ʼಆತಂಕ ಬೇಡ, ಒಕ್ಕಲೆಬ್ಬಿಸುವ ಪ್ರಶ್ನೆಯೇ ಇಲ್ಲʼ : ಯಡಮನೆ ಭಾಗದ ರೈತರಿಗೆ ಸಚಿವ ಮಧುಬಂಗಾರಪ್ಪ ಅಭಯ
ಶಿವಮೊಗ್ಗ : ʼಸಾಗರ ತಾಲ್ಲೂಕಿನ ಕರೂರು ಹೋಬಳಿಯ ಯಡಮನೆ ಗ್ರಾಮದ ರೈತ ಕುಟುಂಬಗಳಿಗೆ ಅರಣ್ಯ ಇಲಾಖೆ ನೊಟೀಸ್ ನೀಡಿರುವ ವಿಚಾರ ನನ್ನ ಗಮನಕ್ಕೆ ಬಂದ ತಕ್ಷಣವೇ ಸೂಕ್ತ ಕ್ರಮಕ್ಕೆ ಅರಣ್ಯ ಇಲಾಖೆಗೆ ಸೂಚನೆ ನೀಡಿದ್ದೇನೆ. ಹೀಗಾಗಿ ಆತಂಕ ಬೇಡʼ ಎಂದು ಜಿಲ್ಲಾ ಉಸ್ತುವಾರಿಯೂ ಆದ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಸಚಿವ ಮಧುಬಂಗಾರಪ್ಪ ಹೇಳಿದ್ದಾರೆ. ಈ ಸಂಬಂಧ ಪ್ರಕಟನೆ ನೀಡಿರುವ ಅವರು, ಈ ನೊಟೀಸ್ಗಳು 2012-13ರ ಬಿಜೆಪಿ ಸರಕಾರದ ಅವಧಿಯಲ್ಲಿ ಕೈಗೊಂಡ ತೀರ್ಮಾನಗಳು. ಹಳೆಯ ಆದೇಶದ ಅನ್ವಯ ಈಗ ಜಾರಿಯಾಗುತ್ತಿರುವುದು ಸ್ಪಷ್ಟವಾಗಿದೆ ಎಂದು ತಿಳಿಸಿದ್ದಾರೆ. ಸರಕಾರಕ್ಕೆ ರೈತರನ್ನು ಒಕ್ಕಲೆಬ್ಬಿಸುವ ಯಾವುದೇ ಉದ್ದೇಶವನ್ನು ಹೊಂದಿಲ್ಲ. ಈಗಾಗಲೇ ನಾನು ಅರಣ್ಯ ಇಲಾಖೆಯ ಉನ್ನತ ಅಧಿಕಾರಿಗಳೊಂದಿಗೆ ನೇರವಾಗಿ ಮಾತನಾಡಿದ್ದು, ಯಾವುದೇ ಕಾರಣಕ್ಕೂ ರೈತರನ್ನು ಬಲವಂತವಾಗಿ ತೆರವುಗೊಳಿಸದಂತೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದೇನೆ. ಅರಣ್ಯ ಹಕ್ಕು ಕಾಯ್ದೆಯಡಿ ಅವರು ಅರ್ಜಿ ಸಲ್ಲಿಸಿದ್ದರೂ ಸೂಕ್ತ ದಾಖಲಾತಿಗಳು ಇಲ್ಲದ ಕಾರಣ ಇವರ ಅರ್ಜಿಗಳು ಇನ್ನೂ ಊರ್ಜಿತವಾಗಿಲ್ಲ. ಈ ಕುರಿತು ಸಂಬಂಧಪಟ್ಟ ಸಮಿತಿಗಳು ಮೇಲ್ಮನವಿ ಸಲ್ಲಿಸುವ ಅಗತ್ಯವಿದೆ. ಸಂಬಂಧಪಟ್ಟ ಸಮಿತಿಗಳ ಮೂಲಕ ಈ ಅರ್ಜಿಗಳ ಮರುಪರಿಶೀಲನೆ ಮತ್ತು ಮೇಲ್ಮನವಿ ಸಲ್ಲಿಕೆಗೆ ಅಗತ್ಯ ಕ್ರಮ ವಹಿಸಲಾಗುವುದು ಎಂದರು. ನಮ್ಮ ಸರಕಾರವು ರೈತರ ಮತ್ತು ಸಂತ್ರಸ್ತರ ಹಿತ ಕಾಯಲು ಸಂಪೂರ್ಣವಾಗಿ ಬದ್ಧವಾಗಿದ್ದು, ಯಡಮನೆ ಗ್ರಾಮದ ಜನರು ಯಾವುದೇ ಆತಂಕಕ್ಕೆ ಒಳಗಾಗಬಾರದು ಎಂದು ತಿಳಿಸಿದ್ದಾರೆ.
Maharashtra | ಮುಂಬೈ ಮೆಟ್ರೋ ಪಿಲ್ಲರ್ ಕುಸಿತ: ಐವರ ಬಂಧನ, ಗುತ್ತಿಗೆದಾರರಿಗೆ 5 ಕೋಟಿ ರೂ. ದಂಡ
ಮುಂಬೈ,ಫೆ.15: ಇಲ್ಲಿನ ಮುಲುಂಡ್ ಪ್ರದೇಶದಲ್ಲಿ ನಿರ್ಮಾಣ ಹಂತದಲ್ಲಿದ್ದ ಮೆಟ್ರೋ ಮಾರ್ಗ–4ರ ಸೇತುವೆಯ ಪ್ಯಾರಪೆಟ್ ಭಾಗ ಕುಸಿದು ಸಂಭವಿಸಿದ ದುರಂತದಲ್ಲಿ ಒಬ್ಬರು ಮೃತಪಟ್ಟು ಮೂವರು ಗಾಯಗೊಂಡ ಘಟನೆಗೆ ಸಂಬಂಧಿಸಿ ಮುಂಬೈ ಮೆಟ್ರೋಪಾಲಿಟನ್ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ (MMRDA)ವು ಗುತ್ತಿಗೆದಾರ ಸಂಸ್ಥೆ ರಿಲಯನ್ಸ್ ಇನ್ಫ್ರಾಸ್ಟ್ರಕ್ಚರ್–ಆಸ್ಟಾಲ್ಡಿ (RAJV) ಹಾಗೂ ಅದರ ಉಪಗುತ್ತಿಗೆದಾರ ಮಿಲನ್ ರೋಡ್ ಬಿಲ್ಡ್ಟೆಕ್ LLP ವಿರುದ್ಧ ಪ್ರಕರಣ ದಾಖಲಿಸಿ ಐವರನ್ನು ಬಂಧಿಸಲಾಗಿದೆ. ಜೊತೆಗೆ RAJVಗೆ 5 ಕೋಟಿ ದಂಡ ವಿಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಯೋಜನೆಯ ಸಾಮಾನ್ಯ ಸಲಹೆಗಾರರ ಒಕ್ಕೂಟವಾದ ಡಿಬಿ ಎಂಜಿನಿಯರಿಂಗ್ & ಕನ್ಸಲ್ಟಿಂಗ್, ಹಿಲ್ ಇಂಟರ್ನ್ಯಾಷನಲ್ ಇಂಕ್ ಹಾಗೂ ಲೂಯಿಸ್ ಬರ್ಗರ್ ಕನ್ಸಲ್ಟಿಂಗ್ ಪ್ರೈವೇಟ್ ಲಿಮಿಟೆಡ್ (DB ಹಿಲ್ LBG) ಮೇಲೂ 1 ಕೋಟಿ ದಂಡ ವಿಧಿಸಲಾಗಿದೆ ಎಂದು MMRDA ಪ್ರಕಟಣೆಯಲ್ಲಿ ತಿಳಿಸಿದೆ. ಶನಿವಾರ ಮಧ್ಯಾಹ್ನ ಸುಮಾರು 12.15ರ ವೇಳೆಗೆ ಎಲ್ಬಿಎಸ್ ರಸ್ತೆಯಲ್ಲಿರುವ ಜಾನ್ಸನ್ & ಜಾನ್ಸನ್ ಕಾರ್ಖಾನೆ ಸಮೀಪ ದುರಂತ ಸಂಭವಿಸಿದೆ. ನಿರ್ಮಾಣ ಹಂತದಲ್ಲಿದ್ದ ಸೇತುವೆಯ ಪ್ಯಾರಪೆಟ್ ಭಾಗ ಹಾದುಹೋಗುತ್ತಿದ್ದ ಆಟೋರಿಕ್ಷಾ ಹಾಗೂ ಸ್ಕೋಡಾ ಕಾರಿನ ಮೇಲೆ ಕುಸಿದು ಬಿದ್ದ ಪರಿಣಾಮ ರಿಕ್ಷಾ ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ. ಮೆಟ್ರೋ ಲೈನ್–4 ದಕ್ಷಿಣ–ಮಧ್ಯ ಮುಂಬೈನ ವಡಾಲಾವನ್ನು ನೆರೆಯ ಥಾಣೆಯೊಂದಿಗೆ ಸಂಪರ್ಕಿಸುವ ಪ್ರಮುಖ ಮಾರ್ಗವಾಗಿದ್ದು, ಕಾರಿಡಾರ್ನ ಗಮನಾರ್ಹ ಭಾಗ ಎಲ್ಬಿಎಸ್ ರಸ್ತೆಯ ಮೇಲೆಯೇ ಹಾದು ಹೋಗುತ್ತದೆ. ಘಟನೆಯ ಬಳಿಕ ನಿರ್ಮಾಣ ಕಾಮಗಾರಿಗಳ ಭದ್ರತೆ ಕುರಿತು ಕಳವಳ ವ್ಯಕ್ತವಾಗಿದೆ. ಆಟೋರಿಕ್ಷಾದ ಹಿಂಭಾಗದಲ್ಲಿ ಕುಳಿತಿದ್ದ ರಾಮಧಾನಿ ಯಾದವ್ (46) ಅವರು ಘಟನೆಯಲ್ಲಿ ಮೃತಪಟ್ಟಿದ್ದಾರೆ. ಚಾಲಕ ರಾಜ್ಕುಮಾರ್ ಯಾದವ್ (45) ಗಂಭೀರವಾಗಿ ಗಾಯಗೊಂಡು ಮುಲುಂಡ್ನ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ರಿಕ್ಷಾದಲ್ಲಿದ್ದ ಮತ್ತೊಬ್ಬ ಪ್ರಯಾಣಿಕ ಮಹೇಂದ್ರ ಪ್ರತಾಪ್ ಯಾದವ್ (52) ಹಾಗೂ ಸ್ಕೋಡಾ ಕಾರಿನ ಚಾಲಕಿ ದೀಪಾ ರುಹಿಯಾ (40) ಗಾಯಗೊಂಡಿದ್ದು, ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Gold Price February 15: ಚಿನ್ನ ಪ್ರಿಯರಿಗೆ ವಾರಾಂತ್ಯದ ಚಿನ್ನದ ಬೆಲೆಯು ನಿರಾಳತೆ ನೀಡಿದೆ. ಚಿನ್ನ ಮತ್ತು ಬೆಳ್ಳಿ ಬೆಲೆಯು ವಾರಾಂತ್ಯದಲ್ಲಿ ಯಥಾಸ್ಥಿತಿ ಮುಂದುವರಿದಿದೆ. ಚಿನ್ನದ ಬೆಲೆಯು ಕಳೆದ ಕೆಲವು ದಿನಗಳಿಂದ ಭಾರೀ ಏರಿಳಿತ ಕಾಣುತ್ತಿದೆ. ಭಾನುವಾರದಂದು ಚಿನ್ನದ ಬೆಲೆಯಲ್ಲಿ ಮಹತ್ವದ ಬದಲಾವಣೆ ಆಗಿಲ್ಲ. ಫೆಬ್ರವರಿ 15ರಂದು ಚಿನ್ನ ಮತ್ತು ಬೆಳ್ಳಿಯ ಬೆಲೆ ಎಷ್ಟಿದೆ ಎನ್ನುವ ನಿಖರವಾದ
ಅಮೆರಿಕದಲ್ಲಿ ಓದುತ್ತಿದ್ದ ಕರ್ನಾಟಕ ಮೂಲದ ವಿದ್ಯಾರ್ಥಿ ದಿಢೀರ್ ಸಾವು, ತೀವ್ರಗೊಂಡ ಆತಂಕ... Saketh Srinivasaiah
ಭಾರತ ಮತ್ತು ಅಮೆರಿಕ ನಡುವೆ ಮೊದಲಿನಿಂದ ಕೂಡ ಸ್ನೇಹ &ಬಾಂಧವ್ಯ ಚನ್ನಾಗಿಯೇ ಇದೆ. ಈ ರೀತಿ ಇದ್ದರೂ ಭಾರತೀಯರಿಗೆ ಅಮೆರಿಕದ ನೆಲದಲ್ಲಿ ಸೂಕ್ತ ಭದ್ರತೆ ಇಲ್ಲ ಎಂಬ ಆರೋಪಗಳ ನಡುವೆ, ಪದೇ ಪದೇ ಭಾರತ ಮೂಲದ ವಿದ್ಯಾರ್ಥಿಗಳು ಹಾಗೂ ಪ್ರಜೆಗಳ ಮೇಲೆ ದಾಳಿ ಆಗುತ್ತಲೇ ಇದೆ. ಈ ರೀತಿ ಭಾರತ ಮೂಲದ ವಿದ್ಯಾರ್ಥಿ, ಅದರಲ್ಲೂ ಕನ್ನಡ
ಎಪ್ರಿಲ್ 14ರಂದು ಉಳ್ಳಾಲ ತಾಲೂಕು ಬ್ಯಾರಿ ಸಾಹಿತ್ಯ ಸಮ್ಮೇಳನ: ಉಮರ್ ಯು.ಎಚ್.
ಮಂಗಳೂರು: ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿಯ ವತಿಯಿಂದ ಮೇಲ್ತೆನೆಯ ಸಹಯೋಗದಲ್ಲಿ ಎಪ್ರಿಲ್ 14ರಂದು ಮುಡಿಪು ಜಂಕ್ಷನ್ ನಲ್ಲಿ ಉಳ್ಳಾಲ ತಾಲೂಕು ಬ್ಯಾರಿ ಸಾಹಿತ್ಯ ಸಮ್ಮೇಳನ ಆಯೋಜಿಸಲಾಗುವುದು ಎಂದು ಬ್ಯಾರಿ ಅಕಾಡಮಿಯ ಅಧ್ಯಕ್ಷ ಉಮರ್ ಯು.ಎಚ್. ತಿಳಿಸಿದ್ದಾರೆ. ನಾಟೆಕಲ್ ವಿಜಯನಗರದ ಇಲೈಟ್ ಟ್ಯೂಶನ್ ಸೆಂಟರ್ ನಲ್ಲಿ ರವಿವಾರ ನಡೆದ ಮೇಲ್ತೆನೆಯ ಮಾಸಿಕ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ತಾಲೂಕು, ಜಿಲ್ಲಾ, ರಾಜ್ಯ ಮತ್ತು ಅಂತರ್ ರಾಷ್ಟ್ರೀಯ ಮಟ್ಟದಲ್ಲಿ ಬ್ಯಾರಿ ಸಾಹಿತ್ಯ ಸಮ್ಮೇಳನ ನಡೆಸುವ ಉದ್ದೇಶವಿದೆ. ಈಗಾಗಲೆ ಮಂಗಳೂರು ತಾಲೂಕು ಸಾಹಿತ್ಯ ಸಮ್ಮೇಳನ ನಡೆಸಲಾಗಿದೆ. ಕೊಡಗಿನಲ್ಲಿ ಜಿಲ್ಲಾ ಮಟ್ಟದ ಮತ್ತು ಚಿಕ್ಕಮಗಳೂರಿನಲ್ಲಿ ರಾಜ್ಯ ಮಟ್ಟದ ಸಾಹಿತ್ಯ ಸಮ್ಮೇಳನ ನಡೆಸಲು ಸಿದ್ಧತೆ ನಡೆಸಲಾಗಿದೆ ಎಂದರು. ಈ ಸಂದರ್ಭ ಮೇಲ್ತೆನೆ ಇ-ಮ್ಯಾಗಝಿನ್ ಎಗ್ಗೆ-2 ನ್ನು ಉಮರ್ ಯು.ಎಚ್. ಬಿಡುಗಡೆಗೊಳಿಸಿದರು. ಸಭೆಯಲ್ಲಿ ಮೇಲ್ತೆನೆಯ ಗೌರವಾಧ್ಯಕ್ಷ ಆಲಿಕುಂಞಿ ಪಾರೆ, ಅಧ್ಯಕ್ಷ ಮಂಗಳೂರು ರಿಯಾಝ್, ಪ್ರಧಾನ ಕಾರ್ಯದರ್ಶಿ ಹಂಝ ಮಲಾರ್, ಕೋಶಾಧಿಕಾರಿ ವಿ.ಇಬ್ರಾಹೀಂ ನಡುಪದವು, ಉಪಾಧ್ಯಕ್ಷ ಇಬ್ರಾಹೀಂ ಮುದುಂಗಾರುಕಟ್ಟೆ, ಜೊತೆ ಕಾರ್ಯದರ್ಶಿ ಸಿ.ಎಂ.ಶರೀಫ್ ಪಟ್ಟೋರಿ, ಮಾಜಿ ಅಧ್ಯಕ್ಷರಾದ ಟಿ.ಇಸ್ಮಾಯಿಲ್ ಮಾಸ್ಟರ್, ಬಶೀರ್ ಅಹ್ಮದ್ ಕಿನ್ಯ, ಮನ್ಸೂರ್ ಅಹ್ಮದ್ ಸಾಮಣಿಗೆ, ಮುಹಮ್ಮದ್ ಬಾಷಾ ನಾಟೆಕಲ್, ಬಶೀರ್ ಕಲ್ಕಟ್ಟ, ಸದಸ್ಯರಾದ ಯೂಸುಫ್ ವಕ್ತಾರ್, ಬಿ.ಎಂ.ಕಿನ್ಯ, ಅಬೂಬಕರ್ ಹೂಹಾಕುವ ಕಲ್ಲು, ಸಿದ್ದೀಕ್ ಎಸ್. ರಾಝ್ ಉಪಸ್ಥಿತರಿದ್ದರು.
West Bengal| ಕತ್ವಾ-ಅಝೀಮ್ಗಂಜ್ ಪ್ರಯಾಣಿಕ ರೈಲಿನಲ್ಲಿ ಅಗ್ನಿ ಅವಘಡ
ಕೊಲ್ಕತ್ತಾ: ಪಶ್ಚಿಮ ಬಂಗಾಳದ ಪುರ್ಬಾ ಬರ್ಧಮಾನ್ ಜಿಲ್ಲೆಯ ಕಟ್ವಾ ರೈಲು ನಿಲ್ದಾಣದಲ್ಲಿ ರವಿವಾರ ಮುಂಜಾನೆ ಖಾಲಿ ಪ್ಯಾಸೆಂಜರ್ ರೈಲಿನ ಬೋಗಿಗೆ ಬೆಂಕಿ ಹೊತ್ತಿಕೊಂಡಿದೆ ಎಂದು ಪೂರ್ವ ರೈಲ್ವೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಕಟ್ವಾ ರೈಲು ನಿಲ್ದಾಣದಲ್ಲಿ ಎರಡನೇ ಪ್ಲಾಟ್ಫಾರ್ಮ್ನಲ್ಲಿ ನಿಂತಿದ್ದ ಕತ್ವಾ-ಅಝೀಮ್ಗಂಜ್ ಪ್ಯಾಸೆಂಜರ್ ರೈಲಿನ ಒಂದು ಬೋಗಿಯಲ್ಲಿ ರವಿವಾರ ಬೆಳಗಿನ ಜಾವ 4.30ರ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದೆ. ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ. ಬೆಂಕಿ ಹರಡುವುದನ್ನು ತಡೆಯಲು ರೈಲ್ವೆ ಸಿಬ್ಬಂದಿ ತಕ್ಷಣವೇ ಬೋಗಿಯನ್ನು ಬೇರ್ಪಡಿಸಿದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ರೈಲಿನ ಬೋಗಿಗೆ ಬೆಂಕಿ ಹೊತ್ತಿಕೊಂಡಿರುವುದನ್ನು ನಿಲ್ದಾಣದಲ್ಲಿದ್ದ ಪ್ರಯಾಣಿಕರು ತಕ್ಷಣ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಅಗ್ನಿ ಅನಾಹುತಕ್ಕೆ ಕಾರಣಗಳ ಬಗ್ಗೆ ಪೊಲೀಸರು ತನಿಖೆಯನ್ನು ನಡೆಸುತ್ತಿದ್ದಾರೆ.
ವ್ಯಾಲಂಟೈನ್ಸ್ ಡೇ ಮರುದಿನ ಪ್ರೇಮಿಗಳಿಗೆ ಕಿವಿ ಮಾತು!
ಅನುಭವಿಗಳು ಹೇಳುವುದುಂಟು ನಿಮ್ಮನ್ನು ಪ್ರೀತಿಸುವವರನ್ನು ನೀವು ಪ್ರೀತಿಸಿ, ಮತ್ತೊಬ್ಬರನ್ನು ಪ್ರೀತಿಸುವವರು ನೀವು ಗಣನೆಗೆ ತೆಗೆದು ಕೊಳ್ಳುವುದು ಬೇಡ ಎಂದು. ಅದು ಸತ್ಯದ ಮಾತು. ನಮ್ಮನ್ನು ಪ್ರೀತಿಸುವವರನ್ನು ನಾವು ಪ್ರೀತಿಸಿದರೆ ಸುಂದರವೇ ಆದರೆ ಆ ಪ್ರೀತಿ ಹಣದಿಂದ ಹುಟ್ಟಬಾರದು ಗುಣ ನೋಡಿ ಹುಟ್ಟುವಂತಿರಬೇಕು. ಕಪಟ ಅದರಲ್ಲಿ ತುಂಬಿರಬಾರದು ಪರಸ್ವರ ಅರ್ಥ ಮಾಡುವ ಗುಣ ಹೊಂದಿರಬೇಕು.
KOLKATA - S I R ಪ್ರಕ್ರಿಯೆ | ‘ತಾರ್ಕಿಕ ವ್ಯತ್ಯಾಸ’ ವರ್ಗದಲ್ಲಿ ಮುಸ್ಲಿಂ ಮತದಾರರ ಪಾಲು ಅಧಿಕ; ಅಧ್ಯಯನ ವರದಿ
ಕೋಲ್ಕತ್ತಾ, ಫೆ.15: ಚುನಾವಣಾ ಆಯೋಗ (EC) ಕೈಗೊಂಡ ವಿಶೇಷ ತೀವ್ರ ಪರಿಷ್ಕರಣೆ (S I R) ಪ್ರಕ್ರಿಯೆಗೆ ಸಂಬಂಧಿಸಿದ ಅಧ್ಯಯನವೊಂದು ದಕ್ಷಿಣ ಕೋಲ್ಕತ್ತಾದ ರಾಜಕೀಯವಾಗಿ ಮಹತ್ವದ ಎರಡು ವಿಧಾನಸಭಾ ಕ್ಷೇತ್ರಗಳಲ್ಲಿ “ತಾರ್ಕಿಕ ವ್ಯತ್ಯಾಸ”ದಡಿ ಗುರುತಿಸಲಾದ ಮತದಾರರಲ್ಲಿ ಮುಸ್ಲಿಂ ಸಮುದಾಯದ ಪಾಲು ಅಸಮಾನವಾಗಿ ಹೆಚ್ಚಾಗಿದೆ ಎಂದು ತಿಳಿಸಿದೆ. ಈ ಅಂಕಿಅಂಶಗಳು S I R ಪ್ರಕ್ರಿಯೆಯ ನಿಷ್ಪಕ್ಷಪಾತತೆಯ ಕುರಿತ ಚರ್ಚೆಗೆ ಹೊಸ ಆಯಾಮ ನೀಡಿವೆ. ಸಬರ್ ಸಂಸ್ಥೆ ನಡೆಸಿದ ಸಂಶೋಧನೆಯ ಪ್ರಕಾರ, ನಗರದ ಸಾಂಪ್ರದಾಯಿಕ ವಾಣಿಜ್ಯ ಹಾಗೂ ರಾಜಕೀಯ ಕೇಂದ್ರದ ಸುತ್ತಲಿನ ಮಧ್ಯ–ದಕ್ಷಿಣ ಭಾಗದಲ್ಲಿರುವ ಭೋವಾನಿಪೋರ್ ವಿಧಾನಸಭಾ ಕ್ಷೇತ್ರದಲ್ಲಿ “ತಾರ್ಕಿಕ ವ್ಯತ್ಯಾಸ” ಹೊಂದಿದ ಮತದಾರ ಪೈಕಿ ಮುಸ್ಲಿಮರು ಸುಮಾರು ಶೇ.52 ಇದ್ದಾರೆ. ದಕ್ಷಿಣ ಕೋಲ್ಕತ್ತಾದ ಪಕ್ಕದ ಉನ್ನತ ವಸತಿ ಪ್ರದೇಶವಾದ ಬ್ಯಾಲಿಗುಂಜ್ ಕ್ಷೇತ್ರದಲ್ಲಿ ಈ ಪ್ರಮಾಣವು ಶೇ.78 ಏರಿದೆ. ಭೋವಾನಿಪೋರ್ ಕ್ಷೇತ್ರದಲ್ಲಿ “ತಾರ್ಕಿಕ ವ್ಯತ್ಯಾಸ” ವರ್ಗದಡಿ ಗುರುತಿಸಲಾದ 15,145 ಮತದಾರರಲ್ಲಿ 7,846 ಮಂದಿ ಮುಸ್ಲಿಮರು ಎಂದು ಅಧ್ಯಯನ ಹೇಳಿದೆ. ಬ್ಯಾಲಿಗುಂಜ್ ಕ್ಷೇತ್ರದಲ್ಲಿ ಇದೇ ವರ್ಗದ 30,008 ಮತದಾರರಲ್ಲಿ 23,256 ಮಂದಿ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದವರು ಎಂದು ವರದಿ ಉಲ್ಲೇಖಿಸಿದೆ. ಇತರ ವರ್ಗಗಳ ಅಳಿಸುವಿಕೆ ಅಥವಾ ತಿದ್ದುಪಡಿ ಅಂಕಿಅಂಶಗಳೊಂದಿಗೆ ಹೋಲಿಸಿದಾಗ ಈ ವ್ಯತ್ಯಾಸ ಸ್ಪಷ್ಟವಾಗಿ ಗೋಚರಿಸುತ್ತದೆ. ಅಧ್ಯಯನದಲ್ಲಿ ಭಾಗವಹಿಸಿದ್ದ ಅಶಿನ್ ಚಕ್ರವರ್ತಿ, ಸುಪ್ತಿಕ್ ಹಾಲ್ದರ್ ಹಾಗೂ ಸಬೀರ್ ಅಹಮದ್ ಅವರ ಪ್ರಕಾರ, ಭೋವಾನಿಪೋರ್ ಕ್ಷೇತ್ರದಲ್ಲಿ ‘ಗೈರು , ಸ್ಥಳಾಂತರ ಅಥವಾ ಮೃತಪಟ್ಟಿರುವ/ನಕಲು’ (SSD) ವರ್ಗದಡಿ ಗುರುತಿಸಲಾದ ಮತದಾರರಲ್ಲಿ ಮುಸ್ಲಿಮರ ಪಾಲು ಕೇವಲ ಶೇ.22.7 ಮತ್ತು ಮ್ಯಾಪ್ ಮಾಡದ ಮತದಾರ ಪೈಕಿ ಸುಮಾರು ಶೇ.26 ಮಾತ್ರ. ಇದು 2011ರ ಜನಗಣತಿ ಪ್ರಕಾರ ಕ್ಷೇತ್ರದ ಸುಮಾರು ಶೇ.20 ಮುಸ್ಲಿಂ ಜನಸಂಖ್ಯೆಯೊಂದಿಗೆ ಹೊಂದಿಕೆಯಾಗುತ್ತದೆ. ಆದರೆ ‘ತಾರ್ಕಿಕ ವ್ಯತ್ಯಾಸ’ ವರ್ಗದಲ್ಲಿ ಈ ಪ್ರಮಾಣ ಶೇ.52ಕ್ಕೆ ಏರಿರುವುದು ಗಮನಾರ್ಹ ಎಂದು ತಿಳಿಸಿದ್ದಾರೆ. ಬ್ಯಾಲಿಗುಂಜ್ ಕ್ಷೇತ್ರದಲ್ಲಿಯೂ ಇದೇ ರೀತಿಯ ಮಾದರಿ ಕಂಡುಬಂದಿದ್ದು, ಅಲ್ಲಿ ಮುಸ್ಲಿಮರು SSD ಮತದಾರರಲ್ಲಿ ಸುಮಾರು ಶೇ.44 ಮತ್ತು ಮ್ಯಾಪ್ ಮಾಡದ ಮತದಾರರಲ್ಲಿ ಶೇ.42 ಮಂದಿ ಇದ್ದಾರೆ. ಇದು ಕ್ಷೇತ್ರದ ಅಂದಾಜು ಶೇ.50 ಜನಸಂಖ್ಯೆ ಪಾಲಿನೊಂದಿಗೆ ಹೋಲಿಕೆಯಾಗುತ್ತದೆ ಎಂದು ಅಧ್ಯಯನ ಸೂಚಿಸಿದೆ. ಇದಕ್ಕೆ ಪ್ರತಿಕ್ರಿಯಿಸಿದ ಚುನಾವಣಾ ಆಯೋಗದ ಅಧಿಕಾರಿಗಳು ಪಕ್ಷಪಾತದ ಆರೋಪಗಳನ್ನು ತಳ್ಳಿ ಹಾಕಿದ್ದು, ಮತದಾರರ ಪಟ್ಟಿಯಲ್ಲಿ ಧರ್ಮದ ವಿವರಗಳನ್ನು ದಾಖಲಿಸುವುದಿಲ್ಲ ಹಾಗೂ ಧರ್ಮವಾರು ಅಂಕಿಅಂಶಗಳನ್ನು ಸಂಗ್ರಹಿಸುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ರಾಜಕೀಯ ವಲಯದಲ್ಲಿ ಈ ವರದಿಗೆ ತೀವ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ರಾಜಕೀಯ ವಿಶ್ಲೇಷಕ ಉದಯನ್ ಬಂಡೋಪಾಧ್ಯಾಯ ಅವರು SIR ಪ್ರಕ್ರಿಯೆಯಲ್ಲಿ ಬಳಸಲಾದ ಕೃತಕ ಬುದ್ಧಿಮತ್ತೆ ಆಧಾರಿತ ವ್ಯವಸ್ಥೆಯನ್ನು ಅಲ್ಪಸಂಖ್ಯಾತ ಮತದಾರರಿಗೆ, ವಿಶೇಷವಾಗಿ ಮಹಿಳೆಯರಿಗೆ ಕಿರುಕುಳ ನೀಡುವ ಉದ್ದೇಶದಿಂದ ವಿನ್ಯಾಸಗೊಳಿಸಲಾಗಿದೆ ಎಂದು ಆರೋಪಿಸಿದ್ದಾರೆ. ಟಿಎಂಸಿ ವಕ್ತಾರ ಕುನಾಲ್ ಘೋಷ್ ಅವರು ಬಿಜೆಪಿ ಮುಸ್ಲಿಂ ಬಹುಸಂಖ್ಯಾತ ಪ್ರದೇಶಗಳನ್ನು ಗುರಿಯಾಗಿಸಿಕೊಂಡು ಮತದಾರರ ಪಟ್ಟಿ ಪರಿಷ್ಕರಣೆ ನಡೆಸುತ್ತಿದೆ ಎಂದು ಟೀಕಿಸಿದ್ದಾರೆ. ಈ ಅಧ್ಯಯನದ ಕಂಡುಬಂದ ಅಂಶಗಳು ಕೋಲ್ಕತ್ತಾದ S I R ಪ್ರಕ್ರಿಯೆಗೆ ಹೊಸ ವಿವಾದದ ಪದರವನ್ನು ಸೇರಿಸಿದ್ದು, ಸಾಫ್ಟ್ ವೇರ್ ಆಧಾರಿತ “ತಾರ್ಕಿಕ ವ್ಯತ್ಯಾಸ” ಶೋಧಕದ ಕುರಿತು ಸ್ವತಂತ್ರ ಆಡಿಟ್ ನಡೆಸಬೇಕೆಂಬ ಬೇಡಿಕೆಗಳು ಹೆಚ್ಚುತ್ತಿವೆ. ಯಾವುದೇ ಸಮುದಾಯದ ಮೇಲೆ ಅಸಮಾನ ಪರಿಣಾಮ ಬೀರುವಂತಾಗದಂತೆ ಪರಿಷ್ಕರಣೆ ಕ್ರಮಗಳನ್ನು ಪಾರದರ್ಶಕಗೊಳಿಸುವ ಅಗತ್ಯವಿದೆ ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ.
ಲಜ್ಜೆಗೆಟ್ಟವು; ಮ್ಯೂನಿಚ್ನಲ್ಲಿ ಐಡಿ ಕಾರ್ಡ್ ಇಲ್ಲದ ಅಸಿಮ್ ಮುನೀರ್ ತಡೆದ ಭದ್ರತಾ ಸಿಬ್ಬಂದಿ! ವಿಡಿಯೋ ವೈರಲ್
ಪಾಕಿಸ್ತಾನದ ರಕ್ಷಣಾ ಪಡೆಗಳ ಮುಖ್ಯಸ್ಥ, ಭೂಸೇನಾಧ್ಯಕ್ಷ, ಫೀಲ್ಡ್ ಮಾರ್ಷಲ್, 4 ಸ್ಟಾರ್ ಜನರಲ್ ಹೀಗೆ ನಾನಾ ಗೌರವ(?)ದ ಹುದ್ದೆ ಹೊಂದಿರುವ ಅಸಿಮ್ ಮುನೀರ್, ಮನೆಯಲ್ಲಿ ಮಾತ್ರ ಹುಲಿ ಬೀದಿಗೆ ಬಂದರೆ ಆತ ಅಕ್ಷರಶಃ ಇಲಿ. ಇಡೀ ಪಾಕಿಸ್ತಾನವನ್ನು ಕಂಟ್ರೋಲ್ ಮಾಡುತ್ತಿರುವ ಬಗ್ಗೆ ಬಡಾಯಿ ಕೊಚ್ಚಿಕೊಳ್ಳುವ ಅಸಿ ಮ್ ಮುನೀರ್, ಅಸಲಿಗೆ ವಿದೇಶಿಯರಿಗೆ ಯಾರೆಂದೇ ಗೊತ್ತಿಲ್ಲ. ಇದಕ್ಕೆ ಜರ್ಮನಿ ರಾಜಧಾನಿ ಮ್ಯೂನಿಚ್ನಲ್ಲಿ ನಡೆದ ಭದ್ರತಾ ಸಮ್ಮೇಳನ ಸಾಕ್ಷಿ. ಏನಾಗಿದೆ? ಇಲ್ಲಿದೆ ಮಾಹಿತಿ.
ಪರೀಕ್ಷೆ ಸಮಯ ಬಂದಾಗ ಮಕ್ಕಳ ಕೈಯಲ್ಲಿ ಪುಸ್ತಕವೇನೋ ಇರುತ್ತದೆ. ಆದರೆ ಅವರ ಮನಸ್ಸಿನಲ್ಲಿ ಇರುವುದು ಪೋಷಕರ ಮತ್ತು ಶಿಕ್ಷಕರ ನಿರೀಕ್ಷೆ, ಅವರ ಭಯ ಮತ್ತು ಒತ್ತಡ. ಪೋಷಕರು ಮತ್ತು ಶಿಕ್ಷಕರಿಬ್ಬರೂ ಒಂದು ವಿಷಯದ ಬಗ್ಗೆ ಗಮನಿಸಬೇಕು. ವಾಸ್ತವವಾಗಿ ಪರೀಕ್ಷೆ ಎಂಬುದು ಮಕ್ಕಳ ಭವಿಷ್ಯವನ್ನು ನಿರ್ಧರಿಸುವುದಿಲ್ಲ. ಆದರೆ ಪೋಷಕರ ಮತ್ತು ಶಿಕ್ಷಕರ ಧೋರಣೆ ಮಕ್ಕಳ ಭವಿಷ್ಯವನ್ನು ರೂಪಿಸುತ್ತದೆ. ಅದರಲ್ಲಿಯೂ ಪೋಷಕರು ಮೊದಲು ಗಮನಿಸಬೇಕಾದುದು ಅವರ ಮಕ್ಕಳ ಮನಸ್ಸು. ಪರೀಕ್ಷೆಯ ಸಮಯದಲ್ಲಿ ಮಕ್ಕಳ ಮೆದುಳು ಓದುವುದಕ್ಕಿಂತ ಹೆಚ್ಚು ಫೇಲ್ ಆದರೆ?, ಅಪ್ಪ-ಅಮ್ಮ ಏನು ಹೇಳುತ್ತಾರೆ? ಅನ್ನೋದರಲ್ಲಿ ತೊಡಗಿರುತ್ತದೆ. ಪೋಷಕರು ತಮ್ಮಲ್ಲಿ ತಾವು ಕೇಳಿಕೊಳ್ಳಬೇಕಾದ ಪ್ರಶ್ನೆಯೇನೆಂದರೆ, ‘‘ನಾನು ನನ್ನ ಮಗುವಿನ ಮನಸ್ಸಿಗೆ ಶಾಂತಿ ಕೊಡ್ತಿದ್ದೀನಾ? ಅಥವಾ ನನ್ನ ಆತಂಕವನ್ನು ಅವನ ಮೇಲೆ ಹಾಕ್ತಿದ್ದೀನಾ?’’ ಪರೀಕ್ಷೆಗೆ ಸಿದ್ಧವಾಗುತ್ತಿರುವಂತಹ ವಿದ್ಯಾರ್ಥಿಗಳಿಗೆ ಆಗ ಬೇಕಾಗಿರುವುದು ಭಾವನಾತ್ಮಕ ಬೆಂಬಲ, ಅದು ಪೋಷಕರ ಮಾತಿನಲ್ಲಿ ಮತ್ತು ಮೌನದಲ್ಲಿಯೂ ಕೂಡಾ. ಪೋಷಕರ ಒಂದು ಮಾತು ಮಗುವಿನ ಆತ್ಮವಿಶ್ವಾಸವನ್ನು ಕಟ್ಟಬಹುದು ಅಥವಾ ಸಂಪೂರ್ಣ ಕುಸಿಯಿಸಬಹುದು. ‘‘ಇಷ್ಟೇನಾ ಓದಿರೋದು?’’ ಅಥವಾ ‘‘ಇಷ್ಟೇ ಇಷ್ಟು ಓದಿದ್ದೀಯಾ? ಇವತ್ತು ಕೂಡ ಫೋನ್ ಹಿಡಿದಿದ್ದೀಯಾ?’’ ಎನ್ನುವ ಬದಲಿಗೆ, ‘‘ನಿನ್ನ ಶ್ರಮ ನನಗೆ ಕಾಣ್ತಿದೆ. ನೀನು ಪ್ರಯತ್ನ ಮಾಡ್ತಿದ್ದೀಯಲ್ಲ, ಅದೇ ಸಾಕು’’ ಎನ್ನುವ ಮಾತುಗಳು ಅವರಲ್ಲಿ ಪ್ರೇರಕ ಶಕ್ತಿಯಾಗಿ ಕೆಲಸ ಮಾಡುತ್ತದೆ. ಕೆಲವೊಮ್ಮೆ ಉಪದೇಶಕ್ಕಿಂತ ಒಂದು ಮೌನದ ಅಪ್ಪುಗೆ ಹೆಚ್ಚು ಮಾನಸಿಕ ಮತ್ತು ಭಾವನಾತ್ಮಕ ಅಗತ್ಯವಾಗಿರುತ್ತದೆ. ಮಕ್ಕಳು ಪರೀಕ್ಷೆಗೆ ತಯಾರಾಗುವ ಸಮಯದಲ್ಲಿ ಒತ್ತಡ ಮತ್ತು ಆತಂಕ ಹೆಚ್ಚಾದರೆ ಅವರ ನಕಾರಾತ್ಮಕ ಭಾವನೆಗಳನ್ನು ಸರಿಪಡಿಸುವ ಹೊಣೆ ಪೋಷಕರದೇ ಆಗಿರುತ್ತದೆ. ಆಗ ಮಕ್ಕಳು ಅಳಬಹುದು, ಕೋಪ ತೋರಿಸಬಹುದು, ಮಾತಾಡದೇ ಇರಬಹುದು. ಅದು ಹಠವಾಗಿರುವುದಿಲ್ಲ. ಬದಲಿಗೆ ಅದು ಒತ್ತಡದ ಲಕ್ಷಣವಾಗಿರುತ್ತದೆ. ಅಂತಹ ಸಮಯದಲ್ಲಿ ಪೋಷಕರು ಮಕ್ಕಳಲ್ಲಿ ಸಾವಧಾನವಾಗಿ ಕೇಳಬೇಕು. ‘‘ನಿನಗೆ ಓದೋದು ಕಷ್ಟವಾಗ್ತಿದೆಯಾ ಅಥವಾ ಮನಸ್ಸು ಭಾರವಾಗಿದೆಯಾ?’’ ಈ ಪ್ರಶ್ನೆ ಮಗುವಿಗೆ ನಾನು ಒಂಟಿ ಅಲ್ಲ ಎನ್ನುವ ಭರವಸೆ ಕೊಡುತ್ತದೆ. ನಿಜ ಹೇಳಬೇಕೆಂದರೆ ಪೋಷಕರು ತಮ್ಮ ಭಾಷೆಯ ಬಗ್ಗೆ ಹೆಚ್ಚು ಮುತುವರ್ಜಿ ವಹಿಸಬೇಕು. ಏಕೆಂದರೆ, ಮಕ್ಕಳು ನಮ್ಮ ಮಾತನ್ನಲ್ಲ, ನಮ್ಮ ಧ್ವನಿಯನ್ನು ಹೆಚ್ಚು ನೆನಪಿಟ್ಟುಕೊಳ್ಳುತ್ತಾರೆ. ನಮ್ಮದು ಶಾಂತ ಧ್ವನಿಯಾಗಿದ್ದರೆ ಅದು ಮಕ್ಕಳಿಗೆ ಸುರಕ್ಷಿತ ಮನಸ್ಸನ್ನು ಹೊಂದಲು ನೆರವಾಗುತ್ತದೆ. ಅದೇ ನಮ್ಮದು ಕಟು ಧ್ವನಿ ಆದರೆ ನಮ್ಮಿಂದ ಮುಚ್ಚಿಕೊಳ್ಳುವ ಮನಸ್ಸು ಅವರದಾಗುತ್ತದೆ. ಪರೀಕ್ಷೆ ಸಮಯದಲ್ಲಿ ಮನೆಯೇ ಪರೀಕ್ಷಾ ಕೇಂದ್ರದಂತೆ ಆಗಬಾರದು. ಮನೆ ಎಂಬುದು ಅವರ ವಿಶ್ರಾಂತಿಯ ಮತ್ತು ಭರವಸೆಯ ಆಧಾರದ ಸ್ಥಳ ಆಗಬೇಕು. ನಮ್ಮ ಮಗುವಿನ ಜೀವನದಲ್ಲಿ ಈ ಪರೀಕ್ಷೆ ಒಂದು ಪುಟ ಮಾತ್ರ. ಆದರೆ ಈ ಸಮಯದಲ್ಲಿ ನಾವು ತೋರಿಸುವ ಪ್ರೀತಿ, ಸಹನೆ ಮತ್ತು ನಂಬಿಕೆ ಮಗುವಿನ ಜೀವನಪೂರ್ತಿ ಉಳಿಯುವ ಅಧ್ಯಾಯವಾಗುತ್ತದೆ. ಮಗುವಿಗೆ ಬೇಕಾಗಿರುವುದು ಶಾಲೆ ಕೊಡುವ ಅಂಕವಲ್ಲ. ತನ್ನ ಜೀವಕ್ಕೆ ಮತ್ತು ಜೀವನಕ್ಕೆ ಪೋಷಕರು ಕೊಡುವ ಮೌಲ್ಯ. ಪೋಷಕರ ಧೋರಣೆ ಮಗುವಿಗೆ ಚೈತನ್ಯವನ್ನು ನೀಡುವುದು. ಪರೀಕ್ಷೆಗೆ ನೀನು ಹೋಗುತ್ತೀಯ. ಆದರೆ ಪರೀಕ್ಷೆ ನಿನ್ನನ್ನು ಅಳೆಯಲು ಬಂದಿಲ್ಲ ಎನ್ನುವಂತಿರಬೇಕು. ಮೊದಲು ಮಗುವಿನ ಮನಸ್ಸನ್ನು ಸಿದ್ಧಪಡಿಸುವುದು ಮುಖ್ಯ. ಮಗುವು ಎಲ್ಲವನ್ನೂ ನೆನಪಿಟ್ಟುಕೊಳ್ಳಬೇಕು ಅಂತಿಲ್ಲ. ಅದು ಓದಿದ್ದಷ್ಟು ಶಾಂತವಾಗಿ ಬರೆಯಬೇಕು - ಅಷ್ಟೇ. ಮಗುವಿನ ಮನಸ್ಸಿಗೆ ಹಿತವಾದ ವಾತಾವರಣವನ್ನು ಸೃಷ್ಟಿಸಿದರೆ, ಆ ಮೂಲಕ ಮಗುವು ಭಾವನಾತ್ಮಕವಾಗಿ ಒತ್ತಡಕ್ಕೆ ಒಳಗಾಗದಿದ್ದರೆ ಅಂತಹ ವಿಶ್ರಾಂತಿ ಸ್ಥಿತಿಯಲ್ಲಿ ಹೆಚ್ಚು ಗ್ರಹಿಸಲು ಸಾಧ್ಯವಾಗುತ್ತದೆ. ಫಲಿತಾಂಶದ ಬಗ್ಗೆ ಭಯ ಇಲ್ಲದಿರಲು ಕೂಡಾ ಸಾಧ್ಯವಾಗುತ್ತದೆ. ಎಷ್ಟೋ ಜನ ಪೋಷಕರು ‘‘ಈ ಪರೀಕ್ಷೆ ನಿನ್ನ ಟರ್ನಿಂಗ್ ಪಾಯಿಂಟ್’’ ಎಂದು ಹೆದರಿಸುತ್ತಾರೆ. ಒಂದು ವರ್ಷ ವ್ಯರ್ಥವಾದರೆ ಎಂದು ಹೆದರುತ್ತಾರೆ. ಮಗುವಿನ ಜೀವ ಮತ್ತು ಜೀವನಕ್ಕಿಂತ ಯಾವ ಒಂದು ವರ್ಷವೂ ಅಥವಾ ಟರ್ನಿಂಗ್ ಪಾಯಿಂಟ್ ಏನೂ ಮುಖ್ಯವಲ್ಲ. ಮತ್ತೊಂದು ವಿದ್ಯಾರ್ಥಿಯೊಂದಿಗೆ ಹೋಲಿಕೆ ಮತ್ತು ಸ್ಪರ್ಧೆ ಖಂಡಿತ ಉತ್ತಮ ಮನಸ್ಥಿತಿಯನ್ನು ಹೊಂದಲು ಬಿಡುವುದಿಲ್ಲ. ವೆಚ್ಚ ಮಾಡಿರುವ ಹಣ ವ್ಯರ್ಥವಾಗಬಾರದು, ತಮ್ಮ ಪ್ರತಿಷ್ಠೆ ಮತ್ತು ಗೌರವಕ್ಕೆ ಧಕ್ಕೆ ಬರಬಾರದು ಎಂಬೆಲ್ಲಾ ಆಲೋಚನೆಗಳು ಮಕ್ಕಳ ಸಕಾರಾತ್ಮಕ ಮನಸ್ಸಿಗೆ ಸಮಸ್ಯೆಯಾಗಿಯೇ ಕಾಡುತ್ತದೆ. ಪರೀಕ್ಷೆಯ ಫಲಿತಾಂಶವೇನೇ ಆದರೂ ನಮಗೆ ನೀನು ಮತ್ತು ನಿನ್ನ ಸುರಕ್ಷತೆಯೇ ಮುಖ್ಯ ಎಂಬ ಪೋಷಕರ ಧೋರಣೆ ಮಗುವಿನ ಮಾನಸಿಕ ಶಕ್ತಿಯಾಗುತ್ತದೆ.
ಏರ್ ಇಂಡಿಯಾ ವಿಮಾನ ದುರಂತ| ಇಟಾಲಿಯನ್ ಪತ್ರಿಕೆಯ ವರದಿ ನಿರಾಕರಿಸಿದ ವಿಮಾನಯಾನ ಸಚಿವ ಮುರಳೀಧರ್ ಮೊಹೋಲ್
ಸಾಂಗ್ಲಿ: ಅಹ್ಮದಾಬಾದ್ನಲ್ಲಿ ನಡೆದ ಏರ್ ಇಂಡಿಯಾ ವಿಮಾನ ದುರಂತದ ಕುರಿತ ವಿದೇಶಿ ಮಾಧ್ಯಮ ವರದಿಯನ್ನು ನಾಗರಿಕ ವಿಮಾನಯಾನ ರಾಜ್ಯ ಸಚಿವ ಮುರಳೀಧರ್ ಮೊಹೋಲ್ ತಳ್ಳಿ ಹಾಕಿದ್ದು, ಈ ಕುರಿತು ತನಿಖೆ ನಡೆಯುತ್ತಿದೆ ಎಂದು ಹೇಳಿದ್ದಾರೆ. ಅಹ್ಮದಾಬಾದ್ನಿಂದ ಲಂಡನ್ಗೆ ಹೊರಟಿದ್ದ ಏರ್ ಇಂಡಿಯಾ ವಿಮಾನ AI–171 2025ರ ಜೂನ್ 12ರಂದು ಟೇಕ್ಆಫ್ ಆದ ಕೆಲವೇ ಕ್ಷಣಗಳಲ್ಲಿ ಅಪಘಾತಕ್ಕೀಡಾದ ಪ್ರಕರಣಕ್ಕೆ ಸಂಬಂಧಿಸಿದಂತೆ, ಪೈಲಟ್ ಗಳಲ್ಲಿ ಒಬ್ಬರು ಉದ್ದೇಶಪೂರ್ವಕವಾಗಿ ವಿಮಾನದ ಇಂಧನ ಸ್ವಿಚ್ ಗಳನ್ನು ಆಫ್ ಮಾಡಿರುವ ಸಾಧ್ಯತೆ ಇದೆ ಎಂದು ಅಂತಿಮ ತನಿಖಾ ವರದಿಯಲ್ಲಿ ತಜ್ಞರು ಉಲ್ಲೇಖಿಸುವ ಸಾಧ್ಯತೆಯಿದೆ ಎಂದು ಇಟಾಲಿಯನ್ ದಿನಪತ್ರಿಕೆ ಕೊರಿಯೆರ್ ಡೆಲ್ಲಾ ಸೆರಾ ಪಾಶ್ಚಾತ್ಯ ವಿಮಾನಯಾನ ಮೂಲಗಳನ್ನು ಉಲ್ಲೇಖಿಸಿ ವರದಿ ಮಾಡಿತ್ತು. ಈ ಕುರಿತು ಪ್ರತಿಕ್ರಿಯಿಸಿದ ಸಚಿವ ಮುರಳೀಧರ್ ಮೊಹೋಲ್, ನಮ್ಮ ತನಿಖಾ ಸಂಸ್ಥೆಗಳು ಈ ವಿಷಯವನ್ನು ತನಿಖೆ ಮಾಡುತ್ತಿವೆ ಎಂದು ನಾನು ನಿಮಗೆಲ್ಲರಿಗೂ ತಿಳಿಸಲು ಬಯಸುತ್ತೇನೆ. ನಾವು ನಮ್ಮದೇ ಆದ ಸಂಸ್ಥೆಗಳಲ್ಲಿ ನಂಬಿಕೆ ಇಡಬೇಕೇ ಅಥವಾ ಹೊರಗಿನವರ ಮೇಲೆ ನಂಬಿಕೆ ಇಡಬೇಕೇ? ಅಂತಿಮ ವರದಿಯನ್ನು ಅಂತಿಮಗೊಳಿಸಿದ ನಂತರವೇ ಅದರ ಬಗ್ಗೆ ಪ್ರತಿಕ್ರಿಯಿಸುವುದು ಸಮರ್ಥನೀಯವಾಗಿರುತ್ತದೆ ಎಂದು ಹೇಳಿದರು. ಭಾರತದ ಅತ್ಯಂತ ಭೀಕರ ವಿಮಾನ ಅಪಘಾತಗಳಲ್ಲಿ ಒಂದಾದ ಏರ್ ಇಂಡಿಯಾದ ಬೋಯಿಂಗ್ 787-8 ವಿಮಾನ ದುರಂತವು ಜೂನ್ 12, 2025ರಂದು ನಡೆದಿತ್ತು. ಲಂಡನ್ ಗೆ ಹಾರಾಟ ನಡೆಸುತ್ತಿದ್ದ ಅಹಮದಾಬಾದ್ನಿಂದ ಟೇಕ್ ಆಫ್ ಆದ ಕೆಲವೇ ಕ್ಷಣದಲ್ಲಿ ವಿಮಾನ ಪತನವಾಗಿತ್ತು. ಘಟನೆಯಲ್ಲಿ 241 ಪ್ರಯಾಣಿಕರು ಸೇರಿದಂತೆ ಒಟ್ಟು 260 ಜನರು ಮೃತಪಟ್ಟಿದ್ದರು.
KALABURAGI | ಈಜಲು ಹೋಗಿ ನದಿಪಾಲಾದ ಯುವಕ; ಶೋಧ ಕಾರ್ಯ
ಕಲಬುರಗಿ: ಈಜಲು ಹೋದ ಯುವಕನೋರ್ವ ನೀರುಪಾಲಾಗಿ ನಾಪತ್ತೆಯಾಗಿರುವ ಘಟನೆ ಸೇಡಂ ತಾಲೂಕಿನ ಬೀರನಹಳ್ಳಿ ಗ್ರಾಮದ ಕಾಗಿಣಾ ನದಿಯಲ್ಲಿ ಶನಿವಾರ ಸಂಜೆ ನಡೆದಿದೆ. ಆಳಂದ ತಾಲೂಕಿನ ಬೆಳಮಗಿ ಗ್ರಾಮದ ಶಿವಪ್ರಕಾಶ್(26) ನಾಪತ್ತೆಯಾಗಿರುವ ಯುವಕ. ಇವರು ಶನಿವಾರ ಸಂಜೆ ಈಜಲೆಂದು ನದಿಗೆ ಇಳಿದವರು ಮುಳುಗಿ ನಾಪತ್ತೆಯಾಗಿದ್ದಾರೆ. ಅಗ್ನಿಶಾಮಕದ ದಳದ ಸಿಬ್ಬಂದಿ ಹಾಗೂ ಪೊಲೀಸರು ಶಿವಪ್ರಕಾಶ್ ರಿಗಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ. ಈ ಬಗ್ಗೆ ಮಳಖೇಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೇಸಿಗೆಗೂ ಮುನ್ನವೇ ತಾಪಮಾನ ಹೆಚ್ಚಳ ; ಬಿಸಿಲಿಗೆ ಬಸವಳಿದ ಜನತೆ
ಚಾಮರಾಜನಗರ ಜಿಲ್ಲಾ ಕೇಂದ್ರದಲ್ಲಿ ಹೆಚ್ಚುತ್ತಿರುವ ಬಿಸಿಲಿನ ತಾಪಮಾನದಿಂದಾಗಿ ತತ್ತರಿಸಿ ಹೋಗಿರುವ ಜನತೆ ತಂಪು ಪಾನಿಯಗಳಾದ ಎಳನೀರು, ಐಸ್ಕ್ರಿಮ್, ಕಲ್ಲಂಗಡಿ ಹಣ್ಣು, ಕಬ್ಬಿನ ಪಾನಕ, ಹಣ್ಣಿನ ಜ್ಯೂಸ್ಗಳತ್ತ ಮುಖ ಮಾಡುತ್ತಿರುವುದು ಕಂಡು ಬರುತ್ತಿದೆ. ಇದರಿಂದಾಗಿ ರಸ್ತೆ ಬದಿ ಕಲ್ಲಂಗಡಿ ಹಣ್ಣು, ಕರಬೂಜ ಹಣ್ಣು, ಎಳನೀರಿಗೆ ಬೇಡಿಕೆ ಹೆಚ್ಚಾಗಿದೆ.
ಸಾಗರ ಸೀಮೆಯ ಭಾಗ ಲಾಗಾಯ್ತಿನಿಂದಲೂ ಆಧುನಿಕ ರಂಗಭೂಮಿಯ ಪ್ರಯೋಗಶಾಲೆ. ಹೆಗ್ಗೋಡಿನ ನೀನಾಸಂ, ಕಿನ್ನರ ಮೇಳಗಳು, ಸಾಗರದ ಉದಯ ಕಲಾವಿದರ ಹಿರಿಯ ತಲೆಮಾರಿನ ಪರಂಪರೆ ಅಲ್ಲಿದೆ. ಅವುಗಳ ಮಧ್ಯೆಯೇ ಹುಟ್ಟಿಕೊಂಡ ‘ಸ್ಪಂದನ’ ಹವ್ಯಾಸಿ ರಂಗ ತಂಡ ಕೂಡ ವಿಭಿನ್ನವಾದ ರಂಗ ಚಟುವಟಿಕೆಗಳನ್ನು ನಡೆಸುತ್ತ, ಸುಮಾರು ಕಾಲು ಶತಮಾನ ಕಂಡಿದೆ. ಕೃಷಿಕರು, ವಿದ್ಯಾರ್ಥಿಗಳು, ವ್ಯಾಪಾರಿಗಳು, ಅಧ್ಯಾಪಕರು ಹೀಗೆ ಬೇರೆ ಬೇರೆ ಹಿನ್ನೆಲೆಯ ರಂಗಾಸಕ್ತರನ್ನೊಳಗೊಂಡ ತಂಡ ಇದುವರೆಗೂ ರಂಗಕ್ಕೆ ತಂದ ನಾಟಕಗಳು ಅರವತ್ತೇಳಕ್ಕೂ ಹೆಚ್ಚು. ಈ ತಂಡದ ಹೊಸ ನಾಟಕ ‘ಪ್ರಾಣ ಪದ್ಮಿನಿ’ ಸುಮಾರು ಹದಿನೈದನೆಯ ಶತಮಾನದ ಕಾಲಮಾನದಲ್ಲಿ ಪೀಸಾದಲ್ಲಿ ನಡೆದ ಯದ್ಧದ ಹಿನ್ನೆಲೆಯಲ್ಲಿ ಕವಿ ಮಾರಿಸ್ ಮ್ಯಾಟರ್ ಲಿಂಕ್, ‘ಮೊನ್ನ ವನ್ನ’ ನಾಟಕ ರಚಿಸಿದ. ಕಮಾಂಡರ್ ಗಿಡೋನ ಪೀಸಾದ ಕೋಟೆಯ ಮೇಲೆ ದಾಳಿ ನಡೆದಿದೆ. ಶತ್ರು ಸೇನೆ ಕೋಟೆಯೊಡೆದು ಒಳಗೆ ಪ್ರವೇಶಿಸುವುದನ್ನು ತಡೆಯಬೇಕೆಂದರೆ ಕಮಾಂಡರ್ನ ಹೆಂಡತಿ ‘ಮೊನ್ನ ವನ್ನ’ ಒಂದು ರಾತ್ರಿ, ತೊಟ್ಟ ನಿಲುವಂಗಿಯ ಮೇಲೆ ಶತ್ರುಪಾಳಯಕ್ಕೆ ಹೋಗಬೇಕು. ಇಂಥದೊಂದು ಎಳೆಯನ್ನಿಟ್ಟುಕೊಂಡು, ಎಸ್.ಜಿ. ಶಾಸ್ತ್ರಿಯವರ ಅನುವಾದದ ಆಧಾರದ ಮೇಲೆ, ಮಂಜುನಾಥ ಎಲ್. ಬಡಿಗೇರ್ ಈ ನಾಟಕ ಬರೆದಿದ್ದಾರೆ. ಈ ನಾಟಕ ಅಪ್ಪಟ ಕನ್ನಡ ನೆಲದ್ದೇ ಎನ್ನುವಷ್ಟು ತಾಜಾ ಆಗಿದೆ. ಇಂಥ ರೂಪಾಂತರಕ್ಕಾಗಿ ಅವರು ಒಂದು ಐತಿಹಾಸಿಕ ಸಂದರ್ಭದ ಮೊರೆ ಹೋಗಿದ್ದಾರೆ. ಅದು ಮೊಗಲರು ವಿಜಯನಗರದ ಮೇಲೆ ನಡೆಸಿದ ದಾಳಿಯ ಸಂದರ್ಭ. ಅವರೇ ಹೇಳಿಕೊಳ್ಳುವ ಹಾಗೆ ಇದು ಇತಿಹಾಸದ ಸತ್ಯ ಘಟನೆಯಲ್ಲ. ರಾಜ, ರಾಣಿ, ಘಟನೆಗಳನ್ನು ನಾಟಕದ ಸಂದರ್ಭಕ್ಕೆ ಹೊಂದಿಕೊಳ್ಳುವುದರಿಂದ ಮಾತ್ರ ಬಳಸಿಕೊಳ್ಳಲಾಗಿದೆ. ಅಲ್ಲಾವುದ್ದೀನ್ನ ಸೇನಾಪತಿ ಅಜ್ಮಲ್ ಖಾನ್, ವಿಜಯನಗರದ ರಾಮರಾಯನ ಕೋಟೆಯ ಮೇಲೆ ದಾಳಿ ಮಾಡಿದ್ದಾನೆ. ವಾರದಿಂದಲೂ ಕೋಟೆಯಾಚೆ ಡೇರೆ ಹಾಕಿ ತಂಗಿದ್ದಾನೆ. ಇತ್ತ ನಿರಂತರ ಯುದ್ಧದಿಂದ ರಾಮರಾಯನ ರಾಜ್ಯ ಬರಿದಾಗಿಹೋಗಿದೆ. ಯುದ್ಧ ಸಾಮಗ್ರಿಗಳಿಲ್ಲ. ಆಹಾರವಿಲ್ಲ. ಜನ ಉಪವಾಸ ನರಳುತ್ತಿದ್ದಾರೆ. ಸೈನಿಕರು ಯುದ್ಧಮಾಡುವ ಸ್ಥಿತಿಯಲ್ಲಿಲ್ಲ. ರಾಜ್ಯದ ತುಂಬ ಹಾಹಾಕಾರ. ಇಂಥ ದುರಂತದ ಸ್ಥಿತಿಯಿಂದ ವಿಜಯನಗರವನ್ನು ಸ್ವತಃ ಅಜ್ಮಲ್ ಖಾನ್ ಮಾತ್ರ ಪಾರುಮಾಡಬಲ್ಲ. ಆತ ಮೊಗಲರನ್ನೇ ಎದುರು ಹಾಕಿಕೊಂಡು ವಿಜಯನಗರವನ್ನೂ ಪ್ರಜೆಗಳನ್ನೂ ಉಳಿಸಬಲ್ಲ. ಆದರೆ ಅದಕ್ಕೆ ಆತನ ಷರತ್ತೊಂದಿದೆ. ರಾಮರಾಯರ ಹೆಂಡತಿ ಪದ್ಮಿನಿ ಒಂದು ರಾತ್ರಿ ಉಟ್ಟ ಬಟ್ಟೆಯಲ್ಲೇ ಅಜ್ಮಲ್ ಖಾನ್ನಲ್ಲಿಗೆ ಬರಬೇಕು’. ರಾಜ್ಯದ ಪ್ರಜೆಗಳ ‘ಪ್ರಾಣ’ ಉಳಿಸಲು ‘ಪದ್ಮಿನಿ’ ಅಜ್ಮಲ್ ಖಾನ್ನಲ್ಲಿ ಹೋಗಲು ಸಿದ್ಧಳಾಗುತ್ತಾಳೆ. ಮುಂದಿನ ಭಾಗದಲ್ಲಿ ನಾಟಕ ಥಟ್ಟನೆ ತಿರುವು ಪಡೆದುಬಿಡುತ್ತದೆ. ನಾಟಕ, ಯುದ್ಧದ ಸಂದರ್ಭದಲ್ಲಿ ರಾಜ್ಯದ ಪ್ರಜೆಗಳು ಪಡುವ ಸಂಕಟ, ನೋವುಗಳು, ಯುದ್ಧದ ಘೋರ ಪರಿಣಾಮಗಳ ಮೇಲೆ ಬೆಳಕು ಚೆಲ್ಲಿದರೆ, ಅಜ್ಮಲ್ ಖಾನ್ನ ಷರತ್ತಿನ ನಂತರದ ಘಟನಾವಳಿಗಳು, ರಾಜಧರ್ಮದ ಕುರಿತಂತೆ, ‘ಮಾನವೋ: ಪ್ರಾಣವೋ’ ಎನ್ನುವ ಸಂಗತಿಗಳ ನಡುವಿನ ಸಂಘರ್ಷದ ವಸ್ತುವಾಗುತ್ತದೆ. ಪ್ರಜೆಗಳ ಪ್ರಾಣ ಉಳಿಸಲು ತಾನೇ ಬಲಿಯಾಗಹೊರಟ ಪದ್ಮಿನಿ ಒಂದು ಹಂತದಲ್ಲಿ ರಾಮರಾಯನ ತಿರಸ್ಕಾರಕ್ಕೂ ಒಳಗಾಗಬೇಕಾಗುತ್ತದೆ. ಆದರೆ ರಾಜಕೀಯ, ಯುದ್ಧ, ಹಿಂಸೆ ಇವುಗಳನ್ನೆಲ್ಲ ಮೀರಿದ ಒಳ ಹರಿವೊಂದಿದೆ. ಅದು ಪ್ರೀತಿ. ಚಿಗುರು ಯೌವನದ ಪ್ರೀತಿ. ಅನಂತರಾಮ, ಪದ್ಮಿನಿಯರ ಪ್ರೀತಿ. ಅದೆಷ್ಟೋ ಕಾಲದಿಂದ ಈ ಪ್ರೀತಿಗಾಗಿ ಹಾತೊರೆಯುತ್ತಿದ್ದ, ಈಗ ಅಜ್ಮಲ್ ಖಾನ್ ಆಗಿರುವ ಅನಂತರಾಮ ಪ್ರೀತಿಗಾಗಿ ಎಂಥ ತ್ಯಾಗಕ್ಕೂ ಸಿದ್ಧನಾಗುತ್ತಾನೆ. ಪದ್ಮಿನಿಯೇ ಆತನ ‘ಪ್ರಾಣ’. ಹಾಗೇ ಪದ್ಮಿನಿಯೂ ಆತನಿಗಾಗಿ ಎಲ್ಲರನ್ನೂ ಎದುರು ಹಾಕಿಕೊಳ್ಳಲು ಸಿದ್ಧ. ಧರ್ಮವನ್ನೂ ಮೀರಿದ ಅವ್ಯಾಜ ಪ್ರೀತಿಯ ದರ್ಶನ ಮಾಡಿಸುತ್ತದೆ ಈ ನಾಟಕ. ಆಶಯವನ್ನೂ, ನಿರೂಪಣೆಯನ್ನೂ ಹೊತ್ತ ಮೇಳ ಗೀತೆಗಳು, ದೃಶ್ಯ ನಿರ್ಮಿತಿಗಳನ್ನು ನಿರ್ದೇಶಕ ಮಂಜುನಾಥ್ ಎಲ್. ಬಡಿಗೇರ್ ಹದವಾಗಿ ಪೋಣಿಸುತ್ತ ಹೋಗುತ್ತಾರೆ. ಕುತೂಹಲಭರಿತವಾದ ನಾಟಕವೊಂದನ್ನು ಕಟ್ಟುತ್ತ ಹೋಗುತ್ತಾರೆ. ಹವ್ಯಾಸಿಗಳಿಗೆ ಹೊಂದುವಂತೆ ನಿಧಾನ ಗತಿಯಲ್ಲಿ ಕಥೆ ಹೇಳುತ್ತ ಹೋಗುವ ಶೈಲಿಯಿದು. ತೀರಾ ಕ್ಲಿಷ್ಟವಾದ ರಂಗಚಲನೆಗಳಿಲ್ಲ. ಆದರೆ ಕಥನ ಮಾತ್ರ ನೇರ, ಸರಳ, ಸ್ಪಷ್ಟ.ಹಾಗಾಗಿಯೇ ನಾಟಕ ಆರಾಮಾಗಿ ನೋಡಿಸಿಕೊಂಡು ಹೋಗುತ್ತದೆ. ನಾಟಕದುದ್ದಕ್ಕೂ ಅಲ್ಲಲ್ಲಿ ಸುಂದರವಾದ ದೃಶ್ಯ ನಿರ್ಮಿತಿಗಳಿವೆ. ಸರಳವಾದ ರಂಗ ಸಜ್ಜಿಕೆ. ಸಮ ಪಾತಳಿ. ಸಾಕಷ್ಟು ರಂಗ ಚಲನೆಯ ಅವಕಾಶ. ಇಂಥದೊಂದು ರಂಗ ಸಜ್ಜಿಕೆಯ ಮೇಲೆ ನಾಟಕ ಬಿಚ್ಚಿಕೊಳ್ಳುತ್ತದೆ. ನಟರೆಲ್ಲ ಇಂಥ ಅವಕಾಶವನ್ನು ಚೆನ್ನಾಗಿಯೇ ಬಳಸಿಕೊಂಡಿದ್ದಾರೆ. ಅಜ್ಮಲ್ ಖಾನ್ನ ಟೆಂಟ್ನ ವಿನ್ಯಾಸ ಚಂದವಿದೆ. ಟೆಂಟ್ನ ಚಿಕ್ಕ ಅವಕಾಶದಲ್ಲೇ ನಾಟಕದ ಮುಖ್ಯ ತಿರುವುಗಳೂ ಘರ್ಷಣೆಗಳೂ ನಡೆಯುತ್ತದೆ. ನಿರ್ದೇಶಕ ಮಂಜುನಾಥ್ ಇಲ್ಲಿಯ ಘಟನೆಗಳನ್ನು ಪ್ರಭಾವಶಾಲಿಯಾಗಿ ಕಟ್ಟಿಕೊಡುತ್ತಾರೆ. ನಟ ನಟಿಯರಿಗೆ ನಾಟಕದ ಯಶಸ್ಸಿನ ಬಹುಪಾಲು ಸಲ್ಲುತ್ತದೆ. ಸಮಾಜದ ಬೇರೆ ಬೇರೆ ಕಡೆಗಳಿಂದ ಬಂದ ಇವರು ಸುಮಾರು ನಲವತ್ತೈದು ದಿನ ನಾಟಕದ ಸಿದ್ಧತೆಯಲ್ಲಿ ತೊಡಗಿಸಿಕೊಳ್ಳುವುದೆಂದರೆ ಸುಲಭವಲ್ಲ. ಅದಮ್ಯ ರಂಗಪ್ರೀತಿಯೊಂದೇ ಇದಕ್ಕೆ ಕಾರಣ. ಮತ್ತು ಅವರ ಕಲಿಕೆಯನ್ನು ಅಷ್ಟೇ ಪ್ರಭಾವಶಾಲಿಯಾಗಿ ರಂಗದ ಮೇಲೆ ತೆರೆದಿಡುತ್ತಾರೆ. ಅಭಿನಯ, ಮಾತುಗಳಲ್ಲಿ ಕಸಬುದಾರಿಕೆಯಿದೆ. ಮುಖ್ಯವಾಗಿ, ಯಾವುದೇ ರೆಪರ್ಟರಿಯ ನಟರಿಗೆ ಕಡಿಮೆಯಿಲ್ಲದಂತೆ ತಮ್ಮ ಅಭಿನಯ ಕೌಶಲವನ್ನು ಪ್ರದರ್ಶಿಸಿದ್ದಾರೆ. ವಿವೇಕ ನಾಯಕ, ಮಹಾಲಕ್ಷ್ಮಿ ಎಸ್., ನಂದಿನಿ ಎನ್., ಶಿವಕುಮಾರ ಉಳವಿ, ಭೂಮಿ, ಕಾರ್ತಿಕ್ ಕೆ., ವಿನಾಯಕ ಡಿ., ದೀಪಕ್ ಡೋಂಗ್ರೆ, ನಿಖಿಲ್ ಎನ್., ಪವನ ಎಸ್. ಮುಖ್ಯಪಾತ್ರಗಳಲ್ಲಿದ್ದಾರೆ. ಸಂಜೀವ್ ಕುಮಾರ್, ಪ್ರತಿಭಾ, ಅಶುತೋಶ್, ಕೀರ್ತಿರಾಜ್ ಮೇಳದಲ್ಲಿದ್ದಾರೆ. ಭಾರ್ಗವ ಹೆಗ್ಗೋಡು, ಅರುಣ ಕುಮಾರ್, ಅಕ್ಷರ ಇಂದ್ರರ ಸಂಗೀತದ ಟೀಮ್ ರಂಗಪ್ರಯೋಗವನ್ನು ಕಳೆಗಟ್ಟಿಸಿದೆ. ಚಕ್ಕಡಿ ಗಾಡಿಗಳು ವಿಜಯನಗರವನ್ನು ಪ್ರವೇಶಿಸುವ ದೃಶ್ಯವನ್ನಂತೂ ಬರಿಯ ಸಂಗೀತ ವಾದ್ಯಗಳಲ್ಲೇ ಕಣ್ಣಿಗೆ ಕಟ್ಟುವಂತೆ ಕಟ್ಟಿಕೊಡುತ್ತಾರೆ. ಹಿರಿಯ ಕಲಾವಿದ ಗುರುಮೂರ್ತಿ ವರದಾಮೂಲರ ವಸ್ತ್ರವಿನ್ಯಾಸ. ಪ್ರವೇಶದಲ್ಲಿ ವಿಜಯನಗರದ ಸ್ಥಿತಿಯನ್ನು ಸಂಕೇತಿಸುವಂತೆ ಕಪ್ಪು ಉಡುಗೆಯಲ್ಲಿ ಬರುವ ಪದ್ಮಿನಿಗೆ ಎರಡನೆಯ ಭಾಗದಲ್ಲಿ ಶುಭ್ರವಾದ ಪ್ರೀತಿಯನ್ನು ಸಂಕೇತಿಸುವಂತೆ ಅಚ್ಚ ಬಿಳಿಯ ಉಡುಗೆ ತೊಡಿಸಿರುವುದು ಗಮನಾರ್ಹವಾಗಿದೆ. ಜೀವನ್ ಕುಮಾರ್ ಹೆಗ್ಗೋಡು ಬೆಳಕಿನ ವಿನ್ಯಾಸ ಮಾಡಿದ್ದಾರೆ. ಪದ್ಮಿನಿ, ಅನಂತರಾಮರ ದೃಶ್ಯದಲ್ಲಿ ಬೆಳಕಿನ ವಿನ್ಯಾಸ ಚಂದವಾಗಿದೆ. ಪ್ರತಿಭಾ ಎಂ.ವಿ. ಸಂಯೋಜನೆಯ ಹೊಣೆ ಹೊತ್ತಿದ್ದಾರೆ. ನಾಟಕದ ಕೊನೆಯ ದೃಶ್ಯದಲ್ಲಿ ಇನ್ನಷ್ಟು ಸ್ಪಷ್ಟತೆ ಬೇಕಿತ್ತೇನೋ ಎನಿಸದಿರದು. ಕೊನೆಯಲ್ಲಿ ಪದ್ಮಿನಿ ಮತ್ತೆ ಮತ್ತೆ ಹೇಳುತ್ತಾಳೆ. ಆಕೆಗೆ ಹೇಳುವುದು ಅನಿವಾರ್ಯವಾಗಿದೆ ಕೂಡ. ‘‘ಆತ ನನ್ನ ಮೈ ಮುಟ್ಟಿಲ್ಲ’’ ಮೂವತ್ತು ಸಾವಿರ ಪ್ರಜೆಗಳ ಪ್ರಾಣ ಉಳಿಸಿದ ಮೇಲೂ ಪದ್ಮಿನಿಗೆ ತನ್ನ ಸ್ತ್ರೀತ್ವದ ಪುರಾವೆ ಕೊಡಬೇಕಾಗಿದೆ.
ಮಾಧವ್ ಗಾಡ್ಗೀಳ್ ಮತ್ತು ಆಂಡ್ರೆ ಬೆಟೈಲ್ ಇಬ್ಬರೂ ದೇಶಭಕ್ತರಾಗಿದ್ದರೂ, ಭಾರತದ ಮೇಲಿನ ತಮ್ಮ ಪ್ರೀತಿಯನ್ನು ಪ್ರದರ್ಶಕ ರೀತಿಯಲ್ಲಿ ತೋರಿಸಲು ಎಂದಿಗೂ ಪ್ರಯತ್ನಿಸಲಿಲ್ಲ. ಅವರು ಹೇಗೆ ಬದುಕಿದರು ಮತ್ತು ಹೇಗೆ ವರ್ತಿಸಿದರು ಎಂಬುದರಲ್ಲಿ, ಎಲ್ಲಾ ವಿದ್ಯಾರ್ಥಿಗಳು ಮತ್ತು ಸಹೋದ್ಯೋಗಿಗಳನ್ನು ಅವರ ಜಾತಿ, ವರ್ಗ, ಲಿಂಗ ಅಥವಾ ಧರ್ಮವನ್ನು ಲೆಕ್ಕಿಸದೆ ಸಮಾನವಾಗಿ ನಡೆಸಿಕೊಳ್ಳುವ ಮೂಲಕ, ಭಾರತೀಯ ಬೌದ್ಧಿಕ ಜೀವನಕ್ಕೆ ಸ್ಥಿರವಾಗಿ ಕೊಡುಗೆ ನೀಡುವುದನ್ನು ಮುಂದುವರಿಸುವ ಮೂಲಕ ಅದನ್ನು ವ್ಯಕ್ತಪಡಿಸಿದರು. ಧಾರ್ಮಿಕ ಅಥವಾ ಆಧ್ಯಾತ್ಮಿಕ ಬೋಧನೆಯನ್ನು ಬಯಸುವವರಿಗೆ ಒಬ್ಬ ಗುರುವಿನ ಅಗತ್ಯವಿರಬಹುದು. ಅವರಿಗೆ ಸರಿಯಾದುದೆಂದು ಕಾಣುವ ಮಾರ್ಗವನ್ನು ಗುರು ತೋರಿಸುತ್ತಾನೆ ಮತ್ತು ನಡೆಸುತ್ತಾನೆ. ಗುರುವನ್ನು ಸೂಚ್ಯವಾಗಿ ಮತ್ತು ಕುರುಡಾಗಿ ಅನುಸರಿಸಲು ಶಿಷ್ಯನಿಗೆ ಹೇಳಲಾಗುತ್ತದೆ. ಆದರೂ, ವಿದ್ವಾಂಸರಾಗಲು ಬಯಸುವವರು ಗುರುವನ್ನು ಹುಡುಕುವುದು ಸೂಕ್ತವಲ್ಲ. ಒಬ್ಬ ವ್ಯಕ್ತಿಯು ಮನಸ್ಸಿನ ಸ್ವಾತಂತ್ರ್ಯವನ್ನು ಹೊಂದಲು, ಬೇರೆಯವರ ಒತ್ತಾಯದ ಮೇರೆಗೆ ಆಗಿರದೆ ಸ್ವಂತ ಬೌದ್ಧಿಕ ಹಿತಾಸಕ್ತಿಗಳಿಗೆ ಅನುಗುಣವಾಗಿ ಸಿದ್ಧಾಂತಗಳು ಮತ್ತು ವಿಧಾನಗಳನ್ನು ಅಳವಡಿಸಿಕೊಳ್ಳಲು ಅಥವಾ ತ್ಯಜಿಸಲು, ಅವರು ಹೆಚ್ಚು ಶಕ್ತಿಶಾಲಿಯಾಗಿದ್ದರೂ ಅಥವಾ (ವಿಶೇಷವಾಗಿ) ಹೆಚ್ಚು ಪ್ರಸಿದ್ಧರಾಗಿದ್ದರೂ, ವಿಮರ್ಶಾತ್ಮಕ ವಿಚಾರಣೆ ಮತ್ತು ಮೂಲ ಸಂಶೋಧನೆಯು ಅಗತ್ಯವಿರುತ್ತದೆ. ದುರಂತವೆಂದರೆ, ಆಧ್ಯಾತ್ಮಿಕ ಹುಡುಕಾಟ ಮತ್ತು ಪಾಂಡಿತ್ಯಪೂರ್ಣ ಅನ್ವೇಷಣೆಯ ನಡುವಿನ ಈ ಪ್ರಮುಖ ವ್ಯತ್ಯಾಸವು ಭಾರತದಲ್ಲಿ ಹೆಚ್ಚಾಗಿ ಮರೆತುಹೋಗಿದೆ. ನಮ್ಮ ದೇಶದ ಶೈಕ್ಷಣಿಕ ಸಂಸ್ಕೃತಿಯು ನಿರಾಶಾದಾಯಕವಾಗಿ ಊಳಿಗಮಾನ್ಯವಾಗಿದೆ. ವಯಸ್ಸಾದವರು ಮತ್ತು ಉನ್ನತ ಸ್ಥಾನಮಾನ ಹೊಂದಿರುವವರು ಗುರುಗಳಾಗಿ ಕಾರ್ಯನಿರ್ವಹಿಸಲು ಬಾಧ್ಯತೆ ಹೊಂದಿರುವುದಾಗಿ ಭಾವಿಸುತ್ತಾರೆ. ವಿಧೇಯತೆಯನ್ನು ಬಯಸುತ್ತಾರೆ ಮತ್ತು ಪ್ರತಿಯಾಗಿ ಗೌರವವನ್ನು ಪಡೆಯುತ್ತಾರೆ. ಈ ಬೌದ್ಧಿಕ ಊಳಿಗಮಾನ್ಯತೆಯು ವಿಜ್ಞಾನಗಳು ಮತ್ತು ಮಾನವಿಕಗಳಲ್ಲಿ ಮತ್ತು ನಂತರ, ಎಲ್ಲಾ ಸೈದ್ಧಾಂತಿಕ ಛಾಯೆಗಳಲ್ಲಿ ಅಸ್ತಿತ್ವದಲ್ಲಿದೆ. ಸೈದ್ಧಾಂತಿಕವಾಗಿ ಮಾರ್ಕ್ಸ್ವಾದವು ಸಾಮಾಜಿಕ ಶ್ರೇಣಿ ವ್ಯವಸ್ಥೆಗಳಿಗೆ ವಿರುದ್ಧವಾಗಿದೆ. ಆದರೆ ಪ್ರಾಯೋಗಿಕವಾಗಿ ಕೋಲ್ಕತಾದ ಮಾರ್ಕ್ಸ್ವಾದಿ ಪ್ರಾಧ್ಯಾಪಕರು ವಾರಣಾಸಿಯ ಸಂಪ್ರದಾಯವಾದಿ ಹಿಂದೂ ದೃಷ್ಟಿಕೋನದ ಪ್ರಾಧ್ಯಾಪಕರಿಗಿಂತ ತಮ್ಮ ಕಿರಿಯ ಸಹೋದ್ಯೋಗಿಗಳ ಕಡೆಗೆ ಕಡಿಮೆ ಶ್ರೇಣೀಕೃತವಾದವರೇನೂ ಆಗಿರಲಿಲ್ಲ. ಯುವ ವಿದ್ವಾಂಸರು ಒಂದೇ ಗುರುವಿನ ಹುಡುಕಾಟದಲ್ಲಿ ಇರಬಾರದು. ಆದರೆ ಅವರು ಪ್ರಾರಂಭಿಸುವಾಗ ತಮಗಿಂತ ಹಿರಿಯ ವಿದ್ವಾಂಸರೊಂದಿಗೆ ಸಂವಹನ ನಡೆಸುವುದರಿಂದ ಇನ್ನೂ ಪ್ರಯೋಜನ ಪಡೆಯಬಹುದು. ಈ ಹೆಚ್ಚು ಅನುಭವಿ ಕೈಗಳು ಆರಂಭಿಕ ಸಂಶೋಧಕರಿಗೆ ಸುಳಿವುಗಳು, ದೃಷ್ಟಿಕೋನಗಳು ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ವಿಮರ್ಶಾತ್ಮಕ ಪ್ರತಿಕ್ರಿಯೆಯನ್ನು ಒದಗಿಸಬಹುದು. ಅವರು ಮಾರ್ಗದರ್ಶಕರು, ಸಲಹೆಗಾರರು, (ತಾತ್ಕಾಲಿಕವಾಗಿ) ಸಲಹೆಗಾರರೂ ಆಗಿರಬಹುದು, ಆದರೆ ಗುರುಗಳಾಗಲು ಸಾಧ್ಯವಿಲ್ಲ. ತಮ್ಮ ಹಿರಿಯರು ಏನು ಹೇಳುತ್ತಾರೆಂದು ಗಮನವಿಟ್ಟು ಕೇಳುವಾಗ, ಅಂತಿಮವಾಗಿ ಯಾವ ನಿರ್ದಿಷ್ಟ ಸಂಶೋಧನಾ ಸಮಸ್ಯೆಯೊಂದಿಗೆ ಮತ್ತು ಯಾವ ನಿರ್ದಿಷ್ಟ ರೀತಿಯಲ್ಲಿ ತೊಡಗಿಸಿಕೊಳ್ಳಬೇಕೆಂದು ನಿರ್ಧರಿಸುವುದು ವೈಯಕ್ತಿಕವಾಗಿ ವಿದ್ವಾಂಸರಿಗೆ ಬಿಟ್ಟದ್ದು. ಬೌದ್ಧಿಕ ಅಭ್ಯಾಸದ ಕುರಿತಾದ ಈ ಪ್ರತಿಬಿಂಬಗಳು ನಾನು ಚಿಕ್ಕವನಿದ್ದಾಗ ನನ್ನ ಮೇಲೆ ಹೆಚ್ಚು ಪ್ರಭಾವ ಬೀರಿದ ಇಬ್ಬರು ಹಿರಿಯ ವಿದ್ವಾಂಸರ ಸಾವುಗಳಿಂದ ಪ್ರೇರೇಪಿಸಲ್ಪಟ್ಟಿವೆ. ಒಬ್ಬರು ಜನವರಿ 7ರಂದು ಪುಣೆಯಲ್ಲಿ ನಿಧನರಾದ ಎಂಭತ್ತಮೂರು ವರ್ಷದ ಪರಿಸರಶಾಸ್ತ್ರಜ್ಞ ಮಾಧವ ಗಾಡ್ಗೀಳ್. ಮತ್ತೊಬ್ಬರು ಫೆಬ್ರವರಿ 3ರಂದು ದಿಲ್ಲಿಯಲ್ಲಿ ನಿಧನರಾದ ತೊಂಭತ್ತೊಂದು ವರ್ಷದ ಸಮಾಜಶಾಸ್ತ್ರಜ್ಞ ಆಂಡ್ರೆ ಬೆಟೈಲ್. ನಾನು ಮೊದಲು ಗಾಡ್ಗೀಳ್ ಅವರನ್ನು ಭೇಟಿಯಾದದ್ದು 1982ರಲ್ಲಿ. ಆಗ ನನಗೆ ಇಪ್ಪತ್ತನಾಲ್ಕು ವರ್ಷ, ಅವರಿಗೆ ನಲವತ್ತು ವರ್ಷ. ನಾನು ಮೊದಲು ಬೆಟೈಲ್ ಅವರನ್ನು 1988ರಲ್ಲಿ ಭೇಟಿಯಾದೆ. ಆಗ ನನಗೆ ಮೂವತ್ತು ವರ್ಷ ತುಂಬಿತ್ತು ಮತ್ತು ಅವರು ಐವತ್ತರ ಮಧ್ಯದಲ್ಲಿದ್ದರು. ನಮ್ಮ ವಯಸ್ಸಿನ ವ್ಯತ್ಯಾಸವಿದ್ದರೂ, ನಾನು ತಕ್ಷಣವೇ ಇಬ್ಬರೊಂದಿಗೂ ಸ್ನೇಹ ಬೆಳೆಸಿಕೊಂಡೆ. ಇದು ಬಹುತೇಕ ಅವರ ಮರಣದವರೆಗೂ ಮುಂದುವರಿಯಿತು. ನಾವು ಸಾಂದರ್ಭಿಕವಾಗಿ ನಮ್ಮ ಕುಟುಂಬಗಳ ಬಗ್ಗೆ ಮಾತನಾಡುತ್ತಿದ್ದೆವು. ಆದರೆ ಪ್ರಾಧ್ಯಾಪಕರಾದ ಗಾಡ್ಗೀಳ್ ಮತ್ತು ಬೆಟೈಲ್ ಅವರೊಂದಿಗಿನ ನನ್ನ ಮಾತುಕತೆಗಳ ಹೆಚ್ಚಿನ ಭಾಗಗಳು ಸಮಾಜ, ರಾಜಕೀಯ, ಸಂಸ್ಕೃತಿ, ಇತಿಹಾಸ, ಪರಿಸರ ವಿಜ್ಞಾನ, ಭಾರತ ಮತ್ತು ಪ್ರಪಂಚದ ಬಗ್ಗೆ ಇದ್ದವು. ಮೊದಲ ನೋಟದಲ್ಲೇ, ಮಾಧವ್ ಗಾಡ್ಗೀಳ್ ಮತ್ತು ಆಂಡ್ರೆ ಬೆಟೈಲ್ ಅವರನ್ನು ಪ್ರತ್ಯೇಕಿಸುವ ಬಹಳಷ್ಟು ವಿಷಯಗಳಿವೆ. ಗಾಡ್ಗೀಳ್ ಒಬ್ಬ ವಿಜ್ಞಾನಿ, ಆದರೆ ಬೆಟೈಲ್ ವಿಜ್ಞಾನಿಯಲ್ಲ. ಗಾಡ್ಗೀಳ್ ಇಂಗ್ಲಿಷ್ ಕಲಿಯುವ ಮೊದಲೇ ಪುಣೆಯಲ್ಲಿ ಮರಾಠಿ ಮಾತನಾಡುತ್ತಾ ಬೆಳೆದರು. ಬೆಟೈಲ್ ಅವರ ತಂದೆ ಫ್ರೆಂಚ್ ಆಗಿದ್ದರೂ, ಅವರು ತಮ್ಮ ತಾಯಿಯ ಕುಟುಂಬದ ಕಡೆಯವರಾದ ಬಂಗಾಳಿಯೊಂದಿಗೆ ಹೆಚ್ಚು ಗುರುತಿಸಿಕೊಂಡರು. ಅವರು ಚಂದನಗೋರಿನಲ್ಲಿ ಬೆಳೆದರು ಮತ್ತು ಹೆಚ್ಚಾಗಿ ಕಲ್ಕತ್ತಾದಲ್ಲಿ ಶಿಕ್ಷಣ ಪಡೆದರು. ಶಾಲೆ ಮತ್ತು ಕಾಲೇಜಿನಲ್ಲಿ ಇಂಗ್ಲಿಷ್ ಮತ್ತು ಸ್ನೇಹಿತರೊಂದಿಗೆ ಬೀದಿಯಲ್ಲಿ ಬಂಗಾಳಿ ಮಾತನಾಡುತ್ತಿದ್ದರು. ಬೆಟೈಲ್ ತಮ್ಮ ಡಾಕ್ಟರೇಟ್ ಪದವಿಯನ್ನು ಭಾರತದಲ್ಲಿ ಪಡೆದರು. ಆದರೆ ಗಾಡ್ಗೀಳ್ ಅಮೆರಿಕದಲ್ಲಿ ಪಡೆದರು. ಗಾಡ್ಗೀಳ್ ತಮ್ಮ ವೃತ್ತಿಜೀವನದ ಬಹುಭಾಗವನ್ನು ಬೆಂಗಳೂರಿನಲ್ಲಿ ಕಳೆದರು. ಆದರೆ ಬೆಟೈಲ್ ದಿಲ್ಲಿಯಲ್ಲಿ ಇದ್ದರು. ಅಂತಿಮವಾಗಿ, ಗಾಡ್ಗೀಳ್ ಮತ್ತು ಬೆಟೈಲ್ ಎಂದಿಗೂ ಭೇಟಿಯಾಗಲಿಲ್ಲ ಮತ್ತು ಅವರಿಬ್ಬರೂ ಈ ಬರಹಗಾರನ ಮೂಲಕ ಹೆಚ್ಚಾಗಿ ಪರಸ್ಪರ ತಿಳಿದಿದ್ದರು. ಅವರ ವೃತ್ತಿಜೀವನವನ್ನು ನೋಡಿದಾಗ, ನಾನು ಗಮನಾರ್ಹ ಹೋಲಿಕೆಗಳನ್ನು ಕಾಣಬಹುದು ಎಂದು ಭಾವಿಸುತ್ತೇನೆ. ಅವರ ಬೌದ್ಧಿಕ ದೃಷ್ಟಿಕೋನ ಮತ್ತು ವಿದ್ವತ್ಪೂರ್ಣ ಅಭ್ಯಾಸದ ವಿಷಯದಲ್ಲಿ, ಮಾಧವ್ ಗಾಡ್ಗೀಳ್ ಮತ್ತು ಆಂಡ್ರೆ ಬೆಟೈಲ್ ಅವರನ್ನು ಒಟ್ಟಿಗೆ ತಂದ ಹತ್ತು ವೈಶಿಷ್ಟ್ಯಗಳನ್ನು ನಾನು ಗುರುತಿಸುತ್ತೇನೆ. ಮೊದಲನೆಯದಾಗಿ, ಇಬ್ಬರೂ ಪಾಂಡಿತ್ಯದ ವಿಧಾನದಲ್ಲಿ ನಿಜವಾಗಿಯೂ ಅಂತರ್ ಶಿಸ್ತಿನವರಾಗಿದ್ದರು. ಬೆಟೈಲ್ ಒಬ್ಬ ಸಮಾಜಶಾಸ್ತ್ರಜ್ಞರಾಗಿದ್ದು, ಇತಿಹಾಸಕಾರರು, ಅರ್ಥಶಾಸ್ತ್ರಜ್ಞರು ಮತ್ತು ಕಾನೂನು ವಿದ್ವಾಂಸರೊಂದಿಗೆ ಸಂವಹನ ನಡೆಸಿದರು. ಗಾಡ್ಗೀಳ್ ಒಬ್ಬ ಪರಿಸರಶಾಸ್ತ್ರಜ್ಞರಾಗಿದ್ದು, ಮಾನವಶಾಸ್ತ್ರಜ್ಞರು ಮತ್ತು ಇತಿಹಾಸಕಾರರೊಂದಿಗೆ ಸಹಯೋಗದ ಸಂಶೋಧನೆ ನಡೆಸಲು ವಿಜ್ಞಾನ/ಮಾನವಿಕ ವಿಭಾಗವನ್ನು ತಲುಪಿದರು. ಎರಡನೆಯದಾಗಿ, ಅವರ ಕೆಲಸದಲ್ಲಿ ಇಬ್ಬರೂ ಸಿದ್ಧಾಂತ ಮತ್ತು ಪ್ರಾಯೋಗಿಕ ಸಂಶೋಧನೆಯನ್ನು ಒಟ್ಟುಗೂಡಿಸಿದರು. ಕುತೂಹಲಕಾರಿಯಾಗಿ, ಬೆಟೈಲ್ ಜನಾಂಗಶಾಸ್ತ್ರಜ್ಞರಾಗಿ ತರಬೇತಿ ಪಡೆದರು. ಆದರೆ ನಂತರ ತುಲನಾತ್ಮಕ ಸಮಾಜಶಾಸ್ತ್ರದತ್ತ ತಿರುಗಿದರು. ಆದರೆ ಗಾಡ್ಗೀಳ್ ಪ್ರಕೃತಿಯೊಂದಿಗೆ ಮಾನವ ಸಂವಹನದ ವೈವಿಧ್ಯದ ಕುರಿತು ಕ್ಷೇತ್ರ ಅಧ್ಯಯನಗಳನ್ನು ನಡೆಸುವ ಮೊದಲು ಪರಿಸರ ವಿಜ್ಞಾನದಲ್ಲಿ ಹೆಚ್ಚು ಸೈದ್ಧಾಂತಿಕ ವಿಧಾನವನ್ನು ಪ್ರಾರಂಭಿಸಿದರು. ಮೂರನೆಯದಾಗಿ, ಇಬ್ಬರೂ ಬೋಧನೆ ಮತ್ತು ಸಂಸ್ಥೆ ನಿರ್ಮಾಣಕ್ಕೆ ಆಳವಾದ ಬದ್ಧತೆಯನ್ನು ಹೊಂದಿದ್ದರು. ಪ್ರತಿಯೊಬ್ಬರೂ ಮೂವತ್ತು ವರ್ಷಗಳಿಗೂ ಹೆಚ್ಚು ಕಾಲ ಒಂದೇ ಸಂಸ್ಥೆಯಲ್ಲಿ ಕಳೆದರು. ಬೆಟೈಲ್ ದಿಲ್ಲಿ ವಿಶ್ವವಿದ್ಯಾನಿಲಯದೊಂದಿಗೆ (ಮತ್ತು ನಿರ್ದಿಷ್ಟವಾಗಿ ಅದರ ಸಮಾಜಶಾಸ್ತ್ರ ವಿಭಾಗದೊಂದಿಗೆ) ನಿಕಟವಾಗಿ ಗುರುತಿಸಿಕೊಂಡರು. ಗಾಡ್ಗೀಳ್ ಭಾರತೀಯ ವಿಜ್ಞಾನ ಸಂಸ್ಥೆಯೊಂದಿಗೆ (ಮತ್ತು ನಿರ್ದಿಷ್ಟವಾಗಿ ಅದರ ಪರಿಸರ ವಿಜ್ಞಾನ ಕೇಂದ್ರದೊಂದಿಗೆ) ಸ್ಪಷ್ಟ ಬಾಂಧವ್ಯವನ್ನು ಹೊಂದಿದ್ದರು. ನಾಲ್ಕನೆಯದಾಗಿ, ಅಕಾಡಮಿಯನ್ನು ಮೀರಿದ ವಿಶಾಲ ಸಾರ್ವಜನಿಕರೊಂದಿಗೆ ಸಕ್ರಿಯವಾಗಿ ತೊಡಗಿಸಿಕೊಂಡರು. ಇಬ್ಬರೂ ಬೌದ್ಧಿಕ ಪ್ರವೃತ್ತಿಗಳನ್ನು ಹೊಂದಿಸುವ ಶೈಕ್ಷಣಿಕ ಪುಸ್ತಕಗಳು ಮತ್ತು ಸಂಶೋಧನಾ ಪ್ರಬಂಧಗಳನ್ನು ಪ್ರಕಟಿಸಿದರು. ಆದರೆ ಇಬ್ಬರೂ ಪತ್ರಿಕೆಗಳಿಗೆ ಆಗಾಗ ಬರೆದರು. ತಮ್ಮ ಸಹ ನಾಗರಿಕರಿಗೆ ತಮ್ಮ ಪಾಂಡಿತ್ಯದ ಫಲಗಳು ಸಿಗುವಂತೆ ಮಾಡಿದರು. ಆದರೂ, ಗಮನಾರ್ಹವಾಗಿ ಅವರು ತಮ್ಮನ್ನು ಹೋರಾಟಗಾರ ಅಥವಾ ಚಿಂತಕ ಎಂದು ಭಾವಿಸಲಿಲ್ಲ. ಅವರು ತಮ್ಮ ಸಾರ್ವಜನಿಕ ತೊಡಗಿಸಿಕೊಳ್ಳುವಿಕೆಯನ್ನು ತಾವು ಸಂಶೋಧನೆ ಮಾಡಿದ ಕ್ಷೇತ್ರಗಳಿಗೆ ಸೀಮಿತಗೊಳಿಸಿದರು. ಐದನೆಯದಾಗಿ, ಇಬ್ಬರೂ ತಮ್ಮ ವೃತ್ತಿಜೀವನದ ಆರಂಭದಲ್ಲಿ ತಮ್ಮ ಸ್ಥಳೀಯ ಪ್ರಾಂತದ ಹೊರಗೆ ಸ್ಥಳಾಂತರಗೊಳ್ಳುವ ಮೂಲಕ ತಮ್ಮ ಬೌದ್ಧಿಕ ಪ್ರಪಂಚಗಳನ್ನು ವಿಸ್ತರಿಸಿಕೊಂಡರು. ಬೆಟೈಲ್ ಕಲ್ಕತ್ತಾದಲ್ಲಿ ಅಲ್ಲ, ದಿಲ್ಲಿಯಲ್ಲಿ ಮತ್ತು ಗಾಡ್ಗೀಳ್ ಪುಣೆಯಲ್ಲಿ ಅಲ್ಲ, ಬೆಂಗಳೂರಿನಲ್ಲಿ ಕೆಲಸ ಮಾಡಿದ ಕಾರಣ, ಅವರು ತಮ್ಮ ಜೀವನವನ್ನು ಹೆಚ್ಚಾಗಿ ತಮ್ಮ ರಾಜ್ಯದಲ್ಲಿ ಕಳೆಯುವ ಭಾರತೀಯ ಬುದ್ಧಿಜೀವಿಗಳಿಗಿಂತ ವಿಶಾಲವಾದ ದೃಷ್ಟಿಕೋನವನ್ನು ಹೊಂದಿದ್ದರು. ಬೆಟೈಲ್ ಅವರ ಅತ್ಯಂತ ತೀವ್ರವಾದ ಕ್ಷೇತ್ರಕಾರ್ಯವು ತಮಿಳುನಾಡಿನಲ್ಲಿ ನಡೆಯಿತು ಮತ್ತು ಗಾಡ್ಗೀಳ್ ಅವರ ಕ್ಷೇತ್ರಕಾರ್ಯವು ಕರ್ನಾಟಕ ಮತ್ತು ಕೇರಳದಲ್ಲಿ ನಡೆಯಿತು. ಆದರೂ, ಇಬ್ಬರೂ ತಮ್ಮ ಸ್ಥಳೀಯ ನೆಲಗೊಂದಿಗಿನ ಸಂಪರ್ಕವನ್ನು ಕಳೆದುಕೊಳ್ಳಲಿಲ್ಲ. ಗಾಡ್ಗೀಳ್ ಮರಾಠಿ ಪತ್ರಿಕೆಗಾಗಿ ಬರೆದರು ಮತ್ತು ತಮ್ಮ ಕೊನೆಯ ವರ್ಷಗಳನ್ನು ತಮ್ಮ ಊರಿನಲ್ಲಿ ಕಳೆದರು. ಆದರೆ ಬೆಟೈಲ್ ತಮ್ಮ ಶಿಕ್ಷಕ ನಿರ್ಮಲ್ ಕುಮಾರ್ ಬೋಸ್ ಅವರ ಕ್ಲಾಸಿಕ್ ಬಂಗಾಳಿ ಪಠ್ಯವನ್ನು ಇಂಗ್ಲಿಷ್ಗೆ ಅನುವಾದಿಸಿದರು. ಜೊತೆಗೆ ಪತ್ರಿಕೆಗಾಗಿ ಕೆಲವು ಲೇಖನಗಳನ್ನು ಬರೆದರು. ಆರನೆಯದಾಗಿ, ಇಬ್ಬರೂ ಭಾರತದ ಹೊರಗಿನ ಪ್ರಪಂಚದಲ್ಲಿ ಕುತೂಹಲ ಹೊಂದಿದ್ದರು. ಎಲ್ಲಾ ರಾಷ್ಟ್ರೀಯತೆಗಳ ವಿದ್ವಾಂಸರೊಂದಿಗೆ ತೊಡಗಿಸಿಕೊಳ್ಳಲು ಮತ್ತು ಅವರ ಕೃತಿಗಳನ್ನು ಹತ್ತಿರದಿಂದ ಓದಲು ಉತ್ಸುಕರಾಗಿದ್ದರು. ಹೀಗೆ ಅವರು ಸ್ಪಷ್ಟವಾಗಿ ಪ್ಯಾನ್-ಇಂಡಿಯನ್ ಮತ್ತು ಅವರ ಬೌದ್ಧಿಕ ಹಿತಾಸಕ್ತಿಗಳಲ್ಲಿ ಸಮರ್ಥವಾಗಿ ಅಂತರ್ರಾಷ್ಟ್ರೀಯವಾದಿಗಳಾಗಿದ್ದರು. ಏಳನೆಯದಾಗಿ, ಮಾನಸಿಕ ಸಂಕುಚಿತತೆ ಇಲ್ಲದೆ ಇರುವಾಗಲೂ, ಇಬ್ಬರೂ ಭಾರತದಲ್ಲಿ ವಾಸಿಸಲು ಮತ್ತು ಕೆಲಸ ಮಾಡಲು ಮತ್ತು ಅದರ ಬೌದ್ಧಿಕ ಜೀವನಕ್ಕೆ ಕೊಡುಗೆ ನೀಡಲು ಬಯಸಿದರು. ಗಾಡ್ಗೀಳ್ ತಮ್ಮ ತಾಯ್ನಾಡಿಗೆ ಮರಳಲು ಹಾರ್ವರ್ಡ್ ವಿಶ್ವವಿದ್ಯಾನಿಲಯದಲ್ಲಿನ ಕೆಲಸವನ್ನು ತೊರೆದರು. ಬೆಟೈಲ್ ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯ ಮತ್ತು ಕ್ಯಾಲಿಫೋರ್ನಿಯಾ ವಿಶ್ವವಿದ್ಯಾನಿಲಯದಲ್ಲಿ ಪ್ರಾಧ್ಯಾಪಕ ಹುದ್ದೆಗಳ ಕೊಡುಗೆಗಳನ್ನು ನಿರಾಕರಿಸಿ, ದಿಲ್ಲಿಯಲ್ಲಿಯೇ ಉಳಿಯುವುದನ್ನು ಆಯ್ಕೆ ಮಾಡಿಕೊಂಡರು. ಎಂಟನೆಯದಾಗಿ, ಇಬ್ಬರೂ ದೇಶಭಕ್ತರಾಗಿ ದ್ದರೂ, ಭಾರತದ ಮೇಲಿನ ತಮ್ಮ ಪ್ರೀತಿಯನ್ನು ಪ್ರದರ್ಶಕ ರೀತಿಯಲ್ಲಿ ತೋರಿಸಲು ಎಂದಿಗೂ ಪ್ರಯತ್ನಿಸಲಿಲ್ಲ. ಅವರು ಹೇಗೆ ಬದುಕಿದರು ಮತ್ತು ಹೇಗೆ ವರ್ತಿಸಿದರು ಎಂಬುದರಲ್ಲಿ, ಎಲ್ಲಾ ವಿದ್ಯಾರ್ಥಿಗಳು ಮತ್ತು ಸಹೋದ್ಯೋಗಿಗಳನ್ನು ಅವರ ಜಾತಿ, ವರ್ಗ, ಲಿಂಗ ಅಥವಾ ಧರ್ಮವನ್ನು ಲೆಕ್ಕಿಸದೆ ಸಮಾನವಾಗಿ ನಡೆಸಿಕೊಳ್ಳುವ ಮೂಲಕ, ಭಾರತೀಯ ಬೌದ್ಧಿಕ ಜೀವನಕ್ಕೆ ಸ್ಥಿರವಾಗಿ ಕೊಡುಗೆ ನೀಡುವುದನ್ನು ಮುಂದುವರಿಸುವ ಮೂಲಕ ಅದನ್ನು ವ್ಯಕ್ತಪಡಿಸಿದರು. ಒಂಭತ್ತನೆಯದಾಗಿ, ಅವರ ದೇಶಪ್ರೇಮವು ತಮ್ಮ ದೇಶವು ಮಾಡಿದ ಅಥವಾ ನಿಂತಿರುವ ಎಲ್ಲದರ ಬಗ್ಗೆ ಕುರುಡು, ಅವಿಚಾರದ ಭಕ್ತಿಯನ್ನು ಒಳಗೊಂಡಿರಲಿಲ್ಲ. ತಮ್ಮ (ಅಥವಾ ಅವರ) ರಾಜ್ಯ ಅಥವಾ ಸರಕಾರವು ತಮ್ಮ ಸಹ ನಾಗರಿಕರ ವಿರುದ್ಧ ಅಪರಾಧಗಳನ್ನು ಮಾಡಿದರೆ ನಾಚಿಕೆಪಡಲು ಅಸಮರ್ಥನಾದ ಯಾರೂ ನಿಜವಾದ ರಾಷ್ಟ್ರೀಯವಾದಿಯಾಗಲು ಸಾಧ್ಯವಿಲ್ಲ ಎಂಬ ಐರಿಶ್ ವಿದ್ವಾಂಸ ಬೆನೆಡಿಕ್ಟ್ ಆಂಡರ್ಸನ್ ಅವರ ಹೇಳಿಕೆಯನ್ನು ಇಬ್ಬರೂ ಒಪ್ಪುತ್ತಿದ್ದರು. ಭಾರತೀಯ ಸಮಾಜದಲ್ಲಿ ವ್ಯಾಪಕವಾದ ಅಸಮಾನತೆಗಳ ಬಗ್ಗೆ ಬೆಟೈಲ್ ಮತ್ತು ಗಾಡ್ಗೀಳ್ ಇಬ್ಬರೂ ನಾಚಿಕೆಪಡುತ್ತಿದ್ದರು ಮತ್ತು ಅವರ ಶೈಕ್ಷಣಿಕ ಮತ್ತು ಜನಪ್ರಿಯ ಬರವಣಿಗೆಯಲ್ಲಿ ಅವುಗಳತ್ತ ಗಮನ ಸೆಳೆಯಲು ಪ್ರಯತ್ನಿಸಿದರು. ಕೊನೆಗೆ, ಅವರ ಅನೇಕ ಸಹ ಪ್ರಾಧ್ಯಾಪಕರಿಗಿಂತ ಭಿನ್ನವಾಗಿ, ಬೆಟೈಲ್ ಅಥವಾ ಗಾಡ್ಗೀಳ್ ಗುರುಗಳಾಗಲು ಬಯಸಲಿಲ್ಲ. ಅವರ ಸುತ್ತಲೂ ಆರಾಧಿಸುವ ಚೇಲಾಗಳ ವಲಯವಿತ್ತು. ಹಿರಿಯ ವಿದ್ವಾಂಸರು ತಮ್ಮ ಬುದ್ಧಿವಂತಿಕೆ ಮತ್ತು ಅನುಭವದ ಪ್ರಯೋಜನವನ್ನು ಒದಗಿಸಬಹುದಾದರೂ, ಕಿರಿಯ ವಿದ್ವಾಂಸರಲ್ಲಿ ಸಾಮಾನ್ಯವಾಗಿ ಕಂಡುಬರುವ ಉತ್ಸಾಹ ಮತ್ತು ಬೌದ್ಧಿಕ ಅಪಾಯವನ್ನೆಳೆದುಕೊಳ್ಳುವಿಕೆಯಿಂದ ಅವರು ಏನನ್ನಾದರೂ ಪಡೆಯಬಹುದು ಎಂದು ಇಬ್ಬರೂ ಅರ್ಥಮಾಡಿಕೊಂಡರು. ಇದು ಅವರ ಉದಾರವಾದದ ಒಂದು ಭಾಗವಾಗಿತ್ತು. ರಾಜಕೀಯ ಮತ್ತು ಬೌದ್ಧಿಕ ಪರಿಭಾಷೆಯಲ್ಲಿ ಅವರು ಕಠಿಣ ಅಥವಾ ಸಿದ್ಧಾಂತವಾದಿಯಾಗಿರಲಿಲ್ಲ. ಯಾವುದೇ ನಿರ್ದಿಷ್ಟ ಸಿದ್ಧಾಂತಕ್ಕೆ ಬದ್ಧರಾಗಿರಲಿಲ್ಲ ಮತ್ತು ಭಾರತ ಮತ್ತು ಪ್ರಪಂಚವನ್ನು ಅರ್ಥಮಾಡಿಕೊಳ್ಳಲು ಮುಕ್ತ ಮನಸ್ಸಿನ ವಿಧಾನವನ್ನು ಅನುಸರಿಸುತ್ತಿದ್ದರು. ಗುರುಕುಲ ಅಥವಾ ಪಕ್ಷದ ಶಾಲೆಯಲ್ಲಿ, ಹೊಸಬ ಅಥವಾ ಹೊಸದಾಗಿ ನೇಮಕಗೊಂಡವರಿಗೆ ಸೂಚನೆ ನೀಡಲಾಗುತ್ತದೆ, ಆದೇಶಿಸಲಾಗುತ್ತದೆ, ಮಾತನಾಡಲಾಗುತ್ತದೆ, ಒಂದು ಪದದಲ್ಲಿ, ಉಪದೇಶಿಸಲಾಗುತ್ತದೆ. ಮತ್ತೊಂದೆಡೆ, ವಿದ್ವತ್ಪೂರ್ಣ ಸಂಶೋಧನೆಯು ಪರಸ್ಪರ ಕಲಿಕೆಯ ಮೂಲಕ, ವಿಭಿನ್ನ ವಿಭಾಗಗಳ ಜನರ ನಡುವಿನ ವಿನಿಮಯ ಮತ್ತು ಸಂವಾದದ ಮೂಲಕ, ಸೈದ್ಧಾಂತಿಕ ದೃಷ್ಟಿಕೋನಗಳು, ಸಂಶೋಧನಾ ಶೈಲಿಗಳು, ಸಾಮಾಜಿಕ ಹಿನ್ನೆಲೆಗಳು, ರಾಷ್ಟ್ರೀಯ ಸಂಬಂಧಗಳು ಮತ್ತು - ಮುಖ್ಯವಾಗಿ, ತಲೆಮಾರುಗಳ ಮೂಲಕ ಮುಂದುವರಿಯುತ್ತದೆ. ನಾನು ಈ ಪಾಠಗಳನ್ನು ಮೊದಲು ಮಾಧವ್ ಗಾಡ್ಗೀಳ್ ಮತ್ತು ಆಂಡ್ರೆ ಬೆಟೈಲ್ ಅವರಿಂದ ಕಲಿತಿದ್ದೇನೆ ಮತ್ತು ಇತ್ತೀಚಿನ ವರ್ಷಗಳಲ್ಲಿ ಅವುಗಳನ್ನು ಪದೇ ಪದೇ ನಾನು ಒತ್ತಿ ಹೇಳಿದ್ದೇನೆ. ಏಕೆಂದರೆ ಮಾರ್ಗದರ್ಶನವನ್ನು ಹುಡುಕಿಕೊಂಡು ಬಂದು ಕೊನೆಯಲ್ಲಿ ಸ್ವತಃ ಅನೇಕ ವಿಷಯಗಳನ್ನು ಕಲಿಸುವ ಕಿರಿಯ ವಿದ್ವಾಂಸರು ಮತ್ತು ಬರಹಗಾರರಿಂದ ನಾನು ತುಂಬಾ ಪ್ರಯೋಜನ ಪಡೆದಿದ್ದೇನೆ.
ಭಾರತ ಮತ್ತು ಬಾಂಗ್ಲಾ ಸಂಬಂಧ ಸುಧಾರಣೆ, ತಾರಿಕ್ ರೆಹಮಾನ್ ಸರ್ಕಾರದ ಮೇಲೆ ನಿರೀಕ್ಷೆಯ ಭಾರ... Bangladesh Election
ಬಾಂಗ್ಲಾದೇಶಕ್ಕೆ ಒಂದು ರೀತಿ ಭಾರತ ತಂದೆ ಇದ್ದಂತೆ, ಏಕೆಂದರೆ ಪಾಕಿಸ್ತಾನದ ಹಿಡಿತಕ್ಕೆ ಸಿಲುಕಿದ್ದ ಬಾಂಗ್ಲಾದೇಶ ಎಂಬ ಪುಟಾಣಿ ಪ್ರದೇಶವನ್ನ ಸ್ವತಂತ್ರ ದೇಶವಾಗಿ ರೂಪುಗೊಳ್ಳಲು ಸಹಾಯ ಮಾಡಿದ್ದೇ ಭಾರತ. ಆದರೆ ಭಾರತ ಮಾಡಿದ್ದ ಈ ಸಹಾಯ ಮರೆತು ಕಳೆದ 2 ವರ್ಷಗಳಿಂದ ಬಾಂಗ್ಲಾದೇಶದಲ್ಲಿ ಅಸ್ತಿತ್ವದಲ್ಲಿದ್ದ ಹಂಗಾಮಿ ಸರ್ಕಾರ, ಪದೇ ಪದೇ ಕಿರಿಕ್ ತೆಗೆಯುತ್ತಿತ್ತು. ಭಾರತ ಕೂಡ ಇದನ್ನೆಲ್ಲಾ ಸೂಕ್ತವಾಗಿ
ಈ ದೇಶದಲ್ಲಿ ಜ್ಞಾನಪೀಠಗಳಿವೆ, ವ್ಯಾಸಪೀಠ ದಾಸಪೀಠಗಳಿವೆ, ಪೀಠಾಧಿಪತಿಗಳಿದ್ದಾರೆ, ಪೀಠಾಧ್ಯಕ್ಷರಿದ್ದಾರೆ. ಆದರೆ ಈ ನೆಲದ ನಿಜವಾದ ಜ್ಞಾನಪೀಠವೆಂದರೆ-ರೈತನ ಹೊಲ, ತೋಟ. ಅಲ್ಲಿ ಪಾಠ ಪುಸ್ತಕಗಳಿಲ್ಲ; ಆದರೆ ಬದುಕನ್ನು ಉಳಿಸುವ ಅನ್ನ ದಾರಿಯ ಅನಂತ ದಾರಿಗಳಿವೆ. ಅಲ್ಲಿ ಉಪನ್ಯಾಸಗಳಿಲ್ಲ; ಆದರೆ ಅನುಭವದ ಶಿಷ್ಯತ್ವವಿದೆ. ಅಲ್ಲಿ ಪ್ರಮಾಣಪತ್ರಗಳಿಲ್ಲ; ಆದರೆ ಬದುಕಿನ ಸತ್ಯವಿದೆ. ಈ ನೆಲದ ಜ್ಞಾನಪರಂಪರೆಯ ನಿಜವಾದ ವಾಸುದಾರರು ರೈತರೇ. ಆದರೆ ಅವರ ಬದುಕು ಭಾಗಶಃ ಪ್ರಭಾವ, ಪ್ರಶಸ್ತಿ, ಹಣದ ಬಲೆಯ ಹಿಂದೆ ಬಿದ್ದಿಲ್ಲ. ಹಕ್ಕು ಸ್ಥಾಪನೆಯ ಹೋರಾಟವೂ ಬಲವಾಗಿ ನಡೆದಿಲ್ಲ. ಮನೆ ತೋಟ ಹೊಲ ಗದ್ದೆ ಜಗಲಿ...ಇವಷ್ಟೇ ಬಹುಪಾಲು ಕೃಷಿಕರ ವಿಶ್ವ. ತಮ್ಮ ಬದುವಿನ ಬೇರಿನಾಚೆ ಮಾತಾಡಲು ಕೂಡ ಸಂಕೋಚಪಡುವ ಈ ಮಣ್ಣಿನ ಮಕ್ಕಳು ಪ್ರತಿಷ್ಠೆಯ ವೇದಿಕೆಗಳಲ್ಲೂ, ಪ್ರಭೆಯ ಬೆಳಕಿನಲ್ಲೂ ಕಾಣಿಸಿಕೊಳ್ಳದ ಮೌನ ಯೋಧರು. ಅಂಥ ಕಡಿಮೆ ಗುರುತು, ಕಡಿಮೆ ಪ್ರಶಸ್ತಿ, ಕಡಿಮೆ ಸನ್ಮಾನ ಪಡೆದ ರೈತರಿಗೆ ಒಂದು ಲೋಕಮಾನ್ಯ ಗೌರವ ನೀಡಬೇಕೆಂಬ ಕನಸಿನಿಂದಲೇ ಇದೀಗ ರೈತಪೀಠ ಎಂಬ ಪ್ರಶಸ್ತಿಯೊಂದು ಹುಟ್ಟಿದೆ. ಅದರ ಬೀಜ ಬಿತ್ತಿದವರು ಮೂಡುಬಿದಿರೆಯ ಡಾ. ರಾಮಕೃಷ್ಣ ಆಚಾರ್. ಸೊನ್ನೆಯಿಂದ ಏರಿ ಉದ್ಯಮದ ಶಿಖರವನ್ನೇರಿದರೂ, ಆ ಏರಿಕೆಯ ಅಹಂಕಾರ ಅವರನ್ನು ಎಂದೂ ನೆಲದಿಂದ ದೂರ ಮಾಡಲಿಲ್ಲ; ಬದಲಾಗಿ ಮತ್ತೆ ಮಣ್ಣಿನ ಬಳಿಗೆ ಕರೆತಂದಿತು. ಕಾರ್ಕಳದ ಮುನಿಯಾಲಿನ ಸಂಜೀವಿನಿ ಗೋಧಾಮ ಅವರ ಆ ಮರಳುವಿಕೆಯ ಜೀವಂತ ಸಾಕ್ಷಿ-ಇಂದು ಅದು ರೈತರಿಗೆ ಮಾದರಿ ಕೃಷಿ ಪಾಠಶಾಲೆ. ಸಂಜೀವಿನಿಗೆ ಕಾಲಿಟ್ಟ ಕ್ಷಣದಿಂದಲೇ ಅದು ಕೇವಲ ತೋಟವಲ್ಲ, ಸಮಗ್ರ ಕೃಷಿಯ ಹಸಿರು ವಿಶ್ವವಿದ್ಯಾನಿಲಯ ಎಂಬ ಅನುಭವ ಉಂಟಾಗುತ್ತದೆ. ಅಲ್ಲಿ ಗಿಡಮರ, ಗೋವು, ಹಕ್ಕಿ, ಮೀನು, ಮನುಷ್ಯ...ಹೀಗೆ ಎಲ್ಲವೂ ಒಂದೇ ಉಸಿರಿನಲ್ಲಿ ಬದುಕುತ್ತವೆ. ನೀರಿನ ಜಾಣ ಬಳಕೆ, ಮಣ್ಣಿನ ಸಂರಕ್ಷಣೆ, ಪುಂಗನೂರು ಹಸು ಸೇರಿ ಗೋವಿನ ಮೌಲ್ಯ-ಇವೆಲ್ಲ ಬದುಕಿನ ಪಾಠಗಳಾಗಿ ಹರಿಯುತ್ತವೆ. ಖಂಡಿತ ಇಲ್ಲಿ ಕೃಷಿ ಉದ್ಯಮವಲ್ಲ; ಅದು ಸಂಸ್ಕೃತಿ, ಸಹಜ ಸಹವಾಸ. ಇಲ್ಲಿಗೆ ಬರುವ ರೈತರು ಮಣ್ಣಿನ ಜೊತೆ ಬದುಕುವುದನ್ನು ಮರುಕಲಿಯುತ್ತಾರೆ. ‘ಈ ದೇಶದ ಕೃಷಿ ಸೋಲುತ್ತಿಲ್ಲ; ನಾವು ಕೃಷಿಯಿಂದ ದೂರ ಸರಿಯುತ್ತಿದ್ದೇವೆ’ ಎಂಬ ಸತ್ಯ ಇಲ್ಲಿ ನಗ್ನವಾಗುತ್ತದೆ. ‘ರೈತಪೀಠ-ಈ ನೆಲದ ಜ್ಞಾನಪೀಠ’ಎಂಬ ನನ್ನ ಹೊಸ ಕೃತಿಯೂ ಇದೇ ತೋಟದ ಹಸಿರು ವಿನ್ಯಾಸ, ಆಶಯ ಎಲ್ಲವನ್ನು ಇಟ್ಟುಕೊಂಡು ಬರೆಯಲಾದ ಯಶೋಗಾಥೆ. ಇದೇ ಫೆಬ್ರವರಿ 20ರಂದು ಸಂಜೀವಿನಿ ವನಾವರಣದಲ್ಲಿ ನಡೆಯುವ ರೈತಪೀಠ ಪ್ರಶಸ್ತಿ ಪ್ರದಾನ ಸಮಾರಂಭದಲ್ಲೇ ಈ ಕೃತಿಯು ಬಿಡುಗಡೆಗೊಳ್ಳಲಿದೆ. ಕೊಲ್ಲಾಪುರ -ಮಹಾರಾಷ್ಟ್ರದ ಸಿದ್ದಗಿರಿ ಮಠದ ಕಾಡಸಿದ್ದೇಶ್ವರ ಸ್ವಾಮೀಜಿ ನಿಮಗೆ ಗೊತ್ತಲ್ಲ? ಆ ಅಸಾಧಾರಣ ಮಣ್ಣು ಮತ್ತು ಪಶು ಪ್ರೇಮಿ ಈ ಕೃತಿಯನ್ನು ಬಿಡುಗಡೆ ಮಾಡಲಿದ್ದಾರೆ. ಇಂದು ನಾಗರಿಕ ಜಗತ್ತಿನಿಂದ ದೂರದ ಹಳ್ಳಿಗಳಲ್ಲಿ ಸಾವಿರಾರು ಎಕರೆ ಭೂಮಿ ಖರೀದಿಸಿ, ಹಸಿರು ಹಚ್ಚುವ, ಜೊತೆಗೆ ಸುದ್ದಿಯಿಲ್ಲದೆ ಬಂದು ಇಳಿದು ಹೋಗಲು ಹೆಲಿಪ್ಯಾಡ್ ನಿರ್ಮಿಸಿಕೊಂಡ ಉದ್ಯಮಿಗಳನ್ನು ನಾನು ನೋಡಿದ್ದೇನೆ. ನಗರದಲ್ಲಿ ಉದ್ಯಮಕ್ಕೆ ಮಾತ್ರ ಭವಿಷ್ಯವಿದೆ, ಜೀವ ಜೀವನಕ್ಕೆ ನೆಮ್ಮದಿಯ ಉಸಿರಿಲ್ಲ ಎಂದು ಕಾಂಕ್ರಿಟ್ ಕಾಡಿನಿಂದ ಹೊರಬಂದು, ಫಾರ್ಮ್ ಹೌಸ್ ಕಟ್ಟಿಕೊಂಡು, ವಾರಾಂತ್ಯದ ಹವ್ಯಾಸಕ್ಕೆ ಕೃಷಿ ಮಾಡಿಸುವುದನ್ನೇ ಸಾಧನೆ ಎಂದು ಕರೆಯುವ ದಿನಗಳಲ್ಲಿ, ರಾಮಕೃಷ್ಣ ಆಚಾರ್ ಅವರಂತೆ ಸೂಕ್ಷ್ಮವಾಗಿ ಮಣ್ಣಿಗೆ ಮರಳುವುದು, ಕೈ ಕಾಲಿಗೆ ಕೆಸರು ಮಾಡಿಕೊಳ್ಳುವುದು ಸುಲಭದ ಕೆಲಸವಲ್ಲ. ಕೃಷಿ ನೆಲ ಸಂಬಂಧಿ ಭತ್ತ, ನೀರು, ಇತ್ಯಾದಿಗಳ ಸಂಸ್ಕರಣ ಯಂತ್ರ -ಉತ್ಪಾದನಾ ಘಟಕಗಳನ್ನು ಕಟ್ಟಿಕೊಂಡ ಆಚಾರ್ ಅವರು ಮತ್ತೆ ನೆಲಕ್ಕೆ ಬಂದಿರುವುದು-ಅವರೊಳಗಿನ ಸಮೃದ್ಧ, ಸಹಜ, ಸುಸ್ಥಿರ ನೆಲದ ಗುಣದಿಂದಲೇ ಎಂಬುವುದು ಖಚಿತವಾದ ಮೇಲೆಯೇ ನಾನು ಕಾಗದದ ಮೇಲೆ ಪೆನ್ನಿಟ್ಟೆ. ‘ಕರ್ನಾಟಕ ಕೃಷಿ ಕಥನ ಮಾಲಿಕೆ’ಯಲ್ಲಿ ಉದ್ಯಮಿಗಳ, ಶ್ರೀಮಂತರ, ಭೂಮಿಗೆ ದುಡ್ಡು ಸುರಿದು ಆಕಾರ ಬದಲಾಯಿಸುವ ‘ನಾಗರಿಕ ರೈತ’ರ ಬಗ್ಗೆ ಬರೆಯಬಾರದು ಎಂಬ ನನ್ನ ನಿರ್ಧಾರವನ್ನು ಬದಲಾಯಿಸಿಕೊಂಡೆ. ರೈತಪೀಠ ಪ್ರಶಸ್ತಿಯ ಅರ್ಥವೂ ಇದೇ. ಅದು ಬರೀ ಒಂದು ಪದಕವಲ್ಲ. ಒಂದು ಸನ್ಮಾನವಲ್ಲ. ಅದು ಪೀಳಿಗೆಯಿಂದ ಪೀಳಿಗೆಗೆ ಹರಿದು ಬಂದ ಕೃಷಿ ಜ್ಞಾನಕ್ಕೆ ಸಲ್ಲಿಸುವ ಗೌರವ. ಅನಾಮಿಕರಾಗಿ ಮೌನವಾಗಿ ದುಡಿಯುವ ಕೈಗಳಿಗೆ ಸಲ್ಲಿಸುವ ಕೃತಜ್ಞತೆ. ಬೆಳಗಿನ ಜಾವ ಹೊಲಕ್ಕೆ ಇಳಿಯುವ ಕಾಲುಗಳಿಗೆ ಸಲ್ಲಿಸುವ ವಂದನೆ. ಇಲ್ಲಿ ಒಂದು ಲಕ್ಷದ ನಗದು ಇದೆ, ಶಾಶ್ವತ ಫಲಕ ಇದೆ. ಮುಂದಿನ ವರ್ಷದಿಂದ ದೇಶ ವ್ಯಾಪಿ ಐದು ಜನರನ್ನು ಗುರುತಿಸಿ ಇದೇ ಮೊತ್ತ, ಮಾನ ಸಲ್ಲಿಸುವ ಉದ್ದೇಶವಿದೆ. ಈ ದೇಶದಲ್ಲಿ ಜ್ಞಾನಪೀಠಗಳಿವೆ, ವ್ಯಾಸಪೀಠ ದಾಸಪೀಠಗಳಿವೆ, ಪೀಠಾಧಿಪತಿಗಳಿದ್ದಾರೆ, ಪೀಠಾಧ್ಯಕ್ಷರಿದ್ದಾರೆ. ಆದರೆ ಈ ನೆಲದ ನಿಜವಾದ ಜ್ಞಾನಪೀಠವೆಂದರೆ-ರೈತನ ಹೊಲ, ತೋಟ. ಅಲ್ಲಿ ಪಾಠ ಪುಸ್ತಕಗಳಿಲ್ಲ; ಆದರೆ ಬದುಕನ್ನು ಉಳಿಸುವ ಅನ್ನ ದಾರಿಯ ಅನಂತ ದಾರಿಗಳಿವೆ. ಅಲ್ಲಿ ಉಪನ್ಯಾಸಗಳಿಲ್ಲ; ಆದರೆ ಅನುಭವದ ಶಿಷ್ಯತ್ವವಿದೆ. ಅಲ್ಲಿ ಪ್ರಮಾಣಪತ್ರಗಳಿಲ್ಲ; ಆದರೆ ಬದುಕಿನ ಸತ್ಯವಿದೆ. ಅಂಥ ಜ್ಞಾನಪೀಠಕ್ಕೆ ಗೌರವ ಸಲ್ಲಿಸುವ ಒಂದು ಸಣ್ಣ ಪ್ರಯತ್ನವೇ ರೈತಪೀಠ. ಅಲ್ಲಿ ಪ್ರಶಸ್ತಿಗಿಂತ ದೊಡ್ಡ ಸಂಕಲ್ಪವಿದೆ. ರೈತನನ್ನು ಮತ್ತೆ ಸಮಾಜದ ಮಧ್ಯಕ್ಕೆ ತರುವ ಪ್ರಯತ್ನವಿದೆ. ಅವನ ಕೈಗೆ ಮರಳಿ ಗೌರವ ನೀಡುವ, ಅವನ ಜ್ಞಾನವನ್ನು ರಾಷ್ಟ್ರದ ಸಂಪತ್ತಾಗಿ ಗುರುತಿಸುವ ಹಂಬಲವಿದೆ. ಸಂಜೀವಿನಿ ಗೋಧಾಮ ಆ ದಾರಿಯ ಮೊದಲ ಹೆಜ್ಜೆ. ರೈತಪೀಠ ಅದರ ಮೊದಲ ಘೋಷಣೆ. ಈ ನೆಲದ ಜ್ಞಾನಪರಂಪರೆಯನ್ನು ನಾವು ಉಳಿಸಿಕೊಳ್ಳಬೇಕಾದರೆ, ರೈತನನ್ನು ಉಳಿಸಿಕೊಳ್ಳಬೇಕು. ರೈತನನ್ನು ಉಳಿಸಿಕೊಳ್ಳಬೇಕಾದರೆ, ಅವನ ಜ್ಞಾನಕ್ಕೆ ಗೌರವ ನೀಡಬೇಕು. ರೈತನನ್ನು ಈ ದೇಶದಲ್ಲಿ ಕಿಂಗ್ ಮಾಡಲು ಹೊರಟ ರಾಮಕೃಷ್ಣರ ಹಿಂದೆ ನಿಲ್ಲಬೇಕೆಂಬ ಕಾರಣಕ್ಕಾಗಿಯೇ ರೈತಪೀಠ ಪುಸ್ತಕವನ್ನು ರಚಿಸಿದ್ದೇನೆ. ಮೂಲತಃ ರಾಮಕೃಷ್ಣರು ಕುಂದಾಪುರದ ಗಂಗೊಳ್ಳಿಯ ಒಬ್ಬ ಸಾಮಾನ್ಯ ಬಡಗಿಯ ಮಗ. ಐದನೇ ತರಗತಿಯಲ್ಲೇ ಶಾಲೆ ಬಿಟ್ಟು ಕುಲುಮೆಯ ಕಠಿಣ ದುಡಿಮೆ. ತಿಂಗಳಿಗೆ ಮೂವತ್ತು ರೂಪಾಯಿ. ಬೆಂಕಿಯೆದುರು ಕಾಯುತ್ತ, ಸುತ್ತಿಗೆಯ ಬಡಿತದ ನಡುವೆ ಕಳೆಯುವ ಬಾಲ್ಯ. ಆ ದುಡಿಮೆಯ ಬೆವರಿನಿಂದಲೇ ಹುಟ್ಟಿದ ಸ್ವಾಭಿಮಾನ ಮುಂದೆ ಅವರನ್ನು ಮೂಡುಬಿದಿರೆಯ ಕಾಳಿಕಾಂಬ ಫ್ಯಾಬ್ರಿಕೇಷನ್ ಎಂಬ ಜಾಗತಿಕ ಸಂಸ್ಥೆಯ ಸ್ಥಾಪಕರನ್ನಾಗಿ ಮಾಡಿತು. ಇವತ್ತು ಅವರ ಎಸ್.ಕೆ.ಎಫ್. ಹೆಸರಿನ ಭತ್ತ, ಕುಡಿನೀರು ಮತ್ತು ಕೊಳಚೆ ನೀರು ಸಂಸ್ಕರಣ ಯಂತ್ರಗಳು ಪ್ರಪಂಚದ ಇಪ್ಪತ್ತೈದು ದೇಶಗಳಿಗೆ ರಫ್ತಾಗುತ್ತಿವೆ. ಸಾವಿರಾರು ಕಾರ್ಮಿಕರಿಗೆ ಬದುಕು ಕೊಟ್ಟಿವೆ. ಕೋಟ್ಯಂತರ ರೈತರ ಬದುಕು- ಬೆಳೆಗೆ ಆ ಯಂತ್ರಗಳು ಕೈಜೋಡಿಸುತ್ತಿವೆ. ಇಷ್ಟಾದರೂ ಅವರ ಒಳಗಿನ ರೈತ ಸತ್ತಿಲ್ಲ. ಉದ್ಯಮದ ಮಧ್ಯೆ ಅವರು ಕಂಡದ್ದು, ನಮ್ಮ ದೇಶದ ರೈತನು ದಿನೇ ದಿನೇ ಕೀಳರಿಮೆಯ ಬದುಕಿಗೆ ಜಾರುತ್ತಿರುವ ದೃಶ್ಯ. ಸಾಲದ ಬಲೆ, ಹವಾಮಾನ ವೈಫಲ್ಯ, ಬೆಲೆ ಕುಸಿತ, ಅವಮಾನ, ಆತ್ಮಹತ್ಯೆಗಳು. ಇದನ್ನೆಲ್ಲ ಹತ್ತಿರದಿಂದ ಕಂಡವರೇ ಆಚಾರ್. ಕೃಷಿಕೇಂದ್ರಿತ ಜಗತ್ತಿನ 32 ದೇಶಗಳನ್ನು ಸುತ್ತಿದಾಗ ಅವರು ಕಂಡದ್ದು: ಅಲ್ಲೆಲ್ಲ ರೈತ ರಾಜ. ಅವನದ್ದು ಗೌರವ, ಮಾನ್ಯತೆ, ಸುಸ್ಥಿರ ಬದುಕು. ಅಲ್ಲಿ ಕೃಷಿಗೆ ಸರಕಾರದ ಸಂಪೂರ್ಣ ಬೆಂಬಲವಿದೆ. ಅನ್ನದ ಕೆಲಸವೇ ಸಮಾಜದ ಶ್ರೇಷ್ಠ ಕೆಲಸ. ನಮ್ಮ ದೇಶದಲ್ಲೂ ರೈತ ರಾಜನಾಗಬೇಕು ಎಂಬ ಆಕಾಂಕ್ಷೆಯೇ ಅವರೊಳಗಿನ ರೈತಪೀಠದ ಬೀಜ. ರೈತಪೀಠ ಅಂದರೆ ಕೇವಲ ಪ್ರಶಸ್ತಿ ಅಲ್ಲ. ಅದು ಒಂದು ಸಾಂಸ್ಕೃತಿಕ ಘೋಷಣೆ. ಅನ್ನವೇ ಜೀವನದ ಮೂಲ ಎಂದು ಸಮಾಜಕ್ಕೆ ನೆನಪಿಸುವ ಪ್ರತಿಜ್ಞೆ. ಕೃಷಿಯ ಘನತೆಯನ್ನು ಮರಳಿ ಸ್ಥಾಪಿಸುವ ಸಂಕಲ್ಪ. ಮುನಿಯಾಲಿನ ಸಂಜೀವಿನಿ ಗೋ-ಧಾಮದಲ್ಲಿ ಬರೀ ಸಾಕು ಪ್ರಾಣಿಗಳಷ್ಟೇ ಅಲ್ಲ, ರಂಬುಟಾನ್, ಮ್ಯಾಂಗೋಸ್ಟೀನ್, ಅಡಿಕೆ, ತೆಂಗು, ಕಾಳುಮೆಣಸು, ಹಲಸು, ಮಾವು, ಪಪ್ಪಾಯಿ, ತರಕಾರಿ-ಏಕಬೆಳೆ ಅಲ್ಲ, ಬಹುಬೆಳೆ. ಮಧ್ಯೆ ಮಧ್ಯೆ ಅಂತರಬೆಳೆ. ಹಸುವಿನ ಗೊಬ್ಬರ, ಗಂಜಳ, ಜೀವಾಮೃತ ಇವೆಲ್ಲವನ್ನು ಸರಳವಾಗಿ ಮಣ್ಣಿಗೆ ಮರಳಿಸಿ ಜೀವ ಕೊಡುವ ವ್ಯವಸ್ಥೆಯಿದೆ. ನಾಗಬನವನ್ನು ಕಾಂಕ್ರಿಟ್ ಮಾಡದೆ, ಕಾಡಿನಂತೆ ಉಳಿಸಿಕೊಂಡು, ಮಿಯಾವಾಕಿ ಮಾದರಿಯ ಹಸಿರು ಕಾಡನ್ನು ಬೆಳೆಸಿ, ಪರಿಸರದ ಸಮತೋಲನಕ್ಕೆ ಕೈಜೋಡಿಸಿರುವ ಅಪರೂಪದ ಪ್ರಯತ್ನವಿದೆ. ‘‘ನನ್ನ ತೋಟಕ್ಕೆ ಬಂದ ಮಗು, ಕೃಷಿಕನಾಗಬೇಕು ಅನ್ನುವ ಕನಸಿನಿಂದಲೇ ಹೊರಹೋಗಬೇಕು’’ ಎನ್ನುವುದು ಆಚಾರ್ ಅವರ ಆಶಯ. ಇಲ್ಲಿ ಮಕ್ಕಳು ಹಸು ಮುದ್ದಿಸಬಹುದು, ಹಾಲು ಕರೆಯಬಹುದು, ಬೀಜ ಬಿತ್ತಬಹುದು, ಮಣ್ಣಲ್ಲಿ ಕೈ ಹಾಕಬಹುದು, ಮೀನುಗಳ ಜೊತೆ ಆಟವಾಡಬಹುದು. ಕೃಷಿಯನ್ನು ಪುಸ್ತಕದಲ್ಲಿ ಅಲ್ಲ, ಬದುಕಿನಲ್ಲಿ ಕಲಿಯುವ ವ್ಯವಸ್ಥೆಯಿದು. ಇವತ್ತು ಹಳ್ಳಿಯಿಂದ ನಗರಕ್ಕೆ ಓಡುತ್ತಿರುವ ಹೊಸ ತಲೆಮಾರಿಗೆ ಸಂಜೀವಿನಿ ಗೋ-ಧಾಮ ಒಂದು ಮೌನದ ಕರೆ: ಸುಖ ಕೇವಲ ದುಡ್ಡಿನಲ್ಲಿ ಇಲ್ಲ. ನೆಲದ ಜೊತೆ ಬದುಕುವುದರಲ್ಲೇ ನಿಜವಾದ ನೆಮ್ಮದಿ. ರೈತಪೀಠ ಆ ಕರೆಯ ಅಧಿಕೃತ ಘೋಷಣೆ. ಒಂದು ಕಾಲದಲ್ಲಿ ಅಕ್ಕಿಯ ಗಿರಣಿಗಳೆಂದರೆ ನಮ್ಮಲ್ಲಿ ಮೂಡುಬಿದಿರೆ-ಹೆಬ್ರಿ -ಕಾರ್ಕಳದ ಹೆಸರು ಕೇಳಿಬರುತ್ತಿತ್ತು. ಹಳ್ಳಿಗಳಲ್ಲೇ ಚಿಕ್ಕ ಚಿಕ್ಕ ಯಂತ್ರಗಳು, ದಿನಕ್ಕೆ ಒಂದೆರಡು ಟನ್ ಭತ್ತ ಸಂಸ್ಕರಿಸುವ ಸ್ವಾವಲಂಬಿ ಘಟಕಗಳು ಇದ್ದವು. ಇವತ್ತು ಅವೆಲ್ಲ ಅಟ್ಟಕ್ಕೆ ಸೇರಿವೆ. ಮಾಲ್ಗಳಲ್ಲಿ ಹೊಳೆಯುವ ಪ್ಯಾಕೆಟ್ಗಳಲ್ಲಿರುವ ಬಿಳಿ ಬಿಳಿ ಅಕ್ಕಿಯ ಮೂಟೆಗಳೇ ನಮ್ಮ ಆಹಾರ ಸಂಸ್ಕೃತಿಯ ಪ್ರತಿನಿಧಿಗಳಾಗಿವೆ. ಆಚಾರ್ ಅವರು ಹೇಳುವ ಮಾತು ಸರಳ : ಜನರಿಗೆ ಇವತ್ತು ಪೌಷ್ಟಿಕಾಂಶಕ್ಕಿಂತ ಬಣ್ಣ ಬೇಕು, ಸಹಜತೆಗಿಂತ ಹೊಳಪು ಬೇಕು. ತುಪ್ಪ ಹಳದಿ ಇರಬೇಕು, ಅನ್ನ ಬಿಳಿಯಾಗಿರಬೇಕು, ಕೇಸರಿಬಾತ್ ಕೇಸರಿಯಾಗಿರಬೇಕು. ರುಚಿಯ ಹಿಂದೆ ಓಡುತ್ತಾ ನಾವು ಆಹಾರದ ಆತ್ಮವನ್ನೇ ಕಳೆದುಕೊಳ್ಳುತ್ತಿದ್ದೇವೆ. ಈ ಸತ್ಯ ಅವರಿಗೆ ಕೈಗೆ ಸಿಕ್ಕದ್ದಲ್ಲ; ಅಕ್ಕಿಯಂತ್ರಗಳ ನಡುವೆ ಬೆಳೆದ, ಕಾರ್ಮಿಕನಾಗಿ ದುಡಿದ ಅನುಭವದಿಂದ ಹುಟ್ಟಿದ್ದು,.ಅದೇ ಅರಿವಿನಿಂದಾಗಿ ಅವರ ಒಳಗಡೆಯಿಂದ ಒಂದು ಸುಂದರವಾದ ಹಸಿರು ವನಾವರಣ ಹುಟ್ಟಿಕೊಂಡಿದೆ. ಇದರ ಒಳಗಡೆಯಿಂದಲೇ ‘ರೈತಪೀಠ’ ಪ್ರಶಸ್ತಿಯ ಕಲ್ಪನೆ ಹುಟ್ಟಿದೆ. ಕೃಷಿ ಎಂದರೆ ಹಳೆಯದು, ಲಾಭವಿಲ್ಲದ್ದು ಎಂಬ ಭ್ರಮೆಗೆ ಸವಾಲು ಹಾಕಲು, ನೆಲವನ್ನು ನಂಬಿದ ಕೃಷಿಕರನ್ನು ಗೌರವಿಸಲು, ಯುವಕರಿಗೆ ದಾರಿ ತೋರಿಸಲು ಈ ಪ್ರಶಸ್ತಿ. ಇದು ಕೇವಲ ನಗದು ಬಹುಮಾನವಲ್ಲ; ಕೃಷಿಗೆ ಮರಳಿ ಘನತೆ ತರುವ ಒಂದು ಸಾಂಸ್ಕೃತಿಕ ಪ್ರಯತ್ನ. ರೈತಪೀಠ ಅನ್ನುವುದು ವಿಶ್ವವಿದ್ಯಾನಿಲಯಗಳಲ್ಲಿರುವ ಪೀಠಗಳಂತೆಯೇ - ಆದರೆ ಇಲ್ಲಿ ಅಧ್ಯಯನದ ವಿಷಯ ಪುಸ್ತಕವಲ್ಲ, ಮಣ್ಣು. ರಾಮಕೃಷ್ಣ ಆಚಾರ್ ಅವರಿಗೆ ಕೃಷಿ ಒಂದು ಹವ್ಯಾಸ. ಆದರೆ ಅದು ಲಘುವಾದ ಹವ್ಯಾಸವಲ್ಲ; ಅದು ಬದುಕಿನ ಅರ್ಥ ಹುಡುಕುವ ಪ್ರಯತ್ನ. ಉದ್ಯಮ, ಮಾರುಕಟ್ಟೆ, ಬಂಡವಾಳ - ಇವೆಲ್ಲದರ ನಡುವೆ ಸಿಕ್ಕ ನೆಮ್ಮದಿಯ ದ್ವೀಪವೇ ಸಂಜೀವಿನಿ ವನ. ಇಲ್ಲಿ ಅವರು ಗಿಡಗಳೊಂದಿಗೆ ಮಾತನಾಡುತ್ತಾರೆ, ಹಸುಗಳ ಕಣ್ಣಲ್ಲಿ ತಾವು ಬದುಕಿನ ಸತ್ಯವನ್ನು ಹುಡುಕುತ್ತಾರೆ. ಕಾರ್ಖಾನೆಯ ಶಬ್ದದಿಂದ ದೂರ, ಹಕ್ಕಿಗಳ ಕಲರವದ ನಡುವೆ ತಮ್ಮನ್ನು ತಾವು ಕಂಡುಕೊಳ್ಳುತ್ತಾರೆ. ರೈತಪೀಠ ಪ್ರಶಸ್ತಿ ಅವರ ಈ ಆತ್ಮಯಾನದ ಸಾಮಾಜಿಕ ವಿಸ್ತರಣೆ. ‘‘ನನ್ನದು ನನ್ನ ಕುಟುಂಬ, ನನ್ನ ಮಕ್ಕಳು ಎನ್ನುವ ವೃತ್ತದಿಂದ ಹೊರಬಂದು, ಸಮಾಜದ ನೆಲೆಯನ್ನು ನಂಬಬೇಕು’’ ಎನ್ನುವ ಅವರ ತತ್ವದ ಪ್ರತಿಫಲ. ರತನ್ ಟಾಟಾ ಉದಾಹರಣೆಯಂತೆ -ವ್ಯಕ್ತಿ ಹೋದರೂ ವ್ಯವಸ್ಥೆ ಉಳಿಯಬೇಕು. ಅದಕ್ಕಾಗಿಯೇ ಅವರು ಕಟ್ಟುತ್ತಿರುವುದು ಕೇವಲ ತೋಟವಲ್ಲ, ಒಂದು ಚಿಂತನೆ. ಇವತ್ತು ಹಳ್ಳಿಗಳು ವೃದ್ಧಾಶ್ರಮಗಳಾಗುತ್ತಿವೆಯೆಂಬ ಆತಂಕದ ನಡುವೆ, ರಾಮಕೃಷ್ಣ ಆಚಾರ್ ಅವರ ಸಂಜೀವಿನಿ ವನ ಒಂದು ಭರವಸೆಯ ಹಸಿರು ಕಿರಣ. ನೆಲವನ್ನು ನಂಬಿದರೆ ಬದುಕು ಕೈ ಬಿಡುವುದಿಲ್ಲ ಎಂಬುದಕ್ಕೆ ಅದು ಜೀವಂತ ಸಾಕ್ಷಿ. ರೈತಪೀಠ ಆ ಭರವಸೆಗೆ ಕೊಟ್ಟ ಗೌರವ.
HASSAN | ಯುವತಿಯ ನಿಗೂಡ ನಾಪತ್ತೆ ಪ್ರಕರಣ ಸುಖಾಂತ್ಯ: ಪ್ರಿಯಕರನೊಂದಿಗೆ ಪತ್ತೆ
ಹಾಸನ: ಯುವತಿಯೊಬ್ಬಳು ವಿವಾಹ ಸಮಾರಂಭಕ್ಕೆಂದು ಹೊರಟವಳು ಬೇಲೂರು ತಾಲೂಕಿನ ಕಲ್ಕೆರೆ ಕೆರೆಯ ಬಳಿ ನಿಗೂಢವಾಗಿ ನಾಪತ್ತೆಯಾಗಿ ಆತಂಕ ಮೂಡಿಸಿದ್ದ ಪ್ರಕರಣ ಸುಖಾಂತ್ಯಗೊಂಡಿದ್ದು, ಆಕೆ ಕುಣಿಗಲ್ ನಲ್ಲಿ ತನ್ನ ಪ್ರಿಯಕರನೊಂದಿಗೆ ಇರುವುದನ್ನು ಪೊಲೀಸರು ಪತ್ತೆಹಚ್ಚಿದ್ದಾರೆ. ಕುಣಿಗಲ್ ತಾಲೂಕಿನ ಯಲಿಯೂರಿನ ಪ್ರಿಯಾಂಕಾ(29) ನಾಪತ್ತೆಯಾಗಿದ್ದವರು. ಇವರನ್ನು ಬಿಹಾರ ಮೂಲದ ಡೇವಿಡ್ ಎಂಬವರ ಜೊತೆ ಕುಣಿಗಲ್ ನ ಲಾಡ್ಜ್ ಒಂದರಲ್ಲಿ ಪೊಲೀಸರು ಪತ್ತೆಹಚ್ಚಿ ನಾಪತ್ತೆ ಪ್ರಕರಣಕ್ಕೆ ತೆರೆ ಎಳೆದಿದ್ದಾರೆ. ಘಟನೆ ವಿವರ: ಚಿಕ್ಕಮಗಳೂರಿನಲ್ಲಿ ನಡೆಯುವ ಮದುವೆ ಕಾರ್ಯಕ್ರಮಕ್ಕೆಂದು ಮನೆಯಲ್ಲಿ ಹೇಳಿ ಹೊರಟಿದ್ದ ಪ್ರಿಯಾಂಕಾ ಫೆ.12ರಂದು ರಾತ್ರಿ 8 ಗಂಟೆ ಸುಮಾರಿಗೆ ಬೇಲೂರು ಬಸ್ ನಿಲ್ದಾಣದಿಂದ ನಾಪತ್ತೆಯಾಗಿದ್ದರು. ಈ ಬಗ್ಗೆ ಕುಟುಂಬಸ್ಥರು ಪೊಲೀಸ್ ದೂರು ನೀಡಿದ್ದರು. ಫೆ.14ರಂದು ಬೆಳಗ್ಗೆ ಕಲ್ಕೆರೆ ಕೆರೆಯ ತೀರದಲ್ಲಿ ಪ್ರಿಯಾಂಕಾರಿಗೆ ಸೇರಿದ ಉಡುಪುಗಳು ಮತ್ತು ಕೆಲವು ವೈಯಕ್ತಿಕ ವಸ್ತುಗಳು ಪತ್ತೆಯಾಗಿದ್ದವು. ಇದರಿಂದಾಗಿ ಆತಂಕ ಸೃಷ್ಟಿಯಾಗಿತ್ತು. ಪ್ರಿಯಾಂಕಾ ಸುಮಾರು 20 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಧರಿಸಿದ್ದ ಹಿನ್ನೆಲೆಯಲ್ಲಿ ಆಕೆಯನ್ನು ಕೊಲೆ ಮಾಡಿ ಕೆರೆಗೆ ಎಸೆದಿರುವ ಶಂಕೆ ವ್ಯಕ್ತವಾಗಿತ್ತು. ಈ ಮಧ್ಯೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಬೇಲೂರು ಪೊಲೀಸರು ವಿಶೇಷ ತಂಡ ರಚಿಸಿ ತನಿಖೆ ಚುರುಕುಗೊಳಿಸಿದರು. ಮೊಬೈಲ್ ಲೊಕೇಶನ್ ಹಾಗೂ ಇತರ ತಾಂತ್ರಿಕ ಮಾಹಿತಿಗಳನ್ನು ಆಧರಿಸಿ ಹುಡುಕಾಟ ನಡೆಸಿ ಪ್ರಿಯಾಂಕಾರನ್ನು ಕುಣಿಗಲ್ ನಲ್ಲಿ ಪ್ರಿಯಕರನೊಂದಿಗೆ ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.
ಯುವಜನರಲ್ಲಿ ತಂತ್ರಜ್ಞಾನದೊಂದಿಗೆ ಸಾಹಿತ್ಯಾಸಕ್ತಿ ಹೆಚ್ಚಾಗಲಿ
ಫೆ.16 ಮತ್ತು 17ರಂದು ಎರಡು ದಿನಗಳ ಕಾಲ ಕಲಬುರಗಿಯಲ್ಲಿ ನಡೆಯಲಿರುವ 22ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿರುವ ಸಾಹಿತಿ ಮತ್ತು ಸಂಶೋಧಕರಾದ ಮುಡುಬಿ ಗುಂಡೇರಾವ್ ಅವರೊಂದಿಗೆ ವಾರ್ತಾ ಭಾರತಿ ಪತ್ರಿಕೆಯ ಕಿರು ಸಂದರ್ಶನ. ವಾ.ಭಾ: 22ನೇ ಜಿಲ್ಲಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಏನು ಹೇಳಲು ಬಯಸುವಿರಿ? ಉ: ಕಳೆದ 40 ವರ್ಷಗಳ ಕಾಲ ನಾನು ಸೇಡಂ ತಾಲೂಕಿನ ಹಳ್ಳಿ ಹಳ್ಳಿಗಳಲ್ಲಿ ದಣಿವಿಲ್ಲದೆ ಸುತ್ತಾಡಿ ಅನಾಥವಾಗಿ, ಜನತೆಯ ಅಲಕ್ಷಕ್ಕೆ ಒಳಗಾಗಿದ್ದ ಅನೇಕ ಶಾಸನ, ಸ್ಮಾರಕ, ದೇವಾಲಯಗಳ ಮಹತ್ವ ಮತ್ತು ರಕ್ಷಣೆಯ ಬಗ್ಗೆ ಸಂಶೋಧನಾತ್ಮಕ ಲೇಖನಗಳನ್ನು ಮತ್ತು ಕೃತಿಗಳನ್ನು ಪ್ರಕಟಿಸಿ ಸಮುದಾಯದಲ್ಲಿ ಜಾಗೃತಿ ಮೂಡಿಸಿದ್ದೇನೆ. ಸರಕಾರದ ಗಮನ ಸೆಳೆದ ಅದೆಷ್ಟೋ ಐತಿಹಾಸಿಕ ಸ್ಮಾರಕಗಳು ಇಂದು ಜಿರ್ಣೋದ್ದಾರಗೊಂಡಿವೆ. ಈ ನನ್ನ ಸಾಧನೆಗಳನ್ನು ಕಲಬುರಗಿ ಕಸಾಪ ಗುರುತಿಸಿ 22ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆ ಮಾಡಿದೆ. ಇದರಿಂದ ಸಮಸ್ತ ಕನ್ನಡ ಅಭಿಮಾನಿಗಳು ಮತ್ತು ಸಾಹಿತಿಗಳಿಗೆ ಋಣಿಯಾಗಿದ್ದೇನೆ. ವಾ.ಭಾ: ಕನ್ನಡ ಸಾಹಿತ್ಯ ಸಮ್ಮೇಳನ ಏಕೆ ಅಗತ್ಯ ಮತ್ತು ಉದ್ದೇಶವೇನು.? ಉ: ಸಾಹಿತ್ಯ ಎಂಬುದು ಚಿಲುಮೆ. ಇದು ಕೇವಲ ಅಕ್ಷರ ಜಾತ್ರೆ ಮಾತ್ರವಲ್ಲ. ಸಾಹಿತ್ಯದ ಮೂಲಕ ಸಮಾಜದ ಅಂಧಕಾರವನ್ನು ಪ್ರತಿರೋಧಿಸಿ ಕಟ್ಟಕಡೆ ವ್ಯಕ್ತಿ, ಸಮುದಾಯವನ್ನು ಪ್ರತಿನಿಧಿಸಿ ಸಮಾಜದಲ್ಲಿ ಸೂಕ್ತ ಸ್ಥಾನಮಾನವನ್ನು ಪಡೆಯುವಂತಾಗಲು ಹಂಬಲಿಸುವ ಲೋಕವಾಗಿದೆ. ಈ ದಿಶೆಯಲ್ಲಿ ಸಾಹಿತ್ಯ ಲೋಕವನ್ನು ಶ್ರೀಮಂತಗೊಳಿಸುವ ಉತ್ಸವದ ಜಾತ್ರೆ. ಈ ಜಾತ್ರೆಯಲ್ಲಿ ಸಾಹಿತಿಗಳು, ಕವಿಗಳು ಮತ್ತು ಕನ್ನಡಪ್ರೇಮಿಗಳು ಕನ್ನಡದ ತೆರನ್ನು ಎಳೆಯುತ್ತೇವೆ. ನಾಡಿನ ಹೆಸರಾಂತ ಸಾಹಿತಿಗಳ ಬರವಣಿಗೆಯ ಪುಸ್ತಕಗಳು, ಕವಿಗೋಷ್ಠಿ, ವಿಚಾರಗೋಷ್ಠಿ, ವಿಮರ್ಶೆ, ಗೀತೆ ಸೇರಿದಂತೆ ವಿವಿಧತೆಯ ವೈಭವವನ್ನು ಕೊಂಡಾಡುವ ದಿನವಾಗಿದೆ. ಪ್ರಮುಖವಾಗಿ ಯುವಜನರಲ್ಲಿ ಸಾಹಿತ್ಯಾಸಕ್ತಿ ಮೂಡಿಸುವುದು ಕಾಲದ ಅಗತ್ಯ ಕನ್ನಡ ಸಾಹಿತ್ಯ ಸಮ್ಮೇಳನಗಳು ಕೇವಲ ಕಾರ್ಯಕ್ರಮಗಳಲ್ಲ, ಅವು ಭಾಷೆ, ಸಂಸ್ಕೃತಿ ಮತ್ತು ಚಿಂತನೆಗಳ ಜಾತ್ರೆ. ವಾ.ಭಾ: ಕನ್ನಡ ಭಾಷೆ ಬಗ್ಗೆ ಸರಕಾರಗಳ ನಿಲುವುಗಳ ಬಗ್ಗೆ ನಿಮ್ಮ ಅನಿಸಿಕೆ? ಉ: ಸರಕಾರವೇ ಎಲ್ಲವನ್ನೂ ಮಾಡಬೇಕು ಎನ್ನುವುದಿಲ್ಲ. ಸಾಮಾನ್ಯ ಕನ್ನಡಪ್ರೇಮಿಗಳ ಮೂಲಕ ಕನ್ನಡವನ್ನು ಉಳಿಸಿ ಬೆಳೆಸುವ ಕೆಲಸ ಆಗಬೇಕು. ಕನ್ನಡವೇ ನಮ್ಮ ಜಾತಿ, ಕನ್ನಡವೇ ನಮ್ಮ ಕುಲ ಎಂಬ ಭಾವನೆ ಶೈಕ್ಷಣಿಕ ಸಂಸ್ಥೆಗಳಲ್ಲಿ ಬರಬೇಕು. ಈ ದಿಕ್ಕಿನಲ್ಲಿ ನಾವು ಕಾಯಕ ಮಾಡಿದ್ದಾಗ ಕನ್ನಡ ಭಾಷೆ ಮತ್ತಷ್ಟು ಉತ್ತುಂಗಕ್ಕೆ ಕೊಂಡೊಯ್ಯಬಹುದು. ಸರಕಾರಗಳು, ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರ ಮಾತುಗಳನ್ನು ಕೇಳಬೇಕು. ಸಾಹಿತ್ಯ ವೇದಿಕೆಗಳಲ್ಲಿ ಮಂಡಿಸುವ ಹಕ್ಕೊತ್ತಾಯಗಳು ಜನಪ್ರತಿನಿಧಿಗಳು ಗಂಭೀರವಾಗಿ ಪರಿಗಣಿಸಿ ಸರಕಾರದ ಮುಂದಿಟ್ಟು ಮುಂದಿನ ಸಮ್ಮೇಳನದವರೆಗೆ ಕನಿಷ್ಠ ಬೇಡಿಕೆಗಳು ಈಡೇರಿಸುವಂತಾಗಬೇಕು. ವಾ.ಭಾ: ವಿದ್ಯಾರ್ಥಿಗಳಿಗೆ, ಯುವಜನರಿಗೆ ನಿಮ್ಮ ಸಂದೇಶವೇನು? ಉ: ಇಂದಿನ ಕಾಲದ ಯುವಜನರು ತಂತ್ರಜ್ಞಾನಕ್ಕೆ ಹೆಚ್ಚು ಒಲವು ತೋರಿಸುತ್ತಿರುವುದು ಸಹಜ. ಆದರೆ ಸಾಹಿತ್ಯದಿಂದ ದೂರವಾಗುವ ಪ್ರವೃತ್ತಿ ಸಮಾಜದ ಸಾಂಸ್ಕೃತಿಕ ಆರೋಗ್ಯಕ್ಕೆ ಹಾನಿಕಾರಕ. ಸಾಹಿತ್ಯವು ಕೇವಲ ಮನರಂಜನೆಗೆ ಸೀಮಿತವಲ್ಲ. ಅದು ಚಿಂತನೆಗೆ ದಾರಿ ತೋರಿಸುವ ಶಕ್ತಿ ಹೊಂದಿದೆ. ನಮಗೆ ತಂತ್ರಜ್ಞಾನ ಎಷ್ಟು ಮುಖ್ಯವೋ ಸಾಹಿತ್ಯವು ಅಷ್ಟೇ ಮುಖ್ಯ. ಸಾಹಿತ್ಯಕ್ಕೆ ಕತ್ತಲ್ಲಲ್ಲಿ ಬೆಳಕು ಚಿಮ್ಮಿಸುವ ಶಕ್ತಿ ಇದೆ ಎಂಬುದು ನಮ್ಮ ಯುವಪೀಳಿಗೆಗೆ ಮನವರಿಕೆ ಮಾಡಿಸುವುದು ಅಗತ್ಯವಾಗಿದೆ. ಶೈಕ್ಷಣಿಕ ಸಂಸ್ಥೆಗಳು ಮತ್ತು ಪೋಷಕರು ಮಕ್ಕಳಿಗೆ ಸಾಹಿತ್ಯ ವಾತಾವರಣ ಕಲ್ಪಿಸಬೇಕು. ಯುವ ಸಾಹಿತಿಗಳು ಮತ್ತು ಕವಿಗಳು ಕೇವಲ ಕವಿಗೋಷ್ಠಿಗಾಗಿ ತಮ್ಮ ಕವಿತೆಗಳನ್ನು ಬರೆಯುವುದಕ್ಕೆ ಸೀಮಿತವಾಗಬಾರದು. ಸ್ಥಳೀಯ ಸಾಹಿತಿಗಳ ಬರವಣಿಗೆ, ಕವಿತೆ, ವಿಚಾರಗಳನ್ನು ಓದಬೇಕು. ನಮ್ಮಲ್ಲಿ ಯುವಜನರಿಗಾಗಿ ಕವಿಗೋಷ್ಠಿಗಳು ಮತ್ತು ಸಾಹಿತ್ಯ ಸ್ಪರ್ಧಾತ್ಮಕ ಚಟುವಟಿಕೆಗಳಲ್ಲಿ ಭಾಗವಹಿಸುವಿಕೆ ಇರಬೇಕು. ಯುವ ಸಾಹಿತಿಗಳು ಪ್ರೇಮಕಾವ್ಯಗಳಲ್ಲೇ ಸೀಮಿತವಾಗದೇ, ಸಮಾಜದ ಅಸಮಾನತೆ, ಶೋಷಣೆ ಮತ್ತು ಬಡತನದಂತಹ ವಿಷಯಗಳನ್ನು ಸಾಹಿತ್ಯದ ಮೂಲಕ ಪ್ರಸ್ತಾಪಿಸಬೇಕು. ಇದೇ ಸಾಹಿತ್ಯದ ನಿಜವಾದ ಹೊಣೆಗಾರಿಕೆಯಾಗಿದೆ. ವಾ.ಭಾ: ವಾರ್ತಾ ಭಾರತಿ ಪತ್ರಿಕೆ ಮೂಲಕ ಓದುಗರಿಗೆ ಏನು ಹೇಳಲು ಇಷ್ಟಪಡುವಿರಿ? ಉ: ಗ್ರಾಮೀಣ, ತಾಲೂಕು ಮತ್ತು ನಗರಕ್ಕೆ ಮಾತ್ರ ಪ್ರತಿಭೆಗಳು ಸೀಮಿತವಾಗದೇ, ಪರಿಷತ್ ಮೂಲಕ ಅಖಿಲ ಭಾರತೀಯ ಮಟ್ಟದಲ್ಲೂ ಗುರುತಿಸಿಕೊಳ್ಳುವಂತೆ ಆಗಬೇಕು. ಕನ್ನಡಕ್ಕಾಗಿ ಮತ್ತು ಕನ್ನಡದ ಬೆಳವಣಿಗೆಗಾಗಿ ಕೆಲಸ ಮಾಡುವವರೊಂದಿಗೆ ಸಾಹಿತ್ಯ ಬಳಗ ಸದಾ ಜೊತೆಗಿರುತ್ತದೆ ಎಂದು ಹೇಳಲು ಇಷ್ಟಪಡುತ್ತೇನೆ.
ಪಾಕಿಸ್ತಾನದ ಡ್ರೋನ್ನಿಂದ ಕೆಳಹಾಕಿದ 40 ಕೋಟಿ ರೂ. ಮೌಲ್ಯದ ಮಾದಕವಸ್ತು ವಶ
ಜಮ್ಮು: ಇಲ್ಲಿನ ಆರ್ ಎಸ್ ಪುರ ಅಂತರರಾಷ್ಟ್ರೀಯ ಗಡಿಯ ಬಳಿ ಪಾಕಿಸ್ತಾನಿ ಡ್ರೋನ್ ನಿಂದ ಕೆಳಕ್ಕೆ ಹಾಕಿದ್ದೆನ್ನಲಾದ 40 ಕೋಟಿ ರೂಪಾಯಿ ಮೌಲ್ಯದ ಮಾದಕ ವಸ್ತುಗಳನ್ನು ಜಮ್ಮು ಮತ್ತು ಕಾಶ್ಮೀರ ಪೊಲೀಸರು ಹಾಗೂ ಗಡಿಭದ್ರತಾ ಪಡೆ ಯೋಧರು ವಶಪಡಿಸಿಕೊಂಡಿದ್ದಾರೆ. ಗಡಿಯಾಚೆಗಿನಿಂದ ಡ್ರೋನ್ ಮೂಲಕ ಕೆಲ ವಸ್ತುಗಳನ್ನು ಕೆಳಹಾಕಲಾಗುತ್ತಿದೆ ಎಂಬ ಮಾಹಿತಿಯ ಆಧಾರದಲ್ಲಿ BSFನ 165ನೇ ಬೆಟಾಲಿಯನ್ ಮತ್ತು ಜಮ್ಮು & ಕಾಶ್ಮೀರ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿದರು. ಶೋಧ ಕಾರ್ಯಚರಣೆ ವೇಳೆ ನಯೀ ಬಸ್ತಿ ಕೊರಠಾಣಾ ಗ್ರಾಮದಿಂದ ಮಾದಕವಸ್ತುಗಳ ಪೊಟ್ಟಣ ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಈ ನಿಷೇಧಿತ ವಸ್ತುಗಳನ್ನು ಹಳದಿ ಬಣ್ಣದ ಪಾಲಿಥಿನ್ ಪ್ಯಾಕೆಟ್ ಗಳಲ್ಲಿ ಸುತ್ತಲಾಗಿತ್ತು. ಶುಕ್ರವಾರ ತಡರಾತ್ರಿ ಈ ಭಾಗದಲ್ಲಿ ಸಂಶಯಾಸ್ಪದ ಡ್ರೋನ್ ಚಲನೆಯ ಮಾಹಿತಿ ಸ್ಥಳೀಯ ಪೊಲೀಸರಿಗೆ ಲಭ್ಯವಾಗಿತ್ತು ಎಂದು ವಿವರಿಸಿದ್ದಾರೆ. ಈ ಮಾದಕವಸ್ತು ವಿರೋಧಿ ಕಾರ್ಯಾಚರಣೆಯನ್ನು ಭದ್ರತಾ ಮೂಲಗಳು ದೊಡ್ಡ ಸಾಧನೆ ಎಂದು ಬಣ್ಣಿಸಿವೆ. ಕಥೂವಾಟದಲ್ಲಿ ಪಾಕಿಸ್ತಾನಿ ಡ್ರೋನ್ ಗಳು ಗಡಿ ಪ್ರದೇಶದಲ್ಲಿ ಸುರಿಸಿದ ಹೆರಾಯಿನ್ ಕಳ್ಳತನ ಮಾಡುತ್ತಿದ್ದ ಆರೋಪದಲ್ಲಿ ಇಬ್ಬರನ್ನು ಬಂಧಿಸಿದ ಘಟನೆಯ ಬೆನ್ನಲ್ಲೇ ಈ ಘಟನೆ ಬೆಳಕಿಗೆ ಬಂದಿದೆ. ಮುಂದಿನ ತನಿಖೆ ನಡೆಯುತ್ತಿದ್ದು, ನಿಖರವಾದ ಮೂಲಕ ಹಾಗೂ ಇದು ಎಲ್ಲಿಗೆ ಸೇರಬೇಕಾಗಿತ್ತು ಎನ್ನುವ ಬಗ್ಗೆ ಪರಿಶೀಲಿಸಲಾಗುತ್ತಿದೆ. ಪೊಲೀಸರು ಹಿಮ್ಮುಖ ಹಾಗೂ ಮುಮ್ಮುಖ ಚಲನೆಯ ಮಾಹಿತಿ ಕಲೆ ಹಾಕುತ್ತಿದ್ದಾರೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.
ಅಮೆರಿಕದಲ್ಲಿ ನಾಪತ್ತೆಯಾಗಿದ್ದ ಕರ್ನಾಟಕ ಮೂಲದ ವಿದ್ಯಾರ್ಥಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ
ಹೊಸದಿಲ್ಲಿ: ಫೆಬ್ರವರಿ 9ರಿಂದ ನಾಪತ್ತೆಯಾಗಿದ್ದ ಅಮೆರಿಕದ ಬರ್ಕ್ಲಿಯ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಾಕೇತ್ ಶ್ರೀನಿವಾಸಯ್ಯ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ ಎಂದು ಸ್ಯಾನ್ ಫ್ರಾನ್ಸಿಸ್ಕೋದಲ್ಲಿರುವ ಭಾರತೀಯ ರಾಯಭಾರ ಕಚೇರಿ ರವಿವಾರ ತಿಳಿಸಿದೆ. ನಾಪತ್ತೆಯಾಗಿದ್ದ ಭಾರತೀಯ ವಿದ್ಯಾರ್ಥಿ ಸಾಕೇತ್ ಶ್ರೀನಿವಾಸಯ್ಯ ಅವರ ಮೃತದೇಹ ಪತ್ತೆಯಾಗಿರುವುದನ್ನು ಸ್ಥಳೀಯ ಪೊಲೀಸರು ದೃಢಪಡಿಸಿದ್ದಾರೆ. ಈ ಸಂಕಷ್ಟದ ಸಮಯದಲ್ಲಿ ಅವರ ಕುಟುಂಬ ಮತ್ತು ಪ್ರೀತಿಪಾತ್ರರಿಗೆ ನಾವು ನಮ್ಮ ಸಂತಾಪವನ್ನು ಸೂಚಿಸುತ್ತೇವೆ ಎಂದು ರಾಯಭಾರ ಕಚೇರಿಯು ತಿಳಿಸಿದೆ. “ಕುಟುಂಬಕ್ಕೆ ಅಗತ್ಯವಿರುವ ಎಲ್ಲಾ ಸಹಾಯಗಳನ್ನು ನೀಡಲು ಭಾರತೀಯ ರಾಯಭಾರಿ ಕಚೇರಿಯು ಸಿದ್ಧವಾಗಿದೆ. ಮೃತದೇಹವನ್ನು ಸಾಧ್ಯವಾದಷ್ಟು ಬೇಗ ಭಾರತಕ್ಕೆ ಹಿಂತಿರುಗಿಸಲು ಅಗತ್ಯ ವ್ಯವಸ್ಥೆಗಳನ್ನು ಮಾಡಲಾಗುವುದು ಎಂದು ತಿಳಿಸಿದೆ. ಸಾಕೇತ್ ಶ್ರೀನಿವಾಸಯ್ಯ ಕರ್ನಾಟಕ ಮೂಲದವರಾಗಿದ್ದಾರೆ. ಅವರ ಲಿಂಕ್ಡ್ ಇನ್ ಸ್ವವಿವರಗಳ ಪ್ರಕಾರ, 2025ರಲ್ಲಿ ಐಐಟಿ ಮದ್ರಾಸ್ ನಿಂದ ಬಿಟೆಕ್ ಪದವಿ ಪಡೆದಿದ್ದಾರೆ. ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಲ್ಲಿ ರಾಸಾಯನಿಕ ಮತ್ತು ಜೈವಿಕ ಅಣು ಇಂಜಿನಿಯರಿಂಗ್ನಲ್ಲಿ ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡುತ್ತಿದ್ದರು. ಫೆಬ್ರವರಿ 9ರಂದು ಸಾಕೇತ್ ಶ್ರೀನಿವಾಸಯ್ಯ ನಾಪತ್ತೆಯಾಗಿದ್ದರು. ಕೊನೆಯದಾಗಿ ಬರ್ಕ್ಲಿಯಲ್ಲಿರುವ ಅಂಝಾ ಕೆರೆಯ ಬಳಿ ಪತ್ತೆಯಾಗಿದ್ದರು.
NELAMANGALA | ಕಾರು-ಬಸ್ ನಡುವೆ ಭೀಕರ ರಸ್ತೆ ಅಪಘಾತ: ಐವರು ಯುವಕರು ಮೃತ್ಯು
ಬೆಂಗಳೂರು ಗ್ರಾಮಾಂತರ: ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ ಹಾರಿ ಎದುರಿನಿಂದ ಬರುತ್ತಿದ್ದ ಕೆಎಸ್ಸಾರ್ಟಿಸಿ ಬಸ್ಸಿಗೆ ಢಿಕ್ಕಿ ಹೊಡೆದ ಪರಿಣಾಮ ಐವರು ಯುವಕರು ಮೃತಪಟ್ಟ ಘಟನೆ ನೆಲಮಂಗಲದ ಜಿಂದಾಲ್ ನಲ್ಲಿ ಶನಿವಾರ ಮಧ್ಯರಾತ್ರಿ ನಡೆದಿದೆ. ಅಪಘಾತದ ತೀವ್ರತೆಗೆ ಕಾರಿನಲ್ಲಿದ್ದ ನಾಲ್ವರು ಸ್ಥಳದಲ್ಲಿ ಮೃತಪಟ್ಟಿದ್ದರೆ, ಓರ್ವ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾನೆ ಎಂದು ತಿಳಿದುಬಂದಿದೆ. ಮೃತರಲ್ಲಿ ಲಿಖಿತ್, ಹರ್ಷಿತ್ ಗುರುತು ಪತ್ತೆಯಾಗಿದ್ದು, ಇನ್ನುಳಿದ ಮೂವರು ಯುವಕರ ಗುರುತು ಪತ್ತೆಯಾಗಿಲ್ಲ. ಐವರು ಸ್ನೇಹಿತರಿದ್ದ ಕಾರು ಕಳೆದ ರಾತ್ರಿ 12 ಗಂಟೆ ಸುಮಾರಿಗೆ ತುಮಕೂರು ಕಡೆಯಿಂದ ಬೆಂಗಳೂರಿನತ್ತ ಬರುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ. ತುಮಕೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಜಿಂದಾಲ್ ಬಳಿಯ ಫ್ಲೈ ಓವರ್ ಮೇಲೆ ಚಾಲಕನ ನಿಯಂತ್ರಣ ತಪ್ಪಿದ ಕಾರು ಡಿವೈಡರ್ ಗೆ ಢಿಕ್ಕಿ ಹೊಡೆದಿದೆ. ಅತೀ ವೇಗದಲ್ಲಿದ್ದ ಕಾರು ಡಿವೈಡರ್ ಅನ್ನು ಹಾರಿ ಬೆಂಗಳೂರಿನಿಂದ ಹುಬ್ಬಳಿಗೆ ತೆರಳುತ್ತಿದ್ದ ಕೆಎಸ್ಸಾರ್ಟಿಸಿ ಬಸ್ಸಿಗೆ ಢಿಕ್ಕಿ ಹೊಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಅಪಘಾತದ ತೀವ್ರತೆಗೆ ಕಾರಿನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ. ಬಸ್ಸಿನ ಮುಂಭಾಗವೂ ಜಖಂ ಆಗಿದ್ದು, ಅದರಲ್ಲಿದ್ದ 43 ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ. ಮೃತ ಪೈಕಿ ದೊಡ್ಡಬಳ್ಳಾಪುರ ಮೂಲದವರಾಗಿರುವ ಹರ್ಷಿತ್, ರಾಜಾನುಕುಂಟೆ ಬಳಿಯ ಸಾಯಿ ಕಾಲೇಜು ವಿದ್ಯಾರ್ಥಿಯಾಗಿದ್ದ ಎಂದು ತಿಳಿದುಬಂದಿದೆ. ಘಟನಾ ಸ್ಥಳಕ್ಕೆ ಮಾದನಾಯಕನಹಳ್ಳಿ ಠಾಣೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ಎಂ ಸತ್ಯವರ ಗ್ರಾಮದ ಬಳಿ ಶುಕ್ರವಾರ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಏಳು ಮಂದಿ ಸಾವನ್ನಪ್ಪಿದ್ದರು. ಆ ದುರ್ಘಟನೆಯ ಆಘಾತ ಮಾಸುವ ಮುನ್ನವೇ ಮತ್ತೊಂದು ಅಪಘಾತ ಸಂಭವಿಸಿದೆ.
ಕೃಷ್ಣ ನೀರು ಗಡಿ ದಾಟಿಸಲು ಬೇಕಿದೆ ಸಹಕಾರ ; ಆಂಧ್ರ ಸಿಎಂಗೆ ಮನವಿ
ವ್ಯಾಲಿ ಯೋಜನೆಗಳಿಂದ ಹರಿಯುತ್ತಿರುವ ನೀರಿನಿಂದ ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜನ ನಾನಾ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಎತ್ತಿನಹೊಳೆ ಯೋಜನೆಯಡಿ ನೀರು ಹರಿಯುವ ಬಗ್ಗೆಯೇ ಹಲವು ಅನುಮಾನಗಳೂ ಇವೆ. ಹೀಗಾಗಿ ಗಡಿಯ ಅನತಿ ದೂರದಲ್ಲಿ ಹರಿಯುತ್ತಿರುವ ಕೃಷ್ಣ ನದಿ ನೀರನ್ನು ತರಲು ಗಂಭೀರ ಪ್ರಯತ್ನ ನಡೆಸಬೇಕಿದೆ. ಇದಕ್ಕಾಗಿ ಮೂರು ಜಿಲ್ಲೆಗಳಲ್ಲಿ ಹೋರಾಟವನ್ನು ತೀವ್ರಗೊಳಿಸಲು ಜಲಾಗ್ರಹ ಜಂಟಿ ಕ್ರಿಯಾಸಮಿತಿ ರೂಪುಗೊಂಡಿದೆ. ಇದರ ಬೆನ್ನಲ್ಲೇ ಆಂಧ್ರ ಸಿಎಂಗೂ ಮನವಿ ಸಲ್ಲಿಸಲಾಗಿದೆ.
ಸಾಕೇತ್ ಶ್ರೀನಿವಾಸಯ್ಯ; ಕ್ಯಾಲಿಫೋರ್ನಿಯಾದಲ್ಲಿ ಕಾಣೆಯಾದ 6 ದಿನಗಳ ಬಳಿಕ ಪತ್ತೆಯಾದ ಕರ್ನಾಟಕದ ಹುಡುಗ!
ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ಕಳೆದ ಆರು ದಿನಗಳಿಂದ ನಾಪತ್ತೆಯಾಗಿದ್ದ ಕರ್ನಾಟಕ ಮೂಲದ 22 ವರ್ಷದ ವಿದ್ಯಾರ್ಥಿ ಸಾಕೇತ್ ಶ್ರೀನಿವಾಸಯ್ಯ, ನಿಗೂಢವಾಗಿ ಸಾವನ್ನಪ್ಪಿದ್ದಾರೆ. ಸಾಕೇತ್ ಶ್ರೀನಿವಾಸಯ್ಯ ಅವರ ಸಾವನ್ನು ದೃಢಪಡಿಸಿರುವ ಸ್ಯಾನ್ ಫ್ರಾನ್ಸಿಸ್ಕೋದಲ್ಲಿರುವ ಭಾರತೀಯ ರಾಯಭಾರ ಕಚೇರಿ, ಕಳೆದ ಫೆ.9ರಂದು ನಾಪತ್ತೆಯಾಗಿದ್ದ ಭಾರತೀಯ ವಿದ್ಯಾರ್ಥಿ ಸಾಕೇತ್ ಶ್ರೀನಿವಾಸಯ್ಯ ಅವರ ಶವವನ್ನು ಪೊಲೀಸರು ಪತ್ತೆ ಮಾಡಿದ್ದಾರೆ ಎಂದು ತಿಳಿಸಿದೆ. ಸ್ಥಳೀಯ ಪೊಲೀಸರು ಕಳೆದ ಆರು ದಿನಗಳಿಂದ ಸಾಕೇತ್ ಅವರಿಗಾಗಿ ಶೋಧಕಾರ್ಯ ನಡೆಸುತ್ತಿದ್ದರು. ಇಲ್ಲಿದೆ ಮಾಹಿತಿ.
Chikkamagaluru | ಭದ್ರಾ ನದಿಯಲ್ಲಿ ಈಜಲು ತೆರಳಿದ್ದ ಇಬ್ಬರು ಯುವಕರು ನೀರುಪಾಲು
ಚಿಕ್ಕಮಗಳೂರು: ಭದ್ರಾ ನದಿಯಲ್ಲಿ ಈಜಲು ತೆರಳಿದ್ದ ಇಬ್ಬರು ಯುವಕರು ನೀರು ಪಾಲಾದ ಘಟನೆ ಕಳಸ ತಾಲೂಕಿನ ಬಾಳೆಹೊಳೆ ಸಮೀಪ ಸಂಭವಿಸಿದೆ. ನೀರು ಪಾಲಾದ ಯುವಕರನ್ನು ಅಭಿಷೇಕ್ (27) ಹಾಗೂ ಯೋಗೀಶ್ (17) ಎಂದು ಗುರುತಿಸಲಾಗಿದೆ. ಇವರು ಮೂಲತಃ ಕೊಡಗು ಜಿಲ್ಲೆಯವರಾಗಿದ್ದಾರೆ ಎಂದು ತಿಳಿದು ಬಂದಿದೆ. ಅಭಿಷೇಕ್ ತನ್ನ ಅಕ್ಕನ ಮನೆಗೆ ಬಂದಿದ್ದ ವೇಳೆ ಸ್ನೇಹಿತರೊಂದಿಗೆ ಭದ್ರಾ ನದಿಗೆ ಈಜಲು ತೆರಳಿದ್ದಾನೆ. ಮೃತ ಅಭಿಷೇಕ್ ಅವರ ಅಕ್ಕ ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ. ಘಟನೆ ತಿಳಿಯುತ್ತಿದ್ದಂತೆ ಕಳಸ ಪೊಲೀಸರು ಸ್ಥಳಕ್ಕೆ ಧಾವಿಸಿ ಅಗ್ನಿಶಾಮಕ ಸಿಬ್ಬಂದಿ ಹಾಗೂ ಸ್ಥಳೀಯರ ಸಹಾಯದಿಂದ ಮೃತದೇಹಗಳಿಗಾಗಿ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಈ ಸಂಬಂಧ ಕಳಸ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ನಡೆಯುತ್ತಿದೆ.
ಶೌಚಾಲಯದಲ್ಲಿ ಲಿಪ್ಸ್ಟಿಕ್ ನಿಂದ ಬರೆದ ಬಾಂಬ್ ಬೆದರಿಕೆ ಪತ್ತೆ: ತುರ್ತಾಗಿ ಇಳಿದ ಇಂಡಿಗೊ ವಿಮಾನ
ಕೊಲ್ಕತ್ತಾ: ಅಸ್ಸಾಂನ ದಿಬ್ರೂಗಢದಿಂದ ಕೊಲ್ಕತ್ತಾದ ನೇತಾಜಿ ಸುಭಾಸ್ಚಂದ್ರ ಬೋಸ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೊರಟಿದ್ದ ಇಂಡಿಗೊ ವಿಮಾನದ ಶೌಚಾಲಯದಲ್ಲಿ, ಲಿಪ್ಸ್ಟಿಕ್ ನಿಂದ ಬರೆದ ಬಾಂಬ್ ಬೆದರಿಕೆ ಪತ್ತೆಯಾದ ಹಿನ್ನೆಲೆಯಲ್ಲಿ ಶನಿವಾರ ಸಂಜೆ ವಿಮಾನ ತುರ್ತಾಗಿ ಇಳಿದ ಘಟನೆ ವರದಿಯಾಗಿದೆ. ಇಂಡಿಗೊ ವಿಮಾನ 6ಇ6894(ಎ-320), ಶನಿವಾರ ರಾತ್ರಿ ಬಾಂಬ್ ಬೆದರಿಕೆ ಪತ್ತೆಯಾದ ಬೆನ್ನಲ್ಲೇ 7.37ಕ್ಕೆ ತುರ್ತಾಗಿ ಸುರಕ್ಷಿತವಾಗಿ ಇಳಿದಿದೆ. ಭದ್ರತಾ ಶಿಷ್ಟಾಚಾರದಂತೆ ವಿಮಾನವನ್ನು ದೂರದಲ್ಲಿರುವ ಪ್ರತ್ಯೇಕ ಬೇ(bay) ಗೆ ಕಳುಹಿಸಲಾಗಿದ್ದು, ಎಲ್ಲ ಪ್ರಯಾಣಿಕರನ್ನು ಸುರಕ್ಷಿತವಾಗಿ ವಿಮಾನದಿಂದ ಇಳಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಇದಕ್ಕೂ ಮುನ್ನ ಶನಿವಾರ ಬೆಳಿಗ್ಗೆ ಕೊಲ್ಕತ್ತಾದ ನೇತಾಜಿ ಸುಭಾಸ್ಚಂದ್ರ ಬೋಸ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಶಿಲ್ಲಾಂಗ್ಗೆ ತೆರಳಬೇಕಿದ್ದ ಇಂಡಿಗೊ ವಿಮಾನದ ಶೌಚಾಲಯದಲ್ಲಿ ಬಾಂಬ್ ಬೆದರಿಕೆ ಪತ್ರ ಪತ್ತೆಯಾಗಿದ್ದು, ಒಂದೇ ದಿನ ಎರಡು ಬಾಂಬ್ ಬೆದರಿಕೆ ಪತ್ರಗಳು ಪತ್ತೆಯಾದಂತಾಗಿವೆ. ಈ ಪತ್ರ ಪತ್ತೆಯಾದ ಬೆನ್ನಲ್ಲೇ ಪ್ರಯಾಣಿಕರನ್ನು ಇಳಿಸಿ ವಿಮಾನವನ್ನು ಭದ್ರತಾ ತಪಾಸಣೆಗಾಗಿ ಐಸೋಲೇಶನ್ ಬೇ ಪ್ರದೇಶಕ್ಕೆ ವಿಮಾನವನ್ನು ಕಳುಹಿಸಲಾಯಿತು. ಬೆಳಿಗ್ಗೆ 9.15ಕ್ಕೆ ಹೊರಡಲು ಅನುವಾಗಿದ್ದ ಕೊಲ್ಕತ್ತಾ-ಶಿಲ್ಲಾಂಗ್ ಇಂಡಿಗೊ 6ಇ3074 ವಿಮಾನದಲ್ಲಿ ಬಾಂಬ್ ಬೆದರಿಕೆ ಪತ್ರ ಪತ್ತೆಯಾಗಿದೆ. ತಕ್ಷಣ ವಿಮಾನವನ್ನು ಐಸೊಲೇಶನ್ ಬೇ ಪ್ರದೇಶಕ್ಕೆ ಕಳುಹಿಸಲಾಗಿದ್ದು, ವಿಮಾನ ಏರುವ ಸಂದರ್ಭದಲ್ಲಿ ವಿಮಾನ ಸಿಬ್ಬಂದಿಗೆ, ವಿಮಾನದಲ್ಲಿ ಬಾಂಬ್ ಇದೆ ಎಂಬ ಪತ್ರ ಲಭ್ಯವಾಗಿದೆ. ತಕ್ಷಣ ಪ್ರಯಾಣಿಕರನ್ನು ಕೆಳಕ್ಕೆ ಇಳಿಸಲಾಗಿದೆ. ತಪಾಸಣೆ ಕಾರ್ಯಾ ಮುಂದುವರಿದಿದೆ ಎಂದು ವಿಮಾನ ನಿಲ್ದಾಣ ನಿರ್ದೇಶಕರು ಹೇಳಿದ್ದಾರೆ.
ಎಐ ಜಗತ್ತಿನಲ್ಲಿ ಹೊಸ ಸೋಷಿಯಲ್ ಮೀಡಿಯಾ: Moltbook ಹೊಸದು, ಅದರ ಹಳೇ ಆವೃತ್ತಿ ಗೊತ್ತಾ: ರಾಜಾರಾಂ ತಲ್ಲೂರು ಬರಹ
New AI: ಎಐ ಜಗತ್ತಿನಲ್ಲಿ ಹೊಸ ಸೋಷಿಯಲ್ ಮೀಡಿಯಾ: Moltbook ಹೊಸದು, ಅದರ ಹಳೇ ಆವೃತ್ತಿ ಗೊತ್ತಾ ಹಿರಿಯ ಪತ್ರಕರ್ತ ರಾಜಾರಾಂ ತಲ್ಲೂರು ಅವರ ಬರಹ ಇಲ್ಲಿದೆ. Moltbook ಎಂಬುದು ಇತ್ತೀಚೆಗೆ (ಜನವರಿ 2026) ಆರಂಭಗೊಂಡಿರುವ ಒಂದು ಸೋಷಿಯಲ್ ಮೀಡಿಯಾ. ಅದರ ವಿಶೇಷ ಎಂದರೆ, AI ಆಧರಿತ chatbotಗಳೇ ಅಲ್ಲಿ ಪೋಸ್ಟ್ ಮಾಡುವುದು, ಚರ್ಚೆ ಮಾಡುವುದು. ಅದು
ಭಾರತ ವಿರುದ್ಧದ ಪಂದ್ಯಕ್ಕೆ ಮುನ್ನ ಪಾಕ್ ಡಗೌಟ್ನಲ್ಲಿ ಹಾವು ಪತ್ತೆ!
ಕೊಲಂಬೊ: ಏಷ್ಯಾದ ಎರಡು ಬಲಾಢ್ಯ ತಂಡಗಳ ನಡುವೆ ಟಿ20 ವಿಶ್ವಕಪ್ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಕೊಲಂಬೊ ಪ್ರೇಮದಾಸ ಸ್ಟೇಡಿಯಂನಲ್ಲಿ ನಡೆಯಲಿರುವ ಪಂದ್ಯವನ್ನು ಇಡೀ ವಿಶ್ವ ಎದುರು ನೋಡುತ್ತಿದೆ. ಸೂಪರ್ 8 ಸ್ಥಾನ ಖಾತರಿಪಡಿಸಿಕೊಳ್ಳಲು ಉಭಯ ದೇಶಗಳಿಗೆ ಇದು ಮಹತ್ವದ ಪಂದ್ಯವಾಗಿದೆ. ಏತನ್ಮಧ್ಯೆ ಪಾಕಿಸ್ತಾನ ಅಟಗಾರರ ಡಗೌಟ್ನಲ್ಲಿ ಶುಕ್ರವಾರ ಸಂಜೆ ಹಾವು ಕಾಣಿಸಿಕೊಂಡು ಕೆಲ ಕಾಲ ಆತಂಕದ ವಾತಾರವಣ ನಿರ್ಮಾಣವಾಗಿತ್ತು. ಸಲ್ಮನ್ ಅಘಾ ನೇತೃತ್ವದ ತಂಡ ತರಬೇತಿಗಾಗಿ ಆಗಮಿಸುವುದಕ್ಕೆ ಸ್ವಲ್ಪ ಮೊದಲು ಹಾವು ಕಾಣಿಸಿಕೊಂಡಿದ್ದು, ಘಟನೆಯ ವಿಡಿಯೊ ಜಾಲತಾಣಗಳಲ್ಲಿ ವೈರಲ್ ಆಗಿದೆ. ಪಾಕಿಸ್ತಾನ ತಂಡ ಬದ್ಧ ಪ್ರತಿಸ್ಪರ್ಧಿ ಭಾರತದ ವಿರುದ್ಧ ಇಬ್ಬರು ಸ್ಪಿನ್ನರ್ ಗಳು ಹಾಗೂ ಇಬ್ಬರು ವೇಗದ ಬೌಲರ್ ಗಳು ಸೇರಿ ನಾಲ್ಕು ಮಂದಿ ಸ್ಪೆಷಲಿಸ್ಟ್ ಬೌಲರ್ ಗಳೊಂದಿಗೆ ಕಣಕ್ಕೆ ಇಳಿಯಲಿದೆ. ಸ್ಪಿನ್ನರ್ ಗಳಾದ ಅಬ್ರರ್ ಅಹ್ಮದ್ ಹಾಗೂ ಉಸ್ಮಾನ್ ತಾರಿಕ್, ವೇಗದ ಬೌಲರ್ ಗಳಾದ ಶಹೀನ್ ಶಾ ಅಫ್ರೀದಿ ಹಾಗೂ ಸಲ್ಮಾನ್ ಮಿರ್ಝಾ ಅವರಿಗೆ ಆಡುವ 11ರಲ್ಲಿ ಸ್ಥಾನ ಕಲ್ಪಿಸಲು ಮುಖ್ಯ ಕೋಚ್ ಮೈಕ್ ಹ್ಯಾಸನ್ ಮತ್ತು ನಾಯಕ ಅಘಾ ನಿರ್ಧರಿಸಿದ್ದಾರೆ ಎಂದು ಆಪ್ತ ಮೂಲಗಳು ಹೇಳಿವೆ. ಇದಕ್ಕಾಗಿ ಶಾಬದ್ ಖಾನ್, ಮೊಹ್ಮದ್ ನವಾಝ್ ಹಾಗೂ ಫಹೀಮ್ ಅಶ್ರಫ್ ಈ ಮೂವರು ಆಲ್ರೌಂಡರ್ ಗಳ ಪೈಕಿ ಒಬ್ಬರನ್ನು ಕೈಬಿಡಲಿದೆ. ಸಯೀಮ್ ಅಯೂಬ್, ಶಹಬ್ಝಾದಾ ಫರ್ಹಾನ್, ಸಲ್ಮನ್ ಅಲಿ ಅಘಾ, ಬಾಬರ್ ಅಝಾಂ ಮತ್ತು ಉಸ್ಮಾನ್ ಖಾನ್ ಅಗ್ರ ಐವರು ಬ್ಯಾಟ್ಸ್ ಮನ್ ಗಳಾಗಿರುತ್ತಾರೆ. ಆರು ಹಾಗೂ ಏಳನೇ ಕ್ರಮಾಂಕದ ಆಟಗಾರರನ್ನು ಇನ್ನೂ ಅಂತಿಮಪಡಿಸಬೇಕಿದ್ದು, ನಾಲ್ವರು ಬೌಲರ್ ಗಳು ಕೆಳ ಕ್ರಮಾಂಕದಲ್ಲಿರುತ್ತಾರೆ ಎಂದು ತಿಳಿದು ಬಂದಿದೆ.
ಕಾವೇರಿ ನೀರಿಗೆ ಹೆಚ್ಚಿದ ಆಗ್ರಹ; ಎತ್ತಿನಹೊಳೆ ನೀರಿಗಾಗಿ ಎದುರು ನೋಡುತ್ತಿದ್ದಾರೆ ಜನ
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ, ದೇವನಹಳ್ಳಿ, ಹೊಸಕೋಟೆ, ನೆಲಮಂಗಲದಲ್ಲಿ ಯಾವುದೇ ನದಿ ಮೂಲಗಳಿಲ್ಲ. ಅರ್ಕಾವತಿ ಪಾತ್ರದ ಕೆರೆಗಳು ಇಲ್ಲಿ ಕಾಣಬಹುದಾಗಿದೆ. ಇದರಿಂದ ಕುಡಿಯುವ ನೀರಿಗೆ ಸಾಕಷ್ಟ ಸಮಸ್ಯೆ ಎದುರಾಗುತ್ತದೆ. ಈ ಬಾರಿ ರಾಜ್ಯ ಬಜೆಟ್ನಲ್ಲಾದರೂ ಜಿಲ್ಲೆಯ ನೀರಿನ ಸಮಸ್ಯೆಗೆ ಪರಿಹಾರಕ್ಕೆ ಆದ್ಯತೆ ನೀಡಲಿದೆಯೇ ಎಂಬ ನಿರೀಕ್ಷೆಯಲ್ಲಿ ಜನಸಾಮಾನ್ಯರು ಇದ್ದಾರೆ.
Condoms Winter Olympics: ಚಳಿಗಾಲದ ಒಲಿಂಪಿಕ್ಸ್ 2026: ಮಿಲನ್ನಲ್ಲಿ 3 ದಿನದಲ್ಲಿ 10,000 ಕಾಂಡೋಮ್ ಖಾಲಿ
Condoms Winter Olympics: ಇಟಲಿಯ ಮಿಲನ್ನಲ್ಲಿ ಚಳಿಗಾಲದ ಒಲಿಂಪಿಕ್ಸ್ ನಡೆಯುತ್ತಿದ್ದು, ಚಳಿಗಾಲದ ಒಲಿಂಪಿಕ್ಸ್ನಲ್ಲಿ ಹೊಸ ಹಾಗೂ ವಿಚಿತ್ರವಾದ ಸಮಸ್ಯೆಯೊಂದು ಎದುರಾಗಿದ್ದು, ಇದು ಜನರ ಗಮನ ಸೆಳೆಯುತ್ತಿದೆ. ಒಲಿಂಪಿಕ್ಸ್ನಲ್ಲಿ ಪ್ರತಿ ಬಾರಿಯೂ ಈ ವಿಷಯಕ್ಕೆ ಸಮಸ್ಯೆ ಅಥವಾ ಹೆಚ್ಚು ಚರ್ಚೆ ಆಗುವುದು ಇದೆ. 2026ರ ಚಳಿಗಾಲದ ಒಲಿಂಪಿಕ್ಸ್ನಲ್ಲಿ 92 ದೇಶಗಳಿಂದ 2,800ಕ್ಕೂ ಹೆಚ್ಚು ಕ್ರೀಡಾಪಟುಗಳು 116 ಸ್ಪರ್ಧೆಗಳಲ್ಲಿ ಸ್ಪರ್ಧಿಸುತ್ತಿದ್ದಾರೆ.
ಐಸಿಸಿ ಟಿ-20 ವಿಶ್ವಕಪ್ 2026ರ ಜ್ವರ ಇಂದು (ಫೆ.15-ಭಾನುವಾರ) ಮತ್ತಷ್ಟು ಹೆಚ್ಚಲಿದೆ. ಏಕೆಂದರೆ ಇಂದು ಸಂಜೆ ಶ್ರೀಲಂಕಾದ ಕೊಲೊಂಬೊದಲ್ಲಿರುವ ಪ್ರೇಮದಾಸ ಕ್ರೀಡಾಂಗಣದಲ್ಲಿ, ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ಪರಸ್ಪರ ಮುಖಾಮುಖಿಯಾಗಲಿವೆ. ಆಪರೇಷನ್ ಸಿಂಧೂರ ಸೇನಾ ಕಾರ್ಯಾಚರಣೆ ಬಲಿಕ ಎರಡನೇ ಬಾರಿ ಐಸಿಸಿ ಪಂದ್ಯಾವಳಿಯಲ್ಲಿ, ಭಾರತ ಮತ್ತು ಪಾಕಿಸ್ತಾನ ತಂಡಗಳು ಸೆಣೆಸಲಿವೆ. ಈ ಹಿನ್ನೆಲೆಯಲ್ಲಿ ಪ್ರೇಮದಾಸ ಕ್ರೀಡಾಂಗಣದ ಪಿಚ್ ರಿಪೋರ್ಟ್ ಇಲ್ಲಿದ್ದು, ಟಾಸ್ ಈ ಪಂದ್ಯದ ಫಲಿತಾಂಶದಲ್ಲಿ ಮಹತ್ವದ ಪಾತ್ರನಿರ್ವಹಿಸಲಿರುವುದು ಖಚಿತ.
ಇತ್ತೀಚಿಗೆ ನಡೆದ ಬಾಂಗ್ಲಾದೇಶ ರಾಷ್ಟ್ರೀಯ ಚುನಾವಣೆಯಲ್ಲಿ ಬಿಜೆಪಿ ಖಾತೆ ತೆರೆದಿದೆ. ಪಕ್ಷದ ಅಭ್ಯರ್ಥಿ ಅಂದಲೀವ್ ರೆಹಮಾನ್ ಪಾರ್ಥೊ ಐತಿಹಾಸಿಕ ಜಯ ಸಾಧಿಸಿದ್ದು, ತಾರಿಕ್ ರೆಹಮಾನ್ ಅವರ ಬಾಂಗ್ಲಾದೇಶ ನ್ಯಾಷನಲಿಸ್ಟ್ ಪಾರ್ಟಿ (ಬಿಎನ್ಪಿ)ಗೆ ಬೆಂಬಲ ಘೋಷಿಸಿದ್ದಾರೆ. ಅಂದಹಾಗೆ ಬಾಂಗ್ಲಾದೇಶ ಚುನಾವಣೆಯಲ್ಲಿ ಜಯಗಳಿಸಿದ್ದು ಭಾರತೀಯ ಜನತಾ ಪಕ್ಷ (ಬಿಜೆಪಿ) ಅಲ್ಲ, ಬದಲಿಗೆ ಬಾಂಗ್ಲಾದೇಶ ಜಾತಿಯಾ ಪಾರ್ಟಿ (ಬಿಜೆಪಿ) ಎಂಬ ರಾಜಕೀಯ ಪಕ್ಷ. ಈ ರಾಜಕೀಯ ಸಂಘಟನೆ ಕುರಿತು ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.
Karnataka Weather Feb 15: ಕರ್ನಾಟಕದ ವಿವಿಧ ಭಾಗದಲ್ಲಿ ಬಿಸಿಲು, ಪಶ್ಚಿಮ ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಪರಿಚಲನೆ
Karnataka Weather Feb 15: ಕರ್ನಾಟಕದ ವಿವಿಧ ಭಾಗದಲ್ಲಿ ಬಿಸಿಲು ಹೆಚ್ಚಾಗಿದ್ದು ಮಳೆ ಬರುವ ಸಾಧ್ಯತೆಯೂ ಇದೆ. ಮುಂದಿನ ಮೂರು ದಿನಗಳಲ್ಲಿ ಮಳೆ ಬರುವ ಸಾಧ್ಯತೆಯೂ ಇದೆ. ಬೆಂಗಳೂರು ಸೇರಿದಂತೆ ಕರ್ನಾಟಕದಾದ್ಯಂತ ಚಳಿ ಪ್ರಮಾಣ ತೀವ್ರ ಇಳಿಕೆಯಾಗಿದ್ದು, ಬಿಸಿಲು ಹೆಚ್ಚಳವಾಗಿದೆ. ಮುಂದಿನ ಐದು ದಿನಗಳಲ್ಲಿ ಕರ್ನಾಟಕದಾದ್ಯಂತ ಕನಿಷ್ಠ ತಾಪಮಾನದಲ್ಲಿ ದೊಡ್ಡ ಬದಲಾವಣೆಗಳಿಲ್ಲ ಎಂದು ಭಾರತೀಯ ಹವಾಮಾನ ಇಲಾಖೆಯ
ಡಿವೈಡರ್ ದಾಟಿ ಕೆಎಸ್ಆರ್ಟಿಸಿ ಬಸ್ಗೆ ಗುದ್ದಿದ ಕಾರು; ನೆಲಮಂಗಲ ಸಮೀಪ ನಡೆದ ಅಪಘಾತದಲ್ಲಿ ಐವರ ಸಾವು!
ನೆಲಮಂಗಲದ ಜಿಂದಾಲ್ ಸಮೀಪ ನಡೆದ ಭೀಕರ ಅಪಘಾತದಲ್ಲಿ, ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಐವರು ದುರ್ಮರಣಕ್ಕೀಡಾಗಿದ್ದಾರೆ. ತುಮಕೂರು ಕಡೆಯಿಂದ ಬೆಂಗಳೂರಿಗೆ ಬರುತ್ತಿದ್ದ ಇಂಡಿಕಾ ಕಾರು, ಬೆಂಗಳೂರಿನಿಂದ ಹೊರಟಿದ್ದ KSRTC ಬಸ್ಗೆ ಡಿಕ್ಕಿ ಹೊಡೆದ ಪರಿಣಾಮವಾಗಿ, ಕಾರಿನಲ್ಲಿದ್ದ ಎಲ್ಲಾ ಐವರು ಪ್ರಯಾಣಿಕರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ವೇಘವಾಗಿ ಬರುತ್ತಿದ್ದ ಕಾರು ಹೆದ್ದಾರಿಯ ಡಿವೈಡರ್ ಹಾರಿ ಬಸ್ಗೆ ಡಿಕ್ಕಿ ಹೊಡೆದಿದ್ದೇ ಈ ದುರಂತಕ್ಕೆ ಕಾರಣ ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಇಲ್ಲಿದೆ ಹೆಚ್ಚಿನ ಮಾಹಿತಿ.
ಗೂಗಲ್ ಮ್ಯಾಪ್ ನಂಬಿ ಕೆಟ್ಟ ಕೇರಳದ ಪ್ರವಾಸಿಗರು; ಉಪ್ಲಾಡಿ ಹೊಳೆಯತ್ತ ಸಾಗಿದ ಕಾರು!
ಇತ್ತೀಚಿಗೆ ಗೂಗಲ್ ಮ್ಯಾಪ್ ತಪ್ಪು ಮಾಹಿತಿಯಿಂದಾಗಿ ಅವಘಢಗಳು ಸಂಭವಿಸುತ್ತಿದ್ದು, ಕೋಟ-ಸ್ಯಾಬ್ರಕಟ್ಟೆ ಮೀಪದ ಉಪ್ಲಾಡಿ ನದಿ ಬಳಿಯೂ ಇಂತದ್ದೇ ಅವಘಢ ಸಂಭವಿಸಿದೆ. ಕೊಲ್ಲೂರು ಮೂಕಾಂಬಿಕೆ ದರ್ಶನಕ್ಕಾಗಿ ಕೇರಳದಿಂದ ಬಂದಿದ್ದ ಕುಟುಂಬವೊಂದು, ಗೂಗಲ್ ಮ್ಯಾಪ್ ತೋರಿದ ದಾರಿಯಲ್ಲಿ ಬಂದು ಉಪ್ಲಾಡಿ ಹೊಳೆಯ ಸಿಮೆಂಟ್ ಪಿಲ್ಲರ್ಗೆ ಡಿಕ್ಕಿ ಹೊಡೆದಿದೆ. ಅದೃಷ್ಟವಶಾತ್ ಕಾರು ನದಿಗೆ ಇಳಿಯದಿರುವುದರಿಂದ, ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ಕಾರಿನಲ್ಲಿ ಓರ್ವ ಮಹಿಳೆ ಸೇರಿದಂತೆ ಒಟ್ಟು ಆರು ಜನ ಪ್ರಯಾಣಿಸುತ್ತಿದ್ದರು. ಇಲ್ಲಿದೆ ಮಾಹಿತಿ.
ತಾನೇ ಕೊಂದಿದ್ದ ತಂದೆ-ತಾಯಿಯ ಅಂತ್ಯಕ್ರಿಯೆ ನಡೆಸಿದ ಮಗ; ಯಾವ ಮನೆಯಲ್ಲೂ ಈ ಘೋರ ಸ್ಥಿತಿ ಬಾರದಿರಲಿ!
ನಿಜ, ಯಾವ ಮನೆಯಲ್ಲೂ ಇಂತಹ ಘೋರ ಸ್ಥಿತಿ ಬರಬಾರದು. ಹಣಕಾಸು ವ್ಯಾಜ್ಯಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ ತನ್ನ ಸ್ವಂತ ತಂದೆ-ತಾಯಿಯನ್ನು ಕೊಲೆ ಮಾಡಿದ್ದ ಮಗ,ಇದೀಗ ತನ್ನ ಪೋಷಕರ ಅಂತ್ಯಕ್ರಿಯೆಯನ್ನೂ ನೆರವೇರಿಸಿದ್ದಾನೆ. ಹೌದು, ನೌಜಾಪಡೆ ನಿವೃತ್ತ ಅಧಿಕಾರಿ ನವೀನ್ಚಂದ್ರ ಭಟ್ ಮತ್ತು ಅವರ ಪತ್ನಿ ಡ. ಶ್ಯಾಮಲಾ ಭಟ್ ಅವರನ್ನು ಕೊಲೆಗೈದಿದ್ದ ಪುತ್ರ ರೋಹನ್ ಭಟ್, ವಿಲ್ಸನ್ಗಾರ್ಡನ್ ಚಿತಾಗಾರದಲ್ಲಿ ಪೊಲೀಸರ ಸಮ್ಮುಖದಲ್ಲಿ ಪೋಷಕರ ಅಂತ್ಯಕ್ರಿಯೆ ನೆರವೇರಿಸಿದ್ದಾನೆ. ಈ ಕುರಿತು ಇಲ್ಲಿದೆ ಹೆಚ್ಚಿನ ಮಾಹಿತಿ.
ಬೆಂಗಳೂರು ಅಪಾರ್ಟ್ಮೆಂಟ್ನಲ್ಲಿ ಇವಿ ಚಾರ್ಜರ್ ಅಳವಡಿಕೆ ವ್ಯಾಜ್ಯ ಸುಖಾಂತ್ಯ; ಹೈಕೋರ್ಟ್ ಮಹತ್ವದ ಆದೇಶ
ಆಧುನಿಕ ಮಾನವನ ಜೀವನ ಪದ್ದತಿ ಬದಲಾದಂತೆ ಆತನ ಸಮಸ್ಯೆಗಳ ಸ್ವರೂಪವೂ ಬದಲಾಗುತ್ತಿವೆ. ಈ ಸಮಸ್ಯೆಗಳ ನಿವಾರಣೆಗಾಗಿ ಪರಿಹಾರಗಳನ್ನು ಕಂಡುಕೊಳ್ಳುವ ಸವಾಲು ಆಧುನಿಕ ಸಮಾಜದ ವ್ಯವಸ್ಥೆಯ ಮುಂದಿದೆ. ಅದೇ ರೀತಿ ರಾಜಧಾನಿ ಬೆಂಗಳೂರಿನಲ್ಲಿ ಈಗ ಎಲೆಕ್ಟ್ರಿಕ್ ವಾಹನಗಳ ಸಂಖ್ಯೆ ಹೆಚ್ಚುತ್ತಿದ್ದು, ಈ ಸೌಲಭ್ಯದ ಜೊತೆಗೆ ಸಮಸ್ಯೆಯೂ ಧುತ್ತೆಂದು ನಮ್ಮೆದುರಿಗೆ ಬಂದು ನಿಂತಿದೆ. ನಗರದ ಅಪಾರ್ಟ್ಮೆಂಟ್ಗಳಲ್ಲಿ ಇವಿ ವಾಹನಗಳ ಚಾರ್ಜಿಂಗ್ ವಿಚಾರ ದೊಡ್ಡ ಸಮಸ್ಯೆಯಾಗಿದ್ದು, ಇಂತದ್ದೇ ಒಂದು ವ್ಯಾಜ್ಯದ ಕುರಿತು ಕೈಕೋರ್ಟ್ ಮಹತ್ವದ ಆದೇಶ ನೀಡಿದೆ. ಏನದು? ಇಲ್ಲಿದೆ ಮಾಹಿತಿ.
ಎಸ್ಐಆರ್ ಪ್ರಜಾಪ್ರಭುತ್ವದ ಮೇಲಿನ ಮೌನ ದಾಳಿ: ಮನ್ಸೂರ್ ಅಲಿ ಖಾನ್
ಬೆಂಗಳೂರು: ಭಾರತೀಯ ಚುನಾವಣಾ ಆಯೋಗವು ದೇಶದ ವಿವಿಧ ರಾಜ್ಯಗಳಲ್ಲಿ ನಡೆಸುತ್ತಿರುವ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ (ಎಸ್ಐಆರ್)ಯು ಪ್ರಜಾಪ್ರಭುತ್ವದ ಮೇಲಿನ ಮೌನ ದಾಳಿಯಾಗಿದೆ ಎಂದು ಎಐಸಿಸಿ ಕಾರ್ಯದರ್ಶಿ ಮನ್ಸೂರ್ ಅಲಿ ಖಾನ್ ಆರೋಪಿಸಿದರು. ಶನಿವಾರ ನಗರದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಮೊದಲ ಹಂತದಲ್ಲಿ ದೇಶದ 12 ರಾಜ್ಯಗಳಲ್ಲಿ ಎಸ್ಐಆರ್ ನಡೆಸಲಾಗಿದೆ. ಎಸ್ಐಆರ್ ಪ್ರಕ್ರಿಯೆ ಕುರಿತು ಬೂತ್ ಮಟ್ಟದ ಅಧಿಕಾರಿ (ಬಿಎಲ್ಒ)ಗಳಿಗೆ ಸೂಕ್ತ ತರಬೇತಿ ನೀಡದೆ, ತರಾತುರಿಯಲ್ಲಿ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ ಮಾಡುವ ಉದ್ದೇಶವೇನು? ಎಂದು ಪ್ರಶ್ನಿಸಿದರು. ಫಾರಂ ನಂ.7ರ ದುರುಪಯೋಗ: ಮತದಾರರ ಪಟ್ಟಿಯಲ್ಲಿರುವ ಹೆಸರಿನ ಬಗ್ಗೆ ಆಕ್ಷೇಪಣೆ ಹಾಗೂ ಇತರ ವ್ಯಕ್ತಿಯ ಹೆಸರನ್ನು ಮತದಾರರ ಪಟ್ಟಿಯಿಂದ ಕೈ ಬಿಡುವಂತೆ ಫಾರಂ ನಂ.7 ಸಲ್ಲಿಸಿ ಕೋರಬಹುದು. ಆದರೆ, ಈ ಹಿಂದೆ ಒಬ್ಬ ವ್ಯಕ್ತಿ ಕೇವಲ 5 ಫಾರಂ ನಂ.7 ಸಲ್ಲಿಸಲು ಅವಕಾಶವಿತ್ತು. ಆದರೆ, ಈಗ ನಿಯಮಾವಳಿಗಳನ್ನು ಬದಲಾಯಿಸಿರುವುದರಿಂದ ಇದರ ದುರುಪಯೋಗ ಅತ್ಯಂತ ಅಪಾಯಕಾರಿಯಾಗಲಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು. ಆಂಧ್ರಪ್ರದೇಶದಲ್ಲಿ ಒಬ್ಬ ವ್ಯಕ್ತಿ 70 ಹಾಗೂ ಕೇರಳದಲ್ಲಿ ಒಬ್ಬ ವ್ಯಕ್ತಿ 400 ಫಾರಂ.7 ಸಲ್ಲಿಕೆ ಮಾಡಿರುವುದು ಬೆಳಕಿಗೆ ಬಂದಿದೆ. ಎಸ್ಐಆರ್ ಪ್ರಕ್ರಿಯೆ ಕುರಿತು ಬಿಎಲ್ಒಗಳಿಗೆ ಸಾಕಷ್ಟು ಗೊಂದಲಗಳಿವೆ. ಅವರ ಮೇಲೆ ಸಾಕಷ್ಟು ಒತ್ತಡಗಳನ್ನು ಹೇರಲಾಗುತ್ತಿದೆ. ಹಲವು ಮಂದಿ ಆತ್ಮಹತ್ಯೆ ಮಾಡಿಕೊಂಡಿರುವುದನ್ನು ನಾವು ಕಂಡಿದ್ದೇವೆ ಎಂದು ಮನ್ಸೂರ್ ಅಲಿ ಖಾನ್ ಹೇಳಿದರು. ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಬಿಎಲ್ಒಗಳ ಮೇಲೆ ಒತ್ತಡ ಹೇರಿ ಅಲ್ಪಸಂಖ್ಯಾತರು, ದಲಿತರು, ಆದಿವಾಸಿಗಳ ಹೆಸರನ್ನು ಮತದಾರರ ಪಟ್ಟಿಯಿಂದ ಕೈ ಬಿಡಲಾಗುತ್ತಿದೆ ಎಂಬ ಆರೋಪಗಳು ಕೇಳಿ ಬಂದಿವೆ. ಬಿಹಾರದಲ್ಲಿ 85 ಲಕ್ಷ ಮತದಾರರ ಹೆಸರನ್ನು ಕೈ ಬಿಡಲಾಯಿತು. ಅದೇ ರೀತಿ ತಮಿಳುನಾಡಿನಲ್ಲೂ ಲಕ್ಷಾಂತರ ಮತದಾರರ ಹೆಸರನ್ನು ಕೈ ಬಿಡಲಾಯಿತು ಎಂದು ಅವರು ತಿಳಿಸಿದರು. ಬಿಜೆಪಿಗೆ ಅನುಕೂಲವಾಗುವ ರೀತಿಯಲ್ಲಿ ಎಸ್ಐಆರ್ ನಡೆಯುತ್ತಿದೆ ಎಂದು ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗುತ್ತಿದೆ. ಕಳೆದ ಒಂದೂವರೆ ವರ್ಷದಿಂದ ಭಾರತೀಯ ಚುನಾವಣಾ ಆಯೋಗವು ವಿಪಕ್ಷಗಳೊಂದಿಗೆ ನಡೆದುಕೊಳ್ಳುತ್ತಿರುವ ರೀತಿ ಇದಕ್ಕೆ ಪುಷ್ಠಿ ನೀಡುವಂತಿದೆ. ಮತಗಳ್ಳತನ ಕುರಿತು ನಾವು ನೀಡಿದ ದಾಖಲೆಗಳನ್ನು ಪರಿಗಣಿಸುವುದಿಲ್ಲ. ನಮ್ಮ ಯಾವುದೆ ಪ್ರಶ್ನೆಗಳಿಗೂ ಉತ್ತರಿಸುವುದಿಲ್ಲ ಎಂದು ಮನ್ಸೂರ್ ಅಲಿಖಾನ್ ಹೇಳೀದರು. ಎಸ್ಐಆರ್ ಗಿಂತ ಮುಂಚಿತವಾಗಿ 2002ನೆ ಸಾಲಿನ ಮತದಾರರ ಪಟ್ಟಿಯ ಆಧಾರದಲ್ಲಿ ಮ್ಯಾಪಿಂಗ್ ಮಾಡಲಾಗುತ್ತಿದೆ. ರಾಜ್ಯದಲ್ಲಿ ಈವರೆಗೆ ಶೇ.65ರಷ್ಟು ಮತದಾರರ ಪಟ್ಟಿಯ ಮ್ಯಾಪಿಂಗ್ ಮುಗಿದಿದೆ ಎಂಬ ಮಾಹಿತಿಯಿದೆ. ಪ್ರತಿಯೊಬ್ಬ ಮತದಾರರು ತನ್ನ ಅಸ್ತಿತ್ವವನ್ನು ಸಾಬೀತುಪಡಿಸಬೇಕಿದೆ. ಈ ಮ್ಯಾಪಿಂಗ್ ಪ್ರಕ್ರಿಯೆಯಲ್ಲಿ ವಿಶೇಷವಾಗಿ ವಲಸೆ ಕಾರ್ಮಿಕರು, ವಿವಾಹಿತ ಮಹಿಳೆಯರು, ಆದಿವಾಸಿಗಳು ಸಮಸ್ಯೆಗಳನ್ನು ಎದುರಿಸುವಂತಾಗಿದೆ ಎಂದು ಮನ್ಸೂರ್ ಅಲಿ ಖಾನ್ ಹೇಳಿದರು. ಬೆಂಗಳೂರು ಉತ್ತರ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಅಬ್ದುಲ್ ವಾಜಿದ್ ಮಾತನಾಡಿ, ನಮ್ಮ ರಾಜ್ಯದಲ್ಲಿಯೂ ಎಸ್ಐಆರ್ ಪ್ರಕ್ರಿಯೆ ಶೀಘ್ರವೇ ಆರಂಭವಾಗುವ ಸಾಧ್ಯತೆಗಳಿವೆ. ಆದುದರಿಂದ, ಪ್ರತಿಯೊಬ್ಬ ಮತದಾರರು ಭಾರತೀಯ ಚುನಾವಣಾ ಆಯೋಗ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ತಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ಇದೆಯೋ ಇಲ್ಲವೋ ಎಂಬುದನ್ನು ಪರಿಶೀಲಿಸಿಕೊಳ್ಳಬೇಕು ಎಂದು ತಿಳಿಸಿದರು. ವಿಧಾನಸಭಾ ಕ್ಷೇತ್ರ, ಮತಗಟ್ಟೆ ಹಾಗೂ ಮತದಾರರ ಪಟ್ಟಿಯಲ್ಲಿನ ಕ್ರಮ ಸಂಖ್ಯೆಯನ್ನು ಬರೆದುಕೊಂಡು ಬಿಎಲ್ಒಗಳಿಗೆ ನೀಡಿ ಮ್ಯಾಪಿಂಗ್ ಮಾಡಿಸಿಕೊಳ್ಳಬೇಕು. ಸರಕಾರ ನೀಡಿರುವ ಗುರುತಿನ ಚೀಟಿಗಳು, ಶೈಕ್ಷಣಿಕ ದಾಖಲೆಗಳಲ್ಲಿ ನಮ್ಮ ಹೆಸರು ಸ್ಪಷ್ಟವಾಗಿರುವಂತೆ ನೋಡಿಕೊಳ್ಳಬೇಕು ಎಂದು ಅವರು ಮನವಿ ಮಾಡಿದರು.
Bihar | ನಕಲಿ ಔಷಧ ಕಾರ್ಖಾನೆ ಬೇಧಿಸಿದ ಪೊಲೀಸರು
ಹೊಸದಿಲ್ಲಿ, ಫೆ. 14: ದಿಲ್ಲಿ ಪೊಲೀಸರು ಬಿಹಾರದ ಗಯಾದಲ್ಲಿ ನಕಲಿ ಔಷಧ ಉತ್ಪಾದನಾ ಘಟಕವನ್ನು ಬೇಧಿಸಿದ್ದು, ಅಂತರ್ರಾಜ್ಯ ಮಾದಕ ಜಾಲದೊಂದಿಗೆ ನಂಟು ಹೊಂದಿದ್ದ ಮತ್ತೋರ್ವ ಆರೋಪಿಯನ್ನು ಬಂಧಿಸಿದ್ದಾರೆ. ಅರ್ಹ ರಸಾಯನ ಶಾಸ್ತ್ರಜ್ಞನಾಗಿರದೇ ಇದ್ದರೂ ಪ್ರಮುಖ ಆರೋಪಿ ಅರುಣ್ (59) ಅಕ್ರಮ ಔಷಧ ಉತ್ಪಾದನಾ ಘಟಕವನ್ನು ನಡೆಸುತ್ತಿದ್ದನು. ಈ ಜಾಲಕ್ಕೆ ಸಂಬಂಧಿಸಿ ಇದುವರೆಗೆ ಒಟ್ಟು 9 ಮಂದಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ. ಪೊಲೀಸರು ಈ ಘಟಕದಲ್ಲಿ ಬೃಹತ್ ಪ್ರಮಾಣದ ನಕಲಿ ಔಷಧಗಳು, ಕಚ್ಚಾ ಸಾಮಗ್ರಿಗಳು ಹಾಗೂ ಭಾರೀ ಯಂತ್ರೋಪಕರಣಗಳನ್ನು ಪತ್ತೆಹಚ್ಚಿದ್ದಾರೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ 5 ಕೋಟಿ ರೂಪಾಯಿಗೂ ಅಧಿಕ ಮೌಲ್ಯವಿರುವ ಅಕ್ರಮ ಸಾಗಾಟಕ್ಕೆ ಬಳಸಲಾದ 5 ಕೆ.ಜಿ. ಟ್ರಾಮಡಾಲ್ ಪುಡಿಯನ್ನು ಅರುಣ್ ಮಾತ್ರೆಗಳಾಗಿ ಸಂಸ್ಕರಿಸಿದ್ದಾನೆ. ನಂತರ ಈ ಮಾತ್ರೆಗಳನ್ನು ನಕಲಿ ಔಷಧ ಅಂಗಡಿಗಳ ಮೂಲಕ ಹೆಚ್ಚಿನ ಬೆಲೆಗೆ ಮಾರಾಟ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಮಾತ್ರೆಗಳನ್ನು ಮಾರುಕಟ್ಟೆಯಲ್ಲಿ ನೋವು ನಿವಾರಕಗಳಾಗಿ ಮಾರಾಟ ಮಾಡಲಾಗುತ್ತಿತ್ತು ಮತ್ತು ಹೆರಾಯಿನ್ ಗೆ ಬದಲಿಯಾಗಿಯೂ ಬಳಸಲಾಗುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
2026ರ Henley & Partners ಪ್ರಕಟಿಸಿದ ಹೆನ್ಲಿ ಪಾಸ್ಪೋರ್ಟ್ ಸೂಚ್ಯಂಕದಲ್ಲಿ ಭಾರತದ ಪಾಸ್ಪೋರ್ಟ್ 75ನೇ ಸ್ಥಾನದಲ್ಲಿದೆ. 2025ರಲ್ಲಿ ಇದು 85ನೇ ಸ್ಥಾನದಲ್ಲಿತ್ತು. ಅಂದರೆ ಈ ವರ್ಷ 10 ಸ್ಥಾನಗಳ ಜಿಗಿತ ಕಂಡಿದೆ. ಈ ವರ್ಷದ ಜನವರಿಯಲ್ಲಿ 80ನೇ ಸ್ಥಾನದಲ್ಲಿದ್ದ ಇದು ಒಂದು ತಿಂಗಳಲ್ಲಿ ಗಮನಾರ್ಹ ಏರಿಕೆ ಕಂಡಿದ್ದರೂ, ಮುಂಗಡ ವೀಸಾ ಪಡೆಯದೆ ಪ್ರವೇಶಿಸಬಹುದಾದ ಒಟ್ಟು ತಾಣಗಳ ಸಂಖ್ಯೆ ಪ್ರಸ್ತುತ 56ರಷ್ಟಿದೆ. ಜನವರಿಯಲ್ಲಿ ಇದು 55 ಆಗಿದ್ದು, 2025ರಲ್ಲಿ 57 ಆಗಿತ್ತು. ಭಾರತದ ಶ್ರೇಯಾಂಕವನ್ನು ಕೋಟ್ ಡಿ’ಐವೊಯಿರ್, ಗ್ಯಾಬೊನ್, ಮಡಗಾಸ್ಕರ್ ಮತ್ತು ಮಾರಿಟಾನಿಯಾ ಮುಂತಾದ ನಾಲ್ಕು ದೇಶಗಳು ಹಂಚಿಕೊಂಡಿವೆ. ಪಾಸ್ಪೋರ್ಟ್ ಸೂಚ್ಯಂಕವು ವಿದೇಶಾಂಗ ನೀತಿಯಲ್ಲಿ ದೇಶದ ಬಲವನ್ನು ಹಾಗೂ ಜಾಗತಿಕ ರಾಜಕೀಯದಲ್ಲಿ ಅದರ ಸ್ಥಿತಿಯನ್ನು ಪ್ರತಿಬಿಂಬಿಸುತ್ತದೆ. ಹೆನ್ಲಿ ಪಾಸ್ಪೋರ್ಟ್ ಸೂಚ್ಯಂಕವು 2000ರ ದಶಕದ ಮಧ್ಯಭಾಗದಲ್ಲಿ ಪ್ರಾರಂಭವಾದಾಗಿನಿಂದ ಸಿಂಗಾಪುರ, ಜಪಾನ್, ಜರ್ಮನಿ, ಫ್ರಾನ್ಸ್, ಇಟಲಿ ಮತ್ತು ಸ್ಪೇನ್ ಸೇರಿದಂತೆ ಪಶ್ಚಿಮ ಯುರೋಪಿನ ದೇಶಗಳು ಶ್ರೇಯಾಂಕಗಳಲ್ಲಿ ಪ್ರಾಬಲ್ಯ ಸಾಧಿಸುತ್ತಿವೆ. ಕಳೆದ ವರ್ಷ ಭಾರತದ ಶ್ರೇಯಾಂಕ 85ನೇ ಸ್ಥಾನದಲ್ಲಿದ್ದು, 57 ದೇಶಗಳಿಗೆ ವೀಸಾ-ಮುಕ್ತ ಪ್ರಯಾಣ ಸೌಲಭ್ಯವಿತ್ತು. ಹೆನ್ಲಿ ಪಾಸ್ಪೋರ್ಟ್ ಸೂಚ್ಯಂಕ ಎಂದರೇನು? ಹೆನ್ಲಿ ಪಾಸ್ಪೋರ್ಟ್ ಸೂಚ್ಯಂಕವು 199 ಪಾಸ್ಪೋರ್ಟ್ಗಳು ಮತ್ತು 227 ಪ್ರಯಾಣ ತಾಣಗಳನ್ನು ಶ್ರೇಣೀಕರಿಸುತ್ತದೆ. ಪಾಸ್ಪೋರ್ಟ್ ಹೊಂದಿರುವವರು ಎಷ್ಟು ದೇಶಗಳಿಗೆ ವೀಸಾ ಇಲ್ಲದೆ ಪ್ರಯಾಣಿಸಬಹುದು ಎಂಬುದರ ಮೇಲೆ ಅಂತರರಾಷ್ಟ್ರೀಯ ವಾಯು ಸಾರಿಗೆ ಸಂಘ (IATA)ದ ಡೇಟಾವನ್ನು ಆಧರಿಸಿ ದೇಶಗಳನ್ನು ಶ್ರೇಣೀಕರಿಸಲಾಗುತ್ತದೆ. ಇದರ ಸ್ಕೋರಿಂಗ್ ವಿಧಾನದಲ್ಲಿ ವೀಸಾ-ಮುಕ್ತ, ವೀಸಾ-ಆನ್-ಅರೈವಲ್ ಹಾಗೂ ಎಲೆಕ್ಟ್ರಾನಿಕ್ ಪ್ರಯಾಣ ಅನುಮತಿಗಳನ್ನು ಒಳಗೊಂಡಿರುತ್ತವೆ. ಸರಳವಾಗಿ ಹೇಳುವುದಾದರೆ, ಮುಂಗಡ ದಾಖಲೆಗಳಿಲ್ಲದೆ ಪ್ರವೇಶಿಸಬಹುದಾದ ತಾಣಗಳ ಸಂಖ್ಯೆ ಹೆಚ್ಚಾದಷ್ಟು ಪಾಸ್ಪೋರ್ಟ್ನ ಚಲನಶೀಲತೆ ಹೆಚ್ಚಾಗುತ್ತದೆ. 2025ರಲ್ಲಿ ಭಾರತೀಯ ಪಾಸ್ಪೋರ್ಟ್ ಹೊಂದಿರುವವರು 57 ವೀಸಾ-ಮುಕ್ತ ತಾಣಗಳಿಗೆ ಪ್ರವೇಶ ಹೊಂದಿದ್ದರು. 2026ರ ಆರಂಭದಲ್ಲಿ ಅದು 55ಕ್ಕೆ ಇಳಿದು, ಫೆಬ್ರವರಿಯಲ್ಲಿ 56ಕ್ಕೆ ಏರಿತು. ಇರಾನ್ ಮತ್ತು ಬೊಲಿವಿಯಾಗೆ ಈಗ ವೀಸಾ-ಮುಕ್ತ ಪ್ರವೇಶವಿಲ್ಲ. ನವೆಂಬರ್ 2025ರಲ್ಲಿ ಇರಾನ್ ಸಾಮಾನ್ಯ ಭಾರತೀಯ ಪಾಸ್ಪೋರ್ಟ್ ಹೊಂದಿರುವವರಿಗೆ ವೀಸಾ-ಮುಕ್ತ ಪ್ರವೇಶವನ್ನು ಸ್ಥಗಿತಗೊಳಿಸಿತು. ಸುಳ್ಳು ಉದ್ಯೋಗ ಆಮಿಷ ತೋರಿಸಿ ನಂತರ ಸುಲಿಗೆಗಾಗಿ ಅಪಹರಣ ಮಾಡಿದ ಘಟನೆಗಳ ಹಿನ್ನೆಲೆ ಈ ನಿರ್ಧಾರ ಕೈಗೊಳ್ಳಲಾಯಿತು ಎಂದು ಭಾರತದ ವಿದೇಶಾಂಗ ಸಚಿವಾಲಯ ತಿಳಿಸಿತ್ತು. ಬೊಲಿವಿಯಾದಲ್ಲಿ 2025ರಲ್ಲಿ ಆಗಮನದ ವೇಳೆ ವೀಸಾ ಪಡೆಯುವ ವ್ಯವಸ್ಥೆ ಇತ್ತು. ಆದರೆ 2026ರಲ್ಲಿ ಇ-ವೀಸಾ ವ್ಯವಸ್ಥೆಗೆ ಬದಲಾಯಿಸಿದ ಕಾರಣ, ಮುಂಗಡ ಅನುಮತಿ ಅಗತ್ಯವಾಯಿತು. ಈ ಕಾರಣದಿಂದ ಅದು ವೀಸಾ-ಮುಕ್ತ ಪಟ್ಟಿಯಿಂದ ಹೊರಬಂದಿತು. ಜನವರಿಯಲ್ಲಿ ಇಳಿಕೆ, ಫೆಬ್ರವರಿಯಲ್ಲಿ ಚೇತರಿಕೆ ಜನವರಿ 2026ರ ಪಟ್ಟಿಯಲ್ಲಿ ಇರಾನ್ ಮತ್ತು ಬೊಲಿವಿಯಾ ತೆಗೆದುಹಾಕಿದ ಬಳಿಕ ತಾಣಗಳ ಸಂಖ್ಯೆ 55 ಆಗಿತ್ತು. ಫೆಬ್ರವರಿಯಲ್ಲಿ ಗ್ಯಾಂಬಿಯಾ ಸೇರಿಕೊಂಡ ಪರಿಣಾಮ ಇದು 56ಕ್ಕೆ ಏರಿತು. ಸ್ಕೋರಿಂಗ್ ಹೇಗೆ? ಪ್ರತಿ ಪಾಸ್ಪೋರ್ಟ್ಗೆ ಪ್ರತಿ ಗಮ್ಯಸ್ಥಾನಕ್ಕೆ 1 ಅಂಕ ಸಿಗುತ್ತದೆ, ಅದು ಈ ಕೆಳಗಿನ ಪ್ರವೇಶವನ್ನು ಅನುಮತಿಸಿದರೆ: – ವೀಸಾ-ಮುಕ್ತ ಪ್ರವೇಶ – ವೀಸಾ-ಆನ್-ಅರೈವಲ್ – ಗಡಿಯಲ್ಲಿ ನೀಡುವ ಸಂದರ್ಶಕರ ಪರವಾನಗಿ – ರಾಯಭಾರ ಕಚೇರಿ ಅನುಮೋದನೆ ಅಗತ್ಯವಿಲ್ಲದ ಎಲೆಕ್ಟ್ರಾನಿಕ್ ಪ್ರಯಾಣ ಅನುಮತಿ ಮುಂಚಿತ ವೀಸಾ ಅಥವಾ ಪೂರ್ವಾನುಮತಿ ಅಗತ್ಯವಿದ್ದರೆ 0 ಅಂಕ. ಭಾರತೀಯ ಪಾಸ್ಪೋರ್ಟ್ನಲ್ಲಿ ವೀಸಾ-ಮುಕ್ತ ದೇಶಗಳ ಸಂಖ್ಯೆ ಹೆನ್ಲಿ ಸೂಚ್ಯಂಕದ ಪ್ರಕಾರ ಭಾರತೀಯರು 56 ದೇಶಗಳಿಗೆ ವೀಸಾ ಇಲ್ಲದೆ ಪ್ರಯಾಣಿಸಬಹುದು. 170 ದೇಶಗಳಿಗೆ ವೀಸಾ ಅಗತ್ಯವಿರುತ್ತದೆ. ವೀಸಾ ಇಲ್ಲದೆ ಭಾರತೀಯರು ಭೇಟಿ ನೀಡಬಹುದಾದ ದೇಶಗಳ ಸಂಖ್ಯೆ ಇಲ್ಲಿದೆ ಬಾರ್ಬಡೋಸ್, ಭೂತಾನ್ , ಬ್ರಿಟಿಷ್ ವರ್ಜಿನ್ ಐಲ್ಯಾಂಡ್, ಬುರುಂಡಿ, ಕಾಂಬೋಡಿಯ, ಕೇಪ್ ವರ್ಡೆ ದ್ವೀಪಗಳು, ಕೊಮೊರೊ ದ್ವೀಪಗಳು, ಕುಕ್ ದ್ವೀಪಗಳುಜಿಬೌಟಿ, ಡೊಮಿನಿಕಾ, ಇಥಿಯೋಪಿಯಾ, ಫಿಜಿ, ಗ್ರೆನಡಾ, ಗಿನಿ-ಬಿಸ್ಸೌ, ಹೈಟಿ, ಇಂಡೋನೇಷ್ಯಾ, ಜಮೈಕಾ, ಜೋರ್ಡಾನ್, ಕಝಾಕಿಸ್ತಾನ್, ಕೀನ್ಯಾ, ಕಿರಿಬಾಟಿ, ಲಾವೋಸ್, ಮಕಾವೊ (SAR ಚೀನಾ), ಮಡಗಾಸ್ಕರ್,ಮಲಾವಿ,ಮಲೇಷ್ಯಾ , ಮಾಲ್ಡೀವ್ಸ್ , ಮಾರ್ಷಲ್ ದ್ವೀಪಗಳು , ಮಾರಿಷಸ್, ಮೈಕ್ರೋನೇಶಿಯಾ, ಮಂಗೋಲಿಯಾ, ಮೊಜಾಂಬಿಕ್, ಮ್ಯಾನ್ಮಾರ್ ,ನೇಪಾಳ, ನಿಯು, ಪಲಾಉ ದ್ವೀಪಗಳು, ಫಿಲಿಪೈನ್ಸ್, ರುವಾಂಡಾ, ಸಮೋವಾ, ಸೆನೆಗಲ್, ಸೀಶೆಲ್ಸ್, ಸಿಯೆರಾ ಲಿಯೋನ್,ಶ್ರೀಲಂಕಾ, ಸೇಂಟ್ ಕಿಟ್ಸ್ ಮತ್ತು ನೆವಿಸ್, ಸೇಂಟ್ ಲೂಸಿಯಾ ಸೇಂಟ್ ವಿನ್ಸೆಂಟ್ ಮತ್ತು ಗ್ರೆನಡೈನ್ಸ್ , ಟಾಂಜಾನಿಯಾ, ಥೈಲ್ಯಾಂಡ್, ದಿ ಗ್ಯಾಂಬಿಯಾ, ಟಿಮೋರ್-ಲೆಸ್ಟೆ, ಟ್ರಿನಿಡಾಡ್ ಮತ್ತು ಟೊಬಾಗೊ, ಟುವಾಲು, ವನವಾಟು, ಜಿಂಬಾಬ್ವೆ, ಮಾಂಟ್ಸೆರಾಟ್, ಮಲೇಷ್ಯಾ ಭಾರತ v/s ನೆರೆ ರಾಷ್ಟ್ರಗಳು: ಯಾರು ಮುಂದಿದ್ದಾರೆ? ಭಾರತದ ನೆರೆಹೊರೆಯ ರಾಷ್ಟ್ರಗಳಲ್ಲಿ, ಮಾಲ್ಡೀವ್ಸ್ 49 ನೇ ಸ್ಥಾನದಲ್ಲಿದೆ ಇದು 93 ಕ್ಕೂ ಹೆಚ್ಚು ಸ್ಥಳಗಳಿಗೆ ವೀಸಾ-ಮುಕ್ತ ಪ್ರಯಾಣ ಪ್ರವೇಶದ ಸವಲತ್ತನ್ನು ಪಡೆದುಕೊಂಡಿದೆ. ಚೀನಾ ಜಾಗತಿಕ ಸೂಚ್ಯಂಕದಲ್ಲಿ 56 ನೇ ಸ್ಥಾನವನ್ನು ಪಡೆದುಕೊಂಡಿದೆ. ಇದು 82 ದೇಶಗಳಿಗೆ ವೀಸಾ-ಮುಕ್ತ ಪ್ರಯಾಣ ಪ್ರವೇಶವನ್ನು ಸುಗಮಗೊಳಿಸುತ್ತದೆ. ಭೂತಾನ್ 83 ನೇ ಸ್ಥಾನದಲ್ಲಿದ್ದು 48 ದೇಶಗಳಿಗೆ ವೀಸಾ-ಮುಕ್ತ ಪ್ರಯಾಣ ಪ್ರವೇಶವನ್ನು ಒದಗಿಸುತ್ತದೆ. 88 ನೇ ಸ್ಥಾನದಲ್ಲಿ ಮ್ಯಾನ್ಮಾರ್ ಇದ್ದು, ಇದು 43 ಸ್ಥಳಗಳಿಗೆ ವೀಸಾ-ಮುಕ್ತ ಪ್ರಯಾಣ ಪ್ರವೇಶವನ್ನು ಖಾತ್ರಿಪಡಿಸುತ್ತದೆ. ಶ್ರೀಲಂಕಾ, ಬಾಂಗ್ಲಾದೇಶ ಮತ್ತು ನೇಪಾಳ ಕ್ರಮವಾಗಿ 91, 93 ಮತ್ತು 95 ನೇ ಸ್ಥಾನದಲ್ಲಿವೆ. ಈ ಮೂರು ದೇಶಗಳು ಕ್ರಮವಾಗಿ 39, 37 ಮತ್ತು 35 ದೇಶಗಳಿಗೆ ವೀಸಾ-ಮುಕ್ತ ಪ್ರಯಾಣ ಪ್ರವೇಶವನ್ನು ಹೊಂದಿವೆ. ಪಾಕಿಸ್ತಾನ 97 ಮತ್ತು ಅಫ್ಘಾನಿಸ್ತಾನ 101 ನೇ ಸ್ಥಾನದಲ್ಲಿದ್ದು, ಕ್ರಮವಾಗಿ 32 ಮತ್ತು 24 ದೇಶಗಳಿಗೆ ವೀಸಾ-ಮುಕ್ತ ಪ್ರಯಾಣ ಪ್ರವೇಶವನ್ನು ಸಾಧ್ಯವಾಗಿಸಿದೆ. ವಿಶ್ವದ ಅತ್ಯಂತ ಶಕ್ತಿಶಾಲಿ ಪಾಸ್ಪೋರ್ಟ್? ಸಿಂಗಾಪುರವು 192 ದೇಶಗಳಿಗೆ ವೀಸಾ-ಮುಕ್ತ ಪ್ರವೇಶದೊಂದಿಗೆ ವಿಶ್ವದ ಬಲಿಷ್ಠ ಪಾಸ್ಪೋರ್ಟ್ ಆಗಿದೆ. ಜಪಾನ್ ಮತ್ತು ದಕ್ಷಿಣ ಕೊರಿಯಾ ಎರಡನೇ ಸ್ಥಾನದಲ್ಲಿವೆ. ಇವು 187 ದೇಶಗಳಿಗೆ ವೀಸಾ-ಮುಕ್ತ ಪ್ರವೇಶವನ್ನು ಅನುಮತಿಸುತ್ತದೆ. ಸ್ವೀಡನ್ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ ಮೂರನೇ ಸ್ಥಾನದಲ್ಲಿದ್ದು 186 ದೇಶಗಳಿಗೆ ವೀಸಾ-ಮುಕ್ತ ಪ್ರವೇಶವನ್ನು ಅನುಮತಿಸುತ್ತದೆ. ಫೆಬ್ರುವರಿ 2026 ರ ಶ್ರೇಯಾಂಕದಲ್ಲಿ, ಅಮೆರಿಕ ಹತ್ತನೇ ಸ್ಥಾನವನ್ನು ಪಡೆದುಕೊಂಡಿತು. ಇದು 179 ದೇಶಗಳಿಗೆ ವೀಸಾ-ಮುಕ್ತ ಪ್ರವೇಶವನ್ನು ನೀಡುತ್ತದೆ. ಯುನೈಟೆಡ್ ಕಿಂಗ್ಡಮ್, ಫ್ರಾನ್ಸ್, ಜರ್ಮನಿ, ಕೆನಡಾದಂತಹ ಅಭಿವೃದ್ಧಿ ಹೊಂದಿದ ದೇಶಗಳು ಕ್ರಮವಾಗಿ 7 ನೇ, 4 ನೇ ಮತ್ತು 8 ನೇ ಸ್ಥಾನವನ್ನು ಪಡೆದುಕೊಂಡಿವೆ.ಈ ದೇಶಗಳು ಕ್ರಮವಾಗಿ 182, 185 ಮತ್ತು 181 ದೇಶಗಳಿಗೆ ವೀಸಾ-ಮುಕ್ತ ಪ್ರವೇಶವನ್ನು ಪಡೆದುಕೊಂಡಿವೆ.
Bengaluru | ಲಾಕರ್ ನಲ್ಲಿದ್ದ 4 ಕೋಟಿ ರೂ.ಮೌಲ್ಯದ ಚಿನ್ನಾಭರಣ ಕಳ್ಳತನ: ಬ್ಯಾಂಕ್ ಸಹಾಯಕ ವ್ಯವಸ್ಥಾಪಕನ ಬಂಧನ
ಬೆಂಗಳೂರು: ಆನ್ಲೈನ್ನಲ್ಲಿ ಜೂಜಾಡಿ ಮಾಡಿಕೊಂಡಿದ್ದ 60ಲಕ್ಷ ರೂ.ಸಾಲ ತೀರಿಸಲು ಬ್ಯಾಂಕ್ ಲಾಕರ್ ನಲ್ಲಿದ್ದ 4 ಕೋಟಿ ರೂ.ಮೌಲ್ಯದ 2.753 ಕೆ.ಜಿ. ಚಿನ್ನಾಭರಣ ಕಳ್ಳತನ ಮಾಡಿದ ಆರೋಪದಡಿ ಇಂಡಿಯನ್ ಬ್ಯಾಂಕ್ನ ಸಹಾಯಕ ವ್ಯವಸ್ಥಾಪಕನನ್ನು ಗಿರಿನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ. ಕಿರಣ್ ಕುಮಾರ್(33) ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ. ಈತನಿಂದ ಒಂದು ಕಾಲು ಕೆ.ಜಿ. ಬಂಗಾರ ವಶಕ್ಕೆ ಪಡೆದುಕೊಳ್ಳಲಾಗಿದೆ. ವಿದ್ಯಾರಣ್ಯಪುರದ ನಿವಾಸಿಯಾಗಿರುವ ಆರೋಪಿಯು ಮೂಲತಃ ಆಂಧ್ರಪ್ರದೇಶದವನಾಗಿದ್ದಾನೆ. 2016ರಿಂದ ರಾಜ್ಯದ ಬ್ಯಾಂಕ್ನ ವಿವಿಧ ಶಾಖೆಗಳಲ್ಲಿ ಕೆಲಸ ಮಾಡಿದ್ದ. 2025ರ ಜೂನ್ನಿಂದ ಗಿರಿನಗರದ ಇಂಡಿಯನ್ ಬ್ಯಾಂಕ್ ಶಾಖೆಯಲ್ಲಿ ಕೆಲಸ ಮಾಡುತ್ತಿದ್ದ ಎಂದು ಪೊಲೀಸರು ಹೇಳಿದ್ದಾರೆ. ತೋಯಜಾಕ್ಷಿ ಎಂಬವರು ಆರು ತಿಂಗಳ ಹಿಂದೆ ಬ್ಯಾಂಕ್ನಲ್ಲಿ ಚಿನ್ನ ಅಡವಿಟ್ಟು ಸಾಲ ಪಡೆದಿದ್ದರು. ಸಾಲ ತೀರಿಸಿ ಒಡವೆ ಬಿಡಿಸಿಕೊಳ್ಳಲು ಇತ್ತೀಚೆಗೆ ಬ್ಯಾಂಕ್ಗೆ ಬಂದಿದ್ದರು. ಪೂರ್ಣ ಸಾಲ ಪಾವತಿಸಿ ಪ್ಯಾಕೆಟ್ನಲ್ಲಿದ್ದ ಚಿನ್ನ ಪರಿಶೀಲಿಸಿದಾಗ ಕೆಲ ಆಭರಣ ಕಾಣೆಯಾಗಿತ್ತು. ಈ ಬಗ್ಗೆ ಬ್ಯಾಂಕ್ ವ್ಯವಸ್ಥಾಪಕರ ಗಮನಕ್ಕೆ ತಂದಿದ್ದರು. ಈ ಬಗ್ಗೆ ಆತಂಕಗೊಂಡ ಅಧಿಕಾರಿಗಳು ಪರಿಶೀಲಿಸಿದಾಗ ಒಂದು ವರ್ಷದಿಂದ ಗೋಲ್ಡ್ ಲೋನ್ ಮಂಜೂರು ಮಾಡಲಾಗಿದ್ದ 207 ಪ್ಯಾಕೇಟ್ಗಳ ಪೈಕಿ ಸುಮಾರು 21 ಪ್ಯಾಕೇಟ್ಗಳಲ್ಲಿ ಒಟ್ಟು 2.753 ಕೆ.ಜಿ ಚಿನ್ನ ಕಳವಾಗಿರುವುದು ಗೊತ್ತಾಗಿತ್ತು ಎಂದು ಪೊಲೀಸರು ಹೇಳಿದ್ದಾರೆ. ಈ ಬಗ್ಗೆ ತನಿಖೆ ನಡೆಸಿದಾಗ ಆರೋಪಿ ಕಿರಣ್ ಬ್ಯಾಂಕ್ನ ವಲಯ ಕಚೇರಿಗೆ ಹಾಜರಾಗಿ ಕಳ್ಳತನವೆಸಗಿರುವುದಾಗಿ ಒಪ್ಪಿಕೊಂಡಿದ್ದ. ಚಿನ್ನವನ್ನು ಕತ್ರಿಗುಪ್ಪೆಯ ಮಣಪುರಂ ಹಾಗೂ ಎಂ.ಎಸ್.ಪಾಳ್ಯದ ಮುತ್ತೂಟ್ ಫೈನಾನ್ಸ್ನಲ್ಲಿ ಅಡವಿಟ್ಟಿರುವುದಾಗಿ ಬಾಯ್ಬಿಟ್ಟಿದ್ದ. ಈ ಕುರಿತು ಬಂದ ದೂರು ಆಧರಿಸಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಬೆಂಗಳೂರು ದಕ್ಷಿಣ ವಿಭಾಗದ ಡಿಸಿಪಿ ಲೋಕೇಶ್ ಜಗಲಾಸರ್ ಮಾಹಿತಿ ನೀಡಿದ್ದಾರೆ. 60 ಲಕ್ಷ ಸಾಲ ತೀರಿಸಲು ಚಿನ್ನ ಕಳವು: ಆನ್ಲೈನ್ ಜೂಜು ಹಾಗೂ ಬೆಟ್ಟಿಂಗ್ ವ್ಯಾಮೋಹಕ್ಕೆ ಅಂಟಿಕೊಂಡಿದ್ದ ಕಿರಣ್, ಹಲವು ವರ್ಷಗಳಿಂದ ಆನ್ಲೈನ್ನಲ್ಲಿ ಜೂಜಾಡುತ್ತಿದ್ದ. ಸುಮಾರು 60 ಲಕ್ಷದವರೆಗೆ ಬೆಟ್ಟಿಂಗ್ನಲ್ಲಿ ಹಣ ಕಳೆದುಕೊಂಡಿದ್ದ. ಮಾಡಿಕೊಂಡ ಸಾಲದಿಂದ ಹೊರಬರಲು ಆರು ತಿಂಗಳಲ್ಲಿ ಹಂತ- ಹಂತವಾಗಿ 4 ಕೋಟಿ ಮೌಲ್ಯದ ಚಿನ್ನ ಕದ್ದು ಅಡವಿಟ್ಟು ಬಂದ ಹಣದಿಂದ ಕೊಂಚ ಸಾಲ ತೀರಿಸಿದ್ದ ಎಂಬುದು ಪೊಲೀಸರ ವಿಚಾರಣೆ ವೇಳೆ ತಿಳಿದುಬಂದಿದೆ.
ಇರಾನ್ ವಿರುದ್ಧ ಯಾವುದೇ ಕ್ಷಣದಲ್ಲಿ ಅಮೆರಿಕ ಸೇನೆಯಿಂದ ದಿಢೀರ್ ದಾಳಿ ಸಾಧ್ಯತೆ | US Military
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಖಡಕ್ ನಿರ್ಧಾರ ಕೈಗೊಂಡು, ತಮ್ಮ ಶತ್ರು ವಿರುದ್ಧ ಘೋರ ಕಾರ್ಯಾಚರಣೆಗೆ ಪ್ಲಾನ್ ಮಾಡಿಕೊಂಡಿದ್ದಾರೆ. ಹೇಗಾದರೂ ಮಾಡಿ ಇರಾನ್ ದಾರಿಗೆ ಬಂದು ಅಮೆರಿಕ ಜೊತೆಗೆ ಪರಮಾಣು ಒಪ್ಪಂದಕ್ಕೆ ಸಹಿ ಹಾಕಬೇಕು ಎಂಬುದು ಡೊನಾಲ್ಡ್ ಟ್ರಂಪ್ ಅವರ ಪ್ಲಾನ್. ಆದರೆ ಪರಮಾಣು ಒಪ್ಪಂದಕ್ಕೆ ಇರಾನ್ ಒಪ್ಪಿಕೊಳ್ಳದೆ ಕಿರಿಕ್ ಮಾಡುತ್ತಿದೆ ಎಂಬ ಕಾರಣಕ್ಕೆ ಇದೀಗ
ಬಡವರ ಮೇಲೆ ಆರ್ಥಿಕ ಭಾರದ ಸಮಾವೇಶ, ಖಾಲಿ ಖಜಾನೆ ತುಂಬಲು ನೋಂದಣಿ ಶುಲ್ಕ ಹೇರಿಕೆ: ಬಸವರಾಜ ಬೊಮ್ಮಾಯಿ
ಹಾವೇರಿ/ಬೆಂಗಳೂರು: ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಿಕ್ಕೆ ಬಂದು ಬರೋಬ್ಬರಿ 1000 ದಿನ ಕಳೆದಿದ್ದು, ಈ ಸಂಬಂಧ ಹಾವೇರಿ ಸಾಧನಾ ಸಮಾವೇಶವನ್ನು ಹಮ್ಮಿಕೊಳ್ಳಲಾಗಿತ್ತು. ಪಂಚ ಗ್ಯಾರೆಂಟಿ ಸೇರಿದಂತೆ ಸರ್ಕಾರ ಮಾಡಿದ ಸಾಧನೆಗಳ ಬಗ್ಗೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಆದಿಯಾಗಿ ಅನೇಕ ಸಚಿವರು ವಿವರಿಸಿದ್ದಾರೆ. ಕಾಂಗ್ರೆಸ್ ಸಮಾವೇಶದ ಬಗ್ಗೆ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಟಾಂಗ್
ನವಾಲ್ನಿಯನ್ನು ಮಾರಣಾಂತಿಕ ವಿಷದಿಂದ ರಷ್ಯ ಕೊಂದಿದೆ: ಬ್ರಿಟನ್ ಸೇರಿ 5 ರಾಷ್ಟ್ರಗಳ ಪ್ರತಿಪಾದನೆ
ಲಂಡನ್, ಫೆ. 14: ರಷ್ಯಾದ ಪ್ರಮುಖ ವಿರೋಧ ಪಕ್ಷದ ನಾಯಕ ಅಲೆಕ್ಸಿ ನವಾಲ್ನಿ ರಷ್ಯಾದ ಜೈಲಿನಲ್ಲಿ ಬಂಧನದಲ್ಲಿದ್ದ ಸಂದರ್ಭ ಮಾರಣಾಂತಿಕ ವಿಷ ಪ್ರಾಶನದಿಂದ ಸಾವನ್ನಪ್ಪಿದ್ದು, ನವಾಲ್ನಿ ಸಾವಿಗೆ ರಷ್ಯ ರಾಷ್ಟ್ರ ಕಾರಣ ಎಂದು ಬ್ರಿಟನ್ ಹಾಗೂ ನಾಲ್ಕು ಯುರೋಪಿಯನ್ ಮಿತ್ರ ರಾಷ್ಟ್ರಗಳು ಪ್ರತಿಪಾದಿಸಿವೆ. ನವಾಲ್ನಿಯ ದೇಹದ ಸ್ಯಾಂಪಲ್ನ ವಿಶ್ಲೇಷಣೆಯು ‘ಎಪಿಬಾಟಿಡೈನ್’ ಇರುವಿಕೆಯನ್ನು ನಿರ್ಣಾಯಕವಾಗಿ ದೃಢಪಡಿಸಿದೆ. ಇದು ದಕ್ಷಿಣ ಅಮೆರಿಕಾದಲ್ಲಿ ವಿಷಕಾರಿ ಕಪ್ಪೆಗಳಲ್ಲಿ ಕಂಡುಬರುವ ವಿಷ ವಸ್ತುವಾಗಿದೆ. ಅಲೆಕ್ಸಿ ನವಾಲ್ನಿಯನ್ನು ಎರಡು ವರ್ಷದ ಹಿಂದೆ ರಷ್ಯಾದ ಆಡಳಿತವು ಡಾರ್ಟ್ ಕಪ್ಪೆಯ ವಿಷ ಉಣಿಸಿ ಹತ್ಯೆಗೈದಿರುವುದು ಬಹು ಗುಪ್ತಚರ ಸಂಸ್ಥೆಯ ವಿಚಾರಣೆಯಲ್ಲಿ ದೃಢಪಟ್ಟಿದೆ ಎಂದು ಲಂಡನ್ನಲ್ಲಿ ಶನಿವಾರ ಬಿಡುಗಡೆಗೊಳಿಸಿದ ಜಂಟಿ ಹೇಳಿಕೆಯಲ್ಲಿ ಬ್ರಿಟನ್, ಫ್ರಾನ್ಸ್, ಜರ್ಮನಿ, ಸ್ವೀಡನ್ ಮತ್ತು ನೆದರ್ಲ್ಯಾಂಡ್ಸ್ನ ವಿದೇಶಾಂಗ ಸಚಿವರು ಪ್ರತಿಪಾದಿಸಿದ್ದಾರೆ.
ಲ್ಯಾಂಬೊರ್ಗಿನಿ ಕಾರನ್ನು ಮಾಲಿಕನ ಮನೆಯಿಂದಲೇ ಜಪ್ತಿ ಮಾಡಿದ್ದ ಆರ್ಟಿಒ ಇನ್ಸ್ಪೆಕ್ಟರ್ಗೆ ಹೈಕೋರ್ಟ್ ತರಾಟೆ
ಆರ್ ಟಿಒ ಇನ್ಸ್ ಪೆಕ್ಟರ್ ಗೆ ಕಾರನ್ನು ಮಾಲೀಕನ ಮನೆಯಿಂದ ಜಪ್ತಿ ಮಾಡಿಕೊಂಡು ಹೋಗುವ ಅಧಿಕಾರ ಇದೆಯೇ? ಕರ್ನಾಟಕ ಹೀಗೊಂದು ಪ್ರಶ್ನೆಯನ್ನು ಕರ್ನಾಟಕ ಹೈಕೋರ್ಟ್ ಕೇಳಿದೆ. ದಾಖಲೆ ತಿರುಚಿ ನೋಂದಣಿ ಮಾಡಿ ಸರ್ಕಾರಕ್ಕೆ ತೆರಿಗೆ ವಂಚಿಸಿದ ಆರೋಪದ ಮೇಲೆ RTO ಇನ್ಸ್ ಪೆಕ್ಟರ್ ಒಬ್ಬರು ಲ್ಯಾಂಬೋರ್ಗನಿ ಕಾರನ್ನು ಮಾಲೀಕನ ಮನೆಯಿಂದಲೇ ಜಪ್ತಿ ಮಾಡಿ ಟೋಯಿಂಗ್ ಮಾಡಿದ್ದರು. ಇದೀಗ ಈ ಪ್ಕಕರಣದ ತನಿಖೆಗೆ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿದೆ. ಹಾಗಿದ್ದರೆ ಏನಿದು ಪ್ರಕರಣ?
ಫೆಲೆಸ್ತೀನ್ ಆ್ಯಕ್ಷನ್ ಗ್ರೂಪ್ ನಿಷೇಧ ಕಾನೂನುಬಾಹಿರ: ಬ್ರಿಟನ್ ಹೈಕೋರ್ಟ್ ತೀರ್ಪು
ಲಂಡನ್, ಫೆ. 14: ಫೆಲೆಸ್ತೀನಿಯನ್ ಪರ ಅಭಿಯಾನ ನಡೆಸುತ್ತಿರುವ ಫೆಲೆಸ್ತೀನ್ ಆ್ಯಕ್ಷನ್ ಗ್ರೂಪ್ ಅನ್ನು ಭಯೋತ್ಪಾದಕ ಸಂಘಟನೆಯೆಂದು ಬ್ರಿಟನ್ ನಿಷೇಧಿಸಿರುವುದು ಕಾನೂನುಬಾಹಿರ ಕ್ರಮ ಎಂದು ಬ್ರಿಟನ್ನ ಹೈಕೋರ್ಟ್ ಶುಕ್ರವಾರ ತೀರ್ಪು ನೀಡಿದೆ. ಹೈಕೋರ್ಟ್ ತೀರ್ಪಿನ ಬಳಿಕವೂ ನಿಷೇಧವು ತಾತ್ಕಾಲಿಕವಾಗಿ ಜಾರಿಯಲ್ಲಿರುತ್ತದೆ. ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸುವುದಾಗಿ ಬ್ರಿಟನ್ ಸರ್ಕಾರ ಹೇಳಿದೆ. ಬ್ರಿಟನ್ನಲ್ಲಿ ಇಸ್ರೇಲ್ ಸಂಯೋಜಿತ ರಕ್ಷಣಾ ಸಂಸ್ಥೆಗಳ ಪ್ರವೇಶದ್ವಾರವನ್ನು ನಿರ್ಬಂಧಿಸುವುದು ಅಥವಾ ಕೆಂಪು ಬಣ್ಣಗಳನ್ನು ಎಸೆಯುವುದು ಸೇರಿದಂತೆ ಸಂಸ್ಥೆಗಳ ವಿರುದ್ಧ ‘ನೇರ ಕ್ರಮ’ಗಳನ್ನು ಕೈಗೊಂಡಿರುವ ಹಿನ್ನೆಲೆಯಲ್ಲಿ ಫೆಲೆಸ್ತೀನ್ ಆ್ಯಕ್ಷನ್ ಗ್ರೂಪ್ ಅನ್ನು ನಿಷೇಧಿಸುವುದಾಗಿ ಬ್ರಿಟನ್ ಸರ್ಕಾರ ಜುಲೈನಲ್ಲಿ ಘೋಷಿಸಿತ್ತು. ಈ ಕ್ರಮವು ಪ್ರತಿಭಟನೆಯ ಹಕ್ಕಿನ ಮೇಲಿನ ಸರ್ವಾಧಿಕಾರಿ ನಿರ್ಬಂಧವಾಗಿದೆ ಎಂದು ಫೆಲೆಸ್ತೀನ್ ಆ್ಯಕ್ಷನ್ ಗ್ರೂಫ್ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿತ್ತು.
ಶಿರಾ ಜಾತ್ರೆಯಲ್ಲಿ ನಾಪತ್ತೆಯಾಗಿದ್ದ ಮಗು ಪತ್ತೆ: ಗಂಡು ಮಗುವಿನ ಆಸೆಗೆ ಅಪಹರಣ ಮಾಡಿದ್ದ ಮಹಿಳೆ ಅರೆಸ್ಟ್
ತುಮಕೂರು: ಇತ್ತೀಚೆಗೆ ತುಮಕೂರು ಜಿಲ್ಲೆಯ ಶಿರಾದಲ್ಲಿ ನಡೆದಿದ್ದ ಮಗು ನಾಪತ್ತೆ ಪ್ರಕರಣವು ಒಂದು ಅಪಹರಣ ಪ್ರಕರಣವಾಗಿತ್ತು ಎಂಬುದು ಪೊಲೀಸ್ ತನಿಖೆಯಿಂದ ಬಯಲಾಗಿದೆ. ದೇವಸ್ಥಾನ ಮತ್ತು ಬಸ್ ನಿಲ್ದಾಣದ ಬಳಿ ಅಳವಡಿಸಲಾಗಿದ್ದ ಕೇವಲ ಎರಡು ಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿಗಳು ಹಾಗೂ ತಾಂತ್ರಿಕ ಕಾರ್ಯಾಚರಣೆಯ ನೆರವಿನಿಂದ ಪೊಲೀಸರು ಈ ಪ್ರಕರಣವನ್ನು ಯಶಸ್ವಿಯಾಗಿ ಭೇದಿಸಿದ್ದಾರೆ. ಫೆಬ್ರವರಿ 2ರ ರಾತ್ರಿ ಶಿರಾದಲ್ಲಿ ಮಾಗೋಡು
ಬಿಡಬ್ಲ್ಯುಎಫ್ ಬ್ಯಾಡ್ಮಿಂಟನ್ ಪ್ಯಾರಾ ವಿಶ್ವ ಚಾಂಪಿಯನ್ಶಿಪ್ಸ್; ಪ್ರಮೋದ್ ಭಗತ್ಗೆ ಎಸ್ಎಲ್3 ಚಿನ್ನ
ಮನಾಮ, ಫೆ. 14: ಬಹ್ರೈನ್ ರಾಜಧಾನಿ ಮನಾಮದಲ್ಲಿ ನಡೆಯುತ್ತಿರುವ ಬಿಡಬ್ಲ್ಯುಎಫ್ ಬ್ಯಾಡ್ಮಿಂಟನ್ ಪ್ಯಾರಾ ವಿಶ್ವ ಚಾಂಪಿಯನ್ಶಿಪ್ಸ್ನಲ್ಲಿ ಶನಿವಾರ ಭಾರತದ ಪ್ರಮೋದ್ ಭಗತ್ ಅವರು ಎಸ್ಎಲ್3 ವಿಭಾಗದಲ್ಲಿ ಇಂಡೋನೇಶ್ಯದ ಮುಹಮ್ಮದ್ ಅಲಿ ಇಮ್ರಾನ್ ಅವರನ್ನು ಸೋಲಿಸಿ ಚಿನ್ನದ ಪದಕ ಗೆದ್ದಿದ್ದಾರೆ. 37 ವರ್ಷದ ಭಗತ್ ಫೈನಲ್ನಲ್ಲಿ ತನ್ನ ಎದುರಾಳಿಯನ್ನು 21–12, 21–18 ಗೇಮ್ಗಳಿಂದ ಸೋಲಿಸಿದರು. ಇದು ವಿಶ್ವ ಚಾಂಪಿಯನ್ಶಿಪ್ನಲ್ಲಿ ಅವರ ನಾಲ್ಕನೇ ಸತತ ಸಿಂಗಲ್ಸ್ ಚಿನ್ನವಾಗಿದ್ದು, ಒಟ್ಟಾರೆ ಈ ವಿಭಾಗದಲ್ಲಿ ಆರನೇ ಜಾಗತಿಕ ಪ್ರಶಸ್ತಿಯಾಗಿದೆ. ಎಸ್ಎಲ್3 ವಿಭಾಗದಲ್ಲಿ ಕಾಲುಗಳ ಅಸಮತೋಲನವಿರುವ ಹಾಗೂ ನಿಂತು ಆಡುವ ಆಟಗಾರರು ಇರುತ್ತಾರೆ. ಐದು ವರ್ಷದವರಿದ್ದಾಗ ಭಗತ್ ಅವರನ್ನು ಪೋಲಿಯೋ ಕಾಡಿತ್ತು. ಅವರು 2009, 2015, 2019, 2022 ಮತ್ತು 2024ರಲ್ಲಿ ಸಿಂಗಲ್ಸ್ ಚಿನ್ನದ ಪದಕಗಳನ್ನು ಗೆದ್ದಿದ್ದಾರೆ. ಬ್ಯಾಡ್ಮಿಂಟನ್ ವಿಶ್ವ ಫೆಡರೇಶನ್ನ (ಬಿಡಬ್ಲ್ಯುಎಫ್) ಉದ್ದೀಪನ ದ್ರವ್ಯ ನಿಯಮಗಳನ್ನು ಉಲ್ಲಂಘಿಸಿದ ಆರೋಪದಲ್ಲಿ ಅವರಿಗೆ 18 ತಿಂಗಳ ನಿಷೇಧವನ್ನೂ ವಿಧಿಸಲಾಗಿತ್ತು. ಅದರಿಂದಾಗಿ 2024ರ ಪ್ಯಾರಿಸ್ ಪ್ಯಾರಾಲಿಂಪಿಕ್ಸ್ನಲ್ಲಿ ಸ್ಪರ್ಧಿಸಲು ಅವರಿಗೆ ಸಾಧ್ಯವಾಗಿರಲಿಲ್ಲ. ಬಳಿಕ ನಡೆದ ಡಬಲ್ಸ್ನಲ್ಲಿ ಅವರು ಸುಕಾಂತ್ ಕದಮ್ ಜೊತೆಗೆ ಆಡಿ ಎಸ್ಎಲ್3–ಎಸ್ಎಲ್4 ವಿಭಾಗದ ಚಿನ್ನ ಗೆದ್ದರು. ಫೈನಲ್ನಲ್ಲಿ ಭಾರತದವರೇ ಆದ ಜೆ. ದಿಲ್ಲಿ ಮತ್ತು ಎನ್. ಶಿವಕುಮಾರ್ ಅವರನ್ನು 21–19, 21–16 ಗೇಮ್ಗಳಿಂದ ಮಣಿಸಿದರು. ಇದು ಭಗತ್ ಅವರ ಎರಡನೇ ಡಬಲ್ಸ್ ಚಿನ್ನವಾಗಿದೆ.
ಭಾರತದ ಬಗ್ಗೆ ಬಾಂಗ್ಲಾ ಭಾವಿ ಪ್ರಧಾನಿ ಮಾತು, ಒಗ್ಗಟ್ಟಿನ ಮಂತ್ರ ಜಪಿಸಿದ ತಾರಿಕ್ ರೆಹಮಾನ್... Bangladesh Election
ಬಾಂಗ್ಲಾದೇಶ ಇದೀಗ ಹೊಸ ಹಾದಿಗೆ ಹೆಜ್ಜೆ ಇಟ್ಟಿದ್ದು, ಇಷ್ಟುದಿನ ಕೋಮು ಗಲಭೆಯ ಕೂಪಕ್ಕೆ ಬಿದ್ದು ಒದ್ದಾಡಿ ನರಳಿದ್ದ ದೇಶಕ್ಕೆ ಹೊಸ ನಾಯಕ ಸಿಕ್ಕಿರುವುದು ಖುಷಿ ನೀಡಿದೆ. ಭಾರತದ ಬೆಂಬಲದಿಂದ ಸ್ವಾತಂತ್ರ್ಯ ಪಡೆದಿದ್ದ ಬಾಂಗ್ಲಾದೇಶ ಕಳೆದ 2 ವರ್ಷಗಳಿಂದ ನಮ್ಮ ದೇಶದ ಜೊತೆಯಲ್ಲೇ ಕಿರಿಕ್ ಮಾಡಿ ಜಾಗತಿಕವಾಗಿ ವಿವಾದ ಸೃಷ್ಟಿಸಿತ್ತು. ಅಲ್ಲದೆ ಭಾರತ ಕೂಡ ಸರಿಯಾಗಿ ಬುದ್ಧಿ ಕಲಿಸಲು
ಇದು ಯಾವ ರೀತಿಯ ಬದುಕು?: ಬಿಜೆಪಿ ಆಡಳಿತವಿರುವ ದಿಲ್ಲಿಯ ವಾಯು ಗುಣಮಟ್ಟದ ಬಗ್ಗೆ ಆದಿತ್ಯನಾಥ್ ಪ್ರಶ್ನೆ
ಲಕ್ನೋ, ಫೆ.14: ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ದಿಲ್ಲಿಯ ವಾಯು ಗುಣಮಟ್ಟವನ್ನು ‘ಗ್ಯಾಸ್ ಚೇಂಬರ್’ಗೆ ಹೋಲಿಸಿದ್ದಾರೆ. ಉತ್ತರಪ್ರದೇಶದ ಜನರು ಸ್ವಚ್ಛ ವಾತಾವರಣವನ್ನು ಆನಂದಿಸುತ್ತಿದ್ದಾರೆ. ಎಲ್ಲಾ ರೀತಿಯ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿದ್ದರೂ ಇಲ್ಲಿ ಜನರಿಗೆ ಉಸಿರು ಕಟ್ಟುತ್ತಿಲ್ಲ ಎಂದು ಅವರು ಶನಿವಾರ ಪ್ರತಿಪಾದಿಸಿದ್ದಾರೆ. ಗೋರಖ್ ಪುರದಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಇಂದಿನ ಅತಿ ದೊಡ್ಡ ಜಾಗತಿಕ ಸಮಸ್ಯೆಗಳಲ್ಲಿ ಪರಿಸರ ನಾಶ ಕೂಡ ಒಂದು ಎಂದರು. ‘‘ಇಲ್ಲಿನ ಪರಿಸರ ತುಂಬಾ ಚೆನ್ನಾಗಿದೆ. ಮಾಲಿನ್ಯವಿಲ್ಲ. ಆದುದರಿಂದ ರೋಗಗಳ ಸಂಖ್ಯೆ ಕಡಿಮೆ. ಮಾಲಿನ್ಯ ಉಂಟಾದಾಗ ಅದು ಶ್ವಾಸಕೋಶಕ್ಕೆ ಹಾನಿಯಾಗುತ್ತದೆ. ಆಮ್ಲಜನಕದ ಪೂರೈಕೆಯಲ್ಲಿ ತೊಂದರೆ ಉಂಟಾದರೆ ಸಂಪೂರ್ಣ ದೇಹ ತೊಂದರೆಗೊಳಗಾಗುತ್ತದೆ’’ ಎಂದು ಅವರು ವಿವರಿಸಿದರು. ‘‘ದಿಲ್ಲಿಯಲ್ಲಿ ನೀವು ನೋಡುತ್ತೀರಿ. ಅದು ಗ್ಯಾಸ್ ಚೇಂಬರ್ನಂತೆ ಭಾಸವಾಗುತ್ತದೆ. ಪರಿಸ್ಥಿತಿ ಗಂಭೀರವಾಗಿದೆ; ಉಸಿರಾಡಲು ಕಷ್ಟವಾಗುತ್ತಿದೆ. ಕಣ್ಣು ಉರಿಯುವ ಅನುಭವವಾಗುತ್ತಿದೆ. ಅಸ್ತಮಾದಿಂದ ಬಳಲುತ್ತಿರುವವರು ಹಾಗೂ ವೃದ್ಧರು, ಮಕ್ಕಳು ಮನೆಯೊಳಗೇ ಇರುವಂತೆ ವೈದ್ಯರು ಸಲಹೆ ನೀಡಿದ್ದಾರೆ. ಇದು ಯಾವ ರೀತಿಯ ಬದುಕು?’’ ಎಂದು ಅವರು ಪ್ರಶ್ನಿಸಿದ್ದಾರೆ. ಪರಿಸರಕ್ಕೆ ಯಾವುದೇ ರೀತಿಯ ಹಾನಿ ಉಂಟಾದರೆ ಇದೇ ರೀತಿಯ ಪರಿಸ್ಥಿತಿಗೆ ಕಾರಣವಾಗಬಹುದು ಎಂದು ಅವರು ಎಚ್ಚರಿಸಿದರು. ಇಲ್ಲಿರುವ ನಾವು ಅದೃಷ್ಟವಂತರು, ಯಾಕೆಂದರೆ ಇಲ್ಲಿ ಉಸಿರುಗಟ್ಟಿಸದ ಅಭಿವೃದ್ಧಿ ಇದೆ ಎಂದು ಯೋಗಿ ಆದಿತ್ಯನಾಥ್ ಹೇಳಿದರು.
ಬಳ್ಳಾರಿ: ವಿಶ್ವ ಪ್ರಸಿದ್ಧ ಹಂಪಿ ಉತ್ಸವವು ವಿಜಯನಗರ ಸಾಮ್ರಾಜ್ಯದ ಗತವೈಭವವನ್ನು ಮರುಸೃಷ್ಟಿಸುತ್ತಿದ್ದು, ಲಕ್ಷಾಂತರ ಜನರನ್ನು ಆಕರ್ಷಿಸುತ್ತಿದೆ. ಈ ಬಾರಿಯ ಉತ್ಸವದಲ್ಲಿ ಕೇವಲ ಸಾಂಸ್ಕೃತಿಕ ಕಾರ್ಯಕ್ರಮಗಳು ಮಾತ್ರವಲ್ಲದೆ, ಒಂದು ಹೃದಯವಂತಿಕೆಯ ಘಟನೆಯೂ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ. ಹಂಪಿ ಉತ್ಸವದಲ್ಲಿ 'ಹಂಪಿ ಬೈ ಸ್ಕೈ' (Hampi by Sky) ವೀಕ್ಷಣೆಗೆ ಆಗಮಿಸಿದ್ದ 60ಕ್ಕೂ ಹೆಚ್ಚು ಸರ್ಕಾರಿ ಶಾಲಾ ಮಕ್ಕಳಿಗೆ ಜಿಲ್ಲಾ
ಅತ್ಯಾಚಾರ, ಕಿರುಕುಳ, ಹಲ್ಲೆ ಆರೋಪ | ಎಸ್ಪಿಯ ರಾಷ್ಟ್ರೀಯ ವಕ್ತಾರ ಮನೋಜ್ ಯಾದವ್ ಬಂಧನ
ಲಕ್ನೋ, ಫೆ.14: ಅತ್ಯಾಚಾರ, ಕಿರುಕುಳ ಹಾಗೂ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ಸಮಾಜವಾದಿ ಪಕ್ಷದ ರಾಷ್ಟ್ರೀಯ ವಕ್ತಾರ ಮನೋಜ್ ಯಾದವ್ ಅವರನ್ನು ಉತ್ತರಪ್ರದೇಶ ಪೊಲೀಸರು ಶನಿವಾರ ಬಂಧಿಸಿದ್ದಾರೆ. ಬಾರಾಬಂಕಿ ಜಿಲ್ಲೆಯ ಸಫ್ದರ್ಗಂಜ್ ಪೊಲೀಸ್ ಠಾಣೆಯಲ್ಲಿ ಅವರ ವಿರುದ್ಧ ಪ್ರಕರಣ ದಾಖಲಾಗಿತ್ತು. ಯಾದವ್ ಅವರನ್ನು ಶುಕ್ರವಾರ ಬೆಳಗ್ಗೆ ಬಿಗಿ ಪೊಲೀಸ್ ಭದ್ರತೆಯೊಂದಿಗೆ ಬಾರಾಬಂಕಿಯ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶ ನಿತೀಶ್ ರಾಯ್ ಅವರ ಮುಂದೆ ಹಾಜರುಪಡಿಸಲಾಗಿದ್ದು, ಅವರಿಗೆ ಏಳು ದಿನಗಳ ನ್ಯಾಯಾಂಗ ಕಸ್ಟಡಿ ವಿಧಿಸಲಾಗಿದೆ. ಭಾಗಲೇಪೂರ್ವ ಗ್ರಾಮದ ಪರಿಶಿಷ್ಟ ಜಾತಿಯ ಮಹಿಳೆಯೊಬ್ಬರು ನೀಡಿದ ದೂರಿನ ಆಧಾರದಲ್ಲಿ ಮನೋಜ್ ಯಾದವ್ ವಿರುದ್ಧ ಬಾರಾಬಂಕಿಯ ಸಫ್ದರ್ಗಂಜ್ ಪೊಲೀಸ್ ಠಾಣೆಯಲ್ಲಿ ಅತ್ಯಾಚಾರ, ಹಲ್ಲೆ, ಲೈಂಗಿಕ ಕಿರುಕುಳ ಮತ್ತು ಎಸ್ಸಿ/ಎಸ್ಟಿ ಕಾಯ್ದೆಯ ಸಂಬಂಧಿತ ಸೆಕ್ಷನ್ಗಳಡಿಯಲ್ಲಿ ಎಫ್ಐಆರ್ ದಾಖಲಾಗಿತ್ತು. 2004ರಲ್ಲಿ ದೂರುದಾರರ ಪತಿ ಬಾಬು ಅವರು ಯಾದವ್ ವಿರುದ್ಧ ಅತಿಕ್ರಮ ಪ್ರವೇಶ ಹಾಗೂ ಹಲ್ಲೆ ನಡೆಸಿದ ಬಗ್ಗೆ ದೂರು ನೀಡಿದ್ದರು. ಈ ದ್ವೇಷದಿಂದಾಗಿ ಯಾದವ್ ಅವರು ಮೂರು ತಿಂಗಳ ಹಿಂದೆ ತನ್ನನ್ನು ಸಫ್ದರ್ಗಂಜ್ ಕ್ರಾಸಿಂಗ್ ಬಳಿಕ ತಡೆದು ನಿಲ್ಲಿಸಿ ಜಾತಿ ನಿಂದನೆ ಮಾಡಿದ್ದಲ್ಲದೆ, ಕೈಹಿಡಿದು ಬೆದರಿಕೆ ಹಾಕಿದ್ದರು. ಅಲ್ಲದೆ ಲಕ್ನೋದಲ್ಲಿ ಚಾಲಕನಾಗಿ ಕೆಲಸ ಮಾಡುತ್ತಿದ್ದ ತನ್ನ ಪುತ್ರನನ್ನು ಕೂಡ ಹಲವು ಬಾರಿ ಅಡ್ಡಗಟ್ಟಿ ಕೊಲೆ ಬೆದರಿಕೆ ಒಡ್ಡಿದ್ದಾರೆಂದು ಮಹಿಳೆ ಆಪಾದಿಸಿದ್ದಾರೆ.
ಆಳಂದ| ನಿಷೇಧಾಜ್ಞೆ, ಸಂಚಾರ ನಿರ್ಬಂಧಗಳಿಂದ ಸಂಕಷ್ಟದಲ್ಲಿ ಜನ
ಆಳoದ: ಫೆಬ್ರವರಿ15 ರಂದು ರವಿವಾರ ಪಟ್ಟಣದ ಲಾಡ್ಲೆ ಮಶಾಕ್ ದರ್ಗಾ ಆವರಣದಲ್ಲಿ ರಾಘವಚೈತನ್ಯ ಸಮಾಧಿಯ ಶಿವಲಿಂಗಕ್ಕೆ ಪೂಜೆ ಸಲ್ಲಿಸಲು ನ್ಯಾಯಾಲಯದಿಂದ 14 ಮಂದಿಗೆ ಅವಕಾಶ ದೊರೆತಿದೆ. ಈ ಹಿನ್ನೆಲೆಯಲ್ಲಿ ತಾಲೂಕು ಆಡಳಿತವು ದರ್ಗಾ ಸೇರಿ ಸುತ್ತಮುತ್ತಲಿನ ಪ್ರದೇಶದಲ್ಲಿ ಭಾರಿ ಪೊಲೀಸ್ ಬಂದೋಬಸ್ತ್ ಒದಗಿಸಿದೆ. 2022ರಲ್ಲಿ ಪೂಜೆಗೆ ತೆರಳಿದ ವೇಳೆ ರಾಜಕೀಯ ಮುಖಂಡರು, ಶಾಸಕರು ಹಾಗೂ ಅಧಿಕಾರಿಗಳಿದ್ದ ತಂಡದ ಮೇಲೆ ಕಲ್ಲು ತೂರಾಟ ನಡೆದ ಹಿನ್ನಲೆಯಲ್ಲಿ ಈ ಬಾರಿ ಭದ್ರತೆಗೆ ಹೆಚ್ಚಿನ ಒತ್ತು ನೀಡಲಾಗಿದೆ. ಪ್ರತಿ ಶಿವರಾತ್ರಿಯ ಸಂದರ್ಭದಲ್ಲಿ ಕೈಗೊಳ್ಳಲಾಗುವ ಕಠಿಣ ಬಂದೋಬಸ್ತ್ ಕ್ರಮಗಳು ಸಾಮಾನ್ಯ ಜನಜೀವನಕ್ಕೆ ಅನಾವಶ್ಯಕ ಅಡಚಣೆ ತಂದಿಡುತ್ತಿವೆ ಎಂಬ ಅಸಮಾಧಾನ ನಾಗರಿಕ ವಲಯದಲ್ಲಿ ವ್ಯಕ್ತವಾಗುತ್ತಿದೆ. ಶಾಂತಿ–ಸುವ್ಯವಸ್ಥೆ ಹೆಸರಿನಲ್ಲಿ ಕೈಗೊಳ್ಳಲಾಗುತ್ತಿರುವ ಕ್ರಮಗಳಿಂದ ವ್ಯಾಪಾರಿಗಳು, ಪ್ರಯಾಣಿಕರು ಮತ್ತು ಭಕ್ತರ ಹಕ್ಕುಗಳು ಉಲ್ಲಂಘನೆಯಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ. ತಾಲೂಕು ಆಡಳಿತವು ಫೆ.14ರ ರಾತ್ರಿ 10 ಗಂಟೆಯಿoದ ಫೆ.15ರ ರಾತ್ರಿ 12ಗಂಟೆವರೆಗೆ ಬಿಎನ್ಎಸ್ಎಸ್ ಅಡಿಯಲ್ಲಿ ನಿಷೇಧಾಜ್ಞೆ ವಿಧಿಸಿದೆ. ಶಾಂತಿಗೆ ಭಂಗ ತರಬಹುದಾದ ಚಟುವಟಿಕೆಗಳಿಗೆ ಕಡಿವಾಣ ಹಾಕುವುದು, ಗುಂಪು ಗುಂಪಾಗಿ ಸೇರುವುದನ್ನು ತಡೆಯುವುದು, ಸಭೆ–ಸಮಾರಂಭಗಳಿಗೆ ನಿರ್ಬಂಧ ವಿಧಿಸುವುದು ಈ ಆದೇಶದ ಉದ್ದೇಶವಾದರೂ, ಬಂದೋಬಸ್ತ್ ಹೆಸರಿನಲ್ಲಿ ವ್ಯಾಪಾರ ವಹಿವಾಟು ಸ್ಥಗಿತಗೊಳ್ಳುವಂತಾಗುವುದು, ಪಟ್ಟಣಕ್ಕೆ ಬರುವ ಬಸ್ಗಳನ್ನು ಸುಮಾರು 2ಕಿ.ಮೀ ದೂರದಲ್ಲೇ ತಡೆದು ನಿಲ್ಲಿಸುವುದು, ಖಾಸಗಿ ವಾಹನಗಳ ಸಂಚಾರಕ್ಕೂ ನಿರ್ಬಂಧ ವಿಧಿಸುವ ಕ್ರಮಗಳಿಂದ ಜನಸಾಮಾನ್ಯರಿಗೆ ತೀವ್ರ ತೊಂದರೆಯಾಗುತ್ತಿದೆ. ಶಿವರಾತ್ರಿಗೆoದು ವಿಶೇಷ ಪೂಜಾ ಸಾಮಗ್ರಿ, ಹಣ್ಣು–ಹಂಪಲು ಖರೀದಿಗೂ ಅವಕಾಶ ಸಿಗದ ಪರಿಸ್ಥಿತಿ ನಿರ್ಮಾಣವಾಗಿದ್ದು, ದೇವಸ್ಥಾನಗಳಿಗೆ ತೆರಳುವ ಭಕ್ತರ ಸಂಚಾರಕ್ಕೂ ಅಡ್ಡಿಯಾಗುತ್ತಿದೆ. ಕಳೆದ ನಾಲ್ಕು ವರ್ಷಗಳಿಂದಲೂ ಪ್ರತಿ ಶಿವರಾತ್ರಿಗೆ ನ್ಯಾಯಾಲಯದ ಅನುಮತಿ, ನಿಷೇಧಾಜ್ಞೆ, ಪೊಲೀಸ್ ಸರ್ಪಗಾವಲು—ಇವೆಲ್ಲವೂ ಸೇರಿ ಹಬ್ಬದ ಸಂಭ್ರಮಕ್ಕೆ ಕರಿನೆರಳಿನ ಛಾಯೆ ಆವರಿಸುವಂತಾಗಿದೆ. “ಭದ್ರತೆ ಅಗತ್ಯವೇ, ಆದರೆ ಅದು ಜನರ ಮೂಲಭೂತ ಹಕ್ಕುಗಳು, ವ್ಯಾಪಾರ–ವಾಣಿಜ್ಯ ಮತ್ತು ಧಾರ್ಮಿಕ ಆಚರಣೆಗಳಿಗೆ ಅಡ್ಡಿಯಾಗಬಾರದು” ಎಂದು ಸಾರ್ವಜನಿಕರು ಹೇಳುತ್ತಿದ್ದಾರೆ. ಆಳಂದ ಪಟ್ಟಣದಲ್ಲಿನ ಸೂಫಿ ಸಂತ ಲಾಡ್ಲೆಮಶಾಕ್ ದರ್ಗಾ ಆವರಣದಲ್ಲಿರುವ ಶ್ರೀ ರಾಘವ ಚೈತನ್ಯ ಲಿಂಗದ ಕುರಿತ ವಿವಾದವು 1996ರ ದಶಕದಿಂದಲೇ ನ್ಯಾಯಾಲಯ ಮೆಟ್ಟಿಲೇರಿದ್ದು, ಅನ್ಸಾರಿ ಸಮುದಾಯ ಹಾಗೂ ಬ್ರಾಹ್ಮಣ ಸಮುದಾಯದವರ ನಡುವೆ ಪ್ರಕರಣ ನಡೆದು ಬರುತ್ತಿದೆ. ಈ ವಿಚಾರವು ಇತ್ತೀಚಿನ ವರ್ಷಗಳಲ್ಲಿ ರಾಜಕೀಯ ಸ್ವಾರ್ಥಕ್ಕೆ ಬಳಸಲ್ಪಡುತ್ತಿದ್ದು, ಧರ್ಮದ ಹೆಸರಿನಲ್ಲಿ ಜನಾಂಗೀಯ ದ್ವೇಷ ಹಚ್ಚುವ ತಂತ್ರ ರೂಪುಗೊಂಡಿದೆ ಎಂದು ಸಾಮಾಜಿಕ ಹೋರಾಟಗಾರ ರಮೇಶ್ ಲೋಹಾರ ಅವರು ಆರೋಪಿಸಿದ್ದಾರೆ. ಈಗಿನ ಮಾಜಿ ಶಾಸಕ ಸುಭಾಷ ಗುತ್ತೇದಾರ ಅವರ ನೇತೃತ್ವದಲ್ಲಿ ಹಿಂದೂಪರ ಸಂಘಟನೆಗಳು ಮಹಾಶಿವರಾತ್ರಿ ದಿನ ಶುದ್ಧೀಕರಣದ ನೆಪದಲ್ಲಿ ಗೊಂದಲ ಸೃಷ್ಟಿಸಿ, ಪಟ್ಟಣದಲ್ಲಿ ಆತಂಕ ಮೂಡಿಸಿದರು. ಇದರಿಂದಾಗಿ ಆಳಂದ ತಾಲೂಕಿನ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿತು. ಈ ಘಟನೆಯು 2023ರ ವಿಧಾನಸಭೆ ಚುನಾವಣೆಯಲ್ಲಿಯೂ ಮಹತ್ವದ ಪಾತ್ರ ವಹಿಸಿ, ಬಿ.ಆರ್. ಪಾಟೀಲ್ ಅವರ ಗೆಲುವಿಗೆ ಕಾರಣವಾಯಿತು ಎಂದು ಅವರು ಉಲ್ಲೇಖಿಸಿದರು. ಬಿ.ಆರ್. ಪಾಟೀಲ್ ಅವರು ಶಾಸಕರಾಗಿ ಆಯ್ಕೆಯಾದ ಬಳಿಕ ಸಮಸ್ಯೆ ಬಗೆಹರಿಯಲಿದೆ ಎಂಬ ನಂಬಿಕೆಯಿoದ ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಮತಗಳನ್ನು ನೀಡಿದ್ದಾರೆ. ಆದರೆ ಮೂರು ವರ್ಷಗಳಾದರೂ ದರ್ಗಾ ಮತ್ತು ರಾಘವ ಚೈತನ್ಯ ಲಿಂಗದ ವಿವಾದಕ್ಕೆ ಶಾಶ್ವತ ಪರಿಹಾರ ದೊರಕಿಲ್ಲ ಎಂದು ರಮೇಶ್ ಲೋಹಾರ ಹೇಳಿದ್ದಾರೆ.
ಕೊರಿಯನ್ ಆನ್ಲೈನ್ ಸ್ನೇಹಿತನ ‘ಸಾವಿನಿಂದ’ ನೊಂದು ಕೇರಳದ ಬಾಲಕಿ ಆತ್ಮಹತ್ಯೆ!
ದುರಂತದ ಹಿಂದೆ ನಿಗೂಢ ಇನ್ಸ್ಟಾಗ್ರಾಂ ಖಾತೆಯ ಪಾತ್ರದ ಬಗ್ಗೆ ಪೊಲೀಸರಿಂದ ತನಿಖೆ ► ಮಕ್ಕಳ ಬದುಕಿಗೆ ಮಾರಕವಾಗುತ್ತಿರುವ ಅತೀವ ಕೊರಿಯನ್ ಸಂಸ್ಕೃತಿಯ ಪ್ರಭಾವ
Kim Jong Un: ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಮಗಳಿಗೆ ಉತ್ತರಾಧಿಕಾರಿ ಪಟ್ಟ
ಕಿಮ್ ಜಾಂಗ್ ಉನ್ ಹೆಸರು ಇಷ್ಟುದಿನ ಬರೀ ಪರಮಾಣು ಅಸ್ತ್ರಗಳ ವಿಚಾರದಲ್ಲಿ ಸದ್ದು ಮಾಡುತ್ತಾ ಇತ್ತು. ಅದರಲ್ಲೂ ಉತ್ತರ ಕೊರಿಯಾ ಬಳಿ ಇರುವ ನ್ಯೂಕ್ಲಿಯರ್ ಬಾಂಬ್ಗಳನ್ನು ಹೆಚ್ಚಿಸುತ್ತಾ ಇದೇ ಕಿಮ್ ಜಾಂಗ್ ಉನ್ ಭಯ ಹೆಚ್ಚು ಮಾಡಿದ್ದು ಗಮನ ಸೆಳೆದಿತ್ತು. ಆದರೆ ಇದೀಗ ದಿಢೀರ್, ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ತನ್ನ 13 ವರ್ಷದ
National Highway: ಹುಬ್ಬಳ್ಳಿ-ವಿಜಯಪುರ ಹೈವೇ ಸಂಚಾರ ಮತ್ತಷ್ಟು ಸುಗಮ, ಮಹತ್ವದ ಯೋಜನೆಗೆ ಟೆಂಡರ್ ಆಹ್ವಾನ
ಬೆಂಗಳೂರು: ಉತ್ತರ ಕರ್ನಾಟಕದ ಪ್ರಮುಖ ತಾಲೂಕು ಹಾಗೂ ನಗರವಾದ ಹುಬ್ಬಳ್ಳಿಯಿಂದ ವಿಜಯಪುರ ಜಿಲ್ಲೆಗೆ ಪ್ರಮುಖ ಹೆದ್ದಾರಿ ಯೋಜನೆ ಕೈಗೆತ್ತಿಕೊಳ್ಳಲು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ನಿರ್ಧರಿಸಿದೆ. ಇದರಿಂದ ಈ ಭಾಗದ ಅನೇಕ ಗ್ರಾಮ, ಪಟ್ಟಣ, ತಾಲೂಕಗಳಿಗೆ ಪ್ರಯೋಜನವಾಗಲಿದೆ. ಈ ಭಾಗದ ಜನ ಸಂಚಾರ, ಸರಕು ಸಾಗಾಣೆಗೆ ವೇಗ ಸಿಗಲಿದೆ. ಈ ಸಂಬಂಧ ವಿಸ್ತೃತ ಯೋಜನಾ ವರದಿ
ಆಸ್ಪತ್ರೆಯಿಂದ ಯುವಕ ನಾಪತ್ತೆ: ಪ್ರಕರಣ ದಾಖಲು
ಮಂಗಳೂರು, ಫೆ.14: ನಗರದ ವೆನ್ಲಾಕ್ ಆಸ್ಪತ್ರೆಗೆ ದಾಖಲಾಗಿದ್ದ ಕಾರ್ಕಳ ನಿವಾಸಿ ಸುರಕ್ಷನ್ ಎಂಬ ಯುವಕ ನಾಪತ್ತೆಯಾಗಿರುವ ಬಗ್ಗೆ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸುರಕ್ಷನ್ ಅವರು ಹಲವು ಸಮಯದಿಂದ ಮೂರ್ಛೆ ಕಾಯಿಲೆ ಮತ್ತು ಮಾನಸಿಕ ಅಸ್ವಸ್ಥರಾಗಿದ್ದು ಪ್ರತಿದಿನ ಮಾತ್ರೆ ಗಳನ್ನು ತೆಗೆದುಕೊಳ್ಳುತಿದ್ದರು. ಮೂರ್ಛೆರೋಗ ಉಲ್ಬಣಗೊಂಡಿದ್ದರಿಂದ ಫೆ.11ರಂದು ಬೆಳಗ್ಗೆ 3 ಗಂಟೆಗೆ ಕಾರ್ಕಳ ಸರಕಾರಿ ಆ ಸ್ಪತ್ರೆಯಿಂದ 108 ಆ್ಯಂಬುಲೆನ್ಸ್ನಲ್ಲಿ ಕರೆತಂದು ಜಿಲ್ಲಾ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಫೆ,13ರಂದು ಸಂಜೆ 4 ಗಂಟೆಗೆ ಸುರಕ್ಷನ್ ಆಸ್ಪತ್ರೆಯ 3ನೇ ವಾರ್ಡ್ನಿಂದ ಕಾಣೆಯಾಗಿರುವುದಾಗಿ ಪೊಲೀಸರಿಗೆ ದೂರು ನೀಡಲಾಗಿದೆ.
ಗಾಝಾ ವಿವಾದ: ಬರ್ಲಿನ್ ಚಿತ್ರೋತ್ಸವದಿಂದ ಹೊರ ನಡೆದ ಅರುಂಧತಿ ರಾಯ್
ಬರ್ಲಿನ್, ಫೆ.14: ಬರ್ಲಿನ್ ಚಿತ್ರೋತ್ಸವದಿಂದ ಹಿಂದೆ ಸರಿಯುವುದಾಗಿ ಬುಕರ್ ಪ್ರಶಸ್ತಿ ಪುರಸ್ಕೃತ ಭಾರತೀಯ ಲೇಖಕಿ ಅರುಂಧತಿ ರಾಯ್ ಶುಕ್ರವಾರ ಹೇಳಿದ್ದಾರೆ. ಗಾಝಾ ವಿಚಾರದ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಎದುರಾದ ಪ್ರಶ್ನೆಗೆ ತೀರ್ಪುಗಾರರ ಸಮಿತಿ ಅಧ್ಯಕ್ಷ ವಿಮ್ ವೆಂಡರ್ಸ್ ‘ತಾನು ರಾಜಕೀಯದಿಂದ ದೂರ ಇರಲು ಬಯಸುತ್ತೇನೆ’ ಎಂದು ಉತ್ತರಿಸಿರುವುದನ್ನು ವಿರೋಧಿಸಿ ಈ ನಿಲುವು ತಳೆದಿರುವುದಾಗಿ ರಾಯ್ ತಿಳಿಸಿದ್ದಾರೆ. ವೆಂಡರ್ಸ್ ಅವರ ಹೇಳಿಕೆಯಿಂದ ಜಿಗುಪ್ಸೆ ಮತ್ತು ಆಘಾತವಾಯಿತು. ‘ನಾನು ಬರ್ಲಿನ್ನಲ್ಲಿ ಹಾಜರಿರುವುದಿಲ್ಲ ಎಂದು ತೀವ್ರ ವಿಷಾದದಿಂದ ಹೇಳುತ್ತಿದ್ದೇನೆ’ ಎಂದು ರಾಯ್ ಅವರನ್ನು ಉಲ್ಲೇಖಿಸಿ ಎಎಫ್ಪಿ ಸುದ್ದಿಸಂಸ್ಥೆ ಶುಕ್ರವಾರ ವರದಿ ಮಾಡಿದೆ. ಗಾಝಾದಲ್ಲಿ ಇಸ್ರೇಲ್ನ ಕ್ರಮಗಳು ಫೆಲೆಸ್ತೀನಿಯರ ವಿರುದ್ಧ ನರಮೇಧವಾಗಿದೆ. ನಮ್ಮ ಕಾಲದ ಶ್ರೇಷ್ಠ ಚಲನಚಿತ್ರ ನಿರ್ಮಾಪಕರು ಮತ್ತು ಕಲಾವಿದರು ಎದ್ದು ನಿಂತು ಹಾಗೆ ಹೇಳಲು ಸಾಧ್ಯವಾಗದಿದ್ದರೆ, ಇತಿಹಾಸವು ಅವರನ್ನು ನಿರ್ಣಯಿಸುತ್ತದೆ ಎಂದು ರಾಯ್ ಹೇಳಿದ್ದಾರೆ ಎಂಬುದಾಗಿ ವರದಿಯಾಗಿದೆ.
ರಾಜ್ಯದ 2,492 ಜನವಸತಿ ಪ್ರದೇಶಗಳನ್ನು ಕಂದಾಯ ಗ್ರಾಮಗಳನ್ನಾಗಿ ಘೋಷಿಸಿದ್ದೇವೆ: ಕಂದಾಯ ಸಚಿವ ಕೃಷ್ಣ ಬೈರೇಗೌಡ
ಹಾವೇರಿ: ‘ಕಂದಾಯ ಗ್ರಾಮ ಅಭಿಯಾನ'ದ ಮೂಲಕ ರಾಜ್ಯದ 2,492 ಜನವಸತಿ ಪ್ರದೇಶಗಳನ್ನು ಕಂದಾಯ ಗ್ರಾಮಗಳನ್ನಾಗಿ ಘೋಷಿಸಿದ್ದೇವೆ. ಬರೋಬ್ಬರಿ 2.20 ಲಕ್ಷ ಕುಟುಂಬಗಳಿಗೆ ಹಕ್ಕುಪತ್ರ ವಿತರಿಸುವ ಮೂಲಕ ನಿಮ್ಮ ಕನಸಿನ ಮನೆಗೆ ಅಧಿಕೃತ ಮುದ್ರೆ ಒತ್ತುತ್ತಿದ್ದೇವೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು. ಶನಿವಾರ ಹಾವೇರಿ ಜಿಲ್ಲಾಡಳಿತ ಮತ್ತು ಕಂದಾಯ ಇಲಾಖೆ ಸಹಯೋಗದಲ್ಲಿ ಆಯೋಜಿಸಲಾಗಿದ್ದ ‘ಜನಸೇವೆಯಲ್ಲಿ ಸಾರ್ಥಕ ಸಾವಿರ ದಿನ, ಒಂದು ಲಕ್ಷ ಮಂದಿ ಫಲಾನುಭವಿಗಳಿಗೆ ಹಕ್ಕು ಪತ್ರ ನೀಡುವ ಭೂ ಗ್ಯಾರಂಟಿ ಸಮರ್ಪಣಾ ಸಮಾವೇಶ’ದಲ್ಲಿ ಫಲಾನುಭವಿಗಳನ್ನು ಉದ್ದೇಶಿಸಿ ಅವರು ಮಾತನಾಡಿದರು. ಕೇವಲ ಹಕ್ಕುಪತ್ರವಷ್ಟೇ ಅಲ್ಲ, ನೋಂದಣಿ ಮತ್ತು ಇ-ಸ್ವತ್ತು ಮಾಡಿಸಿಕೊಡುವ ಮೂಲಕ ನಿಮಗೆ ಸಂಪೂರ್ಣ ‘ಭೂ ಗ್ಯಾರಂಟಿ' ನೀಡುವುದು ನಮ್ಮ ಗುರಿ. ಮೂಲಭೂತ ಸೌಕರ್ಯಗಳೊಂದಿಗೆ ಈಗ ನಿಮ್ಮ ಹಳ್ಳಿ ನೈಜ ಅರ್ಥದಲ್ಲಿ ಕಂದಾಯ ಗ್ರಾಮವಾಗಲಿದೆ. ನಮ್ಮ ನಡೆ, ನಿಮ್ಮ ನೆಮ್ಮದಿಯ ಕಡೆ! ಹಕ್ಕುಪತ್ರ ಪಡೆಯಿರಿ, ಗೌರವದಿಂದ ಬಾಳಿ ಎಂದು ಕೃಷ್ಣ ಬೈರೇಗೌಡ ಹೇಳಿದರು. ದಶಕಗಳಿಂದ ‘ನಮ್ಮೂರು' ಎಂಬ ಹೆಮ್ಮೆಯಿಲ್ಲದೆ, ಅನಿಶ್ಚಿತತೆಯಲ್ಲಿ ಬದುಕುತ್ತಿದ್ದ ಲಕ್ಷಾಂತರ ಕುಟುಂಬಗಳ ಪಾಲಿಗೆ ಇಂದು ಸುವರ್ಣಾಕ್ಷರಗಳಲ್ಲಿ ಬರೆದಿಡುವ ದಿನ. ಸುಮಾರು 2.20 ಲಕ್ಷ ಕುಟುಂಬಗಳಿಗೆ ಹಕ್ಕು ಪತ್ರ ವಿತರಿಸುವ ಮೂಲಕ ರಾಜ್ಯ ಸರಕಾರ ಇತಿಹಾಸ ನಿರ್ಮಿಸಿದೆ. ಇದು ಕೇವಲ ಕಾಗದದ ತುಣುಕಲ್ಲ, ಶೋಷಿತರ ಪಾಲಿನ ‘ಭೂ ಗ್ಯಾರಂಟಿ'. ಯಾವುದೇ ಅಬ್ಬರವಿಲ್ಲದೆ ನಡೆದ ಈ ‘ನಿಶಬ್ದ ಕ್ರಾಂತಿ' ಲಕ್ಷಾಂತರ ಜನರ ಬದುಕಿನಲ್ಲಿ ಭರವಸೆಯ ಬೆಳಕು ಚೆಲ್ಲಿದೆ ಎಂದು ಅವರು ಅಭಿಪ್ರಾಯಪಟ್ಟರು. ಇದುವರೆಗೆ ರಾಜ್ಯದಲ್ಲಿ ಕೆಲವರಿಗೆ ಊರು ಊರಾಗಿದ್ದರು ದಾಖಲೆಗಳಲ್ಲಿ ಗ್ರಾಮ ಆಗಿರಲಿಲ್ಲ. ದಾಖಲೆಗಳಲ್ಲಿ ಇದರ ಉಲ್ಲೇಖವೇ ಇರಲಿಲ್ಲ. ಇವರೆಲ್ಲರೂ ಮೂಲಭೂತ ಸೌಕರ್ಯಗಳಿಂದ ವಂಚಿತರಾಗಿದ್ದರು. ಈಗ ಭೂ ಗ್ಯಾರಂಟಿ ಯೋಜನೆ ಮೂಲಕ ಅವರಿಗೆ ಹಕ್ಕು ಪತ್ರ ನೀಡಿ, ಕ್ರಯ ಪತ್ರ ಮಾಡಿ, ನೋಂದಣಿ ಮಾಡಿಸಿ, ಸಂಪೂರ್ಣ ಹಕ್ಕನ್ನು ಅವರ ಕೈಗೆ ನೀಡಲಾಗುತ್ತಿದೆ. ಜೊತೆಗೆ ಸರಕಾರವೇ ಇ-ಸ್ವತ್ತು ಮಾಡಿಸಿ, ನೂರಕ್ಕೆ ನೂರರಷ್ಟು ಪರಿಪೂರ್ಣವಾದ ದಾಖಲೆ ಒದಗಿಸಿದೆ ಎಂದು ಕೃಷ್ಣ ಬೈರೇಗೌಡ ಹೇಳಿದರು. ನೂರಾರು ವರ್ಷಗಳಿಂದ ವಾಸವಿದ್ದರೂ ಸ್ವಂತ ಮನೆಗೆ ದಾಖಲೆಗಳಿಲ್ಲದೆ ಅತಂತ್ರರಾಗಿದ್ದ ಸಾವಿರಾರು ಕುಟುಂಬಗಳ ಬಾಳಿನಲ್ಲಿ ಇಂದು ಹೊಸ ಬೆಳಕು ಮೂಡಿದೆ. ಬದುಕಿಗೆ ಯಾವುದೇ ಭರವಸೆ ಇಲ್ಲದಿದ್ದ ಕಾಲ ಹೋಗಿ, ಈಗ ‘ಭೂ ಗ್ಯಾರಂಟಿ' ಯೋಜನೆಯ ಮೂಲಕ ಹಕ್ಕುಪತ್ರಗಳನ್ನು ವಿತರಿಸಿ ಜನಸಾಮಾನ್ಯರು ನೆಮ್ಮದಿಯಿಂದ ಬದುಕುವಂತೆ ಮಾಡಲಾಗಿದೆ ಎಂದು ಅವರು ತಿಳಿಸಿದರು. ಕೇವಲ 1000 ದಿನಗಳಲ್ಲಿ ಹಿಂದಿನ ಸರಕಾರಕ್ಕಿಂತ 5 ಪಟ್ಟು ಹೆಚ್ಚು ಕೆಲಸ ಮಾಡುವ ಮೂಲಕ ನಾವು ಜನಪರ ಆಡಳಿತವನ್ನು ನೀಡಿದ್ದೇವೆ. ‘ಭೂ ಗ್ಯಾರಂಟಿ’ ಯೋಜನೆಯ ಮಹತ್ತರ ಕಾರ್ಯಕ್ಕಾಗಿ ಶ್ರಮಿಸಿದ ನಮ್ಮ ಅಧಿಕಾರಿಗಳ ಸಾಧನೆಯನ್ನು ಗುರುತಿಸಿ ಅವರಿಗೆ ಸನ್ಮಾನ ಮಾಡಲಾಗುತ್ತಿದೆ ಹಾಗೂ 5 ಕೋಟಿ ರೂ. ಪ್ರೋತ್ಸಾಹ ಧನವನ್ನು ನೀಡುತ್ತಿದ್ದೇವೆ ಎಂದು ಕೃಷ್ಣ ಬೈರೇಗೌಡ ಹೇಳಿದರು. ರಾಜ್ಯದ ಕಂದಾಯ ದಾಖಲೆಗಳ ಸಂರಕ್ಷಣೆಯಲ್ಲಿ ಮಹತ್ವದ ಹೆಜ್ಜೆ ಇಡಲಾಗಿದೆ. ಈಗಾಗಲೇ 101 ತಾಲೂಕುಗಳಲ್ಲಿ ಎಲ್ಲ ಭೂ ದಾಖಲೆಗಳನ್ನು ಸಂಪೂರ್ಣವಾಗಿ ಗಣಕೀಕರಣಗೊಳಿಸಲಾಗಿದ್ದು, ಸುಮಾರು 69 ಕೋಟಿ ದಾಖಲೆಗಳನ್ನು ಸ್ಕ್ಯಾನ್ ಮಾಡಲಾಗಿದೆ. ಮುಂದಿನ 6 ತಿಂಗಳ ಅವಧಿಯಲ್ಲಿ ರಾಜ್ಯದ ಎಲ್ಲ 241 ತಾಲೂಕುಗಳ ದಾಖಲೆಗಳನ್ನು ಡಿಜಿಟಲೀಕರಣಗೊಳಿಸುವ ಗುರಿ ಹೊಂದಲಾಗಿದೆ. ಈ ಆಧುನಿಕ ವ್ಯವಸ್ಥೆಯಿಂದ ದಾಖಲೆಗಳನ್ನು ತಿದ್ದಲು ಅಥವಾ ನಕಲು ಮಾಡಲು ಸಾಧ್ಯವಾಗದಂತೆ ಅತ್ಯಂತ ಸುರಕ್ಷಿತವಾಗಿ ಕಾಪಾಡಲಾಗುವುದು ಎಂದು ಅವರು ಹೇಳಿದರು. ನಮ್ಮ ಸರಕಾರ ಕಳೆದ 1000 ದಿನಗಳಲ್ಲಿ 60 ಲಕ್ಷ ಎಕರೆ ಸಾಗುವಳಿ ಭೂಮಿಯ ಪೋಡಿ ಕಾರ್ಯವನ್ನು ಪೂರ್ಣಗೊಳಿಸಿ ದಾಖಲೆ ಬರೆದಿದೆ. 14.48 ಲಕ್ಷ ಜನರಿಗೆ ಇ-ಪೌತಿ ಹಾಗೂ 1.96 ಲಕ್ಷ ಜನರಿಗೆ ಪೋಡಿ ದುರಸ್ತಿ ಸೌಲಭ್ಯ ನೀಡಲಾಗಿದ್ದು, ಹಿಂದಿನ ಸರಕಾರಕ್ಕಿಂತ ಶೇ.50ರಷ್ಟು ವೇಗವಾಗಿ ಪ್ರತಿ ತಿಂಗಳು 1.34 ಲಕ್ಷ ಸರ್ವೆ ಕಾರ್ಯಗಳನ್ನು ಮುಗಿಸುತ್ತಿದ್ದೇವೆ. ರೈತರ ಹಿತವೇ ನಮ್ಮ ಆದ್ಯತೆ ಎಂದು ಕೃಷ್ಣ ಬೈರೇಗೌಡ ತಿಳಿಸಿದರು. ಹಿಂದೆ ಕೂಲಿ ಕಾರ್ಮಿಕರಾಗಿದ್ದವರು, ಬದುಕು ಕಟ್ಟಿಕೊಳ್ಳಲು ಹೊಂದಿದ್ದ ಭೂಮಿಯ ಹಕ್ಕನ್ನು ಅವರಿಗೇ ನೀಡುವ ಮೂಲಕ ಸರಕಾರ ಸದ್ದಿಲ್ಲದೆ, ಮಹತ್ವದ ಕೆಲಸವೊಂದನ್ನು ಮಾಡಿದೆ. ಇದಕ್ಕೆ ಅವಕಾಶ ಮಾಡಿಕೊಟ್ಟ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಅವರು ಹೇಳಿದರು. ದಾಖಲೆ ರಹಿತ ಜನವಸತಿಗಳಲ್ಲಿ ವಾಸಿಸುತ್ತಿರುವ ಪ್ರತಿಯೊಬ್ಬ ಬಡವರಿಗೂ ಅಧಿಕೃತ ದಾಖಲೆಗಳನ್ನು ನೀಡಿ, ಅವರಿಗೆ ನ್ಯಾಯ ಒದಗಿಸಬೇಕೆಂದು ಮುಖ್ಯಮಂತ್ರಿ ಸಿದ್ದಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಇದಕ್ಕೆ ಪೂರಕವಾಗಿ, ಉಪಮುಖ್ಯಮಂತ್ರಿ ಅವರು ‘ಭೂ ಗ್ಯಾರಂಟಿ'ಯನ್ನು ನಮ್ಮ ಸರಕಾರದ 6ನೇ ಗ್ಯಾರಂಟಿ ಎಂದು ಘೋಷಿಸಿದ್ದಾರೆ ಎಂದು ಕೃಷ್ಣ ಬೈರೇಗೌಡ ತಿಳಿಸಿದರು. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ರಾಹುಲ್ ಗಾಂಧಿ ಮಾರ್ಗದರ್ಶನದಂತೆ, ಬಡವರ ಏಳಿಗೆಗಾಗಿ ಕೆಲಸ ಮಾಡುವುದು ನಮಗೆ ಹೆಮ್ಮೆಯ ಮತ್ತು ಸಂತೋಷದ ವಿಷಯವಾಗಿದೆ. ನುಡಿದಂತೆ ನಡೆಯುವ ನಮ್ಮ ಸರಕಾರ, ಬಡವರ ಸಬಲೀಕರಣಕ್ಕೆ ಸದಾ ಬದ್ಧ ಎಂದು ಕೃಷ್ಣ ಬೈರೇಗೌಡ ಹೇಳಿದರು.
ಉಕ್ರೇನ್ ವಿರುದ್ಧ ರಷ್ಯಾ ಸೇನೆ ಎಡಬಿಡದೆ ದಾಳಿ ಮಾಡುತ್ತಿದ್ದು, ಪುಟಿನ್ ಪಡೆಗಳು ಕೊಡುತ್ತಿರುವ ಒಂದೊಂದು ಏಟಿಗೂ ಉಕ್ರೇನ್ ಶೇಕ್ ಆಗಿದೆ. ಅದರಲ್ಲೂ ಸಾಕಷ್ಟು ಪ್ರದೇಶವನ್ನ ಈಗಾಗಲೇ ಉಕ್ರೇನ್ ಕಳೆದುಕೊಂಡು ನಲುಗಿ ಹೋಗಿದ್ದು, ನೋಡ ನೋಡುತ್ತಲೇ ಆರ್ಥಿಕವಾಗಿ ಬೀದಿಗೆ ಬಿದ್ದಿದೆ. ಜೊತೆಗೆ ರಷ್ಯಾ ಸೇನೆಯಿಂದ ಉಕ್ರೇನ್ನ ಎಲ್ಲಾ ವಿದ್ಯುತ್ ಸ್ಥಾವರಗಳಿಗೆ ಹಾನಿ ಆಗಿದೆ ಎಂದು ಉಕ್ರೇನ್ನ ಅಧ್ಯಕ್ಷ ಝೆಲೆನ್ಸ್ಕಿ
ಸಂಘರ್ಷಗಳನ್ನು ಪರಿಹರಿಸುವಲ್ಲಿ ವಿಶ್ವಸಂಸ್ಥೆ ಯಾವುದೇ ಪಾತ್ರ ವಹಿಸುತ್ತಿಲ್ಲ: ಅಮೆರಿಕಾ ವಿದೇಶಾಂಗ ಕಾರ್ಯದರ್ಶಿ ರೂಬಿಯೊ
ಮ್ಯೂನಿಚ್, ಫೆ.14: ವಿಶ್ವಸಂಸ್ಥೆಯು ಸಂಘರ್ಷಗಳನ್ನು ಪರಿಹರಿಸುವಲ್ಲಿ ವಾಸ್ತವವಾಗಿ ಯಾವುದೇ ಪಾತ್ರವನ್ನು ವಹಿಸುತ್ತಿಲ್ಲ ಎಂದು ಅಮೆರಿಕಾ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಶನಿವಾರ ಹೇಳಿದ್ದು, ವಿಶ್ವಸಂಸ್ಥೆಯ ಸುಧಾರಣೆ ಅತ್ಯಗತ್ಯವಾಗಿದೆ ಎಂದು ಪ್ರತಿಪಾದಿಸಿದ್ದಾರೆ. ವಿಶ್ವಸಂಸ್ಥೆಯು ಇನ್ನೂ ಜಗತ್ತಿನಲ್ಲಿ ಒಳ್ಳೆಯದಕ್ಕೆ ಒಂದು ಸಾಧನವಾಗಲು ಅಪಾರ ಸಾಮರ್ಥ್ಯವನ್ನು ಹೊಂದಿದೆ. ಆದರೆ ನಮ್ಮ ಮುಂದಿರುವ ಅತ್ಯಂತ ಕಠಿಣ ಬಿಕ್ಕಟ್ಟಿನ ವಿಷಯಗಳಲ್ಲಿ ಅದರ ಬಳಿ ಯಾವುದೇ ಉತ್ತರವಿಲ್ಲ ಮತ್ತು ವಾಸ್ತವಿಕವಾಗಿ ಯಾವುದೇ ಪಾತ್ರವನ್ನು ವಹಿಸಿಲ್ಲ ಎಂಬುದನ್ನು ನಾವು ನಿರ್ಲಕ್ಷಿಸಲು ಸಾಧ್ಯವಿಲ್ಲ. ‘ಗಾಝಾ ಯುದ್ಧವನ್ನು ಪರಿಹರಿಸಲು ವಿಶ್ವಸಂಸ್ಥೆಯಿಂದ ಸಾಧ್ಯವಾಗಲಿಲ್ಲ’ ಎಂದವರು ಮ್ಯೂನಿಚ್ ಭದ್ರತಾ ಸಮ್ಮೇಳನದಲ್ಲಿ ಹೇಳಿದ್ದಾರೆ. ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ‘ಶಾಂತಿ ಮಂಡಳಿ’ ಉಪಕ್ರಮವು ಜಾಗತಿಕವಾಗಿ ಸಂಘರ್ಷಗಳನ್ನು ಪರಿಹರಿಸುವ ಗುರಿಯನ್ನು ಹೊಂದಿದೆ. ಇದು ವಿಶ್ವಸಂಸ್ಥೆಯ ಕೆಲಸಕ್ಕೆ ಹಾನಿಯಾಗಬಹುದು ಎಂದು ರಾಜತಾಂತ್ರಿಕರು ಕಳವಳ ವ್ಯಕ್ತಪಡಿಸಿದ್ದಾರೆ.
ಯುವಕರಿಬ್ಬರಿಗೆ ಗನ್ ತೋರಿಸಿ ಬೆದರಿಕೆ ಆರೋಪ: ನ್ಯಾಯಾಲಯದ ಸೂಚನೆಯಂತೆ ಬಿಲ್ಡರ್ ವಿರುದ್ಧ ಎಫ್ಐಆರ್
ಮಂಗಳೂರು, ಫೆ.14: ಮಂಗಳೂರಿನ ಬಿಲ್ಡರ್ ಜಿತೇಂದ್ರ ಕೊಟ್ಟಾರಿ ಎಂಬಾತ ಯುವಕರಿಬ್ಬರಿಗೆ ಗನ್ ತೋರಿಸಿ ಜೀವ ಬೆದರಿಕೆ ಹಾಕಿರುವ ಆರೋಪಕ್ಕೆ ಸಂಬಂಧಿಸಿ ಕೋರ್ಟ್ ಸೂಚನೆಯಂತೆ ಬರ್ಕೆ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. 2024ರ ಅ.9ರಂದು ತನುಷ್ ಶೆಟ್ಟಿ ಮತ್ತು ಅವರ ಸ್ನೇಹಿತ ಅಂಕಿತ್ ಬಜ್ಪೆಯಿಂದ ಕದ್ರಿಗೆ ಬರುತ್ತಿದ್ದಾಗ ವಾಹನ ಸೈಡ್ ಕೊಡುವ ವಿಚಾರದಲ್ಲಿ ಜಿತೇಂದ್ರ ಕೊಟ್ಟಾರಿ ಜತೆ ಮಾತಿನ ಚಕಮಕಿ ನಡೆದಿತ್ತು ಎನ್ನಲಾಗಿದೆ. ಆ ಬಳಿಕ ಯುವಕರಿಬ್ಬರು ಕಾರನ್ನು ಫಾಲೋ ಮಾಡಿ ಬಂದು ಜಿತೇಂದ್ರ ಕೊಟ್ಟಾರಿ ಅವರ ಮನೆಯ ಕಂಪೌಂಡ್ ಒಳ ಪ್ರವೇಶಿಸಿದ್ದಾರೆ. ಈ ಸಂದರ್ಭ ಮೂವರ ಮಧ್ಯೆ ಭಾರೀ ಚರ್ಚೆ ನಡೆದಿದೆ. ಈ ಬಗ್ಗೆ ಜಿತೇಂದ್ರ ಕೊಟ್ಟಾರಿ ನೀಡಿದ ಬರ್ಕೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪೊಲೀಸರು ತನುಷ್ ಮತ್ತು ಅಂಕಿತ್ರನ್ನು ಬಂಧಿಸಿದ್ದರು. ಯುವಕರು ಪ್ರತಿದೂರು: ಜೈಲಿನಿಂದ ಬಿಡುಗಡೆಯಾದ ಬಳಿಕ ಯುವಕರು ತಾವೇನೂ ಹಲ್ಲೆ ಮಾಡಿಲ್ಲ, ತಮ್ಮ ಮೇಲೆ ಗನ್ ತೋರಿಸಿ ಜೀವ ಬೆದರಿಕೆ ಒಡ್ಡಿದ್ದರು, ಕೊಟ್ಟಾರಿಯ ಪುತ್ರಿ ಯುವಕರನ್ನು ಶೂಟ್ ಮಾಡುವಂತೆ ತಂದೆಗೆ ಪ್ರಚೋದನೆ ನೀಡಿದ್ದರು ಎಂದು ಆರೋಪಿಸಿ ದೂರು ನೀಡಲಾಗಿತ್ತು. ಈ ಬಗ್ಗೆ ಯುವಕರು ಪ್ರತಿ ದೂರು ನೀಡಿದರೂ ಪೊಲೀಸರು ಕೇಸು ದಾಖಲಿಸಿರಲಿಲ್ಲ ಎನ್ನಲಾಗಿದೆ. *ಕೋರ್ಟ್ಗೆ ಖಾಸಗಿ ದೂರು: ಜೈಲಿನಿಂದ ಹೊರ ಬಂದ ಬಳಿಕ ತನುಷ್ ಮತ್ತು ಅಂಕಿತ್ ನ್ಯಾಯಾಲಯಕ್ಕೆ ಖಾಸಗಿ ದೂರು ಸಲ್ಲಿಸಿದ್ದರು. ಇದೀಗ ದೂರು ದಾಖಲಿಸಿ ತನಿಖೆ ಮಾಡುವಂತೆ ನ್ಯಾಯಾಲಯವು ಪೊಲೀಸರಿಗೆ 1ವರ್ಷದ ಬಳಿಕ ಆದೇಶ ಮಾಡಿದ್ದು, ಫೆ.5ರಂದು ಬರ್ಕೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಹಂಪಿ ಉತ್ಸವಕ್ಕೆ ಹರಿದು ಬಂದ ಜನಸಾಗರ: 5 ಕಿಮೀ ಟ್ರಾಫಿಕ್ ಜಾಮ್, ಬಸ್ ನಿಲ್ದಾಣದಲ್ಲಿ ನೂಕುನುಗ್ಗಲು
ವಿಜಯನಗರ: ವಿಜಯನಗರ ಜಿಲ್ಲೆಯಲ್ಲಿ ನಡೆಯುತ್ತಿರುವ ಹಂಪಿ ಉತ್ಸವದ ಎರಡನೇ ದಿನ ಭಾರೀ ಜನಸಾಗರ ಹರಿದುಬಂದ ಪರಿಣಾಮ ನಗರದ ರಸ್ತೆಯಲ್ಲಿ ಸುಮಾರು 5 ಕಿಲೋಮೀಟರ್ಗಳವರೆಗೆ ಟ್ರಾಫಿಕ್ ಜಾಮ್ ಉಂಟಾಗಿ ಪ್ರಯಾಣಿಕರು ಪರದಾಡುವಂತಾಯಿತು. ಉತ್ಸವದ ಹಿನ್ನೆಲೆ ನಗರದ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ಸಾವಿರಾರು ಜನರು ಜಮಾಯಿಸಿದ್ದರು. ಜಿಲ್ಲಾಡಳಿತದಿಂದ ಹೆಚ್ಚುವರಿ 100 ಉಚಿತ ಬಸ್ಗಳನ್ನು ನಿಯೋಜಿಸಿದರೂ ಬಸ್ ನಿಲ್ದಾಣದಲ್ಲಿ ನೂಕುನುಗ್ಗಲು ಉಂಟಾಗಿ ಪ್ರಯಾಣಿಕರು ಗೊಂದಲಕ್ಕೆ ಒಳಗಾದರು. ಕಡ್ಡಿರಾಂಪುರ ಭಾಗದಿಂದ ಉತ್ಸವದ ಮುಖ್ಯ ವೇದಿಕೆಯತ್ತ ಸಹಸ್ರಾರು ಜನರು ಹರಿದು ಬಂದ ಕಾರಣ ಜನರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ಟರು ಮತ್ತು ಕೆಲವು ರಸ್ತೆಗಳನ್ನು ತಾತ್ಕಾಲಿಕವಾಗಿ ಬಂದ್ ಮಾಡಿ ಜನರನ್ನು ನಿಯಂತ್ರಿಸಿದರು.
ಇರಾನ್ ವಿರುದ್ಧದ ಸಂಭಾವ್ಯ ಕಾರ್ಯಾಚರಣೆಗೆ ಅಮೆರಿಕಾದ ತಯಾರಿ: ವರದಿ
ವಾಷಿಂಗ್ಟನ್, ಫೆ.14: ಅಧ್ಯಕ್ಷ ಡೊನಾಲ್ಡ್ ಟ್ರಂಪ್ ದಾಳಿಗೆ ಆದೇಶಿಸಿದರೆ ಇರಾನ್ ವಿರುದ್ಧ ನಡೆಯಬಹುದಾದ ಸಂಭಾವ್ಯ ವಾರಗಳ ಅವಧಿಯ ಕಾರ್ಯಾಚರಣೆಗೆ ಅಮೆರಿಕಾ ತಯಾರಿ ನಡೆಸುತ್ತಿದೆ. ಇದು ಉಭಯ ದೇಶಗಳ ನಡುವೆ ಈ ಹಿಂದೆ ಸಂಭವಿಸಿದ್ದಕ್ಕಿಂತ ಹೆಚ್ಚು ಗಂಭೀರವಾದ ಸಂಘರ್ಷವಾಗಬಹುದು ಎಂದು ಅಧಿಕಾರಿಗಳನ್ನು ಉಲ್ಲೇಖಿಸಿ ರಾಯ್ಟರ್ಸ್ ವರದಿ ಮಾಡಿದೆ. ಇರಾನಿನ ಪರಮಾಣು ಕಾರ್ಯಕ್ರಮಗಳ ವಿಷಯದಲ್ಲಿ ಅಮೆರಿಕಾ ಮತ್ತು ಇರಾನ್ ನಿಯೋಗಗಳ ನಡುವೆ ಒಮಾನ್ನಲ್ಲಿ ಕಳೆದ ವಾರ ಪರೋಕ್ಷ ಮಾತುಕತೆ ನಡೆದಿರುವ ನಡುವೆಯೇ ಈ ಬೆಳವಣಿಗೆ ನಡೆದಿದೆ. ಮಧ್ಯಪ್ರಾಚ್ಯದಲ್ಲಿ ಇನ್ನೊಂದು ಸಮರನೌಕೆ ನಿಯೋಜನೆಗೆ ಪೆಂಟಗಾನ್ ನಿರ್ಧರಿಸಿರುವುದಾಗಿ ಶುಕ್ರವಾರ ಅಮೆರಿಕಾ ಅಧಿಕಾರಿಗಳು ಹೇಳಿದ್ದರು. ಇದರ ಬೆನ್ನಲ್ಲೇ ಉತ್ತರ ಕ್ಯಾಲಿಫೊರ್ನಿಯಾದ ಸೇನಾ ನೆಲೆಯಲ್ಲಿ ಅಮೆರಿಕಾ ಪಡೆಗಳನ್ನು ಉದ್ದೇಶಿಸಿ ಮಾತನಾಡಿದ್ದ ಟ್ರಂಪ್, ‘ಇರಾನ್ನೊಂದಿಗೆ ಒಪ್ಪಂದ ಮಾಡಿಕೊಳ್ಳುವುದು ಕಷ್ಟಕರವಾಗಿದೆ. ಕೆಲವೊಮ್ಮೆ ನೀವು ಭಯಪಡಬೇಕಾಗುತ್ತದೆ. ಇದು ಪರಿಸ್ಥಿತಿಯನ್ನು ನಿರ್ವಹಿಸುವ ಏಕೈಕ ಮಾರ್ಗವಾಗಿದೆ’ ಎಂದಿದ್ದರು. ಸಂಭಾವ್ಯ ಸಶಕ್ತ ಮಿಲಿಟರಿ ಕಾರ್ಯಾಚರಣೆಯ ತಯಾರಿಯ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಶ್ವೇತಭವನದ ವಕ್ತಾರೆ ಅನ್ನಾ ಕೆಲ್ಲಿ, ‘ಇರಾನ್ ವಿಷಯದಲ್ಲಿ ಅಧ್ಯಕ್ಷ ಟ್ರಂಪ್ ಅವರು ಎಲ್ಲಾ ಆಯ್ಕೆಗಳನ್ನೂ ಮುಕ್ತವಾಗಿರಿಸಿಕೊಂಡಿದ್ದಾರೆ. ಅವರು ಯಾವುದೇ ವಿಷಯದ ಬಗ್ಗೆ ವಿವಿಧ ದೃಷ್ಟಿಕೋನಗಳನ್ನು ಆಲಿಸುತ್ತಾರೆ. ಆದರೆ ನಮ್ಮ ದೇಶಕ್ಕೆ ಮತ್ತು ರಾಷ್ಟ್ರೀಯ ಹಿತಾಸಕ್ತಿಯನ್ನು ಆಧರಿಸಿ ಅಂತಿಮ ನಿರ್ಧಾರ ಕೈಗೊಳ್ಳುತ್ತಾರೆ’ ಎಂದಿದ್ದಾರೆ.
ಕಲಬುರಗಿ| ಚೂರಿಯಿಂದ ಇರಿದು ಯುವಕನ ಕೊಲೆ: ಆರೋಪಿಯ ಬಂಧನ
ಕಲಬುರಗಿ: ನಗರದ ಸೂಪರ್ ಮಾರ್ಕೆಟ್ನಲ್ಲಿ ಯುವಕನೋರ್ವನನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ ಆರೋಪಿಯನ್ನು ಬ್ರಹ್ಮಪುರ ಪೊಲೀಸರು ಕಾರ್ಯಾಚರಣೆ ನಡೆಸಿ 24 ಗಂಟೆಯೊಳಗೆ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಗಾಜಿಪುರ ಬಡಾವಣೆ ನಿವಾಸಿ ಶರಣಬಸಪ್ಪ ಗೌಳಿ (35) ಶುಕ್ರವಾರ ರಾತ್ರಿ ಕೊಲೆಯಾಗಿದ್ದನು. ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ದತ್ತು ಘನಾತೆಯನ್ನು ಪೊಲೀಸರು ಬಂಧಿಸಿದ್ದಾರೆ. ಶರಣಬಸಪ್ಪ ಗೌಳಿ ಮತ್ತು ಆತನ ಸ್ನೇಹಿತರಾದ ದತ್ತು ಘನಾತೆ ಮತ್ತು ಇತರರು ಸೇರಿ ಸೂಪರ್ ಮಾರ್ಕೆಟ್ನಲ್ಲಿರುವ ನರ್ತಕಿ ಬಾರ್ಗೆ ಸಂಜೆ ಮದ್ಯಪಾನ ಮಾಡಲು ತೆರಳಿದ್ದಾರೆ. ಈ ವೇಳೆ ಶರಣಬಸಪ್ಪ ಮತ್ತು ದತ್ತು ನಡುವೆ ಜಗಳವಾಗಿದೆ. ಈ ವೇಳೆ ದತ್ತು ತನ್ನ ಬಳಿ ಇದ್ದ ಚಾಕುವಿನಿಂದ ಶರಣಬಸಪ್ಪಗೆ ಇರಿದು ಕೊಲೆ ಮಾಡಿ ಪರಾರಿಯಾಗಿದ್ದಾನೆ. ಸೂಪರ್ ಮಾರ್ಕೇಟ್ನಲ್ಲಿ ಮೊಬೈಲ್ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಶರಣಬಸಪ್ಪ ಗೌಳಿಗೆ ದತ್ತು ಘನಾತೆ ತನ್ನ ಮೊಬೈಲ್ ರಿಪೇರಿ ಮಾಡಲು ಕೊಟ್ಟಿದ್ದಾನೆ. ಹಲವಾರು ದಿನವಾದರೂ ರಿಪೇರಿ ಮಾಡಿ ಕೊಟ್ಟಿರಲಿಲ್ಲ ಎಂದು ಹೇಳಲಾಗುತ್ತಿದೆ. ಶುಕ್ರವಾರ ಸಂಜೆ ಎಲ್ಲ ಸ್ನೇಹಿತರು ಕುಡಿಯಲು ಬಾರ್ಗೆ ಹೋದಾಗ ಈ ವಿಷಯದ ಕುರಿತು ಇಬ್ಬರ ನಡುವೆ ಜಗಳವಾಗಿದೆ. ಕೊನೆಗೆ ದತ್ತು ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ ಎಂದು ತಿಳಿದು ಬಂದಿದೆ. ಮೃತನ ತಾಯಿ ಸುರೇಖಾ ಗೌಳಿ ನೀಡಿದ ದೂರಿನ ಮೇರೆಗೆ ಬ್ರಹ್ಮಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಪಾಕಿಸ್ತಾನದ ಜೊತೆ ಭಾರತ ಹ್ಯಾಂಡ್ಶೇಕ್ ಮಾಡುತ್ತಾ? ನಾಯಕ ಸೂರ್ಯಕುಮಾರ್ ಯಾದವ್ ಉತ್ತರ ಹೀಗಿದೆ
India Vs Pakistan Match: ಭಾರತ ಹಾಗೂ ಪಾಕಿಸ್ತಾನದ ನಡವೆ ಟಿ20 ವಿಶ್ವಕಪ್ 2026 ಗುಂಪು ಹಂತದ ಹೈವೋಲ್ಟೇಜ್ ಪಂದ್ಯ ಭಾನುವಾರ ಕೊಲೊಂಬಿಯಾದಲ್ಲಿ ನಡೆಯಲಿದೆ. ಇದಕ್ಕೂ ಮುನ್ನವೇ ಟೀಂ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್, ಪಾಕಿಸ್ತಾನ ಆಟಗಾರರೊಂದಿಗೆ ಭಾರತ ತಂಡ ಹ್ಯಾಂಡ್ ಶೇಕ್ ಮಾಡಲಿದೆಯೇ ಎನ್ನುವ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ್ದಾರೆ. ಹಾಗಾದ್ರೆ, ಏನು ಹೇಳಿದ್ದಾರೆ ಎನ್ನುವ ಸಂಪೂರ್ಣ
ಬಾಂಗ್ಲಾದೇಶದ ಹೊಸ ಸರ್ಕಾರ ಸೋಮವಾರ ಪ್ರಮಾಣ ವಚನ?
ಢಾಕಾ, ಫೆ.14: ಗುರುವಾರ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ತಾರೀಕುರ್ರಹ್ಮಾನ್ ಅವರ ಬಾಂಗ್ಲಾದೇಶ್ ನ್ಯಾಷನಲಿಸ್ಟ್ ಪಾರ್ಟಿ (ಬಿಎನ್ಪಿ) ನೇತೃತ್ವದ ಮೈತ್ರಿಕೂಟ ಭರ್ಜರಿ ಗೆಲುವು ಸಾಧಿಸಿರುವಂತೆಯೇ, ನೂತನ ಸರ್ಕಾರ ಸೋಮವಾರ ಪ್ರಮಾಣವಚನ ಸ್ವೀಕರಿಸುವ ನಿರೀಕ್ಷೆಯಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ. ಮುಹಮ್ಮದ್ ಯೂನುಸ್ ನೇತೃತ್ವದ ಮಧ್ಯಂತರ ಸರ್ಕಾರವು ಶೀಘ್ರವಾಗಿ ಹೊಸ ಆಡಳಿತಕ್ಕೆ ಅಧಿಕಾರ ಹಸ್ತಾಂತರಿಸಲು ಬಯಸುತ್ತಿದ್ದು, ಒಂದು ಅಥವಾ ಎರಡು ದಿನಗಳಲ್ಲಿ ಪ್ರಮಾಣವಚನ ಕಾರ್ಯಕ್ರಮಕ್ಕೆ ಸಂಪೂರ್ಣ ತಯಾರಿ ನಡೆಸುತ್ತಿದೆ. ಹೊಸ ಸರ್ಕಾರಕ್ಕೆ ಅಧಿಕಾರ ಹಸ್ತಾಂತರಿಸುವ ಪ್ರಕ್ರಿಯೆಗೆ ಚಾಲನೆ ನೀಡುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಯೂನುಸ್ ಸೂಚಿಸಿರುವುದಾಗಿ ಢಾಕಾ ಮೂಲದ ‘ದಿ ಡೈಲಿ ಸ್ಟಾರ್’ ವರದಿ ಮಾಡಿದೆ. ಸಂಸದರ ಪ್ರಮಾಣವಚನ ಕಾರ್ಯಕ್ರಮ ಸೋಮವಾರ ಅಥವಾ ಮಂಗಳವಾರ ನಡೆಯಲಿದ್ದು, ಅದೇ ದಿನ ಪ್ರಧಾನ ಮಂತ್ರಿ ಹಾಗೂ ಸಂಪುಟ ಸದಸ್ಯರ ಪ್ರಮಾಣವಚನ ಕಾರ್ಯಕ್ರಮವೂ ನಡೆಯಲಿದೆ ಎಂದು ವರದಿ ಹೇಳಿದೆ.
ಪತ್ರವೇ ನಕಲಿ ಎನ್ನುವುದಕ್ಕೆ ಮುನ್ನ ‘ಲೆಟರ್ ಹೆಡ್’ ಹಗರಣದ ಬಗ್ಗೆ ತನಿಖೆಯಾಗಲಿ: ಶಾಸಕ ಸುನೀಲ್ ಕುಮಾರ್
ಬೆಂಗಳೂರು: ‘ಪತ್ರ ನಕಲಿ ಎಂದು ವಾದಿಸುವವರ ಮೇಲೆಯೂ ಒಂದಿಷ್ಟು ಜವಾಬ್ದಾರಿ ಇದೆ. ಏಕೆಂದರೆ ಇದಕ್ಕೆ ಸಹಿ ಹಾಕಿರುವುದು ರಾಜ್ಯದ ಮುಖ್ಯಮಂತ್ರಿ. ಪತ್ರವೇ ನಕಲಿ ಎನ್ನುವುದಕ್ಕೆ ಮುನ್ನ ‘ಲೆಟರ್ ಹೆಡ್’ ಹಗರಣದ ಬಗ್ಗೆಯೂ ತನಿಖೆಯಾಗಲಿ’ ಎಂದು ಬಿಜೆಪಿ ಶಾಸಕ ಸುನೀಲ್ ಕುಮಾರ್ ಆಗ್ರಹಿಸಿದ್ದಾರೆ. ಶನಿವಾರ ಎಕ್ಸ್ ನಲ್ಲಿ ಪೋಸ್ಟ್ ಹಾಕಿರುವ ಅವರು, ‘ಸಿಎಂ ಸಹಿ ಇರುವ ಪತ್ರವೇ ನಕಲಿ ಎಂದಾದರೆ ಇನ್ನು ಸಿಎಂ ಕಚೇರಿ ಹೇಗೆ ಕಾರ್ಯ ನಿರ್ವಹಿಸುತ್ತಿದೆ? ಎಂಬುದನ್ನು ಯೋಚಿಸಬೇಕಲ್ಲವೇ?. ಸಿಎಂ ಸಿದ್ದರಾಮಯ್ಯನವರಿಗೆ ಈಗ ಖುರ್ಚಿಯ ಮೇಲಷ್ಟೇ ಗಮನ ಕಚೇರಿಯ ಮೇಲೆ ಇಲ್ಲ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ’ ಎಂದು ಟೀಕಿಸಿದ್ದಾರೆ. ‘ಈ ಪತ್ರ ನಕಲಿ ಎಂದಾದರೆ ಪತ್ರದಲ್ಲಿರುವ ಸಹಿಯ ಅಸಲಿಯತ್ತೇನೆಂಬುದೂ ಇತ್ಯರ್ಥವಾಗಬೇಕು. ಹೀಗಾಗಿ ಈ ಸಹಿ ಅಸಲಿಯೋ, ನಕಲಿಯೋ ಎಂಬುದನ್ನು ವಿಧಿ ವಿಜ್ಞಾನ ಪ್ರಯೋಗಾಲಯ ಪರೀಕ್ಷೆಗೆ ಒಳಪಡಿಸಬೇಕು. ಇದು ಸಿಎಂ ಕಚೇರಿಯಲ್ಲಿ ನಡೆಯುವ ಬಹುದೊಡ್ಡ ‘ಲೆಡರ್ ಹೆಡ್’ ದಂಧೆಯ ಎಳೆಯಾಗಿದ್ದರೂ ಆಶ್ಚರ್ಯ ಇಲ್ಲ’ ಎಂದು ಅವರು ವಾಗ್ದಾಳಿ ನಡೆಸಿದ್ದಾರೆ. ‘ದಿನಾಂಕವಿಲ್ಲದ ಪತ್ರಕ್ಕೆ ಸಿಎಂ ಏಕೆ ಸಹಿ ಹಾಕಿದರು, ಪತ್ರಕ್ಕೆ ಸಹಿ ಹಾಕಿಸಿದ ವ್ಯಕ್ತಿಗಳು ಯಾರು?. ಅವರಿಗೆ ಇದರಿಂದಾಗುವ ಲಾಭವೇನು? ಎಂಬುದೂ ತನಿಖೆಯಿಂದ ಬಹಿರಂಗಗೊಳ್ಳಲಿ. ಇಲ್ಲವಾದರೆ ಸಿದ್ದರಾಮಯ್ಯ ಮಾಡಿರುವ ತನಿಖಾದೇಶ ‘kill the messenger’ಎಂಬ ತಂತ್ರದಂತಾಗುತ್ತದೆ. ಸಿದ್ದರಾಮಯ್ಯರಂತೆ ನಾನೂ ಸಾರ್ವಜನಿಕ ಜೀವನದಲ್ಲಿರುವ ವ್ಯಕ್ತಿ. ನನಗೆ ಲಭಿಸಿದ ಈ ಪತ್ರ ಅಸಲಿ ಎಂದೇ ನಂಬಿ ಸರಕಾರದ ಆಡಳಿತಾತ್ಮಕ ಲೋಪಕ್ಕೆ ಇದೊಂದು ಉದಾಹರಣೆ ಎಂದಿದ್ದೇನೆ. ಈ ರೀತಿಯ ಅಭಿವ್ಯಕ್ತಿಯೇ ತಪ್ಪು ಎನ್ನುವವರು ಹಿಂದೆ ವಿಪಕ್ಷದಲ್ಲಿದ್ದಾಗ ಏನು ಮಾಡಿದ್ದರೆಂಬುದನ್ನು ವಿವೇಚಿಸಬೇಕು ಎಂದು ಸುನೀಲ್ ಕುಮಾರ್ ತಿರುಗೇಟು ನೀಡಿದ್ದಾರೆ. ಸಿಎಂ ಸಹಿ ಇರುವ ಪತ್ರವೇ ನಕಲಿ ಎಂದಾದರೆ ಇನ್ನು ಸಿಎಂ ಕಚೇರಿ ಹೇಗೆ ಕಾರ್ಯ ನಿರ್ವಹಿಸುತ್ತಿದೆ ? ಎಂಬುದನ್ನು ಯೋಚಿಸಬೇಕಲ್ಲವೇ ? ಸಿಎಂ @siddaramaiah ನವರಿಗೆ ಈಗ ಖುರ್ಚಿಯ ಮೇಲಷ್ಟೇ ಗಮನ ಕಚೇರಿಯ ಮೇಲೆ ಇಲ್ಲ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ. ಈ ಪತ್ರ ನಕಲಿ ಎಂದಾದರೆ ಪತ್ರದಲ್ಲಿರುವ ಸಹಿಯ ಅಸಲಿಯತ್ತೇನೆಂಬುದೂ ಇತ್ಯರ್ಥವಾಗಬೇಕು.… pic.twitter.com/qvGmGDbDFa — Sunil Kumar Karkala (@karkalasunil) February 14, 2026
ಬಾಂಗ್ಲಾದೇಶದ ಹಿತಾಸಕ್ತಿಗೆ ಮೊದಲ ಆದ್ಯತೆ: ನಿಯೋಜಿತ ಪ್ರಧಾನಿ ತಾರೀಕುರ್ರಹ್ಮಾನ್
ಢಾಕಾ, ಫೆ.14: ತಮ್ಮ ದೇಶದ ಜನರ ಹಿತಾಸಕ್ತಿ ಮತ್ತು ಜನರ ಕ್ಷೇಮಾಭಿವೃದ್ಧಿಯು ಮೊದಲ ಆದ್ಯತೆಯಾಗಿ ಉಳಿಯುತ್ತದೆ ಎಂದು ಬಾಂಗ್ಲಾದೇಶದ ನಿಯೋಜಿತ ಪ್ರಧಾನಿ ಮತ್ತು ಬಾಂಗ್ಲಾದೇಶ್ ನ್ಯಾಷನಲಿಸ್ಟ್ ಪಾರ್ಟಿ (ಬಿಎನ್ಪಿ) ಅಧ್ಯಕ್ಷ ತಾರೀಕುರ್ರಹ್ಮಾನ್ ಶನಿವಾರ ಹೇಳಿದ್ದಾರೆ. ಭಾರತದೊಂದಿಗೆ ಬಾಂಧವ್ಯದ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಎದುರಾದ ಪ್ರಶ್ನೆಗೆ ಉತ್ತರಿಸಿದ ರಹ್ಮಾನ್, ‘ವಿದೇಶಾಂಗ ನೀತಿಯ ಬಗ್ಗೆ ನಮಗೆ ಸ್ಪಷ್ಟತೆಯಿದೆ. ಬಾಂಗ್ಲಾದೇಶದ ಹಿತಾಸಕ್ತಿ ಮತ್ತು ಬಾಂಗ್ಲಾದೇಶದ ಜನರ ಹಿತಾಸಕ್ತಿಗೆ ಮೊದಲ ಆದ್ಯತೆಯಿದೆ’ ಎಂದು ಹೇಳಿದ್ದಾರೆ. ಮಾಜಿ ಪ್ರಧಾನಿ ಶೇಖ್ ಹಸೀನಾ ಅವರು 2024ರ ಆಗಸ್ಟ್ನಲ್ಲಿ ಭಾರತಕ್ಕೆ ಪಲಾಯನ ಮಾಡಿದ ನಂತರ ಭಾರತದೊಂದಿಗೆ ಹದಗೆಟ್ಟಿರುವ ಸಂಬಂಧ ಸುಧಾರಣೆಯ ಬಗ್ಗೆ ಬಿಎನ್ಪಿಯ ನಿಲುವಿನ ಕುರಿತ ಪ್ರಶ್ನೆಗೆ ಉತ್ತರಿಸಿದ ರಹ್ಮಾನ್, ‘ಬಾಂಗ್ಲಾದೇಶವು ಭಾರತ ಸೇರಿದಂತೆ ಎಲ್ಲಾ ನೆರೆಹೊರೆಯವರೊಂದಿಗೆ ಸಾಮಾನ್ಯ ಸಂಬಂಧವನ್ನು ಬಯಸುತ್ತದೆ, ಆದರೆ ಪರಸ್ಪರ ಗೌರವ ಮತ್ತು ಸಮಾನತೆಯ ಆಧಾರದ ಮೇಲೆ’ ಎಂದು ಹೇಳಿರುವುದಾಗಿ ವರದಿಯಾಗಿದೆ. ಬಾಂಗ್ಲಾದೇಶದಲ್ಲಿ ಕಾನೂನು ಕ್ರಮ ಎದುರಿಸಲು ಹಸೀನಾರನ್ನು ಭಾರತದಿಂದ ಗಡೀಪಾರು ಮಾಡುವ ಆಗ್ರಹವನ್ನು ಬಿಎನ್ಪಿ ಪುನರುಚ್ಚರಿಸಿದೆ. ರಾಜತಾಂತ್ರಿಕ ಮಾರ್ಗಗಳ ಮೂಲಕ ಅವರನ್ನು ಮರಳಿ ಕರೆತರುವ ಪ್ರಯತ್ನಗಳನ್ನು ಪಕ್ಷ ಬೆಂಬಲಿಸುತ್ತದೆ ಎಂದು ಬಿಎನ್ಪಿ ನಾಯಕ ಸಲಾಹುದ್ದೀನ್ ಅಹ್ಮದ್ ಹೇಳಿದ್ದಾರೆ. ‘ವಿದೇಶಾಂಗ ಸಚಿವಾಲಯವು ಈಗಾಗಲೇ ಈ ವಿಷಯವನ್ನು ಕೈಗೆತ್ತಿಕೊಂಡಿದೆ ಮತ್ತು ನಾವದನ್ನು ಬೆಂಬಲಿಸುತ್ತೇವೆ. ಕಾನೂನಿಗೆ ಅನುಸಾರವಾಗಿ ಹಸೀನಾರನ್ನು ಹಸ್ತಾಂತರಿಸುವಂತೆ ನಾವು ನಿರಂತರ ಒತ್ತಾಯಿಸುತ್ತಾ ಬಂದಿದ್ದೇವೆ. ಇದು ಎರಡು ರಾಷ್ಟ್ರಗಳ ವಿದೇಶಾಂಗ ಇಲಾಖೆಗಳ ನಡುವಿನ ವಿಷಯವಾಗಿದೆ. ಬಾಂಗ್ಲಾದೇಶದಲ್ಲಿ ವಿಚಾರಣೆ ಎದುರಿಸಲು ಅವರನ್ನು ವಾಪಾಸು ಕಳುಹಿಸುವಂತೆ ನಾವು ಭಾರತ ಸರ್ಕಾರವನ್ನು ಆಗ್ರಹಿಸುತ್ತೇವೆ’ ಎಂದು ಅಹ್ಮದ್ ಹೇಳಿದ್ದಾರೆ.
Hassan | ಮದುವೆ ಸಮಾರಂಭಕ್ಕೆ ಬಂದಿದ್ದ ಯುವತಿ ನಿಗೂಢವಾಗಿ ನಾಪತ್ತೆ; ಕೊಲೆ ಶಂಕೆ
ಕೆರೆಯಲ್ಲಿ ಶೋಧ ಕಾರ್ಯ
“ಸಮಸ್ತದ ಐಕ್ಯತೆಗೆ ನಾವು ಸದಾ ಸಿದ್ಧ”: ಇಂಡಿಯನ್ ಗ್ರ್ಯಾಂಡ್ ಮುಫ್ತಿ ಕಾಂತಪುರಂ ಎ.ಪಿ. ಅಬೂಬಕರ್ ಮುಸ್ಲಿಯಾರ್
ಮಲಪ್ಪುರಂನಲ್ಲಿ 2027 ಜನವರಿ 28ರಿಂದ 31ರವರೆಗೆ ನೂರನೇ ವಾರ್ಷಿಕ ಸಮಾವೇಶ
ಐರ್ಲ್ಯಾಂಡ್ ಆಲ್ರೌಂಡ್ ಪ್ರದರ್ಶನ: ಒಮಾನ್ ವಿರುದ್ಧ ಸುಲಭ ಜಯ
ಕೊಲಂಬೊ, ಫೆ.14: ನಾಯಕ ಲೋರ್ಕನ್ ಟಕರ್ ಅಮೋಘ ಇನಿಂಗ್ಸ್ ಹಾಗೂ ಬೌಲರ್ಗಳ ಶಿಸ್ತುಬದ್ಧ ಬೌಲಿಂಗ್ ಮೂಲಕ ಆಲ್ರೌಂಡ್ ಪ್ರದರ್ಶನ ನೀಡಿ ಪ್ರಾಬಲ್ಯ ಮೆರೆದ ಐರ್ಲ್ಯಾಂಡ್ ಕ್ರಿಕೆಟ್ ತಂಡವು ಟಿ–20 ವಿಶ್ವಕಪ್ ಟೂರ್ನಿಯ ‘ಬಿ’ ಗುಂಪಿನ ಪಂದ್ಯದಲ್ಲಿ ಒಮಾನ್ ತಂಡವನ್ನು 96 ರನ್ಗಳ ಅಂತರದಿಂದ ಮಣಿಸಿದೆ. ಶುಕ್ರವಾರ ಮೊದಲು ಬ್ಯಾಟಿಂಗ್ಗೆ ಇಳಿಸಲ್ಪಟ್ಟ ಐರ್ಲ್ಯಾಂಡ್ ತಂಡ 64 ರನ್ಗೆ ನಾಲ್ಕು ವಿಕೆಟ್ಗಳನ್ನು ಕಳೆದುಕೊಂಡು ಕಳಪೆ ಆರಂಭ ಪಡೆದಿತ್ತು. ನಾಯಕ ಟಕರ್ (94 ರನ್, 51 ಎಸೆತ, 10 ಬೌಂಡರಿ, 4 ಸಿಕ್ಸರ್) ಹಾಗೂ ಗ್ಯಾರೆತ್ ಡೆಲ್ಯಾನಿ (56 ರನ್, 30 ಎಸೆತ, 3 ಬೌಂಡರಿ, 4 ಸಿಕ್ಸರ್) ಐದನೇ ವಿಕೆಟ್ಗೆ 101 ರನ್ ಜೊತೆಯಾಟ ನಡೆಸಿದ ಪರಿಣಾಮ ಚೇತರಿಸಿಕೊಂಡ ಐರ್ಲ್ಯಾಂಡ್ ತಂಡವು ನಿಗದಿತ 20 ಓವರ್ಗಳಲ್ಲಿ 5 ವಿಕೆಟ್ಗಳ ನಷ್ಟಕ್ಕೆ 235 ರನ್ ಗಳಿಸಿತು. ಟಕರ್ ಹಾಗೂ ಜಾರ್ಜ್ ಡೊಕ್ರೆಲ್ (35 ರನ್, 9 ಎಸೆತ, 5 ಸಿಕ್ಸರ್) ಕೇವಲ 19 ಎಸೆತಗಳಲ್ಲಿ 70 ರನ್ ಗಳಿಸಿದರು. ಐರ್ಲ್ಯಾಂಡ್ ಕೊನೆಯ ನಾಲ್ಕು ಓವರ್ಗಳಲ್ಲಿ 86 ರನ್ ಗಳಿಸಿದ್ದು, 235 ರನ್ ಪ್ರಸಕ್ತ ಪಂದ್ಯಾವಳಿಯಲ್ಲಿ ದಾಖಲಾದ ಗರಿಷ್ಠ ಮೊತ್ತವಾಗಿದೆ. ಗೆಲ್ಲಲು 236 ರನ್ ಗುರಿ ಬೆನ್ನಟ್ಟಿದ ಒಮಾನ್ ತಂಡವು 18 ಓವರ್ಗಳಲ್ಲಿ ಕೇವಲ 139 ರನ್ಗೆ ಆಲೌಟಾಯಿತು. ಆಮಿರ್ ಕಲೀಮ್ (50 ರನ್, 29 ಎಸೆತ, 5 ಬೌಂಡರಿ, 2 ಸಿಕ್ಸರ್) ಹಾಗೂ ಹಮ್ಮದ್ ಮಿರ್ಝಾ (46 ರನ್, 37 ಎಸೆತ, 6 ಬೌಂಡರಿ, 1 ಸಿಕ್ಸರ್) ಒಂದಷ್ಟು ಪ್ರತಿರೋಧ ಒಡ್ಡಿದರು. ಆದರೆ ಈ ಇಬ್ಬರು ಔಟಾದ ನಂತರ ಒಮಾನ್ ತಂಡ ಕುಸಿತ ಕಂಡಿತು. ಒಮಾನ್ ತಂಡದ ಎಂಟು ಬ್ಯಾಟರ್ ಗಳು ಎರಡಂಕೆಯನ್ನು ದಾಟುವಲ್ಲಿ ವಿಫಲರಾದರು. ಜೋಶ್ ಲಿಟಲ್ (3–16) ಬೌಲಿಂಗ್ ನೇತೃತ್ವ ವಹಿಸಿದ್ದು, ಮ್ಯಾಥ್ಯೂ ಹಂಫ್ರೆಸ್ (2–27), ಬ್ಯಾರಿ ಮೆಕ್ಕಾರ್ತಿ (2–32) ಹಾಗೂ ಜಾರ್ಜ್ ಡೊಕ್ರೆಲ್ (1–6) ಉತ್ತಮ ಸಾಥ್ ನೀಡಿದರು. ಬೃಹತ್ ರನ್ ಅಂತರದಿಂದ ಗೆಲುವು ದಾಖಲಿಸಿದ ಹೊರತಾಗಿಯೂ ಐರ್ಲ್ಯಾಂಡ್ ತಂಡವು ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿ ಉಳಿದುಕೊಂಡಿದೆ. ಒಮಾನ್ ತಂಡವು ಸತತ ಮೂರನೇ ಪಂದ್ಯದಲ್ಲಿ ಸೋಲುಂಡಿದೆ. ಸಂಕ್ಷಿಪ್ತ ಸ್ಕೋರ್ ಐರ್ಲ್ಯಾಂಡ್: 20 ಓವರ್ಗಳಲ್ಲಿ 235/5 (ಲೋರ್ಕನ್ ಟಕರ್ ಔಟಾಗದೆ 94, ಗ್ಯಾರೆತ್ ಡೆಲ್ಯಾನಿ 56, ಜಾರ್ಜ್ ಡೊಕ್ರೆಲ್ ಔಟಾಗದೆ 35, ಶಕೀಲ್ ಅಹ್ಮದ್ 3–33) ಒಮಾನ್: 18 ಓವರ್ಗಳಲ್ಲಿ 139 ರನ್ಗೆ ಆಲೌಟ್ (ಆಮಿರ್ ಕಲೀಮ್ 50, ಹಮ್ಮದ್ ಮಿರ್ಝಾ 46, ಜೋಶ್ ಲಿಟಲ್ 3–16, ಮ್ಯಾಥ್ಯೂ ಹಂಫ್ರೆಸ್ 2–27, ಬ್ಯಾರಿ ಮೆಕ್ಕಾರ್ತಿ 2–32) ಪಂದ್ಯಶ್ರೇಷ್ಠ: ಲೋರ್ಕನ್ ಟಕರ್.
ಛತ್ತೀಸ್ಗಢ: ಟ್ರಕ್ ಗೆ ಕಾರು ಢಿಕ್ಕಿ | ‘ಕೋಬ್ರಾ’ದ ಮೂವರು ಸಿಬ್ಬಂದಿ, ಕಾರು ಚಾಲಕ ಮೃತ್ಯು
ರಾಯಪುರ, ಫೆ. 14: ರಾಯಪುರದ ಧಮ್ತಾರಿ ಜಿಲ್ಲೆಯ ಖಾಪ್ರಿ ಬೈಪಾಸ್ ರಸ್ತೆಯ ಸಮೀಪ ಶನಿವಾರ ಬೆಳಗ್ಗೆ ಸಂಭವಿಸಿದ ಕಾರು ಅಪಘಾತದಲ್ಲಿ ಕೋಬ್ರಾ (ಕಮಾಂಡೊ ಬೆಟಾಲಿಯನ್ ಫಾರ್ ರೆಸಲ್ಯೂಟ್ ಆ್ಯಕ್ಷನ್) 201 ಬೆಟಾಲಿಯನ್ನ ಮೂವರು ಯೋಧರು ಹಾಗೂ ಕಾರು ಚಾಲಕ ಮೃತಪಟ್ಟಿದ್ದಾರೆ. ಜಗದಲ್ಪುರ (ಬಸ್ತಾರ್)ದಿಂದ ಹಿಂದಿರುಗುತ್ತಿದ್ದ ಕಾರಿನಲ್ಲಿ ಐವರು ಇದ್ದರು. ಕಾರು ಖಾಪ್ರಿ ಬೈಪಾಸ್ನ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ನಿಲ್ಲಿಸಿದ್ದ ಟ್ರಕ್ಗೆ ಢಿಕ್ಕಿಯಾಯಿತು. ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ ಎಂದು ಮೂಲಗಳು ತಿಳಿಸಿವೆ. ‘‘ಮೃತಪಟ್ಟವರನ್ನು ಸಬ್ ಇನ್ಸ್ಪೆಕ್ಟರ್ ಉಮೆದ್ ಸಿಂಗ್, ಹೆಡ್ ಕಾನ್ಸ್ಟೆಬಲ್ ಮುಖೇಶ್ ಕುಮಾರ್, ಕಾನ್ಸ್ಟೆಬಲ್ ರಾಜ್ಕುಮಾರ್ ಹಾಗೂ ಚಾಲಕ ಹೀರಾಲಾಲ್ ನಗರ್ ಎಂದು ಗುರುತಿಸಲಾಗಿದೆ’’ ಎಂದು ಧಮ್ತಾರಿ ಎಸ್ಪಿ ಸೂರಜ್ ಸಿಂಗ್ ಪರಿಹಾರ್ ಹೇಳಿದ್ದಾರೆ. ಅಪಘಾತದಲ್ಲಿ ಯೋಧ ಅಭಿಮಾನ್ ರಾಯ್ ಅವರ ಸ್ಥಿತಿ ಚಿಂತಾಜನಕವಾಗಿದೆ. ಅವರಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿದ ಬಳಿಕ ರಾಯಪುರದ ಆಸ್ಪತ್ರೆಗೆ ಕೊಂಡೊಯ್ದು ದಾಖಲಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಮೂಡ್ಲಕಟ್ಟೆ ಎಂಐಟಿಯಲ್ಲಿ ಎಐ, ಡ್ರೋನ್, ರೋಬೊಟೆಕ್ಸ್ ಸ್ಮಾರ್ಟ್ ಕೇಂದ್ರ ಉದ್ಘಾಟನೆ
ಕುಂದಾಪುರ, ಫೆ.14: ಮೂಡ್ಲಕಟ್ಟೆ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಎಂಐಟಿ) ಸಂಸ್ಥೆಯ ಸಂಶೋಧನಾ ವಿಭಾಗದ ಅಡಿಯಲ್ಲಿ ಕೃತಕ ಬುದ್ಧಿಮತ್ತೆ (ಎಐ), ಡ್ರೋನ್ ಹಾಗೂ ರೋಬೋಟಿಕ್ಸ್ ಸ್ಮಾರ್ಟ್ ಇನೋವೇಶನ್ ಕೇಂದ್ರವನ್ನು ಜಪಾನಿನ ಕೆಟಿಸಿ ಹೋಲ್ಡಿಂಗ್ನ ಏಷ್ಯಾ ಬ್ಯುಸಿನೆಸ್ ಹೆಡ್ ತಾಕೇಶಿ ಒಗುರಾ ಉದ್ಘಾಟಿಸಿದರು. ಕೇಂದ್ರವನ್ನು ಸಂಸ್ಥೆಯ ಸಂಶೋಧನೆ ಹಾಗೂ ಸಲಹಾ ವಿಭಾಗದ ಡೀನ್ ಡಾ. ಇಂದ್ರ ವಿಜಯ್ ಸಿಂಗ್ ಮುನ್ನಡೆಸಲಿ ದ್ದಾರೆ. ಇಲ್ಲಿ ಉದಯೋನ್ಮುಖ ಸಂಶೋಧಕರಿಗೆ ತಂತ್ರಜ್ಞಾನಗಳಲ್ಲಿ ಉನ್ನತ ಸಂಶೋಧನೆ, ನವೀನತೆ ಹಾಗೂ ಕೈಗಾರಿಕಾ ಸಹಕಾರವನ್ನು ಉತ್ತೇಜಿಸುವ ಉದ್ದೇಶ ಹೊಂದಿದೆ. ಅತಿಥಿಯಾಗಿ ಭಾಗವಹಿಸಿದ್ದ ಟೆಟಿಸಿಎಚ್ನ ಸಹಸಂಸ್ಥಾಪಕ ಹಾಗೂ ಸಿಇಒ ಅನಿಲ್ ಬಸೋತ್ರ ವಿದ್ಯಾರ್ಥಿಗಳಿಗೆ ಜಾಗತಿಕ ಪರಿಚಯ ಮತ್ತು ಉದ್ಯೋಗ ಅವಕಾಶಗಳನ್ನು ಕಲ್ಪಿಸುವ ಬಗ್ಗೆ ಮಾತನಾಡಿದರು. ವಿಷನ್ ಡಿಜಿಟಲ್ ಇಂಡಿಯಾದ ಅಧ್ಯಕ್ಷ ಡಾ.ಹರಿಕೃಷ್ಣ ಮರಂ ಮಾತನಾಡಿ, ಡಿಜಿಟಲ್ ಇಂಡಿಯಾ ದೃಷ್ಟಿಕೋನಕ್ಕೆ ಹೊಂದಿಕೊಳ್ಳು ವಂತೆ ತಿಳಿಸಿದಲ್ಲದೇ, ಕೃತಕ ಬುದ್ಧಿಮತ್ತೆ ಆಧಾರಿತ ನವೀನತೆಗೆ ಭಾರತದಲ್ಲಿರುವ ಅವಕಾಶಗಳ ಬಗ್ಗೆ ವಿವರಿಸಿದರು. ಐಎಂಜೆ ಸಂಸ್ಥೆಗಳ ಶೈಕ್ಷಣಿಕ ನಿರ್ದೇಶಕ ಡಾ.ಎಸ್.ಎನ್. ಭಟ್ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆಯ ಪ್ರಾಂಶುಪಾಲ ಡಾ.ರಾಮಕೃಷ್ಣ ಹೆಗಡೆ ವಹಿಸಿದ್ದರು. ಸ್ಮಾರ್ಟ್ ಇನೋವೇಶನ್ ಕೇಂದ್ರದ ಸಮಗ್ರ ಅವಲೋಕನವನ್ನು ಸ್ರಜನ್ ಕುಲಾಲ್ ನೀಡಿದರು. ಎಐಎಂಎಲ್ ವಿಭಾಗದ ಪ್ರಾಧ್ಯಾಪಕಿ ಶ್ರೀನಿಧಿ ಸ್ವಾಗತಿಸಿದರೆ, ವಿದ್ಯಾರ್ಥಿ ಕಲ್ಯಾಣ ವಿಭಾಗದ ಡೀನ್ ಅಕ್ಷತಾ ನಾಯಕ್ ಹಾಗೂ ಪ್ರಾದ್ಯಾಪಕಿ ಸುಷ್ಮ ಶೆಟ್ಟಿ ಅತಿಥಿಗಳನ್ನು ಪರಿಚಯಿಸಿದರು. ದಿಲೀಪ್ ಕಾರ್ಯಕ್ರಮ ನಿರೂಪಿಸಿದರು.
ಉಡುಪಿ, ಫೆ.14: ಭಾರತೀಯ ಆಯುರ್ವೇದ ಪದ್ಧತಿಯಲ್ಲಿ ವೈದ್ಯಕೀಯ ಶಿಕ್ಷಣ ಕಲಿಯುತ್ತಿರುವ ವಿದ್ಯಾರ್ಥಿಗಳ ಅಧ್ಯಯನ ಹಾಗೂ ಸಂಶೋಧನೆಗಾಗಿ ವ್ಯಕ್ತಿಯೊಬ್ಬರು ಉದ್ಯಾವರ ಕುತ್ಪಾಡಿಯಲ್ಲಿರುವ ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಮಹಾವಿದ್ಯಾಲಯದ ಶರೀರ ರಚನಾ ವಿಭಾಗಕ್ಕೆ ತಮ್ಮ ದೇಹದಾನ ಮಾಡಿದ್ದಾರೆ. ಕೋಟೇಶ್ವರದ ವಸತಿ ಸಮುಚ್ಛಯವೊಂದರಲ್ಲಿ ವಾಸವಾಗಿರುವ ಅನಂತಪದ್ಮನಾಭ (69) ಅವರೇ ಈ ವ್ಯಕ್ತಿಯಾಗಿದ್ದಾರೆ. ಮೃತರ ಸ್ವಇಚ್ಛೆಯಂತೆ ಅವರ ಕುಟುಂಬದವರು ಅನಂತ ಪದ್ಮನಾಭರ ದೇಹವನ್ನು ಎಸ್ಡಿಎಂ ಆಯುರ್ವೇದ ಕಾಲೇಜಿಗೆ ದಾನ ಮಾಡಿದ್ದಾರೆ. ಎಸ್.ಡಿ.ಎಂ. ವಿದ್ಯಾಸಂಸ್ಥೆಗೆ ನೀಡಿರುವ ಈ ಶ್ರೇಷ್ಠ ಕೊಡುಗೆ ಇತರರಿಗೂ ಮಾದರಿಯಾಗಿದೆ. ಮೃತರ ಆತ್ಮಕ್ಕೆ ಶಾಂತಿ ಸಿಗಲೆಂದು ಕಾಲೇಜಿನ ಪ್ರಾಂಶುಪಾಲರಾದ ಡಾ. ಮಮತಾ ಕೆ.ವಿ. ಪ್ರಾರ್ಥಿಸಿ, ಶರೀರ ರಚನಾ ವಿಭಾಗದ (ಅನಾಟಮಿ) ಸಂಶೋಧನೆಗಾಗಿ ವಿಭಾಗ ಮುಖ್ಯಸ್ಥರಾದ ಡಾ. ಕೃಷ್ಣಮೂರ್ತಿ ಎನ್. ಅವರಿಗೆ ದೇಹವನ್ನು ಹಸ್ತಾಂತರಿಸಿದರು.
Bank Locker Theft Case- ಬೆಟ್ಟಿಂಗ್ ಚಟ ವ್ಯಕ್ತಿಯನ್ನು ಎಲ್ಲಿವರೆಗೆ ತೆಗೆದುಕೊಂಡು ಹೋಗುತ್ತದೆ ನೋಡಿ. ಇದರ ದಾಸ್ಯಕ್ಕೆ ಬಿದ್ದ ಬ್ಯಾಂಕ್ ನ ಸಹಾಯಕ ಮ್ಯಾನೇಜರ್ ಒಬ್ಬ ತಾನು ಕೆಲಸ ಮಾಡುತ್ತಿದ್ದ ಬ್ಯಾಂಕ್ ಶಾಖೆಯ ಲಾಕರ್ ಗಳಲ್ಲಿದ್ದ ಗ್ರಾಹಕರ ಚಿನ್ನಾಭರರಣಗಳನ್ನು ಕದ್ದು ಬೇರೆಡೆ ಅಡವಿಟ್ಟಿದ್ದ ಘಟನೆ ಬೆಂಗಳೂರು ನಗರದಲ್ಲಿ ನಡೆದಿದೆ. ಗಿರಿನಗರದ ಖಾಸಗಿ ಬ್ಯಾಂಕ್ ಶಾಖೆಯಲ್ಲಿ ಇಂತಹದ್ದೊಂದು ಬೆಚ್ಚಿ ಬೀಳಿಸುವ ಘಟನೆ ನಡೆದಿದ್ದು ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. 4.12 ಕೋಟಿಗೂ ಅಧಿಕ ಮೌಲ್ಯದ ಚಿನ್ನವನ್ನು ಬೇರೆ ಬೇರೆ ಲಾಕರ್ ಗಳಿಂದ ಎಗರಿಸಲಾಗಿತ್ತು ಎಂದು ತಿಳಿದು ಬಂದಿದೆ.
ನಟಿ ಕಾವ್ಯಾ ಗೌಡ ಹಾಗೂ ಪತಿ ವಿರುದ್ಧದ FIR, ತನಿಖೆಗೆ ಕರ್ನಾಟಕ ಹೈಕೋರ್ಟ್ ಮಧ್ಯಂತರ ತಡೆ!
ನಟಿ ಕಾವ್ಯಾ ಗೌಡ ಮತ್ತು ಪತಿ ಸೋಮಶೇಖರ್ ವಿರುದ್ಧದ ಪೊಲೀಸ್ ತನಿಖೆಗೆ ಹಾಗೂ ಎಫ್ಐಆರ್ಗೆ ಕರ್ನಾಟಕ ಹೈಕೋರ್ಟ್ ತಡೆ ನೀಡಿದೆ. ನ್ಯಾ. ಎಂ.ನಾಗಪ್ರಸನ್ನ ಅವರ ಏಕ ಸದಸ್ಯ ಪೀಠದಿಂದ ಈ ಆದೇಶ ಮಾಡಲಾಗಿದೆ. ಕಾವ್ಯ ಗೌಡ ಅವರು ನೀಡಿದ ದೂರಿಗೆ ಪ್ರತಿಯಾಗಿ ದೂರು ಸಲ್ಲಿಸಲಾಗಿದೆ ಎಂದು ನ್ಯಾಯಾಲಯದ ಗಮನಕ್ಕೆ ವಕೀಲರು ತಂದಿದ್ದರು. ಈ ಬಗ್ಗೆ ವಿವರ ಇಲ್ಲಿದೆ.
ರೈತರಿಂದ 1.93 ಕೋಟಿ ರೂ.ಮೌಲ್ಯದ ಭತ್ತ ಖರೀದಿ ಮಾಡಿ ದಲ್ಲಾಳಿ ನಾಪತ್ತೆ; ರೈತರಿಂದ ಹೆಚ್ಚುವರಿ ಎಸ್ಪಿಗೆ ದೂರು
ಯಾದಗಿರಿ: ರೈತರನ್ನು ನಂಬಿಸಿ ಅವರಲ್ಲಿದ್ದ 1.93 ಕೋಟಿ ರೂ. ಮೌಲ್ಯದ 12,921 ಪಾಕೆಟ್ ಭತ್ತ ಖರೀದಿಸಿದ ದಲ್ಲಾಳಿಯೊಬ್ಬರು ಈಗ ನಾಪತ್ತೆಯಾಗಿದ್ದು, ಅವರನ್ನು ಕೂಡಲೇ ಬಂಧಿಸಿ ತಮಗೆ ಬರಬೇಕಾದ ಹಣ ದೊರಕಿಸಿಕೊಡುವಂತೆ ಹುಣಸಗಿ ತಾಲೂಕಿನ ಬೈಚಬಾಳ, ಕೂಡಲಗಿ, ಕರಡಕಲ್ ಗ್ರಾಮಗಳ 40 ರೈತರು ಶನಿವಾರ ಸಂಜೆ ಹೆಚ್ಚವರಿ ಎಸ್ ಪಿ ಧರಣೇಶ್ ಅವರಿಗೆ ದೂರು ನೀಡಿದ್ದಾರೆ. ಕಡಕಲ್ ಕ್ಯಾಂಪಿನ ಶ್ರೀನಿವಾಸರೆಡ್ಡಿ ಸತ್ಯನಾರಾಯಣ ಎಂಬ ದಲ್ಲಾಳಿ ರೈತರಿಗೆ ದೊಡ್ಡಮಟ್ಟದಲ್ಲಿ ಮೋಸ ಮಾಡಿದ ಪ್ರಮುಖ ಆರೋಪಿಯಾಗಿದ್ದಾನೆ. ದಲ್ಲಾಳಿಗಳಾದ ಕನ್ನಳ್ಳಿ ಕ್ಯಾಂಪಿನ ಪ್ರಸಾದ, ಪ್ರೇಮರೆಡ್ಡಿ, ಕೊಂಡಯ್ಯ, ವೆಂಕಿ, ಮುರಳಿ, ತ್ರಿಮೂರ್ತಿರೆಡ್ಡಿ ಕೂಡ ಇದರಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಲಾಗಿದೆ. ಶನಿವಾರ ಸಂಜೆ ಬೈಚಬಾಳದ ಸುಮಾರು ನಲವತ್ತು ಜನ ರೈತರು, ಹೆಚ್ಚುವರಿ ಎಸ್ ಪಿ ಧರಣೇಶ್ ಅವರನ್ನು ಭೇಟಿ ಮಾಡಿ ದೂರು ನೀಡಿ, ಸಮಗ್ರ ಮಾಹಿತಿ ವಿವರಿಸಿದ್ದಾರೆ. ಆಗಿದ್ದೆನು? ಪ್ರತಿ ವರ್ಷವೂ ಈ ರೈತರಿಂದ ಭತ್ತ ಖರೀಸಿ ದಳ್ಳಾಳಿಗಳು ತಿಂಗಳ ನಂತರ ಹಣ ತಲುಪಿಸುತ್ತಿದ್ದರು. ಈ ದಲ್ಲಾಳಿಗಳು, ಕಳೆದ ಎರಡು ತಿಂಗಳ ಹಿಂದೇ ಆಗಮಿಸಿ ರೈತರನ್ನು ಭೇಟಿ ಮಾಡಿ ಭತ್ತ ಖರೀದಿಸಿ ಅದಕ್ಕೆ ಸ್ವಲ್ಪ ಹೆಚ್ಚಿನ ದರ ನಿಗದಿಗೊಳಿಸಿ ಒಟ್ಟು 1.93 ಕೋಟಿ ರೂ. ಮೌಲ್ಯದ 12,921 ಪಾಕೆಟ್ ಭತ್ತವನ್ನು 35 ಲಾರಿಗಳಲ್ಲಿ ತುಂಬಿಕೊಂಡು ಹೋಗಿದ್ದಾರೆ. ಐದಾರು ವರ್ಷಗಳಿಂದ ಇವರೇ ಖರೀದಿಸಿ ನಂತರ ಪ್ರಮಾಣಿಕವಾಗಿ ದುಡ್ಡು ಕೊಡುತ್ತಿದ್ದರು. ಇದರಿಂದಾಗಿ ಶ್ರೀನಿವಾಸರೆಡ್ಡಿ ಮತ್ತು ಇತರರನ್ನು ನಂಬಿ ರೈತರು ಮಾರಾಟ ಮಾಡಿದ್ದಾರೆ. ಹಣ ಕೊಡುವ ಸಮಯ ಬಂದಾಗ ಶ್ರೀನಿವಾಸರೆಡ್ಡಿ ಅವರನ್ನು ಸಂಪರ್ಕಿಸಿದಾಗ ಆತ ಲಭ್ಯವಾಗಿಲ್ಲ. ಆಗ ಉಳಿದವರಿಗೆ ವಿಚಾರಿಸಿದಾಗ ಅವರು ಎಲ್ಲಿದ್ದಾರೋ ಗೊತ್ತಿಲ್ಲ ಮತ್ತು ಕೇವಲ 15 ಲಾರಿ ಭತ್ತದ ಬಗ್ಗೆ ತಮಗೆ ಮಾಹಿತಿ ಇದೆ. ಅವರು ಬಂದ ನಂತರವೇ ಹಣದ ಲೆಕ್ಕಪತ್ರ ಮಾಡುವುದಾಗಿ ಕನ್ನಳ್ಳಿ ಕ್ಯಾಂಪಿನಲ್ಲಿ ಇರುವ ಈ ದಲ್ಲಾಳಿಗಳು ಹೇಳುತ್ತಾ ಕಾಲಹರಣ ಮಾಡುತ್ತಿದ್ದಾರೆಂದು ದೂರಿನಲ್ಲಿ ರೈತರು ಆರೋಪಿಸಿದ್ದಾರೆ. ಎರಡು ತಿಂಗಳಿಂದಲ್ಲೂ ನಾಪತ್ತೆಯಾಗಿರುವ ದಲ್ಲಾಳಿ ಶ್ರೀನಿವಾಸರೆಡ್ಡಿ ಎಂಬುವವನ ವಿರುದ್ದ ಕೆಂಭಾವಿ ಪೊಲೀಸ್ ಠಾಣೆಯಲ್ಲಿ ಕಳೆದ ಫೆ. 2ರಂದೇ ದೂರು ನೀಡಿದರೂ ಸಹ ಇಲ್ಲಿಯವರೆಗೂ ಅಧಿಕಾರಿಗಳು ಯಾವುದೇ ಕ್ರಮಕ್ಕೆ ಮುಂದಾಗದೇ ಉಡಾಪೆ ಉತ್ತರ ನೀಡುತ್ತಿದ್ದಾರೆಂದು ದೂರಿನಲ್ಲಿ ರೈತರು ಆರೋಪಿಸಿದ್ದಾರೆ.
T20 ವಿಶ್ವಕಪ್ | ಕೊಲಂಬೊದ ಅಂಗಳದಲ್ಲಿ ಬಹು ನಿರೀಕ್ಷಿತ ಇಂಡೋ–ಪಾಕ್ ಸಮರ: ಸ್ಪಿನ್ನರ್ ಗಳ ಮೇಲೆ ಎಲ್ಲರ ಕಣ್ಣು
ಕೊಲಂಬೊ, ಫೆ.14: ಎಲ್ಲ ಗದ್ದಲದ ನಂತರ ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಹಾಗೂ ಪಾಕಿಸ್ತಾನ ಕ್ರಿಕೆಟ್ ತಂಡಗಳ ನಡುವಿನ ಟಿ–20 ವಿಶ್ವಕಪ್ ಟೂರ್ನಿಯ ‘ಎ’ ಗುಂಪಿನ ಪಂದ್ಯವು ನಿಗದಿಯಂತೆ ಆರ್. ಪ್ರೇಮದಾಸ ಸ್ಟೇಡಿಯಂನಲ್ಲಿ ರವಿವಾರ ನಡೆಯಲಿದೆ. ಆದರೆ ಈ ಪಂದ್ಯಕ್ಕೆ ಮಳೆ ಅಡ್ಡಿಯಾಗುವ ಭೀತಿ ಇದೆ. ಪ್ರೇಮದಾಸ ಸ್ಟೇಡಿಯಂನ ಮಂದಗತಿಯ ಪಿಚ್ ಉಭಯ ದೇಶಗಳ ಸ್ಪಿನ್ನರ್ಗಳ ನಡುವಿನ ಹೋರಾಟಕ್ಕೆ ಸಾಕ್ಷಿಯಾಗಬಹುದು. ಪಾಕಿಸ್ತಾನದ ಪ್ರಮುಖ ವೇಗದ ಬೌಲರ್ ಶಾಹೀನ್ ಶಾ ಅಫ್ರಿದಿ ಪ್ರಸಕ್ತ ಟಿ–20 ವಿಶ್ವಕಪ್ನಲ್ಲಿ ತನ್ನ ಶ್ರೇಷ್ಠ ಪ್ರದರ್ಶನ ನೀಡಿಲ್ಲ. ಅಮೆರಿಕ ತಂಡದ ವಿರುದ್ಧ ನೀರಸ ಪ್ರದರ್ಶನ ನೀಡಿದ್ದ ಎಡಗೈ ವೇಗಿ ಅಫ್ರಿದಿ ಭಾರತದ ಆರಂಭಿಕ ಆಟಗಾರ ಅಭಿಷೇಕ್ ಶರ್ಮಾಗೆ ಸವಾಲೊಡ್ಡುವ ನಿರೀಕ್ಷೆ ಇದೆ. ಅಭಿಷೇಕ್ ಹಾಗೂ ಅಫ್ರಿದಿ ಏಷ್ಯಾಕಪ್ನಲ್ಲಿ ಮುಖಾಮುಖಿಯಾಗಿದ್ದರು. ಅಭಿಷೇಕ್ ಮೊದಲ ಎಸೆತವನ್ನು ಸಿಕ್ಸರ್ಗೆ ಸಿಡಿಸಿದ್ದರು. ಇದೀಗ ಅಭಿಷೇಕ್ ಅನಾರೋಗ್ಯದಿಂದ ಚೇತರಿಸಿಕೊಂಡಿದ್ದು, ಆಡುವ 11ರ ಬಳಗಕ್ಕೆ ವಾಪಸಾಗಲು ಸಜ್ಜಾಗಿದ್ದಾರೆ. ಪಾಕಿಸ್ತಾನ ತಂಡವು ಶುಕ್ರವಾರ ತೀವ್ರ ನೆಟ್ ಅಭ್ಯಾಸ ನಡೆಸಿದ್ದು, ಎಲ್ಲ ಸ್ಪಿನ್ನರ್ಗಳು ದೀರ್ಘ ಸಮಯ ಬೌಲಿಂಗ್ ಅಭ್ಯಾಸ ನಡೆಸಿದ್ದರು. ಅಬ್ರಾರ್ ಅಹ್ಮದ್ ಹಾಗೂ ಶಾದಾಬ್ ಖಾನ್ ಅವರು ಎಡಗೈ ಬ್ಯಾಟರ್ಗಳಾದ ಸಯೀಮ್ ಅಯ್ಯೂಬ್ ಹಾಗೂ ಫಖರ್ ಝಮಾನ್ಗೆ ಬೌಲಿಂಗ್ ಮಾಡಿದ್ದರು. ಉಸ್ಮಾನ್ ತಾರಿಕ್ ಹಾಗೂ ಮುಹಮ್ಮದ್ ನವಾಝ್ ಅವರು ಸಾಹಿಬ್ಝದಾ ಫರ್ಹಾನ್, ಉಸ್ಮಾನ್ ಖಾನ್ ಹಾಗೂ ಸಲ್ಮಾನ್ ಅಲಿಗೆ ಬೌಲಿಂಗ್ ಮಾಡಿದ್ದಾರೆ. ಸ್ಪಿನ್ನರ್ ತಾರಿಕ್ ಬೌಲಿಂಗ್ ಶೈಲಿಯು ಟಿ–20 ವಿಶ್ವಕಪ್ ಆರಂಭವಾಗುವ ಮೊದಲೆ ಚರ್ಚೆಯ ಕೇಂದ್ರಬಿಂದುವಾಗಿತ್ತು. 28ರ ವಯಸ್ಸಿನ ತಾರಿಕ್ ಶುಕ್ರವಾರ ಎರಡು ಗಂಟೆಗಳ ಕಾಲ ಪಾಕಿಸ್ತಾನದ ಬಹುತೇಕ ಎಲ್ಲ ಬ್ಯಾಟರ್ಗಳಿಗೆ ಬೌಲಿಂಗ್ ಮಾಡಿದ್ದಾರೆ. ಪಾಕಿಸ್ತಾನ ತಂಡವು ಈ ತನಕ ‘ಎ’ ಗುಂಪಿನ ಪಂದ್ಯಗಳಿಗಾಗಿ ಶ್ರೀಲಂಕಾ ಬಿಟ್ಟು ಬೇರೆಲ್ಲೂ ಪ್ರಯಾಣಿಸಿಲ್ಲ. ಹೀಗಾಗಿ ಅಲ್ಲಿನ ವಾತಾವರಣಕ್ಕೆ ಒಗ್ಗಿಕೊಂಡಿದೆ. ಪ್ರಸಕ್ತ ವಿಶ್ವಕಪ್ನಲ್ಲಿ ಮೊದಲ ಬಾರಿ ಪ್ರೇಮದಾಸ ಸ್ಟೇಡಿಯಂನಲ್ಲಿ ಪಾಕಿಸ್ತಾನ ತಂಡವು ಟಿ–20 ಪಂದ್ಯ ಆಡುತ್ತಿದೆ. ಪಾಕಿಸ್ತಾನ ತಂಡವು ನೆರೆಯ ಸಿಂಹಳೀಸ್ ಸ್ಪೋರ್ಟ್ಸ್ ಕ್ಲಬ್ ಮೈದಾನದಲ್ಲಿ ಸತತ ಎರಡು ಪಂದ್ಯಗಳನ್ನು ಗೆದ್ದುಕೊಂಡಿದೆ. ಭಾರತ ತಂಡವು ಈ ತನಕ ಮುಂಬೈನ ವಾಂಖೆಡೆ ಸ್ಟೇಡಿಯಂ ಹಾಗೂ ದಿಲ್ಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಆಡಿದೆ. ಈ ಎರಡು ನಿಧಾನಗತಿಯ ಪಿಚ್ಗಳಲ್ಲಿ ಭಾರತ ತಂಡವು ಗೆಲುವು ದಾಖಲಿಸಿದೆ. ಪ್ರೇಮದಾಸ ಸ್ಟೇಡಿಯಂನಲ್ಲಿ ಈ ತನಕ ಆಡಿರುವ ಮೂರು ಪಂದ್ಯಗಳಲ್ಲಿ 20 ವಿಕೆಟ್ಗಳು ಸ್ಪಿನ್ನರ್ಗಳ ಪಾಲಾಗಿವೆ. ಕಳೆದ ವಾರ ಶ್ರೀಲಂಕಾ ಹಾಗೂ ಐರ್ಲ್ಯಾಂಡ್ ನಡುವಿನ ಪಂದ್ಯದಲ್ಲಿ 10 ವಿಕೆಟ್ಗಳು ಪತನಗೊಂಡಿದ್ದವು. ಈ ಮೂರು ಪಂದ್ಯಗಳಲ್ಲಿ ಮೊದಲ ಇನಿಂಗ್ಸ್ನ ಸರಾಸರಿ ಮೊತ್ತ 170. ಝಿಂಬಾಬ್ವೆ ತಂಡವು ಶುಕ್ರವಾರ ಪ್ರೇಮದಾಸ ಸ್ಟೇಡಿಯಂನಲ್ಲಿ ನಡೆದಿದ್ದ ವಿಶ್ವಕಪ್ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವನ್ನು 23 ರನ್ಗಳ ಅಂತರದಿಂದ ಮಣಿಸಿ ಶಾಕ್ ನೀಡಿತ್ತು. ವೇಗದ ಬೌಲರ್ ಬ್ಲೆಸ್ಸಿಂಗ್ ಮುಝರ್ಬಾನಿ (4–17) ಯಶಸ್ವಿ ಪ್ರದರ್ಶನ ನೀಡಿದ್ದು ವಿಶೇಷವಾಗಿತ್ತು. ಮುಝರ್ಬಾನಿ ಹಾಗೂ ಇನ್ನೋರ್ವ ವೇಗಿ ಬ್ರಾಡ್ ಇವಾನ್ಸ್ (3–17) ಏಳು ವಿಕೆಟ್ಗಳನ್ನು ಹಂಚಿಕೊಂಡಿದ್ದರು. ‘‘ರವಿವಾರದ ಪಂದ್ಯದಲ್ಲಿ ಸ್ಪಿನ್ನರ್ಗಳು ಪ್ರಮುಖ ಪಾತ್ರವಹಿಸಬಹುದು’’ ಎಂದು ಪಂದ್ಯಪೂರ್ವ ಪತ್ರಿಕಾಗೋಷ್ಠಿಯಲ್ಲಿ ಪಾಕಿಸ್ತಾನದ ನಾಯಕ ಸಲ್ಮಾನ್ ಅಲಿ ಸುಳಿವು ನೀಡಿದ್ದಾರೆ. ಪಾಕಿಸ್ತಾನವು ಐವರು ಸ್ಪಿನ್ನರ್ಗಳಾದ ಅಬ್ರಾರ್, ತಾರಿಕ್, ನವಾಝ್, ಶಾದಾಬ್ ಹಾಗೂ ಅಯ್ಯೂಬ್ರನ್ನು ಭಾರತ ತಂಡದ ವಿರುದ್ಧ ಪಂದ್ಯದಲ್ಲಿ ಕಣಕ್ಕಿಳಿಸುವ ಸಾಧ್ಯತೆ ಇದೆ. ಕೊಲಂಬೊ ಪಿಚ್ ಹಾಗೂ ಅಲ್ಲಿನ ವಾತಾವರಣವು ಭಾರತ ತಂಡವು ಆಡುವ 11ರ ಬಳಗದಲ್ಲಿ ಬದಲಾವಣೆ ಮಾಡಬೇಕಾದ ಅನಿವಾರ್ಯತೆ ಸೃಷ್ಟಿಸಿದೆ. ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ ಅವರು ಸಂಜು ಸ್ಯಾಮ್ಸನ್ ಬದಲಿಗೆ ಇನಿಂಗ್ಸ್ ಆರಂಭಿಸುವ ಸಾಧ್ಯತೆಯಿದೆ. ಭಾರತ ತಂಡವು ಈಗಿನ ಬೌಲಿಂಗ್ ದಾಳಿಯನ್ನು ಕಣಕ್ಕಿಳಿಸುವುದೇ? ಅಥವಾ ಕುಲದೀಪ್ ಯಾದವ್ರನ್ನು ಸೇರಿಸಿಕೊಳ್ಳುವುದೇ? ಎಂಬ ಕುತೂಹಲ ಎಲ್ಲರಲ್ಲಿದೆ. ಎಡಗೈ ಸ್ಪಿನ್ನರ್ ಯಾದವ್ ಪಾಕಿಸ್ತಾನದ ವಿರುದ್ಧ ಉತ್ತಮ ದಾಖಲೆ ಹೊಂದಿದ್ದು, ಏಷ್ಯಾಕಪ್ ಪಂದ್ಯಾವಳಿಯಲ್ಲಿ ಎಲ್ಲ ಮೂರು ಪಂದ್ಯಗಳಲ್ಲಿ ಒಟ್ಟು ಎಂಟು ವಿಕೆಟ್ಗಳನ್ನು ಉರುಳಿಸಿದ್ದರು. ಯಾದವ್ರನ್ನು ಆಡುವ 11ರ ಬಳಗಕ್ಕೆ ಸೇರಿಸಿಕೊಳ್ಳಲು ರಿಂಕು ಸಿಂಗ್ ಅಥವಾ ಅರ್ಷದೀಪ್ ಸಿಂಗ್ರನ್ನು ಕೈಬಿಡಬೇಕು. ರಿಂಕು ಸಿಂಗ್ ಬದಲಿಗೆ 8ನೇ ಕ್ರಮಾಂಕದಲ್ಲಿ ವಾಶಿಂಗ್ಟನ್ ಸುಂದರ್ರನ್ನು ಆಡಿಸುವ ಮತ್ತೊಂದು ಆಯ್ಕೆ ಇದೆ. ಬಹು ನಿರೀಕ್ಷಿತ ಪಂದ್ಯಕ್ಕೆ ಮಳೆ ಭೀತಿ ಬಹು ನಿರೀಕ್ಷಿತ ಭಾರತ ಹಾಗೂ ಪಾಕಿಸ್ತಾನ ನಡುವಿನ ಟಿ–20 ವಿಶ್ವಕಪ್ ಪಂದ್ಯಕ್ಕೆ ಗುಡುಗು ಸಹಿತ ಮಳೆ ಅಡ್ಡಿಯಾಗುವ ಸಾಧ್ಯತೆಯಿದೆ. ರವಿವಾರ ಗುಡುಗು ಸಹಿತ ಮಳೆಯಾಗುವ ಮುನ್ಸೂಚನೆಗಳು ಲಭಿಸಿವೆ. ಮಧ್ಯಾಹ್ನ ಹಾಗೂ ಸಂಜೆ ಮಳೆಯಾಗುವ ಸಾಧ್ಯತೆಯು ಸುಮಾರು 55ರಿಂದ 60 ಪ್ರತಿಶತದಷ್ಟು ಇದೆ.
ಉಡುಪಿ| ಯುವ ಕಾಂಗ್ರೆಸ್ ಮುಖಂಡನಿಗೆ ಹಲ್ಲೆಗೈದ ಪ್ರಕರಣ: ಐವರು ಆರೋಪಿಗಳ ಬಂಧನ
ಉಡುಪಿ, ಫೆ.14: ಕ್ಷುಲ್ಲಕ ಕಾರಣಕ್ಕೆ ಎನ್ಎಸ್ ಯು ಐ ಜಿಲ್ಲಾ ನಾಯಕ ಶರತ್ ಕುಂದರ್ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಉಡುಪಿ ನಗರ ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ಕುಂಜಿಬೆಟ್ಟು ನಿವಾಸಿ ಅಕ್ಷತ್ ಪೈ (27), ಸುಶಾಂತ್ (25), ರಮಾನಂದ ಪೈ (42), ಸಂತೋಷ್ ಕೊರಗ (38), ಅಲೆವೂರು ನಿವಾಸಿ ಶಂಶಾಂಕ್ ನಾಯಕ್ (25) ಎಂದು ಗುರುತಿಸಲಾಗಿದೆ. ಆರೋಪಿಗಳು ಕೃತ್ಯಕ್ಕೆ ಬಳಸಿದ ಕಾರು ಹಾಗೂ ಎರಡು ಮೊಬೈಲ್ ಫೋನ್ಗಳನ್ನು ಪೊಲೀಸರು ವಶಪಡಿಸಿಕೊಂಡಿ ದ್ದಾರೆ. ಬಂಧಿತ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಜ.30ರಂದು ರಾತ್ರಿ 9 ಗಂಟೆ ಸುಮಾರಿಗೆ ಚಿಟ್ಟಾಡಿ ಬೈಲೂರು ಬಡಗುಬೆಟ್ಟು ನಿವಾಸಿ ಶರತ್ ಕುಂದರ್(25) ತಮ್ಮ ಸ್ನೇಹಿತನ ಕಾರಿನಲ್ಲಿ ಮಣಿಪಾಲದ ಹೋಟೆಲ್ಗೆ ಊಟಕ್ಕೆ ತೆರಳಿದ್ದರು. ಅಲ್ಲಿ ಅಕ್ಷತ್ ಪೈ, ಶಶಾಂಕ್ ಹಾಗೂ ಉಡುಪಿಯ ರಾಧಾಕೃಷ್ಣ ಜನರಲ್ ಸ್ಟೋರ್ ಮಾಲಕರ ಮಗನೊಂದಿಗೆ ಸಣ್ಣ ವಿಚಾರಕ್ಕೆ ಸಂಬಂಧಿಸಿ ಮಾತಿನ ಚಕಮಕಿ ನಡೆದಿದೆ. ನಂತರ ಶರತ್ ಕುಂದರ್ ಮನೆಗೆ ವಾಪಸ್ಸಾಗುತ್ತಿದ್ದಾಗ ಕಲ್ಸಂಕ ಬಳಿ ತಲುಪುವ ಸಂದರ್ಭ ಅಕ್ಷತ್ ಪೈ ಕರೆ ಮಾಡಿ, ಹೋಟೆಲಿನ ಗಲಾಟೆ ವಿಚಾರವಾಗಿ ಮಾತನಾಡಲು ಪಿಪಿಸಿ ಕ್ರಾಸ್ ಬಳಿ ನಿಲ್ಲುವಂತೆ ತಿಳಿಸಿದ್ದಾನೆ. ರಾತ್ರಿ ಸುಮಾರು 11.30ರ ವೇಳೆಗೆ ಪಿಪಿಸಿ ಕ್ರಾಸ್ ಸಮೀಪ ರಸ್ತೆಯ ಬದಿಯಲ್ಲಿ ಶರತ್ ಕುಂರ್ದ ತಮ್ಮ ಸ್ನೇಹಿತರಾದ ಧ್ರುವಾ, ಸಿಲಾನ್ ಗಗನ್ ಹಾಗೂ ರೋಹಿತ್ ಜೊತೆ ಮಾತನಾಡುತ್ತ ನಿಂತಿದ್ದ ವೇಳೆ ಎರಡು ವಾಹನಗಳು ಏಕಾಏಕಿ ಬಂದು ನಿಂತಿವೆ. ವಾಹನಗಳಿಂದ ಇಳಿದ ಅಕ್ಷತ್ ಪೈ, ಶಶಾಂಕ್ ಸೇರಿದಂತೆ 6-7 ಮಂದಿ ಕೈಯಲ್ಲಿ ತಲವಾರಿನಂತಹ ಆಯುಧ ಹಾಗೂ ಕಬ್ಬಿಣದ ಚೈನ್ ಹಿಡಿದು ಶರತ್ ಕುಂರ್ದ ಮೇಲೆ ಹಲ್ಲೆ ನಡೆಸಿದರೆಂದು ದೂರಿನಲ್ಲಿ ತಿಳಿಸಲಾಗಿದೆ. ಹಲ್ಲೆ ಬಳಿಕ ಆರೋಪಿಗಳು ಜೀವ ಬೆದರಿಕೆ ಹಾಕಿ ಸ್ಥಳದಿಂದ ಪರಾರಿಯಾಗಿದ್ದರು. ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಈ ಕುರಿತು ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
Maharashtra | ಮಾಲೇಗಾಂವ್ ಉಪ ಮೇಯರ್ ಕಚೇರಿಯಲ್ಲಿ ಟಿಪ್ಪು ಸುಲ್ತಾನ್ ಭಾವಚಿತ್ರ; ಬಿಜೆಪಿ ತರಾಟೆ
ಮುಂಬೈ, ಫೆ. 14: ಮಹಾರಾಷ್ಟ್ರದ ಮಾಲೇಗಾಂವ್ ನ ಉಪ ಮೇಯರ್ ಶಾನ್ ಎ ಹಿಂದ್ ನಿಹಾಲ್ ಅಹ್ಮದ್ ಅವರ ಕಚೇರಿಯಲ್ಲಿ ಇರಿಸಲಾದ 18ನೇ ಶತಮಾನದ ಮೈಸೂರು ದೊರೆ ಟಿಪ್ಪು ಸುಲ್ತಾನ್ ಭಾವಚಿತ್ರ ರಾಜಕೀಯ ವಿವಾದ ಹುಟ್ಟುಹಾಕಿದೆ. ಶಿವಸೇನಾ ಕಾರ್ಪೋರೇಟರ್ಗಳು ಅದನ್ನು ತೆಗೆದುಹಾಕುವಂತೆ ಆಗ್ರಹಿಸಿದ್ದಾರೆ. ಟಿಪ್ಪು ಸುಲ್ತಾನ್ ಪರಂಪರೆಯ ಬಗ್ಗೆ ಜನರು ವಿಭಿನ್ನ ಅಭಿಪ್ರಾಯ ಹೊಂದಿದ್ದಾರೆ ಎಂಬುದನ್ನು ಈ ವಿವಾದ ಹೇಳುತ್ತದೆ. ಕೆಲವರು ಟಿಪ್ಪು ಸುಲ್ತಾನ್ ರನ್ನು ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪೆನಿಯನ್ನು ವಿರೋಧಿಸಿದ್ದಕ್ಕಾಗಿ ನೆನಪಿಸಿಕೊಳ್ಳುತ್ತಾರೆ. ಇನ್ನು ಕೆಲವರು ದಕ್ಷಿಣ ಭಾರತದ ಕೆಲವು ಭಾಗಗಳಲ್ಲಿ ಧಾರ್ಮಿಕ ಅಹಿಷ್ಣುತೆ ಹಾಗೂ ಹಿಂದೂಗಳಿಗೆ ಕಿರುಕುಳ ನೀಡಿದ್ದಕ್ಕಾಗಿ ಟೀಕಿಸುತ್ತಾರೆ. ಭಾವಚಿತ್ರವನ್ನು ತೆರವುಗೊಳಿಸುವಂತೆ ಕೋರಿ ನೀಲೇಶ್ ಅಹೆರ್ ಅವರ ನೇತೃತ್ವದಲ್ಲಿ ಶಿವಸೇನಾ ಕಾರ್ಪೋರೇಟರ್ಗಳು ಮಹಾನಗರ ಪಾಲಿಕೆಗೆ ಔಪಚಾರಿಕ ದೂರು ಸಲ್ಲಿಸಿದ್ದಾರೆ. ಈ ಆಗ್ರಹ ಶಿವಸೇನೆ ಸದಸ್ಯರು ಹಾಗೂ ಉಪ ಮೇಯರ್ ನಡುವೆ ಉದ್ವಿಗ್ನ ವಾಗ್ವಾದಕ್ಕೆ ಕಾರಣವಾಗಿದೆ. ಟಿಪ್ಪು ಸುಲ್ತಾನ್ ಭಾವಚಿತ್ರವನ್ನು ತೆರವುಗೊಳಿಸುವವರೆಗೆ ಪ್ರತಿಭಟನೆ ಮುಂದುವರಿಯಲಿದೆ ಎಂದು ಹೇಳಿರುವ ಅಹೆರ್, ಈ ವಿವಾದ ಶೀಘ್ರ ಪರಿಹಾರವಾಗುವ ಸಾಧ್ಯತೆ ಇಲ್ಲ ಎನ್ನುವ ಸೂಚನೆ ನೀಡಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಬಿಜೆಪಿಯ ರಾಷ್ಟ್ರೀಯ ವಕ್ತಾರ ಶೆಹ್ಝಾದ್, ‘‘ಅವರು ಹಿಂದೂ ದ್ವೇಷಿ ಟಿಪ್ಪು ಸುಲ್ತಾನ್ ಭಾವಚಿತ್ರ ಪ್ರದರ್ಶಿಸಿದ್ದಾರೆ. ಆದರೆ ಛತ್ರಪತಿ ಶಿವಾಜಿ ಮಹಾರಾಜ, ಮಹಾತ್ಮಾ ಗಾಂಧಿ, ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಭಾವಚಿತ್ರ ಕಾಣೆಯಾಗಿದೆ. ಇದು ನಮ್ಮ ನಾಯಕರಿಗೆ ಮಾಡಿದ ಅವಮಾನ’’ ಎಂದಿದ್ದಾರೆ. ‘‘ಉಪ ಮೇಯರ್ ಆಗಲು ಸಂವಿಧಾನ ಅವರಿಗೆ ಅವಕಾಶ ನೀಡಿದೆ. ಆದರೆ ಅವರಿಗೆ ಸಂವಿಧಾನದ ಮೇಲೆ ಗೌರವ ಇಲ್ಲ. ಎಐಎಂಐಎಂ ಮಹಾರಾಷ್ಟ್ರಕ್ಕೆ ಹಸಿರು ಬಳಿಯಲು ಬಯಸಿದೆ; ಅದು ಅಂಬೇಡ್ಕರ್ ಅವರ ಬದಲು ಟಿಪ್ಪು ಸುಲ್ತಾನ್ರನ್ನು ಬೆಂಬಲಿಸುತ್ತದೆ. ನಮ್ಮದು ಮುಸ್ಲಿಂ ಪಕ್ಷ ಎಂದು ಕಾಂಗ್ರೆಸ್ ಹೇಳುತ್ತದೆ’’ ಎಂದು ಅವರು ತಿಳಿಸಿದ್ದಾರೆ. ‘‘ಸಂವಿಧಾನಕ್ಕಿಂತ ಮತಬ್ಯಾಂಕ್ ರಾಜಕಾರಣಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡಿದಾಗ ಇದು ಸಂಭವಿಸುತ್ತದೆ’’ ಎಂದು ಶೆಹ್ಝಾದ್ ಹೇಳಿದ್ದಾರೆ.
ದಿಲ್ಲಿ ವಿವಿಯಲ್ಲಿ ಪ್ರೊ.ಇರ್ಫಾನ್ ಹಬೀಬ್ ಮೇಲಿನ ದಾಳಿಗೆ ಪ್ರಗತಿಪರರಿಂದ ಖಂಡನೆ
ಕಲಬುರಗಿ: ದಿಲ್ಲಿ ವಿಶ್ವವಿದ್ಯಾಲಯದಲ್ಲಿ ಎಐಎಸ್ಎ (AISA) ವತಿಯಿಂದ ಸಮತಾ ಉತ್ಸವದಲ್ಲಿ ಭಾಗಿಯಾಗಿ ಉಪನ್ಯಾಸ ನೀಡುತ್ತಿದ್ದ ಖ್ಯಾತ ಇತಿಹಾಸ ತಜ್ಞ ಪ್ರೊ.ಎಸ್ ಇರ್ಫಾನ್ ಹಬೀಬ್ ಅವರ ಮೇಲೆ ದಾಳಿ ನಡೆಸಿದ್ದನ್ನು ಕಲಬುರಗಿ ಪ್ರಗತಿಪರ ಚಿಂತಕರು ಖಂಡಿಸಿದ್ದಾರೆ. ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, “ಬಲಪಂಥಿಯ ಸಾಹಿತ್ಯ ಉತ್ಸವಕ್ಕೆ ಪರ್ಯಾಯ ಜನೋತ್ಸವ ಮತ್ತು ಪ್ರಗತಿಪರ, ಪ್ರಜಾಪ್ರಭುತ್ವ ನಿಲುವುಗಳು” ಎಂಬ ವಿಷಯದ ಮೇಲೆ ಪ್ರೊ. ಹಬೀಬ್ ಅವರು ವಸ್ತುನಿಷ್ಠವಾಗಿ ಮಾತನಾಡುತ್ತಿದ್ದ ವೇಳೆ, ಕೆಲ ಬಲಪಂಥೀಯ ವ್ಯಕ್ತಿಗಳು ಅಸಭ್ಯವಾಗಿ ವರ್ತಿಸಿ ಅವರ ಮೇಲೆ ಹಿಂಬದಿಯಿಂದ ನೀರು ಸುರಿದು, ಡಸ್ಟ್ಬಿನ್ ಎಸೆದು ದಾಳಿ ನಡೆಸಿರುವುದು ಖಂಡನಾರ್ಹ. ಈ ಬಗ್ಗೆ ಕಾರಣೀಕರ್ತರ ವಿರೋಧ ಕ್ರಮಕ್ಕೆ ಆಗ್ರಹಿಸಿದ್ದಾರೆ. ಉಪನ್ಯಾಸದಲ್ಲಿ ವಿಶ್ವವಿದ್ಯಾಲಯಗಳಲ್ಲಿ ನಡೆಯುತ್ತಿರುವ ಜಾತಿ ತಾರತಮ್ಯ, ದಲಿತ ಹಾಗೂ ದಮನಿತ ವಿದ್ಯಾರ್ಥಿಗಳ ಮೇಲೆ ನಡೆಯುತ್ತಿರುವ ಸಾಂಸ್ಥಿಕ ಕಿರುಕುಳದ ವಿರುದ್ಧ ಯುಜಿಸಿ ನಿಯಮಾವಳಿ ಕಟ್ಟುನಿಟ್ಟಾಗಿ ಜಾರಿಗೆ ತರಬೇಕೆಂದು ಹಾಗೂ ರೋಹಿತ್ ವೇಮುಲಾ ಕಾಯ್ದೆಯನ್ನು ಅನುಷ್ಠಾನಗೊಳಿಸಬೇಕೆಂದು ಒತ್ತಾಯಿಸಲಾಗಿತ್ತು. ಈ ವಿಚಾರಗಳನ್ನು ಸಹಿಸಿಕೊಳ್ಳಲಾರದ ಮನೋಭಾವದಿಂದಲೇ ಈ ದಾಳಿ ನಡೆದಿದ್ದು, ಇದು ದಾಳಿಕೋರರ ಹತಾಶೆ ಮತ್ತು ಅಸಹಿಷ್ಣುತೆಯನ್ನು ತೋರಿಸುತ್ತದೆ ಎಂದು ಹೇಳಿದ್ದಾರೆ. ಘಟನೆಗೆ ಹೊಣೆಗಾರರಾದ ವ್ಯಕ್ತಿಗಳನ್ನು ತಕ್ಷಣವೇ ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಪ್ರಗತಿಪರ ಚಿಂತಕರಾದ ಪ್ರೊ. ಕಾಶಿನಾಥ ಅಂಬಲಗೆ, ಡಾ.ಮೀನಾಕ್ಷಿ ಬಾಳಿ, ಪ್ರೊ. ಆರ್.ಕೆ. ಹುಡಗಿ, ಡಾ. ಪ್ರಭು ಖಾನಾಪೂರೆ, ಕೆ. ನೀಲಾ, ಕೋದಂಡರಾಮ, ಲವಿತ್ರ ವಸ್ತ್ರದ, ಸುಧಾಮ ಧನ್ನಿ, ಚಂದಮ್ಮ ಗೋಳಾ ಮೆಹರಾಜ್ ಪಟೇಲ್, ಪ್ರಮೋದ ಪಾಂಚಾಳ, ಸಲ್ಮಾನ್ ದೇವಂತಗಿ, ಮಾರುತಿ ಗೋಖಲೆ, ಜಯಶ್ರೀ ಗೋಖಲೆ, ದತ್ತಾತ್ರಯ ಇಕ್ಕಳಕಿ, ಶ್ರೀಶೈಲ ಘೂಳಿ ಅವರು ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.
ಅಂದರ್ ಬಾಹರ್ ಆರೋಪ: ಐದು ಮಂದಿ ಬಂಧನ
ಉಡುಪಿ, ಫೆ.14: ಕಡೆಕಾರು ಸೀ ವ್ಯೆ ರೆಸಾರ್ಟ್ ಸಮೀಪ ಕಡೆಕಾರ್ ಪಡುಕೆರೆ ಹೊಳೆಯ ಕಡುವಿನ ಬಾಗಿಲು ಬಳಿ ಶುಕ್ರವಾರ ರಾತ್ರಿ ಅಂದರ್ ಬಾಹರ್ ಇಸ್ಪೀಟು ಜುಗಾರಿ ಆಡುತ್ತಿದ್ದ ಐದು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಉಳ್ಳಾಲದ ಅಂಬಲ್ಲಮೊಗರುವಿನ ನಿತಿನ್ರಾಜ್(35), ಪಡು ಪಲಿಮಾರುವಿನ ಸಚಿನ್ ಆರ್.ಶೆಟ್ಟಿ(35), ಮಂಗಳೂರು ಕಂಕನಾಡಿಯ ಸತೀಶ್ ಕಿಶೋರ್(38), ಸುರತ್ಕಲ್ ತಡಂಬೈಲುವಿನ ರಂಜಿತ್ ಕೆ.ಅಮೀನ್ (39), ಸುರತ್ಕಲ್ನ ರವಿ(36) ಬಂಧಿತ ಆರೋಪಿಗಳು. ಇವರಿಂದ ಒಟ್ಟು 4,90,920ರೂ. ನಗದು ಹಾಗೂ ಎಂಟು ಮೊಬೈಲ್ ಫೋನ್ಗಳು ಹಾಗೂ ಎರಡು ಕಾರುಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Viral Video: 'ಶನೆಲ್' ಹಾಡಿಗೆ ಕರ್ನಾಟಕದ ಅಜ್ಜಿಯರ ಭರ್ಜರಿ ಡ್ಯಾನ್ಸ್ ನೋಡಿ ನೆಟ್ಟಿಗರು ಫಿದಾ
ಬೆಂಗಳೂರು: ಸಾಮಾಜಿಕ ಜಾಲತಾಣಗಳಲ್ಲಿ ನಿತ್ಯವೂ ಸಾವಿರಾರು ವಿಡಿಯೋಗಳು ವೈರಲ್ ಆಗುತ್ತಿರುತ್ತವೆ. ಆದರೆ, ಅವುಗಳಲ್ಲಿ ಕೆಲವು ಮಾತ್ರ ನಮ್ಮ ಹೃದಯಕ್ಕೆ ಹತ್ತಿರವಾಗುತ್ತವೆ ಮತ್ತು ನಮ್ಮ ಮುಖದಲ್ಲಿ ನಗು ತರಿಸುತ್ತವೆ. ಇದೀಗ ಕರ್ನಾಟಕದ ವೃದ್ಧಾಶ್ರಮವೊಂದರ ಅಜ್ಜಿಯರು ಮಾಡಿರುವ ಡ್ಯಾನ್ಸ್ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಮೂಡಿಸಿದ್ದು, ಪ್ರಪಂಚದಾದ್ಯಂತ ನೆಟ್ಟಿಗರ ಮೆಚ್ಚುಗೆಗೆ ಪಾತ್ರವಾಗಿದೆ. ಟ್ರೆಂಡ್ ಸೃಷ್ಟಿಸಿದ 'ಶಾಂತಾಯಿ ವೃದ್ಧಾಶ್ರಮ' ಇನ್ಸ್ಟಾಗ್ರಾಮ್ನಲ್ಲಿ ಸದಾ
ಕೋಲಿ-ಕಬ್ಬಲಿಗ-ಬೆಸ್ತರ್ ಎಸ್ಟಿ ಪಟ್ಟಿಗೆ ಸೇರ್ಪಡೆಗೆ ದಾಖಲೆ ಸಲ್ಲಿಕೆ
ಕಲಬುರಗಿ: ವಿಧಾನ ಪರಿಷತ್ ಸದಸ್ಯರಾದ ಡಾ.ತಳವಾರ ಸಾಬಣ್ಣಾ ಅವರು ಕೋಲಿ-ಕಬ್ಬಲಿಗ-ಬೆಸ್ತರ್ ಪದವನ್ನು ಎಸ್.ಟಿ. ಪಟ್ಟಿಯಲ್ಲಿ ಸೇರಿಸುವ ಕುರಿತು ಮೈಸೂರಿನಲ್ಲಿರುವ ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆಯ ಉಪ ನಿರ್ದೇಶಕಿ ಗಿರಿಜಾಂಬ ಹೆಚ್.ಎಸ್, ಡಾ. ಮಂಜುನಾಥ್, ನಾಗರತ್ನ ಎಂ.ವಿ. ಅವರೊಂದಿಗೆ ಸಭೆ ನಡೆಸಿ, ಸಮರ್ಪಕ ದಾಖಲೆಗಳನ್ನು ಸಲ್ಲಿಸಿದರು. 1996ರಲ್ಲಿ ವಿಠಲ ಹೇರೂರರವರು ಕಲಬುರಗಿಯಲ್ಲಿ ಲಕ್ಷಾಂತರ ಜನರನ್ನು ಸೇರಿಸಿ ಮಾಡಿದ ಹೋರಾಟದ ಫಲವಾಗಿ ಕೋಲಿ-ಕಬ್ಬಲಿಗ ಸಮಾಜವನ್ನು ಎಸ್ಟಿ ಪಟ್ಟಿಯಲ್ಲಿ ಸೇರಿಸುವ ಫೈಲ್ ಕೇಂದ್ರ ಸರಕಾರಕ್ಕೆ ಕಳುಹಿಸಲಾಯಿತು. ಸರಿಯಾದ ದಾಖಲೆಗಳು ಇಲ್ಲದ ಕಾರಣ 29 ವರ್ಷ ಕೇಂದ್ರ ಮತ್ತು ರಾಜ್ಯ ಸರಕಾರಗಳ ನಡುವೆ ಫೈಲ್ ಓಡಾಟ ಆಗಿದೆ. ಗಂಗಾಮತ ಮತ್ತು ಅದರ ಪರ್ಯಾಯ ಪದಗಳ ಫೈಲ್ ಆರ್ಜಿಐ ಅವರಿಂದ 2023ರ ಅಕ್ಟೋಬರ್ 30ರಂದು ರಾಜ್ಯ ಸರಕಾರಕ್ಕೆ ವಾಪಸ್ ಬಂದಿದೆ. 1956ರಲ್ಲಿಯೇ ಕೋಲಿ, ಕಬ್ಬಲಿಗ ಮತ್ತು ಇದರ ಪರ್ಯಾಯ ಪದಗಳಾದ ಟೋಕ್ರೆ ಕೋಲಿ, ಕೋಲಿ ಡೋರ್, ಕೋಯಾ ಪದಗಳು ಎಸ್ಟಿ ಪಟ್ಟಿಯಲ್ಲಿ ಕೇಂದ್ರ ಸರಕಾರ ಸೇರಿಸಿತ್ತು. ಅದು 1976ರಲ್ಲಿ ಎಸ್ಟಿ ಪಟ್ಟಿ ಪರಿಷ್ಕರಣೆ ಮಾಡಿದಾಗಲೂ ಮುಂದುವರಿಯಿತು. ವಿಧಾನ ಪರಿಷತ್ ಸದಸ್ಯರು ಬ್ರಿಟಿಷರ ಕಾಲದ 103 ರಿಪೋರ್ಟ್ಗಳ ದಾಖಲೆಗಳನ್ನು ಸಂಗ್ರಹಿಸಿದ್ದನ್ನು ಮತ್ತು ಕೋಲಿ-ಕಬ್ಬಲಿಗ-ಬೆಸ್ತರ್ ಪರ್ಯಾಯ ಪದಗಳಿಗೆ ಬುಡಕಟ್ಟು ಗುಣ ಲಕ್ಷಣ ಉಲ್ಲೇಖ ಇರುವ ಕುರಿತು ಚರ್ಚಿಸಿದರು ಹಾಗೂ ತಾವು ಸಿದ್ಧಪಡಿಸಿದ 230 ಪುಟಗಳ ವರದಿ ಮತ್ತು ಅದಕ್ಕೆ ಸಂಬಂಧಿಸಿದ ಬ್ರಿಟಿಷರ ಕಾಲದ 103 ರಿಪೋರ್ಟ್ಗಳ 1,100 ಪುಟಗಳ (4 ಸಂಪುಟಗಳು) ದಾಖಲೆಗಳನ್ನು ಉಪ ನಿರ್ದೇಶಕರಿಗೆ ನೀಡಿದರು. ಈ ಸಭೆಯಲ್ಲಿ ಕೋಲಿ-ಕಬ್ಬಲಿಗ-ಬೆಸ್ತರ್ ಪರ್ಯಾಯ ಪದಗಳನ್ನು ಟೋಕ್ರೆ ಕೋಲಿ, ಕೋಲಿ ಡೋರ್, ಕೋಯಾ ಪದಗಳ ಬಿಟ್ಟು ಹೋದ ಪರ್ಯಾಯ ಪದಗಳು ಎಂದು ಎಸ್ಟಿ ಫೈಲ್ ಕೇಂದ್ರ ಸರಕಾರಕ್ಕೆ ಕಳುಹಿಸುವ ಬಗ್ಗೆ ಬುಡಕಟ್ಟು ಸಂಶೋಧನಾ ಸಂಸ್ಥೆಯ ಅಧಿಕಾರಿಗಳು ಸಕಾರಾತ್ಮಕವಾಗಿ ಸ್ಪಂದಿಸಿದರು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ವೀರ ರಾಣಿ ಅಬ್ಬಕ್ಕ ಉತ್ಸವ ಸಮಿತಿಯ ವತಿಯಿಂದ ವೀರರಾಣಿ ಅಬ್ಬಕ್ಕ ಉತ್ಸವ
ಉಳ್ಳಾಲ: ರಾಣಿ ಅಬ್ಬಕ್ಕ 1525 ರಿಂದ 1570 ರವರೆಗೆ ಪೊರ್ಚ್ ಗೀಸರ ವಿರುದ್ಧ ಹೋರಾಟ ಮಾಡಿ ಹೆಗ್ಗಳಿಕೆ ಪಡೆದಿದ್ದರು. ಯುದ್ಧದ ಮೂಲಕ ಅವರನ್ನು ಸೆದೆ ಬಡಿದು ರಾಜ್ಯ ರಕ್ಷಣೆಗೆ ಪಣ ತೊಟ್ಟಿದ್ದ ರಾಣಿ. ಅಬ್ಬಕ್ಕ ಹೆಸರಿನಲ್ಲಿ ವಿವಿಧ ಕಡೆ ಅಬ್ಬಕ್ಕ ಉತ್ಸವ ಆಗುತ್ತಿರುವುದು ಶ್ಲಾಘನೀಯ ಎಂದು ಶ್ರೀಕ್ಷೇತ್ರ ಧರ್ಮಸ್ಥಳದ ರಾಣಿ ಅಬ್ಬಕ್ಕ ವಂಶಸ್ಥ ಅನಿತಾ ಸುರೇಂದ್ರ ಕುಮಾರ್ ಹೇಳಿದರು. ಅವರು ತೊಕ್ಕೊಟ್ಟು ಒಳಪೇಟೆಯ ಅಂಬೇಡ್ಕರ್ ರಂಗಮಂದಿರದಲ್ಲಿ ನಡೆದ ವೀರರಾಣಿ ಅಬ್ಬಕ್ಕ ಉತ್ಸವ25-26 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಕರಾವಳಿ ಅರಸರಿಂದ ಕಪ್ಪ ಸಂಗ್ರಹ ಮಾಡುವುದನ್ನು ವಿರೋಧ ವ್ಯಕ್ತಪಡಿಸಿದ ಅಬ್ಬಕ್ಕ ವ್ಯಕ್ತಿತ್ವಕ್ಕೆ ತಕ್ಕ ಮಾತಿತ್ತು. ಅಬ್ಬಕ್ಕ ಹೆಸರಿನಲ್ಲಿ ನಡೆಯುವ ಉತ್ಸವ ಶಾಶ್ವತವಾಗಿ ಉಳಿಸಬೇಕು ಎಂದು ಕರೆ ನೀಡಿದರು. ಅಭಿನಂದನಾ ನುಡಿ ಸಲ್ಲಿಸಿದ ಹಾವೇರಿ ವಿಶ್ವವಿದ್ಯಾನಿಲಯದ ವಿಶ್ರಾಂತ ಉಪಕುಲಪತಿ ಡಾ. ಕೆ. ಚಿನ್ನಪ್ಪ ಗೌಡರವರು, Brave Hearts of Bharath” ಎನ್ನುವ ಪುಸ್ತಕದಲ್ಲಿ Rani Abbakka Chowta ಅವರ ಕುರಿತು ವಿಶಿಷ್ಟ ಅಧ್ಯಾಯ ಪ್ರಕಟವಾಗಿದೆ. 13 ಮಂದಿ ಶೂರ ಯೋಧರ ಪೈಕಿ 5 ಮಂದಿ ಮಹಿಳೆಯರು ಇದ್ದಾರೆ. ಅವರಲ್ಲಿ ರಾಣಿ ಅಬ್ಬಕ್ಕಳ ಹೆಸರು ಮೊದಲಿಗರಾಗಿ ಉಲ್ಲೇಖವಾಗಿರುವುದು ನಮ್ಮೆಲ್ಲರಿಗೂ ಹೆಮ್ಮೆಯ ಸಂಗತಿ. ಕೌಟುಂಬಿಕ, ಸಾಮಾಜಿಕ ಮತ್ತು ಆರ್ಥಿಕ ನೆಲೆಯಲ್ಲೂ ಅಬ್ಬಕ್ಕಳ ಜೀವನ ಅಪೂರ್ವವಾಗಿದೆ. ಕೇಚ್ಚೆದೆಯ ದಿಟ್ಟತನ, ಅಚಲ ಧೈರ್ಯ ಮತ್ತು ಸ್ವಾಭಿಮಾನದಿಂದ ಅವರು ಇತಿಹಾಸದಲ್ಲಿ ಅಮರರಾಗಿದ್ದಾರೆ. ಅಬ್ಬಕ್ಕಳಿಂದ ನಮಗೆ ಸಿಗುವುದೇ ತಾಯಿತನದ ಪ್ರೀತಿ ಹಾಗೂ ದೇಶಭಕ್ತಿಯ ಸಂದೇಶ ಎಂದರು. ಮಾಜಿ ಮುಖ್ಯಮಂತ್ರಿ ಸದಾನಂದ ಗೌಡ ಮಾತನಾಡಿ, ಇಂದು ನಾವು ಸ್ವತಂತ್ರರು ಆಗಿದ್ದು, ಇದಕ್ಕೆಲ್ಲ ಕಾರಣ ಅಬ್ಬಕಳಂತಹ ಹೋರಾಟಗಾರರು ಆಗಿದ್ದಾರೆ.ನಾವು ಗುಲಾಮರಾಗಿ ಇರಬಾರದು ಎಂಬ ಉದ್ದೇಶ ಅಬ್ಬಕ್ಕಳದ್ದಾಗಿತ್ತು ಪ್ರತಿ ವ್ಯಕ್ತಿಗೂ ತನ್ನದೇ ಆದ ಜವಾಬ್ದಾರಿಗಳಿರುತ್ತವೆ. ಭಾರತವು ಅದ್ಭುತ ರಾಷ್ಟ್ರವಾಗಿ ಹೊರಹೊಮ್ಮಬೇಕಾದರೆ, ನಾವು ನಮ್ಮ ಕರ್ತವ್ಯಗಳನ್ನು ನಿಷ್ಠೆಯಿಂದ ನೆರವೇರಿಸಬೇಕು. ಸ್ವಾಭಿಮಾನದ ಕಿಚ್ಚು, ನಮ್ಮ ಆಚಾರ–ವಿಚಾರಗಳು, ಸಂಸ್ಕೃತಿ ಮತ್ತು ಪರಂಪರೆಗಳು ನಮ್ಮ ದೇಶದ ಅಮೂಲ್ಯ ಕೊಡುಗೆಗಳಾಗಿವೆ. ಇಂತಹ ಅನೇಕ ಸೂತ್ರಗಳು ಭವಿಷ್ಯ ನಿರ್ಮಾಣಕ್ಕೆ ದಾರಿದೀಪವಾಗಬೇಕು ಎಂದರು. ಆಶಾ ಚಾರಿಟೆಬಲ್ ಟ್ರಸ್ಟ್ನ ಅಧ್ಯಕ್ಷ ಡಾ| ಆಶಾಜ್ಯೋತಿ ರೈ ಸಾಹಿತ್ಯ-ಸಾಂಸ್ಕೃತಿಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಇದೇ ವೇಳೆ ಸಾಹಿತ್ಯ ಕ್ಷೇತ್ರದ ಸಾಧನೆಗಾಗಿ ದೇರಳಕಟ್ಟೆಯ ನಿಟ್ಟೆ ವಿಶ್ವವಿದ್ಯಾನಿಲಯದ ಮಾನವಿಕ ವಿಭಾಗದಲ್ಲಿ ಅಸೋಸಿಯೇಟ್ ಪ್ರೊಫೆಸರ್ ಆಗಿರುವ ಡಾ. ಸಾಯಿಗೀತಾ ಹೆಗ್ಡೆ , ಭರತನಾಟ್ಯ ಕ್ಷೇತ್ರದ ಸಾಧನೆಗಾಗಿ ನಾಟ್ಯನಿಕೇತನ ನೃತ್ಯ ಸಂಸ್ಥೆಯ ಪ್ರಾಂಶುಪಾಲೆ ರಾಜಶ್ರೀ ಉಳ್ಳಾಲ್ ವೀರರಾಣಿ ಅಬ್ಬಕ್ಕ ಪ್ರಶಸ್ತಿಯನ್ನು ಪ್ರದಾನ ಮಾಡಿ ಗೌರವಿಸಲಾಯಿತು ಈ ಕಾರ್ಯಕ್ರಮ ಪ್ರಯುಕ್ತ ಯಶಸ್ವಿನಿ ಉಳ್ಳಾಲ್ ನೇತೃತ್ವದ ಸ್ವರಮಾಧುರ್ಯ ತಂಡದಿಂದ ನಾಡುನುಡಿಯ ಗೀತೋತ್ಸವ, ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ಸಹಯೋಗದಲ್ಲಿ ಅಲ್ ಅಝಾರಿಯಾ ದಫ್ ತಂಡದಿಂದ ದಫ್ ಕಾರ್ಯಕ್ರಮ, ಯುವವಾಹಿನಿ ಕೊಲ್ಯ ಘಟಕದಿಂದ ಸಾಂಸ್ಕೃತಿಕ ವೈವಿಧ್ಯ, ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಸಹಯೋಗದಲ್ಲಿ ಕುಡುಂಬಿ ನೃತ್ಯ, ಬಲೇ ತೆಲಿಪಾಲೆ ಖ್ಯಾತಿಯ ಪ್ರಶಂಸಾ ಕಾಪು ತಂಡದಿಂದ ಹಾಸ್ಯ ವೈವಿಧ್ಯ ಬಲೆ ತೆಲಿಪಾಲೆ ಹಾಗೂ ಪಜೀರು ನೃತ್ಯಲಹರಿ ನಾಟ್ಯಾಲಯದ ವಿದುಷಿ ರೇಷ್ಮಾ ನಿರ್ಮಲ್ ಭಟ್ ತಂಡದಿಂದ ಸ್ವಾಗತ ನೃತ್ಯ ನಡೆಯಿತು. ಈ ಕಾರ್ಯಕ್ರಮ ದಲ್ಲಿ ನಗರಸಭೆ ಪೌರಾಯುಕ್ತ ಸಂತೋಷ್,ರೈತ ಮುಖಂಡ ಕೃಷ್ಣಪ್ಪ ಸಾಲಿಯಾನ್, ಮಾಜಿ ಮೇಯರ್ ಪ್ರೇಮಾನಂದ ಶೆಟ್ಟಿ , ಕೋಟೆಕಾರ್ ಪಟ್ಟಣ ಪಂಚಾಯತ್ ಅಧ್ಯಕ್ಷ ದಿವ್ಯ ಶೆಟ್ಟಿ, ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಸೋಮೇಶ್ವರ ಪುರಸಭೆ ಉಪಾಧ್ಯಕ್ಷ ರವಿಶಂಕರ್, ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ್ ಗಟ್ಟಿ ಕಾಪಿಕಾಡ್, ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಉಮರ್ ಯು.ಹೆಚ್., ಚೀರುಂಬ ಭಗವತಿ ಕ್ಷೇತ್ರದ ಆಡಳಿತ ಮೊಕ್ತೇಸರ ಸುರೇಶ್ ಭಟ್ನಗರ,ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷ ಮಮತಾ ಡಿ.ಎಸ್. ಗಟ್ಟಿ , ಯಶವಂತ ಅಮೀನ್, ಪೆರ್ಮನ್ನೂರು ಚರ್ಚ್ ಧರ್ಮಗುರು ಸಿಪ್ರಿಯನ್ ಪಿಂಟೋ ,ವೀರ ರಾಣಿ ಅಬ್ಬಕ್ಕ ಉತ್ಸವ ಸಮಿತಿಯ ಉಪಾಧ್ಯಕ್ಷ ದೇವಕಿ ಆರ್ ಉಳ್ಳಾಲ, ಗೌರವ ಉಪಾಧ್ಯಕ್ಷ ಸದಾನಂದ ಬಂಗೇರ ಮತ್ತಿತರರು ಉಪಸ್ಥಿತರಿದ್ದರು. ಸ್ವಾಗತಾಧ್ಯಕ್ಷ ಜಯರಾಮ್ ಶೆಟ್ಟಿ ಪ್ರಾಸ್ತಾವಿಕ ಮಾತನಾಡಿದರು ಉಳ್ಳಾಲ ವೀರ ರಾಣಿ ಅಬ್ಬಕ್ಕ ಉತ್ಸವ ಸಮಿತಿಯ ಅಧ್ಯಕ್ಷ ದಿನಕರ್ ಉಳ್ಳಾಲ್ ಸ್ವಾಗತಿಸಿದರು .ಧನಲಕ್ಷ್ಮಿ ಗಟ್ಟಿ, ಕೆಎಮ್ ಕೆ ಮಂಜನಾಡಿ ಕಾರ್ಯಕ್ರಮ ನಿರೂಪಿಸಿದರು.ಕೋಶಾಧಿಕಾರಿ ಆನಂದ ಕೆ ಅಸೈಗೋಳಿ ವಂದಿಸಿದರು.
Uttar Pradesh | ‘ಕೇಸರಿ ಬಟ್ಟೆ ಧರಿಸಿದರೆ ಯೋಗಿಯಾಗುವುದಿಲ್ಲ’: ಆದಿತ್ಯನಾಥ್ ವಿರುದ್ಧ ಅಖಿಲೇಶ್ ಯಾದವ್ ವಾಗ್ದಾಳಿ
ಲಕ್ನೊ: ಉತ್ತರ ಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್ ಹಾಗೂ ಪ್ರಮುಖ ಹಿಂದೂ ಧಾರ್ಮಿಕ ಗುರು ಸ್ವಾಮಿ ಅವಿಮುಕ್ತೇಶ್ವರಾನಂದ್ ಅವರ ನಡುವಿನ ವಾಕ್ಸಮರ ತೀವ್ರಗೊಂಡಿದ್ದು, ಈ ವಿವಾದಕ್ಕೆ ಸಮಾಜವಾದಿ ಪಕ್ಷದ (ಎಸ್ಪಿ) ಅಧ್ಯಕ್ಷ ಅಖಿಲೇಶ್ ಯಾದವ್ ಕೂಡ ದನಿಗೊಟ್ಟಿದ್ದಾರೆ. ಆದಿತ್ಯನಾಥ್ ಅವರ ಹೆಸರಿನ ಮೊದಲು ‘ಯೋಗಿ’ ಎಂಬ ಬಿರುದನ್ನು ಬಳಸಲು ಯಾರು ಅವಕಾಶ ನೀಡಿದರು ಎಂದು ಅವರು ಪ್ರಶ್ನಿಸಿದ್ದಾರೆ. ಸ್ವಾಮಿ ಅವಿಮುಕ್ತೇಶ್ವರಾನಂದ್ ತಮ್ಮ ಹೆಸರಿನ ಮೊದಲು ‘ಶಂಕರಾಚಾರ್ಯ’ ಎಂಬ ಬಿರುದನ್ನು ಬಳಸಲು ಎಲ್ಲರಿಗೂ ಅಧಿಕಾರವಿಲ್ಲ ಎಂದು ಹೇಳಿದ ಬಳಿಕ, ಆದಿತ್ಯನಾಥ್ ಅವರ ಹೆಸರಿನ ಮೊದಲು ‘ಯೋಗಿ’ ಬಳಕೆಯನ್ನೂ ಪ್ರಶ್ನಿಸಿದ್ದರು. ಇದರಿಂದ ಇಬ್ಬರ ನಡುವಿನ ಮಾತಿನ ಚರ್ಚೆ ಮತ್ತಷ್ಟು ಉಗ್ರ ಸ್ವರೂಪ ಪಡೆದುಕೊಂಡಿದೆ. ಶುಕ್ರವಾರ ರಾಜ್ಯ ವಿಧಾನಸಭೆಯಲ್ಲಿ ಮಾತನಾಡಿದ ಆದಿತ್ಯನಾಥ್, ‘ಶಂಕರಾಚಾರ್ಯ’ ಸ್ಥಾನ ಅತ್ಯಂತ ಗೌರವಾನ್ವಿತವಾಗಿದ್ದು, ಪ್ರತಿಯೊಬ್ಬರೂ ತಮ್ಮ ಹೆಸರಿನ ಮೊದಲು ಈ ಬಿರುದನ್ನು ಬಳಸಲು ಸಾಧ್ಯವಿಲ್ಲ ಎಂದು ಹೇಳಿದರು. ಶಂಕರಾಚಾರ್ಯರೂ ಸಹ ಕಾನೂನಿಗಿಂತ ಮೇಲಲ್ಲ ಎಂಬ ಅಭಿಪ್ರಾಯವನ್ನೂ ವ್ಯಕ್ತಪಡಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸ್ವಾಮಿ ಅವಿಮುಕ್ತೇಶ್ವರಾನಂದ್, ಶಂಕರಾಚಾರ್ಯರಿಗೆ ಯಾವುದೇ ರಾಜಕಾರಣಿಯಿಂದ ಪ್ರಮಾಣಪತ್ರದ ಅಗತ್ಯವಿಲ್ಲ ಎಂದು ಹೇಳಿದರು. ‘ಯೋಗಿ’ ಎಂಬ ಪದ ತ್ಯಾಗಮಯ ಜೀವನವನ್ನು ಸೂಚಿಸುವುದಾದರೆ, ಭೌತಿಕ ಜಗತ್ತಿನೊಂದಿಗೆ ಸಂಬಂಧ ಹೊಂದಿರುವವರು ತಮ್ಮ ಹೆಸರಿನ ಮುಂದೆ ಆ ಪದವನ್ನು ಹೇಗೆ ಬಳಸಬಹುದು ಎಂಬ ಪ್ರಶ್ನೆಯನ್ನೂ ಎತ್ತಿದರು. ಕಳೆದ ತಿಂಗಳು ನಡೆದ ಮಾಘಮೇಳದ ವೇಳೆ ಮೌನಿ ಅಮಾವಾಸ್ಯೆಯ ಪವಿತ್ರ ಸ್ನಾನಕ್ಕಾಗಿ ಗಂಗಾ ನದಿಯತ್ತ ತೆರಳುವುದನ್ನು ತಡೆಯಲಾಗಿದೆ ಹಾಗೂ ತಮ್ಮ ಶಿಷ್ಯರ ಮೇಲೆ ಪೊಲೀಸರು ಹಲ್ಲೆ ನಡೆಸಿದ್ದಾರೆ ಎಂಬ ಆರೋಪವನ್ನೂ ಅವರು ಮಾಡಿದರು. ಜೊತೆಗೆ, ಆದಿತ್ಯನಾಥ್ ಅವರು ತಾವು ‘ಹಿಂದೂ’ ಎಂಬುದನ್ನು ಸಾಬೀತುಪಡಿಸಬೇಕು ಎಂದೂ ಹೇಳಿದರು. ಸ್ವಾಮಿ ಅವಿಮುಕ್ತೇಶ್ವರಾನಂದ್ ಅವರು ಆದಿತ್ಯನಾಥ್ ಅವರ ವಿರುದ್ಧ ಈ ಹಿಂದೆ ಹಲವಾರು ಕ್ರಿಮಿನಲ್ ಪ್ರಕರಣಗಳು ಇದ್ದರೂ ಅವರು ಅಧಿಕಾರಕ್ಕೆ ಬಂದ ಬಳಿಕ ಅವುಗಳನ್ನು ಹಿಂಪಡೆಯಲಾಗಿದೆ ಎಂದು ಹೇಳಿದರು. “ಕಾನೂನು ಎಲ್ಲರಿಗೂ ಒಂದೇ ಆಗಿದ್ದರೆ ಪ್ರಕರಣಗಳನ್ನು ಹೇಗೆ ಹಿಂಪಡೆಯಲಾಯಿತು?” ಎಂದು ಪ್ರಶ್ನಿಸಿದರು. ಈ ಮಧ್ಯೆ ಅಖಿಲೇಶ್ ಯಾದವ್ ಇಬ್ಬರ ನಡುವಿನ ವಾಗ್ಯುದ್ಧವನ್ನು ಉಲ್ಲೇಖಿಸಿ, “ಕೇಸರಿ ಬಟ್ಟೆ ಧರಿಸಿ ಕಿವಿ ಚುಚ್ಚಿಸಿಕೊಂಡ ಮಾತ್ರಕ್ಕೆ ಒಬ್ಬರು ಯೋಗಿಯಾಗುವುದಿಲ್ಲ” ಎಂದು ತೀಕ್ಷ್ಣವಾಗಿ ವಾಗ್ದಾಳಿ ನಡೆಸಿದರು.
ಭಾರತ vs ಪಾಕಿಸ್ತಾನ ಟಿ20 ವಿಶ್ವಕಪ್ 2026: ಹೈ ವೋಲ್ಟೇಜ್ ಪಂದ್ಯದ ಸಮಯ, ಸ್ಥಳ, ಪ್ಲೇಯಿಂಗ್ 11 ನೇರಪ್ರಸಾರದ ವಿವರಗಳು
India Vs Pakistan Match: ಕೊಲೊಂಬೊದ ಆರ್.ಪ್ರೇಮದಾಸ ಕ್ರಿಕೆಟ್ ಕ್ರೀಡಾಂಗಣದಲ್ಲಿ ಭಾನುವಾರ ಭಾರತ ಹಾಗೂ ಪಾಕಿಸ್ತಾನ ನಡುವೆ ಹೈವೋಲ್ಟೇಜ್ ಟಿ20 ವಿಶ್ವಕಪ್ 2026 ಪಂದ್ಯ ನಡೆಯಲಿದೆ. ಈ ಮಹಾಸಮರವನ್ನು ವೀಕ್ಷಣೆ ಮಾಡಲು ಇಡೀ ವಿಶ್ವವೇ ಕಾತರದಿಂದ ಕಾಯುತ್ತಿದೆ. ಹಾಗಾದ್ರೆ, ಪಂದ್ಯದ ಸಮಯ, ಸ್ಥಳ, ಪ್ಲೇಯಿಂಗ್ 11 ವಿವರವನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ. ಇದುವರೆಗೆ ಟೂರ್ನಿಯಲ್ಲಿ ಭಾರತ ಹಾಗೂ
ನ್ಯಾಯಯುತವಾಗಿ ಮುನ್ನಡೆದರೆ ಬದುಕಿನಲ್ಲಿ ಯಶಸ್ಸು: ಪ್ರೊ. ಶಿವಕುಮಾರ್ ಸ್ವಾಮಿ
ಪಿ.ಎ. ಕಾಲೇಜು ಪದವಿ ಪ್ರದಾನ ಸಮಾರಂಭ

28 C