SENSEX
NIFTY
GOLD
USD/INR

Weather

30    C
...

ದುಬಾರೆ ಸಾಕಾನೆಗಳ ನಡುವಿನ ಭೀಕರ ಕಾದಾಟದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ 'ಮಾರ್ತಾಂಡ' ಸಾವು

ಕೊಡಗು ಜಿಲ್ಲೆಯ ದುಬಾರೆ ಆನೆ ಶಿಬಿರದಲ್ಲಿ ಸಾಕಾನೆಗಳ ನಡುವೆ ನಡೆದ ಭೀಕರ ಕಾದಾಟದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ 'ಮಾರ್ತಾಂಡ' (35 ವರ್ಷ) ಎಂಬ ಆನೆ ಇಂದು ಬೆಳಿಗ್ಗೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದೆ. ಸೋಮವಾರ ಮಧ್ಯಾಹ್ನ ಮಾವುತರು ಕಾವೇರಿ ನದಿ ತಟದಲ್ಲಿ ಆನೆಗಳಿಗೆ ಸ್ನಾನ ಮಾಡಿಸುತ್ತಿದ್ದಾಗ, ನೂರಾರು ಪ್ರವಾಸಿಗರ ಸಮ್ಮುಖದಲ್ಲೇ ದಸರಾ ಆನೆ 'ಕಂಜನ್' (28 ವರ್ಷ) ಇದ್ದಕ್ಕಿದ್ದಂತೆ ರೊಚ್ಚಿಗೆದ್ದು, ದಂತವಿಲ್ಲದ ಸೌಮ್ಯ ಸ್ವಭಾವದ 'ಮಾರ್ತಾಂಡ'ನ ಮೇಲೆ ಭೀಕರ ದಾಳಿ ನಡೆಸಿತ್ತು

ವಿಜಯ ಕರ್ನಾಟಕ 19 May 2026 2:09 pm

ಸಮಸ್ಯೆಗಳ ಆಗರ ಸಾಲುಮರದ ತಿಮ್ಮಕ್ಕ ವೃಕ್ಷೋದ್ಯಾನ

ಕಿತ್ತು ಹೋದ ರಸ್ತೆಗಳು, ಕುಡಿಯಲು ನೀರಿಲ್ಲ, ಮುರಿದ ಆಟಿಕೆಗಳು, ಒಣಗಿದ ಗಿಡಗಳು

ವಾರ್ತಾ ಭಾರತಿ 19 May 2026 2:07 pm

ಮೇ 19ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್‌, ಡೀಸೆಲ್‌ ದರ ಎಷ್ಟಿದೆ ತಿಳಿಯಿರಿ

Petrol, Diesel Price: ಶಕ್ತಿಯ ಮೂಲಗಳು ಎನಿಸಿಕೊಂಡಿರುವ ಪೆಟ್ರೋಲ್ ಮತ್ತು ಡೀಸೆಲ್ ಇಂಧನ ಅತ್ಯವಶ್ಯಕವಾಗಿ ಬೇಕಾಗುವ ಸಂಪನ್ಮೂಲಗಳಾಗಿವೆ. ಹಾಗಾದ್ರೆ, ಬೆಂಗಳೂರು ಸೇರಿದಂತೆ ಕರ್ನಾಟಕದ ಇತರ ಜಿಲ್ಲೆಗಳಲ್ಲಿ ಇಂದು (ಮೇ 19) ಲೀಟರ್‌ ಪೆಟ್ರೋಲ್‌, ಡೀಸೆಲ್‌ ಬೆಲೆ ಎಷ್ಟಿದೆ ಎಂದು ಇಲ್ಲಿ ತಿಳಿಯಿರಿ. ಇತ್ತೀಚಿನ ದಿನಗಳಲ್ಲಿ ಎಲೆಕ್ಟ್ರಿಕ್‌ ವಾಹನಗಳು ಹೆಚ್ಚಾಗುತ್ತಿವೆ. ಹಾಗಂತ ಇಂಧನದ ಬೇಡಿಕೆ ಏನು ಕಡಿಮೆ ಆಗಿಲ್ಲ.

ಒನ್ ಇ೦ಡಿಯ 19 May 2026 1:59 pm

ಭಾರತದಲ್ಲೇ ಇರದ 2 ಏರ್‌ಬೇಸ್ ಧ್ವಂಸ ಎಂದ ಪಾಕ್ ಅಧಿಕಾರಿ ನಗೆಪಾಟಲು: ಗೂಗಲ್ ಮ್ಯಾಪ್‌ನಲ್ಲಿ 'ರಾಜೌರಿ, ಮಾಮುನ್' ವಾಯುನೆಲೆ ಹುಡುಕುತ್ತಿರೋ ನೆಟ್ಟಿಗರು!

ಪಹಲ್ಗಾಮ್‌ ದಾಳಿಯ ಬಳಿಕ ಪಾಕಿಸ್ತಾನ-ಭಾರತ ವಿರುದ್ಧದ ಯುದ್ಧದಲ್ಲಿ ತಾವೇ ಗೆದಿದ್ದು ಎಂದು ಬಿಂಬಿಸಿಕೊಳ್ಳಲು ಹರಸಾಹಸಪಡುತ್ತಿದ್ದು, ಈಗಾಗಲೇ ಸುಳ್ಳಿನ ಕೋಟೆಯನ್ನು ಕಟ್ಟಲು ಹೋಗಿ ಜಗತ್ತಿನ ಮುಂದೆ ಮುಗ್ಗರಿಸಿದೆ. ಆದಾಗ್ಯೂ, ಬುದ್ದಿಕಲಿಯದ ಪಾಕ್‌ ಸೇನಾ ಅಧಿಕಾರಿಯೊಬ್ಬರು ಆಪರೇಷನ್‌ ಸಿಂಧೂರ ಯುದ್ಧದ ಸಮಯದಲ್ಲಿ ಭಾರತದ 26ಕ್ಕೂ ಹೆಚ್ಚು ಸ್ಥಳಗಳ ಮೇಲೆ ಟಾರ್ಗೆಟ್‌ ಮಾಡಿದ್ದು, ಇದರಲ್ಲಿ ಭಾರತದಲ್ಲೇ ಅಸ್ತಿತ್ವದಲ್ಲಿರದ 2 ಏರ್‌ ಬೇಸ್‌ಗಳಾದ ರಾಜೌರಿ ವಾಯುನೆಲೆ ಮತ್ತು ಮಾಮುನ್ ವಾಯುನೆಲೆಯನ್ನು ಗುರಿಯಾಗಿಸಿ ಯಶಸ್ವಿಯಾಗಿ ಹೊಡೆದಿದ್ದೇವೆ ಎಂದು ಹೇಳಿಕೆ ನೀಡಿ ನಗೆಪಾಟಲಿಗೀಡಾಗಿದ್ದಾರೆ. ಇವರ ಈ ಅತಿರೇಕದ ಹೇಳಿಕೆ ಕೇಳಿದ ನೆಟ್ಟಿಗರು ಸದ್ಯ ಇವರಿಗೆ ಭೂಗೋಳಶಾಸ್ತ್ರದ ಪಾಠ ಮಾಡಲು ಮುಂದಾಗಿದ್ದಾರೆ.

ವಿಜಯ ಕರ್ನಾಟಕ 19 May 2026 1:43 pm

ಯಾವ ಪುರುಷಾರ್ಥಕ್ಕೆ ಸಾಧನಾ ಸಮಾವೇಶ ಎಂಬ ಬಿವೈ ವಿಜಯೇಂದ್ರ ಪ್ರಶ್ನೆಗೆ ಖಡಕ್ ಉತ್ತರ ಕೊಟ್ಟ ಕೃಷ್ಣ ಬೈರೇಗೌಡ!

ಕಳೆದ ಮೂರು ವರ್ಷಗಳಲ್ಲಿ ಸರ್ಕಾರ ಏನು ಮಾಡಿದೆ ಎಂದು ತಿಳಿಯಲು ಜನರಿಗೆ ಅಧಿಕಾರ ಇದೆ. ಸಿದ್ದರಾಮಯ್ಯ ಅವರು 2023-24 ರಲ್ಲಿ 3 ಕೋಟಿ 27 ಲಕ್ಷ ಗಾತ್ರದ ಬಜೆಟ್ ಮಂಡನೆ ಮಾಡಿದ್ದರು. 2024-25 ರಲ್ಲಿ 3 ಕೋಟಿ 71 ಲಕ್ಷ ಗಾತ್ರದ ಬಜೆಟ್ ಮಂಡನೆ ಮಾಡಲಾಗಿತ್ತು, 2025-26 ರಲ್ಲಿ 4 ಕೋಟಿ 9 ಲಕ್ಷ ಗಾತ್ರದ ಬಜೆಟ್ ಮಂಡನೆ ಆಗಿತ್ತು. 2026-27 ಕ್ಕೆ 4 ಕೋಟಿ 48 ಲಕ್ಷ ಗಾತ್ರದ ಬಜೆಟ್ ಮಂಡನೆ ಮಾಡಿದ್ದಾರೆ. ನಾಲ್ಕು ಬಜೆಟ್ ನಲ್ಲಿ ಹಣ ಬಡವರಿಗೆ, ಅಭಿವೃದ್ದಿಗೆ, ಸಾಮಾಜಿಕ ನ್ಯಾಯಕ್ಕೆ ಖರ್ಚಾಗಿದೆ. ಪ್ರಣಾಳಿಕೆಯಲ್ಲಿ ಕೊಟ್ಟ ಮಾತನ್ನು ಈಡೇರಿಸಲು ಬಜೆಟ್ ಅನುದಾನ ಖರ್ಚು ಮಾಡಿದೆ ಎಂದು ಗೃಹ ಸಚಿವ ಪರಮೇಶ್ವರ್ ತಿಳಿಸಿದರು.

ವಿಜಯ ಕರ್ನಾಟಕ 19 May 2026 1:41 pm

Kodagu | ದುಬಾರೆ ಶಿಬಿರದಲ್ಲಿ ಸಾಕಾನೆಗಳ ಕಾದಾಟ; ಚಿಕಿತ್ಸೆ ಫಲಿಸದೆ ʼಮಾರ್ತಾಂಡʼ ಸಾವು

ಮಡಿಕೇರಿ : ದುಬಾರೆ ಸಾಕಾನೆ ಶಿಬಿರದಲ್ಲಿ ಸಾಕಾನೆ ಕಂಜನ್ ನಿಂದ ದಾಳಿಗೊಳಗಾಗಿದ್ದ ಮಕ್ನಾ ಆನೆ ಮಾರ್ತಾಂಡ (34) ಚಿಕಿತ್ಸೆ ಫಲಿಸದೆ ಇಂದು ಸಾವನ್ನಪ್ಪಿದೆ. ದುಬಾರೆ ಸಾಕಾನೆ ಶಿಬಿರ ವ್ಯಾಪ್ತಿಯ ನದಿಯಲ್ಲಿ ಸೋಮವಾರ ಕಂಜನ್ ಏಕಾಏಕಿ ಮಾರ್ತಾಂಡನ ಮೇಲೆ ದಾಳಿ ಮಾಡಿತ್ತು. ಕಂಜನ್ ನಿಂದ ತಿವಿತಕ್ಕೊಳಗಾಗಿ ತೀವ್ರವಾಗಿ ಘಾಸಿಗೊಂಡಿದ್ದ ಮಾರ್ತಾಂಡನಿಗೆ ದುಬಾರೆ ಸಾಕಾನೆ ಶಿಬಿರದ ವೈದ್ಯಾಧಿಕಾರಿ ಡಾ.ಮುಜೀಬ್ ಅವರು ಚಿಕಿತ್ಸೆ ನೀಡುತ್ತಿದ್ದರು. ಆದರೆ ಚಿಕಿತ್ಸೆ ಫಲಿಸದೆ ಮಾರ್ತಾಂಡ ಕೊನೆಯುಸಿರೆಳೆದಿದೆ. ಕಂಜನ್ ಮಾರ್ತಾಂಡನ ಮೇಲೆ ದಾಳಿ ಮಾಡುವ ಸಂದರ್ಭ ಮಾವುತರು ಹಾಗೂ ಕಾವಡಿಗರು ನಿಯಂತ್ರಿಸುವ ಪ್ರಯತ್ನ ಮಾಡಿದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಮಾರ್ತಾಂಡ ಬಿದ್ದ ಪರಿಣಾಮ ಚೆನ್ನೈ ಮೂಲದ ಪಲ್ಲಾವರಂ ನ ನಿವಾಸಿ ಜುನೆಸ್ಸಿ (33) ಮೃತಪಟ್ಟಿದ್ದರು. ಮೃತ ಮಹಿಳೆಯ ಕುಟುಂಬಕ್ಕೆ ರೂ.20 ಲಕ್ಷ ಪರಿಹಾರ ನೀಡಲಾಗುವುದು ಎಂದು ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ. ದುರ್ಘಟನೆಯ ಹಿನ್ನೆಲೆ ಪ್ರವಾಸಿತಾಣ ದುಬಾರೆಗೆ ಪ್ರವಾಸಿಗರ ಪ್ರವೇಶವನ್ನು ಎರಡು ದಿನಗಳ ಕಾಲ ನಿರ್ಬಂಧಿಸಲಾಗಿದೆ. ಅನಾಹುತಕ್ಕೆ ಕಾರಣನಾದ ಕಂಜನ್ ನನ್ನು ಶಿಬಿರದಲ್ಲಿ ಸುರಕ್ಷಿತವಾಗಿ ಇಡಲಾಗಿದ್ದು, ಮುಂಜಾಗೃತಾ ಕ್ರಮ ಕೈಗೊಳ್ಳಲಾಗಿದೆ.

ವಾರ್ತಾ ಭಾರತಿ 19 May 2026 1:36 pm

ಬೆಂಗಳೂರು ಹೊರವರ್ತುಲ ರಸ್ತೆಯ ಕಾಂಕ್ರೀಟೀಕರಣಕ್ಕೆ ಯೋಜನೆ: ವಾಹನ ಸವಾರರಿಗೆ ಸಂಚಾರ ದಟ್ಟಣೆ ಸಮಸ್ಯೆ

ಬೆಂಗಳೂರಿನ ಅತ್ಯಂತ ಜನನಿಬಿಡ ತಂತ್ರಜ್ಞಾನ ಕಾರಿಡಾರ್ ಆದ ಸಿಲ್ಕ್ ಬೋರ್ಡ್ ಜಂಕ್ಷನ್‌ನಿಂದ ಕೆ ಆರ್ ಪುರದವರೆಗಿನ 17.1 ಕಿಲೋಮೀಟರ್ ಹೊರವರ್ತುಲ ರಸ್ತೆಯನ್ನು ₹ 378 ಕೋಟಿ ವೆಚ್ಚದಲ್ಲಿ ಕಾಂಕ್ರೀಟೀಕರಣಗೊಳಿಸಲು ಬೃಹತ್ ಯೋಜನೆ ರೂಪಿಸಲಾಗಿದೆ. ಬೆಂಗಳೂರು ಸ್ಮಾರ್ಟ್ ಇನ್‌ಫ್ರಾಸ್ಟ್ರಕ್ಚರ್ ಲಿಮಿಟೆಡ್ ನೇತೃತ್ವದಲ್ಲಿ ನಡೆಯಲಿರುವ ಈ ಮರು ಅಭಿವೃದ್ಧಿ ಯೋಜನೆಯಡಿ, ಅಸ್ತಿತ್ವದಲ್ಲಿರುವ ಡಾಂಬರು ರಸ್ತೆಯನ್ನು ಅಗೆದು 190 ಮಿಲಿಮೀಟರ್ ದಪ್ಪದ ಕಾಂಕ್ರೀಟ್ ರಸ್ತೆಯನ್ನು ನಿರ್ಮಿಸಲಾಗುತ್ತಿದ್ದು, ಇದರ ಟೆಂಡರ್ ಪ್ರಕ್ರಿಯೆ ಅಂತಿಮ ಹಂತದಲ್ಲಿದೆ. ಶೀಘ್ರದಲ್ಲೇ ಕಾಮಗಾರಿ ಆರಂಭವಾಗಲಿದೆ.

ವಿಜಯ ಕರ್ನಾಟಕ 19 May 2026 1:24 pm

ಆಕ್ರಮಣಕಾರಿ ನಾಯಿಗಳಿಗೆ ದಯಾಮರಣಕ್ಕೆ ಸುಪ್ರೀಂ ಕೋರ್ಟ್ ಅನುಮತಿ

ಹೊಸದಿಲ್ಲಿ: ಮಾನವ ಜೀವಕ್ಕೆ ಅಪಾಯ ಉಂಟುಮಾಡುವ ಆಕ್ರಮಣಕಾರಿಯಾಗಿರುವ ಬೀದಿ ನಾಯಿಗಳನ್ನು ಅಗತ್ಯವಿದ್ದರೆ ದಯಾಮರಣ ನೀಡಲು ರಾಜ್ಯ ಸರಕಾರಗಳು ಹಿಂಜರಿಯಬಾರದು ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಸಾರ್ವಜನಿಕ ಸಂಸ್ಥೆಗಳು ಹಾಗೂ ಜನದಟ್ಟಣೆಯ ಪ್ರದೇಶಗಳಿಂದ ಬೀದಿ ನಾಯಿಗಳನ್ನು ತೆರವುಗೊಳಿಸುವಂತೆ 2025ರ ನವೆಂಬರ್‌ ನಲ್ಲಿ ಸುಪ್ರೀಂ ಕೋರ್ಟ್ ನೀಡಿದ್ದ ನಿರ್ದೇಶನವನ್ನು ಮರುಪರಿಶೀಲಿಸುವಂತೆ ಸಲ್ಲಿಕೆಯಾಗಿದ್ದ ಅರ್ಜಿಯ ವಿಚಾರಣೆ ವೇಳೆ ಮಂಗಳವಾರ ಈ ಆದೇಶ ನೀಡಿದೆ. ಆದರೆ, ಆ ತೀರ್ಪನ್ನು ಬದಲಾಯಿಸಬೇಕು ಎಂದು ಸಲ್ಲಿಕೆಯಾಗಿದ್ದ ಹಲವು ಮನವಿಗಳನ್ನು ಪೀಠ ತಿರಸ್ಕರಿಸಿದೆ. ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್, ಸಂದೀಪ್ ಮೆಹ್ತಾ ಮತ್ತು ಎನ್.ವಿ. ಅಂಜಾರಿಯಾ ಅವರನ್ನೊಳಗೊಂಡ ಪೀಠವು, ಸಾರ್ವಜನಿಕ ಸ್ಥಳಗಳಲ್ಲಿ ಮಕ್ಕಳು, ವೃದ್ಧರು ಹಾಗೂ ಇತರ ದುರ್ಬಲ ವರ್ಗದ ಜನರು ಎದುರಿಸುತ್ತಿರುವ ಅಪಾಯಗಳನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ ಎಂದು ತಿಳಿಸಿತು. ನಾಗರಿಕರ ಸುರಕ್ಷತೆ ಕಾಪಾಡುವುದು ರಾಜ್ಯದ ಕರ್ತವ್ಯವಾಗಿದೆ ಎಂದು ಹೇಳಿದ ಪೀಠವು, ಸಾರ್ವಜನಿಕ ಹಿತಾಸಕ್ತಿಗೆ ಆದ್ಯತೆ ನೀಡಬೇಕೆಂದು ಸೂಚಿಸಿತು.

ವಾರ್ತಾ ಭಾರತಿ 19 May 2026 1:18 pm

ಕಾಸರಗೋಡು: ಸ್ಕೂಟರ್-ಬೈಕ್ ಢಿಕ್ಕಿ; ಓರ್ವ ಮೃತ್ಯು, ಇಬ್ಬರಿಗೆ ಗಾಯ

ಕಾಸರಗೋಡು: ಸ್ಕೂಟರ್ ಮತ್ತು ಬೈಕ್ ನಡುವೆ ಉಂಟಾದ ಅಪಘಾತದಲ್ಲಿ ವಿದ್ಯಾರ್ಥಿಯೋರ್ವ ಮೃತಪಟ್ಟು, ಇಬ್ಬರು ಗಾಯಗೊಂಡ ಘಟನೆ ಸೋಮವಾರ ರಾತ್ರಿ ಉಳಿಯ ತ್ತಡ್ಕ - ಚೌಕಿ ರಸ್ತೆಯ ಆಝಾದ್ ನಗರದಲ್ಲಿ ನಡೆದಿದೆ. ಸ್ಕೂಟರ್ ಸವಾರ ಆಝಾದ್ ನಗರದ ಶಹಬಾಸ್ ಹಸನ್ ( 17) ಮೃತಪಟ್ಟವರು . ಜೊತೆಗಿದ್ದ ಇನ್ನೋರ್ವ ಸವಾರ ಹಾಗೂ ಬೈಕ್ ನಲ್ಲಿದ್ದ ಇತರ ಇಬ್ಬರು ಗಾಯಗೊಂಡಿದ್ದು,ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ಹಸನ್ ಉದಯ ಗಿರಿಯಲ್ಲಿರುವ ಕೇಂದ್ರ ವಿದ್ಯಾಲಯದ  ವಿದ್ಯಾರ್ಥಿ. ಕಾಸರಗೋಡು ನಗರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ. ಮೃತದೇಹ ವನ್ನು ಕಾಸರಗೋಡು ಜನರಲ್ ಆಸ್ಪತ್ರೆ ಯಲ್ಲಿರಿಸಲಾಗಿದೆ.

ವಾರ್ತಾ ಭಾರತಿ 19 May 2026 1:08 pm

Bank Holiday: ಮೇ ಕೊನೆ ವಾರ ಬ್ಯಾಂಕ್‌ಗಳು ಬಂದ್, ಬಕ್ರೀದ್ ಸೇರಿ ಎಷ್ಟು ದಿನ ರಜೆ?

Bank Holiday Updates: ಬಡ, ಮಧ್ಯಮ ವರ್ಗದ ಜನರು, ಉದ್ಯಮ, ದೊಡ್ಡ ಕಂಪನಿಗಳವರೆಗೆ ಹಣಕಾಸು ವಹಿವಾಟಿನಲ್ಲಿ ಬ್ಯಾಂಕಿಂಗ್ ವಲಯವು ಪ್ರಮುಖ ಪಾತ್ರ ವಹಿಸುತ್ತದೆ. ಹಬ್ಬಗಳು, ಎರಡು ಮತ್ತು ನಾಲ್ಕನೇ ಶನಿವಾರ ಸೇರಿ ವಿವಿಧ ದಿನಗಳಲ್ಲಿ ಬ್ಯಾಂಕ್ ಬಂದ್ ಆಗಿರುತ್ತವೆ. ಮೇ ತಿಂಗಳ ಮುಂದಿನ ಎರಡು ವಾರಗಳಲ್ಲಿ ಬ್ಯಾಂಕ್‌ಗಳು ಯಾವೆಲ್ಲ ದಿನ ರಜೆ ಇರುತ್ತವೆ ಎಂಬ ಮಾಹಿತಿ ಇಲ್ಲಿದೆ.

ಒನ್ ಇ೦ಡಿಯ 19 May 2026 1:08 pm

Petrol-Diesel Price Hike: ಪೆಟ್ರೋಲ್ ​- ಡೀಸೆಲ್ ಬೆಲೆಯಲ್ಲಿ 5 ದಿನದಲ್ಲಿ ಎರಡನೇ ಬಾರಿ ಹೆಚ್ಚಳ, ಇಂದು ಎಷ್ಟು ಹೆಚ್ಚಾಗಿದೆ

Petrol-Diesel Price Hike: ಬೆಂಗಳೂರು - ಕರ್ನಾಟಕ ಸೇರಿದಂತೆ ದೇಶದಾದ್ಯಂತ ಮತ್ತೆ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯು ಭಾರೀ ಹೆಚ್ಚಳವಾಗಿದೆ. ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರು ಯುದ್ಧ - ಸಂಘರ್ಷವು ಮುಕ್ತಾಯ ಆಗದೆ ಇರುವುದು ಹಲವು ಸಂಕಷ್ಟಗಳಿಗೆ ಕಾರಣವಾಗಿದೆ. ಕಳೆದ ಐದು ದಿನಗಳ ಅವಧಿಯಲ್ಲಿ ಎರಡನೇ ಬಾರಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಭಾರೀ ಹೆಚ್ಚಳವಾಗಿದೆ. ಪೆಟ್ರೋಲ್ ಹಾಗೂ ಡೀಸೆಲ್‌

ಒನ್ ಇ೦ಡಿಯ 19 May 2026 1:05 pm

ರೇವಂತ್‌ ರೆಡ್ಡಿ ಬಿಜೆಪಿಗೆ? ತೆಲಂಗಾಣ ಸಂಸದನ ಸ್ಪೋಟಕ ಹೇಳಿಕೆ! ನರೇಂದ್ರ ಮೋದಿ ಆಫರ್‌ ಬೆನ್ನಲ್ಲೇ ತೆರೆದುಕೊಂಡ ʻಸಂಘ ಸಂಬಂಧʼ

ಇತ್ತೀಚಿಗಷ್ಟೇ 2029ರಲ್ಲಿ ರಾಹುಲ್‌ ಗಾಂಧಿ ದೇಶದ ಪ್ರಧಾನಮಂತ್ರಿಯಾಗಲಿದ್ದಾರೆ ಎಂದು ಹೇಳಿದ್ದ ತೆಲಂಗಾಣ ಮುಖ್ಯಮಂತ್ರಿ ರೇವಂತ್‌ ರೆಡ್ಡಿ, ಪ್ರಧಾನಮಂತ್ರಿ ನರೇಂದ್ರ ಮೋದಿ ನೀಡಿದ್ದ ಆಫರ್‌ ಸ್ವೀಕರಿಸಿ ಬಿಜೆಪಿ ಸೇರಲಿದ್ದಾರಾ? ಹೀಗಂತ ನಾವು ಹೇಳುತ್ತಿಲ್ಲ, ಬದಲಿಗೆ ಇದು ನಿಜಾಮಾಬಾದ್‌ ಬಿಜೆಪಿ ಸಂಸದ ಧರ್ಮಪುರಿ ಅರವಿಂದ್‌ ಅವರ ಅಭಿಪ್ರಾಯ. ರೇವಂತ್‌ ರೆಡ್ಡಿ ಬಿಜೆಪಿಯ ಮುಂದಿನ ಸುವೇಂದು ಅಧಿಕಾರಿ ಆಗಲಿದ್ದು, ಶೀಘ್ರದಲ್ಲೇ ಪಕ್ಷ ಸೇರಲಿದ್ದಾರೆ ಎಂದು ಧರ್ಮಪುರಿ ಅರವಿಂದ್‌ ಸ್ಪೋಟಕ ಹೇಳಿಕೆ ನೀಡಿದ್ದಾರೆ. ಇಲ್ಲಿದೆ ಮಾಹಿತಿ.

ವಿಜಯ ಕರ್ನಾಟಕ 19 May 2026 1:04 pm

Raichur | ಈಜಲು ತೆರಳಿದ್ದ ವೇಳೆ ನೀರಿನಲ್ಲಿ ಮುಳುಗಿ ಯುವಕ ಮೃತ್ಯು

ರಾಯಚೂರು : ಜಿಲ್ಲೆಯ ದೇವದುರ್ಗ ತಾಲೂಕಿನ ಮದರಕಲ್ ಗ್ರಾಮದಲ್ಲಿ ಈಜಲು ತೆರಳಿದ್ದ ಯುವಕನೊಬ್ಬ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ನಡೆದಿದೆ. ಗ್ರಾಮದ ನಬಿಸಾಬ್ (18) ಮೃತ ಯುವಕನಾಗಿದ್ದು, ಸ್ನೇಹಿತರೊಂದಿಗೆ ಗ್ರಾಮದ ಹೊಂಡಕ್ಕೆ ಈಜಾಡಲು ತೆರಳಿದ್ದ ವೇಳೆ ಈ ಅವಘಡ ಸಂಭವಿಸಿದೆ. ಈಜುತ್ತಿದ್ದಾಗ ನಬಿಸಾಬ್ ಕೆಸರಲ್ಲಿ ಸಿಲುಕಿಕೊಂಡು ಹೊರಬರಲಾಗದೆ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ ಎನ್ನಲಾಗಿದೆ. ಈ ಘಟನೆ ಜಾಲಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ವಾರ್ತಾ ಭಾರತಿ 19 May 2026 12:57 pm

IPL 2026 Playoff: ಆರ್‌ಸಿಬಿ, ಗುಜರಾತ್, ಎಸ್‌ಆರ್‌ಎಚ್‌ ಪ್ಲೇಆಫ್‌ ಪ್ರವೇಶ: ಒಂದು ಸ್ಥಾನಕ್ಕಾಗಿ 5 ತಂಡಗಳಿಂದ ಭಾರಿ ಪೈಪೋಟಿ

IPL 2026 Playoff Scenarios: ಚೆನ್ನೈನ ಎಂ.ಎ.ಚಿದಂಬರಂ ಕ್ರೀಡಾಂಗಣದಲ್ಲಿ ಸೋಮವಾರ (ಮೇ 18) ನಡೆದ ರೋಚಕ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡವು ಚೆನ್ನೈ ಸೂಪರ್ ಕಿಂಗ್ಸ್‌ ವಿರುದ್ಧ 5 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿತು. ಈ ಗೆಲುವಿನೊಂದಿಗೆ ಎಸ್‌ಆರ್‌ಎಚ್‌ ಜೊತೆಗೆ ಗುಜರಾತ್ ಟೈಟಾನ್ಸ್‌ ಕೂಡ ಪ್ಲೇಆಫ್‌ ಟಿಕೆಟ್ ಪಡೆದುಕೊಂಡವು. ಇದಕ್ಕೂ ಮುನ್ನ ಆರ್‌ಸಿಬಿ ಪ್ಲೇಆಫ್ ಪ್ರವೇಶ

ಒನ್ ಇ೦ಡಿಯ 19 May 2026 12:55 pm

ಶಾಲೆ ಆರಂಭಕ್ಕೆ ವಾರವಷ್ಟೇ ಬಾಕಿ, ರಾಜ್ಯದಲ್ಲಿ ಬಗೆಹರಿಯದ ದ್ವಿಭಾಷಾ ನೀತಿ ಗೊಂದಲ: ಆತಂಕದಲ್ಲಿ ಶಿಕ್ಷಕರು

ಬೆಂಗಳೂರು: ರಾಜ್ಯದಲ್ಲಿ 2026-27ನೇ ಸಾಲಿನ ಶೈಕ್ಷಣಿಕ ವರ್ಷದ ಶಾಲಾ ತರಗತಿಗಳು ಆರಂಭವಾಗಲು ಇನ್ನೇನು ಒಂದು ವಾರವಷ್ಟೇ ಬಾಕಿಯಿದೆ. ಆದರೆ ರಾಜ್ಯ ಸರ್ಕಾರ ಜಾರಿಕೆ ತರಲು ಉದ್ದೇಶಿಸಿರುವ ʼ ರಾಜ್ಯ ಶಿಕ್ಷಣ ನೀತಿ ʼ (SEP) ಮತ್ತು ʼಕರ್ನಾಟಕ ದ್ವಿಭಾಷಾ ನೀತಿ 2026'ರ ಕುರಿತು ಈವರೆಗೂ ಯಾವುದೇ ಸ್ಪಷ್ಟತೆ ಮೂಡಿಲ್ಲ. ಸರ್ಕಾರದ ಈ ಬಗೆಯ ಮೌನ ಶಿಕ್ಷಕ ವರ್ಗದಲ್ಲಿ

ಒನ್ ಇ೦ಡಿಯ 19 May 2026 12:45 pm

ವರ್ಷಗಳ ಹಿಂದೆಯೇ ಅರ್ಜಿ ಸಲ್ಲಿಸಿದರೂ ಪ್ರಯೋಜನ; ಮುಗಿಯುತ್ತಿಲ್ಲ ಬಿಪಿಎಲ್ ಕಾಡ್೯ಗಾಗಿ ಅಜಿ೯ದಾರರ ಅಲೆದಾಟ

ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಹೊಸ ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಿ ವರ್ಷ ಕಳೆದರೂ ಕಾರ್ಡ್ ಸಿಗದೆ ಸಾರ್ವಜನಿಕರು ಕಾಯುವಂತಾಗಿದೆ. ಜಿಲ್ಲೆಯಲ್ಲಿ ಈಗಾಗಲೇ 2.28 ಲಕ್ಷ ಪಡಿತರ ಚೀಟಿಗಳಿದ್ದು, ಹೊಸದಾಗಿ 5,000ಕ್ಕೂ ಹೆಚ್ಚು ಕುಟುಂಬಗಳು ಅರ್ಜಿ ಸಲ್ಲಿಸಿದ್ದರೂ ವಿತರಣೆಯ ಬಗ್ಗೆ ಯಾವುದೇ ಸ್ಪಷ್ಟ ಸೂಚನೆ ಸಿಕ್ಕಿಲ್ಲ. ಸದ್ಯ ವೈದ್ಯಕೀಯ ತುರ್ತು ಕಾರಣಗಳಿಗಾಗಿ ಸಲ್ಲಿಸುವ ಅರ್ಜಿಗಳಿಗೆ ಮಾತ್ರ ಆದ್ಯತೆ ನೀಡಲಾಗುತ್ತಿದ್ದು, ಸಾಮಾನ್ಯ ಅರ್ಜಿಗಳ ಸ್ಥಿತಿ ಅಯೋಮಯವಾಗಿದೆ.

ವಿಜಯ ಕರ್ನಾಟಕ 19 May 2026 12:39 pm

ಕಲಬುರಗಿ ಜಿಲ್ಲಾ ಪಂಚಾಯತ್ ಸಿಇಒ ಭಂವರ್ ಸಿಂಗ್ ಮೀನಾ ವರ್ಗಾವಣೆ; ನೂತನ ಸಿಇಒ ಆಗಿ ರಾಹುಲ್ ಸಂಕನೂರ ನೇಮಕ

ಕಲಬುರಗಿ : ಕಲಬುರಗಿ ಜಿಲ್ಲಾ ಪಂಚಾಯತ್ ಸಿಇಒ ಭಂವರ್ ಸಿಂಗ್ ಮೀನಾ ವರ್ಗಾವಣೆಗೊಂಡಿದ್ದು, ನೂತನ ಸಿಇಒ ಆಗಿ ರಾಹುಲ್ ಸಂಕನೂರ ನೇಮಕಗೊಂಡಿದ್ದಾರೆ. ಈ ಕುರಿತು ಸರಕಾರದಿಂದ ಆದೇಶ ಹೊರಡಿಸಿದ್ದು, ಕಳೆದ ಎರಡೂವರೆ ವರ್ಷದಿಂದ ಕೆಲಸ ನಿರ್ವಹಿಸುತ್ತಿದ್ದ 2017ರ ಐಎಎಸ್ ಬ್ಯಾಚಿನ ಭಂವರ್ ಸಿಂಗ್ ಮೀನಾ ಅವರನ್ನು ಜಿಲ್ಲಾ ಪಂಚಾಯತ್ ಸಿಇಒ ಸ್ಥಾನದಿಂದ ವರ್ಗಾಯಿಸಿ, ಚಿಕ್ಕಮಗಳೂರು ಜಿಲ್ಲಾಧಿಕಾರಿ ಸ್ಥಾನಕ್ಕೆ ನೇಮಕ ಮಾಡಲಾಗಿದೆ. ಅದರಂತೆಯೇ 2019ರ ಐಎಎಸ್ ಬ್ಯಾಚಿನ ರಾಹುಲ್ ಸಂಕನೂರ ಅವರು ಐಟಿ ಬಿಟಿ ಇಲಾಖೆಯ ನಿರ್ದೇಶಕರಾಗಿದ್ದರು. ಅವರನ್ನು ಕೂಡಲೇ ವರ್ಗಾಯಿಸಿ, ಕಲಬುರಗಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಯನ್ನಾಗಿ ನೇಮಿಸಲಾಗಿದೆ ಎಂದು ತಿಳಿಸಲಾಗಿದೆ.

ವಾರ್ತಾ ಭಾರತಿ 19 May 2026 12:31 pm

ಹೀಲಲಿಗೆ - ರಾಜಾನುಕುಂಟೆ ಸಂಪರ್ಕಿಸಲಿರುವ ‘ಕನಕ’ಮಾರ್ಗಕ್ಕೆ ಮರುಜೀವ ; ಕಾಮಗಾರಿ ಶುರು

ಬೆಂಗಳೂರು ಉಪನಗರ ರೈಲು ಯೋಜನೆಯ (ಬಿಎಸ್‌ಟಿಪಿ) 4ನೇ ಕಾರಿಡಾರ್ ಆದ ‘ಕನಕ’ ಮಾರ್ಗದ (ಹೀಲಲಿಗೆ - ರಾಜಾನುಕುಂಟೆ) ಕಾಮಗಾರಿಗಳು ಈಗ ಮರುಜೀವ ಪಡೆಯುತ್ತಿವೆ. 2024ರ ಕೊನೆಯಲ್ಲಿ ಎಲ್‌ ಆ್ಯಂಡ್‌ ಟಿ ಕಂಪನಿಯು ಒಪ್ಪಂದದಿಂದ ಹಿಂದೆ ಸರಿದಿದ್ದರಿಂದ ಈ ಮಾರ್ಗದ ನಿರ್ಮಾಣ ಕೆಲಸ ಅರ್ಧಕ್ಕೆ ನಿಂತಿತ್ತು. ಪ್ರಸ್ತುತ ರಾಜಾನುಕುಂಟೆ, ಹೀಲಲಿಗೆ ಮತ್ತು ಅಂಬೇಡ್ಕರ್‌ ನಗರ ರೈಲ್ವೆ ನಿಲ್ದಾಣಗಳ ಕೆಲಸಗಳು ಪ್ರತ್ಯೇಕ ಟೆಂಡರ್‌ಗಳ ಮೂಲಕ ನಡೆಯುತ್ತಿವೆ.

ವಿಜಯ ಕರ್ನಾಟಕ 19 May 2026 12:19 pm

ಜಗತ್ತೇ ನಿನ್ನ ವಿರುದ್ಧ ನಿಂತರೂ ,ನಾನು ನಿನ್ನ ಜೊತೆ ಇರುವೆ

ಸ್ಯಾಂಡಲ್‌ವುಡ್‌ ನಟ ದರ್ಶನ್ ತೂಗುದೀಪ ಹಾಗೂ ವಿಜಯಲಕ್ಷ್ಮಿ ದಂಪತಿಗೆ ಇಂದು 23ನೇ ವಿವಾಹ ವಾರ್ಷಿಕೋತ್ಸವದ ಸಂಭ್ರಮ. ಹೀಗಿರುವಾಗ ಗಂಡನ ನೆನೆದು ಪತ್ನಿ ವಿಜಯಲಕ್ಷ್ಮೀ ಗಂಡನ ಕೈ ಹಿಡಿದಿರುವ ಭಾವುಕ ಪೋಸ್ಟ್‌ ಹಂಚಿಕೊಂಡಿದ್ದಾರೆ. ಇನ್ನು ಪೋಸ್ಟ್‌ನಲ್ಲಿ ಪ್ರತಿ ಬಿರುಗಾಳಿ ಪ್ರತಿ ಮೌನದಲ್ಲಿಯೂ ನಾನು ನಿನ್ನ ಕೈಹಿಡಿಯುತ್ತೇನೆ. ಸಂದರ್ಭಗಳು ನಮ್ಮನ್ನು ದೂರ ಮಾಡಲು ಎಷ್ಟೇ ಪ್ರಯತ್ನಿಸಿದರೂ ನನ್ನ ಹೃದಯ ಯಾವಾಗಲೂ ನಿನ್ನನ್ನೇ ಆರಿಸುತ್ತದೆ. ನಿನ್ನ ವಿರುದ್ಧ ಜಗತ್ತೇ ನಿಂತರೂ ನಾನು ನಿನ್ನ ಜೊತೆಗೇ ಇರುತ್ತೇನೆ. ಏನೇ ಬರಲಿ ನಿನ್ನ ಕೈಬಿಡಲ್ಲ […] The post ಜಗತ್ತೇ ನಿನ್ನ ವಿರುದ್ಧ ನಿಂತರೂ ,ನಾನು ನಿನ್ನ ಜೊತೆ ಇರುವೆ first appeared on Vistara News .

ವಿಸ್ತಾರ ನ್ಯೂಸ್ 19 May 2026 12:16 pm

IPL 2026 : ಮೂವರು ಸೇಫ್, ಕೊನೆಯ ಒಂದು ಸೀಟಿಗೆ ಬಿಗ್’ಫೈಟ್ - ಯಾರಿಗೆ ಸಿಗುತ್ತೆ ಪ್ಲೇಆಫ್ ಟಿಕೆಟ್?

Playoff scanario of IPL 2026: ಚೆನ್ನೈ ಸೂಪರ್ ಕಿಂಗ್ಸ್ ಜೊತೆಗಿನ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ಗೆಲುವು ಸಾಧಿಸಿದೆ. ಆ ಮೂಲಕ, ಮೂರನೇ ತಂಡವಾಗಿ ಪ್ಲೇಆಫ್’ಗೆ ಕ್ವಾಲಿಫೈ ಆಗಿದೆ. ಗುಜರಾತ್ ತಂಡ ಕೂಡಾ ಮುಂದಿನ ಹಂತಕ್ಕೆ ಪ್ರವೇಶವನ್ನು ಪಡೆದಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ, ಹದಿನೆಂಟು ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. ನಾಲ್ಕನೇ ಸ್ಥಾನಕ್ಕೆ ಐದು ತಂಡಗಳ ನಡುವೆ ಪೈಪೋಟಿ ಏರ್ಪಟ್ಟಿದೆ.

ವಿಜಯ ಕರ್ನಾಟಕ 19 May 2026 12:15 pm

ದುಬಾರಿ ಆನೆ ದುರಂತದಲ್ಲಿ ಮಹಿಳೆ ಸಾವು: 20 ಲಕ್ಷ ರೂ ಪರಿಹಾರ ಘೋಷಣೆ, ಪ್ರವಾಸಿಗರ ರಕ್ಷಣೆಗೆ ಸರ್ಕಾರ ಹೊಸ ಗೈಡ್‌ಲೈನ್ಸ್

ಮಡಿಕೇರಿ: ಕೊಡಗಿನ ದುಬಾರೆ ಆನೆ ಕ್ಯಾಂಪ್‌ನಲ್ಲಿ ನಡೆದ ಭೀಕರ ದುರಂತವೊಂದರಲ್ಲಿ ಪ್ರವಾಸಿ ಮಹಿಳೆಯೊಬ್ಬರು ಪ್ರಾಣ ಕಳೆದುಕೊಂಡಿದ್ದಾರೆ. ಈ ಆಘಾತಕಾರಿ ಘಟನೆಯ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ರಾಜ್ಯ ಸರ್ಕಾರ ಹಾಗೂ ಅರಣ್ಯ ಇಲಾಖೆಯು ಪ್ರವಾಸಿಗರ ಸುರಕ್ಷತೆಗಾಗಿ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದ್ದು, ಕ್ಯಾಂಪ್‌ನಲ್ಲಿ ಹೊಸ ಮಾರ್ಗಸೂಚಿಗಳನ್ನು ಜಾರಿಗೊಳಿಸಿದೆ. ದುರಂತದಲ್ಲಿ ಮೃತಪಟ್ಟ ಮಹಿಳೆಯ ಕುಟುಂಬಕ್ಕೆ ರಾಜ್ಯ ಸರ್ಕಾರವು 20 ಲಕ್ಷ ರೂಪಾಯಿಗಳ ಪರಿಹಾರವನ್ನು

ಒನ್ ಇ೦ಡಿಯ 19 May 2026 12:09 pm

ಸಾಧನಾ ಸಮಾವೇಶಕ್ಕೆ ತೆರಳುವ ಮುನ್ನ ಸಿದ್ದು ಆಪ್ತರ ಗೌಪ್ಯ ಸಭೆ! ಬ್ರೇಕ್ ಫಾಸ್ಟ್ ಹೆಸರಿನಲ್ಲಿ ಏನೆಲ್ಲಾ ಚರ್ಚೆ

ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಮೇ 20 ರಂದು ಮೂರು ವರ್ಷ ತುಂಬುತ್ತಿದೆ. ಈ ಹಿನ್ನೆಲೆಯಲ್ಲಿ ಒಂದು ದಿನಕ್ಕೂ ಮೊದಲೇ ತುಮಕೂರಿನಲ್ಲಿ ಸಾಧನಾ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ. ಸಾಧನಾ ಸಮಾವೇಶಕ್ಕೆ ಸಿದ್ದರಾಮಯ್ಯ ಆಪ್ತ ಸಚಿವರು ಜೊತೆಗೆ ತೆರಳಿದ್ದಾರೆ. ಇದಕ್ಕೂ ಮೊದಲು ಅವರೆಲ್ಲಾ ಸಚಿವ ಸತೀಶ್ ಜಾರಕಿಹೊಳಿ ಅವರ ನಿವಾಸದಲ್ಲಿ ಬ್ರೇಕ್ ಫಾಸ್ಟ್ ಮೀಟಿಂಗ್ ನಡೆಸಿದ್ದರು. ನಾಯಕತ್ವ ಬದಲಾವಣೆ ಚರ್ಚೆಯ ಸಂದರ್ಭದಲ್ಲಿ ಸಿದ್ದರಾಮಯ್ಯ ಆಪ್ತರ ಗೌಪ್ಯ ಸಭೆ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಈ ಕುರಿತಾದ ವಿವರ ಇಲ್ಲಿದೆ.

ವಿಜಯ ಕರ್ನಾಟಕ 19 May 2026 12:06 pm

ಮುಷ್ಕರಕ್ಕೆ ಸಜ್ಜಾಗಿದ್ದ ಸಾರಿಗೆ ಸಂಘಟನೆಗಳಿಗೆ ಹೈಕೋರ್ಟ್ ಶಾಕ್ ; ನಾಳಿನ ಮುಷ್ಕರಕ್ಕೆ ಬ್ರೇಕ್

ಮೇ 20 ರಿಂದ ಕರೆದಿದ್ದ ಸಾರಿಗೆ ನೌಕರರ ಮುಷ್ಕರ ಆಕ್ಷೇಪಿಸಿ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್, ನಾಳೆ ಮುಷ್ಕರ ನಡೆಸದಂತೆ ಸಾರಿಗೆ ಸಂಘಟನೆಗಳಿಗೆ ನಿರ್ಬಂಧ ವಿಧಿಸಿದೆ. ಅಲ್ಲದೆ, ಕಾರ್ಮಿಕ ಸಂಘಟನೆಗಳ ಜೊತೆ ಮಾತುಕತೆ ನಡೆಸುವಂತೆ ಸರ್ಕಾರಕ್ಕೆ ಸೂಚನೆ ನೀಡಿದೆ. ನ್ಯಾಯಮೂರ್ತಿಗಳಾದ ಸೂರಜ್ ಗೋವಿಂದರಾಜು ಮತ್ತು ಮನ್ಮದರಾವ್ ಅವರಿದ್ದ ಪೀಠ ಈ ಆದೇಶ ನೀಡಿರುವುದರಿಂದ ನಾಳೆ ಎಂದಿನಂತೆ ಸಾರಿಗೆ ಬಸ್ ಸಂಚಾರ ಇರಲಿದ್ದು, ಮುಂದಿನ ವಿಚಾರಣೆಯನ್ನು ಮೇ 21ಕ್ಕೆ ಮುಂದೂಡಲಾಗಿದೆ.

ವಿಜಯ ಕರ್ನಾಟಕ 19 May 2026 11:54 am

Adani: ಉದ್ಯಮಿ ಅದಾನಿ ಮೇಲಿನ ಕ್ರಿಮಿನಲ್ ಪ್ರಕರಣಗಳ ಕೈ ಬಿಟ್ಟ ಯುಎಸ್ ನ್ಯಾಯ ಇಲಾಖೆ

ಗೌತಮ್ ಅದಾನಿ ಮತ್ತು ಅವರ ಸೋದರಳಿಯ ಸಾಗರ್ ಅದಾನಿ ಅವರಿಗೆ ಸಿಹಿ ಸುದ್ದಿಯೊಂದು ಸಿಕ್ಕಿದೆ. ಅಮೆರಿಕಾದ ನ್ಯಾಯಾಂಗ ಇಲಾಖೆ (DOJ) ಇವರ ವಿರುದ್ಧದ ನ್ಯೂಯಾರ್ಕ್‌ನಲ್ಲಿ ದಾಖಲಾಗಿದ್ದ ಸೆಕ್ಯುರಿಟೀಸ್ ಮತ್ತು ವೈರ್ ವಂಚನೆ ಸೇರಿದಂತೆ ಎಲ್ಲಾ ಕ್ರಿಮಿನಲ್ ಆರೋಪ ಪ್ರಕರಣಗಳನ್ನು ಶಾಶ್ವತವಾಗಿ ಕೈಬಿಟ್ಟಿದೆ. ಬಿಲಿಯನೇರ್ ಉದ್ಯಮಿ ಗೌತಮ್ ಅದಾನಿ ಮತ್ತು ಅದಾನಿ ಗ್ರೂಪ್‌ಗೆ ಇದು ಬಹುದೊಡ್ಡ ಸಮಾಧಾನ ತಂದಿದೆ.

ಒನ್ ಇ೦ಡಿಯ 19 May 2026 11:51 am

ಬೀದಿ ನಾಯಿಗಳನ್ನು ಆಶ್ರಯ ಕೇಂದ್ರಗಳಿಗೆ ಸ್ಥಳಾಂತರಿಸಬೇಕು: ಸುಪ್ರೀಂ ಕೋರ್ಟ್ ಖಡಕ್‌ ಸೂಚನೆ

ಬೀದಿ ನಾಯಿ ಕಡಿತ ಪ್ರಕರಣಗಳ ಕುರಿತು ಕಳವಳ ವ್ಯಕ್ತಪಡಿಸಿದ ನ್ಯಾಯಾಲಯ

ವಾರ್ತಾ ಭಾರತಿ 19 May 2026 11:45 am

ತಲಪಾಡಿ : ಸೋಶಿಯಲ್ ಟೀಮ್ ವತಿಯಿಂದ ವಿದ್ಯಾರ್ಥಿಗಳಿಗೆ ಸನ್ಮಾನ, ಉಚಿತ ಪುಸ್ತಕ ವಿತರಣೆ

ಉಳ್ಳಾಲ: ಸೋಶಿಯಲ್ ಟೀಮ್ ಇದರ ಆಶ್ರಯದಲ್ಲಿ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಣೆ, ಅತ್ಯಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮ ತಲಪಾಡಿಯಲ್ಲಿ  ನಡೆಯಿತು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಡಾ.ಅಬ್ದುಲ್ ರಶೀದ್ ಝೈನಿ ಅವರು, ಶಿಕ್ಷಣದ ಮಹತ್ವ ಹಾಗೂ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳಿಗೆ ನೀಡುವ ಸಹಕಾರದ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದರು. ಕೋಟೆಕಾರ್ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಕೃಷ್ಣ ಶೆಟ್ಟಿ ಮಾತನಾಡಿ, ದೇಶದ ಅಭಿವೃದ್ಧಿಗೆ ಶಿಕ್ಷಣ ಅಗತ್ಯ ಇದೆ. ಇದಕ್ಕೆ ಎಲ್ಲರೂ ಒತ್ತು ನೀಡಬೇಕು. ವಿದ್ಯಾರ್ಥಿಗಳು ಆಸಕ್ತಿಯಿಂದ ಶಿಕ್ಷಣ ಪಡೆಯಬೇಕು ಎಂದರು. ಈ ಸಂದರ್ಭದಲ್ಲಿ ಅರ್ಹ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಣೆ ಮಾಡಲಾಯಿತು. ಎಸೆಸೆಲ್ಸಿ ಮತ್ತು ಪಿಯುಸಿಯಲ್ಲಿ ಅತ್ಯಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಬಡ ಕುಟುಂಬದ ವ್ಯಕ್ತಿಯ ಚಿಕಿತ್ಸೆಗೆ , ಐದು ಬಡ ವಿದ್ಯಾರ್ಥಿಗಳ ಶಾಲಾ ಶುಲ್ಕ ಪಾವತಿಸಲು ಸಹಾಯ ಧನ ಚೆಕ್ ವಿತರಣೆ ಮಾಡಲಾಯಿತು. ಸಾಮಾಜಿಕ ಸೇವೆಯಲ್ಲಿ ಗಣನೀಯ ಸೇವೆ ಸಲ್ಲಿಸಿದ, ಸೋಶಿಯಲ್ ಫಾರೂಕ್, ಇಬ್ರಾಹಿಂ ಹುಸೈನ್, ಅಶ್ಫಾಕ್ ಮರವೂರ್, ವಾಣಿ ತಲಪಾಡಿ , ಹಾಗೂ ನಝಿಮಾ ಾವರನ್ನು ಸನ್ಮಾನಿಸಲಾಯಿತು, ಈ ಸಂದರ್ಭದಲ್ಲಿ ಅನಿವಾಸಿ ಭಾರತೀಯ ಅಶ್ಫಾಕ್ ಮರವೂರು, ತಲಪಾಡಿ ಗ್ರಾ.ಪಂ.ಪಿಡಿಒ ಸಂಧ್ಯಾ, ಅಬ್ಬಾಸ್ ಉಚ್ಚಿಲ, ಸಂಶುದ್ದೀನ್ ಉಚ್ಚಿಲ, ಜಯ ಪ್ರಕಾಶ್ ಎಂ ಆರ್, ಬಿ. ಎಸ್ ಇಸ್ಮಾಯಿಲ್, ವೈಭವ ಶೆಟ್ಟಿ ,ಇಬ್ರಾಹಿಂ, ಮಕ್ಯಾರ್ ಅಬ್ದುಲ್ ಖಾದರ್ ಮತ್ತಿತರರು ಉಪಸ್ಥಿತರಿದ್ದರು. ಸೋಶಿಯಲ್ ಫಾರೂಕ್ ಸ್ವಾಗತಿಸಿದರು. ಇಸ್ಮಾಯಿಲ್ ವಂದಿಸಿದರು.

ವಾರ್ತಾ ಭಾರತಿ 19 May 2026 11:45 am

ಭಾರತಕ್ಕೆ 428 ಮಿಲಿಯನ್ ಡಾಲರ್ ರಕ್ಷಣಾ ಬೆಂಬಲ ಘೋಷಿಸಿದ ಅಮೆರಿಕ; ಹಿಂದೂಸ್ತಾನಕ್ಕೆ ಟ್ರಂಪ್‌ ಚೀನಾ ಪ್ರವಾಸದ ಲಾಭ!

ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಚೀನಾ ಪ್ರವಾಸದಿಂದ ಆ ಎರಡು ರಾಷ್ಟ್ರಗಳಿಗೆ ಎಷ್ಟು ಅನುಕೂಲವಾಯಿತೋ ತಿಳಿಯದು. ಆದರೆ ಚೀನಾದಲ್ಲಿ ಅನುಭವಿಸಿದ ಅವಮಾನದಿಂದ ಕೆರಳಿರುವ ಡೊನಾಲ್ಡ್‌ ಟ್ರಂಪ್‌, ತಮ್ಮ ಪ್ರವಾಸ ಮುಗಿದ ಕೆಲವೇ ದಿನಗಳಲ್ಲಿ ಭಾರತಕ್ಕೆ ಬಂಪರ್‌ ರಕ್ಷಣಾ ಕೊಡುಗೆಗಳನ್ನು ಘೋಷಿಸಿದ್ದಾರೆ. ಅಮೆರಿಕ-ಭಾರತ ರಕ್ಷಣಾ ಒಪ್ಪಂದದ ಭಾಗವಾಗಿ ಅಮೆರಿಕವು ತನ್ನ ಅತ್ಯಾಧುನಿಕ ಅಪಾಚೆ ಹೆಲಿಕಾಪ್ಟರ್‌ಗಳು ಮತ್ತು ಹೊವಿಟ್ಜರ್‌ ಫಿರಂಗಿಗಳನ್ನು ಭಾರತಕ್ಕೆ ಮಾರಾಟ ಮಾಡಲಿದೆ. ಒಟ್ಟು 428 ಮಿಲಿಯನ್‌ ಡಾಲರ್‌ ರಕ್ಷಣಾ ಒಪ್ಪಂದದ ಡಿಟೇಲ್ಸ್‌ ಇಲ್ಲಿದೆ.

ವಿಜಯ ಕರ್ನಾಟಕ 19 May 2026 11:38 am

ಪತ್ರಿಕಾ ಸ್ವಾತಂತ್ರ್ಯ ಕುಗ್ಗುತ್ತಿದೆ, ಅಲ್ಪಸಂಖ್ಯಾತರ ಹಕ್ಕುಗಳಿಗೆ ಧಕ್ಕೆ: ಡಚ್ ಪ್ರಧಾನಿ ಹೇಳಿಕೆಗೆ ಭಾರತ ತಿರುಗೇಟು

‘ಭಾರತದ ಬಗ್ಗೆ ತಿಳುವಳಿಕೆಯ ಕೊರತೆ’ ಎಂದ ವಿದೇಶಾಂಗ ಸಚಿವಾಲಯ

ವಾರ್ತಾ ಭಾರತಿ 19 May 2026 11:37 am

16 ದಿನಗಳಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಗೋಪಾಲ್ ಸಿಂಗ್ ಠಾಕೂರ್ ಆರೋಗ್ಯದಲ್ಲಿ ಏರುಪೇರು : ಆಸ್ಪತ್ರೆಗೆ ದಾಖಲು

ಔರಾದ್: ಎಸ್ಐಆರ್ ಹಾಗೂ ಇವಿಎಂ ಸಂಪೂರ್ಣ ರದ್ದತಿಗೆ ಆಗ್ರಹಿಸಿ ಕಳೆದ 16 ದಿನಗಳಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಸಾಮಾಜಿಕ ಕಾರ್ಯಕರ್ತ ಗೋಪಾಲ್ ಸಿಂಗ್ ಠಾಕೂರ್ ಅವರ ಆರೋಗ್ಯದಲ್ಲಿ ಏರುಪೇರಾಗಿದ್ದು, ಚಿಕಿತ್ಸೆಗಾಗಿ ಅವರನ್ನು ಪಟ್ಟಣದ ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಗೋಪಾಲ್ ಸಿಂಗ್ ಠಾಕೂರ್ ಅವರು ಪಟ್ಟಣದ ತಹಸೀಲ್ದಾರ್ ಕಚೇರಿ ಆವರಣದಲ್ಲಿ ಮೇ.3ರಿಂದ ಕೇವಲ ನೀರು ಸೇವಿಸುತ್ತಲೇ ಏಕಾಂಗಿಯಾಗಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದರು. ಅವರ ಹೋರಾಟ ಇಂದು 17ನೇ ದಿನಕ್ಕೆ ಕಾಲಿಟ್ಟಿದೆ. ಮಂಗಳವಾರ ಬೆಳಿಗ್ಗೆ ಅವರು ಏಕಾಏಕಿ ಅಸ್ವಸ್ಥಗೊಂಡು, ರಕ್ತದೊತ್ತಡ (ಬಿಪಿ) ಕಡಿಮೆಯಾಗಿದ್ದು, ತಲೆಸುತ್ತಿ ಮೂರ್ಛೆ ಹೋಗಿದ್ದಾರೆ ಎನ್ನಲಾಗಿದೆ. ಸ್ಥಳೀಯರು ತಕ್ಷಣವೇ ಅವರನ್ನು ಆಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ಸೇರಿಸಿದ್ದಾರೆ. ಸದ್ಯಕ್ಕೆ ಅವರು ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದು ಬಂದಿದೆ.

ವಾರ್ತಾ ಭಾರತಿ 19 May 2026 11:35 am

ಸಾರಿಗೆ ಮಷ್ಕರಕ್ಕೆ ಹೈಕೋರ್ಟ್‌ ಬ್ರೇಕ್‌

ರಾಜ್ಯಾದ್ಯಂತ ಸಾರಿಗೆ ನೌಕರರ ಮುಷ್ಕರಕ್ಕೆ ಹೈಕೋರ್ಟ್‌ ನಿರ್ಬಂಧ ವಿಧಿಸಿದೆ. ಸಾರಿಗೆ ಮುಷ್ಕರವನ್ನು ನಡೆಸಬಾರದು ಎಂದು ಸಾರಿಗೆ ಸಂಘಟನೆಗಳಿಗೆ ಹೈಕೋರ್ಟ್‌ ಸೂಚನೆ ನೀಡಿದ್ದು, ಸರ್ಕಾರವು ಕೂಡಲೇ ಸಂಘಟನೆಗಳೊಂದಿಗೆ ಮಾತುಕತೆ ನಡೆಸಬೇಕು ಎಂದು ನಿರ್ದೇಶಿಸಿದೆ. ಮೇ.20 ರಿಂದ ರಾಜ್ಯಾದ್ಯಂತ ಸರ್ಕಾರಿ ಸಾರಿಗೆ ನೌಕರರು ಮುಷ್ಕರ ನಡೆಸಲು ಮುಂದಾಗಿದರು. ಮುಷ್ಕರಕ್ಕೆ ನಿರ್ಬಂಧ ವಿಧಿಸಿರುವ ಹೈಕೋರ್ಟ್‌ ಸಾರ್ವಜನಿಕರಿಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಬೇಕೆಂದು ಸರ್ಕಾರಕ್ಕೆ ಸೂಚಿಸಿದೆ. ಇದೇ ವೇಳೆ ಸಾರಿಗೆ ಸಚಿವರೊಂದಿಗೆ ಸಂಘಟನೆಗಳು ಮಾತುಕತೆ ನಡೆಸುವಂತೆ ಸಲಹೆ ನೀಡಿದೆ. ಈ ಸಂಬಂಧ ಸಾರಿಗೆ ಸಂಘಟನೆಗಳು, […] The post ಸಾರಿಗೆ ಮಷ್ಕರಕ್ಕೆ ಹೈಕೋರ್ಟ್‌ ಬ್ರೇಕ್‌ first appeared on Vistara News .

ವಿಸ್ತಾರ ನ್ಯೂಸ್ 19 May 2026 11:33 am

ಉಳ್ಳಾಲ : ಸಮುದ್ರ ತೀರದಲ್ಲಿ ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆ

ಉಳ್ಳಾಲ : ಅಪರಿಚಿತ ವ್ಯಕ್ತಿಯೊಬ್ಬರ ಮೃತದೇಹ ಉಳ್ಳಾಲ ಸಮುದ್ರ ತೀರ ಪ್ರದೇಶದಲ್ಲಿ ಪತ್ತೆಯಾಗಿದೆ. ಘಟನಾ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಮೃತದೇಹವನ್ನು ವಶಕ್ಕೆ ಪಡೆದು ಪರಿಶೀಲನೆ ನಡೆಸುತ್ತಿದ್ದಾರೆ. ಮೃತ ವ್ಯಕ್ತಿಯ ಗುರುತು ಇನ್ನು ಪತ್ತೆಯಾಗಿಲ್ಲ ಎಂದು ತಿಳಿದುಬಂದಿದೆ. ಇವರು ಬೆಳಿಗ್ಗೆ ಬೀಚ್ ನಲ್ಲಿ ಕುಳಿತು ಮಾತನಾಡುತ್ತಿದ್ದರು ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತದೇಹವನ್ನು ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದ್ದು, ವಾರಿಸುದಾರರ ಪತ್ತೆಗೆ ಪೊಲೀಸರು ಮುಂದಾಗಿದ್ದಾರೆ.ಇವರು ಆತ್ಮಹತ್ಯೆ ಮಾಡಿಕೊಂಡಿರಬೇಕು ಎಂದು ಪೊಲೀಸರು ಶಂಕಿಸಿದ್ದಾರೆ. ಈ ವ್ಯಕ್ತಿಯನ್ನು ಯಾರಾದರೂ ಗುರುತಿಸಿದಲ್ಲಿ ಸಮೀಪದ ಪೊಲೀಸ್ ಠಾಣೆಯನ್ನು ಸಂಪರ್ಕಿಸುವಂತೆ ಮನವಿ ಮಾಡಲಾಗಿದೆ.

ವಾರ್ತಾ ಭಾರತಿ 19 May 2026 11:26 am

ಮತ್ತೆ ಏರಿಕೆಯಾದ ಚಿನ್ನದ ಬೆಲೆ; ಮಂಗಳೂರಿನಲ್ಲಿ ಇಂದಿನ ದರವೆಷ್ಟು?

ಭಾರತ ಬೆಳ್ಳಿ ಮತ್ತು ಚಿನ್ನದ ಆಮದಿನ ಮೇಲೆ ನಿರ್ಬಂಧಗಳನ್ನು ಹೇರಿರುವ ಹಿನ್ನೆಲೆಯಲ್ಲಿ ಕಚ್ಚಾ ತೈಲ ಬೆಲೆಗಳ ಏರಿಳಿತಗಳು ಮತ್ತು ಯುದ್ಧಕ್ಕೆ ಸಂಬಂಧಿಸಿದ ನಿರಂತರ ಅನಿಶ್ಚಿತತೆ ಮಾರುಕಟ್ಟೆಯಲ್ಲಿ ಪ್ರತಿಕ್ರಿಯಿಸುವ ನಿರೀಕ್ಷೆಯಿದೆ. ಮಧ್ಯ ಪ್ರಾಚ್ಯದ ಪ್ರಮುಖ ನಾಯಕರ ಮನವಿಗಳನ್ನು ಅನುಸರಿಸಿ ಇರಾನ್ ಮೇಲೆ ಯೋಜಿಸಲಾದ ಸೇನಾ ದಾಳಿಯನ್ನು ಮುಂದೂಡಿರುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ ನಂತರ ಚಿನ್ನದ ಬೆಲೆಯಲ್ಲಿ ಏರಿಕೆಯಾಗಿದೆ. ಈಗಿನ ಕದನ ವಿರಾಮವು ಜಾಗತಿಕ ಕಚ್ಚಾ ತೈಲ ಪೂರೈಕೆಯನ್ನು ಮತ್ತಷ್ಟು ಅಡ್ಡಿಪಡಿಸುವ ಮತ್ತು ಹಣದುಬ್ಬರದ ಕಳವಳಗಳನ್ನು ಉಂಟು ಮಾಡುವ ತಕ್ಷಣದ ಏರಿಕೆಯ ಭಯವನ್ನು ಕಡಿಮೆ ಮಾಡಿತು. ಏರಿದ ಕಚ್ಚಾ ತೈಲ ಬೆಲೆಗಳು ಹಣದುಬ್ಬರ ಹೆಚ್ಚಿಸಬಹುದು ಮತ್ತು ಚಿನ್ನವನ್ನು ಹಣದುಬ್ಬರದ ವಿರುದ್ಧ ಸಂಭವನೀಯ ನಷ್ಟದ ವಿರುದ್ಧ ರಕ್ಷಣೆ ಎಂದು ಪರಿಗಣಿಸಲಾಗಿದ್ದರೂ, ಹೆಚ್ಚಿನ ಬಡ್ಡಿದರಗಳು ಲಾಭ ನೀಡದ ಲೋಹದ ಮೇಲೆ ಹೊರೆಯಾಗುತ್ತವೆ. ಅಮೆರಿಕ-ಇರಾನ್ ಸಂಘರ್ಷದಿಂದಾಗಿ, ದೇಸಿ ಮತ್ತು ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಚಿನ್ನ ಮತ್ತು ಬೆಳ್ಳಿಯ ಬೆಲೆಗಳು ಏರಿಳಿತಗೊಳ್ಳುವ ನಿರೀಕ್ಷೆಯಿದೆ. ಭಾರತ ಬೆಳ್ಳಿ ಮತ್ತು ಚಿನ್ನದ ಆಮದಿನ ಮೇಲೆ ನಿರ್ಬಂಧಗಳನ್ನು ಹೇರಿರುವ ಹಿನ್ನೆಲೆಯಲ್ಲಿ ಕಚ್ಚಾ ತೈಲ ಬೆಲೆಗಳ ಏರಿಳಿತಗಳು ಮತ್ತು ಯುದ್ಧಕ್ಕೆ ಸಂಬಂಧಿಸಿದ ನಿರಂತರ ಅನಿಶ್ಚಿತತೆ ಮಾರುಕಟ್ಟೆಯಲ್ಲಿ ಪ್ರತಿಕ್ರಿಯಿಸುವ ನಿರೀಕ್ಷೆಯಿದೆ. ಮತ್ತೆ ಏರಿದ ಚಿನ್ನದ ದರ ಮೇ 19ರಂದು ಮಂಗಳವಾರ ಬೆಂಗಳೂರಿನ ಮಾರುಕಟ್ಟೆಗಳಲ್ಲಿ 24 ಕ್ಯಾರೆಟ್ ಶುದ್ಧ ಚಿನ್ನದ ಬೆಲೆ ಸೋಮವಾರ ಸಂಜೆಯ ಬೆಲೆಗೆ ಹೋಲಿಸಿದರೆ ಪ್ರತಿ ಗ್ರಾಂಗೆ 82 ರೂ. ಏರಿಕೆ ಕಂಡು ಹತ್ತು ಗ್ರಾಂ ಬೆಲೆ 1,57,040 ರೂ.ಗೆ ಬಂದು ನಿಂತಿದೆ.  22 ಕ್ಯಾರೆಟ್  ಚಿನ್ನದ ಬೆಲೆಯು ಪ್ರತಿ ಗ್ರಾಂಗೆ 75 ರೂ. ಏರಿಕೆಯಾಗಿ ಹತ್ತು ಗ್ರಾಂಗೆ 1,43,950 ರೂ.ಗೆ ತಲುಪಿದೆ. 18 ಕ್ಯಾರೆಟ್ ಚಿನ್ನವು ಪ್ರತಿ ಗ್ರಾಂಗೆ 61 ರೂ.ಏರಿಕೆಯಾಗಿ ಹತ್ತು ಗ್ರಾಂಗೆ 1,17,780 ರೂ.ಗೆ ತಲುಪಿದೆ. ಮಂಗಳೂರಿನಲ್ಲಿ ಚಿನ್ನದ ದರವೆಷ್ಟಿದೆ? ಮೇ.19ರಂದು ಮಂಗಳವಾರ ಬೆಳಗಿನ 11 ಗಂಟೆಯ ವಹಿವಾಟಿನಲ್ಲಿ ಮಂಗಳೂರಿನಲ್ಲಿ ಚಿನ್ನದ ಬೆಲೆ ಮತ್ತೆ ಏರಿಕೆಯಾಗಿದೆ. ಒಂದು ಗ್ರಾಂ 24 ಕ್ಯಾರೆಟ್ ಚಿನ್ನದ ದರ 15,704 (+82) ರೂ.ನಷ್ಟಿದೆ. ಒಂದು ಗ್ರಾಂ 22 ಕ್ಯಾರೆಟ್ ಚಿನ್ನದ ದರ 14,395 (+75) ರೂ. ಮತ್ತು ಒಂದು ಗ್ರಾಂ 18 ಕ್ಯಾರೆಟ್ ಚಿನ್ನದ ದರ 11,778 (+61) ರೂ. ಬೆಲೆಗೆ ತಲುಪಿದೆ. ಇಂದಿನ ಬೆಳ್ಳಿಯ ದರವೆಷ್ಟು? ಮಾರ್ಚ್ ಆರಂಭದಲ್ಲಿ ಹೆಚ್ಚು ಏರಿಳಿತ ಕಾಣದೆ ಸ್ಥಿರವಾಗಿದ್ದ ಬೆಳ್ಳಿಯ ದರ, ಮಾರ್ಚ್ 09ರ ನಂತರ ಸ್ವಲ್ಪ ಕುಸಿತದ ಹಾದಿಯಲ್ಲಿತ್ತು. ಏಪ್ರಿಲ್ ಆರಂಭದಲ್ಲಿ 2,55,000 ರೂ.ಗೆ ಬಂದು ತಲುಪಿದ ನಂತರ, ಬಹುತೇಕ ತಿಂಗಳಿಡೀ ಅದೇ ಬೆಲೆಯಲ್ಲಿ ಮುಂದುವರಿದಿತ್ತು. ಕಳೆದ ವಾರದಿಂದ ಬೆಳ್ಳಿಯ ಬೆಲೆ ಏರುತ್ತಲೇ ಇದೆ. ಶುಕ್ರವಾರ ಬೆಳ್ಳಿಯ ಬೆಲೆ ಪ್ರತಿ ಕೆಜಿಗೆ 3,05,000 ರೂ.ಗೆ ಬಂದು ತಲುಪಿತ್ತು. ಆದರೆ ಶನಿವಾರ ಪ್ರತಿ ಗ್ರಾಂಗೆ 10 ರೂ. ಕಡಿಮೆಯಾಗಿ ಪ್ರತಿ ಕೆಜಿ ಬೆಳ್ಳಿಯ ಬೆಲೆ 2,80,000 ರೂ.ಗೆ ಬಂದು ನಿಂತಿದೆ. ಸೋಮವಾರ ಬೆಳ್ಳಿಯ ಬೆಲೆ ಪ್ರತಿ ಕೆಜಿಗೆ 2,79,900 ರೂ.ಗೆ ಕುಸಿದಿದೆ. ಇದೀಗ ಮಂಗಳವಾರ ಕೆಜಿ ಬೆಳ್ಳಿಗೆ 2,90,100ರೂ. ಆಗಿದೆ. ವಿವಿಧ ನಗರಗಳಲ್ಲಿ 1 ಗ್ರಾಂ ಚಿನ್ನದ ದರ (ಬೆಳಗಿನ ವಹಿವಾಟು) ಹೇಗಿದೆ? ದಿಲ್ಲಿ: 24 ಕ್ಯಾರೆಟ್ ಚಿನ್ನದ ದರ 15,719 (+82) ರೂ., 22 ಕ್ಯಾರೆಟ್ ಚಿನ್ನದ ದರ 14,410 (+75) ರೂ. ಮುಂಬೈ: 24 ಕ್ಯಾರೆಟ್ ಚಿನ್ನದ ದರ 15,704 (+82) ರೂ., 22 ಕ್ಯಾರೆಟ್ ಚಿನ್ನದ ದರ 14,395 (+75) ರೂ. ಅಹ್ಮದಾಬಾದ್‌: 24 ಕ್ಯಾರೆಟ್ ಚಿನ್ನದ ದರ 15,709 (+82) ರೂ., 22 ಕ್ಯಾರೆಟ್ ಚಿನ್ನದ ದರ 14,400 (+75) ರೂ. ಚೆನ್ನೈ: 24 ಕ್ಯಾರೆಟ್ ಚಿನ್ನದ ದರ 16,222 (+131) ರೂ., 22 ಕ್ಯಾರೆಟ್ ಚಿನ್ನದ ದರ 14,870 (+20) ರೂ. ಕೋಲ್ಕತ್ತಾ: 24 ಕ್ಯಾರೆಟ್ ಚಿನ್ನದ ದರ 15,704 (+82) ರೂ., 22 ಕ್ಯಾರೆಟ್ ಚಿನ್ನದ ದರ 14,395 (+75) ರೂ. ಹೈದರಾಬಾದ್‌: 24 ಕ್ಯಾರೆಟ್ ಚಿನ್ನದ ದರ 15,704 (+82) ರೂ., 22 ಕ್ಯಾರೆಟ್ ಚಿನ್ನದ ದರ 14,395 (+75) ರೂ. ಜೈಪುರ: 24 ಕ್ಯಾರೆಟ್ ಚಿನ್ನದ ದರ 15,719 (+82) ರೂ., 22 ಕ್ಯಾರೆಟ್ ಚಿನ್ನದ ದರ 14,410 (+75) ರೂ. ಚಂಡೀಗಢ: 24 ಕ್ಯಾರೆಟ್ ಚಿನ್ನದ ದರ 15,719 (+82) ರೂ., 22 ಕ್ಯಾರೆಟ್ ಚಿನ್ನದ ದರ 14,410 (+75) ರೂ. ಲಕ್ನೋ: 24 ಕ್ಯಾರೆಟ್ ಚಿನ್ನದ ದರ 15,719 (+82) ರೂ., 22 ಕ್ಯಾರೆಟ್ ಚಿನ್ನದ ದರ 14,410 (+75) ರೂ.

ವಾರ್ತಾ ಭಾರತಿ 19 May 2026 11:20 am

ನಾಯಕತ್ವ ಬದಲಾವಣೆ ಚರ್ಚೆ ಬೆನ್ನಲ್ಲೇ ಕುಟುಂಬ ಸಮೇತ ತಿಮ್ಮಪ್ಪನ ದರ್ಶನ ಪಡೆದ ಡಿಕೆಶಿ

ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಚರ್ಚೆ ಜೋರಾಗಿ ನಡೆಯುತ್ತಿರುವಾಗಲೇ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ತಿರುಪತಿ ತಿಮ್ಮಪ್ಪನ ದರ್ಶನ ಪಡೆದಿದ್ದಾರೆ.ಕುಟುಂಬ ಸಮೇತರಾಗಿ ತಿರುಪತಿ ತಿರುಮಲಕ್ಕೆ ತೆರಳಿದ ಡಿಸಿಎಂ ಡಿ.ಕೆ. ಶಿವಕುಮಾರ್‌, ವೆಂಕಟೇಶ್ವರ ಸ್ವಾಮಿಯ ದರ್ಶನ ಪಡೆದು ಪ್ರಾರ್ಥನೆ ಸಲ್ಲಿಸಿದ್ದಾರೆ.ಡಿ.ಕೆ.ಶಿವಕುಮಾರ್‌ ನಿನ್ನೆಯಷ್ಟೇ ಕೇರಳಂ ನೂತನ ಸಿಎಂ ವಿ.ಡಿ.ಸತೀಶನ್‌ ಅವರ ಪದಗ್ರಹಣ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಆ ವೇಳೆ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರ ಜೊತೆ ಸಿಎಂ, ಡಿಸಿಎಂ ಪ್ರತ್ಯೇಕವಾಗಿ ಮಾತುಕತೆ ನಡೆಸಿದರು. ಇಂದು ತುಮಕೂರಿನಲ್ಲಿ ಕಾಂಗ್ರೆಸ್‌ ಸರ್ಕಾರದ 3 ನೇ ವರ್ಷದ […] The post ನಾಯಕತ್ವ ಬದಲಾವಣೆ ಚರ್ಚೆ ಬೆನ್ನಲ್ಲೇ ಕುಟುಂಬ ಸಮೇತ ತಿಮ್ಮಪ್ಪನ ದರ್ಶನ ಪಡೆದ ಡಿಕೆಶಿ first appeared on Vistara News .

ವಿಸ್ತಾರ ನ್ಯೂಸ್ 19 May 2026 10:58 am

Gold: ಚಿನ್ನದ ವಿಚಾರದ ಬಗ್ಗೆ ಖ್ಯಾತ ಜ್ಯೋತಿಷಿಯ ವೈರಲ್ ಪೋಸ್ಟ್‌: ಕೇಂದ್ರ ಸರ್ಕಾರದಿಂದಲೇ ಉತ್ತರ, ಜನ ಸಾಮಾನ್ಯರಿಗೆ ಸಂದೇಶ

Gold: ಪ್ರಧಾನಿ ನರೇಂದ್ರ ಅವರು ಈಚೆಗೆ ಭಾರತೀಯರು ಮುಂದಿನ ಒಂದು ವರ್ಷದ ಅವಧಿಗೆ ಚಿನ್ನ ಖರೀದಿ ಮಾಡಬೇಡಿ ಎಂದು ಮನವಿ ಮಾಡಿದ್ದರು. ಡಾಲರ್ ವಿದೇಶಿ ವಿನಿಮಯದ ಹೊರೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಜನರಿಗೆ ಕರೆ ನೀಡಿದ್ದರು. ಇದೀಗ ಭಾರತ ಸರ್ಕಾರವು ದೇವಾಲಯಗಳಲ್ಲಿರುವ ಚಿನ್ನದ ಸಂಗ್ರಹಕ್ಕೆ ಬದಲಾಗಿ ಭಾರತ ಸರ್ಕಾರ ಗೋಲ್ಡ್

ಒನ್ ಇ೦ಡಿಯ 19 May 2026 10:55 am

ಮೂರ್ತಿಯನ್ನು ಮಾತ್ರ ಒಡೆಯಬಹುದು, ವಿಚಾರಗಳನ್ನಲ್ಲ

ಸಮಾಜವಾದ ಹುಟ್ಟಿದ್ದು ಜರ್ಮನಿಯಲ್ಲಾದರೂ ಅದು ಮೊದಲು ಸಾಕಾರಗೊಂಡದ್ದು ರಶ್ಯದಲ್ಲಿ. ಅದನ್ನು ಆಗು ಮಾಡಿದ ಕ್ರಾಂತಿಕಾರಿಯೊಬ್ಬನ ಬಗೆಗೆ ಏನೇನೂ ತಿಳಿಯದ ಅವಿವೇಕಿಗಳು ಆತ ದುಡಿಯುವ ಜನತೆಯ ಪರವಾಗಿದ್ದ ಎಂಬ ಕಾರಣಕ್ಕಾಗಿಯೇ ದ್ವೇಷಿಸುವುದಾದರೆ ಅದರಿಂದ ಲೆನಿನ್‌ಗಾಗಲಿ, ಸಮಾಜವಾದಿ ತತ್ವಗಳಿಗಾಗಲಿ ಏನೂ ಹಾನಿಯಿಲ್ಲ. ಬುದ್ಧ, ಬಸವ, ಬಾಬಾಸಾಹೇಬರು ಹುಟ್ಟಿದ್ದ ನಾಡಿನಲ್ಲಿ ಅಂಥದ್ದೇ ತತ್ವಗಳೊಂದಿಗೆ ಬದುಕಿದ್ದ ಕ್ರಾಂತಿಕಾರಿಯೊಬ್ಬನನ್ನು ಅಪಮಾನಿಸುವುದೆಂದರೆ ಅದು ವಿಶ್ವದ ಸಮಸ್ತ ಸಮತಾವಾದಿಗಳನ್ನು ಅಗೌರವಿಸಿದಂತೆಯೇ ಸರಿ. ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಆಡಳಿತದ ಚುಕ್ಕಾಣಿ ಹಿಡಿಯುತ್ತದೆ ಎಂದು ತಿಳಿದ ಕೂಡಲೇ ಆ ಪಕ್ಷದ ಬೆಂಬಲಿಗರು ಮೊದಲು ಮಾಡಿದ ಕೆಲಸವೆಂದರೆ; ಸಮಾಜವಾದಿ ಹೋರಾಟಗಾರನಾಗಿದ್ದ ಲೆನಿನ್‌ನ ಮೂರ್ತಿಯನ್ನು ಒಡೆದು ಹಾಕಿದ್ದು. ಅದರೊಟ್ಟಿಗೆ ಸೋತ ಪಕ್ಷಗಳ ಕಚೇರಿ ಧ್ವಂಸ, ಕಾರ್ಯಕರ್ತರ ಮೇಲೆ ಹಲ್ಲೆ, ದೊಂಬಿ, ಗಲಭೆ ಮುಂತಾಗಿ ನಡೆದದ್ದು ಬಿಜೆಪಿ ತನ್ನ ಮುಂದಿನ ಆಡಳಿತ ವೈಖರಿಯನ್ನು ಪರಿಚಯಿಸಿದೆ. ಪ್ರಾಯಶಃ ಹೀಗೆ ಮೂರ್ತಿ ಭಂಜಿಸಿದ ಅನೇಕರಿಗೆ ಅವರು ಯಾರು? ಏತಕ್ಕಾಗಿ ಅಂಥ ವ್ಯಕ್ತಿಗಳನ್ನು ಕಾಲ, ದೇಶಗಳಾಚೆ ಜನರು ತಮ್ಮ ಅಸ್ಮಿತೆಗಳನ್ನಾಗಿ ಗುರುತಿಸಿಕೊಂಡು ಬರುತ್ತಿದ್ದಾರೆ ಎಂಬ ಕಲ್ಪನೆಯೂ ಇರದು. ಅಲ್ಲಿ ಮೂರ್ತಿಯನ್ನು ಧ್ವಂಸ ಮಾಡಿದ ಬಹುತೇಕರಿಗೆ ತಾವೇಕೆ ಹೀಗೆ ಮಾಡುತ್ತಿದ್ದೇವೆ ಎಂಬ ಕನಿಷ್ಠ ಅರಿವೂ ಇರಲಾರದು. ಇವುಗಳನ್ನು ಒಡೆಯಬೇಕು, ನಾಶ ಪಡಿಸಬೇಕು ಎಂದು ಹೇಳಿದವರಿಗೂ ಆ ವ್ಯಕ್ತಿಗಳ ಪೂರ್ಣ ಪರಿಚಯವಿರದು. ಇಷ್ಟು ದಿವಸಗಳವರೆಗೆ ತಮ್ಮನ್ನು ಅಧಿಕಾರದ ಗದ್ದುಗೆಯಿಂದ ದೂರವಿಡಲು ಕಾರಣೀಕರ್ತರೇ ಈ ವಿಚಾರವಾದಿಗಳು ಎಂಬ ಬಾಲಿಶ ತಿಳುವಳಿಕೆಯಿಂದಲೇ ಅವರು ತಮ್ಮ ಅಂಧಭಕ್ತರನ್ನು ಒಡೆಯುವ ಕೆಲಸಕ್ಕೆ ಪ್ರಚೋದಿಸುತ್ತಾರೆ. ವಿಚಾರಗಳನ್ನು ಎದುರಿಸಲಾಗದ ಹತಾಶೆ ಸ್ಥಿತಿಯೊಂದು ಅವರನ್ನು ಭೂತವಾಗಿ ಕಾಡುತ್ತಲೇ ಇರುತ್ತದೆ. ಇಂದಲ್ಲ ನಾಳೆ ಈ ವಿಚಾರಗಳೇ ತಮ್ಮನ್ನು ಅಧಿಕಾರದಿಂದ ಕೆಳಗಿಳಿಸಲು ಯಶಸ್ವಿಯಾಗಬಲ್ಲವು ಎಂಬ ಅವ್ಯಕ್ತ ಭಯವೊಂದು ಅವರನ್ನು ಸದಾಕಾಲದಲ್ಲಿ ಕಾಡುತ್ತಿರುತ್ತದೆ. ಕತ್ತಲೆಯು ಗಾಳಿ, ಮಳೆ, ಚಳಿ, ಬೆಂಕಿ ಮತ್ತು ಕಾಲ ಯಾವುದಕ್ಕೂ ಅಂಜುವುದಿಲ್ಲ. ಕೇವಲ ಬೆಳಕಿಗೆ ಮಾತ್ರ ಅಂಜುತ್ತದೆ. ಅಪರಿಮಿತದ ಕತ್ತಲೆಗೆ ಮಿಣುಕು ಬೆಳಕು ಸಾಕು ಓಡಿ ಹೋಗುತ್ತದೆ. ದೊಡ್ಡ ಕೋಣೆಯಲ್ಲಿನ ಕತ್ತಲೆ ಓಡಿಸಲು ಒಂದು ದೀಪ ಅಥವಾ ಒಂದೇ ಹ್ಯಾಲೊಜಿನ್ ಬಲ್ಬ್ ಸಾಕು. ಇನ್ನು ವಿಪರೀತ ಬೆಳಕು ಬೀರಿದರೆ ಕತ್ತಲೆಯ ನೆನಪು ಬರದಷ್ಟು ಅದು ದಿಕ್ಕಾಪಾಲಾಗಿ ಓಡುತ್ತದೆ. ಕೋಮುವಾದಿ ಕತ್ತಲೆಗೆ ವಿಚಾರದ ಬೆಳಕಿನ ಬಗೆಗೆ ಅನವರತ ಭಯವಿದೆ. ಭಾರತದ ಮಟ್ಟಿಗೆ ಮನುವಾದವನ್ನು ಅಂತರ್ಗತ ಮಾಡಿಕೊಂಡಿರುವ ಅಂತರ್‌ರಾಷ್ಟ್ರೀಯ ಮಟ್ಟದ ಸಾಮ್ರಾಜ್ಯಶಾಹಿಗೆ ಸರ್ವ ಸಮಾನತೆಯ ತತ್ವಗಳು ಎಂದಿಗೂ ಹಿಡಿಸವು. ಭೂಮಿಯ ಮೇಲಿನ ಎಲ್ಲ ಸಂಪತ್ತನ್ನು ಕೈವಶ ಮಾಡಿಕೊಳ್ಳಬೇಕೆಂಬ ದುರ್ಭಾವ, ಸಂಪತ್ತನ್ನು ಉತ್ಪಾದಿಸುವ ಕೈಗಳ ಮೇಲೂ ಪ್ರಶ್ನಾತೀತ ಒಡೆತನ ಹೊಂದಲು ಬಯಸುತ್ತದೆ. ಹೀಗಾಗಿಯೇ ಅದಕ್ಕೆ ದುಡಿಯುವ ಯಂತ್ರಗಳಾಗಿ, ಸ್ವಾಮಿನಿಷ್ಠ ಸೇವಕರಾಗಿ ಜನರು ಬೇಕು. ದುಡಿಯುವ ಕೈಗಳು ಯಾವತ್ತೂ ಯೋಚಿಸುವ ತಲೆಯಾಗಬಾರದು. ಪ್ರಶ್ನಿಸುವ ಛಾತಿಯನ್ನಂತೂ ಅವರು ತೋರಲೆಬಾರದು. ದುಡಿಯುವ ಜನರು ವಿಚಾರವಂತರಾದರೆ ಒಡೆಯರ ಅರ್ಥಾತ್ ಬಂಡವಾಳಿಗರ ಆಟ ನಡೆಯದು. ಆದ್ದರಿಂದಲೇ ಅವರು ದಮನ-ದಬ್ಬಾಳಿಕೆಯ ಮೂಲಕ ಇಲ್ಲವೇ ಮೌಢ್ಯ-ಕಂದಾಚಾರಗಳ ಮೂಲಕ ಜನತೆಯ ತಲೆ ಮತ್ತು ಕೈಗಳನ್ನು ಒತ್ತೆಯಿಟ್ಟುಕೊಳ್ಳಲು ಹವಣಿಸುತ್ತಾರೆ. ವಿಚಾರದ ಸಣ್ಣ ಕಿರಣವನ್ನು ಸಹಿಸದ ಸಾಮ್ರಾಜ್ಯಶಾಹಿ ವ್ಯವಸ್ಥೆ ಜನತೆಯು ವೈಚಾರಿಕ ಪ್ರಜ್ಞೆ ಬೆಳೆಸಿಕೊಳ್ಳದಂತೆ ಭಾವನಾತ್ಮಕ ತಡೆಗೋಡೆಯೊಂದನ್ನು ನಿರ್ಮಿಸುತ್ತದೆ. ಅದಕ್ಕೆ ದೈವಭಕ್ತಿ, ರಾಷ್ಟ್ರಪ್ರೇಮ, ಭಾಷಾಭಿಮಾನ, ಧರ್ಮ ಪಾಲನೆಯಂಥ ಆಕರ್ಷಕ ಹೆಸರನ್ನು ಇಡುತ್ತದೆ. ಅದರ ಫಲವೇ ಲೆನಿನ್ ಮೂರ್ತಿ ಕೆಡವಿದಾಗ ನೆಟ್ಟಿಗರು ‘‘ವಿದೇಶದ ವ್ಯಕ್ತಿಗೆ ಭಾರತದಲ್ಲಿ ಏನು ಕೆಲಸ?’’, ‘‘ವಿದೇಶಿ ವ್ಯಕ್ತಿಗಳ ಮೂರ್ತಿ ನಮ್ಮ ದೇಶದಲ್ಲಿ ಏಕೆ ಸ್ಥಾಪಿಸಬೇಕು?’’, ‘‘ಅಸಂಖ್ಯ ಮಹಾನುಭಾವರು ನಮ್ಮಲ್ಲಿ ಇರುವಾಗ ಹೊರಗಿನವರು ಏಕೆ ಬೇಕು?’’ ಎಂದು ಟ್ರೋಲ್ ಮಾಡಿದ್ದೇ ಮಾಡಿದ್ದು. ಇದು ಅವರ ‘ಪವಿತ್ರ ರಾಷ್ಟ್ರಪ್ರೇಮ’ದ ನಮೂನೆ. ಇದೇ ಜನರು ವಿದೇಶಗಳಲ್ಲಿ ರಾಮ, ಕೃಷ್ಣರ ಮಂದಿರಗಳು ಕಟ್ಟಿಸಿದಾಗ ರೋಮಾಂಚಿತರಾಗುತ್ತಾರೆ. ವಿದೇಶಿಯರು ಬಂದು ನಮ್ಮ ದೇವಸ್ಥಾನಗಳಲ್ಲಿ ಕೈ ಮುಗಿದು ನಿಂತಾಗ ಇಲ್ಲವೇ ನಮ್ಮ ದೇವ ಮಾನವರ ಶಿಷ್ಯತ್ವ ಸ್ವೀಕರಿಸಿದಾಗ ದಿವ್ಯತೆಯನ್ನು ಅನುಭವಿಸುತ್ತಾರೆ. ಮಹಾತ್ಮಾ ಗಾಂಧೀಜಿಯವರ ಪುತ್ಥಳಿಯನ್ನು ಜಗತ್ತಿನಾದ್ಯಂತ 70ಕ್ಕೂ ಹೆಚ್ಚು ದೇಶಗಳಲ್ಲಿ ಸ್ಥಾಪಿಸಲಾಗಿದೆ. ನ್ಯೂಯಾರ್ಕ್‌ನ ಯೂನಿಯನ್ ಸ್ಕ್ವೇರ್ ಪಾರ್ಕ್‌ನಲ್ಲಿ, ವಾಶಿಂಗ್ಟನ್ ಡಿಸಿಯಲ್ಲಿ, ಕ್ಯಾಲಿಫೋರ್ನಿಯಾದ ಲೆಕ್ ಶ್ರೈನಿಯಲ್ಲಿ ಗಾಂಧೀಜಿಯವರ ಚಿತಾಭಸ್ಮ ಸ್ಮಾರಕ ಮೂರ್ತಿ ಸ್ಥಾಪಿಸಲಾಗಿದೆ. ಲಂಡನ್‌ಪಾರ್ಲಿಮೆಂಟ್ ಮತ್ತು ಟ್ಯಾವಿಸ್ಟಾಕ್ ಸ್ಕ್ವೇರ್‌ಗಳಲ್ಲಿ ಗಾಂಧೀಜಿಯವರ ಮೂರ್ತಿ ಇದೆ. ದಕ್ಷಿಣ ಆಫ್ರಿಕಾದ ಜೋಹಾನ್ಸ್‌ಬರ್ಗ್, ಪೀಟರ್ ಮ್ಯಾರಿಟ್ಜ್ ಬರ್ಗ್, ಆಸ್ಟ್ರೇಲಿಯದ ಕ್ಯಾನ್ಬೆರಾ, ಸಿಡ್ನಿ, ಬ್ರಿಸ್ಬೆನ್, ಸ್ವಿಟ್ಸರ್‌ಲ್ಯಾಂಡ್, ಡೆನ್ಮಾರ್ಕ್, ಆಸ್ಟ್ರಿಯಾ, ಅರ್ಜೆಂಟಿನಾ, ಉಗಾಂಡಾ, ದಕ್ಷಿಣ ಕೊರಿಯಾ ಮುಂತಾದ ದೇಶಗಳಲ್ಲಿ ಬಾಪುವಿನ ಪುತ್ಥಳಿ ಸ್ಥಾಪಿಸಲಾಗಿದೆ. ಅದರಂತೆ ಬಾಬಾಸಾಹೇಬ ಅಂಬೇಡ್ಕರ್ ಅವರ ಪ್ರತಿಮೆಯನ್ನು ಅಮೆರಿಕ, ಇಂಗ್ಲೆಂಡ್, ಜಪಾನ್, ಆಸ್ಟ್ರೇಲಿಯ, ಕೆನಡಾ, ಹಂಗೇರಿ, ಅಝರ್‌ಬೈಜಾನ್, ಮಾರಿಷಸ್, ಥಾಯ್ಲೆಂಡ್, ವಿಯಟ್ನಾಂ ಮುಂತಾದೆಡೆಯಲ್ಲಿ ಸ್ಥಾಪಿಸಲಾಗಿದೆ. ಇನ್ನೂ ಕೆಲವು ವಿದೇಶಗಳಲ್ಲಿ ವಿವೇಕಾನಂದರ ಸ್ಮಾರಕಗಳನ್ನು ನಿರ್ಮಿಸಲಾಗಿದೆ. ಅವರಲ್ಲಿಯೂ ಸರಕಾರಗಳು ಬದಲಾಗುತ್ತಲೇ ಇರುತ್ತವೆ. ಆ ದೇಶಗಳಲ್ಲಿ ಹೀಗೆ ಸರಕಾರ ಬದಲಾದಂತೆ ಮೂರ್ತಿ ಭಂಜಿಸಿದ ಉದಾಹರಣೆಗಳಿಲ್ಲ. ಭಾರತದಲ್ಲಿ ಮಾತ್ರ ಇತ್ತೀಚೆಗೆ ತಾನು ನಂಬದ ವಿಚಾರಧಾರೆಗಳಿಗಾಗಿ ಜಡ ಮೂರ್ತಿಗಳನ್ನು ಧ್ವಂಸ ಮಾಡುವ ಕುಕೃತ್ಯ ರಾಜಕೀಯ ಪಿಡುಗಾಗಿ ಪರಿಣಮಿಸುತ್ತಿದೆ. ಅಂತರ್‌ರಾಷ್ಟ್ರ ಮಟ್ಟದಲ್ಲಿ ಭಾರತದ ಸಭ್ಯತೆ, ಸಂಸ್ಕೃತಿಯನ್ನು ಇಂತಹ ಕೃತ್ಯಗಳು ಹರಾಜಿಗೆ ಹಾಕುತ್ತಿವೆ. ಲೆನಿನ್ ಎಂಬ ವ್ಯಕ್ತಿಯು 22ನೇ ಎಪ್ರಿಲ್ 1870ರಲ್ಲಿ ರಶ್ಯದ ಸಿಂಬಿರ್ಸ್ಕ್ ಎಂಬಲ್ಲಿ ಜನಿಸಿದ ಕ್ರಾಂತಿಕಾರಿ ಹೋರಾಟಗಾರ. ಈತನ ಪೂರ್ಣ ಹೆಸರು ವ್ಲಾದಿಮಿರ್ ಇಲ್ಯಿಚ್ ಉಲ್ಯಾನೋವ್. ಸುಶಿಕ್ಷಿತ ಮಧ್ಯಮ ವರ್ಗದಲ್ಲಿ ಜನಿಸಿದ ಈತ ಚಿಕ್ಕಂದಿನಿಂದಲೂ ಕ್ರಾಂತಿಕಾರಕ ತತ್ವಗಳಿಂದ ಆಕರ್ಷಿತನಾಗಿದ್ದ. ಅಂದಿಗೆ ರಶ್ಯದಲ್ಲಿ ತ್ಸಾರ್ ಶಾಹಿ ಅಂದರೆ ಕ್ರೂರ ಜಮೀನ್ದಾರಿ ವ್ಯವಸ್ಥೆಯು ಉಚ್ಛ್ರಾಯ ಸ್ಥಿತಿಯಲ್ಲಿದ್ದಿತು. ಕೃಷಿ ಕೂಲಿ ಕಾರ್ಮಿಕರು ತ್ಸಾರ್ ರಾಜಶಾಹಿ ದಬ್ಬಾಳಿಕೆಯಲ್ಲಿ ನಲುಗಿ ಹೋಗಿದ್ದರು. ದಮನಕಾರಿ ತ್ಸಾರ್ ದೊರೆಗಳ ವಿರುದ್ಧ ಜನರು ತಿರುಗಿ ಬಿದ್ದರು. ತ್ಸಾರ್ ರಾಜನ ಹತ್ಯೆಗೆ ಸಂಚು ಹೂಡಿದ ಆರೋಪದ ಮೇಲೆ ಲೆನಿನ್ ಅಣ್ಣ ಅಲೆಕ್ಸಾಂಡರ್ ಉಲಿಯಾನೋವ್ ಗಲ್ಲು ಶಿಕ್ಷೆಗೆ ಒಳಗಾದನು. ಇದು ಲೆನಿನ್ ಮೇಲೆ ಅಗಾಧ ಪರಿಣಾಮ ಬೀರಿತು. ಅಷ್ಟರಲ್ಲಿ ವಿಶ್ವದೆಲ್ಲೆಡೆ ಮಾರ್ಕ್ಸ್‌ವಾದಿ ಸಿದ್ಧಾಂತಗಳು ಕಾಡ್ಗಿಚ್ಚಿನಂತೆ ಹಬ್ಬತೊಡಗಿದ್ದವು. ‘‘ವಿಶ್ವದ ಕಾರ್ಮಿ ಕರೇ ಒಂದಾಗಿ ನಿಮ್ಮಲ್ಲಿ ಕಳೆದು ಕೊಳ್ಳಲು ಏನೂ ಇಲ್ಲ. ಕಳೆದು ಕೊಳ್ಳುವುದಾದರೆ ನಿಮ್ಮನ್ನು ಬಂಧಿಸಿದ ದಾಸ್ಯದ ಸಂಕೋಲೆಗಳನ್ನು ಮಾತ್ರ’’ ಎಂಬ ಘೋಷಣೆಗಳು ಕ್ರಾಂತಿಕಾರಿ ಲೆನಿನ್ ಅವರನ್ನು ತೀವ್ರವಾಗಿ ಪ್ರಭಾವಿಸಿದವು. ಈಗಾಗಲೇ ರಶ್ಯದಲ್ಲಿ ನಡೆಯುತ್ತಿದ್ದ ಕಾರ್ಮಿಕರ ಹೋರಾಟಗಳಲ್ಲಿ ನುಗ್ಗಿದ ಕಾರಣಕ್ಕಾಗಿಯೇ ಈತ ಬಂಧನಕ್ಕೆ ಸಿಲುಕಿ ಸೈಬೀರಿಯಾಕ್ಕೆ ಗಡೀಪಾರು ಮಾಡಲ್ಪಟ್ಟಿದ್ದ. ರಶ್ಯದ ಪೊಲೀಸರಿಂದ ತಪ್ಪಿಸಿಕೊಳ್ಳಲೆಂದೇ ವ್ಲಾದಿಮಿರ್ ಇಲ್ಯಿಚ್ ತನ್ನ ಹೆಸರನ್ನು ಲೆನಿನ್ ಎಂದು ಬದಲಾಯಿಸಿಕೊಂಡನು. ಮುಂದೆ ಇದೇ ಹೆಸರಿನಿಂದ ಆತ ಪ್ರಸಿದ್ಧಿಗೆ ಬಂದನು. ಮೊದಲನೇ ಮಹಾಯುದ್ಧದ ಸಮಯದಲ್ಲಿ ರಾಜಕೀಯ ಅಸ್ಥಿರತೆಯ ಲಾಭ ಪಡೆದುಕೊಂಡು ಸೈಬೀರಿಯದಿಂದ ರಶ್ಯಕ್ಕೆ ಮರಳಿ ಅಲ್ಲಿ ಬೋಲ್ಸೆವಿಕ್ ಎಂಬ ಶ್ರಮಿಕ ಮತ್ತು ರೈತರ ಪಕ್ಷವೊಂದನ್ನು ಕಟ್ಟಿ ಹೋರಾಟದ ಮೂಲಕ ತ್ಸಾರ್ ಶಾಹಿಯನ್ನು ಉರುಳಿಸಿ ಸಮಾಜವಾದಿ ಸರಕಾರವನ್ನು ಸ್ಥಾಪಿಸಿದನು. ಇದುವೇ ಬೋಲ್ಷೆವಿಕ್ ಕ್ರಾಂತಿ ಅಥವಾ ಅಕ್ಟೋಬರ್ ಕ್ರಾಂತಿಯೆಂದು ಹೆಸರಾಗಿದೆ. ಮಾರ್ಕ್ಸ್‌ವಾದವನ್ನು ತನ್ನ ದೇಶಕ್ಕೆ ಒಗ್ಗುವಂತೆ ಪುನರ್‌ರೂಪಿಸಿಕೊಂಡು ಜನರನ್ನು ಕ್ರಾಂತಿ ಪಥದತ್ತ ನಡೆಸಿಕೊಂಡು ಬಂದು ಜಗತ್ತಿನಲ್ಲಿಯೇ ಮೊದಲ ಕಮ್ಯುನಿಸ್ಟ್ ಸರಕಾರವನ್ನು ಸ್ಥಾಪಿಸಿದನು. ಬೋಲ್ಸೆವಿಕ್ ಪಕ್ಷವು ತನ್ನ ಪ್ರಣಾಳಿಕೆಯಲ್ಲಿ ಜನರಿಗೆ ಮುಖ್ಯವಾದ ಮೂರು ಭರವಸೆಗಳನ್ನು ನೀಡಿತು. ‘ಶಾಂತಿ, ಭೂಮಿ ಮತ್ತು ರೊಟ್ಟಿ’ ಅಂದರೆ ಯುದ್ಧವನ್ನು ನಿಲ್ಲಿಸುವುದು. ಕೆಲವೇ ಜನರಲ್ಲಿ ಕೇಂದ್ರೀಕೃತವಾಗಿರುವ ಭೂಮಿಯನ್ನು ಭೂ ಹೀನರಿಗೆ ಹಂಚುವುದು ಹಾಗೂ ದೇಶವನ್ನು ಹಸಿವು ಮುಕ್ತ ಮಾಡುವುದು. ತನ್ನ ಜೀವಿತಾವಧಿಯಲ್ಲಿ ಲೆನಿನ್ ಈ ಮೂರು ಷರತ್ತುಗಳನ್ನು ಪೂರೈಸಿದ್ದನು. ಸೋತ ರಾಜ್ಯಶಾಹಿಗೆ ಹಾಗೂ ಅವರೊಟ್ಟಿಗೆ ಸಹಕರಿಸಿದ ಜಮೀನ್ದಾರರಿಗೆ ಇದು ನುಂಗಲಾರದ ತುತ್ತಾಗಿತ್ತು. ಹೀಗಾಗಿ ಲೆನಿನ್‌ನ ಆಡಳಿತವು ಹಲವು ಅಂತರ್ಯುದ್ಧಗಳನ್ನು ಎದುರಿಸಬೇಕಾಯಿತು. ರಾಜಪ್ರಭುತ್ವದಿಂದ ಸಮಾಜವಾದಿ ಸಿದ್ಧಾಂತದತ್ತ ಹೊರಳಿಕೊಳ್ಳಲು ಜನತೆಗೆ ಕಷ್ಟವೆನಿಸಿತ್ತು. ಸಮತಾವಾದಿ ತತ್ವಗಳ ಅಕ್ಷರಶಃ ಪಾಲನೆ ಅಷ್ಟು ಸುಲಭವಲ್ಲ. ಲೆನಿನ್ ಅಧಿಕಾರ ವಹಿಸಿಕೊಂಡ ಹೊಸತರಲ್ಲಿ ವಿಶಾಲವಾದ ಸೋವಿಯತ್ ಯೂನಿಯನ್ ಕ್ಷಾಮ-ಡಾಮರಗಳಿಗೆ ತುತ್ತಾಯಿತು. ತನ್ನ ದೇಶದ ಹಸಿವನ್ನು ನೀಗಿಸಲು ಲೆನಿನ್ ತಕ್ಷಣ ಆರ್ಥಿಕ ನೀತಿಯಲ್ಲಿ ಸುಧಾರಣೆಗಳನ್ನು ತಂದನು. ಮಾರ್ಕ್ಸ್‌ವಾದ ಎಂಬುದು ಆನ್ವಯಿಕ ಸಾಮಾಜಿಕ ವಿಜ್ಞಾನ. ಪ್ರತಿಯೊಂದು ಜನಾಂಗವು ತನ್ನ ಕಾಲ ಮತ್ತು ದೇಶಕ್ಕೆ ತಕ್ಕಂತೆ ಸಮಾಜೋ ಆರ್ಥಿಕ ನೀತಿಗಳನ್ನು ರೂಪಿಸಿಕೊಳ್ಳಬೇಕು. ಮಾರ್ಕ್ಸ್ ವಾದ ಎಂದರೆ ಸಿದ್ಧ ಮಾದರಿಯ ನಿಶ್ಚಿತ ತತ್ವವಲ್ಲ. ಅದು ಆಗುತ್ತಲೇ ಇರುವ, ಕಾಲಕಾಲಕ್ಕೂ ತನಗೆ ಒಗ್ಗುವ ತತ್ವಗಳನ್ನು ಕಟ್ಟಿಕೊಳ್ಳುತ್ತಲೇ ಹೋಗಬೇಕಾದ ಪ್ರಕ್ರಿಯೆ ಎಂಬುದನ್ನು ಮನಗಂಡ ಲೆನಿನ್ ರಶ್ಯಕ್ಕೆ ತಕ್ಷಣಕ್ಕೆ ಒಗ್ಗುವ ಹೊಸ ಆರ್ಥಿಕ ನೀತಿಯನ್ನು ಜಾರಿಗೆ ತಂದನು. ಇದನ್ನು ‘ಲೆನಿನಿಸಂ’ ಎಂದು ಗುರುತಿಸಲಾಗುವುದು. ಆತನ ಈ ಪ್ರಯೋಗದಿಂದಾಗಿ ದೇಶ ಅನತಿ ಕಾಲದಲ್ಲಿಯೇ ಸುಭಿಕ್ಷವಾಯಿತು. ಆಹಾರ ಉತ್ಪಾದನೆಯಲ್ಲಿ, ತಂತ್ರಜ್ಞಾನದ ಬೆಳವಣಿಗೆಯಲ್ಲಿ ವಿಕ್ರಾಂತ ಸಾಧನೆ ಮಾಡಿತು. ವಿಶ್ವದಲ್ಲಿಯೇ ಸೂಪರ್ ಶಕ್ತಿಯಾಗಿ ಹೊರಹೊಮ್ಮಿತ್ತು. ಲೆನಿನ್ ಎಲ್ಲಿಯೂ ಹಿಂಸೆಗೆ ಪ್ರಚೋದಿಸಲಿಲ್ಲ. ಕಾರ್ಮಿಕರು, ರೈತರು ತಮ್ಮ ರಕ್ಷಣೆಗಾಗಿ ಮಾಡಿದ ಹೋರಾಟವನ್ನು ಸಾಮ್ರಾಜ್ಯಶಾಹಿ ತಿರುಚಿ ಸಾದರ ಪಡಿಸಿತ್ತು. ಮಾಕ್‌ರ್ಸ್ವಾದವು ಸಿದ್ಧಾಂತವಾದರೆ ಲೆನಿನಿಸಂ ಅದರ ಅನುಷ್ಠಾನವೆಂದು ಪರಿಗಣಿಸಲಾಯಿತು. ಜಗತ್ತಿನಾದ್ಯಂತ ದುಡಿಯುವ ವರ್ಗ ತನ್ನ ಪ್ರಜ್ಞೆ ಎತ್ತರಿಸಿಕೊಳ್ಳುವ ಮೂಲಕವೇ ಸಮಾನತೆಯತ್ತ ಹೆಜ್ಜೆ ಇಡಬಹುದೆಂದು ಲೆನಿನ್ ತೋರಿಸಿಕೊಟ್ಟನು. ಇಂದು ಜಗತ್ತಿನಾದ್ಯಂತ ಕಾರ್ಮಿಕ, ರೈತ ಅಥವಾ ದುಡಿಯುವ ಜನತೆ ಪರ ದೃಷ್ಟಿ- ಧೋರಣೆ ಕಾಣಿಸಿಕೊಂಡಿದ್ದರೆ ಅದಕ್ಕೆ ಲೆನಿನ್ ಮಾಡಿದ ಪ್ರಯೋಗಗಳು ದೊಡ್ಡ ದೇಣಿಗೆ ನೀಡಿವೆ. ಆದ್ದರಿಂದಲೇ ಲೆನಿನ್ ಅವರನ್ನು ಮಾರ್ಕ್ಸ್ ನಂತರದ ಶ್ರೇಷ್ಠ ಕ್ರಾಂತಿ ಕಾರಿ ಚಿಂತಕ ಎಂದು ಪರಿಗಣಿಸಲಾಗುತ್ತದೆ. ಮಾರ್ಕ್ಸ್ ವಾದವನ್ನು ಪ್ರಾಯೋಗಿಕಗೊಳಿಸಿದ ಕ್ರಾಂತಿಕಾರಿ ಎಂದೇ ಗುರುತಿಸಲ್ಪಡುವ ಲೆನಿನ್ 1918ರಲ್ಲಿ ದುಷ್ಕರ್ಮಿಗಳಿಂದ ದಾಳಿಗೆ ತುತ್ತಾದರೂ ಸಾವಿನ ದವಡೆಯಿಂದ ಪಾರಾದನು. 1922ರಲ್ಲಿ ಪಾರ್ಶ್ವವಾಯುವಿಗೆ ತುತ್ತಾಗಿ 1924ರಲ್ಲಿ ಮರಣಿಸಿದ. ಲೆನಿನ್ ಕೇವಲ ಹೋರಾಟಗಾರ ಮಾತ್ರವಲ್ಲ ಆತನೊಬ್ಬ ಸೋಪಜ್ಞತೆಯುಳ್ಳ ಲೇಖಕನೂ ಆಗಿದ್ದ. ‘ಏನು ಮಾಡಬೇಕು?’ (‘what is to Be Done’), ‘ಸಾಮ್ರಾಜ್ಯಶಾಹಿ: ಬಂಡವಾಳಶಾಹಿಯ ಅತ್ಯುನ್ನತ ಹಂತ’ (‘Imperialism, the Highest Stage Of Capitalism’), ‘ರಶ್ಯದಲ್ಲಿ ಬಂಡವಾಳಶಾಹಿಯ ಅಭಿವೃದ್ಧಿ’ (‘The Development of Capitalism In Russia’) ಇವು ಆತನ ಪ್ರಮುಖ ಕೃತಿಗಳು. ಬೃಹತ್ ಬಂಡವಾಳಶಾಹಿ ಸ್ವರೂಪ ಮತ್ತು ಲಕ್ಷಣಗಳನ್ನು ಕರಾರುವಕ್ಕಾಗಿ ಗ್ರಹಿಸಿದ್ದ ಲೆನಿನ್ ದುಡಿಯುವ ವರ್ಗವೇ ಸಮಾಜವಾದಿ ಸಿದ್ಧಾಂತದ ನೆಲೆಗಟ್ಟು ಎಂಬುದನ್ನು ಎತ್ತಿ ತೋರಿಸಿದ್ದನು. ಕಾರ್ಮಿಕ ಮತ್ತು ರೈತರು ಒಗ್ಗೂಡಿದಾಗಲೇ ಸಮಗ್ರ ಕ್ರಾಂತಿ ಘಟಿಸುತ್ತದೆ ಎಂದು ಅವನು ಹೇಳಿದ ಮಾತಿಗಾಗಿ ಜಗತ್ತು ಇವತ್ತಿಗೂ ಕಾಯುತ್ತಿದೆ. ಆ ಕಾಲ ಸನ್ನಿಹಿತವೂ ಆಗಿದೆ. ಲೆನಿನ್ ವ್ಯಕ್ತಿತ್ವವನ್ನು ಕುರಿತು ಕವಿ ಕುವೆಂಪು: ‘‘ಧಮನಿಯಲಿ ಬಿಸಿ ನೆತ್ತರುಕ್ಕದೆ ನೆನೆಯಲಾರೆ ನಿನ್ನಂ ಲೆನಿನ್! ನಿನ್ನ ಹೆಸರದು ಸಿಡಿಲ್ ಸದ್ದು ದೊರೆಗಿವಿಗೆ: ನಿನ್ನ ಸಮತಾ ಬೋಧೆ ಸಿಡಿಮದ್ದು ನರನ ಸಂಗ್ರಹ ಬುದ್ಧಿ ಸ್ವಾರ್ಥತೆಯನುರಿದೋರೆ ದಹಿಸಿ, ನಿಃಸ್ವಾರ್ಥತೆಯ ಬೆಂಕಿಯಿಂ ಹೃತ್ಕುಂಡ ಸರ್ವದಾ ಪ್ರಜ್ವಲಿಸುವಂತೆನಗೆ, ಜಮದಗ್ನಿ ದುಡಿವ ದೀನನ ದೈವವನ್ಯರ್ಗೆ ಯಮದಂಡ! ಗೆಯ್ದವರ್ಗೇನಿಲ್ಲ, ಕುಳಿತುಂಬರಿಗೆ ಬೆಲ್ಲ; ಮುಳ್ಳುನೋವಾಳಿಂಗೆ, ಕಂಪು ಹೂ ಒಡೆಯಂಗೆ ಗೋವಳಗೆ, ಸೊಂಪಿವಗೆ, ಈ ತರತಮವನೆಲ್ಲ ಮುರಿಯೆ ಬಹನಲ್ಲಲ್ಲಿ ಕಲ್ಕಿ. ರಕ್ತದ ಗಂಗೆ ಸಿರಿನಾಳದಿಂ ಮರಳಿ ಬಡತನದೊಣಗು ಮೈಗೆ ಹರಿದಿಕ್ಕೆ ದೊರೆಗಳಸಿ ಕೂಲಿ ರೈತರ ಕೈಗೆ !’’ ಎಂದು ಬರೆದಿದ್ದಾರೆ. ಲೆನಿನ್ ದುಡಿವ ದೀನರಿಗೆ ದೈವದಂತೆ ಕಂಡು ಬಂದರೆ ಕುಳಿತು ತಿನ್ನುವವರಿಗೆ ಯಮಪಾಶವಾಗಿದ್ದನಂತೆ. ಸಮಾಜದಲ್ಲಿನ ತಾರತಮ್ಯವನ್ನು ತೊಡೆಯಲೆಂದು ಕಲ್ಕಿ ಅವತಾರ ತೊಟ್ಟು ಬಂದಂತಿದೆ ಎಂದು ಹೇಳಿದ ಮಾತಂತೂ ಲೆನಿನ್‌ಗೆ ಸಂದ ಅತ್ಯುನ್ನತ ಗೌರವವಾಗಿದೆ. ಕುವೆಂಪು ಈಗ ಬದುಕಿದ್ದರೆ ಕೋಮುವಾದಿಗಳ ಹುಚ್ಚಾಟ ಕಂಡು ಅದೆಷ್ಟು ಸಂಕಟ ಪಡುತ್ತಿದ್ದರೊ? ಸಮಾಜವಾದ ಹುಟ್ಟಿದ್ದು ಜರ್ಮನಿಯಲ್ಲಾದರೂ ಅದು ಮೊದಲು ಸಾಕಾರಗೊಂಡದ್ದು ರಶ್ಯದಲ್ಲಿ. ಅದನ್ನು ಆಗು ಮಾಡಿದ ಕ್ರಾಂತಿಕಾರಿಯೊಬ್ಬನ ಬಗೆಗೆ ಏನೇನೂ ತಿಳಿಯದ ಅವಿವೇಕಿಗಳು ಆತ ದುಡಿಯುವ ಜನತೆಯ ಪರವಾಗಿದ್ದ ಎಂಬ ಕಾರಣಕ್ಕಾಗಿಯೇ ದ್ವೇಷಿಸುವುದಾದರೆ ಅದರಿಂದ ಲೆನಿನ್‌ಗಾಗಲಿ, ಸಮಾಜವಾದಿ ತತ್ವಗಳಿಗಾಗಲಿ ಏನೂ ಹಾನಿಯಿಲ್ಲ. ಬುದ್ಧ, ಬಸವ, ಬಾಬಾಸಾಹೇಬರು ಹುಟ್ಟಿದ್ದ ನಾಡಿನಲ್ಲಿ ಅಂಥದ್ದೇ ತತ್ವಗಳೊಂದಿಗೆ ಬದುಕಿದ್ದ ಕ್ರಾಂತಿಕಾರಿಯೊಬ್ಬನನ್ನು ಅಪಮಾನಿಸುವುದೆಂದರೆ ಅದು ವಿಶ್ವದ ಸಮಸ್ತ ಸಮತಾವಾದಿಗಳನ್ನು ಅಗೌರವಿಸಿದಂತೆಯೇ ಸರಿ. ಅವರು ಕಲ್ಲಿನ ಮೂರ್ತಿ ಒಡೆಯಬಹುದು. ಎಂತಿದ್ದರೂ ಅದು ಸ್ಥಾವರ. ಆದರೆ ಲೆನಿನಿಸಂ ವಿಚಾರಗಳನ್ನು ಒಡೆಯಲಾರರು. ಕಾರಣ ಅದು ಜಂಗಮ. ಸ್ಥಾವರಕ್ಕಳಿವುಂಟು; ಜಂಗಮಕ್ಕಳಿವಿಲ್ಲ.

ವಾರ್ತಾ ಭಾರತಿ 19 May 2026 10:55 am

ಮುಂಬೈ-ಅಹ್ಮದಾಬಾದ್‌ ಹೆದ್ದಾರಿಯಲ್ಲಿ ಟೆಂಪೋ-ಟ್ರಕ್‌ ನಡುವೆ ಭೀಕರ ಅಪಘಾತ: 13 ಮಂದಿ ಮೃತ್ಯು, 16 ಜನರಿಗೆ ಗಾಯ

ಪಾಲ್ಘರ್: ಮಹಾರಾಷ್ಟ್ರದ ಪಾಲ್ಘರ್‌ನಲ್ಲಿ ಮುಂಬೈ-ಅಹ್ಮದಾಬಾದ್‌ ಹೆದ್ದಾರಿಯಲ್ಲಿ ನಿಶ್ಚಿತಾರ್ಥ ಸಮಾರಂಭಕ್ಕೆ ಅತಿಥಿಗಳನ್ನು ಕರೆದೊಯ್ಯುತ್ತಿದ್ದ ಟೆಂಪೋಗೆ ವೇಗವಾಗಿ ಬಂದ ಕಂಟೇನರ್ ಟ್ರೇಲರ್ ಢಿಕ್ಕಿ ಹೊಡೆದ ಪರಿಣಾಮ ಕನಿಷ್ಠ 13 ಜನರು ಮೃತಪಟ್ಟಿದ್ದು, 25 ಜನರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮುಂಬೈ-ಅಹ್ಮದಾಬಾದ್‌ ಹೆದ್ದಾರಿಯಲ್ಲಿ ಚಲಿಸುತ್ತಿದ್ದ ಟೆಂಪೋದಲ್ಲಿ 50ಕ್ಕೂ ಹೆಚ್ಚು ಜನರು ಪ್ರಯಾಣಿಸುತ್ತಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹೆದ್ದಾರಿಯಿಂದ ಒಂದು ಕಿಮೀ ದೂರದಲ್ಲಿದ್ದ ಯೂಟರ್ನ್ ಅನ್ನು ತಪ್ಪಿಸಲು ಟ್ರಕ್ ಚಾಲಕ ವಿರುದ್ಧ ದಿಕ್ಕಿನಲ್ಲಿ ಬಂದಾಗ ಟ್ರಕ್‌ ನಿಯಂತ್ರಣ ತಪ್ಪಿದ್ದು, ಅದರ ಕಂಟೇನರ್ ಬಾಕ್ಸ್ ಟೆಂಪೋ ಮೇಲೆ ಬಿದ್ದ ಪರಿಣಾಮ ಈ ಅಪಘಾತ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಘಟನೆ ಬಗ್ಗೆ ಆಘಾತವನ್ನು ವ್ಯಕ್ತಪಡಿಸಿದ ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್,  ಮೃತರ ಕುಟುಂಬಗಳಿಗೆ ತಲಾ 5 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ.

ವಾರ್ತಾ ಭಾರತಿ 19 May 2026 10:54 am

ಸಾಧನಾ ಸಮಾವೇಶದ ಬೆನ್ನಲ್ಲೇ ಪರಮೇಶ್ವರ್‌ಗೆ ಸಿಗುತ್ತಾ ಗುಡ್‌ ನ್ಯೂಸ್? ಕೆ ಎನ್ ರಾಜಣ್ಣ ಮಾತಿನಲ್ಲಿದ್ಯಾ ಮಹತ್ವದ ಸುಳಿವು

ರಾಜ್ಯದಲ್ಲಿ ದಲಿತ ಸಿಎಂ ಎಂಬ ಚರ್ಚೆ ಪದೇ ಪದೇ ಮುನ್ನಲೆಗೆ ಬರುತ್ತಲೇ ಇದೆ. ಆದರೆ, ಅಷ್ಟೇ ವೇಗವಾಗಿ ಇದು ತೆರೆಗೆ ಸರಿಯುತ್ತದೆ. ಇದೀಗ ಮತ್ತೊಮ್ಮೆ ದಲಿತ ಸಿಎಂ ಕೂಗು ಮುನ್ನೆಲೆಗೆ ಬಂದಿದೆ. ಅದರಲ್ಲೂ ನಾಯಕತ್ವ ಬದಲಾವಣೆ ಆದಲ್ಲಿ ಪರಮೇಶ್ವರ್ ಅವರಿಗೆ ಸಿಎಂ ಸ್ಥಾನ ನೀಡಬೇಕು ಎಂಬ ವಿಚಾರವನ್ನು ಮತ್ತೆ ಸುದ್ದಿ ಕೇಂದ್ರಕ್ಕೆ ತರಲಾಗಿದೆ. ಸಿದ್ದರಾಮಯ್ಯ ಆಪ್ತರಾದ ಮಾಜಿ ಸಚಿವ ಕೆ ಎನ್ ರಾಜಣ್ಣ ಅವರು ಪರಮೇಶ್ವರ್ ಪರವಾಗಿ ಬ್ಯಾಟಿಂಗ್ ಮಾಡಿದ್ದಾರೆ.

ವಿಜಯ ಕರ್ನಾಟಕ 19 May 2026 10:45 am

ಜಿನ್‌ಪಿಂಗ್ ಎದುರು ತಣ್ಣಗಾದರೇ ಟ್ರಂಪ್?

ಟ್ರಂಪ್ ಭೇಟಿಯ ಮೊದಲ ದಿನವೇ ಜಿನ್‌ಪಿಂಗ್ ಅವರು, ಅಮೆರಿಕ ತೈವಾನ್ ಸಮಸ್ಯೆಯನ್ನು ಸರಿಯಾಗಿ ನಿಭಾಯಿಸದಿದ್ದರೆ ಎರಡೂ ದೇಶಗಳ ನಡುವಿನ ಉತ್ತಮ ಸಂಬಂಧ ಹಾಳಾಗುತ್ತದೆ ಎಂದು ಘೋಷಿಸಿದರು. ಒಂದು ರೀತಿಯಲ್ಲಿ, ಜಿನ್‌ಪಿಂಗ್ ಟ್ರಂಪ್‌ಗೆ ತೈವಾನ್ ಬಗ್ಗೆ ಮಾತನಾಡಲು ಅವಕಾಶ ನೀಡಲಿಲ್ಲ. ಅವರು ಪ್ರತೀ ಹಂತದಲ್ಲೂ ಟ್ರಂಪ್‌ಗೆ ಮಿತಿಗಳನ್ನು ಹಾಕಿದಂತಿತ್ತು. ಅಮೆರಿಕ ಮತ್ತು ಚೀನಾ ಇವೆರಡರಲ್ಲಿ ಸೂಪರ್ ಪವರ್ ಯಾವುದು ಎಂಬುದು ಈಗ ಮಹತ್ವದ ಪ್ರಶ್ನೆಯಾಗಿದೆ. ಟ್ರಂಪ್ ಮತ್ತು ಕ್ಸಿ ಜಿನ್‌ಪಿಂಗ್ ಭೇಟಿಯ ವೇಳೆ, ಏನೋ ಬದಲಾಗುತ್ತಿದೆ ಎಂಬುದರ ಬಹಳಷ್ಟು ಸೂಚನೆಗಳು ಸಿಕ್ಕಿವೆ. ಜಿನ್‌ಪಿಂಗ್ ತಮ್ಮ ಬಿಗಿ ಹಿಡಿತ ಮತ್ತು ಮೌನದಿಂದಲೇ ಚಂಚಲ ಮತ್ತು ವಾಚಾಳಿ ಟ್ರಂಪ್‌ರನ್ನು ಬಯಲು ಮಾಡಿದ್ದಾರೆ. ಟ್ರಂಪ್ ತಮ್ಮದೇ ಬಲ ತೋರಿಸಲು ವಿವಿಧ ಸನ್ನೆಗಳ ಮೂಲಕ ನೋಡಿದರೆ, ಜಿನ್‌ಪಿಂಗ್ ಅದನ್ನೂ ಮೀರಿ, ಟ್ರಂಪ್ ಅನ್ನು ಮಣಿಸುವ ರೀತಿಯಲ್ಲಿದ್ದರು. ಟ್ರಂಪ್, ಬೀಜಿಂಗ್‌ಗೆ ಹೊರಡುವ ಮೊದಲು ಮತ್ತು ನಂತರ, ತನ್ನೊಂದಿಗೆ ಇರುವವರ ಬಗ್ಗೆ ಹೆಮ್ಮೆಪಡುತ್ತಲೇ ಇದ್ದರು. ಚೀನಾ ಈ ಶಕ್ತಿಯ ಮುಂದೆ ತಲೆಬಾಗಬೇಕಾಗುತ್ತದೆ ಎಂದು ಟ್ರಂಪ್ ಭಾವಿಸಿದ್ದರು. ಟ್ರಂಪ್ ತಮ್ಮ ತಂಡದಲ್ಲಿರುವ ಜನರು ಅವರ ಕ್ಷೇತ್ರಗಳಲ್ಲಿ ನಂಬರ್ ಒನ್ ಎಂದು ಹೇಳಿದರು. ಅವರಲ್ಲಿ ಎಲಾನ್ ಮಸ್ಕ್, ವಿಶ್ವದ ಅತಿ ದೊಡ್ಡ ಆಸ್ತಿ ನಿರ್ವಹಣಾ ಸಂಸ್ಥೆ ಬ್ಲ್ಯಾಕ್‌ರಾಕ್‌ನ ಸಿಇಒ ಲ್ಯಾರಿ ಫಿಂಕ್ ಮತ್ತು ಮೈಕ್ರಾನ್‌ನ ಸಂಜಯ್ ಮೆಹ್ರೋತ್ರಾ ಮೊದಲಾದವರಿದ್ದರು. ಟ್ರಂಪ್ ಜೊತೆ 17 ಪ್ರಮುಖ ಕಂಪೆನಿಗಳ ಸಿಇಒಗಳು ಇದ್ದರು. ಅವರ ವ್ಯವಹಾರಗಳು 16.5 ಟ್ರಿಲಿಯನ್ ಡಾಲರ್ ಮೌಲ್ಯದ್ದಾಗಿವೆ ಎಂದು ಅಂದಾಜಿಸಲಾಗಿದೆ. ಅವರಿಗೆಲ್ಲ ಚೀನಾದ ಮಾರುಕಟ್ಟೆ ತೆರೆಯುವಂತೆ ಜಿನ್‌ಪಿಂಗ್‌ಗೆ ಹೇಳಲಿದ್ದೇನೆ ಎಂದು ಟ್ರಂಪ್ ಬಡಾಯಿ ಕೊಚ್ಚಿಕೊಳ್ಳುತ್ತಿದ್ದರು. ಇವರೆಲ್ಲ ಚೀನಾದ ಜನರ ಜೀವನವನ್ನು ಇನ್ನೂ ಉನ್ನತ ಮಟ್ಟಕ್ಕೆ ಕೊಂಡೊಯ್ಯುತ್ತಾರೆ ಎನ್ನುತ್ತಿದ್ದರು. ಟ್ರಂಪ್ ತಮ್ಮ ತಂಡದ ಶಕ್ತಿಯನ್ನು ಹೊಗಳುತ್ತಲೇ ಇದ್ದರು. ಆದರೆ ಚೀನಾ ಅದರ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳಲಿಲ್ಲ, ಮರುಳಾಗಲೂ ಇಲ್ಲ. ಆದರೆ ಚೀನಾ ಮಸ್ಕ್ ಅನ್ನು ತಿರಸ್ಕರಿಸಲಿಲ್ಲ. ಚೀನಾ ಕಂಪೆನಿಗಳ ಸಿಇಒಗಳು ಸಹ ಮಸ್ಕ್ ಜೊತೆ ಫೋಟೊ ತೆಗೆಸಿಕೊಳ್ಳುತ್ತಲೇ ಇದ್ದರು. ಆದರೆ ಚೀನಾಕ್ಕೆ ತನ್ನದೇ ಆದ ಃಙಆ ಕಾರು ಟೆಸ್ಲಾಗಿಂತ ಯಾವುದೇ ರೀತಿಯಲ್ಲಿ ಕಡಿಮೆಯಿಲ್ಲ ಎಂದು ಗೊತ್ತಿದೆ. ಅದು ಮಸ್ಕ್‌ಗೂ ತಿಳಿದಿದೆ. ಚೀನಾ ಬಹಳ ಗಾಂಭೀರ್ಯ ತೋರಿಸಿತು. ಅದನ್ನು ಗಮನಿಸುವುದು ಮತ್ತು ಕಲಿಯುವುದು ಯೋಗ್ಯವಾಗಿದೆ ಎಂದು ಅನೇಕ ವಿಶ್ಲೇಷಣೆಗಳು ಹೇಳಿವೆ. ಜಿನ್‌ಪಿಂಗ್ ಅವರ ಗಂಭೀರತೆ ಟ್ರಂಪ್ ಅವರ ಮೇಲೂ ಸಕಾರಾತ್ಮಕ ಪರಿಣಾಮ ಬೀರಿತು ಎಂದು ವಿಶ್ಲೇಷಣೆಗಳು ಹೇಳುತ್ತಿವೆ. ಯುರೋಪಿಯನ್ ನಾಯಕರಿಗೆ ಆಗಾಗ ಏನನ್ನಾದರೂ ಹೇಳುವ ಟ್ರಂಪ್, ಜಿನ್‌ಪಿಂಗ್ ಮುಂದೆ ವಿಧೇಯ ವಿದ್ಯಾರ್ಥಿಯ ಹಾಗೆ ಕಂಡರು. ಬೀಜಿಂಗ್‌ನಲ್ಲಿ ಟ್ರಂಪ್ ಅವರ ವರ್ತನೆ ಬದಲಾಗಿತ್ತು ಮತ್ತು ಅವರ ಭಾಷಣದಲ್ಲಿ ಹೆಚ್ಚು ಸಂಯಮ ಕಂಡಿತು. ಫ್ರೆಂಚ್ ಅಧ್ಯಕ್ಷ ಇಮಾನ್ಯುವೆಲ್ ಮ್ಯಾಕ್ರೋನ್ ಅವರ ಪತ್ನಿಯ ಬಗ್ಗೆ ಟ್ರಂಪ್ ಏನು ಹೇಳಿದರು ಎಂಬುದು ಜಗತ್ತಿಗೆ ಗೊತ್ತಿದೆ. ಉಕ್ರೇನಿಯನ್ ಅಧ್ಯಕ್ಷರನ್ನು ಶ್ವೇತಭವನದಲ್ಲಿ ಹೇಗೆ ನಡೆಸಿಕೊಳ್ಳಲಾಯಿತು ಎಂಬುದನ್ನು ಜಗತ್ತು ನೋಡಿದೆ.ಟ್ರಂಪ್ ಬ್ರಿಟಿಷ್ ಪ್ರಧಾನಿಯ ಬಗ್ಗೆಯೂ ಟೀಕಿಸಿದರು. ಗ್ರೀನ್‌ಲ್ಯಾಂಡ್ ಸ್ವಾಧೀನಪಡಿಸಿಕೊಳ್ಳುವ ಬಗ್ಗೆ ಮಾತನಾಡಿದರು. ಆದರೆ ಜಿನ್‌ಪಿಂಗ್ ಅವರ ಮುಂದೆ ಟ್ರಂಪ್ ಅವರ ನಡವಳಿಕೆ ಕಂಡು ಜಗತ್ತು ಅಚ್ಚರಿಪಟ್ಟಿತು. ಯುರೋಪಿಯನ್ ನಾಯಕರ ಎದುರಲ್ಲಿ ಇರುವ ಟ್ರಂಪ್ ಒಬ್ಬರು, ಜಿನ್‌ಪಿಂಗ್ ಅವರೆದುರು ಕಂಡ ಟ್ರಂಪ್ ಇನ್ನೊಬ್ಬರು ಎಂಬಂತಿತ್ತು. ಟ್ರಂಪ್ ಅವರ ಈ ಭೇಟಿಯಿಂದ ಅಮೆರಿಕ ಏನು ಗಳಿಸಿತು? ಟ್ರಂಪ್ ಅವರ ಹೇಳಿಕೆಗಳಿಂದ ಅಮೆರಿಕನ್ ಮಾಧ್ಯಮಗಳು ತೃಪ್ತವಾಗಿಲ್ಲ. ಟ್ರಂಪ್ ಇದನ್ನು ಐತಿಹಾಸಿಕ ಎಂದು ಕರೆಯುತ್ತಿದ್ದಾರೆ. ಆದರೆ ಅಂಥದ್ದೇನಾದರೂ ಆಗಿದೆ ಎಂದು ಸೂಚಿಸುವ ಏನನ್ನೂ ಚೀನಾ ಹೇಳಿಲ್ಲ. ಜಿನ್‌ಪಿಂಗ್ ಟ್ರಂಪ್ ಅವರನ್ನು ಯಾವುದೇ ರೀತಿಯಲ್ಲಿ ಅವಮಾನಿಸಲಿಲ್ಲ. ಅವರನ್ನು ದುರ್ಬಲಗೊಳಿಸಲು ಪ್ರಯತ್ನಿಸಲಿಲ್ಲ. ಅದೇ ವೇಳೆ ಅತಿಥಿಯನ್ನು ರಾಜನಂತೆಯೂ ಮೆರೆಸದೆ, ಔಪಚಾರಿಕ ರೀತಿಯಲ್ಲಿ ಸರಳವಾಗಿ ಗೌರವಿಸಲಾಯಿತು. ಈ ಭೇಟಿ ಇಬ್ಬರು ಶತ್ರುಗಳು ಭೇಟಿಯಾಗುತ್ತಿರುವಂತೆ ಕಾಣದ ಹಾಗೆ ಚೀನಾ ಎಚ್ಚರ ವಹಿಸಿತು. ಟ್ರಂಪ್ ಭೇಟಿಯ ಮೊದಲ ದಿನವೇ ಜಿನ್‌ಪಿಂಗ್ ಅವರು, ಅಮೆರಿಕ ತೈವಾನ್ ಸಮಸ್ಯೆಯನ್ನು ಸರಿಯಾಗಿ ನಿಭಾಯಿಸದಿದ್ದರೆ ಎರಡೂ ದೇಶಗಳ ನಡುವಿನ ಉತ್ತಮ ಸಂಬಂಧ ಹಾಳಾಗುತ್ತದೆ ಎಂದು ಘೋಷಿಸಿದರು. ಒಂದು ರೀತಿಯಲ್ಲಿ, ಜಿನ್‌ಪಿಂಗ್ ಟ್ರಂಪ್‌ಗೆ ತೈವಾನ್ ಬಗ್ಗೆ ಮಾತನಾಡಲು ಅವಕಾಶ ನೀಡಲಿಲ್ಲ. ಅವರು ಪ್ರತೀ ಹಂತದಲ್ಲೂ ಟ್ರಂಪ್‌ಗೆ ಮಿತಿಗಳನ್ನು ಹಾಕಿದಂತಿತ್ತು. ತೈವಾನ್ ಬಗ್ಗೆ ಅಮೆರಿಕ ಎಚ್ಚರಿಕೆ ವಹಿಸದಿದ್ದರೆ, ಎರಡೂ ದೇಶಗಳ ನಡುವೆ ಸಂಘರ್ಷ ಉಂಟಾಗಬಹುದು ಎಂದು ಅವರು ಟ್ರಂಪ್‌ಗೆ ಎಚ್ಚರಿಸಿದ್ದಾಗಿ ವರದಿಯಾಗಿದೆ. ತೈವಾನ್ ವಿಷಯವಾಗಿ ಕೇಳಿದ ಪ್ರಶ್ನೆಗೆ ಫಾಕ್ಸ್ ನ್ಯೂಸ್ ಸಂದರ್ಶನದಲ್ಲಿ ಟ್ರಂಪ್ ಉತ್ತರಿಸಿದ್ದಾರೆ. ‘‘ತೈವಾನ್ ಜನರು ತಟಸ್ಥರಾಗಿರಬೇಕು. ನಾನು ಯಾರೂ ಸ್ವತಂತ್ರರಾಗಲು ಕಾಯುತ್ತಿಲ್ಲ. ನಾವು 9,500 ಮೈಲುಗಳಷ್ಟು ದೂರ ಹೋಗಿ ಯುದ್ಧ ಮಾಡುವುದರಲ್ಲಿ ಅರ್ಥವಿಲ್ಲ. ತೈವಾನ್ ಸ್ವಲ್ಪ ತಣ್ಣಗಾಗಬೇಕು ಮತ್ತು ಚೀನಾ ಕೂಡ ತಣ್ಣಗಾಗಬೇಕು’’ ಎಂದು ಟ್ರಂಪ್ ಹೇಳಿದ್ದಾರೆ. ಅಂದರೆ, ಟ್ರಂಪ್ ಹಿಂದೆ ಸರಿದಿದ್ದಾರೆ ಎಂದು ಹೇಳಲಾಗುತ್ತಿದೆ. ತೈವಾನ್ ಕುರಿತು ಅಮೆರಿಕ ಚೀನಾಕ್ಕೆ ಬೆದರಿಕೆ ಹಾಕುತ್ತಿದ್ದ ಕಾಲವಿತ್ತು. ಆದರೆ ಈಗ ಟ್ರಂಪ್ ತಮ್ಮ ಸ್ವರ ಬದಲಾಯಿಸಿದ್ದಾರೆ. ಚೀನಾ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ, ಅಮೆರಿಕ ಚೀನಾ ಸಮಸ್ಯೆಯನ್ನು ತೀವ್ರ ಎಚ್ಚರಿಕೆಯಿಂದ ನಿಭಾಯಿಸಬೇಕು ಎಂದು ಹೇಳಲಾಗಿದೆ. ಅಮೆರಿಕದ ಹೇಳಿಕೆಯಲ್ಲಿ ತೈವಾನ್ ಬಗ್ಗೆ ಏನನ್ನೂ ಉಲ್ಲೇಖಿಸಲಾಗಿಲ್ಲ. ಟ್ರಂಪ್ ಅವರು ಜಿನ್‌ಪಿಂಗ್ ಅವರೊಂದಿಗೆ ಉತ್ತಮ ಸಭೆ ನಡೆಸಿದರು ಎಂದು ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ. ಈ ಭೇಟಿಯಲ್ಲಿ ಏನಾಯಿತು ಎಂದು ಜಗತ್ತು ಕಾಯುತ್ತಿದೆ ಎಂಬುದು ಚೀನಾಕ್ಕೆ ಗೊತ್ತಿದೆ. ಚೀನಾದ ಮೇಲೆ ಸುಂಕ ವಿಧಿಸುವುದಾಗಿ ಪದೇ ಪದೇ ಬೆದರಿಕೆ ಹಾಕುತ್ತಿರುವ ಸೂಪರ್ ಪವರ್ ದೇಶದ ಅಧ್ಯಕ್ಷರ ಜೊತೆ ಜಿನ್‌ಪಿಂಗ್ ಹೇಗೆ ನಡೆದುಕೊಂಡರು ಎಂದು ಜಗತ್ತು ನೋಡುತ್ತದೆ. ಅವರ ಸಭೆ ಹೇಗಿರುತ್ತದೆ? ಅವರ ಹೇಳಿಕೆಗಳು ಹೇಗಿರುತ್ತವೆ ಎಂಬ ಕುತೂಹಲವಿತ್ತು. ತಮ್ಮ ಆರಂಭಿಕ ಭಾಷಣದಲ್ಲಿ, ಚೀನಾ ಮತ್ತು ಯುಎಸ್ ‘ಥುಸಿಡೈಡ್ಸ್ ಟ್ರ್ಯಾಪ್’ನಿಂದ ಮುಕ್ತವಾಗಬಹುದೇ ಎಂದು ಕ್ಸಿ ಜಿನ್‌ಪಿಂಗ್ ಕೇಳಿದರು. ಇಲ್ಲಿ, ಈಗಾಗಲೇ ಪ್ರಭಾವಿಯಾಗಿರುವ ದೊಡ್ಡಣ್ಣನಿಗೆ, ತನಗಿಂತ ವೇಗವಾಗಿ ಬೆಳೆಯುತ್ತಿರುವ ಚೀನಾ ತನ್ನ ಸ್ಥಾನಕ್ಕೆ ಕುತ್ತು ತರಬಹುದು ಎಂಬ ಆತಂಕ ಯುದ್ಧಕ್ಕೆ ದಾರಿ ಮಾಡಿಕೊಡಬಹುದು ಎಂಬುದು ಈ ‘ಥುಸಿಡೈಡ್ಸ್ ಟ್ರ್ಯಾಪ್’ ಪರಿಕಲ್ಪನೆಯ ಅರ್ಥ. ಆದರೆ, ಆ ಬಲೆಯಿಂದ ಹೊರಬರಲು ಸಾಧ್ಯವಾಗಬಹುದೇ ಎಂದು ಕೇಳುವ ಮೂಲಕ ಜಿನ್‌ಪಿಂಗ್, ತಮ್ಮ ಸ್ಪರ್ಧೆ ಸಂಘರ್ಷಕ್ಕೆ ತಿರುಗುವುದಿಲ್ಲ ಎಂಬುದನ್ನು ಸೂಚಿಸಿದರು. ಜಿನ್‌ಪಿಂಗ್ ಅವರು ತಮ್ಮ ಭಾಷಣಗಳಲ್ಲಿ ಮತ್ತು ಅಂತರ್‌ರಾಷ್ಟ್ರೀಯ ರಾಜತಾಂತ್ರಿಕ ಮಾತುಕತೆಗಳಲ್ಲಿ ಪದೇ ಪದೇ ಥುಸಿಡೈಡ್ಸ್ ಟ್ರ್ಯಾಪ್ ಎಂಬ ಐತಿಹಾಸಿಕ ಸಿದ್ಧಾಂತವನ್ನು ಉಲ್ಲೇಖಿಸುತ್ತಾರೆ. ಈ ಪರಿಕಲ್ಪನೆ ಇಂದಿನ ಜಾಗತಿಕ ರಾಜಕೀಯದಲ್ಲಿ ಹೆಚ್ಚು ಚರ್ಚೆಗೆ ಗ್ರಾಸವಾಗಿದೆ. ಥುಸಿಡೈಡ್ಸ್ ಗ್ರೀಕ್ ದೇಶದ ಅಥೆನ್ಸ್‌ನಲ್ಲಿದ್ದ ಇತಿಹಾಸಕಾರ. ಸ್ಪಾರ್ಟಾ ಮತ್ತು ಅಥೆನ್ಸ್ ನಡುವಿನ ಯುದ್ಧವನ್ನು ವಿವರಿಸುತ್ತಾ, ಆತ ಆಗಿನ ಪ್ರಬಲ ಸಾಮ್ರಾಜ್ಯವಾಗಿದ್ದ ಸ್ಪಾರ್ಟಾದ ಮನಸ್ಸಿನಲ್ಲಿ ಅಥೆನ್ಸ್ ಎಂಬ ಹೊಸದಾಗಿ ಬೆಳೆಯುತ್ತಿರುವ ಶಕ್ತಿ ಉಂಟುಮಾಡಿದ ಭಯವೇ ಆ ಎರಡೂ ದೇಶಗಳ ನಡುವಿನ ಭೀಕರ ಯುದ್ಧಕ್ಕೆ ಮೂಲ ಕಾರಣವಾಯಿತು ಎಂದಿದ್ದಾನೆ. ಹೊಸದರ ಬಗೆಗಿನ ಸ್ಥಾಪಿತ ಶಕ್ತಿಯ ಭಯವನ್ನು ಈ ಥುಸಿಡೈಡ್ಸ್ ಟ್ರ್ಯಾಪ್ ಎಂಬ ಸಿದ್ಧಾಂತ ಸೂಚಿಸುತ್ತದೆ. ಹೊಸ ಶಕ್ತಿ ಹೊರಹೊಮ್ಮಿದಾಗ, ಸ್ಥಾಪಿತ ಶಕ್ತಿ ಅಸುರಕ್ಷಿತತೆ ಅನುಭವಿಸತೊಡಗುತ್ತದೆ ಎಂದು ಆತ ಹೇಳುತ್ತಾನೆ. ಸ್ಥಾಪಿತ ಶಕ್ತಿಯ ಭಯವೇ ಯುದ್ಧಕ್ಕೆ ಕಾರಣವಾಗುತ್ತದೆ ಮತ್ತು ಅಂತಿಮವಾಗಿ ಎರಡೂ ಶಕ್ತಿಗಳಿಗೆ ನಷ್ಟವಾಗುತ್ತದೆ. ಈಗ, ಚೀನಾ ಮತ್ತು ಅಮೆರಿಕ ನಡುವೆ ಯುದ್ಧ ನಡೆದರೆ ಎರಡೂ ದೇಶಗಳು ನಷ್ಟ ಅನುಭವಿಸುತ್ತವೆ ಎಂದು ಜಿನ್‌ಪಿಂಗ್ ಹೇಳುತ್ತಿದ್ಧಾರೆ. ಒಂದು ರೀತಿಯಲ್ಲಿ, ಜಿನ್‌ಪಿಂಗ್ ಅಧಿಕಾರದ ಸಮತೋಲನದ ಅರ್ಥವನ್ನೂ ವಿವರಿಸುತ್ತಿದ್ಧಾರೆ. ಅಮೆರಿಕ ಯಾವುದೇ ತಿಳುವಳಿಕೆಯನ್ನು ಲೆಕ್ಕಿಸದೆ ದಾಳಿ ಮಾಡಿದರೂ ತನಗೆ ತೊಂದರೆಯಿಲ್ಲ ಎಂದು ಜಿನ್‌ಪಿಂಗ್ ಸೂಚಿಸಿದಂತಿದೆ. ಟ್ರಂಪ್ ಈಗ ಇದನ್ನು ಚೆನ್ನಾಗಿ ಅರ್ಥಮಾಡಿಕೊಂಡಿರಬೇಕು. ಏಕೆಂದರೆ ಇರಾನ್‌ನೊಂದಿಗಿನ ಯುದ್ಧದಲ್ಲಿ ಸಾಕಷ್ಟು ದೊಡ್ಡ ಮಟ್ಟದಲ್ಲೇ ಟ್ರಂಪ್ ಗರ್ವಭಂಗವಾಗಿದೆ. ಇರಾನ್ ಎಂದರೆ ಏನೂ ಅಲ್ಲ ಎಂದೇ ಅವರು ತಪ್ಪಾಗಿ ಅಂದಾಜು ಮಾಡಿ ಕೆಟ್ಟಿದ್ದಾರೆ. ಚೀನಾ ಅಮೆರಿಕಕ್ಕೆ ಅದರ ಸ್ಥಾನವೇನು ಎಂದು ತೋರಿಸಿದೆ ಮತ್ತು ಚೀನಾ ವಿಶ್ವ ಇತಿಹಾಸದ ಬಗ್ಗೆ ಅಜ್ಞಾನಿಯಲ್ಲ ಎಂಬುದು ತಿಳಿಯುತ್ತಿದೆ. ಇದರಲ್ಲಿ ಭಾರತಕ್ಕೂ ಪಾಠಗಳಿವೆ. ಟ್ರಂಪ್ ಮತ್ತು ಜಿನ್‌ಪಿಂಗ್ ನಡುವಿನ ಸಭೆಯ ಸಂದರ್ಭದಲ್ಲಿ ತಜ್ಞರು ಭಾರತದತ್ತ ನೋಡುತ್ತಿದ್ದಾರೆ. ಜಿ 20 ಸಮಯದಲ್ಲಿ, ಭಾರತವನ್ನು ಸೂಪರ್ ಪವರ್ ಎಂದು ಬಿಂಬಿಸಲು ಯತ್ನಗಳು ನಡೆದವು. ಕಾರ್ಯಕ್ರಮಕ್ಕಾಗಿ ಸಾವಿರಾರು ಕೋಟಿ ರೂಪಾಯಿಗಳನ್ನು ಖರ್ಚು ಮಾಡಲಾಯಿತು. ಆದರೆ ಏನನ್ನೂ ಮಾಡಲಾಗಲಿಲ್ಲ. ಭಾರತ ಇನ್ನೂ ಬ್ರಿಕ್ಸ್ ಅಧ್ಯಕ್ಷತೆ ವಹಿಸಿದೆ. ಆದರೆ ಬ್ರಿಕ್ಸ್ ಇರಾನ್ ವಿರುದ್ಧದ ಕಾನೂನುಬಾಹಿರ ಯುದ್ಧವನ್ನು ಖಂಡಿಸಲಿಲ್ಲ. ಇರಾನ್ ಸದಸ್ಯ ರಾಷ್ಟ್ರವಾಗಿದ್ದು, ಖಂಡನೆಗೆ ಒತ್ತಾಯಿಸಿತ್ತು. ಬ್ರಿಕ್ಸ್ ವಿದೇಶಾಂಗ ಮಂತ್ರಿಗಳ ಸಭೆಯನ್ನು ಭಾರತದಲ್ಲಿ ನಡೆಸಲಾಯಿತು. ಆದರೆ ಜಂಟಿ ಹೇಳಿಕೆಯನ್ನು ಸಹ ನೀಡಲಿಲ್ಲ. ಫೆಬ್ರವರಿ 28ರಿಂದ ಇರಾನ್ ಎದುರು ಯುದ್ಧ ಶುರುವಾದಾಗಿನಿಂದಲೂ ಭಾರತದ ವಿದೇಶಾಂಗ ನೀತಿ ಏಕಪಕ್ಷೀಯವಾಗಿದ್ದು, ಅದರಿಂದ ಉಂಟಾಗುವ ಹಾನಿಯ ಬಗ್ಗೆ ಟೀಕೆಗಳಿವೆ. 12 ವರ್ಷಗಳಿಂದ, ಭಾರತದ ವಿದೇಶಾಂಗ ನೀತಿ ಕೇವಲ ಪ್ರಚಾರದ ಅಬ್ಬರದಲ್ಲಿ ಸಿಲುಕಿಕೊಂಡಿದೆ ಎಂದು ಹೇಳಲಾಗುತ್ತಿದೆ. ಯುದ್ಧದ ಮೊದಲು ಭಾರತ ತನ್ನ ಹಳೆಯ ಸ್ನೇಹಿತ ಇರಾನ್ ಅನ್ನು ತ್ಯಜಿಸಿ ತನ್ನ ಹೊಸ ಸ್ನೇಹಿತ ಇಸ್ರೇಲ್ ಅನ್ನು ಅಪ್ಪಿಕೊಂಡದ್ದು ಸರಿಯಲ್ಲ ಎಂಬ ಅಭಿಪ್ರಾಯಗಳಿವೆ. ಚೀನಾದಂತೆಯೇ ಭಾರತವೂ ಈ ಸಂಕೀರ್ಣ ಜಗತ್ತಿನಲ್ಲಿ ಗಂಭೀರತೆಯನ್ನು ಪ್ರದರ್ಶಿಸಬೇಕು ಎಂದು ಹೇಳಲಾಗುತ್ತಿದೆ. ಭಾರತ ಮತ್ತು ಚೀನಾ ಸಮಾನ ಸ್ಥಾನದಲ್ಲಿದ್ದ ಸಮಯವಿತ್ತು. ಈಗ ಪರಿಸ್ಥಿತಿ ಬದಲಾಗಿದೆ. ಚೀನಾ ಭಾರತಕ್ಕೆ ಬಹಳ ಮುಖ್ಯವಾಗಿದೆ. ಭಾರತ ಚೀನಾದ ಅಪ್ಲಿಕೇಶನ್‌ಗಳನ್ನು ನಿಷೇಧಿಸುತ್ತಿತ್ತು ಮತ್ತು ಅನೇಕರು ಸಂತೋಷಪಡುತ್ತಿದ್ದರು. ಭಾರತ ಇಂದು ಚೀನಾದ ಹೂಡಿಕೆಗಾಗಿ ಕಾದಿದೆ ಮತ್ತು ಆ ಜನರು ಮೌನವಾಗಿದ್ದಾರೆ. ಭಾರತ ಚೀನಾದ ಆಮದುಗಳ ಮೇಲೆ ಅವಲಂಬಿತವಾಗಿದೆ ಮತ್ತು ಚೀನಾದೊಂದಿಗಿನ ನಮ್ಮ ವ್ಯಾಪಾರ ಕೊರತೆ ದೊಡ್ಡ ಮಟ್ಟದಲ್ಲಿ ಬೆಳೆದಿದೆ. ಭಾರತದ ವಿದೇಶಾಂಗ ನೀತಿಯ ಭೌಗೋಳಿಕತೆ ಛಿದ್ರಗೊಂಡಂತೆ ಕಾಣುತ್ತದೆ. ಆದರೆ ಕುರುಡು ಮಡಿಲ ಮಾಧ್ಯಮಕ್ಕೆ ಈ ಸತ್ಯ ಕಾಣದಂತಾಗಿದೆ. ಅದು ಹಾಡಿಹೊಗಳುತ್ತ ತನ್ನ ಲಜ್ಜೆಗೇಡಿತನವನ್ನು ಪ್ರದರ್ಶಿಸುತ್ತಲೇ ಇದೆ.

ವಾರ್ತಾ ಭಾರತಿ 19 May 2026 10:25 am

6ವರ್ಷದ ನಂತರ ತಿಮ್ಮಪ್ಪನ ದರ್ಶನ : ತಿರುಪತಿಯಿಂದ ಡಿಕೆಶಿ, ನೇರ ಸಾಧನಾ ಸಮಾವೇಶಕ್ಕೆ - ಏನಾದ್ರೂ ಗುಡ್’ನ್ಯೂಸ್ ಸಿಕ್ಕಿದೆಯಾ?

DK Shivakumar in Sadhana Samavesha : ತಿರುವನಂತಪುರಂನಲ್ಲಿ ಕೇರಳದ ನೂತನ ಸರ್ಕಾರದ ಪದಗ್ರಹಣ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕರ್ನಾಟಕದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್, ಬೆಂಗಳೂರಿಗೆ ಬಂದು ತಿರುಪತಿಗೆ ಹೋಗಿ ಬಾಲಾಜಿ ದರ್ಶನವನ್ನು ಮಾಡಿ, ನೇರವಾಗಿ ಸಾಧನಾ ಸಮಾವೇಶಕ್ಕೆ ಹೋಗುತ್ತಿದ್ದಾರೆ. ರಾಹುಲ್ ಗಾಂಧಿಯವರನ್ನು ಭೇಟಿಯಾಗಿದ್ದ ಡಿಕೆಶಿಗೆ, ಏನಾದರೂ ಶುಭಸುದ್ದಿ ಸಿಕ್ಕಿದೆಯಾ ಎನ್ನುವುದು ಚರ್ಚೆಯ ವಿಷಯವಾಗಿದೆ.

ವಿಜಯ ಕರ್ನಾಟಕ 19 May 2026 10:19 am

Gold Rate Rise: ಅಮೆರಿಕ- ಇರಾನ್‌ ಸಂಧಾನಕ್ಕೆ ಒಲವು: ಡಾಲರ್ ಕುಸಿತದಿಂದ ಏರಿಕೆಯಾದ ಚಿನ್ನದ ದರ

ಅಮೂಲ್ಯ ಲೋಹಗಳಾದ ಚಿನ್ನ ಬೆಳ್ಲಿ ದರದಲ್ಲಿ ಹಾವು ಏಣಿ ಆಟ ಶುರುವಾಗಿದೆ. ಅಮೆರಿಕ- ಇರಾನ್ ಸಂಘರ್ಷದಿಂದ ತೈಲ ಬೆಲೆ ಏರಿಕೆಗೊಂಡಾಗ, ಮಾರುಕಟ್ಟೆಯಲ್ಲಿ ಚಿನ್ನ ಬೆಳ್ಳಿ ದರಗಳು ಇಳಿದಿವೆ, ಇದೀಗ ಅಮೆರಿಕ- ಇರಾನ್ ಸಂಧಾನ ಮಾತುಕತೆಗೆ ಮುಂದಾಘಿರುವುದರಿಂದ ತೈಲ ಬೆಲೆ ಇಳಿದು, ಹಣದುಬ್ಬರದ ಆತಂಕ ಕಡಿಮೆ ಆಗಿರುವ ಹಿನ್ನೆಲೆ ಬಡ್ಡಿದರಗಳು ಹೆಚ್ಚು ಕಾಲ ಏರಿಕೆ ಆಗಲಾರದು ಎಂಬ ನಿರೀಕ್ಷೆಯಿಂದ ಚಿನ್ನ ಬೆಳ್ಳಿಯ ಬೇಡಿಕೆ ಮತ್ತೆ ಹೆಚ್ಚಾಗಿದೆ.

ವಿಜಯ ಕರ್ನಾಟಕ 19 May 2026 10:14 am

ಡಿಸಿಎಂ ತವರಲ್ಲಿ ಹಕ್ಕುಪತ್ರ ವಿತರಣೆ ವಿಳಂಬ, ಹಿಂದಿದೆಯಾ ಕುರ್ಚಿ ಮ್ಯಾಟರ್‌?

ತಾಂಡಾ ಮತ್ತು ಹಟ್ಟಿಗಳು ಸೇರಿದಂತೆ ದಾಖಲೆ ರಹಿತ ವಸತಿ ಪ್ರದೇಶಗಳನ್ನು ಕಂದಾಯ ಗ್ರಾಮಗಳನ್ನಾಗಿ ಪರಿವರ್ತಿಸಿ ಹಕ್ಕುಪತ್ರ ನೀಡುವ ಪ್ರಕ್ರಿಯೆಯು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರ ತವರು ಜಿಲ್ಲೆಯಲ್ಲಿಯೇ ವಿಳಂಬವಾಗಿದೆ.ಫೆ. 14 ರಂದು ಹಾವೇರಿಯಲ್ಲಿ ನಡೆದಿದ್ದ ರಾಜ್ಯಮಟ್ಟದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿವಿಧ ಜಿಲ್ಲೆಗಳ 20 ಸಾವಿರಕ್ಕೂ ಹೆಚ್ಚು ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಿದ್ದರು. ಆ ನಂತರದ ದಿನಗಳಲ್ಲಿ ಹಲವು ಜಿಲ್ಲೆಗಳಲ್ಲಿ ಅಲ್ಲಿನ ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಹಕ್ಕುಪತ್ರಗಳ ವಿತರಣೆ ನಡೆದಿದ್ದರೂ, ಡಿಸಿಎಂ ಅವರ ಸ್ವಂತ ಜಿಲ್ಲೆಯಲ್ಲಿ ಮಾತ್ರ ಈ ಪ್ರಕ್ರಿಯೆ ಇನ್ನೂ ಆಮೆಗತಿಯಲ್ಲಿ ಸಾಗಿದೆ.

ವಿಜಯ ಕರ್ನಾಟಕ 19 May 2026 9:44 am

Karnataka Weather: ಬೆಂಗಳೂರಿಗೆ ಯೆಲ್ಲೋ ಅಲರ್ಟ್- ದಾವಣಗೆರೆ, ಶಿವಮೊಗ್ಗ, ವಿಜಯನಗರ ಸೇರಿ 7 ಜಿಲ್ಲೆಗಳಿಗೆ ಭಾರಿ ಮಳೆಯ ಅಲರ್ಟ್

ಚಂಡಮಾರತದ ಹಿನ್ನೆಲೆ ದಕ್ಷಿಣ ಕರ್ನಾಟಕದಲ್ಲಿ ಭಾರಿ ಮಳೆಯಾಗುತ್ತಿದೆ. ಬೆಂಗಳೂರಿಗೆ 3 ದಿನ ಭಾರಿ ಮಳೆಯ ಮುನ್ಸೂಚನೆ ಇದ್ದು ಯೆಲ್ಲೋ ಅಲರ್ಟ್ ಕೊಡಲಾಗಿದೆ. ಹೀಗಾಗಿ ಸಂಜೆ ಕಚೇರಿ ಮುಗಿಸಿ ಮನೆಗೆ ಹೊರಡುವವರಿಗೆ ಮಳೆ ಅಡ್ಡಿ ಆಗಲಿದೆ.

ವಿಜಯ ಕರ್ನಾಟಕ 19 May 2026 9:20 am

ಬೀಜೋತ್ಪನ್ನ ಕಿಟ್‌ಗಳ ವಿತರಣೆಗೆ ಎಸ್‌ಸಿಪಿ, ಟಿಎಸ್‌ಪಿ ಹಣ ದುರ್ಬಳಕೆ

ದೂರು ಸಲ್ಲಿಕೆಯಾದ ಮೂರು ವರ್ಷಗಳ ಬಳಿಕ ತನಿಖಾ ಸಮಿತಿ ರಚನೆ!

ವಾರ್ತಾ ಭಾರತಿ 19 May 2026 9:13 am

ದುಬಾರೆ ಆನೆ ಶಿಬಿರದಲ್ಲಿ ದುರಂತ: ಕಾಡು ಪ್ರಾಣಿಗಳ ವೀಕ್ಷಣೆ ಪ್ರವಾಸಿಗರಿಗೆ ಎಷ್ಟು ಸೇಫ್‌?

ದುಬಾರೆ ಆನೆ ಶಿಬಿರದಲ್ಲಿ ನಡೆದ ದಾರುಣ ಘಟನೆಯು ಮೂಲತಃ ಕಾಡು ಪ್ರಾಣಿಗಳಾದ ಆನೆಗಳನ್ನು ಪ್ರವಾಸಿಗರು ಅತೀ ಸಮೀಪದಿಂದ ವೀಕ್ಷಿಸಲು ಅವಕಾಶ ನೀಡುವುದರ ಸುರಕ್ಷತೆಯ ಬಗ್ಗೆ ಗಂಭೀರ ಚರ್ಚೆಯನ್ನು ಹುಟ್ಟುಹಾಕಿದೆ. ಆನೆಗಳು ಎಷ್ಟೇ ತರಬೇತಿ ಪಡೆದಿದ್ದರೂ ಸಹ ಅವುಗಳ ವರ್ತನೆ ಕ್ಷಣಾರ್ಧದಲ್ಲಿ ಬದಲಾಗಬಹುದು.

ವಿಜಯ ಕರ್ನಾಟಕ 19 May 2026 9:11 am

ಕರ್ನಾಟಕ ರಾಜ್ಯಸಭಾ ಚುನಾವಣೆ : ತೆರವಾಗುತ್ತಿರುವ 4 ಸೀಟ್, ರೇಸಿನಲ್ಲಿರುವ 8 ಸಂಭಾವ್ಯರು, ಯಾರೆಲ್ಲಾ?

Rajya Sabha Election - Karnataka : ಜೂನ್ ಮಾಸಾಂತ್ಯಕ್ಕೆ ಕರ್ನಾಟಕದ ನಾಲ್ಕು ರಾಜ್ಯಸಭಾ ಸ್ಥಾನಗಳು ತೆರವಾಗಲಿದೆ. ಇರುವ ನಾಲ್ಕು ಸ್ಥಾನಕ್ಕೆ ಎಂಟು ಮುಖಂಡರು, ರೇಸಿನಲ್ಲಿದ್ದಾರೆ ಎಂದು ಹೇಳಲಾಗುತ್ತಿದೆ. ಈಗಿನ ಸಂಖ್ಯಾಬಲದ ಪ್ರಕಾರ, ಕಾಂಗ್ರೆಸ್ಸಿನಿಂದ ಮೂವರು ಮತ್ತು ಬಿಜೆಪಿಯಿಂದ ಒಬ್ಬರು ಸಲೀಸಾಗಿ ಗೆಲ್ಲಬಹುದು. ಯಾರು ಸಂಭಾವ್ಯರು, ಯಾರು ಟಿಕೆಟಿಗಾಗಿ ಭಾರೀ ಪ್ರಯತ್ನವನ್ನು ಮಾಡುತ್ತಿದ್ದಾರೆ?

ವಿಜಯ ಕರ್ನಾಟಕ 19 May 2026 9:09 am

ಸ್ಯಾನ್ ಡಿಯಾಗೋದ ಮಸೀದಿಯಲ್ಲಿ ಶೂಟೌಟ್: ಅಪ್ರಾಪ್ತ ಬಂದೂಕುಧಾರಿ ಸೇರಿ 5ಜನ ಸಾವು, ಮುಸ್ಲಿಂ ಕಮ್ಯೂನಿಟಿ ಮೇಲೆ ದ್ವೇಷ ಅಪರಾಧದ ಶಂಕೆ.!

ಕ್ಯಾಲಿಫೋರ್ನಿಯಾದ ಸ್ಯಾನ್ ಡಿಯಾಗೋ ಪ್ರದೇಶದ ಇಸ್ಲಾಮಿಕ್ ಸೆಂಟರ್ ಬಳಿ ಒಬ್ಬ ಅಪ್ರಾಪ್ತ ಸೇರಿದಂತೆ 2 ಹದಿಹರೆಯದ ಬಂದೂಕುಧಾರಿಗಳಿಂದ ದಾಳಿ ನಡೆದಿದ್ದು, ಈ ಘಟನೆಯಲ್ಲಿ ದಾಳಿಕೋರರು ಸೇರಿದಂತೆ 5 ಜನ ಸಾವನ್ನಪ್ಪಿರುವ ಘಟನೆ ನಡೆದಿದೆ. ಇನ್ನು, ಈ ಮಸೀದಿ ಸಂಕೀರ್ಣದಲ್ಲಿ ಮಕ್ಕಳಿಗೆ ಶಿಕ್ಷಣ ನೀಡಲಾಗುತ್ತಿದ್ದು, ಮುಸ್ಲಿಂ ಸಮುದಾಯದ ಮೇಲಿನ ದ್ವೇಷದಿಂದಾಗಿ ಅಪರಾಧ ಎಸಗಿರುವ ಶಂಕೆ ವ್ಯಕ್ತವಾಗಿದ್ದು, ಈ ಕುರಿತು FBI ಹೆಚ್ಚಿನ ತನಿಖೆ ನಡೆಸುತ್ತಿದೆ. ಈ ಕುರಿತ ವರದಿ ಇಲ್ಲಿದೆ..

ವಿಜಯ ಕರ್ನಾಟಕ 19 May 2026 9:00 am

ಪೆಟ್ರೋಲ್ - ಡೀಸೆಲ್ ಬೆಲೆ ಮತ್ತೆ 90 ಪೈಸೆ ಹೆಚ್ಚಳ : ಗ್ರಾಹಕರಿಗೆ ಭಾರಿ ಬೆಲೆ ಏರಿಕೆ ಬಿಸಿ

ಗ್ರಾಹಕರಿಗೆ ಮತ್ತೆ ಬೆಲೆ ಏರಿಕೆ ಬಿಸಿ ತಟ್ಇದೆ. ಪೆಟ್ರೋಲ್ ಡೀಸೆಲ್ ಬೆಲೆ ಮತ್ತೆ ಏರಿಕೆ ಆಗಿದೆ.

ವಿಜಯ ಕರ್ನಾಟಕ 19 May 2026 8:00 am

ರಾಷ್ಟ್ರ ರಾಜಧಾನಿಯಲ್ಲಿ ಮತ್ತಷ್ಟು ಹೆಚ್ಚಿದ ಬಿಸಿಲಿನ ಬೇಗೆ: ಗರಿಷ್ಠ ತಾಪಮಾನ ದಾಖಲು

ಹೊಸದಿಲ್ಲಿ: ರಾಷ್ಟ್ರ ರಾಜಧಾನಿಯಲ್ಲಿ ಬಿಸಿಲಿನ ಬೇಗೆ ಮತ್ತಷ್ಟು ಹೆಚ್ಚಿದ್ದು, ಸೋಮವಾರ ಪ್ರಸಕ್ತ ಋತುವಿನ ಗರಿಷ್ಠ ಉಷ್ಣಾಂಶ 43.4 ಡಿಗ್ರಿ ಸೆಲ್ಷಿಯಸ್ ಸಫ್ದರ್ಜಂಗ್ ಮಾಪನ ಕೇಂದ್ರದಲ್ಲಿ ದಾಖಲಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ. ಮುಂದಿನ ನಾಲ್ಕು ದಿನಗಳ ಕಾಲ ಇದೇ ವಾತಾವರಣ ಮುಂದುವರಿಯಲಿದೆ ಎಂದು ಇಲಾಖೆ ಹೇಳಿದ್ದು, ನಗರದ ವಿವಿಧೆಡೆಗಳಲ್ಲಿ ಉಷ್ಣಮಾರುತಕ್ಕೆ ಸಂಬಂಧಿಸಿದಂತೆ ಯೆಲ್ಲೋ ಅಲರ್ಟ್ ಘೋಷಿಸಿದೆ. ಸಫ್ದರ್ಜಂಗ್ ನಲ್ಲಿ ದಾಖಲಾಗಿರುವ ತಾಪಮಾನ ವಾಡಿಕೆ ಉಷ್ಣತೆಗಿಂತ 3 ಡಿಗ್ರಿ ಸೆಲ್ಷಿಯಸ್ ನಷ್ಟು ಅಧಿಕ. ರಿಡ್ಜ್ ಸ್ಟೇಷನ್ ನಲ್ಲಿ ಗರಿಷ್ಠ ತಾಪಮಾನ 44.6 ಡಿಗ್ರಿ ಸೆಲ್ಷಿಯಸ್ ದಾಖಲಾಗಿದ್ದು, ಇದು ವಾಡಿಕೆಗಿಂತ 3.1 ಡಿಗ್ರಿಯಷ್ಟು ಹೆಚ್ಚು. ಅಯ್ಯಾನಗರದಲ್ಲಿ 44.4 ಡಿಗ್ರಿ, ಲೋಧಿ ರಸ್ತೆ ಕೇಂದ್ರದಲ್ಲಿ 43.8 ಡಿಗ್ರಿ ತಾಪಮಾನ ದಾಖಲಾಗಿದೆ. ಪಾಲಂ ನಿಲ್ದಾಣದಲ್ಲಿ 43.5 ಡಿಗ್ರಿ ಸೆಲ್ಷಿಯಸ್ ದಾಖಲಾಗಿದೆ ಎಂದು ಇಎಂಡಿ ಮೂಲಗಳು ಹೇಳಿವೆ. ಮಂಗಳವಾರ ಮತ್ತು ಬುಧವಾರ ಗರಿಷ್ಠ ತಾಪಮಾನ 43 ಡಿಗ್ರಿಯಿಂದ 45 ಡಿಗ್ರಿ ಸೆಲ್ಷಿಯಸ್ ಇರಲಿದೆ ಹಾಗೂ ಗುರುವಾರ, ಶುಕ್ರವಾರ ಇದು 42 ಡಿಗ್ರಿಯಿಂದ 44 ಡಿಗ್ರಿ ನಡುವೆ ಇರಲಿದೆ ಎಂದು ಇಎಂಡಿ ಅಂದಾಜಿಸಿದೆ. ವಿವಿಧ ಕಡೆಗಳಲ್ಲಿ ಶುಭ್ರ ಆಕಾಶ ಮತ್ತು ಉಷ್ಣಮಾರುತದ ಪರಿಸ್ಥಿತಿ ಇರಲಿದೆ. ಹಗಲಿನ ಅವಧಿಯಲ್ಲಿ ಗಂಟೆಗೆ 35 ಕಿಲೋಮೀಟರ್ ವೇಗದಲ್ಲಿ ಗಾಳಿ ಬೀಸುವ ನಿರೀಕ್ಷೆ ಇದೆ.

ವಾರ್ತಾ ಭಾರತಿ 19 May 2026 7:45 am

ಸುವೇಂದು ಆಪ್ತ ಸಹಾಯಕನ ಹತ್ಯೆ ಆರೋಪಿ ಉತ್ತರಪ್ರದೇಶದಲ್ಲಿ ಬಂಧನ

ಹೊಸದಿಲ್ಲಿ: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಅವರ ಆಪ್ತ ಸಹಾಯಕ ಚಂದ್ರನಾಥ್ ರಾಥ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ರಾಜ್ ಕುಮಾರ್ ಸಿಂಗ್ ಎಂಬಾತನನ್ನು ಸಿಬಿಐ ಅಧಿಕಾರಿಗಳು ಸೋಮವಾರ ಉತ್ತರ ಪ್ರದೇಶದ ಮುಝಫರ್ ನಗರದಲ್ಲಿ ಬಂಧಿಸಿದ್ದಾರೆ. ವಿಶೇಷ ತನಿಖಾ ತಂಡ ಈ ಪ್ರಕರಣದ ತನಿಖೆಯನ್ನು ಹಲವು ರಾಜ್ಯಗಳಿಗೆ ವಿಸ್ತರಿಸುವ ಮುನ್ನ ಮೇ 11ರಂದು ಮೂವರನ್ನು ಈ ಸಂಬಂಧ ಬಂಧಿಸಿತ್ತು. ಮಿಲಿಟರಿ ಶೈಲಿಯ ನಿಖರತೆಯೊಂದಿಗೆ ಹತ್ಯೆ ಮಾಡಲು ಹೊರ ರಾಜ್ಯದಿಂದ ಶಾರ್ಪ್‌ಶೂಟರ್‌ಗಳನ್ನು ಕರೆ ತಂದಿರಬೇಕು ಎಂದು ಎಸ್ಐಟಿ ಶಂಕಿಸಿತ್ತು. ಚಂದ್ರನಾಥ್ ರಾಥ್ ಅವರನ್ನು ಉತ್ತರ 24 ಪರಗಣ ಜಿಲ್ಲೆಯ ಮಾಧ್ಯಮ ಗ್ರಾಮದ ದೊಹಾರಿಯಾ ಕ್ರಾಸ್ ನಲ್ಲಿ ಮೇ 6ರಂದು ರಾತ್ರಿ ಅವರ ನಿವಾಸದಿಂದ ಕೇವಲ 170 ಮೀಟರ್ ದೂರದಲ್ಲಿ ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಅವರ ಚಾಲಕ ಬುದ್ಧಸಾಹೇಬ್ ಬೇರಾ ಕೂಡಾ ದಾಳಿಯಲ್ಲಿ ತೀವ್ರ ಗಾಯಗೊಂಡಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಹಂತಕರು ಕೇವಲ 50 ಸೆಕೆಂಡ್ ನಲ್ಲಿ ಈ ಕಾರ್ಯಾಚರಣೆ ಪೂರ್ಣಗೊಳಿಸಿದ್ದು,  ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡು ಮೋಟರ್‌ ಬೈಕ್‌ಗಳನ್ನು ಎಸ್ಐಟಿ ವಶಪಡಿಸಿಕೊಂಡಿತ್ತು. ಆದರೆ ವಾಹನಗಳನ್ನು ಕದ್ದು ನಕಲಿ ನಂಬರ್‌ ಪ್ಲೇಟ್‌ಗಳನ್ನು ಅಳವಡಿಸಲಾಗಿತ್ತು ಎನ್ನುವುದು ತನಿಖೆಯಿಂದ ತಿಳಿದುಬಂದಿದೆ. ನಿವೇದಿತ ಸೇತು ಟೋಲ್ ಪ್ಲಾಝಾದಲ್ಲಿ ಮೇ 6ರಂದು ಮಾಡಿದ ಯುಪಿಐ ಪಾವತಿಯು ತನಿಖಾಧಿಕಾರಿಗಳಿಗೆ ಮಹತ್ವದ ಸುಳಿವು ನೀಡಿತ್ತು. ಡಿಜಿಟಲ್ ವಿಚಾರಣೆ ನಡೆಸಿದಾಗ ಜಾರ್ಖಂಡ್ ಸಂಪರ್ಕ ಇದ್ದು, ಸಿಲ್ವರ್ ಬಣ್ಣದ ಹ್ಯಾಚ್ಬ್ಯಾಕ್ ಅನ್ನು ಅಲ್ಲಿಂದ ಪಡೆಯಲಾಗಿದೆ ಎನ್ನುವ ಅಂಶ ತಿಳಿದುಬಂದಿತ್ತು.

ವಾರ್ತಾ ಭಾರತಿ 19 May 2026 7:30 am

ಒಂದು ವಾರದಲ್ಲಿ ಎರಡನೇ ಬಾರಿ ಇಂಧನ ದರ ಏರಿಕೆ!

ಪೆಟ್ರೋಲ್‌ ಗೆ 0.86 ರೂ., ಡೀಸೆಲ್‌ ಗೆ 0.83 ರೂ. ಹೆಚ್ಚಳ

ವಾರ್ತಾ ಭಾರತಿ 19 May 2026 7:22 am

Karnataka Rain: ಚಂಡಮಾರುತ ಪ್ರಸರಣ ಪ್ರಭಾವ: ಬೆಂಗಳೂರು ಸೇರಿ ಕರ್ನಾಟಕದಲ್ಲಿ ಭಾರೀ ಮಳೆ, ನೈಋತ್ಯ ಮಾನ್ಸೂನ್ ಪ್ರವೇಶ ಅಪ್ಡೇಟ್ಸ್‌

Karnataka Rain: ಬೆಂಗಳೂರು ಸೇರಿದಂತೆ ಕರ್ನಾಟಕದ ವಿವಿಧ ಭಾಗಗಳಲ್ಲಿ ಧಾರಾಕಾರ ಮಳೆ ಮುಂದುವರಿದಿದೆ. ಚಂಡಮಾರುತ ಪ್ರಸರಣ ಪ್ರಭಾವದಿಂದ ಮಳೆ ಆಗುತ್ತಿದ್ದು ಮುಂದಿನ 3 ದಿನ ಭಾರೀ ಮಳೆ ಆಗುವ ಸಾಧ್ಯತೆ ಇದೆ. ಇನ್ನು ಮೇ 25 ರಂದು ಕೇರಳಕ್ಕೆ ನೈಋುತ್ಯ ಮಾನ್ಸೂನ್ ಪ್ರವೇಶವಾಗಲಿದೆ. ಕರ್ನಾಟಕಕ್ಕೆ ಜೂನ್ ಮೊದಲ ವಾರದಲ್ಲಿ ನೈಋತ್ಯ ಮಾನ್ಸೂನ್ ಪ್ರವೇಶಿಸುವ ಸಾಧ್ಯತೆ ಇದೆ. ಸಾಮಾನ್ಯವಾಗಿ

ಒನ್ ಇ೦ಡಿಯ 19 May 2026 7:06 am

ವರ್ಷ ಕಳೆದರೂ ಮುಗಿಯದ ಸುರಕ್ಷತೆ ಕಾಮಗಾರಿ; ಶಿರೂರು ದುರಂತದ ಅಪಾಯ ಜೀವಂತ

ರಾಷ್ಟ್ರೀಯ ಹೆದ್ದಾರಿ 66 ರ ಅಂಕೋಲಾದ ಶಿರೂರು ಬಳಿ ಸಂಭವಿಸಿದ ಭೀಕರ ಗುಡ್ಡ ಕುಸಿತ ದುರಂತ ನಡೆದು ಎರಡು ವರ್ಷಗಳು ಕಳೆದರೂ ಅಲ್ಲಿನ ಅಪಾಯ ಮಾತ್ರ ಇನ್ನೂ ತಪ್ಪಿಲ್ಲ. ಮುಂಬರುವ ಮಳೆಗಾಲದಲ್ಲಿ ಮತ್ತೆ ಗುಡ್ಡ ಕುಸಿಯುವ ಆತಂಕ ಸ್ಥಳೀಯರಲ್ಲಿ ಜೀವಂತವಾಗಿದೆ. ಈ ಅಪಾಯಕಾರಿ ಸ್ಥಳದಲ್ಲಿ ತಡೆಗೋಡೆ ನಿರ್ಮಿಸಲು ಗುತ್ತಿಗೆ ಕಂಪನಿಗೆ ಮಾರ್ಚ್ ತಿಂಗಳವರೆಗೆ ಗಡುವು ನೀಡಲಾಗಿದ್ದರೂ, ಗಡುವು ಮುಗಿದು ಮಳೆಗಾಲ ಹತ್ತಿರ ಬರುತ್ತಿದ್ದರೂ ಕಾಮಗಾರಿ ಪೂರ್ಣಗೊಂಡಿಲ್ಲ.

ವಿಜಯ ಕರ್ನಾಟಕ 19 May 2026 6:57 am

ತಮಿಳುನಾಡಿನ ಸಿಎಂ ವಿಜಯ್‌ರಿಂದ ಕರ್ನಾಟಕಕ್ಕೆ ಗುಡ್‌ನ್ಯೂಸ್: ಕಾವೇರಿ ನದಿ ನೀರು ಹಂಚಿಕೆ -ಮೇಕೆದಾಟು ವಿವಾದ ವಿಚಾರದಲ್ಲಿ ಸಾಫ್ಟ್

Karnataka: ತಮಿಳುನಾಡಿನ ವಿಧಾನಸಭೆ ಚುನಾವಣೆಯಲ್ಲಿ ಅಭೂತ ಪೂರ್ವ ಯಶಸ್ಸು ಗಳಿಸಿರುವ ಹಾಗೂ ತಮಿಳುನಾಡಿನ ನೂತನ ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರು ಕನ್ನಡಿಗರಿಗೆ ಗುಡ್‌ನ್ಯೂಸ್ ಕೊಡುವ ಸಾಧ್ಯತೆ ಇದೆ. ತಮಿಳುನಾಡು ಹಾಗೂ ಕರ್ನಾಟಕದ ನಡುವೆ ಕಾವೇರಿ ನದಿ ನೀರು ಹಂಚಿಕೆ ಹಾಗೂ ಮೇಕೆದಾಟು ಯೋಜನೆ ವಿಚಾರದಲ್ಲಿ ವೈಮನಸ್ಸು ಇದೆ. ತಮಿಳುನಾಡಿನಲ್ಲಿ ಯಾರೇ ಅಧಿಕಾರಕ್ಕೆ ಬಂದರೂ ಕರ್ನಾಟಕ ಹಾಗೂ

ಒನ್ ಇ೦ಡಿಯ 19 May 2026 6:45 am

ಬೆಂಗಳೂರಲ್ಲಿ ಲೀಸ್‌ಗೆ ಮನೆ ಕೊಡಿಸುವ ನೆಪದಲ್ಲಿ 500 ಜನಕ್ಕೆ 200 ಕೋಟಿ ರೂ ವಂಚನೆ: ರಾತ್ರೋರಾತ್ರಿ ಬಾಗಿಲು ಮುಚ್ಚಿದ ಕಂಪನಿ, ಹೂಡಿಕೆದಾರರು ಕಂಗಾಲು

ಹಣವೂ ಇಲ್ಲ, ಮನೆಯೂ ಇಲ್ಲ ಎಂಬಂತಾಗಿ ಎಲ್ಲವನ್ನು ಕಳೆದುಕೊಂಡು ಬೀದಿಗೆ ಬರುವ ದುಸ್ಥಿತಿ ಬೆಂಗಳೂರಿನ 500 ಕ್ಕೂ ಹೆಚ್ಚು ಜನರಿಗೆ ಉಂಟಾಗಿದೆ. ಇಂದಿರಾನಗರದ ಕಂಒನಿಯೊಂದು 200 ಕೋಟಿ ರೂಪಾಯಿಗೂ ಹೆಚ್ಚು ಹಣ ವಂಚಿಸಿ, ರಾತ್ರೋರಾತ್ರಿ ಪರಾರಿಯಾಗಿದ್ದಾರೆ. 60 ಕ್ಕೂ ಹೆಚ್ಚು ಮಂದಿ ಈಗ ಠಾಣೆ ಮೆಟ್ಟಿಲೇರಿದ್ದಾರೆ.

ವಿಜಯ ಕರ್ನಾಟಕ 19 May 2026 5:59 am

GPS ಡೇಟಾ ಇಲ್ಲದಿದ್ದರೂ ಫೋಟೋಗಳಿಂದ ಸ್ಥಳ ಪತ್ತೆಹಚ್ಚುವ GEOX AI ಅನ್ನು ಭಾರತದಲ್ಲಿ ಅಭಿವೃದ್ಧಿಪಡಿಸಿದ TraceX Labs

AI ಆಧಾರಿತ GEOX AI ಫೋಟೋ ಮತ್ತು ವೀಡಿಯೊಗಳಲ್ಲಿ ಇರುವ visual clues ಮೂಲಕ GPS metadata ಇಲ್ಲದೇ ಸ್ಥಳ ಪತ್ತೆಹಚ್ಚುವ ಸಾಮರ್ಥ್ಯ ಹೊಂದಿದೆ.

ವಾರ್ತಾ ಭಾರತಿ 19 May 2026 2:01 am

ಎಸ್‌ಆರ್‌ಎಚ್‌ ಹಾಗೂ ಗುಜರಾತ್ ಟೈಟಾನ್ಸ್‌ ಪ್ಲೇ-ಆಫ್‌ ಪ್ರವೇಶಕ್ಕೆ ದಾರಿ ಮಾಡಿಕೊಟ್ಟ ಸಿಎಸ್‌ಕೆ

SRH Entered Playoffs: ಚೆನ್ನೈನ ಚೆಪಾಕ್‌ನಲ್ಲಿ ಸೋಮವಾರ (ಮೇ 19) ನಡೆದ ಐಪಿಎಲ್ 2026ರ ರೋಚಕ ಪಂದ್ಯದಲ್ಲಿ ಇಶಾನ್ ಕಿಶನ್ ಅವರ ಭರ್ಜರಿ ಬ್ಯಾಟಿಂಗ್ ನೆರವಿನಿಂದ ಸನ್ ರೈಸರ್ಸ್ ಹೈದರಾಬಾದ್ ತಂಡವು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಐದು ವಿಕೆಟ್‌ಗಳ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ ಎಸ್‌ಆರ್‌ಎಚ್‌ ಜೊತೆಗೆ ಜಿಟಿ ಸಹ ಪ್ಲೇಆಫ್‌ಗೆ ಲಗ್ಗೆ ಇಟ್ಟಿದೆ. ಟಾಸ್‌

ಒನ್ ಇ೦ಡಿಯ 19 May 2026 12:47 am

ಮಂಗಳೂರಿನಲ್ಲಿ ಸಂಚಾರಿ ಹೈಕೋರ್ಟ್‌ ಪೀಠ: ಮುಖ್ಯ ನ್ಯಾಯಮೂರ್ತಿಗೆ ಸಿಎಂ ಸಿದ್ದರಾಮಯ್ಯ ಪತ್ರ

ಬೆಂಗಳೂರು : ʼದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನಲ್ಲಿ ಸಂಚಾರಿ ಹೈಕೋರ್ಟ್ ಪೀಠ ಸ್ಥಾಪನೆ ಮಾಡಬೇಕು’ ಎಂದು ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ರ ಬರೆದಿದ್ದಾರೆ. ಈ ಸಂಬಂಧ  ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಮಾಹಿತಿ ಹಂಚಿಕೊಂಡಿರುವ ಅವರು, ಕರಾವಳಿ ಭಾಗದ ಜನರಿಗೆ ತ್ವರಿತ ನ್ಯಾಯದಾನ ಕಲ್ಪಿಸಲು ಹಾಗೂ ಸರ್ವರಿಗೂ ನ್ಯಾಯದ ಲಭ್ಯತೆಯನ್ನು ಖಾತ್ರಿಪಡಿಸಲು ರಾಜ್ಯ ಸರಕಾರವು ಬದ್ಧವಾಗಿದೆ ಎಂದು ತಿಳಿಸಿದ್ದಾರೆ. ಮಂಗಳೂರಿನಲ್ಲಿ ಸಂಚಾರಿ ಹೈಕೋರ್ಟ್ ಪೀಠ ಸ್ಥಾಪನೆಯಿಂದ ನ್ಯಾಯದಾನದ ವಿಕೇಂದ್ರೀಕರಣ, ಸಕಾಲಿಕ ಹಾಗೂ ಕೈಗೆಟುಕುವ ನ್ಯಾಯದ ಸಾಂವಿಧಾನಿಕ ಭರವಸೆಯನ್ನು ಬಲಪಡಿಸಿದಂತಾಗಲಿದೆ. ಜೊತೆಗೆ ಪ್ರಧಾನ ಪೀಠದ ಮೇಲಿನ ಬಾಕಿ‌ ಪ್ರಕರಣಗಳ ಒತ್ತಡವು ಗಣನೀಯವಾಗಿ ತಗ್ಗಲಿದೆ. ಮಂಗಳೂರಿನ ಹಳೆಯ ಜಿಲ್ಲಾಧಿಕಾರಿ ಕಚೇರಿಯ ಸುಮಾರು 50,000 ಚದರ ಅಡಿ ವಿಸ್ತೀರ್ಣದ ಭೂಮಿ‌ ಲಭ್ಯವಿದೆ. ಪೀಠವು ಸುಗಮವಾಗಿ ಕಾರ್ಯನಿರ್ವಹಿಸಲು ನಾಗರಿಕ, ಆಡಳಿತಾತ್ಮಕ ಮತ್ತು ಲಾಜಿಸ್ಟಿಕ್ ಮೌಲ್ಯಸೌಕರ್ಯವನ್ನು ಒದಗಿಸಲು ನಮ್ಮ ಸರಕಾರ ಸಿದ್ಧವಿದೆ ಎನ್ನುವುದನ್ನು ಸಹ ಪತ್ರದ ಮೂಲಕ‌ ನ್ಯಾಯಮೂರ್ತಿಗಳ ಗಮನಕ್ಕೆ ತಂದಿದ್ದೇನೆ ಎಂದು ಅವರು ತಿಳಿಸಿದ್ದಾರೆ.

ವಾರ್ತಾ ಭಾರತಿ 19 May 2026 12:39 am

‘ಒಂದು ದೇಶ-ಒಂದು ಚುನಾವಣೆ’ | ಎಲ್ಲರಿಗೂ ಪ್ರಜಾಪ್ರಭುತ್ವದ ಹಬ್ಬದಲ್ಲಿ ಪಾಲ್ಗೊಳ್ಳಲು ಸಾಧ್ಯ: ಪಿ.ಪಿ.ಚೌಧರಿ

ಬೆಂಗಳೂರು : ‘ಒಂದು ದೇಶ-ಒಂದು ಚುನಾವಣೆ’ ಅಡಿಯಲ್ಲಿ ಒಂದೇ ಬಾರಿಗೆ ಹಲವು ಹಂತಗಳಲ್ಲಿ ಚುನಾವಣೆಯನ್ನು ನಡೆಸಿದರೆ ಎಲ್ಲರಿಗೂ ಪ್ರಜಾಪ್ರಭುತ್ವದ ಈ ಹಬ್ಬದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಲಿದೆ ಎಂದು ಸಂವಿಧಾನ (129ನೆ ತಿದ್ದುಪಡಿ) ಮಸೂದೆ-2024 ಮತ್ತು ಕೇಂದ್ರಾಡಳಿತ ಪ್ರದೇಶಗಳ ಕಾನೂನು (ತಿದ್ದುಪಡಿ) ಮಸೂದೆ-2024 ಕುರಿತ ಜಂಟಿ ಸಂಸದೀಯ ಅಧ್ಯಯನ ಸಮಿತಿಯ ಅಧ್ಯಕ್ಷ ಪಿ.ಪಿ.ಚೌಧರಿ ತಿಳಿಸಿದ್ದಾರೆ. ಸೋಮವಾರ ನಗರದ ಖಾಸಗಿ ಹೊಟೇಲ್‍ನಲ್ಲಿ ‘ಒಂದು ರಾಷ್ಟ್ರ ಒಂದು ಚುನಾವಣೆ' ಕುರಿತು ಪದ್ಮ ಪ್ರಶಸ್ತಿ ಪುರಸ್ಕೃತರು ಹಾಗೂ ಮಾಧ್ಯಮ ಪ್ರತಿನಿಧಿಗಳೊಂದಿಗೆ ಸಂವಾದ ನಡೆಸಿ, ಅಭಿಪ್ರಾಯ ಸಂಗ್ರಹಿಸಿದ ಬಳಿಕ ಅವರು ಮಾತನಾಡಿದರು. ದೇಶದಲ್ಲಿ ಒಂದು ವರ್ಷಕ್ಕೆ 5-6 ರಾಜ್ಯಗಳ ವಿಧಾನಸಭೆ ಚುನಾವಣೆಗಳು ನಡೆಯುತ್ತವೆ. ಇದರಿಂದ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ವಿವಿಧ ವಲಯಗಳ ಜನರ ಮೇಲೆ ಪರಿಣಾಮ ಬೀರುತ್ತಿದೆ. ಒಂದು ರಾಜ್ಯದಲ್ಲಿ ಚುನಾವಣೆ ನಡೆದಾಗ, ಇತರ ರಾಜ್ಯಗಳ ಮೇಲೂ ಅದರ ಪರಿಣಾಮ ಉಂಟಾಗುತ್ತದೆ ಎಂದು ಚೌಧರಿ ತಿಳಿಸಿದರು. ಈ ಹಿನ್ನೆಲೆಯಲ್ಲಿ ಒಂದು ರಾಷ್ಟ್ರ-ಒಂದು ಚುನಾವಣೆ ಜಾರಿಯಾದಾಗ, ಶಿಕ್ಷಕರು, ಆರಕ್ಷಕರು, ಇತರ ಚುನಾವಣಾ ಸಿಬ್ಬಂದಿಯ ಹೊರೆ ಕಡಿಮೆಯಾಗುತ್ತದೆ. ಕಾರ್ಮಿಕರು, ವಲಸಿಗರು ಸೇರಿದಂತೆ ದೇಶಾದ್ಯಂತ ಎಲ್ಲರಿಗೂ ಮತದಾನದ ಅವಕಾಶ ದೊರೆಯಬೇಕು ಎನ್ನುವುದು ಈ ಸಮಿತಿಯ ಉದ್ದೇಶ ಎಂದು ಅವರು ಹೇಳಿದರು. ಚುನಾವಣೆ ಸುರಕ್ಷಿತವಾಗಿ ನಡೆಯುವುದಕ್ಕೆ ಚುನಾವಣಾ ಆಯೋಗ, ಗೃಹ ಸಚಿವಾಲಯ, ಇವಿಎಂ ಯಂತ್ರಗಳ ಸಿದ್ಧತೆ, ಅಂಚೆ ಮತಗಳು ಹೀಗೆ ವಿವಿಧ ರೀತಿಯ ಸಹಯೋಗ ಅವಶ್ಯಕ. ಸಮಿತಿಯ ಪ್ರಸ್ತಾವನೆಗಳು ಎಲ್ಲರಿಗೂ ತೃಪ್ತಿಕರವಾದಾಗ ಒಂದು ರಾಷ್ಟ್ರ ಒಂದು ಚುನಾವಣೆ ಅನುಷ್ಠಾನವೂ ಸುಲಭವಾಗುತ್ತದೆ. ಇದರಿಂದ ಚುನಾವಣೆಯ ವೆಚ್ಚವನ್ನೂ ದೊಡ್ಡ ಪ್ರಮಾಣದಲ್ಲಿ ತಗ್ಗಿಸಬಹುದು ಎಂದು ಚೌಧರಿ ತಿಳಿಸಿದರು. ಭಾರತವು ವಿವಿಧತೆಯಲ್ಲಿ ಏಕತೆ ಹೊಂದಿರುವಂತೆ ರಾಜಕೀಯ ಚಿತ್ರಣವೂ ಹಲವು ವೈವಿಧ್ಯತೆಗಳನ್ನು ಹೊಂದಿದೆ. ವಿವಿಧ ಪ್ರದೇಶಗಳಿಂದ ಪ್ರತಿನಿಧಿಸುವ ಜನಪ್ರತಿನಿಧಿಗಳು ತಮ್ಮ ಸಂಸ್ಕೃ ತಿ, ಪರಂಪರೆಯನ್ನು ಎತ್ತಿ ಹಿಡಿಯುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ ಎಂದು ಅವರು ಹೇಳಿದರು. ಇದಕ್ಕೂ ಮುನ್ನಾ ದಿನ ಜಂಟಿ ಸದನ ಸಮಿತಿಯು ಕರ್ನಾಟಕ ಸರಕಾರದ ಮುಖ್ಯ ಕಾರ್ಯದರ್ಶಿ ಹಾಗೂ ಪೊಲೀಸ್ ಇಲಾಖೆ ಮುಖ್ಯಸ್ಥರು, ಹಣಕಾಸು ಇಲಾಖೆ, ಗೃಹ, ಶಿಕ್ಷಣ, ಪ್ರವಾಸೋದ್ಯಮ, ಕೃಷಿ ಇಲಾಖೆ, ಕೈಗಾರಿಕೆ, ಆರೋಗ್ಯ, ಕಾರ್ಮಿಕ ಇಲಾಖೆ ಅಧಿಕಾರಿಗಳು ಸೇರಿದಂತೆ ವಿವಿಧ ಇಲಾಖೆಗಳ ಅಭಿಪ್ರಾಯಗಳನ್ನು ಸಂಗ್ರಹಿಸಿತು. ಎಚ್‍ಎಎಲ್, ಬಿಇಎಲ್, ಬಿಇಎಂಎಲ್, ಬಿಎಚ್‍ಇಎಲ್, ಕೆಐಒಸಿಎಲ್, ಕೆಎಪಿಎಲ್, ಐಟಿಐ ಲಿಮಿಟೆಡ್, ಐಐಎಂ, ನ್ಯಾಷನಲ್ ಸ್ಕೂಲ್ ಪ್ರತಿನಿಧಿಗಳಿಂದಲೂ ಅಭಿಪ್ರಾಯಗಳನ್ನು ಸಂಗ್ರಹಿಸಿತು. ದೇಶದಲ್ಲಿ ಏಕಕಾಲದಲ್ಲಿ ಚುನಾವಣೆ ನಡೆಸುವುದರಿಂದ ಆಗುವ ಸಾಧಕ-ಬಾಧಕಗಳ ಕುರಿತು ಸಮಿತಿಯು ಮಾಹಿತಿ ಸಂಗ್ರಹಿಸಿತು.  

ವಾರ್ತಾ ಭಾರತಿ 19 May 2026 12:25 am

ಬಿಡದಿ ಟೌನ್‍ಶಿಪ್ ಯೋಜನೆ ಭೂ ಸ್ವಾಧೀನ ಪ್ರಕ್ರಿಯೆ ರದ್ದುಗೊಳಿಸಲು ಆಗ್ರಹ

ಬೆಂಗಳೂರು : ಫಲವತ್ತಾದ ಕೃಷಿ ಭೂಮಿಯಲ್ಲಿ ಉದ್ದೇಶಿತ ಬಿಡದಿ ಟೌನ್‍ಶಿಪ್ ಯೋಜನೆ ರೈತ ವಿರೋಧಿ ಹಾಗೂ ಪರಿಸರಕ್ಕೆ ವಿನಾಶಕಾರಿ. ಇಂತಹ ವಿನಾಶದ ಯೋಜನೆಗೆ ನೀಡಿರುವ ಸಂಪುಟ ಅನುಮೋದನೆಯನ್ನು ಸರಕಾರ ಹಿಂಪಡೆಯಬೇಕು ಮತ್ತು ಯೋಜನೆಗಾಗಿ ಸುಮಾರು 9,640ಎಕರೆ ಭೂ ಸ್ವಾಧೀನ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ರದ್ದುಪಡಿಸಬೇಕು ಎಂದು ಸಂಯುಕ್ತ ಹೋರಾಟ ಕರ್ನಾಟಕ ಆಗ್ರಹಿಸಿದೆ. ಸೋಮವಾರ ಗಾಂಧಿ ಭವನದಲ್ಲಿ ಸಂಯುಕ್ತ ಹೋರಾಟ ಕರ್ನಾಟಕ ಪದಾಧಿಕಾರಿಗಳಾದ ಬಡಗಲಪುರ ನಾಗೇಂದ್ರ, ಡಾ.ಸಿದ್ದನಗೌಡ ಪಾಟೀಲ್, ನೂರ್ ಶ್ರೀಧರ್, ಟಿ.ಯಶವಂತ, ಪಿ.ಪಿ.ಅಪ್ಪಣ್ಣ, ಪ್ರಕಾಶ್ ಸೇರಿದಂತೆ ರೈತರು ಜಂಟಿ ಪತ್ರಿಕಾಗೋಷ್ಠಿ ನಡೆಸಿದರು. ಬಿಡದಿ ಹೋಬಳಿ ಬೈರಮಂಗಲ ಹಾಗೂ ಕಂಚುಗಾರನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ 25 ಗ್ರಾಮಗಳ ಸುಮಾರು 9,640 ಎಕರೆ ಕೃಷಿ ಭೂಮಿಯು ನೀರಾವರಿ ಹೊಂದಿರುವ ತೆಂಗು, ಅಡಿಕೆ, ಬಾಳೆ, ಮಾವು ಸೇರಿದಂತೆ ವಿವಿಧ ರೀತಿಯ ತೋಟಗಾರಿಕೆ ಬೆಳೆಗಳನ್ನು, ಬೆಳೆಯುತ್ತಿರುವ ಸಮೃದ್ಧ ಹಸಿರು ಪ್ರದೇಶವಾಗಿದೆ ಎಂದರು. ಈ ಪ್ರದೇಶವು ಜಿಬಿಎ ಗಡಿಗೆ ಹೊಂದಿಕೊಂಡಂತೆ ಇದ್ದು ಬೆಂಗಳೂರು ಮಹಾನಗರಕ್ಕೆ ಹಾಲು, ಹಣ್ಣು, ತರಕಾರಿ ಮುಂತಾದ ದಿನನಿತ್ಯದ ಅಗತ್ಯಗಳನ್ನು ಪೂರೈಸುವ ಅಮೂಲ್ಯ ಆಹಾರದ ಕಣಜವಾಗಿದೆ. ಇಲ್ಲಿನ ಎಲ್ಲ ಕೃಷಿ ಕುಟುಂಬಗಳು ತಮ್ಮ ಸಣ್ಣ ಹಿಡುವಳಿಯಲ್ಲೇ ಮಿಶ್ರ ಬೆಳೆ ಪದ್ದತಿಯನ್ನು ಅಳವಡಿಸಿಕೊಂಡು ಅಡಿಕೆ ತಟ್ಟೆ ತಯಾರಿಕೆ ಮುಂತಾದ ಕೃಷಿ ಆಧಾರಿತ ಸಣ್ಣ ಉದ್ದಿಮೆಗಳನ್ನು ಕಟ್ಟಿಕೊಂಡು ಉತ್ತಮ ಮಾರುಕಟ್ಟೆಯನ್ನು ಕಂಡುಕೊಂಡಿದ್ದಾರೆ. ಇಂತಹ ಸುಸ್ಥಿರ ಬದುಕಿನ ಮೇಲೆ ಬಲವಂತ ಹಾಗೂ ಅನ್ಯಾಯದ ಭೂ ಸ್ವಾಧೀನವನ್ನು ಯಾವುದೇ ಕಾರಣಕ್ಕೂ ಒಪ್ಪಲು ಸಾಧ್ಯವಿಲ್ಲ ಎಂದು ಹೋರಾಟಗಾರರು ತಿಳಿಸಿದರು. ಜಿಬಿಎ ಅನುಷ್ಠಾ ನಗೊಳಿಸುತ್ತಿರುವ ಬಿಡದಿ ಸಮಗ್ರ ಉಪ ನಗರ ಯೋಜನೆಗಾಗಿ ಕರ್ನಾಟಕ ನಗರಾಭಿವೃದ್ಧಿ ಪ್ರಾಧಿಕಾರ ಕಾಯ್ದೆ 1987ರ ಕಲಂ 17(1)ರ ಅಡಿಯಲ್ಲಿ 2025ರ ಮಾ.13 ರಂದು ಪ್ರಾಥಮಿಕ ಅಧಿಸೂಚನೆ ಹೊರಡಿಸಿದ ತಕ್ಷಣವೇ ಸುಮಾರು 3,500ಕ್ಕೂ ಹೆಚ್ಚು ಸಣ್ಣ ಮತ್ತು ಅತಿ ಸಣ್ಣ ರೈತರು ಈ ಭೂ ಸ್ವಾಧೀನಕ್ಕೆ ಒಪ್ಪಿಗೆ ಇಲ್ಲ ಎಂದು ಲಿಖಿತವಾಗಿ ಆಕ್ಷೇಪಣೆಗಳನ್ನು ಸಲ್ಲಿಸಿದ್ದಾರೆ. ಇದುವರೆಗೂ ಈ ಯಾವ ರೈತರ ಆಕ್ಷೇಪಣೆಗಳನ್ನು ಸರಕಾರ ಆಲಿಸಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು. ಒಂದೂವರೆ ವರ್ಷದಿಂದ ವಿವಿಧ ಮಾದರಿಯಲ್ಲಿ ತಮ್ಮ ಬಲವಾದ ವಿರೋಧವನ್ನು ಇಲ್ಲಿನ ರೈತರು ದಾಖಲಿಸಿದ್ದು, 428ಕ್ಕೂ ಹೆಚ್ಚು ದಿನಗಳಿಂದ ಅನಿರ್ದಿಷ್ಟಾ ವಧಿ ಧರಣಿ ನಡೆಸುತ್ತಾ ಬಂದಿದ್ದರೂ ಭಾದಿತ ರೈತರ ಜೊತೆ ಯಾವುದೇ ಸಮಾಲೋಚನೆ ನಡೆಸದೇ ಸಂಪುಟ ಅನುಮೋದನೆ ನೀಡಿರುವುದು ರೈತರ ಪ್ರಜಾಪ್ರಭುತ್ವ ಹಕ್ಕುಗಳ ನಗ್ನ ಉಲ್ಲಂಘನೆ ಹಾಗೂ ಸರ್ವಾಧಿಕಾರಿ ಕ್ರಮ. ಕೂಡಲೇ ಸಿದ್ದರಾಮಯ್ಯ ಸರಕಾರ ಈ ಭೂ ಸ್ವಾಧೀನ ಪ್ರಕ್ರಿಯೆಯನ್ನು ರದ್ದುಗೊಳಿಸಬೇಕು ಎಂದು ಹೋರಾಟಗಾರರು ಆಗ್ರಹಿಸಿದರು.   ‘ಸರಕಾರದ ರೈತ ವಿರೋಧಿ ನಡೆಯಿಂದಾಗಿ ಬಿಡದಿ ಮತ್ತೊಂದು ದೇವನಹಳ್ಳಿ ಹೋರಾಟ ಆಗಲಿದೆ. ಇದೇ ವೇಳೆ ಸಿದ್ದರಾಮಯ್ಯ ಸರಕಾರಕ್ಕೆ ಮೂರು ವರ್ಷ ತುಂಬಲಿದೆ. ಬಿಡದಿ ಟೌನ್‍ಶಿಪ್ ಯೋಜನೆಗೆ ರೈತರು ಯಾವುದೇ ಕಾರಣಕ್ಕೂ ಭೂಮಿ ಕೊಡುವುದಿಲ್ಲ. ಸರಕಾರ, ರಾಜಧಾನಿಯನ್ನು ಬಂಡವಾಳಿಗರ ಬೆಂಗಳೂರು ಮಾಡಲಿಕ್ಕೆ ಹೊರಟಿದೆ. ಇದರ ವಿರುದ್ಧ ಹೋರಾಟ ನಡೆಯಬೇಕಾಗುತ್ತದೆ. ಬಂಡವಾಳಿಗರ ಪರ ಆಡಳಿತ ನಡೆಸಿದ್ದೇ ಆದಲ್ಲಿ, ಕಾಂಗ್ರೆಸ್ ಸರಕಾರ ರಾಜ್ಯದಲ್ಲಿ ಅಧಿಕಾರ ಕಳೆದುಕೊಳ್ಳುತ್ತದೆ. ಬಿಡದಿ ಟೌನ್‍ಶಿಪ್ ಯೋಜನೆಯನ್ನು ಕೂಡಲೇ ಕೈಬಿಡಬೇಕು’ -ನೂರ್ ಶ್ರೀಧರ್ ಸಂಯುಕ್ತ ಹೋರಾಟ ಕರ್ನಾಟಕ   ‘ಕೃಷಿ ಪ್ರದೇಶವನ್ನು ನಾಶ ಮಾಡಿ ನಿರ್ಮಾಣಗೊಂಡ ಬಡಾವಣೆಗಳು ಅಗತ್ಯ ಮೂಲಭೂತ ಸೌಕರ್ಯಗಳು ಇಲ್ಲದೇ ಬೆಂಗಳೂರು ಮಹಾನಗರದ ಭೂತಾಪಮಾನವನ್ನು ಗಣನೀಯವಾಗಿ ಹೆಚ್ಚಿಸಿ ರಿಯಲ್ ಎಸ್ಟೇಟ್ ಕಾಂಕ್ರಿಟ್ ಕಾಡಾನ್ನಾಗಿಸಿದೆ. ಲಕ್ಷಾಂತರ ನಿವೇಶನಗಳು, ನೂರಾರು ಅಪಾರ್ಟ್‍ಮೆಂಟ್‍ಗಳು ಖಾಲಿ ಬಿದ್ದಿವೆ. ಇಂತಹ ದುಸ್ಥಿತಿಯನ್ನು ವಿಸ್ತರಿಸಿ ಮಹಾನಗರದ ಜನ ಜೀವನವನ್ನು ಮತ್ತಷ್ಟು ಕಷ್ಟಕ್ಕೆ ಸಿಲುಕಿಸುವ ಬಿಡದಿ ಟೌನ್‍ಶಿಪ್ ನಂತಹ ಪರಿಸರ ವಿರೋಧಿ ಂಜನೆಗಳನ್ನು ಪರಿಸರವಾದಿಗಳು, ಸಾಹಿತಿಗಳು, ನೀತಿ-ನಿರೂಪಕರು ಸೇರಿದಂತೆ ಎಲ್ಲ ಕಾಳಜಿಯುಳ್ಳ ನಾಗರಿಕರು ವಿರೋಧಿಸಬೇಕು’ -ಬಡಗಲಪುರ ನಾಗೇಂದ್ರ ಸಂಯುಕ್ತ ಹೋರಾಟ ಕರ್ನಾಟಕ  

ವಾರ್ತಾ ಭಾರತಿ 19 May 2026 12:22 am

ಜೀವ ಬೆದರಿಕೆ ಆರೋಪ; ತಿಮರೋಡಿ ವಿರುದ್ಧ ಬಲವಂತದ ಕ್ರಮ ಕೈಗೊಳ್ಳದಂತೆ ಹೈಕೋರ್ಟ್ ಮಧ್ಯಂತರ ಆದೇಶ

ಬೆಂಗಳೂರು : ಮಹೇಶ್ ಶೆಟ್ಟಿ ತಿಮರೋಡಿ ಅವರ ಬೆಂಬಲಿಗರು ವ್ಯಕ್ತಿಯೊಬ್ಬರಿಗೆ ಜೀವ ಬೆದರಿಕೆಯೊಡ್ಡಿದ ಹಾಗೂ ಸುಳ್ಳು ಸಾಕ್ಷ್ಯ ನೀಡುವಂತೆ ಒತ್ತಾಯಿಸಿದ ಆರೋಪದಲ್ಲಿ ದಾಖಲಾಗಿರುವ ಪ್ರಕರಣ ಸಂಬಂಧ ತಿಮರೋಡಿ ವಿರುದ್ಧ ಜೂನ್ 8 ರವರೆಗೆ ಯಾವುದೇ ಬಲವಂತದ ಕ್ರಮ ಜರುಗಿಸದಂತೆ ಪುತ್ತೂರು ಗ್ರಾಮೀಣ ಠಾಣೆ ಪೊಲೀಸರಿಗೆ ಹೈಕೋರ್ಟ್ ನಿರ್ದೇಶಿಸಿದೆ. ಪುತ್ತೂರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್ಐಆರ್ ಮತ್ತದರ ಸಂಬಂಧಿತ ವಿಚಾರಣಾ ನ್ಯಾಯಾಲಯದ ಪ್ರಕ್ರಿಯೆ ರದ್ದು ಕೋರಿ ಮಹೇಶ್ ಶೆಟ್ಟಿ ತಿಮರೋಡಿ ಸಲ್ಲಿಸಿರುವ ಕ್ರಿಮಿನಲ್ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ಜಿ.ಎಸ್. ಕಮಾಲ್ ಅವರಿದ್ದ ರಜಾಕಾಲದ ನ್ಯಾಯಪೀಠ ಈ ಮಧ್ಯಂತರ ಆದೇಶ ಮಾಡಿದೆ. ವಿಚಾರಣೆ ವೇಳೆ ತಿಮರೋಡಿ ಪರ ವಕೀಲ ಎಂ.ಆರ್. ಬಾಲಕೃಷ್ಣ ವಾದ ಮಂಡಿಸಿ, ಪ್ರಕರಣಕ್ಕೂ ಅರ್ಜಿದಾರರಿಗೂ ಯಾವುದೇ ಸಂಬಂಧವಿಲ್ಲ. ಕೇವಲ ಅರ್ಜಿದಾರರಿಗೆ ಕಿರುಕುಳ ನೀಡಲು ಈ ದೂರು ದಾಖಲಿಸಲಾಗಿದೆ ಎಂದು ಆಕ್ಷೇಪಿಸಿದರು. ದೂರುದಾರ ಸುಂದರ ರೈ ಮಂದಾರ ಪರ ವಕೀಲರು, ಸತೀಶ್ ಕುಮಾರ್ ರೈ ಅವರು ದೂರುದಾರಿಗೆ ಕರೆ ಮಾಡಿ ಬೆದರಿಕೆ ಹಾಕಿರುವ ಸಂಬಂಧ ಅವರ ಫೋನ್ ಸಂಭಾಷಣೆಯ ಪ್ರತಿಲಿಪಿ (ಟ್ರಾನ್ಸ್‌ಕ್ರಿಪ್ಷನ್) ಸಲ್ಲಿಸಲು ಕಾಲಾವಕಾಶ ನೀಡುವಂತೆ ಕೋರಿದರು. ಅದಕ್ಕೆ ಅನುಮತಿಸಿದ ಹೈಕೋರ್ಟ್, ಅರ್ಜಿಯ ಮುಂದಿನ ವಿಚಾರಣೆವರೆಗೆ ತಿಮರೋಡಿ ವಿರುದ್ಧ ಬಲವಂತದ ಕ್ರಮ ಜರುಗಿಸದಂತೆ ಪುತ್ತೂರು ಠಾಣೆ ಪೊಲೀಸರಿಗೆ ಸೂಚಿಸಿ, ಅರ್ಜಿ ವಿಚಾರಣೆಯನ್ನು ಜೂನ್ 8ಕ್ಕೆ ಮುಂದೂಡಿತು.

ವಾರ್ತಾ ಭಾರತಿ 19 May 2026 12:09 am

ಅದಾನಿ ವಿರುದ್ಧದ ಎಲ್ಲಾ ಆರೋಪ ವಜಾಗೊಳಿಸಿದ ಅಮೆರಿಕ ನ್ಯಾಯ ಇಲಾಖೆ

ನ್ಯೂಯಾರ್ಕ್‌ ನ್ಯಾಯಾಲಯದಿಂದ ಪ್ರಕರಣ ಶಾಶ್ವತವಾಗಿ ಮುಕ್ತಾಯ

ವಾರ್ತಾ ಭಾರತಿ 19 May 2026 12:02 am

IPL 2026 | CSKಗೆ ಸೋಲು, ಹೈದರಾಬಾದ್ ಪ್ಲೇ-ಆಫ್‌ ಗೆ ಲಗ್ಗೆ

ಪ್ಯಾಟ್ ಕಮಿನ್ಸ್‌ ಗೆ ಮೂರು ವಿಕೆಟ್

ವಾರ್ತಾ ಭಾರತಿ 18 May 2026 11:55 pm

ಕಮಿನ್ಸ್ ಚಾಣಾಕ್ಷತನ-ಇಶಾನ್ ಕಿಶನ್ ಸಾಹಸದ ಮುಂದೆ ಸಪ್ಪೆಯಾದ CSK; ಐಪಿಎಲ್ ಅಂಕಪಟ್ಟಿಯಲ್ಲೀಗ ಮತ್ತಷ್ಟು ಪೈಪೋಟಿ!

SRH Vs CSK Highlights - ಚೆಪಾಕ್‌ನಲ್ಲಿ ನಡೆದ ಐಪಿಎಲ್ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 5 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿ, ಅಂಕಪಟ್ಟಿಯಲ್ಲಿ 3ನೇ ಸ್ಥಾನಕ್ಕೇರಿದೆ. ಮೊದಲು ಬ್ಯಾಟಿಂಗ್ ಮಾಡಿದ ಸಿಎಸ್‌ಕೆ, ಡೆವಾಲ್ಡ್ ಬ್ರೆವಿಸ್ (44) ಆಟದ ನೆರವಿನಿಂದ 180 ರನ್ ಗಳಿಸಿತು. ಗುರಿ ಬೆನ್ನಟ್ಟಿದ ಹೈದರಾಬಾದ್ ಇಶಾನ್ ಕಿಶನ್ (70) ಮತ್ತು ಹೆನ್ರಿಚ್ ಕ್ಲಾಸನ್ (47) ಅವರ ಜವಾಬ್ದಾರಿಯುತ ಇನ್ನಿಂಗ್ಸ್‌ನಿಂದ ಇನ್ನು 6 ಎಸೆತ ಬಾಕಿ ಇರುವಂತೆಯೇ ಗೆಲುವು ದಾಖಲಿಸಿತು. ಈ ಸೋಲಿನಿಂದಾಗಿ ಸಿಎಸ್‌ಕೆಯ ಪ್ಲೇಆಫ್ ಹಾದಿ ಅತ್ಯಂತ ಕಠಿಣವಾಗಿದೆ.

ವಿಜಯ ಕರ್ನಾಟಕ 18 May 2026 11:51 pm

ಬೆಂಗಳೂರಿನ ಹಲವೆಡೆ ಧಾರಾಕಾರ ಮಳೆ, ಕರೆಯಂತಾದ ರಸ್ತೆಗಳು

ಬೆಂಗಳೂರು : ಸೋಮವಾರ ಸಂಜೆ ನಗರದ ಹಲವೆಡೆ ಧಾರಾಕಾರ ಮಳೆ ಸುರಿದಿದ್ದು, ವಾಹನ ಸವಾರರು ಪರದಾಡಿದರು. ಮಳೆಯಿಂದಾಗಿ ಚರಂಡಿಯಲ್ಲಿ ನೀರು ಸರಾಗವಾಗಿ ಹೋಗದೆ ನಗರದ ಹಲವು ರಸ್ತೆಗಳು ಮಳೆನೀರಿನಿಂದ ಆವೃತವಾಗಿ, ಕೆರೆಯಂತಾಗಿದ್ದವು. ಮುಂಜಾಗ್ರತಾ ಕ್ರಮವಾಗಿ ಇಲ್ಲಿನ ಕೆ.ಆರ್. ಸರ್ಕಲ್ ಅಂಡರ್ ಪಾಸ್ ಅನ್ನು ಬಂದ್ ಮಾಡಲಾಗಿತ್ತು. ಮೆಜೆಸ್ಟಿಕ್, ಕೆಆರ್ ಮಾರ್ಕೆಟ್, ಚಾಮರಾಜಪೇಟೆ, ಮಲ್ಲೇಶ್ವರಂ, ಶೇಷಾದ್ರಿಪುರಂ, ಹೆಬ್ಬಾಳ ಸೇರಿದಂತೆ ಹಲವೆಡೆ ಜೋರು ಮಳೆಯಾಗಿದೆ. ರಾಜಾಜಿನಗರ, ವಿಧಾನಸೌಧ, ಶಿವಾಜಿನಗರ, ವಸಂತನಗರ, ಶಾಂತಿನಗರ, ಜಯನಗರ, ಜೆ.ಪಿ. ನಗರ, ಬನಶಂಕರಿ, ಯಲಹಂಕ, ಸದಾಶಿವನಗರ, ರಾಜಾಜಿನಗರ, ವಿಜಯನಗರ, ಚಂದ್ರಾಲೇಔಟ್, ಇಂದಿರಾನಗರ, ಲಗ್ಗೆರೆ, ನಂದಿನಿ ಲೇಔಟ್, ನಾಗರಬಾವಿ, ಮೂಡಲಪಾಳ್ಯ, ಗಿರಿನಗರ ಸೇರಿದಂತೆ ಹಲವೆಡೆ ಗಾಳಿ ಸಮೇತ ಮಳೆಯಾಗಿದೆ. ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದವರು ಮಳೆಯಿಂದ ಸಮಸ್ಯೆಗೆ ಸಿಲುಕಿದ್ದು, ರಸ್ತೆ ಬದಿಗಳಲ್ಲೇ ಬೈಕ್ ನಿಲ್ಲಿಸಿ ಬಸ್ ನಿಲ್ದಾಣಗಳಲ್ಲಿ, ಅಂಗಡಿ ಮುಂಗಟ್ಟುಗಳ ಎದುರು ಸವಾರರು ನಿಂತ ದೃಶ್ಯಗಳು ಕಂಡುಬಂದಿತ್ತು. ಅಲ್ಲದೆ ವಾಹನ ದಟ್ಟನೆ ಕಂಡು ಬಂದಿತ್ತು. ನಗರದ ಟೌನ್ ಹಾಲ್ ಮುಂಭಾಗದ ರಸ್ತೆ, ಅವೆನ್ಯೂ ರಸ್ತೆ, ಜೆ.ಚಿ ರಸ್ತೆ ಸೇರದಂತೆ ನಗರದ ಬಹುತೇಕ ಪ್ರಮುಖ ರಸ್ತೆಗಳ ಕೆರೆಯಂತಾಗಿದ್ದವು. ಫ್ರೀಡಂಪಾರ್ಕ್ ಬಳಿ ರಸ್ತೆಗಳು ಜಲಾವೃತಗೊಂಡಿವೆ. ಇದರಿಂದ ಸಂಚಾರ ಕಷ್ಟವಾಗಿದ್ದು, ವಾಹನ ಸವಾರರು ಪರದಾಡುವಂತಾಗಿತ್ತು. ಮಳೆಯಿಂದ ವಿಧಾನಸೌಧದ ಪಕ್ಕದ ಪ್ಯಾಲೇಸ್ ರಸ್ತೆ ಕೆರೆಯಂತಾಗಿತ್ತು.  

ವಾರ್ತಾ ಭಾರತಿ 18 May 2026 11:47 pm

ಮಹಿಳೆಯರಿಗೆ ಸುರಕ್ಷಿತ ಹಾಗೂ ಗೌರವಯುತ ವಾತಾವರಣ ಸೀಗಬೇಕು : ಡಾ.ನಾಗಲಕ್ಷ್ಮಿ ಚೌಧರಿ

ಧಾರವಾಡ : ಕೆಲಸದ ಸ್ಥಳಗಳಲ್ಲಿ ಮಹಿಳೆಯರಿಗೆ ಸುರಕ್ಷಿತ ಮತ್ತು ಗೌರವಯುತ ವಾತಾವರಣ ನಿರ್ಮಾಣವಾಗಬೇಕು. ಮಹಿಳೆಯರು ದೈಹಿಕವಾಗಿ ಹಾಗೂ ಮಾನಸಿಕವಾಗಿ ಆರೋಗ್ಯದಿಂದ ಇದ್ದಾಗ ಮಾತ್ರ ಆತ್ಮಸ್ಥೈರ್ಯದಿಂದ ತಮ್ಮ ಕೆಲಸವನ್ನು ಸಮರ್ಪಕವಾಗಿ ನಿರ್ವಹಿಸಲು ಸಾಧ್ಯವಾಗುತ್ತದೆ ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌಧರಿ ತಿಳಿಸಿದ್ದಾರೆ. ಸೋಮವಾರ ಧಾರವಾಡ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ರಾಜ್ಯ ಮಹಿಳಾ ಆಯೋಗ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಆಯೋಜಿಸಿದ್ದ ಕರ್ತವ್ಯದ ಸ್ಥಳದಲ್ಲಿ ಮಹಿಳೆಯರ ಲೈಂಗಿಕ ದೌರ್ಜನ್ಯ (  ನಿರ್ಬಂಧನೆ ಹಾಗೂ ನಿವಾರಣೆ) ಅಧಿನಿಯಮ 2013 ರ ತರಬೇತಿ ಹಾಗೂ ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಈ ನಿಟ್ಟಿನಲ್ಲಿ ಸಹದ್ಯೋಗಿಗಳ ಮತ್ತು ಸಾರ್ವಜನಿಕರ ಸಹಕಾರ ಮುಖ್ಯವಾಗಿದ್ದು, ಇಲಾಖೆಯ ಅಧಿಕಾರಿಗಳು ಜನಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಇತ್ತೀಚಿನ ದಿನಗಳಲ್ಲಿ ಕೆಲಸದ ಸ್ಥಳಗಳಲ್ಲಿ ಮಹಿಳೆಯರ ಮೇಲಿನ ಲೈಂಗಿಕ ಕಿರುಕುಳ ಹಾಗೂ ಲೈಂಗಿಕ ದೌರ್ಜನ್ಯ, ಮಾನಸಿಕ ಕಿರುಕುಳ ಘಟನೆಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪ್ರತಿಯೊಂದು ಸಂಸ್ಥೆಯಲ್ಲೂ ಸುರಕ್ಷತಾ ಕ್ರಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಅವರು ಸೂಚಿಸಿದರು. ಮಹಿಳೆಯರ ದೂರುಗಳನ್ನು ಗೌಪ್ಯವಾಗಿ ಸ್ವೀಕರಿಸಲು ಶೀ ಬಾಕ್ಸ್ ವ್ಯವಸ್ಥೆ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಬೇಕು. ಮಹಿಳೆಯರು ತಮ್ಮ ಮೇಲೆ ನಡೆಯುವ ಯಾವುದೇ ರೀತಿಯ ಅನ್ಯಾಯ, ಕಿರುಕುಳ ಅಥವಾ ದೌರ್ಜನ್ಯಗಳನ್ನು ಮೌನವಾಗಿ ಸಹಿಸಿಕೊಳ್ಳದೆ, ಧೈರ್ಯವಾಗಿ ಪ್ರಶ್ನಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ಜೊತೆಗೆ ಘಟನೆಗಳ ಬಗ್ಗೆ ದೂರು ದಾಖಲಿಸಲು ಮುಂದಾಗಬೇಕು ಎಂದು ನಾಗಲಕ್ಷ್ಮಿ ಚೌಧರಿ ಹೇಳಿದರು. ಸಮಾಜದಲ್ಲಿ ಮಹಿಳೆಯರ ಗೌರವ ಮತ್ತು ಸುರಕ್ಷತೆ ಕಾಪಾಡುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಮಹಿಳೆಯರಿಗೆ ಸುರಕ್ಷಿತ ಕೆಲಸದ ವಾತಾವರಣ ಒದಗಿದಾಗ ಮಾತ್ರ ಸಮಾಜದ ಅಭಿವೃದ್ಧಿ ಸಾಧ್ಯ. ಧಾರವಾಡ ಜಿಲ್ಲೆಯಲ್ಲಿ ಪೊಲೀಸರು ಮಹಿಳಾ ಸ್ನೇಹಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂಬುದು ತಿಳಿದು ಬಹಳ ಸಂತೋಷವಾಗಿದೆ ಎಂದು ಅವರು ತಿಳಿಸಿದರು. ಮಹಿಳೆಯರ ಸುರಕ್ಷತೆ, ಗೌರವ ಮತ್ತು ನ್ಯಾಯಕ್ಕಾಗಿ ಪೊಲೀಸರು ಕೈಗೊಳ್ಳುತ್ತಿರುವ ಕ್ರಮಗಳು ಸಮಾಜದಲ್ಲಿ ವಿಶ್ವಾಸ ಮೂಡಿಸುತ್ತಿವೆ. ಮಹಿಳೆಯರ ಸಮಸ್ಯೆಗಳಿಗೆ ಸ್ಪಂದಿಸಿ, ಅವರೊಂದಿಗೆ ಆತ್ಮೀಯವಾಗಿ ನಡೆದುಕೊಳ್ಳುತ್ತಿರುವ ಪೊಲೀಸ್ ಇಲಾಖೆಯ ಕಾರ್ಯ ಶ್ಲಾಘನೀಯವಾಗಿದೆ ಎಂದು ನಾಗಲಕ್ಷ್ಮಿ ಚೌಧರಿ ಹೇಳಿದರು. ಕಾರ್ಯಕ್ರಮದಲ್ಲಿ ಹುಬ್ಬಳ್ಳಿ ಧಾರವಾಡ ಮಹಾನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಮಾತನಾಡಿ, ಯಾವುದೇ ಸರಕಾರಿ, ಖಾಸಗಿ ಕಚೇರಿಗಳು ಮತ್ತು ಕೈಗಾರಿಕೆಗಳಲ್ಲಿ ಹತ್ತು ಮತ್ತು ಹತ್ತಕ್ಕಿಂತ ಹೆಚ್ಚು ದುಡಿಯುವ ಮಹಿಳೆಯರು ಇದ್ದಲ್ಲಿ ಕಡ್ಡಾಯವಾಗಿ ‘ಶೀ ಬಾಕ್ಸ್’ ಅಳವಡಿಸಬೇಕು. ಅಲ್ಲಿನ ಮಹಿಳೆಯರು ತಮಗೆ ಲೈಂಗಿಕ ದೌರ್ಜನ್ಯ, ಲೈಂಗಿಕ ಕಿರುಕುಳ ಉಂಟಾದರೆ ಶೀ ಬಾಕ್ಸ್‌ ನಲ್ಲಿ ದೂರು ಹಾಕಬೇಕು ಎಂದು ಹೇಳಿದರು.

ವಾರ್ತಾ ಭಾರತಿ 18 May 2026 11:38 pm

‘ಕಾಕ್ರೋಚ್ ಜನತಾ ಪಾರ್ಟಿ’ ಮೂಲಕ ವೈರಲ್ ಆದ ಅಭಿಜೀತ್ ದೀಪ್ಕೆ ಯಾರು?

ಹೊಸದಿಲ್ಲಿ, ಮೇ 18: ‘ಕಾಕ್ರೋಚ್ ಜನತಾ ಪಾರ್ಟಿ’ (ಸಿಜೆಪಿ) ಎಂಬ ವಿಡಂಬನಾತ್ಮಕ ರಾಜಕೀಯ ಸಂಘಟನೆಯ ಮೂಲಕ ಸಾಮಾಜಿಕ ಮಾಧ್ಯಮದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿರುವ ಅಭಿಜೀತ್ ದೀಪ್ಕೆ ಇದೀಗ ರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿದ್ದಾರೆ. ಆಮ್ ಆದ್ಮಿ ಪಕ್ಷ (ಎಎಪಿ) ಮತ್ತು ದಿಲ್ಲಿ ಸರ್ಕಾರದೊಂದಿಗೆ ಕೆಲಸ ಮಾಡಿದ ಅನುಭವ ಹೊಂದಿರುವ ದೀಪ್ಕೆ, ಯುವಜನರಲ್ಲಿ ರಾಜಕೀಯ ಅಸಮಾಧಾನ ಹಾಗೂ ನಿರುದ್ಯೋಗದ ಪ್ರಶ್ನೆಗಳನ್ನು ವ್ಯಂಗ್ಯದ ಮೂಲಕ ಪ್ರಸ್ತುತಪಡಿಸುತ್ತಿದ್ದಾರೆ. ಕಾಕ್ರೋಚ್ ಜನತಾ ಪಾರ್ಟಿ ಅಧಿಕೃತ ರಾಜಕೀಯ ಪಕ್ಷವಲ್ಲ. ಆದರೆ ಅದರ ತೀಕ್ಷ್ಣ ಹಾಸ್ಯ, ವಿಶಿಷ್ಟ ಘೋಷಣೆಗಳು ಮತ್ತು ಸಾಮಾಜಿಕ ಮಾಧ್ಯಮ ಆಧಾರಿತ ಅಭಿಯಾನಗಳು ಸಾವಿರಾರು ಯುವಕರನ್ನು ಆಕರ್ಷಿಸಿವೆ. ಪಕ್ಷ ಆರಂಭವಾದ ಎರಡು ದಿನಗಳಲ್ಲೇ 40,000ಕ್ಕೂ ಹೆಚ್ಚು ಸದಸ್ಯರನ್ನು ಸೆಳೆದಿದ್ದಾಗಿ ಸಂಘಟನೆ ಹೇಳಿಕೊಂಡಿದೆ. 2020ರ ದಿಲ್ಲಿ ವಿಧಾನಸಭೆ ಚುನಾವಣೆಯ ಸಂದರ್ಭದಲ್ಲಿ ದೀಪ್ಕೆ ಎಎಪಿಯ ಸಾಮಾಜಿಕ ಮಾಧ್ಯಮ ತಂತ್ರ ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಯುವ ಮತದಾರರನ್ನು ತಲುಪಲು ಮೀಮ್ಸ್‌, ಕಿರು ವಿಡಿಯೊಗಳು ಮತ್ತು ಡಿಜಿಟಲ್ ವಿಷಯಗಳನ್ನು ಬಳಸಿದ ತಂಡದ ಭಾಗವಾಗಿದ್ದರು ಎಂದು ವರದಿಯಾಗಿದೆ. ಅವರು ಎಎಪಿಯ ಮಾಜಿ ಐಟಿ ಮತ್ತು ಸಾಮಾಜಿಕ ಮಾಧ್ಯಮ ಮುಖ್ಯಸ್ಥ ಅಂಕಿತ್ ಲಾಲ್ ಅವರ ಅಡಿಯಲ್ಲಿ ಕೆಲಸ ಮಾಡಿದ್ದರು. ನಂತರ ಆಮ್ ಆದ್ಮಿ ಪಕ್ಷದ ಸಂವಹನ ನಿರ್ದೇಶಕರಾಗಿಯೂ ಹಾಗೂ ದಿಲ್ಲಿ ಶಿಕ್ಷಣ ಇಲಾಖೆಯ ಸಂವಹನ ಸಲಹೆಗಾರರಾಗಿಯೂ ಕಾರ್ಯನಿರ್ವಹಿಸಿದ್ದರು. ರಾಜಕೀಯ ಸಂವಹನ, ಆಡಳಿತಾತ್ಮಕ ಸಂಪರ್ಕ ಮತ್ತು ಡಿಜಿಟಲ್ ಕಾರ್ಯತಂತ್ರ ಕ್ಷೇತ್ರಗಳಲ್ಲಿ ದೀಪ್ಕೆ ಅವರಿಗೆ ಒಂಭತ್ತು ವರ್ಷಕ್ಕೂ ಹೆಚ್ಚು ಅನುಭವವಿದೆ. ಅವರ LinkedIn ಪ್ರೊಫೈಲ್ ಪ್ರಕಾರ, ಅವರು ಬೋಸ್ಟನ್ ವಿಶ್ವವಿದ್ಯಾಲಯದಲ್ಲಿ ಸಾರ್ವಜನಿಕ ಸಂಪರ್ಕ ವಿಷಯದಲ್ಲಿ ಸ್ನಾತಕೋತ್ತರ ಪದವಿ ಅಧ್ಯಯನ ಮಾಡುತ್ತಿದ್ದಾರೆ. ►‘ಕಾಕ್ರೋಚ್’ ಹೆಸರಿನ ಹಿಂದಿನ ವಿವಾದ ನ್ಯಾಯಾಲಯದ ವಿಚಾರಣೆಯ ವೇಳೆ CJI ಸೂರ್ಯಕಾಂತ್ ನೀಡಿದ ಹೇಳಿಕೆಗಳಿಗೆ ಪ್ರತಿಕ್ರಿಯೆಯಾಗಿ ‘ಕಾಕ್ರೋಚ್ ಜನತಾ ಪಾರ್ಟಿ’ ಆರಂಭಿಸಲಾಗಿದೆ ಎಂದು ಹೇಳಲಾಗಿದೆ. ಪತ್ರಿಕೋದ್ಯಮ, ಕಾನೂನು ಮತ್ತು ಆರ್‌ಟಿಐ ಚಟುವಟಿಕೆಯಲ್ಲಿ ತೊಡಗಿರುವ ಕೆಲವು ನಿರುದ್ಯೋಗಿ ಯುವಕರನ್ನು “ಜಿರಳೆಗಳು” ಮತ್ತು “ಪರಾವಲಂಬಿಗಳು” ಎಂದು ಹೋಲಿಸಲಾಗಿದೆ ಎಂಬ ವರದಿಗಳು ಸಾಮಾಜಿಕ ಮಾಧ್ಯಮದಲ್ಲಿ ಟೀಕೆಗೆ ಕಾರಣವಾಗಿದ್ದವು. ನಂತರ ಮುಖ್ಯ ನ್ಯಾಯಮೂರ್ತಿಗಳು ತಮ್ಮ ಹೇಳಿಕೆಗಳನ್ನು ಸಂದರ್ಭಕ್ಕಾನುಸಾರವಾಗಿ ಮಾತನಾಡಿದ್ದು ಎಂದು ಸ್ಪಷ್ಟಪಡಿಸಿದ್ದರು. ನಕಲಿ ಪದವಿಗಳನ್ನು ಬಳಸಿ ವೃತ್ತಿಗಳಿಗೆ ಪ್ರವೇಶಿಸುವವರನ್ನು ಉದ್ದೇಶಿಸಿ ಹೇಳಿದ್ದಾಗಿ ತಿಳಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ದೀಪ್ಕೆ, “ಜಿರಳೆ ಜನತಾ ಪಕ್ಷದ ಸ್ಥಾಪಕರಾಗಿ ನಾನು ಈ ಸ್ಪಷ್ಟೀಕರಣವನ್ನು ಖಂಡಿಸುತ್ತೇನೆ” ಎಂದು ಸಾಮಾಜಿಕ ಮಾಧ್ಯಮದಲ್ಲಿ ವ್ಯಂಗ್ಯವಾಗಿ ಬರೆದುಕೊಂಡಿದ್ದರು. ►ರಾಜಕೀಯ ವಲಯದ ಗಮನ ಕಾಕ್ರೋಚ್ ಜನತಾ ಪಾರ್ಟಿ ಸಾರ್ವಜನಿಕ ವ್ಯಕ್ತಿಗಳು ಮತ್ತು ರಾಜಕೀಯ ನಾಯಕರ ಗಮನವನ್ನೂ ಸೆಳೆದಿದೆ. ತೃಣಮೂಲ ಕಾಂಗ್ರೆಸ್ ನಾಯಕಿ ಮಹುವಾ ಮೊಯಿತ್ರಾ ಮತ್ತು ಕೀರ್ತಿ ಆಜಾದ್ ಪಕ್ಷ ಸೇರುವ ಆಸಕ್ತಿ ವ್ಯಕ್ತಪಡಿಸಿದ್ದರು. “ಸೇರಲು ಯಾವ ಅರ್ಹತೆ ಬೇಕು?” ಎಂಬ ಕೀರ್ತಿ ಆಜಾದ್ ಪ್ರಶ್ನೆಗೆ, “1983ರ ವಿಶ್ವಕಪ್ ಗೆದ್ದಿರುವುದು ಸಾಕಷ್ಟು ಉತ್ತಮ ಅರ್ಹತೆ” ಎಂದು ಪಕ್ಷವು ಹಾಸ್ಯಮಯ ಉತ್ತರ ನೀಡಿತ್ತು. ►ವಿಡಂಬನಾತ್ಮಕ ಪ್ರಣಾಳಿಕೆ ಪಕ್ಷದ ಪ್ರಣಾಳಿಕೆಯಲ್ಲಿ ಹಲವು ಅಸಾಮಾನ್ಯ ಭರವಸೆಗಳನ್ನು ನೀಡಲಾಗಿದೆ. ಮಾಜಿ ಮುಖ್ಯ ನ್ಯಾಯಮೂರ್ತಿಗಳಿಗೆ ನಿವೃತ್ತಿಯ ಬಳಿಕ ರಾಜ್ಯಸಭಾ ಸ್ಥಾನ ನೀಡುವುದಕ್ಕೆ ನಿಷೇಧ, ಸಂಸತ್ತಿನಲ್ಲಿ ಮಹಿಳೆಯರಿಗೆ ಶೇಕಡಾ 50 ಮೀಸಲಾತಿ, ಪಕ್ಷ ಬದಲಾಯಿಸುವ ಶಾಸಕರು ಮತ್ತು ಸಂಸದರಿಗೆ 20 ವರ್ಷಗಳ ಚುನಾವಣಾ ನಿಷೇಧ, ಸಿಬಿಎಸ್‌ಇ ಮರುಪರಿಶೀಲನಾ ಶುಲ್ಕ ರದ್ದು ಹಾಗೂ ನೀಟ್‌ ವಿವಾದಗಳಿಂದ ಪ್ರಭಾವಿತ ವಿದ್ಯಾರ್ಥಿಗಳಿಗೆ ಬೆಂಬಲ ನೀಡುವ ಭರವಸೆಗಳನ್ನು ಒಳಗೊಂಡಿದೆ. ಸದಸ್ಯತ್ವದ ಅರ್ಹತೆಗಳಲ್ಲಿ “ನಿರುದ್ಯೋಗಿ”, “ಸೋಮಾರಿ”, “ದೀರ್ಘಕಾಲ ಆನ್‌ಲೈನ್‌ನಲ್ಲಿ ಇರುವವರು” ಮತ್ತು “ವೃತ್ತಿಪರವಾಗಿ ಮಾತನಾಡುವ ಸಾಮರ್ಥ್ಯ” ಹೊಂದಿರುವವರು ಸೇರಿದ್ದಾರೆ ಎಂದು ವ್ಯಂಗ್ಯಾತ್ಮಕವಾಗಿ ಉಲ್ಲೇಖಿಸಲಾಗಿದೆ. ಭಾರತದ ಸಂವಿಧಾನ ಮತ್ತು ಪ್ರಜಾಪ್ರಭುತ್ವ ಮೌಲ್ಯಗಳನ್ನು ರಕ್ಷಿಸುವ ಉದ್ದೇಶ ಹೊಂದಿರುವುದಾಗಿ ಪಕ್ಷ ಹೇಳಿಕೊಂಡಿದೆ. Gen-Z ಯುವಕರಿಗಾಗಿ ವರ್ಚುವಲ್ ಸಮಾವೇಶ ಆಯೋಜಿಸುವ ಯೋಜನೆಯನ್ನೂ ಘೋಷಿಸಿದೆ. ಮೊಬೈಲ್ ಫೋನ್ ಅನ್ನು ಪಕ್ಷದ ಸಾಂಕೇತಿಕ ಚುನಾವಣಾ ಚಿಹ್ನೆಯಾಗಿ ಬಳಸಲಾಗಿದೆ. ಪಕ್ಷದ AI ಆಧಾರಿತ ಗೀತೆಯಲ್ಲಿ “ನಾವು ಜಿರಳೆ ಪಕ್ಷ, ನಾವು ಉರಿಯುತ್ತಿರುವ ನಗರದ ಮಕ್ಕಳು” ಎಂಬ ಸಾಲುಗಳು ಸೇರಿವೆ.

ವಾರ್ತಾ ಭಾರತಿ 18 May 2026 11:30 pm

ವನ್ಯಜೀವಿಗಳಿಂದ ನಿರ್ದಿಷ್ಟ ಅಂತರ ಕಾಯ್ದುಕೊಳ್ಳಬೇಕು: ಸಚಿವ ಈಶ್ವರ್‌ ಖಂಡ್ರೆ

ದುಬಾರೆಯಲ್ಲಿ ಆನೆ ಕಾದಾಟದ ವೇಳೆ ಮೃತಪಟ್ಟ ಮಹಿಳೆಯ ಕುಟುಂಬಕ್ಕೆ ಸಂತಾಪ

ವಾರ್ತಾ ಭಾರತಿ 18 May 2026 11:19 pm

ಉಮರ್ ಖಾಲಿದ್ ಪ್ರಕರಣ | UAPAಯಲ್ಲೂ ಜಾಮೀನು ನಿಯಮ ಎಂದು ಸುಪ್ರೀಂ ಕೋರ್ಟ್, ತನ್ನದೇ ತೀರ್ಪಿನ ಬಗ್ಗೆ ಆಕ್ಷೇಪ

ಕಾನೂನುಬಾಹಿರ ಚಟುವಟಿಕೆಗಳ (ನಿಯಂತ್ರಣ) ಕಾಯ್ದೆ (UAPA) ಅಡಿಯಲ್ಲಿರುವ ಪ್ರಕರಣಗಳಲ್ಲಿಯೂ ಸಹ ಜಾಮೀನು ನಿಯಮ ಮತ್ತು ಜೈಲು ಅಪವಾದ ಎಂಬ ತತ್ವವು ಅನ್ವಯಿಸುತ್ತದೆ ಎಂದು ಸುಪ್ರೀಂ ಕೋರ್ಟ್ ಸೋಮವಾರ ಹೇಳಿದೆ. ಅದೇ ವೇಳೆ, 2020ರ ದಿಲ್ಲಿ ಗಲಭೆ ಪಿತೂರಿ ಪ್ರಕರಣದಲ್ಲಿ JNU ಮಾಜಿ ವಿದ್ಯಾರ್ಥಿ ನಾಯಕ ಉಮರ್ ಖಾಲಿದ್‌ ಗೆ ಜಾಮೀನು ನಿರಾಕರಿಸಿದ ತನ್ನ ಹಿಂದಿನ ಆದೇಶದ ಬಗ್ಗೆ ಸುಪ್ರೀಂ ಕೋರ್ಟ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಸೆಪ್ಟೆಂಬರ್ 2020ರಿಂದ ಜೈಲಿನಲ್ಲಿರುವ ಖಾಲಿದ್‌ ಗೆ ಜಾಮೀನು ನಿರಾಕರಿಸುವ ತೀರ್ಪು, ದೀರ್ಘಕಾಲದ ವಿಚಾರಣೆಯ ಪೂರ್ವ ಬಂಧನದ ಕುರಿತು ಸುಪ್ರೀಂ ಕೋರ್ಟ್ ನಿಗದಿಪಡಿಸಿದ ತತ್ವಗಳನ್ನು ಸರಿಯಾಗಿ ಅನ್ವಯಿಸಲು ವಿಫಲವಾಗಿದೆ ಎಂದು ನ್ಯಾಯಾಲಯ ಗಮನಿಸಿದೆ. ಈ ವರ್ಷದ ಜನವರಿಯಲ್ಲಿ ಖಾಲಿದ್‌ ಗೆ ಜಾಮೀನು ನಿರಾಕರಿಸಿದ್ದು, ಎಪ್ರಿಲ್‌ ನಲ್ಲಿ ಅವರ ಪರಿಶೀಲನಾ ಅರ್ಜಿಯನ್ನು ತಿರಸ್ಕರಿಸಲಾಗಿತ್ತು. ನ್ಯಾಯಮೂರ್ತಿಗಳಾದ ಬಿ.ವಿ. ನಾಗರತ್ನ ಮತ್ತು ಉಜ್ಜಲ್ ಭುಯಾನ್ ಅವರು, UAPA ಸೆಕ್ಷನ್ 43 ಡಿ (5) ರ ಕಟ್ಟುನಿಟ್ಟಾದ ಜಾಮೀನು ಷರತ್ತುಗಳು ವೈಯಕ್ತಿಕ ಸ್ವಾತಂತ್ರ್ಯವನ್ನು ರಕ್ಷಿಸುವ ಸಂವಿಧಾನದ 21ನೇ ವಿಧಿಗೆ ಬದ್ಧವಾಗಿರಬೇಕು ಎಂದು ತೀರ್ಪು ನೀಡಿದರು. ಜಾಮೀನು ನಿಯಮ ಮತ್ತು ಜೈಲು ಅಪವಾದ ಎಂದು ನ್ಯಾಯಾಲಯಗಳಿಗೆ ನೆನಪಿಸುವ ಮೂಲಕ, ಆರೋಪಗಳು UAPA ಅಡಿಯಲ್ಲಿವೆ ಎಂಬ ಕಾರಣಕ್ಕಾಗಿ ನ್ಯಾಯಾಲಯಗಳು ಜಾಮೀನು ನಿರಾಕರಣೆಯನ್ನು ಸ್ವಯಂಚಾಲಿತವಾಗಿ ಪರಿಗಣಿಸಬಾರದು ಎಂದು ಪೀಠ ಒತ್ತಿ ಹೇಳಿದೆ. ಆದ್ದರಿಂದ, UAPA ಅಡಿಯಲ್ಲಿಯೂ ಸಹ ಜಾಮೀನು ನಿಯಮ ಮತ್ತು ಜೈಲು ವಿನಾಯಿತಿಯಾಗಬೇಕು ಎಂದು ಹೇಳುವುದರಲ್ಲಿ ನಮಗೆ ಯಾವುದೇ ಸಂದೇಹವಿಲ್ಲ ಎಂದು ನ್ಯಾಯಾಲಯ ಘೋಷಿಸಿತು. ಯೂನಿಯನ್ ಆಫ್ ಇಂಡಿಯಾ Vs ಕೆಎ ನಜೀಬ್ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ನ 2021ರ ಮಹತ್ವದ ತೀರ್ಪು, ತ್ವರಿತ ವಿಚಾರಣೆಗೆ ಆರೋಪಿಯ ಮೂಲಭೂತ ಹಕ್ಕನ್ನು ಉಲ್ಲಂಘಿಸಿದರೆ, ಕಠಿಣ UAPA ಕಾನೂನುಗಳ ಅಡಿಯಲ್ಲಿಯೂ ಸಹ ಸಾಂವಿಧಾನಿಕ ನ್ಯಾಯಾಲಯಗಳು ಜಾಮೀನು ನೀಡುವ ಅಧಿಕಾರವನ್ನು ಹೊಂದಿವೆ ಎಂದಿತ್ತು. ಜನವರಿಯಲ್ಲಿ ಉಮರ್ ಖಾಲಿದ್ ಅವರಿಗೆ ಜಾಮೀನು ನಿರಾಕರಿಸಿದ ಇಬ್ಬರು ನ್ಯಾಯಾಧೀಶರ ಪೀಠವನ್ನು ನ್ಯಾಯಮೂರ್ತಿ ಭುಯಾನ್ ತೀವ್ರವಾಗಿ ಟೀಕಿಸಿದರು. ದೊಡ್ಡ ಪೀಠವು ನೀಡಿದ ತೀರ್ಪನ್ನು ಸಣ್ಣ ಪೀಠವು ದುರ್ಬಲಗೊಳಿಸಲು, ಬೈಪಾಸ್ ಮಾಡಲು ಅಥವಾ ನಿರ್ಲಕ್ಷಿಸಲು ಸಾಧ್ಯವಿಲ್ಲ. ಸ್ಥಾಪಿತ ನ್ಯಾಯಾಂಗ ಶಿಸ್ತಿನ ಪ್ರಕಾರ, ಸಣ್ಣ ಪೀಠವು ಪೂರ್ವನಿದರ್ಶನವನ್ನು ಅನುಸರಿಸಬೇಕು ಅಥವಾ ಅವರಿಗೆ ಯಾವುದೇ ಸಂದೇಹಗಳಿದ್ದರೆ, ವಿಷಯವನ್ನು ದೊಡ್ಡ ಪೀಠಕ್ಕೆ ಉಲ್ಲೇಖಿಸಬೇಕು ಎಂದು ಅವರು ಹೇಳಿದ್ದಾರೆ. ಮಾದಕ ವಸ್ತುಗಳ ಮೂಲಕ ಭಯೋತ್ಪಾದನೆಗೆ ಹಣಕಾಸು ಒದಗಿಸಿದ UAPA ಆರೋಪದ ಮೇಲೆ ಆರು ವರ್ಷಗಳಿಗೂ ಹೆಚ್ಚು ಕಾಲ ಜೈಲಿನಲ್ಲಿದ್ದ ಸೈಯದ್ ಇಫ್ತಿಕಾರ್ ಅಂದ್ರಾಬಿಗೆ ಜಾಮೀನು ಮಂಜೂರು ಮಾಡುವಾಗ ಸುಪ್ರೀಂ ಕೋರ್ಟ್ ಈ ನಿರ್ಣಾಯಕ ಹೇಳಿಕೆಗಳನ್ನು ನೀಡಿತು. ಉಮರ್ ಖಾಲಿದ್ ಮತ್ತು ಶಾರ್ಜೀಲ್ ಇಮಾಮ್‌ ಗೆ ಜಾಮೀನು ನಿರಾಕರಿಸಿದ ಜನವರಿ 2026ರ ತೀರ್ಪನ್ನು ನ್ಯಾಯಪೀಠವು ತನ್ನ ತೀರ್ಪಿನಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಿದ್ದು, ಆ ಹಿಂದಿನ ಪೀಠವು ತೆಗೆದುಕೊಂಡ ವಿಧಾನವನ್ನು ಸ್ವೀಕರಿಸಲು ಕಷ್ಟ ಎಂದು ಹೇಳಿದೆ. ಲೈವ್ ಲಾ ವರದಿಯ ಪ್ರಕಾರ, ಉಮರ್ ಖಾಲಿದ್ ಪ್ರಕರಣ ಮತ್ತು ಗುರ್ವಿಂದರ್ ಸಿಂಗ್ ಅವರನ್ನು ಒಳಗೊಂಡ ಮತ್ತೊಂದು UAPA ಪ್ರಕರಣದಲ್ಲಿ ಬಳಸಲಾದ ತರ್ಕವನ್ನು ನ್ಯಾಯಮೂರ್ತಿ ಭುಯಾನ್ ಸ್ಪಷ್ಟವಾಗಿ ತಿರಸ್ಕರಿಸಿದರು. ನ್ಯಾಯಾಲಯವು ಅದನ್ನು ಸ್ವೀಕರಿಸಲು ಕಷ್ಟ ಎಂದು ಅವರು ಹೇಳಿದರು. ಆ ಎರಡೂ ತೀರ್ಪುಗಳು UAPAಯ ಕಟ್ಟುನಿಟ್ಟಾದ ಜಾಮೀನು ನಿಬಂಧನೆಗಳನ್ನು ಮೂವರು ನ್ಯಾಯಾಧೀಶರ ಪೀಠದ 2021ರ ತೀರ್ಪಿಗೆ ವಿರುದ್ಧವಾದ ರೀತಿಯಲ್ಲಿ ವ್ಯಾಖ್ಯಾನಿಸಿವೆ ಎಂದು ಅವರು ಗಮನಸೆಳೆದರು. 2021ರ ಕೆಎ ನಜೀಬ್ ತೀರ್ಪು ಸ್ಪಷ್ಟ ನಿಯಮವನ್ನು ಸ್ಥಾಪಿಸಿದೆ ಎಂದು ಪೀಠ ಒತ್ತಿಹೇಳಿತು. ವಿಚಾರಣೆಗಳಲ್ಲಿ ದೀರ್ಘಕಾಲದ ವಿಳಂಬ ಮತ್ತು ವಿಚಾರಣೆಗೆ ಮುನ್ನ ವಿಸ್ತೃತ ಜೈಲು ಶಿಕ್ಷೆಯು UAPAಯ ಕಟ್ಟುನಿಟ್ಟಿನ ನಿಬಂಧನೆಗಳ ಅಡಿಯಲ್ಲಿಯೂ ಸಹ ಜಾಮೀನಿಗೆ ಮಾನ್ಯ ಆಧಾರಗಳಾಗಿವೆ. ಉಮರ್ ಖಾಲಿದ್ ಪ್ರಕರಣವನ್ನು ಹೊರತುಪಡಿಸಿ ನ್ಯಾಯಾಲಯವು ಪ್ರಶ್ನಿಸಿದ ಎರಡನೇ ತೀರ್ಪಿನ ಪ್ರಕಾರ, ಗುರ್ವಿಂದರ್ ಸಿಂಗ್ ಪ್ರಕರಣದಲ್ಲಿ ಅನ್ವಯಿಸಲಾದ ಎರಡು ಹಂತದ ಪರೀಕ್ಷೆಯನ್ನು ನ್ಯಾಯಾಲಯವು ತಿರಸ್ಕರಿಸಿತು. ಇದರ ಪ್ರಕಾರ ಪ್ರಾಥಮಿಕ ವಿಶ್ಲೇಷಣೆಯಲ್ಲಿ ಪ್ರಕರಣವು ಅರ್ಹತೆ ಹೊಂದಿಲ್ಲ ಎಂದು ಆರೋಪಿಗಳು ಸಾಬೀತುಪಡಿಸಿದರೆ ಮಾತ್ರ ಜಾಮೀನು ನೀಡಬಹುದು. ಇಂತಹ ತರ್ಕದ ಪರಿಣಾಮಗಳ ವಿರುದ್ಧ ನ್ಯಾಯಾಲಯ ಎಚ್ಚರಿಸಿತು. ಈ ಆಧಾರದ ಮೇಲೆ ಜಾಮೀನು ನಿರಾಕರಿಸುವುದರಿಂದ ವಿಚಾರಣೆಗೆ ಮುನ್ನ ಜೈಲು ಶಿಕ್ಷೆಯನ್ನು ಅನಧಿಕೃತ, ಅಕಾಲಿಕ ಶಿಕ್ಷೆಯಾಗಿ ಪರಿವರ್ತಿಸುವ ಅಪಾಯವಿದೆ ಎಂದು ಗಮನಿಸಿತು. ಈ ತೀರ್ಪು ಬಾಕಿ ಇರುವ ಇತರ UAPA ಜಾಮೀನು ಪ್ರಕರಣಗಳಲ್ಲಿ, ವಿಶೇಷವಾಗಿ 2020ರ ದಿಲ್ಲಿ ಗಲಭೆ ಪಿತೂರಿ ಪ್ರಕರಣಕ್ಕೆ ಸಂಬಂಧಿಸಿದ ಪ್ರಕರಣಗಳಲ್ಲಿ ಪ್ರತಿಧ್ವನಿಸಲಿದೆ. ವಿಚಾರಣೆಗಳು ಆರಂಭವಾಗದೆ ವರ್ಷಗಳ ಕಾಲ ಜೈಲಿನಲ್ಲಿ ಉಳಿದಿರುವ ಹಲವಾರು ಸಾಮಾಜಿಕ ಕಾರ್ಯಕರ್ತರು ಮತ್ತು ಆರೋಪಿ ವ್ಯಕ್ತಿಗಳಿಗೆ ಇದು ನಿರ್ಣಾಯಕ ಕಾನೂನು ಅವಕಾಶವನ್ನು ನೀಡುತ್ತದೆ. ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ಮಾಜಿ ವಿದ್ಯಾರ್ಥಿ ನಾಯಕ ಮತ್ತು ಸಾಮಾಜಿಕ ಕಾರ್ಯಕರ್ತ ಖಾಲಿದ್ ಅವರನ್ನು ಫೆಬ್ರವರಿ 2020ರ ದಿಲ್ಲಿ ಗಲಭೆಯ ಹಿಂದಿನ ದೊಡ್ಡ ಪಿತೂರಿಯಲ್ಲಿ ಪಾತ್ರ ವಹಿಸಿದ್ದಕ್ಕಾಗಿ ಸೆಪ್ಟೆಂಬರ್ 2020ರಲ್ಲಿ ಬಂಧಿಸಲಾಯಿತು. ಹಿಂಸಾಚಾರಕ್ಕೆ ಕಾರಣವಾದ ಪೂರ್ವ ಯೋಜಿತ ಪಿತೂರಿಯ ಭಾಗವಾಗಿ ಸಿಎಎ ವಿರೋಧಿ ಪ್ರತಿಭಟನೆಗಳ ಸಮಯದಲ್ಲಿ ಅವರು ಪ್ರಚೋದನಕಾರಿ ಭಾಷಣಗಳನ್ನು ನೀಡಿದ್ದಾರೆ ಎಂದು ದಿಲ್ಲಿ ಪೊಲೀಸರು ಹೇಳಿಕೊಂಡಿದ್ದಾರೆ. UAPA ಜೊತೆಗೆ ಹಲವಾರು ಐಪಿಸಿ ಸೆಕ್ಷನ್‌ಗಳ ಅಡಿಯಲ್ಲಿ ಖಾಲಿದ್ ವಿರುದ್ಧ ಪ್ರಕರಣ ದಾಖಲಾಗಿದೆ. ಹಿಂಸಾಚಾರ ಭುಗಿಲೆದ್ದಾಗ ತಾನು ದಿಲ್ಲಿಯಲ್ಲಿ ಇರಲಿಲ್ಲ ಎಂದು ಹೇಳಿಕೊಂಡಿರುವ ಖಾಲಿದ್ ನಿರಂತರವಾಗಿ ಆರೋಪಗಳನ್ನು ನಿರಾಕರಿಸಿದ್ದಾರೆ. ಜನವರಿ 2026ರಲ್ಲಿ, ಸುಪ್ರೀಂ ಕೋರ್ಟ್ ಖಾಲಿದ್ ಮತ್ತು ಶಾರ್ಜೀಲ್ ಇಮಾಮ್ ಇಬ್ಬರಿಗೂ ಜಾಮೀನು ನಿರಾಕರಿಸಿತು. ಅದೇ ವೇಳೆ, ಗುಲ್ಫಿಶಾ ಫಾತಿಮಾ ಮತ್ತು ಮೀರನ್ ಹೈದರ್ ಸೇರಿದಂತೆ ಇತರ ಐದು ಆರೋಪಿಗಳಿಗೆ ಜಾಮೀನು ನೀಡಿತು. ಖಾಲಿದ್ ಮತ್ತು ಇಮಾಮ್ ಉಳಿದವರಿಗಿಂತ ಗುಣಾತ್ಮಕವಾಗಿ ವಿಭಿನ್ನ ನೆಲೆಯಲ್ಲಿ ನಿಂತಿದ್ದಾರೆ ಎಂದು ಹೇಳುವ ಮೂಲಕ ನ್ಯಾಯಾಲಯವು ಈ ವಿಭಜನೆಯ ನಿರ್ಧಾರವನ್ನು ಸಮರ್ಥಿಸಿತು. UAPAಯ ಕಟ್ಟುನಿಟ್ಟಾದ ಕಾನೂನು ಮಾನದಂಡಗಳ ಅಡಿಯಲ್ಲಿ ಅವರ ವಿರುದ್ಧದ ಆರೋಪಗಳು ಮೇಲ್ನೋಟಕ್ಕೆ ನಿಜ ಎಂದು ಕಂಡುಬಂದಿದೆ ಎಂದು ತೀರ್ಪು ನೀಡಿತು.

ವಾರ್ತಾ ಭಾರತಿ 18 May 2026 11:11 pm

ರಾಜ್ಯದಲ್ಲಿ ಮೇ 21ರ ವರೆಗೆ ಮಳೆ ಸಾಧ್ಯತೆ : ಹವಾಮಾನ ಇಲಾಖೆ

ಬೆಂಗಳೂರು : ಕರಾವಳಿ ಉತ್ತರ ಒಳನಾಡು ಮತ್ತು ದಕ್ಷಿಣ ಒಳನಾಡು ಸೇರಿ ರಾಜ್ಯ ಬಹುತೇಕ ಜಿಲ್ಲೆಗಳಲ್ಲಿ ಮೇ 21ರವರೆಗೆ ಮಳೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆಯು ತಿಳಿಸಿದೆ. ಸೋಮವಾರ ಇಲಾಖೆಯು ಪ್ರಕಟನೆ ಹೊರಡಿಸಿದ್ದು, ಕೊಪ್ಪಳ, ಧಾರವಾಡ, ಗದಗ, ವಿಜಯನಗರ, ಹಾವೇರಿ, ದಾವಣಗೆರೆ, ಶಿವಮೊಗ್ಗ, ವಿಜಯಪುರ, ಯಾದಗಿರಿ, ರಾಯಚೂರು, ಬಾಗಲಕೋಟೆ, ಬೆಳಗಾವಿ, ಬಳ್ಳಾರಿ, ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ, ಚಿತ್ರದುರ್ಗ, ಚಿಕ್ಕಮಗಳೂರು, ಹಾಸನ, ಕೊಡಗು, ನೈಸೂರು, ಮಂಡ್ಯ, ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ ಮತ್ತು ಮೈಸೂರಿನಲ್ಲಿಯೂ ಮಳೆಯ ಮುನ್ಸೂಚನೆ ಇದೆ ಎಂದು ತಿಳಿಸಿದೆ. ದಕ್ಷಿಣ ಒಳನಾಡಿನ ಕೆಲವೆಡೆ ಭಾರೀ ಮಳೆಯೊಂದಿಗೆ ಗುಡುಗು-ಮಿಂಚಿನ ಸಾಧ್ಯತೆ ಇದೆ. ಬೆಂಗಳೂರು ಮತ್ತು ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಮೋಡ ಕವಿದ ವಾತಾವರಣ, ಮಧ್ಯಾಹ್ನದ ಬಳಿಕ ಮೋಡಗಟ್ಟುವಿಕೆ ಹಾಗೂ ಸಂಜೆ ವೇಳೆಗೆ ಮಳೆಯಾಗಬಹುದು ಎಂದು ಹವಾಮಾನ ಇಲಾಖೆ ಹೇಳಿದೆ.    

ವಾರ್ತಾ ಭಾರತಿ 18 May 2026 11:11 pm

MS Dhoni: ಎಂಎಸ್ ಧೋನಿ ಇಂದು ರಾತ್ರಿಯೇ ನಿವೃತ್ತಿ ಘೋಷಣೆ? 5 ವರ್ಷದ ಹಿಂದಿನ ಸುಳಿವು ಭಾರಿ ವೈರಲ್

MS Dhoni: ಐಪಿಎಲ್ 2026ರ ಲೀಗ್ ಹಂತದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಇಂದಿನ ಎಸ್‌ಆರ್‌ಎಚ್‌ ವಿರುದ್ಧದ ಪಂದ್ಯ ಬಿಟ್ಟರೆ, ಇನ್ನು ಕೇವಲ ಒಂದು ಮ್ಯಾಚ್ ಬಾಕಿ ಉಳಿಯಲಿದೆ. ಆದರೆ ಎಂ.ಎಸ್. ಧೋನಿ ಈವರೆಗೆ ಒಂದೂ ಪಂದ್ಯವನ್ನು ಆಡಿಲ್ಲ. ಹೊಸ ಸೀಸನ್ ಆರಂಭವಾದಾಗಿನಿಂದ ಅವರು ಗಾಯದ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂದು ವರದಿಯಾಗಿದೆ. ಈ ನಡುವೆಯೇ ಇಂದು (ಮೇ

ಒನ್ ಇ೦ಡಿಯ 18 May 2026 11:06 pm

IPL 2026 | ಇದೇ ಮೊದಲ ಬಾರಿ ಪಂದ್ಯದ ದಿನ ಮೈದಾನಕ್ಕಿಳಿದ ಧೋನಿ!

ಚೆನ್ನೈ, ಮೇ 18: ಈಗ ನಡೆಯುತ್ತಿರುವ ಐಪಿಎಲ್ ಟೂರ್ನಿಯಲ್ಲಿ ಇದೇ ಮೊದಲ ಬಾರಿ ವಿಕೆಟ್‌ಕೀಪರ್-ಬ್ಯಾಟರ್ ಎಂ.ಎಸ್. ಧೋನಿ ಪಂದ್ಯದ ದಿನ ಮೈದಾನದಲ್ಲಿ ಕಾಣಿಸಿಕೊಂಡರು. ಆದರೆ, ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ತಂಡದ ಆಡುವ 11ರ ಬಳಗ ಅಥವಾ ಬದಲಿ ಆಟಗಾರರ ಗುಂಪಿನಲ್ಲಿ ಸ್ಥಾನ ಪಡೆಯಲಿಲ್ಲ. ಈ ಬಾರಿಯ ಐಪಿಎಲ್‌ನಲ್ಲಿ ಮೊದಲ ಬಾರಿ ಚೆನ್ನೈನಲ್ಲಿ ಟಾಸ್ ಗೆದ್ದಿರುವ ಸಿಎಸ್‌ಕೆ ನಾಯಕ ಋತುರಾಜ್ ಗಾಯಕ್ವಾಡ್ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದರು. ‘‘ಧೋನಿ ಅವರು ಪಂದ್ಯ ಆಡುವಷ್ಟು ಫಿಟ್ ಆಗಿಲ್ಲ. ಪಿಚ್ ಸ್ವಲ್ಪ ಒಣಗಿದಂತೆ ಕಂಡಬಂದಿದ್ದು, ರನ್ ಗಳಿಸಲು ಸುಲಭವಾಗಬಹುದು. ಇಬ್ಬನಿಯ ಕೊರತೆ ಕೂಡ ಈ ನಿರ್ಧಾರಕ್ಕೆ ಕಾರಣವಾಗಿದೆ’’ ಎಂದು ಗಾಯಕ್ವಾಡ್ ಹೇಳಿದ್ದಾರೆ. ಸಿಎಸ್‌ಕೆ ತಂಡವು ಒಂದು ಬದಲಾವಣೆಯನ್ನು ಮಾಡಿದ್ದು, ಗುರ್ಜಪ್‌ನೀತ್ ಸಿಂಗ್ ಬದಲಿಗೆ ಸ್ಪಿನ್ನರ್ ಅಕೀಲ್ ಹುಸೇನ್‌ ಗೆ ಅವಕಾಶ ನೀಡಲಾಗಿದೆ.

ವಾರ್ತಾ ಭಾರತಿ 18 May 2026 11:00 pm

ಅಕ್ರಮ ಹಣ ವರ್ಗಾವಣೆ ಪ್ರಕರಣ; ಶ್ರೀಕಿ ಸೇರಿ ಮೂವರನ್ನು ಮತ್ತೆ 5 ದಿನ ಈಡಿ ಕಸ್ಟಡಿಗೆ ನೀಡಿದ ವಿಶೇಷ ಕೋರ್ಟ್

ಬೆಂಗಳೂರು : ಬಿಟ್‌ ಕಾಯಿನ್‌ ಹಗರಣ ಸಂಬಂಧಿತ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಹ್ಯಾಕರ್‌ ಶ್ರೀಕೃಷ್ಣ ಅಲಿಯಾಸ್‌ ಶ್ರೀಕಿ, ಸುನೀಶ್‌ ಹೆಗಡೆ ಹಾಗೂ ರಾಬಿನ್‌ ಖಂಡೇಲವಾಲ್‌ ಅವರನ್ನು ಮತ್ತೆ 5 ದಿನ ಜಾರಿ ನಿರ್ದೇಶನಾಲಯದ (ಈಡಿ) ವಶಕ್ಕೆ ಒಪ್ಪಿಸಿ ಬೆಂಗಳೂರಿನ ವಿಶೇಷ ನ್ಯಾಯಾಲಯ ಆದೇಶಿಸಿದೆ‌. ಬೆಂಗಳೂರಿನ ಪ್ರಧಾನ ಸಿಟಿ ಸಿವಿಲ್‌ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶರಾದ ಎಂ. ಚಂದ್ರಶೇಖರ್‌ ರೆಡ್ಡಿ ಅವರು ಆರೋಪಿಗಳನ್ನು ಮೇ 22ರವರೆಗೆ ಈಡಿ ಕಸ್ಟಡಿಗೆ ನೀಡಿದ್ದಾರೆ. ಮೇ 9ರಂದು ಆರೋಪಿಗಳನ್ನು 10 ದಿನ ಈಇಡಿ ಸುಪರ್ದಿಗೆ ನೀಡಲಾಗಿತ್ತು. ಸೋಮವಾರ ಕಸ್ಟಡಿ ಅವಧಿ ಮುಗಿದ ಹಿನ್ನೆಲೆಯಲ್ಲಿ ಅವರನ್ನು ವಿಶೇಷ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿತ್ತು. ಪ್ರಕರಣದ ಹಿನ್ನೆಲೆ: ಕರ್ನಾಟಕ ಸರ್ಕಾರದ ಇ-ಪ್ರಕ್ಯೂರ್‌ಮೆಂಟ್‌ ಪೋರ್ಟಲ್‌ನಿಂದ 11.5 ಕೋಟಿ ರೂ. ಕದ್ದಿರುವುದು, ಭಾರತದ ಗೇಮಿಂಗ್‌ ವೆಬ್‌ಸೈಟ್‌ಗಳ ಹ್ಯಾಕಿಂಗ್‌ ಮತ್ತು ವಿದೇಶದಲ್ಲಿ ಕ್ರಿಪ್ಟೊ ಕರೆನ್ಸಿ ಬದಲಾವಣೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣವನ್ನು ಈಡಿ ತನಿಖೆ ನಡೆಸುತ್ತಿದೆ. ಇತ್ತೀಚೆಗೆ ಮೊಹಮ್ಮದ್‌ ಹ್ಯಾರಿಸ್‌ ನಲಪಾಡ್‌ ಮನೆಯಲ್ಲಿಯೂ ಈಡಿ ಶೋಧ ನಡೆಸಿತ್ತು. ಯುನೋಕಾಯಿನ್‌ ಹ್ಯಾಕಿಂಗ್‌ ಮತ್ತು ಕಳವು ಆರೋಪಕ್ಕೆ ಸಂಬಂಧಿಸಿದಂತೆ ಸಿಐಡಿ ಶ್ರೀಕಿ ಮತ್ತಿತರರ ವಿರುದ್ಧ ತನಿಖೆ ನಡೆಸಿತ್ತು.ಗೇಮಿಂಗ್‌ ವೆಬ್‌ಸೈಟ್‌ಗಳ ಹ್ಯಾಕಿಂಗ್‌ ಮತ್ತು ಬಿಟ್‌  ಬಳಸಿ ಡಾರ್ಕ್‌ನೆಟ್‌ ಮೂಲಕ ಮಾದಕ ದ್ರವ್ಯ ತರಿಸಿದ ಆರೋಪದ ಸಂಬಂಧ ಕಾಟನ್‌ಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 2023ರಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬರುತ್ತಿದ್ದಂತೆ ಹಿರಿಯ ಐಪಿಎಸ್‌ ಅಧಿಕಾರಿ ಮನೀಷ್‌ ಖರ್ಬೀಕರ್‌ ನೇತೃತ್ವದಲ್ಲಿ ಬಿಟ್‌ ಕಾಯಿನ್‌ ಹಗರಣದ ತನಿಖೆಗೆ ಎಸ್‌ಐಟಿ ನೇಮಿಸಲಾಗಿತ್ತು. ಆನಂತರ, 2024ರ ಜುಲೈನಲ್ಲಿ ಶ್ರೀಕಿ ಹಾಗೂ ಖಂಡೇಲವಾಲಾ ವಿರುದ್ಧ ದಾಖಲಾಗಿರುವ ಕೊಕಾ ಪ್ರಕರಣವನ್ನು ಹೈಕೋರ್ಟ್‌ ರದ್ದುಪಡಿಸಿತ್ತು. ಈ ಇಬ್ಬರೂ 2020ರಲ್ಲಿ ಅಶೋಕ ನಗರ ಠಾಣೆಯಲ್ಲಿ ದಾಖಲಾಗಿರುವ ವಂಚನೆ ಪ್ರಕರಣದ ರದ್ದತಿ ಕೋರಿ ಸಲ್ಲಿಸಿರುವ ಅರ್ಜಿ ಹೈಕೋರ್ಟ್‌ನಲ್ಲಿ ವಿಚಾರಣೆಗೆ ಬಾಕಿ ಇದೆ.

ವಾರ್ತಾ ಭಾರತಿ 18 May 2026 11:00 pm

ಪ್ರಧಾನಿಗೆ ನಾರ್ವೆ ದೇಶದ ಅತ್ಯುನ್ನತ ನಾಗರಿಕ ಗೌರವ

ಹೊಸದಿಲ್ಲಿ, ಮೇ 18: ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸೋಮವಾರ ನಾರ್ವೆಯ ಅತ್ಯುನ್ನತ ನಾಗರಿಕ ಪ್ರಶಸ್ತಿ ‘ಗ್ರಾಂಡ್ ಕ್ರಾಸ್ ಆಫ್ ದಿ ರಾಯಲ್ ನಾರ್ವೇಜಿಯನ್ ಆರ್ಡರ್ ಆಫ್ ಮೆರಿಟ್’ ಅನ್ನು ಪ್ರಧಾನ ಮಾಡಲಾಯಿತು. ಇದು ಪ್ರಧಾನಿ ಮೋದಿ ಅವರಿಗೆ ದೊರೆತ 32ನೇ ಅಂತರ ರಾಷ್ಟ್ರೀಯ ಗೌರವವಾಗಿದೆ. ನಾರ್ವೆಯ ಹಿತಾಸಕ್ತಿಗಳನ್ನು ಮತ್ತು ಅಂತರ ರಾಷ್ಟ್ರೀಯ ಸಂಬಂಧಗಳನ್ನು ವೃದ್ಧಿಸುವ ಅಸಾಧಾರಣ ಸೇವೆ ಸಲ್ಲಿಸಿದವರಿಗೆ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ. ದ್ವಿಪಕ್ಷೀಯ ಸಂಬಂಧಗಳಿಗೆ ನೀಡಿದ ಅಸಾಧಾರಣ ಕೊಡುಗೆ ಮತ್ತು ದೂರದರ್ಶಿತ್ವದ ನಾಯಕತ್ವವನ್ನು ಗುರುತಿಸಿ ಮೋದಿ ಅವರಿಗೆ ರವಿವಾರ ಸ್ವೀಡನ್‌ನ ಪ್ರತಿಷ್ಠಿತ ‘ರಾಯಲ್ ಆರ್ಡರ್ ಆಫ್ ದಿ ಪೋಲಾರ್ ಸ್ಟಾರ್, ಕಮಾಂಡರ್ ಗ್ರಾಂಡ್ ಕ್ರಾಸ್’ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು.

ವಾರ್ತಾ ಭಾರತಿ 18 May 2026 11:00 pm

ಮಾಜಿ ಮಿಸ್ ಪುಣೆ ಟ್ವಿಶಾ ಶರ್ಮಾ ಆತ್ಮಹತ್ಯೆ?; ಪತಿ, ಅತ್ತೆ-ಮಾವನ ಕಿರುಕುಳ ಕಾರಣ: ಹೆತ್ತವರ ಆರೋಪ

ಹೊಸದಿಲ್ಲಿ, ಮೇ 18: ಮಾಜಿ ‘ಮಿಸ್ ಪುಣೆ’ ಟ್ವಿಶಾ ಶರ್ಮಾ ಅವರ ಮೃತದೇಹ ಮೇ 12ರಂದು ಆತ್ರಿ ಕಟಾರಾ ಹಿಲ್ಸ್‌ ಪ್ರದೇಶದಲ್ಲಿರುವ ಪತಿಯ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಟ್ವಿಶಾ ಹೆತ್ತವರು ವರದಕ್ಷಿಣೆ ಕಿರುಕುಳ ಮತ್ತು ಚಿತ್ರಹಿಂಸೆಯ ಆರೋಪ ಮಾಡಿದ ಬಳಿಕ ಈ ಪ್ರಕರಣ ಗಂಭೀರ ತಿರುವು ಪಡೆದುಕೊಂಡಿದೆ. ಟ್ವಿಶಾ ಸಾವನ್ನಪ್ಪುವ ಮುನ್ನ ತನ್ನ ಆಪ್ತ ಗೆಳತಿ ಮೀನಾಕ್ಷಿಗೆ ರವಾನಿಸಿದ್ದ ಕೊನೆಯ ಇನ್‌ ಸ್ಟಾಗ್ರಾಮ್ ಸಂದೇಶದ ಬಳಿಕ ಈ ಘಟನೆ ಬೆಳಕಿಗೆ ಬಂದಿದೆ. ಟ್ವಿಶಾ ಇನ್‌ ಸ್ಟಾಗ್ರಾಮ್‌ನಲ್ಲಿ ‘‘ನಾನು ಸಿಲುಕಿಕೊಂಡಿದ್ದೇನೆ ಗೆಳತಿ. ಆದರೆ, ನೀನು ಮಾತ್ರ ಸಿಲುಕಿಕೊಳ್ಳಬೇಡ. ಹೆಚ್ಚು ಮಾತನಾಡಲು ಸಾಧ್ಯವಿಲ್ಲ. ಸಮಯ ಬಂದಾಗ ನಾನೇ ಕರೆ ಮಾಡುತ್ತೇನೆ’’ ಎಂದು ಬರೆದಿದ್ದರು. ಮಾಜಿ ‘ಮಿಸ್ ಪುಣೆ’ ಆಗಿದ್ದ ಟ್ವಿಶಾ ಶರ್ಮಾ ಅವರಿಗೆ 2024ರಲ್ಲಿ ಡೇಟಿಂಗ್ ಆ್ಯಪ್ ಮೂಲಕ ಸಮರ್ಥ್ ಸಿಂಗ್ ಅವರ ಪರಿಚಯವಾಗಿತ್ತು. 2025 ಡಿಸೆಂಬರ್‌ನಲ್ಲಿ ಅವರು ವಿವಾಹವಾಗಿದ್ದರು. ಬಳಿಕ ಟ್ವಿಶಾ ಶರ್ಮಾ ಪತಿ ಸಮರ್ಥ್ ಸಿಂಗ್ ಮತ್ತು ಆತನ ತಾಯಿ, ನಿವೃತ್ತ ನ್ಯಾಯಾಧೀಶೆ ಗಿರಾಬಾಲಾ ಸಿಂಗ್ ಜೊತೆಗೆ ಭೋಪಾಲದಲ್ಲಿ ವಾಸಿಸುತ್ತಿದ್ದರು. ಅವರು ಭೋಪಾಲ್ ತೊರೆದು ನೋಯ್ಡಾಕ್ಕೆ ಹಿಂದಿರುಗಲು ಬಯಸಿದ್ದಳು. ಸಾವನ್ನಪ್ಪುವ ಕೆಲವೇ ಕ್ಷಣಗಳ ಮುನ್ನ ಆಕೆ ತನ್ನ ಕುಟುಂಬದೊಂದಿಗೆ ಸಂಪರ್ಕದಲ್ಲಿದ್ದಳು ಎಂದು ಆಕೆಯ ಸಂಬಂಧಿಕರು ತಿಳಿಸಿದ್ದಾರೆ. ಟ್ವಿಶಾ ಅವರ ಪತಿ ಮತ್ತು ಅತ್ತೆ-ಮಾವ ದೀರ್ಘಕಾಲದಿಂದ ಆಕೆಗೆ ಮಾನಸಿಕ ಮತ್ತು ದೈಹಿಕ ದೌರ್ಜನ್ಯ ಎಸಗುತ್ತಿದ್ದರು ಎಂದು ಟ್ವಿಶಾ ಕುಟುಂಬ ಆರೋಪಿಸಿದೆ. ಅವರು ತನಿಖೆ ಮೇಲೆ ಪ್ರಭಾವ ಬೀರಲು ಪ್ರಯತ್ನಿಸುತ್ತಿದ್ದಾರೆ ಎಂದೂ ಕೂಡ ಅವರು ಆಪಾದಿಸಿದ್ದಾರೆ. ಟ್ವಿಶಾ ಅವರ ಪತಿ, ವಕೀಲ ಸಮರ್ಥ್ ಸಿಂಗ್, ಅವರ ತಾಯಿ, ನಿವೃತ್ತ ನ್ಯಾಯಾಧೀಶೆ ಗಿರಿಬಾಲಾ ಸಿಂಗ್ ಮತ್ತು ತಂದೆಯ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಅಲ್ಲದೆ, ವರದಕ್ಷಿಣೆ ಕಿರುಕುಳ, ಹಲ್ಲೆ ಮತ್ತು ಸಾಕ್ಷ್ಯ ನಾಶದ ಆರೋಪಗಳ ತನಿಖೆಗಾಗಿ ಎಸ್‌ಐಟಿ ರಚಿಸಿದ್ದಾರೆ.

ವಾರ್ತಾ ಭಾರತಿ 18 May 2026 11:00 pm

ತಿಂಡಿಪ್ರಿಯರೇ ಹುಷಾರ್! ಕರ್ನಾಟಕದಲ್ಲಿ ಕುರುಕಲು, ಬೇಕರಿ, ಡೈರಿ ಉತ್ಪನ್ನಗಳ ಖರೀದಿಸುವ ಮುನ್ನ ಯೋಚಿಸಿ

Food Safety Issue In Karnataka- ಕರ್ನಾಟಕದಲ್ಲಿ ಕರಿದ ತಿಂಡಿ, ಬೇಕರಿ ಮತ್ತು ಡೈರಿ ಉತ್ಪನ್ನಗಳು ಅತಿ ಹೆಚ್ಚು ಅಸುರಕ್ಷಿತ ಎಂದು ವರದಿಯಾಗಿದೆ. ಆಹಾರ ಸುರಕ್ಷತಾ ಇಲಾಖೆ ಪರೀಕ್ಷಿಸಿದ 3200 ಮಾದರಿಗಳಲ್ಲಿ ಶೇ.12ರಿಂದ 15 ರಷ್ಟು ಕಳಪೆಯಾಗಿದ್ದು, ಇವುಗಳಲ್ಲಿ ಕ್ಯಾನ್ಸರ್‌ಕಾರಕ ರಾಸಾಯನಿಕಗಳಿರುವ ಆತಂಕವಿದೆ. 500ಕ್ಕೂ ಹೆಚ್ಚು ಕುರುಕಲು ತಿಂಡಿ ಮತ್ತು ೨೫೦ಕ್ಕೂ ಹೆಚ್ಚು ಡೈರಿ ಉತ್ಪನ್ನಗಳ ಮಾದರಿಗಳು ವಿಫಲವಾಗಿವೆ. ಈ ಹಿನ್ನೆಲೆಯಲ್ಲಿ ನಿಯಮ ಉಲ್ಲಂಘಿಸಿದವರ ವಿರುದ್ಧ ಪ್ರಕರಣ ದಾಖಲಿಸಿ ದಂಡ ವಿಧಿಸಲಾಗಿದೆ.

ವಿಜಯ ಕರ್ನಾಟಕ 18 May 2026 10:58 pm

ಸಾರಿಗೆ ನೌಕರರ ಪ್ರಸ್ತಾಪಿತ ಮುಷ್ಕರ ಪ್ರಶ್ನಿಸಿ ಹೈಕೋರ್ಟ್‌ಗೆ ಪಿಐಎಲ್; ನಾಳೆ ವಿಚಾರಣೆ ಸಾಧ್ಯತೆ

ಬೆಂಗಳೂರು : ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ (ಕೆಎಸ್‌ಆರ್‌ಟಿಸಿ) ಕಾರ್ಮಿಕ ಸಂಘಗಳ ಜಂಟಿ ಕ್ರಿಯಾ ಸಮಿತಿ ಮೇ 20ರಿಂದ ಕರೆದಿರುವ ಸಾರಿಗೆ ನೌಕರರ ಮುಷ್ಕರವನ್ನು ಆಕ್ಷೇಪಿಸಿ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದೆ. ಬೆಂಗಳೂರಿನಲ್ಲಿ ಮನೆಗೆಲಸ ಮಾಡುತ್ತಿರುವ ಸಿ. ವೇದವತಿ ಹಾಗೂ ಕಟ್ಟಡ ಕಾರ್ಮಿಕ ಎಚ್‌.ವಿ. ಶ್ರೀಧರ ಎಂಬವರು ಅರ್ಜಿ ಸಲ್ಲಿಸಿದ್ದು, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ಸಾರಿಗೆ ಇಲಾಖೆಯ ಪ್ರಧಾನ ಕಾರ್ಯದರ್ಶಿ, ಕೆಎಸ್‌ಆರ್‌ಟಿಸಿ, ಬಿಎಂಟಿಸಿ, ವಾಯುವ್ಯ ಸಾರಿಗೆ ನಿಗಮ, ಕಲ್ಯಾಣ ಕರ್ನಾಟಕ ಸಾರಿಗೆ ನಿಗಮ ಹಾಗೂ ಕೆಎಸ್ಆರ್‌ಟಿಸಿ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿಯನ್ನು ಅರ್ಜಿಯಲ್ಲಿ ಪ್ರತಿವಾದಿಯನ್ನಾಗಿಸಲಾಗಿದೆ. ಅರ್ಜಿಯು ಮಂಗಳವಾರ (ಮೇ 19) ರಜಾಕಾಲದ ನ್ಯಾಯಪೀಠದ ಮುಂದೆ ವಿಚಾರಣೆಗೆ ಬರುವ ಸಾಧ್ಯತೆ ಇದೆ. ಮುಷ್ಕರ ನಡೆಸದಂತೆ ಕೆಎಸ್ಆರ್‌ಟಿಸಿ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿಗೆ ನಿರ್ದೇಶಿಸಬೇಕು ಹಾಗೂ ಯಾವುದೇ ಮುಷ್ಕರ ನಡೆಯದಂತೆ ಅಗತ್ಯ ಕ್ರಮಕೈಗೊಳ್ಳಲು ರಾಜ್ಯ ಸರ್ಕಾರ ಹಾಗೂ ಸಾರಿಗೆ ನಿಗಮಗಳಿಗೆ ನಿರ್ದೇಶಿಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ. ಅರ್ಜಿಯಲ್ಲೇನಿದೆ? ರಾಜ್ಯ ಸರ್ಕಾರವು ಕರ್ನಾಟಕ ಅಗತ್ಯ ಸೇವೆಗಳ ನಿರ್ವಹಣಾ (ತಿದ್ದುಪಡಿ) ಕಾಯ್ದೆ (ಎಸ್ಮಾ) ಅಡಿ 2026ರ ಜನವರಿ 1ರಿಂದ ಜೂನ್ 30ರವರೆಗೆ ಮುಷ್ಕರ ನಿಷೇಧಿಸಿದೆ. ಈ ಕಾಯ್ದೆಯ ಸೆಕ್ಷನ್‌ 4 ಹಾಗೂ 5ರ ಅಡಿ ಮುಷ್ಕರದಲ್ಲಿ ಭಾಗವಹಿಸಿದರೆ ಹಾಗೂ ಭಾಗವಹಿಸುವಂತೆ ಪ್ರಚೋದಿಸುವ ವ್ಯಕ್ತಿಯನ್ನು 6 ತಿಂಗಳು ಜೈಲಿನಲ್ಲಿ ಇಡಬಹುದಾಗಿದೆ. ಕೈಗಾರಿಕಾ ವಿವಾದಗಳ ಕಾಯ್ದೆ ಅಡಿಯಲ್ಲೂ ಸಾರಿಗೆ ಸಂಸ್ಥೆಗಳ ಸೇವೆಯನ್ನು ಸಾರ್ವಜನಿಕ ಬಳಕೆ ಸೇವೆ ಎಂದು ಘೋಷಿಸಲಾಗಿದೆ. ಈ ಸಂಬಂಧ ಸಂಧಾನ ಪ್ರಕ್ರಿಯೆ ನಡೆಯುತ್ತಿದ್ದು, ಇದರ ವಿಚಾರಣೆ ಮೇ 25ಕ್ಕೆ ನಿಗದಿಯಾಗಿದೆ. ಕೈಗಾರಿಕಾ ವಿವಾದ ಕಾಯ್ದೆ ಸೆಕ್ಷನ್‌ 22(1)(ಎ) ಅನ್ವಯ ಮುಷ್ಕರ ನಡೆಸುವ 14 ದಿನ ಮುಂಚಿತವಾಗಿ ಭಿತ್ತಿಪತ್ರ ಬಿಡುಗಡೆ ಮಾಡಬೇಕು. ಆದರೆ, ಇದನ್ನು ಐದಾರು ದಿನಗಳ ಮುಂಚಿತವಾಗಿ ಬಿಡುಗಡೆ ಮಾಡಲಾಗಿದೆ ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ. ಸಾರ್ವಜನಿಕ ಬಸ್‌ಗಳಲ್ಲಿ ಪ್ರತಿದಿನ 1.20 ಕೋಟಿ ಮಂದಿ ಸಂಚಾರ ಮಾಡುತ್ತಿದ್ದು, ಇದರಲ್ಲಿ ಶೇ. 60 ಮಂದಿ ಮಹಿಳೆಯರಾಗಿದ್ದಾರೆ. ರಾಜ್ಯ ಸರ್ಕಾರದ ಶಕ್ತಿ ಯೋಜನೆ ಚಾಲ್ತಿಯಲ್ಲಿರುವುದರಿಂದ ಮಹಿಳೆಯರು ಉಚಿತವಾಗಿ ಓಡಾಡುತ್ತಿದ್ದಾರೆ. ಪ್ರಸ್ತಾಪಿತ ಮುಷ್ಕರವು ಮೇ 20ರಿಂದ ನಡೆಯುವ ಸಂದರ್ಭದಲ್ಲಿ ಎಸ್‌ಎಸ್‌ಎಲ್‌ಸಿ ಪೂರಕ ಪರೀಕ್ಷೆಗಳು ಮೇ 18ರಿಂದ 25ರವರೆಗೆ ನಡೆಯಲಿವೆ. ಗ್ರಾಮೀಣ ಮತ್ತು ಅರೆ ಗ್ರಾಮೀಣ ಪ್ರದೇಶಗಳ ವಿದ್ಯಾರ್ಥಿಗಳು ಸಾರ್ವಜನಿಕ ಬಸ್‌ಗಳನ್ನೇ ಅವಲಂಬಿಸಿದ್ದಾರೆ. ದಿನಗೂಲಿ ಅವಲಂಬಿಸಿರುವವರು, ರೋಗಿಗಳು, ವಯಸ್ಕರು ಹಾಗೂ ಆರ್ಥಿಕವಾಗಿ ದುರ್ಬಲ ವರ್ಗದವರು ಸಾರ್ವಜನಿಕ ಬಸ್‌ ಅವಲಂಬಿಸಿದ್ದು, ಮುಷ್ಕರದಿಂದ ಅವರಿಗೆ ಸಮಸ್ಯೆಯಾಗಲಿದೆ ಎಂದು ವಿವರಿಸಲಾಗಿದೆ. ಈ ಹಿಂದೆ 2023 ಹಾಗೂ 2025ರಲ್ಲಿ ಹೈಕೋರ್ಟ್‌ ಮಧ್ಯಪ್ರವೇಶದಿಂದ ಮುಷ್ಕರ ಹಿಂಪಡೆಯಲಾಗಿತ್ತು. 2025ರಲ್ಲಿ ಹೈಕೋರ್ಟ್‌ ಆದೇಶದ ಹೊರತಾಗಿಯೂ ಸಾರ್ವಜನಿಕ ಬಸ್‌ ಸೇವೆಯಲ್ಲಿ ವ್ಯತ್ಯಯವಾಗಿದ್ದು, 17,200 ಷೋಕಾಸ್‌ ನೋಟಿಸ್‌ಗಳನ್ನು ಜಾರಿ ಮಾಡಬೇಕಿದೆ. 2025ರ ಏಪ್ರಿಲ್ 1ರಂದು ರಾಜ್ಯ ಸರ್ಕಾರ ಸಾರಿಗೆ ಸಿಬ್ಬಂದಿಯ ವೇತನದಲ್ಲಿ ಶೇ 12.5 ಪ್ರಮಾಣದಲ್ಲಿ ಪರಿಷ್ಕರಿಸಿದ್ದು, 1,271.92 ಕೋಟಿ ರೂ. ಹಂಚಿಕೆ ಮಾಡಿದೆ. ಮೊದಲ ವಂತಿಗೆ ರೂಪದಲ್ಲಿ 450 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಸಂಧಾನ ಸಂಬಂಧಿತ ವಿಚಾರಣೆಯು ಐದು ದಿನ ಇರುವ ಸಂದರ್ಭದಲ್ಲಿ ಪ್ರಸ್ತಾವಿತ ಮುಷ್ಕರ ನಡೆಸಲು ನಿರ್ಧರಿಸಲಾಗಿದೆ ಎಂದು ಅರ್ಜಿಯಲ್ಲಿ ಆಕ್ಷೇಪಿಸಲಾಗಿದೆ.

ವಾರ್ತಾ ಭಾರತಿ 18 May 2026 10:56 pm

ವಿಶ್ವ ಕೊಂಕಣಿ ಕೇಂದ್ರದಲ್ಲಿ ಎರಡು ದಿನಗಳ ‘ವಿಶ್ವ ಕೊಂಕಣಿ ಸಮಾರೋಹ’

ಮಂಗಳೂರು, ಎ.18: ಕೊಂಕಣಿ ಸಾಹಿತ್ಯ-ಕಲೆ-ಸಂಸ್ಕೃತಿ ಸಂಭ್ರಮಿಸುವ ಎರಡು ದಿನಗಳ ಉತ್ಸವ ವಿಶ್ವಕೊಂಕಣಿ ಸಮಾರೋಪ ಸಮಾರಂಭವು ವಿಶ್ವ ಕೊಂಕಣಿ ಕೇಂದ್ರದಲ್ಲಿ ರವಿವಾರ ಮುಕ್ತಾಯಗೊಂಡಿತು. ಸಮಾರೋಪ ಸಮಾರಂಭದಲ್ಲಿ ಕರ್ನಾಟಕ ಹೈಕೋರ್ಟ್‌ನ ಹೆಚ್ಚುವರಿ ಸಾಲಿಸಿಟರ್ ಜನರಲ್ ಕೆ ಅರವಿಂದ್ ಕಾಮತ್ ಮುಖ್ಯ ಅತಿಥಿಗಳಾಗಿ ಮಾತನಾಡಿ ಇಂತಹ ಭವ್ಯ ಸಭಾಗೃಹದಲ್ಲಿ ಜರುಗುತ್ತಿರುವ ವಿವಿಧ ಸಾಹಿತ್ಯಿಕ, ಸಾಂಸ್ಕೃತಿಕ, ಕಲಾ, ಶೈಕ್ಷಣಿಕ ಕಾರ್ಯಕ್ರಮವನ್ನು ಶ್ಲಾಘಿಸಿದರು. ಸಭೆಯ ವಿಶೇಷ ಆಕರ್ಷಿತರಾದ ಹಿರಿಯ ವಕೀಲ ಕೆ ಜಗದೀಶ್ ಕಾಮತ್ ಇವರು ‘ಭಾರತದ ಸಂವಿಧಾನದಲ್ಲಿ ಭಾಷಾ ಅಲ್ಪಸಂಖ್ಯಾತರಿಗೆ ಲಭ್ಯವಿರುವ ಅವಕಾಶಗಳು’ ಮತ್ತು ಅದರ ಪೂರ್ಣ ಸದುಪಯೋಗ ಮಾಡದಿರುವ ಬಗ್ಗೆ ಮಾಹಿತಿ ನೀಡಿದರು. ವಿಶ್ವ ಕೊಂಕಣಿ ಕೇಂದ್ರ ಅಧ್ಯಕ್ಷರಾದ ಸಿಎ ನಂದಗೋಪಾಲ್ ಶೆಣೈ ಅವರು ಮುಖ್ಯ ಅತಿಥಿ ಗಳನ್ನು ನೆನಪಿನ ಕಾಣಿಕೆ ನೀಡಿ ಗೌರವಿಸಿದರು. ಕೇಂದ್ರದ ಕೋಶಾಧಿಕಾರಿ ಬಿ ಆರ್ ಭಟ್, ಉಪಾಧ್ಯಕ್ಷ ಡಾ.ಕಿರಣ ಬುಡ್ಕುಳೆ, ರಮೇಶ್ ಡಿ ನಾಯಕ, ಉಪಸ್ಥಿತರಿದ್ದರು. ಸಾಹಿತ್ಯ ಸಮಾರೋಹಕ್ಕೆ ಗೋವಾ ವಿಶ್ವ ವಿದ್ಯಾನಿಲಯ ಹಾಗೂ ಸ್ಠಳೀಯ ಕಾಲೇಜು ವಿದ್ಯಾರ್ಥಿಗಳು, ಯುವ ಬರಹಗಾರರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದರು. ಎರಡನೇ ದಿನದ ಪೂರ್ವಾಹ್ನ ಮೂರು ಜನಪದ ಗೋಷ್ಠಿಗಳ ಉದ್ಘಾಟನೆಯನ್ನು ಜನಪದ ಚಿಂತಕ ಹಾಗೂ ಗೋವಾ ವಿಶ್ವವಿದ್ಯಾನಿಲಯದ ವೈಸ್-ಡೀನ್ ಡಾ.ಪ್ರಕಾಶ್ ಪರಿಯೆನಕರ್ ನೆರವೇರಿಸಿದರು. ಮಹಾದಾನಿ ಹಾಗೂ ಶತ ಕೊಂಕಣಿ ಪುಸ್ತಕ ಪ್ರಕಟಣೆ ಯೋಜನೆಯ ಪ್ರವರ್ತಕ ಮೈಕೆಲ್ ಡಿ ಸೋಜ ಹಾಗೂ ವರ್ಧನಿ ಪ್ರತಿಷ್ಠಾನದ ನಿರ್ದೇಶಕ ಉಷಾ ಎನ್ ಶೆಣೈ ಇವರು ಭಾಗವಹಿಸಿ ಶುಭ ಹಾರೈಸಿದರು ಮುಂದೆ ಪ್ರಸಿದ್ಧ ಕಥೆಗಾರ ವಿವೇಕಾನಂದ ಕಾಮತ್ ಅಧ್ಯಕ್ಷತೆಯಲ್ಲಿ ಕೊಂಕಣಿ ನ್ಯಾನೊ ಕಥೆಗಳು ಕಥಾ ಸಮಯ ನಡೆಸಲಾಯಿತು. ಜಯಶ್ರೀ ಶೆಣೈ, ವಂದನಾ ನಾಯಕ, ಕಸ್ತೂರಿ ಪೈ, ಶಕುಂತಲಾ ಆರ್ ಕಿಣಿ, ಬಸ್ತಿ ಶೋಭಾ ಶೆಣೈ ನ್ಯಾನೊ ಕಥಾ ವಾಚನ ನಡೆಸಿಕೊಟ್ಟರು. ಪ್ರಸಿದ್ಧ ಯಕ್ಷಗಾನ ಕಲಾವಿದರು ಹಾಗೂ ವಿಮರ್ಶಕರು ಡಾ.ಪ್ರಭಾಕರ ಜೋಶಿಯವರ ಮಾರ್ಗದರ್ಶನದಲ್ಲಿ, ಯಕ್ಷಗಾನ ಮತ್ತು ಕೊಂಕಣಿಗರು ವಿಚಾರ ಗೋಷ್ಠಿಯಲ್ಲಿ ಅರ್ಗೋಡು ಮೋಹನದಾಸ್ ಶೆಣೈ, ಎಂ ಆರ ಕಾಮತ್ ಶಾಂತಾರಾಮ ಕುಡ್ವ ಇವರು ವಿಷಯ ಮಂಡಿಸಿದರು. ಶಕುಂತಲಾ ಕಿಣಿ ಇವರ ಅಧ್ಯಕ್ಷತೆಯಲ್ಲಿ ನಡೆದ ಜನಪದ ಹಾಡುಗಳ ಗಾಯನದಲ್ಲಿ. ಮರೋಳಿ ಸಬಿತಾ ಕಾಮತ್, ಜೂಲಿಯೆಟ್ ಫೆರ್ನಾಂಡಿಸ್, ಡಾ. ವಿಜಯಲಕ್ಷ್ಮಿ ನಾಯಕ್, ನಾರಾಯಣ ನಾಯಕ್ ತಮ್ಮ ಸಮುದಾಯದ ಮೌಖಿಕ ಪರಂಪರೆಯ ಪದಗಳನ್ನು ಪ್ರಸ್ತುತಪಡಿಸಿದರು ಅಪರಾಹ್ನ ಸಾಹಿತ್ಯ ಅಕಾಡೆಮಿ, ನವದೆಹಲಿ ಸಹಯೋಗದಲ್ಲಿ , ವಿಶ್ವ ಕೊಂಕಣಿ ಕೇಂದ್ರ ಮತ್ತು ಕವಿತಾ ಟ್ರಸ್ಟ್ ಆಯೋಜಿಸಿದ ಯುವ ಕೊಂಕಣಿ ಬರಹಗಾರರ ಚರ್ಚಾ ಗೋಷ್ಠಿ ಜರುಗಿತು. ಸ್ಟ್ಯಾನಿ ಡಿ ಸೋಜ ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದರು. ವಿಲ್ಮಾ ಡಿ ಸೋಜ ಬಂಟ್ವಾಳ, ಲವಿತಾ ಡಿ ಸೋಜ, ಡಾ. ವೆಂಕಟೇಶ್ ನಾಯಕ್, ಗ್ಲಾನಿಶ್ ಮಾರ್ಟಿಸ್, ಶ್ವೇತಾ ಪೈ ಎಂ ಮೊದಲಾದ ಯುವ ಕೊಂಕಣಿ ಬರಹಗಾರರು ತಮ್ಮ ಕವಿತಾ ವಾಚನದ ಮೂಲಕ ಸಭಿಕರ ಮನ ಸೆಳೆದರು.

ವಾರ್ತಾ ಭಾರತಿ 18 May 2026 10:54 pm

ಆಲಿಮಮ್ಮ ಮರವೂರು

ಮಂಗಳೂರು : ಬಜ್ಪೆ ಮರವೂರು ಹಾಜಿ ಎಂ ಹಸನಬ್ಬ ಅವರ ಪತ್ನಿ ಆಲಿಮಮ್ಮ (72) ಅಲ್ಪ ಕಾಲದ ಅಸೌಖ್ಯದಿಂದ ಸೋಮವಾರ ನಗರದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಅಲಿಮಮ್ಮ ಅವರು ಪತಿ, 5 ಹೆಣ್ಣು, 2 ಗಂಡು ಮಕ್ಕಳನ್ನು ಅಗಲಿದ್ದಾರೆ. ಬೆಳಗ್ಗೆ ಬಜ್ಪೆ ಕೇಂದ್ರ ಮಸೀದಿಯಲ್ಲಿ ಜನಾಝಾ ನಮಾಝ್‌ ನೆರವೇರಲಿದ್ದು, ಬಳಿಕ ಮರವೂರು ಮಸೀದಿ ಆವರಣದಲ್ಲಿ ದಫನ ಕಾರ್ಯ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ವಾರ್ತಾ ಭಾರತಿ 18 May 2026 10:49 pm

ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ: ಎನ್ಎಸ್‌ಯುಐ ಪ್ರತಿಭಟನೆ

ಉಳ್ಳಾಲ, ನೀಟ್ ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆ ಯಿಂದ ಕಷ್ಟಪಟ್ಟು ಕಲಿತು ಪರೀಕ್ಷೆ ಬರೆದ ವಿದ್ಯಾರ್ಥಿಗಳಿಗೆ ಅನ್ಯಾಯ ಆಗಿದೆ. ಸೋರಿಕೆ ಮಾಡಿವರ ವಿರುದ್ಧ ಕ್ರಮ ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳಬೇಕು. ಇದರಿಂದ ತೊಂದರೆ ಗೊಳಗಾದ ವಿದ್ಯಾರ್ಥಿಗಳಿಗೆ ನ್ಯಾಯ ಸಿಗಬೇಕು ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಶೆಟ್ಟಿ ಬೋಳಿಯಾರ್ ಹೇಳಿದರು ಅವರು ನೀಟ್ ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆ ಖಂಡಿಸಿ ಎನ್ ಎಸ್ ಯುಐ ಮಂಗಳೂರು ವಿಧಾನಸಭಾ ಕ್ಷೇತ್ರ ಸಮಿತಿ ವತಿಯಿಂದ ತೊಕ್ಕೊಟ್ಟು ಫ್ಲೈಓವರ್ ಬಳಿ ಕೇಂದ್ರ ಸರ್ಕಾರ ವಿರುದ್ಧ ನಡೆದ ಬೃಹತ್ ಪ್ರತಿಭಟನೆ ಯಲ್ಲಿ ಮಾತನಾಡಿದರು. ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಯಾದ ಘಟನೆ ನಡೆದರೂ ಮೌನವಾಗಿರುವ ಕೇಂದ್ರ ಸರ್ಕಾರ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು. ಎನ್ ಎಸ್ ಯುಐ ಜಿಲ್ಲಾ ಧ್ಯಕ್ಷ ಸುಹಾನ್ ಆಳ್ವ ಮಾತನಾಡಿ, ನೀಟ್ ಪರೀಕ್ಷೆ ಪದೇ ಪದೇ ಪ್ರಶ್ನೆ ಪತ್ರಿಕೆ ಸೋರಿಕೆ ಮಾಡುತ್ತಿದ್ದಾರೆ.ಬಿಜೆಪಿ ಸರ್ಕಾರ ಆಡಳಿತಕ್ಕೆ ಬಂದ ಬಳಿಕ ಸುಮಾರು 40 ಬಾರಿ ಪ್ರಶ್ನೆ ಪತ್ರಿಕೆ ಸೋರಿಕೆ ಆಗಿದೆ.‌ಇದರಿಂದ ಬಹಳಷ್ಟು ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸಚಿವರು ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು. ವಿಧಾನಸಭಾ ಕ್ಷೇತ್ರ ಪ್ರಧಾನ ಕಾರ್ಯದರ್ಶಿ ಯುಟಿ ಫರೀದ್ ಮಾತನಾಡಿ ಪ್ರಶ್ನೆ ಪತ್ರಿಕೆ ಸೋರಿಕೆ ಯಿಂದ ತೊಂದರೆಗೊಳಗಾದ ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸುವ ಕೆಲಸ ಆಗಬೇಕು ಎಂದು ಕರೆ ನೀಡಿದರು. ಕಾಂಗ್ರೆಸ್ ಮುಖಂಡ ರಾದ ದಿನೇಶ್ ಕುಂಪಲ , ಮೋನು ಮಲಾರ್, ಅಮಿತಾ , ಆಳ್ವಿನ್ ಡಿಸೋಜ ಮಾತನಾಡಿದರು.  ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡ ರಾದ ಆಳ್ವಿನ್ ಡಿಸೋಜ, ಉಸ್ಮಾನ್ ಕಲ್ಲಾಪು, ರಝಿಯಾ ಇಬ್ರಾಹೀಮ್, ಮುಹಮ್ಮದ್ ಮೋನು ಮಲಾರ್, ಮನ್ಸೂರ್ ಮಂಚಿಲ,ಶಾಹಿಲ್ ಮಂಚಿ, ಫಿರೋಝ್ ಮಲಾರ್, ಮುರಳೀಧರ ಶೆಟ್ಟಿ, ಆಸೀಫ್ ಪೆರಿಮಾರ್, ದಿನೇಶ್ ರೈ,ನವಾಝ್ ನರಿಂಗಾನ, ತ್ವಾಹೀ ಕಲ್ಲಾಪು,ಝಕರಿಯಾ ಮಲಾರ್, ದಿನೇಶ್ ಕುಂಪಲ, ಮಿತೇಶ್, ಬಾಜಿಲ್ ಡಿ ಸೋಜ ಮತ್ತಿತರರು ಉಪಸ್ಥಿತರಿದ್ದರು.

ವಾರ್ತಾ ಭಾರತಿ 18 May 2026 10:46 pm

ಕಲಬುರಗಿ| ಸಿಡಿಲು ಬಡಿದು ಮಹಿಳೆ ಸ್ಥಿತಿ ಗಂಭೀರ: ಆರು ಕುರಿಗಳು ಸಾವು

ಕಲಬುರಗಿ: ಸಿಡಿಲು ಬಡಿದ ಪರಿಣಾಮ 6 ಕುರಿಗಳು ಸಾವನ್ನಪ್ಪಿದ್ದು, ಮಹಿಳೆಯೊಬ್ಬರಿಗೆ ಗಂಭೀರ ಗಾಯಗಳಾಗಿರುವ ಘಟನೆ ಕಾಳಗಿ ತಾಲೂಕಿನ ವಜೀರಗಾಂವ ಗ್ರಾಮದಲ್ಲಿ ಸೋಮವಾರ ಸಂಜೆ ನಡೆದಿದೆ. ಗ್ರಾಮದ ರಶೀದಾ ಬೇಗಂ (48) ಅವರು ಕುರಿ ಮೇಯಿಸುತ್ತಿದ್ದ ವೇಳೆ ಸಿಡಿಲು ಬಡಿದ ಪರಿಣಾಮ ತೀವ್ರವಾಗಿ ಗಾಯಗೊಂಡಿದ್ದಾರೆ. ಅವರನ್ನು ತಕ್ಷಣ ಕಾಳಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ವೈದ್ಯರು ಹೆಚ್ಚಿನ ಚಿಕಿತ್ಸೆಗೆ ಕಲಬುರಗಿ ಜಿಲ್ಲಾಸ್ಪತ್ರೆಗೆ ರವಾನಿಸಲು ಸೂಚಿಸಿರುವುದಾಗಿ ತಿಳಿದುಬಂದಿದೆ. ಸಿಡಿಲು ಬಡಿದ ಪರಿಣಾಮ ಮಹಿಳೆಗೆ ಮಾತನಾಡಲು ಸಾಧ್ಯವಾಗುತ್ತಿಲ್ಲ ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಇದೇ ವೇಳೆ ಗ್ರಾಮದ ರವಿ ಪೂಜಾರಿ ಅವರಿಗೆ ಸೇರಿದ ಆರು ಕುರಿಗಳು ಸಿಡಿಲು ಬಡಿದು ಸಾವನ್ನಪ್ಪಿರುವುದಾಗಿ ವರದಿಯಾಗಿದೆ. ಗಂಭೀರ ಸ್ಥಿತಿಯಲ್ಲಿರುವ ಮಹಿಳೆಯನ್ನು ಜಿಲ್ಲಾಸ್ಪತ್ರೆಗೆ ಕರೆದೊಯ್ಯಲು ಆಂಬ್ಯುಲೆನ್ಸ್‌ಗೆ ಕರೆ ಮಾಡಿದರೂ ಸಮಯಕ್ಕೆ ವಾಹನ ಸ್ಥಳಕ್ಕೆ ಬಂದಿಲ್ಲ ಎಂದು ಸಂಬಂಧಿಕರು ಆರೋಪಿಸಿದ್ದಾರೆ. 

ವಾರ್ತಾ ಭಾರತಿ 18 May 2026 10:36 pm

ಇಂಡೊ-ಪೆಸಿಫಿಕ್ ಉಪಕ್ರಮಕ್ಕೆ ನಾರ್ವೆ ಸೇರ್ಪಡೆ: ಪ್ರಧಾನಿ ನರೇಂದ್ರ ಮೋದಿ ಘೋಷಣೆ

ಓಸ್ಲೋ, ಮೇ 18: ಭಾರತ ಮತ್ತು ನಾರ್ವೆ ಹಸಿರು ಕಾರ್ಯತಂತ್ರದ ಸಹಭಾಗಿತ್ವಕ್ಕೆ ಪ್ರವೇಶಿಸಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಸೋಮವಾರ ಘೋಷಿಸಿದ್ದಾರೆ ಮತ್ತು ಭಯೋತ್ಪಾದನೆ ವಿರುದ್ಧ ಭಾರತದೊಂದಿಗೆ ನಿಂತಿದ್ದಕ್ಕಾಗಿ ದೇಶಕ್ಕೆ ಧನ್ಯವಾದ ಅರ್ಪಿಸಿದ್ದಾರೆ. ನಾರ್ವೆ ಪ್ರಧಾನಿ ಜೊನಾಸ್ ಗಹರ್ ಸ್ಟೋರ್ ಅವರೊಂದಿಗೆ ನಡೆಸಿದ ಸುದ್ದಿಗೋಷ್ಠಿಯಲ್ಲಿ ಪ್ರಧಾನಿ ಮೋದಿ, ‘ಇಂದಿನಿಂದ ನಾರ್ವೆಯು ಇಂಡೊ-ಪೆಸಿಫಿಕ್ ಸಾಗರಗಳ ಉಪಕ್ರಮಕ್ಕೆ ಸೇರಲಿದೆ. ಎರಡು ಪ್ರಮುಖ ಕಡಲ ರಾಷ್ಟ್ರಗಳಾಗಿ ನಾವು ಸಾಗರ ಆರ್ಥಿಕತೆ, ಕಡಲ ಭದ್ರತೆ ಮತ್ತು ಸಾಮರ್ಥ್ಯ ವೃದ್ಧಿಯಲ್ಲಿ ಸಹಕಾರವನ್ನು ಬಲಪಡಿಸುವಲ್ಲಿ ಒಟ್ಟಾಗಿ ಕೆಲಸ ಮಾಡುತ್ತೇವೆ’ ಎಂದು ಘೋಷಿಸಿದರು. ಭವಿಷ್ಯಕ್ಕಾಗಿ ಪರಿಹಾರಗಳನ್ನು ಅಭಿವೃದ್ಧಿಪಡಿಸಲು ಭಾರತ ಮತ್ತು ನಾರ್ವೆ ತಮ್ಮ ಪ್ರಮಾಣ, ವೇಗ, ಪ್ರತಿಭೆ ಮತ್ತು ತಂತ್ರಜ್ಞಾನವನ್ನು ಸಂಯೋಜಿಸುತ್ತವೆ. ಬಾಹ್ಯಾಕಾಶ ಸಹಕಾರವನ್ನು ವಿಸ್ತರಿಸಲು ಇಸ್ರೋ ಮತ್ತು ನಾರ್ವೆಯ ಬಾಹ್ಯಾಕಾಶ ಏಜೆನ್ಸಿ ನಡುವೆ ದಾಖಲೆಗೆ ಸಹಿ ಹಾಕಲಾಗಿದೆ. ನಿಯಮಾಧಾರಿತ ವ್ಯವಸ್ಥೆ, ಮಾತುಕತೆ ಮತ್ತು ರಾಜತಾಂತ್ರಿಕತೆಯ ಮೇಲೆ ಭಾರತ ಮತ್ತು ನಾರ್ವೆಗೆ ನಂಬಿಕೆಯಿದೆ. ಮಿಲಿಟರಿ ಸಂಘರ್ಷದ ಮೂಲಕ ಯಾವುದೇ ಸಮಸ್ಯೆಗೆ ಪರಿಹಾರ ಸಾಧ್ಯವಿಲ್ಲ ಎಂಬುದು ಎರಡೂ ದೇಶಗಳ ನಿಲುವಾಗಿದೆ. ಸಂಘರ್ಷ ಅಂತ್ಯಗೊಳಿಸಿ ಶಾಂತಿ ಮರುಸ್ಥಾಪನೆಯ ಗುರಿ ಹೊಂದಿರುವ ಎಲ್ಲಾ ಪ್ರಯತ್ನಗಳನ್ನೂ ನಾವು ಬೆಂಬಲಿಸುತ್ತೇವೆ ಎಂದು ಮೋದಿ ಹೇಳಿದ್ದಾರೆ. ಎರಡು ದಿವಸಗಳ ಅಧಿಕೃತ ಭೇಟಿಗಾಗಿ ಮೋದಿ ಸೋಮವಾರ ನಾರ್ವೆಗೆ ಆಗಮಿಸಿದ್ದಾರೆ.

ವಾರ್ತಾ ಭಾರತಿ 18 May 2026 10:33 pm

Pakistan | ಅಮೆರಿಕದ ವಿಶ್ವಾಸ ಗಳಿಸಲು ಮಾಜಿ ಪ್ರಧಾನಿ ಇಮ್ರಾನ್ ಪದಚ್ಯುತಿ: ಸೋರಿಕೆಯಾದ ದಾಖಲೆಯಲ್ಲಿ ಉಲ್ಲೇಖ

ವಾಶಿಂಗ್ಟನ್, ಮೇ 18: ಅಮೆರಿಕದ ವಿಶ್ವಾಸವನ್ನು ಮರಳಿ ಪಡೆಯುವ ಪ್ರಯತ್ನದ ಭಾಗವಾಗಿ ಪಾಕಿಸ್ತಾನವು ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರನ್ನು ಪದಚ್ಯುತಗೊಳಿಸಿ ಬಂಧನದಲ್ಲಿಟ್ಟಿದೆ ಎಂದು ಸೋರಿಕೆಯಾದ ಅಮೆರಿಕದ ದಾಖಲೆಯೊಂದರಲ್ಲಿ ಉಲ್ಲೇಖಿಸಲಾಗಿದೆ. ಅಮೆರಿಕ ಮೂಲದ ತನಿಖಾ ಮಾಧ್ಯಮ ‘ಡ್ರಾಪ್ ಸೈಟ್’ ಮೂಲ ದಾಖಲೆಯನ್ನು ಪ್ರಕಟಿಸಿದೆ. ಅಮೆರಿಕಕ್ಕೆ ಪಾಕಿಸ್ತಾನದ ರಾಯಭಾರಿಯಾಗಿದ್ದ ಅಸಾದ್ ಮಜೀದ್ ಖಾನ್ ಮತ್ತು ಅಮೆರಿಕದ ರಾಜತಾಂತ್ರಿಕ ಅಧಿಕಾರಿ ಡೊನಾಲ್ಡ್ ಲು ಅವರ ನಡುವೆ 2022ರ ಮಾರ್ಚ್‌ನಲ್ಲಿ ನಡೆದ ಸಂಭಾಷಣೆಯನ್ನು ‘ಸೈಫರ್ ಇನ್ ಪಾಕಿಸ್ತಾನ’ ಎಂಬ ಹೆಸರಿನ ದಾಖಲೆಯಲ್ಲಿ ವಿವರಿಸಲಾಗಿದೆ. ಉಕ್ರೇನ್ ಮೇಲೆ ರಷ್ಯಾದ ಆಕ್ರಮಣದ ಸಂದರ್ಭ ಆಗಿನ ಪಾಕ್ ಪ್ರಧಾನಿ ಇಮ್ರಾನ್ ಖಾನ್ ತಟಸ್ಥ ನಿಲುವು ತಳೆದಿರುವುದು ಮತ್ತು ಅಫ್ಘಾನಿಸ್ತಾನದ ವಿರುದ್ಧ ಅಮೆರಿಕದ ಪಡೆಗಳಿಗೆ ಪಾಕಿಸ್ತಾನದ ನೆಲೆಗಳನ್ನು ಬಳಸಲು ಅವಕಾಶ ನೀಡದಿರುವುದು ಆಗಿನ ಅಮೆರಿಕ ಅಧ್ಯಕ್ಷ ಜೋ ಬೈಡನ್ ಆಡಳಿತದ ಕಣ್ಣು ಕೆಂಪಗಾಗಿಸಿತ್ತು. ಈ ಕಾರಣಕ್ಕೆ 2022ರ ಮಾರ್ಚ್ 7ರಂದು ನಡೆದ ರಹಸ್ಯ ಸಭೆಯಲ್ಲಿ ಬೈಡನ್ ಆಡಳಿತ ಪ್ರಧಾನಿ ಹುದ್ದೆಯಿಂದ ಖಾನ್ ಅವರನ್ನು ಪದಚ್ಯುತಗೊಳಿಸುವಂತೆ ಪಾಕಿಸ್ತಾನವನ್ನು ಉತ್ತೇಜಿಸಿದೆ ಎಂದು ವರದಿ ಹೇಳಿದೆ. ತಮ್ಮ ಸ್ವತಂತ್ರ ವಿದೇಶಾಂಗ ನೀತಿ ಮತ್ತು ರಷ್ಯಾ ಹಾಗೂ ಚೀನಾದ ವಿಷಯದಲ್ಲಿ ಅಮೆರಿಕದ ಪರ ನಿಲ್ಲಲು ನಿರಾಕರಿಸಿದ್ದಕ್ಕಾಗಿ ತಮ್ಮನ್ನು ಪದಚ್ಯುತಗೊಳಿಸಲು ಅಮೆರಿಕವು ಪಾಕಿಸ್ತಾನದ ವಂಶಾಡಳಿತದ ಪಕ್ಷಗಳಾದ ಪಾಕಿಸ್ತಾನ್ ಮುಸ್ಲಿಂ ಲೀಗ್-ಎನ್ ಮತ್ತು ಪಾಕಿಸ್ತಾನ್ ಪೀಪಲ್ಸ್ ಪಾರ್ಟಿ ಜೊತೆ ಪಿತೂರಿ ನಡೆಸಿದೆ ಎಂದು ಇಮ್ರಾನ್ ಖಾನ್ ಆರೋಪಿಸಿದ್ದರು. ವೈಯಕ್ತಿಕವಾಗಿ ರಾಜೀನಾಮೆ ನೀಡಿದರೆ ಎಲ್ಲವನ್ನೂ ಕ್ಷಮಿಸಲಾಗುವುದು ಎಂದು ಅಮೆರಿಕ ಸೂಚಿಸಿರುವುದಾಗಿ 2022ರ ಎಪ್ರಿಲ್‌ನಲ್ಲಿ ಇಮ್ರಾನ್ ಖಾನ್ ಹೇಳಿಕೆ ನೀಡಿದ್ದರು.

ವಾರ್ತಾ ಭಾರತಿ 18 May 2026 10:30 pm

Royal Enfield: ಆಂಧ್ರಪ್ರದೇಶದಲ್ಲಿ ರಾಯಲ್ ಎನ್‌ಫೀಲ್ಡ್‌ನಿಂದ ₹2,500 ಕೋಟಿ ಬೃಹತ್‌ ಹೂಡಿಕೆ, 15000 ಉದ್ಯೋಗ ಸೃಷ್ಟಿ

ಅಮರಾವತಿ:ಪ್ರಸಿದ್ಧ ದ್ವಿಚಕ್ರ ವಾಹನ ತಯಾರಿಕಾ ಸಂಸ್ಥೆಯಾದ ‘ರಾಯಲ್ ಎನ್‌ಫೀಲ್ಡ್' (Royal Enfield)ಆಂಧ್ರಪ್ರದೇಶಕ್ಕೆ ಲಗ್ಗೆ ಇಟ್ಟಿದೆ. ತಿರುಪತಿ ಜಿಲ್ಲೆಯ ಸತ್ಯವೇಡು ಮಂಡಲದ ವನೇಲೂರು ಮತ್ತು ರಾಳ್ಳಕುಪ್ಪಂ ಗ್ರಾಮಗಳಲ್ಲಿ ರಾಯಲ್ ಎನ್‌ಫೀಲ್ಡ್ ಸಂಸ್ಥೆಯು ಹಮ್ಮಿಕೊಂಡಿರುವ ಬೃಹತ್ ಸಂಯೋಜಿತ ಮೋಟಾರ್‌ಸೈಕಲ್ ಉತ್ಪಾದನಾ ಯೋಜನೆಗೆ ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರು ಹಸಿರು ನಿಶಾನೆ ತೋರಿದ್ದಾರೆ. ವಾರ್ಷಿಕ 9 ಲಕ್ಷ ಬೈಕ್‌ಗಳ

ಒನ್ ಇ೦ಡಿಯ 18 May 2026 10:24 pm

ಕೆೆಕೆಆರ್ ಡಿಬಿ ಮಂಡಳಿ ಸಭೆ: 5,000 ಕೋಟಿ ರೂ. ಮೊತ್ತದ ಕ್ರಿಯಾ ಯೋಜನೆ ರೂಪಿಸಲು ಸಭೆಯಲ್ಲಿ ಒಪ್ಪಿಗೆ

ಕಲಬುರಗಿ: ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಗೆ 2026-27ನೇ ಆರ್ಥಿಕ ಸಾಲಿಗೆ ರಾಜ್ಯ ಸರ್ಕಾರದಿಂದ‌ ಹಂಚಿಕೆಯಾದ 5,000 ಕೋಟಿ ರೂ. ಮೊತ್ತದ ಅನುದಾನಕ್ಕೆ ಕ್ರಿಯಾ ಯೋಜನೆ ರೂಪಿಸಲು ಸೋಮವಾರ ನಡೆದ ಮಂಡಳಿ ಸಭೆಯಲ್ಲಿ ಸರ್ವಾನುಮತದ ನಿರ್ಣಯ ಕೈಗೊಂಡಿದೆ. ಮೈಕ್ರೋ ಮತ್ತು ಮ್ಯಾಕ್ರೊ ನಿಧಿಗೆ 2,900 ಕೋಟಿ ರೂ.ಕಾಯ್ದಿರಿಸಿದ್ದು, ಇದರಲ್ಲಿ ಮೈಕ್ರೋಗೆ ಶೇ.70 ಮತ್ತು ಮ್ಯಾಕ್ರೋಗೆ ಶೇ.30 ಅನುದಾನ ಬಳಸಿಕೊಳ್ಳಲು ನಿರ್ಧರಿಸಿದೆ. ಅಲ್ಲದೆ ಬಜೆಟ್ ನಲ್ಲಿ ಘೋಷಿಸುವ ಯೋಜನೆಗಳಿಗೆ 1500 ಕೋಟಿ ರೂ., ಉನ್ನತ ಶಿಕ್ಷಣ ಮತ್ತು ವಿಶ್ವವಿದ್ಯಾನಿಲಯಕ್ಕೆ 100 ಕೋಟಿ ರೂ., ಪ್ರಾದೇಶಿಕ ನಿಧಿ ಒಳಗೊಂಡಂತೆ ಸಿ‌.ಎಂ, ಮಂಡಳಿ ಅಧ್ಯಕ್ಷರು, ಸರ್ಕಾರದ‌ ವಿವೇಚನಾ ನಿಧಿಗೆ 450 ಕೋಟಿ ರೂ. ಹಾಗೂ ಆಡಳಿತಾತ್ಮಕ ವೆಚ್ಚಕ್ಕೆ 50 ಕೋಟಿ ರೂ. ಅನುದಾನ ಬಳಕೆಗೆ ಒಮ್ಮತದ ನಿರ್ಣಯ ಕೈಗೊಂಡಿದೆ. ಮೈಕ್ರೊ ಯೋಜನೆಯಡಿ ಸಾಂಸ್ಥಿಕ ವಲಯ ಅಭಿವೃದ್ಧಿಗೆ ಮೀಸಲಾದ ಅನುದಾನದಲ್ಲಿ ಅಕ್ಷರ‌ ಅವಿಷ್ಕಾರಕ್ಕೆ 25% ಇತರೆ ಸಾಂಸ್ಥಿಕ ವಲಯಕ್ಕೆ 15% ಹಾಗೂ ಮೂಲಭೂತ ಸೌಲಭ್ಯ ಕಾರ್ಯಕ್ಕೆ ಶೇ.60ರಷ್ಟು ಅನುದಾನ ನಿಗದಿ ಮಾಡಲಾಗಿದೆ. ಅದೇ‌ ರೀತಿ ಇದೇ‌ ಮೊದಲ ಬಾರಿಗೆ ಆಯವ್ಯಯದಲ್ಲಿ ಘೋಷಿಸಿದಂತೆ ಮ್ಯಾಕ್ರೋ ಯೋಜನೆ ಅನುದಾ‌ನದಡಿ‌ ಶೇ.40ರಷ್ಟು ಅನುದಾನ ಆರೋಗ್ಯ, ಶಿಕ್ಷಣ, ಹಾಗೂ ಅಪೌಷ್ಟಿಕತೆ ನಿವಾರಣೆಗೆ ಮೀಸಲಿರಿಸಲು ಸಭೆ ಒಪ್ಪಿಗೆ ಸೂಚಿಸಿದೆ. ಬೀದರ್‌-ಬೆಂಗಳೂರು ಆರ್ಥಿಕ ಕಾರಿಡಾರ್ ಆಗಿ ಪರಿವರ್ತನೆಗೆ 4 ಪಥದ 400 ಕಿ.ಮೀ ರಸ್ತೆ ಅಭಿವೃದ್ಧಿಪಡಿಸಲು 8,200 ಕೋಟಿ ರೂ. ಅನುದಾನ ಅವಶ್ಯಕತೆ ಇದ್ದು, ಇದನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರ ಭರಿಸಿ ಅಭಿವೃದ್ಧಿಪಡಿಸಲು ಮತ್ತು ರಾಜ್ಯ ಸರ್ಕಾರದ ಮಾದರಿಯಲ್ಲಿ ಮಂಡಳಿಗೆ ಕೇಂದ್ರ ಸರಕಾರ ಸಹ ಮ್ಯಾಚಿಂಗ್ ಗ್ರ್ಯಾಂಟ್ ಅನುದಾನ ಬಿಡುಗಡೆ ಮಾಡಬೇಕೆಂದು ನಿರ್ಧರಿಸಿ ಸಭೆ ಠರಾವು ಪಾಸು ಮಾಡಿದೆ. ಇನ್ನು ಮಂಡಳಿಗೆ‌ ಮಾಹಿತಿ ಇಲ್ಲದೆ ಸಚಿವ ಸಂಪುಟ ಸಭೆಯಲ್ಲಿ ಯೋಜನೆಗಳಿಗೆ ಮಂಜೂರಾತಿ ನೀಡಿ ಮಂಡಳಿಯಿಂದ ಅನುದಾನ ಹಂಚಿಕೆ ಮಾಡುತ್ತಿದ್ದು, ಇದು ಸರಿಯಾದ‌ ಕ್ರಮವಲ್ಲ. ಯೋಜನೆಗೆ ಒಪ್ಪಿಗೆ ನೀಡುವ ಮುನ್ನ ಆಯಾ ಇಲಾಖೆಗಳು ಮಂಡಳಿಯ ಅನುಮತಿ ಪಡೆಯಬೇಕು.‌ ಈ ನಿಟ್ಟಿನಲ್ಲಿ ಮಂಡಳಿಯು ಎಲ್ಲಾ ಇಲಾಖೆಗೆ ಪತ್ರ ಬರೆಯುವಂತೆ‌ ಸಭೆಯಲ್ಲಿ ಭಾಗಹಿಸಿದ್ದ‌ ಸಚಿವರು, ಶಾಸಕರು ಸಲಹೆ ನೀಡಿದರು. ಇನ್ನು ಪ್ರಸಕ್ತ 2026-27ನೇ ಸಾಲಿನ ಆಯವ್ಯಯದಲ್ಲಿ ಘೋಷಿಸಲಾದ ಯೋಜನೆಗೆ ಮಂಡಳಿ ಪಾಲಿನ ಅನುದಾನ ನೀಡಲು ಒಪ್ಪಿಗೆ ಸೂಚಿಸಿದೆ. ಇದಲ್ಲದೆ ಈ ವರ್ಷ ಸಹ ಅಕ್ಷರ‌ ಆವಿಷ್ಕಾರ ಯೋಜನೆಯಡಿ ಪ್ರತಿ ತಾಲೂಕಿಗೆ ಎಸ್.ಎಸ್.ಎಲ್.ಸಿ. ಫಲಿತಾಂಶ ಸುಧಾರಣೆಗೆ ತಲಾ‌ 25 ಲಕ್ಷ ರೂ. ವಿಶೇಷ ಅನುದಾನ ನೀಡಲು ಸಭೆ ಸಮ್ಮತಿಸಿದೆ. ಇನ್ನು ಪ್ರದೇಶದ ಸರ್ವಾಂಗೀಣ ಅಭಿವೃದ್ಧಿಗೆ ಕೈಗಾರಿಕೆ, ಪ್ರವಾಸೋದ್ಯಮ, ಕೃಷಿ ಹಾಗೂ ಜವಳಿ ನೀತಿಯಲ್ಲಿ ಪ್ರದೇಶದಲ್ಲಿ ಹೆಚ್ಚು ಹೂಡಿಕೆಯಾಗಿ ಸ್ಥಳೀಯರಿಗೆ ಉದ್ಯೋಗ ದೊರಕಿಸುವ ನಿಟ್ಟಿನಲ್ಲಿ ರಾಜ್ಯ ಸರಕಾರ ಪ್ರೋತ್ಸಾಹ, ಸಬ್ಸಿಡಿ ನೀಡಬೇಕು. ಕೈಗಾರಿಕೆ ಇಲಾಖೆಯಿಂದ ಪ್ರತ್ಯೇಕ ಕೈಗಾರಿಕೆ ನೀತಿಗೆ ಮಂಡಳಿಯು ಎಷ್ಟು ಪ್ರೋತ್ಸಾಹ ಧನ ನೀಡಬಹುದು ಎಂದು ಕೇಳಿದ್ದಾರೆ. ಆದರೆ ಮಂಡಳಿ ಯಾವುದೇ ಪ್ರೋತ್ಸಾಹ ಧನ ನೀಡಲ್ಲ. ಅದನ್ನು ರಾಜ್ಯ ಸರಕಾರವೇ ಮಾಡಬೇಕು ಎಂದು ಸಭೆಯಲ್ಲಿ ಸರ್ವ ಸಮ್ಮತದ‌ ನಿರ್ಣಯ ತೆಗೆದುಕೊಂಡಿದೆ. ಸಭೆಯಲ್ಲಿ ಮಂಡಳಿ ಸದಸ್ಯರಾಗಿರುವ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಐ.ಟಿ-ಬಿ.ಟಿ ಸಚಿವ ಪ್ರಿಯಾಂಕ್ ಖರ್ಗೆ, ಅರಣ್ಯ, ಜೀವಿಶಾಸ್ತ್ರ ಹಾಗೂ ಪರಿಸರ ಸಚಿವ ಈಶ್ವರ ಖಂಡ್ರೆ, ಸಣ್ಣ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ದಿಮೆಗಳ ಸಚಿವ ಶರಣಬಸಪ್ಪ ದರ್ಶನಾಪುರ, ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಖಾತೆ ಸಚಿವ ಡಾ.ಶರಣಪ್ರಕಾಶ ಪಾಟೀಲ್‌, ಹಿಂದುಳಿದ ವರ್ಗಗಳ ಕಲ್ಯಾಣ ಮತ್ತು ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ಎಸ್. ತಂಗಡಗಿ, ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್.ಭೋಸರಾಜು, ಪೌರಾಡಳಿತ ಮತ್ತು ಹಜ್ ಸಚಿವ ರಹೀಂ ಖಾನ್, ಕರ್ನಾಟಕ ರಾಜ್ಯ ನೀತಿ ಮತ್ತು ಯೋಜನಾ ಆಯೋಗದ ಉಪಾಧ್ಯಕ್ಷರು ಹಾಗೂ ಆಳಂದ ಶಾಸಕ ಬಿ.ಆರ್.ಪಾಟೀಲ, ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರರು ಹಾಗೂ ಯಲಬುರ್ಗಾ ಶಾಸಕ ಬಸವರಾಜ ರಾಯರೆಡ್ಡಿ, ಕೊಪ್ಪಳ ಶಾಸಕ ಕೆ.ರಾಘವೇಂದ್ರ ಹಿಟ್ನಾಳ, ಕರ್ನಾಟಕ ರಾಜ್ಯ ಕೈಗಾರಿಕೆ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರು ಮತ್ತು ಸಿಂಧನೂರು ಶಾಸಕ ಹಂಪನಗೌಡ ಬಾದರ್ಲಿ, ವಿಧಾನ ಪರಿಷತ್ ಶಾಸಕ‌ ಭೀಮರಾವ ಪಾಟೀಲ್‌, ಪ್ರಾದೇಶಿಕ ಆಯುಕ್ತರಾದ ಜಹೀರಾ ನಸ್ಸೀಮ್, ಯೋಜನಾ‌ ಸಲಹಾ ಸಮಿತಿ‌ ಸದಸ್ಯೆ ಪ್ರೊ.ಛಾಯಾ ದೇಗಾಂವಕರ್, ಮಂಡಳಿ ಉಪ ಕಾರ್ಯದರ್ಶಿ ಸುರೇಖಾ ಕಿರಣಗಿ, ಜಂಟಿ ನಿರ್ದೇಶಕಿ ಪ್ರವೀಣ ಪ್ರಿಯಾ ಸೇರಿದಂತೆ ಇತರ ಅಧಿಕಾರಿಗಳಿದ್ದರು.

ವಾರ್ತಾ ಭಾರತಿ 18 May 2026 10:20 pm

ಜೂಜು ಕೋಳಿ ಅಂಕಕ್ಕೆ ದಾಳಿ: ನಾಲ್ವರು ವಶಕ್ಕೆ

ಮಂಗಳೂರು, ಮೇ 18: ಬೋಳಿಯಾರು ಗ್ರಾಮದ ಜಲಕದ ಕಟ್ಟೆ ಎಂಬಲ್ಲಿ ನಡೆಯುತ್ತಿದ್ದ ಜೂಜು ಕೋಳಿ ಅಂಕಕ್ಕೆ ಕೋಣಾಜೆ ಪೊಲೀಸರು ದಾಳಿ ನಾಲ್ವರನ್ನು ವಶಕ್ಕೆ ಪಡೆದಿರುವ ಘಟನೆ ವರದಿಯಾಗಿದೆ. ಸ್ಥಳೀಯರಾದ ಪ್ರದೀಪ್, ಪ್ರಿನ್ಸಲ್, ವೀರೇಂದ್ರ ಮತ್ತು ರೋಹಿತ್ ಎಂಬವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಖಚಿತ ಮಾಹಿತಿಯಂತೆ ರವಿವಾರ ಸಂಜೆ 6.15ರ ವೇಳೆಗೆ ದಾಳಿ ನಡೆಸಿದ್ದಾರೆ. ಈ ವೇಳೆ ಸ್ಥಳದಲ್ಲಿ ನಾಲ್ವರನ್ನು ವಶಕ್ಕೆ ಪಡೆದಿದ್ದಾರೆ. ಅವರಿಂದ 1,200 ರೂ. ನಗದು , 5 ಹುಂಜ, ಕೋಳಿಯ ಕಾಲಿಗೆ ಕಟ್ಟಿದ್ದ ಎರಡು ಬಾಳು, ಮೂರು ದ್ವಿಚಕ್ರ ವಾಹನ ಹಾಗೂ ಒಂದು ಆಟೋ ರಿಕ್ಷಾವನ್ನು ವಶಪಡಿಸಿಕೊಂಡಿದ್ದಾರೆ. ವಶಪಡಿಸಿಕೊಂಡ ಸೊತ್ತುಗಳ ಒಟ್ಟು ಮೌಲ್ಯ 3,06,200 ರೂ. ಆಗಬಹುದು ಎಂದು ಅಂದಾಜಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ವಾರ್ತಾ ಭಾರತಿ 18 May 2026 10:19 pm

CSK Vs SRH: ಅಬ್ಬರಿಸಿದ ಡೆವಾಲ್ಡ್ ಬ್ರೆವಿಸ್; ಎಸ್‌ಆರ್‌ಎಚ್‌ಗೆ 181 ರನ್‌ಗಳ ಗುರಿ ನೀಡಿದ ಸಿಎಸ್‌ಕೆ

CSK Vs SRH IPL 2026: ಚೆನ್ನೈನ ಎಂ.ಚಿದಂಬರಂ ಕ್ರೀಡಾಂಗಣದಲ್ಲಿ ಸೋಮವಾರ (ಮೇ 18) ನಡೆದ ಐಪಿಎಲ್ 2026ರ ಅತ್ಯಂತ ನಿರ್ಣಾಯಕ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ ತಂಡವು ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 180 ರನ್ ಪೇರಿಸಿದೆ. ಈ ಪಂದ್ಯದಲ್ಲೂ ಕೂಡ ಎಂಎಸ್‌ ಧೋನಿ ಕಣಕ್ಕಿಳಿದಿಲ್ಲದಿರುವುದು ಅಭಿಮಾನಿಗಳಿಗೆ

ಒನ್ ಇ೦ಡಿಯ 18 May 2026 10:16 pm

ಲಿಫ್ಟ್‌ನಲ್ಲಿ ಸಿಲುಕಿ ಯುವಕ ಮೃತ್ಯು ಪ್ರಕರಣ: ಸಮಗ್ರ ತನಿಖೆಗೆ ಸಾರ್ವಜನಿಕರಿಂದ ಆಗ್ರಹ

ಮಂಗಳೂರು, ಮೇ 18: ನಗರದ ಕುಂಟಿಕಾನ ಬಳಿಯ ಆನ್ ಲೈನ್ ಡೆಲಿವರಿ ಸಂಸ್ಥೆಯ ಲಿಫ್ಟ್‌ನಲ್ಲಿ ಸಿಲುಕಿ ಯುವಕ ಮೃತಪಟ್ಟಿರುವ ಘಟನೆಗೆ ಸಂಬಂಧಿಸಿದಂತೆ ಸಮಗ್ರ ತನಿಖೆಗೆ ಸಾರ್ವಜನಿಕರು ಆಗ್ರಹಿಸಿದ್ದಾರೆ. ಮೇ 16ರಂದು ಸಂಜೆ ಬೆಳ್ತಂಗಡಿಯ ಬೆಳಾಲು ನಿವಾಸಿ ನೌಫಾಲ್ (28) ಲಿಫ್ಟ್‌ನಲ್ಲಿ ಸಿಲುಕಿ ಮೃತಪಟ್ಟಿದ್ದರು. ಕಟ್ಟಡದಲ್ಲಿರುವ ಲಿಫ್ಟ್ ಸರಕು ಸಾಗಣೆ ಉದ್ದೇಶದಿಂದ ಕಟ್ಟಡದ ಹೊರಭಾಗದಿಂದ ಕಬ್ಬಿಣ ಕಂಬಿ, ಶೀಟ್ ಗಳನ್ನು ಬಳಸಿ ನಿರ್ಮಿಸಲಾಗಿದೆ. ಈ ಲಿಫ್ಟ್‌ಗೆ ಅಧಿಕೃತ ಪರವಾನಗಿ ಇದೆಯೇ? ನಗರ ಪಾಲಿಕೆ ಅನುಮತಿ ನೀಡಿದೆಯೇ? ಎಂಬ ಪ್ರಶ್ನೆಗಳು ಇದೀಗ ಕೇಳಿಬರುತ್ತಿವೆ. ಸಾಮಾನ್ಯವಾಗಿ ವಾಣಿಜ್ಯ ಕಟ್ಟಡಗಳಲ್ಲಿ ಅಳವಡಿಸುವ ಲಿಫ್ಟ್‌ಗಳ ನಿರ್ವಹಣೆ ಹಾಗೂ ಸುರಕ್ಷತಾ ತಪಾಸಣೆಗೆ ಮೆಸ್ಕಾಂ ಅಥವಾ ಸಂಬಂಧಿತ ತಾಂತ್ರಿಕ ಇಲಾಖೆಯ ಅಧಿಕಾರಿಗಳನ್ನು ನೇಮಿಸಲಾಗುತ್ತದೆ. ಅವರು ಪ್ರತಿವರ್ಷ ಪರಿಶೀಲನೆ ನಡೆಸಿ ಸುರಕ್ಷತಾ ಮಾನದಂಡಗಳನ್ನು ಖಚಿತಪಡಿಸಬೇಕು. ಆದರೆ, ಈ ಪ್ರಕರಣದಲ್ಲಿ ಬಳಸಲಾಗುತ್ತಿದ್ದ ಲಿಫ್ಟ್ ಸಾಮಾನ್ಯ ಪ್ರಯಾಣಿಕರ ಲಿಫ್ಟ್ ಮಾದರಿಯದ್ದಲ್ಲ ಎಂಬ ಅನುಮಾನ ವ್ಯಕ್ತವಾಗಿದೆ. ಪೊಲೀಸ್ ಇಲಾಖೆ, ಸಂಬಂಧಿತ ಸುರಕ್ಷಾ ಸಂಸ್ಥೆಗಳು, ಮನಪಾ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಸಮಗ್ರ ತನಿಖೆಗೆ ಒಳಪಡಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ. ಪ್ರಕರಣದಲ್ಲಿ ಕೇವಲ ಇನ್ಸ್ಟಾಮಾರ್ಟ್ ಕಂಪನಿಯ ಹೊಣೆಗಾರಿಕೆ ಮಾತ್ರವಲ್ಲ, ಕಟ್ಟಡ ಮಾಲಕರ ಪಾತ್ರವನ್ನೂ ತನಿಖೆ ಮಾಡಬೇಕು ಎಂಬ ಆಗ್ರಹ ಕೇಳಿಬಂದಿದೆ. ಕಟ್ಟಡದಲ್ಲಿ ಪಾರ್ಕಿಂಗ್ ಜಾಗವನ್ನು ವಾಣಿಜ್ಯ ಚಟುವಟಿಕೆಗಳಿಗೆ ಬಳಸಲು ಅವಕಾಶ ನೀಡಿದ್ದು ಹೇಗೆ ಎಂದು ಸ್ಥಳೀಯರು ಪ್ರಶ್ನಿಸಿದ್ದಾರೆ.

ವಾರ್ತಾ ಭಾರತಿ 18 May 2026 10:15 pm

ಕರ್ನಾಟಕ ಯುವ ಕಾಂಗ್ರೆಸ್‌ನಲ್ಲಿ ಮಹಿಳೆಯರಿಗೆ ಅಸುರಕ್ಷಿತ ವಾತಾವರಣ: ದೀಪಿಕಾ ರೆಡ್ಡಿ ಗಂಭೀರ ಆರೋಪ

ಕರ್ನಾಟಕ ಯುವ ಕಾಂಗ್ರೆಸ್‌ನಲ್ಲಿ ಆಂತರಿಕ ಭಿನ್ನಮತ ಸ್ಫೋಟಗೊಂಡಿದ್ದು, ಮಾಜಿ ಉಪಾಧ್ಯಕ್ಷೆ ದೀಪಿಕಾ ರೆಡ್ಡಿ ಅಧ್ಯಕ್ಷ ಮಂಜುನಾಥ ಗೌಡ ವಿರುದ್ಧ 'ಸ್ತ್ರೀ ದ್ವೇಷ' ಹಾಗೂ 'ಸೇಡಿನ ರಾಜಕೀಯ'ದ ಗಂಭೀರ ಆರೋಪ ಮಾಡಿದ್ದಾರೆ. ತಮ್ಮ ಪದಚ್ಯುತಿಯನ್ನು ವಿರೋಧಿಸಿರುವ ಅವರು, ಸಂಘಟನೆಯಲ್ಲಿ ಮಹಿಳೆಯರಿಗೆ ಅಸುರಕ್ಷಿತ ವಾತಾವರಣವಿದೆ ಎಂದಿದ್ದಾರೆ. ಇದೇ ವಿಚಾರವಾಗಿ ಕೆಪಿಸಿಸಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಉಭಯ ನಾಯಕರ ಬೆಂಬಲಿಗರ ನಡುವೆ ಕೈಕೈ ಮಿಲಾಯಿಸುವ ಹಂತಕ್ಕೆ ಘರ್ಷಣೆ ಸಂಭವಿಸಿದೆ.

ವಿಜಯ ಕರ್ನಾಟಕ 18 May 2026 10:13 pm

ಕಲ್ಯಾಣ ಕರ್ನಾಟಕ ಭಾಗದ ಉದ್ಯಮದ ಬೆಳವಣಿಗೆಗೆ ಕೃಷಿಕಲ್ಪ ಸೆಂಟರ್ ಆಫ್ ಎಕ್ಸಲೆನ್ಸ್ ಪೂರಕವಾಗಲಿದೆ: ಸಚಿವ ಪ್ರಿಯಾಂಕ್ ಖರ್ಗೆ

ಕಲಬುರಗಿ: ಕೃಷಿಕಲ್ಪ ಸೆಂಟರ್ ಆಫ್ ಎಕ್ಸಲೆನ್ಸ್ (COE) ಕಲ್ಯಾಣ ಕರ್ನಾಟಕ ಭಾಗದ ಉದ್ಯಮ ಬೆಳವಣಿಗೆಗೆ ಪೂರಕವಾಗಲಿದೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ‌ ಪಂಚಾಯತ್ ರಾಜ್, ಮಾಹಿತಿ ಮತ್ತು ಜೈವಿಕ ತಂತ್ರಜ್ಞಾನ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು. ನಗರದ ಗೋಲ್ಡ್ ಹಬ್ ನಲ್ಲಿ ಗ್ರಾಮೀಣಾಭಿವೃದ್ದಿ ಹಾಗೂ‌ ಪಂಚಾಯತ್ ರಾಜ್, ಐಟಿ - ಬಿಟಿ‌ ಇಲಾಖೆ, ಕೆಕೆ ಆರ್ ಡಿಬಿ ಹಾಗೂ ಕೃಷಿ‌ಕಲ್ಪ ಅಡಿಯಲ್ಲಿ ಆಯೋಜಿಸಲಾಗಿದ್ದ ಕೃಷಿಕಲ್ಪ ಸೆಂಟರ್ ಆಫ್ ಎಕ್ಸಲೆನ್ಸ್ (COE) ಉದ್ಘಾಟನೆ ಹಾಗೂ 'ವಿಕಾಸ ಮತ್ತು ಪ್ರೇರಣಾ' ಕಾರ್ಯಕ್ರಮಗಳ ಉದ್ಘಾಟನೆ ನೆರವೇರಿಸಿ‌ ಅವರು ಮಾತನಾಡುತ್ತಿದ್ದರು. ಕರ್ನಾಟಕದಲ್ಲಿ 18,000 ನೂತನ ಸ್ಟಾರ್ಟ್ ಅಪ್ ಗಳು ಪ್ರಾರಂಭಕ್ಕೆಗೊಳ್ಳಲು ನೋಂದಣಿ ಮಾಡಿಕೊಂಡಿವೆ, ನವೋದ್ಯಮಕ್ಕೆ ಗೈಡೆನ್ಸ್, ಪೈಲೆಟ್ ಹಾಗೂ ಫಂಡಿಂಗ್ ಬೇಕೆ ಬೇಕು. ಇದಕ್ಕೆ  50 ಲಕ್ಷ ರೂ. ಅನುದಾನದ ಅಗತ್ಯವಿದೆ. ಸಧ್ಯ ರಾಜ್ಯ ಸರಕಾರ ಒಟ್ಟು‌ 1500 ಸ್ಟಾರ್ಟ್ ಅಪ್ ಗಳಿಗೆ ಈ ಅನುದಾನ ನೀಡಲು ತಯಾರಾಗಿದೆ. ಬೆಂಗಳೂರು ಆಚೆಗೂ ಕೂಡಾ ಉದ್ಯಮ ಸ್ಥಾಪನೆಗೆ ಸರಕಾರ ಆದ್ಯತೆ ನೀಡುತ್ತಿದ್ದು ' ಬಿಯಾಂಡ್ ಬೆಂಗಳೂರು ' ಕಾರ್ಯಕ್ರಮದಡಿ ಬೆಂಗಳೂರು ಹೊರತುಪಡಿಸಿ, ಮೈಸೂರು, ಮಂಗಳೂರು, ಹುಬ್ಬಳ್ಳಿ- ಧಾರವಾಡ, ಬೆಳಗಾವಿ, ಕಲಬುರಗಿ ಮುಂತಾದ ಜಿಲ್ಲೆಗಳಲ್ಲಿ ಉದ್ಯಮ ಸ್ಥಾಪನೆಗೆ ಪೂರಕವಾದ ವಾತಾವರಣ ನಿರ್ಮಿಸಲು ಹಾಗೂ ನವೋದ್ಯಮ ಸ್ಥಾಪನೆಗೆ ಮುಂದಾಗುವ ಸ್ಟಾರ್ಟ್ ಅಪ್ ಗಳಿಗೆ ಎಲ್ಲಾ ರೀತಿಯ ಸಹಕಾರ ನೀಡುತ್ತಿದೆ ಎಂದ ಸಚಿವರು ಟೈರ್ 2 ಹಾಗೂ 3 ನಗರಗಳ ಬೆಳವಣಿಗೆಗೆ ಹಾಗೂ ಉದ್ಯಮದ ಅಭಿವೃದ್ದಿಗೆ ಬೇಕಾಗುವ ಎಲ್ಲ ಕ್ರಮವಹಿಸಲು ಮುಂದಾಗಿದೆ ಎಂದರು. ಮುಂಬರುವ ದಿನಗಳಲ್ಲಿನ ನವೋದ್ಯಮದ ಅಭಿವೃದ್ದಿಯನ್ನು ಪರಿಗಣಿಸಿ ಡೀಪ್ ಟೆಕ್ ಸ್ಟಾರ್ಟ್ಅಪ್ ಪ್ರೋತ್ಸಾಹಕ್ಕಾಗಿ ಅನುದಾನ ನೀಡಲು ತಯಾರಿದ್ದು, ಮೈಸೂರಿನಲ್ಲಿ 402, ಮಂಗಳೂರಿನಲ್ಲಿ, 332, ಹುಬ್ಬಳ್ಳಿ- ಧಾರವಾಡ ಭಾಗದಲ್ಲಿ 463 ಹಾಗೂ ಕಕ ಭಾಗದಲ್ಲಿ 282 ಸ್ಟಾರ್ಟ್ ಅಪ್ ಗಳಿದ್ದು, ಇವುಗಳಿಗೆ ರೂ 1,000 ಕೋಟಿ ಅನುದಾನವನ್ನು ನೀಡಿ ಸರ್ಕಾರ‌ ಪ್ರೋತ್ಸಾಹ ನೀಡುತ್ತಿದೆ. ಇದರಿಂದ ಟೈರ್ 2 ಹಾಗೂ 3 ನಗರಗಳಲ್ಲಿ ಯುವ ಉದ್ಯಮಗಳ ಬೆಳವಣಿಗೆಗೆ ಸಹಕಾರಿಯಾಗಲಿದೆ ಎಂದರು. ಐಐಐಟಿ ರಾಯಚೂರಿಗೆ ಹೋಗಿದ್ದು ಅಲ್ಲಿಗೆ ಅನುಕೂಲವಾಗುವಂತಹ ಉದ್ಯಮ ಸ್ಥಾಪನೆಗೆ ಬೇಕಾಗುವ ಮಾನವ ಸಂಪನ್ಮೂಲಗಳನ್ನು ಸೃಜಿಸಿ ಅವುಗಳನ್ನು ಒದಗಿಸಲು ಕೆಕೆ ಆರ್‌ಡಿಬಿಯಿಂದ ಅನುದಾನ ಒದಗಿಸುವಂತೆ ಸಚಿವರು ಡಾ ಅಜಯ್ ಸಿಂಗ್ ಅವರಿಗೆ ಮನವಿ ಮಾಡಿದರು. ಕಲಬುರಗಿ ರೊಟ್ಟಿ ಬ್ರಾಂಡ್ ದೇಶದಾದ್ಯಂತ ಹೆಸರುವಾಸಿಯಾಗಿದ್ದು ಕೆನಡಾ, ಅಮೇರಿಕಾ ಸೇರಿದಂತೆ ವಿವಿಧ ದೇಶಗಳಿಗೆ ರಫ್ತಾಗುತ್ತಿವೆ. ಇತ್ತೀಚಿಗೆ ಪುಣೆ ಮೂಲದ ಕಂಪೆನಿಯೊಂದಿಗೆ ಒಪ್ಪಂದ ಮಾಡಿಕೊಂಡಿದ್ದು ಕಲಬುರಗಿಯಲ್ಲಿ ಮಹಿಳಾ ಸಂಘಗಳಿಂದ ತಯಾರಿಸಲಾದ ರೊಟ್ಟಿಗಳನ್ನು ಕಳುಹಿಸಲು ಮೂರು ವರ್ಷಗಳ ಅವಧಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ, ವರ್ಷವೊಂದಕ್ಕೆ 1 ಲಕ್ಷ ರೊಟ್ಟಿಗಳನ್ನು ಸರಬರಾಜು ಮಾಡಲಾಗುವುದು ಎಂದು ಹೇಳಿದ ಅವರು ಕಲಬುರಗಿ ಬ್ರಾಂಡ್ ರೊಟ್ಟಿಯ ಮೂಲಕ‌ ಮಹಿಳಾ ಸಬಲೀಕರಣಕ್ಕೆ ಸರಕಾರ ಕೈಗೊಂಡ ಕ್ರಮಗಳ ಬಗ್ಗೆ ವಿವರಿಸಿದರು. ಕೃಷಿ ವಲಯದ ಅಭಿವೃದ್ದಿ ಹಾಗೂ ಸಮಗ್ರ ಬೆಳವಣಿಗೆಗೆ ಸಹಕಾರಿಯಾಗುವಂತೆ ಕಲಬುರಗಿಯಲ್ಲಿ ಅಗ್ರಿಕಲ್ಚರ್ ಸೆಂಟರ್ ಆಫ್ ಎಕ್ಸಲೆನ್ಸ್ ಸ್ಥಾಪನೆಗೆ ಸರಕಾರ ಮುಂದಾಗಿದ್ದು ಕೃಷಿ ವಲಯಕ್ಕಾಗಿ ಇಂತಹ ಒಂದು ಎಕ್ಸಲೆನ್ಸ್ ಸ್ಥಾಪನೆ ಮಾಡಲು ಮುಂದಾಗಿದ್ದು ದೇಶದಲ್ಲೇ ಮೊದಲನೆಯದಾಗಲಿದೆ. ಇದು ಕೃಷಿ ವಲಯದ ಬೆಳವಣಿಗೆಗೆ ಸಹಕಾರಿಯಾಗಲಿದೆ ಎಂದರು. ಕೆಕೆಆರ್ ಡಿಬಿ ಅಧ್ಯಕ್ಷ ಹಾಗೂ ಶಾಸಕ ಡಾ ಅಜಯ್ ಸಿಂಗ್ ಮಾತನಾಡಿ, ಸರ್ಕಾರ, ಕೆಕೆಆರ್ ಡಿಬಿ ಕಲ್ಯಾಣ ಕರ್ನಾಟಕ ಭಾಗದಲ್ಲಿ ಉದ್ಯಮ ಸ್ಥಾಪನೆಗೆ ಪೂರಕ ವಾತವಾರಣ ನಿರ್ಮಾಣಕ್ಕೆ‌ ಮುಂದಾಗಿದ್ದು, ಯುವ ಉದ್ಯಮಿಗಳನ್ನು ಉತ್ತೇಜಿಸಲು ಕೃಷಿ‌ಕಲ್ಪದೊಂದಿಗೆ ಒಗ್ಗೂಡಿ ಕೃಷಿಕಲ್ಪ ಸೆಂಟರ್ ಆಫ್ ಎಕ್ಸಲೆನ್ಸ್ (COE) ಕಾರ್ಯಕ್ರಮ ರೂಪಿಸಿದೆ ಇವುಗಳ ಅಡಿಯಲ್ಲಿ‌ವಿಕಾಸ ಮತ್ತು ಪ್ರೇರಣಾ' ಕಾರ್ಯಕ್ರಮಗಳನ್ನು ಜಾರಿಗೊಳಿಸುತ್ತಿದೆ ಎಂದರು. ಮುಂಬರುವ ಐದು ಅಥವಾ ಹತ್ತು ವರ್ಷದಲ್ಲಿ ಈ ಭಾಗಕ್ಕೆ ನೀಡಬೇಕಾದ ಅನುದಾನದ ಬಗ್ಗೆ ಅಗತ್ಯ ಕ್ರಮವಹಿಸಲಾಗುತ್ತಿದೆ. ಗೋವಿಂದ್ ರಾವ್ ವರದಿಯಂತೆ ಈ ಭಾಗಕ್ಕೆ  ಹೆಚ್ಚಿನ‌ ಅನುದಾನ ಒದಗಿಸಲಾಗುವುದು. ಕೃಷಿ‌ ಕಲ್ಪಕ್ಕೆ ಕೆಕೆಆರ್ ಡಿಬಿ ಬೆನ್ನೆಲುಬಾಗಿ ನಿಂತು ಈ‌ ಭಾಗದಲ್ಲಿ ಉದ್ಯಮ ಬೆಳವಣಿಗೆಗೆ ಎಲ್ಲ ಅಗತ್ಯ ಸಹಕಾರ‌ ನೀಡಲು ಬದ್ಧವಾಗಿದೆ ಎಂದರು. ವೇದಿಕೆ ಮೇಲೆ ಕೆಕೆಆರ್‌ಡಿಬಿ ಅಧ್ಯಕ್ಷ ಡಾ ಅಜಯ್ ಸಿಂಗ್, ಶಾಸಕರಾದ ಎಂ ವೈ ಪಾಟೀಲ್, ಅಲ್ಲಮಪ್ರಭು ಪಾಟೀಲ್, ಎಂ ಎಲ್ ಸಿ ಜಗದೇವ ಗುತ್ತೇದಾರ, ಚಂದ್ರಿಕಾ ಪರಮೇಶ್ವರ, ಅರುಣ್ ಕುಮಾರ್ ಎಂ ವೈ ಪಾಟೀಲ, ಪ್ರವೀಣ್ ಹರವಾಳ, ಜಿಲ್ಲಾಧಿಕಾರಿ ಮೊಹಮ್ಮದ್ ಇಕ್ರಮುಲ್ಲಾ ಷರೀಫ್, ಸಿಇಒ ಭಂವರ್ ಸಿಂಗ್ ಮೀನಾ, ಕಮೀಷನರ್ ಡಾ ಶರಣಪ್ಪ‌ ಢಗೆ, ಮಹಾನಗರ‌ ಪಾಲಿಕೆ ಕಮಿಷನರ್ ಅವಿನಾಶ ಶಿಂಧೆ, ಎಸ್ ಪಿ ಅಡ್ಡೂರು ಶ್ರೀನಿವಾಸಲು, ಎಡಿಸಿ ರಾಯಪ್ಪ‌ ಹುಣಸಗಿ, ಎಸಿ ಸಾಹಿತ್ಯ, ಕೃಷಿ‌ಕಲ್ಪದ ಸಿಇಒ ಸಿಎಂ ಪಾಟೀಲ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ವಾರ್ತಾ ಭಾರತಿ 18 May 2026 10:04 pm

AAP ನಾಯಕ ದೀಪಕ್ ಸಿಂಗ್ಲಾ ನಿವಾಸದ ಮೇಲೆ ED ದಾಳಿ

ಹೊಸದಿಲ್ಲಿ, ಮೇ 18: ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿ ದಿಲ್ಲಿ ಮತ್ತು ಗೋವಾದಲ್ಲಿರುವ ಆಪ್ ನಾಯಕ ದೀಪಕ್ ಸಿಂಗ್ಲಾ ಹಾಗೂ ಇತರರಿಗೆ ಸೇರಿದ ನಿವಾಸಗಳ ಮೇಲೆ ಜಾರಿ ನಿರ್ದೇಶನಾಲಯ (ED) ಸೋಮವಾರ ದಾಳಿ ನಡೆಸಿದೆ. ಸಿಂಗ್ಲಾ ಅವರು ವಿಶ್ವಾಸ್‌ನಗರ ವಿಧಾನಸಭಾ ಕ್ಷೇತ್ರದ ಆಮ್ ಆದ್ಮಿ ಪಕ್ಷ (ಎಎಪಿ) ಅಭ್ಯರ್ಥಿಯಾಗಿದ್ದರು. ಇದೇ ಪ್ರಕರಣದ ಭಾಗವಾಗಿ 2014ರಲ್ಲಿ ಕೂಡ ED ಅವರ ನಿವಾಸದ ಮೇಲೆ ದಾಳಿ ನಡೆಸಿತ್ತು. ಮತ್ತೊಂದು ಪ್ರತ್ಯೇಕ ಪ್ರಕರಣದಲ್ಲಿ, ಹೂಡಿಕೆ ವಂಚನೆ ಮೂಲಕ ಕೆಲವು ವ್ಯಕ್ತಿಗಳಿಗೆ ಸುಮಾರು 180 ಕೋಟಿ ರೂ. ವಂಚಿಸಿದ ಆರೋಪಕ್ಕೆ ಸಂಬಂಧಿಸಿ ಜಾರಿ ನಿರ್ದೇಶನಾಲಯ ಶೋಧ ನಡೆಸಿದೆ. ತನಿಖೆಯ ಭಾಗವಾಗಿ ದಿಲ್ಲಿಯ ಸುಭಾಷ್ ನಗರದಲ್ಲಿರುವ ಬಾಬಾಜಿ ಫೈನಾನ್ಸ್ ಸಮೂಹದ ರಾಮ್ ಸಿಂಗ್ ಎಂದು ಗುರುತಿಸಲಾದ ವ್ಯಕ್ತಿಯ ನಿವಾಸದ ಮೇಲೆ ದಾಳಿ ನಡೆಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಾರ್ತಾ ಭಾರತಿ 18 May 2026 10:00 pm