SENSEX
NIFTY
GOLD
USD/INR

Weather

18    C
... ...View News by News Source

‘ತಲಾ ಆದಾಯ’ ಕರ್ನಾಟಕ ಮೊದಲ ಸ್ಥಾನದಲ್ಲಿರಲು ಗ್ಯಾರಂಟಿಗಳೇ ಕಾರಣ : ಕೆ.ಜೆ.ಜಾರ್ಜ್

ಬೆಂಗಳೂರು : ತಲಾ ಆದಾಯದಲ್ಲಿ ಕರ್ನಾಟಕ ರಾಜ್ಯವು ದೇಶದಲ್ಲೇ ಮೊದಲ ಸ್ಥಾನದಲ್ಲಿರಲು ಕಾಂಗ್ರೆಸ್ ನೇತೃತ್ವದ ಸರಕಾರದ ಗ್ಯಾರಂಟಿ ಯೋಜನೆಗಳೇ ಮುಖ್ಯ ಕಾರಣ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ಹೇಳಿದ್ದಾರೆ. ರವಿವಾರ ಇಲ್ಲಿನ ಡಾ.ಬಿ.ಆರ್.ಅಂಬೇಡ್ಕರ್ ವೈದ್ಯಕೀಯ ಮತ್ತು ಆಸ್ಪತ್ರೆ ಸಮೂಹ ಸಂಸ್ಥೆಯಲ್ಲಿ ಆಯೋಜಿಸಿದ್ದ ಸಂಸ್ಥಾಪಕರ ದಿನಾಚರಣೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ತ್ಯಾಗ ಮತ್ತು ಮಮತೆಯ ಪ್ರತೀಕ ಎನಿಸಿರುವ ಮಹಿಳೆಯರಿಗೆ ಸರಕಾರ ಗ್ಯಾರಂಟಿ ಯೋಜನೆಗಳ ಮೂಲಕ ಆರ್ಥಿಕ ಶಕ್ತಿ ತುಂಬಿದೆ. ಇದರಿಂದಾಗಿಯೇ ತಲಾ ಆದಾಯದಲ್ಲಿ ನಾವು ದೇಶದಲ್ಲೇ ನಂಬರ್ ಒನ್ ಸ್ಥಾನಕ್ಕೇರಿದ್ದೇವೆ ಎಂದು ಹೇಳಲು ಹೆಮ್ಮೆಯಾಗುತ್ತದೆ ಎಂದರು. ಗ್ಯಾರಂಟಿ ಯೋಜನೆಗಳಿಂದ ಒಂದು ಕುಟುಂಬಕ್ಕೆ ಸುಮಾರು 5,500 ರೂಪಾಯಿ ಸಂದಾಯ ಆಗಲಿದೆ. ಇದರಿಂದ ಕುಟುಂಬಗಳು ಸಬಲವಾಗುವ ಜತೆಗೆ ರಾಜ್ಯದ ಆರ್ಥಿಕ ವಹಿವಾಟಿನಲ್ಲೂ ಏರಿಕೆ ಕಂಡಿದೆ. ಸಾವಿರಾರು ಉದ್ಯೋಗಗಳು ಸೃಷ್ಟಿಯಾಗಿವೆ. ಮುಖ್ಯವಾಗಿ ಜನರ ಖರೀದಿ ಶಕ್ತಿ ಹೆಚ್ಚಿದೆ ಎಂದು ಜಾರ್ಜ್ ಹೇಳಿದರು. ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರು ಹೇಳಿದಂತೆ ಸರಕಾರವು ಎಲ್ಲರನ್ನೊಳಗೊಳ್ಳುವ ಸರಕಾರವಾಗಬೇಕು. ಸಂಪತ್ತು ಕೇವಲ ಒಂದು ವರ್ಗದ ಸ್ವತ್ತಾಗದೆ, ಸಮರ್ಪಕವಾಗಿ ಹಂಚಿಕೆ ಆಗಬೇಕು. ಹಾಗಿದಾಗ ಮಾತ್ರವೇ ಪ್ರಜಾಪ್ರಭುತ್ವಕ್ಕೆ ಅರ್ಥ ಬರುವುದು ಎಂದು ಸಚಿವ ಜಾರ್ಜ್ ಇದೇ ವೇಳೆ ಪ್ರತಿಪಾದಿಸಿದರು. ನಮ್ಮ ನಾಯಕ ರಾಹುಲ್ ಗಾಂಧಿ 3,200ಕಿ.ಮೀ.ಭಾರತ್ ಜೋಡೋ ಪಾದಯಾತ್ರೆ ಕೈಗೊಂಡರು. ಕರ್ನಾಟಕಕ್ಕೆ ಬಂದಾಗ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಜತೆ ಇದ್ದರು. ಪಾದಯಾತ್ರೆ ವೇಳೆ ದೇಶದ ಎಲ್ಲ ವರ್ಗದ ಜನರನ್ನು ಮುಖಾಮುಖಿಯಾಗಿ ಅವರ ಕಷ್ಟ ವಿಚಾರಿಸಿದರು. ಕೋವಿಡ್ ಬಳಿಕ ಕಷ್ಟದಲ್ಲಿರುವ ಜನರಿಗೆ ಆರ್ಥಿಕ ಶಕ್ತಿ ತುಂಬುವ ಕೆಲಸ ಮಾಡಿ ಎಂದು ರಾಹುಲ್ ಗಾಂಧಿ ಹೇಳಿದ್ದರು, ಅದರಂತೆ ನಮ್ಮ ಸರಕಾರ ಗ್ಯಾರಂಟಿಗಳನ್ನು ಘೋಷಿಸುವ ಮೂಲಕ ಅಶಕ್ತರಿಗೆ ಶಕ್ತಿ ತುಂಬಲಾಗಿದೆ ಎಂದರು. ಆಪ್ತ ಕಾಲೇಜ್ : ಕೋವಿಡ್ ವೇಳೆ ರೋಗಿಗಳಿಗೆ ಆಸ್ಪತ್ರೆಗಳಲ್ಲಿ ಹಾಸಿಗೆ ಸಿಗದೆ ಸಮಸ್ಯೆ ಆಯಿತು. ಆಗ ನಮ್ಮ ಕ್ಷೇತ್ರದಲ್ಲಿರುವ ಅಂಬೇಡ್ಕರ್ ಕಾಲೇಜು ನಮ್ಮ ನೆರವಿಗೆ ನಿಂತು, ಬಡವರಿಗೆ ಆರೋಗ್ಯ ಸೇವೆ ಒದಗಿಸಿತು. ಕಾಲೇಜಿನ ಪ್ರಾಂಶುಪಾಲರು 120 ಹಾಸಿಗೆಗಳ ವಾರ್ಡ್ ಸಿದ್ದ ಮಾಡಿಕೊಟ್ಟರು. ಇದಕ್ಕೆ ಅವರಿಗ ನಾನು ಚಿರಋಣಿಯಾಗಿರುತ್ತೇನೆ ಎಂದು ಅವರು ಕೃತಜ್ಞತೆ ಸಲ್ಲಿಸಿದರು.

ವಾರ್ತಾ ಭಾರತಿ 12 Jan 2026 12:38 am

ಚಿದಾನಂದಮೂರ್ತಿ, ಭೈರಪ್ಪ ಕನ್ನಡಕ್ಕೆ ಮಿಡಿದವರು : ಪ್ರೊ.ಸಿದ್ದರಾಮಯ್ಯ

‘ಕನ್ನಡ-ಕನ್ನಡಿಗ-ಕರ್ನಾಟಕ’ ಪರಿಷ್ಕೃತ 17ನೇ ಆವೃತ್ತಿ ಲೋಕಾರ್ಪಣೆ

ವಾರ್ತಾ ಭಾರತಿ 12 Jan 2026 12:35 am

Bengaluru | ‘ಶಿವಲೀಲಾ’ ಚಿತ್ರಕ್ಕೆ ಚಿತ್ರಮಂದಿರಗಳನ್ನು ನೀಡದೆ ಅನ್ಯಾಯ ಆರೋಪ: ಪ್ರತಿಭಟನೆ

ಬೆಂಗಳೂರು : ಲಿಂಗತ್ವ ಅಲ್ಪಸಂಖ್ಯಾತರ ಕುರಿತಾದ ಕಥೆಯನ್ನು ಹೊಂದಿರುವ ‘ಶಿವಲೀಲಾ’ ಚಿತ್ರಕ್ಕೆ ಚಿತ್ರಮಂದಿರಗಳನ್ನು ನೀಡದೆ ಅನ್ಯಾಯ ಮಾಡಲಾಗುತ್ತಿದೆ ಎಂದು ಆರೋಪಿಸಿ ಚಿತ್ರತಂಡದ ಕಲಾವಿದರು ಹಾಗೂ ಬಿಜೆಪಿ ಕಾರ್ಯಕರ್ತರು ರವಿವಾರ ಸ್ವಾತಂತ್ರ್ಯ ಉದ್ಯಾನವನದಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಪ್ರತಿಭಟನೆಯಲ್ಲಿ ನಿರ್ದೇಶಕ ಅಶೋಕ್ ಜೈರಾಮ್ ಮಾತನಾಡಿ, ಸಮಾಜದಲ್ಲಿ ಲಿಂಗತ್ವ ಅಲ್ಪಸಂಖ್ಯಾತರು ಹಾಗೂ ಸಾಮಾನ್ಯರ ನಡುವೆ ಇರುವ ಭಿನ್ನಾಭಿಪ್ರಾಯಗಳನ್ನು ತೊಡೆದು ಹಾಕುವ ಬಲವಾದ ಪ್ರಯತ್ನವಿದು. ರಾಜ್ಯದ ಮೂರು ಚಿತ್ರಮಂದಿರಗಳಲ್ಲಿ ತಲಾ ಒಂದು ಪ್ರದರ್ಶನ ಮಾತ್ರ ನೀಡಲಾಗಿದೆ. ಶಾಲಾ, ಕಾಲೇಜು ಮಕ್ಕಳು ಕಡ್ಡಾಯವಾಗಿ ಈ ಚಿತ್ರ ನೋಡಲು ಸುತ್ತೋಲೆ ಹೊರಡಿಸಬೇಕು ಎಂದರು. ವಿಧಾನ ಪರಿಷತ್ ವಿಪಕ್ಷ ಮುಖ್ಯ ಸಚೇತಕ ಎನ್.ರವಿಕುಮಾರ್ ಮಾತನಾಡಿ, ರಾಜ್ಯದಲ್ಲಿ ಮಂಗಳಮುಖಿಯವರ ಜೀವನ ನರಕವಾಗಿದೆ. ಮನೆಯಲ್ಲೂ ಅವರನ್ನು ಸೇರಿಸುವುದಿಲ್ಲ. ಹಾಗಾಗಿ ಅವರು ಎಲ್ಲಿ ಬದುಕಬೇಕು? ಅವರ ಜೀವನ ಕುರಿತ ಚಿತ್ರ ವೀಕ್ಷಿಸಲು ಚಿತ್ರಮಂದಿರ ಕೊಡುತ್ತಿಲ್ಲ. ಈ ಸಂಬಂಧ ಸರಕಾರವೇ ಸುತ್ತೋಲೆ ಹೊರಡಿಸಿ, ಮಕ್ಕಳು, ಪೋಷಕರು, ಸರಕಾರಿ ನೌಕರರು ವೀಕ್ಷಿಸಲು ಅವಕಾಶ ಕೊಡಬೇಕು ಎಂದು ಒತ್ತಾಯಿಸಿದರು. ಮುಖಂಡರಾದ ಭಾರತಿ ಶೆಟ್ಟಿ ಮಾತನಾಡಿ, ಮುಂಗಳಮುಖಿಯರು ಸಮಾಜದಲ್ಲಿ ಶೋಷಣೆಗೆ ಒಳಗಾಗುತ್ತಿದ್ದಾರೆ. ಕಾನೂನು ಬದಲಾವಣೆ ಮಾಡಿಯಾದರೂ ಮೀಸಲಾತಿ ನೀಡಿ, ಮುಖ್ಯವಾಹಿನಿಗೆ ಬರಲು ಅವಕಾಶ ಮಾಡಿ ಕೊಡಬೇಕು ಎಂದು ಹೇಳಿದರು. ಮನವಿ ಸ್ವೀಕರಿಸಲು ಯಾರೂ ಬಾರದ ಕಾರಣ ಸಿಎಂ ಸಿದ್ದರಾಮಯ್ಯ ಮನೆಗೆ ಮುತ್ತಿಗೆ ಹಾಕಲು ಯತ್ನಿಸಿದ ಕಲಾವಿದರು ಹಾಗೂ ಬಿಜೆಪಿ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದು, ಸಿಎಆರ್ ಕೇಂದ್ರಕ್ಕೆ ಬಸ್‌ನಲ್ಲಿ ಕರೆದೊಯ್ದು ಬಳಿಕ ಬಿಡುಗಡೆಗೊಳಿಸಿದರು. ಪ್ರತಿಭಟನೆಯಲ್ಲಿ ಬಿಜೆಪಿ ಮುಖಂಡರಾದ ವೈ.ಸಂಪಂಗಿ, ಮಂಜುಳಾ ಹಾಗೂ ಜಾನಪದ ಕಲಾವಿದೆ ಜೋಗತಿ ಮಂಜಮ್ಮ, ಹಲವರು ಭಾಗವಹಿಸಿದ್ದರು.

ವಾರ್ತಾ ಭಾರತಿ 12 Jan 2026 12:25 am

Bengaluru | ಡಯಾಲಿಸಿಸ್ ರೋಗಿಗಳಿಗೆ ನೆರವಾಗಲು ‘ಸ್ಯಾರಿ ನಡಿಗೆ’ ವಾಕಥಾನ್

ಬೆಂಗಳೂರು : ಆರೋಗ್ಯವಾಗಿ ಬದುಕುವವರು ಇಂದಿನ ದಿನಗಳಲ್ಲಿ ಅದೃಷ್ಟವಂತರು ಎಂದು ಭಾವಿಸಿದ್ದೇವೆ. ಈ ನಿಟ್ಟಿನಲ್ಲಿ ಸಮಾಜಮುಖಿಯಾಗಿ ಕೈಗೊಂಡ ‘ಸ್ಯಾರಿ ನಡಿಗೆ’ ನಿಜಕ್ಕೂ ಶ್ಲಾಘನೀಯ ಎಂದು ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಇಲಾಖೆಯ ಅಧ್ಯಕ್ಷ ಎಸ್.ಇ.ಸುಧೀಂದ್ರ ಹೇಳಿದ್ದಾರೆ. ರವಿವಾರ ನಗರದ ಕೊಹಿನೂರ್ ಮೈದಾನದಲ್ಲಿ ಮಧುರಾ ಮಹಿಳಾ ಕ್ಲಬ್, ಸುದಯ ಫೌಂಡೇಶನ್ ಮತ್ತು ಗರುಡ ಫೌಂಡೇಶನ್ ಸಹಯೋಗದೊಂದಿಗೆ ಆಯೋಜಿಸಲಾದ ‘ಸ್ಯಾರಿ ವಾಕಥಾನ್’ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಆರ್ಥಿಕವಾಗಿ ಹಿಂದುಳಿದ ಡಯಾಲಿಸಿಸ್‌ಗೆ ಒಳಗಾಗಿರುವ ರೋಗಿಗಳಿಗೆ ಧನಸಹಾಯ ಮಾಡುವ ನಿಟ್ಟಿನಲ್ಲಿ ನಡೆಸಲಾದ ಈ ವಾಕಥಾನ್ ಸಮಾಜಕ್ಕೆ ಉತ್ತಮ ನಿದರ್ಶನವಾಗಲಿದೆ ಎಂದರು. ವಾಕಥಾನ್‌ನಲ್ಲಿ ಪಾಲ್ಗೊಂಡಿದ್ದ ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಉದಯ್ ಗರುಡಾಚಾರ್ ಮಾತನಾಡಿ, ಪೌರಕಾರ್ಮಿಕರು ಈ ನಡಿಗೆಯಲ್ಲಿ ಪಾಲ್ಗೊಂಡಿರುವುದು ನಿಜಕ್ಕೂ ವಿಶೇಷವಾದ ಘಳಿಗೆ ಎಂದು ಎಲ್ಲರಿಗೂ ಶುಭ ಕೋರಿದರು. ಬಸವನಗುಡಿ ಕ್ಷೇತ್ರದ ಶಾಸಕ ಎಲ್.ಎ.ರವಿಸುಬ್ರಹ್ಮಣ್ಯ ಮಾತನಾಡಿ, ಮನೆಯಲ್ಲಿ ಮಹಿಳೆಯೊಬ್ಬರು ಆರೋಗ್ಯವಾಗಿದ್ದರೆ ಕುಟುಂಬವೇ ಆರೋಗ್ಯವಿದ್ದಂತೆ. ಈ ಹಿನ್ನೆಲೆಯಲ್ಲಿ ನಮ್ಮ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಸೀರೆಯನ್ನು ಉಟ್ಟು ಆರ್ಥಿಕವಾಗಿ ಹಿಂದುಳಿದ ಮತ್ತು ಡಯಾಲಿಸಿಸ್‌ಗೆ ಒಳಗಾಗಿರುವ ರೋಗಿಗಳಿಗೆ ಧನ ಸಂಗ್ರಹ ಮಾಡುವ ಸದುದ್ದೇಶ ನಿಜಕ್ಕೂ ಸಮಾಜಕ್ಕೆ ಸಂದೇಶ ನೀಡುವ ಕೆಲಸ ಎಂದು ಸಂತಸ ವ್ಯಕ್ತಪಡಿಸಿದರು. ಸ್ಯಾರಿ ವಾಕಥಾನ್‌ನಲ್ಲಿ 200ಕ್ಕೂ ಹೆಚ್ಚು ಮಹಿಳೆಯರು ಪಾಲ್ಗೊಂಡಿದ್ದು, ಸೌಂದರ್ಯ, ಒಗ್ಗಟ್ಟು ಮತ್ತು ಮಾನವೀಯತೆಯನ್ನು ಪ್ರದರ್ಶಿಸುವ ಮೂಲಕ ಕಾಲ್ನಡಿಗೆ ಕೈಗೊಂಡು ಡಯಾಲಿಸಿಸ್ ಕುರಿತು ಜಾಗೃತಿ ಮೂಡಿಸಿದರು. ಕಾರ್ಯಕ್ರಮದಲ್ಲಿ ನೆರೆದಿದ್ದ ಪೌರಕಾರ್ಮಿಕರಿಗೆ ಸೀರೆ ವಿತರಣೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಮೀಡಿಯಾ ಕನೆಕ್ಟ್ ಮತ್ತು ಸುದಯ ಫೌಂಡೇಶನ್ ಸಂಸ್ಥಾಪಕರು ಹಾಗೂ ಸಿಇಒ ದಿವ್ಯಾ ರಂಗೇನಹಳ್ಳಿ, ಗರುಡ ಫೌಂಡೇಶನ್ ವ್ಯವಸ್ಥಾಪಕ ನಿರ್ದೇಶಕಿ ಮೇದಿನಿ ಉದಯ್ ಗರುಡಾಚಾರ್, ಕಿರುತೆರೆ ನಟಿಯರಾದ ವೀಣಾರಾವ್, ನಟಿ ಭುವನ ಮುರಳಿ, ಮಧುರಾ ವುಮೆನ್ಸ್ ಕ್ಲಬ್‌ನ ಅಧ್ಯಕ್ಷೆ ಮಂಜುಳಾ ಶಂಕರ್, ಸದಸ್ಯರಾದ ಲಕ್ಷ್ಮೀ ಸಿ.ಪಿ., ಅನ್ಷು ಹೆಗಡೆ, ಮತ್ತಿತರರು ಪಾಲ್ಗೊಂಡಿದ್ದರು.

ವಾರ್ತಾ ಭಾರತಿ 12 Jan 2026 12:14 am

ಪ್ರತಿಭಾ ನಂದಕುಮಾರ್ ಬರಹಗಳಲ್ಲಿ ಮನುಷ್ಯ ಪರ ವಿಚಾರವಿದೆ : ಡಾ.ಆಶಾದೇವಿ

ಬೆಂಗಳೂರು : ಲೇಖಕಿ ಪ್ರತಿಭಾ ನಂದಕುಮಾರ್ ಅವರ ಬರಹಗಳಲ್ಲಿ ಮಹಿಳೆ-ಪುರುಷ ಪರ ಸಾಹಿತ್ಯದ ಬದಲು, ಮನುಷ್ಯ ಪರ ಸಾಹಿತ್ಯವನ್ನು ಕಾಣಬಹುದಾಗಿದ್ದು, ಇದು ಅವರ ಬರಹಗಳ ವೈಶಿಷ್ಟ್ಯವೂ ಆಗಿದೆ ಎಂದು ವಿಮರ್ಶಕಿ ಡಾ.ಎಂ.ಎಸ್.ಆಶಾದೇವಿ ಅಭಿಪ್ರಾಯಪಟ್ಟಿದ್ದಾರೆ. ರವಿವಾರ ನಗರದ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ ಸಭಾಂಗಣದಲ್ಲಿ ಆಯೋಜಿಸಿದ್ದ ‘ಪ್ರತಿಭಾ ನಂದಕುಮಾರ್ ಕಾವ್ಯ ಕುರಿತ ಉಪನ್ಯಾಸ ಹಾಗೂ ಪುಸ್ತಕಗಳ ಬಿಡುಗಡೆ ಸಮಾರಂಭ’ವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಪ್ರತಿಭಾ ಅವರ ಬರಹಗಳಲ್ಲಿ ಬಂಧನಗಳನ್ನು ಕಳಚಿಕೊಳ್ಳುತ್ತಾ, ಹೊಸತನವನ್ನು ಸ್ವೀಕರಿಸವ ಅಂಶಗಳಿದ್ದು, ಅವರ ಬರಹ ಶೈಲಿಯು ಎಂತಹವರಿಗೂ ಅಚ್ಚರಿ ಮೂಡಿಸುತ್ತದೆ. ಜೀವನದ ಹಲವು ತಲ್ಲಣಗಳನ್ನು ಪ್ರತಿಭಾ ತಮ್ಮ ಬರಹದಲ್ಲಿ ವಿವರಿಸುತ್ತಾ ಸಾಗುವ ವೈಖರಿ ಮಾದರಿಯಾಗಿದೆ. ಅವರ ಬರಹಗಳು ಹೆಣ್ಣಿನ ಬದುಕು ಹಸನಾಗಬೇಕು ಎಂಬುದಿಲ್ಲ ಬದಲಾಗಿ ಮನುಷ್ಯನ ಬದುಕು ಹಸನಾಗಬೇಕು ಎಂಬುದನ್ನು ಒಳಗೊಂಡಿದೆ ಎಂದು ಅವರು ಹೇಳಿದರು. ಪ್ರಾಧ್ಯಾಪಕ ಸುಂದರ್ ಸಾರುಕೈ ಮಾತನಾಡಿ, ಯಾವುದೇ ಕಾವ್ಯವನ್ನು ಅರ್ಥಮಾಡಿಕೊಳ್ಳಬೇಕಾದರೆ ಬರಹಗಾರರ ತಾತ್ವಿಕ ಚಿಂತನೆಗಳನ್ನು ನಾವು ಮೊದಲು ಅರ್ಥೈಸಿಕೊಳ್ಳಬೇಕು. ನಂತರ ಅವರ ಬರಹವನ್ನು ಅರ್ಥಮಾಡಿಕೊಳ್ಳಬೇಕು. ಈ ನಿಟ್ಟಿನಲ್ಲಿ ಪ್ರತಿಭಾ ಅವರ ಕಾವ್ಯದ ರೂಪ ಹೇಗಿದೆ ಎಂಬುದನ್ನೂ ಅರ್ಥ ಮಾಡಿಕೊಂಡರೆ ಅವರ ವಿವರಣಾ ಶೈಲಿಯೂ ನಮ್ಮ ಗಮನ ಸೆಳೆಯುತ್ತದೆ ಎಂದು ತಿಳಿಸಿದರು. ಪತ್ರಕರ್ತ ಜೋಗಿ ಮಾತನಾಡಿ, ‘ಪ್ರತಿಭಾ ನಂದಕುಮಾರ್ ಅವರು ಹತ್ತು-ಹಲವು ಆಯಾಮಗಳಲ್ಲಿ ಗುರುತಿಸಿಕೊಂಡು ಬರುತ್ತಿದ್ದಾರೆ. ಆಶ್ಚರ್ಯ ಪಡುವುದೇನೆಂದರೆ ಯಾರೇ ಹೊಗಳಲಿ-ತೆಗಳಲಿ ಎಲ್ಲವನ್ನು ಸಹಿಸಿಕೊಂಡು ತಮ್ಮದೇ ಆದ ವಿಭಿನ್ನ ಬರಹಗಳನ್ನು ನೀಡುತ್ತಿರುವ ದಿಟ್ಟ ಲೇಖಕಿ’ ಎಂದರು. ಇದೇ ವೇಳೆ ಪ್ರತಿಭಾ ನಂದಕುಮಾರ್ ಅವರ ಬೆಕ್ಕೇ ಬೆಕ್ಕೇ ಮುದ್ದಿನ ಸೊಕ್ಕೇ, ಶಾಪಗ್ರಸ್ತ ಕವಿ ಬೋದಿಲೇರ್, ಪ್ರತಿಭಾ ಉವಾಚ, ಕಾವ್ಯ ದಾಹ, ಇಳಿದು ಬರುವುದಿಲ್ಲ ತಾಯಿ ಹಾಗೂ ಒಂದು ಹೆಣ್ಣು ಒಂಟೆಯ ಹತ್ಯೆ ಕೃತಿಗಳನ್ನು ಲೋಕಾರ್ಪಣೆ ಮಾಡಲಾಯಿತು. ಪ್ರಕಾಶಕರಾದ ಜಿ.ಎನ್.ಮೋಹನ್, ಪ್ರಕಾಶ್ ಕಂಬತ್ತಳ್ಳಿ, ಮುರಳಿ ಶ್ರೀನಿವಾಸನ್, ಬಿ.ಎಸ್.ವಿದ್ಯಾರಣ್ಯ, ಎಂ.ಸಿ.ನರೇಂದ್ರ ಹಾಗೂ ಸೂರ್ಯಕೀರ್ತಿ ಇದ್ದರು. ಬರಹಗಳನ್ನು ರಚಿಸುತ್ತಾ ಸಾಗಿದಾಗ ಸಾಕಷ್ಟು ಮಂದಿ ನನಗೆ ಸಹಕರಿಸಿದ ಬಗೆಯನ್ನು ಮರೆಯಲಾರೆ. ಹಲವರು ನಿರಂತರವಾಗಿ ಸಹಕರಿಸಿದ್ದಕ್ಕಾಗಿ ಆರು ಕೃತಿಗಳನ್ನು ಒಂದೇ ಬಾರಿ ಪ್ರಕಟಿಸಲು ಸಾಧ್ಯವಾಯಿತು -ಪ್ರತಿಭಾ ನಂದಕುಮಾರ್, ಲೇಖಕಿ 

ವಾರ್ತಾ ಭಾರತಿ 12 Jan 2026 12:11 am

ವಿಶ್ವ ಕಣ್ಣೋಟ-27: ಬಿಗ್‌ ಬ್ಯಾಂಗ್‌ ಬಳಿಕದ ಆದಿ ನಕ್ಷತ್ರಗಳನ್ನು ಪತ್ತೆಹಚ್ಚಿದ ನಾಸಾ; ಯಾವ ಗ್ಯಾಲಕ್ಸಿಯಲ್ಲಿವೆ ಗೊತ್ತಾ?

ಬ್ರಹ್ಮಾಂಡದ ಅಧ್ಯಯನಲ್ಲಿ ಮುಂಚೂಣಿಯಲ್ಲಿರುವ ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ನಾಸಾ, ವಿಶ್ವವು ಜನ್ಮತಳೆದ ಕೆಲವೇ ಮಿಲಿಯನ್‌ ವರ್ಷಗಳಲ್ಲಿ ಹುಟ್ಟಿಕೊಂಡಿದ್ದ ಪುರಾತನ ನಕ್ಷತ್ರಗಳನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದೆ. ಬಿಗ್‌ ಬ್ಯಾಂಗ್‌ ಎಂದು ಕರೆಯಲ್ಪಡುವ ಖಗೋಳೀಐ ವಿದ್ಯಮಾನದ ಬಳಿಕ ಕಾಣಿಸಿಕೊಂಡ ಈ ನಕ್ಷತ್ರಗಳು, ವರ್ತಮಾನದ ನಕ್ಷತ್ರಗಳಿಗಿಂತ ಭಿನ್ನವಾಗಿವೆ ಎಂದು ನಾಸಾ ಹೇಳಿದೆ. ಜೇಮ್ಸ್‌ ವೆಬ್‌ ಸ್ಪೇಸ್‌ ಟೆಲಿಸ್ಕೋಪ್‌ನ ಈ ಸಂಶೋಧನೆ, ಆದಿ ಬ್ರಹ್ಮಾಂಡದ ಮಾನವನ ತಿಳುವಳಿಕೆಯನ್ನು ಮತ್ತಷ್ಟು ವಿಸ್ತಾರಗೊಳಿಸಿದೆ. ಈ ಕುರಿತು ಇಲ್ಲಿದೆ ಹೆಚ್ಚಿನ ಮಾಹಿತಿ.

ವಿಜಯ ಕರ್ನಾಟಕ 11 Jan 2026 11:53 pm

ಮೇಜರ್ ಸ್ವಾತಿ ಶಾಂತಕುಮಾರ್‌ಗೆ ವಿಶ್ವಸಂಸ್ಥೆಯ ಪ್ರತಿಷ್ಠಿತ ಪ್ರಶಸ್ತಿ

ಬೆಂಗಳೂರು : ಬೆಂಗಳೂರು ಮೂಲದ ಸೇನಾಧಿಕಾರಿ ಮೇಜರ್ ಸ್ವಾತಿ ಶಾಂತಕುಮಾರ್ ಅವರನ್ನು ವಿಶ್ವಸಂಸ್ಥೆ ನೀಡುವ ಪ್ರತಿಷ್ಠಿತ ‘ಲಿಂಗ ಸಮಾನತೆ ಪ್ರತಿಪಾದಕ ಪ್ರಶಸ್ತಿ-2025’ಗೆ ಆಯ್ಕೆ ಮಾಡಲಾಗಿದೆ ಎಂದು ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಆಂಟೊನಿಯೊ ಗುಟೆರೆಸ್ ಪ್ರಕಟಿಸಿದ್ದಾರೆ. ರವಿವಾರ ಈ ಸಂಬಂಧ ಅಧಿಕೃತವಾಗಿ ಪ್ರಶಸ್ತಿ ಪ್ರಕಟಿಸಿರುವ ಅವರು, ದೇಶದ ವಿವಿಧೆಡೆ ಅತ್ಯುತ್ತಮ ಕಾರ್ಯಾಚರಣೆ ಮತ್ತು ಸೇವೆ ಸಲ್ಲಿಸಿದ ಸೇನಾ ಅಧಿಕಾರಿಗಳನ್ನು ಗುರುತಿಸಿ ವಿಶ್ವಸಂಸ್ಥೆಯು ಈ ಪ್ರಶಸ್ತಿ ನೀಡುತ್ತಿದ್ದು, ಈ ಬಾರಿ, ಸ್ವಾತಿ ಶಾಂತಕುಮಾರ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಹೇಳಿದ್ದಾರೆ. ಸ್ವಾತಿ ಶಾಂತಕುಮಾರ್ ಅವರು ಯುದ್ಧ ಪೀಡಿತ ದಕ್ಷಿಣ ಸುಡಾನ್‌ನಲ್ಲಿ ಮಹಿಳೆಯರ ರಕ್ಷಣೆ, ಸಮುದಾಯದ ನೆಮ್ಮದಿಗಾಗಿ ನಡೆಸಿದ ಕಾರ್ಯಕ್ರಮಗಳಿಗಾಗಿ ಅವರನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ‘ಸಮಾನ ಪಾಲುದಾರಿಕೆ-ಶಾಶ್ವತ ಶಾಂತಿ’ ಎಂಬುದು ಸ್ವಾತಿ ಅವರ ಧ್ಯೇಯವಾಗಿದೆ ಎಂದು ಅವರು ಹೇಳಿದ್ದಾರೆ. ಈ ಪ್ರಶಸ್ತಿಗೆ ಶಾಂತಿ ರಕ್ಷಣಾ ಕಾರ್ಯಾಚರಣೆಗಳಲ್ಲಿ ಕೆಲಸ ಮಾಡಿರುವವರ ಹೆಸರುಗಳ ಪಟ್ಟಿ ಮಾಡಲಾಗಿತ್ತು. ಹಲವಾರು ಹೆಸರುಗಳನ್ನು ನಾಮನಿರ್ದೇಶನವನ್ನು ಮಾಡಲಾಗಿತ್ತು. ಆ ಪೈಕಿ, ಅಂತಿಮ ಪಟ್ಟಿಗೆ ನಾಲ್ವರನ್ನು ಆಯ್ಕೆ ಮಾಡಿದ್ದು, ನಾಲ್ವರಲ್ಲಿ ಯಾರನ್ನು ಪ್ರಶಸ್ತಿಗೆ ಆಯ್ಕೆ ಮಾಡಬೇಕೆಂದು ಮತದಾನ ನಡೆದಿತ್ತು. ಅತ್ಯಧಿಕ ಮತಗಳು ಸ್ವಾತಿ ಅವರಿಗೆ ಬಂದಿದ್ದು, ಅಂತಿಮವಾಗಿ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ವಿಶ್ವಸಂಸ್ಥೆ ತಿಳಿಸಿವೆ. ಸ್ವಾತಿ ಶಾಂತಕುಮಾರ್ ಅವರು ಬೆಂಗಳೂರು ನಗರದ ಲಿಂಗರಾಜಪುರ ಮೂಲದವರು. ಇಂಜಿನಿಯರಿಂಗ್ ಪದವಿ ಪಡೆದಿದ್ದು, ಎಂಟು ವರ್ಷಗಳಿಂದ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಒಂದೂವರೆ ವರ್ಷದಿಂದ ದಕ್ಷಿಣ ಸುಡಾನ್‌ನಲ್ಲಿ ವಿಶ್ವಸಂಸ್ಥೆಯ ಶಾಂತಿಪಾಲನಾ ಪಡೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

ವಾರ್ತಾ ಭಾರತಿ 11 Jan 2026 11:40 pm

Hubballi | ಮಹಿಳೆಯ ಅತ್ಯಾಚಾರಗೈದು ವೀಡಿಯೊ ಹರಿಬಿಟ್ಟ ಆರೋಪ; ಮೂವರ ಬಂಧನ

ಹುಬ್ಬಳ್ಳಿ : ಮಹಿಳೆಯ ಅತ್ಯಾಚಾರಗೈದು ನಂತರ ಮದ್ಯ ಕುಡಿಸಿ ಅಶ್ಲೀಲ ವಿಡಿಯೋ ಮಾಡಿ ಜಾಲತಾಣದಲ್ಲಿ ಹರಿಬಿಟ್ಟ ಆರೋಪದಲ್ಲಿ ಮೂವರು ಯುವಕರನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಕರಣ ಹಳೆ ಹುಬ್ಬಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಶಿವಶಂಕರ ಕಾಲನಿ ನಿವಾಸಿಗಳಾದ ಶಿವಾನಂದ್(29), ಗಣೇಶ್ ಗಿಡ್ಡಣ್ಣವರ (31), ಪ್ರದೀಪ ಬಂಧಿತ ಆರೋಪಿಗಳು. ಸಂತ್ರಸ್ತೆ ಹಾವೇರಿ ಮೂಲದ ಮಹಿಳೆ ಎಂದು ಗುರುತಿಸಲಾಗಿದೆ. ಆಕೆಗೆ ಹುಬ್ಬಳ್ಳಿಯ ಕಿಮ್ಸ್‌ನಲ್ಲಿ ವೈದ್ಯಕೀಯ ಚಿಕಿತ್ಸೆ ನೀಡಲಾಗಿದೆ. ಪ್ರಕರಣದ ವೀಡಿಯೊ ವೈರಲ್ ಆಗುತ್ತಿದ್ದಂತೆಯೇ ಆರೋಪಿಗಳನ್ನು ಸ್ಥಳೀಯರು ಥಳಿಸಿದ್ದಾರೆ ಎನ್ನಲಾಗಿದೆ. ಈ ಪ್ರಕರಣದ ಬಗ್ಗೆ ಕಮಿಷನರ್ ಎನ್. ಶಶಿಕುಮಾರ್ ಮಾಧ್ಯಮಗಳ ಜೊತೆ ಮಾತನಾಡಿ, ಜ.9ರಂದು ರಾತ್ರಿ 11ರಿಂದ 12ರ ಸಮಯದಲ್ಲಿ ಹುಬ್ಬಳ್ಳಿಯ ಇಂಡಿ ಪಂಪ್ ಹತ್ತಿರ ಇರುವ ಅಂಬೇಡ್ಕರ್ ಮೈದಾನದಲ್ಲಿ 35 ವರ್ಷದ ಮಹಿಳೆಯನ್ನು ಇಬ್ಬರು ಯುವಕರು ಆಟೊದಲ್ಲಿ ಕರೆದುಕೊಂಡು ಬಂದು ಅನುಚಿತ ವರ್ತನೆ ತೋರಿ ಮತ್ತು ದೈಹಿಕ ಸಂಪರ್ಕ ಬೆಳೆಸಿ ನಂತರ ಮಹಿಳೆಗೆ ಮದ್ಯಪಾನವನ್ನು ಮಾಡಿಸಿ ತಮ್ಮ ಮೊಬೈಲ್‌ನಲ್ಲಿ ಆಕೆಯ ಅಶ್ಲೀಲ ವೀಡಿಯೊಗಳನ್ನು ಮಾಡಿದ್ದಾರೆ. ಈ ವೀಡಿಯೊಗಳನ್ನು ಸಾರ್ವಜನಿಕರು ನಮಗೆ ನೀಡಿದ್ದು, ವೀಡಿಯೊಗಳನ್ನು ಆಧರಿಸಿ ಸಂತ್ರಸ್ತ ಮಹಿಳೆಯ ಗುರುತು ಪತ್ತೆ ಹಚ್ಚಲಾಗಿದೆ. ಮೊದಲಿಗೆ ನಾವು ಸುವೋಮೋಟೋ ಪ್ರಕರಣವನ್ನು ದಾಖಲಿಸಿಕೊಂಡಿದ್ದೆವು. ನಂತರ ಸಂತ್ರಸ್ತ ಮಹಿಳೆಯ ಹೇಳಿಕೆಯನ್ನು ಪಡೆದುಕೊಂಡು ಅತ್ಯಾಚಾರ ಹಾಗೂ ಐಟಿ ಆಕ್ಟ್ ಸೇರಿದಂತೆ ವಿವಿಧ ಪ್ರಕರಣವನ್ನು ದಾಖಲಿಸಿಕೊಂಡಿದ್ದೇವೆ ಎಂದು ತಿಳಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಶಿವಾನಂದ್, ಗಣೇಶ್ ಗಿಡ್ಡಣ್ಣವರ ಎಂಬ ಆರೋಪಿಗಳು ಮಹಿಳೆಯನ್ನು ಕರೆದುಕೊಂಡು ಹೋಗಿ ಕೃತ್ಯವನ್ನು ಎಸಗಿದ್ದು ಹಾಗೂ ಇವರು ಮಾಡಿದಂತ ವೀಡಿಯೊವನ್ನು ಪ್ರದೀಪ ಎಂಬಾತ ಬೇರೆಯವರಿಗೆ ಹರಿಬಿಟ್ಟಿದ್ದಾನೆ. ಘಟನೆ ಸ್ಥಳೀಯರ ಗಮನಕ್ಕೆ ಬಂದ ಕೂಡಲೇ ಇಬ್ಬರನ್ನು ಕರೆಸಿ ಥಳಿಸಿದ್ದಾರೆ, ಸಾರ್ವಜನಿಕರಿಂದ ಹಲ್ಲೆಗೊಳಗಾದ ಶಿವಾನಂದ ಕೂಡ ಮರು ಪ್ರಕರಣವನ್ನು ದಾಖಲಿಸಿದ್ದಾನೆ ಎಂದು ಹುಬ್ಬಳ್ಳಿ ಧಾರವಾಡ ಕಮಿಷನರ್ ಎನ್.ಶಶಿಕುಮಾರ್ ತಿಳಿಸಿದ್ದಾರೆ.

ವಾರ್ತಾ ಭಾರತಿ 11 Jan 2026 11:36 pm

ಪಾಕಿಸ್ತಾನಕ್ಕೆ ಚೀನಾ, ಅಮೆರಿಕಾ ಬೆಂಬಲದಿಂದ ಭಯೋತ್ಪಾದನಾ ಕೃತ್ಯಗಳಿಗೆ ಅಂತ್ಯವಿಲ್ಲ: ಡಾ. ಶ್ರೀರಾಮ್ ಸುಂದರ್ ಚೌಲಿಯಾ

ಮಂಗಳೂರು: ‘ಭಯೋತ್ಪಾದನೆ ಚಟುವಟಿಕೆಗಳನ್ನು ನಿಯಂತ್ರಿಸಲು ಭಾರತ ಅದೆಷ್ಟೇ ಪ್ರಯತ್ನಪಟ್ಟರೂ, ಅದು ಮುಂದುವರೆಯುತ್ತಲೇ ಇರುತ್ತದೆ. ಏಕೆಂದರೆ, ಪಾಕಿಸ್ತಾನಕ್ಕೆ ಅಮೇರಿಕಾ ಮತ್ತು ಚೀನಾದ ಬೆಂಬಲವಿದೆ. ನಾವು ಇನ್ನಷ್ಟು ರಕ್ತಪಾತಕ್ಕೆ ತಯಾರಾಗಬೇಕು’ ಎಂದು ಪ್ರೊ. ಡಾ. ಶ್ರೀರಾಮ್ ಸುಂದರ್ ಚೌಲಿಯಾ ಅಭಿಪ್ರಾಯಪಟ್ಟಿದ್ದಾರೆ. ಮಂಗಳೂರು ಲಿಟ್ ಫೆಸ್ಟ್ ನ ಎಂಟನೇ ಆವೃತ್ತಿಯಲ್ಲಿ ದೇಶದ ಜಾಗತಿಕ ಸಂಬಂಧಗಳ ಕುರಿತಾಗಿ ಮಾತನಾಡಿದ ಅವರು, ‘ಆಪರೇಷನ್ ಸಿಂಧೂರವನ್ನು ಇನ್ನಷ್ಟು ಮುಂದುವರೆಸಬೇಕಿತ್ತು, ಅರ್ಧಕ್ಕೆ ನಿಲ್ಲಿಸಬಾರದಾಗಿತ್ತು ಎಂದು ಹಲವರು ಬೇಸರ ವ್ಯಕ್ತಪಡಿಸಿದ್ದರು. ನಮ್ಮ ಉದ್ದೇಶ ಯುದ್ಧ ಮಾಡುವುದಾಗಿರಲಿಲ್ಲ. ಭಯೋತ್ಪಾದನೆಗೆ ಉತ್ತರ ಕೊಡಬೇಕಿತ್ತು. ನಮ್ಮನ್ನು ಪ್ರಚೋದಿಸಿದರೆ ನಾವು ಸುಮ್ಮನೆ ಬಿಡುವುದಿಲ್ಲ ಎಂಬ ಸಂದೇಶ ರವಾನಿಸಬೇಕಿತ್ತು. ಆ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿದ್ದೇವೆ. ಆದರೂ ಭಯೋತ್ಪಾದಕ ಚಟುವಟಿಕೆಗಳು ಮತ್ತೆ ಮರುಕಳಿಸುತ್ತವೆ. ನಾವೆಷ್ಟೇ ತಡೆಯುವುದಕ್ಕೆ ಪ್ರಯತ್ನ ಮಾಡಿದರೂ ಮುಂದಿನ ದಿನಗಳಲ್ಲಿ ಇನ್ನಷ್ಟು ರಕ್ತಪಾತಗಳು, ದುರಂತಗಳು ನಡೆಯುತ್ತವೆ. ಏಕೆಂದರೆ, ಪಾಕಿಸ್ತಾನಕ್ಕೆ ಅಮೇರಿಕಾ ಮತ್ತು ಚೀನಾದ ಬೆಂಬಲವಿದೆ. ಅಂತಹ ರಕ್ತಪಾತಗಳಿಗೆ ನಾವು ಮುಂದಿನ ದಿನಗಳಲ್ಲಿ ಇನ್ನಷ್ಟು ತಯಾರಾಗಬೇಕಿದೆ’ ಎಂದರು. ‘ಬಲಿಷ್ಠ ದೇಶಗಳು ಒಂದು ವ್ಯವಸ್ಥೆಯನ್ನು ಹಾಳು ಮಾಡುತ್ತಿವೆ ಎಂದ ಅವರು, ಕೆಲವು ವರ್ಷಗಳಿಂದಿತ್ತೀಚೆಗೆ ವ್ಯವಸ್ಥೆ ಕುಸಿಯುತ್ತಿರುವುದನ್ನು ನೋಡಬಹುದು. ರಷ್ಯಾ-ಉಕ್ರೇನ್ ಯುದ್ಧ ಮೂರು ವರ್ಷಗಳಿಂದ ನಡೆಯುತ್ತಿದೆ. ಅದರಿಂದ ಸಾಕಷ್ಟು ಪ್ರಾಣಹಾನಿಯಾಗಿದೆ. ಆದರೂ ಯುದ್ಧ ನಿಂತಿಲ್ಲ. ನಂತರ ಇಸ್ರೇಲ್ ಮತ್ತು ಇರಾನ್ ನಡುವೆ ಕದನ ವಾಯಿತು. ಈಗ ಅಮೇರಿಕಾ, ವೆನೆಜುವೆಲಾ ಮೇಲೆ ಬೇರೆ ರೀತಿಯಲ್ಲಿ ದಾಳಿ ಮಾಡಿದೆ. ಬಲಿಷ್ಠರು ಏನು ಮಾಡಿದರೂ ಸರಿ ಎನ್ನುವಂತಾಗಿದೆ. ದುರ್ಬಲರಿಗೆ ಯಾವುದೇ ಸುರಕ್ಷತೆ ಇಲ್ಲ ಎನ್ನುವಂತಾಗಿದೆ. ದೊಡ್ಡ ಮೀನುಗಳು ಸಣ್ಣ ಮೀನುಗಳನ್ನು ತಿನ್ನುತ್ತಿವೆ. ಸಾಮ್ರಾಜ್ಯಶಾಹಿ ವರ್ಷನೆ ಹೆಚ್ಚಾಗುತ್ತಿದೆ. ನಾವು ಇದೆಲ್ಲದರಿಂದ ದೂರ ಉಳಿದು ಅಭಿವೃದ್ಧಿಯತ್ತ ಗಮನಹರಿಸಬೇಕು. ಯುದ್ಧವನ್ನು ತಪ್ಪಿಸಿ, ನಮ್ಮ ಪ್ರಭಾವವನ್ನು ಹೆಚ್ಚಿಸಿಕೊಳ್ಳಬೇಕು ಎಂದರು. ಭಾರತ ಹಲವು ಒತ್ತಡಗಳ ನಡುವೆಯೂ ಅಸ್ತಿತ್ವ ಉಳಿಸಿಕೊಂಡಿದೆ. ವಿಶ್ವಸಂಸ್ಥೆಯ ಖಾಯಂ ರಾಯಭಾರಿ ಟಿ.ಎಸ್. ತಿರುಮೂರ್ತಿ ಮಾತನಾಡಿ, ‘ನಾವು ಇಂದು ಹಲವು ಸಮಸ್ಯೆಗಳ ನಡುವೆಯೂ ನಾಲ್ಕನೇ ದೊಡ್ಡ ಆರ್ಥಿಕತೆಯಾಗಿ ಬೆಳೆದಿದ್ದೇವೆ. ಅಮೇರಿಕಾದ ಹಲವು ಒತ್ತಡಗಳ ನಡುವೆಯೂ ನಮ್ಮ ಅಸ್ತಿತ್ವವನ್ನು ಉಳಿಸಿಕೊಂಡಿದ್ದೇವೆ. ಬಹಳಷ್ಟು ದೇಶಗಳು ಒತ್ತಡ ತಾಳಲಾರದೆ ಮಣಿದಿವೆ. ತಮಗೆ ಸಿಗುತ್ತಿರುವ ಹಲವು ಸವಲತ್ತುಗಳು ತಪ್ಪಬಹುದು ಎಂಬ ಭಯದಿಂದ ತಲೆ ಬಾಗಿವೆ. ಆದರೆ, ಭಾರತ ಮಾತ್ರ ಯಾವುದೇ ಒತ್ತಡಕ್ಕೆ ಬಗ್ಗಿಲ್ಲ. ಅಮೇರಿಕಾ ಬೇರೆ ರಾಷ್ಟ್ರಗಳಿಗೆ ಬೆದರಿಕೆ ಹಾಕಿ ತಮ್ಮ ದೃಷ್ಟಿಕೋನವನ್ನು ಒಪ್ಪಿಕೊಳ್ಳುವಂತೆ ಮಾಡುತ್ತಿದೆ. ಆದರೆ, ಭಾರತ ಮಾತ್ರ ಚಾತುರ್ಯ ದಿಂದ ಅದನ್ನೆಲ್ಲಾ ತಪ್ಪಿಸಿಕೊಂಡು, ಬೆಳವಣಿಗೆಯತ್ತ ಗಮನಹರಿಸುತ್ತಿದೆ’ ಎಂದರು. ವಿಜೇತ್ ಕನಹಳ್ಳಿ ಸಂವಾದ ನಿರ್ವಹಿಸಿದರು.

ವಾರ್ತಾ ಭಾರತಿ 11 Jan 2026 11:30 pm

Chhattisgarh | 'ಪೊಲೀಸ್ ತುರ್ತು ವಾಹನ' ದ ಚಾಲಕ ಸೇರಿ ಐವರಿಂದ ಸಾಮೂಹಿಕ ಅತ್ಯಾಚಾರ

ಇಬ್ಬರ ಬಂಧನ; ಮೂವರು ಆರೋಪಿಗಳು ಪರಾರಿ

ವಾರ್ತಾ ಭಾರತಿ 11 Jan 2026 11:22 pm

ದೇವರಾಜ ಅರಸು ಮತ್ತು ಸಿದ್ದರಾಮಯ್ಯ

ದೇವರಾಜ ಅರಸು ಮತ್ತು ಸಿದ್ದರಾಮಯ್ಯ ಇವರಿಬ್ಬರ ಅಧಿಕಾರ, ಆಡಳಿತ ವೈಖರಿಗಳನ್ನು ಆಗ ಮತ್ತು ಈಗ ಒಟ್ಟಿಗೆ ನೋಡಿದವರು ತುಂಬಾ ಕಡಿಮೆ. ಈ ಐವತ್ತು ವರ್ಷಗಳ ಕಾಲಾವಧಿಯಲ್ಲಿ ಆರ್ಥಿಕ, ರಾಜಕೀಯ, ಸಾಮಾಜಿಕ ರಂಗಗಳಲ್ಲಿ ಹಲವಾರು ಬದಲಾವಣೆಗಳಾಗಿವೆ. ಇವೆರಡನ್ನೂ ನೋಡುತ್ತ ಬಂದವರು ಮಾತ್ರ ಒಂದಿಷ್ಟು ವಸ್ತುನಿಷ್ಠವಾದ ಪರಾಮರ್ಶೆ ಮಾಡಲು ಸಾಧ್ಯ ಎಂಬುದು ನನ್ನ ಅನಿಸಿಕೆ. ಅರಸು ಇದ್ದಾಗ ಜಾಗತೀಕರಣದ, ನವ ಉದಾರೀಕರಣದ ಹೆಸರೇ ಕೇಳಿರಲಿಲ್ಲ. ಈಗಿನಂತಹ ಭಯಾನಕ ಕೋಮುವಾದದ ಅಪಾಯವೂ ಇರಲಿಲ್ಲ. ಮುಖ್ಯಮಂತ್ರಿಯಾಗಿ ದೀರ್ಘಾವಧಿ ಅಧಿಕಾರದಲ್ಲಿರುವ ಸಿದ್ದರಾಮಯ್ಯನವರು ದೇವರಾಜ ಅರಸು ಅವರ ದಾಖಲೆಯನ್ನು ಸರಿಗಟ್ಟಿ ಮುಂದೆ ಸಾಗಿದ ಹಿನ್ನೆಲೆಯಲ್ಲಿ ಇಬ್ಬರ ನಡುವೆ ಹೋಲಿಕೆ ಮಾಡುವ ಹಲವಾರು ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. ಅವರಂತೆ ಇವರಿಲ್ಲ ಎಂಬ ಮಾತುಗಳು ಕೇಳಿ ಬರುತ್ತಿವೆ. ಇವರಿಬ್ಬರ ಕಾಲಘಟ್ಟವೇ ವಿಭಿನ್ನವಾದುದು. ಇಂಥ ಹೋಲಿಕೆ ಇಲ್ಲವೇ ಪರಾಮರ್ಶೆ ಮಾಡುವಾಗ ಆಯಾ ಕಾಲಘಟ್ಟದಲ್ಲಿಟ್ಟು ವಿಮರ್ಶೆ ಮಾಡಬೇಕಾಗುತ್ತದೆ. ಇಬ್ಬರ ಸಾಮಾಜಿಕ ಕಾಳಜಿಯ ಕಣ್ಣೋಟ ಒಂದೇ ಆದರೂ ಎದುರಿಸಿದ ಸವಾಲುಗಳು ಬೇರೆ ಬೇರೆಯಾಗಿವೆ. ಅರಸು ಮತ್ತು ಸಿದ್ದರಾಮಯ್ಯನವರ ನಡುವೆ ಹೋಲಿಕೆ ಮಾಡುವಾಗ ಅನುಸರಿಸುವ ಮಾನದಂಡಗಳು ಯಾವುವು? ಅವರವರ ಆಡಳಿತ, ಕಾರ್ಯಕ್ರಮ, ಜನಪ್ರಿಯತೆಗಳ ಜೊತೆ ಜೊತೆಗೆ ಇವೆಲ್ಲಕ್ಕಿಂತ ಮುಖ್ಯವಾಗಿ ಇಬ್ಬರೂ ಅಧಿಕಾರದಲ್ಲಿ ಇದ್ದ ಮತ್ತು ಇರುವ ಕಾಲಘಟ್ಟ, ಸನ್ನಿವೇಶ ಮತ್ತು ರಾಷ್ಟ್ರೀಯ ಹಾಗೂ ಅಂತರ್‌ರಾಷ್ಟ್ರೀಯ ಪರಿಸ್ಥಿತಿ ಅವರಿಬ್ಬರನ್ನು ಇಟ್ಟು ವಿಮರ್ಶೆ ಮಾಡುವುದು ವೈಜ್ಞಾನಿಕ ಪರಾಮರ್ಶೆ ಎನಿಸುತ್ತದೆ. ಇಂಥ ಪರಾಮರ್ಶೆಯಲ್ಲಿ ಪೂರ್ವಾಗ್ರಹದೋಷ ಇರುವುದಿಲ್ಲ. ಇಬ್ಬರಿಗೂ ಸಹಜ ನ್ಯಾಯವನ್ನು ಒದಗಿಸಿದಂತಾಗುತ್ತದೆ. ದೇವರಾಜ ಅರಸು ಎಪ್ಪತ್ತನೇ ದಶಕದ ಆರಂಭದಲ್ಲಿ ಒಂದು ಮಹತ್ವದ ಹಾಗೂ ನಿರ್ಣಾಯಕ ಸಂದರ್ಭದಲ್ಲಿ ಮುಖ್ಯಮಂತ್ರಿಯಾಗಿ ಅಧಿಕಾರವನ್ನು ವಹಿಸಿಕೊಂಡವರು. ನಾನು ಆವಾಗ ಅವರನ್ನ್ನೂ ಅವರ ಆಡಳಿತವನ್ನು ಕಣ್ಣಾರೆ ಕಂಡವನು.ಆಗ ನನಗೆ ಇಪ್ಪತ್ತೆರಡರ ಪ್ರಾಯ.ಸ್ವಾತಂತ್ರ್ಯ ಹೋರಾಟಗಾರ ಮನೆತನದಿಂದ ಬಂದ ಕಾರಣದಿಂದ ಹಾಗೂ ಇಂಚಗೇರಿ ಮಠದ ಮಹಾದೇವರು ಮುರಗೋಡ ಅವರ ನಿಕಟ ಸಂಪರ್ಕದಿಂದ ಚಿಕ್ಕ ವಯಸ್ಸಿನಲ್ಲೇ ರಾಜಕಾರಣಿಗಳ ಚಟುವಟಿಕೆಗಳು ಹಾಗೂ ವಿದ್ಯಮಾನಗಳ ಒಡನಾಟ ಗಳಿದ್ದವು. ಜೊತೆಗೆ ಎಡಪಂಥೀಯ ಸೈದ್ಧಾಂತಿಕ ಸ್ಪರ್ಶ ನನ್ನ ಬೌದ್ಧಿಕತೆಯ ಗುಣಮಟ್ಟವನ್ನು ಹೆಚ್ಚಿಸಲು ಪೂರಕವಾಯಿತು. ಅದು ನನ್ನ ಯೌವನದ ಕಾಲ ಘಟ್ಟ. ಅಂದಿಗೂ ಇಂದಿಗೂ ಬರೋಬ್ಬರಿ ಐದು ದಶಕಗಳ ಅಂತರ.ಬದುಕಿನ ಇಳಿ ಸಂಜೆಯಲ್ಲಿ ಇರುವ ನಾನು ಅಂದಿನ ದೇವರಾಜ ಅರಸು ಹಾಗೂ ಇಂದಿನ ಸಿದ್ದರಾಮಯ್ಯನವರ ನಡೆ, ನುಡಿ, ಆಡಳಿತ, ಜನಪರ ಕಾರ್ಯಕ್ರಮಗಳನ್ನು ಅಂದಂದಿನ ಕಾಲ ಘಟ್ಟದಲ್ಲಿ ಇಟ್ಟು ಪರಾಮರ್ಶಿಸಲು ಪ್ರಯತ್ನಿಸುತ್ತೇನೆ. ದೇವರಾಜ ಅರಸು ಮತ್ತು ಸಿದ್ದರಾಮಯ್ಯ ಇವರಿಬ್ಬರ ಅಧಿಕಾರ, ಆಡಳಿತ ವೈಖರಿಗಳನ್ನು ಆಗ ಮತ್ತು ಈಗ ಒಟ್ಟಿಗೆ ನೋಡಿದವರು ತುಂಬಾ ಕಡಿಮೆ. ಈ ಐವತ್ತು ವರ್ಷಗಳ ಕಾಲಾವಧಿಯಲ್ಲಿ ಆರ್ಥಿಕ, ರಾಜಕೀಯ, ಸಾಮಾಜಿಕ ರಂಗಗಳಲ್ಲಿ ಹಲವಾರು ಬದಲಾವಣೆಗಳಾಗಿವೆ. ಇವೆರಡನ್ನೂ ನೋಡುತ್ತ ಬಂದವರು ಮಾತ್ರ ಒಂದಿಷ್ಟು ವಸ್ತುನಿಷ್ಠವಾದ ಪರಾಮರ್ಶೆ ಮಾಡಲು ಸಾಧ್ಯ ಎಂಬುದು ನನ್ನ ಅನಿಸಿಕೆ. ಅರಸು ಇದ್ದಾಗ ಜಾಗತೀಕರಣದ , ನವ ಉದಾರೀಕರಣದ ಹೆಸರೇ ಕೇಳಿರಲಿಲ್ಲ. ಈಗಿನಂತಹ ಭಯಾನಕ ಕೋಮುವಾದದ ಅಪಾಯವೂ ಇರಲಿಲ್ಲ. ಆಗ ಭಾರತ ಮಾತ್ರವಲ್ಲ ಜಾಗತಿಕವಾಗಿ ಎಲ್ಲೆಡೆ ಸಮಾಜವಾದ, ಸಾಮಾಜಿಕ ನ್ಯಾಯದ ಗಾಳಿ ಬೀಸುತ್ತಿತ್ತು. ಅಂತಲೇ ಅವರು ಭೂ ಸುಧಾರಣೆ ಕಾಯ್ದೆಯನ್ನು ಜಾರಿ ಮಾಡಲು, ಜೀತ ಮುಕ್ತ, ಋಣ ಮುಕ್ತ ಕಾಯ್ದೆ ತರಲು ಹಾಗೂ ಮಲ ಹೊರುವ ಪದ್ಧತಿ ನಿಷೇಧ,ಹಿಂದುಳಿದ ಸಮುದಾಯಗಳಿಗೆ ಮೀಸಲು ವ್ಯವಸ್ಥೆ ತರಲು ಸಾಧ್ಯವಾಯಿತು. ಆದರೆ ಸಿದ್ದರಾಮಯ್ಯನವರ ಕಾಲಘಟ್ಟವೇ ಬೇರೆ. ಜಾತಿಕವಾಗಿ ಸಮಾಜವಾದ ಅದೃಶ್ಯವಾಗಿದೆ. ನವ ಉದಾರೀಕರಣದ ,ಮಾರುಕಟ್ಟೆ ಆರ್ಥಿಕತೆಯ ಅಬ್ಬರ ಜನ ಕಲ್ಯಾಣ ಕಾರ್ಯಕ್ರಮಗಳು ಹಳ್ಳ ಹಿಡಿಯುತ್ತಿವೆ. ಈ ಜಾಗತೀಕರಣದ ಜೊತೆಗೆ ಭಾರತದಲ್ಲಿ ಫ್ಯಾಶಿಸ್ಟ್ ಕೋಮುವಾದದ ಆರ್ಭಟ ಅತ್ಯಂತ ಆಕ್ರಮಣಕಾರಿ ಆಗಿದೆ.ಇಂಥ ಪ್ರತಿಕೂಲ ಪರಿಸ್ಥಿತಿಯಲ್ಲಿ ಎಪ್ಪತ್ತರ ದಶಕದಲ್ಲಿ ಮೈಸೂರಿನ ಸಮಾಜವಾದಿ ಚಳವಳಿಯೊಂದಿಗೆ ಗುರುತಿಸಿಕೊಂಡ ಸಿದ್ದರಾಮಯ್ಯ ಅವರು ಸಮಾಜಿಕ ನ್ಯಾಯ, ಸೌಹಾರ್ದ, ಸಮಾನತೆಯ ಬಾವುಟ ಹಿಡಿದು ಹೊರಟಿದ್ದಾರೆ. 1969ನೇ ವರ್ಷದಲ್ಲಿ ಕಾಂಗ್ರೆಸ್ ರಾಷ್ಟ್ರ ಮಟ್ಟದಲ್ಲಿ ವಿಭಜನೆ ಆಯಿತು. ನಿಜಲಿಂಗಪ್ಪ, ಅತುಲ್ಯ ಘೋಷ್, ಸಂಜೀವ ರೆಡ್ಡಿ ಮೊದಲಾದ ಹಿರಿಯ ನಾಯಕರು ಒಂದೆಡೆಗೆ ಹಾಗೂ ಇಂದಿರಾ ಗಾಂಧಿ, ಯಂಗ್ ಟರ್ಕ್ ಚಂದ್ರಶೇಖರ್, ಮೋಹನ್ ಧಾರಿಯಾ , ಮೋಹನ ಕುಮಾರ್ ಮಂಗಳಂ , ಕೆ.ಆರ್ . ಗಣೇಶ್ ಇನ್ನೊಂದು ಕಡೆ. ನಿಜಲಿಂಗಪ್ಪನವರು ಅಧ್ಯಕ್ಷರಾಗಿರುವ ಕಾಂಗ್ರೆಸ್‌ಗೆ ಸಿಂಡಿಕೇಟ್,ಇಂದಿರಾ ಗಾಂಧಿಯವರ ನಾಯಕತ್ವದ ಕಾಂಗ್ರೆಸ್‌ಗೆ ಇಂಡಿಕೇಟ್ ಎಂದು ಪತ್ರಿಕೆಗಳು ಹೆಸರಿಟ್ಟು ಅದೇ ವ್ಯಾಪಕವಾಗಿ ಪ್ರಚಾರ ಪಡೆಯಿತು. ಹಿರಿಯರ ನಾಯಕತ್ವದ ವಿರುದ್ಧ ಬಂಡೆದ್ದ ಇಂದಿರಾ ಗಾಂಧಿಯವರು ಬ್ಯಾಂಕುಗಳ ರಾಷ್ಟ್ರೀಕರಣ, ರಾಜಧನ ರದ್ದತಿಯಂಥ ದಿಟ್ಟ , ಪ್ರಗತಿಪರ ಕ್ರಮಗಳನ್ನು ಕೈಗೊಂಡರು. ಕಮ್ಯುನಿಸ್ಟ್ ಪಕ್ಷಗಳು ಅವರ ಬೆಂಬಲಕ್ಕೆ ನಿಂತವು. ಕರ್ನಾಟಕದಲ್ಲಿ ನಿಜಲಿಂಗಪ್ಪನವರ ಪ್ರಾಬಲ್ಯ. ಅವರ ಶಿಷ್ಯ ವೀರೇಂದ್ರ ಪಾಟೀಲರು ಮುಖ್ಯಮಂತ್ರಿ. ಬಹುತೇಕ ಪ್ರಭಾವಿ ಹಳೆಯ ಕಾಂಗ್ರೆಸ್ ನಾಯಕರೆಲ್ಲ ನಿಜಲಿಂಗಪ್ಪನವರ ಕಡೆ. ಆಗ ಇಂದಿರಾ ಗಾಂಧಿ ಅವರ ಪರವಾಗಿ ನಿಂತ ಏಕೈಕ ಕಾಂಗ್ರೆಸ್ ನಾಯಕರೆಂದರೆ ದೇವರಾಜ ಅರಸು.ಮುಂದೆ ಬಸವಲಿಂಗಪ್ಪನವರು, ಕೆ.ಎಚ್.ರಂಗನಾಥರು,ಕೆ.ಎಚ್.ಪಾಟೀಲರು, ಕರ್ನಾಟಕದ ಬಹುತೇಕ ಲೋಕಸಭಾ ಸದಸ್ಯರು ಇಂದಿರಾ ಗಾಂಧಿಯವರ ಪರವಾಗಿ ನಿಂತರು.ಆಗ ನಾನು ಬಿಜಾಪುರ ಜಿಲ್ಲೆಯ ಬಸವನ ಬಾಗೇವಾಡಿಯಲ್ಲಿ ಇದ್ದೆ. ದೇವರಾಜ ಅರಸು ಬಾಗೇವಾಡಿಗೆ ಬಂದಾಗ ನಾವೇ ಕೆಲವು ಗೆಳೆಯರು ಸಭೆಯನ್ನು ಏರ್ಪಡಿಸಿದ್ದೆವು.ಆಗ ನನ್ನ ವಯಸ್ಸು 20. ಮುಂದೆ ಲೋಕಸಭಾ ಚುನಾವಣೆಯಲ್ಲಿ ಇಂದಿರಾ ಕಾಂಗ್ರೆಸ್ ಪಕ್ಷಕ್ಕೆ ಗೆಲುವು. ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲೂ ಇದರ ಪುನರಾವರ್ತನೆ. ಹಳೆಯದನ್ನೆಲ್ಲ ಏಕೆ ಹೇಳಬೇಕಾಯಿತೆಂದರೆ ಅರಸರು ಅಧಿಕಾರಕ್ಕೆ ಬಂದ ಕಾಲಘಟ್ಟವೇ ಬೇರೆ.ದೇವರಾಜ ಅರಸರು ರಾಜಕಾರಣಿ ಮಾತ್ರವಲ್ಲ, ಅವರು ಚಿಂತಕರು .ಸೈದ್ಧಾಂತಿಕವಾಗಿ ಮಾರ್ಕ್ಸ್ ವಾದದತ್ತ ಅವರ ಒಲವು. ಆಗ ಮೆಜೆಸ್ಟಿಕ್‌ನ ಸರ್ಪಭೂಷಣ ಮಠದ ಆವರಣದಲ್ಲಿ ಇದ್ದ, ಆಗಿನ್ನೂ ಪುಟ್ಟದಾಗಿದ್ದ ನವ ಕರ್ನಾಟಕ ಪ್ರಕಾಶನದ ಪುಸ್ತಕ ಮಳಿಗೆಯಿಂದ ಎಡಪಂಥೀಯ ಸಾಹಿತ್ಯ, ಪುಸ್ತಕಗಳನ್ನು ತರಿಸಿ ಓದುತ್ತಿದ್ದರು.ಈ ಮಳಿಗೆ ನಮ್ಮ ರಮೇಶ್ ಕುಮಾರ, ಸಿದ್ದಲಿಂಗಯ್ಯ ಮೊದಲಾದ ಸಮಾನ ಮನಸ್ಕರು ಸೇರುವ ತಾಣ ಕೂಡ ಆಗಿತ್ತು. ಇದು ಅರಸರ ಹಿನ್ನೆಲೆಯಾದರೆ ಸಿದ್ದರಾಮಯ್ಯನವರು ಎಪ್ಪತ್ತರ ದಶಕದ ಆರಂಭದಲ್ಲಿ ಬಂದವರು. ಲೋಹಿಯಾವಾದಿ ಪ್ರೊ.ಎಂ.ಡಿ.ನಂಜುಂಡಸ್ವಾಮಿ ಅವರು ಇವರ ಸೈದ್ಧಾಂತಿಕ ಗುರುಗಳು. ಮೈಸೂರಿನ ಕಾನೂನು ಕಾಲೇಜಿನಲ್ಲಿ ಸಿದ್ದರಾಮಯ್ಯನವರು ವ್ಯಾಸಂಗ ಮಾಡುವಾಗ ಪ್ರೊ. ನಂಜುಂಡಸ್ವಾಮಿ ಅವರು ಅಲ್ಲಿ ಪ್ರಾಧ್ಯಾಪಕ ರು.ಹೀಗಾಗಿ ಅರಸು ಮತ್ತು ಸಿದ್ದರಾಮಯ್ಯನವರದು ಪ್ರಗತಿಪರ ಎಡಪಂಥೀಯ ಹಿನ್ನೆಲೆಯಾದರೂ ರಾಜಕೀಯವಾಗಿ ಕಾಂಗ್ರೆಸ್ ಪಕ್ಷವನ್ನು ಸೇರಿದವರು. ಈಗ ದೇವರಾಜ ಅರಸು ಅವರನ್ನು ಹೊಗಳುವ ಅನೇಕ ಮಿತ್ರರಿಗೆ ಗೊತ್ತಿಲ್ಲ. ಆಗ ಅರಸು ಅವರನ್ನು ಅವರ ಕಾರ್ಯಕ್ರಮಗಳನ್ನು ಹಾಗೂ ಹಿಂದುಳಿದ ಸಮುದಾಯಗಳಿಗೆ ಮೀಸಲು ವ್ಯವಸ್ಥೆ ಕಲ್ಪಿಸುವ ಹಾವನೂರ ವರದಿಯನ್ನು ಕಟುವಾಗಿ ಟೀಕಿಸಿದವರು.ಆಗ ಪ್ರತಿಪಕ್ಷ ನಾಯಕರಾಗಿದ್ದ ದೇವೇಗೌಡರು, ಎಸ್.ಆರ್. ಬೊಮ್ಮಾಯಿ ಅವರು ಅರಸು ಮೇಲೆ ಭ್ರಷ್ಟಾಚಾರ ಆರೋಪ ಹೊರಿಸಿ ನಿರಂತರ ದಾಳಿ ನಡೆಸಿದರು.ಗ್ರೊವರ್ ಆಯೋಗ ರಚಿಸಲು ಕಾರಣರಾದರು.ಈಗ ಸಿದ್ದರಾಮಯ್ಯನವರದೂ ಅದೇ ಸ್ಥಿತಿಯಾಗಿದೆ. ಆಗ ಸಮಾಜವಾದಿ ಸೋವಿಯತ್ ರಶ್ಯ ಇತ್ತು.ಪೂರ್ವ ಯುರೋಪಿನ ಕಮ್ಯುನಿಸ್ಟ್ ದೇಶಗಳಿದ್ದವು.ಇಂದಿನ ಬಿಜೆಪಿ (ಅಂದಿನ ಜನಸಂಘ) ಆಗ ಪ್ರಬಲವಾಗಿರಲಿಲ್ಲ.ರಾಜ್ಯ ವಿಧಾನಸಭೆಯಲ್ಲಿ ಅದಕ್ಕೆ ಒಬ್ಬಿಬ್ಬರು ಶಾಸಕರಿದ್ದರು.ಹೀಗಾಗಿ ಅರಸು ರೂಪಿಸಿದ ಭೂ ಸುಧಾರಣೆಯಂಥ ಶಾಸನಗಳಿಗೆ ವಿರೋಧಿಗಳಿರಲಿಲ್ಲ.ಆದರೆ ಈಗ ಸಂಪೂರ್ಣ ಭಿನ್ನವಾದ ಚಿತ್ರ.ಎಲ್ಲೆಡೆ ಕೋಮು ಉನ್ಮಾದ ಕೆರಳಿ ನಿಂತಿದೆ. ಬಹುತೇಕ ಯುವಕರ ತಲೆಗೆ ಮುಸ್ಲಿಮ್ ದ್ವೇಷದ, ಕೋಮು ಹಿಂದುತ್ವದ ಮತ್ತೇರಿಸಲಾಗಿದೆ. ಇಂಥ ಸನ್ನಿವೇಶದಲ್ಲಿ ಸಿದ್ದರಾಮಯ್ಯನವರು ಸಮಾನತೆ, ಸೌಹಾರ್ದದ ಮಾತುಗಳನ್ನು ಆಡುತ್ತಿದ್ದಾರೆ. ಸಂಘ ಪರಿವಾರವನ್ನು ನೇರವಾಗಿ ಹೆಸರು ಹೇಳಿಯೇ ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ.ಸದನದಲ್ಲಿ ಕೋಮುವಾದದ ವಿರುದ್ಧ ಮಾತಾಡುವಾಗ ಅವರ ಪಕ್ಷದವರೇ ಅನೇಕ ಬಾರಿ ಅವರ ಬೆಂಬಲಕ್ಕೆ ನಿಲ್ಲುವುದಿಲ್ಲ. ಈ ಹಿಂದೆ ಮಾತ್ರವಲ್ಲ ಈಗಲೂ ಕಾಂಗ್ರೆಸ್ ನ ಬಹುತೇಕ ನಾಯಕರು ಆರೆಸ್ಸೆಸ್ ಬಗ್ಗೆ ಮೌನ ತಾಳುತ್ತಾರೆ. ಜಿಲ್ಲೆ,ತಾಲೂಕು ಮಟ್ಟದಲ್ಲಿ ಕಾಂಗ್ರೆಸ್ ನಾಯಕರೇ ವಿಶ್ವ ಹಿಂದೂ ಪರಿಷತ್ತಿನ ಪದಾಧಿಕಾರಿಗಳಾಗಿರುತ್ತಿದ್ದರು. ಅದನ್ನು ಸಮರ್ಥಿಸಿಕೊಳ್ಳುತ್ತಿದ್ದರು. ಎಲ್ಲಿ ಓಟು ಬೀಳುವುದಿಲ್ಲವೋ ಎಂದು ಹೆದರಿ ಮಾತಾಡಲು ಹೆದರುತ್ತಿದ್ದರು.ಆದರೆ ಸಿದ್ದರಾಮಯ್ಯನವರು ಮಾತಾಡಲು ಆರಂಭಿಸಿದ ನಂತರ ಈಗ ನಿಧಾನವಾಗಿ ಪ್ರಿಯಾಂಕ್ ಖರ್ಗೆ, ಸಂತೋಷ್ ಲಾಡ್, ಹರಿಪ್ರಸಾದ್ ಮೊದಲಾದವರು ಮಾತಾಡುತ್ತಿದ್ದಾರೆ. ಇದು ಸಿದ್ದರಾಮಯ್ಯನವರ ಬಗ್ಗೆ ನನ್ನ ಅಭಿಪ್ರಾಯ. ಇದಕ್ಕೆ ಭಿನ್ನವಾದ ಅಭಿಪ್ರಾಯಗಳೂ ಇರಬಹುದು. ಅಭ್ಯಂತರವಿಲ್ಲ. ಎಲ್ಲರ ನಿಲುವು ಒಂದೇ ಇರಬೇಕೆಂದಿಲ್ಲ. ತಾತ್ವಿಕವಾಗಿ ಸಮಾನ ಮನಸ್ಕರಾಗಿದ್ದರೂ ಕೆಲವು ವಿಷಯಗಳಲ್ಲಿ ಭಿನ್ನಾಭಿಪ್ರಾಯಗಳಿರುತ್ತವೆ.ಸಿದ್ದರಾಮಯ್ಯನವರು ಎಷ್ಟೇ ತತ್ವನಿಷ್ಠ ವ್ಯಕ್ತಿಯಾಗಿದ್ದರೂ ಈ ವ್ಯವಸ್ಥೆಯ ಇತಿಮಿತಿಯಲ್ಲಿ ಕೆಲಸ ಮಾಡುವ ಅನಿವಾರ್ಯತೆ ಇರುತ್ತದೆ. ಅದರಲ್ಲೂ ಕೋಮುವಾದಿ ಫ್ಯಾಶಿಸ್ಟ್ ಪಕ್ಷವೊಂದು ಕೇಂದ್ರದ ಅಧಿಕಾರ ಸೂತ್ರವನ್ನು ಕಳೆದ ಹನ್ನೊಂದು ವರ್ಷಗಳಿಂದ ಹಿಡಿದು ಕೂತಾಗ , ಪ್ರತಿನಿತ್ಯ ಕಿರುಕುಳ ಕೊಡುತ್ತಿರುವಾಗ ,ಕರ್ನಾಟಕದಿಂದ ವಸೂಲಿ ಮಾಡಿಕೊಂಡು ಹೋದ ಜಿಎಸ್‌ಟಿಯಲ್ಲಿ ರಾಜ್ಯದ ಪಾಲನ್ನು ಕೊಡದೇಸತಾಯಿಸುತ್ತಿರುವಾಗ ಅದಕ್ಕೆ ಮಣಿಯದೇ ಸವಾಲು ಹಾಕಿ ನಿಂತ ಸಿದ್ದರಾಮಯ್ಯನವರು ಸಹಜವಾಗಿ ಗೌರವಕ್ಕೆ ಪಾತ್ರರಾಗುತ್ತಾರೆ.ಹಿಂದುಳಿದ ಸಮುದಾಯಗಳ ಸಣ್ಣಪುಟ್ಟ ಜನ ವಿಭಾಗಗಳು ಹಾಗೂ ಅಲೆಮಾರಿ ಸಮುದಾಯಗಳ ಕುರಿತು ಸಾಕಷ್ಟು ಗಮನ ಹರಿಸಿಲ್ಲ ಎಂಬ ಅನೇಕ ಗೆಳೆಯರ ಅಭಿಪ್ರಾಯವನ್ನು ಗೌರವಿಸುತ್ತಲೇ ಈ ಎಲ್ಲ ಇತಿಮಿತಿಗಳ ನಡುವೆ ಸದ್ಯದ ಸನ್ನಿವೇಶದಲ್ಲಿ ಜನರನ್ನು ವಿಭಜಿಸುವ ಕೋಮುವಾದಿ ಶಕ್ತಿಗಳನ್ನು ಹಿಮ್ಮೆಟ್ಟಿಸಬೇಕು.ಇದನ್ನು ಗುರುತಿಸಿದ ಸಿದ್ದರಾಮಯ್ಯನವರು ಆ ಕರಾಳ ಶಕ್ತಿಗಳ ವಿರುದ್ಧ ಸಮರವನ್ನೇ ಸಾರಿದ್ದಾರೆ. ಜನರನ್ನು ಜಾತಿ, ಮತದ ಹೆಸರಿನಲ್ಲಿ ವಿಭಜಿಸಿ ಪರಸ್ಪರ ಹೊಡೆದಾಟಕ್ಕೆ ಹಚ್ಚುವ ಕರಾಳ ಶಕ್ತಿಗಳು ದರ್ಪದಿಂದ ಮೆರೆಯುತ್ತಿರುವಾಗ ದಮನಿತ ಜನರನ್ನು ಮಾತ್ರವಲ್ಲ ಎಲ್ಲ ಜನ ವಿಭಾಗಗಳನ್ನು ಒಂದುಗೂಡಿಸದೇ ಯಾವುದೇ ಹೋರಾಟವನ್ನು ರೂಪಿಸಲು, ಪರ್ಯಾಯವನ್ನು ಕಟ್ಟಲು ಸಾಧ್ಯವಾಗುವುದಿಲ್ಲ.ಅಂತಲೇ ಅಂಥ ವಿಭಜಕ ಶಕ್ತಿಗಳ ಸೋಲು ನನ್ನಂಥವರ ಮೊದಲ ಆದ್ಯತೆಯಾಗಿದೆ. ಈ ನಿಟ್ಟಿನಲ್ಲಿ ರಾಜಿ ರಹಿತ ನಿಲುವು ತಾಳಿದ ಸಿದ್ದರಾಮಯ್ಯನವರು ನನ್ನ ಸಹಜ ಆಯ್ಕೆಯಾಗಿದೆ. ಇಂದು ಎಂಥ ಅಪಾಯಕಾರಿ ಕಾಲ ಘಟ್ಟದಲ್ಲಿ ಇದ್ದೇವೆಂದರೆ ಆರ್ಥಿಕ ಹಾಗೂ ಸಾಮಾಜಿಕ ನ್ಯಾಯದ , ಸಮಾನತೆಯ ಯಾವ ಪ್ರಶ್ನೆಗಳ ಬಗೆಗೂ ಚರ್ಚೆಯಾಗದಂಥ ಪರಿಸ್ಥಿತಿ ನಿರ್ಮಾಣಗೊಂಡಿದೆ.ಅರಸು ಮತ್ತು ಎಡಪಂಥೀಯ ಪಕ್ಷಗಳ ಪರಿಶ್ರಮದಿಂದ ಜಾರಿಗೆ ಬಂದ ಭೂ ಸುಧಾರಣೆ ಕಾಯ್ದೆಯ ಹೆಚ್ಚಿನ ಫಲಾನುಭವಿಗಳು ಇರುವ ಕರಾವಳಿಯ ಮಂಗಳೂರು, ಉಡುಪಿ, ಕಾರವಾರ ಜಿಲ್ಲೆಗಳಲ್ಲಿ ಭೂ ಸುಧಾರಣೆ ಕಾಯ್ದೆಯ ಫಲಾನುಭವಿಗಳ ಇಂದಿನ ತಲೆಮಾರಿನ ಮಕ್ಕಳೇ ಕೋಮು ದ್ವೇಷದ ವಿಷವನ್ನು ಮೆದುಳಿನಲ್ಲಿ ತುಂಬಿ ಕೊಂಡು ಓಡಾಡುತ್ತಿದ್ದಾರೆ.ಜನರಿಗಾಗಿ ಮೇಣದ ಬತ್ತಿಯಂತೆ ಉರಿದು ಹೋದ ಸಮಾಜವಾದಿ ನಾಯಕ ಶಾಂತವೇರಿ ಗೋಪಾಲಗೌಡರ ಶಿವಮೊಗ್ಗ ಜಿಲ್ಲೆ ಇಂದು ಏನಾಗಿದೆ? ತಮ್ಮ ಜಿಲ್ಲೆಯನ್ನು ಲೋಕಸಭೆಯಲ್ಲಿ ಪ್ರತಿನಿಧಿಸಿದ್ದ ಇನ್ನೊಬ್ಬ ಸಮಾಜವಾದಿ ನಾಯಕ ಕವಿ ದಿನಕರ ದೇಸಾಯಿಯವರ ಉತ್ತರ ಕನ್ನಡ ಜಿಲ್ಲೆಯ ಇಂದಿನ ಸ್ಥಿತಿ ಏನು? ಹೋಗಲಿ ಜ್ಯೋತಿ ಬಸು ಅವರಂಥ ಮೇಧಾವಿ ಮುಖ್ಯಮಂತ್ರಿ ಮೂರು ದಶಕಕ್ಕೂ ಹೆಚ್ಚು ಕಾಲ ಮುಖ್ಯಮಂತ್ರಿ ಯಾಗಿದ್ದ ಪಶ್ಚಿಮ ಬಂಗಾಳ ಇಂದು ಎಲ್ಲಿಗೆ ತಲುಪಿದೆ? ಸ್ವಂತಕ್ಕೆ ಒಂದು ವಾಹನವೂ ಇಲ್ಲದ ಅತ್ಯಂತ ಸರಳವಾಗಿ ಬದುಕಿದ ಮಾಣಿಕ್ ಸರಕಾರ ಅವರು ಮುಖ್ಯಮಂತ್ರಿ ಯಾಗಿದ್ದ ತ್ರಿಪುರಾದಲ್ಲಿ ಸಿಪಿಎಂ ಕಚೇರಿಗಳಿಗೇ ಬೆಂಕಿ ಹಚ್ಚುವಷ್ಟು ಕೋಮುವಾದಿಗಳು ಹೇಗೆ ಬೆಳೆದರು? ದೂರವೇಕೆ ನಮ್ಮ ಪಕ್ಕದ ನಾರಾಯಣ ಗುರುಗಳ ನಾಡು ಎಂದು ಹೆಸರಾದ ನಮ್ಮ ಹೆಮ್ಮೆಯ ಕೇರಳದಿಂದ ಬರುತ್ತಿರುವ ಸುದ್ದಿಗಳು ಆತಂಕವನ್ನು ಉಂಟು ಮಾಡುತ್ತಿವೆ.ಕಮ್ಯುನಿಸ್ಟರು ಜತನದಿಂದ ಕಾಪಾಡಿಕೊಂಡು ಬಂದಿದ್ದ ಈ ರಾಜ್ಯದಲ್ಲೂ ಕೋಮುವಾದಿ ಶಕ್ತಿಗಳು ಚಿಗುರುತ್ತಿವೆ.ಇದಕ್ಕೆ ಇತ್ತೀಚಿನ ತಿರುವನಂತಪುರ ಮಹಾ ನಗರ ಪಾಲಿಕೆಯ ಇತ್ತೀಚಿನ ಚುನಾವಣೆಯ ಫಲಿತಾಂಶ ಉದಾಹರಣೆಯಾಗಿದೆ.ಈ ಹಿನ್ನೆಲೆಯಲ್ಲಿ ಬಸವಣ್ಣನವರು, ಕನಕದಾಸರು, ಶಿಶುನಾಳ ಶರೀಫ ಸಾಹೇಬರು ಹಾಗೂ ಕುವೆಂಪು ಅವರ ಪರಂಪರೆಯ ಕರ್ನಾಟಕದ ಜನತೆ ಸಿದ್ದರಾಮಯ್ಯನವರ ಕೈಗೆ ನಾಯಕತ್ವವನ್ನು ಕೊಟ್ಟಿದ್ದಾರಲ್ಲ , ಅದು ನಾವು ಹೆಮ್ಮೆ ಪಡಬೇಕಾದ ಸಂಗತಿ.ಮುಂದೇನೋ ಗೊತ್ತಿಲ್ಲ. ಸದ್ಯಕ್ಕಂತೂ ತೊಂದರೆಯಿಲ್ಲ.

ವಾರ್ತಾ ಭಾರತಿ 11 Jan 2026 11:19 pm

ಸಿದ್ದು ಮಾಡಲೇಬೇಕಾದ 12 ಕೆಲಸಗಳೇನು?

ದಿವಂಗತ ಡಿ. ದೇವರಾಜ ಅರಸು ‘ಕಾಲ’ದ ದಾಖಲೆಯನ್ನು ಸಿದ್ದರಾಮಯ್ಯ ಮುರಿದಾಯಿತು. ಇದೇ ಹಿನ್ನೆಲೆಯಲ್ಲಿ ಮಾಧ್ಯಮಗಳು ಅರಸು ಮತ್ತು ಸಿದ್ದರಾಮಯ್ಯ ಅವರನ್ನು ಎದುರುಬದುರು ನಿಲ್ಲಿಸಿದ್ದಾಯಿತು. ಮೇಲೆ ಕೆಳಗೆ ಮಾಡಿದ್ದಾಯಿತು. ಇಬ್ಬರ ಗುಣಗಾನ ನಡೆಯಿತು. ಸಾಧನೆಗಳನ್ನು ಒರೆಗೆ ಹಚ್ಚಲಾಯಿತು. ಆ ಕಾಲ ಈ ಕಾಲಘಟ್ಟಗಳ ರಾಜಕೀಯ ಮತ್ತು ಸಾಮಾಜಿಕ ಪರಿಸ್ಥಿತಿಯ ಅವಲೋಕನವೂ ಆಯಿತು. ಈಗ ಸಿದ್ದರಾಮಯ್ಯ ಮುಂದೇನು ಮಾಡಬೇಕು? ಮಾಡುವರು ಎನ್ನುವುದು ಮಾತ್ರವೇ ಉಳಿದಿರುವ ಪ್ರಶ್ನೆ. ಈ ಏಳೂವರೆ ವರ್ಷದಲ್ಲಿ ಹಲವು ಮಿತಿಗಳ ನಡುವೆ ಸಿದ್ದರಾಮಯ್ಯ ಕೆಲವು ಮಹತ್ಸಾಧನೆಗಳನ್ನು ಮಾಡಿದ್ದಾರೆ. ಆದರೆ ಮಾಡುವುದು ಇನ್ನೂ ಸಾಕಷ್ಟಿದೆ. ಅದರಲ್ಲೂ ಮುಖ್ಯವಾಗಿ ಈ ಒಂದು ಡಝನ್ ಕೆಲಸಗಳನ್ನಂತೂ ಅವರು ಮಾಡಲೇಬೇಕಾಗಿದೆ. 1. ಮೊತ್ತ ಮೊದಲನೆಯದಾಗಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ (ಜಾತಿ ಜನಗಣತಿ) ಜಾರಿ ಮಾಡಬೇಕು. ಸಿದ್ದರಾಮಯ್ಯ ಮಾಡೇ ಮಾಡುತ್ತಾರೆ ಎನ್ನುವ ಬಗ್ಗೆ ಅಪಾರವಾದ ನಿರೀಕ್ಷೆ ಇತ್ತು. ಅದರಲ್ಲೂ ಅಂಚಿನ ಜನರ ನಿರೀಕ್ಷೆ ಹೆಚ್ಚಾಗಿತ್ತು. ಇಷ್ಟೊತ್ತಿಗಾಗಲೇ ಮಾಡಿಬಿಡಬೇಕಾಗಿತ್ತು. ಈಗಲಾದರೂ ಮಾಡಬೇಕು. ಯಾರು ಒಪ್ಪಲಿ, ಬಿಡಲಿ, ಸಿದ್ದರಾಮಯ್ಯ ಅವರನ್ನು ಹೊರತುಪಡಿಸಿ ಬೇರೆ ಯಾರಿಂದಲೂ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ವರದಿ ಜಾರಿ ಮಾಡಲು ಸಾಧ್ಯವಿಲ್ಲ. ಈಗಿರುವ ಯಾವ ನಾಯಕರು ಅಂಥ ಭರವಸೆಯನ್ನು ಹುಟ್ಟಿಸಿಲ್ಲ. ಇದು ಸಿದ್ದರಾಮಯ್ಯ ಅವರೇ ಮಾಡಬೇಕಾದ ಕೆಲಸ. 2. ಹಿಂದೆ ವೀರಪ್ಪ ಮೊಯ್ಲಿ ಕಾಲದಲ್ಲೇ ಮೀಸಲಾತಿ ಮಿತಿಯನ್ನು ಶೇ.73ಕ್ಕೆ ಏರಿಸಿ ಕಾಯ್ದೆ ಮಾಡಲಾಗಿತ್ತು. ಈ ಕಾಯ್ದೆಯನ್ನು ಪ್ರಶ್ನೆ ಮಾಡಿದ್ದಾಗ ಸುಪ್ರೀಂ ಕೋರ್ಟ್ ಅಂದಿನ ಸರಕಾರಕ್ಕೆ ‘ಇದು ಶೇ.50ರಷ್ಟರ ಮೀಸಲಾತಿಯನ್ನು ಮೀರಿದೆ, ಇಂದ್ರಾ ಸಹಾನಿ ಪ್ರಕರಣದ ತೀರ್ಪಿಗೆ ವಿರುದ್ಧವಾಗಿದೆ. ನೀವಾಗಿಯೇ ಇದನ್ನು ಶೇ.50ರಷ್ಟಕ್ಕೆ ಇಳಿಸುತ್ತಿರೋ ಅಥವಾ ನಾವೇ ಕಾಯ್ದೆಯನ್ನು ರದ್ದು ಮಾಡಬೇಕೋ?’ ಎಂದು ಕೇಳಿತ್ತು. ವೀರಾವೇಶದಲ್ಲಿ ಮೀಸಲಾತಿ ಮಿತಿ ಹೆಚ್ಚಳ ಮಾಡಿದ್ದ ವೀರಪ್ಪ ಮೊಯ್ಲಿ ಸರಕಾರದ ಬಳಿ ಯಾವ ಕಾರಣಕ್ಕೆ ಹೆಚ್ಚಳ ಮಾಡಿದ್ದೇವೆ ಎಂದು ಹೇಳಲು ಸಮರ್ಥನೀಯವಾದ ದಾಖಲೆ ಅಥವಾ ದತ್ತಾಂಶಗಳಿರಲಿಲ್ಲ. ಈಗ ಹೊಸದಾಗಿ ನಡೆಸುತ್ತಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷಾ ವರದಿಯ ದತ್ತಾಂಶಗಳನ್ನು ಆಧಾರವಾಗಿ ಇಟ್ಟುಕೊಂಡು ಮೀಸಲಾತಿ ಮಿತಿಯನ್ನು ಹೆಚ್ಚಿಸಬೇಕು. ಆಗ ಮಾತ್ರ ಎಲ್ಲಾ ಸಮುದಾಯಗಳಿಗೂ ನ್ಯಾಯ ಒದಗಿಸಲು ಸಾಧ್ಯ. 3. ವರ್ಷದಿಂದ ವರ್ಷಕ್ಕೆ ಸರಕಾರಿ ಕೆಲಸಗಳಿಗೆ ನೇಮಕಾತಿ ಆಗುವ ಪ್ರಮಾಣವೇ ಕಡಿಮೆಯಾಗುತ್ತಿದೆ. ಪೂರ್ಣ ಪ್ರಮಾಣದಲ್ಲಿ ನೇಮಕಾತಿ ನಡೆದರೂ ಅದು ರಾಜ್ಯದ ಒಟ್ಟಾರೆ ಜನಸಂಖ್ಯೆಯ ಶೇ.2ರಷ್ಟನ್ನು ಮೀರುವುದಿಲ್ಲ. ಆದುದರಿಂದ ಖಾಸಗಿ ಕ್ಷೇತ್ರದಲ್ಲಿ ಮೀಸಲಾತಿ ಜಾರಿ ಮಾಡುವುದು ಅತ್ಯಗತ್ಯವಾಗಿದೆ. ಈ ವಿಷಯವನ್ನು ಕಾಂಗ್ರೆಸ್ ಪಕ್ಷ ಪ್ರಣಾಳಿಕೆಯಲ್ಲೂ ಹೇಳಿದೆ. ತಾನು ಬಸವಣ್ಣರ ಅನುಯಾಯಿ, ನಮ್ಮ ಸರಕಾರ ನುಡಿದಂತೆ ನಡೆಯುವ ಸರಕಾರ ಎಂದು ಹೇಳಿಕೊಳ್ಳುವ ಸಿದ್ದರಾಮಯ್ಯ ಅದನ್ನೀಗ ನಿರೂಪಿಸಬೇಕಾಗಿದೆ. 4. ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಅಭ್ಯುದಯಕ್ಕಾಗಿ ತಂದಿರುವ ಅತ್ಯಂತ ದೂರದೃಷ್ಟಿಯ SಅSP ಖಿSP ಕಾಯ್ದೆ ಮಾದರಿಯಲ್ಲಿ ಹಿಂದುಳಿದ ಜಾತಿಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣಕ್ಕೂ ಪ್ರತ್ಯೇಕ ಕಾನೂನುಗಳನ್ನು ತರಬೇಕು. ಆ ಮೂಲಕ ಸಾಮಾಜಿಕ ನ್ಯಾಯ ಹಲವು ಬಗೆಯಲ್ಲಿ ಇನ್ನಷ್ಟು ಆಳಕ್ಕೆ ಬೇರೂರಲು ನೀರೆರೆಯಬೇಕು. 5. ಡಾ. ಬಿ.ಆರ್.ಅಂಬೇಡ್ಕರ್, ಬಾಬು ಜಗಜೀವನ ರಾಮ್, ಡಿ.ದೇವರಾಜ ಅರಸು ಸಂಶೋಧನಾ ಕೇಂದ್ರಗಳ ಮಾದರಿಯಲ್ಲಿ ಅಹಿಂದ ಸಮುದಾಯಗಳ ಸರ್ವಾಂಗೀಣ ಅಭ್ಯುದಯ ಕುರಿತು ಅಧ್ಯಯನ ಮಾಡುವುದಕ್ಕಾಗಿ ಅಹಿಂದ ಸಂಶೋಧನಾ ಕೇಂದ್ರ ಸ್ಥಾಪಿಸಬೇಕು. ಆ ಮೂಲಕ ಅಹಿಂದ ವರ್ಗಗಳಲ್ಲಿರುವ ಅರಿವಿನ ಕೊರತೆಯನ್ನು ನೀಗಿಸಲು ಕ್ರಮ ಕೈಗೊಳ್ಳಬೇಕು. 6. ಇತ್ತೀಚೆಗೆ ಪರಿಶಿಷ್ಟ ಜಾತಿಗೆ ತಂದಿರುವ ಒಳಮೀಸಲಾತಿ ವರ್ಗೀಕರಣದ ಬಗ್ಗೆ ವ್ಯಾಪಕ ವಿರೋಧವಿದೆ. ನ್ಯಾ. ನಾಗಮೋಹನ್ ದಾಸ್ ಆಯೋಗದ ಶಿಫಾರಸಿಗೆ ವಿರುದ್ಧವಾಗಿ ಒಳಮೀಸಲಾತಿ ವರ್ಗೀಕರಣ ಮಾಡಲಾಗಿದೆ. ಇದರಿಂದ ಅಲೆಮಾರಿಗಳಿಗೆ ಒಂದೇ ಏಟಿಗೆ ಶತಶತಮಾನಕ್ಕಾಗುವಷ್ಟು ಅನ್ಯಾಯವಾಗಿದೆ. ಇದನ್ನು ಸರಿಪಡಿಸಬೇಕು. 7. ನಾಮ ನಿರ್ದೇಶನದಲ್ಲಿ ಸಣ್ಣಪುಟ್ಟ ಜಾತಿಗಳಿಗೆ ಪ್ರಾತಿನಿಧ್ಯ ಕೊಡಬೇಕು. ವಿಶೇಷವಾಗಿ ವಿಧಾನ ಪರಿಷತ್‌ಗೆ. ಒಕ್ಕಲಿಗ, ಲಿಂಗಾಯತ, ಬ್ರಾಹ್ಮಣರಿಗೆ ಸಾಂಕೇತಿಕ ಪ್ರಾತಿನಿಧ್ಯ ಕೊಟ್ಟು ಅಂಚಿನ ಜನರಿಗೆ, ಅಬಲರಿಗೆ ಅಗ್ರಪಾಲು ಲಭ್ಯವಾಗುವಂತೆ ನೋಡಿಕೊಳ್ಳಬೇಕು. ಒಕ್ಕಲಿಗ ಮತ್ತು ಲಿಂಗಾಯತರಿಗೆ ಜಾತಿ ಮತ್ತು ದುಡ್ಡು ಇರುವುದರಿಂದ ಅವರು ಸುಲಭದಲ್ಲಿ ವಿಧಾನಸಭೆ ಪ್ರವೇಶ ಮಾಡಬಲ್ಲರು. ಬ್ರಾಹ್ಮಣರ ಬಳಿ Social Capital ಇರುವುದರಿಂದ ಅವರು ಯಾವಾಗಲೂ ತಮ್ಮ ಜನಸಂಖ್ಯೆಯ ಪ್ರಮಾಣಕ್ಕಿಂತ ಜಾಸ್ತಿಯೇ ಪ್ರಾತಿನಿಧ್ಯ ಪಡೆದುಕೊಳ್ಳುತ್ತಿದ್ದಾರೆ. ಈ ಚಾರಿತ್ರಿಕ ಪ್ರಮಾದವನ್ನು ಸರಿಪಡಿಸಬೇಕು. 8. ಬಹುಶಃ ಸಿದ್ದರಾಮಯ್ಯ ಪಂಚೆ ತೊಟ್ಟ ಕಡೆಯ ಮುಖ್ಯಮಂತ್ರಿ ಯಾಗಲಿದ್ದಾರೆ. ಇಂದಿಗೂ ತಮ್ಮ ಊಟ-ನೋಟ, ಭಾಷೆ-ಭಾವನೆಗಳಲ್ಲಿ ಗ್ರಾಮ್ಯ ಸೊಗಡನ್ನು ಉಳಿಸಿಕೊಂಡಿರುವ ಅವರು ತಮ್ಮ ಬಜೆಟ್ ಮತ್ತಿತರ ಕಾರ್ಯಕ್ರಮಗಳಲ್ಲಿ ಹಳ್ಳಿಗಳ ಕಡೆ ಹೆಚ್ಚು ಗಮನಹರಿಸುತ್ತಾರೆ. ಅದು ತಪ್ಪಲ್ಲ, ಹಾಗೆಯೇ ತಿಜೋರಿಗೆ ದೊಡ್ಡ ಪ್ರಮಾಣದ ತೆರಿಗೆ ತರುವ ಬೆಂಗಳೂರನ್ನು ಬರಿಗೈಯಲ್ಲಿ ಮಾತನಾಡಿಸುವುದು ಸರಿಯೂ ಅಲ್ಲ. ಅದರಲ್ಲೂ ಅಂತರ್‌ರಾಷ್ಟ್ರೀಯ ಖ್ಯಾತಿಯ, ಬೃಹತ್ ಬಂಡವಾಳ ಹೂಡಿಕೆಯ ನಿರೀಕ್ಷೆಯಲ್ಲಿರುವ ಬೆಂಗಳೂರಿಗೆ ಒಂದೆರಡು ಚಮಚ ತುಪ್ಪ ಸುರಿದರೆ ಸೂರು ಹೋಗುವಂಥದ್ದು ಏನೂ ಇಲ್ಲ. 9. ಇತ್ತೀಚಿನ ವರ್ಷಗಳಲ್ಲಿ ಕೇಂದ್ರ ಸರಕಾರ ರಾಜ್ಯಗಳಿಗೆ ಮಾಡುತ್ತಿರುವ ದ್ರೋಹ ದೊಡ್ಡದು. ತೆರಿಗೆ ವಂಚನೆ, ಮನರೇಗಾ ರದ್ದು (ಬಹುತೇಕ ಅದು ರದ್ದಾದಂತೆ), ವಿವಿಧ ಬಗೆಯ ಸೆಸ್‌ಗಳ ಹೆಚ್ಚಳ, ಕೇಂದ್ರ ಪ್ರಾಯೋಜಿತ ಯೋಜನೆಗಳಿಗೆ ಅನುದಾನ ಕಡಿತ, ರಾಷ್ಟ್ರೀಯ ಶಿಕ್ಷಣ ನೀತಿ, ಹಿಂದಿ ಹೇರಿಕೆ... ಹೀಗೆ ದೊಡ್ಡ ಪಟ್ಟಿಯೇ ಇದೆ. ಸಿದ್ದರಾಮಯ್ಯ ಈ ತಾರತಮ್ಯ ಮತ್ತು ವಂಚನೆಗಳ ಬಗ್ಗೆ ಹೋರಾಟ ಮಾಡಬೇಕು. ಸದ್ಯ ಇಡೀ ದೇಶದಲ್ಲಿ ಕೇಂದ್ರ ಸರಕಾರದ ವಿರುದ್ಧ ಮತ್ತು ಪ್ರಧಾನಿ ಮೋದಿ ವಿರುದ್ಧ ಗಟ್ಟಿ ದನಿಯಲ್ಲಿ ಸ್ಪಷ್ಟವಾಗಿ ಮಾತನಾಡುವ ಮೂರು ಮತ್ತೊಂದು ಮುಖ್ಯಮಂತ್ರಿಗಳ ಪೈಕಿ ಸಿದ್ದರಾಮಯ್ಯ ಕೂಡ ಒಬ್ಬರು (ಮಮತಾ ಬ್ಯಾನರ್ಜಿ, ಸ್ಟಾಲಿನ್ ಮತ್ತು ಪಿಣರಾಯಿ). ಹಾಗಾಗಿ ಸಿದ್ದರಾಮಯ್ಯ ದನಿ ಏರಿಸಿಯೇ ಮಾತನಾಡಬೇಕು. 10. ಕಟ್ಟಕಡೆಯ ವ್ಯಕ್ತಿಗೂ ಆರ್ಥಿಕ ಶಕ್ತಿ ತುಂಬುತ್ತಿರುವ, ಗ್ರಾಮೀಣ ಕರ್ನಾಟಕದ ಆರ್ಥಿಕ ಬಲವನ್ನು ಹೆಚ್ಚಿ ಸುತ್ತಿರುವ ಗ್ಯಾರಂಟಿ ಯೋಜನೆಗಳನ್ನು ಈಗ ಪುನರ್ ಪರಿಶೀಲನೆ ಮಾಡಬೇಕು. ಅರ್ಹ ಫಲಾನುಭವಿಗಳನ್ನು ಗುರುತಿಸಿ ಅವರಿಗೆ ಮಾತ್ರ ಸೌಲಭ್ಯ ನೀಡಬೇಕು. ಈ ಪರಿಷ್ಕರಣೆಯಿಂದ ಉಳಿಯುವ ಹಣವನ್ನು ಬೇರೆ ಜನೋಪಯೋಗಿ ಕೆಲಸಕ್ಕೆ ಬಳಸಬಹುದು. 11. ಸಿದ್ದರಾಮಯ್ಯ 16 ಬಾರಿ ರಾಜ್ಯ ಬಜೆಟ್ ಮಂಡಿಸಿ ರಾಜ್ಯದ ಖಜಾನೆಯನ್ನು ಕೂಡಿ ಕಳೆದಿದ್ದರೂ ಗ್ಯಾರಂಟಿಗಳ ಹೊರೆಯಲ್ಲಿ ನಲುಗಿರುವ ಅವರು ಆಡಳಿತ ಸುಧಾರಣಾ ಆಯೋಗದ ಶಿಫಾರಸುಗಳನ್ನು ಜಾರಿ ಮಾಡಲೇಬೇಕು. ವೆಚ್ಚ ಕಡಿತ ಮಾಡಿ ಆ ಹಣವನ್ನು ಬೇರೆ ಯೋಜನೆಗಳಿಗೆ ಬಳಸಿಕೊಳ್ಳುವಂತಾದರೆ ಅವರು ಕೂಡ ಸ್ವಲ್ಪ ಹಗುರವಾಗಬಹುದು. 12. ಸಿದ್ದರಾಮಯ್ಯ 2013ರಲ್ಲಿ ಮುಖ್ಯಮಂತ್ರಿಯಾದ ಮೊದಲ ದಿನವೇ ಅನ್ನಭಾಗ್ಯ ಕೊಟ್ಟಂತೆ ಹತ್ತು ಹಲವು ಕಾರ್ಯಕ್ರಮ ಕೊಟ್ಟಿದ್ದಾರೆ. ಆದರೆ ಕಾರ್ಯಕ್ರಮಗಳ ಬದಲು ಅರಸು ಕೊಟ್ಟಂತೆ ನೀತಿಗಳನ್ನು ಕೊಡಬೇಕು. ಕಾರ್ಯಕ್ರಮಗಳು ಬಜೆಟ್ ಮೇಲೆ ಅವಲಂಬಿತವಾಗುತ್ತವೆ. ನೀತಿಗಳು ಬಜೆಟ್ ಇಲ್ಲದೆಯೂ ಬಹುಕಾಲ ಬದುಕುಳಿಯಬಲ್ಲವು. ಬೇರೆ ಅಭಿವೃದ್ಧಿ ಕೆಲಸ ಮಾಡುವುದು, ಆಡಳಿತ ಸುಧಾರಣೆ ತರುವುದು ಇದ್ದದ್ದೇ. ಅವುಗಳ ಜೊತೆಗೆ ಮಾಡಬೇಕಾದ ಕೆಲಸಗಳು ಇವು. ಸಿದ್ದರಾಮಯ್ಯ ಇನ್ನೂ ಕೆಲವು ಕೆಲಸಗಳನ್ನು ಮಾಡಬೇಕು ಅಂತಾ ಯಾರಿಗಾದರೂ ಅನಿಸಬಹುದು. ಅವರು ಈ ಪಟ್ಟಿಯನ್ನು ಬೆಳಸಬಹುದು. ಹಾಗೆಯೇ ಈ ಪಟ್ಟಿಯಲ್ಲಿ ಕೆಲವು, ಕೆಲವರಿಗೆ, ಕೆಲವು ಕಾರಣಕ್ಕೆ ಅಸಾಧ್ಯ ಎನಿಸಬಹುದು. ಕಡುಕಷ್ಟ ಎನಿಸಬಹುದು. ಕಷ್ಟ ಎನ್ನುವ ಕಾರಣಕ್ಕಾಗಿಯೇ ಸಿದ್ದರಾಮಯ್ಯ ಅವರೇ ಈ ಎಲ್ಲಾ ಕೆಲಸಗಳನ್ನು ಮಾಡಿ ಮುಗಿಸಲಿ ಎನ್ನುವ ನಿರೀಕ್ಷೆ ಹುಟ್ಟಿಕೊಂಡಿರುವುದು. ಸಿದ್ದರಾಮಯ್ಯ ವಿರುದ್ದ ಏನೇ ದೂರಿದ್ದರೂ ದುಮ್ಮಾನವನ್ನೂ ಅವರ ಬಳಿಯೇ ಹೇಳಿಕೊಳ್ಳಬೇಕಲ್ಲವೇ? ಅರಸು ಎಳೆದು ತಂದಿದ್ದ ಸಾಮಾಜಿಕ ನ್ಯಾಯದ ರಥವನ್ನು ಇನ್ನಷ್ಟು ದೂರ ಎಳೆದೊಯ್ಯಲು ಸಿದ್ದರಾಮಯ್ಯ ಅಲ್ಲದೆ ಇನ್ಯಾರಿದ್ದಾರೆ ಈಗ? ನ್ಯಾಯಯುತ ನಿರೀಕ್ಷೆಯಲ್ಲವೇ? ಸಿದ್ದರಾಮಯ್ಯ ಒಬ್ಬ ಉತ್ತಮವಾದ ಸಂಸದೀಯ ಪಟು ಎಂದಷ್ಟೇ ಷರಾ ಬರೆದು ಮುಗಿಸಲಾಗದು, ಅವರಿಗೆ ಹಲವು ಮುಖ; ಸಾಮಾಜಿಕ ನ್ಯಾಯದ ಪ್ರತಿಪಾದಕ, ಅಹಿಂದ ನಾಯಕ, ಉತ್ತಮ ಆಡಳಿತಗಾರ. ಅವರಲ್ಲದೆ ಇನ್ಯಾರು ಮಾಡಬೇಕು? ಅವರು ಇಚ್ಛಾಶಕ್ತಿ ಪ್ರದರ್ಶಿಸಬೇಕು. ಅಧಿಕಾರವನ್ನು ಪಣಕ್ಕಿಟ್ಟಾದರೂ ಸಾಧಿಸಬೇಕು. ಉಳಿದಿರುವುದು 28 ತಿಂಗಳು. ಕಡೆಯ ದಿನಗಳಲ್ಲಿ ಮಾಡಲು ಬಾಕಿ ಉಳಿಸಿಕೊಳ್ಳಬಾರದು. ವಿಧಾನಸಭಾ ಚುನಾವಣೆಗೆ ಹತ್ತಿರವಿದ್ದಾಗ ಮಾಡಿದರೆ ಚುನಾವಣೆಗೋಸ್ಕರವೇ ಮಾಡಿದರು ಎನ್ನುವ ಕುಖ್ಯಾತಿ ಬರುತ್ತದೆ. ಪ್ರತ್ಯೇಕ ಲಿಂಗಾಯತ ಧರ್ಮದ ವಿಚಾರದಲ್ಲಿ ಇದೇ ರೀತಿಯ ಎಡವಟ್ಟಾಗಿತ್ತು ಎನ್ನುವುದನ್ನು ಸಿದ್ದರಾಮಯ್ಯ ಮರೆಯಬಾರದು. ಇವುಗಳನ್ನು ಮಾಡಲಾಗದಿದ್ದರೆ ಸಿದ್ದರಾಮಯ್ಯ ಅಧಿಕಾರದಲ್ಲಿ ಮುಂದುವರಿದರೂ ಪ್ರಯೋಜನ ಇಲ್ಲ. ಏಕೆಂದರೆ ಇತಿಹಾಸ ಅವರನ್ನು ಕ್ಷಮಿಸುವುದಿಲ್ಲ. ಕೆಲವರಿಗೆ ಸಿದ್ದರಾಮಯ್ಯ ಬಗ್ಗೆ ನಿರೀಕ್ಷೆಗಳು ಜಾಸ್ತಿಯಾದವು ಎನಿಸಲೂಬಹುದು. ಹೌದು, ಹಾಲು ಕರೆಯುವ ಹಸುವಿನ ಕೆಚ್ಚಲಿಗೆ ಕೈ ಹಾಕುವುದು ಸಹಜವೇ ಅಲ್ಲವೇ? ಇದು ನ್ಯಾಯಯುತ ನಿರೀಕ್ಷೆಯಲ್ಲವೇ? ದಾಖಲೆರಾಮಯ್ಯ! ಇನ್ನೊಂದು ಕಾರಣಕ್ಕೂ ಸಿದ್ದರಾಮಯ್ಯ ಅವರಿಂದ ಜಾಸ್ತಿ ನಿರೀಕ್ಷೆ ಮಾಡುವುದು ತಪ್ಪಾಗುವುದಿಲ್ಲ. 1983ರಲ್ಲಿ ವಿಧಾನಸಭೆ ಪ್ರವೇಶ ಮಾಡಿದ ಸಿದ್ದರಾಮಯ್ಯ 1989ರಿಂದ 1994ರವರೆಗೆ ಹಾಗೂ 1999ರಿಂದ 2004ರವರೆಗೆ ಮಾತ್ರ ಯಾವುದೇ ಅಧಿಕಾರ ಅನುಭವಿಸಿಲ್ಲ. ಈ ಎರಡು ಅವಧಿ ಬಿಟ್ಟು 1983ರಿಂದ 2026ರವರೆಗಿನ ಅವಧಿಯಲ್ಲಿ 33 ವರ್ಷ ಗೂಟದ ಕಾರು ಬಿಟ್ಟು ಇಳಿದಿಲ್ಲ. ಕನ್ನಡ ಕಾವಲು ಸಮಿತಿ ಅಧ್ಯಕ್ಷ, ಎರಡು ಬಾರಿ ಮಂತ್ರಿ, ಎರಡು ಬಾರಿ ಉಪ ಮುಖ್ಯಮಂತ್ರಿ, ಎರಡು ಬಾರಿ ವಿರೋಧ ಪಕ್ಷದ ನಾಯಕ, ಎರಡು ಬಾರಿ ಮುಖ್ಯಮಂತ್ರಿ ಹೀಗೆ ‘ಎರಡರ’ ದಾಖಲೆಯನ್ನೂ ಬರೆದಿದ್ದಾರೆ. ಹೀಗೆ ದಂಡಿ ದಂಡಿ ಅಧಿಕಾರ ಉಂಡಿರುವ ಸಿದ್ದರಾಮಯ್ಯ ಮುಂದೆ ಯಕಶ್ಚಿತ್ ಒಂದು ಡಝನ್ ಬೇಡಿಕೆ ಇಟ್ಟರೆ ತಪ್ಪೇ? ಆಫ್ ದಿ ರೆಕಾರ್ಡ್! ಅರಸು ಮಾದರಿಯ ಬಗ್ಗೆ ವಾರಪೂರ್ತಿ ಜಪವಾಗಿದೆ. ಆದರೆ ಅರಸರಿಂದ ಕಲಿಯುವುದಷ್ಟೇ ಅಲ್ಲ, ಕಲಿಯಬಾರದವೂ ಇವೆ. ಅರಸು ಹಳಿ ತಪ್ಪಲು ಹೊಗಳುಭಟ್ಟರು, ಪ್ರೇಯಸಿಯರು ಮತ್ತು ಜ್ಯೋತಿಷಿಗಳು (ಮೂಢನಂಬಿಕೆಗಳು) ಕಾರಣ ಎನ್ನುವುದನ್ನು ಇತಿಹಾಸ ಹೇಳುತ್ತದೆ. ಹೊಗಳುಭಟ್ಟರು ಕಿವಿ ಕಚ್ಚದಿದ್ದರೆ ಅವರು ಸಂಜಯ್ ಗಾಂಧಿಗೆ ಡಿಚ್ಚಿ ಹೊಡೆಯುತ್ತಿರಲಿಲ್ಲ. ಇಂದಿರಾ ಗಾಂಧಿಯ ವಿಶ್ವಾಸ ಕಳೆದುಕೊಳ್ಳುತ್ತಿರಲಿಲ್ಲ. ಅಧಿಕಾರ ಅವರಿಂದ ದೂರವಾಗುತ್ತಿರಲಿಲ್ಲ. ಅಧಿಕಾರ ಇದ್ದರೆ ಅವರ ಕನಸುಗಳು ನನೆಗುದಿಗೆ ಬೀಳುತ್ತಿರಲಿಲ್ಲ. ಪ್ರೇಯಸಿಯರ ಪಾಶವಿಲ್ಲದಿದ್ದರೆ ಅವರು ಮೈಮರೆಯುತ್ತಿರಲಿಲ್ಲ. ಜ್ಯೋತಿಷಿಗಳು ಜೋತು ಬೀಳದಿದ್ದರೆ ಅರಸರಿಗೆ ಪ್ರಧಾನಿಯಾಗುವ ಕನಸು ಬೀಳುತ್ತಿರಲಿಲ್ಲ. ಇಂದಿನವರು ಅರಸುವನ್ನು ಈ ಕಾರಣಕ್ಕೂ ಅನುಸರಿಸಬೇಕಲ್ಲವೇ?

ವಾರ್ತಾ ಭಾರತಿ 11 Jan 2026 11:10 pm

ಚುನಾವಣೆ ಆಯೋಗಕ್ಕೆ ನಾಗರಿಕರನ್ನು ಪತ್ತೆ ಮಾಡುವ ಅಧಿಕಾರ ಇಲ್ಲ : ಶಿವಸುಂದರ್‌

Election Commission has no authority to track citizens: Shivasunder

ವಾರ್ತಾ ಭಾರತಿ 11 Jan 2026 11:08 pm

ಲಿಂಗಾಯತ ಧರ್ಮದ ತತ್ವ, ಪರಂಪರೆ, ಅಸ್ತಿತ್ವದ ಕುರಿತು ಅರಿವಿರಲಿ: ಗುರುಮಹಾಂತ ಸ್ವಾಮೀಜಿ

ಆಳಂದ: ಇಂದಿನ ಕಾಲಘಟ್ಟದಲ್ಲಿ ಬಸವಣ್ಣನವರ ಅಭಿಮಾನಿಗಳು ಹಾಗೂ ಪ್ರಗತಿಪರ ಚಿಂತಕರು ಲಿಂಗಾಯತ ಧರ್ಮದ ತತ್ವಗಳು, ಅದರ ಪರಂಪರೆ ಮತ್ತು ಅಸ್ತಿತ್ವದ ಕುರಿತು ಗಂಭೀರವಾಗಿ ತಿಳಿವಳಿಕೆ ಪಡೆದುಕೊಳ್ಳಬೇಕಾದ ಸಮಯ ಬಂದಿದೆ ಎಂದು ಇಲಕಲ್‌ನ ಶ್ರೀವಿಜಯ ಮಹಾಂತೇಶ್ವರ ಸಂಸ್ಥಾನ ಮಠದ ಶ್ರೀ ಗುರುಮಹಾಂತ ಸ್ವಾಮೀಜಿ ಹೇಳಿದರು. ಪಟ್ಟಣದ ಶ್ರೀ ತೋಂಟದಾರ್ಯ ಅನುಭವ ಮಂಟಪದಲ್ಲಿ ರವಿವಾರ ಬೆಂಗಳೂರಿನ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯ ಆಶ್ರಯದಲ್ಲಿ ನಡೆದ ಅಖಿಲ ಕರ್ನಾಟಕ ಶರಣ ಸಾಹಿತ್ಯ 2ನೇ ಸಮ್ಮೇಳನದಲ್ಲಿ ಸರ್ವಾಧ್ಯಕ್ಷರಾಗಿ ಮಾತನಾಡಿದ ಶ್ರೀ ಗುರುಮಹಾಂತ ಸ್ವಾಮೀಜಿ, ಅರಿವಿಲ್ಲದೆ ಹೋದರೆ ನಮ್ಮ ಅಸ್ತಿತ್ವವೇ ಮೌನವಾಗಿ ಸಮಾಧಿಯಾಗುವ ಅಪಾಯವಿದೆ. ಪ್ರಜ್ಞೆ ಮತ್ತು ಜಾಗೃತಿ ತಂದುಕೊಳ್ಳುವುದು ಇಂದಿನ ಅತ್ಯಾವಶ್ಯಕತೆ ಇದೆ ಎಂದರು. ಲಿಂಗಾಯತರು ಹಿಂದೂ ಧರ್ಮದ ವಿರೋಧಿಗಳಲ್ಲ. ಆದರೆ ನಮ್ಮ ಧರ್ಮದ ರಕ್ಷಣೆಯನ್ನು ನಾವು ಸ್ವತಃ ಮಾಡಿಕೊಳ್ಳಬೇಕು ಎಂದು ಸ್ಪಷ್ಟಪಡಿಸಿದರು. ಹಿಂದೂ ಧರ್ಮದಲ್ಲಿ ಬ್ರಾಹ್ಮಣ, ಕ್ಷತ್ರಿಯ, ವೈಷ್ಯ ಮತ್ತು ಶೂದ್ರ ಎಂಬ ನಾಲ್ಕು ವರ್ಣಗಳಿದ್ದು, ಅಂಗದ ಮೇಲೆ ಲಿಂಗ ಕಟ್ಟಿಕೊಂಡ ಲಿಂಗಾಯತರು ಯಾವ ವರ್ಣಕ್ಕೆ ಸೇರುತ್ತಾರೆ ಎಂಬ ಪ್ರಶ್ನೆಯನ್ನು ಸಮಾಜವೇ ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದರು. ವರ್ಣವ್ಯವಸ್ಥೆಯಲ್ಲಿ ಶೂದ್ರರಿಗೆ ಶಿಕ್ಷಣ, ಆಸ್ತಿ, ಆರ್ಥಿಕ–ಸಾಮಾಜಿಕ ಸ್ವಾತಂತ್ರ‍್ಯ ಇಲ್ಲದ ಸ್ಥಿತಿ ಇತ್ತು. ಮಹಿಳೆಯರನ್ನೂ ಸಹ ಸಂಪೂರ್ಣ ಹಕ್ಕುಗಳಿಲ್ಲದವರಂತೆ ನೋಡಲಾಗುತ್ತಿತ್ತು. ಇಂತಹ ಅನ್ಯಾಯಕರ ವ್ಯವಸ್ಥೆಯನ್ನು 12ನೇ ಶತಮಾನದಲ್ಲೇ ಬಸವಣ್ಣನವರು ತೊಡೆದು ಹಾಕಿದರು. ನಂತರ ಸ್ವಾತಂತ್ರ‍್ಯ ಭಾರತದಲ್ಲಿ ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರು ಸಂವಿಧಾನದ ಮೂಲಕ ಎಲ್ಲಾ ವರ್ಗದ ಮಹಿಳೆ–ಪುರುಷರಿಗೆ ಸಮಾನ ಹಕ್ಕು, ಆಸ್ತಿ, ನ್ಯಾಯ ಮತ್ತು ಧಾರ್ಮಿಕ ಸ್ವಾತಂತ್ರ‍್ಯವನ್ನು ನೀಡಿದರು ಎಂದು ಸ್ವಾಮೀಜಿ ಹೇಳಿದರು. ಪ್ರಥಮ ಸಮ್ಮೇಳನದ ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಹಾಗೂ ಹಿರಿಯ ಸಾಹಿತಿ ರಂಜಾನ್ ದರ್ಗಾ ಮಾತನಾಡಿ, ಲಿಂಗಾಯತ ಸಮಾಜದಲ್ಲಿ ಮಾತ್ರ ನಿಜವಾದ ಬದಲಾವಣೆ ಸಾಧ್ಯವಿದೆ. ಆದರೆ ಆ ಬದಲಾವಣೆಗೆ ಸ್ವವಿಮರ್ಶೆ ಅನಿವಾರ್ಯ. ಸ್ವವಿಮರ್ಶೆ ಇಲ್ಲದೆ ಭವಿಷ್ಯವಿಲ್ಲ ಎಂದು ಹೇಳಿದರು. ಇಲ್ಲಕಲದ ಶ್ರೀಗಳು ಹಾಗೂ ಅನುಭವ ಮಂಟಪದ ಕೋರಣೇಶ್ವರ ಮಹಾಸ್ವಾಮಿಗಳು ಸಮಾಜ ಬದಲಾವಣೆಗೆ ಮಹಾನ್ ಶಕ್ತಿಯಾಗಿದ್ದಾರೆ. ಈ ಶಕ್ತಿಯನ್ನು ಸಮಗ್ರ ನಾಡಿನ ಪರಿವರ್ತನೆಗೆ ಬಳಸಬಹುದು. ಆದರೆ ಲಿಂಗಾಯತರು ಸ್ವವಿಮರ್ಶೆಯಿಂದ ಬಹುದೂರ ಉಳಿದಿದ್ದಾರೆ. ವಿಮರ್ಶೆ ಮಾಡಿಕೊಳ್ಳದೇ ಹೋದರೆ ಸಮಾಜದ ಭವಿಷ್ಯವೇ ಅಸ್ತಿತ್ವ ಕಳೆದುಕೊಳ್ಳಲಿದೆ ಎಂದು ಎಚ್ಚರಿಸಿದರು. ವಚನ ಚಿಂತನಾ ಗೋಷ್ಠಿಗೆ ಸಾಮಾಜಿಕ ಹೋರಾಟಗಾರ್ತಿ ಕೆ. ನೀಲಾ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಮ್ಮೇಳನಕ್ಕೆ ಅನುಭವ ಮಂಟಪದ ಶ್ರೀ ಕೋರಣೇಶ್ವರ ಸ್ವಾಮೀಜಿ ನೇತೃತ್ವ ವಹಿಸಿದ್ದರು. ಸಾಹಿತಿ ಡಾ. ಮೀನಾಕ್ಷಿ ಬಾಳಿ ಉಪನ್ಯಾಸ ನೀಡಿದರು. ವೇದಿಕೆಯ ಸಂಸ್ಥಾಪಕ ಅಧ್ಯಕ್ಷ ಕೊಟ್ರೆಶ ಎಸ್. ಉಪ್ಪಾರ್ ಪ್ರಸ್ತಾವಿಕ ಮಾತುಗಳನ್ನಾಡಿದರು. ಈ ಸಂದರ್ಭದಲ್ಲಿ ಡಾ. ವಿಶ್ವರಾಧ್ಯ ಸಂತ್ಯoಪೇಟೆ ಮಾತನಾಡಿದರು. ಸಮಾರೋಪ ನುಡಿಯನ್ನು ವಿಜಯಪುರದ ಶರಣ ಸಂಸ್ಕೃತಿ ಚಿಂತಕ ಡಾ. ಜಿ. ಎಸ್. ಪಾಟೀಲ್ ಮಂಡಿಸಿದರು. ವೇದಿಕೆಯ ಸಂಸ್ಥಾಪಕ ಅಧ್ಯಕ್ಷ ಕೊಟ್ರೆಶ ಎಸ್. ಉಪ್ಪಾರ್ ಉಪಸ್ಥಿತರಿದ್ದರು. ಈ ಸಂದರ್ಭ ಶರಣ ಸಂಕುಲ ರತ್ನ ರಾಷ್ಟ್ರೀಯ ಪ್ರಶಸ್ತಿಯನ್ನು ಸಾಧಕರಿಗೆ ಪ್ರದಾನ ಮಾಡಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಜಾಗತಿಕ ಲಿಂಗಾಯತ್ ಮಹಾಸಭಾ ಜಿಲ್ಲಾ ಅಧ್ಯಕ್ಷ ಪ್ರಭುಲಿಂಗ ಮಹಾಗಾಂವಕರ್, ತಾಲೂಕು ಅಧ್ಯಕ್ಷ ರಮೇಶ ಲೋಹಾರ, ಮುಖಂಡ ಬಾಬುರಾವ್ ಮಡ್ಡೆ, ಮಲ್ಲಿನಾಥ ಯಲಶೆಟ್ಟಿ, ಬಾಬುರಾವ್ ಮಡ್ಡೆ, ರಾಜಶೇಖರ ಯಂಕoಚಿ ಸೇರಿದಂತೆ ಹಲವರು ಉಪಸ್ಥಿತರಿದ್ದರು. 

ವಾರ್ತಾ ಭಾರತಿ 11 Jan 2026 10:34 pm

Bengaluru | ಬುದ್ಧಿವಾದ ಹೇಳಿದ್ದಕ್ಕೆ ಮಹಿಳಾ ಹೋಂ ಗಾರ್ಡ್ ಮೇಲೆ ಹಲ್ಲೆ ನಡೆಸಿದ ಯುವತಿ!

ಬೆಂಗಳೂರು : ಇಲ್ಲಿನ ಕೆ.ಆರ್.ಪುರಂ ರೈಲ್ವೆ ನಿಲ್ದಾಣದ ಬಳಿ ಸಾರ್ವಜನಿಕವಾಗಿ ಬುದ್ಧಿವಾದ ಹೇಳಿದ್ದಕ್ಕೆ ಆಕ್ರೋಶಗೊಂಡ ಯುವತಿಯೊಬ್ಬಳು, ಟ್ರಾಫಿಕ್ ಕರ್ತವ್ಯದಲ್ಲಿದ್ದ ಮಹಿಳಾ ಹೋಂ ಗಾರ್ಡ್ ಮೇಲೆ ಹಲ್ಲೆ ನಡೆಸಿರುವ ಘಟನೆ ರವಿವಾರ ನಡೆದಿದೆ. ಗಾಯಗೊಂಡ ಹೋಂ ಗಾರ್ಡ್ ಲಕ್ಷ್ಮೀ ನರಸಮ್ಮ ಸದ್ಯ ಚಿಕಿತ್ಸೆ ಪಡೆಯುತ್ತಿದ್ದು, ಹಲ್ಲೆ ಮಾಡಿದ ಮೋಹಿನಿ ಎಂಬ ಯುವತಿಯನ್ನು ರಾಮಮೂರ್ತಿ ನಗರ ಠಾಣಾ ಪೊಲೀಸರು ವಶಕ್ಕೆ ಪಡೆದಿದ್ದಾರೆ. 12 ವರ್ಷಗಳಿಂದ ಹೋಂ ಗಾರ್ಡ್ ಆಗಿ ಸೇವೆ ಸಲ್ಲಿಸುತ್ತಿರುವ ಲಕ್ಷ್ಮೀನರಸಮ್ಮ, ಹಿಂದಿನ ಆರು ತಿಂಗಳಿಂದ ಕೆ.ಆರ್.ಪುರಂ ವ್ಯಾಪ್ತಿಯಲ್ಲಿ ಟ್ರಾಫಿಕ್ ನಿಯಂತ್ರಣದ ಕೆಲಸ ಮಾಡುತ್ತಿದ್ದರು. ಈ ವೇಳೆ ಯುವತಿ ರಸ್ತೆಯಲ್ಲಿ ಓಡಾಡುತ್ತಿದ್ದಾಗ, ಅಲ್ಲಿ ಸೇರಿದ್ದ ಕೆಲವು ಯುವಕರು ಆಕೆಯನ್ನು ಚುಡಾಯಿಸುತ್ತಿದ್ದರು. ಸ್ಥಳದಲ್ಲಿದ್ದ ಸಾರ್ವಜನಿಕರು ಈ ಬಗ್ಗೆ ಗಮನ ಹರಿಸುವಂತೆ ಕೇಳಿಕೊಂಡ ಹಿನ್ನೆಲೆಯಲ್ಲಿ, ಲಕ್ಷ್ಮೀನರಸಮ್ಮ ಅವರು ‘ಈ ರೀತಿ ಬಟ್ಟೆ ಧರಿಸಿ ರಸ್ತೆಗೆ ಬರಬೇಡಮ್ಮ’ ಎಂದು ಬುದ್ಧಿವಾದ ಹೇಳಿದ್ದರು ಎನ್ನಲಾಗಿದೆ. ಬುದ್ಧಿವಾದ ಹೇಳಿದ್ದನ್ನೇ ನೆಪವಾಗಿಟ್ಟುಕೊಂಡ ಯುವತಿ, ನನಗೆ ಹೇಳಲು ನೀನು ಯಾರು?; ಎಂದು ಏಕಾಏಕಿ ಲಕ್ಷ್ಮೀನರಸಮ್ಮ ಅವರ ಮೇಲೆರಗಿದ್ದಾಳೆ ಎನ್ನಲಾಗಿದೆ. ಸಮವಸ್ತ್ರದಲ್ಲಿದ್ದ ಹೋಂ ಗಾರ್ಡ್ ಮುಖಕ್ಕೆ ಹೊಡೆದು, ಮೈಮೇಲೆ ಪರಚಿ ಗಾಯಗೊಳಿಸಿದ್ದಾಳೆ. ಸ್ಥಳದಲ್ಲಿದ್ದವರು ಗಲಾಟೆ ಬಿಡಿಸಲು ಮುಂದಾದರೂ ಯಾರಿಗೂ ಕ್ಯಾರೇ ಎನ್ನದೆ ರಂಪಾಟ ಮಾಡಿದ್ದಾಳೆ ಎನ್ನಲಾಗಿದೆ. ಈ ಕುರಿತು ಮಾತನಾಡಿರುವ ಲಕ್ಷ್ಮೀನರಸಮ್ಮ, ‘ನಾನು ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದೆ. ಆ ಯುವತಿ ನಿತ್ಯ ಮದ್ಯಪಾನ ಮಾಡಿ ಅಲೆದಾಡುತ್ತಿರುವುದನ್ನು ಈ ಹಿಂದೆಯೂ ನೋಡಿದ್ದೆ. ಜನರ ಒತ್ತಾಯಕ್ಕೆ ಮಣಿದು ಬುದ್ಧಿವಾದ ಹೇಳಿದ್ದಕ್ಕೆ ನನ್ನ ಮೇಲೆ ಈ ರೀತಿ ದೌರ್ಜನ್ಯ ನಡೆದಿದೆ. ಹಲ್ಲೆ ಮಾಡಿದವರಿಗೆ ಕಾನೂನು ಪ್ರಕಾರ ಕಠಿಣ ಶಿಕ್ಷೆಯಾಗಬೇಕು ಮತ್ತು ಕರ್ತವ್ಯದಲ್ಲಿರುವ ನಮಗೆ ರಕ್ಷಣೆ ಸಿಗಬೇಕು ಎಂದು ಹೇಳಿದ್ದಾರೆ. ಈ ಸಂಬಂಧ ಮಹಿಳಾ ಸಂಘಟನೆಗಳ ದೂರಿನ ಮೇರೆಗೆ ರಾಮಮೂರ್ತಿ ನಗರ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದ್ದು, ಆರೋಪಿ ಮೋಹಿನಿಯನ್ನು ವಶಕ್ಕೆ ಪಡೆದು ತನಿಖೆ ಚುರುಕುಗೊಳಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ವಾರ್ತಾ ಭಾರತಿ 11 Jan 2026 10:28 pm

SIR ಅವಾಂತರ | ವೀರಚಕ್ರ ಪುರಸ್ಕೃತ ನಿವೃತ್ತ ವಾಯುಪಡೆ ಅಧಿಕಾರಿಗೂ ಗುರುತು ದೃಢಪಡಿಸಲು ಅಧಿಕಾರಿಗಳ ಬುಲಾವ್

ಹೊಸದಿಲ್ಲಿ, ಜ.11: ಒಂದು ವೇಳೆ ಮತದಾರಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಗೊಂದಲಗಳು ಉಂಟಾಗಿರುವ ಹಲವು ಪ್ರಕರಣಗಳು ವರದಿಯಾಗಿರುವ ನಡುವೆ, ಭಾರತೀಯ ನೌಕಾಪಡೆಯ ನಿವೃತ್ತ ಅಧಿಕಾರಿ ಮತ್ತು ಅವರ ಪತ್ನಿ ಕೂಡ ತೊಂದರೆಗೆ ಸಿಲುಕಿರುವ ಘಟನೆ ಗೋವಾದಲ್ಲಿ ವರದಿಯಾಗಿದೆ. SIRನ ಭಾಗವಾಗಿ ಗುರುತನ್ನು ಸಾಬೀತುಪಡಿಸಲು ತಮ್ಮನ್ನು ಭೇಟಿ ಮಾಡಲು ನೌಕಾಪಡೆಯ ನಿವೃತ್ತ ಅಧಿಕಾರಿ ಆಡ್ಮಿರಲ್ ಅರುಣ್ ಪ್ರಕಾಶ್ ಅವರನ್ನು ಚುನಾವಣಾ ಆಯೋಗದ ಅಧಿಕಾರಿಗಳು ಕೇಳಿಕೊಂಡಿದ್ದು ವಿವಾದಕ್ಕೆ ದಾರಿ ಮಾಡಿಕೊಟ್ಟಿದೆ. ‘‘ಒಂದು ವೇಳೆ SIR ಫಾರಂಗಳಿಗೆ ಅಗತ್ಯವಿರುವ ಮಾಹಿತಿಯನ್ನು ಪಡೆಯಲು ಸಾಧ್ಯವಾಗುತ್ತಿಲ್ಲವಾದರೆ ಅವುಗಳನ್ನು ಮರುಪರಿಷ್ಕರಿಸುವ ಅಗತ್ಯವಿದೆ. SIR ನಿಮಿತ್ತ ಬಿಎಲ್ಓಗಳು ನಮ್ಮನ್ನು ಮೂರು ಸಲ ಭೇಟಿ ಮಾಡಿದ್ದಾರೆ. ಈ ಸಂದರ್ಭದಲ್ಲಿ ಹೆಚ್ಚಿನ ಮಾಹಿತಿಯನ್ನು ಕೇಳಬಹುದಿತ್ತು. ಆದರೆ 82 ಹಾಗೂ 78 ವರ್ಷ ಪ್ರಾಯದ ದಂಪತಿಯನ್ನು 18 ಕಿ.ಮೀ ದೂರದ ಸ್ಥಳಕ್ಕೆ ಎರಡು ವಿಭಿನ್ನ ದಿನಾಂಕಗಳಲ್ಲಿ ತೆರಳಲು ಸೂಚಿಸಲಾಗಿದೆ’’ ಎಂದು ಆಡ್ಮಿರಲ್ ಪ್ರಕಾಶ್ ಅವರು ತಮ್ಮ X ಬಳಕೆದಾರ ಖಾತೆಯಲ್ಲಿ ಹೇಳಿದ್ದಾರೆ. ವೀರಚಕ್ರ ಪುರಸ್ಕೃತ ಸೇನಾಧಿಕಾರಿ ಆದರೂ ತಮ್ಮ ಗುರುತನ್ನು SIR ನಲ್ಲಿ ದೃಢಪಡಿಸಿಕೊಳ್ಳಬೇಕಾದಂತಹ ಪರಿಸ್ಥಿತಿ ನಿರ್ಮಾಣವಾಗಿರುವುದು ವ್ಯಾಪಕ ಚರ್ಚೆಗೆ ಕಾರಣವಾಗಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಚುನಾವಣಾ ಆಯೋಗವನ್ನು ಟೀಕಿಸುವ ಪೋಸ್ಟುಗಳು ಹರಿದಾಡುತ್ತಿದ್ದವು. ಕೆಲವು ಜನರು ಆಯೋಗವು ಬಿಎಲ್ಓ ಅಧಿಕಾರಿಯನ್ನು ಅವರ ನಿವಾಸಕ್ಕೆ ಕಳುಹಿಸಬೇಕೆಂದು ಸಲಹೆ ನೀಡಿದ್ದರು. ಆದರೆ ಪ್ರಕಾಶ್ ಅವರು ಯಾವುದೇ ವಿಶೇಷ ಸೌಲಭ್ಯಗಳಿಗೆ ಬೇಡಿಕೆ ಸಲ್ಲಿಸುವುದಿಲ್ಲವೆಂದು ಸ್ಪಷ್ಟಪಡಿಸಿದ್ದಾರೆ. ‘‘20 ವರ್ಷದ ಹಿಂದೆ ನಿವೃತ್ತರಾದ ನಂತರದಿಂದ ನಾನು ಯಾವುದೇ ವಿಶೇಷ ಸೌಲಭ್ಯವನ್ನು ಕೇಳಿಲ್ಲ. ನನ್ನ ಪತ್ನಿ ಮತ್ತು ನಾನು SIR ಫಾರಂಗಳನ್ನು ಭರ್ತಿ ಮಾಡಿದ್ದೇವೆ. 2026ರ ಗೋವಾ ಮತದಾರರ ಕರಡು ಪಟ್ಟಿಯಲ್ಲಿ ನಮ್ಮ ಹೆಸರುಗಳು ಇದ್ದರೆ ಸಂತೋಷವಾಗುತ್ತದೆ. ಆದಾಗ್ಯೂ, ಚುನಾವಣಾ ಆಯೋಗ ನೀಡಿರುವ ನೋಟಿಸ್ ಗೆ ನಾವು ಬದ್ಧರಾಗಿದ್ದೇವೆ’’ ಎಂದು ಆಡ್ಮಿರಲ್ ಪ್ರಕಾಶ್ ಅವರು Xನಲ್ಲಿ ಹೇಳಿದ್ದಾರೆ. ►ವೀರಚಕ್ರ ಪುರಸ್ಕೃತ ಸೇನಾನಿ 40 ವರ್ಷಗಳ ಸೇವಾ ಅವಧಿಯಲ್ಲಿ ಪ್ರಕಾಶ್ ಅವರು ಸರಕು ಸಾಗಣೆ ಫೈಟರ್ ಸ್ಕ್ವಾಡ್ರನ್ ನೇತೃತ್ವವನ್ನು ವಹಿಸಿದ್ದರು. ಅವರು ನೌಕಾಪಡೆಯ ವಾಯುನಿಲ್ದಾಣ ಮತ್ತು ವಿಮಾನವಾಹಕ ಸಮರ ನೌಕೆ ಐಎನ್ಎಸ್ ವಿರಾಟ್ ಸೇರಿದಂತೆ ನಾಲ್ಕು ಸಮರ ನೌಕೆಗಳನ್ನು ನಿರ್ವಹಿಸಿದ್ದರು. 1971ರ ಭಾರತ-ಪಾಕ್ ಯುದ್ಧದಲ್ಲಿ ಪಂಜಾಬ್ನಲ್ಲಿ ಭಾರತೀಯ ವಾಯುಪಡೆಯ ಫೈಟರ್ ವಿಮಾನಗಳ ಸ್ಕ್ವಾಡ್ರನ್ನೊಂದಿಗೆ ಹಾರಾಟ ನಡೆಸಿದ್ದಕ್ಕಾಗಿ ಪ್ರಕಾಶ್ ಅವರಿಗೆ ವೀರಚಕ್ರ ಪ್ರದಾನ ಮಾಡಲಾಗಿತ್ತು.

ವಾರ್ತಾ ಭಾರತಿ 11 Jan 2026 10:20 pm

ಕುಮಾರಸ್ವಾಮಿ ಯಶಸ್ವಿ ನಾಯಕ ಆಗಿದ್ದಾರೆಯೇ?: ಚಲುವರಾಯಸ್ವಾಮಿ

ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಯಶಸ್ಸು ಕಂಡಿರುವ ನಾಯಕ. ಅವರ ಬಗ್ಗೆ ಇಲ್ಲಸಲ್ಲದ ಟೀಕೆ ಮಾಡುವುದು ಸರಿಯಲ್ಲ. ಆದರೆ, ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಯಶಸ್ವಿ ನಾಯಕ ಆಗಿದ್ದಾರೆಯೇ ಎಂದು ಕೃಷಿ ಸಚಿವ ಚಲುವರಾಯಸ್ವಾಮಿ ಪ್ರಶ್ನೆ ಮಾಡಿದ್ದಾರೆ. ರವಿವಾರ ನಗರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಈ ಹಿಂದೆ ತಾನು ಸಾಂದರ್ಭಿಕ ಶಿಶು ಎಂದು ಕುಮಾರಸ್ವಾಮಿ ಹೇಳಿಕೊಂಡಿದ್ದಾರೆ. ಮೈತ್ರಿ ಆಗಿದ್ದು ಅವರ ಸ್ವಂತ ಹಿತಾಸಕ್ತಿಗೆ, ಜನರ ಹಿತಾಸಕ್ತಿಗಲ್ಲ. ಕಾರ್ಯಕರ್ತರ ಹಿತಾಸಕ್ತಿಗೆ ಮೈತ್ರಿ ಮಾಡಿಕೊಂಡಿಲ್ಲ ಎಂದು ಹೇಳಿದರು. ಮನರೇಗಾ ಕುರಿತು ಎಚ್.ಡಿ.ಕುಮಾರಸ್ವಾಮಿ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಕೇಂದ್ರ ಸರಕಾರ ಜನರ ಪರವಾಗಿ ಇಲ್ಲ. ಮೇಲ್ವರ್ಗ, ಕೈಗಾರಿಕಾ ಉದ್ಯಮಿಗಳ ಪರ ಇದ್ದಾರೆ. ಬಿಜೆಪಿ ಆರ್ಥಿಕ ಸಬಲೀಕರಣ ಮಾಡಿಲ್ಲ. ಅದು ಅಲ್ಲದೆ, ಹಳೇ ಮೈಸೂರು ಭಾಗದಲ್ಲಿ ಶೇ.60ರಿಂದ 70ರಷ್ಟು ಜನರು ಕೃಷಿಯನ್ನೆ ನಂಬಿದ್ದಾರೆ. ಒಕ್ಕಲಿಗರು ಸೇರಿ ಬೇರೆ ಸಮುದಾಯದವರು ಕೃಷಿ ಮಾಡುತ್ತಾರೆ. ಕುಮಾರಸ್ವಾಮಿ ಕೇಂದ್ರದ ಮಂತ್ರಿ ಆಗದಿದ್ದರೆ ಬಿಜೆಪಿಯನ್ನೆ ಟೀಕೆ ಮಾಡುತ್ತಿದ್ದರು ಎಂದು ವಾಗ್ದಾಳಿ ನಡೆಸಿದರು.

ವಾರ್ತಾ ಭಾರತಿ 11 Jan 2026 10:17 pm

ಕೇಂದ್ರ ಸರಕಾರ ರಾಜ್ಯದ ನೆರವಿಗೆ ಬರಬೇಕು : ಕೃಷ್ಣಭೈರೇಗೌಡ

ಬಜೆಟ್ ಪೂರ್ವ ಸಮಾಲೋಚನಾ ಸಭೆ

ವಾರ್ತಾ ಭಾರತಿ 11 Jan 2026 10:14 pm

ಮಂಗಳೂರು: ‘ವಿಶಿಷ್ಟರಿಗಾಗಿ ವಿಶಿಷ್ಟ ಮೇಳ’

ಮಂಗಳೂರು, ಜ.10: ಸೇವಾ ಭಾರತಿ ಮಂಗಳೂರು ಇದರ ಅಂಗಸಂಸ್ಥೆ ಆಶಾಜ್ಯೋತಿ ವತಿಯಿಂದ ಕೆನರಾ ಶಿಕ್ಷಣ ಸಂಸ್ಥೆಗಳ ಸಹಭಾಗಿತ್ವದಲ್ಲಿ ರವಿವಾರ ‘ವಿಶಿಷ್ಟರಿಗಾಗಿ ವಿಶಿಷ್ಟ ಮೇಳ’ ನಡೆಯಿತು. ವಿಶಿಷ್ಟ ಮೇಳದಲ್ಲಿ ದಿವ್ಯಾಂಗರು ಹಾಡಿದರು, ನಲಿದರು, ಮನದಣಿಯೆ ಕುಣಿದಾಡಿದರು. ಪಾನಿಪುರಿ, ಬೇಲ್ಪುರಿ ರುಚಿ ಸವಿದು, ಐಸ್‌ಕ್ಯಾಂಡಿ ಐಸಿಕ್ರೀಮ್ ಮೆಲ್ಲುತ್ತಾ, ಸಕ್ಕರೆ ಮಿಠಾಯಿ ಬಾಯಿಗಿರಿಸುತ್ತಾ, ಉಂಡೆ, ಚಕ್ಕುಲಿ ತಿನ್ನುತ್ತಾ, ಕುದುರೆ ಏರಿ, ಒಂಟೆ ಸವಾರಿ ನಡೆಸಿ, ತಿರುಗುವ ತೊಟ್ಟಿಲಿನಲ್ಲಿ ಕುಳಿತು ಜಾತ್ರೆ ಸಂಭ್ರಮವನ್ನು ದಿವ್ಯಾಂಗರು ಅನುಭವಿಸಿದರು. ಜಾತ್ರೆ, ಉತ್ಸವಗಳಿಗೆ ತೆರಳಲಾಗದ ದಿವ್ಯಾಂಗರಿಗೆ ಆಶಾಜ್ಯೋತಿ ಸಂಸ್ಥೆ ಈ ಅವಕಾಶ ಕಲ್ಪಿಸಿತ್ತು. ದಿವ್ಯಾಂಗರಿಗೆ ಮನರಂಜನೆ ಒದಗಿಸುವ ಜೊತೆ ಜೊತೆಗೆ ಅವರಲ್ಲಿ ಚೈತನ್ಯ, ವಿಶ್ವಾಸ ತುಂಬಿಸುವುದು ಮೇಳದ ಉದ್ದೇಶವಾಗಿತ್ತು. *ಸಾವಿರಕ್ಕೂ ಅಧಿಕ ಮಂದಿ ದಿವ್ಯಾಂಗರು ಭಾಗಿ: ವಿಶಿಷ್ಟರಿಗಾಗಿ ವಿಶಿಷ್ಟ ಮೇಳದಲ್ಲಿ ದಿವ್ಯಾಂಗರು ಪ್ರತಿಕ್ಷಣವನ್ನೂ ಆನಂದಿಸಿದ್ದಾರೆ. ಈ ಬಾರಿ ಒಂದು ಸಾವಿರಕ್ಕೂ ಅಧಿಕ ಮಂದಿ ದಿವ್ಯಾಂಗರು ಭಾಗವಹಿಸಿದ್ದಾರೆ. ಸಾಮಾನ್ಯವಾಗಿ ಜಾತ್ರೆಗಳಿಗೆ ದಿವ್ಯಾಂಗರನ್ನು ಕರೆದುಕೊಂಡು ಹೋಗುವುದಿಲ್ಲ. ಆದರೆ, ಈ ಮೇಳದಲ್ಲಿ ಜಾತೆಯ ಸನ್ನಿವೇಶ ಸೃಷ್ಟಿಸಿ ದಿವ್ಯಾಂಗರಿಗೆ ಆರೋಗ್ಯಪೂರ್ಣ ವಾತಾವರಣ ಕಲ್ಪಿಸಲಾಗಿದೆ. ದಿವ್ಯಾಂಗರು ವಿಶಿಷ್ಟ ಮೇಳದಲ್ಲಿ ಖುಷಿಪಟ್ಟಿದ್ದಾರೆ ಎಂದು ಆಶಾಜ್ಯೋತಿ ಅಧ್ಯಕ್ಷೆ ಗೀತಾ ಲಕ್ಷ್ಮೀಶ್ ತಿಳಿಸಿದ್ದಾರೆ. *ಉದ್ಘಾಟನೆ:ನಿಟ್ಟೆ ವಿಶ್ವವಿದ್ಯಾಲಯ ಉಪ ಸಹ ಕುಲಪತಿ ಡಾ. ಶಾಂತಾರಾಮ್ ಶೆಟ್ಟಿ ಅವರು ವಿಶಿಷ್ಟರಿಗಾಗಿ ವಿಶಿಷ್ಟ ಮೇಳ ಉದ್ಘಾಟಿಸಿದರು. ಈ ವೇಳೆ ಮಾತನಾಡಿದ ಅವರು, ಕಳೆದ 25 ವರ್ಷಗಳಿಂದ ಸೇವಾ ಭಾರತಿ ಮೂಲಕ ವಿಶಿಷ್ಟರಿಗಾಗಿ ವಿಶಿಷ್ಟ ಮೇಳ ಆಯೋಜಿಸುತ್ತಿರುವುದು ಶ್ಲಾಘನೀಯ. ದೇಶದಲ್ಲಿ ಶೇ.2ರಷ್ಟು ಜನತೆ ದಿವ್ಯಾಂಗರಿದ್ದಾರೆ. ದಿವ್ಯಾಂಗರಿಗೆ ಅನುಕಂಪ ಬೇಡ, ಸಮಾನ ಅವಕಾಶ ನೀಡಿ. ದಿವ್ಯಾಂಗರ ಪ್ರತಿಭೆಗೆ ಉತ್ತೇಜನ ನೀಡುವುದು ನಮ್ಮ ಕರ್ತವ್ಯ ಎಂದರು. ಕರ್ಣಾಟಕ ಬ್ಯಾಂಕ್ ಮಹಾಪ್ರಬಂಧಕ ವಿನಯ ಭಟ್, ಎಂಆರ್‌ಪಿಎಲ್ ಮಂಗಳೂರು ಮಾನವ ಸಂಪನ್ಮೂಲ ವಿಭಾಗದ ಜಿಜಿಎಂ ಕೃಷ್ಣ ಹೆಗ್ಡೆ ಮಿಯಾರ್, ಕೆನರಾ ಸಮೂಹ ಸಂಸ್ಥೆಗಳ ಅಧ್ಯಕ್ಷ ಡಿ. ವಾಸುದೇವ ಕಾಮತ್ ಅತಿಥಿಯಾಗಿದ್ದರು. ದ.ಕ., ಉಡುಪಿ ಜಿಲ್ಲೆಗಳ ವಿಶೇಷ ಶಾಲೆಗಳ ಮಕ್ಕಳ ಸಹಿತ ಎಲ್ಲ ವಯೋಮಾನದ ದಿವ್ಯಾಂಗರು ಭಾಗವಹಿಸಿದ್ದರು. 18 ವರ್ಷ ಮೇಲ್ಪಟ್ಟ ಸ್ವಲೀನತೆ (ಆಟಿಸಂ), ಸೆರೆಬ್ರಲ್ ಪಾಲ್ಸಿ, ಮಾನಸಿಕ ಕುಂಠಿತ ದಿವ್ಯಾಂಗರಿಗೆ ಕಾನೂನು ಬದ್ಧ ಪೋಷಕತ್ವ ಪ್ರಮಾಣ ಪತ್ರ ಪಡೆಯುವ ಬಗ್ಗೆ ಮತ್ತು ನಿರಾಮಯ ಆರೋಗ್ಯ ಕಾರ್ಡ್ ಬಗ್ಗೆ ಸಂಪೂರ್ಣ ಮಾಹಿತಿ ನೀಡಲಾಯಿತು. ‘ಸಕ್ಷಮ’ ಸಂಸ್ಥೆಯ ವತಿಯಿಂದ ದಿವ್ಯಾಂಗರ ಸಬಲೀಕರಣ ಮತ್ತು ನೇತ್ರದಾನದ ಬಗ್ಗೆ ಮಾಹಿತಿ ಒದಗಿಸಲಾಯಿತು. 7 ಮಂದಿ ದಿವ್ಯಾಂಗ ವಿದ್ಯಾರ್ಥಿ ಸಾಧಕರಿಗೆ ಸನ್ಮಾನ ನೆರವೇರಿಸಲಾಯಿತು. ಆಶಾಜ್ಯೋತಿ ಅಧ್ಯಕ್ಷೆ ಗೀತಾ ಲಕ್ಷ್ಮೀಶ , ಚೇತನಾ ಶಾಲೆ ಮುಖ್ಯಶಿಕ್ಷಕಿ ಸುಪ್ರೀತಾ, ಸೇವಾಭಾರತಿ ಮಂಗಳೂರು ಗೌರವ ಕಾರ್ಯದರ್ಶಿ ಎಚ್. ನಾಗರಾಜ ಭಟ್, ಆಶಾಜ್ಯೋತಿ ಜೊತೆ ಕಾರ್ಯದರ್ಶಿ ಗಣರಾಜ ವೈ., ಖಜಾಂಚಿ ಕೆ. ವಿಶ್ವನಾಥ ಪೈ, ಜೊತೆ ಕಾರ್ಯದರ್ಶಿ ಫಣೀಂದ್ರ ಮತ್ತಿತರರು ಉಪಸ್ಥಿತರಿದ್ದರು. *ವಿಶಿಷ್ಟರಿಗಾಗಿ ವಿಶಿಷ್ಟ ಮೇಳದಲ್ಲಿ ದಿವ್ಯಾಂಗರಿಗೆ ಪಾನಿಪುರಿ, ಬೇಲ್ ಪುರಿ, ಪಾವ್ ಬಾಜಿ, ತಂಪು ಪಾನೀಯ, ಲಸ್ಸಿ, ಮಜ್ಜಿಗೆ, ಚಕ್ಕುಲಿ, ಉಂಡೆ, ಚಿಕ್ಕಿ, ಚಾಕೊಲೇಟ್, ಕಲ್ಲಂಗಡಿ, ನೆಲಕಡಲೆ, ಸಕ್ಕರೆ ಮಿಠಾಯಿ, ಪೋಡಿ, ಐಸ್ಕ್ಯಾಂಡಿ, ಐಸ್ ಕ್ರೀಂ ಮುಂತಾದ ತಿಂಡಿ ತಿನಿಸುಗಳು, ತಿಲಕ ಇಡುವುದು, ರಿಂಗ್ ಎಸೆಯುವುದು, ಡಬ್ಬಿಗೆ ಗುರಿ, ಕುದುರೆಗೆ ಬಾಲ ಬಿಡಿಸುವುದು, ಬಕೆಟ್‌ಗೆ ಬಾಲ್ ಹಾಕುವುದು, ಕವಡೆ ಆಟ, ಮೆಹಂದಿ ಹಾಕುವುದು ಮುಂತಾದ ಮನೋರಂಜನಾ ಆಟಗಳು, ಕುದುರೆ, ಒಂಟೆ ಸವಾರಿ, ತಿರುಗುವ ತೊಟ್ಟಿಲು, ಬೇತಾಳ ಕುಣಿತ ಸಹಿತ ಜಾತ್ರೆಯ ಸನ್ನಿವೇಶ ಒದಗಿಸಲಾಯಿತು. ದಿವ್ಯಾಂಗರಿಂದ ಪ್ರತಿಭಾ ಪ್ರದರ್ಶನವೂ ನಡೆಯಿತು.

ವಾರ್ತಾ ಭಾರತಿ 11 Jan 2026 10:12 pm

ಪ್ರತಿಭಟನಾಕಾರರು ದೇವರ ವಿರೋಧಿಗಳು, ನೇಣುಗಂಬದಲ್ಲಿ ನೇತಾಡಲಿವೆ ಕೊರಳುಗಳು; ಇರಾನ್‌ ಎಚ್ಚರಿಕೆ!

ಇರಾನ್‌ನಲ್ಲಿ ಭುಗಿಲೆದ್ದಿರುವ ಪ್ರತಿಭಟನೆಗಳನ್ನು ಹತ್ತಿಕ್ಕಲು ಹರಸಾಹಸಪಡುತ್ತಿರುವ ಅಲ್ಲಿನ ಸರ್ಕಾರ, ಇದೀಗ ಪ್ರತಿಭಟನಾಕಾರರಿಗೆ ಗಂಭೀರ ಎಚ್ಚರಿಕೆಗಳನ್ನು ನೀಡಲಾರಂಭಿಸಿದೆ. ಖಮೇನಿ ಆಡಳಿತ ವಿರೋಧಿ ಪ್ರತಿಭಟನೆಗಳಲ್ಲಿ ಭಾಗವಹಿಸುವವರನ್ನು ದೇವರ ವಿರೋಧಿಗಳು ಎಂದು ಕರೆದಿರುವ ಇರಾನ್‌, ಅಂತಹವರಿಗೆ ಗಲ್ಲುಶಿಕ್ಷೆ ನೀಡುವ ಎಚ್ಚರಿಕೆ ನೀಡಿದೆ. ಅಲ್ಲದೇ ಪ್ರತಿಭಟನೆಗಳಿಗೆ ಸಹಕರಿಸುವ ಮತ್ತು ಪ್ರತಿಭಟನಾಕಾರರಿಗೆ ಆಶ್ರಯ ನೀಡುವವರಿಗೂ ಕಠಿಣ ಶಿಕ್ಷೆ ನೀಡಲಾಗುವುದು ಎಂದು ಖಮೇನಿ ಆಡಳಿತ ಸ್ಪಷ್ಟಪಡಿಸಿದೆ. ಆದಾಗ್ಯೂ, ಇರಾನ್‌ನಲ್ಲಿ ಪ್ರತಿಭಟನೆಗಳು ನಿಲ್ಲುತ್ತಿಲ್ಲ. ಈ ಕುರಿತು ಇಲ್ಲಿದೆ ಹೆಚ್ಚಿನ ಮಾಹಿತಿ.

ವಿಜಯ ಕರ್ನಾಟಕ 11 Jan 2026 10:11 pm

ಬೀದರ್ ನಲ್ಲಿ ಪತ್ರಕರ್ತರ 40ನೇ ರಾಜ್ಯ ಸಮ್ಮೇಳನ ನಡೆಸಲು ನಿರ್ಧಾರ

ಬೀದರ್ : ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದಿಂದ ಆಯೋಜಿಸುವ 40ನೇ ರಾಜ್ಯ ಪತ್ರಕರ್ತರ ಸಮ್ಮೇಳನವನ್ನು ಬೀದರ್ ಜಿಲ್ಲೆಯಲ್ಲಿ ನಡೆಸಲು ನಿರ್ಧರಿಸಲಾಗಿದೆ. ನಗರದ ಪತ್ರಿಕಾ ಭವನದಲ್ಲಿ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಶಿವಾನಂದ ತಗಡೂರು ಅವರ ಅಧ್ಯಕ್ಷತೆಯಲ್ಲಿ ರವಿವಾರ ನಡೆದ ಜಿಲ್ಲಾ ಕಾರ್ಯನಿರತ ಸಂಘದ ಸರ್ವಸದಸ್ಯರ ಸಭೆಯಲ್ಲಿ ಸರ್ವಾನುಮತದಿಂದ ಈ ಬಗ್ಗೆ ನಿರ್ಣಯಿಸಲಾಯಿತು. ಸಭೆಯಲ್ಲಿ ಶಿವಾನಂದ ತಗಡೂರು ಅವರು ಮಾತನಾಡಿ, ನಾಡಿನ ಮೂಕುಟಪ್ರಾಯ ಗಡಿ ಜಿಲ್ಲೆ ಬೀದರ್ ನಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ 40ನೇ ರಾಜ್ಯ ಸಮ್ಮೇಳನ ಹಮ್ಮಿಕೊಳ್ಳಲು ಒಪ್ಪಿರುವುದು ಸಂತಸದ ಸಂಗತಿ ಎಂದು  ಹೇಳಿದರು. ಮೊದಲು ಈ ಸಮ್ಮೇಳನ ರಾಯಚೂರಿನಲ್ಲಿ ನಡೆಸಲು ತಿರ್ಮಾನಿಸಲಾಗಿತ್ತು. ಆದರೆ ಬೀದರ್ ಜಿಲ್ಲೆಯ ಹಿರಿಯ ಪತ್ರಕರ್ತರ ಕೋರಿಕೆ ಮೇರೆಗೆ ಅದನ್ನು ಬೀದರ್ ಜಿಲ್ಲೆಗೆ ನೀಡಲಾಗಿದೆ. ಸಂಪ್ರದಾಯದಂತೆ ಮುಖ್ಯಮಂತ್ರಿಗಳು ಸಮಾರಂಭ ಉದ್ಘಾಟಿಸುವರು. ಉಪಮುಖ್ಯಮಂತ್ರಿಗಳು, ವಿರೋಧ ಪಕ್ಷದ ನಾಯಕರು, ಈ ಭಾಗದ ಸಂಸದರು, ಶಾಸಕರು, ಜಿಲ್ಲೆಯ ಹಿರಿಯ ಅಧಿಕಾರಿಗಳನ್ನು ನಾಡಿನ ಹಾಗೂ ರಾಷ್ಟ್ರ ಮಟ್ಟದ ಚಿಂತನಕಾರರನ್ನು ಕಾರ್ಯಕ್ರಮಕ್ಕೆ ಅಹ್ವಾನಿಸಲಾಗುವುದು ಎಂದು ಹೇಳಿದರು. ಸಾಂಸ್ಕೃತಿಕ ನಾಯಕ ಬಸವಣ್ಣನವರ ಕರ್ಮಭೂಮಿಯಾಗಿರುವ ಈ ಪೂಣ್ಯ ಭೂಮಿಯಲ್ಲಿ 2006ರಲ್ಲಿ 29ನೇ ರಾಜ್ಯ ಸಮ್ಮೇಳನ ಹಮ್ಮಿಕೊಳ್ಳಲಾಗಿತ್ತು. ಅದರ ನಂತರ 20 ವರ್ಷಗಳ ಬಳಿಕ ಮತ್ತೆ ಇಲ್ಲಿ ಸಮ್ಮೇಳನ ಆಯೋಜಿಸುವ ಅವಕಾಶ ಒದಗಿ ಬಂದಿದೆ ಎಂದ ಅವರು, ಸಮ್ಮೇಳನ ಯಶಸ್ವಿಗಾಗಿ ಸ್ಮರಣ ಸಂಚಿಕೆ ರಚನೆ, ವಸತಿ, ಸಂಸ್ಕೃತಿ, ವೇದಿಕೆ, ಸಾರಿಗೆ, ಆರ್ಥಿಕ ಇತ್ಯಾದಿಗಳಿಗೆ ಸಮಿತಿಗಳನ್ನು ರಚಿಸಲಾಗುವುದು ಎಂದರು. ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರನ್ನು ಸಮ್ಮೇಳನದ ಸ್ವಾಗತ ಸಮಿತಿಯ ಅಧ್ಯಕ್ಷರನ್ನಾಗಿ ಸರ್ವಾನುಮತದಿಂದ ಸಭೆಯಲ್ಲಿ ಆಯ್ಕೆ ಮಾಡಲಾಯಿತು. ಇದೇ ವೇಳೆ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆಯವರನ್ನು ಸಭೆಗೆ ಅವ್ಹಾನಿಸಿ ಅವರಿಗೆ ಸಮ್ಮೇಳನದ ಸ್ವಾಗತ ಸಮಿತಿಯ ಜವಾಬ್ದಾರಿ ವಹಿಸಿ ಸನ್ಮಾನಿಸಲಾಯಿತು.  ಸಭೆಯಲ್ಲಿ ಸಂಘದ ಮಾಜಿ ಜಿಲ್ಲಾಧ್ಯಕ್ಷರಾದ ಬಾಬು ವಾಲಿ, ಮಲ್ಲಿಕಾರ್ಜುನ್ ಬಿರಾದಾರ್, ಬಸವರಾಜ್ ಕಾಮಶೆಟ್ಟಿ, ಅಶೋಕಕುಮಾರ್ ಕರಂಜಿ, ಅಪ್ಪಾರಾವ ಸೌದಿ ಹಾಗೂ ಶಿವಕುಮಾರ್ ಸ್ವಾಮಿ ಸೇರಿದಂತೆ ಜಿಲ್ಲೆಯ ಹಲವಾರು ಪತ್ರಕರ್ತರು ಇದ್ದರು.

ವಾರ್ತಾ ಭಾರತಿ 11 Jan 2026 10:07 pm

ಬೆಂಕಿ ಅಕಸ್ಮಿಕದಿಂದ ವ್ಯಕ್ತಿ ಮೃತ್ಯು

ಬೈಂದೂರು, ಜ.11: ದೇವರಿಗೆ ದೀಪ ಹಚ್ಚುವ ವೇಳೆ ಅಕಸ್ಮಿಕವಾಗಿ ಧರಿಸಿದ ನೈಟಿಗೆ ತಗಲಿದ ಬೆಂಕಿಯಿಂದ ಮೈಮುಖ ಸುಟ್ಟು ಮಂಗಳೂರು ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತಿದ್ದ ಉಪ್ಪುಂದ ಗ್ರಾಮದ ಶೋಭಾ (61) ಎಂಬವರು ಚಿಕಿತ್ಸೆ ಪಲಕಾರಿಯಾಗದೇ ಇಂದು ಬೆಳಗ್ಗೆ ಮೃತಪಟ್ಟಿದ್ದಾರೆ. ಜ.5ರಂದು ಘಟನೆ ನಡೆದಿತ್ತು. ಮಗ-ಸೊಸೆಯೊಂದಿಗೆ ಉಪ್ಪುಂದ ಪೇಟೆಯಲ್ಲಿ ವಾಸವಾಗಿದ್ದ ಶೋಭಾ ಅವರು ಸಂಜೆ 6ಗಂಟೆಗೆ ಮನೆಯಲ್ಲಿ ದೇವರಿಗೆ ಹಚ್ಚುವ ವೇಳೆ ಘಟನೆ ನಡೆದಿತ್ತು. ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ಕರೆದೊಯ್ಯಲಾಗಿತ್ತು. ಈ ಬಗ್ಗೆ ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಾರ್ತಾ ಭಾರತಿ 11 Jan 2026 10:03 pm

ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆ

ಉಡುಪಿ, ಜ.11: ಪ್ರತಿದಿನ ಮದ್ಯ ಸೇವಿಸಿ ಬಂದು ಮನೆಯಲ್ಲಿ ಗಲಾಟೆ ಮಾಡುವ ನಾಗಪ್ಪ ಕೇರಿ (49) ಎಂಬವರು ಶನಿವಾರ ಸಂಜೆ ಮನೆಯ ಸಮೀಪದ ತೆಂಗಿನ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆಗೆ ಪ್ರಯತ್ನಿಸಿದ್ದು, ಆಸ್ಪತ್ರೆಗೆ ದಾಖಲಾದವರು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಉಡುಪಿಯ ಮೂಡನಿಡಂಬೂರು ಗ್ರಾಮದ ಇವರು ಪ್ರತಿದಿನ ಕುಡಿದು ಮನೆಗೆ ಬಂದು ಹೆಂಡತಿಯೊಂದಿಗೆ ಜಗಳವಾಡುತಿದ್ದರು. ಶನಿವಾರ ಸಂಜೆ ಸಹ ಕುಡಿದು ಮನೆಗೆ ಬಂದು ಜಗಳವಾಡಿದ ಬಳಿಕ ಹೊರಗೆ ಹೋಗಿ ಮನೆಯ ಸಮೀಪದ ತೆಂಗಿನ ಮರಕ್ಕೆ ನೈಲಾನ್ ಹಗ್ಗದಿಂದ ನೇಣು ಬಿಗಿದು ಆತ್ಮಹತ್ಯೆಗೆ ಪ್ರಯತ್ನಿಸಿದ್ದರು. ತಕ್ಷಣ ನೆರೆಕೆರೆಯವರು ಅವರನ್ನು ಆಸ್ಪತ್ರೆಗೆ ಕರೆದೊಯ್ದಿದ್ದು, ಜಿಲ್ಲಾಸ್ಪತ್ರೆಯಲ್ಲಿ ಅವರನ್ನು ಪರೀಕ್ಷಿಸಿದ ವೈದ್ಯರು ಮೃತಪಟ್ಟಿರುವುದನ್ನು ದೃಢಪಡಿಸಿದ್ದರು. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಾರ್ತಾ ಭಾರತಿ 11 Jan 2026 10:02 pm

ಒಂದು ತಿಂಗಳಲ್ಲಿ ಇಂದಿರಾ ಕಿಟ್ ಪ್ರಾರಂಭ ಮಾಡುತ್ತೇವೆ : ಸಚಿವ ಕೆ.ಹೆಚ್ ಮುನಿಯಪ್ಪ

ಹುಮನಾಬಾದ್ : ಜನರಿಗೆ ಪೌಷ್ಠಿಕ ಆಹಾರ ತಲುಪಿಸುವ ನಿಟ್ಟಿನಲ್ಲಿ ಇಂದಿರಾ ಕಿಟ್ ಶೀಘ್ರದಲ್ಲಿಯೇ ಪ್ರಾರಂಭ ಮಾಡುತ್ತಿದ್ದೇವೆ ಎಂದು ಆಹಾರ ಸಚಿವ ಕೆ.ಹೆಚ್ ಮುನಿಯಪ್ಪ ಅವರು ಹೇಳಿದರು. ರವಿವಾರ ಬೆಳಿಗ್ಗೆ ಹುಮನಾಬಾದ್ ನ ಮಾಜಿ ಸಚಿವ ರಾಜಶೇಖರ್ ಪಾಟೀಲ್ ಅವರ ಮನೆಗೆ ಭೇಟಿ ನೀಡಿ ಸನ್ಮಾನ ಸ್ವೀಕರಿಸಿ ಸುದ್ಧಿಗಾರರೊಂದಿಗೆ ಮಾತನಾಡಿದ ಕೆ.ಹೆಚ್ ಮುನಿಯಪ್ಪ, 10 ಕೆ.ಜಿ ಅಕ್ಕಿ ನೀಡುವ ಮೂಲಕ ನಾವು ನುಡಿದಂತೆ ನಡೆದಿದ್ದೇವೆ. ಆದರೆ ಅಕ್ಕಿ ಸದುಪಯೋಗ ಆಗುತ್ತಿಲ್ಲ ಎಂಬ ಯೋಚನೆ ಮಾಡಿ ಇವಾಗ ಇಂದಿರಾ ಕಿಟ್ ಮೂಲಕ ಬೇಳೆ, ಎಣ್ಣೆ, ಉಪ್ಪು, ಸಕ್ಕರೆ ಕೊಡುವ ನಿರ್ಣಯ ಕ್ಯಾಬಿನೆಟ್ ನಲ್ಲಿ ಆಗಿದೆ. ಬಹುತೇಕ ಇದು ಒಂದು ತಿಂಗಳಲ್ಲಿ ಮನೆ ಮನೆಗೆ ಸೇರುವ ಕಾರ್ಯವಾಗಲಿದೆ ಎಂದು ತಿಳಿಸಿದರು. ಮುಖ್ಯಮಂತ್ರಿ ಬದಲಾವಣೆ ವಿಚಾರವಾಗಿ ಪ್ರತಿಕ್ರಿಯಿಸಿರುವ ಅವರು, ಮುಖ್ಯಮಂತ್ರಿ ತೀರ್ಮಾನ ಹೈಕಮಾಂಡ್ ನಲ್ಲಿದೆ. ಅದಕ್ಕೆ ನಾವು ಪ್ರತಿಕ್ರಿಯಿಸುವುದು ಸೂಕ್ತವಲ್ಲ. ಹೈಕಮಾಂಡ್ ತೀರ್ಮಾನವೇ ಅಂತಿಮ ತೀರ್ಮಾನವಾಗಿರುತ್ತದೆ. ಮುಖ್ಯಮಂತ್ರಿಯವರು ಒಳ್ಳೆಯ ಕಾರ್ಯ ಮಾಡುತ್ತಿದ್ದಾರೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಮಾಜಿ ಸಚಿವ ರಾಜಶೇಖರ್ ಪಾಟೀಲ್, ಮಾಜಿ ಸಚಿವ ಹೆಚ್.ಆಂಜನೇಯ, ವಿಧಾನ ಪರಿಷತ್ ಸದಸ್ಯರಾದ ಭೀಮರಾವ್ ಪಾಟೀಲ್, ಡಾ. ಚಂದ್ರಶೇಖರ್ ಪಾಟೀಲ್ ಹಾಗೂ ಮಾಜಿ ಸಂಸದ ಬಿ.ಎಲ್ ಚಂದ್ರಪ್ಪ ಸೇರಿದಂತೆ ಅನೇಕ ಕಾಂಗ್ರೆಸ್ ಮುಖಂಡರು, ಹುಮನಾಬಾದ್ ಕ್ಷೇತ್ರದ ಕಾರ್ಯಕರ್ತರು ಉಪಸ್ಥಿತರಿದ್ದರು.

ವಾರ್ತಾ ಭಾರತಿ 11 Jan 2026 10:00 pm

ಹಣ ಲೂಟಿ ಮಾಡಲು ಸಾಧ್ಯವಾಗದಿದ್ದಕ್ಕೆ ʼವಿಬಿ- ಜಿ ರಾಮ್‌ ಜಿ ಕಾಯ್ದೆʼಗೆ ವಿರೋಧ : ಆರ್.ಅಶೋಕ್

ಮೈಸೂರು : ರಾಜ್ಯ ಸರಕಾರದ ಆಡಳಿತ ವೈಫಲ್ಯ ಮತ್ತು ಭ್ರಷ್ಟಾಚಾರದ ವಿರುದ್ಧ ರಾಜ್ಯದ ನಾಲ್ಕು ಕಡೆಗಳಲ್ಲಿ ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗಿದ್ದು, ಕಾಂಗ್ರೆಸ್ ಸರಕಾರದ ಜನ ವಿರೋಧಿ ಧೋರಣೆಯನ್ನು ಜನರಿಗೆ ತಿಳಿಸುವ ಕೆಲಸ ವಾಡುತ್ತೇವೆ. ವಾಲ್ಮೀಕಿ ನಿಗಮದಲ್ಲಿ ಲೂಟಿ ಮಾಡಿದಂತೆ ವಿಬಿ- ಜಿ ರಾಮ್‌ಜಿ ಯೋಜನೆಯಡಿ ಹಣ ಕಬಳಿಸಲು ಸಾಧ್ಯವಾಗದ ಕಾರಣ ಹೊಟ್ಟೆ ಕಿಚ್ಚು ಬಂದಿದೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಹೇಳಿದರು. ಮೈಸೂರು ನಗರದ ಬಿಜೆಪಿ ಕಚೇರಿಯ ರವಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ವಾತನಾಡಿದ ಅವರು, ಶಾಸಕ ಜನಾರ್ಧನ ರೆಡ್ಡಿ ಅವರು ಮತ್ತೆ ಬಿಜೆಪಿಗೆ ವಾಪಾಸ್ ಬಂದಿದ್ದಕ್ಕೆ ಸಹಿಸಿಕೊಳ್ಳದ ಕಾಂಗ್ರೆಸ್ ನಾಯಕರು ಅವರ ವಿರುದ್ಧ ಷಡ್ಯಂತ್ರ ರೂಪಿಸಿ, ಅವರ ಮೇಲೆ ದಾಳಿಗೆ ಮುಂದಾಗಿದ್ದಾರೆ. ಈ ಘಟನೆಯಲ್ಲಿ ಬ್ಯಾನರ್ ವಿಷಯ ನೆಪ ಮಾತ್ರ ಅಷ್ಟೇ. ಕಾರ್ಯಕ್ರಮ ಸ್ಥಳಕ್ಕೂ, ಎಂಎಲ್‌ಎ ನಿವಾಸಕ್ಕೂ ನಾಲ್ಕು ಕಿ.ಮೀ. ದೂರವಿದೆ. ಉದ್ದೇಶ ಪೂರ್ವಕವಾಗಿಯೇ ಶಾಸಕರ ನಿವಾಸದ ಬಳಿ ಫ್ಲೆಕ್ಸ್ ಹಾಕಿ ಗಲಾಟೆ ವಾಡಲಾಗಿದೆ. ಗಲಾಟೆಯಲ್ಲಿ ಗುಂಡು ಹೊಡೆದವರು, ಹೊಡೆಸಿಕೊಂಡವರು ಮತ್ತು ಗುಂಡು ಕಾಂಗ್ರೆಸ್ಸಿನದ್ದೇ ಆಗಿದೆ ಎಂದು ಆರೋಪಿಸಿದರು. ಬಳ್ಳಾರಿ ಘಟನೆಯನ್ನು ಖಂಡಿಸಿ ಇದೇ ಜ.17ರಂದು ಬಳ್ಳಾರಿಯಲ್ಲಿ ಬಿಜೆಪಿ ವತಿಯಿಂದ ಬೃಹತ್ ಸಮಾವೇಶ ಮಾಡಲು ಪಕ್ಷದ ಕೋರ್ ಕಮಿಟಿ ನಿರ್ಧರಿಸಿದೆ. ಜತೆಗೆ ಮೈಸೂರಿನಲ್ಲಿ ಡ್ರಗ್ಸ್ ಹಾವಳಿ ಮಿತಿ ಮೀರಿದ್ದು, ಇದರ ವಿರುದ್ಧ ಹೋರಾಟ ಮಾಡಲು ಮೈಸೂರಿನಲ್ಲಿ ಜ.31ರಂದು ಸವಾವೇಶ ಹಮ್ಮಿಕೊಳ್ಳಲಾಗಿದೆ. ಹಾಗೆೆಯೇ 2 ತಿಂಗಳ ಗೃಹಲಕ್ಷ್ಮೀ ಹಣ ನೀಡದೆ ಜನತೆಗೆ ವಂಚಿಸಿರುವುದರ ವಿರುದ್ಧ ಹುಬ್ಬಳ್ಳಿಯಲ್ಲಿ ಸವಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು. ಯಾವ ಪುರುಷಾರ್ಥಕ್ಕೆ ವಿಶೇಷ ಅಧಿವೇಶನ: ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರಕಾರ ಮಹಾತ್ಮ ಗಾಂಧಿ ಉದ್ಯೋಗ ಖಾತರಿ ಯೋಜನೆಯಲ್ಲಿನ ಲೋಪದೋಷಗಳನ್ನು ಸರಿಪಡಿಸಿ, ಹೆಚ್ಚು ದಿನಗಳ ಉದ್ಯೋಗ ಭದ್ರತೆೊಂಂದಿಗೆ ವಿಕಸಿತ ಭಾರತ ಜಿ ರಾಮ್ ಜಿ ಕಾಯ್ದೆನ್ನು ಜಾರಿಗೆ ತರಲು ಮುಂದಾಗಿದೆ. ಇದನ್ನು ಕಾಂಗ್ರೆಸ್ ಸರಕಾರ ವಿರೋಧ ಮಾಡುವ ಜತೆಗೆ ವಿಶೇಷ ಅಧಿವೇಶನ ಕರೆಯುತ್ತಿದೆ. ಈ ಅಧಿವೇಶನ ಯಾವ ಪುರುಷಾರ್ಥಕ್ಕೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಚರ್ಚೆಗೆ ನಾವೂ ಸಿದ್ಧ: ಜಿ ರಾಮ್ ಜಿ ಕಾಯ್ದೆ ಸಂಬಂಧ ಸಿಎಂ ಅವರು ಬಹಿರಂಗ ಚರ್ಚೆಗೆ ಬರಲು ಹೇಳಿದ್ದಾರೆ. ನಾವು ಸಿದ್ಧರಿದ್ದೇವೆ. ಅವರು ಅಖಾಡ ಸಿದ್ಧಪಡಿಸಿದರೆ, ನಾವು ಚರ್ಚೆಗೆ ಹೋಗುತ್ತೇವೆ. ಸವಾಲನ್ನು ಅವರೇ ಹಾಕಿರುವುದರಿಂದ ಅಖಾಡ ಎಲ್ಲಿ ಎಂಬುದನ್ನು ಅವರೇ ನಿರ್ಧರಿಸಲಿ ಎಂದರು. ಡಿಕೆಶಿ ಬಂದರೆ ಸೇರಿಸಲ್ಲ: ಅಧಿಕಾರ ಹಂಚಿಕೆಯಾಗದೇ ಡಿ.ಕೆ.ಶಿವಕುಮಾರ್ ಅವರು ಅತೃಪ್ತಿಯಿಂದ ಬಿಜೆಪಿಗೆ ಬರಲು ಮುಂದಾದರೆ ಅವರನ್ನು ಪಕ್ಷಕ್ಕೆ ಬರಮಾಡಿಕೊಳ್ಳುವಿರಾ ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಡಿ.ಕೆ.ಶಿವಕುಮಾರ್ ಅವರು ಬಿಜೆಪಿ ಪಕ್ಷಕ್ಕೆ ಬರುತ್ತೇನೆ ಎಂದರೆ ಸೇರಿಸಲ್ಲ ಎಂದರು. ನಾನು ಹೇಳಿದಂತೆ ನವೆಂಬರ್ ಕ್ರಾಂತಿ ಆಗಿದೆ. ಮುಂದೆ ಅಧಿಕಾರ ಹಂಚಿಕೆ ಆಗಲಿದೆ. ಲೀಸ್ ಅವಧಿ ಮುಗಿದ ಮೇಲೆ ಸಿದ್ದರಾಮಯ್ಯ ಸಿಎಂ ಸ್ಥಾನ ಬಿಟ್ಟುಕೊಡಲಿದ್ದಾರೆ. ಇಲ್ಲವಾದರೆ ಒದ್ದು ಕಿತ್ತುಕೊಳ್ಳುವ ಜಾಯಮಾನದವರಾದ ಡಿ.ಕೆ.ಶಿವಕುಮಾರ್ ಅಧಿಕಾರ ಕಿತ್ತುಕೊಳ್ಳುತ್ತಾರೆ ಎಂದರು. ಸಂಸದ ಯದುವೀರ್ ಒಡೆಯರ್, ಶಾಸಕ ಟಿ.ಎಸ್.ಶ್ರೀವತ್ಸ, ಮಾಜಿ ಸಂಸದ ಪ್ರತಾಪ್ ಸಿಂಹ, ರಾಜ್ಯ ಉಪಾಧ್ಯಕ್ಷ ಎಂ.ರಾಜೇಂದ್ರ, ಕಾಂಪೋಸ್ಟ್ ನಿಗಮದ ಮಾಜಿ ಅಧ್ಯಕ್ಷ ಎಸ್.ಮಹದೇವಯ್ಯ, ಮೈಸೂರು ಗ್ರಾಮಾಂತರ ಅಧ್ಯಕ್ಷ ಕುಂಬ್ರಳ್ಳಿ ಎನ್.ಸುಬ್ಬಣ್ಣ, ನಗರಾಧ್ಯಕ್ಷ ಎಲ್.ನಾಗೇಂದ್ರ, ರಾಜ್ಯ ವಕ್ತಾರ ಎಂ.ಜಿ.ಮಹೇಶ್, ನಗರ ವಕ್ತಾರ ಎಂ.ವಿ.ಮೋಹನ್, ಪ್ರಧಾನ ಕಾರ್ಯದರ್ಶಿಗಳಾದ ಬಿ.ಎಂ.ರಘು, ವಿ.ಸೋಮಸುಂದರ್, ರಘುಮೂರ್ತಿ, ಮಾಜಿ ಮಹಾಪೌರ ಎಸ್.ಸತೀಶ್ ಸ್ವಾಮಿ, ಮಂಡ್ಯ ಜಿಲ್ಲಾ ಅಧ್ಯಕ್ಷ ವೆಂಕಟೇಶ್, ಮೈಸೂರು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪರೀಕ್ಷಿತ್ ರಾಜ್ ಅರಸ್ ಹಾಜರಿದ್ದರು.

ವಾರ್ತಾ ಭಾರತಿ 11 Jan 2026 9:58 pm

ವಿಬಿ-ಜಿ ರಾಮ ಜಿಯಿಂದ ಬಡ ಕಾರ್ಮಿಕರ ಹೊಟ್ಟೆ ಮೇಲೆ ಕಲ್ಲು ಹಾಕಲಾಗುತ್ತಿದೆ : ಸಚಿವ ಈಶ್ವರ್ ಖಂಡ್ರೆ

ಬೀದರ್ : ಮನರೇಗಾ ಯೋಜನೆಯನ್ನು ಬದಲಾವಣೆ ಮಾಡಿ ವಿಬಿ-ಜಿ ರಾಮ ಜಿ ತರಲಾಗುತ್ತಿದೆ. ಇದರಿಂದಾಗಿ ಬಡ ಕೂಲಿ ಕಾರ್ಮಿಕರ ಹೊಟ್ಟೆ ಮೇಲೆ ಕಲ್ಲು ಹಾಕಿ, ಅಂಬಾನಿ, ಅದಾನಿಯವರ ಜೇಬಿಗೆ ಹಣ ಹಾಕುವ ಕೆಲಸ ಕೇಂದ್ರ ಬಿಜೆಪಿ ಸರಕಾರ ಮಾಡುತ್ತಿದೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ ಅವರು ಕೇಂದ್ರ ಸರಕಾರದ ವಿರುದ್ಧ ಹರಿಹಾಯ್ದರು. ನಗರದ ಪತ್ರಿಕಾ ಭವನದಲ್ಲಿ ರವಿವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಸಚಿವ ಈಶ್ವರ್ ಖಂಡ್ರೆ, ಮನರೇಗಾ ಯೋಜನೆಯ ಉದ್ದೇಶ ಗ್ರಾಮೀಣ ಭಾಗದ ಬಡವರಿಗೆ 100 ದಿನಗಳವರೆಗೆ ಉದ್ಯೋಗ ಸೃಷ್ಟಿಸಿ, ಬೇಡಿಕೆಗೆ ಅನುಗುಣವಾಗಿ ಕೂಲಿ ನೀಡುವಂತಹ ಜಗತ್ತಿನಲ್ಲಿಯೇ ಮೊಟ್ಟ ಮೊದಲ ಕಾಯಿದೆಯಾಗಿದೆ. ಆದರೆ ಬಿಜೆಪಿ ಆ ಕಾಯಿದೆ ಬಗ್ಗೆ ಅಪಪ್ರಚಾರ ಮಾಡುತ್ತಿದೆ. ದೇಶದಲ್ಲಿ 12 ಕೋಟಿ ಜನ, ರಾಜ್ಯದಲ್ಲಿ 71.18 ಲಕ್ಷ ಜನ ಕೂಲಿ ಕಾರ್ಮಿಕರು ಸಕ್ರಿಯವಾಗಿದ್ದಾರೆ. ಈ ಎಲ್ಲರ ಉದ್ಯೋಗದ ಹಕ್ಕನ್ನು ಮೋದಿ ಸರಕಾರ ನೀರು ಪಾಲು ಮಾಡಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ ಅವರು, ಕಾಂಗ್ರೆಸ್ ವತಿಯಿಂದ ಹಳ್ಳಿಯಿಂದ ದಿಲ್ಲಿವರೆಗೆ ಮನರೇಗಾ ಬಚಾವ್ ಆಂದೋಲನ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು. ಗಾಂಧೀಜಿಯವರ ಹೋರಾಟದಿಂದ ನಮಗೆ ಸ್ವತಂತ್ರ ಸಿಕ್ಕಿದೆ. ಆ ಸ್ವಾತಂತ್ರ್ಯವನ್ನು ದುರುಪಯೋಗ ಮಾಡಿಕೊಂಡ ಮೋದಿ ಸರಕಾರ, ಗಾಂಧೀಜಿಯವರ ಹೆಸರನ್ನೇ ಅಳಿಸುವ ಕೆಲಸ ಮಾಡಿ ಅನ್ನ ತಿಂದವರ ಮನೆಗೆ ಕನ್ನ ಹಾಕುವ ದುಸ್ಸಾಹಸಕ್ಕೆಬಂದಿದ್ದು ಅತ್ಯಂತ ಖಂಡನೀಯವಾಗಿದೆ ಎಂದು ಹೇಳಿದರು.   ಬೀದರ್ ಜಿಲ್ಲೆಯಲ್ಲಿ ಸುಮಾರು 2,39,567 ಜಾಬ್ ಕಾರ್ಡ್ ಗಳಿಗೆ. ಇದರಲ್ಲಿ 1,40,363 ಜಾಬ್ ಕಾರ್ಡ್ ಗಳು ಕ್ರಿಯಾಶಿಲವಾಗಿವೆ. ಅವರ ಪಾರಿವಾರದವರಿಗೆ ಸೇರಿದರೆ 4,45,773 ಜನರಿಗೆ ಇದರಿಂದಾಗಿ ಲಾಭವಾಗುತ್ತಿದೆ. ಜಿಲ್ಲೆಯ 2 ಕೋಟಿ 93 ಲಕ್ಷ ಕೂಲಿಕಾರ್ಮಿಕರ ಹಣ ಇನ್ನು ಪಾವತಿ ಮಾಡಬೇಕಿದೆ. ಕೇಂದ್ರದಲ್ಲಿ ಬಿಜೆಪಿ ಸರಕಾರ ಬಂದಾಗಿನಿಂದ ಇದನ್ನು ದುರ್ಬಲಗೊಳಿಸುವ ಷಡ್ಯಂತ್ರ ಮಾಡುತ್ತಿದ್ದಾರೆ ಎಂದು ಅವರು ಆರೋಪಿಸಿದರು. ಮನರೇಗಾ ಯೋಜನೆ ಅಡಿಯಲ್ಲಿ ಸುಮಾರು 200 ರಿಂದ 226 ಕಾಮಗಾರಿಗಳು ಪಡೆಯುವುದಕ್ಕೆ ಅವಕಾಶವಿತ್ತು. ಆದರೆ ಕೇಂದ್ರದ ಬಿಜೆಪಿ ಸರ್ಕಾರದ ಧೋರಣೆ ಈ ಎಲ್ಲ ಕಾಮಗಾರಿಗಳಿಗೆ ತಡೆಯುವ ಕೆಲಸ ಮಾಡಿ ಬರೀ ಬಂಡವಾಳಶಾಹಿ, ಉದ್ಯೋಗಪತಿಗಳಿಗೆ ಹಣ ಹೋಗಬೇಕು ಎನ್ನುವುದಾಗಿದೆ. ನಮ್ಮ ಜಿಲ್ಲೆಯಲ್ಲಿ ಶೇ. 42 ರಷ್ಟು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರಿದ್ದಾರೆ.  ಶೇ. 24 ರಷ್ಟು ಪರಿಶಿಷ್ಟ ಜಾತಿಯ ಕೂಲಿ ಕಾರ್ಮಿಕರು, ಶೇ. 18 ರಷ್ಟು ಪರಿಶಿಷ್ಟ ಪಂಗಡದ ಕೂಲಿ ಕಾರ್ಮಿಕರು, ಶೇ. 56 ರಷ್ಟು ಮಹಿಳೆಯರು ಇದ್ದಾರೆ. ಇವರೆಲ್ಲ ಬಡವರಾಗಿದ್ದು, ಇವರ ಹೊಟ್ಟೆ ಮೇಲೆ ಕಲ್ಲು ಹಾಕುವ ಕೆಲಸ ಕೇಂದ್ರ ಸರಕಾರ ಮಾಡುತ್ತಿದೆ ಎಂದು ಆಕ್ರೋಶ ಹೊರಹಾಕಿದರು. ಭಾರತದ ಪ್ರತಿ ಗ್ರಾಮ ಪಂಚಾಯತ್ ನವರು ಮನರೇಗಾದ ಲಾಭ ಪಡೆಯಬಹುದಾಗಿತ್ತು. ಆದರೆ ಇವಾಗ ಕೇಂದ್ರ ಸರಕಾರದಿಂದ ಅಧಿಸೂಚಿಸಲ್ಪಟ್ಟ ಗ್ರಾಮಗಳಲ್ಲಿನ ಕಾರ್ಮಿಕರು ಮಾತ್ರ ಈ ಉದ್ಯೋಗದ ಲಾಭ ಪಡೆಯುತ್ತಾರೆ. ಜಿ ಎಸ್ ಟಿ ಸಂಪೂರ್ಣ ಕೇಂದ್ರ ಸರಕಾರದ ಅಧೀನದಲ್ಲಿದೆ. ತೆರಿಗೆ ಕಟ್ಟುವುದರಲ್ಲಿ ಕರ್ನಾಟಕ ರಾಜ್ಯ ಎರಡನೇ ಸ್ಥಾನದಲ್ಲಿದೆ. ಕೇಂದ್ರ ಸರಕಾರ ಕರ್ನಾಟಕ ರಾಜ್ಯಕ್ಕೆ ಸಮರ್ಪಕವಾಗಿ ನೀಡುವ ಹಣ ನೀಡಲಿಲ್ಲ. ಹೀಗಾಗಿ ಕೇಂದ್ರದ ಬಿಜೆಪಿ ಸರಕಾರ ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯ ಸರಕಾರಗಳಿಗೆ ದುರ್ಬಲ ಮಾಡಿ, ಸರ್ವಾಧಿಕಾರಿ ಧೋರಣೆ, ಹಿಟ್ಲರ್ ಶಾಹಿ ಧೋರಣೆ ಅನುಸರಿಸುತ್ತಿದೆ. ಇದರಿಂದ ಒಕ್ಕೂಟ ವ್ಯವಸ್ಥೆ, ದೇಶದ ಅಖಂಡತೆಗೆ ಧಕ್ಕೆಯಾಗುತ್ತದೆ ಎಂದು ಅವರು ಕಿಡಿ ಕಾರಿದರು. ಈ ಸಂದರ್ಭದಲ್ಲಿ ಮಾಜಿ ಸಚಿವ ರಾಜಶೇಖರ್ ಪಾಟೀಲ್, ವಿಧಾನ ಪರಿಷತ್ ಸದಸ್ಯರಾದ ಡಾ.ಚಂದ್ರಶೇಖರ್ ಪಾಟೀಲ್, ಭೀಮರಾವ್ ಪಾಟೀಲ್, ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷ ಬಸವರಾಜ್ ಜಾಬಶೆಟ್ಟಿ, ಗ್ಯಾರಂಟಿ ಯೋಜನೆಗಳ ಜಿಲ್ಲಾಧ್ಯಕ್ಷ ಅಮೃತರಾವ್ ಚಿಮಕೋಡ್, ಸಂಜಯ್ ಜಾಗೀರದಾರ್, ಜಾರ್ಜ್, ಬಾಬುರಾವ್ ತುಂಬಾ ಹಾಗೂ ರವಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

ವಾರ್ತಾ ಭಾರತಿ 11 Jan 2026 9:57 pm

ಕೃಷ್ಣಾ ನದಿಗೆ ಹರಿದು ಬರುತ್ತಿರುವ ಕೋರ್ ಗ್ರೀನ್ ಸಕ್ಕರೆ ಕಾರ್ಖಾನೆಯ ಕಲುಷಿತ ನೀರು: ಕ್ರಮಕ್ಕೆ ಒತ್ತಾಯ

ವಡಗೇರಾ: ತಾಲೂಕಿನ ತುಮಕೂರು ಗ್ರಾಮದ ಕೋರ್ ಗ್ರೀನ್ ಸಕ್ಕರೆ ಕಾರ್ಖಾನೆಯ ಕಲುಷಿತ ನೀರು ಹಳ್ಳದ ಮೂಲಕ ಕೃಷ್ಣಾ ನದಿಗೆ ಹರಿಬಿಡುತ್ತಿದ್ದು ಇದರಿಂದ ಜನ ಜಾನುವಾರುಗಳಿಗೆ ಮಾರಕವಾಗಿದೆ. ಇದರಿಂದ ಕಾರ್ಖಾನೆ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ರಾಜ್ಯ ರೈತ ಸಂಘ ಹಸಿರು ಸೇನೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ರೆಡ್ಡಿ ಚನ್ನೂರ ಒತ್ತಾಯಿಸಿದ್ದಾರೆ. ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ತುಮಕೂರು ಗ್ರಾಮದಲ್ಲಿರುವ ಕೋರ್ ಗ್ರೀನ್ ಸಕ್ಕರೆ ಕಾರ್ಖಾನೆಯ ಕಲುಷಿತ ನೀರು ತ್ಯಾಜ್ಯಗಳನ್ನು ಕೃಷ್ಣಾ ನದಿಗೆ ಸುಮಾರು ವರ್ಷಗಳಿಂದ ಹರಿ ಬಿಡಲಾಗುತ್ತಿದೆ.  ಇದರಿಂದ ನದಿಯ ನೀರು ಕಲುಷಿತಗೊಳ್ಳುತ್ತಿದೆ. ಈ ನೀರು ಸೇವನೆಯಿಂದ ಜಲಚರ ಪ್ರಾಣಿಗಳು ಹಾಗೂ ದನಕರುಗಳು ಸಾವನ್ನಪ್ಪುತ್ತಿವೆ. ಆದರೆ ಸಂಬಂಧಿಸಿದ ಪರಿಸರ ಮಾಲಿನ್ಯ ಇಲಾಖೆ ಅಧಿಕಾರಿಗಳು ಮಾತ್ರ ಕಣ್ಮುಚ್ಚಿ ಕುಳಿತಿದ್ದು ಕಾರ್ಖಾನೆಯೊಂದಿಗೆ ಅಧಿಕಾರಿಗಳು ಶಾಮೀಲಾಗಿರುವ ಶಂಕೆ ವ್ಯಕ್ತವಾಗುತ್ತಿದೆ ಎಂದು ಅವರು ಆರೋಪಿಸಿದ್ದಾರೆ. ಕೃಷ್ಣಾ ನದಿಗೆ ನೀರು ಹರಿಬಿಡುತ್ತಿರುವುದರಿಂದ ಮಿನು ಜಲಚರ ಪ್ರಾಣಿಗಳ ಮಾರಣಹೋಮ ನಡೆಯುತ್ತಿದೆ. ನದಿಯ ನೀರು ಸಂಪೂರ್ಣವಾಗಿ ಮಲಿನವಾಗುತ್ತಿದೆ. ಕೂಡಲೇ ಸರಕಾರ ಮತ್ತು ಜಿಲ್ಲಾಡಳಿತ ಎಚ್ಚೆತ್ತುಕೊಂಡು ನದಿಗೆ ನೀರು ಹರಿಯುವುದನ್ನು ತಡೆಯುವುದರ ಜೊತೆಗೆ ಸಕ್ಕರೆ ಕಾರ್ಖಾನೆಯ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು. ಒಂದು ವೇಳೆ ನಿರ್ಲಕ್ಷ ವಹಿಸಿದ್ದಲ್ಲಿ ರಾಜ್ಯ ರೈತ ಸಂಘ ಹಸಿರು ಸೇನೆ ರಾಜ್ಯದ್ಯಕ್ಷರಾದ ಚೂನಪ್ಪ ಪೂಜಾರಿ ಹಾಗೂ ರಾಜ್ಯ ಕಾರ್ಯಧ್ಯಕ್ಷರಾದ ಮಹೇಶ್ ಪಾಟೀಲ್ ಸುಬೇದಾರ್ ನೇತೃತ್ವದಲ್ಲಿ ಕೋರ್ ಗ್ರೀನ್ ಸಕ್ಕರೆ ಕಾರ್ಖಾನೆ ವಿರುದ್ಧ ತೀವ್ರ ಹೋರಾಟ ಮಾಡುವುದಾಗಿ ರಾಜ್ಯ ರೈತ ಸಂಘ ಹಸಿರು ಸೇನೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ರೆಡ್ಡಿ ಚನ್ನೂರ ಎಚ್ಚರಿಸಿದ್ದಾರೆ.

ವಾರ್ತಾ ಭಾರತಿ 11 Jan 2026 9:49 pm

IND Vs NZ- ಚೇಸ್ ಮಾಸ್ಟರ್ ವಿರಾಟ್ ಕೊಹ್ಲಿ ಸೆಂಚುರಿ ತಪ್ಪಿದರೂ ಎಡವದ ಕೆಎಲ್ ರಾಹುಲ್ ಭರ್ಜರಿ ಫಿನಿಶ್!

India Beat New Zealand- ಭರ್ಜರಿ ಫಾರ್ಮ್ ನಲ್ಲಿರುವ ವಿರಾಟ್ ಕೊಹ್ಲಿ ಅವರ ಶತಕದ ಹೊಸ್ತಿಲಲ್ಲಿ ಔಟಾದಾಗ ಪಂದ್ಯ ನ್ಯೂಜಿಲೆಂಡ್ ಕಡೆಗೆ ವಾಲಿತ್ತು. ಎರಡು ಓವರ್ ಗಳಲ್ಲಿ 3 ವಿಕೆಟ್ ಉರುಳಿದ ಮಧ್ಯಮ ವೇಗಿ ಕೈಲ್ ಜಾಮಿಸನ್ ಭಾರತದ ಪಾಳಯದಲ್ಲಿ ಆತಂಕ ಸೃಷ್ಟಿಸಿದ್ದರು. ಆದರೆ ಅನುಭವಿ ಬ್ಯಾಟರ್ ಕರ್ನಾಟಕದ ಕೆಎಲ್ ರಾಹುಲ್ ಮತ್ತು ಹರ್ಷಿತ್ ರಾಣಾ ಅವರ ಸಮಯೋಚಿತ ಬ್ಯಾಟಿಂಗ್ ನೆರವಿನಿಂದ ಭಾರತ ತಂಡ ಇನ್ನೂ ಒಂದು ಓವರ್ ಇರುವಂತೆಯೇ ಜಯಭೇರಿ ಬಾರಿಸಿತು.

ವಿಜಯ ಕರ್ನಾಟಕ 11 Jan 2026 9:45 pm

IND Vs NZ ODI | ಮತ್ತೆ ಅಬ್ಬರಿಸಿದ ವಿರಾಟ್ ಕೊಹ್ಲಿ, ಕಿವೀಸ್ ಮಣಿಸಿದ ಭಾರತ

ವಡೋದರ: ಇಲ್ಲಿನ ವಡೋದರ ಇಂಟರ್ನ್ಯಾಷನಲ್ ಕ್ರೀಡಾಂಗಣದಲ್ಲಿ ನಡೆದ ನ್ಯೂಝಿಲ್ಯಾಂಡ್ ವಿರುದ್ಧದ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಭಾರತ ತಂಡವು 4 ವಿಕೆಟ್ ಗಳ ಜಯ ಸಾಧಿಸಿದೆ. ಇತ್ತೀಚಿಗಷ್ಟೇ ದೇಶೀಯ ಅಂಗಣದಲ್ಲಿ ವಿಜಯ್ ಹಝಾರೆ ಟ್ರೋಫಿಯಲ್ಲಿ ತಮ್ಮಲ್ಲಿ ಕ್ರಿಕೆಟ್ ಆಡುವ ಉತ್ಸಾಹ ಬತ್ತಿಲ್ಲ ಎಂದು ಸೆಂಚುರಿ ಬಾರಿಸಿದ್ದ ವಿರಾಟ್ ಕೊಹ್ಲಿ, ನ್ಯೂಝಿಲ್ಯಾಂಡ್ ವಿರುದ್ಧವೂ ಅದೇ ಲಯದಲ್ಲಿ ಆಟವಾಡಿದರು. 91 ಎಸೆತ ಎದುರಿಸಿದ ವಿರಾಟ್ ಕೊಹ್ಲಿ, 8 ಬೌಂಡರಿಯೊಂದಿಗೆ 1 ಸಿಕ್ಸರ್ ಬಾರಿಸಿ ಶತಕದ ಅಂಚಿನಲ್ಲಿ ಕೈಲ್ ಜೇಮಿಸನ್ ಅವರಿಗೆ ವಿಕೆಟ್ ಒಪ್ಪಿಸಿ ಪೆವಿಲಿಯನ್ ಹಾದಿ ಹಿಡಿದರು. ನ್ಯೂಝಿಲ್ಯಾಂಡ್ ನೀಡಿದ 300 ರನ್ ಗಳ ಬೆನ್ನತ್ತಿದ ಭಾರತ ತಂಡದ ಪರವಾಗಿ ರೋಹಿತ್ ಶರ್ಮಾ, ನಾಯಕ ಶುಭಮನ್ ಗಿಲ್ ಇನ್ನಿಂಗ್ಸ್ ಅರಂಭಿಸಿದರು. ರೋಹಿತ್ 26, ಶುಭಮನ್ ಗಿಲ್ 56 ರನ್ ಗಳಿಸಿದರು. ಶ್ರೇಯಸ್ ಅಯ್ಯರ್ 49 ರನ್ ಗಳ ಕೊಡುಗೆ ನೀಡಿದರು. ರವೀಂದ್ರ ಜಡೇಜಾ 4, ವಾಶಿಂಗ್ಟನ್ ಸುಂದರ್ 7 ರನ್ ಗಳಿಸಿದರು. ವಿಕೆಟ್ ಕೀಪರ್ ಕೆ ಎಲ್ ರಾಹುಲ್ 29, ಹರ್ಷಿತ್ ರಾಣಾ 29 ರನ್ ಗಳಿಸಿ ತಂಡವನ್ನು ಗೆಲುವಿನ ದಡಕ್ಕೆ ಕೊಂಡೊಯ್ದರು. ಭಾರತ ತಂಡವು 6 ವಿಕೆಟ್ ನಷ್ಟಕ್ಕೆ 49 ಓವರ್ ಗಳಲ್ಲಿ 306 ರನ್ ಗಳಿಸಿತು. ನ್ಯೂಝಿಲ್ಯಾಂಡ್ ಪರ ಕೈಲ್ ಜೇಮಿಸನ್ ಬಿಗು ದಾಳಿ ನಡೆಸಿದರು. ಅವರು ಭಾರತ ತಂಡದ ಪ್ರಮುಖ 4 ವಿಕೆಟ್ ಕಿತ್ತರು. ಉಳಿದಂತೆ ಆದಿತ್ಯ ಅಶೋಕ್, ಕ್ರಿಸ್ ಕ್ಲರ್ಕ್ ತಲಾ ಒಂದು ವಿಕೆಟ್ ಪಡೆದರು. ಮೊದಲು ಟಾಸ್ ಗೆದ್ದ ಭಾರತ ತಂಡವು ನ್ಯೂಝಿಲ್ಯಾಂಡ್ ತಂಡವನ್ನು ಬ್ಯಾಟಿಂಗ್ ಗೆ ಆಹ್ವಾನಿಸಿತು. 50 ಓವರ್ ಗಳಲ್ಲಿ 8 ವಿಕೆಟ್ ಕಳೆದುಕೊಂಡ ಕಿವೀಸ್ 300 ರನ್ ಗಳಿಸಿತು. ಕಿವೀಸ್ ಪರ ಡೆರಿಲ್ ಮಿಷೆಲ್ 84 ರನ್ ಗಳಿಸಿದರು. ಹೆನ್ರಿ ನಿಕೋಲಸ್ 62 ರನ್ ಬಾರಿಸಿದರು. ಭಾರತ ತಂಡದ ಪರ ಮುಹಮ್ಮದ್ ಸಿರಾಜ್, ಹರ್ಷಿತ್ ರಾಣಾ, ಪ್ರಸಿದ್ ಕೃಷ್ಣ ತಲಾ 2 ವಿಕೆಟ್ ಪಡೆದರು. ಕುಲ್ ದೀಪ್ ಯಾದವ್ 1 ವಿಕೆಟ್ ಪಡೆದರು.

ವಾರ್ತಾ ಭಾರತಿ 11 Jan 2026 9:44 pm

ಯಾದಗಿರಿ ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿಯಾಗಿ ಚಾಂದ್‌ ಪಾಶ ಗುರುಮಠಕಲ್ ನೇಮಕ

ಯಾದಗಿರಿ: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ರಾಜ್ಯಾಧ್ಯಕ್ಷರಾದ ಡಿ.ಕೆ. ಶಿವಕುಮಾರ್ ಅವರ ಸೂಚನೆ ಮೇರೆಗೆ ಹಿರಿಯ ಕಾಂಗ್ರೆಸ್ ಮುಖಂಡರಾದ ಚಾಂದ್‌ ಪಾಶ ಗುರುಮಠಕಲ್ ಅವರನ್ನು ಯಾದಗಿರಿ ಜಿಲ್ಲಾ ಕಾಂಗ್ರೆಸ್ ಸಮಿತಿಯ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿದೆ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಬಸರೆಡ್ಡಿ ಎಂ. ಪಾಟೀಲ್ ಅವರು ನೂತನ ಕಾರ್ಯದರ್ಶಿ ಚಾಂದ್‌ ಪಾಶ ಅವರಿಗೆ ಅಧಿಕೃತ ಆದೇಶ ಪತ್ರವನ್ನು ಹಸ್ತಾಂತರಿಸಿ, ಶಾಲು ಹೊದಿಸಿ ಸನ್ಮಾನಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಬಸರೆಡ್ಡಿ ಎಂ. ಪಾಟೀಲ್, ಚಾಂದ್‌ ಪಾಶ ಅವರ ಪಕ್ಷನಿಷ್ಠೆ ಹಾಗೂ ಸೇವೆಯನ್ನು ಗುರುತಿಸಿ ಈ ಹುದ್ದೆಗೆ ನೇಮಕ ಮಾಡಲಾಗಿದೆ ಎಂದು ತಿಳಿಸಿದರು. ಅವರಿಗೆ ವಹಿಸಲಾದ ಹೊಣೆಯನ್ನು ನಿಷ್ಠೆಯಿಂದ ನಿರ್ವಹಿಸಿ, ಹಿರಿಯ ನಾಯಕರ ಮಾರ್ಗದರ್ಶನದಲ್ಲಿ ಕಾರ್ಯನಿರ್ವಹಿಸಬೇಕು ಎಂದು ಸಲಹೆ ನೀಡಿದರು. ಜೊತೆಗೆ ಕಿರಿಯ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಅವರ ಸಹಕಾರದೊಂದಿಗೆ ಪಕ್ಷ ಸಂಘಟನೆಯನ್ನು ಮತ್ತಷ್ಟು ಬಲಪಡಿಸುವಂತೆ ಸೂಚಿಸಿದರು. ಕಾಂಗ್ರೆಸ್ ಪಕ್ಷದ ಸಿದ್ಧಾಂತಗಳನ್ನು ಜನಸಾಮಾನ್ಯರಿಗೆ ತಲುಪಿಸಿ ಜಿಲ್ಲೆಯಲ್ಲಿ ಪಕ್ಷದ ಬಲವರ್ಧನೆಗಾಗಿ ಪ್ರಾಮಾಣಿಕವಾಗಿ ಕೆಲಸ ಮಾಡುವಂತೆ ಅವರು ಕರೆ ನೀಡಿದರು. ನೂತನ ಕಾರ್ಯದರ್ಶಿಯಾಗಿ ನೇಮಕಗೊಂಡ ಚಾಂದ್‌ ಪಾಶ ಗುರುಮಠಕಲ್ ಮಾತನಾಡಿ, ಯಾದಗಿರಿ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದ ಹಿಡಿತವನ್ನು ಗಟ್ಟಿಗೊಳಿಸಲು ಸಾಧ್ಯವಾದಷ್ಟು ಶ್ರಮಿಸುವುದಾಗಿ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಅಲ್ಲಾ ಪಾಟೀಲ್, ಶಹಾಪುರ ಶರಣಪ್ಪ ಮೊಟನಹಳ್ಳಿ, ಮಾಣಿಕ್ ಮುಕಡಿ, ಬಸವರಾಜ್ ಬಾಚವಾರ್, ಸಾಯಪ್ಪ ಪೆದ್ದಬೋಯಿ, ತಿಮಯ್ಯ ನಾಯಕ ಸೇರಿದಂತೆ ಜಿಲ್ಲಾ ಕಾಂಗ್ರೆಸ್ ಸಮಿತಿಯ ಹಿರಿಯ ಹಾಗೂ ಕಿರಿಯ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.

ವಾರ್ತಾ ಭಾರತಿ 11 Jan 2026 9:36 pm

ಎಡಪದವು: ಚಾಕುವಿನಿಂದ ದನಕ್ಕೆ ಇರಿತದ ಗಾಯ; ಸ್ವಯಂ ಪ್ರೇರಿತ ಪ್ರಕರಣ ದಾಖಲು

ಮಂಗಳೂರು: ಬಜ್ಪೆ ಪೊಲೀಸ್ ಠಾಣಾ ವ್ಯಾಪ್ತಿಯ ಎಡಪದವು ಬೀದಿ ಬದಿ ಚಾಕುವಿನಿಂದ ದನಕ್ಕೆ ಇರಿತದ ಗಾಯವಾದ ಘಟನೆ ರವಿವಾರ ನಡೆದಿದೆ. ಈ ಬಗ್ಗೆ ಅಂಗಡಿಯ ಮಾಲಕ ಮತ್ತು ದನದ ಮಾಲಕನ ವಿರುದ್ಧ ಪೊಲೀಸರಿಂದ ಸ್ವಯಂ ಪ್ರೇರಿತ ಪ್ರಕರಣ ದಾಖಲಾಗಿದೆ. ಎಡಪದವು ಬಳಿ ಬೀದಿ ಬದಿಯ ಅಂಗಡಿಯೊಂದರಲ್ಲಿ ಅಯ್ಯಪ್ಪ ಮಾಲಧಾರಿಗಳು ಸಾಮಗ್ರಿ ಖರೀದಿಸುತ್ತಿದ್ದರು. ಈ ಸಂದರ್ಭ ಅಲ್ಲಿಗೆ ಬಂದ ದನ ಅಂಗಡಿ ಸಾಮಗ್ರಿಗಳನ್ನು ತಿನ್ನಲು ಯತ್ನಿಸಿದೆ. ತಕ್ಷಣ ಅಂಗಡಿ ವ್ಯಾಪಾರಿ ತನ್ನ ಕೈಯಲ್ಲಿದ್ದ ತರಕಾರಿ ಕತ್ತರಿಸಲು ಬಳಸುವ ಚಾಕು ತೋರಿಸಿ ದನವನ್ನು ಓಡಿಸಲು ಯತ್ನಿಸಿದ್ದು, ಈ ವೇಳೆ ದನದ ಮುಖಕ್ಕೆ ಇರಿಯಲ್ಪಟ್ಟು ಗಾಯವಾಗಿದೆ. ಘಟನೆಗೆ ಸಂಬಂಧಿಸಿ ಪ್ರತಿಕ್ರಿಯೆ ನೀಡಿರುವ ಪೊಲೀಸ್ ಆಯುಕ್ತರು ಸಾಕುಪ್ರಾಣಿಗಳನ್ನು ಸುರಕ್ಷಿತವಾಗಿ ನೋಡಿ ಕೊಳ್ಳುವುದು ಅದರ ಮಾಲಕರ ಕರ್ತವ್ಯವಾಗಿದೆ. ಅದಲ್ಲದೆ ಜಾನುವಾರುಗಳ ಮೇಲೆ ಕ್ರೌರ್ಯವನ್ನು ಎಸಗುವುದು ಕೂಡ ದಂಡನಾರ್ಹ ಅಪರಾಧವಾಗಿದೆ. ಹಾಗಾಗಿ ದನಕ್ಕೆ ಆಹಾರ ನೀಡದೆ ರಸ್ತೆಯಲ್ಲಿ ಅಪಾಯಕಾರಿ ಸ್ಥಿತಿಯಲ್ಲಿ ಓಡಾಡಲು ಬಿಟ್ಟಿದ್ದ ದನದ ಮಾಲಕ ಮತ್ತು ದನಕ್ಕೆ ಇರಿದ ಆರೋಪದ ಮೇಲೆ ಪ್ರಾಣಿಹಿಂಸೆ ತಡೆ ಕಾಯ್ದೆಯಡಿ ಬೀದಿಬದಿ ಅಂಗಡಿಯ ಮಾಲಕನ ವಿರುದ್ಧ ಬಜ್ಪೆ ಠಾಣೆಯಲ್ಲಿ ಸ್ವಯಂಪ್ರೇರಿತ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ.

ವಾರ್ತಾ ಭಾರತಿ 11 Jan 2026 9:33 pm

ಬಿಡಿಎ 8 ಬಡಾವಣೆಗಳು ಗ್ರೇಟರ್ ಬೆಂಗಳೂರು ಪ್ರಾಧಿಕಾರಕ್ಕೆ ಹಸ್ತಾಂತರ: ನಗರಾಭಿವೃದ್ಧಿ ಇಲಾಖೆ ಅಧಿಸೂಚನೆ; ಯಾವೆಲ್ಲಾ?

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ 8 ಬಡಾವಣೆಗಳನ್ನು ಗ್ರೇಟರ್ ಬೆಂಗಳೂರು ಪ್ರಾಧಿಕಾರಕ್ಕೆ ಹಸ್ತಾಂತರಿಸಲಾಗಿದೆ. ತೆರಿಗೆ ವಸೂಲಿ ಅಧಿಕಾರವನ್ನು ನಗರ ಪಾಲಿಕೆಗಳಿಗೆ ನೀಡಲಾಗಿದ್ದು, ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಬಿಡಿಎ ಶೇ.50ರಷ್ಟು ವೆಚ್ಚ ಭರಿಸಲಿದೆ. ಭೂ ಮಾಲೀಕತ್ವ ವಿವಾದಗಳಿರುವ ಪ್ರದೇಶಗಳನ್ನು ಹಸ್ತಾಂತರಿಸುವಂತಿಲ್ಲ ಎಂದು ಸೂಚಿಸಲಾಗಿದೆ.

ವಿಜಯ ಕರ್ನಾಟಕ 11 Jan 2026 9:32 pm

ಯಾದಗಿರಿ| ಕೆಂಭಾವಿ ಪಟ್ಟಣದ ಭೋವಿ ವಡ್ಡರ ಸಮಾಜದ ನೂತನ ಪದಾಧಿಕಾರಿಗಳ ಆಯ್ಕೆ

ಕೆಂಭಾವಿ: ಪಟ್ಟಣದ ಭೋವಿ ವಡ್ಡರ ಸಮಾಜದ ಸಭೆ  ಶನಿವಾರ ಸಂಜೆ ಶ್ರೀ ಸಂಜೀವು ಆಂಜನೇಯ ದೇವಸ್ಥಾನದಲ್ಲಿ ನಡೆಯಿತು. ಸಭೆಯಲ್ಲಿ ಕೆಂಭಾವಿ ಪಟ್ಟಣದ ಭೋವಿ ವಡ್ಡರ ಸಮಾಜದ ನೂತನ ಪದಾಧಿಕಾರಿಗಳನ್ನು ಸಮಾಜದ ಮುಖಂಡರ ಸಮ್ಮುಖದಲ್ಲಿ ಒಮ್ಮತದಿಂದ ಆಯ್ಕೆ ಮಾಡಲಾಯಿತು. ನೂತನವಾಗಿ ಗೌರವ ಅಧ್ಯಕ್ಷರಾಗಿ ಯಂಕಪ್ಪ ಚಂದಾಪುರ, ಅಧ್ಯಕ್ಷರಾಗಿ ದೇವಪ್ಪ ಹಂದ್ರಾಳ, ಉಪಾಧ್ಯಕ್ಷರಾಗಿ ಮಂಜುನಾಥ್ ಎಚ್, ಕಾರ್ಯದರ್ಶಿಯಾಗಿ ವಿಜಯಕುಮಾರ, ಸಹ ಕಾರ್ಯದರ್ಶಿಯಾಗಿ ರಮೇಶ ಚಿಂಚೋಳಿ, ಸಂಚಾಲಕರಾಗಿ ರಾಜು ನಾಗಪ್ಪ ಅವರನ್ನು ಆಯ್ಕೆ ಮಾಡಲಾಯಿತು. ಇದೇ ಸಂದರ್ಭದಲ್ಲಿ ಕಾರ್ಯಕಾರಿ ಸದಸ್ಯರಾಗಿ ರಂಗಪ್ಪ ವಡ್ಡರ, ಬಸವರಾಜ ಮ್ಯಾಗೇರಿ, ಚಳಿಗೆಪ್ಪ ವಡ್ಡರ, ಮಾರುತಿ ಆರ್. ಭೋವಿ ಅವರನ್ನು ನೇಮಕ ಮಾಡಲಾಯಿತು. ಸಭೆಯಲ್ಲಿ ಕುಮಾರ್ ಆರ್. ಭೋವಿ, ವೆಂಕಟೇಶ್ ಚಂದಾಪುರ, ಹಳ್ಳೆಪ್ಪ ವಡ್ಡರ, ಅಂಬರೀಶ ಮ್ಯಾಗೇರಿ, ಚಂದ್ರು ಚಿಂಚೋಳಿ, ಭೀಮಣ್ಣ ಭೈರಮಡ್ಡಿ, ಸೋಮು ಆಲ್ಹಾಳ, ಹುಸೇನಿ ಬಳ್ಳಾರಿ, ಮಂಜುನಾಥ ಚೌಕ, ದುರ್ಗಪ್ರಸಾದ, ಅಶೋಕ ವಣಕ್ಯಾಳ, ಮಾರುತಿ ವಣಕ್ಯಾಳ, ಗಂಗಾಧರ ಶಹಾಪುರ, ನಾಗಪ್ಪ ಕೊಡೆಕಲ್ಲ, ಸುರೇಶ ಶಿರವಾರ, ಪರಶುರಾಮ ರಾಯಚೂರು ಸೇರಿದಂತೆ ಇತರರು ಹಾಜರಿದ್ದರು.

ವಾರ್ತಾ ಭಾರತಿ 11 Jan 2026 9:31 pm

ಯಾದಗಿರಿ| ಮೈಲಾರಲಿಂಗೇಶ್ವರ ಜಾತ್ರೆ ಹಿನ್ನೆಲೆ: ಪೊಲೀಸರಿಂದ ಶಾಂತಿ ಸಭೆ

ಯಾದಗಿರಿ: ಮೈಲಾರಲಿಂಗೇಶ್ವರರ ಉತ್ಸವ ಮೂರ್ತಿ ಹಾಗೂ ಪಲ್ಲಕ್ಕಿ ಮೆರವಣಿಗೆಯ ಮಾರ್ಗದ ಮಧ್ಯದಲ್ಲಿರುವ ಕೆರೆ ಏರಿಯಲ್ಲಿ ಪೂಜೆ ಸಲ್ಲಿಸುವ ವೇಳೆ ಗಲಾಟೆ ಮಾಡಿ ಶಾಂತಿ ಸುವ್ಯವಸ್ಥೆಗೆ ಧಕ್ಕೆ ತಂದವರು ಯಾರೇ ಆಗಿದ್ದರೂ ಮುಲಾಜಿಲ್ಲದೆ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಡಿವೈಎಸ್‌ಪಿ ಸುರೇಶ್ ನಾಯಕ್ ಎಚ್ಚರಿಕೆಯನ್ನು ನೀಡಿದ್ದಾರೆ.  ತಾಲ್ಲೂಕಿನ ಮೈಲಾಪುರ ಗ್ರಾಮದಲ್ಲಿ ನಡೆಯಲಿರುವ ಮೈಲಾರಲಿಂಗೇಶ್ವರ ಜಾತ್ರೆಯ ಅಂಗವಾಗಿ ಶನಿವಾರ ಮೈಲಾಪುರ, ಹಳಿಗೇರಾ, ರಾಮಸಮುದ್ರ, ಹೊಸಳ್ಳಿ ಸೇರಿದಂತೆ ಸುತ್ತಮುತ್ತಲ ಗ್ರಾಮಗಳ ಮುಖಂಡರೊಂದಿಗೆ ನಡೆದ ಶಾಂತಿ ಸಭೆಯಲ್ಲಿ ಮಾತನಾಡಿದ ಡಿವೈಎಸ್‌ಪಿ ಸುರೇಶ್ ನಾಯಕ್, ಜಾತ್ರೆಯ ಸಂದರ್ಭದಲ್ಲಿ ಕಾನೂನು ಸುವ್ಯವಸ್ಥೆಗೆ ಅಡ್ಡಿಪಡಿಸಿದರೆ ಲಾಠಿ ಚಾರ್ಜ್‌ ಸೇರಿದಂತೆ ಕಠಿಣ ಕ್ರಮ ಅನಿವಾರ್ಯವಾಗುತ್ತದೆ. ಸಾರ್ವಜನಿಕರು ಪೊಲೀಸರಿಗೆ ಸಹಕರಿಸಿ ಶಾಂತಿಯುತವಾಗಿ ಜಾತ್ರೆ ನಡೆಸುವಂತೆ ಮನವಿ ಮಾಡಿದರು. ಜಾತ್ರಾ ಪ್ರದೇಶದಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿ ನಿಗಾ ವಹಿಸಲಾಗುವುದು ಎಂದು ತಿಳಿಸಿದರು. ಪ್ರತಿಯೊಂದು ಗ್ರಾಮಕ್ಕೂ ಸಂಪ್ರದಾಯದಂತೆ ಪೂಜೆ ಸಲ್ಲಿಸಲು ಅವಕಾಶ ನೀಡಲಾಗುವುದು. ಯಾವ ಗ್ರಾಮದಿಂದ ಯಾರು ಪೂಜೆ ಸಲ್ಲಿಸಲು ಬರುತ್ತಾರೆ ಎಂಬ ಮಾಹಿತಿಯನ್ನು ಪೊಲೀಸರಿಗೆ ಮುಂಚಿತವಾಗಿ ನೀಡಬೇಕು. ಈ ಸಂಬಂಧ ಪಿಎಸ್‌ಐಗಳು ಗ್ರಾಮಗಳ ಮುಖಂಡರೊಂದಿಗೆ ಪ್ರತ್ಯೇಕ ಸಭೆ ನಡೆಸಲಿದ್ದಾರೆ ಎಂದು ಹೇಳಿದರು. ತಹಶೀಲ್ದಾರ್ ಸುರೇಶ್ ರಾಣಪ್ಪ ಅಂಕಲಗಿ ಮಾತನಾಡಿ, ಗ್ರಾಮಗಳ ಮುಖಂಡರು ಪರಸ್ಪರ ಚರ್ಚಿಸಿ ಒಮ್ಮತದಿಂದ ಪೂಜೆ ಸಲ್ಲಿಸುವವರ ಹೆಸರುಗಳನ್ನು ಪೊಲೀಸರಿಗೆ ನೀಡಬೇಕು. ಗಲಭೆಗಳಿಗೆ ಅವಕಾಶ ನೀಡದೆ ಶಾಂತಿಯಿಂದ ಜಾತ್ರೆ ನಡೆಯುವಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದರು. ಪಿಎಸ್‌ಐ ಹನುಮಂತ ಬಂಕಲಿಗಿ ಮಾತನಾಡಿ, ಉತ್ಸವ ಮೂರ್ತಿ ಹಾಗೂ ಪಲ್ಲಕ್ಕಿ ಹೊರುವವರು ಒಂದೇ ರೀತಿಯ ಬಟ್ಟೆ ಧರಿಸಬೇಕು. ಇದರಿಂದ ದೇವರ ಸೇವಾದಾರರನ್ನು ಗುರುತಿಸಲು ಅನುಕೂಲವಾಗುತ್ತದೆ. ಇಲ್ಲದಿದ್ದರೆ ಸಾಮಾನ್ಯರಂತೆ ಹಿಂದಕ್ಕೆ ತಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು. ಕಳೆದ ವರ್ಷ ನಡೆದಂತೆ ಈ ವರ್ಷ ಗಲಾಟೆ ಮರುಕಳಿಸದಂತೆ ಎಚ್ಚರಿಕೆ ವಹಿಸಲಾಗುವುದು. ಅನುಚಿತ ವರ್ತನೆ ಕಂಡುಬಂದಲ್ಲಿ ಯಾವುದೇ ವಿನಾಯಿತಿ ನೀಡದೆ ಪ್ರಕರಣ ದಾಖಲಿಸಲಾಗುವುದು. ಜನರ ಓಡಾಟಕ್ಕೆ ಅಡ್ಡಿಯಾಗುವಂತೆ ಮನೆಗಳ ಮುಂದೆ ಅಂಗಡಿಗಳನ್ನು ಹಾಕಿದರೂ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ಎಚ್ಚರಿಸಿದರು.

ವಾರ್ತಾ ಭಾರತಿ 11 Jan 2026 9:28 pm

ಪುರುಷರ ಸಿಂಗಲ್ಸ್ ಪ್ರಶಸ್ತಿ ಗೆದ್ದ ಡನೀಲ್ ಮೆಡ್ವೆಡೆವ್

ಬ್ರಿಸ್ಬೇನ್, ಜ. 11: ರಷ್ಯಾದ ಡನೀಲ್ ಮೆಡ್ವೆಡೆವ್ ಬ್ರಿಸ್ಬೇನ್ ಇಂಟರ್ನ್ಯಾಶನಲ್ ಪ್ರಶಸ್ತಿಯನ್ನು ಗೆಲ್ಲುವುದರೊಂದಿಗೆ ಈ ವರ್ಷದ ಆಸ್ಟ್ರೇಲಿಯನ್ ಓಪನ್ ಪಂದ್ಯಾವಳಿಗೆ ಭರ್ಜರಿ ಸಿದ್ಧತೆಯನ್ನು ಮಾಡಿಕೊಂಡಿದ್ದಾರೆ. ರವಿವಾರ ಬ್ರಿಸ್ಬೇನ್ ನ ಪ್ಯಾಟ್ ರಾಫ್ಟರ್ ಅರೀನಾದಲ್ಲಿ ನಡೆದ ಫೈನಲ್ ನಲ್ಲಿ ಮೂರು ಬಾರಿ ಆಸ್ಟ್ರೇಲಿಯನ್ ಓಪನ್ ರನ್ನರ್ಸ್-ಅಪ್ ಆಗಿರುವ ಮೆಡ್ವೆಡೆವ್ ಅಮೆರಿಕದ ಬ್ರಾಂಡನ್ ನಕಶಿಮರನ್ನು 6-2, 7-6 (7/1) ಸೆಟ್ಗಳಿಂದ ಮಣಿಸಿದರು. ಪಂದ್ಯವು 96 ನಿಮಿಷಗಳ ಕಾಲ ನಡೆಯಿತು. ಇದು ಅವರ 22ನೇ ಎಟಿಪಿ ಟೂರ್ ಪ್ರಶಸ್ತಿಯಾಗಿದೆ. ಹದಿಮೂರನೇ ವಿಶ್ವ ರ್ಯಾಂಕಿಂಗ್ನ ರಷ್ಯಾದ ಆಟಗಾರನನ್ನು ನಿಭಾಯಿಸುವುದು ಬ್ರಾಂಡನ್ ನಕಶಿಮಗೆ ಕಷ್ಟವಾಯಿತು. ಮೊದಲ ಸೆಟ್ ನಲ್ಲಿ ಮೆಡ್ವೆಡೆವ್ ಎರಡು ಬಾರಿ ನಕಶಿಮರ ಸರ್ವ್ ಮುರಿದು ಎದುರಾಳಿಗೆ ಆಘಾತ ನೀಡಿದರು. ಬಳಿಕ ಕ್ಷಿಪ್ರವಾಗಿ ಆ ಸೆಟ್ ಅನ್ನು ಗೆದ್ದರು. ಆದರೆ, ಎರಡನೇ ಸೆಟ್ ನಲ್ಲಿ ತೀವ್ರ ಪ್ರತಿರೋಧ ಒಡ್ಡಿದ ನಕಶಿಮ ಪಂದ್ಯವನ್ನು ಟೈಬ್ರೇಕ್ ಗೆ ಒಯ್ದರು. ಆದರೆ, ಟೈಬ್ರೇಕ್ ಅನ್ನು ಸುಲಭವಾಗಿ ಗೆದ್ದ ಮೆಡ್ವೆಡೆವ್ ಪಂದ್ಯವನ್ನು ತಮ್ಮದಾಗಿಸಿಕೊಂಡರು. “ಇದು ನನ್ನ ವರ್ಷದ ಉತ್ತಮ ಆರಂಭ,” ಎಂದು ಮೆಡ್ವೆಡೆವ್ ಹೇಳಿದರು. ಅವರು 2019ರಲ್ಲಿ ಬ್ರಿಸ್ಬೇನ್ ನಲ್ಲಿ ಫೈನಲ್ ತಲುಪಿದ್ದರು.

ವಾರ್ತಾ ಭಾರತಿ 11 Jan 2026 9:23 pm

ಬ್ರಿಸ್ಬೇನ್ ಇಂಟರ್ನ್ಯಾಶನಲ್ ಪ್ರಶಸ್ತಿ ಉಳಿಸಿಕೊಂಡ ಸಬಲೆಂಕಾ

ಬ್ರಿಸ್ಬೇನ್, ಜ. 11: ವಿಶ್ವದ ನಂಬರ್ ವನ್ ಆಟಗಾರ್ತಿ ಬೆಲಾರುಸ್ನ ಅರೈನಾ ಸಬಲೆಂಕಾ ಬ್ರಿಸ್ಬೇನ್ ಇಂಟರ್ನ್ಯಾಶನಲ್ ಪ್ರಶಸ್ತಿಯನ್ನು ತನ್ನಲ್ಲೇ ಉಳಿಸಿಕೊಂಡಿದ್ದಾರೆ. ರವಿವಾರ ನಡೆದ ಫೈನಲ್ ನಲ್ಲಿ ಅವರು ಉಕ್ರೇನ್ ನ ಮಾರ್ಟಾ ಕೊಸ್ಯುಕ್ ಅವರನ್ನು 6-4, 6-3 ನೇರ ಸೆಟ್ಗಳಿಂದ ಪರಾಭವಗೊಳಿಸಿದರು. ಇದರೊಂದಿಗೆ, ಮುಂಬರುವ ಆಸ್ಟ್ರೇಲಿಯನ್ ಓಪನ್ ಪಂದ್ಯಾವಳಿಯಲ್ಲಿ ಪ್ರಶಸ್ತಿಯನ್ನು ಮರಳಿ ಗೆಲ್ಲಲು ಭರ್ಜರಿ ಸಿದ್ಧತೆಯನ್ನು ಮಾಡಿಕೊಂಡಿದ್ದಾರೆ. ಮಾರ್ಟಾ ಕೊಸ್ಯುಕ್ ತನ್ನ ಫೈನಲ್ ಹಾದಿಯಲ್ಲಿ ಜೆಸ್ಸಿಕಾ ಪೆಗುಲಾ, ಮಿರಾ ಆ್ಯಂಡ್ರೀವ ಮತ್ತು ಅಮಾಂಡಾ ಅನಿಸಿಮೋವಾ ಸೇರಿದಂತೆ 10 ಉನ್ನತ ಆಟಗಾರರನ್ನು ಸೋಲಿಸಿದ್ದರು. ಆದರೆ, ಯುಎಸ್ ಓಪನ್ ಚಾಂಪಿಯನ್ ಸಬಲೆಂಕಾ ಅವರ ಸಾಮರ್ಥ್ಯಕ್ಕೆ ಸರಿಸಾಟಿಯಾಗಲು ಅವರಿಗೆ ಸಾಧ್ಯವಾಗಲಿಲ್ಲ. ಕಳೆದ ವರ್ಷ ಆಸ್ಟ್ರೇಲಿಯನ್ ಓಪನ್ ಸಬಲೆಂಕಾ ಅವರ ಕೈತಪ್ಪಿತ್ತು. ಅದನ್ನು ಮರಳಿ ಪಡೆಯಲು ಅವರು ದೃಢ ನಿರ್ಧಾರ ಮಾಡಿದ್ದಾರೆ. ಬ್ರಿಸ್ಬೇನ್ ನ ಉಷ್ಣತೆಯಲ್ಲಿನ ತಮ್ಮ ನಿರ್ವಹಣೆಯ ಮೂಲಕ, ಈ ತಿಂಗಳು ಮೆಲ್ಬರ್ನ್ ಪಾರ್ಕ್ನಲ್ಲಿ ಪ್ರಶಸ್ತಿ ಗೆಲ್ಲುವ ಭರವಸೆಯನ್ನು ಅವರು ಮೂಡಿಸಿದ್ದಾರೆ. ಆಸ್ಟ್ರೇಲಿಯನ್ ಓಪನ್ ಜನವರಿ 18ರಂದು ಆರಂಭಗೊಳ್ಳಲಿದೆ. ಸಬಲೆಂಕಾ ಅಲ್ಲಿ ತಮ್ಮ ಮೂರನೇ ಪ್ರಶಸ್ತಿಗಾಗಿ ಹೋರಾಡಲಿದ್ದಾರೆ.

ವಾರ್ತಾ ಭಾರತಿ 11 Jan 2026 9:23 pm

ಅಂತರರಾಷ್ಟ್ರೀಯ ಹಾಕಿಗೆ ಮರಳಲು ಸಿದ್ಧ: ವಂದನಾ ಕಟಾರಿಯ

ರಾಂಚಿ, ಜ. 11: ಕಳೆದ ವರ್ಷ ಅಂತರರಾಷ್ಟ್ರೀಯ ಹಾಕಿಗೆ ನಿವೃತ್ತಿ ಘೋಷಿಸಿದ್ದ ಭಾರತೀಯ ಹಾಕಿ ತಂಡದ ಮಾಜಿ ಆಟಗಾರ್ತಿ ವಂದನಾ ಕಟಾರಿಯ, ಈಗ ರಾಷ್ಟ್ರೀಯ ತಂಡಕ್ಕೆ ಮರಳುವ ಉತ್ಸುಕತೆಯನ್ನು ವ್ಯಕ್ತಪಡಿಸಿದ್ದಾರೆ. ಅವರು ಕಳೆದ ವರ್ಷದ ಏಪ್ರಿಲ್ 1ರಂದು ಹಾಕಿಗೆ ನಿವೃತ್ತಿ ಕೋರಿದ್ದರು. “ನನ್ನನ್ನು ವಾಪಸ್ ಕರೆದರೆ, ಹೌದು, ನಾನು ಲಭ್ಯವಿದ್ದೇನೆ. ವಾಸ್ತವಿಕವಾಗಿ, ನಾನು ಪಂದ್ಯ ಆಡುವ ದೈಹಿಕ ಕ್ಷಮತೆಯನ್ನು ಹೊಂದಿದ್ದೇನೆ. ನನ್ನ ದೈಹಿಕ ಕ್ಷಮತೆಯನ್ನು ಹಾಕಿ ಇಂಡಿಯಾ ಲೀಗ್ (ಎಚ್ಐಎಲ್)ನಲ್ಲಿ ಸಾಬೀತುಪಡಿಸಿದ್ದೇನೆ. ಓರ್ವ ಆಟಗಾರ್ತಿಯಾಗಿ ಭಾರತೀಯ ತಂಡಕ್ಕೆ ನನ್ನ ಅಗತ್ಯವಿದ್ದರೆ, ನಾನು ತಯಾರಿದ್ದೇನೆ,” ಎಂದು ಅವರು ಹೇಳಿದರು. ಹಾಕಿ ಇಂಡಿಯಾ ಲೀಗ್ನಲ್ಲಿ ಅವರ ತಂಡ ಶ್ರಾಚಿ ಬೆಂಗಾಲ್ ಟೈಗರ್ಸ್ ರನ್ನರ್ಸ್-ಅಪ್ ಆಗಿ ಹೊರಹೊಮ್ಮಿದ ಬಳಿಕ ‘ಸ್ಪೋರ್ಟ್ಸ್ಟಾರ್’ನೊಂದಿಗೆ ಅವರು ಮಾತನಾಡುತ್ತಿದ್ದರು. 2009ರಲ್ಲಿ ರಾಷ್ಟ್ರೀಯ ತಂಡಕ್ಕೆ ಪಾದಾರ್ಪಣೆ ಮಾಡಿದ್ದ ವಂದನಾ ಕಳೆದ ವರ್ಷ ಅಂತರರಾಷ್ಟ್ರೀಯ ಹಾಕಿಗೆ ವಿದಾಯ ಕೋರಿದ್ದರು. ಅವರು ಭಾರತೀಯ ಮಹಿಳಾ ಹಾಕಿ ಇತಿಹಾಸದಲ್ಲಿ ದೇಶದ ಪರವಾಗಿ ಅತ್ಯಂತ ಹೆಚ್ಚು ಪಂದ್ಯಗಳನ್ನು ಆಡಿರುವ ದಾಖಲೆಯನ್ನು ಹೊಂದಿದ್ದಾರೆ. ಹರಿದ್ವಾರದ 33 ವರ್ಷದ ಆಟಗಾರ್ತಿ ಟೋಕಿಯೊ ಒಲಿಂಪಿಕ್ಸ್ನಲ್ಲಿ ಆಡಿದ್ದ ಭಾರತೀಯ ತಂಡದ ಅವಿಭಾಜ್ಯ ಭಾಗವಾಗಿದ್ದರು. ಆ ತಂಡವು ಐತಿಹಾಸಿಕ ನಾಲ್ಕನೇ ಸ್ಥಾನ ಗಳಿಸಿತ್ತು.

ವಾರ್ತಾ ಭಾರತಿ 11 Jan 2026 9:22 pm

ಉಡುಪಿ| ಮಹಾರಾಷ್ಟ್ರದ ಫುಲ್‌ಧರ್ ನೇತಂ ‘ಫುಲ್ ಮ್ಯಾರಥಾನ್’ ಚಾಂಪಿಯನ್

ಉಡುಪಿ: ಉಡುಪಿ ಜಿಲ್ಲಾಡಳಿತ, ಉಡುಪಿ ಜಿಲ್ಲಾ ಅಥ್ಲೆಟಿಕ್ ಅಸೋಸಿಯೇಷನ್ ಹಾಗೂ ಬೆಂಗಳೂರಿನ ಎನ್‌ಇಬಿ ಸ್ಪೋರ್ಟ್ಸ್‌ಗಳ ಸಂಯುಕ್ತ ಆಶ್ರಯದಲ್ಲಿ ಇಂದು ಮುಂಜಾನೆ ಉಡುಪಿಯಲ್ಲಿ ಜರಗಿದ ‘ಉಡುಪಿ ಫುಲ್ ಮ್ಯಾರಥಾನ್-2026’ ಸ್ಪರ್ಧೆಯಲ್ಲಿ ಮಹಾರಾಷ್ಟ್ರದ ಫುಲ್‌ಧರ್ ನೇತಂ ಅವರು 42ಕಿ.ಮೀ. ಓಟವನ್ನು 2ಗಂಟೆ 53.41ನಿ.ಗಳಲ್ಲಿ ಮೊದಲಿಗರಾಗಿ ಕ್ರಮಿಸಿ ಚಾಂಪಿಯನ್ ಪ್ರಶಸ್ತಿಯೊಂದಿಗೆ 20,000ರೂ. ನಗದನ್ನು ಗೆದ್ದುಕೊಂಡರು. ಬೆಳಗ್ಗೆ 4 ಗಂಟೆಗೆ ಪ್ರಾರಂಭಗೊಂಡ ಈ ಸ್ಪರ್ಧೆ ಅಜ್ಜರಕಾಡು ಜಿಲ್ಲಾ ಕ್ರೀಡಾಂಗಣದಲ್ಲಿ ಪ್ರಾರಂಭಗೊಂಡು ಉಡುಪಿ, ಮಣಿಪಾಲ, ಜಿಲ್ಲಾಧಿಕಾರಿ ಕಚೇರಿ ಸಮೀಪದ ಆರ್‌ಟಿಓ ಕಚೇರಿಯವರೆಗೆ ಸಾಗಿ ಮರಳಿ ಜಿಲ್ಲಾ ಕ್ರೀಡಾಂಗಣದಲ್ಲಿ ಮುಕ್ತಾಯಗೊಂಡಿತು. ಮಹಾರಾಷ್ಟ್ರದವರೇ ಆದ ಛೀತ್ರಂ ಕುಮಾರ್ 2ಗಂಟೆ 57ನಿಮಿಷಗಳಲ್ಲಿ ಗುರಿಮುಟ್ಟಿ ರನ್ನರ್‌ಅಪ್ ಸ್ಥಾನ ಪಡೆದರೆ, ಜಯಂತ್ ಬೋರೊ ಅವರು ತೃತೀಯ (3ಗಂ. 02ನಿ) ಸ್ಥಾನಿಯಾದರು. 21ಕಿ.ಮೀ. ದೂರದ ಹಾಫ್ ಮ್ಯಾರಥಾನ್‌ನ ಪುರುಷರ ವಿಭಾಗದಲ್ಲಿ ಸಚಿನ್ ಪೂಜಾರಿ (1ಗಂ. 17.29ನಿ.) ಚಾಂಪಿಯನ್ ಆಗಿ ಮೂಡಿಬಂದರೆ, ಲಕ್ಷ್ಮೀಶ ಸಿ.ಎಸ್. ದ್ವಿತೀಯ ಹಾಗೂ ಪ್ರಶಾಂತ್ ತೃತೀಯ ಸ್ಥಾನ ಗೆದ್ದುಕೊಂಡರು. ಹಾಫ್ ಮ್ಯಾರಥಾನ್‌ನ ಮಹಿಳೆಯರ ವಿಭಾಗದಲ್ಲಿ ರಿತಿಕಾ ಸಿಂಗ್ (1ಗಂ. 58.32ನಿ) ಅಗ್ರಸ್ಥಾನಿಯಾದರೆ, ಅಶ್ವಿನಿ ರನ್ನರ್ ಅಪ್ ಹಾಗೂ ಮರಿಯಾ ಹಾಜಿ ತೃತೀಯ ಸ್ಥಾನದೊಂದಿಗೆ ನಗದು ಬಹುಮಾನ ಗೆದ್ದುಕೊಂಡರು. ಉಳಿದಂತೆ 10ಕಿ.ಮೀ. ಓಟದ ಪುರುಷರ ವಿಭಾಗದಲ್ಲಿ ಮಿಥೇಶ್ ಸಿ.ಜಿ. ಮೊದಲಿಗರಾಗಿ ಗುರಿಮುಟ್ಟಿದರೆ, ಸಂತೋಷ್ ಕುಮಾರ್ ಹಾಗೂ ಮುಗೇಶ್ ಎಂ.ಯು. ಕ್ರಮವಾಗಿ ದ್ವಿತೀಯ ಹಾಗೂ ತೃತೀಯ ಸ್ಥಾನಗಳನ್ನು ಪಡೆದರು. 10ಕಿ.ಮೀ. ಓಟದ ಮಹಿಳೆಯರ ವಿಭಾಗದಲ್ಲಿ ಪ್ರೀತಿ ಮೊಗವೀರ ಅಗ್ರಸ್ಥಾನ ಪಡೆದರು. ಅವರ ನಂತರದ ಸ್ಥಾನ ಗಳನ್ನು ಕ್ರಮವಾಗಿ ಸಾನ್ವಿ ಸಂಭಾಜಿ ಹಾಗೂ ಸ್ವಾತಿ ಪಿ.ಎಂ. ಪಡೆದುಕೊಂಡರು. ಉಳಿದ ಫಲಿತಾಂಶಗಳ ವಿವರ ಹೀಗಿದೆ... 17ವರ್ಷದೊಳಗಿನ ಬಾಲಕರ ವಿಭಾಗ (5ಕಿ.ಮೀ.): 1.ವಿಠ್ಠಲ ಬಾಳಪ್ಪ, ಸರಕಾರಿ ಪ್ರೌಢ ಶಾಲೆ ವಡೇರಹೋಬಳಿ ಕುಂದಾಪುರ, 2.ಆಕಾಶ್, ಸರಕಾರಿ ಪ್ರೌಢ ಶಾಲೆ ಅಜ್ಜರಕಾಡು, 3. ವರ್ಷಿತ್, ನಿಟ್ಟೆ. 17ವರ್ಷದೊಳಗಿನ ಬಾಲಕಿಯರು: 1.ದೀಕ್ಷಿತಾ, ನಿಟ್ಟೆ. 2.ದೀಪಿಕಾ ನಿಟ್ಟೆ, 3. ಸುೃಜನ್, ಸರಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು ಉಡುಪಿ. 14 ವರ್ಷದೊಳಗಿನ ಬಾಲಕರು (3ಕಿ.ಮೀ.): 1.ಸೃಜನ್, ನಿಟ್ಟೆ, 2. ಆಕಾಶ್ ಉಡುಪಿ, 3.ಶೋಧನ್ ಉಡುಪಿ. 14ವರ್ಷದೊಳಗಿನ ಬಾಲಕಿಯರು: 1.ಕುಶಿ ಜೆ.ಶೆಟ್ಟಿ ನಿಟ್ಟೆ, 2.ಶರಣಮ್ಮ, ಮೊರಾರ್ಜಿ ದೇಸಾಯಿ ವಸತಿ ಶಾಲೆ ಯಡಾಡಿ ಮತ್ಯಾಡಿ ಕುಂದಾಪುರ, 3. ಪೂಜಾ, ಮೊರಾರ್ಜಿ ದೇಸಾಯಿ ವಸತಿ ಶಾಲೆ ಯಡಾಡಿ ಮತ್ಯಾಡಿ. ಮ್ಯಾರಥಾನ್ ಸ್ಪರ್ಧೆಗಳಿಗೆ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಅವರು ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಅಥ್ಲೆಟಿಕ್ ಅಸೋಸಿಯೇಷನ್ ಅಧ್ಯಕ್ಷ ಹರಿಪ್ರಸಾದ್ ರೈ, ಕೆ.ರಘುಪತಿ ಭಟ್, ಅಶೋಕ್ ಕುಮಾರ್ ಕೊಡವೂರು, ಎನ್‌ಇಬಿ ಸ್ಪೋರ್ಟ್ಸ್‌ನ ನಾಗರಾಜ ಅಡಿಗ ಉಪಸ್ಥಿತರಿದ್ದರು. ವಿಜೇತರಿಗೆ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಬಹುಮಾನ ವಿತರಿಸಿದರು. ಜಿಲ್ಲಾ ಯುವಜನ ಸೇವೆ ಮತ್ತು ಕ್ರೀಡಾಧಿಕಾರಿ ಡಾ.ರೋಶನ್‌ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು. ಸ್ಪರ್ಧೆಯ ಎಲ್ಲಾ ವಿಭಾಗಗಳಲ್ಲಿ ಒಟ್ಟಾರೆಯಾಗಿ 5,500 ಕ್ರೀಡಾಪಟುಗಳು ನೋಂದಣಿ ಮಾಡಿಕೊಂಡಿದ್ದರು. ಎಲ್ಲಾ ವಿಭಾಗಗಳಲ್ಲಿ ಒಟ್ಟಾರೆಯಾಗಿ 10.00 ಲಕ್ಷ ರೂ. ನಗದನ್ನು ಬಹುಮಾನ ರೂಪದಲ್ಲಿ ವಿತರಿಸಲಾಯಿತು.

ವಾರ್ತಾ ಭಾರತಿ 11 Jan 2026 9:12 pm

Madhya Pradesh | ಇಂದೋರ್ ದುರಂತ: ಮೃತಪಟ್ಟವರ ಸಂಖ್ಯೆ 21ಕ್ಕೆ ಏರಿಕೆ; ಕಾಂಗ್ರೆಸ್ನಿಂದ ಪ್ರತಿಭಟನಾ ರ್ಯಾಲಿ

ಇಂದೋರ್, ಜ. 11: ಇಂದೋರ್ನ ಭಗೀರಥಪುರದಲ್ಲಿ ಕಲುಷಿತ ನೀರು ಸೇವನೆಯಿಂದ ಮೃತಪಟ್ಟವರ ಸಂಖ್ಯೆ 21ಕ್ಕೆ ಏರಿಕೆಯಾಗಿದೆ. ಹೊಣೆಗಾರರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ, ಸಂತ್ರಸ್ತ ಕುಟುಂಬಗಳಿಗೆ ಪರಿಹಾರ ನೀಡುವಂತೆ ಹಾಗೂ ಘಟನೆಯ ಜವಾಬ್ದಾರಿ ವಹಿಸುವಂತೆ ಆಗ್ರಹಿಸಿ ಮಧ್ಯಪ್ರದೇಶ ಕಾಂಗ್ರೆಸ್ ರವಿವಾರ ‘ನ್ಯಾಯಕ್ಕಾಗಿ ಯಾತ್ರೆ’ ನಡೆಸಿತು. ‘ನ್ಯಾಯಕ್ಕಾಗಿ ಯಾತ್ರೆ’ ಬಡಾ ಗಣಪತಿ ಚೌಕದಿಂದ ಆರಂಭವಾಗಿ ರಾಜವಾಡದಲ್ಲಿ ಸಮಾಪನಗೊಂಡಿತು. ಕಾಂಗ್ರೆಸ್ ನ ಹಿರಿಯ ನಾಯಕರು, ಪಕ್ಷದ ಕಾರ್ಯಕರ್ತರು ಹಾಗೂ ನಿವಾಸಿಗಳು ಪಾಲ್ಗೊಂಡರು. ಈ ಯಾತ್ರೆಯ ನೇತೃತ್ವ ವಹಿಸಿದ್ದ ಮಹಿಳಾ ಕಾಂಗ್ರೆಸ್ ಕಾರ್ಯಕರ್ತರು ಇಂದೋರ್ ಮೇಯರ್, ಬಿಜೆಪಿ ಸರಕಾರ ಹಾಗೂ ಮಹಾನಗರ ಪಾಲಿಕೆ ಆಡಳಿತದ ವಿರುದ್ಧ ಘೋಷಣೆಗಳನ್ನು ಕೂಗಿದರು. ಘಟನೆಯಲ್ಲಿ ಮೃತಪಟ್ಟವರ ಕುಟುಂಬಗಳಿಗೆ ತಲಾ 1 ಕೋಟಿ ರೂ. ಪರಿಹಾರ ನೀಡಬೇಕು ಹಾಗೂ ದುರಂತಕ್ಕೆ ಹೊಣೆಗಾರರಾದ ಅಧಿಕಾರಿಗಳ ವಿರುದ್ಧ ಹತ್ಯೆ ಪ್ರಕರಣ ದಾಖಲಿಸಬೇಕು ಎಂದು ಕಾಂಗ್ರೆಸ್ ಆಗ್ರಹಿಸಿತು. ‘ನ್ಯಾಯಕ್ಕಾಗಿ ಯಾತ್ರೆ’ಯಲ್ಲಿ ಪ್ರದೇಶ ಕಾಂಗ್ರೆಸ್ ಸಮಿತಿ (ಪಿಸಿಸಿ) ಅಧ್ಯಕ್ಷ ಜಿತು ಪಟ್ವಾರಿ, ಮಾಜಿ ಮುಖ್ಯಮಂತ್ರಿ ದಿಗ್ವಿಜಯ ಸಿಂಗ್, ಪ್ರತಿಪಕ್ಷದ ನಾಯಕ ಉಮಂಗ್ ಸಿಂಘರ್, ಮಾಜಿ ಸಚಿವ ಸಜ್ಜನ್ ವರ್ಮಾ, ಮಧ್ಯಪ್ರದೇಶ ಕಾಂಗ್ರೆಸ್ ಉಸ್ತುವಾರಿ ಹರೀಷ್ ಚೌಧುರಿ, ಅಜಯ್ ಸಿಂಗ್ ಹಾಗೂ ಕಾಂಗ್ರೆಸ್ ಶಾಸಕರು, ಕಾರ್ಪೋರೇಟರ್ ಗಳು, ಸೇವಾದಳದ ಸದಸ್ಯರು ಮತ್ತು ಮಹಿಳಾ ಕಾಂಗ್ರೆಸ್ ನಾಯಕರು ಪಾಲ್ಗೊಂಡರು. ‘ನ್ಯಾಯಕ್ಕಾಗಿ ಯಾತ್ರೆ’ ನಡೆದ ಮಾರ್ಗದಲ್ಲಿ ಭಾರೀ ಪೊಲೀಸ್ ಪಡೆ ನಿಯೋಜಿಸಲಾಗಿತ್ತು. ಯಾತ್ರೆಯ ವೇಳೆ ದಿಗ್ವಿಜಯ ಸಿಂಗ್ ಹಾಗೂ ಉಮಂಗ್ ಸಿಂಘರ್ ಅವರು ವಾಹನದ ಮೇಲೆ ನಿಂತು ಜನಸಂದಣಿಯನ್ನು ಉದ್ದೇಶಿಸಿ ಮಾತನಾಡಿದರು. ಇಂದೋರ್ನಲ್ಲಿ ಕಾರ್ಪೋರೇಟರ್ ಗಳಿಂದ ಹಿಡಿದು ಸಂಸತ್ತಿನವರೆಗೆ ಎಲ್ಲ ಮಟ್ಟದ ಅಧಿಕಾರವನ್ನು ಬಿಜೆಪಿ ನಿಯಂತ್ರಿಸುತ್ತಿದೆ. ನ್ಯಾಯಕ್ಕಾಗಿ ಹೋರಾಟ ದೀರ್ಘವಾಗಿರುತ್ತದೆ. ಅಲ್ಲದೆ, ಜನರೊಂದಿಗೆ ಮಾತನಾಡಲು ಮನೆಮನೆಗೆ ತೆರಳಬೇಕಾಗುತ್ತದೆ ಎಂದು ದಿಗ್ವಿಜಯ ಸಿಂಗ್ ಹೇಳಿದರು. ಸರಕಾರ ನಿಜವಾದ ಸಾವಿನ ಸಂಖ್ಯೆಯನ್ನು ಮರೆಮಾಚಲು ಪ್ರಯತ್ನಿಸುತ್ತಿದೆ ಎಂದು ಉಮಂಗ್ ಸಿಂಘರ್ ಆರೋಪಿಸಿದರು. ನಗರದ ಕೆಲವು ಭಾಗಗಳಲ್ಲಿ ಇನ್ನೂ ಕಲುಷಿತ ನೀರು ಪೂರೈಕೆ ಮಾಡಲಾಗುತ್ತಿದೆ ಎಂದರು. “ಇದುವರೆಗೆ 21 ಮಂದಿ ಸಾವನ್ನಪ್ಪಿದ್ದಾರೆ. ಇದಕ್ಕೆ ಜವಾಬ್ದಾರರಾದವರು ಕೊಲೆಗಾರರು. ಅವರ ವಿರುದ್ಧ ಹತ್ಯೆ ಪ್ರಕರಣ ದಾಖಲಿಸಬೇಕು” ಎಂದು ಅವರು ಹೇಳಿದರು.

ವಾರ್ತಾ ಭಾರತಿ 11 Jan 2026 9:12 pm

ರೋಹಿತ್ ಶರ್ಮಾ ವಿಶ್ವದಾಖಲೆಯ ಸಿಕ್ಸರ್; ಹಿಟ್ ಮ್ಯಾನ್ ಬೊಂಬಾಟ್ ಹೊಡೆತಕ್ಕೆ ವಿರಾಟ್ ಕೊಹ್ಲಿ ರಿಪ್ಲೈ ವೈರಲ್!

Rohit Sharma Sixes World Record- ಭಾರತದ ಮಾಜಿ ನಾಯಕ ರೋಹಿತ್ ಶರ್ಮಾ ಅವರು ಇದೀಗ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 650 ಸಿಕ್ಸರ್‌ಗಳ ಗಡಿ ದಾಟಿದ ಮೊದಲ ಆಟಗಾರರಾಗಿದ್ದಾರೆ. ನ್ಯೂಜಿಲೆಂಡ್ ವಿರುದ್ಧದ ವಡೋದರಾದಲ್ಲಿ ನಡೆದ ಪ್ರಥಮ ಏಕದಿನ ಪಂದ್ಯದಲ್ಲಿ ಈ ಸಾಧನೆ ಮಾಡಿದರು. ರೋಹಿತ್ ಶರ್ಮಾ ಅವರು ಪಂದ್ಯದಲ್ಲಿ 2 ಸಿಕ್ಸರ್ ಹೊಡೆದರು. ಅವರು ಹೊಡೆದ ವಿಶ್ವದಾಖಲೆಯ ಭರ್ಜರಿ ಸಿಕ್ಸರ್ ಗೆ ಪೆವಿಲಿಯನ್ ನಲ್ಲಿದ್ದ ವಿರಾಟ್ ಕೊಹ್ಲಿ ಅವರ ರಿಯಾಕ್ಷನ್ ವಿಡಿಯೋ ವೈರಲ್ ಆಗಿದೆ.

ವಿಜಯ ಕರ್ನಾಟಕ 11 Jan 2026 8:57 pm

ಜಾಮೀನು ನೀಡಿದರೆ ಅಪರಾಧದಲ್ಲಿ ತೊಡಗಬಹುದು ಎಂಬ ಆತಂಕವಷ್ಟೇ ಮುನ್ನೆಚ್ಚರಿಕೆ ಬಂಧನಕ್ಕೆ ಆಧಾರವಲ್ಲ: ಸುಪ್ರೀಂ ಕೋರ್ಟ್

ಹೊಸದಿಲ್ಲಿ, ಜ. 11: ಬಂಧಿತ ವ್ಯಕ್ತಿಯನ್ನು ಜಾಮೀನಿನಲ್ಲಿ ಬಿಡುಗಡೆಗೊಳಿಸಿದರೆ ಆತ/ಆಕೆ ಮತ್ತೆ ಸಾರ್ವಜನಿಕ ಸುವ್ಯವಸ್ಥೆಗೆ ಧಕ್ಕೆಯನ್ನುಂಟು ಮಾಡುವ ಅಂತಹುದೇ ಅಪರಾಧಗಳಲ್ಲಿ ತೊಡಗಬಹುದು ಎಂಬ ಆತಂಕವಷ್ಟೇ ಮುನ್ನೆಚ್ಚರಿಕೆ ಬಂಧನಕ್ಕೆ ಆದೇಶಿಸಲು ಸಮಂಜಸ ಕಾರಣವಾಗುವುದಿಲ್ಲ ಎಂದು ಸರ್ವೋಚ್ಚ ನ್ಯಾಯಾಲಯವು ಸ್ಪಷ್ಟಪಡಿಸಿದೆ. ನ್ಯಾಯಮೂರ್ತಿಗಳಾದ ಜೆ.ಕೆ. ಮಹೇಶ್ವರಿ ಮತ್ತು ಎ.ಎಸ್. ಚಂದುರ್ಕರ್ ಅವರ ಪೀಠವು ಹೈದರಾಬಾದ್ ಮೂಲದ ಮಹಿಳೆಯೊಬ್ಬಳ ವಿರುದ್ಧದ ಮುನ್ನೆಚ್ಚರಿಕೆ ಬಂಧನ ಆದೇಶವನ್ನು ತಳ್ಳಿಹಾಕಿತು. ಆಕೆಯನ್ನು 1986ರ ತೆಲಂಗಾಣ ಅಪಾಯಕಾರಿ ಚಟುವಟಿಕೆಗಳ ತಡೆ ಕಾಯ್ದೆಯಡಿ ‘ಮಾದಕ ದ್ರವ್ಯ ಅಪರಾಧಿ’ ಎಂದು ಗುರುತಿಸಲಾಗಿತ್ತು. ಮಹಿಳೆಯ ಚಟುವಟಿಕೆಗಳಿಂದ ಸಾರ್ವಜನಿಕ ಸುವ್ಯವಸ್ಥೆಗೆ ಯಾವ ರೀತಿಯಲ್ಲಿ ಹಾನಿಯಾಗಿತ್ತು ಅಥವಾ ಹಾನಿಗೊಳಗಾಗುವ ಸಾಧ್ಯತೆಯಿದೆ ಎಂಬುದನ್ನು ಬಂಧನ ಆದೇಶದಲ್ಲಿ ಉಲ್ಲೇಖಿಸಲಾಗಿಲ್ಲ ಎಂದು ಪೀಠವು ಹೇಳಿತು. ಹೀಗಾಗಿ ಬಂಧಿತೆಯನ್ನು ಜಾಮೀನಿನಲ್ಲಿ ಬಿಡುಗಡೆಗೊಳಿಸಿದರೆ ಆಕೆ ಮತ್ತೆ ಅಂತಹುದೇ ಅಪರಾಧಗಳಲ್ಲಿ ತೊಡಗಬಹುದು ಮತ್ತು ಅದು ಸಾರ್ವಜನಿಕ ಸುವ್ಯವಸ್ಥೆಗೆ ಹಾನಿಯನ್ನುಂಟು ಮಾಡಬಹುದು ಎಂಬ ಬಂಧನಾಧಿಕಾರಿಯ ಕೇವಲ ಆತಂಕವು ಮುನ್ನೆಚ್ಚರಿಕೆ ಬಂಧನಕ್ಕೆ ಸಮರ್ಪಕ ಆಧಾರವಾಗುವುದಿಲ್ಲ ಎಂದು ಪೀಠವು ತನ್ನ ಜ. 8ರ ಆದೇಶದಲ್ಲಿ ತಿಳಿಸಿದೆ. ಬಂಧನಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ದಂಡಾಧಿಕಾರಿ ಹೇಗಾದರೂ ಮಾಡಿ ಮಹಿಳೆಯನ್ನು ಬಂಧನದಲ್ಲಿರಿಸಲು ಉದ್ದೇಶಿಸಿದ್ದಾರೆ ಎಂಬುದು ಸ್ಪಷ್ಟವಾಗಿದೆ ಎಂದು ಕುಟುಕಿದ ಸರ್ವೋಚ್ಚ ನ್ಯಾಯಾಲಯವು, 2016ರಿಂದ 2023ರವರೆಗಿನ ಮಹಿಳೆಯ ನಡವಳಿಕೆಯನ್ನು ಗಮನಿಸಿದೆ. ಆಕೆ ಜಾಮೀನಿನ ಯಾವುದೇ ಷರತ್ತನ್ನು ಉಲ್ಲಂಘಿಸಿದ್ದಾರೆ ಎಂದು ಬಂಧನಾಧಿಕಾರಿ ಭಾವಿಸಿದ್ದರೆ ಜಾಮೀನನ್ನು ರದ್ದುಗೊಳಿಸಲು ಕ್ರಮ ಕೈಗೊಳ್ಳಬಹುದಿತ್ತು. ಆದರೆ ಅದನ್ನು ಮಾಡಲಾಗಿಲ್ಲ ಎಂದು ಬೆಟ್ಟು ಮಾಡಿತು.

ವಾರ್ತಾ ಭಾರತಿ 11 Jan 2026 8:50 pm

ಚಳಿಯಿಂದಾಗಿ ಏರಿದೆ ಸೋಂಕುಗಳ ಅಪಾಯ

ಚಳಿಗಾಲದ ಹವೆಯಿಂದ ಸೋಂಕುಗಳ ಅಪಾಯ ಹೆಚ್ಚಾಗಿದೆ. ಅಧಿಕ ರಕ್ತದೊತ್ತಡ ಇರುವವರು ಮತ್ತು ಹೃದಯರೋಗ ಹೊಂದಿರುವವರು ಜಾಗರೂಕರಾಗಿರಬೇಕು ಎಂದು ವೈದ್ಯರು ಎಚ್ಚರಿಸಿದ್ದಾರೆ. ದೇಹದಲ್ಲಿ ಸಾಕಷ್ಟು ಜಲಸಂಚಯನವನ್ನು ನಿರ್ವಹಿಸುವುದು, ಸಂಸ್ಕರಿತ ಆಹಾರ ಸೇವನೆಯನ್ನು ತೊರೆಯುವುದು ಹಾಗೂ ಪೊಟ್ಯಾಶಿಯಂ–ಸಮೃದ್ಧ ಆಹಾರಗಳು ಮತ್ತು ತರಕಾರಿಗಳ ಬಳಕೆಯನ್ನು ಹೆಚ್ಚಿಸುವುದು ಚಳಿಗಾಲದಲ್ಲಿ ಕಿಡ್ನಿ (ಮೂತ್ರಪಿಂಡ) ಕಾರ್ಯ ಸುಗಮವಾಗಲು ಮತ್ತು ಎಲೆಕ್ಟ್ರೊಲೈಟ್ ಸಮತೋಲನಕ್ಕೆ ಸಹಾಯ ಮಾಡಲಿದೆ ಎಂದು ವೈದ್ಯರು ಹೇಳಿದ್ದಾರೆ. ►ಹೆಚ್ಚಾಗುತ್ತಿರುವ ರೋಗಿಗಳ ಸಂಖ್ಯೆ ಚಳಿಗಾಲದ ಶೀತ ಹವಾಮಾನ ಪರಿಸ್ಥಿತಿಗಳಲ್ಲಿ ರೋಗಿಗಳ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ವೈದ್ಯರು ಎಚ್ಚರಿಸಿದ್ದಾರೆ. ಫ್ಲೂ, ನ್ಯುಮೋನಿಯಾ ಅಥವಾ ಶ್ವಾಸಕೋಶದ ಅನಾರೋಗ್ಯದಂತಹ ಅಪಾಯಗಳು ಹೆಚ್ಚಾಗಿದ್ದು, ಅವು ಅಧಿಕ ರಕ್ತದೊತ್ತಡ ಮತ್ತು ಹೃದಯರೋಗ ಇರುವವರಲ್ಲಿ ದೀರ್ಘಕಾಲೀನ ಅಬ್ಸ್ಟ್ರಕ್ಟಿವ್ ಪಲ್ಮನರಿ ಡಿಸೀಸ್ (ಶ್ವಾಸಕೋಶದ ಕಾಯಿಲೆ) ಸೇರಿದಂತೆ ಪ್ರತಿಕೂಲ ಪರಿಣಾಮಗಳನ್ನು ಬೀರಲಿವೆ. “ಚಳಿಯಿಂದಾಗಿ ರಕ್ತನಾಳಗಳು ಕಿರಿದಾಗುತ್ತವೆ. ಇದರಿಂದ ರಕ್ತದೊತ್ತಡದಲ್ಲಿ ಏರಿಕೆಯಾಗುತ್ತದೆ ಮತ್ತು ಹೃದಯದ ಮೇಲೆ ಒತ್ತಡ ಹೆಚ್ಚಾಗುತ್ತದೆ. ಇದೇ ಸಂದರ್ಭದಲ್ಲಿ ದೈಹಿಕ ಚಟುವಟಿಕೆ ಕಡಿಮೆಯಾಗಿದ್ದು, ಉಪ್ಪುಭರಿತ ಆಹಾರವನ್ನು ಹೆಚ್ಚು ಸೇವಿಸಿದರೆ ನಿರ್ಜಲೀಕರಣಕ್ಕೆ ಕಾರಣವಾಗಿ, ಚಳಿಗಾಲದ ರೋಗಗಳ ಜೊತೆಗೆ ಹೃದಯ–ರಕ್ತನಾಳ ವ್ಯವಸ್ಥೆಯ ಮೇಲೆ ಹೆಚ್ಚಿನ ಒತ್ತಡವನ್ನು ಹೇರಬಹುದು. ಶೀತ ಹವಾಮಾನವು ಅಡ್ರೆನಲಿನ್ ಸೇರಿದಂತೆ ಒತ್ತಡದ ಹಾರ್ಮೋನ್ಗಳಿಗೂ ಪ್ರಚೋದನೆ ನೀಡುತ್ತದೆ. ಇದರಿಂದ ರಕ್ತದೊತ್ತಡ ಮತ್ತು ಹೃದಯದ ದರದಲ್ಲಿ ಏರಿಕೆಯಾಗುವ ಸಾಧ್ಯತೆ ಇದೆ” ಎಂದು ತಜ್ಞರು ಎಚ್ಚರಿಸಿದ್ದಾರೆ. ►ಸೋಡಿಯಂ–ಪೊಟ್ಯಾಶಿಯಂ ಮಟ್ಟದಲ್ಲಿ ಏರಿಳಿತ ವೈದ್ಯರ ಪ್ರಕಾರ, ಚಳಿಗಾಲದಲ್ಲಿ ದೇಹದ ಸೋಡಿಯಂ ಮತ್ತು ಪೊಟ್ಯಾಶಿಯಂ ಮಟ್ಟಗಳಲ್ಲಿ ಏರಿಳಿತ ಉಂಟಾಗುತ್ತದೆ. ಹೆಚ್ಚು ದ್ರವಾಹಾರವನ್ನು ಸೇವಿಸದೆ ಇರುವುದು ಮತ್ತು ನಿರ್ಜಲೀಕರಣದಿಂದ ಸೋಡಿಯಂ ಮಟ್ಟ ಏರಬಹುದು. ಅದೇ ಸಮಯದಲ್ಲಿ ಆಹಾರ ಪದ್ಧತಿಯಲ್ಲಿ ಬದಲಾವಣೆ, ಅಂದರೆ ಹೆಚ್ಚು ಮೂತ್ರವಿಸರ್ಜನೆಗೆ ಕಾರಣವಾಗುವ ಆಹಾರ ಸೇವನೆ ಹಾಗೂ ಹಣ್ಣು–ತರಕಾರಿಗಳನ್ನು ಕಡಿಮೆ ಸೇವಿಸಿದರೆ ಪೊಟ್ಯಾಶಿಯಂ ಅಸಮತೋಲನಕ್ಕೆ ಕಾರಣವಾಗಬಹುದು. ಮುಖ್ಯವಾಗಿ ಹೃದಯರೋಗಿಗಳಲ್ಲಿ ಈ ಅಪಾಯ ಹೆಚ್ಚಿರುತ್ತದೆ. ►ಶ್ವಾಸಕೋಶದ ರೋಗಗಳ ಅಪಾಯ ಸಾಮಾನ್ಯ ಚಳಿಗಾಲದ ಶ್ವಾಸಕೋಶದ ರೋಗಗಳ ಜೊತೆಗೆ ಜಠರದ ವೈರಸ್ಗಳಾದ ನೋರೋವೈರಸ್ಗಳನ್ನು ಶೀತ, ಒಣ ಗಾಳಿ ಉಲ್ಬಣಗೊಳಿಸುತ್ತದೆ. ಇದರಿಂದ ರೋಗನಿರೋಧಕ ವ್ಯವಸ್ಥೆಯ ಮೇಲೆ ಒತ್ತಡ ಬೀರುತ್ತದೆ. ಹೀಗಾಗಿ ಆಸ್ತಮಾ, ಹೃದಯರೋಗ ಮತ್ತು ಒಣಚರ್ಮದಂತಹ ದೀರ್ಘಕಾಲೀನ ಸಮಸ್ಯೆ ಇರುವವರಿಗೆ ಅಪಾಯ ಹೆಚ್ಚಾಗುತ್ತದೆ. “ದೇಹದಲ್ಲಿ ಸಾಕಷ್ಟು ಜಲಸಂಚಯನವನ್ನು ನಿರ್ವಹಿಸಬೇಕು. ಉಪ್ಪುಭರಿತ ಅಥವಾ ಸಂಸ್ಕರಿತ ಆಹಾರಗಳ ಸೇವನೆಯನ್ನು ಕಡಿಮೆ ಮಾಡುವುದು ಹಾಗೂ ಪೊಟ್ಯಾಶಿಯಂ–ಸಮೃದ್ಧ ಉತ್ಪನ್ನಗಳ (ಹಣ್ಣುಗಳು/ತರಕಾರಿಗಳು) ಸೇವನೆಯನ್ನು ಹೆಚ್ಚಿಸುವುದರಿಂದ ಸೆಳೆತಗಳು, ಸುಸ್ತು ಮತ್ತು ಕಿಡ್ನಿ ಸ್ಟೋನ್ಗಳಂತಹ ಸಮಸ್ಯೆಗಳಿಂದ ಪರಿಹಾರ ಪಡೆಯಬಹುದು. ಜೊತೆಗೆ ಎಲೆಕ್ಟ್ರೊಲೈಟ್ ಸಮತೋಲನ ಮತ್ತು ಕಿಡ್ನಿ ಕಾರ್ಯ ಸುಧಾರಿಸಬಹುದು” ಎಂದು ತಜ್ಞರು ಹೇಳಿದ್ದಾರೆ. ►ಮಕ್ಕಳು ಮತ್ತು ವೃದ್ಧರಿಗೆ ಅಪಾಯ ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು, ವಿಶೇಷವಾಗಿ ಹಸುಗೂಸುಗಳು, 65 ವರ್ಷ ಮೇಲ್ಪಟ್ಟ ವಯಸ್ಕರು, ದೀರ್ಘಕಾಲೀನ ಹೃದಯ, ಶ್ವಾಸಕೋಶ, ಕಿಡ್ನಿ ಅಥವಾ ಲಿವರ್ ರೋಗ ಹೊಂದಿರುವವರು, ಮಧುಮೇಹಿಗಳು ಹಾಗೂ ರೋಗನಿರೋಧಕ ಶಕ್ತಿಯ ಸಮಸ್ಯೆ ಇರುವವರು (ಕ್ಯಾನ್ಸರ್ ಥೆರಪಿ ಪಡೆಯುತ್ತಿರುವವರು, ಸ್ಟೆರಾಯ್ಡ್ ಬಳಸುತ್ತಿರುವವರು), ಗರ್ಭಿಣಿಯರು ಮತ್ತು ಬೊಜ್ಜು ಅಥವಾ ಅಧಿಕ ತೂಕ ಹೊಂದಿರುವವರಿಗೆ ಹೆಚ್ಚು ಅಪಾಯವಿರುತ್ತದೆ. ►ಹೆಚ್ಚಾಗಿರುವ ಚಳಿಯ ದಿನಗಳು ಭಾರತದಲ್ಲಿ ಈಗ ತಾಪಮಾನಗಳು ಹಲವು ರಾಜ್ಯಗಳಲ್ಲಿ 3°C ರಿಂದ 5°C ಕ್ಕಿಂತ ಕೆಳಗೆ ಇಳಿಯುತ್ತಿವೆ. ದೀರ್ಘಕಾಲೀನ ಸರ್ಕಾರಿ ದತ್ತಾಂಶದ ಪ್ರಕಾರ, ಜಮ್ಮು ಮತ್ತು ಕಾಶ್ಮೀರ, ದಿಲ್ಲಿ ಹಾಗೂ ಒಡಿಶಾ ಸೇರಿದಂತೆ ಅನೇಕ ಪ್ರದೇಶಗಳಲ್ಲಿ ಚಳಿಯ ದಿನಗಳ ಸಂಖ್ಯೆ ಹೆಚ್ಚಾಗಿದೆ.

ವಾರ್ತಾ ಭಾರತಿ 11 Jan 2026 8:45 pm

2026ರ ಮೊದಲ ಉಡಾವಣೆಗೆ ಸಜ್ಜಾದ ಇಸ್ರೋ; ಇಷ್ಟು ಸ್ಪೀಡ್‌ ಆಗಿ ಕವಿತೆ ಬರೀತಿರಲಿಲ್ಲ ಅಮೀರ್‌ ಖುಸ್ರೋ

ಭಾರತದ ಹೆಮ್ಮೆಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ಹಮ್ಮಿಕೊಳ್ಳುವ ಬಾಹ್ಯಾಕಾಶ ಕಾರ್ಯಾಚರಣೆಗಳನ್ನು ಇಡೀ ಜಗತ್ತು ಕುತೂಹಲಭರಿತ ಕಣ್ಣುಗಳಿಂದ ನೋಡುತ್ತದೆ. ಅದರಂತೆ ನಾಳೆ (ಜ.12-ಸೋಮವಾರ) ಇಸ್ರೋ 2026ರ ವರ್ಷದ ಮೊದಲ ಸ್ಪೇಸ್‌ ಮಿಷನ್‌ ಕೈಗೊಳ್ಳಲಿದ್ದು, ಪಿಎಸ್‌ಎಲ್‌ವಿ ಸಿ62​ ರಾಕೆಟ್‌ ಕಣ್ಗಾವಲು ಉಪಗ್ರಹ EOS-N1ನ್ನು ನಭಕ್ಕೆ ಕೊಂಡೊಯ್ಯಲಿದೆ. ಇದರ ಜೊತೆಗೆ ಭಾರತ ಮತ್ತು ವಿದೇಶಗಳ ಒಟ್ಟು 17 ಉಪಗ್ರಹಗಳನ್ನೂ ಇಸ್ರೋ ಕಕ್ಷೆಗೆ ಸೇರಿಸಲಿದೆ. ಇಸ್ರೋದ ಬಾಹ್ಯಾಕಾಶ ಕಾರ್ಯಾಚರಣೆಗಳ ವೇಗ ಕಂಡು ಜಗತ್ತು ದಂಗಾಗಿದೆ. ಇಲ್ಲಿದೆ ಮಾಹಿತಿ.

ವಿಜಯ ಕರ್ನಾಟಕ 11 Jan 2026 8:40 pm

ಸುಟ್ಟ ಗಾಯ: ಚಿಕಿತ್ಸೆ ಫಲಕಾರಿಯಾಗದೆ ಎಎಸ್ಸೈ ಮೃತ್ಯು

ಮಂಗಳೂರು: ಬೆಂಕಿಯ ಸುಟ್ಟ ಗಾಯದಿಂದ ಆಸ್ಪತ್ರೆಗೆ ದಾಖಲಾಗಿದ್ದ ಪಾಂಡೇಶ್ವರ ಠಾಣೆಯ ಎಎಸ್ಸೈ ಹರಿಶ್ಚಂದ್ರ ಬೇರಿಕೆ (57) ಚಿಕಿತ್ಸೆ ಫಲಕಾರಿಯಾಗದೆ ರವಿವಾರ ಮೃತಪಟ್ಟಿದ್ದಾರೆ. ಇವರು ಪತ್ನಿ, ಓರ್ವ ಪುತ್ರ ಮತ್ತು ಪುತ್ರಿಯನ್ನು ಅಗಲಿದ್ದಾರೆ. ನಗರದ ಕೆಪಿಟಿ ಬಳಿಯ ವ್ಯಾಸನಗರದ ಮನೆಯಲ್ಲಿ ಡಿ.28ರಂದು ತರಗೆಲೆಯನ್ನು ಸುಡುವ ವೇಳೆ ಬೆಂಕಿಯ ತೀವ್ರ ತರದ ಸುಟ್ಟ ಗಾಯದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗಲಿಲ್ಲ. ಕಾಸರಗೋಡು ಜಿಲ್ಲೆಯ ಕಾವುಗೋಳಿಯ ನಿವಾಸಿಯಾಗಿದ್ದ ಹರಿಶ್ಚಂದ್ರ ಬೈಕಂಪಾಡಿಯಲ್ಲಿ ನೆಲೆಸಿದ್ದರು. ಕೆಲವು ವರ್ಷಗಳ ಹಿಂದೆ ವ್ಯಾಸ ನಗರದಲ್ಲಿ ಮನೆ ಮಾಡಿದ್ದರು. 1993ರಲ್ಲಿ ಪೊಲೀಸ್ ಇಲಾಖೆಗೆ ಸೇರ್ಪಡೆಗೊಂಡಿದ್ದ ಅವರು 33 ವರ್ಷಗಳಿಂದ ಪಾಂಡೇಶ್ವರ ಠಾಣೆ, ಡಿವೈಎಸ್‌ಪಿ ಕಚೇರಿ, ಎಸಿಪಿ ಕಚೇರಿ, ಕರಾವಳಿ ಕಾವಲು ಪಡೆ, ಸಂಚಾರ ಪೂರ್ವ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸಿದ್ದರು. 10 ವರ್ಷದ ಹಿಂದೆ ಎಎಸ್ಸೈ ಆಗಿ ಭಡ್ತಿ ಪಡೆದಿದ್ದರು. ಪಾಂಡೇಶ್ವರದ ಪೊಲೀಸ್ ಲೇನ್ ನ ಮುನೀಶ್ವರ ಮಹಾಗಣಪತಿ ದೇವಸ್ಥಾನದ ಉಪಾಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದರು.

ವಾರ್ತಾ ಭಾರತಿ 11 Jan 2026 8:40 pm

West Bengal | ಮತ್ತೋರ್ವ ಬಿಎಲ್ಒ ಆತ್ಮಹತ್ಯೆ

ಕೋಲ್ಕತಾ, ಜ. 11: ಬೂತ್ ಮಟ್ಟದ ಅಧಿಕಾರಿ (ಬಿಎಲ್ಒ) ಯೊಬ್ಬರ ಮೃತದೇಹ ಮುರ್ಶಿದಾಬಾದ್ ಜಿಲ್ಲೆಯ ಪ್ರಾಥಮಿಕ ಶಾಲೆಯೊಂದರ ಕೊಠಡಿಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದೆ. ಎಸ್ಐಆರ್ ನ ತೀವ್ರ ಕೆಲಸದ ಒತ್ತಡವೇ ಅವರು ಆತ್ಮಹತ್ಯೆ ಮಾಡಿಕೊಳ್ಳಲು ಕಾರಣವಾಗಿದೆ ಎಂದು ಅವರ ಕುಟುಂಬ ಆರೋಪಿಸಿದೆ ಎಂದು ಪೊಲೀಸರು ರವಿವಾರ ತಿಳಿಸಿದ್ದಾರೆ. ಮೃತಪಟ್ಟ ಬೂತ್ ಮಟ್ಟದ ಅಧಿಕಾರಿ (ಬಿಎಲ್ಒ)ಯನ್ನು ಹಮಿಮುಲ್ ಇಸ್ಲಾಂ (47) ಎಂದು ಗುರುತಿಸಲಾಗಿದೆ. ಅವರು ಪೈಕ್ಮಾರಿ ಚಾರ್ ಕೃಷ್ಣಾಪುರ ಬಾಲಕರ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿದ್ದರು. ಅವರನ್ನು ಖರಿಬೋನಾ ಗ್ರಾಮ ಪಂಚಾಯತ್ ವ್ಯಾಪ್ತಿಯ ಪೂರ್ವ ಅಲೈಪುರ ಗ್ರಾಮದಲ್ಲಿ ಬೂತ್ ಮಟ್ಟದ ಅಧಿಕಾರಿ (ಬಿಎಲ್ಒ)ಯಾಗಿ ನಿಯೋಜಿಸಲಾಗಿತ್ತು ಎಂದು ರಣಿತಾಲ್ ಪೊಲೀಸ್ ಠಾಣೆಯ ಅಧಿಕಾರಿ ತಿಳಿಸಿದ್ದಾರೆ. ರಣಿತಾಲ್ ಪೊಲೀಸ್ ಠಾಣಾ ವ್ಯಾಪ್ತಿಯ ಪೈಕ್ಮಾರಿ ಚಾರ್ ಪ್ರದೇಶದಲ್ಲಿ ಶನಿವಾರ ತಡರಾತ್ರಿ ಈ ಘಟನೆ ಸ್ಥಳೀಯರ ಗಮನಕ್ಕೆ ಬಂದಿದೆ ಎಂದು ಅವರು ತಿಳಿಸಿದ್ದಾರೆ. ಹಮಿಮುಲ್ ಅವರು ಶನಿವಾರ ಬೆಳಗ್ಗೆ ಶಾಲೆಗೆ ತೆರಳಿದ್ದರು. ಆದರೆ ಅಪರಾಹ್ನ ಮನೆಗೆ ಹಿಂದಿರುಗಲಿಲ್ಲ ಎಂದು ಅವರ ಕುಟುಂಬದ ಸದಸ್ಯರು ತಿಳಿಸಿದ್ದಾರೆ. ‘‘ದೀರ್ಘ ಹುಡುಕಾಟದ ಬಳಿಕ ಶನಿವಾರ ರಾತ್ರಿ ಅವರ ಮೃತದೇಹ ಶಾಲೆಯ ಕೊಠಡಿಯೊಳಗೆ ನೇಣು ಹಾಕಿಕೊಂಡ ಸ್ಥಿತಿಯಲ್ಲಿ ಪತ್ತೆಯಾಯಿತು. ನಮ್ಮ ಅಧಿಕಾರಿಗಳು ಮೃತದೇಹವನ್ನು ಪತ್ತೆ ಹಚ್ಚಿದ್ದಾರೆ. ತನಿಖೆ ನಡೆಯುತ್ತಿದೆ’’ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಶಿಕ್ಷಕ ಹಾಗೂ ಬಿಎಲ್ಒ ಆಗಿ ಎರಡೂ ಜವಾಬ್ದಾರಿಗಳನ್ನು ನಿರ್ವಹಿಸುತ್ತಿದ್ದುದರಿಂದ ಹಮಿಮುಲ್ ಅವರು ತೀವ್ರ ಕೆಲಸದ ಒತ್ತಡದಲ್ಲಿದ್ದರು ಎಂದು ಕುಟುಂಬದ ಸದಸ್ಯರು ಆರೋಪಿಸಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ವಾರ್ತಾ ಭಾರತಿ 11 Jan 2026 8:36 pm

ಜ.12ರಿಂದ ಆಳ್ವಾಸ್‌ನಲಿ ರಾಷ್ಟ್ರೀಯ ಅಥ್ಲೆಟಿಕ್ ಕ್ರೀಡಾಕೂಟ

85ನೇ ಅಖಿಲ ಭಾರತ ಅಂತರ್ ವಿಶ್ವ ವಿದ್ಯಾಲಯ ಅಥ್ಲೆಟಿಕ್ ಚಾಂಪಿಯನ್‌ಶಿಪ್2026

ವಾರ್ತಾ ಭಾರತಿ 11 Jan 2026 8:30 pm

Guwahati ಹೈಕೋರ್ಟ್ ವಕೀಲರಿಂದ ಉಪವಾಸ ಮುಷ್ಕರ, CJI ಕಾರ್ಯಕ್ರಮಕ್ಕೆ ಬಹಿಷ್ಕಾರ

ಗುವಾಹಟಿ (ಅಸ್ಸಾಂ), ಜ.11: ಉಚ್ಚ ನ್ಯಾಯಾಲಯದ ಸ್ಥಳಾಂತರವನ್ನು ವಿರೋಧಿಸಿ ಗುವಾಹಟಿ ಹೈಕೋರ್ಟ್ ವಕೀಲರ ಸಂಘವು (ಜಿಎಚ್ಸಿಬಿಎ) ರವಿವಾರ ನಾಲ್ಕು ಗಂಟೆಗಳ ಉಪವಾಸ ಮುಷ್ಕರವನ್ನು ನಡೆಸಿದ್ದು, ಭಾರತದ ಮುಖ್ಯ ನ್ಯಾಯಾಧೀಶ (CJI) ಸೂರ್ಯಕಾಂತ ಅವರಿಂದ ನೂತನ ಹೈಕೋರ್ಟ್ ಸಂಕೀರ್ಣದ ಶಿಲಾನ್ಯಾಸ ಕಾರ್ಯಕ್ರಮವನ್ನೂ ಬಹಿಷ್ಕರಿಸಿದೆ. ಉತ್ತರ ಗುವಾಹಟಿಯ ರಂಗಮಹಲ್ನಲ್ಲಿ ಸುಮಾರು 49 ಎಕರೆಗಳಷ್ಟು ವಿಶಾಲ ಪ್ರದೇಶದಲ್ಲಿ ನೂತನ ಹೈಕೋರ್ಟ್ ಸಂಕೀರ್ಣ ನಿರ್ಮಾಣಗೊಳ್ಳಲಿದೆ. ಜಿಎಚ್ಸಿಬಿಎ ಸದಸ್ಯರು ಗುರುವಾರ ಮತ್ತು ಶುಕ್ರವಾರವೂ ನಗರದ ಹೃದಯಭಾಗದಲ್ಲಿರುವ ಗುವಾಹಟಿ ಉಚ್ಚ ನ್ಯಾಯಾಲಯದ ಹಳೆಯ ಕಟ್ಟಡದ ಮುಂದೆ ನಾಲ್ಕು ಗಂಟೆಗಳ ಉಪವಾಸ ಮುಷ್ಕರ ನಡೆಸಿದ್ದರು. ಬ್ರಹ್ಮಪುತ್ರ ನದಿಯ ಉತ್ತರ ದಂಡೆಗೆ ನ್ಯಾಯಾಲಯದ ಸ್ಥಳಾಂತರವನ್ನು ಜಿಎಚ್ಸಿಬಿಎ ಆರಂಭದಿಂದಲೂ ಬಲವಾಗಿ ವಿರೋಧಿಸುತ್ತಿದೆ. ಆದರೆ ಸರಕಾರವು ಏಕಪಕ್ಷೀಯವಾಗಿ ನಿರ್ಧಾರವನ್ನು ತೆಗೆದುಕೊಂಡಿದ್ದು, ನೂತನ ಸಂಕೀರ್ಣದ ನಿರ್ಮಾಣಕ್ಕೆ ಮುಂದಾಗಿದೆ ಎಂದು ವಕೀಲರ ಸಂಘದ ಉಪಾಧ್ಯಕ್ಷ ಶಂತನು ಬೋರ್ಥಾಕುರ್ ಆರೋಪಿಸಿದರು.

ವಾರ್ತಾ ಭಾರತಿ 11 Jan 2026 8:23 pm

ಕಳ್ಳಬಟ್ಟೆ ಸರಾಯಿ, ಸೇಂದಿ ಮಾರಾಟಗಾರರನ್ನು ಗಡಿಪಾರು ಮಾಡಿ: ಅಧಿಕಾರಿಗಳಿಗೆ ಅಬಕಾರಿ ಸಚಿವ ತಿಮ್ಮಾಪುರ ಖಡಕ್ ಸೂಚನೆ

ಯಾದಗಿರಿ: ಕಲಬುರಗಿ ವಿಭಾಗದ ಎಲ್ಲಾ ಜಿಲ್ಲೆಗಳಲ್ಲಿ ಕಳ್ಳಬಟ್ಟಿ, ಸೇಂದಿ ತಯಾರಕೆಗೆ ಬಳಸುವ ಸಿಎಚ್ ಪೌಢರ್‌ ಬಳಕೆ ನಿಷೇಧಿಸುವತ್ತ ಕಠಿಣ ಕ್ರಮ ತೆಗೆದುಕೊಳ್ಳಬೇಕು ಮತ್ತು ಇದರಲ್ಲಿ‌ ಭಾಗಿಯಾಗಿರುವ ಆರೋಪಿಗಳಿಗೆ ಗಡಿಪಾರು ಮಾಡಬೇಕೆಂದು ಅಬಕಾರಿ ಸಚಿವ ಆರ್. ಬಿ.ತಿಮ್ಮಾಪುರ ಅವರು ಅಧಿಕಾರಿಗಳಿಗೆ ಖಡಕ್‌ ಸೂಚಿಸಿದ್ದಾರೆ.   ಅಬಕಾರಿ ಇಲಾಖೆ ಕಚೇರಿಯಲ್ಲಿ ರವಿವಾರ ಹಮ್ಮಿಕೊಂಡಿದ್ದ ಅಬಕಾರಿ ಇಲಾಖೆ ವಿಭಾಗ ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಸಚಿವ ಆರ್. ಬಿ.ತಿಮ್ಮಾಪುರ, ರಾಯಚೂರು ಜಿಲ್ಲೆಯಲ್ಲಿ ಅಕ್ರಮ ಸೇಂದಿ, ಸಿಎಚ್ ಪೌಡರ್ ಮತ್ತು ಕಳಬಟ್ಟೆ ಸರಾಯಿ ಹೆಚ್ಚು ತಯಾರಿಸಿ ಮಾರಲಾಗುತ್ತಿದೆ. ಇದು ಆರೋಗ್ಯಕ್ಕೆ ಮಾರಕವಾಗಲಿದೆ. ಕಳೆದ ಸಭೆಯಲ್ಲಿ ಇಂತಹವುಗಳನ್ನು ತಡೆಯುವಂತೆ ಹೇಳಲಾಗಿತ್ತು.  ಆದರೆ  ನಿಗದಿತ ಗುರಿಯನ್ನು ತಲುಪಿಲ್ಲ ಎಂದು ಸಚಿವರು ಈ ವೇಳೆ ತರಾಟೆಗೆ ತೆಗೆದುಕೊಂಡಿದ್ದಾರೆ.  ಈ ರೀತಿ ಅಕ್ರಮ ಸರಾಯಿ, ಸೇಂದಿ ಮಾರಾಟವಾದರೆ ಜನರ ಆರೋಗ್ಯ ಹಾಳಾಗುತ್ತದೆ ಮತ್ತು ಸರಕಾರಕ್ಕೆ  ಇಲಾಖೆಯಿಂದ ತೆರಿಗೆ ನಷ್ಟವಾಗುತ್ತದೆ. ಇದನ್ನು ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಬೇಕೆಂದರು. ಯಾದಗಿರಿ ನಗರದಲ್ಲಿ ಸ್ಥಳವೊಂದರಲ್ಲಿ ಕಳ್ಳಬಟ್ಟಿ ಸರಾಯಿ, ಸೇಂಧಿಯನ್ನು ತಯಾರಿಸಿ ಒಂದು ಬ್ಯಾರಲ್ ಸಂಗ್ರಹಿಸಿ ಟೆರಸ್ ಮೇಲೆ ಇಟ್ಟು ಪೈಪ್ ಮೂಲಕ ಮಾರಾಟ ಮಾಡಲಾಗುತ್ತಿದೆ ಎಂದು ಶಾಸಕ ಚನ್ನಾರೆಡ್ಡಿ ಪಾಟೀಲ್ ಸಚಿವರ ಸಮ್ಮುಖದಲ್ಲಿಯೇ ಗಂಭೀರವಾಗಿ ಆರೋಪಿಸಿದರು.

ವಾರ್ತಾ ಭಾರತಿ 11 Jan 2026 8:22 pm

ರಾಜ್ಯದಲ್ಲಿ ಜ.14ರ ವರೆಗೆ ಚಳಿಯ ವಾತಾವರಣ ಸಾಧ್ಯತೆ

ಬೆಂಗಳೂರು : ರಾಜ್ಯದಲ್ಲಿ ಜ.14ರ ವರೆಗೆ ಚಳಿಯ ವಾತಾವರಣ ಮುಂದುವರೆಯುವ ಸಾಧ್ಯತೆ ಇದೆ. ದಕ್ಷಿಣ ಕನ್ನಡದ ಸುಳ್ಯ, ಕಡಬ, ಪುತ್ತೂರು ತಾಲೂಕುಗಳಲ್ಲಿ ಅಲ್ಲಲ್ಲಿ ರಾತ್ರಿ ತುಂತುರು ಮಳೆಯ ಮುನ್ಸೂಚೆನೆ ಇದೆ. ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳ ಒಂದೆರಡು ಕಡೆ ತುಂತುರು ಮಳೆಯ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಮಲೆನಾಡು ಜಿಲ್ಲೆಗಳಲ್ಲಿ ಬಿಸಿಲು ಹಾಗೂ ಮೋಡದ ವಾತಾವರಣ ಇರಲಿದ್ದು, ಕೊಡಗು, ಹಾಸನ ಜಿಲ್ಲೆಗಳ ಅಲ್ಲಲ್ಲಿ ಚಿಕ್ಕಮಗಳೂರು ಹಾಗೂ ಶಿವಮೊಗ್ಗ ಜಿಲ್ಲೆಗಳ ಕರಾವಳಿ ಜಿಲ್ಲೆಗಳಿಗೆ ಹೊಂದಿಕೊಂಡಿರುವ ಪ್ರದೇಶಗಳಲ್ಲಿ ಅಲ್ಲಲ್ಲಿ ಸಂಜೆ, ರಾತ್ರಿ ತುಂತುರು ಮಳೆಯ ಮುನ್ಸೂಚೆನೆ ಇದೆ. ಜ.14ರವರೆಗೆ ಈಗ ಇರುವ ವಾತಾವರಣ ಮುಂದುವರಿಯುವ ಸಾಧ್ಯತೆಯಿದೆ. ರಾಜ್ಯದ ಉತ್ತರ ಒಳನಾಡಿನ ಬೆಳಗಾವಿ, ಧಾರವಾಡ, ಬಾಗಲಕೋಟೆ, ಹಾವೇರಿ, ಗದಗ, ದಾವಣಗೆರೆ, ವಿಜಯನಗರ, ಬಳ್ಳಾರಿ, ಕೊಪ್ಪಳ, ರಾಯಚೂರು, ವಿಜಯಪುರ, ಕಲಬುರ್ಗಿ, ಬೀದರ್, ಯಾದಗಿರಿ ಜಿಲ್ಲೆಗಳಲ್ಲಿ ಅಲ್ಲಲ್ಲಿ ಬೆಳಿಗ್ಗೆಯಿಂದ ಮೋಡದ ವಾತಾವರಣದ ಮುನ್ಸೂಚನೆ ಇದೆ. ಹಾವೇರಿ, ಧಾರವಾಡ, ಬೆಳಗಾವಿ ಜಿಲ್ಲೆಗಳ ಒಂದೆರಡು ಕಡೆ ರಾತ್ರಿ ತುಂತುರು ಮಳೆಯ ಮುನ್ಸೂಚೆನೆ ಇದೆ. ರಾಜ್ಯದ ಉತ್ತರ ಒಳನಾಡು ಜಿಲ್ಲೆಗಳಲ್ಲಿ ಜ.14ರಿಂದ ಚಳಿಯ ಪ್ರಮಾಣವು ಕಡಿಮೆಯಾಗುವ ಸೂಚನೆಗಳಿವೆ. 14ರ ವರೆಗೆ ರಾಜ್ಯದ ದಕ್ಷಿಣ ಒಳನಾಡಿನ ಮೈಸೂರು, ಮಂಡ್ಯ, ಚಾಮರಾಜನಗರ, ರಾಮನಗರ, ಬೆಂಗಳೂರು ಗ್ರಾಮಾಂತರ ಹಾಗೂ ನಗರ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು ಜಿಲ್ಲೆಗಳ ಅಲ್ಲಲ್ಲಿ ಮೋಡದ ವಾತಾವರಣ ಇರಲಿದ್ದು, ಜ.15ರಿಂದ ಒಣ ಹವೆ ಮುಂದುವರಿಯಲಿದೆ. ಚಳಿಯ ಪ್ರಮಾಣವು ಸ್ವಲ್ಪ ಮಟ್ಟಿಗೆ ಕಡಿಮೆಯಾಗಬಹುದು ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಕನಿಷ್ಟ ಉಷ್ಣಾಂಶದಲ್ಲಿ ಇಳಿಕೆ: ರವಿವಾರದಂದು ಹಾಸನದಲ್ಲಿ ಕನಿಷ್ಟ ಉಷ್ಣಾಂಶ 9 ಡಿಗ್ರಿ ಸೆಲ್ಸಿಯಲ್‍ಗೆ ಇಳಿಕೆಯಾಗಿದ್ದು, ಬೀದರ್ 10, ದಾವಣಗೆರೆ 11, ಹಾವೇರಿ ಮತ್ತು ವಿಜಯಪುರ 12, ಗದಗ, ಬೆಂಗಳೂರು, ಮೈಸೂರು ಜಿಲ್ಲೆಯಲ್ಲಿ ಕನಿಷ್ಟ ಉಷ್ಣಾಂಶ 16ಕ್ಕೆ ತಲುಪಿದೆ ಎಂದು ಹವಾಮಾನ ಇಲಾಖೆ ಹೇಳಿದೆ.

ವಾರ್ತಾ ಭಾರತಿ 11 Jan 2026 8:19 pm

Digital Arrest | Delhiಯ ವೃದ್ಧ ದಂಪತಿಗೆ 14 ಕೋಟಿ ರೂ. ವಂಚನೆ

ಹೊಸದಿಲ್ಲಿ, ಜ.11: ದಿಲ್ಲಿಯ ಗ್ರೇಟರ್ ಕೈಲಾಷ ನಿವಾಸಿಗಳಾಗಿರುವ ವೃದ್ಧ ವೈದ್ಯ ದಂಪತಿಯನ್ನು ಎರಡು ವಾರಗಳಿಗೂ ಅಧಿಕ ಸಮಯ ‘ಡಿಜಿಟಲ್ ಬಂಧನ’ದಲ್ಲಿರಿಸಿದ್ದ ಸೈಬರ್ ಕ್ರಿಮಿನಲ್ಗಳು ಅವರಿಗೆ ಸುಮಾರು 14 ಕೋಟಿ ರೂ.ಗಳನ್ನು ವಂಚಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರ ಪ್ರಕಾರ, ಡಿ.24ರಿಂದ ಜ.9ರ ನಡುವೆ ಈ ವಂಚನೆ ನಡೆದಿದ್ದು, ಕಾನೂನು ಜಾರಿ ಅಧಿಕಾರಿಗಳೆಂದು ಹೇಳಿಕೊಂಡಿದ್ದ ಆರೋಪಿಗಳು ಬಲವಂತದಿಂದ ದಂಪತಿಯಿಂದ ಹಲವಾರು ಬ್ಯಾಂಕ್ ಖಾತೆಗಳಿಗೆ ಹಣವನ್ನು ವರ್ಗಾವಣೆ ಮಾಡಿಸಿಕೊಂಡಿದ್ದರು. ಶನಿವಾರ ಈ ಬಗ್ಗೆ E-FIR ದಾಖಲಿಸಿಕೊಂಡಿರುವ ದಿಲ್ಲಿ ಪೊಲೀಸ್ನ ಸೈಬರ್ ಅಪರಾಧ ಘಟಕವು ತನಿಖೆ ನಡೆಸುತ್ತಿದೆ. ಅಮೆರಿಕದಿಂದ ಮರಳಿದ್ದ ವೈದ್ಯ ದಂಪತಿ 2016ರಿಂದ ಗ್ರೇಟರ್ ಕೈಲಾಷದಲ್ಲಿ ವಾಸವಾಗಿದ್ದು, ಅವರ ಮಕ್ಕಳು ವಿದೇಶದಲ್ಲಿ ನೆಲೆಸಿದ್ದಾರೆ. ಮನೆಯಲ್ಲಿ ದಂಪತಿ ಮಾತ್ರ ವಾಸವಾಗಿರುವುದನ್ನು ಗಮನಿಸಿದ್ದ ಆರೋಪಿಗಳು ಪದೇಪದೇ ಅವರಿಗೆ ಬಂಧನ ಮತ್ತು ಕಾನೂನು ಕ್ರಮದ ಬೆದರಿಕೆ ಒಡ್ಡಿದ್ದರು. ದಂಪತಿಯ ಮೇಲೆ ಒತ್ತಡ ಹೇರಿ ಅವರು ತಮ್ಮೊಂದಿಗೆ ನಿರಂತರವಾಗಿ ಫೋನ್ ಮತ್ತು ವೀಡಿಯೊ ಕರೆಗಳಲ್ಲಿರುವಂತೆ ನೋಡಿಕೊಂಡಿದ್ದರು ಎಂದು ಪೊಲೀಸರು ತಿಳಿಸಿದರು. ಜ.9ರಂದು ಕರೆಗಳು ಬರುವುದು ನಿಂತಾಗ ತಾವು ಮೋಸ ಹೋಗಿದ್ದೇವೆ ಎನ್ನುವುದು ದಂಪತಿಗೆ ಗೊತ್ತಾಗಿದ್ದು, ಬಳಿಕ ಅವರು ಪೊಲೀಸರಿಗೆ ವಂಚನೆ ಕುರಿತು ದೂರು ಸಲ್ಲಿಸಿದ್ದಾರೆ.

ವಾರ್ತಾ ಭಾರತಿ 11 Jan 2026 8:16 pm

ಜ.13: ಜಮೀಯ್ಯತುಲ್ ಫಲಾಹ್‌ನಿಂದ ಚೈತನ್ಯ ಚಿಲುಮೆ ಕಾರ್ಯಾಗಾರ

ಬಂಟ್ವಾಳ: ಜಮಿಯ್ಯತುಲ್ ಫಲಾಹ್ ಬಂಟ್ವಾಳ ಘಟಕದ ವತಿಯಿಂದ ಎಸೆಸ್ಸೆಲ್ಸಿ ವಿದ್ಯಾರ್ಥಿಗಳ ವಿಷಯಾಧಾರಿತ ಪರೀಕ್ಷಾ ಪೂರ್ವ ತರಬೇತಿ ಕಾರ್ಯಕ್ರಮ ಱಚೈತನ್ಯ ಚಿಲುಮೆ-2026 ಕಾರ್ಯಾಗಾರೞ ಜ.13ರಂದು ಬೆಳಗ್ಗೆ 9:30ಕ್ಕೆ ಲಯನ್ಸ್ ಸೇವಾ ಮಂದಿರ ಬಿ.ಸಿ.ರೋಡ್‌ನಲ್ಲಿ ನಡೆಯಲಿದೆ. ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿ ಮಾಲತಿ ಕೆ. ಉದ್ಘಾಟಿಸಲಿದ್ದಾರೆ. ಜಮಿಯ್ಯತುಲ್ ಫಲಾಹ್ ಬಂಟ್ವಾಳ ಘಟಕ ಅಧ್ಯಕ್ಷ ಬಿ.ಎಂ. ಅಬ್ಬಾಸ್ ಅಲಿ ಅಧ್ಯಕ್ಷತೆ ವಹಿಸಲಿದ್ದಾರೆ. ಶಿಕ್ಷಕ ಶೇಕ್ ಆದಂ ಸಾಹೇಬ್, ಸಹಶಿಕ್ಷಕ ಪರಮೇಶ್ವರ ಹೆಗಡೆ, ಶಿಕ್ಷಕ ರೋಶನ್ ಅಲೆಕ್ಸಾಂಡರ್ ಪಿಂಟೋ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಅಜೀವ ಸದಸ್ಯರಾದ ಹಾಜಿ ಅಹ್ಮದ್ ಖಾನ್ ಕೊಡಾಜೆ, ಸಲೀಂ ಅಲ್ತಾಫ್ ಡೈಮಂಡ್ ಭಾಗವಹಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.

ವಾರ್ತಾ ಭಾರತಿ 11 Jan 2026 8:12 pm

Madhya Pradesh | ಇಂದೋರ್ ನಲ್ಲಿ ಕಲುಷಿತ ನೀರು ಕುಡಿದು ಮೃತ್ಯು ಪ್ರಕರಣ; ಸ್ವಚ್ಛ ಜಲ ಅಭಿಯಾನಕ್ಕೆ ಚಾಲನೆ

ಭೋಪಾಲ, ಜ.11: ಇಂದೋರ್ ನಲ್ಲಿ ಕಲುಷಿತ ನೀರಿನ ಸೇವನೆಯಿಂದ ಸಾವುಗಳು ಸಂಭವಿಸಿದ ಹಿನ್ನೆಲೆಯಲ್ಲಿ ಮಧ್ಯಪ್ರದೇಶದ ಮುಖ್ಯಮಂತ್ರಿ ಡಾ. ಮೋಹನ್ ಯಾದವ್ ಅವರು ರಾಜ್ಯಾದ್ಯಂತ ಸ್ವಚ್ಛ ಜಲ ಅಭಿಯಾನಕ್ಕೆ ಚಾಲನೆ ನೀಡಿದ್ದಾರೆ. ಈ ಉಪಕ್ರಮವು ಪ್ರಮುಖವಾಗಿ ನೀರು ಮತ್ತು ಒಳಚರಂಡಿ ಕೊಳವೆಗಳ ಜಿಐಎಸ್ (ಭೌಗೋಳಿಕ ಮಾಹಿತಿ ವ್ಯವಸ್ಥೆ) ಮ್ಯಾಪಿಂಗ್, ಈ ಕೊಳವೆ ಮಾರ್ಗಗಳು ಪರಸ್ಪರ ಸೇರುವ ಸ್ಥಳಗಳ ಗುರುತಿಸುವಿಕೆ ಮತ್ತು ರೋಬೊಟ್ ಗಳನ್ನು ಬಳಸಿಕೊಂಡು ಸೋರಿಕೆ ಪರಿಶೀಲನೆಗಳನ್ನು ಒಳಗೊಂಡಿರಲಿದೆ. ಅಭಿಯಾನದ ಮೊದಲ ಹಂತ ಜ.10ರಿಂದ ಫೆ.28ರವರೆಗೆ ಮತ್ತು ಎರಡನೇ ಹಂತ ಮಾ.1ರಿಂದ ಮಾ.31ರವರೆಗೆ ನಡೆಯಲಿವೆ. ಅಭಿಯಾನದಲ್ಲಿ ಸಾರ್ವಜನಿಕರ ಅಹವಾಲುಗಳನ್ನೂ ಸ್ವೀಕರಿಸಲಾಗುವುದು. ಮುಖ್ಯಮಂತ್ರಿಗಳ ಸಹಾಯವಾಣಿ (181) ಮೂಲಕ ಸಾರ್ವಜನಿಕರು ಕುಡಿಯುವ ನೀರಿಗೆ ಸಂಬಂಧಿಸಿದ ದೂರುಗಳನ್ನು ದಾಖಲಿಸಬಹುದು. ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ಅಭಿಯಾನಕ್ಕೆ ಚಾಲನೆ ನೀಡಿದ ಮುಖ್ಯಮಂತ್ರಿಗಳು, ಪ್ರತಿಯೊಂದು ಮನೆಗೆ ಶುದ್ಧ ನೀರನ್ನು ಪೂರೈಸುವುದು ರಾಜ್ಯ ಸರಕಾರದ ಜವಾಬ್ದಾರಿಯಾಗಿದ್ದು, ಇದಕ್ಕಾಗಿ ಎಲ್ಲ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಹೇಳಿದರು. ಇಂದೋರ್ ನ ಭಗೀರಥಪುರ ಪ್ರದೇಶದಲ್ಲಿ ಕಲುಷಿತ ನೀರಿನ ಸೇವನೆಯಿಂದ ಡಿ.21ರಿಂದ 21 ಜನರು ಮೃತಪಟ್ಟಿದ್ದರು. ಗಮನಾರ್ಹವಾಗಿ, ಭಗೀರಥಪುರದಲ್ಲಿ ಸಂಭವಿಸಿದ ಸಾವುಗಳಿಗೆ ಸಂಬಂಧಿಸಿದಂತೆ ಸಲ್ಲಿಸಲಾಗಿರುವ ಅರ್ಜಿಗಳ ವಿಚಾರಣೆಯನ್ನು ಜ.6ರಂದು ಕೈಗೆತ್ತಿಕೊಂಡಿದ್ದ ಮಧ್ಯಪ್ರದೇಶ ಉಚ್ಚ ನ್ಯಾಯಾಲಯದ ಇಂದೋರ ಪೀಠವು ರಾಜ್ಯ ಸರಕಾರವನ್ನು ತೀವ್ರ ತರಾಟೆಗೆತ್ತಿಕೊಂಡಿತ್ತು. ಭಗೀರಥಪುರ ಘಟನೆಯು ದೇಶದ ಅತ್ಯಂತ ಸ್ವಚ್ಛ ನಗರವೆಂಬ ಇಂದೋರ್ ನ ಖ್ಯಾತಿಗೆ ಹಾನಿಯನ್ನುಂಟು ಮಾಡಿದ್ದು, ತನ್ನ ನಿವಾಸಿಗಳಿಗೆ ಕಲುಷಿತ ನೀರನ್ನು ಪೂರೈಸಿದ್ದಕ್ಕಾಗಿ ಅದನ್ನು ಕುಖ್ಯಾತವಾಗಿಸಿದೆ ಎಂದು ನ್ಯಾಯಾಲಯವು ಕಿಡಿಕಾರಿತ್ತು. ಜ.15ರಂದು ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ನ್ಯಾಯಾಲಯದ ಮುಂದೆ ಹಾಜರಾಗಿ ಇಡೀ ಪ್ರಕರಣದ ಕುರಿತು ವಿವರಗಳನ್ನು ಸಲ್ಲಿಸುವಂತೆ ಮತ್ತು ಇತರ ಸ್ಥಳಗಳಲ್ಲಿ ಇಂತಹ ಘಟನೆಗಳನ್ನು ತಡೆಯಲು ರಾಜ್ಯಮಟ್ಟದಲ್ಲಿ ಯಾವ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎನ್ನುವುದನ್ನು ತಿಳಿಸುವಂತೆ ಇಬ್ಬರು ನ್ಯಾಯಾಧೀಶರ ಪೀಠವು ರಾಜ್ಯದ ಮುಖ್ಯ ಕಾರ್ಯದರ್ಶಿ ಅನುರಾಗ್ ಜೈನ್ ಅವರಿಗೆ ತಾಕೀತು ಮಾಡಿತ್ತು.

ವಾರ್ತಾ ಭಾರತಿ 11 Jan 2026 8:12 pm

ದ್ವೇಷ ಭಾಷಣ ಮಸೂದೆ| ರಾಜ್ಯಪಾಲರಿಂದ ತಿರಸ್ಕೃತವಾಗಿಲ್ಲ: ಮಂಗಳೂರಿನಲ್ಲಿ ಸಿಎಂ ಸಿದ್ದರಾಮಯ್ಯ

ಮಂಗಳೂರು: ದ್ವೇಷ ಭಾಷಣ ಮಸೂದೆಯನ್ನು ಸರ್ವಾನುಮತದಿಂದ ಅಂಗೀಕಾರವಾಗಿದೆ. ರಾಜ್ಯಪಾಲರು ಅದನ್ನು ವಾಪಸ್ ಕಳಿಸಿಲ್ಲ, ತಿರಸ್ಕರಿಸಿಲ್ಲ, ಅಂಕಿತವನ್ನೂ ಹಾಕಿಲ್ಲ. ರಾಜ್ಯಪಾಲರು ಆಹ್ವಾನಿಸಿದಾಗ ಈ ಬಗ್ಗೆ ವಿವರಣೆ ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ರವಿವಾರ ನಗರದಲ್ಲಿ ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಬಳ್ಳಾರಿಯಿಂದ ಬಿಜೆಪಿ ಪಾದಯಾತ್ರೆ ಮಾಡುವ ಕುರಿತು ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು ನಾವು ಹಿಂದೆ ಪಾದಯಾತ್ರೆ ಮಾಡಿದ್ದೆವು. ಬಳ್ಳಾರಿಯಲ್ಲಿ ಕಾನೂನುಬಾಹಿರ ಗಣಿಗಾರಿಕೆ ಮಾಡುತ್ತಿರುವ ಬಗ್ಗೆ ವಿಧಾನಸಭೆಯಲ್ಲಿ ಚರ್ಚೆ ಮಾಡಿದಾಗ ರೆಡ್ಡಿ ಸಹೋದರರು ಹಾಗೂ ಯಡಿಯೂರಪ್ಪ ಸವಾಲು ಹಾಕಿದ್ದರು. ಅದಕ್ಕಾಗಿ ಪಾದಯಾತ್ರೆ ಕೈಗೊಳ್ಳಲಾಯಿತು. ಈ ಬಿಜೆಪಿಗರು ಯಾಕೆ ಪಾದಯಾತ್ರೆ ಮಾಡಬೇಕು ಎಂದು ಪ್ರಶ್ನಿಸಿದರು. *ಬ್ಯಾನರ್ ತೆಗೆದದ್ದು ಬಳ್ಳಾರಿ ಘಟನೆಗೆ ಪ್ರಚೋದನೆ: ಬಳ್ಳಾರಿಯಲ್ಲಿ ಮಹರ್ಷಿ ವಾಲ್ಮೀಕಿ ಪ್ರತಿಮೆ ಉದ್ಘಾಟನೆಯ ಹಿನ್ನಲೆಯಲ್ಲಿ ಹಾಕಿದ್ದ ಬ್ಯಾನರನ್ನು ತೆಗೆಯಬೇಕಾದ ಅಗತ್ಯವೇನಿತ್ತು? ಅದನ್ನು ತೆಗೆದದ್ದೆ ಘಟನೆಗೆ ಪ್ರಚೋದನೆ ಆಯಿತು. ಜನಾರ್ದನ ರೆಡ್ಡಿ , ಶ್ರೀರಾಮುಲು ಅಧಿಕಾರ ಕಳೆದುಕೊಂಡಿದ್ದರಿಂದ ಅಸೂಯೆಯಿಂದ ನಡೆದುಕೊಳ್ಳುತ್ತಿದ್ದಾರೆ ಎಂದರು. *ಕುರ್ಚಿ ಕಾಳಗವಿಲ್ಲ: ಮುಖ್ಯಮಂತ್ರಿ ಕುರ್ಚಿ ಬಗ್ಗೆ ಕಾಳಗವೇ ಇಲ್ಲ. ಇದೆಲ್ಲಾ ಮಾಧ್ಯಮಗಳ ಸೃಷ್ಟಿ ಎಂದು ಮುಖ್ಯಮಂತ್ರಿ ಪ್ರತಿಕ್ರಿಯಿಸಿದರು.

ವಾರ್ತಾ ಭಾರತಿ 11 Jan 2026 8:06 pm

Pune | ವಜಾಗೊಂಡ IAS ತರಬೇತಿ ಅಧಿಕಾರಿ ಪೂಜಾ ಖೇಡ್ಕರ್ ಅವರ ಪೋಷಕರು ಸೇರಿ ಐವರು ಬಂಗಲೆಯಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆ; ಕಳ್ಳತನದ ಶಂಕೆ

ಪುಣೆ, ಜ.11: ವಜಾಗೊಂಡ ಪ್ರೊಬೇಷನರಿ IAS ಅಧಿಕಾರಿ ಪೂಜಾ ಖೇಡ್ಕರ್ ಅವರ ಪೋಷಕರು ಸೇರಿದಂತೆ ಐವರು ಪುಣೆ ನಗರದ ಔಂಧ್ ಪ್ರದೇಶದಲ್ಲಿರುವ ನ್ಯಾಷನಲ್ ಹೌಸಿಂಗ್ ಸೊಸೈಟಿಯ ಬಂಗಲೆಯಲ್ಲಿ ರವಿವಾರ ಮುಂಜಾನೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಬಂಗಲೆಯಲ್ಲಿ ಕಳ್ಳತನ ನಡೆದಿರುವ ಶಂಕೆ ವ್ಯಕ್ತವಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ. ರವಿವಾರ ಬೆಳಗಿನ ಜಾವ ಸುಮಾರು 1.30ರ ಸುಮಾರಿಗೆ ಕಳ್ಳತನ ನಡೆದಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಲಭಿಸಿದೆ. ಮಾಹಿತಿ ಪಡೆದ ತಕ್ಷಣ ಚತುರ್ಶೃಂಗಿ ಪೊಲೀಸ್ ಠಾಣೆಯ ತಂಡ ಸ್ಥಳಕ್ಕೆ ಧಾವಿಸಿತು. ಪೊಲೀಸರು ಸ್ಥಳಕ್ಕೆ ತಲುಪಿದಾಗ ಪೂಜಾ ಖೇಡ್ಕರ್ ಹಾಗೂ ಅವರ ಸಹೋದರರಾದ ವಿನಯ್ ಬುಧ್ವಂತ್ ಮತ್ತು ಹರ್ಷದ್ ಬುಧ್ವಂತ್ ಬಂಗಲೆಯಲ್ಲಿದ್ದರು ಎಂದು ತಿಳಿದುಬಂದಿದೆ. ಪೊಲೀಸರು ಬಂಗಲೆಯನ್ನು ಪರಿಶೀಲಿಸಿದ ವೇಳೆ, ಕಾವಲುಗಾರ ಜಿತೇಂದ್ರ ಸಿಂಗ್ ಕಾರು ಪಾರ್ಕಿಂಗ್ ಪ್ರದೇಶದಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಬಳಿಕ ಪೂಜಾ ಖೇಡ್ಕರ್ ಅವರು ಪೊಲೀಸರನ್ನು ತಮ್ಮ ಪೋಷಕರ ಕೋಣೆಗೆ ಕರೆದೊಯ್ದರು. ಅಲ್ಲಿ ಅವರ ತಂದೆ ಮತ್ತು ತಾಯಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಕಂಡುಬಂದಿದ್ದಾರೆ. ಕೋಣೆಯಲ್ಲಿದ್ದ ಬೀರು ತೆರೆದಿದ್ದು, ಅದರೊಳಗಿನ ವಸ್ತುಗಳು ನೆಲದ ಮೇಲೆ ಅಸ್ತವ್ಯಸ್ತವಾಗಿ ಬಿದ್ದಿದ್ದವು. ಇದೇ ರೀತಿಯಾಗಿ ಬಂಗಲೆಯ ಇತರ ಮೂರು ಕೋಣೆಗಳಲ್ಲಿಯೂ ಬೀರುಗಳಲ್ಲಿದ್ದ ವಸ್ತುಗಳು ನೆಲದ ಮೇಲೆ ಚದುರಿಕೊಂಡಿರುವುದು ಕಂಡುಬಂದಿದೆ. ಬಂಗಲೆಯ ನೆಲಮಹಡಿಯ ಕೋಣೆಯಲ್ಲಿ ಚಾಲಕ ದಾದಾಸಾಹೇಬ್ ಧಕ್ನೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಅಡುಗೆಯವ ಸುಜಿತ್ ರಾಯ್ ಬಂಗಲೆಯ ಹೊರಭಾಗದಲ್ಲಿರುವ ಕೋಣೆಯಲ್ಲಿ ಪ್ರಜ್ಞಾಹೀನರಾಗಿರುವುದು ಕಂಡುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸ್ಥಳಕ್ಕೆ ಆಂಬ್ಯುಲೆನ್ಸ್ಗಳನ್ನು ಕರೆಸಿದ ಪೊಲೀಸರು, ಪ್ರಜ್ಞಾಹೀನಗೊಂಡ ಐವರನ್ನುಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಪೋಷಕರ ಆರೋಗ್ಯ ಸ್ಥಿತಿ ಸರಿಯಿಲ್ಲದ ಕಾರಣ, ದೂರು ದಾಖಲಿಸುವುದನ್ನು ನಂತರ ಮಾಡುವುದಾಗಿ ಪೂಜಾ ಖೇಡ್ಕರ್ ಅವರು ತಿಳಿಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. “ಅರೆಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಐವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಅವರು ಹೇಳಿಕೆ ನೀಡುವ ಸ್ಥಿತಿಯಲ್ಲಿ ಇಲ್ಲ. ಆದರೂ ಪ್ರಕರಣದ ತನಿಖೆ ಆರಂಭಿಸಲಾಗಿದೆ,” ಎಂದು ಉಪ ಪೊಲೀಸ್ ಆಯುಕ್ತ ಚಿಲುಮುಲ ರಜನಿಕಾಂತ್ ತಿಳಿಸಿದ್ದಾರೆ. “ಕುಟುಂಬದಿಂದಲೇ ನೇಮಿಸಲ್ಪಟ್ಟ ಸೇವಕನೊಬ್ಬ ಕಳ್ಳತನದ ಉದ್ದೇಶದಿಂದ ನಿದ್ರಾಜನಕ ಔಷಧಿ ನೀಡಿರಬಹುದೆಂಬ ಶಂಕೆ ಇದೆ. ಶಂಕಿತ ವ್ಯಕ್ತಿ ಸ್ಥಳದಿಂದ ಪರಾರಿಯಾಗಿದ್ದಾನೆ,” ಎಂದು ಅವರು ತಿಳಿಸಿದ್ದಾರೆ. ಘಟನೆಯ ಸಮಯದಲ್ಲಿ ಬಂಗಲೆಯ ಸಿಸಿಟಿವಿ ಕ್ಯಾಮೆರಾಗಳು ಕಾರ್ಯನಿರ್ವಹಿಸುತ್ತಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸುತ್ತಮುತ್ತಲ ಪ್ರದೇಶಗಳ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ. ►IASನಿಂದ ವಜಾಗೊಂಡಿದ್ದ ಪೂಜಾ ಖೇಡ್ಕರ್ ಸೆಪ್ಟೆಂಬರ್ 2024ರಲ್ಲಿ, ಕೇಂದ್ರ ಸಾರ್ವಜನಿಕ ಸೇವಾ ಆಯೋಗ ಪೂಜಾ ಖೇಡ್ಕರ್ ಅವರ ಆಯ್ಕೆಯನ್ನು ರದ್ದುಗೊಳಿಸಿದ ಬಳಿಕ, ಕೇಂದ್ರ ಸರ್ಕಾರ ಅವರನ್ನು ಭಾರತೀಯ ಆಡಳಿತ ಸೇವೆ (IAS)ಯಿಂದ ವಜಾಗೊಳಿಸಿತ್ತು. 2022ರ ನಾಗರಿಕ ಸೇವಾ ಪರೀಕ್ಷೆಯಲ್ಲಿ ಆಯ್ಕೆಯಾದ ಅವರು, ಅನುಮತಿಸಲಾದ ಪ್ರಯತ್ನಗಳ ಮಿತಿ ಮೀರಿದ್ದರೂ ಪರೀಕ್ಷೆಗೆ ಹಾಜರಾದ ಆರೋಪ ಎದುರಿಸಿದ್ದರು. ತಮ್ಮ ಹಾಗೂ ತಮ್ಮ ಪೋಷಕರ ಹೆಸರುಗಳನ್ನು ಬದಲಾಯಿಸಿ ಬೇರೆ ಅಭ್ಯರ್ಥಿಯಾಗಿ ಪರೀಕ್ಷೆ ಬರೆದಿದ್ದಾರೆ ಎಂಬ ಆರೋಪವೂ ಅವರ ಮೇಲೆ ಇದೆ. ವಂಚನೆ, ಇತರ ಹಿಂದುಳಿದ ವರ್ಗ (ಒಬಿಸಿ) ಹಾಗೂ ಅಂಗವೈಕಲ್ಯ ಕೋಟಾದ ಸೌಲಭ್ಯಗಳನ್ನು ದುರುಪಯೋಗಪಡಿಸಿಕೊಂಡ ಆರೋಪಗಳಲ್ಲಿ ಅವರು ತಪ್ಪಿತಸ್ಥರೆಂದು ಕಂಡುಬಂದಿದ್ದು, ಜೀವನಪರ್ಯಂತ ನಾಗರಿಕ ಸೇವಾ ಪರೀಕ್ಷೆ ಬರೆಯುವುದನ್ನು ನಿಷೇಧಿಸಲಾಗಿದೆ. ಈ ಆರೋಪಗಳನ್ನು ಅವರು ನಿರಾಕರಿಸಿದ್ದು, ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆಯುತ್ತಿದೆ. ಇದಲ್ಲದೆ, 2023ರ ಜೂನ್ 5ರಂದು ಮುಲ್ಶಿ ತಹಸಿಲ್ನ ಧಡವಾಲಿ ಗ್ರಾಮದಲ್ಲಿ ರೈತರಿಗೆ ಬೆದರಿಕೆ ಹಾಕಿದ ಆರೋಪ ಸಂಬಂಧ ಪೌಡ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್ಐಆರ್ನಲ್ಲಿ, ಅವರ ತಂದೆ ದಿಲೀಪ್ ಖೇಡ್ಕರ್ ಮತ್ತು ತಾಯಿ ಮನೋರಮಾ ಖೇಡ್ಕರ್ ಆರೋಪಿಗಳಾಗಿದ್ದಾರೆ. ಭೂ ವಿವಾದದ ಬಳಿಕ ರೈತನ ಮೇಲೆ ಮನೋರಮಾ ಖೇಡ್ಕರ್ ಬಂದೂಕು ತೋರಿಸುತ್ತಿದ್ದ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದ್ದವು.

ವಾರ್ತಾ ಭಾರತಿ 11 Jan 2026 8:01 pm

ಬಿಜೆಪಿ ಕಾರ್ಮಿಕರ ಹಕ್ಕನ್ನು ಕಸಿದುಕೊಳ್ಳುವ ಕೆಲಸ ಮಾಡುತ್ತಿದೆ: ಸಚಿವ ಶಿವರಾಜ್‌ ತಂಗಡಗಿ

ಕೊಪ್ಪಳ: ಜ.11: ಬಿಜೆಪಿ ಕಾರ್ಮಿಕರ ಹಕ್ಕನ್ನು ಕಸಿದುಕೊಳ್ಳುವ ಕೆಲಸ ಮಾಡುತ್ತಿದೆ. ಕಾರ್ಪೊರೇಟ್ ಸಂಸ್ಥೆಗಳನ್ನು ಉಳಿಸಲು ಬೇಕಾದ ಯೋಜನೆಗಳನ್ನು ಮಾತ್ರ ಮೋದಿ ಸರಕಾರ ರೂಪಿಸುತ್ತಿದೆ ಎಂದು ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್‌.ಎಸ್.ತಂಗಡಗಿ ಹೇಳಿದ್ದಾರೆ.  ರವಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಚಿವ ಶಿವರಾಜ್‌.ಎಸ್.ತಂಗಡಗಿ, ಮಹಾತ್ಮಾ ಗಾಂಧಿ‌ ಅವರ ಬಗ್ಗೆ ಬಿಜೆಪಿಗರು ಬಾಯಿ ಮಾತಿಗಷ್ಟೇ ಮಾತನಾಡುತ್ತಾರೆ. ಇವರದ್ದು ಜನರಿಂದ ಆಯ್ಕೆಯಾಗಿ ಬಂದ ಸರಕಾರ ಅಲ್ಲ, ಮತಗಳ್ಳತನದಿಂದ  ಅಧಿಕಾರಕ್ಕೆ ಬಂದಿರುವ ಸರಕಾರ. ಬಿಜೆಪಿ ಜನರ, ಕಾರ್ಮಿಕರ ಹಕ್ಕನ್ನು ಕಸಿದುಕೊಳ್ಳುವ ಕೆಲಸ ಮಾಡುತ್ತಿದೆ. ಇದನ್ನು ನಾವು ಸಹಿಸಿಕೊಳ್ಳುವುದಿಲ್ಲ. ರಾಮನ ಹೆಸರಿನಲ್ಲಿ ರಾಜಕಾರಣ ಮಾಡುವ ಬಿಜೆಪಿ ರಾಮನಿಗೂ ತೃಪ್ತಿ ತರುವ ಯೋಜನೆಯನ್ನು ಜಾರಿಗೆ ತಂದಿಲ್ಲ ಎಂದು ಹೇಳಿದರು.   ಆರೆಸ್ಸೆಸ್‌ ಒತ್ತಾಯಕ್ಕೆ ಮಣಿದು ಬಿಜೆಪಿಗರು ಇಂತಹ ಪ್ರಯತ್ನಕ್ಕೆ‌ ಕೈ ಹಾಕಿದ್ದಾರೆ. ಮನುಸ್ಮೃತಿ ಮನಸ್ಥಿತಿಯುಳ್ಳವರು ದಲಿತರು, ಮಹಿಳೆಯರು ಹಾಗೂ ಸಾಮಾನ್ಯರು ನೆಮ್ಮದಿಯಾಗಿ ಬದುಕುವುದನ್ನು ಇಷ್ಟಪಡುವುದಿಲ್ಲ. ಇಂತಹ ಕಾಯ್ದೆ ಪಾಸ್ ಮಾಡಿಕೊಳ್ಳುವ ಮೂಲಕ ದೇಶದ 12.16 ಕೋಟಿ ಕಾರ್ಮಿಕರನ್ನು ಅವರಲ್ಲಿ ಶೇ.53.61ರಷ್ಟು ಸಂಖ್ಯೆಯಲ್ಲಿದ್ದ‌ 6.21 ಕೋಟಿ ಮಹಿಳೆಯರ ಬದುಕನ್ನು ಹಾಗೂ ಶೇ.17ಪರಿಶಿಷ್ಟ ಜಾತಿ ಮತ್ತು ಶೇ.11ಪರಿಶಿಷ್ಟ ಪಂಗಡ ನರೇಗಾ ಕೂಲಿ ಕಾರ್ಮಿಕರ ಬದುಕಿಗೆ ಬೆಂಕಿ‌ ಇಟ್ಟಿದೆ ಎಂದು ಟೀಕಿಸಿದರು.  ಉತ್ತರ ಕರ್ನಾಟಕ ಭಾಗಕ್ಕೆ ಇದು ಮಹತ್ತರವಾದ ಯೋಜನೆಯಾಗಿತ್ತು. ಶೇ.71.18 ಲಕ್ಷ ಮಂದಿ ನರೇಗಾ ಯೋಜನೆಯ ಅನುಕೂಲ ಪಡೆಯುತ್ತಿದ್ದರು. ಅವರ ಬದುಕಿಗೆ ಕೊಳ್ಳಿ ಇಡುವ ಕೆಲಸವನ್ನು ಸರಕಾರ ಮಾಡುತ್ತಿದೆ. ಯುಪಿಎ ಸರಕಾರ ದೇಶದಲ್ಲಿ ಉದ್ಯೋಗ, ಶಿಕ್ಷಣ, ಆಹಾರದ ಹಕ್ಕಿನಂತಹ ಜನಪ್ರಿಯ ಯೋಜನೆಗಳನ್ನು ಜಾರಿಗೆ ತಂದಿತ್ತು. ಮೋದಿ ಸರಕಾರ  ಸುಳ್ಳು ಪ್ರಚಾರ ಮಾಡುವ ಮೂಲಕ ಈ ಯೋಜನೆಗಳನ್ನು ವಿಫಲಗೊಳಿಸುವ ಕೆಲಸ ಮಾಡುತ್ತಾ ಬಂದಿದೆ. ಕಾರ್ಪೊರೇಟ್ ಸಂಸ್ಥೆಗಳನ್ನು ಉಳಿಸಲು ಬೇಕಾದ ಯೋಜನೆಗಳನ್ನು ಮಾತ್ರ ಮೋದಿ ಸರಕಾರ ರೂಪಿಸುತ್ತಿದೆ. ಸಾಮಾನ್ಯ ಜನರ ಬದುಕಿನ ಬಗ್ಗೆ ಈ ಸರಕಾರಕ್ಕೆ ಕಾಳಜಿ ಇಲ್ಲ. ಜೀತಾ ಪದ್ಧತಿಯನ್ನು ಮತ್ತೊಮ್ಮೆ ಪುನರ್ ಸ್ಥಾಪಿಸುವ ಕೆಲಸವನ್ನು ಮಾಡುತ್ತಿದ್ದಾರೆ. ಯುಪಿಎ ಸರಕಾರ ಜಾರಿಗೆ ತಂದಿದ್ದ ನಿರ್ಮಲಾ ಭಾರತ ಯೋಜನೆಯನ್ನು ಸ್ವಚ್ಛ ಭಾರತ , ಇಂದಿರಾ ಅವಾಸ್ ಯೋಜನೆಗೆ ಪ್ರಧಾನಮಂತ್ರಿ ಅವಾಸ್ ಯೋಜನೆ ಎಂದು ಬದಲಾವಣೆ ಮಾಡಿದ್ದಾರೆ.‌ ಯಾವುದೇ ಹೊಸ ಯೋಜನೆಯನ್ನು ಜಾರಿಗೆ ತಂದಿಲ್ಲ. ಉದ್ಯೋಗ ಖಾತ್ರಿ ಯೋಜನೆಯನ್ನು ಬದಲಾವಣೆ ಮಾಡುವ ಬದಲಿಗೆ ಬೇರೊಂದು ಜನಪರ ಯೋಜನೆ ತರಬಹುದಿತ್ತು ಎಂದು ತಿಳಿಸಿದರು. ಬಿಜೆಪಿಗರು ಈ ವಿಚಾರದಲ್ಲಿ ರಾಜಕಾರಣ ಮಾಡುತ್ತಿದ್ದಾರೆ. ಗಾಂಧಿಜಿ ಅವರ ಹೆಸರಿರುವ ಯೋಜನೆಯ ಹೆಸರು ಬದಲಾವಣೆ ಏಕೆ? ಹೆಸರು ಬದಲಾವಣೆ ಮಾಡುವ ಮೂಲಕ ಗಾಂಧಿಜಿ ಅವರ ಬಗ್ಗೆ ಎಷ್ಟು ಗೌರವ ಕೊಡುತ್ತಿದ್ದಾರೆ ಎಂಬುದು ತಿಳಿಯುತ್ತಿದೆ ಎಂದು ಹೇಳಿದರು.   ದೇಶದಲ್ಲೇ ಅತಿ‌ ಹೆಚ್ಚು ತೆರಿಗೆ ಪಾವತಿಸುವ ರಾಜ್ಯಗಳ ಪೈಕಿ ಕರ್ನಾಟಕ ಎರಡನೇ ಸ್ಥಾನದಲ್ಲಿದೆ. ಆದರೆ ಇವರು ಅನುದಾನ ನೀಡುವುದು ಗುಜರಾತ್, ಉತ್ತರ ಪ್ರದೇಶ, ಮಧ್ಯಪ್ರದೇಶ ರಾಜ್ಯಗಳಿಗೆ ಮಾತ್ರ. ಇದು ನಮ್ಮ ರಾಜ್ಯಕ್ಕೆ ಕೇಂದ್ರ ಸರಕಾರ ಮಾಡುತ್ತಿರುವ ಅನ್ಯಾಯವಲ್ಲವೇ ? ಎಂದು ಸಚಿವರು ಪ್ರಶ್ನಿಸಿದರು. ರೈಲ್ವೆ ಯೋಜನೆಯ ಕಾರ್ಯಕ್ರಮದ‌ ಪೂಜಾ ವೇಳೆ ನಡೆದ ಘಟನೆಗೆ ಸಂಬಂಧಪಟ್ಟಂತೆ ಜಿಲ್ಲಾ ಬಿಜೆಪಿ ನಿಯೋಗ ರಾಜ್ಯ ಪೊಲೀಸ್ ಮಹಾ ನಿರ್ದೇಶಕರಿಗೆ ತಮ್ಮ ವಿರುದ್ಧ ದೂರು ನೀಡಿದೆಯಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಶಿವರಾಜ್‌ ತಂಗಡಗಿ, ಶಿಷ್ಟಾಚಾರ ಪಾಲನೆ‌ ಮಾಡುವಂತೆ ಕೇಳಲು ನಾನು ಹಕ್ಕುದಾರ, ನಾನು ಜನಪ್ರತಿನಿಧಿಯಾಗಿದ್ದೇನೆ. ಎಲ್ಲಿ‌ ಕಾರ್ಯಕ್ರಮ ನಡೆಯಲಿದೆಯೋ ಅಲ್ಲಿ ಶಾಸಕರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಬೇಕು. ಸೋಮಣ್ಣ ನನ್ನ ಬಳಿ ಹೇಳಿದ ಮಾತು‌ ಅಸಹ್ಯ ಅನಿಸುತ್ತದೆ. ರೈಲ್ವೆ ಅಧಿಕಾರಿಗಳು ನನ್ನ ಮಾತನ್ನೇ ಕೇಳುವುದಿಲ್ಲ ಎಂದರು. ಮತ್ತೇ ಇನ್ನು ಏಕೆ ಇವರು ಕೇಂದ್ರದಲ್ಲಿ ಮಂತ್ರಿಯಾಗಿರಬೇಕು. ಸ್ವತಃ ನಾನು ಅವರ ಬಳಿ ಮಾತನಾಡುತ್ತಾ, ನನ್ನ ಹಕ್ಕನ್ನು ಪ್ರತಿಪಾದಿಸಿದ್ದೇನೆ. ಹಿರಿಯ ನಾಯಕರು ಸೋಮಣ್ಣ. ನಿಮ್ಮ ನೇತೃತ್ವದಲ್ಲಿ ಈ ರೀತಿ ಕಾರ್ಯಕ್ರಮ ನಡೆಯುವುದು ನನಗೆ ನೋವಾಗುತ್ತದೆ ಎಂದು ಹೇಳಿದೆ ಇದು ತಪ್ಪಾ? ಯಾರೇ ಆದರೂ ಶಿಷ್ಟಾಚಾರ ಪಾಲನೆ ಆಗಬೇಕು. ಬಿಜೆಪಿಯವರಿಗೆ ಬುದ್ಧಿ ಕಡಿಮೆ. ಬಿಜೆಪಿ ಜಿಲ್ಲಾಧ್ಯಕ್ಷನಿಗೂ ಬುದ್ಧಿ ಕಡಿಮೆ ಎಂದು ವಾಗ್ದಾಳಿ ನಡೆಸಿದರು.

ವಾರ್ತಾ ಭಾರತಿ 11 Jan 2026 8:00 pm

ಮನರೇಗಾ ಯೋಜನೆಯ ಬದಲಾವಣೆಗೆ ಉಡುಪಿ ಜಿಲ್ಲಾ ಕಾಂಗ್ರೆಸ್ ಖಂಡನೆ

ಉಡುಪಿ, ಜ.11: ಡಾ.ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರಕಾರ ಅನುಷ್ಠಾನಗೊಳಿಸಿದ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯನ್ನು ಬದಲಿಸುವ ಬಿಜೆಪಿ ನೇತೃತ್ವ ಕೇಂದ್ರ ಸರಕಾರದ ಕ್ರಮವನ್ನು ಉಡುಪಿ ಜಿಲ್ಲಾ ಕಾಂಗ್ರೆಸ್ ಖಂಡಿಸಿದೆ. ಜಿಲ್ಲಾ ಅಧ್ಯಕ್ಷ ಅಶೋಕಕುಮಾರ್ ಕೊಡವೂರು ಅಧ್ಯಕ್ಷತೆಯಲ್ಲಿ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಇತ್ತೀಚೆಗೆ ನಡೆದ ಉಡುಪಿ ಜಿಲ್ಲಾ ಕಾಂಗ್ರೆಸ್ ಸಮಿತಿಯ ಸಭೆಯಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಅವರು, ಮನರೇಗಾ ಯೋಜನೆಯ ಹೆಸರನ್ನು ನರೇಂದ್ರ ಮೋದಿ ಸರಕಾರ ರಾಮ್ ಜಿ ಹೆಸರಲ್ಲಿ ಮಾಡಲು ಹೋಗಿ ಯುಪಿಎ ಸರ್ಕಾರ ಮಾಡಿರುವ ಉತ್ತಮ ಯೋಜನೆಯನ್ನು ದುರುಪಯೋಗಪಡಿಸುವ ಉದ್ದೇಶ ಹೊಂದಿದೆ ಎಂದರು. ಈ ಬಗ್ಗೆ ಪ್ರತಿಕ್ರಿಯಿಸಿದ ಮಾಜಿ ಸಚಿವ ವಿನಯ್‌ಕುಮಾರ್ ಸೊರಕೆ, ಮನರೇಗಾ ಯೋಜನೆಯನ್ನು ಬದಲಿಸುವ ಮೂಲಕ ಜನಸಾಮಾನ್ಯರಿಗೆ ದೊರಕುವ ಉದ್ಯೋಗ ಖಾತ್ರಿಯನ್ನು ಮೋದಿ ಸರಕಾರ ಕಸಿದುಕೊಂಡಿದೆ ಮತ್ತು ಪಂಚಾಯತ್ ಮಟ್ಟದಲ್ಲಿ ಇದ್ದ ಅಧಿಕಾರವನ್ನು ಕಿತ್ತುಕೊಳ್ಳುವ ಹುನ್ನಾರ ನಡೆಸಿದೆ ಎಂದು ವಿವರಿಸಿ ಕೇಂದ್ರ ಸರಕಾರದ ಈ ಪಿತೂರಿಯನ್ನು ನಾವು ವಿರೋಧಿಸಬೇಕು ಎಂದರು. ಮಾಜಿ ಸಚಿವ ಹಾಗೂ ಮಾಜಿ ಸಂಸದ ಕೆ.ಜಯಪ್ರಕಾಶ್ ಹೆಗ್ಡೆ ಮಾತನಾಡಿ, ಯೋಜನೆಯಿಂದ ಜನಸಾಮಾನ್ಯರಿಗಾಗುವ ಪ್ರಯೋಜನ ಕಿತ್ತುಕೊಂಡು ಪಟ್ಟಭದ್ರ ಹಿತಾಸಕ್ತಿಗಳಿಗೆ ಈ ಯೋಜನೆಯ ಲಾಭ ಸಿಗುವಂತೆ ಮಾಡಲಾಗಿದೆ. ಇದನ್ನು ನಾವು ತೀವ್ರವಾಗಿ ವಿರೋಧಿಸಬೇಕಾಗಿದೆ ಎಂದು ಹೇಳಿದರು. ಸಭೆಯಲ್ಲಿ ರಾಜ್ಯಮಟ್ಟದ ಕಾಂಗ್ರೆಸ್ ಸಮಿತಿಗಳಲ್ಲಿ ಅಧಿಕಾರ ಸ್ಥಾನ ಪಡೆದ ಗೀತಾ ವಾಗ್ಳೆ, ಜೇಬಾ ಸೆಲ್ವನ್, ಭಾನು ಭಾಸ್ಕರ್, ಅನಿತಾ ಡಿಸೋಜ, ಹಬೀಬ್ ಅಲಿ, ಚಂದ್ರಶೇಖರ್ ಮೆಂಡನ್‌ರನ್ನು ಗೌರವಿಸಲಾಯಿತು. ಸಭೆಯಲ್ಲಿ ಕರಾವಳಿ ಪ್ರಾಧಿಕಾರದ ಅಧ್ಯಕ್ಷ ಎಂ.ಎ.ಗಪೂರ್, ಜಿಲ್ಲಾ ಕಾಂಗ್ರೆಸ್ ಕಾರ್ಯಾಧ್ಯಕ್ಷ ಕಿಶನ್‌ಹೆಗ್ಡೆ ಕೊಳ್ಕೆಬೈಲ್, ದಿನೇಶ ಹೆಗ್ಡೆ ಮೊಳಹಳ್ಳಿ, ಅಖಿಲ ಭಾರತ ಮಹಿಳಾ ಕಾಂಗ್ರೆಸ್ ಕಾರ್ಯದರ್ಶಿ ಜೇಬಾ ಸೆಲ್ವನ್, ಉದಯಕುಮಾರ್‌ಶೆಟ್ಟಿ ಮುನಿಯಾಲ್, ಹಿರಿಯಣ್ಣಬಿ., ನರಸಿಂಹಮೂರ್ತಿ, ದಿನೇಶ್ ಪುತ್ರನ್, ಮಹಾಬಲ ಕುಂದರ್, ನೀರೇ ಕೃಷ್ಣ ಶೆಟ್ಟಿ, ಗೀತಾ ವಾಗೆ,್ಲ ಬಿಪಿನ್ ಚಂದ್ರಪಾಲ್ ನಕ್ರೆ, ಶಬೀರ್ ಅಹ್ಮದ್, ಸರ್ಪುದ್ದೀನ್ ಶೇಖ್, ಕೃಷ್ಣ ಶೆಟ್ಟಿ ಬಜೆಗೋಳಿ, ರಮೇಶ್ ಕಾಂಚನ್, ವೈ. ಸುಕುಮಾರ್, ಗೋಪಿನಾಥ್ ಭಟ್, ಶುಭದ ರಾವ್ ಕಾರ್ಕಳ, ಹರಿಪ್ರಸಾದ್ ಶೆಟ್ಟಿ, ಮಮತಾ ಶೆಟ್ಟಿ, ಕೀರ್ತಿ ಶೆಟ್ಟ್ವಿ, ಹಬೀಬ್ ಆಲಿ, ಕಿರಣ್ ಹೆಗ್ಡೆ, ಸರಸು ಬಂಗೇರ, ರೋಶನಿ ಒಲಿವರಾ , ಡಾ. ಸುನಿತಾ ಶೆಟ್ಟಿ, ಮೀನಾಕ್ಷಿ ಮಾಧವ ಬನ್ನಂಜೆ, ಗೋಪಿ ನಾಯ್ಕ, ಸಂಧ್ಯಾ ತಿಲಕ್, ಸುರೇಶ್ ಶೆಟ್ಟಿ ಬನ್ನಂಜ್ವೆ, ಜಯಕುಮಾರ್, ಉದ್ಯಾವರ ನಾಗೇಶ್ ಕುಮಾರ್‌ಮುಂತಾದವರು ಉಪಸ್ಥಿತರಿದ್ದರು. ಜಿಲ್ಲಾ ಕಾಂಗ್ರೆಸ್‌ನ ಹಿರಿಯ ಉಪಾಧ್ಯಕ್ಷ ವಾಸುದೇವ ಯಡಿಯಾಳ್ ಸ್ವಾಗತಿಸಿ, ಸಹಕಾರಿ ಕಾಂಗ್ರೆಸ್ ಅಧ್ಯಕ್ಷ ಅಣ್ಣಯ್ಯ ಸೇರಿಗಾರ್ ಕಾರ್ಯಕ್ರಮ ನಿರ್ವಹಿಸಿದರು. ಜಿಲ್ಲಾ ವಕ್ತಾರ ಭಾಸ್ಕರ್ ರಾವ್ ಕಿದಿಯೂರ್ ವಂದಿಸಿದರು.

ವಾರ್ತಾ ಭಾರತಿ 11 Jan 2026 7:59 pm

Virat Kohli ಒಂದೇ ದಿನ ಡಬಲ್ ಸಾಧನೆ; ಸೌರವ್ ಗಂಗೂಲಿ ಮೈಲಿಗಲ್ಲು, ಸಚಿನ್ ತೆಂಡೂಲ್ಕರ್ ವಿಶ್ವದಾಖಲೆ ಮೀರಿ ನಿಂತ ಚೀಕೂ!

Virat Kohli Double Achievement- ವಿರಾಟ್ ಕೊಹ್ಲಿ ಅವರು ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಡಬಲ್ ಸಾಧನೆ ಮಾಡಿದ್ದಾರೆ. ಭಾರತದ ಕ್ರಿಕೆಟ್ ದಿಗ್ಗಜರಾದ ಸಚಿನ್ ತೆಂಡೂಲ್ಕರ್ ಮತ್ತು ಸೌರಲವ್ ಗಂಗೂಲಿ ಅವರು ತಲುಪಿದ್ದ 2 ಅಪರೂಪದ ಮೈಲಿಗಲ್ಲುಗಳನ್ನು ದಾಟಿದ್ದಾರೆ. ಅತಿ ವೇಗವಾದಿ 28 ಸಾವಿರ ಅಂತಾರಾಷ್ಟ್ರೀಯ ರನ್ ಗಳಿಸಿ ಸಚಿನ್ ತೆಂಡೂಲ್ಕರ್ ಅವರ ಹೆಸರಲ್ಲಿದ್ದ ವಿಶ್ವದಾಖಲೆ ಯನ್ನು ಮುರಿದಿದ್ದಾರೆ. ಅಲ್ಲದೆ, ಭಾರತದ ಪರ ಅತಿ ಹೆಚ್ಚು ಏಕದಿನ ಪಂದ್ಯಗಳನ್ನು ಆಡಿದವರ ಪಟ್ಟಿಯಲ್ಲಿ ಸೌರವ್ ಗಂಗೂಲಿ ಅವರನ್ನು ಹಿಂದಿಕ್ಕಿ ಐದನೇ ಸ್ಥಾನಕ್ಕೇರಿದ್ದಾರೆ.

ವಿಜಯ ಕರ್ನಾಟಕ 11 Jan 2026 7:47 pm

Jammu & Kashmir | ವೈದ್ಯರಾಗುವ ವಿದ್ಯಾರ್ಥಿಗಳ ಕನಸುಗಳಿಗೆ ಕೊಳ್ಳಿಯಿಟ್ಟ ಕತ್ರಾದ ವೈಷ್ಣೋದೇವಿ ಕಾಲೇಜಿನ MBBS ಕೋರ್ಸ್ ರದ್ದತಿ

ಜಮ್ಮು, ಜ.11: ಜಮ್ಮು–ಕಾಶ್ಮೀರದ ಕತ್ರಾದ ಶ್ರೀ ಮಾತಾ ವೈಷ್ಣೋದೇವಿ ಮೆಡಿಕಲ್ ಕಾಲೇಜಿಗೆ 2025–26ನೇ ಶೈಕ್ಷಣಿಕ ವರ್ಷಕ್ಕೆ MBBS ಕೋರ್ಸ್ ನಡೆಸಲು ನೀಡಿದ್ದ ಅನುಮತಿಯನ್ನು ಮೂಲಸೌಕರ್ಯಗಳ ಗಂಭೀರ ಕೊರತೆಯನ್ನು ಉಲ್ಲೇಖಿಸಿ ರಾಷ್ಟ್ರೀಯ ವೈದ್ಯಕೀಯ ಆಯೋಗವು (ಎನ್ಎಂಸಿ) ಈ ವಾರದ ಆರಂಭದಲ್ಲಿ ಹಿಂದೆಗೆದುಕೊಂಡಿದೆ. ಈ ನಿರ್ಧಾರ ವೈದ್ಯರಾಗುವ ಕನಸುಗಳನ್ನು ಹೊತ್ತಿದ್ದ ವಿದ್ಯಾರ್ಥಿಗಳನ್ನು ಹತಾಶೆಗೆ ತಳ್ಳಿದೆ. ಕಳೆದ ವರ್ಷದ ಸೆಪ್ಟೆಂಬರ್ ನಲ್ಲಿ ತಜ್ಞರ ತಂಡವೊಂದು ನಡೆಸಿದ ವಿವರವಾದ ಪರಿಶೀಲನೆಯ ಬಳಿಕ ಎನ್ಎಂಸಿ 50 ವಿದ್ಯಾರ್ಥಿಗಳನ್ನು MBBS ಕೋರ್ಸ್ಗೆ ಸೇರಿಸಿಕೊಳ್ಳಲು ಕಾಲೇಜಿಗೆ ಅನುಮತಿ ನೀಡಿತ್ತು. 50 ವಿದ್ಯಾರ್ಥಿಗಳ ಪೈಕಿ 44 ವಿದ್ಯಾರ್ಥಿಗಳು ಮುಸ್ಲಿಮರಾಗಿದ್ದು, ಅವರ ನೀಟ್ ರ್ಯಾಂ ಕಿಂಗ್ ಗಳ ಆಧಾರದ ಮೇಲೆ ಅವರನ್ನು ಆಯ್ಕೆ ಮಾಡಲಾಗಿತ್ತು. ಇದು ಆರೆಸ್ಸೆಸ್ ಪರ ಮತ್ತು ಬಿಜೆಪಿ ಪರ ಗುಂಪುಗಳಿಂದ ಪ್ರತಿಭಟನೆಗೆ ಕಾರಣವಾಗಿತ್ತು. ಹೆಚ್ಚಿನ ವಿದ್ಯಾರ್ಥಿಗಳು ಕಾಶ್ಮೀರ ಕಣಿವೆಯ ವಿವಿಧ ಭಾಗಗಳಿಗೆ ಸೇರಿದವರಾಗಿದ್ದಾರೆ. ಅನುಮತಿ ರದ್ದುಗೊಳಿಸಿದ್ದರೂ ವಿದ್ಯಾರ್ಥಿಗಳಿಗೆ ಜಮ್ಮು–ಕಾಶ್ಮೀರದಲ್ಲಿನ ಇತರ ಮೆಡಿಕಲ್ ಕಾಲೇಜುಗಳಲ್ಲಿ ಪ್ರವೇಶ ಕಲ್ಪಿಸಲಾಗುವುದು ಎಂದು ಸರಕಾರ ಹೇಳಿದೆ. ಆದರೆ, ‘ವೈಷ್ಣೋದೇವಿ ಕಾಲೇಜಿನಲ್ಲಿ ಶೈಕ್ಷಣಿಕ ವರ್ಷ ಈಗಾಗಲೇ ಎರಡು ತಿಂಗಳು ವಿಳಂಬವಾಗಿ ಆರಂಭಗೊಂಡಿತ್ತು. ಬೇರೆ ಕಾಲೇಜುಗಳಲ್ಲಿ ಪ್ರವೇಶ ಪಡೆಯಲು ಒಂದೆರಡು ತಿಂಗಳುಗಳು ತೆಗೆದುಕೊಂಡರೆ ನಾವು ಮೊದಲ ವರ್ಷದಲ್ಲೇ ತುಂಬ ಹಿಂದೆ ಬೀಳುತ್ತೇವೆ’ ಎಂದು ಅನೇಕ ವಿದ್ಯಾರ್ಥಿಗಳು ಆತಂಕ ವ್ಯಕ್ತಪಡಿಸಿದ್ದಾರೆ. ‘ಪ್ರಾದೇಶಿಕ ಮತ್ತು ಧಾರ್ಮಿಕ ವಿಭಜನೆಗಳ ಕುರಿತು ಪ್ರತಿಭಟನೆಗಳು ಕ್ಯಾಂಪಸ್ ಗೇಟ್ಗಳವರೆಗೆ ತಲುಪಿದ್ದರೂ, ನಮ್ಮ ಹಾಸ್ಟೆಲ್ಗಳು ಮತ್ತು ತರಗತಿ ಕೋಣೆಗಳಲ್ಲಿ ಓದನ್ನು ಹೊರತುಪಡಿಸಿ ಧರ್ಮ ಸೇರಿದಂತೆ ಬೇರೆ ಯಾವುದರ ಬಗ್ಗೆಯೂ ಚರ್ಚೆಗಳು ನಡೆದಿರಲಿಲ್ಲ. ವೈದ್ಯಕೀಯ ಒಂದು ಕಠಿಣ ಕೋರ್ಸ್ ಆಗಿದ್ದು, ಅದು ಪ್ರತಿ ವಿದ್ಯಾರ್ಥಿಯಿಂದಲೂ ಸಂಪೂರ್ಣ ಗಮನವನ್ನು ಅಗತ್ಯಪಡಿಸುತ್ತದೆ’ ಎಂದು ಜಮ್ಮುವಿನಿಂದ ಏಕೈಕ ಮುಸ್ಲಿಂ ವಿದ್ಯಾರ್ಥಿನಿಯಾದ ಮಿಸ್ಬಾ ಹೇಳಿದರು. ಶುಕ್ರವಾರ ಅಪರಾಹ್ನ ಎರಡು ಗಂಟೆಯೊಳಗೆ ಕ್ಯಾಂಪಸ್ ತೊರೆಯುವಂತೆ ಕಾಲೇಜಿನ ಅಧಿಕಾರಿಗಳ ಸೂಚನೆಯ ಮೇರೆಗೆ ಸಂಸ್ಥೆಯ ಮೊದಲ ಬ್ಯಾಚ್ ನ MBBS ವಿದ್ಯಾರ್ಥಿಗಳು ಕಣ್ಣೀರಿನ ವಿದಾಯ ಹೇಳಿ ತಮ್ಮ ಮನೆಗಳಿಗೆ ಮರಳಿದರು. ವಿದ್ಯಾರ್ಥಿಗಳು ಕ್ಯಾಂಪಸ್‌ ನಿಂದ ನಿರ್ಗಮಿಸುವ ಮುನ್ನ ಅವರನ್ನುದ್ದೇಶಿಸಿ ಮಾತನಾಡಿದ ಕಾಲೇಜಿನ ಕಾರ್ಯನಿರ್ವಾಹಕ ನಿರ್ದೇಶಕರು, ಇಡೀ ಬೆಳವಣಿಗೆ ದುರದೃಷ್ಟಕರವಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು. ವಿದ್ಯಾರ್ಥಿಗಳ ಭವಿಷ್ಯಕ್ಕೆ ಶುಭ ಹಾರೈಸಿದರು. ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಜಮ್ಮು–ಕಾಶ್ಮೀರದ ಮುಖ್ಯಮಂತ್ರಿ ಉಮರ್ ಅಬ್ದುಲ್ಲಾ, 50 ವಿದ್ಯಾರ್ಥಿಗಳಿಗೆ ಇತರ ಕಾಲೇಜುಗಳಲ್ಲಿ ಪ್ರವೇಶ ಒದಗಿಸುವುದು ಸರಕಾರಕ್ಕೆ ಸಮಸ್ಯೆಯಲ್ಲ ಎಂದು ಹೇಳಿದರೂ, ವೈಷ್ಣೋದೇವಿ ಮೆಡಿಕಲ್ ಕಾಲೇಜಿನ ಮುಚ್ಚುವಿಕೆಯಿಂದ ವಿದ್ಯಾರ್ಥಿಗಳ ವೃತ್ತಿಜೀವನಕ್ಕೆ ಉಂಟಾಗುವ ಹಾನಿಗೆ ಯಾರನ್ನಾದರೂ ಹೊಣೆಯಾಗಿಸಬೇಕು ಎಂದು ಆಗ್ರಹಿಸಿದರು.

ವಾರ್ತಾ ಭಾರತಿ 11 Jan 2026 7:46 pm

ಉಡುಪಿ ಶೀರೂರು ಪರ್ಯಾಯ: ಡಿಸಿಸಿ ಬ್ಯಾಂಕ್, ಸಮಸ್ತ ಸಹಕಾರಿ ಸಂಘಗಳಿಂದ ಹಸಿರು ಹೊರೆಕಾಣಿಕೆ

ಉಡುಪಿ: ಜ.18ರಂದು ಪ್ರಥಮ ಬಾರಿಗೆ ಸರ್ವಜ್ಞ ಪೀಠಾರೋಹಣ ಮಾಡಲಿರುವ ಶೀರೂರು ಮಠದ ಶ್ರೀವೇದವರ್ಧನ ತೀರ್ಥರ ಪರ್ಯಾಯ ಮಹೋತ್ಸವದ ಅಂಗವಾಗಿ ನಿನ್ನೆಯಿಂದ ಪ್ರಾರಂಭಗೊಂಡಿರುವ ಹಸಿರು ಹೊರೆಕಾಣಿಕೆ ಸಮರ್ಪಣೆಯ ಎರಡನೇ ದಿನದಂದು ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ವತಿಯಿಂದ ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಮತ್ತು ಜಿಲ್ಲೆಯ ಸಮಸ್ತ ಸಹಕಾರಿ ಸಂಘಗಳ ಸಹಕಾರದೊಂದಿಗೆ ಅದ್ಧೂರಿಯ ಹಸಿರು ಹೊರೆಕಾಣಿಕೆ ಮೆರವಣಿಗೆ ಸಂಪನ್ನಗೊಂಡಿತು. ಸಮಸ್ತ ಸಹಕಾರಿಗಳ ಸಹಕಾರದೊಂದಿಗೆ ಸುಮಾರು 25 ಲಕ್ಷ ರೂ. ಮೌಲ್ಯದ ತೆಂಗಿನಕಾಯಿ, ಅಕ್ಕಿ, ಬೆಲ್ಲ, ಸಕ್ಕರೆ, ಬೇಳೆ, ಎಣ್ಣೆ, ತುಪ್ಪ, ತರಕಾರಿ ಸೇರಿದಂತೆ ಬೃಹತ್ ಹೊರೆಕಾಣಿಕೆಯನ್ನು ಸಮರ್ಪಿಸಲಾಯಿತು. 40ಕ್ಕೂ ಅಧಿಕ ವಾಹನಗಳಲ್ಲಿ ಹಸಿರು ಹೊರೆಕಾಣಿಕೆಯ ವಸ್ತುಗಳನ್ನು ತುಂಬಿಸಿಕೊಂಡು ತಟ್ಟಿರಾಯ, ಬಿರುದಾವಳಿ, ಪಟಾಕಿ, ವಾದ್ಯಘೋಷದೊಂದಿಗೆ ಸಾಗಿ ಬರಲಾಯಿತು. ಇದೇ ಸಂದರ್ಭದಲ್ಲಿ ಉಡುಪಿ ತಾಲೂಕು ಬ್ರಾಹ್ಮಣ ಮಹಾಸಭಾದ ನೇತೃತ್ವದಲ್ಲಿ 20 ಲಕ್ಷ ರೂ.ಮೌಲ್ಯದ ಹಸಿರು ಹೊರೆಕಾಣಿಕೆ ಹಾಗೂ ಧಾರವಾಡದ ಶ್ರೀಕೃಷ್ಣ ಭಕ್ತರಿಂದ ಹೊರೆಕಾಣಿಕೆಯ ಸಮರ್ಪಣೆಯೂ ನಡೆಯಿತು. ಜೋಡುಕಟ್ಟೆಯಿಂದ ಆರಂಭಗೊಂಡ ಹೊರೆಕಾಣಿಕೆ ಮೆರವಣಿಗೆ ಕೋರ್ಟ್ ರೋಡ್, ಕೆ.ಎಂ. ಮಾರ್ಗ, ತ್ರಿವೇಣಿ ಸರ್ಕಲ್, ಕನಕದಾಸ ರಸ್ತೆ, ರಥಬೀದಿ, ವಿದ್ಯೋದಯ ಶಾಲೆ ಮಾರ್ಗವಾಗಿ ಅನ್ನವಿಠಲ ಉಗ್ರಾಣ ತಲುಪಿತ್ತು. ಮೆರವಣಿಗೆಯಲ್ಲಿ ಸಾಗಿಬಂದ ಪ್ರಮುಖರನ್ನು ಕನಕದಾಸ ಮಾರ್ಗದಲ್ಲಿ ಪರ್ಯಾಯ ಸ್ವಾಗತ ಸಮಿತಿ ಸಂಚಾಲಕ, ಹೊರೆಕಾಣಿಕೆ ಉಸ್ತುವಾರಿ ಬೈಕಾಡಿ ಸುಪ್ರಸಾದ್ ಶೆಟ್ಟಿ, ಕೋಶಾಧಿಕಾರಿ ಎಚ್. ಜಯಪ್ರಕಾಶ್ ಕೆದ್ಲಾಯ, ಮೋಹನ್ ಭಟ್ ಸಹಿತ ಪ್ರಮುಖರು ಮಾರ್ಲಾಪಣೆಗೈದು ಬರ ಮಾಡಿಕೊಂಡರು. ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ನೇತೃತ್ವದ ಹೊರೆಕಾಣಿಕೆ ಸಮರ್ಪಣೆಯಲ್ಲಿ ಸಹಕಾರಿ ಯೂನಿಯನ್ ಅಧ್ಯಕ್ಷ ಬಿ. ಜಯಕರ್ ಶೆಟ್ಟಿ ಇಂದ್ರಾಳಿ, ಎಸ್‌ಸಿಡಿಸಿಸಿ ಬ್ಯಾಂಕ್ ನಿರ್ದೇಶಕ ಡಾ. ಬೆಳಪು ದೇವಿಪ್ರಸಾದ್ ಶೆಟ್ಟಿ, ಹಿರಿಯ ಸಹಕಾರಿಗಳಾದ ಅಶೋಕ್ ಕುಮಾರ್ ಶೆಟ್ಟಿ ಬೆಳ್ಳಂಪಳ್ಳಿ, ಕಾಪು ದಿವಾಕರ ಶೆಟ್ಟಿ, ಸುರೇಶ್ ಶೆಟ್ಟಿ, ಮೈರ್ಮಾಡಿ ಅಶೋಕ್ ಕುಮಾರ್ ಶೆಟ್ಟಿ, ವಿಜಯ ಕುಮಾರ್ ಉದ್ಯಾವರ, ರಾಜೇಶ್ ಸೇರಿಗಾರ್, ರಾಜೇಶ್ ಹೆಗ್ಡೆ, ಶರತ್ ಕುಮಾರ್ ಶೆಟ್ಟಿ, ಹರೀಶ್ ಕಿಣಿ ಅಲೆವೂರು, ಅನುಷಾ ಕೋಟ್ಯಾನ್ ಮುಂತಾದವರು ಉಪಸ್ಥಿತರಿದ್ದರು. ತಾಲೂಕು ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಶ್ರೀಕಾಂತ ಉಪಾಧ್ಯಾಯ, ಜಿಲ್ಲಾ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಸಂದೀಪ್ ಮಂಜ, ಪ್ರಮುಖರಾದ ಶ್ರೀಕೃಷ್ಣರಾಜ ಕೊಡಂಚ, ಭಾಸ್ಕರ್ ರಾವ್ ಕಿದಿಯೂರು, ಪ್ರೊ. ಶಂಕರ್, ಯು.ಬಿ. ಶ್ರೀನಿವಾಸ, ನಾರಾಯಣ ದಾಸ ಉಡುಪ, ವಿಷ್ಣುಪ್ರಸಾದ್ ಪಾಡಿಗಾರು, ಗಣೇಶ್ ರಾವ್, ಮಂಜುನಾಥ ಉಪಾ ಧ್ಯಾಯ, ಹಯವದನ ಭಟ್, ಗುರುದಾಸ, ಮುರಳಿಕೃಷ್ಣ ಸೇರಿದಂತೆ ಅನೇಕರು ಭಾಗವಹಿಸಿದ್ದರು.        

ವಾರ್ತಾ ಭಾರತಿ 11 Jan 2026 7:45 pm

ಅಕ್ಕಪಕ್ಕದಲ್ಲಿ ಇರುವವರೇ ನಿಮಗೆ ಮೋಸ ಮಾಡುತ್ತಾರೆ, ಎಚ್ಚರ: ಡಿಕೆ ಶಿವಕುಮಾರ್ ಹೇಳಿದ್ದು ಯಾರಿಗೆ?

ರಾಜಕೀಯ ಹಿನ್ನೆಲೆಯಿಲ್ಲದೆ ಈ ಮಟ್ಟಕ್ಕೆ ಬಂದಿದ್ದೇನೆ, ಮುಂದೆಯೂ ಪಕ್ಷದವರು ನನ್ನ ಬಗ್ಗೆ ತೀರ್ಮಾನ ಮಾಡುತ್ತಾರೆ ಎಂಬ ವಿಶ್ವಾಸವಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. ಪ್ರಯತ್ನ ವಿಫಲವಾದರೂ ಪ್ರಾರ್ಥನೆ ವಿಫಲವಾಗುವುದಿಲ್ಲ, ಶ್ರಮಕ್ಕೆ ಪ್ರತಿಫಲ ಸಿಗುತ್ತದೆ. ಆತ್ಮಸಾಕ್ಷಿಗೆ ಮೆಚ್ಚುವಂತೆ ಕೆಲಸ ಮಾಡಬೇಕು, ನಂಬಿಕೆಗಿಂತ ದೊಡ್ಡ ಗುಣ ಮತ್ತೊಂದಿಲ್ಲ ಎಂದು ಅವರು ಸಲಹೆ ನೀಡಿದರು.

ವಿಜಯ ಕರ್ನಾಟಕ 11 Jan 2026 7:43 pm

ರಾಜ್ಯದಲ್ಲಿ ಸರಕಾರ ಬದಲಾವಣೆ ಇಲ್ಲ, ಹೈಕಮಾಂಡ್ ನಿರ್ಧಾರಕ್ಕೆ ಬದ್ಧ: ಸಚಿವ ಕೆ ಎಚ್ ಮುನಿಯಪ್ಪ

ಕಲಬುರಗಿ: ರಾಜ್ಯದಲ್ಲಿ ಸರಕಾರ ಬದಲಾವಣೆ ಮಾಹಿತಿ ಎಲ್ಲವೂ ಸುಳ್ಳು, ಅಂತಹ ಬದಲಾವಣೆ ಇಲ್ಲ, ಎಲ್ಲದ್ದಕ್ಕೂ ನಮಗೆ ಹೈಕಮಾಂಡ್ ಇದೆ. ಅದರ ನಿರ್ಧಾರಕ್ಕೆ ಸಿಎಂ ಸಿದ್ದರಾಮಯ್ಯ ಹಾಗೂ ನಾವು ಬದ್ಧರಾಗಿದ್ದೇವೆ ಎಂದು ಸಚಿವ ಕೆ.ಎಚ್.ಮುನಿಯಪ್ಪ ಹೇಳಿದರು. ನಗರದ ಐವಾನ್ ಎ ಶಾಹಿ ಅತಿಥಿಗೃಹದಲ್ಲಿ ಪತ್ರಕರ್ತರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಕೆ.ಎಚ್.ಮುನಿಯಪ್ಪ, ಸಿದ್ದರಾಮಯ್ಯ ಅವರು ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ದೀರ್ಘಾವಧಿಯ ಸಿಎಂ ಆಗಿ ಹೊಸ ಇತಿಹಾಸ ಸೃಷ್ಟಿಸಿದ್ದಾರೆ. ಒಂದು ವೇಳೆ ಬದಲಾವಣೆ ಕುರಿತು ಹೈಕಮಾಂಡ್ ಏನು ಹೇಳುತ್ತೆ ಅದಕ್ಕೆ ಅವರು ಬದ್ಧರಾಗಿರುತ್ತಾರೆ ಎಂದು ಹೇಳಿದರು.  ಸಮಾನತೆ ಕಾಣುವುದು, ಅನುದಾನ ನೀಡುವುದರಲ್ಲಿ ಸಿದ್ದರಾಮಯ್ಯ ಅವರು ಇತಿಹಾಸ ಸೃಷ್ಟಿಸಿದ್ದಾರೆ. ಅದರಲ್ಲಿ ಎಲ್ಲ ವರ್ಗಗಳಿಗೂ ಸಮಾನವಾಗಿ ನೋಡುವುದರಲ್ಲಿ ದೇವರಾಜು ಅರಸು ಅವರು ಅಡಿಗಲ್ಲು ಹಾಕಿದರೆ, ಸಿದ್ದರಾಮಯ್ಯ ಅವರು ಮನೆಯನ್ನೇ ಕಟ್ಟಿದ್ದಾರೆ ಎಂದು ಶ್ಲಾಘಿಸಿದರು. ರಾಜ್ಯಪಾಲರು ಒಳಮೀಸಲಾತಿ ಬಿಲ್ ವಾಪಸಾತಿ ಬಗ್ಗೆ ಸರಕಾರಕ್ಕೆ ಏನು ಪತ್ರ ಬರೆದಿದ್ದಾರೆ ಎನ್ನುವುದು ನಮಗೆ ಗೊತ್ತಿಲ್ಲ. ಅದರ ಬಗ್ಗೆ ಪರಿಶೀಲಿಸಿ ಮುಂದಿನ ಉತ್ತರ ನೀಡುತ್ತೇವೆ ಎಂದ ಅವರು, ಒಳಮೀಸಲಾತಿ ಮಸೂದೆಗೆ ಬೆಳಗಾವಿ ಅಧಿವೇಶನದಲ್ಲಿ ಅವಿರೋಧವಾಗಿ ಪಾಸ್ ಮಾಡಲಾಗಿದೆ. ಮುಂದೆ ಕಾಯ್ದೆಯಾದಾಗ ಬಡ್ತಿ ವಿಷಯ ಕುರಿತಾಗಿ ಪರಾಮರ್ಶಿಸಲಿದ್ದೇವೆ ಎಂದು ಹೇಳಿದರು. 

ವಾರ್ತಾ ಭಾರತಿ 11 Jan 2026 7:37 pm

ಬೀದರ್‌| ಅಗ್ನಿ ಅವಘಡದಲ್ಲಿ ಹಾನಿಯಾದ ಅಂಗಡಿಗಳಿಗೆ ಶಾಸಕ ಪ್ರಭು ಚೌವ್ಹಾಣ್‌ ಭೇಟಿ

ಔರಾದ್: ನಗರದಲ್ಲಿ ಶುಕ್ರವಾರ ತಡರಾತ್ರಿ ಬೆಂಕಿಗಾಹುತಿಯಾದ ಫರ್ನೀಚರ್ ಅಂಗಡಿ, ಚಪ್ಪಲಿ ಅಂಗಡಿ, ಕಿರಾಣಿ ಸ್ಟೋರ್, ತರಕಾರಿ ಮಳಿಗೆಗಳಿಗೆ ಶಾಸಕ ಪ್ರಭು ಚೌವ್ಹಾಣ್‌ ರವಿವಾರ ಭೇಟಿ ನೀಡಿ, ಮಳಿಗೆಗಳ ಮಾಲಕರಿಗೆ ಧೈರ್ಯ ತುಂಬಿ, ವೈಯಕ್ತಿಕ ಧನಸಹಾಯ ಮಾಡಿದರು. ಬಳಿಕ ಮಾತನಾಡಿದ ಶಾಸಕ ಪ್ರಭು ಚೌವ್ಹಾಣ್‌, ಅಗ್ನಿ ಅವಘಡ ನಡೆದಿರುವುದು ತೀವ್ರ ಆಘಾತ ಉಂಟು ಮಾಡಿದೆ. ನನ್ನಿಂದ ಸಾಧ್ಯವಿರುವ ಎಲ್ಲಾ ರೀತಿಯ ಸಹಕಾರ ನೀಡುತ್ತೇನೆ. ತುರ್ತಾಗಿ ಪತ್ರ ಬರೆದು ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಆರ್ಥಿಕ ನೆರವು ಕಲ್ಪಿಸಲು ಪ್ರಯತ್ನಿಸುತ್ತೇನೆ. ನಾನು ನಿಮ್ಮ ಜೊತೆಗೆ ಇದ್ದೇನೆ. ವೈಯಕ್ತಿಕವಾಗಿ ಮತ್ತು ಸರ್ಕಾರದಿಂದ ಅಗತ್ಯ ನೆರವು ಕಲ್ಪಿಸಲು ಪ್ರಯತ್ನಿಸುತ್ತೇನೆ. ತಾವು ಯಾವುದೇ ಕಾರಣಕ್ಕೂ ಧೈರ್ಯ ಕಳೆದುಕೊಳ್ಳದಿರಿ ಎಂದು ಅಂಗಡಿ ಮಾಲಕರು ಮತ್ತು ಅವರ ಕುಟುಂಬಸ್ಥರಿಗೆ ಧೈರ್ಯ ತುಂಬಿದರು. ನಂತರ ಮಾತನಾಡಿದ ಅವರು ತಹಸೀಲ್ದಾರರು, ಕಂದಾಯ ನಿರೀಕ್ಷಕರು, ಗ್ರಾಮ ಲೆಕ್ಕಾಧಿಕಾರಿಗಳೊಂದಿಗೆ ಸ್ಥಳ ಪರಿಶೀಲನೆ ನಡೆಸಿ ನೊಂದ ವ್ಯಾಪಾರಿಗಳಿಗೆ ನೆರವಾಗುವ ರೀತಿಯಲ್ಲಿ ಸರಕಾರಕ್ಕೆ ವರದಿ ಸಲ್ಲಿಸಬೇಕು. ಸರ್ಕಾರದಿಂದ ಹೆಚ್ಚಿನ ಪರಿಹಾರ ಕಲ್ಪಿಸಲು ನೆರವಾಗಬೇಕು ಎಂದು ನಿರ್ದೇಶನ ನೀಡಿದರು. ಜೆಸ್ಕಾಂ ಅಧಿಕಾರಿಗಳು ಪಟ್ಟಣದಲ್ಲಿ ಸಂಚರಿಸಿ ವಿದ್ಯುತ್ ಕಂಬಗಳು ಮತ್ತು ತಂತಿಗಳನ್ನು ಗಮನಿಸಬೇಕು. ವಿದ್ಯುತ್ ಅವಘಡಗಳನ್ನು ತಪ್ಪಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ವಹಿಸಬೇಕು ಎಂದು ಸೂಚಿಸಿದರು. ಈ ಸಂದರ್ಭದಲ್ಲಿ ತಹಸೀಲ್ದಾರ್ ಮಹೇಶ್ ಪಾಟೀಲ್, ಜೆಸ್ಕಾಂ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ರವಿ ಕಾರಬಾರಿ, ಮುಖಂಡರಾದ ಧೊಂಡಿಬಾ ನರೋಟೆ, ಶಿವಾಜಿರಾವ ಪಾಟೀಲ್‌ ಮುಂಗನಾಳ, ರಾಮಶೆಟ್ಟಿ ಪನ್ನಾಳೆ, ಶಿವರಾಜ ಅಲ್ಮಾಜೆ, ದಯಾನಂದ ಘೂಳೆ, ಕೇರಬಾ ಪವಾರ, ಸಂತೋಷ ಪೋಕಲವಾರ, ಗುಂಡಪ್ಪ ಮುಧಾಳೆ, ರಾಮ ನರೋಟೆ, ವೀರಶೆಟ್ಟಿ ಅಲ್ಮಾಜೆ, ಸಂದೀಪ್‌ ಪಾಟೀಲ್‌, ಅಶೋಕ ಶಂಬೆಳ್ಳಿ, ರಮೇಶ ಗೌಡಾ, ಆನಂದ ದ್ಯಾಡೆ ಹಾಗೂ ಹಲವರು ಉಪಸ್ಥಿತರಿದ್ದರು.

ವಾರ್ತಾ ಭಾರತಿ 11 Jan 2026 7:22 pm

ಎಚ್‌ಡಿಕೆ, ಬಿಜೆಪಿಗರನ್ನು ಮೆಚ್ಚಿಸಲು ಹೇಳಿಕೆ ನೀಡುವ ಬದಲು ತಮ್ಮ ಹೊಣೆಗಾರಿಕೆಯನ್ನು ಪ್ರಾಮಾಣಿಕವಾಗಿ ನಿರ್ವಹಿಸಲಿ : ರಮೇಶ್‍ಬಾಬು

ಬೆಂಗಳೂರು : ‘ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ, ಬಿಜೆಪಿ ನಾಯಕರನ್ನು ಮೆಚ್ಚಿಸಲು ಹೇಳಿಕೆ ನೀಡುವ ಬದಲು ತಮ್ಮ ಹೊಣೆಗಾರಿಕೆಯನ್ನು ಪ್ರಾಮಾಣಿಕವಾಗಿ ನಿರ್ವಹಿಸಲಿ. ಕಾಂಗ್ರೆಸ್ ಸರಕಾರಕ್ಕೆ ಪಾಠ ಹೇಳುವುದನ್ನು ಬಿಟ್ಟು ರಾಜ್ಯದ ಅಭಿವೃದ್ಧಿಯತ್ತ ಪ್ರಾಮಾಣಿಕ ಪ್ರಯತ್ನ ಮಾಡಲಿ’ ಎಂದು ಕೆಪಿಸಿಸಿ ಮಾಧ್ಯಮ ವಿಭಾಗದ ಅಧ್ಯಕ್ಷ ರಮೇಶ್ ಬಾಬು ಸಲಹೆ ನೀಡಿದ್ದಾರೆ. ರವಿವಾರ ಈ ಸಂಬಂಧ ಪ್ರಕಟಣೆ ನೀಡಿರುವ ಅವರು, ‘ಕೇಂದ್ರದ ಎನ್‍ಡಿಎ ಸರಕಾರದ ಅಸಹಕಾರದಿಂದ ಕರ್ನಾಟಕದ ಕೈಗಾರಿಕಾ ವೇಗಕ್ಕೆ ಅಡ್ಡಿಯಾಗುತ್ತಿದೆ. ನೀರಾವರಿ ಯೋಜನೆಗಳು ಸ್ಥಗಿತಗೊಂಡಿವೆ. ಹೀಗಿರುವಾಗ ಕುಮಾರಸ್ವಾಮಿ ಕರ್ನಾಟಕ ರಾಜ್ಯದ ಪರ ಕೇಂದ್ರದಲ್ಲಿ ಧ್ವನಿ ಎತ್ತುವ ಕೆಲಸ ಮಾಡಬೇಕು’ ಎಂದು ಆಗ್ರಹಿಸಿದ್ದಾರೆ. ಬೌದ್ಧಿಕ ದಿವಾಳಿ : ‘ನರೇಗಾ ಯೋಜನೆ’ ಸಂಬಂಧ ಕರ್ನಾಟಕದ ಬಿಜೆಪಿ-ಜೆಡಿಎಸ್ ನಾಯಕರು ಬಹಿರಂಗ ಚರ್ಚೆಗೆ ಸಿದ್ದ ಎಂದು ಹೇಳುವ ಮೂಲಕ ತಮ್ಮ ಬೌದ್ಧಿಕ ದಿವಾಳಿತನವನ್ನು ಸಾಬೀತು ಮಾಡಿದ್ದಾರೆ. ನರೇಗಾ ಯೋಜನೆಯನ್ನು ಜನವಿರೋಧಿ ಯೋಜನೆಯಾಗಿ ರೂಪಿಸಿರುವ ಕೇಂದ್ರ ಸರಕಾರದ ಕಾಯಿದೆಯನ್ನು ಬೆತ್ತಲೆಗೊಳಿಸಲು ಶೀಘ್ರದಲ್ಲೇ ವಿಧಾನಸಭೆಯ ವಿಶೇಷ ಅಧಿವೇಶನವನ್ನು ಕರೆಯಲಾಗುತ್ತಿದೆ’ ಎಂದು ಅವರು ತಿಳಿಸಿದ್ದಾರೆ. ಅಧಿವೇಶನದಲ್ಲಿ ಬಹಿರಂಗ ಚರ್ಚೆಗೆ ಅವಕಾಶವಿದ್ದು, ಎಚ್.ಡಿ.ಕುಮಾರಸ್ವಾಮಿ ಲೋಕಸಭೆಯ ಬದಲು ಕರ್ನಾಟಕ ವಿಧಾನಸಭೆಯಲ್ಲಿ ಚರ್ಚೆ ಮಾಡಲು ಆಸಕ್ತಿ ಇದ್ದರೆ ರಾಷ್ಟ್ರಪತಿಗಳಿಂದ ವಿಶೇಷ ಅನುಮತಿಯನ್ನು ಪಡೆದುಕೊಂಡು ವಿಧಾನಸಭೆಯಲ್ಲಿ ಚರ್ಚೆಗೆ ಬರಲಿ. ಕುಮಾರಸ್ವಾಮಿಗೆ ಕರ್ನಾಟಕದ ಬಗ್ಗೆ ಬದ್ಧತೆ ಇದ್ದರೆ ಕೆಳಕಂಡ ರಾಜ್ಯದ ಯೋಜನೆಗಳಿಗೆ ಕೇಂದ್ರದಿಂದ ಅನುಮತಿಯನ್ನು ದೊರಕಿಸಿಕೊಡಲಿ ಎಂದು ರಮೇಶ್‍ಬಾಬು ಒತ್ತಾಯಿಸಿದ್ದಾರೆ.  ‘ಬೆಂಗಳೂರು ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಹಾಗೂ ಹುಬ್ಬಳ್ಳಿ, ಬೆಳಗಾವಿ, ವಿಜಯಪುರ ವಿಮಾನ ನಿಲ್ದಾಣ ವಿಸ್ತರಣೆ/ಉನ್ನತಿ ಸರಕಾರ ಸಿದ್ಧವಾಗಿದ್ದು, ಕೇಂದ್ರದ ಅನುಮತಿ ಬಾಕಿ ಇದೆ. ರಕ್ಷಣಾ ಕೈಗಾರಿಕಾ ಕಾರಿಡಾರ್‍ಗಳು, ಏರೋಸ್ಪೇಸ್ ಮತ್ತು ಡಿಫೆನ್ಸ್ ಕೈಗಾರಿಕಾ ಪಾರ್ಕ್‍ಗಳು, ಬಹು ಜಿಲ್ಲಾ ಕೈಗಾರಿಕಾ ಪಾರ್ಕ್, ದೊಡ್ಡ ಕೈಗಾರಿಕಾ ಹೂಡಿಕೆ ಯೋಜನೆಗಳು, ಬೆಂಗಳೂರು ಉಪನಗರ ರೈಲು ಯೋಜನೆ, ಮೇಕೆದಾಟು ಕುಡಿಯುವ ನೀರಿನ ಯೋಜನೆ, ಕೃಷ್ಣಾ ಮೆಲ್ದಂಡೆ ಮೂರನೇ ಹಂತದ ಯೋಜನೆ, ಕಳಸಾ-ಬಂಡೂರಿ ಕುಡಿಯುವ ನೀರಿನ ಯೋಜನೆ ಸೇರಿದಂತೆ ರಾಜ್ಯದಲ್ಲಿ ಬಾಕಿ ಇರುವ ಯೋಜನೆಗಳಿಗೆ ಕುಮಾರಸ್ವಾಮಿ ಕೇಂದ್ರದ ಅನುಮತಿ ಕೊಡಿಸಲಿ’ ಎಂದು ರಮೇಶ್‍ಬಾಬು ಸವಾಲು ಹಾಕಿದ್ದಾರೆ.

ವಾರ್ತಾ ಭಾರತಿ 11 Jan 2026 7:13 pm

ವರದಾ-ಬೆಡ್ತಿ ಜೋಡಣೆ ಗೊಂದಲ ನಿವಾರಣೆಗೆ ಸರಕಾರ ಸಭೆ ಕರೆಯಲಿ : ಬಸವರಾಜ ಬೊಮ್ಮಾಯಿ

ಹಾವೇರಿ : ವರದಾ-ಬೆಡ್ತಿ ನದಿ ಯೋಜನೆ ಜಾರಿಗೆ ಜನಜಾಗೃತಿ ಮೂಡಿಸಲು ಜಿಲ್ಲೆಯಲ್ಲೂ ಮಠಾಧೀಶರು, ಜನಪ್ರತಿನಿಧಿಗಳ ನೇತೃತ್ವದಲ್ಲಿ ಜನರನ್ನು ಸೇರಿಸಿ ಜಾಗೃತಿ ಸಮಾವೇಶ ಮಾಡಲಾಗುವುದು. ಗೊಂದಲ ನಿವಾರಣೆಗೆ ರಾಜ್ಯ ಸರಕಾರ ಸಭೆ ಕರೆಯಲಿ ಎಂದು ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು. ರವಿವಾರ ಹಾವೇರಿಯಲ್ಲಿ ಪಶ್ಚಿಮ ಘಟ್ಟಗಳನ್ನು ಉಳಿಸಿ, ವರದಾ-ಬೇಡ್ತಿ ವಿರೋಧಿಸಿ ಅಭಿಯಾನದ ಕುರಿತು ಪ್ರತಿಕ್ರಿಯಿಸಿದ ಅವರು, ವರದಾ-ಬೆಡ್ತಿ ನದಿ ಜೋಡಣೆ ಯೋಜನೆ ಇಂದಿನದಲ್ಲ. 1994ರಿಂದಲೇ ಇದೆ. ಅಂದಿನ ಯೋಜನೆಗೂ ಇಂದಿನ ಯೋಜನೆಗೂ ವ್ಯತ್ಯಾಸ ಇದೆ. ಈಗ ಪರಿಸರ ಹಾನಿ, ಅರಣ್ಯ ನಾಶ ಏನೂ ಆಗುವುದಿಲ್ಲ. ಬೆಡ್ತಿ ನದಿಯಿಂದ ಕಡಿಮೆ ನೀರನ್ನು ಎತ್ತುತ್ತಿದ್ದೇವೆ, ಯಾವುದೇ ನೀರಿನ ನಷ್ಟ ಆಗುವುದಿಲ್ಲ. ಸರಕಾರ ಆ ಭಾಗದಲ್ಲಿ ಸ್ವಾಮೀಜಿಗಳ ನೇತೃತ್ವದಲ್ಲಿ ನಡೆದಿರುವ ಹೋರಾಟಕ್ಕೆ ಮನವರಿಕೆ ಮಾಡಿಕೊಡಲಿ ಎಂದು ಹೇಳಿದರು. ಚರ್ಚೆಗೆ ಸಿದ್ದ : ಈ ವಿಚಾರವಾಗಿ ಮುಕ್ತವಾಗಿ ಚರ್ಚಿಸಲು ನೀರಿನ ತಜ್ಞರು, ಪರಿಸರ ವಿಜ್ಞಾನಿಗಳನ್ನು ಕರೆಯಲಿ, ಸೌಹಾರ್ದಯುತ ನಿರ್ಣಯ ತೆಗದುಕೊಳ್ಳಬೇಕು. ಮಳೆಗಾಲದಲ್ಲಿ ನೀರು ಸಂಗ್ರಹ ಮಾಡಿದರೆ ನಮ್ಮ ಭಾಗಕ್ಕೆ ಅನುಕೂಲ ಆಗುತ್ತದೆ. ಇದನ್ನು ಭಾವನಾತ್ಮಕವಾಗಿ ನೋಡಬಾರದು. ಯಾರಿಗೂ ತೊಂದರೆ ಆಗದಂತೆ ಯೋಜನೆ ಮಾಡಬೇಕಿದೆ ಎಂದರು. ರಾಜ್ಯ ಸರಕಾರ ಡಿಪಿಆರ್ ಮಾಡಲು ಒಪ್ಪಿಗೆ ಕೊಟ್ಟಿದೆ. ಡಿಪಿಆರ್ ಆದ ಬಳಿಕ ಸರಕಾರ ಸಭೆ ಕರೆಯಲಿ. ಯಾವುದೇ ನದಿ ನಿಂತ ನೀರಲ್ಲ. ಕೃಷ್ಣಾ ನದಿ ಮಹಾರಾಷ್ಟ್ರದಲ್ಲಿ ಹುಟ್ಟಿ ಆಂದ್ರ, ಕರ್ನಾಟಕದಲ್ಲಿ ಹರಿಯುತ್ತದೆ. ಬರಿ ಮಹಾರಾಷ್ಟ್ರಕ್ಕೆ ಮಾತ್ರವಲ್ಲ. ವರದಾ-ಬೆಡ್ತಿ ಯೋಜನೆ ಆಗಲೇಬೇಕಿದೆ, ಯಾವುದೇ ರೀತಿಯ ಚರ್ಚೆಗೆ ನಾವು ಸಿದ್ದ ಎಂದರು.

ವಾರ್ತಾ ಭಾರತಿ 11 Jan 2026 7:01 pm

ಸಾಮೂಹಿಕ ಹಿಂಸಾಚಾರಗಳ ಅಪಾಯದಲ್ಲಿರುವ ಪ್ರಮುಖ ರಾಷ್ಟ್ರಗಳಲ್ಲಿ ಭಾರತ: ಹೊಲೋಕಾಸ್ಟ್ ಮ್ಯೂಸಿಯಂ ಎಚ್ಚರಿಕೆ

ಹೊಸದಿಲ್ಲಿ, ಜ.11: ಅಮೆರಿಕದ ಹೊಲೋಕಾಸ್ಟ್ ಮೆಮೋರಿಯಲ್ ಮ್ಯೂಸಿಯಂ ಪ್ರಕಟಿಸಿರುವ ವಾರ್ಷಿಕ ಜಾಗತಿಕ ಅಧ್ಯಯನ ವರದಿಯ ಪ್ರಕಾರ, ಭಾರತವು ಮುಂದಿನ ಎರಡು ವರ್ಷಗಳಲ್ಲಿ ನಾಗರಿಕರ ವಿರುದ್ಧ ಸಾಮೂಹಿಕ ಹಿಂಸಾಚಾರ ಮತ್ತು ಜನಾಂಗೀಯ ದೌರ್ಜನ್ಯಗಳ ಗಂಭೀರ ಅಪಾಯಕ್ಕೆ ಸಿಲುಕಬಹುದು. ರಾಜ್ಯಗಳಲ್ಲಿ ಸಾಮೂಹಿಕ ಹತ್ಯೆಗಳು ನಡೆಯುವ ಸಾಧ್ಯತೆಯಿರುವ 168 ದೇಶಗಳ ಪಟ್ಟಿಯಲ್ಲಿ ಭಾರತವು ನಾಲ್ಕನೇ ಸ್ಥಾನದಲ್ಲಿದೆ. ಗಮನಾರ್ಹವಾಗಿ, ಪ್ರಸಕ್ತ ಭಾರೀ ಪ್ರಮಾಣದ ಹಿಂಸಾಚಾರವನ್ನು ಎದುರಿಸದಿದ್ದರೂ, ಅಂತಹ ಅಪಾಯವನ್ನು ಎದುರಿಸುತ್ತಿರುವ ದೇಶಗಳ ಪೈಕಿ ಭಾರತವು ಅಗ್ರಸ್ಥಾನದಲ್ಲಿದೆ ಎಂದು ವರದಿಯು ಹೇಳಿದೆ. ವರದಿಯು ಭಾರತದಲ್ಲಿ ಈಗಲೇ ಸಾಮೂಹಿಕ ಹತ್ಯೆಗಳು ನಡೆಯುತ್ತಿವೆ ಎಂದು ಹೇಳಿಲ್ಲ. ಆದರೆ ಅಪಾಯದ ಲಕ್ಷಣಗಳು ಗೋಚರಿಸುತ್ತಿವೆ ಮತ್ತು ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳದಿದ್ದರೆ ಪರಿಸ್ಥಿತಿ ಗಂಭೀರವಾಗಬಹುದು ಎಂದು ಎಚ್ಚರಿಕೆ ನೀಡಿದೆ. ಮ್ಯೂಸಿಯಂನ ಅರ್ಲಿ ವಾರ್ನಿಂಗ್ ಪ್ರಾಜೆಕ್ಟ್ ಸಿದ್ಧಪಡಿಸಿರುವ ಡಿಸೆಂಬರ್ 2025ರ ವರದಿಯು, ಭಾರತವು 2026ರ ಅಂತ್ಯಕ್ಕೆ ಮುನ್ನ ನಾಗರಿಕರ ವಿರುದ್ಧ ಉದ್ದೇಶಪೂರ್ವಕ ಸಾಮೂಹಿಕ ಹಿಂಸಾಚಾರಕ್ಕೆ ಸಾಕ್ಷಿಯಾಗುವ ಸಾಧ್ಯತೆ ಶೇ.7.5ರಷ್ಟಿದೆ ಎಂದು ಹೇಳಿದೆ. ಸಶಸ್ತ್ರ ಗುಂಪುಗಳು ಒಂದು ವರ್ಷದೊಳಗೆ ಕನಿಷ್ಠ 1,000 ನಾಗರಿಕರನ್ನು ಅವರ ಜನಾಂಗೀಯತೆ, ಧರ್ಮ, ರಾಜಕೀಯ ಅಥವಾ ಭೌಗೋಳಿಕತೆಯ ಆಧಾರದ ಮೇಲೆ ಕೊಲ್ಲಬಹುದು ಎಂದು ವರದಿಯು ತಿಳಿಸಿದೆ. ಪಟ್ಟಿಯಲ್ಲಿ ಮೂರು ದೇಶಗಳು ಭಾರತಕ್ಕಿಂತ ಮೇಲಿನ ಸ್ಥಾನಗಳಲ್ಲಿದೆ. ಮ್ಯಾನ್ಮಾರ್ ಅಗ್ರಸ್ಥಾನದಲ್ಲಿದ್ದರೆ, ಚಾಡ್ ಮತ್ತು ಸುಡಾನ್ ನಂತರದ ಸ್ಥಾನಗಳಲ್ಲಿವೆ. ಮ್ಯಾನ್ಮಾರ್ ಮತ್ತು ಸುಡಾನ್ ಸೇರಿದಂತೆ ಪಟ್ಟಿಯಲ್ಲಿನ ಹಲವಾರು ಅಗ್ರ ದೇಶಗಳಲ್ಲಿ ಈಗಾಗಲೇ ಸಾಮೂಹಿಕ ಹತ್ಯೆಗಳು ನಡೆಯುತ್ತಿದ್ದು, ಇಂತಹ ಅಪಾಯವನ್ನು ಎದುರಿಸಬಹುದಾದ ದೇಶವಾಗಿ ಭಾರತದ ಸ್ಥಾನವನ್ನು ಇದು ಗಮನಾರ್ಹವಾಗಿಸುತ್ತದೆ. ಮ್ಯೂಸಿಯಂ ಮತ್ತು ಡಾರ್ಟ್‌ಮೌತ್ ಕಾಲೇಜಿನ ಸಂಶೋಧಕರು ಹಿಂಸಾಚಾರದ ಮಾದರಿಗಳನ್ನು ಗುರುತಿಸಲು ದಶಕಗಳ ಐತಿಹಾಸಿಕ ದತ್ತಾಂಶಗಳನ್ನು ವಿಶ್ಲೇಷಿಸಿದ್ದಾರೆ. ಅವರು ಹಿಂದಿನ ವರ್ಷಗಳಲ್ಲಿ ಸಾಮೂಹಿಕ ಹಿಂಸಾಚಾರ ಭುಗಿಲೆದ್ದಿದ್ದ ದೇಶಗಳಲ್ಲಿ ಸಮಾನವಾಗಿದ್ದ ಗುಣಲಕ್ಷಣಗಳನ್ನು ಪರಿಶೀಲಿಸಿದ ಬಳಿಕ, ಇಂದಿನ ದಿನಗಳಲ್ಲಿ ಇಂತಹುದೇ ಎಚ್ಚರಿಕೆಯ ಸಂಕೇತಗಳಿಗಾಗಿ ಹುಡುಕಿದ್ದಾರೆ. ಮಾದರಿಯು ಜನಸಂಖ್ಯಾ ಗಾತ್ರ ಮತ್ತು ಆರ್ಥಿಕ ಸೂಚಕಗಳಿಂದ ಹಿಡಿದು ರಾಜಕೀಯ ಸ್ವಾತಂತ್ರ್ಯ ಮತ್ತು ಸಶಸ್ತ್ರ ಸಂಘರ್ಷಗಳವರೆಗೆ 30ಕ್ಕೂ ಅಧಿಕ ಅಂಶಗಳನ್ನು ಪರಿಶೀಲಿಸಿದೆ. ಐತಿಹಾಸಿಕವಾಗಿ, ಪ್ರತಿ ವರ್ಷ ಸರಾಸರಿ ಒಂದು ಅಥವಾ ಎರಡು ದೇಶಗಳಲ್ಲಿ ಸಾಮೂಹಿಕ ಹತ್ಯೆಗಳ ಹೊಸ ಘಟನೆಗಳು ಸಂಭವಿಸುತ್ತವೆ. ಯೋಜನೆಯು ಹಿಂಸಾಚಾರವನ್ನು ತಡೆಯಲು ಯಾವ ಕ್ರಮಗಳ ಮೇಲೆ ಗಮನ ಹರಿಸಬೇಕು ಎಂಬುದನ್ನು ನಿರ್ಧರಿಸಲು ಅಧಿಕಾರಿಗಳು ಮತ್ತು ಸಂಸ್ಥೆಗಳಿಗೆ ನೆರವಾಗುವ ಗುರಿಯನ್ನು ಹೊಂದಿದೆ ಎಂದು ಮ್ಯೂಸಿಯಂನ ಜನಾಂಗೀಯ ಹತ್ಯೆ ತಡೆ ಕೇಂದ್ರದ ಸಂಶೋಧನಾ ನಿರ್ದೇಶಕ ಲಾರೆನ್ಸ್ ವೂಚರ್ ಅವರು ವರದಿಯ ಮುನ್ನುಡಿಯಲ್ಲಿ ಬರೆದಿದ್ದಾರೆ. ಹತ್ಯಾಕಾಂಡಗಳನ್ನು ತಡೆಯಬಹುದು ಎಂದು ಒತ್ತಿ ಹೇಳಿರುವ ಅವರು, ಎಚ್ಚರಿಕೆಯ ಸಂಕೇತಗಳನ್ನು ಗಮನಿಸಿ ಆರಂಭಿಕ ಕ್ರಮಗಳನ್ನು ಕೈಗೊಳ್ಳುವ ಮೂಲಕ ವ್ಯಕ್ತಿಗಳು ಮತ್ತು ಸರ್ಕಾರಗಳು ಜೀವಗಳನ್ನು ಉಳಿಸಬಹುದು ಎಂದು ತಿಳಿಸಿದ್ದಾರೆ. ಅಧ್ಯಯನವು ಪ್ರಚಲಿತ ಹಿಂಸಾಚಾರವು ಇನ್ನಷ್ಟು ಹದಗೆಡಬಹುದೇ ಎಂಬುದನ್ನು ಪರಿಶೀಲಿಸುವುದಕ್ಕಿಂತ, ಭವಿಷ್ಯದಲ್ಲಿ ಹಿಂಸಾಚಾರ ಭುಗಿಲೇಳುವ ಸಾಧ್ಯತೆಯನ್ನು ಮಾತ್ರ ವಿಶ್ಲೇಷಿಸಿದೆ. ಅರ್ಲಿ ವಾರ್ನಿಂಗ್ ಪ್ರಾಜೆಕ್ಟ್ 2014ರಿಂದ ವಾರ್ಷಿಕ ಅಧ್ಯಯನ ವರದಿಗಳನ್ನು ಬಿಡುಗಡೆ ಮಾಡುತ್ತಿದೆ. ಈ ಅವಧಿಯಲ್ಲಿ ಮ್ಯಾನ್ಮಾರ್‌ನಲ್ಲಿ ರೋಹಿಂಗ್ಯಾಗಳ ವಿರುದ್ಧ ನರಮೇಧ, ದಕ್ಷಿಣ ಸುಡಾನ್ ಹಾಗೂ ಇಥಿಯೋಪಿಯಾದಲ್ಲಿ ಸಾಮೂಹಿಕ ನಾಗರಿಕ ಸಾವುಗಳು ಸೇರಿದಂತೆ ಅನೇಕ ದೇಶಗಳಲ್ಲಿ ಸಾಮೂಹಿಕ ದೌರ್ಜನ್ಯಗಳು ನಡೆದಿವೆ. ಇಂತಹ ಪ್ರಕರಣಗಳಲ್ಲಿಯೂ ಎಚ್ಚರಿಕೆಗಳನ್ನು ನೀಡಲಾಗಿತ್ತು. ಆದರೆ ಅವು ಸಾಕಷ್ಟು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿರಲಿಲ್ಲ ಎಂದು ವೂಚರ್ ಹೇಳಿದ್ದಾರೆ. ಸೌಜನ್ಯ : thewire.in

ವಾರ್ತಾ ಭಾರತಿ 11 Jan 2026 6:58 pm

ಕಂಪ್ಲಿ ಕ್ಷೇತ್ರದ ಅಭಿವೃದ್ಧಿ ನನ್ನ ಧ್ಯೇಯ : ಶಾಸಕ ಜೆ.ಎನ್.ಗಣೇಶ್‌

ಕಂಪ್ಲಿ: ಕ್ಷೇತ್ರದ ಅಭಿವೃದ್ಧಿ ಕಾರ್ಯದ ಜೊತೆಗೆ ಜನರ ಸಂಕಷ್ಟಗಳಿಗೆ ಸ್ಪಂದಿಸುವ ಕೆಲಸ ಮಾಡುತ್ತೇನೆ ಹೊರತು ಜನಾರ್ದನರೆಡ್ಡಿ ಅವರ ಹೇಳಿಕೆಗಳಿಗೆ ಕಿವಿಗೊಡುವುದಿಲ್ಲ ಎಂದು ಶಾಸಕ ಜೆ.ಎನ್.ಗಣೇಶ ಹೇಳಿದರು. ಬಳ್ಳಾರಿಯ 22ನೇ ವಾರ್ಡಿನಲ್ಲಿ 2024-25ನೇ ಸಾಲಿನ ಕೆಕೆಆರ್‌ಡಿಬಿ ಯೋಜನೆಯಡಿ ಸುಮಾರು 15 ಲಕ್ಷ ವೆಚ್ಚದಲ್ಲಿ ನಿರ್ಮಿಸಲಿರುವ ಸಿಸಿ ಚರಂಡಿ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಶಾಸಕ ಜೆ.ಎನ್.ಗಣೇಶ, ಜನಾರ್ದನರೆಡ್ಡಿ ದೊಡ್ಡವರು. ಅವರು ರಾಜ್ಯ ಮತ್ತು ಕೇಂದ್ರದ ನಾಯಕರಾಗಿದ್ದಾರೆ. ಅವರು ಏನಾದರೂ ಮಾತಾಡುತ್ತಾರೆ. ನಾನು ಮಾಧ್ಯಮದಿಂದ ದೂರವಿರುತ್ತೇನೆ. ಇಂತಹ ಸೊಕ್ಕಿನ ಮಾತುಗಳಿಗೆ ಕಿವಿಗೊಡುವುದಿಲ್ಲ. ಕ್ಷೇತ್ರದಲ್ಲಿ ಒಳ್ಳೆಯ ಕೆಲಸ ಮಾಡಿದರೆ ಮತದಾರರು ಕೈಹಿಡಿಯಲಿದ್ದಾರೆ ಎಂದು ಹೇಳಿದರು. ಉತ್ಸವ ಮಾಡಿದರೆ ಕಂಪ್ಲಿ ಮತ್ತು ಕುರುಗೋಡು ಎರಡೂ ಉತ್ಸವಗಳನ್ನು ಮಾಡುತ್ತೇನೆ. ಒಬಿಸಿ ಹಾಸ್ಟೆಲ್ ನಿರ್ಮಿಸಬೇಕೆಂಬುದು ಬಹುದಿನದ ಬೇಡಿಕೆಯಾಗಿತ್ತು. ಆದರೆ, ಈಗ ಕಾಲ ಕೂಡಿ ಬಂದಿದೆ. ಈಗಾಗಲೇ ಕಟ್ಟಡ ನಿರ್ಮಾಣಕ್ಕಾಗಿ 3 ಕೋಟಿ ರೂ. ಅನುದಾನ ಬಿಡುಗಡೆಯಾಗಿದ್ದು, ಇನ್ನೂ 3 ಕೋಟಿ ಬರಬೇಕಿದೆ. ಒಟ್ಟಾರೆ 6 ಕೋಟಿ ವೆಚ್ಚದಲ್ಲಿ ಹಾಸ್ಟರ್ ಕಾಮಗಾರಿ ಆರಂಭಗೊಂಡಿದೆ. ಈಗಾಗಲೇ ಎಸ್ಸಿ, ಒಬಿಸಿ, ಅಲ್ಪಸಂಖ್ಯಾತರ ಹಾಸ್ಟೆಲ್ ಆಗಿದೆ. ಮುಂಬರುವ ದಿನಗಳಲ್ಲಿ ಸುಮಾರು 5.50 ಕೋಟಿ ವೆಚ್ಚದಲ್ಲಿ ಎಸ್ಟಿ ಹಾಸ್ಟೆಲ್‌ ನಿರ್ಮಾಣವಾಗಲಿದೆ. ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗೆ ಮೊದಲಿಂದಲೂ ಹೆಚ್ಚಿನ ಆಧ್ಯತೆ ನೀಡಲಾಗಿದೆ. ಈ ಭಾಗದಲ್ಲಿ ರೈತಾಪಿ ಜನರಿದ್ದಾರೆ. ಆದ್ದರಿಂದ ಮಕ್ಕಳಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಹಾಸ್ಟೆಲ್ ನಿರ್ಮಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಒಬಿಸಿ ಮಹಿಳಾ ಹಾಸ್ಟೆಲ್ ನಿರ್ಮಿಸಲಾಗುವುದು ಎಂದರು. ನಂತರ ಒಬಿಸಿ ಹಾಸ್ಟೆಲ್ ಕಟ್ಟಡ ಕಾಮಗಾರಿಗೆ ಶಾಸಕ ಗಣೇಶ ಅವರು ಶಂಕುಸ್ಥಾಪನೆ ನೆರವೇರಿಸಿದರು. ಈ ಸಂದರ್ಭದಲ್ಲಿ ಎಇಇ ಚಂದ್ರಕಾಂತ, ಮುಖ್ಯಾಧಿಕಾರಿ ಬಿ.ಮಲ್ಲಿಕಾರ್ಜುನ, ನಿಲಯ ಪಾಲಕರಾದ ಎಂ.ಗಾದಿಲಿಂಗಪ್ಪ, ವಿರುಪಾಕ್ಷಿ, ಮುಖಂಡರಾದ ಕೆ.ಶ್ರೀನಿವಾಸರಾವ್, ಭಟ್ಟ ಪ್ರಸಾದ್, ಸಿ.ಆರ್.ಹನುಮಂತ, ಎಲ್.ರಾಮನಾಯ್ಡು, ಕರಿಬಸವನಗೌಡ, ಜಾಫರ್, ಹಬೀಬ್ ರೆಹಮಾನ್, ಕೆ.ಷಣ್ಮುಕಪ್ಪ, ನಾಯಕರ ತಿಮ್ಮಪ್ಪ, ಗೋಪಾಲ, ಯಾಳ್ಪಿ ಅಬ್ದುಲ್ ಮುನಾಫ್, ಕರೇಕಲ್ ಮನೋಹರ, ಮೆಹಬೂಬ್, ಡೆಕೋರೇಷನ್ ನಾಗರಾಜ, ಪ್ರಸಾದ್, ಹನುಮಂತಪ್ಪ, ಅಕ್ಕಿ ಜಿಲಾನ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.  

ವಾರ್ತಾ ಭಾರತಿ 11 Jan 2026 6:52 pm

SIR Row; ಗುರುತು ಪರಿಶೀಲನೆಗೆ ನೌಕಾಸೇನೆ ಮಾಜಿ ಮುಖ್ಯಸ್ಥರಿಗೆ ಬುಲಾವ್‌: ವೀರಚಕ್ರ ಪ್ರಶಸ್ತಿ ಪುರಸ್ಕೃತ ಹೇಳಿದ್ದೇನು?

ಚುನಾವಣಾ ಆಯೋಗದ ಮತದಾರರ ಪಟ್ಟಿ ಪರಿಷ್ಕರಣೆ ಸಾಧಕ-ಬಾಧಕಗಳ ಚರ್ಚೆ ಒತ್ತಟ್ಟಿಗಿರಲಿ. SIR ಪ್ರಕ್ರಿಯೆಯಲ್ಲಿ ಆಗುತ್ತಿರುವ ಗೊಂದಲಗಳಿಗೆ ಪರಿಹಾರ ಕಂಡುಕೊಳ್ಳುವಲ್ಲಿ ಚುನಾವಣಾ ಆಯೋಗ ಇನ್ನೂ ಯಶಸ್ವಿಯಾಗಿಲ್ಲ. ಇದಕ್ಕೆ ಪುಷ್ಠಿ ಎಂಬಂತೆ, ಭಾರತೀಯ ನೌಕಾಸೇನೆಯ ಮಾಜಿ ಮುಖ್ಯಸ್ಥ ಅಡ್ಮಿರಲ್‌ (ನಿವೃತ್ತ) ಅರುಣ್‌ ಪ್ರಕಾಶ್‌ ದಂಪತಿಗೆ ತಮ್ಮ ಗುರುತು ಸಾಬೀತುಪಡಿಸುವಂತೆ ಕೋರಿ, ಎಸ್ಐಆರ್‌ ನೋಟಿಸ್‌ ನೀಡಲಾಗಿದ್ದು, ಇದು ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿದೆ. ವೀರಚಕ್ರ ಪ್ರಶಸ್ತಿ ಪುರಸ್ಕೃತ ನೌಕಾಪಡೆ ಮಾಜಿ ಮುಖ್ಯಸ್ಥರನ್ನು ಚುನಾವಣಾ ಆಯೋಗ ಅವಮಾನ ಮಾಡಿದೆ ಎಂಬ ಆರೋಪ ಕೇಳಿಬಂದಿದೆ.

ವಿಜಯ ಕರ್ನಾಟಕ 11 Jan 2026 6:47 pm

ಹುಬ್ಬಳ್ಳಿ ಲೈಂಗಿಕ ದೌರ್ಜನ್ಯ, ಅಶ್ಲೀಲ ವಿಡಿಯೋ ಹರಿದಾಟ ಕೇಸ್‌ನಲ್ಲಿ ಮೂವರ ಬಂಧನ

ಹುಬ್ಬಳ್ಳಿ: 35 ವರ್ಷದ ಮಹಿಳೆಯ ಅಪಹರಣ, ಲೈಂಗಿಕ ದೌರ್ಜನ್ಯ ಹಾಗೂ ಡಿಜಿಟಲ್ ಕಿರುಕುಳ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಈ ಘಟನೆ 9ರ ರಾತ್ರಿ ಅಂಬೇಡ್ಕರ್‌ ಮೈದಾನದ ಸಮೀಪ ನಡೆದಿದ್ದು, ದೌರ್ಜನ್ಯಕ್ಕೆ ಸಂಬಂಧಿಸಿದ ಅಶ್ಲೀಲ ವಿಡಿಯೋಗಳು ಸಾಮಾಜಿಕ ಜಾಲತಾಣಗಳು ಹಾಗೂ ಮೆಸೇಜಿಂಗ್‌ ಪ್ಲಾಟ್‌ಫಾರ್ಮ್‌ಗಳಲ್ಲಿ ಹರಿದಾಡುತ್ತಿದ್ದಂತೆ ಪ್ರಕರಣ ಬೆಳಕಿಗೆ ಬಂದಿದೆ. ಪೊಲೀಸರ ಮಾಹಿತಿ ಪ್ರಕಾರ, ಇಂಡಿ

ಒನ್ ಇ೦ಡಿಯ 11 Jan 2026 6:34 pm

ಭಾರತೀಯ ಸಂಜಾತ ಗಣಿತ ತಜ್ಞೆ ನಳಿನಿ ಜೋಶಿಗೆ 2025ರ NSW ವರ್ಷದ ವಿಜ್ಞಾನಿ ಪ್ರಶಸ್ತಿ

NSW ವರ್ಷದ ವಿಜ್ಞಾನಿ ಪ್ರಶಸ್ತಿಯನ್ನು ಪಡೆದ ಮೊದಲ ಗಣಿತಜ್ಞೆಯಾಗಿ ನಳಿನಿ ಜೋಶಿ ಆಸ್ಟ್ರೇಲಿಯಾದ ಕ್ವಾಂಟಮ್ ಭವಿಷ್ಯವನ್ನು ಭದ್ರಪಡಿಸುತ್ತಿದ್ದಾರೆ. ಜೊತೆಗೆ ಮುಂದಿನ ಪೀಳಿಗೆಯ ವಿಜ್ಞಾನ ಮತ್ತು ಗಣಿತದ ನಾಯಕರಿಗೆ ಸ್ಫೂರ್ತಿಯಾಗಿದ್ದಾರೆ. ಭಾರತೀಯ ಮೂಲದ ಗಣಿತಜ್ಞೆ ಮತ್ತು ಪ್ರಾಧ್ಯಾಪಕರಾದ ನಳಿನಿ ಜೋಶಿ ಎಒ ಅವರನ್ನು 2025ರ ಆಸ್ಟ್ರೇಲಿಯಾದ ನ್ಯೂ ಸೌತ್ ವೇಲ್ಸ್ (NSW) ವರ್ಷದ ವಿಜ್ಞಾನಿ ಎಂದು ಘೋಷಿಸಲಾಗಿದೆ. NSWನ ಅತ್ಯುನ್ನತ ವೈಜ್ಞಾನಿಕ ಗೌರವವನ್ನು ಮೊದಲ ಬಾರಿಗೆ ಗಣಿತ ತಜ್ಞರಿಗೆ ನೀಡಲಾಗಿದೆ. NSW ನೀಡುವ ವೈಜ್ಞಾನಿಕ ಪ್ರೀಮಿಯರ್ ಪ್ರಶಸ್ತಿಗಳ ಭಾಗವಾಗಿ ನಳಿನಿ ಜೋಶಿ ಈ ಗೌರವವನ್ನು ಪಡೆದಿದ್ದಾರೆ. ನಳಿನಿ ಜೋಶಿ ಸಿಡ್ನಿ ವಿಶ್ವವಿದ್ಯಾಲಯದಲ್ಲಿ ಅನ್ವಯಿಕ ಗಣಿತಶಾಸ್ತ್ರದ ಮುಖ್ಯಸ್ಥರು ಮತ್ತು ಪಾಯ್ನೆ–ಸ್ಕಾಟ್ ಪ್ರೊಫೆಸರ್ ಆಗಿದ್ದಾರೆ. ಇಂಟೆಗ್ರೇಬಲ್ ಸಿಸ್ಟಮ್ಸ್‌ನಲ್ಲಿ ಅವರು ನಡೆಸಿದ ಪ್ರವರ್ತಕ (ಮೊದಲ ಶೋಧಕ) ಸಂಶೋಧನಾ ಕಾರ್ಯಗಳಿಗೆ ಪ್ರಸಿದ್ಧರಾಗಿದ್ದಾರೆ. ಅವರ ಸಂಶೋಧನೆ ಹವಾಮಾನ ವಿಜ್ಞಾನದಿಂದ ಹಿಡಿದು ಫೈಬರ್ ಆಪ್ಟಿಕ್ಸ್‌ವರೆಗಿನ ವಿವಿಧ ಕ್ಷೇತ್ರಗಳಲ್ಲಿ ಕಾಣಿಸಿಕೊಳ್ಳುವ ಸಂಕೀರ್ಣ ಗಣಿತ ವಿನ್ಯಾಸಗಳ ಆಳವಾದ ಅಧ್ಯಯನವನ್ನು ಒಳಗೊಂಡಿದೆ. ನಳಿನಿ ಜೋಶಿ ಮ್ಯಾನ್ಮಾರ್‌ ನಲ್ಲಿ ಜನಿಸಿದ್ದಾರೆ. ನಂತರ ಅವರ ಕುಟುಂಬ ಆಸ್ಟ್ರೇಲಿಯಾಗೆ ವಲಸೆ ಹೋದ ಬಳಿಕ ಅಲ್ಲಿಯೇ ತಮ್ಮ ಬಾಲ್ಯವನ್ನು ಕಳೆದರು. ಸಿಡ್ನಿಯಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಣ ಪಡೆದ ಅವರು, ಸಿಡ್ನಿ ವಿಶ್ವವಿದ್ಯಾಲಯದಲ್ಲಿ ಬಿಎಸ್ಸಿ ಪದವಿ ಮುಗಿಸಿದರು. ಬಳಿಕ ಪ್ರಿನ್ಸ್ಟನ್ ವಿಶ್ವವಿದ್ಯಾಲಯದಲ್ಲಿ ಪಿಎಚ್‌ಡಿ ಪದವಿ ಪಡೆದಿದ್ದಾರೆ. ಸಿಡ್ನಿ ವಿಶ್ವವಿದ್ಯಾಲಯದಲ್ಲಿ ನೇಮಕಗೊಂಡ ಮೊದಲ ಮಹಿಳಾ ಗಣಿತ ಪ್ರಾಧ್ಯಾಪಕರಾಗಿದ್ದಾರೆ. ಗಣಿತ ಸಮಸ್ಯೆಗಳ ಪರಿಹಾರಕ್ಕೆ ಹೊಸ ವಿಧಾನಗಳನ್ನು ಅಭಿವೃದ್ಧಿಪಡಿಸಿದವರಾಗಿ ನಳಿನಿ ಜೋಶಿ ಗುರುತಿಸಿಕೊಂಡಿದ್ದಾರೆ. ಪ್ರಸ್ತುತ ಅವರು ಕ್ವಾಂಟಮ್ ಕ್ರಿಪ್ಟೋಗ್ರಫಿ ಕ್ಷೇತ್ರದಲ್ಲಿ ತಮ್ಮ ಅನುಭವವನ್ನು ತೊಡಗಿಸಿಕೊಂಡಿದ್ದಾರೆ. ಕ್ವಾಂಟಮ್ ಕಂಪ್ಯೂಟರ್‌ಗಳು ಜಾಗತಿಕ ಸೈಬರ್ ಭದ್ರತೆಗೆ ತರುವ ಸವಾಲುಗಳನ್ನು ನಿರ್ವಹಿಸುವ ಕ್ಷೇತ್ರದಲ್ಲೂ ಅವರು ಕಾರ್ಯನಿರ್ವಹಿಸುತ್ತಿದ್ದಾರೆ. “ಇಪ್ಪತ್ತು ವರ್ಷಗಳ ಹಿಂದೆ ನಮ್ಮ ಬಳಿ ಸ್ಮಾರ್ಟ್‌ಫೋನ್‌ಗಳೇ ಇರಲಿಲ್ಲ. ಕಾಫಿ ಕುಡಿಯುವುದರಿಂದ ಹಿಡಿದು ಬ್ಯಾಂಕ್ ಬ್ಯಾಲೆನ್ಸ್‌ವರೆಗೂ ಎಲ್ಲವನ್ನೂ ನಾವು ವಿಭಿನ್ನ ರೀತಿಯಲ್ಲಿ ನಿರ್ವಹಿಸುತ್ತಿದ್ದೆವು. ಮುಂದಿನ ಇಪ್ಪತ್ತು ವರ್ಷಗಳಲ್ಲಿ ನಾವು ಕ್ವಾಂಟಮ್ ಚಾಲಿತ ಸಾಧನಗಳ ಮೂಲಕ ಕ್ವಾಂಟಮ್ ಹಣಗಳೊಂದಿಗೆ ವ್ಯವಹರಿಸುವ ಸ್ಥಿತಿಗೆ ತಲುಪುತ್ತೇವೆ. ಆದರೆ ಆ ಭವಿಷ್ಯದಲ್ಲಿ ನಮ್ಮನ್ನು ರಕ್ಷಿಸಿಕೊಳ್ಳುವುದು ಹೇಗೆ ಎಂಬ ಕುರಿತು ಕೈಗಾರಿಕಾ ಕ್ಷೇತ್ರದಲ್ಲಿ ಕನಿಷ್ಠ ಜ್ಞಾನವೂ ಇಲ್ಲ. ಆಸ್ಟ್ರೇಲಿಯಾದಲ್ಲಿ ಈ ವಿಷಯದಲ್ಲಿ ಪರಿಣತಿ ಪಡೆದವರು ಡಜನ್‌ಗೂ ಕಡಿಮೆ ಮಂದಿ ಮಾತ್ರ ಇದ್ದಾರೆ,” ಎಂದು ಅವರು ಹೇಳಿದ್ದಾರೆ. ಅವರ ಪ್ರಕಾರ ಕ್ವಾಂಟಮ್ ಭವಿಷ್ಯಕ್ಕೆ ಸಿದ್ಧವಾಗಲು ಗಣಿತ ಅತ್ಯಂತ ಮುಖ್ಯವಾಗಿದೆ. ಸಿಡ್ನಿ ವಿಶ್ವವಿದ್ಯಾಲಯದಲ್ಲಿ ಗಣಿತದ ಪ್ರಾಧ್ಯಾಪಕರಾಗಿ ಅನೇಕ ಯುವ ಸಂಶೋಧಕರಿಗೆ ಅವರು ಮಾರ್ಗದರ್ಶನ ನೀಡಿದ್ದಾರೆ. ಈ ಸೇವೆಗೆ 2018ರಲ್ಲಿ ಯುರೇಕಾ ಪ್ರಶಸ್ತಿ ಪಡೆದಿದ್ದಾರೆ. 2016ರಲ್ಲಿ ಆಫಿಸರ್ ಆಫ್ ದ ಆರ್ಡರ್ ಪ್ರಶಸ್ತಿಯನ್ನೂ ಗಳಿಸಿದ್ದಾರೆ. ಅವರು ಆಸ್ಟ್ರೇಲಿಯಾ ಅಕಾಡೆಮಿ ಆಫ್ ಸೈನ್ಸಸ್‌ನ ಸದಸ್ಯರಾಗಿದ್ದಾರೆ. ಜೊತೆಗೆ ಅಂತಾರಾಷ್ಟ್ರೀಯ ಗಣಿತ ಒಕ್ಕೂಟದ ಮೊದಲ ಆಸ್ಟ್ರೇಲಿಯನ್ ಉಪಾಧ್ಯಕ್ಷರಾಗಿದ್ದಾರೆ.

ವಾರ್ತಾ ಭಾರತಿ 11 Jan 2026 6:17 pm

ಕಾರ್ಕಳ: ಉಚಿತ ಕಿವಿಯ ಶ್ರವಣ ತಪಾಸಣೆ, ಶ್ರವಣ ಯಂತ್ರಕ್ಕೆ ಸಹಾಯಧನ ವಿತರಣೆ

ಕಾರ್ಕಳ: ರಾಜಾಪುರ ಸರಸ್ವತ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಮತ್ತು ಕಾರ್ಕಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ, ಕಾರ್ಕಳ ನೇತೃತ್ವದಲ್ಲಿ ಟೀಮ್ ಈಶ್ವರ್ ಮಲ್ಪೆ ಇವರ ಸಹಯೋಗದೊಂದಿಗೆ ಉಚಿತ ಕಿವಿಯ ಶ್ರವಣ ತಪಾಸಣೆ ಮತ್ತು ಶ್ರವಣ ಯಂತ್ರಕ್ಕೆ ಸಹಾಯಧನ ವಿತರಣಾ ಕಾರ್ಯಕ್ರಮವು ಜ. 11ರಂದು ರಾಜಾಪುರ ಸರಸ್ವತ ಕ್ರೆಡಿಟ್ ಕೋ ಆಪರೇಟಿವ್ ಸೊಸೈ ಟಿಯ ಸಾರಸ್ವತ ಸೌಧ ಸಭಾಂಗಣದಲ್ಲಿ ನಡೆಯಿತು. ರಾಜಾಪುರ ಸರಸ್ವತ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಪ್ರಧಾನ ವ್ಯವಸ್ಥಾಪಕರಾದ ಸುರೇಂದ್ರ ನಾಯಕ್ ಶಿಬಿರವನ್ನು ಉದ್ಘಾಟಿಸಿ ಅಗತ್ಯವುಳ್ಳವರಿಗೆ ಶಿಬಿರದ ಪ್ರಯೋಜನ ದೊರಕುವಂತಾಗಲಿ ಎಂದರು. ಡಾ| ಅಂಕಿತಾ ಕಲ್ಮಾಡಿ ಮಾತನಾಡಿ ಕಿವಿಯ ಪಂಚೇಂದ್ರಿಯಗಳಲ್ಲಿ ಕಿವಿಯ ಅರೈಕೆ ಅತ್ಯಮೂಲ್ಯವಾಗಿದೆ. ಸ್ಥಳೀಯವಾಗಿ ಸಿಗುವ ಕಿವಿಯ ಉಪಕರಣಗಳನ್ನು ಉಪಯೋಗಿಸಿಕೊಂಡು ಇನ್ನಷ್ಟು ಸಮಸ್ಯೆಗೆ ಒಳಪಡದೆ ಸರಿಯಾಗಿ ಪರೀಕ್ಷಿಸಿ ಡಿಜಿಟಲ್ ಉಪಕರಣಗಳನ್ನು ಉಪಯೋಗಿಸುವಂತೆ ಸಲಹೆ ನೀಡಿದರು. ಕಾರ್ಕಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಬಿ. ಹರೀಶ್ ಆಚಾರ್ಯ, ಡಾ| ಅಂಕಿತಾ ಕಲ್ಮಾಡಿ, ಟೀಮ್ ಈಶ್ವರ್ ಮಲ್ಪೆ ತಂಡದ ಲವ ಬಂಗೇರ ಉಪಸ್ಥಿತರಿಸದ್ದರು. ಸೊಸೈಟಿಯ ಹಿರಿಯ ವ್ಯವಸ್ಥಾಪಕರಾದ ಉದಯ ಪ್ರಭು ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಶಿಬಿರದಲ್ಲಿ ಸುಮಾರು 19 ಮಂದಿ ಭಾಗವಹಿಸದ್ದರು. ಅಗತ್ಯವುಳ್ಳ 8 ಮಂದಿಗೆ ಸಹಾಯಧನ ಹಸ್ತಾಂತರಿಸಲಾ ಯಿತು. ಡಾ| ಅಂಕಿತಾ ಕಲ್ಮಾಡಿ ಕಿವಿಯ ಶ್ರವಣ ತಪಾಸಣೆ ನಡೆಸಿದರು.

ವಾರ್ತಾ ಭಾರತಿ 11 Jan 2026 6:08 pm

ಬದ್ರಿಯಾ ಜುಮಾ ಮಸೀದಿ ಬಂಗೇರಕಟ್ಟೆ: ನೂತನ ಅಧ್ಯಕ್ಷರಾಗಿ ಇಕ್ಬಾಲ್ ಬಂಗೇರಕಟ್ಟೆ, ಪ್ರ. ಕಾರ್ಯದರ್ಶಿಯಾಗಿ ಹನೀಫ್ ಟಿ.ಎಸ್ ಆಯ್ಕೆ

ಬಂಗೇರಕಟ್ಟೆ: ನೂರುಲ್ ಹುದಾ ಮದರಸ ವಠಾರದಲ್ಲಿ ನಡೆದ ಬದ್ರಿಯಾ ಜುಮಾ ಮಸೀದಿಯ ವಾರ್ಷಿಕ ಮಹಾಸಭೆ ಹಾಗೂ ನೂತನ ಆಡಳಿತ ಸಮಿತಿ ಸದಸ್ಯರ ಆಯ್ಕೆಯು ಶುಕ್ರವಾರ ನಡೆಯಿತು. 2026ನೇ ಸಾಲಿನ ಆಡಳಿತ ಸಮಿತಿಯ ನೂತನ ಅಧ್ಯಕ್ಷರಾಗಿ ಇಕ್ಬಾಲ್ ಬಂಗೇರಕಟ್ಟೆ, ಉಪಾಧ್ಯಕ್ಷರಾಗಿ ಹಕೀಂ ರೋಯಲ್, ಪ್ರಧಾನ ಕಾರ್ಯದರ್ಶಿಯಾಗಿ ಹನೀಫ್ ಟಿ.ಎಸ್, ಕೋಶಾಧಿಕಾರಿಯಾಗಿ ಯೂಸುಫ್ ಬಳ್ಳಮಂಜ ಹಾಗೂ ಜೊತೆ ಕಾರ್ಯದರ್ಶಿಗಳಾಗಿ ಹಮೀದ್ ಸಾಲುಮರ ಮತ್ತು ಇಕ್ಬಾಲ್ ರೋಯಲ್ ಅವರು ಆಯ್ಕೆಯಾದರು. ಮೂರು ವರ್ಷಕ್ಕೊಮ್ಮೆ ನಡೆಯುವ ಗೌರವಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆದಿದ್ದು ನೂತನ ಗೌರವಾಧ್ಯಕ್ಷರಾಗಿ ಇಸ್ಮಾಯಿಲ್ ಪಿ.ಕೆ ಆಯ್ಕೆಯಾದರು ಎಂದು ಪ್ರಕಟನೆ ತಿಳಿಸಿದೆ.

ವಾರ್ತಾ ಭಾರತಿ 11 Jan 2026 6:04 pm

ಕಂಪ್ಲಿ| ಖಾಸಗಿ ಭೂಮಿ ಅಕ್ರಮ ಒತ್ತುವರಿ ಮಾಡಲು ಹುನ್ನಾರ : ಚನ್ನಪ್ಪ ಆರೋಪ

ಕಂಪ್ಲಿ: ಖಾಸಗಿ ಭೂಮಿಯನ್ನುಅಕ್ರಮ ಒತ್ತುವರಿ ಮಾಡಲು ಕೆಲವರು ಹುನ್ನಾರ ನಡೆಸಿದ್ದಾರೆ ಎಂದು ಅಂಬೇಡ್ಕರ್ ಸ್ವಾಭಿಮಾನಿ ಸಂಘದ ಕಂಪ್ಲಿ ಕ್ಷೇತ್ರಾಧ್ಯಕ್ಷ ಸಿ.ಎ.ಚನ್ನಪ್ಪ ಆರೋಪಿಸಿದರು. ಶನಿವಾರ ಪಟ್ಟಣದ ಅತಿಥಿ ಗೃಹದಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಿ.ಎ.ಚನ್ನಪ್ಪ,ಪಟ್ಟಣದ 4/6ನೇ ವಾರ್ಡಿನ ಸರ್ವೆ ನಂ.1400ರಲ್ಲಿ 5 ಎಕರೆ 34 ಸೆಂಟ್ಸ್ ಜಾಗ ಇದ್ದು, ಇದರಲ್ಲಿ 50ಸೆಂಟ್ಸ್ ಜಾಗವನ್ನು ಕೆಲವರು ಒತ್ತುವರಿ ಮಾಡಿಕೊಳ್ಳಲು ಹೊರಟಿದ್ದಾರೆ. ಈಗಾಗಲೇ ಕೆಲವರು ಸರಕಾರಿ ಉದ್ಯಾನವನ ಎಂದು ಪುರಸಭೆಗೆ ಮನವಿ ಮಾಡಿದ್ದಾರೆ. ವಲಿಸಾಬ್ ಅವರ ಆಸ್ತಿಯನ್ನು ಸರಕಾರಿ ಜಾಗವೆಂದು ಸುಳ್ಳು ಹೇಳಿ ವಶಪಡಿಸಿಕೊಳ್ಳಲು ಹೊರಟಿದ್ದಾರೆ. 50 ಸೆಂಟ್ಸ್ ಜಾಗವನ್ನು ಕಾನೂನಾತ್ಮಕವಾಗಿ ತೆರವುಗೊಳಿಸಲಾಗಿದೆ. 104 ನಿವೇಶಗಳನ್ನು ಮಾರಾಟ ಮಾಡಿದ್ದು, ಇನ್ನೂ 50 ಸೆಂಟ್ಸ್ ಜಾಗ ಉಳಿದಿದೆ. ಆದ್ದರಿಂದ ಈ ಜಾಗವನ್ನು ಬೇರೆಯವರಿಗೆ ಒತ್ತುವರಿ ಮಾಡುವುದಕ್ಕೆ ಬಿಡುವುದಿಲ್ಲ. ಪುರಸಭೆ ಅಧಿಕಾರಿಗಳು ದಾಖಲೆಗಳನ್ನು ಪರಿಶೀಲಿಸಿ ಫಾರಂ ನಂ-3ರಲ್ಲಿ ನೀಡಿದ್ದು, ಅಧಿಕಾರಿಗಳನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಅಂಬೇಡ್ಕರ್ ವಾದ(ಪ್ರೋ.ಬಿ.ಕೃಷ್ಣಪ್ಪ) ಸಂಘಟನೆಯ ಜಿಲ್ಲಾ ಉಪಾಧ್ಯಕ್ಷ ಬಸಪ್ಪ ಭಾವಿಕಟ್ಟಿ, ಭೀಮವಾದ ಸಂಘಟನೆಯ ಪೃಥ್ವಿರಾಜ್‌ಸಿಂಗ್, ಯುವ ಮುಖಂಡರಾದ ಐ.ಶಂಕರ್, ಹುಸೇನಪ್ಪ ಉಪಸ್ಥಿತರಿದ್ದರು. 

ವಾರ್ತಾ ಭಾರತಿ 11 Jan 2026 6:02 pm

ಗದಗ ಲಕ್ಕುಂಡಿ ನಿಧಿ ಸತ್ಯ ಬಿಚ್ಚಿಟ್ಟ ಪುರಾತತ್ವ ಇಲಾಖೆ ಅಧಿಕಾರಿ! 470 ಗ್ರಾಂ ಚಿನ್ನಾಭರಣ ವಾಪಸ್‌ಗೆ ಕುಟುಂಬ ಪಟ್ಟು

ಗದಗದ ಲಕ್ಕುಂಡಿಯಲ್ಲಿ ಮನೆಯೊಂದರಲ್ಲಿ ಪತ್ತೆಯಾದ ಬೆಲೆಬಾಳುವ ವಸ್ತುಗಳು ನಿಧಿಯಲ್ಲ, ಬದಲಾಗಿ ಹಿರಿಯರು ಅಡುಗೆ ಕೋಣೆಯಲ್ಲಿ ಕೂಡಿಟ್ಟಿದ್ದ ಆಭರಣಗಳು ಎಂದು ಪುರಾತತ್ವ ಇಲಾಖೆ ಸ್ಪಷ್ಟಪಡಿಸಿದೆ. ಪ್ರಾಮಾಣಿಕವಾಗಿ ಆಭರಣಗಳನ್ನು ಸರ್ಕಾರಕ್ಕೆ ಒಪ್ಪಿಸಿದ ಕುಟುಂಬಕ್ಕೆ ಪ್ರೋತ್ಸಾಹ ನೀಡಬೇಕು ಎಂದು ಅಧಿಕಾರಿಗಳು ಶ್ಲಾಘಿಸಿದ್ದಾರೆ. ಇದು ಪೂರ್ವಜರ ಆಸ್ತಿ ಎಂದು ಕುಟುಂಬಸ್ಥರು ವಾಪಸ್ ನೀಡುವಂತೆ ಒತ್ತಾಯಿಸಿದ್ದಾರೆ.

ವಿಜಯ ಕರ್ನಾಟಕ 11 Jan 2026 5:57 pm

`ಟ್ರೋಲ್ ಗಳೆಲ್ಲಾ ನಾನ್ ಸೆನ್ಸ್': ಕಿವೀಸ್ ರೆಕ್ಕೆ ಪುಕ್ಕ ಮುರಿದ ಹರ್ಷಿತ್ ರಾಣಾ ಪರ ಹರ್ಷ ಬೋಗ್ಲೆ ಬ್ಯಾಟಿಂಗ್!

Harsha Bhogle On Harshit Rana- ಖ್ಯಾತ ಕ್ರಿಕೆಟ್ ವಿಮರ್ಶಕ ಹರ್ಷ ಬೋಗ್ಲೆ ಅವರು ವೇಗದ ಬೌಲರ್ ಹರ್ಷಿತ್ ರಾಣಾ ಅವರ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ 'ಅರ್ಥಹೀನ' ಮಾತುಗಳಿಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ರಾಣಾ ಅವರು ಭಾರತದ ಮೂರೂ ಮಾದರಿಯ ತಂಡದಲ್ಲಿ ಇರುವುದು ದೊಡ್ಡ ಪ್ರಶ್ನೆಯಾಗಿಬಿಟ್ಟಿದೆ ಎಂಬ ಟೀಕೆಗಳಿಗೆ ಅವರು ತಿರುಗೇಟು ನೀಡಿದ್ದಾರೆ. ರಾಣಾ ಅವರು ಭಾರತದ ಪ್ರಮುಖ ವಿಕೆಟ್ ಟೇಕರ್‌ ಬೌಲರ್ ಗಳಲ್ಲಿ ಒಬ್ಬರಾಗಿದ್ದಾರೆ ಎಂದು ಬೋಗ್ಲೆ ಅವರು ಅಂಕಿ ಅಂಶಗಳ ಸಮೇತ ಸಮರ್ಥಿಸಿದ್ದಾರೆ.

ವಿಜಯ ಕರ್ನಾಟಕ 11 Jan 2026 5:55 pm

ರಾಯಚೂರು| ಸಾಹಿತಿ ಬರಗೂರು ರಾಮಚಂದ್ರಪ್ಪ ಅವರ ಸೌಹಾರ್ದ ಭಾರತ' ಕೃತಿ ಲೋಕಾರ್ಪಣೆ

ರಾಯಚೂರು: ಮಹಿಳೆಯರು ದಲಿತರು ಮತ್ತು ಆರ್ಥಿಕವಾಗಿ ಹಿಂದುಳಿದವರು ಸೇರಿದಂತೆ ಎಲ್ಲರೂ ಕೂಡಿ ಸೌಹಾರ್ದ ಭಾರತವನ್ನು ಕಟ್ಟಬೇಕಾಗಿದೆ ಎಂದು ರಾಯಚೂರಿನ ಹಿರಿಯ ಸಾಹಿತಿ ವೀರ ಹನುಮಾನವರು ಹೇಳಿದರು. ಶನಿವಾರದಂದು ಅವರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ರಾಯಚೂರು ಹಾಗೂ ಮ್ಯಾದಾರ್ ಲಲಿತಕಲಾ ಪ್ರತಿಷ್ಠಾನ ರಾಯಚೂರು ಇವರ ಸಹಯೋಗದಲ್ಲಿ ರಾಯಚೂರು ನಗರದ ಕನ್ನಡ ಭವನದಲ್ಲಿ ಹಮ್ಮಿಕೊಂಡ ನಾಡಿನ ಹಿರಿಯ ಸಾಹಿತಿ ನಾಡೋಜ ಬರಗೂರು ರಾಮಚಂದ್ರಪ್ಪ ಅವರ ಸೌಹಾರ್ದ ಭಾರತ, ಸಮಾನತೆಯ ಸ್ನೇಹಿತ ಪುಸ್ತಕ ಜನಾರ್ಪಣೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಭಾರತದಲ್ಲಿನ ಸಾಮಾಜಿಕ ನ್ಯಾಯದ ಅನೇಕ ಮುಖಗಳನ್ನು ಕಾಣಬಹುದು.10 ಲೇಖನಗಳಲ್ಲಿ ಭಾರತ ಪಾರಂಪರಿಕ ಸೌಹಾರ್ದತೆ ಜೊತೆಗೆ ದೇಶದ ಬಿಕ್ಕಟ್ಟುಗಳಿಗೆ ಪರಿಹಾರವನ್ನು ಕಾಣಬಹುದಾಗಿದೆ ಎಂದು ಹೇಳಿದರು. ಡಾ. ಸಿ. ಬಿ. ಚಿಲ್ಕರಾಗಿ ಸದಸ್ಯರು ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಂಗಳೂರು ಅವರು ಪುಸ್ತಕ ಲೋಕಾರ್ಪಣೆ ಮಾಡಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡುತ್ತಾ, ಮಾರುಕಟ್ಟೆ ಮಾತುಗಳಿಗಿಂತ ಮೌಲ್ಯ ಮಾತುಗಳು ಉತ್ತಮ ಎಂದು ಹೇಳಿದರು. ಕೃತಿ ಪರಿಚಯವನ್ನು ಮಾಡಿ ಹಿರಿಯ ಸಾಹಿತಿಗಳು, ಮಾಜಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಮಹಾಂತೇಶ ಮಸ್ಕಿ ಅವರು ಮಾತನಾಡುತ್ತಾ, ಈ ರಾಷ್ಟ್ರವನ್ನು ಒಂದೇ ಧರ್ಮಕ್ಕೆ ಸೀಮೀತಗೊಳಿಸಬಾರದು ಎನ್ನುವುದು ಈ ಪುಸ್ತಕದಲ್ಲಿರುವ ತಿರುಳಾಗಿದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಅತುಬಿಹಾಳ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ.ಕೆ.ಖಾದರ್ ಬಾಷಾ ಮಾತನಾಡಿ, ಬರಗೂರವರು ಭಾರತ ಚಿಂತನೆಯನ್ನು ಬೆವರಿನ ಸಂಸ್ಕೃತಿ ಮೂಲಕ ಕಟ್ಟಿದರು ಎಂದು ಹೇಳಿದರು. ಕ್ರಿ ಶ 960 ರಿಂದ ನಾವು ಪಂಪನ ಸಾಹಿತ್ಯ ಓದುತ್ತೇವೆ, ಆದರೇ ವಿಚಾರವಂತರ ನಾಡಿನಲ್ಲಿ ವಿಚಾರವಂತರ ಕೊಲೆಗಾಳಾಗುವುದೇಕೆ? ವರ್ತಮಾನದಲ್ಲಿ ಈ ಪುಸ್ತಕದ ಆಶಯಗಳು ಪ್ರಸ್ತುತ. ಹಿಂದೆ ಇರುವ ಸೌಹಾರ್ದತೆ ಇಂದು ಯಾಕೆ ಇಲ್ಲ, ಮೊದಲು ನಾವು ಮಾನವರು ಪರಿವರ್ತನೆ ಆಗಬೇಕು.  ನಮ್ಮ ತಪ್ಪನ್ನು ನಾವು ತಿದ್ದಿಕೊಂಡು ನಡೆಯಬೇಕು ಎಂದರು. ಜಾತಿ ಧರ್ಮ ಮನೆಯ ಒಳಗೆ ಇರಲಿ ಹೊರಗೆ ನಾವೆಲ್ಲರೂ ಒಂದೇ ಅನ್ನುವ ಭಾವ ಬರಲಿ ಎಂದು ಹೇಳಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಹಿರಿಯ ಸಾಹಿತಿಗಳಾದ ಬಾಬು ಬಂಡಾರಿಗಲ್,  ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷ ಆಯಿತು. ಇನ್ನೂ ನಮಗೆ ಸೌಹಾರ್ದ ಭಾರತ ಬೆಳೆಸಲು ಆಗುತ್ತಿಲ್ಲ. ಸೌಹಾರ್ದತೆ ಮತ್ತು  ಸಮಾನತೆಯ ಅಗತ್ಯ ಇನ್ನೂ ಇದೆ. ಬಾಬಾ ಸಾಹೇಬ್ ಅಂಬೇಡ್ಕರ್‌ ಅವರು ದೇಶದ ಸಮಗ್ರ ಜನತೆಗಾಗಿ ಹೋರಾಟ ಮಾಡಿದವರು ಎಂದು ಹೇಳಿದರು. ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ರಂಗಣ್ಣ ಪಾಟೀಲ್ ಅಳ್ಳುಂಡಿ, ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದ ಎಲ್ಲರಿಗೂ ಧನ್ಯವಾದಗಳು ಎಂದು ತಿಳಿಸಿದರು. ವೇದಿಕೆಯಲ್ಲಿ ನಿಕಟ ಪೂರ್ವ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ.ಬಸವ ಪ್ರಭು ಪಾಟೀಲ್ ಬೆಟ್ಟದೂರು, ಮ್ಯಾದಾರ್ ಲಲಿತಕಲಾ ಪ್ರತಿಷ್ಠಾನದ ಅಧ್ಯಕ್ಷರಾದ ಎಚ್.ಎಚ್. ಮ್ಯಾದಾರ್, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ.ಬಿ.ವಿಜಯ ರಾಜೇಂದ್ರ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಜಿಲ್ಲಾ ಹಾಗೂ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು, ಮ್ಯಾದಾರ್ ಲಲಿತಕಲಾ ಪ್ರತಿಷ್ಠಾನ ರಾಯಚೂರು ಇದರ ಪದಾಧಿಕಾರಿಗಳು, ಸಾಹಿತ್ಯಾಸಕ್ತರು, ರಾಯಚೂರಿನ ನಾಗರಿಕರು ಭಾಗವಹಿಸಿದ್ದರು. ನಾಡಗೀತೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಗೌರವ ಕಾರ್ಯದರ್ಶಿಗಳಾದ ರಾವುತರಾವ್ ಬರೂರ ಸ್ವಾಗತಿಸಿದರು. ರಾಮಣ್ಣ ಮ್ಯಾದಾರ್ ವಂದಿಸಿದರು. ಡಾ.ರೇಖಾ ಪಾಟೀಲ್ ನಿರೂಪಿಸಿದರು.

ವಾರ್ತಾ ಭಾರತಿ 11 Jan 2026 5:44 pm

ಕೇರಳದ ಕೆಂಪುಕೋಟೆಗೆ ಕೇಸರಿ ಧ್ವಜದ ಜೊತೆ ನುಗ್ಗಿದ ಅಮಿತ್‌ ಶಾ; ರಾಜಕೀಯ ಸಮೀಕರಣ ಬದಲಾಯಿಸಲಿದೆ ಬಿಜೆಪಿ ಮಿಷನ್‌ 2026?

ಮುಂಬರುವ ಏಪ್ರಿಲ್‌ನಲ್ಲಿ ವಿಧಾನಸಭೆ ಚುನಾವಣೆ ಎದುರಿಸಲಿರುವ ಕೇರಳದಲ್ಲಿ, ಕೆಂಪು vs ಕೇಸರಿ ರಾಜಕೀಯ ಕದನ ಆರಂಭವಾಗಿದೆ. ಕೇರಳದಲ್ಲಿ ತನ್ನ ಅಸ್ತಿತ್ವ ಸದಾಬೀತುಪಡಿಸುವ ಹುಮ್ಮಸ್ಸಿನೊಂದಿಗೆ, ಬಿಜೆಪಿ ಚುನಾವಣೆಗೆ ಭರ್ಜರಿ ಸಿದ್ಧತೆ ಆರಂಭಿಸಿದೆ. ಇದಕ್ಕೆ ಪೂರಕವಾಗಿ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ರಾಜಧಾನಿ ತಿರುವನಂತಪುರಂ ಪ್ರವಾಸ ಕೈಗೊಂಡಿದ್ದು, ಪಕ್ಷದ ಸ್ಥಳೀಯ ಸಂಸ್ಥೆ ಪ್ರತಿನಿಧಿಗಳ​ನ್ನುದ್ದೇಶಿಸಿ ಭಾಷಣ ಮಾಡಿದ್ದಾರೆ. ಕೇರಳದ ಕೆಂಪುಕೋಟೆಗೆ ಅಮಿತ್‌ ಶಾ ಕೇಸರಿ ಧ್ವಜದೊಂದಿಗೆ ನುಗ್ಗಿದ್ದು, ಇದು ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಏನು ಕಮಾಲ್‌ ಮಾಡಲಿದೆ ಕಾದುನೋಡಬೇಕಿದೆ.

ವಿಜಯ ಕರ್ನಾಟಕ 11 Jan 2026 5:43 pm

ಕಲಬುರಗಿ| ಕೃಷಿ ಯಂತ್ರೋಪಕರಣಗಳ ಲೋಕಾರ್ಪಣೆ, ವಿಕಲಚೇತನರಿಗೆ ಯಂತ್ರಗಳ ವಿತರಣೆ

ಕಲಬುರಗಿ: ಡಾ.ಎಸ್.ಎಂ.ಪಂಡಿತ ರಂಗ ಮಂದಿರದಲ್ಲಿ ಇತ್ತೀಚೆಗೆ ಉನ್ನತಿಕರಿಸಿದ ಕೃಷಿ ಯಂತ್ರೋಪಕರಣಗಳನ್ನು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಲೋಕಾರ್ಪಣೆಗೊಳಿಸಿದರು.‌ ಈ ವೇಳೆ ಮಾತನಾಡಿದ ಅವರು, ಈ ಮುಂಚೆ ಯಂತ್ರಗಳಿಂದ ರಾಶಿ ಮಾಡಲಾಗಿದ್ದರೂ ಸಮರ್ಪಕವಾಗಿ ಸಂಸ್ಕರಣೆಯಾಗುತ್ತಿರಲಿಲ್ಲ. ಹೀಗಾಗಿ ಸರಿಯಾದ ಬೆಲೆ ಸಿಗುತ್ತಿರಲಿಲ್ಲ. ಆದರೆ ಉನ್ನತೀಕರಿಸಿದ ಯಂತ್ರಗಳಿಂದ ಸಂಪೂರ್ಣ ಕ್ಲಿನಿಂಗ್ , ಗ್ರೇಡಿಂಗ್ ಮತ್ತು ಪ್ಯಾಕಿಂಗ್ ಆಗುತ್ತದೆ ಎಂದು ತಿಳಿಸಿದರು. ಜಿಲ್ಲೆಯ ಎಫ್.ಪಿ.ಓ ಕೇಂದ್ರದ ಮೂಲಕ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಮ್ಯಾಕ್ರೋ ಯೋಜನೆಯಡಿಯಲ್ಲಿ ಕೃಷಿ ಉತ್ಪನ್ನಗಳನ್ನು ಪ್ರಾಥಮಿಕವಾಗಿ ಕ್ಲೀನಿಂಗ್, ಗ್ರೇಡಿಂಗ್ ಹಾಗೂ ಪ್ಯಾಕಿಂಗ್ ಮಾಡಲು ಈಗಾಗಲೆ ಜಿಲ್ಲೆಯಾದ್ಯಂತ 11 ಯಂತ್ರೋಪಕರಣ ಬಾಡಿಗೆ ಕೇಂದ್ರಗಳನ್ನು ತೆರೆಯಲಾಗಿದ್ದು, ಈ ಕೇಂದ್ರದ‌ ಮೂಲಕ ಈ ಎಲ್ಲಾ‌‌ ಯಂತ್ರಗಳನ್ನು ರೈತರು ಬಾಡಿಗೆ ಮೂಲಕ ಪಡೆಯಬಹುದಾಗಿದೆ. ಇದಕ್ಕಾಗಿ ಸರಕಾರ 5.50 ಕೋಟಿ ರೂ. ವ್ಯಯ ಮಾಡಿದೆ. ಅಫಜಲಪುರ ತಾಲೂಕಿನ ಅಫಜಲಪುರ, ಅತನೂರ, ಕಲಬುರಗಿ ತಾಲೂಕಿನಲ್ಲಿ ಕಲಬುರಗಿ, ಸೇಡಂ ತಾಲೂಕಿನ ಸೇಡಂ ಪಟ್ಟಣ ಹಾಗೂ ಕೋಡ್ಲಾ, ಚಿತ್ತಾಪುರ ತಾಲೂಕಿನ ಚಿತ್ತಾಪುರ ಪಟ್ಟಣ, ಗುಂಡಗುರ್ತಿ, ಅಲ್ಲೂರ ಬಿ, ಡಿಗ್ಗಾಂವ, ಹೆಬ್ಬಾಳ ಹಾಗೂ ರಾವೂರ ಗ್ರಾಮದಲ್ಲಿ ಕೇಂದ್ರಗಳನ್ನು ಸ್ಥಾಪಿಸಲು ಕ್ರಮ ಕೈಗೊಳ್ಳಲಾಗಿದೆ. ಇದೇ‌ ಸಂದರ್ಭದಲ್ಲಿ ಕೃಷಿಯಲ್ಲಿ ಸ್ವಯಂ ಉದ್ಯೋಗದ‌ ಮೂಲಕ ಆದಾಯ ಗಳಿಸಲು 2024-25ನೇ ಸಾಲಿನ ಜಿಲ್ಲಾ ಖನಿಜ ಪ್ರತಿಷ್ಠಾನ ಯೋಜನೆ ಅಡಿಯಲ್ಲಿ ಶಾಸಕ ಅಲ್ಲಮಪ್ರಭು ಪಾಟೀಲ್ ಅವರ ಅನುದಾನದಡಿಯಲ್ಲಿ ತಲಾ‌ 5 ಲಕ್ಷ‌ ರೂ. ವೆಚ್ಚದಲ್ಲಿ ಕಲಬುರಗಿ ತಾಲೂಕಿನ ಕೆರಿಭೋಸಗಾ ಗ್ರಾಮದ ವಿಠಲ್ ಭಿಮಶಾ ಪೂಜಾರಿ, ಭೀಮಳ್ಳಿ ಗ್ರಾಮದ ಸಂತೋಷ ಗಣಪತಿ ಎಂಬ ವಿಕಲಚೇತನರಿಗೆ ಕೃಷಿ ಯಂತ್ರೋಪಕರಣಗಳನ್ನು ವಿತರಿಸಲಾಯಿತು. ರಾಜ್ಯದ ವೈದ್ಯಕೀಯ ಶಿಕ್ಷಣ, ಕೌಲಶ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಖಾತೆ ಸಚಿವ ಡಾ.ಶರಣಪ್ರಕಾಶ ಪಾಟೀಲ್‌, ಕಲಬುರಗಿ ಉತ್ತರ ಶಾಸಕರಾದ ಕನೀಜ್ ಫಾತಿಮಾ, ಕಲಬುರಗಿ ದಕ್ಷಿಣ ಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ್, ಎಂ.ವೈ.ಪಾಟೀಲ್‌, ವಿಧಾನ ಪರಿಷತ್ ಶಾಸಕರಾದ ತಿಪ್ಪಣ್ಣಪ್ಪ‌ ಕಮಕನೂರು, ಜಗದೇವ ಗುತ್ತೇದಾರ್, ಕುಡಾ ಅಧ್ಯಕ್ಷ ಮಜಹರ್ ಆಲಂ‌ ಖಾನ್, ಜೆಸ್ಕಾಂ‌ ಅಧ್ಯಕ್ಷ ಪ್ರವೀಣ್ ಹರವಾಳ್, ಮೇಯರ್ ವರ್ಷಾ ರಾಜೀವ ಜಾನೆ, ಜಿಲ್ಲಾ ಗ್ಯಾರಂಟಿ‌ ಅನುಷ್ಠಾನ ಸಮಿತಿ ಅಧ್ಯಕ್ಷೆ ಚಂದ್ರಿಕಾ ಪರಮೇಶ್ವರಿ, ಜಿಲ್ಲಾಧಿಕಾರಿ ಬಿ.ಫೌಝಿಯಾ ತರನ್ನಮ್, ಜಿಲ್ಲಾ ಪಂಚಾಯತ್ ಸಿ.ಇ.ಓ ಭಂವರ್ ಸಿಂಗ್ ಮೀನಾ, ಎಸ್.ಪಿ. ಅಡ್ಡೂರು ಶ್ರೀನಿವಾಸಲು ಸೇರಿದಂತೆ ಹಲವರು ಉಪಸ್ಥಿತರಿದ್ದರು.

ವಾರ್ತಾ ಭಾರತಿ 11 Jan 2026 5:33 pm

ಮಲ್ಲಿಕಾರ್ಜುನ್ ಖರ್ಗೆ, ಧರ್ಮಸಿಂಗ್ ಇರದಿದ್ದರೆ 371(ಜೆ) ಕಲಂ ಸಿಗುತ್ತಿರಲಿಲ್ಲ: ಸಚಿವ ಪ್ರಿಯಾಂಕ್ ಖರ್ಗೆ

ಕಲಬುರಗಿಯಲ್ಲಿ ಪರೀಕ್ಷಾ ಪೂರ್ವ ತರಬೇತಿ ಕೇಂದ್ರದ ಹೈಟೆಕ್ ಕಟ್ಟಡ ಲೋಕಾರ್ಪಣೆ

ವಾರ್ತಾ ಭಾರತಿ 11 Jan 2026 5:25 pm

ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಲಬುರಗಿ ಪೊಲೀಸ್ ಕಮೀಷನರ್ ಕಚೇರಿಗೆ ಪ್ರಶಸ್ತಿ ಲಭಿಸಿದ್ದು ಹೆಮ್ಮೆಯ ಸಂಗತಿ: ಸಚಿವ ಪ್ರಿಯಾಂಕ್ ಖರ್ಗೆ

ಕಲಬುರಗಿ: ಸಾರ್ವಜನಿಕರ ಸೇವೆ, ನಾಗರಿಕ ಸ್ನೇಹಿ ವೃತ್ತಿಪರತೆ ಸೇರಿದಂತೆ ಹಲವಾರು ವಿಭಾಗಗಳಲ್ಲಿ ಪೊಲೀಸ್ ಕಮೀಷನರೇಟ್ ಅಮೂಲಾಗ್ರ ಸುಧಾರಣೆ ತಂದಿದೆ. ಈ ಎಲ್ಲಾ ಮಾನದಂಡಗಳನ್ನು ಪರಿಗಣಿಸಿ ಅಂತಾರಾಷ್ಟ್ರೀಯ ISO  ಪ್ರಶಸ್ತಿ ಲಭಿಸಿದೆ. ಇದು ಹೆಮ್ಮೆಯ ಸಂಗತಿಯಾಗಿದೆ. ಇದಕ್ಕೆ ಪ್ರತಿಯೊಬ್ಬ ಸಿಬ್ಬಂದಿ ಕಾರಣರಾಗಿದ್ದಾರೆ. ಅವರೆಲ್ಲರಿಗೂ ಅಭಿನಂದನೆಗಳು ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅಭಿಪ್ರಾಯಪಟ್ಟಿದ್ದಾರೆ.   ಕಲಬುರಗಿ ಪೊಲೀಸ್ ಕಮೀಷನರ್ ಕಚೇರಿಯಲ್ಲಿ ರವಿವಾರ ಬೆಳಗ್ಗೆ ಪ್ರಶಸ್ತಿ ವಿತರಿಸಿ ಮಾತನಾಡಿದ ಪ್ರಿಯಾಂಕ್ ಖರ್ಗೆ, ಈಗ ಅಂತರಾಷ್ಟ್ರೀಯ ಮಟ್ಟದ ಪ್ರಶಸ್ತಿ ಸಿಕ್ಕಿದೆ. ಆದರೆ ಪೊಲೀಸರು ಜನಸ್ನೇಹಿ ಆದಾಗ ಮಾತ್ರ ಜನರ ಸರ್ಟಿಫಿಕೇಟ್ ಸಿಗಲಿದೆ. ಈ ನಿಟ್ಟಿನಲ್ಲಿ ಶ್ರಮಿಸಬೇಕು ಎಂದು ಪೊಲೀಸರಿಗೆ ಸಲಹೆ ನೀಡಿದರು. ಅಪರಾಧಗಳಲ್ಲಿ ಸಾಕಷ್ಟು ಇಳಿಮುಖವಾಗಿದೆ. ಎಸ್ಸಿಎಸ್ಟಿ ಸಂಬಂಧಿಸಿದ ಪ್ರಕರಣಗಳು ಇಳಿಮುಖವಾಗಿದೆ. ಚೈನ್ ಕಳ್ಳತನ ಕಡಿಮೆಯಾಗಿವೆ.  ಪೊಲೀಸ್ ಕಮಿಷನರೇಟ್ ಅಂತಾರಾಷ್ಟ್ರೀಯ ಮಟ್ಟದ ಪ್ರಶಸ್ತಿ ಪಡೆದಿರುವುದು ಅತ್ಯಂತ ಖಷಿಯ ವಿಚಾರವಾಗಿದೆ ಎಂದರು. ವೈದ್ಯಕೀಯ ಶಿಕ್ಷಣ ಸಚಿವ ಡಾ ಶರಣ ಪ್ರಕಾಶ್ ಪಾಟೀಲ್ ಮಾತನಾಡಿ, ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಪೊಲೀಸರ ಪಾತ್ರ ಮಹತ್ವದ್ದಾಗಿದೆ. ಕಲಬುರಗಿ ಪೊಲೀಸ್ ಕಮೀಷನರೇಟ್ ಸಾರ್ವಜನಿಕ ಸೇವೆ ಹಾಗೂ ಇತರೆ ವಿಭಾಗಗಳಲ್ಲಿ ಸುಧಾರಣೆ ತಂದಿರುವುದಕ್ಕೆ ಈ ಪ್ರಶಸ್ತಿ ಲಭಿಸಿದೆ. ಇದಕ್ಕೆ ಕಾರಣರಾದ ಎಲ್ಲರಿಗೂ ಅಭಿನಂದನೆಗಳು ಎಂದು ಹೇಳಿದರು.   ಪ್ರಾಸ್ತಾವಿಕವಾಗಿ ಮಾತನಾಡಿದ ಪೊಲೀಸ್ ಕಮೀಷನರ್ ಡಾ.ಶರಣಪ್ಪ, ಸಾರ್ವಜನಿಕ ಸೇವೆಗಳಲ್ಲಿ ಹಾಗೂ ಇತರೆ ವಿಭಾಗಗಳಲ್ಲಿ ಸುಧಾರಣೆ ತಂದ ಹಿನ್ನೆಲೆಯಲ್ಲಿ ಐಎಸ್‌ಓ 2021 ಪ್ರಶಸ್ತಿಯನ್ನು ಕಲಬುರಗಿ ಪೊಲೀಸ್ ಕಮೀಷನರ್ ಕಚೇರಿಗೆ ನೀಡಲಾಗಿದೆ. ಸಾರ್ವಜನಿಕರ ಫೈಲ್ ಗಳು‌ ತ್ವರಿತವಾಗಿ ವಿಲೇವಾರಿಯಾಗುತ್ತಿವೆ. ಸಿಬ್ಬಂದಿಗಳ ರಜೆ,‌ ವೈದ್ಯಕೀಯ ಸೇವೆ, ವಿವಿಧ ವಿಭಾಗಗಳಲ್ಲಿ ಗಣನೀಯ ಬದಲಾವಣೆಯಾಗಿವೆ. ಕಮೀಷನರೇಟ್ ಅಡಿಯಲ್ಲಿನ ಪೊಲೀಸ್ ಠಾಣೆಗಳಿಗೆ ಮೂಲಭೂತ ಸೌಲಭ್ಯ ಒದಗಿಸಲಾಗಿದೆ. ಮಾಹಿತಿ ಹಾಗೂ ತಂತ್ರಜ್ಞಾನ ವಿಭಾಗದಲ್ಲಿ ಗಣನೀಯ ಸುಧಾರಣೆ ಹಾಗೂ. ಸಾರ್ವಜನಿಕ ಸೇವೆ ಮುಖ್ಯವಾಗಿ ಪಾಸ್ ಪೋರ್ಸ್ ವೆರಿಫಿಕೇಷನ್ ನಲ್ಲಿ ಸುಧಾರಣೆ ತರಲಾಗಿದೆ. ಒಂದು ವಾರದ ಒಳಗಾಗಿ ವಿಲೇವಾರಿ ಮಾಡಲು‌ ಕ್ರಮವಹಿಸಲಾಗಿದೆ ಎಂದು ವಿವರಿಸಿದರು. ಶಾಸಕರಾದ ಅಲ್ಲಮಪ್ರಭು ಪಾಟೀಲ್, ಎಂ‌ಎಲ್ ಸಿ ತಿಪ್ಪಣ್ಣಪ್ಪ‌ ಕಮಕನೂರು, ಜಗದೇವ ಗುತ್ತೇದಾರ್, ಕುಡಾ ಅಧ್ಯಕ್ಷ ಮಜರ್ ಅಲಂ‌ಖಾನ್, ಜೆಸ್ಕಾಂ‌ ಅಧ್ಯಕ್ಷ ಪ್ರವೀಣ್ ಹರವಾಳ್, ಜಿಲ್ಲಾಧಿಕಾರಿ ಫೌಝಿಯಾ ತರನ್ನಮ್, ಕಮಿಷನರ್ ಡಾ.ಶರಣಪ್ಪ ಢಗೆ, ಸಿಇಓ ಭಂವರ್ ಸಿಂಗ್ ಮೀನಾ, ಎಸ್ ಪಿ ಅಡ್ಡೂರು ಶ್ರೀನಿವಾಸಲು ಸೇರಿದಂತೆ ಇತರರು ಉಪಸ್ಥಿತರಿದ್ದರು.

ವಾರ್ತಾ ಭಾರತಿ 11 Jan 2026 5:14 pm

National Highway: ಕರಾವಳಿ ಹಾಗೂ ಉತ್ತರ ಕರ್ನಾಟಕ ಜಿಲ್ಲೆಗಳ ಸಂಪರ್ಕ ಸೇತುವೆಯಾಗಿರುವ ಹೆದ್ದಾರಿ ಬಗ್ಗೆ ಮಹತ್ವದ ಅಪ್ಡೇಟ್‌

National Highway: ರಾಜ್ಯದಲ್ಲಿ ರಾಷ್ಟ್ರೀಯ ಹೆದ್ದಾರಿ ಜಾಲ ವಿಸ್ತರಣೆ ಆಗುತ್ತಲಿದೆ. ಇದೀಗ ಕರಾವಳಿ ಹಾಗೂ ಉತ್ತರ ಕರ್ನಾಟಕ ಜಿಲ್ಲೆಗಳ ಸಂಪರ್ಕ ಸೇತುವೆ ಆಗಿರುವ ಹೆದ್ದಾರಿ ಮೇಲ್ದರ್ಜೆಗೇರಿಸುವ ಬಗ್ಗೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಮಹತ್ವದ ಅಪ್ಡೇಟ್‌ವೊಂದನ್ನು ಕೊಟ್ಟಿದ್ದಾರೆ. ಹಾಗಾದ್ರೆ, ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ. ಉತ್ತರ ಕನ್ನಡ, ಹಾವೇರಿ,

ಒನ್ ಇ೦ಡಿಯ 11 Jan 2026 5:11 pm

ಕಿಂಗ್ ಕೊಹ್ಲಿ ಜೊತೆ `ಮಿನಿ ಕೊಹ್ಲಿ'! ವಡೋದರಾದಲ್ಲಿ ಕಾಣಿಸಿಕೊಂಡ ಬಾಲಕ ಥೇಟ್ ವಿರಾಟ್ ಬಾಲ್ಯದ ಝೆರಾಕ್ಸ್!

Virat Kohli WIth Mini Kohli- ವಡೋದರಾದಲ್ಲಿ ನಡೆದ ಭಾರತ ಮತ್ತು ನ್ಯೂಜಿಲೆಂಡ್ ಪಂದ್ಯಕ್ಕೂ ಮೊದಲು ನಡೆದ ಪ್ರ್ಯಾಕ್ಟೀಸ್ ಸೆಶನ್ ವೇಳೆ ವಿರಾಟ್ ಕೊಹ್ಲಿಯ ಬಾಲ್ಯದ ಪ್ರತಿರೂಪದಂತಿದ್ದ ಬಾಲಕನೊಬ್ಬ ಎಲ್ಲರ ಗಮನ ಸೆಳೆದ. ನೆರೆದಿದ್ದ ಜನರೆಲ್ಲರೂ ಈತನನ್ನು ಮಿನಿ ಕೊಹ್ಲಿ ಎಂದರೆ ಕೆಲವರಂತೂ ಅಕಾಯ್ ಏನಾದ್ರೂ ಮೈದಾನಕ್ಕೆ ಬಂದನಾ ಎಂದೇ ಪ್ರಶ್ನಿಸಿದರು. ಆ ಬಾಲಕನನ್ನು ನೋಡಿ ಸ್ವತಃ ವಿರಾಟ್ ಕೊಹ್ಲಿ ಅವರೇ ಖುಷಿಪಟ್ಟರು. ಈ ಅಪರೂಪದ ಘಟನೆಯ ಫೋಟೋ ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ವಿಜಯ ಕರ್ನಾಟಕ 11 Jan 2026 5:00 pm

ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಮೊಬೈಲ್‌ ಹಾಗೂ ಇಂಟರ್‌ನೆಟ್‌ ಏಕೆ ಬಳಸಲ್ಲ? ಇದಕ್ಕೆ ಕಾರಣವನ್ನು ಅವರ ಮಾತಿನಿಂದಲೇ ಕೇಳಿ!

ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರು ಮೊಬೈಲ್ ಮತ್ತು ಇಂಟರ್ನೆಟ್ ಬಳಸುವುದಿಲ್ಲ. ಅವರು ತಮ್ಮ ಕೆಲಸಗಳಿಗೆ ರಹಸ್ಯ ಸಂವಹನ ವ್ಯವಸ್ಥೆಗಳನ್ನು ಬಳಸುತ್ತಾರೆ. ದೋವಲ್ ಅವರು ತಂತ್ರಜ್ಞಾನದ ಭದ್ರತಾ ಅಪಾಯಗಳನ್ನು ಅರಿತು ಈ ನಿರ್ಧಾರ ತೆಗೆದುಕೊಂಡಿದ್ದಾರೆ. ಅವರು 1945 ರಲ್ಲಿ ಜನಿಸಿದರು ಮತ್ತು ನಿವೃತ್ತ ಐಪಿಎಸ್ ಅಧಿಕಾರಿಯಾಗಿದ್ದಾರೆ. ಅವರು ಹಲವು ನಿರ್ಣಾಯಕ ಕಾರ್ಯಾಚರಣೆಗಳಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.

ವಿಜಯ ಕರ್ನಾಟಕ 11 Jan 2026 4:47 pm

ಇರಾನ್ ನಲ್ಲಿ ಅಮೆರಿಕ ಮಧ್ಯಪ್ರವೇಶಿಸುವ ಸಾಧ್ಯತೆ; ಕಟ್ಟೆಚ್ಚರದಲ್ಲಿ ಇಸ್ರೇಲ್: ವರದಿ

ಹೊಸದಿಲ್ಲಿ: ಇರಾನ್‌ನಲ್ಲಿ ನಡೆಯುತ್ತಿರುವ ಬೃಹತ್ ಸರ್ಕಾರ ವಿರೋಧಿ ಪ್ರತಿಭಟನೆಯನ್ನು ಭದ್ರತಾ ಪಡೆಗಳು ಹತ್ತಿಕ್ಕುತ್ತಿರುವ ಹಿನ್ನೆಲೆಯಲ್ಲಿ, ಇರಾನ್ ವಿಷಯದಲ್ಲಿ ಅಮೆರಿಕ ಮಧ್ಯಪ್ರವೇಶಿಸುವ ಸಾಧ್ಯತೆ ಇರುವುದರಿಂದ ಇಸ್ರೇಲ್‌ ನಾದ್ಯಂತ ಕಟ್ಟೆಚ್ಚರ ವಹಿಸಲಾಗಿದೆ ಎಂದು ಇಸ್ರೇಲ್‌ ನ ವಿಶ್ವಾಸಾರ್ಹ ಮೂಲಗಳು ತಿಳಿಸಿವೆ ಎಂದು theprint.in ವರದಿ ಮಾಡಿದೆ. ಪ್ರತಿಭಟನಾಕಾರರ ವಿರುದ್ಧ ಭದ್ರತಾ ಪಡೆಗಳನ್ನು ಬಳಸುತ್ತಿರುವುದರ ವಿರುದ್ಧ ಹಾಗೂ ಇರಾನ್ ವಿಷಯದಲ್ಲಿ ಅಮೆರಿಕ ಮಧ್ಯಪ್ರವೇಶಿಸಲಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇತ್ತೀಚಿನ ದಿನಗಳಲ್ಲಿ ಬೆದರಿಕೆ ಒಡ್ಡುತ್ತಿದ್ದಾರೆ. ಇರಾನ್ ಜನತೆಗೆ ನೆರವು ನೀಡಲು ಅಮೆರಿಕ ಸಿದ್ಧವಿದೆ ಎಂದೂ ಅವರು ಭರವಸೆ ನೀಡಿದ್ದಾರೆ. ಇಸ್ರೇಲ್ ಕಟ್ಟೆಚ್ಚರ ವಹಿಸುವುದರ ವಿಸ್ತೃತ ವಿವರವನ್ನು ವಾರಾಂತ್ಯದಲ್ಲಿ ನಡೆದ ಇಸ್ರೇಲ್ ಭದ್ರತಾ ಸಮಾಲೋಚನಾ ಸಭೆಯಲ್ಲಿ ಭಾಗವಹಿಸಿದ್ದವರು ಬಹಿರಂಗಪಡಿಸಿಲ್ಲ ಎಂದು ಈ ಮೂಲಗಳು ಹೇಳಿವೆ ಎಂದು ವರದಿಯಾಗಿದೆ. ಕಳೆದ ವರ್ಷದ ಜೂನ್ ತಿಂಗಳಲ್ಲಿ ಇಸ್ರೇಲ್ ಇರಾನ್‌ನೊಂದಿಗೆ 12 ದಿನಗಳ ಯುದ್ಧ ನಡೆಸಿತ್ತು. ಈ ವೇಳೆ ಅಮೆರಿಕವೂ ಇಸ್ರೇಲ್‌ ನೊಂದಿಗೆ ವಾಯುದಾಳಿಯಲ್ಲಿ ಪಾಲ್ಗೊಂಡಿತ್ತು. ಈ ಸಭೆಯಲ್ಲಿ ಭಾಗವಹಿಸಿದ್ದ ಇಸ್ರೇಲ್ ಮೂಲವೊಂದರ ಪ್ರಕಾರ, ಶನಿವಾರ ಅಮೆರಿಕದ ರಾಜ್ಯ ಕಾರ್ಯದರ್ಶಿ ಮಾರ್ಕೊ ರುಬಿಯೊ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿದ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು, ಇರಾನ್ ವಿಷಯದಲ್ಲಿ ಅಮೆರಿಕ ಮಧ್ಯಪ್ರವೇಶಿಸುವ ಸಾಧ್ಯತೆ ಕುರಿತು ಚರ್ಚಿಸಿದ್ದಾರೆ ಎಂದು ಹೇಳಲಾಗಿದೆ. ಅವರಿಬ್ಬರೂ ಮಾತುಕತೆ ನಡೆಸಿದ್ದಾರೆ ಎಂದು ಅಮೆರಿಕ ಅಧಿಕಾರಿಯೊಬ್ಬರು ದೃಢಪಡಿಸಿದ್ದರೂ, ಯಾವ ವಿಷಯಗಳ ಕುರಿತು ಚರ್ಚೆ ನಡೆಸಲಾಗಿದೆ ಎಂಬುದನ್ನು ಬಹಿರಂಗಪಡಿಸಿಲ್ಲ.

ವಾರ್ತಾ ಭಾರತಿ 11 Jan 2026 4:35 pm

ಹತೋಟಿ ತಪ್ಪಿದ ಇರಾನ್‌, ಅಮೆರಿಕದ ಹಸ್ತಕ್ಷೇಪ ಸಾಧ್ಯತೆ ತಿಳಿದು ಆ್ಯಕ್ಟೀವ್‌ ಆದ ಇಸ್ರೇಲ್‌; ಮಧ್ಯಪ್ರಾಚ್ಯ ಬ್ಯಾಕ್‌ ಟು ಸ್ಕ್ವೇರ್‌!

ಕಾಲಚಕ್ರ ಒಂದು ಸುತ್ತು ಸುತ್ತುತ್ತದೆ ಅಂತಾರಲ್ಲ, ಅದೆಷ್ಟು ನಿಜ ನೋಡಿ. 2025ರ ಜೂನ್‌ನಲ್ಲಿ ಬರೋಬ್ಬರಿ 12 ದಿನಗಳ ಕಾಲ ಬಡಿದಾಡಿದ್ದ ಇರಾನ್‌, ಇಸ್ರೇಲ್‌ ಮತ್ತು ಅಮೆರಿಕ ಮತ್ತೆ ಮಧ್ಯಪ್ರಾಚ್ಯದಲ್ಲಿ ಸೆಂಟರ್‌ ಆಫ್‌ ಅಟ್ರ್ಯಾಕ್ಷನ್‌ ಆಗಿವೆ. ಈ ಬಾರಿ ಮೂರೂ ರಾಷ್ಟ್ರಗಳು ಬಡಿದಾಡುತ್ತಿಲ್ಲವಾದರೂ, ಇರಾನ್‌ನಲ್ಲಿ ಭುಗಿಲೆದ್ದಿರುವ ಖಮೇನಿ ಆಡಳಿತ ವಿರೋಧಿ ಪ್ರತಿಭಟನೆಗಳು, ಮೂರೂ ರಾಷ್ಟ್ರಗಳನ್ನು ಮತ್ತೆ ಒಂದೇ ವೇದಿಕೆಗೆ ಬರುವಂತೆ ಮಾಡಿದೆ. ಇರಾನ್‌ನಲ್ಲಿ ಅಮೆರಿಕದ ಹಸ್ತಕ್ಷೇಪ ಸುದ್ದಿ ಕೇಳಿ ಇಸ್ರೇಲ್‌ ಕೂಡ ಕ್ರಿಯಾಶೀಲವಾಗಿದೆ.

ವಿಜಯ ಕರ್ನಾಟಕ 11 Jan 2026 4:18 pm

ಅಳಿಸಲು ಎಷ್ಟೇ ಪ್ರಯತ್ನಿಸಿದರೂ ಉಳಿಯಿತು, ಸೋಮನಾಥವು ಭಾರತದ ಧೈರ್ಯ, ಆಧ್ಯಾತ್ಮಿಕ ಶಕ್ತಿಯ ಜೀವಂತ ಸಾಕ್ಷಿ: ಪ್ರಧಾನಿ ಮೋದಿ

ಪ್ರಧಾನಿ ನರೇಂದ್ರ ಮೋದಿ ಅವರು ಗುಜರಾತ್‌ನ ಸೋಮನಾಥ ದೇಗುಲದಲ್ಲಿ ಶೌರ್ಯ ಯಾತ್ರೆ ನಡೆಸಿ, ದೇಗುಲದ ಸಂಘರ್ಷಮಯ ಇತಿಹಾಸವನ್ನು ನೆನಪಿಸಿಕೊಂಡರು. ಭಾರತದ ನಾಗರಿಕತೆಯ ಶಕ್ತಿ ಹೇಗೆ ಉಳಿದುಕೊಂಡಿದೆ ಎಂಬುದರ ಕುರಿತು ಸಂದೇಶ ನೀಡಿದರು. ಎಷ್ಟೇ ಪ್ರಯತ್ನಿಸಿದರೂ ಅಳಿಯದೇ, ಸೋಮನಾಥವು ಭಾರತದ ಧೈರ್ಯ, ಸ್ಥಿತಿಸ್ಥಾಪಕತೆ ಮತ್ತು ಆಧ್ಯಾತ್ಮಿಕ ಶಕ್ತಿಯ ಜೀವಂತ ಸಾಕ್ಷಿಯಾಗಿದೆ ಎಂದು ಹೇಳಿದರು. ಈ ಯಾತ್ರೆಯು ಸೋಮನಾಥ ಸ್ವಾಭಿಮಾನ ಪರ್ವದ ಅಂಗವಾಗಿತ್ತು.

ವಿಜಯ ಕರ್ನಾಟಕ 11 Jan 2026 4:07 pm

ದಾವಣಗೆರೆ ದಕ್ಷಿಣ ಕ್ಷೇತ್ರ: ಮುಸ್ಲಿಂ ಸೇರಿ 4 ಸಮುದಾಯದ ಆಕಾಂಕ್ಷಿಗಳು ಕಾಂಗ್ರೆಸ್‌ ಟಿಕೆಟ್‌ಗೆ ಪಟ್ಟು! ಶಾಮನೂರು ಕುಟುಂಬ ದೂರ?

ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ಕಾಂಗ್ರೆಸ್‌ ಟಿಕೆಟ್‌ಗಾಗಿ ಅಹಿಂದ ಸಮುದಾಯದ ನಾಯಕರು ಒತ್ತಡ ಹೇರುತ್ತಿದ್ದಾರೆ. ಮುಸ್ಲಿಂ, ದಲಿತ, ಹಿಂದುಳಿದ ಮತ್ತು ಲಿಂಗಾಯತ ಪಂಚಮಸಾಲಿ ಸಮುದಾಯಗಳಿಗೆ ಟಿಕೆಟ್‌ ನೀಡಬೇಕೆಂದು ಆಗ್ರಹಿಸಿದ್ದಾರೆ. ಶಾಮನೂರು ಕುಟುಂಬವು ಹೈಕಮಾಂಡ್‌ಗೆ ಆಕಾಂಕ್ಷಿಗಳ ಹೆಸರನ್ನು ಸೂಚಿಸಿದೆ. ಅಲ್ಪಸಂಖ್ಯಾತರಿಗೆ ಟಿಕೆಟ್‌ ನೀಡಿದರೆ ಗೆಲ್ಲಿಸುವುದಾಗಿ ಭರವಸೆ ನೀಡಿದ್ದಾರೆ. 45 ವರ್ಷಗಳಿಂದ ಪಕ್ಷಕ್ಕಾಗಿ ದುಡಿದ ನಾಯಕರು ಅವಕಾಶ ಕೇಳಿದ್ದಾರೆ.

ವಿಜಯ ಕರ್ನಾಟಕ 11 Jan 2026 4:01 pm

343 ಕಿ.ಮೀನಲ್ಲಿ ಆನಿ ಪಾಲೆಷ್ಟು ಆಡಿನ ಪಾಲೆಷ್ಟು: ರಾಜಾರಾಂ ತಲ್ಲೂರು ಬರಹ

343 ಕಿಮೀ ಸಮುದ್ರ ತೀರ ಕರಾವಳಿ ಪ್ರದೇಶದಲ್ಲಿ ನಡೆಯುತ್ತಿರುವ ಅಭಿವೃದ್ಧಿ, ಅದರಿಂದ ಜನರ ಮೇಲಾಗುವ ಪರಿಣಾಮಗಳ ಬಗ್ಗೆ ಹಾಗೂ ಅಲ್ಲಿನ ಪರಿಸರ ಹಾನಿಯ ಬಗ್ಗೆ ಹಿರಿಯ ಪತ್ರಕರ್ತ ರಾಜಾರಾಂ ತಲ್ಲೂರು ಅವರ ಬರಹ ಇಲ್ಲಿದೆ. ಕರಾವಳಿಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಯ ಬಗ್ಗೆ ಈಚೆಗೆ ನಡೆದ ಸಮಾವೇಶದಲ್ಲಿ ಕರ್ನಾಟಕ ಸರ್ಕಾರದ ಎಲ್ಲ ಹಿರಿತಲೆಗಳು ಮುಖ್ಯಮಂತ್ರಿ, ಉಪಮುಖ್ಯಮಂತ್ರಿಯಾದಿಯಾಗಿ ಪಾಲ್ಗೊಂಡಿದ್ದರು. ಕರಾವಳಿಗೆ ಬೂದಿಮಳೆ,

ಒನ್ ಇ೦ಡಿಯ 11 Jan 2026 3:59 pm

ಸೋಮನಾಥ ಸ್ವಾಭಿಮಾನ ಪರ್ವ: ಆಕ್ರಮಣಕಾರರು ಇತಿಹಾಸದ ಪುಟ ಸೇರಿದರು, ಸೋಮನಾಥ ಇಂದಿಗೂ ಅಚಲ; ಪ್ರಧಾನಿ ಮೋದಿ ಬಣ್ಣನೆ

ಸೋಮನಾಥದಲ್ಲಿ 'ಸೋಮನಾಥ ಸ್ವಾಭಿಮಾನ ಪರ್ವ' ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಅವರು ಭಾಷಣ ಮಾಡಿದರು. ದೇವಾಲಯದ ಧ್ವಜವು ಭಾರತದ ಶೌರ್ಯದ ಸಂಕೇತ ಎಂದು ಬಣ್ಣಿಸಿದರು. ಘಜ್ನಿ ಮತ್ತು ಔರಂಗಜೇಬರ ದಾಳಿಗಳು ನಮ್ಮ ನಂಬಿಕೆಗಳನ್ನು ಅಲುಗಾಡಿಸುವ ಪ್ರಯತ್ನಗಳಾಗಿದ್ದವು ಎಂದು ವಿವರಿಸಿದರು. ಹಿಂದಿನ ಆಡಳಿತಗಳು ಇತಿಹಾಸವನ್ನು ಮರೆಮಾಚಿದ್ದವು ಎಂದು ಆರೋಪಿಸಿದರು. ಶೌರ್ಯ ಯಾತ್ರೆಯಲ್ಲಿ ಪಾಲ್ಗೊಂಡು, ಹಮೀರ್‌ಜಿ ಗೋಹಿಲ್ ಮತ್ತು ಸರ್ದಾರ್ ಪಟೇಲ್ ಅವರಿಗೆ ನಮನ ಸಲ್ಲಿಸಿದರು. ದೇವಾಲಯದಲ್ಲಿ ವಿಶೇಷ ಪೂಜೆಯಲ್ಲಿ ಪಾಲ್ಗೊಂಡರು.

ವಿಜಯ ಕರ್ನಾಟಕ 11 Jan 2026 3:36 pm