ಕೊಪ್ಪಳ | ಕಿಮ್ಸ್ ಆಡಳಿತಾಧಿಕಾರಿ ಬಿ.ಕಲ್ಲೇಶ ಮನೆ- ಕಚೇರಿ, ಕುಟುಂಬದ ಒಡೆತನದ ಶಾಲೆಯ ಮೇಲೆ ಲೋಕಾಯುಕ್ತ ದಾಳಿ
ಕೊಪ್ಪಳ : ಕಿಮ್ಸ್ (ವೈದ್ಯಕೀಯ ವಿಜ್ಞಾನ ಸಂಸ್ಥೆ) ಆಡಳಿತಾಧಿಕಾರಿ ಬಿ.ಕಲ್ಲೇಶ ಅವರ ಮನೆ, ಕುಟುಂಬದ ಒಡೆತನದಲ್ಲಿರುವ ಶಾಲೆ–ಕಾಲೇಜು ಹಾಗೂ ಕಿಮ್ಸ್ನಲ್ಲಿನ ಅವರ ಕಚೇರಿಗಳ ಮೇಲೆ ಲೋಕಾಯುಕ್ತ ಪೊಲೀಸರು ಶುಕ್ರವಾರ ಬೆಳಿಗ್ಗೆ ದಾಳಿ ನಡೆಸಿದ್ದಾರೆ. ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಸಿದ್ದಾರೆಯೆಂಬ ದೂರಿನ ಹಿನ್ನೆಲೆಯಲ್ಲಿ ಈ ದಾಳಿ ನಡೆಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಲೋಕಾಯುಕ್ತ ಅಧಿಕಾರಿಗಳು ವಿವಿಧ ತಂಡಗಳಾಗಿ ತೆರಳಿ ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ. ಬಿ. ಕಲ್ಲೇಶ ಅವರ ಕುಟುಂಬಕ್ಕೆ ಸಂಬಂಧಿಸಿದ ಭಾಗ್ಯನಗರದ ಯತ್ನಟ್ಟಿ ರಸ್ತೆಯಲ್ಲಿರುವ ನವಚೇತನ ಶಾಲೆ ಮತ್ತು ಕಾಲೇಜು, ಹಾಗು ಕಿಮ್ಸ್ ಕಚೇರಿಯಲ್ಲಿ ಹಣಕಾಸು ಹಾಗೂ ಆಸ್ತಿ ಸಂಬಂಧಿತ ದಾಖಲೆಗಳನ್ನು ತಪಾಸಣೆ ಮಾಡಲಾಗುತ್ತಿದೆ ಎಂದು ತಿಳಿದು ಬಂದಿದೆ. ಈ ಹಿಂದೆ ವಾಲ್ಮೀಕಿ ನಿಗಮ ಹಗರಣದಲ್ಲಿ ಇವರ ಹೆಸರು ಕೇಳಿಬಂದಿದ್ದು, ಆ ಪ್ರಕರಣದ ಹಿನ್ನೆಲೆಯಲ್ಲಿ ಅಮಾನತ್ತು ಕೂಡ ಆಗಿದ್ದರು ಎಂದು ತಿಳಿದು ಬಂದಿದೆ.
ಚಾಮರಾಜನಗರ | ಹಸಮಣೆ ಏರಬೇಕಿದ್ದ ವರನ ಮೇಲೆ ಚಾಕು ಇರಿತ: ನಿಗದಿಯಾಗಿದ್ದ ಮದುವೆ ರದ್ದು
ಚಾಮರಾಜನಗರ : ಹಸಮಣೆ ಏರಬೇಕಿದ್ದ ವರನ ಮೇಲೆ ದುಷ್ಕರ್ಮಿಗಳು ಚಾಕು ಇರಿದು ಕೊಲೆ ಯತ್ನ ನಡೆಸಿದ ಪರಿಣಾಮ, ನಿಗದಿಯಾಗಿದ್ದ ಮದುವೆ ರದ್ದಾದ ಘಟನೆ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲದಲ್ಲಿ ನಡೆದಿದೆ. ಜಿಲ್ಲೆಯ ಕೊಳ್ಳೇಗಾಲ ಪಟ್ಟಣದ ಶ್ರೀ ವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ನಡೆಯಬೇಕಿದ್ದ ವಿವಾಹ, ಗುರುವಾರ ರಾತ್ರಿ ನಡೆದ ಹಲ್ಲೆಯ ಹಿನ್ನೆಲೆ ರದ್ದಾಗಿದೆ. ಕೊಳ್ಳೇಗಾಲ ತಾಲ್ಲೂಕಿನ ಕುಣಿಗಳ್ಳಿ ಗ್ರಾಮದ ರವೀಶ್ ಎಂಬವರು ಕಾರಿನಲ್ಲಿ ಕಲ್ಯಾಣ ಮಂಟಪದತ್ತ ಆಗಮಿಸುತ್ತಿದ್ದ ವೇಳೆ, ಎಂ.ಜಿಎಸ್.ವಿ ಕಾಲೇಜು ರಸ್ತೆಯಲ್ಲಿ 4–5 ಜನರಿದ್ದ ದುಷ್ಕರ್ಮಿಗಳ ಗುಂಪೊಂದು ಕಾರಿನಲ್ಲಿ ಬಂದು ದಾಳಿ ನಡೆಸಿದೆ. ಈ ವೇಳೆ ದುಷ್ಕರ್ಮಿಗಳು ವರ ರವೀಶ್ಗೆ ಚಾಕು ಇರಿದು ಹಲ್ಲೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ. ಹಲ್ಲೆಯ ಸಂದರ್ಭ ವರನ ಸಂಬಂಧಿಕರು ಕೂಗಿಕೊಂಡಾಗ ದುಷ್ಕರ್ಮಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ. ಗಾಯಗೊಂಡ ರವೀಶ್ ಅವರನ್ನು ತಕ್ಷಣವೇ ಕೊಳ್ಳೇಗಾಲ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ ಎಂದು ತಿಳಿದು ಬಂದಿದೆ. ಘಟನೆಯ ಕುರಿತು ಕೊಳ್ಳೇಗಾಲ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹಲ್ಲೆ ಘಟನೆಯ ಹಿನ್ನೆಲೆಯಲ್ಲಿ ಶುಕ್ರವಾರ ನಡೆಯಬೇಕಿದ್ದ ವಿವಾಹವನ್ನು ರದ್ದುಗೊಳಿಸಿದ ವರನ ಪೋಷಕರು ಮತ್ತು ಕುಟುಂಬಸ್ಥರು ಮದುವೆ ಮನೆಯಿಂದ ಹಿಂದಿರುಗಿದ್ದಾರೆ.
Gold Rate Jan 30: ಚಿನ್ನ ಪ್ರಿಯರಿಗೆ ಶುಕ್ರವಾರವು ಶುಭ ಶುಕ್ರವಾರವಾಗಿ ಬದಲಾಗಿದೆ. ನಿರಂತರವಾಗಿ ಏರಿಕೆ ಕಂಡಿದ್ದ ಹಾಗೂ ಗುರುವಾರ ಒಂದೇ ದಿನ 11,000 ಸಾವಿರ ರೂಪಾಯಿ ಹೆಚ್ಚಳವಾಗಿದ್ದ ಚಿನ್ನದ ಬೆಲೆಯು ಶುಕ್ರವಾರ / ಜನವರಿ 30ರಂದು ಭರ್ಜರಿ ಇಳಿಕೆ ಕಂಡಿದೆ. ಚಿನ್ನದ ಬೆಲೆಯು ಮಾರುಕಟ್ಟೆಯಲ್ಲಿ ಶುಕ್ರವಾರದಂದು ಬರೋಬ್ಬರಿ 8,230 ರೂಪಾಯಿ ಕಡಿಮೆಯಾಗಿದೆ. ಜನವರಿ 30ರ ಚಿನ್ನ
ಕೇಂದ್ರ-ರಾಜ್ಯ ಸಂಬಂಧ ಮರು ಚಿಂತನೆ ಅಗತ್ಯ
ರಾಜ್ಯಪಾಲರ ಹುದ್ದೆ ಹಾಗೂ ಅಧಿಕಾರ ಕುರಿತು ಸಂವಿಧಾನ ರಚನಾ ಸಮಿತಿ ಸಭೆಯಲ್ಲೇ ಸಾಕಷ್ಟು ಚರ್ಚೆ ಆಗಿತ್ತು. ರಾಜ್ಯಪಾಲರಿಗೆ ವಿವೇಚನಾಧಿಕಾರ ಕೊಡುವುದರ ಬಗ್ಗೆಯೂ ಆತಂಕ ವ್ಯಕ್ತವಾಗಿತ್ತು. ಈ ಅಧಿಕಾರ ದುರುಪಯೋಗವಾಗುವ ಸಾಧ್ಯತೆ ಇದೆ ಎಂದು ಕೆಲವು ಸದಸ್ಯರು ವಾದಿಸಿದ್ದರು. ‘ರಾಜ್ಯಪಾಲರ ಹುದ್ದೆ ಆಲಂಕಾರಿಕ. ಸಚಿವ ಸಂಪುಟದ ಸಲಹೆಯ ಮೇಲೆ ಅವರು ಕರ್ತವ್ಯ ನಿರ್ವಹಿಸುತ್ತಾರೆ. ಅವರ ವಿವೇಚನಾಧಿಕಾರ ಸೀಮಿತವಾಗಿರುತ್ತದೆ’ ಎಂದು ಸಂವಿಧಾನ ಕರಡು ಸಮಿತಿ ಅಧ್ಯಕ್ಷರಾಗಿದ್ದ ಡಾ. ಬಿ.ಆರ್. ಅಂಬೇಡ್ಕರ್ ಮನವರಿಕೆ ಮಾಡಿದ್ದರು. ಆ ಸಮಯದಲ್ಲೇ ಸಮಸ್ಯೆಗೆ ಪರಿಹಾರ ಕಂಡುಕೊಂಡಿದ್ದರೆ ಈಗ ಇಷ್ಟೊಂದು ಕಷ್ಟಪಡುವ ಅಗತ್ಯವಿರಲಿಲ್ಲ. ರಾಜ್ಯ ಸರಕಾರ- ರಾಜ್ಯಪಾಲರ ನಡುವಣ ಸಂಘರ್ಷ ಅತಿರೇಕಕ್ಕೆ ತಲುಪಿದೆ. ಸಂವಿಧಾನದ 356ನೇ ಕಲಂ ದುರ್ಬಳಕೆ ಮಾಡಿಕೊಂಡು ರಾಜ್ಯ ಸರಕಾರಗಳನ್ನು ವಜಾ ಮಾಡುತ್ತಿದ್ದ ಕೇಂದ್ರದ ಪ್ರವೃತ್ತಿಗೆ ಸುಪ್ರೀಂ ಕೋರ್ಟ್ ಬ್ರೇಕ್ ಹಾಕಿದ ಬಳಿಕ ರಾಜ್ಯಗಳ ಮೇಲೆ ಸವಾರಿ ಮಾಡಲು ಹೊಸ ಮಾರ್ಗ ಹಿಡಿಯಲಾಗಿದೆ. ಇತ್ತೀಚೆಗೆ ಕರ್ನಾಟಕ, ಕೇರಳ, ತಮಿಳುನಾಡು ಶಾಸನ ಸಭೆಗಳಲ್ಲಿ ನಡೆದ ರಾಜ್ಯಪಾಲರ ‘ಹೈ ಡ್ರಾಮಾ’ ಇದಕ್ಕೊಂದು ಉದಾಹರಣೆ. ‘ರಾಜಭವನ ರಾಜಕೀಯ ಪುನರ್ವಸತಿ ಕೇಂದ್ರ’ ಸಾಮಾನ್ಯವಾಗಿ ಪ್ರಮುಖ ರಾಜಕೀಯ ಹುದ್ದೆಗಳು ಕೈತಪ್ಪುವ ಪಕ್ಷದ ನಾಯಕರಿಗೆ ರಾಜ್ಯಪಾಲರ ಹುದ್ದೆಗೆ ನೇಮಿಸ ಲಾಗುತ್ತದೆ. ಇದೊಂದು ಆಲಂಕಾರಿಕ ಹುದ್ದೆಯಾದರೂ, ರಾಜಕೀಯ ನೇಮಕವಾಗಿರುವುದರಿಂದ ‘ರಾಜಕೀಯ ಚದುರಂಗದಾಟ’ಕ್ಕೆ ಬಳಸಿಕೊಳ್ಳಲಾಗುತ್ತಿದೆ. ಕೇಂದ್ರ ರಾಜ್ಯಪಾಲರಿಗೆ ಬಗ್ಗಲು ಹೇಳಿದರೆ, ತೆವಳುತ್ತಾರೆ. ಕರ್ನಾಟಕ, ಕೇರಳ, ತಮಿಳುನಾಡು ರಾಜ್ಯಪಾಲರೂ ಮಾಡಿದ್ದು ಇದನ್ನೇ. ಮಹಾತ್ಮಾಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ (ಮನರೇಗಾ) ಬದಲು ಎನ್ಡಿಎ ಸರಕಾರ ಜಾರಿಗೊಳಿಸಿರುವ ‘ವಿಬಿ- ಜಿ ರಾಮ್ ಜಿ’ಯನ್ನು ವಿರೋಧಿಸುತ್ತಿರುವ ರಾಜ್ಯ ಸರಕಾರಗಳಿಗೆ ಬೆಂಬಲವಾಗಿ ನಿಲ್ಲದೆ ಪಲಾಯನ ಮಾಡಿದ್ದಾರೆ. ಕೇಂದ್ರ ಸರಕಾರವನ್ನು ಓಲೈಸಲು ಮೂವರು ರಾಜ್ಯಪಾಲರು ಮೂರು ದಾರಿ ಹಿಡಿದರು. ರಾಜ್ಯಗಳಿಗೆ ಸೆಡ್ಡು ಹೊಡೆದು, ಸಂವಿಧಾನಕ್ಕೆ ಅಪಚಾರ ಎಸಗಿದರು. ಕರ್ನಾಟಕದ ಕಾಂಗ್ರೆಸ್ ಸರಕಾರ ಸಿದ್ಧಪಡಿಸಿದ್ದ ಭಾಷಣದ ಒಂದೆರಡು ವಾಕ್ಯವನ್ನು ರಾಜ್ಯಪಾಲ ಥಾವರ್ಚಂದ್ ಗೆಹ್ಲೋಟ್ ಓದಿದರು. ಕೇರಳ ರಾಜ್ಯಪಾಲ ರಾಜೇಂದ್ರ ವಿಶ್ವನಾಥ ಆರ್ಲೇಕರ್ ಕೆಲ ಆಯ್ದ ಭಾಗಗಳನ್ನು ಓದಿದರು. ತಮಿಳುನಾಡು ರಾಜ್ಯಪಾಲ ಆರ್.ಎನ್. ರವಿ ಭಾಷಣ ಓದದೆ ಹಿಂದಿರುಗಿದರು. ಹೊಸ ಶಿಕ್ಷಣ ನೀತಿ ಭಾಗವಾಗಿರುವ ‘ಪಿಎಂಶ್ರೀ’ ಯೋಜನೆಯನ್ನು ಕೇರಳ ಜಾರಿಗೊಳಿಸಿಲ್ಲ. ಈ ಕಾರಣಕ್ಕೆ ಕೇಂದ್ರ ಸರಕಾರ ವಿವಿಧ ಶೈಕ್ಷಣಿಕ ಯೋಜನೆಯಡಿ ಸುಮಾರು ಎರಡು ಸಾವಿರ ಕೋಟಿ ರೂ. ಅನುದಾನ ತಡೆಹಿಡಿದಿರುವುದನ್ನು ಎಲ್ಡಿಎಫ್ ಸರಕಾರ ಖಂಡಿಸಿದೆ. ಮನರೇಗಾ ಹೆಸರು ಮತ್ತು ಸ್ವರೂಪ ಬದಲಾಯಿಸಿ, ‘ವಿಬಿ- ಜಿ ರಾಮ್ ಜಿ’ ಜಾರಿಗೊಳಿಸಿದ್ದನ್ನು ಸಿದ್ದರಾಮಯ್ಯ ಸರಕಾರ ವಿರೋಧಿಸಿದೆ. ತಮಿಳುನಾಡು ಸರಕಾರ ಮತ್ತು ರಾಜ್ಯಪಾಲರ ನಡುವಿನ ತಿಕ್ಕಾಟಕ್ಕೆ ಕೊನೆ ಇಲ್ಲವಾಗಿದೆ. ರಾಜ್ಯಪಾಲರು ಶಾಸನ ಸಭೆಯಲ್ಲಿ ಭಾಷಣ ಮಾಡದಿರುವುದು ಮೂರನೇ ಸಲ. ಡಿಎಂಕೆ ಸರಕಾರಕ್ಕೆ ಕಾಟ ಕೊಡುವುದಕ್ಕಾಗಿಯೇ ರವಿ ಅವರನ್ನು ತಮಿಳುನಾಡಿಗೆ ಕಳಿಸಿದಂತಿದೆ ಈ ಮೊದಲು ಶಾಸನಸಭೆ ಅಂಗೀಕರಿಸಿದ್ದ 10 ಮಸೂದೆಗಳಿಗೆ ರವಿ ಅಂಕಿತ ಹಾಕದೆ ತಡೆ ಹಿಡಿದಿದ್ದನ್ನು ಸುಪ್ರೀಂ ಕೋರ್ಟ್ನಲ್ಲಿ ಪ್ರಶ್ನಿಸಿತ್ತು. ಸುಪ್ರೀಂ ಕೋರ್ಟ್, ಮಸೂದೆ ತಡೆಹಿಡಿದ ರಾಜ್ಯಪಾಲರ ಕ್ರಮವನ್ನು ಆಕ್ಷೇಪಿಸಿತು. ‘ಇದು ಕಾನೂನುಬಾಹಿರ, ದೋಷ ಪೂರಿತ’. ನಿರ್ದಿಷ್ಟ ಅವಧಿಯೊಳಗೆ ರಾಜ್ಯಪಾಲರು ಕ್ರಮ ಕೈಗೊಳ್ಳದಿದ್ದರೆ, ‘ಪರಿಭಾವಿತ ಸಮ್ಮತಿ ದೊರೆತಿದೆ’ ಎಂದು ಪರಿಗಣಿಸಬಹುದು ಎಂಬ ತೀರ್ಪು ನೀಡಿತು. ಅಲ್ಲದೆ, ರಾಜ್ಯಪಾಲರ ಕ್ರಮಕ್ಕೆ ಕಾಲಮಿತಿ ನಿಗದಿಪಡಿಸಿತು. ಈ ತೀರ್ಪನ್ನು ಕೋರ್ಟ್ ಬಳಿಕ ಪರಾಮರ್ಶೆಗೆ ಒಳಪಡಿಸಿತ್ತು. ಇನ್ನು ರಾಜ್ಯಪಾಲರ ಭಾಷಣದ ವಿಷಯಕ್ಕೆ ಮರಳಿದರೆ, ಸಂವಿಧಾನದ 163ನೇ ಕಲಂ ಅನ್ವಯ, ರಾಜ್ಯ ಸರಕಾರದ (ಸಚಿವ ಸಂಪುಟ) ಸಲಹೆ ಅಂತಿಮ. ರಾಜ್ಯಪಾಲರ ಒಲವು- ನಿಲುವುಗಳಿಗೆ ಅವಕಾಶವಿಲ್ಲ. 176ನೇ ಕಲಂನಲ್ಲಿ ಹೇಳಿರುವಂತೆ, ವರ್ಷದ ಮೊದಲ ಅಧಿವೇಶನದಲ್ಲಿ ರಾಜ್ಯ ಸರಕಾರ ಅನುಮೋದಿಸಿದ ಭಾಷಣವನ್ನೇ ರಾಜ್ಯಪಾಲರು ಓದಬೇಕು. ಭಾಷಣದಲ್ಲಿರುವ ಎಲ್ಲ ಅಂಶಗಳನ್ನು ಪ್ರಸ್ತಾಪಿಸಬೇಕು. ಸಣ್ಣಪುಟ್ಟ ಬದಲಾವಣೆಗೂ ರಾಜ್ಯಪಾಲರಿಗೆ ಅಧಿಕಾರವಿಲ್ಲ. ಕರ್ನಾಟಕ, ಕೇರಳ ಹಾಗೂ ತಮಿಳುನಾಡು ರಾಜ್ಯಪಾಲರು ಶಾಸನಸಭೆಯಲ್ಲಿ ನಡೆದುಕೊಂಡ ರೀತಿ ವಿಭಿನ್ನವಾದರೂ ಉದ್ದೇಶ ಮಾತ್ರ ಒಂದೇ. ಬಿಜೆಪಿಯೇತರ ಸರಕಾರಗಳನ್ನು ಇಕ್ಕಟ್ಟಿಗೆ ಸಿಲುಕಿಸುವುದು. ಈ ಹಿನ್ನೆಲೆಯಲ್ಲಿ ರಾಜ್ಯಪಾಲರ ನಡೆ ವಿಮರ್ಶಾರ್ಹ. ದಕ್ಷಿಣ ರಾಜ್ಯಗಳ ಮುಖ್ಯಮಂತ್ರಿಗಳು ಸಭೆ ಸೇರಿ ಮುಂದಿನ ಕ್ರಮ ಕುರಿತು ಚರ್ಚಿಸಬೇಕು. ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್, ರಾಜ್ಯಪಾಲರ ನಡೆಯನ್ನು ಕೋರ್ಟ್ನಲ್ಲಿ ಪ್ರಶ್ನಿಸುವುದಾಗಿ ಹೇಳಿದ್ದಾರೆ. ಅಲ್ಲದೆ, ರಾಜ್ಯಪಾಲರ ಭಾಷಣ ರದ್ದುಪಡಿಸಲು ಸಂವಿಧಾನ ತಿದ್ದುಪಡಿ ತರುವಂತೆ ಆಗ್ರಹಿಸಿದ್ದಾರೆ. ಬೆಂಗಳೂರಲ್ಲಿ ನಡೆದ ಸಮಾಜವಾದಿಗಳ ಸಮಾವೇಶದಲ್ಲಿ, ಕೇಂದ್ರದ ಅನುದಾನ ಹಂಚಿಕೆ ಬಗ್ಗೆ ಚರ್ಚಿಸಲು ದಕ್ಷಿಣ ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ಕರೆಯುವುದಾಗಿ ಸಿದ್ದರಾಮಯ್ಯ ತಿಳಿಸಿದ್ದಾರೆ. ಬಿಜೆಪಿಯೇತರ ರಾಜ್ಯಗಳು ಒಟ್ಟಾಗಿ ಕಾನೂನು- ರಾಜಕೀಯ ಹೋರಾಟ ನಡೆಸಿದರೆ ಬೇಡಿಕೆಗೂ ಬಲ ಬರಲಿದೆ. ‘ರಾಜ್ಯಪಾಲರ ಜತೆ ರಾಜ್ಯ ಸರಕಾರ ಸಂಘರ್ಷಕ್ಕೆ ಇಳಿಯುವ ಅಗತ್ಯವಿತ್ತೇ?’ ಎಂಬ ಪ್ರಶ್ನೆ ಎದ್ದಿದೆ. ‘ಸರಕಾರದ ಜತೆ ಗೆಹ್ಲೋಟ್ ಹೊಂದಾಣಿಕೆಯಿಂದ ನಡೆಯುತ್ತಿದ್ದಾರೆ. ಸಣ್ಣಪುಟ್ಟ ಭಿನ್ನಾಭಿಪ್ರಾಯ ಹೊರತುಪಡಿಸಿದರೆ, ಈವರೆಗೆ ಗಂಭೀರ ಸಮಸ್ಯೆಯೇನೂ ಇರಲಿಲ್ಲ. ಈಗ ವಿಬಿ-ಜಿ ರಾಮ್ ಜಿ ವಿಷಯದಲ್ಲಿ ಸಂಘರ್ಷ ನಡೆದಿದೆ. ರಾಜ್ಯ ಸರಕಾರ ಕೇಂದ್ರದ ಯೋಜನೆಯನ್ನು ಸೂಕ್ಷ್ಮವಾಗಿ ಟೀಕಿಸಬಹುದಿತ್ತು. ವಿವರವಾಗಿ ಪ್ರಸ್ತಾಪಿಸುವ ಅಗತ್ಯವಿರಲಿಲ್ಲ’ ಎಂಬ ವಾದವೂ ಇದೆ. ಕಾಂಗ್ರೆಸ್ ಸರಕಾರಕ್ಕೆ ರಾಜ್ಯಪಾಲರ ಜತೆಗಿರುವುದು ವೈಯಕ್ತಿಕ ಜಗಳವಲ್ಲ. ತಾತ್ವಿಕ ಸಂಘರ್ಷ. ಮುಖ್ಯಮಂತ್ರಿ ಮತ್ತು ರಾಜ್ಯಪಾಲರ ನಡುವೆ ವೈಯಕ್ತಿಕ ಜಗಳವಿದ್ದರೆ ಲಘುವಾಗಿ ನೋಡಬಹುದಿತ್ತು. ವಿಬಿ-ಜಿ ರಾಮ್ ಜಿ ವಿರುದ್ಧದ ಹೋರಾಟದಲ್ಲಿ ಕಾಂಗ್ರೆಸ್ ಮುಂಚೂಣಿಯಲ್ಲಿರುವುದರಿಂದ ರಾಜ್ಯ ಸರಕಾರ ಉಳಿದ ಬಿಜೆಪಿಯೇತರ ರಾಜ್ಯಗಳಿಗಿಂತ ಕಠಿಣ ನಿಲುವು ತಳೆಯಬೇಕು. ವಿಧಾನಮಂಡಲದಲ್ಲಿ ಕೇಂದ್ರದ ಯೋಜನೆ ವಿರೋಧಿಸುವ ನಿರ್ಣಯ ಕೈಗೊಳ್ಳಬಹುದು. ಮನರೇಗಾ ಮರು ಜಾರಿಗೆ ಒತ್ತಾಯಿಸಬಹುದು. ಆದರೆ, ರಾಜ್ಯಪಾಲರನ್ನು ವಾಪಸ್ ಕರೆಸುವಂತೆ ಕೇಂದ್ರ ಸರಕಾರದ ಮೇಲೆ ಒತ್ತಡ ಹೇರುವ ನಿರ್ಣಯವನ್ನು ಕೈಗೊಳ್ಳುವುದೇ? ರಾಜ್ಯಪಾಲರ ಹುದ್ದೆಯನ್ನೇ ತೆಗೆಯಬೇಕೆಂದು ಸಿಪಿಐ, ಸಿಪಿಎಂ ಮತ್ತಿತರ ಎಡ ಪಕ್ಷಗಳು ಒತ್ತಾಯಿಸುತ್ತಿವೆ. ಈ ಕೂಗಿಗೆ ಕಾಂಗ್ರೆಸ್ ದನಿಗೂಡಿಸುವುದೇ? ಸಂವಿಧಾನದ 356ನೇ ಕಲಂ ದುರ್ಬಳಕೆ ಮಾಡಿ, ಅತೀ ಹೆಚ್ಚು ರಾಜ್ಯ ಸರಕಾರಗಳನ್ನು ವಜಾ ಮಾಡಿದ ದಾಖಲೆ ಕಾಂಗ್ರೆಸ್ ಹೆಸರಲ್ಲಿದೆ. ಕೇರಳದ ಇಎಂಎಸ್ ನಂಬೂದರಿಪಾಡ್ ನೇತೃತ್ವದ ಎಡರಂಗದ ಸರಕಾರ 1959ರಲ್ಲಿ ವಜಾ ಆಯಿತು. ಆಗ ಜವಾಹರಲಾಲ್ ನೆಹರೂ ಪ್ರಧಾನಿ. ದೇಶದಲ್ಲಿ ಮೊದಲ ಸಾರ್ವತ್ರಿಕ ಚುನಾವಣೆ ನಡೆದಿದ್ದು 1952ರಲ್ಲಿ. 1957ರಲ್ಲಿ ಎರಡನೇ ಚುನಾವಣೆ. ಮೊತ್ತಮೊದಲ ಚುನಾಯಿತ ಸರಕಾರ ವಜಾಗೊಂಡಾಗ ಪ್ರಜಾಸತ್ತಾತ್ಮಕ ಸಂಸದೀಯ ವ್ಯವಸ್ಥೆ ಬೆಳವಣಿಗೆ ಆಗುತ್ತಿತ್ತು. ಆಗಲೇ ಎಲ್ಡಿಎಫ್ ಸರಕಾರ ಅಧಿಕಾರ ಕಳೆದುಕೊಂಡಿದ್ದು. ನೆಹರೂ ಅವರೇ ಸಂವಿಧಾನದ 356ನೇ ಕಲಂ ದುರ್ಬಳಕೆ ಮಾಡಿದ್ದರೆಂದರೆ, ಬೇರೆಯವರು ಇನ್ನೆಷ್ಟು ದುರ್ಬಳಕೆ ಮಾಡಿರಬಹುದು? ಇಂದಿರಾಗಾಂಧಿ ರಾಜ್ಯ ಸರಕಾರಗಳನ್ನು ಯದ್ವಾತದ್ವಾ ವಜಾ ಮಾಡಿದ್ದರು. 1994ರಲ್ಲಿ ಎಸ್.ಆರ್. ಬೊಮ್ಮಾಯಿ ವರ್ಸಸ್ ಕೇಂದ್ರ ಸರಕಾರದ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿತು. ರಾಜ್ಯ ಸರಕಾರಗಳನ್ನು ವಜಾ ಮಾಡಿ ರಾಷ್ಟ್ರಪತಿ ಆಳ್ವಿಕೆ ಹೇರುವ ಸಂವಿಧಾನದ 356ನೇ ಕಲಮಿನ ಪ್ರಾಮುಖ್ಯತೆ, ಇತಿಮಿತಿಗಳನ್ನು ಕುರಿತು ವ್ಯಾಖ್ಯಾನಿಸಿತು. ರಾಜ್ಯ ಸರಕಾರಗಳನ್ನು ವಜಾ ಮಾಡುವುದು ರಾಷ್ಟ್ರಪತಿಗಳ (ಕೇಂದ್ರ ಸರಕಾರ) ಪರಮಾಧಿಕಾರ ಅಲ್ಲ. ವಿರಳಾತಿವಿರಳವಾಗಿ ಕಲಂ 356 ಬಳಸಬೇಕು ಎಂದು ಹೇಳಿತು. 356ನೇ ಕಲಮಿನ ಅನ್ವಯಕ್ಕೆ ಮಾರ್ಗಸೂಚಿ ನೀಡಿತು. 2014ರಲ್ಲಿ ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಐದು ಸಲ ಈ ಅಧಿಕಾರ ಬಳಸಲಾಗಿದೆ. ಈಗ ಬಿಜೆಪಿಯೇತರ ಸರಕಾರಗಳಿಗೆ ಕಿರುಕುಳ ಕೊಡಲು ಬೇರೆ ದಾರಿಗಳನ್ನು ಕಂಡುಕೊಳ್ಳಲಾಗುತ್ತಿದೆ. ಶಾಸನಸಭೆಯಲ್ಲಿ ರಾಜ್ಯಪಾಲರ ಭಾಷಣ ಇದರಲ್ಲಿ ಒಂದು. ಅನುದಾನ ಹಂಚಿಕೆ ಇನ್ನೊಂದು ಎಂದು ರಾಜಕೀಯ ಪಂಡಿತರು ವಿಶ್ಲೇಷಿಸುತ್ತಿದ್ದಾರೆ. ರಾಜ್ಯಪಾಲರ ಹುದ್ದೆ ಹಾಗೂ ಅಧಿಕಾರ ಕುರಿತು ಸಂವಿಧಾನ ರಚನಾ ಸಮಿತಿ ಸಭೆಯಲ್ಲೇ ಸಾಕಷ್ಟು ಚರ್ಚೆ ಆಗಿತ್ತು. ರಾಜ್ಯಪಾಲರಿಗೆ ವಿವೇಚನಾಧಿಕಾರ ಕೊಡುವುದರ ಬಗ್ಗೆಯೂ ಆತಂಕ ವ್ಯಕ್ತವಾಗಿತ್ತು. ಈ ಅಧಿಕಾರ ದುರುಪಯೋಗವಾಗುವ ಸಾಧ್ಯತೆ ಇದೆ ಎಂದು ಕೆಲವು ಸದಸ್ಯರು ವಾದಿಸಿದ್ದರು. ‘ರಾಜ್ಯಪಾಲರ ಹುದ್ದೆ ಆಲಂಕಾರಿಕ. ಸಚಿವ ಸಂಪುಟದ ಸಲಹೆಯ ಮೇಲೆ ಅವರು ಕರ್ತವ್ಯ ನಿರ್ವಹಿಸುತ್ತಾರೆ. ಅವರ ವಿವೇಚನಾಧಿಕಾರ ಸೀಮಿತವಾಗಿರುತ್ತದೆ’ ಎಂದು ಸಂವಿಧಾನ ಕರಡು ಸಮಿತಿ ಅಧ್ಯಕ್ಷರಾಗಿದ್ದ ಡಾ. ಬಿ.ಆರ್. ಅಂಬೇಡ್ಕರ್ ಮನವರಿಕೆ ಮಾಡಿದ್ದರು. ಆ ಸಮಯದಲ್ಲೇ ಸಮಸ್ಯೆಗೆ ಪರಿಹಾರ ಕಂಡುಕೊಂಡಿದ್ದರೆ ಈಗ ಇಷ್ಟೊಂದು ಕಷ್ಟಪಡುವ ಅಗತ್ಯವಿರಲಿಲ್ಲ. ಕೇಂದ್ರ-ರಾಜ್ಯ ಸಂಬಂಧ ಕುರಿತು ಅಧ್ಯಯನ ನಡೆಸಿದ ನ್ಯಾ. ಸರ್ಕಾರಿಯಾ ಆಯೋಗ ಹಲವು ಶಿಫಾರಸುಗಳನ್ನು ಒಳಗೊಂಡ ವರದಿಯನ್ನು ಕೇಂದ್ರ ಸರಕಾರಕ್ಕೆ ಕೊಟ್ಟಿದೆ. ಮುಖ್ಯಮಂತ್ರಿ ಜತೆ ಸಮಾಲೋಚಿಸಿ ರಾಜ್ಯಪಾಲರನ್ನು ನೇಮಿಸಬೇಕು. ಅತ್ಯಂತ ವಿಷಮ ಪರಿಸ್ಥಿತಿಯಲ್ಲಿ ಅಂದರೆ, ಸರಕಾರ ಬಹುಮತ ಕಳೆದುಕೊಂಡಾಗ ಸಂವಿಧಾನದ 356ನೇ ವಿಧಿ ಪ್ರಯೋಗ ಮಾಡಬೇಕು. ರಾಜ್ಯಪಾಲರಿಗೆ ಐದು ವರ್ಷದ ಅವಧಿ ನಿಗದಿಪಡಿಸಬೇಕು. ದುರ್ನಡತೆ ಕಂಡುಬಂದಾಗ ಮಾತ್ರ ರಾಜ್ಯಪಾಲರನ್ನು ವಜಾ ಮಾಡಬೇಕು. ಸುಸ್ಥಿರ ಅಭಿವೃದ್ಧಿಗಾಗಿ ರಾಜ್ಯಗಳಿಗೆ ಆರ್ಥಿಕ ಸ್ವಾಯತ್ತತೆ ಕೊಡಬೇಕು ಎಂದು ಶಿಫಾರಸು ಮಾಡಿದೆ. ಬಹುಶಃ ವರದಿ ಗೆದ್ದಲಿಗೆ ಆಹಾರವಾಗಿರಬಹುದು. ಕೇಂದ್ರದ ಎನ್ಡಿಎ ಸರಕಾರ ರಾಜ್ಯಗಳ ಅಧಿಕಾರದಲ್ಲಿ ಹಸ್ತಕ್ಷೇಪ ಮಾಡುತ್ತಿದೆ. ಇದು ಕೇಂದ್ರ-ರಾಜ್ಯ ಸಂಬಂಧವನ್ನು ಹಾಳು ಮಾಡುತ್ತದೆ. ಒಕ್ಕೂಟ ವ್ಯವಸ್ಥೆಗೂ ಅಪಾಯ ತಂದೊಡ್ಡಲಿದೆ. ಈ ಹಿನ್ನೆಲೆಯಲ್ಲಿ ರಾಷ್ಟ್ರವ್ಯಾಪಿ ಚರ್ಚೆ ಆಗಬೇಕಿದೆ. ಬಿಜೆಪಿಯೇತರ ಸರಕಾರಗಳು ಈ ನಿಟ್ಟಿನಲ್ಲಿ ಕಾರ್ಯೋನ್ಮುಖ ಆಗಬೇಕಿದೆ. ಎನ್ಡಿಎ ಭಾಗವಾಗಿರುವ ಜೆಡಿಯು, ಟಿಡಿಪಿಗಳನ್ನು ಈ ಪ್ರಕ್ರಿಯೆಯಲ್ಲಿ ಒಳಗೊಳ್ಳಬೇಕಿದೆ.
ನೇಪಥ್ಯಕ್ಕೆ ಸರಿದ ದಂತಕಥೆ ಮಾರ್ಕ್ ಟುಲ್ಲಿ
ಹಸನ್ಮುಖ, ನಿರರ್ಗಳ ಹಿಂದಿ ಮತ್ತು ಸುಸಂಸ್ಕೃತ ಇಂಗ್ಲಿಷ್ನಿಂದ ಜನರನ್ನು ಸೆಳೆಯುತ್ತಿದ್ದ ಅವರು ದಯೆ, ಕಾಳಜಿ ಹೊಂದಿದ್ದ ಧಾರ್ಮಿಕ ವ್ಯಕ್ತಿ. ಅವರ ರೇಡಿಯೊ ವರದಿಗಳು ವೃತ್ತಪತ್ರಿಕೆಗಳ ವರದಿಗಳಿಗಿಂತ ತಕ್ಷಣ ಮತ್ತು ಹೆಚ್ಚು ಪರಿಣಾಮ ಬೀರಿದವು. ಅವರಿಗೆ ಪತ್ರಿಕೋದ್ಯಮಕ್ಕಿಂತ ಭಾರತದ ಮೇಲೆ ಹೆಚ್ಚು ಪ್ರೀತಿಯಿತ್ತು. ದೇಶ ಸುತ್ತುತ್ತ ಜನರೊಂದಿಗೆ ಬೆರೆತು, ರೇಡಿಯೊದಲ್ಲಿ ವರದಿ-ವ್ಯಾಖ್ಯಾನ ಮಾಡುತ್ತ ನಡೆದರು. ಬಿಬಿಸಿ ಜೊತೆಗೆ ಟುಲ್ಲಿ ಅವರ ಹೆಸರು ಚಿರಸ್ಥಾಯಿಯಾಗಿ ಇರುತ್ತದೆ. ಆದರೆ, ನಿಝಾಮುದ್ದೀನ್ ಪೂರ್ವದ 1ನೇ ಸಂಖ್ಯೆಯ ಮನೆಯಲ್ಲಿ ‘ಇಂಡಿಯನ್ ಎಕ್ಸ್ಪ್ರೆಸ್’ ಮತ್ತು ‘ದೈನಿಕ್ ಭಾಸ್ಕರ್’ ಓದುತ್ತ ಕುಳಿತಿರುವ ಟುಲ್ಲಿ ಮಾತ್ರ ಇನ್ನುಮುಂದೆ ಕಾಣಸಿಗುವುದಿಲ್ಲ. ಪತ್ರಕರ್ತ ವಿಲಿಯಂ ಮಾರ್ಕ್ ಟುಲ್ಲಿ ತಮ್ಮ 90ನೇ ವಯಸ್ಸಿನಲ್ಲಿ ಮೃತಪಟ್ಟಿದ್ದು (ಅಕ್ಟೋಬರ್ 24,1935-ಜನವರಿ 25, 2026), ದಂತಕತೆಯೊಂದು ಕಣ್ಮರೆಯಾಗಿದೆ. ಆದರೆ, ಟುಲ್ಲಿ ಅವರ ಬೆಚ್ಚಗಿನ, ನಿರ್ಭೀತ ಮತ್ತು ನಿಷ್ಪಕ್ಷಪಾತ ಧ್ವನಿಯು ದಕ್ಷಿಣ ಏಶ್ಯ ಮತ್ತು ಪ್ರಪಂಚದಾದ್ಯಂತದ ಶ್ರೋತೃಗಳ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿದುಕೊಳ್ಳಲಿದೆ. ಕಲ್ಕತ್ತಾದಲ್ಲಿ ಜನನ; ತಂದೆ ವಿಲಿಯಂ ಸ್ಕಾರ್ಥ್ ಕಾರ್ಲೈಸ್ಲ್ ಟುಲ್ಲಿ ಬ್ರಿಟಿಷ್ ಮ್ಯಾನೇಜಿಂಗ್ ಏಜೆನ್ಸಿ ಗಿಲ್ಯಾಂಡರ್ ಅರ್ಬುತ್ನಾಟ್ಸ್ನ ಹಿರಿಯ ಪಾಲುದಾರ ಮತ್ತು ತಾಯಿ ಪೇಷನ್ಸ್ ಟ್ರೆಬಿ. ತಾಯಿಯ ಹಿರಿಯರು ಬಾಂಗ್ಲಾದಲ್ಲಿ ತಲೆಮಾರುಗಳಿಂದ ನೆಲೆಸಿದ್ದರು. ಡಾರ್ಜಿಲಿಂಗ್ನ ಬ್ರಿಟಿಷ್ ಬೋರ್ಡಿಂಗ್ ಶಾಲೆ, ಇಂಗ್ಲೆಂಡ್ನ ಮಾರ್ಲ್ಬರೋ ಕಾಲೇಜಿನ ಬಳಿಕ ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯದ ಟ್ರಿನಿಟಿ ಹಾಲ್ನಲ್ಲಿ ಥಿಯಾಲಜಿ(ದೇವತಾ ಶಾಸ್ತ್ರ)ಯನ್ನು ಅಧ್ಯಯನ ಮಾಡಿದರು; ಆದರೆ, ಧರ್ಮಗುರುವಾಗಲಿಲ್ಲ. ‘ಧರ್ಮಗುರು ವೃತ್ತಿ, ಬಿಯರ್-ವಿಸ್ಕಿ ಉಲ್ಲೇಖ ಮತ್ತು ವೈಯಕ್ತಿಕ ಜೀವನದ ಬಗ್ಗೆ ಮಾತಾಡುವುದು ನನಗೆ ಆಗಿಬರುವುದಿಲ್ಲ’ ಎಂದು ಹೇಳುತ್ತಿದ್ದರು. 1994ರಲ್ಲಿ ‘ದಿ ಇಂಡಿಪೆಂಡೆಂಟ್’ ಪತ್ರಿಕೆ ಜೊತೆ ಮಾತನ್ನಾಡುತ್ತ, ‘‘ನನ್ನ ವ್ಯಕ್ತಿತ್ವದಲ್ಲಿ ದ್ವಂದ್ವ ಇದೆ- ತುಂಬಾ ಧಾರ್ಮಿಕತೆ; ಆದರೂ, ನೈತಿಕವಾಗಿ ಕೆಟ್ಟತನ’’. ‘ದಿ ಹಿಂದೂ’ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ, ‘‘ನನ್ನ ವೈಯಕ್ತಿಕ ನೈತಿಕತೆ ಬಗ್ಗೆ ನನಗೆ ವಿಶ್ವಾಸ ಇರಲಿಲ್ಲ. ಚರ್ಚ್ ನನಗೆ ಮಹತ್ವದ್ದಾಗಿತ್ತು; ಈಗಲೂ ಕೂಡ. ಆದ್ದರಿಂದ, ಅದನ್ನು ವಂಚಿಸಲು ಬಯಸಲಿಲ್ಲ’’ ಎಂದು ಹೇಳಿದ್ದರು. ಚರ್ಚ್ನ ನಷ್ಟವು ಪತ್ರಿಕೋದ್ಯಮಕ್ಕೆ ವರವಾಗಿ ಪರಿಣಮಿಸಿತು. ಬಿಬಿಸಿಗೆ ಸೇರ್ಪಡೆ ಧರ್ಮಗುರು ವೃತ್ತಿ ಸೂಕ್ತವಲ್ಲ ಎಂದು ನಿರ್ಧರಿಸಿದ ಬಳಿಕ ಕೆಲಕಾಲ ಬೋಧನೆ, ಆನಂತರ ನಾಲ್ಕು ವರ್ಷ ಚೆಷೈರ್ನಲ್ಲಿ ವಸತಿ ದತ್ತಿಯೊಂದಿಗೆ ಕೆಲಸ ಮಾಡಿದರು. ಕ್ವಿಟ್ ಇಂಡಿಯಾ ಚಳವಳಿ, ಕೋಮುಹಿಂಸೆ, 2ನೇ ಮಹಾಯುದ್ಧ ಹಾಗೂ ಬ್ರಿಟಿಷ್ ಆಡಳಿತದ ಅಂತ್ಯ ಸಮೀಪಿಸುತ್ತಿದ್ದ ಕಾಲ ಅದು. 1965ರಲ್ಲಿ ಬಿಬಿಸಿಯ ಸಹಾಯಕ ಪ್ರತಿನಿಧಿಯಾಗಿ ಆಡಳಿತ ವಿಭಾಗದಲ್ಲಿ ಕೆಲಸ ಆರಂಭಿಸಿ, 1971ರಲ್ಲಿ ಹೊಸ ದಿಲ್ಲಿ ವರದಿಗಾರ ಆದರು. ಸಹೋದ್ಯೋಗಿ ಆಂಡ್ರ್ಯೂ ವೈಟ್ಹೆಡ್, ಟುಲ್ಲಿ ಅವರನ್ನು ‘ಬ್ರಿಟಿಷ್ ರಾಜ್ನ ಮಗು’ ಎಂದು ಕರೆದಿದ್ದರು. 1960ರಲ್ಲಿ ಆಕಾಶವಾಣಿಯದೇ ಸಾಮ್ರಾಜ್ಯ. ಹಲವು ಅಡೆತಡೆ ಹಾಗೂ ಸರಕಾರದ ಒತ್ತಡದ ನಡುವೆಯೂ ಬಿಬಿಸಿಯನ್ನು ಕಟ್ಟಿದರು; 20 ವರ್ಷ ದಕ್ಷಿಣ ಏಶ್ಯ ಬ್ಯೂರೋ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದರು. ಸಹೋದ್ಯೋಗಿ ಸತೀಶ್ ಜೇಕಬ್ ಮತ್ತು ಆನಂತರ ಗಿಲಿಯನ್ ರೈಟ್ (ಗಿಲ್ಲಿ) ಜೊತೆಗೆ ಉಪಖಂಡವನ್ನು ಸುತ್ತಿದರು. ರಾಜಕೀಯ ನಾಯಕರು, ಜನಸಾಮಾನ್ಯರೊಟ್ಟಿಗೆ ಸಂಪರ್ಕ ಬೆಳೆಸಿಕೊಂಡರು. ಬದಲಾಗುತ್ತಿದ್ದ ದೇಶ ಕುರಿತು ವರದಿ ಮಾಡಲು ಇವರೆಲ್ಲರೂ ನೆರವಾದರು. ಬಿಬಿಸಿಯನ್ನು ಆರ್ಥಿಕವಾಗಿ ಸ್ವಾವಲಂಬಿಯಾಗಿಸಲು ಯತ್ನಿಸುತ್ತಿದ್ದ ಮಹಾನಿರ್ದೇಶಕ ಜಾನ್ ಬ್ರಿಟ್ ಅವರೊಂದಿಗೆ ಮನಸ್ತಾಪ ಉಂಟಾಯಿತು. ಬಿಬಿಸಿಯ ವಾಣಿಜ್ಯೀಕರಣ ಅವರಿಗೆ ಪಥ್ಯವಾಗಲಿಲ್ಲ; ಚಿಂತನೆಯಲ್ಲಿ ಬದಲಾವಣೆಯು ವಿಕಾಸದಿಂದ ಬರಬೇಕೇ ಹೊರತು ಕ್ರಾಂತಿಯಿಂದಲ್ಲ ಎಂದು ಹೇಳುತ್ತಿದ್ದರು. ಟೀಕೆ ಮಾಡಬಾರದೆಂದು ಹೇಳಿದ್ದರಿಂದ, ಬಿಬಿಸಿಗೆ 1994ರಲ್ಲಿ ರಾಜೀನಾಮೆ ನೀಡಿದರು. ಆದರೆ, ಕಾರ್ಯಕ್ರಮ ನೀಡುವುದನ್ನು ಮುಂದುವರಿಸಿದರು. 1994ರಲ್ಲಿ ಗ್ರೇಟ್ ರೈಲ್ವೆ ಜರ್ನೀಸ್ ಸರಣಿಯಲ್ಲಿ ‘ಕರಾಚಿ ಟು ದಿ ಖೈಬರ್ ಪಾಸ್’ಗೋಸ್ಕರ ಪಾಕಿಸ್ತಾನದಾದ್ಯಂತ ರೈಲಿನಲ್ಲಿ ಪ್ರಯಾಣಿಸಿದರು; ವರ್ಲ್ಡ್ ಸ್ಟೀಮ್ ಕ್ಲಾಸಿಕ್ಸ್ ಸರಣಿಯ ಭಾಗವಾದ ‘ಸ್ಟೀಮ್ಸ್ ಇಂಡಿಯನ್ ಸಮ್ಮರ್’ಗೆ ಕೆಲಸ ಮಾಡಿದರು. 1995ರಲ್ಲಿ ಬಿಬಿಸಿಯ ರೇಡಿಯೊ 4ಕ್ಕೆ ಪ್ರತೀ ರವಿವಾರ ‘ಸಮ್ಥಿಂಗ್ ಅಂಡರ್ಸ್ಟುಡ್’ ಕಾರ್ಯಕ್ರಮವನ್ನು ನಡೆಸಿಕೊಡುತ್ತಿದ್ದರು. ನಂಬಿಕೆ, ಆಧ್ಯಾತ್ಮಿಕತೆ ಮತ್ತು ಮನುಷ್ಯರ ಜೀವನವನ್ನು ಆಧರಿಸಿದ್ದ ಈ ಜನಪ್ರಿಯ ಕಾರ್ಯಕ್ರಮವನ್ನು 2019ರಲ್ಲಿ ನಿಲ್ಲಿಸಲಾಯಿತು. ‘‘ಇದು ತಮಗೆ ನೋವುಂಟು ಮಾಡಿತು. ಅದು ಅಪಾರ ಶ್ರೋತೃಗಳಿದ್ದ ಕಾರ್ಯಕ್ರಮ. ರೇಡಿಯೊ ಇರಬೇಕಾದ್ದು ಹೀಗೆ ಎಂದು ಶ್ರೋತೃಗಳು ಹೇಳುತ್ತಿದ್ದರು’’ ಎಂದು ರೇಡಿಯೊ ಟೈಮ್ಸ್ ನಿಯತಕಾಲಿಕೆಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದರು. ಚರಿತ್ರೆಯನ್ನು ದಾಖಲಿಸಿದ ವರದಿಗಳು ಭಾರತ-ಪಾಕಿಸ್ತಾನ ಯುದ್ಧ, ಅಫ್ಘಾನಿಸ್ತಾನದ ಮೇಲೆ ರಶ್ಯ ಆಕ್ರಮಣ, ಬಾಂಗ್ಲಾದೇಶದ ಉದಯ, ಶ್ರೀಲಂಕಾ ಮತ್ತು ಇತರೆಡೆಗಳಲ್ಲಿ ದಂಗೆ, 1980ರ ಆರಂಭದಲ್ಲಿ ಪಂಜಾಬ್ನಲ್ಲಿ ತಲೆಯೆತ್ತಿದ ಖಾಲಿಸ್ತಾನ್ ಚಳವಳಿ, ಅಮೃತಸರದ ಹರ್ಮಂದಿರ್ ಸಾಹಿಬ್(ಸ್ವರ್ಣ ಮಂದಿರ) ಮೇಲೆ ಸೇನೆ ಕಾರ್ಯಾಚರಣೆ, ಪ್ರಧಾನಿ ಇಂದಿರಾ ಗಾಂಧಿಯವರ ಹತ್ಯೆ ಮತ್ತು ಯೂನಿಯನ್ ಕಾರ್ಬೈಡ್ನ ಭೋಪಾಲ್ ಅನಿಲ ದುರಂತಗಳನ್ನು ವರದಿ ಮಾಡಿದರು. ಡಿಸೆಂಬರ್ 1979ರಲ್ಲಿ ರಶ್ಯ, ಅಫ್ಘಾನಿಸ್ತಾದ ಮೇಲೆ ದಾಳಿ ನಡೆಸಿತು; ರಶ್ಯದ ಟ್ಯಾಂಕ್ಗಳು ಪ್ರವೇಶಿಸುತ್ತಿದ್ದಂತೆ, ವಿದೇಶಿ ಸುದ್ದಿಸಂಸ್ಥೆಗಳು ದೇಶ ತೊರೆದವು. ಟುಲ್ಲಿ ಮತ್ತು ಸಹೋದ್ಯೋಗಿ ಸತೀಶ್ ಜೇಕಬ್ ಹೊಸದಿಲ್ಲಿಯ ವಿಮಾನ ನಿಲ್ದಾಣದಲ್ಲಿ ಕಾಬೂಲ್ನಿಂದ ಆಗಮಿಸಿದ ಪ್ರಯಾಣಿಕರಿಂದ ಸುದ್ದಿ ಸಂಗ್ರಹಿಸಿ, ವರದಿ ಮಾಡಿದರು. ಪಾಕಿಸ್ತಾನ ಸೇನೆ ಮುಖ್ಯಸ್ಥ ಜನರಲ್ ಜಿಯಾ ಉಲ್ ಹಕ್ ಅವರಿಂದ ಹತ್ಯೆಯಾದ ಪ್ರಧಾನಿ ಝುಲ್ಫಿಕರ್ ಅಲಿ ಭುಟ್ಟೋ ಅವರ ಹಿರಿಯ ಮಗ ಮುರ್ತಝಾ ಭುಟ್ಟೋ, ಬೆಂಬಲಕ್ಕಾಗಿ ಪ್ರಧಾನಿ ಇಂದಿರಾ ಗಾಂಧಿ ಅವರನ್ನು ಭೇಟಿ ಆಗುತ್ತಿದ್ದರು ಎನ್ನುವುದು ಗೊತ್ತಾಯಿತು. ಮುರ್ತಝಾ ಅವರನ್ನು ದಿಲ್ಲಿಯ ಹೋಟೆಲ್ ಒಂದರಲ್ಲಿ ಟುಲ್ಲಿ-ಜೇಕಬ್ ಭೇಟಿ ಮಾಡಿದರು. ಜನರಲ್ ಜಿಯಾ ಉಲ್ ಹಕ್ ಅವರನ್ನು ಪದಚ್ಯುತಗೊಳಿಸುವ ಗುರಿ ಹೊಂದಿದ್ದ ‘ಮೂವ್ಮೆಂಟ್ ಫಾರ್ ದಿ ರಿಸ್ಟೋರೇಶನ್ ಆಫ್ ಡೆಮಾಕ್ರಸಿ (ಎಂಆರ್ಡಿ)’ ಕುರಿತು ವ್ಯಾಪಕ ವರದಿ ಮಾಡಿದರು. 1984ರಲ್ಲಿ ಪ್ರಧಾನಿ ಇಂದಿರಾ ಗಾಂಧಿ ಅವರು ಸ್ವರ್ಣ ಮಂದಿರದ ಆವರಣದಲ್ಲಿ ಶಸ್ತ್ರಾಸ್ತ್ರಗಳನ್ನು ಅಡಗಿಸಿ ಇಟ್ಟಿದ್ದ ಸಿಖ್ ಪ್ರತ್ಯೇಕವಾದಿಗಳನ್ನು ಹೊರತೆಗೆಯಲು ಸೇನಾ ಕಾರ್ಯಾಚರಣೆಗೆ ಆದೇಶ ನೀಡಿದರು. ಟುಲ್ಲಿ ಮತ್ತು ಅವರ ಸತೀಶ್ ಜೇಕಬ್, ಮಂದಿರದ ಒಳಗಿನಿಂದ ಕಾರ್ಯಾಚರಣೆಯನ್ನು ವರದಿ ಮಾಡಿದರು. ಡಿಸೆಂಬರ್ 1992ರಲ್ಲಿ ಅಯೋಧ್ಯೆಯಲ್ಲಿ ಮಸೀದಿಯನ್ನು ಉರುಳಿಸಿದ ಕರಸೇವಕರು ಕಾರಿನಲ್ಲಿದ್ದ ಟುಲ್ಲಿ ಅವರನ್ನು ಗುರುತಿಸಿ ಹಲ್ಲೆ ನಡೆಸಿದರು ಮತ್ತು ಅವರು ಸೇರಿದಂತೆ ಐವರನ್ನು ಕೊಠಡಿಯೊಂದರಲ್ಲಿ ಕೂಡಿಹಾಕಿದರು. ‘‘ಡೆತ್ ಟು ಮಾರ್ಕ್ ಟುಲ್ಲಿ ಮತ್ತು ಡೆತ್ ಟು ಬಿಬಿಸಿ ಎಂದು ಕಿರುಚುತ್ತಿದ್ದ ದೊಡ್ಡ ಗುಂಪು ನಮ್ಮನ್ನು ಸುತ್ತುವರಿದಿತ್ತು’’ ಎಂದು ಅವರು ಲಾಸ್ ಏಂಜಲೀಸ್ ಟೈಮ್ಸ್ಗೆ ಹೇಳಿದರು. 2 ಗಂಟೆ ಕಾಲ ಬಂಧಿತರಾಗಿದ್ದ ಅವರನ್ನು ಬಡಾ ಸ್ಥಾನ್ನ ಮಹಂತ ಬಿಡಿಸಿದರು. ತುರ್ತು ಪರಿಸ್ಥಿತಿ ಸಮಯದಲ್ಲಿ ಟುಲ್ಲಿ ಅವರು ಸೆನ್ಸರ್ಶಿಪ್ ಒಪ್ಪಂದಕ್ಕೆ ಸಹಿ ಹಾಕಲು ನಿರಾಕರಿಸಿದ್ದರಿಂದ, ದೇಶ ತೊರೆಯಲು 24 ಗಂಟೆ ಕಾಲಾವಕಾಶ ನೀಡಲಾಯಿತು. ಇತರ ವಿದೇಶಿ ಬಾತ್ಮೀದಾರರ ಜೊತೆಗೆ ಅವರನ್ನು ದೇಶದಿಂದ ಹೊರಹಾಕಲಾಯಿತು. ‘‘ಶ್ರೀಮತಿ ಗಾಂಧಿ ಅವರಲ್ಲದೆ, ಸರಕಾರ ಕೂಡ ನಮ್ಮನ್ನು ದ್ವೇಷಿಸುತ್ತಿತ್ತು. ಕಚೇರಿಯನ್ನು ಮುಚ್ಚಿ ಮತ್ತು ನನ್ನನ್ನು ಹೊರಹಾಕಿ, ಬಿಬಿಸಿಯ ಬಾಯಿ ಮುಚ್ಚಿಸಬಹುದು ಎಂಬ ಅವರ ಅನಿಸಿಕೆ ಸುಳ್ಳಾಯಿತು. ಬಿಬಿಸಿ ಮುಂದುವರಿಯಿತು. ನಮ್ಮ ವಿಶ್ವಾಸಾರ್ಹತೆಗೆ ನಾವು ಧಕ್ಕೆಯುಂಟು ಮಾಡಿಕೊಳ್ಳಲಿಲ್ಲ’’ ಎಂದು ಹೇಳಿದ್ದರು. ತುರ್ತುಪರಿಸ್ಥಿತಿ ಹಾಗೂ ಇಂದಿರಾ ಅವರ ಹತ್ಯೆ ಸಮಯದಲ್ಲಿ ಮಾಧ್ಯಮಗಳ ಉಸಿರು ನಿಂತಿದ್ದಾಗ, ಅಸಂಖ್ಯ ಭಾರತೀಯರು ಶಾರ್ಟ್ವೇವ್ ರೇಡಿಯೊದಿಂದ ಬಿಬಿಸಿಯಿಂದ ಸುದ್ದಿಗಳನ್ನು ಕೇಳಿದರು. ಗೌರವ-ಪುಸ್ತಕ ಸರಕಾರ ಅವರಿಗೆ ಅತ್ಯುನ್ನತ ನಾಗರಿಕ ಗೌರವ ನೀಡಿ ಗೌರವಿಸಿತು; ಪದ್ಮಶ್ರೀ (1992) ಮತ್ತು ಪದ್ಮಭೂಷಣ (2005). ಬ್ರಿಟಿಷ್ ಸರಕಾರದಿಂದ ನೈಟ್ ಹುದ್ದೆ ಪಡೆದರೂ, ಹೆಸರಿನ ಮುಂದೆ ‘ಸರ್’ ಬಳಸಲಿಲ್ಲ. ಅವರ ಮೊದಲ ಪುಸ್ತಕ- ‘ಅಮೃತಸರ: ಮಿಸ್ಟ್ರೆಸ್ ಗಾಂಧೀಸ್ ಲಾಸ್ಟ್ ಬ್ಯಾಟಲ್’(1985), ಸಹಲೇಖಕ ಸತೀಶ್ ಜೇಕಬ್; ಕೊನೆಯ ಪುಸ್ತಕ ಉತ್ತರ ಭಾರತದ ಗ್ರಾಮೀಣ ಕಥೆಗಳನ್ನು ಒಳಗೊಂಡ ‘ಅಪ್ಕಂಟ್ರಿ ಟೇಲ್ಸ್: ಒನ್ಸ್ ಅಪಾನ್ ಎ ಟೈಮ್ ಇನ್ ದಿ ಹಾರ್ಟ್ ಆಫ್ ಇಂಡಿಯಾ’(2017). ಆಪರೇಷನ್ ಬ್ಲೂಸ್ಟಾರ್ಗೆ ಕಾರಣವಾದ ಘಟನೆಗಳು ಹಾಗೂ ಸ್ವತಂತ್ರ ಭಾರತದ ಮೊದಲ ನಾಲ್ಕು ದಶಕಗಳ ಕುರಿತ ಅವರ ಪ್ರಬಂಧಗಳ ಸಂಕಲನ ‘ನೋ ಫುಲ್ ಸ್ಟಾಪ್ಸ್ ಇನ್ ಇಂಡಿಯಾ’(1991); ಪುಸ್ತಕದ ಮುನ್ನುಡಿಯಲ್ಲಿ ‘ಆರ್ಥಿಕ ಬೆಳವಣಿಗೆಯೊಂದಿಗೆ ದೇಶದ ಸಂಸ್ಕೃತಿಯನ್ನು ರಕ್ಷಿಸುವುದು ಸಹ ಅಗತ್ಯ. ಪ್ರಗತಿ ಎಂದರೆ ಪಾಶ್ಚಾತ್ಯ ಸಂಸ್ಕೃತಿಯ ನಿರ್ಜೀವ ಉಪಯೋಗವಾದದ ನಕಲು ಮಾಡುವುದಲ್ಲ’’ ಎಂದು ಹೇಳಿದ್ದರು. ವರದಿಗಾರಿಕೆಯ ಹೊರೆ ತಪ್ಪಿದ ಬಳಿಕ ‘ಇಂಡಿಯಾ ಇನ್ ಸ್ಲೋ ಮೋಷನ್’ ಮತ್ತು ‘ಇಂಡಿಯಾಸ್ ಅನ್ಎಂಡಿಂಗ್ ಜರ್ನಿ’ ಪ್ರಕಟಿಸಿದರು; ಆತ್ಮಚರಿತ್ರೆ ಬರೆಯುತ್ತಿದ್ದರು. 1960ರ ದಶಕದ ಆರಂಭದಲ್ಲಿ ಲಂಡನ್ನಲ್ಲಿ ಮಾರ್ಗರೆಟ್ ಅವರನ್ನು ವಿವಾಹವಾದರು; ಅವರಿಂದ ಪ್ರತ್ಯೇಕಗೊಂಡ ಬಳಿಕ ಗಿಲಿಯನ್ (ಗಿಲ್ಲಿ) ರೈಟ್ ಜೊತೆ ಸಹಜೀವನ ನಡೆಸಿದರು. ‘ಮಾರ್ಗರೆಟ್ ಮತ್ತು ಗಿಲಿಯನ್ ಅವರಿಗೆ ಋಣಿಯಾಗಿದ್ದೇನೆ. ಪತ್ನಿ ಜೊತೆಗೆ ಸುದೀರ್ಘ ಕಾಲ ಕಳೆದಿದ್ದರಿಂದ, ಅವರಿಂದ ವಿಚ್ಛೇದನ ಪಡೆಯಲಿಲ್ಲ; ಪತ್ನಿ ಮತ್ತು ಮಕ್ಕಳೊಂದಿಗೆ ಸ್ನೇಹದಿಂದ ಇರಲು ಬಯಸಿದೆ’ ಎಂದು ಸಂದರ್ಶನವೊಂದರಲ್ಲಿ ಹೇಳಿದರು. 2004ರಲ್ಲಿ ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳ ನಿಯತಕಾಲಿಕೆ ಕ್ಯಾಮ್ಗೆ ನೀಡಿದ ಸಂದರ್ಶನದಲ್ಲಿ, ‘ಪತ್ನಿ ಅಥವಾ ಗಿಲಿಯನ್ ಅವರ ಮಾತುಗಳನ್ನು ನಾನು ಆಡುವುದು ಸರಿಯಲ್ಲ’ ಎಂದು ಹೇಳಿದ್ದರು. 2003ರಲ್ಲಿ ಬಿಬಿಸಿಯ ಡೆಸರ್ಟ್ ಐಲ್ಯಾಂಡ್ ಡಿಸ್ಕ್ಸ್ನಲ್ಲಿ ಜಾತಿ ವ್ಯವಸ್ಥೆಯನ್ನು ಖಂಡಿಸಿದ್ದರು; ‘ನಾವು ಜಾತಿ ವ್ಯವಸ್ಥೆಯಲ್ಲಿನ ಒಳಿತು ಮತ್ತು ಕೆಡುಕನ್ನು ನೋಡಬೇಕು; ಒಳ್ಳೆಯ ಅಂಶವೆಂದರೆ, ಅದು ಭದ್ರತೆ, ಒಡನಾಟ ಮತ್ತು ಸಮುದಾಯದಲ್ಲಿ ಒಳಗೊಳ್ಳುವಿಕೆಯನ್ನು ನೀಡುತ್ತದೆ’ ಎಂದು ಹೇಳಿದ್ದರು. ಆದರೆ, ಭಾರತದ ಜಾತಿ ವ್ಯವಸ್ಥೆಯಲ್ಲಿ ಒಳ್ಳೆಯದು ಎಂಬುದು ಏನೂ ಇಲ್ಲ ಎನ್ನುವ ಅಂಶ ಅವರ ತಿಳಿವನ್ನು ಮೀರಿತ್ತು. ಜಾತ್ಯತೀತತೆ ಪರ ಹಾಗೂ ಹಿಂದೂ ರಾಷ್ಟ್ರೀಯತೆಯ ಕಟು ವಿಮರ್ಶಕರಾಗಿದ್ದರು. ಸಾಂಪ್ರದಾಯಿಕ ಜೀವನಶೈಲಿ ಮತ್ತು ಆಚರಣೆಗಳನ್ನು ಬದಲಿಸಿದ ಅಭಿವೃದ್ಧಿ ಹಾಗೂ ಆಧುನೀಕರಣವನ್ನು ವಿರೋಧಿಸಿದ್ದರು; ಗ್ರಾಹಕೀಕರಣ ಮತ್ತು ಇನ್ನಿತರ ಬದಲಾವಣೆಗಳು ಪ್ರಗತಿಯನ್ನು ಸಾಧಿಸುವ ಮಾರ್ಗವೆಂದು ಒಪ್ಪಿಕೊಳ್ಳಲು ನಿರಾಕರಿಸಿದರು. ದಿಲ್ಲಿಯ ಸೆಳೆತ ಪತ್ನಿ ಮಾರ್ಗರೆಟ್, ಮಕ್ಕಳಾದ ಸಾರಾ, ಸ್ಯಾಮ್, ಎಮ್ಮಾ ಮತ್ತು ಪ್ಯಾಟ್ರಿಕ್ ಹಾಗೂ ಮೀರತ್ನ ಬಾಣಸಿಗ ಗರೀಬ್ ಒಟ್ಟಿಗೆ ದಿಲ್ಲಿಯ ಹೌಜ್ ಖಾಸ್ನಲ್ಲಿರುವ ಅಪಾರ್ಟ್ಮೆಂಟ್ನಲ್ಲಿ ನೆಲೆಸಿದರು. ಗರೀಬ್ ಮರಣದ ಬಳಿಕ ಅವರ ಮಗಳು ಬಬ್ಲಿ ತಂದೆಯ ಸ್ಥಾನ ತುಂಬಿದರು; ಆಕೆಯ ಮಗ ಕಾಕಾ, ಟುಲ್ಲಿ ಅವರ ಚಾಲಕ. 1994ರಿಂದ ಹೊಸ ದಿಲ್ಲಿಯ ಪೂರ್ವ ನಿಝಾಮುದ್ದೀನ್ನಲ್ಲಿ ನೆಲೆಸಿದ್ದ ಅವರು, ಮನೆಯೊಡತಿ ಮಾಸಿಕ ಒಂದು ಲಕ್ಷ ರೂ. ಬಾಡಿಗೆಗೆ ಬೇಡಿಕೆಯಿಟ್ಟಾಗ ಸ್ವಂತ ಫ್ಲಾಟ್ ಖರೀದಿಸಲು ನಿರ್ಧರಿಸಿದರು. 2010ರಲ್ಲಿ ನಿಝಾಮುದ್ದೀನ್ ಪಶ್ಚಿಮದಲ್ಲಿ ಫ್ಲ್ಯಾಟ್ ಖರೀದಿಸಿದರು. ನಿವೃತ್ತಿ ಬಳಿಕ ಹಿಮಾಲಯದ ತಪ್ಪಲಿನಲ್ಲಿ ಪ್ರಕೃತಿಯ ನಡುವೆ ಬದುಕಬಹುದಿತ್ತು; ಆದರೆ, ಲೋಧಿ ಗಾರ್ಡನ್ಸ್, ಇಂಡಿಯಾ ಇಂಟರ್ನ್ಯಾಶನಲ್ ಸೆಂಟರ್, ಜಿಮ್ಖಾನಾ ಕ್ಲಬ್, ಖಾನ್ ಮಾರ್ಕೆಟ್ನ ಫಕೀರ್ ಚಂದ್ ಆಂಡ್ ಸನ್ಸ್ ಪುಸ್ತಕದ ಅಂಗಡಿ, ಕೆಥೆಡ್ರಲ್ ಚರ್ಚ್ ಆಫ್ ದಿ ರಿಡೆಂಪ್ಶನ್, ಜನಪಥ್ನ ಶರವಣ ಭವನ ಇವೆಲ್ಲದರ ಸೆಳೆತ ಅವರನ್ನು ಬಿಡಲಿಲ್ಲ. ರಾಜಧಾನಿಯ ಮಾಲಿನ್ಯ, ಕೆಟ್ಟ ರಸ್ತೆಗಳು, ರಸ್ತೆಯಲ್ಲಿ ವಾಹನ ಚಾಲಕರ ಆಕ್ರೋಶ, ಬಿಲ್ಡರ್ ಗಳ ಅಟ್ಟಹಾಸ, ದಲ್ಲಾಳಿಗಳ ದುಷ್ಟತನ ಅವರನ್ನು ತಟ್ಟಿತ್ತು. ‘‘ದಿಲ್ಲಿಯ ಜನ ಹೆಚ್ಚು ಒತ್ತಡವನ್ನು ನಿಭಾಯಿಸುತ್ತಾರೆ; ಅದು ಅವರ ವರ್ತನೆಯಲ್ಲಿ ಕಾಣಿಸುತ್ತದೆ. ವಾಹನ ಚಾಲಕರಿಗೆ ಸಂಬಂಧಿಸಿದಂತೆ ಇದು ಸತ್ಯ; ಪರಿಸ್ಥಿತಿ ಭಯಾನಕವಾಗಿದೆ. ದಿಲ್ಲಿಯು ಪಾಣಿಪತ್ (ಹರ್ಯಾಣ), ನೊಯ್ಡಾದವರೆಗೆ ಕೊಳಕಾಗಿ ವಿಸ್ತರಿಸಿದೆ; ಇದರಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ’’ ಎಂದು ಸಂದರ್ಶನವೊಂದರಲ್ಲಿ ಹೇಳಿದ್ದರು. ಹಸನ್ಮುಖ, ನಿರರ್ಗಳ ಹಿಂದಿ ಮತ್ತು ಸುಸಂಸ್ಕೃತ ಇಂಗ್ಲಿಷ್ನಿಂದ ಜನರನ್ನು ಸೆಳೆಯುತ್ತಿದ್ದ ಅವರು ದಯೆ, ಕಾಳಜಿ ಹೊಂದಿದ್ದ ಧಾರ್ಮಿಕ ವ್ಯಕ್ತಿ. ಅವರ ರೇಡಿಯೊ ವರದಿಗಳು ವೃತ್ತಪತ್ರಿಕೆಗಳ ವರದಿಗಳಿಗಿಂತ ತಕ್ಷಣ ಮತ್ತು ಹೆಚ್ಚು ಪರಿಣಾಮ ಬೀರಿದವು. ಅವರಿಗೆ ಪತ್ರಿಕೋದ್ಯಮಕ್ಕಿಂತ ಭಾರತದ ಮೇಲೆ ಹೆಚ್ಚು ಪ್ರೀತಿಯಿತ್ತು. ದೇಶ ಸುತ್ತುತ್ತ ಜನರೊಂದಿಗೆ ಬೆರೆತು, ರೇಡಿಯೊದಲ್ಲಿ ವರದಿ-ವ್ಯಾಖ್ಯಾನ ಮಾಡುತ್ತ ನಡೆದರು. ಬಿಬಿಸಿ ಜೊತೆಗೆ ಟುಲ್ಲಿ ಅವರ ಹೆಸರು ಚಿರಸ್ಥಾಯಿಯಾಗಿ ಇರುತ್ತದೆ. ಆದರೆ, ನಿಝಾಮುದ್ದೀನ್ ಪೂರ್ವದ 1ನೇ ಸಂಖ್ಯೆಯ ಮನೆಯಲ್ಲಿ ‘ಇಂಡಿಯನ್ ಎಕ್ಸ್ಪ್ರೆಸ್’ ಮತ್ತು ‘ದೈನಿಕ್ ಭಾಸ್ಕರ್’ ಓದುತ್ತ ಕುಳಿತಿರುವ ಟುಲ್ಲಿ ಮಾತ್ರ ಇನ್ನುಮುಂದೆ ಕಾಣಸಿಗುವುದಿಲ್ಲ.
Tamil Nadu - ಬಿಜೆಪಿಯ ಮಾಸ್ಟರ್ ಪ್ಲಾನ್ ಸಕ್ಸಸ್ : ದಿನಕರನ್ ಬೆನ್ನಲ್ಲೇ NDA ತೆಕ್ಕೆಗೆ ಮತ್ತೊಬ್ಬ ಪವರ್ಫುಲ್ ನಾಯಕ?
Former TN CM O Panneerselvam : ತಮಿಳುನಾಡು ಮಾಜಿ ಮುಖ್ಯಮಂತ್ರಿ ಮತ್ತು ಒಂದು ಕಾಲದಲ್ಲಿ ಜಯಲಲಿತಾ ಅವರ ಪರಮಾಪ್ತರಾಗಿದ್ದ ಓ ಪನ್ನೀರ್’ಸೆಲ್ವಂ, ಎನ್ಡಿಎ ಮೈತ್ರಿಕೂಟಕ್ಕೆ ವಾಪಸ್ ಆಗುವ ಸುಳಿವನ್ನು ನೀಡಿದ್ದಾರೆ. ಆ ಮೂಲಕ, ಬಿಜೆಪಿಯ ಪರಿಶ್ರಮ ದಿನದಿಂದ ದಿನಕ್ಕೆ ಫಲ ಕೊಡುತ್ತಿದೆ. ಪನ್ನೀರ್’ಸೆಲ್ವಂ, ವಾಪಸಾತಿ ಸಾಧ್ಯತೆಯ ಹಿಂದೆ, ಬಿಜೆಪಿಯ ನಾಯಕರ ಪರಿಶ್ರಮವಿದೆ ಎಂದು ಹೇಳಲಾಗುತ್ತಿದೆ.
Arijit Singh: ಸಾಕು ಎಂದವನೇ ನಿಜವಾದ ಸಾಹುಕಾರ: ಅರ್ಜಿತ್ ಸಿಂಗ್ ನಿರ್ಧಾರ ಮೆಚ್ಚಿದ ರಂಗಣ್ಣ
ಬಾಲಿವುಡ್ ಚಿತ್ರರಂಗದ ಖ್ಯಾತ ಹಿನ್ನೆಲೆ ಗಾಯಕ ಅರ್ಜಿತ್ ಸಿಂಗ್ ಅವರು ಇನ್ಮುಂದೆ ಹಿನ್ನೆಲೆ ಗಾಯಕನಾಗಿ ಹಾಡುವುದಿಲ್ಲ ಎಂದು ಹೇಳಿದ್ದಾರೆ. ಅರ್ಜಿತ್ ಸಿಂಗ್ ಅವರು ಹಿನ್ನೆಲೆ ಗಾಯನಕ್ಕೆ ವಿದಾಯ ಹೇಳಿರುವುದು ಅವರ ಅಭಿಮಾನಿಗಳಲ್ಲಿ ಅಚ್ಚರಿ - ಆಘಾತಕ್ಕೆ ಕಾರಣವಾಗಿದೆ. ಎಲ್ಲವೂ ಇದ್ದು ಸರಳವಾಗಿ ಬದುಕುವುದು ಇವತ್ತಿನ ಸಮಾಜದಲ್ಲಿ, ಕಾಲಘಟ್ಟದಲ್ಲಿ ಬಹಳ ಕಷ್ಟ. ಅರ್ಜಿತ್ ನಿಜಕ್ಕೂ ಅಂತಹ ವಜ್ರ ಆರ್ಥಿಕ
ಅಮೆರಿಕಾ ಮತ್ತು ಕೆನಡಾ ನಡುವೆ ಭಿನ್ನತೆ ಹೆಚ್ಚಾಗಿದೆ. ಕೆನಡಾ ಅಮೆರಿಕನ್ ಗಲ್ಫ್ಸ್ಟ್ರೀಮ್ ಜೆಟ್ಗಳನ್ನು ಪ್ರಮಾಣೀಕರಿಸದಿದ್ದರೆ, ಕೆನಡಾದಿಂದ ಬರುವ ಎಲ್ಲಾ ವಿಮಾನಗಳ ಮೇಲೆ ಶೇ.50% ಸುಂಕ ವಿಧಿಸುವುದಾಗಿ ಡೊನಾಲ್ಡ್ ಟ್ರಂಪ್ ಎಚ್ಚರಿಕೆ ನೀಡಿದ್ದಾರೆ. ಅಲ್ಲದೆ, ಕೆನಡಾದಲ್ಲಿ ತಯಾರಾದ ವಿಮಾನಗಳ ಪ್ರಮಾಣೀಕರಣವನ್ನು ರದ್ದುಗೊಳಿಸುವುದಾಗಿಯೂ ತಿಳಿಸಿದ್ದಾರೆ. ಈ ವಿಚಾರವಾಗಿ ಕೆನಡಾ ಹೇಗೆ ಪ್ರತಿಕ್ರಿಯಿಸಲಿದೆ ಕಾದು ನೋಡಬೇಕಿದೆ.
ಚಿನ್ನ - ಬೆಳ್ಳಿ ಬೆಲೆಯಲ್ಲಿ ದಿಢೀರ್ ಕುಸಿತ, ಒಂದೇ ದಿನದಲ್ಲಿ 14%ವರೆಗೆ ಇಳಿಕೆ ಕಂಡ ಇಟಿಎಫ್ಗಳು! ಕಾರಣ ಏನು?
ದಾಖಲೆಯ ಮಟ್ಟಕ್ಕೆ ಏರಿದ್ದ ಚಿನ್ನ ಮತ್ತು ಬೆಳ್ಳಿ ಬೆಲೆಗಳು ಶುಕ್ರವಾರ (ಜ. 30) ದಿಢೀರ್ ಕುಸಿತ ಕಂಡಿವೆ. ಎಂಸಿಎಕ್ಸ್ನಲ್ಲಿ ಚಿನ್ನ ಶೇಕಡಾ 5 ಮತ್ತು ಬೆಳ್ಳಿ ಶೇಕಡಾ 6ರಷ್ಟು ಇಳಿಕೆಯಾಗಿದೆ. ಇದರ ಪರಿಣಾಮವಾಗಿ ಸಿಲ್ವರ್ ಇಟಿಎಫ್ಗಳು ಶೇಕಡಾ 14ರವರೆಗೆ ಮತ್ತು ಗೋಲ್ಡ್ ಇಟಿಎಫ್ಗಳು ಶೇಕಡಾ 10 ರವರೆಗೆ ಪತನಗೊಂಡಿವೆ. ಅಮೆರಿಕದ ಫೆಡರಲ್ ರಿಸರ್ವ್ಗೆ ಹೊಸ ಮತ್ತು ಕಠಿಣ ನಿಲುವಿನ ಮುಖ್ಯಸ್ಥರ ನೇಮಕವಾಗುವ ಸಾಧ್ಯತೆಯೇ ಈ ಕುಸಿತಕ್ಕೆ ಪ್ರಮುಖ ಕಾರಣ.
DK Shivakumar: ಸ್ಥಳೀಯ ಸಂಸ್ಥೆ ಚುನಾವಣೆ: ಮೀಸಲಾತಿ ನಿಗದಿ ಬಗ್ಗೆ ಡಿ ಕೆ ಶಿವಕುಮಾರ್ ಹೇಳಿದ್ದೇನು?
ಬೆಂಗಳೂರು: ನಾವು ಸ್ಥಳೀಯ ಸಂಸ್ಥೆ ಚುನಾವಣೆ ಮಾಡುತ್ತೇವೆ. ನಾಳೆ ಅಥವಾ ನಾಡಿದ್ದು ಈ ಚುನಾವಣೆಗಳ ಮೀಸಲಾತಿ ವಿಚಾರವಾಗಿ ನ್ಯಾಯಾಲಯದಲ್ಲಿ ವಿಚಾರಣೆ ಇದೆ. ನಾವು ಪಂಚಾಯ್ತಿ ನಾಯಕರಿಗೆ ಸಿದ್ಥತೆ ಮಾಡಿಕೊಳ್ಳಲು ಹೇಳಿದ್ದೇವೆ. ರಾಜ್ಯ ಚುನಾವಣಾ ಆಯೋಗ ಕೂಡ ಸಿದ್ಧತೆ ಮಾಡಿಕೊಳ್ಳುತ್ತಿದ್ದು, ಮತಪತ್ರ ಬಳಸಲು ತೀರ್ಮಾನಿಸಿದ್ದಾರೆ ಎಂದು ಡಿಸಿಎಂ ಡಿ ಕೆ ಶಿವಕುಮಾರ್ ಹೇಳಿದರು. ಸಮಯ ನಿಗದಿಯಾಗಬೇಕು ಅಷ್ಟೇ. ಸಂವಿಧಾನದ
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸ್ಥಿತಿಗತಿ ಹೇಗಿದೆ? ಬೆಚ್ಚಿ ಬೀಳಿಸುವಂತಿದ್ಯಾ 2025 ರ ಅಂಕಿ-ಅಂಶಗಳು
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ವಿಪಕ್ಷಗಳ ಆರೋಪ. ಕೊಲೆ, ಅತ್ಯಾಚಾರ, ದರೋಡೆ ಪ್ರಕರಣಗಳು ಹೆಚ್ಚಾಗಿದ್ದು, ಸೈಬರ್ ಕ್ರೈಂ ವಂಚನೆಗಳು ಲಕ್ಷಾಂತರ ರೂಪಾಯಿ ನಷ್ಟಕ್ಕೆ ಕಾರಣವಾಗಿವೆ.ಈ ಕುರಿತ 2025ರ ಅಂಕಿ-ಅಂಶಗಳು ಕ್ರಿಮಿನಲ್ ಪ್ರಕರಣಗಳು ಸೇರಿದಂತೆ ಸೈಬರ್ ಕ್ರೈಂ ಅಪರಾಧಗಳಲ್ಲಿ ಹೆಚ್ಚಳವನ್ನು ಎತ್ತಿ ತೋರಿಸುತ್ತಿವೆ. ಕಳೆದ ವರ್ಷ ರಾಜ್ಯದಲ್ಲಿ ನಡೆದ ಅಪರಾಧ ಪ್ರಕರಣಗಳ ಬಗ್ಗೆ ಅಂಕಿ-ಅಂಶಗಳು ಏನು ಹೇಳುತ್ತಿವೆ ಎಂಬುದರ ಕುರಿತ ಮಾಹಿತಿ ಇಲ್ಲಿದೆ.
ನಿಮ್ಮ ಹಳ್ಳಿಯಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ ಸರ್ಕಾರದಿಂದ ಸಿಗಲಿದೆ 20 ಲಕ್ಷ ರೂ. ಅನುದಾನ: ಅರ್ಜಿ ಸಲ್ಲಿಕೆ ಹೇಗೆ?
ಕರ್ನಾಟಕ ಸರ್ಕಾರ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಸಾಮಾಜಿಕ, ಸಾಂಸ್ಕೃತಿಕ ಏಳಿಗೆಗೆ ಸಮುದಾಯ ಭವನ ನಿರ್ಮಾಣಕ್ಕೆ ದೊಡ್ಡ ಮೊತ್ತದ ಆರ್ಥಿಕ ಸಹಾಯ ನೀಡುತ್ತಿದೆ. ಗ್ರಾಮೀಣ, ನಗರ ಪ್ರದೇಶಗಳಲ್ಲಿ ಶುಭ ಸಮಾರಂಭ, ಶೈಕ್ಷಣಿಕ ಕಾರ್ಯಕ್ರಮಗಳಿಗೆ ಅನುಕೂಲವಾಗಲಿದೆ. ಡಾ. ಬಿ.ಆರ್. ಅಂಬೇಡ್ಕರ್, ಡಾ. ಬಾಬು ಜಗಜೀವನ್ ರಾಮ್ ಹೆಸರಿನಲ್ಲಿ ಭವನ ನಿರ್ಮಾಣಕ್ಕೆ ಅವಕಾಶವಿದೆ. 20 ಲಕ್ಷದಿಂದ 4 ಕೋಟಿ ರೂ.ವರೆಗೆ ಸಹಾಯಧನ ಸಿಗಲಿದೆ.
Karnataka Weather Updates: ಜನವರಿ 30: ಕರ್ನಾಟಕದ ಹವಾಮಾನ ಹೇಗಿದೆ ಇಲ್ಲಿದೆ ಐಎಂಡಿ ರಿಪೋರ್ಟ್
Karnataka Weather Updates: ಬೆಂಗಳೂರು ಸೇರಿದಂತೆ ಕರ್ನಾಟಕದಾದ್ಯಂತ ಬಹುತೇಕ ಒಣಹವೆ ಮುಂದುವರಿದಿದೆ. ರಾಜ್ಯದಲ್ಲಿ ಮುಂಜಾನೆ ಸಮಯದಲ್ಲಿ ಚಳಿ ಅಲ್ಪ ಪ್ರಮಾಣದಲ್ಲಿ ಇಳಿಕೆಯಾಗಿದ್ದು, ಬಿಸಿಲು ಸಣ್ಣಗೆ ಪ್ರಾರಂಭವಾಗಿದೆ. ವಾಯು ಚಂಡಮಾರುತದ ಪರಿಚಲನೆ ಹಾಗೂ ವಾಯುಭಾರ ಕುಸಿತ ಇರುವುದರಿಂದ ಎರಡು ಮೂರು ದಿನಗಳ ನಂತರ ಹವಾಮಾನದಲ್ಲಿ ಬದಲಾವಣೆ ಆಗುವ ಸಾಧ್ಯತೆಯೂ ಇದೆ. ಜನವರಿ 30ರ ಹವಾಮಾನ ವರದಿ ಇಲ್ಲಿದೆ. ಆಗ್ನೇಯ
Gold Price: ಚಿನ್ನ-ಬೆಳ್ಳಿ ಬೆಲೆ ಭಾರೀ ಕುಸಿತ, ಹೂಡಿಕೆದಾರರಿಗೆ ಒಟ್ಟು 27,55,07,13,98,99,999 ರೂಪಾಯಿ ನಷ್ಟ
ಚಿನ್ನದ ಬೆಲೆ ಆಕಾಶ ಮುಟ್ಟುತ್ತಿದೆ, ಬೆಳ್ಳಿ ಖರೀದಿ ಮಾಡುವುದು ಕೂಡ ಬಡವರಿಗೆ ಕಷ್ಟ ಆಗುತ್ತಿದೆ. ಹೀಗಿದ್ದಾಗ ಚಿನ್ನದ ಬೆಲೆ ಇನ್ನೇನು 2,00,000 ರೂಪಾಯಿ ತಲುಪಲಿದೆ ಎಂಬ ಭಯ ಆವರಿಸಿದೆ. ಈ ನಡುವೆ ನಿನ್ನೆ ಒಂದೇ ದಿನ ಚಿನ್ನದ ಬೆಲೆ ಬರೋಬ್ಬರಿ 10,000 ರೂಪಾಯಿ ಹೆಚ್ಚಾಗಿ ಆಘಾತ ನೀಡಿದೆ. ಬಡವರು ಹಾಗೂ ಮಧ್ಯಮ ವರ್ಗದ ಜನರು ಇನ್ನುಮುಂದೆ ಚಿನ್ನ
ವರದಕ್ಷಿಣೆ ಕಿರುಕುಳ; ಗರ್ಭಿಣಿಯಾಗಿದ್ದ ಕಮಾಂಡೋ ಪತ್ನಿಯನ್ನು ಡಬಲ್ನಿಂದ ಕೊಂದ ಪತಿ ಅಮಾನತು
ನಿನ್ನ ತಂಗಿಯನ್ನು ಕೊಲೆ ಮಾಡುತ್ತಿದ್ದೇನೆ ಈ ವಾಯ್ಸ್ ರೆಕಾರ್ಡ್ ಮಾಡಿಕೋ ಇದು ಪೊಲೀಸರಿಗೆ ಬೇಕಾಗುತ್ತದೆ ಎಂದು ಆಕೆಯನ್ನು ಕೊಲೆಗೈದಿದ್ದಾನೆ. ಐದು ನಿಮಿಷದ ನಂತರ ಪುನಃ ಕರೆ ಮಾಡಿ ಆಕೆ ಸತ್ತಿದ್ದಾಳೆ ಎಂದು 'ಸ್ವಾಟ್' ಟೀಮ್ನಲ್ಲಿ ಕಮಾಂಡೋ ಆಗಿದ್ದ ಮೃತ ಕಾಜಲ್ ಅಣ್ಣ ಅತ್ತರು. ದೆಹಲಿಯಲ್ಲಿ ಕಾಜಲ್ ಚೌಧರಿ ಎಂಬ ಗರ್ಭಿಣಿಯನ್ನು ಆಕೆಯ ಪತಿಯೇ ಡಂಬಲ್ಸ್ನಿಂದ ಕೊಲೆ ಮಾಡಿದ ಘಟನೆ ಬೆಳಕಿಗೆ ಬಂದಿದೆ.
ಕೊಪ್ಪಳದಲ್ಲಿ ಲೋಕಾಯುಕ್ತ ಅಧಿಕಾರಿಗಳ ದಾಳಿ : ಕಿಮ್ಸ್ ಆಡಳಿತಾಧಿಕಾರಿ ಬಿ.ಕಲ್ಲೇಶ ಮನೆ ಶೋಧ
ಕೊಪ್ಪಳದಲ್ಲಿ ಬೆಳ್ಳಂಬೆಳಗ್ಗೆ ಭ್ರಷ್ಟ ಅಧಿಕಾರಿಗಳಿಗೆ ಲೋಕಾಯುಕ್ತ ಅಧಿಕಾರಿಗಳು ಶಾಕ್ ಕೊಟ್ಟಿದ್ದಾರೆ. ಆರೋಪದ ಹಿನ್ನೆಲೆ ಕೊಪ್ಪಳ ವೈದ್ಯಕೀಯ ಮಹಾವಿದ್ಯಾಲಯದ ಆಡಳಿತಾಧಿಕಾರಿ ಬಿ ಕಲ್ಲೇಶ ಅವರ ಮನೆ, ಕಾಲೇಜುಗಳ ಮೇಲೆ ದಾಳಿಯಾಗಿದೆ.
ಪೊಲೀಸ್ ಸಿಬ್ಬಂದಿಗಳಿಗೆ ಹುಟ್ಟುಹಬ್ಬ, ವಿವಾಹ ವಾರ್ಷಿಕೋತ್ಸವಕ್ಕೆ ರಜೆ: ರಾಜ್ಯ ಸರ್ಕಾರ ಆದೇಶ
ಬೆಂಗಳೂರು: ಹಬ್ಬ-ಹರಿದಿನಗಳನ್ನು ಬದಿಗಿಟ್ಟು ಸಾರ್ವಜನಿಕರ ರಕ್ಷಣೆಗಾಗಿ ದುಡಿಯುವ ಕರ್ನಾಟಕ ಪೊಲೀಸ್ ಸಿಬ್ಬಂದಿಗೆ ಇಲಾಖೆಯು ಭರ್ಜರಿ ಸಿಹಿ ಸುದ್ದಿಯನ್ನ ನೀಡಿದೆ. ಇನ್ನು ಮುಂದೆ ಪೊಲೀಸ್ ಸಿಬ್ಬಂದಿ ತಮ್ಮ ಹುಟ್ಟುಹಬ್ಬ ಹಾಗೂ ವಿವಾಹ ವಾರ್ಷಿಕೋತ್ಸವದ ದಿನದಂದು ಕುಟುಂಬದೊಂದಿಗೆ ಕಾಲ ಕಳೆಯಲು ಅನುಕೂಲವಾಗುವಂತೆ ಸಾಂದರ್ಭಿಕ ರಜೆ ನೀಡುವಂತೆ ಕರ್ನಾಟಕ ಸರ್ಕಾರವು ಮಹತ್ವದ ಆದೇಶ ಹೊರಡಿಸಲಾಗಿದೆ. ರಾಜ್ಯ ಸರ್ಕಾರದಿಂದ ಪೊಲೀಸ್ ಸಿಬ್ಬಂದಿಗಳಿಗೆ ಭರ್ಜರಿ
ಕಾರವಾರ ಶೈಕ್ಷಣಿಕ ಜಿಲ್ಲೆಯ ಶಾಲೆಗಳಲ್ಲಿ 3,493 ಬೀದಿನಾಯಿಗಳು ಇರುವುದು ಸಮೀಕ್ಷೆಯಲ್ಲಿ ತಿಳಿದುಬಂದಿದೆ. ಕುಮಟಾ ತಾಲೂಕಿನಲ್ಲಿ ಅತಿಹೆಚ್ಚು ನಾಯಿಗಳು ಕಂಡುಬಂದಿವೆ. ನಗರ ಪ್ರದೇಶ, ತ್ಯಾಜ್ಯ ವಿಲೇವಾರಿ ಘಟಕಗಳು, ಮೀನು ಮಾರಾಟ ಸ್ಥಳಗಳು ಇದಕ್ಕೆ ಕಾರಣವಾಗಿವೆ. ಶಿಕ್ಷಣ ಇಲಾಖೆ ಮಕ್ಕಳ ಸುರಕ್ಷತೆಗೆ ಕ್ರಮ ಕೈಗೊಂಡಿದೆ. ಆರೋಗ್ಯ ಇಲಾಖೆಯ ಸಹಯೋಗದಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ನಾಯಿಗಳ ನಿಯಂತ್ರಣಕ್ಕೆ ಸ್ಥಳೀಯ ಸಂಸ್ಥೆಗಳು ಮುಂದಾಗಿವೆ.
ಇಪ್ಪತ್ತರ ಹರೆಯದಲ್ಲೇ ಕೆಲಸದ ಬಗ್ಗೆ ಚಿಂತಿಸಿ, ದುಡಿಯಲು ಶುರು ಮಾಡಿ. ಸಮಾಜ ನಿಮ್ಮ ಬಗ್ಗೆ ಏನು ಯೋಚಿಸುತ್ತೋ ಎನ್ನುವುದನ್ನು ತಲೆಯಿಂದ ತೆಗೆದು ಹಾಕಿ ಯಾರಿಗೂ ಯಾವುದರ ಬಗ್ಗೆಯೂ ಮಾತನಾಡುವಷ್ಟು ಸಮಯವಿಲ್ಲ. ಜೀವನದಲ್ಲಿ ಹೊಸತನ್ನು ಕಲಿತು ಮುನ್ನುಗ್ಗಿ ಎಂದು ಇಪ್ಪತ್ತಾರು ವರ್ಷದ ಮೈಕ್ರೋಸಾಫ್ಟ್ ಕಂಪನಿಯ ಉದ್ಯೋಗಿಯೊಬ್ಬರು ತಮ್ಮ ಎಕ್ಸ್ನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. ಅವರ ಈ ಜೀವನದ ಪಾಠಕ್ಕೆ ನೆಟ್ಟಿಗರು ಮನಸೋತಿದ್ದಾರೆ.
ಕೊಹ್ಲಿ ಇನ್ಸ್ಟಾಗ್ರಾಮ್ ಖಾತೆ ನಿಷ್ಕ್ರಿಯ; ಅನುಷ್ಕಾ ರಿಂದ ಉತ್ತರ ಬಯಸಿದ ಅಭಿಮಾನಿಗಳು!
ಮುಂಬೈ, ಜ.30: ಭಾರತದ ಕ್ರಿಕೆಟ್ ದಂತಕಥೆ ವಿರಾಟ್ ಕೊಹ್ಲಿ ಅವರ ಇನ್ಸ್ಟಾಗ್ರಾಂ ಖಾತೆ ದಿಢೀರನೇ ನಿಷ್ಕ್ರಿಯಗೊಂಡಿರುವುದು ಡಿಜಿಟಲ್ ಜಗತ್ತಿನಲ್ಲಿ ಅಚ್ಚರಿಗೂ ಆತಂಕಕ್ಕೂ ಕಾರಣವಾಗಿದೆ. ಶುಕ್ರವಾರದವರೆಗೆ 27.4 ಕೋಟಿ (274 ಮಿಲಿಯನ್) ಅನುಯಾಯಿಗಳನ್ನು ಹೊಂದಿದ್ದ ಅವರ ಅಧಿಕೃತ ಖಾತೆ ಸಂಪೂರ್ಣವಾಗಿ ಕಾಣೆಯಾಗಿರುವುದು ಲಕ್ಷಾಂತರ ಅಭಿಮಾನಿಗಳಲ್ಲಿ ಗೊಂದಲ ಮತ್ತು ಹತಾಶೆ ಮೂಡಿಸಿದೆ. ಖಾತೆ ನಿಷ್ಕ್ರಿಯಗೊಂಡಿರುವುದು ಶುಕ್ರವಾರ ಮುಂಜಾನೆ ಮೊದಲ ಬಾರಿ ಬೆಳಕಿಗೆ ಬಂದಿದೆ. ವಿರಾಟ್ ಕೊಹ್ಲಿ ಅವರ ಇನ್ಸ್ಟಾಗ್ರಾಂ ಪ್ರೊಫೈಲ್ ತೆರೆಯಲು ಅಭಿಮಾನಿಗಳು ಪ್ರಯತ್ನಿಸಿದಾಗ, “This page isn’t available” ಅಥವಾ “The link may be broken” ಎಂಬ ತಾಂತ್ರಿಕ ಸಂದೇಶಗಳು ಕಾಣಿಸುತ್ತಿವೆ. ಭಾರತದ ಮಾಜಿ ನಾಯಕ ಐಸಿಸಿ ಏಕದಿನ ರ್ಯಾಂಕಿಂಗ್ನಲ್ಲಿ ಅಗ್ರಸ್ಥಾನಕ್ಕೇರಿದ್ದು, ಅದ್ಭುತ ಫಾರ್ಮ್ನಲ್ಲಿರುವ ನಡುವೆಯೇ ಈ ಬೆಳವಣಿಗೆ ಸಂಭವಿಸಿರುವುದು ಅಭಿಮಾನಿಗಳನ್ನು ಇನ್ನಷ್ಟು ಅಚ್ಚರಿಗೆ ದೂಡಿದೆ. ಇತ್ತೀಚೆಗೆ ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಕೊಹ್ಲಿ 124 ರನ್ಗಳ ಶತಕ ಸಿಡಿಸಿದ್ದರು. ವಿರಾಟ್ ಅವರ ‘ಎಕ್ಸ್’ (ಟ್ವಿಟರ್) ಖಾತೆ ಸದ್ಯ ಸಕ್ರಿಯವಾಗಿದ್ದರೂ, ಈ ಕುರಿತು ಯಾವುದೇ ಪೋಸ್ಟ್ ಅಥವಾ ಸ್ಪಷ್ಟನೆ ನೀಡಿಲ್ಲ. ‘ಕಿಂಗ್ ಕೊಹ್ಲಿ’ ಮೌನ ವಹಿಸಿರುವ ಹಿನ್ನೆಲೆಯಲ್ಲಿ, ಅಭಿಮಾನಿಗಳು ಮುಂದಿನ ವಿಶ್ವಾಸಾರ್ಹ ಮಾಹಿತಿ ಮೂಲವೆಂದು ಪರಿಗಣಿಸಲಾದ ಅವರ ಪತ್ನಿ ಹಾಗೂ ನಟಿ ಅನುಷ್ಕಾ ಶರ್ಮಾ ಅವರ ಸಾಮಾಜಿಕ ಜಾಲತಾಣಗಳತ್ತ ಮುಖ ಮಾಡಿದ್ದಾರೆ. ಅನುಷ್ಕಾ ಶರ್ಮಾ ಅವರ ಪೋಸ್ಟ್ಗಳು ಆತಂಕದಲ್ಲಿರುವ ಅಭಿಮಾನಿಗಳಿಗೆ ತಾತ್ಕಾಲಿಕ “ಹೆಲ್ಪ್ಡೆಸ್ಕ್” ಆಗಿರುವಂತಾಗಿದೆ. ಹತಾಶೆಯಿಂದ ಹಿಡಿದು ಹಾಸ್ಯದವರೆಗಿನ ಅನೇಕ ಪ್ರತಿಕ್ರಿಯೆಗಳು ಅವರ ಕಾಮೆಂಟ್ ವಿಭಾಗದಲ್ಲಿ ಹರಿದುಬರುತ್ತಿವೆ. ಆದರೆ ಅನುಷ್ಕಾ ಈವರೆಗೆ ಸಾವಿರಾರು ಪ್ರಶ್ನೆಗಳಿಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಇತ್ತೀಚೆಗೆ ಕುಟುಂಬದ ಖಾಸಗಿತನ ಹಾಗೂ ಕುಟುಂಬದೊಂದಿಗೆ ಹೆಚ್ಚಿನ ಸಮಯ ಕಳೆಯುವ ಕುರಿತು ದಂಪತಿ ನೀಡಿದ್ದ ಹೇಳಿಕೆಯನ್ನು ಉಲ್ಲೇಖಿಸಿ, ಅಭಿಮಾನಿಗಳು ಇದು ಜಾಲತಾಣಗಳಿಂದ ಶಾಶ್ವತ ನಿವೃತ್ತಿಯೇ ಅಥವಾ ತಾತ್ಕಾಲಿಕ ವಿರಾಮವೇ ಎಂಬ ಪ್ರಶ್ನೆ ಎತ್ತುತ್ತಿದ್ದಾರೆ. ಈ ನಿಗೂಢ ಬೆಳವಣಿಗೆಯ ಕುರಿತಂತೆ ಅನುಷ್ಕಾ ಶರ್ಮಾ ಅಥವಾ ವಿರಾಟ್ ಕೊಹ್ಲಿ ಅವರಿಂದ ಸ್ಪಷ್ಟನೆ ಬರಬಹುದೇ ಎಂಬ ನಿರೀಕ್ಷೆಯಲ್ಲಿ ಅಭಿಮಾನಿಗಳು ಕಾಯುತ್ತಿದ್ದಾರೆ.
ಪಶ್ಚಿಮ ಬಂಗಾಳ ಎಸ್ಐಆರ್ | ಸುಪ್ರೀಂ ಕೋರ್ಟ್ನ ದಾರಿ ತಪ್ಪಿಸಿದ ಚುನಾವಣಾ ಆಯೋಗ: ವರದಿ
ಪಶ್ಚಿಮ ಬಂಗಾಳದಲ್ಲಿನ ಎಸ್ಐಆರ್ ಪ್ರಕ್ರಿಯೆ ನಿಜಕ್ಕೂ ಗೊಂದಲದ ಗೂಡಾಗಿರುವ ಮಧ್ಯೆ ತಾರ್ಕಿಕ ವ್ಯತ್ಯಾಸ ಎಂಬ ನೆಪದಲ್ಲಿ ಕೋಟ್ಯಂತರ ಜನರಿಗೆ ನೀಡಲಾಗಿರುವ ನೋಟಿಸ್ ಸಂಬಂಧ ಚುನಾವಣಾ ಆಯೋಗ ಸುಪ್ರೀಂ ಕೋರ್ಟ್ನ ಹಾದಿ ತಪ್ಪಿಸಿದೆ ಎಂದು reporters-collective.in ವರದಿ ಹೇಳಿದೆ. ಒಂದೂವರೆ ಕೊಟಿ ಮತದಾರರಿಗೆ ತಾರ್ಕಿಕ ವ್ಯತ್ಯಾಸ ಎಂಬ ನೆಪದಲ್ಲಿ ನೀಡಿರುವ ನೋಟಿಸ್ಗಳು ಸ್ವಯಂಚಾಲಿತವಲ್ಲ ಎಂದು ನ್ಯಾಯಾಲಯದೆದುರು ಆಯೋಗ ಹೇಳಿದ್ದರೂ, ದೋಷಪೂರಿತ ಮತ್ತು ಸರಿಯಾಗಿ ಪರಿಶೀಲಿಸದ ಪ್ರಕ್ರಿಯೆ ಮೂಲಕ ನೋಟಿಸ್ ಕಳುಹಿಸಲಾಗಿದೆ. ಅಸೆಂಬ್ಲಿ ಮಟ್ಟದ ಅಧಿಕಾರಿಗಳು ಪ್ರತಿಯೊಂದು ಪ್ರಕರಣವನ್ನು ಎಚ್ಚರಿಕೆಯಿಂದ ಪರಿಶೀಲಿಸಿದ ನಂತರವೇ ಪೌರತ್ವ, ಗುರುತು, ಮತದಾನದ ಹಕ್ಕುಗಳನ್ನು ಸಾಬೀತುಪಡಿಸಲು ನೋಟಿಸ್ಗಳನ್ನು ಕಳುಹಿಸಲಾಗಿದೆ ಎಂದು ಆಯೋಗ ಹೇಳಿಕೊಂಡಿದೆ. ಆದರೆ, ಅವುಗಳು ಯಾಂತ್ರೀಕೃತವಾಗಿ ಕಳಿಸಿದ ನೋಟಿಸ್ಗಳಾಗಿವೆ ಎಂದು ಆಯುಷಿ ಕರ್ ಅವರ ತನಿಖಾ ವರದಿ ಬಹಿರಂಗಪಡಿಸಿದೆ. ಚುನಾವಣಾ ಆಯೋಗ ಕೇಂದ್ರೀಕೃತ, ದೋಷಪೂರಿತ ಕ್ರಮ ಅನುಸರಿಸಿರುವುದರಿಂದ ಮತ್ತು ನಿಯಮಿತವಾಗಿ ಪರಿಷ್ಕರಿಸದೇ ಇರುವ ಸಾಫ್ಟ್ವೇರ್ ಅನ್ನು ಬಳಸಿರುವುದರಿಂದ ಪಶ್ಚಿಮ ಬಂಗಾಳದ ಅಧಿಕಾರಿಗಳು 20 ದಿನಗಳಿಗಿಂತ ಕಡಿಮೆ ಅವಧಿಯಲ್ಲಿ 1.5 ಕೋಟಿ ಮತದಾರರ ಪೌರತ್ವ, ಗುರುತು ಮತ್ತು ಮತದಾನದ ಹಕ್ಕುಗಳನ್ನು ನಿರ್ಧರಿಸಲು ಬೇಕಾಬಿಟ್ಟಿ ವಿಚಾರಣೆ ನಡೆಸುವ ಒತ್ತಡಕ್ಕೆ ಸಿಲುಕಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಆಯೋಗದ ಅಧಿಕೃತ ದಾಖಲೆಗಳು ಮತ್ತು ಆಂತರಿಕ ಡೇಟಾವನ್ನು ಪರಿಶೀಲಿಸಿದ್ದಲ್ಲದೆ, ಅದರ ಸಾಫ್ಟ್ವೇರ್ ಅಪ್ಲಿಕೇಶನ್ಗಳ ಕಾರ್ಯನಿರ್ವಹಣೆಯನ್ನು ಗಮನಿಸಿದ ನಂತರ ರಿಪೋರ್ಟರ್ಸ್ ಕಲೆಕ್ಟಿವ್ ಈ ಸತ್ಯವನ್ನು ಕಂಡುಕೊಂಡಿದೆ. ಐದು ವಿಧಾನಸಭಾ ಮಟ್ಟದ ಚುನಾವಣಾಧಿಕಾರಿಗಳು, ಆಯೋಗದ ರಾಜ್ಯ ಕಚೇರಿಯ ಮೂಲ ಮತ್ತು ಹಲವಾರು ಬೂತ್ ಮಟ್ಟದ ಅಧಿಕಾರಿಗಳನ್ನು ಮಾತನಾಡಿಸಿರುವುದಾಗಿ ವರದಿ ಹೆಳಿದೆ. ಚುನಾವಣಾ ನೋಂದಣಿ ಅಧಿಕಾರಿಗಳು (ಇಆರ್ಒ) ಎಲ್ಲವನ್ನೂ ಪರಿಶೀಲಿಸಿ ಸಹಿ ಮಾಡಿ ನೋಟಿಸ್ ಕಳಿಸಿದ್ದಾರೆ ಎಂಬುದು ಸತ್ಯಕ್ಕೆ ದೂರವಾದುದಾಗಿದೆ ಎಂದು ಕಂಡುಕೊಂಡಿದ್ದಾಗಿ ವರದಿ ಹೇಳಿದೆ. ಇಆರ್ಒಗಳು ಕ್ಷೇತ್ರ ಮಟ್ಟದ ಅಧಿಕಾರಿಗಳಾಗಿದ್ದು, ವಿಧಾನಸಭಾ ಕ್ಷೇತ್ರಕ್ಕೆ ಮತದಾರರ ಪಟ್ಟಿ ಸಿದ್ಧಪಡಿಸುವ, ನವೀಕರಿಸುವ ಮತ್ತು ಪರಿಷ್ಕರಿಸುವ ಅಧಿಕಾರ ಮತ್ತು ಹೊಣೆ ಅವರದ್ದಾಗಿದೆ. ನಿಯಮಗಳ ಆಧಾರದ ಮೇಲೆ ಮತದಾರರ ಪಟ್ಟಿಗಳನ್ನು ಅಂತಿಮಗೊಳಿಸುವ ಅಧಿಕಾರ ಇಆರ್ಒಗಳದ್ದಾಗಿದೆ. ಸುಪ್ರೀಂ ಕೋರ್ಟ್ನ ಮುಂದೆ ಆಯೋಗ ಹೇಳಿರುವುದೇ ಬೇರೆ. ಆದರೆ ಅದಕ್ಕೆ ವಿರುದ್ಧವಾಗಿ, ಪಶ್ಚಿಮ ಬಂಗಾಳದಲ್ಲಿ ಕೇಂದ್ರೀಕೃತ ಮತ್ತು ಪರೀಕ್ಷಿಸದ ಕ್ರಮದ ಮೂಲಕ ತಾರ್ಕಿಕ ವ್ಯತ್ಯಾಸ ಎಂಬ ನೆಪದಲ್ಲಿ ನೋಟಿಸ್ಗಳನ್ನು ಸಾಮೂಹಿಕವಾಗಿ ರಚಿಸಲಾಗಿದೆ ಎಂಬುದನ್ನು ಕಂಡುಕೊಂಡಿರುವುದಾಗಿ ವರದಿ ಹೇಳಿದೆ. ಪ್ರತಿದಿನ ಸಾವಿರಾರು ಪ್ರಕರಣಗಳನ್ನು ಪರಿಶೀಲಿಸಬೇಕಾದ ಒತ್ತಡದ ಹಿನ್ನೆಲೆಯಲ್ಲಿ ಇಆರ್ಒಗಳು ಆಯೋಗದ ಅನುಮಾನಾಸ್ಪದ ಸಾಫ್ಟ್ ವೇರ್ ಮೂಲಕ ನೋಟಿಸ್ ರಚಿಸಿದ್ದಾರೆ. ಆಯೋಗ 2002ರ ಮತದಾರರ ಪಟ್ಟಿಗಳ ದಾಖಲೆಗಳನ್ನು ಡಿಜಿಟಲೀಕರಣಗೊಳಿಸಿತು. ಹೆಚ್ಚಿನ ದಾಖಲೆಗಳು ಬಾಂಗ್ಲಾ(ಬಂಗಳಿ)ದಲ್ಲಿದ್ದವು. ಅವುಗಳನ್ನು ಪರೀಕ್ಷಿಸದ ಸಾಫ್ಟ್ವೇರ್ ಮೂಲಕ ಇಂಗ್ಲಿಷ್ಗೆ ಅನುವಾದಿಸಲಾಯಿತು. ಇದಾದ ಬಳಿಕ ಸಾಫ್ಟ್ವೇರ್ 1.31 ಕೋಟಿಗೂ ಹೆಚ್ಚು ಮತದಾರರನ್ನು ಅನುಮಾನಾಸ್ಪದ ಎಂದು ಗುರುತಿಸಿದೆ ಎಂದು ವರದಿ ಹೇಳಿದೆ. ಪರಿಷ್ಕರಣಾ ಕಾರ್ಯದ ಮಧ್ಯದಲ್ಲಿಯೇ ಸಾಫ್ಟ್ವೇರ್ ದೋಷಗಳಿಂದ ತುಂಬಿತ್ತು ಎಂಬುದನ್ನು ಪಶ್ಚಿಮ ಬಂಗಾಳದ ಸಿಇಒ ಕಚೇರಿ ಒಪ್ಪಿಕೊಂಡಿರುವುದಾಗಿ ವರದಿ ಉಲ್ಲೇಖಿಸಿದೆ. ಇಷ್ಟು ದೊಡ್ಡ ಪ್ರಮಾಣದಲ್ಲಿ ದೊಷಗಳನ್ನು ಕಂಡುಕೊಂಡ ಬಳಿಕ ಪ್ರತಿಯೊಬ್ಬ ಮತದಾರರ ಪ್ರಕರಣವನ್ನೂ ಅಧಿಕಾರಿಗಳು ಸ್ವತಃ ಪರೀಕ್ಷಿಸುವುದು, ದೋಷಗಳನ್ನು ಬಗೆಹರಿಸುವುದು ಅಸಾಧ್ಯದ ಕೆಲಸವಾಗಿತ್ತು. ತಪ್ಪಾಗುವ ರಿಸ್ಕ್ ತೆಗೆದುಕೊಳ್ಳಲು ಬಯಸದ ಮತ್ತು ಕಡಿಮೆ ಗಡುವಿನೊಳಗೆ ಕೆಲಸ ಪೂರೈಸುವ ಒತ್ತಡದಲ್ಲಿದ್ದ ಸ್ಥಳೀಯ ಚುನಾವಣಾಧಿಕಾರಿಗಳು ವಿವೇಚನೆ ಕೈಬಿಟ್ಟರು. ಕ್ಷೇತ್ರ ಮಟ್ಟದ ಅಧಿಕಾರಿಗಳು ನೋಟಿಸ್ಗಳನ್ನು ಬೃಹತ್ ಪ್ರಮಾಣದಲ್ಲಿ ಮುದ್ರಿಸಲು ಮತ್ತು ನಂತರ ಸಾಮೂಹಿಕವಾಗಿ ಸಹಿ ಮಾಡಲು ಸಾಫ್ಟ್ವೇರ್ ಬಳಸಿದರು. ಹೀಗಾಗಿ, ಸಣ್ಣ ದೋಷವಿದ್ದರೂ ಅಂಥವರಿಗೂ ತಾರ್ಕಿಕ ವ್ಯತ್ಯಾಸ ಎಂಬ ನೆಪದಲ್ಲಿ ನೋಟಿಸ್ ಹೋಗಿದೆ ಎಂಬುದನ್ನು ಪಶ್ಚಿಮ ಬಂಗಾಳದ ಮುಖ್ಯ ಚುನಾವಣಾ ಕಚೇರಿಯ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ. ಆದರೆ, ಅವರೆಲ್ಲರೂ ವಿಚಾರಣೆಗಾಗಿ ಹಾಜರಾಗಬೇಕಾದ ಅನಿವಾರ್ಯತೆ ಇದೆ. ಇಆರ್ಒಗಳು ಸಣ್ಣ ದೋಷಗಳನ್ನು ಪರಿಶೀಲಿಸುವುದು ಮತ್ತು ಕೈಬಿಡುವುದು ಅಸಾಧ್ಯವಾದ ಕೆಲಸವಾಗಿದೆ ಎಂದು ಅಧಿಕಾರಿಗಳು ಒಪ್ಪಿಕೊಂಡಿದ್ದಾರೆ. 1.5 ಕೋಟಿಗೂ ಹೆಚ್ಚು ಸಮನ್ಸ್ಗಳನ್ನು ಸಿದ್ಧಪಡಿಸಲಾಗಿದ್ದರೂ, ಅಧಿಕಾರಿಗಳು ಕೇವಲ 95.39 ಲಕ್ಷ ಮತದಾರರನ್ನು ಮಾತ್ರ ತಲುಪಲು ಸಾಧ್ಯವಾಗಿದೆ ಎಂಬುದನ್ನು ಜನವರಿ 24 ರವರೆಗಿನ ಡೇಟಾ ಹೇಳುತ್ತಿರುವುದಾಗಿ ವರದಿ ಹೇಳಿದೆ. ಜನವರಿ 24ರ ವೇಳೆಗೆ ಕೇವಲ 30 ಲಕ್ಷ ಮತದಾರರು ವಿಚಾರಣೆಗೆ ಹಾಜರಾಗಿದ್ದಾರೆ. ಒಂದು ತಿಂಗಳ ನಂತರ, ಆಯೋಗ ತನ್ನ ಯೋಜಿತ ವಿಚಾರಣೆಗಳಲ್ಲಿ ಕೇವಲ ಶೇ.20 ಅನ್ನು ಪೂರ್ಣಗೊಳಿಸಿದೆ. ಫೆಬ್ರವರಿ 14ರಂದು ಅಂತಿಮ ಪಟ್ಟಿ ಪ್ರಕಟಿಸುವ ಮೊದಲು ಉಳಿದ ಶೇ.80ರಷ್ಟು, ಅಂದರೆ ಸುಮಾರು 1.2 ಕೋಟಿ ಮತದಾರರ ಪರಿಶೀಲನೆ ನಡೆಸಲು ಮೂರು ವಾರಗಳು ಮಾತ್ರ ಉಳಿದಿವೆ. ಇಲ್ಲಿಯವರೆಗೆ ಪರಿಶೀಲಿಸಲಾದ ಮತದಾರರ ಸಂಖ್ಯೆ ಶೇ.7.24ರಷ್ಟಿದೆ. ಆರಂಭದಲ್ಲಿ 2002-2004ರ ಪಟ್ಟಿಗೆ ಬಹುಪಾಲು ಮತದಾರರನ್ನು ಡಿಜಿಟಲ್ ಲಿಂಕ್ ಮಾಡಲು ಆಯೋಗ ಆಂತರಿಕ ಮ್ಯಾಪಿಂಗ್ ಸಾಫ್ಟ್ವೇರ್ ಅನ್ನು ಸಿದ್ಧಪಡಿಸುತ್ತಿತ್ತು. ಈ ಡಿಜಿಟಲ್ ಪರಿಶೀಲನೆಯಲ್ಲಿ ತೇರ್ಗಡೆಯಾದವರು ಎಣಿಕೆಗಾಗಿ ಯಾವುದೇ ದಾಖಲೆಗಳನ್ನು ಸಲ್ಲಿಸಬೇಕಾಗಿಲ್ಲ ಎನ್ನಲಾಗಿತ್ತು. ಆದರೆ, ಸರಿಯಾದ ಪರಿಶೀಲನೆಗೆ ಒಳಪಟ್ಟಿರದ ಸಾಫ್ಟ್ವೇರ್ ಕಾರಣದಿಂದಾಗಿ ಕೋಟಿಗಟ್ಟಲೆ ಜನರ ಮತದಾನದ ಹಕ್ಕು ಅತಂತ್ರವಾಗುವ ಸ್ಥಿತಿ ಎದುರಾಗಿದೆ. ಡಿಸೆಂಬರ್ 16ರಂದು ಪ್ರಕಟವಾದ ಪಶ್ಚಿಮ ಬಂಗಾಳದ ಕರಡು ಮತದಾರರ ಪಟ್ಟಿಗಳ ಪ್ರಕಾರ, ಪಶ್ಚಿಮ ಬಂಗಾಳದಲ್ಲಿ 32 ಲಕ್ಷಕ್ಕೂ ಹೆಚ್ಚು ಮತದಾರರು ಮ್ಯಾಪ್ ಮಾಡದವರಾಗಿದ್ದರು. ಅಂದರೆ, ಅವರಾಗಲಿ ಅಥವಾ ಅವರ ಪೂರ್ವಜರಾಗಲಿ 2002ರ ಮತದಾರರ ಪಟ್ಟಿಗಳಲ್ಲಿ ಕಾಣಿಸಿಕೊಂಡಿರಲಿಲ್ಲ ಎಂದು ಆಯೋಗ ಗುರುತಿಸಿತ್ತು. ಆದರೆ, ನಂತರ ಸಾಫ್ಟ್ವೇರ್ ಅನ್ನೇ ದೋಷಪೂರಿತ ಎಂದು ಹೇಳಲಾಯಿತು. 2002ರ ಮತದಾರರ ಪಟ್ಟಿಯ ಡಿಜಟಲೀಕರಣದಲ್ಲಿ ದೋಷಗಳಿವೆ ಎಂದು ಡಿಸೆಂಬರ್ 29ರಂದು ಜಿಲ್ಲಾ ಚುನಾವಣಾಧಿಕಾರಿಗಳಿಗೆ ಬರೆದ ಪತ್ರದಲ್ಲಿ ಆಯೋಗದ ಪಶ್ಚಿಮ ಬಂಗಾಳ ಕಚೇರಿ ಒಪ್ಪಿಕೊಂಡಿದ್ದಾಗಿ ವರದಿ ಉಲ್ಲೇಖಿಸಿದೆ. ಪರಿಣಾಮವಾಗಿ, ಮ್ಯಾಪ್ ಮಾಡದ ಮತದಾರರನ್ನು ವೈಯಕ್ತಿಕ ವಿಚಾರಣೆಗೆ ಕರೆಸಲು ಚುನಾವಣಾಧಿಕಾರಿಗಳಿಗೆ ಆಯೋಗ ಅವಕಾಶ ನೀಡಿತು. ಮ್ಯಾಪ್ ಮಾಡದವರು ಎಂದು ಗುರುತಿಸುವ ಮೂಲಕ, ಆಯೋಗ ರಾಜ್ಯದ ಮತದಾರರ ಪಟ್ಟಿಗೆ ಮೋಸದಿಂದ ಸೇರಿಸಲಾದ ಅಕ್ರಮ ವಲಸಿಗರು ಸೇರಿದಂತೆ ಸಂಶಯಾಸ್ಪದ ಮತದಾರರನ್ನು ಗುರುತಿಸುವ ಸಾಧ್ಯತೆ ಇದೆಯಾದರೂ, ಬಂಗಾಳದ ಮತದಾರರಲ್ಲಿ ಕೇವಲ ಶೇ.3 ಮಾತ್ರ ಮ್ಯಾಪ್ ಮಾಡದವರು ಎಂದು ಹೇಳಲಾಗಿದೆ. ಮ್ಯಾಪ್ ಮಾಡಲಾದ ಮತದಾರರಲ್ಲಿ ತಾರ್ಕಿಕ ವ್ಯತ್ಯಾಸಗಳನ್ನು ಕಂಡುಹಿಡಿಯಲು ಈಗ ಅದೇ ಸಾಫ್ಟ್ವೇರ್ ಅನ್ನು ಬಳಸಲಾಗಿದೆ. 2002 ಮತ್ತು 2025ರ ಮತದಾರರ ಪಟ್ಟಿಯಲ್ಲಿರುವ ಹೆಸರುಗಳ ನಡುವೆ ಕಾಗುಣಿತ ವ್ಯತ್ಯಾಸಗಳಿದ್ದರೆ, ಆರು ಅಥವಾ ಹೆಚ್ಚಿನ ಮತದಾರರು ಒಂದೇ ಪೂರ್ವಜರಿಗೆ ಸಂಬಂಧಿಸಿದ್ದರೆ ಅಥವಾ ಮತದಾರರು ಮತ್ತು ಪೂರ್ವಜರ ನಡುವಿನ ವಯಸ್ಸಿನ ವ್ಯತ್ಯಾಸ ಆಯೋಗದ ಮಾನದಂಡಗಳಿಗೆ ಹೊಂದದಿದ್ದರೆ ಅಂಥವರನ್ನು ತಾರ್ಕಿಕ ವ್ಯತ್ಯಾಸದ ಅಡಿಯಲ್ಲಿ ಪಟ್ಟಿ ಮಾಡಲಾಗುತ್ತಿದೆ. ಈಗ 1.31 ಕೋಟಿ ಮತದಾರರು ಇದರ ಅಡಿಯಲ್ಲಿ ಅತಂತ್ರರಾಗಿದ್ದಾರೆ ಮತ್ತು ಇವುಗಳಲ್ಲಿ ಗಂಭೀರ ವ್ಯತ್ಯಾಸಗಳಿಗಿಂತ ಸಣ್ಣಪುಟ್ಟ ದೋಷಗಳಿರುವ ಪ್ರಕರಣಗಳು ಹೆಚ್ಚು ಎಂದು ಬಿಎಲ್ಒಗಳು ಒಪ್ಪಿಕೊಂಡಿದ್ದಾಗಿ ವರದಿ ಹೇಳುತ್ತದೆ. ಇದು ಸಾಮಾನ್ಯವಾಗಿ ಬಾಂಗ್ಲಾದಿಂದ ಇಂಗ್ಲಿಷ್ಗೆ ಮತದಾರರ ಪಟ್ಟಿಯನ್ನು ಸಾಫ್ಟ್ವೇರ್ ಮೂಲಕ ಬದಲಿಸಿರುವಲ್ಲಿ ಆಗಿರುವ ದೋಷ ಎನ್ನಲಾಗಿದೆ. ಈ ನಡುವೆ, ತಾರ್ಕಿಕ ವ್ಯತ್ಯಾಸಗಳ ಕುರಿತು ಸುಪ್ರೀಂ ಕೋರ್ಟ್ನಲ್ಲಿ ಟಿಎಂಸಿ ಸಲ್ಲಿಸಿದ ಅರ್ಜಿಗೆ ಪ್ರತಿಕ್ರಿಯಿಸಿರುವ ಆಯೋಗ, ಇಆರ್ಒಗಳು ವಿವೇಚನೆ ಬಳಸಿ ನೋಟಿಸ್ ನೀಡಿದ್ದಾಗಿ ಹೇಳಿದೆ. ಆದರೆ ವಾಸ್ತವದಲ್ಲಿ ಸೀಮಿತ ಅವಧಿಯಲ್ಲಿ ಇಷ್ಟೊಂದು ನೋಟಿಸ್ ನೀಡುವುದು ಅಸಾಧ್ಯ ಎಂಬುದು ಟಿಎಂಸಿ ವಾದ. ಸಣ್ಣ ದೋಷಗಳನ್ನು ಆಂತರಿಕವಾಗಿ ಪರಿಹರಿಸಲು ಮತ್ತು ಅವರನ್ನು ವಿಚಾರಣೆಗೆ ಕರೆಯದಿರಲು ಸೂಚಿಸಲಾಗಿದೆ ಎಂದು ಆಯೋಗದ ಅಧಿಕಾರಿಗಳು ಹೇಳುತ್ತಿದ್ದರೂ, ವಾಸ್ತವದಲ್ಲಿ ಹಾಗಾಗಿಲ್ಲ. ತಾರ್ಕಿಕ ವ್ಯತ್ಯಾಸ ಎನ್ನಲಾಗಿರುವ ಎಲ್ಲರಿಗೂ ನೋಟಿಸ್ ನೀಡಲಾಗಿದೆ. ಒಂದೇ ಅಕ್ಷರ ವ್ಯತ್ಯಾಸವಾಗಿದ್ದರೂ, ರಿಸ್ಕ್ ತೆಗೆದುಕೊಳ್ಳಲು ತಯಾರಿಲ್ಲ ಎಂದು ಬಿಎಲ್ಒಗಳು ಹೇಳಿರುವುದನ್ನು ವರದಿ ಉಲ್ಲೆಖಿಸಿದೆ. ಈ ಪರಿಸ್ಥಿತಿ ಈಗ ಪಶ್ಚಿಮ ಬಂಗಾಳದ 1.5 ಕೋಟಿ ಜನರು ತಮ್ಮ ಅಸ್ತಿತ್ವ ಮತ್ತು ಮತದಾನದ ಹಕ್ಕುಗಳನ್ನು ಸಾಬೀತುಪಡಿಸಲು ಸರತಿ ಸಾಲಿನಲ್ಲಿ ನಿಲ್ಲುವಂತೆ ಮಾಡಿದೆ. ಈ ವಿಷಯದಲ್ಲಿ ಆಯೋಗ ಸುಪ್ರೀಂ ಕೋರ್ಟ್ ಅನ್ನು ಹಾದಿ ತಪ್ಪಿಸಿರುವುದು ಸ್ಪಷ್ಟ ಎಂದು ವರದಿ ಹೇಳಿದೆ.
ಹಂಪಿಗೆ ವಿಶೇಷ ಪ್ಯಾಕೇಜ್ ನಿರೀಕ್ಷೆ? ಹಣಕಾಸು ಮತ್ತು ಪ್ರವಾಸೋದ್ಯಮ ಸಚಿವರ ಭೇಟಿಯಿಂದ ಗರಿಗೆದರಿದ ನಿರೀಕ್ಷೆ
ಕೇಂದ್ರ ಬಜೆಟ್ ಮಂಡನೆಗೆ ದಿನಗಣನೆ ಹಿನ್ನೆಲೆಯಲ್ಲಿ ಹಂಪಿ ವಿಶೇಷ ಪ್ಯಾಕೇಜ್ ನಿರೀಕ್ಷೆಯಲ್ಲಿದೆ. ಜಾಗತಿಕ ಪ್ರವಾಸಿ ಕೇಂದ್ರವಾಗಿ ರೂಪುಗೊಳ್ಳುತ್ತಿರುವ ಹಂಪಿಗೆ ಮೂಲಸೌಕರ್ಯ ಕಲ್ಪಿಸಲು, ವಿಮಾನ ನಿಲ್ದಾಣ ವಿಸ್ತರಣೆ, ಸ್ಮಾರಕಗಳ ಪುನಶ್ಚೇತನಕ್ಕೆ ಅನುದಾನದ ನಿರೀಕ್ಷೆ ಹೆಚ್ಚಿದೆ.
ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿದ್ದ ಎತ್ತಿನಹೊಳೆ ಯೋಜನೆ
►ಸಿಎಜಿ ವರದಿಯಲ್ಲಿ ಬಹಿರಂಗ ►ಅಧಿವೇಶನದಲ್ಲಿ ವರದಿ ಮಂಡನೆ
Bangladesh out of U19 World Cup: BCB made a lame excuse!
ಢಾಕಾ: U19 ವಿಶ್ವಕಪ್ನಲ್ಲಿ ಬಾಂಗ್ಲಾ ತಂಡ ಟೂರ್ನಿಯಿಂದ ನಿರ್ಗಮಿಸಿದೆ. ಆದರೆ ತಂಡದ ವೈಫಲ್ಯ ಒಪ್ಪಿಕೊಳ್ಳುವ ಬದಲು ಪಂದ್ಯಗಳ ವೇಳಾಪಟ್ಟಿ ಮತ್ತು ಪ್ರಯಾಣ ವ್ಯವಸ್ಥೆಯ ಬಗ್ಗೆ ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿಯನ್ನು ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ದೂಷಿಸಿದೆ. ನ್ಯಾಯಸಮ್ಮತವಲ್ಲದ ವೇಳಾಪಟ್ಟಿ ಹಾಗೂ ಪದೇ ಪದೇ ಪ್ರಯಾಣ ಬೆಳೆಸಬೇಕಾದ ಕಾರಣ, ತಂಡದ ಸಾಮರ್ಥ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗಿದೆ ಎಂದು ಬಿಸಿಬಿ ಆಪಾದಿಸಿದೆ. ಐಸಿಸಿ ಟಿ20 ವಿಶ್ವಕಪ್ ಪಂದ್ಯಗಳಿಗಾಗಿ ಭಾರತಕ್ಕೆ ತಂಡ ಕಳುಹಿಸುವುದಿಲ್ಲ ಎಂದು ಹೇಳಿಕೆ ನೀಡಿ ಟೂರ್ನಿಯನ್ನು ಬಹಿಷ್ಕರಿಸಿರುವ ನಡುವೆಯೇ ಬಿಸಿಬಿ ಈ ಹೇಳಿಕೆ ನೀಡಿದೆ. ಪುರುಷರ ಟಿ20 ಟೂರ್ನಿಗೆ ಇದೀಗ ಬಾಂಗ್ಲಾದೇಶದ ಬದಲು ಸ್ಕಾಟ್ಲೆಂಡ್ ತಂಡಕ್ಕೆ ಅವಕಾಶ ಲಭ್ಯವಾಗಿದೆ. ಇದೀಗ ಬಿಸಿಬಿ ಮ್ಯಾಚ್ ಡೆವಲಪ್ಮೆಂಟ್ ಸಂಚಾಲಕ ಹಬೀಬುಲ್ ಹಶೀರ್ ದೇಶದ 19ರ ವಯೋಮಿತಿಯ ತಂಡದ ಪ್ರವಾಸ ಯೋಜನೆ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ತಂಡದ ಮನಸ್ಥಿತಿಯ ಬದಲಾಗಿ ಇಂಗ್ಲೆಂಡ್ ಹಾಗೂ ಭಾರತ ವಿರುದ್ಧ ನಮ್ಮ ಲೆಕ್ಕಾಚಾರಗಳು ಕೈಕೊಟ್ಟವು. ನಾನು ನೆಪಗಳನ್ನು ಮುಂದಿಡುತ್ತಿದ್ದೇನೆ ಎಂದು ಜನ ಭಾವಿಸಿದರೂ ಪ್ರಯಾಣದ ವೇಳಾಪಟ್ಟಿಯ ಬಗ್ಗೆ ನಾನು ಹೇಳಲೇಬೇಕು. ಭಾರತ ವಿರುದ್ಧದ ಪಂದ್ಯಗಳ ಮುನ್ನ ನಮ್ಮ ಹುಡುಗರು ಸುಧೀರ್ಘ ಬಸ್ ಪ್ರಯಾಣ ಮಾಡಿ ತೀರಾ ದಣಿಯುವುದನ್ನು ತಪ್ಪಿಸಲು, ನೇರ ವಿಮಾನ ಇಲ್ಲದ ಕಾರಣ ಬಿಸಿಬಿ ಬಸ್ ಪ್ರಯಾಣದ ಬದಲು ದೇಶೀಯ ವಿಮಾನ ಪ್ರಯಾಣಕ್ಕೆ ಪಾವತಿಸಿತ್ತು ಎಂದು ಅವರು ಹೇಳಿದ್ದಾರೆ. ಬಾಂಗ್ಲಾದೇಶದ ಮುಖ್ಯ ಕೋಚ್ ನವೀದ್ ನವಾಝ್ ಮತ್ತು ಹಲವು ಆಟಗಾರರು ಪಂದ್ಯಗಳ ವೇಳಾಪಟ್ಟಿ ಬಗ್ಗೆ ಹತಾಶೆ ವ್ಯಕ್ತಪಡಿಸಿದ್ದಾರೆ. ಆರಂಭಿಕ ಪಂದ್ಯಕ್ಕೆ ತಂಡ ಹರಾರೆಯಿಂದ ಬುಲವಯೊ ಪಟ್ಟಣಕ್ಕೆ ಮಳೆಗಾಲದಲ್ಲಿ ಒಂಬತ್ತು ಗಂಟೆ ಕಾಲ ಬಸ್ ಪ್ರಯಾಣ ಕೈಗೊಳ್ಳಬೇಕಾಯಿತು. ಭಾರತ ಹಾಗೂ ನ್ಯೂಝಿಲೆಂಡ್ ತಂಡಗಳ ವಿರುದ್ಧದ ಮಹತ್ವದ ಪಂದ್ಯಗಳಿಗಾಗಿ ಬಿಸಿಬಿ ಆಂತರಿಕ ವಿಮಾನ ವ್ಯವಸ್ಥೆ ಮಾಡಿತ್ತು. ಜನವರಿ 23ರಂದು ಹರಾರೆಯಲ್ಲಿ ಅಮೆರಿಕ ವಿರುದ್ಧದ ಪಂದ್ಯಕ್ಕೂ ಬಸ್ಸಿನಲ್ಲಿ ಮರಳುವ ಬದಲು ವಿಮಾನ ಪ್ರಯಾಣಕ್ಕೆ ಬೇಡಿಕೆ ಇತ್ತು. ಬಳಿಕ ಇಂಗ್ಲೆಂಡ್ ವಿರುದ್ಧ ಜ.26ರಂದು ನಡೆದ ಸೂಪರ್ ಸಿಕ್ಸ್ ಪಂದ್ಯಕ್ಕೂ ಬುಲವಯೊಗೆ ಪ್ರಯಾಣಿಸಲು ವಿಮಾನದ ಬೇಡಿಕೆ ಇತ್ತು. ವೇಳಾಪಟ್ಟಿಗಳು ನಮಗೆ ನ್ಯಾಯಸಮ್ಮತವಾಗಿರಲಿಲ್ಲ. ಆರಂಭಿಕ ವೇಳಾಪಟ್ಟಿಯಂತೆ ನಾವು ಎರಡು ಅಭ್ಯಾಸ ಪಂದ್ಯಗಳನ್ನು ಮಸ್ವಿಂಗೊ ಮತ್ತು ಬುಲಾವಿಯೊದಲ್ಲಿ ಆಡಬೇಕಿತ್ತು. ಬಳಿಕ ಐಸಿಸಿ ದಿಢೀರನೇ ವೇಳಾಪಟ್ಟಿ ಬದಲಿಸಿ, ಸ್ಥಳಗಳನ್ನು ಬದಲಿಸಿದ್ದರಿಂದ ಹೆಚ್ಚಿನ ಪ್ರಯಾಣ ಮಾಡಬೇಕಾಯಿತು ಎಂದು ಹಶೀರ್ ಹೇಳಿದ್ದಾರೆ.
COMEDK–UGET 2026 ಪ್ರವೇಶ ಪರೀಕ್ಷೆ ಮೇ 9ಕ್ಕೆ ನಿಗದಿ, ಫೆಬ್ರವರಿ 3ರಿಂದ ಅರ್ಜಿ ಸಲ್ಲಿಕೆ ಪ್ರಾರಂಭ
ಬೆಂಗಳೂರು: ಕಾಮೆಡ್ಕೆ ಪ್ರವೇಶ ಪರೀಕ್ಷೆಗೆ ಸಂಬಂಧಿಸಿದಂತೆ ಮಹತ್ವದ ಅಪ್ಡೇಟ್ಸ್ ಬಂದಿದೆ. ಕರ್ನಾಟಕದ ವೈದ್ಯಕೀಯ, ಎಂಜಿನಿಯರಿಂಗ್ ಹಾಗೂ ದಂತ ಕಾಲೇಜುಗಳ ಒಕ್ಕೂಟ (COMEDK) 2026-27ನೇ ಸಾಲಿನ ಶೈಕ್ಷಣಿಕ ವರ್ಷದ ಪ್ರವೇಶ ಪರೀಕ್ಷೆಯನ್ನು ಮೇ 9 (ಶನಿವಾರ) ರಂದು ನಡೆಸಲು ನಿರ್ಧರಿಸಲಾಗಿದೆ. COMEDK-UGET ಎಂದು ಕರೆಯಲ್ಪಡುವ ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳು ರಾಜ್ಯದಾದ್ಯಂತ 150ಕ್ಕೂ ಹೆಚ್ಚು ಖಾಸಗಿ ಅನುದಾನರಹಿತ ಕಾಲೇಜುಗಳಲ್ಲಿ ವಿವಿಧ
Uttar Pradesh| ದಂಪತಿ ಮೃತ್ಯು, ಮೂವರು ಮಕ್ಕಳು ಗಂಭೀರ; ವಿಷಪ್ರಾಶನ ಶಂಕೆ
ಗ್ರೇಟರ್ ನೋಯ್ಡಾ, ಜ.30: ಗ್ರೇಟರ್ ನೋಯ್ಡಾದ ಸಾದುಲ್ಲಾಪುರ ಗ್ರಾಮದಲ್ಲಿ ಪತಿ–ಪತ್ನಿ ಮೃತ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಅವರ ಮೂವರು ಮಕ್ಕಳು ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿರುವ ಘಟನೆ ಗುರುವಾರ ಬೆಳಕಿಗೆ ಬಂದಿದೆ. ಪೋಷಕರು ಮಕ್ಕಳಿಗೆ ವಿಷಪ್ರಾಶನ ಮಾಡಿಸಿ ಬಳಿಕ ಆತ್ಮಹತ್ಯೆ ಮಾಡಿಕೊಂಡಿರಬಹುದೆಂಬ ಶಂಕೆಯ ಮೇರೆಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇದು ವಿಷಪ್ರಾಶನದಿಂದ ಸಂಭವಿಸಿದ ಪ್ರಕರಣವೇ ಎಂಬುದರ ಜೊತೆಗೆ, ಕೊಲೆ–ಆತ್ಮಹತ್ಯೆ ಯತ್ನದ ಸಾಧ್ಯತೆಯನ್ನೂ ಪರಿಶೀಲಿಸಲಾಗುತ್ತಿದೆ. ಇದುವರೆಗೆ ಹಣಕಾಸು ತೊಂದರೆ ಅಥವಾ ಯಾವುದೇ ತಕ್ಷಣದ ಕಾರಣ ಪತ್ತೆಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಗುರುವಾರ ಬೆಳಿಗ್ಗೆ ಒಳಗಿನಿಂದ ಬೀಗ ಹಾಕಿದ್ದ ಮನೆಯೊಳಗೆ ಕುಟುಂಬದ ಎಲ್ಲ ಸದಸ್ಯರು ಪ್ರಜ್ಞಾಹೀನ ಸ್ಥಿತಿಯಲ್ಲಿ ಕಂಡುಬಂದಿದ್ದಾರೆ ಎಂಬ ಮಾಹಿತಿ ಸಂಬಂಧಿಕರಿಂದ ಲಭಿಸಿತು. ಮೇಲ್ನೋಟಕ್ಕೆ ಐವರಲ್ಲಿಯೂ ವಿಷಪ್ರಾಶನದ ಲಕ್ಷಣಗಳು ಕಂಡುಬಂದಿವೆ ಎಂದು ಸೆಂಟ್ರಲ್ ನೋಯ್ಡಾದ ಹೆಚ್ಚುವರಿ ಉಪ ಪೊಲೀಸ್ ಆಯುಕ್ತ (ಎಡಿಸಿಪಿ) ಸಂತೋಷ್ ಕುಮಾರ್ ತಿಳಿಸಿದ್ದಾರೆ. ಎಲ್ಲರನ್ನೂ ತಕ್ಷಣ ಸ್ಥಳೀಯ ಆಸ್ಪತ್ರೆಗೆ ಸಾಗಿಸಲಾಗಿದ್ದು, 42 ಮತ್ತು 38 ವರ್ಷದ ಪತಿ–ಪತ್ನಿ ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದರು. ಅವರ 10 ವರ್ಷದ ಪುತ್ರಿ, 8 ವರ್ಷದ ಪುತ್ರ ಮತ್ತು 4 ವರ್ಷದ ಪುತ್ರಿಯನ್ನು ಗಂಭೀರ ಸ್ಥಿತಿಯಲ್ಲಿ ದೆಹಲಿಯ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಮೃತ ಮಹಿಳೆ ಐದು ತಿಂಗಳ ಗರ್ಭಿಣಿಯಾಗಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ. “ಪ್ರಕರಣ ತನಿಖೆಯಲ್ಲಿದೆ. ಪ್ರಸ್ತುತ ಇದು ಆತ್ಮಹತ್ಯೆಯ ಪ್ರಕರಣವಾಗಿರಬಹುದು ಎಂದು ತೋರುತ್ತಿದೆ,” ಎಂದು ಎಡಿಸಿಪಿ ಸಂತೋಷ್ ಕುಮಾರ್ ಹೇಳಿದ್ದಾರೆ. 10 ವರ್ಷದ ಪುತ್ರಿ ನೀಡಿದ ಮಾಹಿತಿಯಂತೆ, ಕುಟುಂಬದವರು ಕೊನೆಯದಾಗಿ ಬುಧವಾರ ರಾತ್ರಿ ಭೋಜನ ಸೇವಿಸಿದ್ದರು. ಗುರುವಾರ ಬೆಳಿಗ್ಗೆ ಸುಮಾರು 8.30ರ ವೇಳೆಗೆ ಆಕೆ ಎಚ್ಚರಗೊಂಡು, ತನ್ನ ತಾಯಿ–ತಂದೆ ಎಚ್ಚರಗೊಳ್ಳುತ್ತಿಲ್ಲ ಎಂದು ಅಜ್ಜನಿಗೆ ತಿಳಿಸಿದ್ದಾಳೆ. ಭೋಜನದಲ್ಲಿ ವಿಷ ಮಿಶ್ರಣವಾಗಿರಬಹುದೆಂಬ ಶಂಕೆಯಿದ್ದು, ಯಾವ ವಿಧದ ವಿಷ ಬಳಸಲಾಗಿದೆ ಎಂಬುದನ್ನು ಪತ್ತೆಹಚ್ಚಲು ಮರಣೋತ್ತರ ಪರೀಕ್ಷೆ ಹಾಗೂ ಫೊರೆನ್ಸಿಕ್ ವರದಿಗಳ ನಿರೀಕ್ಷೆಯಲ್ಲಿ ಪೊಲೀಸರು ಇದ್ದಾರೆ.
Uttar Pradesh| ವಿಷಪ್ರಾಶನ, ಆತ್ಮಹತ್ಯೆ ಶಂಕೆ: ದಂಪತಿ ಮೃತ್ಯು; ಮೂವರು ಮಕ್ಕಳು ಗಂಭೀರ
ನೋಯ್ಡಾ: ಮಕ್ಕಳಿಗೆ ವಿಷಪ್ರಾಶನ ಮಾಡಿಸಿ ದಂಪತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗುರುವಾರ ಬೆಳಕಿಗೆ ಬಂದಿದೆ. ಘಟನೆಯಲ್ಲಿ ತಂದೆ-ತಾಯಿ ಇಬ್ಬರೂ ಮೃತಪಟ್ಟಿದ್ದು, ಮೂವರು ಮಕ್ಕಳ ಸ್ಥಿತಿ ಗಂಭೀರವಾಗಿದೆ. ಮಕ್ಕಳಿಗೆ ವಿಷಪ್ರಾಶನ ಮಾಡಿಸಿ ಬಳಿಕ ದಂಪತಿಯೂ ಆತ್ಮಹತ್ಯೆ ಮಾಡಿಕೊಂಡಿರಬಹುದೆಂಬ ಶಂಕೆ ವ್ಯಕ್ತವಾಗಿದ್ದು, ಪ್ರಕರಣದ ಎಲ್ಲ ಆಯಾಮಗಳ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಹಣಕಾಸು ಸಮಸ್ಯೆ ಅಥವಾ ಇತರೆ ಕಾರಣಗಳು ಈ ಕೃತ್ಯಕ್ಕೆ ಕಾರಣವಾಗಿರಬಹುದೇ ಎಂಬ ದಿಕ್ಕಿನಲ್ಲೂ ತನಿಖೆ ನಡೆಯುತ್ತಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಗ್ರೇಟರ್ ನೋಯ್ಡಾದ ಸಾದುಲ್ಲಾಪುರ ಗ್ರಾಮದಲ್ಲಿ ಈ ದುರ್ಘಟನೆ ಸಂಭವಿಸಿದೆ. ಗುರುವಾರ ಬೆಳಗ್ಗೆ ಒಳಗಿನಿಂದ ಬೀಗ ಹಾಕಿದ್ದ ಮನೆಯಲ್ಲಿ ಕುಟುಂಬದ ಎಲ್ಲಾ ಸದಸ್ಯರು ಪ್ರಜ್ಞಾಹೀನ ಸ್ಥಿತಿಯಲ್ಲಿ ಇದ್ದಾರೆ ಎಂಬ ಮಾಹಿತಿ ಸಂಬಂಧಿಕರಿಂದ ಲಭಿಸಿತ್ತು. ಮೇಲ್ನೋಟಕ್ಕೆ ಎಲ್ಲರೂ ವಿಷಸೇವಿಸಿದಂತೆ ಕಾಣುತ್ತಿದೆ ಎಂದು ಎಡಿಸಿಪಿ ಸಂತೋಷ್ ಕುಮಾರ್ ತಿಳಿಸಿದ್ದಾರೆ. ಎಲ್ಲರನ್ನೂ ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದ್ದು, 42 ಹಾಗೂ 38 ವರ್ಷದ ದಂಪತಿ ಮೃತಪಟ್ಟಿದ್ದಾರೆ. 10 ಮತ್ತು 4 ವರ್ಷದ ಇಬ್ಬರು ಪುತ್ರಿಯರು ಹಾಗೂ 8 ವರ್ಷದ ಪುತ್ರನ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಮಕ್ಕಳನ್ನು ಹೆಚ್ಚಿನ ಚಿಕಿತ್ಸೆಗೆ ದೆಹಲಿಯ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಮೃತ ಮಹಿಳೆ ಐದು ತಿಂಗಳ ಗರ್ಭಿಣಿಯಾಗಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.
ಯುಜಿಸಿ ನಿಯಮಾವಳಿಗೆ ತಡೆ: ಕೊಟ್ಟಂತೆ ಮಾಡಿ ಕಿತ್ತುಕೊಳ್ಳುವ ಹುನ್ನಾರ!
ಎಡಗೈಯಲ್ಲಿ ಕೊಟ್ಟು, ಬಲಗೈಯಲ್ಲಿ ಕಿತ್ತುಕೊಳ್ಳುವುದು ಎಂದರೆ ಇದೇ ಇರಬೇಕು. ಸುಪ್ರೀಂಕೋರ್ಟ್ನ ಸೂಚನೆಯನ್ವಯ ಯುಜಿಸಿಯು ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ತಾರತಮ್ಯವನ್ನು ತಡೆಯಲು ನೂತನ ನಿಯಮಾವಳಿಗಳನ್ನು ಜಾರಿಗೆ ತಂದಿತ್ತು. ಇದೀಗ ಆ ನಿಯಮಾವಳಿಗಳಿಗೆ ಅದೇ ಸುಪ್ರೀಂಕೋರ್ಟ್ ಗುರುವಾರ ತಡೆಯಾಜ್ಞೆ ನೀಡಿದೆ. ನಿಯಮಾವಳಿಗಳು ಜನರನ್ನು ವಿಂಗಡಿಸುತ್ತವೆ, ತಾರತಮ್ಯದಿಂದ ಕೂಡಿದೆ ಹಾಗೂ ಸಂವಿಧಾನವನ್ನು ಉಲ್ಲಂಘಿಸುತ್ತದೆ ಎಂದು ಆರೋಪಿಸಿ ಕೆಲವರು ಸುಪ್ರೀಂಕೋರ್ಟ್ ಮೊರೆ ಹೋಗಿದ್ದರು. ನಿಯಮಾವಳಿಗಳು ಜಾರಿಗೆ ಬಂದ ದಿನದಿಂದ ಇದರ ವಿರುದ್ಧ ಮೇಲ್ಜಾತಿಯ ಕೆಲವು ಗುಂಪುಗಳು ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದರೆ, ಬಿಜೆಪಿಯೊಳಗಿರುವ ಕೆಲವು ಜನಪ್ರತಿನಿಧಿಗಳು ತಮ್ಮದೇ ಸರಕಾರದ ವಿರುದ್ಧ ಧ್ವನಿಯೆತ್ತ ತೊಡಗಿದ್ದರು. ಭವಿಷ್ಯದಲ್ಲಿ ಮೇಲ್ಜಾತಿಯ ವಿದ್ಯಾರ್ಥಿಗಳು ಮತ್ತು ಶಿಕ್ಷಣ ಸಂಸ್ಥೆಯ ಸಿಬ್ಬಂದಿಯ ಮೇಲೆ ನಡೆಯಬಹುದಾದ ದೌರ್ಜನ್ಯಗಳನ್ನು ಊಹಿಸಿ ಕೆಲವರು ಈ ನಿಯಮಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸ ತೊಡಗಿದ್ದಾರೆ. ಆದರೆ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿಯ ಹೆಸರಿನಲ್ಲಿ ನಡೆಯುತ್ತಿರುವ ತಾರತಮ್ಯ, ದೌರ್ಜನ್ಯಗಳಿಂದಾಗಿ ಕಳೆದ ಹತ್ತು ವರ್ಷಗಳಲ್ಲಿ ಸಾವಿರಾರು ವಿದ್ಯಾರ್ಥಿಗಳು ಶಿಕ್ಷಣವನ್ನು ತೊರೆದಿದ್ದಾರೆ. ನೂರಾರು ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹಲವು ಸಂಘಟನೆಗಳು ಇದರ ವಿರುದ್ಧ ಬೀದಿಗಿಳಿದು ಪ್ರತಿಭಟನೆ ನಡೆಸಿವೆ. ಈ ಸಂತ್ರಸ್ತ ಸಮುದಾಯಗಳ ನೋವಿಗೆ ಸುಪ್ರೀಂಕೋರ್ಟ್ ಕಿವಿಯಾಗುವ ಬದಲು, ಆರೋಪಿ ಸ್ಥಾನದಲ್ಲಿ ನಿಂತಿರುವ ಜನರ ಧ್ವನಿಯಾಗಲು ಹೊರಟಿದೆಯೇ ಎಂದು ಜನರು ಅನುಮಾನಿಸುವಂತಾಗಿದೆ.ನಿಯಮಾವಳಿಗಳಲ್ಲಿ ಇರುವ ಸಣ್ಣ ಪುಟ್ಟ ತಾಂತ್ರಿಕ ದೋಷಗಳ ಕಾರಣಕ್ಕಾಗಿ ಮತ್ತು ಅದನ್ನು ಸರಿಪಡಿಸುವ ನಿಟ್ಟಿನಲ್ಲಿ ಸುಪ್ರೀಂಕೋರ್ಟ್ ಈ ತಡೆಯಾಜ್ಞೆಯನ್ನು ನೀಡಿರುವುದಾಗಿದ್ದರೆ ಅದನ್ನು ಒಪ್ಪಿಕೊಳ್ಳಬಹುದಾಗಿತ್ತು. ಆದರೆ ತಡೆಯಾಜ್ಞೆಯನ್ನು ನೀಡುವ ಸಂದರ್ಭದಲ್ಲಿ ಸುಪ್ರೀಂಕೋರ್ಟ್ ಆಡಿರುವ ಮಾತುಗಳು ಬೇರೆಯೇ ಅರ್ಥವನ್ನು, ಸಂದೇಶವನ್ನು ನೀಡುತ್ತದೆ. ‘‘ಜಾತಿ ಆಧಾರಿತ ತಾರತಮ್ಯವನ್ನು ರೂಪಿಸುವ ಕೆಲವು ನಿಯಮಗಳು ಅಸ್ಪಷ್ಟವಾಗಿವೆ ಮತ್ತು ದುರುಪಯೋಗ ಪಡಿಸಿಕೊಳ್ಳಬಹುದಾಗಿದೆ’’ ಎಂದು ಸುಪ್ರೀಂಕೋರ್ಟ್ ಅಭಿಪ್ರಾಯ ಪಡುತ್ತಿದೆ. ಹಾಗೆ ನೋಡಿದರೆ ದುರುಪಯೋಗದ ಮಾತುಗಳು ಕೇವಲ ಯುಜಿಸಿ ನಿಯಮಾವಳಿಗೆ ಮಾತ್ರ ಅನ್ವಯಿಸುತ್ತದೆಯೆ? ಯುಎಪಿಎ ಕಾಯ್ದೆಗಳ ದುರುಪಯೋಗಕ್ಕಾಗಿ ಇಂದು ಭಾರತವು ವಿಶ್ವದಲ್ಲೇ ಕುಖ್ಯಾತವಾಗಿದೆ. ಪ್ರತಿ ನಿತ್ಯ ಗೋಹತ್ಯೆ ನಿಷೇಧ ಕಾಯ್ದೆಗಳು, ಮತಾಂತರ ಕಾಯ್ದೆಗಳು ದುರುಪಯೋಗವಾಗುತ್ತಿರುವುದು ಸುಪ್ರೀಂಕೋರ್ಟ್ಗೆ ಕಾಣುತ್ತಿಲ್ಲವೆ? ದೇಶದಲ್ಲಿ ಕೆಲವು ಕಾಯ್ದೆಗಳು ದುರುಪಯೋಗವಾಗುತ್ತಿರುವುದು ಎಷ್ಟು ನಿಜವೋ, ಇನ್ನು ಕೆಲವು ಕಾಯ್ದೆಗಳನ್ನು ದುರುಪಯೋಗ ಪಡಿಸುವುದಕ್ಕಾಗಿಯೇ ಜಾರಿಗೆ ತರಲಾಗಿದೆ ಎನ್ನುವುದು ಅಷ್ಟೇ ನಿಜ. ಸುಪ್ರೀಂಕೋರ್ಟ್ ಇವೆಲ್ಲದರ ಕುರಿತಂತೆ ಮೌನವಾಗಿದ್ದು, ಯುಜಿಸಿಯ ಈ ನಿಯಮಗಳ ಬಗ್ಗೆ ಮಾತ್ರ ಯಾಕೆ ತಲೆಕೆಡಿಸಿಕೊಳ್ಳುತ್ತಿದೆ? ಈ ದೇಶದಲ್ಲಿ ತಲೆತಲಾಂತರಗಳಿಂದ ಜಾತಿ ತಾರತಮ್ಯ, ಜಾತಿ ದೌರ್ಜನ್ಯಗಳು ಅಸ್ತಿತ್ವದಲ್ಲಿವೆ. ವಿಪರ್ಯಾಸವೆಂದರೆ ಈ ಜಾತಿ ದೌರ್ಜನ್ಯಗಳ ಬಗ್ಗೆ ಕಣ್ಣಿದ್ದೂ ಕುರುಡಾಗಿರುವ ಮೇಲ್ಜಾತಿಯ ಜನರು, ಜಾತಿದೌರ್ಜನ್ಯ ವಿರೋಧಿ ಕಾನೂನು ಎಲ್ಲೋ ಒಂದೆರಡು ಬಾರಿ ದುರುಪಯೋಗವಾದಾಕ್ಷಣ, ಆ ಕಾನೂನಿನ ಔಚಿತ್ಯವನ್ನೇ ಪ್ರಶ್ನಿಸತೊಡಗುತ್ತಾರೆ. ಇದೀಗ ಯುಜಿಸಿ ನಿಯಮಗಳನ್ನು ಪ್ರಶ್ನಿಸುತ್ತಿರುವವರೂ ಅದೇ ವರ್ಗದ ಜನರು. ಅವರ ರಾಗಕ್ಕೆ ಸುಪ್ರೀಂಕೋರ್ಟ್ ತಾಳ ಹಾಕಲು ಮುಂದಾಗಿರುವುದು ಕಳವಳಕಾರಿಯಾಗಿದೆ. ‘‘ದೇಶವು ಹಿಂದಕ್ಕೆ ಚಲಿಸುತ್ತಿದೆಯೆ? ಜಾತಿ ರಹಿತ ಸಮಾಜವನ್ನು ಸಾಧಿಸುವ ನಿಟ್ಟಿನಲ್ಲಿ ಏನು ಸಾಧಿಸಿದ್ದೇವೆಯೋ ಈಗ ನಾವು ಅದರಿಂದ ಹಿಂದೆ ಹೋಗಬೇಕೆ?’’ ಎಂದೂ ಸುಪ್ರೀಂಕೋರ್ಟ್ ಕೇಳಿದೆ. ಈ ಪ್ರಶ್ನೆಯನ್ನು ನಿಯಮಾವಳಿಯನ್ನು ವಿರೋಧಿಸುತ್ತಿರುವವರೊಂದಿಗೆ ಕೇಳಿದೆಯೋ ಅಥವಾ ಸರಕಾರವನ್ನು ಕೇಳಿದೆಯೋ ಎನ್ನುವ ಗೊಂದಲವಿದೆ. ಜಾತಿ ರಹಿತ ಸಮಾಜವನ್ನು ಸಾಧಿಸುವ ನಿಟ್ಟಿನಲ್ಲಿ ಭಾರತ ಸಂಪೂರ್ಣ ವಿಫಲವಾಗಿದೆ ಎನ್ನುವುದರಲ್ಲಿ ಸುಪ್ರೀಂಕೋರ್ಟ್ಗೆ ಅನುಮಾನವಿದೆಯೆ? ನ್ಯಾಯದೇವತೆಯ ಪ್ರತಿಮೆಯ ಕಣ್ಣಿನ ಪಟ್ಟಿ ಬಿಚ್ಚಿದ ಬಳಿಕವೂ ಈ ದೇಶದಲ್ಲಿ ನಡೆಯುತ್ತಿರುವ ಜಾತಿ ದೌರ್ಜನ್ಯಗಳು, ಜಾತಿ ಅಸಮಾನತೆಗಳು ಯಾಕೆ ನ್ಯಾಯಾಲಯಕ್ಕೆ ಕಾಣುತ್ತಿಲ್ಲ? ಯುಜಿಸಿಯ ಈ ನಿಯಮಗಳಿಂದಾಗಿ ಉನ್ನತ ಶಿಕ್ಷಣ ವ್ಯವಸ್ಥೆಯೊಳಗೆ ಜಾತಿ ತಾರತಮ್ಯ ಸೃಷ್ಟಿಯಾಗಿದೆ ಎಂದು ಸುಪ್ರೀಂಕೋರ್ಟ್ ಭಾವಿಸುತ್ತದೆಯೆ ? ಯುಜಿಸಿಯು ಕಠಿಣ ಕಾನೂನನ್ನು ಜಾರಿಗೆ ತರಲು ಹೊರಟಿರುವುದೇ ಜಾತಿ ರಹಿತ ಸಮಾಜವನ್ನು ಸಾಧಿಸುವುದಕ್ಕಾಗಿ ಎನ್ನುವುದು ಸುಪ್ರೀಂಕೋರ್ಟ್ಗೆ ಯಾಕೆ ಅರ್ಥವಾಗಿಲ್ಲ? ಅಥವಾ ಜಾತಿ ತಾರತಮ್ಯದ ವಿಷಯದಲ್ಲಿ ಸುಪ್ರೀಂಕೋರ್ಟ್ ನಿದ್ರೆಯಲ್ಲಿರುವಂತೆ ನಟಿಸುತ್ತಿದೆಯೆ? ಈ ದೇಶದ ಉನ್ನತ ಶಿಕ್ಷಣದಲ್ಲಿ ಎಲ್ಲ ಜಾತಿ, ಸಮುದಾಯ ಒಳಗೊಳ್ಳುವಂತಾಗಬೇಕಾದರೆ ಅಲ್ಲಿ ಜಾತಿ ತಾರತಮ್ಯ ಅಳಿಯಬೇಕು. ಅದಕ್ಕಾಗಿ ಕಠಿಣ ಕಾನೂನಿನ ಮಾತ್ರ ಅದನ್ನು ಸಾಧಿಸಬಹುದಾಗಿದೆ. ಉನ್ನತ ಶಿಕ್ಷಣದಲ್ಲಿ ಜಾತಿ ತಾರತಮ್ಯಗಳ ಕುರಿತಂತೆ ಹಲವು ಸಂಘಟನೆಗಳು ವರದಿಗಳನ್ನು ನೀಡಿವೆ. ಈ ತಾರತಮ್ಯಕ್ಕೆ ಬಲಿಯಾದವರ ಕುರಿತಂತೆ ಸರಕಾರದ ಬಳಿ ಅಧಿಕೃತ ಅಂಕಿಅಂಶಗಳೂ ಇವೆ. ಈ ಹಿನ್ನೆಲೆಯಲ್ಲಿ ಯುಜಿಸಿಗೆ ಇಂತಹದೊಂದು ನಿಯಮಗಳನ್ನು ಜಾರಿಗೆ ತರುವ ಅನಿವಾರ್ಯ ಸೃಷ್ಟಿಯಾಯಿತು. ಇದು ಸುಪ್ರೀಂಕೋರ್ಟ್ಗೆ ತಿಳಿಯದಿರುವುದೇನೂ ಅಲ್ಲ. ಇತ್ತ ಬಿಜೆಪಿಯೂ ಅಡ್ಡಗೋಡೆಯಲ್ಲಿ ದೀಪವಿಡುವ ಪ್ರಯತ್ನ ನಡೆಸುತ್ತಿದೆ. ಹಿಂದುಳಿದವರ್ಗಗಳನ್ನು ಒಲಿಸಿಕೊಳ್ಳಲು ನಿಯಮಗಳನ್ನು ಜಾರಿಗೆ ತರುವ ನಟನೆಯನ್ನಷ್ಟೇ ಮಾಡಿ, ಒಳಗಿನಿಂದಲೇ ಅದರ ವಿರುದ್ಧ ಸಂಚುಗಳನ್ನು ನಡೆಸುತ್ತಿದೆ. ಯುಜಿಸಿಯ ನಿಯಮಗಳ ವಿರುದ್ಧ ಆರೆಸ್ಸೆಸ್ ಸಂಘಟನೆಯೂ ಅಸಮಾಧಾನವನ್ನು ಹೊಂದಿದ್ದು ಸರಕಾರದ ಮೇಲೆ ಒತ್ತಡಗಳನ್ನು ಹಾಕತೊಡಗಿದೆ. ಹೇಗೆ ಯಾವ ಹೋರಾಟಗಳೂ ಇಲ್ಲದೆ ಈ ದೇಶದಲ್ಲಿ ಸಾಮಾನ್ಯ ವರ್ಗಕ್ಕೆ ಶೇ. 10 ಮೀಸಲಾತಿಯನ್ನು ನೀಡಲಾಯಿತೋ, ಅದೇ ರೀತಿಯಲ್ಲಿ ಒಂದು ಸಣ್ಣ ಗುಂಪಿನ ಆಕ್ಷೇಪಗಳನ್ನೇ ಈ ದೇಶದ ಆಕ್ಷೇಪವೆಂಬಂತೆ ಬಿಂಬಿಸಿ ಯುಜಿಸಿ ನಿಯಮಗಳನ್ನು ದುರ್ಬಲಗೊಳಿಸಲು ಕೇಂದ್ರ ಸರಕಾರವೇ ಒಳಗಿಂದೊಳಗೆ ಪ್ರಯತ್ನಿಸುತ್ತಿದೆ. ಆ ಪ್ರಯತ್ನದ ಭಾಗವಾಗಿ ಸುಪ್ರೀಂಕೋರ್ಟ್ನಲ್ಲಿ ತಡೆಯಾಜ್ಞೆ ಸಿಕ್ಕಿದೆ ಎನ್ನುವುದು ಮೇಲ್ನೋಟಕ್ಕೆ ಸ್ಪಷ್ಟವಾಗುತ್ತದೆ.
ಅಜಿತ್ ಪವಾರ್ ಪತ್ನಿಗೆ ಡಿಸಿಎಂ ಪಟ್ಟ, ಮಗನಿಗೆ ಉಪಚುನಾವಣಾ ಟಿಕೆಟ್: ಎನ್ಸಿಪಿ ಬೇಡಿಕೆ
ಪುಣೆ: ಮಹಾರಾಷ್ಟ್ರ ಉಪಮುಖ್ಯಮಂತ್ರಿ ಮತ್ತು ಎನ್ಸಿಪಿ ನಾಯಕ ಅಜಿತ್ ಪವಾರ್ ವಿಮಾನ ದುರಂತದಲ್ಲಿ ಮಡಿದ ಬೆನ್ನಲ್ಲೇ, ತೆರವಾಗಿರುವ ಡಿಸಿಎಂ ಹುದ್ದೆಯನ್ನು ಪವಾರ್ ಪತ್ನಿ ಹಾಗೂ ರಾಜ್ಯಸಭಾ ಸದಸ್ಯೆ ಸುನೇತ್ರಾ ಅವರಿಗೆ ನೀಡಬೇಕು ಹಾಗೂ ಬಾರಾಮತಿ ಕ್ಷೇತ್ರದ ಉಪಚುನಾವಣೆಯಲ್ಲಿ ಅಜಿತ್ ಪವಾರ್ ಪುತ್ರ ಜಯ್ ಅವರಿಗೆ ಟಿಕೆಟ್ ನೀಡಬೇಕು ಎಂದು ಎನ್ಸಿಪಿ ಬೇಡಿಕೆ ಮುಂದಿಟ್ಟಿದೆ. ಗುರುವಾರ ಸುನೇತ್ರಾ ಪವಾರ್ (62) ಅವರನ್ನು ಅವರ ನಿವಾಸದಲ್ಲಿ ಭೇಟಿ ಮಾಡಿದ ಪಕ್ಷದ ಪ್ರಮುಖರು, ನಾಯಕನ ನಿಧನಕ್ಕೆ ಸಂತಾಪ ಸೂಚಿಸಿದ್ದಲ್ಲದೇ ಎನ್ಸಿಪಿ ನೇತೃತ್ವ ವಹಿಸಿ ಮಹಾಯುತಿ ಸರ್ಕಾರ ಸೇರಬೇಕು ಎಂಬ ಬೇಡಿಕೆ ಮುಂದಿಟ್ಟರು. ಕಾರ್ಯಾಧ್ಯಕ್ಷ ಪ್ರಫುಲ್ ಪಟೇಲ್, ರಾಜ್ಯ ಘಟಕದ ಅಧ್ಯಕ್ಷ ಸುನೀಲ್ ತತ್ಕರೆ ಮತ್ತು ಸಚಿವ ಛಗನ್ ಭುಜಬಲ್ ನಿಯೋಗದಲ್ಲಿದ್ದರು. ಸಚಿವ ಹಾಗೂ ಅಜಿತ್ ಪವಾರ್ ಅವರ ಕಟ್ಟಾ ಅನುಯಾಯಿ ನರಹರಿ ಝಿರ್ವಾಲ್ ಬಹಿರಂಗವಾಗಿ ಈ ಬೇಡಿಕೆಯನ್ನು ಬೆಂಬಲಿಸಿದ್ದಾರೆ. ನಾನು ಎಲ್ಲ ಬೆಂಬಲಿಗರ ಜತೆ ಚರ್ಚೆ ನಡೆಸಿದ್ದು, ಸುನೇತ್ರಾ ಸಂಪುಟ ಸೇರಬೇಕು ಎಂದು ಬಯಸಿದ್ದಾರೆ. ನಾನು ಇದನ್ನು ಬೆಂಬಲಿಸುತ್ತೇನೆ. ಪಕ್ಷದ ಹಿರಿಯ ಸದಸ್ಯರ ಜತೆಗೆ ಈ ಬಗ್ಗೆ ಚರ್ಚಿಸಲಿದ್ದೇನೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಅಜಿತ್ ದಾದಾ ತಮ್ಮ ಪುತ್ರ ಜಯ್ ಅವರನ್ನು ಹೆಚ್ಚಿನ ಹೊಣೆಗಾರಿಕೆಗೆ ಸಜ್ಜುಗೊಳಿಸುತ್ತಿದ್ದರು. ಅವರ ನಿಧನದ ಬಳಿಕ ಜಯ್ ರಾಜಕೀಯದಲ್ಲಿ ಮುಂದುವರಿಯಬೇಕು ಎಂಬ ಬೇಡಿಕೆ ಹೆಚ್ಚುತ್ತಿದೆ. ಎಲ್ಲ ಎನ್ಸಿಪಿ ಹಿರಿಯ ಮುಖಂಡರು ಇದನ್ನು ಬೆಂಬಲಿಸಿದ್ದಾರೆ ಎಂದು ನರಹರಿ ತಿಳಿಸಿದರು.
ಲಕ್ಕುಂಡಿಯಲ್ಲಿ 12ನೇ ದಿನದ ಉತ್ಖನನ: ತ್ರಿಮುಖ ನಾಗಶಿಲೆ ಹಾಗೂ ಕಲ್ಲಿನ ಮುಕುಟ ಮಣಿ ಪತ್ತೆ
ಲಕ್ಕುಂಡಿಯಲ್ಲಿ ಉತ್ಖನನ ಕಾರ್ಯ ಮುಂದುವರೆದಿದ್ದು, ಹನ್ನೆರಡನೇ ದಿನ ನಡೆದ ಕಾರ್ಯದಲ್ಲಿ ತ್ರಿಮುಖ ನಾಗಶಿಲೆ ಸಿಕ್ಕಿದೆ ಎನ್ನಲಾಗಿದೆ. ಅಡಕೆ ಆಕಾರದ ಕಲ್ಲಿನ ಮುಕುಟ ಮಣಿ ಪತ್ತೆಯಾಗಿದೆ. ದಿನದಿಂದ ದಿನಕ್ಕೆ ಉತ್ಖನನ ಕಾರ್ಯ ನಡೆಯುತ್ತಲೇ ಒಂದೊಂದು ವಸ್ತುಗಳು ಪತ್ತೆಯಾಗುತ್ತಿರುವ ಹಿನ್ನೆಲೆ ಇದನ್ನು ಕಣ್ತುಂಬಿಕೊಳ್ಳಲು ವಿದೇಶಿಗರು ಮತ್ತು ಶಾಲಾ ವಿದ್ಯಾರ್ಥಿಗಳು ಲಕ್ಕುಂಡಿಗೆ ಆಗಮಿಸುತ್ತಿದ್ದಾರೆ.
ಬೆಂಗಳೂರಲ್ಲಿ ಕುಡಿದು ವಾಹನ ಚಾಲಾಯಿಸಿದ 19,548 ವಾಹನಗಳ ಡಿಎಲ್ ಅಮಾನತಿಗೆ ಪೊಲೀಸರ ಶಿಫಾರಸು
ಬೆಂಗಳೂರಿನಲ್ಲಿ ಮದ್ಯ ಸೇವಿಸಿ ವಾಹನ ಚಲಾಯಿಸುವವರ ಸಂಖ್ಯೆ ಹೆಚ್ಚಾಗಿದ್ದು, 19,548 ಚಾಲಕರ ಪರವಾನಗಿ ಅಮಾನತಿಗೆ ಶಿಫಾರಸು ಮಾಡಲಾಗಿದೆ. 2025ರಲ್ಲಿ 39,349 ಡ್ರಂಕ್ ಅಂಡ್ ಡ್ರೈವ್ ಪ್ರಕರಣಗಳು ದಾಖಲಾಗಿದ್ದು, 10 ಸಾವಿರ ರೂ. ದಂಡ ವಿಧಿಸಲಾಗಿದೆ. ಆದರೂ, ಪರವಾನಗಿ ಅಮಾನತು ಪ್ರಕ್ರಿಯೆ ವಿಳಂಬವಾಗುತ್ತಿರುವುದು ನಿಯಮ ಉಲ್ಲಂಘನೆಗೆ ಕಾರಣವಾಗುತ್ತಿದೆ.
ಕೊಪ್ಪಳದಲ್ಲಿ ಶಿವರಾತ್ರಿ ಅಂಗವಾಗಿ ನಡೆಯಲಿರುವ ಫೆ.12ರಿಂದ ಐದು ದಿನ ಅಣಬೆ ಮೇಳ ನಡೆಯುತ್ತಿತ್ತು. ಪ್ರತಿ ವರ್ಷವೂ ಇಲ್ಲಿನ ತೋಟಗಾರಿಕಾ ಇಲಾಖೆಯೂ ಒಂದೊಂದು ದುಬಾರಿ ಆಹಾರ ಪದಾರ್ಥವನ್ನು ಪ್ರದರ್ಶನಕ್ಕಿಡುತ್ತಾರೆ. ಅಂತೆಯೇ ಈ ಬಾರಿ ಹಣ್ಣು, ಜೇನು ಮತ್ತು ಅಣಬೆ ಪ್ರದರ್ಶನದಲ್ಲಿ ವಿಶ್ವದ ದುಬಾರಿ ಅಣಬೆ 'ಯಾರ್ಸಾ ಗುಂಬಾ' ಪ್ರದರ್ಶನಕ್ಕಿಡಲಾಗುತ್ತಿದೆ. 15 ಲಕ್ಷ ರೂ. ಬೆಲೆ ಬಾಳುವ ಈ ಅಣಬೆಯನ್ನು 2 ಲಕ್ಷ ರೂ. ವೆಚ್ಚದಲ್ಲಿ ಹಿಮಾಲಯದಿಂದ ತರಿಸಲಾಗುತ್ತಿದೆ. ರೈತರಿಗೆ ಉತ್ತಮ ಮಾರುಕಟ್ಟೆ ಒದಗಿಸುವುದು ಮೇಳದ ಉದ್ದೇಶವಾಗಿದೆ.
ಎತ್ತಿನಹೊಳೆ ಯೋಜನೆಗೆ 7,954 ಕೋಟಿ ರೂ. ಹಣಕಾಸಿನ ಕೊರತೆ ಎದುರಾಗಿದೆ. ಹಣ ಹೊಂದಿಸುವ ಬಗ್ಗೆ ಸ್ಪಷ್ಟತೆ ಇಲ್ಲ. ಗುತ್ತಿಗೆದಾರರ ಆಯ್ಕೆ ಮತ್ತು ಹಣಕಾಸು ಒದಗಿಸುವಲ್ಲಿ ಲೋಪಗಳು ಕಂಡುಬಂದಿವೆ. 12 ವರ್ಷಗಳಲ್ಲಿ 15,297 ಕೋಟಿ ರೂ. ಖರ್ಚಾದರೂ ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಗಳಿಗೆ ಕುಡಿಯುವ ನೀರು ಲಭ್ಯವಾಗಿಲ್ಲ. ಯೋಜನೆ ಅನುಷ್ಠಾನದಲ್ಲಿ ವಿಳಂಬ ಮತ್ತು ಅಡಚಣೆಗಳು ಎದುರಾಗಿವೆ.
ಒಂದೂವರೆ ವರ್ಷದಿಂದ ಕೆಲಸವಿಲ್ಲದೆ ಇದ್ದವ ಈಗ ಕ್ಯಾಬ್ ಡ್ರೈವಿಂಗ್ ನಿಂದ ದಿನಕ್ಕೆ 4 ಸಾವಿರ ರೂ. ಸಂಪಾದನೆ
ಬೆಂಗಳೂರಿನಲ್ಲಿ 1.5 ವರ್ಷಗಳಿಂದ ನಿರುದ್ಯೋಗಿಯಾಗಿದ್ದ ಟ್ಯಾಕ್ಸಿ ಚಾಲ vettoreರೊಬ್ಬರು, ಬದುಕಿಗಾಗಿ ರೈಡ್-ಹೇಲಿಂಗ್ ಆ್ಯಪ್ಗಳ ಮೊರೆಹೋಗಿದ್ದಾರೆ. ಪ್ರತಿದಿನ 16 ಗಂಟೆ ದುಡಿದರೂ, ಕಾರಿನ ಬಾಡಿಗೆ, ಗ್ಯಾಸ್, ಊಟದ ಖರ್ಚುಗಳ ನಂತರ ದಿನಕ್ಕೆ ಕೇವಲ 1000 ರೂ. ಉಳಿಯುತ್ತಿದ್ದು, ಈ ಕಠಿಣ ಪರಿಸ್ಥಿತಿಯನ್ನು ಅವರು ರೆಡ್ಡಿಟ್ನಲ್ಲಿ ಹಂಚಿಕೊಂಡಿದ್ದಾರೆ. ಆ್ಯಪ್ಗಳ ಒತ್ತಡ ಮತ್ತು ಕಡಿಮೆ ಆದಾಯದಿಂದಾಗಿ ಚಾಲಕರು ಸಂಕಷ್ಟ ಎದುರಿಸುತ್ತಿದ್ದಾರೆ ಎಂದು ಅವರು ವಿವರಿಸಿದ್ದಾರೆ.
ಬೆಂಗಳೂರಿನ ಹೊಸಹಳ್ಳಿ-ಗೊರಪಾಳ್ಯ ರೈಲ್ವೆ ಸೇತುವೆ ಈಗ ಸಾರ್ವಜನಿಕರ ಸಂಚಾರಕ್ಕೆ ತೆರೆದಿದೆ. ಸುಮಾರು ಎರಡು ವರ್ಷಗಳ ಪುನರ್ನಿರ್ಮಾಣದ ನಂತರ, ಈ ಸೇತುವೆ ಸಾವಿರಾರು ಜನರಿಗೆ ನೆಮ್ಮದಿ ತಂದಿದೆ. ಇದು ಸುತ್ತಮುತ್ತಲಿನ ಪ್ರದೇಶಗಳ ಸಂಚಾರವನ್ನು ಸುಗಮಗೊಳಿಸುತ್ತದೆ. ಈ ಸೇತುವೆಯು ಪೂರ್ವ-ಪಶ್ಚಿಮ ಸಂಚಾರ ಮಾರ್ಗವನ್ನು ಪುನಃಸ್ಥಾಪಿಸಿದೆ. ಇದರಿಂದ ಸಂಚಾರ ದಟ್ಟಣೆ ಕಡಿಮೆಯಾಗುವ ನಿರೀಕ್ಷೆಯಿದೆ. ಉದ್ಘಾಟನೆ ಶೀಘ್ರದಲ್ಲೇ ನಡೆಯಲಿದೆ.
ಬಾರಾಮತಿಯಲ್ಲಿ ನಡೆದ ಭೀಕರ ವಿಮಾನ ದುರಂತದಲ್ಲಿ ರಾಜಕಾರಣಿ ಅಜಿತ್ ಪವಾರ್ ಸೇರಿದಂತೆ ಐವರು ಪ್ರಾಣ ಕಳೆದುಕೊಂಡಿದ್ದಾರೆ. ದುರಂತದಲ್ಲಿ ಕ್ಯಾಪ್ಟನ್ ಸುಮಂತ್ ಕಪೂರ್, ಸಹ-ಪೈಲಟ್ ಕ್ಯಾಪ್ಟನ್ ಶಂಭವಿ ಪಾಠಕ್, ವಿಮಾನ ಪರಿಚಾರಕಿ ಪಿಂಕಿ ಮಾಲಿ ಮತ್ತು ಭದ್ರತಾ ಸಿಬ್ಬಂದಿ ವಿದಿಪ್ ಜಾಧವ್ ಮೃತಪಟ್ಟಿದ್ದಾರೆ. ಕಡಿಮೆ ಗೋಚರತೆಯಿಂದ ಲ್ಯಾಂಡಿಂಗ್ ವೇಳೆ ತಪ್ಪು ನಿರ್ಣಯ ಸಂಭವಿಸಿರಬಹುದು ಎಂದು ಪ್ರಾಥಮಿಕ ತನಿಖೆ ತಿಳಿಸಿದೆ. ವಿಮಾನ ತಾಂತ್ರಿಕ ದೋಷಗಳ ಬಗ್ಗೆಯೂ ತನಿಖೆ ನಡೆಯುತ್ತಿದೆ.
ಅಮೆರಿಕ ಮತ್ತು ಇರಾನ್ ನಡುವಿನ ಯುದ್ಧದ ಕಾರ್ಮೋಡ ಶೀಘ್ರದಲ್ಲೇ ಅಂತ್ಯ ಕಾಣುವ ಸಾಧ್ಯತೆ ಇದೆ. ಅಮೆರಿಕ ಇರಾನ್ ಮೇಲೆ ದಾಳಿ ನಡೆಸಿದರೆ, ಅಲ್ಲಿ ಸರ್ಕಾರ ಪತನವಾಗಲಿದೆ. ಇರಾನ್ ಸೇನಾ ಪ್ರಾಬಲ್ಯ ಕೊನೆಗೊಳ್ಳಲಿದೆ. ದೇಶದ ವ್ಯವಹಾರಗಳು ಅಮೆರಿಕದ ನಿಯಂತ್ರಣಕ್ಕೆ ಬರಲಿವೆ. ಜಾಗತಿಕ ಇಸ್ಲಾಂ ರಾಷ್ಟ್ರಗಳ ಪ್ರಾಬಲ್ಯವೂ ಕುಗ್ಗಲಿದೆ. ಇದು ದೇಶದಲ್ಲಿ ಅಂತರ್ಯುದ್ಧಕ್ಕೂ ಕಾರಣವಾಗಬಹುದು.
ರಾಜ್ಯಪಾಲರ ಕುರಿತು ಹೇಳಿಕೆ: ವಿಪಕ್ಷಗಳ ಒತ್ತಾಯ ಮಣಿದು ವಿಷಾದ ವ್ಯಕ್ತಪಡಿಸಿದ ಬಿ.ಕೆ. ಹರಿಪ್ರಸಾದ್
ಬೆಂಗಳೂರು: ‘ರಾಜ್ಯಪಾಲರಿಗೆ ಕೈ ತೋರಿಸಿ ಮಾತನಾಡುವ ಬದಲು ಕಾಲು ತೋರಿಸುವುದಕ್ಕಾಗುತ್ತಾ?’ ಎಂದು ಕಾಂಗ್ರೆಸ್ ಹಿರಿಯ ಸದಸ್ಯ ಬಿ.ಕೆ.ಹರಿಪ್ರಸಾದ್ ಪದಬಳಕೆ ಮಾಡುತ್ತಿದ್ದಂತೆ ವಿಧಾನ ಪರಿಷತ್ನಲ್ಲಿ ಗುರುವಾರ ಕೋಲಾಹಲ ಸೃಷ್ಟಿಯಾಗಿ, ಸದನದಿಂದ ಹರಿಪ್ರಸಾದ್ರನ್ನು ಅಮಾನತು ಮಾಡಬೇಕೆಂದು ವಿಪಕ್ಷ ಸದಸ್ಯರು ಆಗ್ರಹಿಸಿದರು. ಗುರುವಾರ ಬೆಳಗ್ಗೆ ವಿಧಾನಪರಿಷತ್ ಕಲಾಪದಲ್ಲಿ ಬಿಜೆಪಿ ಸದಸ್ಯರಾದ ಎನ್.ರವಿಕುಮಾರ್ ಮತ್ತು ಡಿ.ಎಸ್.ಅರುಣ್ ಮಾತನಾಡಿ, ರಾಜ್ಯಪಾಲರಿಗೆ ಅಡ್ಡಿ ಮಾಡಿ, ಕೈ ಬೆರಳು ತೋರಿಸಿದ ಬಿ.ಕೆ.ಹರಿಪ್ರಸಾದ್ ಅವರೇ ಈ ಸದನದ ಕಲಾಪಕ್ಕೆ ಅಡ್ಡಿಯಾಗಲು ಮೂಲ ಕಾರಣಕರ್ತರು. ಆದ್ದರಿಂದ ಅವರನ್ನು ಅಮಾನತು ಮಾಡಬೇಕು ಎಂದು ಸಭಾಪತಿಯವರನ್ನು ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಪ್ರತಿಕ್ರಿಯಿಸಿದ ಬಿ.ಕೆ.ಹರಿಪ್ರಸಾದ್, ರಾಷ್ಟ್ರಗೀತೆಗೆ ಅಗೌರವ ತೋರಿರುವ ರಾಜ್ಯಪಾಲರಿಗೆ ಕೈ ತೋರಿಸಿ ಮಾತನಾಡುವ ಬದಲು ಕಾಲು ತೋರಿಸಕಾಗುತ್ತಾ? ಎಂದು ಪ್ರತ್ಯುತ್ತರಿಸಿದರು. ಈ ಮಾತಿಗೆ ಕೆರಳಿದ ವಿಪಕ್ಷ ಸದಸ್ಯರು ಹರಿಪ್ರಸಾದ್ರನ್ನು ಸದನದಿಂದ ಹೊರಹಾಕಬೇಕೆಂದು ಕೋಲಾಹಲ ಸೃಷ್ಟಿಸಿದಾಗ ಸದನದಲ್ಲಿ ಭಾರೀ ಗದ್ದಲ ಉಂಟಾಯಿತು. ಈ ಹಂತದಲ್ಲಿ ಸಭಾಪತಿ ಬಸವರಾಜ ಹೊರಟ್ಟಿ ಮಾತನಾಡಿ, ವಿಪಕ್ಷ ನಾಯಕರು ಹಾಗೂ ಸದಸ್ಯರು ಬಿ.ಕೆ.ಹರಿಪ್ರಸಾದ್ ಅವರ ವಿರುದ್ಧ ಜ.23, 28, 29 ರಂದು ಅವಾಚ್ಯ ಶಬ್ದಗಳಿಂದ ಮಾತನಾಡಿರುವ ಕುರಿತು ದೂರು ಕೊಟ್ಟಿದ್ದಾರೆ. ಇದಕ್ಕೆ ನಿಮ್ಮ ಅಭಿಪ್ರಾಯವೇನು ಎಂದು ಹರಿಪ್ರಸಾದ್ ಅವರಿಗೆ ಪ್ರಶ್ನಿಸಿದರು. ಈ ವೇಳೆ ಬಿ.ಕೆ.ಹರಿಪ್ರಸಾದ್ ಮಾತನಾಡಿ, ನನ್ನ ಬಗ್ಗೆ ಆರೋಪ ಮಾಡಿದಾಗ ಮಾತನಾಡಿದ್ದೇನೆ. ನನ್ನ ಮಾತಿನಿಂದ ನೋವಾಗಿದ್ದರೆ ಅದನ್ನು ವಾಪಸ್ ಪಡೆಯುತ್ತೇನೆ ಎಂದರು. ಈ ವೇಳೆ ಸಭಾಪತಿ ಮಾತನಾಡಿ, ಸದನದಲ್ಲಿ ಇಂತಹ ಮಾತುಗಳು ಶೋಭೆ ತರುವುದಿಲ್ಲ. ನೀವು ಹಿರಿಯರಿದ್ದೀರಾ, ದೊಡ್ಡ ಮನಸ್ಸು ಮಾಡಿ ವಿಷಾದ ವ್ಯಕ್ತಪಡಿಸಿ ಎಂದು ಹೇಳಿದರು. ಆಗ ಸಭಾಪತಿ ಮಾತಿಗೆ ಒಪ್ಪಿದ ಬಿ.ಕೆ.ಹರಿಪ್ರಸಾದ್ ವಿಷಾದ ವ್ಯಕ್ತಪಡಿಸಿದರು. ಇದಕ್ಕೆ ಒಪ್ಪದ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಹರಿಪ್ರಸಾದ್ ವಿರುದ್ಧ ಕ್ರಮವಾಗಬೇಕು, ಅಮಾನತು ಆಗಬೇಕು ಎಂದು ಪಟ್ಟುಹಿಡಿದರು. ಬಳಿಕ ಸಭಾಪತಿ ಹೊರಟ್ಟಿಯವರು, ಹರಿಪ್ರಸಾದ್ ವಿಷಾದ ವ್ಯಕ್ತಪಡಿಸಿದ್ದಾರೆ. ಮುಂದೆ ಯಾರು ಹೀಗೆ ಮಾತನಾಡಬೇಡಿ. ಸದನಕ್ಕೆ ಇದು ಗೌರವವಲ್ಲ ಎಂದರು. ಸಭಾಪತಿಗಳ ಮಾತಿಗೆ ಒಪ್ಪದ ವಿಪಕ್ಷ ಸದಸ್ಯರು ಹರಿಪ್ರಸಾದ್ ಅಮಾನತು ಮಾಡುವಂತೆ ಘೋಷಣೆ ಕೂಗಿದರು.
ಕೊಳ್ಳೇಗಾಲದಲ್ಲಿ ಮದುವೆ ಆರತಕ್ಷತೆಗೆ ತೆರಳುತ್ತಿದ್ದ ವರನ ಮೇಲೆ ದುಷ್ಕರ್ಮಿಗಳು ಚಾಕುವಿನಿಂದ ಹಲ್ಲೆ ನಡೆಸಿದ್ದಾರೆ. ವರನಿಗೆ ಗಾಯವಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ವಧುವಿನ ಮಾಜಿ ಬಾಯ್ಫ್ರೆಂಡ್ ಈ ಕೃತ್ಯ ಎಸಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಆರೋಪಿಗಳ ಬಂಧನಕ್ಕೆ ಬಲೆ ಬೀಸಲಾಗಿದೆ. ಘಟನೆ ಕುರಿತು ಪೊಲೀಸರು ತೀವ್ರ ಶೋಧ ನಡೆಸುತ್ತಿದ್ದಾರೆ.
Davanagere | ಇಡ್ಲಿ ಸಾಂಬಾರಿಗೆ ಬಿದ್ದ ಹುಳು; ತಟ್ಟೆ ಸಮೇತ ಎಡಿಸಿಗೆ ವಿದ್ಯಾರ್ಥಿಗಳಿಂದ ದೂರು
ದಾವಣಗೆರೆ: ನಗರದ ಬೂದಾಳ್ ರಸ್ತೆಯ ಎಸ್ಪಿಎಸ್ ನಗರದ ಡಾ.ಬಿ.ಆರ್.ಅಂಬೇಡ್ಕರ್ ಮೆಟ್ರಿಕ್ ನಂತರದ ವಸತಿ ನಿಲಯದ ವಿದ್ಯಾರ್ಥಿಗಳು ಹುಳ ಬಿದ್ದ ಸಂಬಾರ್, ಇಡ್ಲಿ ತಟ್ಟೆಯ ಸಮೇತವೇ ಅಪರ ಜಿಲ್ಲಾಧಿಕಾರಿಗೆ ದೂರು ನೀಡಿದ ಘಟನೆ ವರದಿಯಾಗಿದೆ. ನಿತ್ಯವೂ ಕೂದಲು, ಹರಳು, ಸಣ್ಣ ಕಲ್ಲು, ಕಡ್ಡಿಗಳು, ಹುಳಗಳು ಪತ್ತೆಯಾಗುತ್ತಿವೆ. ಈ ಬಗ್ಗೆ ಅಡುಗೆ ಸಿಬ್ಬಂದಿಯಾಗಲಿ, ವಾರ್ಡನ್ ಆಗಲಿ ಗಂಭೀರವಾಗಿ ಪರಿಗಣಿಸುತ್ತಿಲ್ಲ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ. ವಾರ್ಡನ್, ಅಡುಗೆ ಸಿಬ್ಬಂದಿಯ ತಪ್ಪಿದ್ದರೆ ಸೂಕ್ತ ಕ್ರಮ ಕೈಗೊಳ್ಳುತ್ತೇವೆ. ನಾನೇ ಶೀಘ್ರ ಹಾಸ್ಟೆಲ್ಗೆ ಭೇಟಿ ನೀಡಿ ಪರಿಶೀಲಿಸುತ್ತೇನೆ. ಮೆನು ಚಾರ್ಟ್ ಪ್ರಕಾರ ಊಟ ನೀಡುತ್ತಿದ್ದಾರೋ ಇಲ್ಲವೋ, ನೋಡಿ ಕ್ರಮ ಕೈಗೊಳ್ಳುತ್ತೇವೆ ಎಂದು ಅಪರ ಜಿಲ್ಲಾಧಿಕಾರಿ ಶೀಲವಂತ ಶಿವಕುಮಾರ ಭರವಸೆ ನೀಡಿದರು.
MP Sports Festival: ರಾಜ್ಯ, ರಾಷ್ಟ್ರ, ಅಂತಾರಾಷ್ಟ್ರಮಟ್ಟಕ್ಕೆ ತೆರಳುವ ಕ್ರೀಡಾ ಪ್ರತಿಭೆಗಳಿಗೆ ಬೆಂಬಲ: ಬೊಮ್ಮಾಯಿ
ಹಾವೇರಿ/ರಾಣೆಬೆನ್ನೂರು: ಕರ್ನಾಟಕದಲ್ಲಿ ಪ್ರತಿಭೆಗಳು ಸಾಕಷ್ಟಿದ್ದಾರೆ. ಅವರಿಗೆ ಪ್ರೋತ್ಸಾಹ ನೀಡುವ ಅಗತ್ಯವಿದೆ. ಜಿಲ್ಲಾ ಮಟ್ಟದಲ್ಲಿ ಉತ್ತಮ ಪ್ರದರ್ಶನ ನೀಡುವ ಕ್ರೀಡಾಪಟುಗಳಿಗೆ ರಾಜ್ಯ ಮತ್ತು ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟಕ್ಕೆ ತೆರಳಲು ಅಗತ್ಯವಿರುವ ಎಲ್ಲ ರೀತಿಯ ವ್ಯವಸ್ಥೆಯನ್ನು ನಾನು ಮಾಡಿಕೊಡುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಅಭಯ ನೀಡಿದರು. ರಾಣೆಬೆನ್ನೂರಿನಲ್ಲಿ ಆಯೋಜಿಸಿದ್ದ ಸಂಸದರ ಕ್ರೀಡಾ ಮಹೋತ್ಸವ
European Union: ಇರಾನ್ಗೆ ದೊಡ್ಡ ಆಘಾತ ನೀಡಿದ ಯುರೋಪ್ ಒಕ್ಕೂಟ, ಯುದ್ಧಕ್ಕೆ ಮೊದಲೇ ಬಿಗ್ ಶಾಕ್
ಮಧ್ಯಪ್ರಾಚ್ಯದ ಹಣೆಬರಹ ಸರಿ ಇಲ್ಲ ಅಂತಾ ಕಾಣುತ್ತದೆ, ಯಾಕಂದ್ರೆ ಪದೇ ಪದೇ ಈ ಭಾಗದಲ್ಲೇ ಯುದ್ಧಗಳು ಆರಂಭ ಆಗುತ್ತಿವೆ. ಒಂದು ಕಡೆ ಇರಾನ್ ಮತ್ತು ಅಮೆರಿಕ ಯಾವುದೇ ಕ್ಷಣದಲ್ಲಿ ಭಾರಿ ರಣಕಾಳಗ ಶುರು ಮಾಡಬಹುದು ಎಂಬ ಆತಂಕ ಆವರಿಸಿದ ಸಮಯದಲ್ಲೇ, ಒಂದೊಂದೇ ದೇಶಗಳು ಇರಾನ್ ಬೆನ್ನಿಗೆ ನಿಲ್ಲುತ್ತಿವೆ. ಇದರ ನಡುವೆ ಅಮೆರಿಕದ ಸ್ನೇಹಿತ ರಾಷ್ಟ್ರಗಳು ಇರಾನ್ ವಿರುದ್ಧ
`ಪುಕ್ಕಲ ಪಾಕ್ ಗೆ ಅಷ್ಟೊಂದು ಧಮ್ ಇದ್ಯಾ?': ಕಣ್ಣಾಮುಚ್ಚಾಲೆ ಆಡುತ್ತಿರುವ ಪಿಸಿಬಿಗೆ ಅಜಿಂಕ್ಯ ರಹಾನೆ ಮಂಗಳಾರತಿ!
ICC T20 World Cup 2025 - ಪಾಕಿಸ್ತಾನ ನ ಕ್ರಿಕೆಟ್ ಮಂಡಳಿಯ ದಿನಕ್ಕೊಂದು ಮಾತನಾಡುತ್ತಿರುವುದು ಕ್ರಿಕೆಟ್ ವಲಯದಲ್ಲಿ ನಗೆಪಾಟಲಿಗೆ ಕಾರಣವಾಗಿದೆ. ಐಸಿಸಿ ಟಿ20 ವಿಶ್ವಕಪ್ 2026 ಟೂರ್ನಿಯಿಂದ ಬಾಂಗ್ಲಾದೇಶವನ್ನು ಹೊರಹಾಕಿದ್ದಕ್ಕೆ ಪಾಕಿಸ್ತಾನವು ಟೂರ್ನಿಯನ್ನು ಬಹಿಷ್ಕರಿಸುವ ಬಗ್ಗೆ ಮಾತನಾಡುತ್ತಿದೆ. ಆದರೆ ಪಾಕಿಸ್ತಾನಕ್ಕೆ ಅಷ್ಟೊಂದು ಧೈರ್ಯ ಇದೆ ಎಂದು ನಾನು ಭಾವಿಸುವುದಿಲ್ಲ ಎಂದು ಭಾರತದ ಕ್ರಿಕೆಟಿಗ ಅಜಿಂಕ್ಯ ರಹಾನೆ ಅವರು ಕಾಲೆಳೆದಿದ್ದಾರೆ. ಪಾಕಿಸ್ತಾನವು ಟೂರ್ನಿಯಿಂದ ಹಿಂದೆ ಸರಿಯುವ ಸಾಧ್ಯತೆ ತೀರಾ ಕಡಿಮೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ನಾನು ಸಿಎಂ ಆಗುವುದಕ್ಕೆ ಕಾಲವೇ ಉತ್ತರ ಕೊಡುತ್ತದೆ: ಡಿಕೆ ಶಿವಕುಮಾರ್
ಶಿವಮೊಗ್ಗ: ನಾನು ಮುಖ್ಯಮಂತ್ರಿ ಆಗುವುದಕ್ಕೆ ಕಾಲವೇ ಉತ್ತರ ಕೊಡುತ್ತದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. ಗುರುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ನಮ್ಮ, ಕಾರ್ಯಕರ್ತರ ಪ್ರಯತ್ನದಿಂದ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದಿದೆ ಎಂದು ಪ್ರತಿಕ್ರಿಯಿಸಿದರು. ಜಾರ್ಜ್ ರಾಜೀನಾಮೆ ಬಗ್ಗೆ ನನಗೇನೂ ಗೊತ್ತಿಲ್ಲ. ವಿಪಕ್ಷದವರು ಏನಾದರೊಂದು ಹೇಳುತ್ತಲೇ ಇರುತ್ತಾರೆ. ಯಾರೇ ಆದರೂ ಅಧಿಕಾರಿಗಳೊಂದಿಗೆ ಮಾತನಾಡುವುದರಲ್ಲಿ ತಪ್ಪೇನಿಲ್ಲ. ನಮ್ಮ ಕಾರ್ಯಕರ್ತರು ಸಮಸ್ಯೆಗಳನ್ನು ಹೇಳಿಕೊಂಡು ಬರುತ್ತಲೇ ಇರುತ್ತಾರೆ. ಆಗ ಅಧಿಕಾರಿಗಳಿಗೆ ನಾವು ಕೆಲವೊಂದು ಸೂಚನೆ ನೀಡಬೇಕಾಗುತ್ತದೆ. ಅದನ್ನು ಹೊರತುಪಡಿಸಿ ಇನ್ಯಾವುದೇ ರೀತಿಯ ಹಸ್ತಕ್ಷೇಪದ ವಿಚಾರ ನನಗೆ ಗೊತ್ತಿಲ್ಲ ಎಂದರು. ಮನರೇಗಾ ಕುರಿತು ಪತ್ರಿಕೆಗಳಲ್ಲಿ ಜಾಹೀರಾತು ನೀಡಿರುವ ವಿಚಾರ ಮಾತನಾಡಿದ ಅವರು, ಕೇಂದ್ರ ಸರಕಾರ ನರೇಗಾ ರದ್ದು ಪಡಿಸಿರುವ ವಿಚಾರವನ್ನು ಜಾಹೀರಾತು ಮೂಲಕ ಜನರಿಗೆ ಮನವರಿಕೆ ಮಾಡಿಕೊಡುವ ಯತ್ನ ಮಾಡಿದ್ದೇವೆ. ಅದರಲ್ಲಿ ತಪ್ಪೇನಿದೆ?. ಮನರೇಗಾ ವಿಚಾರದಲ್ಲಿ ಕೇಂದ್ರ ಸರಕಾರ ಗ್ರಾಮೀಣ ಭಾಗದ ಜನರಿಗೆ ಅನ್ಯಾಯ ಮಾಡಿದೆ. ಅದನ್ನು ಈಗಿರುವ ಸ್ಥಿತಿಯಲ್ಲಿ ಒಪ್ಪಿಕೊಳ್ಳಲು ಸಾಧ್ಯವೇ ಇಲ್ಲ. ಅದರ ವಿರುದ್ಧ ನಮ್ಮ ಹೋರಾಟ ಮುಂದುವರಿಯುತ್ತದೆ. ಮನರೇಗಾ ಯೋಜನೆಯಿಂದ ಒಳ್ಳೆಯ ಕೆಲಸ ನಡೆಯುತ್ತಿದೆ. ಹಸಿದವರಿಗೆ ಆಹಾರ ಕೊಡಲ್ಲ ಎಂದು ಹೇಳುವುದು ಸರಿಯಲ್ಲ ಎಂದು ಹೇಳಿದರು. ಗಾಂಧಿ ಹೆಸರನ್ನು ತೆಗೆದು ಹಾಕಿ, ಅದೇ ಗಾಂಧಿ ಪ್ರತಿಮೆ ಮುಂದೆ ಕುಳಿತು ಪ್ರತಿಭಟನೆ ಮಾಡುವ ಬಿಜೆಪಿ-ಜೆಡಿಎಸ್ಗೆ ಯಾವ ನೈತಿಕತೆ ಇದೆ ಎಂದು ಪ್ರಶ್ನಿಸಿದ ಡಿಕೆಶಿ, ಎಲ್ಲಾ ಗ್ರಾಮ ಪಂಚಾಯತ್ಗಳಿಗೆ ಮಹಾತ್ಮಾ ಗಾಂಧಿ ಹೆಸರಿಡುವಂತೆ ಮನವಿ ಮಾಡಿದ್ದೇವೆ ಎಂದರು. ಚೋರ್ಲಾ ಘಾಟ್ನಲ್ಲಿ 400 ಕೋಟಿ ರೂ. ಇದ್ದ ವಾಹನ ನಾಪತ್ತೆ ಪ್ರಕರಣ ಸಂಬಂಧ ಕೇಂದ್ರ ಸರಕಾರ ಸಿಬಿಐ ತನಿಖೆ ನಡೆಸಲಿ, ಎಲ್ಲಿತ್ತು ಎಂದು ಹೇಳಲಿ. ಅದು ಕಾಂಗ್ರೆಸ್ಗೆ ಸೇರಿದ್ದು ಎಂದು ಹೇಳಿ ಸುಮ್ಮನೆ ನಗೆ ಪಾಟಲಿಗೀಡಾಗುವುದು ಬೇಡ ಎಂದು ತಿರುಗೇಟು ನೀಡಿದರು. ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಸಲು ಸಿದ್ಧರಿದ್ದೇವೆ. ಈ ನಿಟ್ಟಿನಲ್ಲಿ ಪಕ್ಷ ಈಗಾಗಲೇ ಸಿದ್ಧತೆ ನಡೆಸಿದೆ. ಅದೇ ರೀತಿ ಮಹಾನಗರ ಪಾಲಿಕೆ, ನಗರಸಭೆ ಸೇರಿದಂತೆ ಇತರ ಸ್ಥಳೀಯ ಸಂಸ್ಥೆಗಳಿಗೂ ಶೀಘ್ರದಲ್ಲೇ ಚುನಾವಣೆ ನಡೆಸಲು ಕ್ರಮ ವಹಿಸಲಾಗುವುದು ಎಂದರು. ಐದು ಗ್ಯಾರಂಟಿ ಕುರಿತು ಮನೆಗೊಂದು ರಂಗೋಲಿ ಸ್ಪರ್ಧೆ ಏರ್ಪಡಿಸಲಾಗಿದೆ. ಸುಮಾರು ೭೩ ಸಾವಿರ ಜನ ಇದರಲ್ಲಿ ಭಾಗವಹಿಸಿದ್ದಾರೆ. ಅದೇ ರೀತಿ ಮುಸ್ಲಿಮರಿಗೆ ಮೆಹಂದಿ, ಮಕ್ಕಳಿಗೆ ಚಿತ್ರಕಲೆ, ಯೋಗ ಸ್ಪರ್ಧೆ ನಡೆಯುತ್ತಿದೆ ಎಂದು ಡಿಕೆಶಿ ತಿಳಿಸಿದರು.
ಕೋಟೆಕಾರ್ ಪಟ್ಟಣ ಪಂಚಾಯತ್ ಸಾಮಾನ್ಯ ಸಭೆ
ಉಳ್ಳಾಲ: ಕೋಟೆಕಾರ್ ಪಟ್ಟಣ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ಗ್ರಾಮಕರಣಿಕ ಗೈರು ಹಾಜರಿ ಹಾಗೂ ನಿವೇಶನ ನೀಡುವುದರಲ್ಲಿ ಬಡವರಿಗೆ ಆಗಿರುವ ಅನ್ಯಾಯ ವಿರೋಧಿಸಿ ಅಧಿಕಾರಿಗಳ ವಿರುದ್ಧ ಆಡಳಿತಾರೂಢ ಮತ್ತು ವಿರೋಧ ಪಕ್ಷದ ಸದಸ್ಯರು ಅಧ್ಯಕ್ಷರ ಮುಂದೆ ಜಮಾಯಿಸಿ ಪ್ರತಿಭಟನೆ ನಡೆಸಿದ ಘಟನೆ ಕೋಟೆಕಾರ್ ಪಟ್ಟಣ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ನಡೆಯಿತು. ಕೋಟೆಕಾರ್ ಪ.ಪಂ. ಅಧ್ಯಕ್ಷ ದಿವ್ಯ ಸತೀಶ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಪ್ರತಿಭಟನೆ ನಡೆಸಿದ ಸದಸ್ಯರು,ಗ್ರಾಮಕರಣಿಕ ಸಭೆಗೆ ಬಂದು ಸರಿಯಾಗಿ ಮಾಹಿತಿ ನೀಡುತ್ತಿಲ್ಲ.ವಸತಿ ಯೋಜನೆಗೆ ಸರ್ಕಾರಿ ಜಾಗ ಒದಗಿಸದೇ ಬಡವರಿಗೆ ಅಧಿಕಾರಿಗಳು ಅನ್ಯಾಯ ಎಸಗಿದ್ದಾರೆ ಎಂದು ಆರೋಪಿಸಿ ತಹಶೀಲ್ದಾರ್, ಗ್ರಾಮಕರಣಿಕರಿಗೆ ಧಿಕ್ಕಾರ ಕೂಗಿದರು. ಸರ್ಕಾರಿ ಜಾಗ ಗಡಿ ಗುರುತು ಮಾಡುತ್ತೇವೆ ಎಂದು ಸಭೆಯಲ್ಲಿ ಚರ್ಚೆ ಮಾತ್ರ ಆಗಿದೆ.ಈ ವರೆಗೆ ಕೆಲಸ ಆಗುತ್ತಿಲ್ಲ. ಇದರಿಂದ ಬಡವರಿಗೆ ಅನ್ಯಾಯ ಆಗಿದೆ ಎಂದು ಆರೋಪಿಸಿದ ಅವರು,ಬಡವರಿಗೆ ವಸತಿಗೆ ಜಾಗ ಕೊಡುತ್ತೇವೆ ಎಂದು ಭರವಸೆ ನೀಡಿದ ಅಧಿಕಾರಿಗಳು 2011 ರಿಂದ ಈವರೆಗೆ ನೀಡದೇ ವಂಚನೆ ಮಾಡುತ್ತಾ ಬಂದಿದ್ದಾರೆ. ಈ ವಿಚಾರದಲ್ಲಿ ಯಾಕೆ ಕ್ರಮ ಆಗುತ್ತಿಲ್ಲ, ಯಾಕೆ ನಿವೇಶನ ನೀಡುತ್ತಿಲ್ಲ,2011 ರಿಂದ ಈವರೆಗೆ ಅರ್ಜಿ ಹಾಕಿದ ಬಡವರಿಗೆ ಯಾಕೆ ನ್ಯಾಯ ಕೊಡುತ್ತಿಲ್ಲ ಎಂದು ಪ್ರಶ್ನಿಸಿದರಲ್ಲದೇ ಈ ವಿಚಾರದಲ್ಲಿ ನಿರಂತರ ಹೋರಾಟ ಇದೆ ಎಂದು ಎಚ್ಚರಿಸಿದರು. ಅಭಿವೃದ್ಧಿ ಕಾಮಗಾರಿ ಗೆ ಅನುದಾನ ಮಂಜೂರು ಆಗಿ ಕೆಲವು ಕಡೆ ಅಭಿವೃದ್ಧಿ ಕಾಮಗಾರಿ ಆಗಿ ಹಣ ಉಳಿಕೆ ಆಗಿದೆ. ಆದರೂ ಕೂಡ ನಾಲ್ಕು ಸದಸ್ಯರ ವಾರ್ಡ್ ಗಳಲ್ಲಿ ಕೆಲಸ ಆಗಿಲ್ಲ.ಕೆಲಸ ಆಗದ ವಾರ್ಡ್ ಗಳ ಕೆಲಸ ಮಾಡಿಸಿ ಎಂದು ಅಹ್ಮದ್ ಅಜ್ಜಿನಡ್ಕ ಹೇಳಿದರು. ಸುಜಿತ್ ಮಾಡೂರು ಅಭಿವೃದ್ಧಿ ಕಾಮಗಾರಿ ಗೆ ಹಣ ಇಡಿ, ಇದರಲ್ಲಿ ತಾರತಮ್ಯ ನೀತಿ ಬೇಡ ಎಂದು ಆಗ್ರಹಿಸಿದರು. ಅಭಿವೃದ್ಧಿ ಯಲ್ಲಿ ತಾರತಮ್ಯ ಆಗಿಲ್ಲ.ಎಲ್ಲದಕ್ಕೂ ದಾಖಲಾತಿ ಇದೆ. ಈ ವಿಚಾರದಲ್ಲಿ ತಪ್ಪು ಸಂದೇಶ ನೀಡುವುದು ಬೇಡ ಎಂದು ಅಧ್ಯಕ್ಷ ದಿವ್ಯ ಸತೀಶ್ ಹೇಳಿದರು. ಪ್ರತಿ ವಾರ್ಡ್ ಗೆ ಐದು ಲಕ್ಷ ಕೊಟ್ಟಿದ್ದೀರಿ.ಬಹಳಷ್ಟು ಕಡೆ ಕೆಲಸ ಆಗಿದೆ.ನಮ್ಮ ವಾರ್ಡ್ ಗೆ ಮೀಸಲಿಟ್ಟು ಹಣ ದ ಟೆಂಡರ್ ಪ್ರಕ್ರಿಯೆ ಯಾಕಾಗಿಲ್ಲ, ಈ ತಾರತಮ್ಯ ಯಾಕೆ ಬೇಕು ಎಂದು ಅಹ್ಮದ್ ಅಜ್ಜಿನಡ್ಕ ಪ್ರಶ್ನಿಸಿದರು. 27 ಲಕ್ಷ ನೀರು ಬಿಲ್ ಬಾಕಿ ಇದೆ ಎಂದು ಚರ್ಚೆ ಆಗಿದೆ. ಈ ಬಗ್ಗೆ ಯಾವ ಕ್ರಮ ಆಗಿದೆ ಎಂಬ ಪ್ರಶ್ನೆಗೆ ಮಾಲಿನಿ ಅವರು ಈಗಾಗಲೇ ಒಂದು ಲಕ್ಷ ವಸೂಲಿ ಆಗಿದೆ.ಉಳಿದ ಮೊತ್ತ ಶೀಘ್ರ ಮಾಡಲಾಗುವುದು ಎಂದರು. ಮೆಸ್ಕಾಂ ಜೆಇ ಮಾರಪ್ಪ ವಿದ್ಯುತ್ ಸಮಸ್ಯೆ ಮತ್ತದರ ಪರಿಹಾರ ಬಗ್ಗೆ ಮಾಹಿತಿ ನೀಡಿದರು. ಕೋಟಿ ಕಾರ್ ವ್ಯಾಪ್ತಿಯಲ್ಲಿ ಗೂಡಂಗಡಿ ಬಳಿ ದ್ವಿಚಕ್ರ ವಾಹನ ಪಾರ್ಕಿಂಗ್ ಮಾಡುವ ಬಗ್ಗೆ ದೂರು ಬಂದಿವೆ. ಮದ್ಯಪಾನ ಮಾಡಿ ಪಾರ್ಕಿಂಗ್ ಮಾಡುತ್ತಾರೆ ಎಂಬ ಸಂಶಯವೂ ಇದೆ. ಈ ರೀತಿ ಪಾರ್ಕಿಂಗ್ ಮಾಡುವುದು ಕಂಡಲ್ಲಿ ಠಾಣೆಗೆ ಮಾಹಿತಿ ನೀಡಿ ಎಂದು ಟ್ರಾಫಿಕ್ ಎಎಸ್ಐ ಸಂತೋಷ್ ಪಡೀಲ್ ಮಾಹಿತಿ ನೀಡಿದರು. ಎಚ್ ಪಿಟಿ ಕ್ಯಾನ್ಸರ್ ಇದೆ. ಇದು ವೈರಸ್ ನಿಂದ ಬರುತ್ತದೆ. ಈ ಮಾರಕ ಕಾಯಿಲೆಗೆ ಲಸಿಕೆ ಇದೆ. ಸರ್ಕಾರ ದಿಂದ ಸಿಗುತ್ತಿಲ್ಲ. ಖಾಸಗಿ ಆಸ್ಪತ್ರೆ ಯಲ್ಲಿ ಒಂದು ಡೋಸ್ ಔಷಧಿ ಗೆ 11ಸಾವಿರ ಇದೆ. ವ್ಯಾಕ್ಸಿನ್ ಶೀಘ್ರ ಬರಲಿದೆ. ಈ ವ್ಯಾಕ್ಸಿನ್ ನೀಡುವ ಬಗ್ಗೆ ವ್ಯವಸ್ಥೆ ಮಾಡಲಾಗುತ್ತಿದೆ. ಶಾಲೆಯಲ್ಲಿ 14 ರಿಂದ 15 ವರ್ಷದ ಮಕ್ಕಳಿಗೆ ನೀಡಲಾಗುವುದು ಎಂದು ಆರೋಗ್ಯ ಅಧಿಕಾರಿ ತಿಳಿಸಿದರು. ಅನುದಾನ ಕೋರಿ ಪ್ರತಿಭಟನೆ ಪನೀರ್ ನಲ್ಲಿ ಮಳೆ ಬಂದು ಕಾಂಪೌಂಡ್ ಗೋಡೆ ಹೋಗಿದೆ.ಈ ವಾರ್ಡ್ ಗೆ ತುರ್ತು ಕಾಮಗಾರಿಗೆ ಶಾಸಕ ರ ಫಂಡ್ ಸಿಕ್ಕಿಲ್ಲ. ಪಂಚಾಯತ್ ಕೂಡ ನೀಡುವುದಿಲ್ಲ. ಇದರಿಂದ ನನಗೆ ಅನ್ಯಾಯ ಆಗಿದೆ ಎಂದು ಆರೋಪಿಸಿ ಎಸ್ ಡಿಪಿಐ ಸದಸ್ಯೆ ಸಲೀಮಾ ಬಿ ಅಧ್ಯಕ್ಷ ರ ಟೇಬಲ್ ಮುಂದೆ ಕುಳಿತು ಆಡಳಿತದ ವಿರುದ್ಧ ಭಿತ್ತಿ ಪತ್ರ ಹಿಡಿದು ಪ್ರತಿಭಟನೆ ನಡೆಸಿದರು. ಎಲ್ಲಾ ವಾರ್ಡ್ ಗೆ ಅನುದಾನ ಇಟ್ಟ ಪಂಚಾಯತ್ ನನ್ನ ವಾರ್ಡ್ ನ್ನು ಕಡೆಗಣನೆ ಮಾಡಿದ್ದು ಯಾಕೆ ಎಂದು ಪ್ರಶ್ನಿಸಿದ ಅವರು ನನಗೆ ನ್ಯಾಯ ಸಿಗುವವರೆಗೆ ಹೋರಾಟ ಮಾಡುತ್ತೇನೆ ಎಂದು ಎಚ್ಚರಿಕೆ ನೀಡಿದರು. ಮುಖ್ಯಾಧಿಕಾರಿ ಮಾಲಿನಿ, ಉಪಾಧ್ಯಕ್ಷ ಪ್ರವೀಣ್, ಸ್ಥಾಯಿ ಸಮಿತಿ ಅಧ್ಯಕ್ಷ ಧೀರಜ್ ಉಪಸ್ಥಿತರಿದ್ದರು.
Gaza Peace: ಗಾಜಾ ಪಟ್ಟಿ ಹಸ್ತಾಂತರ ವಿಚಾರದಲ್ಲಿ ಇಸ್ರೇಲ್ ದಿಟ್ಟ ನಿರ್ಧಾರ, ಹಮಾಸ್ ಸೈಲೆಂಟ್?
ಗಾಜಾ ಪಟ್ಟಿ ಇದೀಗ ಒಂದಷ್ಟು ನೆಮ್ಮದಿ ನೋಡುವ ದಿನಗಳು ಬರುತ್ತಿವೆ, ಹಮಾಸ್ ಮತ್ತು ಇಸ್ರೇಲ್ ಸೇನೆ ನಡುವೆ ಯುದ್ಧ ಶುರುವಾದ ನಂತರ ಇಡೀ ಗಾಜಾ ಪಟ್ಟಿ ಹಿಂಸಾಚಾರದ ಬೆಂಕಿಗೆ ಧಗಧಗಿಸಿದೆ. ಲಕ್ಷಾಂತರ ಜನರ ಬದುಕು ಬೀದಿಗೆ ಬೀಳುವ ವಾತಾವರಣ ನಿರ್ಮಾಣ ಆಗಿದೆ, ಹತ್ತಾರು ಸಾವಿರ ಜನ ಈ ಯುದ್ಧದಲ್ಲಿ ಜೀವ ಬಿಟ್ಟಿದ್ದಾರೆ. ಹೀಗಿದ್ದಾಗ ಹಮಾಸ್ ಮೇಲೆ ಹಿಡಿತಕ್ಕೆ
WPL 2026- ಯುಪಿ ವಾರಿಯರ್ಸ್ ಗೆ ನೀರು ಕುಡಿಸಿದ ಗ್ರೇಸ್ ಹ್ಯಾರಿಸ್! ರಾಜಾರೋಷವಾಗಿ RCB ಫೈನಲ್ ಪ್ರವೇಶ
RCB W Vs UP Warriorz W- ಯುಪಿ ವಾರಿಯರ್ಸ್ ವಿರುದ್ಧ 8 ವಿಕೆಟ್ ಗಳ ಭರ್ಜರಿ ಗೆಲುವು ದಾಖಲಿಸಿದ ಸ್ಮೃತಿ ಮಂದಾನ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮಹಿಳಾ ಪ್ರೀಮಿಯರ್ ಲೀಗ್ 2026ರ ಫೈನಲ್ ತಲುಪಿದೆ. ಆಡಿದ 8 ಪಂದ್ಯಗಳಲ್ಲಿ 6 ಗೆಲುವಿನೊಂದಿಗೆ 12 ಅಂಕ ಗಳಿಸಿ ಅಗ್ರಸ್ಥಾನಿಯಾದ ಆರ್ ಸಿಬಿ ನೇರವಾಗಿ ಫೈನಲ್ ಗೆ ಅರ್ಹತೆ ಗಿಟ್ಟಿಸಿಕೊಂಡಿದೆ. ಆಲ್ರೌಂಡ್ ಪ್ರದರ್ಶನ ನೀಡಿ ಗ್ರೇಸ್ ಹ್ಯಾರಿಸ್ ಅವರು ಅರ್ಹವಾಗಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.
ಏರಿದ ಬಳಿಕ ಇಳಿದ ಚಿನ್ನದ ದರ; ಬೆಳ್ಳಿ ಶೇ.6 ಕುಸಿತ
'ಚಿನ್ನ' ದ ಓಟಕ್ಕೆ ಬಿತ್ತು ಬ್ರೇಕ್!
ಲಿಂಗಾಯತರು ಕೈಗಾರಿಕಾ ರಂಗಕ್ಕೆ ಧುಮುಕಬೇಕು: ಸಚಿವ ಎಂ.ಬಿ. ಪಾಟೀಲ್
ಬೆಂಗಳೂರು: ವೀರಶೈವ ಲಿಂಗಾಯತ ಸಮುದಾಯವು ಶಿರಸಂಗಿ ಲಿಂಗರಾಜ ದೇಸಾಯಿ, ವಾರದ ಮಲ್ಲಪ್ಪ, ಬಿ.ವಿ.ಭೂಮರೆಡ್ಡಿ ಅವರಂತಹ ಸಾಹಸಿ ಉದ್ಯಮಿಗಳ ದೀರ್ಘ ಇತಿಹಾಸ ಹೊಂದಿದೆ. ಆದ್ದರಿಂದ ಕೇವಲ ಕೃಷಿಗೆ ಸೀಮಿತರಾಗದೆ, ಸಮುದಾಯದ ಯುವಜನರು ಉದ್ಯಮ ವಲಯಕ್ಕೆ ಧುಮುಕಿ ಬೆಳವಣಿಗೆ ಹೊಂದಬೇಕು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಹೇಳಿದ್ದಾರೆ. ಅಂತಾರಾಷ್ಟ್ರೀಯ ಲಿಂಗಾಯತ ಯೂತ್ ಫೋರಂ ನಗರದ ಅರಮನೆ ಮೈದಾನದಲ್ಲಿ ಏರ್ಪಡಿಸಿರುವ ವೀರಶೈವ ಲಿಂಗಾಯತ ಗ್ಲೋಬಲ್ ಬಿಝಿನೆಸ್ ಸಮಾವೇಶದ ಉದ್ಘಾಟನಾ ಸಮಾರಂಭದಲ್ಲಿ ಅವರು ಗುರುವಾರ ಮಾತನಾಡಿದರು. ಸಮುದಾಯದಲ್ಲಿ ಗುಬ್ಬಿ ತೋಟದಪ್ಪ, ಸರ್ ಪುಟ್ಟಣ್ಣ ಶೆಟ್ಟಿ ಅವರಂತಹ ಮಹಾಮಹಿಮರು ಉದ್ಯಮಶೀಲರಾಗಿ ಸಾಧನೆಗಳನ್ನು ಮಾಡಿ, ಮೇಲ್ಪಂಕ್ತಿಯನ್ನು ಹಾಕಿಕೊಟ್ಟಿದ್ದಾರೆ. 1906ರಷ್ಟು ಹಿಂದೆಯೇ ಶಿರಸಂಗಿಯ ದೇಸಾಯಿ ಅವರಿಂದ ಇದಕ್ಕೆ ಭದ್ರ ಬುನಾದಿ ಬಿದ್ದಿದೆ. ಜತೆಗೆ ವೀರಶೈವ ಮಹಾಸಭಾ ಕೂಡ ಇದರಲ್ಲಿ ಮಹತ್ವದ ಪಾತ್ರ ನಿರ್ವಹಿಸುತ್ತಿದೆ. ಇದರಿಂದಾಗಿ ವೀರಶೈವ ಲಿಂಗಾಯತ ಸಮುದಾಯವು ವ್ಯಾಪಾರ ವಹಿವಾಟು ಮತ್ತು ಶೈಕ್ಷಣಿಕ ಕ್ಷೇತ್ರದಲ್ಲಿ ಅಪಾರ ಯಶಸ್ಸು ಕಾಣುವುದು ಸಾಧ್ಯವಾಗಿದೆ ಎಂದು ಅವರು ನೆನಪಿಸಿ ಕೊಂಡಿದ್ದಾರೆ. ನಾವು ಕೈಗಾರಿಕೆ, ವ್ಯಾಪಾರ ಇತ್ಯಾದಿಗಳನ್ನು ಉದಾಸೀನ ಮಾಡಬಾರದು. ಇವು ಕೃಷಿಗೆ ಪೂರಕವಾಗಿ ನಮ್ಮ ಸಮುದಾಯದ ಆರ್ಥಿಕ ಬೆಳವಣಿಗೆಗೆ ಆಧುನಿಕ ಕಾಲದಲ್ಲಿ ನಿರ್ಣಾಯಕವಾಗಿವೆ. ಸರಕಾರದ ನೀತಿಗಳು ಕೂಡ ಉಪಯುಕ್ತವಾಗಿವೆ. ರಾಜ್ಯದಲ್ಲಿ ಯಾವುದೇ ಭಾಗದಲ್ಲಾದರೂ ಕೈಗಾರಿಕಾ ಬೆಳವಣಿಗೆಗೆ ಸೂಕ್ತ ಕಾರ್ಯ ಪರಿಸರ ಇದೆ. ಸಮುದಾಯದ ಪ್ರತಿಭಾವಂತರು ಇದನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದ್ದಾರೆ. ಈ ರೀತಿಯ ಸಮಾವೇಶಗಳನ್ನು ಸರಕಾರವೂ ಪ್ರೋತ್ಸಾಹಿಸುತ್ತದೆ. ಇದರಿಂದ ಅಸ್ಮಿತೆ, ನೆಟ್ವರ್ಕಿಂಗ್ ಮತ್ತು ಹೂಡಿಕೆಗೆ ಇರುವ ಅವಕಾಶಗಳು ಗೊತ್ತಾಗುತ್ತವೆ. ರಾಜ್ಯದಲ್ಲಿ ನಾವೀನ್ಯತೆ, ಸಂಶೋಧನೆ, ತಯಾರಿಕೆ, ಸಣ್ಣ ಮತ್ತು ಮಧ್ಯಮ ಕೈಗಾರಿಕೆ ಮತ್ತಿತರ ವಲಯಗಳಲ್ಲಿ ಉಜ್ವಲ ಅವಕಾಶಗಳಿವೆ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ. ಕಾರ್ಯಕ್ರಮದಲ್ಲಿ ತುಮಕೂರಿನ ಸಿದ್ಧಗಂಗಾ ಮಠದ ಶ್ರೀ ಸಿದ್ಧಲಿಂಗ ಸ್ವಾಮೀಜಿ, ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಸಚಿವ ಈಶ್ವರ ಖಂಡ್ರೆ, ಶಾಸಕರಾದ ಗಣೇಶ ಹುಕ್ಕೇರಿ, ವಿಧಾನ ಪರಿಷತ್ ಸದಸ್ಯ ನವೀನ್, ಫೋರಂನ ಬೆಂಗಳೂರು ಘಟಕದ ಅಧ್ಯಕ್ಷ ಸಂತೋಷ್ ಕೆಂಚಾಂಬ, ಮಾಜಿ ಶಾಸಕ ರುದ್ರಗೌಡ ಮುಂತಾದವರು ಉಪಸ್ಥಿತರಿದ್ದರು.
Russia Invites Ukraine: ಉಕ್ರೇನ್ ಜೊತೆ ಸಂಧಾನ ಮಾಡಿಕೊಳ್ಳಲು ಮಹತ್ವದ ನಿರ್ಧಾರ ಕೈಗೊಂಡ ರಷ್ಯಾ ಅಧ್ಯಕ್ಷ ಪುಟಿನ್
ರಷ್ಯಾ ಮತ್ತು ಉಕ್ರೇನ್ ಯುದ್ಧ ಒಂದು ರೀತಿಯಲ್ಲಿ ಹಾವು ಸಾಯಬಾರದು, ಕೋಲು ಮುರಿಯಬಾರದು ಎಂಬ ರೀತಿ ಆಗಿ ಹೋಗಿದೆ. ಇಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಎಷ್ಟೆಲ್ಲಾ ಪ್ರಯತ್ನ ಹಾಕಿ, ಇಬ್ಬರ ನಡುವಿನ ಯುದ್ಧ ನಿಲ್ಲಿಸಲು ಸಂಧಾನ ಮಾಡುತ್ತಿದ್ದರೂ ಅದು ಪ್ರಯೋಜನಕ್ಕೆ ಬಂದೇ ಇಲ್ಲ. ಒಂದು ದಿನ ರಷ್ಯಾ ದಾಳಿ ಮಾಡಿದರೆ, ಮರುದಿನವೇ ಉಕ್ರೇನ್ ದಾಳಿ
ಜಗತ್ತಿನ 8ನೇ ಅದ್ಭುತ; ಶಾಂತಿ ಮಾತುಕತೆ ನಡೆಸಲು ಝೆಲೆನ್ಸ್ಕಿ ಅವರನ್ನು ಮಾಸ್ಕೋಗೆ ಕರೆದ ಪುಟಿನ್; ಯುದ್ಧ ನಿಲ್ಲುತ್ತೆ?
ಇದು ನಿಜಕ್ಕೂ ಒಂದು ರೀತಿಯಲ್ಲಿ ಜಗತ್ತಿನ ಎಂಟನೇ ಅದ್ಭುತ. ಕಳೆದ ನಾಲ್ಕು ವರ್ಷಗಳಿಂದ ಪರಸ್ಪರ ಬಂದೂಕುಯ ಗುರಿ ಇಟ್ಟಿರುವ ರಷ್ಯಾ-ಉಕ್ರೇನ್, ಕೊನೆಗೂ ಶಾಂತಿಯ ಮಾತುಗಳನ್ನಾಡಲಾರಂಭಿಸಿವೆ. ಇದರ ಮೊದಲ ಹೆಜ್ಜೆಯಾಗಿ ಉಕ್ರೇನ್ ಅಧ್ಯಕ್ಷರನ್ನು ಶಾಂತಿ ಮಾತುಕತೆಗಾಗಿ ರಷ್ಯಾ ಮಾಸ್ಕೋಗೆ ಬರುವಂತೆ ಆಹ್ವಾನಿಸಿದೆ. ಆದರೆ ಈ ಆಹ್ವಾನವನ್ನು ವೊಲೊಡಮಿರ್ ಝೆಲೆನ್ಸ್ಕಿ ಒಪ್ಪಿಕೊಂಡಿದ್ದರ ಬಗ್ಗೆ ಕೈವ್ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ. ಆದರೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಶಾಂತಿಗಾಗಿ ಕೈಚಾಚಿರುವುದು ಜಾಗತಿಕ ಮಟ್ಟದಲ್ಲಿ ಗಮನ ಸೆಳೆದಿದೆ.
BJP ಮಾಜಿ ಶಾಸಕ ಅಶ್ವತ್ಥ ನಾರಾಯಣಗೆ ಜೈಲು ಶಿಕ್ಷೆ ವಿಧಿಸಿದ ನ್ಯಾಯಾಲಯ! ಬೆಂಗಳೂರಿನಲ್ಲಿ ಲೇಔಟ್ ಅಕ್ರಮ
ಮಾಜಿ ಶಾಸಕ ಅಶ್ವತ್ಥ ನಾರಾಯಣ ಅವರಿಗೆ ರಾಜ್ಯ ಭೂಕಬಳಿಕೆ ನ್ಯಾಯಾಲಯವು 1 ವರ್ಷ ಜೈಲು ಶಿಕ್ಷೆ ಹಾಗೂ 10 ಸಾವಿರ ರೂ. ದಂಡ ವಿಧಿಸಿದೆ. ಕೃಷಿ ಜಮೀನನ್ನು ಭೂ ಪರಿವರ್ತನೆ ಮಾಡದೆ ಖಾಲಿ ನಿವೇಶನಗಳಾಗಿ ವಿಂಗಡಿಸಿ ಮಾರಾಟ ಮಾಡಿದ್ದ ಪ್ರಕರಣ ಇದಾಗಿದೆ. ಮೈಸೂರಿನ ವೈದ್ಯೆ ಡಾ. ಕಾವ್ಯಶ್ರೀ ಅವರ ದೂರಿನ ಅನ್ವಯ ಈ ಆದೇಶ ಹೊರಡಿಸಲಾಗಿದೆ.
ಬೀದಿನಾಯಿಗಳ ತೆರವು ಆದೇಶದಲ್ಲಿ ಬದಲಾವಣೆ ಕೋರಿ ಮನವಿ: ತೀರ್ಪು ಕಾಯ್ದಿರಿಸಿದ ಸುಪ್ರೀಂ ಕೋರ್ಟ್
ಹೊಸದಿಲ್ಲಿ,ಜ.29: ಬೀದಿನಾಯಿಗಳನ್ನು ತೆರವುಗೊಳಿಸುವ ಪ್ರಕರಣಕ್ಕೆ ಸಂಬಂಧಿಸಿ ತಾನು ಈ ಹಿಂದೆ ನೀಡಿದ್ದ ಆದೇಶಗಳಲ್ಲಿ ಬದಲಾವಣೆಗಳನ್ನು ಕೋರಿ ಸಲ್ಲಿಸಲಾದ ಅರ್ಜಿಯ ಮೇಲಿನ ತೀರ್ಪನ್ನು ಸುಪ್ರೀಂಕೋರ್ಟ್ ಗುರುವಾರ ಕಾಯ್ದಿರಿಸಿದೆ. ಬೀದಿನಾಯಿಗಳ ಹಾವಳಿ ನಿಯಂತ್ರಣಕ್ಕೆ ಪಂಜಾಬ್, ತಮಿಳುನಾಡು, ಉತ್ತರಪ್ರದೇಶ ಹಾಗೂ ರಾಜಸ್ಥಾನದಂತ ರಾಜ್ಯಗಳು ಕೈಗೊಂಡ ಕ್ರಮಗಳ ಬಗ್ಗೆ ಆ್ಯಮಿಕಸ್ ಕ್ಯೂರಿ (ನ್ಯಾಯಾಲಯದ ಮಿತ್ರ) ಗೌರವ್ ಅಗರ್ವಾಲ್ ಅವರ ಹೇಳಿಕೆಯನ್ನು ಆಲಿಸಿದ ಬಳಿಕ ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್, ಸಂದೀಪ್ ಮೆಹ್ತಾ ಹಾಗೂ ಎನ್.ವಿ. ಅಂಜಾರಿಯಾ ಅವರನ್ನೊಳಗೊಂಡ ನ್ಯಾಯಪೀಠವು ಆದೇಶವನ್ನು ಕಾಯ್ದಿರಿಸಿತು. ರಾಷ್ಟ್ರೀಯ ಹೆದ್ದಾರಿಗಳಿಂದ ಬೀದಿನಾಯಿಗಳನ್ನು ತೆರವುಗೊಳಿಸಲು ಹಾಗೂ ರಸ್ತೆಗಳಿಗೆ ಬೇಲಿ ನಿರ್ಮಿಸಬೇಕೆಂದು ತಾನು 2025ರ ನವೆಂಬರ್ 7ರಂದು ನೀಡಿದ್ದ ಆದೇಶದ ಅನುಸರಣೆಯ ಕುರಿತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಪರ ನ್ಯಾಯವಾದಿಯವರ ವಾದವನ್ನು ಕೂಡ ನ್ಯಾಯಪೀಠ ಆಲಿಸಿತು. ಪ್ರಾಣಿಗಳಿಗೆ ಆಶ್ರಯಧಾಮಗಳನ್ನು ನಿರ್ಮಿಸಲು ಹಾಗೂ ಪ್ರಾಣಿಗಳಿಗೆ ಜನನ ನಿಯಂತ್ರಣ ಕೇಂದ್ರಗಳನ್ನು ನಿರ್ಮಿಸಲು ಅನುಮತಿ ಕೋರಿದ ಎನ್ಜಿಒಗಳ ಅರ್ಜಿಗಳನ್ನು ಪರಿಷ್ಕರಿಸುವಂತೆಯೂ ನ್ಯಾಯಾಲಯವು ಈ ಸಂದರ್ಭ ಭಾರತೀಯ ಪ್ರಾಣಿ ಕಲ್ಯಾಣ ಮಂಡಳಿಗೆ ಸೂಚಿಸಿದೆ.
ಬಳ್ಳಾರಿ | ಛಾಯಾಗ್ರಾಹಕರ ಕುಟುಂಬಗಳ ಉತ್ತಮ ಜೀವನಕ್ಕೆ ಸರಕಾರ ವಿಶೇಷ ಯೋಜನೆ ರೂಪಿಸಲಿ: ವಾಮದೇವ ಶ್ರೀ
ಬಳ್ಳಾರಿ / ಕಂಪ್ಲಿ : ಇತ್ತೀಚಿನ ಅತ್ಯಾಧುನಿಕ ತಂತ್ರಜ್ಞಾನ ಯುಗದಲ್ಲಿ ಛಾಯಾಗ್ರಾಹಕರ ಜೀವನ ಅತ್ಯಂತ ಸಂಕಷ್ಟದಲ್ಲಿದ್ದು, ಛಾಯಾಗ್ರಾಹಕರ ಹಾಗೂ ಅವರ ಕುಟುಂಬಗಳ ಉತ್ತಮ ಜೀವನಕ್ಕಾಗಿ ಸರ್ಕಾರ ವಿಶೇಷ ಯೋಜನೆಗಳನ್ನು ರೂಪಿಸಬೇಕು ಎಂದು ಎಮ್ಮಿಗನೂರು ಹಂಪಿ ಸಾವಿರ ದೇವರು ಮಹಾಂತರ ಮಠದ ಪೀಠಾಧಿಪತಿಗಳಾದ ಷ.ಬ್ರ. ವಾಮದೇವ ಮಹಾಂತ ಶಿವಾಚಾರ್ಯರು ಹೇಳಿದರು. ಪಟ್ಟಣದ ಸಾಂಗತ್ರಯ ಸಂಸ್ಕೃತ ಪಾಠಶಾಲೆಯ ವೀಶೈಭವನದಲ್ಲಿ ಕಂಪ್ಲಿ ತಾಲ್ಲೂಕು ಫೋಟೋಗ್ರಾಫರ್ಸ್ ಮತ್ತು ವಿಡಿಯೋಗ್ರಾಫರ್ ಸಂಘ ಏರ್ಪಡಿಸಿದ್ದ ತಾಲ್ಲೂಕು ಛಾಯಾ ಸಮ್ಮಿಲನ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದ ಅವರು, ಇಂದಿನ ತಾಂತ್ರಿಕ ಯುಗದಲ್ಲಿ ಹಳೆಯ ಛಾಯಾಗ್ರಾಹಕರು ಜೀವನ ಸಾಗಿಸುವುದು ತುಂಬಾ ಕಷ್ಟಕರವಾಗಿದೆ. ಆದರೂ ಕಾಲಕ್ಕೆ ತಕ್ಕಂತೆ ನೂತನ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಮುಂದುವರಿಯುವುದು ಛಾಯಾಗ್ರಾಹಕರ ಕರ್ತವ್ಯ ಎಂದು ಹೇಳಿದರು. ಸಮಾರಂಭವನ್ನು ಶಾಸಕರ ಪರವಾಗಿ ಉದ್ಘಾಟಿಸಿದ ರಾಜೇಶ್ ಸಿಂಗ್ ಮಾತನಾಡಿ, ಕಂಪ್ಲಿ ಶಾಸಕರು ಕೋವಿಡ್ ಸಂಕಷ್ಟದ ಸಂದರ್ಭದಲ್ಲಿ ಛಾಯಾಗ್ರಾಹಕರ ಪರವಾಗಿ ಶ್ರಮಿಸಿದ್ದಾರೆ. ಮುಂದೆಯೂ ಛಾಯಾಗ್ರಾಹಕರ ನೆರವಿಗೆ ಸದಾ ಸಿದ್ಧರಿದ್ದಾರೆ ಎಂದು ತಿಳಿಸಿ, ಶಾಸಕರಿಂದ ಸಂಘಕ್ಕೆ ನೀಡಲಾದ 50,000 ರೂ. ದೇಣಿಗೆಯನ್ನು ಹಸ್ತಾಂತರಿಸಿದರು. ಕೆಎಪಿಸಿಎಂಎಸ್ ಅಧ್ಯಕ್ಷ ಹೊಸಕೇಟೆ ಜಗದೀಶ್ ಮಾತನಾಡಿದರು. ಕಾರ್ಯಕ್ರಮದಲ್ಲಿ ಕಂಪ್ಲಿ ಪಿಐ ಕೆ.ಬಿ. ವಾಸುಕುಮಾರ, ಛಾಯಾಗ್ರಾಹಕರ ಸಂಘದ ಜಿಲ್ಲಾಧ್ಯಕ್ಷ ನಾಡಗೌಡ ಚಂದ್ರಮೋಹನ್, ವಿಶೇಷ ಆಹ್ವಾನಿತರಾಗಿ ಜಿ. ವೀರಭದ್ರಪ್ಪ ಮತ್ತು ಕುಟುಂಬ, ಆನಂದ ಕಾಗಲ್ಕರ್, ವಿವಿಧ ತಾಲ್ಲೂಕು ಹಾಗೂ ಜಿಲ್ಲೆಗಳ ಛಾಯಾಗ್ರಾಹಕ ಮುಖಂಡರಾದ ಶ್ರೀಧರ್, ನಾಗರಾಜ್, ವಿನಯ್, ಮಲ್ಲಿಕಾರ್ಜುನಗೌಡ, ಷಡಾಕ್ಷರಯ್ಯ ಸ್ವಾಮಿ, ತಾಲ್ಲೂಕು ಅಧ್ಯಕ್ಷ ಜಗದೀಶಗೌಡ, ಜಿ. ಸಿದ್ದರಾಮನಗೌಡ, ರಾಘವೇಂದ್ರಶೆಟ್ಟಿ, ಜಿ.ಎಚ್. ಶಶೀಧರ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಇದಕ್ಕೂ ಮುನ್ನ ಛಾಯಾಗ್ರಾಹಕರ ಸಮ್ಮಿಲನದ ಅಂಗವಾಗಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಅದ್ದೂರಿ ಮೆರವಣಿಗೆ ನಡೆಸಿ ಸಾರ್ವಜನಿಕರ ಗಮನ ಸೆಳೆಯಲಾಯಿತು. ಕಾರ್ಯಕ್ರಮವನ್ನು ಅತಿಥಿ ಶಿಕ್ಷಕ ಎಸ್. ರಾಮು ನಿರ್ವಹಿಸಿದರು. ಕಾರ್ಯದರ್ಶಿ ಜಿ.ಎಚ್. ಶಶೀಧರ್ ವರದಿ ಮಂಡಿಸಿದರು. ನಂತರ ಛಾಯಾಗ್ರಾಹಕರ ಕುಟುಂಬದ ಮಕ್ಕಳಿಂದ ಆಕರ್ಷಕ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ಬಾರಾಮತಿ ವಿಮಾನ ದುರಂತ: ಟೇಬಲ್ಟಾಪ್ ರನ್ವೇಗಳು ಎಷ್ಟು ಸುರಕ್ಷಿತ?
ಬುಧವಾರ ಬೆಳಿಗ್ಗೆ ಬಾರಾಮತಿ ವಿಮಾನ ನಿಲ್ದಾಣದಲ್ಲಿ ನಡೆದ ಭೀಕರ ಲಿಯರ್ಜೆಟ್ ಅಪಘಾತದಲ್ಲಿ ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರ ಸಾವು, ಮತ್ತೊಮ್ಮೆ ಟೇಬಲ್ಟಾಪ್ ರನ್ವೇಗಳ ಸುರಕ್ಷತೆ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಜನವರಿ 28ರಂದು ಬೆಳಿಗ್ಗೆ ಬಾರಾಮತಿಯಲ್ಲಿ ಸಂಭವಿಸಿದ ಈ ವಿಮಾನ ದುರಂತದಲ್ಲಿ ಅಜಿತ್ ಪವಾರ್ ಸೇರಿದಂತೆ ಐವರು ಸಾವಿಗೀಡಾಗಿದ್ದರು. ಪವಾರ್ ಪ್ರಯಾಣಿಸುತ್ತಿದ್ದ ವಿಮಾನವು ಬಾರಾಮತಿ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ಮಾಡಲು ಪ್ರಯತ್ನಿಸುತ್ತಿದ್ದಾಗ ಅಪಘಾತಕ್ಕೀಡಾಯಿತು. ಬಾರಾಮತಿ ಏರ್ಸ್ಟ್ರಿಪ್ ಚಿಕ್ಕದಾಗಿದ್ದು, ಇನ್ಸ್ಟ್ರುಮೆಂಟ್ ಲ್ಯಾಂಡಿಂಗ್ ಸಿಸ್ಟಮ್ (ILS) ಸೌಲಭ್ಯಗಳನ್ನು ಹೊಂದಿಲ್ಲ. ಪೈಲಟ್ ಹಸ್ತಚಾಲಿತ ಹಾಗೂ ದೃಶ್ಯ ಲ್ಯಾಂಡಿಂಗ್ಗೆ ಪ್ರಯತ್ನಿಸಬೇಕಾಯಿತು. ಲ್ಯಾಂಡಿಂಗ್ ಸಮಯದಲ್ಲಿ ವಿಮಾನವು ಟೇಬಲ್ಟಾಪ್ ರನ್ವೇಯ ಅಂಚಿನ ಬಳಿ ಅಪ್ಪಳಿಸಿತು. ಮುಂಬೈನಿಂದ ಹಾರಿದ್ದ ಲಿಯರ್ಜೆಟ್ 45, ಸುಧಾರಿತ ಲ್ಯಾಂಡಿಂಗ್ ಸಾಧನಗಳಿಲ್ಲದೆ, ಸರಾಸರಿ ಸಮುದ್ರ ಮಟ್ಟದಿಂದ 604 ಮೀಟರ್ ಎತ್ತರದಲ್ಲಿರುವ 1,770 ಮೀಟರ್ ರನ್ವೇಯಲ್ಲಿ ಇಳಿಯುವಾಗ ನಿಯಂತ್ರಣ ಕಳೆದುಕೊಂಡಿತು. ಹತ್ತಿರದ ಮೈದಾನಕ್ಕೆ ಡಿಕ್ಕಿ ಹೊಡೆದಾಗ ವಿಮಾನವು ಬೆಂಕಿಗೆ ಆಹುತಿಯಾಯಿತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಮುಂಬೈನಿಂದ ಬೆಳಿಗ್ಗೆ 08.10ರ ಸುಮಾರಿಗೆ ಹೊರಟ ವಿಮಾನವು ಬಾರಾಮತಿ ವಿಮಾನ ನಿಲ್ದಾಣದ ಟೇಬಲ್ಟಾಪ್ ರನ್ವೇ ತಲುಪುತ್ತಿದ್ದಂತೆ ಬೆಳಿಗ್ಗೆ 08.44ರ ಸುಮಾರಿಗೆ ಅಪಘಾತಕ್ಕೀಡಾಯಿತು. ನಾಗರಿಕ ವಿಮಾನಯಾನ ನಿರ್ದೇಶನಾಲಯ (DGCA) ತನಿಖೆಯ ಮೇಲ್ವಿಚಾರಣೆ ನಡೆಸುತ್ತಿದೆ. ತನಿಖೆ ತ್ವರಿತವಾಗಿ ಪ್ರಗತಿಯಲ್ಲಿದೆ. ಅಪಘಾತಕ್ಕೊಳಗಾದ ವಿಮಾನದ ಬ್ಲಾಕ್ ಬಾಕ್ಸ್ ವಶಪಡಿಸಿಕೊಳ್ಳಲಾಗಿದೆ ಎಂದು ನಾಗರಿಕ ವಿಮಾನಯಾನ ಸಚಿವಾಲಯ (MOCA) ತಿಳಿಸಿದ್ದು, AAIB ನಿಯಮಗಳು–2025ರ ನಿಯಮಗಳು 5 ಮತ್ತು 11ರ ಪ್ರಕಾರ ತನಿಖೆಯನ್ನು ಪ್ರಾರಂಭಿಸಲಾಗಿದೆ. ಟೇಬಲ್ಟಾಪ್ ರನ್ವೇಗಳಲ್ಲಿ ಟೇಕ್ಆಫ್ ಮತ್ತು ಲ್ಯಾಂಡಿಂಗ್ ಸಾಮಾನ್ಯ ರನ್ವೇಗಳಿಗಿಂತ ಹೆಚ್ಚು ಸವಾಲಿನದ್ದು ಎಂದು ತಜ್ಞರು ಹೇಳುತ್ತಾರೆ. ಬಾರಾಮತಿ ವಾಯುನೆಲೆ ಸರಿಸುಮಾರು 2,000 ಅಡಿ ಎತ್ತರದಲ್ಲಿದೆ. ಇಲ್ಲಿ ಇನ್ಸ್ಟ್ರುಮೆಂಟ್ ಲ್ಯಾಂಡಿಂಗ್ ಸಿಸ್ಟಮ್ (ILS) ಇಲ್ಲ. ಆದ್ದರಿಂದ ಪೈಲಟ್ಗಳು ಲ್ಯಾಂಡಿಂಗ್ಗೆ ಹಸ್ತಚಾಲಿತ ಹಾಗೂ ದೃಶ್ಯ ತಂತ್ರಗಳನ್ನೇ ಅವಲಂಬಿಸಬೇಕಾಗುತ್ತದೆ. ಕೆಲವು ಸಿಸಿಟಿವಿ ದೃಶ್ಯಾವಳಿಗಳು ವಿಮಾನವು ಅಪ್ಪಳಿಸುವ ಮೊದಲು ಸ್ವಲ್ಪ ಓರೆಯಾಗಿ ಬಳಿಕ ಬೆಂಕಿ ಹತ್ತಿಕೊಂಡಿರುವುದನ್ನು ತೋರಿಸಿದ್ದರೂ, ಆರಂಭಿಕ ತನಿಖೆಗಳು ಕಳಪೆ ಗೋಚರತೆಯೇ ಅಪಘಾತಕ್ಕೆ ಕಾರಣವಾಗಿರಬಹುದು ಎಂದು ಸೂಚಿಸಿವೆ. ಡಿಜಿಸಿಎ ಮೂಲಗಳು ಬಾರಾಮತಿ ರನ್ವೇಯನ್ನು ಟೇಬಲ್ಟಾಪ್ ರನ್ವೇ ಎಂದು ಹೇಳಿದ್ದು, ಇಂತಹ ರನ್ವೇಗಳು ಎಷ್ಟು ಸುರಕ್ಷಿತ ಎಂಬ ಚರ್ಚೆ ಮತ್ತೆ ಮುನ್ನೆಲೆಗೆ ಬಂದಿದೆ. ಟೇಬಲ್ಟಾಪ್ ರನ್ವೇಗಳು ಎಂದರೆ? ಹೆಸರೇ ಸೂಚಿಸುವಂತೆ, ಗುಡ್ಡಗಾಡು ಮೇಲ್ಮೈ ಮೇಲೆ ನಿರ್ಮಿಸಲಾದ ವಿಮಾನ ನಿಲ್ದಾಣವನ್ನು ಟೇಬಲ್ಟಾಪ್ ರನ್ವೇ ಎಂದು ಕರೆಯಲಾಗುತ್ತದೆ. ನಿಲ್ದಾಣದ ಎರಡೂ ಬದಿಗಳಲ್ಲಿ ಅಥವಾ ಒಂದು ಬದಿಯಲ್ಲಿ ಕಣಿವೆ ಇದ್ದು, ಎತ್ತರದ ಪ್ರದೇಶದಲ್ಲಿ ರನ್ವೇ ಇದ್ದರೆ ಅದನ್ನು ಟೇಬಲ್ಟಾಪ್ ರನ್ವೇ ಎಂದು ಗುರುತಿಸಲಾಗುತ್ತದೆ. ಗುಡ್ಡಗಳನ್ನು ಕಡಿದು ನಿರ್ಮಿಸಲಾದ ಈ ರನ್ವೇಗಳ ಒಂದು ತುದಿಯಲ್ಲಿ ಕಡಿದಾದ ಇಳಿಜಾರು ಇರುತ್ತದೆ. ಭಾರತದಲ್ಲಿ ಟೇಬಲ್ಟಾಪ್ ರನ್ವೇಗಳೆಂದು ಪರಿಗಣಿಸಲ್ಪಡುವ ವಿಮಾನ ನಿಲ್ದಾಣಗಳಲ್ಲಿ ಲೆಂಗ್ಪುಯಿ (ಮಿಜೋರಾಮ್), ಶಿಮ್ಲಾ ಮತ್ತು ಕುಲ್ಲು (ಹಿಮಾಚಲ ಪ್ರದೇಶ), ಪಾಕ್ಯೊಂಗ್ (ಸಿಕ್ಕಿಂ), ಮಂಗಳೂರು (ಕರ್ನಾಟಕ), ಕೋಯಿಕ್ಕೋಡ್ ಮತ್ತು ಕಣ್ಣೂರು (ಕೇರಳ) ಸೇರಿವೆ. ಟೇಬಲ್ಟಾಪ್ ರನ್ವೇಗಳಲ್ಲಿ ಸಂಭವಿಸಿದ ಅಪಘಾತಗಳು 2010ರ ಮೇ 22ರಂದು ಮಂಗಳೂರಿನಲ್ಲಿ ನಡೆದ ಅಪಘಾತವು ಟೇಬಲ್ಟಾಪ್ ರನ್ವೇಗಳಲ್ಲಿನ ಅಪಾಯಗಳನ್ನು ಸ್ಪಷ್ಟವಾಗಿ ಎತ್ತಿ ತೋರಿಸಿತು. ದುಬೈನಿಂದ ಮಂಗಳೂರಿಗೆ ಬಂದ ಏರ್ ಇಂಡಿಯಾ ಎಕ್ಸ್ಪ್ರೆಸ್ ವಿಮಾನವು ರನ್ವೇ 24ರಲ್ಲಿ ಇಳಿಯುವಾಗ ರನ್ವೇ ದಾಟಿ ಹೋಗಿತ್ತು. ವಿಮಾನ IX-812 ಆಂಟೆನಾಕ್ಕೆ ಡಿಕ್ಕಿ ಹೊಡೆದು ಬಳಿಕ ಕಡಿದಾದ ಕಣಿವೆಗೆ ಜಾರಿ ಬೆಂಕಿಗಾಹುತಿಯಾಯಿತು. ವಿಮಾನದಲ್ಲಿದ್ದ 160 ಪ್ರಯಾಣಿಕರು ಮತ್ತು 6 ಸಿಬ್ಬಂದಿಗಳಲ್ಲಿ 158 ಮಂದಿ ಈ ಅಪಘಾತದಲ್ಲಿ ಪ್ರಾಣ ಕಳೆದುಕೊಂಡರು. ಈ ಘಟನೆ, ಇಂತಹ ವಿಮಾನ ನಿಲ್ದಾಣಗಳ ಕಾರ್ಯಾಚರಣೆಯ ಸ್ವರೂಪದ ಮೇಲೆ, ವಿಶೇಷವಾಗಿ ಅವುಗಳ ಚಿಕ್ಕ ರನ್ವೇಗಳ ಮೇಲೆ ಗಮನ ಸೆಳೆದಿತ್ತು. 2020ರ ಆಗಸ್ಟ್ನಲ್ಲಿ, ಮಾನ್ಸೂನ್ ಮಳೆ ಮತ್ತು ಕಳಪೆ ಗೋಚರತೆಯ ಕಾರಣದಿಂದ ಏರ್ ಇಂಡಿಯಾ ಎಕ್ಸ್ಪ್ರೆಸ್ನ ಬೋಯಿಂಗ್ 737 ವಿಮಾನವು ಕೋಝಿಕೋಡ್ನ ಟೇಬಲ್ಟಾಪ್ ರನ್ವೇಯನ್ನು ದಾಟಿ 35 ಅಡಿ ಆಳದ ಕಮರಿಗೆ ಉರುಳಿತು. ಈ ಅಪಘಾತದಲ್ಲಿ 21 ಮಂದಿ ಮೃತಪಟ್ಟರು. ಈ ಘಟನೆ ನಂತರ, ವಾಯುಯಾನ ಅಧಿಕಾರಿಗಳು ರನ್ವೇ ಕುಶನ್ ವಿಸ್ತರಣೆಗಳು ಹಾಗೂ ವೃದ್ಧಿಸಿದ ಸುರಕ್ಷತಾ ಪ್ರೋಟೋಕಾಲ್ಗಳನ್ನು ಶಿಫಾರಸು ಮಾಡಿದರು. ಸವಾಲುಗಳೇನು? ಅತ್ಯುತ್ತಮ ವಾಣಿಜ್ಯ ಪೈಲಟ್ಗಳಿಗೂ ಸಹ ಟೇಬಲ್ಟಾಪ್ ರನ್ವೇಗಳಲ್ಲಿ ವಿಮಾನವನ್ನು ಇಳಿಸುವುದು ಕಷ್ಟಕರವೆಂದು ಹೇಳಲಾಗುತ್ತದೆ. ಕೋಝಿಕೋಡ್ ವಿಮಾನ ನಿಲ್ದಾಣದಂತೆ ಗುಡ್ಡದ ತುದಿಯಲ್ಲಿ ಇರುವ ರನ್ವೇಗಳಲ್ಲಿ, ಪೈಲಟ್ಗಳು ಸರಿಯಾದ ದೂರದಲ್ಲಿ ವಿಮಾನವನ್ನು ನಿಲ್ಲಿಸಲು ಹೆಚ್ಚಿನ ಎಚ್ಚರಿಕೆ ವಹಿಸಬೇಕಾಗುತ್ತದೆ. ಮಳೆಗಾಲದಲ್ಲಿ ಪರಿಸ್ಥಿತಿ ಇನ್ನಷ್ಟು ಜಟಿಲವಾಗುತ್ತದೆ. ಪೈಲಟ್ಗಳು ಸರಿಯಾದ ಲ್ಯಾಂಡಿಂಗ್ ಬಿಂದುಗಳನ್ನು ಗುರುತಿಸಲು ವಿಫಲರಾದರೆ, ವಿಮಾನವು ರನ್ವೇ ಬಿಟ್ಟು ಕೆಳಜಾರುವ ಅಪಾಯ ಉಂಟಾಗುತ್ತದೆ. ಕೆಟ್ಟ ಹವಾಮಾನ ಟೇಬಲ್ಟಾಪ್ ವಿಮಾನ ನಿಲ್ದಾಣಗಳಲ್ಲಿ ಇಳಿಯುವುದು ಸ್ವತಃ ಕಷ್ಟಕರವಾಗಿದ್ದರೂ, ಮಂಜು ಮತ್ತು ಮಳೆಯಂತಹ ಪ್ರತಿಕೂಲ ಹವಾಮಾನವು ಲ್ಯಾಂಡಿಂಗ್ ಮತ್ತು ಟೇಕ್ಆಫ್ ಎರಡನ್ನೂ ಮತ್ತಷ್ಟು ಅಪಾಯಕಾರಿಯಾಗಿಸುತ್ತದೆ. ವಿಮಾನ ಸಮೀಪಿಸುವಾಗ ವಿಂಡ್ಶೀಲ್ಡ್ ಮೇಲೆ ಇರುವ ನೀರಿನಿಂದ ಗೋಚರತೆ ವರದಿಯಾದ ಮಟ್ಟಕ್ಕಿಂತ ಕಡಿಮೆಯಾಗುತ್ತದೆ. ಜೊತೆಗೆ, ನೀರಿನಿಂದ ವಕ್ರೀಭವನ ದೋಷ ಉಂಟಾಗಿ ರನ್ವೇ ಕಡಿಮೆಯಾಗಿ ಕಾಣಬಹುದು. ಇತರ ಅಂಶಗಳನ್ನು ಅವಲಂಬಿಸಿ ಈ ದೋಷವು 5 ಡಿಗ್ರಿಗಳವರೆಗೆ ಇರಬಹುದು. ಇದರ ಪರಿಣಾಮವಾಗಿ ಅರ್ಧ ಮೈಲಿ ದೂರದಲ್ಲಿರುವ ರನ್ವೇ ಅಥವಾ ಭೂಪ್ರದೇಶದ ವೈಶಿಷ್ಟ್ಯವು ನಿಜಕ್ಕಿಂತ ಸುಮಾರು 250 ಅಡಿಗಳಷ್ಟು ಕಡಿಮೆಯಾಗಿ ಕಾಣುವ ಸಾಧ್ಯತೆ ಇದೆ. ನೀರಿನಿಂದ ಉಂಟಾಗುವ ರನ್ವೇ ಘರ್ಷಣಾ ಸಮಸ್ಯೆಯೂ ವಿಮಾನವನ್ನು ನಿಲ್ಲಿಸಲು ಬೇಕಾದ ದೂರವನ್ನು ಹೆಚ್ಚಿಸುತ್ತದೆ. ಆಪ್ಟಿಕಲ್ ಭ್ರಮೆಗಳು ಟೇಬಲ್ಟಾಪ್ ರನ್ವೇಗಳು ಅಪಾಯಕಾರಿ ದೃಶ್ಯ ಭ್ರಮೆಗಳನ್ನು ಸೃಷ್ಟಿಸಬಹುದು. ರನ್ವೇ ಬೆಟ್ಟ ಅಥವಾ ಪ್ರಸ್ಥಭೂಮಿಯ ಮೇಲೆ ಎತ್ತರದಲ್ಲಿರುವುದರಿಂದ ಅದು ಇನ್ನಷ್ಟು ಎತ್ತರವಾಗಿ ಕಾಣುತ್ತದೆ ಮತ್ತು ‘ಇನ್ಫಿನಿಟಿ ಪೂಲ್’ ಪರಿಣಾಮವನ್ನು ಉಂಟುಮಾಡುತ್ತದೆ. ಲ್ಯಾಂಡಿಂಗ್ಗೆ ಸಮೀಪಿಸುತ್ತಿರುವ ಪೈಲಟ್ಗೆ ರನ್ವೇ ನಿಜಕ್ಕಿಂತ ಹೆಚ್ಚು ಹತ್ತಿರವಾಗಿಯೂ ಎತ್ತರವಾಗಿಯೂ ಕಾಣಬಹುದು. ಇದರಿಂದ ಪೈಲಟ್ ತಪ್ಪು ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ. ಗ್ರಹಿಕೆ ಮತ್ತು ವಾಸ್ತವದ ನಡುವಿನ ಈ ಗೊಂದಲದಿಂದ ಕಠಿಣ ಲ್ಯಾಂಡಿಂಗ್, ಮಿತಿಗಿಂತ ಕಡಿಮೆ ಲ್ಯಾಂಡಿಂಗ್ ಅಥವಾ ಅಪಘಾತದ ಅಪಾಯ ಹೆಚ್ಚಾಗುತ್ತದೆ.
ಔರಾದ್ | 2 ಎಕರೆ ಭೂಮಿ, ಮೂಲಸೌಕರ್ಯ ಭರವಸೆ: ಧರಣಿ ಕೈ ಬಿಟ್ಟ ಪ್ರತಿಭಟನಾಕಾರರು
ಔರಾದ್ : ಪಟ್ಟಣದ ಸರ್ಕಾರಿ ಭೂಮಿ ಸರ್ವೆ ನಂಬರ್ 205/* ರಲ್ಲಿ ಅಲೆಮಾರಿ ಹಾಗೂ ಅರೆ ಅಲೆಮಾರಿ ಜನಾಂಗದವರಿಗೆ 2 ಎಕರೆ ಭೂಮಿ ನಿವೇಶನ ಹಾಗೂ ಮೂಲಭೂತ ಸೌಲಭ್ಯ ಒದಗಿಸುವುದಾಗಿ ಔರಾದ್ ತಹಶೀಲ್ದಾರ್ ಹಿಂಬರಹ ನೀಡಿದ ಹಿನ್ನೆಲೆಯಲ್ಲಿ, 11 ದಿನಗಳಿಂದ ನಡೆಯುತ್ತಿದ್ದ ಧರಣಿ ಸತ್ಯಾಗ್ರಹವನ್ನು ಗುರುವಾರ ಸಂಜೆ ಪ್ರತಿಭಟನಾಕಾರರು ಹಿಂಪಡೆದಿದ್ದಾರೆ. ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅವರು ಗುರುವಾರ ರಾತ್ರಿ ಧರಣಿ ಸ್ಥಳಕ್ಕೆ ಭೇಟಿ ನೀಡಿ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗಗಳಿಗೆ ಸೇರಿದ ಅಲೆಮಾರಿ–ಅರೆ ಅಲೆಮಾರಿ ಕುಟುಂಬಗಳಿಗೆ ಮುಂದಿನ ಆರು ತಿಂಗಳೊಳಗೆ 2 ಎಕರೆ ಭೂಮಿ ಹಾಗೂ ಅಗತ್ಯ ಮೂಲಸೌಕರ್ಯ ಒದಗಿಸಲಾಗುವುದು ಎಂದು ಭರವಸೆ ನೀಡಿ ಹಿಂಬರಹ ಪತ್ರ ನೀಡಿದರು. ಇದರಿಂದಾಗಿ ಅಲೆಮಾರಿ ಸಮುದಾಯದವರು ಶಾಂತಿಯುತವಾಗಿ ತಮ್ಮ ಹೋರಾಟವನ್ನು ಹಿಂಪಡೆದರು. ತಹಸೀಲ್ದಾರ್ ನೀಡಿದ ಹಿಂಬರಹದಲ್ಲಿ, ಬೀದರ್ ಸಹಾಯಕ ಆಯುಕ್ತರು, ಔರಾದ್ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರು ಮತ್ತು ಪೊಲೀಸ್ ಅಧಿಕಾರಿಗಳು ಸಮಾಲೋಚನೆ ನಡೆಸಿ, ಪರಿಶಿಷ್ಟ ಜಾತಿ–ಪಂಗಡಗಳ 85 ಕುಟುಂಬಗಳು ಹಾಗೂ ಹಿಂದುಳಿದ ವರ್ಗಗಳ 143 ಕುಟುಂಬಗಳಿಗೆ ಮುಂದಿನ 6 ತಿಂಗಳಲ್ಲಿ ಸರ್ಕಾರದ ಕಾರ್ಯವಿಧಾನ ಆರಂಭಿಸಲು ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಲಾಗಿದೆ ಎಂದು ಉಲ್ಲೇಖಿಸಲಾಗಿದೆ. ಅಲೆಮಾರಿ ಸಮುದಾಯಕ್ಕೆ ಭೂಮಿ ಮಂಜೂರಾತಿ ಹಾಗೂ ಮೂಲಭೂತ ಸೌಲಭ್ಯ ಒದಗಿಸುವಂತೆ ಆಗ್ರಹಿಸಿ, ಜ.19ರಿಂದ ಅಲೆಮಾರಿ ಸಮುದಾಯ ಹಾಗೂ ಕೆಲ ದಲಿತ ಸಂಘಟನೆಗಳು ನಿರಂತರ ಧರಣಿ ಸತ್ಯಾಗ್ರಹ ನಡೆಸುತ್ತಿದ್ದರು. ಈ ಹೋರಾಟದ ಫಲವಾಗಿ ಅಲೆಮಾರಿ ಸಮುದಾಯಕ್ಕೆ ಅಲ್ಪ ಜಯ ದೊರೆತಿದ್ದು, ಜನರು ನಿಟ್ಟುಸಿರು ಬಿಡುವಂತಾಗಿದೆ. ಈ ಸಂದರ್ಭದಲ್ಲಿ ಬೀದರ್ ಸಹಾಯಕ ಆಯುಕ್ತ ಮುಹಮ್ಮದ್ ಶಕೀಲ್, ತಹಸೀಲ್ದಾರ್ ಮಹೇಶ್ ಪಾಟೀಲ್, ಪ್ರತಿಭಟನೆಯ ನೇತೃತ್ವ ವಹಿಸಿದ್ದ ರಾಹುಲ್ ಖಂದಾರೆ, ಸುಭಾಷ್ ಲಾಧಾ, ಪ್ರವೀಣ್ ಕಾರಂಜೆ, ಸಂತೋಷ್ ಸಿಂಧೆ ಹಾಗೂ ಅಲೆಮಾರಿ ಕುಟುಂಬಸ್ಥರು ಉಪಸ್ಥಿತರಿದ್ದರು.
ನೋಂದಾಯಿತ ಖಾಸಗಿ ಆಸ್ಪತ್ರೆಗಳಲ್ಲಿ ಆಯುಷ್ಮಾನ್ ಯೋಜನೆ ನಿರಾಕರಣೆ ಸಲ್ಲದು: ಡಾ. ತಿಮ್ಮಯ್ಯ
ಶೀಘ್ರದಲ್ಲಿ ಡಿಸಿ ನೇತೃತ್ವದಲ್ಲಿ ಆಸ್ಪತ್ರೆಗಳ ಪ್ರಮುಖರ ಸಭೆ
ಇಂಗ್ಲೆಂಡ್ ಸಂಸತ್ತಿನಲ್ಲಿ ಅನುಮೋದನೆ ನಿರೀಕ್ಷೆ: ಬ್ರಿಟಿಷ್ ಡೆಪ್ಯುಟಿ ಹೈ ಕಮಿಷನರ್ ಚಂದ್ರು ಅಯ್ಯರ್
ಭಾರತ-ಯು.ಕೆ. ನಡುವಿನ ಆರ್ಥಿಕ ಮತ್ತು ವಾಣಿಜ್ಯ ಒಪ್ಪಂದ
ಯಾದಗಿರಿ | ಕಾರಿನಲ್ಲಿದ್ದ ನಗದು–ಬಂಗಾರ ಕಳವು ಪ್ರಕರಣ: ಇಬ್ಬರು ಆರೋಪಿಗಳ ಬಂಧನ
ಯಾದಗಿರಿ : ಜ.16ರಂದು ಹಾಡುಹಗಲೇ ಕಾರಿನಲ್ಲಿ ಇಟ್ಟಿದ್ದ ನಗದು ಹಾಗೂ ಬಂಗಾರವನ್ನು ಕಳವು ಮಾಡಿದ್ದ ಕಳ್ಳರಿಬ್ಬರನ್ನು ಯಾದಗಿರಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಶರಣಪ್ಪ ಕೊನೆಮನಿ ಅವರಿಗೆ ಸೇರಿದ 9.50 ಲಕ್ಷ ರೂ. ನಗದು ಹಾಗೂ 29 ಗ್ರಾಂ ಬಂಗಾರವನ್ನು ದೋಚಿದ ಪ್ರಕರಣಕ್ಕೆ ಸಂಬಂಧಿಸಿ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ಮೂಲದ ಸಂದೀಪ್ ಬೋವಿ ಹಾಗೂ ಶಂಕರ ಬೋವಿ ಎಂಬುವರನ್ನು ಬಂಧಿಸಲಾಗಿದೆ. ಬಂಧಿತರಿಂದ 8.20 ಲಕ್ಷ ರೂ. ನಗದು, ಸುಮಾರು 4.50 ಲಕ್ಷ ರೂ. ಮೌಲ್ಯದ 29 ಗ್ರಾಂ ಬಂಗಾರ ಹಾಗೂ 1 ಲಕ್ಷ ರೂ. ಮೌಲ್ಯದ ಎರಡು ಬೈಕ್ಗಳು ಸೇರಿದಂತೆ ಒಟ್ಟು 13.20 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪೃಥ್ವಿಕ್ ಶಂಕರ್ ಹಾಗೂ ಹೆಚ್ಚುವರಿ ಎಸ್ಪಿ ಧರಣೇಶ್ ಅವರ ಮಾರ್ಗದರ್ಶನದಲ್ಲಿ, ಡಿವೈಎಸ್ಪಿ ಸುರೇಶ್ ನಾಯಕ, ಸಿಪಿಐ ಸುನೀಲ್ ಮೂಲಿಮನಿ, ಪಿಎಸ್ಐ ಮಂಜನಗೌಡ ಅವರ ನೇತೃತ್ವದ ತಂಡ ಹಾಗೂ ಪೊಲೀಸ್ ಸಿಬ್ಬಂದಿಗಳ ಸಹಕಾರದಿಂದ ಈ ಕಾರ್ಯಾಚರಣೆ ಯಶಸ್ವಿಯಾಗಿ ನಡೆಯಿತು. ಈ ಸಂಬಂಧ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ಮುಂದುವರಿದಿದೆ.
ಅಸ್ಸಾಂ ಎಸ್ಐಆರ್| ಬಿಜೆಪಿ ಕಾರ್ಯಕರ್ತರಿಂದ 5 ಲಕ್ಷಕ್ಕೂ ಅಧಿಕ ದೂರು ದಾಖಲು: ಸಿಎಂ ಹಿಮಾಂತ ಬಿಸ್ವಾ ಶರ್ಮಾ
ಹೊಸದಿಲ್ಲಿ, ಜ. 29: ಅಸ್ಸಾಂನಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್ಐಆರ್)ಸಂದರ್ಭ ಆಡಳಿತಾರೂಢ ಬಿಜೆಪಿ ಕಾರ್ಯಕರ್ತರು ಶಂಕಿತ ವಿದೇಶಿಯರ ವಿರುದ್ಧ 5 ಲಕ್ಷಕ್ಕೂ ಅಧಿಕ ದೂರುಗಳನ್ನು ಸಲ್ಲಿಸಿದ್ದಾರೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಾಂತ ಬಿಸ್ವಾ ಶರ್ಮಾ ಅವರು ಬುಧವಾರ ಹೇಳಿದ್ದಾರೆ. ಶಿವಸಾಗರ್ ಜಿಲ್ಲೆಯ ಡೆಮೊದಲ್ಲಿ ಬುಧವಾರ ನಡೆದ ಕಾರ್ಯಕ್ರಮದ ನೇಪಥ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಸ್ಐಆರ್ ಪ್ರಕ್ರಿಯೆ ಸಂದರ್ಭ ದೂರು ಸಲ್ಲಿಸುವುದು ರಾಷ್ಟ್ರೀಯ ಕರ್ತವ್ಯ ಎಂದರು. ‘‘ಬಾಂಗ್ಲಾದೇಶಿ ಮಿಯಾ ವಲಸಿಗರು ರಾಜ್ಯ ಪ್ರವೇಶಿಸಿರುವುದು ಅಸ್ಸಾಂನ ಪ್ರತಿಯೊಬ್ಬರಿಗೂ ತಿಳಿದಿದೆ. ಎಸ್ಐಆರ್ ಅಡಿಯಲ್ಲಿ ಯಾರೊಬ್ಬರೂ ನೋಟಿಸು ಸ್ವೀಕರಿಸದೇ ಇದ್ದರೆ, ಅರ್ಥವೇನು? ಅಸ್ಸಾಂನಲ್ಲಿ ವಿದೇಶಿ ಪ್ರಜೆಗಳು ಇಲ್ಲ ಎಂದರ್ಥವೇ’’ ಎಂದು ಅವರು ಪ್ರಶ್ನಿಸಿದ್ದಾರೆ. ಆದುದರಿಂದಲೇ ನಮ್ಮ ಕಾರ್ಯಕರ್ತರು 5 ಲಕ್ಷಕ್ಕೂ ಅಧಿಕ ದೂರುಗಳನ್ನು ದಾಖಲಿಸಿದ್ದಾರೆ. ಇಲ್ಲದೆ ಇದ್ದರೆ, ಎಲ್ಲರೂ ಕಾನೂನುಬದ್ಧರಾಗುತ್ತಿದ್ದರು ಎಂದು ಹೇಳಿದ್ದಾರೆ.
ಮತ್ತೆ ಜನೌಷಧಿ ಕೇಂದ್ರಗಳ ಬೆನ್ನು ಹತ್ತಿದ ರಾಜ್ಯ ಸರ್ಕಾರ - ಈಗೇನು ಹೊಸ ಅಸ್ತ್ರ?
ರಾಜ್ಯ ಸರಕಾರವು ಸರ್ಕಾರಿ ಆಸ್ಪತ್ರೆ ಆವರಣದಲ್ಲಿರುವ ಜನೌಷಧಿ ಕೇಂದ್ರಗಳನ್ನು ಮುಚ್ಚುವ ತನ್ನ ಆದೇಶವನ್ನು ಪ್ರಶ್ನಿಸಿ ಹೈಕೋರ್ಟ್ ವಿಭಾಗೀಯ ಪೀಠದಲ್ಲಿ ಮೇಲ್ಮನವಿ ಸಲ್ಲಿಸಿದೆ. ಈ ವಿಚಾರವಾಗಿ ಕೇಂದ್ರ ಸರ್ಕಾರ ಮತ್ತು ಜನೌಷಧಿ ಕೇಂದ್ರಗಳ ಮಾಲೀಕರಿಗೆ ನೋಟಿಸ್ ಜಾರಿ ಮಾಡಲಾಗಿದೆ. ವಿಚಾರಣೆಯನ್ನು ಫೆಬ್ರವರಿ 4ಕ್ಕೆ ಮುಂದೂಡಲಾಗಿದೆ. ಈ ಪ್ರಕರಣದ ಮುಂದಿನ ಬೆಳವಣಿಗೆ ಕುತೂಹಲ ಮೂಡಿಸಿದೆ.
Iran Tension: ಇರಾನ್ ಬೆನ್ನಿಗೆ ನಿಂತ ಚೀನಾ, ಅಮೆರಿಕ ದಾಳಿ ನಡೆಸಿದರೆ ನೇರ ಅಖಾಡಕ್ಕೆ ಡ್ರ್ಯಾಗನ್?
ಇರಾನ್ ವಿರುದ್ಧ ನಾವು ದಾಳಿ ಮಾಡೇ ಮಾಡುತ್ತೇವೆ, ಈ ಬಾರಿ ಇರಾನ್ಗೆ ಬುದ್ಧಿ ಕಲಿಸೋದು ಪಕ್ಕಾ ಎಂದು ಅಮೆರಿಕ ಹೇಳುತ್ತಿದೆ. ಇನ್ನೊಂದು ಕಡೆ ಇರಾನ್ ಕೂಡ ನಮ್ಮ ಮೇಲೆ ಒಂದೇ ಒಂದು ಸಣ್ಣ ದಾಳಿ ಆದರೂ ಅದನ್ನು ಯುದ್ಧ ಎಂದು ಘೋಷಣೆ ಮಾಡಿ, ಪೂರ್ಣ ಪ್ರಮಾಣದ ಹೋರಾಟಕ್ಕೆ ನಾವು ಸಿದ್ಧ ಎನ್ನುತ್ತಿದೆ. ಈ ಇಬ್ಬರ ತಿಕ್ಕಾಟ ಕಂಡು
ನಿತ್ಯವೂ ಗಾಂಧಿ ತತ್ವ, ಸಿದ್ಧಾಂತದ ಹತ್ಯೆ: ವಿಲ್ಪ್ರೆಡ್ ಡಿಸೋಜ
ಗಾಂಧೀಜಿಯವರ ಗ್ರಾಮೀಣ ಭಾರತ ವಿಚಾರಗೋಷ್ಠಿ
ಕಲಬುರಗಿ | ಕವಿರಾಜಮಾರ್ಗದಲ್ಲಿ ಮನುಷ್ಯ ಪ್ರೀತಿಯ ಸಂದೇಶ : ಪ್ರೊ.ಎಚ್.ಟಿ.ಪೋತೆ
ಕವಿರಾಜಮಾರ್ಗ ಕುರಿತು ರಾಜ್ಯಮಟ್ಟದ ವಿಚಾರ ಸಂಕಿರಣ
ಹಿಂದೂ ಸಂಗಮದಲ್ಲಿ ಅಂಬೇಡ್ಕರ್ ಭಾವಚಿತ್ರ ದಸಂಸ ವಿರೋಧ
ಕುಂದಾಪುರ, ಜ.29: ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಭಾವಚಿತ್ರ ವನ್ನು ಸಂಘಪರಿವಾರದ ವಿವಿಧ ಸಂಘಟನೆಗಳು ಆಯೋಜಿಸುವ ಹಿಂದೂ ಸಂಗಮ ಕಾರ್ಯಕ್ರಮದಲ್ಲಿ ಅಳವಡಿಸಿಕೊಂಡಿರುವುದಕ್ಕೆ ಹಾಗೂ ಅವರ ಫೋಟೋ ಬಳಸುವ ರಾಜಕೀಯ ಲೆಕ್ಕಾಚಾರದ ಷಡ್ಯಂತ್ರಕ್ಕೆ ವಿರೋಧವಿದೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಕುಂದಾಪುರ ತಾಲೂಕು ಸಮಿತಿಯ ಪ್ರಧಾನ ಸಂಚಾಲಕ ರಾಜು ಬೆಟ್ಟಿನಮನೆ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಭಾರತಕ್ಕೆ ಸ್ವಾತಂತ್ರ್ಯ ಬಂದು 78ವರ್ಷಗಳು ಕಳೆದು ಹಾಗೂ ಸಂವಿಧಾನ ನಮಗೆ ನಾವೇ ಅರ್ಪಿಸಿಕೊಂಡು 77 ವರ್ಷಗಳ ಪೂರೈಸಿರುವ ಈ ಸಮಯ ದಲ್ಲಿ ಹಿಂದಿನಿಂದಲೂ ಸಂವಿಧಾನದ ಬಗ್ಗೆ ಅಸಡ್ಡೆ ಮನೋಭಾವದಿಂದ ಸಂವಿಧಾನ ಪಿತಾಮಹ ಬಾಬಾ ಸಾಹೇಬ್ ಡಾ. ಬಿ.ಆರ್ ಅಂಬೇಡ್ಕರ್ ಅವರನ್ನು ಜಾತಿ ಕಾರಣದಿಂದ ಸಂಪೂರ್ಣ ಒಪ್ಪಿಕೊಳ್ಳದ ಈ ಸಂಘಟನೆಗಳು ಮತ್ತು ಹಿಂದೂತ್ವವನ್ನು ಪ್ರತಿಪಾದಿಸುವ ರಾಜಕೀಯ ಪಕ್ಷಗಳ ನಾಯಕರು ಅಂಬೇಡ್ಕರ್ ಭಾವಚಿತ್ರವನ್ನು ತಮ್ಮ ಕಾರ್ಯಕ್ರಮದಲ್ಲಿ ಅಳವಡಿಸಿ ಕೊಂಡಿರುವುದು ಆಶ್ಚರ್ಯಕರ. ಇದು ಹಿಂದುತ್ವವಾದ ಮತ್ತು ಆರ್ಎಸ್ಎಸ್ ಸಂಘಟನೆಯ ತತ್ವದ ಅಡಿಯಲ್ಲೇ ರಾಜಕೀಯ ಆಡಳಿತ ನಡೆಸುವ ಭಾರತೀಯ ಜನತಾ ಪಕ್ಷದ ರಾಜಕೀಯ ಸ್ವಾರ್ಥಕ್ಕಾಗಿ ಅಂಬೇಡ್ಕರ್ ಹೆಸರನ್ನು ಬಳಸಿಕೊಳ್ಳಲು ಮುಂದಾಗಿದ್ದಾ ರೆಂಬ ಬಗ್ಗೆ ಅನುಮಾನ ಮೂಡಿಸುತ್ತದೆ ಎಂದು ಅವರು ಹೇಳಿದ್ದಾರೆ. ಅಂಬೇಡ್ಕರ್ ಪ್ರತಿಪಾದಿಸಿದ ತತ್ವ ಸಿದ್ಧಾಂತಗಳನ್ನು ಈ ಸಂಘಟನೆಗಳು ಒಪ್ಪಿಕೊಂಡ ಉದಾಹರಣೆಗಳಿಲ್ಲ. ಹಿಂದಿನಿಂದಲೂ ಅಂಬೇಡ್ಕರರನ್ನು ವಿರೋದಿಸುತ್ತಲೇ ಬಂದವರು ಪ್ರಸ್ತುತ ಈಗಲೂ ವಿರೋಧಿಸುತ್ತಲೇ ಇರುವವ ರಿಂದ ಈ ಬದಲಾವಣೆಯ ಹಿಂದೆ ಏನೋ ಷಡ್ಯಂತ್ರ ಇರುವ ಸಂಶಯ ಮೂಡಿಸುತ್ತಿದೆ. ಅಂಬೇಡ್ಕರರನ್ನು ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನಕಾರಿ ಪದಗಳಿಂದ ನಿಂದಿಸಿದಾಗಲು ಎಲ್ಲೂ ಕೂಡ ವಿರೋಧಿ ಸದ ಇವರು ಯಾವ ಕಾರಣಕ್ಕೆ ಅಂಬೇಡ್ಕರ್ ಭಾವಚಿತ್ರವನ್ನು ಬಳಸಿಕೊಂಡಿದ್ದಾರೆ ಎಂದವರು ಹೇಳಿಕೆಯಲ್ಲಿ ಪ್ರಶ್ನಿಸಿದ್ದಾರೆ.
ದಕ್ಷಿಣ ಆಫ್ರಿಕಾ | ಮಿನಿಬಸ್–ಟ್ರಕ್ ಅಪಘಾತದಲ್ಲಿ 11 ಮಂದಿ ಮೃತ್ಯು: ಒಂದೇ ವಾರದಲ್ಲಿ ಎರಡನೇ ಘಟನೆ
ಕೇಪ್ ಟೌನ್: ಗುರುವಾರ ದಕ್ಷಿಣ ಆಫ್ರಿಕಾದ ಪೂರ್ವ ಕ್ವಾಝುಲು–ನತಾಲ್ ಪ್ರಾಂತ್ಯದಲ್ಲಿ ಮಿನಿಬಸ್ ಟ್ಯಾಕ್ಸಿ ಮತ್ತು ಟ್ರಕ್ ನಡುವೆ ಸಂಭವಿಸಿದ ಅಪಘಾತದಲ್ಲಿ 11 ಮಂದಿ ಮೃತಪಟ್ಟಿದ್ದಾರೆ ಎಂದು ಸ್ಥಳೀಯ ಪೊಲೀಸರು ಹಾಗೂ ತುರ್ತು ಸೇವೆಗಳು ತಿಳಿಸಿವೆ. ಶಾಲಾ ಮಕ್ಕಳನ್ನು ಒಳಗೊಂಡಿದ್ದ ಮತ್ತೊಂದು ಮಾರಣಾಂತಿಕ ಅಪಘಾತ ಸಂಭವಿಸಿದ ಕೇವಲ ಒಂದೇ ವಾರದ ಅಂತರದಲ್ಲಿ ಈ ಭೀಕರ ಘಟನೆ ನಡೆದಿದೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ಘಟನಾ ಸ್ಥಳದಲ್ಲೇ ಶಾಲಾ ಮಕ್ಕಳು ಸೇರಿದಂತೆ 11 ಮಂದಿ ಮೃತಪಟ್ಟಿದ್ದಾರೆ ಎಂದು ಪ್ರಾಂತೀಯ ಸಾರಿಗೆ ಅಧಿಕಾರಿ ಸಿಬೊನಿಸೊ ಡೂಮಾ ತಿಳಿಸಿದ್ದಾರೆ. ಈ ಅಪಘಾತದಲ್ಲಿ 11 ಮಂದಿ ಮೃತಪಟ್ಟು, ಅವಶೇಷಗಳಡಿ ಸಿಲುಕಿದ್ದ ಮಿನಿಬಸ್ನ ಚಾಲಕ ಸೇರಿದಂತೆ ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಖಾಸಗಿ ಅರೆವೈದ್ಯಕೀಯ ಸೇವಾ ಸಂಸ್ಥೆ ಎಎಲ್ಎಸ್ ಪ್ಯಾರಾಮೆಡಿಕ್ಸ್ನ ವಕ್ತಾರ ಗ್ಯಾರಿತ್ ಜಾಮೀಸನ್ ಹೇಳಿದ್ದಾರೆ. ಈ ವಾರದ ಆರಂಭದಲ್ಲಿ ನೈರುತ್ಯ ಜೊಹಾನ್ಸ್ಬರ್ಗ್ನಲ್ಲಿ ಮಿನಿಬಸ್ ಟ್ಯಾಕ್ಸಿ ಮತ್ತು ಟ್ರಕ್ ನಡುವೆ ನಡೆದ ಮುಖಾಮುಖಿ ಡಿಕ್ಕಿಯಲ್ಲಿ 14 ಶಾಲಾ ಮಕ್ಕಳು ಮೃತಪಟ್ಟ ಘಟನೆ ನಡೆದಿದ್ದು, ಅದಾದ ನಂತರ ಒಂದೇ ವಾರದೊಳಗೆ ಸಂಭವಿಸಿದ ಎರಡನೇ ರಸ್ತೆ ಅಪಘಾತ ಇದಾಗಿದೆ.
ಕಲಬುರಗಿ | ಪಿಎಸ್ಐ ಅಕ್ರಮ ನೇಮಕಾತಿ ಪ್ರಕರಣದ ಆರೋಪಿ ಆರ್.ಡಿ.ಪಾಟೀಲ್ ಮೈಸೂರು ಜೈಲಿಗೆ ಸ್ಥಳಾಂತರ
ಕಲಬುರಗಿ : ಪಿಎಸ್ಐ ನೇಮಕಾತಿ ಪರೀಕ್ಷಾ ಹಗರಣದ ಪ್ರಮುಖ ಆರೋಪಿ, ಕಿಂಗ್ಪಿನ್ ಆರ್.ಡಿ.ಪಾಟೀಲ್ ನನ್ನು ಕಲಬುರಗಿ ಕೇಂದ್ರ ಕಾರಾಗೃಹದಿಂದ ಮೈಸೂರು ಕೇಂದ್ರ ಕಾರಾಗೃಹಕ್ಕೆ ಸ್ಥಳಾಂತರಿಸಲಾಗಿದೆ. ಕಲಬುರಗಿ ಜೈಲಿನಲ್ಲಿ ಶಿಸ್ತು ಭಂಗ ಉಂಟುಮಾಡುತ್ತಿದ್ದ ಹಿನ್ನೆಲೆ ಹಾಗೂ ಜೈಲಿನ ಒಳಾಂಗಣ ವಾತಾವರಣ ಹಾಳಾಗುತ್ತಿದೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ ಕಾರಾಗೃಹ ಇಲಾಖೆ ಈ ಕ್ರಮ ಕೈಗೊಂಡಿದೆ ಎಂದು ತಿಳಿದುಬಂದಿದೆ. ಕಳೆದ ತಿಂಗಳು ಕಲಬುರಗಿ ಕೇಂದ್ರ ಕಾರಾಗೃಹದೊಳಗೆ ಜೂಜಾಟ ಮತ್ತು ಮದ್ಯಪಾನಕ್ಕೆ ಸಂಬಂಧಿಸಿದ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು. ಈ ಘಟನೆಗೆ ಆರ್.ಡಿ. ಪಾಟೀಲ್ ಮಾಸ್ಟರ್ಮೈಂಡ್ ಎನ್ನಲಾಗಿದೆ. ಅಲ್ಲದೆ, ಜೈಲಿನ ಮುಖ್ಯ ಅಧೀಕ್ಷಕಿಯ ವಿರುದ್ಧ ಲಂಚದ ಆರೋಪ ಹೊರಿಸಿ, ಪೆನ್ಡ್ರೈವ್ ಮೂಲಕ ವಿಡಿಯೋಗಳನ್ನು ಹೊರಗೆ ಹರಿಬಿಟ್ಟಿದ್ದಾನೆ ಎಂಬ ಆರೋಪವೂ ಆತನ ಮೇಲಿದೆ. ಈ ಪ್ರಕರಣಗಳ ಹಿನ್ನೆಲೆಯಲ್ಲಿ ಕಾರಾಗೃಹ ಡಿಜಿಪಿ ಅಲೋಕ್ ಕುಮಾರ್ ಅವರು ಸ್ವತಃ ಕಲಬುರಗಿ ಕೇಂದ್ರ ಕಾರಾಗೃಹಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ತನಿಖೆಗೆ ಸೂಚನೆ ನೀಡಿದ್ದರು. ಜೈಲಿನ ಶಿಸ್ತು ಹಾಗೂ ಆಡಳಿತ ವ್ಯವಸ್ಥೆಗೆ ಆರ್.ಡಿ. ಪಾಟೀಲ್ನಿಂದ ನಿರಂತರ ತೊಂದರೆ ಉಂಟಾಗುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿದ ಕಾರಾಗೃಹ ಇಲಾಖೆ, ಆತನನ್ನು ಮೈಸೂರು ಕೇಂದ್ರ ಕಾರಾಗೃಹಕ್ಕೆ ಸ್ಥಳಾಂತರಿಸುವ ನಿರ್ಧಾರ ಕೈಗೊಂಡಿದೆ ಎಂದು ಅಧಿಕೃತ ಪೊಲೀಸ್ ಮೂಲಗಳು ತಿಳಿಸಿವೆ.
ಬಿಹಾರ SIR | ತೀರ್ಪು ಕಾಯ್ದಿರಿಸಿದ ಸುಪ್ರೀಂ ಕೋರ್ಟ್
ಹೊಸದಿಲ್ಲಿ: ಬಿಹಾರದಲ್ಲಿ ನಡೆದ ವಿಶೇಷ ತೀವ್ರ ಮತಪಟ್ಟಿ ಪರಿಷ್ಕರಣೆಯನ್ನು ಪ್ರಶ್ನಿಸಿ ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರೈಟ್ಸ್ (ಎಡಿಆರ್) ಸರಕಾರೇತರ ಸಂಸ್ಥೆ ಸೇರಿದಂತೆ ಹಲವರು ಸಲ್ಲಿಸಿದ್ದ ಅರ್ಜಿಗಳ ಕುರಿತ ತೀರ್ಪನ್ನು ಗುರುವಾರ ಸುಪ್ರೀಂ ಕೋರ್ಟ್ ಕಾಯ್ದಿರಿಸಿದೆ. ಬಿಹಾರದಲ್ಲಿನ ವಿಶೇಷ ತೀವ್ರ ಮತಪಟ್ಟಿ ಪರಿಷ್ಕರಣೆಗೆ ಸಂಬಂಧಿಸಿದಂತೆ ಕಪಿಲ್ ಸಿಬಲ್, ಅಭಿಷೇಕ್ ಸಿಂಘ್ವಿ, ಪ್ರಶಾಂತ್ ಭೂಷಣ್ ಹಾಗೂ ಗೋಪಾಲ್ ಶಂಕರ್ ನಾರಾಯಣ್ ಸೇರಿದಂತೆ ವಕೀಲರ ತಂಡ ಮಂಡಿಸಿದ ವಾದಗಳನ್ನು ಆಲಿಸಿದ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಮತ್ತು ನ್ಯಾಯಮೂರ್ತಿ ಜೋಯ್ ಮಲ್ಯ ಬಾಗ್ಚಿ ಅವರನ್ನು ಒಳಗೊಂಡ ನ್ಯಾಯಪೀಠ ವಿಚಾರಣೆಯನ್ನು ಮುಕ್ತಾಯಗೊಳಿಸಿತು. ಚುನಾವಣಾ ಆಯೋಗದ ಪರವಾಗಿ ರಾಕೇಶ್ ದ್ವಿವೇದಿ ಹಾಗೂ ಮಣೀಂದರ್ ಸಿಂಗ್ ವಾದ ಮಂಡಿಸಿದರು. ತೀರ್ಪನ್ನು ಕಾಯ್ದಿರಿಸುವ ಮೊದಲು, ನ್ಯಾಯಾಲಯವು ಅರ್ಜಿದಾರರ ಪರವಾಗಿ ಸಲ್ಲಿಸಲಾದ ತಿದ್ದುಪಡಿ ವಾದಗಳನ್ನು ಆಲಿಸಿತು. ಕಳೆದ ವರ್ಷದ ಆಗಸ್ಟ್ 12ರಂದು ನ್ಯಾಯಾಲಯವು ಪ್ರಕರಣದ ಕೊನೆಯ ಹಂತದ ವಾದ–ಪ್ರತಿವಾದಗಳಿಗೆ ಚಾಲನೆ ನೀಡಿತ್ತು. ಈ ವೇಳೆ, ಮತಪಟ್ಟಿಗಳಲ್ಲಿ ಯಾರದಾದರೂ ಹೆಸರು ಸೇರ್ಪಡೆ ಮಾಡುವ ಅಥವಾ ತೆಗೆದುಹಾಕುವ ಸಾಂವಿಧಾನಿಕ ವ್ಯಾಪ್ತಿ ಚುನಾವಣಾ ಆಯೋಗಕ್ಕೇ ಸೇರಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತ್ತು. ಈ ಸಂದರ್ಭ ವಿಶೇಷ ತೀವ್ರ ಮತಪಟ್ಟಿ ಪರಿಷ್ಕರಣೆಯನ್ನು ಸಮರ್ಥಿಸಿಕೊಂಡ ಭಾರತೀಯ ಚುನಾವಣಾ ಆಯೋಗ, ಆಧಾರ್ ಕಾರ್ಡ್ ಹಾಗೂ ಮತದಾರರ ಚೀಟಿಯನ್ನು ನಾಗರಿಕತ್ವದ ತೃಪ್ತಿದಾಯಕ ಪುರಾವೆಯಾಗಿ ಪರಿಗಣಿಸಲು ಸಾಧ್ಯವಿಲ್ಲ ಎಂದು ವಾದಿಸಿತ್ತು.
ಬಹಿಷ್ಕಾರದ ಕಾರ್ಮೋಡದ ನಡುವೆ ಟಿ-20 ವಿಶ್ವಕಪ್ಗೆ ವಿಮಾನದ ಟಿಕೆಟ್ ಕಾಯ್ದಿರಿಸಿದ ಪಾಕಿಸ್ತಾನ ತಂಡ
ಹೊಸದಿಲ್ಲಿ, ಜ.29: ಮುಂದಿನ ತಿಂಗಳು ಆರಂಭವಾಗಲಿರುವ ಟಿ-20 ವಿಶ್ವಕಪ್ ಪಂದ್ಯಾವಳಿಯಲ್ಲಿ ಭಾಗವಹಿಸುವ ಕುರಿತು ಅನಿಶ್ಚಿತತೆ ಮುಂದುವರಿದಿರುವಂತೆಯೆ ಸೋಮವಾರ ಕೊಲಂಬೊಕ್ಕೆ ತೆರಳಲು ಪಾಕಿಸ್ತಾನದ ಟಿ-20 ಕ್ರಿಕೆಟ್ ತಂಡವು ವಿಮಾನದ ಟಿಕೆಟ್ ಕಾಯ್ದಿರಿಸಿದೆ. 2026ರ ಆವೃತ್ತಿಯ ಟಿ-20 ವಿಶ್ವಕಪ್ ಟೂರ್ನಿಯು ಫೆಬ್ರವರಿ 7ರಿಂದ ಮಾರ್ಚ್ 8ರ ತನಕ ನಡೆಯಲಿದೆ. ಪಾಕಿಸ್ತಾನ ತಂಡವು ವಿಮಾನವೇರುವ ಮೊದಲು ಅಂತಿಮ ನಿರ್ಧಾರ ತೆಗೆದುಕೊಳ್ಳುವ ನಿರೀಕ್ಷೆ ಇದೆ ಎಂದು ವರದಿಯಾಗಿದೆ. ‘ವಿಶ್ವಕಪ್ನಲ್ಲಿ ಭಾಗವಹಿಸುವ ಬಗ್ಗೆ ಅನಿಶ್ಚಿತತೆಯ ಹೊರತಾಗಿಯೂ ಪಾಕಿಸ್ತಾನ ಕ್ರಿಕೆಟ್ ತಂಡವು ಲಾಹೋರ್ನಿಂದ ಏರ್ ಲಂಕಾ ವಿಮಾನದ ಮೂಲಕ ಕೊಲಂಬೊಗೆ ಪ್ರಯಾಣ ಬೆಳೆಸಲು ಆಸ್ಟ್ರೇಲಿಯ ತಂಡದೊಂದಿಗೆ ಟಿಕೆಟ್ ಬುಕ್ ಮಾಡಿದೆ. ಶುಕ್ರವಾರದ ವೇಳೆಗೆ ಪಿಸಿಬಿ ಅಧ್ಯಕ್ಷ ಮುಹ್ಸಿನ್ ನಖ್ವಿ ಅವರು ಮೆಗಾ ಸ್ಪರ್ಧೆಯಲ್ಲಿ ಪಾಕ್ ತಂಡದ ಭಾಗವಹಿಸುವಿಕೆಗೆ ಸಂಬಂಧಿಸಿದ ಎಲ್ಲ ಗೊಂದಲಗಳಿಗೆ ತೆರೆ ಎಳೆಯಲಿದ್ದಾರೆ’ ಎಂದು ಟೆಲಿಕಾಂ ಏಶ್ಯಾ ಸ್ಪೋರ್ಟ್ಗೆ ಮೂಲಗಳು ತಿಳಿಸಿವೆ. ಭದ್ರತಾ ಕಾರಣಗಳಿಗಾಗಿ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯ ವಿಶ್ವಕಪ್ ಪಂದ್ಯಗಳನ್ನು ಭಾರತದಿಂದ ಶ್ರೀಲಂಕಾಕ್ಕೆ ಸ್ಥಳಾಂತರಿಸಬೇಕೆಂಬ ಮನವಿಯನ್ನು ಅಂತರ್ರಾಷ್ಟ್ರೀಯ ಕ್ರಿಕೆಟ್ ಮಂಡಳಿ(ಐಸಿಸಿ)ತಿರಸ್ಕರಿಸಿದ ನಂತರ ನಖ್ವಿ ಪಾಕಿಸ್ತಾನ ತಂಡ ವಿಶ್ವಕಪ್ನಲ್ಲಿ ಪಾಲ್ಗೊಳ್ಳುವ ಕುರಿತಾಗಿ ಅನುಮಾನ ವ್ಯಕ್ತಪಡಿಸಿದ್ದರು. ಬಾಂಗ್ಲಾದೇಶ ತಂಡವನ್ನು ವಿಶ್ವಕಪ್ನಿಂದ ಹೊರಹಾಕಿದ್ದನ್ನು ಪ್ರತಿಭಟಿಸಿ ಪಾಕಿಸ್ತಾನ ವಿಶ್ವಕಪ್ನಿಂದ ಹೊರ ನಡೆಯುವ ಸಾಧ್ಯತೆಯಿದೆ ಎಂದು ಪಿಸಿಬಿ ಅಧ್ಯಕ್ಷ ನಖ್ವಿ ಹೇಳಿದ್ದರು. ಈ ವಾರಾರಂಭದಲ್ಲಿ ಇಸ್ಲಾಮಾಬಾದ್ನಲ್ಲಿ ಪ್ರಧಾನಿ ಶಹಬಾಝ್ ಶರೀಫ್ರನ್ನು ಭೇಟಿಯಾಗಿದ್ದ ನಖ್ವಿ ಅವರಿಂದ ಮಾರ್ಗದರ್ಶನ ಪಡೆದಿದ್ದರು. ಬಾಂಗ್ಲಾದೇಶವನ್ನು ಬೆಂಬಲಿಸುವ ಪಾಕಿಸ್ತಾನದ ನಿಲುವನ್ನು ಶರೀಫ್ ಬೆಂಬಲಿಸಿದ್ದರು. ರಾಜಕೀಯ ಹಾಗೂ ಆಡಳಿತಾತ್ಮಕ ಗೊಂದಲದ ನಡುವೆಯೂ ಮೈದಾನದಲ್ಲಿ ಸಿದ್ಧತೆಗಳು ಮುಂದುವರಿದಿವೆ. ಗುರುವಾರ ಲಾಹೋರ್ನಲ್ಲಿ ಆರಂಭವಾಗಿರುವ ಮೂರು ಪಂದ್ಯಗಳ ಟಿ-20 ಸರಣಿಯಲ್ಲಿ ಪಾಕಿಸ್ತಾನ ತಂಡವು ಆಸ್ಟ್ರೇಲಿಯ ತಂಡವನ್ನು ಎದುರಿಸಿದ್ದು, ಆಟಗಾರರಿಗೆ ಈ ಪಂದ್ಯದತ್ತ ಗಮನ ನೀಡಲು ಕೇಳಿಕೊಳ್ಳಲಾಗಿದೆ.
ಸರ್ಕಾರಿ ನೌಕರರು ಕಡ್ಡಾಯ ಖಾದಿ ಉಡುಪು ಧರಿಸುವ ಬಗ್ಗೆ ಸರ್ಕಾರ ಮಹತ್ವದ ಸುತ್ತೋಲೆ; ಯಾವ ದಿನ? ಯಾರಿಗೆಲ್ಲಾ ಅನ್ವಯ?
ಕರ್ನಾಟಕ ಸರ್ಕಾರವು ತನ್ನ ನೌಕರರಿಗೆ ತಿಂಗಳಲ್ಲಿ ಒಂದು ದಿನ ಖಾದಿ ಉಡುಪು ಧರಿಸುವುದನ್ನು ಕಡ್ಡಾಯಗೊಳಿಸಿದೆ. ಪ್ರತಿ ತಿಂಗಳ ಮೊದಲ ಶನಿವಾರ ಮತ್ತು ರಾಷ್ಟ್ರೀಯ ಹಬ್ಬಗಳಂದು ಖಾದಿ ಧರಿಸಬೇಕು. ಇದು ಸ್ವದೇಶಿ ಉತ್ಪನ್ನಗಳ ಬಗ್ಗೆ ಗೌರವ, ರಾಷ್ಟ್ರೀಯ ಭಾವನೆ ಮತ್ತು ಗ್ರಾಮೀಣ ಆರ್ಥಿಕತೆಯನ್ನು ಉತ್ತೇಜಿಸುವ ಗುರಿ ಹೊಂದಿದೆ. ಖಾದಿ ನೇಕಾರರಿಗೆ ಇದು ಜೀವನೋಪಾಯ ಒದಗಿಸುತ್ತದೆ. ಈ ಬಗ್ಗೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಸುತ್ತೋಲೆ ಹೊರಡಿಸಿದ್ದಾರೆ.
ಬೆಂಗಳೂರು: ಹದಿನೇಳನೆಯ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಫೆಲೆಸ್ತೀನ್ ದೇಶದ ಸಿನೆಮಾಗಳಿಗೆ ನಿರ್ಬಂಧ ಹೇರಿರುವುದಕ್ಕೆ ಕಾರ್ಯಕ್ರಮದ ವೇದಿಕೆಯಲ್ಲಿಯೇ ತೀವ್ರ ಬೇಸರ ವ್ಯಕ್ತಪಡಿಸಿದ ಚಲನಚಿತ್ರೋತ್ಸವ ರಾಯಭಾರಿಯೂ ಆದ ಬಹುಭಾಷಾ ನಟ ಪ್ರಕಾಶ್ ರಾಜ್ ಅವರು, ಫೆಲೆಸ್ತೀನ್ ಕವಿತೆ ವಾಚಿಸುವ ಮೂಲಕ ತಮ್ಮ ಪ್ರತಿರೋಧ ವ್ಯಕ್ತಪಡಿಸಿದರು. ಗುರುವಾರ ವಿಧಾನಸೌಧದ ಮುಂಭಾಗದ ಪೂರ್ವದ್ವಾರದ ಮೆಟ್ಟಿಲುಗಳ ಮೇಲೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಕರ್ನಾಟಕ ಚಲನಚಿತ್ರ ಅಕಾಡೆಮಿ ಹಾಗೂ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಜಂಟಿ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ 17ನೆ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಉದ್ಘಾಟನಾ ಸಮಾರಂಭವನ್ನುದ್ದೇಶಿಸಿ ಅವರು ಮಾತನಾಡಿದರು. 16 ವರ್ಷದ ಹಿಂದೆಯೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವನ್ನು ಉದ್ಘಾಟನೆ ಮಾಡಿದ್ದೆ. ಅಂದಿನಿಂದ ಇದುವರೆಗೂ ಸಿನೆಮಾ ಕ್ಷೇತ್ರದ ವಿವಿಧ ಕೆಲಸಗಳಲ್ಲಿ ತೊಡಗಿಕೊಂಡಿದ್ದೇನೆ. ಆದರೆ, ಇತ್ತೀಚಿಗೆ ಚಲನಚಿತ್ರಗಳು ರಾಜಕೀಯ ಬಲೆಗೆ ಸಿಲುಕಿವೆ. ಅದರಲ್ಲೂ ಕೇಂದ್ರ ಸರಕಾರ ಫೆಲೆಸ್ತೀನ್ ದೇಶದ ಸಿನೆಮಾಗಳಿಗೆ ನಿರ್ಬಂಧಿಸಿರುವುದು ಅತ್ಯಂತ ನೋವಿನ ಸಂಗತಿ ಎಂದು ಪ್ರಕಾಶ್ ರಾಜ್ ಬೇಸರ ವ್ಯಕ್ತಪಡಿಸಿದರು. ಕರ್ನಾಟಕವು ಶಾಂತಿಯ ತೋಟಕ್ಕೆ ಹೆಸರು ಮಾಡಿದೆ. ಇಲ್ಲಿನ ರಂಗನತಿಟ್ಟು, ವಿಜಯನಗರದ ಅಂಕ ಸಮುದ್ರಕ್ಕೆ ದೇಶ, ವಿದೇಶಗಳಿಂದ ಹಕ್ಕಿಗಳು ಬರುವಂತೆ ನಾವು ಸಹ ಬೇರೆ ದೇಶಗಳ ಸಿನೆಮಾ, ಭಾವನೆಗಳಿಗೆ ಸ್ಪಂದಿಸಬೇಕು. ನಮ್ಮದೇ ಕತೆಗಳಿಗೆ ಬೂಕರ್ ಪ್ರಶಸ್ತಿ ಸಿಕ್ಕಿದಾಗ ಸಂಭ್ರಮಿಸುವ ನಾವು, ಬೇರೆ ಸಿನೆಮಾಗಳಿಗೆ ವಿರೋಧ ಏಕೆ ಎಂದ ಅವರು, ರಾಜ್ಯ ಸರಕಾರ ಕೇರಳ ಮಾದರಿಯಲ್ಲಿಯೇ ಗಟ್ಟಿ ನಿಲುವು ತೆಗೆದುಕೊಂಡು ಫೆಲೆಸ್ತೀನ್ ದೇಶದ ಸಿನೆಮಾಗಳ ಮೇಲಿನ ನಿರ್ಬಂಧ ತೆಗೆಯಲು ಮುಂದಾಗಬೇಕು ಎಂದು ಪ್ರಕಾಶ್ ರಾಜ್ ಆಗ್ರಹಿಸಿದರು. ಪ್ರಕಾಶ್ ರಾಜ್ ವಾಚಿಸಿದ ‘ಫೆಲೆಸ್ತೀನ್’ ಕವಿತೆ: ‘ಯುದ್ಧಗಳು ಕೊನೆಗೊಳ್ಳುತ್ತವೆ. ನಾಯಕರು ಕೈ ಕುಲುಕಿ ಹೊರಟು ಹೋಗುತ್ತಾರೆ. ಆದರೆ ಎಲ್ಲೋ, ವಯಸ್ಸಾದ ತಾಯಿ ಇನ್ನೂ ತನ್ನ ಮಗನಿಗಾಗಿ ಕಾಯುತ್ತಾಳೆ, ಹೆಂಡತಿ ತನ್ನ ಗಂಡನಿಗಾಗಿ ಕಾಯುತ್ತಾಳೆ ಮತ್ತು ಮಕ್ಕಳು ತಮ್ಮ ತಂದೆಗಾಗಿ ಕಾಯುತ್ತಾರೆ. ಅದು ಸತ್ಯ. ಈ ಭೂಮಿಯನ್ನು ಯಾರು ತ್ಯಜಿಸಿದರು ಎಂಬುದು ನಮಗೆ ತಿಳಿದಿಲ್ಲದಿರಬಹುದು, ಆದರೆ ಅದಕ್ಕೆ ಯಾರು ಬೆಲೆ ತೆರುತ್ತಿದ್ದಾರೆಂದು ನಮಗೆ ತಿಳಿದಿದೆ ಎಂದು 17ನೆ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಉದ್ಘಾಟನಾ ಸಮಾರಂಭದ ವೇದಿಕೆಯಲ್ಲಿ ಈ ಕವಿತೆಯನ್ನು ಪ್ರಕಾಶ್ ರಾಜ್ ವಾಚಿಸಿದರು.
ಮತ್ತೆ ಸಿಡಿದೆದ್ದ ಗುತ್ತಿಗೆದಾರರು - ಬಾಕಿಯಿರುವ 37 ಸಾವಿರ ಕೋಟಿ ರೂ. ಮಾ. 5ರೊಳಗೆ ನೀಡುವಂತೆ ಸರ್ಕಾರಕ್ಕೆ ಸವಾಲು
ರಾಜ್ಯ ಗುತ್ತಿಗೆದಾರರ ಸಂಘವು 37,370 ಕೋಟಿ ರೂ. ಬಾಕಿ ಬಿಲ್ ಪಾವತಿಗೆ ಮಾರ್ಚ್ 5ರ ಗಡುವು ನೀಡಿದೆ. ಗಡುವು ನೀಡಿದರೂ ಹಣ ಬಿಡುಗಡೆಯಾಗದಿದ್ದರೆ ರಾಜ್ಯದಾದ್ಯಂತ ಸರಕಾರಿ ಕಾಮಗಾರಿಗಳನ್ನು ಸ್ಥಗಿತಗೊಳಿಸಿ ಅನಿರ್ದಿಷ್ಟಾವಧಿ ಮುಷ್ಕರ ನಡೆಸುವುದಾಗಿ ಎಚ್ಚರಿಕೆ ನೀಡಿದೆ. ಗುತ್ತಿಗೆದಾರರು ಮೂರು ವರ್ಷಗಳಿಂದ ಬಾಕಿ ಬಿಲ್ಗಳು ಬಿಡುಗಡೆಯಾಗದೆ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೀಡಿದ್ದ ಭರವಸೆ ಈಡೇರಿಲ್ಲ ಎಂದು ಸಂಘ ಅಸಮಾಧಾನ ವ್ಯಕ್ತಪಡಿಸಿದೆ.
ಅಕ್ರಮ ವಲಸಿಗರನ್ನು ಗಡಿಪಾರು ಮಾಡಲು ವಿಶೇಷ ಕಾರ್ಯಪಡೆ ರಚನೆ: ಸಚಿವ ರಾಮಲಿಂಗಾರೆಡ್ಡಿ
ಬೆಂಗಳೂರು: ರಾಜ್ಯದಲ್ಲಿ ಅಕ್ರಮವಾಗಿ ನೆಲೆಸಿರುವ ವಲಸಿಗರನ್ನು ಪತ್ತೆ ಮಾಡಿ, ಗಡಿಪಾರು ಮಾಡಲು ವಿಶೇಷ ಕಾರ್ಯಪಡೆ ರಚನೆ ಮಾಡಲಾಗುವುದು ಎಂದು ಸಾರಿಗೆ ಹಾಗೂ ಮುಜುರಾಯಿ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು. ಗುರುವಾರ ವಿಧಾನಸಭೆಯಲ್ಲಿ ಬಿಜೆಪಿ ಉಚ್ಛಾಟಿತ ಸದಸ್ಯ ಬಸನಗೌಡ ಪಾಟೀಲ್ ಯತ್ನಾಳ್, ರಾಜ್ಯದಲ್ಲಿ ನೆಲೆಸಿರುವ ಅಕ್ರಮ ಬಾಂಗ್ಲಾ ವಲಸಿಗರ ಮಾಹಿತಿಯನ್ನು ನೀಡಿದ್ದ ಹಿಂದುತ್ವ ಕಾರ್ಯಕರ್ತರಿಗೆ ಪೊಲೀಸರಿಂದ ಕಿರುಕುಳ ಉಂಟಾಗುತ್ತಿರುವ ಕುರಿತು ಗಮನ ಸೆಳೆದ ಸೂಚನೆಗೆ ಗೃಹ ಸಚಿವರ ಪರವಾಗಿ ಅವರು ಉತ್ತರಿಸಿದರು. ರಾಜ್ಯದಲ್ಲಿ ಅಕ್ರಮವಾಗಿ ನೆಲೆಸಿರುವ 370 ಬಾಂಗ್ಲಾ ವಲಸಿಗರನ್ನು ಗುರುತಿಸಲಾಗಿದ್ದು, ಈ ಪೈಕಿ 213 ಮಂದಿಯನ್ನು ಗಡಿಪಾರು ಮಾಡಲಾಗಿದೆ. ಇನ್ನುಳಿದ 157 ಮಂದಿಯ ವಿರುದ್ಧ ಅಕ್ರಮ ವಲಸಿಗರ ಬಂಧನ ಕೇಂದ್ರ(ಎಫ್.ಡಿ.ಸಿ)ದಲ್ಲಿನ ಪ್ರಕರಣಗಳಿರುವುದರಿಂದ, ಅವರನ್ನು ಗಡಿಪಾರು ಮಾಡಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಅವರು ಹೇಳಿದರು. ರಾಜ್ಯದಲ್ಲಿ 25 ಲಕ್ಷಕ್ಕಿಂತ ಹೆಚ್ಚು ಬಾಂಗ್ಲಾದೇಶಿಯರು ಅಕ್ರಮವಾಗಿ ನೆಲೆಸಿದ್ದು, ಕಾಫಿ ತೋಟ, ಶಾಪಿಂಗ್ ಮಾಲ್ಗಳು, ಐಟಿ ಬಿಟಿ ಕಂಪೆನಿಗಳಲ್ಲಿ ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದಾರೆ. ನಕಲಿ ಆಧಾರ್ ಕಾರ್ಡ್, ರೇಷನ್ ಕಾರ್ಡ್ ಮಾಡಿಸಿಕೊಂಡಿದ್ದಾರೆ. ಇದೊಂದು ದೊಡ್ಡ ಜಾಲ. ಇದಕ್ಕೆ ಕಡಿವಾಣ ಹಾಕದಿದ್ದರೆ, ಭಯಾನಕ ಪರಿಸ್ಥಿತಿ ನಿರ್ಮಾಣವಾಗುತ್ತದೆ ಎಂದು ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ರಾಮಲಿಂಗಾರೆಡ್ಡಿ, ಬೆಂಗಳೂರಿನಲ್ಲಿ 1.40 ಕೋಟಿ ಜನಸಂಖ್ಯೆಯಿದೆ. 25 ಲಕ್ಷ ಜನ ಬಾಂಗ್ಲಾದೇಶಿಯರು ರಾಜ್ಯದಲ್ಲಿದ್ದಾರೆ ಎಂದು ಹೇಳುತ್ತಿದ್ದಾರೆ. ಈಶಾನ್ಯ ರಾಜ್ಯಗಳು, ಪಶ್ಚಿಮ ಬಂಗಾಳ, ಬಿಹಾರ, ರಾಜಸ್ಥಾನ, ತೆಲಂಗಾಣ, ಆಂಧ್ರಪ್ರದೇಶ, ಕೇರಳ, ತಮಿಳುನಾಡು ರಾಜ್ಯಗಳ ಲಕ್ಷಾಂತರ ಜನ ಇಲ್ಲಿದ್ದಾರೆ. ಈ ಹಿಂದೆಯೂ ಬಾಂಗ್ಲಾದೇಶಿಯರು ಅಕ್ರಮವಾಗಿ ನೆಲೆಸಿದ್ದಾರೆ ಎಂಬ ದೂರುಗಳು ಬಂದ ಹಿನ್ನೆಲೆಯಲ್ಲಿ ನಾವು ವಿಶೇಷ ಕಾರ್ಯಪಡೆ ರಚನೆ ಮಾಡಿ, ಚಿಕ್ಕಮಗಳೂರು, ಕೊಡಗು ಸೇರಿದಂತೆ ಕಾಫಿ ಎಸ್ಟೇಟ್ಗಳಲ್ಲಿ ಪರಿಶೀಲನೆ ಕೈಗೊಳ್ಳಲಾಗಿತ್ತು ಎಂದು ಅವರು ಹೇಳಿದರು. ಅಕ್ರಮ ವಲಸಿಗರು ಎಲ್ಲೆ ಇದ್ದರೂ ಅವರನ್ನು ಪತ್ತೆ ಮಾಡಿ ಹೊರಗೆ ಹಾಕುತ್ತೇವೆ. ಬಾಂಗ್ಲಾದೇಶದವರು ನಮ್ಮ ರಾಜ್ಯಕ್ಕೆ ಎಲ್ಲಿಂದ ಬರುತ್ತಾರೆ. ಬಾಂಗ್ಲಾದೇಶದ ಗಡಿಯನ್ನು ಹಂಚಿಕೊಂಡಿರುವ ರಾಜ್ಯಗಳ ಮೂಲಕವೇ ತಾನೇ ಅವರು ಬರುವುದು. ಅಕ್ರಮವಾಗಿ ನಮ್ಮ ದೇಶದ ಗಡಿಯೊಳಗೆ ನುಸುಳುವುದನ್ನು ಕೇಂದ್ರ ಸರಕಾರ ತಡೆಗಟ್ಟಬೇಕು ಎಂದು ರಾಮಲಿಂಗಾರೆಡ್ಡಿ ಹೇಳಿದರು. ಅಕ್ರಮವಾಗಿ ನೆಲೆಸಿರುವವರ ಮಾಹಿತಿ ನೀಡುವವರ ಹೆಸರನ್ನು ಗೌಪ್ಯವಾಗಿಡಬೇಕು. ಅವರಿಗೆ ತೊಂದರೆ ಕೊಡಬಾರದು ಎಂದು ಯತ್ನಾಳ್ ಮಾಡಿದ ಮನವಿಗೆ ಸ್ಪಂದಿಸಿದ ರಾಮಲಿಂಗಾರೆಡ್ಡಿ, ಅಕ್ರಮ ವಲಸಿಗರನ್ನಷ್ಟೇ ಅಲ್ಲ, ಅವರನ್ನು ದೇಶದ ಗಡಿಯೊಳಗೆ ಕರೆದುಕೊಂಡು ಬರುವಂತಹ, ಅವರಿಗೆ ನಕಲಿ ದಾಖಲೆಗಳನ್ನು ಸೃಷ್ಠಿ ಮಾಡಿ ನೀಡುವ ದಲ್ಲಾಳಿಗಳನ್ನು ಒದ್ದು ಒಳಗೆ ಹಾಕುತ್ತೇವೆ. ಅಕ್ರಮವಾಗಿ ನೆಲೆಸಿರುವವರ ಬಗ್ಗೆ ಮಾಹಿತಿ ನೀಡುವವರನ್ನು ರಕ್ಷಿಸುತ್ತೇವೆ. ಆದರೆ, ಅವರು ಕಾನೂನು ಕೈಗೆ ತೆಗೆದುಕೊಳ್ಳಬಾರದು ಎಂದು ಹೇಳಿದರು.
ನೈರುತ್ಯ ರೈಲ್ವೇಗೆ 6939 ಕೋಟಿ ರೂ. ಆದಾಯ
ಮಂಗಳೂರು: ನೈರುತ್ಯ ರೈಲ್ವೇ (ಸೌತ್ ವೆಸ್ಟರ್ನ್ - ಎಸ್ಡಬ್ಲ್ಯುಆರ್)ಯು ಪ್ರಸಕ್ತ ಹಣಕಾಸು ವರ್ಷದಲ್ಲಿ 6,939 ಕೋಟಿ ರೂ. ಆದಾಯ ಗಳಿಸುವ ಮೂಲಕ ಶೇ. 16ರಷ್ಟು ಪ್ರಗತಿ ದಾಖಲಿಸಿದೆ ಎಂದು ಪ್ರಧಾನ ವ್ಯವಸ್ಥಾಪಕರಾದ ಮುಕುಲ್ ಸರನ್ ಮಾಥುರ್ ಹೇಳಿದ್ದಾರೆ. ಹುಬ್ಬಳ್ಳಿಯಲ್ಲಿ ನೈರುತ್ಯ ರೈಲ್ವೇ ವತಿಯಿಂದ ನಡೆದ ಗಣರಾಜ್ಯೋತ್ಸವ ಸಂದರ್ಭ, 2025-26ನೇ ಸಾಲಿನ ಮೊದಲ ಮೂರು ತ್ರೈಮಾಸಿಕಗಳಲ್ಲಿ ನೈಋತ್ಯ ರೈಲ್ವೆಯ ವಿವಿಧ ಸಾಧನೆಗಳ ಬಗ್ಗೆ ಮಾಹಿತಿ ನೀಡಿದ್ದಾರೆ. ಪ್ರಯಾಣಿಕರ ವಿಭಾಗದಲ್ಲಿ ಸಾರ್ವಕಾಲಿಕ ಗರಿಷ್ಠ 2,543 ಕೋಟಿ ಆದಾಯ ಗಳಿಸಿದ್ದರೆ, ಸರಕು ವಿಭಾಗದಲ್ಲಿ ಡಿಸೆಂಬರ್ ವರೆಗೆ ದಾಖಳೆಯ 3,976 ಕೋಟಿ ರೂ. ಆದಾಯ ಗಳಿಸಲಾಗಿದೆ. ಪಾರ್ಸೆಲ್ ಮೂಲಕ 129 ಕೋಟಿ ರೂ. ಹಾಗೂ ವಿವಿಧ ಮೂಲಗಳಿಂದ ಶೇ. 21ರಷ್ಟು ಬೆಳವಣಿಗೆ ಆಗಿರುವುದಾಗಿ ಅವರು ತಿಳಿಸಿದ್ದಾರೆ. ಸರಕು ಸಾಗಾಟದಲ್ಲಿ ಅಗ್ರಸ್ಥಾನ ಸರಕು ಸಾಗಣೆ ಕ್ಷೇತ್ರದಲ್ಲಿ ನೈಋತ್ಯ ರೈಲ್ವೆ ಮುಂಚೂಣಿಯಲ್ಲಿದ್ದು, ಶೇ. 18.5ರಷ್ಟು ಬೆಳವಣಿಗೆಯೊಂದಿಗೆ 38 ಮಿಲಿಯನ್ ಟನ್ ಲೋಡಿಂಗ್ ಗುರಿ ಮುಟ್ಟಿದೆ. 2025ರ ಡಿಸೆಂಬರ್ನಲ್ಲಿ 5.1 ಮಿಲಿಯನ್ ಟನ್ ಲೋಡಿಂಗ್ ಮಾಡುವ ಮೂಲಕ ಮಾಸಿಕ ದಾಖಲೆ ಬರೆದಿದೆ. ಇದರಲ್ಲಿ ಹುಬ್ಬಳ್ಳಿ ವಿಭಾಗದ ಪಾಲು ಅತ್ಯಂತ ದೊಡ್ಡದಾಗಿದ್ದು (3.8 ಮಿಲಿಯನ್ ಟನ್). ಮೂಲಸೌಕರ್ಯ ಹಾಗೂ ಸಾಮರ್ಥ್ಯ ವಿಸ್ತರಣೆ ರೈಲ್ವೆ ಜಾಲದ ಬಲವರ್ಧನೆಗೆ ವಿಶೇಷ ಆದ್ಯತೆ ನೀಡಲಾಗುತ್ತಿದ್ದು, 26 ಕಿ.ಮೀ. ಜೋಡಿ ಮಾರ್ಗ ಕಾಮಗಾರಿ ಚಾಲನೆ ಹಾಗೂ 20 ಕಿ.ಮೀ. ಹೊಸ ಮಾರ್ಗಗಳಿಗೆ ಅನುಮೋದನೆ ನೀಡಲಾಗಿದೆ. ತಳಕಲ್ - ಕುಷ್ಟಗಿ ನಡುವಿನ 56 ಕಿ.ಮೀ. ಹೊಸ ಮಾರ್ಗ ರಾಷ್ಟ್ರಕ್ಕೆ ಸಮರ್ಪಣೆ. 1,107 ಕೋಟಿ ರೂ. ಮೊತ್ತದ 190 ಹೊಸ ಕಾಮಗಾರಿಗಳಿಗೆ ಹಾಗೂ 2,264 ಕೋಟಿ ರೂ. ವೆಚ್ಚದ 109 ಆದ್ಯತಾ ಯೋಜನೆಗಳಿಗೆ ಮಂಜೂರಾತಿ ನೀಡಲಾಗಿದೆ. ವಿದ್ಯುದೀಕರಣ ಮತ್ತು ಸುಸ್ಥಿರ ಇಂಧನ ಪರಿಸರ ಸ್ನೇಹಿ ಸಾರಿಗೆಗೆ ಒತ್ತು ನೀಡುತ್ತಿರುವ ನೈರುತ್ಯ ರೈಲ್ವೆಯ ಶೇ. 90ರಷ್ಟು ಜಾಲ (3,340 ಕಿ.ಮೀ.) ವಿದ್ಯುದೀಕರಣಗೊಂಡಿದೆ. ಇದರಿಂದ ಸುಮಾರು 39 ಕೋಟಿ ರೂ. ಡೀಸೆಲ್ ವೆಚ್ಚ ಉಳಿತಾಯವಾಗಿದೆ. ಸೌರಶಕ್ತಿ ಬಳಕೆಯಲ್ಲೂ ದಾಪುಗಾಲು ಇಟ್ಟಿದ್ದು, ಒಟ್ಟು ಸೌರ ಸಾಮರ್ಥ್ಯವನ್ನು 7.6 ಎಂಡಬ್ಲ್ಯುಪಿಗೆ ಹೆಚ್ಚಿಸಲಾಗಿದೆ. ಮುಕ್ತ ಪ್ರವೇಶ ವಿದ್ಯುತ್ ಮತ್ತು ಎಚ್ಒಜಿ ವ್ಯವಸ್ಥೆಯಿಂದ ಒಟ್ಟಾರೆ 295 ಕೋಟಿ ರೂ. ಇಂಧನ ವೆಚ್ಚ ಉಳಿತಾಯವಾಗಿದೆ. ಪ್ರಯಾಣಿಕರ ಸೇವೆ ಮತ್ತು ಸುರಕ್ಷತೆ ಮೇಲ್ ಮತ್ತು ಎಕ್ಸ್ಪ್ರೆಸ್ ರೈಲುಗಳಲ್ಲಿ ಶೇ. 90ರಷ್ಟು ಸಮಯಪಾಲನೆ ಕಾಯ್ದುಕೊಳ್ಳುವ ಮೂಲಕ ರಾಷ್ಟ್ರಮಟ್ಟ ದಲ್ಲಿ 4ನೇ ಸ್ಥಾನ ಪಡೆದಿದೆ. ಬೇಡಿಕೆಗೆ ತಕ್ಕಂತೆ 481 ವಿಶೇಷ ರೈಲುಗಳು ಹಾಗೂ 614 ಹೆಚ್ಚುವರಿ ಬೋಗಿಗಳ ವ್ಯವಸ್ಥೆ ಮಾಡಲಾಗಿದೆ. ಕವಚ್ ವ್ಯವಸ್ಥೆ: ಸುರಕ್ಷತೆಗಾಗಿ 3,692 ಕಿ.ಮೀ. ವ್ಯಾಪ್ತಿಯಲ್ಲಿ ‘ಕವಚ್’ (ರೈಲು ಡಿಕ್ಕಿ ತಡೆ ವ್ಯವಸ್ಥೆ) ಅಳವಡಿಸಲು ಅನುಮೋದನೆ ನೀಡಲಾಗಿದೆ. 2 ವಂದೇ ಭಾರತ್ ಸೇರಿದಂತೆ 10 ಹೊಸ ರೈಲುಗಳ ಸೇವೆ ಆರಂಭಿಸಲಾಗಿದೆ. ಭದ್ರತೆ ಮತ್ತು ಸಾಮಾಜಿಕ ಹೊಣೆಗಾರಿಕೆ ರೈಲ್ವೆ ಸುರಕ್ಷತಾ ಬಲ (ಆರ್ಪಿಎಫ್) ‘ಆಪರೇಷನ್ ನನ್ಹೆ ಫರಿಸ್ತೆ’ ಅಡಿಯಲ್ಲಿ 487 ಮಕ್ಕಳು ಮತ್ತು 54 ದುರ್ಬಲರನ್ನು ರಕ್ಷಿಸಿದೆ. ‘ಮೇರಿ ಸಹೇಲಿ’ ಯೋಜನೆಯಡಿ 3.3 ಲಕ್ಷ ಮಹಿಳಾ ಪ್ರಯಾಣಿಕರಿಗೆ ನೆರವು ನೀಡಲಾ ಗಿದೆ. ನಿಗಾ ವ್ಯವಸ್ಥೆಗಾಗಿ 164 ನಿಲ್ದಾಣಗಳಲ್ಲಿ 2,179 ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ದೇಶದ ಸರ್ವತೋಮುಖ ಪ್ರಗತಿಗೆ ಹೆಗಲು ಕೊಡುತ್ತಿರುವ ನೈಋತ್ಯ ರೈಲ್ವೆಯು, ಆಧುನಿಕ ಮೂಲಸೌಕರ್ಯ ಹಾಗೂ ಪ್ರಯಾಣಿಕರ ಸುರಕ್ಷಿತ ಪ್ರಯಾಣಕ್ಕೆ ಸದಾ ಬದ್ಧವಾಗಿದೆ ಎಂದು ಅವರು ತಿಳಿಸಿದ್ದಾರೆ. ‘ರೈಲುಗಳ ವೇಗ ಹೆಚ್ಚಿಸುವ ನಿಟ್ಟಿನಲ್ಲಿ 360 ಟ್ರ್ಯಾಕ್ ಕಿಲೋಮೀಟರ್ಗಳಲ್ಲಿ ವಿಭಾಗೀಯ ವೇಗವನ್ನು 110 ಕಿ.ಮೀ.ಗೆೆ ಏರಿಸಲಾಗಿದೆ. ಲೂಪ್ ಲೈನ್ ಹಾಗೂ ಹಾಸನ- ಮಂಗಳೂರು ವಿಭಾಗದ ವೇಗವನ್ನೂ ಹೆಚ್ಚಿಸಲಾಗಿದ್ದು(ಘಾಟ್ ವಿಭಾಗ ಹೊರತುಪಡಿಸಿ ), 240 ಕಿ.ಮೀ. ಹಳಿಯನ್ನು 25-ಟನ್ ಆಕ್ಸಲ್ ಲೋಡ್ ಸಾಮರ್ಥ್ಯಕ್ಕೆ ಮೇಲ್ದರ್ಜೆಗೇರಿಸಲಾಗಿದೆ.’ ಮುಕುಲ್ ಸರನ್ ಮಾಥುರ್, ಪ್ರಧಾನ ವ್ಯವಸ್ಥಾಪಕರು, ನೈರುತ್ಯ ರೈಲ್ವೇ.
ಮೂಡುಬಿದಿರೆ: ಜ.30ರಿಂದ ಭಾರತೀಯ ಸೇನಾ ನೇಮಕಾತಿ ರ್ಯಾಲಿ
ಮೂಡುಬಿದಿರೆ: ಅಗ್ನಿಪಥ್ ಯೋಜನೆಯಡಿ ಜ.30ರಿಂದ ಫೆಬ್ರವರಿ 14ರವರೆಗೆ ಸ್ವರಾಜ್ಯ ಮೈದಾನದಲ್ಲಿ ನಡೆಯಲಿ ರುವ ಭಾರತೀಯ ಸೇನಾ ನೇಮಕಾತಿ ರ್ಯಾಲಿ ಗೆ ಮೈದಾನವು ಅಗತ್ಯವಿರುವ ಸಕಲ ಸಿದ್ಧತೆಗಳೊಂದಿಗೆ ಸಜ್ಜಾಗಿದೆ. ಶುಕ್ರವಾರ ಬೆಳಗ್ಗೆ 3 ಗಂಟೆಯಿಂದ ನೇಮಕಾತಿ ಪ್ರಕ್ರಿಯೆ ಆರಂಭವಾಗಲಿದ್ದು, ರಾಜ್ಯದ 11 ಜಿಲ್ಲೆಗಳಿಂದ ಪ್ರತಿದಿನ ಸುಮಾರು ಸಾವಿರಕ್ಕೂ ಅಧಿಕ ಅಭ್ಯರ್ಥಿಗಳು ಭಾಗವಹಿಸುವ ನಿರೀಕ್ಷೆಯಿದೆ. ಒಟ್ಟು 10 ದಿನಗಳ ಅವಧಿಯಲ್ಲಿ ಸುಮಾರು 15,000 ಅಭ್ಯರ್ಥಿಗಳು ರ್ಯಾಲಿಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಅಗ್ನಿಪಥ್ ನ ನೋಡೆಲ್ ಅಧಿಕಾರಿ ಶ್ರೀಧರ ಮುಂದಲಮನಿ ತಿಳಿಸಿದ್ದಾರೆ. ರ್ಯಾಲಿಯಲ್ಲಿ ಮೊದಲ ಹಂತವಾಗಿ ದೈಹಿಕ ಪರೀಕ್ಷೆ ನಡೆಯಲಿದ್ದು, ಆಯ್ಕೆಯಾದ ಅಭ್ಯರ್ಥಿಗಳಿಗೆ ಮುಂದಿನ ಹಂತ ದಲ್ಲಿ ವೈದ್ಯಕೀಯ ಪರೀಕ್ಷೆ ನಡೆಸಲಾಗುತ್ತದೆ. ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಬೆಳಗಿನ ಉಪಹಾರ ಹಾಗೂ ಮಧ್ಯಾಹ್ನ ಊಟದ ವ್ಯವಸ್ಥೆಯನ್ನು ಆಯೋಜಕರು ಕಲ್ಪಿಸಿದ್ದಾರೆ. ಮುಂದಿನ ಹಂತಕ್ಕೆ ಆಯ್ಕೆಯಾದ ಅಭ್ಯರ್ಥಿಗಳಿಗೆ ವೈದ್ಯಕೀಯ ಪರೀಕ್ಷೆಯ ವ್ಯವಸ್ಥೆ ಮಾಡಲಾಗಿದ್ದು, ಜಿಲ್ಲಾಡಳಿತ, ಪೊಲೀಸ್ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳು ರ್ಯಾಲಿಗೆ ಕೈಜೋಡಿಸಿವೆ. ನೇಮಕಾತಿ ರ್ಯಾಲಿಗೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಸಂಪೂರ್ಣ ಸಹಕಾರ ನೀಡುತ್ತಿದ್ದು, ವಿದ್ಯಾಗಿರಿ ಆವರಣದಲ್ಲಿ ವಸತಿ ವ್ಯವಸ್ಥೆ, ಸ್ವಯಂಸೇವಕರ ನಿಯೋಜನೆ, ಸಿಂಥೆಟಿಕ್ ಟ್ರ್ಯಾಕ್ನಲ್ಲಿ ರನ್ನಿಂಗ್ ವ್ಯವಸ್ಥೆ ಸೇರಿದಂತೆ ಅಗತ್ಯ ವ್ಯವಸ್ಥೆಗಳನ್ನು ಕಲ್ಪಿಸಲಾಗಿದೆ. ಆಳ್ವಾಸ್ 150 ಮಂದಿ ಎನ್ಸಿಸಿ, ಎನ್ಎಸ್ಎಸ್ ಸ್ವಯಂಸೇವಕರು, 25 ಸಿಬ್ಬಂದಿಗಳು ರ್ಯಾಲಿಗೆ ಶ್ರಮಿಸುತ್ತಿದ್ದಾರೆ. ವಿದ್ಯಾಗಿರಿಯಲ್ಲಿ ಅಭ್ಯರ್ಥಿಗಳಿಗೆ ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ. ಕುಡಿಯುವ ನೀರು, ಶೌಚಾಲಯ, ಆರೋಗ್ಯ ಸೇವೆ, ಸಂಚಾರ ವ್ಯವಸ್ಥೆ ಸೇರಿದಂತೆ ಅಗತ್ಯ ಮೂಲಸೌಕರ್ಯಗಳನ್ನು ಕಲ್ಪಿಸಲಾಗಿದೆ ಆಹಾರ ವಸ್ತುಗಳನ್ನು ಸರ್ಕಾರ ಒದಗಿಸಿದ್ದು, ಶುಚಿರುಚಿಯಾಗಿ ಆಳ್ವಾಸ್ನ ತಂಡ ತಯಾರಿಸಲಿದೆ ಎಂದು ಆಳ್ವಾಸ್ ಟ್ರಸ್ಟಿ ವಿವೇಕ್ ಆಳ್ವ ಮಾಹಿತಿ ನೀಡಿದ್ದಾರೆ.
ಬಾಕಿ ಬಿಡುಗಡೆ ಆಗ್ರಹಿಸಿ ಕಾಮಗಾರಿ ಸ್ಥಗಿತ: ಮಾ.5ರಿಂದ ರಾಜ್ಯಾದ್ಯಂತ ಗುತ್ತಿಗೆದಾರರ ಮುಷ್ಕರ
ಬೆಂಗಳೂರು: ರಾಜ್ಯ ಸರಕಾರ ವಿವಿಧ ಇಲಾಖೆಗಳಿಂದ ಗುತ್ತಿಗೆದಾರರಿಗೆ ಬರಬೇಕಾದ 38ಸಾವಿರ ಕೋಟಿ ರೂ.ಗಳ ಬಾಕಿ ಮೊತ್ತವನ್ನು ಮಾ.5ರೊಳಗೆ ಬಿಡುಗಡೆ ಮಾಡದಿದ್ದರೆ ರಾಜ್ಯಾದ್ಯಂತ ಎಲ್ಲ ಕಾಮಗಾರಿಗಳನ್ನು ನಿಲ್ಲಿಸಿ, ಅನಿರ್ದಿಷ್ಟಾವಧಿ ಮುಷ್ಕರ ನಡೆಸಲು ರಾಜ್ಯ ಗುತ್ತಿಗೆದಾರರ ಸಂಘ ನಿರ್ಧರಿಸಿದೆ. ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಆರ್.ಮಂಜುನಾಥ್, ಪ್ರಮುಖ ಹಬ್ಬಗಳಾದ ಗೌರಿ ಗಣೇಶ, ದಸರಾ ಮತ್ತು ದೀಪಾವಳಿ ಸಮಯದಲ್ಲಿ ಗುತ್ತಿಗೆದಾರರಿಗೆ ಯಾವುದೇ ಸರಕಾರವಾದರೂ ಬಾಕಿ ಹಣವನ್ನು ಬಿಡುಗಡೆ ಮಾಡುವ ಪರಿಪಾಠವನ್ನು ಬೆಳೆಸಿಕೊಂಡು ಬಂದಿದೆ. ಆದರೆ ಇದುವರೆಗೂ ಕಾಂಗ್ರೆಸ್ ಸರಕಾರದಿಂದ ಹಣ ಬಿಡುಗಡೆ ಮಾಡಿರುವುದಿಲ್ಲ ಎಂದರು. ಮೂರು ವರ್ಷದಿಂದ ಬಿಲ್ ಪಾವತಿಯಾಗದ್ದರಿಂದ ಗುತ್ತಿಗೆದಾರರು ಆರ್ಥಿಕ ಸಂಕಷ್ಟದಲ್ಲಿದ್ದು, ಸಾಲ ಪಾವತಿಸಲಾಗದೆ ವಿಷ ಕುಡಿಯುವ ಸ್ಥಿತಿಗೆ ತಲುಪಿದ್ದಾರೆ. ಲೋಕೋಪಯೋಗಿ, ಜಲಸಂಪನ್ಮೂಲ, ಗ್ರಾಮೀಣಾಭಿವೃದ್ಧಿ, ಸಣ್ಣ ನೀರಾವರಿ, ನಗರಾಭಿವೃದ್ಧಿ, ವಸತಿ, ಕಾರ್ಮಿಕ, ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ)ನಲ್ಲಿ 2021-22, 2022-23, 2023-24 ರಿಂದ 38ಸಾವಿರ ಕೋಟಿ ರೂ.ಗಳಿಗೂ ಹೆಚ್ಚು ಹಣ ಬಾಕಿ ಉಳಿದಿದೆ ಎಂದು ಅವರು ಮಾಹಿತಿ ನೀಡಿದರು. ಸರಕಾರ ಮೊತ್ತವನ್ನು ಒಂದೇ ಬಾರಿಯಲ್ಲದಿದ್ದರೂ ಹಂತ-ಹಂತವಾಗಿ ಬಿಡುಗಡೆ ಮಾಡುವ ಪ್ರಾಮಾಣಿಕತೆಯನ್ನು ತೋರಬೇಕಿತ್ತು. ಆದರೆ ಗುತ್ತಿಗೆದಾರರನ್ನು ನಿರ್ಲಕ್ಷ್ಯ ಮಾಡುತ್ತಾ ಬಂದಿದೆ. ಹಿಂದಿನ ಸರಕಾರಕ್ಕಿಂತ ಈ ಸರಕಾರದಲ್ಲಿ ಕಮಿಷನ್ ಹೆಚ್ಚಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕೃತ ಸಭೆ ಕರೆದರೆ ಎಲ್ಲ ಮಾಹಿತಿಯನ್ನು ದಾಖಲೆ ಸಹಿತ ನೀಡಲಾಗುವುದು. 2025ರ ಎಪ್ರಿಲ್ನಲ್ಲಿ ಹಣ ಬಿಡುಗಡೆ ಮಾಡುವುದಾಗಿ ಭರವಸೆ ನೀಡಿದ್ದರು, ಅದನ್ನು ಉಳಿಸಿಕೊಂಡಿಲ್ಲ. ನಮ್ಮ ಸಮಸ್ಯೆ ಆಲಿಸಲು ಸಭೆಯನ್ನೂ ಕರೆದಿಲ್ಲ ಎಂದು ಮಂಜುನಾಥ್ ದೂರಿದರು.
ಶಿಡ್ಲಘಟ್ಟ ಪೌರಾಯುಕ್ತೆಗೆ ಬೆದರಿಕೆ ಪ್ರಕರಣ: ಆರೋಪಿ ರಾಜೀವ್ ಗೌಡ ತಂಗಿದ್ದ ರೆಸಾರ್ಟ್ ನಲ್ಲಿ ಮಹಜರು
ಮಂಗಳೂರು, ಜ.29: ಚಿಕ್ಕಬಳ್ಳಾಪುರದ ಶಿಡ್ಲಘಟ್ಟ ಪೌರಾಯುಕ್ತೆ ಅಮೃತಾ ಗೌಡಗೆ ಬೆದರಿಕೆ ಹಾಕಿ ತಲೆ ಮರೆಸಿಕೊಂಡಿದ್ದ ಕಾಂಗ್ರೆಸ್ ಮುಖಂಡ ರಾಜೀವ್ ಗೌಡ ತಂಗಿದ್ದ ರೆಸಾರ್ಟ್, ಆತನ ಕಾರು ಪತ್ತೆಯಾಗಿದ್ದ ಮಂಗಳೂರು ಜಂಕ್ಷನ್ ರೈಲು ನಿಲ್ದಾಣದಲ್ಲಿ ಗುರುವಾರ ಶಿಡ್ಲಘಟ್ಟದ ಪೊಲೀಸರು ಮಹಜರು ನಡೆಸಿದ್ದಾರೆ. ಗುರುವಾರ ಸಂಜೆ ಪೊಲೀಸರು ಪಚ್ಚನಾಡಿಗೆ ತೆರಳಿ ಒಂದು ಗಂಟೆಗೂ ಹೆಚ್ಚು ಕಾಲ ಮಹಜರು ನಡೆಸಿ ಪೂರಕ ಸಾಕ್ಷಿ ಸಂಗ್ರಹಿಸಿರುವುದಾಗಿ ತಿಳಿದು ಬಂದಿದೆ. ಆರೋಪಿ ವಾಸವಿದ್ದ ಕೊಠಡಿ, ಸೇವನೆ ಮಾಡಿದ ಆಹಾರ ಇತ್ಯಾದಿಗಳ ಮಾಹಿತಿ ಸಂಗ್ರಹಿಸಿದ್ದಾರೆ. ಮಹಜರು ವೇಳೆ ಫಾರ್ಮ್ಹೌಸ್ನಲ್ಲಿ ಕೆಲಸದಾಳುಗಳು ಮಾತ್ರ ಇದ್ದರು ಎನ್ನಲಾಗಿದೆ. ಅವರನ್ನೂ ಕೂಡ ವಿಚಾರಣೆ ನಡೆಸಿದ್ದಾರೆ. ನಗರದ ಪಡೀಲ್ನಲ್ಲಿರುವ ಮಂಗಳೂರು ಜಂಕ್ಷನ್ ರೈಲು ನಿಲ್ದಾಣದಲ್ಲೂ ಕೂಡ ಪೊಲೀಸರು ಮಹಜರು ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ಫೆ.4ರಂದು ವಾಶಿಂಗ್ಟನ್ ಸುಂದರ್ಗೆ ಫಿಟ್ನೆಸ್ ಟೆಸ್ಟ್?
ಹೊಸದಿಲ್ಲಿ, ಜ.29: ಟೀಮ್ ಇಂಡಿಯಾವು ಫೆ.7ರಂದು ತನ್ನ ಟಿ-20 ವಿಶ್ವಕಪ್ ಅಭಿಯಾನ ಆರಂಭಿಸುವ ಮೂರು ದಿನಗಳ ಮೊದಲು ಫೆ.4ರಂದು ಆಲ್ರೌಂಡರ್ ವಾಶಿಂಗ್ಟನ್ ಸುಂದರ್ ಬೆಂಗಳೂರಿನಲ್ಲಿರುವ ಬಿಸಿಸಿಐನ ಸೆಂಟರ್ ಆಫ್ ಎಕ್ಸಲೆನ್ಸ್ನಲ್ಲಿ ಫಿಟ್ನೆಸ್ ಪರೀಕ್ಷೆಗೆ ಒಳಗಾಗುವ ಸಾಧ್ಯತೆಯಿದೆ. ಸ್ಪಿನ್ ಬೌಲಿಂಗ್ ಆಲ್ರೌಂಡರ್ ಸುಂದರ್ ಸದ್ಯ ಪಂದ್ಯಾವಳಿಗೆ ಲಭ್ಯವಿರುವ ಕುರಿತು ಸಂಶಯ ಕಾಡುತ್ತಿದೆ. ಅವರು ತಮ್ಮ ಗಾಯದ ಸಮಸ್ಯೆಯಿಂದ ಚೇತರಿಸಿಕೊಳ್ಳಲು ನಿರೀಕ್ಷೆಗಿಂತ ಹೆಚ್ಚು ಸಮಯ ತೆಗೆದುಕೊಳ್ಳುತ್ತಿದ್ದಾರೆ. ಸುಂದರ್ ಜ.11ರಂದು ನ್ಯೂಝಿಲ್ಯಾಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದ ವೇಳೆ ಗಾಯಗೊಂಡಿದ್ದರು. ಮುಂದಿನ ಯೋಜನೆಯನ್ನು ರೂಪಿಸುವ ಮೊದಲು ಟೀಮ್ ಮ್ಯಾನೇಜ್ಮೆಂಟ್ ಹಾಗೂ ಆಯ್ಕೆ ಸಮಿತಿಯು ಸುಂದರ್ ಅವರು ಅಧಿಕೃತ ವೈದ್ಯಕೀಯ ವರದಿಗಾಗಿ ಕಾಯಲು ಸಿದ್ಧರಿದ್ದಾರೆ ಎಂದು ‘ಟೈಮ್ಸ್ ಆಫ್ ಇಂಡಿಯಾ’ ವರದಿ ಮಾಡಿದೆ. ಬದಲಾವಣೆಗಳನ್ನು ಮಾಡಲು ತಂಡಗಳಿಗೆ ಜನವರಿ 30ರ ತನಕ ಅವಕಾಶವಿದೆ. ಪಂದ್ಯಾವಳಿಯ ತಾಂತ್ರಿಕ ಸಮಿತಿಯು ಅನುಮೋದಿಸಿದರೆ ಗಾಯಾಳು ಆಟಗಾರನ ಬದಲಿಗೆ ಬೇರೊಬ್ಬ ಆಟಗಾರನನ್ನು ಆಯ್ಕೆ ಮಾಡಬಹುದು. ಫೆ.4ರಂದು ದಕ್ಷಿಣ ಆಫ್ರಿಕಾ ತಂಡದ ವಿರುದ್ಧ ಅಭ್ಯಾಸ ಪಂದ್ಯವನ್ನು ಆಡುವ ಮೊದಲು ಭಾರತೀಯ ಕ್ರಿಕೆಟ್ ತಂಡವು ಫೆ.3ರಂದು ತನ್ನ ಮೊದಲ ತರಬೇತಿಗಾಗಿ ಮುಂಬೈನಲ್ಲಿ ಒಟ್ಟು ಸೇರಲಿದೆ. ಬುಧವಾರ ತಿಲಕ್ ವರ್ಮಾ ಹಾಗೂ ರಿಯಾನ್ ಪರಾಗ್ ಅವರು ಸಿಒಇನಲ್ಲಿ ಅಭ್ಯಾಸ ಪಂದ್ಯವನ್ನು ಆಡಿದ್ದರು. ಆದರೆ ವಾಶಿಂಗ್ಟನ್ ಸುಂದರ್ ಯಾವುದೇ ತೀವ್ರತರದ ಕಸರತ್ತುಗಳನ್ನು ಮಾಡಲಿಲ್ಲ.
ಆಸ್ಟ್ರೇಲಿಯನ್ ಓಪನ್ ಟೆನಿಸ್ ಟೂರ್ನಿ| ಸತತ ನಾಲ್ಕನೇ ಬಾರಿ ಫೈನಲ್ಗೆ ಲಗ್ಗೆ ಇಟ್ಟ ಸಬಲೆಂಕಾ
ಮೆಲ್ಬರ್ನ್, ಜ.29: ಉಕ್ರೇನ್ ಆಟಗಾರ್ತಿ ಎಲಿನಾ ಸ್ವಿಟೋಲಿನಾರನ್ನು ನೇರ ಸೆಟ್ಗಳ ಅಂತರದಿಂದ ಮಣಿಸಿರುವ ಬೆಲಾರುಸ್ ಆಟಗಾರ್ತಿ ಆರ್ಯನಾ ಸಬಲೆಂಕಾ ಆಸ್ಟ್ರೇಲಿಯನ್ ಓಪನ್ ಟೆನಿಸ್ ಟೂರ್ನಿಯಲ್ಲಿ ಸತತ ನಾಲ್ಕನೇ ಬಾರಿ ಫೈನಲ್ಗೆ ಲಗ್ಗೆ ಇಟ್ಟಿದ್ದಾರೆ. ಗುರುವಾರ ನಡೆದ ಮಹಿಳೆಯರ ಸಿಂಗಲ್ಸ್ ವಿಭಾಗದ ಮೊದಲ ಸೆಮಿ ಫೈನಲ್ ಪಂದ್ಯದಲ್ಲಿ ಅಗ್ರ ಶ್ರೇಯಾಂಕದ ಸಬಲೆಂಕಾ ಅವರು ಸ್ವಿಟೋಲಿನಾರನ್ನು 6-2, 6-3 ನೇರ ಸೆಟ್ಗಳಿಂದ ಸದೆಬಡಿದರು. ಸಬಲೆಂಕಾ ಅವರು ಮೆಲ್ಬರ್ನ್ ಪಾರ್ಕ್ನಲ್ಲಿ ನಾಲ್ಕು ವರ್ಷಗಳಲ್ಲಿ ಮೂರನೇ ಸಿಂಗಲ್ಸ್ ಕಿರೀಟ ಹಾಗೂ ಒಟ್ಟಾರೆ ಐದನೇ ಗ್ರ್ಯಾನ್ಸ್ಲಾಮ್ ಪ್ರಶಸ್ತಿ ಗೆಲ್ಲುವತ್ತ ಚಿತ್ತಹರಿಸಿದ್ದಾರೆ. 27ರ ಹರೆಯದ ಸಬಲೆಂಕಾ ಅವರು ವೃತ್ತಿಪರ ಟೆನಿಸ್ ಯುಗದಲ್ಲಿ ಸತತ ನಾಲ್ಕು ಬಾರಿ ಆಸ್ಟ್ರೇಲಿಯನ್ ಓಪನ್ ಟೂರ್ನಿಯಲ್ಲಿ ಫೈನಲ್ಗೆ ತಲುಪಿದ ಮೂರನೇ ಆಟಗಾರ್ತಿಯಾಗಿದ್ದಾರೆ. ಇವೊನ್ ಗೂಲಾಗಾಂಗ್ ಕಾವ್ಲೆ(1971-76)ಹಾಗೂ ಮಾರ್ಟಿನಾ ಹಿಂಗಿಸ್(1997-2002)ಸತತ ಆರು ಬಾರಿ ಫೈನಲ್ಗೆ ತಲುಪಿರುವ ಸಾಧನೆ ಮಾಡಿದ್ದಾರೆ. ‘‘ನನಗೆ ಇದು ನಂಬಲಾಗುತ್ತಿಲ್ಲ. ಇದೊಂದು ಅಮೋಘ ಸಾಧನೆ. ಆದರೆ ನನ್ನ ಕೆಲಸ ಇಲ್ಲಿಗೇ ಮುಗಿದಿಲ್ಲ. ಈ ಗೆಲುವಿನಿಂದ ನನಗೆ ತುಂಬಾ ಸಂತೋಷವಾಗಿದೆ. ಸ್ವಿಟೋಲಿನಾ ಕಠಿಣ ಎದುರಾಳಿಯಾಗಿದ್ದರು. ಇಡೀ ವಾರ ಅತ್ಯುತ್ತಮವಾಗಿ ಆಡಿದ್ದರು’’ ಎಂದು ವಿಶ್ವದ ನಂ.1 ಆಟಗಾರ್ತಿ ಸಬಲೆಂಕಾ ಹೇಳಿದ್ದಾರೆ. 2022ರಲ್ಲಿ ರಶ್ಯವು ಉಕ್ರೇನ್ ಮೇಲೆ ಆಕ್ರಮಣ ಮಾಡಿದ ನಂತರ ರಶ್ಯ ಹಾಗೂ ಬೆಲಾರುಸ್ ಟೆನಿಸಿಗರಿಗೆ ಗ್ರ್ಯಾನ್ಸ್ಲಾಮ್ಗಳು ಹಾಗೂ ಟೂರ್ ಸ್ಪರ್ಧೆಗಳಲ್ಲಿ ತಮ್ಮ ದೇಶಗಳನ್ನು ಪ್ರತಿನಿಧಿಸುವುದಕ್ಕೆ ನಿಷೇಧ ಹೇರಲಾಗಿತ್ತು. 31ರ ಹರೆಯದ ಸ್ವಿಟೋಲಿನಾ ನೇರ ಸೆಟ್ಗಳಿಂದ ಸೋತಿದ್ದರೂ ಆರಂಭದಿಂದ ಅಂತ್ಯದ ತನಕ ಕಠಿಣ ಹೋರಾಟ ನೀಡಿದ್ದರು. ಶನಿವಾರ ನಡೆಯಲಿರುವ ಫೈನಲ್ನಲ್ಲಿ ಸಬಲೆಂಕಾ ಅವರು ಎಲೆನಾ ರೈಬಾಕಿನಾರನ್ನು ಎದುರಿಸಲಿದ್ದಾರೆ. ಸೆಮಿ ಫೈನಲ್ನಲ್ಲಿ ಎಡವಿದ ಜೆಸ್ಸಿಕಾ ಪೆಗುಲಾ: ಆಸ್ಟ್ರೇಲಿಯನ್ ಓಪನ್ ಟೂರ್ನಿಯಲ್ಲಿ ಗುರುವಾರ ನಡೆದ ಮಹಿಳೆಯರ ಸಿಂಗಲ್ಸ್ ವಿಭಾಗದ ಎರಡನೇ ಸೆಮಿ ಫೈನಲ್ನಲ್ಲಿ ಜೆಸ್ಸಿಕಾ ಪೆಗುಲಾರನ್ನು ಮಣಿಸಿದ ಕಝಕ್ಸ್ತಾನದ ಎಲೆನಾ ರೈಬಾಕಿನಾ ಪ್ರಶಸ್ತಿ ಸುತ್ತಿಗೆ ಪ್ರವೇಶಿಸಿದರು. ಎರಡನೇ ಗ್ರ್ಯಾನ್ಸ್ಲಾಮ್ ಕಿರೀಟದ ಮೇಲೆ ಕಣ್ಣಿಟ್ಟಿರುವ ಐದನೆ ಶ್ರೇಯಾಂಕದ ರೈಬಾಕಿನಾ ಅವರು ರಾಡ್ ಲಾವೆರ್ ಅರೆನಾದಲ್ಲಿ ಒಂದು ಗಂಟೆ-40 ನಿಮಿಷಗಳ ಕಾಲ ನಡೆದ ಅಂತಿಮ-4ರ ಸುತ್ತಿನ ಪಂದ್ಯದಲ್ಲಿ ಅಮೆರಿಕದ ಆಟಗಾರ್ತಿ ಪೆಗುಲಾರನ್ನು 6-3, 7-6(9/7) ಸೆಟ್ಗಳ ಅಂತರದಿಂದ ಮಣಿಸಿದರು. ಪಂದ್ಯಾವಳಿಯಲ್ಲಿ ಇನ್ನೂ ಒಂದೂ ಸೆಟ್ ಸೋಲದ ರೈ ಬಾಕಿನಾ ಶನಿವಾರ ಫೈನಲ್ ಪಂದ್ಯದಲ್ಲಿ ವಿಶ್ವದ ನಂ.1 ಆಟಗಾರ್ತಿ ಆರ್ಯನಾ ಸಬಲೆಂಕಾರ ಸವಾಲನ್ನು ಎದುರಿಸಲಿದ್ದಾರೆ. ಈ ಇಬ್ಬರು 2023ರ ಫೈನಲ್ನಲ್ಲಿ ಕೂಡ ಮುಖಾಮುಖಿಯಾಗಿದ್ದರು. ಮೂರು ವರ್ಷಗಳ ಹಿಂದೆ ಸಬಲೆಂಕಾ ಅವರು ರೈಬಾಕಿನಾರ ಪ್ರಶಸ್ತಿಯ ಕನಸನ್ನು ಭಗ್ನಗೊಳಿಸಿದ್ದರು. ಮಾಸ್ಕೊದಲ್ಲಿ ಜನಿಸಿರುವ ರೈ ಬಾಕಿನಾ ಅವರು ಕ್ವಾರ್ಟರ್ಫೈನಲ್ನಲ್ಲಿ ಎರಡನೇ ಶ್ರೇಯಾಂಕದ ಇಗಾ ಸ್ವಿಯಾಟೆಕ್ರನ್ನು ಮಣಿಸಿದ್ದರು. 2022ರಲ್ಲಿ ವಿಂಬಲ್ಡನ್ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದಿರುವ ರೈಬಾಕಿನಾ ಮೂರೂವರೆ ವರ್ಷಗಳ ನಂತರ ಮೊದಲ ಬಾರಿ ಗ್ರ್ಯಾನ್ಸ್ಲಾಮ್ ಪ್ರಶಸ್ತಿ ಗೆಲ್ಲುವ ಗುರಿ ಇಟ್ಟುಕೊಂಡಿದ್ದಾರೆ. ಇತ್ತೀಚೆಗೆ ಭರ್ಜರಿ ಫಾರ್ಮ್ನಲ್ಲಿರುವ ರೈಬಾಕಿನಾ ನವೆಂಬರ್ನಲ್ಲಿ ರಿಯಾದ್ನಲ್ಲಿ ನಡೆದಿದ್ದ ಡಬ್ಲ್ಯುಟಿಎ ಫೈನಲ್ಸ್ ಟೂರ್ನಿಯಲ್ಲಿ ಸಬಲೆಂಕಾರನ್ನು ಸೋಲಿಸಿದ್ದರು. ಹಿಂದಿನ 20 ಪಂದ್ಯಗಳ ಪೈಕಿ 19ರಲ್ಲಿ ಜಯಶಾಲಿಯಾಗಿದ್ದಾರೆ. ಇದೀಗ ಮೂರನೇ ಬಾರಿ ಗ್ರ್ಯಾನ್ಸ್ಲಾಮ್ ಟೂರ್ನಿಯಲ್ಲಿ ಫೈನಲ್ಗೆ ಲಗ್ಗೆ ಇಟ್ಟಿದ್ದಾರೆ.
ಟಿ-20 ಕ್ರಿಕೆಟ್| ಮೂರನೇ ಅತಿ ವೇಗದ ಅರ್ಧಶತಕ ಸಿಡಿಸಿದ ಶಿವಂ ದುಬೆ
ವಿಶಾಖಪಟ್ಟಣ, ಜ.29: ನ್ಯೂಝಿಲ್ಯಾಂಡ್ ತಂಡದ ವಿರುದ್ಧ ಬುಧವಾರ ನಡೆದ ನಾಲ್ಕನೇ ಟಿ-20 ಅಂತರ್ರಾಷ್ಟ್ರೀಯ ಪಂದ್ಯದ ವೇಳೆ ಆಲ್ರೌಂಡರ್ ಶಿವಂ ದುಬೆ ಮೂರನೇ ಅತಿ ವೇಗದ ಅರ್ಧಶತಕ ದಾಖಲಿಸಿದ ಭಾರತದ ಮೂರನೇ ಆಟಗಾರ ಎನಿಸಿಕೊಂಡಿದ್ದಾರೆ. ವೇಗದ ಬೌಲರ್ ಜೇಕಬ್ ಡಫಿ ಎಸೆದ ಫುಲ್ಟಾಸ್ ಅನ್ನು ಸಿಕ್ಸರ್ಗೆ ಅಟ್ಟಿದ ದುಬೆ ಕೇವಲ 15 ಎಸೆತಗಳಲ್ಲಿ 50 ರನ್ ಪೂರೈಸಿದರು. ಲೆಗ್ ಸ್ಪಿನ್ನರ್ ಇಶ್ ಸೋಧಿ ಓವರ್ವೊಂದರಲ್ಲಿ ಎರಡು ಬೌಂಡರಿ ಹಾಗೂ ಮೂರು ಸಿಕ್ಸರ್ಗಳ ಸಹಿತ 29 ರನ್ ಸಿಡಿಸಿದರು. ಭಾರತೀಯ ಆಟಗಾರರ ಪೈಕಿ ಯುವರಾಜ್ ಸಿಂಗ್(12 ಎಸೆತಗಳು)ಹಾಗೂ ಅಭಿಷೇಕ್ ಶರ್ಮಾ(15 ಎಸೆತಗಳು)ಮಾತ್ರ ದುಬೆಗಿಂತ ವೇಗವಾಗಿ ಅರ್ಧಶತಕ ಗಳಿಸಿದ್ದಾರೆ. ಕಳೆದ ವರ್ಷ ದಕ್ಷಿಣ ಆಫ್ರಿಕಾ ತಂಡದ ವಿರುದ್ಧ ಹಾರ್ದಿಕ್ ಪಾಂಡ್ಯ 16 ಎಸೆತಗಳಲ್ಲಿ ಅರ್ಧಶತಕ ಗಳಿಸಿದ್ದು, ಇದು ಭಾರತೀಯ ಆಟಗಾರನ ನಾಲ್ಕನೇ ವೇಗದ ಅರ್ಧಶತಕವಾಗಿದೆ. ಟಿ-20 ಕ್ರಿಕೆಟ್ನಲ್ಲಿ ವೇಗದ ಅರ್ಧಶತಕ ಗಳಿಸಿದ ಭಾರತೀಯರು ಯುವರಾಜ್ ಸಿಂಗ್-12 ಎಸೆತಗಳು-ಇಂಗ್ಲೆಂಡ್ ವಿರುದ್ಧ-ಡರ್ಬನ್(2007) ಅಭಿಷೇಕ್ ಶರ್ಮಾ-14 ಎಸೆತಗಳು-ನ್ಯೂಝಿಲ್ಯಾಂಡ್ ವಿರುದ್ಧ-ಗುವಾಹಟಿ(2026) ಶಿವಂ ದುಬೆ-15 ಎಸೆತಗಳು-ನ್ಯೂಝಿಲ್ಯಾಂಡ್ ವಿರುದ್ಧ-ವಿಶಾಖಪಟ್ಟಣ(2026) ಹಾರ್ದಿಕ್ ಪಾಂಡ್ಯ-16 ಎಸೆತಗಳು-ದಕ್ಷಿಣ ಆಫ್ರಿಕಾ ವಿರುದ್ಧ-ಅಹ್ಮದಾಬಾದ್(2025) ಅಭಿಷೇಕ್ ಶರ್ಮಾ-17 ಎಸೆತಗಳು-ಇಂಗ್ಲೆಂಡ್ ವಿರುದ್ಧ-ಮುಂಬೈ(2025)
ಸಿನಿಮಾಗಳು ಮನರಂಜನೆಗೆ ಸೀಮಿತವಾಗದೆ ಸಮಾಜದ ಅಂಕುಡೊಂಕುಗಳನ್ನು ತಿದ್ದಬೇಕು: ಸಿಎಂ ಸಿದ್ದರಾಮಯ್ಯ
ʼ17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನ ಚಿತ್ರೋತ್ಸವʼ ಉದ್ಘಾಟಿಸಿದ ಸಿಎಂ
(ನುಡಿನಮನ) ವಾತ್ಸಲ್ಯದ ನಾಯಕ: ಶ್ರೀ ಭೀಮಣ್ಣ ಖಂಡ್ರೆ
ವಿಜಯ ಕರ್ನಾಟಕದಲ್ಲಿ ಪ್ರಕಟವಾದ ಲೇಖನವೊಂದು ಈ ಲೇಖಕರ ಜೀವನದಲ್ಲಿ ಮಹತ್ವದ ತಿರುವು ನೀಡಿತು. ಶ್ರೀ ಭೀಮಣ್ಣ ಖಂಡ್ರೆಯವರು ಲೇಖಕರನ್ನು ಗುರುತಿಸಿ ಮಹಾಸಭೆಯ ಯುವ ಘಟಕದ ಸಂಘಟನೆಯಲ್ಲಿ ತೊಡಗಿಸಿಕೊಂಡರು. ಅವರ ವಿಶ್ವಾಸ, ನಾಯಕತ್ವ ಮತ್ತು ಮಾನವೀಯತೆ ಲೇಖಕರ ಮೇಲೆ ಗಾಢ ಪರಿಣಾಮ ಬೀರಿತು. ರಾಜಕೀಯ ಅವಕಾಶಗಳು, ಮಹತ್ವದ ಜವಾಬ್ದಾರಿಗಳು ಲೇಖಕರಿಗೆ ದೊರೆತವು. ಖಂಡ್ರೆಯವರ ಮಾರ್ಗದರ್ಶನ ಲೇಖಕರ ಬದುಕಿನ ಅಮೂಲ್ಯ ಅನುಭವವಾಯಿತು.
ಹೊಸದಿಲ್ಲಿ|ಪತಿಯಿಂದ ಹಲ್ಲೆಗೊಳಗಾಗಿದ್ದ ಮಹಿಳಾ ಕಾನ್ಸ್ಟೇಬಲ್ ಮೃತ್ಯು
ಹೊಸದಿಲ್ಲಿ, ಜ. 29: ತನ್ನ ಪತಿಯಿಂದ ಅಮಾನುಷವಾಗಿ ಹಲ್ಲೆಗೊಳಗಾದ ಐದು ದಿನಗಳ ಬಳಿಕ, ದಿಲ್ಲಿ ಪೊಲೀಸ್ನ ಮಹಿಳಾ ಕಾನ್ಸ್ಟೇಬಲ್ ಒಬ್ಬರು ಮಂಗಳವಾರ ಉತ್ತರಪ್ರದೇಶದ ಘಾಜಿಯಾಬಾದ್ನ ಆಸ್ಪತ್ರೆಯೊಂದರಲ್ಲಿ ಕೊನೆಯುಸಿರೆಳೆದಿದ್ದಾರೆ. ಮೃತರನ್ನು ದಿಲ್ಲಿ ಪೊಲೀಸ್ ವಿಶೇಷ ಘಟಕ ‘ಸ್ಪೆಶಲ್ ವೆಪನ್ಸ್ ಆ್ಯಂಡ್ ಟ್ಯಾಕ್ಟಿಕ್ಸ್’ (ಸ್ವಾತ್)ನ ಕಮಾಂಡೊ 27 ವರ್ಷದ ಕಾಜಲ್ ಎಂಬುದಾಗಿ ಗುರುತಿಸಲಾಗಿದೆ. ಆರೋಪಿ ಪತಿ ಅಂಕುರ್ ಚೌಧರಿ ಮಹಿಳೆಗೆ ಡಂಬ್ಬೆಲ್ನಿಂದ ಹೊಡೆದು ಅವರ ತಲೆಯನ್ನು ಮನೆಯ ಗೋಡೆಗೆ ಅಪ್ಪಳಿಸಿದನು ಎಂಬುದಾಗಿ ಆರೋಪಿಸಲಾಗಿದೆ. ತೀವ್ರ ತಲೆ ಗಾಯಕ್ಕೆ ಒಳಗಾದ ಮಹಿಳೆಯ ಮೆದುಳು ನಿಷ್ಕ್ರಿಯವಾಗಿದೆ ಎಂಬುದಾಗಿ ಆಸ್ಪತ್ರೆಯ ವೈದ್ಯರು ಘೋಷಿಸಿದ್ದರು. ವರದಕ್ಷಿಣೆಯಾಗಿ ತನಗೆ ಹಣ ಮತ್ತು ಕಾರು ನೀಡುವಂತೆ ಗಂಡ ಕಾಜಲ್ಗೆ ಕಿರುಕುಳ ನೀಡುತ್ತಿದ್ದನು ಎಂದು ಆಕೆಯ ಕುಟುಂಬಿಕರು ಆರೋಪಿಸಿದ್ದಾರೆ. ಕಾಜಲ್ ಮತ್ತು ಅಂಕುರ್ ನಾಲ್ಕು ವರ್ಷಗಳ ಪ್ರೇಮದ ಬಳಿಕ 2023 ನವೆಂಬರ್ನಲ್ಲಿ ವಿವಾಹವಾಗಿದ್ದರು. ಅವರಿಗೆ ಒಂದೂವರೆ ವರ್ಷದ ಗಂಡು ಮಗುವಿದೆ. ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಭಾರತೀಯ ವಿಕಾಸ ಟ್ರಸ್ಟ್ಗೆ ನಬಾರ್ಡ್ ಅಧಿಕಾರಿಗಳ ಭೇಟಿ
ಮಣಿಪಾಲ, ಜ.29: ನೇಶನಲ್ ಬ್ಯಾಂಕ್ ಫಾರ್ ಅಗ್ರಿಕಲ್ಚರ್ ಆ್ಯಂಡ್ ರೂರಲ್ ಡೆವಲಪ್ಮೆಂಟ್ (ನಬಾರ್ಡ್) ಸಂಸ್ಥೆಯ ವಿವಿಧ ರಾಜ್ಯಗಳ ಹಿರಿಯ ವ್ಯವಸ್ಥಾಪಕರ ತಂಡ ತಮ್ಮ ಅಧ್ಯಯನ ಭೇಟಿ ಪ್ರಯುಕ್ತ ಮಣಿಪಾಲದ ಭಾರತೀಯ ವಿಕಾಸ ಟ್ರಸ್ಟ್ (ಬಿವಿಟಿ) ಸಂಸ್ಥೆಗೆ ಭೇಟಿ ನೀಡಿತು. ಈ ವೇಳೆ ಸಂಸ್ಥೆಯ ಕಾರ್ಯಕ್ರಮ, ಅವುಗಳ ಅನುಷ್ಠಾನ, ಸಂಸ್ಥೆಯ ಬೆಳವಣಿಗೆ ಕುರಿತು ಮಾಹಿತಿಗಳನ್ನು ಕೇಳಿ ತಿಳಿದುಕೊಂಡರು. ಭಾರತೀಯ ವಿಕಾಸ ಟ್ರಸ್ಟ್ನ ಹಿರಿಯ ಸಲಹೆಗಾರರಾದ ಜಗದೀಶ್ ಪೈ ಇವರು ಸಂಸ್ಥೆ ಪ್ರಾರಂಭ ಗೊಂಡ ಉದ್ದೇಶ ಹಾಗೂ ಸಂಸ್ಥೆಯ ರೂವಾರಿಯಾದ ಪದ್ಮಶ್ರೀ ಟಿ.ಎ.ಪೈ ಇವರ ಗ್ರಾಮೀಣಾಭಿವೃದ್ಧಿ, ಸಮಾಜ ಅಭಿವೃದ್ಧಿ ಕನಸಿನ ಬಗ್ಗೆ, ವಸಂತಿ ಪೈ ಹಾಗೂ ಕೆ.ಎಮ್.ಉಡುಪ ಅವರ ದೂರದೃಷ್ಟಿ ಯೋಜನೆ ಗಳ ಕುರಿತು ವಿವರಿಸಿದರು. ಬಿವಿಟಿಯ ಹಿರಿಯ ಅಧಿಕಾರಿ ಮನೋಹರ್ ಕಟಗೇರಿ ಇವರು ಬಿವಿಟಿಯ ಕಾರ್ಯಕ್ರಮಗಳಾದ ಮಹಿಳಾ ಸಬಲೀಕರಣ, ಕೃಷಿ, ಸುಸ್ಥಿರ ಸೌರ ಶಕ್ತಿ ಯೋಜನೆಗಳ ಬಗ್ಗೆ ಅಧಿಕಾರಿಗಳಿಗೆ ವಿವರಿಸಿದರು. ಕಾರ್ಯಕ್ರಮ ವ್ಯವಸ್ಥಾಪಕ ಜೀವನ್ ಕೊಲ್ಯ ಸಂಸ್ಥೆಯ ಯೋಜನೆ ಕುರಿತು ಮಾಹಿತಿ ನೀಡಿದರು. ನಬಾರ್ಡ್ ಸಂಸ್ಥೆಯ ಅಧಿಕಾರಿ ಡಿಜಿಎಂ ಸತೀಸನ್ ಕರ್ತಾ ನಬಾರ್ಡ್ ಜೊತೆ ಸಂಸ್ಥೆ ಹೊಂದಿರುವ ಕಾರ್ಯತತ್ಪರತೆ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು. ದೇಶದ ವಿವಿಧ ರಾಜ್ಯಗಳ ಒಟ್ಟು 43 ಅಧಿಕಾರಿಗಳ ತಂಡ ಬಿವಿಟಿ ಸಮಾಜದ ಅಭಿವೃದ್ಧಿಯಲ್ಲಿ ಬಿವಿಟಿ ಸಂಸ್ಥೆ ನೀಡಿದ ಉತ್ತಮ ಪರಿಣಾಮಗಳ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದರು. ಸಂಸ್ಥೆಯ ಆಡಳಿತಾಧಿಕಾರಿ ಮಹೇಶ್ ಭಟ್ ಸ್ವಾಗತಿಸಿ, ಬಿವಿಟಿಯ ಹಣಕಾಸು ಅಧಿಕಾರಿ ಹೆಚ್.ಆರ್ ಕೃಷ್ಣದಾಸ ವಂದಿಸಿದರು.
1,000 ಕೋಟಿ.ರೂ. ಬ್ಯಾಂಕ್ ವಂಚನೆ ಪ್ರಕರಣ: ಕೋಲ್ಕತ್ತಾದ ಹಲವು ಸ್ಥಳಗಳಲ್ಲಿ ಸಿಬಿಐ ದಾಳಿ
ಕೋಲ್ಕತಾ, ಜ. 29: ಸುಮಾರು 1,000 ಕೋ.ರೂ.ಗಳ ಬ್ಯಾಂಕ್ ವಂಚನೆ ಆರೋಪದ ಕುರಿತ ತನಿಖೆಗೆ ಸಂಬಂಧಿಸಿ ಸಿಬಿಐ ಗುರುವಾರ ಇಲ್ಲಿನ ಹಲವು ಸ್ಥಳಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕೋಲ್ಕತಾ ಮೂಲದ ಹಣಕಾಸು ಕಂಪೆನಿಯ ಪ್ರವರ್ತಕರ ಕಚೇರಿಗಳು ಹಾಗೂ ನಿವಾಸಗಳ ಮೇಲೆ ಏಕ ಕಾಲದಲ್ಲಿ ಶೋಧ ಕಾರ್ಯ ನಡೆಸಲಾಗಿದೆ ಎಂದು ಅವರು ಹೇಳಿದ್ದಾರೆ. ಶೋಧ ಕಾರ್ಯಾಚರಣೆ ನಡೆಯುತ್ತಿರುವ ಸಂದರ್ಭ ಸ್ಥಳದಲ್ಲಿ ಹೆಚ್ಚುವರಿ ಕೇಂದ್ರ ಪಡೆಗಳನ್ನು ನಿಯೋಜಿಸಲಾಗಿತ್ತು ಎಂದು ಅವರು ತಿಳಿಸಿದ್ದಾರೆ. ‘‘ಸರಕಾರಿ ಬ್ಯಾಂಕ್ಗೆ ದೊಡ್ಡ ಮಟ್ಟದಲ್ಲಿ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿ ಅಲಿಪೋರೆ ಸೇರಿದಂತೆ ಹಲವು ಸ್ಥಳಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಲಾಯಿತು’’ ಎಂದು ಸಿಬಿಐ ಅಧಿಕಾರಿಗಳು ತಿಳಿಸಿದ್ದಾರೆ. ಪೂರ್ವ ಕೋಲ್ಕತಾ ಮೂಲದ ಹಣಕಾಸು ಕಂಪೆನಿಯೊಂದು ಸಾಲದ ಹೆಸರಿನಲ್ಲಿ ಹಣ ವಂಚಿಸಿದೆ ಎಂದು ಬ್ಯಾಂಕ್ ಆರೋಪಿಸಿದೆ. ಈ ಹಿನ್ನೆಲೆಯಲ್ಲಿ ಸಿಬಿಐ ತನಿಖೆ ಆರಂಭಿಸಿತ್ತು. 2020 ಹಾಗೂ 2024ರ ನಡುವೆ ಹಣವನ್ನು ಬೇರೆಡೆ ವರ್ಗಾಯಿಸಲಾಗಿದೆ ಎಂದು ಸಿಬಿಐ ಅಧಿಕಾರಿಗಳು ತಿಳಿಸಿದ್ದಾರೆ. ಹಣಕಾಸು ಕಂಪೆನಿಯ ಇಬ್ಬರು ನಿರ್ದೇಶಕರು ಹಾಗೂ ಅದರ ಒಂದು ಸಹ ಸಂಸ್ಥೆಯ ವಿರುದ್ಧ ಈ ಆರೋಪ ಮಾಡಲಾಗಿದೆ. ಎರಡು ಕಂಪೆನಿಗಳು ಸಾಲಕ್ಕಾಗಿ ಸರಕಾರಿ ಬ್ಯಾಂಕ್ವೊಂದನ್ನು ಸಂಪರ್ಕಿಸಿವೆ ಹಾಗೂ ತಮ್ಮ ಅರ್ಜಿಗೆ ಬೆಂಬಲವಾಗಿ ದಾಖಲೆಗಳನ್ನು ಸಲ್ಲಿಸಿವೆ. ಬ್ಯಾಂಕ್ನ ದೂರಿನ ಪ್ರಕಾರ, ಒಂದು ಕಂಪೆನಿ ಆರಂಭದಲ್ಲಿ 730.82 ಕೋ.ರೂ ಮಂಗಡ ಪಡೆದುಕೊಂಡಿತ್ತು. ಸಹವರ್ತಿ ಕಂಪೆನಿ 260.20 ಕೋ.ರೂ. ಸಾಲ ಪಡೆದುಕೊಂಡಿತ್ತು. ಹೆಚ್ಚುವರಿ ಸಾಲವನ್ನು ಬ್ಯಾಂಕ್ ಹಂತ ಹಂತವಾಗಿ ಮಂಜೂರು ಮಾಡಿತ್ತು ಎಂದು ಸಿಬಿಐ ಅಧಿಕಾರಿಗಳು ತಿಳಿಸಿದ್ದಾರೆ. ಎರಡೂ ಕಂಪೆನಿಗಳು ಸಾಲ ಒಪ್ಪಂದವನ್ನು ಉಲ್ಲಂಘಿಸಿವೆ ಹಾಗೂ ಕಂತುಗಳನ್ನು ಸಕಾಲಿಕವಾಗಿ ಮರು ಪಾವತಿಸುವಲ್ಲಿ ವಿಫಲವಾಗಿವೆ ಎಂದು ಅವರು ಹೇಳಿದ್ದಾರೆ. ಪ್ರಾಥಮಿಕ ವಿಚಾರಣೆಯ ನಂತರ, ಎರಡೂ ಕಂಪೆನಿಗಳು ಕನಿಷ್ಠ ಆರು ಇತರ ಬ್ಯಾಂಕ್ಗಳಿಂದ ಸಾವಿರಾರು ಕೋಟಿ ರೂಪಾಯಿ ಸಾಲ ಪಡೆದಿವೆ. ಆದರೆ, ಮರು ಪಾವತಿಸಿಲ್ಲ ಎಂದು ಸಿಬಿಐ ಹೇಳಿದೆ. 1,000 ಕೋಟಿ. ರೂ. ವಂಚನೆಗೆ ಸಂಬಂಧಿಸಿ 2023ರಲ್ಲಿ ಸರಕಾರಿ ಬ್ಯಾಂಕ್ನ ಇಬ್ಬರು ಅಧಿಕಾರಿಗಳು ಸಿಬಿಐಗೆ ಔಪಚಾರಿಕ ದೂರು ಸಲ್ಲಿಸಿದ್ದರು. ಅನಂತರ ಸಿಬಿಐ ಎರಡು ಕಂಪೆನಿಗಳು ಹಾಗೂ ಅದರ ಪ್ರವರ್ತಕರ ವಿರುದ್ಧ ಪ್ರಕರಣ ದಾಖಲಿಸಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮುಂಬೈ ಮೈದಾನದಲ್ಲಿ ಮಾಸ್ಕ್ ಧರಿಸಿ ಆಡಿದ ಸರ್ಫರಾಝ್ ಖಾನ್!; ರಣಜಿ ಪಂದ್ಯದ ವೇಳೆ ಯಾಕೆ ಹೀಗಾಯ್ತು?
Ranji Trophy 2025-26- ಕ್ರಿಕೆಟ್ ನಲ್ಲಿ ಮಾಸ್ಕ್ ಹಾಕಿಕೊಂಡು ಆಡುವುದು ಹೊಸತೇನಲ್ಲ. ದಿಲ್ಲಿಯಲ್ಲಾದರೆ ವಿಶೇಷವೂ ಅಲ್ಲ. ಆದರೆ ಮುಂಬೈನಲ್ಲಿ ನಡೆಯುತ್ತಿರುವ ರಣಜಿ ಪಂದ್ಯದಲ್ಲಿ ಮುಂಬೈ ಆಟಗಾರರೇ ಮಾಸ್ಕ್ ಧರಿಸಿ ಆಡಿದ ಘಟನೆ ನಡೆದಿದೆ. ಪ್ರಮುಖ ಆಟಗಾರ ಸರ್ಫರಾಝ್ ಖಾನ್ ಸೇರಿದಂತೆ ಕೆಲವರು ಕೆಲಹೊತ್ತು ಮಾಸ್ಕ್ ಧರಿಸಿ ಆಡಿದರು. ಇದು ಮುಂಬೈ ನಗರದ ವಾತಾವರಣದ ಪರಿಸ್ಥಿತಿಗೆ ಸಾಕ್ಷಿಯಾಗಿತ್ತು. ಪಂದ್ಯದ ಮೊದಲನೇ ದಿನ ದಿಲ್ಲಿ ತಂಡ 221 ರನ್ ಗಳಿಗೆ ಆಲೌಟ್ ಆಗಿದ್ದು, ಇದಕ್ಕುತ್ತರವಾಗಿ ಮುಂಬೈ 13 ರನ್ ಗೆ ಒಂದು ವಿಕೆಟ್ ಕಳೆದುಕೊಂಡಿದೆ.
ಕವಿ, ವಿಮರ್ಶಕ ಸುಬ್ರಾಯ ಚೊಕ್ಕಾಡಿಗೆ ಎಸ್.ವಿ.ಪಿ. ಪ್ರಶಸ್ತಿ
ಉಡುಪಿ: ಕನ್ನಡದ ಖ್ಯಾತ ಕವಿ ಎಸ್.ವಿ.ಪರಮೇಶ್ವರ ಭಟ್ಟರ ಹೆಸರಿನಲ್ಲಿ ನೀಡಲಾಗುವ ಕನ್ನಡ ಸಾಹಿತ್ಯ, ಅನುವಾದ ಮತ್ತು ಸಂಶೋಧನ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದ ಸಾಹಿತಿಗಳಿಗೆ ನೀಡುವ ಪ್ರಶಸ್ತಿಗೆ ಈ ಬಾರಿ ಕನ್ನಡದ ಖ್ಯಾತನಾಮ ಸಮಕಾಲೀನ ಕವಿ, ವಿಮರ್ಶಕ ಸುಬ್ರಾಯ ಚೊಕ್ಕಾಡಿ ಅವರನ್ನು ಆಯ್ಕೆ ಮಾಡಲಾಗಿದೆ. ಎಸ್.ಪಿ.ಪಿ.ಪ್ರತಿಷ್ಠಾನದಿಂದ ನೀಡುವ ಈ ಪ್ರಶಸ್ತಿಯನ್ನು 2026ನೇ ಸಾಲಿನಿಂದ ಉಡುಪಿಯ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದ ಮೂಲಕ ನೀಡಲಾಗುತ್ತಿದೆ. ಪ್ರಸಕ್ತ ಸಾಲಿನ ಪ್ರಶಸ್ತಿಗೆ ಕನ್ನಡದ ಹಿರಿಯ ಕವಿ, ಕಥೆಗಾರ ಸುಬ್ರಾಯ ಚೊಕ್ಕಾಡಿ ಅವರನ್ನು ಪ್ರಶಸ್ತಿ ಸಮಿತಿ ಆಯ್ಕೆ ಮಾಡಿದೆ ಎಂದು ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದ ಆಡಳಿತಾಧಿಕಾರಿ ಡಾ.ಬಿ.ಜಗದೀಶ್ ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಸುಬ್ರಾಯ ಚೊಕ್ಕಾಡಿ ಅವರು 1940ರ ಜೂನ್ 29ರಂದು ಸುಳ್ಯ ತಾಲೂಕಿನ ಚೊಕ್ಕಾಡಿಯಲ್ಲಿ ಜನಿಸಿದರು. ತಂದೆ ಯಕ್ಷಗಾನ ಭಾಗವತರಾದ ಗಣಪಯ್ಯ ಹಾಗೂ ತಾಯಿ ಸುಬ್ಬಮ್ಮ. ಸುಬ್ರಾಯ ಚೊಕ್ಕಾಡಿ ಕನ್ನಡದಲ್ಲಿ ಎಂ.ಎ. ಪದವಿ ಪಡೆದು ಸುಳ್ಯ, ಪೈಲೂರು, ಕುಕ್ಕುಜಡ್ಕ ಶಾಲೆಗಳಲ್ಲಿ 39 ವಷರ್ಗಳ ಕಾಲ ಸಹಾಯಕ ಶಿಕ್ಷಕರಾಗಿ, ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸಿದ್ದಾರೆ. ಎಂ.ಗೋಪಾಲಕೃಷ್ಣ ಅಡಿಗ, ಯು.ಆರ್.ಅನಂತಮೂರ್ತಿ, ಲಂಕೇಶ ಮುಂತಾದವರ ನಿಕಟವರ್ತಿಯಾಗಿದ್ದ ಚೊಕ್ಕಾಡಿ, ಲಂಕೇಶರ ಮೊದಲ ನಾಟಕವನ್ನು ಪ್ರಕಟಿಸಿದ್ದರು. ಸಾಹಿತ್ಯದ ಹೊಸ ವಿಚಾರಗಳನ್ನು ಚರ್ಚಿಸಲು ಹಳ್ಳಿಯಲ್ಲಿ ‘ಸುಮನಸಾ’ ಎಂಬ ವಿಚಾರ ವೇದಿಕೆಯನ್ನು ಕಟ್ಟಿ ಬೆಳೆಸಿ ಹತ್ತಾರು ಉತ್ತಮ ಕೃತಿಗಳ ಪ್ರಕಟಣೆಗೆ ಕಾರಣರಾದರು. ಕಾವ್ಯ, ನಾಟಕ, ಯಕ್ಷಗಾನ, ಹರಿಕಥೆ, ಸಂಘಟನೆ, ಶಿಕ್ಷಣ, ಸಾಮಾಜಿಕ ಹೋರಾಟ, ಪ್ರಕಾಶನ, ಕೃಷಿ ಇತ್ಯಾದಿಯಾಗಿ ಅವರೊಬ್ಬ ಸಕ್ರಿಯ ಸವಾರ್ಂತರ್ಯಾಮಿ ಎನಿಸಿದ್ದರು. ಸುಬ್ರಾಯ ಚೊಕ್ಕಾಡಿ ತೆರೆ, ಬೆಟ್ಟವೇರಿದ ಮೇಲೆ, ನಿಮ್ಮವೂ ಇರಬಹುದು, ಮೊನ್ನೆ ಸಿಕ್ಕವರು, ಇದರಲ್ಲಿ ಅದು ಇತ್ಯಾದಿ ಕವನಸಂಕಲನ ಪ್ರಕಟಿಸಿದ್ದರು. ಕಾದಂಬರಿ (ಸಂತೆಮನೆ) ಕಥಾ ಸಂಕಲನ (ಬೇರುಗಳು), ಕಾವ್ಯ ಸಮೀಕ್ಷೆ, ಕೃತಿಶೋಧ, ಒಳಹೊರಗು, ಸಮಾಲೋಕ, ಅವಲೋಕನ ಇವರ ವಿಮರ್ಶಾ ಕೃತಿಗಳೊಂದಿಗೆ ಸಂಪಾದಿತ ಕೃತಿ (ದ.ಕ.ಕಾವ್ಯ) ಪ್ರಕಟಿಸಿದ್ದಾರೆ. ಸುಬ್ರಾಯ ಚೊಕ್ಕಾಡಿ ಅವರಿಗೆ ಸಂದ ಗೌರ, ಪ್ರಶಸ್ತಿಗಳಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ, ವರ್ಧ ಮಾನ ಪ್ರಶಸ್ತಿ, ಮೃತ್ಯುಂಜಯ ಸಾರಂಗಮಠ ಪ್ರಶಸ್ತಿ, ಮುದ್ದಣಕಾವ್ಯ ಪ್ರಶಸ್ತಿ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಸಾಹಿತ್ಯ ಕಲಾನಿಧಿ ಪ್ರಶಸ್ತಿ, ಸಂದೇಶ ಸಾಹಿತ್ಯ ಪ್ರಶಸ್ತಿ, ಮುಳಿಯ ಪ್ರಶಸ್ತಿ, ಕೆ.ಎಸ್.ನರಸಿಂಹ ಸ್ವಾಮಿ ಕಾವ್ಯ ಪ್ರಶಸ್ತಿ, ನುಡಿಸಿರಿ ಪ್ರಶಸ್ತಿ, ಶಿವರಾಮ ಕಾರಂತ ಪ್ರಶಸ್ತಿ, ಸ್ವರ್ಣ ಸಾಧನಾ ಪ್ರಶಸ್ತಿ ಪ್ರಮುಖವಾದವು.
ಕೋಲ್ಕತಾ| ಗೋದಾಮಿನಲ್ಲಿ ಅಗ್ನಿ ಅವಘಡ: ಮೃತರ ಸಂಖ್ಯೆ 21ಕ್ಕೆ ಏರಿಕೆ
ಕೋಲ್ಕತಾ, ಜ. 29: ಜನವರಿ 26ರಂದು ಅಗ್ನಿ ಅವಘಡ ಸಂಭವಿಸಿದ ಕೋಲ್ಕತಾದ ಆನಂದಪುರದ ಗೋದಾಮು ಹಾಗೂ ಉತ್ಪಾದನಾ ಘಟಕದಲ್ಲಿ ಮತ್ತೆ 13 ಮೃತದೇಹಗಳು ಪತ್ತೆಯಾಗಿವೆ. ಇದರೊಂದಿಗೆ ಈ ದುರಂತದಲ್ಲಿ ಮೃತರ ಸಂಖ್ಯೆ 21ಕ್ಕೆ ಏರಿಕೆಯಾಗಿದೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ. 28 ಮಂದಿ ನಾಪತ್ತೆಯಾಗಿದ್ದು, ಮೃತರ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಪೊಲೀಸರು ಹೇಳಿದ್ದಾರೆ. ದಕ್ಷಿಣ 21 ಪರಗಣ ಜಿಲ್ಲೆಯ ಆನಂದಪುರದಲ್ಲಿರುವ ಎರಡು ಗೋದಾಮುಗಳು ಹಾಗೂ ಮೋಮೋ ಕಂಪೆನಿಯ ಒಂದು ಉತ್ಪಾದನಾ ಘಟಕ ರವಿವಾರ ಸಂಭವಿಸಿದ ಅಗ್ನಿ ಅವಘಡದಲ್ಲಿ ಸುಟ್ಟು ಬೂದಿಯಾಗಿತ್ತು. ಘಟನೆಯ ಸ್ವರೂಪ ಹಾಗೂ ಹಾನಿಯ ವ್ಯಾಪ್ತಿಯನ್ನು ಗಮನಿಸಿದರೆ, ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಪತ್ತೆಯಾದ ಒಟ್ಟು 21 ಮೃತದೇಹಗಳ ಗುರುತು ಪತ್ತೆ ಹಚ್ಚಲು ಡಿಎನ್ಎ ವಿಶ್ಲೇಷಣೆ ಕಾರ್ಯ ಗುರುವಾರ ಆರಂಭವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಾರ್ಮಿಕ ವಿರೋಧಿ ಕಾಯ್ದೆ ವಾಪಸ್ ಪಡೆಯಲು ಆಗ್ರಹಿಸಿ ಎಐಸಿಸಿಟಿಯು ವತಿಯಿಂದ ಮಾನ್ವಿಯಲ್ಲಿ ಬೈಕ್ ರ್ಯಾಲಿ
ಮಾನ್ವಿ : ಕೇಂದ್ರ ಸರ್ಕಾರ ಜಾರಿಗೆ ತಂದಿರುವ ನಾಲ್ಕು ಕಾರ್ಮಿಕ ಸಂಹಿತೆಗಳು ಹಾಗೂ ಉದ್ಯೋಗ ಕಸಿಯುವ ವಿಬಿ ಗ್ರಾಮ ಜಿ–2025 ಕಾಯ್ದೆಗಳನ್ನು ತಕ್ಷಣ ವಾಪಸ್ ಪಡೆಯಬೇಕು ಎಂದು ಆಗ್ರಹಿಸಿ, ಕೇಂದ್ರ ಸರ್ಕಾರದ ರೈತ–ಕಾರ್ಮಿಕ ವಿರೋಧಿ ಧೋರಣೆಯನ್ನು ಖಂಡಿಸಿ ಜೆಸಿಟಿಯು ಫೆಬ್ರವರಿ 12ರಂದು ನೀಡಿರುವ ರಾಷ್ಟ್ರವ್ಯಾಪಿ ಮುಷ್ಕರ ಕರೆಯ ಪ್ರಯುಕ್ತ ತುಂಗಭದ್ರಾ ನೀರಾವರಿ ಕಾರ್ಮಿಕರ ಸಂಘ (ಎಐಸಿಸಿಟಿಯು) ವತಿಯಿಂದ ಪಟ್ಟಣದಲ್ಲಿ ಬೈಕ್ ರ್ಯಾಲಿ ನಡೆಸಲಾಯಿತು. ಅಂಬೇಡ್ಕರ್ ವೃತ್ತದಿಂದ ಆರಂಭಗೊಂಡ ಬೈಕ್ ರ್ಯಾಲಿ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಬಸವ ವೃತ್ತದಲ್ಲಿ ಸಮಾಪ್ತಿಗೊಂಡಿತು. ಈ ವೇಳೆ ಸಂಘಟನೆ ಮುಖಂಡರು ಕಾರ್ಮಿಕರನ್ನು ಉದ್ದೇಶಿಸಿ ಮಾತನಾಡಿ, ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ನೀತಿಗಳ ವಿರುದ್ಧ ಘೋಷಣೆಗಳನ್ನು ಕೂಗಿದರು. ಎಐಸಿಸಿಟಿಯು ರಾಜ್ಯ ಸಹ ಕಾರ್ಯದರ್ಶಿ ನಾಗರಾಜ ಪೂಜಾರ್ ಮಾತನಾಡಿ, ದೇಶದಾದ್ಯಂತ ಕಾರ್ಮಿಕ ಸಂಘಟನೆಗಳು ಹಾಗೂ ಟ್ರೇಡ್ ಯೂನಿಯನ್ಗಳು ವಿರೋಧ ವ್ಯಕ್ತಪಡಿಸಿದ್ದರೂ, ಕಾರ್ಮಿಕರ ಮನವಿಯನ್ನು ಲೆಕ್ಕಿಸದೇ ಕೇಂದ್ರ ಸರ್ಕಾರ ಕಾರ್ಮಿಕ ವಿರೋಧಿ ಕಾಯ್ದೆಗಳನ್ನು ಜಾರಿಗೆ ತಂದಿದೆ. ಇದರಿಂದ ಕಾರ್ಮಿಕರಿಗೆ ದೊರಕಬೇಕಾದ ಹಕ್ಕುಗಳನ್ನು ಕಸಿದುಕೊಳ್ಳಲಾಗಿದೆ. ಈ ನಾಲ್ಕು ಕಾರ್ಮಿಕ ಸಂಹಿತೆಗಳನ್ನು ಕೂಡಲೇ ವಾಪಸ್ ಪಡೆಯಬೇಕು ಎಂದು ಒತ್ತಾಯಿಸಿದರು. ಎಐಸಿಸಿಟಿಯು ಜಿಲ್ಲಾ ಅಧ್ಯಕ್ಷ ಅಜೀಜ್ ಜಾಗೀದಾರ್ ಮಾತನಾಡಿ, ಸಾರ್ವಜನಿಕ ವಲಯವನ್ನು ಖಾಸಗಿಯವರಿಗೆ, ವಿಶೇಷವಾಗಿ ಏಕಸ್ವಾಮ್ಯ ಬಂಡವಾಳಗಾರರಿಗೆ ಹಸ್ತಾಂತರಿಸುವ ನೀತಿ ದೇಶದ ಕಾರ್ಮಿಕರಿಗೆ ಮಾರಕವಾಗಿದೆ. ಕಾರ್ಮಿಕರು ತ್ಯಾಗ ಮತ್ತು ಹೋರಾಟಗಳಿಂದ ಪಡೆದ 29 ಕಾನೂನುಗಳನ್ನು ರದ್ದುಪಡಿಸಿ ಮಾಲಕರ ಪರ ಸಂಹಿತೆಗಳನ್ನು ಜಾರಿ ಮಾಡಲಾಗಿದೆ. ಈ ಅನ್ಯಾಯಕರ ನೀತಿಗಳನ್ನು ಹಿಂಪಡೆಯುವವರೆಗೆ ನಮ್ಮ ಹೋರಾಟ ನಿಲ್ಲದು ಎಂದು ಎಚ್ಚರಿಸಿದರು. ಈ ಸಂದರ್ಭದಲ್ಲಿ ತುಂಗಭದ್ರಾ ನೀರಾವರಿ ಕಾರ್ಮಿಕರ ಸಂಘದ ಸಿರಿವಾರ ವಿಭಾಗದ ಅಧ್ಯಕ್ಷ ರಾಜ ಮಹ್ಮದ್, ಮಾನ್ವಿ ಉಪ ವಿಭಾಗದ ಅಧ್ಯಕ್ಷ ಬಸಲಿಂಗಪ್ಪ ಜಂಬಲದಿನ್ನಿ, ಹಿರೆಕೊಟ್ನೆಕಲ್ ಉಪ ವಿಭಾಗದ ಅಧ್ಯಕ್ಷ ವೆಂಕಟೇಶ್ ಕೋರಿ, ಕೇಂದ್ರ ಸಮಿತಿ ಖಜಾಂಚಿ ಜಲೀಲ್ ಪಾಷಾ, ಗೋಪಾಲ ರಾವ್, ಚಂದ್ರಶೇಖರ್, ಬಸವರಾಜ ಬಾಗಲವಾಡ, ರಂಗಪ್ಪ ನಾಯಕ, ಶಂಕರ್ ಜಾನೇಕಲ್, ಕೃಷ್ಣ, ಇಮ್ರಾನ್ ಸೇರಿದಂತೆ ನೂರಾರು ಕಾರ್ಮಿಕರು ಭಾಗವಹಿಸಿ ಪ್ರಚಾರಾಂದೋಲನವನ್ನು ಯಶಸ್ವಿಗೊಳಿಸಿದರು.

23 C