ಛಲವಾದಿ ನಾರಾಯಣಸ್ವಾಮಿ ಅವರು ಸ್ವಾಭಿಮಾನ ಅಡವಿಟ್ಟು ಬಿಜೆಪಿಯಲ್ಲಿ ಬದುಕುತಿದ್ದಾರೆ : ರಮೇಶ್ಬಾಬು
ಬೆಂಗಳೂರು : ತಲೆ ಮೇಲೆ ಚಡ್ಡಿ ಹೊತ್ತು ಸ್ವಾಭಿಮಾನವನ್ನು ಅಡವಿಟ್ಟು ಬಿಜೆಪಿಯಲ್ಲಿ ಬದುಕುತ್ತಿರುವ ಛಲವಾದಿ ನಾರಾಯಣಸ್ವಾಮಿ ಕಾಂಗ್ರೆಸ್ ಸರಕಾರದ ಬಜೆಟ್ಗೆ ಪುಸ್ತಕಕ್ಕೆ ಬೆಂಕಿ ಇಡುವುದಾಗಿ ಹೇಳುವುದರ ಮೂಲಕ ಮತ್ತೊಮ್ಮೆ ಚಡ್ಡಿ ಹೊರುವ ಸಂಸ್ಕೃತಿಗೆ ಮುಂದಾಗಿದ್ದಾರೆ ಎಂದು ವಿಧಾನಪರಿಷತ್ ಸದಸ್ಯ ರಮೇಶ್ಬಾಬು ತಿಳಿಸಿದ್ದಾರೆ. ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಜಾಭತ್ವದ ವ್ಯವಸ್ಥೆಯಲ್ಲಿ ವಿಧಾನಮಂಡಲದ ವಿರೋಧ ಪಕ್ಷದ ನಾಯಕರಿಗೆ ಸಂವಿಧಾನದ ಅಡಿಯಲ್ಲಿ ವಿಶೇಷ ಸ್ಥಾನಮಾನಗಳನ್ನು ನೀಡಲಾಗಿದೆ. ಕರ್ನಾಟಕ ವಿಧಾನಮಂಡಲದ ಇಬ್ಬರೂ ವಿರೋಧ ಪಕ್ಷದ ನಾಯಕರು ಅತ್ಯಂತ ವೈಫಲ್ಯದ ನಾಯಕರಾಗಿದ್ದು, ರಾಜ್ಯದ ಸಮಸ್ಯೆಗಳು ಮತ್ತು ಆಡಳಿತದ ಮೇಲೆ ಬೆಳಕು ಚೆಲ್ಲುವ ಬದಲು ಪದೇ ಪದೇ ತಮ್ಮ ವೈಫಲ್ಯಗಳನ್ನು ಸಾಬೀತು ಪಡಿಸಿಕೊಳ್ಳುತ್ತಿದ್ದಾರೆ ಎಂದು ತಿಳಿಸಿದರು. ವಿಧಾನ ಪರಿಷತ್ನ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಜ.28ರಂದು ಸದನದಲ್ಲಿ ನಿಯಮಾವಳಿ ಪುಸ್ತಕ ಹರಿಯುವುದರ ಮೂಲಕ ಇತಿಹಾಸ ಬರೆದಿರುತ್ತಾರೆ. ಈಗ ಬಜೆಟ್ ಪುಸ್ತಕಕ್ಕೆ ಬೆಂಕಿ ಇಡುವುದಾಗಿ ಹೇಳುವುದರ ಮೂಲಕ ತಮ್ಮ ಬಟ್ಟೆಗೆ ತಾವೇ ಮಸಿ ಬಳಿದುಕೊಂಡಿರುತ್ತಾರೆ ಎಂದು ಟೀಕಿಸಿದರು. ಛಲವಾದಿ ನಾರಾಯಣಸ್ವಾಮಿ ಅವರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ಟೀಕೆ ಮಾಡುವ ಮೂಲಕ ತಮ್ಮ ರಾಜಕೀಯ ಅಸ್ತಿತ್ವವನ್ನು ಉಳಿಸಿಕೊಂಡಿದ್ದಾರೆ. ಕೇಂದ್ರ ಬಿಜೆಪಿ ಸರಕಾರವು ತನ್ನ ಒಟ್ಟಾರೆ ಬಜೆಟ್ನಲ್ಲಿ ಶೇ.10ರಷ್ಟು ಹಣ ಕೂಡ ದೇಶದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ನೀಡಿರುವುದಿಲ್ಲ. ದಲಿತ ವಿರೋಧಿ ನೀತಿಯನ್ನು ತನ್ನ ಆಡಳಿತದ ಉದ್ದಗಲಕ್ಕೂ ಸಾರುತ್ತಿರುವ ಕೇಂದ್ರ ಬಿಜೆಪಿ ಸರಕಾರವನ್ನಾಗಲಿ ಅಥವಾ ಮೀಸಲಾತಿ ವಿರೋಧಿ ನೀತಿಯನ್ನು ಉಸಿರಾಗಿಸಿಕೊಂಡಿರುವ ಸಂಘ ಪರಿವಾರವನ್ನಾಗಲಿ ಪ್ರಶ್ನೆ ಮಾಡುವ ತಾಕತ್ತು, ಧೈರ್ಯ ಅಥವಾ ನೈತಿಕತೆಯನ್ನು ಹೊಂದಿರದ ಛಲವಾದಿ ನಾರಾಯಣಸ್ವಾಮಿ ಅವರು, ಧರ್ಮದ ಹೆಸರಿನಲ್ಲಿ ಬೆಂಕಿ ಇಡುವ ಬಿಜೆಪಿ ಪ್ರವೃತ್ತಿಯ ಮುಂದುವರಿದ ಭಾಗವಾಗಿ ರಾಜ್ಯ ಕಾಂಗ್ರೆಸ್ ಸರಕಾರದ ಬಜೆಟ್ ಪ್ರತಿಗೆ ಬೆಂಕಿ ಇಡುವ ಮಾತನಾಡಿರುತ್ತಾರೆ ಎಂದು ಹೇಳಿದರು. ದೇಶದಲ್ಲಿ ಎಸ್ಸಿಪಿ ಮತ್ತು ಟಿಎಸ್ಪಿ ಯೋಜನೆಯನ್ನು ಕರ್ನಾಟಕದಲ್ಲಿ ಜಾರಿಗೊಳಿಸಿದ ಸಿದ್ದರಾಮಯ್ಯ ಅವರ ಕಾಂಗ್ರೆಸ್ ಸರಕಾರವನ್ನು ಅನುಕರಣೆ ಮಾಡಲು ವಿಫಲವಾಗಿರುವ ಕೇಂದ್ರ ಬಿಜೆಪಿ ಸರಕಾರ ಮತ್ತು ಇತರೆ ರಾಜ್ಯಗಳ ಬಿಜೆಪಿ ಸರಕಾರಗಳನ್ನು ಪ್ರಶ್ನಿಸಲು ತಾಕತ್ತಿಲ್ಲದ ಛಲವಾದಿ ನಾರಾಯಣಸ್ವಾಮಿ ಇಂತಹ ಹೇಳಿಕೆಗಳ ಮೂಲಕ ವಿಧಾನ ಪರಿಷತ್ನ ವಿರೋಧ ಪಕ್ಷದ ನಾಯಕ ಸ್ಥಾನಕ್ಕೆ ಪದೇ ಪದೇ ಮಸಿ ಬಳೆಯುತ್ತಿದ್ದಾರೆ. ಬಹುಶಃ ಬಿಜೆಪಿ ಮತ್ತು ಸಂಘ ಪರಿವಾರಕ್ಕೆ ಇದಕ್ಕಿಂತ ಹೆಚ್ಚು ಭಟ್ಟಂಗಿತನ ಪ್ರದರ್ಶನ ಮಾಡಲು ಇವರಿಗೆ ಸಾಧ್ಯವಿಲ್ಲ ಎಂದರು. ಸದನದಲ್ಲಿ ನಿಯಮಾವಳಿ ಪುಸ್ತಕ ಹರಿಯುವುದು, ಸಾರ್ವಜನಿಕವಾಗಿ ಬಜೆಟ್ ಪುಸ್ತಕಕ್ಕೆ ಬೆಂಕಿ ಇಡುವುದು ಛಲವಾದಿ ನಾರಾಯಣಸ್ವಾಮಿ ಅವರು ಬಿಜೆಪಿ ಮತ್ತು ಸಂಘ ಪರಿವಾರದಿಂದ ಕಲಿತ ಸಂಸ್ಕೃ ತಿಯಾಗಿದೆ. ಇವರಿಗೆ ದಲಿತರ ಬಗ್ಗೆ ಬದ್ಧತೆ ಇದ್ದರೆ ಕೇಂದ್ರ ಬಿಜೆಪಿ ಸರಕಾರದ ಬಜೆಟ್ನಲ್ಲಿ ದೇಶದ ದಲಿತ ಸಮುದಾಯಕ್ಕೆ ನೀಡಿರುವ ಅನುದಾನಗಳ ಕುರಿತು ಧ್ವನಿಯೆತ್ತಲಿ ಎಂದು ತಿಳಿಸಿದರು. ಪ್ರಚಾರಕ್ಕಾಗಿ ಚಡ್ಡಿ ಹೊರುವ, ಪುಸ್ತಕ ಹರಿಯುವ, ಬೆಂಕಿ ಇಡುವ ನಡತೆಯಿಂದ ಮುಕ್ತವಾಗಿ ವಿರೋಧ ಪಕ್ಷದ ನಾಯಕನ ಸ್ಥಾನದ ಘನತೆಗೆ ಅನುಗುಣವಾಗಿ ನಡೆದುಕೊಳ್ಳಲಿ ಎಂದು ಒತ್ತಾಯಿಸದರು.
ಒಳಮೀಸಲಾತಿ ಅನುಷ್ಠಾನಕ್ಕಾಗಿ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿದ ದಲಿತ ಸಚಿವರ ನಿಯೋಗ
ಬೆಂಗಳೂರು : ನೇಮಕಾತಿಯಲ್ಲಿ ಒಳ ಮೀಸಲಾತಿ ಅನುಷ್ಠಾನ ಮಾಡುವ ಕುರಿತು, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಆಹಾರ ಸಚಿವ ಕೆ.ಎಚ್.ಮುನಿಯಪ್ಪ ಹಾಗೂ ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ ನೇತೃತ್ವದಲ್ಲಿ ದಲಿತ ಸಮುದಾಯದ ಶಾಸಕರು, ಮಾಜಿ ಸಚಿವರು ಹಾಗೂ ಮಾಜಿ ಸಂಸದರು ಭೇಟಿ ಮಾಡಿ, ಚರ್ಚಿಸಿದ್ದಾರೆ. ಒಮ್ಮತದ ಅಭಿಪ್ರಾಯದ ಮೂಲಕ ಮೀಸಲಾತಿ ಹಂಚಿಕೆ ಮಾಡಿಕೊಳ್ಳಬೇಕು. ಪರಿಶಿಷ್ಟ ಜಾತಿಯ ನೂರೊಂದು ಸಮುಯದಾಯಗಳಿಗೂ ನ್ಯಾಯಯುತವಾಗಿ ಮೀಸಲಾತಿ ಹಂಚಿಕೆ ಮಾಡಿಕೊಳ್ಳುವ ಕುರಿತು ಮುಖ್ಯಮಂತ್ರಿಗಳ ಗಮನಕ್ಕೆ ತರುತ್ತೇನೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಸಚಿವರಾದ ಆರ್.ಬಿ.ತಿಮ್ಮಾಪುರ, ಮಾಜಿ ಸಚಿವ ಎಚ್.ಆಂಜನೇಯ, ಚಂದ್ರಪ್ಪ, ಎಲ್.ಹನುಮಂತಯ್ಯ, ಶಾಸಕ ಶ್ರೀನಿವಾಸ್, ಧರ್ಮಸೇನ್, ಮಂಜುನಾಥ್ ಮತ್ತಿತರರು ಉಪಸ್ಥಿತರಿದ್ದರು.
ನೀಟ್ ಲೀ ಎಐ | ನೀಟ್, ಸಿಇಟಿ ವಿದ್ಯಾರ್ಥಿಗಳಿಗೆ ಅತ್ಯುತ್ತಮ ಅಪ್ಲಿಕೇಶನ್; ಶಿವಮೊಗ್ಗದ ಇಂಜಿನಿಯರ್ ನಾಫಿ ಸಾಧನೆ
ಬೆಂಗಳೂರು : ಶಿವಮೊಗ್ಗದ ಯುವ ಸಾಫ್ಟ್ ವೇರ್ ಇಂಜಿನಿಯರ್ ನಾಫಿ ಅವರು ಅಭಿವೃದ್ಧಿಪಡಿಸಿದ ‘ನೀಟ್ ಲೀ ಎಐ’ ಎಂಬ ಆಧುನಿಕ ಶೈಕ್ಷಣಿಕ ಅಪ್ಲಿಕೇಶನ್ ಇದೀಗ ನೀಟ್, ಜೆಇಇ ಮತ್ತು ಸಿಇಟಿಂತಹ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಸಿದ್ಧತೆ ನಡೆಸುತ್ತಿರುವ ವಿದ್ಯಾರ್ಥಿಗಳಿಗೆ ಅತ್ಯುತ್ತಮ ನೆರವಾಗುತ್ತಿದೆ. ಇಂಟರ್ನೆಟ್ ಜಗತ್ತಿನಲ್ಲಿ ಇಂತಹ ಅನೇಕ ಅಪ್ಲಿಕೇಶನ್ಗಳು ಲಭ್ಯವಿದ್ದರೂ, ‘ನೀಟ್ ಲೀ ಎಐ’ ತನ್ನ ಸರಳ ಬಳಕೆ, ಸ್ಪಷ್ಟ ಮಾರ್ಗದರ್ಶನ ಹಾಗೂ ಪರಿಣಾಮಕಾರಿ ಅಧ್ಯಯನ ವಿಧಾನಗಳಿಂದ ವಿಶೇಷ ಗಮನ ಸೆಳೆಯುತ್ತಿದೆ. ಈ ಅಪ್ಲಿಕೇಶನ್ನಲ್ಲಿ ಕೃತಕ ಬುದ್ಧಿಮತ್ತೆ ತಂತ್ರಜ್ಞಾನವನ್ನು ಬಳಸಿಕೊಂಡು ವಿದ್ಯಾರ್ಥಿಗಳಿಗೆ ವೈಯಕ್ತಿಕ ಅಧ್ಯಯನ ಮಾರ್ಗದರ್ಶನ, ಅಭ್ಯಾಸ ಪ್ರಶ್ನೆಗಳು, ಮಾಕ್ ಟೆಸ್ಟ್ ಗಳು ಹಾಗೂ ತಕ್ಷಣದ ಫಲಿತಾಂಶ ವಿಶ್ಲೇಷಣೆ ನೀಡಲಾಗುತ್ತದೆ. ವಿದ್ಯಾರ್ಥಿಗಳ ಸಾಧನೆ ಮತ್ತು ದುರ್ಬಲ ವಿಷಯಗಳನ್ನು ವಿಶ್ಲೇಷಿಸಿ ಅವರಿಗೆ ಸೂಕ್ತ ಅಧ್ಯಯನ ಯೋಜನೆಯನ್ನು ನೀಡುವುದು ಇದರ ಮುಖ್ಯ ವೈಶಿಷ್ಟ್ಯವಾಗಿದೆ. ಇಂಜಿನಿಯರ್ ನಾಫಿ ಅವರ ಪ್ರಕಾರ, ದುಬಾರಿ ಕೋಚಿಂಗ್ ಕೇಂದ್ರಗಳಿಗೆ ತೆರಳಲು ಸಾಧ್ಯವಾಗದ ವಿದ್ಯಾರ್ಥಿಗಳನ್ನು ಗಮನದಲ್ಲಿಟ್ಟುಕೊಂಡೇ ಈ ಅಪ್ಲಿಕೇಶನ್ ರೂಪಿಸಲಾಗಿದೆ. ಗ್ರಾಮೀಣ ಹಾಗೂ ಹಿಂದುಳಿದ ಪ್ರದೇಶಗಳ ವಿದ್ಯಾರ್ಥಿಗಳಿಗೆ ಇದು ವಿಶೇಷವಾಗಿ ಉಪಯುಕ್ತವಾಗಿದೆ. ಈ ವೇದಿಕೆ ವಿದ್ಯಾರ್ಥಿಗಳ ಸಮಯ ಬಳಕೆ, ಪ್ರಶ್ನೆಗಳ ಉತ್ತರಿಸುವ ಸಾಮಥ್ರ್ಯ ಮತ್ತು ವಿಷಯವಾರು ದುರ್ಬಲತೆಗಳನ್ನು ವಿಶ್ಲೇಷಿಸಿ ಉತ್ತಮ ತಂತ್ರವನ್ನು ಸೂಚಿಸುತ್ತದೆ ಎಂದು ತಿಳಿಸಿದ್ದಾರೆ. ನೀಟ್ ಲೀ ಎಐಯ ಪ್ರಮುಖ ವೈಶಿಷ್ಟ್ಯಗಳಲ್ಲಿ ಮಾಕ್ ಟೆಸ್ಟ್, ಅಭ್ಯಾಸ ಪ್ರಶ್ನೆಗಳು, ತಕ್ಷಣದ ರ್ಯಾಂಕ್ ಅಂದಾಜು, ದಿನನಿತ್ಯದ ಅಧ್ಯಯನ ಗುರಿ ಮತ್ತು ವಿವರವಾದ ಪ್ರಗತಿ ವರದಿ ಸೇರಿವೆ. ಪ್ರತಿಯೊಂದು ಪರೀಕ್ಷೆಯ ನಂತರ ವಿದ್ಯಾರ್ಥಿಗಳಿಗೆ ಸಂಪೂರ್ಣ ವಿಶ್ಲೇಷಣಾ ವರದಿ ನೀಡಲಾಗುತ್ತದೆ. ಜೊತೆಗೆ ಎಐ ಆಧಾರಿತ ಡೌಟ್ ಕ್ಲಿಯರಿಂಗ್ ವ್ಯವಸ್ಥೆಯ ಮೂಲಕ ವಿದಾ-್ಯರ್ಥಿಗಳು ತಮ್ಮ ಸಂದೇಹಗಳನ್ನು ದಾಖಲಿಸಿ ತಕ್ಷಣ ಉತ್ತರ ಪಡೆಯಬಹುದು ಎಂದು ನಾಫಿ ಹೇಳಿದ್ದಾರೆ. ಅನೇಕ ವಿದ್ಯಾರ್ಥಿಗಳು ಈ ಅಪ್ಲಿಕೇಶನ್ ಬಳಸಿ ಉತ್ತಮ ಅನುಭವ ಹೊಂದಿರುವುದಾಗಿ ತಿಳಿಸಿದ್ದಾರೆ. ಮುಂದಿನ ದಿನಗಳಲ್ಲಿ ಲೈವ್ ಆನ್ಲೈನ್ ತರಗತಿಗಳು, ವಿಡಿಯೋ ಉಪನ್ಯಾಸಗಳು ಮತ್ತು ಪೋಷಕರಿಗಾಗಿ ಪ್ರಗತಿ ಟ್ರ್ಯಾಕಿಂಗ್ ವ್ಯವಸ್ಥೆಯನ್ನು ಸೇರಿಸುವ ಯೋಜನೆ ಇದೆ. ಇತರೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನೂ ಈ ವೇದಿಕೆಯಲ್ಲಿ ಸೇರಿಸುವ ಉದ್ದೇಶವಿದೆ ಎಂದು ನಾಫಿ ತಿಳಿಸಿದ್ದಾರೆ. ಈ ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಹಾಗೂ ಬಳಸಲು ಮೊದಲು ಲಾಗಿನ್ ಮಾಡಬೇಕು. ಹೆಚ್ಚಿನ ಮಾಹಿತಿಗಾಗಿ ವಿದ್ಯಾರ್ಥಿಗಳು ವೆಬ್ಸೈಟ್ neetlyai.in ಗೆ ಭೇಟಿ ನೀಡಬಹುದು ಎಂದು ನಾಫಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮುಂದಿನ ಎರಡು ವರ್ಷಗಳಲ್ಲಿ ಐದು ಲಕ್ಷ ಸ್ವತ್ತುಗಳ ಪೋಡಿ ದುರಸ್ತಿ ಗುರಿ : ಕೃಷ್ಣ ಬೈರೇಗೌಡ
ಕಂದಾಯ ಸೇವೆಗಳ ಗ್ಯಾರಂಟಿ ಸಮರ್ಪಣಾ ಸಮಾವೇಶ
Kalaburagi | ನೋಟಿಸ್ ನೀಡದೆ ಕಾಮಗಾರಿ ಆರೋಪ : ರೈಲ್ವೆ ಅಧಿಕಾರಿಗಳ ವಿರುದ್ಧ ಎಫ್ಐಆರ್
ಕಲಬುರಗಿ: ನೋಟಿಸ್ ನೀಡದೆ ಹೊಲಗಳಲ್ಲಿ ರೈಲ್ವೆ ಇಲಾಖೆಯ ಕಾಮಗಾರಿ ನಡೆಸಿದ ಆರೋಪದ ಮೇರೆಗೆ ಮೂವರು ರೈಲ್ವೆ ಅಧಿಕಾರಿಗಳು ಸೇರಿದಂತೆ ಇತರರ ವಿರುದ್ಧ ವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನೈಋತ್ಯ ರೈಲ್ವೆ ಕನ್ಸ್ಟ್ರಕ್ಷನ್ ವಿಭಾಗದ ಸಹಾಯಕ ಮುಖ್ಯ ಎಂಜಿನಿಯರ್ ರಾಮಾಶ್ರಯ ಝಾ ಸತ್ಯೇಂದ್ರ ಝಾ (51), ಬಿಹಾರ ರಾಜ್ಯದ ಪಟ್ನಾ ನಿವಾಸಿಯಾಗಿರುವ ಸೀನಿಯರ್ ಸೆಕ್ಷನ್ ಇಂಜಿನಿಯರ್ ಹಿಮಾಂಶುಕುಮಾರ್ ಮೌಜಿ ಮಾಲಕರ (40), ಮತ್ತೊಬ್ಬ ಸೀನಿಯರ್ ಸೆಕ್ಷನ್ ಇಂಜಿನಿಯರ್ ಜಗ್ಗು ಮಾಹಂತಿ (49) ಸೇರಿದಂತೆ ಇತರರ ವಿರುದ್ಧ ಪ್ರಕರಣ ದಾಖಲಾಗಿದೆ. ವಾಡಿ ಠಾಣೆ ವ್ಯಾಪ್ತಿಯ ಹಲಕರ್ಟಿ ಗ್ರಾಮದ ಸರ್ವೇ ನಂ. 283ರಲ್ಲಿ ಖಾಜಮ್ಮ ಮುಹಮ್ಮದ್ ಅಲಿಸಾಬ್ ಅವರ ಹೊಲದಲ್ಲಿ ನೋಟಿಸ್ ನೀಡದೆ ಗದಗ ರೈಲ್ವೆ ಹಳಿ ಕಾಮಗಾರಿ ನಡೆಸಲಾಗುತ್ತಿತ್ತು ಎನ್ನಲಾಗಿದೆ. ಸುತ್ತಮುತ್ತಲಿನ ಜಮೀನಿನ ಮಾಲಕರು ಪರಿಹಾರ ಹಣ ದೊರಕಿಲ್ಲವೆಂದು ಆರೋಪಿಸಿದ್ದಾರೆ. ಅತಿಕ್ರಮ ಪ್ರವೇಶ ಮಾಡಿ ಕಾಮಗಾರಿ ಮಾಡಲು ಯತ್ನಿಸಿದ್ದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ವಾಡಿ ನಿವಾಸಿ ಮಲ್ಲಯ್ಯ ಹಣಮಯ್ಯ ಗುತ್ತೇದಾರ್ ನೀಡಿದ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ ಎಂದು ತಿಳಿದುಬಂದಿದೆ.
ಬೆಂಗಳೂರು : ಮಾದಕವಸ್ತು ಸಂಗ್ರಹ ಹಾಗೂ ಮಾರಾಟ ಪ್ರಕರಣದಲ್ಲಿ ಬಂಧನಕ್ಕೀಡಾಗಿದ್ದ ಇಬ್ಬರು ನೈಜೀರಿಯಾ ಪ್ರಜೆಗಳನ್ನು ಬಿಡುಗಡೆಗೊಳಿಸಿರುವ ಹೈಕೋರ್ಟ್, ಅಧಿಕೃತ ದಾಖಲೆಗಳಿಲ್ಲದೆ ಕಳೆದೊಂದು ದಶಕದಿಂದ ಭಾರತದಲ್ಲಿ ನೆಲೆಸಿರುವ ಅರ್ಜಿದಾರ ವಿದೇಶಿಗರನ್ನು ಬಿಡುಗಡೆಗೊಂಡ ನಂತರ ದೇಶದಿಂದ ಗಡಿಪಾರು ಮಾಡಲು ವಿದೇಶಿಯರ ಪ್ರಾದೇಶಿಕ ನೋಂದಣಿ ಕಚೇರಿಗೆ (ಎಫ್ಆರ್ಆರ್ಒ) ಹಸ್ತಾಂತರಿಸಬೇಕು ಎಂದು ಆದೇಶಿಸಿದೆ. ಅಕ್ರಮವಾಗಿ ಬಂಧನದಲ್ಲಿರಿಸಲಾಗಿರುವ ನಮ್ಮನ್ನು ಬಿಡುಗಡೆ ಮಾಡಲು ಪೊಲೀಸರಿಗೆ ನಿರ್ದೇಶಿಸಬೇಕು ಎಂದು ಕೋರಿ ನೈಜಿರಿಯಾ ಪ್ರಜೆಗಳಾದ (ಸದ್ಯ ಕೋಗಿಲು ಲೇ ಔಟ್ ವಿಳಾಸ ಹೊಂದಿರುವ) ಇಮೆಕಾ ಜೇಮ್ಸ್ ಐವೊಬಾ ಹಾಗೂ ವುಡೆರಿಕ್ ಫಿಡೆಲಿಸ್ ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿ ವಿಚಾರಣೆ ಪೂರ್ಣಗೊಳಿಸಿ ಕಾಯ್ದಿರಿಸಿದ್ದ ತೀರ್ಪನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಬುಧವಾರ ಪ್ರಕಟಿಸಿದ್ದು, ಅರ್ಜಿಯನ್ನು ಭಾಗಶಃ ಪುರಸ್ಕರಿಸಿದೆ. ಮುಕ್ತ ನ್ಯಾಯಾಲಯದಲ್ಲಿ ತೀರ್ಪಿನ ಸಾರಾಂಶ ಓದಿದ ನ್ಯಾಯಪೀಠ, ಅರ್ಜಿದಾರರಿಗೆ ನೀಡಲಾದ ಬಂಧನದ ಕಾರಣಗಳು ದೋಷಪೂರಿತವಾಗಿರುವುದರಿಂದ ಹಾಗೂ ಬಂಧನದ ಕಾರಣಗಳಿಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಆದೇಶದ ಉಲ್ಲಂಘನೆಯಾಗಿರುವುದರಿಂದ ಅರ್ಜಿದಾರರು ಬಿಡುಗಡೆ ಹೊಂದಲು ಅರ್ಹರಾಗಿದ್ದಾರೆ. ಅರ್ಜಿದಾರರು ಬಿಡುಗಡೆಯಾದ ತಕ್ಷಣ, ಯಾವುದೇ ಅಧಿಕೃತ ದಾಖಲೆಗಳಿಲ್ಲದೆ 10 ವರ್ಷಗಳಿಗೂ ಹೆಚ್ಚು ಕಾಲ ದೇಶದಲ್ಲಿ ಅಕ್ರಮವಾಗಿ ನೆಲೆಸಿರುವ ಕಾರಣಕ್ಕಾಗಿ, ಅವರ ವಿರುದ್ಧದ ಕಾನೂನು ಪ್ರಕ್ರಿಯೆ ಹಿಂಪಡೆಯುವುದಕ್ಕೆ ಹಾಗೂ ಗಡೀಪಾರು ಮಾಡುವುದಕ್ಕೆ ಸಂಬಂಧಿಸಿದ ಪ್ರಮಾಣಿತ ಕಾರ್ಯಾಚರಣೆ ವಿಧಾನದ (ಎಸ್ಒಪಿ) ಪ್ರಕಾರ ಮುಂದಿನ ಕ್ರಮ ಕೈಗೊಳ್ಳಲು ಅವರನ್ನು ಸಂಬಂಧಪಟ್ಟ ವ್ಯಾಪ್ತಿಯ ಎಫ್ಆರ್ಆರ್ಒಗೆ ಹಸ್ತಾಂತರಿಸಬೇಕು ಎಂದು ಆದೇಶಿಸಿದೆ. ಇದೇ ವೇಳೆ, ಎಸ್ಒಪಿಯಲ್ಲಿ ತಿಳಿಸಿರುವಂತೆ ರಾಜ್ಯ ಮಟ್ಟದ ಸ್ಕ್ರೀನಿಂಗ್ ಸಮಿತಿ ಮತ್ತು ಜಿಲ್ಲಾ ಮಟ್ಟದ ಸ್ಕ್ರೀನಿಂಗ್ ಸಮಿತಿಯನ್ನು ರಚಿಸಬೇಕು ಹಾಗೂ ಸಮಿತಿ ರಚನೆಯ ಕುರಿತು ಈ ಆದೇಶದ ಪ್ರತಿ ಸ್ವೀಕರಿಸಿದ ದಿನಾಂಕದಿಂದ ನಾಲ್ಕು ತಿಂಗಳೊಳಗೆ ನ್ಯಾಯಾಲಯಕ್ಕೆ ವರದಿ ಸಲ್ಲಿಸಬೇಕು ಎಂದು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶಿಸಿದೆ. ವಿಸ್ತೃತ ತೀರ್ಪಿನ ಪ್ರತಿ ಇನ್ನಷ್ಟೇ ಲಭ್ಯವಾಗಬೇಕಿದೆ. ನಾಗರಿಕ ಕೇಂದ್ರಿತವಲ್ಲ: ಭಾರತದ ಸಂವಿಧಾನದ ವಿಧಿ 22(1)ರ ಪ್ರಕಾರ, ಬಂಧಿಸಲ್ಪಟ್ಟ ಪ್ರತಿಯೊಬ್ಬ ವ್ಯಕ್ತಿಗೂ ಆತನ ಬಂಧನಕ್ಕೆ ಕಾರಣಗಳನ್ನು ತಿಳಿಸುವುದು ಕಡ್ಡಾಯವಾಗಿದೆ. ಬಂಧನದ ಕಾರಣಗಳನ್ನು ತಿಳಿಸಬೇಕೆನ್ನುವುದು ಒಂದು ಕಡ್ಡಾಯವಾದ ಸಾಂವಿಧಾನಿಕ ರಕ್ಷಣೆಯಾಗಿದೆಯೇ ಹೊರತು ಅದು ಔಪಚಾರಿಕ ಕಾರ್ಯವಿಧಾನವಷ್ಟೇ ಅಲ್ಲ. 22ನೇ ವಿಧಿಯು ಕೇವಲ ನಾಗರಿಕ ಕೇಂದ್ರಿತವಲ್ಲದೆ, ವ್ಯಕ್ತಿ ಕೇಂದ್ರಿತವಾಗಿದೆ. ಈ ಹಿನ್ನೆಲೆಯಲ್ಲಿ ಅದರ ಅಡಿ ದೊರೆತಿರುವ ಸಾಂವಿಧಾನಿಕ ರಕ್ಷಣೆಯು ಭಾರತದ ಭೂಪ್ರದೇಶದಲ್ಲಿರುವ ವಿದೇಶಿಗರಿಗೂ ಸೇರಿದಂತೆ ದೇಶದ ಎಲ್ಲ ಪ್ರಜೆಗಳಿಗೂ ಅನ್ವಯಿಸುತ್ತದೆ ಎಂದು ಹೈಕೋರ್ಟ್ ಆದೇಶದಲ್ಲಿ ಅಭಿಪ್ರಾಯಪಟ್ಟಿದೆ. ಬಂಧನದ ಕಾರಣಗಳನ್ನು ತಿಳಿಸಲು ಕಾನೂನು ಯಾವುದೇ ಕಟ್ಟುನಿಟ್ಟಾದ ಸ್ವರೂಪವನ್ನು ನಿಗದಿಪಡಿಸಿಲ್ಲ. ಬಂಧಿತ ವ್ಯಕ್ತಿಗೆ ಆತನ ಬಂಧನದ ಆಧಾರದ ಬಗ್ಗೆ ಅರಿವು ಮೂಡಿಸಿದರೆ, ಅದು ಕಾನೂನಿನ ಗಮನಾರ್ಹ ಪಾಲನೆಯೆಂದು ಪರಿಗಣಿಸಲ್ಪಡುತ್ತದೆ. ಇಂತಹ ಪ್ರಕರಣಗಳಲ್ಲಿ ನ್ಯಾಯಾಂಗ ವಿಮರ್ಶೆಯು ಬಂಧನದ ಕಾರಣಗಳನ್ನು ತಿಳಿಸಲಾಗಿದೆಯೇ ಅಥವಾ ಇಲ್ಲವೇ ಎಂಬುದಕ್ಕಷ್ಟೇ ಸೀಮಿತವಾಗಿರುತ್ತದೆಯೇ ಹೊರತು ಆ ಕಾರಣಗಳು ಸಮರ್ಪಕವಾಗಿವೆಯೇ ಅಥವಾ ಸರಿಯಾಗಿವೆಯೇ ಎಂಬ ಬಗ್ಗೆ ಅಲ್ಲ ಎಂದು ನ್ಯಾಯಾಲಯ ಹೇಳಿದೆ. ಉದ್ದೇಶಪೂರ್ವಕ ಕೃತ್ಯ: ತೀರ್ಪು ಪ್ರಕಟಿಸಿದ ಬಳಿಕ ನ್ಯಾಯಾಲಯದಲ್ಲಿ ಹಾಜರಿದ್ದ ಉಪ ಸಾಲಿಸಿಟರ್ ಜನರಲ್ ಎಚ್. ಶಾಂತಿಭೂಷಣ್ ಅವರು, ಬಹುಶಃ ಎಸ್ಒಪಿಗೆ ಸಂಬಂಧಿಸಿದಂತೆ ದೇಶದಲ್ಲೇ ಮೊದಲ ತೀರ್ಪು ಇದಾಗಿದೆ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಇಂಥ ಜನರು ಒಂದಿಲ್ಲೊಂದು ಅಪರಾಧ ಪ್ರಕರಣಗಳಲ್ಲಿ ಉದ್ದೇಶಪೂರ್ವಕವಾಗಿಯೇ ಸಿಲುಕಿಕೊಳ್ಳುತ್ತಾರೆ. ಆನಂತರ ಪ್ರಕರಣದ ವಿಚಾರಣೆ ಬಾಕಿ ಇದೆ ಎಂಬ ನೆಪದಲ್ಲಿ ಅವಧಿ ಮೀರಿ ಇಲ್ಲಿಯೇ ಉಳಿದುಕೊಳ್ಳಲು ಯತ್ನಿಸುತ್ತಾರೆ. ಇದಕ್ಕೆ ಎಸ್ಒಪಿಯೇ ಸರಿಯಾಗಿದೆ ಎಂದು ಮೌಖಿಕವಾಗಿ ಹೇಳಿತು. ಪ್ರಕರಣದ ಹಿನ್ನೆಲೆ: ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಆರೋಪದಲ್ಲಿ ಅರ್ಜಿದಾರರನ್ನು 2024ರ ಮೇ 12ರಂದು ನಗರದ ಸಂಪಿಗೆಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದರು. ಈ ವೇಳೆ, ಆರೋಪಿಗಳಿಂದ 400 ಗ್ರಾಂ ಎಂಡಿಎಂಎ ವಶಪಡಿಸಿಕೊಳ್ಳಲಾಗಿತ್ತು. ಈ ಸಂಬಂಧ ಅವರ ವಿರುದ್ಧ ಎನ್ಡಿಪಿಎಸ್ ಕಾಯ್ದೆ ಹಾಗೂ ವಿದೇಶಿಯರ ಕಾಯ್ದೆ ಅಡಿ ಪ್ರಕರಣ ದಾಖಲಿಸಲಾಗಿತ್ತು. ಪ್ರಕರಣವು ಬೆಂಗಳೂರಿನ ಎನ್ಡಿಪಿಎಸ್ ವಿಶೇಷ ನ್ಯಾಯಾಲಯದಲ್ಲಿ ವಿಚಾರಣಾ ಹಂತದಲ್ಲಿತ್ತು. ಇದರಿಂದ ಅರ್ಜಿದಾರರು ತಮ್ಮ ಬಂಧನವನ್ನು ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಈ ಹಿಂದೆ ಅರ್ಜಿ ವಿಚಾರಣೆ ನಡೆಸಿದ್ದ ಹೈಕೋರ್ಟ್, ಅಧಿಕೃತ ವೀಸಾ ಹಾಗೂ ಪಾಸ್ಪೋರ್ಟ್ ಇಲ್ಲದೆ ಅಕ್ರಮವಾಗಿ ನೆಲೆಸಿರುವ ವಿದೇಶಿಯರಿಂದ ದೇಶದ ಭದ್ರತೆಗೆ ಅಪಾಯ ಎಂದು ಆತಂಕ ವ್ಯಕ್ತಪಡಿಸಿತ್ತು. ಜತೆಗೆ, ಎಫ್ಆರ್ಆರ್ಒ ನಲ್ಲಿ ನೋಂದಣಿ ಮಾಡಿಸದೆ ಬೆಂಗಳೂರು ಮಹಾನಗರದಲ್ಲಿ ಸಾಕಷ್ಟು ವಿದೇಶಿ ಪ್ರಜೆಗಳು ಠಿಕಾಣಿ ಹೂಡಿದ್ದಾರೆ ಎಂದರೆ ಹೇಗೆ? ಇಂಥದನ್ನು ನಿಭಾಯಿಸುವಲ್ಲಿ ರಾಜ್ಯ ಸರ್ಕಾರ ಕರ್ತವ್ಯ ಲೋಪ ಎಸಗಿದಂತಲ್ಲವೇ ಎಂದು ಪ್ರಶ್ನಿಸಿತ್ತಲ್ಲದೆ, ಮಾನ್ಯತೆ ಹೊಂದಿರುವ ವೀಸಾ ಇಲ್ಲದೆ, ಎಫ್ಆರ್ಆರ್ಒ ಕಚೇರಿಯಲ್ಲಿ ನೋಂದಣಿ ಮಾಡಿಸದೆ ನಗರದಲ್ಲಿ ಅವಧಿ ಮೀರಿ ವಾಸಿಸುತ್ತಿರುವ ವಿದೇಶಿ ಪ್ರಜೆಗಳನ್ನು ಪತ್ತೆಹಚ್ಚಲು ಕೈಗೊಂಡಿರುವ ಕ್ರಮಗಳ ಕುರಿತಂತೆ ರಾಜ್ಯ ಸರ್ಕಾರದಿಂದ ವಿವರಣೆ ಕೇಳಿತ್ತು.
ಬ್ರಿಟನ್ ಬಳಿಕ ಅಮೆರಿಕಗೆ ಕೈಕೊಟ್ಟ ಸ್ಪೇನ್, ಕುತೂಹಲ ಕೆರಳಿಸಿದ ಸ್ಪೇನ್ ನಡೆ | Operation Roaring Lion
ಇರಾನ್ ಮತ್ತು ಅಮೆರಿಕ ಯುದ್ಧದ ವಿಚಾರದಲ್ಲಿ ಎಲ್ಲಾ ಕಡೆಯೂ ಸಾಲು ಸಾಲು ಚರ್ಚೆಗಳು ಈಗ ನಡೆಯುತ್ತಾ ಇವೆ. ಈ ಯುದ್ಧವನ್ನು ಬೆಂಬಲಿಸುವ ದೇಶಗಳ ಜೊತೆಗೆ, ಯುದ್ಧ ಬೇಡವಾಗಿತ್ತು ಎಂಬ ಅಭಿಪ್ರಾಯ ವ್ಯಕ್ತಪಡಿಸುತ್ತಿರುವ ದೇಶಗಳು ಕೂಡ ಹೆಚ್ಚಾಗಿವೆ. ಅದರಲ್ಲೂ ಅಮೆರಿಕ ನಂಬಿರುವ &ಅಮೆರಿಕದ ಜೊತೆಗೆ ಶತಮಾನಗಳಿಂದ ಸ್ನೇಹ ಉಳಿಸಿಕೊಂಡು ಬಂದಿರುವ ಯುರೋಪ್ ದೇಶಗಳಲ್ಲೇ ಇದೀಗ ಭಿನ್ನರಾಗ ಶುರುವಾಗಿದೆ.
ಪೂಂಚ್ನಲ್ಲಿ ಭಯೋತ್ಪಾದಕರ ಒಳನುಸುಳುವ ಯತ್ನ ವಿಫಲಗೊಳಿಸಿದ ಸೇನೆ
ಶ್ರೀನಗರ, ಮಾ. 4: ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯ ಭಿಂಬೆರ್ ಗಾಲಿ ಪ್ರದೇಶದಲ್ಲಿ ಭಯೋತ್ಪಾದಕರ ಒಳನುಸುಳುವ ಪ್ರಯತ್ನವೊಂದನ್ನು ಸೈನಿಕರು ವಿಫಲಗೊಳಿಸಿದ್ದಾರೆ ಎಂದು ಸೇನೆ ಬುಧವಾರ ತಿಳಿಸಿದೆ. ‘‘ವಿಶ್ವಾಸಾರ್ಹ ಬೇಹುಗಾರಿಕಾ ಮಾಹಿತಿಗಳನ್ನು ಆಧರಿಸಿ ನಿರಂತರ ಕಣ್ಗಾವಲನ್ನು ಇರಿಸಿದ ಬಳಿಕ, ಭಿಂಬೆರ್ ಗಾಲಿ ಪ್ರದೇಶದಲ್ಲಿ ಬುಧವಾರ ಮುಂಜಾನೆ ಭಯೋತ್ಪಾದಕರ ಚಲನವಲನವನ್ನು ಪತ್ತೆಹಚ್ಚಲಾಯಿತು’’ ಎಂದು ಜಮ್ಮುವಿನಲ್ಲಿ ನೆಲೆ ಹೊಂದಿರುವ ಭಾರತೀಯ ಸೇನೆಯ ವೈಟ್ ನೈಟ್ ಕಾರ್ಪ್ಸ್ ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ತಿಳಿಸಿದೆ. ಆಗ ಕಾರ್ಪ್ಸ್ನ ಸೈನಿಕರು ನಿರ್ಣಾಯಕವಾಗಿ ಪ್ರತಿಕ್ರಿಯಿಸಿದರು ಹಾಗೂ ತಮ್ಮ ಶ್ರೇಷ್ಠ ಯುದ್ಧಕೌಶಲವನ್ನು ಪ್ರದರ್ಶಿಸಿ ಅವರನ್ನು ಹಿಮ್ಮೆಟ್ಟಿಸಿದರು ಎಂದು ಸಂದೇಶ ತಿಳಿಸಿದೆ. ‘‘ಸಂಘಟಿತ ಭೂ ಕಾರ್ಯಾಚರಣೆಯ ಮೂಲಕ ಶತ್ರುವಿನ ಪಿತೂರಿಯನ್ನು ಪರಿಣಾಮಕಾರಿಯಾಗಿ ವಿಫಲಗೊಳಿಸಲಾಯಿತು’’ ಎಂದು ಸೇನೆ ತಿಳಿಸಿದೆ.
ಇರಾನ್ ಯುದ್ಧಕ್ಕೆ ಶೀಘ್ರದಲ್ಲೇ ಬ್ರೇಕ್ ಹಾಕಲು ಜಾಗತಿಕ ಮಟ್ಟದಲ್ಲಿ ಶುರುವಾಯ್ತು ಒತ್ತಡ | Operation Roaring Lion
ಆಧುನಿಕ ಕಾಲದಲ್ಲಿ ಯುದ್ಧಗಳನ್ನು ಮಾಡಬಾರದು, ಶಾಂತಿಯುತ ಮಾರ್ಗವೇ ಪರಿಹಾರ ಎಂದು ಭಾರತ ಪದೇ ಪದೇ ಪ್ರತಿಪಾದನೆ ಮಾಡುತ್ತಾ ಬರುತ್ತಿದೆ. ಅದರಲ್ಲೂ ರಷ್ಯಾ ಮತ್ತು ಉಕ್ರೇನ್ ಮಧ್ಯೆ ಯುದ್ಧ ಶುರುವಾದ ಸಮಯದಲ್ಲಿ ಭಾರತದ ಪ್ರಧಾನಿ ಮೋದಿ ಅವರು ಹೇಳಿದ್ದ ಮಾತುಗಳು ಇಡೀ ಜಗತ್ತಿಗೆ ಮಾದರಿ ಆಗಿದ್ದವು. ನೇರವಾಗಿ ರಷ್ಯಾಗೆ ಕೂಡ ಭಾರತ ಇದೇ ಮಾತನ್ನು ಹೇಳಿ, ಉಕ್ರೇನ್ನ ವಿರುದ್ಧ
ಕಾಕುಬಾಳ | ಅಕ್ರಮ ಪಡಿತರ ಅಕ್ಕಿ ಜಪ್ತಿ
ವಿಜಯನಗರ, ಮಾ. 4: ತಾಲೂಕಿನ ಕಾಕುಬಾಳ ಗ್ರಾಮದ ಜೋಳದ ರಸ್ತೆ ಕರಿಯಮ್ಮನ ಗುಡಿ ಸಮೀಪ ಮನೆಯೊಂದರ ಮುಂದೆ ಅಕ್ರಮವಾಗಿ ಸಂಗ್ರಹಿಸಿಡಲಾಗಿದ್ದ ಪಡಿತರ ಅಕ್ಕಿಯನ್ನು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿ ಜಪ್ತಿ ಮಾಡಿದ್ದಾರೆ. ಯಾವುದೇ ಪರವಾನಗಿ ಇಲ್ಲದೆ ಅನಾಧಿಕೃತವಾಗಿ ಸಂಗ್ರಹಿಸಿಟ್ಟಿದ್ದ ಸುಮಾರು 2.10 ಲಕ್ಷ ರೂ. ಮೌಲ್ಯದ 60.80 ಕ್ವಿಂಟಲ್ ಪಡಿತರ ಅಕ್ಕಿಯನ್ನು ಜಪ್ತಿ ಮಾಡಲಾಗಿದೆ. ಈ ಕುರಿತು ಹೊಸಪೇಟೆ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಪಡಿತರ ಅಕ್ಕಿಯ ಅಕ್ರಮ ದಾಸ್ತಾನು ಮತ್ತು ಸಾಗಣೆ ಕಂಡುಬಂದಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು. ಸಾರ್ವಜನಿಕರು ಇಂತಹ ಕಾನೂನುಬಾಹಿರ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಬೇಕು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶಕ ರಿಯಾಜ್ ತಿಳಿಸಿದ್ದಾರೆ.
Chikkamagaluru | ಬಾಬಾ ಬುಡಾನ್ ದರ್ಗಾದಲ್ಲಿ ಉರೂಸ್ಗೆ ಚಾಲನೆ
ಶಾಖಾದ್ರಿ ನೇತೃತ್ವದಲ್ಲಿ ಆಚರಣೆಗೆ ಅವಕಾಶ ನೀಡದಿದ್ದಕ್ಕೆ ಅಸಮಾಧಾನ
ಕೆಪಿಎಸ್ಸಿ ಆಯ್ಕೆ ಪಟ್ಟಿ ವಿವಾದ | ಒಂದೇ ಕೊಠಡಿಯಲ್ಲಿ ಪರೀಕ್ಷೆ ಬರೆದ 15 ಮಂದಿ ಆಯ್ಕೆ
ಆಧಾರವಿಲ್ಲದೆ ಭ್ರಷ್ಟಾಚಾರದ ಆರೋಪ ಮಾಡುವುದು ಸರಿಯಲ್ಲ: ಕೆಪಿಎಸ್ಸಿ ಸ್ಪಷ್ಟನೆ
ರಾಯಚೂರು | ಮಾ.5ರಿಂದ ನವೋದಯ ಶಿಕ್ಷಣ ಸಂಸ್ಥೆಯಿಂದ ರಿಗೆಲ್-26 ವಾರ್ಷಿಕೋತ್ಸವ
ರಾಯಚೂರು: ನಗರದ ನವೋದಯ ಶಿಕ್ಷಣ ಸಂಸ್ಥೆಯಿಂದ ಮಾ.5ರಿಂದ 7ರ ವರೆಗೆ ರಿಗೆಲ್-26 ವಾರ್ಷಿಕೋತ್ಸವ ಹಾಗೂ ಇಫೋರಿಯಾ ಸಾಂಸ್ಕೃತಿಕ ಉತ್ಸವ ಆಯೋಜಿಸಲಾಗಿದೆ ಎಂದು ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಎಸ್.ಆರ್.ರೆಡ್ಡಿ ಹೇಳಿದರು. ಬುಧವಾರ ನವೋದಯ ಶಿಕ್ಷಣ ಸಂಸ್ಥೆಯ ಗ್ರಂಥಾಲಯ ಸಭಾಂಗಣದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾ.5ರ ಸಂಜೆ 6.30ಕ್ಕೆ ರಿಗೆಲ್ ಕಾರ್ಯಕ್ರಮವು ಕ್ಯಾಂಪಸ್ನ ಫುಡ್ ಕೋರ್ಟ್ ಬಳಿಯ ಬಯಲು ಮೈದಾನದಲ್ಲಿ ನಡೆಯಲಿದ್ದು, ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಡಾ.ಎಂ.ಹನುಮಂತಪ್ಪ ಅವರು ಉದ್ಘಾಟಿಸಲಿದ್ದಾರೆ. ಮಾ.6ರ ಬೆಳಿಗ್ಗೆ 10 ಗಂಟೆಗೆ ಸಂಸ್ಥೆಯ ಮುಖ್ಯ ಸಭಾಂಗಣದಲ್ಲಿ ವೈದ್ಯಕೀಯ, ದಂತ ಹಾಗೂ ಫಿಸಿಯೋಥೆರಪಿಸ್ಟ್ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಕಾರ್ಯಕ್ರಮ ನಡೆಯಲಿದ್ದು, ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ಸಂಸ್ಥೆಯ ಕುಲಪತಿ ಡಾ.ಭಗವಾನ್.ಬಿ.ಸಿ ಆಗಮಿಸಲಿದ್ದಾರೆ. ಸಂಜೆ 6ಕ್ಕೆ ಎಫೋರಿಯಾ ಸಾಂಸ್ಕೃತಿಕ ಉತ್ಸವ ನಡೆಯಲಿದ್ದು, ಮಹಾನಗರ ಪಾಲಿಕೆ ಆಯುಕ್ತ ಜುಬಿನ್ ಮಹೋಪಾತ್ರ ಆಗಮಿಸಲಿದ್ದಾರೆ ಎಂದು ಹೇಳಿದರು. ಮಾ.7ರಂದು 10.45ಕ್ಕೆ ಫಾರ್ಮರ್ಸಿ, ನರ್ಸಿಂಗ್, ಅಲೈಡ್ ವೈದ್ಯಕೀಯ ವಿಜ್ಞಾನಗಳ ಶಿಕ್ಷಣ ಹಾಗೂ ತಂತ್ರಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ಪದವಿಯನ್ನು ಧಾರವಾಡ ಭಾರತೀಯ ತಂತ್ರಜ್ಞಾನ ಸಂಸ್ಥೆ(ಐಐಟಿ)ಯ ನಿರ್ದೇಶಕ ಪ್ರೊ.ವೆಂಕಪ್ಪಯ್ಯ.ಆರ್.ದೇಸಾಯಿ ಅವರು ಪ್ರದಾನ ಮಾಡಲಿದ್ದಾರೆ. ಸಂಜೆ 7 ಗಂಟೆಗೆ ಬೆಂಗಳೂರಿನ ಸೆಹೆರ್ ಬ್ಯಾಂಡ್ ವತಿಯಿಂದ ಸಂಗೀತ ಸಂಜೆ ಕಾರ್ಯಕ್ರಮ ಜರುಗಲಿದೆ ಎಂದರು. ಈ ಸಂದರ್ಭದಲ್ಲಿ ಸಂಸ್ಥೆಯ ಪ್ರಮುಖರು, ಕಾಲೇಜಿನ ಭೋದಕ, ಬೋದಕೇತರ ಸಿಬ್ಬಂದಿ ಉಪಸ್ಥಿತರಿದ್ದರು.
ಇರಾನ್ ನ ಸರ್ವೋಚ್ಚ ನಾಯಕ ಆಯತುಲ್ಲಾ ಅಲಿ ಖಾಮಿನೈ ಹತ್ಯೆ; ಭಾರತದ ಮೌನವೇಕೆ?
ಭಾರತದ ಮೌನದ ಹಿಂದಿನ ಐದು ಭೌಗೋಳಿಕ ರಾಜಕೀಯ ಅಂಶಗಳು
Chikkamagaluru | ಇರಾನ್ನಲ್ಲಿ ನಾಪತ್ತೆಯಾಗಿದ್ದ ಕೊಪ್ಪ ಮೂಲದ ಯುವಕ ಪತ್ತೆ
ಚಿಕ್ಕಮಗಳೂರು, ಫೆ.4: ಇರಾನ್ ದೇಶದ ಮರ್ಚಂಟ್ ನೇವಿಯಲ್ಲಿ ತರಬೇತಿಗೆ ತೆರಳಿದ್ದ ಜಿಲ್ಲೆಯ ವಿದ್ಯಾರ್ಥಿ ನಿಶ್ಚಿತ್ ಸುರಕ್ಷಿತವಾಗಿದ್ದಾನೆ ಎಂದು ತಿಳಿದುಬಂದಿದೆ. ಇರಾನ್ ಯುದ್ಧ ಆರಂಭಗೊಂಡ ಬಳಿಕ ಆತ ಸಂಪರ್ಕಕ್ಕೆ ಸಿಗದೆ ನಾಪತ್ತೆಯಾಗಿದ್ದ ಹಿನ್ನೆಲೆಯಲ್ಲಿ ಆತನ ಪೋಷಕರು ಆತಂಕಕ್ಕೊಳಗಾಗಿ ಸರಕಾರದ ನೆರವು ಕೋರಿದ್ದರು. ಈ ವಿಚಾರವನ್ನು ಮಾಧ್ಯಮಗಳ ಮೂಲಕ ತಿಳಿದು ವಿದ್ಯಾರ್ಥಿಯ ಪತ್ತೆಗೆ ಕಾರ್ಯ ಪ್ರವೃತ್ತರಾದ ಅನಿವಾಸಿ ಭಾರತೀಯ ಸಮಿತಿಯ ಮಾಜಿ ಉಪಾಧ್ಯಕ್ಷೆ ಡಾ.ಆರತಿ ಕೃಷ್ಣ ಅವರು ಇರಾನ್ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಸಂಪರ್ಕಿಸಿದ್ದು, ವಿದ್ಯಾರ್ಥಿ ಸುರಕ್ಷಿತವಾಗಿರುವುದನ್ನು ಖಚಿತ ಪಡಿಸಿದ್ದಾರೆ. ಜಿಲ್ಲೆಯ ಕೊಪ್ಪ ತಾಲೂಕಿನ ಗಡಿಕಲ್ಲು ಗ್ರಾಮದ ನಿವಾಸಿ ಮಹೇಶ್ ಎಂಬವರ ಮಗ ನಿಶ್ಚಿತ್ ಇರಾನ್ನಲ್ಲಿ ನಾಪತ್ತೆಯಾಗಿದ್ದ ಯುವಕನಾಗಿದ್ದು, ಈತ ಕಳೆದ 5 ತಿಂಗಳ ಹಿಂದೆ ಇರಾನ್ನ ಮರ್ಚಂಟ್ ನೇವಿಯಲ್ಲಿ 5 ತಿಂಗಳ ತರಬೇತಿಗೆ ತೆರಳಿದ್ದ. ಸದ್ಯ ಇಸ್ರೇಲ್, ಅಮೆರಿಕ ಹಾಗೂ ಇರಾನ್ ನಡುವೆ ಯುದ್ಧ ಆರಂಭಗೊಂಡಿದ್ದು, ಯುದ್ಧ ಆರಂಭಕ್ಕೂ ಮುನ್ನ ಪೋಷಕರ ಸಂಪರ್ಕದಲ್ಲಿದ್ದ ನಿಶ್ಚಿತ್ ಯುದ್ಧ ಆರಂಭವಾದ ಬಳಿಕ ಪೋಷಕರ ಸಂಪರ್ಕಕ್ಕೆ ಬಂದಿರಲಿಲ್ಲ. ಈ ಹಿನ್ನೆಲೆಯಲ್ಲಿ ಕೊಪ್ಪದಲ್ಲಿರುವ ಆತನ ಪೋಷಕರು ತೀವ್ರ ಆತಂಕಕ್ಕೊಳಗಾಗಿದ್ದರು. ಅಲ್ಲದೆ ಜಿಲ್ಲಾಡಳಿತ, ರಾಜ್ಯ ಸರಕಾರ ಹಾಗೂ ಕೇಂದ್ರ ಸರಕಾರ ನಿಶ್ಚಿತ್ನನ್ನು ಶೀಘ್ರ ಪತ್ತೆ ಹಚ್ಚಿ ಸ್ವದೇಶಕ್ಕೆ ಕರೆ ತರಬೇಕು ಎಂದು ಮನವಿ ಮಾಡಿದ್ದರು. ಸದ್ಯ ನಿಶ್ಚಿತ್ ಇರಾನ್ನಲ್ಲಿ ಸುರಕ್ಷಿತವಾಗಿದ್ದಾನೆಂಬ ಖಚಿತ ಮಾಹಿತಿ ಲಭ್ಯವಾಗಿದ್ದು, ಈ ವಿಚಾರ ತಿಳಿದ ನಿಶ್ಷಿತ್ ಪೋಷಕರು ನಿಟ್ಟುಸಿರುವ ಬಿಟ್ಟಿದ್ದಾರೆ.
ಅಮೆರಿಕ ನೌಕಾಪಡೆ ತನ್ನ ಬಂದರು ಬಳಸುತ್ತಿದೆ ಎಂಬ ಆರೋಪ ತಳ್ಳಿಹಾಕಿದ ಭಾರತ
ಹೊಸದಿಲ್ಲಿ, ಮಾ.4: ಇರಾನ್ ವಿರುದ್ಧ ನಡೆಯುತ್ತಿರುವ ಯುದ್ಧದ ನಡುವೆ ಅಮೆರಿಕ ನೌಕಾಪಡೆ ತನ್ನ ಹಡಗುಗಳಿಗೆ ಭಾರತೀಯ ಬಂದರುಗಳನ್ನು ಬಳಸಲು ಅವಕಾಶ ನೀಡಲಾಗಿದೆ ಎಂಬ ಆರೋಪವನ್ನು ಭಾರತ ತಳ್ಳಿಹಾಕಿದೆ ಎಂದು Aljazeera ವರದಿ ಮಾಡಿದೆ. ಈ ಕುರಿತು ಸ್ಪಷ್ಟನೆ ನೀಡಿರುವ ವಿದೇಶಾಂಗ ವ್ಯವಹಾರಗಳ ಸಚಿವಾಲಯ, ಅಮೆರಿಕ ಮೂಲದ ಚಾನೆಲ್ ‘ಒನ್ ಅಮೆರಿಕಾ ನ್ಯೂಸ್ ನೆಟ್ವರ್ಕ್’ (ಒಎಎನ್) ನಲ್ಲಿ ಪ್ರಸಾರವಾಗಿರುವ ವರದಿ ಸಂಪೂರ್ಣವಾಗಿ ಸುಳ್ಳು ಹಾಗೂ ಆಧಾರರಹಿತ ಎಂದು ಹೇಳಿದೆ. ಸಂಘರ್ಷದ ಮಧ್ಯೆ ಅಮೆರಿಕದ ನೌಕಾ ಹಡಗುಗಳು ಭಾರತೀಯ ಬಂದರುಗಳನ್ನು ಬಳಸುತ್ತಿರಬಹುದು ಎಂದು ಒಎಎನ್ ವರದಿಯಲ್ಲಿ ಹೇಳಲಾಗಿತ್ತು. ‘ಭಾರತದ ಬಂದರುಗಳನ್ನು ಅಮೆರಿಕ ನೌಕಾಪಡೆ ಬಳಸುತ್ತಿದೆ’ ಎಂಬ ಅಮೆರಿಕ ಮೂಲದ ಚಾನೆಲ್ ಒಎಎನ್ ನಲ್ಲಿ ಮಾಡಲಾಗುತ್ತಿರುವ ಹಕ್ಕುಗಳು ಸುಳ್ಳು. ಇಂತಹ ಆಧಾರರಹಿತ ಹಾಗೂ ಕಟ್ಟುಕಥೆಗಳಂತಿರುವ ಆರೋಪಗಳ ಬಗ್ಗೆ ಎಚ್ಚರಿಕೆಯಿಂದಿರಬೇಕು ಎಂದು ವಿದೇಶಾಂಗ ಸಚಿವಾಲಯ ಹೇಳಿದೆ. ಭಾರತ ಆಯೋಜಿಸಿದ್ದ ಮಿಲಿಟರಿ ಕವಾಯತು ಮುಗಿಸಿ ಹೊರಡುವ ವೇಳೆ ಶ್ರೀಲಂಕಾ ಸಮೀಪ ಇರಾನಿನ ಯುದ್ಧನೌಕೆಯ ಮೇಲೆ ಅಮೆರಿಕದ ಜಲಾಂತರ್ಗಾಮಿ ದಾಳಿ ನಡೆದಿರುವ ಕುರಿತು ಹೆಚ್ಚುತ್ತಿರುವ ಪರಿಶೀಲನೆಯ ನಡುವೆಯೇ ಭಾರತದಿಂದ ಈ ಸ್ಪಷ್ಟನೆ ನೀಡಲಾಗಿದೆ.
ಸಮಸ್ತ ಪಬ್ಲಿಕ್ ಪರೀಕ್ಷೆ: 99% ವಿದ್ಯಾರ್ಥಿಗಳು ಉತ್ತೀರ್ಣ
ಮುಂದೆ ಪಬ್ಲಿಕ್ ಪರೀಕ್ಷೆ ತರಗತಿಗಳಲ್ಲಿ ಬದಲಾವಣೆ
ಇರಾನ್ ಮೇಲೆ ಅಮೆರಿಕ-ಇಸ್ರೇಲ್ ಜಂಟಿ ದಾಳಿ | ಭಾರತದ ಮೌನ ಅರ್ಥವಾಗುತ್ತಿಲ್ಲ: ಮೆಹಬೂಬಾ ಮುಫ್ತಿ
ಶ್ರೀನಗರ, ಮಾ. 4: ಇರಾನ್ ವಿರುದ್ಧ ಅಮೆರಿಕ-ಇಸ್ರೇಲ್ ನಡೆಸುತ್ತಿರುವ ಆಕ್ರಮಣಕ್ಕೆ ಸಂಬಂಧಿಸಿ ಭಾರತದ ಮೌನ ತನಗೆ ಅರ್ಥವಾಗುತ್ತಿಲ್ಲ ಎಂದು ಪಿಡಿಪಿ ಪಕ್ಷದ ಅಧ್ಯಕ್ಷೆ ಮೆಹಬೂಬಾ ಮುಫ್ತಿ ಬುಧವಾರ ಹೇಳಿದ್ದಾರೆ. ಪರಮಾಣು ಪರೀಕ್ಷೆಗಳನ್ನು ನಡೆಸಿರುವುದಕ್ಕಾಗಿ ಭಾರತದ ವಿರುದ್ಧ ನಿರ್ಬಂಧಗಳು ಹೇರಲ್ಪಟ್ಟಾಗ, ಅದರ ಪರವಾಗಿ ನಿಂತದ್ದು ಇರಾನ್ ಮಾತ್ರ ಎಂದು ಅವರು ಹೇಳಿದ್ದಾರೆ. ‘‘ನಮ್ಮದು ಪ್ರಜಾಸತ್ತಾತ್ಮಕ ದೇಶವೇ ಎಂಬ ಅನುಮಾನ ಉಂಟಾಗುತ್ತಿದೆ. ಇರಾನ್ ಮೇಲಿನ ದಾಳಿಯನ್ನು ನಮ್ಮ ದೇಶದ ನಾಯಕತ್ವ ಖಂಡಿಸಿಲ್ಲ ಅಥವಾ ಇರಾನ್ ಜನತೆಗೆ ಸಂತಾಪವನ್ನೂ ವ್ಯಕ್ತಪಡಿಸಿಲ್ಲ. ಜಮ್ಮು ಮತ್ತು ಕಾಶ್ಮೀರದ ನಾಯಕತ್ವವೂ ಇದನ್ನು ಮಾಡಿಲ್ಲ’’ ಎಂದು ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಮುಖ್ಯಮಂತ್ರಿ ಹೇಳಿದರು. ಹಿಂದೆ, ಭಾರತವು ಇರಾನ್ನೊಂದಿಗೆ ಅತ್ಯಂತ ಗಾಢ ಸಂಬಂಧವನ್ನು ಹೊಂದಿತ್ತು ಎಂದು ಅವರು ನುಡಿದರು. ‘‘ಕಾಶ್ಮೀರ ವಿಷಯದಲ್ಲಿ, ಇರಾನನ್ನು ಹೊರತುಪಡಿಸಿ ಪ್ರತಿಯೊಂದು ಮುಸ್ಲಿಮ್ ದೇಶ ಪಾಕಿಸ್ತಾನಕ್ಕೆ ಬೆಂಬಲ ನೀಡುತ್ತಿತ್ತು. ಆದರೆ, ಇರಾನ್ ಭಾರತದ ಪರವಾಗಿ ನಿಂತಿತ್ತು. ಭಾರತದ ವಿರುದ್ಧ ನಿರ್ಬಂಧಗಳು ಹೇರಲ್ಪಟ್ಟಾಗ ನಮಗೆ ತೈಲ ನೀಡಿದ ಏಕೈಕ ದೇಶ ಇರಾನ್ ಆಗಿತ್ತು. ಅವರು ಮೊದಲು ಹಣವನ್ನೂ ತೆಗೆದುಕೊಳ್ಳಲಿಲ್ಲ, ನಂತರ ಹಣ ತೆಗೆದುಕೊಂಡರು. ಆದರೆ, ದುರದೃಷ್ಟವಶಾತ್, ಈ ದೇಶದ ನಾಯಕತ್ವವು ಇರಾನ್ ದೇಶದ ಮೇಲಿನ ಆಕ್ರಮಣವನ್ನು ಖಂಡಿಸಲಿಲ್ಲ, ಇರಾನ್ ಜನತೆಗೆ ಸಾಂತ್ವನವನ್ನೂ ಹೇಳಲಿಲ್ಲ’’ ಎಂದು ಮೆಹಬೂಬಾ ಹೇಳಿದರು.
ಬಿಹಾರ | ಶೌಚ ಗುಂಡಿ ಶುಚಿಗೊಳಿಸುತ್ತಿದ್ದಾಗ ವಿಷಾನಿಲ ಸೇವಿಸಿ ಒಂದೇ ಕುಟುಂಬದ ನಾಲ್ವರು ಮೃತ್ಯು
ಪಾಟ್ನಾ, ಮಾ. 4: ಬಿಹಾರದ ಸೀತಾಮಡಿ ಜಿಲ್ಲೆಯಲ್ಲಿ ಮನೆಯ ಶೌಚಗುಂಡಿಯನ್ನು ಸ್ವಚ್ಛಗೊಳಿಸುತ್ತಿದ್ದ ವೇಳೆ ವಿಷ ಗಾಳಿಯನ್ನು ಸೇವಿಸಿ ಒಂದೇ ಕುಟುಂಬದ ನಾಲ್ವರು ಮೃತಪಟ್ಟಿದ್ದಾರೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ. ಘಟನೆಯು ಸೀತಾಮಡಿ ಜಿಲ್ಲೆಯ ಕುರ್ಹರ್ ಗ್ರಾಮದಲ್ಲಿ ಮಂಗಳವಾರ ಸಂಜೆ ಸಂಭವಿಸಿದೆ. ಮೃತರನ್ನು ರಾಜೀವ್ ಸಾಹ್ನಿ, ಕೃಷ್ಣ ಕುಮಾರ್, ರವೀಂದ್ರ ಸಾಹ್ನಿ ಮತ್ತು ವಿನಯ ಸಾಹ್ನಿ ಎಂಬುದಾಗಿ ಗುರುತಿಸಲಾಗಿದೆ. ‘‘ಶೌಚಗುಂಡಿಯಿಂದ ಹೊರಸೂಸಿದ ವಿಷಾನಿಲವನ್ನು ಸೇವಿಸಿ ಅವರು ಪ್ರಜ್ಞೆ ಕಳೆದುಕೊಂಡರು ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಸ್ಥಳೀಯರು ಅವರನ್ನು ಗುಂಡಿಯಿಂದ ಹೊರಗೆಳೆದು ಆಸ್ಪತ್ರೆಗೆ ಕರೆದೊಯ್ದರು. ಎಲ್ಲಾ ನಾಲ್ವರು ಮೃತಪಟ್ಟಿದ್ದಾರೆ ಎಂಬುದಾಗಿ ಆಸ್ಪತ್ರೆಯಲ್ಲಿ ವೈದ್ಯರು ಘೋಷಿಸಿದರು’’ ಎಂದು ಬೋಖ್ರ ಪೊಲೀಸ್ ಠಾಣೆಯ ಉಸ್ತುವಾರಿ ಅಧಿಕಾರಿ ಸುರೇಂದ್ರ ಕುಮಾರ್ ಪಿಟಿಐಗೆ ತಿಳಿಸಿದರು.
ನಟ ದರ್ಶನ್ ಮತ್ತು ಬಳಗಕ್ಕೆ ಮತ್ತೆ ಜೈಲೂಟವೇ ಗತಿ; ಮನೆಯೂಟಕ್ಕೆ ಅವಕಾಶವಿಲ್ಲ ಎಂದ ಹೈಕೋರ್ಟ್
ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿಗಳಾಗಿರುವ , ಲಕ್ಷ್ಮಣ್, ನಾಗರಾಜ್ ಮತ್ತಿತರರಿಗೆ ಮನೆ ಊಟಕ್ಕೆ ಹೈಕೋರ್ಟ್ ಬ್ರೇಕ್ ಹಾಕಿದೆ. ಅಲ್ಲದೆ, ''ವೈದ್ಯಕೀಯ ಸಲಹೆ ಇದ್ದರೆ ಮಾತ್ರ ಮನೆ ಊಟಕ್ಕೆ ಅವಕಾಶವಿದೆ. ಕೈದಿ ಕೇಳಿದ ಕೂಡಲೇ ಮನೆ ಊಟಕ್ಕೆ ಒದಗಿಸಲು ಅವಕಾಶವಿಲ್ಲ,'' ಎಂದು ಆದೇಶಿಸಿದೆ.ಪವಿತ್ರಾ ಗೌಡ ಮತ್ತಿತರರಿಗೆ ಮನೆ ಊಟ ನೀಡುವಂತೆ ಪ್ರಶ್ನಿಸಿ ರಾಜ್ಯ ಸರಕಾರ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ ರದ್ದುಪಡಿಸಿದೆ.''ಜೈಲಿನ ದ್ವಾರಗಳ ಬಾಗಿಲುಗಳಲ್ಲಿ ಮಾನವ ಘನತೆಯ ರಕ್ಷಣೆ ನಿಲ್ಲುತ್ತದೆ. ಕಾನೂನಿನನ್ವಯ ಕೈದಿಗಳಿಗೆ ಸ್ವಾತಂತ್ರ್ಯವಿಲ್ಲದಿದ್ದರೂ ಮೂಲ ಸೌಕರ್ಯಗಳಿಗೆ ಅವರು ಅರ್ಹರಾಗಿರುತ್ತಾರೆ. ವಿಚಾರಣಾಧೀನ ಕೈದಿಗಳಿಗೆ ಮನೆ ಊಟ ನೀಡದಿರಲು ನಿಷೇಧವಿಲ್ಲ. ಆದರೆ, ಜೈಲು ನಿಯಮಗಳು ಮತ್ತು ಪ್ರಕ್ರಿಯೆ ಅನುಸಾರ ಮನೆ ಊಟ ಪೂರೈಸಬಹುದಾಗಿದೆ. ಅದಕ್ಕೆ ವೈದ್ಯಕೀಯ ವರದಿ ಅತ್ಯಗತ್ಯ. ಕೋರಿಕೆ ಆಧರಿಸಿ ಮನೆ ಊಟ ತರಿಸಿಕೊಳ್ಳಲು ಅನುಮತಿಸಲಾಗದು,'' ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ. ಹೈಕೋರ್ಟ್ ಹೇಳಿದ್ದೇನು? ಅಲ್ಲದೆ, ''ವೈದ್ಯಕೀಯ ಪರಿಶೀಲನೆ ಅಥವಾ ಶಿಫಾರಸನ್ನು ಆಧರಿಸದೆ ಮನೆ ಊಟ ಪಡೆಯಲು ಅನುಮತಿಸಿರುವುದರಿಂದ ವಿಚಾರಣಾಧೀನ ನ್ಯಾಯಾಲಯದ ಆದೇಶ ಊರ್ಜಿತವಾಗುವುದಿಲ್ಲ. ತಾರತಮ್ಯದಿಂದ ಕೂಡಿದ ಇಂತಹ ವಿನಾಯಿತಿ ನೀಡುವುದರಿಂದ ಜೈಲು ನಿರ್ವಹಣೆಯಲ್ಲಿ ಗೊಂದಲಕ್ಕೆ ನಾಂದಿಯಾಗಲಿದ್ದು, ಇತರೆ ಕೈದಿಗಳೂ ಅದನ್ನೇ ಕೇಳುತ್ತಾರೆ. ಜೈಲಿನಲ್ಲಿ ವಿತರಿಸಲಾಗುವ ಊಟದ ಲಭ್ಯತೆ ಮತ್ತು ಗುಣಮಟ್ಟವು ಕಾಳಜಿಯ ವಿಚಾರವಾಗಿದ್ದು, ನಿತ್ಯ ನಾಲ್ಕು ಊಟಕ್ಕೆ 125 ರೂಪಾಯಿ ನಿಗದಿ ಪಡಿಸಿರುವುದು ಪೌಷ್ಟಿಕಾಂಶಯುಕ್ತ ಆಹಾರದ ಬಗೆಗಿನ ಮಹತ್ವದ ಪ್ರಶ್ನೆ ಉದ್ಭವಕ್ಕೆ ಕಾರಣವಾಗಿದೆ. ಕೈದಿಗಳ ಹಕ್ಕುಗಳನ್ನು ರಕ್ಷಿಸುವ ದೃಷ್ಟಿಯಿಂದ ಸಾರ್ವಜನಿಕ ಸ್ಥಳಗಳಲ್ಲಿ ಜನರಿಗೆ ಕಾಣುವಂತೆ ಕೈದಿಗಳ ಆಹಾರದ ಪಟ್ಟಿಯನ್ನು ಡಿಜಿಟಲ್ ರೂಪದಲ್ಲಿ ಪ್ರಕಟಿಸಬೇಕು. ಆಹಾರದ ಬಗ್ಗೆ ಅಹವಾಲು/ದೂರು ದಾಖಲಿಸಲು ವ್ಯವಸ್ಥೆ ಇಲ್ಲದಿದ್ದರೆ ಅದನ್ನು ಜಾರಿಗೊಳಿಸಬೇಕು. ಕೈದಿಗಳಿಗೆ ತಯಾರಿಸುವ ಆಹಾರದ ಗುಣಮಟ್ಟದ ಕುರಿತು ಮೇಲಿಂದ ಮೇಲೆ ನಿಗದಿತ ವೈದ್ಯಾಕಾರಿ ದಾಖಲೆ ಸಲ್ಲಿಸಬೇಕು,'' ಎಂದು ನ್ಯಾಯಪೀಠ ನಿರ್ದೇಶನ ನೀಡಿದೆ.2024ರ ಜೂನ್ 3ರಂದು ಚಿತ್ರದುರ್ಗದ ರೇಣುಕಾಸ್ವಾಮಿ ಎಂಬವರನ್ನು ಬೆಂಗಳೂರಿನ ಕಾಮಾಕ್ಷಿಪಾಳ್ಯದಲ್ಲಿ ಬರ್ಬರವಾಗಿ ಕೊಲೆ ಮಾಡಲಾಗಿತ್ತು. ಪವಿತ್ರಾ ಗೌಡ ಅವರಿಗೆ ಅಶ್ಲೀಲ ಸಂದೇಶ ಕಳುಹಿಸಲಾಗಿದೆ ಎಂಬ ಕಾರಣಕ್ಕೆ ಪ್ರತೀಕಾರವಾಗಿ ಈ ಕೃತ್ಯ ನಡೆದಿತ್ತು. ಪ್ರಕರಣಕ್ಕೆ ಸಂಬಂಧಿಸಿ ನಟ ದರ್ಶನ್, ಪವಿತ್ರಾ ಗೌಡ, ಲಕ್ಷ್ಮ್, ನಾಗರಾಜ್ ಅವರನ್ನು ಬಂಧಿಸಲಾಗಿದೆ.
ಟಿ20 ವಿಶ್ವಕಪ್ ಸೋಲಿನ ಬಳಿಕ ಕಠಿಣ ನಿರ್ಧಾರ ತಳೆದ ಪಾಕ್: ಬಾಂಗ್ಲಾ ಸರಣಿಗೆ ಬಾಬರ್ ಆಝಂ ಸೇರಿ ಐವರಿಗೆ ಕೊಕ್!
ಒಂದು ಮಹತ್ವದ ಟೂರ್ನಿ ಬಳಿಕ ಪಾಕಿಸ್ತಾನ ತಂಡದಲ್ಲಿ ಆಮೂಲಾಗ್ರ ಬದಲಾವಣೆಗಳಾಗುವುದೇನೂ ಹೊಸತಲ್ಲ. ಇದೀಗ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನ ತಂಡದ ಕಳಪೆ ಪ್ರದರ್ಶನದ ಬಳಿಕ ನಿರೀಕ್ಷೆಯಂತೆ ಹಲವು ಆಟಗಾರರಿಗೆ ವಿರುದ್ಧ ಪಾಕ್ ಕ್ರಿಕೆಟ್ ಮಂಡಳಿ(PCB) ಬರೆ ಎಳೆದಿದೆ. ಮಾಜಿ ನಾಯಕ ಬಾಬರ್ ಆಝಂ ಸೇರಿದಂತೆ ಒಟ್ಟು ಐವರನ್ನು ಮುಂಬರುವ ಬಾಂಗ್ಲಾದೇಶ ವಿರುದ್ಧ ಏಕದಿನ ಸರಣಿಯಿಂದ ಹೊರಗಟ್ಟಿದೆ. ಆರಂಭಿಕ ಆಟಗಾರ ಸೈಯಮ್ ಅಯೂಬ್, ಆಲ್ರೌಂಡರ್ ಗಳಾದ ಶಡಬ್ ಖಾನ್, ಮೊಹಮ್ಮದ್ ನವಾಝ್, ವೇಗದ ಬೌಲರ್ ಗಳಾದ ನಸೀಮ್ ಶಾ ತಂಡದಿಂದ ಕೈಬಿಡಲಾಗಿರುವ ಇತರ ನಾಲ್ವರು ಆಟಗಾರರು. ಬಾಂಗ್ಲಾದೇಶದ ಡಾಕಾದಲ್ಲಿ ಮಾರ್ಚ್ 11, 13 ಮತ್ತು 15ರಂದು ಮೂರು ಏರದಿನ ಪಂದ್ಯಗಳನ್ನು ಆಡಲಿದೆ. ಅವರು ಈ ತಂಡದ ನಾಯಕರಾಗಿದ್ದಾರೆ. , ಹ್ಯಾರಿಸ್ ರೌಫ್ ಮತ್ತು ಸಲ್ಮಾನ್ ಅಲಿ ಆಘಾ ತಂಡದಲ್ಲಿರುವ ಇತರ ಮೂವರು ಹಿರಿಯ ಆಟಗಾರರಾಗಿದ್ದಾರೆ. ಬಾಬರ್ ಆಝಮ್ ಗೆ ಕೊಕ್ ನೀಡಲಾಗಿದೆಯೇ ಅಥವಾ ವಿಶ್ರಾಂತಿ ನೀಡಲಾಗಿದೆಯೇ ಎಂಬ ಬಗ್ಗೆ ಇನ್ನೂ ಪಿಸಿಬಿ ಖಚಿತಪಡಿಸಿಲ್ಲ. ಇದೀಗ ಬಹುತೇಕ ಹೊಸಬರಿಗೆ ಅವಕಾಶ ನೀಡುವುದು ಪಾಕಿಸ್ತಾನ ತಂಡದ ಪುನರ್ ನಿರ್ಮಾಣ ಮತ್ತು ಭವಿಷ್ಯದ ದೃಷ್ಟಿಯಿಂದ ಈ ಕಠಿಣ ನಿರ್ಧಾರ ಅನಿವಾರ್ಯ ಎಂದು ಪಿಸಿಬಿ ತಿಳಿಸಿದೆ. ಇನ್ನು ಸರಣಿಗೆ ಈವರೆಗೂ ಅಂತಾರಾಷ್ಟ್ರೀಯ ಏಕದಿನ ಪಂದ್ಯವನ್ನು ಆಡದ ಆರು ಮಂದಿಗೆ ಅವಕಾಶ ನೀಡಲಾಗಿದೆ. ಅಬ್ದುಲ್ ಸಮದ್, ಮಾಝ್ ಸದಾಕತ್, ಮೊಹಮ್ಮದ್ ಗಾಝಿ ಗೋರಿ, ಸಾದ್ ಮಸೂದ್, ಸಾಹಿಬ್ ಝಾದಾ ಫರ್ಹಾನ್ ಮತ್ತು ಶಾಮಿಲ್ ಹುಸೇನ್ ಅವರನ್ನು ಹೊಸದಾಗಿ ಆಯ್ಕೆ ಮಾಡಿದೆ. ಈ ಆರು ಆಟಗಾರರಲ್ಲಿ ಸಮದ್, ಸದಾಕತ್, ಮಸೂದ್ ಮತ್ತು ಹುಸೇನ್ ಇತ್ತೀಚೆಗೆ ಅಬುಧಾಬಿಯಲ್ಲಿ ಇಂಗ್ಲೆಂಡ್ ಲಯನ್ಸ್ ವಿರುದ್ಧ ಆಡಿದ ಪಾಕಿಸ್ತಾನ್ ಶಾಹೀನ್ಸ್ ತಂಡದ ಭಾಗವಾಗಿದ್ದರು.ಟಿ20 ವಿಶ್ವಕಪ್ ಸೆಮಿಫೈನಲ್ಗೆ ಅರ್ಹತೆ ಪಡೆಯಲು ವಿಫಲವಾದ ನಂತರ ವಿಧಿಸಿದೆ ಎಂದು ವರದಿಯಾಗಿತ್ತು. ಆಟಗಾರರನ್ನು ಈವರೆಗೂ ಬಹಳ ಚೆನ್ನಾಗಿ ನಡೆಸಿಕೊಂಡಿದ್ದೇವೆ. ಇನ್ನು ಮುಂದೆ ಏನಿದ್ದರೂ ಉತ್ತಮ ಪ್ರದರ್ಶನ ನೀಡಿದಲ್ಲಿ ಮಾತ್ರ ಉತ್ತಮ ಸಂಭಾವನೆ ಪಡೆಯುತ್ತಾರೆ ಎಂದು ಪಿಸಿಬಿ ಖಡಕ್ ಆಗಿ ಹೇಳಿದೆ. ಪಾಕಿಸ್ತಾನ ತಂಡ ಶಾಹೀನ್ ಶಾ ಅಫ್ರಿದಿ (ನಾಯಕ), ಅಬ್ದುಲ್ ಸಮದ್, ಅಬ್ರಾರ್ ಅಹ್ಮದ್, ಫಹೀಮ್ ಅಶ್ರಫ್, ಫೈಸಲ್ ಅಕ್ರಮ್, ಹ್ಯಾರಿಸ್ ರೌಫ್, ಹುಸೇನ್ ತಲಾತ್, ಮಾಜ್ ಸದಾಕತ್, ಮೊಹಮ್ಮದ್ ರಿಜ್ವಾನ್ (ವಿಕೆಟ್ ಕೀಪರ್), ಮೊಹಮ್ಮದ್ ವಾಸಿಂ ಜೂನಿಯರ್, ಮುಹಮ್ಮದ್ ಘಾಜಿ ಘೋರಿ (ವಿಕೆಟ್ ಕೀಪರ್), ಸಾದ್ ಮಸೂದ್, ಸಾಹಿಬ್ಜಾದಾ ಫರ್ಹಾನ್, ಸಲ್ಮಾನ್ ಅಲಿ ಆಘಾ ಮತ್ತು ಶಮಿಲ್ ಹುಸೇನ್.
ಹಾರ್ಮುಜ್ ಜಲಸಂಧಿಯ ಮೂಲಕ ಚೀನಾದ ಹಡಗುಗಳಿಗೆ ಮಾತ್ರ ಅವಕಾಶ: ಇರಾನ್
ಟೆಹ್ರಾನ್, ಮಾ.4: ಮಧ್ಯಪ್ರಾಚ್ಯ ಯುದ್ದ ಪ್ರಾರಂಭಗೊಂಡಂದಿನಿಂದ ಇರಾನ್ ವಿಷಯದಲ್ಲಿ ಚೀನಾವು ತಳೆದಿರುವ ನಿಲುವಿಗೆ ಕೃತಜ್ಞತೆಯ ಅಭಿವ್ಯಕ್ತಿಯಾಗಿ ಹಾರ್ಮುಜ್ ಜಲಸಂಧಿಯ ಮೂಲಕ ಚೀನಾದ ಹಡಗುಗಳಿಗೆ ಮಾತ್ರ ಹಾದುಹೋಗಲು ಅವಕಾಶ ನೀಡುವುದಾಗಿ ಇರಾನ್ ಹೇಳಿದೆ ಎಂದು ಮೂಲಗಳು ಹೇಳಿವೆ. ಹಾರ್ಮುಜ್ ಜಲಸಂಧಿಯು ಯುಎಇ, ಖತರ್ನಂತಹ ದೇಶಗಳಿಗೆ ಮುಕ್ತ ಸಮುದ್ರಕ್ಕೆ ಪ್ರವೇಶವನ್ನು ಒದಗಿಸುತ್ತದೆ. ಜಾಗತಿಕ ತೈಲ ಪೂರೈಕೆಯ ಸುಮಾರು 20%ದಷ್ಟು ಈ ಜಲಸಂಧಿಯ ಮೂಲಕವಾಗಿ ಭಾರತ, ಚೀನಾದಂತಹ ಏಶ್ಯದ ಮಾರುಕಟ್ಟೆಗೆ ಮುಂದುವರಿಯುತ್ತದೆ. ಇರಾನ್ ಈ ಮಾರ್ಗವನ್ನು ನಿರ್ಬಂಧಿಸುವುದರೊಂದಿಗೆ ಜಾಗತಿಕ ಪೂರೈಕೆ ಸರಪಳಿಯಲ್ಲಿ ಭಾರೀ ಅಡಚಣೆಯನ್ನು ನಿರೀಕ್ಷಿಸಲಾಗಿದೆ.
ಅಫಜಲಪುರ | ಭೀಮಾ ನದಿ ಸೇತುವೆ ಕೆಳಗೆ ವ್ಯಕ್ತಿಯ ಮೃತದೇಹ ಪತ್ತೆ
ಅಫಜಲಪುರ: ತಾಲೂಕಿನ ಘತ್ತರಗಾ ಗ್ರಾಮದ ಸಮೀಪದ ಭೀಮಾ ನದಿ ಸೇತುವೆ ಕೆಳಭಾಗದಲ್ಲಿ ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆಯಾಗಿರುವ ಘಟನೆ ಬುಧವಾರ ಸಂಜೆ ಬೆಳಕಿಗೆ ಬಂದಿದೆ. ನದಿ ತೀರದಲ್ಲಿ ಮೃತದೇಹ ತೇಲಿಬರುತ್ತಿರುವುದನ್ನು ಗಮನಿಸಿದ ಸ್ಥಳೀಯರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಸ್ಥಳಕ್ಕೆ ಆಗಮಿಸಿದ ಪೊಲೀಸರು ಮೃತದೇಹವನ್ನು ಮೇಲಕ್ಕೆತ್ತಿ ಪರಿಶೀಲನೆ ನಡೆಸಿದ್ದಾರೆ. ಮೃತ ವ್ಯಕ್ತಿಯನ್ನು ಪ್ರಾಥಮಿಕ ಮಾಹಿತಿಯಂತೆ ರಘುನಾಥ ಬಾಳರಾಮ ಪಾಟೀಲ್ (ಅಂದಾಜು ವಯಸ್ಸು 50 ವರ್ಷ) ಎಂದು ಗುರುತಿಸಲಾಗಿದೆ. ಮಹಾರಾಷ್ಟ್ರ ರಾಜ್ಯದ ಜಲಗಾಂವ ಜಿಲ್ಲೆಯ ಅಮ್ಮಣ್ಣಿ ತಾಲೂಕಿನ ಪಾತೊಂಡ್ ಗ್ರಾಮದ ನಿವಾಸಿಯಾಗಿರುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ. ಘಟನೆಗೆ ಸಂಬಂಧಿಸಿದಂತೆ ಅಫಜಲಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮರಣದ ನಿಖರ ಕಾರಣ ತಿಳಿಯಲು ತನಿಖೆ ಮುಂದುವರಿದಿದೆ.
ವಾಟ್ಸ್ಆ್ಯಪ್ ಸಂಭಾಷಣೆಯ ಆಧಾರದಲ್ಲಿ ವಿಚ್ಛೇದನೆ ನೀಡಲು ಸಾಧ್ಯವಿಲ್ಲ : ಬಾಂಬೆ ಹೈಕೋರ್ಟ್
ಮುಂಬೈ, ಮಾ. 4: ಸಂಗಾತಿಗೆ ತನ್ನನ್ನು ಸಮರ್ಥಿಸುವ ಅವಕಾಶವನ್ನು ನೀಡದೆ, ಕೇವಲ ವಾಟ್ಸ್ಆ್ಯಪ್ ಸಂಭಾಷಣೆಯ ಆಧಾರದಲ್ಲಿ, ಕ್ರೌರ್ಯ ನಡೆದಿದೆ ಎಂಬ ನೆಲೆಯಲ್ಲಿ ಓರ್ವ ವ್ಯಕ್ತಿಗೆ ವಿವಾಹ ವಿಚ್ಛೇದನೆ ನೀಡಲು ಸಾಧ್ಯವಿಲ್ಲ ಎಂದು ಬಾಂಬೆ ಹೈಕೋರ್ಟ್ ಹೇಳಿದೆ. ತನ್ನ ಮೇಲೆ ಕ್ರೌರ್ಯ ನಡೆದಿದೆ ಎಂದು ಆರೋಪಿಸಿ ವ್ಯಕ್ತಿಯೊಬ್ಬರು ಪತ್ನಿಯಿಂದ ವಿಚ್ಛೇದನೆ ಕೋರಿ ಸಲ್ಲಿಸಿರುವ ಅರ್ಜಿಯನ್ನು ಪುರಸ್ಕರಿಸಿ ನಾಶಿಕ್ ಜಿಲ್ಲಾ ಕುಟುಂಬ ನ್ಯಾಯಾಲಯ ನೀಡಿದ ಆದೇಶವೊಂದನ್ನು ನ್ಯಾಯಮೂರ್ತಿಗಳಾದ ಭಾರತಿ ಡಾಂಗ್ರೆ ಮತ್ತು ಮಂಜೂಶಾ ದೇಶಪಾಂಡೆ ಅವರನ್ನೊಳಗೊಂಡ ಬಾಂಬೆ ಹೈಕೋರ್ಟ್ನ ನ್ಯಾಯಪೀಠವೊಂದು ಕಳೆದ ವಾರ ರದ್ದುಪಡಿಸಿದೆ. ಕುಟುಂಬ ನ್ಯಾಯಾಲಯದ ಆದೇಶವನ್ನು ಹೈಕೋರ್ಟ್ನಲ್ಲಿ ಪ್ರಶ್ನಿಸಿರುವ ಮಹಿಳೆಯು, ಆ ಆದೇಶವನ್ನು ಏಕಪಕ್ಷೀಯವಾಗಿ ಹಾಗೂ ನನ್ನ ವಾದವನ್ನು ಮಂಡಿಸಲು ಅವಕಾಶ ನೀಡದೆ ಹೊರಡಿಸಲಾಗಿದೆ ಎಂದು ಆರೋಪಿಸಿದ್ದಾರೆ. ಕುಟುಂಬ ನ್ಯಾಯಾಲಯವು, ವ್ಯಕ್ತಿ ಸಲ್ಲಿಸಿದ ವಾಟ್ಸ್ಆ್ಯಪ್ ಸಂಭಾಷಣೆಯ ಆಧಾರದಲ್ಲಿ 2025 ಮೇ ತಿಂಗಳಲ್ಲಿ ವಿಚ್ಛೇದನೆ ನೀಡಿ ಆದೇಶ ಹೊರಡಿಸಿತ್ತು. ಆ ವಾಟ್ಸ್ಆ್ಯಪ್ ಸಂಭಾಷಣೆಯಲ್ಲಿ, ಪತ್ನಿಯು ಪ್ರತ್ಯೇಕವಾಗಿ ಬದುಕುವುದಕ್ಕಾಗಿ ತಮ್ಮ ವಾಸ್ತವ್ಯವನ್ನು ನಾಶಿಕ್ನಿಂದ ಪುಣೆಗೆ ವರ್ಗಾಯಿಸಬೇಕು ಎಂಬುದಾಗಿ ಗಂಡನನ್ನು ಒತ್ತಾಯಿಸುತ್ತಾರೆ ಹಾಗೂ ತನ್ನ ಅತ್ತೆ ಮತ್ತು ನಾದಿನಿಯ ವಿರುದ್ಧ ಅವಮಾನಕರವಾಗಿ ಮಾತನಾಡುತ್ತಾರೆ. ವಾಟ್ಸ್ಆ್ಯಪ್ ಸಂಭಾಷಣೆಯಲ್ಲಿ, ಹೆಂಡತಿಯು ಒತ್ತಡ ತಂತ್ರಗಳನ್ನು ಬಳಸಿದ್ದಾರೆ, ಭಾವನಾತ್ಮಕ ಬ್ಲ್ಯಾಕ್ಮೇಲ್ ಮಾಡಿದ್ದಾರೆ ಎಂಬುದಾಗಿ ಕುಟುಂಬ ನ್ಯಾಯಾಲಯ ಹೇಳಿತ್ತು ಹಾಗೂ ಗಂಡನ ವಿರುದ್ಧ ಕ್ರೌರ್ಯ ಮೆರೆಯಲಾಗಿದೆ ಎಂದು ಅಭಿಪ್ರಾಯಪಟ್ಟಿತ್ತು. ಹಾಗಾಗಿ, ವಿಚ್ಛೇದನೆ ಪಡೆಯಲು ಗಂಡ ಅರ್ಹರಾಗಿದ್ದಾರೆ ಎಂದು ಹೇಳಿತ್ತು. ತನ್ನ ವಿರುದ್ಧ ಗಂಡ ಸಲ್ಲಿಸಿರುವ ಪುರಾವೆಯನ್ನು ಪ್ರಶ್ನಿಸಲು ಹೆಂಡತಿಗೆ ಅವಕಾಶ ನೀಡಲಾಗಿಲ್ಲ ಎಂದು ಹೈಕೋರ್ಟ್ ಹೇಳಿದೆ. ‘‘ಕೇವಲ ವಾಟ್ಸ್ಆ್ಯಪ್ ಸಂಭಾಷಣೆಯ ಆಧಾರದಲ್ಲಿ ವಿಚ್ಛೇದನೆ ಆದೇಶ ನೀಡುವಂತಿಲ್ಲ. ಯಾಕೆಂದರೆ ಅದು ಪುರಾವೆಯ ಮೂಲಕ ಸಾಬೀತಾಗುವುದಿಲ್ಲ’’ ಎಂದು ಹೈಕೋರ್ಟ್ ಹೇಳಿದೆ.
ಆಳಂದ | ಹೋಳಿ ಹಬ್ಬದ ರಂಗಿನ ಸಂಭ್ರಮ
ಆಳಂದ : ವಸಂತ ಋತುವಿನ ಆಗಮನದ ಸಂಕೇತವಾಗಿರುವ ಹೋಳಿ ಹಬ್ಬವನ್ನು ಆಳಂದ ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಗ್ರಾಮೀಣ ಭಾಗಗಳಲ್ಲಿ ಭಕ್ತಿಭಾವ ಮತ್ತು ಉತ್ಸಾಹಭರಿತವಾಗಿ ಆಚರಿಸಲಾಯಿತು. ಬೆಳಿಗ್ಗೆಯಿಂದಲೇ ಮಹಿಳೆಯರು, ಮಕ್ಕಳು ಹಾಗೂ ಯುವಕರು ಪರಸ್ಪರ ಬಣ್ಣ ಎರಚಿಕೊಂಡು ಸಂಭ್ರಮದಲ್ಲಿ ತೇಲಿದರು. ಪಟ್ಟಣದ ಹನುಮಾನ ದೇವಸ್ಥಾನ ಪರಿಸರದಲ್ಲಿ ಯುವಕರ ಉತ್ಸಾಹ ಹೆಚ್ಚಾಗಿ ಕಂಡುಬಂದಿತು. ಸಿನಿಮಾ ಹಾಡುಗಳಿಗೆ ಹೆಜ್ಜೆ ಹಾಕುತ್ತ ಪರಸ್ಪರ ಬಣ್ಣ ಎರಚಿಕೊಂಡು ನೃತ್ಯ ಮಾಡಿದ ದೃಶ್ಯ ಜನರ ಗಮನ ಸೆಳೆಯಿತು. ಡಿಜೆ ಸದ್ದಿನ ಮಧ್ಯೆ “ಹೋಳಿ ಹೈ” ಎನ್ನುವ ಕೂಗು ಮೊಳಗಿದಂತೆ ವಾತಾವರಣ ಹರ್ಷೋದ್ಗಾರಗಳಿಂದ ಮೊಳಗಿತು. ಬಾಳೆನಕೇರಿ, ಹತ್ತಾರನಗಲ್ಲಿ, ಶರಣನಗರ, ನಾಯಕನಗರ, ಚಕ್ರಕಟ್ಟಾ, ಸುಲ್ತಾನಪೂರ ಬಡಾವಣೆ ಹಾಗೂ ಮಟಕಿ ರಸ್ತೆಗಳಲ್ಲೂ ರಂಗು-ರಂಗಿನ ಬಣ್ಣದಾಟ ಜೋರಾಗಿ ನಡೆಯಿತು. ಮಕ್ಕಳು ನೀರಿನ ಬಲೂನುಗಳು ಹಾಗೂ ಗುಲಾಲ್ಗಳನ್ನು ಬಳಸಿ ದಿನವಿಡೀ ಸಂಭ್ರಮಿಸಿದರು. ಗ್ರಾಮೀಣ ಭಾಗಗಳಲ್ಲೂ ಹಬ್ಬದ ಕಳೆ ಮಿಂಚಿತು. ಮನೆಮನೆಗೆ ಭೇಟಿ ನೀಡಿ ಪರಸ್ಪರ ಬಣ್ಣ ಹಚ್ಚಿಕೊಳ್ಳುವುದು, ಹಿರಿಯರಿಗೆ ಗೌರವ ಸಲ್ಲಿಸುವುದು ಹಾಗೂ ಸಿಹಿತಿಂಡಿಗಳನ್ನು ಹಂಚಿಕೊಳ್ಳುವ ಸಂಪ್ರದಾಯಗಳು ಪಾಲಿಸಲ್ಪಟ್ಟವು. ತಾಂಡಾಗಳಲ್ಲಿ ಮಹಿಳೆಯರು ಪರಂಪರೆಯ ಹಾಡುಗಳನ್ನು ಹಾಡಿ ಹಬ್ಬಕ್ಕೆ ವಿಶೇಷ ಮೆರಗು ನೀಡಿದರು. ಕಾನೂನು ಸುವ್ಯವಸ್ಥೆ ಕಾಪಾಡಲು ಪೊಲೀಸ್ ಇಲಾಖೆ ಮುನ್ನೆಚ್ಚರಿಕಾ ಕ್ರಮ ಕೈಗೊಂಡಿದ್ದು, ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ನಿಗಾ ವಹಿಸಲಾಗಿದೆ ಎಂದು ಪಿಐ ಶರಣಬಸಪ್ಪ ಕೊಡ್ಲಾ ತಿಳಿಸಿದ್ದಾರೆ. ಒಟ್ಟಾರೆ ಆಳಂದ ಪಟ್ಟಣ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಹೋಳಿ ಹಬ್ಬವು ಸೌಹಾರ್ದತೆ, ಸಹೋದರತ್ವ ಮತ್ತು ಸಂಭ್ರಮದ ಸಂಕೇತವಾಗಿ ರಂಗಿನ ನೆನಪುಗಳನ್ನು ಮೂಡಿಸಿತು.
ಹರೇಕಳ ಆಲಡ್ಕ ಜಮಾಅತಿನ ಎರಡು ಮದ್ರಸಕ್ಕೆ ಶೇ.100 ಫಲಿತಾಂಶ
ಕೊಣಾಜೆ, ಮಾ.4: ಇಸ್ಲಾಮಿಕ್ ಎಜುಕೇಷನಲ್ ಬೋರ್ಡ್ ನಡೆಸಿದ 2025-26ನೇ ಸಾಲಿನ 5,7,10,12 ತರಗತಿಗಳ ಪಬ್ಲಿಕ್ ಪರೀಕ್ಷೆಯಲ್ಲಿ ಉಳ್ಳಾಲ ತಾಲೂಕಿನ ಹರೇಕಳ ಗ್ರಾಮದ ಬದ್ರಿಯಾ ಜುಮಾ ಮಸೀದಿ ಅಧೀನದ ಹಿದಾಯತುಲ್ ಇಸ್ಲಾಂ ಆಲಡ್ಕ ಮತ್ತು ತೋಕರಬೆಟ್ಟು ಮದ್ರಸವು ಶೇ. 100 ಫಲಿತಾಂಶ ದಾಖಲಿಸಿದೆ. ಆಲಡ್ಕ ಮದ್ರಸದ 5ನೇ ತರಗತಿಯ ಎಂಟು ವಿದ್ಯಾರ್ಥಿಗಳು, 7ನೇ ತರಗತಿಯ ಐವರು ವಿದ್ಯಾರ್ಥಿಗಳು, ಮತ್ತು 10ನೇ ತರಗತಿಯ ಏಳು ಮಂದಿ ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ನಲ್ಲಿ ಉತ್ತೀರ್ಣರಾಗಿರುತ್ತಾರೆ. 10ನೇ ತರಗತಿಯಲ್ಲಿ ಮೂವರು ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ತೋಕರಬೆಟ್ಟು ಮದ್ರಸದ 12ನೇ ತರಗತಿಯಲ್ಲಿ ಒಬ್ಬರು ವಿದ್ಯಾರ್ಥಿನಿ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾಳೆ ಎಂದು ಮಸೀದಿಯ ಆಡಳಿತ ಮಂಡಳಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ತಮಿಳುನಾಡು | ಕಾಂಗ್ರೆಸ್ಗೆ 29 ವಿಧಾನಸಭಾ, 2 ರಾಜ್ಯಸಭಾ ಸ್ಥಾನಗಳನ್ನು ನೀಡಲು ಮುಂದಾದ ಡಿಎಂಕೆ : ವರದಿ
ಚೆನ್ನೈ, ಮಾ. 4: ರಾಜಿ ಸೂತ್ರದ ಭಾಗವಾಗಿ, ಮುಂಬರುವ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಕಾಂಗ್ರೆಸ್ಗೆ 29 ಸ್ಥಾನಗಳು ಮತ್ತು ಎರಡು ರಾಜ್ಯಸಭಾ ಸ್ಥಾನಗಳನ್ನು ನೀಡಲು ಅದರ ಮಿತ್ರಪಕ್ಷ ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಮುಂದಾಗಿದೆ. ಡಿಎಂಕೆ ಮತ್ತು ಕಾಂಗ್ರೆಸ್ ನಡುವಿನ ಸ್ಥಾನ ಹಂಚಿಕೆ ಬಿಕ್ಕಟ್ಟನ್ನು ನಿವಾರಿಸುವ ಉದ್ದೇಶದಿಂದ ಹಿರಿಯ ಕಾಂಗ್ರೆಸ್ ನಾಯಕ ಪಿ. ಚಿದಂಬರಂ ಮತ್ತು ಕೆ. ಸೆಲ್ವಪೆರುಂತಗೈ ತಮಿಳುನಾಡು ಮುಖ್ಯಮಂತ್ರಿ ಎಮ್.ಕೆ. ಸ್ಟಾಲಿನ್ರನ್ನು ಭೇಟಿಯಾದರು. ಸ್ಥಾನ ಹಂಚಿಕೆಯನ್ನು ಅಂತಿಮಗೊಳಿಸುವ ನಿಟ್ಟಿನಲ್ಲಿ ಮಾತುಕತೆಗಳು ನಡೆದವು. ತನಗೆ 34 ಸ್ಥಾನಗಳು ಬೇಕೆಂದು ಕಾಂಗ್ರೆಸ್ ಬೇಡಿಕೆ ಇಟ್ಟಿತ್ತು. ಈ ಸ್ಥಾನಗಳಲ್ಲಿ ತಳಮಟ್ಟದಲ್ಲಿ ತನ್ನ ಉಪಸ್ಥಿತಿ ಇದೆ ಹಾಗೂ ಇಲ್ಲಿ ಹಿಂದಿನ ಚುನಾವಣೆಗಳಲ್ಲಿ ತನ್ನ ನಿರ್ವಹಣೆ ಚೆನ್ನಾಗಿದೆ ಎಂಬುದಾಗಿ ಅದು ವಾದಿಸಿದೆ. ಆದರೆ, ಈ ಬೇಡಿಕೆಯನ್ನು ತಿರಸ್ಕರಿಸಿದ ಡಿಎಮ್ಕೆ 29 ವಿಧಾನಸಭಾ ಸ್ಥಾನಗಳು ಮತ್ತು ಎರಡು ರಾಜ್ಯಸಭಾ ಸ್ಥಾನಗಳನ್ನು ನೀಡಲು ಮುಂದಾಗಿದೆ. ಅಂತಿಮ ಸ್ಥಾನ ಹಂಚಿಕೆಯ ಘೋಷಣೆ ಆಗಿಲ್ಲವಾದರೂ, ಮಾತುಕತೆಗಳು ರಚನಾತ್ಮಕವಾಗಿತ್ತು ಎಂಬುದಾಗಿ ನಾಯಕರು ಬಣ್ಣಿಸಿದ್ದಾರೆ. ಮೈತ್ರಿಕೂಟವು ಸದೃಢವಾಗಿದೆ ಹಾಗೂ ಪರಸ್ಪರ ಸಮ್ಮತಾರ್ಹ ಪರಿಹಾರವೊಂದಕ್ಕೆ ಶೀಘ್ರವೇ ಬರಲಾಗುವುದು ಎಂದು ಅವರು ಹೇಳಿದ್ದಾರೆ. ತಮಿಳುನಾಡು ವಿಧಾನಸಭೆಯ 234 ಸ್ಥಾನಗಳ ಪೈಕಿ, ಹಾಲಿ ವಿಧಾನಸಭೆಯಲ್ಲಿ ಆಡಳಿತಾರೂಢ ಡಿಎಂಕೆ 133 ಮತ್ತು ಕಾಂಗ್ರೆಸ್ 17 ಸ್ಥಾನಗಳನ್ನು ಹೊಂದಿವೆ.
ಕಲಬುರಗಿ | ಮರಣೋತ್ತರ ದೇಹ-ಅಂಗಾಂಗ ನಾಶ ಮಾಡದೇ ದಾನ ಮಾಡಿ: ಡಾ.ಶಿವಾನಂದ ಹೂಗಾರ
ಟೆಂಗಳಿ ಗ್ರಾಮದಲ್ಲಿ ದೇಹಾಂಗದಾನ ಜಾಗೃತಿ ಕಾರ್ಯಕ್ರಮ
ವಾಡಿ | ಭಾಷೆ ಸಂಸ್ಕೃತಿ ಮೀರಿದ ಭಾವೈಕ್ಯತೆಯ ಹಬ್ಬ ಹೋಳಿ
ವಾಡಿ: ಬಹು ಭಾಷೆ ಮೀರಿದ ಬಹು ಸಂಸ್ಕೃತಿಗಳ ಪಟ್ಟಣವಾದ ವಾಡಿಯಲ್ಲಿ ಬುಧವಾರ ಬೆಳಿಗ್ಗೆಯಿಮದಲೇ ಭಾವೈಕ್ಯದ ಹೋಳಿ ಹಬ್ಬ ಅದ್ದೂರಿಯಾಗಿ ಆಚರಿಸಿದರು. ಪುರುಷರು, ಮಹಿಳೆಯರು, ಮಕ್ಕಳು ಸೇರಿದಂತೆ ವಯಸ್ಸಿನ ಹಂಗು ಮೀರಿ ಎಲ್ಲರೂ ಪಟ್ಟಣದ ಬಹುಪಾಲು ಬೀದಿಗಳಲ್ಲಿ, ವೃತ್ತಗಳಲ್ಲಿ, ಮೈದಾನಗಳಲ್ಲಿ ಪರಸ್ಪರ ರಂಗು ರಂಗಿನ ಬಣ್ಣ ಎರಚುತ್ತ ಸಡಗರದಿಂದ ಬಣ್ಣದೋಕುಳಿ ಆಡಿದರು. ಸಪ್ತವರ್ಣಗಳ ಬಣ್ಣಗಳನ್ನು ಮುಖ ಮೈಗೆ ಹಚ್ಚಿ, ಗಾಳಿಯಲ್ಲಿ ತೂರಿ, ನೀರಿನಲ್ಲಿ ಕಲಿಸಿ ಸುರಿದು ಖುಷಿಪಟ್ಟರು. ಬೆಳಿಗ್ಗೆ 6ರಿಂದಲೇ ಆರಂಭವಾದ ಬಣ್ಣದಾಟ ಮಧ್ಯಾಹ್ನದವರೆಗೂ ಬಣ್ಣಗಳಲ್ಲಿ ಮಿಂದೆದ್ದರು.
ಮಂಗಳೂರು: ಎಸ್ಐಆರ್ ಕುರಿತಂತೆ ಮ್ಯಾಪಿಂಗ್ ಕಾರ್ಯಕ್ಕೆ ಸಹಕರಿಸಲು ಮನವಿ
ಮಂಗಳೂರು: ಕೇಂದ್ರ ಚುನಾವಣಾ ಆಯೋಗವು ರಾಜ್ಯದಲ್ಲಿ ವಿಶೇಷ ಸಮಗ್ರ ಪರಿಷ್ಕರಣೆ (SIR) ಘೋಷಣೆಯನ್ನು ಶೀಘ್ರದಲ್ಲೇ ನಿರೀಕ್ಷಿಸಲಾಗಿರುವುದರಿಂದ ಪೂರ್ವಭಾವಿ ಚಟುವಟಿಕೆಯಾದ ಮ್ಯಾಪಿಂಗ್ ಕಾರ್ಯ ಪ್ರಗತಿಯಲ್ಲಿದೆ. 2002ರ ಮತದಾರರ ಪಟ್ಟಿಗೆ ಸಂಬಂಧಿಸಿದ ಕೆಲವು ವಿವರಗಳನ್ನು ಆಯಾ ವ್ಯಾಪ್ತಿಗೆ ಸಂಬಂಧಿಸಿದ ಬೂತ್ಮಟ್ಟದ ಅಧಿಕಾರಿ (BLO)ಗೆ ಮಾಹಿತಿ ನೀಡಿ ಮ್ಯಾಪಿಂಗ್ ಮಾಡಿಕೊಳ್ಳಲು ತಿಳಿಸಿದೆ. ಅದರಂತೆ ಮ್ಯಾಪಿಂಗ್ (MAPPING) ಅಂದರೆ 2002ರ ಮತದಾರರ ಪಟ್ಟಿಯನ್ನು 2025ರ ಮತದಾರರ ಪಟ್ಟಿಗೆ ಜೋಡನೆ ಮಾಡುವುದು. PROGENY (ಸಂತತಿ) ಮ್ಯಾಪಿಂಗ್ ಅಂದರೆ 2002ರ ಮತದಾರರ ಪಟ್ಟಿಯಲ್ಲಿ ಮತದಾರರ ಹೆಸರು ನೋಂದಣಿಯಾಗದಿದ್ದಲ್ಲಿ ಅವರ ತಂದೆ/ತಾಯಿ/ಅಜ್ಜ/ ಅಜ್ಜಿಯವರ ಭಾಗ ಸಂಖ್ಯೆ ಹಾಗೂ ಕ್ರಮಸಂಖ್ಯೆಯೊಂದಿಗೆ ಜೋಡನೆ ಮಾಡಿಕೊಳ್ಳಬೇಕು. 2002ರ ಮತದಾರರಾಗಿದ್ದಲ್ಲಿ ನೀವು 2002 ರಲ್ಲಿ ವಾಸವಿದ್ದ ವಿಧಾನಸಭಾ ಕ್ಷೇತ್ರ ಹೆಸರು / ಸಂಖ್ಯೆ, ಭಾಗ ಸಂಖ್ಯೆ ಹಾಗೂ ಕ್ರಮ ಸಂಖ್ಯೆಯನ್ನು ತಮ್ಮ ವ್ಯಾಪ್ತಿಯ ಬೂತ್ಮಟ್ಟದ ಅಧಿಕಾರಿಗೆ ಮತದಾರರು ಮಾಹಿತಿ ನೀಡಬೇಕು. ಒಂದು ವೇಳೆ ನೀವು 2002ರಲ್ಲಿ ಮತದಾರರಾಗಿಲ್ಲದಿದ್ದಲ್ಲಿ, ನಿಮ್ಮ ತಂದೆ / ತಾಯಿ / ಅಜ್ಜ / ಅಜ್ಜಿಯವರು ವಾಸವಿದ್ದ ವಿಧಾನಸಭಾ ಕ್ಷೇತ್ರದ ಹೆಸರು/ಸಂಖ್ಯೆ,ಭಾಗ ಸಂಖ್ಯೆ ಹಾಗೂ ಕ್ರಮಸಂಖ್ಯೆಯನ್ನು ತಮ್ಮ ವ್ಯಾಪ್ತಿಯ ಬೂತ್ಮಟ್ಟದ ಅಧಿಕಾರಿಗೆ ಮತದಾರರು ಮಾಹಿತಿ ನೀಡಬೇಕು. ಮ್ಯಾಪಿಂಗ್ ಆಗದಿದ್ದಲ್ಲಿ ವಿಶೆಷ ಸಮಗ್ರ ಪರಿಷ್ಕರಣೆ ಸಮಯದಲ್ಲಿ ಮತದಾರರ ನೋಂದಣಾಧಿಕಾರಿ ಕಚೇರಿಯಿಂದ ಮ್ಯಾಪಿಂಗ್ ಆಗದಿರುವ ಮತದಾರರಿಗೆ ನೋಟಿಸ್ ನೀಡಲಾಗುತ್ತದೆ. ನೋಟಿಸ್ ನೀಡಿದ ನಂತರ ಜನ್ಮದಿನಾಂಕಕ್ಕೆ ಸಂಬಂಧಪಟ್ಟ ದಾಖಲೆಗಳು ಮತ್ತು ವಾಸಸ್ಥಳಕ್ಕೆ ಸಂಬಂಧಪಟ್ಟ ದಾಖಲೆಗಳನ್ನು ಕಡ್ಡಾಯವಾಗಿ ಸಲ್ಲಿಸಬೇಕಾಗಿರು ತ್ತದೆ. ವಿಶೆಷ ಸಮಗ್ರ ಪರಿಷ್ಕರಣೆ ಸಮಯದಲ್ಲಿ ದಾಖಲೆಗಳನ್ನು ಸಲ್ಲಿಸದಿದ್ದಲ್ಲಿ ಅಂತಹವರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಕೈಬಿಡಲಾಗುವುದು. 2002ರ ಮತದಾರರ ಪಟ್ಟಿಯಲ್ಲಿ ಹೆಸರುಗಳನ್ನು https://ceo.karnataka.gov.in/search/en ಅಥವಾ https://voters.eci.gov.in/searchInSIR/S2UA4DPDF-JK4QWODSE ಹುಡುಕಬಹುದು. ತಮ್ಮ ವ್ಯಾಪ್ತಿಯ ಬೂತ್ ಮಟ್ಟದ ಅಧಿಕಾರಿಯ ದೂ.ಸಂ: ಪಡೆಯಲು https://electoralsearch.eci.gov.in/ uesfmempmlkypo ಲಿಂಕ್ ಮೂಲಕ ಹುಡುಕಬಹುದು. ತಮ್ಮ ವ್ಯಾಪ್ತಿಗೆ ಸಂಬಂಧಿಸಿದ ಬೂತ್ಮಟ್ಟದ ಅಧಿಕಾರಿ ಕರೆ ಸ್ವೀಕರಿಸದ್ದಿದಲ್ಲಿ https://voters.eci.gov.in/home/bookACallRequest ಲಿಂಕ್ ಮೂಲಕ ಕರೆಯನ್ನು ಬುಕ್ ಮಾಡಬಹುದು ಎಂದು ಮಂಗಳೂರು ತಹಶೀಲ್ದಾರರ ಪ್ರಕಟನೆ ತಿಳಿಸಿದೆ.
ಮಾರ್ಕೊ ಜಾನ್ಸನ್ ಏಕಾಂಗಿ ಹೋರಾಟ ವ್ಯರ್ಥ: ಫಿನ್ ಅಲೆನ್ ಶತಕ, ಟಿಮ್ ಸೀಫರ್ಟ್ ಅರ್ಧಶತಕ
ಸೋತ ಆಫ್ರಿಕಾ, ಕಿವೀಸ್ ಫೈನಲ್ ಗೆ
ಯಡ್ರಾಮಿ | ಕೆರೆಯಲ್ಲಿ ಈಜಲು ಹೋದ ಯುವಕ ನೀರು ಪಾಲು
ಯಡ್ರಾಮಿ: ಹೋಳಿಯಲ್ಲಿ ಮಿಂದೆದ್ದು, ಸ್ನಾನಕ್ಕೆಂದು ಕೆರೆಯಲ್ಲಿ ಈಜಾಲು ಹೋಗಿದ್ದ ಯುವಕನೋರ್ವ ನೀರುಪಾಲಾಗಿರುವ ಘಟನೆ ಬುಧವಾರ ತಾಲೂಕಿನ ಮಳ್ಳಿ ಗ್ರಾಮದಲ್ಲಿ ಘಟನೆ ನಡೆದಿದೆ. ಮೃತರನ್ನು ಮಳ್ಳಿ ಗ್ರಾಮದ ಹಳ್ಳೆಪ್ಪ ಕಲ್ಲಪ್ಪ ಕಂಠಿ (28) ಎಂದು ಗುರುತಿಸಲಾಗಿದೆ. ಮಧ್ಯಾಹ್ನ ಸ್ನೇಹಿತರೊಡನೆ ಬಣ್ಣದೋಕಳಿ ಆಡಿದ ನಂತರ ಅವರೊಂದಿಗೆ ಈಜಾಡಲು ಮಳ್ಳಿ ಗ್ರಾಮದ ಹೊರ ವಲಯದ ಕೆರೆಗೆ ತೆರಳಿದ್ದ ಎನ್ನಲಾಗಿದೆ. ಆದರೆ ಈಜು ಬಾರದೆ ಯುವಕ ನೀರು ಪಾಲಾಗಿ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ. ಘಟನೆ ನಡೆದ ಸ್ಥಳಕ್ಕೆ ಧಾವಿಸಿದ ಜೇವರ್ಗಿ ಅಗ್ನಿ ಶಾಮಕ ದಳ ಹಾಗೂ ಗ್ರಾಮಸ್ಥರು ಸೇರಿಕೊಂಡು ಸತತ 4 ಗಂಟೆಗಳ ಕಾಲ ಹುಡುಕಾಟ ನಡೆಸಿದ ಬಳಿಕ ಯುವಕನ ಮೃತದೇಹ ಪತ್ತೆಯಾಗಿದೆ. ಘಟನೆ ಯಡ್ರಾಮಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಅಮೆರಿಕ, ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧವು ವಿಮಾನಯಾನ ಸಂಸ್ಥೆಗಳು ಮತ್ತು ಪ್ರವಾಸೋದ್ಯಮ ಕ್ಷೇತ್ರಕ್ಕೆ ಭಾರಿ ಬಿಕ್ಕಟ್ಟನ್ನು ಉಂಟುಮಾಡುತ್ತಿದೆ. ಕೆಲವೇ ದಿನಗಳಲ್ಲಿ 20,000 ಕ್ಕೂ ಹೆಚ್ಚು ವಿಮಾನಗಳು ರದ್ದಾದ ನಂತರ ಮಧ್ಯಪ್ರಾಚ್ಯದಲ್ಲಿ ಸಿಲುಕಿರುವ ಸಾವಿರಾರು ಪ್ರಯಾಣಿಕರಿಗೆ ಸಹಾಯ ಮಾಡಲು ಸರ್ಕಾರಗಳು ಧಾವಿಸುತ್ತಿವೆ. ವಿಶ್ವದ ಅತ್ಯಂತ ಜನನಿಬಿಡ ನಗರಗಳಲ್ಲೊಂದು ದುಬೈ ಸೇರಿದಂತೆ ಕೊಲ್ಲಿಯ ಪ್ರಮುಖ ವಿಮಾನ ನಿಲ್ದಾಣಗಳನ್ನು ಮುಚ್ಚಲಾಗಿದೆ ಅಥವಾ ನಿರ್ಬಂಧಿಸಲಾಗಿದೆ. ಇದರಿಂದ ಸಾವಿರಾರು ಪ್ರಯಾಣಿಕರು ಸಿಲುಕಿಕೊಂಡಿದ್ದಾರೆ. ಫ್ಲೈಟ್ರಾಡಾರ್ 24 ಟ್ರ್ಯಾಕಿಂಗ್ ಡೇಟಾದ ಪ್ರಕಾರ, ಸಂಘರ್ಷ ಪ್ರಾರಂಭವಾದ ಬಳಿಕ ದುಬೈ, ದೋಹಾ ಮತ್ತು ಅಬುಧಾಬಿ ಸೇರಿದಂತೆ ಏಳು ಪ್ರಮುಖ ವಿಮಾನ ನಿಲ್ದಾಣಗಳಲ್ಲಿ ಸುಮಾರು 21,300 ವಿಮಾನಗಳನ್ನು ರದ್ದುಗೊಳಿಸಲಾಗಿದೆ. ಜಾಗತಿಕ ವ್ಯಾಪಾರ ಮತ್ತು ಪ್ರವಾಸೋದ್ಯಮ ಕೇಂದ್ರವಾಗಿ ತೈಲವನ್ನು ಮೀರಿ ಭವಿಷ್ಯವನ್ನು ನಿರ್ಮಿಸಲು ಪ್ರಯತ್ನಿಸುತ್ತಿದ್ದ ಈ ಪ್ರದೇಶದಾದ್ಯಂತ ಪ್ರಯಾಣವನ್ನು ಪ್ರಸ್ತುತ ಯುದ್ಧ ಸ್ಥಗಿತಗೊಳಿಸಿದೆ. ಯುರೋಪ್ ಮತ್ತು ಏಷ್ಯಾ ನಡುವೆ ಹಾರಲು ವಿಮಾನಗಳು ಬಳಸುವ ಕಿರಿದಾದ ಮಾರ್ಗಗಳ ಮೇಲೂ ಇದು ಪರಿಣಾಮ ಬೀರಿದೆ. ಇದರಿಂದ ವಿಶ್ವಾದ್ಯಂತ ವಿಮಾನಯಾನ ಸಂಸ್ಥೆಗಳಿಗೆ ದೀರ್ಘದೂರ ಪ್ರಯಾಣ ಹೆಚ್ಚು ಕಷ್ಟಕರವಾಗಿದೆ. ಗಲ್ಫ್ ವಿಮಾನಯಾನ ಸಂಸ್ಥೆಗಳಾದ ಎಮಿರೇಟ್ಸ್, ಫ್ಲೈದುಬೈ ಮತ್ತು ಎತಿಹಾದ್ ಸೋಮವಾರದಿಂದ ಸೀಮಿತ ಸಂಖ್ಯೆಯ ವಿಮಾನಗಳನ್ನು ಮಾತ್ರ ನಿರ್ವಹಿಸುತ್ತಿವೆ. ಇವುಗಳಲ್ಲಿ ಹೆಚ್ಚಿನವು ಗಲ್ಫ್ ರಾಷ್ಟ್ರಗಳಲ್ಲಿ ಸಿಲುಕಿಕೊಂಡಿರುವ ಪ್ರಯಾಣಿಕರನ್ನು ಮನೆಗೆ ಕರೆತರುವ ಗುರಿಯೊಂದಿಗೆ ನಡೆಸಲಾಗುತ್ತಿರುವ ‘ರಕ್ಷಣಾ ವಿಮಾನಗಳು’ ಆಗಿವೆ. ಈ ನಡುವೆ ಪ್ರಯಾಣಿಕರು ಲಭ್ಯವಿರುವ ಸೀಟುಗಳಿಗಾಗಿ ಪರದಾಡುತ್ತಿದ್ದಾರೆ. COVID-19 ಸಾಂಕ್ರಾಮಿಕದ ನಂತರದ ಅತಿದೊಡ್ಡ ವಾಯುಯಾನ ಸ್ಥಗಿತ ಇದಾಗಿದೆ ಎಂದು ಉದ್ಯಮ ತಜ್ಞರು ಹೇಳಿದ್ದಾರೆ. ಪ್ರಯಾಣ ಸಂಸ್ಥೆ ಪಿಸಿ ಏಜೆನ್ಸಿಯ ಸಿಇಒ ಪಾಲ್ ಚಾರ್ಲ್ಸ್, ಬಿಕ್ಕಟ್ಟು ಕೇವಲ ಪ್ರಯಾಣಿಕರ ವಿಷಯವಲ್ಲ; ಸರಕು ಸಾಗಣೆ ಸ್ಥಗಿತಗೊಳ್ಳುವುದರಿಂದ ಜಾಗತಿಕ ಆರ್ಥಿಕತೆಗೆ ಶತಕೋಟಿ ಡಾಲರ್ಗಳಷ್ಟು ವೆಚ್ಚವಾಗಬಹುದು ಎಂದು ಎಚ್ಚರಿಸಿದ್ದಾರೆ. ‘ಈಗಲೇ ಹೊರಡಿ’ ಯುನೈಟೆಡ್ ಅರಬ್ ಎಮಿರೇಟ್ಸ್ 60 ವಿಮಾನಗಳು ಹಾರಾಟ ಆರಂಭಿಸಿವೆ ಎಂದು ತಿಳಿಸಿದ್ದು, ಅವು ಮೀಸಲಾದ ತುರ್ತು ವಾಯು ಕಾರಿಡಾರ್ಗಳಲ್ಲಿ ಕಾರ್ಯನಿರ್ವಹಿಸುತ್ತಿವೆ. ಮುಂದಿನ ಹಂತದಲ್ಲಿ 80 ಕ್ಕೂ ಹೆಚ್ಚು ವಿಮಾನಗಳನ್ನು ನಿರ್ವಹಿಸುವ ಯೋಜನೆ ಇದೆ. ಇದೇ ವೇಳೆ ಟೆಹ್ರಾನ್ ಮತ್ತು ಬೈರುತ್ನಲ್ಲಿ ಸ್ಫೋಟಗಳು ಸಂಭವಿಸಿರುವ ಹಿನ್ನೆಲೆ, ಇತರ ರಾಷ್ಟ್ರಗಳು ತಮ್ಮ ನಾಗರಿಕರಿಗೆ ವಾಪಸಾತಿ ವಿಮಾನಗಳನ್ನು ವ್ಯವಸ್ಥೆ ಮಾಡಲು ಪ್ರಯತ್ನಿಸುತ್ತಿರುವಾಗ, ಅಮೆರಿಕದ ವಿದೇಶಾಂಗ ಇಲಾಖೆ ಎಲ್ಲಾ ಅಮೆರಿಕನ್ನರನ್ನು ಈ ಪ್ರದೇಶದ ಡಜನ್ಗಿಂತಲೂ ಹೆಚ್ಚು ದೇಶಗಳನ್ನು ತೊರೆಯುವಂತೆ ಒತ್ತಾಯಿಸಿದೆ. ಆದರೆ ಕೊಲ್ಲಿಯಾದ್ಯಂತ ವಾಯುಪ್ರದೇಶಗಳು ಮುಚ್ಚಲ್ಪಟ್ಟಿರುವುದರಿಂದ ಅಥವಾ ನಿರ್ಬಂಧಿಸಲ್ಪಟ್ಟಿರುವುದರಿಂದ ಅನೇಕರಿಗೆ ಏನು ಮಾಡಬೇಕೆಂದು ತಿಳಿಯುತ್ತಿಲ್ಲ. “ಅವರು ‘ಹೊರಡಿ’ ಎಂದು ಹೇಳುತ್ತಾರೆ. ಆದರೆ ವಾಯುಪ್ರದೇಶಗಳು ಮುಚ್ಚಲ್ಪಟ್ಟಾಗ ನಾವು ಹೇಗೆ ಹೊರಬರುತ್ತೇವೆ ಎಂದು ನೀವು ನಿರೀಕ್ಷಿಸುತ್ತೀರಿ?” ಎಂದು ಖತರ್ನ ದೋಹಾದಲ್ಲಿ ಸಿಲುಕಿರುವ ಡಲ್ಲಾಸ್ನ 32 ವರ್ಷದ ಶೆಫ್ ಓಡೀಸ್ ಟರ್ನರ್ ಪ್ರಶ್ನಿಸಿದ್ದಾರೆ. “ಪ್ರತಿಯೊಂದು ವಿಮಾನವನ್ನೂ ರದ್ದುಗೊಳಿಸುತ್ತಿದ್ದಾರೆ. ನಾನು ಮನೆಗೆ ಹೋಗಲು ಬಯಸುತ್ತೇನೆ,” ಎಂದು ಅವರು ಹೇಳಿದ್ದಾರೆ. ಇರಾನ್ ಮತ್ತು ಇಸ್ರೇಲ್ನಲ್ಲಿರುವ ಅಮೆರಿಕನ್ನರು ಖತರ್, ಬಹರೇನ್, ಈಜಿಪ್ಟ್, ಇರಾಕ್, ಜೋರ್ಡಾನ್, ಕುವೈತ್, ಲೆಬನಾನ್, ಒಮಾನ್, ಫೆಲೆಸ್ತೀನಿನ ಪ್ರದೇಶ, ಸೌದಿ ಅರೇಬಿಯಾ, ಸಿರಿಯಾ, ಯುನೈಟೆಡ್ ಅರಬ್ ಎಮಿರೇಟ್ಸ್ ಮತ್ತು ಯೆಮೆನ್ ಸೇರಿದಂತೆ ಲಭ್ಯವಿರುವ ಯಾವುದೇ ವಾಣಿಜ್ಯ ಸಾರಿಗೆಯನ್ನು ಬಳಸಿಕೊಂಡು “ಈಗಲೇ ಹೊರಡಿ” ಎಂದು ಅಮೆರಿಕದ ಕಾನ್ಸುಲರ್ ವ್ಯವಹಾರಗಳ ಸಹಾಯಕ ಕಾರ್ಯದರ್ಶಿ ಮೋರಾ ನಾಮ್ದಾರ್ ಸೋಮವಾರ X ನಲ್ಲಿ ಪೋಸ್ಟ್ ಮಾಡಿದ್ದಾರೆ. ಮಧ್ಯಪ್ರಾಚ್ಯದಿಂದ ಅಮೆರಿಕನ್ನರನ್ನು ಸ್ಥಳಾಂತರಿಸಲು ಅಮೆರಿಕ ಮಿಲಿಟರಿ ಮತ್ತು ಚಾರ್ಟರ್ ವಿಮಾನಗಳನ್ನು ಬಳಸುತ್ತಿದೆ ಎಂದು ವಿದೇಶಾಂಗ ಇಲಾಖೆಯ ಅಧಿಕಾರಿಯೊಬ್ಬರು ಮಂಗಳವಾರ X ನಲ್ಲಿ ತಿಳಿಸಿದ್ದಾರೆ. ಸುಮಾರು 3,000 ಅಮೆರಿಕದ ನಾಗರಿಕರೊಂದಿಗೆ ಸಂಪರ್ಕದಲ್ಲಿರುವುದಾಗಿ ಅವರು ಹೇಳಿದ್ದಾರೆ. ಏತನ್ಮಧ್ಯೆ, ಗಲ್ಫ್ ವಿಮಾನಯಾನ ಸಂಸ್ಥೆಗಳಿಗೆ ಪರ್ಯಾಯ ಮಾರ್ಗಗಳಿಗಾಗಿ ಬೇಡಿಕೆ ಹೆಚ್ಚಾಗಿದೆ. ಹಾಂಗ್ ಕಾಂಗ್–ಲಂಡನ್ನಂತಹ ಮಾರ್ಗಗಳಲ್ಲಿ ಬುಕಿಂಗ್ ಮತ್ತು ಟಿಕೆಟ್ ಬೆಲೆಗಳು ಏರಿಕೆಯಾಗಿವೆ ಎಂದು ಮಂಗಳವಾರ ರಾಯಿಟರ್ಸ್ ವರದಿ ಮಾಡಿದೆ. ಸಂಘರ್ಷ ಮುಂದುವರಿದರೆ ಮಧ್ಯಪ್ರಾಚ್ಯಕ್ಕೆ ಪ್ರವಾಸೋದ್ಯಮದಿಂದ ಬರುವ ಶತಕೋಟಿ ಡಾಲರ್ ಆದಾಯಕ್ಕೆ ಹೊಡೆತ ಬೀಳಬಹುದು ಎಂದು ವಿಶ್ಲೇಷಕರು ಅಂದಾಜಿಸಿದ್ದಾರೆ. “ನಾವು ಮನೆಗೆ ಹೋಗಲು ಸಾಧ್ಯವಿಲ್ಲ, ಕೆಲಸಕ್ಕೆ ಹೋಗಲು ಸಾಧ್ಯವಿಲ್ಲ, ಮಕ್ಕಳನ್ನು ಶಾಲೆಗೆ ಕಳುಹಿಸಲು ಸಾಧ್ಯವಿಲ್ಲ,” ಎಂದು ಥೈಲ್ಯಾಂಡ್ನಲ್ಲಿ ಸಿಲುಕಿರುವ ಫ್ರೆಂಚ್ ಪ್ರವಾಸಿ ಟಟಿಯಾನಾ ಲೆಕ್ಲರ್ಕ್ ಹೇಳಿದ್ದಾರೆ. ಅವರ ವಿಮಾನವು ಏಷ್ಯಾ ಮತ್ತು ಯುರೋಪ್ ನಡುವಿನ ಪ್ರಮುಖ ಸಂಪರ್ಕವಾಗಿರುವ ಮಧ್ಯಪ್ರಾಚ್ಯದ ವಿಮಾನ ನಿಲ್ದಾಣಗಳ ಮೂಲಕ ಹೋಗಬೇಕಾಗಿತ್ತು. ಬ್ಯಾಂಕಾಕ್ನಲ್ಲಿ ಸಿಲುಕಿರುವ ಅಂತರರಾಷ್ಟ್ರೀಯ ವಾಯುಯಾನ ಮತ್ತು ಪ್ರವಾಸೋದ್ಯಮ ಸಲಹೆಗಾರ್ತಿ ಅನಿತಾ ಮೆಂಡಿರಟ್ಟಾ, “ಯುದ್ಧವು ವಿಶ್ವದ ಪ್ರಮುಖ ಭಾಗದಲ್ಲಿ ನಡೆಯುತ್ತಿರುವುದರಿಂದ ಜಾಗತಿಕ ವ್ಯಾಪಾರ ಮತ್ತು ಪ್ರಯಾಣಕ್ಕೆ ದೊಡ್ಡ ಸಮಸ್ಯೆಗಳನ್ನು ಉಂಟುಮಾಡಲಿದೆ,” ಎಂದು ಹೇಳಿದ್ದಾರೆ. “ಮಧ್ಯಪ್ರಾಚ್ಯದಿಂದ ಎಂಟು ಗಂಟೆಗಳ ವಿಮಾನ ಪ್ರಯಾಣದಲ್ಲಿ ವಿಶ್ವದ ಮೂರನೇ ಎರಡರಷ್ಟು ಜನರನ್ನು ತಲುಪಬಹುದು. ಈ ಮಾರ್ಗ ನಿರ್ಬಂಧಿತವಾದಾಗ ವಿಮಾನಗಳು ಯುದ್ಧವನ್ನು ತಪ್ಪಿಸಲು ಉತ್ತರಕ್ಕೆ ಅಥವಾ ದಕ್ಷಿಣಕ್ಕೆ ಹಾರಬೇಕಾಗುತ್ತದೆ. ಉತ್ತರಕ್ಕೆ ಹಾರುವುದು ಅಪಾಯಕಾರಿ; ಅದು ರಷ್ಯಾ ಅಥವಾ ಪಾಕಿಸ್ತಾನದಂತಹ ಇತರ ಸಂಘರ್ಷ ವಲಯಗಳಿಗೆ ಸಮೀಪಿಸುತ್ತದೆ. ಇದರಿಂದ ವಿಮಾನಯಾನ ಸಂಸ್ಥೆಗಳ ಮೇಲೆ ಭಾರಿ ಒತ್ತಡ ಉಂಟಾಗುತ್ತದೆ,” ಎಂದು ಅವರು ಹೇಳಿದ್ದಾರೆ. ಆದಾಗ್ಯೂ, ಮಂಗಳವಾರ ಕೆಲವು ಸುಧಾರಣೆಯ ಸೂಚನೆಗಳು ಕಂಡುಬಂದಿವೆ. ಲಂಡನ್ (ಹೀಥ್ರೂ) ಮತ್ತು ದುಬೈ ಹಾಗೂ ರಿಯಾದ್ ನಡುವೆ ತನ್ನ ನಿಯಮಿತ ವಿಮಾನಗಳನ್ನು ಯೋಜನೆಯಂತೆ ಪುನರಾರಂಭಿಸುವುದಾಗಿ ವರ್ಜಿನ್ ಅಟ್ಲಾಂಟಿಕ್ ಘೋಷಿಸಿದೆ. ‘ಆರ್ಥಿಕ ಸಂಕಷ್ಟದಲ್ಲಿ ವಿಮಾನಯಾನ ಸಂಸ್ಥೆಗಳು’ ಮಂಗಳವಾರ ವಿಶ್ವಾದ್ಯಂತ ವಿಮಾನಯಾನ ಸಂಸ್ಥೆಗಳ ಷೇರುಗಳು ಕುಸಿದವು. ಆದರೆ ಅಮೆರಿಕದ ಷೇರುಗಳು ಮಧ್ಯಾಹ್ನದ ವಹಿವಾಟಿನಲ್ಲಿ ನಷ್ಟವನ್ನು ಭಾಗಶಃ ಕಡಿಮೆ ಮಾಡಿವೆ. ಕಾರ್ಯಾಚರಣೆ ಮತ್ತು ಆರ್ಥಿಕ ಪರಿಣಾಮವು ವಿಮಾನಯಾನ ಸಂಸ್ಥೆಗಿಂತ ಸಂಸ್ಥೆಗೆ ಗಮನಾರ್ಹವಾಗಿ ಬದಲಾಗುತ್ತದೆ ಎಂದು ಜೆಪಿ ಮಾರ್ಗನ್ನ ಏಷ್ಯಾ ಮೂಲಸೌಕರ್ಯ, ಕೈಗಾರಿಕೆಗಳು ಮತ್ತು ಸಾರಿಗೆ ಸಂಶೋಧನಾ ವಿಭಾಗದ ಮುಖ್ಯಸ್ಥ ಕರೆನ್ ಲಿ ಹೇಳಿದ್ದಾರೆ. ಹೆಡ್ಜಿಂಗ್ ತಂತ್ರ, ವಾಯುಸರಕು ಆದಾಯ ಮತ್ತು ನೆಟ್ವರ್ಕ್ ಬದಲಾಯಿಸುವ ಸಾಮರ್ಥ್ಯಗಳ ವಿಷಯದಲ್ಲಿ ವಿಮಾನಯಾನ ಸಂಸ್ಥೆಗಳ ನಡುವೆ ದೊಡ್ಡ ವ್ಯತ್ಯಾಸಗಳಿವೆ; ಇವು ಮಧ್ಯಪ್ರಾಚ್ಯದ ಪರಿಸ್ಥಿತಿಯ ನಿಜವಾದ ಪರಿಣಾಮವನ್ನು ನಿರ್ಧರಿಸುತ್ತವೆ ಎಂದು ಲಿ ಹೇಳಿದ್ದಾರೆ. ಹೆಚ್ಚುತ್ತಿರುವ ಸಂಘರ್ಷದ ನಡುವೆ ತೈಲ ಬೆಲೆಗಳು ಏರಿಕೆಯಾಗಿವೆ. ಈ ವರ್ಷ ಇದುವರೆಗೆ ಬೆಂಚ್ಮಾರ್ಕ್ ಕಚ್ಚಾ ತೈಲದ ಬೆಲೆ ಸುಮಾರು 30% ಏರಿಕೆಯಾಗಿದೆ. ಇದು ಜೆಟ್ ಇಂಧನ ವೆಚ್ಚವನ್ನು ಹೆಚ್ಚಿಸಿ ವಿಮಾನಯಾನ ಸಂಸ್ಥೆಗಳ ಲಾಭವನ್ನು ಕುಗ್ಗಿಸುವ ಸಾಧ್ಯತೆ ಇದೆ. ಕಾರ್ಮಿಕ ವೆಚ್ಚದ ನಂತರ ಇದು ಅವರ ಎರಡನೇ ಅತಿದೊಡ್ಡ ಕಾರ್ಯಾಚರಣಾ ವೆಚ್ಚವಾಗಿದೆ. ಡೆಲ್ಟಾ ಏರ್ ಲೈನ್ಸ್ ತನ್ನ ಇತ್ತೀಚಿನ ವಾರ್ಷಿಕ ವರದಿಯಲ್ಲಿ, ಇಂಧನ ವೆಚ್ಚದಲ್ಲಿನ ಸಣ್ಣ ಹೆಚ್ಚಳವೂ ದೊಡ್ಡ ಪರಿಣಾಮ ಬೀರುತ್ತದೆ ಎಂದು ಹೇಳಿದೆ. ಜೆಟ್ ಇಂಧನದ ಬೆಲೆ ಪ್ರತಿ ಗ್ಯಾಲನ್ಗೆ ಕೇವಲ 1% ಹೆಚ್ಚಾದರೂ, ವಾರ್ಷಿಕ ವೆಚ್ಚದಲ್ಲಿ ಸುಮಾರು 40 ಮಿಲಿಯನ್ ಡಾಲರ್ ಹೆಚ್ಚಳವಾಗುತ್ತದೆ. ಥರ್ಡ್ ಬ್ರಿಡ್ಜ್ ವಿಶ್ಲೇಷಕ ಪೀಟರ್ ಮೆಕ್ನಾಲಿ ಪ್ರಕಾರ, ಇಂಧನ ಬೆಲೆಗಳು 10% ಏರಿದರೆ 2026ರಲ್ಲಿ ಡೆಲ್ಟಾ ಕಂಪನಿಗೆ ಇಂಧನಕ್ಕಾಗಿ ಹೆಚ್ಚುವರಿಯಾಗಿ 1 ಬಿಲಿಯನ್ ಡಾಲರ್ ಪಾವತಿಸಬೇಕಾಗುತ್ತದೆ.
ಕಲಬುರಗಿ ಐಟಿಎಫ್ ಮಹಿಳಾ ಟೆನಿಸ್ ಟೂರ್ನಿ : ಎರಡನೇ ಸುತ್ತಿಗೆ ಅಂಕಿತಾ ರೈನಾ, ಝೀಲ್ ದೇಸಾಯಿ ಮುನ್ನಡೆ
ಕನ್ನಡತಿ ಸೋಹಾ ಸಾದಿಕ್ ಗೆ ನಿರಾಶೆ
Maharashtra | ರಾಜ್ಯಸಭಾ ಅಭ್ಯರ್ಥಿಗಳ ಪೈಕಿ ವಿನೋದ್ ತಾವ್ಡೆ, ರಾಮದಾಸ್ ಅಠಾವಳೆ ಹೆಸರು
ಬಿಜೆಪಿ ಪಾಲಿಗೆ ಮಾನದಂಡವಾದ ಜಾತಿ ಸಮತೋಲನ, ನಿಷ್ಠೆ
ಇರಾನ್ ಪರವಾಗಿ ರಷ್ಯಾ ಮತ್ತು ಚೀನಾ ಬ್ಯಾಟಿಂಗ್, ಯುದ್ಧ ಅಖಾಡದಲ್ಲಿ ಹೊಸ ತಲ್ಲಣ | Operation Roaring Lion
ಇರಾನ್.. ಇರಾನ್.. ಇರಾನ್.. ಯಾವುದೇ ಟಿವಿ ಚಾನಲ್ ಸ್ವಿಚ್ ಮಾಡಿದರೂ, ವೆಬ್ಸೈಟ್ ತೆಗೆದು ಓದಿದರೂ, ಯುಟ್ಯೂಬ್ ವಿಡಿಯೋ ನೋಡಲು ಹೋದರೂ ನಿಮ್ಮ ಕಣ್ಣಿಗೆ ಬರೀ ಇದೇ ಇರಾನ್ನ ಬಗ್ಗೆ ನ್ಯೂಸ್ ಕಾಣಿಸುತ್ತಾ ಇದೆ. ಯಾಕಂದ್ರೆ ಜಗತ್ತಿನ ದೊಡ್ಡಣ್ಣ ಅಮೆರಿಕ ತನ್ನ ಗೆಳೆಯ ಇಸ್ರೇಲ್ ಸೇನೆ ಜೊತೆ ಸೇರಿಕೊಂಡು ಭರ್ಜರಿ ಸೇನಾ ಕಾರ್ಯಾಚರಣೆ ಆರಂಭಿಸಿದೆ. ಹೀಗೆ ಯುದ್ಧ ಶುರುವಾದ
ಥಾಣೆ: 15 ವರ್ಷದ ಶಾಲಾ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿ, ಆಕೆಯಿಂದ ₹50,000 ಹಣ ಸುಲಿಗೆ ಮಾಡಿದ ಆರೋಪದ ಮೇಲೆ 23 ವರ್ಷದ ಯುವಕನೊಬ್ಬನನ್ನು ಬಂಧಿಸಲಾಗಿದೆ ಎಂದು ಬುಧವಾರ ಪೊಲೀಸರು ತಿಳಿಸಿದ್ದಾರೆ. ಆರೋಪಿಯನ್ನು ಲೋಕಮಾನ್ಯ ನಗರ ನಿವಾಸಿ ಪ್ರಥಮೇಶ್ ದೇಸಾಯಿ ಎಂದು ಗುರುತಿಸಲಾಗಿದ್ದು, ಮಾರ್ಚ್ 1ರಂದು ಬಾಲಕಿಯ ತಂದೆ ನೀಡಿದ ದೂರನ್ನು ಆಧರಿಸಿ ಆತನನ್ನು ಪೊಲೀಸರ ವಶಕ್ಕೆ ಪಡೆಯಲಾಗಿದೆ. ಸೆಪ್ಟೆಂಬರ್ 2025ರಿಂದ ಫೆಬ್ರವರಿ 2026ರ ನಡುವೆ ಪ್ರಥಮೇಶ್ ದೇಸಾಯಿ ಬಾಲಕಿಯನ್ನು ಗುರಿಯಾಗಿಸಿಕೊಂಡಿದ್ದ ಎಂದು ವರ್ತಕ್ ನಗರ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. “ಹಲವು ಬಾರಿ ಆಕೆಯನ್ನು ನಿರ್ಜನ ಪ್ರದೇಶಗಳಿಗೆ ಕರೆದೊಯ್ದಿದ್ದ ಆತ, ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ” ಎಂದು ಅವರು ಮಾಹಿತಿ ನೀಡಿದ್ದಾರೆ. ನಮ್ಮ ಸಂಬಂಧದ ಕುರಿತು ನಿನ್ನ ಪೋಷಕರಿಗೆ ತಿಳಿಸುತ್ತೇನೆ ಎಂದು ಬಾಲಕಿಗೆ ಬೆದರಿಕೆ ಒಡ್ಡಿದ್ದ ಆರೋಪಿಯು, ಆಕೆಯಿಂದ ಒಟ್ಟು ₹50,000 ಸುಲಿಗೆ ಮಾಡಿದ್ದ ಎಂದು ಅವರು ತಿಳಿಸಿದ್ದಾರೆ. “ಪದೇಪದೇ ಒಡ್ಡುತ್ತಿದ್ದ ಬೆದರಿಕೆ ಹಾಗೂ ಹಣಕಾಸಿನ ಬೇಡಿಕೆಗಳನ್ನು ತಾಳಲಾರದೆ ಅಂತಿಮವಾಗಿ ಬಾಲಕಿಯು ಈ ವಿಚಾರವನ್ನು ತನ್ನ ಪೋಷಕರಿಗೆ ತಿಳಿಸಿದ್ದಾಳೆ. ನಂತರ ಆಕೆಯ ಪೋಷಕರು ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ” ಎಂದು ಅವರು ಹೇಳಿದ್ದಾರೆ. ಆರೋಪಿ ಪ್ರಥಮೇಶ್ ದೇಸಾಯಿ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ವಿವಿಧ ಸೆಕ್ಷನ್ಗಳಡಿ ಹಾಗೂ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ತೈಲ ಸರಬರಾಜು ಬಿಕ್ಕಟ್ಟು | ಭಾರತಕ್ಕೆ 9.5 ದಶಲಕ್ಷ ಬ್ಯಾರೆಲ್ ಕಚ್ಚಾ ತೈಲ ರಫ್ತು ಮಾಡಲಿರುವ ರಷ್ಯಾ
ಹೊಸದಿಲ್ಲಿ: ಮಧ್ಯಪ್ರಾಚ್ಯದಲ್ಲಿ ತಲೆದೋರಿರುವ ಉದ್ವಿಗ್ನತೆಯಿಂದ ಉದ್ಭವಿಸಿರುವ ತೈಲ ಸರಬರಾಜು ಬಿಕ್ಕಟ್ಟನ್ನು ನಿರ್ವಹಿಸಲು ಭಾರತಕ್ಕೆ 9.5 ದಶಲಕ್ಷ ಬ್ಯಾರೆಲ್ ಕಚ್ಚಾ ತೈಲವನ್ನು ಪೂರೈಸಲು ರಷ್ಯಾ ಸಿದ್ಧವಾಗಿದ್ದು, ಇನ್ನು ಕೆಲವೇ ವಾರಗಳಲ್ಲಿ ಭಾರತಕ್ಕೆ ಕಚ್ಚಾ ತೈಲದ ದಾಸ್ತಾನು ಆಗಮಿಸಲಿದೆ ಎಂದು ಈ ಕುರಿತು ಅರಿವಿರುವ ವಿಶ್ವಾಸಾರ್ಹ ಉದ್ಯಮ ಮೂಲವೊಂದು ತಿಳಿಸಿದೆ ಎಂದು Reuters ಸುದ್ದಿ ಸಂಸ್ಥೆ ವರದಿ ಮಾಡಿದೆ. ಮೂಲತಃ ರಷ್ಯಾದದ್ದಲ್ಲದ ಸರಕು ಸಾಗಣೆ ಹಡಗುಗಳು ಭಾರತದತ್ತ ಹೊರಟಿವೆಯೆ ಎಂಬ ಕುರಿತು ತಿಳಿಸಲು ನಿರಾಕರಿಸಿರುವ ಮೂಲವು, ಇನ್ನು ಕೆಲವೇ ವಾರಗಳಲ್ಲಿ ತೈಲ ಸರಕು ಭಾರತಕ್ಕೆ ಪೂರೈಕೆಯಾಗಲಿದೆ ಎಂದು ಹೇಳಿದೆ. ಇದರಿಂದ ತೈಲ ಸಂಸ್ಕರಣಾ ಘಟಕಗಳು ನಿಟ್ಟುಸಿರು ಬಿಡುವಂತಾಗಿದೆ. ಕೇವಲ 25 ದಿನಗಳ ಬೇಡಿಕೆಯನ್ನು ಪೂರೈಸುವಷ್ಟು ತೈಲ ಸಂಗ್ರಹ ಹೊಂದಿರುವ ಭಾರತ ಸರಬರಾಜು ಆಘಾತದಿಂದ ದುರ್ಬಲಗೊಂಡಿದ್ದು, ಸಂಸ್ಕರಣಾ ಘಟಕಗಳೂ ಕೂಡ ಸೀಮಿತ ಪ್ರಮಾಣದ ಗ್ಯಾಸ್ ಆಯಿಲ್, ಗ್ಯಾಸೊಲಿನ್ ಹಾಗೂ ಎಲ್ಪಿಜಿ ದಾಸ್ತಾನನ್ನು ಹೊಂದಿವೆ. ಮಧ್ಯಪ್ರಾಚ್ಯದಲ್ಲಿ ಇನ್ನೂ 10–15 ದಿನಗಳ ಕಾಲ ಮುಂದುವರಿಯುವ ಸಾಧ್ಯತೆ ಇರುವ ಬಿಕ್ಕಟ್ಟನ್ನು ಎದುರಿಸಲು ಭಾರತ ಪರ್ಯಾಯ ಸರಬರಾಜಿನ ಹುಡುಕಾಟ ನಡೆಸುತ್ತಿದೆ ಎಂದೂ ಸರ್ಕಾರಿ ಮೂಲಗಳು ತಿಳಿಸಿವೆ.
ಇ-ಖಾತಾ, ಇ-ಸ್ವತ್ತು ತ್ವರಿತವಾಗಿ ನೀಡಲು ದ.ಕ.ಜಿಲ್ಲಾ ಉಸ್ತುವಾರಿ ಸಚಿವರ ಸೂಚನೆ
ಮಂಗಳೂರು,ಮಾ.4: ನಗರ ಸ್ಥಳೀಯ ಸಂಸ್ಥೆಗಳು ಮತ್ತು ಗ್ರಾಪಂಗಳು ಇ-ಖಾತಾ ಮತ್ತು ಇ-ಸ್ವತ್ತುಗಳನ್ನು ತ್ವರಿತವಾಗಿ ನೀಡಲು ಕ್ರಮ ವಹಿಸುವಂತೆ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೇಳಿದರು. ದ.ಕ. ಜಿಲ್ಲಾಧಿಕಾರಿ ಕಚೇರಿಯಲ್ಲಿ ಬುಧವಾರ ಅಧಿಕಾರಿಗಳ ಜೊತೆ ಸಭೆ ನಡೆಸಿ ಅವರು ಮಾತನಾಡಿದರು. ಸಾರ್ವಜನಿಕರು ಕಟ್ಟಡ ನಿರ್ಮಾಣ, ನಿವೇಶನ ನಕ್ಷೆ ಮಂಜೂರಾತಿ ಸಹಿತ ವಿವಿಧ ಮಂಜೂರಾತಿಗಳಿಗೆ ಇ-ಖಾತಾ ಮತ್ತು ಇ-ಸ್ವತ್ತು ಅಗತ್ಯವಾಗಿದೆ. ತಾಂತ್ರಿಕ ಸಮಸ್ಯೆುಂದಾಗಿ ಇ-ಖಾತಾ ನೀಡಿಕೆ ವಿಳಂಬವಾಗುತ್ತಿರುವ ಬಗ್ಗೆ ಸಾರ್ವಜನಿಕರಿಂದ ದೂರುಗಳು ಬಂದಿವೆ. ಈ ನಿಟ್ಟಿನಲ್ಲಿ ಇಂತಹ ಸಮಸ್ಯೆಗಳನ್ನು ಪರಿಹರಿಸಲು ಸಂಬಂಧಿಸಿದ ವರೊಂದಿಗೆ ಕ್ಷಿಪ್ರವಾಗಿ ಚರ್ಚಿಸಿ ಸಮಸ್ಯೆ ಪರಿಹರಿಸಲು ಅವರು ಸೂಚಿಸಿದರು. ಪ್ರಸಕ್ತ ಇ-ಖಾತಾ ನೀಡಿಕೆ ಸಮಸ್ಯೆ ಬಗೆಹರಿದಿದೆ. ಫೆಬ್ರವರಿಯಲ್ಲಿ 1058 ಇ-ಖಾತಾಗಳನ್ನು ನೀಡಲಾಗಿದೆ ಎಂದು ಮಹಾನಗರಪಾಲಿಕೆ ಆಯುಕ್ತರು ಸಭೆಗೆ ಮಾಹಿತಿ ನೀಡಿದರು. ಜಿಲ್ಲಾ ರಂಗಮಂದಿರ ಕಾಮಗಾರಿಗೆ ಶೀಘ್ರ ಚಾಲನೆ ನೀಡಬೇಕು. ಬಂಟ್ವಾಳದಲ್ಲಿ ನಿರ್ಮಾಣಗೊಳ್ಳುತ್ತಿರುವ ಪಂಜ ಮಂಗೇಶರರಾಯ ಭವನ ತ್ವರಿತವಾಗಿ ಪೂರ್ಣಗೊಳಿಸಬೇಕು. ನಗರದ ಅತ್ತಾವರದಲ್ಲಿ ಕುದ್ಮುಲ್ ರಂಗರಾವ್ ಸಮಾಧಿ ಸ್ಥಳ ಅಭಿವೃದ್ಧಿಗೆ ಅರಣ್ಯ ತಕರಾರನ್ನು ಶೀಘ್ರದಲ್ಲಿ ಬಗೆಹರಿಸಲು ಜಿಲ್ಲಾ ಉಸ್ತುವಾರಿ ಸಚಿವರು ಸೂಚಿಸಿದರು. ಗ್ರಾಮಾಂತರ ಪ್ರದೇಶದಲ್ಲಿ ವಿನ್ಯಾಸ, ನಕ್ಷೆ ಅನುಮೋದನೆ ಪ್ರಕ್ರಿಯೆಯನ್ನು ತ್ವರಿತಗೊಳಿಸಲು ಯೋಜನಾ ಪ್ರಾಧಿಕಾರಗಳು ಹೆಚ್ಚುವರಿ ಸಿಬ್ಬಂದಿಯನ್ನು ಬಳಸಿಕೊಳ್ಳಬೇಕು ಎಂದ ಸಚಿವರು, ತ್ಯಾಜ್ಯ ಶುದ್ಧೀಕರಣ ಘಟಕದಲ್ಲಿ ಶುದ್ಧೀಕರಣಗೊಂಡ ನೀರನ್ನು ಬೃಹತ್ ಕೈಗಾರಿಕೆಗಳು ಬಳಸುವಂತಾಗಲು ಸಂಬಂಧಿಸಿದ ಉದ್ಯಮಗಳೊಂದಿಗೆ ಮಾತುಕತೆ ನಡೆಸುವಂತೆ ಮಹಾನಗರಪಾಲಿಕೆ ಅಧಿಕಾರಿಗಳಿಗೆ ಸಚಿವರು ಸೂಚಿಸಿದರು. ಜಿಲ್ಲೆಯಲ್ಲಿ ಹೊಸದಾಗಿ ನಿರ್ಮಾಣಗೊಂಡು ಕಾಮಗಾರಿ ಪೂರ್ಣಗೊಂಡಿರುವ ಹಾಸ್ಟೆಲ್ ಕಟ್ಟಡಗಳ ಉದ್ಘಾಟನೆಗೆ ಕಾಯದೆ ವಿದ್ಯಾರ್ಥಿಗಳಿಗೆ ಪ್ರವೇಶ ನೀಡಲು ಸಚಿವರು ತಿಳಿಸಿದರು. ಸಭೆಯಲ್ಲಿ ಜಿಲ್ಲಾಧಿಕಾರಿ ದರ್ಶನ್ ಎಚ್.ವಿ., ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ, ಪೊಲೀಸ್ ವರಿಷ್ಠಾಧಿಕಾರಿ ಡಾ. ಅರುಣ್ ಕುಮಾರ್, ಜಿಪಂ ಸಿಇಒ ನರ್ವಾಡೆ ವಿನಾಯಕ ಖಾರ್ಬಾರಿ, ಅಪರ ಜಿಲ್ಲಾಧಿಕಾರಿ ರಾಜು ಕೆ. ಮತ್ತಿತರರು ಉಪಸ್ಥಿತರಿದ್ದರು.
ತುಳು ಅಧಿಕೃತ ಭಾಷೆ : ಆಂಧ್ರಪ್ರದೇಶ ಅಧ್ಯಯನ ವರದಿ ಸರಕಾರಕ್ಕೆ ಸಲ್ಲಿಕೆ
ಮಂಗಳೂರು, ಮಾ.4: ತುಳು ಭಾಷೆಯನ್ನು ರಾಜ್ಯದ ಎರಡನೇ ಅಧಿಕೃತ ಭಾಷೆಯಾಗಿ ಘೋಷಿಸುವ ಪ್ರಸ್ತಾಪದ ಹಿನ್ನೆಲೆಯಲ್ಲಿ ಆಂಧ್ರಪ್ರದೇಶದಲ್ಲಿ ಹೆಚ್ಚುವರಿ ಅಧಿಕೃತ ಭಾಷೆಯನ್ನು ಘೋಷಿಸುವ ಸಂದರ್ಭದಲ್ಲಿ ಅನುಸರಿಸಿರುವ ಮಾನದಂಡಗಳ ಬಗ್ಗೆ ಅಧ್ಯಯನ ನಡೆಸಲು ಸರಕಾರ ನೇಮಿಸಿರುವ ಸಮಿತಿಯು ತನ್ನ ವರದಿಯನ್ನು ಸರಕಾರಕ್ಕೆ ಸಲ್ಲಿಸಿದೆ. ಕನ್ನಡ ಮತ್ತು ಸಂಸ್ಕ್ರತಿ ಇಲಾಖೆಯ ಅಂದಿನ ನಿರ್ದೇಶಕಿ ಕೆ.ಎ.. ಗಾಯತ್ರಿ ಅಧ್ಯಕ್ಷತೆಯಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡಮಿಯ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್ ಉಪಸ್ಥಿತಿಯಲ್ಲಿ 6 ಮಂದಿ ಸದಸ್ಯರ ಅಧ್ಯಯನ ಸಮಿತಿಯನ್ನು ಸರಕಾರ ನೇಮಿಸಿತ್ತು. ಈ ಸಮಿತಿಯು ಜ.19 ಹಾಗೂ 20ರಂದು ಆಂಧ್ರಪ್ರದೇಶ ರಾಜ್ಯದ ಸಚಿವಾಲಯ, ವಿವಿಧ ಇಲಾಖೆ, ಕಚೇರಿಗಳಿಗೆ ಭೇಟಿ ನೀಡಿ ಆಂದ್ರಪ್ರದೇಶದಲ್ಲಿ ಉರ್ದು ಭಾಷೆಯನ್ನು ಎರಡನೇ ಅಧಿಕೃತ ಭಾಷೆಯಾಗಿ ಘೋಘಿಸುವ ಸಂದರ್ಭದಲ್ಲಿ ಕೈಗೊಂಡ ಮಾನದಂಡಗಳು ಹಾಗೂ ವಿಧಿವಿಧಾನಗಳ ಬಗ್ಗೆ ಅಧ್ಯಯನ ನಡೆಸಿ ವರದಿ ಸಿಧ್ದಪಡಿಸಿತ್ತು. ಸಮಿತಿಯು ವರದಿಯನ್ನು ವಿಕಾಸ ಸೌಧದಲ್ಲಿ ಕನ್ನಡ ಮತ್ತು ಸಂಸ್ಕ್ರತಿ ಇಲಾಖೆಯ ಕಾರ್ಯದರ್ಶಿ ಜೆ.ಮಂಜುನಾಥ್ಗೆ ಅಧ್ಯಯನ ಸಮಿತಿ ಸದಸ್ಯರು ಸಲ್ಲಿಸಿದರು. ತುಳುಭಾಷೆಯ ಹಿನ್ನೆಲೆ ಹಾಗೂ ಚರಿತ್ರೆಯ ಬಗೆಗಿನ ಪ್ರಸ್ತಾವನೆಯನ್ನು ಕೂಡ ವರದಿ ಜೊತೆಗೆ ಸಲ್ಲಿಸಲಾಯಿತು. ಈ ಸಂದರ್ಭ ಕನ್ನಡ ಮತ್ತು ಸಂಸ್ಕ್ರತಿ ಇಲಾಖೆಯ ನಿರ್ದೇಶಕ ಡಾ. ಬಿ.ಎಸ್. ಮಂಜುನಾಥ ಸ್ವಾಮಿ, ತುಳು ಅಕಾಡಮಿ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್, ಅಧ್ಯಯನ ಸಮಿತಿ ಸದಸ್ಯರಾದ ಸುಧಾಕರ ಶೆಟ್ಟಿ , ಕಾನೂನು ಇಲಾಖೆಯ ಉಪಕಾರ್ಯದರ್ಶಿ ವನಿತಾ, ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಉಪಕಾರ್ಯದರ್ಶಿ ಮೂರ್ತಿ ಕೆ.ಎನ್., ಕನ್ನಡ ಮತ್ತು ಸಂಸ್ಕ್ರತಿ ಇಲಾಖೆಯ ಅಧೀನ ಕಾರ್ಯದರ್ಶಿ ಕೆ.ಎಂ. ಶುಭಶ್ರೀ, ಕರ್ನಾಟಕ ಸಾಹಿತ್ಯ ಅಕಾಡಮಿಯ ರಿಜಿಸ್ಟ್ರಾರ್ ಕರಿಯಪ್ಪಎನ್. ಉಪಸ್ಥಿತರಿದ್ದರು.
ಮಂಗಳೂರು: ಮಾ.5ರಂದು ವಿಮಾನ ಸಂಚಾರ ರದ್ದು
ಮಂಗಳೂರು, ಮಾ.4: ಮಂಗಳೂರು ವಿಮಾನ ನಿಲ್ದಾಣದಿಂದ ಮಾ.5ರಂದು ಮಂಗಳೂರು-ದೋಹಾ (ಐಎಕ್ಸ್ 821), ದೋಹಾ - ಮಂಗಳೂರು (ಐಎಕ್ಸ್ 822), ಮಂಗಳೂರು-ದುಬೈ (ಐಎಕ್ಸ್ 831), ದುಬೈ-ಮಂಗಳೂರು (ಐಎಕ್ಸ್ 832), ಮಂಗಳೂರು - ದುಬೈ (ಐಎಕ್ಸ್ 813), ಮಾ.6ರ ದುಬೈ-ಮಂಗಳೂರು (ಐಎಕ್ಸ್ 814), ಮಾ5ರ ಮಂಗಳೂರು-ಬಹರೇನ್(ಐಕ್ಸ್ 841), ಮಾ.6ರ ಬಹರೇನ್-ಮಂಗಳೂರು (ಐಎಕ್ಸ್ 842), ಮಾ.5ರ ಮಂಗಳೂರು-ಕುವೈತ್ (ಐಎಕ್ಸ್ 851), ಮಾ.6ರ ಕುವೈತ್-ಮಂಗಳೂರು (ಐಎಕ್ಸ್ 852), ಮಾ.5ರ ಮಂಗಳೂರು-ದಮ್ಮಾಮ್ (ಐಎಕ್ಸ್ 847), ಮಾ.6ರ ದಮ್ಮಾಮ್-ಮಂಗಳೂರು (ಐಎಕ್ಸ್ 848), ಮಾ.5ರ ಮಂಗಳೂರು-ಅಬುಧಾಬಿ (ಐಎಕ್ಸ್ 815), ಮಾ.6ರ ಅಬುಧಾಬಿ-ಮಂಗಳೂರು (ಐಎಕ್ಸ್ 816) ವಿಮಾನಗಳ ಸಂಚಾರ ರದ್ದಾಗಿದೆ ಎಂದು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ವಕ್ತಾರರು ತಿಳಿಸಿದ್ದಾರೆ. ಮಾ.5 ರ ಅಬುಧಾಬಿ - ಮಂಗಳೂರು (6E1437), ಮಂಗಳೂರು-ಅಬುಧಾಬಿ (6E1438), ದುಬೈ-ಮಂಗಳೂರು (6E1468), ಮಂಗಳೂರು-ದುಬೈ(6E1467).
T20 World Cup- ಫಿನ್ ಅಲೆನ್ ಬಿರುಗಾಳಿ ಶತಕಕ್ಕೆ ದಕ್ಷಿಣ ಆಫ್ರಿಕಾ ನಿರುತ್ತರ: ನ್ಯೂಜಿಲೆಂಡ್ ಗೆ ಫೈನಲ್ ಟಿಕೆಟ್!
ಫಿನ್ ಅಲೆನ್ ಅವರ ಬಿರುಗಾಳಿ ಶತಕ ಐಸಿಸಿ ಟಿ20 ಟೂರ್ನಿಯದ್ದಕ್ಕೂ ಅಜೇಯವಾಗಿ ಸಾಗಿ ಬಂದಿದ್ದ ದಕ್ಷಿಣ ಆಫ್ರಿಕಾದ ಎಲ್ಲಾ ಲೆಕ್ಕಾಚಾರಗಳನ್ನು ತಲೆ ಕೆಳಗೆ ಮಾಡಿದೆ. ಸೆಮಿಫೈನಲ್ ನಲ್ಲಿ ಹರಿಣಗಳ ಪಡೆಯನ್ನು 9 ವಿಕೆಟ್ ಅಂತರದಿಂದ ಭರ್ಜರಿಯಾಗಿ ಸೋಲಿಸಿದ ಕಿವೀಸ್ ರಾಜಾರೋಷವಾಗಿ ಫೈನಲ್ ಗೆ ನೆಗೆದಿದೆ. ಕೇವಲ 33 ಎಸೆತಗಳಲ್ಲಿ ಶತಕ ಬಾರಿಸಿದ ನ್ಯೂಜಿಲೆಂಡ್ ನ ಫಿನ್ ಅಲೆನ್ ಜಯದ ರೂವಾರಿಯಾದರು. ಇದು ಇತಿಹಾಸದಲ್ಲೇ ಅತ್ಯಂತ ವೇಗದ ಶತಕವಾಗಿದೆ. ಅದೇ ರೀತಿ ಅಂತಾರಾಷ್ಟ್ರೀಯ ಟಿ20ಯಲ್ಲಿ 2ನೇ ಅತಿವೇಗದ ಶತಕವಾಗಿದೆ. ಅರ್ಹವಾಗಿ ಅವರು ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಕೋಲ್ಕತಾದ ಈಡನ್ ಗಾರ್ಡನ್ಸ್ ನಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ದಕ್ಷಿಣ ಆಫ್ರಿಕಾ ತಂಡ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 169 ರನ್ ಪೇರಿಸಿತು. ಈ ಮೊತ್ತ ಲೆಕ್ಕಕ್ಕೇ ಇಲ್ಲ ಎಂಬಂತೆ ಆಡಿದ ನ್ಯೂಜಿಲೆಂಡ್ ತಂಡ ಇನ್ನೂ 43 ಎಸೆತಗಳು ಬಾಕಿ ಇರುವಂತೆ ಗುರಿ ತಲುಪಿತು. ()ನ್ಯೂಜಿಲೆಂಡ್ ನ ಆರಂಭಿಕ ಬ್ಯಾಟರ್ ಗಳಾದ ಟಿಮ್ ಸೈಫರ್ಟ್ ಮತ್ತು ಫಿನ್ ಅಲೆನ್ ಅವರು ಆರಂಭದಿಂದಲೇ ದಕ್ಷಿಣ ಆಫ್ರಿಕಾ ಬೌಲರ್ ಗಳ ವಿರುದ್ಧ ಏರಿ ಹೋದರು. ಪವರ್ ಪ್ಲೇನ 6 ಓವರ್ ನಲ್ಲಿ 84 ರನ್ ಬಾಚಿದ ಈ ಜೋಡಿ ಕೇವಲ 7.5 ಓವರ್ ಗಳಲ್ಲಿ ತಂಡದ ಮೊತ್ತವನ್ನು 100ರ ಗಡಿ ದಾಟಿಸಿತು. ಆಗಲೇ ದಕ್ಷಿಣ ಆಪ್ರಿಕಾ ತಂಡ ಅತ್ತ ರನ್ ನಿಯಂತ್ರಿಸಲೂ ಆಗದೆ, ಇತ್ತ ವಿಕೆಟ್ ಕೀಳಲೂ ಆಗದೆ ಪಂದ್ಯವನ್ನು ಕಳೆದುಕೊಂಡಾಗಿತ್ತು. ಇವರಿಬ್ಬರಲ್ಲಿ ಸೈಫರ್ಟ್ ಅವರು 28 ಎಸೆತಗಳಲ್ಲಿ ಅರ್ಧಶತಕ ಬಾರಿಸಿದರೆ, ಫಿನ್ ಅಲೆನ್ ಅವರು 19 ಎಸೆತಗಳಲ್ಲಿ 50 ರನ್ ಬಾರಿಸಿದರು. ಕಗಿಸೋ ರಬಾಡಾ ಅವರು ಎಸೆದ 10ನೇ ಓವರ್ ನಲ್ಲಿ ದಕ್ಷಿಣ ಆಫ್ರಿಕಾಗೆ ಮೊದಲ ಯಶಸ್ಸು ಸಿಕ್ಕಿತು. ರಬಾಡಾ ಬೌಲಿಂಗ್ ನ ವೇಗ ಅಂದಾಜಿಸುವಲ್ಲಿ ವಿಫಲರಾದ ಸೈಫರ್ಟ್ ಅವರು ಕ್ಲೀನ್ ಬೌಲ್ಡ್ ಅದರು. ಆಗ ತಂಡದ ಮೊತ್ತ 117. ಔಟಾಗುವ ಮುನ್ನ ಅವರು 33 ಎಸೆತಗಳಿಂದ 58 ರನ್ ಬಾರಿಸಿದ್ದರು. ಅದರಲ್ಲಿ 7 ಬೌಂಡರಿ ಮತ್ತು 2 ಸಿಕ್ಸರ್ ಗಳಿದ್ದವು. ಇದಾದ ಬಳಿಕ ಫಿನ್ ಅಲೆ್ ಮತ್ತು ರಚಿನ್ ರವೀಂದ್ರಗೆ ಹೆಚ್ಚು ಕೆಲಸ ಉಳಿಯಲಿಲ್ಲ. ಫಿನ್ ಅಲೆನ್ ಮಾತ್ರ ಬಹಳ ತರಾತುರಿಯಲ್ಲಿದ್ದಂತೆ ಅನ್ನಿಸಿತು. 13 ಓವರ್ ಮುಗಿಯುವ ಮುಂಚೆಯೇ ತಂಡವನ್ನೂ ಜಯದ ದಡ ಸೇರಿಸಿದರು. ಜೊತೆಗೆ ಶತಕವನ್ನೂ ಪೂರೈಸಿದರು. 33 ಎಸೆತಗಳನ್ನು ಎದುರಿಸಿದ ಅವರು 10 ಬೌಂಡರಿ ಮತ್ತು 8 ಸಿಕ್ಸರ್ ಗಳಿದ್ದ ಅಜೇಯ 100 ರನ್ ಗಳಿಸಿದರು.ಇದಕ್ಕೂ ಮುನ್ನ ಟಾಸ್ ಗೆದ್ದ ನ್ಯೂಜಿಲೆಂಡ್ ತಂಡದ ನಾಯಕ ಮಿಚೆಲ್ ಸ್ಯಾಂಟ್ನರ್ ಅವರು ದಕ್ಷಿಣ ಆಫ್ರಿಕಾ ತಂಡವನ್ನು ಬ್ಯಾಟಿಂಗ್ ಗೆ ಇಳಿಸಿದರು. ಮ್ಯಾಟ್ ಹೆನ್ರಿ, ಕೋಲ್ ಮಕೆಂಚಿ ಮತ್ತು ರಚಿನ್ ರವೀಂದ್ರ ಅವರ ಬಿಗು ದಾಳಿಗೆ ದಕ್ಷಿಣ ಆಫ್ರಿಕಾ ತಂಡ ಅಕ್ಷರಶಃ ರನ್ ಗಳಿಸಲು ಪರದಾಡಿತು. ಅಂತಿಮ ಓವರ್ ಗಳಲ್ಲಿ ಮಾರ್ಕೋ ಯಾನ್ಸನ್ ಅವರು ಅರ್ಧಶತಕ ಗಳಿಸದೇ ಹೋಗಿದ್ದರೆ ತಂಡದ ಪರಿಸ್ಥಿತಿ ಮತ್ತಷ್ಟು ಶೋಚನೀಯವಾಗುತ್ತಿತ್ತು. 30 ಎಸೆತಗಳನ್ನು ಎದುರಿಸಿದ ಅವರು 2 ಬೌಂಡರಿ ಮತ್ತು 5 ಸಿಕ್ಸರ್ ಗಳನ್ನು ಒಳಗೊಂಡ ಅಜೇಯ 55 ರನ್ ಗಳಿಸಿದರು. ಸಂಕ್ಷಿಪ್ತ ಸ್ಕೋರ್ ದಕ್ಷಿಣ ಆಫ್ರಿಕಾ 20 ಓವರ್ ಗಳಲ್ಲಿ 169/8, ಮಾರ್ಕೋ ಯಾನ್ಸನ್ 55(30), ಡಿವಾಲ್ಡ್ ಬ್ರೇವಿಸ್ 34(27),ತ್ರಿಸ್ಟನ್ ಸ್ಟಬ್ಸ್ 29(24), ಮ್ಯಾಟ್ ಹೆನ್ರಿ 34ಕ್ಕೆ 2, ಕೋಲ್ ಮೆಕೆಂಚಿ 9ಕ್ಕೆ 2, ರಚಿನ್ ರವೀಂದ್ರ 29ಕ್ಕೆ 2. ನ್ಯೂಜಿಲೆಂಡ್ 12.5 ಓವರ್ ಗಳಲ್ಲಿ 173/1, ಫಿನ್ ಅಲೆನ್ 100(33), ಟಿಮ್ ಸೈಫರ್ಟ್ 58(33), ರಚಿನ್ ರವೀಂದ್ರ ನಾಟೌಟ್ 13(11),ಕಗಿಸೊ ರಬಾಡಾ 28ಕ್ಕೆ 1.
ಬ್ಯಾಂಕ್ ಖಾತೆಯಿಂದ ಅನಧಿಕೃತ ವಿಡ್ರಾ: ಪ್ರಕರಣ ದಾಖಲು
ಮಂಗಳೂರು, ಮಾ.4: ಬ್ಯಾಂಕ್ ಖಾತೆಯಿಂದ ಅನಧಿಕೃತವಾಗಿ ಹಣವನ್ನು ವಿದ್ಡ್ರಾ ಮಾಡಿರುವ ಬಗ್ಗೆ ಕದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಫೆ.28ರಂದು ತನ್ನ ಮೊಬೈಲ್ನಲ್ಲಿದ್ದ ಸಿಮ್ ಕಾರ್ಡ್ ಡೆಡ್ ಆಗಿರುವುದನ್ನು ಗಮನಿಸಿ ಏರ್ಟೆಲ್ ಕಚೇರಿಗೆ ಹೋಗಿ ಅದೇ ಸಂಖ್ಯೆಯ ಸಿಮ್ ಪಡೆದು ಏರ್ಟೆಲ್ ಕಚೇರಿಯಲ್ಲಿ ತಿಳಿಸಿದಂತೆ 4 ಗಂಟೆಯ ಬಳಿಕ ಆ ಸಿಮ್ನ್ನು ಮೊಬೈಲ್ಗೆ ಹಾಕಿ ಗೂಗಲ್ ಪೇ ಆ್ಯಪ್ ನ್ನು ಆಕ್ಟಿವೇಷನ್ ಮಾಡುವ ವೇಳೆ ಓಟಿಪಿ ಬಂದಿತ್ತು. ಆದರೆ ಆ ಓಟಿಪಿಯನ್ನು ಹಾಕಿರಲಿಲ್ಲ. ತಾನು ನಗರದ ಪಂಪ್ವೆಲ್ನಲ್ಲಿರುವ ಯೂನಿಯನ್ ಬ್ಯಾಂಕ್ ಶಾಖೆಯಲ್ಲಿ ಖಾತೆಯನ್ನು ಹೊಂದಿದ್ದು ಮಾ.2ರಂದು ಮುಂಜಾನೆ 04:04 ಗಂಟೆಯಿಂದ ಹಂತ ಹಂತವಾಗಿ ತನ್ನ ಖಾತೆಯಿಂದ ಹಣ ಕಡಿತವಾಗಿರುವ ಬಗ್ಗೆ ಮೊಬೈಲ್ಗೆ ಮೆಸೇಜ್ ಬಂದಿತ್ತು. ಅದರಂತೆ ತಾನು ಬ್ಯಾಂಕ್ಗೆ ಹೋಗಿ ತನ್ನ ಖಾತೆಯನ್ನು ಸ್ಥಗಿತ ಮಾಡುವಂತೆ ತಿಳಿಸಿದೆ. ಫೆ.27ರಿಂದು ಮಾ.2ರವರೆಗಿನ ಬ್ಯಾಂಕ್ ಸ್ಟೇಟ್ಮೆಂಟನ್ನು ಕೇಳಿ ತೆಗೆದುಕೊಂಡು ಪರಿಶೀಲಿಸಿದಾಗ ತನ್ನ ಖಾತೆ ಯಿಂದ ಹಂತ ಹಂತವಾಗಿ 1,98,200 ರೂ.ಗಳನ್ನು ಅನಧಿಕೃತವಾಗಿ ವಿದ್ಡ್ರಾ ಮಾಡಿರುವುದು ಗೊತ್ತಾಗಿದೆ ಎಂದು ಹಣ ಕಳಕೊಂಡ ವ್ಯಕ್ತಿ ದೂರಿನಲ್ಲಿ ತಿಳಿಸಿದ್ದಾರೆ.
Kerala | ಮಾಸಿಕ ₹40,000 ಕನಿಷ್ಠ ವೇತನಕ್ಕೆ ಆಗ್ರಹಿಸಿ ಖಾಸಗಿ ಆಸ್ಪತ್ರೆಗಳ ಶುಶ್ರೂಷಕಿಯರ ಮುಷ್ಕರ
ತಿರುವನಂತಪುರಂ: ಮಾಸಿಕ ₹40,000 ಕನಿಷ್ಠ ವೇತನ ಪಾವತಿಸಬೇಕು ಹಾಗೂ ಬಾಕಿ ಇರುವ ಭರವಸೆಗಳನ್ನು ತಕ್ಷಣವೇ ಈಡೇರಿಸಬೇಕು ಎಂದು ಆಗ್ರಹಿಸಿ ಬುಧವಾರ ಕೇರಳದಾದ್ಯಂತ ಖಾಸಗಿ ಆಸ್ಪತ್ರೆಗಳ ಶುಶ್ರೂಷಕಿಯರು ಮುಷ್ಕರ ನಡೆಸಿದರು. ಮುಷ್ಕರಕ್ಕೆ ಕರೆ ನೀಡಿದ್ದ ಯುನೈಟೆಡ್ ನರ್ಸಸ್ ಅಸೋಸಿಯೇಷನ್, ಪ್ರತಿಭಟನಾರ್ಥವಾಗಿ ತಿರುವನಂತಪುರಂನಲ್ಲಿರುವ ವಿಧಾನಸಭಾ ಕಾರ್ಯಾಲಯದವರೆಗೆ ಮೆರವಣಿಗೆ ನಡೆಸಿತು. ನಮ್ಮ ವೇತನಗಳನ್ನು ಕೊನೆಯದಾಗಿ 2018ರಲ್ಲಿ ಪರಿಷ್ಕರಿಸಲಾಗಿದೆ. ಜೀವನ ವೆಚ್ಚ ನಿರಂತರವಾಗಿ ಏರಿಕೆಯಾಗುತ್ತಿರುವುದರಿಂದ, ಈ ವೇತನಗಳು ಸಾಲದಾಗಿವೆ ಎಂದು ಪ್ರತಿಭಟನಾನಿರತ ಶುಶ್ರೂಷಕಿಯರು ದೂರಿದರು. ಯುನೈಟೆಡ್ ನರ್ಸಸ್ ಅಸೋಸಿಯೇಷನ್ ನಡೆಸಿದ್ದ ಪ್ರತಿಭಟನೆಯ ಬಳಿಕ, 2023ರಲ್ಲಿ ರಾಜ್ಯ ಸರ್ಕಾರ ವೇತನ ಏರಿಕೆ ಮಾಡಿ ಆದೇಶ ಹೊರಡಿಸಿದ್ದರೂ, ಆ ಆದೇಶವನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಿಲ್ಲ ಎಂದೂ ಅವರು ಆರೋಪಿಸಿದರು. ಈ ಮುಷ್ಕರದಿಂದ ಖಾಸಗಿ ಆಸ್ಪತ್ರೆಗಳ ಸೇವೆಗಳಲ್ಲಿ ವ್ಯತ್ಯಯವಾಗುವ ಸಾಧ್ಯತೆ ಇದ್ದರೂ, ತುರ್ತು ಸೇವೆಗಳ ಮೇಲೆ ಯಾವುದೇ ಪರಿಣಾಮ ಉಂಟಾಗುವುದಿಲ್ಲ ಎಂದು ಪ್ರತಿಭಟನಾಕಾರರು ತಿಳಿಸಿದ್ದಾರೆ.
ನರ್ಸಿಂಗ್ ವಿದ್ಯಾರ್ಥಿನಿ ಆತ್ಮಹತ್ಯೆ
ಉಡುಪಿ, ಮಾ.4: ವೈಯಕ್ತಿಕ ಕಾರಣದಿಂದ ಮನನೊಂದ ನರ್ಸಿಂಗ್ ವಿದ್ಯಾರ್ಥಿನಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಬಗ್ಗೆ ವರದಿಯಾಗಿದೆ. ಕಡಬ ರೆಂಜಿಲಾಡಿಯ ಲಾರೆನ್ಸ್ ಎಂಬವರ ಮಗಳು ಸ್ವೀಟಿ(18) ಎಂದು ಗುರುತಿಸಲಾಗಿದೆ. ಇವರು ಉಡುಪಿಯ ನರ್ಸಿಂಗ್ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿದ್ದು, ಆಸ್ಪತ್ರೆಯ ವಸತಿ ನಿಲಯದಲ್ಲಿ ತರಗತಿ ಮುಗಿದ ನಂತರ ಉಳಿದುಕೊಳ್ಳುತ್ತಿದ್ದರು. ಫೆ.25ರಂದು ರಾತ್ರಿ ವಸತಿ ನಿಲಯದಲ್ಲಿರುವಾಗ ಇಲಿ ಪಾಷಣಾ ಸೇವನೆ ಮಾಡಿದ್ದು, ಕೂಡಲೇ ಅವರನ್ನು ಉಡುಪಿ ಖಾಸಗಿ ಆಸ್ಪತ್ರೆಯಲ್ಲಿ ದಾಖಲು ಮಾಡಲಾಯಿತು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಆಸ್ಪತ್ರೆಗೆ ವರ್ಗಾ ಯಿಸಲಾಯಿತು. ಆದರೆ ಗಂಭೀರ ಸ್ಥಿತಿಯಲ್ಲಿದ್ದ ಅವರು, ಮಾ.3ರಂದು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟರೆಂದು ತಿಳಿದುಬಂದಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೈಂದೂರು: ಜ್ಯುವೆಲ್ಲರಿಗೆ ನುಗ್ಗಿ ಸೊತ್ತು ಕಳವು; ಪ್ರಕರಣ ದಾಖಲು
ಬೈಂದೂರು, ಮಾ.4: ಜ್ಯುವೆಲ್ಲರಿಯೊಂದಕ್ಕೆ ನುಗ್ಗಿದ ಕಳ್ಳರು ಲಕ್ಷಾಂತರ ರೂ. ಮೌಲ್ಯದ ಸೊತ್ತುಗಳನ್ನು ಕಳವು ಮಾಡಿರುವ ಘಟನೆ ಮಾ.4ರಂದು ಬೆಳಗಿನ ಜಾವ ನಡೆದಿದೆ. ಯಡ್ತರೆ ಗ್ರಾಮದ ಬಂಕೇಶ್ವರದ ಕಾರ್ತಿಕ್ ರಮೇಶ್ ರಾಯ್ಕರ್ ಎಂಬವರ ಬಂಕೇಶ್ವರ ರಸ್ತೆಯಲ್ಲಿರುವ ರವಿಕಲಾ ಜ್ಯುವೆಲ್ಲರ್ಸ್ನ ಬೀಗ ಮುರಿದು ಒಳನುಗ್ಗಿದ ಕಳ್ಳರು, ಅಂಗಡಿಗೆ ರಿಪೇರಿಗೆ ಬಂದಿದ್ದ 12 ಗ್ರಾಂ ತೂಕದ ಚಿನ್ನದ ನೆಕ್ಲೆಸ್ ಮತ್ತು 80 ಗ್ರಾಂ ತೂಕದ ಬೆಳ್ಳಿಯ ಆಭರಣಗಳಾದ 3 ಬೆಳ್ಳಿಯ ಚೈನ್, 1 ಬೆಳ್ಳಿಯ ಬ್ರಾಸ್ಲೈಟ್, ಬೆಳ್ಳಿಯ ಉಂಗುರ ಮತ್ತು 8000ರೂ. ನಗದು ಕಳವು ಮಾಡಿಕೊಂಡು ಹೋಗಿದ್ದಾರೆ. ಕಳವಾದ ಸೊತ್ತುಗಳ ಒಟ್ಟು ಮೌಲ್ಯ 1,23,000ರೂ. ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇಸ್ರೇಲ್, ಅಮೆರಿಕ ಗುರಿಗಳತ್ತ ಕ್ಷಿಪಣಿ ಮಳೆಗರೆದ ಇರಾನ್
ಟೆಹ್ರಾನ್, ಮಾ.4: ಮಧ್ಯಪ್ರಾಚ್ಯದಲ್ಲಿನ ಯುದ್ದ ಬುಧವಾರ ಐದನೇ ದಿನಕ್ಕೆ ಮುಂದುವರಿದಿರುವಂತೆಯೇ, ಅಮೆರಿಕ ಮತ್ತು ಇಸ್ರೇಲ್ನ ಗುರಿಗಳತ್ತ 40ಕ್ಕೂ ಹೆಚ್ಚು ಕ್ಷಿಪಣಿಗಳನ್ನು ಪ್ರಯೋಗಿಸಿರುವುದಾಗಿ ಇರಾನ್ ಹೇಳಿದೆ. `ಬುಧವಾರ ಬೆಳಿಗ್ಗೆ ಅಮೆರಿಕ ಮತ್ತು ಇಸ್ರೇಲ್ ಗುರಿಗಳ ಕಡೆಗೆ ಇಸ್ಲಾಮಿಕ್ ರೆವೊಲ್ಯುಷನರಿ ಗಾರ್ಡ್ ಕಾಪ್ರ್ಸ್(ಐಆರ್ಜಿಸಿ)ನ ಏರೋಸ್ಪೇಸ್ ಪಡೆಗಳು 40ಕ್ಕೂ ಹೆಚ್ಚು ಕ್ಷಿಪಣಿಗಳನ್ನು ಪ್ರಯೋಗಿಸಿವೆ. ಇರಾನ್ ರಾಷ್ಟ್ರದ ಪ್ರತೀಕಾರದ ಹಸ್ತವು ಕೊಲೆಗಾರರಿಗೆ ಕಠಿಣ, ನಿರ್ಣಾಯಕ ಮತ್ತು ವಿಷಾದನೀಯ ಶಿಕ್ಷೆ ವಿಧಿಸದೆ ಬಿಡುವುದಿಲ್ಲ' ಎಂದು ಐಆರ್ಜಿಸಿ ಹೇಳಿದೆ. ಈ ಮಧ್ಯೆ, ಶನಿವಾರ ದಾಳಿ ಆರಂಭಗೊಂಡ ಬಳಿಕ ಇರಾನ್ನ ಸುಮಾರು 2,000 ಗುರಿಗಳಿಗೆ ಹೊಡೆತ ನೀಡಿರುವುದಾಗಿ ಅಮೆರಿಕದ ಮಿಲಿಟರಿ ಹೇಳಿದೆ.
ನಾಟಕ ಹೊಸ ಸೃಜನಶೀಲತೆಯನ್ನು ಕಂಡುಕೊಳ್ಳಲು ಸಹಕಾರಿ: ಪ್ರಸನ್ನ
ಉಡುಪಿ, ಮಾ.4: ನಾಟಕವು ವಾಸ್ತವದಿಂದ ಹೊರಬಂದು ಸತ್ಯವನ್ನು ಅನ್ವೇಷಿಸುವ ಕಲೆಯಾಗಿದೆ. ಈ ಕಲೆಯು ಮನುಷ್ಯನನ್ನು ತನ್ನ ಸ್ವಂತ ಅಸ್ತಿತ್ವದಿಂದ ಹೊರತಂದು, ಹೊಸ ಸೃಜನಶೀಲತೆಯನ್ನು ಕಂಡುಕೊಳ್ಳಲು ಸಹಾಯ ಮಾಡುತ್ತದೆ ಎಂದು ಹಿರಿಯ ರಂಗಕರ್ಮಿ ಪ್ರಸನ್ನ ಹೇಳಿದ್ದಾರೆ. ರಂಗಭೂಮಿ ಉಡುಪಿ ವತಿಯಿಂದ ಉಡುಪಿ ಎಂಜಿಎಂ ಕಾಲೇಜಿನ ಮುದ್ದಣ ಮಂಟಪದಲ್ಲಿ ಬುಧವಾರ ನಡೆದ ರಂಗಭೂಮಿ ರಂಗೋತ್ಸವ ಉದ್ಘಾಟನಾ ಸಮಾರಂಭದಲ್ಲಿ ರಂಗಭೂಮಿ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡುತಿದ್ದರು. ಜೀವನ ಅನುಭವವನ್ನು ಪಡೆಯಲು ’ಕಾಯಕ’ ಅಥವಾ ಕೆಲಸ ಅತ್ಯಂತ ಮುಖ್ಯ ಎಂದು ಎಲ್ಲಾ ಧರ್ಮಗಳು ಸಾರುತ್ತವೆ. ಬಸವಣ್ಣನವರ ’ಕಾಯಕವೇ ಕೈಲಾಸ’ ತತ್ವವಿರಲಿ, ಎಲ್ಲವೂ ಕೆಲಸವನ್ನೇ ದೈವ ಎಂದು ಪರಿಗಣಿಸಿವೆ. ಪುರಂದರದಾಸರು, ಕನಕದಾಸರು, ಕಬೀರ ಮತ್ತು ರವಿದಾಸರಂತಹ ಸಂತರು ಕಲಿಸಿದ್ದಾರೆ. ನಿಮ್ಮ ಕೆಲಸವೇ ದೈವ ಮತ್ತು ಅದರಿಂದ ಬಂದ ಲಾಭವನ್ನು ಹಸಿದವರಿಗೆ ಹಂಚಿ ಉಣ್ಣುವುದೇ ನಿಜವಾದ ದೈವತ್ವ. ಆದರೆ ಇಂದು ನಾವು ಇಡೀ ವಿಶ್ವವನ್ನು ಯಂತ್ರ ನಾಗರಿಕತೆಯನ್ನಾಗಿ ಮಾಡಿಕೊಂಡಿದ್ದೇವೆ. ಇವು ಮನುಕುಲವನ್ನು ನಾಶಪಡಿಸುವ ವ್ಯವಸ್ಥೆ ಯಾಗಿದೆ ಎಂದರು. ರಂಗೋತ್ಸವವನ್ನು ಮಣಿಪಾಲ ಮಾಹೆ ಸಹಕುಲಾಧಿಪತಿ ಡಾ. ಎಚ್.ಎಸ್.ಬಳ್ಳಾಲ್ ಉದ್ಘಾಟಿಸಿದರು. ಸವಿತಾ ಕರ್ನಾಟಕ ಸಂಪಾದಕ ಮಂಡಳಿ ಗೌರವ ಸಲಹೆಗಾರ ರಾಜನ್ ಹುಣಸವಾಡಿ ಅಭಿನಂದನಾ ಭಾಷಣ ಮಾಡಿದರು. ಮಾಜಿ ಶಾಸಕ ಕೆ.ರಘುಪತಿ ಭಟ್, ಎಂಜಿಎಂ ಪ್ರಾಂಶುಪಾಲೆ ವನಿತಾ ಮಯ್ಯ, ರಂಗಭೂಮಿ ಅಧ್ಯಕ್ಷ ಡಾ.ತಲ್ಲೂರು ಶಿವರಾಂ ಶೆಟ್ಟಿ ಉಪಸ್ಥಿತರಿದ್ದರು. ರಂಗಭೂಮಿ ಪ್ರಧಾನ ಕಾರ್ಯದರ್ಶಿ ಪ್ರದೀಪ್ಚಂದ್ರ ಕುತ್ಪಾಡಿ ಸ್ವಾಗತಿಸಿದರು. ಪೂರ್ಣಿಮಾ ಸುರೇಶ್ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಲಿಟ್ಲ್ ಅರ್ಥ ಸ್ಕೂಲ್ ಆಫ್ ಥಿಯೇಟರ್ ಕೇರಳದ ಕಲಾವಿದರಿಂದ ಕುಹೂ ನಾಟಕ ಪ್ರದರ್ಶನಗೊಂಡಿತು.
ಕೆಪಿಎಸ್ಸಿ ನಡೆಸಿದ ಕೆಎಎಸ್ ಪರೀಕ್ಷೆ ವಿರುದ್ಧ ಅಕ್ರಮ ಆರೋಪ ಕೇಳಿಬಂದಿದೆ. ಒಂದೇ ಕೊಠಡಿಯ 15 ಮಂದಿ ಪರೀಕ್ಷೆ ಪಾಸ್ ಆಗಿ ಸಂದರ್ಶನಕ್ಕೆ ಆಯ್ಕೆಯಾಗಿರುವುದು ಅನುಮಾನಕ್ಕೆ ಕಾರಣವಾಗಿದೆ. ಈ ಬಗ್ಗೆ ಕೆಪಿಎಸ್ಸಿ ಕಾರ್ಯದರ್ಶಿ ಪ್ರತಿಕ್ರಿಯೆ ನೀಡಿದ್ದು, ಒಂದೇ ಕೊಠಡಿಯಲ್ಲಿ ಇನ್ನೊಂದು ಅಭ್ಯರ್ಥಿಗಳು ಪಾಸ್ ಆಗಿದ್ದು ಇದೇ ಮೊದಲ ಎಂದಿದ್ದಾರೆ. ಇನ್ನು ಈ ಬಗ್ಗೆ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ವರದಿ ಕೇಳಿದ್ದಾರೆ.
ಮಾ. 5ರಂದು ಹೋಳಿ ಆಚರಣೆ: ಮದ್ಯ ಮಾರಾಟ ನಿಷೇಧ
ಉಡುಪಿ, ಮಾ.4: ಗುರುವಾರ ಜಿಲ್ಲೆಯಲ್ಲಿ ಹೋಳಿ ಹಬ್ಬದ ಆಚರಣೆ ನಡೆಯಲಿರುವ ಹಿನ್ನೆಲೆಯಲ್ಲಿ ಕಾನೂನು ಸುವ್ಯವಸ್ಥೆ ಮತ್ತು ಸಾರ್ವಜನಿಕ ಶಾಂತಿ ಕಾಪಾಡುವ ದೃಷ್ಟಿಯಿಂದ ಕರ್ನಾಟಕ ಅಬಕಾರಿ (ಭಾರತೀಯ ಮತ್ತು ವಿದೇಶಿಯ ಮದ್ಯ ಮಾರಾಟ) ನಿಯಮಗಳನ್ವಯ ಮದ್ಯ ಮಾರಾಟದ ಸನ್ನದುಗಳನ್ನು ಹೊಂದಿರುವ ಅಂಗಡಿಗಳಲ್ಲಿ ಕರ್ನಾಟಕ ಅಬಕಾರಿ ಕಾಯ್ದೆ 1965 ರ ನಿಯಮ 21 ರನ್ವಯ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಗಂಗೊಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಗಂಗೊಳ್ಳಿ ಮತ್ತು ಗುಜ್ಜಾಡಿ ಗ್ರಾಮ ವ್ಯಾಪ್ತಿಯಲ್ಲಿ ಹಾಗೂ ಕುಂದಾಪುರ ನಗರ ಠಾಣೆಯ ಕಸಬಾ, ವಡೇರಹೋಬಳಿ ಹಾಗೂ ಹಂಗಳೂರು ಗ್ರಾಮ ವ್ಯಾಪ್ತಿಯಲ್ಲಿ ಮಾರ್ಚ್ 5ರಂದು ಬೆಳಗ್ಗೆ 6ಗಂಟೆಯಿಂದ ರಾತ್ರಿ 12:00 ಗಂಟೆಯವರೆಗೆ ಬಾರ್, ರೆಸ್ಟೋರೆಂಟ್ ಮತ್ತು ವೈನ್ಶಾಪ್ಗಳಲ್ಲಿ ಮದ್ಯ ಮಾರಾಟವನ್ನು ನಿಷೇಧಿಸಿ ಹಾಗೂ ಅಬಕಾರಿ ಸನ್ನದುಗಳನ್ನು ಮುಚ್ಚಲು ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಆದೇಶ ಹೊರಡಿಸಿದ್ದಾರೆ. ಈ ಹಿನ್ನಲೆಯಲ್ಲಿ ನಾಳೆ ಗಂಗೊಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಗಂಗೊಳ್ಳಿ, ಗುಜ್ಜಾಡಿ ಹಾಗೂ ಕುಂದಾಪುರ ನಗರ ಠಾಣೆಯ ಕಸಬಾ, ವಡೇರಹೋಬಳಿ ಮತ್ತು ಹಂಗಳೂರು ಗ್ರಾಮ ವ್ಯಾಪ್ತಿಯಲ್ಲಿ ಒಣದಿನವನ್ನು ಘೋಷಿಸಲಾಗಿದೆ.
ಗಂಗಾವತಿ | ತುಂಗಭದ್ರಾ ನದಿಯಲ್ಲಿ ಇಬ್ಬರು ಯುವಕರು ಮುಳುಗಿ ಮೃತ್ಯು
ಗಂಗಾವತಿ : ಹೋಳಿ ಹಬ್ಬದ ಹಿನ್ನೆಲೆ ನದಿ ಸ್ನಾನಕ್ಕೆ ತೆರಳಿದ್ದ ಮೂವರು ಯುವಕರು ಆಕಸ್ಮಿಕವಾಗಿ ತುಂಗಭದ್ರಾ ನದಿಯಲ್ಲಿ ಮುಳುಗಿದ ಘಟನೆ ಬುಧವಾರ ಸಂಜೆ ನಡೆದಿದೆ. ಈ ಪೈಕಿ ಒಬ್ಬ ಯುವಕ ಈಜಿ ದಡ ಸೇರಿದರೆ, ಇನ್ನಿಬ್ಬರು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಮೃತರನ್ನು ಗಂಗಾವತಿಯ ಗಾಂಧಿನಗರ ನಿವಾಸಿಗಳಾದ ಸೂರ್ಯ (17) ಹಾಗೂ ಅಭಿಷೇಕ (17) ಎಂದು ಗುರುತಿಸಲಾಗಿದೆ. ಹೋಳಿ ಕಾರ್ಯಕ್ರಮಗಳ ಬಳಿಕ ಸ್ನೇಹಿತರೊಂದಿಗೆ ಊಟ ಮಾಡಿಕೊಂಡು ನದಿ ಸ್ನಾನಕ್ಕೆ ತೆರಳಿದ್ದ ವೇಳೆ ಕಾಲು ಜಾರಿ ನೀರಿನಲ್ಲಿ ಬಿದ್ದಿದ್ದಾರೆ ಎಂದು ತಿಳಿದು ಬಂದಿದೆ. ಸ್ಥಳೀಯರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ತಕ್ಷಣ ಶೋಧ ಕಾರ್ಯಾಚರಣೆ ನಡೆಸಿ ಮೃತದೇಹಗಳನ್ನು ಹೊರತೆಗೆದಿದ್ದಾರೆ. ಪ್ರಕರಣ ಸಂಬಂಧ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ತನಿಖೆ ಮುಂದುವರಿದಿದೆ. ಹಬ್ಬದ ಸಂಭ್ರಮದಲ್ಲಿ ನದಿ-ಕೊಳಗಳಲ್ಲಿ ಸ್ನಾನ ಮಾಡುವಾಗ ಎಚ್ಚರಿಕೆ ವಹಿಸುವಂತೆ ಸಾರ್ವಜನಿಕರಿಗೆ ಪೊಲೀಸರು ಮನವಿ ಮಾಡಿದ್ದಾರೆ. ಹಬ್ಬದ ಸಂಭ್ರಮದ ಸಂದರ್ಭದಲ್ಲಿ ನದಿ ಮತ್ತು ಕೊಳಗಳಲ್ಲಿ ಸ್ನಾನ ಮಾಡುವಾಗ ಸಾರ್ವಜನಿಕರು ಹೆಚ್ಚಿನ ಎಚ್ಚರಿಕೆ ವಹಿಸಬೇಕು ಎಂದು ಪೊಲೀಸರು ಮನವಿ ಮಾಡಿದ್ದಾರೆ.
ಖತರ್ ಎನರ್ಜಿ ಎಲ್ಎನ್ಜಿ ಉತ್ಪಾದನೆ ಸ್ಥಗಿತ: ಜಾಗತಿಕ ಅನಿಲ ಮಾರುಕಟ್ಟೆಗೆ ಯಾವ ರೀತಿ ಪರಿಣಾಮ?
ಡ್ರೋನ್ ದಾಳಿಯ ನಂತರ ಖತರ್ ಎನರ್ಜಿ ದ್ರವೀಕೃತ ನೈಸರ್ಗಿಕ ಅನಿಲ (LNG) ಉತ್ಪಾದನೆಯನ್ನು ಸ್ಥಗಿತಗೊಳಿಸಿದೆ. ಇದು ಜಾಗತಿಕ ಎಲ್ಎನ್ಜಿ ಮಾರುಕಟ್ಟೆಯನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ಮಾರ್ಚ್ 2ರಂದು ಖತರ್ ನ ರಕ್ಷಣಾ ಸಚಿವಾಲಯವು ಇರಾನಿನ ಎರಡು ಡ್ರೋನ್ ಗಳು ನಿರ್ಣಾಯಕ ಮೂಲಸೌಕರ್ಯಗಳನ್ನು ಗುರಿಯಾಗಿಸಿಕೊಂಡಿವೆ ಎಂದು ದೃಢಪಡಿಸಿತು. ಈ ಡ್ರೋನ್ ಗಳು ಮೆಸಯೀದ್ ವಿದ್ಯುತ್ ಸ್ಥಾವರದಲ್ಲಿನ ನೀರಿನ ಟ್ಯಾಂಕ್ ಮತ್ತು ರಾಸ್ ಲಫಾನ್ ನಲ್ಲಿರುವ ಖತರ್ ಎನರ್ಜಿ ಸೌಲಭ್ಯದ ಮೇಲೆ ದಾಳಿ ನಡೆಸಿವೆ. ಯಾವುದೇ ಸಾವು-ನೋವುಗಳು ವರದಿಯಾಗಿಲ್ಲವಾದರೂ, ಈ ಪ್ರಮುಖ ಕೈಗಾರಿಕಾ ಕೇಂದ್ರಗಳ ಮೇಲಿನ ದಾಳಿಗಳು ವಿಶ್ವದ ಪ್ರಮುಖ ಎಲ್ಎನ್ಜಿ ಉತ್ಪಾದಕ ಕಂಪನಿಯನ್ನು ತಕ್ಷಣವೇ ಉತ್ಪಾದನೆಯನ್ನು ಸ್ಥಗಿತಗೊಳಿಸಲು ಕಾರಣವಾಯಿತು. ಖತರ್ ಎನರ್ಜಿ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿದ್ದು ಏಕೆ? ರಫ್ತು ಮಾಡಲು ಸಿದ್ಧವಾಗಿರುವ ದ್ರವೀಕೃತ ನೈಸರ್ಗಿಕ ಅನಿಲ ಸಂಸ್ಕರಣಾ ಘಟಕಗಳಿಗೆ ನೆಲೆಯಾಗಿರುವ ರಾಸ್ ಲಫಾನ್ ಸಂಕೀರ್ಣದ ಮೇಲೆ ಡ್ರೋನ್ ದಾಳಿಗಳು ನಡೆದಿವೆ. ದಾಳಿಗಳ ನಂತರ ಖತರ್ ಎನರ್ಜಿ ‘ಫೋರ್ಸ್ ಮೇಜರ್’ ಅನ್ನು ಘೋಷಿಸಿತು. ಇದು ಅನಿರೀಕ್ಷಿತ ವಿಪತ್ತುಗಳ ಸಮಯದಲ್ಲಿ ಕಂಪನಿಗೆ ತನ್ನ ಒಪ್ಪಂದಗಳಿಂದ ವಿನಾಯಿತಿ ನೀಡುವ ಕಾನೂನು ಷರತ್ತು. ಆಂತರಿಕ ಮೂಲಗಳನ್ನು ಉಲ್ಲೇಖಿಸಿ ರಾಯಿಟರ್ಸ್ ಮತ್ತು ಬ್ಲೂಮ್ ಬರ್ಗ್ ವರದಿಗಳು, ಈ ಕ್ರಮವು ಅದರ ಮೂಲಸೌಕರ್ಯದ ಮೇಲಿನ ಡ್ರೋನ್ ದಾಳಿಗೆ ನೇರ ಪ್ರತಿಕ್ರಿಯೆಯಾಗಿದೆ ಎಂದು ತಿಳಿಸಿವೆ. ಉತ್ಪಾದನೆ ಸ್ಥಗಿತವು ಅಮೆರಿಕ ಮತ್ತು ಇರಾನ್ ನಡುವಿನ ಕಡಲ ಯುದ್ಧದಲ್ಲಿ ಉಂಟಾದ ಅಸ್ಥಿರ ಏರಿಕೆಗೆ ಹೊಂದಿಕೊಂಡಿದೆ. ಕ್ಷಿಪಣಿಗಳು ಅಬ್ಬರಿಸುತ್ತಿದ್ದಂತೆ ಜಾಗತಿಕ ವ್ಯಾಪಾರಕ್ಕೆ ಪ್ರಮುಖ ಮಾರ್ಗವಾದ ಹಾರ್ಮುಜ್ ಜಲಸಂಧಿಯನ್ನು ಬಂದ್ ಮಾಡಲಾಗಿದೆ. ಜಲಮಾರ್ಗವು ನಿಷೇಧಿತ ವಲಯವಾಗುತ್ತಿದ್ದಂತೆ ನಿರ್ಣಾಯಕ ಎಲ್ ಎನ್ ಜಿ ಟ್ಯಾಂಕರ್ ಗಳು ಸೇರಿದಂತೆ ಕನಿಷ್ಠ 150 ಹಡಗುಗಳು ಲಂಗರು ಹಾಕಿವೆ ಎಂದು ರಾಯಿಟರ್ಸ್ ವರದಿ ಮಾಡಿದೆ. ಎಲ್ ಎನ್ ಜಿ ಮತ್ತು ತೈಲ ಎರಡಕ್ಕೂ ಜಲಸಂಧಿಯಲ್ಲಿ ಸಂಚಾರವು ಶೇಕಡಾ 86 ರಷ್ಟು ಕಡಿಮೆಯಾಗಿದೆ. ಸುಮಾರು 700 ಹಡಗುಗಳು ಮಾರ್ಗದ ಎರಡೂ ಬದಿಗಳಲ್ಲಿ ನಿಂತಿವೆ ಎಂದು ಅನಡೋಲು ಸುದ್ದಿ ಸಂಸ್ಥೆ ತಿಳಿಸಿದೆ. ಮಾರುಕಟ್ಟೆಯ ಮೇಲೆ ಹೇಗೆ ಪರಿಣಾಮ ಬೀರುತ್ತದೆ? ಖತರ್ನ ಎಲ್ಎನ್ಜಿ ರಫ್ತುಗಳು ಜಾಗತಿಕ ಮಾರುಕಟ್ಟೆಯ ಶೇಕಡಾ 20 ರಷ್ಟನ್ನು ಪ್ರತಿನಿಧಿಸುತ್ತವೆ. ಕಡಿಮೆ ಉತ್ಪನ್ನಗಳು ಮಾರುಕಟ್ಟೆಯನ್ನು ತಲುಪುತ್ತಿರುವುದರಿಂದ ಎಲ್ಎನ್ಜಿ ಪೂರೈಕೆ ಕಡಿಮೆಯಾಗಿದ್ದು, ಬೆಲೆಗಳು ಏರಿಕೆಯಾಗಲು ಕಾರಣವಾಗಿದೆ. “ಗಲ್ಫ್ನಲ್ಲಿ ಇಂಧನ ಮೂಲಸೌಕರ್ಯದ ಮೇಲಿನ ಒತ್ತಡದ ಹಿನ್ನೆಲೆಯಲ್ಲಿ ಇದು ರಾತ್ರೋರಾತ್ರಿ ಏರಿಕೆಯಾಗಿದೆ” ಎಂದು ಚಿಂತಕರ ಚಾವಡಿ ಸೆಂಟರ್ ಫಾರ್ ಎ ನ್ಯೂ ಅಮೇರಿಕನ್ ಸೆಕ್ಯುರಿಟಿಯ ಹಿರಿಯ ಸಹೋದ್ಯೋಗಿ ರಾಚೆಲ್ ಝೀಂಬಾ ಹೇಳಿದ್ದಾರೆ. ಏಷ್ಯನ್ ಮಾರುಕಟ್ಟೆಗಳು, ವಿಶೇಷವಾಗಿ ಬಾಂಗ್ಲಾದೇಶ, ಭಾರತ ಮತ್ತು ಪಾಕಿಸ್ತಾನಗಳ ಮೇಲೆ ಹೆಚ್ಚು ಪರಿಣಾಮ ಬೀಳಲಿದೆ. ಚೀನಾ ವಿಶ್ವದ ಅತಿದೊಡ್ಡ ನೈಸರ್ಗಿಕ ಅನಿಲ ಆಮದುದಾರ ದೇಶ. ಆದರೆ ಅದು ಆಸ್ಟ್ರೇಲಿಯಾದಿಂದ ಹೆಚ್ಚಿನ ಆಮದುಗಳನ್ನು ಪಡೆಯುತ್ತದೆ. ಇದು ಅದರ ಆಮದುಗಳಲ್ಲಿ ಶೇಕಡಾ 34 ರಷ್ಟಿದೆ ಎಂದು ಯುಎಸ್ ಇಂಧನ ಮಾಹಿತಿ ಆಡಳಿತ ತಿಳಿಸಿದೆ. ಆದಾಗ್ಯೂ, ಸ್ಟ್ಯಾನ್ಫೋರ್ಡ್ ವಿಶ್ವವಿದ್ಯಾಲಯದ ಸೆಂಟರ್ ಫಾರ್ ಫ್ಯುಯೆಲ್ಸ್ ಆಫ್ ದಿ ಫ್ಯೂಚರ್ ನ ಇಂಧನ ತಜ್ಞ ಮ್ಯಾಕ್ಸಿಮ್ ಸೋನಿನ್ ಅವರ ಪ್ರಕಾರ, ಖತರ್ ಎನರ್ಜಿಯ ನಿರ್ಧಾರವು ಇಂಧನ ಮಾರುಕಟ್ಟೆಗಳಲ್ಲಿ ಚಂಚಲತೆಯನ್ನು ತಂದರೂ ಪರಿಸ್ಥಿತಿಯನ್ನು “ಬಿಕ್ಕಟ್ಟು” ಎಂದು ಕರೆಯಲಾಗುವುದಿಲ್ಲ. “ವಿಶೇಷವಾಗಿ ಖತರ್ ಮತ್ತು ಇತರ ಕೇಂದ್ರಗಳಲ್ಲಿನ ಮೂಲಸೌಕರ್ಯಗಳು ಹಾನಿಗೊಳಗಾದರೆ ಎಲ್ಎನ್ಜಿ ಮಾರುಕಟ್ಟೆಯಲ್ಲಿ ಅಲ್ಪಾವಧಿಯ ಏರಿಳಿತವನ್ನು ನಾವು ನೋಡಬಹುದು. ಆದರೆ 2022ರಲ್ಲಿ ಯುರೋಪ್ ನಲ್ಲಿ ಕಂಡ ಅನಿಲ ಬಿಕ್ಕಟ್ಟು ಪುನರಾವರ್ತನೆಯಾಗುತ್ತದೆ ಎಂದು ನಾನು ನಿರೀಕ್ಷಿಸುವುದಿಲ್ಲ” ಎಂದು ಅಲ್ ಜಜೀರಾ ಜತೆ ಮಾತನಾಡಿದ ಸೋನಿನ್ ಹೇಳಿದ್ದಾರೆ. ರಷ್ಯಾ-ಉಕ್ರೇನ್ ಯುದ್ಧದ ನಂತರ ಅನೇಕ ಯುರೋಪಿಯನ್ ರಾಷ್ಟ್ರಗಳು ರಷ್ಯಾದ ತೈಲ ಮತ್ತು ಅನಿಲದ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ಪ್ರಯತ್ನಿಸಿವೆ. 2022ರವರೆಗೆ ರಷ್ಯಾ ವಿಶ್ವದ ಅತಿದೊಡ್ಡ ಎಲ್ಎನ್ಜಿ ರಫ್ತುದಾರವಾಗಿತ್ತು. ಆದರೆ ಉಕ್ರೇನ್ ವಿರುದ್ಧದ ಯುದ್ಧ ಪ್ರಾರಂಭವಾದ ನಂತರ ಅದರ ಮಾರಾಟ ಕುಸಿದಿದೆ. ಈಗ ಅಮೆರಿಕ ವಿಶ್ವದ ಅತಿದೊಡ್ಡ ಎಲ್ಎನ್ಜಿ ರಫ್ತುದಾರವಾಗಿದ್ದು, ನಂತರ ಖತರ್ ಮತ್ತು ಆಸ್ಟ್ರೇಲಿಯಾ ಸ್ಥಾನದಲ್ಲಿವೆ. ಇದು ಯುರೋಪ್ ಮೇಲೆ ಒತ್ತಡವನ್ನು ಹೆಚ್ಚಿಸುತ್ತದೆಯೇ? ಖತರ್ ಎನರ್ಜಿಯ ಮಾರಾಟದ ಶೇಕಡಾ 82 ರಷ್ಟು ಏಷ್ಯಾದ ದೇಶಗಳಿಗೆ ಆಗಿದ್ದರೂ, ಈ ಸ್ಥಗಿತವು ಪ್ರಪಂಚದಾದ್ಯಂತದ ಇತರ ಮಾರುಕಟ್ಟೆಗಳ ಮೇಲೆ, ವಿಶೇಷವಾಗಿ ಯುರೋಪ್ನಲ್ಲಿ ಹೆಚ್ಚಿನ ಒತ್ತಡವನ್ನು ಉಂಟುಮಾಡಬಹುದು. ವಾಸ್ತವವಾಗಿ ಅನಿಲದ ಸಣ್ಣ ಪೂರೈಕೆ ಕೂಡ ಅದೇ ಜಾಗತಿಕ ಬೇಡಿಕೆಯನ್ನು ಪೂರೈಸಬೇಕಾಗುತ್ತದೆ. ಇದರ ಪರಿಣಾಮವಾಗಿ ಅನಿಲ ಬೆಲೆಗಳು ಈಗಾಗಲೇ ಗಗನಕ್ಕೇರಲು ಪ್ರಾರಂಭಿಸಿವೆ. ಬೆಂಚ್ಮಾರ್ಕ್ ಡಚ್ ಮತ್ತು ಬ್ರಿಟಿಷ್ ಸಗಟು ಅನಿಲ ಬೆಲೆಗಳು ಸುಮಾರು ಶೇಕಡಾ 50 ರಷ್ಟು ಏರಿಕೆಯಾಗಿದೆ. ಬೆಂಚ್ಮಾರ್ಕ್ ಏಷ್ಯನ್ ಎಲ್ಎನ್ಜಿ ಬೆಲೆಗಳು ಖತರ್ ಎನರ್ಜಿ ಘೋಷಣೆಯ ನಂತರ ಸೋಮವಾರ ಸುಮಾರು ಶೇಕಡಾ 39 ರಷ್ಟು ಏರಿಕೆ ಕಂಡಿವೆ. “ಖತರ್ ದೀರ್ಘಕಾಲ ಆಫ್ ಲೈನ್ನ ಲ್ಲಿ ಇದ್ದರೆ ಅದು ಒಳ್ಳೆಯದಲ್ಲ” ಎಂದು ಝೀಂಬಾ ಹೇಳಿದ್ದಾರೆ. ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಸಂಘರ್ಷದ ಪರಿಣಾಮವನ್ನು ನಿರ್ಣಯಿಸಲು ಯುರೋಪಿಯನ್ ಒಕ್ಕೂಟದ ಅನಿಲ ಸಮನ್ವಯ ಗುಂಪು ಬುಧವಾರ ಸಭೆ ಸೇರಲಿದೆ ಎಂದು ಯುರೋಪಿಯನ್ ಆಯೋಗದ ವಕ್ತಾರರು ಸೋಮವಾರ ರಾಯಿಟರ್ಸ್ಗೆ ತಿಳಿಸಿದ್ದಾರೆ. ಭಾರತ, ಯುರೋಪ್ನಲ್ಲಿ ಇಂಧನ ಕೊರತೆ ಜಾಗತಿಕ ಮಟ್ಟದಲ್ಲಿ ಪ್ರಮುಖ ಉತ್ಪಾದಕ ರಾಷ್ಟ್ರವಾದ ಖತರ್ ಎಲ್ಎನ್ಜಿ ಉತ್ಪಾದನೆಯನ್ನು ಸ್ಥಗಿತಗೊಳಿಸಿದ ನಂತರ ಭಾರತೀಯ ಕಂಪನಿಗಳು ಈಗಾಗಲೇ ಸ್ಥಳೀಯ ಕೈಗಾರಿಕೆಗಳಿಗೆ ನೈಸರ್ಗಿಕ ಅನಿಲ ಪೂರೈಕೆಯನ್ನು ಕಡಿಮೆ ಮಾಡಿವೆ. ಪೆಟ್ರೋನೆಟ್ ಎಲ್ಎನ್ಜಿ ಗ್ಯಾಸ್ ವಿತರಣೆಯನ್ನು ಕಡಿಮೆ ಮಾಡುವುದಾಗಿ ಗೈಲ್ ಮತ್ತು ಇತರ ಪ್ರಮುಖ ವಿತರಕರಿಗೆ ತಿಳಿಸಿದೆ. ದೇಶದ ಪ್ರಮುಖ ಆಮದುದಾರ ಕಂಪನಿಯು ಭಾರತದ ಅತಿದೊಡ್ಡ ಸರ್ಕಾರಿ ಸ್ವಾಮ್ಯದ ಅನಿಲ ಮಾರಾಟಗಾರರಿಗೆ ಸರಬರಾಜುಗಳನ್ನು ಕಡಿಮೆ ಮಾಡುತ್ತಿದೆ ಎಂದು ಉದ್ಯಮ ಮೂಲಗಳನ್ನು ಉಲ್ಲೇಖಿಸಿ ರಾಯಿಟರ್ಸ್ ವರದಿ ಮಾಡಿದೆ. ಕಡಿತವು ಶೇಕಡಾ 10 ರಿಂದ 30 ರವರೆಗೆ ಇತ್ತು ಎಂದು ಎರಡು ಮೂಲಗಳು ಸಂಸ್ಥೆಗೆ ತಿಳಿಸಿವೆ. ಸೋಮವಾರ ತಡವಾಗಿ ಅನಿಲ ಪೂರೈಕೆ ಕಡಿತದ ಬಗ್ಗೆ ಗೈಲ್ ಮತ್ತು ಇಂಡಿಯನ್ ಆಯಿಲ್ ಕಾರ್ಪೊರೇಷನ್ (ಐಒಸಿ) ಗ್ರಾಹಕರಿಗೆ ಮಾಹಿತಿ ನೀಡಿವೆ. ಎಲ್ಎನ್ಜಿ ಕೊರತೆಯನ್ನು ಸರಿದೂಗಿಸಲು ಐಒಸಿ, ಗೈಲ್ ಮತ್ತು ಪೆಟ್ರೋನೆಟ್ ಎಲ್ಎನ್ಜಿ ಸೇರಿದಂತೆ ಕಂಪನಿಗಳು ಸ್ಪಾಟ್ ಟೆಂಡರ್ ಗಳನ್ನು ನೀಡಲು ಯೋಜಿಸುತ್ತಿವೆ. ಆದರೆ ಸ್ಪಾಟ್ ಬೆಲೆಗಳು, ಸರಕು ಸಾಗಣೆ ಮತ್ತು ವಿಮಾ ವೆಚ್ಚಗಳು ಹೆಚ್ಚಿವೆ ಎಂದು ಮೂಲಗಳು ತಿಳಿಸಿವೆ. ತಜ್ಞರು ಏನಂತಾರೆ? ಭಾರತವು ತನ್ನ ಅನಿಲ ಅಗತ್ಯಗಳಲ್ಲಿ ಶೇಕಡಾ 50 ರಷ್ಟು ಅಂತರರಾಷ್ಟ್ರೀಯ ಮಾರುಕಟ್ಟೆಯಿಂದ ಆಮದು ಮಾಡಿಕೊಳ್ಳುತ್ತದೆ. ಈ ಎಲ್ಎನ್ಜಿಯಲ್ಲಿ ಸುಮಾರು ಶೇಕಡಾ 40 ರಷ್ಟು ಖತರ್ನಿಂದ ಖರೀದಿಸಲಾಗುತ್ತದೆ. ಭಾರತದ ಒಟ್ಟು ಎಲ್ಎನ್ಜಿ ಆಮದಿನ ಶೇಕಡಾ 20 ರಷ್ಟು ಖತರ್ನಿಂದ ಬರುತ್ತವೆ. ಪೂರೈಕೆ ಬಿಕ್ಕಟ್ಟನ್ನು ನಿರ್ವಹಿಸಲು ಕೈಗಾರಿಕಾ ವಲಯದಲ್ಲಿ ಬಳಕೆಯನ್ನು ಕಡಿತಗೊಳಿಸುವುದು ಮತ್ತು ಅನಿಲ ಆಧಾರಿತ ವಿದ್ಯುತ್ ಉತ್ಪಾದನೆಯನ್ನು ಕಡಿಮೆ ಮಾಡುವುದು ರಾಷ್ಟ್ರದ ಆದ್ಯತೆಯಾಗಬೇಕು ಎಂದು ಭಾರತದ ಪ್ರಮುಖ ತೈಲ-ಅನಿಲ ಅರ್ಥಶಾಸ್ತ್ರಜ್ಞ ಡಾ. ಕಿರಿತ್ ಪರೇಖ್ ಹೇಳಿದ್ದಾರೆ. “ಈ ಪರಿಸ್ಥಿತಿಯಲ್ಲಿ ವಿದ್ಯುತ್ ಉತ್ಪಾದನೆಗೆ ಕಲ್ಲಿದ್ದಲಿನ ಬಳಕೆಯನ್ನು ಹೆಚ್ಚಿಸಬಹುದು. ಆದರೆ ಅದು ಹೆಚ್ಚು ದುಬಾರಿಯಾಗಬಹುದು. ವಿದ್ಯುತ್ ವಲಯವು ಹೆಚ್ಚು ಪರಿಣಾಮಗೊಳ್ಳುವುದಿಲ್ಲ. ಆದರೆ ಅನಿಲ ಆಧಾರಿತ ಕೈಗಾರಿಕೆಗಳು ಲಭ್ಯವಿರುವ ಇಂಧನವನ್ನು ಮಿತವಾಗಿ ಬಳಸಬೇಕು” ಎಂದು ಅವರು ತಿಳಿಸಿದ್ದಾರೆ. “ನಮ್ಮ ಪೆಟ್ರೋಲಿಯಂ ಕಂಪನಿಗಳು ಹೈಡ್ರೋಜನ್ ಉತ್ಪಾದಿಸಲು ಬಹಳಷ್ಟು ಅನಿಲವನ್ನು ಬಳಸುತ್ತವೆ. ಅದನ್ನು ವಿದ್ಯುತ್ ಬಳಸಿ ಉತ್ಪಾದಿಸಬಹುದು. ಆದರೆ ಅದು ಹೆಚ್ಚು ದುಬಾರಿ ಆಯ್ಕೆಯಾಗಬಹುದು” ಎಂದು ಪರೇಖ್ ಹೇಳಿದ್ದಾರೆ. ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆ ಹಿನ್ನೆಲೆಯಲ್ಲಿ ಪೆಟ್ರೋಲಿಯಂ ಸಚಿವ ಹರ್ದೀಪ್ ಸಿಂಗ್ ಪುರಿ ದೇಶದಲ್ಲಿ ಪೆಟ್ರೋಲ್, ಡೀಸೆಲ್ ಮತ್ತು ವಾಯುಯಾನ ಟರ್ಬೈನ್ ಇಂಧನ (ATF) ಸೇರಿದಂತೆ ಅಗತ್ಯ ಇಂಧನಗಳ ಸಾಕಷ್ಟು ಸಂಗ್ರಹವಿದೆ ಎಂದು ಹೇಳಿದ್ದಾರೆ. ಮೇಲ್ವಿಚಾರಣೆಗೆ ಸಚಿವಾಲಯವು ರಾಷ್ಟ್ರೀಯ ಇಂಧನ ದಾಸ್ತಾನುಗಳನ್ನು 24 ಗಂಟೆಯೂ ಮೇಲ್ವಿಚಾರಣೆ ಮಾಡಲು ನಿಯಂತ್ರಣ ಕೊಠಡಿಯನ್ನು ಪ್ರಾರಂಭಿಸಿದೆ.
ತಪ್ಪಿತಸ್ಥ ಪೊಲೀಸ್ ಸಿಬ್ಬಂದಿ ವಿರುದ್ಧ ಕಠಿಣ ಕ್ರಮ : ರಾಜ್ಯ ಪೊಲೀಸ್ ಮಹಾನಿರ್ದೆಶಕ ಎಂ.ಎ.ಸಲೀಂ
ಬೆಂಗಳೂರು : ಭ್ರಷ್ಟಾಚಾರ, ಕರ್ತವ್ಯ ಲೋಪ ಎಸಗಿದ ಪೊಲೀಸ್ ಸಿಬ್ಬಂದಿ, ಅಧಿಕಾರಿಗಳ ವಿರುದ್ಧ ಕಾನೂನು ರೀತ್ಯಾ ಕಠಿಣ ಕ್ರಮ ತೆಗೆದುಕೊಳ್ಳಲಾಗುತ್ತಿದೆ ಎಂದು ರಾಜ್ಯ ಪೊಲೀಸ್ ಮಹಾನಿರ್ದೆಶಕ ಡಾ.ಎಂ.ಎ.ಸಲೀಂ ಹೇಳಿದ್ದಾರೆ. ಬುಧವಾರ ಬೆಂಗಳೂರು ಪ್ರೆಸ್ಕ್ಲಬ್ ಆಯೋಜಿಸಿದ್ದ ಮಾಧ್ಯಮ ಸಂವಾದದಲ್ಲಿ ಮಾತನಾಡಿದ ಅವರು, ಸಿವಿಲ್ ಪ್ರಕರಣಗಳಲ್ಲಿ ಪೊಲೀಸರು ಮಧ್ಯ ಪ್ರವೇಶಿಸುವಂತಿಲ್ಲ. ಇಂತಹ ಪ್ರಕರಣಗಳಲ್ಲಿ ನ್ಯಾಯ ಕೇಳಿಕೊಂಡು ಠಾಣೆಗೆ ಬಂದವರಿಗೆ ಮಾರ್ಗದರ್ಶನ ನೀಡಬಹುದು. ಆಗ, ಸಾರ್ವಜನಿಕರಲ್ಲಿ ಪೊಲೀಸರ ಮೇಲೆ ನಂಬಿಕೆ, ವಿಶ್ವಾಸ ಬರಲಿದೆ ಎಂದು ಉಲ್ಲೇಖಿಸಿದರು. ಡ್ರಗ್ಸ್ ನಿಯಂತ್ರಣಕ್ಕೆ ಕ್ರಮ: ಮಾದಕ ವಸ್ತು (ಡ್ರಗ್ಸ್) ಪೂರೈಕೆ, ಮಾರಾಟ ದಂಧೆಗೆ ಸಂಪೂರ್ಣ ಕಡಿವಾಣ ಹಾಕಲು ರಾಷ್ಟ್ರೀಯ ಮಾದಕವಸ್ತು ನಿಯಂತ್ರಣ ಘಟಕದ (ಎನ್ಸಿಬಿ) ಮಾದರಿಯಲ್ಲಿಯೇ ರಾಜ್ಯದಲ್ಲೂ ‘ಮಾದಕ ದ್ರವ್ಯ ವಿರೋಧಿ ಕಾರ್ಯಪಡೆ’ (ಎಎನ್ಟಿಎಫ್) ಅಸ್ತಿತ್ವಕ್ಕೆ ತರಲಾಗಿದೆ. ಆ ಪಡೆಗೆ 66 ಸಿಬ್ಬಂದಿಯನ್ನು ನೇಮಿಸಲಾಗಿದ್ದು, ಡ್ರಗ್ಸ್ ವಿರುದ್ಧ ಸಮರದ ರೀತಿಯಲ್ಲೇ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಮಾಹಿತಿ ನೀಡಿದರು. ಮಾದಕ ವಸ್ತು ಪೂರೈಕೆದಾರರು, ಪೆಡ್ಲರ್ಗಳನ್ನು ಮಾತ್ರ ಪತ್ತೆ ಮಾಡಿ ಕ್ರಮ ತೆಗೆದುಕೊಳ್ಳಲಾಗುತ್ತಿದೆ. ಎಎನ್ಟಿಎಫ್ ಸ್ಥಾಪನೆಯಾದ ಮೇಲೆ ಡ್ರಗ್ಸ್ ಉತ್ಪಾದಕರನ್ನೂ ಪತ್ತೆ ಹಚ್ಚುತ್ತಿದ್ದೇವೆ. 2024ರಲ್ಲಿ 6,800, 2025ರಲ್ಲಿ ನಾಲ್ಕು ಸಾವಿರ ಡ್ರಗ್ಸ್ ಪ್ರಕರಣಗಳು ದಾಖಲಾಗಿದ್ದವು. ಈ ವರ್ಷ ಎರಡೆ ತಿಂಗಳಲ್ಲಿ 2,378 ಪ್ರಕರಣ ದಾಖಲು ಮಾಡಲಾಗಿದೆ. ಇದೇ ರೀತಿ ಕಾರ್ಯಾಚರಣೆ ನಡೆದರೆ, ಈ ವರ್ಷ 15 ಸಾವಿರಕ್ಕಿಂತ ಹೆಚ್ಚು ಪ್ರಕರಣ ದಾಖಲಾಗುವ ಸಾಧ್ಯತೆಯಿದೆ. ಹೆಚ್ಚುಚ್ಚು ಪ್ರಕರಣ ದಾಖಲಿಸಿ ಡ್ರಗ್ಸ್ ದಂಧೆಕೋರರನ್ನು ಮಟ್ಟ ಹಾಕಲಾಗುವುದು ಎಂದು ಅವರು ಹೇಳಿದರು. ಪೊಲೀಸ್ ಇಲಾಖೆಯಲ್ಲಿ ಪೊಲೀಸ್ ಫೋರ್ಸ್ ವ್ಯವಸ್ಥೆ ಬದಲಾಗಿ ಪೊಲೀಸ್ ಸೇವೆ ಎಂಬ ಹೊಸ ಆಲೋಚನೆಯೊಂದಿಗೆ ಇಲಾಖೆ ಬದಲಾಗಬೇಕು ಎನ್ನುವುದು ನನ್ನ ಮುಖ್ಯ ಉದ್ದೇಶ ಎಂದ ಅವರು, ನಾಗರಿಕರು ಮತ್ತು ಪೊಲೀಸರ ನಡುವೆ ದೊಡ್ಡ ಕಂದಕವಿದೆ, ಅಪನಂಬಿಕೆ ಇದೆ ಇದು ಸರಿಯಾಗಬೇಕು. ಸಾರ್ವಜನಿಕರು ತಮ್ಮ ದೂರುಗಳನ್ನು ಮೊದಲು ತಲುಪಿಸುವ ಸ್ಥಳ ಪೊಲೀಸ್ ಠಾಣೆ. ಅಲ್ಲಿನ ಪೊಲೀಸ್ ಅಧಿಕಾರಿಗಳು ಅವರ ಜೊತೆ ಬೆರೆತು ಅವರ ಸಮಸ್ಯೆಗಳನ್ನು ಆಲಿಸಿ ಅದಕ್ಕೆ ಪರಿಹಾರ ಹೇಳುವಂತಾಗಬೇಕು ಎಂದು ಅವರು ತಿಳಿಸಿದರು. ಕೆಲವೊಂದು ವಿಚಾರಗಳು ಪೊಲೀಸ್ ಠಾಣೆಗೆ ಸಂಬಂಧವಿಲ್ಲದಿದ್ದರೂ ದೂರನ್ನು ನೀಡಲು ಬರುತ್ತಾರೆ. ಅಂತಹ ವಿಚಾರಗಳನ್ನು ಕೂಡ ಸಂಬಂಧ ಪಟ್ಟ ಪೊಲೀಸ್ ಅಧಿಕಾರಿಗಳು ಸೂಕ್ತ ರೀತಿಯಲ್ಲಿ ತಿಳಿಹೇಳಿ ಅವರನ್ನು ಕಳುಹಿಸಿ ಕೊಡಬೇಕಾಗುತ್ತದೆ. ಆ ಬದ್ಧತೆ ಮೆರೆದು ಒಟ್ಟಾರೆಪೊಲೀಸ್ ಸ್ನೇಹಿತನಂತೆ ವರ್ತಿಸಬೇಕು. ಆ ರೀತಿಯ ವಾತಾವರಣವನ್ನು ನಾನು ಬಯಸುತ್ತಿದ್ದು, ಈ ದಿಕ್ಕಿನಲ್ಲಿ ಕೆಲವು ಬದಲಾವಣೆಗಳನ್ನು ತರಲು ಪ್ರಯತ್ನಿಸುತ್ತಿದ್ದೇನೆ. ಪೊಲೀಸ್ ಇಲಾಖೆ ಇದರಂತೆ ನಡೆದುಕೊಂಡರೆ ನಾಗರಿಕರಲ್ಲಿ ಉತ್ತಮ ಬಾಂಧವ್ಯ ಬೆಳೆದು ಇಲಾಖೆ ಮೇಲಿರುವ ಕೆಲವು ಅಪನಂಬಿಕೆಗಳು ದೂರವಾಗುತ್ತವೆ ಎಂದು ತಾನು ಬಯಸಿದ ಬದಲಾವಣೆಯ ಬಗ್ಗೆ ತಿಳಿಸಿದರು. ಬೆಂಗಳೂರಿನಂತಹ ದೊಡ್ಡ ನಗರಗಳಲ್ಲಿ ಸಂಚಾರ ದಟ್ಟಣೆ ಸಮಸ್ಯೆ ಹೆಚ್ಚುತ್ತಲೆ ಇದೆ. ಇದಕ್ಕೆ ಅನೇಕ ಕಾರಣಗಳು ಕೂಡ ಇವೆ. ತುಮಕೂರು, ರಾಮನಗರ, ಕೋಲಾರ ರಸ್ತೆ ಹೀಗೆ ಎಲ್ಲ ದಿಕ್ಕುಗಳಲ್ಲೂ ಹೊರಗಡೆಯಿಂದ ವಾಹನಗಳು ವೇಗವಾಗಿ ಬಂದು ಬೆಂಗಳೂರು ನಗರವನ್ನು ತಲುಪುತ್ತದೆ. ಆಗ ದಟ್ಟಣೆ ಹೆಚ್ಚಾಗುತ್ತದೆ. ಈ ಸಮಸ್ಯೆನ ಬಗೆಹರಿಸಲು ಈಗಾಗಲೇ ಹಲವು ಬದಲಾವಣೆಗಳನ್ನು ತಂದಿದ್ದೇವೆ ಎಂದರು ಮುಂಬೈ ಅಂತಹ ನಗರಗಳಲ್ಲಿ ಶೇ.80 ನಾಗರಿಕರು ಸಾರ್ವಜನಿಕ ಸಾರಿಗೆ ಇಲಾಖೆಯನ್ನು ಬಳಸುತ್ತಾರೆ ಆದರೆ ನಮ್ಮ ಬೆಂಗಳೂರು ನಗರದಲ್ಲಿ ಕೇವಲ ಶೇ.47 ಜನರು ಮಾತ್ರ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಉಪಯೋಗಿಸುತ್ತಿದ್ದಾರೆ. ದಟ್ಟಣೆ ಹೆಚ್ಚಾಗಲು ಇದು ಒಂದು ಕಾರಣ. ಬೆಂಗಳೂರಿನಲ್ಲಿ ಈಗ ಮೆಟ್ರೋ ವ್ಯವಸ್ಥೆ ತುಂಬಾ ಅತ್ಯುತ್ತಮವಾಗಿದೆ. ಬಸ್ ವ್ಯವಸ್ಥೆ ಕೂಡ ಚೆನ್ನಾಗಿದೆ ನಾಗರಿಕರು ಹೆಚ್ಚಿಗೆ ಇವುಗಳನ್ನು ಬಳಸಬೇಕು ಎಂದು ಅವರು ಮನವಿ ಮಾಡಿದರು. ಮಾಧ್ಯಮ ಸಂವಾದದಲ್ಲಿ ಬೆಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಆರ್.ಶ್ರೀಧರ್, ಪ್ರಧಾನ ಕಾರ್ಯದರ್ಶಿ ಶಿವಕುಮಾರ್ ಬೆಳ್ಳಿತಟ್ಟೆ, ಉಪಾಧ್ಯಕ್ಷ ಮೋಹನ್ ಕುಮಾರ್ ಸೇರಿದಂತೆ ಪ್ರಮುಖರಿದ್ದರು. ಡಾ.ಎಂ.ಎ.ಸಲೀಂ ಅವರಿಗೆ ಪ್ರೆಸ್ಕ್ಲಬ್ ಸದಸ್ಯತ್ವ..! ಸಂವಾದ ಆರಂಭಕ್ಕೂ ಮುನ್ನ ರಾಜ್ಯ ಪೊಲೀಸ್ ಮಹಾನಿರ್ದೆಶಕ ಡಾ.ಎಂ.ಎ.ಸಲೀಂ ಅವರಿಗೆ ಪ್ರೆಸ್ಕ್ಲಬ್ ಸದಸ್ಯತ್ವ ನೀಡಲಾಯಿತು. ಅಕ್ರಮ ವಲಸಿಗರ ಪತ್ತೆ ಚುರುಕು..! ಅಕ್ರಮ ವಲಸಿಗರನ್ನು ಪತ್ತೆಮಾಡಿ ಕ್ರಮ ತೆಗೆದುಕೊಳ್ಳುವಂತೆ ಆಯಾ ಜಿಲ್ಲೆಗಳ ಎಸ್ಪಿಗಳಿಗೆ ಈಗಾಗಲೇ ಸೂಚನೆ ನೀಡಲಾಗಿದೆ. ಕಾಫಿ ಎಸ್ಟೇಟ್ಗಳಲ್ಲಿ ಅಕ್ರಮ ವಲಸಿಗರು ಕೆಲಸ ಮಾಡುತ್ತಿದ್ದಾರೆ ಎನ್ನುವ ಮಾಹಿತಿ ಇದ್ದು, ಪರಿಶೀಲನೆ ನಡೆಸಲಾಗುವುದು ಎಂದು ಡಾ.ಎಂ.ಎ.ಸಲೀಂ ಹೇಳಿದರು.
ಶ್ರೀಲಂಕಾ ಕರಾವಳಿಯಲ್ಲಿ ಇರಾನ್ ಯುದ್ಧನೌಕೆ ಮೇಲೆ ಯುಎಸ್ ದಾಳಿ, 102 ಮಂದಿ ನಾಪತ್ತೆ: ಭಾರತಕ್ಕೆ ಕಾಂಗ್ರೆಸ್ ಪ್ರಶ್ನೆ
ಇರಾನ್ ಮೇಲೆ ಇಸ್ರೇಲ್ ಮತ್ತು ಯುಎಸ್ ಸೇನೆಗಳು ದಾಳಿ ಮುಂದುವರಿಸಿವೆ. ಇದರ ನಡುವೆ ಇಂದು (ಮಾ.4) ಶ್ರೀಲಂಕಾದ ಕರಾವಳಿ ಭಾಗದಲ್ಲಿ ಅಂದರೆ ಭಾರತದ ಸಮೀಪವೇ ಇರಾನ್ ಯುದ್ಧ ನೌಕೆಯನ್ನು ಅಮೆರಿಕ ಜಲಾಂತರ್ಗಾಮಿ ನೌಕೆಯು ದಾಳಿ ನಡೆಸಿ ಮುಳುಗಿಸಿದೆ. ಇದರಲ್ಲಿದ್ದ ಹಲವು ಮಂದಿ ಪೈಕಿ 102 ಮಂದಿ ನಾಪತ್ತೆ ಆಗಿದ್ದು, 32 ಮಂದಿಯನ್ನು ಭಾರತೀಯ ನೌಕಾಪಡೆ ರಕ್ಷಿಸಿದೆ. ಭಾರತದ
ಶ್ರೀಲಂಕಾ ಕರಾವಳಿಯಲ್ಲಿ ಮುಳುಗಿದ ಇರಾನಿನ ಯುದ್ಧನೌಕೆ: 87 ಮೃತದೇಹಗಳು ಪತ್ತೆ
ಕೊಲಂಬೊ: ಸಮುದ್ರದಲ್ಲಿ ಅಮೆರಿಕ ಪಡೆಗಳು ಮುಳುಗಿಸಿದೆ ಎಂದು ಹೇಳಲಾಗಿರುವ ಇರಾನಿನ ಯುದ್ಧನೌಕೆಯಿಂದ ಕನಿಷ್ಠ 87 ಮೃತದೇಹಗಳನ್ನು ಶ್ರೀಲಂಕಾ ನೌಕಾಪಡೆ ವಶಪಡಿಸಿಕೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಸೋಸಿಯೇಟೆಡ್ ಪ್ರೆಸ್ ವರದಿ ಪ್ರಕಾರ, ಶ್ರೀಲಂಕಾ ನೌಕಾಪಡೆಯ ಕಮಾಂಡರ್ ಬುದ್ಧಿಕ ಸಂಪತ್ ಈ ಕುರಿತು ಮಾಹಿತಿ ನೀಡಿದ್ದು, ರಕ್ಷಣಾ ಪಡೆಗಳು ಘಟನಾ ಸ್ಥಳಕ್ಕೆ ತಲುಪುವ ಹೊತ್ತಿಗೆ ಹಡಗಿನ ಯಾವುದೇ ಸ್ಪಷ್ಟ ಅವಶೇಷಗಳು ಕಾಣಿಸಲಿಲ್ಲ ಎಂದು ಹೇಳಿದ್ದಾರೆ. “ಅಲ್ಲಿ ಕೇವಲ ತೈಲದ ಅಂಶಗಳು ಹಾಗೂ ಲೈಫ್ ರಾಫ್ಟ್ ಗಳು ಮಾತ್ರ ಕಂಡುಬಂದವು. ನೀರಿನ ಮೇಲೆ ತೇಲುತ್ತಿದ್ದ ಕೆಲವರನ್ನು ನಾವು ಪತ್ತೆಹಚ್ಚಿದ್ದೇವೆ,” ಎಂದು ಅವರು ತಿಳಿಸಿದ್ದಾರೆ. ಈ ಘಟನೆಯಲ್ಲಿ ಗಾಯಗೊಂಡ 32 ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಮುಳುಗಿದ ಇರಾನಿನ ಯುದ್ಧನೌಕೆಯಲ್ಲಿ ಸುಮಾರು 180 ಮಂದಿ ಇದ್ದರು ಎನ್ನಲಾಗಿದೆ ಎಂದು ಶ್ರೀಲಂಕಾದ ವಿದೇಶಾಂಗ ಸಚಿವರು ಸಂಸತ್ತಿನಲ್ಲಿ ತಿಳಿಸಿದ್ದಾರೆ. ಪತ್ತೆಯಾದ ಮೃತದೇಹಗಳನ್ನು ದಡಕ್ಕೆ ತರಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ನೌಕಾಪಡೆಯ ವಕ್ತಾರರು ತಿಳಿಸಿದ್ದಾರೆ.
ಪವಿತ್ರಾ ಗೌಡ ಸೇರಿ ಮೂವರು ಆರೋಪಿಗಳಿಗೆ ಮನೆ ಊಟ; ಸೆಷನ್ಸ್ ಕೋರ್ಟ್ ಆದೇಶ ರದ್ದುಪಡಿಸಿದ ಹೈಕೋರ್ಟ್
ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಪವಿತ್ರಾ ಗೌಡ, ನಾಗರಾಜ್ ಮತ್ತು ಲಕ್ಷ್ಮಣ್ಗೆ ವಾರಕೊಮ್ಮೆ ಮನೆಯಿಂದ ಊಟ ತರಿಸಿಕೊಳ್ಳಲು ಅನುಮತಿಸುವಂತೆ ಪರಪ್ಪನ ಅಗ್ರಹಾರ ಜೈಲು ಅಧಿಕಾರಿಗಳಿಗೆ ಸೂಚಿಸಿದ್ದ ನಗರದ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯದ ಆದೇಶವನ್ನು ಹೈಕೋರ್ಟ್ ರದ್ದುಪಡಿಸಿದೆ. ಇದೇ ವೇಳೆ, ಮಾನವ ಘನತೆಯ ರಕ್ಷಣೆಯು ಕಾರಾಗೃಹದ ಬಾಗಿಲುಗಳ ಬಳಿ ಕೊನೆಗೊಳ್ಳುವುದಿಲ್ಲ. ಕಾನೂನಿನ ಅನ್ವಯ ಕೈದಿಗಳು ಸ್ವಾತಂತ್ರ್ಯದಿಂದ ವಂಚಿತರಾಗಿದ್ದರೂ, ಮೂಲಭೂತ ಅವಶ್ಯಕತೆಗಳನ್ನು ಪಡೆಯಲು ಅರ್ಹರಾಗಿರುತ್ತಾರೆ ಎಂದು ಹೇಳಿರುವ ನ್ಯಾಯಾಲಯ, ಕೈದಿಗಳಿಗೆ ಆಹಾರ ಒದಗಿಸುವ ವಿಚಾರವಾಗಿ ಸರ್ಕಾರಕ್ಕೆ ಕೆಲ ನಿರ್ದೇಶನಗಳನ್ನು ನೀಡಿದೆ. ನಗರದ 57ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ ಜನವರಿ 12ರಂದು ಹೊರಡಿಸಿದ್ದ ಆದೇಶ ರದ್ದು ಕೋರಿ ಪ್ರಕರಣದ ತನಿಖಾಧಿಕಾರಿಗಳಾದ ಕಾಮಾಕ್ಷಿಪಾಳ್ಯ ಠಾಣೆ ಪೊಲೀಸ್ ಇನ್ಸ್ಪೆಕ್ಟರ್ ಸಲ್ಲಿಸಿದ್ದ ಅರ್ಜಿಯನ್ನು ಬುಧವಾರ ಪುರಸ್ಕರಿಸಿರುವ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಆದೇಶ ಮಾಡಿದೆ. ಹೈಕೋರ್ಟ್ ಆದೇಶವೇನು? ವಿಚಾರಣಾಧೀನ ಕೈದಿಗಳಿಗೆ ಮನೆ ಊಟ ನೀಡಲು ನಿಷೇಧವಿಲ್ಲ. ಆದರೆ, ಜೈಲು ನಿಯಮಗಳು ಮತ್ತು ಪ್ರಕ್ರಿಯೆ ಅನುಸಾರ ಮನೆ ಊಟ ಪೂರೈಸಬಹುದಾಗಿದ್ದು, ಇದಕ್ಕೆ ವೈದ್ಯಕೀಯ ವರದಿ ಅತ್ಯಗತ್ಯ. ಕೇವಲ ಮನವಿ ಆಧರಿಸಿ ಆರೋಪಿಗಳು/ವಿಚಾರಣಾಧೀನ ಕೈದಿಗಳಿಗೆ ಮನೆ ಊಟ ತರಿಸಿಕೊಳ್ಳಲು ಅನುಮತಿಸಲಾಗದು ಎಂದು ಸ್ಪಷ್ಟಪಡಿಸಿರುವ ಹೈಕೋರ್ಟ್, ವಿಚಾರಣಾ ನ್ಯಾಯಾಲಯದ ಆದೇಶ ರದ್ದುಪಡಿಸಿದೆ. ವೈದ್ಯಕೀಯ ಪರಿಶೀಲನೆ ಅಥವಾ ಶಿಫಾರಸು ಆಧರಿಸದೆಯೇ ಪ್ರತಿವಾದಿ ಆರೋಪಿಗಳಿಗೆ ಮನೆ ಊಟ ಪಡೆಯಲು ಅನುಮತಿಸಿರುವುದರಿಂದ ವಿಚಾರಣಾ ನ್ಯಾಯಾಲಯದ ಆದೇಶ ಉಳಿಯುವುದಿಲ್ಲ. ತಾರತಮ್ಯದಿಂದ ಕೂಡಿದ ಇಂಥ ವಿನಾಯಿತಿ ನೀಡುವುದರಿಂದ ಜೈಲು ನಿರ್ವಹಣೆಯಲ್ಲಿ ಗೊಂದಲಕ್ಕೆ ನಾಂದಿಯಾಗಲಿದ್ದು, ಇತರ ಕೈದಿಗಳೂ ಇದೇ ರೀತಿಯ ವಿನಾಯಿತಿಗೆ ಅರ್ಹರಾಗುತ್ತಾರೆ ಎಂದು ನ್ಯಾಯಾಲಯ ಆದೇಶದಲ್ಲಿ ಅಭಿಪ್ರಾಯಪಟ್ಟಿದೆ. ಜೈಲಿನಲ್ಲಿ ವಿತರಿಸಲಾಗುವ ಊಟದ ಲಭ್ಯತೆ ಮತ್ತು ಗುಣಮಟ್ಟವು ಕಾಳಜಿಯ ವಿಚಾರವಾಗಿದ್ದು, ಪ್ರತಿನಿತ್ಯ ನಾಲ್ಕು ಊಟಕ್ಕೆ 125 ರೂಪಾಯಿ ನಿಗದಿಪಡಿಸಿರುವುದು ಪೌಷ್ಠಿಕಾಂಶಯುಕ್ತ ಆಹಾರದ ಬಗೆಗಿನ ಮಹತ್ವದ ಪ್ರಶ್ನೆ ಉದ್ಭವಕ್ಕೆ ಕಾರಣವಾಗಿದೆ. ಕೈದಿಗಳ ಹಕ್ಕುಗಳನ್ನು ರಕ್ಷಿಸುವ ದೃಷ್ಟಿಯಿಂದ ಸಾರ್ವಜನಿಕ ಸ್ಥಳಗಳಲ್ಲಿ ಜನರಿಗೆ ಕಾಣುವಂತೆ ಕೈದಿಗಳ ಆಹಾರದ ಪಟ್ಟಿಯನ್ನು ಡಿಜಿಟಲ್ ರೂಪದಲ್ಲಿ ಪ್ರಕಟಿಸಬೇಕು. ಆಹಾರದ ಬಗ್ಗೆ ಅಹವಾಲು/ದೂರು ದಾಖಲಿಸಲು ವ್ಯವಸ್ಥೆ ಇಲ್ಲದಿದ್ದರೆ ಅದನ್ನು ಜಾರಿಗೊಳಿಸಬೇಕು. ಕೈದಿಗಳಿಗೆ ತಯಾರಿಸುವ ಆಹಾರದ ಗುಣಮಟ್ಟದ ಕುರಿತು ಮೇಲಿಂದ ಮೇಲೆ ನಿಗದಿತ ವೈದ್ಯಾಧಿಕಾರಿಯು ದಾಖಲೆ ಸಲ್ಲಿಸಬೇಕು ಎಂದು ನ್ಯಾಯಾಲಯ ನಿರ್ದೇಶಿಸಿದೆ. ನ್ಯಾಯಾಲಯದ ಈ ನಿರ್ದೇಶನಗಳ ಅನುಪಾಲನೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಸುತ್ತೋಲೆ ಹೊರಡಿಸಬೇಕು. ಇನ್ನು ವಿಚಾರಣಾ ನ್ಯಾಯಾಲಯದ ಆದೇಶವನ್ನು ರದ್ದುಪಡಿಸಲಾಗಿದ್ದರೂ, ಪ್ರತಿವಾದಿಗಳು ಪೂರಕ ವೈದ್ಯಕೀಯ ದಾಖಲೆಗಳೊಂದಿಗೆ ಜೈಲು ನಿಯಮಗಳ ಅನ್ವಯ ಮನೆ ಊಟ ಪೂರೈಕೆಗೆ ಮನವಿ ಮಾಡುವ ಸ್ವಾತಂತ್ರ್ಯ ಹೊಂದಿದ್ದಾರೆ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ. ಇದೇ ವೇಳೆ, ಪವಿತ್ರಾ ಗೌಡ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ನೀಡಿರುವ ತೀರ್ಪನ್ನು ಗಮನದಲ್ಲಿಟ್ಟುಕೊಳ್ಳಬೇಕು ಎಂದೂ ನ್ಯಾಯಪೀಠ ತಿಳಿಸಿದೆ.
► ವಾರಾಹಿ ಬಲದಂಡೆ ನೀರಾವರಿ ಯೋಜನೆ ಅನುಷ್ಠಾನಗೊಳ್ಳಲಿ► ಮೂಲ ಯೋಜನೆಯಂತೆ ನೀರಿನ ಹಂಚಿಕೆ ಖಚಿತಪಡಿಸಬೇಕು► ಯೋಜನೆಯಲ್ಲಿ ವಂಚಿತ ಪ್ರದೇಶಗಳಿಗೂ ನೀರಾವರಿ ಸೌಲಭ್ಯ
ಜಾಗತಿಕ ದಕ್ಷಿಣದ ಧ್ವನಿಯಾಗಿರುವ ಭಾರತ ಮೌನವಾಗಿರಲು ಸಾಧ್ಯವಿಲ್ಲ: ಇರಾನ್ ಸಚಿವ
ಟೆಹ್ರಾನ್, ಮಾ.4: ಮಧ್ಯಪ್ರಾಚ್ಯದ ಬಿಕ್ಕಟ್ಟು, ಸಂಘರ್ಷ ತೀವ್ರಗೊಳ್ಳುತ್ತಿರುವ ಬಗ್ಗೆ ಪ್ರತಿಕ್ರಿಯಿಸಿರುವ ಇರಾನ್ನ ವಿದೇಶಾಂಗ ಇಲಾಖೆಯ ಸಹಾಯಕ ಸಚಿವ ಮೊಹಮ್ಮದ್ ರೆಝಾ ಬಹ್ರಾಮಿ `ಇದು ತಾತ್ಕಾಲಿಕ ಬಿಕ್ಕಟ್ಟು ಅಥವಾ ಅಮೆರಿಕದೊಂದಿಗಿನ ದ್ವಿಪಕ್ಷೀಯ ವಿವಾದವಲ್ಲ. ಇರಾನ್ನ ಮೇಲೆ ಉದ್ದೇಶಪೂರ್ವಕ ಹೇರಿರುವ ಯುದ್ದವಾಗಿದೆ' ಎಂದು ಹೇಳಿದ್ದಾರೆ. ಇರಾನ್ನ ಮೇಲೆ ಅಮೆರಿಕ-ಇಸ್ರೇಲ್ ನಡೆಸಿದ ಜಂಟಿ ದಾಳಿಯನ್ನು ಭಾರತ ಖಂಡಿಸದಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು ` ಇಂತಹ ವಿಷಯಗಳಲ್ಲಿ ಏಶ್ಯಾದ ಸ್ವತಂತ್ರ ಪ್ರಭಾವಿ ರಾಷ್ಟ್ರಕ್ಕೆ ಪ್ರಮುಖ ಪಾತ್ರವಿದೆ. ಭಾರತ ತನ್ನ ವಿದೇಶಾಂಗ ಕಾರ್ಯನೀತಿಯ ದಿಕ್ಸೂಚಿಯಾಗಿ ಕಾರ್ಯತಂತ್ರದ ಸ್ವಾಯತ್ತತೆಯನ್ನು ಸ್ಥಿರವಾಗಿ ವ್ಯಾಖ್ಯಾನಿಸಿದೆ. ಪ್ರಮುಖ ಶಕ್ತಿಗಳೊಂದಿಗೆ ಸಮತೋಲಿತ ಸಂಬಂಧವನ್ನು ನಿರ್ವಹಿಸುತ್ತದೆ. ವಿಶ್ವದ ಅತೀ ದೊಡ್ಡ ಪ್ರಜಾಪ್ರಭುತ್ವ ಮತ್ತು ಜಾಗತಿಕ ದಕ್ಷಿಣದ ಪ್ರಮುಖ ಧ್ವನಿಯಾಗಿ, ಭಾರತವು ಮೌನವಾಗಿರದೆ, ಪ್ರಾದೇಶಿಕ ಬೆಳವಣಿಗೆಗಳ ಬಗ್ಗೆ ಸಕ್ರಿಯ ವಿಧಾನವನ್ನು ಅಳವಡಿಸಿಕೊಳ್ಳಬೇಕು ಎಂದು ಹೇಳಿದರು. ಇರಾನ್ ಮತ್ತು ಭಾರತ ಆಳವಾದ ಐತಿಹಾಸಿಕ ಮತ್ತು ಸಾಂಸ್ಕೃತಿಕ ಸಂಬಂಧಗಳನ್ನು ಹೊಂದಿರುವ ಎರಡು ಪ್ರಾಚೀನ ನಾಗರಿಕತೆಗಳಾಗಿವೆ. ಈ ಪರಂಪರೆಯು ಸೂಕ್ಷ್ಮ ಮತ್ತು ಪರಿವರ್ತನೆಯ ಕ್ಷಣಗಳಲ್ಲಿ ಜವಾಬ್ದಾರಿಯುತ ಸಹಕಾರಕ್ಕೆ ಅರ್ಥಪೂರ್ಣ ಅಡಿಪಾಯವನ್ನು ಒದಗಿಸುತ್ತದೆ' ಎಂದು ಹೇಳಿರುವುದಾಗಿ ವರದಿಯಾಗಿದೆ.
ಲೆಬನಾನ್ | ಇಸ್ರೇಲ್ ದಾಳಿಯಲ್ಲಿ ಕನಿಷ್ಠ 11 ಮಂದಿ ಮೃತ್ಯು
ಬೈರೂತ್, ಮಾ.4: ಲೆಬನಾನ್ ಮೇಲಿನ ದಾಳಿಯನ್ನು ಬುಧವಾರ ಇಸ್ರೇಲ್ ತೀವ್ರಗೊಳಿಸಿದ್ದು ರಾಜಧಾನಿ ಲೆಬನಾನ್ನಲ್ಲಿ ಅಧ್ಯಕ್ಷೀಯ ಭವನದ ಸುತ್ತಮುತ್ತಲಿನ ಪ್ರದೇಶ ಹಾಗೂ ಇರಾನ್ ಬೆಂಬಲಿತ ಹಿಜ್ಬುಲ್ಲಾ ಗುಂಪಿನ ಭದ್ರಕೋಟೆಗಳನ್ನು ಗುರಿಯಾಗಿಸಿ ನಡೆಸಿದ ದಾಳಿಯಲ್ಲಿ ಕನಿಷ್ಠ 11 ಮಂದಿ ಮೃತಪಟ್ಟಿರುವುದಾಗಿ ವರದಿಯಾಗಿದೆ. ಶನಿವಾರ ಅಮೆರಿಕ-ಇಸ್ರೇಲ್ ಜಂಟಿ ದಾಳಿಯಲ್ಲಿ ಇರಾನ್ನ ಸರ್ವೋಚ್ಛ ನಾಯಕ ಆಯತುಲ್ಲಾ ಆಲಿ ಖಾಮಿನೈ ಹತ್ಯೆಗೆ ಪ್ರತಿಯಾಗಿ ಹಿಜ್ಬುಲ್ಲಾ ಇಸ್ರೇಲ್ನ ಮೇಲೆ ದಾಳಿ ಮಾಡುವುದರೊಂದಿಗೆ ಲೆಬನಾನ್ ಮಧ್ಯಪ್ರಾಚ್ಯ ಯುದ್ದಕ್ಕೆ ಎಳೆಯಲ್ಪಟ್ಟಿದೆ. ಬುಧವಾರ ಬೈರೂತ್ ಹೊರವಲಯದ ಹಜ್ಮೀಹ್ ನಗರದ ಹೋಟೆಲ್ ಮೇಲೆ ನಡೆದ ವೈಮಾನಿಕ ದಾಳಿಯಲ್ಲಿ ಹೋಟೆಲ್ನ ಕಟ್ಟಡಕ್ಕೆ ಹಾನಿಯಾಗಿದ್ದು ಹಲವರು ಗಾಯಗೊಂಡಿರುವುದಾಗಿ ಎಎಫ್ಪಿ ಸುದ್ದಿಸಂಸ್ಥೆ ವರದಿ ಮಾಡಿದೆ. ಬೈರೂತ್ನ ದಕ್ಷಿಣದಲ್ಲಿರುವ, ಹಿಜ್ಬುಲ್ಲಾ ಭದ್ರಕೋಟೆ ಅರಾಮೌನ್ ಮತ್ತು ಸಾದಿಯಾತ್ನಲ್ಲಿ ಇಸ್ರೇಲ್ನ ವೈಮಾನಿಕ ದಾಳಿಯಲ್ಲಿ 6 ಮಂದಿ ಮೃತಪಟ್ಟಿದ್ದು ಇತರ 8 ಮಂದಿ ಗಾಯಗೊಂಡಿದ್ದಾರೆ. ಬಾಲ್ಬೆಕ್ ನಗರದಲ್ಲಿ 4 ಅಂತಸ್ತಿನ ಕಟ್ಟಡದ ಒಂದು ಭಾಗ ಕುಸಿದಿದ್ದು 5 ಮಂದಿ ಮೃತಪಟ್ಟಿದ್ದು ಇತರ 15 ಮಂದಿ ಗಾಯಗೊಂಡಿದ್ದಾರೆ. ಮೂವರು ನಾಪತ್ತೆಯಾಗಿದ್ದಾರೆ ಎಂದು ಲೆಬನಾನ್ನ ಸರಕಾರಿ ಸ್ವಾಮ್ಯದ `ನ್ಯಾಷನಲ್ ನ್ಯೂಸ್ ಏಜೆನ್ಸಿ' ವರದಿ ಮಾಡಿದೆ. ಈ ಮಧ್ಯೆ, ದಕ್ಷಿಣ ಲೆಬನಾನ್ನ 13 ನಗರ ಹಾಗೂ ಗ್ರಾಮಗಳನ್ನು ತಕ್ಷಣ ತೊರೆಯುವಂತೆ ಅಲ್ಲಿನ ನಿವಾಸಿಗಳಿಗೆ ಬುಧವಾರ ಬೆಳಿಗ್ಗೆ ಇಸ್ರೇಲ್ ಮಿಲಿಟರಿ ಎಚ್ಚರಿಕೆ ನೀಡಿದೆ. ಮಂಗಳವಾರ ಇದೇ ರೀತಿಯ ಎಚ್ಚರಿಕೆಯನ್ನು ಇತರ 16 ಗ್ರಾಮಗಳಿಗೂ ನೀಡಲಾಗಿತ್ತು. ಸೋಮವಾರದಿಂದ ಇಸ್ರೇಲ್ ದಾಳಿಯಲ್ಲಿ ಕನಿಷ್ಠ 50 ಮಂದಿ ಮೃತಪಟ್ಟಿದ್ದು 335 ಮಂದಿ ಗಾಯಗೊಂಡಿರುವುದಾಗಿ ಲೆಬನಾನ್ನ ಆರೋಗ್ಯ ಇಲಾಖೆ ಹೇಳಿದೆ.
ವಿಶ್ವಸಂಸ್ಥೆ, ಮಾ.4: ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಧ್ರುವೀಕರಣವನ್ನು ಎತ್ತಿ ತೋರಿಸುವ ಬೆಳವಣಿಗೆಯಲ್ಲಿ, ರಶ್ಯ ಮತ್ತು ಚೀನಾವು ಇರಾನ್ಗೆ ಸಂಬಂಧಿಸಿದ ವಿಷಯದ ಬಗ್ಗೆ ಆಕ್ಷೇಪಣೆಗಳನ್ನು ಎತ್ತಿದ ನಂತರ ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಮಾರ್ಚ್ ತಿಂಗಳ ಅಧ್ಯಕ್ಷನಾಗಿರುವ ಅಮೆರಿಕವು ಮಾಸಿಕ ಕಾರ್ಯಕ್ರಮವನ್ನು ಅಳವಡಿಸಿಕೊಳ್ಳಲು ಸಾಧ್ಯವಾಗಲಿಲ್ಲ ಎಂದು ವರದಿಯಾಗಿದೆ. 15 ಸದಸ್ಯರ ಭದ್ರತಾ ಮಂಡಳಿಯಲ್ಲಿ ಮಾರ್ಚ್ ತಿಂಗಳ ಅಧ್ಯಕ್ಷತೆಯನ್ನು ವಿಟೊ ಅಧಿಕಾರ ಹೊಂದಿರುವ ಕಾಯಂ ಸದಸ್ಯ ಅಮೆರಿಕ ವಹಿಸಿಕೊಂಡಿದೆ. ವಾಡಿಕೆಯಂತೆ , ಕೌನ್ಸಿಲ್ನ ನಿರೀಕ್ಷಿತ ಸಭೆಗಳು ಮತ್ತು ತಿಂಗಳ ಕಾರ್ಯಕ್ರಮವನ್ನು ವಿವರಿಸುವ ಮಾಸಿಕ ಕಾರ್ಯಕ್ರಮ ಪಟ್ಟಿಯನ್ನು ಆಯಾ ತಿಂಗಳ ಪ್ರಾರಂಭದಲ್ಲಿ ಮಂಡಿಸಲಾಗುವುದು. ಬಳಿಕ, ಭದ್ರತಾ ಮಂಡಳಿಯ ಆ ತಿಂಗಳ ಅಧ್ಯಕ್ಷ ರಾಷ್ಟ್ರದ ಪ್ರತಿನಿಧಿ ವಿಶ್ವಸಂಸ್ಥೆಯ ಪ್ರಧಾನ ಕಚೇರಿಯಲ್ಲಿ ಮಾಧ್ಯಮಗಳಿಗೆ ಭದ್ರತಾ ಮಂಡಳಿಯ ತಿಂಗಳ ಕೆಲಸ ಮತ್ತು ಕಾರ್ಯಸೂಚಿಯ ಕುರಿತು ವಿವರಿಸುತ್ತಾರೆ. ಆದರೆ, ಇರಾನ್ ಕುರಿತ 1737ರ ನಿರ್ಬಂಧ ಸಮಿತಿಗೆ ಸಂಬಂಧಿಸಿ ಚೀನಾ ಮತ್ತು ರಶ್ಯ ಆಕ್ಷೇಪ ಎತ್ತಿದ್ದರಿಂದ ಮಾರ್ಚ್ ತಿಂಗಳ ಕಾರ್ಯಕ್ರಮವನ್ನು ಸೂಚಿಸುವ ಅಮೆರಿಕದ ಕರಡು ಕಾರ್ಯಸೂಚಿಯನ್ನು ಅಂಗೀಕರಿಸಲಾಗಲಿಲ್ಲ. ಚೀನಾ ಮತ್ತು ರಶ್ಯವೂ ಭದ್ರತಾ ಮಂಡಳಿಯಲ್ಲಿ ವಿಟೊ ಅಧಿಕಾರ ಹೊಂದಿವೆ. ಅಮೆರಿಕ ಸಿದ್ದಪಡಿಸಿದ ಭದ್ರತಾ ಮಂಡಳಿ ಕಾರ್ಯಕ್ರಮದ ಕಾರ್ಯಸೂಚಿಯ ಅಳವಡಿಕೆಗೆ ರಶ್ಯ ಮತ್ತು ಚೀನಾ ಆಕ್ಷೇಪಿಸಿವೆ' ಎಂದು ವಿಶ್ವಸಂಸ್ಥೆಗೆ ರಶ್ಯದ ಕಾಯಂ ನಿಯೋಗ ಹೇಳಿದೆ. ಅಮೆರಿಕ ಪ್ರಸ್ತಾಪಿಸಿದ ಕಾರ್ಯಕ್ರಮದ ಕಾರ್ಯಸೂಚಿಯು ಇರಾನ್ಗೆ ಸಂಬಂಧಿಸಿದ 1737ರ ನಿರ್ಬಂಧಗಳ ಸಮಿತಿಯ (1737ರ ನಿರ್ಣಯಗಳನ್ನು ಜಾರಿಗೆ ತರುವ ಕಾರ್ಯವಿಧಾನವನ್ನು ಬ್ರಿಟನ್, ಫ್ರಾನ್ಸ್ ಮತ್ತು ಜರ್ಮನಿಯ ಪ್ರಚೋದನೆಯಿಂದ 2025ರ ಸೆಪ್ಟಂಬರ್ನಲ್ಲಿ ಸಮಿತಿ ಪುನರಾರಂಭಿಸಿದೆ ಎಂದು ಹೇಳಲಾಗಿದೆ) ಕೆಲಸದ ಕುರಿತು ಮಾಹಿತಿ ನೀಡುವುದನ್ನು ಒಳಗೊಂಡಿರುವ ಕಾರಣ ನಾವು ಈ ಕ್ರಮವನ್ನು ಕೈಗೊಳ್ಳುವುದು ಅನಿವಾರ್ಯವಾಗಿದೆ. ಕಾರ್ಯಕ್ರಮದ ಕಾರ್ಯಸೂಚಿಯಲ್ಲಿ ಈ ವಿಷಯವನ್ನು ಸೇರಿಸದಂತೆ ಫೆಬ್ರವರಿಯಲ್ಲಿ ಮತ್ತೊಮ್ಮೆ ಅಮೆರಿಕವನ್ನು ಒತ್ತಾಯಿಸಿದ್ದೆವು. ದುರದೃಷ್ಟವಶಾತ್ ನಮ್ಮ ಮನವಿಯನ್ನು ಪರಿಗಣಿಸಲಿಲ್ಲ. ಈ ಕಾರಣಕ್ಕೆ ಮಾರ್ಚ್ ತಿಂಗಳಿಗೆ ಭದ್ರತಾ ಮಂಡಳಿಯ ಕೆಲಸದ ಕಾರ್ಯಸೂಚಿ ಅಳವಡಿಸುವುದನ್ನು ವಿರೋಧಿಸದೆ ನಮಗೆ ಬೇರೆ ಆಯ್ಕೆಯಿಲ್ಲ' ಎಂದು ರಶ್ಯ ಹೇಳಿದೆ. ವಿಶ್ವಸಂಸ್ಥೆ ಭದ್ರತಾ ಮಂಡಳಿ 2015ರಲ್ಲಿ ಇರಾನ್ನ ಪರಮಾಣು ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಜಂಟಿ ಸಮಗ್ರ ಕ್ರಿಯಾ ಯೋಜನೆ(ಜೆಸಿಪಿಒಎ)ಯನ್ನು ಜಾರಿಗೊಳಿಸುವ ನಿರ್ಣಯವನ್ನು ಅಂಗೀಕರಿಸಿದೆ.
ಮುಲ್ಕಿ: ಇಲ್ಲಿನ ಕೆ.ಎಸ್. ರಾವ್ ನಗರ ನಿವಾಸಿ ಮರ್ಹೂಮ್ ಬಿ.ಎಂ. ಹಾಜಿ ಚಾಬಾ ಅವರ ಪತ್ನಿ ಅತೀಜಮ್ಮ ಅವರು ಬುಧವಾರ ಸಂಜೆ ಹೃದಯಾಘಾತಕ್ಕೊಳಗಾಗಿ ನಿಧನರಾದರು. ಸಂಜೆಯ ವೇಳೆ ಇವರಿಗೆ ಹೃದಯಾಘಾತ ಸಂಭವಿಸಿದ್ದು, ತಕ್ಷಣ ಅವರನ್ನು ಆ್ಯಂಬುಲೆನ್ಸ್ ಮೂಲಕ ನಗರದ ಖಾಸಗಿ ಆಸ್ಪತ್ರೆಗೆ ಸಾಗಿಸಲಾಗಿತ್ತು. ದಾರಿ ಮಧ್ಯೆ ಅವರು ಕೊನೆಯುಸಿರೆಳೆದರು ಎಂದು ತಿಳಿದು ಬಂದಿದೆ. ಇವರು ಮುಲ್ಕಿ ನಗರ ಪಂಚಾಯತ್ ನ ಮಾಜಿ ಅಧ್ಯಕ್ಷ ಹಾಗೂ ಮುಲ್ಕಿ ಕೊಲ್ನಾಡು ಶಾಫಿ ಜುಮ್ಮಾ ಮಸೀದಿಯ ಆಡಳಿತ ಸಮಿತಿಯ ಸದಸ್ಯ ಬಿ.ಎಂ. ಆಸಿಫ್ ಸೇರಿದಂತೆ ಮೂವರು ಪುತ್ರರು ಮೂವರು ಪುತ್ರಿಯರು, ಮೊಮ್ಮಕ್ಕಳು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಮೃತರ ದಫನ ಕಾರ್ಯವು ಗುರುವಾರ ಬೆಳಗ್ಗೆ ಕೊಲ್ನಾಡು ಶಾಫಿ ಜುಮಾ ಮಸೀದಿಯ ಖಬರಸ್ತಾನದಲ್ಲಿ ನೆರವೇರಲಿದೆ ಎಂದು ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ.
Bidar | ಬಸವಕಲ್ಯಾಣದಲ್ಲಿ ಮದರಸಾ ಶಿಕ್ಷಕರಿಬ್ಬರ ಮೇಲೆ ಹಲ್ಲೆ ಆರೋಪ : ಠಾಣೆಗೆ ಮುತ್ತಿಗೆ
ನಗರದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್
ಯೆನೆಪೊಯ ಸಮೂಹ ಸಂಸ್ಥೆಯ ವತಿಯಿಂದ ಸೌಹಾರ್ದ ಇಫ್ತಾರ್ ಕೂಟ
ಮಂಗಳೂರು, ಮಾ.4: ಯೆನೆಪೊಯ ಸಮೂಹ ಸಂಸ್ಥೆಯ ವತಿಯಿಂದ ನಗರದ ಜಪ್ಪಿನಮೊಗರಿನಲ್ಲಿರುವ ಯೆನೆಪೊಯ ಸ್ಕೂಲ್ನಲ್ಲಿ ಬುಧವಾರ ಸೌಹಾರ್ದ ಇಫ್ತಾರ್ ಕೂಟ ನಡೆಯಿತು. ಯೆನೆಪೊಯ ವಿಶ್ವವಿದ್ಯಾನಿಲಯದ ಕುಲಾಧಿಪತಿ ಡಾ. ಯೆನೆಪೊಯ ಅಬ್ದುಲ್ಲಾ ಕುಂಞಿ ನೇತೃತ್ಬದಲ್ಲಿ ನಡೆದ ಇಫ್ತಾರ್ ಕೂಟದಲ್ಲಿ ಹಿಂದೂ, ಮುಸ್ಲಿಂ, ಕ್ರೈಸ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡರು. ಐಕ್ಯತೆಯ ಸಂದೇಶ ಸಾರಲಾದ ಈ ಸೌಹಾರ್ದ ಕೂಟದಲ್ಲಿ ಅಮೇರಿಕಾ, ಇಸ್ರೇಲ್-ಇರಾನ್ ಸಹಿತ ಗಲ್ಫ್ ರಾಷ್ಟ್ರಗಳಲ್ಲಿ ನಡೆಯುತ್ತಿರುವ ಯುದ್ಧವು ಶೀಘ್ರ ಕೊನೆಗೊಂಡು ಶಾಂತಿ ನೆಲೆಸುವಂತಾಗಲಿ ಎಂದು ಪಾರ್ಥಿಸಲಾಯಿತು. ಈ ಸಂದರ್ಭ ಶಿಕ್ಷಣ ಕ್ಷೇತ್ರಕ್ಕೆ ಕೊಡುಗೆ ನೀಡಿದ್ದ ದಿ. ಡಾ. ನಿಟ್ಟೆ ವಿನಯ ಹೆಗ್ಡೆ ಮತ್ತು ದಿ. ಡಾ.ಸಿಎ ಎ. ರಾಘವೇಂದ್ರ ರಾವ್ ಅವರನ್ನು ಸ್ಮರಿಸಲಾಯಿತು. ದೇಶದ ಭವಿಷ್ಯದ ಹಿತದೃಷ್ಟಿಯಿಂದ ಇಂತಹ ಸೌಹಾರ್ದ ಕೂಟಗಳ ಅಗತ್ಯವಿದೆ. ಇದರಿಂದ ಅಂತರ್ ಧರ್ಮೀಯ ಆಚಾರ, ವಿಚಾರಗಳ ವಿನಿಮಯವು ಸಾಧ್ಯವಾಗಲಿದೆ. ಪರಸ್ಪರ ಅರಿಯುವ ಅವಕಾಶವೂ ಸಿಗಲಿದೆ. ಅನುಮಾನವೂ ದೂರವಾಗಲಿದೆ. ಮನುಷ್ಯತ್ವದ ಅರಿವು ಕೂಡ ಆಗಲಿದೆ. ಗಲ್ಫ್ ಯುದ್ಧದಿಂದ ಅನೇಕ ಮಂದಿ ಅತಂತ್ರರಾಗಿದ್ದಾರೆ. ಅವರಿಗೆಲ್ಲಾ ನಾವು ಅಭಯ ನೀಡಬೇಕಾಗಿದೆ. -ರೆ.ಫಾ.ಡಾ.ಪೀಟರ್ ಪೌಲ್ ಸಲ್ದಾನ, ಮಂಗಳೂರು ಬಿಷಪ್ ರಮಝಾನ್ನ ಇಫ್ತಾರ್ ಕೂಟಕ್ಕೆ ತನ್ನದೇ ಆದ ವಿಶೇಷತೆಯಿದೆ. ಮಹತ್ವವೂ ಇದೆ. ಈ ಇಫ್ತಾರ್ ಕೂಟವು ಸೌಹಾರ್ದದ ಪ್ರತೀಕವಾಗಿದೆ. ಗಲ್ಫ್ ಯುದ್ಧದಿಂದ ದೇಶಾದ್ಯಂತ ಆತಂಕ ಸೃಷ್ಟಿಯಾಗಿದೆ. ಅದರಲ್ಲೂ ಕರಾವಳಿಯ ಅನೇಕ ಮಂದಿ ಸಂಕಷ್ಟದಲ್ಲಿ ಸಿಲುಕಿರುವ ಬಗ್ಗೆ ವರದಿಯಾಗುತ್ತಿದೆ. ಶೀಘ್ರ ಯುದ್ಧ ಕೊನೆಗೊಂಡು ಶಾಂತಿ ನೆಲೆಗೊಳ್ಳಲಿ. -ಡಾ. ಯೆನೆಪೊಯ ಅಬ್ದುಲ್ಲಾ ಕುಂಞಿ, ಕುಲಾಧಿಪತಿ, ಯೆನೆಪೊಯ ಡೀಮ್ಡ್ ವಿವಿ ಇಫ್ತಾರ್ ಕೂಟವು ಸಂಭ್ರಮವಲ್ಲ. ಇದೊಂದ ಆತ್ಮವಿಮರ್ಶೆಯ ಕ್ಷಣವಾಗಿದೆ. ಯೆನೆಪೊಯ ಅಬ್ದುಲ್ಲಾ ಕುಂಞಿ ಅವರು ಒಬ್ಬ ಕನಸುಗಾರ. ಅದನ್ನು ಈಡೇರಿಸಲು ಯಾವುದೇ ತ್ಯಾಗಕ್ಕೂ ಅವರು ಸಿದ್ಧರಾಗಿರುತ್ತಾರೆ. ಈ ಕಾಲ ಘಟ್ಟದಲ್ಲಿ ಎಲ್ಲಾ ಧರ್ಮದ ಜನರನ್ನು ಒಂದೆಡೆ ಸೇರಿಸಿ ಸೌಹಾರ್ದದ ಸಂಭ್ರಮ ರೂಪಿಸುವಲ್ಲಿ ಅವರು ಯಶಸ್ವಿ ಯಾಗುತ್ತಿರುವುದು ಶ್ಲಾಘನೀಯ. ಮಂಗಳೂರಿನ ಜನತೆಯ ಪರವಾಗಿ ನಾನು ಯೆನೆಪೊಯ ಅಬ್ದುಲ್ಲಾ ಕುಂಞಿ ಅವರನ್ನು ವಿಶೇಷವಾಗಿ ಅಭಿನಂದಿಸುವೆ. ಮಂಗಳೂರು ಅತ್ಯಂತ ಸುಂದರ ಮತ್ತು ಸುರಕ್ಷಿತ ನಗರವಾಗಿದೆ. ಇಂತಹ ಸೌಹಾರ್ದ ಕೂಟಗಳ ಮೂಲಕ ಈ ನಗರವು ಮತ್ತಷ್ಟು ಬೆಳಗಲಿ. -ಡಾ. ಎಂ. ಶಾಂತರಾಮ ಶೆಟ್ಟಿ, ಸಹ ಕುಲಾಧಿಪತಿ, ನಿಟ್ಟೆ ಡೀಮ್ಡ್ ವಿವಿ ಇಫ್ತಾರ್ ಕೂಟದಲ್ಲಿ ಸ್ಪೀಕರ್ ಯು.ಟಿ.ಖಾದರ್, ವಿಧಾನ ಪರಿಷತ್ ಶಾಸಕ ಐವನ್ ಡಿಸೋಜ, ಮಾಜಿ ಸಚಿವ ರಮಾನಾಥ ರೈ, ನಿಟ್ಟೆ ಡೀಮ್ಡ್ ವಿವಿಯ ಕುಲಾಧಿಪತಿ ವಿಶಾಲ್ ಹೆಗ್ಡೆ, ತುಂಬೆ ಗ್ರೂಪ್ನ ಸಂಸ್ಥಾಪಕ ಮತ್ತು ಅಧ್ಯಕ್ಷ ಡಾ. ತುಂಬೆ ಮೊಯ್ದಿನ್, ದ.ಕ. ಜಿಲ್ಲಾಧಿಕಾರಿ ದರ್ಶನ್ ಎಚ್.ವಿ., ಪಶ್ಚಿಮ ವಲಯ ಐಜಿಪಿ ಅಮಿತ್ ಸಿಂಗ್, ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ, ಡಿಸಿಪಿಗಳಾದ ಮಿಥುನ್ ಎಚ್.ಎನ್, ರವಿಶಂಕರ್ ಕೆ., ದ.ಕ. ಜಿಪಂ ಸಿಇಒ ನರ್ವಾಡೆ ವಿನಾಯಕ ಖರ್ಬೂರಿ, ರಾಜ್ಯ ಅಲೈಡ್ ಆ್ಯಂಡ್ ಹೆಲ್ತ್ಕೇರ್ ಕೌನ್ಸಿಲ್ನ ಅಧ್ಯಕ್ಷ ಡಾ. ಯು.ಟಿ. ಇಫ್ತಿಕಾರ್ ಅಲಿ, ಉದ್ಯಮಿ ವಿವಿಧ ನಿಗಮ, ಮಂಡಳಿಯ ಅಧ್ಯಕ್ಷರಾದ ಎಂ.ಎ.ಗಫೂರ್ ಉಡುಪಿ, ಶಾಲೆಟ್ ಪಿಂಟೋ, ಟಿ.ಎಂ.ಶಹೀದ್, ಮಮತಾ ಗಟ್ಟಿ, ಮೆಸ್ಕಾಂ ಅಧ್ಯಕ್ಷ ಹರೀಶ್ ಕುಮಾರ್, ಮುಡಾ ಆಯುಕ್ತ ಮುಹಮ್ಮದ್ ನಝೀರ್, ಉದ್ಯಮಿಗಳಾದ ರೋಹನ್ ಮೊಂತೆರೋ, ಶ್ರೀನಾಥ್ ವಿನೋದ್ ಪಿಂಟೋ, ಗುರುದತ್ ಶೆಣೈ, ಎಸ್.ಎಂ. ರಶೀದ್ ಹಾಜಿ, ಮುಸ್ತಫಾ ಭಾರತ್, ಡಾ. ಅಶ್ಫಾಕ್, ಡಿಸಿಎಫ್ ಆ್ಯಂಟನಿ ಮರಿಯಪ್ಪ, ರೆ.ಮೆಲ್ವಿನ್ ಪಿಂಟೋ, ಡಾ. ಮೆಲ್ವಿನ್ ಡಿಕುನ್ಹಾ, ರೋಝ್ ಸೆಲಿನ್, ಡಾ. ಪ್ರವೀಣ್ ಮಾರ್ಟಿಸ್, ಕಸಾಪ ಮಾಜಿ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರಾ, ಮಂಗಳೂರು ಬಿಷಪ್ ಹೌಸ್ನ ಸಾರ್ವಜನಿಕ ಸಂಪರ್ಕ ಅಧಿಕಾರಿ ರಾಯ್ ಕ್ಯಾಸ್ಟಲಿನೊ, ಎಂಸಿಸಿ ಬ್ಯಾಂಕ್ನ ಅಧ್ಯಕ್ಷ ಅನಿಲ್ ಲೋಬೊ ಮತ್ತಿತರರು ಪಾಲ್ಗೊಂಡಿದ್ದರು.
ನಿತೀಶ್ ಕುಮಾರ್ ಬಿಹಾರ ಮುಖ್ಯಮಂತ್ರಿ ಹುದ್ದೆ ತೊರೆಯುವ ಸಾಧ್ಯತೆ : ಮಗನಿಗೆ ಡಿಸಿಎಂ ಪಟ್ಟ?
ಪಾಟ್ನಾ,ಮಾ.4 ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ರಾಜ್ಯಸಭೆಯನ್ನು ಪ್ರವೇಶಿಸುವ ಮತ್ತು ಅವರ ಪುತ್ರ ನಿಶಾಂತ್ ಕುಮಾರ್ ರಾಜ್ಯದ ಉಪ ಮುಖ್ಯಮಂತ್ರಿಯಾಗುವ ಸಾಧ್ಯತೆಯಿದೆ. ಬಿಜೆಪಿಯ ವ್ಯಕ್ತಿ ನಿತೀಶ್ ಸ್ಥಾನದಲ್ಲಿ ಮುಂದಿನ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಬಲ್ಲ ಮೂಲಗಳು ತಿಳಿಸಿವೆ. ಬಿಹಾರದ ಯುಗವೊಂದರ ಅಂತ್ಯವನ್ನು ಸೂಚಿಸುವ ಈ ಪ್ರಮುಖ ಬದಲಾವಣೆಯು ಮುಂಬರುವ ರಾಜ್ಯಸಭಾ ಚುನಾವಣೆಯಲ್ಲಿ ಕಾರ್ಯಗತಗೊಳ್ಳಬಹುದು. ರಾಜ್ಯಸಭಾ ಚುನಾವಣೆಗೆ ನಾಮಪತ್ರ ಈ ವಾರ ಸಲ್ಲಿಕೆಯಾಗುವ ನಿರೀಕ್ಷೆಯಿದೆ. ಇದು ದುಃಖಿಸಬೇಕಾದ ಸಮಯ, ಪ್ರತಿಯೊಂದನ್ನೂ ದಿಲ್ಲಿಯಲ್ಲೇ ನಿರ್ಧರಿಸಲಾಗಿದೆ ಎಂದು ನಿತೀಶ್ಗೆ ಆಪ್ತ ನಾಯಕರೋರ್ವರು ಹೇಳಿದರು. ಅವರು ನಿತೀಶ್ ಜಾತಿಗೇ ಸೇರಿದ್ದು,ಅವರ ಹೆಸರನ್ನೂ ರಾಜ್ಯಸಭೆಗೆ ಪರಿಗಣಿಸಲಾಗುತ್ತಿದೆ. ನಿತೀಶ್ ಮುಂದಿನ ವಾರವೇ ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಬಹುದು ಎಂದು ಮೂಲಗಳು ತಿಳಿಸಿದವು. ಈ ವಿಷಯದಲ್ಲಿ ನಿತೀಶ್ ನಿಲುವು ಇನ್ನೂ ಸ್ಪಷ್ಟವಾಗಿಲ್ಲವಾದರೂ ಬದಲಾವಣೆಯು ಸಂಭವಿಸಿದರೆ ರಾಜ್ಯದ ಆಡಳಿತ ಬಿಜೆಪಿ ಕೈಸೇರಲಿದೆ. ಅದು ಕೆಲ ಸಮಯದಿಂದ ಈ ಹುದ್ದೆಗೆ ಕಾತರಿಸುತ್ತಿತ್ತು. 2025ರ ವಿಧಾನಸಭಾ ಚುನಾವಣೆಗೆ ಮೊದಲಿನಿಂದಲೂ ನಿತೀಶ್ ಅವರ ಬದಲಾವಣೆಯನ್ನು ನಿರೀಕ್ಷಿಸಲಾಗಿತ್ತು.ಆದರೆ ಅವರ ಜನಪ್ರಿಯತೆಯನ್ನು ಗಮನದಲ್ಲಿಟ್ಟುಕೊಂಡು ಅದಕ್ಕಾಗಿ ಅವಸರಿಸಿರಲಿಲ್ಲ. 75ರ ಹರೆಯದ ನಿತೀಶ್ ಅತಿ ಹೆಚ್ಚು ಕಾಲ ಬಿಹಾರದ ಮುಖ್ಯಮಂತ್ರಿಯಾಗಿದ್ದು,10 ಸಲ ಪ್ರಮಾಣವಚನ ಸ್ವೀಕರಿಸಿದ ಹೆಗ್ಗಳಿಕೆಯನ್ನು ಹೊಂದಿದ್ದಾರೆ. ಆಗ ತನ್ನ ನಿಕಟವರ್ತಿಯಾಗಿದ್ದ ಜಿತನ್ ರಾಮ ಮಾಂಝಿ ಮುಖ್ಯಮಂತ್ರಿಯಾಗಿದ್ದ ಅಲ್ಪಾವಧಿಯನ್ನು ಹೊರತು ಪಡಿಸಿ 2025ರಿಂದಲೂ ನಿತೀಶ್ ಮುಖ್ಯಮಂತ್ರಿ ಹುದ್ದೆಯಲ್ಲಿದ್ದಾರೆ. ನಿತೀಶ್ ಎನ್ಡಿಎ ಅಥವಾ ಮಹಾ ಘಟಬಂಧನಲ್ಲಿದ್ದಾಗಲೂ ಬಿಹಾರದಲ್ಲಿ ಯಾವಾಗಲೂ ಚುನಾವಣಾ ಪ್ರಚಾರಗಳನ್ನು ಅವರೇ ಮುನ್ನಡೆಸಿದ್ದಾರೆ. ತನ್ನ ಎಲ್ಲ ರಾಜಕೀಯ ಸರ್ಕಸ್ಗಳ ಮತ್ತು ಪಾಳಯ ಬದಲಾವಣೆ ಹೊರತಾಗಿಯೂ ದೃಢವಾದ ಬೆಂಬಲದ ಬುನಾದಿಯೊಂದಿಗೆ ರಾಜ್ಯದ ಅತ್ಯಂತ ಜನಪ್ರಿಯ ಮುಖ್ಯಮಂತ್ರಿಗಳಲ್ಲೊಬ್ಬರಾಗಿ ನಿತೀಶ ಚುನಾವಣೆಗಳಲ್ಲಿ ಗೆಲ್ಲುತ್ತಲೇ ಬಂದಿದ್ದಾರೆ. 2025ರಲ್ಲಿ ಇನ್ನೇನು ನಿತೀಶ್ ಕಾಲ ಮುಗಿಯಿತು ಎಂದು ರಾಜಕೀಯ ಪಂಡಿತರು ಭಾವಿಸಿದ್ದರಾದರೂ ಅವರು ಮತ್ತೊಮ್ಮೆ ಜಯಭೇರಿ ಬಾರಿಸಿದ್ದರು. ರಾಜ್ಯದ ಮಹಿಳೆಯರ ಬೆಂಬಲ ಅವರ ಬೆನ್ನಿಗಿತ್ತು. ತನ್ನ ಶಾಲಾ ಬಾಲಕಿಯರಿಗಾಗಿ ಸೈಕಲ್ ಯೋಜನೆ ಮತ್ತು ಬಳಿಕ ರಾಜ್ಯದಲ್ಲಿ ಮದ್ಯ ನಿಷೇಧವನ್ನು ತರುವ ಮೂಲಕ ಅವರು ಮಹಿಳೆಯರ ನಿಷ್ಠೆಯನ್ನು ಗೆದ್ದುಕೊಂಡಿದ್ದರು. ಚುನಾವಣಾ ಅಂದಾಜುಗಳು ಬಿಜೆಪಿಯನ್ನು ಅಗ್ರಸ್ಥಾನದಲ್ಲಿ ಮತ್ತು ನಿತೀಶ್ ಅವರ ಜೆಡಿಯುವನ್ನು ದೂರದ ಎರಡನೇ ಸ್ಥಾನದಲ್ಲಿ ಇರಿಸಿದ್ದರೂ ಅವರನ್ನು ಬದಲಿಸುವ ದುಃಸ್ಸಾಹಸಕ್ಕೆ ಕೇಸರಿ ಪಕ್ಷವು ಮುಂದಾಗಿರಲಿಲ್ಲ. ಹಾಗಿದ್ದರೂ ಬಿಜೆಪಿಯ ರಾಜ್ಯ ನಾಯಕರಿಗೆ ನೇಪಥ್ಯದಲ್ಲಿ ಕಾಯುತ್ತಲೇ ಇರುವುದು ತೃಪ್ತಿಯನ್ನು ನೀಡಿರಲಿಲ್ಲ. ಪ್ರತಿಪಕ್ಷ ಆರ್ಜೆಡಿಯು ನಿತೀಶ್ ಅವರನ್ನು ವಯೋಸಂಬಂಧಿ ಅರಿವಿನ ಕ್ಷೀಣತೆ ಕಾಡುತ್ತಿದೆ ಎಂದು ಹೇಳಿತ್ತು. ಇವೆಲ್ಲ ಆಡಳಿತ ಬದಲಾವಣೆಗೆ ದಾರಿ ಮಾಡಿಕೊಟ್ಟಿವೆ. ಮುಂದಿನ ಮುಖ್ಯಮಂತ್ರಿ ಹುದ್ದೆಗೆ ಹಲವಾರು ಹೆಸರುಗಳು ಕೇಳಿ ಬರುತ್ತಿವೆಯಾದರೂ ಬಿಜೆಪಿ ಅಚ್ಚರಿಗಳನ್ನು ಸೃಷ್ಟಿಸುವಲ್ಲಿ ಹೆಸರುವಾಸಿಯಾಗಿದೆ. ಬಿಹಾರದಲ್ಲಿ ಪ್ರಸ್ತುತ ಬಿಜೆಪಿಯ ಇಬ್ಬರು ಉಪ ಮುಖ್ಯಮಂತ್ರಿಗಳಿದ್ದು, ಅವರಲ್ಲಿ ಗೃಹ ಖಾತೆಯನ್ನೂ ಹೊಂದಿರುವ ಸಾಮ್ರಾಟ್ ಚೌಧರಿ ಹೆಚ್ಚು ಪ್ರಭಾವಿಯಾಗಿದ್ದಾರೆ. ಪಾಟ್ನಾ ದಿಘಾ ಶಾಸಕ ಸಂಜೀವ ಚೌರಾಸಿಯಾ ಅವರ ಹೆಸರೂ ಚರ್ಚೆಯಾಗುತ್ತಿದೆ. ಯಾದವ್ ಸಮುದಾಯಕ್ಕೆ ಸೇರಿರುವ ಕೇಂದ್ರ ಸಚಿವ ನಿತ್ಯಾನಂದ ರಾಯ್ ಅವರು ಕೇಂದ್ರ ಗೃಹಸಚಿವರ ಪರಮಾಪ್ತರಾಗಿದ್ದು,ಅವರ ಹೆಸರೂ ಹರಿದಾಡುತ್ತಿದೆ.
Bengaluru | ಯುವತಿಗೆ ಎಂಬಿಬಿಎಸ್ ಸೀಟ್ ಕೊಡಿಸುವುದಾಗಿ ನಂಬಿಸಿ ವಂಚನೆ ಆರೋಪ: ನಾಲ್ವರ ವಿರುದ್ಧ ಪ್ರಕರಣ ದಾಖಲು
ಬೆಂಗಳೂರು : ಯುವತಿಯೊಬ್ಬಳಿಗೆ ಎಂಬಿಬಿಎಸ್ ಸೀಟ್ ಕೊಡಿಸುವುದಾಗಿ ನಂಬಿಸಿ ಬರೋಬ್ಬರಿ 25 ಲಕ್ಷ ರೂಪಾಯಿ ಹಣವನ್ನು ವಂಚಿಸಿದ ಆರೋಪದಡಿ ನಾಲ್ವರ ವಿರುದ್ಧ ಇಲ್ಲಿನ ಬನಶಂಕರಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿರುವುದಾಗಿ ವರದಿಯಾಗಿದೆ. ಆಯೇಷಾ ಖಥುಮ್(27) ಎಂಬಾಕೆಗೆ ಕಿಮ್ಸ್ ವೈದ್ಯಕೀಯ ಕಾಲೇಜಿನ ಅಧ್ಯಕ್ಷರ ಪರಿಚಯವಿರುವುದಾಗಿ ಹೇಳಿ ಎಂಬಿಬಿಎಸ್ ಸೀಟ್ ಕೊಡಿಸುವುದಾಗಿ ನಂಬಿಸಿದ್ದ ಡಾ.ಕೆ.ಪಿ.ಶರತ್ ಸೇರಿದಂತೆ ನಾಲ್ವರ ವಿರುದ್ಧ ಸಂತ್ರಸ್ತೆಯ ತಂದೆ ಲಾಲ್ ಬಾಬು ಎಂಬುವರು ನೀಡಿದ ದೂರಿನ ಅನ್ವಯ ಬನಶಂಕರಿ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಶಂಶೇರ್ ಬೇಗ್, ಸೈಯದ್ ತಬ್ರೇಜ್ ಎಂಬವರ ಮೂಲಕ ಸಂತ್ರಸ್ತ ಯುವತಿಗೆ ಡಾ.ಕೆ.ಪಿ.ಶರತ್ ಪರಿಚಯವಾಗಿದ್ದು, ಕಿಮ್ಸ್ ಕಾಲೇಜಿನಲ್ಲಿ ಸೀಟ್ ಕೊಡಿಸುವುದಾಗಿ ನಂಬಿಸಿ ಹಂತ ಹಂತವಾಗಿ 25 ಲಕ್ಷ ರೂಪಾಯಿ ಹಣ ಪಡೆದು ವಂಚಿಸಲಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಫರಂಗಿಪೇಟೆ ನದಿಯಲ್ಲಿ ರಾಶಿ ರಾಶಿ ಆಧಾರ್ ಕಾರ್ಡ್ ಪತ್ತೆ; ತನಿಖೆಗೆ ಆಗ್ರಹ
ಫರಂಗಿಪೇಟೆ: ನೇತ್ರಾವತಿ ನದಿ ತಟದಲ್ಲಿ ರಾಶಿ ರಾಶಿ ಆದಾರ್ ಕಾರ್ಡ್ ಪತ್ತೆಯಾಗಿದ್ದು ಈ ಬಗ್ಗೆ ಸಮಗ್ರ ತನಿಖೆ ನಡೆಸ ಬೇಕೆಂದು ಪುದು ಗ್ರಾಮ ಪಂಚಾಯತ್ ಅಧ್ಯಕ್ಷ ರಮ್ಲಾನ್ ನೇತೃತ್ವದ ನಿಯೋಗ ಅಪರ ಜಿಲ್ಲಾಧಿಕಾರಿಯನ್ನು ಭೇಟಿಯಾಗಿ ಮನವಿ ಸಲ್ಲಿಸಿತು. ಸ್ಥಳೀಯರು ನದಿ ತಟದಲ್ಲಿ ತೆಳುತ್ತಿದ್ದ ರಾಶಿ ರಾಶಿ ಆದಾರ್ ಕಾರ್ಡ್ ನ್ನು ಕಂಡು ಪುದು ಗ್ರಾಮ ಪಂಚಾಯತ್ ಅಧ್ಯಕ್ಷ ರಮ್ಲಾನ್ ಗೆ ಮಾಹಿತಿ ನೀಡಿದ್ದಾರೆ. ಈ ಬಗ್ಗೆ ಪುದು ಗ್ರಾಮ ಪಂಚಾಯತ್ ಅಧ್ಯಕ್ಷ ರಮ್ಲಾ ನ್ ಸ್ಥಳಕ್ಕೆ ಭೇಟಿ ನೀಡಿ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಮಾತ್ರವಲ್ಲ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಫಾರೂಕು, ಪಂಚಾಯತ್ ಸದಸ್ಯರಾದ ಇಕ್ಬಾಲ್ ಸುಜೀರ್, ಹಿಷಾಮ್ ಫರಂಗಿಪೇಟೆ, ಹಾಗೂ ಬದ್ರುದ್ದೀನ್ ಒಳಗೊಂಡ ನಿಯೋಗ ಅಪರ ಜಿಲ್ಲಾಧಿಕಾರಿ, ಹಾಗೂ ತಹಶೀಲ್ದಾರ್ ರವರನ್ನು ಭೇಟಿಯಾಗಿ ಈ ಬಗ್ಗೆ ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಜರಗಿಸಬೇಕೆಂದು ಅಗ್ರಹಿಸಿದ್ದಾರೆ.
ಪತ್ರಕರ್ತರಾಗಲು ಓದು-ಅಧ್ಯಯನ ಅತ್ಯವಶ್ಯಕ : ಕೆ.ವಿ.ಪ್ರಭಾಕರ್
ಪತ್ರಿಕೋದ್ಯಮ ವಿದ್ಯಾರ್ಥಿಗಳಿಗಾಗಿ ʼಮಾಧ್ಯಮ ಹಬ್ಬ-2026ʼ
ಮಧ್ಯಪ್ರಾಚ್ಯ ಸಂಘರ್ಷ | Oman ಬಳಿ ಮೃತಪಟ್ಟ ಭಾರತೀಯರ ವಿವರ ಬಹಿರಂಗ
ಹೊಸದಿಲ್ಲಿ,ಮಾ.4: ಇಸ್ರೇಲ್-ಇರಾನ್ ಸಂಘರ್ಷದಲ್ಲಿ ಒಮಾನ್ ಕರಾವಳಿಯಾಚೆ ಇರಾನ್ ದಾಳಿಗಳ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಮೃತಪಟ್ಟಿರುವ ವಿದೇಶಿ ಹಡಗುಗಳ ಭಾರತೀಯ ಸಿಬ್ಬಂದಿಗಳ ವಿವರಗಳು ಬಹಿರಂಗಗೊಂಡಿವೆ. ಸೋಮವಾರ ಮಸ್ಕತ್ ಕರಾವಳಿಯಿಂದ 52 ನಾಟಿಕಲ್ ಮೈಲು ದೂರದಲ್ಲಿ ಸ್ಫೋಟಕಗಳಿಂದ ತುಂಬಿದ್ದ ಡ್ರೋನ್ ಬೋಟ್ ಮಾರ್ಷಲ್ ಐಲಂಡ್ಸ್ ಧ್ವಜವನ್ನು ಹೊತ್ತಿದ್ದ ‘ಎಂವಿ ಎಂಕೆಡಿ ವ್ಯೋಮ್’ ತೈಲ ಟ್ಯಾಂಕರ್ಗೆ ಅಪ್ಪಳಿಸಿದ ಪರಿಣಾಮ ದೀಕ್ಷಿತ್ ಸೋಲಂಕಿ (25) ಕೊಲ್ಲಲ್ಪಟ್ಟಿದ್ದಾನೆ. ಇದಕ್ಕೂ ಮುನ್ನಾದಿನ ಹಾರ್ಮುಝ್ ಜಲಸಂಧಿಯಲ್ಲಿ ‘ಎಂವಿ ಸ್ಕೈಲೈಟ್ ’ಹೆಸರಿನ ಇನ್ನೊಂದು ವಾಣಿಜ್ಯ ಹಡಗಿನ ಮೇಲೆ ನಡೆದ ದಾಳಿಯಲ್ಲಿ ಬಿಹಾರದ ಆಶಿಷ್ ಕುಮಾರ್ ಮತ್ತು ರಾಜಸ್ಥಾನದ ದಲೀಪ್ ಸಿಂಗ್ ನಾಪತ್ತೆಯಾಗಿದ್ದು,ತೀವ್ರ ಶೋಧ ಕಾರ್ಯಾಚರಣೆಯ ಬಳಿಕವೂ ಪತ್ತೆಯಾಗದ ಹಿನ್ನೆಲೆಯಲ್ಲಿ ಮೃತಪಟ್ಟಿದ್ದಾರೆ ಎಂದು ಪರಿಗಣಿಸಲಾಗಿದೆ. ಕೆಲ ಸಮಯದ ಹಿಂದೆ ದಿಯುವಿನ ಭಾವಸರವಾಡಾ ಪ್ರದೇಶದಿಂದ ಮುಂಬೈಗೆ ಬಂದಿದ್ದ ಸೋಲಂಕಿ ಕಾಂದಿವಲಿಯಲ್ಲಿ ವಾಸವಾಗಿದ್ದ. ಆತ ಮೀನು ವ್ಯಾಪಾರಿ ಅಮೃತಲಾಲ ಸೋಲಂಕಿಯವರ ಕಿರಿಯ ಪುತ್ರನಾಗಿದ್ದು,ಆತನ ಅಕ್ಕ ದುಬೈನಲ್ಲಿ ವಾಸವಿದ್ದಾರೆ. ತಿಂಗಳ ಹಿಂದಷ್ಟೇ ತನ್ನ ತಾಯಿಯ ಅಂತಿಮ ಕ್ರಿಯೆಯಲ್ಲಿ ಭಾಗವಹಿಸಲು ಸೋಲಂಕಿ ಮುಂಬೈಗೆ ಬಂದು ಹೋಗಿದ್ದ ಎಂದು ಬಲ್ಲ ಮೂಲಗಳು ತಿಳಿಸಿವೆ. ಸೋಲಂಕಿ 16 ಭಾರತೀಯರು ಮತ್ತು ನಾಲ್ವರು ಬಾಂಗ್ಲಾದೇಶಿಗಳು ಸೇರಿದಂತೆ ಇತರ 25 ಸಿಬ್ಬಂದಿಗಳೊಂದಿಗೆ ತೈಲ ಟ್ಯಾಂಕರ್ನಲ್ಲಿ ಕೆಲಸ ಮಾಡುತ್ತಿದ್ದ. ದಾಳಿ ನಡೆದಾಗ ಟ್ಯಾಂಕರ್ ಮಸ್ಕತ್ನ ಸುಲ್ತಾನ್ ಕಬೂಸ್ ಬಂದರಿಗೆ ಪ್ರಯಾಣಿಸುತ್ತಿತ್ತು. ಸ್ಫೋಟಕಗಳಿಂದ ತುಂಬಿದ್ದ ಡ್ರೋನ್ ಬೋಟ್ ಟ್ಯಾಂಕರ್ಗೆ ಅಪ್ಪಳಿಸಿದಾಗ ಇಂಜಿನ್ ರೂಮ್ಗೆ ಬೆಂಕಿ ಹತ್ತಿಕೊಂಡಿದ್ದು ಅಲ್ಲಿಯೇ ಇದ್ದ ಸೋಲಂಕಿ ಮೃತಪಟ್ಟಿದ್ದ. ಇತರ ಸಿಬ್ಬಂದಿಗಳನ್ನು ಸಮೀಪದಲ್ಲಿ ಹಾದು ಹೋಗುತ್ತಿದ್ದ ಇನ್ನೊಂದು ಹಡಗು ರಕ್ಷಿಸಿತ್ತು ಎಂದು ಒಮಾನ್ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಹೇಳಿಕೆಯಲ್ಲಿ ತಿಳಿಸಿದೆ.
ಮಾಗಡಿಯವರಿಗೆ ಎತ್ತಿನಹೊಳೆ ನೀರಿನ ಅದೃಷ್ಟ: ಡಿ.ಕೆ.ಶಿವಕುಮಾರ್
ವೈ.ಜಿ.ಗುಡ್ಡ ಏತನೀರಾವರಿ ಯೋಜನೆಯ ಶಂಕುಸ್ಥಾಪನೆ
ಟೀಂ ಇಂಡಿಯಾ ODI ಸಂಖ್ಯೆ ಹೆಚ್ಚಿಸಲು ಬಿಸಿಸಿಐ ಚಿಂತನೆ! ರೋಹಿತ್ ಶರ್ಮಾ- ವಿರಾಟ್ ಕೊಹ್ಲಿಗಾಗಿ ಕೆಲ ಬದಲಾವಣೆ
Team India Schedule- ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರ ಅಭಿಮಾನಿಗಳಿಗೆ ಇದು ಸಂತಸದ ಸುದ್ದಿ. ಇಬ್ಬರು ಸ್ಟಾರ್ ಆಟಗಾರರು ಹೆಚ್ಚು ಪಂದ್ಯಗಳನ್ನಾಡುವಂತೆ ಸಾಧ್ಯವಾಗಲು ಬಿಸಿಸಿಐ ಇದೀಗ ಏಕದಿನ ಪಂದ್ಯಗಳ ಸಂಖ್ಯೆಯನ್ನು ಹಂತಹಂತವಾಗಿ ಹೆಚ್ಚಿಸುವ ಬಗ್ಗೆ ಚಿಂತನೆ ನಡೆಸುತ್ತಿದೆ. ಈ ನಿಟ್ಟಿನಲ್ಲಿ ಕೆಲ ಟಿ20 ಸರಣಿಗಳ ಪಂದ್ಯಗಳನ್ನು ಕಡಿತಗೊಳಿಸಿ ಏಕದಿನ ಸರಣಿಗಳಲ್ಲಿನ ಪಂದ್ಯಗಳನ್ನು ಹೆಚ್ಚಿಸಲಾಗುತ್ತಿದೆ. 2027ರ ಏಕದಿನ ವಿಶ್ವಕಪ್ ಗೆ ಪೂರ್ವಭಾವಿಯಾಗಿ ಭಾರತ ತಂಡಕ್ಕೆ ಹೆಚ್ಚು ಏಕದಿನ ಪಂದ್ಯಗಳನ್ನಾಡಿ ರೂಢಿ ಮಾಡಿಕೊಳ್ಳಲಿ ಎಂಬುದು ಸಹ ಈ ಚಿಂತನೆಯ ಹಿಂದಿನ ಉದ್ದೇಶವಾಗಿದೆ.
ಉಪ್ಪಿನಂಗಡಿ: ಕೋಳಿ ಅಂಕಕ್ಕೆ ಪೊಲೀಸರಿಂದ ದಾಳಿ; ಮೂವರು ಆರೋಪಿಗಳ ಬಂಧನ
ಉಪ್ಪಿನಂಗಡಿ: ಬಜತ್ತೂರು ಗ್ರಾಮದ ಮಣಿಕ್ಕಳದಲ್ಲಿ ನಡೆಯುತ್ತಿದ್ದ ಅನಧಿಕೃತ ಕೋಳಿ ಅಂಕಕ್ಕೆ ದಾಳಿ ನಡೆಸಿದ ಉಪ್ಪಿನಂಗಡಿ ಪೊಲೀಸರು ಮೂವರು ಆರೋಪಿಗಳು ಸೇರಿದಂತೆ ಐದು ಹುಂಜಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಕೊಯಿಲ ಗ್ರಾಮದ ಸಬಲೂರಿನ ಸತೀಶ್ (38), ವಿಟ್ಲ ಪಡ್ನೂರು ಗ್ರಾಮದ ಕಡಂಬುವಿನ ಮುರಳಿ (30) ಹಾಗೂ ವಳಾಲಿನ ಕುಡತ್ತಡ್ಕ ನಿವಾಸಿ ಮೋನಪ್ಪ ಕೆ. (36) ಬಂಧಿತರು. ಉಪ್ಪಿನಂಗಡಿ ಪೊಲೀಸ್ ಠಾಣಾ ಉಪನಿರೀಕ್ಷಕ ಸುತೇಶ್ ಕೆ.ಪಿ. ಅವರು ಮಾ.3ರಂದು ಸಂಜೆ ತನ್ನ ಸಿಬ್ಬಂದಿಗಳೊಂದಿಗೆ ಮಣಿಕ್ಕಳ ಕಡೆ ರೌಂಡ್ಸ್ ಕರ್ತವ್ಯದಲ್ಲಿದ್ದಾಗ ಕೋಳಿ ಕೂಗುವ ಸದ್ದು ಕೇಳಿ ಬಂದಿದ್ದು, ಸ್ಥಳಕ್ಕೆ ತೆರಳಿದಾಗ ಅಲ್ಲಿ ರಸ್ತೆ ಬದಿ ಕೋಳಿ ಅಂಕ ನಡೆಯುತ್ತಿರುವುದು ಕಂಡು ಬಂದಿತ್ತು. ಪೊಲೀಸರು ದಾಳಿ ನಡೆಸಲು ಮುಂದಾದಾಗ ಗುಂಪು ಸೇರಿದ್ದ ಜನ ಅಲ್ಲಿಂದ ಚದುರಿ ಓಡಿ ಹೋಗಿದ್ದು, ಮೂವರು ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾರೆ. ಸ್ಥಳದಿಂದ ಕೋಳಿ ಅಂಕಕ್ಕೆ ಬಳಸಲಾದ ಐದು ಹುಂಜ ಕೋಳಿಗಳನ್ನು, ಎರಡು ಬಾಲುಗಳನ್ನು, ಆರೋಪಿಗಳು ಜೂಜಿಗೆ ಬಳಸಿದ್ದ 2,300 ರೂ. ಹಣ, ಎರಡು ಪ್ಲಾಸ್ಟಿಕ್ ಚೀಲ, ಹಾಗೂ ಒಂದು ಮೋಟಾರ್ ಸೈಕಲನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆರೋಪಿಗಳಲ್ಲಿ ವಿಚಾರಿಸಿದಾಗ ದೇರಣ್ಣ ಮತ್ತು ಉಮೇಶ್ ರವರು ಇಲ್ಲಿ ಕೋಳಿ ಅಂಕ ನಡೆಸುತ್ತಿದ್ದು ನಾವುಗಳು ಕೋಳಿ ಅಂಕದಲ್ಲಿ ಭಾಗವಹಿಸಿ ಪಂದ್ಯಾಟದಲ್ಲಿ ತೊಡಗಿಸಿಕೊಂಡಿರುತ್ತೇವೆ ಎಂದು ತಿಳಿಸಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಕುಮಾರಸ್ವಾಮಿ ಮಂಡ್ಯದಲ್ಲೊಂದು ಟ್ರಾನ್ಸ್ ಫಾರ್ಮರ್ ಹಾಕಿಸಲಿ : ಡಿ.ಕೆ.ಶಿವಕುಮಾರ್
ಬೆಂಗಳೂರು : ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ತಾವು ಪ್ರತಿನಿಧಿಸುವ ಮಂಡ್ಯ ಲೋಕಸಭಾ ಕ್ಷೇತ್ರದಲ್ಲೊಂದು ವಿದ್ಯುತ್ ಟ್ರಾನ್ಸ್ ಫಾರ್ಮರ್ ಹಾಕಿಸಲಿ ನೋಡೋಣ ಎಂದು ಉಪಮುಖ್ಯಮಂತ್ರಿಯೂ ಆದ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಸವಾಲು ಹಾಕಿದ್ದಾರೆ. ಬುಧವಾರ ಇಲ್ಲಿನ ಮಾಗಡಿಯ ಚಕ್ರಬಾವಿಯಲ್ಲಿ ನಡೆದ ವೈ.ಜಿ.ಗುಡ್ಡ ಏತನೀರಾವರಿ ಯೋಜನೆಯ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ಕುಮಾರಸ್ವಾಮಿ ಅವರು ಮಂಡ್ಯ ಸಂಸದರಾಗಿದ್ದಾರೆ. ಕೇಂದ್ರ ಸರಕಾರದಿಂದ ಹಣ ತಂದು ಮಂಡ್ಯದ ರೈತರಿಗೆ ಟ್ರಾನ್ಸ್ ಫಾರ್ಮರ್ ಹಾಕಿಸಲು ಅವರ ಸಾಮರ್ಥ್ಯ ಗೊತ್ತಾಗುತ್ತದೆ ಎಂದು ಹೇಳಿದರು. ರೈತರ ಪಂಪ್ ಸೆಟ್ಗಳಿಗೆ 10 ಎಚ್ಪಿ ಉಚಿತ ವಿದ್ಯುತ್ ನೀಡಿದ್ದು ಕಾಂಗ್ರೆಸ್ ಸರಕಾರ. ರಾಜ್ಯದ 2.20 ಲಕ್ಷ ಜನರಿಗೆ ಆಸ್ತಿ ದಾಖಲೆ ನೀಡುವ ಮೂಲಕ ಭೂಮಿ ಗ್ಯಾರಂಟಿ ನೀಡಿದ್ದೇವೆ. ವಿಧಾನಸಭೆಯ ವಿಪಕ್ಷ ನಾಯಕ ಅಶೋಕ್ ನಿಮ್ಮ ಅವಧಿಯಲ್ಲಿ, ಜನತಾ ದಳದ ಅವಧಿಯಲ್ಲಿ ಇಂತಹ ಕೆಲಸ ಮಾಡಲು ಆಗುತ್ತಿರಲಿಲ್ಲವೇ? ಉಳುವವನಿಗೆ ಭೂಮಿ, ಬಗರ್ ಹುಕ್ಕುಂ, ಅರಣ್ಯ ಭಾಗದ ರೈತರಿಗೆ ಜಮೀನು ಸೇರಿದಂತೆ ರೈತರ ಪರವಾಗಿ ಹೊಸದಿಲ್ಲಿಯಲ್ಲಾದರೂ ಸರಿ, ರಾಜ್ಯದಲ್ಲಾದರೂ ಸರಿ ಯೋಜನೆ ರೂಪಿಸಿದ್ದರೆ ಅದು ಕಾಂಗ್ರೆಸ್ ಮಾತ್ರ. ಇಂತಹ ಒಂದೇ ಒಂದು ಕೆಲಸ ಮಾಡಲು ಆಗದಿದ್ದರೆ ಮತ್ತೆ ಏಕೆ ಜನ ಮತ ಹಾಕಬೇಕು? ಎಂದು ಕೇಳಿದರು. ನಾನು ಇಲ್ಲಿ ನಮ್ಮ ಕೆಲಸವನ್ನು ತೋರಿಸಲು ನಿಂತಿದ್ದೇನೆ ಹೊರತು, ಮುಂದೆ ಇಂತಹ ಕೆಲಸ ಮಾಡುತ್ತೇನೆ ಎಂದು ಹೇಳಲು ನಿಂತಿಲ್ಲ. ಶಾಸಕರಾಗಿ, ಸಂಸದರಾಗಿ ಸಿಎಂ ಆಗಿ ದೊಡ್ಡ ಸ್ಥಾನಕ್ಕೆ ಹೋದವರು ಇಲ್ಲಿಗೆ ಬಂದು ಬುಡುಬುಡುಕೆ, ಬಣ್ಣ ಬಣ್ಣದ ಮಾತುಗಳನ್ನಾಡುತ್ತಾರೆ. ನಾಳೆ ಕೆಲಸ ಮಾಡುತ್ತೇವೆ ಎಂಬುದು ಶತೃತ್ವ, ಇವತ್ತೇ ಕೆಲಸ ಮಾಡುತ್ತೇವೆ ಎಂಬುದು ಮಿತ್ರತ್ವ. ನಾಳೆ ಯಾರು ಇರುತ್ತಾರೋ ಇರುವುದಿಲ್ಲವೋ ಗೊತ್ತಿಲ್ಲ. ಅಧಿಕಾರ ಇದ್ದಾಗ ನಾವು ಏನು ಮಾಡಿದೆವು ಎಂಬುದು ಮುಖ್ಯ. ನಮ್ಮದು ನಾಳೆ ಎನ್ನುವ ಸರಕಾರವಲ್ಲ, ಇಂದೇ ಎನ್ನುವ ಸರಕಾರ ಎಂದು ಅವರು ತಿಳಿಸಿದರು. ರಾಜಕಾರಣಿಗಳು ಐದು ವರ್ಷಕ್ಕೊಮ್ಮೆ ಮತಕ್ಕಾಗಿ ಬಂದಾಗ ಯಾರು ಏನು ಮಾಡಿದ್ದಾರೆ ಎಂದು ಕೇಳಬೇಕು. ಕಾಂಗ್ರೆಸ್ ಕಾರ್ಯಕರ್ತರು ನೀವುಗಳು ಬೇರೆ ಪಕ್ಷಗಳ ನಿಮ್ಮ ಸ್ನೇಹಿತರ ಜತೆ ಯಾರ ಕಾಲದಲ್ಲಿ ಯಾವ ಕೆಲಸ ಆಗಿದೆ ಎಂದು ಲೆಕ್ಕಾಚಾರ ಹಾಕಬೇಕು. ಅಧಿಕಾರ ಯಾರಿಗೆ ಇರಲಿಲ್ಲ? ಜೆಡಿಎಸ್ ಪಕ್ಷದ ಮುಖ್ಯಮಂತ್ರಿ, ಪ್ರಧಾನಿ ಆಗಿದ್ದ ವೇಳೆ ಎಲ್ಲರಿಗೂ ಅಧಿಕಾರ ಇತ್ತಲ್ಲವೇ? ಅಧಿಕಾರದಲ್ಲಿ ಇದ್ದಾಗ ಯಾವ ಸಾಕ್ಷಿ ಗುಡ್ಡೆ ಬಿಟ್ಟು ಹೋಗಿದ್ದಾರೆ? ಎಂದು ಅವರು ಪ್ರಶ್ನಿಸಿದರು.
ನಾಳೆ ಎರಡನೇ ಸೆಮಿ ಫೈನಲ್ | ಭಾರತ-ಇಂಗ್ಲೆಂಡ್ ತೀವ್ರ ಪೈಪೋಟಿ ನಿರೀಕ್ಷೆ
ಮುಂಬೈ, ಮಾ.4: ಟಿ-20 ವಿಶ್ವಕಪ್ ಟೂರ್ನಿಯ ಎರಡನೇ ಸೆಮಿ ಫೈನಲ್ ಪಂದ್ಯವು ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಗುರುವಾರ ನಡೆಯಲಿದೆ. ಈ ತನಕ ತಲಾ ಎರಡು ಬಾರಿ ಟಿ-20 ವಿಶ್ವಕಪ್ ಟ್ರೋಫಿ ಗೆದ್ದಿರುವ ಭಾರತ ಹಾಗೂ ಇಂಗ್ಲೆಂಡ್ ತಂಡಗಳು ಮುಖಾಮುಖಿಯಾಗುತ್ತಿದ್ದು, ತೀವ್ರ ಪೈಪೋಟಿಯನ್ನು ನಿರೀಕ್ಷಿಸಲಾಗುತ್ತಿದೆ. ಸೆಮಿ ಫೈನಲ್ನಲ್ಲಿ ಉಭಯ ತಂಡಗಳು ತಲಾ ಒಂದು ಪಂದ್ಯವನ್ನು ಜಯಿಸಿ ಸಮತೋಲಿತ ಪ್ರದರ್ಶನ ನೀಡಿವೆ. ಆ ಎರಡೂ ಸಂದರ್ಭದಲ್ಲಿ ಸೆಮಿ ಫೈನಲ್ ಗೆದ್ದ ತಂಡವು ಪ್ರಶಸ್ತಿಯನ್ನು ಜಯಿಸಿತ್ತು. ಇದೀಗ ಉಭಯ ತಂಡಗಳು ಮುಂಬೈನ ಪ್ರತಿಷ್ಠಿತ ಸ್ಟೇಡಿಯಂನಲ್ಲಿ ಮೂರನೇ ಬಾರಿ ಸೆಮಿ ಫೈನಲ್ ಪಂದ್ಯದಲ್ಲಿ ಸೆಣಸಾಡಲು ಸಜ್ಜಾಗಿವೆ. ಈ ಪಂದ್ಯವನ್ನು ಗೆಲ್ಲುವ ತಂಡವು ಐಸಿಸಿ ಪುರುಷರ ಟಿ-20 ವಿಶ್ವಕಪ್ ಇತಿಹಾಸದಲ್ಲಿ ಮೊದಲ ಬಾರಿ ಮೂರನೇ ಪ್ರಶಸ್ತಿ ಗೆಲ್ಲುವತ್ತ ದಿಟ್ಟ ಹೆಜ್ಜೆ ಇಡಲಿದೆ. ಭಾರತ ಹಾಗೂ ಇಂಗ್ಲೆಂಡ್ನ ಜೊತೆಗೆ ವೆಸ್ಟ್ಇಂಡೀಸ್ ಕೂಡ ಎರಡು ಬಾರಿ ಟಿ-20 ವಿಶ್ವಕಪ್ ಟ್ರೋಫಿ ಗೆದ್ದುಕೊಂಡಿದೆ. 2022ರ ಟಿ-20 ವಿಶ್ವಕಪ್ ಸೆಮಿ ಫೈನಲ್ನಲ್ಲಿ ಭಾರತ ತಂಡವನ್ನು 10 ವಿಕೆಟ್ಗಳ ಅಂತರದಿಂದ ಮಣಿಸಿದ್ದ ಇಂಗ್ಲೆಂಡ್ ತಂಡವು ಫೈನಲ್ನಲ್ಲಿ ಪಾಕಿಸ್ತಾನವನ್ನು ಮಣಿಸಿ ಪ್ರಶಸ್ತಿ ಜಯಿಸಿತ್ತು. 2024ರ ಟಿ-20 ವಿಶ್ವಕಪ್ನಲ್ಲಿ ಭಾರತ ತಂಡವು ಸೆಮಿ ಫೈನಲ್ನಲ್ಲಿ ಇಂಗ್ಲೆಂಡ್ ತಂಡವನ್ನು ಸೋಲಿಸಿತ್ತು. ರೋಚಕವಾಗಿ ಸಾಗಿದ ಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಸೋಲಿಸಿ ಎರಡನೇ ಬಾರಿ ಟಿ-20 ವಿಶ್ವಕಪ್ ಎತ್ತಿ ಹಿಡಿದಿತ್ತು. ಹೆಡ್-ಟು-ಹೆಡ್ ಭಾರತ ಹಾಗೂ ಇಂಗ್ಲೆಂಡ್ ತಂಡಗಳು ಟಿ-20 ಕ್ರಿಕೆಟ್ನಲ್ಲಿ ಒಟ್ಟು 29 ಬಾರಿ ಮುಖಾಮುಖಿಯಾಗಿವೆ. ಭಾರತ 17 ಬಾರಿ ಹಾಗೂ ಇಂಗ್ಲೆಂಡ್ 12 ಬಾರಿ ಗೆಲುವು ದಾಖಲಿಸಿದೆ. ಭಾರತ ತಂಡವು ಟಿ-20 ವಿಶ್ವಕಪ್ನಲ್ಲಿ ತನ್ನಲ್ಲೇ ಉಳಿಸಿಕೊಂಡ ಮೊದಲ ತಂಡ ಹಾಗೂ ಐಸಿಸಿ ಟ್ರೋಫಿ ಗೆದ್ದ ಮೊದಲ ಆತಿಥೇಯ ದೇಶ ಎನಿಸಿಕೊಳ್ಳುವ ವಿಶ್ವಾಸದಲ್ಲಿದೆ. ಉಭಯ ತಂಡಗಳ ಸೆಮಿ ಫೈನಲ್ ಪಯಣ ವ್ಯತಿರಿಕ್ತವಾಗಿದೆ. ಇಂಗ್ಲೆಂಡ್ ತಂಡವು ಸೂಪರ್-8ರ ಗ್ರೂಪ್-2ರಲ್ಲಿ ಅಜೇಯ ಗೆಲುವಿನ ದಾಖಲೆಯೊಂದಿಗೆ ಸೆಮಿ ಫೈನಲ್ಗೆ ತಲುಪಿದ ಮೊದಲ ತಂಡ ಎನಿಸಿಕೊಂಡಿದೆ. ಇದೇ ವೇಳೆ, ಭಾರತ ತಂಡವು ಸೂಪರ್-8ರ ಗ್ರೂಪ್-1ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಸೋತಿತ್ತು. ವೆಸ್ಟ್ಇಂಡೀಸ್ ವಿರುದ್ಧ ರೋಚಕ ಜಯ ಸಾಧಿಸಿದ ನಂತರ ಸೆಮಿ ಫೈನಲ್ನಲ್ಲಿ ಸ್ಥಾನ ಪಡೆದಿತ್ತು. ಇದಕ್ಕೂ ಮೊದಲು ಲೀಗ್ ಹಂತದ ‘ಎ’ ಗುಂಪಿನಲ್ಲಿ ಎಲ್ಲ ನಾಲ್ಕು ಪಂದ್ಯಗಳನ್ನು ಜಯಿಸಿದ್ದ ಭಾರತ ತಂಡ ಅಗ್ರ ಸ್ಥಾನ ಪಡೆದಿತ್ತು. ಇಂಗ್ಲೆಂಡ್ ತಂಡವು ವೆಸ್ಟ್ಇಂಡೀಸ್ ವಿರುದ್ಧ ಸೋತ ಕಾರಣ ‘ಸಿ’ ಗುಂಪಿನಲ್ಲಿ ಎರಡನೇ ಸ್ಥಾನ ಪಡೆದಿತ್ತು. ಸೆಮಿ ಫೈನಲ್ ಪಂದ್ಯವು ವಿಭಿನ್ನವಾಗಿದ್ದು, ವಾಂಖೆಡೆ ಸ್ಟೇಡಿಯಂನಲ್ಲಿನ ನೆನಪು ಆತಿಥೇಯ ತಂಡಕ್ಕೆ ಹೆಚ್ಚು ಭಾವನಾತ್ಮಕವಾಗಿದೆ. 2011ರ ಏಕದಿನ ವಿಶ್ವಕಪ್ ಫೈನಲ್ನಲ್ಲಿ ಎಂ.ಎಸ್ ಧೋನಿ ಸಿಕ್ಸರ್ ಸಿಡಿಸಿ ಪ್ರಶಸ್ತಿ ಖಚಿತಪಡಿಸಿದ್ದರು. ಸಚಿನ್ ತೆಂಡುಲ್ಕರ್ರನ್ನು ಸಹ ಆಟಗಾರರು ಹೆಗಲ ಮೇಲೆ ಕುಳ್ಳಿರಿಸಿ ಸಂಭ್ರಮಿಸಿದ್ದರು. ಪ್ರಸಕ್ತ ವಿಶ್ವಕಪ್ ಟೂರ್ನಿಯಲ್ಲಿ ಭಾರತದ ಅಭಿಯಾನದಲ್ಲಿ ನಿರ್ಣಾಯಕ ಘಟ್ಟದಲ್ಲಿ ಹಲವು ಮ್ಯಾಚ್ ವಿನ್ನರ್ಗಳು ಹೊರಹೊಮ್ಮಿದ್ದಾರೆ. ಅಭಿಷೇಕ್ ಶರ್ಮಾ ಟಿ-20 ವಿಶ್ವಕಪ್ನಲ್ಲಿ ತನ್ನ ಮೊದಲ ಅರ್ಧಶತಕ ಗಳಿಸಿದರು. ಸಂಜು ಸ್ಯಾಮ್ಸನ್ ವೆಸ್ಟ್ಇಂಡೀಸ್ ವಿರುದ್ಧ ಗೆಲ್ಲಲೇಬೇಕಾದ ಪಂದ್ಯದಲ್ಲಿ ಔಟಾಗದೆ 97 ರನ್ ಗಳಿಸಿದ್ದರು. ನಾಯಕ ಸೂರ್ಯಕುಮಾರ ಯಾದವ್ ಅಮೆರಿಕ ತಂಡದ ವಿರುದ್ಧ 84 ರನ್ ಗಳಿಸಿದ್ದರು. ತಿಲಕ್ ವರ್ಮಾ, ಇಶಾನ್ ಕಿಶನ್ ಹಾಗೂ ಹಾರ್ದಿಕ್ ಪಾಂಡ್ಯ ಅವರ ಕೊಡುಗೆಗಳು ಬ್ಯಾಟಿಂಗ್ ವಿಭಾಗವನ್ನು ಶಕ್ತಿಶಾಲಿಗೊಳಿಸಿದೆ. ಭಾರತದ ಪರ ಗರಿಷ್ಠ ಸ್ಕೋರರ್ಗಳ ಪಟ್ಟಿಯಲ್ಲಿ ಸೂರ್ಯಕುಮಾರ್(231 ರನ್)ಅಗ್ರ ಸ್ಥಾನದಲ್ಲಿದ್ದು, ಇಶಾನ್(217 ರನ್)ಎರಡನೇ ಸ್ಥಾನದಲ್ಲಿದ್ದಾರೆ. ಭಾರತದ ಬೌಲಿಂಗ್ ದಾಳಿಯು ಸಮತೋಲಿತವಾಗಿದೆ. ಜಸ್ಪ್ರಿತ್ ಬುಮ್ರಾ, ಅರ್ಷದೀಪ ಸಿಂಗ್, ವರುಣ್ ಚಕ್ರವರ್ತಿ, ಅಕ್ಷರ್ ಪಟೇಲ್, ಹಾರ್ದಿಕ್ ಹಾಗೂ ಕುಲದೀಪ ಯಾದವ್ ಎಲ್ಲರೂ ಪ್ರಮುಖ ಸಂದರ್ಭದಲ್ಲಿ ತಂಡಕ್ಕೆ ಮೇಲುಗೈ ಒದಗಿಸಿದ್ದಾರೆ. ವರುಣ್ ಒಟ್ಟು 12 ವಿಕೆಟ್ಗಳನ್ನು ಪಡೆದು ಅತ್ಯಧಿಕ ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ. ಯಾವೊಬ್ಬ ಆಟಗಾರನು ಸ್ಥಿರ ಪ್ರದರ್ಶನದಿಂದ ಪ್ರಾಬಲ್ಯ ಸಾಧಿಸಿಲ್ಲ. ಎಲ್ಲರೂ ತಮ್ಮ ಹೊಣೆಗಾರಿಕೆಯನ್ನು ಹಂಚಿಕೊಂಡು ಭಾರತ ತಂಡದ ಗೆಲುವಿಗೆ ನೆರವಾಗಿದ್ದಾರೆ. ಇಂಗ್ಲೆಂಡ್ ತಂಡ ಕೂಡ ವೈಯಕ್ತಿಕ ಪ್ರದರ್ಶನವನ್ನು ಅವಲಂಬಿಸದೆ ಸಂಘಟಿತ ಪ್ರದರ್ಶನವನ್ನು ಹೆಚ್ಚು ನೆಚ್ಚಿಕೊಂಡಿದೆ. ಜೋಸ್ ಬಟ್ಲರ್ ತನ್ನ ಶ್ರೇಷ್ಠ ಫಾರ್ಮ್ಗಾಗಿ ಹುಡುಕಾಡುತ್ತಿದ್ದರೂ ಫಿಲ್ ಸಾಲ್ಟ್, ಜೇಕಬ್ ಬೆಥೆಲ್, ವಿಲ್ ಜಾಕ್ಸ್ ಹಾಗೂ ನಾಯಕ ಹ್ಯಾರಿ ಬ್ರೂಕ್ ಪ್ರಮುಖ ಕೊಡುಗೆಗಳನ್ನು ನೀಡಿದ್ದಾರೆ. 228 ರನ್ಗಳೊಂದಿಗೆ ಬ್ರೂಕ್ ಸ್ಕೋರ್ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದ್ದಾರೆ. ಬೌಲಿಂಗ್ ವಿಭಾಗದಲ್ಲಿ ಸ್ಪಿನ್ನರ್ ಆದಿಲ್ ರಶೀದ್ ಈ ತನಕ 11 ವಿಕೆಟ್ಗಳನ್ನು ಪಡೆದು ಮಿಂಚಿದ್ದಾರೆ. ವಾಂಖೆಡೆ ಸ್ಟೇಡಿಯಂ ಪಿಚ್ ಬ್ಯಾಟಿಂಗ್ ಸ್ನೇಹಿಯಾಗಿದ್ದರೂ, ಆರಂಭದಲ್ಲಿ ವೇಗಿಗಳಿಗೆ ನೆರವಾಗುವ ನಿರೀಕ್ಷೆ ಇದೆ. ಬಿಸಿಲಿನ ವಾತಾವರಣದ ಮುನ್ಸೂಚನೆ ಇದ್ದು, ರಾತ್ರಿ ವೇಳೆ ಇಬ್ಬನಿ ಬೀಳುವ ಸಾಧ್ಯತೆ ಇದೆ. ಹೀಗಾಗಿ ಟಾಸ್ ಪ್ರಮುಖ ಪಾತ್ರವಹಿಸಬಹುದು. ಟಾಸ್ ಗೆಲ್ಲುವ ನಾಯಕ ಮೊದಲು ಬೌಲಿಂಗ್ ಆಯ್ದುಕೊಳ್ಳಬಹುದು. ಪಂದ್ಯಾವಳಿಯಲ್ಲಿ ಏಳು ಪಂದ್ಯಗಳ ನಂತರ ಉಭಯ ತಂಡಗಳು ಆಡುವ 11ರ ಬಳಗವನ್ನು ಕಂಡುಕೊಂಡಿವೆ. ಹೀಗಾಗಿ ಬದಲಾವಣೆ ಮಾಡುವ ಸಾಧ್ಯತೆ ಇಲ್ಲ. ಭಾರತ ತಂಡವು ಸಂಜು ಸ್ಯಾಮ್ಸನ್ಗೆ ಉತ್ತಮ ಪ್ರದರ್ಶನ ಮುಂದುವರಿಸಲು ಮತ್ತೊಂದು ಅವಕಾಶ ನೀಡಬಹುದು. ಸ್ಟೇಡಿಯಂನಲ್ಲಿ 35,000ಕ್ಕೂ ಅಧಿಕ ಕ್ರಿಕೆಟ್ ಪ್ರೇಮಿಗಳು ಜಮಾಯಿಸುವ ನಿರೀಕ್ಷೆ ಇದೆ. ಹೊನಲು ಬೆಳಕಿನಡಿ ಕಿಕ್ಕಿರಿದು ಪ್ರೇಕ್ಷಕರ ಸಮ್ಮುಖದಲ್ಲಿ ನಡೆಯುವ ಪಂದ್ಯದಲ್ಲಿ ಗೆಲ್ಲುವ ತಂಡ ಅಹ್ಮದಾಬಾದ್ನಲ್ಲಿ ಮಾ.8ರಂದು ನಡೆಯಲಿರುವ ಫೈನಲ್ಗೆ ಲಗ್ಗೆ ಇಡಲಿದೆ. ಸಂಭಾವ್ಯ ಆಡುವ 11ರ ಬಳಗ ಭಾರತ: ಸಂಜು ಸ್ಯಾಮ್ಸನ್(ವಿಕೆಟ್ಕೀಪರ್), ಅಭಿಷೇಕ್ ಶರ್ಮಾ, ಇಶಾನ್ ಕಿಶನ್, ಸೂರ್ಯಕುಮಾರ ಯಾದವ್(ನಾಯಕ), ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ಅಕ್ಷರ ಪಟೇಲ್, ಅರ್ಷದೀಪ ಸಿಂಗ್, ವರುಣ್ ಚಕ್ರವರ್ತಿ, ಜಸ್ಪ್ರಿತ್ ಬುಮ್ರಾ. ಇಂಗ್ಲೆಂಡ್: ಫಿಲ್ ಸಾಲ್ಟ್, ಜೋಸ್ ಬಟ್ಲರ್(ವಿಕೆಟ್ಕೀಪರ್), ಹ್ಯಾರಿ ಬ್ರೂಕ್(ನಾಯಕ), ಜೇಕಬ್ ಬೆಥೆಲ್, ಟಾಮ್ ಬ್ಯಾಂಟನ್, ಸ್ಯಾಮ್ ಕರ್ರನ್, ವಿಲ್ ಜಾಕ್ಸ್, ಲಿಯಾಮ್ ಡಾಸನ್, ರಿಹಾನ್ ಅಹ್ಮದ್, ಜೋಫ್ರಾ ಆರ್ಚರ್, ಆದಿಲ್ ರಶೀದ್. ಪಂದ್ಯ ಆರಂಭದ ಸಮಯ: ರಾತ್ರಿ 7:00 ಟಿ-20 ವಿಶ್ವಕಪ್ ಸೆಮಿ ಫೈನಲ್ನಲ್ಲಿ ಭಾರತದ ಪ್ರದರ್ಶನ ಭಾರತ ತಂಡವು ಹತ್ತು ಆವೃತ್ತಿಗಳ ಟಿ-20 ವಿಶ್ವಕಪ್ ಟೂರ್ನಿಗಳ ಪೈಕಿ ಆರನೇ ಬಾರಿ ಸೆಮಿ ಫೈನಲ್ಗೆ ತಲುಪಿದೆ. ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಗುರುವಾರ ಇಂಗ್ಲೆಂಡ್ ತಂಡವನ್ನು ಮಣಿಸಿ ಪ್ರಶಸ್ತಿಯನ್ನು ತನ್ನಲ್ಲೇ ಉಳಿಸಿಕೊಳ್ಳುವತ್ತ ಹೆಜ್ಜೆ ಇಡುವ ವಿಶ್ವಾಸದಲ್ಲಿದೆ. 2007ರಲ್ಲಿ ನಡೆದ ಮೊತ್ತ ಮೊದಲ ಟಿ-20 ವಿಶ್ವಕಪ್ನಲ್ಲಿ ಸೆಮಿ ಫೈನಲ್ಗೆ ತಲುಪಿದ್ದ ಭಾರತ ತಂಡವು ಡರ್ಬನ್ನಲ್ಲಿ ಆಸ್ಟ್ರೇಲಿಯವನ್ನು ಮಣಿಸಿತ್ತು. ಜೋಹಾನ್ಸ್ಬರ್ಗ್ನಲ್ಲಿ ನಡೆದಿದ್ದ ಫೈನಲ್ನಲ್ಲಿ ಪಾಕಿಸ್ತಾನವನ್ನು ಸೋಲಿಸಿ ತನ್ನ ಚೊಚ್ಚಲ ಟಿ-20 ವಿಶ್ವಕಪ್ ಜಯಿಸಿತ್ತು. ಫೈನಲ್ನಲ್ಲಿ ಗೌತಮ್ ಗಂಭೀರ್ 75 ರನ್ ಗಳಿಸಿದ್ದರು. ಎಂ.ಎಸ್. ಧೋನಿ ನಾಯಕತ್ವದಡಿ ಬೌಲರ್ಗಳಾದ ಆರ್.ಪಿ. ಸಿಂಗ್ ಹಾಗೂ ಇರ್ಫಾನ್ ಪಠಾಣ್ ಮಿಂಚಿದ್ದರು. ಆ ನಂತರ 2009, 2010 ಹಾಗೂ 2012ರಲ್ಲಿ ಭಾರತ ತಂಡ ಸೆಮಿ ಫೈನಲ್ ತಲುಪುವಲ್ಲಿ ವಿಫಲವಾಗಿತ್ತು. 2014ರಲ್ಲಿ ಮತ್ತೊಮ್ಮೆ ಸೆಮಿ ಫೈನಲ್ ತಲುಪಿತು. ವಿರಾಟ್ ಕೊಹ್ಲಿಯ ಅರ್ಧಶತಕದ(ಔಟಾಗದೆ 72)ನೆರವಿನಿಂದ ದಕ್ಷಿಣ ಆಫ್ರಿಕಾವನ್ನು ಮಣಿಸಿತ್ತು. ಆದರೆ ಫೈನಲ್ನಲ್ಲಿ ಕೊಹ್ಲಿ 77 ರನ್ ಗಳಿಸಿದ ಹೊರತಾಗಿಯೂ ಶ್ರೀಲಂಕಾ ತಂಡವು 131 ರನ್ ಗುರಿಯನ್ನು ಯಶಸ್ವಿಯಾಗಿ ಬೆನ್ನಟ್ಟಿತ್ತು. ಸ್ವದೇಶದಲ್ಲಿ 2016ರಲ್ಲಿ ನಡೆದಿದ್ದ ಟಿ-20 ವಿಶ್ವಕಪ್ನಲ್ಲಿ ಭಾರತ ಮತ್ತೊಮ್ಮೆ ಸೆಮಿ ಫೈನಲ್ ತಲುಪಿತ್ತು. ಆದರೆ ಮುಂಬೈನಲ್ಲಿ ಆಗಿನ ಚಾಂಪಿಯನ್ ವೆಸ್ಟ್ಇಂಡೀಸ್ ತಂಡಕ್ಕೆ ಸೋತಿತ್ತು. 2022ರಲ್ಲಿ ನಾಕೌಟ್ ಹಂತದಲ್ಲಿ ಮೊದಲ ಬಾರಿ ಭಾರತ ತಂಡ ಇಂಗ್ಲೆಂಡ್ ತಂಡವನ್ನು ಎದುರಿಸಿತ್ತು. ಭಾರತ 6ಕ್ಕೆ 168 ರನ್ ಗಳಿಸಿದ್ದರೆ, ಇಂಗ್ಲೆಂಡ್ನ ಆರಂಭಿಕ ಆಟಗಾರರು ವಿಕೆಟ್ ಕಳೆದುಕೊಳ್ಳದೆ 10 ವಿಕೆಟ್ಗಳಿಂದ ಜಯ ಸಾಧಿಸಿ ಪ್ರಶಸ್ತಿ ಗೆಲ್ಲಲು ನೆರವಾಗಿದ್ದರು. 2024ರಲ್ಲಿ ಭಾರತ-ಇಂಗ್ಲೆಂಡ್ ಮತ್ತೊಮ್ಮೆ ಮುಖಾಮುಖಿಯಾಗಿದ್ದವು. ಮೊದಲು ಬ್ಯಾಟಿಂಗ್ ಮಾಡಿದ್ದ ಭಾರತವು ರೋಹಿತ್ ಶರ್ಮಾರ 57 ರನ್ ನೆರವಿನಿಂದ 171 ರನ್ ಗಳಿಸಿತ್ತು. ಈ ಬಾರಿ ಇಂಗ್ಲೆಂಡ್ ತಂಡವು 103 ರನ್ಗೆ ಕುಸಿದುಬಿದ್ದಿದ್ದು, ಭಾರತವು 68 ರನ್ಗನ್ಗಳಿಂದ ಜಯಶಾಲಿಯಾಗಿತ್ತು. ಭಾರತವು ಫೈನಲ್ನಲ್ಲಿ ದಕ್ಷಿಣ ಆಫ್ರಿಕಾವನ್ನು ಸೋಲಿಸಿ ಎರಡನೇ ಬಾರಿ ಟಿ-20 ವಿಶ್ವಕಪ್ ಜಯಿಸಿತ್ತು. ಇದೀಗ ಭಾರತ ಹಾಗೂ ಇಂಗ್ಲೆಂಡ್ ತಂಡಗಳು ಸತತ ಮೂರನೇ ಟಿ-20 ವಿಶ್ವಕಪ್ನ ಸೆಮಿ ಫೈನಲ್ನಲ್ಲಿ ಮುಖಾಮುಖಿಯಾಗುತ್ತಿವೆ. ಮತ್ತೊಂದು ಅಧ್ಯಾಯ ಆರಂಭಿಸುವ ನಿರೀಕ್ಷೆ ಮೂಡಿಸಿವೆ.
ರಾಯಚೂರು | ಮಾ.6ರಂದು ನಶಾಮುಕ್ತ ಭಾರತ್–ಯುವ ಶುದ್ಧಿ ಅಭಿಯಾನ ವಾಕಥಾನ್
ರಾಯಚೂರು : ರಾಯಚೂರು ಜಿಲ್ಲಾ ವ್ಯಾಪ್ತಿಯ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯ ಸಂಯೋಜಿತ ಕಾಲೇಜುಗಳ ಸಂಘ, ದಿಶಾಬೋಧ್ ಫೌಂಡೇಶನ್ ಹಾಗೂ ಮಾದಕ ದ್ರವ್ಯ ನಿಯಂತ್ರಣ ಬ್ಯೂರೋ ಇವರ ಸಹಯೋಗದಲ್ಲಿ “ನಶಾಮುಕ್ತ ಭಾರತ್–ಯುವ ಶುದ್ಧಿ ಅಭಿಯಾನ” ಅಂಗವಾಗಿ ವಾಕಥಾನ್ ಹಾಗೂ ಜಾಗೃತಿ ಕಾರ್ಯಕ್ರಮವನ್ನು ಮಾರ್ಚ್ 6ರಂದು ಹಮ್ಮಿಕೊಳ್ಳಲಾಗಿದೆ ಎಂದು ರಾಯಚೂರು ವೈದ್ಯಕೀಯ ವಿಜ್ಞಾನ ಸಂಸ್ಥೆ (ರಿಮ್ಸ್) ನಿರ್ದೇಶಕ ಡಾ. ರಮೇಶ್ ಬಿ.ಹೆಚ್ ತಿಳಿಸಿದ್ದಾರೆ. ನಗರದ ರಿಮ್ಸ್ ಸಭಾಂಗಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಿಗ್ಗೆ 7.30ಕ್ಕೆ ಎಸ್ಪಿ ಫರೇಡ್ ಮೈದಾನದಿಂದ ಜಾಥಾ ಆರಂಭವಾಗಿ ಗಾಂಧಿ ಚೌಕ್, ಬಸವೇಶ್ವರ ವೃತ್ತ, ಡಾ. ಬಿ.ಆರ್. ಅಂಬೇಡ್ಕರ್ ವೃತ್ತ ಮಾರ್ಗವಾಗಿ ಮಹಾತ್ಮ ಗಾಂಧೀ ಜಿಲ್ಲಾ ಕ್ರೀಡಾಂಗಣಕ್ಕೆ ತಲುಪಲಿದೆ. ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ, ಲಯನ್ಸ್ ಕ್ಲಬ್, ರೋಟರಿ ಕ್ಲಬ್ ಸೇರಿದಂತೆ ಹಲವು ಸಂಸ್ಥೆಗಳ ಸಹಕಾರದಿಂದ ನಡೆಯುವ ಈ ವಾಕಥಾನದಲ್ಲಿ ಅಂದಾಜು 5,000 ಮಂದಿ ಭಾಗವಹಿಸಲಿದ್ದಾರೆ. ಈ ಅಭಿಯಾನವು ಯುವಜನರನ್ನು ಮಾದಕ ವಸ್ತುಗಳ ದುಷ್ಪರಿಣಾಮಗಳಿಂದ ರಕ್ಷಿಸಿ, ಜವಾಬ್ದಾರಿಯುತ ಮತ್ತು ಮೌಲ್ಯಾಧಾರಿತ ಕ್ಯಾಂಪಸ್ಗಳನ್ನು ನಿರ್ಮಿಸುವ ಉದ್ದೇಶ ಹೊಂದಿದೆ. ರಾಷ್ಟ್ರವ್ಯಾಪಿ ಚಳವಳಿಯಾಗಿ ಆರಂಭವಾದ ಈ ಉಪಕ್ರಮಕ್ಕೆ 10 ಕೇಂದ್ರ ಸಚಿವಾಲಯಗಳು ಹಾಗೂ ರಾಜ್ಯ ಕಾನೂನು ಜಾರಿಗೊಳಿಸುವ ಸಂಸ್ಥೆಗಳ ಸಹಕಾರವೂ ಇದೆ ಎಂದು ತಿಳಿಸಿದರು. ವಿಶ್ವವಿದ್ಯಾಲಯದ ಕುಲಪತಿ ಡಾ. ಬಿ.ಸಿ. ಭಗವಾನ್ ಅವರ ಮಾರ್ಗದರ್ಶನದಲ್ಲಿ ಚಳವಳಿ ಮುಂದುವರಿಯುತ್ತಿದ್ದು, ವಿದ್ಯಾಭ್ಯಾಸದ ಜೊತೆಗೆ ಸಾಮಾಜಿಕ ಜವಾಬ್ದಾರಿ ಮತ್ತು ನೈತಿಕ ದೃಢತೆ ಹೊಂದಿದ ಕ್ಯಾಂಪಸ್ಗಳನ್ನು ನಿರ್ಮಿಸುವುದು ಉದ್ದೇಶವಾಗಿದೆ. ಇದುವರೆಗೆ 3 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಗೂ ಕುಟುಂಬಗಳು ಈ ಚಳವಳಿಯಲ್ಲಿ ಭಾಗಿಯಾಗಿದ್ದಾರೆ. ರಿಮ್ಸ್ ಸಹಾಯಕ ಪ್ರಾಧ್ಯಾಪಕ ಡಾ. ಸುಶ್ರಿತ್ ಮಾತನಾಡಿ, “ಅಂಗದಾನ ಕ್ಯಾಂಪಸ್” ಪರಿಕಲ್ಪನೆಯನ್ನು ಉತ್ತೇಜಿಸಿ ಅಂಗದಾನದ ಮಹತ್ವದ ಕುರಿತು ಯುವಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ದಿಶಾಬೋಧ್ ಫೌಂಡೇಶನ್ ನೇತೃತ್ವದಲ್ಲಿ ಕಳೆದ ಎರಡು ವರ್ಷಗಳಿಂದ ಯುವಜನರಲ್ಲಿ ಜಾಗೃತಿ ಕಾರ್ಯಕ್ರಮಗಳು ನಡೆಯುತ್ತಿವೆ. ವಿದ್ಯಾರ್ಥಿಗಳು, ಪೋಷಕರು ಹಾಗೂ ಸಮುದಾಯ ನಾಯಕರನ್ನು ಒಂದೇ ವೇದಿಕೆಯಲ್ಲಿ ಸೇರಿಸಿ ಮಾದಕ ವಸ್ತು ರಹಿತ, ಜವಾಬ್ದಾರಿಯುತ ಮತ್ತು ರಾಷ್ಟ್ರಭಕ್ತ ಯುವ ಚಳವಳಿಯನ್ನು ಬಲಪಡಿಸುವ ಉದ್ದೇಶ ಹೊಂದಿದೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ನವೋದಯ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲರಾದ ಡಾ.ದೇವಾನಂದ, ಹೃದ್ರೋಗ ತಜ್ಞರು ಹಾಗೂ ರಾಜೀವ್ ಗಾಂಧಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಪ್ರಭಾರಿ ವಿಶೇಷಾಧಿಕಾರಿ ಡಾ. ಮುರಳಿ ರಾವ್, ಪೂರ್ಣಿಮಾ ಆಯುರ್ವೇದ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲರಾದ ಡಾ.ಚಂದ್ರಶೇಖರ ರೆಡ್ಡಿ, ನವೋದಯ ದಂತ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲರಾದ ಡಾ.ಗಿರೀಶ್ ಕಟ್ಟಿ, ಶಿವಂ ನರ್ಸಿಂಗ್ ಕಾಲೇಜಿನ ಅಡಳಿತಾಧಿಕಾರಿ ರವಿ ಪಾಟೀಲ್, ನಂದಿನಿ ನರ್ಸಿಂಗ್ ಕಾಲೇಜಿನ ಉಪನ್ಯಾಸಕಿ ಸುಮಲತಾ, ಸ್ಎಎಮ್ಇಎಸ್ ದಂತ ವೈದ್ಯಕೀಯ ಕಾಲೇಜಿನ ಉಪ ಪ್ರಾಂಶುಪಾಲರಾದ ಡಾ.ರಾಘವೇಂದ್ರ ಸೇರಿದಂತೆ ಇತರರು ಇದ್ದರು.
ರಾಯಚೂರು | ಜನಗಣತಿ 2027: ಮೂರು ದಿನಗಳ ತರಬೇತಿ ಕಾರ್ಯಗಾರಕ್ಕೆ ಚಾಲನೆ
ರಾಯಚೂರು : ಜನಗಣತಿ-2027 ಹಿನ್ನೆಲೆಯಲ್ಲಿ ಜಿಲ್ಲಾಮಟ್ಟದ ಅಧಿಕಾರಿಗಳು, ಚಾರ್ಜ್ ಅಧಿಕಾರಿಗಳು ಹಾಗೂ ಇತರೆ ಸಿಬ್ಬಂದಿಗೆ ಮೂರು ದಿನಗಳ ತರಬೇತಿ ಕಾರ್ಯಾಗಾರವು ಮಾರ್ಚ್ 4ರಂದು ಆರಂಭವಾಯಿತು. ನೂತನ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಕಾರ್ಯಾಗಾರಕ್ಕೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಈಶ್ವರ್ ಕಾಂದೂ ಚಾಲನೆ ನೀಡಿ ಮಾತನಾಡಿ, ಈ ಜನಗಣತಿಯು ಡಿಜಿಟಲ್ ಮಾದರಿಯಲ್ಲಿ ನಡೆಯಲಿದೆ. ಪ್ರಶ್ನಾವಳಿಗಳನ್ನು ಸರಿಯಾಗಿ ಓದಿ ತಿಳಿದುಕೊಳ್ಳಬೇಕು. ಯಾವುದೇ ಗೊಂದಲಗಳಿದ್ದರೆ ತಕ್ಷಣ ಪರಿಹರಿಸಿಕೊಳ್ಳಬೇಕು. ಸಂವಿಧಾನಬದ್ಧ ಕರ್ತವ್ಯವೆಂದು ಭಾವಿಸಿ ಎಲ್ಲ ಅಧಿಕಾರಿಗಳು ಮತ್ತು ಸಿಬ್ಬಂದಿ ಮಾರ್ಗಸೂಚಿಯನುಸಾರ ಜನಗಣತಿ ಕಾರ್ಯದಲ್ಲಿ ಭಾಗವಹಿಸಬೇಕು ಎಂದು ತಿಳಿಸಿದರು. ಅಪರ ಜಿಲ್ಲಾಧಿಕಾರಿ ಶಿವಾನಂದ ಭಜಂತ್ರಿ ಮಾತನಾಡಿ, ಕರ್ನಾಟಕದಲ್ಲಿ ಜನಗಣತಿ ಎರಡು ಹಂತಗಳಲ್ಲಿ ನಡೆಯಲಿದೆ. ಭಾರತದ ರಿಜಿಸ್ಟ್ರಾರ್ ಜನರಲ್ ಮತ್ತು ಜನಗಣತಿ ಆಯುಕ್ತರ ಕಚೇರಿ ನೀಡುವ ಮಾರ್ಗಸೂಚಿಗಳನ್ನು ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಸಮಗ್ರವಾಗಿ ಅರ್ಥೈಸಿಕೊಂಡು ಶ್ರದ್ಧೆಯಿಂದ ಕಾರ್ಯನಿರ್ವಹಿಸಬೇಕು ಎಂದು ಹೇಳಿದರು. ಜನಗಣತಿಯ ಹಿನ್ನೆಲೆ, ಪ್ರಕ್ರಿಯೆ, ವಿಧಾನಗಳು ಹಾಗೂ ಅಧಿಕಾರಿಗಳು ಮತ್ತು ಸಿಬ್ಬಂದಿಯ ಕರ್ತವ್ಯಗಳ ಕುರಿತು ತರಬೇತಿಯಲ್ಲಿ ಸಮಗ್ರವಾಗಿ ವಿವರಿಸಲಾಯಿತು. ಉದ್ಘಾಟನಾ ಸಮಾರಂಭದಲ್ಲಿ ಲಿಂಗಸೂರ ಸಹಾಯಕ ಆಯುಕ್ತ ಬಸವಣೆಪ್ಪ ಕಲಶೆಟ್ಟಿ, ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ಡಾ. ಟಿ. ರೋಣಿ, ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಕೆ.ಡಿ. ಬಡಿಗೇರ, ಸಾಮಾಜಿಕ ಭದ್ರತೆ ಮತ್ತು ಪಿಂಚಣಿಯ ಸಹಾಯಕ ನಿರ್ದೇಶಕ ಬಸವರಾಜ ನಾಗರಬೆಂಚಿ ಸೇರಿದಂತೆ ಇತರರು ಉಪಸ್ಥಿತರಿದ್ದರು. ಐಎಎಸ್ ಪ್ರೋಬೇಷನರಿ ಹಾಗೂ ತಹಸೀಲ್ದಾರರಾದ ಪುರುರಾಜ್ ಸಿಂಗ್ ಸೋಲಂಕಿ ಅವರು ಸ್ವಾಗತಿಸಿದರು. ಶಿರಸ್ತೇದಾರ ಸೂಗುರೇಶ ದೇಸಾಯಿ ನಿರೂಪಿಸಿದರು. ತರಬೇತಿಯಲ್ಲಿ ಸಿಂಧನೂರ, ಮಾನವಿ, ಮಸ್ಕಿ, ಲಿಂಗಸಗೂರು, ದೇವದುರ್ಗ ಹಾಗೂ ಅರಕೇರಾ ತಹಸೀಲ್ದಾರರು, ದೇವದುರ್ಗ, ಮುದಗಲ್, ಲಿಂಗಸೂರ, ಮಾನವಿ ಮತ್ತು ಮಸ್ಕಿ ಪುರಸಭೆಗಳ ಮತ್ತು ತುರವಿಹಾಳ, ಹಟ್ಟಿ, ಬಳಗಾನೂರ, ಸಿರವಾರ, ಕವಿತಾಳ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಗಳು, ವಿಷಯ ನಿರ್ವಾಹಕರು ಹಾಗೂ ತಾಂತ್ರಿಕ ಸಹಾಯಕರು ಭಾಗಿಯಾಗಿದ್ದರು.
ಇರಾನ್ನಲ್ಲಿ 1000 ದಾಟಿದ ಸಾವು: ಯುಎಸ್- ಇಸ್ರೇಲ್ ತೀವ್ರ ವಾಯುದಾಳಿಗೆ ಸಜ್ಜು, 10 ಪ್ರಮುಖಾಂಶಗಳು
War Update Today: ಇರಾನ್, ಇಸ್ರೇಲ್ ಮತ್ತು ಯುಎಸ್ ಮಧ್ಯದ ಯುದ್ಧ ಸಂಘರ್ಷ ಐದನೇ ದಿನ ಬುಧವಾರದಂದು (ಮಾರ್ಚ್ 4) ಮತ್ತಷ್ಟು ತೀವ್ರಗೊಂಡಿದೆ. ಪ್ರತೀಕಾರದ ದಾಳಿ ನಡೆಸಿದ ಇರಾನ್ ಇಂದ ಕೂಡ ಇಸ್ರೇಲ್ ಹಾಗೂ ಯುಎಸ್ಗೆ ಸಂಬಂಧಿಸಿದ ಪ್ರದೇಶಗಳ ಮೇಲೆ ನಿರಂತರ ಕ್ಷಿಪಣಿಗಳನ್ನು ಉಡಾಯಿಸಿದೆ. ಇದಕ್ಕೆ ವಿರುದ್ಧ ಯುಎಸ್ ಬೆಂಬಲದೊಂದಿಗೆ ಇಸ್ರೇಲ್ ಪೈಲಟ್ಗಳು ಇರಾನ್ ಮತ್ತು ಟೆಹ್ರಾನ್
Raichur | ಅನುಸೂಚಿತ ಉದ್ಯಮಗಳಲ್ಲಿ ಕಾರ್ಮಿಕರಿಗೆ ಕನಿಷ್ಠ ವೇತನ ಪ್ರಕಟಿಸಲು ಪ್ರತಿಭಟನೆ
ರಾಯಚೂರು: ರಾಜ್ಯದ ಅನುಸೂಚಿತ ಉದ್ದಿಮೆಗಳಿಗೆ ಕನಿಷ್ಠವೇತನದ ಪ್ರಕಟಣೆಗೆ ಒತ್ತಾಯಿಸಿ ಸಿಐಟಿಯು ನೇತೃತ್ವದಲ್ಲಿ ನಗರದ ಮಂತ್ರಾಲಯ ರಸ್ತೆಯ ಬಳಿಯ ಜಿಲ್ಲಾ ಕಾರ್ಮಿಕ ಇಲಾಖೆ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಯಿತು. ರಾಜ್ಯ ಸರ್ಕಾರವು ಏಪ್ರಿಲ್ 2025ರಲ್ಲಿ ರಾಜ್ಯದಲ್ಲಿನ ಅನುಸೂಚಿತ, ಸೂಚಿತ ಉದ್ದಿಮೆಗಳಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಅನ್ವಯವಾಗುವ ಕನಿಷ್ಠ ವೇತನದ ಕರಡು ಅಧಿಸೂಚನೆಯನ್ನು ಪ್ರಕಟಿಸಿದೆ. ಈ ಅಧಿಸೂಚನೆಗಳಿಗೆ ಕಾರ್ಮಿಕ ಸಂಘಟನೆಗಳು, ಮಾಲಕರ ಸಂಘಟನೆಗಳು ಮತ್ತು ಇತರರು ಆಕ್ಷೇಪಣೆಗಳು ಹಾಗೂ ಸಲಹೆಗಳನ್ನು ಸಲ್ಲಿಸಿದ್ದು, ಕನಿಷ್ಟ ವೇತನ ಸಲಹಾ ಮಂಡಳಿಯು ಇದರ ಕುರಿತು ಎರಡು ಸುತ್ತುಗಳ ಚರ್ಚೆಯನ್ನು ನಡೆಸಿದೆ. ಕನಿಷ್ಠ ವೇತನ ಸಲಹಾ ಮಂಡಳಿಯು ತಮ್ಮ ಅಭಿಪ್ರಾಯವನ್ನು 2025 ಆಗಸ್ಟ್ ನಲ್ಲಿ ಸರ್ಕಾರಕ್ಕೆ ಸಲ್ಲಿಸಿ ಹಲವು ತಿಂಗಳು ಕಳೆದರೂ ವೈಜ್ಞಾನಿಕವಾಗಿ ಹಾಗೂ ಕಾನೂನು ಬದ್ಧವಾದ ಕನಿಷ್ಟವೇತನದ ಅಂತಿಮ ಪ್ರಕಟಣೆ ಹೊರಡಿಸಿಲ್ಲವೆಂದು ದೂರಿದರು. ಕನಿಷ್ಠ ವೇತನ ಪರಿಷ್ಕರಣೆಯಾಗಿ ಏಳು ವರ್ಷಗಳು ಕಳೆದಿದೆ ಈ ಹಿನ್ನೆಲೆಯಲ್ಲಿ, ಅಂತಿಮ ಅಧಿಸೂಚನೆಯನ್ನು ಸರ್ಕಾರವು ಮಾಡದಿರುವುದು ನ್ಯಾಯಸಮ್ಮತವಲ್ಲ, ರಾಜ್ಯದ ಸಮಗ್ರ ಅಭಿವೃದ್ಧಿಗೆ ಹಾಗೂ ಲಕ್ಷಾಂತರ ದುರ್ಬಲ ಕಾರ್ಮಿಕ ವರ್ಗಕ್ಕೆ ಆರ್ಥಿಕ ಸ್ವಾವಲಂಬನೆಯನ್ನು ಖಾತರಿಪಡಿಸುವ ಕನಿಷ್ಠವೇತನದ ಪ್ರಕಟಣೆಯನ್ನು ಕೂಡಲೇ ರಾಜ್ಯ ಸರ್ಕಾರವು ಮಾಡಬೇಕೆಂದು ಒತ್ತಾಯಿಸಿದರು. ಸರ್ವೋಚ್ಚ ನ್ಯಾಯಾಲಯದ ತೀರ್ಪಿನ ಆಯವ್ಯಯದಲ್ಲಿ ಇವತ್ತಿನ ಗ್ರಾಹಕ ಬೆಲೆ ಸೂಚ್ಯಾಂಕ, ಮನೆ ಬಾಡಿಗೆ ಹಾಗು ಇತರೆ ಖರ್ಚುಗಳ ಆಧಾರದಲ್ಲಿ ರಾಜ್ಯದ ಕಾರ್ಮಿಕ ಸಂಘಟನೆಗಳು ಸಲಹೆಗಳನ್ನು ಪರಿಗಣಿಸಿ ಅಂತಿಮ ಅಧಿಸೂಚನೆಯನ್ನು ಕೂಡಲೇ ಪ್ರಕಟಿಸಲು ಮನವಿ ಮಾಡಿದರು. ಪ್ರತಿಭಟನೆಯಲ್ಲಿ ಸಿಐಟಿಯು ಅಧ್ಯಕ್ಷೆ ಹೆಚ್. ಪದ್ಮಾ, ಪ್ರಧಾನ ಕಾರ್ಯದರ್ಶಿ ಡಿ.ಎಸ್.ಶರಣ ಬಸವ, ಶಬ್ಬೀರ್, ಗಿರಿಯಪ್ಪ ಪೂಜಾರಿ, ಶರ್ಫುದ್ದಿನ್ ಪೋತ್ನಾಳ, ಮಹಮದ್ ಹನೀಫ್, ಅನ್ವರ್ ಪಾಶ ಹಾಗೂ ಕಾರ್ಮಿಕರು ಭಾಗವಹಿಸಿದ್ದರು.
ರಾಯಚೂರು | ಬಜೆಟ್ ನಲ್ಲಿ ಯರಗೇರಾ ತಾಲೂಕು ರಚನೆಗೆ ಒತ್ತಾಯ
ರಾಯಚೂರು : ರಾಯಚೂರು ತಾಲೂಕಿನ ಯರಗೇರಾ ಹೋಬಳಿ ಕೇಂದ್ರವನ್ನು ತಾಲೂಕು ಕೇಂದ್ರವನ್ನಾಗಿ ಬಜೆಟ್ನಲ್ಲಿ ಘೋಷಿಸಬೇಕು. ಇಲ್ಲದಿದ್ದರೆ ವಿವಿಧ ಹಂತಗಳಲ್ಲಿ ಹೋರಾಟ ನಡೆಸಲಾಗುತ್ತದೆ ಎಂದು ಯರಗೇರಾ ತಾಲೂಕು ರಚನೆ ಹೋರಾಟ ಸಮಿತಿ ಪ್ರಧಾನ ಸಂಚಾಲಕ ನಿಜಾಮುದ್ದಿನ್ ಎಚ್ಚರಿಸಿದರು. ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಯರಗೇರಾ ಹೋಬಳಿಯನ್ನು ತಾಲೂಕು ಕೇಂದ್ರವನ್ನಾಗಿ ಮಾಡಲು ಹಲವು ವರ್ಷಗಳಿಂದ ಹೋರಾಟ ನಡೆಯುತ್ತಿದೆ. ಬೆಂಗಳೂರಿನಲ್ಲಿ ಹೋರಾಟ ನಡೆಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದಾಗ ತಾಲೂಕು ರಚನೆಗೆ ಭರವಸೆ ನೀಡಿದ್ದರು. ಜಿಲ್ಲಾಧಿಕಾರಿಗಳು ಸಹ ತಾಲೂಕು ಕೇಂದ್ರ ಘೋಷಣೆಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದಾರೆ. ಗ್ರಾಮೀಣ ಶಾಸಕ ದದ್ದಲ್ ಬಸನಗೌಡ ಬೆಂಬಲ ವ್ಯಕ್ತಪಡಿಸಿದ್ದು, ಈ ಬಾರಿ ಬಜೆಟ್ನಲ್ಲಿ ಘೋಷಣೆ ಆಗುವ ಆಶಾಭಾವನೆ ಇದೆ ಎಂದು ಹೇಳಿದರು. ಯರಗೇರಾ ಹೋಬಳಿಯಲ್ಲಿ 326 ಎಕರೆ ಸರ್ಕಾರಿ ಜಮೀನು ಲಭ್ಯವಿದ್ದು, ಅದರಲ್ಲಿ 250 ಎಕರೆ ರಾಯಚೂರು ವಿಶ್ವವಿದ್ಯಾಲಯಕ್ಕೆ ನೀಡಲಾಗಿದೆ. 19 ಗ್ರಾಮ ಪಂಚಾಯತಿಗಳ 64 ಗ್ರಾಮಗಳ ಜನರು ನಿತ್ಯ ಕೆಲಸಗಳಿಗೆ ರಾಯಚೂರು ನಗರಕ್ಕೆ ಅಲೆದಾಡುವ ಪರಿಸ್ಥಿತಿ ಇದೆ. ತಾಲೂಕು ಕೇಂದ್ರ ಮಾಡಿದಲ್ಲಿ ಜನರಿಗೆ ಸಾಕಷ್ಟು ಅನುಕೂಲವಾಗಲಿದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಬಸವರಾಜ ಹೂಗಾರ, ಪಿ. ಮಲ್ಲಿಕಾರ್ಜುನ ರೆಡ್ಡಿ, ಮಹಿಬೂಬ್ ಪಟೇಲ್, ಬಸವರಾಜ ರೆಡ್ಡಿ, ವಿದ್ಯಾನಂದ ರೆಡ್ಡಿ, ಕೆಸಿ ಲಕ್ಷ್ಮಿಪತಿಸ್ವಾಮಿ, ಶಾಂತಕುಮಾರ, ರವಿತಾತ, ಶ್ರೀನಿವಾಸ ರೆಡ್ಡಿ ಉಪಸ್ಥಿತರಿದ್ದರು.
ರಾಯಚೂರು | ಒಳ ಮೀಸಲಾತಿ ಜಾರಿಗೊಳಿಸದಿದ್ದರೆ ರಾಜ್ಯಾದ್ಯಂತ ಹೋರಾಟ
ರಾಯಚೂರು : ರಾಜ್ಯ ಸರ್ಕಾರವು ಒಳ ಮೀಸಲಾತಿಯನ್ನು ಸಂಪೂರ್ಣವಾಗಿ ಜಾರಿಗೊಳಿಸದೇ 56 ಸಾವಿರ ಹುದ್ದೆಗಳ ಭರ್ತಿಗೆ ಮುಂದಾಗಿರುವುದು ಮಾದಿಗ ಸಮಾಜಕ್ಕೆ ಅನ್ಯಾಯವಾಗಿದೆ. ಇದನ್ನು ಖಂಡಿಸಿ ರಾಜ್ಯಾದ್ಯಂತ ತೀವ್ರ ಹೋರಾಟ ನಡೆಸಲಾಗುವುದು ಎಂದು ಒಳ ಮೀಸಲಾತಿ ಹೋರಾಟ ಸಮಿತಿ ಮುಖಂಡ ಎಸ್. ಮಾರೆಪ್ಪ (ವಕೀಲ) ಎಚ್ಚರಿಸಿದರು. ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಸಾಮಾಜಿಕ ನ್ಯಾಯದ ಹರಿಕಾರರು ಎಂದು ಹೇಳಿಕೊಳ್ಳುತ್ತಾ, ಅದರ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು. ಸಚಿವ ಕೆ.ಎಚ್.ಮುನಿಯಪ್ಪ ಅವರು 15ರೊಳಗೆ ಒಳ ಮೀಸಲಾತಿ ಜಾರಿಗೊಳಿಸದಿದ್ದರೆ ರಾಜೀನಾಮೆ ನೀಡುವುದಾಗಿ ಹೇಳಿರುವುದು ಸ್ವಾಗತಾರ್ಹ. ಉಳಿದ ಮಾದಿಗ ಸಮಾಜದ ಶಾಸಕರು ಮತ್ತು ಸಚಿವರುಗಳು ಕೂಡ ಸಮಾಜದ ಹಿತ ಕಾಪಾಡಲು ರಾಜೀನಾಮೆ ನೀಡಿ ಹೋರಾಟಕ್ಕೆ ಬರಬೇಕು ಎಂದು ಮನವಿ ಮಾಡಿದರು. 56 ಸಾವಿರ ಹುದ್ದೆಗಳ ಭರ್ತಿಯಲ್ಲಿ ಮಾದಿಗ ಸಮಾಜಕ್ಕೆ ಶೇ.6ರಷ್ಟು, ಅಂದರೆ ಸುಮಾರು 2 ಸಾವಿರ ಹುದ್ದೆಗಳು ಲಭಿಸಬೇಕಾಗುತ್ತದೆ. ಆದರೆ ಎಲ್ಲ ಸಮುದಾಯಗಳು ಸಮಾನವಾಗಿ ಹಂಚಿಕೊಳ್ಳಬೇಕಾದ ಹುದ್ದೆಗಳಲ್ಲಿ ಅನ್ಯಾಯವಾಗುತ್ತಿದೆ ಎಂದು ದೂರಿದರು. 10 ವರ್ಷಗಳ ಬಳಿಕ ದೊಡ್ಡ ಪ್ರಮಾಣದಲ್ಲಿ ನೇಮಕಾತಿ ನಡೆಯುತ್ತಿದ್ದು, ಒಳ ಮೀಸಲಾತಿ ವಂಚಿಸುವ ಉದ್ದೇಶ ಇದರಲ್ಲಿ ಗೋಚರಿಸುತ್ತದೆ. ಈ ಹಿಂದೆ 10 ಸಾವಿರ ಬ್ಯಾಕ್ಲಾಗ್ ಹುದ್ದೆಗಳ ನೇಮಕಾತಿಯಲ್ಲೂ ಸಮಾಜಕ್ಕೆ ಸಿಗಬೇಕಾದ 1 ಸಾವಿರ ಹುದ್ದೆಗಳು ಲಭಿಸಿಲ್ಲ. ಇದೀಗ ಮತ್ತೊಮ್ಮೆ ಹುದ್ದೆಗಳ ವಂಚನೆಗೆ ಒಳಸಂಚು ನಡೆಯುತ್ತಿದೆ ಎಂದು ಆರೋಪಿಸಿದರು. ಈ ಸಂದರ್ಭದಲ್ಲಿ ಸಮಾಜದ ಮುಖಂಡರಾದ ಎಂ. ವಿರೂಪಾಕ್ಷಿ, ನರಸಿಂಹಲು ಮಾಡಗಿರಿ, ಪಿ. ಯಲ್ಲಪ್ಪ, ಜೆ.ಬಿ. ರಾಜು, ಆಂಜನೇಯ, ಬೀಮಣ್ಣ ಮಂಚಾಲ, ನರಸಪ್ಪ, ಮೌನೇಶ ಸೇರಿದಂತೆ ಇತರರು ಉಪಸ್ಥಿತರಿದ್ದರು.
ರಾಯಚೂರು | ದ್ವಿತೀಯ ಪಿಯು ಪರೀಕ್ಷೆ: ಉರ್ದು ವಿಷಯಕ್ಕೆ 16 ವಿದ್ಯಾರ್ಥಿಗಳು ಗೈರು
ರಾಯಚೂರು: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಲಿಯಿAದ 2026ರ ಮಾರ್ಚ್ 04ರ ಬುಧವಾರ ಉರ್ದು ಹಾಗೂ ಸಂಸ್ಕೃತ ವಿಷಯದ ಪರೀಕ್ಷೆಗಳು ನಡೆದವು. ಜಿಲ್ಲೆಯ 43 ಪರೀಕ್ಷಾ ಕೇಂದ್ರಗಳಲ್ಲಿ ನಡೆದ ಉರ್ದು ವಿಷಯದ ಪರೀಕ್ಷೆಗೆ ಒಟ್ಟು 311 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದರು. ಇವರಲ್ಲಿ 295 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 16 ಮಂದಿ ಗೈರುಹಾಜರಾಗಿದ್ದಾರೆ. ಸಂಸ್ಕೃತ ವಿಷಯದಲ್ಲಿ ಒಟ್ಟು 252 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದು, ಎಲ್ಲಾ 252 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದಾರೆ. ಈ ವಿಷಯದಲ್ಲಿ ಯಾವುದೇ ಗೈರುಹಾಜರಿ ಇಲ್ಲವೆಂದು ಪದವಿ ಪೂರ್ವ ಶಿಕ್ಷಣ ಇಲಾಖೆಯ ಪ್ರಭಾರಿ ಉಪನಿರ್ದೇಶಕ ಸೋಮಶೇಖರಪ್ಪ ಹೊಕ್ರಾಣಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮಂಗಳೂರು: ಕೆನರಾ ಕಾಲೇಜಿಗೆ ಸ್ವಾಯತ್ತ ಸ್ಥಾನಮಾನ
ಮಂಗಳೂರು: ಕೆನರಾ ಹೈಸ್ಕೂಲ್, ಅಸೋಸಿಯೇಷನ್ ಸಂಸ್ಥೆಯಿಂದ 1973ರಲ್ಲಿ ಸ್ಥಾಪಿತವಾದ ಕೆನರಾ ಕಾಲೇಜು, ಮಂಗಳೂರು ವಿಶ್ವವಿದ್ಯಾನಿಲಯ ವ್ಯಾಪ್ತಿಗೆ ಒಳಪಟ್ಟಿದ್ದುಶೈಕ್ಷಣಿಕ ವರ್ಷ 2025 26ನೇ ಸಾಲಿನಲ್ಲಿ ಕೆನರಾ ಕಾಲೇಜಿಗೆ ಸ್ವಾಯತ್ತ ಸ್ಥಾನಮಾನ (Autonomus status) ಪಡೆದಿದೆ. ಇದು ಕಾಲೇಜಿನ ಶೈಕ್ಷಣಿಕ ಪಯಣದಲ್ಲಿ ಐತಿಹಾಸಿಕ ಮೈಲುಗಲ್ಲಾಗಿದೆ ಕೆನರಾ ಶೈಕ್ಷಣಿಕ ಸಂಸ್ಥೆಗಳ ಅಧ್ಯಕ್ಷ ಡಿ. ವಾಸುದೇವ ಕಾಮತ್ ಸುದ್ದಿಗೋಷ್ಠಿ ಯಲ್ಲಿಂದು ತಿಳಿಸಿದ್ದಾರೆ. ಸ್ವಾಯತ್ತ ಸ್ಥಾನಮಾನದಿಂದ ಸಮಾಜ, ಕೈಗಾರಿಕೆ ಮತ್ತು ತಂತ್ರಜ್ಞಾನ ಕ್ಷೇತ್ರಗಳಲ್ಲಿ ವೇಗವಾಗಿ ನಡೆಯುತ್ತಿರುವ ಬದಲಾವ ಣೆಗಳಿಗೆ ಅನುಗುಣವಾಗಿ ಪಠ್ಯಕ್ರಮವನ್ನು ರೂಪಿಸುವ, ಪರಿಷ್ಕರಿಸುವ ಅಧಿಕಾರವೂ ದೊರೆತಿರುವುದು. ಇದರ ಮೂಲಕ ಸಮಕಾಲಿನ ಕೌಶಲ್ಯ ಆಧಾರಿತ ಬಹುಶಾಖಾ ಮತ್ತು ವೃತ್ತಿ ಕೇಂದ್ರಿತ ಪಠ್ಯಕ್ರಮಗಳನ್ನು ಪರಿಚ ಯಿಸಿ ವಿದ್ಯಾರ್ಥಿಗಳಿಗೆ ಭವಿಷ್ಯದ ಮತ್ತು ಪ್ರಸ್ತುತ ಅವಶ್ಯಕತೆಗಳಿಗೆ ಯೋಗ್ಯವಾದ ಶಿಕ್ಷಣವನ್ನು ಒದಗಿಸಲು ಸಾಧ್ಯವಾಗುತ್ತದೆ ಎಂದು ಸಂಸ್ಥೆಯ ಅಧ್ಯಕ್ಷ ವಾಸುದೇವ ಕಾಮತ್ ತಿಳಿಸಿದ್ದಾರೆ. ಕಳೆದ ಐದು ದಶಕಗಳಲ್ಲಿ ಮಂಗಳೂರು ನಗರದಲ್ಲಿನ ಪ್ರಮುಖ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾಗಿ ಬೆಳೆದು ನಿಂತಿದೆ. ಕೆನರಾ ಕಾಲೇಜು ರಾಷ್ಟ್ರೀಯ ಮೌಲ್ಯ ಮಾಪನ ಮತ್ತು ಮಾನ್ಯತಾ ಮಂಡಳಿ (NAAC) ನಿಂದ 3.21 ಸಿ.ಜಿ.ಪಿ.ಎ. 'ಎ' ಶ್ರೇಣಿ ಮಾನ್ಯತೆ ಪಡೆದಿದ್ದು ಇದು ಇಲ್ಲಿನ ಶೈಕ್ಷಣಿಕ ಗುಣಮಟ್ಟ ಮತ್ತು ಶ್ರೇಷ್ಠತೆ ಹಾಗೂ ಬದ್ಧತೆಯನ್ನು ಪ್ರತಿಬಿಂಬಿಸುವುದು. ಈ ಸಂಸ್ಥೆ 1569 ವಿದ್ಯಾರ್ಥಿಗಳು ಮತ್ತು 85 ಅರ್ಹ ಉಪನ್ಯಾಸಕ ಹಾಗೂ ಸಿಬ್ಬಂದಿಯೊಂದಿಗೆ ಶಿಸ್ತು, ಹೊಸತನ ಮತ್ತು ಸಮಗ್ರ ವ್ಯಕ್ತಿತ್ವ ವಿಕಸನವನ್ನು ಉತ್ತೇಜಿಸುವ ಚೈತನ್ಯಯುತವಾದ ಶೈಕ್ಷಣಿಕ ವಾತಾವರಣವನ್ನು ಕಾಪಾಡಿ ಕೊಂಡು ಬಂದಿದೆ.ತನ್ನ 53 ವರ್ಷಗಳ ಪಯಣದಲ್ಲಿ ಕೆನರಾ ಕಾಲೇಜು ವಿಶ್ವವಿದ್ಯಾನಿಲಯ ಮಟ್ಟದಲ್ಲಿ 135 ರ್ಯಾಂಕ್ ಗಳನ್ನು ಗಳಿಸಿ ನಿರಂತರವಾಗಿ ಶೈಕ್ಷಣಿಕ ಶ್ರೇಷ್ಠತೆಯನ್ನು ಸಾಧಿಸಿದೆ. ವಿಶೇಷವಾಗಿ 2024 25 ಮತ್ತು 2025-26ನೇ ಶೈಕ್ಷಣಿಕ ವರ್ಷಗಳಲ್ಲಿ ವಿಶ್ವವಿದ್ಯಾನಿಲಯ ಮಟ್ಟದ 12 Rank ಗಳನ್ನು ಪಡೆದಿದ್ದು ಅದರ ಶಕ್ತಿಶಾಲಿ ಶೈಕ್ಷಣಿಕ ಸಾಧನೆಯನ್ನು ರುಜುವಾತು ಪಡಿಸಿದೆ. ಬಿಸಿಎ(BCA) ಮತ್ತು ಎಂಸಿಎ(MCA) ವಿಭಾಗಗಳು ಸಂಸ್ಥೆಯ ಪ್ರಮುಖ ಶೈಕ್ಷಣಿಕ ಆಧಾರ ಸ್ತಂಭಗಳಾಗಿದ್ದು ಗುಣಮಟ್ಟದ ಬೋಧನ, ಕೈಗಾರಿಕಾ ಆಧಾರಿತ ಪಠ್ಯಕ್ರಮ ಮತ್ತು ಕಂಪ್ಯೂಟರ್ ಅನ್ವಯಿತ ಹಾಗೂ ಉದಯೋನ್ಮುಖ ತಂತ್ರಜ್ಞಾನ ಕ್ಷೇತ್ರಗಳಲ್ಲಿ ವಿದ್ಯಾರ್ಥಿಗಳ ಅತ್ಯುತ್ತಮ ಸಾಧನೆಗೆ ಭದ್ರಬುನಾದಿ ಯಾಗಿದೆ. ಸರಕಾರ, ಕಾರ್ಪೊರೇಟ್ ಸಂಸ್ಥೆಗಳು, ಶೈಕ್ಷಣಿಕ, ಉದ್ಯಮ ಹಾಗೂ ವಿವಿಧ ವೃತ್ತಿಪರ ಕ್ಷೇತ್ರಗಳಲ್ಲಿ ದೇಶವಿದೇಶ ಗಳಲ್ಲಿ ಗೌರವಾನ್ವಿತ ಹುದ್ದೆಗಳನ್ನು ಅಲಂಕರಿಸಿರುವ ಹಳೆ ವಿದ್ಯಾರ್ಥಿಗಳ ಬಲಿಷ್ಠ ಹಾಗೂ ನೈಪುಣ್ಯತೆ ಹೊಂದಿದ ಸಂಘವು ಈ ಕಾಲೇಜಿಗೆ ಕಿರೀಟ ಪ್ರಾಯವೆನಿಸಿದೆ.ಈ ದೃಷ್ಟಿಕೋನಕ್ಕೆ ಅನುಗುಣವಾಗಿ, ಕೆಳಗಿನ ಕೈಗಾರಿಕಾ ಅವಶ್ಯಕತೆಗಳಿಗೆ ಹೊಂದಿಕೊಂಡ ಹೊಸ ಪಠ್ಯಕ್ರಮಗಳನ್ನು ಪ್ರಾರಂಭಿಸಲು ಕಾಲೇಜು ಪ್ರಸ್ತಾವನೆಗಳನ್ನು ಸಲ್ಲಿಸಿದೆ: * ಲಾಜಿಸ್ಟಿಕ್ಸ್ನಲ್ಲಿ ಬಿಬಿಎ (BBA in Logistics),* ಡೇಟಾ ಅನಾಲಿಟಿಕ್ಸ್ನಲ್ಲಿ ಬಿಸಿಎ (BCA in Data Analytics)* ಬಿಸಿ ನೆಸ್ ಡೇಟಾ ಅನಾಲಿಟಿಕ್ಸ್ನಲ್ಲಿ ಬಿ.ಕಾಂ (B.Com in Business Data Analytics) ಶಿಕ್ಷಣದಲ್ಲಿ ಮೇಲಿನ ಪಠ್ಯ ಕ್ರಮವನ್ನು ಪ್ರಸ್ತುತ ಮಾರುಕಟ್ಟೆ ಅಗತ್ಯಗಳಿಗೆ ಹೊಂದುವ ಉದ್ದೇಶದಿಂದ ಲಾಜಿಸ್ಟಿಕ್ಸ್ ನಿರ್ವಹಣೆ ಡೇಟಾ ಸೈನ್ಸ್ ಮತ್ತು ವ್ಯವಹಾರ ವಿಶ್ಲೇಷಣೆ ಕ್ಷೇತ್ರಗಳಲ್ಲಿ ಉದ್ಯೋಗಾ ವಕಾಶವನ್ನು ಗಮನದಲ್ಲಿಟ್ಟು ಕೊಂಡು ಅಳವಡಿಸಲಾಗುವುದು ಎಂದು ಅವರು ತಿಳಿಸಿದ್ದಾರೆ. ಸುದ್ದಿ ಗೋಷ್ಠಿಯಲ್ಲಿ ಕೆನರಾ ಶಿಕ್ಷಣ ಸಂಸ್ಥೆಗಳ ಗೌರವ ಕಾರ್ಯದರ್ಶಿ ರಂಗನಾಥ ಭಟ್,ಕಾಲೇಜಿನ ಸಂಚಾಲಕ ಜಗನ್ನಾಥ ಕಾಮತ್,ಆಡಳಿತ ಸಮಿತಿ ಸದಸ್ಯ ಪುರುಷೋತ್ತಮ ಶೆಣೈ,ಜೊತೆ ಕಾರ್ಯದರ್ಶಿ ಗೋಪಾಲಕೃಷ್ಣ ಶೆಣೈ, ವಿಕಾಸ್ ಗ್ರೂಫ್ ಆಫ್ ಕಾಲೇಜಿನ ಕೋಶಾಧಿಕಾರಿ ವಾಮನ ಕಾಮತ್,ಕೆನರಾ ಕಾಲೇಜಿನ ಪ್ರಾಂಶುಪಾಲೆ ಪ್ರೇಮಲತಾ ಮೊದಲಾದವರು ಉಪಸ್ಥಿತರಿದ್ದರು.
ಉಡುಪಿ: ನಾರ್ತ್ ಶಾಲೆಯಲ್ಲಿ ವಿಶ್ವ ಶ್ರವಣ ದಿನಾಚರಣೆ
ಉಡುಪಿ, ಮಾ.4: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಆಸ್ಪತ್ರೆ, ತಾಲೂಕು ಆರೋಗ್ಯಾಧಿಕಾರಿ ಕಛೇರಿ ಉಡುಪಿ, ಕೆ.ಎಂ.ಸಿ ಮಣಿಪಾಲ ಶ್ರವಣ ವಿಭಾಗ ಹಾಗೂ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಉಡುಪಿ ನಾರ್ತ್ ಇವರ ಸಂಯುಕ್ತ ಆಶ್ರಯದಲ್ಲಿ ಉಡುಪಿ ನಾರ್ತ್ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಶ್ವ ಶ್ರವಣ ದಿನವನ್ನು ಆಚರಿಸಲಾಯಿತು. ಶಾಲೆಯ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸತೀಶ್ ರಾವ್ ಕಾರ್ಯಕ್ರಮ ವನ್ನು ಉದ್ಘಾಟಿಸಿದರು. ಉಪ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಚಂದ್ರಕಲಾ ಅವರು ಮಕ್ಕಳಲ್ಲಿ ಕಂಡುಬರುವ ತಡೆಗಟ್ಟಬಹುದಾದ ಶ್ರವಣ ನಷ್ಟವನ್ನು ಕಡಿಮೆ ಮಾಡಿ ಅವರ ಅರಿವಿನ ಸಾಮರ್ಥ್ಯವನ್ನು ಹೆಚ್ಚಿಸುವುದು ಮತ್ತು ಸಾಮಾಜಿಕವಾಗಿ ಎಲ್ಲರೊಡನೆ ಬೆರೆಯು ವಂತೆ ಮಾಡುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶ ಎಂದರು. ಶ್ರವಣ ತಜ್ಞೆ ಸಮೀಕ್ಷಾ ಡಿ ರಾವ್ ಮಾತನಾಡಿ, ಮಗು ಸರಿಯಾಗಿ ಮಾತನಾಡಬೇಕೆಂದರೆ ಮಗುವಿಗೆ ಕೇಳುವಿಕೆ ತುಂಬಾ ಮುಖ್ಯ. ಮಕ್ಕಳು ಕಿವಿಗೆ ಕಡ್ಡಿ ಅಥವಾ ಚೂಪಾದ ವಸ್ತುವನ್ನು ಹಾಕದಂತೆ ಪೋಷಕರು ಕಾಳಜಿ ವಹಿಸ ಬೇಕು. ಕಡ್ಡಿಯಿಂದ ಕಿವಿಯನ್ನು ಸ್ವಚ್ಛ ಮಾಡಬಾರದು. ಸೀಳು ತುಟಿ ಮತ್ತು ಸೀಳು ಅಂಗುಳ ಇರುವ ಮಕ್ಕಳಿಗೆ ಸರಿಯಾದ ಸಮಯದಲ್ಲಿ ಶಸ್ತ್ರ ಚಿಕಿತ್ಸೆ ಮಾಡಿಸಬೇಕು. ಕಿವಿನೋವು, ಕಿವಿಯಲ್ಲಿ ಕೀವು, ತುರಿಕೆ ಇದ್ದಲ್ಲಿ ತಕ್ಷಣವೇ ಕಿವಿ,ಮೂಗು, ಗಂಟಲು ತಜ್ಞ ವೈದ್ಯರನ್ನು ಸಂಪರ್ಕಿಸಿ, ಸೂಕ್ತ ಚಿಕಿತ್ಸೆ ಪಡೆದುಕೊಳ್ಳಬೇಕು. ದಡಾರ, ರುಬೆಲ್ಲಾ ಲಸಿಕೆಯನ್ನು ಸರಿಯಾದ ಸಮಯದಲ್ಲಿ ತೆಗೆದುಕೊಳ್ಳಬೇಕು ಎಂದರು. ಕಾರ್ಯಕ್ರಮದಲ್ಲಿ ಶಾಲಾಭಿವೃದ್ಧಿ ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷ ಬಸಪ್ಪ ಬೆನ್ನಪ್ಪನವರ್, ಕೆಎಂಸಿ ಮಣಿಪಾಲ ಶ್ರವಣ ವಿಭಾಗದ ದಿಯಾ, ಆಂಡ್ರಿವ್ ಮುಂತಾದವರು ಉಪಸ್ಥಿತರಿದ್ದರು. ಶಾಲೆಯ ಮುಖ್ಯೋಪಾಧ್ಯಾಯಿನಿ ಸಾವಿತ್ರಿ ಕೆ ಸ್ವಾಗತಿಸಿ, ಸಹಶಿಕ್ಷಕ ಗುರು ಪ್ರಸಾದ್ ವಂದಿಸಿದರು. ನಾರ್ತ್ ಶಾಲೆಯ 85 ಮಕ್ಕಳಿಗೆ ಕಿವಿಯ ತಪಾಸಣೆ ನಡೆಸಿ, ಸೂಕ್ತ ಸಲಹೆ ನೀಡಲಾಯಿತು.
ರಾಯಚೂರು | ಅನುಸೂಚಿತ ಉದ್ಯಮಗಳಲ್ಲಿ ಕಾರ್ಮಿಕರಿಗೆ ಕನಿಷ್ಠ ವೇತನ ಪ್ರಕಟಿಸಲು ಪ್ರತಿಭಟನೆ
ರಾಯಚೂರು: ರಾಜ್ಯದ ಅನುಸೂಚಿತ ಉದ್ದಿಮೆಗಳಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಕನಿಷ್ಠ ವೇತನದ ಅಂತಿಮ ಅಧಿಸೂಚನೆ ಪ್ರಕಟಿಸಲು ಒತ್ತಾಯಿಸಿ ಭಾರತೀಯ ಕಾರ್ಮಿಕ ಸಂಘಗಳ ಕೇಂದ್ರ (ಸಿಐಟಿಯು) ನೇತೃತ್ವದಲ್ಲಿ ನಗರದ ಮಂತ್ರಾಲಯ ರಸ್ತೆ ಸಮೀಪದ ಜಿಲ್ಲಾ ಕಾರ್ಮಿಕ ಇಲಾಖೆ ಕಚೇರಿ ಎದುರು ಪ್ರತಿಭಟನೆ ನಡೆಯಿತು. ರಾಜ್ಯ ಸರ್ಕಾರವು ಏಪ್ರಿಲ್ 2025ರಲ್ಲಿ ಅನುಸೂಚಿತ ಹಾಗೂ ಸೂಚಿತ ಉದ್ದಿಮೆಗಳಲ್ಲಿ ಕಾರ್ಯನಿರ್ವಹಿಸುವ ಕಾರ್ಮಿಕರಿಗೆ ಅನ್ವಯವಾಗುವ ಕನಿಷ್ಠ ವೇತನದ ಕರಡು ಅಧಿಸೂಚನೆ ಪ್ರಕಟಿಸಿತ್ತು. ಇದಕ್ಕೆ ಕಾರ್ಮಿಕ ಸಂಘಟನೆಗಳು, ಮಾಲೀಕರ ಸಂಘಟನೆಗಳು ಸೇರಿದಂತೆ ಹಲವು ವಲಯಗಳಿಂದ ಆಕ್ಷೇಪಣೆಗಳು ಹಾಗೂ ಸಲಹೆಗಳು ಸಲ್ಲಿಕೆಯಾಗಿದ್ದವು. ಕನಿಷ್ಠ ವೇತನ ಸಲಹಾ ಮಂಡಳಿಯು ಎರಡು ಸುತ್ತಿನ ಚರ್ಚೆ ನಡೆಸಿ, 2025ರ ಆಗಸ್ಟ್ನಲ್ಲಿ ತಮ್ಮ ಅಭಿಪ್ರಾಯವನ್ನು ಸರ್ಕಾರಕ್ಕೆ ಸಲ್ಲಿಸಿದೆ. ಆದರೆ ಹಲವು ತಿಂಗಳು ಕಳೆದರೂ ವೈಜ್ಞಾನಿಕ ಹಾಗೂ ಕಾನೂನುಬದ್ಧ ಅಂತಿಮ ಪ್ರಕಟಣೆ ಹೊರಡಿಸದಿರುವುದಾಗಿ ದೂರಿದರು. ಕನಿಷ್ಠ ವೇತನ ಪರಿಷ್ಕರಣೆ ನಡೆದಿದ್ದು ಏಳು ವರ್ಷಗಳಾದ ಹಿನ್ನೆಲೆಯಲ್ಲಿ ಅಂತಿಮ ಅಧಿಸೂಚನೆ ವಿಳಂಬವಾಗಿರುವುದು ನ್ಯಾಯಸಮ್ಮತವಲ್ಲ. ಲಕ್ಷಾಂತರ ದುರ್ಬಲ ಕಾರ್ಮಿಕ ವರ್ಗದ ಆರ್ಥಿಕ ಸ್ವಾವಲಂಬನೆ ಹಾಗೂ ರಾಜ್ಯದ ಸಮಗ್ರ ಅಭಿವೃದ್ಧಿಗೆ ಕನಿಷ್ಠ ವೇತನ ಅಗತ್ಯವಾಗಿದ್ದು, ತಕ್ಷಣ ಪ್ರಕಟಿಸಬೇಕು ಎಂದು ಆಗ್ರಹಿಸಿದರು. ಭಾರತದ ಸರ್ವೋಚ್ಚ ನ್ಯಾಯಾಲಯ ತೀರ್ಪಿನ ಆಯವ್ಯಯದಲ್ಲಿ ಪ್ರಸ್ತುತ ಗ್ರಾಹಕ ಬೆಲೆ ಸೂಚ್ಯಾಂಕ, ಮನೆ ಬಾಡಿಗೆ ಮತ್ತು ಇತರೆ ಖರ್ಚುಗಳನ್ನು ಪರಿಗಣಿಸಿ ಕಾರ್ಮಿಕ ಸಂಘಟನೆಗಳ ಸಲಹೆಗಳನ್ನು ಒಳಗೊಂಡ ಅಂತಿಮ ಅಧಿಸೂಚನೆ ಹೊರಡಿಸಲು ಮನವಿ ಮಾಡಿದರು. ಪ್ರತಿಭಟನೆಯಲ್ಲಿ ಸಿಐಟಿಯು ಅಧ್ಯಕ್ಷೆ ಹೆಚ್. ಪದ್ಮಾ, ಪ್ರಧಾನ ಕಾರ್ಯದರ್ಶಿ ಡಿ.ಎಸ್. ಶರಣ ಬಸವ, ಶಬ್ಬೀರ್, ಗಿರಿಯಪ್ಪ ಪೂಜಾರಿ, ಶರ್ಫುದ್ದಿನ್ ಪೋತ್ನಾಳ, ಮಹಮದ್ ಹನೀಫ್, ಅನ್ವರ್ ಪಾಶ ಸೇರಿದಂತೆ ಅನೇಕ ಕಾರ್ಮಿಕರು ಭಾಗವಹಿಸಿದರು.
ಡಾ.ಬಾಬು ಜಗಜೀವನರಾಂ, ಅಂಬೇಡ್ಕರ್ ಪ್ರಶಸ್ತಿಗೆ ಅರ್ಜಿ ಆಹ್ವಾನ
ಉಡುಪಿ, ಮಾ.4: ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ 2026-27ನೇ ಸಾಲಿನಲ್ಲಿ ಡಾ. ಬಾಬು ಜಗಜೀವನ ರಾಂ ಅವರ 119ನೇ ಹಾಗೂ ಡಾ.ಬಿ.ಆರ್ ಅಂಬೇಡ್ಕರ್ ಅವರ 135ನೇ ಜನ್ಮದಿನಾಚರಣೆ ಅಂಗವಾಗಿ ಪ್ರಶಸ್ತಿ ನೀಡಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಇದಕ್ಕಾಗಿ ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಜನಾಂಗದವರ ಅಭಿವೃದ್ಧಿಗಾಗಿ ಶ್ರಮಿಸಿ, ಪ್ರೋತ್ಸಾಹಿಸಿ ಗಣನೀಯ ಸೇವೆ ಸಲ್ಲಿಸಿದ ಅರ್ಹ ವ್ಯಕ್ತಿಗಳು ತಮ್ಮ ಸ್ವ-ವಿವರವುಳ್ಳ ಅರ್ಜಿ ನಮೂನೆಯನ್ನು ಸಹಾಯಕ ನಿರ್ದೇಶಕರ ಕಚೇರಿ, ಸಮಾಜ ಕಲ್ಯಾಣ ಇಲಾಖೆ, ಉಡುಪಿ, ಕುಂದಾಪುರ ಮತ್ತು ಕಾರ್ಕಳ ತಾಲೂಕುಗಳಿಂದ ಪಡೆದು, ಭರ್ತಿ ಮಾಡಿದ ಅರ್ಜಿಗಳನ್ನು ಮಾರ್ಚ್ 10 ರ ಒಳಗೆ ಆಯಾ ಕಛೇರಿಗಳಿಗೆ ಅಥವಾ ಉಪನಿರ್ದೇಶಕರು, ಸಮಾಜ ಕಲ್ಯಾಣ ಇಲಾಖೆ, ರಜತಾದ್ರಿ, ಮಣಿಪಾಲ, ಉಡುಪಿ ಇವರಿಗೆ ಅಂಚೆ ಮೂಲಕ ಅಥವಾ ಖುದ್ದಾಗಿ ಸಲ್ಲಿಸಬಹುದು ಎಂದು ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರ ಪ್ರಕಟಣೆ ತಿಳಿಸಿದೆ.
ಕಾಪು ಪುರಸಭೆ: ಅಧ್ಯಕ್ಷರ ಆಯ್ಕೆಗೆ ಚುನಾವಣಾಧಿಕಾರಿಗಳ ನೇಮಕ
ಉಡುಪಿ, ಮಾ.4: ವಿವಿಧ ಕಾರಣಗಳಿಂದ ತೆರವಾಗಿರುವ ಕಾಪು ಪುರಸಭೆಯ 10ನೇ ಅವಧಿಯ ಅಧ್ಯಕ್ಷ ಸ್ಥಾನಕ್ಕೆ - ಸಾಮಾನ್ಯ(ಮಹಿಳೆ)- ಚುನಾವಣೆ ನಡೆಸುವ ಸಲುವಾಗಿ ಕಾಪು ತಹಶೀಲ್ದಾರ್ ಆದ ಅನಂತಶಂಕರ ಬಿ. ಅವರನ್ನು ಚುನಾವಣಾ ಅಧಿಕಾರಿಯನ್ನಾಗಿ ನೇಮಿಸಲಾಗಿದೆ. ಅನಂತಶಂಕರ್ ಅವರು ಕರ್ನಾಟಕ ಪೌರಸಭೆ ನಿಯಮ 1965ರ ನಿಯಮ 01ರಿಂದ 18ರವರೆಗಿನ ನಿಯಮದಂತೆ ಚುನಾವಣೆ ನಡೆಸಿ, ಅಧ್ಯಕ್ಷರನ್ನು ಆಯ್ಕೆ ಮಾಡುವಂತೆ ಹೆಚ್ಚುವರಿ ಜಿಲ್ಲಾ ಚುನಾವಣಾಧಿಕಾರಿಗಳ ಪ್ರಕಟಣೆ ತಿಳಿಸಿದೆ.
ಸಂಚಾರಿ ನಿಯಮ ಉಲ್ಲಂಘನೆ : ಎಂ.ಎಸ್. ಧೋನಿಗೆ 1,000 ರೂ. ದಂಡ
ಹೊಸದಿಲ್ಲಿ, ಮಾ.4: ರಾಂಚಿಯಲ್ಲಿ ತನ್ನ ಮನೆ ಸಮೀಪ ಅತಿ ವೇಗವಾಗಿ ಕಾರನ್ನು ಚಲಾಯಿಸಿ ಸಂಚಾರಿ ನಿಯಮಗಳನ್ನು ಉಲ್ಲಂಘಿಸಿರುವ ಭಾರತದ ಪುರುಷರ ಕ್ರಿಕೆಟ್ ತಂಡದ ಮಾಜಿ ನಾಯಕ ಎಂ.ಎಸ್. ಧೋನಿಗೆ 1,000 ರೂ. ದಂಡ ವಿಧಿಸಲಾಗಿದೆ. ಧೋನಿ ಕಾರು ವೇಗದ ಮಿತಿಗಿಂತ ಹೆಚ್ಚು ವೇಗವಾಗಿ ಚಲಿಸುತ್ತಿರುವುದು ನಗರದ ಸ್ವಯಂಚಾಲಿತ ಸಂಚಾರಿ ನಿಯಂತ್ರಿತ ವ್ಯವಸ್ಥೆಯ ಮೂಲಕ ಗೊತ್ತಾಗಿದೆ. ಮೋಟಾರು ವಾಹನ ಕಾಯ್ದೆಯ 183 ಸೆಕ್ಷನ್ ಅಡಿ ಧೋನಿಗೆ ಇ-ಚಾಲನ್ ನೀಡಲಾಗಿದೆ. ರಾಂಚಿಯ ಹರ್ಮು ರೋಡ್ನಲ್ಲಿರುವ ವಸತಿ ಗೃಹವನ್ನು ದುರುಪಯೋಗಪಡಿಸಿಕೊಂಡ ಆರೋಪದ ಮೇಲೆ ಇತ್ತೀಚೆಗೆ ಜಾರ್ಖಂಡ್ ರಾಜ್ಯ ಗೃಹ ಮಂಡಳಿಯು ಧೋನಿಗೆ ನೋಟಿಸ್ ಕಳುಹಿಸಿತ್ತು. ವಸತಿಗಾಗಿ ಸೀಮಿತವಾಗಿದ್ದ ಭೂಮಿಯನ್ನು ವಾಣಿಜ್ಯ ಉದ್ದೇಶಕ್ಕೆ ಬಳಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ರಿಂಗ್ ರೋಡ್ನಲ್ಲಿರುವ ಈಗಿನ ನಿವಾಸಕ್ಕೆ ತೆರಳುವ ಮೊದಲು ಧೋನಿ ಇದೇ ಪ್ರದೇಶದಲ್ಲಿ ನೆಲೆಸಿದ್ದರು. 44ರ ವಯಸ್ಸಿನ ಧೋನಿ ಸದ್ಯ ಕ್ರಿಕೆಟ್ನತ್ತ ಹೆಚ್ಚು ಗಮನ ನೀಡುತ್ತಿದ್ದಾರೆ. 2026ರ ಆವೃತ್ತಿಯ ಐಪಿಎಲ್ಗೆ ದಿನಗಣನೆ ಆರಂಭವಾಗಿದ್ದು, ಧೋನಿ ಚೆನ್ನೈಸೂಪರ್ ಕಿಂಗ್ಸ್ನೊಂದಿಗೆ ತರಬೇತಿ ಆರಂಭಿಸಿದ್ದಾರೆ. 2025ರ ಋತುವಿನಲ್ಲಿ 14 ಪಂದ್ಯಗಳ ಪೈಕಿ 10ರಲ್ಲಿ ಸೋಲನುಭವಿಸಿ ಕಳಪೆ ಪ್ರದರ್ಶನ ನೀಡಿ ನಿರಾಶೆಗೊಳಿಸಿದ್ದ ಸಿಎಸ್ಕೆ ಈ ಬಾರಿ ಉತ್ತಮ ಪ್ರದರ್ಶನದ ವಿಶ್ವಾಸದಲ್ಲಿದೆ. ಹೊಸ ಆಟಗಾರನಿಗೆ ಇರುವ ನಿಯಮದ ಪ್ರಕಾರ 4 ಕೋ.ರೂ.ಗೆ ಸಿಎಸ್ಕೆ ತಂಡದಲ್ಲಿ ಉಳಿದುಕೊಂಡಿರುವ ಧೋನಿ, ಕಳೆದ ವರ್ಷ 14 ಪಂದ್ಯಗಳಲ್ಲಿ 135.17ರ ಸ್ಟ್ರೈಕ್ರೇಟ್ನಲ್ಲಿ ಒಟ್ಟು 196 ರನ್ ಗಳಿಸಿದ್ದಾರೆ.
ಮಾ.14ರ ಲೋಕ ಅದಾಲತ್ನಲ್ಲಿ 4400 ಪ್ರಕರಣಗಳ ವಿಲೆ ಗುರಿ: ನ್ಯಾ.ಕಿರಣ್ ಎಸ್.ಗಂಗಣ್ಣವರ್
ಉಡುಪಿ, ಮಾ.4: ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದಂತೆ ಜಿಲ್ಲೆಯ ಉಡುಪಿ, ಕುಂದಾಪುರ, ಕಾರ್ಕಳ ಹಾಗೂ ಬೈಂದೂರು ನ್ಯಾಯಾಲಯಗಳ ಆವರಣಗಳಲ್ಲಿ ವರ್ಷದ ಮೊದಲ ಲೋಕ ಅದಾಲತ್ನ್ನು ಮಾ.14ರಂದು ಆಯೋಜಿಸಲಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ನ್ಯಾ.ಕಿರಣ್ ಎಸ್.ಗಂಗಣ್ಣವರ್ ತಿಳಿಸಿದ್ದಾರೆ. ಉಡುಪಿ ನ್ಯಾಯಾಲಯದ ಸಭಾಂಗಣದಲ್ಲಿ ಇಂದು ಕರೆದ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ 35,263 ಕೇಸುಗಳು ವಿಚಾರಣೆಗೆ ಬಾಕಿ ಇವೆ. ಇವುಗಳಲ್ಲಿ ಸಂಧಾನ ಹಾಗೂ ಮಾತುಕತೆಗಳ ಮೂಲಕ ಇತ್ಯರ್ಥಗೊಳಿಸಬಹುದಾದ 4,397 ಕೇಸುಗಳನ್ನು ಗುರುತಿಸಿದ್ದು, ಈ ಬಾರಿಯ ಲೋಕ ಅದಾಲತ್ನಲ್ಲಿ ಇವು ಗಳನ್ನು ಇತ್ಯರ್ಥಪಡಿಸುವ ಗುರಿಯನ್ನು ಹೊಂದಲಾಗಿದೆ ಎಂದರು. ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳನ್ನು ಅತೀ ಶೀಘ್ರವಾಗಿ ವಿಲೇವಾರಿ ಮಾಡಿ ಸಾರ್ವಜನಿಕರು ತಮ್ಮ ವ್ಯಾಜ್ಯ ಪೂರ್ವ ಹಾಗೂ ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳಲ್ಲಿ ಪರಿಹಾರ ಕಂಡು ಕೊಳ್ಳಲು ಇದೊಂದು ಸುವರ್ಣಾವಕಾಶ. ಇದಕ್ಕೆ ಜಿಲ್ಲೆಯ ಜನರ ಸಂಪೂರ್ಣ ಸಹಕಾರ ಬೇಕಾಗಿದೆ ಎಂದು ಅವರು ಹೇಳಿದರು. ವಾಜ್ಯಪೂರ್ವ ಕೇಸುಗಳಿಗಾಗಿ ಮಂಗಳೂರಿನಲ್ಲಿ ಖಾಯಂ ಲೋಕ ಅದಾಲತ್ ಪೀಠವನ್ನು ಸ್ಥಾಪಿಸಲಾಗಿದೆ. ಇಲ್ಲಿ ಉಡುಪಿ ಸೇರಿದಂತೆ ಐದು ಜಿಲ್ಲೆಗಳ ವ್ಯಾಜ್ಯಪೂರ್ವ ಹಾಗೂ ಸಂಧಾನದಲ್ಲಿ ಮುಗಿಯಬಹುದಾದ ಕೇಸುಗಳನ್ನು ಈ ಪೀಠದಲ್ಲಿ ದಾಖಲಿಸಬಹುದು. ಇವುಗಳ ವಿಚಾರಣೆ ತ್ವರಿತಗತಿಯಲ್ಲಿ ನಡೆದು ತೀರ್ಪು ಬರುತ್ತದೆ ಎಂದರು. ಮಾ.14ರ ಲೋಕಅದಾಲತ್ನಲ್ಲಿ ವಿಚಾರಣೆ ನಡೆಸಲು 4397 ಕೇಸುಗಳನ್ನು ಗುರುತಿಸಲಾಗಿದೆ. ಇವುಗಳನ್ನು ಸಂಧಾನ, ರಾಜಿ ಪ್ರಕ್ರಿಯೆಗಳ ಮೂಲಕ ವಿಲೇ ಮಾಡಲು ಪ್ರಯತ್ನಸಲಾಗುತ್ತಿದೆ. ಇದಕ್ಕಾಗಿ ಬ್ಯಾಂಕ್ ಹಾಗೂ ವಿಮಾ ಕಂಪೆನಿಗಳನ್ನೂ ಕರೆದು ಮಾತನಾಡಿದ್ದೇವೆ ಎಂದು ನ್ಯಾ.ಗಂಗಣ್ಣವರ್ ತಿಳಿಸಿದರು. ಡಿಸೆಂಬರ್ ತಿಂಗಳಲ್ಲಿ ನಡೆದ ಹಿಂದಿನ ಲೋಕ ಅದಾಲತ್ನಲ್ಲಿ ಜಿಲ್ಲೆಯಲ್ಲಿದ್ದ 36,568 ಕೇಸುಗಳ ಪೈಕಿ 4341 ಕೇಸುಗಳನ್ನು ಇತ್ಯರ್ಥ ಪಡಿಸುವ ಗುರಿ ಹೊಂದಿದ್ದು, ಇವುಗಳಲ್ಲಿ 3729 ಕೇಸುಗಳು ಇತ್ಯರ್ಥಗೊಂಡಿವೆ. ಒಟ್ಟು 17.31 ಕೋಟಿ ರೂ. ಪರಿಹಾರವನ್ನು ವಿತರಿಸಲಾಗಿದೆ ಎಂದು ಗೋಷ್ಠಿಯಲ್ಲಿ ಉಪಸ್ಥಿತರಿದ್ದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮನು ಪಟೇಲ್ ಬಿ.ವೈ. ತಿಳಿಸಿದರು. ಶನಿವಾರ ನಡೆಯುವ ಈ ಲೋಕ ಅದಾಲತ್ನಲ್ಲಿ ರಾಜಿಯಾಗಬಲ್ಲ ಅಪರಾಧಿಕ ಪ್ರಕರಣಗಳು, ಎಂಎಂಡಿಆರ್ ಪ್ರಕರಣ, ಚೆಕ್ ಅಮಾನ್ಯದ ಪ್ರಕರಣಗಳು, ಬ್ಯಾಂಕ್ ಸಾಲದ ವಸೂಲಾತಿ ಪ್ರಕರಣಗಳು, ಮೋಟಾರು/ವಾಹನ ಅಪಘಾತ ಪರಿಹಾರ ನ್ಯಾಯಾಧೀಕರಣದ ಪ್ರಕರಣಗಳು, ಉದ್ಯೋಗದಲ್ಲಿ ಪುನರ್ ಸ್ಥಾಪಿಸಲ್ಪಡುವ ಪ್ರಕರಣಗಳನ್ನು ರಾಜಿಯಲ್ಲಿ ಇತ್ಯರ್ಥಗೊಳಿಸಲು ಪ್ರಯತ್ನಿಸಲಾಗುವುದು ಎಂದು ಮನು ಪಟೇಲ್ ತಿಳಿಸಿದರು. ಅಲ್ಲದೇ ಕಾರ್ಮಿಕ ವಿವಾದಗಳು ಹಾಗೂ ಕೈಗಾರಿಕಾ ಕಾರ್ಮಿಕರ ವೇತನಕ್ಕೆ ಸಂಬಂಧಿಸಿದ ಕ್ಷೇಮುಗಳು, ವಿದ್ಯುತ್ ಮತ್ತು ನೀರಿನ ಶುಲ್ಕಗಳು, ವಿಚ್ಚೇಧನ ವನ್ನು ಹೊರತು ಪಡಿಸಿದ ವೈವಾಹಿಕ/ ಕೌಟುಂಬಿಕ ನ್ಯಾಯಾಲಯದ ಪ್ರಕರಣಗಳು, ಭೂಸ್ವಾಧೀನ ಪರಿಹಾರ ಪ್ರಕರಣಗಳು, ಭೂ ಸ್ವಾಧೀನ ಪರಿಹಾರ ಹಂಚಿಕೆ ಪ್ರಕರಣಗಳು, ವೇತನ ಮತ್ತು ಭತ್ತೆಗಳಿಗೆ ಸಂಬಂಧಿಸಿದ ಸೇವಾ ಪ್ರಕರಣಗಳು ಹಾಗೂ ಪಿಂಚಣಿ ಪ್ರಕರಣಗಳೊಂದಿಗೆ ಸಿವಿಲ್ ಪ್ರಕರಣ ಗಳನ್ನು ರಾಜಿ ಮೂಲಕ ಇತ್ಯರ್ಥ ಪಡಿಸಿಕೊಳ್ಳಬಹುದಾಗಿದೆ ಎಂದರು. ಅಲ್ಲದೇ ನ್ಯಾಯಾಲಯಗಳಲ್ಲಿ ಉಭಯ ಪಕ್ಷಗಾರರು ರಾಜಿ ಮಾಡಿ ಕೊಳ್ಳಲು ಸೂಕ್ತ ಮಾರ್ಗದರ್ಶನ ನೀಡಲಾ ಗುವುದು. ಪ್ರಕರಣದ ಇತ್ಯರ್ಥಕ್ಕೆ ಉಭಯ ಕಕ್ಷಿದಾರರ ಉಪಸ್ಥಿತಿ ಕಡ್ಡಾಯವಾಗಿದೆ. ಇಬ್ಬರಿಗೂ ಒಪ್ಪಿಗೆಯಾ ಗುವಂತೆ ಪ್ರಕರಣ ತೀರ್ಮಾನಗೊಳ್ಳುವುದರಿಂದ ಸೌಹಾರ್ದತೆ ಉಳಿಯಲು ಸಾಧ್ಯವಾಗುತ್ತದೆ ಎಂದವರು ಅಭಿಪ್ರಾಯಪಟ್ಟರು. ನ್ಯಾಯಾಲಯಗಳಲ್ಲಿ ದಾಖಲಾಗದೇ ಇರುವ ಪ್ರಕರಣಗಳನ್ನು ಸಹ ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಸಿ ಕೊಂಡಲ್ಲಿ ನ್ಯಾಯಾಲಯಕ್ಕೆ ಪಾವತಿಸಲಾದ ನ್ಯಾಯಾಲಯ ಶುಲ್ಕವನ್ನು ಸಂಪೂರ್ಣವಾಗಿ ಮರು ಪಾವತಿಸಲಾ ಗುವುದು. ಸಂಧಾನಕಾರರು ಸೂಚಿಸುವ ಪರಿಹಾರ ಒಪ್ಪಿಗೆಯಾದಲ್ಲಿ ಮಾತ್ರ ರಾಜೀ ಮಾಡಿಕೊಳ್ಳಬಹುದು ಎಂದು ಮನು ಪಟೇಲ್ ತಿಳಿಸಿದರು.
ಖತರ್ನಿಂದ LNG ಉತ್ಪಾದನೆ ಸ್ಥಗಿತ: ಭಾರತಕ್ಕೆ ಪೂರೈಕೆಯಲ್ಲಿ ವ್ಯತ್ಯಯ
ಹೊಸದಿಲ್ಲಿ,ಮಾ.4: ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಸಂಘರ್ಷದ ನಡುವೆ ತನ್ನ ದ್ರವೀಕೃತ ನೈಸರ್ಗಿಕ ಅನಿಲ (ಎಲ್ಎನ್ಜಿ) ಸ್ಥಾವರಗಳ ಮೇಲೆ ದಾಳಿಗಳ ಬಳಿಕ ಖತರ್ ಉತ್ಪಾದನೆಯನ್ನು ಸ್ಥಗಿತಗೊಳಿಸಿದೆ. ಇದು ಭಾರತಕ್ಕೆ ಎಲ್ಎನ್ಜಿ ಪೂರೈಕೆಗೆ ವ್ಯತ್ಯಯವನ್ನುಂಟು ಮಾಡಿದ್ದು, ಪ್ರಮುಖ ದೇಶಿಯ ಕ್ಷೇತ್ರಗಳಿಗೆ ದಾಸ್ತಾನು ಲಭ್ಯತೆಯನ್ನು ಕುಗ್ಗಿಸಿದೆ. ತನ್ನ ಹೆಚ್ಚಿನ ಅನಿಲ ಅಗತ್ಯಗಳಿಗಾಗಿ ಖತರ್ನೊಂದಿಗಿನ ದೀರ್ಘಾವಧಿಯ ಎಲ್ಎನ್ಜಿ ಒಪ್ಪಂದಗಳನ್ನು ಅಲವಂಬಿಸಿರುವ ಭಾರತಕ್ಕೆ ಅನಿಲ ಪೂರೈಕೆ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ. ಇದರಿಂದಾಗಿ ಹಲವಾರು ಕೈಗಾರಿಕಾ ಬಳಕೆದಾರರು ಮತ್ತು ನಗರ ಅನಿಲ ವಿತರಣೆ (ಸಿಜಿಡಿ) ಕಂಪನಿಗಳಿಗೆ ಪೂರೈಕೆ ಶೇ.40ರಷ್ಟು ಕಡಿತಗೊಂಡಿದೆ. ಕೆಲವು ಕೈಗಾರಿಕಾ ಬಳಕೆದಾರರು ಪರ್ಯಾಯ, ಆದರೆ ದುಬಾರಿ ವ್ಯವಸ್ಥೆಗಳತ್ತ ಮುಖ ಮಾಡಬಹುದಾದರೂ ಸಿಎನ್ಜಿ-ಚಿಲ್ಲರೆ ನಗರ ಅನಿಲ ವಲಯವು ತೀವ್ರ ಒತ್ತಡದ ಎಚ್ಚರಿಕೆ ನೀಡಿದೆ. ಖತರ್ ಒಪ್ಪಂದಗಳಿಗಿಂತ ದುಪ್ಪಟ್ಟು ದರದಲ್ಲಿ ಸ್ಪಾಟ್ ಎನ್ಎನ್ಜಿಯನ್ನು ಖರೀದಿಸುವುದರಿಂದ ಸಿಎನ್ಜಿಯ ಬೆಲೆ ಪ್ರಯೋಜನವನ್ನು ಕಳೆದುಕೊಳ್ಳಬಹುದು ಮತ್ತು ಗ್ರಾಹಕರು ಶಾಶ್ವತವಾಗಿ ವಿದ್ಯುತ್ ವಾಹನಗಳಿಗೆ ಬದಲಾಗಬಹುದು ಎಂದು ಸಿಜಿಡಿ ನಿರ್ವಾಹಕರು ಕಳವಳ ವ್ಯಕ್ತಪಡಿಸಿದ್ದಾರೆ. ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದರಿಂದ ಭಾರತದ ಅತಿ ದೊಡ್ಡ ಎಲ್ಎನ್ಜಿ ಆಮದುದಾರನಾಗಿರುವ ಪೆಟ್ರೋನೆಟ್ ಎಲ್ಎನ್ಜಿ ಲಿ.ಗೆ ಖತರ್ನಿಂದ ಎಲ್ಎನ್ಜಿ ಸಾಗಿಸಲು ಹಡಗುಗಳನ್ನು ಕಳುಹಿಸಲು ಸಾಧ್ಯವಾಗುತ್ತಿಲ್ಲ. ಖತರ್ ಸೇರಿದಂತೆ ಹೆಚ್ಚಿನ ಪಶ್ಚಿಮ ಏಶ್ಯಾ ದೇಶಗಳು ಹಾರ್ಮುಝ್ ಮೂಲಕವೇ ತಮ್ಮ ಹೆಚ್ಚಿನ ತೈಲ ಮತ್ತು ಅನಿಲ ರಫ್ತನ್ನು ನಡೆಸುತ್ತವೆ. ಹೆಚ್ಚುವರಿಯಾಗಿ ಇರಾನ್ನಿಂದ ಡ್ರೋನ್ ದಾಳಿಯ ಬಳಿಕ ಖತರ್ ವಿಶ್ವದ ಅತ್ಯಂತ ದೊಡ್ಡ ರಫ್ತು ಸ್ಥಾವರದಲ್ಲಿ ಎನ್ಎನ್ಜಿ ಉತ್ಪಾದನೆಯನ್ನು ಸ್ಥಗಿತಗೊಳಿಸಿದೆ. ಇದು ಭಾರತಕ್ಕೂ ಅನಿಲವನ್ನು ಪೂರೈಸುತ್ತಿತ್ತು. ಭಾರತವು ವಾರ್ಷಿಕವಾಗಿ ಆಮದು ಮಾಡಿಕೊಳ್ಳುವ 27 ಮಿಲಿಯನ್ ಟನ್ ಎಲ್ಎನ್ಜಿಯ ಪೈಕಿ ಶೇ.40ರಷ್ಟನ್ನು ಖತರ್ ಪೂರೈಸುತ್ತದೆ. ಪೂರೈಕೆ ಕಡಿತಗಳು ನಗರ ಅನಿಲ ಸಂಸ್ಥೆಗಳ ಮೇಲೂ ಪ್ರತಿಕೂಲ ಪರಿಣಾಮ ಬೀರಿವೆ. ವಾಹನಗಳಿಗೆ ಸಿಎನ್ಜಿ ಮತ್ತು ಕೊಳವೆಗಳ ಮೂಲಕ ಮನೆಗಳಿಗೆ ಅಡಿಗೆ ಅನಿಲ ಅಗತ್ಯಗಳನ್ನು ಪೂರೈಸಲು ದೇಶೀಯ ಅನಿಲ ಮತ್ತು ಎಲ್ಎನ್ಜಿ ಲಭ್ಯತೆಯ ಬಗ್ಗೆ ಕಳವಳಗಳನ್ನು ವ್ಯಕ್ತಪಡಿಸಿ ಅವು ಮಾ.3ರಂದು ಸರಕಾರಿ ಸ್ವಾಮ್ಯದ ಗ್ಯಾಸ್ ಅಥಾರಿಟಿ ಆಫ್ ಇಂಡಿಯಾಕ್ಕೆ (ಗೈಲ್) ಪತ್ರ ಬರೆದಿವೆ.
ಕರ್ನಾಟಕ BJP ಹೊಸ ಪ್ರಭಾರಿಗಳ ನೇಮಕ: ಮಂಗಳೂರು, ಮೈಸೂರು, ದಾವಣಗೆರೆ ಸೇರಿ 10 ವಿಭಾಗಕ್ಕೆ 21 ಮುಖಂಡರ ಆಯ್ಕೆ
ರಾಜ್ಯ ಬಿಜೆಪಿ 10 ವಿಭಾಗಗಳಿಗೆ ಹೊಸ ಪ್ರಭಾರಿಗಳು, ಸಹ ಪ್ರಭಾರಿಗಳ ನೇಮಕ ಮಾಡಿದೆ. ಪ್ರಮುಖವಾಗಿ ಮಂಗಳೂರು, ಮೈಸೂರು, ದಾವಣಗೆರೆ ಸೇರಿದಂತೆ ವಿವಿಧ ವಿಭಾಗಗಳಿಗೆ ಪ್ರಭಾರಿಗಳ ಆಯ್ಕೆಯಾಗಿದೆ. ಸ್ಥಳೀಯ 21 ಮುಖಂಡರಿಗೆ ಅವಕಾಶ ನೀಡಲಾಗಿದೆ. ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಬಿಜೆಪಿ ಸಜ್ಜಾಗುತ್ತಿದ್ದು, ಈ ಹಿನ್ನೆಲೆ ಹೊಸ ಪ್ರಭಾರಿಗಳ ನೇಮಕ ಮಾಡಲಾಗಿದೆ.
ಕಲಬುರಗಿ | ಆಯ್ಕೆಯಾದ ಪುಸ್ತಕಗಳ ಪಟ್ಟಿ ಪ್ರಕಟ: ಆಕ್ಷೇಪಣೆ ಆಹ್ವಾನ
ಕಲಬುರಗಿ: 2022ನೇ ವರ್ಷದಲ್ಲಿ ಪ್ರಥಮ ಮುದ್ರಣಗೊಂಡು ರಾಜ್ಯಮಟ್ಟದ ಪುಸ್ತಕ ಆಯ್ಕೆ ಸಮಿತಿಯಿಂದ ಆಯ್ಕೆಯಾದ ಪುಸ್ತಕಗಳನ್ನು ಇಲಾಖೆಯ ಅಧಿಕೃತ www.dpl.karnataka.gov.in ವೆಬ್ಸೈಟ್ ನಲ್ಲಿ ಈಗಾಗಲೇ ಮಾ.2 ರಂದು ಪ್ರಕಟಿಸಲಾಗಿದೆ ಎಂದು ಕಲಬುರಗಿ ನಗರ ಕೇಂದ್ರ ಗ್ರಂಥಾಲಯದ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ರಾಜ್ಯಮಟ್ಟದ ಪುಸ್ತಕ ಆಯ್ಕೆ ಸಮಿತಿಯಿಂದ ಆಯ್ಕೆಯಾದ ಪುಸ್ತಕಗಳ ಲೇಖಕರು, ಲೇಖಕ-ಪ್ರಕಾಶಕರು, ಪ್ರಕಾಶಕರು ಮತ್ತು ಪುಸ್ತಕ ಮಾರಾಟಗಾರರ ಪುಸ್ತಕಗಳಲ್ಲಿ ಶೀರ್ಷಿಕೆ, ಲೇಖಕರ ಹೆಸರು, ಪ್ರಕಾಶಕರ ಹೆಸರು, ಮುಖ ಬೆಲೆ ಮತ್ತು ನಿಗದಿತ ಬೆಲೆಯಲ್ಲಿ ಹೆಚ್ಚು ಅಥವಾ ಕಡಿಮೆಯಾಗಿದ್ದಲ್ಲಿ ಪುಸ್ತಕದ ಅಳತೆ, ಪುಟ ಸಂಖ್ಯೆ ಹಾಗೂ ಇತರೆ ಯಾವುದೇ ತಾಂತ್ರಿಕ ವ್ಯತ್ಯಾಸಗಳಿದ್ದಲ್ಲಿ ಅಧಿಕೃತ ಮಾಹಿತಿ/ದಾಖಲಾತಿಗಳೊಂದಿಗೆ 2026ರ ಮಾ.16ರ ಸಂಜೆ 5.30 ಗಂಟೆಯೊಳಗಾಗಿ ಆಯುಕ್ತರು, ಸಾರ್ವಜನಿಕ ಗ್ರಂಥಾಲಯ ಇಲಾಖೆ, ವಿಶ್ವೇಶ್ವರಯ್ಯ ಮುಖ್ಯ ಗೋಪುರ, 4ನೇ ಮಹಡಿ, ಡಾ.ಅಂಬೇಡ್ಕರ್ ವೀಧಿ, ಬೆಂಗಳೂರು-560001 ಇವರಿಗೆ ಲಿಖಿತವಾಗಿ ಮನವಿ (ಆಕ್ಷೇಪಣೆಗಳನ್ನು) ಸಲ್ಲಿಸಬೇಕು. ನಿಗದಿತ ಅವಧಿ ನಂತರ ಬರುವ ಮನವಿ (ಆಕ್ಷೇಪಣೆ) ಗಳನ್ನು ಪರಿಗಣಿಸಲಾಗುವುದಿಲ್ಲ. ತದನಂತರ ಏಕಪಕ್ಷೀಯವಾಗಿ ನಿರ್ಣಯ ಕೈಗೊಳ್ಳಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

24 C