ಕಲಬುರಗಿ | ವಿದ್ಯಾರ್ಥಿಗಳಲ್ಲಿ ಕೋಮು ವಿಷ ಬೀಜ ಬಿತ್ತುವ ಸರಕಾರಗಳು : ರಾಘವೇಂದ್ರ ಕುಷ್ಟಗಿ ಕಳವಳ
ಕಲ್ಯಾಣ ಕರ್ನಾಟಕ ವಲಯಮಟ್ಟದ ʼನಮ್ಮೂರ ಶಾಲೆ ಉಳಿಸಿʼ ಸಮಾವೇಶ
ಕಲಬುರಗಿ | ಸ್ಪಾಂಡಿಲೋಆಥ್ರೋಪಥಿ ರೋಗಕ್ಕೆ ಆರಂಭದಲ್ಲೇ ಚಿಕಿತ್ಸೆ ಅಗತ್ಯ: ಡಾ.ಜಿ.ನರಸಿಂಹಲು
ಕಲಬುರಗಿ : ಸ್ಪಾಂಡಿಲೋಆಥ್ರೋಪಥಿ ರೋಗವನ್ನು ಆರಂಭದಲ್ಲೇ ಪತ್ತೆಹಚ್ಚಿ ಸಕಾಲಿಕವಾಗಿ ಸೂಕ್ತ ಚಿಕಿತ್ಸೆ ನೀಡಿದರೆ ಅಂಗವೈಕಲ್ಯವನ್ನು ಗಮನಾರ್ಹವಾಗಿ ಕಡಿಮೆ ಮಾಡಬಹುದು ಹಾಗೂ ರೋಗಿಗಳ ಜೀವನದ ಗುಣಮಟ್ಟವನ್ನು ಸುಧಾರಿಸಬಹುದು ಎಂದು ಹಿರಿಯ ವೈದ್ಯರು ಹಾಗೂ ಭಾರತೀಯ ವೈದ್ಯರ ಸಂಘದ ರಾಷ್ಟ್ರೀಯ ಅಧ್ಯಕ್ಷ ಡಾ. ಜಿ. ನರಸಿಂಹಲು ತಿಳಿಸಿದರು. ನಗರದ ಕೆಬಿಎನ್ ಬೋಧನಾ ಮತ್ತು ಸಾರ್ವಜನಿಕ ಆಸ್ಪತ್ರೆಯ ಸಭಾಂಗಣದಲ್ಲಿ ಶನಿವಾರ ಡಾ. ಪಿ. ಎಸ್. ಶಂಕರ್ ಪ್ರತಿಷ್ಠಾನ ಆಯೋಜಿಸಿದ್ದ 5ನೇ ಡಾ. ಎ. ಶಿವಶಂಕರ್ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಆಂಕೈಲೋಜಿಂಗ್ ಸ್ಪಾಂಡಿಲೈಟಿಸ್, ಸೋರಿಯಾಟಿಕ್ ಅರ್ಥರೈಟಿಸ್, ರಿಯಾಕ್ಟಿವ್ ಅರ್ಥರೈಟಿಸ್ ಮತ್ತು ಎಂಟರೊಪಥಿಕ್ ಅರ್ಥರೈಟಿಸ್ ಸೇರಿದಂತೆ ಹಲವು ಕಾಯಿಲೆಗಳು ಸ್ಪಾಂಡಿಲೋಆಥ್ರೋಪಥಿ ರೋಗಗಳ ಗುಂಪಿನಲ್ಲಿಗೆ ಬರುತ್ತವೆ ಎಂದು ವಿವರಿಸಿದರು. ಸಾಂಪ್ರದಾಯಿಕ ಚಿಕಿತ್ಸೆಯ ಜೊತೆಗೆ ರೋಗದ ಪ್ರಗತಿಯನ್ನು ನಿಯಂತ್ರಿಸಲು ಜೈವಿಕ ಚಿಕಿತ್ಸೆಗಳು, ಜೀವನಶೈಲಿ ಬದಲಾವಣೆ, ನಿಯಮಿತ ವ್ಯಾಯಾಮ ಮತ್ತು ಭೌತ ಚಿಕಿತ್ಸೆಯೂ ಮಹತ್ವದ ಪಾತ್ರ ವಹಿಸುತ್ತವೆ ಎಂದು ಡಾ. ನರಸಿಂಹಲು ತಿಳಿಸಿದರು. ಕಲಬುರಗಿಯ ಮಹಾದೇವಪ್ಪ ರಾಂಪುರೆ ವೈದ್ಯಕೀಯ ಕಾಲೇಜಿನ ಹಳೆಯ ವಿದ್ಯಾರ್ಥಿ ಮತ್ತು ಡಾ. ಪಿ. ಎಸ್. ಶಂಕರ್ ಅವರ ವಿದ್ಯಾರ್ಥಿಯೂ ಆಗಿರುವ ಭಾರತೀಯ ವೈದ್ಯರ ಸಂಘ, ಕರ್ನಾಟಕದ ಅಧ್ಯಕ್ಷ ಡಾ.ಬಿ.ಮಹಾಲಿಂಗಪ್ಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಡಾ.ಸಂಗ್ರಾಮ್ ಬಿರಾದಾರ್, ಡಾ.ಶಿವರಾಜ್ ಅಲಶೆಟ್ಟಿ ಮತ್ತು ಅಪಾರ ಸಂಖ್ಯೆಯ ಸ್ನಾತಕೋತ್ತರ ವಿದ್ಯಾರ್ಥಿಗಳು ಸೇರಿದಂತೆ ಅನೇಕ ಹಿರಿಯ ವೈದ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಡಾ.ಪಿ.ಎಸ್.ಶಂಕರ ತಮ್ಮ ಸಂಕ್ಷಿಪ್ತ ಪರಿಚಯ ಭಾಷಣದಲ್ಲಿ ಡಾ.ನರಸಿಂಹಲು ಅವರ ಬಗ್ಗೆ ಮತ್ತು ಅವರ ವಿದ್ಯಾರ್ಥಿ ದಿನಗಳ ಜೊತೆ ಯಾದಗಿರಿ ಜಿಲ್ಲೆಯ ಗುರುಮಿಠಕ್ನಲ್ಲಿ ಅವರ ವೃತ್ತಿ ಅಭ್ಯಾಸವನ್ನು ನೆನಪಿಸಿಕೊಂಡರು. ಶಂಕರ್ ಪ್ರತಿಷ್ಠಾನದ ಕಾರ್ಯದರ್ಶಿ ಡಾ. ನರೇಂದ್ರ ಬಡಶೇಷಿ ಅತಿಥಿಗಳನ್ನು ಸ್ವಾಗತಿಸಿದರು.
ಯಶವಂತಪುರದಲ್ಲಿ ಟೆಕ್ಸ್ಟೈಲ್ ಮಾರುಕಟ್ಟೆ; ಸಿಎಂ ಜೊತೆ ಚರ್ಚಿಸಿ ಶೀಘ್ರ ಶಂಕು ಸ್ಥಾಪನೆ : ಶಿವಾನಂದ ಪಾಟೀಲ್
ಬೆಂಗಳೂರು : ‘ಪಾರಂಪರಿಕ ಕಲೆಯನ್ನು ಉಳಿಸಿ-ಬೆಳೆಸುವ ನಿಟ್ಟಿನಲ್ಲಿ ನಮ್ಮ ಉತ್ಪನ್ನಗಳಿಗೆ ಸ್ಥಳೀಯವಾಗಿಯೇ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಲು ಯಶವಂತಪುರದಲ್ಲಿರುವ ಇಲಾಖೆಯ ಒಂದೂವರೆ ಎಕರೆ ಪ್ರದೇಶದಲ್ಲಿ ಕಟ್ಟಡ ನಿರ್ಮಿಸಲಾಗುವುದು’ ಎಂದು ಜವಳಿ, ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ್ ತಿಳಿಸಿದ್ದಾರೆ. ಶನಿವಾರ ಇಲ್ಲಿನ ರಾಜಾಜಿನಗರದ ಡಾ.ಅಂಬೇಡ್ಕರ್ ಕ್ರೀಡಾಂಗಣನಲ್ಲಿ 14 ದಿನಗಳ ಭಾರತೀಯ ಕೈಮಗ್ಗ ಪರಂಪರೆ ಪ್ರದರ್ಶನ ಉದ್ಘಾಟಿಸಿ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯನವರೊಂದಿಗೆ ಜೊತೆ ಚರ್ಚಿಸಿ ಶೀಘ್ರದಲ್ಲಿ ಶಂಕುಸ್ಥಾಪನೆ ನೆರವೇರಿಸಲು ಪ್ರಯತ್ನಿಸಲಾಗುವುದು ಎಂದು ಭರವಸೆ ನೀಡಿದರು. ಪಾರಂಪರಿಕ ಕಲೆ ನಶಿಸಿ ಹೋಗುತ್ತಿದೆ. ಈ ಕಲೆಯನ್ನು ಉಳಿಸಿ-ಬೆಳೆಸಲು ಉತ್ಪನ್ನಗಳಿಗೆ ಸ್ಥಳೀಯ ಮಾರುಕಟ್ಟೆ ಕಲ್ಪಿಸಬೇಕಾಗಿದೆ. ಯಶವಂತಪುರದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಕಟ್ಟಡದಲ್ಲಿ ಕೈಮಗ್ಗ ಉತ್ಪನ್ನಗಳು, ಚನ್ನಪಟ್ಟಣದ ಗೊಂಬೆ, ಕುಂಬಾರಿಕೆ ಸೇರಿದಂತೆ ಎಲ್ಲ ರೀತಿಯ ಪಾರಂಪರಿಕ ಕಲೆಯ ಉತ್ಪನ್ನಗಳ ಮಾರಾಟಕ್ಕೆ ಅವಕಾಶ ಕಲ್ಪಿಸಲು ಯೋಜಿಸಲಾಗಿದೆ ಎಂದು ಅವರು ಹೇಳಿದರು. ರಾಜ್ಯದ ಕೈಮಗ್ಗ ಉತ್ಪನ್ನಗಳು ಹೊರ ರಾಜ್ಯಗಳಲ್ಲಿ ಬೇರೆ ಬೇರೆ ಬ್ರಾಂಡ್ಗಳಲ್ಲಿ ಮಾರಾಟವಾಗುತ್ತಿವೆ. ನಮ್ಮದೇ ಉತ್ಪನ್ನಗಳು ಬೇರೆ ರಾಜ್ಯಗಳಿಂದ ಬೇರೆ ಬ್ರಾಂಡ್ಗಳ ರೂಪದಲ್ಲಿ ರಾಜ್ಯಕ್ಕೆ ಬರುತ್ತಿವೆ. ಸ್ಥಳೀಯವಾಗಿ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಿದರೆ ಈ ಸಮಸ್ಯೆಗೆ ಪರಿಹಾರ ಸಿಗಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು. ಕೈಮಗ್ಗ ಕೇವಲ ಉತ್ಪಾದನಾ ಕ್ಷೇತ್ರವಷ್ಟೇ ಅಲ್ಲ, ಅದು ಭಾರತದ ಸಾಂಸ್ಕೃತಿ ಕ ಗುರುತು. ಕೈಗಾರಿಕೆ ಮತ್ತು ಪರಂಪರೆಯನ್ನು ಪ್ರತಿಬಿಂಬಿಸುವ ಜೀವಂತ ಸಂಪ್ರದಾಯ. ನಮ್ಮ ನೇಕಾರರು ಪೀಳಿಗೆಯಿಂದ ಪೀಳಿಗೆಗೆ ತಂತ್ರಜ್ಞಾನ ಹಾಗೂ ವಿನ್ಯಾಸವನ್ನು ಸಂರಕ್ಷಣೆ ಮಾಡಿಕೊಂಡು ಬಂದಿದ್ದು, ಅದರ ಫಲವಾಗಿ ಭಾರತೀಯ ಕೈಮಗ್ಗ ಉತ್ಪನ್ನಗಳು ವಿಶ್ವದಾದ್ಯತ ಪ್ರಶಂಸೆಗೆ ಪಾತ್ರವಾಗಿವೆ ಎಂದು ಅವರು ನುಡಿದರು. ಕಾವೇರಿ ಹ್ಯಾಂಡ್ ಲೂಮ್ ಅಧ್ಯಕ್ಷ ಬಿ.ಜೆ.ಗಣೇಶ್ ಅವರು ಕೈಮಗ್ಗ ಉತ್ಪನ್ನಗಳು ಸೇರಿ ಸಾಂಪ್ರದಾಯಿಕ ಕಲೆಯ ಎಲ್ಲ ಉತ್ಪನ್ನಗಳು ಒಂದೇ ಸೂರಿನಡಿ ಸಿಗುವಂತೆ ಮಾರುಕಟ್ಟೆ ಕಲ್ಪಿಸಬೇಕು ಎಂದು ಸಚಿವ ಶಿವಾನಂದ ಪಾಟೀಲ್ಗೆ ಮನವಿ ಮಾಡಿದರು. ಈ ವೇಳೆ ಜವಳಿ ಇಲಾಖೆ ಅಧಿಕಾರಿಗಳಾದ ಪ್ರಭಾ ಕರಣ್, ಪ್ರಕಾಶ್, ಯೋಗೇಶ್ ಉಪಸ್ಥಿತರಿದ್ದರು.
ಕಲಬುರಗಿ | ಕೇಂದ್ರೀಯ ವಿವಿಯಲ್ಲಿ ಅಕ್ರಮ ನೇಮಕಾತಿ; ನ್ಯಾಯಾಂಗ ತನಿಖೆಗೆ ಆಗ್ರಹ
ಕಲಬುರಗಿ : ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಬೋಧಕ ಹುದ್ದೆಗಳ ನೇಮಕಾತಿಯಲ್ಲಿ ಮೀಸಲು ಕ್ರಮ ಉಲ್ಲಂಘನೆ ಹಾಗೂ ಅಕ್ರಮ ನೇಮಕಾತಿಗಳು ನಡೆದಿವೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ ಸಿಟಿಂಗ್ ನ್ಯಾಯಾಧೀಶರ ನೇತೃತ್ವದಲ್ಲಿ ನ್ಯಾಯಾಂಗ ತನಿಖೆ ನಡೆಸಬೇಕು ಎಂದು ಕರ್ನಾಟಕ ವಿದ್ಯಾರ್ಥಿ ಸಂಘಟನೆ ಮುಖಂಡ ಲಕ್ಷ್ಮಣ್ ಮಂಡಲಗೇರ ಒತ್ತಾಯಿಸಿದ್ದಾರೆ. ಶನಿವಾರ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರೀಯ ವಿಶ್ವವಿದ್ಯಾಲಯ ಕಲಬುರಗಿಯ ಕುಲಪತಿ ಪ್ರೊ. ಬಟ್ಟು ಸತ್ಯನಾರಾಯಣ ಅವರ ಅವಧಿಯಲ್ಲಿ ಬೋಧಕ ಹುದ್ದೆಗಳ ನೇಮಕಾತಿಯಲ್ಲಿ ಅಕ್ರಮಗಳು ನಡೆದಿವೆ ಎಂದು ಆರೋಪಿಸಿ, ಕೂಡಲೇ ಅವರ ವಿರುದ್ಧ ತನಿಖೆ ಆರಂಭಿಸಬೇಕು ಎಂದು ಆಗ್ರಹಿಸಿದರು. ಭಾರತ ಸರ್ಕಾರದ ಸಿಬ್ಬಂದಿ ಮತ್ತು ತರಬೇತಿ ಇಲಾಖೆ ಜಾರಿಗೆ ತಂದಿರುವ ಹುದ್ದೆ ಆಧಾರಿತ ಮೀಸಲು ಕ್ರಮದ ನಿಯಮಗಳ ಪ್ರಕಾರ ಪ್ರತಿಯೊಂದು ಹುದ್ದೆಗೆ ನಿರ್ದಿಷ್ಟ ಕ್ರಮ ಸಂಖ್ಯೆ ಇರಬೇಕು. ಮೀಸಲು ಪಟ್ಟಿಯಲ್ಲಿ ಭರ್ತಿಯಾದ ಹಾಗೂ ಖಾಲಿ ಇರುವ ಹುದ್ದೆಗಳ ವಿವರಗಳನ್ನು ಕಡ್ಡಾಯವಾಗಿ ಪ್ರಕಟಿಸಬೇಕು. ಆದರೆ 2019ರ ಪಟ್ಟಿಯಲ್ಲಿ ಖಾಲಿ ಹಾಗೂ ಭರ್ತಿಯಾದ ಹುದ್ದೆಗಳ ವಿವರಗಳನ್ನು ತೋರಿಸಿದರೂ, 2025ರ ಪಟ್ಟಿಯಲ್ಲಿ ಭರ್ತಿಯಾದ ಹುದ್ದೆಗಳನ್ನಷ್ಟೇ ತೋರಿಸಿ ಖಾಲಿ ಹುದ್ದೆಗಳ ವಿವರಗಳನ್ನು ಪ್ರಕಟಿಸಿಲ್ಲ ಎಂದು ಅವರು ಪ್ರಶ್ನಿಸಿದರು. ಈ ಹಿಂದೆ ವಿಶ್ವವಿದ್ಯಾಲಯದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ನೌಕರರ ಸಂಘವು ಮೀಸಲು ಕ್ರಮ ಉಲ್ಲಂಘನೆ ಕುರಿತು ಉನ್ನತ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿತ್ತು. ಆದರೆ 63ನೇ ಕಾರ್ಯಕಾರಿ ಮಂಡಳಿ ಸಭೆಯಲ್ಲಿ ಕುಲಪತಿಗಳು ನ್ಯಾಯಾಲಯವು ವಿಶ್ವವಿದ್ಯಾಲಯದ ಮೀಸಲು ಪಟ್ಟಿಯನ್ನು ಅನುಮೋದಿಸಿದೆ ಎಂದು ಹೇಳಿ ಸಭಾ ಸದಸ್ಯರಿಗೆ ತಪ್ಪು ಮಾಹಿತಿ ನೀಡಿದ್ದಾರೆ ಎಂದು ಅವರು ಆರೋಪಿಸಿದರು. ಇನ್ನು ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ) ನಿಯಮಗಳಿಗೆ ವಿರುದ್ಧವಾಗಿ ಕೆಲ ಅಭ್ಯರ್ಥಿಗಳನ್ನು ಸಹ ಪ್ರಾಧ್ಯಾಪಕ ಹಾಗೂ ಪ್ರಾಧ್ಯಾಪಕ ಹುದ್ದೆಗಳಿಗೆ ನೇಮಕ ಮಾಡಲಾಗಿದೆ ಎಂಬ ಆರೋಪವೂ ಕೇಳಿಬಂದಿದೆ. ಯುಜಿಸಿ ನಿಯಮಗಳ ಪ್ರಕಾರ ಸಹ ಪ್ರಾಧ್ಯಾಪಕರಾಗಲು ಕನಿಷ್ಠ ಎಂಟು ವರ್ಷಗಳ ಸಹಾಯಕ ಪ್ರಾಧ್ಯಾಪಕ ಸೇವೆ ಅಗತ್ಯವಿದೆ. ಆದರೆ ಕೆಲವು ಅಭ್ಯರ್ಥಿಗಳು ಈ ಅರ್ಹತೆಗಳನ್ನು ಪೂರೈಸದೆ ಇದ್ದರೂ ನೇಮಕಗೊಂಡಿರುವ ಸಾಧ್ಯತೆ ಇದೆ ಎಂದು ಹೇಳಿದರು. ಡಾ. ಬಸವರಾಜ ಕುಬಕಡ್ಡಿ ಅವರನ್ನು 2022ರ ಡಿಸೆಂಬರ್ 8ರಂದು ಕಾನೂನು ವಿಭಾಗದಲ್ಲಿ ಸಹ ಪ್ರಾಧ್ಯಾಪಕರಾಗಿ ನೇಮಕ ಮಾಡಲಾಗಿದೆ. ಅವರು ಪಿಎಚ್.ಡಿ ಪದವಿಯನ್ನು 2015ರಲ್ಲಿ ಪಡೆದಿದ್ದು, ಅದರ ನಂತರದ ಸೇವೆಯನ್ನು ಮಾತ್ರ ಪರಿಗಣಿಸಬೇಕು. ಆದರೆ ಎಂಟು ವರ್ಷಗಳ ಸೇವೆ ಪೂರ್ಣಗೊಳ್ಳುವ ಮೊದಲು ಅವರನ್ನು ನೇಮಕ ಮಾಡಲಾಗಿದೆ ಎಂದು ಹೇಳಿದರು. ಇದೇ ರೀತಿ ಡಾ. ಕೋಟಾ ಸಾಯಿ ಕೃಷ್ಣ ಸೇರಿದಂತೆ ಹಲವು ಉಪನ್ಯಾಸಕರ ನೇಮಕಾತಿಗಳಲ್ಲಿಯೂ ಯುಜಿಸಿ ಅರ್ಹತಾ ನಿಯಮಗಳನ್ನು ಪಾಲಿಸಿಲ್ಲ ಎಂಬ ಅನುಮಾನಗಳಿವೆ. ಡಾ. ಎಸ್. ಲಿಂಗಮೂರ್ತಿ, ಡಾ. ಜಿ. ಮಹೇಂದ್ರ, ಡಾ. ಸಂದೀಪ್, ಡಾ. ಪ್ರಮೋದ್ ಕುಮಾರ್ ಸೇರಿದಂತೆ ಹಲವರ ನೇಮಕಾತಿಗಳಲ್ಲಿಯೂ ಅಕ್ರಮ ನಡೆದಿರುವ ಸಾಧ್ಯತೆ ಇದೆ ಎಂದು ಅವರು ಸಂಶಯ ವ್ಯಕ್ತಪಡಿಸಿದರು. ವಿಶ್ವವಿದ್ಯಾಲಯದಲ್ಲಿ ನಡೆದಿರುವ ಮೀಸಲು ಕ್ರಮ ಉಲ್ಲಂಘನೆ ಹಾಗೂ ನೇಮಕಾತಿ ಅಕ್ರಮಗಳ ಬಗ್ಗೆ ಸಮಗ್ರ ನ್ಯಾಯಾಂಗ ತನಿಖೆ ನಡೆಸಬೇಕು ಎಂದು ಅವರು ಒತ್ತಾಯಿಸಿದರು. ಸುದ್ದಿಗೋಷ್ಠಿಯಲ್ಲಿ ರಾಜೇಂದ್ರ ರಾಜವಾಳ, ಮೈಲಾರಿ ದೊಡ್ಡಮನಿ, ಸಂತೋಷ ತಳವಾರ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ವಿತ್ತವರ್ಷ 2025-26ರಲ್ಲಿ ರಾಜ್ಯಗಳಿಗೆ 9,300 ಕೋಟಿ ರೂ. ಮನರೇಗಾ ಹಣ ಪಾವತಿ ಬಾಕಿ: ಕೇಂದ್ರ ಸರಕಾರ
ಹೊಸದಿಲ್ಲಿ: ವಿತ್ತವರ್ಷ 2025-26ರಲ್ಲಿ ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಡಿ ರಾಜ್ಯಗಳಿಗೆ 9,300 ಕೋಟಿ ರೂ.ಗೂ ಅಧಿಕ ಹಣ ಪಾವತಿ ಬಾಕಿಯಿದೆ ಎಂದು ಕೇಂದ್ರ ಸರಕಾರವು ರಾಜ್ಯಸಭೆಯಲ್ಲಿ ತಿಳಿಸಿದೆ. ಉತ್ತರ ಪ್ರದೇಶ, ಆಂಧ್ರಪ್ರದೇಶ ಮತ್ತು ಕರ್ನಾಟಕ ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿವೆ. ಫೆ.9, 2026ಕ್ಕೆ ಇದ್ದಂತೆ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಒಟ್ಟು 9,308.67 ಕೋಟಿ ರೂ.ಬಾಕಿಯಿತ್ತು ಎಂದು ಗ್ರಾಮೀಣಾಭಿವೃದ್ಧಿ ರಾಜ್ಯ ಸಚಿವ ಕಮಲೇಶ್ ಪಾಸ್ವಾನ್ ಅವರು ಶುಕ್ರವಾರ ಲಿಖಿತ ಉತ್ತರದಲ್ಲಿ ತಿಳಿಸಿದರು. ಸದನದಲ್ಲಿ ಮಂಡಿಸಲಾದ ಮಾಹಿತಿ ಪ್ರಕಾರ, ಉತ್ತರ ಪ್ರದೇಶಕ್ಕೆ ಅತ್ಯಂತ ಹೆಚ್ಚಿನ ಹಣ (1,158.71 ಕೋಟಿ ರೂ.) ಬಾಕಿಯಿದ್ದು, ನಂತರದ ಸ್ಥಾನಗಳಲ್ಲಿ ಆಂಧ್ರಪ್ರದೇಶ (1,014.60 ಕೋಟಿ ರೂ.)ಕರ್ನಾಟಕ (746.65 ಕೋಟಿ ರೂ.), ತಮಿಳುನಾಡು (729.88 ಕೋಟಿ ರೂ.),ಮಧ್ಯಪ್ರದೇಶ (704.64 ಕೋಟಿ ರೂ.),ಬಿಹಾರ (664.72 ಕೋಟಿ ರೂ.),ಮಹಾರಾಷ್ಟ್ರ (528.28 ಕೋಟಿ ರೂ.) ಮತ್ತು ಅಸ್ಸಾಂ (482.51 ಕೋಟಿ ರೂ.) ನಂತರದ ಸ್ಥಾನಗಳಲ್ಲಿವೆ. ಗಮನಾರ್ಹ ಹಣ ಪಾವತಿ ಬಾಕಿಯಿರುವ ಇತರ ರಾಜ್ಯಗಳಲ್ಲಿ ಕೇರಳ (419.09 ಕೋಟಿ ರೂ.),ಒಡಿಶಾ (411.64 ಕೋಟಿ ರೂ.),ಜಾರ್ಖಂಡ್ (385.02 ಕೋಟಿ ರೂ.) ಮತ್ತು ರಾಜಸ್ಥಾನ (383.24 ಕೋಟಿ ರೂ.) ಸೇರಿವೆ. ಮನರೇಗಾದಡಿ ಹಣ ಪಾವತಿ ವಿಳಂಬಗಳ ಬಗ್ಗೆ ಕಳವಳಗಳಿಗೆ ಪ್ರತಿಕ್ರಿಯಿಸಿದ ಪಾಸ್ವಾನ್,ಇದು ಬೇಡಿಕೆ ಆಧಾರಿತ ಯೋಜನೆಯಾಗಿದ್ದು,ನೇರ ಲಾಭ ವರ್ಗಾವಣೆ (ಡಿಬಿಟಿ) ಮೂಲಕ ವೇತನಗಳನ್ನು ಫಲಾನುಭವಿಗಳ ಖಾತೆಗಳಿಗೆ ನೇರವಾಗಿ ಜಮೆ ಮಾಡಲಾಗುತ್ತದೆ ಎಂದು ತಿಳಿಸಿದರು. ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ ಸ್ವೀಕರಿಸಲಾದ ನಿಧಿ ವರ್ಗಾವಣೆ ಆದೇಶಗಳ ಆಧಾರಿತ ಸಾರ್ವಜನಿಕ ಹಣಕಾಸು ನಿರ್ವಹಣೆ ವ್ಯವಸ್ಥೆಯ ಮೂಲಕ ನಿತ್ಯ ವೇತನ ಪಾವತಿಗಳಿಗೆ ಮಂಜೂರಾತಿಯನ್ನು ನೀಡಲಾಗುತ್ತದೆ. ಪ್ರತಿ ವಿತ್ತವರ್ಷದ ಆರಂಭದಲ್ಲಿ ಹಿಂದಿನ ವರ್ಷದ ಬಾಕಿಗಳೇನಾದರೂ ಇದ್ದರೆ ಕೇಂದ್ರವು ಅದನ್ನು ಪಾವತಿಸುತ್ತದೆ ಎಂದರು. ಹಾಲಿ ವಿತ್ತವರ್ಷದಲ್ಲಿ ಫೆ.8ಕ್ಕೆ ಇದ್ದಂತೆ ಯೋಜನೆಯಡಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ 78,004.59 ಕೋ.ರೂ.ಗಳನ್ನು ಬಿಡುಗಡೆ ಮಾಡಲಾಗಿದ್ದು,ಇದರಲ್ಲಿ ವೇತನಗಳಿಗಾಗಿ 64,789.49 ಕೋಟಿ ರೂ. ಮತ್ತು ಆಡಳಿತಾತ್ಮಕ ವೆಚ್ಚವಾಗಿ 13,215.10 ಕೋಟಿ ರೂ.ಗಳು ಸೇರಿವೆ ಎಂದು ಪಾಸ್ವಾನ್ ತಿಳಿಸಿದರು. ಕಾರ್ಮಿಕ ಬಜೆಟ್,ಕೆಲಸದ ಬೇಡಿಕೆ,ನಿಧಿಗಳ ಬಳಕೆ ಮತ್ತು ರಾಜ್ಯಗಳಿಂದ ಅಗತ್ಯ ದಾಖಲೆಗಳ ಸಲ್ಲಿಕೆಯಂತಹ ಅಂಶಗಳ ಆಧಾರದಲ್ಲಿ ಕೇಂದ್ರವು ನಿಯತಕಾಲಿಕವಾಗಿ ಕಂತುಗಳಲ್ಲಿ ಹಣವನ್ನು ಬಿಡುಗಡೆ ಮಾಡುತ್ತದೆ. ಹಣ ಬಿಡುಗಡೆಯು ನಿರಂತರ ಪ್ರಕ್ರಿಯೆಯಾಗಿದೆ ಮತ್ತು ಕೆಲಸಕ್ಕೆ ಬೇಡಿಕೆಯ ಆಧಾರದಲ್ಲಿ ಯೋಜನೆಯ ಅನುಷ್ಠಾನಕ್ಕಾಗಿ ಹಣದ ಲಭ್ಯತೆಯನ್ನು ಖಚಿತಪಡಿಸಲು ಸರಕಾರವು ಬದ್ಧವಾಗಿದೆ. 2025-26ರಲ್ಲಿ ಕೆಲಸದ ಅಗತ್ಯವಿದ್ದ ಶೇ.99.81ರಷ್ಟು ಅರ್ಹ ಗ್ರಾಮೀಣ ಕುಟುಂಬಗಳಿಗೆ ಯೋಜನೆಯಡಿ ಉದ್ಯೊಗ ನೀಡಲಾಗಿದೆ ಎಂದರು.
IPL 2026- ಕೆಕೆಆರ್ ಪರ ಆಡಲು ಪಿಎಸ್ಎಲ್ ತೊರೆದ ಬ್ಲೆಸ್ಸಿಂಗ್ ಮುಝರಬಾನಿಗೆ ಈಗ ಪಾಕ್ ಕ್ರಿಕೆಟ್ ಮಂಡಳಿ ಕಿರಿಕ್ ಶುರು
ಜಿಂಬಾಬ್ವೆಯ ಮಧ್ಯಮ ವೇಗಿ ಬ್ಲೆಸ್ಸಿಂಗ್ ಮುಝರಬಾನಿ ಪಾಕಿಸ್ತಾನ ಸೂಪರ್ ಲೀಗ್ (PSL) ತೊರೆದು ಇಂಡಿಯನ್ ಪ್ರೀಮಿಯರ್ ಲೀಗ್ (IPL) ಅನ್ನು ಅಪ್ಪಿಕೊಂಡಿರುವುದು ಪಾಕ್ ಕ್ರಿಕೆಟ್ ಮಂಡಳಿಗೆ ತೀವ್ರ ಮುಜುಗರಕ್ಕೆ ಕಾರಣವಾಗಿದೆ. ಮಾತ್ರವಲ್ಲದೆ ಅವರ ವಿರುದ್ಧ ಒಪ್ಪಂದ ಉಲ್ಲಂಘನೆ ಆರೋಪದಡಿ ಕಾನೂನು ಕ್ರಮ ಕೈಗೊಳ್ಳುವುದಾಗಿಯೂ ಎಚ್ಚರಿಕೆ ನೀಡಿದೆ. ಇತ್ತೀಚೆಗೆ ಮುಗಿದ ಐಸಿಸಿ ಟಿ20 ವಿಶ್ವಕಪ್ ನಲ್ಲಿ ಉತ್ತಮ ಪ್ರದರ್ಶನ ನೀಡಿರುವ ಮುಝರಬಾನಿ ಅವರನ್ನು ಕೋಲ್ಕತಾ ನೈಟ್ ರೈಡರ್ಸ್ ಫ್ರಾಂಚೈಸಿಯು ಮುಸ್ತಫಿಝುರ್ ರೆಹ್ಮಾನ್ ಅವರ ಬದಲಿಗೆ ಆಯ್ಕೆ ಮಾಡಿಕೊಂಡಿದ್ದು ಶೀಘ್ರದಲ್ಲೇ ಅವರು ತಂಡವನ್ನು ಸೇರಿಕೊಳ್ಳಲಿದ್ದಾರೆ.
ಮಧ್ಯಪ್ರಾಚ್ಯದಲ್ಲಿ ಯುದ್ದದ ಪರಿಣಾಮವಾಗಿ ಅಡುಗೆ ಗ್ಯಾಸ್ ಹಾಗೂ ಆಟೋ ಗ್ಯಾಸ್ ಸೇರಿದಂತೆ ಇಂಧನ ಪೂರೈಕೆಯಲ್ಲಿ ವ್ಯತ್ಯಯವಾಗುತ್ತದೆ ಎಂದು ಜನರಲ್ಲಿ ಆತಂಕ ಶುರುವಾಗಿದ್ದು, ಕೋಲಾರದಲ್ಲಿ ಗ್ಯಾಸ್ ವಿತರಕರ ಅಂಗಡಿಗಳ ಮುಂದೆ ಬೆಳ್ಳಂಬೆಳಗ್ಗೆಯಿಂದಲೇ ಬುಕಿಂಗ್ ಮಾಡಲು ಸಾಲುಗಟ್ಟಿ ನಿಲ್ಲುತ್ತಿರುವ ಪರಿಸ್ಥಿತಿ ಎದುರಾಗಿದೆ. ಇತ್ತ ಕಮರ್ಷಿಯಲ್ ಗ್ಯಾಸ್ ಸಿಲಂಡರ್ ಪೂರೈಕೆಯಲ್ಲಿ ವಿಳಂಬವಾಗುತ್ತಿರುವ ಹಿನ್ನಲೆಯಲ್ಲಿ ಹೊಟೇಲ್ ಉದ್ಯಮದವರು ತಮ್ಮ ಗೃಹ ಬಳಕೆ ಸಿಲಿಂಡರ್ ಖರೀದಿ ಮಾಡುತ್ತಿದ್ದು, ಇದರಿಂದಾಗಿ ಇನ್ನಷ್ಟು ಸಮಸ್ಯೆ ಹೆಚ್ಚುತ್ತಿದೆ. ಇತ್ತ ಆಟೋ ಗ್ಯಾಸ್ ಖರೀದಿಯೂ ಹೆಚ್ಚಳವಾಗಿದು, ಸಾಲಿನಲ್ಲಿ ನಿಂತು ಕಾಯುವ ಪರಿಸ್ಥಿತಿ ಎದುರಾಗಿದೆ.
BCCI: ಕರ್ನಾಟಕದ ಕ್ರಿಕೆಟ್ ದಿಗ್ಗಜರಾದ ರಾಹುಲ್ ದ್ರಾವಿಡ್, ರೋಜರ್ ಬಿನ್ನಿಗೆ ಬಿಸಿಸಿಐ ಅತ್ಯುನ್ನತ ಪ್ರಶಸ್ತಿ
BCCI Award: ಈ ಬಾರಿ ಬಿಸಿಸಿಐನ ಅತ್ಯುನ್ನತ ಗೌರವವಾದ 'ಕರ್ನಲ್ ಸಿ. ಕೆ. ನಾಯ್ಡು ಜೀವಮಾನ ಸಾಧನೆ ಪ್ರಶಸ್ತಿ'ಯು ಇಬ್ಬರು ಹೆಮ್ಮೆಯ ಕನ್ನಡಿಗರಿಗೆ ಒಲಿಯುತ್ತಿರುವುದು ವಿಶೇಷ. ಕರ್ನಾಟಕದ ಇಬ್ಬರು ಕ್ರಿಕಟ್ ದಿಗ್ಗಜರಾದ ರಾಹುಲ್ ದ್ರಾವಿಡ್ ಮತ್ತು ರೋಜರ್ ಬಿನ್ನಿ ಅವರಿಗೆ ಭಾನುವಾರ (ಮಾರ್ಚ್ 15) ನವದೆಹಲಿಯಲ್ಲಿ ನಡೆಯಲಿರುವ 'ನಮನ್ ಅವಾರ್ಡ್ಸ್' ಕಾರ್ಯಕ್ರಮದಲ್ಲಿ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುತ್ತದೆ.
UAEಯಲ್ಲಿನ ಅಮೆರಿಕ ಅಡಗುತಾಣಗಳು ನಮ್ಮ ಮುಂದಿನ ಗುರಿಗಳು: IRGC
ಖಾರ್ಗ್ ದ್ವೀಪದ ಮೇಲೆ ಅಮೆರಿಕ ನಡೆಸಿದ ದಾಳಿಗೆ ಪ್ರತಿಕಾರಕ್ಕೆ ಸಿದ್ಧತೆ
LPG ಬಿಕ್ಕಟ್ಟು: LPG ಗೋದಾಮುಗಳಿಗೆ ದಿನದ 24 ಗಂಟೆ ರಕ್ಷಣೆ ಒದಗಿಸಲು ದಿಲ್ಲಿ ಪೊಲೀಸರ ರಜೆ ರದ್ದು!
ದಿಲ್ಲಿ: ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಸಂಘರ್ಷದ ಹಿನ್ನೆಲೆಯಲ್ಲಿ ದೇಶಾದ್ಯಂತ ಉದ್ಭವಿಸಿರುವ LPG ಕೊರತೆಯ ಹಿನ್ನೆಲೆಯಲ್ಲಿ ದಿಲ್ಲಿಯಲ್ಲಿನ LPG ಗೋದಾಮುಗಳು, ಮಳಿಗೆಗಳು, ರೀಫಿಲ್ಲಿಂಗ್ ಘಟಕಗಳಿಗೆ ದಿನದ 24 ಗಂಟೆಯೂ ರಕ್ಷಣೆ ಒದಗಿಸಲು ದಿಲ್ಲಿ ಪೊಲೀಸರ ಎಲ್ಲ ನಿಯಮಿತ ರಜೆಗಳನ್ನು ಗುರುವಾರ ದಿಲ್ಲಿ ಪೊಲೀಸರು ರದ್ದುಗೊಳಿಸಿದ್ದಾರೆ. ಎಲ್ಪಿಜಿ ಗೋದಾಮುಗಳು, ರೀಫಿಲ್ಲಿಂಗ್ ಘಟಕಗಳ ಸುತ್ತ ಭದ್ರತೆಯನ್ನು ಬಿಗಿಗೊಳಿಸುವಂತೆ ಕೇಂದ್ರ ಗೃಹ ಸಚಿವಾಲಯ ನೀಡಿರುವ ಸೂಚನೆಯ ಹಿನ್ನೆಲೆಯಲ್ಲಿ ರಾಷ್ಟ್ರ ರಾಜಧಾನಿಯಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಜಂಟಿ ಪೊಲೀಸ್ ಆಯುಕ್ತ (ಕಾರ್ಯಾಚರಣೆ) ಬಿಡುಗಡೆ ಮಾಡಿರುವ ಪ್ರಕಟನೆಯಲ್ಲಿ, “ಮುಂದಿನ ಆದೇಶದವರೆಗೆ ತಕ್ಷಣದಿಂದಲೇ ಜಾರಿಗೆ ಬರುವಂತೆ ಪೊಲೀಸ್ ಸಿಬ್ಬಂದಿಗಳ ಎಲ್ಲ ನಿಯಮಿತ ರಜೆಗಳನ್ನು ಮಂಜೂರು ಮಾಡಬಾರದು. ನೈಜ ಕಾರಣಗಳಿರುವ ಪ್ರಕರಣಗಳಲ್ಲಿ ಮಾತ್ರ ರಜೆಯನ್ನು ಮಂಜೂರು ಮಾಡಬಹುದು ಹಾಗೂ ಈ ರಜೆಯನ್ನು ಮಂಜೂರು ಪ್ರಾಧಿಕಾರ ಸ್ವಯಂ ದೃಢೀಕರಿಸಿ, ಅನುಮೋದಿಸಿರಬೇಕು. ಈ ಆದೇಶವನ್ನು ಸ್ಪಷ್ಟವಾಗಿ ಪಾಲಿಸುವಂತೆ ಎಲ್ಲ ಉಪ ಪೊಲೀಸ್ ಆಯುಕ್ತರಿಗೆ ಮನವಿ ಮಾಡಲಾಗಿದೆ” ಎಂದು ಹೇಳಲಾಗಿದೆ.
ಉಡುಪಿ ಜಿಲ್ಲೆಯ ಇಬ್ಬರು ರೌಡಿಶೀಟರ್ ಸಹಿತ ಮೂವರು ಗಡಿಪಾರು
ಉಡುಪಿ, ಮಾ.14: ಉಡುಪಿ ಜಿಲ್ಲೆಯ ಇಬ್ಬರು ರೌಡಿಶೀಟರ್ ಸಹಿತ ಮೂವರು ಆರೋಪಿಗಳನ್ನು ಗಡಿಪಾರು ಮಾಡಿ ವಿಶೇಷ ಕಾರ್ಯಾಂಗ ದಂಡಾಧಿಕಾರಿ ಹಾಗೂ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರು ಮಾ.12ರಂದು ಆದೇಶ ಹೊರಡಿಸಿದ್ದಾರೆ. ಹಿರಿಯಡ್ಕ ಪೊಲೀಸ್ ಠಾಣಾ ವ್ಯಾಪ್ತಿಯ ಬೊಮ್ಮರಬೆಟ್ಟು ಗ್ರಾಮದ ಪುತ್ತಿಗೆ ನಿವಾಸಿ ಸಂದೇಶ ನಾಯ್ಕ್, ಹಿರಿಯಡಕ ಪಾಪುಜೆ ದರ್ಖಾಸು ನಿವಾಸಿ ಸುಶಾಂತ್ ಪೂಜಾರಿ ಹಾಗೂ ಪಡುಬಿದ್ರಿ ಪೊಲೀಸ್ ಠಾಣೆಯ ವ್ಯಾಪ್ತಿಯ ನಡ್ಸಾಲು ಗ್ರಾಮದ ಜಬ್ಬಾರ್ ಹುಸೇನ್ ಗಡಿಪಾರುಗೊಂಡ ಆರೋಪಿಗಳು. ಜಬ್ಬಾರ್ ಹುಸೈನ್ ವಿರುದ್ಧ ಪಡುಬಿದ್ರಿ ಠಾಣೆಯಲ್ಲಿ ರೌಡಿ ಶೀಟರ್ ತೆರೆಯಲಾಗಿದ್ದು, ಈತನ ವಿರುದ್ಧ ಉಡುಪಿ, ಚಿಕ್ಕಮಗಳೂರು, ಉತ್ತರ ಕನ್ನಡ ಜಿಲ್ಲೆ ಹಾಗೂ ಮಂಗಳೂರ ನಗರದಲ್ಲಿ ಈವರೆಗೆ ಒಟ್ಟು 16 ಪ್ರಕರಣಗಳು ದಾಖಲಾಗಿವೆ. ಸಂದೇಶ ವಿರುದ್ಧ ಐದು ಪ್ರಕರಣ ದಾಖಲಾಗಿದ್ದು, ರೌಡಿ ಶೀಟರ್ ತೆರೆಯಲಾಗಿದೆ. ಅದೇ ರೀತಿ ಸುಶಾಂತ್ ಪೂಜಾರಿ ವಿರುದ್ಧ ಮೂರು ಪ್ರಕರಣಗಳು ದಾಖಲಾಗಿವೆ. ಜಬ್ಬಾರ್ ಹುಸೇನ್ನನ್ನು ಹಾಸನ ಜಿಲ್ಲೆಯ ಪೆನ್ಷನ್ ಮೊಹಲ್ಲಾ ಠಾಣಾ ವ್ಯಾಪ್ತಿಗೆ, ಸಂದೇಶ್ ನಾಯ್ಕ್ನನ್ನು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಗೆ ಹಾಗೂ ಸುಶಾಂತ್ ಪೂಜಾರಿಯನ್ನು ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಪೊಲೀಸ್ ಠಾಣಾ ವ್ಯಾಪ್ತಿಗೆ ಗಡಿಪಾರು ಮಾಡಲಾಗಿದೆ ಎಂದು ಪೊಲೀಸ್ ಅಧೀಕ್ಷಕ ಹರಿರಾಂ ಶಂಕರ್ ತಿಳಿಸಿದ್ದಾರೆ.
ಗೆದ್ದಾಯಿತು, ಯುದ್ದದಿಂದ ಹೊರಬನ್ನಿ : ಟ್ರಂಪ್ಗೆ ಶ್ವೇತಭವನದ ಅಧಿಕಾರಿಗಳ ಕಿವಿಮಾತು
Internal White House Advise : ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಯುದ್ದದಿಂದ ಅಮೆರಿಕಾ, ಹೊರಕ್ಕೆ ಬರಲು ಇದು ಸೂಕ್ತ ಸಮಯ ಎಂದು ವೈಟ್’ಹೌಸ್ ಅಧಿಕಾರಿಯೊಬ್ಬರು ಅಭಿಪ್ರಾಯ ಪಟ್ಟಿದ್ದಾರೆ. ಈಗಾಗಲೆ, ಇರಾನ್ ಸಾಕಷ್ಟು ನಷ್ಟವನ್ನು ಅನುಭವಿಸಿದ್ದು, ಯುದ್ದದಲ್ಲಿ ಗೆದ್ದಿದ್ದೇವೆ ಎಂದು ಅಮೆರಿಕಾ ಹೊರಕ್ಕೆ ಬರಲಿ ಎಂದು ಸಲಹೆಗಳು ಕೇಳಿ ಬಂದಿದೆ.
Sakleshpura | ಕೊನೆಗೂ ಬ್ಯಾಂಕ್ 66 ಪೈಸೆ ರೈತನಿಗೆ ಪಾವತಿಸಿತು....: ಏನಿದು ಘಟನೆ?
ಸಕಲೇಶಪುರ : ತಾಲೂಕಿನ ಹೊಸಕೊಪ್ಪಲು ಗ್ರಾಮದ ರೈತನಿಗೆ ನೀಡಬೇಕಿದ್ದ 66 ಪೈಸೆಯನ್ನು ಕೊನೆಗೂ ಬ್ಯಾಂಕ್ ಪಾವತಿಸಿದ ಘಟನೆ ಬೆಳಕಿಗೆ ಬಂದಿದೆ. ಹೊಸಕೊಪ್ಪಲು ಗ್ರಾಮದ ರೈತ ಚೊಕ್ಕಣ್ಣಗೌಡ ಅವರು ಕೆಲವು ವರ್ಷಗಳ ಹಿಂದೆ ಪಟ್ಟಣದ ಕೆನರಾ ಬ್ಯಾಂಕ್ ಶಾಖೆಯಿಂದ 50 ಸಾವಿರ ಸಾಲ ಪಡೆದಿದ್ದರು. ನಂತರ ಅವರು ಸಾಲವನ್ನು ಸಕಾಲಕ್ಕೆ ತೀರಿಸಿದ್ದರೂ, ಬ್ಯಾಂಕ್ನಿಂದ ಇನ್ನೂ 9.34 ರೂ. ಬಾಕಿ ಇದೆ ಎಂದು ನೋಟಿಸ್ ನೀಡಿ ತಕ್ಷಣ ಪಾವತಿಸುವಂತೆ ಸೂಚಿಸಲಾಗಿತ್ತು. ಇದಲ್ಲದೆ, ಪದೇಪದೇ ದೂರವಾಣಿ ಕರೆಗಳನ್ನೂ ಮಾಡಲಾಗುತ್ತಿತ್ತು ಎಂದು ತಿಳಿದುಬಂದಿದೆ. ಇದರಿಂದ ಬೇಸತ್ತ ರೈತ ಚೊಕ್ಕಣ್ಣಗೌಡ ಅವರು ಬ್ಯಾಂಕ್ಗೆ ತೆರಳಿ 10 ನೀಡಿ ಸಾಲಕ್ಕೆ ಜಮಾ ಮಾಡಿಕೊಂಡು, ಉಳಿದ 66 ಪೈಸೆಯನ್ನು ವಾಪಸ್ ನೀಡುವಂತೆ ಕ್ಯಾಷಿಯರ್ಗೆ ಮನವಿ ಮಾಡಿದರು. ಆದರೆ, ಚಿಲ್ಲರೆ ಇಲ್ಲ ಎಂಬ ಕಾರಣ ನೀಡಿ ಹಣ ನೀಡಲು ಸಾಧ್ಯವಿಲ್ಲ ಎಂದು ಬ್ಯಾಂಕ್ ಸಿಬ್ಬಂದಿ ತಿಳಿಸಿದ ಹಿನ್ನೆಲೆಯಲ್ಲಿ ಮಾತಿನ ಚಕಮಕಿ ನಡೆದಿದೆ. “ಪೈಸೆಗೆ ಪೈಸೆ ಲೆಕ್ಕ ಹಾಕಿ ನಮ್ಮಿಂದ ಹಣ ವಸೂಲಿಸುತ್ತೀರಾ; ಹಾಗಾದರೆ ನಮಗೂ ಬಾಕಿ ಇರುವ ಹಣವನ್ನು ನೀಡಿ” ಎಂದು ರೈತ ಪಟ್ಟು ಹಿಡಿದಿದ್ದರು. ಬಳಿಕ ಬ್ಯಾಂಕ್ ವ್ಯವಸ್ಥಾಪಕರು ರೈತನಿಗೆ ಕ್ಷಮೆ ಕೇಳಿ ಪ್ರಕರಣವನ್ನು ಸಮಾಧಾನಪಡಿಸಿದ್ದರು ಈ ವಿಚಾರ ಮೇಲಧಿಕಾರಿಗಳ ಗಮನಕ್ಕೆ ಬಂದ ಬಳಿಕ, ಬ್ಯಾಂಕ್ ಅಧಿಕಾರಿಗಳು ರೈತನ ಖಾತೆಗೆ 66 ಪೈಸೆ ಜಮಾ ಮಾಡಿ ಎಸ್ಎಂಎಸ್ ಮೂಲಕ ಮಾಹಿತಿ ನೀಡಿರುವುದು ತಿಳಿದುಬಂದಿದೆ.
ಮಹಾರಾಷ್ಟ್ರ | ಗೂಡ್ಸ್ ರೈಲು ಢಿಕ್ಕಿ; ಮೂವರು ಯುವಕರು ಮೃತ್ಯು
ರೈಲ್ವೆ ಹಳಿಯಲ್ಲಿ ಪೊಲೀಸರು ಹಿಂಬಾಲಿಸಿದ್ದರಿಂದ ಘಟನೆ ನಡೆಯಿತು : ಕುಟುಂಬಸ್ಥರ ಆರೋಪ
PHOTOS | ಮಧ್ಯಪ್ರಾಚ್ಯ ಸಂಘರ್ಷದಿಂದ LPG ಬಿಕ್ಕಟ್ಟು; ಸರತಿ ಸಾಲು, ಹೋಟೆಲ್ ಗಳು ಬಂದ್, ಪ್ರತಿಭಟನೆ...
ಪಂಜಾಬ್ | LPG ಸಿಲಿಂಡರ್ಗಾಗಿ ಸರತಿ ಸಾಲಿನಲ್ಲಿ ನಿಂತಿದ್ದ ವ್ಯಕ್ತಿ ಹೃದಯಾಘಾತದಿಂದ ಮೃತ್ಯು; ವರದಿ
ಚಂಡೀಗಢ : ಮಧ್ಯಪ್ರಾಚ್ಯದ ಸಂಘರ್ಷದ ಪರಿಣಾಮ ದೇಶದ ಹಲವು ಭಾಗಗಳಲ್ಲಿ ಎಲ್ಪಿಜಿ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ. ಪಂಜಾಬ್ನ ಬರ್ನಾಲಾ ಜಿಲ್ಲೆಯಲ್ಲಿ ಎಲ್ಪಿಜಿ ಏಜೆನ್ಸಿ ಮುಂದೆ ಸರತಿ ಸಾಲಿನಲ್ಲಿ ನಿಂತಿದ್ದ ವ್ಯಕ್ತಿಯೋರ್ವ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಭೂಷಣ್ ಕುಮಾರ್ ಮಿತ್ತಲ್(66) ಮೃತರು. ಅವರು ಎಲ್ಪಿಜಿ ಏಜೆನ್ಸಿ ಮುಂದೆ ಸರದಿಯಲ್ಲಿ ನಿಂತಿದ್ದಾಗ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು The Indian Express ವರದಿ ಮಾಡಿದೆ. ಭೂಷಣ್ ಕುಮಾರ್ ಅವರು ಬೆಳಿಗ್ಗೆ ಶೆಹ್ನಾ ಬ್ಲಾಕ್ನಲ್ಲಿರುವ ಎಲ್ಪಿಜಿ ವಿತರಣೆ ಕೇಂದ್ರಕ್ಕೆ ಗ್ಯಾಸ್ ಸಿಲಿಂಡರ್ ಪಡೆಯಲು ತೆರಳಿದ್ದರು. ಸುಮಾರು 8 ಗಂಟೆಯಿಂದಲೇ ಸಾಲಿನಲ್ಲಿ ನಿಂತಿದ್ದ ಅವರಿಗೆ ಟೋಕನ್ ಸಂಖ್ಯೆ ನೀಡಲಾಗಿತ್ತು. ಸುಮಾರು ಎರಡು ಗಂಟೆಗಳ ಕಾಲ ಸರದಿಯಲ್ಲಿ ನಿಂತುಕೊಂಡಿದ್ದರಿಂದ ದಣಿದು ಬೆಳಿಗ್ಗೆ 10 ಗಂಟೆ ಸುಮಾರಿಗೆ ಇದ್ದಕ್ಕಿದ್ದಂತೆ ಕುಸಿದು ಬಿದ್ದರು. ತಕ್ಷಣ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಅವರು ಮೃತಪಟ್ಟಿರುವುದನ್ನು ವೈದ್ಯರು ದೃಢಪಡಿಸಿದ್ದಾರೆ. ಪ್ರಾಥಮಿಕ ವರದಿಗಳು ಭೂಷಣ್ ಕುಮಾರ್ ಅವರಿಗೆ ಹೃದಾಯಾಘಾತವಾಗಿರುವುದನ್ನು ದೃಢಪಡಿಸಿದೆ ಎಂದು ಮೂಲಗಳು ತಿಳಿಸಿದೆ.
ಅಮೆರಿಕ–ಇಸ್ರೇಲ್ ದಾಳಿಗಳಿಂದ ಇರಾನ್ ನ 56 ಸಾಂಸ್ಕೃತಿಕ ತಾಣಗಳಿಗೆ ಹಾನಿ
ಟೆಹ್ರಾನ್: ಯುದ್ಧ ಆರಂಭವಾದ ನಂತರ ಅಮೆರಿಕ ಮತ್ತು ಇಸ್ರೇಲ್ ನಡೆಸಿದ ದಾಳಿಗಳ ಪರಿಣಾಮವಾಗಿ ಇರಾನ್ ನ ವಸ್ತು ಸಂಗ್ರಹಾಲಯಗಳು ಹಾಗೂ ಐತಿಹಾಸಿಕ ಸ್ಮಾರಕಗಳು ಸೇರಿದಂತೆ ಕನಿಷ್ಠ 56 ಸಾಂಸ್ಕೃತಿಕ ತಾಣಗಳಿಗೆ ಗಂಭೀರ ಹಾನಿಯಾಗಿವೆ ಎಂದು ಇರಾನ್ ದೇಶದ ಸಂಸ್ಕೃತಿ ಸಚಿವಾಲಯ ತಿಳಿಸಿದೆ ಎಂದು Aljazeera ವರದಿ ಮಾಡಿದೆ. ISNA ಸುದ್ದಿ ಸಂಸ್ಥೆಗೆ ನೀಡಿದ ಹೇಳಿಕೆಯಲ್ಲಿ, ಹಾನಿಗೊಳಗಾದ 19 ಸ್ಮಾರಕಗಳೊಂದಿಗೆ ಟೆಹ್ರಾನ್ ಪ್ರಾಂತ್ಯವು ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ ಎಂದು ಸಚಿವಾಲಯ ಹೇಳಿದೆ. ಇದರ ಜೊತೆಗೆ, ಇರಾನ್ ನ ಕುರ್ದಿಸ್ತಾನ್ ಪ್ರಾಂತ್ಯದಲ್ಲಿಯೂ 12 ಪ್ರಮುಖ ಸ್ಮಾರಕಗಳು ಹಾನಿಗೊಳಗಾಗಿವೆ ಎಂದು ವರದಿ ಉಲ್ಲೇಖಿಸಿದೆ. ಯುದ್ಧದ ನಡುವೆ ಸಾಂಸ್ಕೃತಿಕ ಪಾರಂಪರಿಕ ತಾಣಗಳಿಗೆ ಉಂಟಾಗುತ್ತಿರುವ ಹಾನಿ ಕುರಿತು ಆತಂಕ ವ್ಯಕ್ತವಾಗಿದ್ದು, ಇತರೆ ಪ್ರಾಂತ್ಯಗಳಲ್ಲಿಯೂ ಹಲವು ತಾಣಗಳು ಹಾನಿಗೆ ಒಳಗಾಗಿರುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದೇಶದಲ್ಲಿ ಪೆಟ್ರೋಲ್ ಕೊರತೆ ಇಲ್ಲ, ಅನಗತ್ಯವಾಗಿ ಹೆಚ್ಚಾಗಿ ಖರೀದಿಸಬೇಡಿ: ಜನರಿಗೆ ಸರ್ಕಾರ ಸಲಹೆ!
ಮಧ್ಯಪ್ರಾಚ್ಯದಲ್ಲಿ ಯುದ್ದದಿಂದಾಗಿ ದೇಶದಲ್ಲಿ ತೈಲ ಪೂರೈಕೆಯಲ್ಲಿ ಕೊರತೆಯಾಗಬಹುದು ಎಂದು ಗ್ರಾಹಕರು ಪೆಟ್ರೋಲ್ ಸೇರಿದಂತೆ ವಿವಿಧ ಇಂಧನಗಳ ಖರೀದಿಗೆ ಮುಗಿ ಬೀಳುತ್ತಿದ್ದು, ಅಸುರಕ್ಷಿತ ಮಾದರಿಯಲ್ಲಿ ಪೆಟ್ರೋಲ್ ಸಂಗ್ರಹ ಮಾಡಿಕೊಳ್ಳುತ್ತಿದ್ದಾರೆ. ಈ ಕುರಿತು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ ಸಲಹೆ ಬಿಡುಗಡೆ ಮಾಡಿದ್ದು, ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಸಮರ್ಪಕವಾಗಿ ಲಭ್ಯವಿದ್ದು, ಅನಗತ್ಯವಾಗಿ ಬಳಕೆಗಿಂತ ಹೆಚ್ಚು ಇಂಧನವನ್ನು ಸಂಗ್ರಹಿಸಬೇಡಿ ಎಂದು ಸೂಚನೆ ನೀಡಿದೆ. ಜೊತೆಗೆ ಅಸುರಕ್ಷಿತವಾಗಿ ತೈಲ ವಿತರಣೆ ಮಾಡುವವರ ಮೇಲೆ ಕಠಿಣ ಕ್ರಮದ ಎಚ್ಚರಿಕೆ ನೀಡಿದೆ.
ಮಧ್ಯಪ್ರಾಚ್ಯ ಯುದ್ಧಕಾಲದಲ್ಲಿ ಜನರ ನಡುವೆ ಭೀತಿ ಸೃಷ್ಟಿಸುತ್ತಿದೆ ಕಾಂಗ್ರೆಸ್: ಪ್ರಧಾನಿ ಮೋದಿ ವಾಗ್ದಾಳಿ
PM Modi Slams Congress- ಮಧ್ಯಪ್ರಾಚ್ಯ ಯುದ್ಧದ ವೇಳೆ ಯಲ್ಲಿ ಜವಾಬ್ದಾರಿಯುತ ವಿಪಕ್ಷದ ರೀತಿಯಲ್ಲಿ ವರ್ತಿಸಬೇಕಿದ್ದ ಕಾಂಗ್ರೆಸ್ ಪಕ್ಷ ಜನರ ನಡುವೆ ಭೀತಿ ಮೂಡಿಸುವ ಪ್ರಯತ್ನ ಮಾಡುತ್ತಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಆರೋಪಿಸಿದ್ದಾರೆ. ಕೇಂದ್ರ ಸರ್ಕಾರ ಯುದ್ಧದ ವೇಳೆ ನಮ್ಮ ನಾಗರಿಕರ ಕಷ್ಟಗಳನ್ನು ಕಡಿಮೆ ಮಾಡುವ ಬಗ್ಗೆ ಕಾರ್ಯನಿವೃತ್ತವಾಗಿದ್ದರೆ, ಕಾಂಗ್ರೆಸ್ ಭೀತಿ ಹುಟ್ಟಿಸುತ್ತಿದೆ ಎಂದರು. ಮಾತ್ರವಲ್ಲದೆ ಭಾರತದ ಏಳ್ಗೆಯನ್ನು ಸಹಿಸದ ವಿದೇಶಿ ಶಕ್ತಿಗಳ ಕೈಗೊಂಬೆಯಂತೆ ವರ್ತಿಸುತ್ತಿದೆ ಎಂದು ಆರೋಪಿಸಿದರು.
US-ಇರಾನ್-ಇಸ್ರೇಲ್ ನಡುವೆ ಸಂಘರ್ಷ : ಖಜಾನೆ ತುಂಬಿಸಿಕೊಳ್ಳುತ್ತಿರುವ ರಷ್ಯಾಗೆ ಆಗುತ್ತಿರುವ ಲಾಭಗಳೇನು?
West Asia Crisis : ಯುದ್ದ ಮೂರು ದೇಶಗಳ ನಡುವೆ ನಡೆಯುತ್ತಿದ್ದರೂ, ಜಾಗತಿಕ ಮಟ್ಟದಲ್ಲಿ ಇದರ ಎಫೆಕ್ಟ್ ಎಲ್ಲರಿಗೂ ತಟ್ಟಲು ಆರಂಭಿಸಿದೆ. ಯುದ್ದಕ್ಕೂ ತಮಗೂ ಏನೂ ಸಂಬಂಧವಿಲ್ಲದಿದ್ದರೂ, ಇರಾನ್, ಕೊಲ್ಲಿ ರಾಷ್ಟ್ರಗಳ ಮೇಲೆ ದಾಳಿಯನ್ನು ನಡೆಸುತ್ತಿದೆ. ಅದೇ ರೀತಿ, ಭಾರತ ಯುದ್ದದಿಂದ ತೈಲದ ಅಭಾವ ಎದುರಿಸುತ್ತಿದೆ. ಇನ್ನೊಂದು ಕಡೆ, ರಷ್ಯಾ ಈ ಯುದ್ದದಿಂದ ಲಾಭವನ್ನು ಮಾಡಿಕೊಳ್ಳುತ್ತಿದೆ.
ಉತ್ತರ ಪ್ರದೇಶ | ರಸ್ತೆಯಲ್ಲಿ ನಮಾಝ್ ಮಾಡಿದರೆ ಪಾಸ್ಪೋರ್ಟ್ ರದ್ದು : ಹಿರಿಯ ಪೊಲೀಸ್ ಅಧಿಕಾರಿಯಿಂದ ಬೆದರಿಕೆ
ಮೀರತ್ : ಉತ್ತರ ಪ್ರದೇಶದ ಮೀರತ್ನಲ್ಲಿ ಶುಕ್ರವಾರ ಪೊಲೀಸ್ ಅಧಿಕಾರಿಯೊಬ್ಬರು ರಸ್ತೆಗಳಲ್ಲಿ ನಮಾಝ್ ಮಾಡದಂತೆ ಎಚ್ಚರಿಕೆ ನೀಡಿದ್ದು, ಮಾರ್ಗಸೂಚಿ ಉಲ್ಲಂಘಿಸುವವರ ಪಾಸ್ಪೋರ್ಟ್ ಗಳನ್ನು ರದ್ದುಗೊಳಿಸಲಾಗುವುದು ಎಂದು ಬೆದರಿಸಿರುವ ಬಗ್ಗೆ The Times of India ವರದಿ ಮಾಡಿದೆ. “ರಸ್ತೆಗಳಲ್ಲಿ ನಮಾಝ್ ಮಾಡಬಾರದು. ನಿಯಮವನ್ನು ಉಲ್ಲಂಘಿಸಿದರೆ ಅಂತಹ ವ್ಯಕ್ತಿಗಳ ವಿರುದ್ಧ ಕ್ರಮವನ್ನು ಕೈಗೊಳ್ಳಲಾಗುವುದು ಮತ್ತು ಅವರ ಪಾಸ್ಪೋರ್ಟ್ಗಳನ್ನು ರದ್ದುಗೊಳಿಸಲಾಗುವುದು” ಎಂದು ಮೀರತ್ನ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಅವಿನಾಶ್ ಪಾಂಡೆ ಹೇಳಿದ್ದಾರೆ. ಮೀರತ್ ಜಿಲ್ಲೆಯಲ್ಲಿ 544 ಮಸೀದಿಗಳು ಮತ್ತು 146 ಈದ್ಗಾಗಳಿವೆ ಮತ್ತು ಅವುಗಳ ನಿರ್ವಹಣಾ ಸಮಿತಿಗಳು ನಿಯಮಗಳನ್ನು ಪಾಲಿಸಲು ಒಪ್ಪಿಕೊಂಡಿವೆ ಎಂದು ಪಾಂಡೆ ಹೇಳಿದ್ದಾರೆ. ಪಾಸ್ಪೋರ್ಟ್ಗಳನ್ನು ರದ್ದುಗೊಳಿಸುವ ಬಗ್ಗೆ ಯಾವುದೇ ನಿಬಂಧನೆ ಇಲ್ಲದಿದ್ದರೂ ನಿಯಮ ಉಲ್ಲಂಘಿಸುವವರ ಅಪರಾಧ ಹಿನ್ನೆಲೆಯ ಕುರಿತು ತನಿಖೆ ನಡೆಸಬಹುದು ಮತ್ತು ಆ ತನಿಖೆಯ ಆಧಾರದ ಮೇಲೆ ಪಾಸ್ಪೋರ್ಟ್ ರದ್ದುಪಡಿಸುವ ಸಾಧ್ಯತೆ ಇದೆ ಎಂದು ಪಾಂಡೆ ಹೇಳಿರುವ ಬಗ್ಗೆ The Times of India ವರದಿ ಮಾಡಿದೆ. ಪಾಂಡೆ ಪತ್ರಿಕೆಗೆ ನೀಡಿದ ಹೇಳಿಕೆಯಲ್ಲಿ, ನಾನು ಹೊಸದೇನನ್ನೂ ಹೇಳಿಲ್ಲ. ಹಿಂದಿನ ವರ್ಷದ ಆದೇಶವನ್ನು ಪುನರುಚ್ಚರಿಸಿದ್ದೇನೆ ಎಂದು ಹೇಳಿದ್ದಾರೆ.
ಮಾರ್ಚ್ 14ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ
Petrol, Diesel Price: ಶಕ್ತಿಯ ಮೂಲಗಳು ಎನಿಸಿಕೊಂಡಿರುವ ಪೆಟ್ರೋಲ್ ಮತ್ತು ಡೀಸೆಲ್ ಇಂಧನ ಅತ್ಯವಶ್ಯಕವಾಗಿ ಬೇಕಾಗುವ ಸಂಪನ್ಮೂಲಗಳಾಗಿವೆ. ಇನ್ನೂ ಬೆಂಗಳೂರು ಸೇರಿದಂತೆ ಕರ್ನಾಟಕದ ಇತರ ಜಿಲ್ಲೆಗಳಲ್ಲಿ ಇಂದು (ಮಾರ್ಚ್ 14) ಲೀಟರ್ ಪೆಟ್ರೋಲ್, ಡೀಸೆಲ್ ಬೆಲೆ ಎಷ್ಟಿದೆ ಎಂದು ಇಲ್ಲಿ ತಿಳಿಯಿರಿ. ಇತ್ತೀಚಿನ ದಿನಗಳಲ್ಲಿ ಎಲೆಕ್ಟ್ರಿಕ್ ವಾಹನಗಳು ಹೆಚ್ಚಾಗುತ್ತಿವೆ. ಹಾಗಂತ ಇಂಧನದ ಬೇಡಿಕೆ ಏನು ಕಡಿಮೆ ಆಗಿಲ್ಲ.
Karan Adani: ಆರ್ಥಿಕ ಬೆಳವಣಿಗೆಗೆ ದಕ್ಷ ಮೂಲಸೌಕರ್ಯ ಹಾಗೂ ಸಾರಿಗೆ ಅತ್ಯಗತ್ಯ- ಕರಣ್ ಅದಾನಿ ಪ್ರತಿಪಾದನೆ
ಜಾಗತಿಕ ಸರಬರಾಜು ಸರಪಳಿಯು ಪದೇ, ಪದೇ ವ್ಯತ್ಯಯ ಸಮಸ್ಯೆ ಎದುರಿಸುತ್ತಿರುವ ಈ ಪರಿಸ್ಥಿತಿಯಲ್ಲಿ ಆರ್ಥಿಕ ಬೆಳವಣಿಗೆಗೆ ದಕ್ಷ ಮೂಲಸೌಕರ್ಯ ಜೊತೆಗೆ ಬಲಿಷ್ಠ ಸಾರಿಗೆಯ ಜಾಲ ಅತ್ಯಗತ್ಯ ಎಂದು ಕರಣ್ ಅದಾನಿ ಅವರು ಪ್ರತಿಪಾದಿಸಿದರು. ರಾಜಧಾನಿ ನವದೆಹಲಿಯಲ್ಲಿ ಮಾಧ್ಯಮ ಸಂಸ್ಥೆಯೊಂದರ ವಾರ್ಷಿಕ ನಾಯಕತ್ವ ಸಮಾವೇಶದಲ್ಲಿ ಮಾತನಾಡಿದ ಅದಾನಿ ಪೋರ್ಟ್ಸ್ ಹಾಗೂ ವಿಶೇಷ ಆರ್ಥಿಕ ವಲಯದ ಎಂಡಿ ಕರಣ್ ಅದಾನಿ
ರಾಜ್ಯದಲ್ಲಿ ₹4,824 ಕೋಟಿ ಮೊತ್ತದ ಬಂಡವಾಳ ಹೂಡಿಕೆಗೆ ಸಮ್ಮತಿ: 14,525 ಉದ್ಯೋಗ ಅವಕಾಶಗಳು ಸೃಷ್ಟಿ
ರಾಜ್ಯದಲ್ಲಿ ₹4,824 ಕೋಟಿ ಮೊತ್ತದ ಬಂಡವಾಳ ಹೂಡಿಕೆಗೆ ಸಮ್ಮತಿ ನೀಡಲಾಗಿದ್ದು, ಇದರಿಂದ ಮುಂದಿನ ದಿನಗಳಲ್ಲಿ 14,525 ಉದ್ಯೋಗ ಅವಕಾಶಗಳು ಸೃಷ್ಟಿಯಾಗಲಿದೆ ಎಂದು ಕೈಗಾರಿಕಾ ಸಚಿವ ಎಂಬಿ ಪಾಟೀಲ್ ಮಾಹಿತಿ ನೀಡಿದ್ದಾರೆ. ಸಕ್ಕರೆಕಾರ್ಖಾನೆ, ಐಟಿ ಮೂಲಸೌಲಭ್ಯ, ಕಂಪ್ರೆಸ್ಡ್ ಗ್ಯಾಸ್, ಟೆಕ್ನಿಕಲ್ ಟೆಕ್ಸ್ಟೈಲ್, ಚಿನ್ನಾಭರಣ ತಯಾರಿಕೆ, ವೈಮಾಂತರಿಕ್ಷ,ಎ ಲೆಕ್ಟ್ರಾನಿಕ್ಸ್, ಸಾಫ್ಟ್ವೇರ್ ಮತ್ತು ಪಂಚತಾರಾ ಹೋಟೆಲ್ ನಿರ್ಮಾಣ ಯೋಜನೆಗಳಿಗೆ ನೀಡಿರುವ ಅನುಮೋದನೆಗಳಿಂದ ದೊಡ್ಡ ಪ್ರಮಾಣದಲ್ಲಿ ಉದ್ಯೋಗ ಸೃಷ್ಟಿ ಅಗಲಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಹೊಸದಿಲ್ಲಿ: ಪಶ್ಚಿಮ ಏಷ್ಯಾದಲ್ಲಿಯ ಬಿಕ್ಕಟ್ಟಿನ ನಡುವೆ ರಶ್ಯಾದ ತೈಲದ ಬಗ್ಗೆ ಅಮೆರಿಕವು ತನ್ನ ನಿಲುವು ಬದಲಿಸಿದ್ದನ್ನು ಇರಾನಿನ ವಿದೇಶಾಂಗ ಸಚಿವ ಸಯ್ಯದ್ ಅಬ್ಬಾಸ್ ಅರಾಘ್ಚಿ ಅವರು ಗೇಲಿ ಮಾಡಿದ್ದಾರೆ. ಈ ಹಿಂದೆ ರಶ್ಯಾದಿಂದ ಕಚ್ಚಾ ತೈಲ ಆಮದನ್ನು ನಿಲ್ಲಿಸುವಂತೆ ಒತ್ತಡ ಹೇರಿದ್ದ ಡೊನಾಲ್ಡ್ ಟ್ರಂಪ್ ಆಡಳಿತವು ಈಗ ಆ ದೇಶದಿಂದಲೇ ತೈಲವನ್ನು ಖರೀದಿಸುವಂತೆ ಭಾರತ ಮತ್ತು ವಿಶ್ವಾದ್ಯಂತದ ಇತರ ರಾಷ್ಟ್ರಗಳನ್ನು ಬೇಡಿಕೊಳ್ಳುತ್ತಿದೆ ಎಂದು ಅರಾಘ್ಚಿ ಶನಿವಾರ ಎಕ್ಸ್ ಪೋಸ್ಟ್ನಲ್ಲಿ ಕುಟುಕಿದ್ದಾರೆ. ರಶ್ಯಾದಿಂದ ತೈಲ ಆಮದು ನಿಲ್ಲಿಸುವಂತೆ ಅಮೆರಿಕವು ತಿಂಗಳುಗಟ್ಟಲೆ ಭಾರತವನ್ನು ಬೆದರಿಸಿತ್ತು. ಇರಾನ್ ಜೊತೆ ಎರಡು ವಾರಗಳ ಬಳಿಕ ಅದು ಈಗ ಭಾರತದ ಸೇರಿದಂತೆ ಜಗತ್ತನ್ನು ರಶ್ಯಾದ ಕಚ್ಚಾತೈಲವನ್ನು ಖರೀದಿಸುವಂತೆ ಬೇಡಿಕೊಳ್ಳುತ್ತಿದೆ ಎಂದು ಅವರು ಹೇಳಿದ್ದಾರೆ. ಇರಾನ್ ವಿರುದ್ಧದ ‘ಕಾನೂನು ಬಾಹಿರ ಯುದ್ಧ’ವನ್ನು ಬೆಂಬಲಿಸುತ್ತಿರುವುದಕ್ಕಾಗಿ ಐರೋಪ್ಯ ದೇಶಗಳನ್ನೂ ಟೀಕಿಸಿರುವ ಅರಾಘ್ಚಿ, ಪ್ರತಿಫಲವಾಗಿ ಅಮೆರಿಕವು ರಶ್ಯಾದ ವಿರುದ್ಧ ತಮ್ಮನ್ನು ಬೆಂಬಲಿಸುತ್ತದೆ ಎಂದು ಅವು ಭಾವಿಸಿದ್ದವು, ಶೋಚನೀಯ ಎಂದು ಹೇಳಿದ್ದಾರೆ. ಈ ನಡುವೆ ಮಧ್ಯಪ್ರಾಚ್ಯ ಪ್ರದೇಶದಲ್ಲಿನ ಸಂಘರ್ಷದ ನಡುವೆಯೇ ಇರಾನ್ ಭಾರತದ ಧ್ವಜವನ್ನು ಹೊತ್ತಿರುವ ಎಲ್ಪಿಜಿ ಸಾಗಣೆಯ ಎರಡು ಹಡಗುಗಳಿಗೆ ಹಾರ್ಮುಝ್ ಜಲಸಂಧಿಯ ಮೂಲಕ ಹಾದು ಹೋಗಲು ಅನುಮತಿಸಿದೆ ಎಂದು ಬಲ್ಲ ಮೂಲಗಳನ್ನು ಉಲ್ಲೇಖಿಸಿ Financial Times article ಸುದ್ದಿಸಂಸ್ಥೆಯು ವರದಿ ಮಾಡಿದೆ. ಸೌದಿ ಅರೇಬಿಯಾದ ಕಚ್ಚಾ ತೈಲವನ್ನು ಹೊತ್ತಿರುವ ತೈಲ ಟ್ಯಾಂಕರ್ ಮಾ.1ರ ಸುಮಾರಿಗೆ ಹಾರ್ಮುಝ್ ಜಲಸಂಧಿಯನ್ನು ದಾಟಿದ್ದು, ಶನಿವಾರ ಭಾರತವನ್ನು ತಲುಪುವ ನಿರಿಕ್ಷೆಯಿದೆ ಎಂದು ಸುದ್ದಿಸಂಸ್ಥೆಯು ಮೂಲಗಳನ್ನು ಉಲ್ಲೇಖಿಸಿ ವರದಿ ಮಾಡಿದೆ. ಭಾರತದಿಂದ ರಶ್ಯಾ ತೈಲ ಖರೀದಿ ಕುರಿತು ಅಮೆರಿಕ ಹೇಳಿದ್ದೇನು? ಭಾರತದಿಂದ ರಶ್ಯಾ ತೈಲ ಖರೀದಿಯ ಮುಂದುವರಿಕೆಯನ್ನು ‘ಅನಿವಾರ್ಯ’ ಎಂದು ಬಣ್ಣಿಸಿರುವ ಅಮೆರಿಕದ ವಿತ್ತಸಚಿವ ಸ್ಕಾಟ್ ಬೆಸೆಂಟ್ ಅವರು, ಪಶ್ಚಿಮ ಏಶ್ಯಾ ಸಂಘರ್ಷದಿಂದ ಉಂಟಾಗಿರುವ ಇಂಧನ ವ್ಯತ್ಯಯಗಳ ನಡುವೆ ತುರ್ತು ಪೂರೈಕೆ ಅಗತ್ಯಗಳಿಂದಾಗಿ ಭಾರತೀಯ ಸಂಸ್ಕರಣಾಗಾರಗಳಿಗೆ 30 ದಿನಗಳ ತಾತ್ಕಾಲಿಕ ವಿನಾಯಿತಿ ನೀಡಲು ನಿರ್ಧರಿಸಲಾಗಿದೆ ಎಂದು ಹೇಳಿದ್ದಾರೆ. ʼಸ್ಕೈ ನ್ಯೂಸ್ʼಗೆ ನೀಡಿರುವ ಸಂದರ್ಶನದಲ್ಲಿ ಬೆಸೆಂಟ್, ರಶ್ಯಾದ ತೈಲವನ್ನು ಹೊತ್ತ ಟ್ಯಾಂಕರ್ಗಳು ಈಗಾಗಲೇ ಸಮುದ್ರದಲ್ಲಿದ್ದು, ಅದು ಭಾರತೀಯ ಸಂಸ್ಕರಣಾಗಾರಗಳಿಗೆ ತ್ವರಿತ ಮೂಲವಾಗಿದೆ. ಹೀಗಾಗಿ ಅವು ರಶ್ಯಾದಿಂದ ತೈಲವನ್ನು ಖರೀದಿಸಲು 30 ದಿನಗಳ ಅವಕಾಶವನ್ನು ನೀಡಲಾಗಿದೆ. ಇಲ್ಲದಿದ್ದರೆ ಆ ತೈಲ ಹೇಗಿದ್ದರೂ ಚೀನಾವನ್ನು ತಲುಪುತ್ತಿತ್ತು ಎಂದು ಹೇಳಿದ್ದಾರೆ.
ಕೊಟ್ಟೂರು: ರಸ್ತೆ ಕಾಮಗಾರಿ ಅಪೂರ್ಣ
ಅಧಿಕಾರಿ ಹಾಗೂ ಶಾಸಕರ ವಿರುದ್ಧ ಜನರ ಆಕ್ರೋಶ
ಇರಾನ್ ನ ಆರ್ಥಿಕ ಜೀವನಾಡಿಯಾಗಿರುವ ತೈಲ ನಿಕ್ಷೇಪ ದ್ವೀಪ ಖಾರ್ಗ್ ಮೇಲೆ US ಭೀಕರ ದಾಳಿ ನಡೆಸಿದ್ದು, ಅಲ್ಲಿನ ಮಿಲಿಟರಿ ನೆಲೆಗಳನ್ನು ಧ್ವಂಸಗೊಳಿಸಿರುವುದಾಗಿ ಅಮೆರಿಕಾ ಅಧ್ಯಕ್ಷ ಟ್ರಂಪ್ ಘೋಷಿಸಿದ್ದಾರೆ. ಅಲ್ಲದೆ, ಈ ದ್ವೀಪದಲ್ಲಿನ ತೈಲ ಮೂಲಗಳನ್ನು ಗುರಿಯಾಗಿಸುವ ಎಚ್ಚರಿಕೆ ನೀಡಿದ್ದು, ಇದಕ್ಕೆ ಇರಾನ್ ಭೀಕರ ಪ್ರತಿಕ್ರಿಯೆಯ ಬೆದರಿಕೆ ಹಾಕಿದೆ. ಇನ್ನು, ಯುದ್ದ ಆರಂಭವಾಗಿ 2ವಾರಗಳ ಬಳಿಕ ಈ ದ್ವೀಪದ ಮೇಲೆ US ದಾಳಿ ಮಾಡಲು ಕಾರಣವೇನು? ಇರಾನ್ ಕೀರಿಟ ರತ್ನ ಎನಿಸಿಕೊಂಡಿರುವ ಈ ದ್ವೀಪ ಇರಾನ್ ಪಾಲಿಗೆಷ್ಟು ಮುಖ್ಯ? ಎಂಬ ಮಾಹಿತಿ ಇಲ್ಲಿದೆ..
ಲೇಡಿಗೋಶನ್ ನೂತನ ಆಸ್ಪತ್ರೆ ಕಟ್ಟಡ ನಿರ್ಮಾಣ ವಿವಾದ;ಗುತ್ತಿಗೆದಾರರ ಬಾಕಿ ಮೊತ್ತ ಲೋಕ ಅದಾಲತ್ನಲ್ಲಿ ಇತ್ಯರ್ಥ
ಮಂಗಳೂರು, ಮಾ.14: ನಗರದ ಪ್ರಮುಖ ಹೆರಿಗೆ ಆಸ್ಪತ್ರೆಯಾದ ಲೇಡಿಗೋಶನ್ನ ನೂತನ ಕಟ್ಟಡ ನಿರ್ಮಾಣ ಸಂದರ್ಭ ನಿರ್ಮಿತಿ ಕೇಂದ್ರದಿಂದ ಗುತ್ತಿಗೆದಾರರಿಗೆ ಪಾವತಿಯಾಗಬೇಕಿದ್ದ ಬಾಕಿ ಮೊತ್ತಕ್ಕೆ ಸಂಬಂಧಿಸಿದ ವಿವಾದವು ಲೋಕ ಅದಾಲತ್ನಲ್ಲಿ ಶನಿವಾರ ರಾಜಿಯಲ್ಲಿ ಇತ್ಯರ್ಥಗೊಂಡಿದೆ. ಬಡ್ಡಿ ಸೇರಿದಂತೆ ಗುತ್ತಿಗೆದಾರರಿಗೆ ನಿರ್ಮಿತಿ ಕೇಂದ್ರದಿಂದ ಕಕ್ಷಿದಾರ ಗುತ್ತಿಗೆದಾರರಿಗೆ ನೀಡಬೇಕಾಗಿದ್ದ ಸುಮಾರು 4 ಕೋಟಿ ರೂ. ಮೊತ್ತದ ಪರಿಹಾರ ಮೊತ್ತದ ಹಣವನ್ನು ರಾಜೀ ಸಂಧಾನದ ಮೂಲಕ ಸುಮಾರು 2 ಕೋಟಿಗೆ ಸೀಮಿತಗೊಳಿಸಿ ನೀಡುವ ಮೂಲಕ ಸಾರ್ವಜನಿಕ ಹಣ ಉಳಿತಾಯದ ಮೂಲಕ ಪ್ರಕಣವನ್ನು ಸುಖಾಂತ್ಯಗೊಳಿಸಲಾಯಿತು. ಲೇಡಿಗೋಶನ್ ಆಸ್ಪತ್ರೆಯ ನೂತನ ಕಟ್ಟಡದ ನಿರ್ಮಾಣ (2012-13ರ ಅವಧಿಯಲ್ಲಿ)ದ ವಿಚಾರದಲ್ಲಿ ಗುತ್ತಿಗೆದಾರರು ಹಾಗೂ ನಿರ್ಮಿತಿ ಕೇಂದ್ರದ ನಡುವೆ ವಿವಾದ ಏರ್ಪಟ್ಟು, ಇದನ್ನು ಮಧ್ಯಸ್ಥಿಕೆ (ಆಬ್ರಿಟ್ರೇಶನ್)ಮೂಲಕ ಬಗೆಹರಿಸಲು ವಾದಿ ಹಾಗೂ ಪ್ರತಿವಾದಿಗಳು ಬಯಸಿದ್ದರು. ಅದರಂತೆ ಜಿಲ್ಲಾ ನ್ಯಾಯಾಲಯದಲ್ಲಿ ಆಬ್ರಿಟ್ರೇಶನ್ ಮತ್ತು ಕನ್ಸಿಲೇಶನ್ ಕಾಯ್ದೆಯ ಕಲಂ 34ರ ಅಡಿ ಪರಿಶೀಲನೆಗೊಂಡು ಪ್ರಕರಣವು ಲೋಕ ಅದಾಲತ್ನಲ್ಲಿ ರಾಜೀ ಸಂಧಾನಕ್ಕೆ ಸಲ್ಲಿಕೆಯಾಗಿತ್ತು. ‘ರಾಜಿ ಇತ್ಯರ್ಥದಲ್ಲಿ ಪ್ರಕರಣ ಬಗೆಹರಿಸಲು ಉಭಯ ವಕೀಲರ ಮೂಲಕ ನಾವು ಮುಂದಾಗಿದ್ದು, ಅದರಂತೆ ದ.ಕ. ಜಿಲ್ಲಾಧಿಕಾರಿಯವರು ಕೂಡಾ ಸಂಧಾನ ಪ್ರಕ್ರಿಯೆಯಲ್ಲಿ ಭಾಗವಹಿಸುವ ಮೂಲಕ ಪರಿಹಾರ ಮೊತ್ತವನ್ನು 1,83,23,040 ರೂ.ಗಳೊಂದಿಗೆ ರಾಜಿ ಮಾಡಿಕೊಳ್ಳಲಾಗಿದೆ. ಗುತ್ತಿಗೆದಾರರಿಗೆ ನೀಡಬೇಕಾಗಿದ್ದ ಮೊತ್ತ ಸುಮಾರು 4 ಕೋಟಿ ರೂ.ಗಳಷ್ಟಿದ್ದು, ರಾಜಿಯಿಂದಾಗಿ ಅದನ್ನು ಅರ್ಧಕ್ಕೆ ಇಳಿಕೆ ಮಾಡಿರುವುದರಿಂದ ಸರಕಾರಕ್ಕೂ ಅನುಕೂಲವಾಗಿ ಪರಿಣಮಿಸಿದೆ’ ಎಂದು ಲೋಕ ಅದಾಲತ್ನಲ್ಲಿ ಶನಿವಾರ ವಿವಾದವನ್ನು ಬಗೆಹರಿಸಿದ ನಾಲ್ಕನೇ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರಾದ ಶ್ರೀಧರ್ ಗೋಪಾಲಕೃಷ್ಣ ಭಟ್ ತಿಳಿಸಿದರು. ‘ರಾಜಿ ಸಂಧಾನದ ಮೂಲಕ ಉಭಯ ಕಕ್ಷಿದಾರರು ಒಪ್ಪಿಕೊಳ್ಳುವ ಮೂಲಕ ಪ್ರಕರಣ ಬಗೆಹರಿದಿರುವುದಲ್ಲದೆ, ಸರಕಾರದ ಸಾರ್ವಜನಿಕ ಹಣವೂ ಅರ್ಧಕರ್ಧ ಉಳಿದಿದೆ. ಇದೊಂದು ವಿಶೇಷ ಪ್ರಕರಣವಾಗಿದೆ’ ಎಂದು ಪ್ರಧಾನ ಜಿಲ್ಲಾ ನ್ಯಾಯಾಧೀಶ ಬಸವರಾಜು ತಿಳಿಸಿದರು. ಪ್ರಕರಣದ ವಿವರ: 2012-13ರ ಅವಧಿಯಲ್ಲಿ ಎಂಆರ್ಪಿಎಲ್ನಿಂದ ಲೇಡಿಗೋಶನ್ ಆಸ್ಪತ್ರೆಗೆ ಹೊಸ ಕಟ್ಟಡ ನಿರ್ಮಾಣಕ್ಕಾಗಿ ಸಿಎಸ್ಆರ್ ನಿಧಿಯಡಿ 21 ಕೋಟಿ ರೂ. ಮಂಜೂರಾಗಿತ್ತು. ಎಂಆರ್ಪಿಎಲ್ನವರು ಮುಂಗಡ ನೀಡದ ಕಾರಣ ಪಿಡಬ್ಲ್ಯುಡಿ ಅಥವಾ ಇತರ ಸರಕಾರಿ ನಿರ್ಮಾಣ ಸಂಸ್ಥೆಗೆ ನೀಡಲು ಸಾಧ್ಯವಾಗದ ಕಾರಣ ನಿರ್ಮಿತಿ ಕೇಂದ್ರದ ಮೂಲಕ ಕಾಮಗಾರಿ ನಡೆಸಲು ಅಂದಿನ ಜಿಲ್ಲಾ ಮಟ್ಟದ ಸಮಿತಿ ನಿರ್ಧರಿಸಿತ್ತು. ಅದರಂತೆ ಟೆಂಡರ್ ಕರೆದು 18 ಕೋಟಿ ರೂ.ಗಳಿಗೆ ಟೆಂಡರ್ ಮಾಡಿ 9 ಕೋಟಿ ರೂ.ಗಳಿಗೆ ಗುತ್ತಿಗೆದಾರರಿಗೆ ಟೆಂಡರ್ ನೀಡಲಾಗಿತ್ತು. ಆದರೆ ಗುತ್ತಿಗೆದಾರರು 2 ವರ್ಷಗಳಲ್ಲಿ ಮುಗಿಸಬೇಕಾಗಿದ್ದ ಕಾಮಗಾರಿ ಮೂರು ವರ್ಷ ಕಳೆದರೂ ಅರ್ಧವೂ ಮುಗಿಸದ ಕಾರಣ ಅಂದಿನ ಜಿಲ್ಲಾಧಿಕಾರಿ ಹೊಸ ಗುತ್ತಿಗೆದಾರರಿಗೆ ಕಾಮಗಾರಿ ಹೊಣೆಯನ್ನು ವಹಿಸಲಾಗಿತ್ತು. ಬಳಿಕ ಕಾಮಗಾರಿ ಮುಗಿಸಿ 2ನೆ ಗುತ್ತಿಗೆದಾರರಿಗೆ ಪಾವತಿ ಆಗಿತ್ತು. ಪ್ರಥಮ ಗುತ್ತಿಗೆದಾರರ ವಿಳಂಬ ನೀತಿಯ ಹಿನ್ನೆಲೆಯಲ್ಲಿ ದಂಡದೊಂದಿಗೆ ಹಣವನ್ನು ಬಾಕಿ ಇರಿಸಲಾಗಿತ್ತು. ಗುತ್ತಿಗೆದಾರರು ನ್ಯಾಯಾಲಯದ ಮೊರೆ ಹೋಗಿದ್ದು, ನ್ಯಾಯಾಲಯ ಗುತ್ತಿಗೆದಾರರ ಪರ ಬಾಕಿ ಹಣ ನೀಡಲು ಆದೇಶಿಸಿತ್ತು. ಒಂದೂವರೆ ಕೋಟಿ ರೂ. ಬಾಕಿ ಹಣಕ್ಕೆ ಶೇ. 12ರಷ್ಟು ಬಡ್ಡಿ ಸೇರಿ ಸುಮಾರು 4 ಕೋಟಿ ರೂ.ನಷ್ಟು ಬಾಕಿಯನ್ನು ಗುತ್ತಿಗೆದಾರರಿಗೆ ನಿರ್ಮಿತಿ ಕೇಂದ್ರದಿಂದ ನೀಡಬೇಕಾಗಿತ್ತು. ಈ ಪ್ರಕರಣ ಇದೀಗ ಲೋಕ ಅದಾಲತ್ನಲ್ಲಿ 1,83 ಕೋಟಿ ರೂ. ಬಾಕಿಯನ್ನು ಗುತ್ತಿಗೆದಾರರಿಗೆ ನೀಡುವುದರೊಂದಿಗೆ ಇತ್ಯರ್ಥಗೊಂಡಿತು. ವಿಚ್ಛೇದನ ಬಯಸಿದ್ದವರು ಲೋಕ ಅದಾಲತ್ನಲ್ಲಿ ರಾಜಿ! ಪರಸ್ಪರ ಹೊಂದಾಣಿಕೆಯ ಕೊರತೆಯಿಂದ ಉಂಟಾದ ಸಮಸ್ಯೆಯಿಂದ 10 ವರ್ಷಗಳ ವೈವಾಹಿಕ ಜೀವನದಿಂದ ವಿಚ್ಛೇದನಕ್ಕೆ ಮುಂದಾಗಿದ್ದ ಜೋಡಿಯೊಂದು ನ್ಯಾಯಾಧೀಶರ ಎದುರು ಹಾರ ಬದಲಾಯಿಸಿಕೊಂಡು, ಸಿಹಿ ತಿನ್ನಿಸುವ ಮೂಲಕ ಮತ್ತೆ ದಾಂಪತ್ಯ ಜೀವನಕ್ಕೆ ಒಂದಾದ ಪ್ರಸಂಗಕ್ಕೆ ಮಂಗಳೂರು ನ್ಯಾಯಾಲಯ ಸಾಕ್ಷಿಯಾಯಿತು. ದ.ಕ. ಜಿಲ್ಲಾ ನ್ಯಾಯಾಲಯದಲ್ಲಿ ಶನಿವಾರ ಆಯೋಜಿಸಲಾದ ಲೋಕ ಅದಾಲತ್ನಲ್ಲಿ ಮಂಗಳೂರಿನ ಈ ಜೋಡಿ ನ್ಯಾಯಾಧೀಶರಾದ ಲಕ್ಷ್ಮೀ ನಾರಾಯಣ ಭಟ್ ಅವರ ಸಮ್ಮುಖದಲ್ಲಿ ರಾಜೀ ಸಂಧಾನದ ಮೂಲಕ ದಾಂಪತ್ಯ ಜೀವನದಲ್ಲಿ ಮುಂದುವರಿಯಲು ಒಪ್ಪಿಕೊಂಡಿದ್ದಾರೆ. ಪುಟ್ಟ ಮಗುವನ್ನೂ ಹೊಂದಿರುವ ಜೋಡಿಯ ದಾಂಪತ್ಯದಲ್ಲಿ ಕಾಣಿಸಿಕೊಂಡ ಬಿರುಕಿನಿಂದ ಕಳೆದ ಮೂರು ವರ್ಷಗಳಿಂದ ಬೇರ್ಪಟ್ಟಿದ್ದರು. ತನ್ನ ಹಾಗೂ ಮಗುವಿನ ಭವಿಷ್ಯದ ದೃಷ್ಟಿಯಿಂದ ಜೀವನಾಂಶಕ್ಕೆ ಪರಿಹಾರ ನೀಡುವಂತೆ ಕೋರಿ ಪತ್ನಿ ನ್ಯಾಯಾಲಯದ ಮೆಟ್ಟಿಲೇರಿದ್ದು, ಲೋಕ ಅದಾಲತ್ನಲ್ಲಿ ರಾಜಿಯೊಂದಿಗೆ ತಮ್ಮ ವೈವಾಹಿಕ ಜೀವನ ಮುಂದುವರಿಸಲು ಒಪ್ಪಿಕೊಂಡಿರುವುದಾಗಿ ನ್ಯಾಯ ಸಂಧಾನ ನಡೆಸಿರುವ ನ್ಯಾಯಾಧೀಶರು ತಿಳಿಸಿದ್ದಾರೆ. ಲೋಕ ಅದಾಲತ್ನಲ್ಲಿ ಈ ದಿನ ಇಂತಹ ಮೂರು ವಿಚ್ಚೇದನ ಪ್ರಕರಣಗಳು ರಾಜೀ ಸಂಧಾನಕ್ಕೆ ನಿಗದಿಯಾಗಿದ್ದು, ಎರಡು ಪ್ರಕರಣಗಳು ಬಗೆಹರಿದಿವೆ ಎಂದು ಹಿರಿಯ ಜಿಲ್ಲಾ ನಾಯಾಧೀಶರು ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಜೈಬುನ್ನಿಸಾ ತಿಳಿಸಿದ್ದಾರೆ.
ಹಕ್ಕಿಗಳ ದಾಹ ತಣಿಸುತ್ತಿರುವ ಗಿರಿನಾಡಿನ ‘ಪಕ್ಷಿ ಪ್ರೇಮಿ’
ಕೆಂಭಾವಿ: ರಾಜ್ಯಾದ್ಯಂತ ಸೂರ್ಯನ ತಾಪ ದಿನದಿಂದ ದಿನಕ್ಕೆ ಏರುತ್ತಲೇ ಇದೆ. ತೇವಾಂಶ ಕಡಿಮೆಯಾಗಿ ಉಷ್ಣಾಂಶದಲ್ಲಿ ಭಾರಿ ಏರಿಕೆಯಾಗಿರುವುದರಿಂದ ಮನುಷ್ಯರು ಮಾತ್ರವಲ್ಲದೆ, ಮೂಕಪ್ರಾಣಿ ಮತ್ತು ಪಕ್ಷಿಗಳು ನೀರಿಲ್ಲದೆ ತತ್ತರಿಸುತ್ತಿವೆ. ಈ ಕಠಿಣ ಪರಿಸ್ಥಿತಿಯಲ್ಲಿ ಯಾದಗಿರಿ ಜಿಲ್ಲೆಯ ಕೆಂಭಾವಿ ಪಟ್ಟಣದ ಇಲ್ಯಾಸ್ ಪಟೇಲ್ ಅವರು ಪ್ರಾಣಿ-ಪಕ್ಷಿಗಳಿಗೆ ನೀರುಣಿಸುವ ಮೂಲಕ ಮಾನವೀಯತೆ ಮೆರೆಯುತ್ತಿದ್ದಾರೆ. ಬತ್ತಿದ ಕೆರೆಗಳು - ಕಂಗಾಲಾದ ಜೀವಿಗಳು: ಹಿಂದೆ ಹಳ್ಳ-ಕೊಳ್ಳಗಳು, ಕೆರೆ-ಕುಂಟೆಗಳು ಸಮೃದ್ಧವಾಗಿರುತ್ತಿದ್ದವು. ಆದರೆ ಇಂದು ನಗರೀಕರಣ ಹಾಗೂ ಮಳೆಯ ಅಭಾವದಿಂದ ಜಲಮೂಲಗಳು ಬರಿದಾಗಿವೆ. ಬಿಸಿಲಿನ ಝಳಕ್ಕೆ ಹಾರಾಡುವ ಹದ್ದು, ಕಾಗೆ, ಪಾರಿವಾಳಗಳು ಬಸವಳಿದು ನೆಲಕ್ಕೆ ಬೀಳುತ್ತಿವೆ. ಇಂತಹ ಸಂದಿಗ್ಧ ಸಮಯದಲ್ಲಿ ಇಲ್ಯಾಸ್ ಪಟೇಲ್ ಅವರ ಈ ಸೇವೆ ಪ್ರಕೃತಿ ಸಂರಕ್ಷಣೆಗೆ ದೊಡ್ಡ ಕೊಡುಗೆಯಾಗಿದೆ. ಇಲ್ಯಾಸ್ ಪಟೇಲ್ ಅವರ ವಿಶಿಷ್ಟ ಸೇವೆ: ಸದಾ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿರುವ ಪಟೇಲ್ ಅವರು ತಮ್ಮದೇ ಆದ ವಿಶಿಷ್ಟ ಶೈಲಿಯಲ್ಲಿ ಈ ಸೇವೆಯನ್ನು ಆರಂಭಿಸಿದ್ದಾರೆ. ಬಾಟಲಿಗಳ ಮರುಬಳಕೆ: ಸಾರ್ವಜನಿಕರು ಬಳಸಿ ಬಿಸಾಡಿದ ಪ್ಲಾಸ್ಟಿಕ್ ಬಾಟಲಿಗಳನ್ನು ಸಂಗ್ರಹಿಸಿ, ಅವುಗಳಲ್ಲಿ ನೀರು ತುಂಬಿಸಿ ಪಕ್ಷಿಗಳಿಗೆ ಕುಡಿಯಲು ಅನುಕೂಲ ಮಾಡಿಕೊಡುತ್ತಿದ್ದಾರೆ.ಆ ಮೂಲಕ, ಪಕ್ಷಿಗಳಿಗೆ ಕೇವಲ ನೀರುಣಿಸುವುದು ಮಾತ್ರವಲ್ಲದೆ, ಪ್ಲಾಸ್ಟಿಕ್ ತ್ಯಾಜ್ಯವನ್ನು ಸಮರ್ಪಕವಾಗಿ ಬಳಸಿ ಪರಿಸರ ಕಾಳಜಿಯನ್ನೂ ಪ್ರದರ್ಶಿಸುತ್ತಿದ್ದಾರೆ. ಪ್ರತಿ ದಿನವೂ ಈ ಕಾಯಕವನ್ನು ನಿರಂತರವಾಗಿ ಮಾಡುತ್ತಾ, ಪಕ್ಷಿ ಸಂಕುಲಜಕ್ಕೆ ದಾಹ ತಣಿಸಲು ತಮ್ಮ ಅಳಿಲು ಸೇವೆ ಮಾಡುತ್ತಿದ್ದಾರೆ. ಸಮಾಜಕ್ಕೆ ಮಾದರಿ ಇಲ್ಯಾಸ್ ಪಟೇಲ್ ಅವರ ಈ ಕಾರ್ಯವು ಕೇವಲ ಒಂದು ಸೇವೆಯಲ್ಲ, ಅದು ಸಮಾಜಕ್ಕೆ ಒಂದು ಸಂದೇಶ. ಪ್ರತಿಯೊಬ್ಬರೂ ತಮ್ಮ ಮನೆಯ ತಾರಸಿ ಮೇಲೆ ಅಥವಾ ಅಂಗಳದಲ್ಲಿ ಒಂದು ಪಾತ್ರೆ ನೀರು ಇಟ್ಟರೆ, ಸಾವಿರಾರು ಪಕ್ಷಿಗಳ ಜೀವ ಉಳಿಸಬಹುದು ಎಂಬುದು ಇವರ ಆಶಯ. ಪ್ರಕೃತಿಯಲ್ಲಿರುವ ಜೀವ ಸಂಕುಲ ಉಳಿಸುವುದು ನಮ್ಮೆಲ್ಲರ ಕರ್ತವ್ಯ. ನನ್ನ ಪುಟ್ಟ ಕಾರ್ಯದಿಂದ ಪಕ್ಷಿಗಳ ದಾಹ ತೀರುವುದು ಸಂತೋಷ ನೀಡುತ್ತದೆ. ಇದು ಇತರರಿಗೂ ಪ್ರೇರಣೆಯಾದರೆ, ಸಂತೋಷ. -ಇಲ್ಯಾಸ್ ಪಟೇಲ್
ವ್ಯಾಸನ ತಾಂಡಾ: ‘ಸೋರುತಿಹುದು ಶಾಲಾ ಮಾಳಿಗಿ’
ಸರಕಾರಿ ಶಾಲಾ ವಿದ್ಯಾರ್ಥಿಗಳಿಗೆ ಬಯಲು ಶೌಚವೇ ಗತಿ!
ಯುಕೆಪಿ ಯೋಜನೆಗೆ ಆಂಧ್ರ ತಕರಾರು ಬಗ್ಗೆ ಕರ್ನಾಟಕದ ಸಂಸದರ ಜತೆ ದಿಲ್ಲಿಯಲ್ಲಿ ಸಭೆ : ಡಿಸಿಎಂ ಡಿ.ಕೆ. ಶಿವಕುಮಾರ್
ಬಾಗಲಕೋಟೆ: “ರಾಜ್ಯದ ಪ್ರಮುಖ ನೀರಾವರಿ ಯೋಜನೆಗಳಲ್ಲಿ ಒಂದಾದ ಯುಕೆಪಿ 3ನೇ ಹಂತಕ್ಕೆ ತಕರಾರು ಎತ್ತಿರುವ ಹಾಗೂ ತುಂಗಭದ್ರಾ ಅಣೆಕಟ್ಟಿನ ನೀರು ಪೋಲು ತಡೆಯಲು ಸಹಕಾರ ನೀಡದಿರುವ ಆಂಧ್ರ ಪ್ರದೇಶದ ನಡೆ ವಿರುದ್ಧ ಧ್ವನಿ ಎತ್ತಿ, ಕೇಂದ್ರ ಸರಕಾರದ ಮೇಲೆ ಒತ್ತಡ ಹೇರುವ ಹಿನ್ನೆಲೆಯಲ್ಲಿ ರಾಜ್ಯದ ಸಂಸದರ ಜತೆ ದಿಲ್ಲಿಯ ಕರ್ನಾಟಕ ಭವನದಲ್ಲಿ ಬರುವ ಮಂಗಳವಾರ ಸಭೆ ನಡೆಸಲಾಗುವುದು” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ತಿಳಿಸಿದರು. ಬಾಗಲಕೋಟೆಯಲ್ಲಿ ಮಾಧ್ಯಮಗಳಿಗೆ ಶನಿವಾರ ಪ್ರತಿಕ್ರಿಯೆ ನೀಡಿದರು. “ಕೃಷ್ಣಾ ಮೇಲ್ದಂಡೆ ಯೋಜನೆ ಅನುಷ್ಠಾನ ಹಾಗೂ ಭೂಸ್ವಾಧೀನ ಪ್ರಕ್ರಿಯೆ ಮಾಡಬಾರದು ಎಂದು ಆಂಧ್ರ ಪ್ರದೇಶದವರು ಕೇಂದ್ರ ಸರಕಾರಕ್ಕೆ ಆಕ್ಷೇಪಣಾ ಪತ್ರ ಬರೆದಿದ್ದು, ಈ ವಿಚಾರವಾಗಿ ಕೇಂದ್ರ ಸರಕಾರ ನಮಗೆ ಪತ್ರ ಬರೆದು ಸ್ಪಷ್ಟನೆ ಕೇಳಿದೆ. ನ್ಯಾಯಾಧೀಕರಣ ಆದೇಶದ ಪ್ರಕಾರ ನಮ್ಮ ಪಾಲಿನ ನೀರಿನ ಬಳಕೆಗೆ ಯೋಜನೆ ಮಾಡುತ್ತಿದ್ದು, ಈಗಾಗಲೇ 26 ಸಾವಿರ ಕೋಟಿ ರೂ. ಮೊತ್ತದ ಕಾಮಗಾರಿಗಳನ್ನು ಆರಂಭಿಸಿದ್ದೇವೆ” ಎಂದು ಡಿಸಿಎಂ ಅವರು ವಿವರಿಸಿದರು. “ನಾವು ಈಗಲೇ ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳ ಮಾಡುತ್ತಿಲ್ಲ. 2010 ರಲ್ಲಿ ಆಗಿರುವ ಆದೇಶದ ಅನುಸಾರ ನಮ್ಮ ಪಾಲಿನ ನೀರು ಬಳಕೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ. ಇದಕ್ಕೆ ಆಂಧ್ರ ಪ್ರದೇಶ ಸರಕಾರ ತಗಾದೆ ತೆಗೆದಿದೆ. ಇದರ ಜತೆಗೆ, ತುಂಗಭದ್ರಾ ಅಣೆಕಟ್ಟೆಯಿಂದ ನಮಗೆ 30 ಟಿಎಂಸಿ ನೀರು ವ್ಯರ್ಥವಾಗುತ್ತಿದ್ದು, ಇದಕ್ಕೆ ಪರ್ಯಾಯ ಮಾರ್ಗ ಕಂಡುಕೊಳ್ಳಲು ಆಂಧ್ರ ಸರಕಾರ ನಮಗೆ ಸಹಕಾರ ನೀಡುತ್ತಿಲ್ಲ. ಈ ಎಲ್ಲಾ ವಿಚಾರಗಳ ಬಗ್ಗೆ ನಮ್ಮ ಸಂಸದರ ಜತೆ ಚರ್ಚೆ ಮಾಡಿ, ಕೇಂದ್ರ ಸರಕಾರದ ಮೇಲೆ ಒತ್ತಡ ಹಾಕಲು ನಾನು, ಸಚಿವರಾದ ಎಚ್.ಕೆ ಪಾಟೀಲ್, ಎಂ.ಬಿ. ಪಾಟೀಲ್, ಬೋಸರಾಜು ಅವರು ಮಂಗಳವಾರ ದಿಲ್ಲಿಗೆ ಹೋಗುತ್ತಿದ್ದೇವೆ” ಎಂದು ತಿಳಿಸಿದರು.
ಅಧಿಕಾರಿ, ಜನಪ್ರತಿನಿಧಿಗಳ ನಿರ್ಲಕ್ಷ್ಯ: ಹಟ್ಟಿ ಪಟ್ಟಣಕ್ಕೆ ತಪ್ಪದ ನೀರಿನ ಬವಣೆ
ಯಾರ ಜೇಬು ಸೇರಿತು ಕೋಟಿ ಕೋಟಿ ರೂ. ಅನುದಾನ?
ಜಪಾನ್ ಸಮುದ್ರದತ್ತ ಉತ್ತರ ಕೊರಿಯಾದಿಂದ 10 ಬ್ಯಾಲಿಸ್ಟಿಕ್ ಕ್ಷಿಪಣಿಗಳ ಉಡಾವಣೆ
ಸಿಯೋಲ್: ಪ್ರಾದೇಶಿಕ ಮಿಲಿಟರಿ ಉದ್ವಿಗ್ನತೆಯ ನಡುವೆಯೇ ಉತ್ತರ ಕೊರಿಯಾ ಜಪಾನ್ ಸಮುದ್ರದ ದಿಕ್ಕಿನಲ್ಲಿ ಸುಮಾರು ಹತ್ತು ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಹಾರಿಸಿದೆ ಎಂದು ದಕ್ಷಿಣ ಕೊರಿಯಾದ ಜಂಟಿ ಮುಖ್ಯಸ್ಥರು ತಿಳಿಸಿದ್ದಾರೆ. ಸುನಾನ್ ಪ್ರದೇಶದಿಂದ ಮಧ್ಯಾಹ್ನ 1.20ರ ಸುಮಾರಿಗೆ ಉಡಾಯಿಸಲಾದ ಕ್ಷಿಪಣಿಗಳು ಪೂರ್ವ ಸಮುದ್ರದತ್ತ ಸಾಗುತ್ತಿರುವುದನ್ನು ಪತ್ತೆ ಹಚ್ಚಲಾಗಿದೆ. ದಕ್ಷಿಣ ಕೊರಿಯಾ ಮತ್ತು ಅಮೆರಿಕ ನಡೆಸುತ್ತಿರುವ ವಾರ್ಷಿಕ ಮಿಲಿಟರಿ ಕವಾಯತುಗಳ ಕುರಿತು ಭಯಾನಕ ಪರಿಣಾಮಗಳು ಎದುರಾಗಬಹುದು ಎಂದು ಪ್ಯೊಂಗ್ಯಾಂಗ್ ಎಚ್ಚರಿಕೆ ನೀಡಿದ ನಂತರವೇ ಈ ಉಡಾವಣೆ ನಡೆದಿದೆ. ಸಿಯೋಲ್ನ ಸಂಕ್ಷಿಪ್ತ ಮಿಲಿಟರಿ ಹೇಳಿಕೆಯಲ್ಲಿ ಉಡಾವಣೆಯನ್ನು ದೃಢಪಡಿಸಿದರೂ, ಬಳಸಿದ ಕ್ಷಿಪಣಿಗಳ ಪ್ರಕಾರ ಅಥವಾ ಅವುಗಳ ವ್ಯಾಪ್ತಿಯ ಬಗ್ಗೆ ತಕ್ಷಣ ಹೆಚ್ಚಿನ ವಿವರಗಳನ್ನು ನೀಡಲಾಗಿಲ್ಲ. ಜಪಾನ್ ನ ಕೋಸ್ಟ್ ಗಾರ್ಡ್, ರಕ್ಷಣಾ ಸಚಿವಾಲಯದ ಮಾಹಿತಿಯನ್ನು ಉಲ್ಲೇಖಿಸಿ, ಸ್ಥಳೀಯ ಸಮಯ ಮಧ್ಯಾಹ್ನ 1.30ರ ಸುಮಾರಿಗೆ ಉತ್ತರ ಕೊರಿಯಾದಿಂದ ಬ್ಯಾಲಿಸ್ಟಿಕ್ ಕ್ಷಿಪಣಿಯಂತೆ ಕಾಣುವ ವಸ್ತುವನ್ನು ಉಡಾಯಿಸಲಾಗಿದೆ ಎಂದು ತಿಳಿಸಿದೆ. ಕ್ಷಿಪಣಿಗಳು ಜಪಾನ್ ನ ವಿಶೇಷ ಆರ್ಥಿಕ ವಲಯದ ಹೊರಭಾಗದಲ್ಲಿರುವ ಸಮುದ್ರದಲ್ಲಿ ಬಿದ್ದಿರಬಹುದು ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ. ಪರಿಸ್ಥಿತಿಯನ್ನು ಅವಲೋಕಿಸಲು ಹಾಗೂ ಯಾವುದೇ ಹಾನಿ ಸಂಭವಿಸಿದ್ದೇ ಎಂಬುದನ್ನು ಪರಿಶೀಲಿಸಲು ಟೋಕಿಯೊದಲ್ಲಿನ ಪ್ರಧಾನ ಮಂತ್ರಿಯ ಬಿಕ್ಕಟ್ಟು ನಿರ್ವಹಣಾ ಕೇಂದ್ರದಲ್ಲಿ ತುರ್ತು ಪ್ರತಿಕ್ರಿಯೆ ತಂಡವನ್ನು ರಚಿಸಲಾಗಿದೆ. ಇದೇ ವೇಳೆ, ಅಮೆರಿಕ ಒಳಗೊಂಡ ಹೊಸ ರಾಜತಾಂತ್ರಿಕ ಚಟುವಟಿಕೆಗಳ ನಡುವೆಯೇ ಈ ಉಡಾವಣೆ ನಡೆದಿದೆ. ವಾಷಿಂಗ್ಟನ್ ನಲ್ಲಿ ಉತ್ತರ ಕೊರಿಯಾದ ನಾಯಕ ಕಿಮ್ ಜಾಂಗ್ ಉನ್ ಅವರೊಂದಿಗೆ ನಡೆಯುವ ಸಾಧ್ಯತೆಯ ಸಭೆ ಉತ್ತಮವಾಗಿರಬಹುದು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ ಎಂದು ದಕ್ಷಿಣ ಕೊರಿಯಾದ ಪ್ರಧಾನಿ ಕಿಮ್ ಮಿನ್-ಸಿಯೋಕ್ ತಿಳಿಸಿದ್ದಾರೆ.
ಮೌನವಲ್ಲ ಹೋರಾಟ – ಮಹಿಳೆಯರಿಗೆ ನ್ಯಾಯ: ರಾಜ್ಯಾದ್ಯಂತ ಮಹಿಳಾ ದಿನಾಚರಣೆ
ಬೆಂಗಳೂರು: ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ವಿಮೆನ್ ಇಂಡಿಯಾ ಮೂವ್ಮೆಂಟ್ ಕರ್ನಾಟಕದ ವತಿಯಿಂದ “ಮೌನವಲ್ಲ ಹೋರಾಟ – ಮಹಿಳೆಯರಿಗೆ ನ್ಯಾಯ” ಎಂಬ ಘೋಷಣೆಯೊಂದಿಗೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಯಿತು. ಮಹಿಳೆಯರ ಹಕ್ಕುಗಳು, ಸುರಕ್ಷತೆ ಮತ್ತು ಗೌರವವನ್ನು ಕೇಂದ್ರಬಿಂದುವಾಗಿಟ್ಟುಕೊಂಡು ರಾಜ್ಯದ ಹಲವು ಜಿಲ್ಲೆಗಳಲ್ಲಿ ಜಾಗೃತಿ ಕಾರ್ಯಕ್ರಮಗಳು, ಸಭೆಗಳು, ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡ ಸಾಧಕರಿಗೆ ಸನ್ಮಾನ, ವೃದ್ಧಾಶ್ರಮಗಳಿಗೆ ಭೇಟಿ, ರೋಗಿಗಳಿಗೆ ಹಣ್ಣು ಹಂಪಲು ವಿತರಣೆ ಸೇರಿದಂತೆ ವಿವಿಧ ಸೇವಾ ಕಾರ್ಯಗಳು ನಡೆದವು. ಇದೇ ಸಂದರ್ಭದಲ್ಲಿ ಮಹಿಳಾ ದೌರ್ಜನ್ಯದ ವಿರುದ್ಧ ಪೊಲೀಸ್ ಅಧೀಕ್ಷಕರಿಗೆ ಮನವಿ ಪತ್ರ ಸಲ್ಲಿಸಲಾಯಿತು. ಮಹಿಳೆಯರ ಹಕ್ಕುಗಳು ಮತ್ತು ಗೌರವದ ಕುರಿತಾಗಿ ವಿಚಾರ ಸಂಕಿರಣಗಳನ್ನು ಆಯೋಜಿಸಲಾಗಿದ್ದು, ಮಹಿಳೆಯರ ಅರಿವು ಮತ್ತು ಆತ್ಮವಿಶ್ವಾಸವನ್ನು ಹೆಚ್ಚಿಸುವ ಉದ್ದೇಶದಿಂದ ಕ್ವಿಜ್ ಸ್ಪರ್ಧೆಗಳನ್ನೂ ನಡೆಸಲಾಯಿತು. ಸರ್ಕಾರವು ಎಲ್ಲಾ ವಯೋಮಾನದ ಮಹಿಳೆಯರಿಗೆ ಸ್ವರಕ್ಷಣಾ ತರಬೇತಿ ಯೋಜನೆ ರೂಪಿಸಬೇಕು, ಮಹಿಳೆಯರ ರಕ್ಷಣೆಗೆ ಸಂಬಂಧಿಸಿದ ಕಾನೂನುಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕು ಹಾಗೂ ಮಹಿಳೆಯರು ದುರ್ಬಲರೆಂಬ ಮನೋಭಾವವನ್ನು ಬದಲಿಸಿ ರಾಜಕೀಯ ಮತ್ತು ಆಡಳಿತದಲ್ಲಿ ಸಮಾನ ಪ್ರಾತಿನಿಧ್ಯ ಒದಗಿಸಬೇಕು ಎಂದು ಕಾರ್ಯಕ್ರಮದ ವೇಳೆ ಒತ್ತಾಯಿಸಲಾಯಿತು. ರಾಜ್ಯಾದ್ಯಂತ ನಡೆದ ಈ ಕಾರ್ಯಕ್ರಮಗಳಲ್ಲಿ ಸಂಘಟನೆಯ ರಾಷ್ಟ್ರೀಯ, ರಾಜ್ಯ, ಜಿಲ್ಲಾ ಮಟ್ಟದ ನಾಯಕಿಯರು ಹಾಗೂ ಕಾರ್ಯಕರ್ತೆಯರು ಭಾಗವಹಿಸಿದ್ದರು.
ಉಪ್ಪಿನಂಗಡಿ: ಕೋಳಿ ಅಂಕಕ್ಕೆ ದಾಳಿ; ಐವರ ವಿರುದ್ಧ ಪ್ರಕರಣ ದಾಖಲು
ಉಪ್ಪಿನಂಗಡಿ: ಬೆಳ್ತಂಗಡಿ ತಾಲೂಕಿನ ಕರಾಯ ಗ್ರಾಮದ ಶೆಟ್ಟಿಕೋಡಿ ಎಂಬಲ್ಲಿ ಅಕ್ರಮವಾಗಿ ನಡೆಯುತ್ತಿದ್ದ ಕೋಳಿ ಅಂಕಕ್ಕೆ ದಾಳಿ ನಡೆಸಿದ ಪೊಲೀಸರು ಐವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ನಾಲ್ಕು ಹುಂಜಗಳನ್ನು ವಶಕ್ಕೆ ಪಡೆದಿದ್ದಾರೆ. ಕೊಡಂಬೆಟ್ಟು ಗ್ರಾಮದ ಮುಗೇರ ಮನೆಯ ಅಂಕಿತ್, ಉರುಡಾಯಿ ನಿವಾಸಿ ಯಶೋಧರ, ಮುಗೇರ ಮನೆಯ ಶಿವಪ್ಪ, ತಣ್ಣೀರುಪಂಥ ಗ್ರಾಮದ ಮುಂದಿ ಮನೆಯ ಕರುಣಾಕರ ಪೂಜಾರಿ, ಮಚ್ಚಿನ ಗ್ರಾಮದ ಮಡಕ್ಕಿಲ ಮನೆಯ ಉಮೇಶ ಅವರ ಮೇಲೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಸ್ಥಳದಿಂದ ನಾಲ್ಕು ಅಂಕದ ಹುಂಜ, ಜೂಜಾಟಕ್ಕೆ ಬಳಸಿದ 2,500 ರೂ. ನಗದು, ಎರಡು ಕೋಳಿ ಬಾಳು, ಒಂದು ಅಟೋ ರಿಕ್ಷಾವನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಶೆಟ್ಟಿಕೋಡಿ ಎಂಬಲ್ಲಿ ಮೈದಾನವೊಂದರಲ್ಲಿ ಮಾ.13ರಂದು ಕೋಳಿ ಅಂಕ ನಡೆಯುತ್ತಿದ್ದ ಸಂದರ್ಭ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿರುವ ಪ್ರೊಬೆಷನರಿ ಐಪಿಎಸ್ ಅನನ್ಯ ಶ್ರೀವತ್ಸವ್ ಅವರ ನೇತೃತ್ವದಲ್ಲಿ ಈ ದಾಳಿ ನಡೆಸಲಾಗಿದೆ.
ಇರಾನ್ ಸೇನೆಯನ್ನ ಹೇಗಾದರೂ ಮಾಡಿ ಸೈಲೆಂಟ್ ಮಾಡಬೇಕು ಹಾಗೂ ಈ ಮೂಲಕ ಯುದ್ಧದಲ್ಲಿ ಗೆಲುವು ಕಾಣಬೇಕು ಎಂದು ಇಸ್ರೇಲ್ ಮತ್ತು ಅಮೆರಿಕ ಶಪಥ ಮಾಡಿವೆ. ಹೀಗಾಗಿ ಅಮೆರಿಕ ಅಧ್ಯಕ್ಷ ಟ್ರಂಪ್ ಅವರು ಸಾಲು ಸಾಲು ಸಭೆಗಳನ್ನ ನಡೆಸುತ್ತಾ, ಇರಾನ್ ದೇಶದ ಈಗಿನ ಪರಿಸ್ಥಿತಿ ಕುರಿತಾಗಿ ಮಾಹಿತಿ ಪಡೆಯುತ್ತಿದ್ದಾರೆ. ಅಲ್ಲದೆ ಯಾವುದೇ ಕ್ಷಣದಲ್ಲಿ ನೇರವಾಗಿ ಇರಾನ್ ಮೇಲೆ ಯುದ್ಧ
ಆನ್ ಲೈನ್ ಗೇಮ್ ಎಂಬ ಅಪಾಯ: ರಾಜ್ಯದಲ್ಲಿ 4 ವರ್ಷದಲ್ಲಿ 5 ಮಕ್ಕಳ ಬಲಿ
ರಾಜ್ಯದಲ್ಲಿ ಆನ್ಲೈನ್ ಗೇಮ್ನಿಂದ ವಿದ್ಯಾರ್ಥಿಗಳು, ಯುವಕರು, ಮಕ್ಕಳು ಹಾಗೂ ಸಾರ್ವಜನಿಕರನ್ನು ರಕ್ಷಿಸಲು ಕೆಳಕಂಡ ಕಠಿಣ ಕ್ರಮಗಳನ್ನು ಅನುಸರಿಸಲಾಗುತ್ತಿದೆ. ಪೊಲೀಸ್ ಅಧಿಕಾರಿ/ಸಿಬ್ಬಂಧಿಗಳು ಶಾಲಾ-ಕಾಲೇಜುಗಳಿಗೆ ಭೇಟಿ ನೀಡಿ ಅವೇರ್ನೆಸ್ ಪ್ರೋಗ್ರಾಮ್ ನಡೆಸಿ ಆನ್ಲೈನ್ ಗೇಮಿಂಗ್ ನಿಂದ ಆಗುವ ದುಷ್ಪರಿಣಾಮದ ಬಗ್ಗೆ ಉಪನ್ಯಾಸ ನೀಡುತ್ತಿದ್ದಾರೆ. ಈ ಮೂಲಕ ವಿದ್ಯಾರ್ಥಿಗಳಲ್ಲಿ ಅರಿವು ದೃಶ್ಯರೂಪಕಗಳ ಮೂಡಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಬೀಟ್ಗಳಲ್ಲಿ ಯುವಕರು ಹಾಗೂ ಸಾರ್ವಜನಿಕರೊಂದಿಗೆ ಸಭೆ ನಡೆಸಿ ಯಾವುದೇ ತರಹದ ಆನ್ಲೈನ್ ಗೇಮ್ಸ್ ಮತ್ತು ಆನ್ಲೈನ್ ಜೂಜುಗಳ ಚಟಕ್ಕೆ ಒಳಗಾಗದಂತೆ ಎಚ್ಚರಿಕೆ ನೀಡಲಾಗುತ್ತಿದೆ.
ಬೀರೂರು : ತಂದೆಯ ಅಂತ್ಯಸಂಸ್ಕಾರ ನೆರವೇರಿಸಿದ ಹೆಣ್ಣುಮಕ್ಕಳು
ತಂದೆ ತಾಯಿಯರ ಅಂತಿಮ ಸಂಸ್ಕಾರವನ್ನು ಗಂಡು ಮಕ್ಕಳು ಮಾಡುವುದು ಸಾಮಾನ್ಯ. ಹೆಣ್ಣು ಮಕ್ಕಳಿಗೆ ಅವಕಾಶ ಕೊಡುವುದು ಕೆಲವು ಸಂಪ್ರದಾಯಗಳಲ್ಲಿ, ಸಮಾಜಗಳಲ್ಲಿ ಇಲ್ಲ. ಇಲ್ಲಿ ಹೆಣ್ಣು ಮಕ್ಕಳು ತಂದೆಯ ಅಂತ್ಯಸಂಸ್ಕಾರವನ್ನು ತಾವೇ ನೆರವೇರಿಸುವ ಮೂಲಕ ಲಿಂಗಸಮಾನತೆಯ ಸಂದೇಶವನ್ನು ಸಾರಿದ್ದಾರೆ. ಬೀರೂರು ಪಟ್ಟಣದಲ್ಲಿ ಈ ಘಟನೆ ನಡೆದಿದೆ.
Kalaburagi | ಚಿಂಚೋಳಿ ವನ್ಯಜೀವಿ ಧಾಮದಲ್ಲಿ ಜೀಪ್ ಸಫಾರಿ ಮತ್ತು ಬೋಟಿಂಗ್ಗೆ ಸಚಿವ ಪ್ರಿಯಾಂಕ್ ಖರ್ಗೆ ಚಾಲನೆ
ಕಲಬುರಗಿ : ಚಂದ್ರಂಪಳ್ಳಿ ಜಲಾಶಯ, ಗೊಟ್ಟಂಗೊಟ್ಟ, ಎತ್ತಿಪೊತ್ತ ಜಲಪಾತ ಸೇರಿದಂತೆ ದಟ್ಟ ಅರಣ್ಯದೊಂದಿಗೆ ವನ್ಯಜೀವಿ ತಾಣವಾಗಿರುವ ಜಿಲ್ಲೆಯ ಚಿಂಚೋಳಿಯನ್ನು ಮುಂದಿನ ಒಂದೂವರೆ ವರ್ಷದಲ್ಲಿ ಮಿನಿ ಪ್ರವಾಸಿ ಸರ್ಕ್ಯೂಟ್ ಮಾಡಲಾಗುವುದು ಎಂದು ರಾಜ್ಯದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಐ.ಟಿ-ಬಿ.ಟಿ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು. ಶನಿವಾರ ಚಿಂಚೋಳಿ ತಾಲೂಕಿನ ಚಂದ್ರಂಪಳ್ಳಿಯಲ್ಲಿ ಅರಣ್ಯ ಜೀಪ್ ಸಫಾರಿ ಹಾಗೂ ಚಂದ್ರಂಪಳ್ಳಿ ಜಲಾಶಯದಲ್ಲಿ ದೋಣಿ ವಿಹಾರ ಉದ್ಘಾಟಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚಿಂಚೋಳಿ ಸುತ್ತಮುತ್ತವಿರುವ 8-10 ಪ್ರವಾಸಿ ತಾಣಗಳನ್ನು ಸರ್ಕ್ಯೂಟ್ ನಲ್ಲಿ ಸೆರಿಸಲಾಗುವುದು. ಪ್ರವಾಸಿಗರು ಒಂದು ದಿನದ ಪ್ಯಾಕೇಜ್ ನಡಿ ಇದನೆಲ್ಲ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗುವುದು. ಕೆ.ಎಸ್.ಟಿ.ಡಿ.ಸಿ. ಯಿಂದ ಪ್ಯಾಕೇಜ್ ಟೂರ್ ವ್ಯವಸ್ಥೆ ಸಹ ಜಾರಿಗೆ ತರಲಾಗುವುದು ಎಂದರು. ಚಿಂಚೋಳಿ ಸುತ್ತಮುತ್ತ ಪ್ರಾಕೃತಿಕ ತಾಣಗಳ ಸೌಂದರ್ಯ ಸವೆಯಲು ಪ್ರವಾಸಿಗರಿಗೆ ಪೂರಕವಾಗಿ ಮೂಲಸೌಕರ್ಯ ಅಭಿವೃದ್ಧಿಪಡಿಸಲಾಗುತ್ತಿದೆ. ಈಗಾಗಲೇ ತೋಟಗಾರಿಕೆ ಇಲಾಖೆಯಿಂದ 6.50 ಕೋಟಿ ರೂ. ಮೊತ್ತದ ಡಿ.ಪಿ.ಅರ್. ಸಿದ್ದಪಡಿಸಲಾಗಿದೆ. ಪ್ರವಾಸೋದ್ಯಮ, ಅರಣ್ಯ, ಕೃಷಿ, ತೋಟಗಾರಿಕೆ ಹೀಗೆ ಎಲ್ಲಾ ಇಲಾಖೆಯ ಸಮನ್ವಯದೊಂದಿಗೆ ಬ್ಲೂಪ್ರಿಂಟ್ ಸಿದ್ದಪಡಿಸಲಾಗುವುದು. ಇನ್ನು ಈ ನಿಟ್ಟಿನಲ್ಲಿ ಶೀಘ್ರವೇ ಪ್ರವಾಸೋದ್ಯಮ ಸಚಿವರನ್ನು ಸಹ ಭೇಟಿ ಮಾಡಿ ಚರ್ಚಿಸಲಾಗುವುದು ಎಂದರು. ಅರಣ್ಯ ಜೀಪ್ ಸಫಾರಿಗೆ 24 ಲಕ್ಷ ವೆಚ್ಚದಲ್ಲಿ ಎರಡು ಕ್ಯಾಂಪರ್ ವಾಹನಗಳನ್ನು ಖರೀದಿಸಿ ಸಫಾರಿ ವಾಹನಗಳಾಗಿ ಮಾರ್ಪಡಿಸಲಾಗಿದೆ. 64 ಲಕ್ಷ ರೂ. ವೆಚ್ಚದಲ್ಲಿ ಸಫಾರಿ ರಸ್ತೆ ಅಭಿವೃದ್ಧಿಪಡಿಸಲಾಗಿದೆ. 43 ಲಕ್ಷ ರೂ. ವೆಚ್ಚದಲ್ಲಿ ಮೂಲಭೂತ ಸೌಲಭ್ಯಗಳೊಂದಿಗೆ ಗೊಟ್ಟಂಗೊಟ್ಟದಲ್ಲಿ ಎರಡು ಹೆಚ್ಚುವರಿ ಟೆಂಟ್ ಹೌಸ್ ನಿರ್ಮಿಸಲಾಗಿದೆ. 14 ಲಕ್ಷ ರೂ. ವೆಚ್ಚದಲ್ಲಿ ಮನರಂಜನಾ ಚಟುವಟಿಕೆಗಳಿಗಾಗಿ 12 ಆಸನಗಳ ಮೋಟಾರ್ ದೋಣಿ ಮತ್ತು ಎರಡು ಪೆಡಲ್ ದೋಣಿಗಳು ಮತ್ತು ಕಯಾಕ್ ಗಳನ್ನು ಒದಗಿಸಲಾಗಿದೆ. ಇದಲ್ಲದೆ ಕೆಕೆಆರ್ ಡಿಬಿಯ ಮ್ಯಾಕ್ರೋ ಅನುದಾನದಲ್ಲಿ 2 ಕೋಟಿ ರೂ. ವೆಚ್ಚದಲ್ಲಿ ಕೈಗೊಂಡಿರುವ ವಿವಿಧ ಪ್ರವಾಸೋದ್ಯಮ ಅಭಿವೃದ್ಧಿ ಕಾರ್ಯಕ್ರಮಗಳು ಹೆಚ್ಚು ಪ್ರವಾಸಿಗರನ್ನು ಆಕರ್ಷಿಸುವುದರಲ್ಲಿ ಅನುಮಾನವಿಲ್ಲ. ಇಲ್ಲಿನ ಪ್ರವಾಸೋದ್ಯಮ ಹೆಚ್ಚಿದಂತೆ ಸ್ಥಳೀಯ ಆರ್ಥಿಕತೆಗೆ ಉತ್ತೇಜನ ದೊರಕುತ್ತದೆ ಮತ್ತು ಸ್ಥಳೀಯರ ಉದ್ಯೋಗಾವಕಾಶಗಳು ಹೆಚ್ಚುತ್ತದೆ ಎಂಬ ನಂಬಿಕೆ ನಮ್ಮದು ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದರು. ಪ್ರಸಕ್ತ ವರ್ಷ ಸನ್ನತಿ, ನಾಗಾವಿ, ಮಳಖೇಡ್ ಕೋಟೆ, ಕಾಳಗಿ ಪ್ರವಾಸಿ ತಾಣಗಳಲ್ಲಿ ಮೂಲಸೌಕರ್ಯ ಅಭಿವೃದ್ದಿಪಡಿಸಲಾಗುತ್ತಿದೆ. ಕಲಬುರಗಿ ಕೋಟೆಯಲ್ಲಿನ ನಿವಾಸಿಗಳನ್ನು ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಬೇರೆಡೆ ಸ್ಥಳಾಂತರಿಸಲಾಗುತ್ತಿದ್ದು, ನಿವಾಸಿಗಳ ಮನವೊಲಿಸುವ ಕೆಲಸ ನಡೆದಿದೆ. ಮುಂದಿನ ಒಂದು ತಿಂಗಳಲ್ಲಿ ಅದು ಸಹ ಪೂರ್ಣವಾಗಲಿದೆ. ಇದರಿಂದ ಪಾರಂಪರಿಕ ಕೋಟೆ ಮತ್ತೆ ತನ್ನ ಮೆರಗಿನಿಂದ ಪ್ರವಾಸಿಗರನ್ನು ಅಕರ್ಷಿಸಲಿದೆ ಎಂದರು. ಜಂಗಲ್ ಲಾಡ್ಜೆಸ್-ರೆಸಾರ್ಟ್ ಆರಂಭ: ಇಲ್ಲಿನ ಪ್ರಕೃತಿ ಸೊಬಗನ್ನು ಆನಂದಿಸಲು ಪ್ರವಾಸಿಗರ ತಂಗಲು ಅನುಕೂಲವಾಗುವಂತೆ ಚಂದ್ರಂಪಳ್ಳಿಯಲ್ಲಿ ಜಂಗಲ್ ಲಾಡ್ಜೆಸ್ ಮತ್ತು ರೆಸಾರ್ಟ್ ಆರಂಭಿಸುವ ಚಿಂತನೆ ಇದೆ. ಎಲ್ಲದಕ್ಕೂ ಪರಿಸರ ಕ್ಲಿಯರೆನ್ಸ್ ಅಗತ್ಯವಿದ್ದು, ಅದು ಸಿಕ್ಕಿದ ಮೇಲೆ ನೀಲಿ ನಕ್ಷೆ ಸಿದ್ದಪಡಿಸಿ ಇದನ್ನೆಲ್ಲ ಅನುಷ್ಠಾನಕ್ಕೆ ತರಲಾಗುವು ಎಮದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದರು. ಬೋಟಿಂಗ್ ಗೆ 175 ರೂ.,ಸಫಾರಿಗೆ 450 ರೂ.: ಉಪ ಅರಣ್ಯ ಸಂರಕ್ಷಣಾಧಿಕಾರಿ ಸುಮಿತ್ ಪಾಟೀಲ್ ಮಾತನಾಡಿ, ಚಂದ್ರಂಪಳ್ಳಿ ಜಲಾಶಯದಲ್ಲಿ ಬೋಟಿಂಗ್ ನಡೆಸಲು ಬೇಕಾದ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದ್ದು, ಪ್ರವಾಸಿಗರ ಸುರಕ್ಷತೆಗೆ ಹೆಚ್ಚಿನ ಒತ್ತು ನೀಡಲಾಗಿದೆ. ಬೋಟ್ ಆಪರೇಟರ್ಗಳಿಗೆ ಗೋವಾದ 'ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ವಾಟರ್ ಸ್ಪೋರ್ಟ್ಸ್' ಸಂಸ್ಥೆಯಿಂದ ವಿಶೇಷ ತರಬೇತಿ ಕೊಡಿಸಲಾಗಿದೆ. ಸ್ಥಳೀಯ 15 ಯುವಕರಿಗೆ ಈಜುವುದು ಸೇರಿದಂತೆ ತುರ್ತು ಸಂದರ್ಭಗಳಲ್ಲಿ ಹೇಗೆ ಕಾರ್ಯನಿರ್ವಹಿಸಬೇಕು ಎಂಬ ಬಗ್ಗೆ ತರಬೇತಿ ನೀಡಲಾಗಿದೆ. ಬೋಟ್ ನಡೆಸಲು ಅಗತ್ಯವಿರುವ ಲೈಸೆನ್ಸ್ ಮತ್ತು ಇನ್ಶೂರೆನ್ಸ್ ಪ್ರಕ್ರಿಯೆಗಳು ಪೂರ್ಣಗೊಂಡಿವೆ. ಲೈಫ್ ಜಾಕೆಟ್ಗಳು ಮತ್ತು ಅಗ್ನಿಶಾಮಕ ಉಪಕರಣಗಳನ್ನು ಪ್ರತಿ ಬೋಟ್ನಲ್ಲಿ ಕಡ್ಡಾಯಗೊಳಿಸಲಾಗಿದೆ ಎಂದರು. ಬೋಟ್ ರೈಡಿಂಗ್ ಗೆ ಪ್ರತಿ ವ್ಯಕ್ತಿಗೆ 175 ರೂ. ದರ ನಿಗದಿಪಡಿಸಿದೆ. ಇನ್ನು ಅರಣ್ಯ ಸುತ್ತುವ ಜೀಪ್ ಸಫಾರಿಗೆ ವಯಸ್ಕರಿಗೆ 450 ರೂ., ಮಕ್ಕಳಿಗೆ 200 ರೂ. ದರ ಇರಲಿದೆ. ಇದಲ್ಲದೆ, ದೂರದ ಊರುಗಳಿಂದ ಬರುವ ಪ್ರವಾಸಿಗರಿಗಾಗಿ ಜಲಾಶಯದ ಸಮೀಪವಿರುವ ಕಾಟೇಜ್ ಜೊತೆಗೆ ಹೆಚ್ಚುವರಿಯಾಗಿ ತಂಗಲು ಟೆಂಟ್ ಹೌಸ್ ವ್ಯವಸ್ಥೆಯನ್ನು ವೈಜ್ಞಾನಿಕವಾಗಿ ಮಾಡಲಾಗುತ್ತಿದೆ ಎಂದರು. ವಿಧಾನ ಪರಿಷತ್ ಶಾಸಕ ಜಗದೇವ ಗುತ್ತೇದಾರ, ಕೆ.ಕೆ.ಆರ್.ಟಿ.ಸಿ ಅಧ್ಯಕ್ಷ ಅರುಣಕುಮಾರ ಪಾಟೀಲ, ಜಿಲ್ಲಾಧಿಕಾರಿ ಬಿ.ಫೌಝಿಯಾ ತರನ್ನುಮ್, ಕಲಬುರಗಿ ವಲಯದ ಅರಣ್ಯ ಸಂರಕ್ಷಣಾಧಿಕಾರಿ ಸುನಿಲ ಪನ್ವಾರ, ಜಿಲ್ಲಾ ಪಂಚಾಯತ್ ಸಿ.ಇ.ಓ ಭಂವರ್ ಸಿಂಗ್ ಮೀನಾ, ಎಸ್.ಪಿ. ಅಡ್ಡೂರು ಶ್ರೀನಿವಾಸಲು, ಜಂಟಿ ಕೃಷಿ ನಿರ್ದೇಶಕ ಸಮದ್ ಪಟೇಲ್, ಜಂಟಿ ತೋಟಗಾರಿಕೆ ನಿರ್ದೇಶಕ ಸಂತೋಷ ಇನಾಂದಾರ, ವಲಯ ಅರಣ್ಯಾಧಿಕಾರಿ ಸಂಜೀವಕುಮಾರ ಚವ್ಜಾಣ, ಮುಖಂಡರಾದ ಸುಭಾಷ ರಾಠೋಡ, ಕೈಲಾಶನಾಥ ಪಾಟೀಲ, ದೀಪಕನಾಗ್ ಪುಣ್ಯಶೆಟ್ಟಿ ಸೇರಿದಂತೆ ಅರಣ್ಯ ಇಲಾಖೆಯ ಇತರೆ ಅಧಿಕಾರಿಗಳು ಇದ್ದರು.
LPG ಸಿಲಿಂಡರ್ ಕೊರತೆ: ಗಗನಕ್ಕೇರಿದ ಸೌದೆ ಬೆಲೆ, ಸ್ಟೌವ್ ರಿಪೇರಿ ಅಂಗಡಿಗಳಿಗೆ ಫುಲ್ ಡಿಮ್ಯಾಂಡ್
ಬೆಂಗಳೂರು: ಮಧ್ಯಪ್ರಾಚ್ಯ ದೇಶಗಳಲ್ಲಿ ನಡೆಯುತ್ತಿರುವ ಯುದ್ಧ ಹಾಗೂ ಉದ್ವಿಗ್ನತೆಯ ನೇರ ಬಿಸಿ ಈಗಾಗಲೇ ಭಾರತದ ಅಡುಗೆಮನೆಗಳಿಗೆ ತಟ್ಟಿದೆ. ದೇಶಾದ್ಯಂತ ವಾಣಿಜ್ಯ ಎಲ್ಪಿಜಿ (LPG) ಸಿಲಿಂಡರ್ಗಳ ಪೂರೈಕೆಯಲ್ಲಿ ಭಾರಿ ವ್ಯತ್ಯಯ ಉಂಟಾಗಿದ್ದು, ಹೊಟೇಲ್ ಉದ್ಯಮ, ಸಣ್ಣಪುಟ್ಟ ದರ್ಶಿನಿಗಳು, ವೃದ್ಧಾಶ್ರಮಗಳು ಹಾಗೂ ಜನಸಾಮಾನ್ಯರು ಪರ್ಯಾಯ ಇಂಧನಗಳ ಮೊರೆ ಹೋಗುವುದು ಅನಿವಾರ್ಯವಾಗಿದೆ. ಗ್ಯಾಸ್ ಕೊರತೆಯಿಂದಾಗಿ ದಿಢೀರನೆ ಸೌದೆ (ಕಟ್ಟಿಗೆ), ಪಂಪ್ ಸ್ಟೌವ್
ಟೆಹ್ರಾನ್ : ಖಾರ್ಗ್ ದ್ವೀಪದ ಮೇಲೆ ಅಮೆರಿಕ ನಡೆಸಿದ ದಾಳಿಯಲ್ಲಿ ಯಾವುದೇ ತೈಲ ಮೂಲಸೌಕರ್ಯಕ್ಕೆ ಹಾನಿಯಾಗಿಲ್ಲ ಎಂದು ಇರಾನಿನ ಮಾಧ್ಯಮ ಶನಿವಾರ ಸ್ಪಷ್ಟಪಡಿಸಿದೆ. ಖಾರ್ಗ್ ದ್ವೀಪದ ಮೇಲೆ ಅಮೆರಿಕ ಬಾಂಬ್ ದಾಳಿ ನಡೆಸಿ ಮಿಲಿಟರಿ ಗುರಿಗಳನ್ನು ನಾಶಪಡಿಸಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದರು. ಇದರ ಬೆನ್ನಲ್ಲೆ ತೈಲ ಸೌಲಭ್ಯಗಳಿಗೆ ಯಾವುದೇ ಹಾನಿಯಾಗಿಲ್ಲ ಎಂದು ಮೂಲಗಳನ್ನು ಉಲ್ಲೇಖಿಸಿ ಫಾರ್ಸ್ ಸುದ್ದಿ ಸಂಸ್ಥೆ, ವರದಿ ಮಾಡಿದೆ. ಟ್ರೂತ್ ಸೋಷಿಯಲ್’ನಲ್ಲಿ ಪೋಸ್ಟ್ ಮಾಡಿದ್ದ ಡೊನಾಲ್ಡ್ ಟ್ರಂಪ್, ದ್ವೀಪದ ತೈಲ ಸೌಲಭ್ಯಗಳನ್ನು ಈ ಹಂತದಲ್ಲಿ ಗುರಿಯಾಗಿಸಲಿಲ್ಲ. ಆದರೆ ಹಾರ್ಮುಝ್ ಜಲಸಂಧಿಯಲ್ಲಿ ಹಡಗುಗಳ ಮುಕ್ತ ಹಾಗೂ ಸುರಕ್ಷಿತ ಸಾಗಣೆಗೆ ಅಡ್ಡಿ ಉಂಟಾದರೆ, ಈ ನಿರ್ಧಾರವನ್ನು ತಕ್ಷಣ ಮರುಪರಿಶೀಲಿಸಲಾಗುವುದು ಎಂದು ಟ್ರಂಪ್ ಎಚ್ಚರಿಸಿದ್ದರು.
ತೈಲದಲ್ಲಿ ದೇಶವನ್ನು ಕಾಪಾಡುವ ಅವಿಭಜಿತ ದಕ್ಷಿಣ ಕನ್ನಡ ; ಉಡುಪಿಯಲ್ಲಿದೆ ಭೂಗತ ಸಂಗ್ರಹಾಗಾರ
ಭಾರತವು ಜಾಗತಿಕ ತೈಲ ಪೂರೈಕೆ ವ್ಯತ್ಯಯಗಳು ಅಥವಾ ತುರ್ತು ಪರಿಸ್ಥಿತಿಗಳನ್ನು ಎದುರಿಸಲು ಇಂಡಿಯನ್ ಸ್ಟ್ರಾಟೆಜಿಕ್ ಪೆಟ್ರೋಲಿಯಂ ರಿಸರ್ವ್ (ಐಎಸ್ಪಿಆರ್ಎಧಿಲ್) ಅಡಿಯಲ್ಲಿ ಬೃಹತ್ ಭೂಗತ ಕಚ್ಚಾತೈಲ ಸಂಗ್ರಹಾಗಾರಗಳನ್ನು ದೇಶದ 3 ಕಡೆಗಳಲ್ಲಿ ಹೊಂದಿದೆ. ಅದರಲ್ಲಿಎರಡು ಅವಿಭಜಿತ ದಕ್ಷಿಣ ಕನ್ನಡದಲ್ಲೇ ಇದೆ.
ತೈವಾನ್ ಕರಾವಳಿಗೆ ನುಗ್ಗಿದ ಚೀನಾ ಹಡಗುಗಳು, ವಿಚಿತ್ರ ವರ್ತನೆ ಕಂಡು ಬೆಚ್ಚಿಬಿದ್ದ ಜಗತ್ತು | China Boats
ಇರಾನ್ ಮತ್ತು ಅಮೆರಿಕ ನಡುವೆ ಯುದ್ಧ ಶುರುವಾಗಿ, ಇನ್ನೊಂದು ಕಡೆ ಇಸ್ರೇಲ್ ಕೂಡ ಈ ಯುದ್ಧಕ್ಕೆ ಕೈಜೋಡಿಸಿ ದೊಡ್ಡ ಮಟ್ಟದಲ್ಲಿ ದಾಳಿ ಹಾಗೂ ಪ್ರತಿದಾಳಿ ನಡೆಯುವಾಗಲೇ ಏಷ್ಯಾ ಭಾಗದಲ್ಲಿ ಕೂಡ ಯುದ್ಧದ ಕಾರ್ಮೋಡ ಆವರಿಸಿದೆ. ಇರಾನ್ ಯುದ್ಧದ ಪರಿಣಾಮ ಈಗಾಗಲೇ ಮಧ್ಯಪ್ರಾಚ್ಯ ಧಗಧಗ ಅಂತಾ ಹೊತ್ತಿ ಉರಿಯುತ್ತಿದೆ, ಇದೇ ಕಾರಣಕ್ಕೆ ಇಡೀ ಜಗತ್ತಿನ ಆರ್ಥಿಕತೆ ಬುಡ ಅಲ್ಲಾಡಿ
ಸರಕಾರಿ ವಿ.ವಿ.ಗಳಿಗೆ ಬಜೆಟ್ ಬೆಂಬಲವಿಲ್ಲ
ಕರ್ನಾಟಕದ ಅಸಂಖ್ಯಾತ ಅಲ್ಪಸಂಖ್ಯಾತ, ಹಿಂದುಳಿದ ಮತ್ತು ದಲಿತ ಸಮುದಾಯಕ್ಕೆ ಸೇರಿದ ವಿದ್ಯಾರ್ಥಿಗಳು ಕೇವಲ ಸರಕಾರಿ ವಿಶ್ವವಿದ್ಯಾನಿಲಯಗಳನ್ನು ಅವಲಂಬಿಸಿದ್ದಾರೆ. ಸರಕಾರಿ ವಿಶ್ವವಿದ್ಯಾನಿಲಯಗಳು ದುರ್ಬಲಗೊಂಡರೆ ಅಹಿಂದ ವರ್ಗದವರು ವಿಶ್ವವಿದ್ಯಾನಿಲಯ ಮಟ್ಟದ ಶಿಕ್ಷಣದಿಂದ ವಂಚಿತರಾಗುವುದು ಗ್ಯಾರಂಟಿ. ವಿದೇಶಿ ವಿಶ್ವವಿದ್ಯಾನಿಲಯಗಳು, ಕರ್ನಾಟಕದ ಖಾಸಗಿ ವಿಶ್ವವಿದ್ಯಾನಿಲಯಗಳು ಶಿಕ್ಷಣವನ್ನು ಅದರಲ್ಲೂ ಉನ್ನತ ಶಿಕ್ಷಣವನ್ನು ವ್ಯಾಪಾರಕ್ಕೆ ಇಟ್ಟಿವೆ. ಬಡವರ ಮಕ್ಕಳು ದಕ್ಕಿಸಿಕೊಳ್ಳಲಾಗದ ಸ್ಥಿತಿಯಲ್ಲಿದ್ದಾರೆ. ಸಾಮಾಜಿಕ ನ್ಯಾಯದ ಪ್ರತಿಪಾದಕರಾದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸರಕಾರಿ ವಿಶ್ವವಿದ್ಯಾನಿಲಯಗಳ ಕಾಯಕಲ್ಪಕ್ಕೆ ಮುಂದಾಗಬೇಕು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇತ್ತೀಚೆಗೆ ಮಂಡಿಸಿದ ಬಜೆಟ್ನಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಸಾಕಷ್ಟು ಹಣ ಒದಗಿಸಿದ್ದಾರೆ. ಆದರೆ ಉನ್ನತ ಶಿಕ್ಷಣದ ಕಿರೀಟದಂತಿರುವ ಸರಕಾರಿ ವಿಶ್ವವಿದ್ಯಾನಿಲಯಗಳನ್ನು ಶೈಕ್ಷಣಿಕವಾಗಿ ಅಭಿವೃದ್ಧಿ ಪಡಿಸುವ ವಿಶೇಷ ಯೋಜನೆಯೇನೂ ಪ್ರಸ್ತಾಪಿಸಿಲ್ಲ. ಸರಕಾರಿ ವಿಶ್ವವಿದ್ಯಾನಿಲಯಗಳಲ್ಲಿ ಒಂದು ಸಾವಿರ ಬೋಧಕ ಹುದ್ದೆಗಳ ಭರ್ತಿಗೆ ಅವಕಾಶ ಕಲ್ಪಿಸಿದ್ದಾರೆ. ಸರಕಾರಿ ವಿಶ್ವವಿದ್ಯಾನಿಲಯಗಳಿಗಿಂತಲೂ ಸರಕಾರಿ ಪದವಿ ಕಾಲೇಜು ಮತ್ತು ಪೊಲಿಟೆಕ್ನಿಕ್ಗಳ ಶೈಕ್ಷಣಿಕ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಅಷ್ಟು ಮಾತ್ರವಲ್ಲ ಸರಕಾರಿ ಶಾಲಾ ಶಿಕ್ಷಣಕ್ಕೂ ಹೆಚ್ಚಿನ ಆದ್ಯತೆ ಕಲ್ಪಿಸಲಾಗಿದೆ. ಮೂಲಭೂತ ಸೌಕರ್ಯದ ಕಾರಣಕ್ಕೆ ಖಾಸಗಿ ಶಿಕ್ಷಣ ರಂಗ ಪ್ರಾಬಲ್ಯ ಮೆರೆಯುತ್ತಿದೆ. ಹೀಗಿರುವಾಗ ಸರಕಾರಿ ಶಿಕ್ಷಣ ವ್ಯವಸ್ಥೆಯನ್ನು ವಿಶೇಷ ನಿಗಾ ವಹಿಸಿ ಬಲಬಡಿಸುವುದು ಸರಕಾರದ ಮೊದಲ ಆದ್ಯತೆಯಾಗಬೇಕು. ಐವತ್ತು ವರ್ಷಗಳ ಹಿಂದೆ ಸರಕಾರಿ ಮತ್ತು ಖಾಸಗಿ ಶಿಕ್ಷಣ ರಂಗಗಳು ಪರಸ್ಪರ ಪೂರಕವಾಗಿ ಕಾರ್ಯ ನಿರ್ವಹಿಸುತ್ತಿದ್ದವು. ಪ್ರಾಥಮಿಕ ಶಿಕ್ಷಣದಿಂದ ಹಿಡಿದು ವಿಶ್ವವಿದ್ಯಾನಿಲಯಗಳ ಹಂತದವರೆಗೆ ಸರಕಾರಿ ವ್ಯವಸ್ಥೆಯೇ ಶಕ್ತಿಶಾಲಿಯಾಗಿತ್ತು. ಆಗ ಮೆಡಿಕಲ್ ಮತ್ತು ಇಂಜಿನಿಯರಿಂಗ್ ಶಿಕ್ಷಣ ಕ್ಷೇತ್ರದಲ್ಲೂ ಸರಕಾರಿ ಕಾಲೇಜುಗಳು ಗುಣಮಟ್ಟದ ಶಿಕ್ಷಣಕ್ಕೆ ಹೆಸರಾಗಿದ್ದವು. ಬಡ ಕೂಲಿಕಾರರ ಮಗನಿಂದ ಅತ್ಯಂತ ಶ್ರೀಮಂತರ ಮಕ್ಕಳೂ ಸರಕಾರಿ ಶಾಲಾ ವ್ಯವಸ್ಥೆಯನ್ನೇ ಅವಲಂಬಿಸಿದ್ದರು. ಜನಪ್ರತಿನಿಧಿಗಳ ಮಕ್ಕಳಿಗಂತೂ ಸರಕಾರಿ ಕಾಲೇಜು ಮತ್ತು ವಿಶ್ವವಿದ್ಯಾನಿಲಯಗಳು ಅನಿವಾರ್ಯವಾಗಿದ್ದವು. ಹಿರಿಯ ಅಧಿಕಾರಿಗಳ ಮಕ್ಕಳು, ಅದರಲ್ಲೂ ಜಿಲ್ಲಾ ಕೇಂದ್ರಗಳಲ್ಲಿ ವಾಸಿಸುವ ಮಧ್ಯಮ ವರ್ಗದ, ಶ್ರೀಮಂತರ ಮಕ್ಕಳು ಕಾನ್ವೆಂಟ್ ಶಾಲೆಗಳಲ್ಲಿ ಪ್ರವೇಶ ಪಡೆಯುತ್ತಿದ್ದರು. ಆಗ ಎಲ್ಲರ ಮಕ್ಕಳಿಗೂ ಸರಕಾರಿ ವಿಶ್ವವಿದ್ಯಾನಿಲಯಗಳೇ ಗತಿಯಾಗಿದ್ದವು. ಮೈಸೂರು, ಧಾರವಾಡ, ಬೆಂಗಳೂರು ವಿಶ್ವವಿದ್ಯಾನಿಲಯಗಳು ಪ್ರತಿಷ್ಠಿತ ವಿದ್ಯಾ ಕೇಂದ್ರಗಳಾಗಿದ್ದವು. ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಮೈಸೂರು ಮತ್ತು ಬೆಂಗಳೂರು ವಿಶ್ವವಿದ್ಯಾನಿಲಯಗಳನ್ನು ವಿಶೇಷ ಕಾಳಜಿ ವಹಿಸಿ ಅಭಿವೃದ್ಧಿ ಪಡಿಸಿದ್ದರು. ಧಾರವಾಡದ ಕರ್ನಾಟಕ ವಿಶ್ವವಿದ್ಯಾನಿಲಯವನ್ನು ಬ್ರಿಟಿಷ್ ಕಾಲದ ಬಾಂಬೆ ಸರಕಾರದಲ್ಲಿ ಶಿಕ್ಷಣ ಮಂತ್ರಿಯಾಗಿದ್ದ ಸರ್ ಸಿದ್ದಪ್ಪ ಕಂಬಳಿಯವರು ವಿಶೇಷ ಮುತುವರ್ಜಿ ವಹಿಸಿ ಅಭಿವೃದ್ಧಿ ಪಡಿಸಿದ್ದರು. ಸಮಸ್ತ ಉತ್ತರ ಕರ್ನಾಟಕದ ವಿದ್ಯಾಕಾಂಕ್ಷಿಗಳಿಗೆ ಧಾರವಾಡದ ಕರ್ನಾಟಕ ವಿಶ್ವವಿದ್ಯಾನಿಲಯ ಏಕೈಕ ಆಶಾಕಿರಣವಾಗಿತ್ತು. ಕಲಬುರ್ಗಿ, ಬೀದರ್ ಜಿಲ್ಲೆಯ ಜನರು ಸಮೀಪದ ಹೈದರಾಬಾದ್ನ ಉಸ್ಮಾನಿಯಾ ವಿಶ್ವವಿದ್ಯಾನಿಲಯವನ್ನು ಅವಲಂಬಿಸಿದ್ದರು. ಉನ್ನತ ಶಿಕ್ಷಣವನ್ನು ಅದರಲ್ಲೂ ವಿಶ್ವವಿದ್ಯಾನಿಲಯ ಮಟ್ಟದ ಶಿಕ್ಷಣವನ್ನು ಬಡ ಮತ್ತು ಮಧ್ಯಮ ವರ್ಗದ ಜನತೆಗೂ ಲಭ್ಯವಾಗಲೆಂದು ಗುಲ್ಬರ್ಗಾ ವಿಶ್ವವಿದ್ಯಾನಿಲಯ, ಮಂಗಳೂರು ವಿಶ್ವವಿದ್ಯಾನಿಲಯ, ಕುವೆಂಪು ವಿಶ್ವವಿದ್ಯಾನಿಲಯ ಅಸ್ತಿತ್ವಕ್ಕೆ ಬಂದವು. ಆಗ ಒಂದು ಹೊಸ ವಿಶ್ವವಿದ್ಯಾನಿಲಯ ಸ್ಥಾಪಿಸುವ ಮುಂಚೆ ಅಲ್ಲಿ ಸ್ನಾತಕೋತ್ತರ ಕೇಂದ್ರವನ್ನು ಅತ್ಯುನ್ನತ ಗುಣಮಟ್ಟದಲ್ಲಿ ಅಭಿವೃದ್ಧಿ ಪಡಿಸುತ್ತಿದ್ದರು. ತೀರಾ ಅಗತ್ಯವೆನಿಸಿದಾಗ ಅಗತ್ಯದ ಮೂಲಭೂತ ಸೌಕರ್ಯಗಳನ್ನು ಒದಗಿಸಿಯೇ ಹೊಸ ವಿಶ್ವವಿದ್ಯಾನಿಲಯಗಳನ್ನು ಆರಂಭಿಸಲು ಅನುಮತಿ ನೀಡುತ್ತಿದ್ದರು. ಎಂಭತ್ತರ ದಶಕದಲ್ಲಿ ಆರಂಭವಾದ ವಿಶ್ವವಿದ್ಯಾನಿಲಯಗಳಿಗೆ ಆರೇಳು ನೂರು ಎಕರೆ ಜಮೀನು ಒದಗಿಸಿಯೇ ಕ್ಯಾಂಪಸ್ ವ್ಯವಸ್ಥೆ ಕಲ್ಪಿಸಿದ್ದರು. ಹೊಸ ವಿಭಾಗಗಳು ಆರಂಭಿಸಿದರೂ ಅವುಗಳಿಗೆ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಯನ್ನು ಒದಗಿಸಿಯೇ ಕಾರ್ಯಾರಂಭ ಮಾಡುತ್ತಿದ್ದರು. ಮೆಡಿಕಲ್ ಮತ್ತು ಇಂಜಿನಿಯರಿಂಗ್ ಕಾಲೇಜುಗಳು ಆಯಾ ಪ್ರದೇಶದ ವಿಶ್ವವಿದ್ಯಾನಿಲಯಗಳ ವ್ಯಾಪ್ತಿಗೆ ಸೇರುತ್ತಿದ್ದವು. ಕುಲಪತಿ ಮತ್ತು ಕುಲಸಚಿವರ ನೇಮಕಾತಿಯಲ್ಲಿ ಹಣದ ಪಾತ್ರವೇ ಇರಲಿಲ್ಲ. ಜಾತಿ ಪ್ರಮುಖ ಪಾತ್ರ ವಹಿಸಿದ್ದರೂ ಒಟ್ಟು ಶಿಕ್ಷಣ ವ್ಯವಸ್ಥೆಯ ಮೂಲ ಸ್ವರೂಪಕ್ಕೇನು ಧಕ್ಕೆಯನ್ನುಂಟು ಮಾಡುತ್ತಿರಲಿಲ್ಲ. ಆಗ ವಿದ್ಯಾರ್ಥಿ ಸಂಘಟನೆಗಳು ಪ್ರಬಲವಾಗಿರುವುದರಿಂದ ಜಾತಿವಾದಿ ಶಕ್ತಿಗಳನ್ನು ಹದ್ದುಬಸ್ತಿನಲ್ಲಿಡಲು ಸಹಕಾರಿಯಾಗಿದ್ದವು. ಕೃಷಿ ವಿಶ್ವವಿದ್ಯಾನಿಲಯಗಳು ಸೇರಿದಂತೆ ವಿಶೇಷ ಪರಿಣತಿಯ ವಿಶ್ವವಿದ್ಯಾನಿಲಯಗಳು ಆರಂಭವಾಗುತ್ತಿದ್ದಂತೆ ಮೈಸೂರು, ಬೆಂಗಳೂರು, ಕರ್ನಾಟಕ, ಗುಲ್ಬರ್ಗಾ, ಮಂಗಳೂರು ಮತ್ತು ಕುವೆಂಪು ವಿಶ್ವವಿದ್ಯಾನಿಲಯಗಳು ದುರ್ಬಲವಾಗತೊಡಗಿದವು. ನಂತರ ಸ್ನಾತಕೋತ್ತರ ಕೇಂದ್ರಗಳನ್ನು ವಿಶ್ವವಿದ್ಯಾನಿಲಯಗಳನ್ನಾಗಿ ಮಾರ್ಪಡಿಸತೊಡಗಿದರು. ಅಗತ್ಯದ ಮೂಲಭೂತ ಸೌಕರ್ಯ ಮತ್ತು ಸಿಬ್ಬಂದಿಯನ್ನು ಒದಗಿಸಿ ಹೊಸ ವಿಶ್ವವಿದ್ಯಾನಿಲಯ ಆರಂಭಿಸಿದಾಗ ಯಾವ ತೊಂದರೆಯೂ ಇರಲಿಲ್ಲ. ಕರ್ನಾಟಕದಲ್ಲಿ ಬಿಜೆಪಿ ಮೊದಲ ಬಾರಿಗೆ ಅಧಿಕಾರಕ್ಕೆ ಬಂದಾಗ ವಿಶ್ವವಿದ್ಯಾನಿಲಯಗಳ ದುರ್ದೆಸೆ ಆರಂಭವಾಯಿತು. ಹಂಪಿಯ ಕನ್ನಡ ವಿಶ್ವವಿದ್ಯಾನಿಲಯವನ್ನು ಕರ್ನಾಟಕದ ಜೆಎನ್ಯು ಎಂದೇ ಭಾವಿಸಲಾಗಿತ್ತು. ಸಂಶೋಧನೆಗೆಂದು ಮೀಸಲಾದ ಆ ವಿಶ್ವವಿದ್ಯಾನಿಲಯ ಕನ್ನಡದ ಶ್ರೇಷ್ಠ ಸಾಹಿತಿ, ಕಲಾವಿದರ ಒತ್ತಾಸೆಯ ಫಲವಾಗಿ ರೂಪುಗೊಂಡಿತ್ತು. ವೀರಪ್ಪ ಮೊಯ್ಲಿ, ಎಂ.ಪಿ. ಪ್ರಕಾಶ್ ಮುಂತಾದವರು ಕನ್ನಡ ವಿಶ್ವವಿದ್ಯಾನಿಲಯಕ್ಕೆ ಹಣಕಾಸಿನ ತೊಂದರೆಯಾಗದಂತೆ ನೋಡಿಕೊಂಡಿದ್ದರು. ಕನ್ನಡ ವಿಶ್ವವಿದ್ಯಾನಿಲಯದ ಮೊದಲ ಕುಲಪತಿ ಡಾ. ಚಂದ್ರಶೇಖರ ಕಂಬಾರರು ಅತ್ಯಂತ ಮಹತ್ವಾಕಾಂಕ್ಷೆ ಇಟ್ಟುಕೊಂಡೇ ಅದನ್ನು ಕಟ್ಟಲು ಪ್ರಯತ್ನಿಸಿದರು. ಆದರೆ ಪ್ರಾಧ್ಯಾಪಕರ ನೇಮಕಾತಿಯಲ್ಲಿ ನಿಯಮಗಳನ್ನು ಗಾಳಿಗೆ ತೂರಿದ್ದರಿಂದ ಗುಣಮಟ್ಟ ಕಾಯ್ದುಕೊಳ್ಳಲು ಸಾಧ್ಯವಾಗಲಿಲ್ಲ. ಅನೇಕ ಪ್ರತಿಭಾವಂತರ ಜೊತೆಗೇ ಹಲವು ಜನ ದಡ್ಡರು ಸೇರಿಕೊಂಡು ಕನ್ನಡ ವಿಶ್ವವಿದ್ಯಾನಿಲಯದ ಘನತೆ ಗೌರವ ಹಾಳು ಮಾಡಿದರು. ಕರ್ನಾಟಕದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದಾಗ ಉನ್ನತ ಶಿಕ್ಷಣ ಮಂತ್ರಿಯಾಗಿ ಅರವಿಂದ ಲಿಂಬಾವಳಿ ನೇಮಕವಾಗಿದ್ದರು. ಅರವಿಂದ ಲಿಂಬಾವಳಿ ಸಂಘ ಪರಿವಾರದ ಹಿನ್ನೆಲೆಯಿಂದ ಬಂದವರು. ಕನ್ನಡ ವಿಶ್ವವಿದ್ಯಾನಿಲಯದಲ್ಲಿ ಕಮ್ಯುನಿಸ್ಟ್ ಸಿದ್ಧಾಂತ ಒಪ್ಪಿಕೊಂಡವರೇ ಹೆಚ್ಚಾಗಿದ್ದರೆಂದು ಭಾವಿಸಿ ಆ ವಿಶ್ವವಿದ್ಯಾನಿಲಯದ ಬಗ್ಗೆ ಪೂರ್ವಾಗ್ರಹಪೀಡಿತರಾಗಿದ್ದರು. ಖಾಲಿ ಹುದ್ದೆಗಳ ಭರ್ತಿ ಸೇರಿದಂತೆ ಆ ವಿಶ್ವವಿದ್ಯಾನಿಲಯದ ಶೈಕ್ಷಣಿಕ ಅಭಿವೃದ್ಧಿಗೆ ಪೂರಕವಾಗುವಂತೆ ಹಣಕಾಸಿನ ನೆರವು ಒದಗಿಸಲಿಲ್ಲ. ಕನ್ನಡ ವಿಶ್ವವಿದ್ಯಾನಿಲಯದ ಮೇಲೆ ಸೇಡು ತೀರಿಸಿಕೊಳ್ಳಲು ಮತ್ತು ಅದರ ಪ್ರಾಮುಖ್ಯತೆ ತಗ್ಗಿಸಲು ಮೂರು ಹೊಸ ವಿಶೇಷ ವಿಶ್ವವಿದ್ಯಾನಿಲಯಗಳನ್ನು ಸ್ಥಾಪಿಸುವ ನಿರ್ಧಾರ ಕೈಗೊಂಡರು. ಹಾಗೆ ನೋಡಿದರೆ ಕನ್ನಡ ವಿಶ್ವವಿದ್ಯಾನಿಲಯದ ವ್ಯಾಪ್ತಿಯಲ್ಲೇ ಆ ಮೂರೂ ವಿಶ್ವವಿದ್ಯಾನಿಲಯಗಳ ವಿಷಯಗಳನ್ನು ಅಭಿವೃದ್ಧಿ ಪಡಿಸಬಹುದಿತ್ತು. ಕನ್ನಡ ವಿಶ್ವವಿದ್ಯಾನಿಲಯ ವ್ಯಾಪ್ತಿಯಲ್ಲಿ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಭಾಗ ಕಾರ್ಯ ನಿರ್ವಹಿಸುತ್ತಿತ್ತು. ಬುಡಕಟ್ಟು ಮತ್ತು ಜಾನಪದ ವಿಭಾಗಗಳು ಕಾರ್ಯಾರಂಭ ಮಾಡಿದ್ದವು. ಪಾಲಿ ಮತ್ತು ಸಂಸ್ಕೃತ ವಿಭಾಗಗಳು ಆರಂಭಿಸಿ ಕನ್ನಡ ವಿಶ್ವವಿದ್ಯಾನಿಲಯಕ್ಕೆ ಹೆಚ್ಚಿನ ಅನುದಾನ ನೀಡಿದ್ದರೆ ಆ ವಿಶ್ವವಿದ್ಯಾನಿಲಯವೂ ಬೆಳೆಯುತ್ತಿತ್ತು. ಅರವಿಂದ ಲಿಂಬಾವಳಿಯವರು ತಮ್ಮ ಅಧಿಕಾರಾವಧಿಯಲ್ಲಿ ಹೊಸದಾಗಿ ಮೂರು ವಿಶೇಷ ವಿಶ್ವವಿದ್ಯಾನಿಲಯಗಳನ್ನು ಸ್ಥಾಪಿಸಿದರು. ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾನಿಲಯ, ಕರ್ನಾಟಕ ಜಾನಪದ ವಿಶ್ವವಿದ್ಯಾನಿಲಯ ಮತ್ತು ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾನಿಲಯಗಳನ್ನು ಆರಂಭಿಸಿದರು. ಸಂಘ ಪರಿವಾರದ ಒತ್ತಡದ ಕಾರಣಕ್ಕೆ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾನಿಲಯಕ್ಕೆ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಭರ್ತಿಗೆ ಹಣಕಾಸಿನ ನೆರವು ನೀಡಿದರು. ಆದರೆ ಕರ್ನಾಟಕ ಜಾನಪದ ವಿಶ್ವವಿದ್ಯಾನಿಲಯ ಮತ್ತು ಕರ್ನಾಟಕ ರಾಜ್ಯ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾನಿಲಯಗಳನ್ನು ಸಂಪೂರ್ಣ ಕಡೆಗಣಿಸಿದರು. 2008ರಲ್ಲಿ ಸ್ಥಾಪನೆಯಾದ ಈ ಮೂರು ವಿಶ್ವವಿದ್ಯಾನಿಲಯಗಳ ಪೈಕಿ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾನಿಲಯ ಮಾತ್ರ ಅಗತ್ಯದ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಯನ್ನು ಹೊಂದಿದೆ. ಸಿದ್ದರಾಮಯ್ಯ ಅವರು ಎರಡನೇ ಅವಧಿಗೆ ಮುಖ್ಯಮಂತ್ರಿಯಾದಾಗ ಕರ್ನಾಟಕ ಜಾನಪದ ವಿಶ್ವವಿದ್ಯಾನಿಲಯ ಅಕ್ರಮವಾಗಿ ಒಂದಷ್ಟು ಹುದ್ದೆಗಳನ್ನು ಭರ್ತಿ ಮಾಡಿಕೊಂಡಿದೆ. ಖ್ಯಾತ ಹಿಂದೂಸ್ತಾನಿ ಸಂಗೀತ ಕಲಾವಿದೆ ಡಾ. ಗಂಗೂಬಾಯಿ ಹಾನಗಲ್ ಅವರ ಹೆಸರಿನ ಸಂಗೀತ ವಿಶ್ವವಿದ್ಯಾನಿಲಯ ಮಾತ್ರ ಏಳ್ಗೆ ಹೊಂದದೆ ನಿಂತಲ್ಲೇ ನಿಂತಿದೆ. ಅರವಿಂದ ಲಿಂಬಾವಳಿ ಉನ್ನತ ಶಿಕ್ಷಣ ಮಂತ್ರಿಯಾಗಿದ್ದಾಗಲೇ ಹೊಸದಾಗಿ ಎರಡು ವಿಶ್ವವಿದ್ಯಾನಿಲಯಗಳನ್ನು ಆರಂಭಿಸಿದ್ದರು. ಹೊಸದಾಗಿ ಆರಂಭವಾದ ಬಳ್ಳಾರಿಯ ಶ್ರೀಕೃಷ್ಣ ದೇವರಾಯ ವಿಶ್ವವಿದ್ಯಾನಿಲಯ ಮತ್ತು ಬೆಳಗಾವಿಯ ರಾಣಿ ಚೆನ್ನಮ್ಮ ವಿಶ್ವವಿದ್ಯಾನಿಲಯಗಳಿಗೆ ಸಂಘ ಪರಿವಾರಕ್ಕೆ ಸೇರಿದ ಮಂಜಪ್ಪ ಹೆಗಡೆ, ಅನಂತನ್ ಅವರನ್ನು ಕುಲಪತಿಗಳನ್ನಾಗಿ ನೇಮಿಸಿ ಪೂರ್ಣ ಪ್ರಮಾಣದಲ್ಲಿ ಅಭಿವೃದ್ಧಿ ಪಡಿಸಿದರು. ಅಗತ್ಯದ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಯನ್ನು ಒದಗಿಸಿ ಇಡೀ ವಿಶ್ವವಿದ್ಯಾನಿಲಯ ಆರೆಸ್ಸೆಸ್ ಮಯ ಮಾಡಿದ್ದಾರೆ. ಹಂಪಿಯ ಕನ್ನಡ ವಿಶ್ವವಿದ್ಯಾನಿಲಯವನ್ನು ಬಿಜೆಪಿ ಆಡಳಿತಾವಧಿಯಲ್ಲಿ ಸಂಪೂರ್ಣ ಕಡೆಗಣಿಸಿದ್ದರ ಪರಿಣಾಮವಾಗಿ ಅದು ಈಗ ಅಕ್ಷರಶಃ ಹಾಳು ಹಂಪಿಯಾಗಿದೆ. ಸಂಶೋಧನಾ ಚಟುವಟಿಕೆಗಳು ಸಂಪೂರ್ಣ ಸ್ಥಗಿತಗೊಂಡಿವೆ. ಬೋಧಕ ಮತ್ತು ಬೋಧಕೇತರ ಸಿಬ್ಬಂದಿಯ ಕೊರತೆ ಎದುರಿಸುತ್ತಿದೆ. ಅತಿಥಿ ಉಪನ್ಯಾಸಕರಿಗೂ ಸಂಬಳ ನೀಡದ ಸ್ಥಿತಿ ತಲುಪಿದೆ. ರಾಜ್ಯದಲ್ಲಿ ಬಿಜೆಪಿ ಸರಕಾರ ಅಧಿಕಾರದ ಚುಕ್ಕಾಣಿ ಹಿಡಿದಾಗಲೆಲ್ಲ ಹೊಸ ವಿಶ್ವವಿದ್ಯಾನಿಲಯಗಳ ಸ್ಥಾಪನೆಗೆ ಹೆಚ್ಚು ಆಸಕ್ತಿ ತೋರಿದೆ. ಆದರೆ ಹೊಸ ವಿಶ್ವವಿದ್ಯಾನಿಲಯಗಳಿಗೆ ಮೂಲಭೂತ ಸೌಕರ್ಯ ಕಲ್ಪಿಸುವ, ಅಗತ್ಯದ ಬೋಧಕ-ಬೋಧಕೇತರ ಸಿಬ್ಬಂದಿಯನ್ನು ಒದಗಿಸುವಲ್ಲಿ ಸಂಪೂರ್ಣ ಎಡವಿದೆ. 2019ರಿಂದ 2023ರವರೆಗೆ ನಾಲ್ಕು ವರ್ಷಗಳ ಕಾಲ ಸತತ ಉನ್ನತ ಶಿಕ್ಷಣ ಮತ್ತು ಐಟಿ, ಬಿಟಿ ಮಂತ್ರಿಯಾಗಿದ್ದ ಡಾ. ಅಶ್ವತ್ಥ ನಾರಾಯಣ್ ಅವರು ಮನಸ್ಸು ಮಾಡಿದ್ದರೆ ಕರ್ನಾಟಕದ ಎಲ್ಲ ಸರಕಾರಿ ವಿಶ್ವವಿದ್ಯಾನಿಲಯಗಳನ್ನು ಅಭಿವೃದ್ಧಿ ಪಡಿಸಬಹುದಿತ್ತು. ಕಾರ್ಪೊರೇಟ್ ವಲಯದ ಸಿ.ಎಸ್.ಆರ್. ಫಂಡ್ನ್ನು ತಂದಿದ್ದರೂ ಸರಕಾರಿ ವಿಶ್ವವಿದ್ಯಾನಿಲಯಗಳು ಚಾಣಕ್ಯ ವಿಶ್ವವಿದ್ಯಾನಿಲಯವನ್ನು ಮೀರಿಸುವ ಹಾಗೆ ತಲೆ ಎತ್ತಿ ನಿಲ್ಲುತ್ತಿದ್ದವು. ಇರುವ ವಿಶ್ವವಿದ್ಯಾನಿಲಯಗಳನ್ನು ಅಭಿವೃದ್ಧಿ ಪಡಿಸುವುದು ಒತ್ತಟ್ಟಿಗಿರಲಿ ಹಳೆಯ ವಿಶ್ವವಿದ್ಯಾನಿಲಯಗಳು ಅಸ್ತಿತ್ವ ಉಳಿಸಿಕೊಳ್ಳಲು ಹೆಣಗುವ ಪರಿಸ್ಥಿತಿ ತಲುಪಿವೆ. ಅಶ್ವತ್ಥ ನಾರಾಯಣ ಅವರು ತಮ್ಮ ಅಧಿಕಾರಾವಧಿಯಲ್ಲಿ ಎಂಟು ಹೊಸ ವಿಶ್ವವಿದ್ಯಾನಿಲಯಗಳನ್ನು ಆರಂಭಿಸುವ ಮೂಲಕ ಹಳೆಯ ವಿಶ್ವವಿದ್ಯಾನಿಲಯಗಳ ಆದಾಯ ಮೂಲಕ್ಕೆ ಕೊಡಲಿ ಪೆಟ್ಟು ನೀಡಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯದ ವ್ಯಾಪ್ತಿಯಲ್ಲಿ ಹಾಸನ ವಿಶ್ವವಿದ್ಯಾನಿಲಯ, ಮಂಡ್ಯ ವಿಶ್ವವಿದ್ಯಾನಿಲಯ ಮತ್ತು ಚಾಮರಾಜನಗರ ವಿಶ್ವವಿದ್ಯಾನಿಲಯಗಳನ್ನು ಸ್ಥಾಪಿಸುವ ಮೂಲಕ ಹಳೆಯ ಮೈಸೂರು ವಿಶ್ವವಿದ್ಯಾನಿಲಯದ ಕಾಲೇಜು ಮತ್ತು ವಿದ್ಯಾರ್ಥಿಗಳ ಸಂಖ್ಯೆ ಗಣನೀಯವಾಗಿ ಕುಸಿಯುವಂತಾಗಿದೆ. ಹೊಸದಾಗಿ ಸ್ಥಾಪನೆ ಮಾಡಿದ ವಿಶ್ವವಿದ್ಯಾನಿಲಯಗಳಿಗೆ ಬಿಡಿಗಾಸು ಅನುದಾನ ನೀಡದೆ ಹಳೆಯ ಮತ್ತು ಹೊಸ ವಿಶ್ವವಿದ್ಯಾನಿಲಯಗಳನ್ನು ಸಂಕಷ್ಟಕ್ಕೆ ದೂಡಿದ್ದಾರೆ. ನಾಲ್ವಡಿ ಕೃಷ್ಣರಾಜ ಒಡೆಯರ್ ಕಾಲದ ಮೈಸೂರು ವಿಶ್ವವಿದ್ಯಾನಿಲಯ ನಿವೃತ್ತಿ ಹೊಂದಿದ ಸಿಬ್ಬಂದಿಗೆ ಪಿಂಚಣಿ ನೀಡಲಾಗದ ದುಸ್ಥಿತಿಗೆ ತಲುಪಿದೆ. ಮಂಗಳೂರು ವಿಶ್ವವಿದ್ಯಾನಿಲಯದ ವ್ಯಾಪ್ತಿಯ ಕೆಲವು ಕಾಲೇಜುಗಳನ್ನು ಕೊಡಗು ವಿಶ್ವವಿದ್ಯಾನಿಲಯಕ್ಕೆ ಸೇರಿಸಿ ಕೊಡಗು ವಿಶ್ವವಿದ್ಯಾನಿಲಯ ಆರಂಭಿಸಿದ್ದಾರೆ. ಅತ್ಯಂತ ಹಳೆಯದಾದ ಕರ್ನಾಟಕ ವಿಶ್ವವಿದ್ಯಾನಿಲಯದ ಕಾಲೇಜುಗಳು ಹಾವೇರಿ ಮತ್ತು ಬಾಗಲಕೋಟ ವಿಶ್ವವಿದ್ಯಾನಿಲಯಗಳ ವ್ಯಾಪ್ತಿಯಲ್ಲಿ ಹಂಚಿ ಹೋಗಿವೆ. ಅದರ ಪರಿಣಾಮ ಕರ್ನಾಟಕ ವಿಶ್ವವಿದ್ಯಾನಿಲಯ ಬಡವಾಗಿದೆ. ಗುಲ್ಬರ್ಗಾ ವಿಶ್ವವಿದ್ಯಾನಿಲಯದ ವ್ಯಾಪ್ತಿಯ ಕಾಲೇಜುಗಳು ಬೀದರ್ ಮತ್ತು ಕೊಪ್ಪಳ ವಿಶ್ವವಿದ್ಯಾನಿಲಯಗಳ ವ್ಯಾಪ್ತಿಯಲ್ಲಿ ಹಂಚಿ ಹೋಗಿದ್ದರಿಂದ ಮೂಲ ವಿಶ್ವವಿದ್ಯಾನಿಲಯ ಬಡವಾಗಿದೆ. ಕರ್ನಾಟಕ ವಿಶ್ವವಿದ್ಯಾನಿಲಯ, ಮೈಸೂರು ವಿಶ್ವವಿದ್ಯಾನಿಲಯ, ಗುಲ್ಬರ್ಗಾ ವಿಶ್ವವಿದ್ಯಾನಿಲಯಗಳ ಆರ್ಥಿಕ ಸಂಪನ್ಮೂಲಗಳು ಬತ್ತಿ ಹೋಗಿವೆ. ಅಶ್ವತ್ಥ ನಾರಾಯಣ ಕಾಲದ ಎಂಟು ವಿಶ್ವವಿದ್ಯಾನಿಲಯಗಳಿಗೆ ಖಾಯಂ ಸಿಬ್ಬಂದಿ ಮತ್ತು ಕನಿಷ್ಠ ಮೂಲಭೂತ ಸೌಲಭ್ಯ ಒದಗಿಸಿಲ್ಲ. ಕರ್ನಾಟಕದ ಎಲ್ಲ ಹಳೆಯ ವಿಶ್ವವಿದ್ಯಾನಿಲಯಗಳು ಕಳೆದ ಒಂದೂವರೆ ದಶಕಗಳಿಂದ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಯಿಲ್ಲದೆ ತೀವ್ರ ಹಿನ್ನಡೆ ಅನುಭವಿಸುತ್ತಿವೆ. ವಿದೇಶಗಳಲ್ಲಿ ಅತಿಥಿ ಉಪನ್ಯಾಸಕರನ್ನು ಅವಲಂಬಿಸಿ ವಿಶ್ವವಿದ್ಯಾನಿಲಯಗಳನ್ನು ನಡೆಸುತ್ತಿದ್ದಾರೆ. ಕರ್ನಾಟಕದಲ್ಲಿ ನಡೆಸಲು ಯಾಕೆ ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎಲ್ಲ ಕುಲಪತಿಗಳಿಗೆ ಕೇಳಿದ್ದಾರೆ. ವಿದೇಶಗಳಲ್ಲಿ ಯಾವ ತಜ್ಞ ಪ್ರಾಧ್ಯಾಪಕರೂ ಖಾಯಂ ಆಗಿ ಒಂದು ಕಡೆ ನೆಲೆ ನಿಲ್ಲಲು ಬಯಸುವುದಿಲ್ಲ. ಅನಿವಾರ್ಯವಾಗಿ ಸಂದರ್ಶಕ ಪ್ರಾಧ್ಯಾಪಕರಿಗೆ ಅತಿ ಹೆಚ್ಚು ಸಂಬಳ ನೀಡಿ ಅವರ ಸೇವೆ ಪಡೆಯುತ್ತಾರೆ. ಆದರೆ ಕರ್ನಾಟಕದಲ್ಲಿ ಅತಿಥಿ ಉಪನ್ಯಾಸಕರ ಪಾಡು ಹಾಗಿಲ್ಲ. ಪ್ರತೀ ವರ್ಷ ಅರ್ಜಿ ಹಾಕಿ ಸಂದರ್ಶನಕ್ಕೆ ಹಾಜರಾಗಬೇಕು. ಹೆಚ್ಚಿನ ವಿದ್ಯಾರ್ಹತೆ ಹೊಂದಿಯೂ ಅತಿ ಕಡಿಮೆ ಸಂಬಳದಲ್ಲಿ ದುಡಿಯಬೇಕು. ವಿದೇಶಗಳಲ್ಲಿ ಸಂದರ್ಶಕ ಪ್ರಾಧ್ಯಾಪಕರಿಗೆ ಇರುವ ಬೇಡಿಕೆ ಮತ್ತು ಸಂಬಳ ಅಲ್ಲಿ ಖಾಯಂ ಪ್ರಾಧ್ಯಾಪಕರಿಗೆ ನೀಡುವುದಿಲ್ಲ. ಕರ್ನಾಟಕದ ವಿಶ್ವವಿದ್ಯಾನಿಲಯಗಳಲ್ಲಿ ಅತಿಥಿ ಉಪನ್ಯಾಸಕರಿಗೆ ಪಿಎಚ್.ಡಿ. ಮಾರ್ಗದರ್ಶಕರಾಗಿ ಕಾರ್ಯ ನಿರ್ವಹಿಸಲು ಯುಜಿಸಿ ನಿಯಮಗಳು ಒಪ್ಪುವುದಿಲ್ಲ. ದುರಂತವೆಂದರೆ, ಕರ್ನಾಟಕ ವಿಶ್ವವಿದ್ಯಾನಿಲಯಗಳಲ್ಲಿ ಕಾರ್ಯ ನಿರ್ವಹಿಸುವ ಅತಿಥಿ ಉಪನ್ಯಾಸಕರು ಹತ್ತು ವರ್ಷಗಳ ಕಾಲ ಪಾಠ ಮಾಡಿದರೂ ಅವರ ಬೋಧನಾನುಭವವನ್ನು ಎಲ್ಲೂ ಪರಿಗಣಿಸುವುದಿಲ್ಲ. ಈ ಎಲ್ಲ ಕಾರಣಕ್ಕೆ ಅತಿಥಿ ಉಪನ್ಯಾಸಕರು ಸಂಶೋಧನಾ ಚಟುವಟಿಕೆಗಳಲ್ಲಿ ಭಾಗವಹಿಸದಂತೆ ಯುಜಿಸಿ ನಿರ್ಬಂಧಿಸಿದೆ. ಕರ್ನಾಟಕದಲ್ಲಿ ಒಟ್ಟು 32 ಸರಕಾರಿ ವಿಶ್ವವಿದ್ಯಾನಿಲಯಗಳಿವೆ. ಎಂಟು ಹೊಸ ವಿಶ್ವವಿದ್ಯಾನಿಲಯಗಳಿಗೆ ಕನಿಷ್ಠ ಮೂಲಭೂತ ಸೌಕರ್ಯ ಇಲ್ಲ. ಎಂಟು ಹೊಸ ವಿಶ್ವವಿದ್ಯಾನಿಲಯಗಳನ್ನು ಮುಂದುವರೆಸಬೇಕೇ ಬೇಡವೇ ಎಂದು ನಿರ್ಧರಿಸಲು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಅಧ್ಯಕ್ಷತೆಯಲ್ಲಿ ಸಂಪುಟ ಉಪಸಮಿತಿ ರಚಿಸಲಾಗಿದೆ. ಸಂಪುಟ ಉಪಸಮಿತಿ ಸ್ಪಷ್ಟ ನಿರ್ಧಾರ ಕೈಗೊಂಡಿಲ್ಲ. ಒಂದು ವೇಳೆ ಆ ಎಂಟು ವಿಶ್ವವಿದ್ಯಾನಿಲಯಗಳು ಮುಂದುವರಿಯಬಾರದು ಎಂಬ ನಿರ್ಧಾರ ಕೈಗೊಂಡರೆ ಹಳೆಯ ಪ್ರತಿಷ್ಠಿತ ವಿಶ್ವವಿದ್ಯಾನಿಲಯಗಳು ನಿರಾಳವಾಗುತ್ತವೆ. ಆಗ ಒಟ್ಟು ಸರಕಾರಿ ವಿಶ್ವವಿದ್ಯಾನಿಲಯಗಳ ಸಂಖ್ಯೆ 24ಕ್ಕೆ ಇಳಿಯುತ್ತದೆ. ಈ ಇಪ್ಪತ್ತನಾಲ್ಕು ವಿಶ್ವವಿದ್ಯಾನಿಲಯಗಳಿಗೆ ಒಟ್ಟು 4,705 ಬೋಧಕ ಸಿಬ್ಬಂದಿಯ ಅಗತ್ಯವಿದೆ. ಈಗ ಕೇವಲ ಪ್ರತಿಶತ 36ರಷ್ಟು ಬೋಧಕ ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅಂದರೆ ಪ್ರತಿಶತ 64ರಷ್ಟು ಬೋಧಕ ಸಿಬ್ಬಂದಿ ಖಾಲಿ ಇವೆ. ಪ್ರತಿಶತ ಎಪ್ಪತ್ತರಷ್ಟು ಬೋಧಕೇತರ ಹುದ್ದೆಗಳು ಖಾಲಿ ಇವೆ. ಇದೇ ವರ್ಷದ ಜನವರಿ ತಿಂಗಳಲ್ಲಿ ಸುಪ್ರೀಂ ಕೋರ್ಟ್ನ ನ್ಯಾಯಾಧೀಶರ ಪೀಠ ‘‘ವಿಶ್ವವಿದ್ಯಾನಿಲಯಗಳಲ್ಲಿ ಖಾಲಿ ಇರುವ ಕುಲಪತಿ ಮತ್ತು ಕುಲಸಚಿವರ ಹುದ್ದೆಗಳನ್ನು ಒಂದು ತಿಂಗಳಲ್ಲಿ, ಖಾಲಿ ಇರುವ ಬೋಧಕ ಮತ್ತು ಬೋಧಕೇತರ ಹುದ್ದೆಗಳನ್ನು ನಾಲ್ಕು ತಿಂಗಳಲ್ಲಿ ಭರ್ತಿ ಮಾಡಬೇಕು’’ ಎಂದು ಯುಜಿಸಿ, ಕೇಂದ್ರ ಮತ್ತು ರಾಜ್ಯ ಸರಕಾರಗಳಿಗೆ ಆದೇಶ ನೀಡಿದೆ. ವಿಶ್ವವಿದ್ಯಾನಿಲಯಗಳಲ್ಲಿ ಗುಣಮಟ್ಟದ ಶಿಕ್ಷಣ ಕಾಯ್ದುಕೊಳ್ಳಬೇಕು ಎನ್ನುವುದು ನ್ಯಾಯಪೀಠದ ಆಶಯ. ನ್ಯಾಯ ಮೂರ್ತಿ ಜೆ.ಬಿ. ಪರ್ದಿವಾಲ ಮತ್ತು ನ್ಯಾಯಮೂರ್ತಿ ಆರ್. ಮಾಧವನ್ ಅವರ ನ್ಯಾಯ ಪೀಠ 38 ಪುಟಗಳ ಆದೇಶ ಹೊರಡಿಸಿದ್ದು ವಿ.ವಿ.ಗಳ ಪ್ರಾಧ್ಯಾಪಕರ ನೇಮಕಾತಿ ಯು.ಜಿ.ಸಿ. ನಿಯಮಗಳಿಗೆ ಬದ್ಧವಾಗಿರಬೇಕು ಎಂದೂ ಎಚ್ಚರಿಕೆ ನೀಡಿದೆ. ಸುಪ್ರೀಂ ಕೋರ್ಟ್ ಆದೇಶವನ್ನು ಪಾಲಿಸುವುದು ಕೇಂದ್ರ-ರಾಜ್ಯ ಸರಕಾರಗಳಿಗೆ ಅನಿವಾರ್ಯವಾಗಿದೆ. ನಾಲ್ವಡಿ ಕೃಷ್ಣರಾಜ ಒಡೆಯರ್ ಕಾಲದ ಮೈಸೂರು ವಿಶ್ವವಿದ್ಯಾನಿಲಯದಲ್ಲಿ 380ಕ್ಕೂ ಹೆಚ್ಚು ಬೋಧಕ ಹುದ್ದೆಗಳು ಖಾಲಿ ಇವೆ. ಕರ್ನಾಟಕ ವಿಶ್ವವಿದ್ಯಾನಿಲಯದಲ್ಲಿ ಅತಿ ಹೆಚ್ಚು ಬೋಧಕ (415ಕ್ಕೂ ಹೆಚ್ಚು) ಹುದ್ದೆಗಳು ಭರ್ತಿಯಾಗದೆ ಖಾಲಿ ಉಳಿದಿವೆ. ಬೆಂಗಳೂರು ವಿಶ್ವವಿದ್ಯಾನಿಲಯವನ್ನು ಜ್ಞಾನ ಭಾರತಿ ವಿಶ್ವವಿದ್ಯಾನಿಲಯ, ಡಾ. ಮನಮೋಹನ್ ಸಿಂಗ್ ಬೆಂಗಳೂರು ನಗರ ವಿಶ್ವವಿದ್ಯಾನಿಲಯ, ಬೆಂಗಳೂರು ಉತ್ತರ ವಿಶ್ವವಿದ್ಯಾನಿಲಯ ಎಂದು ಮೂರು ವಿಶ್ವವಿದ್ಯಾನಿಲಯಗಳನ್ನಾಗಿ ವಿಭಜಿಸಲಾಗಿದೆ. ಬೆಂಗಳೂರು ಉತ್ತರ ಮತ್ತು ಬೆಂಗಳೂರು ನಗರ ವಿಶ್ವವಿದ್ಯಾನಿಲಯಗಳಿಗೆ ಅಗತ್ಯದ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಯನ್ನು ಭರ್ತಿ ಮಾಡಬೇಕಿದೆ. ಸುಪ್ರೀಂ ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಕರ್ನಾಟಕ ಸರಕಾರ ಈ ಬಾರಿಯ ಬಜೆಟ್ ನಲ್ಲಿ ವಿಶ್ವವಿದ್ಯಾನಿಲಯಗಳ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಯ ನೇಮಕಾತಿಗೆ ಮೊದಲ ಆದ್ಯತೆ ನೀಡಬಹುದೆಂದು ನಿರೀಕ್ಷಿಸಲಾಗಿತ್ತು. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಓದಿದ ಬಜೆಟ್ನಲ್ಲಿ ಒಂದು ಸಾವಿರ ಹುದ್ದೆಗಳನ್ನು ಆದ್ಯತೆಯ ಮೇರೆಗೆ ವಿಶ್ವವಿದ್ಯಾನಿಲಯಗಳಲ್ಲಿ ಭರ್ತಿ ಮಾಡುವುದಾಗಿ ಪ್ರಕಟಿಸಿದ್ದಾರೆ. ಕಾರ್ಪೊರೇಟ್ ವಲಯದ ಸಿಎಸ್ಆರ್ ಫಂಡ್ ಬಳಸಿಕೊಂಡು ಚಾಣಕ್ಯದಂತಹ ಖಾಸಗಿ ವಿಶ್ವವಿದ್ಯಾನಿಲಯಗಳು ಅತ್ಯುತ್ತಮ ಮೂಲಭೂತ ಸೌಕರ್ಯ ಹೊಂದಿದ ಕ್ಯಾಂಪಸ್ನೊಂದಿಗೆ ತಲೆ ಎತ್ತುತ್ತಿವೆ. ಆದರೆ ಸರಕಾರಿ ವಿಶ್ವವಿದ್ಯಾನಿಲಯಗಳು ಸರಕಾರದ ನೆರವು ಸಿಗದೇ ದಿನೇ ದಿನೇ ಸೊರಗುತ್ತಿವೆ. ಕರ್ನಾಟಕದ ಅಸಂಖ್ಯಾತ ಅಲ್ಪಸಂಖ್ಯಾತ, ಹಿಂದುಳಿದ ಮತ್ತು ದಲಿತ ಸಮುದಾಯಕ್ಕೆ ಸೇರಿದ ವಿದ್ಯಾರ್ಥಿಗಳು ಕೇವಲ ಸರಕಾರಿ ವಿಶ್ವವಿದ್ಯಾನಿಲಯಗಳನ್ನು ಅವಲಂಬಿಸಿದ್ದಾರೆ. ಸರಕಾರಿ ವಿಶ್ವವಿದ್ಯಾನಿಲಯಗಳು ದುರ್ಬಲಗೊಂಡರೆ ಅಹಿಂದ ವರ್ಗದವರು ವಿಶ್ವವಿದ್ಯಾನಿಲಯ ಮಟ್ಟದ ಶಿಕ್ಷಣದಿಂದ ವಂಚಿತರಾಗುವುದು ಗ್ಯಾರಂಟಿ. ವಿದೇಶಿ ವಿಶ್ವವಿದ್ಯಾನಿಲಯಗಳು, ಕರ್ನಾಟಕದ ಖಾಸಗಿ ವಿಶ್ವವಿದ್ಯಾನಿಲಯಗಳು ಶಿಕ್ಷಣವನ್ನು ಅದರಲ್ಲೂ ಉನ್ನತ ಶಿಕ್ಷಣವನ್ನು ವ್ಯಾಪಾರಕ್ಕೆ ಇಟ್ಟಿವೆ. ಬಡವರ ಮಕ್ಕಳು ದಕ್ಕಿಸಿಕೊಳ್ಳಲಾಗದ ಸ್ಥಿತಿಯಲ್ಲಿದ್ದಾರೆ. ಸಾಮಾಜಿಕ ನ್ಯಾಯದ ಪ್ರತಿಪಾದಕರಾದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸರಕಾರಿ ವಿಶ್ವವಿದ್ಯಾನಿಲಯಗಳ ಕಾಯಕಲ್ಪಕ್ಕೆ ಮುಂದಾಗಬೇಕು. ಅರವಿಂದ ಲಿಂಬಾವಳಿ ಮತ್ತು ಅಶ್ವತ್ಥ ನಾರಾಯಣ ಅವರ ಹಾಗೆ ಸಿದ್ದರಾಮಯ್ಯ ಸರಕಾರ ಕೂಡಾ ವಿಶ್ವವಿದ್ಯಾನಿಲಯಗಳನ್ನು ಕಡೆಗಣಿಸಿದರೆ ಈ ನಾಡಿನ ಅಹಿಂದ ವರ್ಗದ ಹಿತವನ್ನು ಕಡೆಗಣಿಸಿದಂತೆ. ಕಾಂಗ್ರೆಸ್ ಪಕ್ಷ ಬಿಜೆಪಿಗಿಂತಲೂ ಭಿನ್ನ ಎನ್ನುವುದು ಕೃತಿಯ ಮೂಲಕವೇ ರುಜುವಾತುಪಡಿಸಬೇಕು. ಈ ಬಾರಿಯ ಬಜೆಟ್ ಭಾಷಣದಲ್ಲಿ ವಿಶ್ವವಿದ್ಯಾನಿಲಯಗಳಿಗೆ ಸಂಬಂಧಿಸಿದ ವಿಷಯದಲ್ಲಿ ಗಮನಾರ್ಹ ಘೋಷಣೆ ಮಾಡಿಲ್ಲ ಎಂಬುದು ದೊಡ್ಡ ಕೊರತೆ
ಬೆಂಗಳೂರು: ಸರ್ಕಾರಿ ಜಮೀನುಗಳ ರಕ್ಷಣೆ ಕೇವಲ ಕಂದಾಯ ಇಲಾಖೆಯ ಜವಾಬ್ದಾರಿಯಲ್ಲ, ಇದು ಎಲ್ಲಾ ಇಲಾಖೆಗಳ ಸಾಮೂಹಿಕ ಹೊಣೆ ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ಹೇಳಿದರು. ಸರ್ಕಾರಿ ಆಸ್ತಿಗಳ ಒತ್ತುವರಿ ತಡೆಯಲು ಅಧಿಕಾರಿಗಳು ಪ್ರತಿ ಮೂರು ತಿಂಗಳಿಗೊಮ್ಮೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಬೇಕು ಎಂದು ಅವರು ಕಟ್ಟುನಿಟ್ಟಿನ ಸೂಚನೆ ನೀಡಿದರು. ತಹಶೀಲ್ದಾರ್ ಹಾಗೂ ಸರ್ವೇ ಇಲಾಖೆ ಅಧಿಕಾರಿಗಳೊಂದಿಗೆ ನಡೆಸಿದ
ವ್ಯಕ್ತಿಯೊಬ್ಬರು ತಮ್ಮ ಓಟವನ್ನು ಮುಗಿಸಿ ಶೂಗಳನ್ನು ಕೈಯಲ್ಲಿಡಿದುಕೊಂಡು ಬರಿಗಾಲಿನಲ್ಲಿ ಕಬ್ಬನ್ ಪಾರ್ಕ್ ಮೆಟ್ರೋ ನಿಲ್ದಾಣ ಪ್ರವೇಶಿಸಲು ಪ್ರಯತ್ನಿಸಿದ್ದು, ಇತನನ್ನು ಅಲ್ಲಿಯ ಸಿಬ್ಬಂದಿ ತಡೆದಿದ್ದಾರೆ. ಈ ಕುರಿತು ಈತ ತನ್ನ ಸೋಶಿಯಲ್ ಮೀಡಿಯಾ ಮೂಲಕ ಹೇಳಿಕೊಂಡಿದ್ದು, ಇದಕ್ಕೆ BMRCL ಸ್ಪಷ್ಟನೆ ನೀಡಿದ್ದು, ನಿಯಮಗಳನ್ನು ಪಾಲಿಸಿ ಮೆಟ್ರೋ ಬಳಸಿ ಎಂಬ ಸಂದೇಶವನ್ನು ನೀಡಿದೆ. ಸದ್ಯ ಈ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, BMRCL ಕಾರ್ಯಕ್ಕೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಜೊತೆಗೆ ಕೈಯಲ್ಲಿ ಶೂ ಹಿಡಿದು ಬಂದ ವ್ಯಕ್ತಿಗೆ ಸಾಮಾನ್ಯ ಜ್ಞಾನದ ಪಾಠ ಹೇಳಿಕೊಟ್ಟಿದ್ದಾರೆ.
ಹೊಸದಿಲ್ಲಿ: ಮಸೀದಿಯಲ್ಲಿ ನಮಾಝ್ ಮಾಡುವವರ ಸಂಖ್ಯೆಯನ್ನು ಮಿತಿಗೊಳಿಸುವುದು ನ್ಯಾಯಸಮ್ಮತವಲ್ಲ ಎಂದು ಅಲಹಾಬಾದ್ ಹೈಕೋರ್ಟ್ ಸ್ಪಷ್ಟಪಡಿಸಿದೆ. ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಲು ಸಾಧ್ಯವಾಗದಿದ್ದರೆ ಸಂಬಂಧಿತ ಅಧಿಕಾರಿಗಳು ತಮ್ಮ ಹುದ್ದೆಗೆ ರಾಜೀನಾಮೆ ನೀಡಬೇಕು ಎಂದು ನ್ಯಾಯಾಲಯ ಚಾಟಿ ಬೀಸಿದೆ. ಸಂಭಲ್ ನ ಮಸೀದಿಯಲ್ಲಿ ನಮಾಝ್ ಮಾಡುವವರ ಸಂಖ್ಯೆಯನ್ನು ಮಿತಿಗೊಳಿಸಿದ ಸ್ಥಳೀಯ ಆಡಳಿತದ ಕ್ರಮವನ್ನು ನ್ಯಾಯಮೂರ್ತಿ ಅತುಲ್ ಶ್ರೀಧರನ್ ಹಾಗೂ ನ್ಯಾಯಮೂರ್ತಿ ಸಿದ್ಧಾರ್ಥ್ ನಂದನ್ ಅವರ ವಿಭಾಗೀಯ ಪೀಠ ಪ್ರಶ್ನಿಸಿತು. ಜಿಲ್ಲಾಧಿಕಾರಿ ಮತ್ತು ಪೊಲೀಸ್ ವರಿಷ್ಠಾಧಿಕಾರಿ ಸೇರಿದಂತೆ ಅಧಿಕಾರಿಗಳು ಕಾನೂನಿನ ಆಳ್ವಿಕೆಯನ್ನು ಜಾರಿಗೊಳಿಸಲು ಅಸಮರ್ಥರಾಗಿದ್ದರೆ ರಾಜೀನಾಮೆ ನೀಡಬೇಕು ಅಥವಾ ವರ್ಗಾವಣೆ ಕೋರಬೇಕು ಎಂದು ಪೀಠ ಹೇಳಿದೆ. ಪ್ರತಿಯೊಂದು ಸಮುದಾಯಕ್ಕೂ ತನ್ನ ಗೊತ್ತುಪಡಿಸಿದ ಪ್ರಾರ್ಥನಾ ಸ್ಥಳದಲ್ಲಿ ಅಥವಾ ಖಾಸಗಿ ಆಸ್ತಿಯಲ್ಲಿ ಯಾವುದೇ ಅಧಿಕೃತ ಅನುಮತಿಯಿಲ್ಲದೆ ಶಾಂತಿಯುತವಾಗಿ ಪ್ರಾರ್ಥನೆ ಸಲ್ಲಿಸುವ ಹಕ್ಕು ಇದೆ ಎಂದು ನ್ಯಾಯಾಲಯ ಒತ್ತಿಹೇಳಿತು. ಸಾರ್ವಜನಿಕ ಪ್ರದೇಶ ಅಥವಾ ಸಾರ್ವಜನಿಕ ಆಸ್ತಿಯಲ್ಲಿ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಬೇಕಾದರೆ ಮಾತ್ರ ಆಡಳಿತದ ಅನುಮತಿ ಅಗತ್ಯವಿರುತ್ತದೆ ಎಂಬುದನ್ನು ಪೀಠವು ಉಲ್ಲೇಖಿಸಿತು. ರಮಝಾನ್ ಸಂದರ್ಭದಲ್ಲಿ ಸಂಭಲ್ ನ ಮಸೀದಿಯಲ್ಲಿ ನಮಾಝ್ ಮಾಡಲು ಮುಸ್ಲಿಮರಿಗೆ ಅವಕಾಶ ನೀಡಲಾಗುತ್ತಿಲ್ಲ ಎಂದು ಆರೋಪಿಸಿ ಸಲ್ಲಿಸಿದ ಅರ್ಜಿಯ ಕುರಿತು ನ್ಯಾಯಾಲಯ ವಿಚಾರಣೆ ನಡೆಸಿತು. ಮಸೀದಿಯ ಅಸ್ತಿತ್ವವನ್ನು ದೃಢಪಡಿಸುವ ಫೊಟೋಗಳನ್ನು ಅರ್ಜಿದಾರರು ಸಲ್ಲಿಸಿಲ್ಲ ಎಂಬುದನ್ನು ನ್ಯಾಯಾಲಯ ಗಮನಿಸಿತು. ಜೊತೆಗೆ ಆ ಸ್ಥಳದ ಮಾಲಕತ್ವದ ಕುರಿತು ವಿವಾದವಿದೆ ಎಂಬ ರಾಜ್ಯದ ವಾದವನ್ನೂ ಪರಿಗಣಿಸಿತು. ಕಾನೂನು ಮತ್ತು ಸುವ್ಯವಸ್ಥೆ ಸಮಸ್ಯೆ ಉಂಟಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಕೇವಲ 20 ಮಂದಿಗೆ ಮಾತ್ರ ನಮಾಝ್ ಸಲ್ಲಿಸಲು ಅವಕಾಶ ನೀಡಲಾಗಿದೆ ಎಂದು ರಾಜ್ಯ ಒಪ್ಪಿಕೊಂಡಿತು. ಈ ವಾದವನ್ನು ನ್ಯಾಯಾಲಯ ಸಂಪೂರ್ಣವಾಗಿ ತಿರಸ್ಕರಿಸಿ, ಕಾನೂನು ಸುವ್ಯವಸ್ಥೆ ಕಾಪಾಡುವುದು ರಾಜ್ಯದ ಮೂಲ ಕರ್ತವ್ಯವೆಂದು ಸ್ಪಷ್ಟಪಡಿಸಿತು. “ಸ್ಥಳೀಯ ಅಧಿಕಾರಿಗಳು ಪರಿಸ್ಥಿತಿ ಹದಗೆಡಬಹುದು ಎಂಬ ಕಾರಣದಿಂದ ಜನರ ಸಂಖ್ಯೆಯನ್ನು ಮಿತಿಗೊಳಿಸಲು ಯತ್ನಿಸುವುದಾದರೆ, ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಬೇಕು ಅಥವಾ ತಾವು ಕಾನೂನಿನ ಆಳ್ವಿಕೆಯನ್ನು ಜಾರಿಗೊಳಿಸಲು ಸಮರ್ಥರಲ್ಲವೆಂದು ಒಪ್ಪಿಕೊಳ್ಳಬೇಕು” ಎಂದು ಪೀಠ ಕಟ್ಟುನಿಟ್ಟಾಗಿ ಹೇಳಿದೆ. ಪ್ರಕರಣದ ಮುಂದಿನ ವಿಚಾರಣೆಯನ್ನು ಮಾರ್ಚ್ 16ರಂದು ನಡೆಸಲಾಗುವುದು. ಇದೇ ವೇಳೆ, ಅರ್ಜಿದಾರರು ನಮಾಝ್ ಸಲ್ಲಿಸುವ ಸ್ಥಳವನ್ನು ಸ್ಪಷ್ಟಪಡಿಸುವ ದಾಖಲೆಗಳು, ಛಾಯಾಚಿತ್ರಗಳು ಹಾಗೂ ಕಂದಾಯ ದಾಖಲೆಗಳನ್ನು ಸಲ್ಲಿಸಬೇಕೆಂದು ನ್ಯಾಯಾಲಯ ಸೂಚಿಸಿದೆ. ಅರ್ಜಿದಾರರ ಪರವಾಗಿ ವಕೀಲ ವಹಾಝ್ ಅಹ್ಮದ್ ಸಿದ್ದಿಕಿ ವಾದ ಮಂಡಿಸಿದರು.
Karnataka: ರಾಜ್ಯದಲ್ಲಿ ಹೆಚ್ಚಾಯ್ತು ವಿದ್ಯಾರ್ಥಿಗಳ ಆತ್ಮಹತ್ಯೆ ಪ್ರಕರಣ: 3 ವರ್ಷದಲ್ಲಿ 27 ಸಾವು
ಬೆಂಗಳೂರು: ರಾಜ್ಯದ ಸರ್ಕಾರಿ ಶಾಲೆಗಳು ಮತ್ತು ವಸತಿ ನಿಲಯಗಳಲ್ಲಿ (ಹಾಸ್ಟೆಲ್ಗಳು) ಓದುತ್ತಿರುವ ವಿದ್ಯಾರ್ಥಿಗಳ ಸರಣಿ ಆತ್ಮಹತ್ಯೆ ಪ್ರಕರಣಗಳು ಇದೀಗ ತೀವ್ರ ಆತಂಕಕ್ಕೆ ಕಾರಣವಾಗಿವೆ. ಕಳೆದ ಮೂರು ವರ್ಷಗಳ ಅವಧಿಯಲ್ಲಿ ಬರೋಬ್ಬರಿ 27 ವಿದ್ಯಾರ್ಥಿಗಳು ತಮ್ಮ ಪ್ರಾಣ ಕಳೆದುಕೊಂಡಿರುವ ಆಘಾತಕಾರಿ ಅಂಕಿ-ಅಂಶಗಳು ವಿಧಾನಪರಿಷತ್ ಕಲಾಪದಲ್ಲಿ ಬಹಿರಂಗವಾಗಿವೆ. ಎಳೆಯ ವಯಸ್ಸಿನ ಮಕ್ಕಳು ಈ ಕಠಿಣ ನಿರ್ಧಾರ ತೆಗೆದುಕೊಳ್ಳುತ್ತಿರುವುದು ಇಡೀ ಸಮಾಜ
ಪ್ರತಿಭೆಗೆ ಮತ್ಸರ ಇಲ್ಲ : ಅಪರೂಪದ ಘಟನೆ - ತುಂಬಿದ ವೇದಿಕೆಯಲ್ಲಿ ಬಿಜೆಪಿ ಶಾಸಕರಿಂದ ಕೃಷ್ಣ ಬೈರೇಗೌಡರ ಗುಣಗಾನ
Krisha Byre Gowda Working style : ಸಿದ್ದರಾಮಯ್ಯನವರ ಸರ್ಕಾರದಲ್ಲಿ ಅತ್ಯಂತ ಚುರುಕು ಸಚಿವರೆಂದೇ ಹೆಸರಾಗಿರುವ ಕಂದಾಯ ಸಚಿವ ಕೃಷ್ಣ ಬೈರೇಗೌಡರ ಕಾರ್ಯವೈಖರಿಗೆ ಸಾರ್ವಜನಿಕ ವಲಯದಿಂದ ಮೆಚ್ಚುಗೆ ವ್ಯಕ್ತವಾಗುತ್ತಲೇ ಇರುತ್ತದೆ. ಈಗ, ಬಿಜೆಪಿಯ ಶಾಸಕರೊಬ್ಬರು, ಸಚಿವರ ಕೆಲಸಕ್ಕೆ ತುಂಬಿದ ಸಭೆಯಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ. ಬಿಜೆಪಿ ಶಾಸಕ ಉಮಾನಾಥ ಕೋಟ್ಯಾನ್ ಅವರು ಮಾತನಾಡಿರುವ ವಿಡಿಯೋ ವೈರಲ್ ಆಗುತ್ತಿದೆ.
ಹವಾಮಾನ ಕಾರ್ಯಕರ್ತ ಸೋನಂ ವಾಂಗ್ಚುಕ್ ಬಂಧನ ರದ್ದುಗೊಳಿಸಿದ ಕೇಂದ್ರ ಗೃಹ ಸಚಿವಾಲಯ
ಹೊಸದಿಲ್ಲಿ: ಹವಾಮಾನ ಕಾರ್ಯಕರ್ತ ಸೋನಂ ವಾಂಗ್ಚುಕ್ ಅವರ ಬಂಧನವನ್ನು ಕೇಂದ್ರ ಸರಕಾರ ಶನಿವಾರ ತಕ್ಷಣದಿಂದ ಜಾರಿಗೆ ಬರುವಂತೆ ರದ್ದುಗೊಳಿಸಿದೆ ಎಂದು ಕೇಂದ್ರ ಗೃಹ ಸಚಿವಾಲಯ ತಿಳಿಸಿದೆ. ಗೃಹ ಸಚಿವಾಲಯ ಈ ಕುರಿತು ಹೇಳಿಕೆಯನ್ನು ಬಿಡುಗಡೆಗೊಳಿಸಿದ್ದು, ಲಡಾಖ್ನಲ್ಲಿ ಶಾಂತಿ, ಸ್ಥಿರತೆ ಮತ್ತು ಪರಸ್ಪರ ನಂಬಿಕೆಯ ವಾತಾವರಣವನ್ನು ಉತ್ತೇಜಿಸಲು ಸರಕಾರ ಬದ್ಧವಾಗಿದೆ ಎಂದು ತಿಳಿಸಿದೆ. ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಲಭ್ಯವಿರುವ ಅಧಿಕಾರವನ್ನು ಬಳಸಿಕೊಂಡು ಸೋನಂ ವಾಂಗ್ಚುಕ್ ಅವರ ಬಂಧನವನ್ನು ತಕ್ಷಣದಿಂದಲೇ ರದ್ದುಪಡಿಸಲು ಸರಕಾರ ನಿರ್ಧರಿಸಿದೆ ಎಂದು ಪ್ರಕಟಣೆ ತಿಳಿಸಿದೆ.
ಏಮಾಜೆ : ಕಿರಿಯ ಪ್ರಾಥಮಿಕ ಶಾಲೆಯ ನೂತನ ತರಗತಿ ಕೊಠಡಿಗೆ ಶಿಲಾನ್ಯಾಸ
ಬಂಟ್ವಾಳ: ತಾಲೂಕಿನ ನೆಟ್ಲಮುಡ್ನೂರು ಗ್ರಾಮದ ಏಮಾಜೆಯ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ, ಎಂ.ಆರ್.ಪಿ.ಎಲ್ (MRPL) ಸಂಸ್ಥೆಯ ಸಿ.ಎಸ್.ಆರ್ (CSR) ನಿಧಿಯಡಿ ಮಂಜೂರಾದ ರೂ. 27,50,000 ವೆಚ್ಚದ ಎರಡು ನೂತನ ತರಗತಿ ಕೊಠಡಿಗಳ ಶಿಲಾನ್ಯಾಸ ಕಾರ್ಯಕ್ರಮವು ಗುರುವಾರ ನಡೆಯಿತು. ನೇರಳಕಟ್ಟೆ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕಿನ ಅಧ್ಯಕ್ಷರಾದ ಪುಷ್ಪರಾಜ್ ಚೌಟ ಅವರು ಶಿಲಾನ್ಯಾಸ ನೆರವೇರಿಸಿದರು. ಈ ಸಂದರ್ಭದಲ್ಲಿ ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷೆ ಮಲ್ಲಿಕಾ ಗಣೇಶ್, ಉಪಾಧ್ಯಕ್ಷ ಹರೀಶ್ ಕುಲಾಲ್ ಹಾಗೂ ಕಟ್ಟಡ ಕಾಮಗಾರಿಯ ಗುತ್ತಿಗೆದಾರ ಅಖಿಲ್ ಶೆಟ್ಟಿ ಉಪಸ್ಥಿತರಿದ್ದರು. ಅಲ್ಲದೆ, ನೆಟ್ಲಮುಡ್ನೂರು ಗ್ರಾಮ ಪಂಚಾಯತ್ನ ಮಾಜಿ ಅಧ್ಯಕ್ಷರು, ಹಾಲಿ ಸದಸ್ಯರು, ಎಸ್.ಡಿ.ಎಂ.ಸಿ ಸದಸ್ಯರು, ಮಕ್ಕಳ ಪೋಷಕರು, ದಾನಿಗಳು ಹಾಗೂ ಊರಿನ ವಿದ್ಯಾಭಿಮಾನಿಗಳು ಭಾಗವಹಿಸಿದ್ದರು. ಶಾಲಾ ಮುಖ್ಯ ಶಿಕ್ಷಕಿ ತ್ರಿವೇಣಿ ರಮೇಶ್ ಸ್ವಾಗತಿಸಿದರು. ಸಹ ಶಿಕ್ಷಕರು ಸಹಕರಿಸಿದರು.
ಹಾರ್ಮುಜ್ ಜಲಸಂಧಿಯ ಮೂಲಕ ಎಲ್ಪಿಜಿ ಹೊತ್ತ ಹಡಗುಗಳು ಭಾರತಕ್ಕೆ ಬರಲು ಇರಾನ್ ಅನುಮತಿ
ಹಾರ್ಮುಜ್ ಜಲಸಂಧಿಯ ಮೂಲಕ ಭಾರತದ ಎರಡು ಧ್ವಜ ಹೊತ್ತ ಎಲ್ಪಿಜಿ ವಾಹಕಗಳಿಗೆ ಇರಾನ್ ಅನುಮತಿ ನೀಡಿದೆ. ಭಾರತದಲ್ಲಿ ಎಲ್ಪಿಜಿ ಬಿಕ್ಕಟ್ಟು ಉದ್ಭವಿಸಿರುವ ಈ ಹೊತ್ತಿನಲ್ಲಿ ಈ ಬೆಳವಣಿಗೆ ಮಹತ್ತರ ಎನಿಸಿದೆ. ಇರಾನ್ - ಅಮೆರಿಕ ಸಂಘರ್ಷ ಆರಂಭವಾದ ನಂತರ ಪ್ರಧಾನಿ ನರೇಂದ್ರ ಮೋದಿ ಅವರು ಇರಾನ್ ಜೊತೆ ಮಾತನಾಡಿದ ನಂತರ ಈ ಬೆಳವಣಿಗೆ ನಡೆದಿದೆ.
ಪಾಣೆಮಂಗಳೂರು : ಮಾ. 14 ರಂದು ರಮಾನಾಥ ರೈ ನೇತೃತ್ವದಲ್ಲಿ ಸೌಹಾರ್ದ ಇಫ್ತಾರ್ ಕೂಟ
ಬಂಟ್ವಾಳ : ಮಾಜಿ ಸಚಿವ ಬಿ. ರಮಾನಾಥ ರೈ ಅವರ ನೇತೃತ್ವದಲ್ಲಿ ಸೌಹಾರ್ದ ಇಫ್ತಾರ್ ಕೂಟವು ಮಾರ್ಚ್ 14 ಶನಿವಾರದಂದು ಪಾಣೆಮಂಗಳೂರು ಸಾಗರ್ ಆಡಿಟೋರಿಯಂ ನಲ್ಲಿ ನಡೆಯಲಿದೆ. ಸಂಜೆ 5.30 ಕ್ಕೆ ಸಭಾ ಕಾರ್ಯಕ್ರಮ ನಡೆಯಲಿದ್ದು, ರಮಾನಾಥ ರೈ ಅಧ್ಯಕ್ಷತೆ ವಹಿಸುವರು. ಮಂಗಳೂರು ಶಾಂತಿ ಪ್ರಕಾಶನದ ಅದ್ಯಕ್ಷ ಮುಹಮ್ಮದ್ ಕುಂಞಿ , ಶ್ರೀ ಧಾಮ ಮಾಣಿಲದ ಮೋಹನದಾಸ ಪರಮಹಂಸ ಸ್ವಾಮೀಜಿ , ಬಂಟ್ವಾಳ ವಲಯ ಪ್ರಧಾನ ಧರ್ಮಗುರು ರೆ.ಫಾ. ವಿಕ್ಟರ್ ಡಿಸೋಜಾ, ನೆಹರು ನಗರ ಮಸೀದಿ ಖತೀಬ್ ದಾವೂದ್ ಇಸ್ಮಾಯಿಲ್ ಫೈಝಿ ಹಾಗೂ ಹಲವಾರು ರಾಜಕೀಯ ಸಾಮಾಜಿಕ ಮುಖಂಡರು ಭಾಗವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
ಸತತ ಮೂರನೇ ದಿನವೂ ಕುಸಿದ ಚಿನ್ನ; ಇಂದಿನ ದರವೆಷ್ಟು?
ಹೂಡಿಕೆದಾರರು ದೊಡ್ಡ ಮಟ್ಟದಲ್ಲಿ ಚಿನ್ನದ ಮೇಲೆ ಹೂಡಿಕೆ ಮಾಡುತ್ತಿಲ್ಲ ಅಥವಾ ಹೂಡಿಕೆಯನ್ನು ಹಿಂತೆಗೆಯದೆ ಇರುವುದರಿಂದ ಬೆಲೆಯಲ್ಲಿ ವಿಪರೀತ ಏರಿಳಿತ ಕಾಣುತ್ತಿಲ್ಲ. ಫೆಬ್ರವರಿಯಲ್ಲಿ ಹೆಚ್ಚು ಏರಿಳಿತ ಕಾಣದ ಶುದ್ಧ ಚಿನ್ನದ ಬೆಲೆ ಮಾರ್ಚ್ 01ರಂದು ಪ್ರತಿ ಗ್ರಾಂಗೆ 17 ಸಾವಿರ ದಾಟಿತ್ತು. ಆದರೆ ನಂತರ ಕಳೆದ ಸೋಮವಾರದಿಂದ ಚಿನ್ನದ ಬೆಲೆ ಕುಸಿತದ ಹಾದಿಯಲ್ಲಿದೆ. ಆದರೆ ಕಳೆದ ವಾರಾಂತ್ಯದಲ್ಲಿ ಚಿನ್ನದ ಬೆಲೆಯಲ್ಲಿ ಹಠಾತ್ ಏರಿಕೆ ಕಂಡುಬಂದಿತ್ತು. ಮಾರ್ಚ್ 09 ಸೋಮವಾರ ಮತ್ತೆ ಕುಸಿದ ಶುದ್ಧ ಚಿನ್ನದ ಬೆಲೆ 16 ಸಾವಿರದ ಮಿತಿಯೊಳಗೆ ನಿಂತಿತ್ತು. ಮಂಗಳವಾರ ಮತ್ತು ಬುಧವಾರ ಚಿನ್ನದ ಬೆಲೆಯಲ್ಲಿ ಅಲ್ಪ ಮಟ್ಟಿಗೆ ಸತತ ಏರಿಕೆಯಾಗಿದ್ದು, ಮತ್ತೆ 16 ಸಾವಿರದ ಮಿತಿ ಮೀರಿ ಬೆಳೆದಿದೆ. ಇದೀಗ ಗುರುವಾರ, ಶುಕ್ರವಾರ ಮತ್ತು ಶನಿವಾರ ಸತತ ಕುಸಿತದ ನಂತರ ಚಿನ್ನದ ಬೆಲೆಯು 15 ಸಾವಿರದ ಮಿತಿಯೊಳಗೆ ಬಂದು ನಿಂತಿದೆ. ಚಿನ್ನ-ಬೆಳ್ಳಿ ಬೆಲೆ ಏರಿಳಿತಕ್ಕೆ ಕಾರಣವೇನು? ಅಮೆರಿಕ ಮತ್ತು ಇಸ್ರೇಲ್ ಜೊತೆಗೂಡಿ ಇರಾನ್ ಮೇಲೆ ದಾಳಿ ಮಾಡಿರುವುದು, ಜಾಗತಿಕ ಭೌಗೋಳಿಕ ರಾಜಕೀಯದ ಉದ್ವಿಗ್ನತೆ ಮತ್ತು ಪಶ್ಚಿಮ ಏಷ್ಯಾದಲ್ಲಿ ಸಂಘರ್ಷದ ವಾತಾವರಣದ ನಡುವೆಯೂ ಚಿನ್ನ ಮತ್ತು ಬೆಳ್ಳಿಯ ಬೆಲೆಗಳು ವಿಪರೀತ ಏರದೆ ಸ್ಥಿರವಾಗಿವೆ. ಅಮೆರಿಕನ್ ಡಾಲರ್ ಪ್ರಬಲವಾಗಿರುವುದು ಮತ್ತು ಅಮೆರಿಕದ ಕೇಂದ್ರೀಯ ಬ್ಯಾಂಕ್ ಫೆಡರಲ್ ರಿಸರ್ವ್ ನೀತಿಯ ಮೇಲೆ ನಿರೀಕ್ಷೆಯ ನಡುವೆ ಸದ್ಯದ ಮಟ್ಟಿಗೆ ಹೂಡಿಕೆದಾರರು ಚಿನ್ನ-ಬೆಳ್ಳಿ ಮಾರುಕಟ್ಟೆಯನ್ನು ಅನುಮಾನದಿಂದಲೇ ಗಮನಿಸುತ್ತಿದ್ದಾರೆ. ಹೀಗಾಗಿ, ದೊಡ್ಡ ಮಟ್ಟದಲ್ಲಿ ಚಿನ್ನದ ಮೇಲೆ ಹೂಡಿಕೆ ಮಾಡುತ್ತಿಲ್ಲ ಅಥವಾ ಹೂಡಿಕೆಯನ್ನು ಹಿಂತೆಗೆಯುತ್ತಿಲ್ಲ. ಅದೇ ಕಾರಣದಿಂದ ಚಿನ್ನ-ಬೆಳ್ಳಿ ಬೆಲೆಗಳು ಅಲ್ಪ ಏರಿಳಿತ ಕಾಣುತ್ತಿವೆ. ಇಂದಿನ ಚಿನ್ನದ ದರ ಹೇಗಿದೆ? ಮಾರ್ಚ್ 14ರಂದು ಶನಿವಾರ ಬೆಂಗಳೂರಿನ ಮಾರುಕಟ್ಟೆಗಳಲ್ಲಿ 24 ಕ್ಯಾರೆಟ್ ಶುದ್ಧ ಚಿನ್ನದ ಬೆಲೆ ಶುಕ್ರವಾರ ಸಂಜೆಯ ಬೆಲೆಗೆ ಹೋಲಿಸಿದರೆ ಪ್ರತಿ ಗ್ರಾಂಗೆ 103 ರೂ. ಕುಸಿತ ಕಂಡು ಹತ್ತು ಗ್ರಾಂ ಬೆಲೆ 1,59,660 ರೂ. ಗೆ ಬಂದು ನಿಂತಿದೆ. ಆಭರಣ ಚಿನ್ನವಾದ 22 ಕ್ಯಾರೆಟ್ ಬೆಲೆಯು ಗ್ರಾಂಗೆ 95 ರೂ. ಕುಸಿತವಾಗಿ ಹತ್ತು ಗ್ರಾಂಗೆ 1,46,350 ರೂ. ಗೆ ತಲುಪಿದೆ. 18 ಕ್ಯಾರೆಟ್ ಚಿನ್ನವು ಪ್ರತಿ ಗ್ರಾಂಗೆ 78 ರೂ. ಕುಸಿದು ಹತ್ತು ಗ್ರಾಂಗೆ 1,19,740 ರೂ. ಗೆ ತಲುಪಿದೆ. ಮಂಗಳೂರಿನಲ್ಲಿ ಚಿನ್ನದ ದರವೆಷ್ಟಿದೆ? ಮಾರ್ಚ್ 14ರಂದು ಶನಿವಾರ ಬೆಳಗಿನ 11 ಗಂಟೆಯ ವಹಿವಾಟಿನಲ್ಲಿ ಮಂಗಳೂರಿನಲ್ಲಿ ಚಿನ್ನದ ಬೆಲೆ ಮತ್ತೆ ತೀವ್ರ ಕುಸಿತ ಕಂಡುಬಂದಿದೆ. ಒಂದು ಗ್ರಾಂ 24 ಕ್ಯಾರೆಟ್ ಚಿನ್ನದ ದರ 15,966 (-103) ರೂ. ನಷ್ಟಿದೆ. ಒಂದು ಗ್ರಾಂ 22 ಕ್ಯಾರೆಟ್ ಚಿನ್ನದ 14,635 (-95) ರೂ. ಮತ್ತು ಒಂದು ಗ್ರಾಂ 18 ಕ್ಯಾರೆಟ್ ಚಿನ್ನದ ದರ 11,974 (-78) ರೂ. ಬೆಲೆಗೆ ತಲುಪಿದೆ. ಮತ್ತೆ ಕುಸಿದ ಬೆಳ್ಳಿ ದರ ಮಾರ್ಚ್ 02ರಂದು ಗ್ರಾಂಗೆ 20 ರೂ. ಕುಸಿತ ಕಂಡು ಒಂದು ಕೆಜಿ ಬೆಳ್ಳಿ ಬೆಲೆಯು 2,95,000 ರೂ. ಗೆ ಬಂದು ನಿಂತಿತ್ತು. ಕಳೆದ ಬುಧವಾರ ಮತ್ತೆ ಪ್ರತಿ ಗ್ರಾಂಗೆ 10 ರೂ. ಕುಸಿದ ಬೆಳ್ಳಿಯ ಬೆಲೆ ಪ್ರತಿ ಕೆಜಿಗೆ 2,85,000 ರೂ. ಗೆ ತಲುಪಿತ್ತು. ನಂತರ ಗುರುವಾರ, ಶುಕ್ರವಾರ ಮತ್ತು ಶನಿವಾರ ಇದೇ ಬೆಲೆಗೆ ಸ್ಥಿರವಾಗಿ ನಿಂತಿದೆ. ಮಾರ್ಚ್ 09ರಂದು ಸೋಮವಾರ ಮತ್ತೆ ಪ್ರತಿ ಗ್ರಾಂಗೆ 5 ರೂ. ಕುಸಿದ ಬೆಳ್ಳಿ ಪ್ರತಿ ಕೆಜಿಗೆ 2,80,000 ರೂ. ಗೆ ತಲುಪಿತ್ತು. ಮಂಗಳವಾರ ಪ್ರತಿ ಗ್ರಾಂಗೆ 10 ರೂ. ಏರಿಕೆಯಾಗಿರುವ ಬೆಳ್ಳಿಯ ಬೆಲೆ ಪ್ರತಿ ಕೆಜಿಗೆ 2,90,000 ರೂ.ಗೆ ಆಗಿತ್ತು. ಬುಧವಾರ ಇದೇ ಬೆಲೆಯಲ್ಲಿ ಸ್ಥಿರವಾಗಿ ನಿಂತಿದ್ದ ಪ್ರತಿ ಗ್ರಾಂ ಬೆಳ್ಳಿಯ ಬೆಲೆ ಗುರುವಾರ 10 ರೂ. ಕುಸಿದು ಮತ್ತೆ ಪ್ರತಿ ಕೆಜಿಗೆ 2,80,000 ರೂ.ಗೆ ಬಂದು ತಲುಪಿದೆ. ಶುಕ್ರವಾರ ಇದೇ ಬೆಲೆಗೆ ಸ್ಥಿರವಾಗಿ ನಿಂತಿದೆ. ಆದರೆ ಶನಿವಾರ ಮತ್ತೆ ಪ್ರತಿ ಗ್ರಾಂಗೆ 5 ರೂ. ಕುಸಿದು ಪ್ರತಿ ಕೆಜಿಗೆ 2,75,000 ರೂ. ಗೆ ತಲುಪಿದೆ. ವಿವಿಧ ನಗರಗಳಲ್ಲಿ 1 ಗ್ರಾಮ್ ಚಿನ್ನದ ದರ (ಬೆಳಗಿನ ವಹಿವಾಟು) ಹೇಗಿದೆ? ದಿಲ್ಲಿ: 24 ಕ್ಯಾರೆಟ್ ಚಿನ್ನದ ದರ 15,981 (-103) ರೂ., 22 ಕ್ಯಾರೆಟ್ ಚಿನ್ನದ ದರ 14,650 (-95) ರೂ. ಮುಂಬೈ: 24 ಕ್ಯಾರೆಟ್ ಚಿನ್ನದ ದರ 15,966 (-103) ರೂ., 22 ಕ್ಯಾರೆಟ್ ಚಿನ್ನದ ದರ 14,635 (-95) ರೂ. ಅಹಮದಾಬಾದ್: 24 ಕ್ಯಾರೆಟ್ ಚಿನ್ನದ ದರ 15,971 (-103) ರೂ., 22 ಕ್ಯಾರೆಟ್ ಚಿನ್ನದ ದರ 14,640 (-95) ರೂ. ಚೆನ್ನೈ: 24 ಕ್ಯಾರೆಟ್ ಚಿನ್ನದ ದರ 16,102 (-154) ರೂ., 22 ಕ್ಯಾರೆಟ್ ಚಿನ್ನದ ದರ 14,760 (-140) ರೂ. ಕೋಲ್ಕತ್ತಾ: 24 ಕ್ಯಾರೆಟ್ ಚಿನ್ನದ ದರ 15,966 (-103) ರೂ., 22 ಕ್ಯಾರೆಟ್ ಚಿನ್ನದ ದರ 14,635 (-95) ರೂ. ಹೈದರಾಬಾದ್: 24 ಕ್ಯಾರೆಟ್ ಚಿನ್ನದ ದರ 15,966 (-103) ರೂ., 22 ಕ್ಯಾರೆಟ್ ಚಿನ್ನದ ದರ 14,635 (-95) ರೂ. ಜೈಪುರ: 24 ಕ್ಯಾರೆಟ್ ಚಿನ್ನದ ದರ 15,981 (-103) ರೂ., 22 ಕ್ಯಾರೆಟ್ ಚಿನ್ನದ ದರ 14,650 (-95) ರೂ. ಚಂಡೀಗಢ: 24 ಕ್ಯಾರೆಟ್ ಚಿನ್ನದ ದರ 15,981 (-103) ರೂ., 22 ಕ್ಯಾರೆಟ್ ಚಿನ್ನದ ದರ 14,650 (-95) ರೂ. ಲಕ್ನೋ: 24 ಕ್ಯಾರೆಟ್ ಚಿನ್ನದ ದರ 15,981 (-103) ರೂ., 22 ಕ್ಯಾರೆಟ್ ಚಿನ್ನದ ದರ 14,650 (-95) ರೂ.
ಹಾಸನ ಕಾಂಗ್ರೆಸ್ ಪಾಳಯದಲ್ಲಿ ಭಿನ್ನಮತ ಸ್ಪೋಟ: ಅತೃಪ್ತ ಮುಖಂಡರ ಪ್ರತ್ಯೇಕ ಸಭೆ, ರಾಜ್ಯದ ನಾಯಕರ ವಿರುದ್ದ ಅಸಮಾಧಾನ!
ಹಾಸನದ ಕಾಂಗ್ರೆಸ್ ಪಾಳಯದಲ್ಲಿ ಸದ್ಯ ಭಿನ್ನಮತ ಕಾಣಿಸಿಕೊಂಡಿದೆ. 2028ರ ಚುನಾವಣೆಯಲ್ಲಿ ಜೆಡಿಎಸ್ ಭದ್ರಕೋಟೆಯನ್ನು ಕಾಂಗ್ರೆಸ್ ಗೆಲ್ಲುವ ಹಂಬಲದಿಂದ ಸಾಕಷ್ಟು ಬೃಹತ್ ಸಮಾವೇಶಗಳನ್ನು ನಡೆಸಿದ ಹಾಸನದ ಮೇಲೆ ವಿಶೇಷ ಆಸಕ್ತಿ ವಹಿಸುವ ಭರವಸೆಯನ್ನೆಲ್ಲಾ ನೀಡಿದ್ದರು. ಆದರೆ, ಇದೀಗ ಕೆಲ ಕಾಂಗ್ರಸ್ ಮುಖಂಡರಲ್ಲಿ ರಾಜ್ಯ ಹಾಗೂ ಹೈಕಮಾಂಡ್ ನಾಯಕರಲ್ಲಿ ಬೇಸರವುಂಟಾದಂತಿದ್ದು, ಪ್ರತ್ಯೇಕ ಸಭೆ ನಡೆಸಿ ಅಸಮಾಧಾನ ಹೊರಹಾಕಿದ್ದಾರೆ. ಈ ವೇಳೆ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿಗಳನ್ನೇ ನೆಚ್ಚಿ ಕುಳಿತರೆ ಮುಂಬರುವ ಚುನಾವಣೆಯಲ್ಲಿ ಗೆಲ್ಲುವುದು ಕಷ್ಟ ಎಂದು ಎಚ್.ಕೆ.ಮಹೇಶ್ ಹೇಳಿದ್ದಾರೆ. ಸದ್ಯ ಇದು ಸಾಕಷ್ಟು ಚರ್ಚೆಗೀಡು ಮಾಡಿದೆ.
ದೇಶದಲ್ಲಿ ಎಲ್ಲೂ ಗ್ಯಾಸ್, ಪೆಟ್ರೋಲಿಯಂ ಉತ್ಪನ್ನ ಅಭಾವವಿಲ್ಲ : ಪ್ರಲ್ಹಾದ ಜೋಶಿ
ಬೆಂಗಳೂರು: ಮಧ್ಯಪ್ರಾಚ್ಯದ ಯುದ್ಧದ ಸಂದಿಗ್ಧ ಪರಿಸ್ಥಿತಿಯಲ್ಲಿ ದೇಶದಲ್ಲಿ ಎಲ್ಲಿಯೂ ಗ್ಯಾಸ್ ಮತ್ತು ಪೆಟ್ರೋಲಿಯಂ ಉತ್ಪನ್ನಗಳ ಕೊರತೆಯಿಲ್ಲ. ಆದರೆ ಕಾಂಗ್ರೆಸ್ ಪಕ್ಷ “ಬಣವಿ ಸುಟ್ಟು ಅರಳು ಮುಕ್ಕುವ” ಕೆಲಸ ಮಾಡುತ್ತಿದೆ ಎಂದು ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಪ್ರಲ್ಹಾದ ಜೋಶಿ ಹೇಳಿದ್ದಾರೆ. ಬೆಂಗಳೂರಿನಲ್ಲಿ ಶುಕ್ರವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಹುಲ್ ಗಾಂಧಿ ಮತ್ತು ಸಿಎಂ ಸಿದ್ದರಾಮಯ್ಯ ಅವರು “ಕೇಂದ್ರದ ವಿರುದ್ಧ ಪ್ರತಿಭಟನೆಗೆ ಇಳಿಯಿರಿ” ಎಂದು ಜನರನ್ನು ಎತ್ತಿಕಟ್ಟುತ್ತಿರುವುದು ನಿಜಕ್ಕೂ ದೇಶದ ದೌರ್ಭಾಗ್ಯವೇ ಸರಿ ಎಂದರು. ದೇಶದಲ್ಲಿ ಈ ಹಿಂದೆ ಬಿಕ್ಕಟ್ಟು ಉಂಟಾದಾಗ ವಿಪಕ್ಷ ಸ್ಥಾನದಲ್ಲಿದ್ದ ಬಿಜೆಪಿ ಅತ್ಯಂತ ಜವಾಬ್ದಾರಿಯಿಂದ ನಡೆದುಕೊಂಡಿದೆ. ಆದರೆ ಸದ್ಯದ ಪರಿಸ್ಥಿತಿಯಲ್ಲಿ ವಿಪಕ್ಷ ಕಾಂಗ್ರೆಸ್ ತೀರಾ ಬೇಜವಾಬ್ದಾರಿಯಾಗಿ ನಡೆದುಕೊಳ್ಳುತ್ತಿದೆ. ಯುದ್ಧದ ಈ ಸಂದಿಗ್ಧ ಪರಿಸ್ಥಿತಿಯಲ್ಲಿ “ಏನಾದರೂ ಮಾಡಿ ಮೋದಿ ಸರ್ಕಾರಕ್ಕೆ ಕೆಟ್ಟ ಹೆಸರು ತರಬೇಕು” ಎಂಬ ದುರಾಲೋಚನೆಯೊಂದಿಗೆ ಕಾಂಗ್ರೆಸ್ ಪಕ್ಷ ಪ್ರಯತ್ನಿಸುತ್ತಿದೆ. ದೇಶದಲ್ಲಿ ಗ್ಯಾಸ್ ಸೇರಿದಂತೆ ಪೆಟ್ರೋಲಿಯಂ ಉತ್ಪನ್ನಗಳ ಅಭಾವವಿದೆ ಎಂದು ಜನರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದರು. ಯುದ್ಧದಿಂದಾಗಿ ಜಗತ್ತೇ ತತ್ತರಿಸುತ್ತಿದೆ. ಸಂಘರ್ಷ ಸನ್ನಿವೇಶದಲ್ಲೂ ಭಾರತದಲ್ಲಿ ಯಾವುದೇ ಅಭಾವ ಅಥವಾ ತೊಡಕು ಉಂಟಾಗದಂತೆ ಪ್ರಧಾನಿ ಮೋದಿ ಅವರ ನೇತೃತ್ವದಲ್ಲಿ ಸರ್ಕಾರ ಅಗತ್ಯ ಕ್ರಮ ಕೈಗೊಂಡಿದೆ. ಅಂತಾರಾಷ್ಟ್ರೀಯ ಸಂಬಂಧಗಳನ್ನು ಉತ್ತಮಪಡಿಸಿಕೊಂಡು ದೇಶವಾಸಿಗಳ ಹಿತ ಕಾಯಲು ಬದ್ಧವಾಗಿ ಉತ್ತಮ ಆಡಳಿತ ನಡೆಸುತ್ತಿದೆ. ಆದರೆ ಕಾಂಗ್ರೆಸ್ ಪಕ್ಷ ಮೋದಿ ಸರ್ಕಾರದ ವಿರುದ್ಧ ಜನರ ಭಾವನೆ ಕೆರಳಿಸಲು ಯತ್ನಿಸುತ್ತಿದೆ ಎಂದು ಸಚಿವ ಜೋಶಿ ಆಕ್ರೋಶ ವ್ಯಕ್ತಪಡಿಸಿದರು. ಗ್ಯಾಸ್ ಸೇರಿದಂತೆ ಪೆಟ್ರೋಲಿಯಂ ಉತ್ಪನ್ನಗಳ ಕೊರತೆ ದೇಶದಲ್ಲಿ ಎಲ್ಲಿಯೂ ಇಲ್ಲ. ದೇಶದ 33 ಕೋಟಿ ಕುಟುಂಬಗಳಿಗೆ LPG ಪೂರೈಕೆಯಾಗುತ್ತಿದೆ. ಮೊದಲಿನಂತೆ ಸಿಲಿಂಡರ್ ಬುಕ್ ಮಾಡಿದ ಎರಡ್ಮೂರು ದಿನಗಳಲ್ಲೇ ಪೂರೈಸುತ್ತಿದ್ದೇವೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವರೂ ಆಗಿರುವ ಪ್ರಲ್ಹಾದ ಜೋಶಿ ಸ್ಪಷ್ಟಪಡಿಸಿದರು. ಭಾರತಕ್ಕೆ ಈ ಮೊದಲು ಕೇವಲ 20 ದೇಶಗಳಿಂದ ಪೆಟ್ರೋಲಿಯಂ ಉತ್ಪನ್ನಗಳು ಬರುತ್ತಿದ್ದವು. ಆದರೆ ಇದೀಗ ಅದನ್ನು 40 ರಾಷ್ಟ್ರಗಳಿಗೆ ಹೆಚ್ಚಿಸಿದ್ದೇವೆ. ಆಸ್ಟ್ರೇಲಿಯಾ, ರಷ್ಯಾ ಸೇರಿದಂತೆ ಆಫ್ರಿಕಾದ ಕೆಲವು ದೇಶಗಳಿಂದಲೂ ತರಿಸಿಕೊಳ್ಳಲು ಯೋಜಿಸಿದ್ದೇವೆ. ಅಲ್ಲದೆ ದೇಶದಲ್ಲೇ ಶೇ.20ರಷ್ಟು LPG ಉತ್ಪಾದನೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು. ಯುಪಿಎ ಕಾಲದಲ್ಲಿ ಕೇವಲ ಶೇ.1.5ರಷ್ಟಿದ್ದ ಎಥೆನಾಲ್ ಬ್ಲೆಂಡಿಂಗ್ ಅನ್ನು ಇದೀಗ ಶೇ.20ಕ್ಕೆ ಹೆಚ್ಚಿಸಲಾಗಿದೆ. ಇದಷ್ಟೇ ಅಲ್ಲದೆ ಪೆಟ್ರೋಲ್ ಮತ್ತು ಡೀಸೆಲ್ ಪಂಪ್ಗಳನ್ನು ಸೌರ ಪಂಪ್ಗಳನ್ನಾಗಿ ಪರಿವರ್ತಿಸಲಾಗಿದೆ. ದೇಶದಲ್ಲಿ ಕಲ್ಲಿದ್ದಲು ಉತ್ಪಾದನೆಯೂ ಹೆಚ್ಚಾಗಿದೆ. ಇನ್ನು ನವೀಕರಿಸಬಹುದಾದ ಇಂಧನ ಉತ್ಪಾದನೆಯೂ ಹೆಚ್ಚಾಗಿದೆ. ಹೀಗೆ ನಮ್ಮ ದೇಶ ಆತ್ಮನಿರ್ಭರ ಭಾರತವಾಗಿದೆ. ಆದರೆ ಕಾಂಗ್ರೆಸ್ ನಾಯಕರು ಈ ಆತ್ಮನಿರ್ಭರ ಭಾರತವನ್ನು ಕೆಡಿಸುವ ಸಂಚು ಹೂಡಿದ್ದಾರೆ ಎಂದು ಪ್ರಲ್ಹಾದ ಜೋಶಿ ಕಾಂಗ್ರೆಸ್ ವಿರುದ್ಧ ಹರಿಹಾಯ್ದರು. ದೇಶದಲ್ಲಿ ಎಲ್ಲಿಯೂ LPG ಅಭಾವವಿಲ್ಲ. ಜನಸಾಮಾನ್ಯರ ಹಿತದೃಷ್ಟಿಯಿಂದ ಬುಕ್ಕಿಂಗ್ ನಿಯಮಿತಗೊಳಿಸಿ ಕಮರ್ಷಿಯಲ್ ಗ್ಯಾಸ್ ಮೇಲೆ ಕೇಂದ್ರ ನಿಗಾ ವಹಿಸುತ್ತಿದೆ ಅಷ್ಟೇ. ಆದರೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಮತ್ತು ಸಿಎಂ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ ನಾಯಕರು ಪರಿಸ್ಥಿತಿಯ ಲಾಭ ಪಡೆದು ಜನರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಸಚಿವ ಪ್ರಲ್ಹಾದ ಜೋಶಿ ಆರೋಪಿಸಿದರು.
ಸಾಮಾಜಿಕ ಜಾಲತಾಣಗಳ ಬಳಕೆ; ವಹಿಸಬೇಕಾದ ಎಚ್ಚರ
ಈಗ ಸಾಮಾಜಿಕ ಜಾಲತಾಣಗಳು ಕೇವಲ ಸಂವಹನ ಸಾಧನವಲ್ಲ ಬದಲಿಗೆ ಅದೊಂದು ಅಭಿಪ್ರಾಯ ರೂಪಿಸುವ ಶಕ್ತಿಯಾಗಿದೆ. ಚುನಾವಣೆಗಳ ವೇಳೆ ರಾಜಕೀಯ ಪ್ರಚಾರದಿಂದ ಹಿಡಿದು ಸಾಮಾಜಿಕ ಚಳವಳಿಗಳವರೆಗೆ ಇದರ ಪ್ರಭಾವ ಸ್ಪಷ್ಟವಾಗಿದೆ. ಒಂದು ಪೋಸ್ಟ್ ಸಾವಿರಾರು ಜನರಿಗೆ ತಲುಪುವ ಸಾಮರ್ಥ್ಯ ಹೊಂದಿರುವುದರಿಂದ ಪ್ರತಿಯೊಬ್ಬ ಬಳಕೆದಾರನಿಗೂ ಜವಾಬ್ದಾರಿ ಅಗತ್ಯವಾಗಿದೆ. ಒಟ್ಟಿನಲ್ಲಿ, ಇದು ಜ್ಞಾನ, ಸಂಪರ್ಕ ಮತ್ತು ಅವಕಾಶಗಳನ್ನು ಒದಗಿಸುವ ಮಹತ್ವದ ವೇದಿಕೆ ಆಗಿದ್ದರೂ ಸಹ ಅದರ ದುರುಪಯೋಗವು ಸಮಸ್ಯೆಗಳಿಗೆ ಕಾರಣವಾಗುತ್ತಿರುವುದನ್ನೂ ಕಾಣುತ್ತಿದ್ದೇವೆ. ಇಂದಿನ ಡಿಜಿಟಲ್ ಯುಗದಲ್ಲಿ ಸಾಮಾಜಿಕ ಜಾಲತಾಣಗಳು ಮಾನವನ ದೈನಂದಿನ ಬದುಕಿನ ಅವಿಭಾಜ್ಯ ಅಂಗವಾಗಿವೆ. ಇತ್ತೀಚಿನ ವರ್ಷಗಳಲ್ಲಿ ಇದರ ವ್ಯಾಪ್ತಿ ಮತ್ತು ಪ್ರಭಾವವು ಅತ್ಯಂತ ವೇಗವಾಗಿ ಹೆಚ್ಚಾಗಿದೆ. ಮಾಹಿತಿ ಹಂಚಿಕೆ, ಮನರಂಜನೆ, ವ್ಯಾಪಾರ, ರಾಜಕೀಯ ಚರ್ಚೆ ಹಾಗೂ ವೈಯಕ್ತಿಕ ಅಭಿವ್ಯಕ್ತಿ-ಎಲ್ಲದಕ್ಕೂ ಸಾಮಾಜಿಕ ಜಾಲತಾಣವೇ ಪ್ರಮುಖ ವೇದಿಕೆಯಾಗಿದೆ. ಯುವಕರಿಂದ ಹಿಡಿದು ಹಿರಿಯರ ತನಕ ಎಲ್ಲರೂ ಈ ಡಿಜಿಟಲ್ ಜಾಲತಾಣಗಳನ್ನು ಬಳಸುತ್ತಿದ್ದಾರೆ. ಪ್ರಸ್ತುತ ಪರಿಸ್ಥಿತಿಯಲ್ಲಿ ಸಾಮಾಜಿಕ ಜಾಲತಾಣಗಳ ಬಳಕೆದಾರರನ್ನು ಗಮನಿಸಿದಾಗ ಜಾಗತಿಕ ಮಟ್ಟದಲ್ಲಿ ಇದರ ಸಂಖ್ಯೆ ಕೋಟಿ-ಕೋಟಿಯಾಗಿರುವುದನ್ನು ಕಾಣುತ್ತೇವೆ. ಪ್ರತಿದಿನ ಜನರು ಹಲವಾರು ಗಂಟೆಗಳ ಕಾಲ ತಮ್ಮ ಮೊಬೈಲ್ ಅಥವಾ ಕಂಪ್ಯೂಟರ್ ಮೂಲಕ ವಿವಿಧ ವೇದಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ವಿಶೇಷವಾಗಿ ಚಿಕ್ಕ ಅವಧಿಯ ವೀಡಿಯೊಗಳು, ನೇರ ಪ್ರಸಾರಗಳು ಹಾಗೂ ವೈಯಕ್ತಿಕೀಕೃತ ವಿಷಯಗಳು ಹೆಚ್ಚು ಜನಪ್ರಿಯವಾಗಿವೆ. ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನದ ಸಹಾಯದಿಂದ ಬಳಕೆದಾರರ ಆಸಕ್ತಿಗೆ ಅನುಗುಣವಾಗಿ ಹಲವಾರು ವಿಷಯಗಳನ್ನು ತೋರಿಸುವ ವ್ಯವಸ್ಥೆ ಮತ್ತಷ್ಟು ಬಲಗೊಂಡಿದೆ. ವ್ಯಾಪಾರ ಮತ್ತು ಮಾರುಕಟ್ಟೆ ಕ್ಷೇತ್ರದಲ್ಲಿಯೂ ಸಾಮಾಜಿಕ ಜಾಲತಾಣ ಮಹತ್ವದ ಪಾತ್ರ ವಹಿಸುತ್ತಿದೆ. ಸಣ್ಣ ಮತ್ತು ಮಧ್ಯಮ ಉದ್ಯಮಗಳು ಕಡಿಮೆ ವೆಚ್ಚದಲ್ಲಿ ತಮ್ಮ ಉತ್ಪನ್ನಗಳನ್ನು ಜಾಹೀರಾತು ಮಾಡುವ ಅವಕಾಶವನ್ನು ಪಡೆದಿವೆ. ಆನ್ಲೈನ್ ವ್ಯಾಪಾರ, ಡಿಜಿಟಲ್ ಮಾರ್ಕೆಟಿಂಗ್ ಹಾಗೂ ಪ್ರಭಾವಿಗಳ (influencers) ಮೂಲಕ ಉತ್ಪನ್ನ ಪ್ರಚಾರ ಇಂದಿನ ವ್ಯವಹಾರ ತಂತ್ರದ ಪ್ರಮುಖ ಭಾಗವಾಗಿದೆ. ಇದರಿಂದ ಉದ್ಯೋಗಾವಕಾಶಗಳೂ ಹೆಚ್ಚಾಗಿವೆ. ಇದರ ಇನ್ನೊಂದು ಮುಖವೂ ಗಮನಾರ್ಹವಾಗಿದೆ. ಸಾಮಾಜಿಕ ಜಾಲತಾಣಗಳ ಅತಿಯಾದ ಬಳಕೆ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ಹೋಲಿಕೆ ಮನೋಭಾವ, ಲೈಕ್-ಶೇರ್ ಸಂಸ್ಕೃತಿ ಹಾಗೂ ನಿರಂತರ ಮಾಹಿತಿಯ ಒತ್ತಡವು ಕೆಲವರಿಗೆ ಆತಂಕ ಮತ್ತು ಒತ್ತಡವನ್ನುಂಟು ಮಾಡುತ್ತದೆ. ವಿಶೇಷವಾಗಿ ಕಿಶೋರ ಮತ್ತು ಯುವ ವಯಸ್ಸಿನ ಬಳಕೆದಾರರ ಸುರಕ್ಷತೆ ಕುರಿತು ಚರ್ಚೆಗಳು ಹೆಚ್ಚಾಗಿವೆ. ಇವುಗಳನ್ನು ಹೆಚ್ಚು ಬಳಸುವುದರಿಂದ ಮನೋವೈಜ್ಞಾನಿಕ ಕಾಯಿಲೆಗಳು ಬರುತ್ತವೆ ಎನ್ನುವುದನ್ನು ಹೆಚ್ಚಿನ ಅಧ್ಯಯನ ವರದಿಗಳು (ಅಕಾಡಮಿಕ್ ಅಧ್ಯಯನಗಳು) ಹೇಳಿವೆ. ಮುಖ್ಯವಾಗಿ ಯುವಕರಲ್ಲಿ ಮಾನಸಿಕ ಒತ್ತಡ, ಅಲಸ್ಯತೆ, ಆಕ್ರಮಣಕಾರಿ ಭಾವನೆ, ಹೆಚ್ಚಾಗುವುದು, ಈ ತರಹದ ಮನೋವೈಜ್ಞಾನಿಕತೆಯ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತವೆಯಲ್ಲದೆ ನಕಾರಾತ್ಮಕ ಭಾವನೆಗಳೇ ಹೆಚ್ಚಾಗುತ್ತವೆ. ಶೇ. 39ರಷ್ಟು ಭಾರತೀಯ ಯುವಕರಲ್ಲಿ ಆಕ್ರಮಣಕಾರಿ ಭಾವನೆ, ಶೇ. 25 ಯುವಕರಲ್ಲಿ ಅತೀಯಾದ ಚಟುವಟಿಕೆ(ಹೈಪರ್ ಆಕ್ಟಿವ್)ಭಾವನೆ, ಶೇ. 37ರಷ್ಟು ಯುವಕರಲ್ಲಿ ಅಸಹನೆ ಭಾವನೆ ಸಾಮಾಜಿಕ ಜಾಲತಾಣಗಳ ಬಳಕೆಯಿಂದ ಬಂದಿದೆ ಎಂದು ಅಧ್ಯಯನವೊಂದು ಹೇಳಿದೆ. ಜಾಗತಿಕವಾಗಿ ಸಾಮಾಜಿಕ ಜಾಲತಾಣಗಳ ಆರಂಭವನ್ನು ನೋಡಿದಾಗ 1997ರಲ್ಲಿ ಮೊದಲಿಗೆ ಸಿಕ್ಸ್ ಡಿಗ್ರೀಸ್ ಎನ್ನುವ ಮೊದಲ ಸಾಮಾಜಿಕ ಜಾಲತಾಣವನ್ನು ಆರಂಭಿಸಲಾಯಿತು. 2001ರಲ್ಲಿ ಇದು ತೆರೆಮರೆಗೆ ಸರಿದು, 2002ರಲ್ಲಿ ಫ್ರೆಂಡ್ಸ್ಟರ್ ಎನ್ನುವ ಇನ್ನೊಂದು ಜಾಲತಾಣ ಬಳಕೆಗೆ ಬಂತು. ಅಲ್ಲಿಂದ ಶುರುವಾಗಿ ಮೈಸ್ಪೇಸ್(2002), ಫೇಸ್ಬುಕ್ (2004), ಟ್ವಿಟರ್(2006), ವಾಟ್ಸ್ಆ್ಯಪ್ (2009), ಇನ್ಸ್ಟಾಗ್ರಾಂ (2010), ಸ್ನ್ಯಾಪ್ಚಾಟ್,(2011), ಟಿಕ್ಟಾಕ್(2017), ಕ್ಲಬ್ಹೌಸ್(2020), ಫೇಸ್ಬುಕ್ ಮೆಟಾ (2023) ಹೀಗೆ ಇನ್ನೂ ಹಲವು ಬದಲಾವಣೆಗಳೊಂದಿಗೆ ಸಾಮಾಜಿಕ ಜಾಲತಾಣಗಳು ವಿವಿಧ ಲಕ್ಷಣಗಳೊಂದಿಗೆ ಅಭಿವೃದ್ಧಿಯಾಗಿರುವುದನ್ನು ಗಮನಿಸಬಹುದು. ಹೆಚ್ಚು ಕಮ್ಮಿ ಇಂದು ಜಾಗತಿಕವಾಗಿ 5.35 ಬಿಲಿಯನ್ (ಶೇ. 94.8) ಜನ ಸಾಮಾಜಿಕ ಜಾಲತಾಣಗಳನ್ನು ಬಳಸುತ್ತಿದ್ದಾರೆ. 13ರಿಂದ 19 ವಯಸ್ಸಿನವರು ಶೇ. 12.7 ಜನ, 20ರಿಂದ 29 ವಯಸ್ಸಿನವರು ಶೇ.31.8 ಜನ, 30ರಿಂದ 39 ವಯಸ್ಸಿನವರು ಶೇ. 21.9 ಜನ, 40ರಿಂದ 49 ವಯಸ್ಸಿನವರು ಶೇ. 15.0 ಜನ, 50ರಿಂದ 59 ವಯಸ್ಸಿನವರು ಶೇ. 10.0 ಜನ, 60ಕ್ಕೂ ಹೆಚ್ಚಿನ ವಯಸ್ಸಿನವರು ಶೇ. 8.6 ಜನರು ಜಾಗತಿಕ ಮಟ್ಟದಲ್ಲಿ ಸಾಮಾಜಿಕ ಜಾಲತಾಣಗಳ ಬಳಕೆದಾರರಿದ್ದಾರೆ. ಮಾಸಿಕ ಬಳಕೆಯ ಲೆಕ್ಕಾಚಾರದಲ್ಲಿ ಫೇಸ್ಬುಕ್ ಮೊದಲ(2,958 ಮಿಲಿಯನ್) ಸ್ಥಾನ, ಯೂಟ್ಯೂಬ್ ಎರಡನೇ(2,514 ಮಿಲಿಯನ್) ಮತ್ತು ವಾಟ್ಸ್ ಆ್ಯಪ್ ಮೂರನೇ(2,000 ಮಿಲಿಯನ್) ಸ್ಥಾನದಲ್ಲಿದ್ದರೆ, ಪಿಂಟರೆಸ್ಟ್(445 ಮಿಲಿಯನ್) ಕೊನೆಯ ಸ್ಥಾನದಲ್ಲಿದೆ. ಲಿಂಗಾನುಪಾತದ ಆಧಾರದ ಮೇಲೆ ನೋಡುವುದಾದರೆ ಜಾಗತಿಕ ಮಟ್ಟದಲ್ಲಿ ಶೇ. 31.4 ಮಹಿಳೆಯರು(285.6 ಮಿಲಿಯನ್) ಮತ್ತು ಶೇ. 68.6 ಪುರುಷರು(614.4 ಮಿಲಿಯನ್) ಬಳಕೆದಾರರು. 1.29 ಬಿಲಿಯನ್(ಶೇ. 69.5) ಜನರು ಭಾರತದಲ್ಲಿ ಸಾಮಾಜಿಕ ಜಾಲತಾಣಗಳನ್ನು ಬಳಸುತ್ತಿದ್ದಾರೆ. ಭಾರತದಲ್ಲಿ ವಾಟ್ಸ್ಆ್ಯಪ್ ಬಳಕೆದಾರರ ಸಂಖ್ಯೆ ಶೇ. 80.8 ಇದೆ. ಎರಡನೇ ಸ್ಥಾನದಲ್ಲಿ ಇನ್ಸ್ಟಾಗ್ರಾಂ(ಶೇ.77.9) ಮತ್ತು ಫೇಸ್ಬುಕ್ ಬಳಕೆ ಮೂರನೇ(ಶೇ.67.8)ಸ್ಥಾನದಲ್ಲಿದೆ. ಕರ್ನಾಟಕದ ಮಟ್ಟಿಗೆ ಹೇಳುವುದಾದರೆ ಭಾರತದ ಮಾಧ್ಯಮ ಮತ್ತು ಮನರಂಜನಾ ಉದ್ಯಮಕ್ಕೆ ಶೇ. 20 ಕೊಡುಗೆ ನೀಡುವ ಪ್ರಮುಖ ಐಟಿ ಕೇಂದ್ರವಾಗಿರುವ ಕರ್ನಾಟಕ ರಾಜ್ಯವು ಡಿಜಿಟಲ್ ಬಳಕೆಯಲ್ಲಿ ಏರಿಕೆಯನ್ನು ಕಾಣುತ್ತಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ಸಾಮಾಜಿಕ ಜಾಲತಾಣಗಳ ಬಳಕೆ ಹೆಚ್ಚಾಗಿದ್ದು, ಅದು ತುಂಬಾ ವೇಗವಾಗಿ ಬೆಳೆಯುತ್ತಿದೆ. ಹದಿಹರೆಯದವರು ಮತ್ತು ಯುವಜನರಲ್ಲಿ ಹೆಚ್ಚಿನವರು ಸ್ಮಾರ್ಟ್ಫೋನ್ಗಳ ಮೂಲಕ ಇದರ ಬಳಕೆಯಲ್ಲಿ ಸಕ್ರಿಯವಾಗಿದ್ದಾರೆ. ಬಳಕೆಯಲ್ಲಿ ಇನ್ಸ್ಟಾಗ್ರಾಮ್ ಮತ್ತು ಫೇಸ್ಬುಕ್ ಸಾಮಾನ್ಯವಾಗಿರುವುದನ್ನು ಕಾಣಬಹುದು. ಶೇಕಡಾವಾರು ಬಳಕೆಯನ್ನು ನೋಡಿದಾಗ ಹದಿಹರೆಯದವರಲ್ಲಿ ಸರಿಸುಮಾರು ಶೇ. 62-74ರಷ್ಟು ಸಕ್ರಿಯ ಸಾಮಾಜಿಕ ಜಾಲತಾಣಗಳ ಬಳಕೆದಾರರಿದ್ದರೆ, ಮಹಿಳೆಯರಿಗಿಂತ (ಶೇ.39) ಪುರುಷರು (ಶೇ. 65) ಹೆಚ್ಚಿನ ಪ್ರಮಾಣದಲ್ಲಿದ್ದಾರೆ ಎಂದು ಅಧ್ಯಯನವೊಂದು ಸೂಚಿಸಿದೆ. ಶೇ. 90ಕ್ಕಿಂತ ಹೆಚ್ಚು ಯುವ ಬಳಕೆದಾರರು ಮೊಬೈಲ್ (ಡೇಟಾದ) ಮೂಲಕ ಮುಖ್ಯವಾಗಿ ನೆಟ್ವರ್ಕಿಂಗ್, ಶೈಕ್ಷಣಿಕ ಮತ್ತು ಮನರಂಜನಾ ಉದ್ದೇಶಗಳಿಗಾಗಿ ಗಣನೀಯ ಸಮಯವನ್ನು ಕಳೆಯುತ್ತಾರೆ. ಹೆಚ್ಚಿನ ಮಟ್ಟದ ಸಾಮಾಜಿಕ ಜಾಲತಾಣದ ಅವಲಂಬನೆಯ ಸುಮಾರು ಶೇ. 36.9 ಬಳಕೆದಾರರು ವ್ಯಸನದ ಲಕ್ಷಣಗಳನ್ನು ಹೊಂದಿದ್ದಾರೆ ಎಂಬ ಅಂಶ ಅಧ್ಯಯನದ ಮೂಲಕ ಬಹಿರಂಗಗೊಂಡಿದೆ. ಸುರಕ್ಷತೆ ಮತ್ತು ಅನುಚಿತ ವಿಷಯಗಳಿಗೆ ಒಡ್ಡಿಕೊಳ್ಳುವುದರ ಬಗ್ಗೆ ಕಾಳಜಿ ಇರುವುದರಿಂದ ಕರ್ನಾಟಕ ಸರಕಾರವು ಮಕ್ಕಳ ಸಾಮಾಜಿಕ ಮಾಧ್ಯಮ ಪ್ರವೇಶದ ಮೇಲಿನ ನಿರ್ಬಂಧಗಳನ್ನು ಕುರಿತು ಸಾಮಾಜಿಕ ಕಾಳಜಿಯಾಗಿ ಇದನ್ನು ಪರಿಗಣಿಸುತ್ತಿದೆ (ಇತ್ತೀಚೆಗೆ ಸರಕಾರ ಅಪ್ರಾಪ್ತ ವಯಸ್ಕರಿಗೆ ಸಾಮಾಜಿಕ ಜಾಲತಾಣದ ಬಳಕೆಗೆ ನಿರ್ಬಂಧಿಸಲು ಮುಂದಾಗಿದ್ದನ್ನು ಗಮನಿಸಬಹುದು) ರಾಜಕೀಯ ಪಕ್ಷಗಳು ಇದರ ಬಳಕೆಯಿಂದ ಹೊರತಾಗಿಲ್ಲ 2015 ರಿಂದ 2020ರ ಅವಧಿಯಲ್ಲಿ ಬಿಜೆಪಿ 1,400 ಕೋಟಿ ಮತ್ತು ಕಾಂಗ್ರೆಸ್ 850 ಕೋಟಿ ಹಣವನ್ನು ಸಾಮಾಜಿಕ ಜಾಲತಾಣದ ಜಾಹೀರಾತಿಗಾಗಿ ಖರ್ಚು ಮಾಡಿವೆ. ಬಿಜೆಪಿಗೆ ಟ್ವಿಟರ್ಗೆ 17.3 ಮಿಲಿಯನ್ ಮತ್ತು ಫೇಸ್ಬುಕ್ಗೆ 16.7 ಮಿಲಿಯನ್ ಫಾಲೋವರ್ಸ್ ಇದ್ದರೆ, ಕಾಂಗ್ರೆಸ್ಗೆ ಟ್ವಿಟರ್ಗೆ 8.4 ಮಿಲಿಯನ್ ಮತ್ತು ಫೇಸ್ಬುಕ್ಗೆ 6.2 ಮಿಲಿಯನ್ ಫಾಲೋವರ್ಸ್ ಇದ್ದಾರೆ. 2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 110.8 ಕೋಟಿ(ಯೂಟ್ಯೂಬ್, ಫೇಸ್ಬುಕ್, ಇನ್ಸ್ಟಾಗ್ರಾಂಗೆ) ಹಣ ಖರ್ಚು ಮಾಡಿದರೆ, ಕಾಂಗ್ರೆಸ್ 56.1 ಕೋಟಿ(ಯೂಟ್ಯೂಬ್, ಫೇಸ್ಬುಕ್, ಇನ್ಸ್ಟಾಗ್ರಾಂಗೆ) ಹಣ ಖರ್ಚು ಮಾಡಿದೆ. ಎಲ್ಲಾ ರಾಜಕೀಯ ಪಕ್ಷಗಳಿಗಿಂತ ಅತೀ ಹೆಚ್ಚು ಸಾಮಾಜಿಕ ಜಾಲತಾಣಗಳಿಗೆ ಖರ್ಚು ಮಾಡಿರುವುದು ಬಿಜೆಪಿಯೇ ಆಗಿದೆ. ಸಾಮಾಜಿಕ ಜಾಲತಾಣಗಳ ಬಳಕೆಯಿಂದಾಗುವ ಅನಾಹುತಗಳಲ್ಲಿ ತಪ್ಪು ಮತ್ತು ಸುಳ್ಳು ಮಾಹಿತಿ ಹಂಚಿಕೆ ಮತ್ತೊಂದು ಗಂಭೀರ ಸಮಸ್ಯೆಯಾಗಿದೆ. ಪರಿಶೀಲಿಸದ ಸುದ್ದಿಗಳು ವೇಗವಾಗಿ ಹರಡುವುದರಿಂದ ಸಮಾಜದಲ್ಲಿ ಗೊಂದಲ ಮತ್ತು ಉದ್ವಿಗ್ನತೆ ಉಂಟಾಗುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಇದನ್ನು ನಿಯಂತ್ರಿಸಲು ಸರಕಾರಗಳು ಕಠಿಣ ನಿಯಮಗಳನ್ನು ಜಾರಿಗೆ ತರುತ್ತಿವೆ. ಅನಾಚಾರಿ ಅಥವಾ ಕಾನೂನುಬಾಹಿರ ವಿಷಯಗಳನ್ನು ಶೀಘ್ರವಾಗಿ ತೆಗೆದುಹಾಕುವಂತೆ ಸಾಮಾಜಿಕ ಜಾಲತಾಣ ಕಂಪೆನಿಗಳಿಗೆ ಸೂಚನೆ ನೀಡಲಾಗುತ್ತಿದೆ. ಡಿಜಿಟಲ್ ಜವಾಬ್ದಾರಿತನದ ಕುರಿತು ಜನರಲ್ಲಿ ಜಾಗೃತಿ ಮೂಡಿಸುವುದು ಇಂದಿನ ಕಾಲದ ಅಗತ್ಯವಾಗಿದೆ. ತಮಗೆ ಬಂದಂತಹ ಮಾಹಿತಿಯನ್ನು ಪರಿಶೀಲಿಸದೆ ಮತ್ತು ಅದರ ಸಾಧಕ-ಬಾಧಕಗಳನ್ನು ನೋಡದೆ ಯಥಾಪ್ರಕಾರ ಅದನ್ನು ಹಂಚಲಾಗುತ್ತದೆ. ಹಂಚಲ್ಪಟ್ಟ 10 ಪೋಸ್ಟ್ಗಳಲ್ಲಿ 5 ಇತರರಿಂದ ಸಂಗ್ರಹಿತ (ಬಂದಂತಹ ಪೋಸ್ಟ್ಗಳು) ಪೋಸ್ಟ್ ಗಳು ಆಗಿರುತ್ತವೆ ಎಂಬುದು ಗಮನಿಸಬೇಕಾದ ವಿಚಾರ ಮತ್ತು ಭಾರತದಂತಹ ದೇಶಗಳ ಜನರ ಕೈಯಲ್ಲಿ ಇದರ ಬಳಕೆ ಮಾತ್ರ ಭಯ ಹುಟ್ಟಿಸುವಂತಿದೆ. ಕಾರಣ ಜನರನ್ನು ದಿಕ್ಕುತಪ್ಪಿಸುವ, ಅವರನ್ನು ಪ್ರಚೋದಿಸುವಂತಹ ಕೆಲಸಗಳು ಹೆಚ್ಚಾಗಿ ನಡೆಯುತ್ತಿರುವುದು ಇವುಗಳ ಬಳಕೆಯಿಂದಾಗಿ ಎನ್ನುವುದು ಅತ್ಯಂತ ದುಃಖದ ವಿಚಾರ. ಈಗ ಸಾಮಾಜಿಕ ಜಾಲತಾಣವು ಕೇವಲ ಸಂವಹನ ಸಾಧನವಲ್ಲ ಬದಲಿಗೆ ಅದೊಂದು ಅಭಿಪ್ರಾಯ ರೂಪಿಸುವ ಶಕ್ತಿಯಾಗಿದೆ. ಚುನಾವಣೆಗಳ ವೇಳೆ ರಾಜಕೀಯ ಪ್ರಚಾರದಿಂದ ಹಿಡಿದು ಸಾಮಾಜಿಕ ಚಳವಳಿಗಳವರೆಗೆ ಇದರ ಪ್ರಭಾವ ಸ್ಪಷ್ಟವಾಗಿದೆ. ಒಂದು ಪೋಸ್ಟ್ ಸಾವಿರಾರು ಜನರಿಗೆ ತಲುಪುವ ಸಾಮರ್ಥ್ಯ ಹೊಂದಿರುವುದರಿಂದ ಪ್ರತಿಯೊಬ್ಬ ಬಳಕೆದಾರನಿಗೂ ಜವಾಬ್ದಾರಿ ಅಗತ್ಯವಾಗಿದೆ. ಒಟ್ಟಿನಲ್ಲಿ, ಇದು ಜ್ಞಾನ, ಸಂಪರ್ಕ ಮತ್ತು ಅವಕಾಶಗಳನ್ನು ಒದಗಿಸುವ ಮಹತ್ವದ ವೇದಿಕೆ ಆಗಿದ್ದರೂ ಸಹ ಅದರ ದುರುಪಯೋಗವು ಸಮಸ್ಯೆಗಳಿಗೆ ಕಾರಣವಾಗುತ್ತಿರುವುದನ್ನೂ ಕಾಣುತ್ತಿದ್ದೇವೆ. (ರೈತ ಚಳವಳಿ, ದಿಲ್ಲಿ ಗಲಭೆಗಳಲ್ಲಿ ನಕಲಿ ಮತ್ತು ತಿರುಚಿದ ವೀಡಿಯೊ-ಫೋಟೋ ಹಂಚಿಕೆ ನೆನಪಿಸಿಕೊಳ್ಳಬಹುದು) ಆದ್ದರಿಂದ ನಿಯಂತ್ರಿತ ಬಳಕೆ, ಮಾಹಿತಿ ಪರಿಶೀಲನೆ ಮತ್ತು ಡಿಜಿಟಲ್ ನೈತಿಕತೆ ಪಾಲನೆ ಅತ್ಯಂತ ಮುಖ್ಯ. ತಂತ್ರಜ್ಞಾನವನ್ನು ಸಮರ್ಥವಾಗಿ ಬಳಸಿದರೆ ಸಾಮಾಜಿಕ ಜಾಲತಾಣವು ಸಮಾಜದ ಪ್ರಗತಿಗೆ ಶಕ್ತಿಯುತ ಸಾಧನವಾಗಬಹುದು ಎಂಬುದನ್ನು ತೋರಿಸಿದ್ದು ದೇವನಹಳ್ಳಿ ಭೂ ಹೋರಾಟದಂತಹ ಪ್ರಕರಣಗಳು. ಇದರೊಂದಿಗೆ ಹೊಸ ನರೇಟಿವ್ ಕಟ್ಟಲೂ ಇದು ಸಹಕಾರಿಯಾಗುತ್ತದೆ. ಮತ್ತು ಭಿನ್ನ ಸಂಸ್ಕೃತಿಯನ್ನು ಅರ್ಥ ಮಾಡಿಕೊಳ್ಳುವಲ್ಲಿಯೂ ಇದು ಸಹಕಾರಿ ವೇದಿಕೆಯಾಗಿದೆ ಎನ್ನುವುದರಲ್ಲಿ ಅನುಮಾನವಿಲ್ಲ. ಮುಖ್ಯವಾಗಿ ಇಂದು ಯುವಕರು ಇದಕ್ಕೆ ಬಲಿಯಾಗಿ ಓದು-ಬರಹವನ್ನು ಮರೆತೇ ಬಿಟ್ಟಿದ್ದಾರೆ. ಅಲ್ಲದೇ, ಸೋಷಿಯಲ್ ಮೀಡಿಯಾದಲ್ಲಿ ಬಂದದ್ದೇ ಸತ್ಯ ಎನ್ನುವ ರೀತಿಯಲ್ಲಿ ಬದುಕುತ್ತಿದ್ದಾರೆ. ಹದಿಹರೆಯದವರೇ ಮುಖ್ಯವಾಗಿ ಇದನ್ನು ಹೆಚ್ಚು ಬಳಸುತ್ತಿದ್ದು, ಸರಕಾರ ಇದಕ್ಕೆ ಕಡಿವಾಣ ಹಾಕಲು ಹೊರಟಿರುವುದು ಒಂದು ರೀತಿಯಲ್ಲಿ ಸಂತಸದಾಯಕ. ಆದರೆ ಅದನ್ನು ಎಷ್ಟರಮಟ್ಟಿಗೆ ಪಾಲಿಸಲಾಗುತ್ತದೆ ಎನ್ನುವುದು ಮುಖ್ಯವಾಗಿದೆ.
ಇರಾನ್ ʼಭಯೋತ್ಪಾದಕ ಆಡಳಿತʼ ಎಂದು ಪೋಸ್ಟ್ ಮಾಡಿದ NDTV ಹಿರಿಯ ಸಂಪಾದಕ
ಸಾಮಾಜಿಕ ಜಾಲತಾಣಗಳಲ್ಲಿ ಟೀಕೆ ಬೆನ್ನಲ್ಲೆ ಪೋಸ್ಟ್ ಡಿಲೀಟ್ ಮಾಡಿದ ಆದಿತ್ಯ ರಾಜ್ ಕೌಲ್
ಕೈಗಾರಿಕೆಗಳಲ್ಲಿ ಹೊರಗಿನವರಿಗೆ ಹೆಚ್ಚಿನ ಆದ್ಯತೆ ; ಅನುಮಾನ ಮೂಡಿಸಿದ ಸರಕಾರದ ಅಂಕಿ-ಅಂಶಗಳು?
ಬಹುತೇಕ ಕೈಗಾರಿಕೆಗಳು ಕೆಲಸಕ್ಕೆ ತೆಗೆದುಕೊಳ್ಳುವಂತಹ ಸಂದರ್ಭದಲ್ಲಿ ಹೆಣ್ಣು ಮಕ್ಕಳಿಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ. ಕೋಲಾರ ಜಿಲ್ಲೆಯ ನರಸಾಪುರ ಕೈಗಾರಿಕಾ ಪ್ರದೇಶದ ಟಾಟಾ (ವಿಸ್ಟ್ರಾನ್) ಕಂಪನಿಯಲ್ಲಿಕಾರ್ಮಿಕರು ನಡೆಸಿದ ಗಲಾಟೆ ದೇಶಾದ್ಯಂತ ಸುದ್ದಿಯಾಗಿತ್ತು. ಇದರಿಂದ ಬೆಚ್ಚಿದ ಕಂಪನಿಗಳು ಕೆಲಸಕ್ಕೆ ತೆಗೆದುಕೊಳ್ಳುವಾಗ ಹೆಣ್ಣು ಮಕ್ಕಳಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ.
‘ಚೀನಾ ಪ್ಲಸ್ ವನ್’ ಎಂದಲ್ಲಿಂದ ‘ಚೀನಾ ಈಸ್ (ದಿ) ವನ್’ ಎಂಬಲ್ಲಿಗೆ
ಚೀನಾ ಪ್ಲಸ್ ವನ್ ಆಗಿದ್ದ ಭಾರತ ಈ ಎಲ್ಲ ಬೆಳವಣಿಗೆಗಳೊಂದಿಗೆ ಈಗ ‘ಚೀನಾ ಇಸ್ (ದಿ) ವನ್’ ಎಂದು ಹೇಳುವ ಸ್ಥಿತಿಗೆ ತಲುಪಿದೆ. ಇದರ ದೂರಗಾಮಿ ಆರ್ಥಿಕ, ಕೈಗಾರಿಕಾ ಪರಿಣಾಮಗಳನ್ನು ಮತ್ತು ಜಿಯೊಪೊಲಿಟಿಕಲ್ ಸಂಗತಿಗಳು, ದೇಶದ ಭದ್ರತೆಗೆ ಸಂಬಂಧಿ ಪರಿಣಾಮಗಳನ್ನು ಕಾದು ನೋಡಬೇಕು. ಆದರೆ, ಅಲಿಪ್ತ ದೇಶವಾಗಿ ಎಲ್ಲರೊಡನೆ ಒಂದು ಹಂತದ ಹೊಂದಾಣಿಕೆಯಲ್ಲೇ ಕೊಡು-ಕೊಳ್ಳುವಿಕೆ, ಸ್ನೇಹಾಚಾರ, ವಿಶ್ವಾಸ ಹೊಂದಿದ್ದ ಭಾರತವು ಅಕ್ಕಪಕ್ಕದ ದೇಶಗಳ ಜೊತೆ ಈಗ ಸಂಬಂಧಗಳನ್ನು ಬಹುತೇಕ ಹದಗೆಡಿಸಿಕೊಂಡಿದೆ. ಆದರೆ ವ್ಯಾಪಾರದ ಪ್ರಶ್ನೆ ಬಂದಾಗ, ಲಾಭದ ಪ್ರಶ್ನೆ ಬಂದಾಗ ಎಲ್ಲರನ್ನೂ ಅಪ್ಪಿಕೊಳ್ಳಲು ದೇಶ ಸಜ್ಜಾಗುತ್ತಿರುವ ಪರಿ ಬಹಳ ಕುತೂಹಲಕರವಾಗಿದೆ. ಭಾರತ ಸರಕಾರದ ಸಚಿವಸಂಪುಟ ಸಭೆಯು ಇದೇ ಮಾರ್ಚ್ 10ರಂದು ಒಂದು ನಿರ್ಣಯವನ್ನು ಸ್ವೀಕರಿಸುವ ಮೂಲಕ, ಭಾರತದೊಂದಿಗೆ ಗಡಿ ಹಂಚಿಕೊಂಡಿರುವ ದೇಶಗಳಿಗೆ (LBCಗಳು- nations that share a land border with India) ಭಾರತದ ಒಳಗೆ ಹೂಡಿಕೆಗೆ ಇರುವ ನಿಯಮಗಳನ್ನು ಸಡಿಲಗೊಳಿಸಿದೆ. ಇದರಿಂದಾಗಿ, ಭಾರತದಲ್ಲಿ ಆ ದೇಶಗಳಿಗೆ ವ್ಯವಹಾರ ಸುಗಮ ಆಗಲಿದ್ದು, ದೇಶಕ್ಕೆ ವಿದೇಶಿ ನೇರ ಹೂಡಿಕೆಯ (FDI) ಪ್ರಮಾಣ ಹೆಚ್ಚಲಿದೆ, ದೇಶಕ್ಕೆ ಹೊಸ ತಂತ್ರಜ್ಞಾನಗಳು ಸುಲಭವಾಗಿ ದಕ್ಕಲಿವೆ, ದೇಶಿ ಕಂಪೆನಿಗಳಿಗೆ ವಿಸ್ತರಣೆಗೊಳ್ಳುವುದು ಮತ್ತು ಜಾಗತಿಕ ಸರಬರಾಜು ಸರಪಣಿಯಲ್ಲಿ ನಮ್ಮ ಒಳಗೊಳ್ಳುವಿಕೆ ಸಾಧ್ಯವಾಗಲಿವೆೆ ಮತ್ತು ಒಟ್ಟಿನಲ್ಲಿ, ಆತ್ಮನಿರ್ಭರ ಭಾರತದ ಆರ್ಥಿಕ ಅಭಿವೃದ್ಧಿಗೆ ಹೆಚ್ಚಿನ ಒತ್ತು ದೊರೆಯಲಿದೆ ಎಂದು ಭಾರತ ಸರಕಾರ ಹೇಳಿಕೊಂಡಿದೆ. ಈ ನಿರ್ಣಯದಿಂದ ಆಗಿರುವ ಬದಲಾವಣೆಗಳು ಏನೆಂದರೆ, ಲಾಭಗಳಿಸುವ ಮಾಲಕ (Beneficial Owner- BO) ಎಂಬುದಕ್ಕೆ ಸ್ಪಷ್ಟ ವ್ಯಾಖ್ಯಾನ ನೀಡಲಾಗಿದ್ದು, LBC ದೇಶಗಳಲ್ಲಿರುವ, ತಮ್ಮ ಲಾಭದಲ್ಲಿ ಶೇ. 10ರ ತನಕದ ಹಕ್ಕು ಹೊಂದಿರುವ ಕಂಪೆನಿಗಳ ಮಾಲಕರಿಗೆ ಆಟೊಮ್ಯಾಟಿಕ್ ಹಾದಿಯಲ್ಲಿ ಭಾರತದಲ್ಲಿ ಹೂಡಿಕೆ ಮಾಡುವುದಕ್ಕೆ ಕಾನೂನುಬದ್ಧ ಅವಕಾಶ ತೆರೆದು, ನಿಯಮಗಳನ್ನು ಸಡಿಲಿಸಲಾಗಿದೆ. ನಿರ್ದಿಷ್ಟ ಕ್ಷೇತ್ರಗಳಲ್ಲಿ ಅವರ ಹೂಡಿಕೆ ಪ್ರಸ್ತಾಪಗಳನ್ನು 60 ದಿನಗಳ ಒಳಗೆ ವಿಲೇವಾರಿ ಮಾಡುವ ವ್ಯವಸ್ಥೆಯನ್ನು ರೂಪಿಸಲಾಗಿದೆ. (PIB Release ID: 2237806). ಹಿಂದೆಲ್ಲ, ಅನಿವಾಸಿಯೊಬ್ಬರು ಭಾರತದಲ್ಲಿ ಪ್ರತಿಬಂಧಿತ ಕ್ಷೇತ್ರಗಳನ್ನು (ರಕ್ಷಣೆ, ಪರಮಾಣು ಶಕ್ತಿ, ಬಾಹ್ಯಾಕಾಶ ಇತ್ಯಾದಿ) ಹೊರತುಪಡಿಸಿ ಬೇರೆ ಕ್ಷೇತ್ರಗಳಲ್ಲಿ, ವಿದೇಶಿ ನೇರ ಹೂಡಿಕೆ ನಿಯಮಗಳ ಅಡಿಯಲ್ಲಿ ಹೂಡಿಕೆ ಮಾಡಲು ಅವಕಾಶ ಇತ್ತು. ಆದರೆ, ಕೋವಿಡ್ ಕಾಲದಲ್ಲಿ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯವು ಒಂದು ಪತ್ರಿಕಾ ಟಿಪ್ಪಣಿ ಹೊರಡಿಸಿ [Press Note 3(2020)] ದಿನಾಂಕ 17.04.2020 ಅನಿವಾಸಿಯೊಬ್ಬರು ಐಃಅ ದೇಶಕ್ಕೆ ಸೇರಿದ್ದಲ್ಲಿ, ಕೇವಲ ಸರಕಾರಿ ಹಾದಿಯಲ್ಲಿ ಮಾತ್ರ ಭಾರತದಲ್ಲಿ ಹೂಡಿಕೆ ಮಾಡಲು ಸಾಧ್ಯ ಆಗಲಿದೆ ಎಂದು ವಿಧಿಸಿತ್ತು. ಜೊತೆಗೆ, ಆ ತೀರ್ಮಾನದ ಫಲವಾಗಿ ಸಂಭವಿಸುವ ಮಾಲಕತ್ವ ಬದಲಾವಣೆಗಳಿಗೆ ಸರಕಾರದ ಅನುಮತಿ ಪಡೆಯಬೇಕೆಂದೂ ವಿಧಿಸಲಾಗಿತ್ತು. ಈಗ ಮಾರ್ಚ್ 10ರ ಸಂಪುಟ ತೀರ್ಮಾನದ ಹಿನ್ನೆಲೆಯಲ್ಲಿ, ಈ ನಿಯಮ ಸಡಿಲ ಆದಂತಾಗಿದೆ. ಹೊರನೋಟಕ್ಕೆ ಇದೊಂದು ಸಣ್ಣ ಬೆಳವಣಿಗೆ ಅನ್ನಿಸಿದರೂ, ಇದರ ಹಿಂದೆ ದೇಶದ ಆಡಳಿತ ಉಸ್ತುವಾರಿ ಹೊತ್ತವರ ದೂರದೃಷ್ಟಿಯ ಕೊರತೆ, ನೀತ್ಯಾತ್ಮಕ ಯುಟರ್ನ್ಗಳ ಉದ್ದ ಕಥೆ ಇದೆ. ಲಾಲ್ ಆಂಕೇ 2014ರ ಮುನ್ನ ಹಾಲಿ ಪ್ರಧಾನಮಂತ್ರಿಯವರು ತಮ್ಮ ಚುನಾವಣಾ ಪ್ರಚಾರದ ವೇಳೆ, ಅಂದಿನ ಯುಪಿಎ ಸರಕಾರ ಚೀನಾ ಜೊತೆ ಹೊಂದಿದ್ದ ಸಂಬಂಧಗಳನ್ನು ಟೀಕಿಸುತ್ತಾ, ಒಂದು ಬಲಿಷ್ಠ ಸರಕಾರ ತನ್ನ ಗಡಿಗಳ ರಕ್ಷಣೆಗಾಗಿ ಚೀನಾದ ಜೊತೆ ವ್ಯವಹರಿಸುವಾಗ, ‘ಲಾಲ್ ಆಂಕೇ (ಕೆಂಪುಕಣ್ಣು)’ ತೋರಿಸುವ ಸಾಮರ್ಥ್ಯ ಹೊಂದಿರಬೇಕು ಎಂದು ಹೇಳಿಕೆ ನೀಡಿದ್ದರು. ಅದಾದ ಬಳಿಕ, ಅವರದೇ ಸರಕಾರ ಅಧಿಕಾರಕ್ಕೆ ಬಂದು, ಚೀನಾದ ಜೊತೆ ಗಡಿಗೆ ಸಂಬಂಧಿಸಿ ವ್ಯವಹರಿಸುವಾಗಲೆಲ್ಲ, ಪ್ರತಿಪಕ್ಷಗಳು ಪ್ರಧಾನಿಯವರನ್ನು ತರಾಟೆಗೆ ತೆಗೆದುಕೊಳ್ಳಲು ಈ ‘ಲಾಲ್ ಆಂಕೇ’ ಹೇಳಿಕೆಯನ್ನು ಉಲ್ಲೇಖಿಸುತ್ತಾ ಬಂದಿದ್ದಾರೆ. 2014, 2019ರಲ್ಲಿ ಚೀನಾ ಅಧ್ಯಕ್ಷರ ಭಾರತ ಭೇಟಿಗೆ ಅಬ್ಬರದ ಪ್ರಚಾರ ನೀಡಲಾಗಿತ್ತು. ಆದರೆ, ಆ ಬಳಿಕ ಚೀನಾ-ಭಾರತ ಸಂಬಂಧಗಳು ಹದಗೆಡುತ್ತಲೇ ಹೋಗಿದ್ದವು. 2017ರ ದೋಕ್ಲಾಂ ಗಡಿ ವಿವಾದ, 2020ರ ಗಾಲ್ವಾನ್ ಕಣಿವೆ ಮುಖಾಮುಖಿ, ಆ ಬಳಿಕ ಸತತವಾಗಿ ಕೇಳಿಬರುತ್ತಿರುವ ಗಡಿ ಅತಿಕ್ರಮಣದ ಚರ್ಚೆಗಳ ವೇಳೆ ಪ್ರಧಾನಿಯವರ ಮೌನ ಪ್ರತಿಪಕ್ಷಗಳ ಟೀಕೆಗೆ ತುತ್ತಾಗುತ್ತಾ ಬಂದಿದೆ. ಚೀನೀ ಆ್ಯಪ್ಗಳ ನಿಷೇಧ, ಚೀನೀ ಹೂಡಿಕೆಗಳ ಮೇಲೆ ಪ್ರತಿಬಂಧ ಇವೆಲ್ಲ ಆ ಆಸುಪಾಸಿನಲ್ಲೇ ನಡೆದ ವಿದ್ಯಮಾನಗಳು. ಆರ್ಥಿಕ ಸಲಹೆಗಾರರ ಸಲಹೆ ಭಾರತವು ಜಾಗತಿಕ ಸರಬರಾಜು ಸರಪಣಿಯ ಭಾಗ ಆಗಹೊರಟು, ಅದಕ್ಕಾಗಿ ದೇಶದಲ್ಲಿ ಹೂಡಿಕೆ ಮಾಡುವ ಉದ್ಯಮಿಗಳಿಗೆ ಉತ್ಪಾದನೆ ಆಧರಿತ ಪ್ರೋತ್ಸಾಹನ (ಪಿಎಲ್ಐ) ನೀಡಲು ಶುರು ಮಾಡಿದ ಮೇಲೆ, ಐಫೋನ್, ಮೈಕ್ರೊಚಿಪ್ ಇತ್ಯಾದಿಗಳ ಮಾರುಕಟ್ಟೆಯ ಮೇಲೆ ಕಣ್ಣಿರಿಸಿಕೊಂಡಿದೆ. ಅದಕ್ಕೆ ಸಮಾನಾಂತರವಾಗಿ, ಅಮೆರಿಕದಂಥ ಬಲಾಢ್ಯ ಮಾರುಕಟ್ಟೆಗಳು ಕೋವಿಡೋತ್ತರ ಕಾಲದಲ್ಲಿ ಚೀನಾದ ಮೇಲೆ ಅತಿ ಅವಲಂಬನೆ ಬೇಡ ಎಂಬ ಕಾರಣಕ್ಕೆ, ‘ಚೀನಾ ಪ್ಲಸ್ ವನ್’ ತಂತ್ರವನ್ನು ಬಳಸಲಾರಂಭಿಸಿವೆ. ಹಾಗೆಂದರೆ, ಕಚ್ಚಾ ಮಾಲುಗಳು, ಅಸೆಂಬ್ಲಿ ಮತ್ತಿತರ ಕಾರ್ಮಿಕರು ಹೆಚ್ಚು ಬೇಕಾಗುವ ಚಟುವಟಿಕೆಗಳಿಗೆ ಕೇವಲ ಚೀನಾದ ಮೇಲೆ ಅವಲಂಬಿಸುವ ಬದಲು, ಒಂದು ಹೆಚ್ಚುವರಿ ದೇಶದ ಮೇಲೂ ಅವಲಂಬಿಸುವುದು; ಆ ದೇಶವನ್ನು ತನ್ನ ಸರಬರಾಜು ಸರಪಣಿಯ ಭಾಗವಾಗಿಸಿಕೊಳ್ಳುವುದು. ಹಾಗಾಗಿ ಅವರ ಕಣ್ಣು ಕಡಿಮೆ ವೆಚ್ಚದ ಕಾರ್ಮಿಕರು ಸಿಗುವ ಪೂರ್ವ ಏಶ್ಯದ ಕೆಲವು ದೇಶಗಳು (ಮಲೇಶ್ಯ, ಥಾಯ್ಲೆಂಡ್, ವಿಯೆಟ್ನಾಂ, ತೈವಾನ್) ಮತ್ತು ಕೆಲವು ಉತ್ಪಾದನೆಗಳಿಗೆ ಮೆಕ್ಸಿಕೊ, ಕೊರಿಯಾದಂತಹ ದೇಶಗಳತ್ತ ಬಿದ್ದಿದೆ. ಈ ಸನ್ನಿವೇಶದ ಲಾಭ ಪಡೆಯುವುದು ಭಾರತದ ಉದ್ದೇಶ. ತನ್ನ 2023-24ರ ಇಕನಾಮಿಕ್ ಸರ್ವೇಯಲ್ಲಿ ಭಾರತದ ಆರ್ಥಿಕ ಮುಖ್ಯ ಸಲಹೆಗಾರ ವಿ. ಅನಂತನಾಗೇಶ್ವರನ್ ಅವರು ಹೊಸದೊಂದು ಪ್ರಸ್ತಾವವನ್ನು ಸರಕಾರದ ಮುಂದಿಟ್ಟಿದ್ದರು. ಚೀನಾ-ಅಮೆರಿಕ ನಡುವಿನ ವೈಷಮ್ಯದ ಕಾರಣಕ್ಕೆ ಅಮೆರಿಕದ ಬೃಹತ್ ಕಂಪೆನಿಗಳು, ಚೀನಾದಿಂದ ದೂರ ಸರಿಯುತ್ತಿವೆ. ಹಾಗಂತ, ಚೀನಾವನ್ನು ಪೂರ್ಣವಾಗಿ ತ್ಯಜಿಸುವುದು ಅವರಿಗೆ ಸಾಧ್ಯವಾಗದು. ಹಾಗಾಗಿ ಭಾರತಕ್ಕೆ ಎರಡು ಆಯ್ಕೆಗಳಿವೆ. ಚೀನಾ ಪ್ಲಸ್ ವನ್ ತಂತ್ರಗಾರಿಕೆಯ ಲಾಭ ಪಡೆಯಲು ಒಂದೋ ಭಾರತವು ಚೀನಾದ ಸರಬರಾಜು ಸರಪಣಿಯ ಭಾಗ ಆಗಬೇಕು; ಇಲ್ಲವೇ ಚೀನಾವು ಭಾರತದಲ್ಲಿ ನೇರ ಹೂಡಿಕೆ (FDI) ಮಾಡುವಂತಾಗಬೇಕು. ಇದರಲ್ಲಿ ಚೀನಿ FDI ಆಹ್ವಾನಿಸುವುದೇ ಹೆಚ್ಚು ಲಾಭದಾಯಕ. ಇದು ಅಮೆರಿಕಕ್ಕೆ ಭಾರತದ ರಫ್ತು ಹೆಚ್ಚಿಸಲು ಸಹಾಯಕ. ಚೀನಾ ಈಗಾಗಲೇ ಭಾರತದ ಅತಿದೊಡ್ಡ ಆಮದು ಪಾಲುದಾರ ಮತ್ತು ಅವರ ಜೊತೆ ನಮ್ಮ ಟ್ರೇಡ್ ಡೆಫಿಸಿಟ್ ಹೆಚ್ಚುತ್ತಿದೆ. ಅಮೆರಿಕ ಮತ್ತು ಯುರೋಪುಗಳು ತಮ್ಮ ಕಚ್ಚಾ ಸಾಮಗ್ರಿಗಳಿಗೆ ಚೀನಾದಿಂದ ದೂರ ಸರಿಯುತ್ತಿರುವುದರಿಂದ, ಚೀನೀ ಕಂಪೆನಿಗಳಿಗೆ ಭಾರತದಲ್ಲಿ ಹೂಡಿಕೆ ಮಾಡಲು ಹೇಳುವುದು ಹೆಚ್ಚು ಪರಿಣಾಮಕಾರಿ. ಭಾರತವು ಚೀನೀ ಸರಕುಗಳನ್ನು ಆಮದು ಮಾಡಿಕೊಂಡು, ಇಲ್ಲಿ ಸ್ವಲ್ಪ ಮೌಲ್ಯ ವರ್ಧಿಸಿ, ಬಳಿಕ ಮರು ರಫ್ತು ಮಾಡುವ ಬದಲು, ಚೀನಾ ಕಂಪೆನಿಗಳು ಭಾರತದ ನೆಲದಲ್ಲೇ ಉತ್ಪಾದನೆ ಮಾಡಿ ರಫ್ತು ಮಾಡುವುದು ಭಾರತಕ್ಕೆ ಹೆಚ್ಚು ಲಾಭದಾಯಕ. ಚೀನಾ ಹಲವಾರು ಕಚ್ಚಾ ಮಾಲುಗಳ ಮೇಲೆ ಮಾರುಕಟ್ಟೆ ಹಿಡಿತ ಹೊಂದಿರುವುದರಿಂದ, ಅವರು ಆಯಕಟ್ಟಿನ ಜಾಗಗಳಲ್ಲಿ ಕಚ್ಚಾ ವಸ್ತುಗಳ ಮೇಲೆ ನಿಯಂತ್ರಣ ಹೇರಿ, ರಾಜಕೀಯ ಲಾಭ ಪಡೆದುಕೊಳ್ಳಬಹುದು. ಹಾಗಾಗಿ ಭಾರತ ಚೀನಾದಿಂದ ಸರಕುಗಳ ಆಮದು ಮತ್ತು ವಿದೇಶಿ ಹೂಡಿಕೆಗಳಿಗೆ ಆಹ್ವಾನದ ನಡುವೆ ಹದವಾದ ಸಂತುಲನ ಹೊಂದಬೇಕು ಎಂದು ಅನಂತನಾಗೇಶ್ವರನ್ ವಿವರಿಸಿದ್ದರು. (ವಿವರಗಳಿಗೆ ನೋಡಿ: Economic Survey 2023-24 ಪುಟ 143-144). ಸರಕಾರದ ನಿಲುವು ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ, ನಾಗೇಶ್ವರನ್ ಅವರ ಸಲಹೆ ಪಡೆದ ಎರಡು ವರ್ಷಗಳ ಬಳಿಕ ಈಗ ಸರಕಾರ ಆ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿದೆ. ಇದಕ್ಕೆ ಪೀಠಿಕೆ ರೂಪದಲ್ಲಿ ಈ ವರ್ಷದ ಬಜೆಟ್ ಭಾಷಣದ ವೇಳೆ ದೇಶದ ಹಣಕಾಸು ಸಚಿವರು, ವಿದೇಶೀ ಹೂಡಿಕೆಗಳನ್ನು ಆಕರ್ಷಿಸಲು ಕಾನೂನಿನ ಅಡಚಣೆಗಳನ್ನು ತೆಗೆದುಹಾಕಿ, ಪ್ರಕ್ರಿಯೆಯನ್ನು ಸುಗಮಗೊಳಿಸಲಾಗುವುದು, ಮೂಲಸೌಕರ್ಯ-ಲಾಜಿಸ್ಟಿಕ್ಸ್ಗಳನ್ನು ಸುಧಾರಿಸುವ ಮೂಲಕ ವ್ಯವಹಾರಕ್ಕೆ ಯೋಗ್ಯ ವಾತಾವರಣ ಕಲ್ಪಿಸಲಾಗುವುದು ಎಂದು ಹೇಳಿದ್ದರು. ಚೀನಾ ಪ್ಲಸ್ ವನ್ ಆಗಿದ್ದ ಭಾರತ ಈ ಎಲ್ಲ ಬೆಳವಣಿಗೆಗಳೊಂದಿಗೆ ಈಗ ‘ಚೀನಾ ಇಸ್ (ದಿ) ವನ್’ ಎಂದು ಹೇಳುವ ಸ್ಥಿತಿಗೆ ತಲುಪಿದೆ. ಇದರ ದೂರಗಾಮಿ ಆರ್ಥಿಕ, ಕೈಗಾರಿಕಾ ಪರಿಣಾಮಗಳನ್ನು ಮತ್ತು ಜಿಯೊಪೊಲಿಟಿಕಲ್ ಸಂಗತಿಗಳು, ದೇಶದ ಭದ್ರತೆಗೆ ಸಂಬಂಧಿ ಪರಿಣಾಮಗಳನ್ನು ಕಾದು ನೋಡಬೇಕು. ಆದರೆ, ಅಲಿಪ್ತ ದೇಶವಾಗಿ ಎಲ್ಲರೊಡನೆ ಒಂದು ಹಂತದ ಹೊಂದಾಣಿಕೆಯಲ್ಲೇ ಕೊಡು-ಕೊಳ್ಳುವಿಕೆ, ಸ್ನೇಹಾಚಾರ, ವಿಶ್ವಾಸ ಹೊಂದಿದ್ದ ಭಾರತವು ಅಕ್ಕಪಕ್ಕದ ದೇಶಗಳ ಜೊತೆ ಈಗ ಸಂಬಂಧಗಳನ್ನು ಬಹುತೇಕ ಹದಗೆಡಿಸಿಕೊಂಡಿದೆ. ಆದರೆ ವ್ಯಾಪಾರದ ಪ್ರಶ್ನೆ ಬಂದಾಗ, ಲಾಭದ ಪ್ರಶ್ನೆ ಬಂದಾಗ ಎಲ್ಲರನ್ನೂ ಅಪ್ಪಿಕೊಳ್ಳಲು ದೇಶ ಸಜ್ಜಾಗುತ್ತಿರುವ ಪರಿ ಬಹಳ ಕುತೂಹಲಕರವಾಗಿದೆ. ಸರಕಾರದ ಸಮರ್ಥಕರು ಈ ಪ್ರತಿಯೊಂದು ಹಂತವನ್ನೂ ತಮ್ಮದೇ ಕಾರಣಗಳನ್ನು ನೀಡಿ, ಶತಾಯ ಗತಾಯ ಸಮರ್ಥಿಸಿಕೊಳ್ಳಬಲ್ಲರು. ಆದರೆ, ಸ್ವತಃ ಆ LBC ದೇಶಗಳು ಕೂಡ ನಮ್ಮ ಬಗ್ಗೆ ತಮ್ಮದೇ ಅಭಿಪ್ರಾಯ ತಳೆಯುವ ಸಾಧ್ಯತೆಗಳಿವೆ ಎಂಬ ವಾಸ್ತವವನ್ನು ಮರೆಯುವಂತಿಲ್ಲ.
135 - 150 ರೂ.ಗೆ ಜಿಗಿದ ಪಾಮ್, 175-180ರೂ. ವರೆಗೆ ಹೆಚ್ಚಾದ ಸೂರ್ಯಕಾಂತಿ ಎಣ್ಣೆ ; ಕೃತಕ ಅಭಾವ ಸೃಷ್ಟಿಯ ಅನುಮಾನ
ಕಳೆದ ವಾರದಲ್ಲಿ ಸನ್ಫ್ಲವರ್ ಹಾಗೂ ಪಾಮ್ ಎಣ್ಣೆ ದರದಲ್ಲಿ ಗಮನಾರ್ಹ ಏರಿಕೆ ಕಂಡು ಬಂದಿದೆ. ಹತ್ತು ದಿನದ ಹಿಂದೆ ಸನ್ಫ್ಲವರ್ಎಣ್ಣೆ ಲೀಟರ್ಗೆ 165 ರೂ. ಇದ್ದದ್ದು ಈಗ 178 ರೂ.ಗೆ ಏರಿಕೆಯಾಗಿದೆ. ಅದೇ ರೀತಿ ಪಾಮ್ ಎಣ್ಣೆ ಲೀಟರ್ಗೆ 134 ರೂ. ಇದ್ದದ್ದು ಈಗ 146 ರೂ.ಗೆ ತಲುಪಿದೆ. ಮಾರುಕಟ್ಟೆ ತಜ್ಞರ ಪ್ರಕಾರ ಯುದ್ಧ ಪರಿಸ್ಥಿತಿ ಮುಂದುವರಿದರೆ ಮುಂದಿನ ದಿನಗಳಲ್ಲಿ ಬೆಲೆ ಇನ್ನಷ್ಟು ಏರಿಕೆಯಾಗುವ ಸಾಧ್ಯತೆ ಇದೆ.
PUC ವಿದ್ಯಾರ್ಥಿಗಳ ಗಮನಕ್ಕೆ: ದ್ವಿತೀಯ ಪಿಯುಸಿ ಫಲಿತಾಂಶ ಸುಧಾರಣೆಗೆ ಇನ್ಮುಂದೆ 2 ವರ್ಷ ಮಾತ್ರ ಅವಕಾಶ
ಬೆಂಗಳೂರು: ರಾಜ್ಯದ ದ್ವಿತೀಯ ಪಿಯುಸಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಕರ್ನಾಟಕ ಸರ್ಕಾರ ಮಹತ್ವದ ಮಾಹಿತಿಯೊಂದನ್ನು ನೀಡಿದೆ. ವಿದ್ಯಾರ್ಥಿಗಳು ತಮ್ಮ ವಾರ್ಷಿಕ ಪರೀಕ್ಷೆಯ ಫಲಿತಾಂಶವನ್ನು ಸುಧಾರಿಸಿಕೊಳ್ಳಲು ನೀಡಲಾಗುತ್ತಿದ್ದ ಅವಕಾಶಗಳ ನಿಯಮದಲ್ಲಿ ಮಹತ್ತರ ಬದಲಾವಣೆ ತರಲಾಗಿದ್ದು, ಇನ್ಮುಂದೆ ಕೇವಲ ಎರಡು ವರ್ಷಗಳ ಕಾಲಾವಕಾಶವನ್ನು ಮಾತ್ರ ನೀಡಲು ಶಿಕ್ಷಣ ಇಲಾಖೆ ಅಧಿಕೃತ ಆದೇಶ ಹೊರಡಿಸಿದೆ. ಹೊಸ ನಿಯಮದಲ್ಲೇನಿದೆ? ಹೊಸ ನಿಯಮದ ಪ್ರಕಾರ,
ಮಧ್ಯಪ್ರಾಚ್ಯ ಸಂಘರ್ಷದ ನಡುವೆ ವೀಡಿಯೊ ಹಂಚಿಕೆ: ಯುಎಇಯಲ್ಲಿ 10 ಮಂದಿ ಬಂಧನ
ಅಬುಧಾಬಿ: ನಡೆಯುತ್ತಿರುವ ಸಂಘರ್ಷದ ಹಿನ್ನೆಲೆ ಸಾಮಾಜಿಕ ಮಾಧ್ಯಮಗಳಲ್ಲಿ ನೈಜ ಹಾಗೂ AI ವೀಡಿಯೊಗಳನ್ನು ಹಂಚಿಕೊಂಡ ಆರೋಪದ ಮೇಲೆ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಸರ್ಕಾರವು ವಿವಿಧ ರಾಷ್ಟ್ರೀಯತೆಗಳಿಗೆ ಸೇರಿದ 10 ಮಂದಿಯನ್ನು ಬಂಧಿಸಿದೆ ಎಂದು Aljazeera ವರದಿ ಮಾಡಿದೆ. ಯುಎಇಯ ಅಧಿಕೃತ ಸುದ್ದಿ ಸಂಸ್ಥೆ WAM ನೀಡಿರುವ ಮಾಹಿತಿಯಂತೆ, ಆರೋಪಿತರು ಹಂಚಿಕೊಂಡ ವೀಡಿಯೊಗಳಲ್ಲಿ ಯುಎಇ ವಾಯು ರಕ್ಷಣಾ ವ್ಯವಸ್ಥೆಯನ್ನು ನಿಯೋಜಿಸಿರುವುದು ಅಥವಾ ಪ್ರೊಜೆಕ್ಟೈಲ್ ಗಳಿಂದ ದಾಳಿಗೊಳಗಾದಂತೆ ತೋರಿಸುವ ದೃಶ್ಯಗಳು ಸೇರಿವೆ. ಇದಲ್ಲದೆ, ಕೃತಕ ಬುದ್ಧಿಮತ್ತೆ (AI) ಬಳಸಿ ನಿರ್ಮಿಸಿದ ನಕಲಿ ಸ್ಫೋಟಗಳು, ಬೆಂಕಿ ಅವಘಡಗಳು ಹಾಗೂ ಪ್ರಮುಖ ಹೆಗ್ಗುರುತುಗಳ ಮೇಲೆ ದಾಳಿ ನಡೆದಂತೆ ತೋರಿಸುವ ದೃಶ್ಯಗಳೂ ಒಳಗೊಂಡಿವೆ. ಇಂತಹ ನೈಜ ಅಥವಾ ಕೃತಕ ವೀಡಿಯೊಗಳನ್ನು ಹಂಚುವುದರಿಂದ ಜನರಲ್ಲಿ ಗೊಂದಲ ಉಂಟಾಗುತ್ತದೆ ಮತ್ತು ಸಾರ್ವಜನಿಕ ಭದ್ರತೆಯ ಮೇಲೆ ಪರಿಣಾಮ ಬೀರುತ್ತದೆ. ಜೊತೆಗೆ, ಇವು ಸರ್ಕಾರದ ಮೇಲಿನ ವಿಶ್ವಾಸವನ್ನು ಕುಗ್ಗಿಸುವಂತಹ ವಿಷಯವನ್ನು ಹರಡುತ್ತವೆ ಎಂದು ಸಾರ್ವಜನಿಕ ಅಭಿಯೋಜಕರು ತಿಳಿಸಿದ್ದಾರೆ. “ಉದ್ದೇಶಪೂರ್ವಕ ವಂಚನೆ, ಸಾರ್ವಜನಿಕ ಭದ್ರತೆಯ ಮೇಲೆ ದಾಳಿ, ಜನರಲ್ಲಿ ಭಯ ಹುಟ್ಟಿಸುವುದು ಹಾಗೂ ಸಾಮಾಜಿಕ ಶಾಂತಿಯನ್ನು ಭಂಗಪಡಿಸುವುದು” ಎಂಬ ಆರೋಪಗಳಡಿ ಬಂಧಿತರಾದವರಿಗೆ ಕನಿಷ್ಠ ಒಂದು ವರ್ಷದ ಜೈಲು ಶಿಕ್ಷೆ ವಿಧಿಸುವ ಸಾಧ್ಯತೆ ಇದೆ. ಜೊತೆಗೆ 1,00,000 ದಿರ್ಹಮ್ ದಂಡ (ಸುಮಾರು 24 ಲಕ್ಷ ರೂಪಾಯಿ ) ವಿಧಿಸಬಹುದು ಎಂದು WAM ವರದಿ ತಿಳಿಸಿದೆ.
ಬಿಸಿಲು, ಬಿಸಿಗಾಳಿಯಿಂದ ತುಮಕೂರು ತತ್ತರ ; ಹೀಟ್ ವೇವ್ ಆತಂಕ, ಇರಲಿ ಮುನ್ನೆಚ್ಚರಿಕೆ
ಬೇಸಿಗೆಯಲ್ಲಿ ಅಧಿಕ ಉಷ್ಣಾಂಶ ದಾಖಲಾಗುತ್ತಿದ್ದು, ಹೀಟ್ ವೇವ್ ಸ್ಟ್ರೋಕ್ನಿಂದಾಗಿ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಇದೆ. ಹಾಗಾಗಿ ಸಾರ್ವಜನಿಕರು ಅಗತ್ಯ ಮುಂಜಾಗ್ರತೆ ವಹಿಸಬೇಕು. ಸಾರ್ವಜನಿಕರು ರೇಡಿಯೋ, ಟಿವಿ, ದಿನಪತ್ರಿಕೆಗಳಲ್ಲಿ ಬರುವ ಅತಿಯಾದ ಬಿಸಿಲಿನ ಕುರಿತು ಮುನ್ಸೂಚನೆಗಳನ್ನು ಗಮನಿಸಬೇಕು, ಬಾಯಾರಿಕೆಯಿಲ್ಲದಿದ್ದರೂ ಸಾಕಷ್ಟು ಮತ್ತು ಸಾಧ್ಯವಾದಷ್ಟು ಹೆಚ್ಚಾಗಿ ನೀರನ್ನು ಕುಡಿಯಬೇಕು, ಹಗುರವಾದ, ತಿಳಿ ಬಣ್ಣದ ಸಡಿಲ ಮತ್ತು ರಂಧ್ರವುಳ್ಳ ಹತ್ತಿ ಬಟ್ಟೆಗಳನ್ನು ಧರಿಸಬೇಕು. ಬಿಸಿಲಿನಲ್ಲಿ ಹೋಗುವಾಗ ರಕ್ಷಣಾತ್ಮಕ ಕನ್ನಡಕಗಳು, ಛತ್ರಿ/ಟೋಪಿ, ಬೂಟುಗಳು ಅಥವಾ ಚಪ್ಪಲಿ ಬಳಸಬೇಕು.
ಚೀನಾದ ಕರೆನ್ಸಿಯಲ್ಲಿ ವ್ಯಾಪಾರ ಮಾಡಿದರೆ ಹಾರ್ಮುಝ್ ಜಲಸಂಧಿಯಲ್ಲಿ ತೈಲ ಟ್ಯಾಂಕರ್ ಸಂಚಾರಕ್ಕೆ ಸಡಿಲಿಕೆ: ವರದಿ
ಹೊಸದಿಲ್ಲಿ: ಚೀನಾದ ಕರೆನ್ಸಿಯಾದ ಯುವಾನ್ ನಲ್ಲಿ ಸರಕುಗಳ ವ್ಯಾಪಾರ ನಡೆಸುವ ದೇಶಗಳಿಗೆ ಹಾರ್ಮುಝ್ ಜಲಸಂಧಿಯ ಮೂಲಕ ಸೀಮಿತ ಸಂಖ್ಯೆಯ ತೈಲ ಟ್ಯಾಂಕರ್ ಗಳನ್ನು ಹಾದುಹೋಗಲು ಇರಾನ್ ಅವಕಾಶ ನೀಡುವ ಸಾಧ್ಯತೆ ಇದೆ ಎಂದು ಅಮೆರಿಕದ ಸುದ್ದಿಸಂಸ್ಥೆ ಸಿಎನ್ಎನ್ ವರದಿ ಮಾಡಿದೆ. ಇಸ್ರೇಲ್–ಅಮೆರಿಕ ವಿರುದ್ಧದ ಯುದ್ಧದ ನಂತರ ಕಾರ್ಯತಂತ್ರದ ಮಹತ್ವ ಹೊಂದಿರುವ ಹಾರ್ಮುಝ್ ಜಲಸಂಧಿಯ ಮೂಲಕ ಟ್ಯಾಂಕರ್ ಸಂಚಾರವನ್ನು ನಿಯಂತ್ರಿಸಲು ಟೆಹ್ರಾನ್ ರೂಪಿಸುತ್ತಿರುವ ವಿಶಾಲ ಯೋಜನೆಯ ಭಾಗವಾಗಿ ಈ ಪ್ರಸ್ತಾಪವನ್ನು ರೂಪಿಸಲಾಗಿದೆ ಎಂದು ವರದಿ ಹೇಳಿದೆ. ಜಾಗತಿಕ ತೈಲ ಸಾಗಣೆಯ ಪ್ರಮುಖ ದಾರಿಗೆ ಸೇರಿದ ಹಾರ್ಮುಝ್ ಜಲಸಂಧಿಯಲ್ಲಿ ಸಂಚಾರದ ಮೇಲಿನ ನಿಯಂತ್ರಣಗಳು ಜಾಗತಿಕ ಇಂಧನ ಮಾರುಕಟ್ಟೆಯ ಮೇಲೆ ನೇರ ಪರಿಣಾಮ ಬೀರುವ ಸಾಧ್ಯತೆ ಇದೆ. ಇನ್ನೂ ಜಾಗತಿಕ ತೈಲ ವ್ಯಾಪಾರದ ಬಹುಪಾಲು ಯುಎಸ್ ಡಾಲರ್ ನಲ್ಲಿ ನಡೆಯುತ್ತಿದ್ದರೂ, ಪಾಶ್ಚಾತ್ಯ ನಿರ್ಬಂಧಗಳಿಗೆ ಒಳಗಾದ ರಷ್ಯಾದ ಕಚ್ಚಾ ತೈಲವನ್ನು ಹೆಚ್ಚಾಗಿ ರೂಬಲ್ ಅಥವಾ ಯುವಾನ್ ನಲ್ಲಿ ವ್ಯಾಪಾರ ಮಾಡಲಾಗುತ್ತಿದೆ ಎಂದು ವರದಿ ತಿಳಿಸಿದೆ.
ಬೇಸಿಗೆಯಲ್ಲಿ ಭತ್ತದ ಇಳುವರಿ ಅಧಿಕ, ರೈತರಿಗೆ ಬಿಸಿಲಿನದ್ದೇ ಆತಂಕ
ನೀರಿನ ಸಮಸ್ಯೆಯಿಂದ ಮುಕ್ತಿ ಪಡೆದು ಖುಷಿಯಿಂದ ಭತ್ತದ ನಾಟಿ ಮಾಡಿದ ರೈತರಿಗೆ ಈಗ ತೀವ್ರ ಬಿಸಿಲಿನ ಆತಂಕ ಮನೆ ಮಾಡಿದೆ. ಬಿಸಿಲ ಜತೆ ಆಗಾಗ ಬೇಸಿಗೆ ಮಳೆ ಸುರಿದು ವಾತಾವರಣ ತಂಪಾಗುತ್ತಿದ್ದರೆ ಭತ್ತಕ್ಕೆ ಸಮಸ್ಯೆ ಇರುವುದಿಲ್ಲ, ಆದರೆ ತಾಪಮಾನ 40 ಡಿಗ್ರಿ ಮೀರಿದರೆ ಇಳುವರಿ ಮೇಲೆ ಪರಿಣಾಮ ಬೀರಲಿದೆ. ಜತೆಗೆ ದುಂಡಾಣು ಅಂತಹ ರೋಗಳು ಕಾಣಿಸಿಕೊಳ್ಳಲಿವೆ ಎಂದು ತಜ್ಞರು ಹೇಳುತ್ತಿದ್ದಾರೆ.
ಕಳಪೆ ಕಾಮಗಾರಿಯ ಕರ್ನಾಟಕದ 4 ರಾಷ್ಟ್ರೀಯ ಹೆದ್ದಾರಿಗಳು ಯಾವುವು? ಕೇಂದ್ರ ಸಚಿವ ಗಡ್ಕರಿ ವಿವರಣೆ
Karnataka NH Construction : ದೇಶದ ಭೂಹೆದ್ದಾರಿ ಖಾತೆಯ ಸಚಿವ ನಿತಿನ್ ಗಡ್ಕರಿ, ಲೋಕಸಭೆಯಲ್ಲಿ ಪ್ರಶ್ನೋತ್ತರದ ವೇಳೆ ಮಾತನಾಡುತ್ತಾ, ಕರ್ನಾಟಕದ ರಾಷ್ಟ್ರೀಯ ಹೆದ್ದಾರಿಗಳ ಬಗ್ಗೆ ವಿವರಣೆಯನ್ನು ನೀಡಿದ್ದಾರೆ. ನಾಲ್ಕು ಹೆದ್ದಾರಿಗಳಲ್ಲಿ ಬಿರುಕು ಕಾಣಿಸಿಕೊಂಡ ಹಿನ್ನಲೆಯಲ್ಲಿ ಗುತ್ತಿಗೆದಾರರ ವಿರುದ್ದ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಸಚಿವರು ವಿವರಣೆಯನ್ನು ನೀಡಿದ್ದಾರೆ.
ದೇಶವನ್ನು ಭೀತಿಗೆ ತಳ್ಳಿದ ಪ್ರಧಾನಿ ಮೋದಿಯ ಹೇಳಿಕೆ!
ಮಧ್ಯಪ್ರಾಚ್ಯ ಸಂಘರ್ಷದ ಕಾರಣದಿಂದ ಎದುರಾಗಿರುವ ಎಲ್ಪಿಜಿ ಬಿಕ್ಕಟ್ಟಿನ ಬಗ್ಗೆ ಅನಗತ್ಯವಾಗಿ ಆತಂಕಗೊಳ್ಳಬೇಡಿ ಎಂದು ಧೈರ್ಯ ಹೇಳಬೇಕಾದ ಪ್ರಧಾನಿ ನರೇಂದ್ರ ಮೋದಿಯವರೇ, ದೇಶದ ಜನರು ಹೆದರಿ ಕಂಗಾಲಾಗುವ ಹೇಳಿಕೆಯನ್ನು ನೀಡಿದ್ದಾರೆ. ಎನ್ಎಕ್ಸ್ಟಿ ಶೃಂಗಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ‘‘ಕೋವಿಡ್ ಸಾಂಕ್ರಾಮಿಕ ಕಾಲದ ಬಿಕ್ಕಟ್ಟನ್ನು ಎದುರಿಸಿದಂತೆಯೇ ನಾವು ಈ ಬಿಕ್ಕಟ್ಟನ್ನೂ ಎದುರಿಸುತ್ತೇವೆ ಎನ್ನುವ ಸಂಪೂರ್ಣ ವಿಶ್ವಾಸ ನನಗಿದೆ’’ ಎಂದು ಹೇಳಿರುವುದು ದೇಶದ ಜನರನ್ನು ಬೆಚ್ಚಿ ಬೀಳಿಸಿದೆ. ಯಾಕೆಂದರೆ, ಕೋವಿಡ್ ಕಾಲದ ಬಿಕ್ಕಟ್ಟನ್ನು ಎದುರಿಸುವಲ್ಲಿ ಸರಕಾರ ಅನುಭವಿಸಿದ ವೈಫಲ್ಯದ ಫಲವನ್ನು ಜನತೆ ಈಗಲೂ ಅನುಭವಿಸುತ್ತಿದ್ದಾರೆ. ‘ಕೊರೋನ ಕಾಲದಲ್ಲಿ ಸಂಭವಿಸಿದ ಪ್ರಮಾದ ಈ ಬಾರಿ ಸಂಭವಿಸದಂತೆ ಜಾಗರೂಕತೆ ವಹಿಸಲಾಗುವುದು’ ಎಂಬ ಭರವಸೆ ನೀಡುವ ಬದಲಿಗೆ, ಮತ್ತೆ ಕೊರೋನಾದ ಕಾಲದ ‘ಲಾಕ್ಡೌನ್ ಉಡುಗೊರೆ’ಗಳನ್ನು ನೀಡುವ ಭರವಸೆ ನೀಡುವ ಮೂಲಕ ಜನರಲ್ಲಿ ಪ್ರಧಾನಿ ಅನಗತ್ಯ ಭೀತಿಯನ್ನು ಸೃಷ್ಟಿಸುತ್ತಿದ್ದಾರೆ. ಕೊರೋನ ಕಾಲವನ್ನು ಪ್ರಧಾನಿ ಮೋದಿ ನೇತೃತ್ವದಲ್ಲಿ ಹೇಗೆ ಎದುರಿಸಲಾಯಿತು ಎನ್ನುವುದನ್ನು ದೇಶ ಇನ್ನೂ ಮರೆತಿಲ್ಲ. ಗುಜರಾತ್ನಲ್ಲಿ ನಡೆದ ‘ನಮಸ್ತೆ ಟ್ರಂಪ್’ ಸಮಾವೇಶ ಭಾರತದೊಳಗೆ ಕೊರೋನವು ಮುಕ್ತವಾಗಿ ಪ್ರವೇಶಿಸಲು ಅನುಕೂಲ ಮಾಡಿಕೊಟ್ಟಿತ್ತು. ಪ್ರಧಾನಿ ಮೋದಿಯವರು ತನ್ನ ಅಮೆರಿಕದ ಸ್ನೇಹಿತ ಟ್ರಂಪ್ನ ಹಿತಾಸಕ್ತಿಗಾಗಿ ಹಮ್ಮಿಕೊಂಡ ಸಮಾವೇಶವಾಗಿತ್ತು ಅದು. ‘ನಮಸ್ತೆ ಟ್ರಂಪ್’ ಕಾರ್ಯಕ್ರಮವೇ ಬಳಿಕ ‘ನಮಸ್ತೆ ಕೊರೋನ’ ಆಗಿ ಬದಲಾಯಿತು. ಈ ಯುದ್ಧ ಕಾಲದಲ್ಲೂ ಭಾರತದ ಪಾಲಿಗೆ ಪ್ರಧಾನಿ ಮೋದಿಯ ‘ಟ್ರಂಪ್ ಓಲೈಕೆ’ಯೇ ಮುಖ್ಯವಾಗಿರುವುದು ಭಾರತದ ಇಂದಿನ ಸಮಸ್ಯೆಗೆ ಮೂಲ ಕಾರಣವಾಗಿದೆ. ಕೊರೋನ ವೈರಸನ್ನು ಈ ದೇಶ ಎದುರಿಸಿದ್ದೇ ‘ತಟ್ಟೆ, ಗಂಟೆ, ಜಾಗಟೆಗಳನ್ನು ಬಾರಿಸುವ ಮೂಲಕ’. ಹೀಗೆ ಬಾರಿಸಲು ಸಲಹೆ ನೀಡಿದವರೂ ಸ್ವತಃ ಪ್ರಧಾನಿ ಮೋದಿಯವರೇ ಆಗಿದ್ದರು. ಇದಾದ ಬಳಿಕ, ಯಾವುದೇ ಪೂರ್ವ ಸೂಚನೆಗಳಿಲ್ಲದೆ ಅನಿರೀಕ್ಷಿತವಾಗಿ ಸರಕಾರ ದೇಶಾದ್ಯಂತ ಘೋಷಿಸಿದ ಲಾಕ್ಡೌನ್ ಕೂಡ ಜನರನ್ನು ಸಂಕಷ್ಟಕ್ಕೆ ತಳ್ಳಿತು. ನಗರದಲ್ಲಿರುವ ವಲಸೆ ಕಾರ್ಮಿಕರು ರಾತ್ರೋ ರಾತ್ರಿ ಬಸ್, ರೈಲು ನಿಲ್ದಾಣಗಳಲ್ಲಿ ನೆರೆದರು. ವೈರಸ್ಗಳನ್ನು ಇನ್ನಷ್ಟು ವೇಗವಾಗಿ ಹರಡುವುದಕ್ಕೆ ಇದೂ ಒಂದು ಕಾರಣವಾಯಿತು. ಸಾವಿರಾರು ಕಿಲೋಮೀಟರ್ ದೂರ ವಲಸೆ ಕಾರ್ಮಿಕರು ಕಾಲ್ನಡಿಗೆಯಲ್ಲಿ ತಮ್ಮ ಹಳ್ಳಿಗಳ ಕಡೆಗೆ ಸಾಗುವ ಸ್ಥಿತಿ ನಿರ್ಮಾಣವಾಯಿತು. ನೂರಾರು ಜನರು ದಾರಿಯ ಮಧ್ಯೆಯೇ ಅಸ್ವಸ್ಥರಾಗಿ ಮೃತಪಟ್ಟರು. ಕಾಲ್ನಡಿಗೆಯಲ್ಲಿ ಸಾಗುತ್ತಿದ್ದ ವಲಸೆ ಕಾರ್ಮಿಕರ ಮೇಲೆ ರೈಲು ಹರಿದು ಹಲವರು ಮೃತಪಟ್ಟಿರುವುದು ವಿಶ್ವ ಮಟ್ಟದಲ್ಲಿ ಸುದ್ದಿಯಾಯಿತು. ಇದಕ್ಕಾಗಿ ಸರಕಾರ ಸಣ್ಣದೊಂದು ವಿಷಾದವನ್ನೂ ವ್ಯಕ್ತಪಡಿಸಲಿಲ್ಲ. ಲಾಕ್ಡೌನ್ ಸಂದರ್ಭದಲ್ಲಿ ಮೃತಪಟ್ಟ ವಲಸೆ ಕಾರ್ಮಿಕರ ಅಧಿಕೃತ ಅಂಕಿಅಂಶಗಳೇ ಸರಕಾರದ ಬಳಿಯಿಲ್ಲ. ಕೊರೋನ ವೈರಸ್ನಲ್ಲೂ ‘ಹಿಂದೂ-ಮುಸ್ಲಿಮ್’ ಭೇದವನ್ನು ಹುಡುಕಿದ ಏಕೈಕ ದೇಶ ನಮ್ಮದು. ಬಿಜೆಪಿ ಮತ್ತು ಸಂಘಪರಿವಾರ ಹರಡಿದ ಕೋಮು ವೈರಸ್ ಯಾವುದೇ ವೈರಸ್ಗಳಿಗಿಂತ ಮಾರಕವಾಗಿತ್ತು. ದೇಶದಲ್ಲಿ ಹರಡುತ್ತಿರುವ ವೈರಸ್ನ್ನು ಮುಸ್ಲಿಮರ ತಲೆಗೆ ಕಟ್ಟುವ ಪ್ರಯತ್ನ ನಡೆಯಿತು. ಅದರ ಭಾಗವಾಗಿಯೇ ತಬ್ಲೀಗಿ ಜಮಾತ್ನ ಸಮಾವೇಶದಲ್ಲಿ ಭಾಗವಹಿಸಿದ ಮುಸ್ಲಿಮರ ಮೇಲೆ ಪ್ರಕರಣ ದಾಖಲಿಸಲಾಯಿತು. ಆದರೆ ಇತ್ತೀಚೆಗೆ ಅವರನ್ನೆಲ್ಲ ನ್ಯಾಯಾಲಯ ನಿರ್ದೋಷಿಗಳು ಎಂದು ಘೋಷಿಸಿತು. ಲಾಕ್ಡೌನ್ ಹೆಸರಿನಲ್ಲಿ ಜನಸಾಮಾನ್ಯರು ಬೀದಿಗಿಳಿಯದಂತೆ ದಮನಿಸಿದ ಸರಕಾರ, ಚುನಾವಣಾ ರ್ಯಾಲಿಯ ಹೆಸರಿನಲ್ಲಿ, ಕುಂಭಮೇಳದ ಹೆಸರಿನಲ್ಲಿ ಲಕ್ಷಾಂತರ ಜನರನ್ನು ಸೇರಿಸಿತು. ಕೊರೋನ ದೇಶದಲ್ಲಿ ಮತ್ತೆ ಉಲ್ಬಣಿಸಿ ಕೊರೋನದಿಂದ ಸತ್ತವರ ಹೆಣಗಳು ಗಂಗಾನದಿಯಲ್ಲಿ ತೇಲತೊಡಗಿದವು. ಗಂಗಾನದಿಯ ದಡದಲ್ಲಿ ಅರೆಬರೆ ಸಮಾಧಿ ಮಾಡಲ್ಪಟ್ಟ ಹೆಣಗಳನ್ನು ನರಿ ನಾಯಿಗಳು ಕಿತ್ತು ತಿನ್ನುತ್ತಿರುವ ಚಿತ್ರಗಳು ಪತ್ರಿಕೆಗಳ ಮುಖಪುಟದಲ್ಲಿ ರಾರಾಜಿಸಿದವು. ಸಾರ್ವಜನಿಕ ಆಸ್ಪತ್ರೆಗಳಲ್ಲಿ ಮೂಲ ಸೌಕರ್ಯಗಳ ಕೊರತೆಯಿಂದಾಗಿ ನೂರಾರು ಸಾವು -ನೋವುಗಳು ಸಂಭವಿಸಿದವು. ಬರೇ ಕೊರೋನ ಸೋಂಕಿತರಿಗೆ ಮಾತ್ರವಲ್ಲ, ಇತರ ರೋಗಿಗಳಿಗೂ ಸರಿಯಾದ ಚಿಕಿತ್ಸೆ ಸಿಗದೆ ಅವರು ನರಳಿ ಸಾಯಬೇಕಾಯಿತು. ಕೊರೋನದಿಂದ ಎಷ್ಟು ಜನರು ಸತ್ತಿದ್ದಾರೆ ಎನ್ನುವ ಬಗ್ಗೆ ಇಂದಿಗೂ ಸ್ಪಷ್ಟ ಅಂಕಿಅಂಶಗಳು ಸರಕಾರದ ಬಳಿಯಿಲ್ಲ. ಸರಕಾರದ ದಾಖಲೆಯ ಪ್ರಕಾರ, ಲಾಕ್ಡೌನ್ನ ಎರಡು ವರ್ಷಗಳಲ್ಲಿ 5,74,198 ಮಂದಿ ಮೃತಪಟ್ಟಿದ್ದಾರೆ. ಡಬ್ಲ್ಯುಎಚ್ಒ ಅಂದಾಜಿನ ಪ್ರಕಾರ, ಭಾರತದಲ್ಲಿ ಸಾಂಕ್ರಾಮಿಕ ರೋಗದಿಂದ ನೇರವಾಗಿ ಅಥವಾ ಪರೋಕ್ಷವಾಗಿ ಸಂಭವಿಸಿದ ಒಟ್ಟು ಸಾವುಗಳ ಸಂಖ್ಯೆ 33 ಲಕ್ಷದಿಂದ 65 ಲಕ್ಷಗಳವರೆಗೆ ಎಂದು ಹೇಳಲಾಗಿದೆ. ಆದರೆ ಸರಕಾರ ಈ ಅಂಕಿಅಂಶ ಗಳನ್ನು ತಿರಸ್ಕರಿಸುತ್ತಲೇ ಬಂದಿದೆ. ಕೊರೋನ ಕಾಲದ ಸಾವು ನೋವುಗಳನ್ನು, ನಾಶ ನಷ್ಟಗಳನ್ನು ಮುಚ್ಚಿ ಟ್ಟದ್ದೇ ಸರಕಾರದ ಬಹುದೊಡ್ಡ ಸಾಧನೆಯಾಗಿದೆ. ಇದೀಗ ಅದೇ ತಂತ್ರಗಳ ಮೂಲಕ ಯುದ್ಧ ಬಿಕ್ಕಟ್ಟನ್ನು ಗೆಲ್ಲುವುದಕ್ಕೆ ಸರಕಾರ ಯೋಚಿಸುತ್ತಿರುವುದು ಕಳವಳಕಾರಿಯಾಗಿದೆ. ಲಾಕ್ಡೌನ್ ಪರಿಣಾಮವಾಗಿ ಸಾವಿರಾರು ಉದ್ದಿಮೆಗಳು ಮುಚ್ಚಲ್ಪಟ್ಟು, ನಿರೋದ್ಯೋಗಿಗಳ ಸಂಖ್ಯೆ ಹೆಚ್ಚಿತು. ಇತ್ತೀಚಿನ ಅಂಕಿಅಂಶಗಳ ಪ್ರಕಾರ, ಭಾರತದಲ್ಲಿ ಸುಮಾರು 6,789 ಮಾನ್ಯತೆ ಪಡೆದ ಸ್ಟಾರ್ಟ್ಅಪ್ಗಳು ಶಾಶ್ವತವಾಗಿ ಮುಚ್ಚಲ್ಪಟ್ಟಿವೆ. ಲಾಕ್ಡೌನ್ ಪರಿಣಾಮದಿಂದಾಗಿ ಹಲವು ಉದ್ಯಮಿಗಳೇ ಆತ್ಮಹತ್ಯೆ ಮಾಡಿಕೊಳ್ಳುವ ಸ್ಥಿತಿ ನಿರ್ಮಾಣವಾಯಿತು. ಲಸಿಕೆ ಹೆಸರಿನಲ್ಲಿ ನಡೆದ ಬೃಹತ್ ಅವ್ಯವಹಾರಗಳು, ಆಕ್ಸಿಜನ್ ಸಿಲಿಂಡರ್ ಕೊರತೆಯಿಂದ ಸಂಭವಿಸಿದ ಸಾಲು ಸಾಲು ಸಾವುಗಳು ಇವೆಲ್ಲವನ್ನು ಪ್ರಧಾನಿ ಮೋದಿಯವರು ‘ಕೊರೋನ ಕಾಲದ ಯಶಸ್ವಿ ಕಾರ್ಯಾಚರಣೆ’ ಎಂದು ಕರೆಯುತ್ತಾರೆಯೆ? ಮತ್ತೊಮ್ಮೆ ಈ ದೇಶಕ್ಕೆ ಕೊರೋನ ಕಾಲದ ದುಸ್ಥಿತಿಯನ್ನು ತಂದಿಡುವುದಿಲ್ಲ ಎನ್ನುವ ಭರವಸೆಯನ್ನು ನರೇಂದ್ರ ಮೋದಿಯವರು ನೀಡಬೇಕಾಗಿದೆ. ಮಧ್ಯಪ್ರಾಚ್ಯದಲ್ಲಿ ಬರೇ ಹತ್ತು ದಿನಗಳ ಯುದ್ಧಕ್ಕೇ ಭಾರತ ಈ ಪರಿ ಕಂಗೆಟ್ಟುಕೂತಿದೆಯೆಂದರೆ ಅದಕ್ಕೆ ಯಾರು ಹೊಣೆ? ಕಳೆದ ಹತ್ತು ವರ್ಷಗಳಿಂದ ಈ ದೇಶವನ್ನು ಸ್ವಾವಲಂಬಿಯನ್ನಾಗಿಸುತ್ತಿದ್ದೇನೆ ಎಂದು ‘ಮನ್ ಕೀ ಬಾತ್’ನಲ್ಲಿ ಪದೇ ಪದೇ ತುತ್ತೂರಿ ಊದುತ್ತಿದ್ದ ಪ್ರಧಾನಿಯ ತುತ್ತೂರಿ ಧ್ವನಿ ಇದೀಗ ಅಪಸ್ವರವನ್ನು ಯಾಕೆ ಹೊರಡಿಸುತ್ತಿದೆ? ಪ್ರಧಾನಿ ಮೋದಿಯವರೇ ಉತ್ತರಿಸಬೇಕಾಗಿದೆ.
LPG ಕೊರತೆಯಿಂದ ಮರಗಳಿಗೆ ಕೊಡಲಿ ಭೀತಿ: ಅಕ್ರಮ ಮರ ಕಡಿತ ತಡೆಯಲು ಅಧಿಕಾರಿಗಳಿಗೆ ಈಶ್ವರ ಖಂಡ್ರೆ ಖಡಕ್ ಸೂಚನೆ
ಬೆಂಗಳೂರು: ಮಧ್ಯಪ್ರಾಚ್ಯ ದೇಶಗಳಲ್ಲಿ ನಡೆಯುತ್ತಿರುವ ನಿರಂತರ ಸಂಘರ್ಷದ ನೇರ ಪರಿಣಾಮ ಇದೀಗ ಕರ್ನಾಟಕದ ಮೇಲೂ ಬೀರಲಾರಂಭಿಸಿದೆ. ರಾಜ್ಯದಲ್ಲಿ ಗೃಹ ಬಳಕೆ ಹಾಗೂ ವಾಣಿಜ್ಯ ಬಳಕೆಯ ಅಡುಗೆ ಅನಿಲ (LPG) ಪೂರೈಕೆಯಲ್ಲಿ ಭಾರಿ ಕೊರತೆ ಉಂಟಾಗಿದ್ದು, ಹೋಟೆಲ್ ಉದ್ಯಮ ಸೇರಿದಂತೆ ಜನಸಾಮಾನ್ಯರು ಪರ್ಯಾಯ ವ್ಯವಸ್ಥೆಯ ಮೊರೆ ಹೋಗುತ್ತಿದ್ದಾರೆ. ಗ್ಯಾಸ್ ಸಿಲಿಂಡರ್ ಅಭಾವದಿಂದಾಗಿ ಹಳ್ಳಿಗಳು, ಅರೆ-ನಗರ ಪ್ರದೇಶಗಳು ಹಾಗೂ ವಾಣಿಜ್ಯ
ಅಡುಗೆ ಅನಿಲ ಸರಬರಾಜು ವ್ಯತ್ಯಯ ಹಿನ್ನೆಲೆ: ಪಡಿತರ ಅಂಗಡಿಗಳಲ್ಲಿ ಸೀಮೆಎಣ್ಣೆ ವಿತರಣೆಗೆ ಕೇಂದ್ರದ ಕ್ರಮ
ಹೊಸದಿಲ್ಲಿ: ಹಲವು ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಸೀಮೆಎಣ್ಣೆ ಬಳಕೆ ಮತ್ತೆ ಆರಂಭವಾಗಿದ್ದು, ಪ್ರಾಥಮಿಕವಾಗಿ ಪಡಿತರ ಅಂಗಡಿಗಳ ಮೂಲಕ ವಿವತರಿಸಲು ಕ್ರಮ ಕೈಗೊಳ್ಳಲಾಗಿದೆ. ಕೆಲವೆಡೆಗಳಲ್ಲಿ ಸಾರ್ವಜನಿಕ ವಲಯದ ತೈಲ ಮಾರಾಟ ಕಂಪನಿಗಳು, ಅಡುಗೆ ಮತ್ತು ದೀಪದ ವ್ಯವಸ್ಥೆಗೆ ಬಳಸಿಕೊಳ್ಳಲು ಅನುವಾಗುವಂತೆ ಮಳಿಗೆಗಳನ್ನು ತೆರೆದಿವೆ. ಅಡುಗೆ ಇಂಧನವಾಗಿ ಬಳಸಲು ಬಿಡುಗಡೆ ಮಾಡುತ್ತಿದ್ದ ಒಂದು ಲಕ್ಷ ಕಿಲೋಲೀಟರ್ ಸೀಮೆಎಣ್ಣೆಗೆ ಪೂರಕವಾಗಿ ಹೆಚ್ಚುವರಿಯಾಗಿ 48 ಲಕ್ಷ ಕಿಲೋಲೀಟರ್ ಸೀಮೆಎಣ್ಣೆಯನ್ನು ಕೇಂದ್ರ ಸರ್ಕಾರ ಗುರುವಾರ ಹಂಚಿಕೆ ಮಾಡಿತ್ತು. ಬಹುತೇಕ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳು ಕಳೆದ 10 ವರ್ಷಗಳಿಂದ ಸೀಮೆಎಣ್ಣೆ ಬಳಕೆಯನ್ನು ಸ್ಥಗಿತಗೊಳಿಸಿದ್ದವು. ಆದರೆ ಇದೀಗ ಅಡುಗೆ ಅನಿಲ ಸರಬರಾಜು ವ್ಯತ್ಯಯವಾಗಿರುವ ಹಿನ್ನೆಲೆಯಲ್ಲಿ ಬಳಕೆದಾರರು ಇದೀಗ ಹಳೆಯ ಸ್ಟೌಗಳನ್ನು ಮತ್ತೆ ಹೊರತೆಗೆಯಬೇಕಾಗಿದೆ ಅಥವಾ ಹೊಸ ಸ್ಟೌಗಳನ್ನು ಖರೀದಿಸಬೇಕಾದ ಪರಿಸ್ಥಿತಿ ಸೃಷ್ಟಿಯಾಗಿದೆ. ಅಂತೆಯೇ ಕೆಲ ರೆಸ್ಟೋರೆಂಟ್ ಗಳು ಅನಿಲ ಆಧರಿತ ಓವನ್ ಗಳ ಬದಲಾಗಿ ಕಲ್ಲಿದ್ದಲು ಬಳಕೆಯ ತಂದೂರ್ ಗಳನ್ನು ಮರು ಬಳಕೆಗೆ ತಂದಿವೆ. ದೊಡ್ಡ ಪ್ರಮಾಣದಲ್ಲಿ ಕಚ್ಚಾ ತೈಲವನ್ನು ಶುದ್ಧೀಕರಿಸಿ ಸುಲಭವಾಗಿ ದೊಡ್ಡ ಪ್ರಮಾಣದಲ್ಲಿ ಸೀಮೆಎಣ್ಣೆ ಉತ್ಪಾದಿಸಲು ಸಾಧ್ಯತೆಗಳು ಇರುವ ಹಿನ್ನೆಲೆಯಲ್ಲಿ ಅಡುಗೆ ಉದ್ದೇಶಕ್ಕೆ ಅದನ್ನು ಬಳಸುವ ಸಲುವಾಗಿ ಹೆಚ್ಚುವರಿ ಸೀಮೆಎಣ್ಣೆ ಹಂಚಿಕೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಎಷ್ಟು ಪ್ರಮಾಣದಲ್ಲಿ ಗ್ರಾಹಕರಿಗೆ ಸೀಮೆಎಣ್ಣೆ ವಿತರಿಸಬೇಕು ಮತ್ತು ಯಾವ ಮಾನದಂಡವನ್ನು ಅನುಸರಿಸಬೇಕು ಎನ್ನುವುದು ಆಯಾ ರಾಜ್ಯ ಸರ್ಕಾರ ಅಥವಾ ಕೇಂದ್ರಾಡಳಿತ ಪ್ರದೇಶಗಳಿಗೆ ಬಿಟ್ಟ ವಿಚಾರ ಎಂದು ಪೆಟ್ರೋಲಿಯಂ ಸಚಿವಾಲಯ ತನ್ನ ಸುತ್ತೋಲೆಯಲ್ಲಿ ಸ್ಪಷ್ಟಪಡಿಸಿದೆ. ಆದರೆ ಪಡಿತರ ಅಂಗಡಿಗಳ ಮೂಲಕ ವಿತರಿಸಿದ ಸೀಮೆಎಣ್ಣೆ ಪೆಟ್ರೋಲ್ ಅಥವಾ ಡೀಸೆಲ್ ಕಲಬೆರಕೆಗೆ ಬಳಸದಂತೆ ಅಥವಾ ಉದ್ದೇಶಿತವಲ್ಲದ ಬಳಕೆಗೆ ವಿಮುಖವಾಗದಂತೆ ಎಚ್ಚರ ವಹಿಸುವುದು ಅಗತ್ಯ ಎಂದು ಎಚ್ಚರಿಕೆ ನೀಡಿದೆ.
ಶಬರಿಮಲೆ ದೇಗುಲಕ್ಕೆ ಮಹಿಳೆಯರಿಗೆ ಪ್ರವೇಶ: ಕೇರಳ ಸರ್ಕಾರ ಯು ಟರ್ನ್
ತಿರುವನಂತಪುರಂ: ಶಬರಿಮಲೆ ದೇವಾಲಯದಲ್ಲಿ ಮಹಿಳೆಯರ ಪ್ರವೇಶಕ್ಕೆ ಸಂಬಂಧಿಸಿದಂತೆ ಪ್ರಾಚೀನ ಸಂಪ್ರದಾಯ ಮತ್ತು ಪದ್ಧತಿಯನ್ನು ಉಳಿಸಿಕೊಳ್ಳುವುದು ಅಗತ್ಯ ಎಂದು ಕೇರಳದ ಎಲ್ಡಿಎಫ್ ಸರ್ಕಾರ ಸುಪ್ರೀಂಕೋರ್ಟ್ ನಲ್ಲಿ ಶುಕ್ರವಾರ ಅಫಿಡವಿಟ್ ಸಲ್ಲಿಸಿದೆ. ಇದು ತಿರುವಾಂಕೂರು ದೇವಸ್ವಂ ಮಂಡಳಿಯ ನಿಲುವಿಗೆ ಅನುಸಾರವಾಗಿದ್ದು, ತನ್ನ ಹಿಂದಿನ ನಿಲುವಿನಿಂದ ಸರ್ಕಾರ ಹಿಂದೆ ಸರಿದಿದೆ. ಪವಿತ್ರ ಮಂದಿರಕ್ಕೆ ಮಹಿಳೆಯರ ಪ್ರವೇಶವನ್ನು ಈ ಹಿಂದೆ ಕೇರಳ ಸರ್ಕಾರ ಬೆಂಬಲಿಸಿತ್ತು. ಇದೀಗ ಸಿಪಿಎಂ ರಾಜ್ಯ ಘಟಕವು ಶಬರಿಮಲೆ ಸಂಪ್ರದಾಯದ ಪರವಾಗಿ ನಿರ್ಣಯ ಕೈಗೊಂಡ ಹಿನ್ನೆಲೆಯಲ್ಲಿ ಸರ್ಕಾರದ ನಿಲುವು ಬದಲಾಗಿದೆ. ಅಗತ್ಯಕ್ಕೆ ತಕ್ಕಂತೆ ಕಾನೂನು ಮತ್ತು ಸಾಂವಿಧಾನಿಕ ಆಯಾಮಗಳನ್ನು ಪರಿಶೀಲಿಸಿ ಕೇರಳ ಸರ್ಕಾರ ಸುಪ್ರೀಂಕೋರ್ಟ್ ನಲ್ಲಿ ಸೂಕ್ತವಾದ ಪ್ರತಿಕ್ರಿಯೆಯನ್ನು ಸಲ್ಲಿಸಬಹುದು ಎಂದು ಸಿಪಿಎಂ ರಾಜ್ಯ ಘಟಕವು ನಿರ್ಧಾರ ಕೈಗೊಂಡಿದೆ ಎಂದು ಸಿಪಿಎಂ ರಾಜ್ಯ ಕಾರ್ಯದರ್ಶಿ ಎಂ.ವಿ.ಗೋವಿಂದನ್ ಹೇಳಿಕೆ ನೀಡಿದ್ದರು. ಧಾರ್ಮಿಕ ವಿಚಾರದ ನಂಬಿಕೆಯನ್ನು ಪಕ್ಷ ಸದಾ ಗೌರವಿಸುತ್ತದೆ. ಈ ಕ್ಷೇತ್ರದ ತಜ್ಞರ ಸಲಹೆಯನ್ನು ಪಡೆದ ಬಳಿಕ ನಿರ್ಧಾರ ಕೈಗೊಳ್ಳಲು ಪಕ್ಷ ಬಯಸಿದೆ ಎಂದು ವಿವರಿಸಿದ್ದಾರೆ. ಏಳು ಪ್ರಶ್ನೆಗಳಿಗೆ ನಾವು ಉತ್ತರಿಸಿಸಬೇಕಿದೆ. ಪವಿತ್ರ ಮಂದಿರಕ್ಕೆ ಮಹಿಳೆಯರ ಪ್ರವೇಶಕ್ಕೆ ಅವಕಾಶ ನೀಡಬೇಕೇ ಅಥವಾ ಬೇಡವೇ ಎಂದು ಯಾರೂ ಕೇಳಿಲ್ಲ. ಇದು ಸುಪ್ರೀಂಕೋರ್ಟ್ ನಲ್ಲಿರುವ ಸಾಂವಿಧಾನಿಕ ವಿಚಾರವಾಗಿದ್ದು, ಎಲ್ಲ ಧರ್ಮಗಳಿಗೂ ಸಂಬಂಧಿಸಿದ್ದು ಎಂದು ಸ್ಪಷ್ಟಪಡಿಸಿದರು. ಋತುಸ್ರಾವ ವಯಸ್ಸಿನ ಮಹಿಳೆಯರು ದೇವಸ್ಥಾನಕ್ಕೆ ಪ್ರವೇಶಿಸಲು ಅವಕಾಶ ನೀಡಿ ನೀಡಿದ್ದ ತೀರ್ಪಿನ ಪರಾಮರ್ಶನಾ ಅರ್ಜಿ ವಿಚಾರಣೆ ನಡೆಸುತ್ತಿರುವ ಸುಪ್ರೀಂಕೋರ್ಟ್, ಮಾರ್ಚ್ 14ರ ಮೊದಲು ತನ್ನ ನಿಲುವನ್ನು ಸ್ಪಷ್ಟಪಡಿಸುವಂತೆ ರಾಜ್ಯ ಸರ್ಕಾರಕ್ಕೆ ಗಡುವು ವಿಧಿಸಿತ್ತು.
Gold Rate: ಬೆಂಗಳೂರಿನಲ್ಲಿ ಇಳಿಕೆಯಾಯ್ತು ಚಿನ್ನ-ಬೆಳ್ಳಿ ಬೆಲೆ; ಇಲ್ಲಿದೆ ದರ ಪಟ್ಟಿ
ಬೆಂಗಳೂರು: ನೀವು ಚಿನ್ನ ಅಥವಾ ಬೆಳ್ಳಿ ಆಭರಣ ಖರೀದಿಸುವ ಯೋಚನೆಯಲ್ಲಿದ್ದರೆ, ಇಂದಿನ ಮಾರುಕಟ್ಟೆಯ ಟ್ರೆಂಡ್ ನಿಮಗೆ ಖುಷಿ ನೀಡಬಹುದು. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅಮೆರಿಕನ್ ಡಾಲರ್ ಮೌಲ್ಯ ಬಲಗೊಂಡಿರುವ ಪರಿಣಾಮ, ಜಾಗತಿಕ ಮಟ್ಟದಲ್ಲಿ ಚಿನ್ನದ ಬೆಲೆಯಲ್ಲಿ ಶೇ. 2ರಷ್ಟು ದಿಢೀರ್ ಕುಸಿತ ಕಂಡುಬಂದಿದೆ. ಇದರ ನೇರ ಪರಿಣಾಮ ಭಾರತೀಯ ಮಾರುಕಟ್ಟೆಯ ಮೇಲೂ ಆಗಿದ್ದು, ಮಲ್ಟಿ ಕಮಾಡಿಟಿ ಎಕ್ಸ್ಚೇಂಜ್ (MCX)
ಎಚ್ಎನ್, ಕೆಸಿ ವಿಷಕಾರಿ ವ್ಯಾಲಿ ನೀರಿನ ವಿರುದ್ಧ ರಾಜ್ಯ, ರಾಷ್ಟ್ರ ಮಟ್ಟದಲ್ಲಿ ‘ಜನ’ಧ್ವನಿ
ಕೆಸಿ ವ್ಯಾಲಿ, ಎಚ್ಎನ್ ವ್ಯಾಲಿ ನೀರು ತುಂಬಿಕೊಂಡಿರುವ ಕೆರೆಯಂಚಿನ ಗ್ರಾಮಗಳು ಹಾಗೂ ನಿವಾಸಿಗಳು ಜೀವನ ನಡೆಸುವುದೇ ಕಷ್ಟ ಎನ್ನುವಂತಾಗಿದೆ. ವ್ಯಾಲಿ ನೀರಿನ ಜತೆ ಸರಿಯಾದ ನಿರ್ವಹಣೆಯಿಲ್ಲದ ಕಾರಣ ಒಳಚರಂಡಿ ನೀರು ಕೂಡಾ ಕೆರೆಗಳ ಒಡಲು ಸೇರುತ್ತಿದ್ದು, ಕೆರೆಗಳು ಗಬ್ಬೆದ್ದು ನಾರುತ್ತಿವೆ. ನೀರು ಹರಿಸುವುದಷ್ಟೇ ನಮ್ಮ ಕೆಲಸ ಎಂದು ಅಧಿಕಾರಿಗಳು ಕೈಕಟ್ಟಿ ಕೂತಿದ್ದು, ಕೆರೆಗಳು ವಿಷಕಾರುವ ತಾಣಗಳಾಗಿ ಮಾರ್ಪಟ್ಟಿವೆ.
Karnataka Weather: ರಾಜ್ಯವನ್ನು ಸುಡುತ್ತಿದೆ ರಣಬಿಸಿಲು; ಕರಾವಳಿ, ಮಲೆನಾಡಿಗೆ ಇಂದು ಮಳೆ ಮುನ್ಸೂಚನೆ
ಬೆಂಗಳೂರು: ರಾಜ್ಯದಲ್ಲಿ ಮಾರ್ಚ್ ತಿಂಗಳ ಆರಂಭದಿಂದಲೇ ಬೇಸಿಗೆಯ ಬಿಸಿಲಿನ ಅಬ್ಬರ ಶುರುವಾಗಿದೆ. ದಿನದಿಂದ ದಿನಕ್ಕೆ ಉಷ್ಣಾಂಶ ಏರಿಕೆಯಾಗುತ್ತಿದ್ದು, ಜನಸಾಮಾನ್ಯರು ಸೆಕೆಯಿಂದ ಹೈರಾಣಾಗಿದ್ದಾರೆ. ಭಾರತೀಯ ಹವಾಮಾನ ಇಲಾಖೆಯ ಅಧಿಕೃತ ವರದಿಗಳ ಪ್ರಕಾರ, ಇಂದು (ಮಾರ್ಚ್ 14, 2026) ಕರ್ನಾಟಕದ ಹವಾಮಾನದಲ್ಲಿ ಪ್ರಮುಖ ಬದಲಾವಣೆಗಳು ಕಂಡುಬರುವ ನಿರೀಕ್ಷೆಯಿದೆ. ಒಂದೆಡೆ ನೆತ್ತಿ ಸುಡುವ ಬಿಸಿಲಿದ್ದರೆ, ಮತ್ತೊಂದೆಡೆ ಅನಿರೀಕ್ಷಿತ ಮಳೆಯ ಮುನ್ಸೂಚನೆ ಇದೆ.
ಲೆಕ್ಕಾಚಾರ ತಪ್ಪಿದರೆ ನೀರಿನ ಅಭಾವ ಖಚಿತ ; ಮುಂದಿನ 3 ತಿಂಗಳು ನಿರ್ವಹಣೆಯೇ ಸವಾಲು
ವಿಜಯಪುರ ಜಿಲ್ಲಾದ್ಯಂತ ಕಾಲುವೆ ಜಾಲಗಳ ಮೂಲಕ ಕೆರೆ ತುಂಬಿಸಿರುವುದರಿಂದ ಸದ್ಯಕ್ಕೆ ನೀರಿನ ಸಮಸ್ಯೆ ಎದುರಾಗಿಲ್ಲ. ಮುನ್ನೆಚ್ಚರಿಕೆ ಕ್ರಮವಾಗಿ ಜನ ಜಾನುವಾರುಗಳಿಗೆ ಜೀವಜಲದ ಸಮಸ್ಯೆಯಾಗದಂತೆ ಜಿಲ್ಲಾಡಳಿತ ವ್ಯವಸ್ಥೆ ಕಲ್ಪಿಸುತ್ತಿದೆ. ಆದರೂ ಅಲ್ಲಲ್ಲಿಕುಡಿಯುವ ನೀರಿನ ಸಮಸ್ಯೆ ಸೃಷ್ಟಿಯಾಗುತ್ತಿದೆ. ಹೀಗಾಗಿ ಜಿಲ್ಲೆಯಲ್ಲಿನ ಕುಡಿಯುವ ನೀರಿನ ಸ್ಥಿತಿ-ಗತಿ ಹೇಗಿದೆ ಎನ್ನುವುದರ ಕುರಿತು ವಿಜಯ ಕರ್ನಾಟಕ ಸರಣಿ ವರದಿ ಮೂಲಕ ಬೆಳಕು ಚೆಲ್ಲಲಿದೆ.
ಹಾರ್ಮುಝ್ ಜಲಸಂಧಿಯ ಬಳಿ ಸರಕು ಸಾಗಣೆ ಹಡಗಿನ ಮೇಲೆ ಇರಾನ್ ದಾಳಿ: ಬಿಹಾರ ಮೂಲದ ಇಂಜಿನಿಯರ್ ಮೃತ್ಯು
ಹೊಸದಿಲ್ಲಿ: ಹಾರ್ಮುಝ್ ಜಲಸಂಧಿಯ ಬಳಿ ಅಮೆರಿಕದ ಧ್ವಜ ಹೊಂದಿದ್ದ ಸರಕು ಸಾಗಣೆ ಹಡಗಿನ ಮೇಲೆ ಇರಾನ್ ನಡೆಸಿದ ದಾಳಿಯಲ್ಲಿ ಬಿಹಾರ ಮೂಲದ ಇಂಜಿನಿಯರ್ ಒಬ್ಬರು ಮೃತಪಟ್ಟಿದ್ದು, ಅವರ ಕುಟುಂಬ ತೀವ್ರ ಆಘಾತಕ್ಕೊಳಗಾಗಿದೆ. ಮೃತದೇಹವನ್ನು ಭಾರತಕ್ಕೆ ಕರೆತರುವಂತೆ ಮೃತ ಇಂಜಿನಿಯರ್ ಕುಟುಂಬದ ಸದಸ್ಯರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಮೃತ ಇಂಜಿನಿಯರ್ ಅವರನ್ನು ಬಿಹಾರದ ಭಗಲ್ಪುರ್ ಜಿಲ್ಲೆಯ ರಾಣಿ ಬಮಿಯಾನ್ ಗ್ರಾಮದ ನಿವಾಸಿ ದೇವನಂದನ್ ಪ್ರಸಾದ್ ಸಿಂಗ್ ಎಂದು ಗುರುತಿಸಲಾಗಿದೆ. ಮಧ್ಯಪ್ರಾಚ್ಯದಲ್ಲಿ ಉದ್ಭವಿಸಿರುವ ಬಿಕ್ಕಟ್ಟಿನ ಹಿನ್ನೆಲೆ, ಮಾರ್ಚ್ 11ರಂದು ಅವರು ಕೆಲಸ ಮಾಡುತ್ತಿದ್ದ ಸರಕು ಸಾಗಣೆ ಹಡಗಿನ ಮೇಲೆ ನಡೆದ ದಾಳಿಯಲ್ಲಿ ಅವರು ಮೃತಪಟ್ಟಿದ್ದಾರೆ. ಈ ಹಡಗು ಇರಾನ್ ಮತ್ತು ಒಮಾನ್ ನಡುವಿನ ವ್ಯೂಹಾತ್ಮಕ ಜಲಮಾರ್ಗವಾದ ಹಾರ್ಮುಝ್ ಜಲಸಂಧಿಗೆ ಸಮೀಪದಲ್ಲಿರುವ ಅಲ್-ಝುಬೈರ್ ಬಂದರಿನ ಬಳಿ ಕಾರ್ಯಾಚರಿಸುತ್ತಿತ್ತು ಎಂದು ಹೇಳಲಾಗಿದೆ. ಘಟನೆಯ ವಿವರಗಳ ಪ್ರಕಾರ, ದಾಳಿಗೆ ಗುರಿಯಾದ ಸಂದರ್ಭದಲ್ಲಿ ಹಡಗು 48,000 ಮೆಟ್ರಿಕ್ ಟನ್ ನಾಫ್ತಾವನ್ನು ಸಾಗಿಸುತ್ತಿತ್ತು ಎಂದು ತಿಳಿದುಬಂದಿದೆ. ಇರಾನ್ ನ ಜಲಾಂತರ್ಗಾಮಿ ಘಟಕವು ಮಾನವರಹಿತ ಸ್ಫೋಟಕಗಳನ್ನು ಹೊಂದಿದ್ದ ವೇಗದ ದೋಣಿಯನ್ನು ಬಳಸಿ ಹಡಗಿನ ಮೇಲೆ ಮಾರಕ ದಾಳಿ ನಡೆಸಿದೆ. ಈ ದಾಳಿಯಲ್ಲಿ ಹಡಗಿನಲ್ಲಿದ್ದ ಸಾಗರ ಇಂಜಿನಿಯರ್ ದೇವನಂದನ್ ಪ್ರಸಾದ್ ಸಿಂಗ್ ಮೃತಪಟ್ಟಿದ್ದಾರೆ. ಅವರು 1994ರಿಂದ ಅಮೆರಿಕ ಮೂಲದ ಹಡಗು ಕಂಪನಿ ‘ಬ್ರೇವೊ ಶಿಪ್ ಮ್ಯಾನೇಜ್ಮೆಂಟ್’ನಲ್ಲಿ ಕೆಲಸ ಮಾಡುತ್ತಿದ್ದು, ಕಂಪೆನಿಯಲ್ಲಿ ಉಪಾಧ್ಯಕ್ಷ ಹುದ್ದೆಯನ್ನು ಹೊಂದಿದ್ದರು ಎಂದು ವರದಿಯಾಗಿದೆ.
ಇರಾನಿನ ತೈಲ ಮೂಲಸೌಕರ್ಯ ಉಳಿಸಿಕೊಂಡು ಖಾರ್ಗ್ ದ್ವೀಪದ ಮಿಲಿಟರಿ ನೆಲೆಗಳ ಮೇಲೆ ಅಮೆರಿಕ ದಾಳಿ ನಡೆಸಿದ್ದು ಯಾಕೆ?
ಟೆಹ್ರಾನ್, ಮಾ. 14: ಮಧ್ಯಪ್ರಾಚ್ಯದ ಉದ್ವಿಗ್ನತೆಯ ನಡುವೆಯೇ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇರಾನ್ನ ಖಾರ್ಗ್ ದ್ವೀಪದಲ್ಲಿರುವ ಮಿಲಿಟರಿ ಸೌಲಭ್ಯಗಳ ಮೇಲೆ ಅಮೆರಿಕ ವಾಯುಪಡೆ ಬಾಂಬ್ ದಾಳಿ ನಡೆಸಿದುದಾಗಿ ಘೋಷಿಸಿದ್ದಾರೆ. ದಾಳಿ ನಡೆದಿರುವುದು ಕಳೆದ ಒಂದು ಗಂಟೆಯ ಹಿಂದೆ ಎಂದು ಅವರು ತಿಳಿಸಿದ್ದಾರೆ ಎಂದು Aljazeera ವರದಿ ಮಾಡಿದೆ. ‘ಟ್ರೂತ್ ಸೋಷಿಯಲ್’ನಲ್ಲಿ ಪೋಸ್ಟ್ ಮಾಡಿದ ಟ್ರಂಪ್, “ದ್ವೀಪದ ತೈಲ ಸೌಲಭ್ಯಗಳನ್ನು ಈ ಹಂತದಲ್ಲಿ ಗುರಿಯಾಗಿಸಲಿಲ್ಲ. ಆದರೆ ಹಾರ್ಮುಝ್ ಜಲಸಂಧಿಯಲ್ಲಿ ಹಡಗುಗಳ ಮುಕ್ತ ಹಾಗೂ ಸುರಕ್ಷಿತ ಸಾಗಣೆಗೆ ಅಡ್ಡಿ ಉಂಟಾದರೆ, ಈ ನಿರ್ಧಾರವನ್ನು ತಕ್ಷಣ ಮರುಪರಿಶೀಲಿಸಲಾಗುವುದು” ಎಂದು ಟ್ರಂಪ್ ಎಚ್ಚರಿಸಿದ್ದಾರೆ. ಅಮೆರಿಕದ ಅಂದಾಜಿನ ಪ್ರಕಾರ, ಖಾರ್ಗ್ ದ್ವೀಪವನ್ನು ಇರಾನ್ ಹಾರ್ಮುಝ್ ಜಲಸಂಧಿಯ ಮೂಲಕ ಸಾಗುವ ಹಡಗುಗಳ ಮೇಲೆ ಕ್ಷಿಪಣಿ ದಾಳಿ ನಡೆಸಲು ಬಳಸುತ್ತಿದೆ. ಈ ಹಿನ್ನೆಲೆ, ದ್ವೀಪದಲ್ಲಿನ ಮಿಲಿಟರಿ ಸೌಲಭ್ಯಗಳನ್ನು ಗುರಿಯಾಗಿಸುವ ಮೂಲಕ ಜಲಸಂಧಿಯಲ್ಲಿನ ಸಾಗಣೆಗೆ ಇರುವ ಅಪಾಯವನ್ನು ಮಿತಿಗೊಳಿಸುವ ಪ್ರಯತ್ನ ಅಮೆರಿಕ ಮಾಡಿದೆ ಎನ್ನಲಾಗಿದೆ. ಖಾರ್ಗ್ ದ್ವೀಪವು ಇರಾನ್ ಗೆ ಆರ್ಥಿಕವಾಗಿ ಅತ್ಯಂತ ಪ್ರಮುಖ ಕೇಂದ್ರವಾಗಿದೆ. ದೇಶದ ಹೆಚ್ಚಿನ ತೈಲ ರಫ್ತುಗಳು ಇದೇ ದ್ವೀಪದಿಂದ ನಡೆಯುತ್ತವೆ. ಟ್ರಂಪ್ ಅವರ ಹೇಳಿಕೆಯಂತೆ, ಇದು ಇರಾನ್ನ “ಕಿರೀಟದ ರತ್ನ”ವಾಗಿದ್ದು, ತೈಲ ಮೂಲಸೌಕರ್ಯವನ್ನು ಗುರಿಯಾಗಿಸುವ ಬೆದರಿಕೆಯೇ ಇರಾನ್ ಮೇಲೆ ಒತ್ತಡ ಹೆಚ್ಚಿಸುವ ಪ್ರಮುಖ ಸಾಧನವಾಗಿದೆ. ಹಾರ್ಮುಝ್ ಜಲಸಂಧಿಯ ಸಮೀಪದಲ್ಲಿರುವ ಈ ದ್ವೀಪವು ಜಾಗತಿಕ ಇಂಧನ ಸಾಗಣೆಯ ಪ್ರಮುಖ ಕೊಂಡಿಯಾಗಿದ್ದು, ಇಲ್ಲಿ ನಡೆಯುವ ಯಾವುದೇ ಮಿಲಿಟರಿ ಬೆಳವಣಿಗೆಗಳು ವಿಶ್ವ ಆರ್ಥಿಕತೆಗೆ ಪರಿಣಾಮ ಬೀರುವ ಸಾಧ್ಯತೆ ಇದೆ. ಜಲಸಂಧಿಯನ್ನು ದಾಟುವ ಹಡಗುಗಳ ಮೇಲೆ ದಾಳಿ ನಡೆಸುವ ಚಟುವಟಿಕೆಗಳು ಇದೇ ಪ್ರದೇಶದಿಂದ ನಡೆಯುತ್ತಿವೆ ಎಂದು ಭಾವಿಸಿ ಅಮೆರಿಕ ಈ ಕ್ರಮ ಕೈಗೊಂಡಿರಬಹುದು ಎಂದು ವಿಶ್ಲೇಷಕರು ಹೇಳಿದ್ದಾರೆ. ಇನ್ನೊಂದೆಡೆ, ಮಿಲಿಟರಿ ತಜ್ಞರು ಖಾರ್ಗ್ ದ್ವೀಪವನ್ನು ಯುದ್ಧದ ಆರಂಭದಲ್ಲೇ ಗುರಿಯಾಗಬೇಕಾಗಿತ್ತು ಎಂದು ಅಭಿಪ್ರಾಯಪಟ್ಟಿದ್ದಾರೆ. ಈಗ ಮಾತ್ರ ದಾಳಿ ನಡೆಸಿರುವುದು ಏಕೆ ಎಂಬ ಪ್ರಶ್ನೆ ಎದುರಾಗಿದೆ. ಮಿಲಿಟರಿ ಸೌಲಭ್ಯಗಳನ್ನು ಮಾತ್ರ ಗುರಿಯಾಗಿಸಿ ತೈಲ ಮೂಲಸೌಕರ್ಯವನ್ನು ಉಳಿಸಿಕೊಂಡಿರುವುದು ಅಮೆರಿಕದ ಹಂತ ಹಂತದ ಒತ್ತಡ ತಂತ್ರದ ಸೂಚನೆಯಾಗಿದ್ದು, ಅಗತ್ಯವಿದ್ದರೆ ಮುಂದಿನ ಹಂತದಲ್ಲಿ ಕಠಿಣ ಕ್ರಮಗಳಿಗೂ ಅವಕಾಶವಿದೆ ಎಂಬ ಸಂದೇಶ ನೀಡಲಾಗಿದೆ ಎನ್ನಲಾಗಿದೆ.
ಮಹಾರಾಷ್ಟ್ರದ ಸಣ್ಣ ಪಟ್ಟಣವಾದ ನಾಸಿಕ್ನಲ್ಲಿರುವ ಸಂಜಯ್ ನೆರ್ಕರ್ ಅವರ ಮಗ ವರದ್ ನೆರ್ಕರ್ ಸುಮಾರು ಒಂದು ದಶಕದ ಕಾಲ ಶಿಕ್ಷಣಕ್ಕಾಗಿ ಮನೆಯಿಂದ ದೂರ ವಾಸಿಸುತ್ತಿದ್ದ. ಆತ ಮನೆಗೆ ಕರೆ ಮಾಡುತ್ತಿದ್ದದ್ದು ಮುಸ್ಸಂಜೆ ಹೊತ್ತಿಗೇ. ಎಷ್ಟು ಬ್ಯುಸಿ ಇದ್ದರೂ ಆತ ಫೋನ್ ಮಾಡಿ “ಅಪ್ಪಾ, ನಿಮ್ಮ ದನಿ ಕೇಳಬೇಕಿತ್ತು” ಎನ್ನುತ್ತಿದ್ದ ಎಂದು 55 ವರ್ಷದ ಸರ್ಕಾರಿ ನೌಕರ ಸಂಜಯ್ ನೆರ್ಕರ್ ನೆನಪಿಸಿಕೊಂಡರು. 2022ರಲ್ಲಿ ವರದ್ ಬಾಲ್ಯದಿಂದಲೂ ಕಾಣುತ್ತಿದ್ದ ಕನಸು ನನಸಾಯಿತು. ಆತನಿಗೆ ಐಐಟಿಯಲ್ಲಿ ಸೀಟು ಸಿಕ್ಕಿತು. ವರದ್ ದಿಲ್ಲಿಯಲ್ಲಿರುವ ಐಐಟಿ-ದೆಹಲಿ ಸಂಸ್ಥೆಯಲ್ಲಿ ಸ್ನಾತಕೋತ್ತರ ಶಿಕ್ಷಣಕ್ಕೆ ಪ್ರವೇಶ ಪಡೆದಿದ್ದ. ಅವನಿಗೆ ಅಲ್ಲಿ ಬಿಟೆಕ್ ಸೀಟು ಸಿಗಲಿಲ್ಲ, ಆದರೆ ಅವನು ಪಟ್ಟು ಬಿಡಲಿಲ್ಲ. ಎಂಟೆಕ್ ಫಲಿತಾಂಶ ಬಂದಾಗ ಕುಟುಂಬ ಸಿಹಿತಿಂಡಿ ಹಂಚಿತು. “ಅವನ ಕನಸು ನಮ್ಮದು ಕೂಡಾ” ಎಂದು ಅನಿಸಿತ್ತು. ಆದರೆ... ಸಂಜಯ್ ಅವರ ದನಿ ಗದ್ಗದಿತವಾಯಿತು. “ಐಐಟಿ-ದೆಹಲಿ ನನ್ನಿಂದ ಅವನನ್ನು ಕಸಿದುಕೊಳ್ಳುತ್ತದೆ ಎಂದು ತಿಳಿದಿದ್ದರೆ, ನಾನು ಅವನನ್ನು ಎಂದಿಗೂ ಕಳುಹಿಸುತ್ತಿರಲಿಲ್ಲ. ಓಹ್ ವರದ್... ನೀನು ಯಾಕೆ ಇಷ್ಟು ಬೇಗ ನಮ್ಮನ್ನು ಬಿಟ್ಟು ಹೊರಟೆ?” ಎಂದು ಅವರು ಕಣ್ಣೀರಾದರು. 2024ರ ಫೆಬ್ರವರಿ 15ರಂದು ವರದ್ ಐಐಟಿ-ದೆಹಲಿಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದ. 2021ರಿಂದ ಐಐಟಿ-ದೆಹಲಿಯಲ್ಲಿ ನಡೆದ 65 ವಿದ್ಯಾರ್ಥಿಗಳ ಆತ್ಮಹತ್ಯೆಗಳಲ್ಲಿ ಇದೂ ಒಂದು; ಐಐಟಿ-ದೆಹಲಿಯಲ್ಲಿ ನಡೆದ ಆತ್ಮಹತ್ಯೆ ಪ್ರಕರಣಗಳಲ್ಲಿ ಎಂಟನೆಯದು. ವರದ್ಗೆ ಆಗ 26 ವರ್ಷ. ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೆ ಕೆಲ ದಿನಗಳ ಹಿಂದೆ ತೀವ್ರ ಶೈಕ್ಷಣಿಕ ಒತ್ತಡ ಮತ್ತು ಮೇಲ್ವಿಚಾರಕರಿಂದ ಬಂದ ಒತ್ತಡದ ಬಗ್ಗೆ ತಾಯಿಗೆ ಹೇಳಿದ್ದ. ಪ್ರತಿಷ್ಠಿತ ‘ಐಐಟಿ’ ಭಾರತದಲ್ಲಿ ಐಐಟಿಗೆ ಪ್ರವೇಶವು ಶೈಕ್ಷಣಿಕ ಶ್ರೇಷ್ಠತೆ ಮತ್ತು ಸಾಮಾಜಿಕ ಪ್ರತಿಷ್ಠೆಯ ಸಂಕೇತವಾಗಿದೆ. 2025ರಲ್ಲಿ ಸುಮಾರು 1.3 ಮಿಲಿಯನ್ ವಿದ್ಯಾರ್ಥಿಗಳು ಜಂಟಿ ಪ್ರವೇಶ ಪರೀಕ್ಷೆ (JEE Main) ಬರೆದಿದ್ದಾರೆ. ಇದರಲ್ಲಿ ಮುಂದಿನ ಹಂತಕ್ಕೆ ಸುಮಾರು 2,50,000 ಮಂದಿ ಮಾತ್ರ ಅರ್ಹತೆ ಪಡೆದರು. ಇದನ್ನು ಜೆಇಇ ಅಡ್ವಾನ್ಸ್ಡ್ ಎಂದು ಕರೆಯಲಾಗುತ್ತದೆ, ಇದು ಐಐಟಿಗಳಲ್ಲಿ ಕೇವಲ 18,000 ಬಿಟೆಕ್ ಸೀಟುಗಳಿಗೆ ಸ್ಪರ್ಧಿಸಲು ಅಂತಿಮ ಹಂತವಾಗಿದೆ. ಸೀಟುಗಳನ್ನು ಶ್ರೇಣಿ, ವರ್ಗ ಮತ್ತು ಆದ್ಯತೆಗಳ ಆಧಾರದ ಮೇಲೆ ಹಂಚಲಾಗುತ್ತದೆ. ಎಂಟೆಕ್ ಕಾರ್ಯಕ್ರಮಗಳಿಗೆ ವಾರ್ಷಿಕವಾಗಿ 8,00,000ರಿಂದ 10,00,000 ಅಭ್ಯರ್ಥಿಗಳು GATE ಪರೀಕ್ಷೆಗೆ ಹಾಜರಾಗುತ್ತಾರೆ. ಇವರಲ್ಲಿ ಸುಮಾರು 8,500 ಮಂದಿ ಪ್ರವೇಶ ಪಡೆಯುತ್ತಾರೆ. ಅಂದರೆ ಸರಾಸರಿ ಬಿಟೆಕ್ನಲ್ಲಿ 72ರಲ್ಲಿ ಒಬ್ಬರು ಮತ್ತು ಎಂಟೆಕ್ ಕೋರ್ಸ್ಗಳಲ್ಲಿ 117ರಲ್ಲಿ ಒಬ್ಬರು ಮಾತ್ರ ಆಯ್ಕೆಯಾಗುತ್ತಾರೆ. ಐಐಟಿಗಳಲ್ಲಿ ಪಿಎಚ್ಡಿ ಸೀಟುಗಳ ಸಂಖ್ಯೆ ಪ್ರತಿ ವರ್ಷ ಬದಲಾಗುತ್ತದೆ. ಇದು ಪ್ರಾಧ್ಯಾಪಕರ ಬಳಿಯಿರುವ ಖಾಲಿ ಮಾರ್ಗದರ್ಶನ ಸ್ಥಾನಗಳ ಮೇಲೆ ಅವಲಂಬಿತವಾಗಿರುತ್ತದೆ. ದಶಕಗಳಿಂದ ಐಐಟಿಗಳು ಜಾಗತಿಕ ನಾಯಕರಿಗೆ ಲಾಂಚ್ಪ್ಯಾಡ್ ಆಗಿವೆ. ಗೂಗಲ್ ಸಿಇಒ ಸುಂದರ್ ಪಿಚೈ ಮತ್ತು ಐಬಿಎಂ ಸಿಇಒ ಅರವಿಂದ್ ಕೃಷ್ಣ ಅವರಂತಹ ವಿಶ್ವಪ್ರಸಿದ್ಧ ವ್ಯಕ್ತಿಗಳು ಐಐಟಿಯ ಹಳೆಯ ವಿದ್ಯಾರ್ಥಿಗಳಾಗಿದ್ದಾರೆ. ಕಾರ್ಪೊರೇಟ್ ಜಗತ್ತಿನ ಹೊರತಾಗಿ, ಐಐಟಿಯಲ್ಲಿ ಕಲಿತವರಲ್ಲಿ 35ಕ್ಕೂ ಹೆಚ್ಚು ಭಾರತೀಯ ಶತಕೋಟ್ಯಾಧಿಪತಿಗಳು, ಅನೇಕ ರಾಜಕಾರಣಿಗಳು, ಬರಹಗಾರರು ಮತ್ತು ಪತ್ರಕರ್ತರು ಇದ್ದಾರೆ. AI ಆಧಾರಿತ ವೃತ್ತಿ ದತ್ತಾಂಶ ವೇದಿಕೆ 6figr.com ಪ್ರಕಾರ, ಅಮೆರಿಕದಲ್ಲಿ ಕೆಲಸ ಮಾಡುವ ಐಐಟಿ ಪದವೀಧರರ ಸರಾಸರಿ ವಾರ್ಷಿಕ ವೇತನವು 216,000 ರಿಂದ 235,000 ಡಾಲರ್ ನಡುವೆ ಇರುತ್ತದೆ. ಇದು ಅಲ್ಲಿ ಇರುವ ರಾಷ್ಟ್ರೀಯ ಸರಾಸರಿ ವೇತನಕ್ಕಿಂತ ಸುಮಾರು ನಾಲ್ಕು ಪಟ್ಟು ಹೆಚ್ಚು. ಗ್ಲೋಬಲ್ ಐಐಟಿ-ಐಐಎಂ ಅಲುಮ್ನಿ ಸಪೋರ್ಟ್ ಗ್ರೂಪ್ನ ಸಂಸ್ಥಾಪಕ ಧೀರಜ್ ಸಿಂಗ್, ವಿದ್ಯಾರ್ಥಿಗಳಿಗೆ ಉದ್ಯೋಗ ಹಾಗೂ ಮಾನಸಿಕ ಬೆಂಬಲ ಒದಗಿಸುವ ಕೆಲಸ ಮಾಡುತ್ತಿದ್ದಾರೆ. “ಐಐಟಿಯನ್ ಆಗಿರುವುದು ಕೇವಲ ಒಂದು ಟ್ಯಾಗ್ ಅಲ್ಲ; ಅದು ಇಡೀ ಕುಟುಂಬಕ್ಕೆ ಗೌರವ ತರುತ್ತದೆ” ಎಂದು ಅವರು ಹೇಳಿದ್ದಾರೆ. ‘ನನ್ನ ಏಕೈಕ ಮಗನನ್ನು ಕಳೆದುಕೊಂಡೆ’ ಐಐಟಿಗಳು ಉನ್ನತ ಮಟ್ಟದ ಶಿಕ್ಷಣ ಮತ್ತು ಹೆಚ್ಚಿನ ಸಂಬಳದ ಉದ್ಯೋಗಗಳಿಗೆ ಪ್ರಸಿದ್ಧವಾಗಿದ್ದರೂ, ಕ್ಯಾಂಪಸ್ ಜೀವನವು ಹೆಚ್ಚಾಗಿ ಒತ್ತಡ ಮತ್ತು ನಿರಂತರ ಸ್ಪರ್ಧೆಯಿಂದ ಕೂಡಿರುತ್ತದೆ. ಸಂಸ್ಥೆಗಳು ದಾಖಲೆ ಪ್ರಮಾಣದ ಪ್ಲೇಸ್ಮೆಂಟ್ಗಳನ್ನು ಪ್ರಚಾರ ಮಾಡುತ್ತವೆಯಾದರೂ, ಅನೇಕ ಪದವೀಧರರು ಉದ್ಯೋಗವಿಲ್ಲದೆ ಉಳಿಯುತ್ತಾರೆ. 2024ರ ದತ್ತಾಂಶ ಪ್ರಕಾರ, ಸುಮಾರು 38% ಐಐಟಿ ಪದವೀಧರರಿಗೆ ಉದ್ಯೋಗ ಸಿಕ್ಕಿಲ್ಲ. ಸಿಂಗ್ ಪ್ರಕಾರ, ಸುಮಾರು ಅರ್ಧದಷ್ಟು ವಿದ್ಯಾರ್ಥಿಗಳು ಕೆಲಸ ಹುಡುಕಲು ಕಷ್ಟಪಡುತ್ತಾರೆ. ನಿರೀಕ್ಷೆಗಳು ಹೆಚ್ಚು. ಶೈಕ್ಷಣಿಕ ಒತ್ತಡ ಮತ್ತು ಉದ್ಯೋಗದ ಒತ್ತಡ ಸೇರಿ ಪರಿಸ್ಥಿತಿ ಗಂಭೀರವಾಗುತ್ತದೆ. ಐಐಟಿ-ಕಾನ್ಪುರದ ಒಬ್ಬ ವಿದ್ಯಾರ್ಥಿ “ನನಗೆ ಕೆಲಸ ಸಿಗದೇ ಇದ್ದರೆ ನಾನು ನನ್ನ ಜೀವನವನ್ನು ಕೊನೆಗೊಳಿಸುತ್ತೇನೆ” ಎಂದು ಹೇಳಿದ್ದನ್ನು ಸಿಂಗ್ ನೆನಪಿಸಿಕೊಂಡರು. ಎಲ್ಲಾ ಪ್ರಯತ್ನಗಳ ಹೊರತಾಗಿಯೂ ಆತ ಆತ್ಮಹತ್ಯೆ ಮಾಡಿಕೊಂಡನು ಎಂದು ಅವರು ಹೇಳಿದರು. ಸರ್ಕಾರಿ ದತ್ತಾಂಶ ಮತ್ತು ವಿವಿಧ ಐಐಟಿಗಳ ಮಾಹಿತಿಯ ಪ್ರಕಾರ, ಕಳೆದ ಎರಡು ದಶಕಗಳಲ್ಲಿ 160 ವಿದ್ಯಾರ್ಥಿಗಳ ಆತ್ಮಹತ್ಯೆ ದಾಖಲಾಗಿದೆ. ಅವುಗಳಲ್ಲಿ 69 ಪ್ರಕರಣಗಳು ಕಳೆದ ಐದು ವರ್ಷಗಳಲ್ಲಿ ಸಂಭವಿಸಿವೆ. ದರ್ಶನ್ ಸೋಲಂಕಿ ಎಂಬ 20 ವರ್ಷದ ಪ್ರತಿಭಾವಂತ ಯುವಕ ಕೂಡಾ ಈ ಪಟ್ಟಿಯಲ್ಲಿ ಒಬ್ಬರು. 2022ರಲ್ಲಿ ಐಐಟಿ ಪ್ರವೇಶ ಪರೀಕ್ಷೆಯಲ್ಲಿ ಉತ್ತೀರ್ಣನಾದ ದರ್ಶನ್, 2023ರಲ್ಲಿ ಐಐಟಿ-ಬಾಂಬೆನಲ್ಲಿ ರಾಸಾಯನಿಕ ಎಂಜಿನಿಯರಿಂಗ್ಗೆ ಸೇರಿದ್ದ. ಅದು ತನ್ನ ಜೀವನದ ಅತ್ಯಂತ ಸಂತೋಷದ ದಿನವಾಗಿತ್ತು ಎಂದು ತಂದೆ ರಮೇಶ್ ಸೋಲಂಕಿ ಹೇಳುತ್ತಾರೆ. “ಅಪ್ಪಾ, ನಾನು ಸಾಧಿಸಿದೆ. ಈಗ ನಮ್ಮ ಜೀವನ ಸುಲಭವಾಗುತ್ತದೆ” ಎಂದು ಮಗ ಹೇಳಿದ್ದ. ಆದರೆ ಜಾತಿ ಆಧಾರಿತ ಅಪಹಾಸ್ಯ ಮತ್ತು ಶೈಕ್ಷಣಿಕ ಒತ್ತಡ ಅವನ ಮೇಲೆ ಪರಿಣಾಮ ಬೀರಿತು ಎಂದು ಕುಟುಂಬ ಆರೋಪಿಸಿದೆ. “ನಾವು ಕೆಳ ಜಾತಿಗೆ ಸೇರಿದವರು. ಅದೇಕೆ ಮುಖ್ಯವಾಗಬೇಕು? ಅವಮಾನ ಮತ್ತು ಒತ್ತಡ ಎರಡನ್ನೂ ಅವನು ಹೇಗೆ ಸಹಿಸಬೇಕು?” ಎಂದು ರಮೇಶ್ ಪ್ರಶ್ನಿಸುತ್ತಾರೆ. ಅಧಿಕಾರದ ಅಸಮತೋಲನ ಪಿಎಚ್ಡಿ ವಿದ್ಯಾರ್ಥಿಗಳು ಮತ್ತು ಮೇಲ್ವಿಚಾರಕರ ನಡುವೆ ಅಧಿಕಾರದ ಅಸಮತೋಲನವಿದೆ ಎಂದು ತಜ್ಞರು ಸೂಚಿಸುತ್ತಾರೆ. ಫೆಲೋಶಿಪ್ಗಳು ಐದು ವರ್ಷಗಳ ನಂತರ ನಿಲ್ಲುತ್ತವೆ, ಇದರಿಂದ ವಿದ್ಯಾರ್ಥಿಗಳು ಒತ್ತಡಕ್ಕೆ ಒಳಗಾಗುತ್ತಾರೆ. ಐಐಟಿ-ಕಾನ್ಪುರದ ಪಿಎಚ್ಡಿ ವಿದ್ಯಾರ್ಥಿ ಸುಶಾಂತ್ (ಹೆಸರು ಬದಲಿಸಲಾಗಿದೆ) ಹೇಳುವಂತೆ, “ಪ್ರಬಂಧದ ಅನುಮೋದನೆ ಸಂಪೂರ್ಣವಾಗಿ ಮೇಲ್ವಿಚಾರಕರ ಕೈಯಲ್ಲಿರುತ್ತದೆ. ಇದು ವಿದ್ಯಾರ್ಥಿಗಳನ್ನು ಅವಲಂಬಿತರನ್ನಾಗಿ ಮಾಡುತ್ತದೆ. ಕೆಲವು ಮೇಲ್ವಿಚಾರಕರು ಟಾಕ್ಸಿಕ್ ಆಗಿರಬಹುದು.” ಏಳು ವರ್ಷಗಳಲ್ಲಿ ಪಿಎಚ್ಡಿ ಪೂರ್ಣಗೊಳಿಸದಿದ್ದರೆ ಪ್ರವೇಶ ರದ್ದು ಮಾಡುವ ನಿರ್ಧಾರವೂ ಒತ್ತಡ ಹೆಚ್ಚಿಸುತ್ತದೆ. ಹೊಣೆಗಾರಿಕೆಯನ್ನು ಸರಿಪಡಿಸುವುದು ಸುಪ್ರೀಂ ಕೋರ್ಟ್ನ ಮಾಜಿ ನ್ಯಾಯಾಧೀಶ ಎಸ್. ರವೀಂದ್ರ ಭಟ್ ನೇತೃತ್ವದ ರಾಷ್ಟ್ರೀಯ ಕಾರ್ಯಪಡೆ, ವಿದ್ಯಾರ್ಥಿಗಳ ಮಾನಸಿಕ ಆರೋಗ್ಯ ರಕ್ಷಣೆಗಾಗಿ ಕಾರ್ಯನಿರ್ವಹಿಸುತ್ತಿದೆ. “ಆತ್ಮಹತ್ಯೆ ಕೇವಲ ವೈಯಕ್ತಿಕ ಸಮಸ್ಯೆಯಲ್ಲ; ಇದು ಸಾಮಾಜಿಕ ಹಾಗೂ ಸಂಸ್ಥಾತ್ಮಕ ಸಮಸ್ಯೆಗಳ ಪರಿಣಾಮ” ಎಂದು ಅವರು ಹೇಳಿದ್ದಾರೆ. ಸಂಸ್ಥೆಗಳು ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳುತ್ತಿವೆ ಎಂಬ ಆರೋಪಗಳೂ ಕೇಳಿಬರುತ್ತಿವೆ. ಪರೀಕ್ಷೆಗಳ ಸಮಯದಲ್ಲಿ ಆತ್ಮಹತ್ಯೆಗಳ ಪ್ರಮಾಣ ಹೆಚ್ಚಿರುವುದರಿಂದ ತಜ್ಞರು ತಡೆಗಟ್ಟುವ ಕ್ರಮಗಳ ಅಗತ್ಯವಿದೆ ಎಂದು ಹೇಳಿದ್ದಾರೆ. ಐಐಟಿಗಳಲ್ಲಿ ಆತ್ಮಹತ್ಯೆಗಳನ್ನು ಸಕಾಲಿಕ ಹಸ್ತಕ್ಷೇಪದ ಮೂಲಕ ಕಡಿಮೆ ಮಾಡಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಆದರೆ ಮಾನಸಿಕ ಆರೋಗ್ಯ ಸಲಹೆಗಾರರ ಪ್ರಯತ್ನಗಳು ಸಾಕಾಗುತ್ತಿಲ್ಲ ಎಂದು ವೈದ್ಯೆ ಅಕ್ಸಾ ಶೇಖ್ ಹೇಳಿದ್ದಾರೆ. ಸೌಜನ್ಯ: Aljazeera.com
ಕೆನೆಪದರ ಮೀಸಲಾತಿ ಪರಿಶೀಲಿಸಿ ಸೂಕ್ತ ಕ್ರಮ : ಶಿವರಾಜ ತಂಗಡಗಿ
ಬೆಂಗಳೂರು : ಕೇಂದ್ರ ಸರಕಾರದ ಉದ್ಯೋಗ ಹಾಗೂ ಶಿಕ್ಷಣದಲ್ಲಿ ಹಿಂದುಳಿದ ವರ್ಗಗಳಿಗೆ ಕೆನೆಪದರ ಮೀಸಲಾತಿ ಜಾರಿ ಸಂಬಂಧ ಇತ್ತೀಚೆಗೆ ಸುಪ್ರೀಂ ಕೋರ್ಟ್ ಆದೇಶ ಹೊರಡಿಸಿದ್ದು, ಈ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಶಿವರಾಜ ತಂಗಡಗಿ ತಿಳಿಸಿದ್ದಾರೆ. ಶುಕ್ರವಾರ ವಿಧಾನ ಪರಿಷತ್ನ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿ ಸದಸ್ಯ ಶಶೀಲ್ ಜಿ.ನಮೋಶಿ ಪ್ರಶ್ನೆಗೆ ಉತ್ತರಿಸಿದ ಸಚಿವರು, ರಾಜ್ಯ ಸರಕಾರ ತನ್ನದೇ ಆದ ಕೆನೆಪದರ ನೀತಿ ಹೊಂದಿದೆ. ಈ ನೀತಿಯಡಿ ಆಭ್ಯರ್ಥಿ ಮತ್ತು ಅವರ ಪೋಷಕರ ವಾರ್ಷಿಕ ಆದಾಯ ಮಿತಿ 8 ಲಕ್ಷ ರೂ. ಗೆ ನಿಗದಿಪಡಿಸಲಾಗಿದೆ. ಅಭ್ಯರ್ಥಿಯ ತಂದೆ-ತಾಯಿ ಎ ಹಾಗೂ ಬಿ ದರ್ಜೆಯ ಸರಕಾರಿ ನೌಕರರಾಗಿದ್ದರೆ, ಕೆನೆಪದರಡಿ ಬರುತ್ತಾರೆ. ಆದರೆ ಕೇಂದ್ರ ಸರಕಾರ ತನ್ನದೇ ಆದ ನೀತಿ ಹೊಂದಿದೆ ಎಂದರು. ಈ ಬಗ್ಗೆ ಸುಪ್ರೀಂ ಕೋರ್ಟ್, ಮೀಸಲಾತಿ ನಿರ್ಧರಿಸುವಾಗ ಪೋಷಕರ ಆದಾಯವೊಂದನ್ನು ಆಧರಿಸಿ ತೀರ್ಮಾನಿಸುವುದು ಸಾಧ್ಯವಿಲ್ಲ ಎಂದು ಆದೇಶದಲ್ಲಿ ಹೇಳಿದೆ. ಆದೇಶದ ಪೂರ್ಣ ವಿವರ ತರಿಸಿಕೊಂಡು ಪರಿಶೀಲಿಸಿದ ಬಳಿಕ ಮುಖ್ಯಮಂತ್ರಿಯೊಂದಿಗೆ ಚರ್ಚಿಸಲಾಗುವುದು ಎಂದು ಶಿವರಾಜ್ ತಂಗಡಗಿ ಹೇಳಿದರು. ರಾಷ್ಟ್ರಮಟ್ಟದಲ್ಲಿ ಪ್ರವೇಶ ಪರೀಕ್ಷೆ ಬರೆದು ವಿವಿಧ ಕೋರ್ಸ್ಗಳಿಗೆ ಪ್ರವೇಶ ಪಡೆಯುವ ಹಿಂದುಳಿದ ವರ್ಗಗಳ ಅಭ್ಯರ್ಥಿಗಳ ಪೋಷಕರ ಆದಾಯ 8 ಲಕ್ಷ ರೂ.ಗಿಂತ ಹೆಚ್ಚಿದ್ದರೂ ಅಂತಹ ಮಕ್ಕಳಿಗೆ ಅಖಿಲ ಭಾರತ ಕೋಟಾದಡಿ ಪ್ರವೇಶ ನೀಡಲಾಗುತ್ತಿದೆ. ಆದರೆ, ಅದೇ ವಿದ್ಯಾರ್ಥಿಗಳು ರಾಜ್ಯದ ಕೋಟಾದಡಿ ಪ್ರವೇಶ ಪಡೆಯುವಾಗ ಕೆನೆಪದರ ನೀತಿ ಅನ್ವಯಿಸಲಾಗುತ್ತಿದ್ದು, ಇದರಿಂದ ಅವಕಾಶ ವಂಚಿತರಾಗುತ್ತಿದ್ದಾರೆ. ಇದರಿಂದ ಹಿಂದುಳಿದ ಅಭ್ಯರ್ಥಿಗಳಿಗೆ ಅನ್ಯಾಯವಾಗುತ್ತಿದೆ. ಹೀಗಾಗಿ ಕೇಂದ್ರ ಕೆನೆಪದರ ಮೀಸಲಾತಿ ನೀತಿ ಹಾಗೂ ಸುಪ್ರೀಂ ಆದೇಶದಂತೆ ರಾಜ್ಯದಲ್ಲಿ ಈ ನಿಯಮ ಜಾರಿಯಾಗಬೇಕು ಎಂದು ನಮೋಶಿ ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ತಂಗಡಗಿ, ಸಂವಿಧಾನದ ಪರಿಚ್ಛೇದ 342-ಎ (3) ಅಡಿಯಲ್ಲಿ ಕೆನೆಪದರ ನೀತಿಯನ್ನು ಶಿಕ್ಷಣ ಹಾಗೂ ಉದ್ಯೋಗದ ಮೀಸಲಾತಿಗೆ ಅಳವಡಿಸಿಕೊಳ್ಳಬಹುದು. ಆದಾಗ್ಯೂ, ಕೇಂದ್ರ ಸರಕಾರದ ಶಿಕ್ಷಣ ಮತ್ತು ಉದ್ಯೋಗದ ಮೀಸಲಾತಿಗೆ ಅನ್ವಯಿಸುವ ಕೆಲವು ಮಾನದಂಡಗಳು ರಾಜ್ಯ ಸರಕಾರದ ವ್ಯಾಪ್ತಿಗೆ ಬರುವ ಶಿಕ್ಷಣ ಹಾಗೂ ಉದ್ಯೋಗದ ಮೀಸಲಾತಿಯನ್ನು ಚಾಲ್ತಿಯಲ್ಲಿರುವ ಕೆನೆಪದರ ನೀತಿಯಡಿ ಅಳವಡಿಸಿಕೊಳ್ಳುವ ಬಗ್ಗೆ ಪರಿಶೀಲಿಸಲಾಗುತ್ತಿದೆ ಎಂದು ತಿಳಿಸಿದರು. ಕೆನೆಪದರ ನೀತಿ ಕುರಿತು ಸುಪ್ರೀಂ ಕೋರ್ಟ್ ಆದೇಶವನ್ನು ಪರಿಶೀಲಿಸಿ ಮುಖ್ಯಮಂತ್ರಿಗಳ ಗಮನಕ್ಕೆ ತರಲಿದ್ದೇನೆ. ಈ ಬಗ್ಗೆ ಸಚಿವ ಸಂಪುಟದಲ್ಲಿ ಚರ್ಚಿಸುವ ಉದ್ದೇಶವಿದೆ. ಇದರಿಂದ ಉದ್ಯೋಗ ಹಾಗೂ ಶಿಕ್ಷಣದಲ್ಲಿ ಅರ್ಹ ಅಭ್ಯರ್ಥಿಗಳಿಗೆ ಮೀಸಲಾತಿ ಅವಕಾಶ ಸಿಗಲಿದೆ ಎಂದು ಶಿವರಾಜ್ ತಂಗಡಗಿ ತಿಳಿಸಿದರು.
ಬೆಂಗಳೂರು : ಜಿಬಿಎ ವ್ಯಾಪ್ತಿಯಲ್ಲಿ ಇ-ಖಾತಾ ವಿತರಣೆಯನ್ನು ಸುಲಭಗೊಳಿಸುವ ಉದ್ದೇಶದಿಂದ ಸರಳವಾದ ಆನ್ಲೈನ್ ಪ್ರಕ್ರಿಯೆಯ ಮೂಲಕ ಇ-ಖಾತಾ ಸೇವೆಗಳನ್ನು ಒದಗಿಸಲಾಗುತ್ತಿದೆ. ಇದರಿಂದ ನಾಗರಿಕರು ಯಾವುದೆ ಸರಕಾರಿ ಕಚೇರಿಗಳಿಗೆ ಭೇಟಿ ನೀಡುವ ಅಗತ್ಯವಿಲ್ಲ ಎಂದು ಕಂದಾಯ ವಿಭಾಗದ ವಿಶೇಷ ಆಯುಕ್ತ ಮುನೀಶ್ ಮೌದ್ಗಿಲ್ ತಿಳಿಸಿದ್ದಾರೆ. ಶುಕ್ರವಾರ ನಗರದ ಸರ್ ಪುಟ್ಟಣ್ಣ ಚೆಟ್ಟಿ ಪುರಭವನ(ಟೌನ್ ಹಾಲ್)ದಲ್ಲಿ ಆಯೋಜಿಸಿದ್ದ ಸ್ಥಳೀಯ ಖಾಸಗಿ ಉದ್ಯಮಿಗಳ ಮೂಲಕ ಇ-ಖಾತಾ ಸೇವೆಗಳ ಕುರಿತ ಮಾರ್ಗದರ್ಶನ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು. ಇ-ಖಾತಾ ಅರ್ಜಿಗಳನ್ನು ಆನ್ಲೈನ್ ಮೂಲಕ ತಪ್ಪಿಲ್ಲದಂತೆ ಸಲ್ಲಿಸಲು ಹಾಗೂ ನಾಗರಿಕರಿಗೆ ಡಿಜಿಟಲ್ ವ್ಯವಸ್ಥೆಯನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ಸಹಾಯ ಮಾಡುವಂತೆ ಉದ್ಯಮಿಗಳಿಗೆ ಸೂಚಿಸಿದ ಅವರು, ನಾಗರಿಕರಿಗೆ ಸರಿಯಾದ ಮಾರ್ಗದರ್ಶನ ನೀಡಿ, ಅವರ ಅರ್ಜಿಗಳು ನಿಖರವಾಗಿ ಸಲ್ಲಿಕೆಯಾಗುವಂತೆ ಸಹಕರಿಸುವುದು ನಿಮ್ಮ ಪ್ರಮುಖ ಜವಾಬ್ದಾರಿಯಾಗಿದೆ ಎಂದು ಮನವರಿಕೆ ಮಾಡಿದರು. ಕಚೇರಿಗಳಿಗೆ ಭೇಟಿ ಅಥವಾ ಮಧ್ಯವರ್ತಿಗಳ ಅವಶ್ಯಕತೆ ಇಲ್ಲ : ಇ-ಖಾತಾ ಸಂಬಂಧಿತ ವಿಷಯಗಳಿಗೆ ನಾಗರಿಕರು ಅಥವಾ ಎಲ್ಪಿಇಗಳು ಯಾವುದೇ ಕಚೇರಿಗಳಿಗೆ ಭೇಟಿ ನೀಡುವ ಅಗತ್ಯವಿಲ್ಲ ಅಥವಾ ಅಧಿಕಾರಿಗಳನ್ನು ನೇರವಾಗಿ ಸಂಪರ್ಕಿಸುವ ಅಗತ್ಯವಿಲ್ಲ. ಇ-ಖಾತಾ ವಿತರಣೆ ಸಂಪೂರ್ಣವಾಗಿ ಆನ್ಲೈನ್ ಮೂಲಕ ನಡೆಯುವುದರಿಂದ ಮಧ್ಯವರ್ತಿಗಳೊಂದಿಗೆ ಸಂಪರ್ಕ ಸಾಧಿಸುವುದನ್ನು ತಪ್ಪಿಸಿಕೊಳ್ಳಿ. ಸರಾಸರಿ 3 ರಿಂದ 4 ದಿನಗಳೊಳಗೆ ನಾಗರಿಕರ ಇ-ಖಾತಾ ಅರ್ಜಿಗಳನ್ನು ಅನುಮೋದಿಸಲಾಗುತ್ತಿದೆ ಎಂದು ಮುನೀಶ್ ಮೌದ್ಗಿಲ್ ತಿಳಿಸಿದರು. ಕಾಲಮಿತಿಯಲ್ಲಿ ಪರಿಶೀಲನೆ ಮತ್ತು ಸ್ವಯಂ ಅನುಮೋದನೆ: ಸುಮಾರು ಶೇ.99ರಷ್ಟು ಇ-ಖಾತಾ ಅರ್ಜಿಗಳನ್ನು ಪರಿಶೀಲಿಸಿ ಕಾಲಮಿತಿಯೊಳಗಾಗಿ ಅನುಮೋದಿಸಲಾಗುತ್ತಿದೆ. ಅಂತಿಮ ಇ-ಖಾತಾ ಅರ್ಜಿಯನ್ನು 5 ಕೆಲಸದ ದಿನಗಳೊಳಗೆ ಪರಿಶೀಲಿಸದಿದ್ದರೆ, ವ್ಯವಸ್ಥೆಯೆ ಸ್ವಯಂಚಾಲಿತವಾಗಿ ಅನುಮೋದನೆ ಪ್ರಕ್ರಿಯೆಯನ್ನು ಪ್ರಾರಂಭಿಸುವ ವ್ಯವಸ್ಥೆ ಜಾರಿಗೆ ತರಲಾಗಿದೆ. ಇದರಿಂದ ನಾಗರಿಕರ ಅರ್ಜಿಗಳನ್ನು ಯಾರೂ ತಡೆಹಿಡಿಯಲು ಸಾಧ್ಯವಿಲ್ಲ ಎಂದು ಅವರು ತಿಳಿಸಿದರು. ಅಹವಾಲು ನಿವಾರಣಾ ವ್ಯವಸ್ಥೆ : ಇ-ಖಾತಾ ಅರ್ಜಿ ಪ್ರಕ್ರಿಯೆಗೆ ಸಂಬಂಧಿಸಿದ ಅಹವಾಲುಗಳನ್ನು ಸಲ್ಲಿಸಲು ನಾಗರಿಕರು ಹಾಗೂ ಸ್ಥಳೀಯ ಖಾಸಗಿ ಉದ್ಯಮಿಗಳಿಗಾಗಿ ವಿಶೇಷ ಪೋರ್ಟಲ್ ಅನ್ನು ರಚಿಸಲಾಗಿದೆ. ಈ ಕುರಿತು https://support.bbmpgov.in/ehelpline/](https://support.bbmpgov.in/ehelpline/ ಲಿಂಕ್ ಮೂಲಕ ಅಹವಾಲುಗಳನ್ನು ಸಲ್ಲಿಸಬಹುದು. ವೈಯಕ್ತಿಕ ಪ್ರಕರಣಗಳಿಗೆ ಸಂಬಂಧಿಸಿದ ಪ್ರಶ್ನೆಗಳಿದ್ದಲ್ಲಿ 9480683695 ಅಧಿಕೃತ ವಾಟ್ಸಾಪ್ ಸಹಾಯವಾಣಿ ಸಂಖ್ಯೆಯನ್ನು ಸಂಪರ್ಕಿಸಬಹುದು ಅಥವಾ ಅದೇ ಲಿಂಕ್ ಮೂಲಕ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಬಹುದು ಎಂದು ಮುನೀಶ್ ಮೌದ್ಗಿಲ್ ತಿಳಿಸಿದರು. ಇ-ಖಾತಾ ಸೇವೆಗಳ ಕುರಿತು ಪ್ರಾತ್ಯಕ್ಷಿಕೆ : ಕಾರ್ಯಕ್ರಮದ ವೇಳೆ ಇ-ಖಾತಾ ಸೇವೆಗಳು, ಆನ್ಲೈನ್ ಅರ್ಜಿ ಸಲ್ಲಿಕೆ ವಿಧಾನ ಹಾಗೂ ಡಿಜಿಟಲ್ ವರ್ಕ್-ಫೆÇ್ಲೀ ಕುರಿತು ಸ್ಥಳೀಯ ಖಾಸಗಿ ಉದ್ಯಮಿಗಳಿಗೆ ವಿವರವಾದ ಪ್ರಾತ್ಯಕ್ಷಿಕೆ ಮೂಲಕ ವಿವರಿಸಲಾಯಿತು. ಇದರಿಂದ ವ್ಯವಸ್ಥೆಯನ್ನು ಸಮಗ್ರವಾಗಿ ಅರ್ಥಮಾಡಿಕೊಳ್ಳಲು ಹಾಗೂ ನಾಗರಿಕರಿಗೆ ಉತ್ತಮ ಸಹಾಯ ಒದಗಿಸಲು ನೆರವಾಗಲಿದೆ. ಕಾರ್ಯಕ್ರಮದಲ್ಲಿ ಮಾಹಿತಿ ತಂತಜ್ಞಾನ(ಇ-ಆಸ್ತಿ)ದ ಉಪ ಆಯುಕ್ತ ಮದನ್ ಮೋಹನ್ ಸಿ, ಕಂದಾಯ ವಿಭಾಗದ ಜಂಟಿ ಆಯುಕ್ತರಾದ ಲಕ್ಷ್ಮೀದೇವಿ, ಕಂದಾಯ ಅಧಿಕಾರಿಗಳು ಮತ್ತು ಸ್ಥಳೀಯ ಖಾಸಗಿ ಉದ್ಯಮಿಗಳು ಉಪಸ್ಥಿತರಿದ್ದರು.
Budget Session 2026 | ಎಲೆ ಚುಕ್ಕೆ ರೋಗ: ಸದನದಲ್ಲಿ ಇಕ್ಕಟ್ಟಿಗೆ ಸಿಲುಕಿದ ಸಚಿವ ಮಲ್ಲಿಕಾರ್ಜುನ್
ಬೆಂಗಳೂರು : ರಾಜ್ಯದಲ್ಲಿ ಎಲೆ ಚುಕ್ಕೆ ರೋಗದಿಂದ ಹಾನಿಗೊಳಗಾದ ಅಡಿಕೆ ಬೆಳೆ ವಿಸ್ತೀರ್ಣ ಮತ್ತು ಅದಕ್ಕೆ ಪಾವತಿಸಲಾದ ಪರಿಹಾರದ ಬಗ್ಗೆ ಸಮರ್ಪಕ ಉತ್ತರ ನೀಡಲಾಗದೆ ತೋಟಗಾರಿಕಾ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ವಿಧಾನಸಭೆಯಲ್ಲಿ ಇಕ್ಕಟ್ಟಿಗೆ ಸಿಲುಕಿ ಪರದಾಡಿದ ಪ್ರಸಂಗ ನಡೆಯಿತು. ಶುಕ್ರವಾರ ವಿಧಾನಸಭೆಯ ಪ್ರಶ್ನೋತ್ತರ ವೇಳೆಯಲ್ಲಿ ಕಾಂಗ್ರೆಸ್ ಭೀಮಣ್ಣ ಟಿ.ನಾಯಕ್ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ರಾಜ್ಯದಲ್ಲಿ 88,559 ಹೆಕ್ಟರ್ನಲ್ಲಿ ಅಡಿಕೆ ಬೆಳೆ ಹಾನಿಯಾಗಿದೆ. ಚಿಕ್ಕಮಗಳೂರು ಶಿವಮೊಗ್ಗ. ಉತ್ತರ ಕನ್ನಡ, ಹಾಸನ, ದಕ್ಷಿಣ ಕನ್ನಡ, ಉಡುಪಿ, ಕೊಡಗು ಜಿಲ್ಲೆಗಳು ಸಮಸ್ಯೆಗೆ ಸಿಲುಕಿವೆ ಎಂದು ವಿವರಿಸಿದರು ಈ ವೇಳೆ ಸಚಿವರ ಉತ್ತರದಲ್ಲಿ ಗೊಂದಲಗಳಿತ್ತು. ಇದನ್ನು ಗುರುತಿಸಿದ ಬಿಜೆಪಿಯ ಸದಸ್ಯ ವಿ.ಸುನಿಲ್ ಕುಮಾರ್, ಬಜೆಟ್ ಅನು ಪಾಲನಾ ವರದಿಯಲ್ಲಿ 10,000 ಫಲಾನುಭವಿಗಳಿಗೆ ಪರಿಹಾರ ನೀಡಲಾಗಿದೆ ಎಂದು ತಿಳಿಸಲಾಗಿದೆ ಸಚಿವರು ನೀಡುವ ಉತ್ತರದಲ್ಲಿ ರಾಜ್ಯಾದ್ಯಂತ 16,000 ಬೆಳೆಗಾರರಿಗೆ ಪರಿಹಾರ ನೀಡಿರುವುದಾಗಿ ಹೇಳಲಾಗಿದ್ದು ಉತ್ತರ ಕನ್ನಡ ಜಿಲ್ಲೆಯ ಒಂದರಲ್ಲಿ ಒಂದರಲ್ಲೇ 22,000 ಮಂದಿ ಬೆಳೆ ನಷ್ಟ ಅನುಭವಿಸಿದ್ದಾರೆ ಎಂದು ತಿಳಿಸಲಾಗಿದೆ. ಇದರಲ್ಲಿ ಯಾವುದು ಸತ್ಯ ಎಂದು ಪ್ರಶ್ನಿಸಿದರು. ಸಚಿವರು ನೀಡುವ ಉತ್ತರಗಳು ಶಾಸಕರಿಗೆ ಸಮಾಧಾನಕರವಾಗಿರಲಿಲ್ಲ. ಹೀಗಾಗಿ ಬಿಜೆಪಿಯ ಎಲ್ಲ ಸದಸ್ಯರು ಸಚಿವರ ಮೇಲೆ ಮುಗಿಬಿದ್ದರು. ಆಗ ಆಡಳಿತ ಪಕ್ಷದ ಪಕ್ಷದ ಸದಸ್ಯರು ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಅವರ ನೆರವಿಗೆ ಬರಲಿಲ್ಲ. ಏಕಾಂಗಿಯಾಗಿ ಕಕ್ಕಾಬಿಕ್ಕಿಯಾಗಿದ್ದ ಮಲ್ಲಿಕಾರ್ಜುನ್, ಉತ್ತರ ನೀಡಲು ಪರದಾಡಿದರು. ಪರಿಸ್ಥಿತಿಯನ್ನು ಅರ್ಥೈಸಿಕೊಂಡ ಸಭಾಧ್ಯಕ್ಷ ಯು.ಟಿ.ಖಾದರ್ ಸದ್ಯಕ್ಕೆ ಈ ಪ್ರಶ್ನೆಯನ್ನು ತಡೆಹಿಡಿದಿರುತ್ತೇನೆ. ಸಚಿವರು ಅಧಿಕಾರಿಗಳಿಂದ ಸಮಗ್ರ ಮಾಹಿತಿ ಪಡೆದು ನಂತರ ಸದನಕ್ಕೆ ಉತ್ತರ ನೀಡಿ ಎಂದು ಉಲ್ಲೇಖಿಸಿದರು. ಆದರೆ ಇದಕ್ಕೂ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ಬಳಿಕ ಸಚಿವರು ವ್ಯತ್ಯಾಸ ಇರುವ ಬಗ್ಗೆ ಪರಿಶೀಲಿಸಿ ಸ್ಪಷ್ಟನೆ ನೀಡುವುದಾಗಿ ಸದನಕ್ಕೆ ತಿಳಿಸಿದರು. ಕರ್ನಾಟಕ ರಾಜ್ಯದಲ್ಲಿ ಹಂತ ಹಂತವಾಗಿ ತೋಟಗಾರಿಕಾ ಮಹಾವಿದ್ಯಾಲಯಗಳನ್ನು ಸ್ಥಾಪಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಇದೇ ವೇಳೆ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ತಿಳಿಸಿದರು. ಕಾಂಗ್ರೆಸ್ ಶಾಸಕ ಕೆ.ಷಡಕ್ಷರಿ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಹೊಸ ತೋಟಗಾರಿಕೆ ಮಹಾವಿದ್ಯಾಲಯಗಳನ್ನು ಸ್ಥಾಪಿಸಲು ಇರುವ ಸಾಧಕ-ಬಾಧಕಗಳನ್ನು ಪರಿಶೀಲಿಸಲು ತೋಟಗಾರಿಕೆ ವಿಜ್ಞಾನಿಗಳ ವಿಶ್ವವಿದ್ಯಾಲಯ, ಬಾಗಲಕೋಟೆಯ ವಿಶ್ರಾಂತ ಕುಲಪತಿಗಳ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ರಚಿಸಲಾಗಿದೆ. ತಿಪಟೂರು ತಾಲೂಕಿನ ಬಿದರೆಗುಡಿಕಾವಲಿನಲ್ಲಿ ತೋಟಗಾರಿಕೆ ಮಹಾವಿದ್ಯಾಲಯವನ್ನು ಸ್ಥಾಪಿಸುವುದು ಸೇರಿದಂತೆ ರಾಜ್ಯದ ವಿವಿಧ ಸ್ಥಳಗಳಲ್ಲಿ ತೋಟಗಾರಿಕೆ ಮಹಾವಿದ್ಯಾಲಯಗಳನ್ನು ಸ್ಥಾಪಿಸುವ ಬಗ್ಗೆ ಈ ಸಮಿತಿ ವಿವಿಧ ಆಯಾಮಗಳನ್ನು ಪರಿಶೀಲಿಸಿ ವರದಿ ನೀಡಿದೆ ಎಂದರು.
ಅಡುಗೆ ಅನಿಲಕ್ಕೆ ಕೊರತೆ ಇಲ್ಲ; ಕಾಂಗ್ರೆಸ್ ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದೆ : ಪ್ರಹ್ಲಾದ್ ಜೋಶಿ
ಬೆಂಗಳೂರು : ಅಡುಗೆ ಅನಿಲ, ವಾಣಿಜ್ಯ ಎಲ್ಪಿಜಿ ಸಿಲಿಂಡರ್ಗಳ ಕೊರತೆ ದೇಶದಲ್ಲಿ ಇಲ್ಲ. ಆದರೆ, ಸಿಲಿಂಡರ್ ಪೂರೈಕೆಗೆ ಸಂಬಂಧಿಸಿದಂತೆ ಪ್ರತಿಪಕ್ಷ ಕಾಂಗ್ರೆಸ್, ಜನರನ್ನು ತಪ್ಪು ದಾರಿಗೆ ಎಳೆಯುವ ಪ್ರಯತ್ನ ಮಾಡುತ್ತಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಆರೋಪಿಸಿದ್ದಾರೆ. ಶುಕ್ರವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಅಡುಗೆ ಅನಿಲ ಸಂಬಂಧ ಜನರನ್ನು ಗೊಂದಲಕ್ಕೀಡು ಮಾಡುವ ಪ್ರಯತ್ನವನ್ನು ಕಾಂಗ್ರೆಸ್ ಮಾಡುತ್ತಿದೆ. ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಕೊರತೆ ಆಗುತ್ತದೆ ಎಂದು ರಾಹುಲ್ ಗಾಂಧಿ ನಿನ್ನೆ ಹೇಳಿದ್ದಾರೆ. ಇದು ಸುಳ್ಳು. ಇಡೀ ದೇಶದಲ್ಲಿ ಈಗಲೂ ಮತ್ತು ಮುಂದೆಯೂ ಪೆಟ್ರೋಲಿಯಂ ಉತ್ಪನ್ನಗಳ ಕೊರತೆ ಆಗುವುದಿಲ್ಲ ಎಂದರು. ಅಡುಗೆ ಅನಿಲ ಮತ್ತು ವಾಣಿಜ್ಯ ಸಿಲಿಂಡರ್ ಪೂರೈಕೆಗೆ ಹಲವು ಮೂಲಗಳಿಂದ ಪ್ರಯತ್ನ ಮಾಡಲಾಗಿದೆ. ಈ ಮೊದಲು 20 ರಿಂದ 22 ದೇಶಗಳಿಂದ ಪೆಟ್ರೋಲಿಯಂ ಉತ್ಪನ್ನಗಳನ್ನು ಭಾರತ ಆಮದು ಮಾಡಿಕೊಳ್ತಿತ್ತು. ಇದೀಗ ಇದು 40 ದೇಶಗಳಿಗೆ ಹೆಚ್ಚಿದೆ. ಅಡುಗೆ ಅನಿಲ ಸಿಲಿಂಡರ್ ಕೊರತೆ ವಿಷಯದಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ರಾಹುಲ್ ಗಾಂಧಿ ಜನರನ್ನು ತಪ್ಪು ದಾರಿಗೆ ಎಳೆಯುತ್ತಿದ್ದಾರೆ ಎಂದು ಟೀಕಿಸಿದರು. ಅಡುಗೆ ಅನಿಲ ಮತ್ತು ವಾಣಿಜ್ಯ ಸಿಲಿಂಡರ್ಗಳ ಬುಕಿಂಗ್ ಜಾಸ್ತಿ ಇದೆ. ಹೀಗಾಗಿ ಕೆಲ ನಿರ್ಬಂಧಗಳನ್ನು ಹೇರಲಾಗಿದೆ. ಈ ಮೊದಲಿನಂತೆಯೆ ಸಿಲಿಂಡರ್ಗಳ ಪೂರೈಕೆ ಮಾಡಲಾಗುತ್ತಿದೆ. ಎಲ್ಲಿಯೂ ಕೊರತೆ ಇಲ್ಲ. ಜಾಗತಿಕ ಸರಕು ಸಾಗಣೆಯ ಪ್ರಮುಖ ಜಲಮಾರ್ಗ ಹರ್ಮುಜ್ ಜಲಸಂಧಿ ಮೂಲಕ ಈಗಾಗಲೇ ಒಂದು ಹಡಗು ಬಂದಿದೆ. ಇನ್ನೂ ಹಲವು ಹಡಗು ಬರಲಿವೆ ಎಂದರು.
ಬಳ್ಳಾರಿಯಲ್ಲಿ ‘ಇನ್ಕ್ಯುಬೇಷನ್ ಕೇಂದ್ರ’ ಸ್ಥಾಪನೆ : ಪ್ರಿಯಾಂಕ್ ಖರ್ಗೆ
ಬೆಂಗಳೂರು : ಬಳ್ಳಾರಿ ಜಿಲ್ಲೆಯಲ್ಲಿ ಜೈವಿಕ ಕ್ಷೇತ್ರದ ‘ಇನ್ಕ್ಯುಬೇಷನ್ ಕೇಂದ್ರ’ವನ್ನು 55 ಕೋಟಿ ರೂ. ವೆಚ್ಚದಲ್ಲಿ ಸ್ಥಾಪಿಸಲಾಗುವುದು ಎಂದು ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದರು. ಶುಕ್ರವಾರ ವಿಧಾನ ಪರಿಷತ್ತಿನ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿ ಸದಸ್ಯ ಕೆ.ಎಸ್.ನವೀನ್ ಪ್ರಶ್ನೆಗೆ ಉತ್ತರಿಸಿದ ಸಚಿವರು, ಜೈವಿಕ ಸುಧಾರಣೆ ಗಮನದಲ್ಲಿಟ್ಟುಕೊಂಡು ಈ ಕೇಂದ್ರ ಸ್ಥಾಪನೆ ಮಾಡಲಾಗುತ್ತಿದೆ. ಗಣಿಗಾರಿಕೆಯಿಂದ ಉಂಟಾಗುವ ಪರಿಸರ ಹಾನಿಯನ್ನು ಇದು ಸರಿಪಡಿಸಲಿದೆ. ಈ ಕೇಂದ್ರವು ಭಾರತದ ಮೊಟ್ಟ ಮೊದಲನೆ ಕೇಂದ್ರವಾಗಲಿದೆ. ಇದಕ್ಕಾಗಿಯೇ ಬಳ್ಳಾರಿಯಲ್ಲಿ ಸುಮಾರು 4.74 ಎಕರೆ ಜಮೀನನ್ನು ಈಗಾಗಲೇ ಕಾಯ್ದಿರಿಸಲಾಗಿದೆ ಎಂದರು. ಉತ್ತರ ಕರ್ನಾಟಕ ಭಾಗದ ಕೃಷಿ ಮತ್ತು ಸಂಬಂಧಿಸಿದ ವಲಯದಲ್ಲಿ ನಾವೀನ್ಯತೆಯನ್ನು ಉತ್ತೇಜಿಸಲು ಕ್ರಮ ಕೈಗೊಳ್ಳಲಾಗಿದೆ. ಕಳೆ ತೆಗೆಯುವ ಯಂತ್ರಗಳನ್ನು ಒಳಗೊಂಡಿರುವ ವಿಶ್ವ ದರ್ಜೆಯ ಪ್ರಯೋಗಾಲಯದ ಶ್ರೇಷ್ಠತಾ ಕೇಂದ್ರವನ್ನು ಕೃಷಿ ಫೌಂಡೇಶನ್ ವತಿಯಿಂದ 16.50 ಕೋಟಿ ರೂ. ವೆಚ್ಚದಲ್ಲಿ ಕಲಬುರಗಿಯಲ್ಲಿ ಸ್ಥಾಪಿಸಲಾಗುತ್ತಿದೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದರು. ರಾಯಚೂರಿನಲ್ಲಿ ಎಐ ಕೇಂದ್ರ: ಕೃತಕ ಬುದ್ದಿಮತ್ತೆಯ(ಎಐ) ಶ್ರೇಷ್ಠತಾ ಕೇಂದ್ರವನ್ನು ಐಐಐಟಿ ರಾಯಚೂರಿನಲ್ಲಿ ಸ್ಥಾಪಿಸಲು 2026-27ನೇ ಸಾಲಿನ ಬಜೆಟ್ನಲ್ಲಿ ಘೋಷಣೆ ಮಾಡಲಾಗಿದೆ. ಬೆಂಗಳೂರು ಹೊರತುಪಡಿಸಿ ಉಳಿದ ಭಾಗಗಳಲ್ಲಿ ನವೋದ್ಯಮ ಪರಿಸರ ವ್ಯವಸ್ಥೆಯನ್ನು ಅಭಿವೃದ್ದಿಪಡಿಸಲು ಘೋಷಿಸಲಾಗಿರುವ ಎಲ್ಇಎಪಿ ಕಾರ್ಯಕ್ರಮ ಉತ್ತರ ಕರ್ನಾಟಕ ಯುವ ಉದ್ಯಮಿಗಳಿಗೆ ಉತ್ತೇಜನ ನೀಡಲಿದೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದರು. ಹಿಂದಿನ ಮೂರು ವರ್ಷಗಳಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶಗಳಿಗೆ ಸಂಬಂಧಿಸಿದಂತೆ ಒಟ್ಟು 72 ನವೋದ್ಯಮಗಳು ನೋಂದಾಣಿಯಾಗಿರುತ್ತವೆ. ಈಗಾಗಲೇ ಎಲಿವೇಟ್ ಯೋಜನೆಯಡಿಯಲ್ಲಿ ಈ ಪ್ರದೇಶದ ಸುಮಾರು 20 ನವೋದ್ಯಮಿಗಳಿಗೆ ಒಟ್ಟು 4.90 ಕೋಟಿ ರೂ. ಅನುದಾನ ಹಂಚಿಕೆ ಮಾಡಲಾಗಿದೆ ಎಂದು ಪ್ರಿಯಾಂಕ್ ಖರ್ಗೆ ತಿಳಿಸಿದರು. ನವೋದ್ಯಮಿಗಳಿಗೆ ಉತ್ತೇಜನ ನೀಡುವ ಕೆಲಸವನ್ನು ಸರಕಾರ ಮಾಡುತ್ತಿದೆ. ಹೊಸ ಕಂಪೆನಿಗಳನ್ನು ಪ್ರಾರಂಭಿಸಲು ಅನುಕೂಲವಾಗುವಂತೆ ಈಗಾಗಲೇ ಬಳ್ಳಾರಿ ಜಿಲ್ಲೆಯಲ್ಲಿ 3, ಬೀದರ್ನಲ್ಲಿ 2 ಮತ್ತು ಕಲಬುರಗಿಯಲ್ಲಿ 2 ನ್ಯೂ ಏಜ್ ಇನ್ನೋವೇಶನ್ ಕೇಂದ್ರ ಸ್ಥಾಪಿಸಲಾಗಿದೆ ಎಂದು ಪ್ರಿಯಾಂಕ್ ಖರ್ಗೆ ವಿವರಿಸಿದರು.
ಹಾಸನದಲ್ಲಿ ಆಟೊ ಗ್ಯಾಸ್ ಕೊರತೆ : ಚಾಲಕರ ಪರದಾಟ, ಬಂಕ್ ಮಾಲಕರ ಆಕ್ರೋಶ
ಹಾಸನ : ನಗರ ಮತ್ತು ಸುತ್ತಮುತ್ತ ಪ್ರದೇಶಗಳಲ್ಲಿ ಆಟೊ ಗ್ಯಾಸ್ ಸಿಗದೆ ಆಟೊ ಚಾಲಕರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕಳೆದ ಒಂದು ವಾರದಿಂದ ಗ್ಯಾಸ್ ಸರಬರಾಜು ಸ್ಥಗಿತ ಗೊಂಡಿರುವುದರಿಂದ ಆಟೊ ಚಾಲಕರು ದಿನನಿತ್ಯದ ಜೀವನ ಸಾಗಿಸಲು ಪರದಾಡುವಂತಾಗಿದೆ. ನಗರದ ಬಿ. ಕಾಟೀಹಳ್ಳಿ ಪ್ರದೇಶದಲ್ಲಿರುವ ಎಚ್ಪಿ ಆಟೋ ಗ್ಯಾಸ್ ಬಂಕ್ನಲ್ಲಿ ಗ್ಯಾಸ್ ಲಭ್ಯವಿಲ್ಲದೆ, ಚಾಲಕರು ಮತ್ತು ಬಂಕ್ ಮಾಲಕರು ಸಂಕಷ್ಟ ಅನುಭವಿಸುತ್ತಿದ್ದಾರೆ. ಇದು ಇವರಿಬ್ಬರ ನಡುವೆ ವಾಗ್ವಾದಕ್ಕೂ ನಾಂದಿ ಹಾಡಿದೆ. ಸರ್ಕಾರಿ ಸ್ವಾಮ್ಯದ ಗ್ಯಾಸ್ ಕಂಪೆನಿಯಿಂದ ನಿಗದಿತ ದರದಲ್ಲಿ ದೊರೆಯುತ್ತಿದ್ದ ಆಟೊ ಗ್ಯಾಸ್ ಇದೀಗ ಸಿಗದಿರುವುದರಿಂದ ಚಾಲಕರು ಖಾಸಗಿ ಮಾರ್ಗದಲ್ಲಿ ದುಬಾರಿ ಬೆಲೆಯಲ್ಲಿ ಗ್ಯಾಸ್ ಖರೀದಿಸಲು ಸಿದ್ಧರಾಗಿದ್ದಾರೆ. ಇದರಿಂದ ಆಟೊ ಚಾಲಕರ ಆದಾಯಕ್ಕೂ ದೊಡ್ಡ ಹೊಡೆತ ಬಿದ್ದಿದ್ದು, ಅವರ ಜೀವನೋಪಾಯದ ಮೇಲೆ ಗಂಭೀರ ಪರಿಣಾಮ ಬೀರಿದೆ. ಗ್ಯಾಸ್ ಬಂಕ್ ಮಾಲಕರ ಮಾತಿನ ಪ್ರಕಾರ, ಈಗಾಗಲೇ ಮುಂಗಡ ಹಣ ಪಾವತಿಸಿ ಗ್ಯಾಸ್ ಬುಕ್ ಮಾಡಿದ್ದರೂ ಕಂಪೆನಿಯಿಂದ ಸರಬರಾಜು ಆಗುತ್ತಿಲ್ಲ. ‘‘ಫೋನ್ ಮಾಡಿದರೂ ಪ್ರತಿಕ್ರಿಯೆ ನೀಡುವುದಿಲ್ಲ. ಸೇಲ್ಸ್ ಆಫೀಸರ್ ಬರುವಾಗಲೇ ಸಮಸ್ಯೆ ಹೇಳಿಕೊಳ್ಳಬೇಕು. ಬೇರೆ ಯಾರನ್ನೂ ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ’’ ಎಂದು ತಮ್ಮ ಅಸಹಾಯಕತೆಯನ್ನು ವ್ಯಕ್ತಪಡಿಸಿದ್ದಾರೆ. ಆಟೋ ಚಾಲಕರಾದ ಜಾನಿ ಮತ್ತು ಇತರರು ಮಾತನಾಡಿ, ‘‘ಗ್ಯಾಸ್ ಇಲ್ಲದೆ ನಮ್ಮ ಆಟೋಗಳು ರಸ್ತೆಗೆ ಇಳಿಯುತ್ತಿಲ್ಲ. ದಿನಕ್ಕೆ ದುಡಿದು ಮನೆ ನಡೆಸುವ ನಮ್ಮಂತಹವರಿಗೆ ಇದು ದೊಡ್ಡ ಹೊಡೆತವಾಗಿದೆ’’ ಎಂದರು.
ಶಿವಮೊಗ್ಗ : ಎತ್ತುಗಳ ಸಾಗಾಟಕ್ಕೆ ಅಡ್ಡಿ ಮಾಡಿದ್ದಾರೆ ಎಂದು ಆರೋಪಿಸಿ ಬಜರಂಗದಳದ ಕಾರ್ಯಕರ್ತರ ವಿರುದ್ಧ ರೈತರು ಶಿವಮೊಗ್ಗ ಉಪವಿಭಾಗಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದ ಘಟನೆ ವರದಿಯಾಗಿದೆ. ಘಟನೆ ಹಿನ್ನೆಲೆ : ಹಾವೇರಿ ಜಿಲ್ಲೆಯ ಹಿರೇಕೇರೂರು ತಾಲೂಕಿನ ಕೆಲವು ರೈತರು ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಗಂಡಸಿ ಗ್ರಾಮದ ಎತ್ತುಗಳ ಸಂತೆಯಲ್ಲಿ ಸುಮಾರು 19 ಎತ್ತುಗಳನ್ನು ಖರೀದಿಸಿ ಲಾರಿಯಲ್ಲಿ ಹಿರೇಕೆರೂರಿಗೆ ತೆಗೆದುಕೊಂಡು ಹೋಗುತ್ತಿದ್ದರು. ಮಾರ್ಗ ಮಧ್ಯೆ ಹೊಳೆಹೊನ್ನೂರ ಪಟ್ಟಣದಲ್ಲಿ ಟೀ ಕುಡಿಯಲು ಲಾರಿಯನ್ನು ನಿಲ್ಲಿಸಿದಾಗ ಬಜರಂಗದಳದ ಕಾರ್ಯಕರ್ತರು ಲಾರಿಯನ್ನು ಅಡ್ಡಗಟ್ಟಿ ಪಟ್ಟಣದ ಪೋಲಿಸ್ ಠಾಣೆಗೆ ದೂರು ನೀಡಿದ್ದಾರೆ ಎಂದು ರೈತರು ಆರೋಪಿಸಿದ್ದಾರೆ. ಈ ವೇಳೆ ಎಷ್ಟೇ ಪರಿಪರಿಯಾಗಿ ಬೇಡಿಕೊಂಡರೂ ಕೇಳದ ಬಜರಂಗದಳದ ಕಾರ್ಯಕರ್ತರು ಪೊಲೀಸರ ಮೇಲೆ ಒತ್ತಡ ಹೇರಿ ಲಾರಿ ಚಾಲಕನ ವಿರುದ್ಧ ಪಟ್ಟಣದ ಠಾಣೆಯಲ್ಲಿ ಎಫ್ಐಆರ್ ದಾಖಲಿಸಿದ್ದಾರೆ. ನಂತರ ಎಲ್ಲ ಎತ್ತುಗಳನ್ನು ಶಿವಮೊಗ್ಗದ ಗೋ ಶಾಲೆಗೆ ಬಿಡಲಾಗಿದೆ ಎಂದು ದೂರಿದ್ದಾರೆ. ಘಟನೆಯಿಂದ ಕಂಗಾಲಾದ ಹಿರೇಕೇರೂರು ತಾಲೂಕಿನ ಸುಮಾರು 20 ಮಂದಿ ರೈತರು ಶಿವಮೊಗ್ಗ ಉಪವಿಭಾಗಾಧಿಕಾರಿ ಕಚೇರಿ ಎದುರು ಗುರುವಾರ ತಡರಾತ್ರಿಯಿಂದಲೇ ಪ್ರತಿಭಟನೆ ಆರಂಭಿಸಿದ್ದರು. ಶುಕ್ರವಾರ ವಿಷಯ ಜಿಲ್ಲಾಧಿಕಾರಿ ಗಮನಕ್ಕೆ ಬಂದಿದ್ದು, ಬಳಿಕ ಜಿಲ್ಲಾಧಿಕಾರಿ ಮತ್ತು ಉಪವಿಭಾಗಾಧಿಕಾರಿ ಅವರು ರೈತರ ಮನವಿಗೆ ಸ್ಪಂದಿಸಿ ಎಲ್ಲ ಎತ್ತುಗಳನ್ನು ಗೋ ಶಾಲೆಯಿಂದ ಬಿಡಿಸಿ ಕಳಿಸಿದ್ದಾರೆ ಎಂದು ರೈತರೋರ್ವರು ಮಾಹಿತಿ ನೀಡಿದ್ದಾರೆ.
Sagara | ಕಾರ್ಗಲ್ನಲ್ಲಿ ಹೆಚ್ಚಿದ ವಾಂತಿ, ಭೇದಿ ಪ್ರಕರಣ; ಅಸ್ವಸ್ಥಗೊಂಡಿದ್ದ ಮಹಿಳೆ ಮೃತ್ಯು
ಶಿವಮೊಗ್ಗ : ಜಿಲ್ಲೆಯ ಸಾಗರ ತಾಲೂಕಿನ ಕಾರ್ಗಲ್ ಪಟ್ಟಣದಲ್ಲಿ ಎರಡು ದಿನಗಳಿಂದ ವಾಂತಿ ಮತ್ತು ಭೇದಿ ಪ್ರಕರಣ ಹೆಚ್ಚಾಗಿದ್ದು, ಈ ಮಧ್ಯೆ ಕಾರ್ಗಲ್ ಪಟ್ಟಣದ ಭಾಗ್ಯಮಂದಿರ ಕಾಲನಿಯ ಮಹಿಳೆ ಮೃತಪಟ್ಟ ಘಟನೆ ಶುಕ್ರವಾರ ವರದಿಯಾಗಿದೆ. ಕಾರ್ಗಲ್ ಪಟ್ಟಣ ಪಂಚಾಯತ್ ಮಾಜಿ ಅಧ್ಯಕ್ಷ ಎಂ. ರಾಜು ಅವರ ತಾಯಿ ಜಯಲಕ್ಷ್ಮೀ (65) ಮೃತ ಮಹಿಳೆ. ಇವರು ಬುಧವಾರ ಜ್ವರ, ವಾಂತಿ, ಭೇದಿಯಿಂದ ಅಸ್ವಸ್ಥಗೊಂಡಿದ್ದರು. ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೆ ಗುರುವಾರ ಮೃತಪಟ್ಟಿದ್ದಾರೆ. ಕಾರ್ಗಲ್, ಜೋಗ, ಲಿಂಗನಮಕ್ಕಿ, ಅರಳಗೋಡು, ಹೆನ್ನಿ, ಇಡುವಾಣಿ ಗ್ರಾಮಗಳಲ್ಲಿ 4-5 ದಿನಗಳಿಂದ ನಿವಾಸಿಗಳಲ್ಲಿ ಹೊಟ್ಟೆ ನೋವು, ವಾಂತಿ, ಭೇದಿ, ತಲೆನೋವು, ಜ್ವರ ಕಾಣಿಸಿಕೊಂಡಿತ್ತು. ಅಸ್ವಸ್ಥಗೊಂಡಿದ್ದ ಕಾರ್ಗಲ್ನ ಸರಕಾರಿ ಶಾಲೆಯ 15ಕ್ಕೂ ಅಧಿಕ ವಿದ್ಯಾರ್ಥಿಗಳನ್ನು ಚಿಕಿತ್ಸೆಗೆ ಬುಧವಾರ ಕೆಪಿಸಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸರ್ವೇಕ್ಷಣಾಧಿಕಾರಿ ಭೇಟಿ : ವಿಷಯ ತಿಳಿಯುತ್ತಿದ್ದಂತೆ ಜಿಲ್ಲಾ ಸರ್ವೇಕ್ಷಣಾಧಿಕಾರಿ ಎಲ್. ನಾಗರಾಜ್ ನಾಯ್ಕ ಅವರು ಕಾರ್ಗಲ್ ಆಸ್ಪತ್ರೆಗೆ ಭೇಟಿ ನೀಡಿ ವೈದ್ಯರ ಜೊತೆಗೆ ಚರ್ಚಿಸಿದರು. ಅಲ್ಲದೆ, ಜಿಲ್ಲಾ ಆರೋಗ್ಯ ತಂಡವು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ವೈದ್ಯಾಧಿಕಾರಿಗಳು ಕುಡಿಯುವ ನೀರು ಹಾಗೂ ಆಹಾರದ ಮಾದರಿ ಸಂಗ್ರಹಿಸಿ ತಪಾಸಣೆಗೆ ಕಳುಹಿಸಿದ್ದಾರೆ. ಕಾರ್ಗಲ್ ಭಾಗದಲ್ಲಿ ಎರಡು ದಿನಗಳಿಂದ ವಾಂತಿ-ಭೇದಿ ಪ್ರಕರಣಗಳು ಗಮನಕ್ಕೆ ಬಂದಿವೆ. ಸುಮಾರು ನೂರಕ್ಕೂ ಹೆಚ್ಚು ಜನರಿಗೆ ವಾಂತಿ-ಭೇದಿಯಾಗಿದೆ. ಪ್ರಸಕ್ತ ಐದು ಜನ ಒಳರೋಗಿಗಳಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕುಡಿಯುವ ನೀರಿನಲ್ಲಿ ಯಾವುದೇ ದೋಷ ಕಂಡು ಬಂದಿಲ್ಲ. ಬದಲಾಗಿ ಚೌಡೇಶ್ವರಿ ಜಾತ್ರೆಯಲ್ಲಿ ಸೇವಿಸಿದ ಐಸ್ಕ್ರೀಂ ಹಾಗೂ ಆಲೂಗಡ್ಡೆಯ ತಿನಿಸುಗಳಿಂದ ಈ ಸಮಸ್ಯೆ ಉಂಟಾಗಿರುವ ಶಂಕೆ ಇದೆ. ನೀರಿನ 48 ಗಂಟೆಗಳ ಕಲ್ಚರ್ ಟೆಸ್ಟ್ ವರದಿ ಇನ್ನಷ್ಟೇ ಬರಬೇಕಿದೆ. ವರದಿ ಬಂದ ಬಳಿಕ ಹೆಚ್ಚಿನ ಮಾಹಿತಿ ನೀಡಲಾಗುವುದು. -ಪ್ರಭುಲಿಂಗ ಕವಳಿಕಟ್ಟಿ, ಶಿವಮೊಗ್ಗ ಜಿಲ್ಲಾಧಿಕಾರಿ
ಇರಾನ್ ವಿರುದ್ಧ ಮತ್ತಷ್ಟು ದಾಳಿಗೆ ಸಿದ್ಧವಾದ ಇಸ್ರೇಲ್, ಹೊಸ ತಂತ್ರದ ಮೊರೆ | Operation Roaring Lion
ಇರಾನ್ ವಿರುದ್ಧ ಈ ಬಾರಿ ಯುದ್ಧ ಗೆಲ್ಲಬೇಕು, ಆ ಮೂಲಕ ಮಧ್ಯಪ್ರಾಚ್ಯ ಭಾಗದಲ್ಲಿ ತಮ್ಮ ವಿರುದ್ಧ ಯಾವುದೇ ದೇಶ ಕಿರಿಕ್ ಮಾಡದಂತೆ ಭವಿಷ್ಯ ರೂಪಿಸಬೇಕು ಎಂಬುದು ಅಮೆರಿಕ ಹಾಗೂ ಇಸ್ರೇಲ್ ಪ್ಲಾನ್ ಆಗಿದೆ. ಅದರಲ್ಲೂ ಇರಾನ್ ದೇಶ ಪರಮಾಣು ಬಾಂಬ್ ತಯಾರಿಸುತ್ತಿದೆ ಎಂಬ ಕಾರಣಕ್ಕೆ, ಭಾರಿ ದೊಡ್ಡ ಮಟ್ಟದಲ್ಲಿ ದಾಳಿ ಶುರು ಮಾಡಿದ್ದ ಇಸ್ರೇಲ್ ಮತ್ತು ಅಮೆರಿಕ
ವಾಶಿಂಗ್ಟನ್, ಮಾ.13: ಅಮೆರಿಕ ಮತ್ತು ಇಸ್ರೇಲ್ ನಡೆಸಿದ ದಾಳಿಯಲ್ಲಿ ಇರಾನ್ ನ ನೂತನ ಸರ್ವೋಚ್ಚ ನಾಯಕ ಮೊಜ್ತಾಬಾ ಖಾಮಿನೈ ಗಾಯಗೊಂಡಿದ್ದಾರೆ ಎಂದು ಅಮೆರಿಕದ ರಕ್ಷಣಾ ಕಾರ್ಯದರ್ಶಿ ಪೀಟ್ ಹೆಗ್ಸೆತ್ ಹೇಳಿದ್ದಾರೆ ಎಂದು Aljazeera ವರದಿ ಮಾಡಿದೆ. ಮೊಜ್ತಾಬಾ ಖಾಮಿನೈ ಸರ್ವೋಚ್ಚ ನಾಯಕರಾಗಿ ನೇಮಕಗೊಂಡ ಬಳಿಕ ತಮ್ಮ ಮೊದಲ ಹೇಳಿಕೆಯಲ್ಲಿ ಹೋರಾಟ ಮುಂದುವರಿಸುವುದಾಗಿ ಪ್ರತಿಜ್ಞೆ ಮಾಡಿದ ಒಂದು ದಿನದ ಬಳಿಕ ಹೆಗ್ಸೆತ್ ಈ ಹೇಳಿಕೆ ನೀಡಿದ್ದಾರೆ. ಶುಕ್ರವಾರ ಪೆಂಟಗನ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಹೆಗ್ಸೆತ್, ಮೊಜ್ತಾಬಾ ಖಾಮಿನೈ ಗಾಯಗೊಂಡಿದ್ದಾರೆ ಮತ್ತು ವಿರೂಪಗೊಂಡಿರಬಹುದು ಎಂದು ತಿಳಿಸಿದ್ದಾರೆ. “ನಿನ್ನೆ ಅವರು ಒಂದು ಹೇಳಿಕೆ ನೀಡಿದರು. ವಾಸ್ತವವಾಗಿ ಅದು ದುರ್ಬಲವಾಗಿತ್ತು. ಯಾವುದೇ ಧ್ವನಿ ಅಥವಾ ವೀಡಿಯೊ ಇರಲಿಲ್ಲ; ಅದು ಕೇವಲ ಲಿಖಿತ ಹೇಳಿಕೆಯಾಗಿತ್ತು” ಎಂದು ಹೆಗ್ಸೆತ್ ಹೇಳಿದರು. ಆದರೆ ತಮ್ಮ ಹೇಳಿಕೆಗೆ ಪೂರಕವಾದ ಯಾವುದೇ ಪುರಾವೆಗಳನ್ನು ಹೆಗ್ಸೆತ್ ನೀಡಿಲ್ಲ. ಖಾಮಿನೈ ಅವರ ಆರೋಗ್ಯ ಸ್ಥಿತಿಯ ಕುರಿತು ಇರಾನ್ ಸರ್ಕಾರವೂ ಯಾವುದೇ ವಿವರಗಳನ್ನು ಬಹಿರಂಗಪಡಿಸಿಲ್ಲ. ಈ ಹೇಳಿಕೆಗಳಿಗೆ ಇರಾನ್ ನಾಯಕರು ತಕ್ಷಣ ಪ್ರತಿಕ್ರಿಯಿಸಲಿಲ್ಲ. ಫೆಬ್ರವರಿ 28ರಂದು ಇರಾನ್ ಮೇಲೆ ಅಮೆರಿಕ ಮತ್ತು ಇಸ್ರೇಲ್ ದಾಳಿಗಳು ಆರಂಭವಾದ ಮೊದಲ ದಿನವೇ ಮೊಜ್ತಾಬಾ ಖಾಮಿನೈ ಅವರ ತಂದೆ ಆಯತುಲ್ಲಾ ಅಲಿ ಖಾಮಿನೈ ಹತ್ಯೆಗೀಡಾದ ಬಳಿಕ ಅವರು ದೇಶದ ಸರ್ವೋಚ್ಚ ನಾಯಕನಾಗಿ ಅಧಿಕಾರ ವಹಿಸಿಕೊಂಡಿದ್ದರು. ಅಧಿಕಾರ ಸ್ವೀಕರಿಸಿದ ಬಳಿಕ ಗುರುವಾರ ಅವರು ತಮ್ಮ ಮೊದಲ ಸಾರ್ವಜನಿಕ ಹೇಳಿಕೆಯನ್ನು ಬಿಡುಗಡೆ ಮಾಡಿದ್ದರು. ಇರಾನ್ ನ ಸರಕಾರಿ ಟಿವಿಯಲ್ಲಿ ಓದಿದ ಲಿಖಿತ ಹೇಳಿಕೆಯಲ್ಲಿ, ಈ ಪ್ರದೇಶದಲ್ಲಿರುವ ಅಮೆರಿಕದ ಎಲ್ಲಾ ಸೇನಾ ನೆಲೆಗಳನ್ನು ತಕ್ಷಣವೇ ಮುಚ್ಚಬೇಕು ಎಂದು ಮೊಜ್ತಾಬಾ ಖಾಮಿನೈ ಆಗ್ರಹಿಸಿದರು. ಇಲ್ಲವಾದರೆ ಆ ನೆಲೆಗಳ ಮೇಲೆ ದಾಳಿ ನಡೆಸುವುದಾಗಿ ಎಚ್ಚರಿಕೆ ನೀಡಿದರು. ಜೊತೆಗೆ, ಹಾರ್ಮುಝ್ ಜಲಸಂಧಿಯನ್ನು ಮುಚ್ಚುವ ಕ್ರಮ ಮುಂದುವರಿಸಲಾಗುವುದು ಎಂದು ಅವರು ತಿಳಿಸಿದ್ದಾರೆ. “ದೇಶದ ಮೇಲೆ ನಡೆಯುತ್ತಿರುವ ದಾಳಿಗಳ ನಡುವೆಯೂ ಧೈರ್ಯದಿಂದ ಹೋರಾಡುತ್ತಿರುವ ಯೋಧರಿಗೆ ನಾನು ಕೃತಜ್ಞತೆ ಸಲ್ಲಿಸುತ್ತೇನೆ” ಎಂದು ಖಾಮಿನೈ ಹೇಳಿದ್ದಾರೆ. ಯುದ್ಧ ಆರಂಭವಾದ ಬಳಿಕ ಮೊಜ್ತಾಬಾ ಖಾಮಿನೈ ಅವರು ಸಾರ್ವಜನಿಕವಾಗಿ ಕಾಣಿಸಿಕೊಂಡಿಲ್ಲ. ಈ ವಾರದ ಆರಂಭದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಮೊಜ್ತಾಬಾ ಖಾಮಿನೈ ಅವರನ್ನು ಇರಾನ್ ನ ಹೊಸ ಸುಪ್ರೀಂ ಲೀಡರ್ ಆಗಿ ನೇಮಿಸಿರುವುದು ತಮಗೆ ‘ಸಂತೋಷಕರವಾಗಿಲ್ಲ’ ಎಂದು ಹೇಳಿದ್ದಾರೆ. ಅವರ ತಂದೆಯಂತೆಯೇ ಅವರನ್ನು ಗುರಿಯಾಗಿಸಿ ಕೊಲ್ಲಬಹುದೆಂಬ ಸೂಚನೆಯನ್ನು ಕೂಡ ನೀಡಿದ್ದಾರೆ. “ಅವರು ಸುಪ್ರೀಂ ಲೀಡರ್ ಆಗಿ ಹೆಚ್ಚು ಕಾಲ ಉಳಿಯುತ್ತಾರೆಯೋ ಇಲ್ಲವೋ ತಿಳಿದಿಲ್ಲ. ಅವರನ್ನು ನೇಮಿಸಿರುವುದು ತಪ್ಪು ನಿರ್ಧಾರ ಎಂದು ನಾನು ಭಾವಿಸುತ್ತೇನೆ” ಎಂದು ಟ್ರಂಪ್ ಸೋಮವಾರ ಹೇಳಿದ್ದರು. ಕಳೆದ ತಿಂಗಳ ಕೊನೆಯಲ್ಲಿ ಆರಂಭವಾದ ಯುದ್ಧದ ಬಳಿಕ ಅಮೆರಿಕ–ಇಸ್ರೇಲ್ ನಡೆಸಿದ ದಾಳಿಯಲ್ಲಿ ಕನಿಷ್ಠ 1,444 ಜನರು ಸಾವನ್ನಪ್ಪಿದ್ದು, 18,551 ಜನರು ಗಾಯಗೊಂಡಿದ್ದಾರೆ ಎಂದು ಇರಾನ್ ಆರೋಗ್ಯ ಸಚಿವಾಲಯದ ಇತ್ತೀಚಿನ ಅಂಕಿಅಂಶಗಳು ತಿಳಿಸಿವೆ. ಅಮೆರಿಕ ಮತ್ತು ಇಸ್ರೇಲ್, ಇರಾನ್ನ ನಾಯಕತ್ವ, ಮಿಲಿಟರಿ ಮತ್ತು ಪರಮಾಣು ಮೂಲಸೌಕರ್ಯಗಳನ್ನು ಗುರಿಯಾಗಿಸಿಕೊಂಡಿದ್ದೇವೆ ಎಂದು ಹೇಳಿವೆ. ಆದರೆ ಶಾಲೆಗಳು ಮತ್ತು ಆಸ್ಪತ್ರೆಗಳಂತಹ ಸಾವಿರಾರು ನಾಗರಿಕ ಸ್ಥಳಗಳ ಮೇಲೂ ದಾಳಿ ನಡೆದಿದೆ ಎಂದು ಇರಾನ್ ಆರೋಪಿಸಿದೆ. ಶುಕ್ರವಾರದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಹೆಗ್ಸೆತ್, ಫೆಬ್ರವರಿ 28ರಿಂದ ಅಮೆರಿಕ ಮತ್ತು ಇಸ್ರೇಲ್ ದಾಳಿಗಳು 15,000 ಕ್ಕೂ ಹೆಚ್ಚು ಇರಾನಿನ ಗುರಿಗಳನ್ನು ಹೊಡೆದುರುಳಿಸಿವೆ ಎಂದು ಹೇಳಿದರು. “ಅವರ ಬಳಿ ಇನ್ನೂ ಉಳಿದಿರುವ ಕ್ಷಿಪಣಿಗಳನ್ನು ನಾವು ಹೊಡೆದುರುಳಿಸಿ ನಾಶಪಡಿಸುತ್ತಿದ್ದೇವೆ. ಮುಖ್ಯವಾಗಿ ಅವರು ಮುಂದಿನ ದಾಳಿಗಳನ್ನು ನಡೆಸುವ ಸಾಮರ್ಥ್ಯವನ್ನು ಕಳೆದುಕೊಳ್ಳುವಂತೆ ಮಾಡುತ್ತಿದ್ದೇವೆ” ಎಂದು ಅವರು ಹೇಳಿದರು. “ಅವರ ಉತ್ಪಾದನಾ ಮಾರ್ಗಗಳು, ಮಿಲಿಟರಿ ಸ್ಥಾವರಗಳು ಮತ್ತು ರಕ್ಷಣಾ ನವೀನತೆ ಕೇಂದ್ರಗಳು ಸೋಲಿಸಲ್ಪಟ್ಟಿವೆ. ಇರಾನ್ ನ ನಾಯಕತ್ವ ಉತ್ತಮ ಸ್ಥಿತಿಯಲ್ಲಿ ಇಲ್ಲ. ಅವರು ಭೂಗತದಲ್ಲಿ ಅಡಗಿಕೊಂಡು ಭಯಭೀತರಾಗಿದ್ದಾರೆ” ಎಂದು ಹೆಗ್ಸೆತ್ ಹೇಳಿದರು. ಶುಕ್ರವಾರ ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಮತ್ತು ಇರಾನ್ ನ ಉನ್ನತ ಭದ್ರತಾ ಅಧಿಕಾರಿ ಅಲಿ ಲಾರಿಜಾನಿ ಅವರು ರಾಜಧಾನಿ ಟೆಹ್ರಾನ್ನಲ್ಲಿ ನಡೆದ ಅಲ್-ಕುಡ್ಸ್ ದಿನದ ಸಾಮೂಹಿಕ ಪ್ರದರ್ಶನದಲ್ಲಿ ಕಾಣಿಸಿಕೊಂಡರು. ದೋಹಾ ಇನ್ಸ್ಟಿಟ್ಯೂಟ್ ಫಾರ್ ಗ್ರಾಜುಯೇಟ್ ಸ್ಟಡೀಸ್ನ ಪ್ರಾಧ್ಯಾಪಕ ಮೊಹಮ್ಮದ್ ಎಲ್ಮಾಸ್ರಿ ಅವರ ಪ್ರಕಾರ, ಹೆಗ್ಸೆತ್ ಅವರ ಹೇಳಿಕೆಗಳು ಮುಖ್ಯವಾಗಿ ಅಮೆರಿಕದ ಸಾರ್ವಜನಿಕರನ್ನು ಗುರಿಯಾಗಿರಿಸಿಕೊಂಡಿವೆ. “ಹೆಗ್ಸೆತ್ ಆತ್ಮವಿಶ್ವಾಸ ಮತ್ತು ಯಶಸ್ಸನ್ನು ಪ್ರದರ್ಶಿಸಲು ಪ್ರಯತ್ನಿಸುತ್ತಿದ್ದಾರೆ. ಇತ್ತೀಚಿನ ಅಭಿಪ್ರಾಯ ಸಂಗ್ರಹಗಳ ಪ್ರಕಾರ ಇರಾನ್ ನಲ್ಲಿನ ಯುದ್ಧ ಅಮೆರಿಕದಲ್ಲಿ ಹೆಚ್ಚು ಜನಪ್ರಿಯವಾಗಿಲ್ಲ. ಅನಿಲ ಬೆಲೆಗಳು ಏರುತ್ತಿವೆ, ಅಮೆರಿಕದ ಸೈನಿಕರು ಸಾವನ್ನಪ್ಪುತ್ತಿದ್ದಾರೆ. ಆದ್ದರಿಂದ ಟ್ರಂಪ್ ಮತ್ತು ಹೆಗ್ಸೆತ್ ಜನರಲ್ಲಿ ವಿಶ್ವಾಸ ಮೂಡಿಸಲು ಪ್ರಯತ್ನಿಸುತ್ತಿದ್ದಾರೆ” ಎಂದು ಅವರು ಹೇಳಿದ್ದಾರೆ.
IPL 2026: ಐಪಿಎಲ್ ಹಬ್ಬ ಆರಂಭಕ್ಕೂ ಮುನ್ನ 10 ಫ್ರಾಂಚೈಸಿಗಳಿಗೂ ಬಿಸಿಸಿಐ ಕಟ್ಟುನಿಟ್ಟಿನ ಮಾರ್ಗಸೂಚಿಗಳು
IPL 2026: ಈಗಾಗಲೇ ಇಂಡಿಯನ್ ಪ್ರೀಮಿಯರ್ ಲೀಗ್ 2026ರ ಮೊದಲ ಹಂತದ ವೇಳಾಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಇದರ ಬೆನ್ನಲ್ಲೇ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಎಲ್ಲಾ 10 ಐಪಿಎಲ್ ಫ್ರಾಂಚೈಸಿಗಳಿಗೆ ಕಟ್ಟುನಿಟ್ಟಿನ ಮಾರ್ಗಸೂಚಿಗಳನ್ನು ಹೊರಡಿಸಿದೆ. ಹಾಗಾದ್ರೆ, ಅವುಗಳಲ್ಲಿ ಏನೆಲ್ಲಾ ಇದೆ ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ. ಬಿಸಿಸಿಐ ಹೊರಡಿಸಿದ ಮಾರ್ಗಸೂಚಿಗಳು ಐಪಿಎಲ್ 2026ರ
ಭಾರತದಲ್ಲಿ ಬಗೆಹರಿಯಲಿದೆ ಎಲ್ಪಿಜಿ ಸಮಸ್ಯೆ, ನೀವು ನಮ್ಮ ಗೆಳೆಯ ಎಂದು ಕರೆದ ಇರಾನ್... Donald Trump
ಭಾರತಕ್ಕೆ ಮಧ್ಯಪ್ರಾಚ್ಯ ಭಾಗದಿಂದ ಇದೀಗ ಭಾರಿ ಭರ್ಜರಿ ಸುದ್ದಿ ಸಿಕ್ಕಿದೆ, ಭಾರತದ ಹಡಗುಗಳು &ನೌಕೆಗಳು ಹಾರ್ಮುಜ್ ಜಲಸಂಧಿಯಲ್ಲಿ ಸಿಲುಕಿ ಪರದಾಡುತ್ತಿದ್ದವು. ಅದರಲ್ಲೂ ಇರಾನ್ ಮಿಲಿಟರಿ ಈ ಭಾಗದಲ್ಲಿ ಎಂದರೆ, ಹಾರ್ಮುಜ್ ಜಲಸಂಧಿ ಮೂಲಕ ಯಾವುದೇ ತೈಲ ಹಾಗೂ ಗ್ಯಾಸ್ ಹಡಗು ಸಂಚಾರ ಮಾಡದಂತೆ ಅಡ್ಡ ಹಾಕಿದೆ. ಅಕಸ್ಮಾತ್ ಹಾರ್ಮುಜ್ ಜಲಸಂಧಿ ದಾಟಲು ಪ್ರಯತ್ನಿಸುತ್ತಿದ್ದರೆ ದೊಡ್ಡ ಮಟ್ಟದಲ್ಲಿ

32 C