SENSEX
NIFTY
GOLD
USD/INR

Weather

17    C
... ...View News by News Source

ರಾಜ್ಯಪಾಲ ಹುದ್ದೆ ರಾಜಕೀಯ ಹುದ್ದೆ ಅಲ್ಲ: ರಾಜಾರಾಂ ತಲ್ಲೂರು ಬರಹ

ವಿವಿಧ ರಾಜ್ಯಗಳಲ್ಲಿ ರಾಜ್ಯಪಾಲರ ಅಧಿಕಾರ - ನಿರ್ಧಾರಗಳು ಭಾರೀ ಚರ್ಚೆ ಹಾಗೂ ವಿವಾದಗಳಿಗೆ ಕಾರಣವಾಗಿದೆ. ಕೇರಳ, ಪಶ್ಚಿಮ ಬಂಗಾಳ ಹಾಗೂ ತಮಿಳುನಾಡಿನಲ್ಲಿ ರಾಜ್ಯಪಾಲರ ನಿರ್ಧಾರದ ವಿಚಾರವಾಗಿ ರಾಜಕೀಯ ವಾಕ್ಸಮರವೇ ನಡೆದಿದೆ. ಇದೀಗ ಕರ್ನಾಟಕದ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರ ನಿರ್ಧಾರವೂ ಸಹ ಪರ - ವಿರೋಧ ಚರ್ಚೆಗೆ ಕಾರಣವಾಗಿದೆ. ರಾಜ್ಯಪಾಲ ಹುದ್ದೆ ರಾಜಕೀಯ ಹುದ್ದೆ ಅಲ್ಲ:

ಒನ್ ಇ೦ಡಿಯ 22 Jan 2026 9:05 am

ವನ್ಯಜೀವಿಗಳ ಮೇಲೆ ಡ್ರೋನ್‌ ನಿಗಾ ; ಅರಣ್ಯ ಇಲಾಖೆಯಿಂದ ಖರೀದಿಗೆ ಸಿದ್ಧತೆ

ಬೇಸಿಗೆಯಲ್ಲಿ ಆಹಾರಕ್ಕಾಗಿ ನಾಡಿಗೆ ಬರುವ ವನ್ಯಜೀವಿಗಳ ಮೇಲೆ ನಿಗಾ ಇಡಲು ಅರಣ್ಯ ಇಲಾಖೆ ಡ್ರೋನ್‌ಗಳನ್ನು ಬಳಸಲು ಮುಂದಾಗಿದೆ. ದೊಡ್ಡಬಳ್ಳಾಪುರ, ನೆಲಮಂಗಲದಂತಹ ಪ್ರದೇಶಗಳಲ್ಲಿ ಚಿರತೆ, ಕರಡಿಗಳ ಉಪಟಳ ಹೆಚ್ಚಾಗಿದ್ದು, ಅವುಗಳನ್ನು ಸೆರೆಹಿಡಿಯಲು ಹೆಚ್ಚಿನ ಬೋನ್‌ಗಳನ್ನು ಅಳವಡಿಸಲಾಗುತ್ತಿದೆ. ಸಿಬ್ಬಂದಿಗೆ ತರಬೇತಿ ನೀಡಿ, ಸುರಕ್ಷತಾ ಕಿಟ್‌ಗಳನ್ನು ಒದಗಿಸಲಾಗುತ್ತಿದೆ.

ವಿಜಯ ಕರ್ನಾಟಕ 22 Jan 2026 8:52 am

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಹಗರಣ ಆರೋಪಿಯಿಂದ ಅಕ್ರಮ ಪದೋನ್ನತಿಗೆ ಯತ್ನ

ಕರ್ನಾಟಕ ರಾಷ್ಟ್ರ ಸಮಿತಿಯಿಂದ ಮುಖ್ಯಮಂತ್ರಿಗೆ ದೂರು

ವಾರ್ತಾ ಭಾರತಿ 22 Jan 2026 8:43 am

ಟಿ20 ವಿಶ್ವಕಪ್ನಿಂದ ಶ್ರೇಯಸ್ ಅಯ್ಯರ್ ಹೊರಗಿಟ್ಟಿದ್ದು ಏಕೆ? ರೋಹಿತ್ ಶರ್ಮಾ ಹೇಳಿದ್ದಿಷ್ಟು...

ಮುಂಬೈ: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ರೋಹಿತ್ ಶರ್ಮಾ ತಮ್ಮ ವೃತ್ತಿಜೀವನದಲ್ಲಿ ಮೊದಲ ಬಾರಿಗೆ ಟಿ20 ವಿಶ್ವಕಪ್ ಪಂದ್ಯವನ್ನು ಮೈದಾನದಿಂದ ಹೊರಗೆ ವೀಕ್ಷಿಸಲಿದ್ದಾರೆ. ಇದನ್ನು ಅವರು “ವಿಚಿತ್ರ ಅನುಭವ” ಎಂದು ಬಣ್ಣಿಸಿದ್ದಾರೆ. ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಚುಟುಕು ಕ್ರಿಕೆಟ್‌ನಿಂದ ಹಿಂದೆ ಸರಿದಿದ್ದು, ಇದೀಗ ಕೇವಲ 50 ಓವರ್‌ಗಳ ಕ್ರಿಕೆಟ್‌ನಲ್ಲಿ ಮಾತ್ರ ಆಡುತ್ತಿದ್ದಾರೆ. ಇವರಿಬ್ಬರೂ ಟೆಸ್ಟ್ ಕ್ರಿಕೆಟ್‌ನಿಂದಲೂ ನಿವೃತ್ತರಾಗಿದ್ದಾರೆ. ಫೆಬ್ರವರಿ 7ರಂದು ಮುಂಬೈನಲ್ಲಿ ಅಮೆರಿಕ ವಿರುದ್ಧದ ಪಂದ್ಯದಿಂದ ಭಾರತ ತಂಡ ಟಿ20 ವಿಶ್ವಕಪ್‌ನಲ್ಲಿ ತನ್ನ ಅಭಿಯಾನ ಆರಂಭಿಸಲಿದೆ. ಈ ಪಂದ್ಯದಲ್ಲಿ ರೋಹಿತ್ ಶರ್ಮಾ ಭಾರತ ತಂಡದ ಭಾಗವಾಗಿರುವುದಿಲ್ಲ. ದ್ವಿಪಕ್ಷೀಯ ಸರಣಿ ತಪ್ಪಿಸಿಕೊಳ್ಳುವುದಕ್ಕಿಂತ ವಿಶ್ವಕಪ್ ತಪ್ಪಿಸಿಕೊಳ್ಳುವುದು ಹೆಚ್ಚು ನೋವು ನೀಡುತ್ತದೆ ಎಂದು ಅವರು ಜಿಯೋಹಾಟ್‌ಸ್ಟಾರ್ ಶೋದಲ್ಲಿ ಮಾತನಾಡುತ್ತ ಹೇಳಿದರು. “ಟಿ20 ವಿಶ್ವಕಪ್ ಪಂದ್ಯವನ್ನು ಮನೆಯಿಂದ ವೀಕ್ಷಿಸುವುದು ನಿಜಕ್ಕೂ ವಿಚಿತ್ರ ಅನುಭವ. ಈ ಟೂರ್ನಿ ಆರಂಭವಾದಾಗಿನಿಂದಲೂ ನಾನು ಪ್ರತಿಯೊಂದು ವಿಶ್ವಕಪ್ ತಂಡದ ಭಾಗವಾಗಿದ್ದೆ. ಈಗ ಇದು ಸಂಪೂರ್ಣ ಭಿನ್ನ ಅನುಭವ” ಎಂದು ರೋಹಿತ್ ಶರ್ಮಾ ಹೇಳಿದರು. ಡ್ರೆಸ್ಸಿಂಗ್ ರೂಮಿನಲ್ಲಿ ವಿಶ್ವಾಸ ಉಳಿಸಿಕೊಳ್ಳುವುದು ನಾಯಕತ್ವದ ಅತ್ಯಂತ ಸವಾಲಿನ ಅಂಶ ಎಂದು ಅವರು ಅಭಿಪ್ರಾಯಪಟ್ಟರು. ಕೆಲವೊಮ್ಮೆ ಕಠಿಣ ನಿರ್ಧಾರಗಳನ್ನು ಕೈಗೊಳ್ಳಲೇಬೇಕಾಗುತ್ತದೆ. ಎಲ್ಲರನ್ನೂ ಸಮಾಧಾನಪಡಿಸಲು ಸಾಧ್ಯವಿಲ್ಲ; ಆದರೆ ಆ ನಿರ್ಧಾರ ಏಕೆ ತೆಗೆದುಕೊಳ್ಳಲಾಗಿದೆ ಎಂಬುದನ್ನು ಪ್ರತಿಯೊಬ್ಬ ಆಟಗಾರಿಗೂ ಮನವರಿಕೆ ಮಾಡುವುದು ಮುಖ್ಯ ಎಂದು ಹೇಳಿದರು. ತಂಡದ ಸಮತೋಲನ ಕಾಪಾಡಿಕೊಳ್ಳುವ ಉದ್ದೇಶದಿಂದ ಏಷ್ಯಾ ಕಪ್ ಹಾಗೂ 2022ರ ಟಿ20 ವಿಶ್ವಕಪ್ ತಂಡದಿಂದ ಶ್ರೇಯಸ್ ಅಯ್ಯರ್ ಅವರನ್ನು ಹೊರಗಿಟ್ಟ ಸಂದರ್ಭವನ್ನು ಅವರು ಉದಾಹರಣೆಯಾಗಿ ಉಲ್ಲೇಖಿಸಿದರು. “ನಮಗೆ ಬೌಲಿಂಗ್‌ನಲ್ಲಿ ಹೆಚ್ಚು ಆಯ್ಕೆಗಳು ಬೇಕಾಗಿದ್ದವು. ಆ ಸಮಯದಲ್ಲಿ ನಮಗೆ ದೀಪಕ್ ಉತ್ತಮ ಆಯ್ಕೆಯಾಗಿ ಕಂಡರು. ಶ್ರೇಯಸ್‌ಗೆ ಬೇಸರವಾಗಿರಬಹುದು, ದೀಪಕ್ ಸಂತೋಷಪಟ್ಟರು. ತಂಡದ ಹಿತದೃಷ್ಟಿಯಿಂದ ಹೀಗೆ ನಿರ್ಧಾರ ಕೈಗೊಳ್ಳಬೇಕಾಗುತ್ತದೆ. ಈ ಬಗ್ಗೆ ನಾನು ಮತ್ತು ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಇಬ್ಬರೂ ಶ್ರೇಯಸ್ ಅಯ್ಯರ್ ಜೊತೆ ಮಾತನಾಡಿದ್ದೇವೆ” ಎಂದು ರೋಹಿತ್ ಶರ್ಮಾ ನೆನಪಿಸಿಕೊಂಡರು.

ವಾರ್ತಾ ಭಾರತಿ 22 Jan 2026 8:40 am

Tamil Nadu Election 2026: ಸತತ ಮಾತುಕತೆಗಳ ನಂತರ NDA ಮೈತ್ರಿಕೂಟಕ್ಕೆ ಸಿಕ್ಕ ಬಹುದೊಡ್ಡ ಬೂಸ್ಟ್

Big Plus Point to NDA Alliance : ತಮಿಳುನಾಡು ವಿಧಾನಸಭಾ ಚುನಾವಣೆಯ ಕಾವು ದಿನದಿಂದ ದಿನಕ್ಕೆ ಏರ ತೊಡಗಿದೆ. ಎಐಎಡಿಎಂಕೆ ನೇತೃತ್ವದ NDA ಮೈತ್ರಿಕೂಟಕ್ಕೆ ದೊಡ್ಡ ಪ್ಲಸ್ ಪಾಯಿಂಟ್ ಆಗಬಹುದು ಎನ್ನುವ ಲೆಕ್ಕಾಚಾರದ ಬೆಳವಣಿಗೆ ನಡೆದಿದ್ದು, ಟಿಟಿವಿ ದಿನಕರನ್ ಅವರನ್ನು ಮತ್ತೆ ಮೈತ್ರಿಕೂಟಕ್ಕೆ ಸೆಳೆಯುವ ಕೆಲಸಕ್ಕೆ ಯಶಸ್ಸು ಸಿಕ್ಕಿದೆ.

ವಿಜಯ ಕರ್ನಾಟಕ 22 Jan 2026 8:37 am

ಕಾಸರಗೋಡು ಜಿಲ್ಲೆಯಲ್ಲಿ ಪ್ರಥಮ ಸರಕಾರಿ ಇಂಜಿನಿಯರಿಂಗ್‌ ಕಾಲೇಜು ಆರಂಭಕ್ಕೆ ಅಧಿಕಾರಿಗಳ ಅಸ್ತು: ಯಾವೆಲ್ಲಾ ಕೋರ್ಸ್ ಗಳಿರಲಿವೆ?

ಕಾಸರಗೋಡು ಜಿಲ್ಲೆಯ ಶೈಕ್ಷಣಿಕ ಅಭಿವೃದ್ಧಿಗೆ ಮಹತ್ವದ ಹೆಜ್ಜೆ ಇಡಲಾಗಿದ್ದು, ಚೆರುವತ್ತೂರಿನಲ್ಲಿ ಸರಕಾರಿ ಎಂಜಿನಿಯರಿಂಗ್‌ ಕಾಲೇಜಿಗೆ ಆಡಳಿತಾನುಮತಿ ದೊರೆತಿದೆ. 2025-26ರ ಬಜೆಟ್‌ನಲ್ಲಿ ಘೋಷಿಸಲಾಗಿದ್ದ ಈ ಕಾಲೇಜು, 3.60 ಕೋಟಿ ರೂ. ಅನುದಾನದೊಂದಿಗೆ ಆರಂಭಗೊಳ್ಳಲಿದೆ. ಆರಂಭದಲ್ಲಿ ಎಲೆಕ್ಟ್ರಿಕಲ್, ಕಂಪ್ಯೂಟರ್, ಎಐ, ಡೇಟಾ ಸೈನ್ಸ್, ರೊಬೋಟಿಕ್ಸ್ ಕೋರ್ಸ್‌ಗಳು ಲಭ್ಯವಾಗಲಿವೆ. ಇದು ಜಿಲ್ಲೆಯ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣದ ಹೊಸ ದಾರಿ ತೆರೆಯಲಿದೆ.

ವಿಜಯ ಕರ್ನಾಟಕ 22 Jan 2026 8:37 am

ಬೆಂಗಳೂರು ಸೇರಿ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ದಟ್ಟ ಮಂಜು, ಭಾರೀ ಶೀತಗಾಳಿ ಮುಂದುವರೆಯುವ ಮುನ್ಸೂಚನೆ

Karnataka Weather: ರಾಜ್ಯದ ಬಹುತೇಕ ಭಾಗಗಳಲ್ಲಿ ಭಾರೀ ಶೀತಗಾಳಿ ಮುಂದುವರೆದಿದೆ. ಹಾಗೆಯೇ ಮುಂದಿನ ದಿನಗಳಲ್ಲಿ ಬೆಂಗಳೂರು ಸೇರಿ ಹಲವು ಜಿಲ್ಲೆಗಳಲ್ಲಿ ಇದೇ ರೀತಿಯ ವಾತಾವರಣ ಇರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಹಾಗಾದ್ರೆ, ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ. ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಇಂದು (ಜನವರಿ 22) ಬೆಳ್ಳಂಬೆಳಗ್ಗೆ ದಟ್ಟ ಮಂಜಿನ ಜೊತೆ ಭಾರೀ

ಒನ್ ಇ೦ಡಿಯ 22 Jan 2026 8:13 am

KIAನಲ್ಲಿ ಜೆನ್‌ ಜೀ, ಪ್ರೇರಿತ 'ಗೇಟ್‌ ಜೆಡ್‌' ಲಾಂಜ್‌; ದೇಶದ ಮೊದಲ ಸಾಮಾಜಿಕ ಲಾಂಜ್‌ನ ವಿಶೇಷತೆ ಏನು?

ಬೆಂಗಳೂರು ಏರ್ಪೋರ್ಟ್‌ ಟರ್ಮಿನಲ್ 2ರಲ್ಲಿ ಯುವಜನತೆಯನ್ನು ಆಕರ್ಷಿಸಲು ಕೆಐಎ ಮೆಗಾ ಪ್ಲ್ಯಾನ್‌ ಮಾಡಿದೆ. ಯೋಜನೆ ಪ್ರಕಾರ 'ಗೇಟ್ ಝಡ್' ಎಂಬ ವಿನೂತನ ಸೋಷಿಯಲ್ ಲಾಂಜ್ ಅನ್ನು ಶುರು ಮಾಡಿದೆ. ಇದು ದೇಶದಲ್ಲೇ ಮೊದಲ ರೀತಿಯ ಪ್ರಯೋಗವಾಗಿದೆ. ಕಲೆ, ತಂತ್ರಜ್ಞಾನ ಮತ್ತು ಸುಸ್ಥಿರ ವಿನ್ಯಾಸ ಈ ಲಾಂಜ್‌ನಲ್ಲಿ ಕಾಣಿಸುತ್ತದೆ.

ವಿಜಯ ಕರ್ನಾಟಕ 22 Jan 2026 8:10 am

Gold ಲಕ್ಕುಂಡಿ: ನಿಧಿ ನೀಡಿ ಸಂಕಷ್ಟಕ್ಕೆ ಸಿಲುಕಿದ ಕುಟುಂಬ: \ಬಡವರಿದ್ದೀವಿ ಸರ್ಕಾರ ಸಹಾಯ ಮಾಡಬೇಕು\

ಗದಗ: ಗದಗ ಜಿಲ್ಲೆಯ ಲಕ್ಕುಂಡಿ ಗ್ರಾಮದಲ್ಲಿ ಈಚೆಗೆ ನಿಧಿ / ಚಿನ್ನಭರಣ ಸಿಕ್ಕಿದೆ. ಇಲ್ಲಿನ ಗಂಗವ್ವ ರಿತ್ತಿ ಹಾಗೂ ಪುತ್ರ ಪ್ರಜ್ವಲ್ ರಿತ್ತಿ ಅವರು ಮನೆ ನಿರ್ಮಾಣಕ್ಕೆ ಅಡಿಪಾಯ ತೆಗೆಯುವ ಸಂದರ್ಭದಲ್ಲಿ ಮಡಿಕೆಯಲ್ಲಿ 460 ಗ್ರಾಂ ಚಿನ್ನದ ಆಭರಣಗಳು ಸಿಕ್ಕಿದ್ದವು. ಗದಗ ಜಿಲ್ಲೆಯ ಲಕ್ಕುಂಡಿ ಗ್ರಾಮದಲ್ಲಿ ಸಿಕ್ಕ ನಿಧಿಯನ್ನು ಸರ್ಕಾರಕ್ಕೆ ಒಪ್ಪಿಸಿದ ಈ ಕುಟುಂಬವು ಪ್ರಾಮಾಣಿಕತೆ ಮೆರೆದಿತ್ತು.

ಒನ್ ಇ೦ಡಿಯ 22 Jan 2026 8:10 am

ಅಲೆಲೆಲೆ....ವೀಳ್ಯದೆಲೆಗೆ ಬಂಗಾರದ ಬೆಲೆ; ಬೆಳೆಗಾರರು ಫುಲ್ ಖುಷ್

ಬಂಗಾರಪೇಟೆಯಲ್ಲಿ ವಿಳ್ಯದೆಲೆ ಬೆಲೆ ಗಗನಕ್ಕೇರಿದ್ದು, ಒಂದು ಕಟ್ಟು 150-200 ರೂ.ಗೆ ಮಾರಾಟವಾಗುತ್ತಿದೆ. ಡಿಸೆಂಬರ್ ನಂತರ ಬಳ್ಳಿ ಇಳಿಕೆ ಮತ್ತು ಅಧಿಕ ಮಂಜು ಬೀಳುತ್ತಿರುವ ಕಾರಣ ಇಳುವರಿ ಕಡಿಮೆಯಾಗಿ ಬೆಲೆ ಏರಿಕೆಗೆ ಕಾರಣವಾಗಿದೆ. ಇದರಿಂದ ಬೆಳೆಗಾರರು ಸಂತಸಗೊಂಡಿದ್ದರೆ, ಗ್ರಾಹಕರು ಕಂಗಾಲಾಗಿದ್ದಾರೆ.

ವಿಜಯ ಕರ್ನಾಟಕ 22 Jan 2026 8:01 am

ಕನಿಷ್ಠ ಎಸೆತಗಳಲ್ಲಿ ಗರಿಷ್ಠ ಅರ್ಧಶತಕ: ಅಭಿಷೇಕ್ ಶರ್ಮಾ ವಿಶ್ವದಾಖಲೆ

ನಾಗ್ಪುರ:  ನ್ಯೂಝಿಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಭಾರತದ ಆರಂಭಿಕ ಬ್ಯಾಟ್ಸ್ಮನ್ ಅಭಿಷೇಕ್ ಶರ್ಮಾ ಕೇವಲ 22 ಎಸೆತಗಳಲ್ಲಿ ಅರ್ಧಶತಕ ಬಾರಿಸಿ ವಿಶ್ವದಾಖಲೆ ಸ್ಥಾಪಿಸಿದ್ದಾರೆ. ಬಿರುಸಿನ ಹೊಡೆತಗಳಿಗೆ ಹೆಸರುವಾಸಿಯಾದ ಎಡಗೈ ಬ್ಯಾಟ್ಸ್ಮನ್ ಆರಂಭದಿಂದಲೇ ನ್ಯೂಝಿಲೆಂಡ್ ಬೌಲರ್‌ಗಳನ್ನು ದಂಡಿಸಿದರು. ಕೇವಲ 22 ಎಸೆತಗಳಲ್ಲಿ 4 ಬೌಂಡರಿ ಮತ್ತು 4 ಸಿಕ್ಸರ್ ಸಿಡಿಸಿದ ಶರ್ಮಾ ಈ ಮೈಲುಗಲ್ಲು ಸಾಧನೆ ಮಾಡಿದರು. ಈ ಮೂಲಕ 25 ಅಥವಾ ಅದಕ್ಕಿಂತ ಕಡಿಮೆ ಎಸೆತಗಳಲ್ಲಿ 8 ಟಿ20 ಅರ್ಧಶತಕಗಳನ್ನು ಸಾಧಿಸಿದ ವಿಶ್ವದ ಮೊದಲ ಬ್ಯಾಟ್ಸ್ಮನ್ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾದರು. ಇದಕ್ಕೂ ಮುನ್ನ ಸಹ ಆಟಗಾರ ಸೂರ್ಯಕುಮಾರ್ ಯಾದವ್, ಫಿಲ್ ಸಾಲ್ಟ್ ಮತ್ತು ಇವೀಸ್ ಲೆವಿಸ್ 25ಕ್ಕಿಂತ ಕಡಿಮೆ ಎಸೆತಗಳಲ್ಲಿ 7 ಅರ್ಧಶತಕಗಳನ್ನು ಸಾಧಿಸಿದ್ದರು. ಇದು ನ್ಯೂಝಿಲೆಂಡ್ ತಂಡದ ವಿರುದ್ಧ ಭಾರತ ಅತ್ಯಂತ ಕಡಿಮೆ ಎಸೆತಗಳಲ್ಲಿ ಗಳಿಸಿದ ಅರ್ಧಶತಕವೂ ಆಗಿದೆ. ಇದಕ್ಕೂ ಮುನ್ನ ಕೆ.ಎಲ್.ರಾಹುಲ್ ಹಾಗೂ ರೋಹಿತ್ ಶರ್ಮಾ 23 ಎಸೆತಗಳಲ್ಲಿ ಅರ್ಧಶತಕ ಗಳಿಸಿದ್ದರು.

ವಾರ್ತಾ ಭಾರತಿ 22 Jan 2026 8:00 am

ಐದು ವರ್ಷಗಳಲ್ಲಿ 65 ಐಐಟಿ ವಿದ್ಯಾರ್ಥಿಗಳ ಆತ್ಮಹತ್ಯೆ!

ಮುಂಬೈ: ಮಂಗಳವಾರ ವರದಿಯಾದ ಕಾನ್ಪುರ ಐಐಟಿ ವಿದ್ಯಾರ್ಥಿ ಆತ್ಮಹತ್ಯೆ ಪ್ರಕರಣ ದೇಶದ ಅತ್ಯುನ್ನತ ತಾಂತ್ರಿಕ ಶಿಕ್ಷಣ ಕ್ಯಾಂಪಸ್ಗಳಲ್ಲಿ ಮಾನಸಿಕ ಆರೋಗ್ಯದ ಸಮಸ್ಯೆಯ ಬಗೆಗಿನ ಚರ್ಚೆಯನ್ನು ಮತ್ತೆ ಹುಟ್ಟುಹಾಕಿದೆ. ಕಳೆದ ಐದು ವರ್ಷದ ಅಂಕಿ ಅಂಶಗಳನ್ನು ವಿಶ್ಲೇಷಿಸಿದರೆ ಪ್ರತಿ ವರ್ಷ ಸರಾಸರಿ 12-13 ಐಐಟಿ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. 2021ರ ಜನವರಿಯಿಂದ 2025ರ ಡಿಸೆಂಬರ್ ವರೆಗೆ ದೇಶದ ಐಐಟಿಗಳಲ್ಲಿ ಕನಿಷ್ಠ 65 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನುವ ಅಂಶ ಜಾಗತಿಕ ಐಐಟಿ ಹಳೆವಿದ್ಯಾರ್ಥಿಗಳ ಬೆಂಬಲ ಗುಂಪು ಕ್ರೋಢೀಕರಿಸಿದ ಅಂಕಿ ಅಂಶಗಳಿಂದ ತಿಳಿದುಬರುತ್ತದೆ. ಕಳೆದ ಎರಡು ವರ್ಷಗಳಲ್ಲಿ ಸುಮಾರು 30 ಇಂಥ ಪ್ರಕರಣಗಳು ವರದಿಯಾಗಿವೆ. ಇದು ಸಾಂಸ್ಥಿಕ ಹೊಣೆಗಾರಿಕೆ ಬಗೆಗಿನ ಆತಂಕಕ್ಕೆ ಕಾರಣವಾಗಿದೆ. ತಾಂತ್ರಿಕ ಪದವಿ, ಸ್ನಾತಕೋತ್ತರ ಪದವಿ ಅಥವಾ ಡಾಕ್ಟರೇಟ್ ವಿದ್ಯಾರ್ಥಿಗಳು ಕೂಡಾ ಆತ್ಮಹತ್ಯೆ ಮಾಡಿಕೊಂಡವರಲ್ಲಿ ಸೇರಿದ್ದಾರೆ. ಆತ್ಮಹತ್ಯೆಗೆ ಅಧಿಕಾರಿಗಳು ನೀಡುವ ಕಾರಣ ವೈಯಕ್ತಿಕ ಅಥವಾ ಶೈಕ್ಷಣಿಕ ಒತ್ತಡ. ವಿದ್ಯಾರ್ಥಿ ಸಂಘಗಳು ಮತ್ತು ಹಳೆ ವಿದ್ಯಾರ್ಥಿ ಸಂಘಗಳು ಇಂಥ ವಿವರಣೆಗಳು ಸಂಕೀರ್ಣ ವಾಸ್ತವತೆಗಳನ್ನು ಮರೆಮಾಚುತ್ತವೆ ಎಂದು ಅಭಿಪ್ರಾಯಪಡುತ್ತವೆ. ನಿರ್ದಾಕ್ಷಿಣ್ಯ ಮೌಲ್ಯಮಾಪನ, ಸ್ಪರ್ಧಾತ್ಮಕತೆ, ಏಕಾಂತ ಹಾಗೂ ಕೆಲ ಪ್ರಕರಣಗಳಲ್ಲಿ ಜಾತಿ ಅಥವಾ ಭಾಷೆ ಆಧರಿತ ಬೇರ್ಪಡಿಸುವಿಕೆಯಿಂದ ಈ ವಿಪರೀತದ ಕ್ರಮಕ್ಕೆ ವಿದ್ಯಾರ್ಥಿಗಳು ಮುಂದಾಗುತ್ತಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ. ಆದರೆ ಎಚ್ಚರಿಕೆಯ ಸಂಕೇತಗಳನ್ನು ಸಾಮಾನ್ಯವಾಗಿ ನಿರ್ಲಕ್ಷಿಸಲಾಗುತ್ತಿದೆ ಹಾಗೂ ಹಸ್ತಕ್ಷೇಪದ ವೇಳೆಗೆ ಪರಿಸ್ಥಿತಿ ಕೈಮೀರಿರುತ್ತದೆ ಎನ್ನುವುದನ್ನು ಬೋಧಕ ಸಿಬ್ಬಂದಿ ಖಾಸಗಿಯಾಗಿ ಒಪ್ಪಿಕೊಳ್ಳುತ್ತಾರೆ. ದೇಶಾದ್ಯಂತ 2023ರಲ್ಲಿ 13 ಸಾವಿರ ವಿದ್ಯಾರ್ಥಿಗಳು ಅಂದರೆ ದಿನಕ್ಕೆ 36 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಎಂದು ಎನ್ಸಿಆರ್ಬಿ ದಾಖಲೆಗಳು ಹೇಳುತ್ತವೆ. ದೇಶದ ಐಐಟಿಗಳಲ್ಲಿ ಸಂಭವಿಸಿದ ಒಟ್ಟು ಪ್ರಕರಣಗಳಲ್ಲಿ ಶೇಕಡ 30ರಷ್ಟು ಪ್ರಕರಣಗಳು ಕಾನ್ಪುರ ಐಐಟಿಯಲ್ಲೇ ವರದಿಯಾಗಿವೆ. ಸುಪ್ರೀಂಕೋರ್ಟ್ ಕೂಡಾ ಇದನ್ನು ಗಂಭೀರವಾಗಿ ಪರಿಗಣಿಸಿ, ವಿದ್ಯಾರ್ಥಿ ಆತ್ಮಹತ್ಯೆ ತಡೆಗೆ ಮತತ್ ಮಾಣಸಿಕ ಆರೋಗ್ಯ ಸಮಸ್ಯೆಗಳ ಪರಿಹಾರಕ್ಕೆ ಕಾರ್ಯಪಡೆಯನ್ನೂ ರಚಿಸಿದೆ. ಆದರೆ ಗ್ಲೋಬಲ್ ಐಐಟಿ ಅಲ್ಯುಮ್ನಿ ಸಪೋರ್ಟ್ ಗ್ರೂಪ್ ಸಂಸ್ಥಾಪಕ ಧೀರಜ್ ಸಿಂಗ್ ಅವರ ಪ್ರಕಾರ, ಆತ್ಮಹತ್ಯೆ ಪ್ರಕರಣಗಳಲ್ಲಿ ಉನ್ನತ ಮಟ್ಟದ ಅಧಿಕಾರಿಗಳನ್ನು ನೇರ ಹೊಣೆಗಾರರನ್ನಾಗಿ ಮಾಡುವುದು ಅಗತ್ಯ.

ವಾರ್ತಾ ಭಾರತಿ 22 Jan 2026 7:52 am

ಜ.30ರಿಂದ 17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ; ಯಾವ್ಯಾವ ದೇಶದ, ಎಷ್ಟು ಸಿನಿಮಾ ಪ್ರದರ್ಶನ ಇರಲಿದೆ?

ಜ. 30 ರಿಂದ ಬೆಂಗಳೂರಿನಲ್ಲಿ 17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಆರಂಭವಾಗಲಿದೆ. ಈ ಬಾರಿ ಮಹಿಳಾ ಪ್ರಧಾನ ಚಿತ್ರಗಳಿಗೆ ವಿಶೇಷ ಆದ್ಯತೆ ನೀಡಲಾಗುತ್ತಿದೆ. ಸ್ತ್ರೀ ಎಂದರೆ ಅಷ್ಟೇ ಸಾಕೆ ಎನ್ನುವು ಕಾನ್ಸೆಪ್ಟ್‌ ಮೇಲೆ 60ಕ್ಕೂ ಹೆಚ್ಚು ಮಹಿಳಾ ಪ್ರಧಾನ ಸಿನಿಮಾಗಳನ್ನು ಪ್ರದರ್ಶಿಸಲಾಗುವುದು. ದೇಶ ವಿದೇಶ ಚಿತ್ರಗಳು ಪ್ರದರ್ಶನಗೊಳ್ಳಲಿದೆ. ಕನ್ನಡದ 15 ಚಿತ್ರಗಳು ಸೇರಿದಂತೆ ಹಲವು ದೇಶಗಳ ಅತ್ಯುತ್ತಮ ಚಿತ್ರಗಳು ಪ್ರದರ್ಶನಗೊಳ್ಳಲಿವೆ. ಫೆ. 6 ರಂದು ಚಿತ್ರೋತ್ಸವ ಸಮಾರೋಪಗೊಳ್ಳಲಿದೆ ಎಂದು ಹೇಳಲಾಗುತ್ತಿದೆ.

ವಿಜಯ ಕರ್ನಾಟಕ 22 Jan 2026 7:47 am

ಬೆಂಗಳೂರಿನ ವಿಧಾನಸೌಧ ಸುತ್ತಮುತ್ತ ಅಂಬಾರಿ ಡಬಲ್‌ ಡೆಕ್ಕರ್‌ ಬಸ್‌ ಸೇವೆ; ಶುಲ್ಕವೆಷ್ಟು, ಬುಕ್ಕಿಂಗ್‌ ಮಾಡೋದು ಹೇಗೆ?

ಬೆಂಗಳೂರಿನಲ್ಲಿ ಲಂಡನ್ ಮಾದರಿಯ ಅಂಬಾರಿ ಡಬಲ್ ಡೆಕ್ಕರ್ ಬಸ್ ಸೇವೆಗೆ ಸಚಿವ ಎಚ್.ಕೆ.ಪಾಟೀಲ್ ಚಾಲನೆ ನೀಡಿದ್ದಾರೆ. ಪ್ರವಾಸೋದ್ಯಮ ಅಭಿವೃದ್ಧಿ ನಿಗಮವು ನಗರದ ಪ್ರಮುಖ ಸ್ಥಳಗಳನ್ನು ವೀಕ್ಷಿಸಲು 3 ಬಸ್‌ಗಳನ್ನು ಪರಿಚಯಿಸಿದೆ. 180 ರೂ.ಗೆ ದಿನವಿಡೀ ಪ್ರಯಾಣಿಸಬಹುದು. ಐಷಾರಾಮಿ ಆಸನಗಳು, ಮೈಕ್ ಸಿಸ್ಟಂ ಅಳವಡಿಸಲಾಗಿದೆ. ಆನ್‌ಲೈನ್ ಅಥವಾ ದೂರವಾಣಿ ಮೂಲಕ ಬುಕ್ಕಿಂಗ್ ಮಾಡಬಹುದು.

ವಿಜಯ ಕರ್ನಾಟಕ 22 Jan 2026 6:03 am

ಪ್ರಥಮ ಬಜೆಟ್‌ ಮಂಡನೆಗೆ ಬೆಂಗಳೂರಿನ 5 ನಗರ ಪಾಲಿಕೆಗಳ ಸಿದ್ಧತೆ : ಸರಕಾರದ ಅನುದಾನ ಆಧರಿಸಿ 2026-27ನೇ ಸಾಲಿನ ಆಯವ್ಯಯ ಸಿದ್ಧತೆ

ಬೆಂಗಳೂರಿನ ಸಮಗ್ರ ಅಭಿವೃದ್ಧಿಗಾಗಿ ಈಗಾಗಲೇ ಮಹನಗರ ಪಾಲಿಕೆಯನ್ನು ಐದು ಹೊಸ ನಗರ ಪಾಲಿಕೆಗಳಾಗಿ ಸರಕಾರ ವಿಂಗಡಿಸಿದೆ. ಇದೀಗ ಕಾರ್ಯಕ್ಷಮತೆ ನಿರ್ಧಾರ ಆಗಲಿದ್ದು, ಅಭವೃದ್ಧಿಗೆ ಪ್ರಮುಖ ಇಂಧನವಾದ ಬಜೆಟ್ ಮಂಡನೆಗೆ ಈಗ ಸಿದ್ಧತೆಗಳು ಆರಂಭ ಆಗಿದೆ. ಯಾವ ರೀತಿ ತಯಾರಿ ನಡೆಸಲಾಗ್ತಿದೆ ಎಂಬ ವಿವರ ಇಲ್ಲಿದೆ.

ವಿಜಯ ಕರ್ನಾಟಕ 22 Jan 2026 5:40 am

ಬೆಂಗಳೂರಿನ ಈ ಏರಿಯಾದಲ್ಲಿ 2BHK ಮನೆ ಬಾಡಿಗೆ 70 ಸಾವಿರ ರೂ.! ಎಷ್ಟು ದುಬಾರಿಯಾಯ್ತು ನೋಡಿ ರಾಜಧಾನಿಯ ಜೀವನ

ಬೆಂಗಳೂರಿನಲ್ಲಿ ಮನೆ ಬಾಡಿಗೆ ಗಗನಕ್ಕೇರಿದ್ದು, 70,000 ರೂ.ಗೆ 2BHK ಕೇಳುತ್ತಿರುವುದು ಸಾಫ್ಟ್‌ವೇರ್ ಇಂಜಿನಿಯರ್ ಒಬ್ಬರ ಅಸಮಾಧಾನಕ್ಕೆ ಕಾರಣವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಇದು ದೊಡ್ಡ ಚರ್ಚೆಗೆ ಎಡೆಮಾಡಿಕೊಟ್ಟಿದ್ದು, ಅನೇಕರು ತಮ್ಮ ಅನುಭವ ಹಂಚಿಕೊಂಡು, ಬೆಂಗಳೂರಿನಲ್ಲಿ ಮನೆ ಹುಡುಕುವ ಕಷ್ಟವನ್ನು ವಿವರಿಸಿದ್ದಾರೆ. ಇದು ನಗರದ ವಸತಿ ಮಾರುಕಟ್ಟೆಯ ಗಂಭೀರ ಸಮಸ್ಯೆಯನ್ನು ಎತ್ತಿ ತೋರಿಸುತ್ತದೆ.

ವಿಜಯ ಕರ್ನಾಟಕ 22 Jan 2026 1:52 am

ವೆನೆಜುವೆಲಾ ಅಧ್ಯಕ್ಷರನ್ನು ಸೆರೆ ಹಿಡಿಯುವಾಗ ಬಳಸಿದ್ದ ಹೊಚ್ಚ ಹೊಸ ಅಸ್ತ್ರದ ಬಗ್ಗೆ ಕಡೆಗೂ ಬಾಯಿಬಿಟ್ಟ ಟ್ರಂಪ್

ಅಮೆರಿಕಾದ ಸೇನೆ ವೆನೆಜುವೆಲಾ ಅಧ್ಯಕ್ಷ ನಿಕೋಲಸ್ ಮದುರೊ ಅವರನ್ನು ಸೆರೆಹಿಡಿಯಲು 'ರಹಸ್ಯ ಸೋನಿಕ್' ಆಯುಧ ಬಳಸಿದೆ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಒಪ್ಪಿಕೊಂಡಿದ್ದಾರೆ. ಈ ಆಯುಧವು ಶತ್ರುಗಳನ್ನು ದಿಕ್ಕುತಪ್ಪಿಸಿ ನಿಷ್ಕ್ರಿಯಗೊಳಿಸುವ ಸಾಮರ್ಥ್ಯ ಹೊಂದಿದೆ. ಈ ಕಾರ್ಯಾಚರಣೆಯು ಅಮೆರಿಕಾದ ಸೇನೆಯ ಶಕ್ತಿಯನ್ನು ಪ್ರದರ್ಶಿಸಿದೆ. ರಷ್ಯಾ ಈ ಬಗ್ಗೆ ಹೆಚ್ಚಿನ ಮಾಹಿತಿ ಕೇಳಿದೆ.

ವಿಜಯ ಕರ್ನಾಟಕ 22 Jan 2026 1:10 am

ನಿಯಮಬಾಹಿರ ‘ಅರ್ಹತಾ ಪ್ರಮಾಣಪತ್ರ’ ನೀಡಿದ ಆರೋಪ: ಹಿರಿಯ ಮೋಟಾರು ವಾಹನ ನಿರೀಕ್ಷಕ ನಿಸಾರ್ ಅಹಮದ್ ಅಮಾನತು

ಬೆಂಗಳೂರು: ಹಿರಿಯ ಮೋಟಾರು ವಾಹನ ನಿರೀಕ್ಷಕ ನಿಸಾರ್ ಆಹಮ್ಮದ್ ಅವರು ಗುಜರಾತ್ ರಾಜ್ಯದ ವಾಹನಗಳಿಗೆ ನಿಯಮಬಾಹಿರವಾಗಿ ಅರ್ಹತಾ ಪ್ರಮಾಣಪತ್ರ(ಫಿಟ್ನೆಸ್ ಸರ್ಟಿಫಿಕೇಟ್) ನೀಡಿ ಕರ್ತವ್ಯ ಲೋಪ ಎಸಗಿರುವ ಆರೋಪದಲ್ಲಿ ಅವರನ್ನು ಅಮಾನತು ಮಾಡಿ, ಸಾರಿಗೆ ಇಲಾಖೆಯ ಆಯುಕ್ತರು ಆದೇಶ ಹೊರಡಿಸಿದ್ದಾರೆ. ಗುಜರಾತ್ ರಾಜ್ಯದ ಸಾರಿಗೆ ಕಚೇರಿಯ ಇ-ಡಿಟೆಕ್ಷನ್ ತಂಡವು ವಾಹನ ಇ-ಡಿಟೆಕ್ಷನ್ ಪೋರ್ಟಲ್‍ನಲ್ಲ್ಲಿ ಲಭ್ಯವಿರುವ ಡೇಟಾವನ್ನು ಪರಿಶೀಲಿಸಿ 41 ವಾಹನಗಳನ್ನು ಕರ್ನಾಟಕ ರಾಜ್ಯದ ಆರ್‍ಟಿಒ ಕಚೇರಿಗಳಲ್ಲಿ ತಪಾಸಣೆ ಮಾಡಿ ನಮೂನೆ-38(ಎ) ಅರ್ಹತಾ ಪ್ರಮಾಣಪತ್ರ ನೀಡಿದ ನಂತರ, ಅದೇ ದಿನ ಗುಜರಾತ್ ರಾಜ್ಯದಲ್ಲಿರುವ ಟೋಲ್ ಪ್ಲಾಜಾಗಳ ಮೂಲಕ ಸದರಿ ವಾಹನಗಳು ಹಾದುಹೋಗಿವೆ ಎಂದು ಹಾಗೂ ಅವುಗಳನ್ನು ನಿಸಾರ್ ಅಹಮದ್ ಇವರು ಅನುಮೋದಿಸಿರುವುದಾಗಿ ಗುಜರಾತ್‍ನ ಗಾಂಧಿನಗರ ಸಾರಿಗೆ ಆಯುಕ್ತರ ಕಚೇರಿಯ ಉಪ ನಿರ್ದೇಶಕರು ತಿಳಿಸಿದ್ದಾರೆ. ಈ ವಿಷಯ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರ ಗಮನಕ್ಕೆ ಬಂದ ಕೂಡಲೇ ಈ ಬಗ್ಗೆ ಸಾರಿಗೆ ಆಯುಕ್ತರಿಗೆ ಕ್ರಮಕೈಗೊಳ್ಳಲು ಸೂಚಿಸಿದ್ದರು. ಅದರಂತೆ ಸಾರಿಗೆ ಆಯುಕ್ತರು ಬೆಂಗಳೂರು ನಗರ ವಿಭಾಗದ ಜಂಟಿ ಸಾರಿಗೆ ಆಯುಕ್ತರಿಗೆ ವರದಿ ನೀಡಲು ಸೂಚಿಸಿದ್ದು, ಸದರಿ ವರದಿಯಲ್ಲಿ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿಯ ಹಿರಿಯ ಮೋಟಾರು ವಾಹನ ನಿರೀಕ್ಷಕ ನಿಸಾರ್ ಅಹಮದ್ ಅವರು ವಾಹನಗಳಿಗೆ ನಮೂನೆ-38(ಎ)ರಲ್ಲಿ ಅರ್ಹತಾ ಪತ್ರ ನವೀಕರಣ ಮಾಡಿರುವುದಾಗಿ ಇಲಾಖೆ ವಾಹನ್ 4.0 ತಂತ್ರಾಂಶದನ್ವಯ ದೃಢಪಟ್ಟಿರುತ್ತದೆ. ಹಾಗೂ ಸದರಿ 41 ವಾಹನಗಳು ಅದೇ ದಿನ ಅಂದರೆ ತಪಾಸಣೆ ನಡೆಸಿದ ದಿನಾಂಕದಂದು ಗುಜರಾತ್ ರಾಜ್ಯದಲ್ಲಿರುವ ಟೋಲ್ ಪ್ಲಾಜಾಗಳ ಮೂಲಕ ಹಾದುಹೋಗಿರುವುದು ಸಹ ಕಂಡುಬಂದಿದೆ. ವಾಹನಗಳನ್ನು ಭೌತಿಕವಾಗಿ ಪರಿಶೀಲನೆ ಮಾಡದೇ ನಮೂನೆ-38(ಎ)ನ್ನು ನಿಯಮ ಬಾಹಿರವಾಗಿ ಅನುಮೋದಿಸಿರುವುದು ಕಂಡುಬಂದಿದೆ. ಇದರಿಂದಾಗಿ ಮೋಟಾರು ವಾಹನಗಳ ಕಾಯ್ದೆ ಮತ್ತು ನಿಯಮಗಳನ್ನು ಉಲಂಘಿಸಿದ್ದು, ವಾಹನಗಳನ್ನು ಭೌತಿಕವಾಗಿ ಪರಿಶೀಲನೆ ಮಾಡದೇ ಅನುಮೋದಿಸುವ ಮೂಲಕ ಕರ್ತವ್ಯ ಲೋಪವೆಸಗಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಆದ್ದರಿಂದ ಅವರನ್ನು ಸೇವೆಯಿಂದ ಅಮಾನತ್ತು ಮಾಡಲಾಗಿದೆ ಎಂದು ಆಯುಕ್ತರು ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ.

ವಾರ್ತಾ ಭಾರತಿ 22 Jan 2026 12:36 am

ಅರ್ಹತಾ ಪ್ರಮಾಣಪತ್ರ ನವೀಕರಣಕ್ಕೆ ಬರುವ ವಾಹನಗಳ ತಪಾಸಣೆಗೆ ಕಾರ್ಯವಿಧಾನ (ಎಸ್‍ಒಪಿ) ಪಾಲಿಸುವಂತೆ ಆದೇಶ

ಬೆಂಗಳೂರು: ಅರ್ಹತಾ ಪ್ರಮಾಣಪತ್ರ ನವೀಕರಣಕ್ಕೆ ಬರುವ ವಾಹನಗಳ ತಪಾಸಣೆಗೆ ಪ್ರಮಾಣಿತ ಕಾರ್ಯಾಚರಣೆಯ ಕಾರ್ಯವಿಧಾನಗಳನ್ನು (ಎಸ್‍ಒಪಿ) ಪಾಲಿಸುವಂತೆ ಸಾರಿಗೆ ಇಲಾಖೆ ಆದೇಶಿಸಿದೆ. ನೋಂದಣಿ ಪ್ರಾಧಿಕಾರದ ಕಚೇರಿಯ ನಿಗದಿತ ಜಾಗದಲ್ಲಿ ಮಾತ್ರ ಅರ್ಹತಾ ಪ್ರಮಾಣ ಪತ್ರ ನವೀಕರಣಕ್ಕೆ ಬರುವ ವಾಹನಗಳನ್ನು ಹಿರಿಯ ಮೋಟಾರು ವಾಹನ ನಿರೀಕ್ಷಕರು ಖುದ್ದಾಗಿ ಪರಿಶೀಲಿಸಿ, ಅರ್ಹತಾ ಪ್ರಮಾಣಪತ್ರವನ್ನು ನವೀಕರಿಸಬೇಕು. ವಾಹನಗಳನ್ನು ಪರಿಶೀಲಿಸುವ ಹಿರಿಯ ಮೋಟಾರು, ಮೋಟಾರು ವಾಹನ ನಿರೀಕ್ಷಕರು ಅವರ ಹಾಗೂ ವಾಹನದ ವಾಹನದ ನಂಬರ್ ಪ್ಲೇಟ್ ಸೇರಿ ಜಿಪಿಎಸ್ ಫೋಟೊ ಲೊಕೇಷನ್ ಆಪ್ ಬಳಸಿ ದಿನಾಂಕ, ಸಮಯ ಮತ್ತು ಸ್ಥಳ ಸೃಜನೆಯಾಗುವಂತೆ ಛಾಯಾಚಿತ್ರವನ್ನು ತೆಗೆದು ತಮ್ಮ ಕಚೇರಿಯ ನೋಂದಣಿ ಪ್ರಾಧಿಕಾರಿಗಳ ಮೊಬೈಲ್ ಸಂಖ್ಯೆಗೆ ವಾಟ್ಸ್ ಆಪ್‍ನಲ್ಲಿ ಸಲ್ಲಿಸಬೇಕು. ನೋಂದಣಿ ಪ್ರಾಧಿಕಾರಿಗಳ, ಕಚೇರಿ ಮುಖ್ಯಸ್ಥರ ವಾಟ್ಸ್ ಆಪ್‍ನಲ್ಲಿ ಹಿರಿಯ ಮೋಟಾರು, ಮೋಟಾರು ವಾಹನ ನಿರೀಕ್ಷಕರಿಂದ ಸಲ್ಲಿಕೆಯಾಗುವ ಆಯಾ ದಿವಸದ ವಾಹನಗಳ ಛಾಯಾಚಿತ್ರಗಳು ವಾಹನ್ ತಂತ್ರಾಂಶದಲ್ಲಿ ಪರಿಶೀಲಿಸಿ ವರದಿಯನ್ನು ಸಿದ್ಧಪಡಿಸಬೇಕು. ಸಂಬಂಧಪಟ್ಟ ಕಚೇರಿಯ ನೋಂದಣಿ ಪ್ರಾಧಿಕಾರಿಗಳ, ಕಚೇರಿ ಮುಖ್ಯಸ್ಥರು ಅರ್ಹತಾ ಪ್ರಮಾಣಪತ್ರ ನವೀಕರಣಕ್ಕೆ ಕಚೇರಿಗೆ ಬರುವ ವಾಹನಗಳಲ್ಲಿ ಕನಿಷ್ಠ ಶೇ.20ರಷ್ಟು ವಾಹನಗಳನ್ನು ಖುದ್ದಾಗಿ ಪರಿಶೀಲಿಸಿ ಮೇಲ್ವಿಚಾರಣೆ ಮಾಡಬೇಕು. ಎಲ್ಲ ವಿಭಾಗದ ಜಂಟಿ ಸಾರಿಗೆ ಆಯುಕ್ತರು ಮಾನದಂಡಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಿರುವ ಕುರಿತು ಕಚೇರಿ ಸಮಯದಲ್ಲಿ ಅಥವಾ ಮಾಸಿಕ ಸಭೆಯಲ್ಲಿ ಪರಿಶೀಲಿಸಿ ಖಚಿತಪಡಿಸಿಕೊಂಡು ವರದಿಯನ್ನು ನೀಡಬೇಕು. ಇತರೆ ರಾಜ್ಯದ ವಾಹನಗಳ ಅರ್ಹತಾ ಪ್ರಮಾಣ ಪತ್ರ ನವೀಕರಣವನ್ನು ಹಿರಿಯ ಮೋಟಾರು, ಮೋಟಾರು ವಾಹನ ನಿರೀಕ್ಷಕರು ಭೌತಿಕವಾಗಿ ಪರಿಶೀಲಿಸಿದ ನಂತರ ಖುದ್ದಾಗಿ ಕಚೇರಿ ಮುಖ್ಯಸ್ಥರೇ ಮೇಲ್ವಿಚಾರಣೆಯನ್ನು ಮಾಡಬೇಕು. ಫೆ.2ರಿಂದ ಹಂತ ಹಂತವಾಗಿ ರಾಜ್ಯದ ಎಲ್ಲ ನೋಂದಣಿ ಪ್ರಾಧಿಕಾರಿಗಳ ಕಚೇರಿಯಲ್ಲಿ ಎಂ-ಫಿಟ್ನೆಸ್ ಆಪ್ ಅನ್ನು ಜಾರಿಗೊಳಿಸುವ ಸಂಬಂಧ ಈಗಾಗಲೇ ತಂತ್ರಾಂಶವನ್ನು ಅಭಿವೃದ್ಧಿ ಪಡಿಸಲಾಗಿದ್ದು, ವಾಹನಗಳು ಕಡ್ಡಾಯವಾಗಿ ಕಚೇರಿಗಳಿಗೆ ಹಾಜರಾಗಬೇಕು. ವಾಹನಗಳ ಛಾಯಾಚಿತ್ರ ಮತ್ತು ಕೋ-ಆರ್ಡಿನೆಟ್ಸ್‍ಗಳನ್ನು ಪಡೆದು ದಾಖಲಿಸದ ನಂತರವಷ್ಟೇ ಅರ್ಹತಾ ಪ್ರಮಾಣಪತ್ರವನ್ನು ನೀಡುವ ಕುರಿತು ತಾಂತ್ರಿಕವಾಗಿ ಪರೀಕ್ಷಿಸಲಾಗುತ್ತಿದ್ದು, ಶೀಘ್ರದಲ್ಲೇ ಅಳವಡಿಸಲಾಗುತ್ತದೆ. ಅಲ್ಲಿಯ ವರೆಗೆ ಎಲ್ಲ ಕಾರ್ಯವಿಧಾನಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಸಾರಿಗೆ ಮತ್ತು ರಸ್ತೆ ಸುರಕ್ಷತೆ ಆಯುಕ್ತರು ಆದೇಶದಲ್ಲಿ ತಿಳಿಸಿದ್ದಾರೆ. 

ವಾರ್ತಾ ಭಾರತಿ 22 Jan 2026 12:33 am

ರಾಜ್ಯದಲ್ಲಿ ಡೇಟಾ ಕೇಂದ್ರ ಸ್ಥಾಪನೆಗೆ ʼಸಿಫಿʼ, ʼಭಾರತಿʼ ಒಲವು: ಎಂ.ಬಿ.ಪಾಟೀಲ್

ʼಕಂಪೆನಿಗಳ ಜತೆಗಿನ ಚರ್ಚೆಯಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಭಾಗಿʼ

ವಾರ್ತಾ ಭಾರತಿ 22 Jan 2026 12:22 am

ಬೆಂಗಳೂರಿನಲ್ಲಿ ಅಜಾಗರೂಕತೆಯಿಂದ ಲ್ಯಾಂಬೋರ್ಗಿನಿ ಕಾರು ಚಾಲನೆ; ವಿಡಿಯೋ ಆಧರಿಸಿ ಸ್ವಯಂಪ್ರೇರಿತ ಎಫ್‍ಐಆರ್ ದಾಖಲು

ಬೆಂಗಳೂರು: ನಗರದಲ್ಲಿರುವ ಮೈಸೂರು ರಸ್ತೆಯಲ್ಲಿ ಲ್ಯಾಂಬೋರ್ಗಿನಿ ಕಾರನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ‘ಸನಾತನ’ ಎಂಬ ಖಾತೆಯಿಂದ ಹಂಚಿಕೆಯಾಗಿದ್ದ ಈ ವಿಡಿಯೋವನ್ನು ಆಧರಿಸಿ ಕೆಂಗೇರಿ ಸಂಚಾರ ಪೊಲೀಸರು ಸ್ವಯಂ ಪ್ರೇರಿತ ಎಫ್‍ಐಆರ್ ದಾಖಲಿಸಿಕೊಂಡಿದ್ದಾರೆ. ಕೆಂಗೇರಿ ಸಂಚಾರ ಪೊಲೀಸ್ ಠಾಣೆಯಲ್ಲಿ ಪಿಎಸ್‍ಐ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ರಾಮಸ್ವಾಮಿ ಆರ್ ಅವರು ಸಾಮಾಜಿಕ ಜಾಲತಾಣವಾದ ‘ಎಕ್ಸ್’ ಪರಿಶೀಲಿಸುತ್ತಿದ್ದಾಗ, ಸನಾತನ ಎಂಬ ಖಾತೆಯಿಂದ ಹಂಚಿಕೆಯಾಗಿದ್ದ ವಿಡಿಯೋದಲ್ಲಿ, ಹಸಿರು ಬಣ್ಣದ ಲ್ಯಾಂಬೋರ್ಗಿನಿ ಹುರಾಕಾನ್ ಕಾರು, ರಾಜರಾಜೇಶ್ವರಿ ನಗರ ಆರ್ಚ್ ಬಳಿ ಮೈಸೂರು ರಸ್ತೆಯತ್ತ ಅಪಾಯಕಾರಿ ರೀತಿಯಲ್ಲಿ ಚಲಿಸುತ್ತಿರುವುದು ಕಂಡುಬಂದಿದೆ. ಇದನ್ನು ಅಧಾರಿಸಿ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ಕಾರಿಗೆ ದೋಷಪೂರಿತ ಸೈಲೆನ್ಸರ್ ಅಳವಡಿಸಿಕೊಂಡು ಮಾನವ ಜೀವಕ್ಕೆ ಅಪಾಯ ಉಂಟು ಮಾಡುವ ರೀತಿಯಲ್ಲಿ ಕಾರನ್ನು ಚಲಾಯಿಸಿರುವುದು ಸ್ಪಷ್ಟವಾಗಿದೆ. ಈ ಹಿನ್ನೆಲೆಯಲ್ಲಿ ಕಾರಿನ ಚಾಲಕನ ವಿರುದ್ಧ ಅಜಾಗರೂಕ ಹಾಗೂ ಅಪಾಯಕಾರಿ ಚಾಲನೆ ಆರೋಪದಲ್ಲಿ ಎಫ್‍ಐಆರ್ ದಾಖಲಾಗಿದೆ. ಸದ್ಯ ಕಾರಿನ ನೋಂದಣಿ ವಿವರಗಳು ಮತ್ತು ಚಾಲಕನ ಗುರುತು ಪತ್ತೆಹಚ್ಚುವ ಕಾರ್ಯ ನಡೆಯುತ್ತಿದೆ ಎಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ. Driver of a green #Lamborghini Huracan in #Bengaluru has been booked for rash driving on Mysuru Road near Kengeri. @DCPTrWestBCP Anoop Shetty has confirmed an FIR has been registered. Efforts are on to trace the suspect. @DeccanHerald pic.twitter.com/QpZ7eV62Wz — Prajwal D'Souza (@prajwaldza) January 20, 2026

ವಾರ್ತಾ ಭಾರತಿ 22 Jan 2026 12:02 am

ಔರಾದ್ | ಹೊಲಗಳಿಗೆ ದಾರಿ ವ್ಯವಸ್ಥೆ ಮಾಡಿಕೊಡಿ : ಶಾಸಕ ಪ್ರಭು ಚವ್ಹಾಣ್‌

ಔರಾದ್ : ಕೃಷಿ ಜಮೀನುಗಳಿಗೆ ತೆರಳುವ ದಾರಿ ಬಗ್ಗೆ ಸಾಕಷ್ಟು ದೂರುಗಳು ಬರುತ್ತಿದ್ದು, ಸಂಬಂಧಿಸಿದ ಗ್ರಾಮಸ್ಥರ ಸಹಯೋಗದೊಂದಿಗೆ ಅಧಿಕಾರಿಗಳು ಸಮಸ್ಯೆ ಇತ್ಯರ್ಥಪಡಿಸಬೇಕು ಎಂದು ಶಾಸಕ ಪ್ರಭು ಚವ್ಹಾಣ್‌ ಸೂಚನೆ ನೀಡಿದ್ದಾರೆ. ಕಮಲನಗರ ತಾಲೂಕಿನ ಬೆಂಬ್ರಾ, ಕೋರೆಕಲ್, ಠಾಣಾ ಕುಶನೂರ, ನಿಡೋದಾ, ಹಾಲಹಳ್ಳಿ, ಬಳತ್(ಕೆ), ಬಳತ್(ಬಿ), ಸಂಗಮ್, ಖೇಡ್,ಕಾಳಗಾಪೂರ ಗ್ರಾಮಗಳಿಗೆ ಸೋಮವಾರ ಭೇಟಿ ನೀಡಿ ಗ್ರಾಮಸ್ಥರೊಂದಿಗೆ ಸಂವಾದ ನಡೆಸಿದ ನಂತರ ಸಾರ್ವಜನಿಕರ ಅಹವಾಲು ಆಲಿಸಿ ಮಾತನಾಡಿದರು. ಗ್ರಾಮಸ್ಥರು ಮತ್ತು ರೈತರು ತಮ್ಮ ಹೊಲಗಳಿಗೆ ತೆರಳಲು ಅನುಕೂಲವಾಗುವಂತೆ ಹಳೆಯ ದಾರಿಗಳನ್ನು ಸಂಚಾರಕ್ಕೆ ಮುಕ್ತಗೊಳಿಸಬೇಕು. ಅತಿಕ್ರಮಣಗೊಂಡಿರುವ ದಾರಿಗಳನ್ನು ತೆರವುಗೊಳಿಸಬೇಕು. ರೈತರು ಕೃಷಿ ಚಟುವಟಿಕೆ ನಡೆಸಲು ದಾರಿ ಸಮಸ್ಯೆಯಿಂದ ಅಡಚಣೆ ಎದುರಿಸಬಾರದು ಎಂದು ಶಾಸಕರು ಹೇಳಿದರು. ಪ್ರತಿ ಗ್ರಾಮದಲ್ಲಿಯೂ ಹೊಲಗಳಿಗೆ ಹೋಗುವ ದಾರಿಗಳ ವಿವರ ಸಂಗ್ರಹಿಸಿ, ಸಮಸ್ಯೆಯಿರುವ ಸ್ಥಳಗಳನ್ನು ಗುರುತಿಸಿ ತಕ್ಷಣ ಕ್ರಮ ಕೈಗೊಳ್ಳಬೇಕು. ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಕಂದಾಯ ಇಲಾಖೆ ಅಧಿಕಾರಿಗಳು ಸಮನ್ವಯದಿಂದ ಕೆಲಸ ಮಾಡಿ ರೈತರಿಗೆ ಶಾಶ್ವತ ಪರಿಹಾರ ಒದಗಿಸಬೇಕು ಎಂದು ಅವರು ಸೂಚಿಸಿದರು. ಈ ಸಂದರ್ಭದಲ್ಲಿ ತಹಶೀಲ್ದಾರ ಅಮಿತ ಕುಲಕರ್ಣಿ, ತಾಪಂ ಇಒ ಹಣಮಂತರಾಯ ಕೌಟಗೆ, ತಾಲೂಕು ಆರೋಗ್ಯಾಧಿಕಾರಿ ಡಾ.ಗಾಯತ್ರಿ, ಲೋಕೋಪಯೋಗಿ ಇಲಾಖೆ ಎಇಇ ಪ್ರೇಮಸಾಗರ, ಪಂಚಾಯತ ರಾಜ್ ಎಂಜಿನಿಯರಿಂಗ್ ಇಲಾಖೆ ಎಇಇ ಸುನೀಲ ಚಿಲ್ಲರ್ಗೆ, ಬಿಇಒ ಬಿ.ಜೆ ರಂಗೇಶ, ಸಹಾಯಕ ಕೃಷಿ ನಿರ್ದೇಶಕ ಧೂಳಪ್ಪ, ಸಿಡಿಪಿಒ ಇಮಲಪ್ಪ, ಎಡಿಎಲ್‌ಆರ್ ರಾಜಶ್ರೀ, ಮುಖಂಡರಾದ ರಾಮಶೆಟ್ಟಿ ಪನ್ನಾಳೆ, ಅರಹಂತ ಸಾವಳೆ, ಶ್ರೀಮಂತ ಪಾಟೀಲ, ಧನರಾಜ ವಡೆಯರ್, ಗಿರೀಶ ವಡೆಯರ್, ಮಂಜು ಸ್ವಾಮಿ, ಬಾಲಾಜಿ ಠಾಕೂರ, ಸಂದೀಪ ಪಾಟೀಲ, ಶಿವಕುಮಾರ ಬಿರಾದಾರ, ಉದಯ ಸೋಲಾಪೂರೆ, ಪ್ರವೀಣ ಕಾರಬಾರಿ, ಯೋಗೇಶ ಬಿರಾದಾರ ಇದ್ದರು.

ವಾರ್ತಾ ಭಾರತಿ 22 Jan 2026 12:02 am

ಬೀದರ್ ವಿವಿ ಅತಿಥಿ ಉಪನ್ಯಾಸಕರ ನೇಮಕಾತಿಯಲ್ಲಿ ಅವ್ಯವಹಾರ ಆರೋಪ: ವಿದ್ಯಾರ್ಥಿ ಸಂಘಟನೆಗಳಿಂದ ಪ್ರತಿಭಟನೆಯ ಎಚ್ಚರಿಕೆ

ಬೀದರ್: ನಗರದ ಹಾಲಹಳ್ಳಿ ಗ್ರಾಮದ ಬಳಿಯಿರುವ ಬೀದರ್ ವಿಶ್ವವಿದ್ಯಾಲಯದ 2025–26ನೇ ಸಾಲಿನ ಅತಿಥಿ ಉಪನ್ಯಾಸಕರ ಆಯ್ಕೆ ಪ್ರಕ್ರಿಯೆಯಲ್ಲಿ ಯುಜಿಸಿ (UGC) ನಿಯಮಾವಳಿಗಳನ್ನು ಗಾಳಿಗೆ ತೂರಿ ದೊಡ್ಡ ಮಟ್ಟದ ಅವ್ಯವಹಾರ ನಡೆಸಲಾಗಿದೆ ಎಂದು ಭಾರತೀಯ ವಿದ್ಯಾರ್ಥಿ ಸಂಘದ (SFI) ಜಿಲ್ಲಾಧ್ಯಕ್ಷ ಪ್ರದೀಪ್ ನಾಟೇಕರ್ ಹಾಗೂ ದಲಿತ ವಿದ್ಯಾರ್ಥಿ ಪರಿಷತ್ (DVP) ಜಿಲ್ಲಾಧ್ಯಕ್ಷ ಸಂದೀಪ್ ಕಾಂಟೆ ಗಂಭೀರ ಆರೋಪ ಮಾಡಿದ್ದಾರೆ. ಈ ಕುರಿತು ಪ್ರಕಟಣೆ ನೀಡಿರುವ ಅವರು, ವಿಶ್ವವಿದ್ಯಾಲಯದ ನೇಮಕಾತಿ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಇಲ್ಲದ ಕಾರಣ ಅರ್ಹ ಅಭ್ಯರ್ಥಿಗಳಿಗೆ ಅನ್ಯಾಯವಾಗಿದೆ ಎಂದು ದೂರಿದ್ದಾರೆ. ಕೆಲವು ವಿಭಾಗಗಳ ಆಯ್ಕೆ ಪ್ರಕ್ರಿಯೆ ಈಗಾಗಲೇ ಪೂರ್ಣಗೊಂಡಿದೆ. ಆದರೆ, ಯುಜಿಸಿ ನಿಯಮದಂತೆ ಸಂದರ್ಶನಕ್ಕೆ ಹಾಜರಾದ ಅಭ್ಯರ್ಥಿಗಳ ಪಟ್ಟಿ ಅಥವಾ ಅಂತಿಮ ಆಯ್ಕೆ ಪಟ್ಟಿಯನ್ನು ವಿಶ್ವವಿದ್ಯಾಲಯದ ವೆಬ್‌ಸೈಟ್ ಅಥವಾ ನೋಟಿಸ್ ಬೋರ್ಡ್‌ನಲ್ಲಿ ಪ್ರಕಟಿಸಿಲ್ಲ. ಅರ್ಹ ಅಭ್ಯರ್ಥಿಗಳನ್ನು ಕೈಬಿಟ್ಟು ತಮಗೆ ಬೇಕಾದವರನ್ನು ಮನಬಂದಂತೆ ಆಯ್ಕೆ ಮಾಡಲಾಗಿದೆ. ಇಡೀ ಪ್ರಕ್ರಿಯೆಯನ್ನು ಗೌಪ್ಯವಾಗಿಟ್ಟಿರುವುದು ಭ್ರಷ್ಟಾಚಾರದ ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ ಎಂದು ಅವರು ತಿಳಿಸಿದ್ದಾರೆ. ಅತಿಥಿ ಉಪನ್ಯಾಸಕರ ಆಯ್ಕೆ ಹಾಗೂ ಬೋಧಕೇತರ ನೇಮಕಾತಿಯಲ್ಲಿ ನಡೆದಿರುವ ಅನ್ಯಾಯದ ಕುರಿತು ಈಗಾಗಲೇ ಕುಲಪತಿ ಹಾಗೂ ಕುಲಸಚಿವರಿಗೆ ಎರಡು ಬಾರಿ ಲಿಖಿತವಾಗಿ ಮತ್ತು ಮೂರು ಬಾರಿ ಮೌಖಿಕವಾಗಿ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಅಧಿಕಾರಿಗಳು ಈವರೆಗೂ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿಶ್ವವಿದ್ಯಾಲಯವು ತಕ್ಷಣವೇ ಅರ್ಜಿ ಸಲ್ಲಿಸಿದ ಎಲ್ಲಾ ಅಭ್ಯರ್ಥಿಗಳ ಅಂಕಪಟ್ಟಿಯ ವಿವರ ಹಾಗೂ ಆಯ್ಕೆ ಪಟ್ಟಿಯನ್ನು ಬಹಿರಂಗಪಡಿಸಬೇಕು. ಅನ್ಯಾಯಕ್ಕೊಳಗಾದ ಅಭ್ಯರ್ಥಿಗಳಿಗೆ ನ್ಯಾಯ ನೀಡಬೇಕು. ಒಂದು ವಾರದೊಳಗೆ ಈ ಕುರಿತು ಸೂಕ್ತ ಕ್ರಮ ಕೈಗೊಳ್ಳದಿದ್ದರೆ ವಿಶ್ವವಿದ್ಯಾಲಯದ ಆವರಣದ ಮುಂದೆ ಬೃಹತ್ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಸಂಘಟನೆಗಳ ಮುಖಂಡರು ಎಚ್ಚರಿಸಿದ್ದಾರೆ.

ವಾರ್ತಾ ಭಾರತಿ 21 Jan 2026 11:56 pm

ವಿದೇಶಿ‌ ಹೂಡಿಕೆಯಿಂದ ಷೇರು ಖರೀದಿ ಆರೋಪ: ಕಾಫಿ ಡೇ ವಿರುದ್ಧದ ಫೆಮಾ ಪ್ರಕರಣದ ವಿಚಾರಣೆ ಮುಂದೂಡಲು ಈಡಿಗೆ ಹೈಕೋರ್ಟ್ ಸೂಚನೆ

ಬೆಂಗಳೂರು: ವಿದೇಶಿ ಕಂಪನಿಗಳಿಂದ ಪಡೆದಿರುವ ಕೋಟ್ಯಂತರ ರೂ. ಹೂಡಿಕೆ ಹಣವನ್ನು ಭಾರತದ ಕಂಪನಿಗಳಲ್ಲಿ ಷೇರು ಖರೀದಿಸಲು ವಿನಿಯೋಗಿಸಿದ ಆರೋಪ ಪ್ರಕರಣದಲ್ಲಿ 'ಕಾಫಿ ಡೇ ಎಂಟರ್‌ಪ್ರೈಸಸ್‌ ಲಿಮಿಟೆಡ್' ವಿರುದ್ಧದ ವಿಚಾರಣೆಯನ್ನು ಮುಂದೂಡುವಂತೆ ಜಾರಿ ನಿರ್ದೇಶನಾಲಯಕ್ಕೆ (ಈಡಿ) ಹೈಕೋರ್ಟ್ ಸೂಚಿಸಿದೆ. ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ (ಫೆಮಾ) ಅಡಿ 2022ರ ನವೆಂಬರ್‌ 3ರ ದೂರು ಮತ್ತು ನವೆಂಬರ್‌ 23ರಂದು ಜಾರಿ ಮಾಡಿರುವ ಶೋಕಾಸ್‌ ನೋಟಿಸ್‌ ಹಾಗೂ ಪ್ರಕರಣದ ವಿಚಾರಣಾ ಪ್ರಕ್ರಿಯೆಗೆ ಹಾಜರಾಗಲು ಸೂಚಿಸಿ 2026ರ ಜನವರಿ 7ರಂದು ನೀಡಿರುವ ನೋಟಿಸ್ ರದ್ದು ಕೋರಿ ಕಾಫಿ ಡೇ ಎಂಟರ್‌ಪ್ರೈಸಸ್‌ ಲಿಮಿಟೆಡ್‌ನ ಪ್ರತಿನಿಧಿ ಸದಾನಂದ ಪೂಜಾರಿ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಬಿ.ಎಂ. ಶ್ಯಾಮ್‌ಪ್ರಸಾದ್‌ ಅವರಿದ್ದ ಏಕಸದಸ್ಯ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿತು. ಕೆಲ ಕಾಲ ಅರ್ಜಿ ಆಲಿಸಿದ ನ್ಯಾಯಪೀಠ, ಪ್ರಕರಣಕ್ಕೆ ಸಂಬಂಧಿಸಿದಂತೆ ಜನವರಿ 30ರಂದು ನಿಗದಿಯಾಗಿದ್ದ ಅರ್ಜಿದಾರ ಕಂಪನಿಯ ವಿಚಾರಣಾ ಪ್ರಕ್ರಿಯೆಯನ್ನು ನ್ಯಾಯಾಲಯದ ಮುಂದಿನ ವಿಚಾರಣೆವರೆಗೆ ಮುಂದೂಡುವಂತೆ ಈಡಿ ವಿಶೇಷ ನಿರ್ದೇಶಕರಿಗೆ ಸೂಚಿಸಿ ಮಧ್ಯಂತರ ಆದೇಶ ಮಾಡಿತಲ್ಲದೆ, ಅರ್ಜಿಯಲ್ಲಿ ಪ್ರತಿವಾದಿಗಳಾದ ಇಡಿ ನಿರ್ದೇಶಕರು, ವಿಶೇಷ ನಿರ್ದೇಶಕರು ಹಾಗೂ ಸಹಾಯಕ ನಿರ್ದೇಶಕರಿಗೆ ನೋಟಿಸ್ ಜಾರಿಗೊಳಿಸಿ, ವಿಚಾರಣೆಯನ್ನು ಫೆಬ್ರವರಿ 23ಕ್ಕೆ ಮುಂದೂಡಿತು. ಇದಕ್ಕೂ ಮುನ್ನ ಅರ್ಜಿದಾರರ ಪರ ಹಿರಿಯ ವಕೀಲ ಸಜನ್ ಪೂವಯ್ಯ ವಾದ ಮಂಡಿಸಿ, 2009ರಲ್ಲಿ ನಡೆದಿದೆ ಎನ್ನಲಾದ ಕೃತ್ಯಕ್ಕಾಗಿ 2022ರಲ್ಲಿ ಇಡಿ ದೂರು ದಾಖಲಿಸಿ, ಶೋಕಾಸ್ ನೋಟಿಸ್ ಜಾರಿಗೊಳಿಸಿದೆ. ಈ ವಿಳಂಬವು ಇಡೀ ಪ್ರಕ್ರಿಯೆಗಳಿಗೆ ಮಾರಕವಾಗುತ್ತದೆ ಎಂದರಲ್ಲದೆ, ಫೆಮಾ ಸೆಕ್ಷನ್ 13ರ ಅಡಿಯಲ್ಲಿನ ನ್ಯಾಯನಿರ್ಣಯದ ಉದ್ದೇಶಕ್ಕಾಗಿ 2014ರ ಸೆಪ್ಟೆಂಬರ್ 26ರ ತಾಂತ್ರಿಕ ಸುತ್ತೋಲೆಯ ಪ್ರಕಾರ ವಿಚಾರಣೆ ನಡೆಸಬೇಕು ಎಂದು ನ್ಯಾಯಪೀಠಕ್ಕೆ ವಿವರಿಸಿದರು. ​ವಿಚಾರಣಾ ಪ್ರಾಧಿಕಾರವು ನೋಟಿಸ್ ಪಡೆದವರ ವಿರುದ್ಧ ಏಕೆ ಪ್ರಕ್ರಿಯೆ ಮುಂದುವರಿಯಲು ಉದ್ದೇಶಿಸಿದೆ ಎಂಬುದರ ಕುರಿತು ಒಂದು ಅಭಿಪ್ರಾಯವನ್ನು ರೂಪಿಸಬೇಕು ಹಾಗೂ ಆ ಅಭಿಪ್ರಾಯವನ್ನು ಲಿಖಿತ ರೂಪದಲ್ಲಿ ದಾಖಲಿಸಿ, ಪ್ರತಿಯನ್ನು ಸಂಬಂಧಪಟ್ಟವರಿಗೆ ಒದಗಿಸಬೇಕು. ಆದರೆ, ಹಾಲಿ ಪ್ರಕರಣದಲ್ಲಿ ನ್ಯಾಯನಿರ್ಣಯ ಪ್ರಕ್ರಿಯೆ ಮುಂದುವರಿಸಲು ಇರುವ ಕಾರಣಗಳನ್ನು ಅರ್ಜಿದಾರರಿಗೆ ನೀಡಿಲ್ಲ. ಅದರ ಅನುಪಸ್ಥಿತಿಯಲ್ಲಿ ಅರ್ಜಿದಾರರ ವಿರುದ್ಧದ ವಿಚಾರಣೆ ಅನುಮತಿಸಲಾಗದು ಎಂದು ಆಕ್ಷೇಪಿಸಿದರಲ್ಲದೆ, ಇದೇ 30ರಂದು ನಿಗದಿಯಾಗಿರುವ ವಿಚಾರಣೆಯನ್ನು ಮುಂದೂಡುವಂತೆ ಮಧ್ಯಂತರ ಆದೇಶ ನೀಡಬೇಕು ಎಂದು ಮನವಿ ಮಾಡಿದರು. ಇದೇ ಪ್ರಕರಣದಲ್ಲಿ ಈಡಿ ದಾಖಲಿಸಿರುವ ದೂರು ಹಾಗೂ ಶೋಕಾಸ್ ನೋಟಿಸ್ ರದ್ದುಕೋರಿ ಕಾಫಿ ಡೇ ಎಂಟರ್‌ಪ್ರೈಸಸ್‌ ಲಿಮಿಟೆಡ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಇಒ) ಮಾಳವಿಕಾ ಹೆಗ್ಡೆ ಸಲ್ಲಿಸಿದ್ದ ಅರ್ಜಿ ಕುರಿತು ಸೋಮವಾರ ವಿಚಾರಣೆ ನಡೆಸಿದ್ದ ಹೈಕೋರ್ಟ್, ಮಾಳವಿಕಾ ಅವರಿಗೆ 2022ರ ನವೆಂವರ್ 23ರಂದು ಜಾರಿ ಮಾಡಲಾಗಿದ್ದ ಶೋಕಾಸ್‌ ನೋಟಿಸ್‌ ಮತ್ತು ಅದರಡಿಯ ಮುಂದಿನ ಪ್ರಕ್ರಿಯೆಗಳಿಗೆ ತಡೆ ನೀಡಿ ಮಧ್ಯಂತರ ಆದೇಶ ಹೊರಡಿಸಿತ್ತು.

ವಾರ್ತಾ ಭಾರತಿ 21 Jan 2026 11:52 pm

ರಾಯಚೂರು | ರೋಗಿಯ ಸಾವಿನ ಪ್ರಕರಣದಲ್ಲಿ ವೈದ್ಯರ ನಿರ್ಲಕ್ಷ್ಯ ಆರೋಪ : ಕ್ರಮ ಕೈಗೊಳ್ಳದ ಆರೋಗ್ಯ ಇಲಾಖೆ ವಿರುದ್ಧ ಆಕ್ರೋಶ

ರಾಯಚೂರು: ಮಾನ್ವಿ ತಾಲೂಕಿನ ಬಾಗಲವಾಡ ಗ್ರಾಮದ ಅನ್ವರ್ ಸಾಬ್ ಅವರ ಸಾವಿಗೆ ವೈದ್ಯರ ನಿರ್ಲಕ್ಷ್ಯವೇ ಕಾರಣವಾಗಿದ್ದರೂ, ಇದನ್ನು ಮುಚ್ಚಿಹಾಕುವ ಪ್ರಯತ್ನಗಳು ನಡೆಯುತ್ತಿವೆ. ಘಟನೆ ನಡೆದು 60 ದಿನ ಕಳೆದರೂ ಆರೋಗ್ಯ ಇಲಾಖೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ರಿಯಾಜ್ ಆರೋಪಿಸಿದರು. ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಳೆದ ವರ್ಷ ನ.24ರಂದು ಅನ್ವರ್ ಸಾಬ್ ಅವರು ಉಸಿರಾಟದ ತೊಂದರೆಯಿಂದ ಮಾನವಿ ಪಟ್ಟಣದ ಶ್ರೀ ಲಕ್ಷ್ಮೀ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲಾಗಿದ್ದರು. ಅವರು ಆಸ್ಪತ್ರೆಗೆ ನಡೆದುಕೊಂಡೇ ಹೋಗುತ್ತಿರುವುದು ಸಿಸಿಟಿವಿ ವಿಡಿಯೋದಲ್ಲಿ ಸ್ಪಷ್ಟವಾಗಿ ದಾಖಲಾಗಿದೆ. ಆದರೂ ಆಸ್ಪತ್ರೆ ಮಂಡಳಿಯು ಇದೊಂದು ನೈಸರ್ಗಿಕ ಸಾವು ಎಂದು ವರದಿ ನೀಡಿ ಪ್ರಕರಣವನ್ನು ಹಳ್ಳ ಹಿಡಿಸಲು ಪ್ರಯತ್ನಿಸುತ್ತಿದೆ ಎಂದು ದೂರಿದರು. ವೈದ್ಯಕೀಯ ನಿರ್ಲಕ್ಷ್ಯದ ಕುರಿತು ಮೆಡಿಕಲ್ ಅಸೋಸಿಯೇಷನ್‌ಗೆ ದೂರು ನೀಡಲಾಗಿತ್ತು. ಅಸೋಸಿಯೇಷನ್ ಅಧ್ಯಕ್ಷರು ಸ್ಥಳಕ್ಕೆ ಭೇಟಿ ನೀಡಿ ಆರೋಗ್ಯ ಇಲಾಖೆಗೆ ವರದಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಬದಲಿಗೆ, ಜಿಲ್ಲಾ ಮತ್ತು ತಾಲೂಕು ಆರೋಗ್ಯ ಅಧಿಕಾರಿಗಳು ದೂರುದಾರರಿಗೇ ಬೆದರಿಕೆ ಹಾಕುತ್ತಿದ್ದಾರೆ. ಪ್ರಕರಣವನ್ನು ಇಲ್ಲಿಗೆ ಬಿಡದಿದ್ದರೆ ಜಿಲ್ಲೆಯ ಯಾವ ಆಸ್ಪತ್ರೆಯಲ್ಲೂ ಚಿಕಿತ್ಸೆ ಸಿಗದಂತೆ ಮಾಡುವುದಾಗಿ ಹೆದರಿಸುತ್ತಿದ್ದಾರೆ ಎಂದು ರಿಯಾಜ್ ಆತಂಕ ವ್ಯಕ್ತಪಡಿಸಿದರು. ಜೀವಂತವಾಗಿ ದಾಖಲಾದ ವ್ಯಕ್ತಿ ಮೃತಪಟ್ಟರೂ ಮರಣ ಪ್ರಮಾಣ ಪತ್ರ ನೀಡದೆ ಆಸ್ಪತ್ರೆಯು ಕುಟುಂಬಕ್ಕೆ ವಂಚಿಸುತ್ತಿದೆ. ಮೃತರ ಕುಟುಂಬಕ್ಕೆ ಕೂಡಲೇ ನ್ಯಾಯ ಒದಗಿಸಬೇಕು. ತಪ್ಪಿತಸ್ಥ ವೈದ್ಯರು ಮತ್ತು ಆಸ್ಪತ್ರೆಯ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು. ಇಲ್ಲವಾದಲ್ಲಿ ನ್ಯಾಯಾಲಯದ ಮೊರೆ ಹೋಗುವುದಾಗಿ ಅವರು ಎಚ್ಚರಿಕೆ ನೀಡಿದರು. ಸುದ್ದಿಗೋಷ್ಠಿಯಲ್ಲಿ ಮೃತರ ಕುಟುಂಬಸ್ಥರಾದ ಅನೀಫಾ ಬೇಗಂ ಹಾಗೂ ಅಜಮಲಮ್ಮ ಉಪಸ್ಥಿತರಿದ್ದರು.

ವಾರ್ತಾ ಭಾರತಿ 21 Jan 2026 11:50 pm

ಶಹಾಬಾದ್‌ | ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ದಲಿತ ಸಂಘರ್ಷ ಸಮಿತಿಯಿಂದ ಪ್ರತಿಭಟನೆ

ಶಹಾಬಾದ್‌ : ತಾಲೂಕು ಕಚೇರಿಗಳನ್ನು ಕೂಡಲೇ ಪ್ರಾರಂಭಿಸಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ಮಂಗಳವಾರ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ವತಿಯಿಂದ ನಗರದ ಡಾ.ಅಂಬೇಡ್ಕರ್ ಪ್ರತಿಮೆಯ ಬಳಿ ಪ್ರತಿಭಟನೆ ನಡೆಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಸಂಘಟನೆಯ ಜಿಲ್ಲಾ ಸಂಘಟನಾ ಸಂಚಾಲಕ ಕೃಷ್ಣಪ್ಪ ಕರಣಿಕ್, ಶಹಾಬಾದ್‌ ತಾಲೂಕಿನ ಪ್ರಜಾಸೌಧ ನಿರ್ಮಿಸಲು ಮರಗೋಳ ಕಾಲೇಜ್ ಪಕ್ಕದಲ್ಲಿ ಇರುವ ಜಮೀನನ್ನು ತಾಲೂಕಾಡಳಿತ ಗುರುತಿಸಿದ್ದು, ಅದನ್ನು ಹೈದ್ರಾಬಾದ್ ಶಿಕ್ಷಣ ಸಂಸ್ಥೆಯ ಎಸ್. ಎಸ್. ಮರಗೋಳ ಕಾಲೇಜಿನವರು ಕೋರ್ಟಿನಲ್ಲಿ ತಕರಾರು ಅರ್ಜಿ ಸಲ್ಲಿಸಿದ್ದಾರೆ. ಈ ಸಂಪೂರ್ಣ ಜಾಗ ಸರಕಾರದ್ದು, ಆದರೆ ಅವರು ಬೇನಾಮಿಯಾಗಿ ಬಳಸಿಕೊಂಡಿದ್ದಾರೆ. ಕೂಡಲೇ ಈ ಬಗ್ಗೆ ಕೈಗೊಳ್ಳಬೇಕೆಂದು ಆಗ್ರಹಿಸಿದರು. ತಾಲೂಕಿನಲ್ಲಿ ಶೀಘ್ರ ಪ್ರಜಾಸೌಧ ನಿರ್ಮಾಣ ಮಾಡಿಕೊಡಬೇಕು. ತಾಪಂಯಲ್ಲಿ 7 ಗ್ರಾಪಂಗಳು ಒಳಗೊಂಡು ಸುಮಾರು 11 ಗ್ರಾಮಗಳಲ್ಲಿ ದಲಿತರಿಗೆ ಸ್ಮಶಾನ ಭೂಮಿಯಿಲ್ಲ. ಕೂಡಲೇ ಸ್ಮಶಾನಭೂಮಿ ಮಂಜೂರು ಮಾಡಬೇಕು. ಮುಗುಳನಾಗಾವ್‌ ಗ್ರಾಮದಲ್ಲಿ ದಲಿತರಿಗೆ ನಿವೇಶನಗಳನ್ನು ನೀಡಿ, ಹಕ್ಕುಪತ್ರವನ್ನು ವಿತರಿಸಿದ್ದಾರೆ. ಆದರೆ ಇಲ್ಲಿಯವರೆಗೆ ಪಹಣಿಯಲ್ಲಿ ಜಮೀನಿನ ಮಾಲಕರ ಹೆಸರು ಹಾಗೆಯೇ ಇದೆ. ಅದನ್ನ ಬದಲಾಯಿಸಬೇಕೆಂದು ಹೇಳಿದರು. ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ ತಹಶೀಲ್ದಾರ್‌ ನೀಲಪ್ರಭ ಬಬಲಾದ ಅವರಿಗೆ ಮನವಿ ಪತ್ರವನ್ನು ಸಲ್ಲಿಸಿದರು. ಸೇಡಂ ಉಪವಿಭಾಗೀಯ ಸಂಚಾಲಕ ಮಲ್ಲಿಕಾರ್ಜುನ ಜಲಂಧರ್, ರಾಮಕುಮಾರ ಸಿಂಘೆ, ತಾಲೂಕು ಸಂಚಾಲಕ ತಿಪ್ಪಣ್ಣ ಧನ್ನೇಕರ್, ಜೈಭೀಮ್‌ ರಸ್ತಾಪೂರ, ಸಂತೋಷ ಬಂಡೇರ್, ಸುನೀಲ ಮೆಂಗನ್, ರಾಣೋಜಿ ಹಾದಿಮನಿ, ಸುನೀಲ ದೊಡ್ಡಮನಿ, ಬಸಲಿಂಗ ಕಟ್ಟಿ, ಭೀಮಾಶಂಕರ ಕಾಂಬಳೆ, ಮಹಾದೇವ ಮೇತ್ರೆ, ರಾಕೇಶ ಜಾಯಿ, ಶಿವಲಿಂಗ ಜಿವಣಗಿ, ಶಂಕರ ಜಾನಾ, ಜೆಡಿಎಸ್ ಅಧ್ಯಕ್ಷ ಸಾಬೀರ ಬಾರಿ ಸೇರಿದಂತೆ ಅನೇಕರು ಇದ್ದರು.

ವಾರ್ತಾ ಭಾರತಿ 21 Jan 2026 11:45 pm

Gaza War: ಗಾಜಾ ನೆಲದಲ್ಲಿ ಅತಿ ಶೀಘ್ರದಲ್ಲೇ ಮಹತ್ವದ ಬದಲಾವಣೆ ಸಾಧ್ಯತೆ

ಗಾಜಾ ಪಟ್ಟಿಯಲ್ಲಿ ಪ್ರತಿನಿತ್ಯ ಒಂದಲ್ಲ ಒಂದು ನೋವಿನ ಘಟನೆಗಳು ಸಂಭವಿಸುತ್ತಿದ್ದು, ಇಸ್ರೇಲ್ &ಹಮಾಸ್ ನಡುವಿನ ಯುದ್ಧದಲ್ಲಿ ಗಾಜಾ ಬಡವಾಗಿ ಹೋಗಿದೆ ಎಂಬ ಆರೋಪ ಪದೇ ಪದೇ ಕೇಳಿ ಬರುತ್ತಲೇ ಇದೆ. ಆದರೆ ನಮ್ಮ ಮೇಲೆ ದಾಳಿಗೆ ಬಂದ ಹಮಾಸ್ ಉಗ್ರರಿಗೆ ಸರಿಯಾದ ಪಾಠವನ್ನೇ ನಾವು ಕಲಿಸುತ್ತಿದ್ದೇವೆ ಎಂದು ಇಸ್ರೇಲ್ ಹೇಳುತ್ತಿದೆ. ಹೀಗೆ ಎರಡೂ ಕಡೆ ಪದೇ

ಒನ್ ಇ೦ಡಿಯ 21 Jan 2026 11:39 pm

ಕಲ್ಯಾಣ ಕರ್ನಾಟಕಕ್ಕೆ ಹೊಸ ಯೋಜನೆ ಘೋಷಣೆಗೆ ಕೇಂದ್ರಕ್ಕೆ ಒತ್ತಾಯ

ದುಂಡು ಮೇಜಿನ ಸಭೆಯಲ್ಲಿ ಹೋರಾಟ ಸಮಿತಿಯ ನಿರ್ಧಾರ

ವಾರ್ತಾ ಭಾರತಿ 21 Jan 2026 11:37 pm

ʼಕಾಮಿಡಿ ಕಿಲಾಡಿಗಳುʼ ಶೋ‌ನಲ್ಲಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಆರೋಪ| ವಾಕ್ ಸ್ವಾತಂತ್ರ್ಯದ ನೆಪದಲ್ಲಿ ಅನಿಸಿದ್ದೆಲ್ಲವನ್ನೂ ಮಾಡಬಹುದೇ?; ಹೈಕೋರ್ಟ್ ತರಾಟೆ

ಬೆಂಗಳೂರು: ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಹಾಸ್ಯ ಕಾರ್ಯಕ್ರಮ ‘ಕಾಮಿಡಿ ಕಿಲಾಡಿಗಳು’ ಸಂಚಿಕೆಯೊಂದರಲ್ಲಿ ಮಹಾಭಾರತದ ಪಾತ್ರಗಳು ಹಾಗೂ ಹಿಂದು ದೇವತೆಗಳನ್ನು ಅಪಹಾಸ್ಯ ಮಾಡಿರುವ ಕುರಿತು ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಹೈಕೋರ್ಟ್, ವಾಕ್‌ ಸ್ವಾತಂತ್ರ್ಯದ ನೆಪದಲ್ಲಿ ನೀವು ಏನಾದರೂ ಮಾಡಬಹುದೇ? ಎಂದು ಝೀ ವಾಹಿನಿ ಹಾಗೂ ಕಾರ್ಯಕ್ರಮದ ನಿರ್ದೇಶಕರನ್ನು ಕಟುವಾಗಿ ಪ್ರಶ್ನಿಸಿದೆ. ಇದೇ ವೇಳೆ ವಾಹಿನಿ, ಕಾರ್ಯಕ್ರಮದ ನಿರ್ದೇಶಕರು ಹಾಗೂ ಕಲಾವಿದರ ವಿರುದ್ಧ ಮುಂದಿನ ವಿಚಾರಣೆವರೆಗೆ ಬಲವಂತದ ಕ್ರಮ ಜರುಗಿಸದಂತೆ ಪ್ರಾಸಿಕ್ಯೂಷನ್‌ಗೆ ನಿರ್ದೇಶಿಸಿದೆ. ಬೆಂಗಳೂರಿನ ಸುಬ್ರಹ್ಮಣ್ಯಪುರ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್ ರದ್ದುಕೋರಿ ಜೀ ಎಂಟರ್‌ಪ್ರೈಸಸ್‌ನ ಪ್ರತಿನಿಧಿ ದೀಪಕ್ ಶ್ರೀರಾಮುಲು ಹಾಗೂ ಕಾಮಿಡಿ ಕಿಲಾಡಿಗಳು ಕಾರ್ಯಕ್ರಮದ ನಿರ್ದೇಶಕ ಕೆ. ಅನಿಲ್‌ ಕುಮಾರ್‌ ಸಲ್ಲಿಸಿರುವ ಕ್ರಿಮಿನಲ್ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಮಧ್ಯಂತರ ಆದೇಶ ಮಾಡಿತು. ಕೆಲ ಕಾಲ ಅರ್ಜಿದಾರರ ವಾದ ಆಲಿಸಿದ ನ್ಯಾಯಪೀಠ, ಪ್ರಕರಣಕ್ಕೆ ಸಂಬಂಧಿಸಿದ ದೂರು ಇನ್ನೂ ತನಿಖಾ ಹಂತದಲ್ಲಿದ್ದು, ಅರ್ಜಿದಾರರು ತನಿಖೆಯಲ್ಲಿ ಭಾಗವಹಿಸಬೇಕು. ತ‌ನಿಖೆಯ ನೆಪದಲ್ಲಿ ಅರ್ಜಿದಾರರ ವಿರುದ್ಧ ಮುಂದಿನ ವಿಚಾರಣೆವರೆಗೆ ಬಲವಂತದ ಕ್ರಮಕೈಗೊಳ್ಳಬಾರದು ಎಂದು ಪ್ರಾಸಿಕ್ಯೂಷನ್‌ಗೆ ನಿರ್ದೇಶಿಸಿತಲ್ಲದೆ, ಅರ್ಜಿ ಸಂಬಂಧ ರಾಜ್ಯ ಸರ್ಕಾರಕ್ಕೆ (ಸುಬ್ರಹ್ಮಣ್ಯಪುರ ಪೊಲೀಸರು) ನೋಟಿಸ್ ಹಾಗೂ ದೂರುದಾರ ಪ್ರಶಾಂತ್ ಶಶಿಧರ ನರಗುಂದ ಅವರಿಗೆ ತುರ್ತು ನೋಟಿಸ್ ಜಾರಿಗೊಳಿಸಿ, ವಿಚಾರಣೆಯನ್ನು ಫೆಬ್ರವರಿ 20ಕ್ಕೆ ಮುಂದೂಡಿತು. ವಾಕ್ ಸ್ವಾತಂತ್ರ್ಯದ ಹೆಸರಲ್ಲಿ ಅನಿಸಿದ್ದೆಲ್ಲ ಮಾಡಬಹುದೇ?: ವಿಚಾರಣೆ ವೇಳೆ ಅರ್ಜಿದಾರರ ಪರ ಹಿರಿಯ ವಕೀಲ ಸಂದೇಶ್‌ ಚೌಟ ವಾದ ಮಂಡಿಸಿ, ಕಾಮಿಡಿ ಕಿಲಾಡಿಗಳು ಕಾರ್ಯಕ್ರಮದಲ್ಲಿ ಪ್ರಸಾರಗೊಂಡ ಆಕ್ಷೇಪಾರ್ಹ ಹಾಸ್ಯದ ಸ್ಕಿಟ್ ಮಹಾಭಾರತದ ಒಂದು ಭಾಗವನ್ನು ಗ್ರಾಮೀಣ ಭಾಗದ ಜನ ನಾಟಕಕ್ಕಾಗಿ ಪೂರ್ವಾಭ್ಯಾಸ ಮಾಡುತ್ತಿರುವುದಕ್ಕೆ ಸಂಬಂಧಿಸಿದ್ದಾಗಿದೆ. ಅದರಲ್ಲಿ ಯಾವುದೇ ದೇವತೆಗಳನ್ನು ಅವಹೇಳನ ಮಾಡುವ ಉದ್ದೇಶವಿರಲಿಲ್ಲ ಎಂದರು. ಆಗ ನ್ಯಾಯಪೀಠ, ವಾಕ್‌ ಸ್ವಾತಂತ್ರ್ಯದ ನೆಪದಲ್ಲಿ ನಿಮಗೆ ಅನಿಸಿದ್ದೆಲ್ಲವನ್ನೂ ಮಾಡಬಹುದೇ? ದೇವರು, ಪೌರಾಣಿಕ ವ್ಯಕ್ತಿಗಳನ್ನು ನಿಷ್ಪ್ರಯೋಜಕರು ಎನ್ನುವ ರೀತಿಯಲ್ಲಿ ಬಿಂಬಿಸುವವರಿಗೆ ಅನುಗ್ರಹ ತೋರುವ ಅಗತ್ಯವಿಲ್ಲ? ಅಂಥವರನ್ನು ಏಕೆ ಬಿಡಬೇಕು? ದೂರನ್ನು ಗಮನಿಸಿದ್ದೀರಾ? ಕೃಷ್ಣ ದೇವರನ್ನು ಏನೆಂದು ಬಿಂಬಿಸಲಾಗಿದೆ? ದೂರನ್ನು ಓದಿದ್ದೀರಾ, ಅದು ಓದುವ ರೀತಿಯಲ್ಲಿ ಇದೆಯೇ? ದ್ರೌಪದಿಯನ್ನು ಹೇಗೆ ಬಿಂಬಿಸಿಲಾಗಿದೆ? ಅದನ್ನು ಓದಲಾಗುತ್ತದೆಯೇ? ಹಾಸ್ಯದ ಹೆಸರಿನಲ್ಲಿ ಏನಾದರೂ ಈ ದೇಶದಲ್ಲಿ ನಡೆಯುತ್ತದೆ? ಈ ರೀತಿಯಲ್ಲಿ ವಾಕ್‌ ಸ್ವಾತಂತ್ರ್ಯ ಬಳಕೆ ಸರಿಯೇ? ದೂರನ್ನು ಓದಲಾಗದು, ಅದಾಗ್ಯೂ, ನಾವು ಅನುಕಂಪ ತೋರಬೇಕಲ್ಲವೇ ಎಂದು ತೀಕ್ಷ್ಣವಾಗಿ ಪ್ರಶ್ನಿಸಿತು. ಅದಕ್ಕೆ ಪ್ರತಿಕ್ರಿಯಿಸಿದ ಸಂದೇಶ್ ಚೌಟ ಅವರು, ಹಿಂದು ದೇವರನ್ನು ನೇರವಾಗಿ ಬಿಂಬಿಸಲಾಗಿಲ್ಲ. ನಾಟಕಕ್ಕಾಗಿ ಪಾತ್ರಗಳನ್ನು ಅಭ್ಯಾಸ ಮಾಡುವುದನ್ನು ಕಾಮಿಡಿ ಕಿಲಾಡಿಗಳು ಶೋ‌ನಲ್ಲಿ ತೋರಿಸಲಾಗಿತ್ತು. ಕಾಮಿಡಿ‌ ಕಿಲಾಡಿಗಳು ಕಾರ್ಯಕ್ರಮದ ಐದು ಸರಣಿಗಳು (ಸೀಸನ್) ನಡೆದಿವೆ. ಧಾರ್ಮಿಕ ಭಾವನೆಗಳಿಗೆ ಘಾಸಿ ಉಂಟು ಮಾಡಲು ಇದನ್ನು ಮಾಡಲಾಗಿಲ್ಲ ಎಂದು ಸಮಜಾಯಿಷಿ ನೀಡಿದರು. ಆಗ ನ್ಯಾಯಪೀಠ, ಹಾಗಿದ್ದರೆ ಇವೆಲ್ಲ ಬೇರೇನು ಎಂದು ಪ್ರಶ್ನಿಸಿತು. ವಾದ ಮುಂದುವರಿಸಿದ ಚೌಟ, ಈ ಪ್ರಕರಣದಲ್ಲಿ ಪ್ರಕ್ರಿಯಾ ಲೋಪವಾಗಿದೆ. ಘಟನೆಗೆ ಸಂಬಂಧಿಸಿದಂತೆ ಮೊದಲಿಗೆ ಹುಬ್ಬಳ್ಳಿಯಲ್ಲಿ ದೂರು ದಾಖಲಿಸಲಾಗಿತ್ತು. ಆನಂತರ ಅದನ್ನು ಬೆಂಗಳೂರಿಗೆ ವರ್ಗಾಯಿಸಲಾಗಿದೆ. ಇಂಥ ಪ್ರಕರಣಗಳಲ್ಲಿ ಪ್ರಾಥಮಿಕ ತನಿಖೆಯಾಗಬೇಕು. ಈ ಪ್ರಕರಣದಲ್ಲಿ ಅದೂ ಆಗಿಲ್ಲ ಎಂದರು. ಆಗ ನ್ಯಾಯಪೀಠ, ಪ್ರಾಸಿಕ್ಯೂಷನ್‌ ಸರಿಯಾದ ಪ್ರಕ್ರಿಯೆ ಪಾಲಿಸದೇ ಇರುವುದಕ್ಕೆ ಇಂಥ ಪ್ರಕರಣಗಳು ಮುಕ್ತಾಯ ಕಾಣುತ್ತವೆ. ಪ್ರತಿ ಪ್ರಕರಣದಲ್ಲೂ ನೀವು ಸಮಸ್ಯೆ ಮಾಡುತ್ತೀರಿ. ಇದು ಉದ್ದೇಶಪೂರ್ವಕವೋ ಏನೋ? ಯಾರಿಗೆ ಗೊತ್ತು ಎಂದು ಅಸಮಾಧಾನ ವ್ಯಕ್ತಪಡಿಸಿತು. ವಿಪರೀತ ಹಾಸ್ಯದಿಂದಲೇ ಸಮಸ್ಯೆ ಸೃಷ್ಟಿ: ಸಂದೇಶ ಚೌಟ ಅವರು, ಹಿಂದು ದೇವತೆಗಳ ಕುರಿತು ಜನರು ಪೂರ್ವಾಭ್ಯಾಸ ಮಾಡುವುದಕ್ಕೆ ಸಂಬಂಧಿಸಿದ ಎಪಿಸೋಡ್‌ ಅದಾಗಿದೆ. ಇದು ದೇವರುಗಳಿಗೆ ಸಂಬಂಧಿಸಿದ್ದಲ್ಲ ಎಂದರು. ಇದಕ್ಕೆ ನ್ಯಾಯಪೀಠ, ನ್ಯಾಯಾಲಯಗಳು ಹೆಚ್ಚು ಉದಾರವಾಗಿರುವುದರಿಂದ ಈ ಘಟನೆಗಳು ನಡೆಯುತ್ತಿವೆ. ನಾವು ಸ್ವಲ್ಪ ಕಠಿಣವಾದರೆ ಅದು ಬೇರೆಯದೇ ರೀತಿಯಲ್ಲಿರುತ್ತದೆ. ಕಾಮಿಡಿ ವಿಪರೀತವಾಗುತ್ತಿದೆ. ಇದೇ ಇಲ್ಲಿ ಸಮಸ್ಯೆಯಾಗುತ್ತಿರುವುದು. ಎಲ್ಲವನ್ನೂ ಒಂದೇ ರೀತಿಯಲ್ಲಿ ಕಾಣಲಾಗದು. ಎಲ್ಲವೂ ಇದೇ ರೀತಿ ಆದರೆ ಹಾಗೆ ಇರಲಿ ಬಿಡಿ. ಕಾಮಿಡಿ ಎನ್ನುವುದು ನಿಜ. ಆದರೆ, ಅದು ಇನ್ನೊಬ್ಬರಿಗೆ ಹೊರೆಯಾಗಬಾರದು ಎಂದಿತು. ಇದಕ್ಕೆ ಚೌಟ ಅವರು ಪೂರ್ವಾಭ್ಯಾಸವಷ್ಟೇ ಎಂದರು. ಆಗ ನ್ಯಾಯಪೀಠ, ಪೂರ್ವಭ್ಯಾಸವನ್ನು ಹಂಚಿಕೆ ಮಾಡಿದ್ದೇಕೆ? ಎಂದು ಪ್ರಶ್ನಿಸಿತು. ಪ್ರಕರಣದ ಹಿನ್ನೆಲೆ: ಕಾಮಿಡಿ ಕಿಲಾಡಿಗಳು ಕಾರ್ಯಕ್ರಮದ ಎಪಿಸೋಡ್ ಒಂದರಲ್ಲಿ ಪ್ರಸಾರವಾದ ಹಾಸ್ಯದ ಸ್ಕಿಟ್‌ನ ಪಾತ್ರಧಾರಿಗಳು, ಸ್ಕ್ರಿಪ್ಟ್ ತಯಾರಿಸಿದವರು, ನಿರ್ದೇಶಕರು, ಕನ್ನಡ ವಾಹಿನಿ, ಜಿ5 ಒಟಿಟಿ ಮತ್ತು ಅದಕ್ಕೆ ಸಂಬಂಧಿಸಿದ ವ್ಯಕ್ತಿಗಳು ಮಹಾಭಾರತದಲ್ಲಿನ ಪೂಜ್ಯರ ಪಾತ್ರಗಳನ್ನು ಹಿಂದು ಧರ್ಮದ ಭಾವನೆಗೆ ಧಕ್ಕೆ ಬರುವಂತೆ ಬಿಂಬಿಸಿದ್ದಾರೆ. ಶ್ರೀ ಕೃಷ್ಣ, ಪಾಂಡವರು, ಧೃತರಾಷ್ಟ್ರನ ಪಾತ್ರಧಾರಿಗಳನ್ನು ಅವಾಚ್ಯ ಶಬ್ದದಿಂದ ನಿಂದಿಸಲಾಗಿದೆ. ಶ್ರೀಕೃಷ್ಣನ ಪಾತ್ರದಾರಿಗೆ 2-3 ಸಾರಿ ಕಪಾಳ ಮೋಕ್ಷ ಮತ್ತು ದ್ರೌಪದಿ ಪಾತ್ರದಾರಿಗೆ ಮೈಮೇಲೆ ಸರಾಯಿ ಸಿಂಪಡಿಸಿ ಆ ಪಾತ್ರಗಳಿಗೆ ಅವಹೇಳನ ಮಾಡಿ, ಧಾರ್ಮಿಕ ಭಾವನೆಗೆ ಧಕ್ಕೆ ಉಂಟು ಮಾಡಲಾಗಿದೆ ಎಂದು ಹುಬ್ಬಳ್ಳಿಯ ಕೇಶ್ವಾಪುರದ ಪ್ರಶಾಂತ್‌ ನರಗುಂದ 2025ರ ನವೆಂಬರ್‌ 15ರಂದು ದೂರು ನೀಡಿದ್ದರು. ದೂರು ಆಧರಿಸಿ, ಕಾಮಿಡಿ ಕಿಲಾಡಿಗಳು ಕಲಾವಿದರು, ಸ್ಕ್ರಿಪ್ಟ್‌ ರೈಟರ್‌, ನಿರ್ದೇಶಕ, ಝೀ ಕನ್ನಡ ವಾಹಿನಿ, ಜಿ5 ಒಟಿಟಿ, ಕಾಮಿಡಿ ಕಿಲಾಡಿಗಳು ಪ್ರಸಾರಕರು ಮತ್ತು ಇತರರ ವಿರುದ್ಧ ಬಿಎನ್‌ಎಸ್‌ ಸೆಕ್ಷನ್‌ 299ರ ಅಡಿ ಹುಬ್ಬಳ್ಳಿಯ ಸಬ್‌ ಅರ್ಬನ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಆನಂತರ ಪ್ರಕರಣ ಬೆಂಗಳೂರಿನ ಸುಬ್ರಹ್ಮಣ್ಯಪುರ ಪೊಲೀಸ್ ಠಾಣೆಗೆ ವರ್ಗಾವಣೆಗೊಂಡಿದೆ.

ವಾರ್ತಾ ಭಾರತಿ 21 Jan 2026 11:33 pm

ರಷ್ಯಾ &ಉಕ್ರೇನ್ ಯುದ್ಧ ನಿಲ್ಲಿಸುವ ಬಗ್ಗೆ ಟ್ರಂಪ್ ಮಹತ್ವದ ಮಾಹಿತಿ!

ರಷ್ಯಾ ಮತ್ತು ಉಕ್ರೇನ್ ಯುದ್ಧ ಬರೋಬ್ಬರಿ 4 ವರ್ಷ ಮುಗಿಸಲು ಇನ್ನು ಕೆಲವೇ ದಿನಗಳು ಬಾಕಿ ಇವೆ. ಈ ಯುದ್ಧ ಇಡೀ ಜಗತ್ತಿನ ನೆಮ್ಮದಿ ಹಾಳು ಮಾಡುವ ಜೊತೆಗೆ, ಯುರೋಪ್ ದೇಶಗಳ ನಿದ್ದೆಯನ್ನೇ ಹಾರಿ ಹೋಗುವಂತಹ ವಾತಾವರಣ ಸೃಷ್ಟಿ ಮಾಡಿದೆ. ಅದರಲ್ಲೂ ರಷ್ಯಾ ಮತ್ತು ಉಕ್ರೇನ್ ಯುದ್ಧವು ಶುರುವಾದ ನಂತರ ಸಾಲು ಸಾಲು ಹೊಸ ಹೊಸ ತಿಕ್ಕಾಟಗಳು

ಒನ್ ಇ೦ಡಿಯ 21 Jan 2026 11:28 pm

ಕೊಪ್ಪಳ | ವಿದೇಶಿ ಮಹಿಳೆಯ ಅತ್ಯಾಚಾರ, ಪ್ರವಾಸಿಗನ ಕೊಲೆ ಪ್ರಕರಣವನ್ನು 'ಸಣ್ಣ ಘಟನೆ' ಎಂದ ಸಂಸದ ಹಿಟ್ನಾಳ್ !

ಕೊಪ್ಪಳ : ಕಳೆದ ವರ್ಷ ಸಣಾಪುರ ಕಾಲುವೆ ದಂಡೆಯ ಬಳಿ ನಡೆದ ವಿದೇಶಿ ಮಹಿಳೆ ಸೇರಿ ಇಬ್ಬರ ಮೇಲಿನ ಅತ್ಯಾಚಾರ ಮತ್ತು ಪ್ರವಾಸಿಗನ ಕೊಲೆ ಪ್ರಕರಣ ಒಂದು ಸಣ್ಣ ಘಟನೆಯಾಗಿತ್ತು. ಅದನ್ನು ಮಾಧ್ಯಮಗಳು ದೊಡ್ಡದಾಗಿ ಬಿಂಬಿಸಿದ್ದರಿಂದ ಜಿಲ್ಲೆಯ ಪ್ರವಾಸೋದ್ಯಮಕ್ಕೆ ಹೊಡೆತ ಬಿತ್ತು ಎಂದು ಕೊಪ್ಪಳ ಸಂಸದ ಕೆ.ರಾಜಶೇಖರ್ ಹಿಟ್ನಾಳ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಜಿಲ್ಲಾಡಳಿತ ಭವನದ ಆವರಣದಲ್ಲಿ ಕೇಂದ್ರ ಮತ್ತು ರಾಜ್ಯ ಪ್ರವಾಸೋದ್ಯಮ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ “ಕೊಪ್ಪಳವನ್ನು ಅನ್ವೇಷಿಸಿ” ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುವಾಗ ಈ ಹೇಳಿಕೆ ನೀಡಿದ್ದಾರೆ. ಹಿಂದೆ ಈ ಭಾಗದಲ್ಲಿ ಒಂದು ಅತ್ಯಾಚಾರ ನಡೆದಿತ್ತು. ಮಾಧ್ಯಮಗಳು ಈ ಒಂದು ಸಣ್ಣ ಘಟನೆಯನ್ನು ದೊಡ್ಡದಾಗಿ ಪ್ರಸಾರ ಮಾಡಿದವು. ಇದರಿಂದ ಜಿಲ್ಲೆಯ ಪ್ರವಾಸೋದ್ಯಮದ ಮೇಲೆ ನಕಾರಾತ್ಮಕ ಪರಿಣಾಮ ಬೀರಿದೆ ಎಂದು ಹೇಳಿದ್ದಾರೆ. ಕಳೆದ ವರ್ಷದ ಮಾರ್ಚ್ ತಿಂಗಳಿನಲ್ಲಿ ಐವರು ಪ್ರವಾಸಿಗರ ತಂಡ ಸಣಾಪುರ ಕೆರೆ ಬಳಿ ತೆರಳಿದ್ದಾಗ ಮೂವರು ದುಷ್ಕರ್ಮಿಗಳು ಹಲ್ಲೆ ನಡೆಸಿದ್ದರು. ಅಮೇರಿಕಾದ ಡೇನಿಯಲ್ ಸೇರಿದಂತೆ ಮೂವರು ಪ್ರವಾಸಿಗರನ್ನು ತುಂಗಭದ್ರಾ ಎಡದಂಡೆ ಕಾಲುವೆಗೆ ತಳ್ಳಲಾಗಿತ್ತು. ಈ ವೇಳೆ ಒಡಿಶಾ ಮೂಲದ ಬಿಬಾಶ್ ಎಂಬುವವರು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದರು. ಇದೇ ವೇಳೆ ಇಸ್ರೇಲ್ ಮೂಲದ ಮಹಿಳೆ ಮತ್ತು ಸ್ಥಳೀಯ ಮಹಿಳೆಯೊಬ್ಬರ ಮೇಲೆ ಅತ್ಯಾಚಾರ ಎಸಗಲಾಗಿತ್ತು.

ವಾರ್ತಾ ಭಾರತಿ 21 Jan 2026 10:59 pm

Kerala | ದೀಪಕ್ ಆತ್ಮಹತ್ಯೆ ಪ್ರಕರಣ: ಶಿಮ್ಜಿತಾಳ ವೈರಲ್ ವೀಡಿಯೋ ಮತ್ತು ಸೋಷಿಯಲ್ ಮೀಡಿಯಾ ನ್ಯಾಯ

ಕೇರಳದಲ್ಲಿ 41 ವರ್ಷದ ದೀಪಕ್ ಎಂಬ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬಸ್ ನಲ್ಲಿ ಪ್ರಯಾಣಿಸುತ್ತಿದ್ದಾಗ ಮಹಿಳೆಯೊಬ್ಬರಿಗೆ ದೀಪಕ್ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂಬ ಆರೋಪ ಅವರ ಮೇಲೆ ಹೋರಿಸಲಾಗಿದೆ. ಶಿಮ್ಜಿತಾ ಮುಸ್ತಫಾ ಎಂಬ ಮಹಿಳೆ, ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದಾಗ ದೀಪಕ್ ತನ್ನೊಂದಿಗೆ ಅನುಚಿತವಾಗಿ ವರ್ತಿಸಿದ್ದಾನೆ ಎಂದು ಆರೋಪಿಸಿ ಸೋಷಿಯಲ್ ಮೀಡಿಯಾದಲ್ಲಿ ವೀಡಿಯೊವೊಂದನ್ನು ಪೋಸ್ಟ್ ಮಾಡಿದ್ದರು. ಆ ವೀಡಿಯೋದಲ್ಲಿ ದೀಪಕ್ ಅವರ ಮೊಣಕೈ ತನ್ನ ಎದೆಗೆ ತಾಗುತ್ತಿರುವಂತೆ ಕಾಣುವ ಸೆಲ್ಫಿ ವಿಡಿಯೋ ಆಗಿತ್ತು. ಈ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ದೀಪಕ್ ಆತ್ಮಹತ್ಯೆ ಮಾಡಿದ್ದಾರೆ. ವೀಡಿಯೋ ರೀಚ್ ಗಾಗಿ ಸುಳ್ಳು ಆರೋಪಗಳನ್ನು ಮಾಡಿ ಅಮಾಯಕ ವ್ಯಕ್ತಿಯೊಬ್ಬನ ಸಾವಿಗೆ ಕಾರಣಳಾದ ಶಿಮ್ಜಿತಾ ವಿರುದ್ಧ ಪೊಲೀಸರು ಕೇಸು ದಾಖಲಿಸಿದ್ದು, ಆಕೆಯನ್ನು ಬಂಧಿಸಿದ್ದಾರೆ. ಬಂಧನದ ನಂತರ, ಕೋಝಿಕ್ಕೋಡ್‌ನ ಕುನ್ನಮಂಗಲಂ ಪ್ರಥಮ ದರ್ಜೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಶಿಮ್ಜಿತಾ ಅವರಿಗೆ 14 ದಿನಗಳ ಕಾಲ ರಿಮಾಂಡ್ ವಿಧಿಸಿದ್ದು, ಅವರನ್ನು ಮಂಜೇರಿ ಜೈಲಿಗೆ ವರ್ಗಾಯಿಸಲಾಗುವುದು. ಜನವರಿ 19 ರಂದು, ಕೋಝಿಕ್ಕೋಡ್ ವೈದ್ಯಕೀಯ ಕಾಲೇಜು ಪೊಲೀಸರು ದೀಪಕ್ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ಶಿಮ್ಜಿತಾ ವಿರುದ್ಧ ಪ್ರಥಮ ಮಾಹಿತಿ ವರದಿ ಸಲ್ಲಿಸಿದರು. ಎಫ್‌ಐಆರ್ ನಂತರ ಶಿಮ್ಜಿತಾ ಪರಾರಿಯಾಗಿದ್ದಾರೆ ಎಂದು ವರದಿಯಾಗಿತ್ತು. ವರದಿಗಳ ಪ್ರಕಾರ, ಬುಧವಾರ ವಡಗರದಲ್ಲಿ ಸಂಬಂಧಿಕರ ಮನೆಯಿಂದ ಆಕೆಯನ್ನು ಬಂಧಿಸಲಾಯಿತು. ಅವರ ಬಂಧನಕ್ಕೆ ಕೆಲವು ಗಂಟೆಗಳ ಮೊದಲು, ಪೊಲೀಸರು ಅವರ ವಿರುದ್ಧ ಲುಕ್ಔಟ್ ನೋಟಿಸ್ ಹೊರಡಿಸಿದ್ದರು. ಆಕೆ ಪರಾರಿಯಾಗಿದ್ದ ನಂತರ ಪೊಲೀಸರು ರಾಜ್ಯದಲ್ಲಿ ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿದ್ದರು. ಕೋಝಿಕ್ಕೋಡ್ ಜಿಲ್ಲಾ ನ್ಯಾಯಾಲಯವು ಅವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಪರಿಗಣಿಸುವ ಒಂದು ದಿನದ ಮೊದಲು ಬಂಧನ ನಡೆದಿದೆ. ಶಿಮ್ಜಿತಾ ಆನ್‌ಲೈನ್‌ನಲ್ಲಿ ವೀಡಿಯೊ ಪೋಸ್ಟ್ ಮಾಡಿದ ಕೆಲವು ದಿನಗಳ ನಂತರ ಅಂದರೆ ಜನವರಿ 18 ರಂದು ದೀಪಕ್ ಆತ್ಮಹತ್ಯೆ ಮಾಡಿಕೊಂಡಿದ್ದರು. ದೀಪಕ್ ಅವರ ಕುಟುಂಬದವರ ಪ್ರಕಾರ, ಜನವರಿ 16 ರಂದು ದೀಪಕ್ ಕೋಝಿಕ್ಕೋಡ್ ನಿಂದ ಕಣ್ಣೂರಿಗೆ ಕೆಲಸಕ್ಕಾಗಿ ಪ್ರಯಾಣಿಸುತ್ತಿದ್ದಾಗ ಈ ಘಟನೆ ನಡೆದಿದೆ. ಶಿಮ್ಜಿತಾ ಅದೇ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದರು. ವಿಡಿಯೊದಲ್ಲೇನಿದೆ? ಶಮ್ಜಿತಾ ಪೋಸ್ಟ್ ಮಾಡಿರುವ ವೀಡಿಯೋದಲ್ಲಿ ಆಕೆ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದಾಗ ಒಬ್ಬ ವ್ಯಕ್ತಿ ಆಕೆಗೆ ತಾಕುತ್ತಿರುವಂತೆ ಕಾಣುತ್ತದೆ. ಆಮೇಲೆ ಸೆಲ್ಫಿ ವಿಡಿಯೋದಲ್ಲಿ ಆತನ ಮೊಣಕೈ ಆಕೆಯ ಎದೆಭಾಗಕ್ಕೆ ತಾಗುವಂತೆ ಕಾಣುತ್ತದೆ. ಆ ವ್ಯಕ್ತಿ ಇದು ಬೇಕೂಂತ ಮಾಡಿದ್ದು. ಇಂಥವರಿಗೆ ಬುದ್ಧಿ ಕಲಿಸುವುದಕ್ಕಾಗಿ ವೀಡಿಯೋ ಶೇರ್ ಮಾಡಿದ್ದು ಅಂತ ಶಿಮ್ಜಿತಾ ವೀಡಿಯೋದಲ್ಲಿ ಹೇಳಿದ್ದಾರೆ. ವೀಡಿಯೋ ವೈರಲ್ ಆದ ನಂತರ ದೀಪಕ್ ಮಾನಸಿಕವಾಗಿ ನೊಂದಿದ್ದರು. ಅವರು ಸಾರ್ವಜನಿಕವಾಗಿ ಅವಮಾನಿಸಲ್ಪಟ್ಟರು ಎಂದು ದೀಪಕ್ ಅವರ ಕುಟುಂಬ ಆರೋಪಿಸಿದೆ. ಈ ಬಗ್ಗೆ ದೂರು ದಾಖಲಿಸಿ ಕಠಿಣ ಕ್ರಮ ಕೈಗೊಳ್ಳುವಂತೆ ದೀಪಕ್ ಕುಟುಂಬ ಒತ್ತಾಯಿಸಿತ್ತು. ತನಿಖೆಯ ಭಾಗವಾಗಿ ಪೊಲೀಸರು ಜನವರಿ 19 ರಂದು ದೀಪಕ್ ಅವರ ಪೋಷಕರ ಹೇಳಿಕೆಗಳನ್ನು ದಾಖಲಿಸಿದ್ದಾರೆ. ಏತನ್ಮಧ್ಯೆ, ಮಾನವ ಹಕ್ಕುಗಳ ಆಯೋಗವು ವಕೀಲರಾದ ವಿ ದೇವದಾಸ್ ಮತ್ತು ಅಬ್ದುಲ್ ರಹೀಮ್ ಪೂಕತ್ ಅವರು ಸಲ್ಲಿಸಿದ ದೂರುಗಳ ಮೇರೆಗೆ ಘಟನೆಯ ಬಗ್ಗೆ ತನಿಖೆ ನಡೆಸುವಂತೆ ಉತ್ತರ ವಲಯ ಡಿಐಜಿಗೆ ನಿರ್ದೇಶನ ನೀಡಿದೆ. ಆಯೋಗದ ನ್ಯಾಯಾಂಗ ಸದಸ್ಯ ಕೆ ಬೈಜುನಾಥ್ ಅವರು ಒಂದು ವಾರದೊಳಗೆ ವರದಿ ಕೋರಿದ್ದಾರೆ. ಅನುಚಿತ ವರ್ತನೆಗೆ ವೀಡಿಯೋ ಸಾಕ್ಷಿ? ಇಲ್ಲಿ ವಿವಾದದ ಪ್ರಾಥಮಿಕ ಅಂಶವೆಂದರೆ ಶಿಮ್ಜಿತಾ ಅವರ ವೀಡಿಯೊ. ದೀಪಕ್ ಉದ್ದೇಶಪೂರ್ವಕವಾಗಿ ತನ್ನ ಎದೆಗೆ ಮೊಣಕೈ ತಾಗಿಸಿದ್ದಾರೆ ಎಂಬ ಆರೋಪದಲ್ಲಿ ಅವರು ದೃಢವಾಗಿ ನಿಂತಿದ್ದರೂ, ವೀಡಿಯೊವನ್ನು ವೀಕ್ಷಿಸಿದ ಹಲವಾರು ಇಂಟರ್ನೆಟ್ ಬಳಕೆದಾರರು ಅದು ಆಕಸ್ಮಿಕ ಎಂದು ಹೇಳಿಕೊಂಡಿದ್ದಾರೆ. ಯೂಟ್ಯೂಬ್ ಕಂಟೆಂಟ್ ಕ್ರಿಯೇಟರ್ ಮತ್ತು ಇನ್‌ಸ್ಟಾಗ್ರಾಮ್ ಇನ್ ಫ್ಲೂಯೆನ್ಸರ್ ಯಾವ ರೀತಿ ಸುಳ್ಳು ಆಪಾದನೆ ಮಾಡಿದ್ದಾರೆ? ದೀಪಕ್ ಎಂಬ ಪ್ರಯಾಣಿಕ ಯಾವ ರೀತಿ ಬಸ್ಸಿನಲ್ಲಿ ನಿಂತಿದ್ದರು. ಶಿಮ್ಜಿತಾ ಯಾವ ರೀತಿ ನಿಂತಿದ್ದಾರೆ ಎಂಬುದರ ಬಗ್ಗೆ ಹಲವಾಪು ಬಳಕೆದಾರರು ವಿಶ್ಲೇಷಣೆ ಮಾಡಿದ್ದಾರೆ . ಕೆಲವು ಬಳಕೆದಾರರು ಅನುಚಿತವಾಗಿ ಸ್ಪರ್ಶಿಸಲ್ಪಟ್ಟಾಗ ಮಹಿಳೆ ಹೇಗೆ ಇಷ್ಟೊಂದು ಕೂಲ್ ಆಗಿ ಕಾಣಿಸಿಕೊಳ್ಳಬಹುದು ಎಂದು ಕೇಳಿದ್ದಾರೆ. ಶಿಮ್ಜಿತಾ ಅವರು ವೀಡಿಯೊ ರೆಕಾರ್ಡ್ ಮಾಡಿದ ನಂತರ ಪೊಲೀಸರಿಗೆ ಘಟನೆಯ ಬಗ್ಗೆ ಮಾಹಿತಿ ನೀಡಿದ್ದೆ ಎಂದು ಹೇಳುತ್ತಿದ್ದರೂ, ಅದರ ಬಗ್ಗೆ ಯಾವುದೇ ದೃಢೀಕರಣವಿಲ್ಲ. ಬಸ್ಸಿನಲ್ಲಿ ಅಂಥಾ ಘಟನೆ ನಡೆದಿರುವ ಬಗ್ಗೆ ನಮ್ಮ ಗಮನಕ್ಕೂ ಆಕೆ ತಂದಿರಲಿಲ್ಲ ಎಂದು ಬಸ್ಸಿನ ಕಂಡೆಕ್ಟರ್ ಹೇಳಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ನ್ಯಾಯ ಕೇಳುವ ದಾರಿ ಯಾವುದೇ ವಿಷಯಗಳನ್ನು ಸಂಬಂಧಪಟ್ಟವರ ಗಮನಕ್ಕೆ ತರದೇ ಏಕಾಏಕಿ ಅದನ್ನು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿ ಶಿಮ್ಜಿತಾ ತಪ್ಪು ಮಾಡಿದ್ದಾರೆ. ಬಸ್ಸಿನಲ್ಲಿ ಕಿರುಕುಳ ನೀಡುವವರಿಗೆ ಬುದ್ಧಿ ಕಲಿಸಬೇಕು ಎಂದೇ ವಿಡಿಯೊ ಪೋಸ್ಟ್ ಮಾಡಿದ್ದು ಎಂದು ಹೇಳುವ ಕಂಟೆಂಟ್ ಕ್ರಿಯೇಟರ್ ಗಳ ಸಂಖ್ಯೆಯೂ ಹೆಚ್ಚಾಗಿದೆ. ಸೋಷಿಯಲ್ ಮೀಡಿಯಾ ಬಳಕೆದಾರರು ಅದರ ಸತ್ಯಾಸತ್ಯತೆಯನ್ನು ಪರಿಶೀಲಿಸದೆ ಸೈಬರ್ ದಾಳಿಮಾಡುತ್ತಾರೆ. ಇದರಲ್ಲಿ ತಪ್ಪು ಮಾಡದೇ ಇದ್ದ ಅಮಾಯಕ ವ್ಯಕ್ತಿ ಇದ್ದರೆ ಆತನಿಗೆ ಆಗುವ ಮಾನಸಿಕ ನೋವನ್ನು ಯಾರೂ ಅರ್ಥ ಮಾಡಿಕೊಳ್ಳುವುದಿಲ್ಲ ಇದು ಆರೋಪವನ್ನು ಕಟ್ಟುನಿಟ್ಟಾಗಿ ಸ್ಥಾಪಿಸದಿದ್ದಾಗ ಅಥವಾ ಎರಡೂ ಕಡೆಯಿಂದ ಪ್ರತಿಕ್ರಿಯೆಯನ್ನು ಪಡೆಯದೇ ಮಾಡಿದಾಗ ಅಂತಹ ವ್ಯಾಖ್ಯಾನವು ವಿಶೇಷವಾಗಿ ಸಮಸ್ಯಾತ್ಮಕವಾಗಿರುತ್ತದೆ. ಇಂಥಾ ವಿಡಿಯೋ ಆರೋಪ ಮತ್ತು ಪುರಾವೆಗಳ ನಡುವಿನ ರೇಖೆಯನ್ನು ಮಸುಕುಗೊಳಿಸುತ್ತದೆ. ಆದಾಗ್ಯೂ, ನಾವು ಸಾಮಾಜಿಕ ಮಾಧ್ಯಮದ ಗದ್ದಲವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬೇಕಾದರೂ, ಸಾರ್ವಜನಿಕ ಕಿರುಕುಳ ಮತ್ತು ಲೈಂಗಿಕ ದೌರ್ಜನ್ಯದ ವೀಡಿಯೊಗಳನ್ನು ಪೋಸ್ಟ್ ಮಾಡಲು ಹಲವಾರು ಮಹಿಳೆಯರು ಹೆಚ್ಚಾಗಿ ಸಾಮಾಜಿಕ ಮಾಧ್ಯಮವನ್ನು ಏಕೆ ಆಶ್ರಯಿಸುತ್ತಾರೆ ಎಂಬುದನ್ನು ಪರಿಶೀಲಿಸುವುದು ಸಹ ಅಗತ್ಯವಾಗಿದೆ. ಮಹಿಳೆಯರು ಇಂತಹ ವೀಡಿಯೊಗಳನ್ನು ಏಕೆ ಪೋಸ್ಟ್ ಮಾಡುತ್ತಾರೆ? ಶಿಮ್ಜಿತಾ ಅವರನ್ನು ಬೆಂಬಲಿಸಿರುವ ಹಲವಾರು ಮಹಿಳೆಯರು, ಸಾರ್ವಜನಿಕ ಸಾರಿಗೆಯಲ್ಲಿ ಇಂಥಾ ಘಟನೆಗಳು ಆಗಾಗ್ಗೆ ಆಗುತ್ತಿರುತ್ತವೆ ಎಂದು ಹೇಳುತ್ತಾರೆ. ಅಂತಹ ಪ್ರಕರಣಗಳನ್ನು ನಿರ್ವಹಿಸುವಲ್ಲಿ ಪೊಲೀಸ್ ಮತ್ತು ನ್ಯಾಯಾಂಗ ವ್ಯವಸ್ಥೆಯ ವೈಫಲ್ಯ ಅನೇಕ ಮಹಿಳೆಯರು ಈ ರೀತಿ ವೀಡಿಯೊವನ್ನು ಪೋಸ್ಟ್ ಮಾಡಲು ಪ್ರಚೋದಿಸುತ್ತದೆ. ಇದು ಸಂಭಾವ್ಯ ಅಪರಾಧಿಗಳನ್ನು ನಿಯಂತ್ರಣದಲ್ಲಿಡುತ್ತದೆ ಎಂದು ಅವರು ವಾದಿಸುತ್ತಾರೆ. 2023 ರಲ್ಲಿ ಕೇರಳದಲ್ಲಿ ಬಸ್ಸಿನೊಳಗೆ ಹಸ್ತಮೈಥುನ ಮಾಡಿದ್ದ ಸವಾದ್ ಎಂಬ ವ್ಯಕ್ತಿಯ ಪ್ರಕರಣ ನೆನಪಿರಬಹುದು. ನಟಿ ಮತ್ತು ಮಾಡೆಲ್ ಆಗಿರುವ ನಂದಿತಾ ಶಂಕರ್ ಈ ಘಟನೆಯನ್ನು ವಿವರಿಸುವ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಅಪ್‌ಲೋಡ್ ಮಾಡಿದ ನಂತರ ಈ ಘಟನೆ ಸಾರ್ವಜನಿಕ ಗಮನಕ್ಕೆ ಬಂದಿತು. ಆದರೆ ನಂತರದ ದಿನಗಳಲ್ಲಿ, ಆಕೆಯ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ ಫೋಟೋದಲ್ಲಿ ಆಕೆ ಧರಿಸಿದ ಬಟ್ಟೆ ಬಗ್ಗೆ ಹಲವಾರು ಮಂದಿ ಟೀಕಿಸಿದ್ದರು. 2025 ರಲ್ಲಿ, ಬೇರೆ ಬಸ್ಸಿನೊಳಗೆ ಮಹಿಳೆಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ್ದಕ್ಕಾಗಿ ಸವಾದ್ ಮೇಲೆ ಮತ್ತೊಮ್ಮೆ ಪ್ರಕರಣ ದಾಖಲಾದಾಗ, ಎರಡು ವರ್ಷಗಳ ಕಾಲ ಸಾಮಾಜಿಕವಾಗಿ ಅನುಭವಿಸಿದ ಆಘಾತದ ಬಗ್ಗೆ ಹೇಳಿಕೊಂಡಿದ್ದರು ನಂದಿತಾ. ಸಮಾಜದಿಂದ ಸಾಕ್ಷ್ಯಾಧಾರಗಳಿಗಾಗಿ ಸಾಮೂಹಿಕ ಬೇಡಿಕೆ ಇರುವುದರಿಂದ ಮಹಿಳೆಯರು ಇಂತಹ ವೀಡಿಯೊಗಳನ್ನು ಚಿತ್ರೀಕರಿಸುವುದು ಈಗ ಹೆಚ್ಚಾಗಿದೆ. ಆದರೆ ನಂತರದ ಸಾಮಾಜಿಕ ಮಾಧ್ಯಮ ಪ್ರತಿಕ್ರಿಯೆಗಳು ಹೆಚ್ಚಾಗಿ ವಿರೋಧಾತ್ಮಕವಾಗಿರುತ್ತವೆ. ಮಹಿಳೆಯ ಹೇಳಿಕೆಗಳ ಸತ್ಯಾಸತ್ಯತೆಯನ್ನು ಲೆಕ್ಕಿಸದೆ, ಹೆಚ್ಚಿನ ಸಂದರ್ಭಗಳಲ್ಲಿ, ಅವಳ ಮೇಲೆ ಸೈಬರ್ ದಾಳಿ ನಡೆಯುತ್ತದೆ. ಸಾಮಾಜಿಕ ಮಾಧ್ಯಮ ಚರ್ಚೆಗಳು ನಮ್ಮ ಸಾಮಾಜಿಕ-ರಾಜಕೀಯ ತಿಳುವಳಿಕೆ ನೀಡುತ್ತವೆ, ಧೈರ್ಯ ತುಂಬುತ್ತವೆ ಎಂಬುದು ನಿಜ. ಆದರೆ ಅಗತ್ಯವಿದ್ದಾಗ ನಾವು ಸಂಯಮವನ್ನು ಕಾಪಾಡಿಕೊಳ್ಳಬೇಕಿದೆ. ಎಲ್ಲಾ ವಿಷಯಗಳಿಗೆ ತಕ್ಷಣದ ಪ್ರತಿಕ್ರಿಯೆಗಳು ಅಗತ್ಯವಿಲ್ಲ, ಏಕೆಂದರೆ ಕೆಲವು ವಿಷಯಗಳಿಗೆ ಎಚ್ಚರಿಕೆಯ ವಿಶ್ಲೇಷಣೆ ಮತ್ತು ಸೂಕ್ಷ್ಮತೆ ಅಗತ್ಯ.

ವಾರ್ತಾ ಭಾರತಿ 21 Jan 2026 10:59 pm

ದಾವೋಸ್‌ನಲ್ಲಿ ಗ್ರೀನ್‌ಲ್ಯಾಂಡ್‌ಗೆ ಹಕ್ಕು ಮಂಡಿಸಿದ ಡೊನಾಲ್ಡ್‌ ಟ್ರಂಪ್;‌ ಇಲ್ಲ ಅಂದವರನ್ನು ನೆನಪಿಟ್ಟುಕೊಳ್ಳುವುದಾಗಿ ಬೆದರಿಕೆ!

ಸದಾಶಿವನಿಗೆ ಅದೇ ಜ್ಞಾನ ಎಂಬಂತೆ, ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ದಾವೋಸ್‌ ವಿಶ್ವ ಆರ್ಥಿಕ ವೇದಿಕೆ ಶೃಂಗಸಭೆಯ ತಮ್ಮ ಭಾಷಣದಲ್ಲೂ ಗ್ರೀನ್‌ಲ್ಯಾಂಡ್‌ನ ಭಜನೆ ಮಾಡಿದ್ದಾರೆ. ಗ್ರೀನ್‌ಲ್ಯಾಂಡ್‌ ಅಮೆರಿಕಕ್ಕೆ ಸೇರಲೇಬೇಕು ಎಂದು ಪಟ್ಟು ಹಿಡಿದ ಡೊನಾಲ್ಡ್‌ ಟ್ರಂಪ್‌, ಇದಕ್ಕೆ ಇಲ್ಲ ಎನ್ನುವವರನ್ನು ಅಮೆರಿಕ ಯಾವಾಗಲೂ ನೆನೆಪಿಟ್ಟುಕೊಂಡಿರುತ್ತದೆ ಎಂದು ಬೆದರಿಕೆ ಕೂಡ ಹಾಕಿದ್ದಾರೆ. ಇದೇ ವೇಳೆ ಅಮೆರಿಕ ಅಧ್ಯಕ್ಷರು ಭಾರತ-ಪಾಕಿಸ್ತಾನ ಕದನ ವಿರಾಮ ಒಪ್ಪಂದ ಏರ್ಪಡಿಸಿದ್ದಾಗಿ ಮತ್ತೊಮ್ಮೆ ಪ್ರತಿಪಾದಿಸಿದ್ದಾರೆ. ಇಲ್ಲಿದೆ ಮಾಹಿತಿ.

ವಿಜಯ ಕರ್ನಾಟಕ 21 Jan 2026 10:50 pm

‘ಶಂಕರಾಚಾರ್ಯ’ ಹೆಸರು ಬಳಕೆ ಪ್ರಶ್ನಿಸಿ ಕಾನೂನು ನೋಟಿಸ್; ಕಾನೂನು ಕ್ರಮದ ಎಚ್ಚರಿಕೆ ನೀಡಿದ ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿ

ಪ್ರಯಾಗ್‌ರಾಜ್, ಜ. 21: ತಾನು ‘‘ಶಂಕರಾಚಾರ್ಯ’’ ಎಂಬ ಹೆಸರನ್ನು ಬಳಸುತ್ತಿರುವುದನ್ನು ಪ್ರಶ್ನಿಸಿ ಮಾಘ ಮೇಳ ಆಡಳಿತ ಸಮಿತಿಯು ನೀಡಿರುವ ಕಾನೂನು ನೋಟಿಸ್‌ಗೆ ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿ ತೀವ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ಈ ನೋಟಿಸ್ ಅನ್ನು ಹಿಂದಕ್ಕೆ ಪಡೆಯದಿದ್ದರೆ, ತಾನು ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸುವುದರ ಜೊತೆಗೆ ಅಧಿಕಾರಿಗಳ ವಿರುದ್ಧ ಮಾನನಷ್ಟ ಮೊಕದ್ದಮೆಯನ್ನೂ ಹೂಡುತ್ತೇನೆ ಎಂದು ಅವರು ಎಚ್ಚರಿಸಿದ್ದಾರೆ. ‘‘ಶಂಕರಾಚಾರ್ಯ’’ ಪದವಿಯನ್ನು ಸಾಂಪ್ರದಾಯಿಕವಾಗಿ ಸನಾತನ ಧರ್ಮದ ಅತ್ಯುನ್ನತ ಧಾರ್ಮಿಕ ಮುಖ್ಯಸ್ಥರಿಗೆ ನೀಡಲಾಗುತ್ತದೆ. ಮಂಗಳವಾರ, ‘‘ಶಂಕರಾಚಾರ್ಯ’’ ಹೆಸರಿನ ಬಳಕೆಯನ್ನು ಪ್ರಶ್ನಿಸಿ ಪ್ರಯಾಗ್‌ರಾಜ್ ಮೇಳ ಪ್ರಾಧಿಕಾರವು ಸ್ವಾಮಿ ಅವಿಮುಕ್ತೇಶ್ವರಾನಂದರಿಗೆ ನೋಟಿಸ್ ಕಳುಹಿಸಿದ್ದು, ಆ ಹೆಸರನ್ನು ಬಳಸಲು ನಿಮಗಿರುವ ಅರ್ಹತೆಗಳ ಕುರಿತು ವಿವರಣೆ ನೀಡುವಂತೆ ಸೂಚಿಸಿತ್ತು. ಬುಧವಾರ ಸ್ವಾಮಿ ಅವಿಮುಕ್ತೇಶ್ವರಾನಂದ ಅವರು ಈ ನೋಟಿಸ್‌ಗೆ ಎಂಟು ಪುಟಗಳ ಉತ್ತರ ನೀಡಿದ್ದಾರೆ. ನೋಟಿಸ್ ಅನ್ನು ಅವಮಾನಕರವೆಂದು ಬಣ್ಣಿಸಿರುವ ಅವರು, ಇದು ಸನಾತನ ಧರ್ಮದ ಅನುಯಾಯಿಗಳ ನಂಬಿಕೆಯಲ್ಲಿ ಹಸ್ತಕ್ಷೇಪ ಮಾಡುವ ಪ್ರಯತ್ನಕ್ಕೆ ಸಮಾನವಾಗಿದೆ ಎಂದು ಆರೋಪಿಸಿದ್ದಾರೆ. ಸುಪ್ರೀಂ ಕೋರ್ಟ್ ಆದೇಶಕ್ಕೆ ಅನುಗುಣವಾಗಿಯೇ ನೋಟಿಸ್ ನೀಡಲಾಗಿದೆ ಎಂದು ಮಾಘ ಮೇಳ ಪ್ರಾಧಿಕಾರದ ಅಧಿಕಾರಿಗಳು ತಿಳಿಸಿದ್ದಾರೆ. ಸ್ವಾಮಿ ಅವಿಮುಕ್ತೇಶ್ವರಾನಂದರನ್ನು ಜ್ಯೋತಿರ್ಮಠದ ಶಂಕರಾಚಾರ್ಯರಾಗಿ ಮಾನ್ಯ ಮಾಡಲಾಗಿಲ್ಲ ಎಂದು ನೋಟಿಸ್‌ನಲ್ಲಿ ಉಲ್ಲೇಖಿಸಲಾಗಿದೆ. ‘‘ಶಂಕರಾಚಾರ್ಯ’’ ಪದವಿಯನ್ನು ನೀವು ಯಾವ ಆಧಾರದ ಮೇಲೆ ನಿಮ್ಮದೆಂದು ಹೇಳಿಕೊಳ್ಳುತ್ತೀರಿ ಎಂಬುದಾಗಿ ನೋಟಿಸ್ ಪ್ರಶ್ನಿಸಿದ್ದು, 24 ಗಂಟೆಗಳ ಒಳಗೆ ಉತ್ತರ ನೀಡುವಂತೆ ಸೂಚಿಸಿದೆ. ಜ್ಯೋತಿರ್ಮಠ ಅಥವಾ ಜ್ಯೋತಿಷ್ ಪೀಠದ ನಿಜವಾದ ಶಂಕರಾಚಾರ್ಯ ಯಾರು ಎಂಬ ಕುರಿತು ಜಗತ್ ಗುರು ಶಂಕರಾಚಾರ್ಯ ಪಿ.ಎಸ್.ಎಸ್.ಎನ್. ಸರಸ್ವತಿ ಮತ್ತು ಸ್ವಾಮಿ ವಾಸುದೇವಾನಂದ ಸರಸ್ವತಿ ನಡುವೆ ದೀರ್ಘಕಾಲದಿಂದ ವಿವಾದ ಮುಂದುವರಿದಿದೆ.

ವಾರ್ತಾ ಭಾರತಿ 21 Jan 2026 10:40 pm

West Bengal | S I R ಗೆ ಹೆದರಿ ಆತ್ಮಹತ್ಯೆ: ಚುನಾವಣಾ ಆಯೋಗದ ವಿರುದ್ಧ ಮೊಕದ್ದಮೆ

ಕೋಲ್ಕತಾ, ಜ. 21: ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್)ಗೆ ಹೆದರಿ 82 ವರ್ಷದ ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆಗೆ ಸಂಬಂಧಿಸಿ ಪಶ್ಚಿಮ ಬಂಗಾಳದ ಪುರುಲಿಯ ಜಿಲ್ಲೆಯಲ್ಲಿ ಚುನಾವಣಾ ಆಯೋಗದ ವಿರುದ್ಧ ಮೊಕದ್ದಮೆ ದಾಖಲಾಗಿದೆ. ಮೃತರ ಮಗ ಪಾರ ಪೊಲೀಸ್ ಠಾಣೆಯಲ್ಲಿ ದಾಖಲಿಸಿದ ದೂರಿನ ಆಧಾರದಲ್ಲಿ, ಮೃತಪಟ್ಟ 23 ದಿನಗಳ ಬಳಿಕ ಮೊಕದ್ದಮೆ ದಾಖಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಬುಧವಾರ ತಿಳಿಸಿದ್ದಾರೆ. ‘‘ಮೊಕದ್ದಮೆಯಲ್ಲಿ ಚುನಾವಣಾ ಆಯೋಗದ ಅಧಿಕಾರಿಗಳ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ಹಾಗೂ ಕ್ರಿಮಿನಲ್ ಪಿತೂರಿ ಆರೋಪಗಳನ್ನು ಹೊರಿಸಲಾಗಿದೆ. ಎಫ್‌ಐಆರ್‌ನಲ್ಲಿ ಯಾವುದೇ ಅಧಿಕಾರಿಯನ್ನು ಹೆಸರಿಸಲಾಗಿಲ್ಲ’’ ಎಂದು ಅವರು ಹೇಳಿದರು.

ವಾರ್ತಾ ಭಾರತಿ 21 Jan 2026 10:40 pm

ಗ್ರೀನ್‌ಲ್ಯಾಂಡ್ ವಿಚಾರದಲ್ಲಿ ಡೆನ್ಮಾರ್ಕ್ ಕೃತಘ್ನತೆಯಿಂದ ವರ್ತಿಸಿದೆ: ದಾವೊಸ್ ಸಮಾವೇಶದಲ್ಲಿ ಟ್ರಂಪ್ ಆಕ್ರೋಶ

ಗ್ರೀನ್‌ಲ್ಯಾಂಡ್ ಸ್ವಾಧೀನಕ್ಕೆ ಬಲಪ್ರಯೋಗಿಸುವುದಿಲ್ಲವೆಂದು ಭರವಸೆ ನೀಡಿದ ಅಮೆರಿಕ ಅಧ್ಯಕ್ಷ

ವಾರ್ತಾ ಭಾರತಿ 21 Jan 2026 10:37 pm

ಕರ್ನಾಟಕ ಕ್ರೀಡಾಕೂಟ 2025–26 | ಬಾಸ್ಕೆಟ್‌ಬಾಲ್: ಯಂಗ್ ಒರಿಯನ್ಸ್, ಮೈಸೂರು ಚಾಂಪಿಯನ್ಸ್

ತುಮಕೂರು, ಜ. 21: ತುಮಕೂರಿನಲ್ಲಿ ನಡೆಯುತ್ತಿರುವ ಕರ್ನಾಟಕ ಕ್ರೀಡಾಕೂಟ 2025–26ರ ಬಾಸ್ಕೆಟ್‌ಬಾಲ್ ಪಂದ್ಯಾವಳಿಯಲ್ಲಿ ಯಂಗ್ ಒರಿಯನ್ಸ್ ಮತ್ತು ಮೈಸೂರು ತಂಡಗಳು ಕ್ರಮವಾಗಿ ಪುರುಷರ ಹಾಗೂ ಮಹಿಳೆಯರ ವಿಭಾಗದಲ್ಲಿ ಚಾಂಪಿಯನ್‌ಗಳಾಗಿವೆ. ಸಿದ್ದಾರ್ಥ ಮೆಡಿಕಲ್ ಕಾಲೇಜ್ ಮೈದಾನದಲ್ಲಿ ನಡೆದ ಪುರುಷರ ಫೈನಲ್ ಪಂದ್ಯದಲ್ಲಿ ಯಂಗ್ ಒರಿಯನ್ಸ್ ತಂಡ 5 ಅಂಕಗಳ ಅಂತರದಿಂದ ಬ್ಯಾಂಕ್ ಆಫ್ ಬರೋಡಾ ತಂಡವನ್ನು ಮಣಿಸಿ ಸ್ವರ್ಣ ಪದಕ ಗೆದ್ದುಕೊಂಡಿತು. ಆಟದ ಕೊನೆಯವರೆಗೂ ಕುತೂಹಲ ಕೆರಳಿಸಿದ ಪಂದ್ಯದಲ್ಲಿ ಯಂಗ್ ಒರಿಯನ್ಸ್ 76–71 ಅಂಕಗಳಿಂದ ರೋಚಕ ಜಯ ದಾಖಲಿಸಿತು. ಆರಂಭದಿಂದಲೇ ಉತ್ತಮ ಪ್ರದರ್ಶನ ನೀಡಿದ ಯಂಗ್ ಒರಿಯನ್ಸ್, ಮೊದಲಾರ್ಧದಲ್ಲಿ 39–30 ಅಂಕಗಳಿಂದ ಮುನ್ನಡೆ ಸಾಧಿಸಿತು. ದ್ವಿತೀಯಾರ್ಧದಲ್ಲಿ ಬ್ಯಾಂಕ್ ಆಫ್ ಬರೋಡಾ ತೀವ್ರ ಪ್ರತಿರೋಧ ಒಡ್ಡಿದರೂ ವೀರೋಚಿತ ಸೋಲು ಅನುಭವಿಸಿತು. ಯಂಗ್ ಒರಿಯನ್ಸ್ ಪರ ಅಭಿಷೇಕ್ 24 ಹಾಗೂ ಗೌತಮ್ 16 ಅಂಕ ಗಳಿಸಿ ಗೆಲುವಿನ ರೂವಾರಿಗಳಾದರು. ಬ್ಯಾಂಕ್ ಆಫ್ ಬರೋಡಾ ಪರ ಕಾರ್ತಿಕೇಯನ್ 18 ಮತ್ತು ಹರೀಶ್ 14 ಅಂಕ ಗಳಿಸಿ ಗಮನ ಸೆಳೆದರು. ಜಿಎಸ್‌ಟಿ ಕಸ್ಟಮ್ಸ್ ತಂಡವನ್ನು 49–28 ಅಂಕಗಳಿಂದ ಸೋಲಿಸಿದ ಡಿವೈಇಎಸ್ ಬೆಂಗಳೂರು ತಂಡ ಮೂರನೇ ಸ್ಥಾನ ಪಡೆದು ಕಂಚಿನ ಪದಕ ಗೆದ್ದಿತು. ಮಹಿಳೆಯರ ಫೈನಲ್ ಪಂದ್ಯದಲ್ಲಿ ಡಿವೈಇಎಸ್ ವಿದ್ಯಾನಗರ ತಂಡವನ್ನು ಮಣಿಸಿದ ಡಿವೈಇಎಸ್ ಮೈಸೂರು ತಂಡ ಬಂಗಾರದ ಪದಕಕ್ಕೆ ಕೊರಳೊಡ್ಡಿತು. ಸಾನಿಕ (10 ಅಂಕ) ಮತ್ತು ಸಾಧನ (8 ಅಂಕ) ಅವರ ಉತ್ತಮ ಆಟದ ನೆರವಿನಿಂದ ಮೈಸೂರು ತಂಡ 30–18 ಅಂಕಗಳಿಂದ ಜಯಭೇರಿ ಬಾರಿಸಿತು. ಮಂಡ್ಯ ಮಹಿಳಾ ತಂಡ ಕಂಚಿನ ಪದಕಕ್ಕೆ ತೃಪ್ತಿಪಟ್ಟುಕೊಂಡಿತು.

ವಾರ್ತಾ ಭಾರತಿ 21 Jan 2026 10:31 pm

ರಾಜಕೀಯ ಅಧಿಕಾರ ಪಡೆದಾಗ ದೌರ್ಜನ್ಯ ತಡೆಗಟ್ಟಲು ಸಾಧ್ಯ: ಎಸ್‌ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್

ಮಂಗಳೂರು: ರಾಜಕೀಯ ಅಧಿಕಾರ ಪಡೆದಾಗ ದಲಿತರು, ಅಲ್ಪಸಂಖ್ಯಾತರು, ಆದಿವಾಸಿಗಳು ತಮ್ಮ ಮೇಲೆ ನಡೆಯುತ್ತಿರುವ ದೌರ್ಜನ್ಯದಿಂದ ಪಾರಾಗಲು ಸಾಧ್ಯ ಎಂದು ಎಸ್‌ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಮೈಸೂರು ಅಭಿಪ್ರಾಯಪಟ್ಟರು. ಎಸ್‌ಡಿಪಿಐಯ ಎನ್‌ಆರ್‌ಸಿಗೆ ಆಯ್ಕೆಯಾದ ನೂತನ ಪದಾಧಿಕಾರಿಗಳಿಗೆ ನಗರದ ಪುರಭವನದಲ್ಲಿ ಬುಧವಾರ ಆಯೋಜಿಸಲಾದ ಅಭಿನಂದನಾ ಸಭೆಯಲ್ಲಿ ಅವರು ಅಭಿನಂದನಾ ಭಾಷಣ ಮಾಡಿದರು. ಅಧಿಕಾರ ಬಲಾಡ್ಯರ ಕೈಯಲ್ಲಿರುವುದರಿಂದ ಅಲ್ಪಸಂಖ್ಯಾತರು, ದಲಿತರು ಆದಿವಾಸಿಗಳು ಶೋಷಣೆಗೊಳಗಾಗುತ್ತಿ ದ್ದಾರೆ. ಕೈಯಲ್ಲಿ ಅಧಿಕಾರ ಇಲ್ಲದ ಕಾರಣ ಅವರ ಮೇಲೆ ನಿರಂತರ ದೌಜನ್ಯ ನಡೆಯುತ್ತಿದೆ ಎಂದರು. ಇವತ್ತು ನಮ್ಮಲ್ಲಿ ಸಂವಿಧಾನದ ಪರ ಮತ್ತು ಸಂವಿಧಾನ ವಿರೋಧಿ ಎಂಬ ಎರಡು ಪಕ್ಷಗಳು ನಮಲ್ಲಿದೆ. ಈ ವರೆಗೆ ಆಡಳಿತ ನಡೆಸಿದ ಎಲ್ಲ ಪಕ್ಷಗಳು ಈಗ ಆಳುತ್ತಿರುವ ಪಕ್ಷ ಸಂವಿಧಾನ ವಿರೋಧಿ ನೀತಿಯನ್ನು ಅನುಸರಿಸುತ್ತಿದೆ. ಜಾತೀಯತೆ, ಸ್ವಜನಪಕ್ಷಪಾತ ಭ್ರಷ್ಟಾಚಾರದಲ್ಲಿ ಮುಳುಗಿದೆ ಎಂದು ಆರೋಪಿಸಿದರು. ಅಲ್ಪಸಂಖ್ಯಾತರು, ದಲಿತರ ಹಿತ ಕಾಯುವ ಪಕ್ಷ ಎಸ್‌ಡಿಪಿಐ ಆಗಿದೆ. ಪ್ರಜಾತಂತ್ರವನ್ನು ಗಟ್ಟಿಗೊಳಿಸುವ ಪಕ್ಷ ಮತ್ತು ಚಳವಳಿ ಇಂದು ಬೇಕಾಗಿದೆ. ಪ್ರಜಾಪ್ರಭುತ್ವ, ಸಂವಿಧಾನವನ್ನು ರಕ್ಷಿಸುವ ಏಕೈಕ ಪಕ್ಷ ಎಸ್‌ಡಿಪಿಐ. ಸಂವಿಧಾನ ಉಳಿದರೆ ಮಾತ್ರ ಎಲ್ಲರಿಗೂ ಸ್ವಾಭಿಮಾಬದ ಬದುಕು ಸಾಧ್ಯ ಎಂದರು. ಮಾಜಿ ಸಂಸದ ಒಬೈದುಲ್ಲಾ ಖಾನ್ ಅಜ್ಮಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ರಾಜಕೀಯ ಎನ್ನುವುದು ಮಾನವ ಸೇವೆ ಆಗಿದೆ. ಆದರೆ ಅಧಿಕಾರ ಅನುಭವಿಸಲು ಇವರುವಂತದ್ದಲ್ಲ ಎಂದರು. ಎಸ್‌ಡಿಪಿಐನ ರಾಷ್ಟ್ರೀಯ ಕಾರ್ಯಕಾರಿ ಸಮಿತಿಗೆ ನೂತನವಾಗಿ ಆಯ್ಕೆಯಾಗಿರುವ ಪದಾಧಿಕಾರಿಗಳಿಗೆ ಅಭಿನಂದನಾ ಸಭೆಗೂ ಮುನ್ನ ನಗರದ ಜ್ಯೋತಿ ವೃತ್ತದಿಂದ ಪುರಭವನದ ತನಕ ಬೃಹತ್ ರ್ಯಾಲಿ ನಡೆಯಿತು. ಎನ್‌ಆರ್‌ಸಿಗೆ ಆಯ್ಕೆಯಾಗಿರುವ ನೂತನ ಪದಾಧಿಕಾರಿಗಳನ್ನು ಅಭಿನಂದಿಸಲಾಯಿತು. ನೂತನ ರಾಷ್ಟ್ರೀಯ ಕಾರ್ಯಾಧ್ಯಕ್ಷ ಮುಹಮ್ಮದ್ ಶಫಿ, ಉಪಾಧ್ಯಕ್ಷ ಸೀತಾರಾಮ್ ಖಾಟಿಕ್, ಶೇಖ್ ಮುಹಮ್ಮದ್, ಪ್ರಧಾನ ಕಾರ್ಯದರ್ಶಿಗಳಾದ ಮುಹಮ್ಮದ್ ಅಶ್ರಫ್ ಅಂಕಜಾಲ್, ಮುಹಮ್ಮದ್ ರಿಯಾಝ್, ಅಬ್ದುಲ್ ಮಜೀದ್, ಮೆಹರ್ ಅಫ್ರೋಝ್ ಯಾಸ್ಮೀನ್, ಕಾರ್ಯದರ್ಶಿಗಳಾದ ಅಲ್ಫೋನ್ಸ್ ಫ್ರಾಂಕೊ ,ತೈದುಲ್ ಉಲ್ ಇಸ್ಲಾಂ, ಸಅದೀಯ ಸಯೀದಾ, ಡಿ.ಎಸ್.ಬಿಂದ್ರಾ, ಅತಿಕಾ ಸಾಜಿದ್ ಮತ್ತು ಯಾಮೊಯ್ದೀನ್ , ಖಜಾಂಚಿ ಜಿ. ಅಬ್ದುಲ್ ಸತ್ತಾರ್ ಅವರನ್ನು ಅಭಿನಂದಿಸಲಾಯಿತು.        

ವಾರ್ತಾ ಭಾರತಿ 21 Jan 2026 10:29 pm

Ramachandra Rao: ಡಿಜಿಪಿ ರಾಮಚಂದ್ರ ರಾವ್ ಕೇಸ್; ತಪ್ಪು ಸಾಬೀತಾದರೆ ಶಿಕ್ಷೆ ಏನು?

ಬೆಂಗಳೂರು: ಹಿರಿಯ ಐಪಿಎಸ್ ಅಧಿಕಾರಿ ಕೆ.ರಾಮಚಂದ್ರರಾವ್ ರಾವ್ ಅವರು ಕಚೇರಿಯಲ್ಲಿ ಮಹಿಳೆಯರ ಜೊತೆಗೆ ಅಸಭ್ಯವಾಗಿ ವರ್ತಿಸಿದ ವಿಡಿಯೋ ವೈರಲ್ ಆಗಿದ್ದು, ಕರ್ನಾಟಕದಲ್ಲಿ ತೀವ್ರ ಸಂಚಲನ ಸೃಷ್ಟಿಸಿದೆ. ಪೊಲೀಸ್ ಇಲಾಖೆಯ ಮಾನ ಹರಾಜು ಹಾಕಿದೆ. ಇದರಿಂದ ಮುಜುಗರ ಎದುರಿಸಿರುವ ಗೃಹ ಇಲಾಖೆಯು ರಾಮಚಂದ್ರ ರಾವ್ ಅವರನ್ನು ಈಗಾಗಲೇ ಅಮಾನತು ಮಾಡಿ, ತನಿಖೆ ಆರಂಭಿಸಿದೆ. ಡಿಜಿಪಿ ರಾಮಚಂದ್ರ ರಾವ್ ರಾಸಲೀಲೆ

ಒನ್ ಇ೦ಡಿಯ 21 Jan 2026 10:26 pm

ಪುತ್ತೂರು| ವಿವೇಕಾನಂದ ಜಯಂತಿಯಲ್ಲಿ ದ್ವೇಷ ಭಾಷಣ: ಕಲ್ಲಡ್ಕ ಪ್ರಭಾಕರ ಭಟ್, ವಿಕಸನ ಟಿವಿ ವಿರುದ್ಧ ಪ್ರಕರಣ ದಾಖಲು

ಪುತ್ತೂರು: ವಿವೇಕಾನಂದ ಕಾಲೇಜಿನಲ್ಲಿ ಇತ್ತೀಚೆಗೆ ನಡೆದ ವಿವೇಕಾನಂದ ಜಯಂತಿ ಕಾರ್ಯಕ್ರಮದಲ್ಲಿ ಕಲ್ಲಡ್ಕ ಪ್ರಭಾಕರ ಭಟ್ ದ್ವೇಷ ಭಾಷಣ ಮಾಡಿದ್ದಾರೆ ಎಂದು ಆರೋಪಿಸಿ, ಅವರ ವಿರುದ್ಧ ಹಾಗೂ ಆ ಭಾಷಣವನ್ನು ಪ್ರಸಾರ ಮಾಡಿದ ಯೂಟ್ಯೂಬ್ ಚಾನೆಲ್ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಕರ್ನಾಟಕ ಮಾನವ ಬಂಧುತ್ವ ವೇದಿಕೆಯ ಪುತ್ತೂರು ತಾಲೂಕು ಸಮಿತಿ ಪುತ್ತೂರು ನಗರ ಠಾಣೆಗೆ ದೂರು ನೀಡಿದ್ದು, ಈ ಬಗ್ಗೆ ಪ್ರಕರಣ ದಾಖಲಾಗಿದೆ. ಮಾನವ ಬಂಧುತ್ವ ವೇದಿಕೆಯ ವತಿಯಿಂದ ನೀಡಲಾಗಿರುವ ದೂರಿನಂತೆ ಕಲ್ಲಡ್ಕ ಪ್ರಭಾಕರ ಭಟ್ ಮತ್ತು ವಿಕಸನ ಟಿವಿ ಯೂಟ್ಯೂಬ್ ಚಾನಲ್ ವಿರುದ್ಧ ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಾರ್ಯಕ್ರಮದಲ್ಲಿ ಕೋಮು ದ್ವೇಷ ಹಾಗೂ ಹಿಂಸೆಗೆ ಪ್ರಚೋದಿಸುವಂತೆ ಭಾಷಣ ಮಾಡಿದ ಕಲ್ಲಡ ಪ್ರಭಾಕರ ಭಟ್ ವಿರುದ್ಧ ಹಾಗೂ ಭಾಷಣವನ್ನು ಪ್ರಸಾರ ಮಾಡಿದ VIKASANA TV (ವಿಕಸನ ಟಿವಿ) ಎಂಬ ಹೆಸರಿನ ಯೂಟ್ಯೂಬ್ ಚಾನಲ್ ಹಾಗೂ ಸದ್ರಿ ಕಾರ್ಯಕ್ರಮವನ್ನು ಆಯೋಜಿಸಿದ್ದ ಆಯೋಜಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ನೀಡಿದ ದೂರಿನ ಮೇರೆಗೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಅ.ಕ್ರ: 10/2026, ಕಲಂ:196, 299, 302, 353(2), 3(5) BNS ರಂತೆ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ವಾರ್ತಾ ಭಾರತಿ 21 Jan 2026 10:23 pm

ದೇಶದ್ರೋಹ ಪ್ರಕರಣ | ಶೇಖ್ ಹಸೀನಾ ವಿರುದ್ಧ ಫೆ. 9ರಂದು ಬಾಂಗ್ಲಾ ಕೋರ್ಟ್ ವಿಚಾರಣೆ

ಢಾಕಾ, ಜ. 21: ಬಾಂಗ್ಲಾದೇಶದ ಉಚ್ಚಾಟಿತ ಪ್ರಧಾನಿ ಶೇಖ್ ಹಸೀನಾ ಹಾಗೂ ಇತರ 285 ಮಂದಿಯ ವಿರುದ್ಧ ದಾಖಲಿಸಲಾದ ದೇಶದ್ರೋಹ ಪ್ರಕರಣದಲ್ಲಿ ದೋಷಾರೋಪ ಹೊರಿಸುವ ಕುರಿತ ವಿಚಾರಣೆಯನ್ನು ಬಾಂಗ್ಲಾದೇಶದ ನ್ಯಾಯಾಲಯವು ಫೆಬ್ರವರಿ 9ರಂದು ನಡೆಸಲಿದೆ. ಶೇಖ್ ಹಸೀನಾ ಹಾಗೂ ಅವಾಮಿ ಲೀಗ್‌ನ ನೂರಾರು ಸದಸ್ಯರು ಡಿಸೆಂಬರ್ 2024ರಲ್ಲಿ ‘ಜಯ್ ಬಾಂಗ್ಲಾ ಬ್ರಿಗೇಡ್’ ಎಂಬ ಹೆಸರಿನ ಸಂಘಟನೆಯ ವಿಡಿಯೊ ಕಾನ್ಫರೆನ್ಸ್‌ ನಲ್ಲಿ ಪಾಲ್ಗೊಂಡಿದ್ದರು. ಮುಹಮ್ಮದ್ ಯೂನುಸ್ ನೇತೃತ್ವದ ಮಧ್ಯಂತರ ಸರ್ಕಾರವನ್ನು ಪದಚ್ಯುತಗೊಳಿಸಲು ಸಂಚು ರೂಪಿಸಿದ್ದರು ಎಂಬ ಆರೋಪಗಳಿಗೆ ಸಂಬಂಧಿಸಿದ ಪ್ರಕರಣ ಇದಾಗಿದೆ. ಢಾಕಾ ವಿಶೇಷ ನ್ಯಾಯಾಲಯ–9ರ ನ್ಯಾಯಾಧೀಶ ಮೊಹಮ್ಮದ್ ಅಬ್ದುಸ್ಸಲಾಮ್ ಈ ಆದೇಶ ಹೊರಡಿಸಿದ್ದಾರೆ. ಈ ಪ್ರಕರಣದ 286 ಆರೋಪಿಗಳ ಪೈಕಿ ಉಚ್ಚಾಟಿತ ಪ್ರಧಾನಿ ಶೇಖ್ ಹಸೀನಾ ಸೇರಿದಂತೆ 259 ಮಂದಿ ತಲೆಮರೆಸಿಕೊಂಡಿದ್ದು, ಅವರ ಅನುಪಸ್ಥಿತಿಯಲ್ಲೇ ನ್ಯಾಯಾಂಗ ವಿಚಾರಣೆ ನಡೆಯುತ್ತಿದೆ.

ವಾರ್ತಾ ಭಾರತಿ 21 Jan 2026 10:20 pm

ಮತ್ತೆ ದಾಳಿ ನಡೆದರೆ ಬಲವಾದ ತಿರುಗೇಟು: ಅಮೆರಿಕಕ್ಕೆ ಇರಾನ್ ವಿದೇಶಾಂಗ ಸಚಿವ ಅರಾಘ್ಚಿ ಎಚ್ಚರಿಕೆ

ದುಬೈ, ಜ. 21: ಇರಾನ್‌ನ ವಿದೇಶಾಂಗ ಸಚಿವ ಅಬ್ಬಾಸ್ ಅರಾಘ್ಚಿ ಅವರು ಬುಧವಾರ ಅಮೆರಿಕಕ್ಕೆ ನೇರ ಎಚ್ಚರಿಕೆ ನೀಡಿದ್ದು, ಒಂದು ವೇಳೆ ವಾಷಿಂಗ್ಟನ್ ಮತ್ತೊಮ್ಮೆ ದಾಳಿ ನಡೆಸಿದರೆ ಇಸ್ಲಾಮಿಕ್ ಗಣರಾಜ್ಯವು ತಕ್ಕ ತಿರುಗೇಟು ನೀಡಲಿದೆ ಎಂದು ಹೇಳಿದ್ದಾರೆ. ಇರಾನ್‌ ನಲ್ಲಿ ಆಡಳಿತ ವಿರೋಧಿ ಪ್ರತಿಭಟನಕಾರರ ಹತ್ಯೆಗಳನ್ನು ಖಂಡಿಸಿ, ಜಾಗತಿಕ ಆರ್ಥಿಕ ವೇದಿಕೆ ದಾವೋಸ್‌ನಲ್ಲಿ ಅಮೆರಿಕದ ಯುದ್ಧವಿಮಾನವಾಹಕ ನೌಕೆ ‘ಅಬ್ರಹಾಂ ಲಿಂಕನ್’ ಏಶಿಯಾದಿಂದ ಮಧ್ಯಪ್ರಾಚ್ಯದತ್ತ ಚಲಿಸುತ್ತಿರುವ ಸಂದರ್ಭದಲ್ಲೇ ಅರಾಘ್ಚಿ ಈ ಹೇಳಿಕೆ ನೀಡಿದ್ದಾರೆ. ವಾಲ್ ಸ್ಟ್ರೀಟ್ ಜರ್ನಲ್ ಪತ್ರಿಕೆಯಲ್ಲಿ ಪ್ರಕಟವಾದ ಲೇಖನದಲ್ಲಿ ಅವರು, “ಆಡಳಿತ ವಿರೋಧಿ ಪ್ರತಿಭಟನೆಗಳಿಂದ ಉಂಟಾದ ಅಶಾಂತಿಯ ಹಿಂಸಾತ್ಮಕ ಹಂತವು 72 ತಾಸುಗಳಿಗೂ ಕಡಿಮೆ ಅವಧಿಯಲ್ಲಿ ಅಂತ್ಯಗೊಂಡಿತು. ಈ ಹಿಂಸಾಚಾರಕ್ಕೆ ಸಶಸ್ತ್ರ ಪ್ರತಿಭಟನಕಾರರೇ ಹೊಣೆಗಾರರು” ಎಂದು ಆರೋಪಿಸಿದ್ದಾರೆ. ಕಳೆದ ವರ್ಷ ಇರಾನ್ ವಿರುದ್ಧ ಇಸ್ರೇಲ್ ನಡೆಸಿದ 12 ದಿನಗಳ ಯುದ್ಧವನ್ನು ಉಲ್ಲೇಖಿಸಿದ ಅರಾಘ್ಚಿ, “2025ರ ಜೂನ್‌ನಲ್ಲಿ ತೋರಿದಂತಹ ಸಂಯಮವನ್ನು ಈ ಬಾರಿ ಇರಾನ್ ಪ್ರದರ್ಶಿಸುವುದಿಲ್ಲ. ಪ್ರತಿದಾಳಿ ನಡೆಸುವಲ್ಲಿ ನಮ್ಮ ಬಲಿಷ್ಠ ಸಶಸ್ತ್ರ ಪಡೆಗಳು ಯಾವುದೇ ದಾಕ್ಷಿಣ್ಯ ತೋರಿಸುವುದಿಲ್ಲ” ಎಂದು ಲೇಖನದಲ್ಲಿ ಬರೆದಿದ್ದಾರೆ.

ವಾರ್ತಾ ಭಾರತಿ 21 Jan 2026 10:20 pm

ಜಪಾನ್‌ನ ಮಾಜಿ ಪ್ರಧಾನಿ ಶಿಂರೊ ಆಬೆ ಹತ್ಯೆ ಆರೋಪಿಗೆ ಜೀವಾವಧಿ ಶಿಕ್ಷೆ

ಟೋಕಿಯೊ, ಜ. 21: ಜಪಾನ್‌ನ ಮಾಜಿ ಪ್ರಧಾನಿ ಶಿಂರೊ ಆಬೆ ಅವರನ್ನು ಹತ್ಯೆಗೈದ ಆರೋಪಿಯ ಅಪರಾಧ ಸಾಬೀತಾಗಿದ್ದು, ಆತನಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಇಡೀ ಜಗತ್ತನ್ನು ಬೆಚ್ಚಿಬೀಳಿಸಿದಂತೆ, ಶಿಂರೊ ಆಬೆ ಅವರನ್ನು ಹಾಡಹಗಲೇ ಗುಂಡಿಕ್ಕಿ ಹತ್ಯೆಗೈದ ಘಟನೆ ನಡೆದ ಮೂರು ವರ್ಷಗಳ ಬಳಿಕ 45 ವರ್ಷದ ತೆತ್ಸುಯಾ ಯಾಮಾಗಾಮಿ ವಿರುದ್ಧ ತೀರ್ಪು ಪ್ರಕಟವಾಗಿದೆ. ಯಾಮಾಗಾಮಿ ವಿರುದ್ಧ ಕೊಲೆ ಹಾಗೂ ಶಸ್ತ್ರಾಸ್ತ್ರ ನಿಯಂತ್ರಣ ಕಾನೂನುಗಳ ಉಲ್ಲಂಘನೆ ಸೇರಿದಂತೆ ಹಲವು ಪ್ರಕರಣಗಳು ದಾಖಲಾಗಿದ್ದವು. 2022ರ ಜುಲೈನಲ್ಲಿ ಚುನಾವಣಾ ಪ್ರಚಾರ ಭಾಷಣದ ವೇಳೆ ಶಿಂರೊ ಆಬೆ ಅವರನ್ನು ಗುಂಡಿಕ್ಕಿ ಹತ್ಯೆಗೈಯಲಾಗಿತ್ತು. ಅಕ್ಟೋಬರ್‌ ನಲ್ಲಿ ಪ್ರಕರಣದ ವಿಚಾರಣೆ ಆರಂಭಗೊಂಡಿದ್ದು, ಆರೋಪಿ ತನ್ನ ಅಪರಾಧವನ್ನು ಒಪ್ಪಿಕೊಂಡಿದ್ದರೂ ಜಪಾನ್ ಕಾನೂನು ಪ್ರಕಾರ ವಿಚಾರಣೆ ಮುಂದುವರಿಸಲಾಗಿತ್ತು. ‘ಯುನಿಫಿಕೇಶನ್ ಚರ್ಚ್’ ಎಂಬ ಕ್ರೈಸ್ತ ಪಂಥವನ್ನು ಕಳಂಕಿತಗೊಳಿಸುವ ಉದ್ದೇಶದಿಂದಲೇ ಆಬೆ ಅವರನ್ನು ಹತ್ಯೆಗೈಯಲಾಯಿತು ಎಂದು ಪ್ರಾಸಿಕ್ಯೂಟರ್‌ ಗಳು ಆರೋಪಿಸಿದ್ದರು. ತನ್ನ ತಾಯಿ ಚರ್ಚ್‌ಗೆ ಅತಿಯಾದ ದೇಣಿಗೆ ನೀಡುತ್ತಿದ್ದುದರಿಂದ ಕುಟುಂಬ ದಿವಾಳಿಯಾಗಿತ್ತು. ಚರ್ಚ್‌ಗಳ ಬೆಳವಣಿಗೆಗೆ ಪ್ರಭಾವಿ ರಾಜಕಾರಣಿಗಳು ಕಾರಣರಾಗಿದ್ದಾರೆ ಎಂಬ ನಂಬಿಕೆಯಿಂದ, ಆಬೆ ಅವರಂತಹ ವ್ಯಕ್ತಿಯನ್ನು ಹತ್ಯೆಗೈದರೆ ಸಾರ್ವಜನಿಕ ಗಮನ ಸೆಳೆಯಬಹುದು ಎಂದು ಯಾಮಾಗಾಮಿ ನಂಬಿದ್ದ. ಈ ವಿಷಯವನ್ನು ಆತ ಪಶ್ಚಿಮ ಜಪಾನ್‌ ನ ನಾರಾ ಪ್ರಾಂತದ ನ್ಯಾಯಾಲಯದಲ್ಲಿ ತಿಳಿಸಿದ್ದ. ಚರ್ಚ್ ಸಂಘಟನೆಗಳು ಆಯೋಜಿಸಿದ್ದ ಕಾರ್ಯಕ್ರಮಗಳಲ್ಲಿ ಆಬೆ ಅವರು ಭಾಗವಹಿಸುತ್ತಿದ್ದರು.

ವಾರ್ತಾ ಭಾರತಿ 21 Jan 2026 10:20 pm

ನಿಯಮದ ಪ್ರಕಾರ ರಾಜ್ಯ ಸರಕಾರ ಉಲ್ಲೇಖಿಸಿದ ಭಾಷಣವನ್ನು ರಾಜ್ಯಪಾಲರು ಓದುವುದು ಕರ್ತವ್ಯ: ಬಸವರಾಜ ಹೊರಟ್ಟಿ

ಬೆಂಗಳೂರು: ತಮಿಳುನಾಡು, ಕೇರಳ ರಾಜ್ಯದಲ್ಲಿ ರಾಜ್ಯಪಾಲರ ಭಾಷಣ ವೇಳೆ ಸಂಘರ್ಷಣೆ ಮಾದರಿ ರಾಜ್ಯದಲ್ಲಿ ಸಂಭವಿಸುವುದಿಲ್ಲ, ನನಗೆ ಸಂಪೂರ್ಣ ವಿಶ್ವಾಸ ಇದೆ ಎಂದು ವಿಧಾನ ಪರಿಷತ್ತಿನ ಸಭಾಪತಿ ಬಸವರಾಜ ಹೊರಟ್ಟಿ ತಿಳಿಸಿದ್ದಾರೆ. ಬುಧವಾರ ವಿಧಾನಸೌಧದ ತಮ್ಮ ಕೊಠಡಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ನಿಯಮದ ಪ್ರಕಾರ ರಾಜ್ಯ ಸರಕಾರ ಉಲ್ಲೇಖಿಸಿದ ಭಾಷಣವನ್ನು ರಾಜ್ಯಪಾಲರು ಓದುವುದು ಕರ್ತವ್ಯ. ಅದನ್ನು ಅವರು ಮಾಡಲಿದ್ದಾರೆ ಎನ್ನುವ ವಿಶ್ವಾಸ ನನಗಿದೆ. ತಮಿಳುನಾಡು, ಕೇರಳ ರಾಜ್ಯದಲ್ಲಿ ರಾಜ್ಯಪಾಲರ ಭಾಷಣ ವೇಳೆ ಸಂಘರ್ಷಣೆ ಮಾದರಿ ನಮ್ಮಲ್ಲಿ ಆಗುವುದಿಲ್ಲ ಎಂದರು. ಅದೇ ರೀತಿ, ಸಂವಿಧಾನದ ವಿರೋಧವಾಗಿ ಭಾಷಣವನ್ನು ಸರಕಾರ ನೀಡುವುದಿಲ್ಲ ಎಂಬ ನಂಬಿಕೆ ನಮಗಿದ್ದು, ರಾಜ್ಯಪಾಲರಿಗೆ ಇರಿಸು ಮುರಿಸು ಇದ್ದರೂ ಅದನ್ನು ಅವರು ಓದಲೇಬೇಕು. ರಾಜ್ಯ ಸರಕಾರ ಮತ್ತು ಕೇಂದ್ರ ಸರಕಾರ ಬೇರೆ ಬೇರೆ ಇದ್ದಾಗ ಈ ರೀತಿ ಆಗುತ್ತೆ ಎಂದು ಬಸವರಾಜ ಹೊರಟ್ಟಿ ನುಡಿದರು.

ವಾರ್ತಾ ಭಾರತಿ 21 Jan 2026 10:17 pm

AI ಲೋಕದ ದಿಗ್ಗಜನಾಗಿದ್ದರೂ ನೆಲಕಚ್ಚಿದ ChatGPT? ಮುಳುವಾಯಿತೇ ಗೂಗಲ್ ಜೆಮಿನಿ ಜನಪ್ರಿಯತೆ?

ಹೂಡಿಕೆದಾರ ಜಾರ್ಜ್ ನೋಬಲ್ ಅವರು ಓಪನ್ ಎಐ ಸಂಸ್ಥೆಯು 'ನೇರ ಪ್ರಸಾರದಲ್ಲೇ ಕುಸಿಯುತ್ತಿದೆ' ಎಂದು ಎಚ್ಚರಿಸಿದ್ದಾರೆ. ಸ್ಪರ್ಧೆ, ಆರ್ಥಿಕ ಸಂಕಷ್ಟ, ಸಿಬ್ಬಂದಿ ವಲಸೆ ಮತ್ತು ಎಲಾನ್ ಮಸ್ಕ್ ದಾವೆಯಂತಹ ಸಮಸ್ಯೆಗಳು ಸಂಸ್ಥೆಯ ಭವಿಷ್ಯವನ್ನು ಅನಿಶ್ಚಿತಗೊಳಿಸಿವೆ. ಕೃತಕ ಬುದ್ಧಿಮತ್ತೆಯ ಅತಿರೇಕದ ನಿರೀಕ್ಷೆಗಳು ವಾಸ್ತವಿಕತೆಗೆ ಎದುರಾಗುತ್ತಿವೆ.

ವಿಜಯ ಕರ್ನಾಟಕ 21 Jan 2026 10:13 pm

ನಿಜಶರಣ ಅಂಬಿಗರ ಚೌಡಯ್ಯನವರ ಆಚಾರ-ವಿಚಾರಗಳನ್ನು ಅರಿತು ನಡೆಯಬೇಕು: ಸಚಿವ ಎನ್.ಎಸ್.ಬೋಸರಾಜು

ನಿಜಶರಣ ಅಂಬಿಗರ ಚೌಡಯ್ಯನವರ ಜಯಂತಿ ಕಾರ್ಯಕ್ರಮ

ವಾರ್ತಾ ಭಾರತಿ 21 Jan 2026 10:12 pm

ಬೈಂದೂರು: ಬಿಜೆಪಿಯಿಂದ ದೀಪಕ್‌ ಕುಮಾರ್ ಶೆಟ್ಟಿ ಉಚ್ಛಾಟನೆ

ಬೈಂದೂರು: ಇಲ್ಲಿನ ಬಿಜೆಪಿ ಮಂಡಲದ ನಿಕಟ ಪೂರ್ವಾಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ ಅವರನ್ನು ಪಕ್ಷ ವಿರೋಧಿ ಚಟುವಟಿಕೆ ಆರೋಪದಲ್ಲಿ ಪಕ್ಷದಿಂದ ಆರು ವರ್ಷಗಳ ಕಾಲ ಉಚ್ಛಾಟಿಸಿ ಬೈಂದೂರು ಬಿಜೆಪಿ ಮಂಡಲ ಅಧ್ಯಕ್ಷೆ ಅನಿತಾ ಆರ್.ಕೆ. ನೋಟಿಸ್ ಕಳುಹಿಸಿದ್ದಾರೆ. ಪತ್ರದಲ್ಲೇನಿದೆ?: ಪಕ್ಷದ ಜಿಲ್ಲಾ ಮುಖಂಡರ ಸ್ಪಷ್ಟ ಹಾಗೂ ಪುನಃ ಪುನಃ ನೀಡಲಾದ ಸೂಚನೆಗಳನ್ನು ಉದ್ದೇಶ ಪೂರ್ವಕವಾಗಿ ಕಡೆಗಣಿಸಿ, ಪಕ್ಷದ ಅಧಿಕೃತ ವೇದಿಕೆಯನ್ನು ಬಿಟ್ಟು ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ತೊಡಗುವ ಮೂಲಕ ಪಕ್ಷದ ಘನತೆ, ಶಿಸ್ತು ಹಾಗೂ ಏಕತೆಯನ್ನು ಗಂಭೀರವಾಗಿ ಹಾನಿಗೊಳಪಡಿಸಿರುವುದು ಪಕ್ಷದ ಗಮನಕ್ಕೆ ಬಂದಿದೆ. ಇದಲ್ಲದೆ, ಪಕ್ಷದ ನೇತೃತ್ವದ ವಿರುದ್ಧ ನಿರಂತರವಾಗಿ ಅವಮಾನಕಾರಿಯಾಗಿ ಮಾತನಾಡುತ್ತಾ, ಪಕ್ಷದ ಕಾರ್ಯಕರ್ತ ರಲ್ಲಿ ಗೊಂದಲ, ಅಸಮಾಧಾನ ಮತ್ತು ಭಿನ್ನಾಭಿಪ್ರಾಯಗಳನ್ನು ಉಂಟುಮಾಡಿರುವುದು ಗಂಭೀರ ಶಿಸ್ತು ಉಲ್ಲಂಘನೆಯಾಗಿದ್ದು, ಈ ವರ್ತನೆ ಪಕ್ಷದ ನಿಯಮಾವಳಿ ಮತ್ತು ಆಂತರಿಕ ಶಿಸ್ತಿಗೆ ಸಂಪೂರ್ಣ ವಿರೋಧವಾಗಿದೆ. ಈ ಎಲ್ಲಾ ಅಶಿಸ್ತಿನ, ಜವಾಬ್ದಾರಿಯಿಲ್ಲದ ಹಾಗೂ ಪಕ್ಷವಿರೋಧಿ ಚಟುವಟಿಕೆಗಳನ್ನು ಗಂಭೀರವಾಗಿ ಪರಿಗಣಿಸಿ, ಪಕ್ಷದ ಉನ್ನತ ನಾಯಕತ್ವದ ಆದೇಶದ ಮೇರೆಗೆ ನಿಮ್ಮನ್ನು ತಕ್ಷಣದಿಂದ ಜಾರಿಗೆ ಬರುವಂತೆ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ 6 ವರ್ಷಗಳ ಕಾಲ ಉಚ್ಚಾಟಿಸಲಾಗುತ್ತಿದೆ ಎಂದು ಈ ಮೂಲಕ ಅಂತಿಮವಾಗಿ ತಿಳಿಸಲಾಗುತ್ತದೆ’ ಎಂದು ಅನಿತಾ ಅವರು ನೀಡಿರುವ ಪತ್ರದಲ್ಲಿ ತಿಳಿಸಿದ್ದಾರೆ.

ವಾರ್ತಾ ಭಾರತಿ 21 Jan 2026 10:06 pm

ರಾಜ್ಯಪಾಲರು ಕಾಂಗ್ರೆಸ್ ಸರ್ಕಾರದ ವಕ್ತಾರರಲ್ಲ; ಸಂವಿಧಾನದ ರಕ್ಷಕರು: ಆರ್. ಅಶೋಕ್

ಬೆಂಗಳೂರು: ರಾಜ್ಯಪಾಲರು ಕಾಂಗ್ರೆಸ್ ಸರ್ಕಾರದ ವಕ್ತಾರರಲ್ಲ; ಅವರು ಸಂವಿಧಾನದ ರಕ್ಷಕರು. ಸರ್ಕಾರದ ಸುಳ್ಳಿನ ಕಂತೆಗೆ ರಾಜ್ಯಪಾಲರು ಧ್ವನಿಯಾಗಬೇಕು ಎಂಬ ಯಾವುದೇ ಕಡ್ಡಾಯ ನಿಯಮ ಭಾರತದ ಸಂವಿಧಾನದಲ್ಲಿ ಇಲ್ಲ ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ಹೇಳಿದ್ದಾರೆ. ಅಭಿವೃದ್ಧಿ ಶೂನ್ಯ ಆಡಳಿತ, ಸಾಲು ಸಾಲು ಭ್ರಷ್ಟಾಚಾರ ಹಗರಣಗಳು ಮತ್ತು ಆಡಳಿತಾತ್ಮಕ ವೈಫಲ್ಯವನ್ನು ಮರೆಮಾಚಲು ಮುಖ್ಯಮಂತ್ರಿ ಸಿದ್ದರಾಮಯ್ಯ

ಒನ್ ಇ೦ಡಿಯ 21 Jan 2026 10:04 pm

ಕನಕಗಿರಿ | ಯುವತಿ ಆತ್ಮಹತ್ಯೆ : ಪ್ರಕರಣ ದಾಖಲು

ಕನಕಗಿರಿ: ಸಮೀಪದ ಅರಳಹಳ್ಳಿ ಗ್ರಾಮದಲ್ಲಿ ಯುವತಿಯೊಬ್ಬಳು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಗಳವಾರ ಸಂಜೆ ನಡೆದಿದೆ. ಮೃತರನ್ನು ಕುಕನೂರು ತಾಲ್ಲೂಕಿನ ಕುದ್ರಿಮೋತಿ ಗ್ರಾಮದ ನಿವಾಸಿ ಕೆ.ಎಂ. ಅನ್ನಪೂರ್ಣ ಎಂದು ಗುರುತಿಸಲಾಗಿದೆ. ಆತ್ಮಹತ್ಯೆಗೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಅನ್ನಪೂರ್ಣ ಅವರನ್ನು ಅರಳಹಳ್ಳಿ ಗ್ರಾಮದ ರೇವಣಸಿದ್ದಯ್ಯ ಅವರ ಪುತ್ರ ಶರಣಬಸವಸ್ವಾಮಿ ಎಂಬುವರಿಗೆ ಮದುವೆ ಮಾಡಿಕೊಡಲಾಗಿತ್ತು. ಬಿ.ಎಸ್ಸಿ, ಬಿ.ಇಡಿ ಪದವೀಧರಳಾಗಿದ್ದ ಅನ್ನಪೂರ್ಣ ಇತ್ತೀಚೆಗೆ ನಡೆದ ಶಿಕ್ಷಕ ಅರ್ಹತಾ ಪರೀಕ್ಷೆ (ಟಿಇಟಿ)ಯಲ್ಲಿ ಉತ್ತೀರ್ಣರಾಗಿದ್ದರು ಎಂಬುದು ತಿಳಿದುಬಂದಿದೆ. ಕಾಂತಯ್ಯಸ್ವಾಮಿ ಎಂಬುವರು ಅನ್ನಪೂರ್ಣಳ ಯೋಗಕ್ಷೇಮ ವಿಚಾರಿಸಲು ದೂರವಾಣಿ ಮೂಲಕ ಸಂಪರ್ಕಿಸಲು ಪ್ರಯತ್ನಿಸಿದಾಗ ಆಕೆಯಿಂದ ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ. ಬಳಿಕ ಅವರ ಅತ್ತೆಯೂ ಕರೆ ಮಾಡಿದರೂ ಪ್ರತಿಕ್ರಿಯೆ ಸಿಗಲಿಲ್ಲ. ಸ್ವಲ್ಪ ಸಮಯದ ನಂತರ ಅನ್ನಪೂರ್ಣಳ ಅತ್ತೆ ಕಾಂತಯ್ಯಸ್ವಾಮಿ ಅವರಿಗೆ ಸಂಜೆ ಕರೆ ಮಾಡಿ, ಅನ್ನಪೂರ್ಣಳು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಮಾಹಿತಿ ನೀಡಿದ್ದಾರೆ. ಈ ವಿಷಯವನ್ನು ಕಾಂತಯ್ಯಸ್ವಾಮಿ ನನ್ನ ಗಮನಕ್ಕೆ ತಂದಿದ್ದು, ಅವರು ಹೇಳಿದ ವಿಷಯದಲ್ಲಿ ಸಂಶಯವಿರುವುದರಿಂದ ಸಾವಿನ ಹಿಂದಿನ ಸತ್ಯವನ್ನು ಕೂಲಂಕಷವಾಗಿ ತನಿಖೆ ನಡೆಸಬೇಕು ಎಂದು ಮೃತಳ ತಂದೆ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಆತ್ಮಹತ್ಯೆಯ ಯೋಚನೆ ಬಂದಾಗ ಅದನ್ನು ನಿಗ್ರಹಿಸಲು ರಾಜ್ಯ ಸರಕಾರದ ಅರೋಗ್ಯ ಇಲಾಖೆಯ ಹೆಲ್ಪ್ ಲೈನ್ 104 ಸಹಾಯ ಮಾಡುತ್ತದೆ. ಅದರ ಜೊತೆಗೆ Tele-MANAS ನ 14416 ಅನ್ನೂ ಸಂಪರ್ಕಿಸಬಹುದು.

ವಾರ್ತಾ ಭಾರತಿ 21 Jan 2026 9:55 pm

`ಭಾರತದಲ್ಲಿ ಆಡಿ, ಇಲ್ಲ ಹೊರಹೋಗಲು ರೆಡಿಯಾಗಿ': ಕಿರಿಕ್ ಬಾಂಗ್ಲಾಗೆ ಈಗ ಐಸಿಸಿಯಿಂದ 24 ಗಂಟೆಯ ಅಂತಿಮ ಗಡುವು!

ಭಾರತದಲ್ಲಿ ಟಿ20 ವಿಶ್ವಕಪ್ ಪಂದ್ಯಗಳನ್ನು ಆಡುವುದಿಲ್ಲ ಎಂದು ಪಟ್ಟು ಹಿಡಿದಿರುವ ಬಾಂಗ್ಲಾದೇಶಕ್ಕೆ ಇದೀಗ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ(ICC) ಸರಿಯಾಗಿಯೇ ಬಿಸಿ ಮುಟ್ಟಿಸಿದೆ. ಯಾವುದೇ ಕಾರಣಕ್ಕೂ ನಿಮ್ಮ ಪಂದ್ಯಗಳನ್ನು ಭಾರತದಿಂದ ಶ್ರೀಲಂಕಾಗೆ ಸ್ಥಳಾಂತರಿಸುವುದು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿರುವ ಐಸಿಸಿ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ(BCB) ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಲು 24 ಗಂಟೆಗಳ ಕಾಲಾವಕಾಶ ನೀಡಲಾಗಿದೆ. ಒಂದುವೇಳೆ ಬಾಂಗ್ಲಾದೇಶ ತನ್ನ ಈಗಿನ ನಿಲುವಿಗೇ ಬದ್ಧವಾದಲ್ಲಿ ಐಸಿಸಿ ಟಿ20 ವಿಶ್ವಕಪ್ 2026 ಟೂರ್ನಿಯಿಂದ ಹೊರಬೀಳಲಿದೆ. ಬಾಂಗ್ಲಾದೇಶಕ್ಕೆ ಸಂಬಂಬಂಧಿಸಿದಂತೆ ಬುಧವಾರ ಮಹತ್ವದ ಸಭೆ ನಡೆಸಿದ ಐಸಿಸಿಯ ಮಂಡಳಿಯು ಬಾಂಗ್ಲಾದೇಶದ ಪಂದ್ಯಗಳನ್ನು ಎಂಬ ತಿರ್ಮಾನಕ್ಕ ಬಂದಿತು. ಹೀಗಾಗಿ ಭಾಗವಹಿಸುವಿಕೆಯ ಕುರಿತು ಅಂತಿಮ ನಿರ್ಧಾರ ತೆಗೆದುಕೊಳ್ಳಲು ಬಿಸಿಬಿಗೆ 24 ಗಂಟೆಗಳ ಕಾಲಾವಕಾಶ ನೀಡಲಾಗಿದೆ. ಐಸಿಸಿ ನಿರ್ಧಾರವೇನು? ಭದ್ರತಾ ಕಾರಣಗಳನ್ನು ನೀಡಿ ಬಾಂಗ್ಲಾದೇಶವು ಭಾರತದಲ್ಲಿ . ಹೀಗಾಗಿ ತನ್ನೆಲ್ಲಾ ಪಂದ್ಯಗಳನ್ನು ಶ್ರೀಲಂಕಾಗೆ ಸ್ಥಳಾಂತರ ಮಾಡುವಂತೆ ಐಸಿಸಿಯನ್ನು ಆಗ್ರಹಿಸಿತ್ತು. ಆದರೆ ಐಸಿಸಿಯು ಭಾರತದಲ್ಲಿ ಕ್ರಿಕೆಟ್ ಪಂದ್ಯಗಳನ್ನು ಆಡಲು ಬಾಂಗ್ಲಾದೇಶಕ್ಕೆ ಯಾವುದೇ ಭದ್ರತಾ ಬೆದರಿಕೆ ಇಲ್ಲ. ಹಾಗಾಗಿ ಅಲ್ಲಿನ ತಂಡವು ತನ್ನ ಗ್ರೂಪ್ ಸಿ ಪಂದ್ಯಗಳನ್ನು ಆಡಲು ಭಾರತಕ್ಕೆ ಬರಬೇಕಾಗಿದೆ ಎಂದು ಐಸಿಸಿ ತನ್ನ ಅಧಿಕೃತ ಮಾಧ್ಯಮ ಪ್ರಕಟಣೆಯಲ್ಲಿ ದೃಢಪಡಿಸಿದೆ. ಹೀಗಾಗಿ ಬಾಂಗ್ಲಾದೇಶ ಇದೀಗ ಐಸಿಸಿಯ ಸೂಚನೆಯ ಪ್ರಕಾರ ಭಾರತದಲ್ಲಿ ತನ್ನ ಪಂದ್ಯಗಳನ್ನು ಆಡಲೇ ಬೇಕಿದೆ. ಒಂದು ವೇಳೆ ಆಡದೇ ಹೋದಲ್ಲಿ ಅವರು ಮಹತ್ವದಟೂರ್ನಿಯಿಂದ ಹೊರಗುಳಿಯಬೇಕಾಗುತ್ತದೆ. ಏನಿದು ಇಂಡೋ ಬಾಂಗ್ಲಾ ವಿವಾದ? ಬಾಂಗ್ಲಾದೇಶದಲ್ಲಿ ಇತ್ತೀಚೆಗೆ ನಡೆದ ಹಿಂದೂಗಳ ಕೊಲೆಯನ್ನು ಖಂಡಿಸಿ ಭಾರತದ ಹಲೆವೆಡೆ ಪ್ರತಿಭಟನೆಗಳು ನಡೆದಿದ್ದವು. ಅನೇಕ ರಾಜಕೀಯ ಮತ್ತು ಧಾರ್ಮಿಕ ನೇತಾರರು ಈ ಬೆಳವಣಿಗೆಗೆ ಆಕ್ರೋಶ ವ್ಯಕ್ತಪಡಿಸಿದ್ದರು. ಜೊತೆಗೆ ಬಾಂಗ್ಲಾದೇಶದ ಆಟಗಾರರಿಗೆ ಇಂಡಿಯನ್ ಪ್ರೀಮಿಯರ್ ಲೀಗ್ (IPL) ನಲ್ಲಿ ಆಡುವ ಆವಕಾಶ ನೀಡಬಾರದು ಎಂಬ ಕೂಗು ಭಾರತದಲ್ಲಿ ಕೇಳಿ ಬಂದಿತ್ತು. ಈ ಆಗ್ರಹಕ್ಕೆ ಮಣಿದು ಬಾಂಗ್ಲಾದೇಶದ ಮಧ್ಯಮ ವೇಗದ ಬೌಲರ್ ಮುಸ್ತಫಿಝುರ್ ಅವರನ್ನು ತಂಡದಿಂದ ಹೊರಹಾಕುವಂತೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(BCCI)ಯು ಕೋಲ್ಕತಾ ನೈಟ್ ರೈಡರ್ಸ್ (KKR) ಗೆ ಸೂಚನೆ ನೀಡಿತ್ತು. ಅದರಂತೆ ಕೆಕೆಆರ್ ಫ್ರಾಂಚೈಸಿಯು ಮುಸ್ತಫಿಝುರ್ ರೆಹಮಾನ್ ಅವರನ್ನು ತಂಡದಿಂದ ಹೊರ ಹಾಕಿತು. ಬಾಂಗ್ಲಾ ಕಿರಿಕ್ ಗೆ ಸೊಪ್ಪು ಹಾಕದ ಐಸಿಸಿ ಇದರಿಂದ ಕೆರಳಿದ ಬಾಂಗ್ಲಾದೇಶವು ಮೊದಲಿಗೆ ತನ್ನ ದೇಶದಲ್ಲಿ ಐಪಿಎಲ್ ಪ್ರಸಾರ ಮತ್ತು ಪ್ರಚಾರಕ್ಕೆ ತಡೆ ಒಡ್ಡಿತು. ಆ ಬಳಿಕ ಭಾರತದಲ್ಲಿ ಟಿ20 ವಿಶ್ವಕಪ್ ಪಂದ್ಯಗಳನ್ನು ಆಡುವುದಿಲ್ಲ, ತಾನಾಡುವ ಪಂದ್ಯಗಳನ್ನು ಶ್ರೀಲಂಕಾಗೆ ಸ್ಥಳಾಂತರ ಮಾಡುವಂತೆ ಐಸಿಸಿಗೆ ಮನವಿ ಮಾಡಿತು. ಬಾಂಗ್ಲಾದೇಶದ ನಿಲುವಿಗೆ ಬೆಂಬಲ ವ್ಯಕ್ತಪಡಿಸಿ ಪಾ ಬರೆಯಿತು. ಆದರೆ ಇದ್ಯಾವುದಕ್ಕೀೂ ಐಸಿಸಿ ಸೊಪ್ಪು ಹಾಕಿಲ್ಲ. ಹೀಗಾಗಿ ಈಗ ಬಾಂಗ್ಲಾದೇಶ ಅಂತಿಮ ನಿರ್ಧಾರ ಏನಾಗಿರುತ್ತದೆ ಎಂಬ ಬಗ್ಗೆ ಕುತೂಹಲ ಇದೆ. ಒಂದು ವೇಳೆ ಬಾಂಗ್ಲಾದೇಶ ಆಡದೇ ಹೋದಲ್ಲಿ ಆಗ ಅದರ ಬದಲಿಗೆ ಸ್ಕಾಟ್ಲೆಂಡ್ ಗೆ ಅವಕಾಶ ಸಿಗುವ ಸಾಧ್ಯತೆ ಇಧೆ.

ವಿಜಯ ಕರ್ನಾಟಕ 21 Jan 2026 9:55 pm

ಬಾಂಗ್ಲಾದೇಶದ ಟಿ–20 ವಿಶ್ವಕಪ್ ಪಂದ್ಯಗಳ ಆತಿಥ್ಯಕ್ಕೆ ಒಲವು ತೋರಿದ Pak!

ಲಾಹೋರ್, ಜ.21: ಮುಂಬರುವ ಟಿ–20 ವಿಶ್ವಕಪ್ ಟೂರ್ನಿಯಲ್ಲಿ ಬಾಂಗ್ಲಾದೇಶ ಕ್ರಿಕೆಟ್ ತಂಡದ ಭಾಗವಹಿಸುವಿಕೆ ಕುರಿತ ಪ್ರಶ್ನೆಗಳಿಗೆ ಇನ್ನೂ ಸ್ಪಷ್ಟ ಉತ್ತರ ಲಭಿಸಿಲ್ಲ. ಬಾಂಗ್ಲಾದೇಶ ತಂಡವು ಭಾರತ ಅಥವಾ ಶ್ರೀಲಂಕಾ ನೆಲದಲ್ಲಿ ಆಡದೇ ಇದ್ದರೆ, ತಾನು ವಿಶ್ವಕಪ್ ಪಂದ್ಯಗಳ ಆತಿಥ್ಯ ವಹಿಸುವುದಾಗಿ ಪಾಕಿಸ್ತಾನ ಪರ್ಯಾಯ ಆಯ್ಕೆಯನ್ನು ನೀಡಿದೆ. ‘ಸುರಕ್ಷತೆಯ ಕಳವಳ’ದಿಂದಾಗಿ ಭಾರತದಲ್ಲಿ ತನ್ನ ಟಿ–20 ವಿಶ್ವಕಪ್ ಪಂದ್ಯಗಳನ್ನು ಆಡಲು ನಿರಾಕರಿಸಿರುವ ಬಾಂಗ್ಲಾದೇಶಕ್ಕೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಬೆಂಬಲ ವ್ಯಕ್ತಪಡಿಸಿದೆ. ಬಾಂಗ್ಲಾದೇಶದ ವಿಶ್ವಕಪ್ ಪಂದ್ಯಗಳನ್ನು ತಾನು ಆಯೋಜಿಸಲು ಸಿದ್ಧವಿರುವುದಾಗಿ ಐಸಿಸಿಗೆ ತಿಳಿಸಿದೆ. ಐಸಿಸಿಯೊಂದಿಗೆ ನಡೆದ ಅಧಿಕೃತ ಮಾತುಕತೆಯ ಮೂಲಕ ಪಿಸಿಬಿ ತನ್ನ ಆಫರ್ ಅನ್ನು ಮುಂದಿಟ್ಟಿದೆ. ವೇಳಾಪಟ್ಟಿಯ ಪ್ರಕಾರ ಬಾಂಗ್ಲಾದೇಶ ತಂಡವು ತನ್ನ ಎಲ್ಲಾ ನಾಲ್ಕು ಗುಂಪು ಹಂತದ ಪಂದ್ಯಗಳನ್ನು ಕೋಲ್ಕತಾ ಹಾಗೂ ಮುಂಬೈನಲ್ಲಿ ಆಡಬೇಕಾಗಿದೆ.

ವಾರ್ತಾ ಭಾರತಿ 21 Jan 2026 9:52 pm

Indonesia Open | ಸಿಂಧು, ಶ್ರೀಕಾಂತ್ ಶುಭಾರಂಭ

ಜಕಾರ್ತ, ಜ.21: ಒಲಿಂಪಿಕ್ಸ್‌ನಲ್ಲಿ ಎರಡು ಬಾರಿ ಪದಕ ವಿಜೇತೆ ಪಿ.ವಿ. ಸಿಂಧು ಹಾಗೂ ವಿಶ್ವದ ಮಾಜಿ ನಂ.1 ಆಟಗಾರ ಕಿಡಂಬಿ ಶ್ರೀಕಾಂತ್ ಅವರು ಬುಧವಾರ ಜಕಾರ್ತದಲ್ಲಿ ಆರಂಭವಾದ ಇಂಡೋನೇಶ್ಯ ಮಾಸ್ಟರ್ಸ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ದ್ವಿತೀಯ ಸುತ್ತಿಗೆ ಪ್ರವೇಶಿಸುವ ಮೂಲಕ ಶುಭಾರಂಭ ಮಾಡಿದ್ದಾರೆ. ಐದನೇ ಶ್ರೇಯಾಂಕದ ಸಿಂಧು ಬುಧವಾರ 53 ನಿಮಿಷಗಳಲ್ಲಿ ಮುಗಿದ ಮಹಿಳೆಯರ ಸಿಂಗಲ್ಸ್ ವಿಭಾಗದ ಪಂದ್ಯದಲ್ಲಿ ಜಪಾನ್ ಆಟಗಾರ್ತಿ ಮನಾಮಿ ಸುಝು ಅವರನ್ನು 22-20, 21-18 ನೇರ ಗೇಮ್‌ಗಳ ಅಂತರದಿಂದ ಮಣಿಸಿದರು. ಸದ್ಯ ವಿಶ್ವ ರ‍್ಯಾಂಕಿಂಗ್‌ನಲ್ಲಿ 33ನೇ ಸ್ಥಾನದಲ್ಲಿರುವ ಶ್ರೀಕಾಂತ್ ಒಂದು ಗಂಟೆ 12 ನಿಮಿಷಗಳ ಕಾಲ ನಡೆದ ಪುರುಷರ ಸಿಂಗಲ್ಸ್ ಪಂದ್ಯದಲ್ಲಿ ವಿಶ್ವದ ನಂ.22ನೇ ಆಟಗಾರ ಕೊಕೊ ವಟನಬೆ ಅವರನ್ನು 21-15, 21-23, 24-22 ಗೇಮ್‌ಗಳ ಅಂತರದಿಂದ ಮಣಿಸಿದರು. ಶ್ರೀಕಾಂತ್ ಎರಡನೇ ಸುತ್ತಿನಲ್ಲಿ ಚೈನೀಸ್ ತೈಪೆಯ ನಾಲ್ಕನೇ ಶ್ರೇಯಾಂಕದ ಆಟಗಾರ ಚೌ ಟಿಯೆನ್ ಚೆನ್ ಅವರನ್ನು ಎದುರಿಸಲಿದ್ದಾರೆ. ಚೆನ್ ಅವರು ಮತ್ತೊಂದು ಆರಂಭಿಕ ಪಂದ್ಯದಲ್ಲಿ 21-14, 21-15 ಅಂತರದಿಂದ ಜಯಶಾಲಿಯಾದರು. ಆದರೆ ಭಾರತದ ಇನ್ನೋರ್ವ ಆಟಗಾರ ಕಿರಣ್ ಜಾರ್ಜ್ ಇಂಡೋನೇಶ್ಯದ ಮುಹಮ್ಮದ್ ಝಾಕಿ ಉಬೈದಿಲ್ಲಾ ವಿರುದ್ಧ 17-21, 14-21 ಗೇಮ್‌ಗಳ ಅಂತರದಿಂದ ಸೋಲನುಭವಿಸಿ ಆರಂಭಿಕ ಸುತ್ತಿನಲ್ಲೇ ಟೂರ್ನಿಯಿಂದ ನಿರ್ಗಮಿಸಿದರು. ಮಹಿಳೆಯರ ಸಿಂಗಲ್ಸ್‌ನಲ್ಲಿ ಆಕರ್ಷಿ ಕಶ್ಯಪ್ ಕೂಡ ಆರಂಭಿಕ ಸುತ್ತಿನಲ್ಲಿ ಜುಲಿ ಡಾವಾಲ್ ಜೇಕಬ್ಸನ್ ವಿರುದ್ಧ 21-8, 20-22, 17-21 ಗೇಮ್‌ಗಳ ಅಂತರದಿಂದ ಸೋತು ನಿರ್ಗಮಿಸಿದ್ದಾರೆ. ಮಿಕ್ಸೆಡ್ ಡಬಲ್ಸ್‌ನಲ್ಲೂ ಭಾರತದ ಅಭಿಯಾನ ಅಂತ್ಯವಾಗಿದೆ. ರೋಹನ್ ಕಪೂರ್–ಋತ್ವಿಕಾ ಹಾಗೂ ಧ್ರುವ ಕಪಿಲಾ–ತನಿಷ್ ಕ್ರಾಸ್ಟೊ ಮೊದಲ ಸುತ್ತಿನಲ್ಲೇ ಸೋತು ಹೊರಬಿದ್ದರು. ಕಪೂರ್–ಋತ್ವಿಕಾ ಜೋಡಿ ಫ್ರಾನ್ಸ್‌ನ ಥೋಮ್ ಗಿಕ್ವೆಲ್ ಹಾಗೂ ಡೆಲ್ಫಿನ್ ಡೆಲ್ರು ವಿರುದ್ಧ 9-21, 20-22 ಗೇಮ್‌ಗಳ ಅಂತರದಿಂದ ಸೋತಿದೆ. ಕಪಿಲಾ–ಕ್ರಾಸ್ಟೊಗೆ ಇನ್ನೋರ್ವ ಫ್ರೆಂಚ್ ಜೋಡಿ ಜುಲಿಯನ್ ಮೈಯೊ ಹಾಗೂ ಲಿಯಾ ಪಾಲೆರ್ಮೊ 23-21, 20-22, 21-6 ಗೇಮ್‌ಗಳ ಅಂತರದಿಂದ ಮಣಿಸಿ ನಿರ್ಗಮನದ ಹಾದಿ ತೋರಿಸಿದೆ.

ವಾರ್ತಾ ಭಾರತಿ 21 Jan 2026 9:50 pm

Australian Open | ಮೆಡ್ವೆಡೆವ್, ಅಲ್ಕರಾಝ್, ಸಬಲೆಂಕಾ, ಕೊಕೊ ಗೌಫ್ ಮೂರನೇ ಸುತ್ತಿಗೆ ಲಗ್ಗೆ

ಮೆಲ್ಬರ್ನ್, ಜ.21: ಆಸ್ಟ್ರೇಲಿಯನ್ ಓಪನ್ ಟೆನಿಸ್ ಟೂರ್ನಿಯಲ್ಲಿ ಬುಧವಾರ ಸ್ಟಾರ್ ಆಟಗಾರರು ತಮ್ಮ ಪ್ರಾಬಲ್ಯ ಮುಂದುವರಿಸಿದ್ದು, ಡೇನಿಯಲ್ ಮೆಡ್ವೆಡೆವ್, ಕಾರ್ಲೊಸ್ ಅಲ್ಕರಾಝ್, ಆರ್ಯನಾ ಸಬಲೆಂಕಾ ಹಾಗೂ ಕೊಕೊ ಗೌಫ್ ಮೂರನೇ ಸುತ್ತಿಗೆ ಪ್ರವೇಶಿಸಿದ್ದಾರೆ. ಮೆಲ್ಬರ್ನ್ ಪಾರ್ಕ್‌ನಲ್ಲಿ 2021, 2022 ಹಾಗೂ 2024ರಲ್ಲಿ ಮೂರು ಬಾರಿ ಫೈನಲ್‌ಗೆ ತಲುಪಿದ್ದ ಮೆಡ್ವೆಡೆವ್ ಅವರು ಬುಧವಾರ ಪುರುಷರ ಸಿಂಗಲ್ಸ್ ವಿಭಾಗದ ಎರಡನೇ ಸುತ್ತಿನ ಪಂದ್ಯದಲ್ಲಿ ಫ್ರಾನ್ಸ್‌ನ ಕ್ವೆಂಟಿನ್ ಹ್ಯಾಲಿಸ್ ವಿರುದ್ಧ 6-7(9), 6-3, 6-4, 6-2 ಸೆಟ್‌ಗಳ ಅಂತರದಿಂದ ಜಯ ದಾಖಲಿಸಿದರು. ವಿಶ್ವದ ನಂ.11ನೇ ಆಟಗಾರರಾದ ಮೆಡ್ವೆಡೆವ್ ಆರಂಭಿಕ ಸೆಟ್ ಅನ್ನು ಟೈ-ಬ್ರೇಕರ್‌ನಲ್ಲಿ ಸೋತಿದ್ದರೂ, ಮುಂದಿನ ಮೂರು ಸೆಟ್‌ಗಳಲ್ಲಿ ಆರಂಭದಲ್ಲೇ ಹಿಡಿತ ಸಾಧಿಸಿದರು. ಈ ಗೆಲುವಿನೊಂದಿಗೆ ಮೆಡ್ವೆಡೆವ್ 2026ರಲ್ಲಿ ಸತತ ಏಳು ಪಂದ್ಯಗಳಲ್ಲಿ ಜಯ ಸಾಧಿಸಿದ್ದಾರೆ. 2024ರ ಯು.ಎಸ್. ಓಪನ್ ಟೂರ್ನಿಯ ನಂತರ ಇದೇ ಮೊದಲ ಬಾರಿ ಗ್ರ್ಯಾನ್‌ಸ್ಲಾಮ್ ಟೂರ್ನಿಯಲ್ಲಿ ಅಂತಿಮ-32ರ ಸುತ್ತಿಗೆ ಪ್ರವೇಶಿಸಿದ್ದಾರೆ. ನಾಲ್ಕು ಸೆಟ್‌ಗಳ ಪಂದ್ಯ ಆಡಿದ ಬಳಿಕ ಕ್ಯಾಮೆರಾದಲ್ಲಿ ‘ನಾಟ್ 5 ಸೆಟ್ಸ್’ ಎಂದು ಬರೆದು ಸಹಿ ಹಾಕಿದ ಮೆಡ್ವೆಡೆವ್, ಮುಂದಿನ ಸುತ್ತಿನಲ್ಲಿ ಹಂಗೇರಿಯ ಫ್ಯಾಬಿಯನ್ ಮರೋಝ್ಸಾನ್ ಅವರನ್ನು ಎದುರಿಸಲಿದ್ದಾರೆ. ವಿಶ್ವದ ನಂ.1 ಆಟಗಾರ ಕಾರ್ಲೊಸ್ ಅಲ್ಕರಾಝ್ ಜರ್ಮನಿಯ ಯಾನಿಕ್ ಹ್ಯಾನ್ಫ್‌ಮನ್ ವಿರುದ್ಧ ಆರಂಭದಲ್ಲಿ ಅಗ್ನಿಪರೀಕ್ಷೆಗೆ ಒಳಗಾದರೂ, ಅಂತಿಮವಾಗಿ 7-6(4), 6-3, 6-2 ಸೆಟ್‌ಗಳ ಅಂತರದಿಂದ ಜಯಶಾಲಿಯಾದರು. ಮೊದಲ ಸೆಟ್ 79 ನಿಮಿಷಗಳ ಕಾಲ ನಡೆಯಿತು. ಲಯವನ್ನು ಕಂಡುಕೊಂಡ ನಂತರ ಅಲ್ಕರಾಝ್ ಪಂದ್ಯದುದ್ದಕ್ಕೂ ಆತ್ಮವಿಶ್ವಾಸದಿಂದ ಆಡಿದರು. ವೃತ್ತಿಜೀವನದಲ್ಲಿ ಎಲ್ಲ ನಾಲ್ಕು ಗ್ರ್ಯಾನ್‌ಸ್ಲಾಮ್ ಪ್ರಶಸ್ತಿಗಳನ್ನು ಗೆಲ್ಲುವತ್ತ ಅವರು ಹೆಜ್ಜೆ ಇಟ್ಟಿದ್ದಾರೆ. ಆದರೆ ಆಸ್ಟ್ರೇಲಿಯನ್ ಓಪನ್‌ನಲ್ಲಿ ಈ ತನಕ ಅವರು ಕ್ವಾರ್ಟರ್ ಫೈನಲ್ ಸುತ್ತನ್ನು ದಾಟಿಲ್ಲ. 22 ವರ್ಷದ ಅಲ್ಕರಾಝ್ ಮುಂದಿನ ಸುತ್ತಿನಲ್ಲಿ ಫ್ರಾನ್ಸ್‌ನ ವಿಶ್ವದ ನಂ.37ನೇ ಆಟಗಾರ ಕೊರೆಂಟಿನ್ ಮೌಟೆಟ್ ಅವರನ್ನು ಎದುರಿಸಲಿದ್ದಾರೆ. ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಚೀನಾದ ಕ್ವಾಲಿಫೈಯರ್ ಬೈ ಕ್ಸುಕ್ಸುಯಾನ್ ಅವರನ್ನು 6-3, 6-1 ನೇರ ಸೆಟ್‌ಗಳ ಅಂತರದಿಂದ ಸದೆಬಡಿದ ಆರ್ಯನಾ ಸಬಲೆಂಕಾ ಸತತ ಆರನೇ ವರ್ಷ ಟೂರ್ನಿಯಲ್ಲಿ ಮೂರನೇ ಸುತ್ತಿಗೆ ಪ್ರವೇಶಿಸಿದ್ದಾರೆ. ಎರಡು ಬಾರಿಯ ಚಾಂಪಿಯನ್ ಸಬಲೆಂಕಾ ಆರಂಭದಲ್ಲೇ 5-0 ಮುನ್ನಡೆ ಪಡೆದರು. ಈ ಮೂಲಕ 2026ರ ಋತುವಿನಲ್ಲಿ ತಮ್ಮ ಅಜೇಯ ಓಟ ಮುಂದುವರಿಸಿದರು. ಅಮೆರಿಕದ ಯುವ ಆಟಗಾರ್ತಿ ಕೊಕೊ ಗೌಫ್ ಕೇವಲ 78 ನಿಮಿಷಗಳಲ್ಲಿ ಮುಗಿದ ಮಹಿಳೆಯರ ಸಿಂಗಲ್ಸ್ ಪಂದ್ಯದಲ್ಲಿ ಸರ್ಬಿಯಾದ ಓಲ್ಗಾ ಡ್ಯಾನಿಲೋವಿಚ್ ಅವರನ್ನು 6-2, 6-2 ನೇರ ಸೆಟ್‌ಗಳ ಅಂತರದಿಂದ ಮಣಿಸಿ ಪ್ರಾಬಲ್ಯ ಮೆರೆದರು. 2024ರ ಆಸ್ಟ್ರೇಲಿಯನ್ ಓಪನ್‌ನಲ್ಲಿ ಸೆಮಿ ಫೈನಲ್‌ಗೆ ತಲುಪಿದ್ದ ಗೌಫ್, ಮುಂದಿನ ಸುತ್ತಿನಲ್ಲಿ ತಮ್ಮದೇ ದೇಶದ ಹೈಲಿ ಬ್ಯಾಪ್ಟಿಸ್ಟ್ ಅವರನ್ನು ಎದುರಿಸಲಿದ್ದಾರೆ. ಲಿಂಡಾ ಕ್ಲಿಮೊವಿಕೋವಾರನ್ನು ನೇರ ಸೆಟ್‌ಗಳ ಅಂತರದಿಂದ ಮಣಿಸಿದ ಎಲಿನಾ ಸ್ವಿಟೋಲಿನಾ ಈ ಋತುವಿನಲ್ಲಿ ಉತ್ತಮ ಆರಂಭ ಪಡೆದಿದ್ದು, ಮೂರನೇ ಸುತ್ತಿನಲ್ಲಿ ಡಯಾನ ಸ್ನೈದರ್ ಸವಾಲನ್ನು ಎದುರಿಸಲಿದ್ದಾರೆ. ಜೈಮಿ ಫರಿಯಾರನ್ನು ನಾಲ್ಕು ಸೆಟ್‌ಗಳ ಅಂತರದಿಂದ ಸದೆಬಡಿದ ಆ್ಯಂಡ್ರೆ ರುಬ್ಲೇವ್ ಸತತ ಏಳನೇ ವರ್ಷ ಅಂತಿಮ-32ರ ಸುತ್ತಿಗೆ ಪ್ರವೇಶಿಸಿದ್ದಾರೆ. *ಯೂಕಿ ಭಾಂಬ್ರಿ ಶುಭಾರಂಭ ಪುರುಷರ ಡಬಲ್ಸ್ ವಿಭಾಗದಲ್ಲಿ ಬುಧವಾರ ಕೇವಲ 57 ನಿಮಿಷಗಳಲ್ಲಿ ಮುಗಿದ ಮೊದಲ ಸುತ್ತಿನ ಪಂದ್ಯದಲ್ಲಿ ಭಾರತದ ಯೂಕಿ ಭಾಂಬ್ರಿ ಅವರು ಸ್ವೀಡನ್‌ನ 10ನೇ ಶ್ರೇಯಾಂಕದ ಆಟಗಾರ ಆಂಡ್ರೆ ಗೊರಾನ್ಸನ್ ಜೊತೆಗೂಡಿ ಆಸ್ಟ್ರೇಲಿಯಾದ ಜೋಡಿ ಜೇಮ್ಸ್ ಡಕ್‌ವರ್ತ್ ಹಾಗೂ ಕ್ರೂಝ್ ಹೆವಿಟ್ ಅವರನ್ನು 6-3, 6-4 ನೇರ ಸೆಟ್‌ಗಳ ಅಂತರದಿಂದ ಮಣಿಸಿದರು. ಈ ಮೂಲಕ ಪಂದ್ಯಾವಳಿಯಲ್ಲಿ ಎರಡನೇ ಸುತ್ತಿಗೆ ಪ್ರವೇಶಿಸಿ ಶುಭಾರಂಭ ಮಾಡಿದರು. ವರ್ಷದ ಮೊದಲ ಗ್ರ್ಯಾನ್‌ಸ್ಲಾಮ್ ಟೂರ್ನಿಯಲ್ಲಿ ಇಂಡೋ–ಸ್ವೀಡಿಷ್ ಜೋಡಿ 10ನೇ ಶ್ರೇಯಾಂಕ ಪಡೆದಿದೆ. ಮೊದಲ ಸುತ್ತಿನ ಪಂದ್ಯದುದ್ದಕ್ಕೂ ಬಿಗಿ ಹಿಡಿತ ಸಾಧಿಸಿದೆ. ಮೊದಲ ಸೆಟ್‌ನಲ್ಲಿ ಐದು ಸರ್ವಿಸ್ ಗೇಮ್‌ಗಳಲ್ಲಿ ನಾಲ್ಕನ್ನು ಗೆದ್ದಿದ್ದು, 9ನೇ ಗೇಮ್‌ನಲ್ಲಿ ಒಮ್ಮೆ ಮಾತ್ರ ಅಂಕ ಬಿಟ್ಟುಕೊಟ್ಟರು. ವಿಶ್ವದ ಮಾಜಿ ನಂ.1 ಆಟಗಾರ ಹಾಗೂ ಹಲವು ಗ್ರ್ಯಾನ್‌ಸ್ಲಾಮ್ ಪ್ರಶಸ್ತಿಗಳ ವಿಜೇತರಾಗಿರುವ ಲೇಟನ್ ಹೆವಿಟ್ ಅವರ ಪುತ್ರ ಕ್ರೂಝ್ ಹೆವಿಟ್ ಹಾಗೂ ಜೇಮ್ಸ್ ವಿರುದ್ಧ ಭಾಂಬ್ರಿ ಜೋಡಿ ಮೊದಲ ಸೆಟ್ ಅನ್ನು 6-3 ಅಂತರದಿಂದ ಗೆದ್ದುಕೊಂಡಿತು. ಎರಡನೇ ಸೆಟ್‌ನಲ್ಲೂ ಭಾಂಬ್ರಿ–ಗೊರಾನ್ಸನ್ ಜೋಡಿ ಒಂದೂ ಅಂಕವನ್ನು ಕೈಚೆಲ್ಲದೆ, ಮತ್ತೊಮ್ಮೆ ಐದು ಸರ್ವಿಸ್ ಗೇಮ್‌ಗಳಲ್ಲಿ ನಾಲ್ಕನ್ನು ಗೆದ್ದುಕೊಂಡರು. ಭಾಂಬ್ರಿ–ಗೊರಾನ್ಸನ್ ಜೋಡಿ ಮುಂದಿನ ಸುತ್ತಿನಲ್ಲಿ ಮೆಕ್ಸಿಕೊದ ಸ್ಯಾಂಟಿಯಾಗೊ ಗೊಂಝಾಲೆಝ್ ಹಾಗೂ ನೆದರ್‌ಲ್ಯಾಂಡ್ಸ್‌ನ ಡೇವಿಡ್ ಪೀಲ್ ಅಥವಾ ಬ್ರೆಝಿಲ್‌ನ ಜೋಡಿ ಮಾರ್ಸೆಲೊ ಮೆಲೊ ಹಾಗೂ ಫೆರ್ನಾಂಡೊ ರಾಂಬೊಲಿ ಅವರನ್ನು ಎದುರಿಸಲಿದ್ದಾರೆ. ಭಾಂಬ್ರಿ ಅವರು 2014ರ ಆಸ್ಟ್ರೇಲಿಯನ್ ಓಪನ್‌ನಲ್ಲಿ ಶ್ರೇಷ್ಠ ಪ್ರದರ್ಶನ ನೀಡಿದ್ದರು. ಆಗ ಅವರು ನ್ಯೂಝಿಲ್ಯಾಂಡ್‌ನ ಮೈಕಲ್ ವೇನಸ್ ಜೊತೆಗೂಡಿ ಮೂರನೇ ಸುತ್ತಿಗೆ ಪ್ರವೇಶಿಸಿದ್ದರು. ಕಳೆದ ವರ್ಷ ಗ್ರ್ಯಾನ್‌ಸ್ಲಾಮ್ ಟೂರ್ನಿಗಳಲ್ಲಿ ಭಾಂಬ್ರಿ ತಮ್ಮ ಶ್ರೇಷ್ಠ ಪ್ರದರ್ಶನ ನೀಡಿದ್ದಾರೆ. ಯು.ಎಸ್. ಓಪನ್ ಟೂರ್ನಿಯಲ್ಲಿ ಸೆಮಿ ಫೈನಲ್‌ಗೆ ಪ್ರವೇಶಿಸಿದ್ದರು. ಆಸ್ಟ್ರೇಲಿಯನ್ ಓಪನ್‌ನಲ್ಲಿ ಮಂಗಳವಾರ ಭಾರತದ ಟೆನಿಸ್ ಆಟಗಾರ ನಿಕಿ ಕಾಲಿಯಂಡಾ ಪೂಣಚ್ಚ ಅವರು ಥಾಯ್ಲೆಂಡ್‌ನ ಇಸಾರೊ ಅವರೊಂದಿಗೆ ಡಬಲ್ಸ್ ಪಂದ್ಯ ಆಡಿದ್ದು, ಸ್ಪೇನ್‌ನ ಮಾರ್ಟಿನೆಝ್ ಹಾಗೂ ಮುನಾರ್ ವಿರುದ್ಧ 6-7(3), 5-7 ಸೆಟ್‌ಗಳ ಅಂತರದಿಂದ ಸೋತಿದ್ದರು. ಯೂಕಿ ಭಾಂಬ್ರಿ ಮೆಲ್ಬರ್ನ್‌ನಲ್ಲಿ ಮಿಕ್ಸೆಡ್ ಡಬಲ್ಸ್ ವಿಭಾಗದಲ್ಲಿ 2018ರ ವಿಂಬಲ್ಡನ್ ಚಾಂಪಿಯನ್ ಅಮೆರಿಕದ ನಿಕೋಲ್ ಮೆಲಿಚಾರ್–ಮಾರ್ಟಿನೆಝ್ ಅವರೊಂದಿಗೆ ಆಡಲಿದ್ದಾರೆ. ಮೊದಲ ಸುತ್ತಿನಲ್ಲಿ ಚೀನಾದ ಝಾಂಗ್ ಶುಐ ಹಾಗೂ ಜರ್ಮನಿಯ ಟಿಮ್ ಪುಟ್ಝ್ ಅವರನ್ನು ಎದುರಿಸಲಿದ್ದಾರೆ. ಭಾಂಬ್ರಿ ಅವರು ಗ್ರ್ಯಾನ್‌ಸ್ಲಾಮ್ ಮಿಕ್ಸೆಡ್ ಡಬಲ್ಸ್‌ನಲ್ಲಿ ಎರಡನೇ ಬಾರಿ ಆಡುತ್ತಿದ್ದಾರೆ. 2025ರ ವಿಂಬಲ್ಡನ್ ಚಾಂಪಿಯನ್‌ಶಿಪ್‌ನಲ್ಲಿ ಮೊದಲ ಬಾರಿ ಆಡಿದ್ದರು. 114ನೇ ಆವೃತ್ತಿಯ ಆಸ್ಟ್ರೇಲಿಯನ್ ಓಪನ್ ಟೆನಿಸ್ ಪಂದ್ಯಾವಳಿ ಫೆಬ್ರವರಿ 1ರಂದು ಮುಕ್ತಾಯವಾಗಲಿದೆ.

ವಾರ್ತಾ ಭಾರತಿ 21 Jan 2026 9:46 pm

ಮೊಝಾಂಬಿಕ್‌ ನ ಗ್ರಾಸಾ ಮಾಶೆಲ್‌ ಗೆ ಇಂದಿರಾ ಗಾಂಧಿ ಶಾಂತಿ ಪ್ರಶಸ್ತಿ

ಹೊಸದಿಲ್ಲಿ, ಜ. 21: ಶಾಂತಿ, ನಿಶ್ಶಸ್ತ್ರೀಕರಣ ಮತ್ತು ಅಭಿವೃದ್ಧಿಗಾಗಿ ನೀಡಲಾಗುವ 2025ರ ಸಾಲಿನ ಇಂದಿರಾ ಗಾಂಧಿ ಪ್ರಶಸ್ತಿಗೆ ಮೊಝಾಂಬಿಕ್‌ನ ಮಾನವ ಹಕ್ಕುಗಳ ಹೋರಾಟಗಾರ್ತಿ ಗ್ರಾಸಾ ಮಾಶೆಲ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಪ್ರಶಸ್ತಿಯ ಅಂತಾರಾಷ್ಟ್ರೀಯ ತೀರ್ಪುಗಾರರ ಮಂಡಳಿ ಬುಧವಾರ ಘೋಷಿಸಿದೆ. ಶಿಕ್ಷಣ, ಆರೋಗ್ಯ ಮತ್ತು ಪೌಷ್ಟಿಕತೆ, ಆರ್ಥಿಕ ಸಬಲೀಕರಣ ಕ್ಷೇತ್ರಗಳಲ್ಲಿ ಅವರು ಮಾಡಿರುವ ಗಣನೀಯ ಕೆಲಸಗಳು ಹಾಗೂ ಕಠಿಣ ಪರಿಸ್ಥಿತಿಗಳಲ್ಲಿಯೂ ನಡೆಸಿದ ಮಾನವೀಯ ಕಾರ್ಯಗಳಿಗಾಗಿ ಅವರನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಮಾಜಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಶಿವಶಂಕರ್ ಮೆನನ್ ಅಧ್ಯಕ್ಷತೆಯಲ್ಲಿರುವ ಅಂತಾರಾಷ್ಟ್ರೀಯ ತೀರ್ಪುಗಾರರ ಸಮಿತಿ ಪ್ರಕಟಿಸಿದ ಹೇಳಿಕೆಯಲ್ಲಿ ತಿಳಿಸಿದೆ. ಮಾಶೆಲ್ ಅವರು ಆಫ್ರಿಕದ ಉನ್ನತ ರಾಜತಾಂತ್ರಿಕೆ, ರಾಜಕಾರಣಿ ಮತ್ತು ಮಾನವತಾವಾದಿಯಾಗಿದ್ದಾರೆ. ಸ್ವಯಮಾಡಳಿತ ಮತ್ತು ಮಾನವ ಹಕ್ಕುಗಳ ರಕ್ಷಣೆಗೆ ಅವರು ಜೀವಮಾನಪೂರ್ಣ ಹೋರಾಟ ನಡೆಸಿದ್ದಾರೆ ಎಂದು ಹೇಳಿಕೆ ತಿಳಿಸಿದೆ. ‘‘ಅವರು ಸರ್ವರಿಗೂ ನ್ಯಾಯೋಚಿತ ಹಾಗೂ ಸಮಾನತೆಯ ಸಮಾಜವೊಂದನ್ನು ರೂಪಿಸಲು ಶ್ರಮಿಸಿದ್ದಾರೆ. ಅದರ ಮೂಲಕ ದುರ್ಬಲ ಸಮುದಾಯಗಳ ಜನರ ಜೀವನವನ್ನು ಸುಧಾರಿಸಲು ಪ್ರಯತ್ನಿಸಿದ್ದಾರೆ. ಈ ಕಾರ್ಯಕ್ಕಾಗಿ ಅವರು ತಮ್ಮ ಜೀವನವನ್ನೇ ಮುಡುಪಾಗಿಟ್ಟಿದ್ದಾರೆ’’ ಎಂದು ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ.

ವಾರ್ತಾ ಭಾರತಿ 21 Jan 2026 9:40 pm

Indore | ಕಲುಷಿತ ನೀರು ಸೇವನೆ; ಮತ್ತೊಬ್ಬರು ಮೃತ್ಯು, ಮೃತರ ಸಂಖ್ಯೆ 25ಕ್ಕೆ ಏರಿಕೆ

ಇಂದೋರ್ (ಮ.ಪ್ರ.), ಜ. 21: ಕಲುಷಿತ ನೀರು ಸೇವಿಸಿದ ಪರಿಣಾಮ ಅತಿಸಾರ ಬಾಧಿಸಿ 50 ವರ್ಷದ ರಿಕ್ಷಾ ಚಾಲಕರೊಬ್ಬರು ಮೃತಪಟ್ಟಿದ್ದು, ಈ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 25ಕ್ಕೆ ಏರಿಕೆಯಾಗಿದೆ. ಅತಿಸಾರದಿಂದ ಬಳಲುತ್ತಿದ್ದ ಭಗೀರಥಪುರ ನಿವಾಸಿ ಹೇಮಂತ್ ಗಾಯಕ್ವಾಡ್ ಅವರು ಕಳೆದ 15 ದಿನಗಳಿಂದ ಇಂದೋರ್‌ನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಮಂಗಳವಾರ ರಾತ್ರಿ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕಲುಷಿತ ನೀರು ಸೇವಿಸಿದ ಬಳಿಕ ಡಿಸೆಂಬರ್ 22ರಂದು ಹೇಮಂತ್ ಗಾಯಕ್ವಾಡ್ ಅನಾರೋಗ್ಯಕ್ಕೀಡಾಗಿದ್ದರು. ಆರಂಭದಲ್ಲಿ ಅವರನ್ನು ಪರ್ದೇಶಿಪುರದಲ್ಲಿನ ಖಾಸಗಿ ನರ್ಸಿಂಗ್ ಹೋಮ್‌ಗೆ ದಾಖಲಿಸಲಾಗಿತ್ತು. ಆರೋಗ್ಯ ಸ್ಥಿತಿ ತೀವ್ರವಾಗಿ ಹದಗೆಟ್ಟ ಹಿನ್ನೆಲೆಯಲ್ಲಿ ಜನವರಿ 7ರಂದು ಅವರನ್ನು ಅರಬಿಂದೋ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ಅಲ್ಲಿ ಅವರು ಹಲವು ದಿನಗಳ ಕಾಲ ಚಿಕಿತ್ಸೆ ಪಡೆದರು. ವೈದ್ಯರ ಪ್ರಕಾರ, ಅವರು ಜೀವಕೋಶ ಕಾರ್ಸಿನೋಮಾ ಹಾಗೂ ಮೂತ್ರಪಿಂಡದ ಕಾಯಿಲೆಯಿಂದ ಬಳಲುತ್ತಿದ್ದರು. ಆದರೆ, ಅತಿಸಾರ ಮತ್ತು ವಾಂತಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಅವರ ಆರೋಗ್ಯ ಸ್ಥಿತಿ ಮತ್ತಷ್ಟು ಹದಗೆಟ್ಟಿತು ಎಂದು ಮೂಲಗಳು ತಿಳಿಸಿವೆ. ಹೇಮಂತ್ ಅವರ ಕಿರಿಯ ಸಹೋದರ ಸಂಜಯ್ ಗಾಯಕ್ವಾಡ್, “ನನ್ನ ಸಹೋದರ ಕಲುಷಿತ ನೀರು ಸೇವಿಸಿರುವುದರಿಂದ ಮೃತಪಟ್ಟಿದ್ದಾರೆ. 15 ದಿನಗಳ ಅನಾರೋಗ್ಯದ ಬಳಿಕ ಅವರು ಸಾವನ್ನಪ್ಪಿದರು. ಅವರನ್ನು ಮೊದಲು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಆರೋಗ್ಯ ಹದಗೆಟ್ಟಾಗ ಇನ್ನೊಂದು ಖಾಸಗಿ ಆಸ್ಪತ್ರೆಗೆ ವರ್ಗಾಯಿಸಲಾಗಿತ್ತು” ಎಂದು ಹೇಳಿದ್ದಾರೆ. “ಭಗೀರಥಪುರದ ನಿವಾಸಿಗಳು ಕಳೆದ ಎರಡು ವರ್ಷಗಳಿಂದ ಕಲುಷಿತ ನೀರಿನ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ನಗರಸಭೆಗೆ ಹಲವು ಬಾರಿ ದೂರು ನೀಡಿದರೂ ಸಮಸ್ಯೆಗೆ ಪರಿಹಾರ ದೊರಕಿಲ್ಲ” ಎಂದು ಅವರು ಆರೋಪಿಸಿದ್ದಾರೆ. ಹೇಮಂತ್ ಅವರ ಮಗಳು ರಿಯಾ, “ಕಲುಷಿತ ನೀರು ಸೇವಿಸಿದ ಬಳಿಕ ನನ್ನ ತಂದೆಗೆ ತೀವ್ರ ಅತಿಸಾರ ಕಾಣಿಸಿಕೊಂಡಿತು. ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದೆವು. ಆರೋಗ್ಯ ಹದಗೆಟ್ಟಾಗ ಮತ್ತೊಂದು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಅಲ್ಲಿ ಅವರು ಮೃತಪಟ್ಟರು” ಎಂದು ಹೇಳಿದ್ದಾರೆ. ಕಲುಷಿತ ನೀರು ಸೇವನೆಯಿಂದ ಉಂಟಾದ ಅತಿಸಾರದಿಂದ ಈವರೆಗೆ 25 ಮಂದಿ ಮೃತಪಟ್ಟಿದ್ದಾರೆ ಎಂದು ಸ್ಥಳೀಯ ನಿವಾಸಿಗಳು ಹೇಳುತ್ತಾರೆ. ಆದರೆ, ಮಧ್ಯಪ್ರದೇಶ ಸರ್ಕಾರ ಜನವರಿ 15ರಂದು ಮಧ್ಯಪ್ರದೇಶ ಉಚ್ಚ ನ್ಯಾಯಾಲಯದ ಇಂದೋರ್ ಪೀಠಕ್ಕೆ ಸಲ್ಲಿಸಿದ ಸ್ಥಿತಿಗತಿ ವರದಿಯಲ್ಲಿ, ಐದು ತಿಂಗಳ ಮಗು ಸೇರಿದಂತೆ ಏಳು ಮಂದಿ ಮೃತಪಟ್ಟಿದ್ದಾರೆ ಎಂದು ಉಲ್ಲೇಖಿಸಿದೆ.

ವಾರ್ತಾ ಭಾರತಿ 21 Jan 2026 9:40 pm

ಮಕ್ಕಳ ಸುರಕ್ಷತೆಗೆ ನೀತಿ-ನಿಯಮಗಳು ತಳಮಟ್ಟದಲ್ಲಿ ಜಾರಿಯಾಗಲಿ: ತಿಪ್ಪೇಸ್ವಾಮಿ ಕೆ.ಟಿ.

ಪೋಕ್ಸೋ ಕಾಯ್ದೆ ಹಾಗೂ ಬಾಲನ್ಯಾಯ ಕಾಯ್ದೆ ತರಬೇತಿ

ವಾರ್ತಾ ಭಾರತಿ 21 Jan 2026 9:39 pm

Bengaluru | ಅಂಬಾರಿ ‘ಡಬಲ್ ಡೆಕ್ಕರ್ ಬಸ್’ಗೆ ಚಾಲನೆ ನೀಡಿದ ಸಚಿವ ಎಚ್.ಕೆ.ಪಾಟೀಲ್

ಬೆಂಗಳೂರು: ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದಿಂದ ಬೆಂಗಳೂರು ನಗರದಲ್ಲಿ ‘ಅಂಬಾರಿ ಡಬಲ್ ಡೆಕ್ಕರ್ ಬಸ್’ಗೆ ಪ್ರವಾಸೋದ್ಯಮ ಇಲಾಖೆ ಸಚಿವ ಎಚ್.ಕೆ.ಪಾಟೀಲ್ ಅವರು ಬುಧವಾರ ನಗರದ ರವೀಂದ್ರ ಕಲಾಕ್ಷೇತ್ರ ಎದುರು ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದ್ದಾರೆ. ಈ ವೇಳೆ ಸಚಿವ ಎಚ್.ಕೆ.ಪಾಟೀಲ್ ಮಾತನಾಡಿ, ‘ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮವು ಸರಕಾರದ ಸ್ವಾಮ್ಯಕ್ಕೆ ಒಳಪಟ್ಟು ಪ್ರವಾಸೋದ್ಯಮ ಇಲಾಖೆಯ ಅಂಗಸಂಸ್ಥೆಯಾಗಿದ್ದು, 55 ವರ್ಷಗಳಿಂದ ಆತಿಥ್ಯ ಕ್ಷೇತ್ರ ಹಾಗೂ ಪ್ರವಾಸೋದ್ಯಮ ಕ್ಷೇತ್ರಕ್ಕೆ ಸಂಬಂಧಪಟ್ಟ ಚಟುವಟಿಕೆಗಳನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದ್ದು, ರಾಜ್ಯಕ್ಕೆ ಭೇಟಿ ನೀಡುವ ದೇಶ ಹಾಗೂ ವಿದೇಶದ ಪ್ರವಾಸಿಗರಿಗೆ ಉತ್ತಮ ಗುಣಮಟ್ಟದ ಆತಿಥ್ಯ ಸೇವೆಯನ್ನು ಒದಗಿಸುತ್ತಾ ಬಂದಿದೆ ಎಂದು ತಿಳಿಸಿದರು. ಬೆಂಗಳೂರಿಗೆ ಬರುವ ಪ್ರವಾಸಿಗರಿಗೆ ಹಾಗೂ ಬೆಂಗಳೂರಿನ ಪ್ರವಾಸೋದ್ಯಮವನ್ನು ಜನಪ್ರಿಯಗೊಳಿಸಲು ಬೆಂಗಳೂರು ನಗರದಲ್ಲಿ ಲಂಡನ್ ಮಾದರಿಯ ‘ಅಂಬಾರಿ ಡಬಲ್ ಡೆಕ್ಕರ್’ ಬಸ್ ಅನ್ನು ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದಿಂದ ಒಟ್ಟು 3 ಡಬಲ್ ಡೆಕ್ಕರ್ ಬಸ್ ಅನ್ನು ಕಾರ್ಯಾಚರಣೆ ಮಾಡಲು ಉದ್ದೇಶಿಸಲಾಗಿದೆ ಎಂದು ತಿಳಿಸಿದರು. ಡಬಲ್ ಡೆಕ್ಕರ್ ಜ.21ರಿಂದ ರವೀಂದ್ರ ಕಲಾಕ್ಷೇತ್ರ-ಕಾರ್ಪೋರೇಷನ್ ಸರ್ಕಲ್-ಹಡ್ಸನ್ ವೃತ್ತ -ಕಸ್ತೂರ ಬಾ ರಸ್ತೆ-ವಿಶ್ವೇಶ್ವರಯ್ಯ ಮೂಸಿಯಂ-ಚಿನ್ನಸ್ವಾಮಿ ಸ್ಟೇಡಿಯಂ ರಸ್ತೆ-ಅಂಚೆ ಕಚೇರಿ- ಹೈಕೋರ್ಟ್/ ವಿಧಾನಸೌಧ-ಕೆ.ಆರ್ ವೃತ್ತ -ಹಡ್ಸನ್ ವೃತ್ತ-ಕಾರ್ಪೋರೇಷನ್ ಸರ್ಕಲ್- ರವೀಂದ್ರ ಕಲಾಕ್ಷೇತ್ರ ಕಾರ್ಯಾಚರಣೆ ಮಾಡಲಿದೆ ಎಂದು ಮಾಹಿತಿ ನೀಡಿದರು. ಒಂದು ದಿನಕ್ಕೆ ಪ್ರತಿ ವ್ಯಕ್ತಿಗೆ 180 ರೂ.ಗಳನ್ನು ದರ ನಿಗದಿ ಪಡಿಸಲಾಗಿದೆ. ಅಂಬಾರಿ ಬಸ್ ಲೋಯೆರ್ ಡೆಕ್ ಹವನಿಂತ್ರಣ ಬಸ್ ಆಗಿದ್ದು ಐಷಾರಾಮಿ ಆಸನಗಳನ್ನು ಒಳಗೊಂಡಿದೆ. ಪ್ರವಾಸಿಗರಿಗೆ ಸುತ್ತಮುತ್ತಲಿನ ಪ್ರವಾಸಿ ತಾಣಗಳ ಕುರಿತು ಪರಿಚಯಿಸಲು ಮೈಕ್ ಸಿಸ್ಟಮ್ ಅಳವಡಿಸಲಾಗಿದೆ. ಪ್ರತಿ ಬಸ್ ನಲ್ಲಿ ಅಪ್ಪರ್ ಡೆಕ್‍ನಲ್ಲಿ 20 ಆಸನಗಳಿದ್ದು ಪ್ರವಾಸಿಗರಿಗೆ ಎತ್ತರದಿಂದ ಪ್ರವಾಸಿ ತಾಣ ಮತ್ತು ನಗರ ವೀಕ್ಷಣಗೆ ಅನುಭವ ಪಡೆಯಲು ಅನುಕೂಲವಾಗಲಿದೆ ಎಂದು ತಿಳಿಸಿದರು. ಮುಂಬರುವ ದಿನಗಳಲ್ಲಿ ಪ್ರತ್ಯೇಕ ಮಾರ್ಗಗಳಲ್ಲಿ ಡಬಲ್ ಡೆಕ್ಕರ್ ಬಸ್ ಸಂಚಾರ ಮಾಡಲು ಕಾರ್ಯಕ್ರಮ ರೂಪಿಸಲಾಗುವುದು. ಡಬಲ್ ಡೆಕ್ಕರ್ ಬಸ್ ಬುಕ್ ಮಾಡಲು ಪ್ರವಾಸೋದ್ಯಮ ಇಲಾಖೆಯ ಜಾಲತಾಣ kstdc.co ಹಾಗೂ ದೂ: 080-4334 4334/35 ಮೊ: 89706 50070/ 89706 50075 ಸಂಪರ್ಕಿಸಿ ಹೆಚ್ಚಿನ ಮಾಹಿತಿ ಪಡೆದುಕೊಳ್ಳಬಹುದು ಎಂದು ತಿಳಿಸಿದರು ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷ ಶ್ರೀನಿವಾಸ್.ಎಂ, ಶಾಸಕ ಉದಯ್ ಬಿ ಗರುಡಾಚಾರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಾರ್ಯದರ್ಶಿ ಮಂಜುನಾಥ್, ಇಲಾಖೆಯ ನಿರ್ದೇಶಕಿ ಗಾಯತ್ರಿ, ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಪ್ರಶಾಂತ್ ಕುಮಾರ್ ಮಿಶ್ರ ಸಹಿತ ಮತ್ತಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.

ವಾರ್ತಾ ಭಾರತಿ 21 Jan 2026 9:37 pm

ವಚನಗಳ ಮೂಲಕ ಸನ್ಮಾರ್ಗಕ್ಕೆ ದಾರಿತೋರಿದವರು ಶಿವಶರಣರು: ಎಂ.ಎ. ಗಫೂರ್

ಉಡುಪಿ, ಜ.21: ಹನ್ನೆರಡನೆಯ ಶತಮಾನವನ್ನು ವಚನಗಳ ಕ್ರಾಂತಿಯುಗ ಎನ್ನಲಾಗುತ್ತಿದ್ದು, ಅಂದಿನ ಕಾಲಘಟ್ಟದಲ್ಲಿ ಶಿವಶರಣ- ಶರಣೆಯರು ಸಮಾಜದಲ್ಲಿ ಆಳವಾಗಿ ಬೇರೂರಿದ್ದ ಅಸ್ಪಶ್ಯತೆ, ಜಾತೀಯತೆ, ಅಸಮಾನತೆಯನ್ನು ತೊಲಗಿಸಲು ತಮ್ಮದೇ ಶೈಲಿಯಲ್ಲಿ ಸರಳ ರೂಪದಲ್ಲಿ ವಚನಗಳನ್ನು ರಚಿಸುವ ಮೂಲಕ ಜನಸಾಮಾನ್ಯರು ಸನ್ಮಾರ್ಗದಲ್ಲಿ ನಡೆಯಲು ದಾರಿ ತೋರಿಸಿದ್ದಾರೆ ಎಂದು ಕರಾವಳಿ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಎಂ.ಎ.ಗಫೂರ್ ಹೇಳಿದ್ದಾರೆ. ಬುಧವಾರ ನಗರದ ವಳಕಾಡು ಸರಕಾರಿ ಸಂಯುಕ್ತ ಪ್ರೌಢಶಾಲೆಯಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ನಡೆದ ಮಹಾಯೋಗಿ ವೇಮನ ಹಾಗೂ ಅಂಬಿಗರ ಚೌಡಯ್ಯ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ, ಮಹನೀಯರಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಅವರು ಮಾತನಾಡುತ್ತಿದ್ದರು. ನೇರ ನಿಷ್ಠುರವಾದಿಯಾಗಿ ಸಮ ಸಮಾಜ ನಿರ್ಮಾಣವನ್ನು ಪ್ರತಿಪಾದಿಸಿದ ಅಂಬಿಗರ ಚೌಡಯ್ಯ ಹಾಗೂ ಮಹಾಯೋಗಿ ವೇಮನ ಅವರ ಆದರ್ಶಗಳು ಇಂದಿಗೂ ಸಮಾಜಕ್ಕೆ ಮಾದರಿಯಾಗಿ ಉಳಿದಿದೆ. ಶಿವಶರಣರ ವಚನಗಳ ಸಾರವನ್ನು ಬದುಕಿನಲ್ಲಿ ಅಳವಡಿಸಿಕೊಂಡಲ್ಲಿ ನಮ್ಮಲ್ಲಿ ಅಡಗಿರುವ ಅಜ್ಞಾನದ ಕತ್ತಲನ್ನು ಹೋಗಲಾಡಿಸಿ ಕೊಂಡು ಸನ್ಮಾರ್ಗದ ಹಾದಿಯಲ್ಲಿ ಸಾಗಬಹುದು. ಶಿವಶರಣರು ಅಂದು ಪ್ರತಿಪಾದಿಸಿದ ವಚನ ಸಾರಗಳು ಸಮಾಜದಲ್ಲಿ ಇಂದಿಗೂ ಪ್ರಸ್ತುತವಾಗಿದೆ ಎಂದರು. ಅಧ್ಯಕ್ಷತೆ ವಹಿಸಿದ್ದ ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ ಮಾತನಾಡಿ, ಅಂಬಿಗರ ಚೌಡಯ್ಯ 12ನೆ ಶತಮಾನ ದಲ್ಲಿಯೇ ಜಾತೀಯತೆ, ಮೌಢ್ಯತೆ ವಿರೋಧಿಸಿದ್ದರು. ಭಿನ್ನ ವ್ಯಕ್ತಿತ್ವದ ಶ್ರೇಷ್ಠ ವಚನಕಾರರಾದ ಇವರ ತತ್ವ ಆದರ್ಶ ಗಳು ಇಂದಿಗೂ ಪ್ರಸ್ತುತವಾಗಿವೆ. ಹಾಗೆಯೇ ಸಮಾಜದಲ್ಲಿ ಕವಿದಿದ್ದ ಅಂಧಕಾರ ತೊಡೆದುಹಾಕಲು ಜ್ಞಾನದ ದೀವಿಗೆ ಹಿಡಿದು ಸಮಾಜ ಸುಧಾರಣೆಗೆ ಅವಿರತ ಶ್ರಮಿಸಿದ ಸಮಾಜ ಸುಧಾರಕರು ಮಹಾಯೋಗಿ ವೇಮನ ಎಂದರು. ನಿವೃತ್ತ ಉಪನ್ಯಾಸಕಿ ನಳಿನಾದೇವಿ ಎಂ.ಆರ್ ವಿಶೇಷ ಉಪನ್ಯಾಸ ನೀಡಿ ಮಾತನಾಡಿ, 12ನೇ ಶತಮಾನದಲ್ಲಿ ವಚನ ಚಳುವಳಿಯ ಕ್ರಾಂತಿಯಿಂದಾಗಿ, ಲಿಂಗ ತಾರತಮ್ಯ, ಜಾತೀಯತೆ, ಅಂಧ ಆಚರಣೆಗಳನ್ನು ಮೀರಿ ಜನ ಸಾಮಾನ್ಯರಿಗೆ ಸಮಾನತೆಯನ್ನು ನೀಡಿದವರು ಬಸವಣ್ಣನವರು. ಪ್ರತಿಯೊಬ್ಬರೂ ತಮ್ಮ ಅನುಭವಗಳನ್ನು ಮುಕ್ತವಾಗಿ ಹಂಚಿಕೊಳ್ಳುವ ಮೂಲಕ ಬದುಕಿನ ಸರಿ-ತಪ್ಪುಗಳನ್ನು ಅರಿತು ತಿದ್ದುಪಡಿ ಮಾಡಿಕೊಳ್ಳ ಬಹುದು ಎಂಬುದನ್ನು ತೋರಿಸಿಕೊಟ್ಟವರು ಅಂದಿನ ಕಾಲದ ವಚನಕಾರರು ಎಂದರು. ಕಾರ್ಯಕ್ರಮದಲ್ಲಿ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗದ ಚಿಕ್ಕಮಠ, ಶಾಲೆಯ ಅಧ್ಯಾಪಕ ವೃಂದದವರು, ವಿದ್ಯಾರ್ಥಿಗಳು ಹಾಗೂ ಇತರರು ಉಪಸ್ಥಿತರಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರೆ, ವರ್ಷಾ ಬಿ ಕೋಟ್ಯಾನ್ ಕಾರ್ಯಕ್ರಮ ನಿರೂಪಿಸಿ, ವಳಕಾಡು ಸರಕಾರಿ ಸಂಯುಕ್ತ ಪ್ರೌಢಶಾಲೆಯ ಮುಖ್ಯೋಪಾಧ್ಯಾಯಿನಿ ಕೆ. ಪೂರ್ಣಿಮಾ ವಂದಿಸಿದರು.

ವಾರ್ತಾ ಭಾರತಿ 21 Jan 2026 9:36 pm

ಹಣಕಾಸು ಯೋಜನೆಗಳ ಪ್ರಚಾರಕ್ಕೆ ತಮ್ಮ ಭಾವಚಿತ್ರ, ಧ್ವನಿಯ ದುರ್ಬಳಕೆ: ನಕಲಿ ವಿಡಿಯೊಗಳ ಬಗ್ಗೆ ಸುಧಾಮೂರ್ತಿ ಎಚ್ಚರಿಕೆ

ಬೆಂಗಳೂರು: ಹಣಕಾಸು ಯೋಜನೆಗಳು ಹಾಗೂ ಹೂಡಿಕೆಗಳನ್ನು ಪ್ರಚಾರ ಮಾಡಲು ತಮ್ಮ ಭಾವಚಿತ್ರ ಹಾಗೂ ಧ್ವನಿಯನ್ನು ದುರ್ಬಳಕೆ ಮಾಡುತ್ತಿರುವ ನಕಲಿ ವಿಡಿಯೊಗಳ ಬಗ್ಗೆ ರಾಜ್ಯಸಭಾ ಸದಸ್ಯೆ ಸುಧಾಮೂರ್ತಿ ಎಚ್ಚರಿಕೆ ನೀಡಿದ್ದಾರೆ. ನನ್ನ ಅರಿವು ಅಥವಾ ಒಪ್ಪಿಗೆ ಇಲ್ಲದೆ ಈ ಡೀಪ್‌ಫೇಕ್‌ ವಿಡಿಯೊಗಳನ್ನು ನಿರ್ಮಿಸಲಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಸುಧಾಮೂರ್ತಿ, “ಹಣಕಾಸು ಯೋಜನೆಗಳು ಹಾಗೂ ಹೂಡಿಕೆಗಳನ್ನು ಪ್ರಚಾರ ಮಾಡಲು ನನ್ನ ಭಾವಚಿತ್ರ ಹಾಗೂ ಧ್ವನಿಯನ್ನು ದುರ್ಬಳಕೆ ಮಾಡಿಕೊಂಡು ಆನ್‌ಲೈನ್‌ನಲ್ಲಿ ಹಂಚಲಾಗುತ್ತಿರುವ ನಕಲಿ ವಿಡಿಯೊಗಳ ಬಗ್ಗೆ ನಾನು ನಿಮ್ಮನ್ನು ಎಚ್ಚರಿಸಲು ಬಯಸುತ್ತೇನೆ. ಇವು ನನ್ನ ಅರಿವು ಅಥವಾ ಒಪ್ಪಿಗೆ ಇಲ್ಲದೆ ನಿರ್ಮಿಸಲಾದ ಡೀಪ್‌ಫೇಕ್‌ ವಿಡಿಯೊಗಳಾಗಿವೆ” ಎಂದು ತಿಳಿಸಿದ್ದಾರೆ. “ವಂಚಕ ವಿಡಿಯೊಗಳನ್ನು ಆಧರಿಸಿ ಯಾವುದೇ ಹಣಕಾಸು ನಿರ್ಧಾರಗಳನ್ನು ಕೈಗೊಳ್ಳಬೇಡಿ. ಇಂತಹ ಮಾಹಿತಿಗಳನ್ನು ಅಧಿಕೃತ ಮಾರ್ಗಗಳ ಮೂಲಕ ಪರಿಶೀಲಿಸಿಕೊಳ್ಳಿ. ಇಂತಹ ತುಣುಕುಗಳು ನಿಮ್ಮ ಗಮನಕ್ಕೆ ಬಂದಾಗ ಅವುಗಳನ್ನು ವರದಿ ಮಾಡಿ. ಜಾಗೃತರಾಗಿರಿ, ಸುರಕ್ಷಿತರಾಗಿರಿ. ಜೈಹಿಂದ್!” ಎಂದು ಅವರು ಮನವಿ ಮಾಡಿದ್ದಾರೆ. ತಾವು ಮೂರ್ತಿ ಟ್ರಸ್ಟ್‌ನ ಅಧ್ಯಕ್ಷೆಯಾಗಿರುವ ಕಾರಣ, ನಿಯಮದ ಪ್ರಕಾರ ಯಾವುದೇ ಹೂಡಿಕೆಗಳು ಅಥವಾ ಹಣಕ್ಕೆ ಸಂಬಂಧಿಸಿದ ವಿಷಯಗಳನ್ನು ಕುರಿತು ಮಾತನಾಡಲು ಅವಕಾಶವಿಲ್ಲ ಎಂದೂ ಅವರು ತಿಳಿಸಿದ್ದಾರೆ. “ನೀವು ಫೇಸ್‌ಬುಕ್‌ ನೋಡಿದಾಗ, ಅದರಲ್ಲಿ ನನ್ನ ಒಂದರಿಂದ ಮೂರು ವಿಡಿಯೊಗಳು ಏಕಕಾಲಕ್ಕೆ ಪ್ರಸಾರವಾಗುತ್ತಿರುವುದನ್ನು ಕಂಡು ನಿಜವಾಗಿಯೂ ಆತಂಕ ಮತ್ತು ನೋವು ಆಗುತ್ತಿದೆ. ಅದರಲ್ಲಿ 200 ಡಾಲರ್‌ ಅಥವಾ 20,000 ರೂ. ಹೂಡಿಕೆ ಮಾಡಿದರೆ, ಅದಕ್ಕಿಂತಲೂ ಅಥವಾ ಬಹುಶಃ ಹತ್ತು ಪಟ್ಟು ಹೆಚ್ಚು ಹಣ ಪಡೆಯಬಹುದು ಎಂಬ ಮಾತುಗಳು ಕೇಳಿ ಬರುತ್ತಿವೆ. ಇಂತಹ ನಕಲಿ ಸುದ್ದಿಗಳು ಹರಡುತ್ತಿವೆ” ಎಂದು ಅವರು ವಿಷಾದ ವ್ಯಕ್ತಪಡಿಸಿದ್ದಾರೆ. ಇಂತಹ ಯೋಜನೆಗಳಲ್ಲಿ ಹೂಡಿಕೆ ಮಾಡಿ ಹಲವರು ನಷ್ಟ ಅನುಭವಿಸಿರುವ ವಿಷಯ ನನಗೆ ತಿಳಿದಿದೆ. ಆದ್ದರಿಂದ ಫೇಸ್‌ಬುಕ್‌ನಂತಹ ಸಾಮಾಜಿಕ ಮಾಧ್ಯಮಗಳಲ್ಲಿ ಹರಡುವ ಹಣಕಾಸು ವಹಿವಾಟುಗಳಿಗೆ ಸಂಬಂಧಿಸಿದ ಸಂದೇಶಗಳನ್ನು ನಂಬಬೇಡಿ ಎಂದು ಸುಧಾಮೂರ್ತಿ ಅವರು ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ. ಇದೇ ವೇಳೆ, “ನನ್ನ ಹೆಸರಿನಲ್ಲಿ ಬರುವ ಯಾವುದೇ ಹಣಕಾಸು ವಹಿವಾಟುಗಳನ್ನು ನಂಬಬಾರದು ಎಂದು ಎಲ್ಲ ವೀಕ್ಷಕರಲ್ಲೂ ಕೈಮುಗಿದು ಬೇಡಿಕೊಳ್ಳುತ್ತೇನೆ. ಇದು ಸಂಪೂರ್ಣ ನಕಲಿ ಸುದ್ದಿ. ದುರಾಸೆಯಿಂದ ನಿಮ್ಮ ಕಠಿಣ ದುಡಿಮೆಯ ಹಣವನ್ನು ಕಳೆದುಕೊಳ್ಳಬೇಡಿ. ನಕಲಿ ಸುದ್ದಿಯನ್ನು ಬಲೆಯಂತೆ ಹಾಕಿ ನಿಮ್ಮನ್ನು ಒಳಗೆಳೆದುಕೊಳ್ಳುತ್ತಾರೆ. ಅದಕ್ಕೆ ಬಲಿಯಾಗಬೇಡಿ” ಎಂದು ಅವರು ಕಿವಿಮಾತು ಹೇಳಿದ್ದಾರೆ.

ವಾರ್ತಾ ಭಾರತಿ 21 Jan 2026 9:32 pm

ಬಳ್ಳಾರಿ | ಮಹಿಳೆ, ಮಕ್ಕಳ ಸುರಕ್ಷತೆಗಾಗಿ ‘ಅಕ್ಕಪಡೆ’ ಯೋಜನೆ ಅನುಷ್ಠಾನ : ಡಿಸಿ ನಾಗೇಂದ್ರ ಪ್ರಸಾದ್ ಕೆ.

ಬಳ್ಳಾರಿ: ಜಿಲ್ಲೆಯಲ್ಲಿ ಮಹಿಳೆಯರು ಮತ್ತು ಮಕ್ಕಳ ಸುರಕ್ಷತೆಯನ್ನು ಖಾತ್ರಿಪಡಿಸಲು ‘ಅಕ್ಕಪಡೆ’ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್ ಕೆ. ಅವರು ಹೇಳಿದರು. ಜಿಲ್ಲಾಡಳಿತ, ಜಿಲ್ಲಾ ಪೊಲೀಸ್ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ಬುಧವಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ‘ಅಕ್ಕಪಡೆ’ ಯೋಜನೆಗೆ ಚಾಲನೆ ನೀಡಿ ಅವರು ಮಾತನಾಡಿದರು. ಮಹಿಳೆ ಮತ್ತು ಮಕ್ಕಳ ಹಕ್ಕುಗಳ ರಕ್ಷಣೆ ಹಾಗೂ ಕಾನೂನು ಅರಿವು ಮೂಡಿಸುವುದು ಈ ಯೋಜನೆಯ ಮುಖ್ಯ ಉದ್ದೇಶ. ಬಾಲ್ಯವಿವಾಹ, ಪೋಕ್ಸೋ ಪ್ರಕರಣಗಳಂತಹ ಅನಿಷ್ಟ ಪದ್ಧತಿಗಳ ಕುರಿತು ಮನೆಯಿಂದಲೇ ಅರಿವು ಆರಂಭವಾಗಬೇಕು. ಅಕ್ಕಪಡೆ ಯೋಜನೆಯ ಯಶಸ್ಸಿಗೆ ಜಿಲ್ಲಾಡಳಿತ ಸಂಪೂರ್ಣ ಸಹಕಾರ ನೀಡಲಿದೆ ಎಂದು ಡಿಸಿ ಭರವಸೆ ನೀಡಿದರು. ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಡಿ.ಪೆನ್ನೇಕರ್ ಮಾತನಾಡಿ, ದೌರ್ಜನ್ಯಕ್ಕೊಳಗಾದವರಿಗೆ ತಕ್ಷಣದ ಸಹಾಯ ಮತ್ತು ಕಾನೂನು ಸಲಹೆ ನೀಡಲು ಅಕ್ಕಪಡೆ ಸದಾ ಸಿದ್ಧವಿರುತ್ತದೆ. ಇದರ ಮೇಲ್ವಿಚಾರಣೆಗಾಗಿ ಸಮಿತಿ ರಚಿಸಲಾಗಿದ್ದು, ಪ್ರತಿ ಮೂರು ತಿಂಗಳಿಗೊಮ್ಮೆ ಪ್ರಗತಿ ಪರಿಶೀಲನೆ ನಡೆಸಲಾಗುವುದು ಎಂದರು. ಹಿರಿಯ ಸಿವಿಲ್ ನ್ಯಾಯಾಧೀಶರಾದ ರಾಜೇಶ್ ಎನ್. ಹೊಸಮನೆ ಮಾತನಾಡಿ, ಅಕ್ಕಪಡೆಯು ಕೌಟುಂಬಿಕ ಹಿಂಸೆ, ಕಳ್ಳಸಾಗಣೆ ಹಾಗೂ ಲೈಂಗಿಕ ದೌರ್ಜನ್ಯ ತಡೆಯುವ ಸಮುದಾಯ ಆಧಾರಿತ ಪಡೆಯಾಗಿದೆ ಎಂದು ಬಣ್ಣಿಸಿದರು. ಇದೇ ವೇಳೆ ಅವರು ಜ. 30ರ ವರೆಗೆ ನಡೆಯಲಿರುವ 'ರಸ್ತೆ ಸುರಕ್ಷತಾ ಜಾಗೃತಿ ಅಭಿಯಾನ'ದ ಮಹತ್ವವನ್ನು ತಿಳಿಸಿದರು. ಜಿಲ್ಲಾ ಪಂಚಾಯತ್ ಸಿಇಓ ಮಹಮ್ಮದ್ ಹಾರಿಸ್ ಸುಮೇರ್ ಅವರು ಬಾಲ್ಯವಿವಾಹ ತಡೆಗೆ ಗಸ್ತು ಪಡೆ ನಡೆಸುವ ಅಗತ್ಯತೆಯನ್ನು ಪ್ರತಿಪಾದಿಸಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ರಾಮಕೃಷ್ಣ ಎಂ. ಮಾತನಾಡಿ, ಈ ಪಡೆಯು ಪೊಲೀಸ್ ಮತ್ತು ಗೃಹರಕ್ಷಕ ಸಿಬ್ಬಂದಿಯನ್ನು ಒಳಗೊಂಡಿದ್ದು, ನಾಲ್ವರು ಮಹಿಳಾ ಸಿಬ್ಬಂದಿಯ ವಾಹನ ಸಾರ್ವಜನಿಕ ಸ್ಥಳಗಳಲ್ಲಿ ಗಸ್ತು ತಿರುಗಲಿದೆ. ತುರ್ತು ಸಂದರ್ಭದಲ್ಲಿ 112, 181 ಅಥವಾ 1098ಕ್ಕೆ ಕರೆ ಮಾಡಬಹುದು ಎಂದು ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ‘ಅಕ್ಕಪಡೆ’ ಯೋಜನೆಯ ಭಿತ್ತಿಪತ್ರ ಅನಾವರಣಗೊಳಿಸಲಾಯಿತು ಹಾಗೂ ಅಕ್ಕಪಡೆ ಗಸ್ತು ವಾಹನಕ್ಕೆ ಗಣ್ಯರು ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು. ಎಎಸ್ಪಿ ಕೆ.ಪಿ. ರವಿ ಕುಮಾರ್ ಸ್ವಾಗತಿಸಿದರು. ಈ ವೇಳೆ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ನವೀನ್ ಕುಮಾರ್.ಎನ್., ಗೃಹರಕ್ಷಕ ದಳದ ಜಿಲ್ಲಾ ಕಮಾಂಡೆಂಟ್ ಶೇಕ್ ಸಾಬ್, ಪದವಿ ಪೂರ್ವ ಶಿಕ್ಷಣಾ ಇಲಾಖೆಯ ಉಪನಿರ್ದೇಶಕ ಲಕ್ಮಣ್ ಹಳ್ಳದಮನೆ, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಜಲಾಲಪ್ಪ.ಕೆ., ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಚಿದಾನಂದಪ್ಪ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಸುಭದ್ರ ದೇವಿ, ಮಹಿಳಾ ಪೊಲೀಸ್ ಠಾಣೆಯ ಆರಕ್ಷಕ ಉಪ ನೀರಿಕ್ಷಕ ರಮೇಶ್ ಕುಲಕರ್ಣಿ ಸೇರಿದಂತೆ ಪೊಲೀಸ್ ಅಧಿಕಾರಿಗಳು, ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿ, ಸಿಬ್ಬಂದಿ, ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

ವಾರ್ತಾ ಭಾರತಿ 21 Jan 2026 9:31 pm

ದೋಷಪೂರಿತ ವ್ಯವಸ್ಥೆಯೇ ಅನಾಹುತಕ್ಕೆ ಕಾರಣ: S I R ವಿರುದ್ಧ ನೇತಾಜಿ ಸುಭಾಷ್ ಚಂದ್ರ ಬೋಸ್ ಮೊಮ್ಮಗ ತೀವ್ರ ವಾಗ್ದಾಳಿ

ಕೋಲ್ಕತಾ, ಜ. 21: ಪಶ್ಚಿಮ ಬಂಗಾಳದಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ದೋಷಪೂರಿತ ಪ್ರಕ್ರಿಯೆಯಾಗಿದ್ದು, ಅದೇ ಅನಾಹುತಕ್ಕೆ ಕಾರಣವಾಗಿದೆ ಎಂದು ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಮೊಮ್ಮಗ ಚಂದ್ರ ಕುಮಾರ್ ಬೋಸ್ ಹೇಳಿದ್ದಾರೆ. ಮತದಾರರ ಪಟ್ಟಿಯಲ್ಲಿ ತನ್ನ ಹೆಸರನ್ನು ಉಳಿಸಿಕೊಳ್ಳಲು ಹಕ್ಕು ಸಾಬೀತುಪಡಿಸುವ ಸಂಬಂಧ ಚುನಾವಣಾ ಆಯೋಗದ ಅಧಿಕಾರಿಗಳ ಮುಂದೆ ಹಾಜರಾದ ನಂತರ ಅವರು ಈ ಹೇಳಿಕೆ ನೀಡಿದ್ದಾರೆ. ಸುಭಾಷ್ ಚಂದ್ರ ಬೋಸ್ ಅವರ ಹಿರಿಯ ಸಹೋದರ ಶರತ್ ಚಂದ್ರ ಬೋಸ್ ಅವರ ಮೊಮ್ಮಗರಾದ ಚಂದ್ರ ಕುಮಾರ್ ಬೋಸ್, ತಮ್ಮಗೆ ನೀಡಲಾದ ಎಣಿಕೆ ನಮೂನೆಯಲ್ಲಿ ಪ್ರಮುಖ ಕಾಲಂ ಒಂದನ್ನು ಬಿಡಲಾಗಿದೆ ಎಂಬ ಕಾರಣ ನೀಡಿ ನೋಟಿಸ್ ನೀಡಲಾಗಿದೆ ಎಂಬ ಚುನಾವಣಾ ಆಯೋಗದ ಹೇಳಿಕೆಯನ್ನು ತೀವ್ರವಾಗಿ ವಿರೋಧಿಸಿದರು. ಈ ವ್ಯವಸ್ಥೆ ದೋಷಪೂರಿತವಾಗಿದ್ದು, ಆತುರದಿಂದ ಜಾರಿಗೆ ತರಲಾಗಿದೆ. ಸಿಬ್ಬಂದಿಗೆ ಸಮರ್ಪಕ ತರಬೇತಿ ನೀಡದೇ ಇದನ್ನು ನಡೆಸಲಾಗುತ್ತಿದೆ. ಇದರ ಫಲವಾಗಿ ಅವ್ಯವಸ್ಥೆ ಉಂಟಾಗಿದೆ ಎಂದು ಎರಡು ವರ್ಷಗಳ ಕಾಲ ಬಿಜೆಪಿಯೊಂದಿಗೆ ಸಂಬಂಧ ಹೊಂದಿದ್ದ ಚಂದ್ರ ಕುಮಾರ್ ಬೋಸ್ ಹೇಳಿದರು. ಬಿಜೆಪಿಯ ಆಜ್ಞೆಯ ಮೇರೆಗೆ ಚುನಾವಣಾ ಆಯೋಗ ಯೋಜನೆಯಿಲ್ಲದ ಹಾಗೂ ನಿರಂಕುಶ ಕ್ರಮ ಕೈಗೊಂಡಿದ್ದು, ಇದು ಪಶ್ಚಿಮ ಬಂಗಾಳದ ಜನರಿಗೆ ಕಿರುಕುಳ ಉಂಟು ಮಾಡಿದೆ ಎಂಬ ತೃಣಮೂಲ ಕಾಂಗ್ರೆಸ್ ಆರೋಪಕ್ಕೆ ಅವರು ಬಹುತೇಕ ಬೆಂಬಲ ವ್ಯಕ್ತಪಡಿಸಿದರು. ವಿಚಾರಣೆಗೆ ಕರೆದಿರುವುದರಲ್ಲಿ ನನಗೆ ಯಾವುದೇ ಸಮಸ್ಯೆ ಇರಲಿಲ್ಲ. ಆದರೆ, ವಯಸ್ಸಾದ ಮತದಾರರು ಸರದಿ ಸಾಲಿನಲ್ಲಿ ನಿಂತು ಅಸ್ವಸ್ಥರಾಗುವುದನ್ನು ನೋಡಿದಾಗ ಕಳವಳ ಉಂಟಾಗುತ್ತದೆ ಎಂದು ಅವರು ಮಂಗಳವಾರ ‘ಎಕ್ಸ್’ನಲ್ಲಿ ಪ್ರಕಟಿಸಿದ ಪೋಸ್ಟ್‌ನಲ್ಲಿ ಹೇಳಿದ್ದಾರೆ. ಚುನಾವಣಾ ಆಯೋಗದಿಂದ ನೋಟಿಸ್ ಪಡೆದಿರುವ ಹಲವು ಗಣ್ಯ ವ್ಯಕ್ತಿಗಳಲ್ಲಿ ಚಂದ್ರ ಕುಮಾರ್ ಬೋಸ್ ಕೂಡ ಒಬ್ಬರು. ಇತರರಲ್ಲಿ ನೋಬೆಲ್ ಪ್ರಶಸ್ತಿ ಪುರಸ್ಕೃತ ಅಮರ್ತ್ಯ ಸೇನ್, ಬೆಂಗಾಳಿ ಚಿತ್ರನಟ ದೇವ್, ಕ್ರಿಕೆಟರ್ ಮುಹಮ್ಮದ್ ಶಮಿ, ಉದ್ಯಮಿ ಸ್ವಪನ್ ಸಾಧನ್ ಬಸು ಹಾಗೂ ಸಾಹಿತಿ ಜಾಯ್ ಗೋಸ್ವಾಮಿ ಸೇರಿದ್ದಾರೆ.

ವಾರ್ತಾ ಭಾರತಿ 21 Jan 2026 9:30 pm

ಯುಎಇ–ಭಾರತದ ನಡುವೆ ಡಿಜಿಟಲ್ ರಾಯಭಾರ ಕಚೇರಿ ಸ್ಥಾಪನೆಗೆ ಪ್ರಸ್ತಾಪ; ಈ ಕಚೇರಿ ಹೇಗೆ ಕಾರ್ಯನಿರ್ವಹಿಸುತ್ತದೆ?

ಯುನೈಟೆಡ್ ಅರಬ್ ಎಮಿರೇಟ್ಸ್‌ನ ಅಧ್ಯಕ್ಷ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಸೋಮವಾರ ಭಾರತಕ್ಕೆ ಭೇಟಿ ನೀಡಿದ್ದರು. ಕೇವಲ ಮೂರುವರೆ ಗಂಟೆಗಳ ಭಾರತದ ಪ್ರವಾಸದ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾದ ಅವರು, ರಕ್ಷಣಾ ವಲಯ ಸೇರಿದಂತೆ ಬೃಹತ್ ವ್ಯಾಪಾರ ಒಪ್ಪಂದಗಳ ಕುರಿತು ಚರ್ಚಿಸಿದ್ದಾರೆ. ಮಾತುಕತೆಯಲ್ಲಿ ಭಾರತ ಮತ್ತು ಯುಎಇ ನಡುವಿನ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸಲು ವಿಸ್ತೃತ ಕಾರ್ಯಸೂಚಿಯನ್ನು ನಿಗದಿಪಡಿಸಲಾಗಿದೆ. ಉಭಯ ದೇಶಗಳು 2032ರವರೆಗೆ ಪ್ರತಿ ವರ್ಷ ಸುಮಾರು 200 ಬಿಲಿಯನ್ ಅಮೆರಿಕನ್ ಡಾಲರ್ ವ್ಯಾಪಾರ ನಡೆಸುವ ಗುರಿ ಹೊಂದಿವೆ. ಇದೇ ವೇಳೆ, ಯುಎಇ ಮತ್ತು ಭಾರತದ ನಡುವೆ ‘ಡಿಜಿಟಲ್ ರಾಯಭಾರ ಕಚೇರಿಗಳನ್ನು’ (Digital Embassies) ಸ್ಥಾಪಿಸುವ ಸಾಧ್ಯತೆಯನ್ನು ಪರಿಶೀಲಿಸಲು ಉಭಯ ನಾಯಕರು ತಮ್ಮ ತಂಡಗಳಿಗೆ ಸೂಚಿಸಿದ್ದಾರೆ. ಏನಿದು ಡಿಜಿಟಲ್ ರಾಯಭಾರ ಕಚೇರಿ? ಮಾಹಿತಿ ರಾಯಭಾರ ಕಚೇರಿ ಅಥವಾ ಡೇಟಾ ರಾಯಭಾರ ಕಚೇರಿ ಎಂದೂ ಕರೆಯಲಾಗುವ ಡಿಜಿಟಲ್ ರಾಯಭಾರ ಕಚೇರಿ, ಮೂಲತಃ ಒಂದು ರಾಷ್ಟ್ರದ ಭೌಗೋಳಿಕ ಗಡಿಗಳನ್ನು ಮೀರಿ, ಆ ದೇಶದ ಮಾಲೀಕತ್ವದಲ್ಲಿರುವ ಪ್ರಮುಖ ಡೇಟಾವನ್ನು ಸುರಕ್ಷಿತವಾಗಿ ಸಂಗ್ರಹಿಸುವ ವ್ಯವಸ್ಥೆಯಾಗಿದೆ. ದತ್ತಾಂಶ ರಾಯಭಾರ ಕಚೇರಿಯಲ್ಲಿ ನಿರ್ಣಾಯಕ ಡಿಜಿಟಲ್ ಮಾಹಿತಿಯನ್ನು ಸಂಗ್ರಹಿಸಲಾಗುತ್ತದೆ. ಸೈಬರ್ ದಾಳಿಗಳು, ನೈಸರ್ಗಿಕ ವಿಕೋಪಗಳು ಅಥವಾ ಭೌಗೋಳಿಕ-ರಾಜಕೀಯ ಸಂಘರ್ಷಗಳ ಸಂದರ್ಭದಲ್ಲಿ ಡಿಜಿಟಲ್ ನಿರಂತರತೆ ಮತ್ತು ಸಾರ್ವಭೌಮತ್ವವನ್ನು ಖಚಿತಪಡಿಸುವುದೇ ಇದರ ಪ್ರಮುಖ ಉದ್ದೇಶ. ಇದು ದೇಶದ ಡಿಜಿಟಲ್ ಮೂಲಸೌಕರ್ಯದ ವಿಸ್ತರಣೆಯಾಗಿ ಕಾರ್ಯನಿರ್ವಹಿಸುತ್ತದೆ. ವಿಶ್ವಾಸಾರ್ಹ ಆತಿಥೇಯ ರಾಷ್ಟ್ರದಲ್ಲಿ ನಿರ್ಣಾಯಕ ಡೇಟಾಬೇಸ್‌ಗಳ ಬ್ಯಾಕಪ್‌ಗಳನ್ನು ಹೊಂದಿರುವುದರಿಂದ, ಸ್ವದೇಶದಲ್ಲಿ ಭೌತಿಕ ಪ್ರವೇಶ ಅಸಾಧ್ಯವಾದ ಸಂದರ್ಭದಲ್ಲಿಯೂ ಸರ್ಕಾರಗಳು ಅಗತ್ಯ ಸೇವೆಗಳನ್ನು ಮುಂದುವರಿಸಬಹುದು. ಇದನ್ನು ಸೈಬರ್ ದಾಳಿಗಳಿಂದ ರಕ್ಷಿತವಾಗಿರಿಸುವಂತೆ ವಿನ್ಯಾಸಗೊಳಿಸಲಾಗುತ್ತದೆ. ಭಾರತದ ದತ್ತಾಂಶ ಭದ್ರತಾ ಮಂಡಳಿಯ ಪ್ರಕಾರ, ಡಿಜಿಟಲ್ ರಾಯಭಾರ ಕಚೇರಿಯು ವಿದೇಶಗಳಲ್ಲಿ ಸರ್ಕಾರಿ ಸ್ವಾಮ್ಯದ ಸರ್ವರ್‌ಗಳನ್ನು ಬಳಸಿಕೊಂಡು ರಾಷ್ಟ್ರದ ಕ್ಲೌಡ್ ಕಂಪ್ಯೂಟಿಂಗ್ ಮೂಲಸೌಕರ್ಯದ ವಿಸ್ತರಣೆಯಾಗಿದೆ. ಡಿಜಿಟಲ್ ರಾಯಭಾರ ಕಚೇರಿ ಆತಿಥೇಯ ದೇಶದ ಭೌಗೋಳಿಕ ವ್ಯಾಪ್ತಿಯೊಳಗಿದ್ದರೂ, ಆ ಡೇಟಾದ ಮೇಲಿನ ಪ್ರವೇಶ ಮತ್ತು ನಿಯಂತ್ರಣ ಸಂಪೂರ್ಣವಾಗಿ ಮೂಲ ದೇಶಕ್ಕೇ ಸೇರಿರುತ್ತದೆ. ಈ ದತ್ತಾಂಶವು ಆತಿಥೇಯ ದೇಶದ ನ್ಯಾಯವ್ಯಾಪ್ತಿಗೆ ಒಳಪಡುವುದಿಲ್ಲ. ಭಾರತ ಮತ್ತು ಅಬುಧಾಬಿ ತಮ್ಮ ತಮ್ಮ ಭೂಪ್ರದೇಶಗಳಲ್ಲಿ ಪರಸ್ಪರ ದತ್ತಾಂಶ ಕೇಂದ್ರಗಳನ್ನು ಸ್ಥಾಪಿಸುವ ಸಾಧ್ಯತೆಯನ್ನು ಪರಿಶೀಲಿಸುತ್ತಿವೆ. ಭಾರತಕ್ಕೆ ಸಂಬಂಧಿಸಿದಂತೆ, ಯುಎಇ ಪ್ರದೇಶದಲ್ಲಿ ಡಿಜಿಟಲ್ ಬ್ಯಾಕಪ್ ಮಾಡಲಿರುವ ದತ್ತಾಂಶದಲ್ಲಿ ನಿರ್ಣಾಯಕ ಹಣಕಾಸು ಮಾಹಿತಿ ಮತ್ತು ಸಾರ್ವಜನಿಕ ದಾಖಲೆಗಳು ಸೇರಿರಬಹುದು. ಈ ರೀತಿ ಸಂಗ್ರಹಿಸಲಾದ ದತ್ತಾಂಶಕ್ಕೆ ಆ ದೇಶ ಮತ್ತು ಅದರ ಅಧಿಕೃತ ಪ್ರತಿನಿಧಿಗಳಿಗೆ ಮಾತ್ರ ಪ್ರವೇಶವಿರುತ್ತದೆ. ಪರಸ್ಪರ ಗುರುತಿಸಲ್ಪಟ್ಟ ಸಾರ್ವಭೌಮತ್ವ ವ್ಯವಸ್ಥೆಗಳ ಅಡಿಯಲ್ಲಿ ಡಿಜಿಟಲ್ ರಾಯಭಾರ ಕಚೇರಿಗಳನ್ನು ಸ್ಥಾಪಿಸುವ ಸಾಧ್ಯತೆಯನ್ನು ಎರಡೂ ದೇಶಗಳು ಅನ್ವೇಷಿಸಲಿವೆ ಎಂದು ವಿದೇಶಾಂಗ ಸಚಿವಾಲಯ (MEA) ತನ್ನ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ. ಈ ಪ್ರಸ್ತಾವನೆ ಕುರಿತು ಪ್ರತಿಕ್ರಿಯಿಸಿದ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ತ್ರಿ, ಇದರಲ್ಲಿ ರಾಷ್ಟ್ರೀಯ ಪ್ರಾಮುಖ್ಯತೆ ಮತ್ತು ಕಾರ್ಯತಂತ್ರದ ಮೌಲ್ಯ ಹೊಂದಿರುವ ದತ್ತಾಂಶವನ್ನು ಮಾತ್ರ ಒಳಗೊಳ್ಳಿಸಲಾಗುತ್ತದೆ ಎಂದು ಹೇಳಿದ್ದಾರೆ. ಇದು ಜಾಗತಿಕವಾಗಿ ಕೆಲ ದೇಶಗಳಲ್ಲಿ ಯಶಸ್ಸು ಕಂಡಿರುವ ಹೊಸ ತಂತ್ರಜ್ಞಾನವಾಗಿದ್ದು, ಭಾರತಕ್ಕೆ ಇದು ಹೊಸ ಅನುಭವ. ಇದನ್ನು ಕಾರ್ಯಗತಗೊಳಿಸಲು ಸ್ಪಷ್ಟ ನಿಯಂತ್ರಕ ಚೌಕಟ್ಟು ಅಗತ್ಯವಿದೆ ಎಂದೂ ಅವರು ಹೇಳಿದ್ದಾರೆ. 2017ರಲ್ಲಿ ಎಸ್ಟೋನಿಯಾ ದೇಶವು ಲಕ್ಸೆಂಬರ್ಗ್ ಜೊತೆ ಒಪ್ಪಂದ ಮಾಡಿಕೊಂಡ ಬಳಿಕ ವಿಶ್ವದ ಮೊದಲ ದತ್ತಾಂಶ ರಾಯಭಾರ ಕಚೇರಿ ಸ್ಥಾಪನೆಯಾಯಿತು. 2021ರಲ್ಲಿ ಮೊನಾಕೊ ತನ್ನ ಇ-ರಾಯಭಾರ ಕಚೇರಿಯನ್ನು ಲಕ್ಸೆಂಬರ್ಗ್‌ನಲ್ಲಿ ಸ್ಥಾಪಿಸಿತು. ಸರಳವಾಗಿ ಹೇಳುವುದಾದರೆ, ದತ್ತಾಂಶ ರಾಯಭಾರ ಕಚೇರಿ ಎಂದರೆ ಒಂದು ದೇಶದ ಡೇಟಾವನ್ನು ಮತ್ತೊಂದು ದೇಶದಲ್ಲಿ, ಆದರೆ ಅದರ ಸ್ವಂತ ಅಧಿಕಾರ ವ್ಯಾಪ್ತಿಯಲ್ಲಿಯೇ ಸಂಗ್ರಹಿಸುವ ಸರ್ವರ್‌ಗಳ ಸಮೂಹ. ಈ ಆರ್ಕೈವ್‌ಗಳು ಅತ್ಯಂತ ಸುರಕ್ಷಿತವಾಗಿದ್ದು, ತಿರುಚುವ ಸಾಧ್ಯತೆ ಇರುವುದಿಲ್ಲ. 2023–24ರ ಬಜೆಟ್‌ನಲ್ಲಿ, ಇತರ ರಾಷ್ಟ್ರಗಳಿಗೆ ತಡೆರಹಿತ ಡಿಜಿಟಲ್ ವರ್ಗಾವಣೆ ಮತ್ತು ನಿರಂತರತೆಯನ್ನು ಸುಗಮಗೊಳಿಸುವ ಉದ್ದೇಶದಿಂದ ದೇಶದಲ್ಲಿ ದತ್ತಾಂಶ ರಾಯಭಾರ ಕಚೇರಿಗಳನ್ನು ಸ್ಥಾಪಿಸುವ ಪ್ರಸ್ತಾಪವನ್ನು ಸರ್ಕಾರ ಮಾಡಿದೆ. ಈ ನಿಟ್ಟಿನಲ್ಲಿ, ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು, ವಿದೇಶಿ ರಾಷ್ಟ್ರಗಳು ಹಾಗೂ ಅಂತರರಾಷ್ಟ್ರೀಯ ಕಂಪನಿಗಳು ಭಾರತೀಯ ಭೂಪ್ರದೇಶದೊಳಗೆ ದತ್ತಾಂಶ ರಾಯಭಾರ ಕಚೇರಿಗಳನ್ನು ಸ್ಥಾಪಿಸಲು ಅನುಕೂಲವಾಗುವ ನೀತಿಯನ್ನು ರೂಪಿಸುವ ಕಾರ್ಯದಲ್ಲಿ ತೊಡಗಿದೆ ಎಂದು ತಿಳಿದುಬಂದಿದೆ. ಪ್ರಸ್ತಾವಿತ ನೀತಿಯ ಪ್ರಕಾರ, ಈ ರಾಯಭಾರ ಕಚೇರಿಗಳಲ್ಲಿರುವ ದತ್ತಾಂಶಕ್ಕೆ ರಾಜತಾಂತ್ರಿಕ ರಕ್ಷಣೆ ದೊರೆಯಲಿದ್ದು, ಭಾರತೀಯ ಕಾನೂನುಗಳ ರಕ್ಷಣೆ ಸಹ ಇರಲಿದೆ. ತಂತ್ರಜ್ಞಾನ ಮತ್ತು AI ಕ್ಷೇತ್ರದಲ್ಲಿ ಭಾರತ–ಯುಎಇ ಸಹಯೋಗ ಡಿಜಿಟಲ್ ರಾಯಭಾರ ಕಚೇರಿಗಳ ಜೊತೆಗೆ, ಕೃತಕ ಬುದ್ಧಿಮತ್ತೆ (AI) ಮತ್ತು ಹೊಸ ತಂತ್ರಜ್ಞಾನಗಳ ಮೇಲೆ ಕೇಂದ್ರೀಕರಿಸುವ ಮೂಲಕ ವಿಜ್ಞಾನ, ತಂತ್ರಜ್ಞಾನ ಮತ್ತು ನಾವೀನ್ಯತೆಯ ಕ್ಷೇತ್ರಗಳಲ್ಲಿ ಉಭಯ ದೇಶಗಳ ಸಹಕಾರವನ್ನು ಬಲಪಡಿಸುವುದಾಗಿ ಸರ್ಕಾರ ತಿಳಿಸಿದೆ. ಭಾರತದಲ್ಲಿ ಸೂಪರ್‌ಕಂಪ್ಯೂಟಿಂಗ್ ಕ್ಲಸ್ಟರ್‌ಗಳನ್ನು ರಚಿಸುವುದು ಹಾಗೂ ಡೇಟಾ ಕೇಂದ್ರಗಳ ಸಾಮರ್ಥ್ಯವನ್ನು ವೃದ್ಧಿಸುವ ಕುರಿತೂ ಒಟ್ಟಾಗಿ ಕೆಲಸ ಮಾಡಲು ಉಭಯ ದೇಶಗಳು ಒಪ್ಪಿಕೊಂಡಿವೆ. ಈ ಪಾಲುದಾರಿಕೆ ಡಿಜಿಟಲ್ ಮೂಲಸೌಕರ್ಯ ಕ್ಷೇತ್ರದಲ್ಲಿ ಆಳವಾದ ಕಾರ್ಯತಂತ್ರದ ಜೋಡಣೆಯನ್ನು ಪ್ರತಿಬಿಂಬಿಸುತ್ತದೆ. 2026ರ ಫೆಬ್ರವರಿಯಲ್ಲಿ ಭಾರತದಲ್ಲಿ ನಡೆಯಲಿರುವ AI ಇಂಪ್ಯಾಕ್ಟ್ ಶೃಂಗಸಭೆಗೆ ಯುಎಇ ಅಧ್ಯಕ್ಷರು ತಮ್ಮ ಬೆಂಬಲವನ್ನು ವ್ಯಕ್ತಪಡಿಸಿದ್ದಾರೆ. ಸುರಕ್ಷಿತ ಡಿಜಿಟಲ್ ರಾಯಭಾರ ಕಚೇರಿಗಳನ್ನು ಸ್ಥಾಪಿಸಲು ಆಹ್ವಾನ ಭಾರತವು ತನ್ನ ಭೂಪ್ರದೇಶದೊಳಗೆ ಡಿಜಿಟಲ್ ರಾಯಭಾರ ಕಚೇರಿಗಳನ್ನು ಸ್ಥಾಪಿಸಲು ಇತರ ರಾಷ್ಟ್ರಗಳನ್ನು ಆಹ್ವಾನಿಸುತ್ತಿದ್ದು, ಯುಎಇ ಮೊದಲ ದೇಶವಾಗುವ ಸಾಧ್ಯತೆಯಿದೆ. ಈ ಉದ್ದೇಶಕ್ಕಾಗಿ ಪ್ರಸ್ತಾವಿತ ಸ್ಥಳವೆಂದರೆ ಗುಜರಾತ್‌ನ ಗಿಫ್ಟ್ ಸಿಟಿ. ಇಲ್ಲಿ ಅತ್ಯಾಧುನಿಕ ಹಾಗೂ ಹೆಚ್ಚು ನಿಯಂತ್ರಿತ ದತ್ತಾಂಶ ಸೌಲಭ್ಯಗಳಿಗಾಗಿ ಸೂಕ್ತವಾದ ಮೂಲಸೌಕರ್ಯವಿದೆ ಎಂದು MEA ತಿಳಿಸಿದೆ. ಈ ರಾಯಭಾರ ಕಚೇರಿಗಳು ಕಾನೂನುಬದ್ಧವಾಗಿ ರಕ್ಷಿತವಾಗಿದ್ದು, ಭೌತಿಕವಾಗಿ ಅತ್ಯಂತ ಸುರಕ್ಷಿತವಾಗಿರಲಿವೆ ಮತ್ತು ವಿದೇಶಿ ಸರ್ಕಾರಗಳ ದತ್ತಾಂಶ ಸಂಗ್ರಹಣೆಯ ಅಗತ್ಯಗಳನ್ನು ಪೂರೈಸಲಿವೆ. ಇವುಗಳಿಗೆ ರಾಜತಾಂತ್ರಿಕ ರಕ್ಷಣೆಯೂ ದೊರೆಯಲಿದೆ. ಈ ಕ್ರಮವು ಭಾರತವನ್ನು ಜಾಗತಿಕ ಡಿಜಿಟಲ್ ಮೂಲಸೌಕರ್ಯ ಕೇಂದ್ರವಾಗಿ ರೂಪಿಸುವ ಸಾಧ್ಯತೆ ಹೊಂದಿದ್ದು, ದೇಶದ ಕಾರ್ಯತಂತ್ರದ ಮತ್ತು ತಾಂತ್ರಿಕ ಪ್ರಭಾವವನ್ನು ಹೆಚ್ಚಿಸುತ್ತದೆ. ರಾಷ್ಟ್ರೀಯ ಮಹತ್ವ ಮತ್ತು ಕಾರ್ಯತಂತ್ರದ ಮೌಲ್ಯ ಹೊಂದಿರುವ ದತ್ತಾಂಶ ಸಂಗ್ರಹವಾಗುವುದರಿಂದ, ಈ ಸೌಲಭ್ಯಗಳ ಸ್ಥಾಪನೆಗೆ ಕಟ್ಟುನಿಟ್ಟಾದ ನಿಯಂತ್ರಕ ಮೇಲ್ವಿಚಾರಣೆ ಅಗತ್ಯವಿದೆ. ಈ ರಾಯಭಾರ ಕಚೇರಿಗಳಲ್ಲಿರುವ ದತ್ತಾಂಶವು ಸಂಪೂರ್ಣವಾಗಿ ಸುರಕ್ಷಿತವಾಗಿದ್ದು, ಆತಿಥೇಯ ದೇಶದ ಯಾವುದೇ ಹಸ್ತಕ್ಷೇಪಕ್ಕೆ ಒಳಪಡುವುದಿಲ್ಲ ಎಂದು ವಿಕ್ರಮ್ ಮಿಸ್ತ್ರಿ ಸ್ಪಷ್ಟಪಡಿಸಿದ್ದಾರೆ.

ವಾರ್ತಾ ಭಾರತಿ 21 Jan 2026 9:25 pm

ಸಿರುಗುಪ್ಪ | ತಾಳೂರು ಗ್ರಾಮದಲ್ಲಿ 50 ಲಕ್ಷ ರೂ. ವೆಚ್ಚದ ಪಿಎಚ್‌ಸಿ ಸಿಬ್ಬಂದಿ ವಸತಿ ನಿಲಯ ಉದ್ಘಾಟನೆ

ಸಿರುಗುಪ್ಪ: ಸಿರುಗುಪ್ಪ ತಾಲೂಕು ತಾಳೂರು ಗ್ರಾಮದಲ್ಲಿ ಕರ್ನಾಟಕ ಸರ್ಕಾರ, ತಾಲೂಕು ಪಂಚಾಯತ್, ತಾಲೂಕು ಆಡಳಿತ, ಆರೋಗ್ಯ ಇಲಾಖೆ ಹಾಗೂ ಕಲ್ಯಾಣ ಕರ್ನಾಟಕ ಗ್ರಾಮೀಣ ಅಭಿವೃದ್ಧಿ ಮಂಡಳಿಯ 2024–25ನೇ ಸಾಲಿನ ಯೋಜನಾ ಅನುದಾನದ ಅಡಿಯಲ್ಲಿ 50 ಲಕ್ಷ ರೂ. ವೆಚ್ಚದಲ್ಲಿ ನೂತನವಾಗಿ ನಿರ್ಮಿಸಲಾದ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರು, ನರ್ಸ್‌ಗಳು ಹಾಗೂ ಡಿ-ಗ್ರೂಪ್ ಸಿಬ್ಬಂದಿಗಾಗಿ ನಿರ್ಮಿಸಲಾದ ವಸತಿ ನಿಲಯ ಕಟ್ಟಡವನ್ನು ಸಿರುಗುಪ್ಪ ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕ ಬಿ.ಎಂ. ನಾಗರಾಜ ಅವರು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಬಿ.ಎಂ. ನಾಗರಾಜ ಅವರು, ಗ್ರಾಮೀಣ ಪ್ರದೇಶದ ಜನರಿಗೆ ಗುಣಮಟ್ಟದ ಆರೋಗ್ಯ ಸೇವೆ ದೊರಕಬೇಕು ಎಂಬ ಉದ್ದೇಶದಿಂದ ಸರ್ಕಾರ ಹಲವಾರು ಅಭಿವೃದ್ಧಿ ಯೋಜನೆಗಳನ್ನು ಜಾರಿಗೊಳಿಸಿದೆ. ಆರೋಗ್ಯ ಸಿಬ್ಬಂದಿಗೆ ಅಗತ್ಯ ಸೌಲಭ್ಯ ಒದಗಿಸಿದರೆ ಸೇವೆಯ ಗುಣಮಟ್ಟ ಇನ್ನಷ್ಟು ಉತ್ತಮಗೊಳ್ಳುತ್ತದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಮುಖಂಡರಾದ ಪುರುಷೋತ್ತಮರೆಡ್ಡಿ, ಗ್ರಾಮ ಪಂಚಾಯತ್ ಅಧ್ಯಕ್ಷೆ ಗೌರಮ್ಮ ಈರಣ್ಣ, ಗ್ರಾಮ ಪಂಚಾಯತ್ ಎಲ್ಲಾ ಸದಸ್ಯರು, ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಸುನಿಲ್, ಲೋಕೋಪಯೋಗಿ ಇಲಾಖೆ ಇಂಜಿನಿಯರ್ ರಾಕೇಶ್, ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಜಿಲ್ಲಾ ಸಾಕ್ಷರತಾ ಸದಸ್ಯ ಅಬ್ದುಲ್ ನಬಿ, ಗ್ರಾಮ ಪಂಚಾಯತ್ ಪಿಡಿಓ ಮೊಹಮ್ಮದ್ ಖಾದಿರ್ ಸೇರಿದಂತೆ ದೇವರೆಡ್ಡಿ, ಫಕೀರಯ್ಯ, ಭುವಪ್ಪ, ನೆರಣಿಕಪ್ಪ, ನಾಗಪ್ಪ, ಡಿ. ಮಲ್ಲರೆಡ್ಡಿ, ವೆಂಕಟರಾಮ ರೆಡ್ಡಿ, ರಾಮಾಂಜನಿ ಉಪಸ್ಥಿತರಿದ್ದರು. ಇದೇ ವೇಳೆ ಆಸ್ಪತ್ರೆಯ ಸಿಬ್ಬಂದಿ ವರ್ಗ, ಆಶಾ ಕಾರ್ಯಕರ್ತೆಯರು, ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಹಾಗೂ ಸ್ಥಳೀಯ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

ವಾರ್ತಾ ಭಾರತಿ 21 Jan 2026 9:24 pm

ಹರಪನಹಳ್ಳಿ | ಅಂಬಿಗರ ಚೌಡಯ್ಯನವರ ವಚನಗಳು ಸಮಾಜಕ್ಕೆ ದಾರಿದೀಪ : ಕಣಿವಿಹಳ್ಳಿ ಮಂಜುನಾಥ

ಹರಪನಹಳ್ಳಿ : ಶಿಷ್ಟ ಸಾಹಿತಿ ಬಸವಣ್ಣನಾದರೆ, ಗಾಂಭೀರ್ಯದ ಸಾಹಿತಿ ಅಂಬಿಗರ ಚೌಡಯ್ಯನವರು ಆಗಿದ್ದಾರೆ. ಅವರ ಕಠೋರ ಹಾಗೂ ಖಂಡನಾತ್ಮಕ ವಚನಗಳು ಸಕಲ ಸಮಾಜಕ್ಕೆ ಮಾರ್ಗದರ್ಶನ ನೀಡುತ್ತವೆ ಎಂದು ವಕೀಲ ಕಣಿವಿಹಳ್ಳಿ ಮಂಜುನಾಥ ಅಭಿಪ್ರಾಯ ವ್ಯಕ್ತಪಡಿಸಿದರು. ಪಟ್ಟಣದ ರಾಜೀವ್ ಗಾಂಧಿ ಸಭಾಂಗಣದಲ್ಲಿ ತಾಲೂಕು ಆಡಳಿತ ವತಿಯಿಂದ ಆಯೋಜಿಸಿದ್ದ ಶ್ರೀ ನಿಜಶರಣ ಅಂಬಿಗರ ಚೌಡಯ್ಯ ಹಾಗೂ ಮಹಾಯೋಗಿ ವೇಮನ ಜಯಂತೋತ್ಸವ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಅಂಬಿಗರ ಚೌಡಯ್ಯ 12ನೇ ಶತಮಾನದಲ್ಲಿ ಸಮಾಜದಲ್ಲಿದ್ದ ಅಂಕುಡೊಂಕುಗಳನ್ನು ಚಾಟಿ ಏಟಿನಂತ ವಚನಗಳ ಮೂಲಕ ತಿದ್ದಿದ ನಿಜಶರಣರಾಗಿದ್ದರು. ಸತ್ತು ಬದುಕುವುದು, ಸಾವಿನವರೆಗೂ ಬದುಕುವುದು, ಸಾವಿನ ನಂತರವೂ ಬದುಕುವವರು ತ್ಯಾಗಿಗಳು. ಪರಹಿತ ಚಿಂತಕರಾಗಿ ತಮ್ಮ ಇಡೀ ಜೀವನವನ್ನು ಸಮಾಜದ ಒಳಿತಿಗಾಗಿ ಸವೆಸಿದ ಮಹಾನ್ ಶರಣ ಎಂದು ಅವರು ಹೇಳಿದರು. ತಹಶಿಲ್ದಾರ ಬಿ.ಬಿ. ಗಿರೀಶ್ ಬಾಬು ಮಾತನಾಡಿದರು. ಕಾರ್ಯಕ್ರಮದಲ್ಲಿ ತಾಲೂಕು ಪಂಚಾಯತ್ ಇಓ ಚಂದ್ರಶೇಖರ್, ವೇದ ಭಾಷಾ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಗಂಗಾಧರ್, ನಿವೃತ್ತ ಜಿಲ್ಲಾ ಮೀನುಗಾರಿಕೆ ಸಹಾಯಕ ನಿರ್ದೇಶಕ ಪವಾಡಿ ಬಸವರಾಜ್, ಸಮಾಜದ ಉಪಾಧ್ಯಕ್ಷ ಜೆ.ಕೊಟ್ರೇಶ್, ಕಾರ್ಯದರ್ಶಿ ಪವಾಡಿ ದೇವೇಂದ್ರ, ಬಾಗಳಿ ಬಿ.ವೈ. ಹಾಲೇಶ್, ಕೋಟಿ ಭೀಮಪ್ಪ, ಹರಸನಾಳ ಬಸವರಾಜ್, ಚಿಗಟೇರಿ ಸುರೇಶ್, ಸಿಂಗ್ರಿಹಳ್ಳಿ ನಿಂಗಪ್ಪ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು. ಕಾರ್ಯಕ್ರಮದ ನಿರೂಪಣೆಯನ್ನು ದೈಹಿಕ ಶಿಕ್ಷಕ ದೇವರಾಜ್ ನೆರವೇರಿಸಿದರು.

ವಾರ್ತಾ ಭಾರತಿ 21 Jan 2026 9:19 pm

ಪಚ್ಚನಾಡಿ ಬಳಿ ಬೈಕ್ ಅಪಘಾತ: ಸಹಸವಾರ ಮೃತ್ಯು

ಮಂಗಳೂರು, ಜ.21: ನಗರದ ಹೊರವಲಯದ ಮೂಡುಶೆಡ್ಡೆ ಸಮೀಪದ ಪಚ್ಚನಾಡಿಯಲ್ಲಿ ಮಂಗಳವಾರ ರಾತ್ರಿ ನಡೆದ ರಸ್ತೆ ಅಪಘಾತದಲ್ಲಿ ಬೈಕ್ ಸಹಸವಾರ ಮಾವ ಮೃತಪಟ್ಟಿದ್ದು, ಸವಾರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಮೂಡುಶೆಡ್ಡೆ ನಿವಾಸಿ ತುಕಾರಾಮ (60) ಮೃತಪಟ್ಟವರು. ಕಾರ್ಯಕ್ರಮವೊಂದಕ್ಕೆ ಬೈಕ್‌ನಲ್ಲಿ ಹೊರಟಿದ್ದರು. ಅವರ ಅಳಿಯ ಪ್ರವೀಣ್ ಬೈಕ್ ಚಲಾಯಿಸುತ್ತಿದ್ದರು. ಪಚ್ಚನಾಡಿ ಬಳಿ ಬೈಕ್ ನಿಯಂತ್ರಣ ತಪ್ಪಿ ಇಬ್ಬರೂ ಹೊಂಡಕ್ಕೆ ಬಿದ್ದಿ ದ್ದಾರೆ. ಇದರಿಂದ ತುಕಾರಾಮ ಗಂಭೀರ ಗಾಯಗೊಂಡು ಮೃತಪಟ್ಟಿದ್ದಾರೆ. ಸವಾರ ಪ್ರವೀಣ್‌ರಿಗೆ ಗಾಯವಾಗಿದೆ. ಈ ಬಗ್ಗೆ ಸಂಚಾರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ವಾರ್ತಾ ಭಾರತಿ 21 Jan 2026 9:17 pm

ಶಿವಮೊಗ್ಗದಲ್ಲಿ ಸಿಕ್ಕ ಮಾಸ್ತಿಕಲ್ಲು ವಿಜಯನಗರ ಕಾಲದ್ದು - ಗಂಡನ ಶವದೊಂದಿಗೆ ಚಿತೆಯಲ್ಲಿ ಬೆಂದ ಆ ಮೂವರು ಮಹಾಸತಿಯರು ಯಾರು?

ಹೊಸನಗರ ತಾಲೂಕಿನ ಹರತಾಳು ಗ್ರಾಮದಲ್ಲಿ ಅಪರೂಪದ ಗರುಡ ಶಿಲ್ಪ ಹೊಂದಿರುವ ವಿಜಯನಗರ ಕಾಲದ ಮಾಸ್ತಿಕಲ್ಲು ಪತ್ತೆಯಾಗಿದೆ. ಬೊಮ್ಮದೇವಗೌಡ ಎಂಬುವರ ಪತ್ನಿಯರು ಸಹಗಮನ ಮಾಡಿದ ಘಟನೆಯನ್ನು ತಿಳಿಸುವ ಈ ಶಿಲ್ಪ, ವೈಷ್ಣವ ಧರ್ಮಕ್ಕೆ ಸೇರಿದ ವ್ಯಕ್ತಿಯ ಮರಣವನ್ನು ಸೂಚಿಸುತ್ತದೆ. ಇದು ಈ ಭಾಗದ ಐತಿಹಾಸಿಕ ಮಹತ್ವವನ್ನು ಹೆಚ್ಚಿಸಿದೆ.

ವಿಜಯ ಕರ್ನಾಟಕ 21 Jan 2026 9:17 pm

ಹಂಪಿ ಉತ್ಸವದ ಯಶಸ್ಸಿಗೆ ಅಧಿಕಾರಿಗಳು ಜವಾಬ್ದಾರಿಯಿಂದ ಶ್ರಮಿಸಿ : ಜಿಲ್ಲಾಧಿಕಾರಿ ಎಸ್.ಮನ್ನಿಕೇರಿ

ಹೊಸಪೇಟೆ : ವಿಶ್ವವಿಖ್ಯಾತ ಹಂಪಿ ಉತ್ಸವವನ್ನು ಅತ್ಯಂತ ವೈಭವದಿಂದ ಮತ್ತು ಯಶಸ್ವಿಯಾಗಿ ಆಯೋಜಿಸಲು ಅಧಿಕಾರಿಗಳು ತಮಗೆ ವಹಿಸಿದ ಜವಾಬ್ದಾರಿಗಳನ್ನು ಯಾವುದೇ ಲೋಪದೋಷವಿಲ್ಲದೆ ನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಸೂಚನೆ ನೀಡಿದರು. ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ನಡೆದ ಹಂಪಿ ಉತ್ಸವದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಈ ಬಾರಿ ಫೆ.13 ರಿಂದ 15ರವರೆಗೆ ಮೂರು ದಿನಗಳ ಕಾಲ ಉತ್ಸವ ನಡೆಯಲಿದ್ದು, ಸಿದ್ಧತೆಗಳಿಗಾಗಿ ಈಗಾಗಲೇ 21 ಉಪ ಸಮಿತಿಗಳನ್ನು ರಚಿಸಲಾಗಿದೆ ಎಂದು ತಿಳಿಸಿದರು. ಈ ಬಾರಿಯ ಉತ್ಸವದಲ್ಲಿ ಒಟ್ಟು ಐದು ವೇದಿಕೆಗಳನ್ನು ನಿರ್ಮಿಸಲಾಗುತ್ತಿದ್ದು, ಚಂದನವನದ ಖ್ಯಾತ ಕಲಾವಿದರಾದ ಡಾಲಿ ಧನಂಜಯ್, ಧ್ರುವ ಸರ್ಜಾ, ರಚಿತಾ ರಾಮ್, ರುಕ್ಮಿಣಿ ವಸಂತ್, ಉಪೇಂದ್ರ ಹಾಗೂ ಗಾಯಕರಾದ ಸಂಜಿತ್ ಹೆಗ್ಡೆ, ಶ್ರೇಯಾ ಘೋಷಾಲ್ ಸೇರಿದಂತೆ ಹಲವು ಕಲಾವಿದರು ಪಾಲ್ಗೊಳ್ಳಲಿದ್ದಾರೆ. ಇವರೆಲ್ಲರಿಗೂ ಸೂಕ್ತ ವಸತಿ ಮತ್ತು ಶಿಷ್ಟಾಚಾರದಂತೆ ಆತಿಥ್ಯ ನೀಡಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ನೆರೆ ಜಿಲ್ಲೆಗಳಿಂದ ಬರುವ ಪ್ರವಾಸಿಗರಿಗಾಗಿ ಕೆಎಸ್‌ಆರ್‌ಟಿಸಿ ವತಿಯಿಂದ ಹೆಚ್ಚಿನ ಬಸ್ ವ್ಯವಸ್ಥೆ ಮಾಡಲಾಗುವುದು. ಹಂಪಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳಲ್ಲಿನ 'ಬ್ಲಾಕ್‌ಸ್ಪಾಟ್'ಗಳನ್ನು ಗುರುತಿಸಿ ಕೂಡಲೇ ದುರಸ್ತಿಪಡಿಸಲು ಮತ್ತು ರಸ್ತೆ ಬದಿಯ ಜಂಗಲ್ ತೆರವುಗೊಳಿಸಲು ಸಂಬಂಧಪಟ್ಟ ಇಲಾಖೆಗೆ ನಿರ್ದೇಶನ ನೀಡಲಾಗಿದೆ. ಹಿರಿಯ ನಾಗರಿಕರಿಗಾಗಿ ವಿಶೇಷವಾಗಿ 'ಪಿಕಪ್ ಮತ್ತು ಡ್ರಾಪ್' ವ್ಯವಸ್ಥೆಯನ್ನು ಪ್ರಾದೇಶಿಕ ಸಾರಿಗೆ ಇಲಾಖೆ ಮಾಡಲಿದೆ ಎಂದು ತಿಳಿಸಿದರು. ಜಿಲ್ಲಾ ಪಂಚಾಯತ್ ವತಿಯಿಂದ ಸ್ವಚ್ಛತೆ, ಕುಡಿಯುವ ನೀರು ಮತ್ತು ತಾತ್ಕಾಲಿಕ ಶೌಚಾಲಯಗಳ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಮಾಡುವಂತೆ ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ತಿಮ್ಮಪ್ಪ ಅವರಿಗೆ ಸೂಚಿಸಲಾಯಿತು. ಜನರ ಆರೋಗ್ಯ ರಕ್ಷಣೆಗಾಗಿ ಉತ್ಸವದ ಸ್ಥಳದಲ್ಲಿ 8 ವೈದ್ಯಕೀಯ ಸ್ಟಾಲ್‌ಗಳು ಹಾಗೂ 108 ಅಂಬುಲೆನ್ಸ್ ಸದಾ ಸಿದ್ಧವಿರಲಿವೆ.  ಅರಣ್ಯ ಇಲಾಖೆ ವತಿಯಿಂದ ಕೃತಕ ಮೃಗಾಲಯ ಹಾಗೂ ವಿಜಯನಗರದ ಗತ ವೈಭವ ಸಾರುವ ಸ್ತಬ್ದಚಿತ್ರಗಳು ಜನರ ಕಣ್ಮನ ಸೆಳೆಯಲಿವೆ ಎಂದು ಹೇಳಿದರು. ಸಾಹಸ ಕ್ರೀಡೆ, ಗಾಳಿಪಟ ಉತ್ಸವ, ಶಿಲ್ಪಕಲೆ, ರಂಗೋಲಿ ಸ್ಪರ್ಧೆ ಹಾಗೂ ಕವಿಗೋಷ್ಠಿ, ವಿಚಾರಗೋಷ್ಠಿಗಳ ಮೂಲಕ ಸಾಂಸ್ಕೃತಿಕ ಹಬ್ಬವನ್ನು ಆಯೋಜಿಸಲಾಗುವುದು. ಪೊಲೀಸ್ ಇಲಾಖೆಯ ವತಿಯಿಂದ ಬಿಗಿ ಬಂದೋಬಸ್ತ್ ಏರ್ಪಡಿಸಲಾಗುವುದು ಎಂದು ತಿಳಿಸಿದ ಜಿಲ್ಲಾಧಿಕಾರಿಗಳು, ಅಧಿಕಾರಿಗಳು ಯಾವುದೇ ಗೊಂದಲಗಳಿದ್ದಲ್ಲಿ ನೇರವಾಗಿ ಜಿಲ್ಲಾಧಿಕಾರಿ ಅಥವಾ ಸಿಇಓ ಅವರನ್ನು ಸಂಪರ್ಕಿಸಿ ಪರಿಹಾರ ಕಂಡುಕೊಳ್ಳುವಂತೆ ಸಲಹೆ ನೀಡಿದರು. ಸಭೆಯಲ್ಲಿ ಜಿಲ್ಲಾ ಪಂಚಾಯತ್ ಸಿಇಓ ನೋಗ್ಜಾಯ್ ಮಹಮದ್ ಅಲಿ ಅಕ್ರಂ ಷಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್.ಜಾಹ್ನವಿ, ಅಪರ ಜಿಲ್ಲಾಧಿಕಾರಿ ಇ.ಬಾಲಕೃಷ್ಣ, ಉಪ ಅರಣ್ಯ ಸಂರಕ್ಷಣಾಧಿಕಾರಿ ಅನುಪಮ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

ವಾರ್ತಾ ಭಾರತಿ 21 Jan 2026 9:13 pm

ಮೈತ್ರಿ ಮಾಡಿಕೊಂಡ ಒಂದೇ ತಿಂಗಳಲ್ಲಿ ಉದ್ಧವ್‌ ಠಾಕ್ರೆಗೆ ಕೈಕೊಟ್ಟ ಸಹೋದರ ರಾಜ್‌; ಶಿಂಧೆ ಬಣಕ್ಕೆ ಎಂಎನ್‌ಎಸ್‌ ಬೆಂಬಲ!

ರಾಜಕಾರಣದಲ್ಲಿ ಯಾರೂ ಮಿತ್ರರೂ ಅಲ್ಲ, ಶತ್ರುಗಳೂ ಅಲ್ಲ ಎಂಬುದು ಅದೆಷ್ಟು ನಿಜ ನೋಡಿ. ಕೇವಲ ಒಂದು ತಿಂಗಳ ಹಿಂದಷ್ಟೇ ಬೃಹನ್ಮುಂಬೈ ಮಹಾನಗರ ಪಾಲಿಕೆ ಚುನಾವಣೆಗಾಗಿ ಒಂದಾಗಿದ್ದ ಉದ್ಧವ್‌ ಠಾಕ್ರೆ ಮತ್ತು ರಾಜ್‌ ಠಾಕ್ರೆ ಸಹೋದರರು, ಈಗ ಮತ್ತೆ ದೂರಾಗುವ ಲಕ್ಷಣ ತೋರುತ್ತಿದ್ದಾರೆ. ಕಲ್ಯಾಣ್‌-ದೋಂಬಿವಿಲಿ ಪುರಸಭೆಯಲ್ಲಿ ಎಂಎನ್‌ಎಸ್‌-ಶಿವಸೇನೆ ಶಿಂಧೆ ಬಣದ ನಡುವೆ ಮೈತ್ರಿ ಏರ್ಪಡುವ ಸಾಧ್ಯತೆ ಇದ್ದು, ಈ ಬೆಳವಣಿಗೆಯನ್ನು ಉದ್ಧವ್‌ ಠಾಕ್ರೆ ನೇತೃತ್ವದ ಶಿವಸೇನೆ ಬಣ ತೀವ್ರವಾಗಿವಿರೋಧಿಸಿದೆ. ಇಲ್ಲಿದೆ ಮಾಹಿತಿ.

ವಿಜಯ ಕರ್ನಾಟಕ 21 Jan 2026 9:02 pm

IND Vs NZ- ನಾಗ್ಪುರದಲ್ಲಿ ಕಿವೀಸ್ ವಿರುದ್ಧ ಗುಡುಗಿದ ಅಭಿಷೇಕ್ ಶರ್ಮಾ, ಸಿಕ್ಕ ಅವಕಾಶದಲ್ಲೇ ರಿಂಕು ಸಿಂಗ್ ಮಿಂಚು!

India Vs New Zealand 1st T20i Match- ನಾಗ್ಪುರದಲ್ಲಿ ನಡೆದ ಮೊದಲ ಟಿ20 ಪಂದ್ಯದಲ್ಲಿ ಭಾರತ ತಂಡ 238 ರನ್ ಗಳಿಸಿದೆ. ಸೂರ್ಯಕುಮಾರ್ ಯಾದವ್ ಮತ್ತು ಅಭಿಷೇಕ್ ಶರ್ಮಾ ಅವರು 99 ರನ್ ಗಳ ಜೊತೆಯಾಟವಾಡಿ ತಂಡವನ್ನು ಆರಂಭಿಕ ಕುಸಿತದಿಂದ ಪಾರು ಮಾಡಿದರು. ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ ಅವರು 84 ರನ್ ಗಳಿಸಿ ಮಿಂಚಿದರು. ಅಂತಿಮ ಹಂತದಲ್ಲಿ ರಿಂಕು ಸಿಂಗ್ ಅವರು ಅಜೇಯ 44 ರನ್ ಗಳಿಸಿ ತಂಡದ ಮೊತ್ತವನ್ನು ಹೆಚ್ಚಿಸಲು ನೆರವಾದರು.

ವಿಜಯ ಕರ್ನಾಟಕ 21 Jan 2026 8:59 pm

ಉಡುಪಿ ಡಿಸಿ ವಿರುದ್ಧ ಕ್ರಮ ಕೈಗೊಂಡರೆ ಬಿಜೆಪಿಯಿಂದ ಕಾಂಗ್ರೆಸ್ ಕಚೇರಿಗೆ ಮುತ್ತಿಗೆ: ಕುತ್ಯಾರು ನವೀನ್ ಶೆಟ್ಟಿ

ಉಡುಪಿ, ಜ.21: ಪರ್ಯಾಯ ಮಹೋತ್ಸವದ ಶೋಭಾಯಾತ್ರೆಗೆ ಉಡುಪಿ ಶ್ರೀಕೃಷ್ಣ ಮಠದ ಯತಿಗಳ ಉಪಸ್ಥಿತಿ ಯಲ್ಲಿ ಭಗವಾಧ್ವಜವನ್ನು ಹಾರಿಸಿ ಚಾಲನೆ ನೀಡಿದ ಉಡುಪಿ ಜಿಲ್ಲಾಧಿಕಾರಿಗಳ ವಿರುದ್ಧ ರಾಜ್ಯ ಸರಕಾರ ಯಾವುದೇ ಕ್ರಮ ಕೈಗೊಳ್ಳಲು ಮುಂದಾದರೆ ಬಿಜೆಪಿಯಿಂದ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಮುತ್ತಿಗೆ ಹಾಕುವುದಾಗಿ ಬಿಜೆಪಿ ಉಡುಪಿ ಜಿಲಾಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ ಎಚ್ಚರಿಕೆ ನೀಡಿದ್ದಾರೆ. ಸದಾ ಹಿಂದೂ ವಿರೋಧಿ ನೀತಿಗಳ ಮೂಲಕ ಮತೀಯ ಶಕ್ತಿಗಳ ಓಲೈಕೆಗಾಗಿ ಮುಂದಾಗಿರುವ ರಾಜ್ಯ ಕಾಂಗ್ರೆಸ್ ಸರಕಾರ ಇದುವರೆಗೆ ಹಿಂದೂ ಕಾರ್ಯಕರ್ತರನ್ನು ಟಾರ್ಗೆಟ್ ಮಾಡುತ್ತಿದ್ದು, ಇದೀಗ ಪರ್ಯಾಯೋತ್ಸವದ ಮೆರವಣಿಗೆ ಸಂದರ್ಭದಲ್ಲಿ ಭಗವಾಧ್ವಜ ಹಾರಿಸಿದ ವಿಚಾರವನ್ನು ವಿವಾದವಾಗಿ ಸೃಷ್ಟಿಸಿ ಉಡುಪಿ ಜಿಲ್ಲಾಧಿಕಾರಿ ಗಳನ್ನು ಟಾರ್ಗೆಟ್ ಮಾಡುವ ಮೂಲಕ ಮತೀಯ ಶಕ್ತಿಗಳನ್ನು ಖುಷಿ ಪಡಿಸಲು ಮುಂದಾಗಿರುವುದು ದುರಂತ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ. ಈ ಎಲ್ಲಾ ಬೆಳವಣಿಗೆಗಳಿಗೆ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲೆಯ ಬಗ್ಗೆ ತೋರಿದ ನಿರ್ಲಕ್ಷ್ಯ ಧೋರಣೆಯೇ ಮುಖ್ಯ ಕಾರಣ. ಕಳೆದ ಹಲವು ದಶಕಗಳಿಂದ ಜಿಲ್ಲಾ ಉಸ್ತುವಾರಿ ಸಚಿವರು ಅಥವಾ ರಾಜ್ಯ ಸರಕಾರದ ಪ್ರತಿನಿಧಿ ಗಳು ಉಡುಪಿಯ ಪರ್ಯಾಯೋತ್ಸವದ ಶೋಭಾಯಾತ್ರೆಗೆ ಚಾಲನೆ ನೀಡುವುದು ಸಂಪ್ರದಾಯವಾಗಿತ್ತು ಎಂದು ಹೇಳಿದ್ದಾರೆ. ಆದರೆ ಉಡುಪಿ ಜಿಲ್ಲೆಗೆ ಅತಿಥಿಯಂತೆ ಭೇಟಿ ನೀಡುವ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಈ ಬಾರಿಯ ಪರ್ಯಾಯ ಮಹೋತ್ಸವದ ಬಗ್ಗೆ ಒಂದೇ ಒಂದು ಪೂರ್ವ ಸಿದ್ಧತಾ ಸಭೆಯನ್ನೂ ನಡೆಸಿಲ್ಲ. ಅಲ್ಲದೆ ಕರಾವಳಿ ಕರ್ನಾಟಕದ ನಾಡಹಬ್ಬ ಎನಿಸಿರುವ ಉಡುಪಿ ಪರ್ಯಾಯ ಮಹೋತ್ಸವ ಕಾರ್ಯಕ್ರಮದಿಂದ ಅಂತರ ಕಾಯ್ದು ಕೊಂಡು ಉಡುಪಿ ಜಿಲ್ಲೆಯ ಸಮಸ್ತ ಜನತೆಗೆ ಅಪಮಾನ ಮಾಡಿರುವುದಾಗಿ ಆರೋಪಿಸಿದ್ದಾರೆ. ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರು ಸ್ವತಃ ಆಗಮಿಸಿ ಪರ್ಯಾಯದ ಶೋಭಾಯಾತ್ರೆಗೆ ಭಗವಾಧ್ವಜವನ್ನು ಹಾರಿಸಿ ಚಾಲನೆ ನೀಡಿದ್ದರೆ ಕಾಂಗ್ರೆಸ್ ಪಕ್ಷಕ್ಕೆ ಅವರ ರಾಜೀನಾಮೆಯನ್ನು ಕೇಳುವ ತಾಕತ್ತು ಇದೆಯೇ? ಗುಬ್ಬಿಯ ಮೇಲೆ ಬ್ರಹ್ಮಾಸ್ತ್ರ ಎಂಬಂತೆ ಜಿಲ್ಲಾಧಿಕಾರಿಗಳ ಮೇಲೆ ಕ್ರಮಕ್ಕೆ ಆಗ್ರಹಿಸುವ ಮೂಲಕ ಬೌದ್ಧಿಕ ದಿವಾಳಿತನವನ್ನು ಪ್ರದರ್ಶಿಸಿದೆ ಎಂದು ಕಾಂಗ್ರೆಸ್ ಪಕ್ಷದ ಮೇಲೆ ಕಿಡಿ ಕಾರಿದರು.

ವಾರ್ತಾ ಭಾರತಿ 21 Jan 2026 8:55 pm

IND vs NZ T20 | 'ಸಿಕ್ಸರ್ ಅಭಿಷೇಕ್ ಶರ್ಮ' ಕಮಾಲ್; ನ್ಯೂಝಿಲ್ಯಾಂಡ್ ಗೆ 239 ರನ್ ಗಳ ಗುರಿ ನೀಡಿದ ಭಾರತ

ನಾಗ್ಪುರ: ಇಲ್ಲಿನ ವಿದರ್ಭಾ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂ ನಲ್ಲಿ ನಡೆಯುತ್ತಿರುವ ನ್ಯೂಜಿಲ್ಯಾಂಡ್ ವಿರುದ್ಧದ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಬುಧವಾರ ಭಾರತ ತಂಡವು 7 ವಿಕೆಟ್ ಗಳ ನಷ್ಟಕ್ಕೆ 238 ರನ್ ಗಳಿಸಿದೆ. ಪಂದ್ಯ ಗೆಲ್ಲಲು ನ್ಯೂಝಿಲ್ಯಾಂಡ್‌ ಗೆ 239 ರನ್ ಗಳ ಗುರಿ ನೀಡಿದೆ. ಟಾಸ್ ಗೆದ್ದು ಭಾರತ ತಂಡವನ್ನು ನ್ಯೂಝಿಲ್ಯಾಂಡ್ ತಂಡವು ಬ್ಯಾಟಿಂಗ್ ಗೆ ಆಹ್ವಾನಿಸಿತು. ಭಾರತ ತಂಡದ ಪರ ಸಂಜು ಸ್ಯಾಮ್‌ಸನ್ ಜೊತೆ ಇನ್ನಿಂಗ್ಸ್ ಆರಂಭಿಸಿದ ಅಭಿಷೇಕ್ ಶರ್ಮ ಕೇವಲ 35 ಎಸೆತಗಳಲ್ಲಿ 84 ರನ್ ಗಳಿಸಿದರು. ಅವರ ಇನ್ನಿಂಗ್ಸ್ ನಲ್ಲಿ 8 ಸಿಕ್ಸರ್ ಗಳೇ ಸೇರಿದ್ದವು. 5 ಬೌಂಡರಿ ಸಹಿತ ಸ್ಫೋಟಕ ಆಟವಾಡಿದ ಅವರು 'ಸಿಕ್ಸರ್ ಸಿಧು' ಎಂದೇ ಹೆಸರಾಗಿದ್ದ ಮಾಜಿ ಕ್ರಿಕೆಟಿಗ ನವೋಜಿತ್ ಸಿಂಗ್ ಸಿಧು ಅವರನ್ನು ನೆನಪಿಸಿದರು.

ವಾರ್ತಾ ಭಾರತಿ 21 Jan 2026 8:52 pm

ಉಡುಪಿ ಜಿಲ್ಲಾ ಕಾಂಗ್ರೆಸ್‌ನಿಂದ ‘ನರೇಗ ಬಚಾವ್ ಸಂಗ್ರಾಮ್’ ಆಂದೋಲನ

ಉಡುಪಿ, ಜ.21: ನಮ್ಮ ಯುಪಿಎ ಸರಕಾರ 2005ರಲ್ಲಿ ಜಾರಿಗೆ ತಂದ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ (ಮನರೇಗಾ) ಯೋಜನೆಯ ಮೂಲ ಸ್ವರೂಪವನ್ನು ಬದಲಾಯಿಸುವ ಹಾಗೂ ಯೋಜನೆಯಿಂದ ಮಹಾತ್ಮಗಾಂಧಿ ಹೆಸರನ್ನು ತೆಗೆಯುವ ಸಂಚನ್ನು ಕೇಂದ್ರ ಸರಕಾರ ರೂಪಿಸುತಿದ್ದು,ದೇಶದ ಬಡ ಕಾರ್ಮಿಕರ ಹೊಟ್ಟೆಗೆ ಹೊಡೆಯುತ್ತಿದೆ. ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಮತ್ತು ನರೇಗಾ ಯೋಜನೆಯ ಮೂಲ ಸ್ವರೂಪ ದೊಂದಿಗೆ ಪುನರ್ ಸ್ಥಾಪಿಸುವುದಕ್ಕೆ ಆಗ್ರಹಿಸಿ ಫೆ.7ರವರೆಗೆ ಜಿಲ್ಲೆಯಾದ್ಯಂತ ನರೇಗಾ ಬಚಾವ್ ಸಂಗ್ರಾಮ್ ಅಂದೋಲನವನ್ನು ಹಮ್ಮಿಕೊಳ್ಳಲಾಗುವುದು ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್‌ ಕುಮಾರ್ ಕೊಡವೂರು ತಿಳಿಸಿದ್ದಾರೆ. ಬ್ರಹ್ಮಗಿರಿಯ ಕಾಂಗ್ರೆಸ್ ಭವನದಲ್ಲಿ ಬುಧವಾರ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರಕಾರ ನರೇಗಾ ಯೋಜನೆಯನ್ನು ರದ್ದುಗೊಳಿಸಿ ಬಡವರ ಹೊಟ್ಟೆಗೆ ಹೊಡೆಯುವ ಕೆಲಸ ಮಾಡುತ್ತಿದೆ. ಉದ್ಯೋಗ ಖಾತ್ರಿಯ ಹಕ್ಕನ್ನು ರಕ್ಷಿಸಲು ಹಾಗೂ ಅದರ ಮೂಲ ಸ್ವರೂಪವನ್ನು ಮರುಸ್ಥಾಪಿಸುವಂತೆ ಆಗ್ರಹಿಸಲು ರಾಷ್ಟ್ರವ್ಯಾಪ್ತಿ ನರೇಗಾ ಬಚಾವ್ ಸಂಗ್ರಾಮ್ ಜನಪರ ಚಳವಳಿಯನ್ನು ಹಮ್ಮಿಕೊಳ್ಳಲು ಪಕ್ಷ ನಿರ್ಧರಿಸಿದೆ ಎಂದು ತಿಳಿಸಿದರು. ಮಹಾತ್ಮಗಾಂಧಿ ಹುತಾತ್ಮರಾದ ದಿನವಾದ ಜ.30ರಂದು ವಾರ್ಡ್/ಬೂತ್ ಮಟ್ಟದಲ್ಲಿ ಶಾಂತಿಯುತ ಧರಣಿ ನಡೆಯಲಿದೆ. ಅರ್ಧ ದಿನ ಉಪವಾಸ ಸತ್ಯಾಗ್ರಹ, ಬ್ಲಾಕ್ ಮತ್ತು ವಾರ್ಡ್ ಮಟ್ಟದಲ್ಲಿ ಧರಣಿ ನಡೆಸಲಾಗುವುದು. ಜ.27ರಿಂದ ಫೆ. 6ರವರೆಗೆ ಎಲ್ಲಾ ಬ್ಲಾಕ್ ಕಾಂಗ್ರೆಸ್ ಕಾರ್ಯಕರ್ತರಿಂದ ತಾಲೂಕು ಮಟ್ಟದಲ್ಲಿ 5ರಿಂದ 10ಕಿ.ಮೀ.ವರೆಗೆ ಪಾದಯಾತ್ರೆಯನ್ನು ಹಮ್ಮಿಕೊಳ್ಳಲಾಗುವುದು. ಜ.31ರಿಂದ ಫೆ.7ರವರೆಗೆ ಜಿಲ್ಲಾ ಮಟ್ಟದಲ್ಲಿ ವಿವಿಧ ಕ್ಷೇತ್ರಗಳಲ್ಲಿ ನರೇಗಾ ಬಚಾವೋ ಧರಣಿ ಕಾರ್ಯಕ್ರಮ ನಡೆಯ ಲಿದೆ. ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಧರಣಿ ನಡೆಸಿ ವಿಬಿ-ಜಿ ರಾಮ್-ಜಿ ಬಿಲ್ ಹಿಂಪಡೆದು ನರೇಗಾ ಯೋಜನೆಯ ಮೂಲ ಸ್ವರೂಪದೊಂದಿಗೆ ಪುನರ್ ಸ್ಥಾಪಿಸುವಂತೆ ಮನವಿಯಲ್ಲಿ ಆಗ್ರಹಿಸಲಾಗುವುದು ಎಂದರು. ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಮಾತನಾಡಿ, ಕೇಂದ್ರ ಸರಕಾರ ಬಹುಮತ ಇದೆ ಎನ್ನುವ ಕಾರಣಕ್ಕೆ ಯಾವುದೇ ಚರ್ಚೆಗೆ ಅವಕಾಶ ನೀಡದೇ ವಿಬಿ- ಜಿರಾಮ್ ಜಿ ಬಿಲ್ ತರುವುದಕ್ಕೆ ಮುಂದಾಗಿದೆ. ಈ ಬಿಲ್‌ನಲ್ಲಿರುವ ರಾಮ್ ದಶರಥನ ಪುತ್ರನೂ ಅಲ್ಲ. ಸೀತೆಯ ಪತಿಯೂ ಅಲ್ಲ. ಇದು ನಾಥೂರಾಮ್ ಗೋಡ್ಸೆ ಹೆಸರಿನ ರಾಮ್. ಕೇಂದ್ರ ಸರಕಾರ ಕೇವಲ ರಾಜಕೀಯ ಉದ್ದೇಶಕ್ಕಷ್ಟೇ ಮನರೇಗಾ ಯೋಜನೆಯನ್ನು ರದ್ದುಗೊಳಿಸುತ್ತಿದೆ. ಹಳ್ಳಿಗೆ ಶಕ್ತಿ ಕೊಡುವ ನಮ್ಮ ಯೋಜನೆಯನ್ನು ದೆಹಲಿಗೆ ಶಕ್ತಿ ಕೊಡುವ ಉದ್ದೇಶಕ್ಕೆ ಬಲಿ ಕೊಡಲಾಗುತ್ತಿದೆ ಎಂದು ಆರೋಪಿಸಿದರು. ರಾಜ್ಯದಲ್ಲಿ ಸುಮಾರು 6000ದಷ್ಟು ಗ್ರಾಪಂಗಳಿದ್ದು, ಪಂಚಾಯಿತಿ ವ್ಯವಸ್ಥೆಯನ್ನು ಅಸ್ಥಿಪಂಜರ ಮಾಡಲಾಗುತ್ತಿದೆ. ಗಾಂಧೀಜಿ ಹೆಸರನ್ನು ಇತಿಹಾಸದಿಂದ ಅಳಿಸುವ ಹುನ್ನಾರ ಪ್ರಧಾನಿ ಮೋದಿಯದ್ದು. ಈ ಮೂಲಕ ಕಾರ್ಮಿಕರ ಹೊಟ್ಟೆಗೆ ಹೊಡೆಯುವ ಕೆಲಸವಾಗುತ್ತಿದೆ. ಕಾರ್ಮಿಕರನ್ನು ಶ್ರೀಮಂತರ ಕೈಗೆ ನೀಡುವ ಕೆಲಸವನ್ನು ಬಿಜೆಪಿ ಸರಕಾರ ಮಾಡುತ್ತಿದ್ದು, ಈ ಬಗ್ಗೆ ಕಾಂಗ್ರೆಸ್ ಅಭಿಯಾನ ಮಾಡುತ್ತಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಕರಾವಳಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಂ.ಎ. ಗಫೂರ್, ಕಾಂಗ್ರೆಸ್ ಮುಖಂಡರಾದ ಪ್ರಸಾದ್‌ ರಾಜ್ ಕಾಂಚನ್, ರಮೇಶ್ ಕಾಂಚನ್, ಅಣ್ಣಯ್ಯ ಶೇರಿಗಾರ್, ಮಹಾಬಲ ಕುಂದರ್, ಕಿಶನ್ ಹೆಗ್ಡೆ ಕೊಳ್ಕೆಬೈಲು, ಹರಿಪ್ರಸಾದ್ ರೈ, ಪ್ರಶಾಂತ್ ಜತ್ತನ್ನ, ಭಾಸ್ಕರ್ ರಾವ್ ಕಿದಿಯೂರು ಉಪಸ್ಥಿತರಿದ್ದರು.

ವಾರ್ತಾ ಭಾರತಿ 21 Jan 2026 8:50 pm

ಭಾರತದಲ್ಲಿ ಎಲೆಕ್ಷನ್ ಪರ್ವ, 2026ರಲ್ಲಿ ಎದುರಾಗುವ ಪ್ರಮುಖ ಚುನಾವಣೆಗಳು ಇವು

ಭಾರತದಲ್ಲಿ ಮತ್ತೆ ಚುನಾವಣೆ ಪರ್ವ ಶುರುವಾಗುತ್ತಿದ್ದು, ದೊಡ್ಡ ದೊಡ್ಡ ರಾಜ್ಯಗಳಿಗೆ ಈ ವರ್ಷವೇ ವಿಧಾನಸಭೆ ಚುನಾವಣೆ ನಡೆಯಲಿದೆ. ದಕ್ಷಿಣ ಭಾರತವೂ ಸೇರಿದಂತೆ ಉತ್ತರ ಭಾರತದಲ್ಲೂ ಪ್ರಮುಖ ರಾಜ್ಯಗಳಿಗೆ ಮತದಾನ ನಡೆಯಲಿದೆ. ಬಿಜೆಪಿ ಈ ಬಾರಿ ತನ್ನ ಗೆಲುವಿನ ಓಟ ಮುಂದುವರಿಸಲು ಎಲ್ಲಾ ರೀತಿ ರಣತಂತ್ರ ಹೆಣೆಯುತ್ತಿದ್ದು, ವಿರೋಧ ಪಕ್ಷಗಳಲ್ಲಿ ಒಗ್ಗಟ್ಟಿನ ಮಂತ್ರ ಜಪಿಸಲಾಗುತ್ತಿದೆ. ಅದರಲ್ಲೂ ಈ ಬಾರಿ

ಒನ್ ಇ೦ಡಿಯ 21 Jan 2026 8:50 pm

ಯೂತ್ ವಿಂಗ್ ಆರಂಭಕ್ಕೆ ಎಸ್‌ಡಿಪಿಐ ರಾಷ್ಟ್ರೀಯ ಪ್ರತಿನಿಧಿ ಮಂಡಳಿ ಸಭೆ ನಿರ್ಧಾರ

ಮಂಗಳೂರು,21: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ)ದ ರಾಷ್ಟ್ರೀಯ ಪ್ರತಿನಿಧಿ ಮಂಡಳಿ ಸಭೆಯು ಡೆಮಾಟ್ರಿಕ್ ಯೂತ್ ವಿಂಗ್ ಆರಂಭಿಸುವ ನಿರ್ಧಾರ ಕೈಗೊಂಡಿದೆ. ನಗರದ ಎಕ್ಕೂರಿನ ಇಂಡಿಯಾನ್ ಸಭಾಂಗಣದಲ್ಲಿ ನಡೆದ ಎಸ್‌ಡಿಪಿಐ ರಾಷ್ಟ್ರೀಯ ಪ್ರತಿನಿಧಿ ಮಂಡಳಿ ಸಭೆಯು ಪಕ್ಷದ ಯುವ ಸಂಘಟನೆ ಆರಂಭಿಸುವ ನಿಟ್ಟಿನಲ್ಲಿ ನಿರ್ಣಯ ಕೈಗೊಳ್ಳಲಾಗಿದ್ದು, ಈ ನಿಟ್ಟಿನಲ್ಲಿ ಸಂಘಟನಾ ಸಮಿತಿ ಯನ್ನು ರಚಿಸಲಾಗಿದೆ ಎಂದು ಪಕ್ಷದ ರಾಷ್ಟ್ರೀಯ ಉಪಾಧ್ಯಕ್ಷರು ಮತ್ತು ಕಾರ್ಯಾಧ್ಯಕ್ಷರಾದ ಮುಹಮ್ಮದ್ ಶಫಿ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ರಾಷ್ಟ್ರ, ರಾಜ್ಯ, ಜಿಲ್ಲೆ , ತಾಲೂಕು ಮಟ್ಟದಲ್ಲಿ ಪಕ್ಷದ ಯುವ ಸಂಘಟನೆ ಯನ್ನು ಆರಂಭಿಸಲಾಗುವುದು ಎಂದರು. ದೇಶದ ಬಲಿಷ್ಠ ಶಕ್ತಿಯಾಗಿರುವ ಯುವ ಸಮೂಹ ಬೇರೆ ಬೇರೆ ಕಾರಣಗಳಿಂದ ರಾಜಕೀಯದಿಂದ ದೂರ ಸರಿಯುತ್ತಿ ದ್ದಾರೆ. ದೇಶದ ಮುಂದಿನ ಭವಿಷ್ಯವಾಗಿರುವ ಅವರನ್ನು ರಾಷ್ಟ್ರ ಕಟ್ಟುವ ಮತ್ತು ಸಂವಿಧಾನವನ್ನು ಉಳಿಸುವ ಕಾರ್ಯಕ್ಕೆ ಸಕ್ರೀಯವಾಗಿ ತೊಡಗಿಸಿಕೊಳ್ಳುವ ಉದ್ದೇಶಕ್ಕಾಗಿ ಯೂತ್ ವಿಂಗ್ ಪ್ರಾರಂಭಿಸಲಾಗಿದೆ 15ರಿಂದ 40 ವರ್ಷ ವರೆಗಿನ ಯುವಜನರಿಗೆ ಯೂತ್ ವಿಂಗ್‌ನಲ್ಲಿ ಸೇರಲು ಅವಕಾಶ ಇದೆ ಎಂದು ಮಾಹಿತಿ ನೀಡಿದರು. ಪಕ್ಷದ ಪದಾಧಿಕಾರಿಗಳ ಚುನಾವಣೆಯು ಸುಸೂತ್ರವಾಗಿ ನಡೆದಿದ್ದು, ಎಸ್‌ಡಿಪಿಐ ಅಧ್ಯಕ್ಷ ಎಂಕೆ ಫೈಝಿ ಅವರನ್ನು ಜಾರಿ ನಿರ್ದೇಶನಾಲಯ(ಇಡಿ) ಅಧಿಕಾರಿಗಳು ಕಳೆದ ಮಾರ್ಚ್‌ನಲ್ಲಿ ಬಂಧಿಸಿದ್ದರು. 11 ತಿಂಗಳಿನಿಂದ ಜೈಲಿನಲ್ಲಿದ್ದಾರೆ. ಅವರ ಬಂಧನ ಖಂಡನೀಯ. ಫೈಝಿ ಅವರಂತಹ ನಾಯಕರನ್ನು ಬಂಧಿಸಿ ಜೈಲಿನಲ್ಲಿಡುವ ಮೂಲಕ ಕೇಂದ್ರ ಸರಕಾರವು ಈಡಿ, ಸಿಬಿಐ, ಎನ್‌ಐಎ ಮುಂತಾದ ತನಿಖಾ ಸಂಸ್ಥೆಗಳ ಅಧಿಕಾರವನ್ನು ದುರುಪಯೋಗ ಮಾಡುತ್ತಿದೆ ಎಂದು ಆರೋಪಿಸಿದರು. ಉಪಾಧ್ಯಕ್ಷ ಸೀತಾರಾಮ್ ಖಾಟಿಕ್, ಶೇಖ್ ಮುಹಮ್ಮದ್, ಪ್ರಧಾನ ಕಾರ್ಯದರ್ಶಿಗಳಾದ ಮುಹಮ್ಮದ್ ಅಶ್ರಫ್ ಅಂಕಜಾಲ್, ಮುಹಮ್ಮದ್ ರಿಯಾಝ್, ಅಬ್ದುಲ್ ಮಜೀದ್, ಮೆಹರ್ ಅಫ್ರೋಝ್ ಯಾಸ್ಮೀನ್, ಕಾರ್ಯದರ್ಶಿಗಳಾದ ಅಲ್ಫೋನ್ಸ್ ಫ್ರಾಂಕೊ ,ತೈದುಲ್ ಉಲ್ ಇಸ್ಲಾಂ, ಸಅದೀಯ ಸಯೀದಾ, ಡಿ.ಎಸ್.ಬಿಂದ್ರಾ, ಅತಿಕಾ ಸಾಜಿದ್‌ಮತ್ತು ಯಾಮೊಯ್ದೀನ್ , ಖಜಾಂಚಿ ಜಿ. ಅಬ್ದುಲ್ ಸತ್ತಾರ್ ಮತ್ತಿತರರು ಉಪಸ್ಥಿತರಿದ್ದರು. ಅಭಿನಂದನಾ ರ್ಯಾಲಿ: ಎಸ್‌ಡಿಪಿಐನ ರಾಷ್ಟ್ರೀಯ ಕಾರ್ಯಕಾರಿ ಸಮಿತಿಗೆ ನೂತನವಾಗಿ ಆಯ್ಕೆಯಾಗಿರುವ ಪದಾಧಿಕಾರಿಗಳಿಗೆ ಅಭಿನಂದನಾ ರ್ಯಾಲಿ ನಗರದ ಜ್ಯೋತಿ ವೃತ್ತದಿಂದ ಪುರಭವನದ ತನಕ ನಡೆಯಿತು. ಬಳಿಕ ಪುರಭವನದಲ್ಲಿ ಎಸ್‌ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಮೈಸೂರು ಅಧ್ಯಕ್ಷತೆಯಲ್ಲಿ ನಡೆದ ನಡೆದ ಸಮಾವೇಶ ದಲ್ಲಿ ರಾಷ್ಟ್ರೀಯ ಸಮಿತಿಯ ನೂತನ ಪದಾಧಿಕಾರಿಗಳನ್ನು ಅಭಿನಂದಿಸಲಾಯಿತು.        

ವಾರ್ತಾ ಭಾರತಿ 21 Jan 2026 8:34 pm

ಯಾದಗಿರಿ | ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಬಾಲಕನ ಮೃತದೇಹ ಪತ್ತೆ

ಯಾದಗಿರಿ : ಜಿಲ್ಲೆಯ ವಡಿಗೇರಾ ಪಟ್ಟಣದ ಸರ್ಕಾರಿ ಪ್ರೌಢ ಶಾಲೆಯ ಆವರಣದಲ್ಲಿ ವಿದ್ಯಾರ್ಥಿಯೊಬ್ಬ ಮರಕ್ಕೆ ನೇಣು ಬಿಗಿದುಕೊಂಡು ಮೃತಪಟ್ಟಿರುವ ಘಟನೆ ಬುಧವಾರ ವರದಿಯಾಗಿದೆ. ಮೃತ ಬಾಲಕನನ್ನು ವಡಿಗೇರಾ ಸರ್ಕಾರಿ ಪ್ರೌಢಶಾಲೆಯ 9ನೇ ತರಗತಿಯ ವಿದ್ಯಾರ್ಥಿ ಪವನ್ (14) ಎಂದು ಗುರುತಿಸಲಾಗಿದೆ. ಈತ ಮಲ್ಲಪ್ಪ ಎಂಬುವವರ ಪುತ್ರನಾಗಿದ್ದು, ಶಾಲಾ ಆವರಣದ ಮರಕ್ಕೆ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪವನ್ ಮೃತದೇಹ ಪತ್ತೆಯಾಗಿದ್ದು, ಸಾವಿನ ಸುತ್ತ ಹಲವು ಅನುಮಾನಗಳು ವ್ಯಕ್ತವಾಗಿವೆ. ವಿಷಯ ತಿಳಿಯುತ್ತಿದ್ದಂತೆಯೇ ವಡಿಗೇರಾ ಪೊಲೀಸ್ ಠಾಣೆಯ ಪಿಎಸ್ಐ ಮೈಬೂಬ್ ಅಲಿ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ವಿದ್ಯಾರ್ಥಿಯ ಈ ಆತ್ಮಹತ್ಯೆಗೆ ನಿಖರ ಕಾರಣವೇನು ಎಂಬುದು ಇನ್ನೂ ತಿಳಿದುಬಂದಿಲ್ಲ.

ವಾರ್ತಾ ಭಾರತಿ 21 Jan 2026 8:29 pm

ಸಿದ್ದಾಪುರ ಏತ ನೀರಾವರಿ ಯೋಜನಾ ಕಾಮಗಾರಿಗೆ ಹಠಾತ್ ತಡೆ: ಜಿಲ್ಲಾ ರೈತ ಸಂಘ, ಗ್ರಾಮಸ್ಥರಿಂದ ಪ್ರತಿಭಟನೆ

ಸಿದ್ಧಾಪುರ(ಕುಂದಾಪುರ), ಜ.21: ಸಿದ್ದಾಪುರ ಏತ ನೀರಾವರಿ ಯೋಜನೆ ಫಲಾನುಭವಿ ಗಳಾದ ನಾಲ್ಕು ಗ್ರಾಮ ಪಂಚಾಯತ್ ವ್ಯಾಪ್ತಿಯ ರೈತರ ಅಭಿಪ್ರಾಯಕ್ಕೆ ಹಾಗೂ ಗ್ರಾಮಸಭೆ ನಿರ್ಣಯಕ್ಕೂ ಬೆಲೆ ಕೊಡದೆ ಯೋಜನೆಯ ಕಾಮಗಾರಿಯನ್ನು ಹಠಾತ್ತನೆ ನಿಲ್ಲಿಸುವ ಮೂಲಕ ವ್ಯವಸ್ಥೆಯು ರೈತವಿರೋಧಿ ಧೋರಣೆ ತಳೆದಿದ್ದು, ಈ ಬಗ್ಗೆ ಉಡುಪಿ ಜಿಲ್ಲಾ ರೈತ ಸಂಘವು ಈ ಭಾಗದ ರೈತರ ಪರವಾಗಿ ನಿಲ್ಲಲಿದೆ ಎಂದು ಉಡುಪಿ ಜಿಲ್ಲಾ ರೈತ ಸಂಘದ ಅಧ್ಯಕ್ಷ, ವಿಧಾನಪರಿಷತ್‌ನ ಮಾಜಿ ಸಭಾಪತಿ ಕೆ. ಪ್ರತಾಪಚಂದ್ರ ಶೆಟ್ಟಿ ಹೇಳಿದ್ದಾರೆ. ಸಿದ್ದಾಪುರ ಏತ ನೀರಾವರಿ ಯೋಜನೆ ಕಾಮಗಾರಿಯನ್ನು ತಡೆದಿರುವ ಹುನ್ನಾರದ ವಿರುದ್ಧ ಜ.21 ಬುಧವಾರ ಸಿದ್ದಾಪುರ ಸರ್ಕಲ್ ಬಳಿ ಸಿದ್ದಾಪುರ ಏತ ನೀರಾವರಿ ವ್ಯಾಪ್ತಿಯ ರೈತರು, ಉಡುಪಿ ಜಿಲ್ಲಾ ರೈತ ಸಂಘದ ನೇತೃತ್ವದಲ್ಲಿ ವಿವಿಧ ಸಂಘ-ಸಂಸ್ಥೆಗಳ ಆಶ್ರಯದಲ್ಲಿ ಹಮ್ಮಿಕೊಳ್ಳಲಾದ ‘ಬೃಹತ್ ಜನಾಗ್ರಹ ಸಭೆ’ಯನ್ನುದ್ದೇಶಿಸಿ ಅವರು ಮಾತನಾಡುತಿದ್ದರು. ಯಾರೋ ಹೇಳುತ್ತಾರೆಂದು ಮಾಜಿ ಶಾಸಕರೊಬ್ಬರು ಕಾಮಗಾರಿ ವಿಚಾರ ದಲ್ಲಿ ಸರಕಾರಕ್ಕೆ ಪತ್ರ ಬರೆದಿದ್ದು ಸತತವಾಗಿ ಆರಿಸಿ ಕಳಿಸಿದ್ದ ಜನರು, ರೈತರ ವಿರೋಧಿಯಾಗಿ ಪತ್ರ ಕೊಟ್ಟಿದ್ದು ರಾಜಕೀಯ ದುರಂತ. ಇದು ಒಪ್ಪುವ ವಿಚಾರವಲ್ಲ. ಇಲ್ಲಿನ ಕಾಮಗಾರಿ ನಿಲ್ಲಿಸುವಂತೆ ಮಾಡಿದವರು ಆತ್ಮಾವಲೋಕನ ಮಾಡಿಕೊಳ್ಳಬೇಕು. ಜನಪ್ರತಿನಿಧಿಯಾದವರು ಜನರ ಪರವಾಗಿರಬೇಕು. ಜನರ ಭಾವನೆಗಳಿಗೆ, ಅನಿಸಿಕೆಗಳಿಗೆ ಸ್ಪಂದಿಸಬೇಕು ಎಂದರು. ವಾರಾಹಿ ವಿಚಾರದಲ್ಲಿ ಗುತ್ತಿಗೆ ಕಂಪೆನಿಗಳ ನಡುವೆ ಮೊದಲಿನಿಂದಲೂ ಮ್ಯಾಚ್ ಫಿಕ್ಸಿಂಗ್ ನಡೆಯುತ್ತಿದೆ. ಆದರೆ ನಿರ್ದಿಷ್ಟ ಸಮಾಜ (ಸಮುದಾಯ) ವನ್ನು ಮುಂದಿಟ್ಟುಕೊಂಡು ಕರಾವಳಿ ಜಿಲ್ಲೆಗಳಲ್ಲಿ ಗುತ್ತಿಗೆ ಮಾಡಲಾಗುತಿದ್ದು ಇದು ದುರಂತ ಹಾಗೂ ಖಂಡನೀಯ ಎಂದು ಪ್ರತಾಪ್‌ಚಂದ್ರ ಶೆಟ್ಟಿ ಹೇಳಿದರು. 10 ವರ್ಷಗಳ ಹಿಂದೆ ವಾರಾಹಿ ನೀರಿನ ವಿಚಾರದಲ್ಲಿ ರೈತರ ಪರ ಹೋರಾಟ ಮಾಡಿದಾಗಲೂ ನನ್ನ ವಿರುದ್ಧ ಆರೋಪಗಳನ್ನು ಮಾಡಲಾಗಿತ್ತು. ಪಕ್ಷದಿಂದ ಉಚ್ಛಾಟನೆ ಬಗ್ಗೆ ಸ್ವಪಕ್ಷದಲ್ಲೇ ಕೆಲವರು ಕಾದಿದ್ದರು. ಈಗ ರೈತಸಂಘ ಬಿಜೆಪಿ ಹಿಂದೆ ಹೋಗುತ್ತಿದೆ ಎಂದು ಕೆಲವರು ಟೀಕಿಸ ತೊಡಗಿದ್ದಾರೆ. ರೈತ ಸಂಘ ರೈತರ ಪರವಾಗಿದೆ ಹೊರತು ಬಿಜೆಪಿ, ಕಾಂಗ್ರೆಸ್ ಹಿಂದೆ ಹೋಗಿಲ್ಲ. ರೈತರ ಋಣ ಸಂದಾಯ ಮಾಡುವ ಕೆಲಸವನ್ನು ಕರ್ತವ್ಯವೆಂದು ನಂಬಿ ಸಂಘ ಮಾಡುತ್ತಿದೆ ಎಂದು ಅವರು ಹೇಳಿದರು. ಜನರ ನೋವು-ನಲಿವಿಗೆ ಜನಪ್ರತಿನಿಧಿಗಳು ಸ್ಪಂದನೆ ನೀಡಬೇಕು. ಆದರೆ ವಾರಾಹಿ, ಬ್ರಹ್ಮಾವರ ಸಕ್ಕರೆ ಕಾರ್ಖಾನೆ ವಿಚಾರದಲ್ಲಿ ಬಹಳಷ್ಟು ಮಂದಿ ಮಾತನಾಡದಿದ್ದಾಗ ರೈತ ಸಂಘ ಬೀದಿಗಿಳಿದು ಹೋರಾಟ ಮಾಡಿತ್ತು. ವೈಯಕ್ತಿಕವಾಗಿ ಅಥವಾ ರೈತ ಸಂಘಕ್ಕಾಗಲಿ ಯಾರೊಂದಿಗೂ ವಿರೋಧವಿಲ್ಲ. ಆದರೆ ರೈತರ ಹಿತಾಸಕ್ತಿ ಕಾಪಾಡಲು ರೈತ ಸಂಘ ಸಿದ್ಧವಿದೆ. ಬಲದಂಡೆ, ಎಡದಂಡೆ ಹಾಗೂ ಏತ ನೀರಾವರಿ ಯೋಜನೆಗಳ ಮೂಲಕ ನೀರೂಣಿಸುವ ಯೋಜನೆಗಳಾಗುತ್ತಿದ್ದರೂ, ಯೋಜನಾ ಪ್ರದೇಶದ ನೆರೆಯ ಗ್ರಾಮವಾಗಿರುವ ಸಿದ್ದಾಪುರಕ್ಕೆ ನೀರು ಕೊಡುವ ಬಗ್ಗೆ ಯಾರೂ ಸಹ ಮಾತನಾಡುತ್ತಿಲ್ಲ ಎಂದವರು ದೂರಿದರು. ಕಳೆದ ನಾಲ್ಕು ದಶಕಗಳಿಂದ ನಡೆಯುತ್ತಿರುವ ವಾರಾಹಿ ಯೋಜನೆಯ ಕಾಮಗಾರಿಗಳಲ್ಲಿ ಲೋಪ, ನ್ಯೂನತೆ ಹಾಗೂ ಕಳಪೆತನ ಇದೆ. ಇದೇ ಪರಿಸ್ಥಿತಿ ಸಿದ್ಧಾಪುರ ಏತ ನೀರಾವರಿ ಯೋಜನೆಯ ಕಾಮಗಾರಿ ಹಂತದಲ್ಲಿ ಉದ್ಭವವಾದಲ್ಲಿ ಗುತ್ತಿಗೆದಾರರ ವಿರುದ್ಧ ಹೋರಾಟ ಮಾಡಬೇಕಾದ ಪರಿಸ್ಥಿತಿ ಬರುವ ಮೊದಲೇ ಎಚ್ಚೆತ್ತು ಕೊಳ್ಳಬೇಕಾದ ಜವಾಬ್ದಾರಿ ಸ್ಥಳೀಯರದ್ದಾಗಿದೆ ಎಂದರು. ಬೈಂದೂರು ವಿಧಾನಸಭಾ ಕ್ಷೇತ್ರದ ಶಾಸಕ ಗುರುರಾಜ್ ಗಂಟಿಹೊಳೆ ಮಾತನಾಡಿ, ಸಮಸ್ಯೆಗಳು ಜಟಿಲ ಗೊಂಡಾಗ ಹೋರಾಟದ ಅಗತ್ಯವಿರುತ್ತದೆ. ದೊಡ್ಡವರು ಸಮಸ್ಯೆ ಸೃಷ್ಟಿಸಿದಾಗಲೇ ಅದರ ತೀವ್ರತೆ ಜಾಸ್ತಿ. ಆ ಸಮಸ್ಯೆ ಪರಿಹರಿಸುವಲ್ಲಿ ಜನರು, ಮುಖಂಡರು, ಅಧಿಕಾರಿಗಳು, ತಂತ್ರಜ್ಞರ ಬೆಂಬಲ ಅಗತ್ಯವಾಗಿದ್ದು ಈ ಸಮಸ್ಯೆಯನ್ನು ಪರಿಹಾರದ ಹೋರಾಟ ಎಂದು ಪರಿಗಣಿಸಬೇಕಿದೆ ಎಂದು ನುಡಿದರು. ನಿವೃತ್ತ ಆರೋಗ್ಯಾಧಿಕಾರಿ ಹಾಗೂ ಕೃಷಿಕ ಡಾ. ನಾಗಭೂಷಣ ಉಡುಪ ಅಧ್ಯಕ್ಷತೆ ವಹಿಸಿದ್ದರು. ಉಡುಪಿ ಜಿಲ್ಲಾ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಸತೀಶ್ ಕಿಣಿ ಬೆಳ್ವೆ, ಸಿದ್ಧಾಪುರ ಗ್ರಾಪಂ ಸದಸ್ಯ ಶೇಖರ್ ಕುಲಾಲ್, ಉಳ್ಳೂರು-74 ಗ್ರಾಪಂ ಉಪಾಧ್ಯಕ್ಷ ಪ್ರಸಾದ್ ಶೆಟ್ಟಿ ಕಟ್ಟಿನಬೈಲು, ಆಜ್ರಿ ಗ್ರಾಪಂ ಅಧ್ಯಕ್ಷೆ ಮುಕಾಂಬು, ಉಪಾಧ್ಯಕ್ಷೆ ಗಾಯತ್ರಿ ನಾಯ್ಕ್, ಹೊಸಂಗಡಿ ಗ್ರಾಪಂ ಅಧ್ಯಕ್ಷೆ ಶಾಂತಿ ನಾಯಕ್, ಉಪಾಧ್ಯಕ್ಷೆ ಶಾರದಾ, ಅಂಪಾರು ಗ್ರಾಪಂ ಅಧ್ಯಕ್ಷ ಗೋಪಾಲಕೃಷ್ಣ, ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದದ ಕುಂದಾಪುರ ತಾಲೂಕು ಸಂಚಾಲಕ ರಾಜು ಬೆಟ್ಟಿನಮನೆ ವೇದಿಕೆಯಲ್ಲಿದ್ದರು. ಇಲ್ಲಿನ ಕೃಷಿಕರ ಸಮಸ್ಯೆಗಳ ಕುರಿತಂತೆ ನ್ಯಾಯವಾದಿ ಉಮೇಶ್ ಶೆಟ್ಟಿ ಶಾನ್ಕಟ್ಟು, ನಿವೃತ್ತ ಅಬಕಾರಿ ಅಧಿಕಾರಿ ಶಿವರಾಮ ಶೆಟ್ಟಿ, ಅಂಪಾರು ವ್ಯವಸಾಯ ಸೇವಾ ಸಹಕಾರಿ ಸಂಘದ ಉಪಾಧ್ಯಕ್ಷ ನವೀನ್ ಶೆಟ್ಟಿ ಶಾನ್ಕಟ್ಟು, ಸಿದ್ದಾಪುರ ಗ್ರಾಪಂ ಮಾಜಿ ಅಧ್ಯಕ್ಷ ಶೇಖರ ಕುಲಾಲ್, ರೈತಪರ ಹೋರಾಟಗಾರ ಹರ್ಷ ಮೇಲ್ಜಡ್ಡು, ಆಜ್ರಿ ಗ್ರಾಪಂ ಸದಸ್ಯ ಪ್ರವೀಣ್ ಶೆಟ್ಟಿ ಜನಾಗ್ರಹ ಸಭೆಯಲ್ಲಿ ಮಾತನಾಡಿದರು. ಪ್ರಮುಖರಾದ ಹರಿಪ್ರಸಾದ್ ಶೆಟ್ಟಿ ಕಾನ್ಮಕ್ಕಿ, ದಿನೇಶ್ ಹೆಗ್ಡೆ ಮೊಳಹಳ್ಳಿ, ಉಮೇಶ್ ಶೆಟ್ಟಿ ಕಲ್ಗದ್ದೆ, ಸುಭಾಶ್ಚಂದ್ರ ಶೆಟ್ಟಿ ಬಾಂಡ್ಯ, ಕಿಶನ್ ಹೆಗ್ಡೆ ಕೊಳ್ಕೆಬೈಲು, ಎಸ್. ಪ್ರಕಾಶ್ಚಂದ್ರ ಶೆಟ್ಟಿ ಕಂಬದಕೋಣೆ, ಜಯರಾಂ ಭಂಡಾರಿ, ಗೋಪಾಲ ಕಾಮತ್, ಉದಯಕುಮಾರ ಶೆಟ್ಟಿ ವಂಡ್ಸೆ, ಶರತ್ ಶೆಟ್ಟಿ ಬಾಳಿಕೆರೆ, ವಾಸುದೇವ ಪೈ ಸಿದ್ದಾಪುರ, ಮಂಜುನಾಥ ಕುಲಾಲ್, ಕೃಷ್ಣ ಪೂಜಾರಿ ಮತ್ತಿಬೇರು, ಶಾನೋಜ್ ಸಿದ್ದಾಪುರ, ರಾಬಿನ್ ಆಜ್ರಿ, ಕೃಷ್ಣದೇವ ಕಾರಂತ ಕೋಣಿ, ವಿನೋದ್ ಕ್ರಾಸ್ತಾ , ವಿವಿಧ ಪಕ್ಷ ಹಾಗೂ ಸಂಘಟನೆಗಳ ಮುಖಂಡರು, ಸಾವಿರಾರು ರೈತರು ಉಪಸ್ಥಿತರಿದ್ದರು. ಮನವಿ ಸಲ್ಲಿಕೆ: ಪ್ರತಿಭಟನಾ ಸಭೆ ಬಳಿಕ ಸಿದ್ದಾಪುರದಲ್ಲಿರುವ ಕರ್ನಾಟಕ ನೀರಾವರಿ ನಿಗಮ (ವಾರಾಹಿ) ಕಚೇರಿಗೆ ಜಾಥಾದ ಮೂಲಕ ಸಾಗಿ ಕಾಮಗಾರಿ ತಡೆ ಆದೇಶವನ್ನು ಹಿಂಪಡೆಯುವಂತೆ ಹಾಗೂ ರೈತರಿಗೆ ಅನುಕೂಲ ವಾಗುವ ಪ್ರಸ್ತುತ ಸ್ಥಳದಲ್ಲೇ ಯೋಜನೆ ಮುಂದುವರೆಸಲು ಆಗ್ರಹಿಸಿ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು. ಮಾಜಿ ಜಿಪಂ ಸದಸ್ಯ ರೋಹಿತ್‌ಕುಮಾರ್ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಹೋರಾಟಗಾರ ಶ್ರವಣ್ ಶೆಟ್ಟಿ ಸಂಪಿಗೇಡಿ ಸ್ವಾಗತಿಸಿದರು. ದಿನೇಶ್ ಪೂಜಾರಿ ಉಳ್ಳೂರು-74 ನಿರೂಪಿಸಿ, ಉದಯ್ ಶೆಟ್ಟಿ ರೈತಗೀತೆ ಹಾಡಿದರು, ಪ್ರಸಾದ್ ಶೆಟ್ಟಿ ವಂದಿಸಿದರು. ಶಂಕರನಾರಾಯಣದ ಅಣೆಕಟ್ಟಿನ ಕೆಳಗೆ ಯಾವುದೇ ಯೋಜನೆ ಮಾಡಿದರೂ ಯಾವುದೇ ಆಕ್ಷೇಪ ಇಲ್ಲ. ಆದರೆ ಮೇಲ್ಭಾಗದಲ್ಲಿ ಆಗುವ ಎಲ್ಲ ಯೋಜನೆಗಳಿಗೂ ಆಕ್ಷೇಪಗಳು ಬರುತ್ತವೆ. ಯಾಕೆಂದು ರೈತರು ಅರ್ಥೈಸಿಕೊಳ್ಳಬೇಕು. ಸಿದ್ದಾಪುರ ಏತ ನೀರಾವರಿ ಯೋಜನೆ ವಿಚಾರದಲ್ಲಿ ಹೋರಾಟ ಸಮಿತಿಯನ್ನು ಪಕ್ಷಾತೀತವಾಗಿ ರಚಿಸಿ, ಎಲ್ಲರ ವಿಶ್ವಾಸ ಪಡೆದು ಕೊಂಡು ನಿರಂತರವಾಗಿ ಹೋರಾಟ ಮುಂದುವರೆಸುವುದು ಸೂಕ್ತ. ರೈತಸಂಘ ಜೊತೆಗಿರಲಿದೆ. - ಕೆ. ಪ್ರತಾಪಚಂದ್ರ ಶೆಟ್ಟಿ, ಉಡುಪಿ ಜಿಲ್ಲಾ ರೈತ ಸಂಘದ ಅಧ್ಯಕ್ಷರು. ರಾಜಕೀಯ ಪಕ್ಷಗಳು ಹೋರಾಟವನ್ನು ಸಂಘಟಿಸಿದಾಗ ಪಕ್ಷದ ತೀರ್ಮಾನದ ಬದ್ಧತೆಯಲ್ಲಿ ಪಾಲ್ಗೊಳ್ಳುತ್ತಾರೆ. ಪಕ್ಷಾತೀತವಾಗಿ ಹೋರಾಟ ಆಗುತ್ತದೆ ಎಂದಾಗ, ಸಬೂಬು ಹೇಳಿ, ಹೋರಾಟದಿಂದ ತಪ್ಪಿಸಿ ಕೊಳ್ಳುವವರಿದ್ದಾರೆ. ಆದರೆ ಬದುಕು, ಅಸ್ತಿತ್ವದ ಪ್ರಶ್ನೆ ಬಂದಾಗ ಹೋರಾಟ ಆಗಲೇಬೇಕು. ಸಿದ್ದಾಪುರ ಏತ ನೀರಾವರಿ ಯೋಜನೆ ವಿಚಾರ ರೈತರಿಗೆ ಅನುಕೂಲವಾಗುವಂತೆ ನಡೆಯಬೇಕಿದ್ದು ಇದರಲ್ಲಿ ಯಾವುದೇ ರಾಜಿಯಿಲ್ಲ. ಅನ್ಯಾಯಕ್ಕೊಳಗಾದವರ ಜೊತೆಗೂಡಿ ನಡೆಸುವ ಮುಂದಿನ ಹೋರಾಟಕ್ಕೆ ಚಾಲನೆ ಸಿಕ್ಕಿದೆ. -ಗುರುರಾಜ್ ಗಂಟಿಹೊಳೆ, ಬೈಂದೂರು ಶಾಸಕ.

ವಾರ್ತಾ ಭಾರತಿ 21 Jan 2026 8:28 pm

ಟಿ20 ವಿಶ್ವಕಪ್: ಬಾಂಗ್ಲಾದೇಶ ಬದಲಿಗೆ ಸ್ಕಾಟ್ಲೆಂಡ್: ಭಾರತದ ಪರ ಐಸಿಸಿ ಮತ - ಬಿಸಿಬಿಗೆ ಅಂತಿಮ ಎಚ್ಚರಿಕೆ

ಭಾರತ ಮತ್ತು ಬಾಂಗ್ಲಾದೇಶದ ನಡುವೆ ಇತ್ತೀಚಿನ ದಿನಗಳಲ್ಲಿ ರಾಜತಾಂತ್ರಿಕ ಸಂಬಂಧ ಉತ್ತಮವಾಗಿಲ್ಲ. ಕ್ರಿಕೆಟ್ ವಿಚಾರದಲ್ಲಿ ಬಾಂಗ್ಲಾದೇಶವೂ ಸಹ ನೆರೆಯ ಪಾಕಿಸ್ತಾನದಂತೆ ವರ್ತಿಸುತ್ತಿದೆ. ಇತ್ತೀಚೆಗೆ ಭಾರತದಲ್ಲಿ ಪಂದ್ಯಗಳನ್ನು ಆಡುವುದಿಲ್ಲ ಎಂದು ಬಾಂಗ್ಲಾದೇಶವು 2026ರ ಟಿ- 20 ವಿಶ್ವಕಪ್ ಪಂದ್ಯಾವಳಿಯಿಂದಲೇ ಹೊರಗುಳಿಯುವ ಸಾಧ್ಯತೆ ಇದೆ. ಇದೀಗ ಭಾರತದ ಪರವಾಗಿ 14 ಮಂಡಳಿಗಳು ನಿಂತಿದ್ದು, ಬಾಂಗ್ಲಾದೇಶಕ್ಕೆ ಐಸಿಸಿ 24 ಗಂಟೆ ಗಡುವು

ಒನ್ ಇ೦ಡಿಯ 21 Jan 2026 8:24 pm

ಗ್ರಾಮೀಣ ಪ್ರದೇಶದತ್ತ ಒಳಗಣ್ಣು ತೆರೆಯೋಣ: ಡಾ. ನಾಗತಿಹಳ್ಳಿ ಚಂದ್ರಶೇಖರ್

► ಏಳು ಮಂದಿ ಸಾಧಕರು, ಒಂದು ಸಂಸ್ಥೆಗೆ ಸಂದೇಶ ಪ್ರಶಸ್ತಿ ಪ್ರದಾನ

ವಾರ್ತಾ ಭಾರತಿ 21 Jan 2026 8:22 pm

ಚುನಾವಣಾಧಿಕಾರಿಗಳ ವಿರುದ್ಧದ ಕ್ರಮ: ಪಶ್ಚಿಮ ಬಂಗಾಳ ಸರ್ಕಾರದ ವಿರುದ್ಧ ಚುನಾವಣಾ ಆಯೋಗ ಅಸಮಾಧಾನ

ಕೋಲ್ಕತ್ತಾ: ಕಳೆದ ವರ್ಷದ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ, ತಪ್ಪೆಸಗಿದ್ದ ವಿಶೇಷ ತೀವ್ರ ಮತಪಟ್ಟಿ ಪರಿಷ್ಕರಣೆ(SIR) ಕರ್ತವ್ಯದಲ್ಲಿ ತೊಡಗಿಕೊಂಡಿರುವ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸುವುದಕ್ಕೂ ಮುನ್ನ ಪಶ್ಚಿಮ ಬಂಗಾಳ ಸರ್ಕಾರ ತನ್ನನ್ನು ಸಂಪರ್ಕಿಸಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿರುವ ಚುನಾವಣಾ ಆಯೋಗ, ರಾಜ್ಯದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದೆ. ಮತಪಟ್ಟಿಗಳ ತಯಾರಿ ಹಾಗೂ ಪರಿಷ್ಕರಣೆ ಪ್ರಕ್ರಿಯೆಯಲ್ಲಿ ಪಶ್ಚಿಮ ಬಂಗಾಳದ ನಾಲ್ವರು ಅಧಿಕಾರಿಗಳು ತಪ್ಪೆಸಗಿರುವುದನ್ನು ಚುನಾವಣಾ ಆಯೋಗ ಪತ್ತೆಹಚ್ಚಿತ್ತು. ಈ ಅಧಿಕಾರಿಗಳನ್ನು ಬರುಯಪುರ್ ಪೂರ್ವ ವಿಧಾನಸಭಾ ಕ್ಷೇತ್ರದ ಇಆರ್‌ಒ ದೇಬೋತ್ತಮ್ ದತ್ತ ಚೌಧುರಿ, ಬರುಯಪುರ್ ಪೂರ್ವ ವಿಧಾನಸಭಾ ಕ್ಷೇತ್ರದ ಎಇಆರ್‌ಒ ತಥಾಗತ ಮಂಡಲ್, ಮೊಯ್ನಾ ವಿಧಾನಸಭಾ ಕ್ಷೇತ್ರದ ಇಆರ್‌ಒ ಬಿಯೊಲೋಬ್ ಸರ್ಕಾರ್ ಹಾಗೂ ಎಇಆರ್‌ಒ ಮೊಯ್ನಾ ಎಂದು ಗುರುತಿಸಲಾಗಿದೆ. ಆಗಸ್ಟ್ 5ರಂದು ಸರ್ಕಾರಕ್ಕೆ ಪತ್ರ ಬರೆದಿದ್ದ ಚುನಾವಣಾ ಆಯೋಗ, ಈ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಜರುಗಿಸಿ, ಅವರ ವಿರುದ್ಧ ಎಫ್‌ಐಆರ್‌ಗಳನ್ನು ದಾಖಲಿಸಬೇಕು ಎಂದು ಸೂಚಿಸಿತ್ತು. ಆದರೆ, ರಾಜ್ಯ ಸರ್ಕಾರ ಈ ಸೂಚನೆಗಳನ್ನು ಕೇವಲ ಭಾಗಶಃ ಮಾತ್ರ ಪಾಲಿಸಿತ್ತು. ಬಳಿಕ, ಪಶ್ಚಿಮ ಬಂಗಾಳದ ಮುಖ್ಯ ಕಾರ್ಯದರ್ಶಿ ಮನೋಜ್ ಪಂತ್ ಅವರಿಗೆ ನೋಟಿಸ್ ಜಾರಿಗೊಳಿಸಿದ್ದ ಚುನಾವಣಾ ಆಯೋಗ, ಅವರನ್ನು ಹೊಸದಿಲ್ಲಿಗೆ ಕರೆಸಿಕೊಂಡಿತ್ತು. ಆದರೆ, ತಪ್ಪಿತಸ್ಥ ಚುನಾವಣಾ ಅಧಿಕಾರಿಗಳ ವಿರುದ್ಧ ಎಫ್‌ಐಆರ್ ದಾಖಲಿಸುವುದಕ್ಕೂ ಮುನ್ನ ತನಿಖೆ ನಡೆಸಬೇಕು ಎಂಬ ರಾಜ್ಯ ಸರ್ಕಾರದ ಆಗ್ರಹವನ್ನು ಮನ್ನಿಸಲಾಗಿದೆ ಎಂದು ಚುನಾವಣಾ ಆಯೋಗವೇ ಸ್ಪಷ್ಟಪಡಿಸಿತ್ತು. “ನಿಗದಿಪಡಿಸಲಾಗಿರುವ ನಿಯಮಗಳನುಸಾರ ಹಾಗೂ ಕಡ್ಡಾಯ ಸಂಪರ್ಕವಿಲ್ಲದೆ ಶಿಸ್ತು ಕ್ರಮವನ್ನು ಜರುಗಿಸಲಾಗಿದೆ. ಇಂತಹ ಶಿಸ್ತುಕ್ರಮವನ್ನು ಚುನಾವಣಾ ಆಯೋಗ ಅಂತಿಮಗೊಳಿಸುವುದಿಲ್ಲ. ಅದರಂತೆ, ಚುನಾವಣಾ ಆಯೋಗದ ದೃಷ್ಟಿಯಲ್ಲಿ ಈ ಕ್ರಮವು ನಿಯಮಾನುಸಾರ ಕ್ರಮಬದ್ಧವಾಗಿಲ್ಲ. ಹೀಗಾಗಿ, ಈ ಕ್ರಮವನ್ನು ಚುನಾವಣಾ ಆಯೋಗದ ಸೂಚನೆಯ ಮೇರೆಗೆ ಕಟ್ಟುನಿಟ್ಟಾಗಿ ಮರುಪರಿಶೀಲಿಸಬೇಕು” ಎಂದು ಚುನಾವಣಾ ಆಯೋಗದ ಪತ್ರದಲ್ಲಿ ತಿಳಿಸಲಾಗಿದೆ. ಈ ಲೋಪಕ್ಕೆ ಯಾರು ಹೊಣೆ ಹಾಗೂ ಯಾಕಾಗಿ ಇಂತಹ ಲೋಪ ಸಂಭವಿಸಿದೆ ಎಂಬುದರ ಕುರಿತು ಇನ್ನೂ 72 ಗಂಟೆಗಳೊಳಗಾಗಿ ವರದಿ ಸಲ್ಲಿಸುವಂತೆ ಪಶ್ಚಿಮ ಬಂಗಾಳ ಸರ್ಕಾರಕ್ಕೆ ಚುನಾವಣಾ ಆಯೋಗ ಸೂಚಿಸಿದೆ. ಜೊತೆಗೆ, ನಾಲ್ವರು ಅಧಿಕಾರಿಗಳ ವಿರುದ್ಧ ನಡೆದಿರುವ ತನಿಖೆಯ ವಿವರಗಳನ್ನು ಒದಗಿಸುವಂತೆಯೂ ನಿರ್ದೇಶನ ನೀಡಿದೆ.

ವಾರ್ತಾ ಭಾರತಿ 21 Jan 2026 8:20 pm

ಕಲಬುರಗಿ | ಶಿಕ್ಷಣದಿಂದ ಎಲ್ಲ ಕ್ಷೇತ್ರಗಳ ಬಡತನ ನಿವಾರಣೆ : ಪ್ರೊ.ಚೆನ್ನಾರೆಡ್ಡಿ ಪಾಟೀಲ್‌

ಕಲಬುರಗಿ: ಶಿಕ್ಷಣದಿಂದ ಬದುಕಿನ ಎಲ್ಲ ಕ್ಷೇತ್ರಗಳ ಬಡತನ ನಿವಾರಣೆ ಸಾಧ್ಯ ಎಂದು ಸರ್ವಜ್ಞ ಶಿಕ್ಷಣ ಸಮೂಹ ಸಂಸ್ಥೆಗಳ ಸಂಸ್ಥಾಪಕ ಅಧ್ಯಕ್ಷ ಪ್ರೊ.ಚೆನ್ನಾರೆಡ್ಡಿ ಪಾಟೀಲ್‌ ಹೇಳಿದರು. ಸರ್ವಜ್ಞ ಹಾಗೂ ಜಸ್ಟಿಸ್ ಶಿವರಾಜ ಪಾಟೀಲ ಪದವಿಪೂರ್ವ ಕಾಲೇಜಿನಲ್ಲಿ ಬುಧವಾರ ಆಯೋಜಿಸಿದ್ದ ಅಂಬಿಗರ ಚೌಡಯ್ಯನವರ ಜಯಂತ್ಯುತ್ಸವ ಹಾಗೂ ಪೂಜ್ಯಶ್ರೀ ಶತಾಯುಷಿ ಡಾ.ಶಿವಕುಮಾರ ಸ್ವಾಮಿಗಳ 7ನೇ ಪುಣ್ಯಸ್ಮರಣೆ (ದಾಸೋಹ ದಿನ) ಅಂಗವಾಗಿ ಆಯೋಜಿಸಿದ್ದ ಪ್ರೇರಣೋಪನ್ಯಾಸ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಶರಣರ ವಿಚಾರಗಳು ಉನ್ನತವಾಗಿದ್ದವು. ವಿದ್ಯಾರ್ಥಿಗಳು ಶರಣರ ಭಾವಚಿತ್ರದ ಹಿಂದಿನ ಚರಿತ್ರೆ ಅರ್ಥಮಾಡಿಕೊಳ್ಳಬೇಕು. ಅನ್ನ, ಅಕ್ಷರ, ಅರಿವು ತ್ರಿವಿಧ ದಾಸೋಹ ಮಾಡಿದ ಶಿವಕುಮಾರ ಸ್ವಾಮಿಗಳು ನಡೆದಾಡುವ ದೇವರು ಆಗಿದ್ದರು ಎಂದು ತಿಳಿಸಿದರು. ಲೇಖಕ ಡಾ.ಶಿವರಂಜನ ಸತ್ಯಂಪೇಟೆ ವಿಶೇಷ ಉಪನ್ಯಾಸ ನೀಡಿದರು. ಜಸ್ಟಿಸ್ ಶಿವರಾಜ ಪಾಟೀಲ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯೆ ವಿನುತಾ ಆರ್.ಬಿ., ಸರ್ವಜ್ಞ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಪ್ರಶಾಂತ ಕುಲಕರ್ಣಿ, ಸರ್ವಜ್ಞ ಪದವಿ ಕಾಲೇಜಿನ ಪ್ರಾಚಾರ್ಯ ಪ್ರಭುಗೌಡ ಸಿದ್ಧಾರಡ್ಡಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಡಾ. ವಿದ್ಯಾವತಿ ಪಾಟೀಲ ನಿರೂಪಿಸಿದರು. ಭಾಗ್ಯಶ್ರೀ ಹಾಗೂ ತಂಡದವರು ಪ್ರಾರ್ಥನೆಗೀತೆ ಹಾಡಿದರು. ದೈಹಿಕ ಶಿಕ್ಷಕ ಗುರುರಾಜ ಜಾನಬೋ, ತ್ರಿವೇಣಿ ಭಾವಿ, ವೀಣಾ, ಕರುಣೇಶ ಹಿರೇಮಠ, ಗುರುರಾಜ ಕುಲಕರ್ಣಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ವಾರ್ತಾ ಭಾರತಿ 21 Jan 2026 8:20 pm

ಅರಾವಳಿ ಗಣಿಗಾರಿಕೆ | ಸಮಗ್ರ ಪರಿಶೀಲನೆಗೆ ಪರಿಣತ ಸಮಿತಿ: ಸುಪ್ರೀಂ ಕೋರ್ಟ್

ಹೊಸದಿಲ್ಲಿ, ಜ. 21: ಅಕ್ರಮ ಗಣಿಗಾರಿಕೆ ಪರಿಸರಕ್ಕೆ ಸರಿಪಡಿಸಲಾಗದ ಹಾನಿ ಉಂಟು ಮಾಡಬಹುದು ಎಂದು ಬುಧವಾರ ಅಭಿಪ್ರಾಯಪಟ್ಟ ಸುಪ್ರೀಂ ಕೋರ್ಟ್, ಅರಾವಳಿ ಪರ್ವತಶ್ರೇಣಿಯಲ್ಲಿ ನಡೆಯುತ್ತಿರುವ ಗಣಿಗಾರಿಕೆ ಹಾಗೂ ಸಂಬಂಧಿತ ಸಮಸ್ಯೆಗಳ ಕುರಿತು ಸಮಗ್ರ ಪರಿಶೀಲನೆಗೆ ಪರಿಣತ ಸಮಿತಿಯೊಂದನ್ನು ರಚಿಸುವುದಾಗಿ ತಿಳಿಸಿದೆ. ಪರಿಸರ ತಜ್ಞರು ಹಾಗೂ ಗಣಿಗಾರಿಕೆ ಸೇರಿದಂತೆ ಸಂಬಂಧಿತ ಕ್ಷೇತ್ರಗಳಲ್ಲಿ ಪರಿಣತಿ ಹೊಂದಿರುವ ವಿಜ್ಞಾನಿಗಳ ಹೆಸರುಗಳನ್ನು ನಾಲ್ಕು ವಾರಗಳೊಳಗೆ ಸೂಚಿಸುವಂತೆ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್, ನ್ಯಾಯಮೂರ್ತಿ ಜಯಮಲ್ಯ ಬಾಗ್ಚಿ ಮತ್ತು ನ್ಯಾಯಮೂರ್ತಿ ವಿಪುಲ್ ಎಂ. ಪಂಚೋಲಿ ಅವರನ್ನು ಒಳಗೊಂಡ ನ್ಯಾಯಪೀಠವು ಹೆಚ್ಚುವರಿ ಸಾಲಿಸಿಟರ್ ಜನರಲ್ ಐಶ್ವರ್ಯ ಭಾಟಿ ಮತ್ತು ನ್ಯಾಯಾಲಯದ ಸಲಹೆಗಾರ ಕೆ. ಪರಮೇಶ್ವರ್ ಅವರಿಗೆ ಸೂಚಿಸಿದೆ. ಸಮಿತಿಯು ನ್ಯಾಯಾಲಯದ ನಿರ್ದೇಶನ ಮತ್ತು ಉಸ್ತುವಾರಿಯಲ್ಲೇ ಕಾರ್ಯನಿರ್ವಹಿಸಲಿದೆ ಎಂದು ಕೋರ್ಟ್ ಸ್ಪಷ್ಟಪಡಿಸಿದೆ. ಇತರ ಪರ್ವತ ಮತ್ತು ಬೆಟ್ಟಗಳೊಂದಿಗೆ ಅರಾವಳಿ ಬೆಟ್ಟಗಳು ಹಾಗೂ ಪರ್ವತಶ್ರೇಣಿಗಳನ್ನು ಹೋಲಿಸಿದ ವರದಿಯನ್ನು ಅಂಗೀಕರಿಸಿ, ನವೆಂಬರ್ 20ರಂದು ನೀಡಿದ್ದ ಆದೇಶದ ಅಮಾನತನ್ನು ಸುಪ್ರೀಂ ಕೋರ್ಟ್ ವಿಸ್ತರಿಸಿದೆ. ಅರಾವಳಿ ಪರ್ವತಶ್ರೇಣಿಯ ಹಲವು ಪ್ರದೇಶಗಳಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿದೆ ಎಂದು ವಿಚಾರಣೆಯ ವೇಳೆ ಕೋರ್ಟ್‌ಗೆ ತಿಳಿಸಲಾಯಿತು. ಈ ವೇಳೆ ರಾಜಸ್ಥಾನ ಸರ್ಕಾರದ ಪರವಾಗಿ ಹಾಜರಾದ ಹೆಚ್ಚುವರಿ ಸಾಲಿಸಿಟರ್ ಜನರಲ್ ಕೆ.ಎಂ. ನಟರಾಜ್, ಅಕ್ರಮ ಗಣಿಗಾರಿಕೆಗೆ ಅವಕಾಶವಿಲ್ಲ ಎಂದು ಹೇಳಿದರು.

ವಾರ್ತಾ ಭಾರತಿ 21 Jan 2026 8:15 pm

Uttar Pradesh | ಪ್ರಯಾಗ್‌ ರಾಜ್‌ ನಲ್ಲಿ IAF ತರಬೇತಿ ವಿಮಾನ ತುರ್ತು ಭೂಸ್ಪರ್ಶ

ಪ್ರಯಾಗ್‌ರಾಜ್, ಜ. 21: ಭಾರತೀಯ ವಾಯುಪಡೆ (ಐಎಎಫ್)ಯ ತರಬೇತಿ ವಿಮಾನವೊಂದು ಬುಧವಾರ ಉತ್ತರ ಪ್ರದೇಶದ ಪ್ರಯಾಗ್‌ ರಾಜ್‌ ನಲ್ಲಿ ನಿಯಮಿತ ತರಬೇತಿ ಹಾರಾಟದಲ್ಲಿದ್ದಾಗ, ವಿಮಾನ ನಿಲ್ದಾಣದ ಸಮೀಪದ ಕೆರೆಯೊಂದರಲ್ಲಿ ತುರ್ತು ಭೂಸ್ಪರ್ಶ ಮಾಡಿದೆ. ತುರ್ತು ನೆರವು ತಂಡಗಳು ಸ್ಥಳಕ್ಕೆ ಧಾವಿಸಿ ಇಬ್ಬರು ಪೈಲಟ್‌ ಗಳನ್ನು ರಕ್ಷಿಸಿವೆ. ವಿಮಾನ ಪತನಗೊಂಡಿದೆ ಎಂಬ ಆರಂಭಿಕ ಅನುಮಾನವಿದ್ದರೂ, ಹಾರಾಟದ ವೇಳೆ ತಾಂತ್ರಿಕ ಸಮಸ್ಯೆ ಕಂಡುಬಂದ ಹಿನ್ನೆಲೆಯಲ್ಲಿ ತುರ್ತು ಭೂಸ್ಪರ್ಶ ಮಾಡಲಾಗಿದೆ ಎಂದು ಬಳಿಕ ಅಧಿಕಾರಿಗಳು ಸ್ಪಷ್ಟಪಡಿಸಿದರು. ವಿಮಾನ ನಿಯಂತ್ರಣ ಕಳೆದುಕೊಂಡಂತೆ ಕಂಡುಬಂದ ನಂತರ ನೀರಿಗೆ ಜಿಗಿದುದಾಗಿ ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಭೂಸ್ಪರ್ಶ ಮಾಡಿದ ಬಳಿಕ ದಟ್ಟ ಕಪ್ಪು ಹೊಗೆ ಆ ಪ್ರದೇಶವನ್ನು ಆವರಿಸಿತು. ವಿಮಾನ ಕೆರೆಗೆ ಅಪ್ಪಳಿಸಿದ ತಕ್ಷಣ ಸ್ಥಳೀಯರು ನೆರವಿಗೆ ಧಾವಿಸಿದರು. ಬಳಿಕ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್)ಯ ಮುಳುಗುಗಾರರು ಸ್ಥಳಕ್ಕೆ ಬಂದರು. ನಿರ್ಜನ ಪ್ರದೇಶದಲ್ಲಿ ಸಣ್ಣ ವಿಮಾನವೊಂದು ಸುರಕ್ಷಿತವಾಗಿ ತುರ್ತು ಭೂಸ್ಪರ್ಶ ಮಾಡಿದ್ದು, ಘಟನೆಯ ಕುರಿತು ತನಿಖೆಗೆ ಆದೇಶಿಸಲಾಗಿದೆ ಎಂದು ಭಾರತೀಯ ವಾಯುಪಡೆ ‘ಎಕ್ಸ್’ನಲ್ಲಿ ನೀಡಿದ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ. ಭಾರತ–ಪಾಕ್ ಯುದ್ಧ ನಿಲ್ಲಿಸಿದ್ದು ನಾನು ಎಂದು ಟ್ರಂಪ್ ಪುನರುಚ್ಚರಿಸಿದ್ದು 70ನೇ ಬಾರಿ: ಕಾಂಗ್ರೆಸ್(w/f) ಹೊಸದಿಲ್ಲಿ, ಜ. 21: ಕಳೆದ ವರ್ಷ ನಡೆದ ಭಾರತ–ಪಾಕಿಸ್ತಾನ ಯುದ್ಧವನ್ನು ನಿಲ್ಲಿಸಿದ್ದು ತಾನೇ ಎಂಬುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತೊಮ್ಮೆ ಪುನರುಚ್ಚರಿಸಿದ್ದಾರೆ. ಇದರ ಬೆನ್ನಲ್ಲೇ ಕಾಂಗ್ರೆಸ್ ಪಕ್ಷ ಪ್ರಧಾನಿ ನರೇಂದ್ರ ಮೋದಿ ಅವರನ್ನು ಕುಟುಕಿದ್ದು, ಈ ವಿಷಯದಲ್ಲಿ ಟ್ರಂಪ್ ನೀಡಿರುವ ಹೇಳಿಕೆಗಳ ಸಂಖ್ಯೆ ಈಗ 70ಕ್ಕೆ ತಲುಪಿದೆ ಎಂದು ಹೇಳಿದೆ. ವಾಷಿಂಗ್ಟನ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಟ್ರಂಪ್ ತಮ್ಮ ಎರಡನೇ ಅವಧಿಯ ಅಧ್ಯಕ್ಷರಾದ ಮೊದಲ ವರ್ಷದ ಸಾಧನೆಗಳನ್ನು ವಿವರಿಸುತ್ತಾ, ‘ಕೊನೆಗೊಳ್ಳದ ಯುದ್ಧಗಳು’ ಎಂಬ ಪಟ್ಟಿಯನ್ನು ಉಲ್ಲೇಖಿಸಿದರು. ಅದರಲ್ಲಿ ಭಾರತ–ಪಾಕಿಸ್ತಾನ ಯುದ್ಧವನ್ನೂ ಸೇರಿಸಿದ್ದರು. ಇದನ್ನು ಉಲ್ಲೇಖಿಸಿ ಬುಧವಾರ ಸಾಮಾಜಿಕ ಮಾಧ್ಯಮ ‘ಎಕ್ಸ್’ನಲ್ಲಿ ಸಂದೇಶವೊಂದನ್ನು ಪ್ರಕಟಿಸಿದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್, ‘‘ಇತ್ತೀಚೆಗೆವರೆಗೆ ಈ ಸಂಖ್ಯೆ 68 ಆಗಿತ್ತು. ಆದರೆ ಮಂಗಳವಾರ ಟ್ರಂಪ್ ಇದನ್ನು ಎರಡು ಬಾರಿ ಹೇಳಿದ್ದರಿಂದ ಸಂಖ್ಯೆ 70ಕ್ಕೆ ಏರಿದೆ. ಭಾರತ–ಪಾಕಿಸ್ತಾನ ಯುದ್ಧವನ್ನು ನಿಲ್ಲಿಸಿದ್ದು ತಾನು ಎಂಬುದಾಗಿ ಅವರು ಆರಂಭಿಕ ಹೇಳಿಕೆಯಲ್ಲಿ ತಿಳಿಸಿದರು. ಬಳಿಕ ಪ್ರಶ್ನೋತ್ತರ ಅವಧಿಯಲ್ಲಿ ಅದನ್ನು ಪುನರುಚ್ಚರಿಸಿದರು’’ ಎಂದು ತಿಳಿಸಿದ್ದಾರೆ. 2025ರ ಮೇ 10ರಂದು ‘ಆಪರೇಶನ್ ಸಿಂಧೂರ’ ದಿಢೀರನೆ ಮತ್ತು ಅನಿರೀಕ್ಷಿತವಾಗಿ ನಿಂತಿರುವುದಕ್ಕೆ ತಾನೇ ಕಾರಣ ಎಂದು ಪ್ರಧಾನಿಯ ‘ಒಳ್ಳೆಯ ಮಿತ್ರ’ ಇಷ್ಟು ಬಾರಿ ಹೇಳಿದ್ದಾರೆ ಎಂದು ರಮೇಶ್ ವ್ಯಂಗ್ಯವಾಡಿದರು. ಪತ್ರಿಕಾಗೋಷ್ಠಿಯಲ್ಲಿ ಟ್ರಂಪ್, ‘‘ಭಾರತ ಮತ್ತು ಪಾಕಿಸ್ತಾನ ತೀವ್ರ ಯುದ್ಧದಲ್ಲಿ ತೊಡಗಿದ್ದವು. ನನ್ನ ಅಂದಾಜಿನಲ್ಲಿ ಅದು ಪರಮಾಣು ಯುದ್ಧವಾಗಿ ವಿಸ್ತರಿಸಬಹುದಿತ್ತು. ನನ್ನ ಮಧ್ಯಪ್ರವೇಶದಿಂದ ಲಕ್ಷಾಂತರ ಜನರ ಪ್ರಾಣಗಳು ಉಳಿದವು’’ ಎಂದು ಹೇಳಿದ್ದಾರೆ. ‘‘10 ತಿಂಗಳ ಅವಧಿಯಲ್ಲಿ ಕೊನೆಗೊಳ್ಳುವ ಸಾಧ್ಯತೆಯಿಲ್ಲದ ಎಂಟು ಯುದ್ಧಗಳನ್ನು ನಿಲ್ಲಿಸಿದ್ದೇನೆ’’ ಎಂಬುದನ್ನೂ ಅವರು ಹೇಳಿದ್ದಾರೆ.

ವಾರ್ತಾ ಭಾರತಿ 21 Jan 2026 8:11 pm

Kashmir | ಭಾರತ–ಪಾಕ್ ಸೈನಿಕರಿಂದ ಗುಂಡಿನ ಚಕಮಕಿ

ಹೊಸದಿಲ್ಲಿ, ಜ. 21: ಉತ್ತರ ಕಾಶ್ಮೀರದ ಕುಪ್ವಾರ ಜಿಲ್ಲೆಯ ಕೆರನ್ ವಲಯದಲ್ಲಿ ಮಂಗಳವಾರ–ಬುಧವಾರ ರಾತ್ರಿ ಭಾರತ ಮತ್ತು ಪಾಕಿಸ್ತಾನಿ ಸೈನಿಕರ ನಡುವೆ ಗುಂಡಿನ ಚಕಮಕಿ ನಡೆದಿದೆ ಎಂದು ರಕ್ಷಣಾ ಮೂಲಗಳು ತಿಳಿಸಿವೆ. ಗಡಿ ಭದ್ರತೆಯನ್ನು ಬಿಗಿಗೊಳಿಸುವುದು ಮತ್ತು ನಿಯಂತ್ರಣ ರೇಖೆಯಲ್ಲಿನ ಅಗೋಚರ ಸ್ಥಳಗಳನ್ನು ಕಡಿಮೆ ಮಾಡುವ ಉದ್ದೇಶದಿಂದ ಕೆರನ್‌ ನ ಬಾಲಾ ಪ್ರದೇಶದಲ್ಲಿ ಹೆಚ್ಚಿನ ಸಾಮರ್ಥ್ಯದ ನಿಗಾ ಕ್ಯಾಮೆರಾಗಳನ್ನು 6 ರಾಷ್ಟ್ರೀಯ ರೈಫಲ್ಸ್ ಸೈನಿಕರು ಅಳವಡಿಸುತ್ತಿದ್ದಾಗ ಘರ್ಷಣೆ ನಡೆದಿದೆ. ಕ್ಯಾಮೆರಾ ಅಳವಡಿಕೆಯನ್ನು ತಡೆಯುವ ಉದ್ದೇಶದಿಂದ ಪಾಕಿಸ್ತಾನಿ ಪಡೆಗಳು ಸಣ್ಣ ಶಸ್ತ್ರಗಳಿಂದ ಎರಡು ಸುತ್ತು ಗುಂಡು ಹಾರಿಸಿದವು ಎನ್ನಲಾಗಿದೆ. ಅದಕ್ಕೆ ಪ್ರತಿಯಾಗಿ ಭಾರತೀಯ ಪಡೆ ಒಂದು ಸುತ್ತು ಗುಂಡು ಹಾರಿಸಿದೆ. ಉಭಯ ಕಡೆಗಳಿಂದ ಯಾವುದೇ ಸಾವು–ನೋವು ವರದಿಯಾಗಿಲ್ಲ. ಆದರೆ, ಭಯೋತ್ಪಾದಕರನ್ನು ಭಾರತೀಯ ಪ್ರದೇಶದೊಳಗೆ ನುಗ್ಗಿಸುವ ಉದ್ದೇಶದಿಂದ ಭಾರತೀಯ ಸೈನಿಕರ ಗಮನವನ್ನು ಬೇರೆಡೆಗೆ ಸೆಳೆಯುವ ಪ್ರಯತ್ನವೂ ಇದಾಗಿರಬಹುದೆಂಬ ಸಾಧ್ಯತೆಯನ್ನು ಸೈನಿಕರು ತಳ್ಳಿಹಾಕಿಲ್ಲ. ಈ ಹಿನ್ನೆಲೆಯಲ್ಲಿ ದಟ್ಟ ಅರಣ್ಯ ಪ್ರದೇಶವನ್ನು ಸುತ್ತುವರಿದು ಶೋಧ ಕಾರ್ಯಾಚರಣೆ ಆರಂಭಿಸಲಾಗಿದೆ.

ವಾರ್ತಾ ಭಾರತಿ 21 Jan 2026 8:08 pm

ಚಿಂಚೋಳಿ | ಸಮಾಜದಲ್ಲಿ ಜಾಗೃತಿ ಮೂಡಿಸಿದ ಅಂಬಿಗರ ಚೌಡಯ್ಯ ಮಹಾನ್ ದಾರ್ಶನಿಕರು : ಬಸವರಾಜ ಮಾಲಿ

ಚಿಂಚೋಳಿ: ಹನ್ನೆರಡನೇ ಶತಮಾನದಲ್ಲಿ ಕಾಯಕ, ದಾಸೋಹ, ಶಿಕ್ಷಣಕ್ಕೆ ಒತ್ತು ನೀಡುವ ಮೂಲಕ ಸಮಾಜದಲ್ಲಿ ಜಾಗೃತಿ ಮೂಡಿಸಿದ ಶರಣ ಅಂಬಿಗರ ಚೌಡಯ್ಯ ಮಹಾನ್ ದಾರ್ಶನಿಕರು ಎಂದು ತಾಲೂಕು ಗ್ಯಾರೆಂಟಿ ಸಮಿತಿಯ ಅಧ್ಯಕ್ಷ ಬಸವರಾಜ ಮಾಲಿ ಹೇಳಿದರು. ಪಟ್ಟಣದ ತಾಲೂಕು ಆಡಳಿತ ವತಿಯಿಂದ ಪ್ರಜಾಸೌಧದಲ್ಲಿ ಬುಧವಾರ ಹಮ್ಮಿಕೊಂಡ ಅಂಬಿಗರ ಚೌಡಯ್ಯ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಸವಣ್ಣನವರ ನಡೆ-ನುಡಿ-ತತ್ವ-ಆದರ್ಶಗಳನ್ನು ಪಾಲಿಸಿ ತಮ್ಮದೇ ಆದ ವಚನಗಳ ಮೂಲಕ ಸಮಾಜದ ಅಂಕು-ಡೊಂಕುಗಳನ್ನು ತಿದ್ದಿದರು ಎಂದು ಅಭಿಪ್ರಾಯಪಟ್ಟರು. ಕಾರ್ಯಕ್ರಮದ ಅಂಗವಾಗಿ ಪಟ್ಟಣದ ಹೀರೆ ಅಗಸಿ ಚಿಂಚೋಳಿಯಿಂದ ಶ್ರೀ ಅಂಬಿಗರ ಚೌಡಯ್ಯನವರ ಭಾವಚಿತ್ರದ ಭವ್ಯ ಮೆರವಣಿಗೆಗೆ ಚಾಲನೆ ನೀಡಲಾಯಿತು. ಮೆರವಣಿಗೆಯುದ್ದಕ್ಕೂ ಶರಣರ ಪರ ಘೋಷಣೆಗಳು ಮೊಳಗಿದವು. ಪ್ರಮುಖ ರಸ್ತೆಗಳ ಮೂಲಕ ಸಾಗಿದ ಮೆರವಣಿಗೆಯು ಅಂತಿಮವಾಗಿ ಪ್ರಜಾಸೌಧಕ್ಕೆ ತಲುಪಿತು. ಆಡಳಿತ ಅಧಿಕಾರಿ ಸುಬ್ಬಣ್ಣ ಜಮಖಂಡಿ ಜಯಪ್ಪ ಚಾಪಲ್, ಕಾಡಾದ ಮಾಜಿ ಅಧ್ಯಕ್ಷ ಶರಣಪ್ಪ ತಳವಾರ್, ಅಖಿಲ ಭಾರತ ಕೋಲಿ ಸಮಾಜ ಅಧ್ಯಕ್ಷ ಸುರೇಶ ಭಂಟ, ಕೋಲಿ ಕಬ್ಬಲಿಗ ಸಮಾಜ ಅಧ್ಯಕ್ಷ ಅನೀಲ್ ಜಮಾದಾರ ಅವರು ಅಂಬಿಗರ ಚೌಡಯ್ಯನವರ ಜೀವನ ಹಾಗೂ ಅವರ ವಚನಗಳ ಮಹತ್ವದ ಕುರಿತು ಮಾತನಾಡಿದರು. ಪುರಸಭೆ ಮುಖ್ಯಾಧಿಕಾರಿ ಕಾಶಿನಾಥ ಧನ್ನಿ, ಕೆ ಎಂ ಬಾರಿ, ಶ್ರೀಮಂತ ಕಟ್ಟಿಮನಿ, ಶರಣು ಪಾಟೀಲ್, ಖಲೀಲ ಪಟೇಲ್, ವಿವಿಧ ಇಲಾಖೆಯ ಅಧಿಕಾರಿಗಳು, ಸಮಾಜದ ಮುಖಂಡರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಮಲ್ಲಿಕಾರ್ಜುನ್ ಕಾರ್ಯಕ್ರಮವನ್ನು ನಿರೂಪಿಸಿ, ವಂದಿಸಿದರು

ವಾರ್ತಾ ಭಾರತಿ 21 Jan 2026 8:05 pm

ಹಿಂದೂ ಧ್ವಜ ಹಾರಿಸಿದ ಉಡುಪಿ ಜಿಲ್ಲಾಧಿಕಾರಿ ವಿರುದ್ಧ ಕ್ರಮ ಕೈಗೊಳ್ಳಿ; ಸಿಎಂ ಸಿದ್ದರಾಮಯ್ಯಗೆ ಪತ್ರ ಬರೆದ ಕಾಂಗ್ರೆಸ್‌

ಉಡುಪಿ ಪರ್ಯಾಯ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಸ್ವರೂಪ ಅವರು ಆರ್.ಎಸ್.ಎಸ್. ಧ್ವಜವನ್ನು ಸಾರ್ವಜನಿಕವಾಗಿ ಪ್ರದರ್ಶಿಸಿದ್ದಕ್ಕೆ ಕಾನೂನು ಕ್ರಮಕ್ಕೆ ಆಗ್ರಹಿಸಿ ಕಾಂಗ್ರೆಸ್ ಜಿಲ್ಲಾ ಘಟಕ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಪತ್ರ ಬರೆದಿದೆ. ಜಿಲ್ಲಾಧಿಕಾರಿಯವರ ಈ ನಡೆ ಸರ್ಕಾರಿ ಸೇವಾ ನಿಯಮಗಳು ಮತ್ತು ಸಂವಿಧಾನದ ಧರ್ಮ ನಿರಪೇಕ್ಷತೆಗೆ ವಿರುದ್ಧ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ವಿಜಯ ಕರ್ನಾಟಕ 21 Jan 2026 8:02 pm

Jammu & Kashmir ದಲ್ಲಿ ಮೌನ ರೋಧನ | ಕ್ಯಾನ್ಸರ್ ಪ್ರಕರಣಗಳಲ್ಲಿ ಕಳವಳಕಾರಿ ಪ್ರಮಾಣದ ಏರಿಕೆ

ಶ್ರೀನಗರ: ಇತ್ತೀಚಿನ ದಶಕಗಳಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಸಶಸ್ತ್ರ ಹಿಂಸಾಚಾರದ ಪ್ರಮಾಣ ಅತ್ಯಂತ ಕನಿಷ್ಠ ಮಟ್ಟಕ್ಕೆ ಇಳಿಕೆಯಾಗಿದ್ದರೂ, ಅದಕ್ಕಿಂತಲೂ ಭೀಕರ ಸಮಸ್ಯೆಯೊಂದು ಇದನ್ನು ಹಿಂದಿಕ್ಕಿದೆ. ಅದು ಕ್ಯಾನ್ಸರ್ ಎಂದು ಅಧಿಕೃತ ಆರೋಗ್ಯ ದತ್ತಾಂಶ ಹೇಳುತ್ತದೆ. ಇತ್ತೀಚಿನ ವರ್ಷಗಳಲ್ಲಿ ಉಭಯ ದೇಶಗಳ ನಡುವಿನ ಬಿಕ್ಕಟ್ಟು ಸಂಬಂಧಿತ ಹಿಂಸಾಚಾರಕ್ಕಿಂತ ಕ್ಯಾನ್ಸರ್ ಕಾರಣಕ್ಕೆ ಸಂಭವಿಸುತ್ತಿರುವ ಸಾವುಗಳ ಪ್ರಮಾಣ ಗಂಭೀರ ಸ್ವರೂಪದಲ್ಲಿ ಏರಿಕೆಯಾಗಿದ್ದು, ಈ ಪ್ರಾಂತ್ಯದ ಮರಣ ಸ್ವರೂಪದಲ್ಲಿ ನಿರ್ಣಾಯಕ ಪಲ್ಲಟವಾಗಿದೆ. ಈ ವಾರ ಈ ಸಮಸ್ಯೆಯ ಕುರಿತು ಗಮನ ಸೆಳೆದಿರುವ ಪಿಡಿಪಿ ಶಾಸಕ ವಹೀದ್ ಪರ್ರಾ, ದಶಕಗಳ ಹಿಂಸಾಚಾರದಲ್ಲಿ ಸಂಭವಿಸಿರುವ ಸಾವುಗಳು ಹಾಗೂ ಕ್ಯಾನ್ಸರ್‌ ನಿಂದ ಆಗುತ್ತಿರುವ ಸಾವುಗಳ ಪ್ರಮಾಣವನ್ನು ತೀಕ್ಷ್ಣವಾಗಿ ಹೋಲಿಕೆ ಮಾಡಿದ್ದಾರೆ. ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ವಹೀದ್ ಪರ್ರಾ, “ಕಳೆದ ಐದು ವರ್ಷಗಳಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ 67,000 ಮಂದಿ ಕ್ಯಾನ್ಸರ್‌ ನಿಂದ ಮೃತಪಟ್ಟಿದ್ದರೆ, ಕಳೆದ ಮೂರು ದಶಕಗಳ ಹಿಂಸಾಚಾರದಲ್ಲಿಯೂ ಅಷ್ಟೇ ಪ್ರಮಾಣದ ಜನರು ಸಾವನ್ನಪ್ಪಿದ್ದಾರೆ” ಎಂದು ಹೋಲಿಕೆ ಮಾಡಿದ್ದಾರೆ. “ದೊಡ್ಡ ಹೋರಾಟಗಳು ಪದೇಪದೇ ನಡೆಯುತ್ತಿವೆ; ಆದರೆ ಅದನ್ನು ನಾವು ಕಾಣುತ್ತಿಲ್ಲ. ಸ್ಥಳೀಯ ಆಸ್ಪತ್ರೆಗಳು ಅತಿಯಾದ ಹೊರೆ ಹಾಗೂ ಸೌಲಭ್ಯಗಳ ಕೊರತೆಯನ್ನು ಎದುರಿಸುತ್ತಿರುವುದರಿಂದ ಜನರು, ವಿಶೇಷವಾಗಿ ಬಡವರು, ಕಾಶ್ಮೀರದ ಹೊರಗೆ ಚಿಕಿತ್ಸೆ ಪಡೆಯಲು ತಮ್ಮ ಜಮೀನುಗಳನ್ನು ಮಾರಾಟ ಮಾಡುತ್ತಿದ್ದಾರೆ. ಇದು ಆರೋಗ್ಯ ಮತ್ತು ಆಡಳಿತದ ಸಮಸ್ಯೆಯಾಗಿದ್ದು, ಇದನ್ನು ಉಪೇಕ್ಷಿಸಬಾರದು. ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿಯವರು ಹಾಗೂ ಸರ್ಕಾರ ಈ ಸಮಸ್ಯೆಯತ್ತ ಗಮನ ಹರಿಸಬೇಕಾದ ಅಗತ್ಯವಿದೆ” ಎಂದೂ ಅವರು ಮನವಿ ಮಾಡಿದ್ದಾರೆ. ಅವರು ನೀಡಿರುವ ದತ್ತಾಂಶದಲ್ಲಿ 2024ರಲ್ಲಿ ಕ್ಯಾನ್ಸರ್‌ ನಿಂದ ತೀರಿಕೊಂಡ ತಮ್ಮ ತಂದೆಯ ನಿದರ್ಶನವೂ ಸೇರಿದೆ. ಅಧಿಕೃತ ಮರಣ ದತ್ತಾಂಶದ ಪ್ರಕಾರ, ಹಿಂಸಾಚಾರ ಪೀಡಿತ ಜಮ್ಮು ಮತ್ತು ಕಾಶ್ಮೀರದಲ್ಲಿ 1989ರಿಂದ ಇಲ್ಲಿಯವರೆಗೆ 47,000 ಮಂದಿ ಮೃತಪಟ್ಟಿದ್ದಾರೆ. ಈ ಅಂಕಿ-ಸಂಖ್ಯೆಗಳು ಸರ್ಕಾರಿ ಕಚೇರಿಗಳು ಉಲ್ಲೇಖಿಸಿರುವ ಅಧಿಕೃತ ದಾಖಲೆಗಳಲ್ಲಿ ಪ್ರತಿಬಿಂಬಗೊಂಡಿರುವ ಸಂಖ್ಯೆಗಳಾಗಿವೆ. ಇವು ಮೂರೂವರೆ ದಶಕಗಳ ಹಿಂಸಾಚಾರದಲ್ಲಿ ಮೃತಪಟ್ಟಿರುವ ನಾಗರಿಕರು, ಭದ್ರತಾ ಸಿಬ್ಬಂದಿಗಳು ಹಾಗೂ ಉಗ್ರಗಾಮಿಗಳನ್ನು ಒಳಗೊಂಡಿವೆ. ಆದರೆ ಪ್ರತ್ಯೇಕತಾವಾದಿಗಳ ಪರ ಸಹಾನುಭೂತಿ ಹೊಂದಿರುವವರು ಹಾಗೂ ಕೆಲವು ನಾಗರಿಕ ಸಂಘಟನೆಗಳು ಮಂಡಿಸುವ ಅನಧಿಕೃತ ಅಂದಾಜಿನ ಪ್ರಕಾರ, ಸುಮಾರು ಒಂದು ಲಕ್ಷ ಮಂದಿ ಮೃತಪಟ್ಟಿದ್ದಾರೆ. ಈ ಅಂಕಿ-ಸಂಖ್ಯೆಗಳು ಪ್ರಶ್ನಾರ್ಹವಾಗಿಯೇ ಉಳಿದಿದ್ದು, ಇವುಗಳಿಗೆ ಸಮಗ್ರ ಹಾಗೂ ಪರಿಶೀಲಿಸಬಹುದಾದ ಅಧಿಕೃತ ದತ್ತಾಂಶದ ಬೆಂಬಲವಿಲ್ಲ. ಆದರೆ ಪ್ರಶ್ನಾತೀತ ಸಂಗತಿಯೆಂದರೆ, ಕಳೆದ ವರ್ಷಗಳಲ್ಲಿ ಹಿಂಸಾಚಾರಕ್ಕೆ ಸಂಬಂಧಿಸಿದ ಮರಣ ಪ್ರಮಾಣ ತೀಕ್ಷ್ಣವಾಗಿ ಇಳಿಕೆಯಾಗಿರುವುದು. ವಾರ್ಷಿಕ ಮರಣ ಪ್ರಮಾಣ ಎರಡಂಕಿಗೆ ಇಳಿದಿದ್ದು, 1990ರ ದಶಕದಿಂದ 2000ರ ದಶಕದವರೆಗೆ ಉತ್ತುಂಗದಲ್ಲಿದ್ದ ಭಯೋತ್ಪಾದನಾ ಅವಧಿಯ ಮರಣ ಪ್ರಮಾಣಕ್ಕೆ ಹೋಲಿಸಿದರೆ ಇದು ಅಲ್ಪವಾಗಿದೆ. ಇದಕ್ಕೆ ವ್ಯತಿರಿಕ್ತವಾಗಿ, ಕ್ಯಾನ್ಸರ್‌ ನಿಂದ ಸಂಭವಿಸಿದ ಮರಣ ಪ್ರಮಾಣದಲ್ಲಿ ಏರಿಕೆಯಾಗಿದೆ. ಕೇಂದ್ರ ಆರೋಗ್ಯ ಸಚಿವಾಲಯ ಹಾಗೂ ಭಾರತೀಯ ವೈದ್ಯಕೀಯ ಸಂಶೋಧನಾ ಪರಿಷತ್ತಿನ ದತ್ತಾಂಶಗಳ ಪ್ರಕಾರ, ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರತಿ ವರ್ಷ 12,000ಕ್ಕೂ ಹೆಚ್ಚು ಕ್ಯಾನ್ಸರ್ ಪ್ರಕರಣಗಳು ವರದಿಯಾಗುತ್ತಿವೆ. 2018ರಿಂದ 2022ರ ನಡುವೆ 35,000 ಕ್ಯಾನ್ಸರ್ ಸಂಬಂಧಿತ ಸಾವುಗಳು ಅಧಿಕೃತವಾಗಿ ದಾಖಲಾಗಿವೆ. ಇದರ ಪ್ರಕಾರ, ಪ್ರತಿ ವರ್ಷ ಸರಿಸುಮಾರು 7,000 ಸಾವುಗಳು ಸಂಭವಿಸುತ್ತಿವೆ. ಈ ಅಂಕಿ-ಸಂಖ್ಯೆಗಳು ಇತ್ತೀಚಿನ ವರ್ಷಗಳಲ್ಲಿ ಹಿಂಸಾಚಾರದಿಂದ ಸಂಭವಿಸಿದ ಸಾವುಗಳಿಗೆ ಹೋಲಿಸಿದರೆ ಕ್ಯಾನ್ಸರ್ ಸಂಬಂಧಿತ ಸಾವುಗಳು ಅಧಿಕವಾಗಿವೆ ಎಂಬುದನ್ನು ತೋರಿಸುತ್ತವೆ. ಜಮ್ಮು ಮತ್ತು ಕಾಶ್ಮೀರವು ದೊಡ್ಡ ಪ್ರಮಾಣದ ಹಿಂಸಾಚಾರದಿಂದ ಮುಕ್ತವಾಗುವತ್ತ ಸಾಗುತ್ತಿದ್ದರೂ, ಕ್ಯಾನ್ಸರ್ ಆರೈಕೆಯನ್ನು ಆದ್ಯತೆಯನ್ನಾಗಿ ಪರಿಗಣಿಸದಿದ್ದರೆ, ಹಲವಾರು ದಶಕಗಳಿಂದ ನಡೆಯುತ್ತಿರುವ ಹಿಂಸಾಚಾರದಿಂದ ಸಾವನ್ನಪ್ಪಿರುವವರಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸಾವನ್ನಪ್ಪುವ ಸಾಧ್ಯತೆ ಇದೆ ಎಂದು ವೈದ್ಯರು ಹಾಗೂ ನೀತಿ ತಜ್ಞರು ಎಚ್ಚರಿಸುತ್ತಾರೆ. ಸೌಜನ್ಯ: deccanherald.com

ವಾರ್ತಾ ಭಾರತಿ 21 Jan 2026 8:01 pm

ಸಹಾಯಕ್ಕಾಗಿ ಅಂಗಲಾಚುತ್ತಿದ್ದಾಗ ಜನರು ವೀಡಿಯೋ ಮಾಡುತ್ತಿದ್ದರು, ಇದೆಂಥಾ ವ್ಯವಸ್ಥೆ?

ನೋಯ್ಡಾದಲ್ಲಿ ನೀರಿನ ಹೊಂಡಕ್ಕೆ ಬಿದ್ದು ಟೆಕ್ಕಿ ಮೃತ್ಯು ಪ್ರಕರಣ

ವಾರ್ತಾ ಭಾರತಿ 21 Jan 2026 7:58 pm

ಗೋವಾದಲ್ಲಿ ವರ್ಲ್ಡ್ ಲೆಜೆಂಡ್ಸ್ ಪ್ರೊ ಟಿ20 ಲೀಗ್; ಯಾವ ತಂಡದಲ್ಲಿ ಯಾರು? ಕನ್ನಡಿಗರು ಯಾರ್ಯಾರು? ಹೀಗಿದೆ ವೇಳಾಪಟ್ಟಿ

Legends Cricket Festival In Goa- ಹಿರಿಯರ ಕ್ರಿಕೆಟ್ ಹಬ್ಬಕ್ಕೆ ಇದೀಗ ಕಡಲ ಕಿನಾರೆಯ ಸ್ವರ್ಗ ಗೋವಾ ಸಿದ್ಧವಾಗಿದೆ. ಜನವರಿ 26ರಿಂದ ಫೆಬ್ರವರಿ 4ರವರೆಗೆ ಇಲ್ಲಿ ವಿಶ್ವ ಲೆಜೆಂಡ್ಸ್ ಪ್ರೊ ಟಿ20 ಲೀಗ್ 2026 ನಡೆಯಲಿದ್ದು ಆರು ತಂಡಗಳು ಆಡಲಿವೆ. ಇದರಲ್ಲಿ ವಿಶ್ವದ ವಿವಿಧ ಮೂಲೆಯಿಂದ 90ಕ್ಕೂ ಹೆಚ್ಚು ಕ್ರಿಕೆಟ್ ದಿಗ್ಗಜರು ಭಾಗವಹಿಸಲಿದ್ದಾರೆ. ಜನವರಿ 25ರಂದು ಉದ್ಘಾಟನಾ ಸಮಾರಂಭ ನಡೆಯಲಿದ್ದು, ಸುನಿಧಿ ಚೌಹಾನ್ ಸಂಗೀತ ಪ್ರದರ್ಶನ ನೀಡಲಿದ್ದಾರೆ. ಟಿಕೆಟ್‌ಗಳು BookMyShow ನಲ್ಲಿ ಲಭ್ಯವಿದೆ.

ವಿಜಯ ಕರ್ನಾಟಕ 21 Jan 2026 7:58 pm