ಕಲಾಪಕ್ಕೆ ಅಡ್ಡಿಪಡಿಸುವ ಸದಸ್ಯರಿಗೆ ಮೊಗಸಾಲೆಯಲ್ಲೇ ಕೂರುವ ದಂಡನೆ: ಸ್ಪೀಕರ್ ಖಾದರ್ ಎಚ್ಚರಿಕೆ
ಬೆಳಗಾವಿ(ಸುವರ್ಣ ವಿಧಾನಸೌಧ): ವಿಧಾನಸಭೆ ಕಲಾಪದಲ್ಲಿ ಚರ್ಚೆಯ ನಡುವೆ ತಮಷ್ಟಕ್ಕೆ ತಾವು ಕುಳಿತ ಜಾಗದಲ್ಲಿಯೇ ಮಾತನಾಡಿ ಕಲಾಪಕ್ಕೆ ಅಡ್ಡಿಪಡಿಸುವ ಸದಸ್ಯರನ್ನು ಒಂದು ದಿನದ ಮಟ್ಟಿಗೆ ವಿಧಾನಸಭೆ ಮೊಗಸಾಲೆಯಲ್ಲಿ ಕೂರಿಸುವ ದಂಡನೆ ವಿಧಿಸಬೇಕಾಗುತ್ತದೆ ಎಂದು ಸ್ಪೀಕರ್ ಯು.ಟಿ.ಖಾದರ್ ಎಚ್ಚರಿಸಿದ ಪ್ರಸಂಗ ನಡೆಯಿತು. ಶುಕ್ರವಾರ ವಿಧಾನಸಭೆ ಪ್ರಶ್ನೋತ್ತರದ ಬಳಿಕ ಉತ್ತರ ಕರ್ನಾಟಕ ಭಾಗದ ಅಭಿವೃದ್ಧಿ ಕುರಿತ ಚರ್ಚೆಗೆ ವಿರೋಧ ಪಕ್ಷದ ಉಪನಾಯಕ ಅರವಿಂದ ಬೆಲ್ಲದ ಅವರಿಗೆ ಸ್ಪೀಕರ್ ಖಾದರ್ ಅವಕಾಶ ನೀಡಿದರು. ಈ ವೇಳೆ ಬಿಜೆಪಿಯ ಉಚ್ಛಾಟಿತ ಸದಸ್ಯ ಬಸನಗೌಡ ಪಾಟೀಲ್ ಯತ್ನಾಳ್, ‘ತಾನು ಮೂರು ದಿನಗಳಿಂದ ಚರ್ಚೆಗೆ ಅವಕಾಶ ಕೇಳುತ್ತಿದ್ದೇನೆ. ಈವರೆಗೂ ಅವಕಾಶ ಸಿಕ್ಕಿಲ್ಲʼ ಎಂದು ಆಕ್ಷೇಪಿಸಿದರು. ಬಳಿಕ ಪ್ರತಿಕ್ರಿಯಿಸಿದ ಸ್ಪೀಕರ್ ಖಾದರ್, ‘ವಿರೋಧ ಪಕ್ಷದ ಉಪನಾಯಕ ಅರವಿಂದ ಬೆಲ್ಲದ್ ಅವರಿಗೆ ಅನುಮತಿ ನೀಡಲಾಗಿದೆ. ಮುಂದಿನ ಸರದಿಯಲ್ಲಿ ನಿಮಗೆ ಅವಕಾಶ ನೀಡಲಾಗುವುದು ಎಂದು ಸಮಾಧಾನ ಪಡಿಸಿದರು. ಈ ಹಂತದಲ್ಲಿ ಗಂಭೀರ ಚರ್ಚೆ ನಡೆಯುವ ವೇಳೆ ಕೆಲವು ಶಾಸಕರು ತಮ ಸ್ಥಾನದಲ್ಲೇ ಕುಳಿತು ಮೈಕ್ ಆನ್ ಮಾಡಿಕೊಂಡು ಮಾತನಾಡಿ, ಚರ್ಚೆಗೆ ಅಡ್ಡಿಪಡಿಸುತ್ತಿದ್ದರು. ಈ ವೇಳೆ ಸ್ಪೀಕರ್ ‘ಸದಸ್ಯರ ವರ್ತನೆ ಸರಿಯಲ್ಲ, ಚರ್ಚೆಯ ದಿಕ್ಕು ತಪ್ಪುತ್ತಿದೆ. ಫುಟ್ಬಾಲ್ ಆಟದಲ್ಲಿ ನಿಯಮ ಮೀರುವ ಆಟಗಾರರಿಗೆ ಕೆಂಪು, ಬಿಳಿ ಮತ್ತು ಹಳದಿ ಕಾರ್ಡ್ಗಳನ್ನು ತೋರಿಸುವ ಪದ್ಧತಿ ಇದೆ. ಅದೇ ರೀತಿ ಚರ್ಚೆಗೆ ಅಡ್ಡಿಪಡಿಸುವ ಸದಸ್ಯರಿಗೆ ಎಚ್ಚರಿಕೆಯ ಕಾರ್ಡ್ಗಳನ್ನು ತೋರಿಸಲಾಗುವುದು. ಅದರ ನಂತರವೂ ತಿದ್ದಿಕೊಳ್ಳದಿದ್ದರೆ ಒಂದು ದಿನದ ಮಟ್ಟಿಗೆ ವಿಧಾನಸಭೆಯ ಮೊಗಸಾಲೆಯಲ್ಲಿ ಕೂರಿಸುವ ದಂಡನೆ ವಿಧಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಕುಂದಾಪುರ ಒಳಚರಂಡಿ ಕಾಮಗಾರಿಗೆ 56.15 ಕೋಟಿ ರೂ. : ಬಿ.ಎಸ್.ಸುರೇಶ್
ಬೆಳಗಾವಿ, (ಸುವರ್ಣ ವಿಧಾನಸೌಧ), ಡಿ.12: ಕುಂದಾಪುರ ಪಟ್ಟಣಕ್ಕೆ ಒಳಚರಂಡಿ ವ್ಯವಸ್ಥೆ ಕಾಮಗಾರಿ ಸಂಬಂಧ 56.15 ಕೋಟಿ ರೂ., ವೆಚ್ಚದ ಪರಿಷ್ಕೃತ ಯೋಜನೆ ರೂಪಿಸಲಾಗಿದ್ದು, ಶೀಘ್ರವೇ ಕಾಮಗಾರಿಯನ್ನು ಅನುಷ್ಠಾನಗೊಳಿಸುವುದಾಗಿ ನಗರಾಭಿವೃದ್ದಿ ಮತ್ತು ನಗರ ಯೋಜನೆ ಸಚಿವ ಬಿ.ಎಸ್.ಸುರೇಶ್ ಹೇಳಿದ್ದಾರೆ. ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಶುಕ್ರವಾರ ವಿಧಾನಸಭೆಯ ಪ್ರಶ್ನೋತ್ತರ ವೇಳೆಯಲ್ಲಿ ಬಿಜೆಪಿ ಸದಸ್ಯ ಕಿರಣ್ ಕುಮಾರ ಕೋಡ್ಗಿ ಅವರ ಪ್ರಶ್ನೆಗೆ ಅವರು ಉತ್ತರಿಸಿದರು. ಕೇಂದ್ರ ಸರಕಾರ ಪುರಸೃತ ಯುಐಡಿಎಸ್ಎಸ್ಎಂಟಿ ಯೋಜನೆಯಡಿ ಕುಂದಾಪುರ ಪಟ್ಟಣಕ್ಕೆ ಒಳಚರಂಡಿ ವ್ಯವಸ್ಥೆ ಕಲ್ಪಿಸಲು ಈ ಹಿಂದೆ 48.14 ಕೋಟಿ ರೂ., ಅಂದಾಜು ವೆಚ್ಚಕ್ಕೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿತ್ತು. ಸದ್ಯ 56.15 ಕೋಟಿರೂ., ವೆಚ್ಚದ ಪರಿಷ್ಕೃತ ಯೋಜನೆ ರೂಪಿಸಲಾಗಿದ್ದು, ಶೀಘ್ರವೇ ಕಾಮಗಾರಿಯನ್ನು ಅನುಷ್ಠಾನಗೊಳಿಸಲಾಗುವುದು ಎಂದು ಅವರು ಹೇಳಿದರು. ಈ ಯೋಜನೆಯಡಿ 39.50 ಕಿ.ಮೀ ಉದ್ದದ ಆಂತರಿಕ ಒಳಚರಂಡಿ ಕೊಳವೆ ಮಾರ್ಗ, 1485 ಮೆಷಿನ್ ಹೋಲ್, 6,000 ಗೃಹ ಸಂಪರ್ಕ 5 ವೆಟ್ ವೆಲ್, 5.40 ಕಿ.ಮೀ ಏರು ಕೊಳವೆ ಮಾರ್ಗ ಹಾಗೂ 3 ತ್ಯಾಜ್ಯ ನೀರು ಶುದ್ಧೀಕರಣ ಘಟಕಗಳನ್ನು ನಿರ್ಮಿಸಲು ಅನುವು ಮಾಡಿಕೊಡಲಾಗಿತ್ತು. ಈ ಪೈಕಿ 31.50 ಕಿ.ಮೀ ಆಂತರಿಕ ಒಳಚರಂಡಿ ಕೊಳವೆ ಮಾರ್ಗ, 1,160 ಮೆಷಿನ್ ಹೋಲ್, 1,650 ಗೃಹ ಸಂಪರ್ಕ ಹಾಗೂ 2.30 ಕಿ.ಮೀ ಏರು ಕೊಳವೆ ಮಾರ್ಗಗಳ ಕಾಮಗಾರಿ ಪೂರ್ಣಗೊಳಿಸಲಾಗಿದೆ. ಇದಕ್ಕೆ ಸುಮಾರು ರೂ.27 ಕೋಟಿಯಷ್ಟು ವೆಚ್ಚವಾಗಿದೆ ಎಂದು ಅವರು ಮಾಹಿತಿ ನೀಡಿದರು. ವೆಟ್ ವೆಲ್ ಹಾಗೂ ತ್ಯಾಜ್ಯ ನೀರು ಶುದ್ದೀಕರಣ ಘಟಕಗಳ ನಿರ್ಮಾಣಕ್ಕೆ 2024ರ ಅಂತ್ಯದವರೆಗೆ ಜಾಗ ನೀಡಿರಲಿಲ್ಲ. ಈ ಹಿನ್ನೆಲೆಯಲ್ಲಿ ಇವುಗಳ ನಿರ್ಮಾಣ ಕಾರ್ಯ ತಡವಾಗಿದೆ. ಸದ್ಯ ನಿರ್ಮಾಣಕ್ಕೆ ಜಾಗ ಹಸ್ತಾಂತರಿಸಲಾಗಿದೆ. ಈ ಕಾಮಗಾರಿಗಳಿಗೆ 33.77 ಕೋಟಿ ರೂ., ಯೋಜನೆ ಸಿದ್ದಪಡಿಸಲಾಗಿದೆ. 13 ಕೋಟಿ ರೂ. ಯೋಜನೆಯ ಹಣವಿದ್ದು, ಸ್ವಚ್ಛ ಭಾರತ ಯೋಜನೆಯಡಿ 6 ಕೋಟಿ ರೂ. ಅನುದಾನ ಹೊಂದಾಣಿಕೆ ಮಾಡಿಕೊಳ್ಳಲಾಗುವುದು. ಇದರ ಹೊರತಾಗಿಯೂ 14 ಕೋಟಿಯಷ್ಟು ಅಗತ್ಯವಿದ್ದು, ಆರ್ಥಿಕ ಇಲಾಖೆ ಒಪ್ಪಿಗೆ ಪಡೆದು ಕಾಮಗಾರಿಯನ್ನು ಶೀಘ್ರ ಆರಂಭಿಸುವುದಾಗಿ ಅವರು ಉಲ್ಲೇಖಿಸಿದರು. ಈ ವೇಳೆ ಪ್ರಸ್ತಾಪಿಸಿದ ಬಿಜೆಪಿ ಸದಸ್ಯ ಸುನೀಲ್ ಕುಮಾರ್, ಸರಕಾರದಿಂದ ಅನುಷ್ಠಾನಗೊಳಿಸಿದ ಒಳಚರಂಡಿ ವ್ಯವಸ್ಥೆಗಳ ನಿರ್ವಹಣೆ ಅವಧಿ ಮುಗಿದ ನಂತರ ಗುತ್ತಿಗೆದಾರರು ಸ್ಥಳೀಯ ಸಂಸ್ಥೆಗಳಿಗೆ ನಿರ್ವಹಣೆ ಹೊಣೆ ಹಸ್ತಾಂತರ ಮಾಡುತ್ತಾರೆ. ಆದರೆ ಪಟ್ಟಣ ಪಂಚಾಯತ್, ಪುರಸಭೆ, ನಗರಸಭೆ ಹಾಗೂ ಪಾಲಿಕೆಗಳಲ್ಲಿ ನಿರ್ವಹಣೆ ವೆಚ್ಚ ಭರಿಸಲು ಅನುದಾನವಿರುವುದಿಲ್ಲ. ಈ ಹಿನ್ನೆಲೆಯಲ್ಲಿ ಸರಕಾರ ಆಯವ್ಯಯದಲ್ಲಿ ಒಳಚರಂಡಿ ವ್ಯವಸ್ಥೆ ನಿರ್ವಹಣೆ ಹಣ ಮೀಸಲಿರಿಸಬೇಕು. ಈ ಮೂಲಕ ಕೋಟ್ಯಾಂತರ ರೂಪಾಯಿಗಳನ್ನು ವ್ಯಯಿಸಿ ಸರಕಾರ ನಿರ್ಮಿಸಿದ ಕಾಮಗಾರಿಗಳು ಸದಾಕಾಲ ಸದ್ಬಳಕೆ ಬರುತ್ತವೆ ಎಂದು ತಿಳಿಸಿದರು. ಇದಕ್ಕೆ ಸಚಿವರು ಉತ್ತರಿಸಿ, ರಾಜ್ಯದಲ್ಲಿ 350 ರಿಂದ 400 ಸ್ಥಳೀಯ ಸಂಸ್ಥೆಗಳಿವೆ. ಇವುಗಳಲ್ಲಿ ನಿರ್ಮಿಸಿದ ಒಳಚರಂಡಿ ವ್ಯವಸ್ಥೆಗೆ ನಿರ್ವಹಣೆ 700 ರಿಂದ 800 ಕೋಟಿ ರೂ., ಅನುದಾನ ಒದಗಿಸಬೇಕಾಗುತ್ತಿದೆ. ಇದಕ್ಕೆ ಆರ್ಥಿಕ ಇಲಾಖೆ ಒಪ್ಪುವುದಿಲ್ಲ. ಸ್ಥಳೀಯ ಸಂಸ್ಥೆಗಳು ತಮ್ಮ ಆದಾಯ ಮೂಲಗಳಿಂದಲೇ ನಿರ್ವಹಣೆ ವೆಚ್ಚ ತೆಗೆದುಕೊಳ್ಳಬೇಕು ಎಂದು ಸ್ಪಷ್ಟಪಡಿಸಿದರು.
Year Ender 2025: ದೇಶದಲ್ಲಿ ಈ ಮದ್ಯಕ್ಕೆ ಭರ್ಜರಿ ಡಿಮ್ಯಾಂಡ್, ಕರ್ನಾಟಕವೇ ನಂ 1
Year Ender 2025: 2025 ನೇ ಸಾಲಿನಲ್ಲಿ ಹಲವು ಅಚ್ಚರಿಯ ಬೆಳವಣಿಗೆಗಳು ನಡೆದಿವೆ. ಅದರಲ್ಲೂ ಮುಖ್ಯವಾಗಿ ಈ ವರ್ಷ ಮದ್ಯ ಮಾರಾಟದಲ್ಲಿ ಹೊಸ ದಾಖಲೆ ಸೃಷ್ಟಿಯಾಗಿದೆ. ಈ ವರ್ಷ ಮದ್ಯ ಖರೀದಿಯಲ್ಲಿ ದಕ್ಷಿಣ ಭಾರತದ ರಾಜ್ಯಗಳು ಹಾಗೂ ಕರ್ನಾಟಕ ಮುಂಚೂಣಿಯಲ್ಲಿದೆ. ಅದರಲ್ಲೂ ಮುಖ್ಯವಾಗಿ ಈ ವರ್ಷ ವಿವಿಧ ಮದ್ಯಗಳಲ್ಲಿ ವಿಸ್ಕಿ ಮಾರಾಟವು ಹೊಸ ದಾಖಲೆಯನ್ನೇ ಬರೆದಿದೆ. 2025ನೇ
Guest Teachers Recruitment: 5,000 ಅತಿಥಿ ಶಿಕ್ಷಕರ ನೇಮಕಾತಿ ಬಗ್ಗೆ ಶಿಕ್ಷಣ ಸಚಿವ ಮಹತ್ವದ ಮಾಹಿತಿ
ಅತಿಥಿ ಶಿಕ್ಷಕರಾಗುವ ಆಕಾಂಕ್ಷಿಗಳಿಗೆ ರಾಜ್ಯ ಸರ್ಕಾರವು ಸಿಹಿಸುದ್ದಿ ನೀಡಿದೆ. ಈ ಬಗ್ಗೆ ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಬೆಳಗಾವಿ ಅಧಿವೇಶನದಲ್ಲಿ ಮಹತ್ವದ ವಿಚಾರವನ್ನು ಪ್ರಸ್ತಾಪಿಸಿದ್ದಾರೆ. ಶಾಲಾ ಶಿಕ್ಷಕರ ಹಾಗೂ ಸರ್ಕಾರಿ ಪ್ರೌಢಶಾಲಾ ಶಿಕ್ಷಕರ ವಿಷಯವಾರು ಹಾಗೂ ಭಾಷಾವಾರು ಖಾಲಿ ಹುದ್ದೆಗಳಿಗೆ ಅತಿಥಿ ಶಿಕ್ಷಕರನ್ನು ನಿಯೋಜಿಸಿಕೊಳ್ಳಲು ಅನುಮತಿ ನೀಡಲಾಗಿದೆ ಎಂದು ಅವರು ಸದನಕ್ಕೆ ತಿಳಿಸಿದ್ದಾರೆ. ಈ ಸಂಬಂಧ
ರಿಷಿಕಾ ದೇವಾಡಿಗರಿಗೆ ಉಡುಪಿ ಜಿಲ್ಲಾ ʼವಿದ್ಯಾರ್ಥಿ ಯುವ ಸಾಹಿತ್ಯ ರತ್ನʼ ಪ್ರಶಸ್ತಿ
ಕಾರ್ಕಳ : ಕಾರ್ಕಳ ತಾಲೂಕು ಇಪ್ಪತ್ತೊಂದನೆಯ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಡಾ. ಸುಧಾಕರ ಶೆಟ್ಟಿ, ಅಧ್ಯಕ್ಷರು ಪದ್ಮ ಗೋಪಾಲ ಎಜುಕೇಶನ್ ಟ್ರಸ್ಟ್ ಗಣಿತ ನಗರ ಕುಕ್ಕುಂದೂರು ಇವರ ಪ್ರಾಯೋಜಕತ್ವದಲ್ಲಿ ನೀಡಲಾಗುವ ದಿ. ಪ್ರೊ.ಎಂ.ರಾಮಚಂದ್ರ ಸ್ಮರಣೆಯ ಉಡುಪಿ ಜಿಲ್ಲೆಯ ವಿದ್ಯಾರ್ಥಿ ಯುವ ಸಾಹಿತ್ಯ ರತ್ನ ಪ್ರಶಸ್ತಿಗೆ ಕುಂದಾಪುರ ತಾಲೂಕಿನ ಹಟ್ಟಿಅಂಗಡಿಯ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆಯ 10 ನೇ ತರಗತಿಯ ವಿದ್ಯಾರ್ಥಿ ರಿಷಿಕಾ ದೇವಾಡಿಗ ಬೈಂದೂರು ಇವರು ಆಯ್ಕೆಯಾಗಿದ್ದಾರೆ. ರಾಜ್ಯಮಟ್ಟದ ಮಕ್ಕಳ ಸಾಹಿತ್ಯ ಸಮ್ಮೇಳನ 2025 ರ ಸರ್ವಾಧ್ಯಕ್ಷೆಯಾಗಿದ್ದು ಆ ಸಂದರ್ಭದಲ್ಲಿ ಇವರಮೊದಲ ಹೆಜ್ಜೆ ಕಥಾ ಸಂಕಲನವನ್ನು ಪ್ರಕಟಗೊಂಡಿರುತ್ತದೆ. ಇವರು ರಾಜ್ಯಮಟ್ಟದ ಭಾಷಣ ಸ್ಪರ್ಧೆ, ದೇಶಭಕ್ತಿ ಗೀತೆ ಸ್ಪರ್ಧೆ, ಏಕಪಾತ್ರಾಭಿನಯ, ಸಾಹಿತ್ಯ ಕೃತಿ ವಿಮರ್ಶೆ ಮೊದಲಾದವುಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ಪ್ರಶಸ್ತಿಗಳನ್ನು ಪಡೆದಿರುತ್ತಾರೆ. ಇವರು ಹಟ್ಟಿಯಂಗಡಿ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆಯ ಉಪ ಪ್ರಾಂಶುಪಾಲರಾದ ರಾಮ ದೇವಾಡಿಗ ಮತ್ತು ಶಿಕ್ಷಕಿ ರೂಪ ರವರ ಸುಪುತ್ರಿಯಾಗಿದ್ದಾರೆ. ಪ್ರಶಸ್ತಿಯು ಹತ್ತು ಸಾವಿರ ರೂ. ನಗದು ಹಾಗೂ ಶಾಶ್ವತ ಫಲಕವನ್ನು ಒಳಗೊಂಡಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತು ಕಾರ್ಕಳ ತಾಲೂಕು ಘಟಕ ಪ್ರಕಟನೆಯಲ್ಲಿ ತಿಳಿಸಿದೆ.
ಮೇಕೆದಾಟು ಯೋಜನೆ ತ್ವರಿತ ಅನುಷ್ಠಾನಕ್ಕೆ ತಂಡ ರಚನೆ: ರಾಜ್ಯ ಸರ್ಕಾರ ಮಹತ್ವದ ಆದೇಶ
ಬೆಂಗಳೂರು, ಡಿಸೆಂಬರ್12: ಕರ್ನಾಟಕದ ಪರ ಸುಪ್ರೀಂ ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಮೇಕೆದಾಟು ಸಮತೋಲಿತ ಜಲಾನಯನ ಯೋಜನೆ ತ್ವರಿತ ಅನುಷ್ಠಾನಕ್ಕೆ ಕೆಇಆರ್ ಎಸ್ (ಕರ್ನಾಟಕ ಇಂಜಿನಿಯರಿಂಗ್ ಸಂಶೋಧನಾ ಕೇಂದ್ರ) ನಿರ್ದೇಶಕರ ನೇತೃತ್ವದಲ್ಲಿ ತಂಡವನ್ನು ರಚಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಈ ತಂಡವು ಉಪ ಮುಖ್ಯ ಇಂಜಿನಿಯರ್ ಹಾಗೂ ಸಿಬ್ಬಂದಿಯನ್ನು ಒಳಗೊಂಡಿದ್ದು, ಬೆಂಗಳೂರು ದಕ್ಷಿಣ ಜಿಲ್ಲೆಯ ರಾಮನಗರವನ್ನು ಕೇಂದ್ರ
ಲಿಂಗಸೂಗೂರು, ಹಟ್ಟಿ, ಮುದುಗಲ್ ಪಟ್ಟಣಕ್ಕೆ ಕಾಲಮಿತಿಯಲ್ಲಿ ನೀರು ಪೂರೈಕೆಗೆ ಕ್ರಮ: ಸಚಿವ ಭೈರತಿ ಸುರೇಶ್
ಬೆಳಗಾವಿ (ಸುವರ್ಣವಿಧಾನಸೌಧ) ಡಿ. 12: ರಾಯಚೂರು ಜಿಲ್ಲೆಯ ಲಿಂಗಸೂಗೂರು, ಹಟ್ಟಿ ಹಾಗೂ ಮುದುಗಲ್ ಪಟ್ಟಣಗಳಿಗೆ ನಿಗದಿತ ಕಾಲಮಿತಿಯಲ್ಲಿ ಕುಡಿಯುವ ನೀರು ಪೊರೈಕೆಗೆ ಸರಕಾರ ಕ್ರಮ ವಹಿಸಲಿದೆ ಎಂದು ನಗರಾಭಿವೃದ್ಧಿ ಮತ್ತು ನಗರ ಯೋಜನೆ ಸಚಿವ ಭೈರತಿ ಸುರೇಶ್ ತಿಳಿಸಿದ್ದಾರೆ. ಶುಕ್ರವಾರ ವಿಧಾನಸಭೆ ಪ್ರಶ್ನೋತ್ತರ ಅವಧಿಯಲ್ಲಿ ಬಿಜೆಪಿ ಸದಸ್ಯ ಮಾನಪ್ಪ ವಜ್ಜಲ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವ ಭೈರತಿ ಸುರೇಶ್, ಲಿಂಗಸೂಗೂರು ಪಟ್ಟಣಕ್ಕೆ ಅಮೃತ್ 2.0 ಯೋಜನೆಯಡಿ 94 ಕೋಟಿ ರೂ.ವೆಚ್ಚದಲ್ಲಿ ಹಾಗೂ ಹಟ್ಟಿ ಪಟ್ಟಣ ಪಂಚಾಯಿತಿಗೆ ಜೆ.ಜೆ.ಎಂ ಯೋಜನೆಯಡಿ 33.22 ಕೋಟಿ ರೂ.ವೆಚ್ಚದಲ್ಲಿ ಕುಡಿಯುವ ನೀರು ಸರಬರಾಜು ಮಾಡುವ ಕಾಮಗಾರಿ ಚಾಲ್ತಿಯಲಿದ್ದು, ಕಾಲಮಿತಿಯಲ್ಲಿ ಕಾಮಗಾರಿ ಪೂರ್ಣಗೊಳಿಸಿ ಕುಡಿಯುವ ನೀರಿನ ಸಮಸ್ಯೆ ಪರಿಹರಿಸಲಾಗುವುದು ಎಂದರು. ಲಿಂಗಸೂಗೂರು ಯೋಜನೆಯ ಟೆಂಡರ್ ಪಡೆದ ಗುತ್ತಿಗೆದಾರರಿಗೆ ಕಾಮಗಾರಿ ಸ್ಥಳವನ್ನು 2024ರ ಮೇ ನಲ್ಲಿ ಹಸ್ತಾಂತರಿಸಲಾಗಿದೆ. 24 ತಿಂಗಳ ಕಾಲಾವಧಿ ನಿಗದಿಪಡಿಸಿದ್ದು, 2026ರ ಮೇ ಒಳಗಾಗಿ ಕಾಮಗಾರಿ ಪೂರ್ಣಗೊಳಿಸಿ ಚಾಲನೆ ನೀಡಲಾಗುವುದು. ಹಟ್ಟಿ ಪಟ್ಟಣ ಪಂಚಾಯಿತಿ ಯೋಜನೆಯ ಟೆಂಡರ್ ಪಡೆದ ಗುತ್ತಿಗೆದಾರರಿಗೆ ಸ್ಥಳವನ್ನು 2025ರ ಜನವರಿಯಲ್ಲಿ ಹಸ್ತಾಂತರಿಸಲಾಗಿದೆ. ಮುಂಬರುವ ವರ್ಷದ ಆರಂಭದಲ್ಲಿಯೇ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದು ಸಚಿವ ಭೈರತಿ ಸುರೇಶ್ ತಿಳಿಸಿದರು. ಮುದಗಲ್ ಪಟ್ಟಣದ ಕುಡಿಯುವ ನೀರು ಸರಬರಾಜು ಉನ್ನತೀಕರಣ ಯೋಜನೆಗೆ 34.96 ಕೋಟಿ ರೂ.ಅಂದಾಜು ಮೊತ್ತದಲ್ಲಿ ಕೈಗೊಳ್ಳಲು ಅನುಮೋದನೆ ನೀಡಲಾಗಿದೆ. ಈ ಪೈಕಿ ಶೇ.50ರಷ್ಟು ಮೊತ್ತ 17.48 ಕೋಟಿ ರೂ.ಸರಕಾರದ ಅನುದಾನ ಹಾಗೂ ಶೇ.50ರಷ್ಟು ಮೊತ್ತ 17.48 ಕೋಟಿ ರೂ.ಗಳನ್ನು ಪುರಸಭೆ ಪರವಾಗಿ ಮಾರುಕಟ್ಟೆ ಸಾಲ ಪಡೆದು ಅನುಷ್ಠಾನ ಗೊಳಿಸಲು ಉದ್ದೇಶಿಸಲಾಗಿತ್ತು. ಸರಕಾರದ ಅನುದಾನದ ಪಾಲಿನಲ್ಲಿ 6.62 ಕೋಟಿ ರೂ.ವೆಚ್ಚವಾಗಿದ್ದು, ಶೇ.27ರಷ್ಟು ಕೆಲಸ ಪೂರ್ಣಗೊಂಡಿದೆ ಎಂದು ಹೇಳಿದರು. ಲಿಂಗಸೂಗೂರು, ಹಟ್ಟಿ ಮತ್ತು ಮುದುಗಲ್ ಪಟ್ಟಣಗಳಲ್ಲಿ ಪ್ರತಿ 10 ದಿನಗಳಿಗೊಮ್ಮೆ ಕುಡಿಯುವ ನೀರು ಸರಬರಾಜು ಆಗುತ್ತಿದೆ. ಹತ್ತಿರದಲ್ಲಿಯೇ ಕೃಷ್ಣಾ ನದಿಗೆ ಅಡ್ಡಲಾಗಿ ಅಣೆಕಟ್ಟು ಇದ್ದರೂ ಕುಡಿಯುವ ನೀರಿಗೆ ಪರದಾಡುವ ಸ್ಥಿತಿ ಎದುರಾಗಿದೆ. ಪ್ರತಿದಿನ ಜನರು ನೀರಿನ ಬವಣೆ ಹೇಳಿಕೊಂಡು ಮನೆಗೆ ಬರುತ್ತಾರೆ. ಸರಕಾರಕ್ಕೆ ಜನರಿಗೆ ಕುಡಿಯುವ ನೀರನ್ನು ಕೊಡುವ ಯೋಗ್ಯತೆಯೂ ಇಲ್ಲವೇ?. ಜನ ಪ್ರತಿನಿತ್ಯ ನನ್ನ ಮನೆಗೆ ಬಂದು ಛಿಮಾರಿ ಹಾಕುತ್ತಿದ್ದಾರೆಂದು ಸದಸ್ಯ ಮಾನಪ್ಪ ವಜ್ಜಲ್ ಸರಕಾರದ ಗಮನ ಸೆಳೆದಿದ್ದರು.
ತೊಗರಿ ಬೆಳೆಗಾರರಿಗೆ ಕೇಂದ್ರದಿಂದ ನೆರವು: ಮಾಜಿ ಶಾಸಕ ಸುಭಾಷ್ ಗುತ್ತೇದಾರ್ ಸ್ವಾಗತ
ಕಲಬುರಗಿ: ಬೆಂಬಲ ಬೆಲೆಯಲ್ಲಿ ತೊಗರಿ ಖರೀದಿಸಲು ಕೇಂದ್ರ ಸರಕಾರ ಅನುಮತಿ ನೀಡಿದ್ದರಿಂದ ರಾಜ್ಯ ಸರಕಾರ ಮೀನಾ ಮೇಷ ಏಣಿಸದೇ ಈ ಕೂಡಲೇ ಖರೀದಿ ಕೇಂದ್ರಗಳನ್ನು ಆರಂಭಿಸುವoತೆ ಮಾಜಿ ಶಾಸಕ ಸುಭಾಷ್ ಆರ್. ಗುತ್ತೇದಾರ್ ಆಗ್ರಹಿಸಿದ್ದಾರೆ. ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಸುಭಾಷ್ ಆರ್.ಗುತ್ತೇದಾರ್, ಕೇಂದ್ರ ಸರಕಾರ ಪ್ರಸಕ್ತವಾಗಿ ತೊಗರಿ ಖರೀದಿಗೆ ಒಪ್ಪಿಗೆ ನೀಡಿದ್ದಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ, ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹಾಗೂ ಶಿವರಾಜ್ ಸಿಂಗ್ ಚೌವ್ಹಾಣ್ ಅವರನ್ನು ಪತ್ರಿಕಾ ಹೇಳಿಕೆಯಲ್ಲಿ ಸುಭಾಷ್ ಆರ್ ಗುತ್ತೇದಾರ್ ಅಭಿನಂದಿಸಿದ್ದಾರೆ. ಅತಿವೃಷ್ಟಿ ಯಿಂದ ತೊಗರಿ ಬೆಳೆ ಹಾನಿಯಾಗಿ ಅಲ್ಲಲ್ಲಿ ಅಲ್ಪ ಸ್ವಲ್ಪ ಬೆಳೆ ಉಳಿದು ರಾಶಿಯಾಗುತ್ತಿದೆ. ಆದರೆ ಮಾರುಕಟ್ಟೆಯಲ್ಲಿ ಬೆಂಬಲ ಬೆಲೆಗಿಂತ ಕಡಿಮೆಯಿದ್ದು, ಕ್ವಿಂಟಾಲ್ ತೊಗರಿಗೆ ಕೇವಲ 7,000ರೂ. ದರದಲ್ಲಿ ಮಾರಾಟವಾಗುತ್ತಿದೆ. ರೈತರಿಗೆ ಕ್ವಿಂಟಾಲ್ ಗೆ 9,000 ರೂ. ದರದಲ್ಲಿ ಖರೀದಿ ಮಾಡಿದರೆ ರೈತರಿಗೆ ಅನುಕೂಲವಾಗುತ್ತದೆ. ಜೊತೆಗೆ ಮಾರುಕಟ್ಟೆಯಲ್ಲೂ ದರ ಹೆಚ್ಚಳಕ್ಕೆ ಕಾರಣವಾಗುತ್ತದೆ. ಹೀಗಾಗಿ ರಾಜ್ಯ ಸರಕಾರ ಪ್ರತಿ ಕ್ವಿಂಟಾಲ್ಗೆ ಸಾವಿರ ರೂ ಪ್ರೋತ್ಸಾಹ ಧನ ನಿಗದಿ ಮಾಡಿ ಬೆಂಬಲ ಬೆಲೆಯಲ್ಲಿ ತೊಗರಿ ಖರೀದಿ ಪ್ರಾರಂಭಿಸಬೇಕು. ಕೇಂದ್ರದ ಬೆಂಬಲ ಬೆಲೆ ಕ್ವಿಂಟಾಲ್ ಗೆ 8 ಸಾವಿರ ರೂ ಇದ್ದು, ರಾಜ್ಯ ಸರಕಾರ 1 ಸಾವಿರ ರೂ ಪ್ರೋತ್ಸಾಹ ಧನ ನಿಗದಿ ಮಾಡಿದರೆ, ಕ್ವಿಂಟಾಲ್ ಗೆ 9 ಸಾವಿರ ರೂ ದರದಲ್ಲಿ ಖರೀದಿ ಮಾಡಿದರೆ ರೈತರಿಗೆ ಅನುಕೂಲವಾಗುತ್ತದೆ ಎಂದು ಸುಭಾಷ್ ಆರ್ ಗುತ್ತೇದಾರ್ ಹೇಳಿದ್ದಾರೆ. ಪ್ರಸಕ್ತವಾಗಿ ಅತಿವೃಷ್ಟಿಯಿಂದ ಬೆಳೆಗಳು ಹಾಳಾಗಿ ರೈತರು ತೊಂದರೆಯಲ್ಲಿರುವುದು ಎಲ್ಲರಿಗೂ ತಿಳಿದ ವಿಷಯ. ಹೀಗಾಗಿ ಸರಕಾರ ಈ ವೇಳೆ ಬೆಳೆ ಹಾನಿ ಪರಿಹಾರವನ್ನು ಸಂಪೂರ್ಣವಾಗಿ ರೈತರ ಖಾತೆಗೆ ಜಮಾ ಮಾಡಬೇಕಿತ್ತು. ಮೂರು ಇಲ್ಲವೇ ಆರೇಳು ಸಾವಿರ ರೂ ಮಾತ್ರ ಹಾಕಲಾಗಿದೆ. ಎನ್ಡಿಆರ್ಎಫ್ ನಿಯಮಾವಳಿ ಅಡಿ ಪ್ರತಿಯೊಬ್ಬ ರೈತರಿಗೆ ಕೇಂದ್ರ ಸರಕಾರವೇ ಹೆಕ್ಟೇರ್ ಗೆ 8500 ರೂ. ನಂತೆ ಎರಡು ಹೆಕ್ಟೇರ್ ಸೇರಿ 17,000 ರೂ ನೀಡಲಾಗುತ್ತದೆ. ಅದರ ಜತೆಗೆ ರಾಜ್ಯ ಸರ್ಕಾರದ್ದು ಸೇರಿದರೆ 24,000 ರೂ. ಆಗುತ್ತದೆ. ಆದ್ದರಿಂದ ಪ್ರತಿ ರೈತಗೆ 34 ಸಾವಿರ ರೂ ಪರಿಹಾರ ನೀಡಬೇಕು. ಇಲ್ಲದಿದ್ದರೆ ರಾಜ್ಯ ಸರಕಾರದ ಬೊಕ್ಕಸ ಖಾಲಿಯಾಗಿದೆ ಎಂಬುದಾಗಿ ತಿಳಿದುಕೊಳ್ಳಬೇಕಾಗುತ್ತದೆ ಎಂದು ಹೇಳಿದ್ದಾರೆ. ಪ್ರಸಕ್ತವಾಗಿ ಕೇಂದ್ರದ ಪ್ರಧಾನ ಮಂತ್ರಿ ಫಸಲು ವಿಮಾ ಯೋಜನೆ ಅಡಿ ಅತಿ ಹೆಚ್ಚಿನ ರೈತರು ಬೆಳೆವಿಮೆ ಮಾಡಿಸಿದ್ದಾರೆ. ಹೀಗಾಗಿ ತೊಗರಿ ಬೆಳೆ ಹಾಳಾಗಿದ್ದರಿಂದ ನೂರಕ್ಕೆ ನೂರಷ್ಟು ಬೆಳೆ ವಿಮೆ ದೊರಕುವ ನಿಟ್ಟಿನಲ್ಲಿ ಕಲಬುರಗಿ ಜಿಲ್ಲಾಡಳಿತ ಮುಂದಾಗಬೇಕು. ಕನಿಷ್ಠ ಸಾವಿರ ಕೋ.ರೂ. ಜಿಲ್ಲೆಯ ರೈತರಿಗೆ ಬೆಳೆ ವಿಮೆ ದೊರಕಬೇಕು ಎಂದು ಹೇಳಿದ್ದಾರೆ.
ಭೂ ಕಬಳಿಕೆದಾರರಿಗೆ ಶಾಕ್ ಕೊಟ್ಟ ಸರ್ಕಾರ, ಅಧಿವೇಶನದಲ್ಲಿ ಮಹತ್ವದ ನಿರ್ಧಾರ
ರಾಜ್ಯ ಸರ್ಕಾರವು ಭೂಕಬಳಿಕೆದಾರರಿಗೆ ಶಾಕ್ ಕೊಟ್ಟಿದೆ. ಬೆಳಗಾವಿಯಲ್ಲಿ ನಡೆಯುತ್ತಿರುವ ಅಧಿವೇಶನದಲ್ಲಿ ಈ ಭೂಕಬಳಿಕೆದಾರರಿಗೆ ಬಿಸಿ ಮುಟ್ಟಿಸಲು ಮಹತ್ವದ ನಿರ್ಧಾರ ತೆಗೆದುಕೊಳ್ಳಲಾಗಿದೆ. ಸದ್ಯ ರಿಯಲ್ ಎಸ್ಟೇಟ್ ಹೆಸರಿನಲ್ಲಿ ಭೂಮಿಗೆ ದುಬಾರಿ ಬೆಲೆ ಇರುವ ಜಾಗಗಳಲ್ಲಿ ಕಬಳಿಕೆ ಮಿತಿಮೀರಿದೆ. ಈ ಹಿನ್ನೆಲೆ ರಾಜ್ಯ ಸರ್ಕಾರ ಭೂಕಬಳಿಕೆದಾರರಿಗೆ ವಾರ್ನಿಂಗ್ ಕೂಡ ನೀಡಿದೆ. ಬಗರ್ ಹುಕುಂ ಭೂಮಿ ಕಬಳಿಸುವವರಿಗೂ ಕಾನೂನಿನ ಎಚ್ಚರಿಕೆ ನೀಡಿದೆ.
ಅಮೆರಿಕದ ಕಂಪೆನಿಗಳಿಂದ ಭಾರತೀಯರನ್ನು ಹೊರಹಾಕಲು ಯೋಜನೆ; ಪ್ರಸಿದ್ಧ ಸಮೀಕ್ಷಾ ಸಂಸ್ಥೆ ಘೋಷಣೆ
ಅಮೆರಿಕದ ಪ್ರಮುಖ ಸಮೀಕ್ಷಾ ಕಂಪೆನಿಗಳಲ್ಲಿ ಒಂದಾಗಿರುವ ‘ರಾಸ್ಮುಸೆನ್ ರಿಪೋರ್ಟ್ಸ್’ ಎಚ್-1ಬಿ ವೀಸಾಗಳ ಬಗ್ಗೆ ಹೊಸ ರೀತಿಯ ದಾಳಿ ನಡೆಸಿದೆ. ಭಾರತೀಯರನ್ನು ಅಮೆರಿಕದ ಕಂಪೆನಿಗಳಿಂದ ಹೊರಹಾಕಲು ಕನ್ಸಲ್ಟೆನ್ಸಿ ಕಂಪೆನಿ ತೆರೆಯುವುದಾಗಿ ಹೇಳಿದೆ. ಅಮೆರಿಕದಲ್ಲಿ ಸಾರ್ವಜನಿಕ ಅಭಿಪ್ರಾಯಗಳನ್ನು ರೂಪಿಸುವ ಪ್ರಮುಖ ಸಮೀಕ್ಷಾ ಸಂಸ್ಥೆಯಾಗಿರುವ ‘ರಾಸ್ಮುಸೆನ್ ರಿಪೋರ್ಟ್ಸ್’ನ ಸಿಇಒ ಮಾರ್ಕ್ ಮಿಷೆಲ್ ಎಚ್-1ಬಿ ವೀಸಾ ಕಾರ್ಯಕ್ರಮವನ್ನು ಟೀಕಿಸಿದ್ದು, ಅಮೆರಿಕದ ಕಂಪೆನಿಗಳಿಂದ ಭಾರತೀಯರನ್ನು ಹೊರಗೆ ಹಾಕುವ ಅಭಿಯಾನಕ್ಕಾಗಿ ಕನ್ಸಲ್ಟನ್ಸಿಯನ್ನು ಸ್ಥಾಪಿಸುವುದಾಗಿ ಹೇಳಿದ್ದಾರೆ. ಎಚ್-1ಬಿ ವೀಸಾಗಳ ಮೂಲಕ ಅಮೆರಿಕದ ಕಂಪೆನಿಗಳು ವಿದೇಶಿ ಪ್ರತಿಭೆಗಳನ್ನು ಕೆಲಸಕ್ಕೆ ನೇಮಿಸಿಕೊಳ್ಳುತ್ತವೆ. ಎಚ್-1ಬಿ ವ್ಯವಸ್ಥೆಯಲ್ಲಿ ಉದ್ಯೋಗ ದೊರೆತವರಲ್ಲಿ ಶೇ 70ರಷ್ಟು ಭಾರತೀಯರಾಗಿದ್ದಾರೆ. ವಾರ್ಷಿಕವಾಗಿ 85,000 ಭಾರತೀಯರಿಗೆ ಎಚ್-1ಬಿ ವೀಸಾ ನೀಡಲಾಗುತ್ತಿದೆ. “ನನ್ನ ಜೀವನದಲ್ಲಿ ಇಂತಹ ಒಂದು ಕೆಲಸ ಮಾಡುತ್ತೇನೆ ಎಂದು ಅಂದುಕೊಂಡಿರಲಿಲ್ಲ. ಹಾಗಿದ್ದರೂ ಇದೀಗ ಅಮೆರಿಕದ ಕಂಪೆನಿಗಳಿಂದ ಭಾರತೀಯರನ್ನು ಹೊರಗಿಡಲೆಂದೇ ಕನ್ಸಲ್ಟೆನ್ಸಿ ಆರಂಭಿಸಲಿದ್ದೇನೆ. ನಾನು ಸಾಯುವವರೆಗೂ ಇದಕ್ಕಾಗಿ ಹೆಣಗಾಡುತ್ತೇನೆ” ಎಂದು ಸಾಮಾಜಿಕ ಜಾಲತಾಣ ‘ಎಕ್ಸ್’ ನಲ್ಲಿ ಅವರು ಡಿಸೆಂಬರ್ 10ರಂದು ಬರೆದಿದ್ದಾರೆ. “ಆ್ಯಪಲ್ ಕಂಪೆನಿಯ ಹಿರಿಯ ಡೆವಲಪರ್ಗಳೇ ನಾವು ಹೊರಗೆ ಕಳುಹಿಸುವ ಪ್ರತಿ ಎಚ್-1ಬಿಯು ಆರ್ಥಿಕವಾಗಿ 10 ಅಕ್ರಮ ವಲಸಿಗರನ್ನು ಹೊರಕಳುಹಿಸಿರುವುದಕ್ಕೆ ಸಮನಾಗಿರುತ್ತದೆ. ನಿನ್ನೆಯೇ ಇದನ್ನು ಏಕೆ ಮಾಡಲಿಲ್ಲ ಎಂದು ನನಗೆ ತಿಳಿದಿಲ್ಲ. ಇವರಲ್ಲಿ ಬಹಳಷ್ಟು ಮಂದಿ ಆರಂಭಿಕ ಹಂತದವರು. ಆದರೆ ಬಹಳಷ್ಟು ಮಂದಿ ಟನ್ಗಟ್ಟಲೆ ಹಣ ಸಂಪಾದಿಸುತ್ತಿದ್ದಾರೆ” ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಮಿಷೆಲ್ ಅವರ ಬೆದರಿಕೆಯನ್ನು ಗಂಭೀರವಾಗಿ ತೆಗೆದುಕೊಳ್ಳಲು ಕಾರಣವಿದೆ. ಅವರು ‘ರಾಸ್ಮುಸೆನ್ ರಿಪೋರ್ಟ್ಸ್’ನ ಸಿಇಒ. ಆ ಕಂಪೆನಿ ಅಮೆರಿಕದ ಬೃಹತ್ ಸಮೀಕ್ಷಾ ಕಂಪೆನಿಗಳಲ್ಲಿ ಒಂದಾಗಿದೆ. 2003ರಲ್ಲಿ ಸ್ಕಾಟ್ ರಾಸ್ಮುಸೆನ್ ಅವರು ಸ್ಥಾಪಿಸಿರುವ ಈ ಸಂಸ್ಥೆ ಅಮೆರಿಕದಲ್ಲಿ ಸಾರ್ವಜನಿಕ ಅಭಿಪ್ರಾಯವನ್ನು ಮೂಡಿಸುವ ಅತಿದೊಡ್ಡ ಸಂಸ್ಥೆಯಾಗಿದೆ. ಇದು ನಿತ್ಯವೂ ರಾಷ್ಟ್ರೀಯ ಮಟ್ಟದಲ್ಲಿ ರಾಜಕೀಯ, ಅರ್ಥವ್ಯವಸ್ಥೆ ಮತ್ತು ಗ್ರಾಹಕ ಸಂವೇದನೆಗಳ ಕುರಿತು ಸಮೀಕ್ಷೆ ನಡೆಸುತ್ತದೆ.
ಬೆಂಗಳೂರಿನಲ್ಲಿ'ಆಕ್ಸಿಲೇಟರ್'ಗಿಂತ 'ಹಾರ್ನ್' ಹೆಚ್ಚು ಉಪಯುಕ್ತ; ಜಪಾನ್ನ ಸಿಇಒ ಹೀಗಂದಿದ್ಯಾಕೆ?
ಇತ್ತೀಚೆಗೆ ಜಪಾನ್ನಲ್ಲಿನ ಉದ್ಯೋಗಿಗಳು ಬೆಂಗಳೂರಿನ ಟ್ರಾಫಿಕ್ ನೆನದು ಇಲ್ಲಿಗೆ ಬರಲು ಹಿಂದೇಟು ಹಾಕುತ್ತಿದ್ದರು. ಅವರಿಗೆ ನಾನು ಈ ಸಿಲಿಕಾನ್ ಸಿಟಿ ಬಗ್ಗೆ ವರ್ಣಿಸಿದ್ದು ಹೀಗೆ ಎಂದು ಜಪಾನ್ನ ಕಂಪನಿಯೊಂದರ ಸಿಇಒ ಬೆಂಗಳೂರಿನ ಹವಾಮಾನ, ಟ್ರಾಫಿಕ್ ಬಗ್ಗೆ ಲಿಂಕ್ಡಿನ್ನಲ್ಲಿ ವರ್ಣಿಸಿ ಪೋಸ್ಟ್ ಹಂಚಿಕೊಂಡಿದ್ದಾರೆ. ಬೆಂಗಳೂರಿನ ಟ್ರಾಫಿಕ್ನಿಂದ ಕಾರು ಓಡಿಸುವುದು ಹೇಗೆ ಕಲಿತೆ, ಹಾರ್ನ್ ಬಳಕೆ ಮಾಡುವುದು ಕಲಿತಿದ್ದು ಹೇಗೆ ಎಂದು ವರ್ಣಿಸಿದ್ದಾರೆ. ಜೊತೆಗೆ ಹವಾಯಿ ದ್ವೀಪಕ್ಕೆ ಬೆಂಗಳೂರನ್ನು ಅವರು ಹೋಲಿಸಿದ್ದಾರೆ.
ರಷ್ಯಾ-ಉಕ್ರೇನ್ ಯುದ್ದ 3ನೇ ಮಹಾಯುದ್ದಕ್ಕೆ ನಾಂದಿ ಹಾಡುತ್ತೆ; ಟ್ರಂಪ್ ಸ್ಪೋಟಕ ಹೇಳಿಕೆ
ರಷ್ಯಾ-ಉಕ್ರೇನ್ ಯುದ್ಧ ಕೊನೆಗೊಳಿಸುವ ಶಾಂತಿ ಮಾತುಕತೆ ವಿಫಲವಾಗುವ ಹಂತದಲ್ಲಿದೆ.ಯುದ್ದ ಹೀಗೆ ಮುಂದುವರಿದರೆ ಮೂರನೇ ಮಹಾಯುದ್ಧಕ್ಕೆ ಕಾರಣವಾಗಬಹುದು ಎಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಕೆ ನೀಡಿದ್ದಾರೆ. ಇತ್ತ ಪುಟಿನ್ ಯುದ್ದ ನಿಲ್ಲಬೇಕಾದರೆ ಭೂಭಾಗ ಬಿಟ್ಟುಕೊಡಲೇ ಬೇಕು ಎಂದು ಕೂತಿದ್ದರೆ ಝೆಲೆನ್ಸ್ಕಿ ಅದಕ್ಕೆ ಒಪ್ಪುತ್ತಿಲ್ಲ, ಇದು ಪರಿಸ್ಥಿತಿಯನ್ನು ಮತ್ತಷ್ಟು ಹದಗೆಡಿಸಿದ್ದು, ಟ್ರಂಪ್ ಉಭಯ ದೇಶಗಳ ಯುದ್ದದಿಂದ ಬೇಸತ್ತಿದ್ದಾರೆ.
ಶಿಲ್ಪ ಕಲಾವಿದ ಆನಂದ್ ಬಾಬು ಅವರಿಗೆ ರಾಷ್ಟ್ರೀಯ ಪ್ರಶಸ್ತಿ
ಕಲಬುರಗಿ: ಕಲಬುರಗಿ ಮೂಲದ ಶಿಲ್ಪ ಕಲಾವಿದ ಆನಂದ್ ಬಾಬು ಮನೋಹರ್ ಅವರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು 2024ರ ಸಾಲಿನ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಮಾಡಿದರು. ಡಿಸೆಂಬರ್ 9ರಂದು ದಿಲ್ಲಿಯ ವಿಜ್ಞಾನ ಭವನದಲ್ಲಿ ನಡೆದ ಸಮಾರಂಭದಲ್ಲಿ ಆನಂದ ಬಾಬು ಅವರು ಪ್ರಶಸ್ತಿಯನ್ನು ಸ್ವೀಕರಿಸಿದರು. ಅನಂದ್ ಬಾಬು ಅವರು ಕಳೆದ ದಶಕದಿಂದ ಕೈಗಾರಿಕೆ ಸೇವಾ ಕೇಂದ್ರ (ಅಭಿವೃದ್ಧಿ ಆಯುಕ್ತರ ಕಚೇರಿ) ಜತೆ ಹಲವು ಯೋಜನೆಗಳಲ್ಲಿ ಕೆಲಸ ಮಾಡಿದ್ದಾರೆ. ಶಿಲ್ಪ ವಿನ್ಯಾಸದಲ್ಲಿ ಮಾಡಿರುವ ಕೆಲಸವನ್ನು ಪರಿಗಣಿಸಿ ಅವರಿಗೆ ರಾಷ್ಟ್ರೀಯ ಪ್ರಶಸ್ತಿ ನೀಡಲಾಗಿದೆ.
ಸೋಶಿಯಲ್ ಮೀಡಿಯಾ ದುರುಪಯೋಗದ ವಿರುದ್ಧ ತೊಡೆ ತಟ್ಟಿದ ಸುನಿಲ್ ಗವಾಸ್ಕರ್; ದಿಲ್ಲಿ ಹೈಕೋರ್ಟ್ ಹೇಳಿದ್ದೇನು?
Sunil Gavaskar Vs Social Media- ಭಾರತದ ಮಾಜಿ ಕ್ರಿಕೆಟ್ ನಾಯಕ ಸುನಿಲ್ ಗವಾಸ್ಕರ್ ಅವರು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಹೆಸರು, ಫೋಟೋ ವಿಡಿಯೋಗಳ ದುರುಪಯೋಗ ತಡೆಯಬೇಕು ಎಂದು ದಿಲ್ಲಿ ಹೈಕೋರ್ಟ್ ಮೊರೆ ಹೋಗಿದ್ದಾರೆ. ಸಾಮಾಜಿಕ ಜಾಲತಾಣಗಳು, ಇ-ಕಾಮರ್ಸ್ ಪ್ಲಾಟ್ಫಾರ್ಮ್ಗಳಲ್ಲಿ ತಮ್ಮ ವೈಯಕ್ತಿಕ ಮಾಹಿತಿಯ ದುರುಪಯೋಗ ನಡೆಯುತ್ತಿದೆ ಎಂದು ಅವರು ಆರೋಪಿಸಿದ್ದಾರೆ. ಈ ಅರ್ಜಿಯನ್ನು ಕೈಗೆತ್ತಿಕೊಂಡ ನ್ಯಾ. ಅರೋರಾ ಅವರಿದ್ದ ಏಕಸದಸ್ಯ ನ್ಯಾಯಪೀಠವು ಸಾಮಾಜಿಕ ಜಾಲತಾಣದ ಮಧ್ಯವರ್ತಿಗಳಿಗೆ ಒಂದು ವಾರದೊಳಗೆ ನಿರ್ಧರಿಸಲು ಸೂಚಿಸಿದೆ.
ಮುಂಗಾರು ಹಂಗಾಮಿನಲ್ಲಿ ಸರ್ಕಾರದಿಂದ ರೈತರಿಗೆ ಬಿಡುಗಡೆಯಾದ ಪರಿಹಾರವೆಷ್ಟು : ಕಂದಾಯ ಸಚಿವರ ಮಹತ್ವದ ಅಪ್ಡೇಟ್ಸ್
Krishna Byre Gowda Explained : ಸರ್ಕಾರಿ ಭೂಮಿಯನ್ನು ಅಕ್ರಮವಾಗಿ ಭೂ ಕಬಳಿಕೆದಾರರಿಗೆ ನೀಡುವ ಪ್ರವೃತ್ತಿಯನ್ನು ಸಹಿಸಲು ಸಾಧ್ಯವಿಲ್ಲ. ಈ ಅಕ್ರಮದಲ್ಲಿ ಕೆಲ ಅಧಿಕಾರಿಗಳು ಭಾಗಿರುವುದು ವಿಷಾದನೀಯ. ಹಾಲೀ ಮುಂಗಾರಿನಲ್ಲಿ ಕಲಬುರಗಿ ಜಿಲ್ಲೆಯ ರೈತರಿಗೆ ಬಿಡುಗಡೆಯಾದ ಪರಿಹಾರದ ಹಣದ ಬಗ್ಗೆ ಕಂದಾಯ ಸಚಿವ ಕೃಷ್ಣ ಬೈರೇಗೌಡ ಮಾಹಿತಿಯನ್ನು ನೀಡಿದ್ದಾರೆ.
Under-19 Asia Cup 2025: ಸೂರ್ಯವಂಶಿ 'ವೈಭವ'; 433/6 ರನ್ ಗಳಿಸಿ ದಾಖಲೆ ನಿರ್ಮಿಸಿದ ಭಾರತ
ದುಬೈ, ಡಿ. 12: ಅಂಡರ್-19 ಏಷ್ಯಾ ಕಪ್ನಲ್ಲಿ ಭಾರತ ತಂಡ ಗುರುವಾರ ಐತಿಹಾಸಿಕ ಮೈಲಿಗಲ್ಲು ಸ್ಥಾಪಿಸಿದೆ. ವೈಭವ್ ಸೂರ್ಯವಂಶಿ ಅವರ ಶತಕದ ನೆರವಿನಿಂದ ಭಾರತ 50 ಓವರ್ನಲ್ಲಿ 433/6 ರನ್ಗಳನ್ನು ಕಲೆಹಾಕಿ ಟೂರ್ನಿಯ ಇತಿಹಾಸದಲ್ಲೇ ಅತಿ ದೊಡ್ಡ ಮೊತ್ತ ದಾಖಲಿಸಿದೆ. ದುಬೈನ ಐಸಿಸಿ ಅಕಾಡೆಮಿಯಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಆತಿಥೇಯ ಯುಎಇ, ಭಾರತ ತಂಡವನ್ನು ಮೊದಲು ಬ್ಯಾಟಿಂಗ್ಗೆ ಆಹ್ವಾನಿಸಿತು. ಆರಂಭದಿಂದಲೇ ಪ್ರಾಬಲ್ಯ ತೋರಿದ ಭಾರತೀಯ ಬ್ಯಾಟರ್ ಗಳು ಯುಎಇ ಬೌಲಿಂಗ್ ಮೇಲಿನ ಒತ್ತಡವನ್ನು ನಿರಂತರವಾಗಿ ಹೆಚ್ಚಿಸಿದ್ದರು. ವೈಭವ್ ಸೂರ್ಯವಂಶಿ 95 ಎಸೆತಗಳಲ್ಲಿ 171 ರನ್ (14 ಸಿಕ್ಸರ್) ಸಿಡಿಸಿ ಇನ್ನಿಂಗ್ಸ್ ಕಟ್ಟಿದರು. ಮಧ್ಯಕ್ರಮಾಂಕದಲ್ಲಿ ಆರನ್ ಜಾರ್ಜ್ ಮತ್ತು ವಿಹಾನ್ ಮಲ್ಹೋತ್ರಾ ತಲಾ 69 ರನ್ಗಳ ಪರಿಣಾಮಕಾರಿ ಕೊಡುಗೆಯನ್ನು ನೀಡಿದರು. ಇನ್ನಿಂಗ್ಸ್ ಅಂತ್ಯದ ವೇಳೆ ಅಭಿಗ್ಯಾನ್ ಕುಂಡು ಮತ್ತು ಕನಿಷ್ಕ್ ಚೌಹಾಣ್ ವೇಗದ ರನ್ಗಳೊಂದಿಗೆ ತಂಡವನ್ನು ದಾಖಲೆಯ ಮೊತ್ತಕ್ಕೆ ತಲುಪಿಸಿದರು. 433 ರನ್ಗಳ ಈ ಮೊತ್ತ ಅಂಡರ್-19 ಏಷ್ಯಾ ಕಪ್ ಇತಿಹಾಸದಲ್ಲೇ ಮೊದಲ ಬಾರಿಗೆ 400 ಗಡಿ ದಾಟಿದ ಇನ್ನಿಂಗ್ಸ್ ಆಗಿ ದಾಖಲಾಗಿದೆ.
ಮೈಸೂರು ಯೂನಿಟಿ ಮಾಲ್ ನಿರ್ಮಾಣಕ್ಕೆ ತಡೆಯಾಜ್ಞೆ; ಪ್ರಮೋದಾ ದೇವಿ ಒಡೆಯರ್ ಸ್ಪಷ್ಟನೆ
ಮೈಸೂರಿನಲ್ಲಿ ಯೂನಿಟಿ ಮಾಲ್ ನಿರ್ಮಾಣಕ್ಕೆ ನ್ಯಾಯಾಲಯದ ತಡೆಯಾಜ್ಞೆ ವಿಚಾರವಾಗಿ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಸ್ಪಷ್ಟನೆ ನೀಡಿದ್ದಾರೆ. ಮಾಲ್ ನಿರ್ಮಾಣಕ್ಕೆ ವಿರೋಧವಿಲ್ಲ. ಆದರೆ ಖಾಸಗಿ ಜಾಗದಲ್ಲಿ ನಿರ್ಮಾಣ ಸರಿಯಲ್ಲ. ಕರಕುಶಲ ವಸ್ತುಗಳ ಪ್ರದರ್ಶನಕ್ಕೆ ಅಡ್ಡಿಯಿಲ್ಲ. ಸರ್ಕಾರ ತನ್ನ ಜಾಗದಲ್ಲಿ ಮಾಲ್ ನಿರ್ಮಿಸಲಿ. ತಮ್ಮ ಪೂರ್ವಜರ ಆಸ್ತಿ ರಕ್ಷಣೆ ತಮ್ಮ ಜವಾಬ್ದಾರಿ ಎಂದಿದ್ದಾರೆ.
ಅಸ್ಪೃಶ್ಯ ಅಲೆಮಾರಿಗಳಿಗೆ ಪ್ರತ್ಯೇಕ ಮೀಸಲಾತಿ ನಿರಾಕರಿಸಿದ ಕಾಂಗ್ರೆಸ್ ಸರಕಾರಕ್ಕೆ ಧಿಕ್ಕಾರ
ಅಸ್ಪೃಶ್ಯ ಅಲೆಮಾರಿಗಳ ಸಾಪೇಕ್ಷ ಹಿಂದುಳಿದಿರುವಿಕೆಯನ್ನೇ ಅಲ್ಲಗೆಳೆದು ಮಹಾದ್ರೋಹ!
ಗೃಹಲಕ್ಷ್ಮಿ ಯೋಜನೆ ಬಾಕಿ ಹಣ ಬಿಡುಗಡೆಗೆ ಕ್ರಮ: ಸಿದ್ದರಾಮಯ್ಯ
ಬೆಳಗಾವಿ, (ಸುವರ್ಣ ವಿಧಾನಸೌಧ), ಡಿ.12: ಬಾಕಿ ಉಳಿದಿರುವ ಗೃಹಲಕ್ಷ್ಮಿ ಯೋಜನೆಯ ಹಣವನ್ನು ಕೂಡಲೇ ಬಿಡುಗಡೆ ಮಾಡಿಸಲು ಸರಕಾರ ಕ್ರಮ ಕೈಗೊಳ್ಳಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ. ಶುಕ್ರವಾರ ವಿಧಾನಸಭೆಯಲ್ಲಿ ಪ್ರತಿಪಕ್ಷ ನಾಯಕ ಆರ್.ಅಶೋಕ್ ಪ್ರಸ್ತಾಪಿಸಿದ ವಿಷಯಕ್ಕೆ ಉತ್ತರಿಸಿದ ಅವರು, ‘ಫೆಬ್ರವರಿ, ಮಾರ್ಚ್ ನಲ್ಲಿ ಗೃಹಲಕ್ಷ್ಮೀ ಹಣ ಸಂದಾಯ ಆಗಿಲ್ಲ ಎಂದು ಹೇಳಿದ್ದಾರೆ. ಗೃಹಲಕ್ಷ್ಮಿ ಹಣ ನೀಡಿದಿದ್ದರೆ ಅದನ್ನು ಕೂಡಲೇ ಕೊಡಿಸುವ ಕೆಲಸವನ್ನು ಸರಕಾರ ಮಾಡಲಿದೆ. ಆಗಸ್ಟ್ ತಿಂಗಳವರೆಗೆ ಹಣ ಪಾವತಿ ಮಾಡಲಾಗಿದೆ. ಆದರೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಸದನಕ್ಕೆ ಕೊಟ್ಟ ಉತ್ತರ ಸರಿಯಾಗಿಲ್ಲವೆಂಬುದು ಹಕ್ಕುಚ್ಯುತಿ ಆಗುವುದಿಲ್ಲ. ಈ ಬಗ್ಗೆ ಪರಿಶೀಲನೆ ಮಾಡಿ ಹಣ ಸಂದಾಯ ಮಾಡುತ್ತೇವೆ ಎಂದು ನುಡಿದರು. ಈ ಹಿಂದೆ ‘ವಿರೋಧ ಪಕ್ಷ ಇರುವುದೇ ಸುಳ್ಳು ಹೇಳುವುದಕ್ಕೆ’ ಎಂದು ಅಶೋಕ್ ಹೇಳಿದ್ದರು. ಸುಳ್ಳು ಹೇಳಲು ವಿಪಕ್ಷ ಇರುವುದಲ್ಲ. ನೀವು ಆಡುವ ಮಾತು ಸುಳ್ಳು ಎಂದು ಆಯಿತು. ನಾವು ಸುಳ್ಳು ಹೇಳುವುದಿಲ್ಲ. ಏನಾದರೂ ಹೆಚ್ಚು ಕಮ್ಮಿ ಹೇಳಿದರೆ ಸರಿಪಡಿಸುತ್ತೇನೆ ಎಂದು ಸಿದ್ದರಾಮಯ್ಯ, ವಿಪಕ್ಷ ನಾಯಕ ಆರ್.ಅಶೋಕ್ ಗೆ ತಿರುಗೇಟು ನೀಡಿದರು. ಔತನಕೂಟ ರಾಜಕೀಯ ಮುಂದೂಡಿ : ವಿಧಾನ ಮಂಡಲ ಅಧಿವೇಶನ ಮುಕ್ತಾಯಗೊಳ್ಳುವವರೆಗೆ ಕಾಂಗ್ರೆಸ್ ಪಕ್ಷದ ಮುಖಂಡರು ಔತನಕೂಟದ ರಾಜಕೀಯವನ್ನು ಮುಂದೂಡಿಕೆ ಮಾಡಬೇಕು ಎಂದು ವಿಪಕ್ಷ ನಾಯಕ ಆರ್.ಅಶೋಕ್ ಆಗ್ರಹಿಸಿದರು. ಔತಣಕೂಟ ರಾಜಕೀಯದ ಹಿನ್ನೆಲೆಯಲ್ಲಿ ಸಚಿವರು ಸಿದ್ದತೆ ಮಾಡಿಕೊಳ್ಳದೆ ಸದನಕ್ಕೆ ಬಂದು ತಪ್ಪು ಉತ್ತರ ನೀಡುತ್ತಿದ್ದು, ಆ ಮೂಲಕ ಸದನಕ್ಕೆ ತಪ್ಪು ಮಾಹಿತಿ ನೀಡುತ್ತಿದ್ದಾರೆ. ರಾತ್ರಿಯೆಲ್ಲಾ ಡಿನ್ನರ್ ಪಾಲಿಟಿಕ್ಸ್ ನಡೆಯುತ್ತದೆ. ಬೆಳಗ್ಗೆ ಮಾಹಿತಿ ಪಡೆದುಕೊಳ್ಳದೆ ಸದನಕ್ಕೆ ಬರುತ್ತಿದ್ದು, ಆಡಳಿತ ಪಕ್ಷದಲ್ಲಿ ಯಾರೂ ಹೇಳುವವರು ಕೇಳುವವರು ಇಲ್ಲದಂತೆ ಆಗಿದೆ ಎಂದು ಅಶೋಕ್ ಅಸಮಾಧಾನ ವ್ಯಕ್ತಪಡಿಸಿದರು. ಮಧ್ಯಪ್ರವೇಶಿಸಿದ ಬಿಜೆಪಿ ಸದಸ್ಯ ಸುನೀಲ್ ಕುಮಾರ್, ‘ಗೃಹಲಕ್ಷ್ಮೀ ಯೋಜನೆ ಹಣ ಸಂದಾಯ ಆಗಿಲ್ಲ ಎಂಬುದು ವಿಚಾರ ಅಲ್ಲ. ಆದರೆ, ಸದನಕ್ಕೆ ಸುಳ್ಳು ಹೇಳಲಾಗಿದೆ. ಇದು ಸದನ ದಿಕ್ಕು ತಪ್ಪಿಸಿದ್ದಲ್ವಾ? ಅಥವಾ ಹಕ್ಕುಚ್ಯುತಿಯೇ? ಎಂದು ಪ್ರಶ್ನಿಸಿದರು. ಇದಕ್ಕೆ ಆಕ್ಷೇಪಿಸಿದ ಕಾಂಗ್ರೆಸ್ ಸದಸ್ಯ ಶಿವಲಿಂಗೇಗೌಡ, ಬಿಜೆಪಿಯವರು ಗ್ಯಾರಂಟಿ ಯೋಜನೆಗಳಿಗೆ ವಿರೋಧ ಮಾಡುತ್ತಿದ್ದು, ಇದೀಗ ಯೋಜನೆಯ ಹಣ ಬಂದಿಲ್ಲ ಎಂದು ಮಾತನಾಡುವುದು ಇವರೇ’ ಎಂದು ತಿರುಗೇಟು ನೀಡಿದರು. ಅನಂತರ ಉತ್ತರ ನೀಡಿದ ಸಿಎಂ ಸಿದ್ದರಾಮಯ್ಯ, ‘ನಾನು ಎರಡು ಬಾರಿ ವಿಪಕ್ಷ ನಾಯಕನಾಗಿ ಕೆಲಸ ಮಾಡಿದ್ದೇನೆ. ನಾನು ಎಂದು ಸುಳ್ಳು ಹೇಳಿಲ್ಲ, ಬದಲಿಗೆ ವಾಸ್ತವ ಸಂಗತಿಗಳನ್ನು ತಿಳಿಸಿದ್ದೇನೆ ಎಂದರು. ‘ಫೆಬ್ರವರಿ ಮತ್ತು ಮಾರ್ಚ್ ತಿಂಗಳ ಗೃಹಲಕ್ಷ್ಮಿ ಯೋಜನೆ ಹಣ ಬಿಡುಗಡೆ ಸಂಬಂಧ ಸಚಿವರು ತಪ್ಪು ಮಾಹಿತಿ ನೀಡಿದ್ದಾರೆ ಎಂದು ಸದಸ್ಯರು ಆರೋಪ ಮಾಡಿದ್ದಾರೆ. ಈ ಕುರಿತು ತಾನು ಸಚಿವರೊಂದಿಗೆ ಚರ್ಚಿಸಿ, ಮುಂದಿನ ಕ್ರಮದ ಬಗ್ಗೆ ತೀರ್ಮಾನ ಮಾಡಲಾಗುವುದು’ -ಯು.ಟಿ.ಖಾದರ್ ಸ್ಪೀಕರ್
Uppinangady | ಜಾತಕ ಪರಿಶೀಲಿಸಲು ಬಂದ ಯುವತಿಗೆ ಜ್ಯೋತಿಷಿಯಿಂದ ಕಿರುಕುಳ
ಮದುವೆಯಾಗುವಂತೆ ಒತ್ತಾಯಿಸುತ್ತಿದ್ದ ಶೇಷಗಿರಿ ಭಟ್ ನ ಬಂಧನ, ಬಿಡುಗಡೆ
ಬೈಂದೂರು ಪಟ್ಟಣ ಪಂಚಾಯತ್ ವ್ಯಾಪ್ತಿ ಮಿತಿ ಪರಿಶೀಲನೆ: ಸಚಿವ ಬಿ.ಎಸ್.ಸುರೇಶ್
ಬೆಳಗಾವಿ, (ಸುವರ್ಣ ವಿಧಾನಸೌಧ), ಡಿ. 12: ಉಡುಪಿ ಜಿಲ್ಲೆಯ ಬೈಂದೂರು ಪಟ್ಟಣ ಪಂಚಾಯತ್ ವ್ಯಾಪ್ತಿಯಿಂದ ಕೆಲವು ಪ್ರದೇಶಗಳನ್ನು ಕೈಬಿಡುವ ಸಮರ್ಪಕತೆಯನ್ನು ಪರಿಶೀಲಿಸಲಾಗುವುದು ಎಂದು ನಗರಾಭಿವೃದ್ಧಿ ಮತ್ತು ನಗರ ಯೋಜನೆ ಸಚಿವ ಬಿ.ಎಸ್.ಸುರೇಶ್ ಹೇಳಿದ್ದಾರೆ. ಶುಕ್ರವಾರ ವಿಧಾನಸಭೆಯ ಪ್ರಶ್ನೋತ್ತರ ವೇಳೆಯಲ್ಲಿ ಬಿಜೆಪಿ ಸದಸ್ಯ ಗುರುರಾಜ್ ಶೆಟ್ಟಿ ಗಂಟಿಹೊಳೆ ಕೇಳಿದ ಪ್ರಶ್ನೆಗೆ ಅವರು ಉತ್ತರಿಸಿದರು. ಕೆಲವು ಪ್ರದೇಶಗಳನ್ನು ಕೈಬಿಡುವಂತೆ ಕೋರಿ ಹಲವು ಮನವಿಗಳು ಸ್ವೀಕೃತವಾಗಿವೆ. ಈ ಬಗ್ಗೆ ಸರಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಲಾಗಿದ್ದು, ಕೆಲವು ಪ್ರದೇಶಗಳನ್ನು ಪಟ್ಟಣ ಪಂಚಾಯಿತಿಯ ವ್ಯಾಪ್ತಿಯಿಂದ ಕೈಬಿಡುವ ಸಮರ್ಪಕತೆಯನ್ನು ಪರಿಶೀಲಿಸಲು ಮಾಹಿತಿ ಕೋರಲಾಗಿದೆ. ಮಾಹಿತಿ ದೊರೆತ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು. ಬೈಂದೂರು ಪಟ್ಟಣ ಪಂಚಾಯತ್ ವ್ಯಾಪ್ತಿಯ ಮಿತಿಯನ್ನು ಮರುನಿಗದಿಗೊಳಿಸುವ ಪ್ರಸ್ತಾವನೆಗೆ ಅನುಮೋದನೆ ದೊರೆತ ನಂತರ ಈ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದೂ ಸಚಿವರು ಉಲ್ಲೇಖಿಸಿದರು.
ಮಹಾನಗರ ಪಾಲಿಕೆಗಳಿಗೆ ತಲಾ 200 ಕೋಟಿ ರೂ.ವಿಶೇಷ ಅನುದಾನ ಬಿಡುಗಡೆ : ಸಚಿವ ಬೈರತಿ ಸುರೇಶ್
ಬೆಳಗಾವಿ (ಸುವರ್ಣವಿಧಾನಸೌಧ) ಡಿ. 12: ರಾಜ್ಯದ ಎಲ್ಲ ಮಹಾನಗರ ಪಾಲಿಕೆಗಳಿಗೆ ತಲಾ 200 ಕೋಟಿ ರೂ.ಗಳಂತೆ ಒಟ್ಟು 2,400 ಕೋಟಿ ರೂ.ಗಳ ವಿಶೇಷ ಅನುದಾವನ್ನು ನೀಡಲಾಗಿದೆ ಎಂದು ನಗರಾಭಿವೃದ್ಧಿ ಮತ್ತು ನಗರ ಯೋಜನೆ ಸಚಿವ ಬಿ.ಎಸ್.ಸುರೇಶ್ ಹೇಳಿದರು. ಶುಕ್ರವಾರ ವಿಧಾನಸಭೆ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿ ಸದಸ್ಯ ದಿನಕರ್ ಕೇಶವ್ ಶೆಟ್ಟಿ ಕೇಳಿದ ಪ್ರಶ್ನೆಗೆ ಉತ್ತರ ನೀಡುವ ವೇಳೆ ಮಾಹಿತಿ ನೀಡಿದ ಅವರು, ಈ ಹಿಂದೆ ಒಂದೇ ಅವಧಿಯಲ್ಲಿ ಇಷ್ಟು ದೊಡ್ಡ ಮೊತ್ತದ ಅನುದಾನವನ್ನು ಯಾವುದೇ ಸರಕಾರ ನೀಡಿರಲಿಲ್ಲ. ಆದರೆ, ನಮ್ಮ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹೆಚ್ಚಿನ ಅನುದಾನವನ್ನು ನೀಡಿದ್ದಾರೆ ಎಂದು ತಿಳಿಸಿದರು. ಸದ್ಯಕ್ಕೆ ಪುರಸಭೆ ರಚನೆ ಇಲ್ಲ : ಪಟ್ಟಣ ಪಂಚಾಯತ್, ಪುರಸಭೆ, ನಗರಸಭೆ, ಮಹಾನಗರ ಪಾಲಿಕೆಗಳನ್ನಾಗಿ ಉನ್ನತೀಕರಿಸುವ ವೇಳೆ ಹತ್ತಿರ ಇರುವ ಗ್ರಾಮಾಂತರ ಪ್ರದೇಶಗಳನ್ನು ಸೇರ್ಪಡೆ ಮಾಡಿ ಸರಹದ್ದು ನಿಗದಿಪಡಿಸಲಾಗುತ್ತಿದೆ. ಆದರೆ, ಕೆಲ ಶಾಸಕರು ನಗರಸಭೆ ವ್ಯಾಪ್ತಿಯಿಂದ ಗ್ರಾಮಗಳನ್ನು ಕೈಬಿಡುವಂತೆ ಮನವಿ ಮಾಡುತ್ತಾರೆ. ಇದು ಕಷ್ಟದ ಕೆಲಸವಾಗಿದೆ. ಸರಕಾರ ನಗರಸಭೆ ವ್ಯಾಪ್ತಿಗೆ ಸೇರ್ಪಡೆ ಮಾಡಿದ ಗ್ರಾಮಗಳ ಅಭಿವೃದ್ಧಿಗೆ ಹಣ ನೀಡಲಿದೆ, ಶಾಸಕರು ತಾಳ್ಮೆ ವಹಿಸಬೇಕು ಎಂದು ಬಿ.ಎಸ್.ಸುರೇಶ್ ತಿಳಿಸಿದರು. ಕರ್ನಾಟಕ ಪೌರಸಭೆಗಳ ಅಧಿನಿಯಮದ ಮಾನದಂಡಗಳ ಪ್ರಕಾರ 20ಸಾವಿರದಿಂದ 50ಸಾವಿರ ಜನಸಂಖ್ಯೆ ಅಥವಾ ಚದರ ಮೀಟರ್ ಗೆ 1,500 ಜನಸಾಂದ್ರತೆ, 9 ಲಕ್ಷ ರೂ.ರಾಜಸ್ವ ಆದಾಯ, ಇಲ್ಲವೆ ಶೇ.50ರಷ್ಟು ಕೃಷಿಯೇತರ ಚಟುವಟಿಕೆ ನಡೆಯುತ್ತಿದ್ದರೆ, ಅಂತಹ ಸ್ಥಳವನ್ನು ಪುರಸಭೆಯನ್ನಾಗಿ ಉನ್ನತಿಕರಿಸಲಾಗುವುದು. ಆದರೆ, ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ಪಟ್ಟಣದಲ್ಲಿ 2011ರ ಜನಗಣತಿ ಅನ್ವಯ 19,109 ಜನಸಂಖ್ಯೆಯಿದೆ. ಈ ಹಿನ್ನಲೆಯಲ್ಲಿ ಹೊನ್ನಾವರ ಪಟ್ಟಣ ಪಂಚಾಯಿತಿಯನ್ನು ಪುರಸಭೆಯನ್ನಾಗಿ ಮೇಲ್ದರ್ಜೆಗೇರಿಸುವ ಪ್ರಸ್ತಾವನೆ ತಿರಸ್ಕರಿಸಲಾಗಿದೆ ಎಂದು ಬಿ.ಎಸ್.ಸುರೇಶ್ ಪೌರಾಡಳಿತ ಸಚಿವ ರಹೀಂ ಖಾನ್ ಪರವಾಗಿ ಉತ್ತರಿಸಿದರು.
ಜಾಗತಿಕ ಮಾರುಕಟ್ಟೆಗಳ ಸಕಾರಾತ್ಮಕ ಸೂಚನೆಗಳು ಮತ್ತು ಮೋದಿ-ಟ್ರಂಪ್ ಮಾತುಕತೆಯ ಬೆನ್ನಲ್ಲೇ ಭಾರತೀಯ ಷೇರುಪೇಟೆ ಶುಕ್ರವಾರದಂದು ಚೇತರಿಕೆ ಕಂಡಿದೆ. ಸೆನ್ಸೆಕ್ಸ್ 400 ಅಂಕಗಳ ಏರಿಕೆ ಕಂಡರೆ, ನಿಫ್ಟಿ 26,000ದ ನಿರ್ಣಾಯಕ ಮಟ್ಟವನ್ನು ಮರುಗಳಿಸಿಕೊಂಡಿದೆ. ಅಮೆರಿಕದ ಫೆಡ್ ರಿಸರ್ವ್ ಬಡ್ಡಿದರ ಕಡಿತ ಮತ್ತು ಏಷ್ಯನ್ ಮಾರುಕಟ್ಟೆಗಳ ಏರಿಕೆ ಭಾರತೀಯ ಮಾರುಕಟ್ಟೆಗೆ ಬಲ ತುಂಬಿವೆ. ಹಿಂಡಾಲ್ಕೊ ಮತ್ತು ಟಾಟಾ ಸ್ಟೀಲ್ ಟಾಪ್ ಗೇನರ್ಸ್ ಆಗಿದ್ದರೆ, ಇನ್ಫೋಸಿಸ್ ಮತ್ತು ಎಚ್ಯುಎಲ್ ಷೇರುಗಳು ಕುಸಿತ ಕಂಡಿವೆ.
ಬೆಳಗಾವಿಯಲ್ಲಿ ಕೈಗಾರಿಕಾ ಪಾರ್ಕ್ ಸ್ಥಾಪನೆ: ಸಚಿವ ಎಂ.ಬಿ.ಪಾಟೀಲ್
ಬೆಳಗಾವಿ(ಸುವರ್ಣ ವಿಧಾನಸೌಧ), ಡಿ. 12: ಬಂಡವಾಳ ಹೂಡಿಕೆ ಮತ್ತು ಕೈಗಾರಿಕಾ ಬೆಳವಣಿಗೆ ಉದ್ದೇಶದಿಂದ ಬೆಳಗಾವಿ ಜಿಲ್ಲೆಯಲ್ಲಿ ಕೈಗಾರಿಕಾ ಪಾರ್ಕ್ ಸ್ಥಾಪನೆ ಮಾಡಲಾಗುವುದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಅವರು ವಿಧಾನಸಭೆಯಲ್ಲಿ ಭರವಸೆ ನೀಡಿದ್ದಾರೆ. ಶುಕ್ರವಾರ ವಿಧಾನಸಭೆ ಪ್ರಶ್ನೋತ್ತರ ವೇಳೆಯಲ್ಲಿ ಬಿಜೆಪಿ ಸದಸ್ಯ ಅರವಿಂದ ಬೆಲ್ಲದ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಕೈಗಾರಿಕಾ ಪಾರ್ಕ್ ಸ್ಥಾಪನೆ ಸಂಬಂಧ ಈಗಾಗಲೇ ಸಾಕಷ್ಟು ಸಿದ್ಧತೆಗಳು ನಡೆದಿವೆ. ಬೆಂಗಳೂರು-ಮುಂಬೈ ಕೈಗಾರಿಕಾ ಕಾರಿಡಾರ್ ಗೆ ಸಂಬಂಧಿಸಿದಂತೆ 3,000 ಎಕರೆ ಭೂಮಿಯನ್ನು ಒದಗಿಸಲಾಗಿದೆ. ಏರೋಸ್ಪೇಸ್ ಡಿಫೆನ್ಸ್ ಕಾರಿಡಾರ್ ಸ್ಥಾಪನೆಗೆ ಕೇಂದ್ರ ಸರಕಾರಕ್ಕೆ ಒತ್ತಾಯ ಮಾಡುತ್ತಿದ್ದೇವೆ ಎಂದರು. ಜಾಗತಿಕ ಮಟ್ಟದಲ್ಲಿ ಎಕೋ ಸಿಸ್ಟಮ್ ಹಾಗೂ ಏರೋಸಿಸ್ಟಮ್ ಗೆ ಸಾಕಷ್ಟು ಬೇಡಿಕೆಯಿದೆ. ಬೆಂಗಳೂರು ಗ್ರಾಮಾಂತರ ಹಾಗೂ ಕೋಲಾರ ಭಾಗದಲ್ಲಿ ಏರೋ ಸ್ಪೇಸ್ ಆಗುವ ಸಾಧ್ಯತೆಗಳು ಇವೆ. ಬೆಳಗಾವಿಯಲ್ಲಿ ಎಕೋ ಸಿಸ್ಟಮ್ ಸಾಕಷ್ಟು ಬೆಳೆಯುತ್ತಿದೆ. ನಗರ ಪ್ರದೇಶದಲ್ಲಿ ಸ್ಥಾಪಿತವಾಗುವ ಕೈಗಾರಿಕೆಗಳಿಗೆ ಉತ್ತೇಜನ ಸಿಗುವುದಿಲ್ಲ. ಆದರೆ, ಹಿಂದುಳಿದ ತಾಲೂಕುಗಳ ಗ್ರಾಮೀಣ ಭಾಗದಲ್ಲಿ ಸ್ಥಾಪನೆಯಾಗುವ ಕೈಗಾರಿಕೆಗಳಿಗೆ ಶೇ.3ರಿಂದ 5ರಷ್ಟು ಉತ್ತೇಜನ ಸಿಗಲಿದೆ ಎಂದರು ರಾಜ್ಯದಲ್ಲಿ ಹೊಸ ಕೈಗಾರಿಕಾ ನೀತಿ ತಂದಿದ್ದು, ಎಲ್ಲ ರಾಜ್ಯಗಳಿಗಿಂತಲೂ ಉತ್ತಮವಾಗಿದೆ. ಏರೋ ಸ್ಪೇಸ್ ನೀತಿ ವಿಶೇಷವಾಗಿದೆ. ಕ್ಲೀನ್ ಮೊಬಿಲಿಟಿ ನೀತಿಯನ್ನು ಜಾರಿ ಮಾಡಿದ್ದೇವೆ ಎಂದ ಅವರು, ಬಿಜೆಪಿ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ಉತ್ತರ ಕರ್ನಾಟಕ ಭಾಗಕ್ಕೆ ಕೈಗಾರಿಕೆ ಸ್ಥಾಪಿಸಲು ಯಾವುದೇ ಪ್ರಯತ್ನ ನಡೆಸಲಿಲ್ಲ ಎಂದು ಟೀಕಿಸಿದರು.
ಡಿಕೆಶಿಯನ್ನು ವಿಜಯೇಂದ್ರ ಅಮಿತ್ ಶಾ ಬಳಿ ಕರೆದುಕೊಂಡು ಹೋಗಿದ್ರು! ಯತ್ನಾಳ್ ಹೊಸ ಬಾಂಬ್
ಬಿಜೆಪಿ ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಬಳಿ ಕರೆದೊಯ್ದಿದ್ದರು ಎಂದು ಸ್ಫೋಟಕ ಹೇಳಿಕೆ ನೀಡಿದ್ದಾರೆ. ಜನವರಿ 19ರ ಬಳಿಕ ರಾಜ್ಯ ರಾಜಕೀಯದಲ್ಲಿ ಹಲವು ಬದಲಾವಣೆಗಳು ಸ್ಪಷ್ಟವಾಗಲಿವೆ ಎಂದಿದ್ದಾರೆ.ಅಲ್ಲದೆ, ನಾನು ಬಿಜೆಪಿಗೆ ಹೋಗಬೇಕಾದ್ರೆ ನನಗೆ ನಂಬರ್ ಒನ್ ಸ್ಥಾನ ಬೇಕು ಎಂದು ಶಾಸಕರ ಬಳಿ ಹೇಳಿದ್ದೆ ಎಂದಿದ್ದಾರೆ.
ಯತೀಂದ್ರ ಮಾತಿನ ಹಿಂದಿನ ’ಖಚಿತ ವಿಶ್ವಾಸ’: ಹೈಕಮಾಂಡ್ ಮಟ್ಟದಲ್ಲಿ ಎಲ್ಲವೂ ನಿರ್ಧಾರವಾಗಿ ಹೋಗಿದೆಯೇ?
CM Power Sharing : ಮುಖ್ಯಮಂತ್ರಿ ಬದಲಾವಣೆಯ ವಿಚಾರದಲ್ಲಿ ಕಾಂಗ್ರೆಸ್ ಹೈಕಮಾಂಡಿನ ಮೌನ ಕುತೂಹಲಕ್ಕೆ ಕಾರಣವಾಗಿದೆ. ಯಾವ ನಿರ್ಧಾರವನ್ನು ತೆಗೆದುಕೊಳ್ಳು ಬೇಕು ಎನ್ನುವ ವಿಚಾರದಲ್ಲಿ ವರಿಷ್ಠರು ಗೊಂದದಲ್ಲಿ ಇದ್ದಾರಾ ಎನ್ನುವ ಪ್ರಶ್ನೆ ಎದುರಾಗಿದೆ. ಈ ನಡುವೆ, ಸಿದ್ದರಾಮಯ್ಯನವರ ಪುತ್ರ, ಖಚಿತ ವಿಶ್ವಾಸದ ಮಾತಿನಿಂದ ಹೇಳಿಕೆಯನ್ನು ನೀಡುತ್ತಿದ್ದಾರೆ.
ಧಾರವಾಡ ಮಹಾನಗರ ಪಾಲಿಕೆ ಸ್ಥಾಪಿಸಲು ಕ್ರಮ : ಸಚಿವ ಬೈರತಿ ಸುರೇಶ್
ಬೆಳಗಾವಿ(ಸುವರ್ಣ ವಿಧಾನಸೌಧ), ಡಿ. 12: ಧಾರವಾಡ ಜಿಲ್ಲೆಯ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯನ್ನು ವಿಭಜಿಸಿ ಹೊಸದಾಗಿ ಧಾರವಾಡ ಮಹಾನಗರ ಪಾಲಿಕೆಯನ್ನು ರಚಿಸುವ ಪ್ರಸ್ತಾವನೆಯನ್ನು ರಾಜ್ಯಪಾಲರ ಅನುಮೋದನೆಗೆ ಸಲ್ಲಿಸಿದೆ. ರಾಜ್ಯಪಾಲರ ಬಳಿ ಏಳು ತಿಂಗಳಿಂದ ಕಡತ ವಿಲೇಗೆ ಬಾಕಿ ಇದ್ದು, ಕೂಡಲೇ ಒಪ್ಪಿಗೆ ನೀಡಲು ನಿಯೋಗವನ್ನು ಕೊಂಡೊಯ್ಯಲಾಗುವುದು ಎಂದು ನಗರಾಭಿವೃದ್ಧಿ ಮತ್ತು ನಗರ ಯೋಜನೆ ಸಚಿವ ಬೈರತಿ ಸುರೇಶ್ ತಿಳಿಸಿದ್ದಾರೆ. ಶುಕ್ರವಾರ ವಿಧಾನಸಭೆ ಪ್ರಶ್ನೋತ್ತರ ಅವಧಿಯಲ್ಲಿ ಆಡಳಿತ ಪಕ್ಷದ ಸದಸ್ಯ ಅಬ್ಬಯ್ಯ ಪ್ರಸಾದ್ ಕೇಳಿದ ಪ್ರಶ್ನೆಗೆ ಉತ್ತರ ನೀಡಿದ ಅವರು, ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯನ್ನು ವಿಭಜಿಸಿ ಹೊಸದಾಗಿ ಧಾರವಾಡ ಮಹಾನಗರ ಪಾಲಿಕೆಯನ್ನು ರಚಿಸಲು ಮತ್ತು ಇನ್ನುಳಿದ ಪ್ರದೇಶವನ್ನು ಹುಬ್ಬಳ್ಳಿ ಮಹಾನಗರ ಪಾಲಿಕೆ ಎಂಬುದಾಗಿ ಮುಂದುವರೆಸಲು 2025ರ ಜನವರಿ 21ರಂದು ಪ್ರಾಥಮಿಕ ಅಧಿಸೂಚನೆಯನ್ನು ರಾಜ್ಯಪತ್ರದಲ್ಲಿ ಪ್ರಕಟಿಲಾಗಿರುತ್ತದೆ. ಆದರೆ ಈ ಬಗ್ಗೆ ಯಾವುದೇ ಕ್ರಮ ಆಗಿರುವುದಿಲ್ಲ ಎಂದರು. ಆಕ್ಷೇಪಣೆ/ಸಲಹೆಗಳ ಕುರಿತ ವರದಿಯನ್ನು ಪೌರಾಡಳಿತ ನಿರ್ದೇಶಕರಿಂದ ಧಾರವಾಡ ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿ ವರದಿ ಸಿದ್ದಪಡಿಸಿ ರಾಜ್ಯಪಾಲರ ಅನುಮೋದನೆಗೆ ಸಲ್ಲಿಸಲಾಗಿದೆ. ಆದರೆ ಇದೂವರೆಗೂ ರಾಜ್ಯಪಾಲರಿಂದ ಅನುಮೋದನೆ ಬಂದಿರುವುದಿಲ್ಲ. ರಾಜ್ಯಪಾಲರ ಕಚೇರಿಯೊಂದಿಗೆ ಈ ಕುರಿತು ಪತ್ರ ವ್ಯವಹಾರ ಮಾಡಲಾಗಿದೆ. ರಾಜ್ಯಪಾಲರ ಅನುಮೋದನೆಗೆ ಪಕ್ಷಾತೀತವಾಗಿ ಎಲ್ಲ ಶಾಸಕರ ನಿಯೋಗವು ರಾಜ್ಯಪಾಲರನ್ನು ಭೇಟಿ ಮಾಡಿ ಈ ಬಗ್ಗೆ ಅನುಮೋದನೆ ನೀಡುವಂತೆ ಮನವಿ ಮಾಡಲಾಗುವುದು ಎಂದು ಅವರು ಉತ್ತರಿಸಿದರು. ಆರಂಭಕ್ಕೆ ಮಾತನಾಡಿದ ಸದಸ್ಯ ಪ್ರಸಾದ್ ಅಬ್ಬಯ್ಯ, ಬೆಂಗಳೂರು ಭಾಗದಲ್ಲಿ ಪಾಲಿಕೆಗಳನ್ನು ಶೀಘ್ರದಲ್ಲೇ ಮಾಡಲಾಗುತ್ತದೆ, ಆದರೆ, ಪಾಲಿಕೆ ಘೋಷಣೆಯಾಗಿದ್ದರೂ ಏಕೆ ವಿಳಂಬ ಆಗಿದೆ. ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಜನಸಂಖ್ಯೆ ಹೆಚ್ಚಾಗಿದ್ದು, ಎರಡು ಮಹಾನಗರ ಪಾಲಿಕೆ ಮಾಡಬೇಕು. ಇದರಿಂದ ಜನರಿಗೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲು ಅನುಕೂಲವಾಗಲಿದೆ. ಆ ನಿಟ್ಟಿನಲ್ಲಿ ಬಿಜೆಪಿ ಸದಸ್ಯರು ರಾಜ್ಯಪಾಲರಿಗೆ ತ್ವರಿತ ಕಡತ ವಿಲೇವಾರಿಗೆ ಕ್ರಮ ವಹಿಸಬೇಕು ಎಂದು ಮನವಿ ಮಾಡಿದರು.
ಕನಕದಾಸರ ರಚನೆಯ ತಿರುಪತಿಗಿರಿವಾಸ ಸುಪ್ರಭಾತದ ಅರ್ಥ ವಿವರಣೆ : ಹಾಡು ಹಳತು ಭಾವ ನವೀನ ಭಾಗ- 116
ಕನಕದಾಸರ ಸುಪ್ರಭಾತ ರಚನೆಯು ತಿರುಪತಿ ವೆಂಕಟೇಶನನ್ನು ಬೆಳಗಿನ ಜಾವದಲ್ಲಿ ಎಬ್ಬಿಸುವ ಸೊಗಸನ್ನು ವಿವರಿಸುತ್ತದೆ. ಹಾಲು ಕಾಯಿಸಿ, ಬೆಣ್ಣೆ ಕಡೆದು, ಹೂವು ಅರ್ಪಿಸಿ, ದಾಸರು ಜ್ಞಾನೋದಯಕ್ಕಾಗಿ ಹರಿಯನ್ನು ಸ್ಮರಿಸುತ್ತಿದ್ದಾರೆ. ಭಕ್ತರ ದರ್ಶನಕ್ಕಾಗಿ, ಪೂಜೆ ಸ್ವೀಕರಿಸಲು ಶ್ರೀಕೃಷ್ಣನನ್ನು ಎದ್ದು ಬರಲು ಆಹ್ವಾನಿಸಿದ್ದಾರೆ.
ಮಂಗಳೂರು | ಎಂಸಿಎಫ್ ಹೆಸರು ಉಳಿಸಿ: ನಿವೃತ್ತ ನೌಕರರ ಅಭಿಯಾನ
ಮಂಗಳೂರು, ಡಿ.12: ಪಣಂಬೂರು ಬಳಿಯ ಮಂಗಳೂರು ರಾಸಾಯನಿಕ ಮತ್ತು ರಸಗೊಬ್ಬರ ಕಾರ್ಖಾನೆ (ಎಂಸಿಎಫ್) ಹೆಸರನ್ನು ತೆಗೆದು ಪಾರದೀಪ್ ಫಾಸ್ಪೇಟ್ಸ್ ಲಿಮಿಟೆಡ್ ಎಂದು ಮರುನಾಮಕರಣ ಮಾಡಲಾಗಿದೆ. ಇದಕ್ಕೆ ಅವಕಾಶ ನೀಡದೆ ಅದನ್ನು ಮಂಗಳೂರು ರಾಸಾಯನಿಕ ಮತ್ತು ರಸಗೊಬ್ಬರ ಕಾರ್ಖಾನೆ ಎಂದೇ ಮುಂದುವರಿಸಬೇಕು ಎಂದು ಸಂಸ್ಥೆಯ ನಿವೃತ್ತ ನೌಕರರು ಒತ್ತಾಯಿಸಿದ್ದಾರೆ. ಈ ಬಗ್ಗೆ ಎಂಸಿಎಫ್ ಹೆಸರು ಉಳಿಸಿ ಅಭಿಯಾನ ಸಮಿತಿ ರಚಿಸಿಕೊಂಡಿರುವ ನಿವೃತ್ತ ನೌಕರರು ನಗರದ ಪ್ರೆಸ್ಕ್ಲಬ್ನಲ್ಲಿ ಶುಕ್ರವಾರ ಸುದ್ದಿಗೋಷ್ಟಿಯಲ್ಲಿ ಈ ಆಗ್ರಹ ಮಾಡಿದರು. ಸಮಿತಿಯ ಸದಸ್ಯರಾದ ಮ್ಯಾಕ್ಸಿಮ್ ಅಲ್ಫ್ರೆಡ್ ಡಿಸೋಜಾ ಮಾತನಾಡಿ, 1971ರಲ್ಲಿ ರಾಜಯ ಸರಕಾರ, ರಾಜ್ಯದ ಹೂಡಿಕೆದಾರರು ಮತ್ತು ರೈತರ ಪಾಲುದಾರಿಕೆಯೊಂದಿಗೆ ಸ್ಥಾಪನೆಯಾದ ಎಂಸಿಎಫ್ ಕಾರ್ಖಾನೆ 1976ರಲ್ಲಿ ವಾಣಿಜ್ಯ ಉತ್ಪಾದನೆ ಆರಂಭಿಸಿತ್ತು. ರಾಜ್ಯದ ಏಕೈಕ ಬೃಹತ್ ರಸಗೊಬ್ಬರ ಕೈಗಾರಿಕೆ ಇದಾಗಿದ್ದು, ಸ್ಥಳೀಯ ಜನರ ಭೂ ತ್ಯಾಗ, ಸ್ಥಳೀಯ ನದಿಗಳ ನೀರಿನ ಬಳಕೆ, ಕಚ್ಚಾ ವಸ್ತುವಾಗಿ ಇಲ್ಲಿನ ಗಾಳಿ ಬಳಕೆ, ಪರಿಸರ ಪರಿಣಾಮಗಳ ಹೊರೆ ಮತ್ತು ಸಮುದಾಯ ಎಲ್ಲವೂ ಈ ಸಂಸ್ತೆಯ ಬೆಳವಣಿಗೆಗೆ ಕಾರಣವಾಗಿದೆ. ಪಾದೇಶಿಕ ಅಸ್ಮಿತೆಯ ಹೆಸರನ್ನು ಇದೀಗ ರಾತ್ರೋರಾತ್ರಿ ಬದಲಾಯಿಸುವುದನ್ನು ಖಂಡಿಸುತ್ತೇವೆ ಎಂದರು. ಇದು ಹೆಸರಿನ ಬದಲಾವಣೆ ಮಾತ್ರವಲ್ಲ, ಎಂಸಿಎಫ್ ಹೊಂದಿರುವ ಸಾಂಸ್ಕೃತಿಕ ಮತ್ತು ಚಾರಿತ್ರಿಕ ಮಹತ್ವದ ಅಗೌರವವಾಗಿದೆ. 35 ವರ್ಷಗಳ ಕಾಲ ಖಾಸಗಿ ಒಡೆತನವಿದ್ದರೂ ಎಂಸಿಎಫ್ನಲ್ಲಿ ಯಾವುದೇ ನೇರ ಹೂಡಿಕೆಯಾಗಿಲ್ಲ. ಬದಲಾಗಿ ಎಂಸಿಎಫ್ ತನ್ನದೇ ಆಂತರಿಕ ಹೂಡಿಕೆ ಮತ್ತು ಬ್ಯಾಂಕ್ ಸಾಲದ ಮೂಲಕ ಪುನಶ್ಚೇತನಗೊಂಡಿದೆ. ಹಾಗಾಗಿ ಎಂಸಿಎಫ್ ಹೆಸರನ್ನು ಮರುಸ್ಥಾಪಿಸಬೇಕು ಎಂಬದು ನಮ್ಮ ಆಗ್ರಹ ಎಂದು ಅವರು ಹೇಳಿದರು. ಗೋಷ್ಟಿಯಲ್ಲಿ ಸಮಿತಿ ಸದಸ್ಯರಾದ ಶಿವರಾಮ ಶೆಟ್ಟಿ, ದಯಾನಂದ ಶೆಟ್ಟಿ, ಜಯರಾಮ ಶೆಟ್ಟಿ, ಮುಹಮ್ಮದ್ ಅಲಿ, ಪಿ.ವಿ. ಶಬರಾಯ ಉಪಸ್ಥಿತರಿದ್ದರು.
ಪರಿಹಾರ ನೀಡಿ, ಇಲ್ಲವೇ ಭೂಮಿ ವಾಪಸ್ ಕೊಡಿ : ಪದವು ಗ್ರಾಮ ರಾ.ಹೆ.169 ಭೂ ಮಾಲಕರ ಆಗ್ರಹ
ಮಂಗಳೂರು, ಡಿ.12: ಮಂಗಳೂರು-ಸಾಣೂರು ರಾಷ್ಟ್ರೀಯ ಹೆದ್ದಾರಿ 169ರ ಪದವು ಗ್ರಾಮದಲ್ಲಿ ಭೂ ಸ್ವಾಧೀನಕ್ಕೆ ನೋಟಿಫಿಕೇಶನ್ ಆಗಿರುವ ಜಮೀನನ್ನು ಸ್ವಾಧೀನಪಡಿಸಿ ಸೂಕ್ತ ಪರಿಹಾರ ನೀಡಬೇಕು. ಇಲ್ಲವಾದರೆ ಡಿನೋಟಿಫೈ ಮಾಡಿ ಜಮೀನನ್ನು ಮಾಲಕರಿಗೆ ವಾಪಸ್ ನೀಡಬೇಕೆಂದು ಪದವು ಗ್ರಾಮದ ಭೂ ಮಾಲಕರು ಒತ್ತಾಯಿಸಿದ್ದಾರೆ. ಶುಕ್ರವಾರದಂದು ಮಂಗಳೂರು ಪ್ರೆಸ್ಕ್ಲಬ್ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಭೂಮಾಲಕರ ಹೋರಾಟ ಸಮಿತಿಯ ಅಧ್ಯಕ್ಷೆ ಮರಿಯಮ್ಮ ಥೋಮಸ್ ಅವರು, ಮಂಗಳೂರು-ಮೂಡುಬಿದಿರೆ - ಸಾಣೂರು ರಸ್ತೆ ಅಗಲೀಕರಣದ ಬಗ್ಗೆ ಕೇಂದ್ರ ಸರಕಾರ 2016ರಲ್ಲಿ ಅಧಿಸೂಚನೆ ಹೊರತುಪಡಿಸಿ 2017 ರಲ್ಲಿ ಮಂಗಳೂರಿನ ಪದವು ಗ್ರಾಮವನ್ನು ಹೊರತುಪಡಿಸಿ ಅಂತಿಮ ಅಧಿಸೂಚನೆಯನ್ನು ಹೊರಡಿಸಿತ್ತು. ಪದವು ಗ್ರಾಮ ಹಾಗೂ ಉಳಿದ 19 ಗ್ರಾಮಗಳಲ್ಲಿ ಬಿಟ್ಟು ಹೋದ ಜಮೀನುಗಳ ಭೂಸ್ವಾಧೀನತೆಗಾಗಿ 2020 ರಲ್ಲಿ ಅಧಿಸೂಚನೆಯನ್ನು ಹೊರಡಿಸಲಾಗಿತ್ತು. ಪದವು ಗ್ರಾಮಕ್ಕೆ ಸಂಬಂಧಪಟ್ಟಂತೆ, 2016 ರಲ್ಲಿ ಸೆಂಟ್ಸು ಒಂದಕ್ಕೆ ಸಿವಿಸಿ ಗೈಡ್ಲೈನ್ ಪ್ರಕಾರ 3,50,000 ರೂ. ಮೌಲ್ಯವಿತ್ತು. 2020 ರಲ್ಲಿ ಸೆಂಟ್ಸ್ ಒಂದಕ್ಕೆ ಸಿವಿಸಿ ಗೈಡ್ ಲೈನ್ ಪ್ರಕಾರ 10,11,700 ರೂ. ಆಗಿದೆ. ಪ್ರಸ್ತುತ ಸಿವಿಸಿ ಗೈಡ್ಲೈನ್ 13,35,444 ರೂ. ಮೌಲ್ಯವಿದೆ. ಭೂಮಿ ಕಳಕೊಂಡವರಿಗೆ 2020ರ ದರದಂತೆ ಪರಿಹಾರ ನೀಡಬೇಕಾಗಿದೆ. ಇದರ ವಿರುದ್ಧ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಆರ್ಬಿಟ್ರೇಶನ್ಗೆ ಅಪೀಲು ಸಲ್ಲಿಸಿದ್ದು, ಅಪೀಲು ವಜಾ ಆಗಿದೆ. ತದನಂತರ ಆಬ್ರಿಟ್ರೇಶನ್ನ ಮೇಲೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಅಪೀಲು ಮಾಡಿದ್ದು, ಪ್ರಕರಣವು ಕಳೆದ 2 ವರ್ಷದಿಂದ ಮಂಗಳೂರಿನ ಜಿಲ್ಲಾ ನ್ಯಾಯಾಲಯದಲ್ಲಿ ತನಿಖಾ ಹಂತದಲ್ಲಿದೆ. ಇದರಿಂದಾಗಿ ಪದವು ಗ್ರಾಮದ ಭೂಸ್ವಾಧೀನತೆಗೆ ಒಳಪಟ್ಟ ಜಮೀನಿನ ಮಾಲಕರು ಕಳೆದ 9 ವರ್ಷಗಳಿಂದ ಪರಿಹಾರಕ್ಕಾಗಿ ಕಾಯುತ್ತಿದ್ದಾರೆ. ಆದರೆ ಸಾಮಾಜಿಕವಾಗಿ ಭೂ ಮಾಲಕರು ಭೂಮಿ ಬಿಡದ ಕಾರಣ ಹೆದ್ದಾರಿ ಅಗಲೀಕರಣಕ್ಕೆ ತೊಂದರೆಯಾಗಿದೆ ಎಂದು ಬಿಂಬಿಸಲಾಗಿದೆ. ಆದರೆ ಎನ್ಎಚ್ಎಐನಿಂದ ಸೂಕ್ತ ಪರಿಹಾರ ದೊರಕದೆ ರಸ್ತೆ ಅಭಿವೃದ್ಧಿಗೆ ತೊಡಕಾಗಿದೆ. ಇಲಾಖೆಯ ಈ ಪರಿಯ ಕಾರ್ಯ ವಿಧಾನವನ್ನು ಜಿಲ್ಲೆಯ ಜನಪ್ರತಿನಿಧಿಗಳು ಗಮನಿಸದಿರುವುದು ಅತ್ಯಂತ ದೌರ್ಭಾಗ್ಯವಾಗಿದೆ. ಕುಡುಪು ಗ್ರಾಮದಿಂದ ಸಾಣೂರು ತನಕ ಭೂಸ್ವಾಧೀನಪಡಿಸಿದರೂ ಈ ತನಕ ಶೇ. 50 ಕೆಲಸ ಪೂರ್ತಿ ಆಗಿಲ್ಲ. ಒಂದು ವೇಳೆ ಪದವು ಗ್ರಾಮ ಭೂ ಮಾಲಕರಿಗೆ ಪರಿಹಾರ ನೀಡಲು ಸಾಧ್ಯವಾಗದಿದ್ದರೆ ಡಿ ನೋಟಿಫೈ ಭೂ ಮಿ ವಾಪಸ್ ನೀಡಬೇಕು. ಭೂ ಮಾಲಕರಿಗೆ ಹಿಂಸೆ ನೀಡಬಾರದು. ಸಮಸ್ಯೆಗೆ ಪರಿಹಾರ ನೀಡದಿದ್ದಲ್ಲಿ ಮಗದೊಮ್ಮೆ ಹೋರಾಟ ಮಾಡಿ ನಮ್ಮ ಹಕ್ಕನ್ನು ಪಡೆಯುವುದು ಅನಿವಾರ್ಯವಾಗುತ್ತದೆ ಎಂದು ಹೇಳಿದರು. ಸಮಿತಿಯ ಖಜಾಂಚಿ ರತ್ನಾಕರ್ ಶೆಟ್ಟಿ ಅವರು ಮಾತನಾಡಿ, ಹೆದ್ದಾರಿ ಪ್ರಾಧಿಕಾರವು ಉದ್ದೇಶಪೂರ್ವಕವಾಗಿ ನ್ಯಾಯಾಲಯದಲ್ಲಿ ಪ್ರಕರಣ ಮುಂದಕ್ಕೆ ಹೋಗುವಂತೆ ಮಾಡುತ್ತಿದೆ ಎಂದು ಆರೋಪಿಸಿದರು. ಪತ್ರಿಕಾಗೋಷ್ಠಿಯಲ್ಲಿ ಸಮಿತಿಯ ಕಾರ್ಯದರ್ಶಿ ವಿಶ್ವಜಿತ್, ಸದಸ್ಯ ಜಯರಾಮ ಪೂಜಾರಿ ಉಪಸ್ಥಿತರಿದ್ದರು. ಸಮಿತಿಯ ಸಂಚಾಲಕ ಪ್ರಕಾಶ್ಚಂದ್ರ ಆವರು ಮಾತನಾಡಿ, ಒಂದು ತಿಂಗಳೊಳಗೆ ಪರಿಹಾರ ಪಾವತಿ ಮಾಡದಿದ್ದರೆ, ಕೋರ್ಟ್ ವ್ಯಾಜ್ಯ ವಾಪಸ್ ಪಡೆಯದಿದ್ದರೆ ಮುಂದೆ ಭೂಮಿ ಬಿಟ್ಟು ಕೊಡದಿರಲು ನಿರ್ಧರಿಸಿದ್ದೇವೆ ಎಂದರು.
ಬೆಂಗಳೂರಿನ ವಾಯುಗುಣಮಟ್ಟ ಕುಸಿತ;ದೆಹಲಿಯಂತಾಗುತ್ತಾ ಸಿಲಿಕಾನ್ ಸಿಟಿ, ತಜ್ಞರು ಹೇಳೋದೇನು?
ಬೆಂಗಳೂರಿನ ಗಾಳಿಯ ಗುಣಮಟ್ಟ ನಿರೀಕ್ಷೆಗಿಂತ ಹೆಚ್ಚು ಕಲುಷಿತವಾಗಿದೆ ಎಂದಿದ್ದು,180ಕ್ಕೆ ವಾಯುಗುಣಮಟ್ಟ ಸೂಚ್ಯಂಕ ಇಳಿಕೆಯಾಗಿದೆ. ನಗರದ ಮಾಲಿನ್ಯಕ್ಕೆ ಶೇ. 64 ರಷ್ಟು ಕಾರಣ ವಾಹನ ದಟ್ಟಣೆಯಾಗಿದ್ದು, ಪ್ರತಿದಿನ 2,563 ಹೊಸ ವಾಹನಗಳು ರಸ್ತೆಗಿಳಿಯುತ್ತಿವೆ ಎಂಬ ಆಘಾತಕಾರಿ ವಿಚಾರವನ್ನು ತಜ್ಞರು ಬಹಿರಂಗಪಡಿಸಿದ್ದಾರೆ. ಕಳಪೆ ವಾಯುಗುಣಮಟ್ಟದಿಂದ ಉಸಿರಾಟ ಸಮಸ್ಯೆಯಿಂದ ಬಳಲುತ್ತಿರುವವರರು, ಹಿರಿಯರು ಮತ್ತು ಕಿರಿಯರು ರಾತ್ರಿ ಹಾಗೂ ಮುಂಜಾನೆ ಓಡಾಟ ಕಡಿಮೆ ಮಾಡಲು ಸೂಚನೆ ನೀಡಲಾಗಿದೆ.
ಪ್ರೀತಿಯಿಂದ ಊಟಕ್ಕೆ ಕರೆದರೆ ಬರಲ್ಲ ಅನ್ನಲು ಆಗುತ್ತದೆಯೇ?: ಡಿಸಿಎಂ ಡಿಕೆಶಿ
ಬೆಳಗಾವಿ, ಡಿ.12:ದಿನ ಒಬ್ಬೊಬ್ಬ ಸ್ಥಳೀಯರು, ನಮ್ಮ ಕ್ಷೇತ್ರದವರು ಪ್ರೀತಿಯಿಂದ ಊಟ ತಂದು ಕೊಡುತ್ತಿದ್ದಾರೆ. ಊಟವನ್ನು ಬೇಡ ಎನ್ನಲು ಆಗುತ್ತದೆಯೇ? ಪ್ರೀತಿಯಿಂದ ಕರೆಯುತ್ತಾರೆ, ಅದಕ್ಕೆ ಒಂದೊಂದು ದಿನ ಒಂದೊಂದು ಕಡೆ ಊಟಕ್ಕೆ ಹೋಗುತ್ತೇವೆ. ಇದು ಯಾವ ಔತಣಕೂಟವೂ ಅಲ್ಲ, ಏನೂ ಅಲ್ಲ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಬೆಳಗಾವಿಯ ಸರ್ಕಿಟ್ ಹೌಸ್ ಬಳಿ ಶುಕ್ರವಾರ ಬೆಳಗ್ಗೆ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಈ ರೀತಿ ಪ್ರತಿಕ್ರಿಯಿಸಿದರು. ಬೆಳಗಾವಿ ಹೊರವಲಯದಲ್ಲಿ ಗುರುವಾರ ರಾತ್ರಿ ಶಾಸಕರ ಜತೆ ಔತಣಕೂಟ ಮಾಡಿದ್ದೀರಂತಲ್ಲಾ ಎಂಬ ಪ್ರಶ್ನೆಗೆ, ನನ್ನ ಕ್ಷೇತ್ರದ ಹುಡುಗನೊಬ್ಬ ಇಲ್ಲಿ ಕೆಲಸ ಮಾಡುತ್ತಿದ್ದಾನೆ. ಆತನ ಮನೆಯಿಂದ ಇವತ್ತು ಮುದ್ದೆ, ಉಪ್ಸಾರು ಊಟ ಮಾಡಿ ಕಳಿಸುತ್ತೇವೆ ಎನ್ನುತ್ತಿದ್ದಾನೆ. ಹೀಗೇ ಅವರು ಪ್ರೀತಿಯಿಂದ ಹೇಳಿದಾಗ, ಕರೆದಾಗ ಬೇಡ ಎನ್ನಲು ಆಗುತ್ತದೆಯೇ? ನಾಳಿದ್ದು ನಮ್ಮ ಆಸಿಫ್ ಸೇಠ್, ಫಿರೋಝ್ ಸೇಠ್ ಊಟಕ್ಕೆ ಕರೆದಿದ್ದಾರೆ ಎಂದರು. ದೊಡ್ಡಣ್ಣನವರ ಬೆಳಗಾವಿ ಜಿಲ್ಲಾ ಕಾಂಗ್ರೆಸ್ ನ ಮಾಜಿ ಅಧ್ಯಕ್ಷರು. ನನ್ನ ಸ್ನೇಹಿತರೂ ಹೌದು. ಅವರದು ದೊಡ್ಡ ಕುಟುಂಬ. ಕಳೆದ 15 ವರ್ಷಗಳಿಂದ ನಮ್ಮ ಮನೆಗೆ ಊಟಕ್ಕೆ ಬನ್ನಿ ಎಂದು ಕರೆಯುತ್ತಿದ್ದರು. ನಮ್ಮ ಕಾಂಗ್ರೆಸ್ ಕುಟುಂಬದವರನ್ನು ಮರೆಯಲು ಆಗುತ್ತದೆಯೇ? ಹೀಗಾಗಿ ನಾನೂ ಸೇರಿದಂತೆ ಒಂದಷ್ಟು ಜನರು ಊಟಕ್ಕೆ ಹೋಗಿದ್ದೆವು, ಅಷ್ಟೇ. ಅದರಲ್ಲಿ ಯಾವ ಔತಣಕೂಟವು ಇಲ್ಲ, ಏನೂ ಇಲ್ಲ ಎಂದು ಹೇಳಿದರು. ಕ್ರಿಕೆಟ್ ಪಂದ್ಯಗಳ ಆಯೋಜನೆಗೆ ಅನುಮತಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ರಿಕೆಟ್ ಪಂದ್ಯಗಳ ಆಯೋಜನೆಗೆ ಅನುಮತಿ ನೀಡಿರುವ ಬಗ್ಗೆ ಕೇಳಿದಾಗ, ಬೆಂಗಳೂರಿನ ಗೌರವ ಉಳಿಸಲು ನಾವು ಅಗತ್ಯ ಕ್ರಮ ಕೈಗೊಂಡಿದ್ದೇವೆ. ಮುಂದೆ ಯಾವುದೇ ರೀತಿಯ ಅನಾಹುತ ಸಂಭವಿಸದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಂಡು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ರಿಕೆಟ್ ಪಂದ್ಯಗಳ ಆಯೋಜನೆಗೆ ಅನುಮತಿ ನೀಡಿದ್ದೇವೆ ಎಂದು ತಿಳಿಸಿದರು. ಈ ವಿಚಾರದಲ್ಲಿ ವಹಿಸಬೇಕಾದ ಮುಂಜಾಗ್ರತಾ ಕ್ರಮಗಳ ಜವಾಬ್ದಾರಿಯನ್ನು ಗೃಹ ಸಚಿವ ಪರಮೇಶ್ವರ್ ಅವರಿಗೆ ವಹಿಸಲಾಗಿದೆ. ಕೆಎಸ್ ಸಿಎ ಅಧ್ಯಕ್ಷ ವೆಂಕಟೇಶ್ ಪ್ರಸಾದ್ ರ ತಂಡ ಹಾಗೂ ಪೊಲೀಸ್ ಅಧಿಕಾರಿಗಳು ಕೂತು ಚರ್ಚೆ ಮಾಡಲಿದ್ದಾರೆ ಎಂದು ತಿಳಿಸಿದರು.
ಶಶಿ ತರೂರ್ ಸತತ ಮೂರನೇ ಬಾರಿ ಕಾಂಗ್ರೆಸ್ ಸಂಸದರ ಸಭೆಗೆ ಗೈರು; ಪಕ್ಷದೊಳಗೆ ಕುತೂಹಲ
ಹೊಸದಿಲ್ಲಿ,ಡಿ.12: ರಾಹುಲ್ ಗಾಂಧಿ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆದ ಕಾಂಗ್ರೆಸ್ ಲೋಕಸಭಾ ಸಂಸದರ ಸಭೆಗೆ ತಿರುವನಂತಪುರಂ ಸಂಸದ ಶಶಿ ತರೂರ್ ಗೈರು ಹಾಜರಾಗಿದ್ದು, ಅವರ ಸತತ ಗೈರುಹಾಜರಿ ಕುರಿತು ಪಕ್ಷದೊಳಗೆ ಪ್ರಶ್ನೆಗಳು ಎದ್ದಿವೆ. ಶಶಿ ತರೂರ್ ಸಭೆಗೆ ಹಾಜರಾಗದಿರುವುದು ಇದು ಮೂರನೇ ಬಾರಿ ಎಂದು ಪಕ್ಷದ ಮೂಲಗಳು ತಿಳಿಸಿವೆ. ಶಶಿ ತರೂರ್ ಸಭೆಗೆ ಗೈರು ಹಾಜರಾಗಿರುವ ಬಗ್ಗೆ ಕಾರಣ ಸ್ಪಷ್ಟವಾಗಿಲ್ಲ ಎಂದು ಕಾಂಗ್ರೆಸ್ ಮುಖ್ಯ ಸಚೇತಕರು ತಿಳಿಸಿದ್ದಾರೆ. ಆದರೆ ತರೂರ್ ಮುಂಚಿತವಾಗಿ ತಮ್ಮ ಅನಾನುಕೂಲತೆಯ ಬಗ್ಗೆ ಮಾಹಿತಿ ನೀಡಿದ್ದರೆಂಬುದನ್ನು ಪಕ್ಷದ ಮೂಲಗಳು ದೃಢಪಡಿಸಿವೆ. ಇತ್ತೀಚಿನ ಕೆಲವು ವಾರಗಳಿಂದಲೂ ತರೂರ್ ಪ್ರಮುಖ ಪಕ್ಷದ ಚರ್ಚೆಗಳಿಂದ ದೂರ ಉಳಿಯುತ್ತಿರುವುದು ಗಮನಾರ್ಹವಾಗಿದೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಆಡಳಿತಾರೂಢ ಬಿಜೆಪಿಗೆ ಅನುಕೂಲಕರವೆಂದು ಹೇಳಲಾದ ಹೇಳಿಕೆಗಳ ನಡುವೆ ತರೂರ್ ಮತ್ತೊಮ್ಮೆ ಗೈರು ಹಾಜರಾಗಿರುವುದು ಆಕ್ಷೇಪಗಳಿಗೆ ಕಾರಣವಾಗಿದೆ. ಚಂಡೀಗಢ ಸಂಸದ ಮನೀಶ್ ತಿವಾರಿ ಕೂಡ ಈ ಸಭೆಗೆ ಹಾಜರಾಗಿರಲಿಲ್ಲ. ತರೂರ್ ಅವರ ಸಾರ್ವಜನಿಕ ವೇಳಾಪಟ್ಟಿಯ ಪ್ರಕಾರ, ಅವರು ಗುರುವಾರ ರಾತ್ರಿ ಕೋಲ್ಕತ್ತಾದಲ್ಲಿ ಪ್ರಭಾ ಖೈತಾನ್ ಫೌಂಡೇಶನ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಇದರಿಂದಾಗಿ ಅವರು ದಿಲ್ಲಿಗೆ ಸಮಯಕ್ಕೆ ಹಿಂತಿರುಗಲು ಸಾಧ್ಯವಾಗಿಲ್ಲ ಎನ್ನಲಾಗಿದೆ. ಇತ್ತೀಚೆಗಷ್ಟೇ ನ.30ರಂದು ನಡೆದ ಪಕ್ಷದ ಸಭೆಗೆ ಗೈರುಹಾಜರಾಗಿದ್ದ ವಿಚಾರಕ್ಕೆ ತರೂರ್ ಸ್ಪಷ್ಟನೆ ನೀಡಿದ್ದರು. “ನಾನು ಸಭೆಯನ್ನು ಉದ್ದೇಶಪೂರ್ವಕವಾಗಿ ತಪ್ಪಿಸಿಕೊಂಡಿಲ್ಲ; ಕೇರಳದಿಂದ ಬರುತ್ತಿದ್ದ ವಿಮಾನದಲ್ಲಿ ಇದ್ದೆ” ಎಂದು ಅವರು ಹೇಳಿದ್ದರು. ಹಿಂದೆಯೂ ಅನಾರೋಗ್ಯ ಮತ್ತು ಪ್ರಯಾಣ ಸಂಬಂಧಿತ ಕಾರಣಗಳಿಂದ SIR ವಿಚಾರಣಾ ಚರ್ಚೆಗೆ ಹಾಜರಾಗಲು ಸಾಧ್ಯವಾಗಿರಲಿಲ್ಲವೆಂದು ತರೂರ್ ಕಚೇರಿ ತಿಳಿಸಿತ್ತು. ಪಕ್ಷದ ಕೆಲ ನಾಯಕರು ತರೂರ್ ಹೆಚ್ಚುತ್ತಿರುವ ಗೈರುಹಾಜರಿಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ವಿಶೇಷವಾಗಿ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಭೇಟಿಯ ಸಂದರ್ಭದಲ್ಲಿ ರಾಷ್ಟ್ರಪತಿ ಭವನದ ರಾಜ್ಯ ಔತಣಕೂಟಕ್ಕೆ ಆಹ್ವಾನಿಸಲಾದ ಏಕೈಕ ಕಾಂಗ್ರೆಸ್ ಸಂಸದ ತರೂರ್ ಆಗಿದ್ದರಿಂದ ಪಕ್ಷದೊಳಗೆ ಈ ಬಗ್ಗೆ ಕುತೂಹಲ ಹೆಚ್ಚಿದೆ.
ರೈತರಿಗೆ ಗುಡ್ ನ್ಯೂಸ್; 14,21,000 ಲಕ್ಷ ರೈತರಿಗೆ ರೂ.2,249 ಕೋಟಿ ಪರಿಹಾರ ಜಮೆ: ಕೃಷ್ಣ ಬೈರೇಗೌಡ
ಬೆಳಗಾವಿ ಡಿಸೆಂಬರ್ 12: ಪ್ರಸ್ತುತ ಮುಂಗಾರು ಹಂಗಾಮಿನಲ್ಲಿ ರಾಜ್ಯಾದ್ಯಂತ 14,21,000 ಲಕ್ಷ ರೈತರಿಗೆ ರೂ.2,249 ಕೋಟಿ ಪರಿಹಾರ ಹಣವನ್ನು ನೇರವಾಗಿ ರೈತರ ಖಾತೆಗೆ ಜಮೆ ಮಾಡಲಾಗಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ವಿಧಾನ ಪರಿಷತ್ಗೆ ಮಾಹಿತಿ ನೀಡಿದರು. ಶುಕ್ರವಾರ ವಿಧಾನ ಪರಿಷತ್ನ ಶೂನ್ಯವೇಳೆ ಚರ್ಚೆಯ ಸಂದರ್ಭದಲ್ಲಿ ಕಲಬುರಗಿ ಭಾಗದ ಸದಸ್ಯರಾದ ತಿಮ್ಮಪ್ಪಣ್ಣ ಕಮಕನೂರ ಅವರ
ಮಾಗಡಿ | ಕಾಂಗ್ರೆಸ್ ನಾಯಕ ಎಚ್.ಎಂ.ರೇವಣ್ಣರ ಪುತ್ರನ ಕಾರು ಢಿಕ್ಕಿ: ದ್ವಿಚಕ್ರ ವಾಹನ ಸವಾರ ಮೃತ್ಯು
ಮಾಗಡಿ: ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಎಚ್.ಎಂ.ರೇವಣ್ಣ ಅವರ ಪುತ್ರ ಆರ್. ಶಶಾಂಕ್ ಅವರ ಕಾರು ಢಿಕ್ಕಿ ಹೊಡೆದ ಪರಿಣಾಮ ದ್ವಿಚಕ್ರ ವಾಹನ ಸವಾರ ಮೃತಪಟ್ಟ ಘಟನೆ ತಾಲೂಕಿನ ಗುಡೇಮಾರನಹಳ್ಳಿಯಲ್ಲಿ ಗುರುವಾರ ರಾತ್ರಿ ನಡೆದಿದೆ. ಮೃತರನ್ನು ಬೆಳಗುಂಬ ಗ್ರಾಮದ ರಾಜೇಶ್ (27) ಎಂದು ಗುರುತಿಸಲಾಗಿದೆ. ಬೆಂಗಳೂರಿನ ಖಾಸಗಿ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಇವರು, ಕೆಲಸ ಮುಗಿಸಿ ರಾತ್ರಿ 10 ಗಂಟೆ ಸುಮಾರಿಗೆ ಮನೆಗೆ ಹಿಂದಿರುಗುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ. ರಾಜೇಶ್ ಚಲಾಯಿಸುತ್ತಿದ್ದ ದ್ವಿಚಕ್ರ ವಾಹನಕ್ಕೆ ಮಾಗಡಿಯಿಂದ ಬೆಂಗಳೂರು ಕಡೆಗೆ ಹೊರಟಿದ್ದ ಶಶಾಂಕ್ ಅವರಿದ್ದ ಕಾರು ಢಿಕ್ಕಿ ಹೊಡೆದಿದೆ. ಇದರಿಂದ ರಸ್ತೆಗೆ ಎಸೆಯಲ್ಪಟ್ಟ ರಾಜೇಶ್ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ. ಸ್ಥಳಕ್ಕೆ ಆಗಮಿಸಿದ ಕುದೂರು ಠಾಣೆ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಭಾರತೀಯರ ಬಗ್ಗೆ ಅಮೆರಿಕದ ಈತನಿಂದ ಉಡಾಫೆ ಮಾತು, ರೊಚ್ಚಿಗೆದ್ದ ಶತಕೋಟಿ ಇಂಡಿಯನ್ಸ್... H-1B Visa
ಅಮೆರಿಕ &ಭಾರತದ ಬಾಂಧ್ಯವಕ್ಕೆ ಮತ್ತೆ ಬೆಂಕಿ ಹಚ್ಚುವ ಕೆಲಸ ಮಾಡಿ, ಸ್ವತಃ ಅಮೆರಿಕದಲ್ಲೇ ಟೀಕೆಗೆ ಒಳಗಾಗಿದ್ದಾರೆ ಮಾರ್ಕ್ ಮಿಚೆಲ್. ಡೊನಾಲ್ಡ್ ಟ್ರಂಪ್ ಪರವಾಗಿ ಮಾತನಾಡುವ ಭರದಲ್ಲಿ, ರಾಸ್ಮುಸ್ಸೆನ್ ರಿಪೋರ್ಟ್ಸ್ ಮುಖ್ಯ ಸಮೀಕ್ಷೆಕಾರ ಹಾಗೂ ಅಮೆರಿಕದ ಪ್ರಸಿದ್ಧ ಸಂಪ್ರದಾಯವಾದಿ ನಿರೂಪಕ ಮಾರ್ಕ್ ಮಿಚೆಲ್ ಬಾಯಿಗೆ ಬಂದಂತೆ ಮಾತನಾಡಿದ್ದರು. ಅದರಲ್ಲೂ ಎಚ್1ಬಿ ವೀಸಾ ಹಾಗೂ ಅಮೇರಿಕ ಕಂಪನಿಗಳು ತಮ್ಮ
14 ಸಿಕ್ಸ್, 9 ಬೌಂಡರಿ!; ಅಂಡರ್ 19 ಏಷ್ಯಾ ಕಪ್ ನಲ್ಲೂ ವೈಭವ್ ಸೂರ್ಯವಂಶಿ ಭರ್ಜರಿ ಸೆಂಚುರಿ!
14ರ ಹರೆಯದ ಈ ಹುಡುಗ ಸಾಮಾನ್ಯನಲ್ಲ ಎಂಬುದನ್ನು ಮತ್ತೆ ಸಾಬೀತು ಪಡಿಸಿದ್ದಾನೆ. ರೈಸಿಂಗ್ ಏಷ್ಯಾಕಪ್ ಟೂರ್ನಿಯ ಬಳಿಕ ವೈಭವ್ ಸೂರ್ಯವಂಶಿ ಅಂಡರ್ 19 ಏಷ್ಯಾಕಪ್ ನಲ್ಲೂ ತನ್ನ ಅದ್ಭುತ ಬ್ಯಾಟಿಂಗ್ ಅನ್ನು ಮುಂದುವರಿಸಿದ್ದಾನೆ. ಯುಎಇ ವಿರುದ್ಧ ಕೇವಲ 95 ಎಸೆತಗಳಲ್ಲಿ ಗಳಿಸಿದ್ದು 171 ರನ್! ಅದರಲ್ಲಿ 9 ಬೌಂಡರಿ, 14 ಭರ್ಜರಿ ಸಿಕ್ಸರ್ ಗಳು. ಪರಿಣಾಮ ಭಾರತ ರನ್ ಗಳ ಪರ್ವತವೇರಿ ನಿಂತಿದೆ. ಈ ಹಂತದಲ್ಲಿ ಅನೇಕ ದಾಖಲೆಗಳು ಧೂಳೀಪಟವಾಗಿವೆ. ದುಬೈನಲ್ಲಿ ನಡೆಯುತ್ತಿರುವ ಯಲ್ಲಿ ಟಾಸ್ ಗೆದ್ದ ಯುಎಇ ತಂಡ ಭಾರತವನ್ನು ಬ್ಯಾಟಿಂಗ್ ಗೆ ಇಳಿಸಿತು. (4) ವಿಕೆಚ್ 3ನೇ ಓವರ್ ನಲ್ಲೇ ಪತನಗೊಂಡರೂ ಎದೆಗುಂದದ ವೈಭವ್ ತಮ್ಮ ಎಂದಿನ ಶೈಲಿಯಲ್ಲಿ ಬ್ಯಾಟಿಂಗ್ ಮುಂದುವರಿಸಿದರು. ಪರಿಣಾಮ ಭಾರತ ತಂಡ ನಿಗದಿತ 50 ಓವರ್ ಗಳು ಮುಗಿವಾಗ ತಂಡದ6 ವಿಕೆಟ್ ನಷ್ಟಕ್ಕೆ ವಿರುದ್ಧ 433 ರನ್ಗಳ ಭರ್ಜರಿ ಮೊತ್ತವನ್ನು ಕಲೆಹಾಕಿದೆ. ಇದು 50 ಓವರ್ಗಳಲ್ಲಿ ದಾಖಲಾದ ಅತಿ ದೊಡ್ಡ ಮೊತ್ತಗಳಲ್ಲಿ ಒಂದಾಗಿದೆ. ವೈಭವ್ ಸೂರ್ಯವಂಶಿ ಔಟಾದ ಬಳಿಕ ಆ್ಯರನ್ ಜಾರ್ಜ್, ವಿಹಾನ್ ಮಲ್ಹೋತ್ರಾ, ವೇದಾಂತ್ ತ್ರಿವೇದಿ, ಅಭಿಜ್ಞಾನ್ ಕುಂಡು ಅವರು ಉಪಯುಕ್ತ ಕೊಡುಗೆ ನೀಡಿದ್ದರಿಂದ ತಂಡ 48ನೇ ಓವರ್ನಲ್ಲಿ ಭಾರತ ತಂಡವು 400 ರನ್ಗಳ ಗಡಿ ತಲುಪಿತು. ಈ ಸಾಧನೆಯೊಂದಿಗೆ ಭಾರತ ತಂಡ ಅಂಡರ್ 19 ಏಕದಿನ ಪಂದ್ಯಗಳಲ್ಲಿ ಮೂರು ಬಾರಿ 400ಕ್ಕೂ ಹೆಚ್ಚು ರನ್ ಗಳಿಸಿದ ಮೊದಲ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು. ಟೂರ್ನಿಯಲ್ಲಿ ಅತಿ ಹೆಚ್ಚು ಸಿಕ್ಸರ್ ಗಳ ದಾಖಲೆ ವೈಭವ್ ಸೂರ್ಯವಂಶಿ ಅವರು ಅಂಡರ್ 19 ಏಷ್ಯಾ ಕಪ್ ನಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಬ್ಯಾಟರ್ ಎಂಬ ದಾಖಲೆಯನ್ನೂ ಈ ಸಂದರ್ಭದಲ್ಲಿ ಬರೆದರು. ಈ ಮೊದಲು 2017ರಲ್ಲಿ ಅಫ್ಘಾನಿಸ್ತಾನದ ದರ್ವಿಶ್ ರಸೂಲಿ 10 ಸಿಕ್ಸರ್ಗಳನ್ನು ಬಾರಿಸಿದ್ದು ಈವರೆಗಿನ ದಾಖಲೆಯಾಗಿತ್ತು. ವೈಭವ್ ಸೂರ್ಯವಂಶಿ ಅವರು 2025ರಲ್ಲಿವೂ ಹೌದು. ವೈಭವ್ ಸೂರ್ಯವಂಶಿ ಅವರು ತಮ್ಮ ಅರ್ಧಶತಕವನ್ನು ಕೇವಲ 30 ಎಸೆತಗಳಲ್ಲಿ ಪೂರೈಸಿದರೆ, ಶತಕಕ್ಕೆ ತೆಗೆದುಕೊಂಡದ್ದು 56 ಎಸೆತಗಳಷ್ಟೇ. 84 ಎಸತೆಗಳಲ್ಲಿ 150 ರನ್ ಗಳ ಗಡಿಯನ್ನು ದಾಟಿದ ಅವರು ಅಂತಿಮವಾಗಿ 33ನೇ ಓವರ್ ನಲ್ಲಿ ಎಡಗೈ ಸ್ಪಿನ್ನರ್ ಉದ್ದಿಶ್ ಸೂರಿಗೆ ಕ್ಲೀನ್ ಬೌಲ್ಡ್ ಆದರು. ಆಗಲೇ ಭಾರತ ತಂಡ ಸ್ಕೋರ್ ಬೋರ್ಡ್ ನಲ್ಲಿ 265 ರನ್ ಗಳನ್ನು ಪೇರಿಸಿತ್ತು. ಆ್ಯರನ್ ಜೊತೆ ದ್ವಿಶತಕದ ಜೊತೆಯಾಟ 3ನೇ ಕ್ರಮಾಂಕದಲ್ಲಿ ಆಡಿತ ಆ್ಯರನ್ ಜಾರ್ಜ್ ಅವರು 2ನೇ ವಿಕೆಟ್ ಗೆ ಮಹತ್ವದ 212 ರನ್ ಗಳ ಜೊತೆಯಾಟ ಆಡಿದರು. 28ನೇ ಓವರ್ ನಲ್ಲಿ ಔಟಾಗುವ ಮುಂಚೆ ಅವರು 73 ಎಸೆತಗಳಲ್ಲಿ 7 ಬೌಂಡರಿ ಮತ್ತು 1 ಸಿಕ್ಸರ್ ಗಳಿದ್ದ 69 ರನ್ ಬಾರಿಸಿದರು. ಇದಾದ ಬಳಿಕ ವಿಹಾನ್ ಮಲ್ಹೋತ್ರಾ ಅವರು ವೈಭವ್ ಸೂರ್ಯವಂಶಿ ಅವರಿಗೆ ಸಾಥ್ ನೀಡಿದರು. ಅವರು 55 ಎಸೆತಗಳಲ್ಲಿ 7 ಬೌಂಡರಿ ಮತ್ತು ಒಂದು ಸಿಕ್ಸರ್ ಗಳಿದ್ದ 69 ರನ್ ಗಳಿಸಿದರು. ಇನ್ನುಳಿದಂತೆ ವೇದಾಂತ್ ತ್ರಿವೇದಿ ಅವರು 34 ಎಸೆತಗಳಲ್ಲಿ 38 ರನ್ ಗಳಿಸದರೆ ಅಂತಿಮ ಹಂತದಲ್ಲಿ ವಿಕೆಟ್ ಕೀಪರ್ ಬ್ಯಾಟರ್ ಅಭಿಜ್ಞಾನ್ ಕುಂಡು ಅವರು 17 ಎಸೆತಗಳಲ್ಲಿ ಅಜೇಯ 32 ರನ್ ಮತ್ತು ಕಾನಿಷ್ಕ್ ಚೌಹಾನ್ ಅವರು 12 ಎಸೆತಗಳಲ್ಲಿ 28 ರನ್ ಬಾರಿಸಿದ್ದರಿಂದ ಅಂತಿಮ ಹಂತದಲ್ಲಿ ಕ್ಷಿಪ್ರ ಗತಿಯಲ್ಲಿ ತಂಡದ ಮೊತ್ತ ಏರಲು ಸಹಾಯವಾಯಿತು.
ಮೂಡುಬಿದಿರೆ | ತಾಲೂಕು ಮಟ್ಟದ ಪ್ರಾರಂಭಿಕ ತರಬೇತಿ ಶಿಬಿರ
ಮೂಡುಬಿದಿರೆ : ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ, ದಕ್ಷಿಣ ಕನ್ನಡ ಜಿಲ್ಲಾ ಸಂಸ್ಥೆ ಹಾಗೂ ಮೂಡುಬಿದಿರೆ ತಾಲೂಕಿನ ಸ್ಥಳೀಯ ಸಂಸ್ಥೆಗಳ ಸಹಭಾಗಿತ್ವದಲ್ಲಿ ಗುರುವಾರ ಸ್ಕೌಟ್ಸ್ ಮತ್ತು ಗೈಡ್ಸ್ ಕನ್ನಡ ಭವನದಲ್ಲಿ ಮೂಡುಬಿದಿರೆ ತಾಲೂಕು ಮಟ್ಟದ ಪ್ರಾರಂಭಿಕ ತರಬೇತಿ ಶಿಬಿರ ಹಾಗೂ ಪುನಶ್ಚೇತನ ತರಬೇತಿ ಶಿಬಿರ ಯಶಸ್ವಿಯಾಗಿ ನಡೆಯಿತು. ಕಾರ್ಯಕ್ರಮವನ್ನು ಮೂಡುಬಿದಿರೆ ಸ್ಥಳೀಯ ಸಂಸ್ಥೆಯ ಉಪಾಧ್ಯಕ್ಷೆ ಪ್ರಫುಲ್ಲ ಅವರು ದೀಪ ಬೆಳಗಿಸಿ ಉದ್ಘಾಟಿಸಿದರು. ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ ವಿರೂಪಾಕ್ಷಪ್ಪ, ಜಿಲ್ಲಾ ಕಾರ್ಯದರ್ಶಿ ಪ್ರತೀಮ್ ಕುಮಾರ್, ಜಿಲ್ಲಾ ಕೋಶಾಧಿಕಾರಿ ನವೀನ್ ಚಂದ್ರ ಅಂಬೂರಿ, ಜಿಲ್ಲಾ ಸಂಘಟನಾ ಆಯುಕ್ತರಾದ ವಸಂತ್ ದೇವಾಡಿಗ, ಶಿಬಿರ ಸಹಾಯಕರಾದ ವಿನೋದ್ ಚೇವಾರ್ HWB(S), ಡಾ.ರಾಹುಲ್, ಅಕ್ಕಮ್ಮ LT (G),ರಾಜ್ಯ ಸಹಾಯಕ ಸಂಘಟನಾ ಆಯುಕ್ತರಾದ ಭರತ್ ರಾಜ್ ಕೆ ಉಪಸ್ಥಿತರಿದ್ದರು. ಪ್ರಾರಂಭಿಕ ತರಬೇತಿ ಶಿಬಿರದಲ್ಲಿ ಒಟ್ಟು 45 ಮತ್ತು ಪುನಶ್ಚೇತನ ತರಬೇತಿ ಶಿಬಿರದಲ್ಲಿ 18 ಸೇರಿ 63 ಶಿಕ್ಷಕ/ಶಿಕ್ಷಕಿಯರು ಭಾಗವಹಿಸುತ್ತಾರೆ. ಕಾರ್ಯಕ್ರಮದಲ್ಲಿ ಆಳ್ವಾಸ್ ಬಿ.ಇಡಿ ಕಾಲೇಜು ಮೂಡುಬಿದಿರೆಯ ರೇಂಜರ್ಸ್ ವಿದ್ಯಾರ್ಥಿಗಳು ಸಹಕರಿಸಿದರು.
ನಮ್ಮ ಮೆಟ್ರೋಗೆ ಬಂತು ಚಾಲಕ ರಹಿತ ರೈಲು; ಚೀನಾದಲ್ಲ, ಮೊದಲ ಮೇಡ್ ಇನ್ ಇಂಡಿಯಾ ಟ್ರೈನ್! ಏನಿದು ಟೆಕ್ನಾಲಜಿ?
ಬೆಂಗಳೂರು ಮೆಟ್ರೋಗೆ 'ಮೇಡ್ ಇನ್ ಇಂಡಿಯಾ' ಮೊದಲ ಚಾಲಕರಹಿತ ರೈಲು ಸೇರ್ಪಡೆಯಾಗಿದೆ. ಬಿಇಎಂಎಲ್ ಅಭಿವೃದ್ಧಿಪಡಿಸಿದ ಈ ರೈಲು, ಅತ್ಯಾಧುನಿಕ GoA4 ತಂತ್ರಜ್ಞಾನ ಹೊಂದಿದ್ದು, 2027ರ ಮೇನಿಂದ ಗುಲಾಬಿ ಮಾರ್ಗದಲ್ಲಿ ಸಂಚಾರ ಆರಂಭಿಸಲಿದೆ. ಇದು ಸುರಕ್ಷತೆ, ಇಂಧನ ಉಳಿತಾಯ ಮತ್ತು ಪ್ರಯಾಣಿಕರ ಅನುಕೂಲಕ್ಕೆ ಆದ್ಯತೆ ನೀಡುತ್ತದೆ. ಈ ರೈಲಿನ ವಿಶೇಷತೆಗಳೇನು? ಚಾಲಕನಿಲ್ಲದೆ ಇದು ಹೇಗೆ ಕಂಟ್ರೋಲ್ ಆಗುತ್ತೆ? ಪ್ರಯಾಣಿಕರ ಸುರಕ್ಷತೆಗೆ ಏನೆಲ್ಲಾ ಕ್ರಮಗಳಿವೆ? ದೇಶದ ಬೇರೆ ಕಡೆ ಎಲ್ಲೆಲ್ಲಿ ಡ್ರೈವರ್ಲೆಸ್ ಮೆಟ್ರೋ ಇದೆ ಎಂಬ ವಿವರ ಇಲ್ಲಿದೆ.
ಡಿ.16ರಂದು ಬೆಳ್ತಂಗಡಿಯಲ್ಲಿ ಮಹಿಳಾ ನ್ಯಾಯ ಸಮಾವೇಶ : ಜ್ಯೋತಿ ಎ.
ಮಂಗಳೂರು, ಡಿ.12: ಬೆಳ್ತಂಗಡಿಯ ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಅತ್ಯಾಚಾರ, ಕೊಲೆ, ಅಸಹಜ ಸಾವುಗಳು, ನಾಪತ್ತೆ ಪ್ರಕರಣಗಳಿಗೆ ಕಾರಣ ಯಾರು ಎಂದು ಪತ್ತೆ ಹಚ್ಚಲು ಒತ್ತಾಯಿಸಿ ವಿವಿಧ ಮಹಿಳಾ ಸಂಘಟನೆಗಳ ಸಹಭಾಗಿತ್ವದ ಕೊಂದವರು ಯಾರು ಅಭಿಯಾನ ಸಮಿತಿಯಿಂದ ಮಹಿಳೆಯರ ಮೌನ ಮೆರವಣಿಗೆ ಹಾಗೂ ಮಹಿಳಾ ನ್ಯಾಯ ಸಮಾವೇಶ ಡಿ. 16ರಂದು ನಡೆಯಲಿದೆ. ರಾಜ್ಯದ ವಿವಿಧ ಭಾಗಗಳಿಂದ 1,000ದಷ್ಟು ಮಹಿಳೆಯರು ಈ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ ಎಂದು ಅಭಿಯಾನದ ಪ್ರಮುಖರಾದ ಜ್ಯೋತಿ ಎ. ತಿಳಿಸಿದರು. ಮಂಗಳೂರು ಪ್ರೆಸ್ಕ್ಲಬ್ನಲ್ಲಿ ಶುಕ್ರವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಧರ್ಮಸ್ಥಳ ಹಾಗೂ ಸುತ್ತಮುತ್ತಲಿನಲ್ಲಿ ನಡೆದ ಅಸಹಜ ಸಾವು, ಅತ್ಯಾಚಾರ ಪ್ರಕರಣಗಳಿಗೆ ಕಾರಣ ಯಾರು ಎಂದು ಈವರೆಗೂ ಪತ್ತೆಯಾಗಿಲ್ಲ. ಬೇರೆಡೆ ಇಂತಹ ಪ್ರಕರಣಗಳಲ್ಲಿ ಆರೋಪಿಗಳ ಪತ್ತೆಯಾಗುತ್ತದೆಯಾದರೂ ಧರ್ಮಸ್ಥಳ ವ್ಯಾಪ್ತಿಯಲ್ಲಿ ಮಾತ್ರ ಆರೋಪಿಗಳ ಪತ್ತೆ ಯಾಕಾಗುವುದಿಲ್ಲ. ವ್ಯವಸ್ಥೆ ಇಷ್ಟು ವರ್ಷಗಳ ಕಾಲ ಏನು ಮಾಡುತ್ತಿದೆ ಎಂಬುದು ಮಹಿಳೆಯರು ಹಾಗೂ ಪ್ರಜ್ಞಾವಂತರ ಪ್ರಶ್ನೆಯಾಗಿದೆ ಎಂದವರು ಹೇಳಿದರು. ಎಸ್ಐಟಿ ವಿಚಾರಣೆಯು ಸಂಪೂರ್ಣವಾಗಿ ಮಹಿಳೆಯರು ಮತ್ತಿತರ ನೊಂದವರಿಗೆ ನ್ಯಾಯ ದೊರಕಿಸುವ ಸುತ್ತ ಕೇಂದ್ರೀಕೃತವಾಗಿರಬೇಕು. ಎಸ್ಐಟಿ ರಚಿಸುವಾಗ ಸರಕಾರ ಹೊರಡಿಸಿದ ಆದೇಶದಲ್ಲಿ ಹೇಳಿರುವಂತೆ ಈ ವ್ಯಾಪ್ತಿಯಲ್ಲಿ ದಾಖಲಾಗಿರುವ ಮತ್ತು ದಾಖಲಾಗುವ ಎಲ್ಲ ಅಪರಾಧ ಪ್ರಕರಣಗಳ ಸಮಗ್ರ ಮತ್ತು ನಿಷ್ಪಕ್ಷಪಾತ ತನಿಖೆ ನಡೆಸಬೇಕು ಎಂಬುದು ನಮ್ಮ ಬೇಡಿಕೆಯಾಗಿದೆ. ಯಾರದ್ದೋ ವಿರುದ್ಧ ನಮ್ಮ ಆರೋಪವಿಲ್ಲ. ಯಾರು ಕೊಂದವರು, ಯಾರು ಅತ್ಯಾಚಾರಿಗಳು ಎಂದು ಬೆಟ್ಟು ಮಾಡುತ್ತಿಲ್ಲ. ಆದರೆ ಆಗಿರುವ ಘಟನೆಗಳ ಆರೋಪಿಗಳನ್ನು ಪತ್ತೆ ಹಚ್ಚಬೇಕು ಎಂಬುದಷ್ಟೇ ನಮ್ಮ ಹೋರಾಟವಾಗಿದೆ ಎಂದು ಅವರು ಹೇಳಿದರು. ಗೋಷ್ಟಿಯಲ್ಲಿ ಮುಖಂಡರಾದ ಗೀತಾ ಸುರತ್ಕಲ್, ಸಿಂಧೂ ದೇವಿ, ಕಿರಣ್ ಪ್ರಭ ಉಪಸ್ಥಿತರಿದ್ದರು. ‘ನಮ್ಮ ಹೋರಾಟವನ್ನು ಷಡ್ಯಂತ್ರ, ಕೋರ್ಟ್ ಆದೇಶ ಬಂದಿದೆ ಎನ್ನುವ ರೀತಿಯಲ್ಲಿ ತೇಜೋವಧೆ ನಡೆಸಲಾಗುತ್ತಿದೆ. ಪ್ರತಿಭಟನೆ ಇಲ್ಲ ಎಂದು ಬಿಂಬಿಸಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟರ್ ಹಾಕಲಾಗುತ್ತಿದೆ. ಇದು ಯಾರ ಷಡ್ಯಂತ್ರ ಎಂಬ ಪ್ರಶ್ನೆಗೆ ಉತ್ತರ ಬೇಕಾಗಿದೆ. ಕೆಲ ಮಾಧ್ಯಮ ಮೂಲಕ ಈ ರೀತಿಯ ದಿಕ್ಕುತಪ್ಪಿಸುವ ಕೆಲಸ ನಡೆಸುತ್ತಿರುವ ಬಗ್ಗೆ ನಮಗೆ ನೋವಿದೆ. ನಾವು ಕಾನೂನಾತ್ಮಕವಾಗಿ ಹೋರಾಟ ಮಾಡುತ್ತಿದ್ದೇವೆ. 20 ವರ್ಷಗಳ ಅವಧಿಯಲ್ಲಿ ನಡೆದಿರುವ ಸುಮಾರು 70ರಷ್ಟು ಪ್ರಕರಣಗಳ ತನಿಖೆ ಕೂಲಂಕುಷವಾಗಿ ನಡೆಯಬೇಕು’ ಎಂದು ಪ್ರಸನ್ನ ರವಿ ಹೇಳಿದರು. ಡಿ. 16ರಂದು 10.30ಕ್ಕೆ ಬೆಳ್ತಂಗಡಿ ಮಾರಿಗುಡಿಯಿಂದ ಮೌನ ಮೆರವಣಿಗೆ ನಡೆಯಲಿದೆ. ಭಿತ್ತಿಪತ್ರಗಳನ್ನು ಹಿಡಿದು ನಡೆಯುವ ಮೆರವಣಿಗೆ ಬಳಿಕ ತಾಲೂಕು ಕಚೇರಿ ಆವರಣದಲ್ಲಿ ಮಹಿಳಾ ನ್ಯಾಯ ಸಮಾವೇಶ ನಡೆಯಲಿದೆ ಎಂದು ಜ್ಯೋತಿ ಎ. ತಿಳಿಸಿದರು.
ನಾಯಕತ್ವ ಕಚ್ಚಾಟದ ವಿರುದ್ಧ ದೆಹಲಿಗೆ ದೂರು: ಗೊಂದಲದ ಬಗ್ಗೆ ಹೈಕಮಾಂಡ್ ಗೆ ಪತ್ರ ನೀಡಲು ಕೈ ಶಾಸಕ ಸಿದ್ದತೆ
ರಾಜ್ಯ ಕಾಂಗ್ರೆಸ್ ನಲ್ಲಿ ನಾಯಕತ್ವ ಕಿತ್ತಾಟ ತೀವ್ರಗೊಂಡಿದ್ದು, ಶಾಸಕರು ಬಹಿರಂಗ ಹೇಳಿಕೆಗಳ ಮೂಲಕ ಹಗ್ಗಜಗ್ಗಾಟ ನಡೆಸುತ್ತಿದ್ದಾರೆ. ಈ ಗೊಂದಲದಿಂದ ಪಕ್ಷಕ್ಕೆ ಹಿನ್ನಡೆಯಾಗುತ್ತಿದ್ದು, ಹೈಕಮಾಂಡ್ ಮಧ್ಯಪ್ರವೇಶಕ್ಕೆ ಶಾಸಕ ಬೇಳೂರು ಗೋಪಾಲಕೃಷ್ಣ ಒತ್ತಾಯಿಸಿದ್ದಾರೆ. ಅಧಿವೇಶನ ಮುಗಿದ ಕೂಡಲೇ ಡಿಕೆ ಶಿವಕುಮಾರ್ ಮುಖ್ಯಮಂತ್ರಿ ಆಗುವ ಸಾಧ್ಯತೆಯ ಬಗ್ಗೆಯೂ ಚರ್ಚೆಗಳು ನಡೆಯುತ್ತಿವೆ.
ಆಸ್ಟ್ರೇಲಿಯಾದಲ್ಲಿ ಸ್ಕೈಡೈವರ್ ಒಬ್ಬರು ವಿಮಾನದ ಬಾಲಕ್ಕೆ ಪ್ಯಾರಾಚೂಟ್ ಸಿಲುಕಿಕೊಂಡು ಸಾವಿರಾರು ಅಡಿ ಎತ್ತರದಲ್ಲಿ ಗಾಳಿಯಲ್ಲಿ ತೇಲಾಡಿದ್ದಾರೆ. ತುರ್ತು ಪ್ಯಾರಾಚೂಟ್ ವಿಮಾನದ ರೆಕ್ಕೆಗೆ ಸಿಲುಕಿದಾಗ, ಸ್ಕೈಡೈವರ್ ಹುಕ್ ನೈಫ್ ಬಳಸಿ ಹಗ್ಗಗಳನ್ನು ಕತ್ತರಿಸಿ, ಮುಖ್ಯ ಪ್ಯಾರಾಚೂಟ್ ತೆರೆದು ಸುರಕ್ಷಿತವಾಗಿ ಭೂಮಿಗೆ ಇಳಿದಿದ್ದಾರೆ. ಈ ರೋಮಾಂಚನಕಾರಿ ದೃಶ್ಯವನ್ನು ಆಸ್ಟ್ರೇಲಿಯಾದ ಸಾರಿಗೆ ಸುರಕ್ಷತಾ ಮಂಡಳಿ ಹಂಚಿಕೊಂಡಿದೆ.
ಭೂಮಿ, ಉದ್ಯೋಗ, ನಿಗಮಕ್ಕಾಗಿ ಕೊರಗ, ಜೇನುಕುರುಬರ ಒತ್ತಾಯ : ಬೆಳಗಾವಿ ಸುವರ್ಣ ವಿಧಾನ ಸೌಧದ ಎದುರು ಪ್ರತಿಭಟನೆ
ಮಂಗಳೂರು, ಡಿ.12: ರಾಜ್ಯದ ವಿಶೇಷ ನೈಜ ದುರ್ಬಲ ಬುಡಕಟ್ಟು (ಪಿವಿಟಿಜಿ)ಗಳಾದ ಕೊರಗ ಮತ್ತು ಜೇನುಕುರುಬ ಸಮುದಾಯದ ನಾಯಕರು ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಬೆಳಗಾವಿಯ ಸುವರ್ಣ ವಿಧಾನ ಸೌಧದ ಎದುರು ಶುಕ್ರವಾರ ಪ್ರತಿಭಟನೆ ನಡೆಸುತ್ತಿದ್ದಾರೆ. ದೇಶದಲ್ಲಿ ಅಳಿವಿನಂಚಿನಲ್ಲಿರುವ ಪಿವಿಟಿಜಿಗಳಲ್ಲಿ ಕರ್ನಾಟಕದ ಕೊರಗ ಹಾಗೂ ಜೇನುಕುರುಬ ಸಮುದಾಯಗಳು ಸೇರಿದ್ದು, ತಮ್ಮ ಪ್ರಮುಖ ಬೇಡಿಕೆಗಳ ಈಡೇರಿಕೆಗೆ ಜಂಟಿ ಪ್ರತಿಭಟನೆಯ ಮೂಲಕ ರಾಜ್ಯ ಸರಕಾರದ ಗಮನ ಸೆಳೆಯಲು ಸಮುದಾಯದ ಮುಖಂಡರು ಧರಣಿ ನಿರತರಾಗಿದ್ದಾರೆ. ದ.ಕ. ಮತ್ತು ಉಡುಪಿ ಜಿಲ್ಲೆಗಳ ಮೂಲ ನಿವಾಸಿಗಳೆಂದು ಗುರುತಿಸಲ್ಪಡುವ ಕೊರಗರು ಭೂಮಿ ಹಕ್ಕಿಗಾಗಿ ಹಲವು ದಶಕಗಳಿಂದ ಒತ್ತಾಯಿಸುತ್ತಾ ಬಂದಿದ್ದಾರೆ. ಡಾ.ಮುಹಮ್ಮದ್ ಪೀರ್ ನೇತೃತ್ವದಲ್ಲಿ ಕೊರಗರ ಸಮಗ್ರ ಅಧ್ಯಯನ ವರದಿಯನ್ನು ಸಲ್ಲಿಸಲಾಗಿದೆ. ಈ ವರದಿಯಲ್ಲಿ ಉಲ್ಲೇಖಿಸಿರುವಂತೆ ಪ್ರತಿ ಕೊರಗ ಕುಟುಂಬಗಳಿಗೆ ತಲಾ ಎರಡೂವರೆ ಎಕರೆ ಭೂಮಿ ವಿತರಣೆ ಹಾಗೂ ಪುನರ್ವಸತಿ ಕಾರ್ಯವನ್ನು ನೀಡಲು ಆದೇಶ ಹೊರಡಿಸಬೇಕು ಎಂದು ಕೊರಗ ಸಮುದಾಯ ಪ್ರಮುಖ ಬೇಡಿಕೆಯಾಗಿದೆ. ಇತರ ಪ್ರಮುಖ ಬೇಡಿಕೆಗಳು : ► ಪಿವಿಟಿಜಿ ಬುಡಕಟ್ಟು ಸಮುದಾಯಗಳಿಗೆ ಭೂಮಿ ಒದಗಿಸಲು ವಿಶೇಷ ಭೂ ಒಡೆತನ ಹಕ್ಕು ಕಾಯಿದೆ ರೂಪಿಸಬೇಕು. ► ಕೊರಗ ಮತ್ತು ಜೇನು ಕುರುಬರಿಗೆ ಪ್ರತ್ಯೇಕ ನಿಗಮ ಸ್ಥಾಪನೆ ಮತ್ತು ಪೂರಕ ಯೋಜನೆ ಅನುಷ್ಠಾನಗೊಳಿಸಬೇಕು. ► ಕೊರಗ ಸಮುದಾಯದವರಿಗೆ ಇಲಾಖಾವಾರು ಸಮಿತಿ ಮತ್ತು ಸ್ಥಳೀಯ ಸಂಸ್ಥೆಗಳಲ್ಲಿ ರಾಜಕೀಯ ಪ್ರಾತಿನಿಧ್ಯ ಒದಗಿಸಬೇಕು. ಸ್ಥಳೀಯಾಡಳಿತ ಸಂಸ್ಥೆಗಳಲ್ಲಿ ರಾಜಕೀಯ ಪ್ರಾತಿನಿಧ್ಯಕ್ಕಾಗಿ ಮೀಸಲು ಕ್ಷೇತ್ರ ಕಲ್ಪಿಸುವುದು ಹಾಗೂ ನಾಮ ನಿರ್ದೇಶನಕ್ಕೆ ಅವಕಾಶ ಒದಗಿಸಬೇಕು. ► ಕೊರಗ ಸಮುದಾಯದ ಯುವ ಜನತೆಗೆ ವಿಶೇಷ ನೇರ ನೇಮಕಾತಿ ಅಡಿಯಲ್ಲಿ ಶೇ. 100ರಷ್ಟು ಉದ್ಯೋಗ ಒದಗಿಸಬೇಕು. ► ಪಿವಿಟಿಜಿ ಬುಡಕಟ್ಟು ಸಮುದಾಯಗಳ ನೇರ ನೇಮಕಾತಿಗೆ ವಿಶೇಷ ಉದ್ಯೋಗ ಹಕ್ಕು ನಿಯಮ ರೂಪಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ. ‘ರಾಜ್ಯದ ಎರಡು ಪಿವಿಟಿಜಿ ಸಮುದಾಯಗಳಾದ ಕೊರಗ ಮತ್ತು ಜೇನುಕುರುಬರ ವಿವಿಧ ಬೇಡಿಕೆಗಳನ್ನು ಮುಂದಿರಿಸಿ ನಾವು ಬೆಳಗಾವಿ ಸುವರ್ಣ ವಿಧಾನ ಸೌಧದ ಎದುರು ಪ್ರತಿಭಟನೆ ನಡೆಸುತ್ತಿದ್ದು, ನಮ್ಮ ಬೇಡಿಕೆಯ ಮನವಿ ಪತ್ರವನ್ನು ಮುಖ್ಯಮಂತ್ರಿಗೆ ಸಲ್ಲಿಸಲಿದ್ದೇವೆ. ಕರ್ನಾಟಕ ಕರಾವಳಿಯ ಮೂಲ ನಿವಾಸಿಗಳಾದ ಕೊರಗರು ಹಲವು ದಶಕಗಳಿಂದ ಭೂಮಿ ಹಕ್ಕಿಗಾಗಿ ಹೋರಾಟ ನಡೆಸುತ್ತಾ ಬಂದಿದ್ದೇವೆ. ಇದರ ಜತೆಗೆ ಉದ್ಯೋಗದ ಹಕ್ಕು ಹಾಗೂ ಜೇನುಕುರುಬರನ್ನು ಒಳಗೊಂಡು ಕೊರಗ ಸಮುದಾಯಕ್ಕೆ ಪ್ರತ್ಯೇಕ ನಿಗಮ ಸ್ಥಾಪನೆ ಮಾಡಬೇಕೆಂಬುದು ನಮ್ಮ ಆಗ್ರಹವಾಗಿದೆ.’ ಸುಂದರ ಕೊರಗ, ಅಧ್ಯಕ್ಷರು, ದ.ಕ. ಜಿಲ್ಲಾ ಕೊರಗ ಸಂಘ.
ಬೆಂಗಳೂರಿನ ಪ್ರಮುಖ ಐಟಿ ಕಾರಿಡಾರ್ ಸಿಲ್ಕ್ ಬೋರ್ಡ್ ನಿಂದ ಕೆ.ಆರ್. ಪುರಂವರೆಗೆ ರಸ್ತೆ ಅಭಿವೃದ್ಧಿ ಆಗಲಿದೆ. ಅಂತರಾಷ್ಟ್ರೀಯ ಕಂಪನಿಗಳಿರುವ, ನಗರದ ಪ್ರಮುಖ ವಾಣಿಜ್ಯ ಆದಾಯ ತರುವ ಹಾಗೂ ಉದ್ಯಮಿಗಳ ಒತ್ತಾಯದ ಮೇರೆಗೆ ರಸ್ತೆಯ ಅಭಿವೃದ್ಧಿಗೆ ಸರಕಾರ ನಿರ್ಧರಿಸಿದೆ.
ಇಂಡಿಗೋ ವಿಮಾನಯಾನದಲ್ಲಿ ಭಾರೀ ಅಡಚಣೆ: ನಾಲ್ವರು ವಿಮಾನ ಕಾರ್ಯಾಚರಣೆ ಪರಿಶೀಲಕರ ವಜಾ
ಕಳೆದ ವಾರ ಇಂಡಿಗೋ ವಿಮಾನ ಕಾರ್ಯಾಚರಣೆಯಲ್ಲಿ ಉಂಟಾದ ಭಾರಿ ಅಡಚಣೆಯ ಹಿನ್ನೆಲೆಯಲ್ಲಿ, ಭಾರತದ ವಾಯುಯಾನ ನಿಯಂತ್ರಕ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (ಡಿಜಿಸಿಎ) ನಾಲ್ವರು ವಿಮಾನ ಕಾರ್ಯಾಚರಣೆ ನಿರೀಕ್ಷಕರನ್ನು (ಎಫ್ಒಐ) ವಜಾಗೊಳಿಸಿದೆ. ಡಿಜಿಸಿಎ ಆದೇಶದ ಪ್ರಕಾರ, ಒಪ್ಪಂದದ ಆಧಾರದ ಮೇಲೆ ಡಿಜಿಸಿಎ ಜೊತೆ ತೊಡಗಿಸಿಕೊಂಡಿರುವ ಈ ಎಫ್ಒಐಗಳನ್ನು ತಮ್ಮ ಮಾತೃ ಸಂಸ್ಥೆಗಳಿಗೆ ಸೇರಲು ತಕ್ಷಣದಿಂದ ಜಾರಿಗೆ ಬರುವಂತೆ ಬಿಡುಗಡೆ ಮಾಡಲಾಗಿದೆ.
IMD Weather Forecast: ಈ ಭಾಗಗಳಲ್ಲಿ ಮುಂದಿನ ಮೂರು ದಿನ ವಿಪರೀತ ಚಳಿ ಮುನ್ಸೂಚನೆ
IMD Weather Forecast: ದೇಶದ ಬಹುತೇಕ ರಾಜ್ಯಗಳಲ್ಲಿ ಚಳಿ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚಳ ಆಗುತ್ತಲಿದೆ. ಹಾಗೆಯೇ ಮುಂದಿನ ಮೂರು ದಿನಗಳವರೆಗೆ ಈ ಭಾಗಗಳಲ್ಲಿ ಶೀತಗಾಳಿ ಪ್ರಮಾಣ ಗಮನಾರ್ಹವಾಗಿ ಹೆಚ್ಚಳ ಆಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಹಾಗಾದ್ರೆ ಎಲ್ಲೆಲ್ಲಿ ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ. ಈಗಾಗಲೇ ದೇಶದ ಹಲವೆಡೆ ರಣಭೀಕರ
ರಾಜ್ಯದಲ್ಲಿ ಮುಂದಿನ ಕೆಲವು ದಿನಗಳ ಕಾಲ ತೀವ್ರ ಚಳಿ ಆವರಿಸಲಿದ್ದು, ಉತ್ತರ ಕರ್ನಾಟಕದ 9 ಜಿಲ್ಲೆಗಳಲ್ಲಿ 'ತೀವ್ರ ಶೀತಗಾಳಿ' ಬೀಸುವ ಸಾಧ್ಯತೆಯಿದೆ. ಬೆಂಗಳೂರಿನಲ್ಲಿಯೂ ಮುಂಜಾನೆ ಮಂಜು ಕವಿದ ವಾತಾವರಣವಿರಲಿದೆ. ಮುಂದಿನ 7 ದಿನಗಳ ಕಾಲ ರಾಜ್ಯದಾದ್ಯಂತ ಒಣ ಹವೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ಬೆಲ್ದಂಗಾ ಬಾಬರೀ ಮಸೀದಿ ನಿರ್ಮಾಣದ ಬಳಿ ಉದ್ಘಾಟನಾ ಪ್ರಾರ್ಥನೆ; ಇಟ್ಟಂಗಿ ಸಮೇತ ಬಂದವರಿಗೆ ಊಟ!
ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೂ ಮುನ್ನ ಬೆಲ್ದಂಗಾ ಬಾಬರಿ ಮಸೀದಿ ನಿರ್ಮಾಣ ವಿವಾದ, ರಾಜ್ಯದಲ್ಲಿ ತೀವ್ರ ರಾಜಕೀಯ ಕೋಲಾಹಲವನ್ನು ಸೃಷ್ಟಿಸಿದೆ. ಈ ಮಧ್ಯೆ ಕಳೆದ ಡಿ.6ರಂದು ಅಡಿಗಲ್ಲು ಸಮಾರಂಭ ನೆರವೇರಿಸಿದ್ದ ಸ್ಥಳದಲ್ಲಿ ಟಿಎಂಸಿ ಉಚ್ಚಾಟಿತ ಶಾಸಕ ಹುಮಾಯೂನ್ ಕಬೀರ್ ಅವರು,ಶುಕ್ರವಾರದ ಉದ್ಘಾಟನಾ ಪ್ರಾರ್ಥನೆ ಕಾರ್ಯಕ್ರಮವನ್ನು ಆಯೋಜಿಸಿದ್ದಾರೆ. ಸ್ಥಳದಲ್ಲಿ ಸಾವಿರಾರು ಜನರಿಗೆ ಊಟದ ವ್ಯವಸ್ಥೆಯನ್ನೂ ಮಾಡಲಾಗಿದೆ. ಪ್ರತಿಪಕ್ಷ ಬಿಜೆಪಿ ಈ ಘಟನೆಯನ್ನು ಖಂಡಿಸುತ್ತಾ, ಟಿಎಂಸಿ ಸರ್ಕಾರದ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದೆ.
ಕರ್ನಾಟಕ ಸರ್ಕಾರ ಮಾದಕ ವಸ್ತು ಮಾರಾಟಗಾರರ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಿದೆ. ಮಾರಾಟಗಾರರ ಮನೆಗಳ ಮೇಲೆ ಬುಲ್ಡೋಜರ್ ಹತ್ತಿಸಿ ಕೆಡವಲು ಸಿದ್ಧವಿದೆ ಎಂದು ಗೃಹ ಸಚಿವ ಡಾ.ಜಿ ಪರಮೇಶ್ವರ್ ಹೇಳಿದ್ದಾರೆ. ಈಗಾಗಲೇ ಸುಮಾರು 300 ವಿದೇಶಿ ಪ್ರಜೆಗಳನ್ನು ಗಡೀಪಾರು ಮಾಡಲಾಗಿದೆ. ಮಾದಕ ದ್ರವ್ಯಗಳ ಹರಡುವಿಕೆ ತಡೆಯಲು 'ಆಂಟಿ-ನಾರ್ಕೋಟಿಕ್ಸ್ ಟಾಸ್ಕ್ ಫೋರ್ಸ್' ಸ್ಥಾಪಿಸಲಾಗಿದೆ ಎಂದು ತಿಳಿಸದ್ದು, ಈ ಧಂಧೆಯಲ್ಲಿ ಭಾಗಿಯಾಗುವ ಪೊಲೀಸರ ಮೇಲೆ ಕಠಿಣ ಕ್ರಮಕೈಗೊಳ್ಳುವುದಾಗಿ ಎಚ್ಚರಿಸಿದ್ದಾರೆ.
ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ: ಹಳೆಯ ಪಿಂಚಣಿ ಯೋಜನೆ ಮರುಜಾರಿ ಬಗ್ಗೆ ಸದನದಲ್ಲಿ ಚರ್ಚೆ..!
ಹಳೆಯ ಪಿಂಚಣಿ ಯೋಜನೆ (Old Pension Scheme – OPS). ಈ ಒಂದು ಪದವೇ ರಾಜ್ಯದ ಲಕ್ಷಾಂತರ ಸರ್ಕಾರಿ ನೌಕರರಲ್ಲಿ ನಿರೀಕ್ಷೆ, ಆತಂಕ ಮತ್ತು ಕುತೂಹಲವನ್ನು ಹುಟ್ಟಿಸುತ್ತದೆ. ಇತ್ತೀಚೆಗೆ ಚಾಳಿಗಳಾದ ಬೆಳಗಾವಿ ವಿಧಾನಸಭೆಯ ಅಧಿವೇಶನದಲ್ಲಿ ಈ ವಿಷಯ ಪ್ರಸ್ತಾಪವಾದ ಬೆನ್ನಲ್ಲೇ, “OPS ಜಾರಿಯಾಯಿತಾ?”, “NPS ರದ್ದಾಯಿತಾ?” ಎಂಬ ಪ್ರಶ್ನೆಗಳು ಮತ್ತೆ ಚರ್ಚೆಗೆ ಬಂದಿವೆ. ವಿಧಾನಸಭೆಯಲ್ಲಿ ನಡೆದ ಚರ್ಚೆಯ ನಂತರ, ಈ ವಿಚಾರ ಸಾಮಾಜಿಕ ಜಾಲತಾಣಗಳು ಮತ್ತು ಸುದ್ದಿವಾಹಿನಿಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ಆದರೆ, ನಿಜಕ್ಕೂ ಸದನದಲ್ಲಿ ಏನು ಚರ್ಚೆಯಾಯ್ತು? ... Read more The post ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ: ಹಳೆಯ ಪಿಂಚಣಿ ಯೋಜನೆ ಮರುಜಾರಿ ಬಗ್ಗೆ ಸದನದಲ್ಲಿ ಚರ್ಚೆ..! appeared first on Karnataka Times .
\ಕಾಂಗ್ರೆಸ್ನ ಕೆಜಿಎಫ್-2 ಡಿಸೆಂಬರ್ 20ರಂದು ರಿಲೀಸ್ ಆಗುತ್ತೆ\
ರಾಜ್ಯದ ಪವರ್ ಹೌಸ್ ಈಗ ಬೆಳಗಾವಿಯಲ್ಲಿದೆ. ಚಳಿಗಾಲದ ಅಧಿವೇಶನದ ನಡುವೆ ಕಾಂಗ್ರೆಸ್ನ ಕುರ್ಚಿ ಕಿತ್ತಾಟ ಮತ್ತೆ ಮುನ್ನೆಲೆಗೆ ಬಂದಿದೆ. ತಡರಾತ್ರಿವರೆಗೆ ಡಿನ್ನರ್ ಮೀಟಿಂಗ್ ನಡೆಯುತ್ತಿದ್ದು, ಅಧಿವೇಶನ ಮುಗಿದ ಕೂಡಲೇ ಸಿಎಂ ಬದಲಾಗ್ತಾರೆ ಎನ್ನುವ ಚರ್ಚೆಗಳು ನಡೆಯುತ್ತಿದೆ. 'ಇಲ್ಲಿವರೆಗೆ ರಾಜ್ಯದ ಜನ ಕಾಂಗ್ರೆಸ್ನ ಅರ್ಧ ಸಿನಿಮಾ ನೋಡಿದ್ದಾರೆ, ಡಿಸೆಂಬರ್ 20ರಂದು ಕಾಂಗ್ರೆಸ್ ನಟನೆಯ ಕೆಜಿಎಫ್-2 ತೆರೆ ಕಾಣಲಿದೆ' ಎಂದು
Uttar Pradesh | ಯೂಟ್ಯೂಬ್ ನೋಡಿ ‘ಶಸ್ತ್ರಚಿಕಿತ್ಸೆ’ ನಡೆಸಿದ ನಕಲಿ ವೈದ್ಯ; 25 ವರ್ಷದ ಮಹಿಳೆ ಮೃತ್ಯು
ಬಾರಾಬಂಕಿ (ಉ.ಪ್ರ.), ಡಿ.12: ಯೂಟ್ಯೂಬ್ ವೀಡಿಯೊಗಳನ್ನು ನೋಡಿ ಶಸ್ತ್ರಚಿಕಿತ್ಸೆ ನಡೆಸಿದ ನಕಲಿ ವೈದ್ಯನ ನಿರ್ಲಕ್ಷ್ಯದಿಂದ 25 ವರ್ಷದ ಮಹಿಳೆಯೊಬ್ಬಳು ಪ್ರಾಣ ಕಳೆದುಕೊಂಡಿರುವ ಘಟನೆ ಉತ್ತರ ಪ್ರದೇಶದ ಬಾರಾಬಂಕಿಯಲ್ಲಿ ನಡೆದಿದೆ. ಮೃತರನ್ನು ಮುನಿಶಾರ ಎಂದು ಗುರುತಿಸಲಾಗಿದೆ. ತೀವ್ರ ಹೊಟ್ಟೆನೋವಿನಿಂದ ಬಳಲುತ್ತಿದ್ದ ಮುನಿಶಾರ, ದಸ್ರಾಪುರದಲ್ಲಿರುವ ಜ್ಞಾನಪ್ರಕಾಶ್ ಮಿಶ್ರಾ (48) ನಡೆಸುತ್ತಿದ್ದ ಕ್ಲಿನಿಕ್ ಗೆ ಭೇಟಿ ನೀಡಿದಾಗ, “ಪಿತ್ತಕೋಶದಲ್ಲಿ ಕಲ್ಲುಗಳು ಹೆಚ್ಚಿವೆ, ತಕ್ಷಣ ಶಸ್ತ್ರಚಿಕಿತ್ಸೆ ಅಗತ್ಯ” ಎಂದು ಆತ ವೈದ್ಯನಂತೆ ಹೇಳಿದ್ದಾನೆಂದು ಕುಟುಂಬದವರು ದೂರು ನೀಡಿದ್ದಾರೆ. ಮುನಿಶಾರ ಪತಿ ತೇಜ್ ಬಹದ್ದೂರ್ ರಾವತ್ ಅವರ ದೂರಿನ ಪ್ರಕಾರ, ಮಿಶ್ರಾ ಮೊದಲು “ಇನ್ನೊಬ್ಬ ವೈದ್ಯರು ಶಸ್ತ್ರಚಿಕಿತ್ಸೆಗೆ ಬರುತ್ತಾರೆ” ಎಂದು ಹೇಳಿದ್ದರೂ, ಕೊನೆಗೆ ಯಾರೂ ಬರಲಿಲ್ಲ. ನಂತರ “ನಾನು ಯೂಟ್ಯೂಬ್ ನೋಡಿದರೆ ಸಾಕು, ವಿಧಾನ ಗೊತ್ತಿದೆ” ಎಂದು ಹೇಳಿ ಸ್ವತಃ ಶಸ್ತ್ರಚಿಕಿತ್ಸೆಗೆ ಮುಂದಾಗಿದ್ದಾನೆಂದು ಆರೋಪಿಸಲಾಗಿದೆ. ಪ್ರಕ್ರಿಯೆ ತಪ್ಪಾಗಿದ್ದರಿಂದ ಮರುದಿನ ಮುನಿಶಾರ ಸ್ಥಿತಿ ಗಂಭೀರಗೊಂಡಿದ್ದು, ಪತಿ ಕ್ಲಿನಿಕ್ ಗೆ ತಲುಪುವಷ್ಟರಲ್ಲಿ ಆಕೆ ಮೃತಪಟ್ಟಿದ್ದರು ಎಂದು ತಿಳಿದುಬಂದಿದೆ. ಘಟನೆಯ ಬಳಿಕ ವೈದ್ಯಕೀಯ ತಂಡ ನಡೆಸಿದ ಪರಿಶೀಲನೆಯಲ್ಲಿ ಮಿಶ್ರಾಗೆ ಯಾವುದೇ ಮಾನ್ಯ ವೈದ್ಯಕೀಯ ಅರ್ಹತೆ ಇಲ್ಲದಿರುವುದು ಬಹಿರಂಗವಾಗಿದೆ. ಅವನ ಕ್ಲಿನಿಕ್ ಕೂಡ ಆರೋಗ್ಯ ಇಲಾಖೆಯಲ್ಲಿ ನೋಂದಾಯಿಸಿರಲಿಲ್ಲ ಎಂದು ಬಾರಾಬಂಕಿ ಎಸ್ಪಿ ಅರ್ಪಿತ್ ವಿಜಯವರ್ಗಿಯ ತಿಳಿಸಿದ್ದಾರೆ. ಶಸ್ತ್ರಚಿಕಿತ್ಸೆ ವೇಳೆ ಸಹಾಯ ಮಾಡಿದ ಆರೋಪಿಯ ಸೋದರಳಿಯನೂ ಪರಾರಿಯಾಗಿದ್ದು, ಇಬ್ಬರನ್ನು ಪತ್ತೆಹಚ್ಚಲು ವಿಶೇಷ ತಂಡಗಳನ್ನು ರಚಿಸಲಾಗಿದೆ. ಘಟನೆ ತಿಳಿದ ಗ್ರಾಮಸ್ಥರು ಹಾಗೂ ಮೃತರ ಬಂಧುಗಳು ಕ್ಲಿನಿಕ್ ಎದುರು ಭಾರೀ ಪ್ರತಿಭಟನೆ ನಡೆಸಿದರು. ನಂತರ ಹಿರಿಯ ಅಧಿಕಾರಿಗಳು ತ್ವರಿತ ಕ್ರಮಕ್ಕೆ ಭರವಸೆ ನೀಡಿದ ಹಿನ್ನೆಲೆಯಲ್ಲಿ ಪ್ರತಿಭಟನೆಯನ್ನು ಹಿಂತೆಗೆದುಕೊಳ್ಳಲಾಯಿತು. ಕೋಥಿ ಪೊಲೀಸ್ ಠಾಣೆಯಲ್ಲಿ ಕೊಲೆಗೆ ಸಮಾನವಲ್ಲದ ನರಹತ್ಯೆ ಅಪರಾಧ ಸೇರಿದಂತೆ ಹಲವು ಗಂಭೀರ ಸೆಕ್ಷನ್ ಗಳಡಿ ಪ್ರಕರಣ ದಾಖಲಿಸಲಾಗಿದೆ. ತೇಜ್ ಬಹದ್ದೂರ್ ಕಾರ್ಮಿಕರಾಗಿದ್ದು, ದಂಪತಿಗೆ ಮೂವರು ಮಕ್ಕಳು ಇದ್ದಾರೆ ಎಂದು ತಿಳಿದು ಬಂದಿದೆ.
ಡಿಸೆಂಬರ್ 15 -18 ರವರೆಗೆ ಜೋರ್ಡಾನ್, ಇಥಿಯೋಪಿಯಾ, ಓಮನ್ಗೆ ಪ್ರಧಾನಿ ಮೋದಿ ಭೇಟಿ
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸೋಮವಾರದಿಂದ ನಾಲ್ಕು ದಿನಗಳ ವಿದೇಶ ಪ್ರವಾಸ ಆರಂಭಿಸಲಿದ್ದಾರೆ. ಅವರು ಜೋರ್ಡಾನ್, ಇಥಿಯೋಪಿಯಾ ಮತ್ತು ಓಮನ್ಗೆ ಭೇಟಿ ನೀಡಲಿದ್ದಾರೆ. ಈ ಭೇಟಿಯ ಮುಖ್ಯ ಉದ್ದೇಶ ವ್ಯಾಪಾರ ಮತ್ತು ರಕ್ಷಣಾ ಕ್ಷೇತ್ರಗಳಲ್ಲಿ ದ್ವಿಪಕ್ಷೀಯ ಸಂಬಂಧಗಳನ್ನು ಬಲಪಡಿಸುವುದಾಗಿದೆ. ಈ ಪ್ರವಾಸವು ಭಾರತದ ವಿದೇಶಾಂಗ ನೀತಿಯಲ್ಲಿ ಮಹತ್ವದ ಹೆಜ್ಜೆಯಾಗಿದೆ.
Koppala | ಅಡುಗೆ ಅನಿಲ ಸಿಲಿಂಡರ್ ಸ್ಫೋಟ: ಏಳು ಮಂದಿಗೆ ಗಂಭೀರ ಗಾಯ
ಸ್ಫೋಟದ ತೀವ್ರತೆಗೆ ಮನೆ ಭಾಗಶಃ ಧ್ವಂಸ
ಗಣೇಶ್ ಘೋಷ್-ಚಿತ್ತಗಾಂಗ್ ಶಸ್ತ್ರಾಸ್ತ್ರ ಕೋಠಿ ಲೂಟಿಯ ಕ್ರಾಂತಿಕಾರಿ : ಇವರಾರೂ ಕ್ಷಮೆ ಯಾಚಿಸಲಿಲ್ಲ!
ಕರಿನೀರಿನ ಕಠಿಣ ಶಿಕ್ಷೆ ಅನುಭವಿಸಿದ ಕ್ರಾಂತಿಕಾರಿಗಳು!
Explained: ದೀದಿಗೆ ಧರ್ಮಸಂಕಟ: ಪಶ್ಚಿಮ ಬಂಗಾಲದಲ್ಲಿ ತಲೆ ಎತ್ತಲಿದೆಯೇ ಬಾಬ್ರಿ ಮಸೀದಿ ?
ಪಶ್ಚಿಮ ಬಂಗಾಳದ ದೀದಿ ಆಡಳಿತದಲ್ಲಿ ಬಾಬ್ರಿ ಮಸೀದಿ ನಿರ್ಮಾಣ ವಿಚಾರ ಈಗ ರಾಜಕೀಯ ಸಂಚಲನ ಸೃಷ್ಟಿಸಿದೆ. ಮುಂದಿನ ನಾಲ್ಕೈದು ತಿಂಗಳ ಒಳಗೆ ಚುನಾವಣೆ ನಡೆಯಲಿರುವ ರಾಜ್ಯದಲ್ಲಿ ಎದ್ದಿರುವ ಈ ವಿದ್ಯಮಾನವು ಸಿಎಂ ಮಮತಾ ಬ್ಯಾನರ್ಜಿಗೆ ಹೊಸ ಸಂಕಟ ತಂದಿತ್ತಿದೆ. ಏನಿದು ಬಂಗಾಳದ ಬಾಬ್ರಿ ಮಸೀದಿ ವಿವಾದ? ತಮ್ಮದೇ ಪಕ್ಷದ ಶಾಸಕ ಸಿಡಿದೆದ್ದು ಮಸೀದಿ ನಿರ್ಮಿಸಲು ಹೊರಟಿದ್ದಕ್ಕೆ ಮಮತಾ ಏಕೆ ಅಡ್ಡಿಯಾಗುತ್ತಿದ್ದಾರೆ?
RCB ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟ ಡಿ ಕೆ ಶಿವಕುಮಾರ್
ಬೆಳಗಾವಿ, ಡಿಸೆಂಬರ್ 12: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಈ ವರ್ಷ ಐಪಿಎಲ್ ಟ್ರೋಫಿ ಗೆದ್ದು ಬೀಗಿದ ಸಂಭ್ರಮಾಚರಣೆ ವೇಳೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ 11 ಜನ ಅಭಿಮಾನಿಗಳು ಸಾವನ್ನಪ್ಪಿದ್ದರು. ಹಾಗಾಗಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಯಾವುದೇ ಕ್ರಿಕೆಟ್ ಪಂದ್ಯ ನಡೆಸದೇ ಇರಲು ನಿರ್ಧರಿಸಲಾಗಿತ್ತು. ಇದೀಗ ಆರ್ಸಿಬಿ ಅಭಿಮಾನಿಗಳಿಗೆ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಗುಡ್ ನ್ಯೂಸ್ ನೀಡಿದ್ದಾರೆ.
ವಾಲ್ಸ್ಟ್ರೀಟ್ನಲ್ಲಿ ಒರ್ಯಾಕಲ್ ಷೇರು ಕುಸಿತ; ಓಪನ್ AI ಸಾಮ್ ಅಲ್ಟ್ಮನ್ ಸಖ್ಯ ಎಂಬ ಬಿಸಿತುಪ್ಪ!
ವ್ಯಾಪಾರ ಕ್ಷೇತ್ರದಲ್ಲಿ ಕೆಲವೊಮ್ಮೆ ಪರಸ್ಪರ ಮಾಡಿಕೊಳ್ಳುವ ಒಪ್ಪಂದಗಳು ಬಿಸಿ ತುಪ್ಪವಾಗಿ ಪರಿಣಮಿಸುತ್ತವೆ. ನಷ್ಟ ಎಂಬ ಕಾರಣಕ್ಕೆ ಉಗಿಯಲೂ ಬಾರದ ಮತ್ತು ಲಾಭದ ಕಾರಣಕ್ಕೆ ನುಂಗಲೂ ಬಾರದ ಪರಿಸ್ಥಿತಿಯನ್ನು ಅವು ಸೃಷ್ಟಿಸಿ ಬಿಡುತ್ತವೆ. ಚಾಟ್ಕಜಿಪಿಟಿ-ತಯಾರಕ ಓಪನ್ AI ಜೊತೆ ಮಾಡಿಕೊಂಡ 300 ಬಿಲಿಯನ್ ಅಮೆರಿಕನ್ ಡಾಲರ್ ಮೌಲ್ಯದ ಒಪ್ಪಂದವೂ ಒರ್ಯಾಕಲ್ಗೆ ಬಿಸಿ ತುಪ್ಪವಾಗಿ ಪರಿಣಮಿಸಿದೆ. ವಾಲ್ಸ್ಟ್ರೀಟ್ನಲ್ಲಿ ಒರ್ಯಾಕಲ್ ಷೇರು ಮೌಲ್ಯ ಶೇ. 11ರಷ್ಟು ಕುಸಿತ ಕಂಡಿವೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.
ಮಾಜಿ ಸಚಿವ HM ರೇವಣ್ಣ ಪುತ್ರನ ಕಾರು ಮಾಗಡಿ ಬಳಿ ಅಪಘಾತ: ಬೈಕ್ ಸವಾರ ಸಾವು
ಎಚ್ಎಂ ರೇವಣ್ಣ ಮಗ ಶಶಾಂಕ್ ಓಡಿಸಿದ್ದ ಕಾರು ಬೈಕ್ಗೆ ಡಿಕ್ಕಿಯಾಗಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ತಡರಾತ್ರಿ ಘಟನೆ ನಡೆದಿದ್ದು, ಪ್ರಕರಣ ದಾಖಲಾಗಿದೆ.
ಅಮೆರಿಕಾ ಅಧ್ಯಕ್ಷ ಟ್ರಂಪ್ ವೆನೆಜುವೆಲಾದ ಅಧ್ಯಕ್ಷ ಮಡೂರೊ ಅವರನ್ನು ಅಧಿಕಾರದಿಂದ ಕೆಳಗಿಳಿಸಲು ಪ್ರಯತ್ನಿಸುತ್ತಿದ್ದಾರೆ. ಈ ನಡುವೆ ರಷ್ಯಾ ಮತ್ತು ಬೆಲಾರೂಸ್ ಮಡೂರೊಗೆ ಬೆಂಬಲ ನೀಡಿವೆ. ರಷ್ಯಾ ಅಧ್ಯಕ್ಷ ಪುಟಿನ್ ಮಡೂರೊಗೆ ಕರೆ ಮಾಡಿ ಬೆಂಬಲ ಸೂಚಿಸಿದ್ದಾರೆ. ಬೆಲಾರೂಸ್ ಸಹ ಮಡೂರೊಗೆ ಆಶ್ರಯ ನೀಡಲು ಸಿದ್ಧವಿದೆ ಎಂದು ತಿಳಿಸಿದೆ.ಇವೆಲ್ಲದರ ನಡುವೆ ಅಮೆರಿಕಾ ಕೆರಿಬಿಯನ್ ಸಮುದ್ರದಲ್ಲಿ ಮಿಲಿಟರಿ ಶಕ್ತಿ ಹೆಚ್ಚಿಸಿದ್ದು, ಪರಿಸ್ಥಿತಿ ಉಲ್ಬಣಗೊಳ್ಳುವ ಸಾಧ್ಯತೆ ದಟ್ಟವಾಗಿದೆ.
ಇಂಡಿಗೊ ವಿಮಾನ ಹಾರಾಟದಲ್ಲಿ ಅಡಚಣೆ: ನಾಲ್ವರು ಫ್ಲೈಟ್ ಆಪರೇಷನ್ ಇನ್ಸ್ಪೆಕ್ಟರ್ಗಳ ವಜಾ
ಹೊಸದಿಲ್ಲಿ: ಇಂಡಿಗೊ ಏರ್ಲೈನ್ಸ್ನಲ್ಲಿ ನಡೆದ ವ್ಯಾಪಕ ವಿಮಾನ ಹಾರಾಟದ ಅಡಚಣೆಗಳ ಹಿನ್ನೆಲೆ, ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (ಡಿಜಿಸಿಎ) ನಾಲ್ವರು ಫ್ಲೈಟ್ ಆಪರೇಷನ್ ಇನ್ಸ್ಪೆಕ್ಟರ್ ಗಳನ್ನು ಸೇವೆಯಿಂದ ವಜಾಗೊಳಿಸಿದೆ. ಈ ಕ್ರಮಕ್ಕೆ ನಿಖರವಾದ ಕಾರಣವನ್ನು ಅಧಿಕೃತವಾಗಿ ಪ್ರಕಟಿಸಲಾಗದಿದ್ದರೂ, ಚಳಿಗಾಲದ ವೇಳಾಪಟ್ಟಿಯಲ್ಲಿ ಇಂಡಿಗೊಗೆ 10% ಹೆಚ್ಚು ಹಾರಾಟಗಳ ಅನುಮತಿ ನೀಡುವ ಮೊದಲು ಪೈಲಟ್ ಗಳ ಲಭ್ಯತೆ, ಹೊಸ ಕರ್ತವ್ಯ ವಿಶ್ರಾಂತಿ ಮಾನದಂಡಗಳನ್ನು ಅನುಸರಿಸುವ ಸಿದ್ಧತೆ ಮೊದಲಾದ ವಿಚಾರಗಳಲ್ಲಿ ಡಿಜಿಸಿಎ ಏನು ಪರಿಶೀಲಿಸಿತ್ತು ಎಂಬ ಪ್ರಶ್ನೆಗಳ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿದು ಬಂದಿದೆ. ವಿಮಾನಯಾನದ ಪುನಃಸ್ಥಾಪನೆ, ಪೈಲಟ್ಗಳ ನೇಮಕಾತಿ ಹಾಗೂ ತೊಂದರೆ ಅನುಭವಿಸಿದ ಪ್ರಯಾಣಿಕರಿಗೆ ನೀಡಲಾಗುತ್ತಿರುವ ಮರುಪಾವತಿ ಮತ್ತು ಪರಿಹಾರ ಕ್ರಮಗಳ ಬಗ್ಗೆ ವಿವರಿಸಲು, ಡಿಜಿಸಿಎ ಡಿಸೆಂಬರ್ 12, 2025 ರಂದು ಇಂಡಿಗೊ ಸಿಇಒ ಪೀಟರ್ ಎಲ್ಬರ್ಸ್ ಅವರಿಗೆ ಸಮನ್ಸ್ ಜಾರಿ ಮಾಡಿದೆ.
Car Accident: ಮಾಜಿ ಸಚಿವ ರೇವಣ್ಣ ಪುತ್ರನ ಕಾರು ಅಪಘಾತ, ಯುವಕ ದುರ್ಮರಣ
ಕಾಂಗ್ರೆಸ್ನ ಪ್ರಭಾವಿ ರಾಜಕಾರಣಿ, ಮಾಜಿ ಸಚಿವ ಹಾಗೂ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಹೆಚ್.ಎಂ.ರೇವಣ್ಣ ಪುತ್ರನ ವಿರುದ್ಧ ಗಂಭೀರ ಆರೋಪ ಕೇಳಿಬಂದಿದೆ. 23 ವರ್ಷದ ಯುವಕನೊಬ್ಬ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದು, ಆ ಫಾರ್ಚೂನರ್ ಕಾರು ರೇವಣ್ಣ ಅವರ ಪುತ್ರ ಶಶಾಂಕ್ ಅವರಿಗೆ ಸೇರಿದ್ದು ಎಂದು ಹೇಳಲಾಗುತ್ತಿದೆ. ನಿನ್ನೆ ತಡರಾತ್ರಿ ಈ ದುರ್ಘಟನೆ ನಡೆದಿದ್ದು, ಮೃತ ಯುವಕನನ್ನು
ಸಂಪಾದಕೀಯ | ಅಸಮಾನತೆಯ ಕಂದರದೊಳಗೆ ಭಾರತದ ಅಭಿವೃದ್ಧಿಯ ಕನಸು
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
518 ಕಡೆ ಶಾಂತಿಯುತವಾಗಿ ನಡೆದ RSS ಪಥಸಂಚಲನ: ಸಂಘದ ಶಿಸ್ತೋ, ಖಾಕಿಯ ಗಸ್ತೋ?
Pathasanchalana Of RSS : ರಾಷ್ಟ್ರೀಯ ಸ್ವಯಂಸೇವಕ ಸಂಘದ ಪಥಸಂಚಲನ ಶಾಂತಿಯುತವಾಗಿ ನಡೆದಿದೆ. ಎಲ್ಲೂ, ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗಿಲ್ಲ ಎಂದು ರಾಜ್ಯ ಗೃಹ ಸಚಿವ ಡಾ.ಪರಮೇಶ್ವರ್ ಅವರು ಸದನದಲ್ಲಿ ಹೇಳಿದ್ದರು. ಇದು, ಸಂಘದ ಶಿಸ್ತು ಎನ್ನುವುದು ಒಂದು ವಾದವಾದರೆ, ಪೊಲೀಸರು ಉತ್ತಮ ಬಂದೋಬಸ್ತ್ ಅನ್ನು ನೀಡಿದ್ದರು ಎನ್ನುವುದು ಇನ್ನೊಂದು ವಾದ.
ಸಾಹಿತ್ಯ, ರಂಗಭೂಮಿ ಮತ್ತು ಸಂಶೋಧನೆಯ ತ್ರಿವೇಣಿ ಸಂಗಮ : ಕ.ವೆಂ. ರಾಜಗೋಪಾಲ
ಆಧುನಿಕ ಕನ್ನಡ ಸಾಹಿತ್ಯದ ಚರಿತ್ರೆಯನ್ನು ಅವಲೋಕಿಸಿದಾಗ, ಯಾವುದೇ ಒಂದು ನಿರ್ದಿಷ್ಟ ಪಂಥದ ಚೌಕಟ್ಟಿಗೆ ಸಿಲುಕದೆ, ಆದರೆ ಎಲ್ಲಾ ಪ್ರಮುಖ ಸಾಹಿತ್ಯಕ ಚಳವಳಿಗಳೊಡನೆ ಸಕ್ರಿಯವಾಗಿ ಸಂವಾದ ನಡೆಸಿದ ವಿಶಿಷ್ಟ ಮತ್ತು ನಿಷ್ಠುರ ವ್ಯಕ್ತಿತ್ವವಾಗಿ ಪ್ರೊ. ಕ.ವೆಂ. ರಾಜಗೋಪಾಲ (ಕ.ವೆಂ.) ಎದ್ದು ಕಾಣುತ್ತಾರೆ. ನವೋದಯದ ರಮ್ಯತೆ, ನವ್ಯದ ಬೌದ್ಧಿಕ ತೀವ್ರತೆ ಮತ್ತು ಪ್ರಗತಿಪರ ಚಳವಳಿಯ ಸಾಮಾಜಿಕ ಕಳಕಳಿ - ಈ ಮೂರರ ಅಪರೂಪದ ಸಂಗಮವಾಗಿದ್ದ ಕ.ವೆಂ. ಅವರ ಜನ್ಮ ಶತಮಾನೋತ್ಸವದ ವರ್ಷವಿದು (1924-2024). ಕೇವಲ ಕೃತಿಗಳನ್ನು ರಚಿಸಿ ಸುಮ್ಮನಾಗುವ ಸಾಹಿತಿ ಅವರಾಗಿರಲಿಲ್ಲ; ಬದಲಾಗಿ ತರಗತಿಯ ಕೋಣೆಯಲ್ಲಿ ಮೇಷ್ಟ್ರಾಗಿ, ರಂಗಭೂಮಿಯಲ್ಲಿ ನಿರ್ದೇಶಕರಾಗಿ, ಕ್ಷೇತ್ರಕಾರ್ಯದಲ್ಲಿ ಸಂಶೋಧಕರಾಗಿ ಮತ್ತು ಹೊಸ ಪ್ರತಿಭೆಗಳನ್ನು ಗುರುತಿಸುವ ಮಾರ್ಗದರ್ಶಕರಾಗಿ ಅವರು ಕನ್ನಡದ ಸಾಂಸ್ಕೃತಿಕ ಲೋಕಕ್ಕೆ ನೀಡಿದ ಕೊಡುಗೆ ಅಪಾರವಾದುದು. ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನ ಕಟ್ಟೆಪುರದಲ್ಲಿ 1924ರ ನವೆಂಬರ್ 10ರಂದು ಜನಿಸಿದ ಕ.ವೆಂ., ಮೈಸೂರು ಮತ್ತು ಧಾರವಾಡದ ಬೌದ್ಧಿಕ ಪರಿಸರದಲ್ಲಿ ತಮ್ಮ ವ್ಯಕ್ತಿತ್ವವನ್ನು ರೂಪಿಸಿಕೊಂಡರು. ತೀ.ನಂ.ಶ್ರೀ. ಅವರಂತಹ ದಿಗ್ಗಜರ ಪ್ರಭಾವ ಮತ್ತು ಧಾರವಾಡದ ಬೌದ್ಧಿಕ ಪರಿಸರ ಅವರ ಸಾಹಿತ್ಯಕ ಕೃಷಿಗೆ ಭದ್ರ ಬುನಾದಿ ಹಾಕಿತು. ವಿಶೇಷವಾಗಿ ಗೋಪಾಲಕೃಷ್ಣ ಅಡಿಗರ ಒಡನಾಟವು ಅವರನ್ನು ನವ್ಯದತ್ತ ಸೆಳೆಯಿತು. ಅವರ ಮೊದಲ ಕವನ ಸಂಕಲನ ‘ಅಂಜೂರ’ಕ್ಕೆ ಸ್ವತಃ ಅಡಿಗರೇ ಮುನ್ನುಡಿ ಬರೆದಿದ್ದರು ಎಂಬುದು ಕ.ವೆಂ. ಅವರ ಕಾವ್ಯಶಕ್ತಿಗೆ ಸಿಕ್ಕ ಮೊದಲ ಮನ್ನಣೆಯಾಗಿತ್ತು. ನವ್ಯದ ಉಚ್ಛ್ರಾಯ ಕಾಲದಲ್ಲಿದ್ದರೂ, ಅವರು ಸಾಮಾಜಿಕ ಜವಾಬ್ದಾರಿಯನ್ನು ಮರೆಯಲಿಲ್ಲ. ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಅವರು ಬರೆದ ‘ಮೇ ತಿಂಗಳ ಅಬ್ಬರ’ ಕವನ ಸಂಕಲನವು ಅಂದಿನ ದಮನಕಾರಿ ವ್ಯವಸ್ಥೆಯ ವಿರುದ್ಧದ ನೇರ ಪ್ರತಿಭಟನೆಯಾಗಿತ್ತು. ಕೇವಲ ವೈಯಕ್ತಿಕ ತಲ್ಲಣಗಳಿಗೆ ಮತ್ತು ಅಂತರ್ಮುಖಿ ಧೋರಣೆಗೆ ಸೀಮಿತವಾಗಿದ್ದ ನವ್ಯ ಕಾವ್ಯವನ್ನು ಸಾಮಾಜಿಕ ಆಕ್ರೋಶದತ್ತ ಹೊರಳಿಸಿದ ಮತ್ತು ಅದಕ್ಕೆ ರಾಜಕೀಯ ಪ್ರಜ್ಞೆಯನ್ನು ಮೂಡಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ‘ನದಿಯ ಮೇಲಿನ ಗಾಳಿ’ ಮತ್ತು ‘ಈ ನೆಲದ ಕರೆ’ ಅವರ ಕಾವ್ಯದ ಪಕ್ವತೆಯನ್ನು ತೋರಿಸುವ ಇತರ ಪ್ರಮುಖ ಕೃತಿಗಳು. ಕ.ವೆಂ. ಅವರ ಸೃಜನಶೀಲತೆಯ ಮತ್ತೊಂದು ಅತ್ಯಂತ ಪ್ರಮುಖ ಮಜಲು ರಂಗಭೂಮಿ. ಅವರು ನಾಟಕವನ್ನು ಕೇವಲ ಮನರಂಜನೆಯ ಮಾಧ್ಯಮವಾಗಿ ನೋಡದೆ, ಅದೊಂದು ‘ವೈಚಾರಿಕ ಅನುಸಂಧಾನ’ದ ವೇದಿಕೆಯನ್ನಾಗಿ ಬಳಸಿಕೊಂಡರು. 12ನೇ ಶತಮಾನದ ಶರಣ ಚಳವಳಿಯನ್ನು ಕುರಿತು ಕನ್ನಡದಲ್ಲಿ ಅನೇಕ ನಾಟಕಗಳು ಬಂದಿವೆಯಾದರೂ, ಕ.ವೆಂ. ಅವರ ‘ಕಲ್ಯಾಣದ ಕೊನೆಯ ದಿನಗಳು’ ನಾಟಕವು ವಿಶಿಷ್ಟವಾಗಿ ನಿಲ್ಲುತ್ತದೆ. ಕ್ರಾಂತಿಯ ಉಚ್ಛ್ರಾಯ ಸ್ಥಿತಿಗಿಂತ ಹೆಚ್ಚಾಗಿ, ಅದು ವಿಫಲವಾದ ಬಗೆ, ಅಲ್ಲಿನ ಆಂತರಿಕ ರಾಜಕೀಯ ಸಂಘರ್ಷಗಳು, ಬಿಜ್ಜಳನ ಆಡಳಿತದ ಸಂಕೀರ್ಣತೆ ಮತ್ತು ಧಾರ್ಮಿಕ ಸಂಸ್ಥೆಗಳ ಅಧಿಕಾರ ಲಾಲಸೆಯನ್ನು ಈ ನಾಟಕವು ಎಳೆಎಳೆಯಾಗಿ ಬಿಚ್ಚಿಡುತ್ತದೆ. ಇತಿಹಾಸವನ್ನು ವರ್ತಮಾನದ ರಾಜಕೀಯ ಪ್ರಜ್ಞೆಯೊಂದಿಗೆ ನೋಡುವ ಅವರ ಮಾರ್ಕ್ಸ್ವಾದಿ ದೃಷ್ಟಿಕೋನಕ್ಕೆ ಇದೊಂದು ಉತ್ತಮ ಉದಾಹರಣೆ. ಹಾಗೆಯೇ, ಅವರ ಕೊನೆಯ ದಿನಗಳಲ್ಲಿ ರಚಿತವಾದ ‘ಭಗತ್ ಸಿಂಗ್: ಒಂದು ವಿಚಾರಣೆ’ ಮತ್ತು ‘ಗಾಂಧಿ: ವಿಚಾರಣೆ’ ನಾಟಕಗಳು, ಐತಿಹಾಸಿಕ ಮಹಾಪುರುಷರನ್ನು ಕುರುಡು ಪೂಜೆಗೆ ಒಳಪಡಿಸದೆ, ಅವರ ತತ್ವಗಳನ್ನು ತಾರ್ಕಿಕವಾಗಿ ರಂಗದ ಮೇಲೆ ‘ವಿಚಾರಣೆ’ಗೆ ಗುರಿಪಡಿಸುವ ಧೈರ್ಯವನ್ನು ಪ್ರದರ್ಶಿಸಿದವು. ಶೇಕ್ಸ್ಪಿಯರ್ನ ಸಂಕೀರ್ಣ ರಾಜಕೀಯ ನಾಟಕ ‘ಕೊರಿಯೋಲೇನಸ್’ (Coriolanus) ಅನ್ನು ಕನ್ನಡಕ್ಕೆ ತಂದ ಕೀರ್ತಿಯೂ ಇವರದೇ. ರಂಗಭೂಮಿಯ ನಿರ್ದೇಶಕರಾಗಿಯೂ ಅವರು ಅನೇಕ ಪ್ರಯೋಗಗಳನ್ನು ನಡೆಸಿದ್ದರು. ಪ್ರಾಧ್ಯಾಪಕರಾಗಿದ್ದ ಕ.ವೆಂ. ಅವರು ಸಂಶೋಧನೆಯಲ್ಲಿ ಎಂದಿಗೂ ‘ಸುರಕ್ಷಿತ’ ಅಥವಾ ಸಾಂಪ್ರದಾಯಿಕ ಹಾದಿಯನ್ನು ತುಳಿಯಲಿಲ್ಲ. ಅವರ ಸಂಶೋಧನೆಗಳು ಯಾವಾಗಲೂ ಹೊಸ ಚರ್ಚೆಗಳಿಗೆ ನಾಂದಿ ಹಾಡುತ್ತಿದ್ದವು. ‘ಬೌದ್ಧ ಮತದಲ್ಲಿ ಯಕ್ಷಕಲೆ’ ಎಂಬ ಅವರ ಕೃತಿಯು ಇದಕ್ಕೆ ಸಾಕ್ಷಿ. ಕರಾವಳಿಯ ಪ್ರಸಿದ್ಧ ಕಲೆಯಾದ ಯಕ್ಷಗಾನವು ವೈದಿಕ ಅಥವಾ ಪುರಾಣ ಮೂಲಗಳಿಂದ ಬಂದಿದ್ದಲ್ಲ, ಬದಲಾಗಿ ಅದು ಬೌದ್ಧ ಧರ್ಮದ ಆಚರಣೆ ಮತ್ತು ಯಕ್ಷಾರಾಧನೆಯಿಂದ ವಿಕಾಸಗೊಂಡಿರಬಹುದು ಎಂಬ ಅವರ ವಾದವು ಜಾನಪದ ಲೋಕದಲ್ಲಿ ಸಂಚಲನ ಮೂಡಿಸಿತ್ತು. ಇದಕ್ಕಾಗಿ ಅವರು ಕೇವಲ ಗ್ರಂಥಗಳನ್ನು ಅವಲಂಬಿಸದೆ, ಹೆಗಲಿಗೆ ಚೀಲ ಹಾಕಿಕೊಂಡು, ನೀರಿನ ಬಾಟಲಿ ಹಿಡಿದು ಬನವಾಸಿ, ಸನ್ನತಿಯಂತಹ ಐತಿಹಾಸಿಕ ಸ್ಥಳಗಳಿಗೆ ಕ್ಷೇತ್ರಕಾರ್ಯಕ್ಕಾಗಿ ಅಲೆದಾಡುತ್ತಿದ್ದರು. ಹಾಗೆಯೇ, ಆದಿಕವಿ ಪಂಪನ ಹೆಸರು ‘ಪಂಪಾ ಸರೋವರ’ದಿಂದ ಬಂದಿಲ್ಲ, ಬದಲಾಗಿ ಜೈನ ತೀರ್ಥಂಕರ ‘ಪದ್ಮಪ್ರಭ’ನಿಂದ (ಮಾಣಿಕ್ಯ ಜಿನೇಂದ್ರ) ಬಂದಿರಬಹುದು ಎಂಬ ಅವರ ಊಹೆ ಕೂಡ ಸಂಶೋಧನಾ ವಲಯದಲ್ಲಿ ಹೊಸ ಚಿಂತನೆಗೆ ದಾರಿ ಮಾಡಿಕೊಟ್ಟಿತು. ತಮ್ಮ ಬಹುಮುಖಿ ವ್ಯಕ್ತಿತ್ವದ ಮತ್ತೊಂದು ಮಜಲಾಗಿ, ಶಂಕರ್ ನಾಗ್ ಅವರ ನಿರ್ದೇಶನದ ಮೈಲಿಗಲ್ಲು ಸಿನೆಮಾ ‘ಆಕ್ಸಿಡೆಂಟ್’ನಲ್ಲಿ (1985) ಅವರು ಅಭಿನಯಿಸಿದ್ದರು. ಆ ಚಿತ್ರದಲ್ಲಿನ ಅವರ ಪಾತ್ರವು ಅವರ ನೈಜ ವ್ಯಕ್ತಿತ್ವದಂತೆಯೇ ಗಂಭೀರ ಮತ್ತು ಚಿಂತನಶೀಲವಾಗಿತ್ತು. ತಮ್ಮ ಗುರುವಾದ ಅಡಿಗರು ರಾಜಕೀಯಕ್ಕೆ ಇಳಿದಾಗ ಅದನ್ನು ನೇರವಾಗಿ ವಿರೋಧಿಸುವಷ್ಟು ಬೌದ್ಧಿಕ ಪ್ರಾಮಾಣಿಕತೆ ಅವರಲ್ಲಿತ್ತು. ನಿರ್ಭೀತ ಸಂಶೋಧನಾ ಪ್ರವೃತ್ತಿ ಮತ್ತು ಮಾನವೀಯ ಅಂತಃಕರಣದ ಸಂಗಮವಾಗಿದ್ದ ಪ್ರೊ. ಕ.ವೆಂ. ರಾಜಗೋಪಾಲ ಅವರು, ಇಂದಿನ ಕದಡಿದ ಸಾಮಾಜಿಕ ಮತ್ತು ರಾಜಕೀಯ ಸನ್ನಿವೇಶದಲ್ಲಿ ‘ವಿಚಾರಣೆ’ಯ ದೀವಿಗೆಯಾಗಿ ಸದಾ ಪ್ರಸ್ತುತರಾಗಿರುತ್ತಾರೆ. ಡಿಸೆಂಬರ್ 13ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಇವರ ಶತಮಾನೋತ್ಸವ ಕಾರ್ಯಕ್ರಮವನ್ನು ಕರ್ನಾಟಕ ನಾಟಕ ಅಕಾಡಮಿ ಮತ್ತು ಕ.ವೆಂ. ಜನ್ಮಶತಮಾನೋತ್ಸವ ಸಮಿತಿ ಹಮ್ಮಿಕೊಂಡಿದೆ. ಇದು ಅವರ ಸಾಂಸ್ಕೃತಿಕ ಕಲಾವಂತಿಕೆಗೆ ನೀಡಿದ ಮನ್ನಣೆ. ಈ ಸಂದರ್ಭದಲ್ಲಿ ಅವರ ಸಾಹಿತ್ಯ ಮತ್ತು ಚಿಂತನೆಗಳನ್ನು ಮುಂದಿನ ತಲೆಮಾರಿಗೆ ದಾಟಿಸುವುದು ಅವರಿಗೆ ಸಲ್ಲಿಸಬಹುದಾದ ನಿಜವಾದ ಗೌರವವಾಗಿದೆ.
ಸಂಕ್ರಾಂತಿ ಅಲ್ಲ, ಅಧಿವೇಶನ ಮುಗಿದ ಕೂಡಲೇ ಡಿಕೆಶಿ ಸಿಎಂ: ಇಕ್ಬಾಲ್ ಹುಸೇನ್ ಸ್ಫೋಟಕ ಮಾತು
ಅಧಿವೇಶನ ಮುಗಿದ ಕೂಡಲೇ ಡಿಕೆ ಶಿವಕುಮಾರ್ ಮುಖ್ಯಮಂತ್ರಿಯಾಗುತ್ತಾರೆ ಎಂದು ಕಾಂಗ್ರೆಸ್ ಶಾಸಕ ಇಕ್ಬಾಲ್ ಹುಸೇನ್ ಹೇಳಿದ್ದಾರೆ. ಡಿಕೆಶಿ ಅವರ ಕಠಿಣ ಪರಿಶ್ರಮಕ್ಕೆ ಫಲ ಸಿಗುತ್ತದೆ, ಹೈಕಮಾಂಡ್ ನಿರ್ದೇಶನವೇ ಅಂತಿಮ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು. 55 ಶಾಸಕರು ಊಟಕ್ಕೆ ಸೇರಿದ್ದರೂ, ರಾಜಕೀಯ ಚರ್ಚೆ ನಡೆದಿಲ್ಲ ಎಂದು ಸ್ಪಷ್ಟಪಡಿಸಿದರು.
ಶಿವಮೊಗ್ಗದಲ್ಲಿ ಮತ್ತೆ ಮಂಗನಕಾಯಿಲೆ ಭೀತಿ: ಬಿಳ್ಳೋಡಿ ಗ್ರಾಮದ ಐವರಲ್ಲಿ ಸೋಂಕು ಪತ್ತೆ
ಚಿಕ್ಕಮಗಳೂರಿನಲ್ಲೂ ಕೆಎಫ್ ಡಿ ಸೋಂಕು
RCB: ನಿರಾಸೆಯಲ್ಲಿದ್ದ ಆರ್ಸಿಬಿ ಅಭಿಮಾನಿಗಳಿಗೆ ಬಿಗ್ ಗುಡ್ ನ್ಯೂಸ್ ಕೊಟ್ಟ ಸರ್ಕಾರ!
RCB Good News: ಐಪಿಎಲ್ 2025 ಫೈನಲ್ ಪಂದ್ಯದಲ್ಲಿ ಆರ್ಸಿಬಿ ಗೆದ್ದು ಚೊಚ್ಚಲ ಟ್ರೋಫಿಯನ್ನು ಎತ್ತಿಹಿಡಿಯಿತು. ಈ ಹಿನ್ನೆಲೆ ಜೂನ್ 4ರಂದು ಬೆಂಗಳೂರಿನಲ್ಲಿ ವಿಜಯೋತ್ಸವವನ್ನು ಇಟ್ಟುಕೊಳ್ಳಲಾಗಿತ್ತು. ಆದರೆ, ಎಂ.ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಕಾಲ್ತುಳಿತ ಸಂಭವಿಸಿ 11 ಜನ ಪ್ರಾಣ ಕಳೆದುಕೊಂಡಿದ್ದರು. ಈ ಘಟನೆ ತಂಡಕ್ಕೆ ಕಪ್ಪುಚುಕ್ಕೆಯಾಗಿಬಿಟ್ಟಿತು. ಇದೇ ಕಾರಣದಿಂದ ಇಲ್ಲಿ ಯಾವುದೇ ಪಂದ್ಯಗಳನ್ನು ನಡೆಸುವಂತ್ತಿಲ್ಲ ಎಂಬ ಆದೇಶ
ಧುರಂಧರ್ ಚಿತ್ರದ ವೀಡಿಯೊದಲ್ಲಿ ಅಕ್ಷಯ್ ಖನ್ನಾಗೆ ಹೋಲಿಸಿ ಪ್ರಧಾನಿ ನರೇಂದ್ರ ಮೋದಿ ಅವರನ್ನೇ ವಿಲನ್ ಮಾಡಿದ ಬಿಜೆಪಿ!
ಬಿಜೆಪಿ ಹಂಚಿಕೊಂಡಿದ್ದ ಪೋಸ್ಟ್ ವೈರಲ್; ಸಾಮಾಜಿಕ ಜಾಲತಾಣಗಳಲ್ಲಿ ವ್ಯಂಗ್ಯ
LPG Price: ಎಲ್ಪಿಜಿ ದರದ ಬಗ್ಗೆ ಹೊಸ ಸುದ್ದಿ ಹಂಚಿಕೊಂಡ ಕೇಂದ್ರ
ಕೇಂದ್ರ ಸರ್ಕಾರವು ಎಲ್ಪಿಜಿ ದರಗಳ ಬಗ್ಗೆ ಹೊಸ ಸುದ್ದಿಯೊಂದನ್ನು ಹಂಚಿಕೊಂಡಿದೆ. ಡಿಸೆಂಬರ್ ಆರಂಭದಲ್ಲೇ ವಾಣಿಜ್ಯ ಬಳಕೆ ಸಿಲಿಂಡರ್ ದರ ಕಡಿಮೆಯಾಗಿತ್ತು. ಅಲ್ಲದೆ ಇತ್ತೀಚೆಗೆ ಭಾರತವು ಅಮೇರಿಕಾದೊಂದಿಗೆ ಎಲ್ಪಿಜಿ ಆಮದು ಮಾಡಿಕೊಳ್ಳಲು ಒಪ್ಪಂದ ಕೂಡ ಮಾಡಿಕೊಂಡಿತ್ತು. ಇದರ ನಡುವೆ ಕೇಂದ್ರವು ಎಲ್ಪಿಜಿ ದರಗಳ ಬಗ್ಗೆ ಗ್ರಾಹಕರಿಗೆ ಮಹತ್ವದ ವಿಚಾರವನ್ನು ಹಂಚಿಕೊಂಡಿದೆ. ಬೇರೆ ದೇಶಗಳಿಗೆ ಹೋಲಿಸಿದರೆ ನಮ್ಮ ದೇಶದಲ್ಲೇ ಎಲ್ಪಿಜಿ
ಉತ್ತರ ಕರ್ನಾಟಕ ಭಾಗದ ಶಾಸಕರ ಸಭೆ ಕರೆದು ಪ್ರತ್ಯೇಕ ರಾಜ್ಯದ ಬಗ್ಗೆ ಅಭಿಪ್ರಾಯ ಸಂಗ್ರಹ: ರಾಜು ಕಾಗೆ ಸ್ಫೋಟಕ ಮಾತು
ಕಾಂಗ್ರೆಸ್ ಶಾಸಕ ರಾಜು ಕಾಗೆ ಅವರು ಪ್ರತ್ಯೇಕ ಉತ್ತರ ಕರ್ನಾಟಕ ರಾಜ್ಯದ ಬೇಡಿಕೆಯನ್ನು ಪುನರುಚ್ಚರಿಸಿದ್ದಾರೆ.ಉ.ಕ ಪ್ರತ್ಯೇಕ ರಾಜ್ಯ ಆಗಬೇಕು ಎಂಬುದಕ್ಕೆ ಹಲವರು ವಿರೋಧ ವ್ಯಕ್ತಪಡಿಸಿದ್ದಾರೆ, ಆದರೆ ಇದು ನನ್ನ ವೈಯಕ್ತಿಕ ಅಭಿಪ್ರಾಯ ಹಾಗೂ ನನ್ನ ಹಕ್ಕು ಎಂದು ತಿಳಿಸಿದ್ದಾರೆ. ಅಭಿವೃದ್ಧಿ ಕೊರತೆಯಿಂದಾಗಿ ಈ ಕೂಗು ಅನಿವಾರ್ಯ ಎಂದಿರುವ ಅವರು, ಶಾಸಕರ ಸಭೆ ಕರೆದು ಅಭಿಪ್ರಾಯ ಸಂಗ್ರಹಿಸುವುದಾಗಿ ತಿಳಿಸಿದ್ದಾರೆ. ಇದೇ ವೇಳೆ ಡಿಕೆ ಶಿವಕುಮಾರ್ ಆಯೋಜಿಸಿದ್ದ ಡಿನ್ನರ್ ಗೆ ಆಹ್ವಾನ ಇರಲಿಲ್ಲ ಎಂದೂ ಅವರು ಸ್ಪಷ್ಟಪಡಿಸಿದ್ದಾರೆ.
BELTANGADY | ಅಂಗಡಿಗೆ ಬಂದ ಬಾಲಕಿಗೆ ಲೈಂಗಿಕ ಕಿರುಕುಳ: ಪೊಕ್ಸೊ ಪ್ರಕರಣ ದಾಖಲು
ಬೆಳ್ತಂಗಡಿ: ಅಂಗಡಿಗೆ ಬರುತ್ತಿದ್ದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಲ್ಲಿ ಅಂಗಡಿ ಮಾಲಕನೊಬ್ಬನ ವಿರುದ್ಧ ಬೆಳ್ತಂಗಡಿ ಠಾಣೆಯಲ್ಲಿ ಪೊಕ್ಸೊ ಪ್ರಕರಣ ದಾಖಲಾಗಿದೆ. ಟಿಕ್ಕಾ ಮುಹಮ್ಮದ್ ಗೇರುಕಟ್ಟೆ ಎಂಬಾತ ಆರೋಪಿಯಾಗಿದ್ದು, ಆತನ ಮೇಲೆ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನೊಂದ ಬಾಲಕಿ ಅಂಗಡಿಗೆ ಹೋದಾಗ ಆರೋಪಿಯು ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದ ಎಂದು ಆರೋಪಿಸಲಾಗಿದೆ. ಮೂರ್ನಾಲ್ಕು ಬಾರಿ ಇದೇ ರೀತಿ ದೌರ್ಜನ್ಯ ಎಸಗಿರುವ ಆರೋಪಿ, ಈ ಬಗ್ಗೆ ಯಾರಿಗೂ ಹೇಳದಂತೆ ಬಾಲಕಿಗೆ ಬೆದರಿಕೆ ಹಾಕಿದ್ದ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಈ ಮಧ್ಯೆ ಬಾಲಕಿಯು ಒಂದು ದಿನ ಬೀಗ ತೆರೆದಿದ್ದ ಅಂಗಡಿಯ ಒಳಗೆ ಪ್ರವೇಶಿಸಿ ಹೊರಬರುತ್ತಿದ್ದ ವೇಳೆ ದಾಖಲಾಗಿದ್ದ ಸಿಸಿಟಿವಿ ಕ್ಯಾಮರಾ ದೃಶ್ಯಾವಳಿಗಳನ್ನು ಆರೋಪಿ ಬೇರೆಯವರಿಗೆ ಕಳುಹಿಸಿ ಆಕೆ ಕಳ್ಳಿ ಎಂದು ಬಿಂಬಿಸುವ ಯತ್ನ ಮಾಡಿದ್ದಾನೆ ಎಂದೂ ದೂರಲಾಗಿದೆ. ನೊಂದ ಬಾಲಕಿ ನೀಡಿದ ದೂರಿನಂತೆ ಮುಹಮ್ಮದ್ ಗೇರುಕಟ್ಟೆ ವಿರುದ್ಧ ಪೊಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿರುವ ಬೆಳ್ತಂಗಡಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
Explained: ಐಪಿಎಲ್ ಫ್ರಾಂಚೈಸಿ ತಂಡಗಳ ಬ್ರ್ಯಾಂಡ್ವ್ಯಾಲ್ಯೂ; ಸಿಎಸ್ಕೆ ಹಿಂದಿಕ್ಕಿದ ಆರ್ಸಿಬಿ ವಿ ಲವ್ ಯು
ಐಪಿಎಲ್ ಪಂದ್ಯಾವಳಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ತಂಡಕ್ಕಿರುವಷ್ಟು ಅಭಿಮಾನಿ ವರ್ಗ ಬಹುಶಃ ಬೇರೆ ಯಾವ ತಂಡಕ್ಕೂ ಇಲ್ಲ. ಅರ್ಸಿಬಿ ಮೇಲಿನ ಅಭಿಮಾನ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇರುತ್ತದೆ. ಫ್ರಾಂಚೈಸಿ ಬ್ರ್ಯಾಂಡ್ವ್ಯಾಲ್ಯೂ ಪಟ್ಟಿಯಲ್ಲಿ ಆರ್ಸಿಬಿ ಎರಡನೇ ಸ್ಥಾನಕ್ಕೇರಿರುವುದು ಇದಕ್ಕೆ ಪುಷ್ಠಿ ಒದಗಿಸುತ್ತದೆ. ಈ ಪಟ್ಟಿಯಲ್ಲಿ ಆರ್ಸಿಬಿ ತಂಡ ಸಿಎಸ್ಕೆ ತಂಡವನ್ನು ಮೂರನೇ ಸ್ಥಾನಕ್ಕೆ ಹಿಂದಿಕ್ಕಿದೆ. ಆರ್ಸಿಬಿ ತಂಡದ ಬ್ರ್ಯಾಂಡ್ವ್ಯಾಲ್ಯೂ 105 ಮಿಲಿಯನ್ ಡಾಲರ್ ಆಗಿದೆ. ಈ ಪಟ್ಟಿಯಲ್ಲಿ ಎಂಐ ತಂಡ ಮೊದಲ ಸ್ಥಾನದಲ್ಲಿದೆ.
ಬೆಳಗಾವಿ, ಡಿಸೆಂಬರ್ 12: ವಿಶೇಷ ಚೇತನ ರಾಜ್ಯ ಸರ್ಕಾರಿ ನೌಕರರಿಗೆ ವಾಹನ ಖರೀದಿಗೆ ಪ್ರಸ್ತುತ ನೀಡಲಾಗುತ್ತಿರುವ ಸಹಾಯಧನದ ಪರಿಷ್ಕರಣೆಯನ್ನೂ ಒಳಗೊಂಡಂತೆ ಸರ್ಕಾರಿ ನೌಕರರಿಗೆ ಲಭ್ಯವಿರುವ ವಿವಿಧ ಭತ್ಯೆ ಮತ್ತು ಸೌಲಭ್ಯಗಳ ಪರಿಷ್ಕರಣೆ ಕುರಿತಂತೆ ರಾಜ್ಯ 7ನೇ ವೇತನ ಆಯೋಗವು ಸರ್ಕಾರಕ್ಕೆ ಸಲ್ಲಿಸಿರುವ ಸಂಪುಟ-1ರ ವರದಿಯಲ್ಲಿನ ಶಿಫಾರಸ್ಸುಗಳು ಪ್ರಸ್ತುತ ಸರ್ಕಾರದ ಪರಿಶೀಲನೆಯಲ್ಲಿರುತ್ತದೆ ಎಂದು ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಹೇಳಿದರು. ಪರಿಷತ್ತಿನಲ್ಲಿ
ಕಾಂಗ್ರೆಸ್ ಹಿರಿಯ ನಾಯಕ, ಮಾಜಿ ಕೇಂದ್ರ ಗೃಹ ಸಚಿವ ಶಿವರಾಜ್ ಪಾಟೀಲ್ ನಿಧನ
ಹೊಸದಿಲ್ಲಿ: ಹಿರಿಯ ಕಾಂಗ್ರೆಸ್ ನಾಯಕ ಮತ್ತು ಮಾಜಿ ಕೇಂದ್ರ ಗೃಹ ಸಚಿವ ಶಿವರಾಜ್ ಪಾಟೀಲ್ ಮಹಾರಾಷ್ಟ್ರದ ಲಾತೂರ್ನಲ್ಲಿರುವ ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ. ಶಿವರಾಜ್ ಪಾಟೀಲ್ ಅವರು ಅಲ್ಪಕಾಲದ ಅನಾರೋಗ್ಯದ ನಂತರ ಶುಕ್ರವಾರ ನಿಧನರಾದರು ಎಂದು ಅವರ ಕುಟುಂಬ ಸದಸ್ಯರು ತಿಳಿಸಿದ್ದಾರೆ. ಶಿವರಾಜ್ ಪಾಟೀಲ್ ಅವರು ಪುತ್ರ ಶೈಲೇಶ್ ಪಾಟೀಲ್, ಸೊಸೆ ಅರ್ಚನಾ ಮತ್ತು ಇಬ್ಬರು ಮೊಮ್ಮಕ್ಕಳನ್ನು ಅಗಲಿದ್ದಾರೆ. ಪಾಟೀಲ್ ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದಾರೆ. ಶಿವರಾಜ್ ಪಾಟೀಲ್ ಅವರ ನಿಧನದಿಂದ ನಾನು ದುಃಖಿತನಾಗಿದ್ದೇನೆ. ಅವರು ಅನುಭವಿ ನಾಯಕರಾಗಿದ್ದರು. ಅವರು ಶಾಸಕ, ಸಂಸದ, ಕೇಂದ್ರ ಸಚಿವ, ಮಹಾರಾಷ್ಟ್ರ ವಿಧಾನಸಭೆಯ ಸ್ಪೀಕರ್ ಹಾಗೂ ಲೋಕಸಭೆಯ ಸ್ಪೀಕರ್ ಆಗಿ ಸುದೀರ್ಘಾವಧಿಗೆ ಸಾರ್ವಜನಿಕವಾಗಿ ಸೇವೆ ಸಲ್ಲಿಸಿದ್ದಾರೆ ಎಂದು ಪ್ರಧಾನಿ ಮೋದಿ ಎಕ್ಸ್ನಲ್ಲಿ ಬರೆದುಕೊಂಡಿದ್ದಾರೆ.
106 ವರ್ಷಗಳ ಸಂಭ್ರಮದಲ್ಲಿ ಅಂಜುಮನ್ ಹಾಮಿಯೇ ಮುಸ್ಲಿಮೀನ್
ನಾಳೆಯಿಂದ ಭಟ್ಕಳದಲ್ಲಿ ‘ಅಂಜುಮನ್ ದಿನ’
IPL 2026 RCB: ಆರ್ಸಿಬಿಗೆ ಇಬ್ಬರು ಸ್ಟಾರ್ ಆಲ್ರೌಂಡರ್ಗಳ ಎಂಟ್ರಿ..
IPL 2026 RCB: ಐಪಿಎಲ್ 2025 ಫೈನಲ್ ಪಂದ್ಯದಲ್ಲಿ ಆರ್ಸಿಬಿ ಪಂಜಾಗ್ ಕಿಂಗ್ಸ್ ಮಣಿಸಿ ಚೊಚ್ಚಲ ಟ್ರೋಫಿಗೆ ಮುತ್ತಿಟ್ಟಿತು. ಇದೀಗ ಎಲ್ಲರ ಗಮನ 19ನೇ ಸೀಸನ್ನತ್ತ ನೆಟ್ಟಿದ್ದು, ಮಿನಿ ಹರಾಜಿಗೂ ಮುನ್ನ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಇಬ್ಬರು ಸ್ಟಾರ್ ಆಲ್ರೌಡರ್ಗಳನ್ನು ಕೊಂಡುಕೊಳ್ಳಲು ಭರ್ಜರಿ ಸಿದ್ಧತೆ ನಡೆಸಿದೆ. ಹಾಗಾದ್ರೆ, ಅವರು ಯಾರು ಹಾಗೂ ಈ ಹಿಂದೆ ಯಾವ
ಆಂಧ್ರಪ್ರದೇಶ| ಕಣಿವೆಗೆ ಉರುಳಿಬಿದ್ದ ಬಸ್: 9 ಮಂದಿ ಮೃತ್ಯು, 22 ಜನರಿಗೆ ಗಾಯ
ಹೊಸದಿಲ್ಲಿ: ಆಂಧ್ರಪ್ರದೇಶದಲ್ಲಿ ಬಸ್ವೊಂದು ಕಣಿವೆಗೆ ಉರುಳಿಬಿದ್ದ ಪರಿಣಾಮ ಕನಿಷ್ಠ 9 ಮಂದಿ ಮೃತಪಟ್ಟಿದ್ದು, 22 ಜನರು ಗಾಯಗೊಂಡಿದ್ದಾರೆ. ಚಿತ್ತೂರಿನಿಂದ ತೆಲಂಗಾಣಕ್ಕೆ ತೆರಳುತ್ತಿದ್ದ ಬಸ್ ಮೋತುಗುಡೆಮ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ರಸ್ತೆಗೆ ಉರುಳಿಬಿದ್ದಿದೆ. ಬಸ್ನಲ್ಲಿ ಚಾಲಕ ಮತ್ತು ಕ್ಲೀನರ್ ಸೇರಿದಂತೆ 37 ಜನರು ಪ್ರಯಾಣಿಸುತ್ತಿದ್ದರು. ದಟ್ಟ ಮಂಜು ಆವರಿಸಿದ್ದರಿಂದ ಚಾಲಕನಿಗೆ ತಿರುವು ಕಾಣಿಸದೆ ಅಪಘಾತ ಸಂಭವಿಸಿರಬಹುದು ಎಂದು ಹೇಳಲಾಗಿದೆ. ಈ ಕುರಿತು ಪೊಲೀಸ್ ವರಿಷ್ಠಾಧಿಕಾರಿ ಅಮಿತ್ ಬರ್ದಾರ್ ಮಾಹಿತಿ ನೀಡಿದ್ದು, ಚಿಂತೂರು-ಮರೇಡುಮಿಲ್ಲಿ ಘಾಟ್ ರಸ್ತೆಯ ದುರ್ಗಾ ದೇವಸ್ಥಾನದ ಬಳಿ ಬೆಳಿಗ್ಗೆ 4:30ರ ಸುಮಾರಿಗೆ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಕನಿಷ್ಠ 9 ಜನರು ಮೃತಪಟ್ಟಿದ್ದಾರೆ ಮತ್ತು 22 ಜನರು ಗಾಯಗೊಂಡಿದ್ದಾರೆ. ಗಾಯಗೊಂಡವರಲ್ಲಿ ನಾಲ್ವರ ಸ್ಥಿತಿ ಗಂಭೀರವಾಗಿದೆ ಎಂದು ಹೇಳಿದ್ದಾರೆ. ಪ್ರಯಾಣಿಕರು ಚಿತ್ತೂರಿನಿಂದ ತೆಲಂಗಾಣದ ಭದ್ರಾಚಲಂನಲ್ಲಿರುವ ಶ್ರೀ ರಾಮ ದೇವಸ್ಥಾನಕ್ಕೆ ಹೋಗುತ್ತಿದ್ದರು ಎಂದು ಅಮಿತ್ ಬರ್ದಾರ್ ಹೇಳಿದ್ದಾರೆ.
ಗುಡ್ ನ್ಯೂಸ್; ಸರ್ಕಾರದಿಂದಲೇ ಪೌರಕಾರ್ಮಿಕರಿಗೆ ವೇತನ: ಮಹತ್ವ ಮಾಹಿತಿ ನೀಡಿದ ರಹೀಂ ಖಾನ್
ಬೆಳಗಾವಿ, ಡಿಸೆಂಬರ್ 12: ರಾಜ್ಯದ ನಗರಸಭೆ, ಪುರಸಭೆ ಸೇರಿದಂತೆ ನಗರ ಸ್ಥಳೀಯ ಸಂಸ್ಥೆಗಳಲ್ಲಿನ ಪೌರಕಾರ್ಮಿಕರಿಗೆ ಸರ್ಕಾರದಿಂದಲೇ ವೇತನ ಪಾವತಿಸುವ ಕುರಿತಂತೆ ಆರ್ಥಿಕ ಇಲಾಖೆಯೊಂದಿಗೆ ಚರ್ಚಿಸಿ, ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಪೌರಾಡಳಿತ ಮತ್ತು ಹಜ್ ಸಚಿವ ರಹೀಂ ಖಾನ್ ಹೇಳಿದರು. ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲದ ಅಧಿವೇಶನದಲ್ಲಿ ಗುರುವಾರ ವಿಧಾನಸಭೆಯಲ್ಲಿ ತೇರದಾಳ ಶಾಸಕ ಸಿದ್ದು
ಕಾಸರಗೋಡು: ಡಿ.13ರಂದು ಸ್ಥಳೀಯಾಡಳಿತ ಸಂಸ್ಥೆಗಳ ಚುನಾವಣೆ ಫಲಿತಾಂಶ
ಕಾಸರಗೋಡು: ಸ್ಥಳೀಯಾಡಳಿತ ಸಂಸ್ಥೆಗಳಿಗೆ ಗುರುವಾರ ನಡೆದ ಚುನಾವಣೆಯ ಫಲಿತಾಂಶ ಡಿ.13ರಂದು ಹೊರ ಬೀಳಲಿದೆ. ಬೆಳಗ್ಗೆ 8 ಗಂಟೆಯಿಂದ ಮತ ಎಣಿಕೆ ನಡೆಯಲಿದೆ. ಮಧ್ಯಾಹ್ನದ ವೇಳೆಗೆ ಪೂರ್ಣ ಫಲಿತಾಂಶ ಹೊರ ಬೀಳಲಿದೆ. ಮತ ಎಣಿಕೆಗೆ 9 ಕೇಂದ್ರಗಳನ್ನು ಸಜ್ಜುಗೊಳಿಸಲಾಗಿದೆ. 48 ಸ್ಥಳೀಯಾಡಳಿತ ಸಂಸ್ಥೆಗಳಿಗೆ ಗುರುವಾರ ಚುನಾವಣೆ ನಡೆದಿದ್ದು, 74.89 ಶೇಕಡ ಮತದಾನವಾಗಿತ್ತು. 11,12,190 ಮತದಾರರಲ್ಲಿ 8,32,894 ಮಂದಿ ಹಕ್ಕು ಚಲಾಯಿಸಿದ್ದರು. ಈ ಪೈಕಿ 3,75,959 ಪುರುಷ ಮತದಾರರು, 4,56,933 ಮಹಿಳೆಯರು ಮತಚಲಾಯಿಸಿದ್ದಾರೆ. ಇಬ್ಬರು ಮಂಗಳಮುಖಿಯರು ತಮ್ಮ ಹಕ್ಕು ಚಲಾಯಿಸಿದ್ದಾರೆ. ಜಿಲ್ಲಾ ಪಂಚಾಯತ್ ನ 16 ಡಿವಿಜನ್, ಆರು ಬ್ಲಾಕ್ ಪಂಚಾಯತ್, ಮೂರು ನಗರಸಭೆ ಹಾಗೂ 38 ಗ್ರಾಮ ಪಂಚಾಯತ್ ಗಳಿಗೆ ಚುನಾವಣೆ ನಡೆದಿತ್ತು. ನಗರಸಭೆಯ ಮೂರು ಹಾಗೂ ಬ್ಲಾಕ್ ಪಂಚಾಯತ್ ನ ಆರು ಕೇಂದ್ರಗಳು ಸೇರಿದಂತೆ ಒಟ್ಟು 9 ಮತ ಎಣಿಕಾ ಕೇಂದ್ರಗಳನ್ನು ಸಜ್ಜುಗೊಳಿಸಲಾಗಿದೆ. ಕುಂಬಳೆ ಸರಕಾರಿ ಹಯರ್ ಸೆಕೆಂಡರಿ ಶಾಲೆ, ಕಾಸರಗೋಡು ಸರಕಾರಿ ಕಾಲೇಜು, ಬೋವಿಕ್ಕಾನ ಹಯರ್ ಸೆಕೆಂಡರಿ ಶಾಲೆ, ಕಾಞಂಗಾಡ್ ದುರ್ಗಾ ಹಯರ್ ಸೆಕೆಂಡರಿ ಶಾಲೆ, ನೀಲೇಶ್ವರ ರಾಜಾಸ್ ಹಯರ್ ಸೆಕೆಂಡರಿ ಶಾಲೆ, ಪಡನ್ನಕ್ಕಾಡ್ ನೆಹರೂ ಕಾಲೇಜು, ಪರಪ್ಪ ಜಿ.ಎಚ್.ಎಸ್. ಶಾಲೆ, ಹೊಸದುರ್ಗ ಹಯರ್ ಸೆಕೆಂಡರಿ ಶಾಲೆ ಯಲ್ಲಿ ಎಣಿಕೆ ನಡೆಯಲಿದೆ. ಮತ ಯಂತ್ರಗಳನ್ನು ಪೊಲೀಸ್ ಬಂದೋ ಬಸ್ತ್ ನಲ್ಲಿ ಎಣಿಕಾ ಕೇಂದ್ರಗಳಲ್ಲಿಡಲಾಗಿದೆ. ಕಳೆದ ಬಾರಿ ಕಾಸರಗೋಡು ಜಿಲ್ಲಾ ಪಂಚಾಯತ್ ಎಲ್ ಡಿ ಎಫ್ ತೆಕ್ಕೆಯಲ್ಲಿತ್ತು. ಯು ಡಿ ಎಫ್ ಮತ್ತು ಎಲ್ ಡಿ ಎಫ್ ತಲಾ 7 ಸ್ಥಾನ ಪಡೆದ ಹಿನ್ನಲೆಯಲ್ಲಿ ಪಕ್ಷೇತರರ ಸದಸ್ಯನ ಬೆಂಬಲದಿಂದ ಎಲ್ ಡಿ ಎಫ್ ಅಧಿಕಾರಕ್ಕೆ ಬಂದಿತ್ತು. ಬಿಜೆಪಿ ಎರಡು ಸ್ಥಾನ ಪಡೆದಿತ್ತು. ಕಳೆದ ಬಾರಿ 17 ಸ್ಥಾನಗಳಿತ್ತು. ಈ ಬಾರಿ 18 ಸ್ಥಾನಗಳಿದ್ದು, ಎಲ್ಲಾ ಕ್ಷೇತ್ರಗಳಲ್ಲೂ ತ್ರಿಕೋನ ಸ್ಪರ್ಧೆ ಕಂಡುಬಂದಿದೆ. ಬ್ಲಾಕ್, ಗ್ರಾಮ ಪಂಚಾಯತ್ ಹಾಗೂ ನಗರಸಭೆಗಳಲ್ಲಿ ಎಲ್ ಡಿ ಎಫ್ ಕಳೆದ ಬಾರೀ ಮೇಲುಗೈ ಸಾಧಿಸಿ ಅಧಿಕಾರಕ್ಕೆ ಬಂದಿತ್ತು. ಈ ಬಾರೀ ಅದಿಕಾರ ಹಿಡಿಯಲು ಎಲ್ ಡಿ ಎಫ್, ಯುಡಿಎಫ್ ಅಲ್ಲದೆ ಬಿಜೆಪಿಯೂ ಪೈಪೋಟಿ ನಡೆಸಿದೆ. ಇದರಿಂದ ನಾಳಿನ ಫಲಿತಾಂಶ ಕುತೂಹಲ ಕೆರಳಿಸಿದೆ.
ಚಿನ್ನದ ಬೆಲೆ ಗಗನಕ್ಕೆ ಜಿಗಿದಿದೆ. ಇಂದು ಒಂದೇ ದಿನ ಭಾರಿ ಜಿಗಿತವಾಗಿದ್ದು, ಈ ವರ್ಷದ ದಾಖಲೆ ಬೆಲೆ ರೆಕಾರ್ಡ್ ಆಗಿದೆ. ಚಿನ್ನದ ಬೆಲೆ ಜನಸಾಮಾನ್ಯರ ಕೈಗೆ ನಿಲುಕದಷ್ಟು ಹೆಚ್ಚಳ ಕಂಡಿದೆ. ಗೋಲ್ಡ್ ಡಿಮ್ಯಾಂಡ್, ಹಾಗೂ ಹೂಡಿಕೆ ಹೆಚ್ಚಳದಿಂದ ಬೆಲೆ ಏರಿಕೆ ಆಗಿದೆ.
ಕಾರ್ತಿಕ ದೀಪಕ್ಕೆ ಜಡ್ಜ್ ಅನುಮತಿ : ವಾಗ್ದದಂಡನೆಗೆ ರಾಜ್ಯದ 3 ಸಂಸದರ ಸಹಿ - ಬಿಜೆಪಿಯಿಂದ ಹೆಸರು ಬಹಿರಂಗ
Impeachment Against Madras Justice : ಮದ್ರಾಸ್ ಹೈಕೋರ್ಟಿನ ಮಧುರೈ ಬೆಂಚ್ ನ್ಯಾಯಮೂರ್ತಿ ಅವರನ್ನು ಮಹಾಭಿಯೋಗಕ್ಕೆ ಒಳಪಡಿಸಬೇಕು ಎಂದು ವಿರೋಧ ಪಕ್ಷಗಳು, ಲೋಕಸಭೆಯ ಸ್ಪೀಕರ್ ಓಂ ಬಿರ್ಲಾಗೆ ನೂರಕ್ಕೂ ಹೆಚ್ಚು ಸಂಸದರ ಸಹಿ ಇರುವ ಮನವಿಯನ್ನು ಸಲ್ಲಿಸಿದ್ದರು. ಆ ಮನವಿಗೆ ರಾಜ್ಯದ ಮೂವರು ಸಂಸದರು ಸಹಿ ಹಾಕಿದ್ದಾರೆ ಎಂದು ಬಿಜೆಪಿ ದೂರಿದೆ.
ಬ್ರಿಸ್ಟಲ್ ಮ್ಯೂಸಿಯಂನಿಂದ ಭಾರತೀಯ ಕಲಾಕೃತಿ ಸೇರಿದಂತೆ 600ಕ್ಕೂ ಹೆಚ್ಚು ಅಪರೂಪದ ವಸ್ತುಗಳ ಕಳ್ಳತನ!
ಊರೆಲ್ಲಾ ಕೊಳ್ಳೆ ಹೊಡೆದ ಮೇಲೆ ಕೋಟೆ ಬಾಗಿಲು ಹಾಕಿದಂತೆ, ಯುಕೆಯ ಬ್ರಿಸ್ಟಲ್ನಲ್ಲಿರುವ ಐತಿಹಾಸಿಕ ವಸ್ತುಸಂಗ್ರಹಲಾಯದಲ್ಲಿ ಕಳ್ಳತನ ನಡೆದು ಎರಡು ತಿಂಗಳುಗಳ ಬಳಿಕ, ಪೊಲೀಸರು ಕಳ್ಳತನದ ಮಾಹಿತಿಯನ್ನು ಸಾರ್ವಜನಿಕಗೊಳಿಸಿದ್ದಾರೆ. ಕಳೆದ ಸೆಪ್ಟೆಂಬರ್ 25ರಂದು ತಡರಾತ್ರಿ ಮ್ಯೂಸಿಯಂ ಹೊಕ್ಕ ನಾಲ್ವರು ಖದೀಮರು, ಭಾರತೀಯ ಕಲಾಕೃತಿಗಳೂ ಸೇರಿದಂತೆ ಒಟ್ಟು 600ಕ್ಕೂ ಹೆಚ್ಚು ಅಪರೂಪದ ವಸ್ತುಗಳನ್ನು ಕದ್ದಿದ್ದಾರೆ. ಕಳ್ಳತನದಲ್ಲಿ ನಾಲ್ವರು ದುಷ್ಟರು ಭಾಗಿಯಾಗಿರುವುದು ಮ್ಯೂಸಿಯಂನ ಸಿಸಿಟಿವಿ ದೃಶ್ಯಾವಳಿಯಿಂದ ಸಾಬೀತಾಗಿದೆ. ಈ ಕುರಿತು ಇಲ್ಲಿದೆ ಹೆಚ್ಚಿನ ಮಾಹಿತಿ.
ಚಿತ್ರ ವಿಮರ್ಶಕರ ವಿರುದ್ಧ ಟೀಕೆ; ಚರ್ಚೆಗೆ ಗ್ರಾಸವಾದ ದುರಂಧರ
ಹೊಸದಿಲ್ಲಿ: ಇತ್ತೀಚೆಗೆ ಬಿಡುಗಡೆಯಾದ ಆದಿತ್ಯ ಧರ್ ಅವರ ಸಿನಿಮಾ 'ದುರಂಧರ' ಚಿತ್ರ ವಿಮರ್ಶಕರ ವಿರುದ್ಧದ ಟೀಕೆಯಿಂದಾಗಿ ಸುದ್ದಿಯಲ್ಲಿದೆ. ರಣವೀರ್ ಸಿಂಗ್ ಪಾಕಿಸ್ತಾನದಲ್ಲಿ ನಿಯೋಜಿಸಿರುವ ಭಾರತೀಯ ಗೂಢಚಾರಿಯಾಗಿ ಕಾಣಿಸಿಕೊಂಡಿರುವ ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಏತನ್ಮಧ್ಯೆ ಚಿತ್ರದಲ್ಲಿ ಬಿಂಬಿತವಾಗಿರುವ ತೀವ್ರ ಹಿಂಸೆ ಕೂಡಾ ಇದೀಗ ಪ್ರಧಾನ ಅಂಶವಾಗಿದ್ದು, ರಾಜಕೀಯ ಒಲವಿನ ಕಾರಣದಿಂದ ಗುರಿಯಾಗಿದೆ. ಖ್ಯಾತ ಚಿತ್ರ ವಿಮರ್ಶಕರಾದ ಸುಚಿತ್ರಾ ತ್ಯಾಗಿ ಹಾಗೂ ಅನುಪಮಾ ಚೋಪ್ರಾರಂಥವರ ವಿರುದ್ಧ ಆನ್ಲೈನ್ ನಲ್ಲಿ ದ್ವೇಷ ಪ್ರತಿಕ್ರಿಯೆಗಳು ವ್ಯಕ್ತವಾಗತ್ತಿವೆ. ಇದರಿಂದಾಗಿ ಚೋಪ್ರಾ ಅವರ ವಿಮರ್ಶೆಯನ್ನು 'ದ ಹಾಲಿವುಡ್ ರಿಪೋರ್ಟರ್ ಇಂಡಿಯಾ' ಯೂಟ್ಯೂಬ್ ಚಾನಲ್ ನಿಂದ ಕಿತ್ತುಹಾಕಲಾಗಿದೆ. ಇದೀಗ ಭಾರತೀಯ ಚಿತ್ರ ವಿಮರ್ಶಕರ ಗಿಲ್ಡ್ (ಎಫ್ಸಿಜಿ) ವಿಮರ್ಶಕ ವಿರುದ್ಧದ ದಾಳಿಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದೆ. ದುರಂಧರ್ ಚಿತ್ರ ವಿಮರ್ಶಕರ ವಿರುದ್ಧದ ಗುರಿನಿರ್ದೇಶಿತ ದಾಳಿ, ಕಿರುಕುಳ ಮತ್ತು ದ್ವೇಷವನ್ನು ತೀವ್ರವಾಗಿ ಖಂಡಿಸಿದೆ. ಅಭಿಪ್ರಾಯ ಬೇಧ ಕ್ರಮೇಣ ಸಂಯೋಜಿತ ನಿಂದನೆ, ವೈಯಕ್ತಿಕ ಟೀಕೆಯಾಗಿ ಮಾರ್ಪಟ್ಟಿದೆ. ಜತೆಗೆ ವಿಮರ್ಶಕರ ವೃತ್ತಿಪರ ಬದ್ಧತೆಯನ್ನು ಹಾಳುಮಾಡುವ ಪ್ರಯತ್ನ ನಡೆದಿದೆ ಎಂದು ಎಕ್ಸ್ ಮತ್ತು ಇನ್ಸ್ಟಾಗ್ರಾಂಗಳಲ್ಲಿ ಬಿಡುಗಡೆ ಮಾಡಲಾದ ಹೇಳಿಕೆಯಲ್ಲಿ ಟೀಕಿಸಲಾಗಿದೆ. ಎಫ್ಸಿಜಿ2018ರ ಏಪ್ರಿಲ್ ನಲ್ಲಿ ಆರಂಭವಾಗಿದ್ದು, ಪ್ರಸ್ತತ 13 ನಗರಗಳಲ್ಲಿ 57 ಸದಸ್ಯರನ್ನು ಹೊಂದಿದೆ. ಮುದ್ರಣ ಮಾಧ್ಯಮ, ಡಿಜಿಟಲ್ ಪ್ಲಾಟ್ಫಾರಂ ಹಾಗೂ ರೇಡಿಯೊದಲ್ಲಿ ಚಿತ್ರ ವಿಮರ್ಶೆ ಮಾಡುವ ಮಂದಿ ಇದರ ಸದಸ್ಯರಾಗಿದ್ದಾರೆ.
ಅಂತಾರಾಷ್ಟ್ರೀಯ ಸಂಸ್ಥೆಗಳು ಪ್ರಕಟಿಸುವ ವಾಯು ಗುಣಮಟ್ಟದ ಶ್ರೇಯಾಂಕಗಳಿಗೆ ಅಧಿಕೃತ ಮಾನ್ಯತೆ ಇಲ್ಲ: ಕೇಂದ್ರ ಸ್ಪಷ್ಟನೆ
ಭಾರತದ ವಾಯು ಗುಣಮಟ್ಟದ ಮಾನದಂಡಗಳಿಗೆ ಅಂತಾರಾಷ್ಟ್ರೀಯ ಶ್ರೇಯಾಂಕಗಳಿಗೆ ಅಧಿಕೃತ ಮಾನ್ಯತೆ ಇಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. ವಿಶ್ವ ಆರೋಗ್ಯ ಸಂಸ್ಥೆಯ ಮಾರ್ಗಸೂಚಿಗಳು ಕೇವಲ ಸಲಹೆಗಳಾಗಿದ್ದು, ಭಾರತಕ್ಕೆ ಕಡ್ಡಾಯವಲ್ಲ. ದೇಶವು ತನ್ನದೇ ಆದ ರಾಷ್ಟ್ರೀಯ ಮಾನದಂಡಗಳನ್ನು ರೂಪಿಸಿಕೊಂಡಿದ್ದು, ವಾರ್ಷಿಕ 'ಸ್ವಚ್ಛ ವಾಯು ಸರ್ವೇಕ್ಷಣ' ಮೂಲಕ ವಾಯು ಗುಣಮಟ್ಟವನ್ನು ಮೌಲ್ಯಮಾಪನ ಮಾಡುತ್ತದೆ.
ಅಮೆರಿಕಾಗೆ ಹೆರಿಗೆ ಸಮಯದಲ್ಲಿ ಪ್ರವಾಸಕ್ಕೆ ತೆರಳಿ ಮಗುವಿಗೆ ಪೌರತ್ವ ಗಿಟ್ಟಿಸಿಕೊಳ್ಳುವ ತಂತ್ರಗಳ ವಿರುದ್ಧ ಟ್ರಂಪ್ ಆಡಳಿತ ಕಠಿಣ ಕ್ರಮಕ್ಕೆ ಮುಂದಾಗಿದೆ. ಅರ್ಜಿದಾರರು ಗರ್ಭಿಣಿಯಾಗಿದ್ದು ಪ್ರವಾಸಿ ವೀಸಾಗಾಗಿ ಅರ್ಜಿಸಲ್ಲಿಸುವಾಗೇನಾದರೂ ಅಮೆಕಾದಲ್ಲಿ ಮಗುವಿಗೆ ಜನ್ಮ ನೀಡುವ ಪುರಾವೆಗಳು ಅಥವಾ ಅಂತಹ ಉದ್ದೇಶ ಕಂಡು ಬಂದಲ್ಲಿ ಅರ್ಜಿ ತಿರಸ್ಕರಿಸಲಾಗುವುದು ಎಂದು ಭಾರತದಲ್ಲಿನ ಅಮೆರಿಕಾ ರಾಯಭಾರ ಕಚೇರಿ ಎಚ್ಚರಿಕೆ ನೀಡಿದೆ. ಈ ಮೂಲಕ ಅಮೆರಿಕಾದ ವೀಸಾ ವ್ಯವಸ್ಥೆಯನ್ನು ದುರುಪಯೋಗಪಡಿಸಿಕೊಳ್ಳುವವರ ವಿರುದ್ದ ನಿರ್ಬಂಧ ಹೇರುತ್ತಿದೆ.
ಬೆಳಗಾವಿ ಅಧಿವೇಶನದಲ್ಲಿ ನಾಯಕತ್ವ ಗೊಂದಲ ತಣ್ಣಗಾಗುವ ಬದಲು ಬೂದಿಮುಚ್ಚಿದ ಕೆಂಡದಂತಿದೆ. ಡಿಸಿಎಂ ಡಿಕೆ ಶಿವಕುಮಾರ್ ಅವರು ಆಪ್ತ ಶಾಸಕರಿಗೆ ಪ್ರತ್ಯೇಕ ಡಿನ್ನರ್ ಮೀಟಿಂಗ್ ಹಮ್ಮಿಕೊಂಡಿದ್ದು, ನಾಯಕತ್ವ ಬದಲಾವಣೆ ಬಗ್ಗೆ ಗೊಂದಲ ಮುಂದುವರೆದಿದೆ. ಯತೀಂದ್ರ ಸಿದ್ದರಾಮಯ್ಯ ಅವರ ಹೇಳಿಕೆಗೆ ಡಿಕೆಶಿ ಬಣ ಪ್ರತ್ಯುತ್ತರ ನೀಡಿದೆ.
ದಕ್ಷಿಣ ಆಫ್ರಿಕಾ ವಿರುದ್ಧ ಟಿ20 ಸೋಲು: ಟೀಮ್ ಇಂಡಿಯಾ ಫಾರ್ಮ್ ಬಗ್ಗೆ ಕಳವಳ
ಹೊಸದಿಲ್ಲಿ: ಮುಲ್ಲನ್ಪುರದಲ್ಲಿ ಗುರುವಾರ ರಾತ್ರಿ ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಪಂದ್ಯದಲ್ಲಿ ಭಾರತ 51 ರನ್ ಗಳ ಸೋಲು ಅನುಭವಿಸಿದ ಬೆನ್ನಲ್ಲೇ ಶುಭಮನ್ ಗಿಲ್, ಸೂರ್ಯಕುಮಾರ್ ಯಾದವ್ ಅವರ ಫಾರ್ಮ್ ಬಗ್ಗೆ ಪ್ರಶ್ನೆಗಳು ಎದ್ದಿವೆ. ಜತೆಗೆ ಭಾರತದ ಬೌಲಿಂಗ್ ಶಿಸ್ತಿನ ಬಗ್ಗೆಯೂ ಟೀಕೆಗಳು ಕೇಳಿಬರುತ್ತಿವೆ. ಮಾಜಿ ಆಲ್ರೌಂಡರ್ ಇರ್ಫಾನ್ ಪಠಾಣ್ ಅವರು ಜಾಲತಾಣಗಳಲ್ಲಿ ಹೆಚ್ಚುತ್ತಿರುವ ಆತಂಕಕಾರಿ ಅಭಿಪ್ರಾಯಗಳ ಬಗ್ಗೆ ಎಕ್ಸ್ ಪೋಸ್ಟ್ ನಲ್ಲಿ ಪ್ರತಿಕ್ರಿಯಿಸಿದ್ದಾರೆ. ಶುಭಮನ್ ಗಿಲ್ & ಸೂರ್ಯಕುಮಾರ್ ಅವರ ಫಾರ್ಮ್? ಇಂದಿನ ಬೌಲಿಂಗ್ ನಲ್ಲಿ 13 ಫುಲ್ಟಾಸ್ ಗಳು. ಇದನ್ನು ಹೇಗೆ ಸಮರ್ಥಿಸುತ್ತೀರಿ? ಈ ಪ್ರಶ್ನೆಗಳಿಗೆ ಟೀಮ್ ಇಂಡಿಯಾ ಉತ್ತರಿಸಬೇಕಿದೆ. ಧನಾತ್ಮಕ ಪರಿಣಾಮದೊಂದಿಗೆ ಅವರು ಉತ್ತರಿಸಲಿ ಎಂದು ಕುಟುಕಿದ್ದಾರೆ. ಬ್ಯಾಟಿಂಗ್ ಪಿಚ್ ನಲ್ಲಿ ಗಿಲ್ ಹಾಗೂ ಯಾದವ್ ಮತ್ತೆ ನಿರಾಶಾದಾಯಕ ಪ್ರದರ್ಶನ ತೋರಿದ್ದಾರೆ. ದಕ್ಷಿಣ ಆಫ್ರಿಕಾ ಪರ ಕ್ವಿಂಟನ್ ಡಿಕಾಕ್ ಕೇವಲ 46 ಎಸೆತಗಳಲ್ಲಿ 90 ರನ್ ಸಿಡಿಸಿ 4 ವಿಕೆಟ್ ನಷ್ಟಕ್ಕೆ 213 ರನ್ ಕಲೆ ಹಾಕಲು ಸಾಧ್ಯವಾಯಿತು. ಭಾರತದ ಅಗ್ರಕ್ರಮಾಂಕದ ಕುಸಿತ ಅಭಿಷೇಕ್ ಶರ್ಮಾ (14) ಅವರನ್ನು ಕಳೆದುಕೊಂಡಲ್ಲಿಂದ ಆರಂಭವಾಯಿತು. ಮೊದಲ ಐದು ಓವರ್ ನಲ್ಲೇ ಗಿಲ್ ಹಾಗೂ ಯಾದವ್ ನಿರ್ಗಮಿಸಿದರು. ಅಭಿಮಾನಿಗಳು ಗಿಲ್ ಅವರಿಂದ ಉತ್ತಮ ಪ್ರದರ್ಶನ ನಿರೀಕ್ಷಿಸಿದ್ದರು. ಆದರೆ ಲುಂಗಿ ಗಿಡಿಯವರ ಮೊದಲ ಎಸೆತಕ್ಕೇ ವಿಕೆಟ್ ಒಪ್ಪಿಸಿದರು.
Karnataka Dams Water Level: ರಾಜ್ಯದ ಪ್ರಮುಖ ಜಲಾಶಯಗಳ ನೀರಿನ ಮಟ್ಟ: ಡಿಸೆಂಬರ್ 12ರ ಅಂಕಿಅಂಶಗಳು
Karnataka Reservoirs Water Level: ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಶೀತಗಾಳಿ ಮುಂದುವರೆದಿದೆ. ಈ ನಡುವೆಯೇ ಕೆಲವೇ ಕೆಲವೆಡೆ ಮಾತ್ರ ತುಂತುರು ಮಳೆಯಾಗುತ್ತಿದೆ. ಈಗಾಗಲೇ ಮುಂಗಾರು ಮಳೆ ವೇಳೆ ಬಹುತೇಕ ಪ್ರಮುಖ ಜಲಾಶಯಗಳು ಭರ್ತಿಯಾಗಿವೆ. ಹಾಗಾದ್ರೆ, ಇಂದು (ಡಿಸೆಂಬರ್ 12) ಬೆಂಗಳೂರು, ಮೈಸೂರು, ಮಂಡ್ಯ ಜಿಲ್ಲೆಗಳ ಜೀವನಾಡಿ ಕೃಷ್ಣರಾಜಸಾಗರ (ಕೆಆರ್ಎಸ್) ಸೇರಿದಂತೆ ಉಳಿದ ಪ್ರಮುಖ ಡ್ಯಾಂಗಳ ನೀರಿನ ಮಟ್ಟ
ಅಸಮಾನತೆಯ ಕಂದರದೊಳಗೆ ಭಾರತದ ಅಭಿವೃದ್ಧಿಯ ಕನಸು
ತನ್ನೊಳಗಿನ ಅಸಮಾನತೆಯ ಕಾರಣಕ್ಕಾಗಿ ಭಾರತ ಮತ್ತೆ ಸುದ್ದಿ ಮಾಡುತ್ತಿದೆ. ಬುಧವಾರ ಬಿಡುಗಡೆಗೊಂಡ 2026ರ ವಿಶ್ವ ಅಸಮಾನತೆ ವರದಿಯ ಪ್ರಕಾರ, ಭಾರತದ ಜನಸಂಖ್ಯೆಯ ಶೇ. 1ರಷ್ಟು ಜನರು ದೇಶದ ಶೇ. 40ರಷ್ಟು ಸಂಪತ್ತನ್ನು ಕೈವಶ ಮಾಡಿಕೊಂಡಿದ್ದಾರೆ. ಭಾರತವು ವಿಶ್ವದಲ್ಲೇ ಅತಿ ಹೆಚ್ಚಿನ ಅಸಮಾನತೆಯನ್ನು ಹೊಂದಿರುವ ದೇಶವೆಂದು ವರದಿ ಹೇಳುತ್ತಿದೆ. ಭಾರತವು ಆರ್ಥಿಕವಾಗಿ ಸದೃಢವಾಗುತ್ತಿದೆ, ವಿಶ್ವದಲ್ಲೇ ನಾಲ್ಕನೇ ಶ್ರೀಮಂತ ದೇಶ ಎಂದೆಲ್ಲ ಪ್ರಧಾನಿ ಮೋದಿಯವರು ಹೇಳಿಕೆ ನೀಡುತ್ತಾ ಬರುತ್ತಿದ್ದರೂ ಅಧ್ಯಯನ ವರದಿಗಳು ತೆರೆದಿಡುತ್ತಿರುವ ವಾಸ್ತವ ಮಾತ್ರ ಬೇರೆಯೇ ಆಗಿದೆ. ಅದಾನಿ, ಅಂಬಾನಿಗಳ ಕಡೆಗೆ ಬೆರಳು ತೋರಿಸಿ ಈ ದೇಶದ ಆರ್ಥಿಕತೆಯನ್ನು ವೈಭವೀಕರಿಸುವ ನಮ್ಮ ನಾಯಕರಿಗೆ ಈ ವರದಿಯ ಅಂಶಗಳು ತೀರಾ ಕಹಿಯಾಗಿವೆ. ‘ವರ್ಲ್ಡ್ ಇನ್ಇಕ್ವಾಲಿಟಿ ಲ್ಯಾಬ್’ ಪ್ರಕಟಿಸಿರುವ ಅಧ್ಯಯನ ವರದಿಯ ಪ್ರಕಾರ ಶೇ. 10ರಷ್ಟು ಅತಿ ಶ್ರೀಮಂತರು ದೇಶದ ಒಟ್ಟು ಸಂಪತ್ತಿನ ಶೇ. 65ರಷ್ಟನ್ನು ಹೊಂದಿದ್ದಾರೆ. ಇದೇ ಸಂದರ್ಭದಲ್ಲಿ ಜನಸಂಖ್ಯೆಯ ತಳಸ್ತರದ ಶೇ. 50ರಷ್ಟು ಜನರು ಕೇವಲ ಶೇ. 15ರಷ್ಟು ಆದಾಯವನ್ನು ಪಡೆಯುತ್ತಿದ್ದಾರೆ. ದೇಶದಲ್ಲಿ ಮಹಿಳಾ ಕಾರ್ಮಿಕರ ಪಾಲ್ಗೊಳ್ಳುವಿಕೆಯು ಶೇ. 15.7ರಷ್ಟಿದ್ದು ಇದು ಕಳಪೆ ಮಟ್ಟವಾಗಿದೆ. ಕಳೆದೊಂದು ದಶಕದಲ್ಲಿ ಮಹಿಳಾ ಕಾರ್ಮಿಕರ ಪಾಲ್ಗೊಳ್ಳುವಿಕೆಯಲ್ಲಿ ಯಾವುದೇ ಹೆಚ್ಚಳ ಕಂಡು ಬಂದಿಲ್ಲ ಎಂದು ವರದಿ ಹೇಳುತ್ತಿದೆ. ಇದು ಕೇವಲ ಭಾರತಕ್ಕೆ ಮಾತ್ರ ಸೀಮಿತವಲ್ಲ. ವಿಶ್ವದ 0.001ರಷ್ಟು ಶ್ರೀಮಂತರು ವಿಶ್ವ ಜನಸಂಖ್ಯೆಯ ಶೇ. 50ರಷ್ಟು ಜನರ ಒಟ್ಟು ಸಂಪತ್ತಿನ ಮೂರು ಪಟ್ಟನ್ನು ಹೊಂದಿದ್ದಾರೆ ಎಂದು ವರದಿ ಹೇಳುತ್ತಿದೆ. ಅಂದರೆ ಈ ವಿಶ್ವದಲ್ಲಿ ಬಡತನ ಎನ್ನುವುದು ಇಲ್ಲ. ಇದನ್ನು ಶ್ರೀಮಂತರಿಗಾಗಿಯೇ ಸೃಷ್ಟಿಸಲಾಗಿದೆ. ಇತ್ತೀಚೆಗೆ ಹೊರಬಿದ್ದ ಆಕ್ಸ್ಫಾಮ್ ವರದಿಯು ಈ ಅಸಮಾನತೆಯ ಭೀಕರತೆಯ ಇನ್ನಷ್ಟು ಮುಖಗಳನ್ನು ತೆರೆದಿಟ್ಟಿತ್ತು. ಭಾರತದಲ್ಲಿ 300ಕ್ಕೂ ಅಧಿಕ ಬಿಲಿಯಾಧಿಪತಿಗಳು ಇದ್ದಾರೆ. ವರ್ಷದಿಂದ ವರ್ಷಕ್ಕೆ ಇವರ ಸಂಖ್ಯೆ ಹೆಚ್ಚುತ್ತಿದೆ. ಇದೇ ಸಂದರ್ಭದಲ್ಲಿ ಇನ್ನೊಂದೆಡೆ ಭಾರತವು ಹಸಿವಿಗಾಗಿ ವಿಶ್ವದಲ್ಲೇ ನಂ. 1 ಎಂದು ಗುರುತಿಸಲ್ಪಡುತ್ತಿದೆ. ಈ ದೇಶದಲ್ಲಿ ಆರು ಕೋಟಿ ಜನರು ಪ್ರತಿ ವರ್ಷ ಆರೋಗ್ಯ ವೆಚ್ಚದ ಕಾರಣದಿಂದಾಗಿಯೇ ಬಡತನಕ್ಕೆ ತಳ್ಳಲ್ಪಡುತ್ತಿದ್ದಾರೆ. ಭಾರತದ ಅಸಮಾನತೆ ಎಷ್ಟು ಭೀಕರವಾಗಿದೆ ಎಂದರೆ ಇಲ್ಲಿನ ಪ್ರಮುಖ ಉಡುಪು ಕಂಪೆನಿಯ ಉನ್ನತ ವೇತನ ಪಡೆಯುವ ಕಾರ್ಯನಿರ್ವಾಹಕರು ಒಂದು ವರ್ಷದಲ್ಲಿ ಗಳಿಸುವ ಹಣವನ್ನು ಗ್ರಾಮೀಣ ಭಾರತದ ಕನಿಷ್ಠ ವೇತನದ ಕೆಲಸಗಾರ ಗಳಿಸಲು 941 ವರ್ಷಗಳು ಬೇಕಾಗುತ್ತದೆ. ಹಾಗೆಂದು ಇಲ್ಲಿ ಶ್ರೀಮಂತರಷ್ಟೇ ತೆರಿಗೆಯನ್ನು ಕಟ್ಟುತ್ತಾರೆ, ಬಡವರು ಶ್ರೀಮಂತರ ತೆರಿಗೆಯಿಂದ ಬದುಕುತ್ತಿದ್ದಾರೆ ಎಂದರೆ ಅದು ಸುಳ್ಳು. ಆಕ್ಸ್ ಫಾಮ್ ವರದಿಯ ಪ್ರಕಾರ, ಭಾರತದ ಜನಸಂಖ್ಯೆಯ ಶೇ. 50ರಷ್ಟು ಬಡವರ್ಗ ಅತಿ ಹೆಚ್ಚು ಪರೋಕ್ಷ ತೆರಿಗೆಯನ್ನು ಕಟ್ಟುತ್ತಿದೆ. 2021-22 ಆರ್ಥಿಕ ವರ್ಷದಲ್ಲಿ ಜಿಎಸ್ಟಿಯಿಂದ 14.83 ಲಕ್ಷ ಕೋಟಿ ರೂಪಾಯಿ ತೆರಿಗೆ ಸಂಗ್ರಹವಾಗಿದೆ. ಇದರಲ್ಲಿ ದೊಡ್ಡ ಪಾಲನ್ನು ಈ ದೇಶದ ಬಡ ಮತ್ತು ಮಧ್ಯಮ ವರ್ಗ ನೀಡಿದೆ. ದೇಶದ ಶೇ. 10ರಷ್ಟಿರುವ ಅತಿ ಶ್ರೀಮಂತರು ಜಿಎಸ್ಟಿ ರೂಪದಲ್ಲಿ ಪಾವತಿಸಿದ ತೆರಿಗೆ ಶೇ. 3ರಷ್ಟು ಮಾತ್ರ. ಭಾರತದಲ್ಲಿ ಕಾರ್ಪೊರೇಟ್ ತೆರಿಗೆಯನ್ನು ಭಾರೀ ಪ್ರಮಾಣದಲ್ಲಿ ಕಡಿಮೆ ಮಾಡಲಾಗಿದೆ ಮಾತ್ರವಲ್ಲ, ಅವರಿಗೆ ಭತ್ತೆ, ರಿಯಾಯಿತಿಗಳನ್ನು ಹೆಚ್ಚಿಸಿರುವ ಅಂಶವನ್ನು ಅಧ್ಯಯನ ವರದಿ ಬಹಿರಂಗ ಪಡಿಸಿವೆ. ಕೊರೋನ, ಲಾಕ್ಡೌನ್ ಕಾಲದಲ್ಲಿ ಸಾವಿರಾರು ಉದ್ಯಮಗಳು ಮುಚ್ಚಿದ್ದವು. ದೊಡ್ಡ ಪ್ರಮಾಣದಲ್ಲಿ ವ್ಯಾಪಾರ, ಉದ್ದಿಮೆಗಳು ನಷ್ಟ ಅನುಭವಿಸಿದವು. ಮಧ್ಯಮ ವರ್ಗ ಮತ್ತು ಬಡವರ್ಗ ಇದರ ನೇರ ಪರಿಣಾಮಗಳನ್ನು ಅನುಭವಿಸಿದವು. ಆದರೆ ಇದೇ ಸಂದರ್ಭದಲ್ಲಿ ಅದಾನಿ, ಅಂಬಾನಿಗಳು ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ರಾರಾಜಿಸುತ್ತಿದ್ದರು. ಲಾಕ್ಡೌನ್, ಕೊರೋನ ಅವರ ಮೇಲೆ ಯಾವ ಪರಿಣಾಮವನ್ನೂ ಬೀರಿರಲಿಲ್ಲ. ಲಸಿಕೆ ವ್ಯಾಪಾರದಿಂದಲೇ ಕೆಲವು ಕಾರ್ಪೊರೇಟ್ ಉದ್ಯಮಿಗಳು ತಮ್ಮ ಸಂಪತ್ತನ್ನು ಹೆಚ್ಚಿಸಿಕೊಂಡರು. ಈ ದೇಶದ ತೆರಿಗೆ ಹಣವನ್ನು ಸರಕಾರ ಲಸಿಕೆಯ ಮೇಲೆ ಸುರಿಯಿತು. ಅದರಿಂದ ದೇಶದ ಜನತೆಯ ಆರೋಗ್ಯಕ್ಕೆ ಎಷ್ಟರಮಟ್ಟಿಗೆ ಉಪಕಾರವಾಯಿತು ಎನ್ನುವುದು ಇನ್ನೂ ಸ್ಪಷ್ಟವಿಲ್ಲ. ಆದರೆ ಬೆರಳೆಣಿಕೆಯ ಕೆಲವು ಕಂಪೆನಿಗಳು ಅಪಾರ ಲಾಭ ಮಾಡಿಕೊಂಡವು. ಕೊರೋನ ಕಾಲದಲ್ಲಿ ಬಡವರು ಮತ್ತು ಶ್ರೀಮಂತರ ನಡುವಿನ ಅಂತರ ಹೆಚ್ಚಿತು. ಇದು ಕೇವಲ ಆರ್ಥಿಕ ಕ್ಷೇತ್ರದಲ್ಲಿ ಮಾತ್ರವಲ್ಲ, ಶೈಕ್ಷಣಿಕ ಕ್ಷೇತ್ರದಲ್ಲೂ ಉಳ್ಳವರು-ಇಲ್ಲದವರು ಎನ್ನುವ ವ್ಯತ್ಯಾಸ ಕಣ್ಣಿಗೆ ರಾಚುವಂತೆ ಕಾಣುತ್ತಿತ್ತು. ಉಳ್ಳವರಷ್ಟೇ ಶಿಕ್ಷಣ ಪಡೆಯಲು ಅರ್ಹರಾದರು. ಅಸಮಾನತೆ ಅಳಿಯದೆ ದೇಶದ ಆಮೂಲಾಗ್ರ ಅಭಿವೃದ್ಧಿ ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ಸಂಪತ್ತಿನ ಸಮಾನ ಹಂಚಿಕೆಗೆ ಸರಕಾರ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ. ಇಲ್ಲವಾದರೆ ಹೆಚ್ಚುತ್ತಿರುವ ಜನಸಂಖ್ಯೆಯ ಕಡೆಗೆ ಬೆರಳು ತೋರಿಸಿ, ಎಂದಿನಂತೆ ತನ್ನ ತಪ್ಪುಗಳನ್ನು ಮರೆಮಾಚಬೇಕಾಗುತ್ತದೆ. ಈ ದೇಶದ ಪ್ರಾಕೃತಿಕ ಸಂಪತ್ತಿಗೆ ಹೋಲಿಸಿದರೆ ಇಲ್ಲಿರುವ ಜನಸಂಖ್ಯೆ ಯಾವತ್ತೂ ಒಂದು ಹೊರೆಯಲ್ಲ. ಸಂಪನ್ಮೂಲವನ್ನು ಸಮಾನವಾಗಿ ಹಂಚುವ ಬಗ್ಗೆ ಸರಕಾರ ಕ್ರಮ ತೆಗೆದುಕೊಂಡರೆ ಜನಸಂಖ್ಯೆ ಭಾರತದ ಶಕ್ತಿಯಾಗಿ ಹೊರ ಹೊಮ್ಮ ಬಹುದು. ಈ ನಿಟ್ಟಿನಲ್ಲಿ ಈ ಹಿಂದೊಮ್ಮೆ ಆಕ್ಸ್ಫಾಮ್ ವರದಿಯೇ ಇದಕ್ಕೆ ಪರಿಹಾರವನ್ನೂ ಸೂಚಿಸಿತ್ತು. 2017ರಿಂದ 2021ರವರೆಗೆ ಗೌತಮ್ ಅದಾನಿ ಅವರಿಗೆ ದೊರೆತಿರುವ ವಿನಾಯಿತಿ ಮತ್ತು ನೆರವಿನ ಮೊತ್ತ 1.79 ಲಕ್ಷ ಕೋಟಿ ರೂಪಾಯಿಯಾಗುತ್ತದೆ. ಇಷ್ಟು ತೆರಿಗೆ ಹಣದಿಂದ ದೇಶದ ಪ್ರಾಥಮಿಕ ಶಾಲೆಗಳ 50 ಲಕ್ಷಕ್ಕೂ ಹೆಚ್ಚು ಶಿಕ್ಷಕರಿಗೆ ಒಂದು ವರ್ಷದವರೆಗೆ ವೇತನ ನೀಡಬಹುದಿತ್ತು. ದೇಶದ ಅತಿ ಶ್ರೀಮಂತ ಶೇ. 10 ಜನರ ಸಂಪತ್ತಿನ ಮೇಲೆ ಶೇ. 5ರಷ್ಟು ಒಂದು ಬಾರಿಯ ತೆರಿಗೆಯಿಂದ 1.37 ಲಕ್ಷ ಕೋಟಿ ರೂಪಾಯಿ ಸಂಗ್ರಹವಾಗುತ್ತದೆ. ದೇಶದ ಆರೋಗ್ಯ ಸಚಿವಾಲಯ ಮತ್ತು ಆಯುಷ್ ಬಜೆಟ್ನ್ನು ಈ ಹಣದಿಂದ ತುಂಬಬಹುದಾಗಿದೆ. ಉಳಿಕೆಯಾದ ಹಣದಿಂದ ಇನ್ನೂ ಆರು ತಿಂಗಳು ಆರೋಗ್ಯಕ್ಕಾಗಿ ಹೆಚ್ಚುವರಿ ವೆಚ್ಚ ಮಾಡಬಹುದಾಗಿದೆ. ದೇಶದ 100 ಅತಿ ಶ್ರೀಮಂತರ ಸಂಪತ್ತಿನ ಮೇಲೆ ಶೇ.2.5ರಷ್ಟು ತೆರಿಗೆ ವಿಧಿಸಿದರೆ ದೇಶದ ಸರ್ವಶಿಕ್ಷಣ ಅಭಿಯಾನಕ್ಕೆ ಅಗತ್ಯವಿರುವ ಒಂದು ವರ್ಷದ ವೆಚ್ಚವನ್ನು ಭರಿಸಬಹುದಾಗಿದೆ. ಭಾರತವೆಂದರೆ ಶೇ.1ರಷ್ಟಿರುವ ಬಿಲಿಯಾಧಿಪತಿಗಳಷ್ಟೇ ಅಲ್ಲ. ಈ ಭಾರತವನ್ನು ಕಟ್ಟಿರುವುದು ಶೇ. 50ಕ್ಕೂ ಅಧಿಕವಿರುವ ಬಡ ಮತ್ತು ಮಧ್ಯಮವರ್ಗವಾಗಿದೆ. ಅವರ ಹೆಗಲಿಗೇ ಇನ್ನಷ್ಟು ತೆರಿಗೆಗಳನ್ನು ಹೇರಿ ಅವರನ್ನು ಇನ್ನಷ್ಟು ದುರ್ಬಲಗೊಳಿಸಿ ಶೇ. 1ರಷ್ಟಿರುವ ಜನರನ್ನು ಇನ್ನಷ್ಟು ಶ್ರೀಮಂತಗೊಳಿಸುವುದನ್ನೇ ದೇಶದ ಅಭಿವೃದ್ಧಿ ಎಂದು ಭಾವಿಸುವುದನ್ನು ನಿಲ್ಲಿಸಬೇಕಾಗಿದೆ. ದೂರದೃಷ್ಟಿಯುಳ್ಳ ಅಭಿವೃದ್ಧಿಯು ಎಲ್ಲರನ್ನು ಒಳಗೊಳ್ಳುತ್ತದೆ. ಈ ನಿಟ್ಟಿನಲ್ಲಿ ಶೇ. 1ರಷ್ಟಿರುವ ಶ್ರೀಮಂತರ ಮೇಲೆ ತೆರಿಗೆ ವಿಧಿಸುವ ಮೂಲಕ ಅವರೊಳಗೆ ಶೇಖರವಾಗಿರುವ ಸಂಪತ್ತನ್ನು ಹಂಚುವ ಕೆಲಸ ಮಾಡಬೇಕು. ಅಸಮಾನತೆಯ ಅಂತರವನ್ನು ತುಂಬಿದಾಗ ಮಾತ್ರ ಭಾರತವು ಆಮೂಲಾಗ್ರ ಅಭಿವೃದ್ಧಿ ಹೊಂದಿದ ದೇಶವಾಗಿ ಭವಿಷ್ಯದಲ್ಲಿ ಹೊರಹೊಮ್ಮಲು ಸಾಧ್ಯ.

25 C