್ ದಾಟಿ ಮುಂದೆ ಬರುವಾಗ ಬಲಬದಿಯಲ್ಲಿ ಸಂತ ಲೋರೆನ್ಸ್ ಧರ್ಮ ಕೇಂದ್ರದ ಆಡಳಿತಕ್ಕೊಳಪಟ್ಟ ಸಂತ ಲೋರೆನ್ಸ್ ಹೈಸ್ಕೂಲ್ ಶಾಲಾ ಆಟದ ವಿಶಾಲ ವಾದ ಮೈದಾನವನ್ನು ಸಂಪೂರ್ಣವಾಗಿ ವಾಹನ ನಿಲುಗಡೆ ಗಾಗಿಯೇ ಕಾದಿರಿಸಲಾಗಿದೆ. ವಾಹನ ಪಾಸ್ ಹೊಂದಿದ ವಾಹನ ಚಾಲಕರು ತಮ್ಮ ವಾಹನಗಳನ್ನು ಕಾಬೆಟ್ಟು ಮಾರ್ಗವಾಗಿ ತಂದು ಎಡಬದಿಯ ಪಂಚಾಯತ್ ಶೌಚಾಲ ಯದ ಬಳಿ ಎಡಕ್ಕೆ ತಿರುಗಿ ಮುಂದೆ ಸಾಗಿ ಬಲಬದಿಯ ಅತ್ತೂರು ಕಾನ್ವೆಂಟ್ ಬಿಎಸ್ಎನ್ಎಲ್ ಮೊಬೈಲ್ ಟವರ್ ಹಾಗೂ ಇತರ ಪಾಸ್ ಹೊಂದಿದವರಿಗೆ ವಿಶಾಲವಾದ ಪಾರ್ಕಿಂಗ್ ವಠಾರದಲ್ಲಿ ವಾಹನಗಳನ್ನು ನಿಲ್ಲಿಸಲು ಅವಕಾಶ ನೀಡಲಾಗಿದೆ ಎಂದರು.
ಸರಕಾರ, ಖಾಸಗಿಯಿಂದ ಬಲಿಷ್ಠ ಶಿಕ್ಷಣ ವ್ಯವಸ್ಥೆ ಕಟ್ಟಲು ಸಾಧ್ಯ: ಡಾ.ಮೋಹನ್ ಆಳ್ವ
ಕುಷ್ಮಾ ಉಡುಪಿ ಜಿಲ್ಲಾ ಸಮಿತಿ ಉದ್ಘಾಟನೆ-ಪದಾಧಿಕಾರಿಗಳ ಪದಗ್ರಹಣ
ಸೈನೈಡ್ ಮಲ್ಲಿಕಾ: ಅಮಾಯಕ ಮುಖದ ಹಿಂದೆ ಅಡಗಿದ್ದ ಸರಣಿ ಹಂತಕಿ ಕೆಂಪಮ್ಮ
ಮಲ್ಲಿಕಾ… ಈಕೆ ಸಾಮಾನ್ಯಳಲ್ಲ. ಮೌನವಾಗಿಯೇ ಎಲ್ಲವನ್ನೂ ನಿರೀಕ್ಷಿಸಿ, ಬೇಟೆಯಾಡುವ ಹಂತಕಿ. ‘ಸೈನೈಡ್ ಮಲ್ಲಿಕಾ’ ಎಂದೇ ಕುಖ್ಯಾತಿ ಪಡೆದಿರುವ ಕರ್ನಾಟಕದ ಈಕೆ, ಭಾರತದ ಮೊದಲ ಸರಣಿ ಹಂತಕಿ ಎಂದು ಹೇಳಲಾಗುತ್ತಿದೆ. ತನ್ನನ್ನು ನಂಬಿದವರನ್ನೇ ಸಂಚಿನಿಂದ ಕೊಲ್ಲುತ್ತಿದ್ದ ಈಕೆಯ ನಿಜವಾದ ಹೆಸರು ಕೆ.ಡಿ. ಕೆಂಪಮ್ಮ. ಧರ್ಮನಿಷ್ಠೆಯ, ಪಾಪಭೀತಿಯ, ಅಮಾಯಕ ಮಹಿಳೆಯಂತೆ ಕಾಣುತ್ತಿದ್ದ ಈಕೆ, ಕುತಂತ್ರದಿಂದ ಬಲೆಗೆ ಬೀಳಿಸಿ, ನಿಧಾನವಾಗಿ ಸಂಚು ರೂಪಿಸಿ, ಬಹಳ ಚುರುಕಾಗಿ ಸೈನೈಡ್ ನೀಡಿ ಹತ್ಯೆ ಮಾಡುತ್ತಿದ್ದಳು. 20 ವರ್ಷಗಳ ಹಿಂದೆ ಬೆಂಗಳೂರು ಪೊಲೀಸರು ಕೆ.ಡಿ. ಕೆಂಪಮ್ಮ ಅಲಿಯಾಸ್ ಮಲ್ಲಿಕಾಳನ್ನು ಬಂಧಿಸಿದ್ದರು. ಹಲವು ಮಹಿಳೆಯರಿಗೆ ಸೈನೈಡ್ ನೀಡಿ ಹತ್ಯೆ ಮಾಡಿ ಅವರ ಆಭರಣಗಳನ್ನು ದೋಚಿರುವುದಾಗಿ ಈಕೆ ಒಪ್ಪಿಕೊಂಡಿದ್ದಳು ಎಂದು ತನಿಖಾ ಅಧಿಕಾರಿಗಳು ಹೇಳಿದ್ದರು. ಆಕೆಯ ಈ ಬಹಿರಂಗಪಡಿಸುವಿಕೆ ನಗರದಾದ್ಯಂತ ಸಂಚಲನ ಮೂಡಿಸಿತ್ತು. ಆಗ 43 ವರ್ಷದ ಕೆಂಪಮ್ಮ, ಸಂಕಷ್ಟದಲ್ಲಿದ್ದ ಮಹಿಳೆಯರನ್ನು ಗುರಿಯಾಗಿಸಿಕೊಂಡು, ದೇವರಲ್ಲಿ ನಂಬಿಕೆ ಇರುವ ಮಹಾಭಕ್ತೆಯಂತೆ ವರ್ತಿಸುವ ಮೂಲಕ ಮಹಿಳೆಯರ ವಿಶ್ವಾಸವನ್ನು ಗಳಿಸುತ್ತಿದ್ದಳು. ಹೀಗೆ ವಿಶ್ವಾಸ ಗೆದ್ದ ನಂತರ ಆಕೆ ಕೊಲೆಗಳನ್ನು ಮಾಡುತ್ತಿದ್ದಳು. 2007ರ ಡಿಸೆಂಬರ್ 31ರಂದು ಆಕೆಯನ್ನು ಬಂಧಿಸುವ ಹೊತ್ತಿಗೆ, ಕೆಂಪಮ್ಮ 1999ರಿಂದ ಕನಿಷ್ಠ ಆರು ಮಹಿಳೆಯರನ್ನು ಕೊಂದಿರುವುದಾಗಿ ಒಪ್ಪಿಕೊಂಡಿದ್ದಳು. ಮೂರು ತಿಂಗಳೊಳಗೆ ಐವರು ಮಹಿಳೆಯರನ್ನು ಕೊಲೆ ಮಾಡಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ. ಕೆಂಪಮ್ಮನೆಂಬ ಹಂತಕಿ ತನಿಖಾಧಿಕಾರಿಗಳ ಪ್ರಕಾರ, ಕೆಂಪಮ್ಮ ಕೊಲೆಗೆ ಪಕ್ಕಾ ಲೆಕ್ಕಾಚಾರದ ಮಾದರಿಯನ್ನು ಅನುಸರಿಸುತ್ತಿದ್ದಳು. ಬೆಂಗಳೂರಿನ ಸುತ್ತಮುತ್ತಲಿನ ದೇವಾಲಯಗಳಿಗೆ ಆಕೆ ಆಗಾಗ್ಗೆ ಭೇಟಿ ನೀಡುತ್ತಿದ್ದಳು. ಧಾರ್ಮಿಕ ಆಚರಣೆಗಳಲ್ಲಿ ಪಾರಂಗತಳಾದ ಕಟ್ಟಾ ಭಕ್ತೆಯಂತೆ ನಟಿಸುತ್ತಿದ್ದಳು. ತೊಂದರೆಗೊಳಗಾದ ಮಹಿಳೆಯರನ್ನು ಸೂಕ್ಷ್ಮವಾಗಿ ಗಮನಿಸಿ ಮಾತು ಆರಂಭಿಸುತ್ತಿದ್ದಳು. ಅವರ ವೈಯಕ್ತಿಕ ಸಮಸ್ಯೆಗಳನ್ನು ತಾಳ್ಮೆಯಿಂದ ಆಲಿಸುತ್ತಿದ್ದಳು. ಸಹಾನುಭೂತಿ ತೋರಿ ಆಪ್ತಮಿತ್ರಳಂತೆ ವರ್ತಿಸುತ್ತಿದ್ದಳು. ಹೀಗೆ ಮಹಿಳೆಯರ ವಿಶ್ವಾಸವನ್ನು ಗಳಿಸಿದ ಬಳಿಕ, ಕೆಂಪಮ್ಮ ಅವರಿಗೆ ವಿಶೇಷ ಆಚರಣೆಗಳನ್ನು ಮಾಡುವಂತೆ ಸೂಚಿಸುತ್ತಿದ್ದಳು. ಮಕ್ಕಳಿಲ್ಲದಿರುವುದು, ಆರ್ಥಿಕ ತೊಂದರೆಗಳು ಅಥವಾ ಕೌಟುಂಬಿಕ ಕಲಹದಂತಹ ಸಮಸ್ಯೆಗಳಿಗೆ ಪರಿಹಾರವಾಗಿ ಮಂಡಲ ಪೂಜೆ ಅಥವಾ ಇತರ ಪೂಜೆಗಳನ್ನು ಮಾಡುವಂತೆ ಸಲಹೆ ನೀಡುತ್ತಿದ್ದಳು. ನಗರದ ಹೊರವಲಯದಲ್ಲಿರುವ ದೇವಾಲಯಗಳಲ್ಲಿ—ಅಂದರೆ ಸಂತ್ರಸ್ತರ ಮನೆಯಿಂದ ದೂರದ ಸ್ಥಳಗಳಲ್ಲಿ—ಆಚರಣೆಗಳನ್ನು ನಡೆಸಬೇಕೆಂದು ಆಕೆ ಒತ್ತಾಯಿಸುತ್ತಿದ್ದಳು. ಈ ರೀತಿ ದೂರ ಕರೆದುಕೊಂಡು ಬಂದು ಏಕಾಂತ ಸ್ಥಳಗಳಲ್ಲಿ ಕೆಂಪಮ್ಮ ಸೈನೈಡ್ ನೀಡುತ್ತಿದ್ದಳು. ಕೆಲವೊಮ್ಮೆ ನೀರಿನಲ್ಲಿ ಬೆರೆಸಿ ‘ಪವಿತ್ರ ನೀರು’ ಎಂದು ಕುಡಿಸುತ್ತಿದ್ದಳು. ಕೆಲವೊಮ್ಮೆ ಆಹಾರದಲ್ಲಿ ವಿಷ ಬೆರೆಸುತ್ತಿದ್ದಳು. ಕೆಲವು ಸಂದರ್ಭಗಳಲ್ಲಿ ಮೂಗನ್ನು ಬಲವಂತವಾಗಿ ಹಿಡಿದು ವಿಷಪೂರಿತ ದ್ರವವನ್ನು ಕುಡಿಯುವಂತೆ ಮಾಡುತ್ತಿದ್ದಳು. ಕೆಲವೊಮ್ಮೆ ಸಂತ್ರಸ್ತರು ನಿದ್ರಿಸುವವರೆಗೆ ಅಥವಾ ಪ್ರಾರ್ಥಿಸುವವರೆಗೆ ಕಾಯುತ್ತಿದ್ದಳು. ಅಲ್ಲೊಂದು ಕೊಲೆ ಸಂಭವಿಸುತ್ತಿತ್ತು. ಬಲಿಪಶು ಕುಸಿದು ಬಿದ್ದ ನಂತರ, ಕೆಂಪಮ್ಮ ಶಾಂತವಾಗಿ ಆಭರಣಗಳು ಮತ್ತು ಬೆಲೆಬಾಳುವ ವಸ್ತುಗಳನ್ನು ದೋಚಿ ಕಣ್ಮರೆಯಾಗುತ್ತಿದ್ದಳು. ಬಂಧಿಸಿದ್ದು ಹೇಗೆ? ಬಸ್ ನಿಲ್ದಾಣದಲ್ಲಿ ಮಹಿಳೆಯೊಬ್ಬರು ಆಭರಣಗಳು ಮತ್ತು ಮೊಬೈಲ್ ಫೋನ್ಗಳನ್ನು ಅನುಮಾನಾಸ್ಪದ ರೀತಿಯಲ್ಲಿ ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂಬ ಸುಳಿವು ದೊರೆತ ನಂತರ ಕಲಾಸಿಪಾಳ್ಯಂ ಪೊಲೀಸರು ಕೆಂಪಮ್ಮನನ್ನು ಬಂಧಿಸಿದರು. ವಿಚಾರಣೆಗೆ ಒಳಪಡಿಸಿದಾಗ ಸರಣಿ ಹತ್ಯೆಗಳು ಬೆಳಕಿಗೆ ಬಂದವು. ಮಲ್ಲಿಕಾ ಎಂದು ತನ್ನ ಹೆಸರು ಹೇಳಿದ್ದ ಕೆಂಪಮ್ಮ, ತನಿಖಾಧಿಕಾರಿಗಳ ಮುಂದೆ ತಾನು ಮಾಡಿದ ಅಪರಾಧಗಳ ಮಾಹಿತಿಯನ್ನು ಒಂದೊಂದಾಗಿ ಬಿಚ್ಚಿಟ್ಟಳು. ಆಕೆ ಒಬ್ಬಂಟಿಯಾಗಿ ಆರು ಮಹಿಳೆಯರನ್ನು ಸೈನೈಡ್ ಬಳಸಿ ಕೊಲೆ ಮಾಡಿ, ಆಭರಣಗಳು ಮತ್ತು ಬೆಲೆಬಾಳುವ ವಸ್ತುಗಳನ್ನು ದೋಚಿದ್ದಳು ಎಂದು ಆಗಿನ ನಗರ ಪೊಲೀಸ್ ಆಯುಕ್ತ ಎನ್. ಅಚ್ಯುತ ರಾವ್ ಹೇಳಿದ್ದಾರೆ. ಆಕೆ ಅತ್ಯಂತ ಜಾಣತನದಿಂದ ಈ ಕೃತ್ಯಗಳನ್ನು ಮಾಡುತ್ತಿದ್ದಳು. ಹೆಚ್ಚಾಗಿ ದೇವಸ್ಥಾನಗಳಿಗೆ ಭೇಟಿ ನೀಡುವ, ನೊಂದುಕೊಂಡಿರುವ, ದುಃಖದಲ್ಲಿರುವ ಶ್ರೀಮಂತ ಮಹಿಳೆಯರೇ ಆಕೆಯ ಟಾರ್ಗೆಟ್ ಆಗಿದ್ದರು. ವಿಚಾರಣೆಯ ಸಮಯದಲ್ಲಿ ಕೆಂಪಮ್ಮ ಅಪರಾಧಗಳನ್ನು ಒಪ್ಪಿಕೊಂಡ ಪರಿಣಾಮ, ಈ ಹಿಂದೆ ನಿಗೂಢ ಸಾವುಗಳೆಂದು ದಾಖಲಾಗಿದ್ದ ಹಲವಾರು ಪ್ರಕರಣಗಳನ್ನು ಪೊಲೀಸರು ಮತ್ತೆ ತೆರೆಯಬೇಕಾಯಿತು. ಕೊಲೆ ಪ್ರಕರಣಗಳಲ್ಲೊಂದು ತಮಿಳುನಾಡಿನಲ್ಲಿ ನಡೆದಿದ್ದರೆ, ಇನ್ನು ಕೆಲವು ಬೆಂಗಳೂರು ಮತ್ತು ಸುತ್ತಮುತ್ತ ನಡೆದಿವೆ. ಕೆಂಪಮ್ಮ ತಪ್ಪೊಪ್ಪಿಕೊಂಡ ಕೊಲೆಗಳಲ್ಲಿ ಮೂರನ್ನು ನಿಗೂಢ ಸಾವುಗಳು, ಎರಡನ್ನು ಅಸ್ವಾಭಾವಿಕ ಸಾವುಗಳು ಎಂದು ದಾಖಲಿಸಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಹಲವಾರು ಪ್ರಕರಣಗಳಲ್ಲಿ ಮಹಿಳೆಯರು ದೇವಾಲಯದ ಆವರಣದೊಳಗೆ ಸಾವನ್ನಪ್ಪಿದ್ದರು. ಆದರೆ ಅಲ್ಲಿ ಕೊಲೆ ಕೃತ್ಯದ ಯಾವುದೇ ಲಕ್ಷಣಗಳು ಕಾಣಿಸಿರಲಿಲ್ಲ. ಇದರಿಂದಾಗಿ ಆ ಸಮಯದಲ್ಲಿ ತನಿಖಾಧಿಕಾರಿಗಳು ಅಪರಾಧ ನಡೆದಿದೆ ಎಂದು ಶಂಕಿಸುವುದು ಕಷ್ಟವಾಗಿತ್ತು. ಆ ವರ್ಷದ ಅಕ್ಟೋಬರ್ ಮತ್ತು ಡಿಸೆಂಬರ್ ನಡುವೆ ಬೆಂಗಳೂರಿನಲ್ಲಿ ಐದು ಮಹಿಳೆಯರನ್ನು ಮಲ್ಲಿಕಾ ಕೊಲೆ ಮಾಡಿದ್ದಾಳೆ. ಆಕೆಯ ಕೊನೆಯ ಬಲಿಪಶು 30 ವರ್ಷದ ಮಹಿಳೆ. ಗಂಡು ಮಗು ಇಲ್ಲದ ಕಾರಣ ಆಕೆ ಬೇಸರಗೊಂಡಿದ್ದಳು. ಆಕೆ ನಿದ್ದೆ ಮಾಡುತ್ತಿದ್ದಾಗ ಕೆಂಪಮ್ಮ ಆಕೆಯನ್ನು ಹತ್ಯೆ ಮಾಡಿದ್ದಳು. ಪ್ರತಿ ಕೊಲೆಯೂ ಪರಿಚಿತ ಮಾದರಿಯಲ್ಲೇ ನಡೆದಿತ್ತು ಎಂದು ಪೊಲೀಸರು ಹೇಳಿದ್ದಾರೆ. ಯಾರು ಈಕೆ? ಕೆಂಪಮ್ಮ ಕಗ್ಗಲಿಪುರ ನಿವಾಸಿಯಾಗಿದ್ದು, ಚಿಟ್ ಫಂಡ್ ವ್ಯವಹಾರ ನಡೆಸುತ್ತಿದ್ದಳು. ಈಕೆ ನಿಮ್ಹಾನ್ಸ್ನಲ್ಲಿ ದರ್ಜಿಯಾಗಿ ಕೆಲಸ ಮಾಡುತ್ತಿದ್ದ ದೇವರಾಜ್ ಎಂಬಾತನನ್ನು ಮದುವೆಯಾಗಿದ್ದಳು. ಆದರೆ 1998ರಲ್ಲಿ ವ್ಯವಹಾರದಲ್ಲಿ ಭಾರಿ ನಷ್ಟ ಸಂಭವಿಸಿತು. ಪತಿ ಕೈಬಿಟ್ಟ. ಕೆಂಪಮ್ಮನ ಬದುಕು ತೀವ್ರ ತಿರುವು ಪಡೆದುಕೊಂಡಿತು. ಆಕೆಯನ್ನು ಮನೆಯಿಂದ ಹೊರಹಾಕಲಾಯಿತು. ನಂತರ ಕೆಂಪಮ್ಮ ಈ ಕೃತ್ಯಗಳಲ್ಲಿ ತೊಡಗಿಸಿಕೊಂಡಳು ಎಂದು ಪೊಲೀಸರು ಹೇಳಿದ್ದಾರೆ. 1999ರ ಅಕ್ಟೋಬರ್ 19ರಂದು ಹೊಸಕೋಟೆಯಲ್ಲಿ 30ರ ಹರೆಯದ ಮಮತಾ ರಾಜನ್ ಅವರನ್ನು ಕೊಲ್ಲುವ ಮೂಲಕ ಕೆಂಪಮ್ಮ ‘ಕಿಲ್ಲರ್ ಕೆಂಪಮ್ಮ’ ಆಗಿಬಿಟ್ಟಳು. ಮಮತಾ ಪ್ರಾರ್ಥನೆ ಮಾಡುತ್ತಿದ್ದಾಗ ಕೆಂಪಮ್ಮ ಆಕೆಯನ್ನು ಕೊಂದಿದ್ದಳು. 2007ರಲ್ಲಿ ಕೆಂಪಮ್ಮ ಹೆಚ್ಚಿನ ಕೊಲೆಗಳನ್ನು ಮಾಡಿದ್ದಾಳೆ. ಜೀವಾವಧಿ ಶಿಕ್ಷೆ 2007ರಲ್ಲಿ ಬಂಧನದ ನಂತರ, ಕೆಂಪಮ್ಮ ವಿವಿಧ ನ್ಯಾಯಾಲಯಗಳಲ್ಲಿ ಅನೇಕ ವಿಚಾರಣೆಗಳನ್ನು ಎದುರಿಸಿದರು. ಲಾಭಕ್ಕಾಗಿ ಐವರು ಮಹಿಳೆಯರನ್ನು ಕೊಲೆ ಮಾಡಿದ್ದಕ್ಕಾಗಿ ತ್ವರಿತ ನ್ಯಾಯಾಲಯವು ಆಕೆಗೆ ಮರಣದಂಡನೆ ವಿಧಿಸಿತು. 2010ರಲ್ಲಿ ಕುಣಿಗಲ್ ತಾಲ್ಲೂಕಿನ ಯಡಿಯೂರು ಸಿದ್ದಲಿಂಗೇಶ್ವರ ದೇವಸ್ಥಾನದಲ್ಲಿ ಮುನಿಯಮ್ಮ ಅವರ ಕೊಲೆಗೆ ತುಮಕೂರು ನ್ಯಾಯಾಲಯವು ಮರಣದಂಡನೆ ವಿಧಿಸಿತು. 2012ರಲ್ಲಿ ಬೆಂಗಳೂರು ಗ್ರಾಮಾಂತರ 1ನೇ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯವು ಘಾಟಿ ಸುಬ್ರಹ್ಮಣ್ಯದಲ್ಲಿ ಕೆ. ನಾಗಲಕ್ಷ್ಮಿ ಅವರ ಕೊಲೆ ಪ್ರಕರಣದಲ್ಲಿ ಕೆಂಪಮ್ಮಗೆ ಮರಣದಂಡನೆ ವಿಧಿಸಿತು. ಈ ಪ್ರಕರಣದಲ್ಲಿ ಕೆಂಪಮ್ಮ ಆಭರಣ ದೋಚುವ ಮುನ್ನ ಸೈನೈಡ್ ಮತ್ತು ವಿದ್ಯುತ್ ತಂತಿಯನ್ನು ಬಳಸಿದ್ದಳು. ದೊಡ್ಡಬಳ್ಳಾಪುರದ ದೇವಸ್ಥಾನದಲ್ಲಿ ಶವವಾಗಿ ಪತ್ತೆಯಾದ ಗೃಹಿಣಿ ನಾಗವೇಣಿ ಅವರ ಕೊಲೆ ಪ್ರಕರಣದಲ್ಲೂ ಸೆಷನ್ಸ್ ನ್ಯಾಯಾಲಯವು ಕೆಂಪಮ್ಮಗೆ ಮರಣದಂಡನೆ ವಿಧಿಸಿತು. ನಾಗವೇಣಿಗೆ ಮಕ್ಕಳಿರಲಿಲ್ಲ. ಇದಕ್ಕಾಗಿ ಎಲ್ಲಾ ಆಭರಣಗಳನ್ನು ಧರಿಸಿ ವಿಶೇಷ ಪೂಜೆಗಳನ್ನು ಮಾಡುವಂತೆ ಕೆಂಪಮ್ಮ ಹೇಳಿದ್ದಳು. ಹೈಕೋರ್ಟ್ ಹಸ್ತಕ್ಷೇಪ ಮತ್ತು ಮರುವಿಚಾರಣೆಗಳು ಕೆಲವು ಪ್ರಕರಣಗಳಲ್ಲಿ ಕರ್ನಾಟಕ ಹೈಕೋರ್ಟ್ ಮಧ್ಯಪ್ರವೇಶಿಸಿತು. ಒಂದು ಪ್ರಕರಣದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯರ ಕ್ರಾಸ್ ಎಕ್ಸಾಮಿನೇಷನ್ ದಾಖಲಿಸಲು ಹಾಗೂ ನಿಗದಿತ ಅವಧಿಯೊಳಗೆ ವಿಚಾರಣೆಯನ್ನು ಪೂರ್ಣಗೊಳಿಸಲು ನಿರ್ದೇಶಿಸಿ, ಪ್ರಕರಣವನ್ನು ಮತ್ತೆ ಸೆಷನ್ಸ್ ನ್ಯಾಯಾಲಯಕ್ಕೆ ಹಿಂತಿರುಗಿಸಿತು. ಇತರ ಕೆಲವು ಪ್ರಕರಣಗಳಲ್ಲಿ ವಿಚಾರಣಾ ನ್ಯಾಯಾಲಯಗಳು ಕೆಂಪಮ್ಮಗೆ ಜೀವಾವಧಿ ಶಿಕ್ಷೆ ವಿಧಿಸಿವೆ. ಮದ್ದೂರು ತಾಲ್ಲೂಕಿನಲ್ಲಿ 50 ವರ್ಷದ ಪಿಳ್ಳಮ್ಮ ಅವರ ಹತ್ಯೆ ಪ್ರಕರಣದಲ್ಲಿ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯವು ಜೀವಾವಧಿ ಶಿಕ್ಷೆ ಹಾಗೂ 5,000 ರೂ. ದಂಡ ವಿಧಿಸಿತು. ಕೆಂಪಮ್ಮಳನ್ನು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಇರಿಸಲಾಯಿತು. ಎಐಎಡಿಎಂಕೆ ನಾಯಕಿ ವಿ.ಕೆ. ಶಶಿಕಲಾ ಅವರ ಪಕ್ಕದ ಸೆಲ್ ನಲ್ಲಿ ಕೆಂಪಮ್ಮಳನ್ನು ಇರಿಸಲಾಗಿದೆ ಎಂಬ ವರದಿಗಳು ಹೊರಬಂದಾಗ ಈಕೆ ಮತ್ತೆ ಸುದ್ದಿಯಾದಳು. ಭದ್ರತಾ ಕಾರಣಗಳಿಂದ ಜೈಲು ಅಧಿಕಾರಿಗಳು ಕೆಂಪಮ್ಮಳನ್ನು ದೇಶದ ಅತ್ಯಂತ ಹಳೆಯ ಜೈಲುಗಳಲ್ಲಿ ಒಂದಾದ ಬೆಳಗಾವಿಯ ಹಿಂಡಲಗಾ ಜೈಲಿಗೆ ಸ್ಥಳಾಂತರಿಸಿದರು. ಕೈದಿಗೆ ಪೂರ್ವ ಸೂಚನೆ ನೀಡದೆ ಈ ಕ್ರಮವನ್ನು ಸದ್ದಿಲ್ಲದೆ ಕೈಗೊಳ್ಳಲಾಗಿದೆ ಎಂದು ಜೈಲು ಮೂಲಗಳು ತಿಳಿಸಿವೆ. ಕೊಲೆ ಮಾಡಲು ಕೆಂಪಮ್ಮ ಸೈನೈಡ್ ಜತೆಗೆ ನಂಬಿಕೆಯನ್ನು ಆಯುಧವಾಗಿಸಿಕೊಂಡಳು. ದೇವಾಲಯವನ್ನು ಸಂಚು ರೂಪಿಸುವ ಮತ್ತು ಕೊಲೆ ಮಾಡುವ ಸ್ಥಳವಾಗಿ ಬಳಸಿಕೊಂಡಳು. ಪವಿತ್ರ ನೀರು ಎಂದು ವಿಷ ಕುಡಿಸಿದಳು. ಪರಮ ಭಕ್ತೆಯಂತೆ ನಟಿಸಿ, ಇನ್ನೊಬ್ಬರ ನೋವಿಗೆ ಪರಿಹಾರ ಸೂಚಿಸುತ್ತಾ ಅಮಾಯಕ ಮಹಿಳೆಯರನ್ನು ಕೊಂದು, ಆಭರಣ ದೋಚುವ ದುಷ್ಕೃತ್ಯಗಳಲ್ಲಿ ತೊಡಗಿಸಿಕೊಂಡಳು. ಕೆಂಪಮ್ಮ ‘ಸೈನೈಡ್ ಮಲ್ಲಿಕಾ’ ಆಗಿ ಸರಣಿ ಹತ್ಯೆಗಳನ್ನು ನಡೆಸಿದ ಭಯಾನಕ ಕಥೆ ಇದು.
ಉಡುಪಿ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಹೆಸರಿನಲ್ಲಿ ನಕಲಿ ಖಾತೆ
ಉಡುಪಿ, ಜ.15: ಸಾಮಾಜಿಕ ಜಾಲತಾಣಗಳಾದ ಫೇಸ್ಬುಕ್ ಹಾಗೂ ವಾಟ್ಯ್ಸಾಪ್ಗಳಲ್ಲಿ ತನ್ನ ಫೋಟೋ ಹಾಗೂ ಹೆಸರನ್ನು ದುರ್ಬಳಕೆ ಮಾಡಿಕೊಂಡು ನಕಲಿ ಖಾತೆಗಳನ್ನು ಸೃಷ್ಟಿಸುವ ಮೂಲಕ, ಬೇರೆ ಬೇರೆ ಕಾರಣಗಳನ್ನು ನೀಡಿ ಹಣಕ್ಕೆ ಬೇಡಿಕೆ ಇಡುತ್ತಿರುವುದು ತನ್ನ ಗಮನಕ್ಕೆ ಬಂದಿರುವುದಾಗಿ ಉಡುಪಿ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. ತನ್ನ ಹೆಸರಿನಲ್ಲಿ ನಕಲಿ ಖಾತೆ ತೆರೆದು ಬೇರೆ ಬೇರೆ ಕಾರಣಗಳಿಗೆ ಹಣ ವರ್ಗಾಯಿಸುವಂತೆ ಸಂದೇಶಗಳನ್ನು ರವಾನಿಸುತ್ತಿರುವುದು ಗೊತ್ತಾಗಿದೆ. ಈ ಬಗ್ಗೆ ಈಗಾಗಲೇ ಕಾನೂನು ಕ್ರಮಕೈಗೊಳ್ಳುವಂತೆ ಉಡುಪಿಯ ಸೆನ್ ಪೊಲೀಸ್ ಠಾಣೆಯಲ್ಲಿ ದೂರನ್ನು ದಾಖಲಿಸಲಾಗಿದೆ. ಅದಾಗ್ಯೂ ಇಂತಹ ಪ್ರಕರಣ ಪುನರಾವರ್ತನೆಯಾಗುತ್ತಿರುವುದರಿಂದ ಫೇಸ್ಬುಕ್ ಹಾಗೂ ವಾಟ್ಯ್ಸಾಪ್ಗಳಲ್ಲಿ ನನ್ನ ಫೋಟೋ ಹಾಗೂ ಹೆಸರನ್ನು ಬಳಸಿ ಹಣ ವರ್ಗಾವಣೆಗೆ ಅಥವಾ ಇನ್ನಿತರೆ ಬೇಡಿಕೆಗಳ ಸಂದೇಶಗಳು ಸ್ವೀಕೃತ ವಾದಲ್ಲಿ, ಅಂತಹ ಸಂದೇಶಗಳಿಗೆ ಸ್ಪಂದಿಸದೆ, ಸಂದೇಶ ಸ್ವೀಕೃತವಾದ ತಕ್ಷಣ ಸೆನ್ ಪೊಲೀಸ್ ಠಾಣೆಗೆ ದೂರು ನೀಡುವಂತೆ ಎಲ್ಲಾ ಅಧಿಕಾರಿಗಳಿಗೆ ಹಾಗೂ ಸಾರ್ವಜನಿಕರಿಗೆ ಸ್ವರೂಪ ಟಿ.ಕೆ. ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.
ಆಳಂದ–ಕಲಬುರಗಿ ಮಧ್ಯೆ ಬಸ್ ಸಂಚಾರಕ್ಕೆ ಚಾಲನೆ
ಆಳಂದ: ಆಳಂದ–ಕಲಬುರಗಿ ಮಧ್ಯೆ ಹೊಸ ಬಸ್ ಸಂಚಾರಕ್ಕೆ ಶಾಸಕ, ನೀತಿ ಆಯೋಗದ ರಾಜ್ಯ ಉಪಾಧ್ಯಕ್ಷ ಬಿ.ಆರ್.ಪಾಟೀಲ್ ಅವರು ಗುರುವಾರ ಚಾಲನೆ ನೀಡಿದರು. ಪಟ್ಟಣದ ಬಸ್ ನಿಲ್ದಾಣದಲ್ಲಿ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಸ್ಥಳೀಯ ಘಟಕಕ್ಕೆ ಬಿಡುಗಡೆಯಾದ ಎರಡು ಹೊಸ ಬಸ್ಗಳಿಗೆ ಶಾಸಕರು ಪೂಜೆ ಸಲ್ಲಿಸಿ, ಸಂಚಾರಕ್ಕೆ ಅಧಿಕೃತವಾಗಿ ಚಾಲನೆ ಕೊಟ್ಟರು. ಬಳಿಕ ಮಾತನಾಡಿದ ಅವರು, ಜಿಲ್ಲಾ ಕೇಂದ್ರ ಕಲಬುರಗಿಗೆ ಸಂಚರಿಸುವ ಸಾರ್ವಜನಿಕರು ಮತ್ತು ವ್ಯಾಪಾರಿಗಳ ಬೇಡಿಕೆಯನ್ನು ಮನಗಂಡು ಹೊಸ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಅವರು ಹೇಳಿದರು. ಈ ಸಂದರ್ಭದಲ್ಲಿ ಸ್ಥಳೀಯ ಘಟಕಾಧಿಕಾರಿ ಯೋಗಿನಾಥ ಸರಸಂಬಿ ಅವರು ಬಸ್ ಸಂಚಾರ, ವೇಳಾಪಟ್ಟಿ ಹಾಗೂ ಸೇವಾ ವ್ಯವಸ್ಥೆಯ ಕುರಿತು ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಪಂಚಗ್ಯಾರoಟಿ ಅಧ್ಯಕ್ಷ ಶಿವುಪುತ್ರ ಪಾಟೀಲ, ಮುಖಂಡ ಮಲ್ಲಪ್ಪ ಹತ್ತರಕಿ, ಘಟಕದ ಮೇಲ್ವಿಚಾರಕ ಮುಹಮ್ಮದ್ ಖಾನ್, ವೈದ್ಯಕುಮಾರ ತೇಲ್ಕರ್, ಮಶಾಕ್ ಪಟೇಲ್, ಮುಹಮ್ಮದ್ ಯಾಸೀನ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಇರಾನ್ ಬೆದರಿಸಲು ಮಧ್ಯಪ್ರಾಚ್ಯಕ್ಕೆ ಯುದ್ಧವಾಹಕ ನೌಕೆ ರವಾನಿಸಿದ ಅಮರಿಕ; ಸಾಗರದ ಅಲೆಗಳಲ್ಲಿ ಸಂಚಲನ!
ಇರಾನ್ನ ಆಂತರಿಕ ಬಿಕ್ಕಟ್ಟಿನಲ್ಲಿ ಮಧ್ಯಪ್ರವೇಶ ಮಾಡುವುದಾಗಿ ಹೇಳುತ್ತಲೇ ಇರುವ ಅಮೆರಿಕ, ತನ್ನ ಮಾತಿಗೆ ಪೂರಕವಾಗಿ ಮಧ್ಯಪ್ರಾಚ್ಯದತ್ತ ತನ್ನ ಯುದ್ಧವಾಹಕ ನೌಕೆಯ ಗುಂಪೊಂದನ್ನು ರವಾನೆ ಮಾಡಿದೆ. ಅಮೆರಿಕ ಈ ನಡೆಯನ್ನು ಇರಾನ್ ಮೇಲೆ ಒತ್ತಡ ಹೇರುವ ತಂತ್ರ ಎಂದು ವಿಶ್ಲೇಷಿಸಲಾಗುತ್ತಿದೆ. ಈ ಯುದ್ಧವಾಹಕ ನೌಕೆಗಳನ್ನು ದಕ್ಷಿಣ ಚೀನಾ ಸಮುದ್ರದಿಂದ ಮಧ್ಯಪ್ರಾಚ್ಯಕ್ಕೆ ಸ್ಥಳಾಂತರಿಸಲಾಗಿದೆ. ಅಮೆರಿಕದ ಈ ನಡೆಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಲವರು ಇದನ್ನು ಇರಾನ್ ಬೆದರಿಸುವ ತಂತ್ರ ಎಂದು ಕರೆದರೆ, ಮತ್ತೆ ಕೆಲವರು ಇದು ಬಿಕ್ಕಟ್ಟನನ್ನು ಮತ್ತಷ್ಟು ಉಲ್ಬಣಗೊಳಿಸಲಿದೆ ಎಂದು ಟೀಕಿಸಿದ್ದಾರೆ.
ಕಾಳಗಿ | ಅಣವೀರಭದ್ರೇಶ್ವರ ಜಾತ್ರಾ ಮಹೋತ್ಸವ
ಕಾಳಗಿ : ಇಲ್ಲಿನ ಶ್ರೀ ಅಣವೀರಭದ್ರೇಶ್ವರ ಹಾಗೂ ಭದ್ರಕಾಳಿ ಕಲ್ಯಾಣ ಮಹೋತ್ಸವವು ಬುಧವಾರ ವಿಜೃಂಭಣೆಯಿಂದ ನೆರವೇರಿತು. ಬೆಳಗ್ಗೆ 6 ಗಂಟೆಯಿಂದ 10.30 ರವರೆಗೆ ಸಾವಿರಾರು ಭಕ್ತರ ಸಾನ್ನಿಧ್ಯದಲ್ಲಿ ಮಹಾರುದ್ರಾಭಿಷೇಕ ಜರುಗಿತು. ಬಳಿಕ 11 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು. ಅನಂತರ ಶಿವಾನುಭವ ಚಿಂತನೆ ಹಾಗೂ ಧರ್ಮಸಭೆ ಜರುಗಿದ್ದು, ಸಂಜೆ 5.30ಕ್ಕೆ ಕಲ್ಯಾಣ ಮಹೋತ್ಸವ ಅತ್ಯಂತ ವೈಭವದಿಂದ ನೆರವೇರಿತು. ಕರ್ನಾಟಕದ ವಿವಿಧ ಜಿಲ್ಲೆಗಳೊಂದಿಗೆ ಆಂಧ್ರಪ್ರದೇಶ ಮತ್ತು ಮಹಾರಾಷ್ಟ್ರದಿಂದಲೂ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು. ಈ ಸಂದರ್ಭದಲ್ಲಿ ದಿವ್ಯ ಸಾನಿಧ್ಯ ವಹಿಸಿದ್ದ ಶ್ರೀ ಪ.ಬ್ರ. ರೇವಣಸಿದ್ಧ ಶಿವಾಚಾರ್ಯರು ಶ್ರೀನಿವಾಸ ಸರಡಗಿ, ನೀಲಕಂಠ ದೇವರು, ರಾಮಲಿಂಗ ರೆಡ್ಡಿ ದೇಶಮುಖ, ಶರಣಬಸಪ್ಪ ಮಮಶೆಟ್ಟಿ ಅವರು ಮಾತನಾಡಿದರು. ಇದೇ ಸಂದರ್ಭದಲ್ಲಿ ಅಣ್ಣಾರಾವ ಪೆದ್ದಿ, ವೀರಣ್ಣ ಗಂಗಾಣಿ, ಡಾ.ಅನೀಲ ರಟಕಲ್, ನೀಲಕಂಠ ರಾವ್ ಪಾಟೀಲ್, ಸೋಮಣ್ಣ ಕುರಕೋಟಿ, ಮಹೇಶ ಪೆದ್ದಿ, ರಾಜಶೇಖರ ಗುಡುದಾ, ಅರ್ಚಕರಾದ ಗೌರಿಶಂಕರ ತೆಂಗಿನಮಠ, ರೇವಣಸಿದ್ಧಪ್ಪ ಕುರುಕೋಟಿ, ಸಂತೋಷ್ ಚಿದರಿ, ಜಗದೇವಪ್ಪ ಮಹಾಗಾಂವ, ಚಿಕ್ಕವೀರಪ್ಪ ಮಾಮಾ, ಮಲ್ಲಿಕಾರ್ಜುನ್ ಕುರಕೋಟಿ, ಮಗಳಪ್ಪ ಸರ್ ಚಿದರಿ, ನಾಗಣ್ಣ ಗಡ್ಡಿ, ರವಿ ಬಳಾ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಭಜಂತ್ರಿ ವೃಂದದಿಂದ ಕಾರ್ಯಕ್ರಮಕ್ಕೆ ಮೆರುಗು ನೀಡಲಾಯಿತು. ರಟಕಲ್ ಪೊಲೀಸರು ಸೂಕ್ತ ಬಂದೋಬಸ್ತ್ ಒದಗಿಸಿದ್ದರು. ಇನ್ನೂ ಅನೇಕ ಭಕ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಉಡುಪಿ: ಚೂರ್ಣೋತ್ಸವದೊಂದಿಗೆ ಸಂಪನ್ನಗೊಂಡ ಸಪ್ತೋತ್ಸವ
ಉಡುಪಿ, ಜ.15: ಉಡುಪಿ ಶ್ರೀಕೃಷ್ಣ ಮಠದ ವಾರ್ಷಿಕ ಜಾತ್ರೋತ್ಸವ ಎಂದೇ ಕರೆಯಲಾಗುವ ಪರ್ಯಾಯ ಪುತ್ತಿಗೆ ಮಠದ ಶ್ರೀಸುಗುಣೇಂದ್ರ ತೀರ್ಥ ಶ್ರೀಪಾದರ ನೇತೃತ್ವದಲ್ಲಿ ಕಳೆದೊಂದು ವಾರದಿಂದ ನಡೆದ ಸಪ್ತೋತ್ಸವ, ಇಂದು ಹಗಲಿನ ರಥೋತ್ಸವ ‘ಚೂರ್ಣೋತ್ಸವ’ದೊಂದಿಗೆ ಸಂಪನ್ನಗೊಂಡಿತು. ದ್ವೈತಮತ, ಮಧ್ವ ಸಿದ್ಧಾಂತದ ಪ್ರತಿಪಾದಕರಾದ ಶ್ರೀಮಧ್ವಾಚಾರ್ಯರು ಸುಮಾರು 800 ವರ್ಷಗಳ ಹಿಂದೆ ಮಕರ ಸಂಕ್ರಮಣದ ದಿನದಂದೇ ಉಡುಪಿಯಲ್ಲಿ ಶ್ರೀಕೃಷ್ಣನ ಮೂರ್ತಿಯನ್ನು ಪ್ರತಿಷ್ಠಾಪಿಸಿದರೆಂಬ ಪ್ರತೀತಿ ಇರುವ ಹಿನ್ನೆಲೆ ಯಲ್ಲಿ ಪ್ರತಿ ವರ್ಷ ಇಲ್ಲಿ ಒಂದು ವಾರ ಕಾಲ ಸಪ್ತೋತ್ಸವವನ್ನು ಆಚರಿಸಲಾಗುತ್ತದೆ. ಮಕರ ಸಂಕ್ರಾಂತಿಯ (ಜ.14) ದಿನದಂದು ರಾತ್ರಿ ಮೂರು ತೇರುಗಳ ಉತ್ಸವ ನಡೆದು ಮರುದಿನ ಹಗಲು ರಥೋತ್ಸವದೊಂದಿಗೆ ಇದು ಮುಕ್ತಾಯಗೊಳ್ಳುತ್ತದೆ. ಪರ್ಯಾಯ ಪುತ್ತಿಗೆ ಮಠದ ಶ್ರೀಗಳೊಂದಿಗೆ ಮಠದ ಕಿರಿಯ ಯತಿಗಳಾದ ಶ್ರೀಸುಶ್ರೀಂದ್ರತೀರ್ಥರು, ಅದಮಾರು ಮಠದ ಶ್ರೀವಿಶ್ವಪ್ರಿಯ ತೀರ್ಥರು ಹಾಗೂ ಪೇಜಾವರ ಮಠದ ಶ್ರೀವಿಶ್ವಪ್ರಸನ್ನ ತೀರ್ಥರು ಇಂದಿನ ಚೂರ್ಣೋತ್ಸವ ದಲ್ಲಿ ಪಾಲ್ಗೊಂಡರು. ಪೂಜೆಯ ಬಳಿಕ ಶ್ರೀಕೃಷ್ಣ-ಮುಖ್ಯಪ್ರಾಣ ಮೂರ್ತಿಗಳನ್ನು ಚಿನ್ನದ ಪಲಕ್ಕಿ ಯಲ್ಲಿ ತಂದು ಸ್ವಾಗತ ಗೋಪುರದ ಎದುರು ನಿಲ್ಲಿಸಲಾದ ಬ್ರಹ್ಮರಥದಲ್ಲಿ ಪ್ರತಿಷ್ಠಾಪಿಸಲಾಯಿತು. ಬಳಿಕ ಸ್ವಾಮೀಜಿಗಳು ರಥವನ್ನೇರಿ ಮಂಗಳಾರತಿ ಬೆಳಗಿದ ಬಳಿಕ ರಥವನ್ನು ರಥಬೀದಿಗೆ ಒಂದು ಸುತ್ತು ಪ್ರದಕ್ಷಿಣೆ ತರಲಾಯಿತು. ಈ ವೇಳೆ ಶ್ರೀಗಳು ರಥದಿಂದಲೇ ನೆರೆದ ಭಕ್ತರತ್ತ ಪ್ರಸಾದ, ಹಣ್ಣುಹಂಪಲು ಹಾಗೂ ನಾಣ್ಯಗಳನ್ನು ಎಸೆಯುತ್ತಾರೆ. ಉತ್ಸವದ ಬಳಿಕ ಶ್ರೀಕೃಷ್ಣ-ಮುಖ್ಯಪ್ರಾಣ ಮೂರ್ತಿಗಳನ್ನು ಮಠದ ವಸಂತ ಮಂಟಪಕ್ಕೆ ತಂದು ಪೂಜಿಸಿ ದೇವರಿಗೆ ಸಮರ್ಪಿತ ಓಕುಳಿಯನ್ನು ಎಲ್ಲಾ ಯತಿಗಳೊಂದಿಗೆ ಭಕ್ತರು ಹಚ್ಚಿಕೊಂಡು ಮಧ್ವ ಸರೋವರದಲ್ಲಿ ಅವಭೃತ ಸ್ನಾನ ಮಾಡಿದರು. ನೂರಾರು ಮಂದಿ ಭಕ್ತರು ಇದರಲ್ಲಿ ಪಾಲ್ಗೊಂಡರು. ಬಳಿಕ ಅನ್ನಸಂತಪರ್ಣೆಗಾಗಿ ಸಿದ್ಧಪಡಿಸಲಾದ ಅನ್ನದ ರಾಶಿಗೆ ಪಲ್ಲಪೂಜೆ ನಡೆಯಿತು. ಸಾವಿರಾರು ಮಂದಿ ಇಂದಿನ ಅನ್ನಸಂತರ್ಪಣೆಯಲ್ಲಿ ಪಾಲ್ಗೊಂಡರು. ಉರುಳು ಸೇವೆ: ಈ ಬಾರಿ ಕೃಷ್ಣನ ಭಕ್ತರು ಬ್ರಹ್ಮ ರಥೋತ್ಸವದ ಸಂದರ್ಭದಲ್ಲಿ ರಥಬೀದಿಯಲ್ಲಿ ಉರುಳು ಸೇವೆ ಮಾಡಿದರು. ಸಂಜೆ ರಾಜಾಂಗಣದಲ್ಲಿ ಪುತ್ತಿಗೆ ಪರ್ಯಾಯದ ಮಂಗಳೋತ್ಸವದೊಂದಿಗೆ ಪುತ್ತಿಗೆ ಶ್ರೀಗೆ ತುಲಾಭಾರ ಸಹಿತ ಗುರುವಂದನಾ ಕಾರ್ಯಕ್ರಮ ನಡೆಯಿತು. ಶುಕ್ರವಾರ ಏಳು ರಥಗಳ ಉತ್ಸ: ಪುತ್ತಿಗೆ ಶ್ರೀ ಎರಡು ವರ್ಷಗಳ ಕಾಲ ಶ್ರೀಕೃಷ್ಣನಿಗೆ ನಡೆಸಿದ ವಿಶ್ವ ಗೀತಾ ಪರ್ಯಾ ಯದ ಮಂಗಳೋತ್ಸವ ಪ್ರಯುಕ್ತ ನಾಳೆ ಅಪರೂಪದ ಏಳು ರಥಗಳ ಉತ್ಸವ ನಡೆಯಲಿದೆ ಎಂದು ಪರ್ಯಾಯ ಪುತ್ತಿಗೆ ಮಠದ ಪ್ರಕಟಣೆ ತಿಳಿಸಿದೆ.
11 ತಿಂಗಳಲ್ಲಿ 4.71 ಲಕ್ಷ ಕೋಟಿ ರೂ. ಹೂಡಿಕೆ : ಸಚಿವ ಎಂ.ಬಿ.ಪಾಟೀಲ್
ಬೆಂಗಳೂರು : 2025ರ ಫೆಬ್ರವರಿಯಲ್ಲಿ ನಡೆಸಿದ ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ 10.27 ಲಕ್ಷ ಕೋಟಿ ರೂ. ಬಂಡವಾಳ ಹೂಡಿಕೆಯ ಖಾತ್ರಿ ಸಿಕ್ಕಿತ್ತು. ಈ ಪೈಕಿ ಡಿಸೆಂಬರ್ ಕೊನೆಯ ಹೊತ್ತಿಗೆ 4.71 ಲಕ್ಷ ಕೋಟಿ ರೂ. ನೈಜ ಹೂಡಿಕೆ ಆಗಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ತಿಳಿಸಿದ್ದಾರೆ. ಜ.19ರಿಂದ 23ರವರೆಗೆ ದಾವೋಸ್ ನಲ್ಲಿ ನಡೆಯಲಿರುವ ವಿಶ್ವ ಮಟ್ಟದ ಆರ್ಥಿಕ ಶೃಂಗಸಭೆಗೆ ತೆರಳಲು ಸಿದ್ಧವಾಗುತ್ತಿರುವುದಕ್ಕೆ ಪೂರ್ವಭಾವಿಯಾಗಿ ಸಚಿವರು, ಕಳೆದ ಒಂದು ವರ್ಷದಲ್ಲಿ ರಾಜ್ಯದ ಕೈಗಾರಿಕಾ ಕ್ಷೇತ್ರದ ವಿವಿಧ ವಲಯಗಳಲ್ಲಿ ಆಗಿರುವ ಹೂಡಿಕೆ, ಅರ್ಜಿ ಸಲ್ಲಿಕೆ ಮುಂತಾದ ಪ್ರಗತಿಯ ಅಂಕಿಅಂಶಗಳನ್ನು ನೀಡಿದ್ದಾರೆ. ಗುರುವಾರ ಈ ಬಗ್ಗೆ ವಿವರ ಮಾಹಿತಿ ನೀಡಿರುವ ಅವರು, ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಮಾಡಿಕೊಂಡಿರುವ ಹೂಡಿಕೆ ಒಡಂಬಡಿಕೆಗಳಲ್ಲಿ ಶೇ.46ರಷ್ಟು ನೈಜ ಹೂಡಿಕೆಯಾಗಿ ಸಾಕಾರಗೊಂಡಿವೆ. ಈ ಪೈಕಿ ತಯಾರಿಕಾ ವಲಯಕ್ಕೆ 5.66 ಲಕ್ಷ ಕೋಟಿ ರೂ., ಹೂಡಿಕೆ ಖಾತ್ರಿಯಲ್ಲಿ 3.22 ಲಕ್ಷ ಕೋಟಿ ರೂ. ನೈಜ ಬಂಡವಾಳವಾಗಿ ಈಗಾಗಲೆ ಬಂದಿದೆ ಎಂದು ತಿಳಿಸಿದ್ದಾರೆ. ಹಾಗೆಯೆ, ಮರುಬಳಕೆ ಇಂಧನ ವಲಯದಲ್ಲಿ 4.25 ಲಕ್ಷ ಕೋಟಿ ರೂ. ಖಾತ್ರಿಯ ಪೈಕಿ 1.41 ಲಕ್ಷ ಕೋಟಿ ರೂ. ಹೂಡಿಕೆಯಾಗಿ ಹರಿದಿದ್ದು, ಮೂಲಸೌಕರ್ಯ ಅಭಿವೃದ್ಧಿ ಕ್ಷೇತ್ರಕ್ಕೆ 0.45 ಲಕ್ಷ ಕೋಟಿ ರೂ.ಗಳ ಹೂಡಿಕೆ ವಾಗ್ದಾನದಲ್ಲಿ 0.085 ಲಕ್ಷ ಕೋಟಿ ರೂ. ಹೂಡಿಕೆ ಬಂದಿದೆ. ಇದು ಕ್ರಮವಾಗಿ ಶೇ.58, ಶೇ.33 ಮತ್ತು ಶೇ.19ರ ಯಶಸ್ಸಿನ ದಾಖಲೆಯಾಗಿದೆ ಎಂದು ಎಂ.ಬಿ.ಪಾಟೀಲ್ ಹೇಳಿದ್ದಾರೆ. ನಾವು ಕೇವಲ ಒಡಂಬಡಿಕೆಯ ಮಟ್ಟದಲ್ಲಿ ಮಾತ್ರ ನಿಂತಿಲ್ಲ. ಹೂಡಿಕೆ ಪ್ರಸ್ತಾವನೆ ಸಲ್ಲಿಸಿದ ಕೂಡಲೇ ಅರ್ಜಿ ಸಲ್ಲಿಕೆ, ಭೂಮಿ ಮತ್ತಿತರ ಮಂಜೂರಾತಿಗಳು, ಕಡ್ಡಾಯ ಅನುಮೋದನೆಗಳು ಇವೆಲ್ಲವನ್ನೂ ಸಂಪೂರ್ಣ ಡಿಜಿಟಲ್ ವೇದಿಕೆಯಾಗಿರುವ ಏಕಗವಾಕ್ಷಿ ವ್ಯವಸ್ಥೆ ಮೂಲಕ ಒದಗಿಸುತ್ತಿದ್ದೇವೆ. ಇದರ ಅಡಿಯಲ್ಲಿ 30ಕ್ಕೂ ಹೆಚ್ಚು ಇಲಾಖೆಗಳ 150ಕ್ಕೂ ಹೆಚ್ಚು ಸೇವೆಗಳನ್ನು ಏಕತ್ರಗೊಳಿಸಲಾಗಿದೆ. ಇದರಿಂದಾಗಿ ತಯಾರಿಕೆ, ಇ.ಎಸ್.ಡಿ.ಎಂ, ಸೆಮಿಕಂಡಕ್ಟರ್, ಆಹಾರ ಸಂಸ್ಕರಣೆ ಕ್ಷೇತ್ರಗಳಿಗೆ ಹೆಚ್ಚಿನ ಬಂಡವಾಳವು ನೈಜರೂಪದಲ್ಲಿ ಹರಿದುಬರುತ್ತಿದೆ ಎಂದು ಅವರು ವಿವರಿಸಿದ್ದಾರೆ. ಕಳೆದ ಒಂದು ವರ್ಷದಲ್ಲಿ ರಾಜ್ಯದಲ್ಲಿ ಹೂಡಿಕೆ ಪ್ರಸ್ತಾವನೆಗಳು ತ್ವರಿತವಾಗಿ ಅನುಷ್ಠಾನಗೊಳ್ಳುತ್ತಿದ್ದು, ಮೊದಲಿಗಿಂತಲೂ ಹೆಚ್ಚು ಕೈಗಾರಿಕಾ ಸ್ನೇಹಿಯಾಗಿದೆ. ಒಟ್ಟು ಹೂಡಿಕೆ ಪ್ರಸ್ತಾವನೆಗಳ ಪೈಕಿ ಶೇ.50ರಷ್ಟು ಮತ್ತು ತಯಾರಿಕೆ ವಲಯದ ಹೂಡಿಕೆ ಪ್ರಸ್ತಾವನೆಗಳಲ್ಲಿ ಶೇ.60ರಷ್ಟು `ಕರ್ನಾಟಕ ಉದ್ಯೋಗ ಮಿತ್ರ’ದಲ್ಲಿ ಸಲ್ಲಿಕೆಯಾಗಿವೆ ಎಂದು ಎಂ.ಬಿ.ಪಾಟೀಲ್ ಹೇಳಿದ್ದಾರೆ. ಇವೆಲ್ಲವೂ ಸರಕಾರವು ಜಾರಿಗೆ ತಂದಿರುವ ರಚನಾತ್ಮಕ ಕೈಗಾರಿಕಾ ನೀತಿ ಮತ್ತಿತರ ರಚನಾತ್ಮಕ ಕ್ರಮಗಳಿಗೆ ಸಿಕ್ಕಿರುವ ಗೆಲುವಾಗಿದೆ. ನಾವು ಯಾವ ಯೋಜನೆಯನ್ನೂ ಕೇವಲ ಒಡಂಬಡಿಕೆಯ ಹಂತಕ್ಕಷ್ಟೇ ನಿಲ್ಲಿಸದೆ, ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುತ್ತಿದ್ದೇವೆ ಎಂದು ಎಂದು ಅವರು ನುಡಿದಿದ್ದಾರೆ. ತಯಾರಿಕಾ ವಲಯದಲ್ಲಿ ಹೆಸರು ಮಾಡಿರುವ ಸಿಫ್ಲೆಕ್ಸ್ ಕಂಪನಿಯು ಸೆಮಿಕಂಡಕ್ಟರ್ ಕ್ಷೇತ್ರದಲ್ಲಿ ಮುಖ್ಯವಾಗಿರುವ ಸಿಲಿಕಾನ್ ಬಿಡಿಭಾಗಗಳನ್ನು ತಯಾರಿಸುವ ಸ್ಥಾವರ ಸ್ಥಾಪನೆಗೆ 9,300 ಕೋಟಿ ರೂ., ಎಮ್ವೀ ಎನರ್ಜಿ ಕಂಪನಿಯು ಬೆಂಗಳೂರಿನ ಐಟಿಐಆರ್ ಪ್ರದೇಶದಲ್ಲಿ ಸೌರಕೋಶ ಮತ್ತು ಮಾಡ್ಯೂಲ್ ತಯಾರಿಕೆ ವಿಸ್ತರಣೆಗೆ 5,495 ಕೋಟಿ ರೂ., ಜಿಂದಾಲ್ ಸ್ಟೀಲ್ಸ್ ವಿಜಯನಗರದಲ್ಲಿ ಎಲೆಕ್ಟ್ರಿಕಲ್ ಸ್ಟೀಲ್ ಘಟಕ ಸ್ಥಾಪನೆಗೆ 7 ಸಾವಿರ ಕೋಟಿ ರೂ. ಹೂಡಿಕೆ ಮಾಡುವ ಪ್ರಸ್ತಾವನೆಗಳನ್ನು ಸಲ್ಲಿಸಿವೆ ಎಂದು ಎಂ.ಬಿ.ಪಾಟೀಲ್ ತಿಳಿಸಿದ್ದಾರೆ. ಮಿಕ್ಕಂತೆ ಸಿಮೆಂಟ್ ತಯಾರಿಕಾ ಘಟಕ ಸ್ಥಾಪನೆಗೆ ಅಲ್ಟ್ರಾ ಟೆಕ್ ಕಂಪನಿಯು ಕಲಬುರಗಿ ಜಿಲ್ಲೆಯಲ್ಲಿ 4,819 ಕೋಟಿ ರೂ., ದಾಲ್ಮಿಯಾ ಸಿಮೆಂಟ್ಸ್ ಬೆಳಗಾವಿಯ ಯಾದವಾಡದಲ್ಲಿ 3,000 ಕೋಟಿ ರೂ. ಹಾಗೂ ವಿಸ್ತರಣೆಗೆ 3,020 ಕೋಟಿ ರೂ., ಮರುಬಳಕೆ ಇಂಧನ ಕ್ಷೇತ್ರದಲ್ಲಿ ಟಾಟಾ ಪವರ್ 8,134 ಕೋಟಿ ರೂ., ವೋಲ್ವೋ ತನ್ನ ಹೊಸಕೋಟೆ ಘಟಕದ ವಿಸ್ತರಣೆಗೆ 1,251 ಕೋಟಿ ರೂ.ಗಳಿಗೆ ಕರ್ನಾಟಕ ಉದ್ಯೋಗ ಮಿತ್ರದಲ್ಲಿ ಪ್ರಸ್ತಾವನೆ ನೀಡಿವೆ ಎಂದು ಅವರು ತಿಳಿಸಿದ್ದಾರೆ. ಇದಲ್ಲದೆ, ವಿಜಯಪುರ ಜಿಲ್ಲೆಯಲ್ಲಿ ಸುಜ್ಲಾನ್ ಎನರ್ಜಿ ಲಿಮಿಟೆಡ್ 12,032 ಕೋಟಿ ರೂ., ಹ್ಯಾವೆಲ್ಸ್ ಇಂಡಿಯಾ ತನ್ನ ಉತ್ಪಾದನೆಯ ಹೆಚ್ಚಳ ಮತ್ತು ನೂತನ ಸಂಶೋಧನಾ ಮತ್ತು ಅಭಿವೃದ್ಧಿ ಕೇಂದ್ರ ಸ್ಥಾಪನೆಗೆ ತುಮಕೂರು ಜಿಲ್ಲೆಯಲ್ಲಿ 710 ಕೋಟಿ ರೂ., ಬಾಲಾಜಿ ವೇಫರ್ಸ್ 550 ಕೋಟಿ ರೂ., ಎಎಸ್ಎಂ ಟೆಕ್ನಾಲಜೀಸ್ 490 ಕೋಟಿ ರೂ., ಹೂಡಿಕೆ ಮಾಡಲು ಕರ್ನಾಟಕ ಉದ್ಯೋಗ ಮಿತ್ರದಲ್ಲಿ ಪ್ರಸ್ತಾವನೆ ನೀಡಿವೆ ಎಂದು ಅವರು ಮಾಹಿತಿ ನೀಡಿದ್ದಾರೆ. ವೈದ್ಯಕೀಯ ಮತ್ತು ಸ್ಯಾನಿಟರಿ ಸಾಧನಗಳನ್ನು ತಯಾರಿಸುವ ಟಿಜೆಡ್ಎಂಒ ಇಂಡಿಯಾ 58 ಕೋಟಿ ರೂ., ಎಚ್125 ಮಾದರಿಯ ಏರ್-ಬಸ್ ಗೆ ಬೇಕಾಗುವ ಬಿಡಿಭಾಗಗಳ ತಯಾರಿಕೆ ಟಿಎಎಸ್ಎಲ್ ಕೋಲಾರದ ವೇಮಗಲ್ ನಲ್ಲಿ 500 ಕೋಟಿ ರೂ., ಏವಿಯಾನಿಕ್ಸ್ ಮತ್ತು ರಕ್ಷಣಾ ಕ್ಷೇತ್ರದ ಸಾಧನಗಳ ತಯಾರಿಕೆಗೆ ಸಾಫ್ರಾನ್ ಎಲೆಕ್ಟ್ರಾನಿಕ್ಸ್ ಕಂಪನಿಯು 250 ಕೋಟಿ ರೂ. ಹೂಡುತ್ತಿವೆ ಎಂದು ಎಂ.ಬಿ.ಪಾಟೀಲ್ ಹೇಳಿದ್ದಾರೆ.
2025ರಲ್ಲಿ ದ್ವೇಷ ಭಾಷಣಗಳಲ್ಲಿ ಏರಿಕೆ; ಧಾರ್ಮಿಕ ಅಲ್ಪಸಂಖ್ಯಾತರೇ ಟಾರ್ಗೆಟ್!
2025ರಲ್ಲಿ ಭಾರತದಾದ್ಯಂತ ಧಾರ್ಮಿಕ ಅಲ್ಪಸಂಖ್ಯಾತರನ್ನು, ವಿಶೇಷವಾಗಿ ಮುಸ್ಲಿಮರು ಮತ್ತು ಕ್ರಿಶ್ಚಿಯನ್ನರನ್ನು ಗುರಿಯಾಗಿಸಿಕೊಂಡು ಒಟ್ಟು 1,318 ದ್ವೇಷ ಭಾಷಣದ ಘಟನೆಗಳು ದಾಖಲಾಗಿವೆ. ಇಂಡಿಯಾ ಹೇಟ್ ಲ್ಯಾಬ್ (IHL) ವರದಿಯ ಪ್ರಕಾರ, ದಿನಕ್ಕೆ ಸರಾಸರಿ ನಾಲ್ಕು ದ್ವೇಷ ಭಾಷಣ ಘಟನೆಗಳು ನಡೆದಿವೆ. 2024ಕ್ಕೆ ಹೋಲಿಸಿದರೆ ದ್ವೇಷ ಭಾಷಣದಲ್ಲಿ 13% ಹೆಚ್ಚಳವಾಗಿದ್ದು, 2023ಕ್ಕೆ ಹೋಲಿಸಿದರೆ 97% ಹೆಚ್ಚಳವಾಗಿದೆ. ‘ಸೆಂಟರ್ ಫಾರ್ ದಿ ಸ್ಟಡಿ ಆಫ್ ಆರ್ಗನೈಸ್ಡ್ ಹೇಟ್’ (CSOH) ಅಧೀನದಲ್ಲಿರುವ IHL, 2025ರಲ್ಲಿ ಧಾರ್ಮಿಕ ಅಲ್ಪಸಂಖ್ಯಾತರನ್ನು ಗುರಿಯಾಗಿಸಿಕೊಂಡು ದಾಖಲಾಗಿದ ದ್ವೇಷ ಭಾಷಣ ಘಟನೆಗಳ ಸಂಖ್ಯೆ 2024ರಲ್ಲಿ ದಾಖಲಾಗಿದ್ದ 1,165 ಪ್ರಕರಣಗಳನ್ನು ಮೀರಿಸಿದೆ ಎಂದು ಹೇಳಿದೆ. ಕಳೆದ ವರ್ಷ ರಾಜಕೀಯ ನಾಯಕರು ಮತ್ತು ಹಿಂದುತ್ವ ಸಂಘಟನೆಗಳ ಸದಸ್ಯರು ಮುಸ್ಲಿಮರು ಮತ್ತು ಕ್ರಿಶ್ಚಿಯನ್ನರನ್ನು ವಿಶ್ವಾಸದ್ರೋಹಿ, ದೇಶವಿರೋಧಿ, ಅಪಾಯಕಾರಿ ಅಥವಾ ಬೆದರಿಕೆ ಹುಟ್ಟಿಸುವವರಂತೆ ಚಿತ್ರಿಸುವ ಮೂಲಕ ಭಯ ಹುಟ್ಟಿಸುವ ನಿರೂಪಣೆಗಳನ್ನು ಬಳಸಿದ್ದಾರೆ ಎಂದು IHL ಗಮನಿಸಿದೆ. ವಿಶ್ವ ಹಿಂದೂ ಪರಿಷತ್ (VHP) ಮತ್ತು ಬಜರಂಗ ದಳದಂತಹ ಭಾರತೀಯ ಜನತಾ ಪಕ್ಷ (ಬಿಜೆಪಿ) ಹಾಗೂ ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ಅಂಗಸಂಸ್ಥೆಗಳು ವೈಯಕ್ತಿಕ ದ್ವೇಷ ಭಾಷಣ ಘಟನೆಗಳಲ್ಲಿ ಹೆಚ್ಚಿನ ಪಾಲು ವಹಿಸಿವೆ. ಅಂತರರಾಷ್ಟ್ರೀಯ ಹಿಂದೂ ಪರಿಷತ್, ಸಕಲ್ ಹಿಂದೂ ಸಮಾಜದಂತಹ ಇತರ ಬಲಪಂಥೀಯ ಗುಂಪುಗಳೂ ಈ ಪಟ್ಟಿಯಲ್ಲಿ ಸೇರಿವೆ. ಧಾರ್ಮಿಕ ಅಲ್ಪಸಂಖ್ಯಾತರನ್ನು ಗುರಿಯಾಗಿಸಿದ ದ್ವೇಷ ಭಾಷಣ ಇಂಡಿಯಾ ಹೇಟ್ ಲ್ಯಾಬ್ ವರದಿ ಪ್ರಕಾರ, 2025ರಲ್ಲಿ 1,318 ದ್ವೇಷ ಭಾಷಣದ ಪ್ರಕರಣಗಳು ದಾಖಲಾಗಿವೆ. ಈ ಭಾಷಣಗಳು ಧಾರ್ಮಿಕ ಅಲ್ಪಸಂಖ್ಯಾತರನ್ನು ಗುರಿಯಾಗಿಸಿಕೊಂಡಿವೆ. ಇದರಲ್ಲಿ 1,289 ಘಟನೆಗಳು ಅಥವಾ ಶೇಕಡಾ 98ರಷ್ಟು ದ್ವೇಷ ಭಾಷಣಗಳು ಮುಸ್ಲಿಮರನ್ನು ಗುರಿಯಾಗಿಸಿಕೊಂಡಿವೆ. ಇದೇ ವೇಳೆ ಕ್ರಿಶ್ಚಿಯನ್ ಸಮುದಾಯದ ವಿರುದ್ಧದ ದ್ವೇಷ ಭಾಷಣಗಳ ಸಂಖ್ಯೆ ಹಿಂದಿನ ಅವಧಿಗೆ ಹೋಲಿಸಿದರೆ ಶೇ. 41ರಷ್ಟು ಹೆಚ್ಚಾಗಿದ್ದು, 162 ಪ್ರಕರಣಗಳು ದಾಖಲಾಗಿವೆ. ಈ ಅಂಕಿಅಂಶಗಳು ಸೂಚಿಸುವಂತೆ, ಅನೇಕ ಕಾರ್ಯಕ್ರಮಗಳು ಮತ್ತು ಕೂಟಗಳು ಮುಸ್ಲಿಮರು ಮತ್ತು ಕ್ರಿಶ್ಚಿಯನ್ನರಿಬ್ಬರನ್ನೂ ಗುರಿಯಾಗಿಸಿಕೊಂಡ ದ್ವೇಷ ಭಾಷಣಗಳನ್ನು ಒಳಗೊಂಡಿವೆ. ಹಿಂಸಾಚಾರಕ್ಕೆ ನೇರ ಕರೆ ನೀಡಿರುವ ದ್ವೇಷ ಭಾಷಣ ಘಟನೆಗಳೂ ಇಲ್ಲಿ ದಾಖಲಾಗಿವೆ. 308 ಭಾಷಣಗಳು, ಅಂದರೆ ದಾಖಲಾದ ಎಲ್ಲಾ ದ್ವೇಷ ಭಾಷಣ ಘಟನೆಗಳಲ್ಲಿ 23 ಪ್ರತಿಶತ, ಹಿಂಸಾಚಾರಕ್ಕೆ ಕರೆ ನೀಡಿವೆ. 120 ದ್ವೇಷ ಭಾಷಣಗಳು ಅಲ್ಪಸಂಖ್ಯಾತ ಸಮುದಾಯಗಳನ್ನು—ಮುಖ್ಯವಾಗಿ ಮುಸ್ಲಿಮರನ್ನು—ಸಾಮಾಜಿಕ ಅಥವಾ ಆರ್ಥಿಕವಾಗಿ ಬಹಿಷ್ಕರಿಸುವಂತೆ ಕರೆ ನೀಡಿವೆ. 136 ಭಾಷಣಗಳು ಆಯುಧಗಳನ್ನು ಹಿಡಿಯುವಂತೆ ನೇರ ಕರೆಗಳನ್ನು ಒಳಗೊಂಡಿವೆ. 276 ಭಾಷಣಗಳಲ್ಲಿ ಮಸೀದಿಗಳು, ದೇವಾಲಯಗಳು ಮತ್ತು ಚರ್ಚ್ಗಳು ಸೇರಿದಂತೆ ಪೂಜಾ ಸ್ಥಳಗಳನ್ನು ಕೆಡವುವ ಅಥವಾ ನಾಶಮಾಡುವ ಕರೆಗಳು ಸೇರಿವೆ. 141 ಭಾಷಣಗಳಲ್ಲಿ ಮಾನವೀಯತೆಯನ್ನು ಅವಮಾನಿಸುವ ಭಾಷೆ ಕಂಡುಬಂದಿದೆ. 69 ದ್ವೇಷ ಭಾಷಣ ಘಟನೆಗಳು ನಿರ್ದಿಷ್ಟವಾಗಿ ಭಾರತದಲ್ಲಿ ವಾಸಿಸುವ ರೋಹಿಂಗ್ಯಾ ಮುಸ್ಲಿಂ ನಿರಾಶ್ರಿತರನ್ನು ಗುರಿಯಾಗಿಸಿಕೊಂಡಿವೆ. ಯಾವ ರಾಜ್ಯದಲ್ಲಿ ಹೆಚ್ಚು? ಉತ್ತರ ಪ್ರದೇಶ (266), ಮಹಾರಾಷ್ಟ್ರ (193), ಮಧ್ಯಪ್ರದೇಶ (172), ಉತ್ತರಾಖಂಡ (155) ಮತ್ತು ದೆಹಲಿ (76) ಅತಿ ಹೆಚ್ಚು ದ್ವೇಷ ಭಾಷಣ ಘಟನೆಗಳನ್ನು ದಾಖಲಿಸಿವೆ. ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ, ಬಿಜೆಪಿ ಜತೆ ಸಮ್ಮಿಶ್ರ ಸರ್ಕಾರ ಹಾಗೂ ಬಿಜೆಪಿ ಆಡಳಿತವಿರುವ ಕೇಂದ್ರಾಡಳಿತ ಪ್ರದೇಶಗಳಲ್ಲಿ ಒಟ್ಟು 1,164 ದ್ವೇಷ ಭಾಷಣ ಘಟನೆಗಳು (88%) ದಾಖಲಾಗಿವೆ. ಇದು 2024ರಲ್ಲಿ ದಾಖಲಾದ 931 ಘಟನೆಗಳಿಗಿಂತ 25% ಹೆಚ್ಚಳವನ್ನು ತೋರಿಸುತ್ತದೆ. ವಿರೋಧ ಪಕ್ಷಗಳ ಆಡಳಿತವಿರುವ ಏಳು ರಾಜ್ಯಗಳಲ್ಲಿ 2025ರಲ್ಲಿ 154 ದ್ವೇಷ ಭಾಷಣ ಘಟನೆಗಳು ದಾಖಲಾಗಿವೆ. 2024ರಲ್ಲಿ ಈ ರಾಜ್ಯಗಳಲ್ಲಿ 234 ಘಟನೆಗಳು ದಾಖಲಾಗಿದ್ದವು. ಅತೀ ಹೆಚ್ಚು ದ್ವೇಷ ಭಾಷಣಗಳು ನಡೆದ ತಿಂಗಳು ಏಪ್ರಿಲ್. ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತಿಕ್ರಿಯೆಯಾಗಿ ರಾಮನವಮಿ ಮೆರವಣಿಗೆಗಳು ಮತ್ತು ದ್ವೇಷ ರ್ಯಾಲಿಗಳ ಆಯೋಜನೆಯು ಏಪ್ರಿಲ್ ತಿಂಗಳಲ್ಲಿ ದ್ವೇಷ ಭಾಷಣ ಘಟನೆಗಳು ಏರಿಕೆಯಾಗಲು ಕಾರಣವಾಗಿದೆ. ಈ ತಿಂಗಳಲ್ಲಿ 158 ದ್ವೇಷ ಭಾಷಣ ಘಟನೆಗಳು ವರದಿಯಾಗಿವೆ. ದ್ವೇಷ ಭಾಷಣಗಳಲ್ಲಿ ಉತ್ತರ ಪ್ರದೇಶಕ್ಕೆ ಅಗ್ರಸ್ಥಾನ 69 ದ್ವೇಷ ಭಾಷಣ ಘಟನೆಗಳು ರೋಹಿಂಗ್ಯಾ ನಿರಾಶ್ರಿತರನ್ನು ಗುರಿಯಾಗಿಸಿಕೊಂಡಿದ್ದು, 192 ಭಾಷಣಗಳು “ಬಾಂಗ್ಲಾದೇಶದ ಒಳನುಸುಳುವವರು” ಎಂಬ ಟೀಕೆಯನ್ನು ಒಳಗೊಂಡಿವೆ. ಇಂಡಿಯಾ ಹೇಟ್ ಲ್ಯಾಬ್ ವಿಶ್ಲೇಷಿಸಿದ 21 ರಾಜ್ಯಗಳಲ್ಲಿ ಉತ್ತರ ಪ್ರದೇಶವು ಅತಿ ಹೆಚ್ಚು ದ್ವೇಷ ಭಾಷಣ ಘಟನೆಗಳನ್ನು ದಾಖಲಿಸಿದೆ. ಇಲ್ಲಿ 266 ಘಟನೆಗಳು ದಾಖಲಾಗಿದ್ದು, ಇದು ಒಟ್ಟು ದ್ವೇಷ ಭಾಷಣಗಳ 20% ರಷ್ಟಾಗಿದೆ. ಇದು 2024ರಲ್ಲಿ ದಾಖಲಾದ 242 ಘಟನೆಗಳಿಂದ ಸುಮಾರು 10% ಹೆಚ್ಚಳ ಹಾಗೂ 2023ರಲ್ಲಿ ದಾಖಲಾಗಿದ್ದ 104 ಘಟನೆಗಳಿಂದ 156% ಹೆಚ್ಚಳವನ್ನು ತೋರಿಸುತ್ತದೆ. ನಂತರದ ಸ್ಥಾನದಲ್ಲಿ ಮಹಾರಾಷ್ಟ್ರ ಇದ್ದು, ಇಲ್ಲಿ 193 ಘಟನೆಗಳು ದಾಖಲಾಗಿವೆ. ದ್ವೇಷ ಭಾಷಣ ಘಟನೆಗಳು ಅತಿ ಹೆಚ್ಚು ಸಂಭವಿಸಿದ ಹತ್ತು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ನೇರವಾಗಿ ಅಥವಾ ಒಕ್ಕೂಟದಲ್ಲಿ ಆಡಳಿತ ನಡೆಸುತ್ತಿದೆ ಎಂಬುದು ಗಮನಾರ್ಹ. ಇದರಲ್ಲಿ ದೆಹಲಿಯ ರಾಷ್ಟ್ರೀಯ ರಾಜಧಾನಿ ಪ್ರದೇಶವೂ ಸೇರಿದ್ದು, ಅಲ್ಲಿ ವಿಧಾನಸಭಾ ಚುನಾವಣೆಯ ನಂತರ ಫೆಬ್ರವರಿ 2025ರಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಕಾಂಗ್ರೆಸ್ ಆಡಳಿತವಿರುವ ಕರ್ನಾಟಕವು 40 ದ್ವೇಷ ಭಾಷಣ ಘಟನೆಗಳೊಂದಿಗೆ ಮೊದಲ ಹತ್ತು ರಾಜ್ಯಗಳಲ್ಲಿ ಸ್ಥಾನ ಪಡೆದ ಏಕೈಕ ಬಿಜೆಪಿಯೇತರ ಸರ್ಕಾರದ ರಾಜ್ಯವಾಗಿದೆ. 2025ರಲ್ಲಿ 656 ದ್ವೇಷ ಭಾಷಣಗಳು ಪಿತೂರಿ ಆಧಾರಿತವಾಗಿವೆ. ಇಂಥ ಭಾಷಣಗಳಲ್ಲಿ “ಲವ್ ಜಿಹಾದ್”, “ಲ್ಯಾಂಡ್ ಜಿಹಾದ್”, “ಜನಸಂಖ್ಯಾ ಜಿಹಾದ್”, “ಥೂಕ್ (ಉಗುಳು) ಜಿಹಾದ್”, “ಶಿಕ್ಷಣ ಜಿಹಾದ್”, “ಡ್ರಗ್ ಜಿಹಾದ್” ಮತ್ತು “ವೋಟ್ ಜಿಹಾದ್” ಮೊದಲಾದ ಕಾಲ್ಪನಿಕ ಪಿತೂರಿ ಪದಗಳನ್ನು ಬಳಸಲಾಗಿದೆ. ಅತಿ ಹೆಚ್ಚು ದ್ವೇಷ ಭಾಷಣ ಮಾಡಿದವರು: ಧಾಮಿ ಸಂಘಟನೆಗಳಲ್ಲಿ, ವಿಎಚ್ಪಿ ಮತ್ತು ಬಜರಂಗ ದಳ ದ್ವೇಷ ಭಾಷಣ ಕಾರ್ಯಕ್ರಮಗಳನ್ನು ಹೆಚ್ಚಾಗಿ ಆಯೋಜಿಸಿವೆ. ಈ ಸಂಘಟನೆಗಳು 289 ಸಭೆಗಳನ್ನು ನೇರವಾಗಿ ಪ್ರಾಯೋಜಿಸಿದ್ದು, ಇದು ಎಲ್ಲಾ ದಾಖಲಿತ ಘಟನೆಗಳಲ್ಲಿ 22% ರಷ್ಟಾಗಿದೆ. ಆದಾಗ್ಯೂ, 2025ರಲ್ಲಿ ಅತಿ ಹೆಚ್ಚು ದ್ವೇಷ ಭಾಷಣಗಳನ್ನು ಮಾಡಿದ ಪ್ರಮುಖ ವ್ಯಕ್ತಿಗಳಲ್ಲಿ ಹಿರಿಯ ಬಿಜೆಪಿ ನಾಯಕರು ಸೇರಿದಂತೆ ಹಲವು ದ್ವೇಷ ಭಾಷಣಕಾರರು ಸೇರಿದ್ದಾರೆ. ದೆಹಲಿ ಮತ್ತು ಬಿಹಾರದಂತಹ ರಾಜ್ಯಗಳಲ್ಲಿ ಚುನಾವಣಾ ಪ್ರಚಾರದ ವೇಳೆ ಸಿಎಂ ಪುಷ್ಕರ್ ಸಿಂಗ್ ಧಾಮಿ ಹೆಚ್ಚಿನ ಸಂಖ್ಯೆಯಲ್ಲಿ ಭಾಷಣಗಳನ್ನು ಮಾಡಿದ್ದಾರೆ. ತಮ್ಮ ಭಾಷಣಗಳಲ್ಲಿ ಅವರು ನಿಯಮಿತವಾಗಿ “ಲವ್ ಜಿಹಾದ್”, “ಲ್ಯಾಂಡ್ ಜಿಹಾದ್” ಮತ್ತು “ಥೂಕ್ ಜಿಹಾದ್” ಸೇರಿದಂತೆ ಮುಸ್ಲಿಂ ವಿರೋಧಿ ಪಿತೂರಿ ಸಿದ್ಧಾಂತಗಳನ್ನು ಪ್ರಚಾರ ಮಾಡಿದ್ದಾರೆ. ಎರಡನೇ ಸ್ಥಾನದಲ್ಲಿ ಅಖಿಲ ಭಾರತ ಹಿಂದೂ ಪರಿಷತ್, ರಾಷ್ಟ್ರೀಯ ಬಜರಂಗ ದಳದ ಮುಖ್ಯಸ್ಥ ಪ್ರವೀಣ್ ತೊಗಾಡಿಯಾ ಇದ್ದಾರೆ. ಅವರು 2025ರಲ್ಲಿ 46 ದ್ವೇಷ ಭಾಷಣಗಳನ್ನು ಮಾಡಿದ್ದಾರೆ. ಇದು 2024ರಲ್ಲಿ 31 ಮತ್ತು 2023ರಲ್ಲಿ 32 ಆಗಿತ್ತು. ವಿಶ್ವ ಹಿಂದೂ ಪರಿಷತ್ನ ಮಾಜಿ ನಾಯಕ ತೊಗಾಡಿಯಾ ಈ ಹಿಂದೆ ಪ್ರಧಾನಿ ಮೋದಿ ಹಾಗೂ ಸಂಘ ಪರಿವಾರದೊಂದಿಗೆ ಭಿನ್ನಾಭಿಪ್ರಾಯ ಹೊಂದಿದ್ದರು. ಚುನಾವಣೆಗಳಿಗೆ ಸಂಬಂಧಿಸಿದಂತೆ, ಭಾರತದಲ್ಲಿ ಹೆಚ್ಚಿನ ಪ್ರಮಾಣದ ಚುನಾವಣಾ ದ್ವೇಷ ಭಾಷಣವು ಪ್ರಮುಖ ರಾಜ್ಯ ಅಥವಾ ಸಾರ್ವತ್ರಿಕ ಚುನಾವಣೆಗಳ ಸುತ್ತ ಕೇಂದ್ರೀಕೃತವಾಗಿರುತ್ತದೆ. ಸ್ಥಳೀಯ ಚುನಾವಣಾ ಸ್ಪರ್ಧೆಗಳ ಸಮಯದಲ್ಲಿ ಇದು ಕಡಿಮೆಯಾಗುತ್ತದೆ ಎಂದು IHL ಹೇಳಿದೆ. ಸಾಮಾಜಿಕ ಮಾಧ್ಯಮದ ಪಾತ್ರ 2025ರಲ್ಲಿ ದಾಖಲಾಗಿರುವ ಮುಸ್ಲಿಂ ಮತ್ತು ಕ್ರಿಶ್ಚಿಯನ್ ಅಲ್ಪಸಂಖ್ಯಾತರನ್ನು ಗುರಿಯಾಗಿಸಿಕೊಂಡ 1,318 ದ್ವೇಷ ಭಾಷಣ ಘಟನೆಗಳಲ್ಲಿ, 1,278 ಘಟನೆಗಳ ಮೂಲ ಸಾಮಾಜಿಕ ಮಾಧ್ಯಮ ವೇದಿಕೆಗಳಾಗಿವೆ. ಅಲ್ಲಿ ಅವುಗಳನ್ನು ಮೊದಲು ಬಲಪಂಥೀಯ ಸಂಘಟನೆಗಳು ಅಥವಾ ನಾಯಕರು ಹಂಚಿಕೊಂಡಿದ್ದಾರೆ ಅಥವಾ ನೇರ ಪ್ರಸಾರ ಮಾಡಿದ್ದಾರೆ ಎಂದು ಹೇಳಲಾಗಿದೆ. ಹೆಚ್ಚು ವೀಡಿಯೋಗಳು ಅಪ್ಲೋಡ್ ಆಗಿರುವುದು ಫೇಸ್ಬುಕ್ನಲ್ಲಿ. ಫೇಸ್ಬುಕ್ನಲ್ಲಿ 942 ವೀಡಿಯೋಗಳು, ಯೂಟ್ಯೂಬ್ನಲ್ಲಿ 246, ಇನ್ಸ್ಟಾಗ್ರಾಮ್ನಲ್ಲಿ 67 ಮತ್ತು ಎಕ್ಸ್ನಲ್ಲಿ 23 ವೀಡಿಯೋಗಳು ಶೇರ್ ಆಗಿವೆ. ಇದು ದ್ವೇಷ ಭಾಷಣದ ಏರಿಕೆಯಲ್ಲಿ ಸಾಮಾಜಿಕ ಮಾಧ್ಯಮದ ಪ್ರಮುಖ ಪಾತ್ರವನ್ನು ಸ್ಪಷ್ಟಪಡಿಸುತ್ತದೆ.
UGCET 2026: ವೃತ್ತಿಪರ ಕೋರ್ಸ್ಗಳ ಪ್ರವೇಶ ಪರೀಕ್ಷೆಗೆ ಕೆಇಎ ಅರ್ಜಿ ಆಹ್ವಾನ, ಈ ದಾಖಲೆಗಳು ಬೇಕು
ಬೆಂಗಳೂರು: ಇಂಜಿನಿಯರಿಂಗ್, ಪಶು ಸಂಗೋಪನೆ, ಕೃಷಿ ವಿಜ್ಞಾನ, ಫಾರ್ಮಸಿ, ಬಿಎಸ್ಸಿ (ನರ್ಸಿಂಗ್) ಮುಂತಾದ ವೃತ್ತಿಪರ ಕೋರ್ಸ್ಗಳ ಪ್ರವೇಶಕ್ಕೆ ಪ್ರಾಧಿಕಾರವು ನಡೆಸುವ ಸಾಮಾನ್ಯ ಪ್ರವೇಶ ಪರೀಕ್ಷೆಗೆ (UGCET 2025) ಆನ್ಲೈನ್ ಮೂಲಕ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಈ ಬಾರಿ 'ಅಪ್ಲಿಕೇಷನ್ ಜೊತೆಗೆ ವೇರಿಫಿಕೇಷನ್ ಮಾದರಿ' ಇರುವ ಕಾರಣ ಪ್ರಮಾಣಪತ್ರ, ಷರತ್ತು ಹಾಗೂ ಇತರ ಸಂಕ್ಷಿಪ್ತ ಮಾಹಿತಿ ಒಳಗೊಂಡ '
ಮಂಗಳೂರು| ಲಕ್ಕಿ ಸ್ಕೀಮ್ ಕಂಪೆನಿಗಳಿಗೆ ಬೀಗ ಜಡಿಯಿರಿ: ಬಿ.ಕೆ ಇಮ್ತಿಯಾಝ್
ವಂಚನೆಗೆ ಒಳಗಾದ ಸಂತ್ರಸ್ತರಿಂದ ಪ್ರತಿಭಟನೆ
Explainer- ಟಿ20 ಕ್ರಿಕೆಟ್ ನಲ್ಲಿ ಹೊಸ ನಿಯಮ! ಏನಿವು`DB' ಮತ್ತು `DF'? `ಇಂಪ್ಯಾಕ್ಟ್ ಪ್ಲೇಯರ್' ಗಿಂತ ಹೇಗೆ ಭಿನ್ನ?
Big Bash League 2026-27 New Rules- ಆಸ್ಟ್ರೇಲಿಯಾ ಜನಪ್ರಿಯ ಟಿ20 ಕ್ರಿಕೆಟ್ ಲೀಗ್ ಆಗಿರುವ ಬಿಗ್ ಬ್ಯಾಷ್ ಲೀಗ್ 2026-27ರ ಆವೃತ್ತಿಯಿಂದ 'ಡಿಸಿಗ್ನೇಟೆಡ್ ಬ್ಯಾಟರ್' ಮತ್ತು 'ಡಿಸಿಗ್ನೇಟೆಡ್ ಫೀಲ್ಡರ್' ಎಂಬ ಹೊಸ ನಿಯಮಗಳನ್ನು ಪರಿಚಯಿಸಲಾಗುತ್ತಿದೆ. ಈ ನಿಯಮಗಳು ಟಿ20 ಕ್ರಿಕೆಟ್ನಲ್ಲಿ ಹೊಸ ತಂತ್ರಗಾರಿಕೆಗಳಿಗೆ ದಾರಿ ಮಾಡಿಕೊಡಲಿವೆ ಎಂದು ನಿರೀಕ್ಷಿಸಲಾಗಿದೆ. ಏನಿದು ಹೊಸ ನಿಯಮ? ಇದು ಇಂಡಿಯನ್ ಪ್ರೀಮಿಯರ್ ಲೀಗನ್ ಇಂಪ್ಯಾಕ್ಟ್ ಪ್ಲೇಯರ್ ನಿಯಮಕ್ಕಿಂತ ಹೇಗೆ ಭಿನ್ನ? ಇಲ್ಲಿದೆ ಈ ಬಗ್ಗೆ ವಿಶ್ಲೇಷಣೆ.
ಬೆಲೆ ಬೆಂಬಲ ಯೋಜನೆಯಡಿ ‘ಕಡಲೆ’ ಖರೀದಿ; ಪ್ರಧಾನಿ ಹಾಗೂ ಕೇಂದ್ರ ಕೃಷಿ ಸಚಿವರಿಗೆ ಸಿಎಂ ಸಿದ್ದರಾಮಯ್ಯ ಪತ್ರ
ಬೆಂಗಳೂರು : ರಾಜ್ಯದ ಲಕ್ಷಾಂತರ ಕಡಲೆ ಬೆಳೆಗಾರರು ಸಂಕಷ್ಟದಲ್ಲಿದ್ದು, ತಕ್ಷಣ ಮಧ್ಯಪ್ರವೇಶ ಮಾಡಿ ಕಡಲೆಯನ್ನು ಬೆಲೆ ಬೆಂಬಲ ಯೋಜನೆ(ಪಿಎಸ್ಎಸ್)ಯಡಿ ಖರೀದಿಗೆ ಅನುಮೋದನೆ ನೀಡುವಂತೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ರ ಬರೆದು ಮನವಿ ಮಾಡಿದ್ದಾರೆ. ಕಡಲೆ ಕರ್ನಾಟಕದ ಪ್ರಮುಖ ದ್ವಿದಳ ಧಾನ್ಯ ಬೆಳೆಗಳಲ್ಲಿ ಒಂದಾಗಿದ್ದು, 9.24 ಲಕ್ಷ ಹೆಕ್ಟೇರ್ನಲ್ಲಿ 6.27 ಲಕ್ಷ ಮೆಟ್ರಿಕ್ ಟನ್ ಉತ್ಪಾದನೆ ಮಾಡಲಾಗುತ್ತಿದೆ. ಇದು ಧಾರವಾಡ, ಗದಗ, ಬೆಳಗಾವಿ, ವಿಜಯಪುರ, ಕಲಬುರಗಿ, ಯಾದಗಿರಿ, ಬೀದರ್, ರಾಯಚೂರು, ಕೊಪ್ಪಳ, ಬಳ್ಳಾರಿ, ಚಿತ್ರದುರ್ಗ, ಬಾಗಲಕೋಟೆ, ದಾವಣಗೆರೆ ಮತ್ತು ಚಿಕ್ಕಮಗಳೂರು ಮುಂತಾದ ಪ್ರದೇಶಗಳ ರೈತರನ್ನು ಪೋಷಿಸುತ್ತದೆ. ಅನೇಕ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಆದಾಯದ ಏಕೈಕ ಮೂಲವಾಗಿದೆ ಎಂದು ಸಿದ್ದರಾಮಯ್ಯ ಗಮನ ಸೆಳೆದಿದ್ದಾರೆ. 2026-27ರ ರಬಿ ಮಾರುಕಟ್ಟೆ ಋತುವಿನಲ್ಲಿ ಭಾರತ ಸರಕಾರವು ಕಡಲೆಗೆ ಕ್ವಿಂಟಾಲ್ಗೆ 5,875 ರೂ. ಕನಿಷ್ಠ ಬೆಂಬಲ ಬೆಲೆ(ಎಂ.ಎಸ್.ಪಿ) ಘೋಷಿಸಿದ್ದರೂ, ಕರ್ನಾಟಕದ ಪ್ರಮುಖ ಎಪಿಎಂಸಿಗಳಲ್ಲಿ ಚಾಲ್ತಿಯಲ್ಲಿರುವ ಮಾರುಕಟ್ಟೆ ಬೆಲೆಗಳು ಎಂ.ಎಸ್.ಪಿ ಗಿಂತ ಗಮನಾರ್ಹವಾಗಿ ಕಡಿಮೆಯಾಗಿದ್ದು, ಪ್ರತಿ ಕ್ವಿಂಟಾಲ್ಗೆ 4,260 ರೂ.ಗಳಿಂದ 5,813 ರೂ.ವರೆಗೆ ಇದೆ ಎಂದು ಅವರು ತಿಳಿಸಿದ್ದಾರೆ. ಹಲವಾರು ಮಾರುಕಟ್ಟೆಗಳಲ್ಲಿ, ರೈತರಿಗೆ ಕನಿಷ್ಠ ಬೆಂಬಲ ಬೆಲೆಗಿಂತ 800–1,200 ರೂ. ಕಡಿಮೆ ಬೆಲೆಗೆ ಮಾರಾಟ ಮಾಡಲು ಒತ್ತಾಯಿಸಲಾಗುತ್ತಿದೆ. ಜನವರಿ ಮತ್ತು ಮಾರ್ಚ್ ನಡುವೆ ಕೊಯ್ಲು ತೀವ್ರಗೊಳ್ಳುತ್ತಿದ್ದಂತೆ, ಮತ್ತಷ್ಟು ಬೆಲೆ ಕುಸಿತವಾಗುವ ಆತಂಕವಿದೆ ಎಂದು ಮುಖ್ಯಮಂತ್ರಿ ಹೇಳಿದ್ದಾರೆ. ಕನಿಷ್ಠ ಬೆಂಬಲ ಬೆಲೆಯ ಸೌಲಭ್ಯ ಸಿಗದಿದ್ದರೆ, ರೈತರ ನಂಬಿಕೆ ಕ್ಷೀಣಿಸುತ್ತದೆ. ಉತ್ಪಾದನಾ ವೆಚ್ಚಗಳು, ಸಾಲ ಬಾಧ್ಯತೆಗಳು ಮತ್ತು ಮನೆಯ ಅಗತ್ಯಗಳ ಹೊರೆಯೂ ಅನೇಕ ಬೆಳೆಗಾರರನ್ನು ಸಂಕಷ್ಟದ ಮಾರಾಟಕ್ಕೆ ತಳ್ಳುತ್ತದೆ. ಇಂತಹ ಸಂದರ್ಭದಲ್ಲಿ ಬೆಲೆ ಬೆಂಬಲ ಯೋಜನೆ ಅಡಿಯಲ್ಲಿ ಕಡಲೆ ಖರೀದಿಗೆ ಭಾರತ ಸರಕಾರವು ತಕ್ಷಣವೇ ಅನುಮೋದನೆ ನೀಡಬೇಕು ಎಂದು ಅವರು ಮನವಿ ಮಾಡಿದ್ದಾರೆ. ಅಲ್ಲದೇ, ನಾಫೆಡ್ ಮತ್ತು ಎನ್.ಸಿ.ಸಿ.ಎಫ್ ನಂತಹ ಕೇಂದ್ರ ನೋಡಲ್ ಏಜೆನ್ಸಿಗಳು ಕರ್ನಾಟಕದಲ್ಲಿ ಖರೀದಿ ಕೇಂದ್ರಗಳನ್ನು ವಿಳಂಬವಿಲ್ಲದೆ ಕಾರ್ಯಗತಗೊಳಿಸಲು ನಿರ್ದೇಶಿಸಬೇಕು ಎಂದು ಒತ್ತಾಯಿಸಿರುವ ಮುಖ್ಯಮಂತ್ರಿ, ಈ ಸಂಬಂಧ ತ್ವರಿತ ಕ್ರಮ ಕೈಗೊಳ್ಳದಿದ್ದರೆ ರೈತರ ನಷ್ಟ ಪ್ರತಿ ದಿನ ಹೆಚ್ಚುತ್ತಾ ಹೋಗುತ್ತದೆ ಮತ್ತು ಎಂ.ಎಸ್.ಪಿಯ ಉದ್ದೇಶವೆ ದುರ್ಬಲವಾಗುತ್ತದೆ ಎಂದು ಹೇಳಿದ್ದಾರೆ. ರಾಜ್ಯ ಸರಕಾರವು ಬೆಲೆ ಬೆಂಬಲ ಯೋಜನೆಯ ಚೌಕಟ್ಟಿನಡಿಯಲ್ಲಿ ತನ್ನ ಜವಾಬ್ದಾರಿಗಳನ್ನು ಹೊರಲು ಸಂಪೂರ್ಣವಾಗಿ ಸಿದ್ಧವಾಗಿದೆ. ಈಗಾಗಲೆ ಅಗತ್ಯ ಅಧಿಸೂಚನೆಗಳನ್ನು ಹೊರಡಿಸಲಾಗಿದೆ. ರಾಜ್ಯ ಸಂಸ್ಥೆಗಳನ್ನು ಗೊತ್ತುಪಡಿಸಲಾಗಿದೆ. ಬೆಲೆ ಬೆಂಬಲ ಯೋಜನೆಯ ಮಾರ್ಗಸೂಚಿಗಳ ಪ್ರಕಾರ ಎಲ್ಲ ಕಾರ್ಯಗಳನ್ನು ಒದಗಿಸಿದೆ ಮತ್ತು ಖರೀದಿ ಲಾಜಿಸ್ಟಿಕ್ಸ್, ರೈತರ ನೋಂದಣಿ, ಗೋದಾಮು, ಸಾರಿಗೆ ಮತ್ತು ರಾಜ್ಯ ಸುಂಕಗಳ ವಿನಾಯಿತಿಯನ್ನು ಸುಗಮಗೊಳಿಸಲು ರಾಜ್ಯ ಸರಕಾರ ಬದ್ಧವಾಗಿದೆ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ. ಸುಗಮ ಮತ್ತು ಪಾರದರ್ಶಕ ಕಾರ್ಯಾಚರಣೆಗಳನ್ನು ಖಚಿತಪಡಿಸಿಕೊಳ್ಳಲು ಕರ್ನಾಟಕವು ಕೇಂದ್ರ ಸಂಸ್ಥೆಗಳೊಂದಿಗೆ ಸಂಪೂರ್ಣವಾಗಿ ಸಹಕರಿಸಲು ಸಿದ್ಧವಾಗಿದೆ. ಎಂ.ಎಸ್.ಪಿಯಲ್ಲಿ ಸಂಗ್ರಹಣೆ ಕೇವಲ ಆಡಳಿತಾತ್ಮಕ ವ್ಯಾಯಾಮವಲ್ಲ, ಇದು ತನ್ನ ರೈತರ ಘನತೆಗೆ ರಾಷ್ಟ್ರದ ಬದ್ಧತೆಯ ದೃಢೀಕರಣವಾಗಿದೆ. ಈಗ ಖರೀದಿ ಕೇಂದ್ರಗಳನ್ನು ತೆರೆಯುವುದರಿಂದ ರಾಜ್ಯ ಮತ್ತು ಕೇಂದ್ರವು ಸಂಕಷ್ಟದ ಸಮಯದಲ್ಲಿ ಒಟ್ಟಾಗಿ ನಿಲ್ಲುತ್ತದೆ ಎಂಬ ಬಲವಾದ ಭರವಸೆಯ ಸಂದೇಶವನ್ನು ಗ್ರಾಮೀಣ ಭಾರತಕ್ಕೆ ಕಳುಹಿಸುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಆದುದರಿಂದ, ನೀವು ತಕ್ಷಣ ಮಧ್ಯಪ್ರವೇಶಿಸಿ, ಕಡಲೆ ಬೇಳೆಗೆ ಕನಿಷ್ಠ ಬೆಂಬಲ ಬೆಲೆ ಖರೀದಿಗೆ ಅನುಮೋದನೆ ನೀಡಬೇಕು ಮತ್ತು ಕರ್ನಾಟಕದಾದ್ಯಂತ ಖರೀದಿ ಕೇಂದ್ರಗಳು ಸಾಧ್ಯವಾದಷ್ಟು ಬೇಗ ಕಾರ್ಯರೂಪಕ್ಕೆ ಬರುವಂತೆ ನೋಡಿಕೊಳ್ಳಬೇಕು. ಇಂತಹ ಸಕಾಲಿಕ ಕ್ರಮವು ರೈತರನ್ನು ಮಾರಾಟ ಸಂಕಷ್ಟದಿಂದ ರಕ್ಷಿಸುತ್ತದೆ, ಮಾರುಕಟ್ಟೆಗಳನ್ನು ಸ್ಥಿರಗೊಳಿಸುತ್ತದೆ ಮತ್ತು ಕನಿಷ್ಠ ಬೆಂಬಲ ಬೆಲೆ ವ್ಯವಸ್ಥೆಯ ವಿಶ್ವಾಸಾರ್ಹತೆಯನ್ನು ಎತ್ತಿಹಿಡಿಯುತ್ತದೆ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.
ಕಲಬುರಗಿ | ಸದೃಢ ಸಮಾಜ ನಿರ್ಮಿಸುವಲ್ಲಿ ಮಹಿಳಾ ಬರಹಗಾರರ ಪಾತ್ರ ಪ್ರಮುಖ : ರೋಷನಿ ಗೌಡ
ಸಂಕ್ರಾಂತಿ ಕಾವ್ಯ ಸಂಭ್ರಮ
ಮುಂದುವರಿದ ನಕ್ಸಲರ ಶರಣಾಗತಿ ಪರ್ವ, ಸಂಕ್ರಾಂತಿಯಂದೇ ಛತ್ತೀಸ್ಗಢದಲ್ಲಿ ಶರಣಾದ 52 ಮಾವೋವಾದಿಗಳು
ಛತ್ತೀಸ್ಗಢದ ಬಿಜಾಪುರ ಜಿಲ್ಲೆಯಲ್ಲಿ ಗುರುವಾರ 52 ಜನ ಮಾವೋವಾದಿಗಳು ಪೊಲೀಸರಿಗೆ ಶರಣಾಗಿದ್ದಾರೆ. ಇವರಲ್ಲಿ 49 ಜನರ ತಲೆಗೆ ಒಟ್ಟು 1.41 ಕೋಟಿ ರೂ. ಬಹುಮಾನವಿತ್ತು. ಡಿವಿಷನಲ್ ಕಮಿಟಿ ಸದಸ್ಯ ಲಖು ಕರಮ್ ಸೇರಿದಂತೆ ಮೂವರು ಪ್ರಮುಖ ನಾಯಕರ ತಲೆಗೆ ತಲಾ 8 ಲಕ್ಷ ರೂ. ಬಹುಮಾನವಿತ್ತು. ಸರ್ಕಾರದ 'ಪೂನಾ ಮರ್ಗೆಮ್' ಪುನರ್ವಸತಿ ನೀತಿಗೆ ಆಕರ್ಷಿತರಾಗಿ ಇವರು ಶಸ್ತ್ರತ್ಯಾಗ ಮಾಡಿದ್ದಾರೆ.
‘ಬಳ್ಳಾರಿ ಪಾದಯಾತ್ರೆ’ ಆರಂಭಕ್ಕೂ ಮುನ್ನವೇ ತೆರೆ ಬಿದ್ದಿದೆ : ಸಚಿವ ಪ್ರಿಯಾಂಕ್ ಖರ್ಗೆ
ಬೆಂಗಳೂರು : ಪಾದಯಾತ್ರೆ ಮಾಡಬೇಕೆಂದರೆ ಒಟ್ಟಿಗೆ ಹೆಜ್ಜೆ ಹಾಕುವ ಕಾಲುಗಳು ಬೇಕು. ಆದರೆ, ಬಿಜೆಪಿಯಲ್ಲಿ ಒಬ್ಬರಿಗೊಬ್ಬರು ಕಾಲೆಳೆಯುವವರೆ ಇರುವಾಗ ಪಾದಯಾತ್ರೆಗೆ ಪಾದಗಳು ಸೇರುವುದಾದರೂ ಹೇಗೆ?. ಕಾಲೆಳೆದುಕೊಳ್ಳುವ ಆಟದಲ್ಲಿ ‘ಬಳ್ಳಾರಿ ಪಾದಯಾತ್ರೆ’ ಪ್ರಹಸನದ ಪ್ರದರ್ಶನ ಆರಂಭಕ್ಕೂ ಮುನ್ನವೇ ತೆರೆ ಬಿದ್ದಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಅವರು ವ್ಯಂಗ್ಯವಾಡಿದ್ದಾರೆ. ಬಳ್ಳಾರಿಯಲ್ಲಿ ಬ್ಯಾನರ್ ಕಟ್ಟುವ ವಿಚಾರದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ನಡೆದ ಗಲಾಟೆ, ಗೋಲಿಬಾರ್ ಖಂಡಿಸಿ ಬಿಜೆಪಿ ಪಾದಯಾತ್ರೆ ನಡೆಸುವುದಾಗಿ ಘೋಷಿಸಿ, ನಂತರ ಪ್ರತಿಭಟನೆಗೆ ಸೀಮಿತಗೊಳಿಸಿರುವ ನಡೆಯನ್ನು ಟೀಕಿಸಿ ಗುರುವಾರ ಈ ಸಂಬಂಧ ಎಕ್ಸ್ ನಲ್ಲಿ ಅವರು ಪೋಸ್ಟ್ ಹಾಕಿದ್ದಾರೆ. ಪಾದಯಾತ್ರೆಯನ್ನು ಮುನ್ನಡೆಸುವ ನಾಯಕತ್ವವಿಲ್ಲ, ಯಾರಾದರೂ ನಾಯಕರಾಗಿಬಿಡುವ ಅಸೂಯೆ, ಬಣ ಜಗಳದಲ್ಲಿ ಒಟ್ಟಿಗೆ ಹೆಜ್ಜೆ ಹಾಕುವಲ್ಲಿ ಇಲ್ಲದ ಒಮ್ಮತ, ಇದೆಲ್ಲಕ್ಕೂ ಮಿಗಿಲಾಗಿ ಪಾದಯಾತ್ರೆಗೆ ವ್ಯಕ್ತವಾಗದ ಜನ ಬೆಂಬಲ, ಇದೆಲ್ಲವನ್ನೂ ಅರಿತ ಬಿಜೆಪಿಯವರ ಪಾದಗಳು ಜಗನ್ನಾಥ ಭವನದಿಂದ ಹೊರಗೆ ಹೊರಡದೆ ನಿಂತಿವೆ ಎಂದು ಅವರು ಲೇವಡಿ ಮಾಡಿದ್ದಾರೆ. ಬಿಜೆಪಿಯ ಪಾದಯಾತ್ರೆ ರಾಜಕೀಯ ಜಿದ್ದಿಗಾಗಿಯೆ ಹೊರತು, ಜನ ಕೇಂದ್ರಿತ ವಿಷಯಗಳಿಗಾಗಿ ಅಲ್ಲ, ಹೀಗಿರುವಾಗ ಯಾತ್ರೆಗೆ ಜನ ಬೆಂಬಲ ಸಿಗುವುದು ಕನಸಿನ ಮಾತು. ಕಾಂಗ್ರೆಸ್ ಪಕ್ಷವು ಅಭೂತಪೂರ್ವ ಜನ ಬೆಂಬಲದೊಂದಿಗೆ ಮಾಡಿದ್ದ ಚಾರಿತ್ರಿಕ ಬಳ್ಳಾರಿ ಪಾದಯಾತ್ರೆಯು, ಜನ ಬಿಜೆಪಿಯನ್ನು ಕಿತ್ತೆಸೆಯುವಂತೆ ಮಾಡಿತ್ತು ಎಂದು ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ. ಮೇಕೆದಾಟು ಪಾದಯಾತ್ರೆಯನ್ನು ಜನ ಹಿತಕ್ಕಾಗಿ ಮಾಡಿದ್ದೆವು, ಸುಪ್ರೀಂ ಕೋರ್ಟಿನಲ್ಲಿ ಕರ್ನಾಟಕಕ್ಕೆ ಯಶಸ್ಸು ದೊರಕಿದೆ. ಕೃಷ್ಣ ಮೇಲ್ದಂಡೆ ಯೋಜನೆಗಾಗಿ ಪಾದಯಾತ್ರೆ ನಡೆಸಿದ್ದೆವು, ಅದರ ಪರಿಣಾಮ, ಯಶಸ್ಸನ್ನು ನಾಡು ಕಂಡಿದೆ. ಕಾಂಗ್ರೆಸ್ ನಡೆಸಿದ ಎಲ್ಲ ಪಾದಯಾತ್ರೆಗಳಿಗೆ ಅಪಾರ ಜನಬೆಂಬಲ ವ್ಯಕ್ತವಾಗಿದೆ, ನಾವು ಎತ್ತಿಕೊಂಡ ವಿಷಯಗಳಿಗೆ ಯಶಸ್ಸೂ ದೊರಕಿದೆ ಎಂದು ಅವರು ಹೇಳಿದ್ದಾರೆ. ಏಕೆಂದರೆ ನಾವು ಪಾದಯಾತ್ರೆಗಳನ್ನು ಜನರಿಗಾಗಿ ನಡೆಸಿದ್ದೇವೆ ಹೊರತು ರಾಜಕೀಯ ಮೇಲಾಟಕ್ಕಾಗಿ ಅಲ್ಲ. ರಾಜ್ಯ ಬಿಜೆಪಿ ಎಂದಿಗೂ ಕಾಂಗ್ರೆಸ್ಸಿನಂತೆ ಪಾದಯಾತ್ರೆ ಮಾಡಲು ಸಾಧ್ಯವಿಲ್ಲ, ಏಕೆಂದರೆ ಅವರಿಗೆ ಕಾಂಗ್ರೆಸ್ಸಿನಂತೆ ಜನಪರ ಚಿಂತನೆಗಳಿಲ್ಲ ಎಂದು ಪ್ರಿಯಾಂಕ್ ಖರ್ಗೆ ಟೀಕಿಸಿದ್ದಾರೆ. ಪಾದಯಾತ್ರೆ ಮಾಡಬೇಕೆಂದರೆ ಒಟ್ಟಿಗೆ ಹೆಜ್ಜೆ ಹಾಕುವ ಕಾಲುಗಳು ಬೇಕು, ಆದರೆ ಬಿಜೆಪಿಯಲ್ಲಿ ಒಬ್ಬರಿಗೊಬ್ಬರು ಕಾಲೆಳೆಯುವವರೇ ಇರುವಾಗ ಪಾದಯಾತ್ರೆಗೆ ಪಾದಗಳು ಸೇರುವುದಾದರೂ ಹೇಗೆ! ಕಾಲೆಳೆದುಕೊಳ್ಳುವ ಆಟದಲ್ಲಿ ಬಳ್ಳಾರಿ ಪಾದಯಾತ್ರೆ ಪ್ರಹಸನದ ಪ್ರದರ್ಶನ ಆರಂಭಕ್ಕೂ ಮುನ್ನವೇ ತೆರೆ ಬಿದ್ದಿದೆ. ಪಾದಯಾತ್ರೆಯನ್ನು ಮುನ್ನಡೆಸುವ ನಾಯಕತ್ವವಿಲ್ಲ,… — Priyank Kharge / ಪ್ರಿಯಾಂಕ್ ಖರ್ಗೆ (@PriyankKharge) January 15, 2026
ಮಂಗಳೂರು: ಉಳಾಯಿಬೆಟ್ಟುವಿನ ಕೃಷಿಕರು ಹಾಗೂ ವ್ಯಾಪಾರಿ ಹಾಜಿ ಕೆ ಮುಹಮ್ಮದ್ (95) ಗುರುವಾರ ಬೆಳಗ್ಗೆ ನಿಧನರಾದರು. ಉಳಾಯಿಬೆಟ್ಟು ಗ್ರಾ.ಪಂ ಮಾಜಿ ಅಧ್ಯಕ್ಷ ಯೂಸುಫ್ ಉಳಾಯಿಬೆಟ್ಟು ಸೇರಿದಂತೆ 11 ಮಕ್ಕಳನ್ನು , ಮೊಮ್ಮಕ್ಕಳನ್ನು ಅಗಲಿದ್ದಾರೆ. ಮಾಜಿ ಸಚಿವ ಬಿ.ರಮಾನಾಥ ರೈ ಮೃತರ ಮನೆಗೆ ಭೇಟಿ ನೀಡಿದ್ದಾರೆ.
ಕಲಬುರಗಿ | ಗ್ರಾಮೀಣ ಬಾಸ್ಕೆಟ್ ಬಾಲ್ ಲೀಗ್ ಉದ್ಘಾಟನೆ
ಕಲಬುರಗಿ: ಇಲ್ಲಿನ ಚಂದ್ರಶೇಖರ್ ಪಾಟೀಲ್ ಕ್ರೀಡಾಂಗಣದಲ್ಲಿ ಕರ್ನಾಟಕ ರಾಜ್ಯ ಬಾಸ್ಕೆಟ್ಬಾಲ್ ಅಸೋಸಿಯೇಷನ್ ಹಾಗೂ ಕಲಬುರಗಿ ಜಿಲ್ಲಾ ಬಾಸ್ಕೆಟ್ಬಾಲ್ ಅಸೋಸಿಯೇಷನ್ ವತಿಯಿಂದ ಆಯೋಜಿಸಿದ್ದ ಗ್ರಾಮೀಣ ಬಾಸ್ಕೆಟ್ಬಾಲ್ ಲೀಗ್ ಟೂರ್ನಿಗೆ ಚಾಲನೆ ನೀಡಲಾಯಿತು. ಪಂದ್ಯಾಟಗಳ ಉದ್ಘಾಟನೆಯನ್ನು ಕಲಬುರಗಿ ದಕ್ಷಿಣ ಕ್ಷೇತ್ರದ ಶಾಸಕರಾದ ಅಲ್ಲಮ ಪ್ರಭು ಪಾಟೀಲ್ ಹಾಗೂ ನಗರ ಪೊಲೀಸ್ ಆಯುಕ್ತ ಡಾ.ಶರಣಪ್ಪ ಎಸ್.ಡಿ. ಅವರು ನೆರವೇರಿಸಿದರು. ಈ ಸಂದರ್ಭದಲ್ಲಿ ಡಾ.ರಾಜಕುಮಾರ್, ಡಾ.ಶಂಕರ್ ಸೂರೆ, ಮಲ್ಲಿಕಾರ್ಜುನ ಉದ್ನೂರ್, ಚಂದ್ರಕಾಂತ್ ಶಿರೋಳಿ, ಬಾಸ್ಕೆಟ್ಬಾಲ್ ತರಬೇತುದಾರರಾದ ಪ್ರವೀಣ್ ಕುಮಾರ್ ಪುಣೆ, ಕುವೆಂಪು ಬಾಸ್ಕೆಟ್ಬಾಲ್ ಕ್ಲಬ್ ಅಧ್ಯಕ್ಷರಾದ ಮಹೇಶ್ ಪವಾರ್, ಭಗವಾನ್ ಬಾಸ್ಕೆಟ್ಬಾಲ್ ಕ್ಲಬ್ ಅಧ್ಯಕ್ಷರಾದ ಭರತ್ ಭೂಷಣ್, ಗುಲ್ಬರ್ಗಾ ವಿಶ್ವವಿದ್ಯಾಲಯದ ನಿವೃತ್ತ ಕುಲಪತಿಗಳಾದ ಡಾ.ಪ್ರತಾಪ್ ಸಿಂಗ್ ತಿವಾರಿ, ಅಕ್ಕಮಹಾದೇವಿ ಬಾಸ್ಕೆಟ್ಬಾಲ್ ಕ್ಲಬ್ ಅಧ್ಯಕ್ಷರಾದ ವಿಕಾಸ್ ಭಾಟಿ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು. ಗ್ರಾಮೀಣ ಲೀಗ್ ಪಂದ್ಯಾಟದಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶದ ಅಕ್ಕಮಹಾದೇವಿ ಬಾಸ್ಕೆಟ್ಬಾಲ್ ಕ್ಲಬ್, ಭಗವಾನ್ ಬಾಸ್ಕೆಟ್ಬಾಲ್ ಕ್ಲಬ್, ವೈಸಿಬಿಸಿ ಬಳ್ಳಾರಿ, ಬಳ್ಳಾರಿಯ ನಂದಿ ಬಾಸ್ಕೆಟ್ಬಾಲ್ ಕ್ಲಬ್, ಮಾದನ ಹಿಪ್ಪರ್ಗದ ವಿವೇಕ್ ಆನಂದ್ ಭಾಸ್ಕರ್ ಬಾಸ್ಕೆಟ್ಬಾಲ್ ಕ್ಲಬ್, ಬೀದರ್ ನ ಎ.ಬಿ.ಸಿ ಬಾಸ್ಕೆಟ್ಬಾಲ್ ಕ್ಲಬ್, ಕಲಬುರಗಿಯ ಕುವೆಂಪು ಬಾಸ್ಕೆಟ್ಬಾಲ್ ಕ್ಲಬ್, ಹಮನಾಬಾದ್ ನ ಮಾಣಿಕ್ ಪ್ರಭು ಬಾಸ್ಕೆಟ್ಬಾಲ್ ಕ್ಲಬ್ ಭಾಗವಹಿಸಿದ್ದವು.
ಫೆ.13ರಿಂದ ಮೂರು ದಿನಗಳ ಕಾಲ ಅದ್ಧೂರಿ 'ಹಂಪಿ ಉತ್ಸವ' : ಸಚಿವ ಝಮೀರ್ ಅಹ್ಮದ್
ವಿಜಯನಗರ (ಹೊಸಪೇಟೆ 5: ವಿಶ್ವವಿಖ್ಯಾತ ಹಂಪಿ ಉತ್ಸವವನ್ನು ಈ ಬಾರಿ ಫೆ.13, 14 ಮತ್ತು 15 ರಂದು ಅತ್ಯಂತ ವೈಭವದಿಂದ ಆಚರಿಸಲು ನಿರ್ಧರಿಸಲಾಗಿದೆ. ಮುಖ್ಯ ವೇದಿಕೆ ಸೇರಿದಂತೆ ಒಟ್ಟು ಐದು ವೇದಿಕೆಗಳಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ ಎಂದು ವಸತಿ, ವಕ್ಫ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಝಮೀರ್ ಅಹ್ಮದ್ ಖಾನ್ ತಿಳಿಸಿದರು. ಗುರುವಾರ ಹಂಪಿಗೆ ಭೇಟಿ ನೀಡಿ, ಉತ್ಸವ ನಡೆಯಲಿರುವ ಮುಖ್ಯ ವೇದಿಕೆ ಹಾಗೂ ವಾಹನ ನಿಲುಗಡೆ ಸ್ಥಳಗಳನ್ನು ಪರಿಶೀಲಿಸಿದ ನಂತರ ಅವರು ಮಾಧ್ಯಮಗಳೊಂದಿಗೆ ಮಾತನಾಡಿದರು. ಫೆ.13 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉತ್ಸವಕ್ಕೆ ಅಧಿಕೃತವಾಗಿ ಚಾಲನೆ ನೀಡಲಿದ್ದಾರೆ. ಈ ಬಾರಿ ಉತ್ಸವವನ್ನು ಕೇವಲ ಒಂದು ವೇದಿಕೆಗೆ ಸೀಮಿತಗೊಳಿಸದೆ, ಪ್ರವಾಸಿಗರಿಗೆ ಅನುಕೂಲವಾಗುವಂತೆ ಐದು ವಿಭಿನ್ನ ವೇದಿಕೆಗಳಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದರು. ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದ ಕಲಾವಿದರನ್ನು ಆಹ್ವಾನಿಸುವ ಕುರಿತು ಶೀಘ್ರವೇ ಅಂತಿಮ ಪಟ್ಟಿ ಬಿಡುಗಡೆಯಾಗಲಿದೆ. ಅಶ್ವಿನಿ ಪುನೀತ್ ರಾಜ್ಕುಮಾರ್, ಧ್ರುವ ಸರ್ಜಾ ಸೇರಿದಂತೆ ಚಿತ್ರರಂಗದ ಗಣ್ಯರನ್ನು ಆಹ್ವಾನಿಸುವ ಬಗ್ಗೆ ಚರ್ಚಿಸಲಾಗಿದೆ. ಜೊತೆಗೆ, ಸ್ಥಳೀಯ ಕಲಾವಿದರಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ಸಚಿವರು ಭರವಸೆ ನೀಡಿದರು. ಕಳೆದ ಎರಡು ವರ್ಷಗಳಿಗಿಂತ ಈ ಬಾರಿ ವೇದಿಕೆಯ ವಿನ್ಯಾಸ ಮತ್ತು ಸ್ಮಾರಕಗಳ ಮಾದರಿಗಳು ಅತ್ಯಂತ ಆಕರ್ಷಕವಾಗಿರಲಿವೆ. ಸುಗಮ ಸಂಚಾರಕ್ಕಾಗಿ ರೈತರೊಂದಿಗೆ ಚರ್ಚಿಸಿ ಹೆಚ್ಚಿನ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗುವುದು. ಪಾರ್ಕಿಂಗ್ಗೆ ಭೂಮಿ ನೀಡುವ ರೈತರ ಬೆಳೆ ನಷ್ಟಕ್ಕೆ ತಕ್ಕ ಪರಿಹಾರ ಒದಗಿಸಲಾಗುವುದು ಎಂದರು. ಹಗರಿಬೊಮ್ಮನಹಳ್ಳಿಯಿಂದ ಶಿವಮೊಗ್ಗ ರಸ್ತೆ ಸೇರಿದಂತೆ ಹಂಪಿಗೆ ಸಂಪರ್ಕ ಕಲ್ಪಿಸುವ ಹದಗೆಟ್ಟ ರಸ್ತೆಗಳನ್ನು ಕೂಡಲೇ ದುರಸ್ತಿ ಮಾಡುವಂತೆ ಜಿಲ್ಲಾಧಿಕಾರಿಗಳಿಗೆ ಸ್ಥಳದಲ್ಲೇ ಸೂಚನೆ ನೀಡಿದರು. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಈ ನಾಡಹಬ್ಬವನ್ನು ಯಶಸ್ವಿಗೊಳಿಸಬೇಕೆಂದು ಅವರು ಮನವಿ ಮಾಡಿದರು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ, ಜಿ.ಪಂ. ಸಿಇಓ ನೊಂಗ್ಜಾಯ್ ಮಹ್ಮದ್ ಅಕ್ರಂ ಅಲಿ ಷಾ, ಜಿಲ್ಲಾ ಪೊಲೀಸ್ ಅಧೀಕ್ಷಕಿ ಎಸ್. ಜಾಹ್ನವಿ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
ಬಂಟ್ವಾಳ : ಕಬ್ಬಿಣದ ತಂತಿಯಲ್ಲಿ ಸಿಲುಕಿಕೊಂಡಿದ್ದ ಚಿರತೆಯ ರಕ್ಷಣೆ
ಬಂಟ್ವಾಳ : ಬೇಲಿಗೆ ಹಾಕಲಾಗಿದ್ದ ಕಬ್ಬಿಣದ ತಂತಿಯಲ್ಲಿ ಸಿಲುಕಿಕೊಂಡಿದ್ದ ಚಿರತೆಯೊಂದನ್ನು ವೇಣೂರು ಅರಣ್ಯ ಇಲಾಖೆಯ ಅಧಿಕಾರಿಗಳ ತಂಡ ರಕ್ಷಣೆ ಮಾಡಿದ ಘಟನೆ ಪಿಲಾತಬೆಟ್ಟು ಎಂಬಲ್ಲಿ ಗುರುವಾರ ನಡೆದಿದೆ. ಪಿಲಾತಬೆಟ್ಟು ಗ್ರಾಮದ ನಿನ್ಯಾಲು ಎಂಬಲ್ಲಿ ತಡೆ ಬೇಲಿಗೆ ಹಾಕಲಾದ ಕಬ್ಬಿಣದ ತಂತಿಯಲ್ಲಿ ಸಿಲುಕಿಕೊಂಡು ಹೋಗಲು ಸಾಧ್ಯವಾಗದೆ ಒದ್ದಾಡುತ್ತಿದ್ದ ಚಿರತೆಯನ್ನು ಗುರುವಾರ ಬೆಳಿಗ್ಗೆ ಸುಮಾರು 9.30 ಗಂಟೆಗೆ ನೋಡಿದ ಗ್ರಾಮಸ್ಥರು ವೇಣೂರು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಸ್ಥಳಕ್ಕೆ ಭೇಟಿ ನೀಡಿದ ಇಲಾಖೆಯ ಅಧಿಕಾರಿಗಳು ಪಿಲಿಕುಲದ ವೈದ್ಯಾಧಿಕಾರಿ ಯಶಸ್ವಿ ನಾರವಿ ಅವರು ಚಿರತೆಗೆ ಅರಿವಳಿಕೆ ಚುಚ್ಚುಮದ್ದು ನೀಡಿದರು. ಬಳಿಕ ತಂತಿಯಲ್ಲಿ ಸಿಲುಕಿಕೊಂಡಿದ್ದ ಚಿರತೆಯನ್ನು ಬಿಡಿಸಿಕೊಂಡು, ಸುರಕ್ಷಿತವಾಗಿ ಪಂಜರದೊಳಗೆ ಹಾಕಿ ವೇಣೂರು ಅರಣ್ಯ ಇಲಾಖೆಗೆ ಕೊಂಡುಹೋಗಿ ಪ್ರಥಮ ಚಿಕಿತ್ಸೆ ನೀಡಲಾಗಿದೆ. ಸುಮಾರು ಒಂದುವರೆ ವರ್ಷದ ಹೆಣ್ಣು ಚಿರತೆ ಇದಾಗಿದ್ದು, ಆರೋಗ್ಯವಾಗಿದೆ ಎಂದು ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ. ಎ.ಸಿ.ಎಫ್.ಶ್ರೀಧರ್ ಅವರ ಮಾರ್ಗದರ್ಶನದಲ್ಲಿ ವಲಯ ಅರಣ್ಯ ಅಧಿಕಾರಿ ಭರತ್ , ಉಪ ವಲಯ ಅರಣ್ಯಾಧಿಕಾರಿ ಸುನಿಲ್, ಗಸ್ತು ಅರಣ್ಯ ಪಾಲಕರಾದ ದಿವಾಕರ ಮತ್ತು ದಿನೇಶ್ ಅವರು ಕಾರ್ಯಚರಣೆಯಲ್ಲಿ ಭಾಗವಹಿಸಿದ್ದರು.
ಮಸ್ಕತ್ ತಲುಪಿದ ಹೆಮ್ಮೆಯ INSV ಕೌಂಡಿನ್ಯ ನೌಕೆ; ಭಾರತದ ಪುರಾತನ ನೌಕಾ ಪೌಂಡಿತ್ಯಕ್ಕೆ ಇದಕ್ಕಿಂತ ಸಾಕ್ಷಿ ಬೇಕೆ?
ಪ್ರಾಚೀನ ಭಾರತದ ನೌಕಾ ಪಾಂಡಿತ್ಯವನ್ನು ಪ್ರಶ್ನಿಸಿದವರಿಗೆಲ್ಲಾ ಉತ್ತರವೆಂಬಂತೆ, ಐಎನ್ಎಸ್ವಿ ಕೌಂಡಿನ್ಯ ಹಡಗು ಯಶಸ್ವಿ ಸಮುದ್ರಯಾನವನ್ನು ಪೂರೈಸಿದೆ. ಗುಜರಾತ್ನ ಪೋರಬಂದರ್ನಿಂದ ಹೊರಟಿದ್ದ ಈ ಇಂಜಿನ್ರಹಿತ ಹಡಗು, ನಿನ್ನೆ (ಜ.14-ಬುಧವಾರ) ಒಮಾನ್ ರಾಜಧಾನಿ ಮಸ್ಕತ್ ತಲುಪಿದೆ. ಈ ಯಶಸ್ವಿ ನೌಕಾಯಾನದಿಂದ ಭಾರತದ ಪ್ರಾಚೀನ ಹಡಗು ನಿರ್ಮಾಣ ತಂತ್ರಜ್ಞಾನ ಇಡೀ ಜಗತ್ತಿಗೆ ಪರಿಚಿತವಾಗಿದೆ. ಆದರೆ ಐಎನ್ಎಸ್ವಿ ಕೌಂಡಿನ್ಯದ ಸಮುದ್ರಯಾನ ಅಷ್ಟು ಸುಲಭವಾಗಿರಿಲಿಲ್ಲ. ಈ ಹಡಗಿನ ಸಿಬ್ಬಂದಿ ಸಮುದ್ರಯಾನದ ಸಂದರ್ಭದಲ್ಲಿ ಎದುರಿಸಿದ ಸವಾಲುಗಳೇನು? ಎಲ್ಲಾ ಸವಾಲುಗಳನ್ನು ಯಶಸ್ವಿಯಾಗಿ ಎದುರಿಸಿ ಮಸ್ಕತ್ ತಲುಪಿದ್ದೇಗೆ? ಇಲ್ಲಿದೆ ಪಿಎಸ್ ರಂಗನಾಥ ಅವರ ವಿಸ್ತೃತ ಲೇಖನ.
ಹೊಸಪೇಟೆ | 'ಮನೆಗೊಂದು ಗ್ರಂಥಾಲಯ' ಯೋಜನೆಗೆ ಚಾಲನೆ
ಹೊಸಪೇಟೆ: ಪುಸ್ತಕಗಳನ್ನು ಜನಸಾಮಾನ್ಯರಿಗೆ ತಲುಪಿಸಲು ಹಾಗೂ ಓದುವ ಸಂಸ್ಕೃತಿಯನ್ನು ಮನೆಮನಗಳಲ್ಲಿ ಬೆಳೆಸಲು ಕರ್ನಾಟಕ ಪುಸ್ತಕ ಪ್ರಾಧಿಕಾರವು 'ಮನೆಗೊಂದು ಗ್ರಂಥಾಲಯ' ಎಂಬ ಮಹತ್ವಾಕಾಂಕ್ಷೆಯ ಯೋಜನೆಯನ್ನು ಜಾರಿಗೆ ತಂದಿದೆ ಎಂದು ಪ್ರಾಧಿಕಾರದ ಅಧ್ಯಕ್ಷೆ ಡಾ.ಮಾನಸ ತಿಳಿಸಿದರು. ನಗರದ ಜಗದ್ಗುರು ಶ್ರೀ ಕೊಟ್ಟೂರುಸ್ವಾಮಿ ಮಠದ ಆವರಣದಲ್ಲಿ ಕರ್ನಾಟಕ ಪುಸ್ತಕ ಪ್ರಾಧಿಕಾರ ಹಾಗೂ ವಿಜಯನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಮನೆಗೊಂದು ಗ್ರಂಥಾಲಯ ಸದಸ್ಯರ ನೇಮಕ ಪ್ರಮಾಣಪತ್ರ ವಿತರಣಾ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಸಾಪ ಅಧ್ಯಕ್ಷ ಡಾ.ನಿಷ್ಠಿ ರುದ್ರಪ್ಪ ಮಾತನಾಡಿ, ಈ ಯೋಜನೆಯ ಮೂಲಕ ರಾಜ್ಯದ ಒಂದು ಲಕ್ಷ ಮನೆಗಳಲ್ಲಿ ಗ್ರಂಥಾಲಯ ಸ್ಥಾಪಿಸಲು ಪ್ರಾಧಿಕಾರ ಮುಂದಾಗಿರುವುದು ಅತ್ಯಂತ ಶ್ಲಾಘನೀಯ ಸಂಗತಿಯಾಗಿದೆ ಎಂದರು. ಮುಖ್ಯ ಅತಿಥಿಯಾಗಿದ್ದ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ಧಲಿಂಗೇಶ ರಂಗಣ್ಣನವರ ಅವರು, ಪುಸ್ತಕ ಸಂಸ್ಕೃತಿಯು ಸಮಾಜದ ಪ್ರಗತಿಯ ಪ್ರತಿಬಿಂಬವಾಗಿದೆ ಎಂದು ಅಭಿಪ್ರಾಯಪಟ್ಟರು. ವಿಜಯನಗರ ಜಿಲ್ಲೆಯ ಮನೆಗೊಂದು ಗ್ರಂಥಾಲಯ ಸಂಚಾಲಕರನ್ನಾಗಿ ಎಂ.ಉಮಾಮಹೇಶ್ವರ, ಹುಲಿಯಪ್ಪನವರ ಬಸವರಾಜ ಹರಪನಹಳ್ಳಿ, ವೀರಮ್ಮ ಹಿರೇಮಠ ಹೊಸಪೇಟೆ, ಎಲ್.ಹಾಲ್ಯಾನಾಯಕ, ಬಿ.ಕಿರಣ್ ಕುಮಾರ್, ಎಸ್.ಎಂ.ರಿಯಾಝ್ ಪಾಷಾ ಕೂಡ್ಲಿಗಿ, ಗಣೇಶ ಹವಾಲ್ದಾರ್ ಹಗರಿಬೊಮ್ಮನಹಳ್ಳಿ, ಬಿ.ಹೆಚ್. ಶರಣಪ್ಪ ಕೊಟ್ಟೂರು, ಬಿ.ಕೆ. ಮುರಳೀಧರ, ಇವರುಗಳನ್ನು ಸದಸ್ಯರನ್ನಾಗಿ ನೇಮಕ ಮಾಡಿ ಪ್ರಮಾಣ ಪತ್ರ ನೀಡಲಾಯಿತು. ವೇದಿಕೆಯಲ್ಲಿ ತಾಲೂಕು ಕಸಾಪ ಅಧ್ಯಕ್ಷ ಡಾ.ಗುಂಡಿ ಮಾರುತಿ, ಹಿರಿಯ ಸಾಹಿತಿ ಟಿ.ಯಮನಪ್ಪ ಹಾಗೂ ಶೋಭಾ ಶಂಕರಾನಂದ ಉಪಸ್ಥಿತರಿದ್ದರು. ಎಲ್.ಹಾಲ್ಯಾನಾಯಕ ಸ್ವಾಗತಿಸಿದರು, ವೀರಮ್ಮ ಹಿರೇಮಠ ಕಾರ್ಯಕ್ರಮ ನಿರೂಪಿಸಿದರು ಮತ್ತು ಉಮಾಮಹೇಶ ವಂದನಾರ್ಪಣೆ ಮಾಡಿದರು.
ಬೆಂಗಳೂರು ಗವಿಗಂಗಾಧೇಶ್ವರ ದೇವಾಲಯದ ಪ್ರಧಾನ ಅರ್ಚಕರಿಂದ 2026ರ ಸಂಕ್ರಾಂತಿ ಭವಿಷ್ಯ - ಸೂರ್ಯರಶ್ಮಿಯ ಸ್ಪರ್ಶ ಫಲವೇನು?
ಬೆಂಗಳೂರಿನ ಗವಿಗಂಗಾಧರೇಶ್ವರ ದೇವಸ್ಥಾನದಲ್ಲಿ ಮಕರ ಸಂಕ್ರಾಂತಿಯಂದು ಸೂರ್ಯನ ಕಿರಣಗಳು ಶಿವಲಿಂಗವನ್ನು ಸ್ಪರ್ಶಿಸಿವೆ. ಇದು ದೇಶಕ್ಕೆ ಶುಭ ಸೂಚನೆ ನೀಡಿದೆ. ಪ್ರಧಾನ ಅರ್ಚಕರ ಪ್ರಕಾರ, ಯಾವುದೇ ಅಹಿತಕರ ಘಟನೆಗಳು ನಡೆಯುವುದಿಲ್ಲ. ಸೂರ್ಯನ ಕಿರಣಗಳು ಶಿವಲಿಂಗದ ಮೇಲೆ ಸುಮಾರು 6 ನಿಮಿಷಗಳ ಕಾಲ ಹರಿದಾಡಿವೆ. ಇದು ದೇಶದ ಭವಿಷ್ಯಕ್ಕೆ ಒಳ್ಳೆಯ ಸಂಕೇತವಾಗಿದೆ.
ಬಂಟ್ವಾಳ : ನಾಪತ್ತೆಯಾಗಿದ್ದ ವ್ಯಕ್ತಿಯ ಮೃತದೇಹ ನೇತ್ರಾವತಿ ನದಿಯಲ್ಲಿ ಪತ್ತೆ
ಬಂಟ್ವಾಳ : ಕಳೆದ ಎರಡು ದಿನಗಳಿಂದ ನಿಗೂಢವಾಗಿ ನಾಪತ್ತೆಯಾಗಿದ್ದ ತಲೆಕ್ಕಿ ಮಹಮ್ಮದ್ ಹಾಜಿ (70) ಅವರ ಮೃತದೇಹ ಬುಧವಾರ ನೇತ್ರಾವತಿ ನದಿಯಲ್ಲಿ ಪತ್ತೆಯಾಗಿದ್ದು, ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕರ್ನಾಟಕ-ಕೇರಳ ಗಡಿ ಭಾಗದ ಬಾಕ್ರಬೈಲು ತಲೆಕ್ಕಿ ಪರಿಸರದ ಬೊಳ್ಮಾರ್ ನಿವಾಸಿ ಮುಹಮ್ಮದ್ ಹಾಜಿ ಎರಡು ದಿನಗಳಿಂದ ನಿಗೂಢವಾಗಿ ನಾಪತ್ತೆಯಾಗಿದ್ದರು. ಮನೆಯವರು ಎಲ್ಲಾ ಕಡೆ ಹುಡುಕಾಡಿದ್ದರೂ ಯಾವುದೇ ಸುಳಿವು ಸಿಗಲಿಲ್ಲ. ಬುಧವಾರ ಸಂಜೆ ರಾಷ್ಟ್ರೀಯ ಹೆದ್ದಾರಿಯ ಪಾಣೆಮಂಗಳೂರು ಗೂಡಿನಬಳಿ ನೇತ್ರಾವತಿ ನದಿಯಲ್ಲಿ ಮಹಮ್ಮದ್ ಹಾಜಿಯವರ ಮೃತದೇಹ ಪತ್ತೆಯಾಗಿದೆ. ಸ್ಥಳೀಯ ಸಾಮಾಜಿಕ ಕಾರ್ಯಕರ್ತರು ಮೃತದೇಹವನ್ನು ಮೇಲಕ್ಕೆತ್ತಿದ್ದಾರೆ. ಬಂಟ್ವಾಳ ನಗರ ಠಾಣಾ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ.
ಬಳ್ಳಾರಿ ಗುಂಪು ಘರ್ಷಣೆಯ ತನಿಖೆಯನ್ನು ಸಿಬಿಐಗೆ ವಹಿಸಲು ಆಗ್ರಹಿಸಿ ಜ.17ರಂದು ಬೃಹತ್ ಸಮಾವೇಶ : ಶ್ರೀರಾಮುಲು
ಬಳ್ಳಾರಿ: ಬಳ್ಳಾರಿಯಲ್ಲಿ ನಡೆದ ಘರ್ಷಣೆಯ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಸಲು ಪ್ರಕರಣವನ್ನು ಸಿಬಿಐಗೆ ವಹಿಸಬೇಕು. ಶಾಸಕ ಭರತ್ ರೆಡ್ಡಿ ಹಾಗೂ ಅವರ ಬೆಂಬಲಿಗರನ್ನು ತಕ್ಷಣವೇ ಬಂಧಿಸಬೇಕು ಎಂದು ಒತ್ತಾಯಿಸಿ ಜ.17 ರಂದು ಜಿಲ್ಲೆಯಲ್ಲಿ ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಮಾಜಿ ಸಚಿವ ಬಿ.ಶ್ರೀರಾಮುಲು ತಿಳಿಸಿದರು. ನಗರದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಈ ಸಮಾವೇಶವು ಕೇವಲ ಬಳ್ಳಾರಿ ಗಲಭೆಗೆ ಮಾತ್ರ ಸೀಮಿತವಾಗಿಲ್ಲ, ಬದಲಿಗೆ ಇಡೀ ಕಲ್ಯಾಣ ಕರ್ನಾಟಕ ಭಾಗದಲ್ಲಿ ಹದಗೆಟ್ಟಿರುವ ಕಾನೂನು ಮತ್ತು ಸುವ್ಯವಸ್ಥೆಯನ್ನು ವಿರೋಧಿಸಿ ನಡೆಯುತ್ತಿರುವ ಸಮಾವೇಶವಾಗಿದೆ ಎಂದರು. ಕಲಬುರಗಿ ಇಂದು ರಿಪಬ್ಲಿಕ್ ಆಗಿದೆ. ಅಲ್ಲಿ ಅಕ್ರಮ ಗಣಿಗಾರಿಕೆ ಕುರಿತು ಪರಿಶೀಲಿಸಲು ಹೋದ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಹಾಗೂ ಛಲವಾದಿ ನಾರಾಯಣಸ್ವಾಮಿ ಅವರ ಮೇಲೆ ಕಲ್ಲುಬಂಡೆಗಳಿಂದ ಹಲ್ಲೆಗೆ ಯತ್ನಿಸಲಾಯಿತು. ರಾಜ್ಯದಲ್ಲಿ ಗೂಂಡಾ ವರ್ತನೆ ಹೆಚ್ಚಾಗಿದ್ದು, ಆಡಳಿತ ವ್ಯವಸ್ಥೆ ಕುಸಿದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಜ. 17 ರಂದು ನಡೆಯಲಿರುವ ಈ ಸಮಾವೇಶದಲ್ಲಿ ಸುಮಾರು 50 ಸಾವಿರಕ್ಕೂ ಹೆಚ್ಚು ಜನರು ಸೇರುವ ನಿರೀಕ್ಷೆಯಿದೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ, ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಸೇರಿದಂತೆ ರಾಜ್ಯದ ಪ್ರಮುಖ ನಾಯಕರು ಪಾಲ್ಗೊಳ್ಳಲಿದ್ದಾರೆ ಎಂದು ಮಾಹಿತಿ ನೀಡಿದರು. ಬಳ್ಳಾರಿ ಪಾದಯಾತ್ರೆ ಕುರಿತಾದ ಗೊಂದಲಗಳಿಗೆ ಪ್ರತಿಕ್ರಿಯಿಸಿದ ಅವರು, ಪಾದಯಾತ್ರೆ ಮಾಡಬಾರದು ಎಂದೇನೂ ಇಲ್ಲ, ನಮಗೂ ಪಾದಯಾತ್ರೆ ಮಾಡುವ ಹಂಬಲವಿದೆ. ಈ ಬಗ್ಗೆ ಹೈಕಮಾಂಡ್ ಜೊತೆ ಚರ್ಚಿಸಿ ಮುಂದಿನ ದಿನಗಳಲ್ಲಿ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದರು.
ಶಿಡ್ಲಘಟ್ಟ ವಿವಾದ: ಕೊನೆಗೂ ಎಚ್ಚೆತ್ತುಕೊಂಡ ಕೆಪಿಸಿಸಿ, ರಾಜೀವ್ ಗೌಡಗೆ ಶೋಕಾಸ್ ನೋಟಿಸ್
ಶಿಡ್ಲಘಟ್ಟದಲ್ಲಿ ಬ್ಯಾನರ್ ವಿಚಾರವಾಗಿ ಪೌರಾಯುಕ್ತೆಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದ ಕಾಂಗ್ರೆಸ್ ಮುಖಂಡ ರಾಜೀವ್ ಗೌಡ ವಿರುದ್ದ ಆಕ್ರೋಶ ವ್ಯಕ್ತವಾಗಿತ್ತು. ಇದೀಗ ಕೊನೆಗೂ ಕೆಪಿಸಿಸಿ ಎಚ್ಚೆತ್ತುಕೊಂಡಿದೆ. ರಾಜೀವ್ ಗೌಡಗೆ ನೋಟಿಸ್ ನೀಡಿದೆ. ನೋಟಿಸ್ ಸಿಕ್ಕ ಒಂದು ವಾರದ ಒಳಗಾಗಿ ಈ ಬಗ್ಗೆ ಸೂಕ್ತ ಸಮಜಾಷಿ ನೀಡಬೇಕು ಎಂದು ಸೂಚಿಸಲಾಗಿದೆ. ಇಲ್ಲವಾದಲ್ಲಿ ಶಿಸ್ತು ಸಮಿತಿಯು ಮುಂದಿನ ಶಿಸ್ತು ಕ್ರಮ ಕೈಗೊಳ್ಳಲಿದೆ ಎಂಬ ಎಚ್ಚರಿಕೆಯನ್ನು ನೀಡಲಾಗಿದೆ. ಹಾಗಾದರೆ ನೋಟಿಸ್ ನಲ್ಲಿ ಏನಿದೆ? ಇಲ್ಲದೆ ಈ ಕುರಿತಾದ ವಿವರ.
ಚಿಂಚೋಳಿ | ಭೋವಿ ಸಮಾಜದ ಆರ್ಥಿಕ ಪ್ರಗತಿಗೆ ಶಿಕ್ಷಣವೇ ಅಸ್ತ್ರ : ತಹಶೀಲ್ದಾರ್ ಸುಬ್ಬಣ್ಣ ಜಮಖಂಡಿ
ಶಿವಯೋಗಿ ಸಿದ್ದರಾಮೇಶ್ವರ ಜಯಂತಿ ಕಾರ್ಯಕ್ರಮ
Iran: ಇರಾನ್ ಬಡಿದಾಟದಲ್ಲಿ ಸಾವಿನ ಸಂಖ್ಯೆ 3,400ಕ್ಕೆ ಏರಿಕೆ, ಅಮೆರಿಕ ಅಧ್ಯಕ್ಷ ನೀಡಿದ ಎಚ್ಚರಿಕೆ ಏನು?
ಇರಾನ್ ಪ್ರತಿಭಟನೆ ಕಾವು ಇಡೀ ಜಗತ್ತಿಗೆ ತಲುಪಿದ್ದು, ಅಮೆರಿಕ ಎದ್ದು ಕೂತಿದೆ. ಯಾವ ಕ್ಷಣದಲ್ಲಿ ಬೇಕಾದರೂ ಅಮೆರಿಕದ ಯುದ್ಧ ವಿಮಾನಗಳು ನೇರವಾಗಿ ಇರಾನ್ ಕಡೆಗೆ ನುಗ್ಗಿ ದಾಳಿ ಮಾಡುವ &ಇರಾನ್ ಸರ್ಕಾರ ಬದಲಾಯಿಸುವ ಸಾಧ್ಯತೆ ದಟ್ಟವಾಗಿದೆ. ಹೀಗೆ ಇರಾನ್ ಮತ್ತು ಅಮೆರಕ ನಡುವೆ ಯುದ್ಧದ ಕಾರ್ಮೋಡ ಆವರಿಸಿದ ಸಮಯದಲ್ಲೇ ಇರಾನ್ ಬಡಿದಾಟದಲ್ಲಿ ಸಾವಿನ ಸಂಖ್ಯೆ 3,400ಕ್ಕೆ
ವಾಡಿ | ಅನ್ನಮ್ಮ ಚರ್ಚ್ನಲ್ಲಿ ಬಾಲಯೇಸು ವಾರ್ಷಿಕ ಹಬ್ಬ
ವಾಡಿ: ಬಾಲ ಯೇಸುವಿನ ವಿನಯ ಮತ್ತು ವಿಧೇಯತೆಯ ಗುಣಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ದೇವರೊಂದಿಗೆ ಆಳವಾದ ಐಕ್ಯತೆಯನ್ನು ಸಾಧಿಸಬೇಕು ಎಂದು ಸ್ಥಳೀಯ ಸಂತ ಅನ್ನಮ್ಮ ದೇವಾಲಯದ ಮುಖ್ಯಸ್ಥ ಫಾದರ್ ರೋಷನ್ ಅವರು ಭಕ್ತರಿಗೆ ಕರೆ ನೀಡಿದರು. ಪಟ್ಟಣದ ಸಂತ ಅನ್ನಮ್ಮ ದೇವಾಲಯದಲ್ಲಿ ಬುಧವಾರ ಸಂಜೆ ಹಮ್ಮಿಕೊಂಡ ಬಾಲ ಯೇಸು ವಾರ್ಷಿಕ ಹಬ್ಬದ ಪ್ರಾರ್ಥನಾ ಸಭೆ ಉದ್ದೇಶಿಸಿ ಮಾತನಾಡಿದ ಅವರು, ಬಾಲ ಯೇಸುವಿನ ವಾರ್ಷಿಕ ಹಬ್ಬಕ್ಕೆ ತಯಾರಿಯಾಗಿ ಹಬ್ಬದ 10 ದಿನಗಳ ಮುಂಚೆ, ಜ.4 ರಂದು ಧ್ವಜರೋಹಣ ನೆರವೇರಿಸಿ ಜ.14 ರಂದು ಬಲಿಪೂಜೆಯನ್ನು ಮಾಡಲಾಗುವುದು ಎಂದರು. ಈ ಸಂದರ್ಭದಲ್ಲಿ ಫಾದರ್ ಸಾಗರ, ಫಾದರ್ ವಿನ್ಸೆಂಟ್ ಪೆರೆರ, ಫಾದರ್ ಸೆಲ್ಬಂ ಅವರು ಪ್ರಾರ್ಥನೆಯನ್ನು ಸಲ್ಲಿಸಿದರು. ಸಿಸ್ಟರ್ ಗ್ರೇಸಿ, ಸಿಸ್ಟರ್ ವಸಂತ, ಸಿಸ್ಟರ್ ಅನು ಹಾಗೂ ಸಿಸ್ಟರ್ ಅಮಲಾ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ವಾಡಿ ಧರ್ಮ ಕೇಂದ್ರದ ಪಾಲನ ಪರಿಷತ್ತಿನ ಸದಸ್ಯರಾದ ಆನಂದ ಬೋಯಿನ್, ಕ್ರಿಸ್ಟೋಫರ್ ರಾಜು, ನವೀನ ಯರಬೋಯಿ, ರಾಯಪ್ಪ, ಆನಂದ, ಜೋಯೆಲ್, ತೆರೇಸಾ, ಅನಿತಾ, ಮೇರಿ, ಪ್ರಕಾಶ, ಬಾಲರಾಜ, ರಾಬರ್ಟ್, ಥಾಮಸ್, ಸೈಮನ್, ವಿಲಿಯಂ, ನಿಕೋಶ, ಶರತ್ ಸೇರಿದಂತೆ ಅನೇಕರು ಭಾಗವಹಿಸಿದ್ದರು.
ಅಂತಿಮ ಘಟ್ಟದಲ್ಲಿ ಮೊದಲ ಹಂತದ ಭಾರತ-ಅಮೆರಿಕ ವ್ಯಾಪಾರ ಒಪ್ಪಂದ, ಸಹಿ ಯಾವಾಗ?
ಭಾರತ ಮತ್ತು ಅಮೆರಿಕ ನಡುವಿನ ವಾಣಿಜ್ಯ ಒಪ್ಪಂದದ ಮೊದಲ ಹಂತವು ಅಂತಿಮಗೊಳ್ಳುವ ಸನಿಹದಲ್ಲಿದೆ ಎಂದು ವಾಣಿಜ್ಯ ಕಾರ್ಯದರ್ಶಿ ರಾಜೇಶ್ ಅಗರ್ವಾಲ್ ತಿಳಿಸಿದ್ದಾರೆ. ಈ ಒಪ್ಪಂದವು ಭಾರತೀಯ ಸರಕುಗಳ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕವನ್ನು ಕಡಿಮೆ ಮಾಡುವ ಗುರಿ ಹೊಂದಿದೆ. ಪ್ರಸ್ತುತ ಮಾತುಕತೆಗಳು ನಡೆಯುತ್ತಿದ್ದು, ಮಾರ್ಚ್ 2026ರ ವೇಳೆಗೆ ಮಧ್ಯಂತರ ಒಪ್ಪಂದವಾಗುವ ನಿರೀಕ್ಷೆಯಿದೆ. ಮೋದಿ ಮತ್ತು ಟ್ರಂಪ್ ಆಡಳಿತವು 2030ರ ವೇಳೆಗೆ 500 ಬಿಲಿಯನ್ ಡಾಲರ್ ವ್ಯಾಪಾರದ ಗುರಿ ಹೊಂದಿವೆ.
ಪೋಷಕರಿಂದಲೇ ಮಕ್ಕಳನ್ನು ಕೊಂದ ಬುಲೆಟ್ನ ಹಣ ವಸೂಲಿ; ʻಟೆಹ್ರಾನ್ ಹಾರರ್ʼ ಬಿಚ್ಚಿಟ್ಟ ಭಾರತದಲ್ಲಿರುವ ಇರಾನಿಯನ್ನರು!
ಅಕ್ಷರಶಃ ರಣಾಂಗಣವಾಗಿರುವ ಇರಾನ್ ರಾಜಧಾನಿ ಟೆಹ್ರಾನ್ನಲ್ಲಿ, ಖಮೇನಿ ಆಡಳಿತ ವಿರೋಧಿಗಳ ರಕ್ತ ನದಿಯಂತೆ ಹರಿಯುತ್ತಿದೆ. ಪ್ರತಿಭಟನಾಕಾರರನ್ನು ಹತ್ತಿಕ್ಕಲು ಕಂಡು ಕೇಳರಿಯದ ದಮನ ಕಾರ್ಯಕ್ಕೆ ಇಳಿದಿರುವ ಭದ್ರತಾ ಪಡೆಗಳು, ಮಾನವೀಯತೆಯನ್ನು ಮರೆತಂತೆ ವರ್ತಿಸುತ್ತಿವೆ. ಟೆಹ್ರಾನ್ನ ಭೀಕರ ಪರಿಸ್ಥಿತಿಯ ಬಗ್ಗೆ ಕ್ಷಣಕ್ಷಣದ ಮಾಹಿತಿ ಪಡೆಯುತ್ತಿರುವ ಭಾರತದಲ್ಲಿರುವ ಇರಾನಿಯನ್ನರು, ತಮ್ಮವರ ಸುರಕ್ಷತೆ ಬಗ್ಗೆ ತೀವ್ರ ಚಿಂತಾಕ್ರಾಂತರಾಗಿದ್ದಾರೆ. ಇಲ್ಲಿರುವ ಇರಾನ್ ಪ್ರಜೆಗಳು ಟೆಹ್ರಾನ್ ಪ್ರಸ್ತುತ ಪರಿಸ್ಥಿಯನ್ನು ಮಾಧ್ಯಮಗಳೊಂದಿಗೆ ಹಂಚಿಕೊಂಡಿದ್ದಾರೆ. ಈ ಕುರಿತು ಇಲ್ಲಿದೆ ಹೆಚ್ಚಿನ ಮಾಹಿತಿ.
ಕಲಬುರಗಿ | ನ್ಯಾಯಾಲಯಕ್ಕೆ ಸುಳ್ಳು ಮಾಹಿತಿ ನೀಡಿದ ಪೊಲೀಸ್ ಅಧಿಕಾರಿಗೆ 1.50 ಲಕ್ಷ ರೂ. ದಂಡ!
ಕಲಬುರಗಿ: ಪ್ರಕರಣವೊಂದರ ತನಿಖೆಗೆ ಆರೋಪಿಗಳು ಸಹಕರಿಸುತ್ತಿಲ್ಲ ಎಂಬ ಸುಳ್ಳು ನೆಪವೊಡ್ಡಿ ನ್ಯಾಯಾಲಯಕ್ಕೆ ತಪ್ಪು ಮಾಹಿತಿ ನೀಡಿದ್ದ ಪೊಲೀಸ್ ಅಧಿಕಾರಿಗೆ 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು 1.50 ಲಕ್ಷ ರೂ. ದಂಡ ವಿಧಿಸಿ ಆದೇಶ ಹೊರಡಿಸಿದೆ. ಹಿಂದೆ ಬ್ರಹ್ಮಪುರ ಪೊಲೀಸ್ ಠಾಣೆಯ ಪಿಐ ಆಗಿದ್ದ ಸೋಮಲಿಂಗ ಕಿರದಳ್ಳಿ (ಪ್ರಸ್ತುತ ಡಿವೈಎಸ್ಪಿ) ಅವರು ಈ ದಂಡಕ್ಕೆ ಗುರಿಯಾದ ಅಧಿಕಾರಿ. ಈ ಮೊತ್ತವನ್ನು ಪ್ರಕರಣದ ಮೂವರು ಆರೋಪಿಗಳಿಗೆ ತಲಾ 50 ಸಾವಿರದಂತೆ ಪರಿಹಾರ ರೂಪದಲ್ಲಿ ಪಾವತಿಸುವಂತೆ ನ್ಯಾಯಾಧೀಶರಾದ ಮಹಮ್ಮದ್ ಮುಜೀರ್ ಉಲ್ಲಾ ಅವರಿದ್ದ ಪೀಠವು ಆದೇಶಿಸಿದೆ. ಘಟನೆಯ ವಿವರ: ಅಜಾದ್ಪುರ ರಸ್ತೆಯ ಅಹ್ಮದ್ ನಗರ ನಿವಾಸಿಗಳಾದ ಸಲ್ಲಾವುದ್ದೀನ್ ಶೇಖ್, ಶಬಾನಾ ಬೇಗಂ ಹಾಗೂ ಸರ್ವರ್ ಮತೀನ್ ವಿರುದ್ಧ 2024ರ ಡಿ.19ರಂದು ಬ್ರಹ್ಮಪುರ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲಾಗಿತ್ತು. ಈ ಸಂಬಂಧ ನ್ಯಾಯಾಲಯದಿಂದ ಜಾಮೀನು ಪಡೆದಿದ್ದ ಆರೋಪಿಗಳು ತನಿಖೆಗೆ ನಿಯಮಿತವಾಗಿ ಹಾಜರಾಗುತ್ತಿದ್ದರು. ಆದರೆ, ತನಿಖಾಧಿಕಾರಿ ಸೋಮಲಿಂಗ ಕಿರದಳ್ಳಿ ಅವರು ಆರೋಪಿಗಳು ತನಿಖೆಗೆ ಸಹಕರಿಸುತ್ತಿಲ್ಲ, ಆದ್ದರಿಂದ ಅವರ ಜಾಮೀನು ರದ್ದುಗೊಳಿಸಬೇಕು ಎಂದು ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ವೇಳೆ ಆರೋಪಿಗಳ ಪರ ವಕೀಲರು, ತಮ್ಮ ಕಕ್ಷಿದಾರರು ಪೊಲೀಸ್ ಠಾಣೆಗೆ ವಿಚಾರಣೆಗೆ ಹಾಜರಾದ ದಿನದ ಸಿಸಿಟಿವಿ ಫೂಟೇಜ್ ಹಾಗೂ ಇತರ ದಾಖಲೆಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿ ಸತ್ಯಾಂಶವನ್ನು ಮನವರಿಕೆ ಮಾಡಿಕೊಟ್ಟರು. ಸುಳ್ಳು ಮಾಹಿತಿ ನೀಡಿ ನ್ಯಾಯಾಲಯದ ಹಾದಿ ತಪ್ಪಿಸಿರುವುದು ಸಾಬೀತಾದ ಹಿನ್ನೆಲೆಯಲ್ಲಿ, ಅಧಿಕಾರಿಗೆ ದಂಡ ವಿಧಿಸಲಾಗಿದೆ. ಜೊತೆಗೆ, ಈ ಅಧಿಕಾರಿಯ ವಿರುದ್ಧ ಶಿಸ್ತುಕ್ರಮ ಕೈಗೊಳ್ಳುವಂತೆ ನಗರ ಪೊಲೀಸ್ ಆಯುಕ್ತರಿಗೆ ನ್ಯಾಯಾಲಯವು ನಿರ್ದೇಶನ ನೀಡಿದೆ.
Bagalkote | ನೀರಿನಲ್ಲಿ ಮುಳುಗಿ ಬಾಲಕರಿಬ್ಬರು ಮೃತ್ಯು
ಬಾಗಲಕೋಟೆ : ಸಂಕ್ರಾಂತಿ ಹಿನ್ನೆಲೆ ಕಲ್ಲಿನ ಕ್ವಾರಿಯಲ್ಲಿ ಸ್ನಾನಕ್ಕೆ ತೆರಳಿದ್ದ ಇಬ್ಬರು ಬಾಲಕರು ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಜಿಲ್ಲೆಯ ಜಾಲಿಕಟ್ಟಿ ಗ್ರಾಮದಲ್ಲಿ ಗುರುವಾರ ನಡೆದಿರುವುದಾಗಿ ವರದಿಯಾಗಿದೆ. ಮೃತರನ್ನು ಒಂದೇ ಕುಟುಂಬದ ಮನೋಜ ಬಡಿಗೇರ (17) ಹಾಗೂ ಪ್ರಮೋದ ಬಡಿಗೇರ (17) ಎಂದು ಗುರುತಿಸಲಾಗಿದೆ. ಲೋಕಾಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.
ಮೀಫ್ ವತಿಯಿಂದ ಪ್ರತಿಭಾವಂತ ಪಿಯುಸಿ (ವಿಜ್ಞಾನ) ವಿದ್ಯಾರ್ಥಿಗಳಿಗೆ ಉಚಿತ ನೀಟ್, ಸಿಇಟಿ ಕ್ರ್ಯಾಶ್ ಕೋರ್ಸ್
ಮಂಗಳೂರು: ಮುಸ್ಲಿಂ ಶಿಕ್ಷಣ ಸಂಸ್ಥೆಗಳ ಒಕ್ಕೂಟ (ಮೀಫ್) ಕೇಂದ್ರ ಕಚೇರಿ ಮಂಗಳೂರು ವತಿಯಿಂದ ಯೆನೆಪೋಯ ಪಿ.ಯು. ಕಾಲೇಜಿನ ಸಹಯೋಗದಲ್ಲಿ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗಾಗಿ 45 ದಿವಸಗಳ ಉಚಿತ ನೀಟ್ / ಸಿ.ಇ.ಟಿ. ಕ್ರ್ಯಾಶ್ ಕೋರ್ಸ್ ಅನ್ನು ಮಂಗಳೂರಿನ ಯೆನೆಪೋಯ ಕಾಲೇಜಿನಲ್ಲಿ ಏರ್ಪಡಿಸಲಾಗಿದೆ. ಎರಡು ಪ್ರತ್ಯೇಕ ಬ್ಯಾಚುಗಳಲ್ಲಿ 15 ನುರಿತ ಉಪನ್ಯಾಸಕರಿಂದ ತರಗತಿ ನಡೆಯಲಿದೆ. ಷರತ್ತುಗಳು:- 1. ವಿದ್ಯಾರ್ಥಿಯು ಪಿಯುಸಿ (ವಿಜ್ಞಾನ) ಸಿದ್ಧತಾ ಪರೀಕ್ಷೆಯಲ್ಲಿ ಶೇಕಡಾ 80 ಕ್ಕಿಂತ ಹೆಚ್ಚು ಅಂಕ ಗಳಿಸಿರಬೇಕು. 2. ಮೀಫ್ ವಿದ್ಯಾ ಸಂಸ್ಥೆಯಲ್ಲಿ ಮತ್ತು ಸರಕಾರಿ ಪಿಯು ಕಾಲೇಜಿನಲ್ಲಿ ಕಲಿತ ವಿದ್ಯಾರ್ಥಿಗಳಿಗೆ ಆಯ್ಕೆಯಲ್ಲಿ ಪ್ರಥಮ ಪ್ರಾಶಸ್ತ್ಯ ನೀಡಲಾಗುವುದು. 3. ಮೀಫ್ ವ್ಯಾಪ್ತಿಗೆ ಒಳಪಡುವ ಉಡುಪಿ, ಕೊಡಗು, ಚಿಕ್ಕಮಗಳೂರು, ಶಿವಮೊಗ್ಗ ಮತ್ತು ಹಾಸನ ಜಿಲ್ಲೆಗಳ ವಿದ್ಯಾರ್ಥಿಗಳಿಗಾಗಿ 32 ಉಚಿತ ಹಾಸ್ಟೆಲ್ ನ ಸೌಲಭ್ಯ ಒದಗಿಸಲಾಗುವುದು. 4. ಶೇಕಡಾ 80 ಕ್ಕಿಂತಲೂ ಕಡಿಮೆ ಅಂಕ ಪಡೆದ ಪ್ರತಿಭಾವಂತ ಬಡ ವಿದ್ಯಾರ್ಥಿಗಳಿಗೆ ಇತರ ಆಧಾರದ ಮೇಲೆ ಪ್ರಾಶಸ್ತ್ಯ ನೀಡಲಾಗುವುದು. 5. ತರಗತಿಯು 21/3/2026 ರಿಂದ 1/5/2026 ರ ವರೆಗೆ ಜರಗಲಿರುವುದು. 6. ನಿಗದಿತ ನಮೂನೆಯಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 21/1/2026. 7. ಒಟ್ಟು 200 ಸೀಟುಗಳು ಮಾತ್ರ ಲಭ್ಯವಿರುವುದರಿಂದ ಮೊದಲು ನೋಂದಾಯಿಸುವವರಿಗೆ ಮೊದಲ ಆಧ್ಯತೆ ನೀಡಲಾಗುವುದು. 8. ನಿಗದಿತ ಅರ್ಜಿ ನಮೂನೆಗಾಗಿ ಸ್ಥಳೀಯ ಮೀಫ್ ವಿದ್ಯಾ ಸಂಸ್ಥೆಗಳ ಪ್ರಾಂಶುಪಾಲರನ್ನು ಸಂಪರ್ಕಿಸುವುದು. ಅಥವಾ ಮೀಫ್ ಕಚೇರಿಗೆ ಭೇಟಿ ನೀಡುವುದು. 9. ಹೆಚ್ಚಿನ ಮಾಹಿತಿಗಾಗಿ ಮೀಫ್ ಮೊಬೈಲ್ ಸಂಖ್ಯೆ 8792115666 ಅನ್ನು ಸಂಪರ್ಕಿಸಬಹುದು ಎಂದು ಕೇಂದ್ರ ಸಮಿತಿಯ ಅಧ್ಯಕ್ಷರಾದ ಮೂಸಬ್ಬ ಪಿ. ಬ್ಯಾರಿ ಜೋಕಟ್ಟೆ ಅವರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಉಡುಪಿಯಲ್ಲಿ ವರ್ಷದ ಏಕೈಕ ಹಗಲು ಉತ್ಸವ ’ಚೂರ್ಣೋತ್ಸವ’ಕ್ಕೆ ತೆರೆ: ಕಿಕ್ಕಿರಿದು ಸೇರಿದ ಭಕ್ತ ಸಮೂಹ
Udupi Churnotsava : ಮಕರ ಸಂಕ್ರಾಂತಿಯ ದಿನ ರಾತ್ರಿಯಂದು ನಡೆಯುವ ಮೂರು ತೇರು ಉತ್ಸವದ ಮರುದಿನ ನಡೆಯುವ ಚೂರ್ಣೋತ್ಸವ ಉಡುಪಿಯಲ್ಲಿ ಸಂಪನ್ನಗೊಂಡಿದೆ. ಹಗಲು ಹೊತ್ತಿನಲ್ಲಿ ನಡೆಯುವ ಉಡುಪಿಯ ಏಕೈಕ ಹಗಲು ತೇರು ಉತ್ಸವ ಇದಾಗಿದೆ. ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಕಿಕ್ಕಿರಿದು ಭಕ್ತ ಸಮೂಹ ಸೇರಿದ್ದರು.
ಮಹಾರಾಷ್ಟ್ರ ಸ್ಥಳೀಯ ಸಂಸ್ಥೆ ಚುನಾವಣೆ| ಮತದಾನದ ವೇಳೆ ಬೆರಳಿಗೆ ಮಾರ್ಕರ್ ಪೆನ್ ನಿಂದ ಗುರುತು; ಆರೋಪ
ದೂರುಗಳ ತನಿಖೆ ನಡೆಸಲಿರುವ ಬಿಎಂಸಿ
ಟಿ20 ವಿಶ್ವಕಪ್ ಗೆಲ್ಲುವ ಉಮೇದಿನಲ್ಲಿರುವ ಭಾರತಕ್ಕೆ ಗಾಯಾಳುಗಳದ್ದೇ ಚಿಂತೆ! ಏನಂತೆ ವಾಶಿಂಗ್ಟನ್ ಸುಂದರ್ ಕತೆ?
Washington Sundar Injury- ಭಾರತ ಮತ್ತು ಶ್ರೀಲಂಕಾಗಳಲ್ಲಿ ಈ ಬಾರಿ ನಡೆಯಲಿರುವ ಟಿ20 ವಿಶ್ವಕಪ್ ಅನ್ನು ಗೆಲ್ಲಬೇಕೆಂಬ ಛಲದಲ್ಲಿರುವ ಭಾರತ ತಂಡವನ್ನು ಇದೀಗ ಗಾಯದ ಸಮಸ್ಯೆ ಕಾಡುತ್ತಿದೆ. ರಿಷಬ್ ಪಂತ್ ಮತ್ತು ತಿಲಕ್ ವರ್ಮಾ ಅವರ ಬಳಿಕ ಇದೀಗ ವಾಷಿಂಗ್ಟನ್ ಸುಂದರ್ ಅವರು ಗಾಯಗೊಂಡಿರುವುದು ಆತಂಕಕ್ಕೆ ಕಾರಣವಾಗಿದೆ. ವಡೋದರಾ ಏಕದಿನ ಪಂದ್ಯದ ವೇಳೆ ಗಾಯಗೊಂಡಿದ್ದ ಅವರು ಏಕದಿನ ಸರಣಿಯಿಂದ ಹೇಗೂ ಹೊರಬಿದ್ದಿದ್ದಾರೆ. ಇದೀಗ ಅವರು ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಯಲ್ಲೂ ಆಡುವುದು ಸಾಧ್ಯವಿಲ್ಲ ಎಂದು ಹೇಳಲಾಗಿದೆ. ಹೀಗಾಗಿ ಅವರು ಟಿ20 ವಿಶ್ವಕಪ್ ನಲ್ಲಿ ಆಡುತ್ತಾರೋ ಇಲ್ಲವೋ ಎಂಬ ಬಗ್ಗ ಅನುಮಾನ ಶುರುವಾಗಿದೆ.
ವೀಸಾ ಪ್ರಹಾರದ ತೀವ್ರತೆಯನ್ನು ಹೆಚ್ಚಿಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ದಿನಕ್ಕೊಂದು ಹೊಸ ನಿಯಮಗಳ ಮೂಲಕ ಅನ್ಯ ದೇಶಗಳಿಂದವ ವಲಸಿಗರು ಅಮೆರಿಕಕ್ಕೆ ಬರುವುದನ್ನು ತಡೆಯುವಲ್ಲಿ ನಿರತರಾಗಿದ್ದಾರೆ. ಇದೀಗ ಟ್ರಂಪ್ ಆಡಳಿತವು ಬರೋಬ್ಬರಿ 75 ದೇಶಗಳ ವಲಸೆ ವೀಸಾ ಪ್ರಕ್ರಿಯೆಯನ್ನು ಅನಿರ್ದಿಷ್ಟಾವಧಿಗೆ ಸ್ಥಗಿತಗೊಳಿಸಿದ್ದು, ಅಮೆರಿಕಕ್ಕೆ ಕಾನೂನುಬದ್ಧ ಪ್ರವೇಶ ಮಾರ್ಗಗಳನ್ನು ನಿರ್ಬಂಧಿಸುವ ತನ್ನ ಪ್ರಯತ್ನಗಳನ್ನು ಮುಂದುವರೆಸಿದೆ. ಯಾವೆಲ್ಲಾ ದೇಶಗಳ ಮೇಲೆ ಈ ನಿರ್ಧಾರ ಪರಿಣಾಮ ಬೀರಲಿದೆ? ಈ ಕುರಿತು ಇಲ್ಲಿದೆ ಸಂಪೂರ್ಣ ಮಾಹಿತಿ.
ಅಹಮದಾಬಾದ್ ಏರ್ ಇಂಡಿಯಾ ದುರಂತ | ಮೃತ ಏರ್ ಇಂಡಿಯಾ ಪೈಲಟ್ ಸಂಬಂಧಿಗೆ ಸಮನ್ಸ್; ಪೈಲಟ್ ಗಳ ಪ್ರತಿಭಟನೆ
ಹೊಸದಿಲ್ಲಿ: ಏರ್ ಇಂಡಿಯಾ 171 ವಿಮಾನ ಅಪಘಾತಕ್ಕೆ ಸಂಬಂಧಿಸಿದಂತೆ ನಡೆಯುತ್ತಿರುವ ತನಿಖೆಗೆ ಹಾಜರಾಗುವಂತೆ ಮೃತ ಕ್ಯಾಪ್ಟನ್ ಸುಮೀತ್ ಸಭರ್ ವಾಲ್ ಅವರ ಸೋದರಳಿಯ ಕ್ಯಾಪ್ಟನ್ ವರುಣ್ ಆನಂದ್ ಗೆ ವಿಮಾನ ಅಪಘಾತ ತನಿಖಾ ದಳ (AAIB) ಸಮನ್ಸ್ ಜಾರಿಗೊಳಿಸಿದ್ದು, ಈ ಕ್ರಮದ ವಿರುದ್ಧ ಭಾರತೀಯ ಪೈಲಟ್ ಗಳ ಒಕ್ಕೂಟ ಬಲವಾದ ಆಕ್ಷೇಪ ವ್ಯಕ್ತಪಡಿಸಿದೆ. ಈ ಸಂಬಂಧ ವಿಮಾನ ಅಪಘಾತ ತನಿಖಾ ದಳಕ್ಕೆ ಕಾನೂನು ನೋಟಿಸ್ ಅನ್ನು ರವಾನಿಸಿರುವ ಭಾರತೀಯ ಪೈಲಟ್ ಗಳ ಒಕ್ಕೂಟ, ಈ ಕ್ರಮ ಸಂಪೂರ್ಣ ಅನಗತ್ಯವಾಗಿದ್ದು, ಇದು ಕಿರುಕುಳಕ್ಕೆ ಸಮನಾಗಿದೆ ಎಂದು ಹೇಳಿದೆ. ಕ್ಯಾಪ್ಟನ್ ವರುಣ್ ಆನಂದ್ ಅವರು ಏರ್ ಇಂಡಿಯಾದ ಸೇವಾನಿರತ ಪೈಲಟ್ ಆಗಿದ್ದು, ಭಾರತೀಯ ಪೈಲಟ್ ಗಳ ಒಕ್ಕೂಟದ ಸದಸ್ಯರೂ ಆಗಿದ್ದಾರೆ. ಜನವರಿ 15ರಂದು ನಡೆಯಲಿರುವ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ಬಂದಿದೆ ಎಂದು ಅವರಿಗೆ ಏರ್ ಇಂಡಿಯಾ ಸಂಸ್ಥೆ ಮಾಹಿತಿ ನೀಡಿದೆ. ಈ ನೋಟಿಸ್ ಕ್ಯಾಪ್ಟನ್ ವರುಣ್ ಆನಂದ್ ವಿಚಾರಣೆಗೆ ಹಾಜರಾಗಲು ಅಗತ್ಯವಿರುವ ಶಾಸನಾತ್ಮಕ ಆಧಾರ, ಉದ್ದೇಶ ಅಥವಾ ಸಮನ್ಸ್ ನ ಪ್ರಸ್ತುತತೆ ಕುರಿತು ನಿರ್ದಿಷ್ಟವಾಗಿ ಉಲ್ಲೇಖಿಸುವಲ್ಲಿ ವಿಫಲವಾಗಿದೆ ಎಂದು ಭಾರತೀಯ ಪೈಲಟ್ ಗಳ ಒಕ್ಕೂಟ ಒತ್ತಿ ಹೇಳಿದೆ. “ಕ್ಯಾಪ್ಟನ್ ವರುಣ್ ಆನಂದ್ ಅವರಿಗೆ ಸಮನ್ಸ್ ಜಾರಿಗೊಳಿಸಿರುವುದು, ವಿಶೇಷವಾಗಿ ಈ ಘಟನೆಯಲ್ಲಿ ಅವರು ಯಾವುದೇ ರೀತಿಯಲ್ಲೂ ಭಾಗಿಯಾಗಿರದಿದ್ದರೂ ಜಾರಿಗೊಳಿಸಿರುವುದು ಸಂಪೂರ್ಣ ಅನಗತ್ಯವಾಗಿತ್ತು. ಇದು ಕಿರುಕುಳಕ್ಕೆ ಸಮನಾಗಿದೆ” ಎಂದು ವಿಮಾನ ಅಪಘಾತ ತನಿಖಾ ದಳದ ಅಧಿಕಾರಿಗಳಿಗೆ ರವಾನಿಸಿರುವ ನೋಟಿಸ್ ನಲ್ಲಿ ಭಾರತೀಯ ಪೈಲಟ್ ಗಳ ಒಕ್ಕೂಟ ಆಕ್ಷೇಪ ವ್ಯಕ್ತಪಡಿಸಿದೆ.
ಪಾದಯಾತ್ರೆಗೆ ’ಬಿಜೆಪಿಯಲ್ಲಿ’ ಒಟ್ಟಿಗೆ ಹೆಜ್ಜೆ ಹಾಕುವ ಕಾಲುಗಳು ಬೇಕಲ್ಲವೇ : ಪ್ರಿಯಾಂಕ ಖರ್ಗೆ
BJP Internal Rift : ಬಳ್ಳಾರಿಯಿಂದ ಬಿಜೆಪಿ ನಾಯಕರು ಪಾದಯಾತ್ರೆ ನಡೆಸಲು ಯೋಜನೆಯನ್ನು ಸಿದ್ದಪಡಿಸಿಕೊಂಡಿದ್ದಾರೆ. ಇದಕ್ಕೆ ಜೆಡಿಎಸ್ ನಾಯಕರೂ ಸಾಥ್ ನೀಡುತ್ತಿದ್ದಾರೆ. ಇದರ ಬಗ್ಗೆ ಕರ್ನಾಟಕ ಐಟಿ ಇಲಾಖೆಯ ಸಚಿವ ಪ್ರಿಯಾಂಕ್ ಖರ್ಗೆ, ಬಿಜೆಪಿ ನಾಯಕರ ಕಾಲೆಳೆದಿದ್ದಾರೆ. ಆ ಮೂಲಕ, ಬಿಜೆಪಿಯ ಆಂತರಿಕ ಫೈಟ್ ಬಗ್ಗೆ ಲೇವಡಿ ಮಾಡಿದ್ದಾರೆ.
‘ಪಬ್ಬಾರ್’ ಸಿನಿಮಾದ ಪಾತ್ರ ಪರಿಚಯಿಸಿದ ಶಿವರಾಜ್ಕುಮಾರ್
ಶಾಖಾಹಾರಿ ಸಿನಿಮಾದ ನಿರ್ದೇಶಕ ಸಂದೀಪ್ ಸುಕಂದ್ ಹೊಸ ಚಿತ್ರ ನಿರ್ದೇಶಿಸಿದ್ದಾರೆ. ಚಿತ್ರದಲ್ಲಿ ಧೀರೇನ್ ರಾಮ್ಕುಮಾರ್ ಮತ್ತು ಅಮೃತಾ ಪ್ರೇಮ್ ಪ್ರಮುಖ ಪಾತ್ರದಲ್ಲಿದ್ದಾರೆ. ಗೀತಾ ಶಿವರಾಜ್ ಕುಮಾರ್ ನಿರ್ಮಾಣದ 'ಪಬ್ಬಾರ್' ಚಿತ್ರದ ಪಾತ್ರ ಪರಿಚಯದ ವೀಡಿಯೋವನ್ನು ಚಿತ್ರ ತಂಡ ಗುರುವಾರ ಬಿಡುಗಡೆ ಮಾಡಿದೆ. ಗೀತಾ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಸಿನಿಮಾ ನಿರ್ಮಾಣವಾಗುತ್ತಿದೆ. “ದಿಟ್ಟಿಸಿನೋಡಿ… ಬಿರುಗಾಳಿ… ಮೌನ” ಎನ್ನುವ ಬರಹಗಳೊಂದಿಗೆ ‘ಎಕ್ಸ್’ ಸಾಮಾಜಿಕ ಜಾಲತಾಣದಲ್ಲಿ ಸಂಕ್ರಾಂತಿಯ ಶುಭಾಶಯಗಳ ಜೊತೆಗೆ ಹಿರಿಯ ನಟ ಶಿವರಾಜ್ ಕುಮಾರ್ ‘ಪಬ್ಬಾರ್’ ಸಿನಿಮಾದ ಪಾತ್ರ ಪರಿಚಯದ ವೀಡಿಯೋವನ್ನು ಬಿಡುಗಡೆ ಮಾಡಿದ್ದಾರೆ. ‘ಶಾಖಾಹಾರಿ’ ಚಿತ್ರದ ನಿರ್ದೇಶಕ ಸಂದೀಪ್ ಸುಕಂದ್ ಸಿನಿಮಾ ನಿರ್ದೇಶಿಸಿದ್ದಾರೆ. ಸಿನಿಮಾದಲ್ಲಿ ಧೀರೇನ್ ರಾಮ್ಕುಮಾರ್ ಮತ್ತು ಅಮೃತಾ ಪ್ರೇಮ್ ಪ್ರಮುಖ ಪಾತ್ರದಲ್ಲಿದ್ದಾರೆ. ಧೀರೇನ್ ಸಿನಿಮಾದಲ್ಲಿ ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ‘ಶಿವ 143’ ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ ಧಿರೇನ್ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ನಾಯಕಿ ಅಮೃತಾ ಲವ್ಲಿ ಸ್ಟಾರ್ ನಟ ಪ್ರೇಮ್ ಪುತ್ರಿ. ಈಗಾಗಲೇ ‘ಟಗರು ಪಲ್ಯ’ ಸಿನಿಮಾದಲ್ಲಿ ನಟಿಸಿದ್ದಾರೆ. ಇದೊಂದು ಅಪರಾಧ, ಸಾಹಸ ಥ್ರಿಲ್ಲರ್ ಸಿನಿಮಾ. ಹಿಮಾಚಲ ಪ್ರದೇಶದ ಶಿಮ್ಲಾ ಬಳಿ ಪಬ್ಬಾರ್ ನದಿ ಕಣಿವೆ ಇದೆ. ಚಿತ್ರದ ಕತೆಗೂ ಈ ಜಾಗಕ್ಕೂ ಕೊಂಡಿಯಿದೆ ಎಂದು ಚಿತ್ರತಂಡ ಹೇಳಿದೆ. ಈ ಜಾಗವೇ ಚಿತ್ರದ ಕತೆಯ ಕೇಂದ್ರ ಬಿಂದು. ಹೀಗಾಗಿ ಚಿತ್ರಕ್ಕೆ ‘ಪಬ್ಬಾರ್’ ಎಂಬ ಹೆಸರು ಇಟ್ಟಿದ್ದಾರೆ. ಸಿನಿಮಾ ತಂಡ ಮೊದಲು ಮಡಿಕೇರಿಯಲ್ಲಿ ಚಿತ್ರೀಕರಣ ಮುಗಿಸಿ ನಂತರ ಪಬ್ಬಾರ್ ಕಣಿವೆಯಲ್ಲಿ ಚಿತ್ರೀಕರಿಸಿದ್ದಾರೆ. ಧೀರೇನ್ ಹಾಗೂ ಅಮೃತಾ ಪ್ರೇಮ್ ಪಾತ್ರಗಳ ಸುತ್ತಮುತ್ತ ಸಂಪೂರ್ಣ ಸಿನಿಮಾ ಕಥೆ ಸಾಗಲಿದೆ. ವಿಶ್ವಜಿತ್ ರಾವ್ ಛಾಯಾಗ್ರಹಣ ಹಾಗೂ ಮಯೂರ್ ಅಂಬೆಕಲ್ಲು ಸಂಗೀತ 'ಪಬ್ಬಾರ್' ಚಿತ್ರಕ್ಕಿದೆ. ಅಚ್ಯುತ್ ಕುಮಾರ್, ಗೋಪಾಲಕೃಷ್ಣ ದೇಶಪಾಂಡೆ, ಡ್ಯಾನಿ ಕುಟ್ಟಪ್ಪ ಸೇರಿ ಅನುಭವಿ ಕಲಾವಿದರು ಚಿತ್ರದಲ್ಲಿ ನಟಿಸಲಿದ್ದಾರೆ.
ಕರ್ನಾಟಕದಲ್ಲಿ 11 ತಿಂಗಳಲ್ಲಿ ಹೂಡಿಕೆಯಾದ ಬಂಡವಾಳ ಎಷ್ಟು? ಮಾಹಿತಿ ನೀಡಿದ ಸಚಿವ ಎಂಬಿ ಪಾಟೀಲ್
ಬೆಂಗಳೂರಿನಲ್ಲಿ ನಡೆದ ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ 10.27 ಲಕ್ಷ ಕೋಟಿ ರೂ. ಹೂಡಿಕೆ ಖಾತ್ರಿಯಾಗಿತ್ತು. ಡಿಸೆಂಬರ್ ಅಂತ್ಯಕ್ಕೆ 4.71 ಲಕ್ಷ ಕೋಟಿ ರೂ. ನೈಜ ಹೂಡಿಕೆ ರಾಜ್ಯಕ್ಕೆ ಬಂದಿದೆ. ತಯಾರಿಕಾ ವಲಯ, ಮರುಬಳಕೆ ಇಂಧನ, ಮೂಲಸೌಕರ್ಯ ಅಭಿವೃದ್ಧಿ ಕ್ಷೇತ್ರಗಳಲ್ಲಿ ಹೂಡಿಕೆ ಹೆಚ್ಚಾಗಿದೆ. ಏಕಗವಾಕ್ಷಿ ವ್ಯವಸ್ಥೆಯಿಂದ ಹೂಡಿಕೆ ಪ್ರಸ್ತಾವನೆಗಳು ತ್ವರಿತವಾಗಿ ಅನುಷ್ಠಾನಗೊಳ್ಳುತ್ತಿವೆ.
ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯಲ್ಲಿ ಸಂಕ್ರಾಂತಿ ಹಬ್ಬವನ್ನು ವಿಭಿನ್ನವಾಗಿ ಆಚರಿಸಲಾಗಿದೆ. ತೆನಾಲಿ ಪಟ್ಟಣದ ಒಂದು ಕುಟುಂಬ ತಮ್ಮ ಅಳಿಯನಿಗಾಗಿ 158 ಬಗೆಯ ಅಡುಗೆಗಳನ್ನು ತಯಾರಿಸಿ ವಿಶೇಷ ಆತಿಥ್ಯ ನೀಡಿದೆ. ಇದು ಮೊದಲ ಸಂಕ್ರಾಂತಿಯಾಗಿದ್ದು, ಸಿಹಿ, ಖಾರದ ತಿಂಡಿಗಳು, ಸಸ್ಯಾಹಾರಿ ಮತ್ತು ಮಾಂಸಾಹಾರಿ ಖಾದ್ಯಗಳು ಸೇರಿವೆ. ಈ ಆಚರಣೆ ಸಾಮಾಜಿಕ ಮಾಧ್ಯಮಗಳಲ್ಲಿ ಗಮನ ಸೆಳೆದಿದೆ.
ಭಾರತೀಯ ರಿಸರ್ವ್ ಬ್ಯಾಂಕ್ ನಲ್ಲಿ ಅಟೆಂಡೆಂಟ್ ಹುದ್ದೆಗೆ ಅರ್ಜಿ ಆಹ್ವಾನ
ಸಂಬಂಧಿತ ರಾಜ್ಯ/ ಕೇಂದ್ರಾಡಳಿತ ಪ್ರದೇಶದ ಮಾನ್ಯತೆ ಪಡೆದ ಮಂಡಳಿಯಿಂದ 10ನೇ ತರಗತಿ (ಎಸ್ಎಸ್ಸಿ/ಮೆಟ್ರಿಕ್ಯುಲೇಶನ್) ಉತ್ತೀರ್ಣರಾಗಿರಬೇಕು. ಅರ್ಜಿದಾರರು 2026 01/01ರಂತೆ ಪದವಿಪೂರ್ವ ವಿದ್ಯಾರ್ಥಿಗಳಾಗಿರಬೇಕು. ಪದವೀಧರರಿಗೆ ಅವಕಾಶವಿಲ್ಲ. ಭಾರತೀಯ ರಿಸರ್ವ್ ಬ್ಯಾಂಕ್ 572 ಅಟೆಂಡೆಂಟ್ ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆಯನ್ನು ಅಧಿಕೃತ ವೆಬ್ಸೈಟ್ ನಲ್ಲಿ ಬಿಡುಗಡೆ ಮಾಡಿದೆ. RBI ಅರ್ಜಿ ಸಲ್ಲಿಕೆಯು 2026 ಜನವರಿ 15ರಂದು ಆರಂಭವಾಗಿದೆ. ಅಭ್ಯರ್ಥಿಗಳು 2026 ಫೆಬ್ರವರಿ 04ರವರೆಗೆ ಅರ್ಜಿ ಸಲ್ಲಿಸಬಹುದು. 2026 ಜನವರಿ 01ರಂತೆ ಕನಿಷ್ಠ ವಯಸ್ಸು 18 ವರ್ಷಗಳು ಮತ್ತು ಗರಿಷ್ಠ ವಯಸ್ಸು 25 ವರ್ಷಗಳು. ಅರ್ಜಿ ಸಲ್ಲಿಸುವ ಮೊದಲು ಈ ಕೆಳಗೆ ನೀಡಲಾದ ಲಿಂಕ್ ನಲ್ಲಿ RBI ಬ್ಯಾಂಕ್ ಆಫೀಸ್ ಅಟೆಂಡೆಂಟ್ ನೇಮಕಾತಿ 2026ರ ಸಂಪೂರ್ಣ ವಿವರಗಳನ್ನು ಪರಿಶೀಲಿಸಬೇಕು: https://opportunities.rbi.org.in/Scripts/Vacancies.aspx RBI ಬ್ಯಾಂಕ್ ಆಫೀಸ್ ಅಟೆಂಡೆಂಟ್ ಪರೀಕ್ಷೆ 2016ರ ಪೂರ್ಣ ವಿವರಗಳು ಹೀಗಿವೆ: ► ಪ್ರಮುಖ ದಿನಾಂಕಗಳು ► ಆನ್ಲೈನ್ ಅರ್ಜಿ ಆರಂಭ : 15 ಜನವರಿ 2026 ► ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 04 ಫೆಬ್ರವರಿ 2026 ► ಶುಲ್ಕ ಪಾವತಿಗೆ ಕೊನೆಯ ದಿನಾಂಕ : 04 ಫೆಬ್ರವರಿ 2026 ► ಪರೀಕ್ಷೆ ದಿನಾಂಕ : 2026 ಫೆಬ್ರವರಿ 28 ಮತ್ತು 2026 ಮಾರ್ಚ್ 1 ► ಭರ್ತಿ ಕಾರ್ಡ್ : ಪರೀಕ್ಷೆಗೆ ಮೊದಲು ► ಫಲಿತಾಂಶ ದಿನಾಂಕ : ಶೀಘ್ರವೇ ಅಪ್ಡೇಟ್ ಮಾಡಲಾಗುವುದು. ► ವಿವರಗಳಿಗೆ ಅಭ್ಯರ್ಥಿಗಳು ಭಾರತೀಯ ರಿಸರ್ವ್ ಬ್ಯಾಂಕ್ನ ಅಧಿಕೃತ ವೆಬ್ತಾಣವನ್ನು ಪರೀಕ್ಷಿಸಿ ದೃಢಪಡಿಸಬಹುದು. ► ಅರ್ಜಿ ಶುಲ್ಕ ಜನರಲ್/ಒಬಿಸಿ/ಇಡಬ್ಲ್ಯುಎಸ್: 450 ರೂ. (+ ಜಿಎಸ್ಟಿ ಶೇ 18) ಎಸ್ಸಿ/ಎಸ್ಟಿ/ ಪಿಡಬ್ಲ್ಯುಡಿ/ಇಎಕ್ಸ್ಎಸ್: 50 ರೂ. (+ ಜಿಎಸ್ಟಿ ಶೇ 18) ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್, ಇಂಟರ್ನೆಟ್ ಬ್ಯಾಂಕಿಂಗ್, ಐಎಂಪಿಎಸ್, ಕ್ಯಾಶ್ ಕಾರ್ಡ್/ ಮೊಬೈಲ್ ವಾಲೆಟ್ ಮೂಲಕ ಪಾವತಿಸುವ ಅವಕಾಶವಿದೆ. ► ವಯೋಮಿತಿ 2026 ಜನವರಿ 1ರಂತೆ ಕನಿಷ್ಠ ವಯೋಮಿತಿ 18 ವರ್ಷಗಳು ಮತ್ತು ಗರಿಷ್ಠ ವಯೋಮಿತಿ 25 ವರ್ಷಗಳು. ಅಂದರೆ 2001 ಜನವರಿ 02ಕ್ಕಿಂತ ಮೊದಲು ಜನಿಸಿದವರು ಮತ್ತು 2008 ಜನವರಿ 01ರ ನಂತರ ಜನಿಸಿದವರು. ► ಒಟ್ಟು ಹುದ್ದೆಗಳು RBI ಬ್ಯಾಂಕ್ ಆಫೀಸ್ ಅಟೆಂಡೆಂಟ್- 572 ಹುದ್ದೆಗಳು ► ವಿದ್ಯಾರ್ಹತೆ ಅಭ್ಯರ್ಥಿಗಳು ತಾವು ಅರ್ಜಿ ಸಲ್ಲಿಸುತ್ತಿರುವ ನೇಮಕಾತಿ ಕಚೇರಿಯ ಪ್ರಾದೇಶಿಕ ವ್ಯಾಪ್ತಿಯಲ್ಲಿರುವ ಸಂಬಂಧಿತ ರಾಜ್ಯ/ ಕೇಂದ್ರಾಡಳಿತ ಪ್ರದೇಶದ ಮಾನ್ಯತೆ ಪಡೆದ ಮಂಡಳಿಯಿಂದ 10ನೇ ತರಗತಿ (ಎಸ್ಎಸ್ಸಿ/ಮೆಟ್ರಿಕ್ಯುಲೇಶನ್) ಉತ್ತೀರ್ಣರಾಗಿರಬೇಕು. ಅರ್ಜಿದಾರರು 2026 ಜನವರಿ 01ರಂತೆ ಪದವಿಪೂರ್ವ ವಿದ್ಯಾರ್ಥಿಗಳಾಗಿರಬೇಕು. ಪದವೀಧರರು ಅಥವಾ ಹೆಚ್ಚಿನ ಅರ್ಹತೆ ಹೊಂದಿದವರು ಅರ್ಹರಲ್ಲ. ಮಾಜಿ ಸೈನಿಕರು 10ನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು ಮತ್ತು ಕನಿಷ್ಠ 15 ವರ್ಷಗಳ ರಕ್ಷಣಾ ಸೇವೆ ಪೂರ್ಣಗೊಳಿಸಿರಬೇಕು. ಆದರೆ ಅವರು ಶಸಸ್ತ್ರಪಡೆಗಳ ಹೊರಗೆ ಪದವಿ ಪಡೆದಿರಬಾರದು. ಹೆಚ್ಚುವರಿಯಾಗಿ ಅಭ್ಯರ್ಥಿಗಳು ಸಂಬಂಧಿತ ನೇಮಕಾತಿ ಕಚೇರಿಯ ಅಡಿಯಲ್ಲಿ ರಾಜ್ಯ/ಕೇಂದ್ರಾಡಳಿತದ ಪ್ರದೇಶದ ಸ್ಥಳೀಯ ಭಾಷೆಯಲ್ಲಿ (ಓದುವುದು, ಮಾತನಾಡುವುದು ಮತ್ತು ಅರ್ಥಮಾಡಿಕೊಳ್ಳುವುದು) ಪ್ರವೀಣರಾಗಿರಬೇಕು. ► ಆಯ್ಕೆ ಪ್ರಕ್ರಿಯೆ ಆನ್ಲೈನ್ ಪರೀಕ್ಷೆ (120 ಪ್ರಶ್ನೆಗಳು, 90 ನಿಮಿಷಗಳು) ರೀಸನಿಂಗ್ (30) ಸಾಮಾನ್ಯ ಇಂಗ್ಲಿಷ್ (30) ಸಾಮಾನ್ಯ ಜ್ಞಾನ್ (30) ಸಂಖ್ಯೆ ಸಾಮರ್ಥ್ಯ (30) ನೆಗೆಟಿವ್ ಅಂಕ : ಪ್ರತಿ ತಪ್ಪು ಉತ್ತರಕ್ಕೆ ¼ ಅಂಕ ಕಡಿತ. ಭಾಷಾ ಪ್ರಾವೀಣ್ಯತೆ ಪರೀಕ್ಷೆ (ಎಲ್ಪಿಟಿ) : ಸ್ಥಳೀಯ ಭಾಷೆಯಲ್ಲಿ ಪಾಸಾಗಬೇಕು. ಅಂತಿಮ ಆಯ್ಕೆ : ಆನ್ಲೈನ್ ಪರೀಕ್ಷೆ +ಎಲ್ಪಿಟಿ, ವೈದ್ಯಕೀಯ ಪರೀಕ್ಷೆ ಮತ್ತು ದಾಖಲೆ ಪರಿಶೀಲನೆ ವೇತನ ಮತ್ತು ಭತ್ಯೆಗಳು ಆರಂಭಿಕ ವೇತನ : ಮಾಸಿಕ 24,250 ರೂ. ಒಟ್ಟು ವೇತನ : ಮಾಸಿಕ 46,029 ರೂ. (ಎಚ್ಆರ್ಎ ಹೊರತುಪಡಿಸಿ) ಸವಲತ್ತುಗಳು : ಆರ್ಬಿಐ ವಸತಿ (ಲಭ್ಯವಿದ್ದರೆ), ವೈದ್ಯಕೀಯ ಸೌಲಭ್ಯಗಳು, ಶಿಕ್ಷಣ ಮರುಪಾವತಿ, ವಿಮೆ, ಪಿಂಚಣಿ ಯೋಜನೆ, ಗ್ಯಾಚ್ಯುಟಿ ಇತ್ಯಾದಿ ಕೆಲಸದ ಸ್ವರೂಪ : ವರ್ಗ 4 ಕರ್ತವ್ಯಗಳು- ಫೈಲ್ ಚಲನೆ, ಡಾಕ್ ವಿತರಣೆ, ಫೊಟೋಕಾಪಿ ಮಾಡುವುದು, ದೈನಂದಿನ ಕಚೇರಿ ಕೆಲಸಗಳಲ್ಲಿ ನೆರವಾಗುವುದು.
ಕುಂಟುತ್ತಿರುವ ಪಿಎಂ ಇಂಟರ್ನ್ಶಿಪ್ ಯೋಜನೆ; ಕೇವಲ ಶೇ.4ರಷ್ಟು ಹಣ ಬಳಕೆ: ವರದಿ
ಹೊಸದಿಲ್ಲಿ: ಪ್ರಧಾನ ಮಂತ್ರಿ ಇಂಟರ್ನ್ಶಿಪ್ ಯೋಜನೆಯು (ಪಿಎಂಐಎಸ್) ಯೋಜಿಸಿದಷ್ಟು ಪ್ರಗತಿಯನ್ನು ಸಾಧಿಸಿಲ್ಲ ಎನ್ನುವುದನ್ನು ಸರಕಾರದ ದತ್ತಾಂಶಗಳು ತೋರಿಸಿವೆ. ಯೋಜನೆಗೆ ಹಣವನ್ನು ಒದಗಿಸುವ ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯವು ವಿತ್ತವರ್ಷ 26ರ ಎಪ್ರಿಲ್ ಮತ್ತು ನವಂಬರ್ ನಡುವೆ ತನ್ನ ಬಜೆಟ್ ಹಂಚಿಕೆಯ ಕೇವಲ ಸುಮಾರು ಶೇ.4ರಷ್ಟು ಹಣವನ್ನು ವೆಚ್ಚ ಮಾಡಿದ್ದು,ಇದು ಯೋಜನೆಯ ಸೀಮಿತ ಪ್ರಭಾವವನ್ನು ಎತ್ತಿ ತೋರಿಸಿದೆ ಎಂದು thehindubusinessline.com ವರದಿ ಮಾಡಿದೆ. ಕಂಟ್ರೋಲರ್ ಆಫ್ ಜನರಲ್ ಅಕೌಂಟ್ಸ್ನ ದತ್ತಾಂಶಗಳ ಪ್ರಕಾರ, 11,500 ಕೋಟಿ ರೂ.ಗೂ ಹೆಚ್ಚಿನ ಬಜೆಟ್ ಹಂಚಿಕೆಯಲ್ಲಿ ಸಚಿವಾಲಯವು ಪ್ರಸಕ್ತ ಹಣಕಾಸು ವರ್ಷದ ಮೊದಲ ಎಂಟು ತಿಂಗಳುಗಳಲ್ಲಿ 500 ಕೋಟಿ ರೂ.ಗಿಂತ ಕೊಂಚ ಹೆಚ್ಚಿನ ಮೊತ್ತವನ್ನು ವೆಚ್ಚ ಮಾಡಿದೆ. ಹಂಚಿಕೆಯ ಸುಮಾರು ಶೇ.94ರಷ್ಟನ್ನು ಅಥವಾ 10,800 ಕೋಟಿ ರೂ.ಗೂ ಹೆಚ್ಚು ಮೊತ್ತವನ್ನು ಪಿಎಂಐಸ್ಗೆ ಮೀಸಲಿರಿಸಲಾಗಿತ್ತು. ಇದು ಹೊಸದೇನಲ್ಲ. ವಿತ್ತವರ್ಷ 25ರಲ್ಲಿ ಭಾರೀ ಮೊತ್ತದ ಹಣ ಬಳಕೆಯಾಗದೆ ಉಳಿದ ಬಳಿಕ ಸಚಿವಾಲಯದ ಹಂಚಿಕೆಯನ್ನು 2,667 ಕೋಟಿ ರೂ.ಗಳಿಂದ 1,078 ಕೋಟಿ ರೂ.ಗಳಿಗೆ ತೀವ್ರವಾಗಿ ಕಡಿತಗೊಳಿಸಲಾಗಿತ್ತು. ಮುಖ್ಯವಾಗಿ ಇಂಟರ್ನ್ಶಿಪ್ ಯೋಜನೆಯಡಿ ಕಳಪೆ ಬಳಕೆಯಿಂದಾಗಿ ಹಣವನ್ನು ಮರಳಿಸಲಾಗಿದೆ ಎಂದು ಸಚಿವಾಲಯವು ಸಂಸದೀಯ ಸ್ಥಾಯಿ ಸಮಿತಿಗೆ ತಿಳಿಸಿತ್ತು. ಆ ವರ್ಷ ವಾಸ್ತವ ವೆಚ್ಚ ಕೇವಲ ಸುಮಾರು 680 ಕೋಟಿ ರೂ.ಆಗಿತ್ತು. ಯೋಜನೆಯಲ್ಲಿ ಅಭ್ಯರ್ಥಿಗಳ ಸೀಮಿತ ಆಸಕ್ತಿಯನ್ನೂ ಅಧಿಕೃತ ದತ್ತಾಂಶಗಳು ಬೆಟ್ಟು ಮಾಡಿವೆ. ಡಿ.15,2025ರಂದು ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಅವರು ಸಂಸತ್ತಿನಲ್ಲಿ ನೀಡಿದ ಲಿಖಿತ ಉತ್ತರದಲ್ಲಿ ಪಿಎಂಐಎಸ್ನ ಪ್ರಾಯೋಗಿಕ ಯೋಜನೆಯ ಮೊದಲ ಸುತ್ತಿನಲ್ಲಿ 1.27 ಲಕ್ಷ ಇಂಟರ್ನಶಿಪ್ ಅವಕಾಶಗಳಿಗಾಗಿ 6.21 ಲಕ್ಷ ಅರ್ಜಿಗಳನ್ನು ಸ್ವೀಕರಿಸಲಾಗಿತ್ತು. ಕಂಪನಿಗಳು 82,000ಕ್ಕೂ ಹೆಚ್ಚಿನ ಅವಕಾಶಗಳನ್ನು ಮುಂದಿಟ್ಟಿದ್ದರೂ ಕೇವಲ ಸುಮಾರು 28,000 ಅವಕಾಶಗಳನ್ನು (ಶೇ.34) ಅಭ್ಯರ್ಥಿಗಳು ಸ್ವೀಕರಿಸಿದ್ದರು. 2025, ನ.30ಕ್ಕೆ ಇದ್ದಂತೆ ಕೇವಲ 2,066 ಇಂಟರ್ನ್ಗಳು ತಮ್ಮ ಇಂಟರ್ನ್ಶಿಪ್ಗಳನ್ನು ಪೂರ್ಣಗೊಳಿಸಿದ್ದಾರೆ ಎಂದು ತಿಳಿಸಿದ್ದರು. ಎರಡನೇ ಸುತ್ತಿನಲ್ಲಿಯೂ ಇದೇ ರೀತಿಯ ಪ್ರವೃತ್ತಿ ಕಂಡು ಬಂದಿದೆ. 1.18 ಲಕ್ಷ ಅವಕಾಶಗಳ ಪೈಕಿ 83,000ಕ್ಕೂ ಅಧಿಕ ಇಂಟರ್ನ್ಶಿಪ್ ಅವಕಾಶಗಳನ್ನು ಅಭ್ಯರ್ಥಿಗಳ ಮುಂದಿರಿಸಲಾಗಿತ್ತಾದರೂ, 24,000ಕ್ಕೂ ಕಡಿಮೆ ಅಭ್ಯರ್ಥಿಗಳು ಸ್ವೀಕರಿಸಿದ್ದರು (ಶೇ.30ಕ್ಕೂ ಕಡಿಮೆ). ಯಾವುದೇ ಅಧಿಕೃತ ವಿವರಣೆಯನ್ನು ನೀಡಿಲ್ಲವಾದರೂ ಅಲ್ಪ ಪ್ರಮಾಣದ ಆರ್ಥಿಕ ನೆರವು ಅಭ್ಯರ್ಥಿಗಳ ನಿರಾಸಕ್ತಿಗೆ ಕಾರಣವಾಗಿರಬಹುದು ಎಂದು ಸರಕಾರಿ ಅಧಿಕಾರಿಗಳು ಅಭಿಪ್ರಾಯಿಸಿದ್ದಾರೆ. ಇಂಟರ್ನ್ಗಳು 12 ತಿಂಗಳುಗಳ ಅವಧಿಗೆ ಮಾಸಿಕ 5,000 ರೂ.ಗಳನ್ನು ಪಡೆಯುತ್ತಾರೆ, ಜೊತೆಗೆ 6,000 ರೂ.ಗಳ ಒಂದು ಬಾರಿಯ ಅನುದಾನ ಮತ್ತು ವಿಮೆ ಸೌಲಭ್ಯವನ್ನೂ ಒದಗಿಸಲಾಗುತ್ತದೆ.
BMC Elections 2026: ಮಹಾರಾಷ್ಟ್ರ ಪಾಲಿಕೆ ಚುನಾವಣೆಯಲ್ಲಿ ಚುರುಕಿನ ಮತದಾನ, ಮುಂಬೈ ಗದ್ದುಗೆ ಯಾರಿಗೆ?
ಮುಂಬೈ: ಮಹಾರಾಷ್ಟ್ರದಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆ 2026 ಇಂದು ಜನವರಿ 15ರಂದು ಬೆಳಗ್ಗೆಯಿಂದ ಆರಂಭವಾಗಿದೆ. ಪ್ರಮುಖ ರಾಜಕೀಯ ಪಕ್ಷಗಳು ಮುಖಾಮುಖಿ ಆಗಿವೆ. ಮಹಾರಾಷ್ಟ್ರದಾದ್ಯಂತ 29 ಮಹಾನಗರ ಪಾಲಿಕೆಗಳಲ್ಲಿ ಮತದಾನ ನಡೆಯುತ್ತಿದೆ. ಮಧ್ಯಾಹ್ನ 1.30ಕ್ಕೆ ಮುಂಬೈ 30%, ಪುಣೆ 27% ಮತ್ತು ನಾಗಪುರ 26.5% ರಷ್ಟು ಮತದಾನ ಆಗಿದೆ. ಮಹಾರಾಷ್ಟ್ರ ಬೃಹನ್ ಮುಂಬೈ ಮಹಾನಗರ ಪಾಲಿಕೆ (ಹಿಎಂಸಿ) ಸೇರಿದಂತೆ
ಹಂಪಿ ಉತ್ಸವ ವಿಜೃಂಭಣೆಯ ವಿನೂತನವಾಗಿ ಆಚರಿಸಲು ಸಿದ್ಧತೆ ಕೈಗೊಳ್ಳಿ: ಅಧಿಕಾರಿಗಳಿಗೆ ಸಚಿವ ಝಮೀರ್ ಸೂಚನೆ
ಹಂಪಿ ಉತ್ಸವ ಪೂರ್ವಭಾವಿ ಸಭೆ
ಉಪವಾಸ ಕ್ಯಾನ್ಸರನ್ನು ಗುಣಪಡಿಸುತ್ತದೆ ಎಂದ ಅಣ್ಣಾಮಲೈ; ವೈದ್ಯರು ಮತ್ತು ಅಧ್ಯಯನಗಳು ಹೇಳಿದ್ದೇನು?
ವೈದ್ಯರಾದ ವೇಲುಮಣಿ ಹೇಳುವ ಪ್ರಕಾರ ಉಪವಾಸವೊಂದರಿಂದಲೇ ಕ್ಯಾನ್ಸರ್ ಅನ್ನು ತೊಡೆದು ಹಾಕಬಹುದಾದರೆ ಸಾವಿರಾರು ಆಂಕೊಲಜಿ ಆಸ್ಪತ್ರೆಗಳು ಇರುವುದು ವ್ಯರ್ಥ! ಬಿಜೆಪಿ ನಾಯಕ ಕೆ ಅಣ್ಣಾಮಲೈ ಇತ್ತೀಚೆಗೆ ಉಪವಾಸದಿಂದ ಕ್ಯಾನ್ಸರ್ ತೊಡೆದು ಹಾಕಬಹುದು ಎಂದು ಹೇಳಿರುವುದು ಬಹಳ ಟೀಕೆಗೆ ಗುರಿಯಾಗಿದೆ. ಮುಖ್ಯವಾಗಿ ವೈದ್ಯಕೀಯ ವೃತ್ತಿಪರರು ಮತ್ತು ಕೈಗಾರಿಕೋದ್ಯಮಿಗಳು ವೈಜ್ಞಾನಿಕವಾಗಿ ತಳಹದಿಯಿಲ್ಲದದ ಇಂತಹ ಹೇಳಿಕೆ ಬಹಳ ಅಪಾಯಕಾರಿ ಬೆಳವಣಿಗೆ ಎಂದು ಹೇಳಿದ್ದಾರೆ. ಅಣ್ಣಾಮಲೈ ಅವರ ಕ್ಯಾನ್ಸರ್ ಹೇಳಿಕೆ: ಅಣ್ಣಾಮಲೈ ಹೇಳಿರುವ ಪ್ರಕಾರ 24 ಗಂಟೆ ಉಪವಾಸ ಮಾಡಿದರೆ ಕ್ಯಾನ್ಸರ್ ಜೀವಕೋಶಗಳಿಗೆ ಶಕ್ತಿ ಸರಬರಾಜು ನಿಲ್ಲುತ್ತದೆ ಮತ್ತು ಅವು ಸತ್ತು ಹೋಗುತ್ತವೆ ಮತ್ತು ಏಳು ದಿನಗಳ ಉಪವಾಸದಿಂದ ದೇಹದಲ್ಲಿರುವ ಎಲ್ಲಾ ಕ್ಯಾನ್ಸರ್ ಜೀವಕೋಶಗಳನ್ನು ತೊಡೆದು ಹಾಕಬಹುದಾಗಿದೆ. ಅವರು ಪದೇಪದೆ ಆಧುನಿಕ ಜೀವನಶೈಲಿ ಮತ್ತು ಸಂಸ್ಕರಿತ ಆಹಾರ ಸೇವಿಸದೆ, ಉಪವಾಸ, ಹಠಯೋಗ ಮತ್ತು ಅಂಗಮರ್ಧನ ಯೋಗದಂತಹ ಯೋಗಾಭ್ಯಾಸದಿಂದ ಕ್ಯಾನ್ಸರ್ ತೊಡೆದು ಹಾಕಬಹುದು ಎಂದು ಹೇಳುತ್ತಿದ್ದಾರೆ. ಮುಂದುವರಿದು ಅವರು ಸಲಹೆ ನೀಡಿರುವ ಪ್ರಕಾರ, ಹಿಂದಿನ ತಲೆಮಾರು ಉಪವಾಸ ಸಂಪ್ರದಾಯಗಳನ್ನು ಅನುಸರಿಸಿಕೊಂಡು ಬಂದ ಕಾರಣ ಕ್ಯಾನ್ಸರ್ ಸಮಸ್ಯೆಯನ್ನು ಎದುರಿಸಿಲ್ಲ. ಕ್ಯಾನ್ಸರ್ ಜೀವಕೋಶಗಳು ಸಾಮಾನ್ಯ ಜೀವಕೋಶಗಳಿಗಿಂತ ಹೆಚ್ಚು ಶಕ್ತಿಯನ್ನು ಬಳಸುತ್ತವೆ, ಹೀಗಾಗಿ ಆಹಾರ ಸೇವನೆ ತೊರೆದರೆ ಕ್ಯಾನ್ಸರ್ ಜೀವಕೋಶಗಳು ಸತ್ತು ಹೋಗುತ್ತವೆ! ಹೇಳಿಕೆ ತಪ್ಪು ಎಂದ ವೈದ್ಯರು ಥೈರೋಕೇರ್ ಸಂಸ್ಥಾಪಕರಾದ ಡಾ. ಎ. ವೇಲುಮಣಿ ಅವರು ಇಂತಹ ಹೇಳಿಕೆ ಹಾಸ್ಯಾಸ್ಪದ ಎಂದಿದ್ದಾರೆ. ಅವರ ಪತ್ನಿ ಕ್ಯಾನ್ಸರ್ ನಿಂದ ಮೃತಪಟ್ಟಿದ್ದಾರೆ. “2016ರಲ್ಲಿ ತಾನು ಅಂತಹ ಹೇಳಿಕೆಗಳನ್ನು ಕೇಳಿದ್ದರೆ ಚೆನ್ನಾಗಿತ್ತು” ಎಂದು ಅವರು ವ್ಯಂಗ್ಯವಾಡಿದ್ದಾರೆ. ವೇಲುಮಣಿ ಹೇಳುವ ಪ್ರಕಾರ ಉಪವಾಸವೊಂದರಿಂದಲೇ ಕ್ಯಾನ್ಸರ್ ಅನ್ನು ತೊಡೆದು ಹಾಕಬಹುದಾದರೆ ಸಾವಿರಾರು ಆಂಕೊಲಜಿ ಆಸ್ಪತ್ರೆಗಳು ಇರುವುದು ವ್ಯರ್ಥ. ಮಾತ್ರವಲ್ಲದೆ, “ಜಾಗತಿಕವಾಗಿ ವೈದ್ಯಕೀಯ ತಂತ್ರಜ್ಞಾನ ಸಂಸ್ಥೆಗಳು ಹುಟ್ಟಿಕೊಳ್ಳುತ್ತಲೇ ಇರಲಿಲ್ಲ” ಎಂದು ಅವರು ಹೇಳಿದ್ದಾರೆ. ವೇಲುಮಣಿ ಮುಂದುವರಿದು, ಜಾಗತಿಕವಾಗಿ ಅತ್ಯಾಧುನಿಕ ಕ್ಯಾನ್ಸರ್ ಚಿಕಿತ್ಸೆಗಳಿಗಾಗಿ ವ್ಯಾಪಕ ಹೂಡಿಕೆಗಳನ್ನು ಮಾಡಲಾಗುತ್ತಿದೆ. ಸೈಕ್ಲೊಟ್ರೊನ್ಗಳು, PET-CT, PET-MR, ಲೀನಿಯರ್ ಅಕ್ಸಲರೇಟರ್ಗಳು, ಗಾಮಾ ನೈಫ್ ವಿಧಾನಗಳೂ, ಪ್ರೊಟೋನ್ ಥೆತಪಿ ಮತ್ತು ರೊಬೊಟಿಕ್ ಸರ್ಜರಿಗಳನ್ನು ಅನುಸರಿಸಲಾಗುತ್ತದೆ. ಹೇಳಿಕೆಗೆ ವಿರುದ್ಧವಾಗಿರುವ ಸಾಕ್ಷ್ಯಗಳು ವೈದ್ಯಕೀಯ ಸಾಕ್ಷ್ಯಗಳು ಅಣ್ಣಾಮಲೈ ಹೇಳಿಕೆಗೆ ವಿರುದ್ಧವಾಗಿದೆ. ಅಮೆರಿಕದ ರಾಷ್ಟ್ರೀಯ ಆರೋಗ್ಯ ಸಂಸ್ಥೆ ಅಧ್ಯಯನದ ಪ್ರಕಾರ ಕ್ಯಾನ್ಸರ್ ಆರೈಕೆಯಲ್ಲಿ ವಿವಿಧ ರೀತಿಯ ಉಪವಾಸ ಮತ್ತು ಕ್ಯಾಲರಿ ನಿರ್ಬಂಧದ ಸಂಶೋಧನೆ ಸೀಮಿತವಾಗಿದೆ. ಇನ್ಸುಲಿನ್-ಪ್ರಚೋದಿತ ಬೆಳವಣಿಗೆ ಮತ್ತು ಇತರ ಪ್ರಸ್ತುತವೆನಿಸಿದ ಹಾರ್ಮೋನಲ್ ಮತ್ತು ಕ್ಯಾರ್ಸಿನೋಜೆನಿಸಿಸ್ನ ಸೂಚ್ಯಂಕಗಳಾದ ಇತರ ಉರಿಯೂತಗಳ ಮೇಲೆ ಅನಿರ್ದಿಷ್ಟಾವಧಿ ಉಪವಾಸದ ಪರಿಣಾಮಗಳು ಈವರೆಗೂ ಚಿಕಿತ್ಸಾತ್ಮಕವಾಗಿ ಉಪಯುಕ್ತವಲ್ಲ. ಮುಖ್ಯವಾಗಿ ಉಪವಾಸ ಮಾತ್ರದಿಂದ ಕ್ಯಾನ್ಸರ್ ಗುಣವಾಗುವುದು ಅಥವಾ ತೊಡೆದುಹಾಕುತ್ತದೆ ಎಂದು ಸಾಬೀತಾಗಿಲ್ಲ. ಪ್ರಾಥಮಿಕ ಚಿಕಿತ್ಸೆಯಾಗಿ ಉಪವಾಸದ ಪಾತ್ರ ನಗಣ್ಯ ನಿರ್ದಿಷ್ಟ ಸಂದರ್ಭದಲ್ಲಿ ಕ್ಯಾನ್ಸರ್ ಚಿಕಿತ್ಸೆಯಲ್ಲಿ ನಿರ್ದಿಷ್ಟ ಅಡ್ಡಪರಿಣಾಮಗಳನ್ನು ಕಡಿಮೆಗೊಳಿಸಲು ನೆರವಾಗುವ ಸಾಧ್ಯತೆಯಿದೆ. ಆದರೆ ಕೀಮೋಥೆರಪಿ, ರೇಡಿಯೊಥೆರಪಿ ಅಥವಾ ಉದ್ದೇಶಿತ ಔಷಧಿಗಳ ಜೊತೆಗೆ ಬಳಸದೆ ಇದ್ದರೆ ಅರ್ಥಪೂರ್ಣ ಫಲಿತಾಂಶಗಳು ಸಿಗುವುದು ಅಪರೂಪ. ಕ್ಯೂರಿಯಸ್ ಜರ್ನಲ್ ಆಫ್ ಮೆಡಿಕಲ್ ಸೈನ್ಸ್ನಲ್ಲಿ ಪ್ರಕಟವಾದ ಸಮಗ್ರ ಪರಿಶೀಲನೆಯು ಕ್ಯಾನ್ಸರ್ ಗೆ ಉಪವಾಸ ಮಾತ್ರ ಚಿಕಿತ್ಸೆಯಾಗಬಲ್ಲದು ಎನ್ನುವ ಸಿದ್ಧಾಂತವನ್ನು ಸುಳ್ಳೆಂದು ಹೇಳಿದೆ. ಸಮಕಾಲೀನ ಚಿಕಿತ್ಸೆಯ ಜೊತೆಗೆ ಉಪವಾಸವನ್ನು ಪೂರಕವಾಗಿ ಬಳಸಿದಾಗ ಬೆಂಬಲಿತ ಪಾತ್ರವನ್ನು ನಿರ್ವಹಿಸಬಹುದು. ಆದರೆ ಪ್ರಾಥಮಿಕ ಚಿಕಿತ್ಸೆಯಾಗಿ ಉಪವಾಸದ ಪಾತ್ರ ನಗಣ್ಯ ಎಂದು ಅಧ್ಯಯನ ಹೇಳಿದೆ. ಉಪವಾಸವನ್ನು ಒಂದು ಮಹತ್ವವಾದ ಚಿಕಿತ್ಸೆಯಾಗಿ ಮುಂದಿಡುವುದು ದಾರಿ ತಪ್ಪಿಸುವ ಹೇಳಿಕೆಗಳಾಗಿವೆ ಎಂದು ಅಧ್ಯಯನ ಹೇಳಿದೆ.
ಮಹಾರಾಷ್ಟ್ರ ಚುನಾವಣೆಯಲ್ಲಿ ಶಾಯಿ ವಿವಾದ: ‘ಮಾರ್ಕರ್ ಪೆನ್’ ಬಳಕೆಗೆ ಠಾಕ್ರೆ ಬ್ರದರ್ಸ್ ಕಿಡಿ, ಆಯೋಗ ಸ್ಪಷ್ಟನೆ
ಮಹಾರಾಷ್ಟ್ರದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮತದಾರರ ಬೆರಳಿಗೆ ಗುರುತು ಹಾಕಲು 'ಅಳಿಸಲಾಗದ ಶಾಯಿ'ಯ ಬದಲಿಗೆ 'ಮಾರ್ಕರ್ ಪೆನ್' ಬಳಸುತ್ತಿರುವುದು ವಿವಾದಕ್ಕೆ ಕಾರಣವಾಗಿದೆ. ಈ ಮಾರ್ಕರ್ ಗುರುತನ್ನು ರಾಸಾಯನಿಕ ಬಳಸಿ ಅಳಿಸಬಹುದು, ಇದು ನಕಲಿ ಮತದಾನಕ್ಕೆ ದಾರಿ ಮಾಡಿಕೊಡುತ್ತದೆ ಎಂದು ರಾಜ್ ಠಾಕ್ರೆ ಮತ್ತು ಉದ್ಧವ್ ಠಾಕ್ರೆ ನೇತೃತ್ವದ ವಿಪಕ್ಷಗಳು ಆರೋಪಿಸಿವೆ. ಆದರೆ, ಈ ಆರೋಪವನ್ನು ತಳ್ಳಿಹಾಕಿರುವ ಚುನಾವಣಾ ಆಯೋಗ, 2012ರಿಂದಲೇ ಸ್ಥಳೀಯ ಚುನಾವಣೆಗಳಲ್ಲಿ ಮಾರ್ಕರ್ ಪೆನ್ ಬಳಸಲಾಗುತ್ತಿದೆ ಮತ್ತು ನಕಲಿ ಮತದಾನ ತಡೆಯಲು ಸೂಕ್ತ ವ್ಯವಸ್ಥೆ ಇದೆ ಎಂದು ಸ್ಪಷ್ಟಪಡಿಸಿದೆ.
ಹೊಸದಿಲ್ಲಿ: I-PAC ಕಚೇರಿ ಮೇಲೆ ಈಡಿ ದಾಳಿಗೆ ಸಂಬಂಧಿಸಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳ ವಿರುದ್ಧದ ಎಫ್ಐಆರ್ಗೆ ಸುಪ್ರೀಂ ಕೋರ್ಟ್ ತಡೆ ನೀಡಿದೆ. ಈ ಕುರಿತು ಮಮತಾ ಬ್ಯಾನರ್ಜಿ, ಪಶ್ಚಿಮ ಬಂಗಾಳ ಪೊಲೀಸರು ಮತ್ತು ಇತರರಿಗೆ ನೋಟಿಸ್ ನೀಡಿದೆ. ಜನವರಿ 8ರಂದು ಕಲ್ಲಿದ್ದಲು ಕಳ್ಳಸಾಗಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ ಕಚೇರಿ ಮತ್ತು ಸಂಸ್ಥೆಯ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಕೋಲ್ಕತ್ತಾದ ನಿವಾಸದ ಮೇಲೆ ದಾಳಿ ನಡೆಸಿದಾಗ ಅಡ್ಡಿಪಡಿಸಿದ್ದಾರೆಂದು ಈಡಿ ಅಧಿಕಾರಿಗಳು ಸಲ್ಲಿಸಿದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸಿದೆ. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಈ ವೇಳೆ ಮಧ್ಯೆ ಪ್ರವೇಶಿಸಿ ತನಿಖೆಗೆ ಸಂಬಂಧಿಸಿದ ಪ್ರಮುಖ ಸಾಕ್ಷ್ಯಗಳನ್ನು ತೆಗೆದುಕೊಂಡು ಹೋಗಿದ್ದಾರೆ ಎಂದು ತನಿಖಾ ಸಂಸ್ಥೆ ಆರೋಪಿಸಿದೆ. ಈ ಬಗ್ಗೆ ಸುಪ್ರೀಂ ಕೋರ್ಟ್ ಬಂಗಾಳ ಸರಕಾರ, ಸಿಎಂ ಮಮತಾ ಬ್ಯಾನರ್ಜಿ, ಡಿಜಿಪಿ ರಾಜೀವ್ ಕುಮಾರ್ ಮತ್ತು ಇತರರಿಗೆ ನೋಟಿಸ್ ಜಾರಿ ಮಾಡಿದೆ. ಐ-ಪಿಎಸಿ ಕಚೇರಿ ಮತ್ತು ಪ್ರತೀಕ್ ಜೈನ್ ಅವರ ನಿವಾಸದ ಮೇಲೆ ದಾಳಿ ನಡೆಸಿದ ಈಡಿ ಅಧಿಕಾರಿಗಳ ವಿರುದ್ಧದ ಎಫ್ಐಆರ್ ಗೆ ಇದೇ ವೇಳೆ ನ್ಯಾಯಾಲಯ ತಡೆ ನೀಡಿದೆ. ಐ-ಪಿಎಸಿ ಕಚೇರಿ ಮೇಲಿನ ದಾಳಿಯ ವೇಳಿನ ಸಿಸಿಟಿವಿ ದೃಶ್ಯಾವಳಿಗಳನ್ನು ರಕ್ಷಿಸುವಂತೆ ಪಶ್ಚಿಮ ಬಂಗಾಳ ಪೊಲೀಸರಿಗೆ ನ್ಯಾಯಾಲಯ ಇದೇ ವೇಳೆ ನಿರ್ದೇಶನ ನೀಡಿದೆ. ಈ ಕುರಿತು ಫೆಬ್ರವರಿ 3ರಂದು ಹೆಚ್ಚಿನ ವಿಚಾರಣೆ ನಡೆಯಲಿದೆ.
ಧಾರವಾಡ: ಸರ್ಕಾರಿ ಶಾಲಾ ಮಕ್ಕಳ ಅಪಹರಣ ಪ್ರಕರಣ, ಜಿಲ್ಲಾಧಿಕಾರಿ ದಿವ್ಯ ಪ್ರಭು ಹೇಳಿದ್ದೇನು
ಧಾರವಾಡ: ಇಲ್ಲಿನ ಸರ್ಕಾರಿ ಶಾಲೆಯ ಮಕ್ಕಳನ್ನು ಅಪಹರಣ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್ಐಆರ್ ದಾಖಲಿಸಿಕೊಳ್ಳಲಾಗಿದೆ. ಜನವರಿ 12 ರಂದು ಜರುಗಿದ ಕಮಲಾಪುರ ಸರ್ಕಾರಿ ಪ್ರಾಥಮಿಕ ಶಾಲೆಯ ಅಪಹರಣ ಪ್ರಕರಣದ ಆರೋಪಿ ವಿರುದ್ಧ ಎಫ್ಐಆರ್ ದಾಖಲಿಸಿ, ಪೊಲೀಸ್ ಕ್ರಮ ಜರುಗಿಸಲಾಗಿದೆ. ಶಾಲಾ ಅವಧಿಯಲ್ಲಿ ಮಕ್ಕಳ ಅಪಹರಣ ಆಗಿರುವುದರಿಂದ ಈ ಕುರಿತು ತನಿಖೆ ಮಾಡಿ ವರದಿ ನೀಡಲು, ಜಿಲ್ಲಾ ಪಂಚಾಯತ್
ದೇಶದಲ್ಲಿ 50 ಲಕ್ಷ ನುರಿತ ಪ್ಯಾರಾ ಮೆಡಿಕಲ್ ಸಿಬ್ಬಂದಿಯ ಕೊರತೆ: ಸಚಿವ ಶ್ರೀಪಾದ್ ನಾಯಕ್
ಉಡುಪಿ, ಜ.15: ಪ್ರಸಕ್ತ ಭಾರತದಲ್ಲಿ ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿ 50 ಲಕ್ಷ ಹಾಗೂ ಕರ್ನಾಟಕದಲ್ಲಿ 30 ಸಾವಿರ ತರಬೇತಿ ಪಡೆದ ನುರಿತ ಪ್ಯಾರಾ ಮೆಡಿಕಲ್ ಸಿಬ್ಬಂದಿಯ ಕೊರತೆ ಇದೆ. ಈ ವಾಸ್ತಾವಾಂಶ ಪ್ಯಾರಾ ಮೆಡಿಕಲ್ ನಲ್ಲಿನ ಅವಕಾಶ ಮತ್ತು ಬೇಡಿಕೆಯನ್ನು ಎತ್ತಿ ತೋರಿಸುತ್ತದೆ ಎಂದು ಕೇಂದ್ರ ವಿದ್ಯುತ್ ಮತ್ತು ನವೀಕರಿಸಬಹುದಾದ ಇಂಧನ ಇಲಾಖೆಯ ರಾಜ್ಯ ಸಚಿವ ಶ್ರೀಪಾದ್ ನಾಯಕ್ ಹೇಳಿದ್ದಾರೆ. ಉಡುಪಿ ನೇತ್ರಜ್ಯೋತಿ ಕಾಲೇಜಿನಲ್ಲಿ ಗುರುವಾರ ನಡೆದ ಸಂಸ್ಥೆಯ ವಾರ್ಷಿಕ ಘಟಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ, ವಿದ್ಯಾರ್ಥಿಗಳಿಗೆ ಘಟಿಕೋತ್ಸವವನ್ನು ಪ್ರದಾನ ಮಾಡಿ ಅವರು ಮಾತನಾಡುತ್ತಿದ್ದರು. ಈ ಕ್ಷೇತ್ರದಲ್ಲಿರುವ ಸಿಬ್ಬಂದಿಯ ಕೊರತೆಯನ್ನು ನೇತ್ರಜ್ಯೋತಿಯಂತಹ ಸಂಸ್ಥೆಗಳು ನೀಗಿಸುವ ಕಾರ್ಯ ಮಾಡುತ್ತಿದೆ ಎಂದ ಅವರು, ಪ್ಯಾರಾ ಮೆಡಿಕಲ್ ವೃತ್ತಿ ಎಂಬುದು ಆರೋಗ್ಯ ಕ್ಷೇತ್ರದ ಬೆನ್ನೆಲುಬು ಆಗಿದೆ. ಪ್ಯಾರಾ ಮೆಡಿಕಲ್ ಸಿಬ್ಬಂದಿ ತಮ್ಮ ಸೇವೆಯಲ್ಲಿ ಶಿಸ್ತು, ವಿನಯವನ್ನು ಅಳವಡಿಸಿಕೊಳ್ಳಬೇಕು. ಪ್ಯಾರಾ ಮೆಡಿಕಲ್ ಆರೋಗ್ಯ ರಕ್ಷಣೆಯ ಸೇವೆಗೆ ನಮ್ಮಲ್ಲಿ ಅತ್ಯುತ್ತಮ ಸ್ಥಾನ ಇದೆ. ಸೇವೆ ಎಂಬುದು ಅತ್ಯಂತ ಪ್ರಮುಖ ಕರ್ತವ್ಯವಾಗಿದೆ ಎಂದರು. ಸಂಸದ ಕೋಟ ಶ್ರೀನಿವಾಸ ಪೂಜಾರಿ, ಉಡುಪಿ ಶಾಸಕ ಯಶ್ಪಾಲ್ ಸುವರ್ಣ, ಕರ್ನಾಟಕ ಸ್ಟೇಟ್ ಅಲೈಡ್ ಆಂಡ್ ಹೆಲ್ತ್ ಕೇರ್ ಕೌನ್ಸಿಲ್ ಅಧ್ಯಕ್ಷ ಡಾ.ಯು.ಟಿ.ಇಫ್ತಿಕಾರ್ ಅಲಿ ಮುಖ್ಯ ಅತಿಥಿಗಳಾಗಿದ್ದರು. ಶ್ರೀಮತಿ ವೀಣಾ ರಘುರಾಮ್ ರಾವ್ ದತ್ತಿ ಪ್ರಶಸ್ತಿಯನ್ನು ಸಾಧಕ ವಿದ್ಯಾರ್ಥಿಗಳಿಗೆ ಪ್ರದಾನ ಮಾಡಲಾಯಿತು. ವೇದಿಕೆಯಲ್ಲಿ ನೇತ್ರಜ್ಯೋತಿ ಚಾರಿಟೇಬಲ್ ಟ್ರಸ್ಟ್ ನ ಟ್ರಸ್ಟಿ ರಘುರಾಮ್ ರಾವ್, ನೇತ್ರಜ್ಯೋತಿ ಕಾಲೇಜಿನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಗೌರಿಪ್ರಭು ಉಪಸ್ಥಿತರಿದ್ದರು. ಕಾಲೇಜಿನ ಸ್ಥಾಪಕ ಅಧ್ಯಕ್ಷ ಡಾ.ಕೃಷ್ಣ ಪ್ರಸಾದ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಧ್ಯಕ್ಷೆ ರಶ್ಮಿ ಕೃಷ್ಣ ಪ್ರಸಾದ್ ವರದಿ ವಾಚಿಸಿದರು. ಶ್ರೀನಿಧಿ ಹಾಗೂ ಆಯಿಶ ಕಾರ್ಯಕ್ರಮ ನಿರೂಪಿಸಿದರು.
ರಾಜ್ಯ ರಾಜಕೀಯಕ್ಕೆ ಮರಳುವ ಸುಳಿವು ಕೊಟ್ಟ ಎಚ್ಡಿಕೆ: ಯಾವಾಗ ಎಂಟ್ರಿ ನೀಡುತ್ತಾರೆ ಕೇಂದ್ರ ಸಚಿವ
ನಾನು ರಾಜ್ಯ ರಾಜಕೀಯದಿಂದ ದೂರ ಸರಿಯುವುದಿಲ್ಲ ಎಂದು ಕೇಂದ್ರ ಸಚಿವ ಎಚ್ಡಿ ಕುಮಾರಸ್ವಾಮಿ ಅವರು ಹೇಳಿದರು. ಬೆಂಗಳೂರಿನಲ್ಲಿ ಗುರುವಾರ ಮಾತನಾಡಿದ ಅವರು, ರಾಜ್ಯ ರಾಜಕಾರಣಕ್ಕೆ ಮರಳುವ ಸುಳಿವು ನೀಡಿದರು. ಇದೇ ವೇಳೆ ನಾಡಿನ ಜನರಿಗೆ ಸಂಕ್ರಾಂತಿ ಹಬ್ಬದ ಶುಭಾಶಯ ಕೋರಿದ ಕೇಂದ್ರ ಸಚಿವ ಕುಮಾರಸ್ವಾಮಿ, ಸಂಕ್ರಾಂತಿ ಹಬ್ಬ ಕೃಷಿಕರ ಹಬ್ಬ. ಈ ಬಾರಿ ಕಾಲ ಕಾಲಕ್ಕೆ ಹವಾಮಾನದಲ್ಲಿ ವ್ಯತ್ಯಾಸ ಆಗದೆ ಪ್ರಕೃತಿಯೂ ಸಹಕಾರ ನೀಡಲಿ ಎಂದು ಪ್ರಾರ್ಥಿಸುತ್ತೇನೆ. ಸಂಕ್ರಾಂತಿ ಮಣ್ಣಿನ ಮಕ್ಕಳ ಸಂಭ್ರಮ. ಸುಗ್ಗಿ, ಸಮೃದ್ಧಿಯ ಪ್ರತೀಕ. ಈ ಶುಭ ಸಂದರ್ಭದಲ್ಲಿ ಎಲ್ಲರಿಗೂ ಒಳ್ಳೆಯದಾಗಲಿ. ಎಳ್ಳು ಬೆಲ್ಲದಂತೆ ಎಲ್ಲರ ಮನೆ ಮನಗಳಲ್ಲಿ ಸುಖ ಸಂತೋಷ, ನೆಮ್ಮದಿ ನೆಲೆಸಲಿ ಹಾಗೂ ಇನ್ನೂ ಹೆಚ್ಚಿನ ಆಯುರಾರೋಗ್ಯ ಸಿಗುವಂತಾಗಲಿ ಎಂದು ಹಾರೈಸಿದರು.
ಇರಾನ್ ಹಿಂಸಾತ್ಮಕ ಪ್ರತಿಭಟನೆಗಳನ್ನು ನೋಡಿ ಹೇಗೆ ಅಮೆರಿಕ ನಗುತ್ತಿದೆಯೋ ಹಾಗೆಯೇ ಪಾಕಿಸ್ತಾನ ಮತ್ತು ಚೀನಾ ಕೂಡ ಖಮೇನಿ ಆಡಳಿತ ಬದಲಾಗುವುದನ್ನು ಕಾಯುತ್ತಿದೆ. ಇರಾನ್ನಲ್ಲಿ ಸರ್ಕಾರ ಬದಲಾವಣೆ ಈ ಎರಡೂ ದೇಶಗಳಿಗೆ ಲಾಭ ತಂದುಕೊಡಲಿದೆ. ಆದರೆ ಭಾರತಕ್ಕೆ ಇಂತಹ ಯಾವುದೇ ಬೆಳವಣಿಗೆ ರಾಜತಾಂತ್ರಿಕವಾಗಿ ಹಿನ್ನಡೆಯನ್ನುಂಟು ಮಾಡಲಿದೆ. ಇರಾನ್-ಭಾರತ ನಡುವಿನ ಕಾರ್ಯತಂತ್ರದ ಪಾಲುದಾರಿಕೆ ಪಾಕಿಸ್ತಾನವನ್ನು ನಿಯಂತ್ರಿಸುವಲ್ಲಿ ಸಹಾಯ ಮಾಡಿದ್ದು, ಇರಾನ್ನಲ್ಲಿ ಸದ್ಯ ಸರ್ಕಾರ ಬದಲಾವಣೆ ಸಂಭವಿಸಿದರೆ, ಇದು ತಪ್ಪಬಹುದು. ಈ ಬಗ್ಗೆ ಇಲ್ಲಿದೆ ವಿಶ್ಲೇಷಣಾತ್ಮಕ ವರದಿ.
ಉಡುಪಿ ಆದರ್ಶ ಆಸ್ಪತ್ರೆಯ ಕ್ಯಾನ್ಸರ್ -ತೆರೆದ ಹೃದಯದ ಶಸ್ತ್ರಚಿಕಿತ್ಸೆ ವಿಭಾಗ ಉದ್ಘಾಟನೆ
ಉಡುಪಿ, ಜ.15: ಉಡುಪಿ ಆದರ್ಶ ಆಸ್ಪತ್ರೆಯಲ್ಲಿ ನೂತನ ಕ್ಯಾನ್ಸರ್ ಹಾಗೂ ತೆರೆದ ಹೃದಯದ ಶಸ್ತ್ರಚಿಕಿತ್ಸಾ ವಿಭಾಗದ ಉದ್ಘಾಟನೆ ಕಾರ್ಯಕ್ರಮ ಗುರುವಾರ ನಡೆಯಿತು. ಅದಮಾರು ಮಠದ ಹಿರಿಯ ಯತಿ ಶ್ರೀ ವಿಶ್ವಪ್ರಿಯ ತೀರ್ಥ ಸ್ವಾಮೀಜಿ ಆಶೀರ್ವಚನ ನೀಡಿ, ಪ್ರತಿಯೊಂದು ರೋಗಕ್ಕೂ ಮೂಲ ಕಾರಣ ಅಜೀರ್ಣ. ಮಾನಸಿಕ ಕಾಯಿಲೆಗಳಿಗೂ ಇದೇ ಕಾರಣವಾಗಿದೆ. ನಾವು ಸೇವಿಸುವ ಆಹಾರವನ್ನು ಹಿಡಿತದಲ್ಲಿ ಇಟ್ಟುಕೊಂಡರೇ ಯಾವುದೇ ರೋಗಗಳು ಬರುವುದಿಲ್ಲ ಎಂದು ಹೇಳಿದರು. ಅದಮಾರು ಮಠದ ಕಿರಿಯ ಯತಿ ಶ್ರೀಈಶಪ್ರಿಯ ತೀರ್ಥ ಸ್ವಾಮೀಜಿ ಆಶೀರ್ವಚನ ನೀಡಿ, ಯಾವುದೇ ರೋಗಿ ಕಾಯಿಲೆಯೊಂದಿಗೆ ಆಸ್ಪತ್ರೆಗೆ ಚಿಕಿತ್ಸೆ ಬಂದ ಬಳಿಕ ಜೀವನದ ಸಾಕಷ್ಟು ಪಾಠ ಕಲಿಯುತ್ತಾನೆ. ತನ್ನ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುತ್ತಾನೆ ಹಾಗೂ ಪರೋಪಕಾರಿ ಮನೋಭಾವ ಬೆಳೆಸುತ್ತಾನೆ. ಇಲ್ಲಿಗೆ ಬರುವ ರೋಗಿ ಚಿಕಿತ್ಸೆ ಪಡೆದು ನಗುಮುಖದೊಂದಿಗೆ ಮನೆಗೆ ಮರಳಿ, ಮುಂದೆ ಎಂದಿಗೂ ಆಸ್ಪತ್ರೆಗೆ ಬಾರದ ರೀತಿ ಆರೋಗ್ಯವಂತರಾಗಲಿ ಎಂದು ಹಾರೈಸಿದರು. ಕಾರ್ಡಿಯೋಥೊರಾಸಿಕ್ ಮತ್ತು ವಾಸ್ಕುಲರ್ ಶಸ್ತ್ರಚಿಕಿತ್ಸಕ ಡಾ.ಗುರು ಪ್ರಸಾದ್ ಡಿ. ರೈ ಮಾತನಾಡಿ, ಆಸ್ಪತ್ರೆಯಲ್ಲಿ ಹೃದಯದ ತುರ್ತು ಮತ್ತು ನಿರ್ದಿಷ್ಟ ಶಸ್ತ್ರಚಿಕಿತ್ಸೆಯನ್ನು ಆರಂಭಿಸಲಾಗಿದ್ದು, ಮುಂದೆ ಬೈಪಾಸ್ ಸರ್ಜರಿ ಹಾಗೂ ಕಪಾಟು ಬದಲಾವಣೆ ಸೇರಿದಂತೆ ಅತ್ಯಾಧುನಿಕ ಚಿಕಿತ್ಸೆಯನ್ನು ಆರಂಭಿಸಲು ಉದ್ದೇಶಿಸಲಾಗಿದೆ ಎಂದು ತಿಳಿಸಿದರು. ಕ್ಯಾನ್ಸರ್ ಶಸ್ತ್ರಚಿಕಿತ್ಸಕ ಡಾ.ಅನಂತ್ ಎಸ್.ಮಠದ್, ತಜ್ಞ ವೈದ್ಯ ಡಾ.ಸುಕೇನ್ ಶೆಟ್ಟಿ, ಹೃದ್ರೋಗ ತಜ್ಞರಾದ ಡಾ.ಶ್ರೀಕಾಂತ್ ಕೃಷ್ಣ, ಡಾ.ವಿಶು ಕುಮಾರ್, ಆಸ್ಪತ್ರೆಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ವಿಮಲಾ ಚಂದ್ರಶೇಖರ್ ಉಪಸ್ಥಿತರಿದ್ದರು. ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಹಾಗೂ ಹಿರಿಯ ವೈದ್ಯಕೀಯ ತಜ್ಞ ಡಾ.ಜಿ.ಎಸ್.ಚಂದ್ರಶೇಖರ್ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಆದರ್ಶ ಆಸ್ಪತ್ರೆಯ ನಿರ್ದೇಶಕ ಮತ್ತು ಹೃದ್ರೋಗ ತಜ್ಞ ಡಾ.ಸುಹಾಸ್ ಜಿ.ಸಿ. ಆಸ್ಪತ್ರೆಯ ಮುಂದಿನ ಯೋಜನೆಗಳ ಕುರಿತು ಮಾಹಿತಿ ನೀಡಿದರು. ಅನುಶ್ರೀ ಆಚಾರ್ ಕಾರ್ಯಕ್ರಮ ನಿರೂಪಿಸಿದರು.
ಜ.18ರಂದು ಮಂಗಳೂರಿನಲ್ಲಿ ಪ್ರಥಮ ಜಾಗತಿಕ ಬಿಲ್ಲವರ ಕ್ರೀಡೋತ್ಸವ
ವಿಶೇಷ ಆಕರ್ಷಣೆಯಾಗಿ ನಟ ಶಿವರಾಜ್ ಕುಮಾರ್ ಸಹಿತ ಸಿನಿತಾರೆಯರು ಭಾಗಿ
ನನ್ನ 'ಎಕ್ಸ್' ಪೋಸ್ಟನ್ನು ಬೇರೆ ರೀತಿ ವ್ಯಾಖ್ಯಾನಿಸುವುದರಲ್ಲಿ ಅರ್ಥವಿಲ್ಲ: ಡಿ.ಕೆ.ಶಿವಕುಮಾರ್
ರಾಹುಲ್ ಗಾಂಧಿ ನಮ್ಮ ನಾಯಕರು, ಅವರ ಭೇಟಿ ಹೊಸತಲ್ಲ, ಸಹಜ ಪ್ರಕ್ರಿಯೆ
ರಾಜ್ಯ ರಾಜಕೀಯದಿಂದ ದೂರ ಸರಿಯುವುದಿಲ್ಲ: ಎಚ್.ಡಿ.ಕುಮಾರಸ್ವಾಮಿ
ಬೆಂಗಳೂರು, ಜ.15: ರಾಜ್ಯ ರಾಜಕೀಯದಿಂದ ದೂರ ಸರಿಯುವುದಿಲ್ಲ. ನಾನು ರಾಜಕಾರಣದಲ್ಲಿ ಇದ್ದೇನೆ. ನಾನು ಎಲ್ಲಿರಬೇಕು ಎಂದು ತೀರ್ಮಾನ ಮಾಡುವುದು ರಾಜ್ಯದ ಜನತೆ. ರಾಜ್ಯ ರಾಜಕೀಯಕ್ಕೆ ಯಾವಾಗ ಬರಬೇಕು ಎಂದು ಜನತೆಯ ಆಶಯದ ಮೇರೆಗೆ ತೀರ್ಮಾನ ಮಾಡುತ್ತೇನೆ ಎಂದು ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ. ಬೆಂಗಳೂರಿನ ತಮ್ಮ ನಿವಾಸದ ಬಳಿ ಮಾಧ್ಯಮದವರ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಕೇಂದ್ರ ಸಚಿವರು, ನಾವು ಎನ್ ಡಿಎ ಮೈತ್ರಿಯಲ್ಲಿದ್ದೇವೆ. ಈ ಮೈತ್ರಿಯಲ್ಲಿ ಯಾವುದೇ ಗೊಂದಲಕ್ಕೆ ಅವಕಾಶ ಕೊಡಬಾರದು. ನಮ್ಮ ಉದ್ದೇಶ ರಾಜ್ಯದಲ್ಲಿ ಉತ್ತಮ ಸರ್ಕಾರ ತರಬೇಕು ಎನ್ನುವುದು. ಇದು ನನ್ನ ವೈಯಕ್ತಿಕ ಉದ್ದೇಶ ಎಂದರು. ನಾನು ರಾಜ್ಯ ರಾಜಕೀಯದಿಂದ ದೂರ ಸರಿಯುತ್ತೇನೆ ಅಂತ ಯಾರಾದರೂ ತಿಳಿದುಕೊಂಡಿದ್ದರೆ ತಪ್ಪು. ನಾನು ರಾಜ್ಯ ರಾಜಕಾರಣದಿಂದ ದೂರ ಸರಿಯಲ್ಲ. ರಾಜ್ಯದ ರಾಜಕಾರಣದಲ್ಲಿ ಇರುತ್ತೇನೆ. ಕೇಂದ್ರದಲ್ಲಿ ಪ್ರಧಾನಿಗಳು ಉತ್ತಮ ಜವಾಬ್ದಾರಿ ಕೊಟ್ಟಿದ್ದಾರೆ. ಎರಡು ಇಲಾಖೆಯಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡಲು ಅವಕಾಶ ನೀಡಿದ್ದಾರೆ. ರಾಜ್ಯ ರಾಜಕೀಯಕ್ಕೆ ಯಾವ ಸಮಯದಲ್ಲಿ ಬರಬೇಕು ಅಂತ ತೀರ್ಮಾನ ಮಾಡುತ್ತೇನೆ. ತಪ್ಪಿಸಿಕೊಳ್ಳಲು ಆಗುವುದಿಲ್ಲ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರ ನೀಡಿದರು. ಶಿಡ್ಲಘಟ್ಟ ಪ್ರಕರಣ; ಮುಖ್ಯ ಕಾರ್ಯದರ್ಶಿ ಇನ್ನೂ ಸ್ಪಂದಿಸಿಲ್ಲ ಎಂದ ಕುಮಾರಸ್ವಾಮಿ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬಂದ ಮೇಲೆ ನಿರಂತರವಾಗಿ ಅಧಿಕಾರಿಗಳ ಮೇಲೆ ದೌರ್ಜನ್ಯ ನಡೆಸುವ ಪ್ರವೃತ್ತಿ ಹೆಚ್ಚಾಗುತ್ತಿದೆ. ಇದು ಸರಿಯಲ್ಲ, ಶಿಡ್ಲಘಟ್ಟ ಪ್ರಕರಣದ ಬಗ್ಗೆ ನಾನು ಈಗಾಗಲೇ ಮುಖ್ಯ ಕಾರ್ಯದರ್ಶಿಯವರಿಗೆ ತಿಳಿಸಿದ್ದೇನೆ. ಈವರೆಗೆ ಅವರು ಈ ಬಗ್ಗೆ ಯಾವ ಕ್ರಮವನ್ನು ವಹಿಸಿಲ್ಲ. ಇವತ್ತು ಸಂಕ್ರಾಂತಿ ಹಬ್ಬವಿದೆ. ಹೀಗಾಗಿ ನಾನು ಮತ್ತೆ ಅವರನ್ನು ಕೇಳಲು ಹೋಗಿಲ್ಲ ಎಂದು ಸಚಿವ ಕುಮಾರಸ್ವಾಮಿ ಹೇಳಿದರು. ಶಿಡ್ಲಘಟ್ಟದ ಕಾಂಗ್ರೆಸ್ ಮುಖಂಡನಿಂದ ಅಧಿಕಾರಿಗೆ ಧಮ್ಕಿ ಹಾಕಿದ ಪ್ರಕರಣ ನಿಜಕ್ಕೂ ಬೇಸರ ತರಿಸಿದೆ. ನಮ್ಮ ಪಕ್ಷ ಅಂತಲ್ಲ, ಯಾವುದೇ ಪಕ್ಷದ ಕಾರ್ಯಕರ್ತರು, ಮುಖಂಡರು ಅಧಿಕಾರಿಗಳ ಜತೆ ಅನುಚಿತವಾಗಿ ವರ್ತಿಸಬಾರದು. ಒಂದೆರಡು ಪ್ರಕರಣಗಳಲ್ಲಿ ಕಠಿಣ ಕ್ರಮ ಜರುಗಿಸಿದರೆ ಅದು ಪಾಠವಾಗುತ್ತದೆ ಎಂದು ಕುಮಾರಸ್ವಾಮಿ ಸರಕಾರಕ್ಕೆ ಸಲಹೆ ಮಾಡಿದರು. ಅಧಿಕಾರಿಗಳ ಮೇಲೆ ಒತ್ತಡ ಹೇರಿ ಕೆಲಸ ಮಾಡಿಸುವ ಪ್ರವೃತ್ತಿ ಸರ್ಕಾರದಲ್ಲಿ ವ್ಯಾಪಕವಾಗಿದೆ. ಸಾಮಾನ್ಯ ಕಾರ್ಯಕರ್ತರಿಂದ ಹಿಡಿದು ಅಧಿಕಾರದಲ್ಲಿರುವ ಮೇಲಿನವರು ಅಧಿಕಾರಿಗಳ ಮೇಲೆ ಒತ್ತಡ ಹಾಕಿ ಕಾನೂನುಬಾಹಿರ ಕೆಲಸ ಮಾಡಿಸುತ್ತಿದ್ದಾರೆ. ಸರ್ಕಾರ ಸರಿ ಇಲ್ಲದೆ ಇಲ್ಲದಿದ್ದಾಗ ಇವೆಲ್ಲ ನಡೆಯುತ್ತವೆ. ಮೇಟಿ ಸರಿಯಾಗಿದ್ದರೆ ಇಂತಹ ಘಟನೆಗಳು ನಡೆಯುವುದಿಲ್ಲ ಎಂದು ಕೇಂದ್ರ ಸಚಿವರು ತೀವ್ರ ಬೇಸರ ವ್ಯಕ್ತಪಡಿಸಿದರು. ಅಧಿಕಾರಿಗಳು ಕೂಡ ಎಚ್ಚರಿಕೆಯಿಂದ ಕರ್ತವ್ಯ ನಿರ್ವಹಿಸಬೇಕು. ಬಡ್ತಿ ಅಥವಾ ಪೋಸ್ಟಿಂಗ್ ಆಸೆಗೆ ಬಿದ್ದು ಕಾನೂನುಬಾಹಿರ ಕೆಲಸ ಮಾಡಿದರೆ ಪ್ರತಿಫಲ ಅನುಭವಿಸಬೇಕಾಗುತ್ತದೆ. ಇತ್ತೀಚೆಗೆ ಒಂದು ಪತ್ರಿಕೆಯ ಅಗ್ರಬರಹವನ್ನು ಓದಿದೆ. 'ಕಳಪೆ ಕಾಮಗಾರಿ; ಆರು ಮಂದಿ ಹೊಣೆ' ಎನ್ನುವ ವರದಿ ನೋಡಿದ ಮೇಲೆ ವಿಕಾಸಸೌಧ ನಿರ್ಮಾಣದಲ್ಲಿ ಎಂಜಿನಿಯರುಗಳು ನಡೆಸಿರುವ ಅಕ್ರಮ ನಡೆಸಿರುವುದು ಬಯಲಾಗಿದೆ. 8 ವರ್ಷಗಳ ನಂತರ ಅಧಿಕಾರಿಗಳ ಮೇಲೆ ಕ್ರಮ ಆಗಬೇಕು ಅಂತ ಲೋಕಾಯುಕ್ತ ತೀರ್ಪು ಕೊಟ್ಟಿದೆ. ಹೀಗಾಗಿ ಅಧಿಕಾರಿಗಳು ಜನಪ್ರತಿನಿಧಿಗಳ ಒತ್ತಡಕ್ಕೆ ಕೆಲಸ ಮಾಡಬಾರದು. ಸರ್ಕಾರದ ನಿಯಮಾವಳಿ ಉಲ್ಲಂಘನೆ ಆಗದಂತೆ ಆತ್ಮಸಾಕ್ಷಿಗಾಗಿ ಕೆಲಸ ಮಾಡಿ ಎಂದು ಕೇಂದ್ರ ಸಚಿವರು ಕಿವಿಮಾತು ಹೇಳಿದರು.
ಮಳವಳ್ಳಿ : ಅಕ್ಕಿ ತುಂಬಿದ ಲಾರಿ ಪಲ್ಟಿ, ಇಬ್ಬರು ಸಾವು
ಮಳವಳ್ಳಿ ತಾಲೂಕಿನಲ್ಲಿ ಅಕ್ಕಿ ತುಂಬಿದ್ದ ಲಾರಿ ಪಲ್ಟಿಯಾಗಿ ಇಬ್ಬರು ಕೂಲಿಕಾರರು ಮೃತಪಟ್ಟಿದ್ದಾರೆ. ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನಲ್ಲಿ ಮಕರ ಸಂಕ್ರಾಂತಿ ಪುಣ್ಯ ಸ್ನಾನಕ್ಕೆ ತೆರಳಿದ್ದ ಇಬ್ಬರು ಯುವಕರು ಕ್ವಾರಿಯಲ್ಲಿ ಈಜಲು ಹೋಗಿ ಸಾವನ್ನಪ್ಪಿದ್ದಾರೆ. ಎರಡೂ ಘಟನೆಗಳಲ್ಲಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಪ್ರತಿಭಟನಾಕಾರರನ್ನು ಗಲ್ಲಿಗೇರಿಸುವುದಿಲ್ಲ: ಇರಾನ್ ವಿದೇಶಾಂಗ ಸಚಿವ
ಇರಾನ್ನಲ್ಲಿ ಪ್ರತಿಭಟನಾಕಾರರ ಹತ್ಯೆಗಳು ನಿಂತಿವೆ ಎಂದ ಟ್ರಂಪ್
ಬಿಟಿಎಸ್ ಆರ್ಮಿಗಳು ಕಾತುರದಿಂದ ಕಾಯುತ್ತಿದ್ದ ಕ್ಷಣ ಬಂದಿದೆ. ಬಿಟಿಎಸ್ ತಮ್ಮ 5ನೇ ಆಲ್ಬಂ ಬಿಡುಗಡೆ ಬಳಿಕ 2026-27ರಲ್ಲಿ ವಿಶ್ವ ಪ್ರವಾಸ ಕೈಗೊಳ್ಳಲಿದೆ. ಈ ಪ್ರವಾಸ ಏಪ್ರಿಲ್ 9ರಂದು ದಕ್ಷಿಣ ಕೊರಿಯಾದ ಗೊಯಾಂಗ್ನಲ್ಲಿ ಆರಂಭವಾಗಲಿದೆ. ಭಾರತೀಯ ಆರ್ಮಿಗಳಿಗೆ ಮೊದಲ ಪಟ್ಟಿಯಲ್ಲಿ ನಿರಾಸೆಯಾಗಿದ್ದರೂ, ಮುಂದಿನ ಪಟ್ಟಿಯಲ್ಲಿ ಭಾರತದ ನಗರಗಳು ಸೇರುವ ನಿರೀಕ್ಷೆ ಇದೆ. ಈ ಪ್ರವಾಸವು 2027ರವರೆಗೆ ನಡೆಯಲಿದೆ.ಯಾವ್ಯಾವ ದಿನಾಂಕದಲ್ಲಿ, ಎಲ್ಲಿ ಕಾನ್ಸರ್ಟ್ ನಡೆಯಲಿದೆ ಎಂಬ ಫುಲ್ ಲಿಸ್ಟ್ ಇಲ್ಲಿದೆ ನೋಡಿ...
`ಅವಳ ಕನಸಿಗಾಗಿ ನನ್ನ ಕೆಲಸ ಬಿಟ್ಟೆ; ಮಕ್ಕಳ ನೋಡಿದೆ; ಈಗ ಹೀಗನ್ನೋದಾ?': ಮೇರಿ ಕೋಂ ಆರೋಪಗಳಿಗೆ ಮಾಜಿ ಪತಿ ತಿರುಗೇಟು
Mary Kom Vs Onler- ಖ್ಯಾತ ಬಾಕ್ಸರ್ ಮೇರಿ ಕೋಂ ಮತ್ತು ಅವರ ಮಾಜಿ ಪತಿ ಓನ್ಲರ್ ಅವರ ಆರೋಪ- ಪ್ರತ್ಯಾರೋಪಗಳ ಸರಣಿ ಇದೀಗ ಮುಂದುವರಿದಿದೆ. ವಿಚ್ಛೇದನ ಪಡೆದ ಬಳಿಕ ಮೊದಲ ಬಾರಿಗೆ ಮೇರಿ ಕೊಂ ಅವರು ತಮ್ಮ ಮಾಜಿ ಪತಿಯ ಬಗ್ಗೆ ಅನೇಕ ಆರೋಪಗಳನ್ನು ಮಾಡಿದ್ದರು. ತಮ್ಮ ದುಡಿಮೆಯನ್ನು ಹಾಳು ಮಾಡಿದರು ಎಂದು ಆಕ್ರೋಶ ವ್ಯಕ್ತಪಡಿಸಿದ್ದರು. ಅದಕ್ಕೆ ಇದೀಗ ಓನ್ಲರ್ ಪ್ರತಿಕ್ರಿಯಿಸಿ, ಮೇರಿ ಕೋಂ ಅವರು ಚುನಾವಣೆಗೆ ಸ್ಪರ್ಧಿಸಲು ಒತ್ತಾಯಿಸಿದ್ದರಿಂದ ಹಣ ಕಳೆದುಕೊಂಡೆ ಎಂದು ಓನ್ಲರ್ ತಿರುಗೇಟು ನೀಡಿದ್ದಾರೆ.
Bengaluru Train: ಬೆಂಗಳೂರು - ಮುಂಬೈ ನಡುವೆ ದುರಂತೋ ಎಕ್ಸ್ಪ್ರೆಸ್ ರೈಲು ಸೇವೆಗೆ ರೈಲ್ವೆ ಸಿದ್ಧತೆ
ನವದೆಹಲಿ: ಬೆಂಗಳೂರು ಹಾಗೂ ಮುಂಬೈ ಮೆಟ್ರೋ ನಗರಗಳ ಪ್ರಯಾಣಿಕರಿಗೆ ಗುಡ್ನ್ಯೂಸ್ ನೀಡುವುದಕ್ಕೆ ಭಾರತೀಯ ರೈಲ್ವೆ ಮುಂದಾಗಿದೆ. ರೈಲ್ವೆ ಇಲಾಖೆಯು 18 ಗಂಟೆಗಳಲ್ಲಿ ಬೆಂಗಳೂರು ಮತ್ತು ಮುಂಬೈ ಸಂಪರ್ಕಿಸುವ ದುರಂತೋ ಎಕ್ಸ್ಪ್ರೆಸ್ ರೈಲು ಪರಿಚಯಿಸಲು ಚಿಂತನೆ ನಡೆಸಿದೆ ಎಂದು Deccan Herald ವರದಿ ಮಾಡಿದೆ. ಇನ್ನು ಬೆಂಗಳೂರು ಹಾಗೂ ಮುಂಬೈ ನಗರಗಳ ನಡುವೆ ವಾರಕ್ಕೆ ಎರಡು ಬಾರಿ ಸೂಪರ್
ದೇಶಾದ್ಯಂತ 9 ಹೊಸ ಅಮೃತ್ ಭಾರತ್ ಎಕ್ಸ್ಪ್ರೆಸ್ ರೈಲುಗಳ ಘೋಷಣೆಯಾಗಿದ್ದು, ಬೆಂಗಳೂರು-ಅಲಿಪುರ್ ದ್ವಾರ ನಡುವೆ ಕರ್ನಾಟಕಕ್ಕೆ ಒಂದು ರೈಲು ಸಿಕ್ಕಿದೆ. ಆದರೆ, ಈ ರೈಲು ಕನ್ನಡಿಗರಿಗೆ ಪ್ರಯೋಜನಕ್ಕಿಂತ ವಲಸಿಗರಿಗೆ ಅನುಕೂಲ ಮಾಡಿಕೊಡುತ್ತದೆ ಎಂದು ಹಲವರು ಸಾಮಾಜಿಕ ಜಾಲತಾಣಗಳಲ್ಲಿ ವಿರೋಧ ವ್ಯಕ್ತಪಡಿಸಿದ್ದಾರೆ. ರಾಜ್ಯದೊಳಗೆ ಹಲವು ಮಾರ್ಗಗಳಲ್ಲಿ ರೈಲುಗಳ ಬೇಡಿಕೆಯಿದೆ.
Trekking Ban: ಕೊಡಚಾದ್ರಿ, ಕುದುರೆಮುಖ ಸೇರಿ 11 ಚಾರಣಪಥ ಪ್ರವೇಶಿಸುವಂತಿಲ್ಲ, ಸರ್ಕಾರ ಆದೇಶ
ಬೆಂಗಳೂರು: ಮಕರ ಸಂಕ್ರಾಂತಿ ಹಬ್ಬ ಹಾಗೂ ವಾರಾಂತ್ಯದ ರಜೆಗಳು ಮತ್ತು ಮುಂಬರಲಿರುವ ಬೇಸಿಗೆ ರಜೆಗಳ ಹಿನ್ನೆಲೆಯಲ್ಲಿ ಯಾರೆಲ್ಲ ಪ್ರಮುಖ ಬೆಟ್ಟಗಳು, ಪ್ರವಾಸಿ ಸ್ಥಳಗಳಲ್ಲಿ ಚಾರಣ ತೆರಳಲು ಮುಂದಾಗಿದ್ದರೋ ಅವರೆಲ್ಲರಿಗೂ ಅರಣ್ಯ ಇಲಾಖೆ ಕಹಿ ಸುದ್ದಿ ನೀಡಿದೆ. ರಾಜ್ಯದ ಪ್ರಮುಖ 11 ಚಾರಣಪಥಗಳ ಪ್ರವೇಶವನ್ನು ಪ್ರವಾಸಿಗರಿಗೆ ನಿರ್ಬಂಧಿಸಿ ಆದೇಶ ಹೊರಡಿಸಲಾಗಿದೆ. ಜನವರಿ 14ರಂದು ಅರಣ್ಯ ಇಲಾಖೆ ಹೊರಡಿಸಿರುವ ಆದೇಶ
ರಾಜ್ಯ ಸರ್ಕಾರದ ನಡೆ ಖಂಡಿಸಿ ಜ.17 ಕ್ಕೆ ಬಳ್ಳಾರಿ ಎಪಿಎಂಸಿ ಆವರಣದಲ್ಲಿ ಬೃಹತ್ ಹೋರಾಟ
ಬಳ್ಳಾರಿಯಲ್ಲಿ ನಡೆದ ಬ್ಯಾನರ್ ಗಲಭೆ ಬಗ್ಗೆ ಜನಾರ್ದನ ರೆಡ್ಡಿ ಹಾಗೂ ಎನ್ ರವಿಕುಮಾರ್ ಅವರು ಶಾಸಕ ಭರತ್ ರೆಡ್ಡಿ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಜನವರಿ 17 ರಂದು ಬಳ್ಳಾರಿಯಲ್ಲಿ ಬೃಹತ್ ಪ್ರತಿಭಟನಾ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಈ ಸಮಾವೇಶದಲ್ಲಿ ಬಿಜೆಪಿ ಮತ್ತು ಜೆಡಿಎಸ್ ನ ಪ್ರಮುಖ ನಾಯಕರು ಭಾಗವಹಿಸಲಿದ್ದಾರೆ. ಸರ್ಕಾರದ ವಿರುದ್ಧ ಬಿಜೆಪಿ ಹೋರಾಟ ನಡೆಸಲಿದೆ.
ಕಾರ್ಕಳ: ಪರಶುರಾಮ ಥೀಮ್ ಪಾರ್ಕ್ ನಿಂದ ಫ್ಯಾನ್ ಕಳವು: ಇಬ್ಬರು ಅಪ್ರಾಪ್ತ ವಯಸ್ಕರ ವಿರುದ್ಧ ಪ್ರಕರಣ ದಾಖಲು
ಕಾರ್ಕಳ, ಜ.15: ಬೈಲೂರು ಪರಶುರಾಮ ಥೀಮ್ ಪಾರ್ಕ್ ನಲ್ಲಿನ ಕಟ್ಟಡದ ಫ್ಯಾನ್ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಅಪ್ರಾಪ್ತ ವಯಸ್ಸಿನವರ ವಿರುದ್ಧ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 2025ರ ಜನವರಿಯಿಂದ ಜೂನ್ ತಿಂಗಳ ಮಧ್ಯಾವಧಿಯಲ್ಲಿ ಪರಶುರಾಮ ಥೀಮ್ ಪಾರ್ಕ್ ನಿಂದ ಎರಡು ಫ್ಯಾನ್ ಗಳನ್ನು ಕಳವು ಮಾಡಿದ ಆರೋಪದಲ್ಲಿ ಇಬ್ಬರು ಅಪ್ರಾಪ್ತ ವಯಸ್ಸಿನವರ ವಿರುದ್ಧ ಜ.12ರಂದು ಮಂಜುನಾಥ್ ಜೋಗಿ ಎಂಬವರು ನೀಡಿದ ದೂರಿನಂತೆ ಪ್ರಕರಣ ದಾಖಲಿಸಿ, ತನಿಖೆ ನಡೆಸಲಾಗುತ್ತಿದೆ ಎಂದು ಎಸ್ಪಿ ಹರಿರಾಂ ಶಂಕರ್ ತಿಳಿಸಿದ್ದಾರೆ. ಈ ಪ್ರಕರಣವು ಇತ್ತೀಚೆಗೆ ಪರಶುರಾಮ ಥೀಮ್ ಪಾರ್ಕ್ ಕಟ್ಟಡದ ತಾಮ್ರದ ಮೇಲ್ಛಾವಣಿ ಕಳವು ಪ್ರಕರಣದಿಂದ ಸಂಪೂರ್ಣವಾಗಿ ಭಿನ್ನವಾಗಿದ್ದು, ಈ ಎರಡೂ ಪ್ರಕರಣಗಳಿಗೆ ಯಾವುದೇ ಸಂಬಂಧ ಇಲ್ಲ ಎಂದು ಎಸ್ಪಿ ಸ್ಪಷ್ಟಪಡಿಸಿದ್ದಾರೆ.

23 C