T20 World Cup- ಉಸ್ಮಾನ್ ತಾರಿಕ್ ಬಳಿಕ ಜೆರಾಲ್ಡ್ ಎರಾಸ್ಮಸ್! ನಮೀಬಿಯಾ ನಾಯಕನ ವಿಚಿತ್ರ ಬೌಲಿಂಗ್ ಶೈಲಿ ಓಕೆನಾ?
Gerhard Erasmus Controversial Bowling- ಉಸ್ಮಾನ್ ತಾರಿಕ್ ಅವರ ಬೌಲಿಂಗ್ ನಿಯಮಬದ್ಧವಾಗಿದೆಯೇ ಎಂಬ ಚರ್ಚೆ ನಡೆಯುತ್ತಲೇ ಇದೆ. ಇದೀಗ ನಮೀಬಿಯಾ ನಾಯಕ ಜೆರಾಲ್ಡ್ ಎರಾಸ್ಮಸ್ ಅವರ ಅಸಂಪ್ರದಾಯಿಕ ಬೌಲಿಂಗ್ ಶೈಲಿ ಸಹ ವಿವಾದಕ್ಕೀಡುಮಾಡಿದೆ. ಅದರೊಂದಿಗೆ ದಿಲ್ಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಭಾರತದ ವಿರುದ್ಧ ಬೌಲಿಂಗ್ ನಡೆಸುವ ಹೊತ್ತಲ್ಲೇ ಅಂಪೈರ್ ರಾಡ್ ಟಕ್ಕರ್ ಅವರು ಅವರ ಬೌಲಿಂಗ್ ಗೆ ಡೆಡ್ ಹಾಲ್ ನೀಡಿದ್ದು ವಿವಾದ ಮತ್ತಷ್ಟು ಹೆಚ್ಚಲು ಕಾರಣವಾಗಿದೆ. ಇಲ್ಲಿದೆ ಈ ಬಗ್ಗೆ ವಿಶ್ಲೇಷಣೆ.
ಯುದ್ಧದ ನಾಡು ಉಕ್ರೇನ್ ನೆಲದಲ್ಲಿ ಚುನಾವಣೆ ಚರ್ಚೆ, ಅಧ್ಯಕ್ಷ ಸ್ಥಾನಕ್ಕೆ ಪೈಪೋಟಿ | Ukraine President Election
ಉಕ್ರೇನ್ ಸರಿಯಾಗಿ ಪೆಟ್ಟು ತಿಂದು ನರಳುವ ಪರಿಸ್ಥಿತಿ ಎದುರಾಗಿದ್ದು, ರಷ್ಯಾ ಸೇನೆಯಿಂದ ಆಗಿರುವ ಹಾನಿ ಸರಿ ಮಾಡಿಕೊಳ್ಳಲು ಇನ್ನೂ ಹತ್ತಾರು ವರ್ಷಗಳೇ ಸಾಲುವುದಿಲ್ಲ ಉಕ್ರೇನ್ ದೇಶಕ್ಕೆ. ಹೀಗೆಲ್ಲಾ ಕಳೆದ 4 ವರ್ಷಗಳಲ್ಲಿ ಇಡೀ ಉಕ್ರೇನ್ ಹೀನಾಯವಾಗಿ ಸೋಲು ಕಂಡು, ಇನ್ನೇನು ಸರ್ವನಾಶವಾಗಿ ಹೋಗುವ ಹಂತಕ್ಕೆ ಬಂದು ತಲುಪಿದೆ. ಜನರಿಗೆ ಊಟ, ನೀರು ಕೂಡ ಸಿಗದ ಪರಿಸ್ಥಿತಿ ಇದೆ.
ಹೆತ್ತ ತಾಯಿಯ ಕೊಲೆ ಮಾಡಿ ಕತೆ ಕಟ್ಟಿದ ಪುತ್ರಿ!: ಅಂತ್ಯಕ್ರಿಯೆ ವೇಳೆ ತಲುಪಿ ಬಾಯಿಬಿಡಿಸಿದ ತುಮಕೂರು ಪೊಲೀಸರು
Tumkur Police-ಹಣಕ್ಕಾಗಿ ಹೆತ್ತತಾಯಿಯನ್ನೇ ಗಂಡನ ಜೊತೆ ಸೇರಿ ಕೊಲೆ ಮಾಡಿದ್ದ ಪುತ್ರಿಯನ್ನು ಕ್ಯಾತ್ಸಂದ್ರ ಠಾಣೆ ಪೊಲೀಸರು ಬಂಧಿಸಿದ್ದಾರೆ. ತುಮಕೂರಿನ ಪುುಷ್ಪಲತಾ ಎಂಬ ಮಹಿಳೆಯನ್ನು ಪುತ್ರಿ ಸುಚಿತ್ರಾ ಮತ್ತು ಅವರ ಪತಿ ಸುರೇಶ್ ಅವರು ತಲೆದಿಂಬಿನಿಂದ ಉಸಿರುಗಟ್ಟಿಸಿ ಕೊಲೆ ಮಾಡಿದ್ದರು. ಬಳಿಕ ಸಹಜ ಸಾವು ಎಂಬಂತೆ ಬಿಂಬಿಸಲು ಇನ್ನಿಲ್ಲದ ಪ್ರಯತ್ನ ಪಟ್ಟಿದ್ದರು. ಅನುಮಾನಗೊಂಡ ಸಂಬಂಧಿಕರು ಪೊಲೀಸರಿಗೆ ದೂರು ನೀಡಿದ್ದರು. ಅಂತ್ಯಸಂಸ್ಕಾರದ ವೇಳೆ ಸ್ಥಳಕ್ಕೆ ತಲುಪಿದ ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದು ತನಿಖೆ ನಡೆಸಿದಾಗ ಸತ್ಯಾಂಶ ಬೆಳಕಿಗೆ ಬಂದಿದೆ.
ಇರಾನ್ ವಿರುದ್ಧ ಇನ್ನಷ್ಟು ರೊಚ್ಚಿಗೆದ್ದ ಅಮೆರಿಕ, ಮುಂದಿನ ಹೆಜ್ಜೆ ಬಗ್ಗೆ ಮತ್ತಷ್ಟು ಕುತೂಹಲ... USA Military
ಅಮೆರಿಕ ಮತ್ತು ಇರಾನ್ ನಡುವೆ ಹೊತ್ತಿಕೊಂಡ ಕಿಚ್ಚು ಇವತ್ತು ತಣ್ಣಗೆ ಆಗಲಿದೆ, ನಾಳೆ ಸೈಲೆಂಟ್ ಆಗಲಿದೆ ಅಂತಾ ಹೇಳಿದ್ದೇ ಬಂತು. ಆದರೆ ಕಳೆದ ಕೆಲವು ದಿನಗಳಿಂದ ಈ ಜಗಳ ನಿರಂತರ ಮತ್ತೆ, ಮತ್ತೆ ಹೆಚ್ಚಾಗುತ್ತಲೇ ಇದೆ. ಅಮೆರಿಕ ಮತ್ತು ಇರಾನ್ ತಿಕ್ಕಾಟ ಹೆಚ್ಚಾದ ಕಾರಣ ಮಧ್ಯಪ್ರಾಚ್ಯ ಭಾಗದಲ್ಲಿ ಆತಂಕ ಮನೆಮಾಡಿದ್ದು, ಯಾವ ಕ್ಷಣದಲ್ಲಿ ಯುದ್ಧ ಶುರುವಾಗುತ್ತೋ ಎಂದು
ಸರಕಾರಿ ಕಾರ್ಯಕ್ರಮಗಳಲ್ಲಿ ವಂದೇ ಮಾತರಂ ಹಾಡುವುದು ಕಡ್ಡಾಯ ಆದೇಶ: ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ತೀವ್ರ ಆಕ್ಷೇಪ
ಅಧಿಸೂಚನೆ ಹಿಂಪಡೆಯದಿದ್ದರೆ ನ್ಯಾಯಾಲಯದ ಮೊರೆ ಹೋಗುವ ಎಚ್ಚರಿಕೆ
ಬೆಂಗಳೂರು | ಫೆ.14ರಂದು ‘ಮಲಬಾರ್ ಮುಸ್ಲಿಮ್ ಅಸೋಸಿಯೇಷನ್’ನ 90ನೇ ವಾರ್ಷಿಕೋತ್ಸವ: ಡಾ.ಎನ್.ಎ.ಮುಹಮ್ಮದ್
ಬೆಂಗಳೂರು, ಫೆ.12: ಮಲಬಾರ್ ಮುಸ್ಲಿಮ್ ಅಸೋಸಿಯೇಷನ್(ಎಂ.ಎಂ.ಎ)ನ 90ನೇ ವಾರ್ಷಿಕೋತ್ಸವ ಸಮಾರಂಭವನ್ನು ಫೆ.14ರ ಮಧ್ಯಾಹ್ನ 2ರಿಂದ ರಾತ್ರಿ 10 ಗಂಟೆಯ ವರೆಗೆ ಬೆಂಗಳೂರು ನಗರ ವಿಶ್ವವಿದ್ಯಾನಿಲಯದ ಸೆಂಟ್ರಲ್ ಕಾಲೇಜಿನ ಜ್ಞಾನಜ್ಯೋತಿ ಸಭಾಂಗಣದಲ್ಲಿ ಆಯೋಜಿಸಲಾಗಿದೆ ಎಂದು ಎಂ.ಎಂ.ಎ. ಅಧ್ಯಕ್ಷ ಡಾ.ಎನ್.ಎ.ಮುಹಮ್ಮದ್ ತಿಳಿಸಿದರು. ಗುರುವಾರ ನಗರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಈ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸ್ಪೀಕರ್ ಯು.ಟಿ.ಖಾದರ್ ಸೇರಿದಂತೆ ರಾಜ್ಯ ಸರಕಾರದ ಹಲವು ಸಚಿವರು, ಕೇರಳದ ಅನೇಕ ಗಣ್ಯರು ಭಾಗವಹಿಸಲಿದ್ದಾರೆ ಎಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಎಂ.ಎಂ.ಎ ಪ್ರಧಾನ ಕಾರ್ಯದರ್ಶಿ ಟಿ.ಸಿ.ಸಿರಾಜುದ್ದೀನ್, ಎಂ.ಎಂ.ಎ. ಕಾರ್ಯದರ್ಶಿ ಕೆ.ಸಿ.ಅಬ್ದುಲ್ ಖಾದರ್, ಮುಖಂಡರಾದ ಶಂಸುದ್ದೀನ್ ಕುಡಾಲಿ, ಪಿ.ಎಂ.ಅಬ್ದುಲ್ ಲತೀಫ್, ತನ್ವೀರ್ ಮುಹಮ್ಮದ್, ಮುಹಮ್ಮದ್ ಮೌಲವಿ, ಸಿರಾಜ್ ಹುದವಿ, ಸಿ.ಎ.ಆಸೀಫ್, ಡಿ.ಸಿ.ಶಬ್ಬೀರ್ ಉಪಸ್ಥಿತರಿದ್ದರು.
ತಿಹಾರ್ ಜೈಲು ಪಾಲಾದ ನಟ ರಾಜ್ಪಾಲ್ ಯಾದವ್; ನಟನೆಯಿಂದ ನಿರ್ದೇಶನಕ್ಕಿಳಿದು ಸೋತ ಹಾಸ್ಯನಟನ ಬದುಕಿನ ಏಳು ಬೀಳು
ದೆಹಲಿ ಹೈಕೋರ್ಟ್ ದೀರ್ಘಕಾಲದಿಂದ ಬಾಕಿ ಉಳಿದಿರುವ ಚೆಕ್ ಬೌನ್ಸ್ ಪ್ರಕರಣಗಳಲ್ಲಿ ಹೆಚ್ಚಿನ ಗಡುವು ನೀಡಲು ನಿರಾಕರಿಸಿದ ನಂತರ, ಬಾಲಿವುಡ್ ನಟ ರಾಜ್ಪಾಲ್ ಯಾದವ್ ಫೆಬ್ರವರಿ 5 ರಂದು ತಿಹಾರ್ ಜೈಲಿನಲ್ಲಿ ಶರಣಾದರು. ಜೈಲು ಅಧಿಕಾರಿಗಳಿಗೆ ಶರಣಾಗುವಂತೆ ನಿರ್ದೇಶಿಸಿದ ಹಿಂದಿನ ಆದೇಶವನ್ನು ಹಿಂಪಡೆಯಲು ನ್ಯಾಯಾಲಯ ನಿರಾಕರಿಸಿತು. ಮುಜ್ ಸೆ ಶಾದಿ ಕರೋಗಿ, ವಕ್ತ್, ಫಿರ್ ಹೇರಾ ಫೇರಿ, ಪಾರ್ಟ್ನರ್, ಭೂಲ್ ಭುಲೈಯಾ, ಹಂಗಾಮಾ ಮತ್ತು ಚುಪ್ ಚುಪ್ ಕೆ ಮುಂತಾದ ಸಿನಿಮಾಗಳಿಂದ ಜನಪ್ರಿಯರಾಗಿದ್ದ ನಟ ರಾಜ್ಪಾಲ್ ಯಾದವ್ ಇದೀಗ ಬರೋಬ್ಬರಿ ₹9 ಕೋಟಿ ಚೆಕ್ ಬೌನ್ಸ್ ಪ್ರಕರಣದಲ್ಲಿ ಜೈಲು ಸೇರಿದ್ದಾರೆ. ಏನಿದು ಪ್ರಕರಣ? ಈ ಪ್ರಕರಣವು 2010ರ ಹಿಂದಿನದು. ಯಾದವ್ ತಮ್ಮ ನಿರ್ದೇಶನದ ಅತಾ ಪತಾ ಲಾಪತಾ ಚಿತ್ರಕ್ಕೆ ಹಣಕಾಸು ಒದಗಿಸಲು M/s ಮುರಳಿ ಪ್ರಾಜೆಕ್ಟ್ಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯಿಂದ ₹5 ಕೋಟಿ ಸಾಲ ಪಡೆದಿದ್ದರು. ಚಿತ್ರವು ಬಾಕ್ಸ್ ಆಫೀಸ್ನಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಲಿಲ್ಲ; ಇದರಿಂದ ಆರ್ಥಿಕ ನಷ್ಟ ಉಂಟಾಯಿತು. ನಂತರ ಅವರ ವಿರುದ್ಧ ಚೆಕ್ ಬೌನ್ಸ್ ದೂರುಗಳು ದಾಖಲಾಗಿದ್ದವು. ಏಪ್ರಿಲ್ 2018ರಲ್ಲಿ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಯಾದವ್ ಅವರನ್ನು ದೋಷಿ ಎಂದು ಘೋಷಿಸಿ ಆರು ತಿಂಗಳ ಜೈಲು ಶಿಕ್ಷೆ ವಿಧಿಸಿತು. 2019ರಲ್ಲಿ ಸೆಷನ್ಸ್ ನ್ಯಾಯಾಲಯವು ಶಿಕ್ಷೆಯನ್ನು ಎತ್ತಿಹಿಡಿಯಿತು. ನ್ಯಾಯಾಲಯದಲ್ಲಿ ವಿಚಾರಣೆ ವಿವಾದವನ್ನು ಇತ್ಯರ್ಥಪಡಿಸಲು ಪ್ರಾಮಾಣಿಕ ಪ್ರಯತ್ನಗಳನ್ನು ಮಾಡಬೇಕು ಎಂಬ ಷರತ್ತಿನ ಮೇಲೆ ಜೂನ್ 2024ರಲ್ಲಿ ಹೈಕೋರ್ಟ್ ಅವರ ಶಿಕ್ಷೆಯನ್ನು ಅಮಾನತುಗೊಳಿಸಿತ್ತು. ಆದರೆ ಮರುಪಾವತಿಗೆ ಸಂಬಂಧಿಸಿದಂತೆ ಯಾದವ್ ನೀಡಿದ ಭರವಸೆಗಳನ್ನು ಪದೇ ಪದೇ ಉಲ್ಲಂಘಿಸಿದ್ದಾಗಿ ನ್ಯಾಯಾಲಯ ಗಮನಿಸಿತು. ಫೆಬ್ರವರಿ 2ರಂದು ಸಂಜೆ 4 ಗಂಟೆಯೊಳಗೆ ಶರಣಾಗುವಂತೆ ಸೂಚಿಸಿದ್ದ ಹಿನ್ನೆಲೆಯಲ್ಲಿ, ಯಾದವ್ ಪರ ವಕೀಲರು ನಟರು ₹50 ಲಕ್ಷವನ್ನು ವ್ಯವಸ್ಥೆ ಮಾಡಿದ್ದಾರೆ ಎಂದು ತಿಳಿಸಿ, ಪಾವತಿಗೆ ಇನ್ನೂ ಒಂದು ವಾರ ಅವಧಿ ನೀಡುವಂತೆ ಮನವಿ ಮಾಡಿದ್ದರು. ಆದರೆ ನ್ಯಾಯಮೂರ್ತಿ ಸ್ವರಣ ಕಾಂತ್ ಶರ್ಮಾ ಶರಣಾಗುವ ಗಡುವು ವಿಸ್ತರಿಸುವಂತೆ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿ, ಯಾವುದೇ ರಿಯಾಯಿತಿ ನೀಡಲು ಸಾಧ್ಯವಿಲ್ಲ ಎಂದು ಹೇಳಿದರು. ಏಳು ಪ್ರಕರಣಗಳಲ್ಲಿ ಪ್ರತಿಯೊಂದರಲ್ಲೂ ಯಾದವ್ ₹1.35 ಕೋಟಿ ಪಾವತಿಸಬೇಕಾಗಿದೆ. ರಿಜಿಸ್ಟ್ರಾರ್ ಜನರಲ್ ಬಳಿ ಈ ಹಿಂದೆ ಠೇವಣಿ ಇಟ್ಟಿದ್ದ ಮೊತ್ತವನ್ನು ದೂರುದಾರ ಕಂಪನಿಗೆ ಬಿಡುಗಡೆ ಮಾಡಲು ಹೈಕೋರ್ಟ್ ನಿರ್ದೇಶಿಸಿದೆ. ಅಕ್ಟೋಬರ್ 2025ರಲ್ಲಿ ತಲಾ ₹75 ಲಕ್ಷದ ಎರಡು ಡಿಮ್ಯಾಂಡ್ ಡ್ರಾಫ್ಟ್ಗಳನ್ನು ಠೇವಣಿ ಮಾಡಲಾಗಿತ್ತು. ಇದರ ಹೊರತಾಗಿಯೂ, ಸುಮಾರು ₹9 ಕೋಟಿ ಪಾವತಿಸದೆ ಉಳಿದಿದೆ. ಗಡುವು ವಿಸ್ತರಿಸಲು ನ್ಯಾಯಾಲಯ ನಿರಾಕರಿಸಿದ ನಂತರ ಯಾದವ್ ಫೆಬ್ರವರಿ 5ರಂದು ತಿಹಾರ್ ಜೈಲಿನಲ್ಲಿ ಶರಣಾದರು. ಶರಣಾದ ಬಳಿಕ ಕಾನೂನಿನ ಪ್ರಕಾರ ಸೂಕ್ತ ಅರ್ಜಿಯನ್ನು ಸಲ್ಲಿಸಬಹುದು ಎಂದು ನ್ಯಾಯಾಲಯ ತಿಳಿಸಿದೆ. ರಾಜ್ಪಾಲ್ ಯಾದವ್ ಹೇಳಿದ್ದೇನು? ಅಧಿಕಾರಿಗಳಿಗೆ ಶರಣಾಗುವ ಕೆಲವೇ ಕ್ಷಣಗಳ ಮೊದಲು ರಾಜ್ಪಾಲ್ ಭಾವುಕರಾಗಿ ಪ್ರತಿಕ್ರಿಯಿಸಿದರು: “ಸರ್, ನಾನು ಏನು ಮಾಡಬೇಕು? ನನ್ನ ಬಳಿ ಹಣವಿಲ್ಲ. ನನಗೆ ಬೇರೆ ದಾರಿ ಕಾಣುತ್ತಿಲ್ಲ. ಇಲ್ಲಿ ನಾವೆಲ್ಲರೂ ಒಬ್ಬಂಟಿಯಾಗಿದ್ದೇವೆ. ನನಗೆ ಸ್ನೇಹಿತರಿಲ್ಲ. ಈ ಬಿಕ್ಕಟ್ಟನ್ನು ನಾನೇ ನಿಭಾಯಿಸಬೇಕು” ಎಂದು ಹೇಳಿದರು. ಯಾದವ್ ಸಹಾಯಕ್ಕೆ ಬಂದ ಸಿನಿಮಾ ಮಂದಿ ಯಾದವ್ ಜೈಲು ಸೇರಿದ ನಂತರ ಚಲನಚಿತ್ರೋದ್ಯಮದ ಹಲವರು ಹಾಗೂ ಇತರ ಸಾರ್ವಜನಿಕ ವ್ಯಕ್ತಿಗಳು ಅವರಿಗೆ ಬೆಂಬಲ ಸೂಚಿಸಿದ್ದಾರೆ. ಪ್ರತಿಕ್ರಿಯಿಸಿದ ಮೊದಲಿಗರಲ್ಲಿ ನಟ ಸೋನು ಸೂದ್ ಇದ್ದು, ಮುಂಬರುವ ಯೋಜನೆಯಲ್ಲಿ ಯಾದವ್ ಅವರನ್ನು ಆಯ್ಕೆ ಮಾಡಿದ್ದಾರೆ ಎನ್ನಲಾಗಿದೆ. ಅಜಯ್ ದೇವಗನ್ ಮತ್ತು ಸಲ್ಮಾನ್ ಖಾನ್ ಸೇರಿದಂತೆ ಹಲವು ಬಾಲಿವುಡ್ ತಾರೆಯರು ಸಹ ಬೆಂಬಲ ವ್ಯಕ್ತಪಡಿಸಿದ್ದಾರೆ. ನ್ಯೂಸ್ 18 ಶೋಶಾ ವರದಿ ಪ್ರಕಾರ, ಯಾದವ್ ಪ್ರತಿ ಚಿತ್ರಕ್ಕೆ ₹1 ಕೋಟಿ–₹2 ಕೋಟಿ ವರೆಗೆ ಶುಲ್ಕ ಪಡೆಯುತ್ತಾರೆ. ಭೂಲ್ ಭುಲೈಯಾ 2ರಲ್ಲಿ ಛೋಟೆ ಪಂಡಿತ್ ಪಾತ್ರಕ್ಕೆ ₹1.25 ಕೋಟಿ ಮತ್ತು ಚಂದು ಚಾಂಪಿಯನ್ಗಾಗಿ ₹2 ಕೋಟಿ ಪಡೆದಿದ್ದಾರೆ ಎನ್ನಲಾಗಿದೆ. ಭೂತ್ ಬಾಂಗ್ಲಾ ಮತ್ತು ವೆಲ್ಕಮ್ ಟು ದಿ ಜಂಗಲ್ ಸೇರಿ 2026ರ ಯೋಜನೆಗಳೂ ಇವರ ಬಳಿ ಇವೆ. ಸಿನಿಮಾ ಹೊರತಾಗಿ ಬ್ರಾಂಡ್ ಪ್ರಚಾರಗಳ ಮೂಲಕ ವಾರ್ಷಿಕವಾಗಿ ಸುಮಾರು ₹30–35 ಲಕ್ಷ ಗಳಿಸುತ್ತಾರೆ. ಮುಂಬೈ ಮತ್ತು ಶಹಜಹಾನ್ಪುರದಲ್ಲಿ ಆಸ್ತಿಗಳಿದ್ದು, ಆಡಿ ಮತ್ತು ಬಿಎಂಡಬ್ಲ್ಯು ಐಷಾರಾಮಿ ವಾಹನಗಳೂ ಇವರ ಬಳಿ ಇವೆ. ಸ್ಟೇಜ್ ಶೋ ಹಾಗೂ ರಂಗಭೂಮಿ ಪ್ರದರ್ಶನಗಳ ಮೂಲಕವೂ ಆದಾಯ ಗಳಿಸುತ್ತಿದ್ದಾರೆ. ವೃತ್ತಿ ಜೀವನದ ಏಳು ಬೀಳು ಬಾಲಿವುಡ್ ನಟ ರಾಜ್ಪಾಲ್ ಯಾದವ್ 2012ರಲ್ಲಿ ಅತಾ ಪತಾ ಲಾಪತಾ ಚಿತ್ರದ ಮೂಲಕ ನಿರ್ದೇಶಕರಾದರು. ಕಾಣೆಯಾದ ಮನೆಯ ಕಥೆಯನ್ನು ಹೇಳುವ ಈ ಚಿತ್ರದಂತೆಯೇ ನಂತರದ ವರ್ಷಗಳಲ್ಲಿ ಅವರ ವೃತ್ತಿಜೀವನವೂ ಹಳಿ ತಪ್ಪಿತು. ಉತ್ತರ ಪ್ರದೇಶದ ಶಹಜಹಾನ್ಪುರ ಎಂಬ ಸಣ್ಣ ಪಟ್ಟಣದಿಂದ ಬಂದ ಯಾದವ್, ಬಾಲಿವುಡ್ ಹಾಸ್ಯನಟರಲ್ಲಿ ತಮ್ಮದೇ ಛಾಪು ಮೂಡಿಸಿದವರು. 1990ರ ದಶಕದ ಪಂಚ್ಲೈನ್ ಹಾಸ್ಯವನ್ನು 2000ರ ದಶಕದಲ್ಲಿ ಪಾತ್ರ ಮತ್ತು ಸನ್ನಿವೇಶ ಆಧಾರಿತ ಹಾಸ್ಯಕ್ಕೆ ತಿರುಗಿಸಿದವರಲ್ಲಿ ಯಾದವ್ ಪ್ರಮುಖರು. ಜಾನಿ ಲಿವರ್ ನಂತರ 2000ರ ದಶಕದಲ್ಲಿ ಹಾಸ್ಯ ಪಾತ್ರಗಳಲ್ಲಿ ಮಿಂಚಿದ ನಟ ರಾಜ್ಪಾಲ್ ಯಾದವ್. ಮುಜ್ ಸೆ ಶಾದಿ ಕರೋಗಿ (2004), ಅಪ್ನಾ ಸಪ್ನಾ ಮನಿ ಮನಿ ಮತ್ತು ಪಾರ್ಟ್ನರ್ (2007) ಸಿನಿಮಾಗಳಲ್ಲಿನ ಪಾತ್ರಗಳು ಹೆಚ್ಚು ಗಮನ ಸೆಳೆದವು. ಪ್ರಿಯದರ್ಶನ್ ನಿರ್ದೇಶನದ ಗರಂ ಮಸಾಲಾ (2005), ಚುಪ್ ಚುಪ್ ಕೆ (2006), ಭಾಗಮ್ ಭಾಗ್ (2006), ಧೋಲ್ (2007) ಮತ್ತು ಭೂಲ್ ಭುಲೈಯಾ (2007) ಸಿನಿಮಾಗಳು ಅವರನ್ನು ಜನಪ್ರಿಯ ಹಾಸ್ಯನಟನನ್ನಾಗಿ ರೂಪಿಸಿವೆ. ಪರ್ಫೆಕ್ಟ್ ಕಾಮಿಕ್ ಟೈಮಿಂಗ್ 54ರ ಹರೆಯದ ರಾಜ್ಪಾಲ್ ಯಾದವ್ 1994ರಿಂದ 1997ರವರೆಗೆ ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾ (NSD)ಯಲ್ಲಿ ಅಭ್ಯಾಸ ಮಾಡಿದರು. ಭೂಲ್ ಭುಲೈಯಾ ಚಿತ್ರದಲ್ಲಿನ ಛೋಟೆ ಪಂಡಿತ್ ಪಾತ್ರ ಅಪಾರ ಮೆಚ್ಚುಗೆ ಗಳಿಸಿತು. ಭೂಲ್ ಭುಲೈಯಾ 3ದಲ್ಲಿಯೂ ಇದೇ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಪ್ರಿಯದರ್ಶನ್ ಅವರ ಚುಪ್ ಚುಪ್ ಕೆ ಸಿನಿಮಾದಲ್ಲಿನ ಯಾದವ್ ಅವರ ಹಾಸ್ಯದ ಟೈಮಿಂಗ್ ವಿಶೇಷವಾಗಿ ಜನಪ್ರಿಯ. ಶಾಹಿದ್ ಕಪೂರ್ ಮತ್ತು ಕರೀನಾ ಕಪೂರ್ ಖಾನ್ ತಾರಾಬಳಗದಲ್ಲಿದ್ದರೂ, ಚಿತ್ರದ ಪಂಚ್ ಹಾಸ್ಯ ದೃಶ್ಯಗಳಲ್ಲಿ ಬಹುತೇಕವು ಯಾದವ್ ಅವರದ್ದಾಗಿವೆ. ಪಾರ್ಟ್ನರ್ ಚಿತ್ರದಲ್ಲಿ 1978ರ ಡಾನ್ ಸಿನಿಮಾದ ಅಮಿತಾಬ್ ಬಚ್ಚನ್ ಪಾತ್ರದ ಅಣಕವೂ ಗಮನ ಸೆಳೆದಿತ್ತು. ಯಾದವ್ ಅವರ ಪಾತ್ರಗಳು ಬಹುಪಾಲು ಅವರ ಕುಳ್ಳಗಿನ ದೇಹವನ್ನೇ ಹೈಲೈಟ್ ಮಾಡುತ್ತವೆ. ಪಾರ್ಟ್ನರ್ನಲ್ಲಿ ‘ಛೋಟಾ ಡಾನ್’, ಭೂಲ್ ಭುಲೈಯಾದಲ್ಲಿ ‘ಛೋಟೆ ಪಂಡಿತ್’. 1999ರಲ್ಲಿ ಪಾದಾರ್ಪಣೆ NSDಯಿಂದ ಪದವಿ ಪಡೆದ ಬಳಿಕ ಕೆಲಸ ಹುಡುಕುತ್ತಿದ್ದ ಯಾದವ್ ಅವರನ್ನು ಅನುರಾಗ್ ಕಶ್ಯಪ್ ಶೂಲ್ (1999) ಚಿತ್ರಕ್ಕೆ ಶಿಫಾರಸು ಮಾಡಿದರು. ಮೊದಲಿಗೆ ಮೂರು ಸಂಭಾಷಣೆಗಳಿದ್ದ ಪಾತ್ರ, ಚಿತ್ರೀಕರಣದ ವೇಳೆಗೆ ಹದಿನೈದು ಸಂಭಾಷಣೆಗಳಾಯಿತು. ಇದೇ ಅವರ ಮೊದಲ ಬಾಲಿವುಡ್ ಚಿತ್ರ. ಮನೋಜ್ ಬಾಜ್ಪೇಯಿ ಅಭಿನಯದ ಈ ಚಿತ್ರದಲ್ಲಿ ಹೆಚ್ಚುವರಿ ಶುಲ್ಕ ಬೇಡುವ ಕೂಲಿ ಪಾತ್ರದಲ್ಲಿ ನಟಿಸಿದ್ದರು. ಅದೇ ವರ್ಷ ಪ್ರಕಾಶ್ ಝಾ ನಿರ್ದೇಶನದ ದೂರದರ್ಶನ ಸರಣಿ ಮುಂಗೇರಿ ಕೆ ಭಾಯ್ ನೌರಂಗಿಲಾಲ್ ಮೂಲಕ ಟಿವಿಗೆ ಪಾದಾರ್ಪಣೆ ಮಾಡಿದರು. ನಂತರ ರಾಮ್ ಗೋಪಾಲ್ ವರ್ಮಾ ನಿರ್ದೇಶನದ ಜಂಗಲ್ ಚಿತ್ರದಲ್ಲಿ ಗೆರಿಲ್ಲಾ ಸೈನಿಕ ‘ಸಿಪ್ಪಾ’ ಪಾತ್ರ ನಿರ್ವಹಿಸಿದ್ದು ವೃತ್ತಿಜೀವನದ ಮಹತ್ತರ ತಿರುವಾಯಿತು. 2000ರಲ್ಲಿ ಈ ಪಾತ್ರಕ್ಕೆ ಅತ್ಯುತ್ತಮ ನೆಗೆಟಿವ್ ರೋಲ್ ವಿಭಾಗದಲ್ಲಿ ಸ್ಕ್ರೀನ್ ಅವಾರ್ಡ್ ಗೆದ್ದರು. ಮೇ ಮಾಧುರಿ ದೀಕ್ಷಿತ್ ಬನ್ನಾ ಚಾಹತಿ ಹೂನ್ (2003) ಚಿತ್ರದಲ್ಲಿ ನಾಯಕನ ಪಾತ್ರ ನೀಡಿದವರೂ ರಾಮ್ ಗೋಪಾಲ್ ವರ್ಮಾ. ಚಂದನ್ ಅರೋರಾ ನಿರ್ದೇಶನದ ಮೇ ಮೇರಿ ಪತ್ನಿ ಔರ್ ವೋ ಚಿತ್ರದಲ್ಲಿಯೂ ನಟಿಸಿದರು. ಮೊದಲ ಚಿತ್ರಕ್ಕಾಗಿ Zee ಅವಾರ್ಡ್ನಲ್ಲಿ ಅತ್ಯುತ್ತಮ ಪೋಷಕ ನಟ ವಿಭಾಗಕ್ಕೆ ನಾಮನಿರ್ದೇಶನಗೊಂಡಿದ್ದು, ಎರಡನೇ ಚಿತ್ರದಿಗಾಗಿ ಹಾಸ್ಯ ವಿಭಾಗದಲ್ಲಿ ಎರಡು ಬಾರಿ ನಾಮಿನೇಟ್ ಆಗಿದ್ದರು. ಚಿತ್ರ ನಿರ್ದೇಶಿಸುವ ಉದ್ದೇಶ ಹೊಂದಿರಲಿಲ್ಲ ಅತಾ ಪತಾ ಲಾಪತಾ ಚಿತ್ರವನ್ನು ಯಾದವ್ ಅವರ ಪತ್ನಿ ಶ್ರೀ ನೌರಂಗ್ ‘ಗೋದಾವರಿ ಎಂಟರ್ಟೈನ್ಮೆಂಟ್’ ಬ್ಯಾನರ್ ಅಡಿಯಲ್ಲಿ ನಿರ್ಮಿಸಿದ್ದರು. ಚಿತ್ರದ ಸಂಗೀತ ಆಲ್ಬಮ್ ಅನ್ನು ಅಮಿತಾಬ್ ಬಚ್ಚನ್ ಬಿಡುಗಡೆ ಮಾಡಿದ್ದರು. ಯಾದವ್ ಸ್ವತಃ ಚಿತ್ರವನ್ನು ನಿರ್ದೇಶಿಸುವ ಉದ್ದೇಶ ಹೊಂದಿರಲಿಲ್ಲ; ಸ್ನೇಹಿತನಿಗಾಗಿ ನಿರ್ಮಾಣಕ್ಕೆ ಮುಂದಾಗಿದ್ದರು. ಆದರೆ ನಂತರ ನಿರ್ದೇಶನ ಹೊಣೆ ಹೊತ್ತರು. ಸುಮಾರು ₹12 ಕೋಟಿ ವೆಚ್ಚದಲ್ಲಿ ನಿರ್ಮಿತವಾದ ಈ ಚಿತ್ರವು ಕೇವಲ ₹42 ಲಕ್ಷ ಗಳಿಸಿತು ಎಂದು ನಿರ್ದೇಶಕ ಅರೋರಾ ಹೇಳಿದ್ದಾರೆ.
Bhalki | ದೈವ, ರಾಷ್ಟ್ರಪಿತರ ವಿರುದ್ಧ ಅವಹೇಳನಕಾರಿ ಹೇಳಿಕೆ ಆರೋಪ: ಕ್ರಮಕ್ಕೆ ಆಗ್ರಹ
ಭಾಲ್ಕಿ : ಸಾರ್ವಜನಿಕವಾಗಿ ದೈವಗಳ ಮತ್ತು ರಾಷ್ಟ್ರಪಿತರ ವಿರುದ್ದ ಅವಹೇಳನಾಕಾರಿ ಹೇಳಿಕೆ ನೀಡಿ, ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿರುವ ಅಪರಾಧಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಶಿವು ಲೋಖಂಡೆ, ಸಚೀನ್ ಜಾಧವ್, ದೇವರಾಜಸಿಂಗ್ ಠಾಕೂರ್ ನೇತೃತ್ವದಲ್ಲಿ ಡಿವೈಎಸ್ಪಿ ಶಿವಾನಂದ್ ಪವಾಡಿಶೆಟ್ಟಿ ಅವರಿಗೆ ಮನವಿ ಪತ್ರ ಸಲ್ಲಿಸಿತು. ಮನವಿ ಪತ್ರದಲ್ಲಿ, ರೈಲಿನಲ್ಲಿ ಪ್ರಯಾಣಿಸುತ್ತಿರುವಾಗ ಕಾಳಿದಾಸ್ ಸೂರ್ಯವಂಶಿ, ಕಪಿಲ್ ಗೋಡಬೊಲೆ ಹಾಗೂ ರಾಹುಲ್ ಖಂದಾರೆ ಸೇರಿದಂತೆ ಹಲವರು ತಮ್ಮ ಸಹಚರರೊಂದಿಗೆ ಭಾರತೀಯ ಮಹಾತ್ಮರಿಗೆ, ಹಿಂದೂಗಳ ಆರಾಧ್ಯ ದೈವರಿಗೆ ಅವಹೇಳನಾಕಾರಿ ಮಾತನಾಡುತ್ತಾ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ ಎಂದು ಆರೋಪಿಸಿದ್ದಾರೆ. ಹಿಂದೂಗಳ ಪರಮ ಆರಾಧ್ಯ ದೈವ ಶ್ರೀರಾಮಚಂದ್ರ, ಶ್ರೀಕೃಷ್ಣ ಪರಮಾತ್ಮ ಸೇರಿದಂತೆ ರಾಷ್ಟ್ರಪಿತ ಮಹಾತ್ಮಾ ಗಾಂಧಿ ಅವರ ಬಗ್ಗೆ ಅವಹೇಳನಾಕಾರಿ, ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ರೀತಿಯಲ್ಲಿ ಮಾತನಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಮುಖಂಡರಾದ ಜೈರಾಜ್ ಕೊಳ್ಳಾ, ರವಿಕಾಂತ್ ಕುಂಬಾರ್, ಶೈಲೇಶ್ ಮಾಲಪಾಣಿ, ಪಾಂಡುರಂಗ್ ಕನಸೆ, ಗಣಪತರಾವ್ ನಗಟೆ, ಸಂದೀಪ್ ತೆಲಗಾಂವಕರ್, ಪ್ರಭಾಕರ್ ಜಾಧವ್, ಕೃಷ್ಣಾ, ಮಲ್ಲಿಕಾರ್ಜುನ್ ಸೋಲಾಪೂರೆ, ಸಾಗರ್ ಗುಬ್ಬೆ, ಬಸವಾ ಭುಸಗುಂಡೆ, ಪ್ರಕಾಶ್ ಪಾಟೀಲ್, ನವನಾಥ್ ಪಾಟೀಲ್, ವಿಜಯಕುಮಾರ್ ಇದ್ದರು.
ಹಾರ್ದಿಕ್ ಪಾಂಡ್ಯ ಅವರ ಆಲ್ರೌಂಡ್ ಆಟ ಮತ್ತು ಇಶಾನ್ ಕಿಶನ್ ಅವರ ಸೊಗಸಾದ ಅರ್ಧಶತಕಗಳ ನೆರವಿನಿಂದ ಭಾರತ ತಂಡ ಕ್ರಿಕೆಟ್ ಶಿಶು ನಮೀಬಿಯಾವನ್ನು 93 ರನ್ ಗಳಿಂದ ಸೋಲಿಸಿದೆ. ಈ ಮೂಲಕ 2 ಪಂದ್ಯಗಳಿಂದ 4 ಅಂಕ ಗಳಿಸಿದ ಸೂರ್ಯಕುಮಾರ್ ಯಾದವ್ ಬಳಗ ಅತ್ಯುತ್ತಮ ರನ್ ರೇಟ್ (3.050) ನೊಂದಿಗೆ ಪ್ರಥಮ ಸ್ಥಾನಕ್ಕೇರಿದೆ. ದಿಲ್ಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ ನಿಗದಿತ 20 ಓವರ್ ಗಳಲ್ಲಿ 9 ವಿಕೆಟ್ ಕಳೆದುಕೊಂಡು 209 ರನ್ ಪೇರಿಸಿತು. ಈ ಮೊತ್ತವನ್ನು ಬೆಂಬತ್ತಿ ಹೊರಟ ನಮೀಬಿಯಾ ತಂಡ ಕೇವಲ 18.2 ಓವರ್ ಗಳಲ್ಲೇ 116 ರನ್ ಗಳಿಗೆ ಸರ್ವಪತನ ಕಂಡಿತು. ()ಇದಕ್ಕೂ ಮೊದಲು ಟಾಸ್ ಸೋತು ಬ್ಯಾಟಿಂಗ್ ಮಾಡಿದ ಭಾರತ ತಂಡ ಭರ್ಜರಿ ಆರಂಭವನ್ನೇ ಪಡೆಯಿತು. ಅಭಿಷೇಕ್ ಶರ್ಮಾ ಅಲಭ್ಯತೆಯಿಂದಾಗಿ ಆಡುವ ಅವಕಾಶಅವರು ಉತ್ತಮ ಲಯದಲ್ಲಿದ್ದಂತೆ ಕಂಡರು. 1 ಬೌಂಡರಿ ಮತ್ತು 3 ಸಿಕ್ಸರ್ ಗಳನ್ನೂ ಸಿಡಿಸಿದ್ದರು. ಆದರೆ ಕೆಟ್ಟ ಹೊಡೆತಕ್ಕೆ ಕೈಹಾಕಿ ವಿಕೆಟ್ ಕಳೆದುಕೊಂಡರು. ಕೇವಲ 8 ಎಸೆತಗಳನ್ನು ಎದುರಿಸಿದ ಅವರು 22 ರನ್ ಗಳಿಸಿದರು. ಇದಾದ ಬಳಿಕ ಮತ್ತೊಬ್ಬ ಆರಂಭಿಕ ಇಶಾನ್ ಕಿಶನ್ ಮಾತ್ರ ಭರ್ಜರಿ ಬ್ಯಾಟಿಂಗ್ ಮುಂದುವರಿಸಿದರು. ಕೇವಲ 20 ಎಸೆತಗಳಲ್ಲೇ ಅರ್ಧಶತಕ ಪೂರೈಸಿದ ಅವರು ಔಟಾಗುವ ಮುಂಚೆ 24 ಎಸೆತಗಳಲ್ಲಿ 61 ರನ್ ಗಳಿಸಿ ಔಟಾದರು. ಅವರ ಇನ್ನಿಂಗ್ಸ್ ನಲ್ಲಿ 6 ಬೌಂಡರಿ ಮತ್ತು 5 ಸಿಕ್ಸರ್ ಗಳಿದ್ದವು. ಮಧ್ಯಮ ಕ್ರಮಾಂಕದಲ್ಲಿ ಹಾರ್ದಿಕ್ ಪಾಂಡ್ಯ ಅವರು ಅವರು ಕೇವಲ 28 ಎಸತೆದಲ್ಲಿ 52 ರನ್ ಗಳಿಸಿದರು. ಹೀಗಾಗಿ ತಂಡ 200ರ ಗಡಿ ದಾಟಿತು. ಆಲ್ರೌಂಡ್ ಪ್ರದರ್ಶನ ನೀಡಿದ ಹಾರ್ದಿಕ್ ಪಾಂಡ್ಯ ಅವರು ಅರ್ಹವಾಗಿ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಸಂಕ್ಷಿಪ್ತ ಸ್ಕೋರ್ ಭಾರತ 20 ಓವರ್ ಗಳಲ್ಲಿ 209/9, ಇಶಾನ್ ಕಿಶನ್ 61(24), ಹಾರ್ದಿಕ್ ಪಾಂಡ್ಯ 52(28), ತಿಲಕ್ ವರ್ಮಾ 25(21), ಶಿವಂ ದುಬೆ 23(16), ಸಂಜು ಸ್ಯಾಮ್ಸನ್ 22(8), ಜೆರಾಲ್ಡ್ ಎರಾಸ್ಮಸ್ 20ಕ್ಕೆ 4 ನಮೀಬಿಯಾ 18.2 ಓವರ್ ಗಳಲ್ಲಿ 116/10, ಲಾರೆನ್ ಸ್ಟೀನ್ ಕ್ಯಾಂಪ್ 29(20), ಜಾನ್ ಫ್ರೈಲಿಂಕ್ 22(15), ಜೆರಾಲ್ಡ್ ಎರಾಸ್ಮಸ್ 18(11), ವರುಣ್ ಚಕ್ರವರ್ತಿ 7ಕ್ಕೆ 3, ಹಾರ್ದಿಕ್ ಪಾಂಡ್ಯ 21ಕ್ಕೆ 2, ಅಕ್ಷರ್ ಪಟೇಲ್ 20ಕ್ಕೆ 2.
ವಿಜಯನಗರ | ವಸಂತ ವೈಭವ ಉತ್ಸವಕ್ಕೆ ಚಾಲನೆ
ವಿಜಯನಗರ (ಹೊಸಪೇಟೆ) : ವಸಂತ ವೈಭವ ಉತ್ಸವಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಬಿ.ಜೆಡ್. ಜಮೀರ್ ಅಹ್ಮದ್ ಖಾನ್ ಹಾಗೂ ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ ಚಾಲನೆ ನೀಡಿದರು. ನಗರದ ವಾಡಕರಾಯ ದೇವಸ್ಥಾನದಿಂದ ಆರಂಭವಾದ ಭವ್ಯ ಮೆರವಣಿಗೆ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಪುನೀತ್ ರಾಜ್ ಕುಮಾರ್ ವೃತ್ತದಲ್ಲಿ ಸಮಾಪ್ತಿಯಾಯಿತು. ಮೆರವಣಿಗೆಯಲ್ಲಿ ಜಾನಪದ ಕಲೆಗಳ ವೈಭವ ಜನಮನ ಸೆಳೆಯಿತು. ಕಂಸಾಳೆ, ಡೊಳ್ಳು ಕುಣಿತ, ವೀರಗಾಸೆ, ಯಕ್ಷಗಾನ ವೇಷಧಾರಿಗಳು ತಮ್ಮ ಅದ್ಭುತ ಪ್ರದರ್ಶನದ ಮೂಲಕ ಜನರನ್ನು ಮಂತ್ರಮುಗ್ಧಗೊಳಿಸಿದರು. ರಾಮ, ಲಕ್ಷ್ಮಣ, ಆಂಜನೇಯ ಸೇರಿದಂತೆ ವಿವಿಧ ಪೌರಾಣಿಕ ಪಾತ್ರಗಳ ವೇಷಭೂಷಣ, ತೊಗಲು ಗೊಂಬೆ, ಕೀಲು ಕುದುರೆ ಕುಣಿತ ಹಾಗೂ ಮನಮೋಹಕ ಸ್ತಬ್ಧಚಿತ್ರಗಳು ಮೆರವಣಿಗೆಯ ಅಂದವನ್ನು ಇಮ್ಮಡಿಗೊಳಿಸಿತು. ನಾದಸ್ವರ, ತಮಟೆ ಸೇರಿದಂತೆ ಸಾಂಪ್ರದಾಯಿಕ ಮಂಗಳವಾದ್ಯಗಳ ನಾದಕ್ಕೆ ಕಲಾವಿದರು ಹೆಜ್ಜೆ ಹಾಕುತ್ತಿದ್ದರೆ, ಸಾರ್ವಜನಿಕರು ಸಹ ತಾಳಕ್ಕೆ ತಕ್ಕಂತೆ ಕುಣಿದು ಸಂಭ್ರಮಿಸಿದರು. ಮೆರವಣಿಗೆ ಹಾದಿಯುದ್ದಕ್ಕೂ ಸಾಂಪ್ರದಾಯಿಕ ವೇಷಭೂಷಣ ತೊಟ್ಟ ಮಹಿಳೆಯರು ತಾಯಿ ಭುವನೇಶ್ವರಿ ದೇವಿಯ ಮೂರ್ತಿಯನ್ನು ಹೊತ್ತು ಗಜಲಕ್ಷ್ಮಿ ಕಲಾತಂಡಗಳೊಂದಿಗೆ ಗಾಂಭೀರ್ಯದಿಂದ ಸಾಗಿದರು. ರಸ್ತೆ ಇಕ್ಕೆಲಗಳಲ್ಲಿ ನಿಂತ ಜನರು ಹೂವಿನ ಮಳೆಯ ಮೂಲಕ ಸ್ವಾಗತಿಸಿದರು. ವಿಶೇಷವಾಗಿ ಬಂಜಾರ ಸಂಸ್ಕೃತಿಯ ಉಡುಪು, ಕರಗ ಮತ್ತು ಡೊಳ್ಳು ಕುಣಿತ ನೋಡುಗರ ಗಮನ ಸೆಳೆಯಿತು. ‘ವಸಂತ ಉತ್ಸವ’ದ ಅಂಗವಾಗಿ ನಡೆದ ಈ ವೈಭವಮಯ ಮೆರವಣಿಗೆ ಜನರಿಗೆ ಕಣ್ಣಿಗೆ ಹಬ್ಬದಂತೆ ಭಾಸವಾಯಿತು. ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ನೋಂಗ್ಜಾಯ್ ಮೋಹಮ್ಮದ್ ಅಲಿ ಅಕ್ರಮ್ ಷಾ, ಅಪರ ಜಿಲ್ಲಾಧಿಕಾರಿ ಇ. ಬಾಲಕೃಷ್ಣ, ಸಹಾಯಕ ಆಯುಕ್ತ ವಿವೇಕ್ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
ಜಾರ್ಖಂಡ್| ಶಾಲೆಯಲ್ಲಿ ಸರಸ್ವತಿ ಪೂಜೆಗೆ ಹಣ ನೀಡದ ವಿದ್ಯಾರ್ಥಿಗಳಿಗೆ 100 ಸಿಟ್ ಅಪ್ ಶಿಕ್ಷೆ, ಊಟ ನಿರಾಕರಣೆ: ಆರೋಪ
ರಾಂಚಿ, ಫೆ. 12: ಜಾರ್ಖಂಡ್ನ ದುಮ್ಕಾದ ಜರ್ಮುಂಡಿ ಬಾಲಕಿಯ ಮಾಧ್ಯಮಿಕ ಶಾಲೆಯ ವಿದ್ಯಾರ್ಥಿನಿಯರು ಸರಸ್ವತಿ ಪೂಜೆಗೆ 100 ರೂ. ದೇಣಿಗೆ ತರಲಿಲ್ಲ ಎಂಬ ಕಾರಣಕ್ಕೆ ಅವರಿಗೆ 100 ಸಿಟ್ ಅಪ್ಗಳ ಶಿಕ್ಷೆ ನೀಡಿದ ಹಾಗೂ ಮಧ್ಯಾಹ್ನದ ಊಟ ನಿರಾಕರಿಸಿದ ಆಘಾತಕಾರಿ ಘಟನೆ ನಡೆದಿದೆ. ಶಾಲೆಯ ಪ್ರಾಂಶುಪಾಲರ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಿ ಕೆಲವು ಪೋಷಕರು ಹಾಗೂ ವಿದ್ಯಾರ್ಥಿಗಳು ಉಪ ಆಯುಕ್ತರಲ್ಲಿ ಔಪಚಾರಿಕ ದೂರು ದಾಖಲಿಸಿದ್ದಾರೆ. ಅವರು ತಮ್ಮ ಅರ್ಜಿಯಲ್ಲಿ, ಜರ್ಮುಂಡಿ ಬಾಲಕಿಯರ ಮಾಧ್ಯಮಿಕ ಶಾಲೆಯ ಮುಖ್ಯೋಪಾಧ್ಯಾಯರು ಸರಸ್ವತಿ ಪೂಜೆಗೆ ಪ್ರತಿ ವಿದ್ಯಾರ್ಥಿಯಿಂದ 100 ರೂ. ದೇಣಿಗೆ ಕೇಳಿದ್ದಾರೆ ಎಂದು ಆರೋಪಿಸಿದ್ದಾರೆ. ಹಣ ತರದ ವಿದ್ಯಾರ್ಥಿನಿಯರಿಗೆ ಪೂಜೆಯ ನಂತರ ಕಿರುಕುಳ ನೀಡಲಾಗಿದೆ ಹಾಗೂ ತರಗತಿಗೆ ಹಾಜರಾಗುವುದನ್ನು ತಡೆಯಲಾಗಿದೆ ಎಂದು ಅವರು ಹೇಳಿದ್ದಾರೆ. ಮನೆಯಿಂದ ದೇಣಿಗೆ ತರುವಂತೆ ಮುಖ್ಯೋಪಾಧ್ಯಾಯರು ಸೂಚಿಸಿದರು. ಹಣ ತರಲು ಸಾಧ್ಯವಾಗದೇ ಇರುವವರಿಗೆ ಶಿಕ್ಷೆ ವಿಧಿಸಲಾಯಿತು ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ. ಸರಸ್ವತಿ ಪೂಜೆಗೆ 100 ರೂ. ದೇಣಿಗೆ ತರುವಂತೆ ಹೇಳಲಾಗಿತ್ತು. ತಾನು ಹಣ ನೀಡಲು ನಿರಾಕರಿಸಿದಾಗ, ಮುಖ್ಯೋಪಾಧ್ಯಾಯರು ಪೂಜೆಯ ನಂತರ 100 ಸಿಟ್ ಅಪ್ಗಳನ್ನು ಮಾಡುವಂತೆ ತನ್ನನ್ನು ಒತ್ತಾಯಿಸಿದರು ಹಾಗೂ ಮಧ್ಯಾಹ್ನದ ಊಟವನ್ನು ನಿರಾಕರಿಸಿದರು ಎಂದು 7ನೇ ತರಗತಿ ವಿದ್ಯಾರ್ಥಿನಿ ನೀತು ಕುಮಾರಿ ತಿಳಿಸಿದ್ದಾರೆ. ತಾನು ಖಾಲಿ ಹೊಟ್ಟೆಯಲ್ಲಿ 100 ಸಿಟ್ ಅಪ್ಗಳನ್ನು ಮಾಡಿದ ನಂತರ ಅಸ್ವಸ್ಥಳಾದೆ. ಮನೆಗೆ ಹೋಗಲು ಅನುಮತಿ ಕೇಳಿದೆ. ಆದರೆ, ಹೋಗಲು ಬಿಡಲಿಲ್ಲ. ಕಾರ್ಯಕ್ರಮ ಮುಗಿಯುವ ವರೆಗೆ ಶಾಲೆಯಲ್ಲಿ ಕುಳಿತುಕೊಳ್ಳುವಂತೆ ಹೇಳಿದರು ಎಂದು ಆಕೆ ಆರೋಪಿಸಿದ್ದಾಳೆ. ‘‘ನಾನು ಮನೆಗೆ ಹೋಗಲು ಮುಖ್ಯೋಪಾಧ್ಯಾಯರ ಅನುಮತಿ ಕೇಳಿದೆ. ಅದಕ್ಕೆ ಅವರು, ನನ್ನನ್ನು ಶೂರ್ಪನಖಿಯನ್ನಾಗಿ ಮಾಡುವುದಾಗಿ ಹೇಳಿದರು’’ ಎಂದು ನೀತು ಕುಮಾರಿ ತಿಳಿಸಿದ್ದಾಳೆ. ಆಕೆ ಸಂಜೆ ಮನೆಗೆ ಹಿಂದಿರುಗಿದ ಬಳಿಕ ತನ್ನ ತಾಯಿ ರೀಟಾ ದೇವಿಗೆ ನಡೆದ ಘಟನೆಯನ್ನು ವಿವರಿಸಿದಳು. ಅವರಿಗೆ ಶಾಲೆಯಲ್ಲಿ ಸಿಟ್ ಅಪ್ ತೆಗೆದ ಬಳಿಕ ತನ್ನ ಮಗಳು ಕಾಲು ಹಾಗೂ ಹೊಟ್ಟೆ ನೋವಿನಿಂದ ಬಳಲುತ್ತಿರುವುದನ್ನು ನೋಡಿ ಆಘಾತವಾಯಿತು. ತಾನು ಇದುವರೆಗೆ ಯಾವುದೇ ಲಿಖಿತ ದೂರನ್ನು ಸ್ವೀಕರಿಸಿಲ್ಲ ಎಂದು ದುಮ್ಕಾದ ಉಪ ಆಯುಕ್ತ ಅಭಿಜಿತ್ ಸಿನ್ಹಾ ತಿಳಿಸಿದ್ದಾರೆ. ವಿಷಯದ ಬಗ್ಗೆ ತಿಳಿಸಿದ ನಂತರ ಅವರು ಆರೋಪದ ಕುರಿತು ತನಿಖೆ ನಡೆಸುವಂತೆ ಹಾಗೂ ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ನಿರ್ದೇಶಿಸಿದ್ದಾರೆ.
ಕೇಂದ್ರ ಸರಕಾರ ನರೇಗಾ ಮೂಲ ಸ್ವರೂಪ ಬದಲಾವಣೆ ಮಾಡಿದೆ: ಸುಧೀರ್ ಕುಮಾರ್ ಮುರೊಳ್ಳಿ
ಬಂಟ್ವಾಳ: ಯಪಿಎ ಸರಕಾರದ ಮಹತ್ವಾಕಾಂಕ್ಷೆಯ ಕಾರ್ಯಕ್ರಮವಾಗಿ ಜನಪರ ನರೇಗಾ ಯೋಜನೆ ಜಾರಿ ಗೊಂಡಿದ್ದು, ಆದರೆ ಗ್ರಾಮೀಣ ಜನತೆಯ ಉದ್ಯೋಗ ಕಸಿಯುವ ದೃಷ್ಟಿಯಿಂದ ಕೇಂದ್ರ ಸರಕಾರ ನರೇಗಾ ಮೂಲ ಸ್ವರೂಪ ಬದಲಾವಣೆ ಮಾಡಿದೆ ಎಂದು ಕೆಪಿಸಿಸಿ ಸಂಯೋಜಕ ಸುಧೀರ್ ಕುಮಾರ್ ಮುರೊಳ್ಳಿ ಹೇಳಿದರು. ಕೇಂದ್ರ ಸರಕಾರವು ನರೇಗಾ ಯೋಜನೆಯ ಹೆಸರು ಹಾಗೂ ಸ್ವರೂಪ ಬದಲಿಸಿರುವುದನ್ನು ಖಂಡಿಸಿ ದ.ಕ.ಜಿಲ್ಲಾ ಕಾಂಗ್ರೆಸ್ ಹಮ್ಮಿಕೊಂಡಿರುವ ಮನರೇಗಾ ಬಚಾವ್ ಸಂಗ್ರಾಮ ಪಾದಯಾತ್ರೆಯ ಭಾಗವಾಗಿ ಮುಡಿಪು ಹಾಗೂ ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಫರಂಗಿಪೇಟೆಯಲ್ಲಿ ನಡೆದ 3 ನೇ ದಿನದ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದರು. ಗ್ರಾಮ ಸ್ವರಾಜ್ಯದ ಕಲ್ಪನೆಯನ್ನು ಮಾಡಿದ್ದ ಮಹಾತ್ಮಾ ಗಾಂಧಿ ಅವರ ಹೆಸರನ್ನು ಯೋಜನೆಗೆ ಇಡಲಾಗಿದ್ದು, ಆದರೆ ಈಗಿನ ಸರಕಾರದ ಗಾಂಧಿಯ ಕೊಲೆಯನ್ನು ಸಮರ್ಥಿಸುವ ಧ್ಯೇಯವನ್ನು ಹೊಂದಿರುವ ಕಾರಣಕ್ಕೆ ಗಾಂಧಿಯ ಹೆಸರು ಬದಲಾವಣೆ ಮಾಡಿರುವುದರಲ್ಲಿ ಅಚ್ಚರಿ ಇಲ್ಲ. ಕಾಂಗ್ರೆಸ್ ಯೋಜನೆಯನ್ನು ಜಾರಿಗೆ ತರುವಾಗ ಗ್ರಾಮೀಣ ಜನತೆಗೆ ಉದ್ಯೋಗ ಕೊಡುವ ಯೋಚನೆ ಇತ್ತೇ ಹೊರತು ಜಾತಿ, ಧರ್ಮದ ಆಲೋಚನೆಗಳೇ ಇರಲಿಲ್ಲ. ವರ್ಷದ 365 ದಿನವೂ ಉದ್ಯೋಗ ನೀಡಿ ಹಳ್ಳಿಯಲ್ಲೇ ಉದ್ಯೋಗ ನಿರ್ಧಾರವಾಗುತ್ತಿದ್ದು, ಆದರೆ ಈಗಿನ ಬದಲಾ ವಣೆ ಯಿಂದ ಹಳ್ಳಿಯ ಕೆಲಸಗಳು ಹೊಸದಿಲ್ಲಿಯಲ್ಲಿ ನಿರ್ಧಾರವಾಗುವ ಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಕಾಂಗ್ರೆಸ್ ನಿರಂತರವಾಗಿ ಹೋರಾಟದ ಮೂಲಕ ನಿಮ್ಮ ಕೈಯಲ್ಲೇ ಹಿಂದಿನ ಸ್ವರೂಪಕ್ಕೆ ತಂದು ನಿಲ್ಲಿಸುತ್ತೇವೆ. ಮುಂದಿನ ಅವಧಿಯಲ್ಲಿ ಕೇಂದ್ರದಲ್ಲಿ ಕಾಂಗ್ರೆಸ್ ಸರಕಾರ ಬರುವುದು ಶತಸಿದ್ಧ ಎಂದರು. ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ದ.ಕ.ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಹರೀಶ್ ಕುಮಾರ್, , ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ ಎಸ್ ಮಹಮ್ಮದ್, ಕಾರ್ಯದರ್ಶಿ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ದ.ಕ.ಜಿಲ್ಲಾ ಅಲ್ಪ ಸಂಖ್ಯಾತ ಘಟಕದ ಅಧ್ಯಕ್ಷ ಕೆ.ಕೆ.ಶಾಹುಲ್ ಹಮೀದ್, ನಿಗಮಗಳ ಅಧ್ಯಕ್ಷರಾದ ಮಮತಾ ಗಟ್ಟಿ, ಶಾಲೆಟ್ ಪಿಂಟೋ, ಮೂಡಾ ಅಧ್ಯಕ್ಷ ಸದಾಶಿವ ಉಳ್ಳಾಲ್, ದ.ಕ.ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಇಬ್ರಾಹಿಂ ನವಾಜ್, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾದ ಅಪ್ಪಿ, ಉಷಾ ಅಂಚನ್, ಮಾಜಿ ಮೇಯರ್ ಎಂ.ಶಶಿಧರ್ ಹೆಗ್ಡೆ, ಮುಡಿಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಶಾಂತ್ ಕಾಜವ, ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಬೋಳ್ಯಾರ್, ಪುದು ಗ್ರಾ.ಪಂ. ಅಧ್ಯಕ್ಷ ರಮ್ಲಾನ್ ಮಾರಿಪಳ್ಳ, ಪ್ರಮುಖರಾದ ಸುಭಾಶ್ಚಂದ್ರ ಶೆಟ್ಟಿ ಕುಳಾಲು, ವೃಂದಾ ಮೇರಮಜಲು, ಶೈಲಜಾ ರಾಜೇಶ್ ಮೊದಲಾದವರು ಉಪಸ್ಥಿತರಿದ್ದರು. ಕೆಪಿಸಿಸಿ ಸದಸ್ಯ ಉಮ್ಮರ್ ಫಾರೂಕ್ ಫರಂಗಿಪೇಟೆ ಸ್ವಾಗತಿಸಿ, ತಾಲೂಕು ಪಂಚಾಯತ್ ಮಾಜಿ ಸದಸ್ಯ ಆಸಿಫ್ ಇಕ್ಬಾಲ್ ವಂದಿಸಿದರು. ಇರಾ ಗ್ರಾ.ಪಂ.ಮಾಜಿ ಅಧ್ಯಕ್ಷ ಅಬ್ದುಲ್ ರಝಾಕ್ ಕುಕ್ಕಾಜೆ ಕಾರ್ಯಕ್ರಮ ನಿರ್ವಹಿಸಿದರು.
ಪುತ್ರಿಯನ್ನು ಉತ್ತರಾಧಿಕಾರಿಯಾಗಿ ಆಯ್ಕೆ ಮಾಡಿದ ಉತ್ತರ ಕೊರಿಯಾ ಅಧ್ಯಕ್ಷ ಕಿಮ್ ಜಾಂಗ್ ಉನ್
ಪ್ಯೋಂಗ್ಯಾಂಗ್, ಮಾ.12: ಉತ್ತರ ಕೊರಿಯಾದ ಅಧ್ಯಕ್ಷ ಕಿಮ್ ಜಾಂಗ್ ಉನ್ ತನ್ನ ಹದಿಹರೆಯದ ಪುತ್ರಿ ಕಿಮ್ ಜು ಏ ಅವರನ್ನು ಉತ್ತರಾಧಿಕಾರಿಯನ್ನಾಗಿ ಆಯ್ಕೆ ಮಾಡಿರುವುದಾಗಿ ದಕ್ಷಿಣ ಕೊರಿಯಾದ ಗುಪ್ತಚರ ಇಲಾಖೆ ಗುರುವಾರ ಮಾಹಿತಿ ನೀಡಿದೆ. ಇತ್ತೀಚಿನ ದಿನಗಳಲ್ಲಿ ಸರಕಾರಿ ಕಾರ್ಯಕ್ರಮಗಳಲ್ಲಿ 13 ವರ್ಷದ ಕಿಮ್ ಜು ಅವರ ಉಪಸ್ಥಿತಿ ಹೆಚ್ಚಾಗಿ ಗಮನ ಸೆಳೆಯುತ್ತಿತ್ತು. ತಂದೆ ಭಾಗವಹಿಸುತ್ತಿದ್ದ ಪ್ರಮುಖ ಕಾರ್ಯಕ್ರಮಗಳಲ್ಲಿ ಕಿಮ್ ಜು ಅವರೂ ಜತೆಯಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಸೆಪ್ಟಂಬರ್ನಲ್ಲಿ ಕಿಮ್ ಜು ಚೀನಾಕ್ಕೆ ಭೇಟಿ ನೀಡಿದ್ದರು ಎಂದು ಮೂಲಗಳನ್ನು ಉಲ್ಲೇಖಿಸಿ ಬಿಬಿಸಿ ವರದಿ ಮಾಡಿದೆ.
ನಾಳೆ ನೂತನ ಪ್ರಧಾನಿ ಕಾರ್ಯಾಲಯ ‘ಸೇವಾತೀರ್ಥ’, ಸಚಿವಾಲಯ ಸಂಕೀರ್ಣ ‘ಕರ್ತವ್ಯ ಭವನ’ ಉದ್ಘಾಟನೆ
ಹೊಸದಿಲ್ಲಿ,ಫೆ.12: ನೂತನ ಪ್ರಧಾನಿ ಕಾರ್ಯಾಲಯ ‘ಸೇವಾ ತೀರ್ಥ’ ಹಾಗೂ ಕೇಂದ್ರ ಸರಕಾರದ ವಿವಿಧ ಕಚೇರಿ ಮತ್ತು ಸಚಿವಾಲಯಗಳ ಸಂಕೀರ್ಣ ‘ಕರ್ತವ್ಯ ಭವನ’ದ 1 ಹಾಗೂ 2 ಕಟ್ಟಡಗಳನ್ನು ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಉದ್ಘಾಟಿಸಲಿದ್ದಾರೆ. ಈ ಕಟ್ಟಡಗಳ ಉದ್ಘಾಟನೆಯು ಭಾರತದ ಆಡಳಿತಾತ್ಮಕ ಕಚೇರಿಗಳ ವಾಸ್ತುಶಿಲ್ಪದಲ್ಲಿ ಪರಿವರ್ತನಾತ್ಮಕ ಮೈಲುಗಲ್ಲಾಗಲಿದೆೆ. ಅತ್ಯಾಧುನಿಕವಾದ, ದಕ್ಷತೆಯ, ಕೈಗೆಟಕುವ ಮತ್ತು ಪೌರ ಕೇಂದ್ರೀತ ಆಡಳಿತದ ವಾತಾವರಣ ವ್ಯವಸ್ಥೆಯನ್ನು ನಿರ್ಮಿಸುವ ಪ್ರಧಾನಿಯ ಬದ್ಧತೆಯನ್ನು ಇದು ಪ್ರತಿಬಿಂಬಿಸುತ್ತದೆ ಎಂದು ಪ್ರಧಾನಿ ಕಚೇರಿಯ ಹೇಳಿಕೆ ತಿಳಿಸಿದೆ. ಕಳೆದ ಹಲವು ದಶಕಗಳಿಂದ ಕೇಂದ್ರ ಸರಕಾರದ ಪ್ರಮುಖ ಕಚೇರಿಗಳು ಹಾಗೂ ಸಚಿವಾಲಯಗಳು ದಿಲ್ಲಿಯ ಸೆಂಟ್ರಲ್ ವಿಸ್ಟಾ ಪ್ರದೇಶಾದ್ಯಂತ ವಿವಿಧ ಸ್ಥಳಗಳಲ್ಲಿ ಹರಡಿಕೊಂಡಿದ್ದ ಶಿಥಿಲವಾದ ಹಾಗೂ ತೀರಾ ಹಳೆಯ ಮೂಲಸೌಕರ್ಯಗಳಿರುವ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದವು. ಇದರಿಂದಾಗಿ ಕಾರ್ಯನಿರ್ವಹಣೆಯಲ್ಲಿ ಅದಕ್ಷತೆ, ಸಮನ್ವಯದ ಸಮಸ್ಯೆಗಳಿಗೆ ಕಾರಣವಾಗಿದ್ದವು ಮತ್ತು ನಿರ್ವಹಣಾ ವೆಚ್ಚಗಳು ಹೆಚ್ಚಾಗಿದ್ದವು ಮತ್ತು ಕೆಲಸದ ವಾತಾವರಣ ಕೂಡಾ ಸಮರ್ಪಕವಾಗಿರಲಿಲ್ಲ. ನೂತನ ಕಟ್ಟಡ ಸಂಕೀರ್ಣಗಳು ಈ ಸಮಸ್ಯೆಗಳನ್ನು ನಿವಾರಿಸಲಿವೆ ಎಂದು ಪ್ರಧಾನಿ ಕಾರ್ಯಾಲಯದ ಹೇಳಿಕೆ ತಿಳಿಸಿದೆ.
ಫ್ರಾನ್ಸ್ನಿಂದ 114 ರಾಫೇಲ್ ಫೈಟರ್ ಜೆಟ್ಗಳ ಖರೀದಿಗೆ ಡಿಎಸಿ ಅನುಮೋದನೆ
ಹೊಸದಿಲ್ಲಿ,ಫೆ.12: ಫ್ರಾನ್ಸ್ನಿಂದ 114 ರಾಫೇಲ್ ಫೈಟರ್ ಜೆಟ್ಗಳನ್ನು ಖರೀದಿಸುವ ಮಹತ್ವದ ಪ್ರಸ್ತಾವನೆಗೆ ರಕ್ಷಣಾ ಖರೀದಿ ಮಂಡಳಿ(ಡಿಎಸಿ)ಯು ಗುರುವಾರ ಅನುಮೋದನೆ ನೀಡಿದೆ. ಭಾರತವು ಹಿಂದೆಂದೂ ಇಲ್ಲದಂತಹ ಬೃಹತ್ ಗಾತ್ರದ ವಿಮಾನಗಳನ್ನು ಹೊಂದಲು ಹಾಗೂ ಸ್ವದೇಶಿ ರಕ್ಷಣಾ ಉತ್ಪಾದನೆ ಕ್ಷೇತ್ರವನ್ನು ಗಣನೀಯವಾಗಿ ವಿಸ್ತರಿಸಲು ಈ ಪ್ರಸ್ತಾವನೆಯು ಹಾದಿ ಮಾಡಿಕೊಟ್ಟಿದೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅಧ್ಯಕ್ಷತೆಯ ರಕ್ಷಣಾ ಖರೀದಿ ಮಂಡಳಿಯು ಪ್ರಸ್ತಾವನೆಗೆ ಅನುಮೋದನೆ ನೀಡಿದೆ. ಭಾರತೀಯ ವಾಯುಪಡೆಯ ಫೈಟರ್ ವಿಮಾನಗಳ ಸಂಖ್ಯೆಯು ಕ್ಷೀಣಿಸುತ್ತಿರುವ ಕುರಿತು ಹೆಚ್ಚಿದ ಆತಂಕಗಳ ನಡುವೆಯೇ ರಾಫೇಲ್ ವಿಮಾನಗಳ ಖರೀದಿ ಪ್ರಕ್ರಿಯೆಗೆ ಅನುಮೋದನೆ ದೊರೆತಿದೆ. ಈ ತಿಂಗಳ ಅಂತ್ಯದ ವೇಳೆಗೆ ಫ್ರಾನ್ಸ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರೋನ್ ಅವರ ಯೋಜಿತ ಭಾರತ ಭೇಟಿಗೆ ಕೆಲವೇ ಸಮಯದ ಮೊದಲು ಈ ಅನುಮೋದನೆ ದೊರೆತಿದೆ. ಭಾರತ-ಫ್ರಾನ್ಸ್ ನಡುವೆ ವ್ಯೆಹಾತ್ಮಕ ಹಾಗೂ ಆಯಕಟ್ಟಿನ ರಕ್ಷಣಾ ಪಾಲುದಾರಿಕೆ ಹೆಚ್ಚುತ್ತಿರುವ ನಡುವೆ ಈ ಅನುಮೋದನೆ ದೊರೆತಿದೆ. ರಕ್ಷಣಾ ಖರೀದಿ ಮಂಡಳಿಯ ಅನುಮೋದನೆಯ ಬಳಿಕ ಈ ಪ್ರಸ್ತಾವನೆಯು ಭದ್ರತೆ ಹಾಗೂ ವಿಸ್ತೃತ ವಾಣಿಜ್ಯ ಮಾತುಕತೆಗಳ ಕುರಿತ ಕೇಂದ್ರೀಯ ಸಮಿತಿಯ ಪರಿಶೀಲನೆಗೆ ಬರಲಿದೆ. ಭಾರತದ ಯುದ್ಧವಿಮಾನಗಳ ಆಧುನೀಕರಣ ಯೋಜನೆಯಲ್ಲಿ ಈ ಒಪ್ಪಂದವು ಪ್ರಮುಖ ಮೈಲುಗಲ್ಲಾಗಲಿದ್ದು, ದೇಶದಲ್ಲೇ ಉತ್ಕೃಷ್ಟ ಗುಣಮಟ್ಟದ ಉತ್ಪಾದನಾ ಸಾಮರ್ಥ್ಯವನ್ನು ನಿರ್ಮಿಸಿಕೊಳ್ಳುವುದರ ಜೊತೆಗೆ ತುರ್ತು ಸೇನಾ ಅವಶ್ಯಕತೆಗಳನ್ನು ಈಡೇರಿಸಲಿದೆ ಎಂದು ರಕ್ಷಣಾ ಇಲಾಖೆಯ ಮೂಲಗಳು ತಿಳಿಸಿವೆ. ಭಾರತದಲ್ಲೇ 90 ರಾಫೇಲ್ ಜೆಟ್ಗಳ ನಿರ್ಮಾಣ ಭಾರತವು ಖರೀದಿಸಲಿರುವ 114 ರಾಫೇಲ್ ಫೈಟರ್ ಜೆಟ್ಗಳ ಪೈಕಿ 90 ವಿಮಾನಗಳು ದೇಶದಲ್ಲಿಯೇ ತಯಾರಾಗಲಿದ್ದು ಅವು 50 ಶೇಕಡದಷ್ಟು ಸ್ವದೇಶಿ ಸಾಮಾಗ್ರಿಗಳನ್ನು ಒಳಗೊಂಡಿರುವುದು. ಉಳಿದ ವಿಮಾನಗಳನ್ನು ಭಾರತೀಯ ವಾಯುಪಡೆಯ ತುರ್ತು ಕಾರ್ಯಾಚರಣೆಗಳ ಅಗತ್ಯಗಳಿಗೆ ಹೊಂದುವಂತಹ ರೀತಿಯಲ್ಲಿ ಖರೀದಿಸಲಾಗುವುದು.
Bidar | ಶಾಲಾ ಅಭಿವೃದ್ಧಿ ಅನುದಾನದಲ್ಲಿ ಭ್ರಷ್ಟಾಚಾರ ಆರೋಪ: ತನಿಖೆಗೆ ಯುವ ಕ್ರಾಂತಿ ಸಂಘಟನೆ ಆಗ್ರಹ
ಬೀದರ್: ಜಿಲ್ಲೆಯ ಔರಾದ್ ಹಾಗೂ ಕಮಲನಗರ್ ತಾಲೂಕುಗಳ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಕಲ್ಯಾಣ ಕರ್ನಾಟಕ ಪ್ರಾದೇಶಿಕ ಅಭಿವೃದ್ಧಿ ಮಂಡಳಿ (ಕೆಕೆಆರ್ಡಿಬಿ) ಮೂಲಕ ಮಂಜೂರಾದ ಕೋಟ್ಯಾಂತರ ರೂಪಾಯಿ ಅನುದಾನದಲ್ಲಿ ಭಾರೀ ಪ್ರಮಾಣದ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿ, ತಪ್ಪಿತಸ್ಥ ಅಧಿಕಾರಿಗಳನ್ನು ಅಮಾನತು ಮಾಡಬೇಕು ಎಂದು ಯುವ ಕ್ರಾಂತಿ ಸಂಘಟನೆ ಆಗ್ರಹಿಸಿದೆ. ಗುರುವಾರ ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದ ಮನವಿ ಪತ್ರದಲ್ಲಿ, ಸರ್ಕಾರಿ ಶಾಲೆಗಳಿಗೆ ನಿರಂತರ ವಿದ್ಯುತ್ ಪೂರೈಕೆ ಒದಗಿಸುವ ಉದ್ದೇಶದಿಂದ 49 ಶಾಲೆಗಳಲ್ಲಿ ಸೋಲಾರ್ ಪ್ಯಾನೆಲ್ ಅಳವಡಿಸಲು ಸುಮಾರು 1.52 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗಿತ್ತು. ಪ್ರತಿ ಶಾಲೆಗೆ 4 ರೂ. ನಿಂದ 5 ಲಕ್ಷ ರೂ. ಮೀಸಲಿಡಲಾಗಿದ್ದರೂ, ಕೇವಲ ಐದು–ಆರು ಶಾಲೆಗಳಲ್ಲಿ ಮಾತ್ರ ಸೋಲಾರ್ ಪ್ಯಾನೆಲ್ ಅಳವಡಿಸಲಾಗಿದೆ. ಅಳವಡಿಸಲಾದ ಪ್ಯಾನೆಲ್ಗಳ ಗುಣಮಟ್ಟವೂ ಕಳಪೆಯಾಗಿದೆ ಎಂದು ದೂರಲಾಗಿದೆ. 2023-24 ಹಾಗೂ 2025-26ನೇ ಸಾಲಿನ ಅನುದಾನದಲ್ಲೂ ಅಕ್ರಮ ನಡೆದಿದೆ ಎನ್ನಲಾಗಿದೆ. ಅಧಿಕಾರಿಗಳು ಮತ್ತು ಗುತ್ತಿಗೆದಾರರು ಕೈಜೋಡಿಸಿ, 2025ರ ಫೆಬ್ರವರಿಯಲ್ಲೇ ಕಾಮಗಾರಿ ಪೂರ್ಣಗೊಂಡಿದೆ ಎಂದು ಸುಳ್ಳು ದಾಖಲೆ ಸೃಷ್ಟಿಸಿ ಹಣ ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ. ಶಾಲಾ ಕಟ್ಟಡಗಳ ದುರಸ್ತಿ ಹೆಸರಲ್ಲಿಯೂ ಕೋಟಿ ಕೋಟಿ ರೂಪಾಯಿ ದುರುಪಯೋಗ ನಡೆದಿದೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು, ಕೆಕೆಆರ್ಡಿಬಿ ಹಾಗೂ ಪಂಚಾಯತ್ ರಾಜ್ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಸಮಗ್ರ ತನಿಖೆ ನಡೆಸಬೇಕು. ತಪ್ಪಿತಸ್ಥ ಅಧಿಕಾರಿಗಳನ್ನು ಅಮಾನತು ಮಾಡಿ, ಸರ್ಕಾರಕ್ಕೆ ಉಂಟಾದ ನಷ್ಟವನ್ನು ವಸೂಲಿ ಮಾಡಬೇಕು ಎಂದು ಸಂಘಟನೆ ಒತ್ತಾಯಿಸಿದೆ. ಒಂದು ವಾರದೊಳಗೆ ಸೂಕ್ತ ಕ್ರಮ ಕೈಗೊಳ್ಳದಿದ್ದಲ್ಲಿ ಕೆಆರ್ಐಡಿಎಲ್ ಕಚೇರಿ ಎದುರು ಆಹೋರಾತ್ರಿ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ. ಈ ಸಂದರ್ಭದಲ್ಲಿ ಯುವ ಕ್ರಾಂತಿ ಸಂಘಟನೆಯ ಜಿಲ್ಲಾಧ್ಯಕ್ಷ ಸಂಗಮೇಶ್ ಭೂರೆ, ತಾಲೂಕಾಧ್ಯಕ್ಷ ಮೇತ್ರೆ ಸಿದ್ರಾಮ್, ಸದಸ್ಯರಾದ ರಾಕೇಶ್ ಚೌಧರಿ, ಕ್ರಿಸ್ಟೊಫರ್, ನರಸಿಂಗ್, ಯೇಸು, ಸಂಗಮೇಶ್ ಹಾಗೂ ಅನಿಲ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
7.11 ಕೋಟಿ ರೂ. ಎಟಿಎಂ ಹಣ ದರೋಡೆ ಪ್ರಕರಣ: ನ್ಯಾಯಾಲಯಕ್ಕೆ 9 ಮಂದಿ ವಿರುದ್ಧ 1,328 ಪುಟಗಳ ದೋಷಾರೋಪ ಪಟ್ಟಿ ಸಲ್ಲಿಕೆ
ಬೆಂಗಳೂರು : ಬರೋಬ್ಬರಿ 7.11 ಕೋಟಿ ರೂಪಾಯಿ ಎಟಿಎಂ ಹಣ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಪೂರ್ಣಗೊಳಿಸಿರುವ ಸಿದ್ದಾಪುರ ಠಾಣೆಯ poಲೀಸರು ಕಾನ್ಸ್ಟೇಬಲ್ ಅಣ್ಣಪ್ಪ ನಾಯ್ಕ್ ಸಹಿತ 9 ಮಂದಿ ವಿರುದ್ಧ ಬೆಂಗಳೂರಿನ 56ನೇ ಸಿಸಿಎಚ್ ನ್ಯಾಯಾಲಯಕ್ಕೆ 1,328 ಪುಟಗಳ ದೋಷಾರೋಪ ಪಟ್ಟಿ(ಚಾರ್ಜ್ಶೀಟ್)ಯನ್ನು ಗುರುವಾರ ಸಲ್ಲಿಸಿದ್ದಾರೆ. 2025ರ ನವೆಂಬರ್ 19ರಂದು ಆರ್ಬಿಐ ಅಧಿಕಾರಿಗಳ ಸೋಗಿನಲ್ಲಿ ಬೆಂಗಳೂರಿನ ಡೇರಿ ಸರ್ಕಲ್ ಮೇಲ್ಸೇತುವೆ ಮೇಲೆ ಎಟಿಎಂಗೆ ಹಣ ಸಾಗಿಸುವ ವಾಹನ ಅಡ್ಡಗಟ್ಟಿದ್ದ ಆರೋಪಿಗಳು 7.11 ಕೋಟಿ ರೂಪಾಯಿ ದರೋಡೆ ಮಾಡಿ ಪರಾರಿಯಾಗಿದ್ದರು. ಈ ಕೃತ್ಯವು ಇಡೀ ರಾಜಧಾನಿಯನ್ನೇ ತಲ್ಲಣಗೊಳಿಸಿತ್ತು. ಘಟನೆಯ ಬಳಿಕ ವಿಶೇಷ ತಂಡಗಳನ್ನು ರಚಿಸಿ ಕೆಲವೇ ದಿನಗಳಲ್ಲಿ ಪ್ರಕರಣದ ಸೂತ್ರಧಾರ ಗೋವಿಂದಪುರ ಠಾಣೆ ಕಾನ್ಸ್ಟೇಬಲ್ ಅಣ್ಣಪ್ಪ ನಾಯ್ಕ್, ಸಿಎಂಎಸ್ ಮಾಜಿ ನೌಕರ ಝೇವಿಯರ್, ಸಹಚರರಾದ ರವಿ, ನೆಲ್ಸನ್, ಗೋಪಾಲ್, ಮಂಜುನಾಥ್ ಸೇರಿದಂತೆ 9 ಮಂದಿ ವಿರುದ್ಧ 56ನೇ ಸಿಸಿಎಚ್ ನ್ಯಾಯಾಲಯಕ್ಕೆ 1,328 ಪುಟಗಳ ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ ಎಂದು ಪೊಲೀಸರು ವಿವರಿಸಿದ್ದಾರೆ. ಆರೋಪಿಗಳ ವಿರುದ್ಧ ದರೋಡೆ, ಸಾಕ್ಷ್ಯನಾಶ, ಒಳಸಂಚು, ಬೆದರಿಕೆ ಸೇರಿದಂತೆ ಬಿಎನ್ಎಸ್ ವಿವಿಧ ಸೆಕ್ಷನ್ಗಳಡಿ ಪ್ರಕರಣ ದಾಖಲಿಸಲಾಗಿತ್ತು. ಚಾರ್ಜ್ಶೀಟ್ನಲ್ಲಿ ಪ್ರತ್ಯಕ್ಷ ಸಾಕ್ಷಿಗಳ ಹೇಳಿಕೆ, ತಾಂತ್ರಿಕ ಸಾಕ್ಷ್ಯ ಹಾಗೂ ಬೆರಳಚ್ಚು ಸೇರಿ ಇತರ ವೈಜ್ಞಾನಿಕ ಸಾಕ್ಷ್ಯ ಒಳಗೊಂಡಂತೆ ಒಟ್ಟು 129 ಸಾಕ್ಷ್ಯಾಧಾರಗಳನ್ನು ನಮೂದಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ದರೋಡೆ ಪ್ರಕರಣದ ಹಿನ್ನೆಲೆಯಲ್ಲಿ ತಮಿಳುನಾಡು, ಆಂಧ್ರಪ್ರದೇಶ ಹಾಗೂ ತೆಲಂಗಾಣದಲ್ಲಿ ಪರಾರಿಯಾಗಿದ್ದ ಆರೋಪಿಗಳನ್ನು ಹಾಗೂ ಬಚ್ಚಿಡಲಾಗಿದ್ದ ಕೋಟ್ಯಂತರ ರೂಪಾಯಿ ಹಣವನ್ನು ವಶಕ್ಕೆ ಪಡೆದುಕೊಳ್ಳಲಾಗಿತ್ತು. ಆರೋಪಿಗಳ ನಡುವಿನ ಫೋನ್ ಕರೆ ಸಂಭಾಷಣೆ, ಸಿಸಿಟಿವಿ ದೃಶ್ಯಾವಳಿ ಸೇರಿದಂತೆ ಇನ್ನಿತರ ತಾಂತ್ರಿಕ ಹಾಗೂ ವೈಜ್ಞಾನಿಕ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಎಟಿಎಂ ಹಣ ದರೋಡೆ ಪ್ರಕರಣ ಸಂಬಂಧ ಗುರುವಾರ(ಫೆ.12) ನ್ಯಾಯಾಲಯಕ್ಕೆ ಚಾರ್ಜ್ಶೀಟ್ ಸಲ್ಲಿಸಲಾಗಿದೆ. ಜಯನಗರ ಉಪವಿಭಾಗದ ತನಿಖಾಧಿಕಾರಿಯಾದ ಎಸಿಪಿ ನೇತೃತ್ವದ ತಂಡ ತನಿಖೆ ನಡೆಸಿತ್ತು. ಈ ಪ್ರಕರಣದಲ್ಲಿ ಕಾನೂನಿನ ಪ್ರಕಾರ ತಾರ್ಕಿಕ ಅಂತ್ಯ ಕಾಣುವವರೆಗೂ ನ್ಯಾಯಾಲಯದ ವಿಚಾರಣೆ ನೋಡಿಕೊಂಡು, ಆರೋಪಿಗಳ ಮೇಲೆ ನಿಗಾ ಇರಿಸಲಾಗುವುದು ಎಂದು ಬೆಂಗಳೂರು ದಕ್ಷಿಣ ವಿಭಾಗದ ಡಿಸಿಪಿ ಲೋಕೇಶ್ ಜಗಲಾಸರ್ ತಿಳಿಸಿದ್ದಾರೆ.
Bidar | ಯುವಜನತೆ ದೇಶೀಯ ಕ್ರೀಡೆಗಳತ್ತ ಒಲವು ತೋರಿಸಲಿ : ಶಾಸಕ ಪ್ರಭು ಚೌವ್ಹಾಣ್
ಇಚ್ಛಾಪೂರ್ತಿ ಜಾತ್ರೆಯಲ್ಲಿ ಕುಸ್ತಿ ಪಂದ್ಯಾವಳಿ
ಕಾಫಿ ಉತ್ಸವ ಉದ್ಘಾಟಿಸಿದ ಸಚಿವ ಎಂ.ಬಿ.ಪಾಟೀಲ್
‘2,500 ಕಾಫಿ ಕಿಯೋಸ್ಕ್ ಸ್ಥಾಪನೆಗೆ 25 ಕೋಟಿ ರೂ. ಮಂಜೂರು
ಕೇಂದ್ರ ಸರಕಾರ ಪಂಚಾಯತ್ನ ಹಕ್ಕನ್ನು ಕಸಿದುಕೊಂಡಿದೆ: ವಿನಯ ಕುಮಾರ್ ಸೊರಕೆ ಆರೋಪ
ಮಂಗಳೂರು: ಕೇಂದ್ರ ಸರಕಾರ ಮನರೇಗಾ ಬದಲು ಪಂಚಾಯತ್ ವ್ಯವಸ್ಥೆಯನ್ನು ಶಿಥಿಲಗೊಳಿಸುವ ಯೋಜನೆಯನ್ನು ಜಾರಿಗೊಳಿಸಿದೆ. ಆ ಮೂಲಕ ಪಂಚಾಯತ್ನ ಹಕ್ಕನ್ನು ಕಸಿದು ಕೊಂಡಿದೆ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಹಾಗೂ ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಹೇಳಿದ್ದಾರೆ. ದ.ಕ.ಜಿಲ್ಲಾ ಕಾಂಗ್ರೆಸ್ ವತಿಯಿಂದ ಹಮ್ಮಿಕೊಳ್ಳಲಾಗಿರುವ ‘ಮನರೇಗಾ ಬಚಾವೋ ಸಂಗ್ರಾಮ್‘ನ ನಾಲ್ಕನೇ ದಿನದ ಪಾದಯಾತ್ರೆಗೆ ಗುರುವಾರ ನಗರದ ಲಾಲ್ ಬಾಗ್ ನಲ್ಲಿ ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು. ಗ್ರಾಮ ಸ್ವರಾಜ್ಯದ ಕಲ್ಪನೆಯನ್ನು ಜಾರಿಗೆ ತಂದವರು ರಾಷ್ಟ್ರಪಿತ ಮಹಾತ್ಮಾ ಗಾಂಧಿ. ಆದರೆ ಗ್ರಾಮೀಣ ಯೋಜನೆಯೊಂದಕ್ಕೆ ಇಟ್ಟಿದ್ದ ಅವರ ಹೆಸರನ್ನೇ ಕೇಂದ್ರ ಸರಕಾರ ತೆಗೆದು ಹಾಕಿದೆ. ಆ ಮೂಲಕ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರಿಗೆ ಅವಮಾನ ಮಾಡಿದೆ ಎಂದರು. ದ.ಕ.ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್, ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ಮಾಜಿ ಶಾಸಕ ಜೆ.ಆರ್. ಲೋಬೊ, ಜಿಲ್ಲಾ ನಗರ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಅಪ್ಪಿ, ಪರಿಸರ ಪ್ರವಾಸೋದ್ಯಮ ಮಂಡಳಿ ಅಧ್ಯಕ್ಷೆ ಶಾಲೆಟ್ ಪಿಂಟೊ, ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಡಿಎಸ್ ಗಟ್ಟಿ, ಮಾಜಿ ಮೇಯರ್ಗಳಾದ ಎಂ. ಶಶಿಧರ ಹೆಗ್ಡೆ , ಭಾಸ್ಕರ ಕೆ ಮತ್ತು ಕೆ.ಅಶ್ರಫ್, ಯುವ ಕಾಂಗ್ರೆಸ್ ಅಧ್ಯಕ್ಷ ಇಬ್ರಾಹೀಂ ನವಾಜ್ ,ಪ್ರಮುಖರಾದ ಎಂ.ಎಸ್.ಮುಹಮ್ಮದ್, ಸುರೇಶ್ ಬಳ್ಳಾಲ್, ಪ್ರಕಾಶ್ ಸಾಲ್ಯಾನ್, ಎ.ಸಿ. ವಿನಯರಾಜ್, ಪ್ರವೀಣ್ ಚಂದ್ರ ಆಳ್ವ, ಲ್ಯಾನ್ಸ್ ಲಾಟ್ ಪಿಂಟೊ, ಶುಭೋದಯ ಆಳ್ವ, ನವೀನ್ ಡಿ‘ಸೋಜ, ಡಿ.ಕೆ.ಅಶೋಕ್, ಸಂತೋಷ್ ಕುಮಾರ್, ಟಿ.ಕೆ.ಸುಧೀರ್, ಡೆನಿಸ್ ಡಿ ಸಿಲ್ವ, ಜೋಕಿಂ ಡಿ ಸೋಜ, ಅಬ್ಬಾಸ್ ಅಲಿ, ಸುಹಾನ ಆಳ್ವ, ಸೇರಿದಂತೆ ಕಾಂಗ್ರೆಸ್ ಪಕ್ಷದ ಮುಖಂಡರು, ಕಾರ್ಯಕರ್ತರು ಪಾಲ್ಗೊಂಡಿದ್ದರು.
ಬೀದರ್ | ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ಶಿಕ್ಷಕರ ಪಾತ್ರ ಅತೀ ಮುಖ್ಯ : ಡಿಸಿ ಶಿಲ್ಪಾ ಶರ್ಮಾ
ಬೀದರ್: ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ಶಿಕ್ಷಕರ ಪಾತ್ರ ಅತ್ಯಂತ ಮುಖ್ಯವಾಗಿದೆ ಎಂದು ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಹೇಳಿದರು. ನಗರದ ಶಾಹಿನ್ ಪದವಿಪೂರ್ವ ಕಾಲೇಜು ಸಭಾಂಗಣದಲ್ಲಿ ಗುರುವಾರ ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕರ ಕಚೇರಿ ವತಿಯಿಂದ 2025-26ನೇ ಸಾಲಿನ ಎಸೆಸೆಲ್ಸಿ ಫಲಿತಾಂಶ ಉತ್ತಮಪಡಿಸಲು ಆಯೋಜಿಸಿದ್ದ ಪ್ರೌಢಶಾಲಾ ಮುಖ್ಯ ಶಿಕ್ಷಕರ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಎಸೆಸೆಲ್ಸಿ ಪೂರ್ವಸಿದ್ಧತಾ ಪರೀಕ್ಷೆ 1 ಮತ್ತು 2ರಲ್ಲಿ ಶೇ.0ರಿಂದ ಶೇ.50ರೊಳಗಿನ ಫಲಿತಾಂಶ ಬಂದಿರುವ ಶಾಲೆಗಳಲ್ಲಿ ಬೆಳಿಗ್ಗೆ ಹಾಗೂ ಸಂಜೆ ವಿಶೇಷ ತರಗತಿಗಳನ್ನು ನಡೆಸಿ ಮೂರನೇ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ತರುವಂತೆ ಶಿಕ್ಷಕರು ಕ್ರಮವಹಿಸಬೇಕು ಎಂದು ಸೂಚಿಸಿದರು. ಜಿಲ್ಲೆಯಲ್ಲಿ ಶೇ.0 ಫಲಿತಾಂಶ ಬಂದಿರುವ ಶಾಲೆಗಳ ಶಿಕ್ಷಕರನ್ನು ಹೊಣೆಗಾರರನ್ನಾಗಿ ಮಾಡಿ, ಅಗತ್ಯವಿದ್ದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು. ಫಲಿತಾಂಶ ಸುಧಾರಣೆಗಾಗಿ ಈಗಾಗಲೇ ಕೆಕೆಆರ್ಡಿಬಿ ವತಿಯಿಂದ ಪ್ರತಿ ತಾಲೂಕಿಗೆ 25 ಲಕ್ಷ ರೂ. ವೆಚ್ಚದಲ್ಲಿ ವಿಷಯವಾರು ಅತಿಥಿ ಶಿಕ್ಷಕರನ್ನು ನೇಮಿಸಿ ವಿಶೇಷ ಬೋಧನೆಗೆ ಕ್ರಮ ಕೈಗೊಳ್ಳಲಾಗಿದೆ. ಅನೇಕ ಕಾರ್ಯಾಗಾರಗಳನ್ನು ಆಯೋಜಿಸಿ ಶಿಕ್ಷಕರಿಗೆ ಮಾರ್ಗದರ್ಶನ ನೀಡಿದರೂ ನಿರೀಕ್ಷಿತ ಫಲಿತಾಂಶ ಸಿಗುತ್ತಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಗಿರೀಶ್ ಬದೋಲೆ ಮಾತನಾಡಿ, ಎಸೆಸೆಲ್ಸಿ ಫಲಿತಾಂಶ ಸುಧಾರಣೆಗೆ 29 ಅಂಶಗಳ ಕಾರ್ಯಕ್ರಮ ರೂಪಿಸಲಾಗಿದೆ. ಹಿಂದುಳಿದ ವಿದ್ಯಾರ್ಥಿಗಳನ್ನು ಗುರುತಿಸಿ ಗುಂಪು ಚಟುವಟಿಕೆ, ಸ್ಪರ್ಧೆಗಳು ಹಾಗೂ ಪೋಷಕರ ಸಭೆಗಳನ್ನು ನಡೆಸಲಾಗುತ್ತಿದೆ. ಆದರೂ ಜಿಲ್ಲೆ 35 ಶೈಕ್ಷಣಿಕ ಜಿಲ್ಲೆಗಳ ಪೈಕಿ 34ನೇ ಸ್ಥಾನದಲ್ಲಿರುವುದು ಆತಂಕಕಾರಿ ಎಂದು ಹೇಳಿದರು. ಖಾಸಗಿ ಶಾಲೆಗಳಲ್ಲಿ ಉತ್ತಮ ಫಲಿತಾಂಶ ಬರುತ್ತಿರುವುದಾದರೆ ಸರ್ಕಾರಿ ಶಾಲೆಗಳಲ್ಲಿ ಏಕೆ ಸಾಧ್ಯವಾಗುತ್ತಿಲ್ಲ ಎಂಬುದನ್ನು ಬಿಇಓ ಮತ್ತು ಬಿಆರ್ಸಿ ಅಧಿಕಾರಿಗಳು ಗಂಭೀರವಾಗಿ ಪರಿಶೀಲಿಸಬೇಕು. ಉತ್ತಮ ಫಲಿತಾಂಶ ತರುವ ಶಾಲಾ ಶಿಕ್ಷಕರಿಗೆ ಜಿಲ್ಲಾಡಳಿತದಿಂದ ಸನ್ಮಾನ ನೀಡಲಾಗುವುದು ಎಂದು ತಿಳಿಸಿದರು. ಮಹಾನಗರ ಪಾಲಿಕೆ ಆಯುಕ್ತ ಮುಕುಲ್ ಜೈನ್ ಮಾತನಾಡಿ, ವಿದ್ಯಾರ್ಥಿಗಳು ಯಾವ ವಿಷಯಗಳಲ್ಲಿ ಹಿಂದುಳಿದಿದ್ದಾರೆ ಎಂಬುದನ್ನು ಗುರುತಿಸಿ ಅವರಿಗೆ ವಿಶೇಷ ಬೋಧನೆ ನೀಡುವಂತೆ ಶಿಕ್ಷಕರಿಗೆ ಸಲಹೆ ನೀಡಿದರು. ಕಾರ್ಯಾಗಾರದಲ್ಲಿ ಪ್ರೋಬೇಷನರಿ ಐಎಎಸ್ ಅಧಿಕಾರಿ ರಮ್ಯಾ ರಂಗನಾಥ್, ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಸುರೇಶ್, ಡಯಟ್ ಪ್ರಾಚಾರ್ಯರು, ಕಾರ್ಯಕ್ರಮ ಸಂಯೋಜಕ ಸೈಯದ್ ಪುರ್ಖಾನ್, ಶಾಹೀನ್ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಅಬ್ದುಲ್ ಹಜಿಜ್ ಸೇರಿದಂತೆ ವಿವಿಧ ಅಧಿಕಾರಿಗಳು, ಎಲ್ಲಾ ತಾಲೂಕುಗಳ ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಸರ್ಕಾರಿ ಮತ್ತು ಅನುದಾನ ರಹಿತ ಶಾಲೆಗಳ ಮುಖ್ಯ ಶಿಕ್ಷಕರು ಉಪಸ್ಥಿತರಿದ್ದರು.
ಶಿಕ್ಷಕ ಭಡ್ತಿಗೆ ಅರ್ಹತಾ ಪರೀಕ್ಷೆ ಮುಂದೂಡಿಕೆ, ಎ.21ರಿಂದ ಆರಂಭ
ಬೆಂಗಳೂರು : ಸರಕಾರಿ ಪ್ರೌಢಶಾಲಾ ಸಹಶಿಕ್ಷಕ ವೃಂದದಿಂದ ಸರಕಾರಿ ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರ ವೃಂದದ ಹುದ್ದೆಗೆ ಭಡ್ತಿ ನೀಡಲು ನಿಗಧಿಪಡಿಸಿದ್ದ ಅರ್ಹತಾ ಪರೀಕ್ಷೆಯ ಮಾರ್ಪಡಿಸಿದ್ದು, ಪರೀಕ್ಷೆಯು ಫೆ.22ರ ಬದಲಿಗೆ ಎ.21ರಿಂದ ಪ್ರಾರಂಭವಾಗಲಿದೆ ಎಂದು ಶಾಲಾ ಶಿಕ್ಷಣ ಇಲಾಖೆಯ ಆಯುಕ್ತರು ತಿಳಿಸಿದ್ದಾರೆ. ಗುರುವಾರ ಪ್ರಕಟನೆ ಹೊರಡಿಸಿರುವ ಅವರು, ಎ.21ರ ಬೆಳಗ್ಗೆ 10ರಿಂದ ಮಧ್ಯಾಹ್ನ 1ರವರೆಗೆ ಕನ್ನಡ, ಉರ್ದು, ಗಣಿತ ಮತ್ತು ಜೀವಶಾಸ್ತ್ರ ಪರೀಕ್ಷೆಗಳು ಮತ್ತು ಮಧ್ಯಾಹ್ನ 2ರಿಂದ ಸಂಜೆ 5ರವರೆಗೆ ಇಂಗ್ಲೀಷ್ ಮತ್ತು ಸಂಸ್ಕೃತ ಪರೀಕ್ಷೆಗಳು ನಡೆಯಲಿವೆ. ಎ.22ರ ಬೆಳಗ್ಗೆ 10ರಿಂದ ಮಧ್ಯಾಹ್ನ 1ರವರೆಗೆ ಇತಿಹಾಸ, ಮಧ್ಯಾಹ್ನ 2ರಿಂದ ಸಂಜೆ 5ರವರೆಗೆ ಹಿಂದಿ ಪರೀಕ್ಷೆಗಳು ನಡೆಯಲಿವೆ ಎಂದಿದ್ದಾರೆ. ಎ.23ರ ಬೆಳಗ್ಗೆ 10ರಿಂದ ಮಧ್ಯಾಹ್ನ 1ರವರೆಗೆ ಅರ್ಥಶಾಸ್ತ್ರ, ಮಧ್ಯಾಹ್ನ 2ರಿಂದ ಸಂಜೆ 5ರವರೆಗೆ ರಾಜಕೀಯ ಶಾಸ್ತ್ರ, ಎ.24ರ ಬೆಳಗ್ಗೆ 10ರಿಂದ ಮಧ್ಯಾಹ್ನ 1ರವರೆಗೆ ಸಮಾಜಶಾಸ್ತ್ರ, ಮಧ್ಯಾಹ್ನ 2ರಿಂದ ಸಂಜೆ 5ರವರೆಗೆ ಭೂಗೋಳಶಾಸ್ತ್ರ ಪರೀಕ್ಷೆಗಳು ನಡೆಯಲಿವೆ ಎಂದು ಅವರು ತಿಳಿಸಿದ್ದಾರೆ. ಪರೀಕ್ಷೆಯನ್ನು ಆಯಾಯ ಶೈಕ್ಷಣಿಕ ವಿಭಾಗದ ಕೇಂದ್ರ ಸ್ಥಾನದಲ್ಲಿ ನಡೆಸಲಾಗುವುದು. ಅಭ್ಯರ್ಥಿಗಳ ಪರೀಕ್ಷಾ ಪ್ರವೇಶ ಪತ್ರವನ್ನು ಪರೀಕ್ಷೆ ಪ್ರಾರಂಭದ ದಿನಕ್ಕಿಂತ ಒಂದು ವಾರ ಮೊದಲು ಇಲಾಖಾ ವೆಬ್ ಸೈಟಿನಲ್ಲಿ ಲಭ್ಯಗೊಳಿಸಲಾಗುವುದು. ಅಭ್ಯರ್ಥಿಗಳು ತಮ್ಮ ಯೂಸರ್ ಐಡಿ ಮತ್ತು ಪಾಸ್ ವರ್ಡನ್ನು ಬಳಸಿ ಅದನ್ನು ಮುದ್ರಿಸಿಕೊಳ್ಳಬೇಕು. ಅಭ್ಯರ್ಥಿಗಳಿಗೆ ಪ್ರಶೋತ್ತರ ಪತ್ರಿಕೆಗಳನ್ನು ನೀಡಲಾಗುವುದು. ಪ್ರತಿ ಪ್ರಶ್ನೆಯ ನಂತರ ಉತ್ತರ ಬರೆಯಲು ಸ್ಥಳಾವಕಾಶವನ್ನು ನೀಡಲಾಗುವುದು. ಭಾಷಾ ವಿಷಯಗಳನ್ನು ಹೊರತುಪಡಿಸಿ ಉಳಿದ ವಿಷಯಗಳಲ್ಲಿ ಪ್ರಶ್ನೆಗಳು ಇಂಗ್ಲಿಷ್ ಮತ್ತು ಕನ್ನಡ ಭಾಷೆಗಳಲ್ಲಿರುತ್ತವೆ. ಭಾಷಾ ವಿಷಯಗಳಲ್ಲಿ ಪ್ರಶ್ನೆಗಳು ಆಯಾಯ ಭಾಷೆಗಳಲ್ಲಿ ಮಾತ್ರ ಇರುತ್ತವೆ. ಈ ಪರೀಕ್ಷೆಗೆ ಅರ್ಜಿ ಸಲ್ಲಿಸುವಾಗ ಕೆಲವು ಅಭ್ಯರ್ಥಿಗಳು ಒಂದಕ್ಕಿಂತ ಹೆಚ್ಚು ಅರ್ಜಿಗಳನ್ನು ಸಲ್ಲಿಸಿರುತ್ತಾರೆ. ಆದುದರಿಂದ ಯಾವ ಸಂಖ್ಯೆಯ ಅರ್ಜಿಯನ್ನು ಪರಿಗಣಿಸಬೇಕೆಂಬ ಬಗ್ಗೆ ಅಭಿಮತ ನೀಡಲು ಇಲಾಖೆಯ ವೆಬ್ ಸೈಟಿನಲ್ಲಿ ಅವಕಾಶವನ್ನು ಕಲ್ಪಿಸಲಾಗಿದೆ. ಸಂಬಂಧಿಸಿದವರು ಈ ಕಾರ್ಯವನ್ನು ತುರ್ತಾಗಿ ಪೂರೈಸಬೇಕು. ಇಲ್ಲವಾದಲ್ಲಿ ಅಭ್ಯರ್ಥಿಯ ಇತ್ತೀಚಿನ ಅರ್ಜಿಯನ್ನು ಮಾತ್ರ ಪರಿಗಣಿಸಲಾಗುವುದು ಎಂದು ಪ್ರಕಟನೆಯಲ್ಲಿ ಸ್ಪಷ್ಟಪಡಿಸಲಾಗಿದೆ.
ಫ್ರಾಂಚೈಸಿ ಕೊಡುವುದಾಗಿ ನಂಬಿಸಿ ಆನ್ಲೈನ್ ವಂಚನೆ: ಪ್ರಕರಣ ದಾಖಲು
ಉಡುಪಿ, ಫೆ.12: ಕಂಪೆನಿಯೊಂದ ಫ್ರಾಂಚೈಸಿ ಕೊಡುವುದಾಗಿ ನಂಬಿಸಿ ವ್ಯಕ್ತಿಯೊಬ್ಬರಿಗೆ ಲಕ್ಷಾಂತರ ರೂ. ಆನ್ಲೈನ್ ವಂಚನೆ ಎಸಗಿರುವ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮನೋಜ್ ಸ್ಟೀಫನ್ ರೆಗೋ ಎಂಬವರು ಸಾಮಾಜಿಕ ಜಾಲತಾಣದಲ್ಲಿ ಕಂಪೆನಿಯೊಂದರ ಫ್ರಾಂಚೈಸಿ ಕೊಡುವು ದಾಗಿ ಇದ್ದ ಜಾಹಿರಾತನ್ನು ನೋಡಿ ಅರ್ಜಿ ಸಲ್ಲಿಸಿದ್ದರು. ಕಂಪೆನಿಂದ ಇಬ್ಬರು ವ್ಯಕ್ತಿಗಳು ಕರೆ ಮಾಡಿ, ಎಗ್ರಿಮೆಂಟ್ ಫೀಸ್ ಹಾಗೂ ಲೈಸನ್ಸ್ ಫೀಸ್ ನೀಡುವಂತೆ ತಿಳಿಸಿದ್ದರು. ಅದರಂತೆ ಮನೋಜ್, 2025ರ ಮಾ.4ರಿಂದ ಮಾ.5ರವರೆಗೆ ಒಟ್ಟು 1,22,300ರೂ. ಹಣವನ್ನು ಆರೋಪಿಗಳ ಖಾತೆಗೆ ವರ್ಗಾವಣೆ ಮಾಡಿದ್ದರು. ಬಳಿಕ ಆರೋಪಿಗಳು ಮನೋಜ್ಗೆ ಕರೆಮಾಡಿ ಇನ್ನೂ ಹೆಚ್ಚಿನ ಹಣವನ್ನು ಕಟ್ಟಲು ತಿಳಿಸಿದಾಗ ಇದೊಂದು ಆನ್ಲೈನ್ ವಂಚನೆ ಎಂಬುದು ತಿಳಿದುಬಂತು ಎಂದು ದೂರಿನಲ್ಲಿ ತಿಳಿಸಲಾಗಿದೆ.
ಬಡವರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸಚಿವ ಸಂಪುಟ ಸಭೆಯು ಮಹತ್ವದ ತೀರ್ಮಾನ ಕೈಗೊಂಡಿದೆ. 4 ಖಾಸಗಿ ಆಸ್ಪತ್ರೆಗಳಲ್ಲಿ ರೆಫೆರಲ್ ಲೆಟರ್ ಇಲ್ಲದೇ ನೇರವಾಗಿ ತೆರಳಿ ಉಚಿತವಾಗಿ ಚಿಕಿತ್ಸೆ ಪಡೆಯಬಹುದು. ಇದು ಬಿಪಿಎಲ್ ಕಾರ್ಡ್ ಹೊಂದಿರುವವರಿಗೆ ಹಾಗೂ ಸರ್ಕಾರಿ ನೌಕರರಿಗೆ ಅನುಕೂಲವಾಗಲಿದೆ. ಯಾವೆಲ್ಲಾ ಆಸ್ಪತ್ರೆಗಳು? ಏನೆಲ್ಲಾ ದಾಖಲೆ ಬೇಕು ಈ ಬಗ್ಗೆ ವಿವರ ಇಲ್ಲಿದೆ.
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್ಗೆ ಅನುಮತಿ : ಸಚಿವ ಸಂಪುಟ ನಿರ್ಧಾರ
ಬೆಂಗಳೂರು ಟರ್ಫ್ ಕ್ಲಬ್ ಕುಣಿಗಲ್ಗೆ ಸ್ಥಳಾಂತರ : ಎಚ್.ಕೆ.ಪಾಟೀಲ್
ದೇವದುರ್ಗ | ನಾಲ್ಕು ಕಾರ್ಮಿಕ ಸಂಹಿತೆ ಹಿಂಪಡೆಯಲು ಜೆಸಿಟಿಯು ಆಗ್ರಹ
ದೇವದುರ್ಗ: ಕೇಂದ್ರದಲ್ಲಿ ಆಡಳಿತದಲ್ಲಿರುವ ಬಿಜೆಪಿ ಸರ್ಕಾರ ದುಡಿಯುವ ವರ್ಗದ ವಿರೋಧಿಯಾಗಿ ನಾಲ್ಕು ಕರಾಳ ಕಾರ್ಮಿಕ ಸಂಹಿತೆಗಳನ್ನು (ಲೇಬರ್ ಕೋಡ್) ಜಾರಿಗೆ ತಂದಿದ್ದು, ಕಾರ್ಮಿಕ ವರ್ಗಕ್ಕೆ ಯಾವುದೇ ಸೇವಾ ಸೌಲಭ್ಯಗಳನ್ನು ನೀಡಿಲ್ಲ ಎಂದು ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ (ಜೆ.ಸಿ.ಟಿ.ಯು) ತಾಲೂಕು ಸಮಿತಿಯ ಪದಾಧಿಕಾರಿಗಳು ಆರೋಪಿಸಿದರು. ಪಟ್ಟಣದ ಮಿನಿ ವಿಧಾನಸೌಧದ ಎದುರು ಬೃಹತ್ ಪ್ರತಿಭಟನೆ ನಡೆಸಿ ಮಾತನಾಡಿದ ಅವರು, ನಾಲ್ಕು ಲೇಬರ್ ಕೋಡ್ಗಳನ್ನು ತಕ್ಷಣ ಹಿಂಪಡೆಯಬೇಕು. ವಿಬಿ-ಜಿ ರಾಮ್ ಜಿ ವಿಮಾ ಕಾಯ್ದೆ, ಶಾಂತಿ ಕಾಯ್ದೆ, ವಿದ್ಯುತ್ ಕಾಯ್ದೆ ತಿದ್ದುಪಡಿ, ಬೀಜ ಕಾಯ್ದೆ ತಿದ್ದುಪಡಿ ಹಾಗೂ ಭೂಸ್ವಾಧೀನ ಕಾಯ್ದೆಗಳನ್ನು ರದ್ದುಗೊಳಿಸಬೇಕು. ರಾಜ್ಯ ಸರ್ಕಾರ ಲೇಬರ್ ಕೋಡ್ಗಳಿಗೆ ನಿಯಮಾವಳಿ ರೂಪಿಸಬಾರದು ಹಾಗೂ ಜನವಿರೋಧಿ ಮಸೂದೆಗಳನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದರು. ಅಂಗನವಾಡಿ ಕಾರ್ಯಕರ್ತೆಯರು, ಬಿಸಿ ಊಟ, ಗ್ರಾಮ ಪಂಚಾಯಿತಿ, ಆಶಾ ಹಾಗೂ ವಸತಿ ನಿಲಯದ ನೌಕರರಿಗೆ ಕನಿಷ್ಠ 36 ಸಾವಿರ ರೂ. ವೇತನ ಜಾರಿಗೆ ತರಬೇಕು. ಕಟ್ಟಡ ಕಾರ್ಮಿಕರಿಗೆ ಅಗತ್ಯ ಸೌಲಭ್ಯಗಳನ್ನು ಒದಗಿಸಬೇಕು. ಹಮಾಲಿ ಕಾರ್ಮಿಕರಿಗೆ ವಸತಿ ಸೌಲಭ್ಯ ಕಲ್ಪಿಸಬೇಕು. ರೈತರು ಬೆಳೆದ ಬೆಳೆಗಳಿಗೆ ಬೆಂಬಲ ಬೆಲೆ ನೀಡಬೇಕು ಎಂದು ಆಗ್ರಹಿಸಿದರು. ವರ್ಷಗಳಿಂದ ವಿವಿಧ ಸಂಘಟನೆಗಳು ಹೋರಾಟ ನಡೆಸುತ್ತಿದ್ದರೂ ರಾಯಚೂರು ಜಿಲ್ಲೆಯಲ್ಲಿ ಏಮ್ಸ್ ಸ್ಥಾಪನೆ ಕುರಿತು ಕೇಂದ್ರ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲವೆಂದು ತೀವ್ರವಾಗಿ ಖಂಡಿಸಿದರು. ಪ್ರತಿಭಟನೆಯಲ್ಲಿ ಗಿರಿಯಪ್ಪ ಪೂಜಾರಿ, ನರಸಣ್ಣ ನಾಯಕ, ಶಬ್ಬಿರ್ ಜಾಲಹಳ್ಳಿ, ಯೂಸೂಫ್ ಗ್ವಾಡಿಕಾರ, ಹೊನ್ನಪ್ಪ ನಾಯಕ ಗೌರಂಪೇಟ್, ಪಂಚಯ್ಯ ರಮಾದೇವಿ, ರೇಣುಕಾ ಪಾಂಡುರಂಗ ನಾಯಕ, ಮರಿಯಮ್ಮ, ಶ್ರೀಲೇಖಾ, ಅಣ್ಣಪ್ಪ, ಮಸ್ತಾನ್ ಬಿ. ಗಣೇಕಲ್ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.
ದೇಶಾದ್ಯಂತ ನ್ಯಾಯಾಲಯಗಳಲ್ಲಿ 2.24 ಲಕ್ಷಕ್ಕೂ ಅಧಿಕ ಪೊಕ್ಸೊ ಪ್ರಕರಣಗಳು ಬಾಕಿ: ಕೇಂದ್ರ ಸರಕಾರ ಮಾಹಿತಿ
ಹೊಸದಿಲ್ಲಿ,ಫೆ.12: ಸರಕಾರವು ಬುಧವಾರ ಸಂಸತ್ತಿನಲ್ಲಿ ಮಂಡಿಸಿದ ಅಂಕಿಅಂಶಗಳಂತೆ ದೇಶಾದ್ಯಂತ ನ್ಯಾಯಾಲಯಗಳಲ್ಲಿ 2.24 ಲಕ್ಷಕ್ಕೂ ಅಧಿಕ ಪೊಕ್ಸೊ ಪ್ರಕರಣಗಳು ಬಾಕಿಯಿದ್ದು,ವಿಚಾರಣೆಗಳು ಆರು ತಿಂಗಳಿನಿಂದ ಹಿಡಿದು ನಾಲ್ಕು ವರ್ಷಗಳಿಗೂ ಹೆಚ್ಚಿನ ಸಮಯವನ್ನು ತೆಗೆದುಕೊಳ್ಳುತ್ತಿವೆ. ಡಿ.31,2025ಕ್ಕೆ ಇದ್ದಂತೆ 29 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ 774 ತ್ವರಿತ ವಿಶೇಷ ನ್ಯಾಯಾಲಯಗಳು ಕಾರ್ಯ ನಿರ್ವಹಿಸುತ್ತಿದ್ದರೂ ಒಟ್ಟು 2,24,572 ಪೊಕ್ಸೊ ಪ್ರಕರಣಗಳು ಬಾಕಿಯುಳಿದಿವೆ. ಈ ಪೈಕಿ 398 ನ್ಯಾಯಾಲಯಗಳು ಪೊಕ್ಸೋ ಪ್ರಕರಣಗಳಿಗೇ ಮೀಸಲಾಗಿವೆ ಎಂದು ಕಾನೂನು ಸಚಿವ ಅರ್ಜುನ ರಾಮ ಮೇಘ್ವಾಲ್ ಅವರು ರಾಜ್ಯಸಭಾ ಸದಸ್ಯ ಎಸ್.ನಿರಂಜನ ರೆಡ್ಡಿ ಅವರಿಗೆ ನೀಡಿದ ಲಿಖಿತ ಉತ್ತರದಲ್ಲಿ ತಿಳಿಸಿದರು. ದತ್ತಾಂಶಗಳ ಪ್ರಕಾರ ದಿಲ್ಲಿಯಲ್ಲಿ ಅತ್ಯಂತ ನಿಧಾನ ಗತಿಯಲ್ಲಿ ಪ್ರಕರಣಗಳು ವಿಲೇವಾರಿಯಾಗುತ್ತಿದ್ದು, ವಿಚಾರಣೆಗಳು ಮುಗಿಯಲು ಸರಾಸರಿ ನಾಲ್ಕೂವರೆ ವರ್ಷಗಳನ್ನು ತೆಗೆದುಕೊಳ್ಳುತ್ತಿವೆ. ತ್ರಿಪುರಾ ನಾಲ್ಕು ವರ್ಷಗಳಿಗೂ ಹೆಚ್ಚಿನ ಅವಧಿಯನ್ನು ತೆಗೆದುಕೊಳ್ಳುತ್ತಿದ್ದರೆ ಮಣಿಪುರದಲ್ಲಿ ಪ್ರಕರಣಗಳ ವಿಚಾರಣೆ ಮುಗಿಯಲು ಸರಾಸರಿ 3.7 ವರ್ಷಗಳನ್ನು ತೆಗೆದುಕೊಳ್ಳುತ್ತದೆ. ಈ ಅವಧಿ ಗುಜರಾತಿನಲ್ಲಿ ಸುಮಾರು 3.5 ವರ್ಷಗಳಾಗಿದ್ದರೆ, ಬಿಹಾರ ಮತ್ತು ಅಸ್ಸಾಮಿನಲ್ಲಿ ಇದು ಸುಮಾರು 2.6 ವರ್ಷಗಳಾಗಿದೆ. ನಾಗಾಲ್ಯಾಂಡ್,ಮಿರೆರಮ್ ಮತ್ತು ಪಶ್ಚಿಮ ಬಂಗಾಳಗಳಲ್ಲಿ ಪ್ರತಿ ವಿಚಾರಣೆಯು ಎರಡೂವರೆ ವರ್ಷಗಳಿಗೂ ಹೆಚ್ಚು ಸಮಯವನ್ನು ತೆಗೆದುಕೊಳ್ಳುತ್ತದೆ. ಇದಕ್ಕೆ ವ್ಯತಿರಿಕ್ತವಾಗಿ ಪುದುಚೇರಿಯಲ್ಲಿ ಕೇವಲ ಆರು ತಿಂಗಳುಗಳಲ್ಲಿ ವಿಚಾರಣೆ ಪೂರ್ಣಗೊಳ್ಳುತ್ತದೆ. ಆಂಧ್ರಪ್ರದೇಶದಲ್ಲಿ ಸರಾಸರಿ 257 ದಿನಗಳು ಮತ್ತು ಛತ್ತೀಸಗಡದಲ್ಲಿ ಸುಮಾರು 332.5 ದಿನಗಳು ಬೇಕಾಗುತ್ತವೆ. ಜು.7,2025ರಂದು ಜಾರ್ಖಂಡ್ ತ್ವರಿತ ವಿಶೇಷ ನ್ಯಾಯಾಲಯಗಳ ಯೋಜನೆಯಿಂದ ಸಂಪೂರ್ಣವಾಗಿ ಹೊರಬಂದಿದ್ದು,ರಾಜ್ಯದಲ್ಲಿ ಈಗ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳ ವಿಚಾರಣೆಗೆ ಮೀಸಲಾದ ನ್ಯಾಯಾಂಗ ಮೂಲಸೌಕರ್ಯವಿಲ್ಲ ಎಂದು ಸಚಿವರ ಉತ್ತರವು ಬಹಿರಂಗಗೊಳಿಸಿದೆ. ಮಕ್ಕಳ ಸ್ನೇಹಿ ವಾತಾವರಣವನ್ನು ಸೃಷ್ಟಿಸಲು ನ್ಯಾಯಾಲಯ ಸಂಕೀರ್ಣಗಳಲ್ಲಿ ದುರ್ಬಲ ಸಾಕ್ಷಿ ಹೇಳಿಕೆಗಳ ಕೇಂದ್ರಗಳ ಸ್ಥಾಪನೆ ಸೇರಿದಂತೆ ಸಂತ್ರಸ್ತರನ್ನು ಬೆಂಬಲಿಸಲು ತೆಗದುಕೊಂಡಿರುವ ಕ್ರಮಗಳನ್ನು ಸರಕಾರವು ಎತ್ತಿ ತೋರಿಸಿದೆ. ಸರ್ವೋಚ್ಚ ನ್ಯಾಯಾಲಯವು ರಚಿಸಿದ್ದ ಸಮಿತಿಯು 10,000ಕ್ಕೂ ಅಧಿಕ ಜನರಿಗೆ ತರಬೇತಿ ಕಾರ್ಯಕ್ರಮಗಳನ್ನು ನಡೆಸಿದೆ. ತನಿಖಾ ಸಾಮರ್ಥ್ಯಗಳನ್ನು ಬಲಗೊಳಿಸಲು ಸರಕಾರವು ನೂತನ ವಿಧಿವಿಜ್ಞಾನ ಪ್ರಯೋಗಾಲಯಗಳಿಗೆ ಅನುಮೋದನೆಯನ್ನೂ ನೀಡಿದೆ. ಆದಾಗ್ಯೂ ಸಂವಿಧಾನದ ವಿಧಿ 233 ಮತ್ತು 234ರಡಿ ನ್ಯಾಯಾಧೀಶರು, ಪ್ರಾಸಿಕ್ಯೂಟರ್ಗಳು ಮತ್ತು ನ್ಯಾಯಾಲಯ ಸಿಬ್ಬಂದಿಗಳನ್ನು ನೇಮಕ ಮಾಡುವ ಹೊಣೆಗಾರಿಕೆಯು ರಾಜ್ಯಸರಕಾರಗಳದ್ದಾಗಿದೆ ಎಂದು ಸಚಿವರು ಬೆಟ್ಟು ಮಾಡಿದರು. ದೊಡ್ಡ ಪ್ರಮಾಣದಲ್ಲಿ ಬಾಕಿಯಿರುವ ಪ್ರಕರಣಗಳು ಮತ್ತು ವಿಚಾರಣೆಯ ದೀರ್ಘಾವಧಿಗಳು ಭಾರತದಲ್ಲಿ ಮಕ್ಕಳ ರಕ್ಷಣಾ ವ್ಯವಸ್ಥೆಯ ಪರಿಣಾಮಕಾರಿತ್ವದ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಶಹಾಬಾದ್ | ಪರಿಸರದ ವಿನಾಶದಿಂದ ಮನುಕುಲಕ್ಕೆ ಉಳಿಗಾಲವಿಲ್ಲ: ಮಲ್ಲಿನಾಥ ಪಾಟೀಲ
ಶಹಾಬಾದ್: ಅಭಿವೃದ್ಧಿ ಹೆಸರಿನಲ್ಲಿ ಗಿಡ-ಮರಗಳನ್ನು ಕಡಿದು ಅರಣ್ಯ ಪ್ರದೇಶಗಳನ್ನು ನಾಶಪಡಿಸುತ್ತಿರುವ ಪರಿಣಾಮ ಜಾಗತಿಕ ತಾಪಮಾನ ಏರಿಕೆಯಾಗುತ್ತಿದ್ದು, ವನ್ಯಜೀವಿ ಸಂಕುಲಗಳು ವಿನಾಶದ ಅಂಚಿಗೆ ತಲುಪುತ್ತಿವೆ. ಪರಿಸರದ ವಿನಾಶದಿಂದ ಮನುಕುಲಕ್ಕೆ ಉಳಿಗಾಲವಿಲ್ಲ ಎಂದು ಎಸ್.ಜಿ. ವರ್ಮಾ ಹಿಂದಿ ಪ್ರೌಢಶಾಲೆಯ ಮುಖ್ಯಗುರು ಮಲ್ಲಿನಾಥ ಪಾಟೀಲ ಹೇಳಿದರು. ತಾಲೂಕಿನ ಭಂಕೂರ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಪ್ರಕೃತಿ ಇಕೋ ಕ್ಲಬ್ ಹಾಗೂ ರಾಷ್ಟ್ರೀಯ ಹಸಿರು ಪಡೆಯ ವತಿಯಿಂದ ಆಯೋಜಿಸಿದ್ದ ಪರಿಸರ ಸಂರಕ್ಷಣೆಯ ಕುರಿತ ಉಪನ್ಯಾಸ ಕಾರ್ಯಕ್ರಮದಲ್ಲಿ ಉಪನ್ಯಾಸಕರಾಗಿ ಅವರು ಮಾತನಾಡಿದರು. ಇಂದು ಪ್ರಾಣಿಗಳು ಅಳಿವಿನಂಚಿಗೆ ತಲುಪುತ್ತಿವೆ. ವಾಯುಮಾಲಿನ್ಯ ಮತ್ತು ಜಲಮಾಲಿನ್ಯ ಹೆಚ್ಚುತ್ತಿದ್ದು, ಅತಿಯಾದ ವಾಹನಗಳ ಹೊಗೆ ಜನರ ಆರೋಗ್ಯ ಮತ್ತು ವಾತಾವರಣದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಅರಣ್ಯ ಪ್ರಮಾಣ ಕಡಿಮೆಯಾಗುತ್ತಿದ್ದು, ಪರಿಸರ ನಾಶಕ್ಕೆ ಮಾನವನೇ ಕಾರಣ ಎಂಬುದು ವಿಷಾದನೀಯ. ಪರಿಸರ ಸಂರಕ್ಷಣೆಯತ್ತ ಎಲ್ಲರೂ ಜಾಗೃತರಾಗಬೇಕು ಎಂದು ಕರೆ ನೀಡಿದರು. ಭಂಕೂರ ಸರ್ಕಾರಿ ಪ್ರೌಢಶಾಲೆಯ ಮುಖ್ಯಗುರು ಶಂಕರ ಜಾಧವ ಮಾತನಾಡಿದರು. ಶಿಕ್ಷಕರಾದ ದತ್ತಪ್ಪ ಕೋಟನೂರ್, ಶಿಕ್ಷಕಿ ಶಶಿಕಲಾ ಕೋಟನೂರ್ ಹಾಗೂ ಉಮೇಶ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಅನೀಲಕುಮಾರ ಕುಮಸಿಕರ್ ಕಾರ್ಯಕ್ರಮ ನಿರೂಪಿಸಿ ಸ್ವಾಗತಿಸಿ ವಂದಿಸಿದರು. ಸಂಯೋಜಕ ಶಿಕ್ಷಕಿ ಸೀತಮ್ಮ ಎನ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ವಾಡಿ | ನಾಲ್ಕು ಕಾರ್ಮಿಕ ಸಂಹಿತೆಗಳು ಹಿಂಪಡೆಯಬೇಕು: ಶರಣಬಸು ಸಿರೂರಕರ ಆಗ್ರಹ
ವಾಡಿ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ನಾಲ್ಕು ಹೊಸ ಕಾರ್ಮಿಕ ಕಾನೂನುಗಳು ಕಾರ್ಪೊರೇಟ್ ಪರವಾಗಿದ್ದು, ಕಾರ್ಮಿಕರ ಕೆಲಸದ ಭದ್ರತೆ ಹಾಗೂ ಸಾಮಾಜಿಕ ಭದ್ರತೆಯನ್ನು ಕಸಿದುಕೊಳ್ಳುವ ಹುನ್ನಾರವಾಗಿದೆ. ಈ ಕಾನೂನುಗಳನ್ನು ಕೂಡಲೇ ಹಿಂಪಡೆಯಬೇಕು ಎಂದು ವಾಡಿ ಸಿಮೆಂಟ್ ಕಾರ್ಖಾನೆ ಕಾರ್ಮಿಕರು ಮತ್ತು ಸಿಬ್ಬಂದಿ ಸಂಘದ ಅಧ್ಯಕ್ಷ ಶರಣಬಸು ಸಿರೂರಕರ ಆಗ್ರಹಿಸಿದರು. ಗುರುವಾರ ಪಟ್ಟಣದ ಎಸಿಸಿ ಕಾರ್ಖಾನೆ ಮುಂಭಾಗದಲ್ಲಿ ನಾಲ್ಕು ಕಾರ್ಮಿಕ ಕೋಡ್ಗಳನ್ನು ವಿರೋಧಿಸಿ ಹಮ್ಮಿಕೊಂಡ ಪ್ರತಿಭಟನೆ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು. ಕಾರ್ಮಿಕರು ಸಂಘಟಿತರಾಗುವ ಹಕ್ಕನ್ನು ದುರ್ಬಲಗೊಳಿಸುವ ಜೊತೆಗೆ ಅವರನ್ನು ಜೀತದಾಳುಗಳನ್ನಾಗಿ ಮಾಡುವ ಉದ್ದೇಶ ಈ ಕಾನೂನುಗಳಲ್ಲಿದೆ ಎಂದು ಅವರು ಆರೋಪಿಸಿದರು. ಸಂಘದ ಪ್ರಧಾನ ಕಾರ್ಯದರ್ಶಿ ವಿಶಾಲ್ ನಂದೂರಕರ ಮಾತನಾಡಿ, ಪ್ರತಿದಿನ 8 ಗಂಟೆಗಳಿಗಿಂತ ಹೆಚ್ಚು ಕೆಲಸ ಮಾಡುವ ನಿಯಮಗಳನ್ನು ಸೇರಿಸುವ ಮೂಲಕ ಕಾರ್ಮಿಕರ ಸುರಕ್ಷತೆಯಲ್ಲಿ ನಿರ್ಲಕ್ಷ್ಯ ತೋರಲಾಗಿದೆ. ಕಾರ್ಮಿಕರ ಪರವಾಗಿ ಕೆಲಸ ಮಾಡುವ ಯೂನಿಯನ್ಗಳನ್ನು ದುರ್ಬಲಗೊಳಿಸಿ, ಸಂಘಟಿತ ಹೋರಾಟದ ಹಕ್ಕನ್ನು ಈ ಹೊಸ ಕಾರ್ಮಿಕ ಸಂಹಿತೆಗಳು ಕಡಿತಗೊಳಿಸುತ್ತವೆ ಎಂದು ಆತಂಕ ವ್ಯಕ್ತಪಡಿಸಿದರು. ನವೆಂಬರ್ 21, 2025ರಿಂದ ಜಾರಿಗೆ ಬಂದಿರುವ ಈ ಕಾನೂನುಗಳನ್ನು ತಕ್ಷಣವೇ ಹಿಂಪಡೆಯಬೇಕು. ರೈತ–ಕಾರ್ಮಿಕ ವಿರೋಧಿ ನೀತಿಗಳನ್ನು ಕೇಂದ್ರ ಸರ್ಕಾರ ವೇಗವಾಗಿ ಜಾರಿಗೊಳಿಸುತ್ತಿದ್ದು, ಕಾರ್ಪೊರೇಟ್ ದಣಿಗಳ ಪರ ಕಾರ್ಯನಿರ್ವಹಿಸುತ್ತಿದೆ ಎಂದು ಟೀಕಿಸಿದರು. ನಾಲ್ಕು ಕಾರ್ಮಿಕ ಸಂಹಿತೆಗಳನ್ನು ಹಿಂಪಡೆಯದಿದ್ದರೆ ಹೋರಾಟವನ್ನು ತೀವ್ರಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದರು. ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ಅವಿನಾಶ ರಾಠೋಡ್, ಅನಿಲಕುಮಾರ ಸಿಬೋನೂರ, ದೀಪಕ್ ಪೂಜಾರಿ, ಜಂಟಿ ಕಾರ್ಯದರ್ಶಿಗಳು ಅಹಸನ್ ಅಲಿ, ಸತೀಶ ಭಾಗೋಡಿಕರ್, ಸಂಜಯ ರಾಥೋಡ, ಖಜಾಂಚಿ ಉಮೇಶ ಪವಾರ ಹಾಗೂ ಕಾರ್ಮಿಕರು ಎಂ.ಡಿ. ಜಾಫರ್, ಬಸವರಾಜ ಪೂಜಾರಿ, ಯಲ್ಲಾಲಿಂಗ, ಧರ್ಮ, ಮರಲಿಂಗ ಕೊಲ್ಲೂರು, ಜಗನ್ನಾಥ ರಾಥೋಡ, ಯಂಕಪ್ಪ ದಾಸ, ಕಿಶನ ಪವಾರ, ಅಬ್ದುಲ್ ನಬಿ, ಸುನೀಲ ರಾವೂರ, ತೇಜಪ್ಪ, ನಾಗರಾಜ ಮಾಡಗಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಆಳಂದ | ಸ್ಪರ್ಧಾತ್ಮಕ ಯುಗದಲ್ಲಿ ಮೃದು ಕೌಶಲ್ಯಗಳೇ ಯಶಸ್ಸಿನ ಮಂತ್ರ : ಡಾ.ಶುಷ್ಮಾ
ಆಳಂದ: ಲಿಂಕ್ಡ್ಇನ್ ನ ಇತ್ತೀಚಿನ ಸಂಶೋಧನೆಯ ಪ್ರಕಾರ ಶೇ.85 ರಷ್ಟು ಉದ್ಯೋಗ ಯಶಸ್ಸು ಮೃದು ಕೌಶಲ್ಯಗಳಿಂದ ಸಾಧ್ಯವಾಗುತ್ತದೆ. ಐಐಟಿ ಸಂಶೋಧನೆ ಪ್ರಕಾರ ಹೆಚ್ಚಿನ ಭಾವನಾತ್ಮಕ ಬುದ್ಧಿಮತ್ತೆ ಹೊಂದಿರುವ ಎಂಜಿನಿಯರ್ಗಳ ತಂಡಗಳು ಇತರರಿಗಿಂತ ಶೇ.20 ರಷ್ಟು ವೇಗವಾಗಿ ಹೊಸ ಮಾದರಿಗಳನ್ನು ಅಭಿವೃದ್ಧಿಪಡಿಸುತ್ತವೆ ಎಂದು ಸಿಯುಕೆಯ ಸಾಫ್ಟ್ ಸ್ಕಿಲ್ಸ್ ಡೆವಲಪ್ಮೆಂಟ್ ಸೆಂಟರ್ ನಿರ್ದೇಶಕಿ ಹಾಗೂ ಸಂಪನ್ಮೂಲ ವ್ಯಕ್ತಿ ಡಾ. ಶುಷ್ಮಾ ಎಚ್ ತಿಳಿಸಿದರು. ತಾಲೂಕಿನ ಕಡಗಂಚಿ ಸಮೀಪದ ಸಿಯುಕೆಯ ಸಾಫ್ಟ್ ಸ್ಕಿಲ್ಸ್ ಡೆವಲಪ್ಮೆಂಟ್ ಸೆಂಟರ್ ವತಿಯಿಂದ ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ “ರೀ-ಎಂಜಿನಿಯರಿಂಗ್ ಎಂಜಿನಿಯರ್ಸ್ ಸಾಫ್ಟ್ ಸ್ಕಿಲ್ಸ್” ಎಂಬ ಒಂದು ದಿನದ ಮೃದು ಕೌಶಲ್ಯಗಳ ಅಭಿವೃದ್ಧಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು. ಎಐ ಯುಗದಲ್ಲಿ ತಂತ್ರಜ್ಞಾನ ಎಲ್ಲರಿಗೂ ಲಭ್ಯವಾಗುತ್ತಿರುವ ಸಂದರ್ಭದಲ್ಲಿ ಮೃದು ಕೌಶಲ್ಯಗಳೇ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಮುನ್ನಡೆ ನೀಡುವ ಪ್ರಮುಖ ಅಂಶವಾಗಿವೆ. ಈ ಹಿನ್ನೆಲೆಯಲ್ಲಿ ವಿಶ್ವವಿದ್ಯಾಲಯದ ಎಲ್ಲಾ ವಿಭಾಗಗಳ ವಿದ್ಯಾರ್ಥಿಗಳಿಗೆ ಅಗತ್ಯ ಮೃದು ಕೌಶಲ್ಯಗಳಲ್ಲಿ ತರಬೇತಿ ನೀಡಲಾಗುತ್ತಿದ್ದು, ಉದ್ಯಮದ ಅಗತ್ಯತೆಗಳಿಗೆ ತಕ್ಕಂತೆ ವಿಶೇಷ ತರಬೇತಿ ನೀಡಲು ಸಂಬಂಧಿತ ಉದ್ಯಮಗಳೊಂದಿಗೆ ಒಪ್ಪಂದಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ವಿವರಿಸಿದರು. ಕಾರ್ಯಕ್ರಮವನ್ನು ಉದ್ಘಾಟಿಸಿದ ಸಿಯುಕೆಯ ಕುಲಪತಿ ಪ್ರೊ. ಬಟ್ಟು ಸತ್ಯನಾರಾಯಣ ಮಾತನಾಡಿ, ವಿದ್ಯಾರ್ಥಿಗಳ ಸಮಗ್ರ ವ್ಯಕ್ತಿತ್ವ ನಿರ್ಮಾಣಕ್ಕೆ ಮೃದು ಕೌಶಲ್ಯಗಳು ಅತ್ಯಗತ್ಯ. ಸ್ಪರ್ಧಾತ್ಮಕ ಜಗತ್ತಿನಲ್ಲಿ ಕೇವಲ ಪದವಿ ಮಾತ್ರ ಸಾಕಾಗುವುದಿಲ್ಲ. ಆತ್ಮವಿಶ್ವಾಸ, ಸಾರ್ವಜನಿಕ ಭಾಷಣ ಹಾಗೂ ಪರಿಣಾಮಕಾರಿ ಸಂವಹನ ಕೌಶಲ್ಯಗಳು ಯಶಸ್ಸಿಗೆ ಮುಖ್ಯ ಎಂದರು. ಎಐ ಸೇರಿದಂತೆ ತಂತ್ರಜ್ಞಾನಗಳು ಮಾತ್ರ ವೃತ್ತಿಜೀವನದಲ್ಲಿ ಮುನ್ನಡೆಯಲು ಸಾಕಾಗುವುದಿಲ್ಲ. ವಿದ್ಯಾರ್ಥಿಗಳು ತಮ್ಮ ಸಾಮರ್ಥ್ಯವನ್ನು ಗುರುತಿಸಿಕೊಂಡು ನಿರಂತರವಾಗಿ ಕೌಶಲ್ಯ ವೃದ್ಧಿಗೆ ಶ್ರಮಿಸಬೇಕು ಎಂದು ಕರೆ ನೀಡಿದರು. ಐಕ್ಯೂಎಸಿ ನಿರ್ದೇಶಕ ಪ್ರೊ. ಅಮರೇಂದ್ರ ಮತ್ಸ ಮಾತನಾಡಿದರು. ಎಂಜಿನಿಯರಿಂಗ್ ನಿಕಾಯದ ಡೀನ್ ಡಾ.ಪರಮೇಶ, ಪ್ರೊ.ವೀರೇಶ ಕಸಬೇಗೌಡರ, ಡಾ.ಎಂ.ಜೋಹೈರ್, ಪ್ರೊ.ವಿಜಯಕುಮಾರ, ಪ್ಲೇಸ್ಮೆಂಟ್ ಅಧಿಕಾರಿ ಡಾ.ಪರಮೇಶ ಸೇರಿದಂತೆ ಅಧ್ಯಾಪಕರು ಮತ್ತು ನೂರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು.
High Speed Rail: ಬೆಂಗಳೂರು - ಬೆಳಗಾವಿ - ಮುಂಬೈ ನಡುವೆ 8ನೇ ಹೈಸ್ಪೀಡ್ ರೈಲು ಕಾರಿಡಾರ್ ಯೋಜನೆ: ಮಹತ್ವದ ಚರ್ಚೆ
High Speed Rail: ಬೆಳಗಾವಿಯ ವಿವಿಧ ರೈಲು ಯೋಜನೆಗಳ ಅಭಿವೃದ್ಧಿ ಹಾಗೂ ಸೇವೆಗೆ ಸಂಬಂಧಿಸಿದಂತೆ ಬೆಳಗಾವಿ ಲೋಕಸಭಾ ಕ್ಷೇತ್ರದ ಸಂಸದ ಜಗದೀಶ್ ಶೆಟ್ಟರ್ ಅವರು ಕೇಂದ್ರ ರೈಲ್ವೆ ಸಚಿವ ಅಶ್ವಿನ್ ವೈಷ್ಣವ್ ಅವರೊಂದಿಗೆ ಚರ್ಚೆ ನಡೆಸಿದ್ದಾರೆ. ಇದರಲ್ಲಿ ಮುಖ್ಯವಾಗಿ ಬೆಂಗಳೂರು - ಬೆಳಗಾವಿ - ಮುಂಬೈ ನಡುವೆಯೂ 8ನೇ ಹೈಸ್ಪೀಡ್ ರೈಲು ಕಾರಿಡಾರ್ ಯೋಜನೆಯ ಬಗ್ಗೆಯೂ ಚರ್ಚೆ
ಸೇಡಂ | ರಾಜ್ಯ, ಕೇಂದ್ರ ಸರಕಾರದ ರೈತ -ಕಾರ್ಮಿಕ ವಿರೋಧಿ ನೀತಿ ಖಂಡಿಸಿ ಪ್ರತಿಭಟನೆ
ಸೇಡಂ: ರೈತ–ಕಾರ್ಮಿಕ ವಿರೋಧಿ ನೀತಿಗಳನ್ನು ಖಂಡಿಸಿ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘ, ಆಲ್ ಇಂಡಿಯಾ ಯುನೈಟೆಡ್ ಟ್ರೇಡ್ ಯೂನಿಯನ್ (AIUTUC) ಸೇರಿದಂತೆ ಹಲವು ಕಾರ್ಮಿಕ ಮತ್ತು ರೈತ ಸಂಘಟನೆಗಳ ನೇತೃತ್ವದಲ್ಲಿ ಗುರುವಾರ ಪಟ್ಟಣದ ರಾಜ್ಯ ಹೆದ್ದಾರಿಯಲ್ಲಿ ರಸ್ತೆ ತಡೆದು ಮಾನವ ಸರಪಳಿ ನಿರ್ಮಿಸಿ ಅಖಿಲ ಭಾರತ ಸಾರ್ವತ್ರಿಕ ಮುಷ್ಕರ ಯಶಸ್ವಿಗೊಳಿಸಲಾಯಿತು. ಪ್ರತಿಭಟನೆಯ ನಂತರ ತಹಸೀಲ್ದಾರ್ ಶ್ರೀಯಾಂಕ ಧನಶ್ರೀ ಅವರ ಮೂಲಕ ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು. ಅಲ್ಟ್ರಾ ಟೆಕ್ ಸಿಮೆಂಟ್ ಕಾರ್ಖಾನೆ ಯುನಿಯನ್ ಅಧ್ಯಕ್ಷ ಸತೀಶ್ ರೆಡ್ಡಿ ಪಾಟೀಲ್ ರಂಜೋಳ ಮಾತನಾಡಿ, ಕೇಂದ್ರ ಸರ್ಕಾರ ಜಾರಿಗೆ ತಂದಿರುವ ನಾಲ್ಕು ಕಾರ್ಮಿಕ ಸಂಹಿತೆಗಳು ಕಾರ್ಮಿಕರ ಹಕ್ಕುಗಳ ಮೇಲೆ ಗಂಭೀರ ಪರಿಣಾಮ ಬೀರುತ್ತಿವೆ. ಬಡವರ್ಗದ ಜನರ ಬದುಕಿಗೆ ಹೊರೆ ಆಗುವಂತಹ ನೀತಿಗಳನ್ನು ಸರ್ಕಾರ ಹಿಂಪಡೆಯಬೇಕು ಎಂದು ಆಗ್ರಹಿಸಿದರು. ಬೇಡಿಕೆಗಳನ್ನು ಈಡೇರಿಸದಿದ್ದರೆ ಹಂತ ಹಂತವಾಗಿ ತೀವ್ರ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು. ಹೋರಾಟಗಾರ ವಿ.ಜಿ. ದೇಸಾಯಿ ಮಾತನಾಡಿ, ಸಾರ್ವಜನಿಕ ವಲಯದ ಉದ್ಯಮಗಳು ಮತ್ತು ಸೇವೆಗಳನ್ನು ಖಾಸಗೀಕರಣ ಮಾಡಿ ಕಾರ್ಪೋರೇಟ್ ಕಂಪನಿಗಳಿಗೆ ಒಪ್ಪಿಸುವ ಕ್ರಮವನ್ನು ಖಂಡಿಸಿದರು. ಮನರೇಗಾ ಯೋಜನೆಯನ್ನು ವಿಬಿ-ಜಿ-ರಾಮ್ ಎಂದು ಬದಲಾಯಿಸಿರುವುದು ಬಡವರ ಬದುಕಿಗೆ ಹೊಡೆತವಾಗಿದೆ. ವಿದ್ಯುತ್ ತಿದ್ದುಪಡಿ ಮಸೂದೆ 2025ರ ಮೂಲಕ ಸರಬರಾಜು ಖಾಸಗೀಕರಣಕ್ಕೆ ಮುಂದಾಗಿರುವುದನ್ನೂ ವಿರೋಧಿಸುತ್ತೇವೆ ಎಂದು ಹೇಳಿದರು. ಎಐಯುಟಿಯುಸಿ ಜಿಲ್ಲಾ ಸದಸ್ಯೆ ನಾಗವೇಣಿ, ಹಾಸ್ಟೆಲ್ ಕಾರ್ಮಿಕರ ತಾಲೂಕು ಅಧ್ಯಕ್ಷ ಬಸವರಾಜ ಹೂಳಗೋಳ, ಅಂಗನವಾಡಿ ನೌಕರರ ಸಂಘದ ತಾಲೂಕು ಅಧ್ಯಕ್ಷೆ ಮಹಾದೇವಿ, ಆಶಾ ಕಾರ್ಯಕರ್ತೆಯರ ಸಂಘದ ಅಧ್ಯಕ್ಷೆ ವಿಜಯಲಕ್ಷ್ಮೀ ಸೇರಿದಂತೆ ಅನೇಕರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
Kalaburagi | ಬೇಸಿಗೆಯಲ್ಲಿ ಕಲ್ಲಂಗಡಿ ಬೆಳೆ: ಎಲೆ ನೆಕ್ರಾಸಿಸ್ ರೋಗ ನಿಯಂತ್ರಣಕ್ಕೆ ಕೃಷಿ ವಿಜ್ಞಾನಿಗಳ ಸಲಹೆ
ಕಲಬುರಗಿ: ಜಿಲ್ಲೆಯಲ್ಲಿ ಬೇಸಿಗೆ ಹಂಗಾಮಿನಲ್ಲಿ ಕಲ್ಲಂಗಡಿ ಬೆಳೆ ವ್ಯಾಪಕವಾಗಿ ಬೆಳೆದಿದ್ದು, ರಂಜಾನ್ ತಿಂಗಳಲ್ಲಿ ಹೈದರಾಬಾದ್, ಪುಣೆ, ಮುಂಬೈ ಹಾಗೂ ಕಲಬುರಗಿ ಮಾರುಕಟ್ಟೆಗಳಲ್ಲಿ ಉತ್ತಮ ದರ ಸಿಗುವ ನಿರೀಕ್ಷೆಯಿಂದ ಕೆಲ ರೈತರು ಮುಂಗಡವಾಗಿ ಬೆಳೆ ಬೆಳೆಸುತ್ತಿದ್ದಾರೆ. ಪಟ್ಟಣ, ನರೋಣ, ಭೀಮಳ್ಳಿ, ನಂದೂರ್ ಹಾಗೂ ಮೇಲಕುಂದ ಪ್ರದೇಶಗಳಲ್ಲಿ ಕಲ್ಲಂಗಡಿ ಬೆಳೆ ಕಾಯಿ ಬೆಳವಣಿಗೆ ಹಂತದಲ್ಲಿದ್ದು, ಬಿಸಿಲು ಹಾಗೂ ಒಣ ಹವಾಮಾನದಲ್ಲಿ ಹಣ್ಣಿನ ಸಿಹಿತನ ಹೆಚ್ಚಾಗುತ್ತದೆ ಎಂದು ಕೃಷಿ ವಿಜ್ಞಾನ ಕೇಂದ್ರ, ಕಲಬುರಗಿ ಸಸ್ಯರೋಗ ತಜ್ಞ ಡಾ.ಝಹೀರ್ ಅಹಮದ್ ತಿಳಿಸಿದ್ದಾರೆ. ನೀರಾವರಿ ತೋಟಗಳಲ್ಲಿ ಹೂ ಹಂತದಲ್ಲಿ ಜೇನುನೊಣಗಳ ಚಟುವಟಿಕೆ ಹೆಚ್ಚಿದ್ದರೆ ಪರಾಗಸಂಪರ್ಕ ಉತ್ತಮವಾಗಿ ಕಾಯಿ ರಚನೆ ಸುಧಾರಿಸುತ್ತದೆ. ಸುತ್ತಮುತ್ತಲಿನ ಹೊಲಗಳಲ್ಲಿ ನುಗ್ಗೆ, ಸೂರ್ಯಕಾಂತಿ, ಸೌತೆಕಾಯಿ ಬೆಳೆಗಳಿದ್ದರೆ ಜೇನುನೊಣಗಳ ಸಂಖ್ಯೆ ಹೆಚ್ಚಾಗಿ ಉತ್ಪಾದನೆಗೂ ಸಹಕಾರಿಯಾಗುತ್ತದೆ ಎಂದು ಅವರು ವಿವರಿಸಿದರು. ಬದಲಾಗುತ್ತಿರುವ ಹವಾಮಾನ, ಗಾಳಿ ವೇಗ ಹಾಗೂ ಒಣ ವಾತಾವರಣದಿಂದ ಬೂದಿ ರೋಗ ಮತ್ತು ಎಲೆ ನೆತ್ತಿ ಸುಡುವ (ನೆಕ್ರಾಸಿಸ್) ಸಮಸ್ಯೆ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಈ ಸಂದರ್ಭದಲ್ಲಿ ಪ್ರತಿ ಲೀಟರ್ ನೀರಿಗೆ ಕಾರ್ಬೆಂಡಾಜಿಂ 1 ಗ್ರಾಂ ಮತ್ತು ತಿಯೋಮೆಥಾಕ್ಸಮ್ ಅರ್ಧ ಗ್ರಾಂ ಬೆರೆಸಿ ಸಿಂಪಡಿಸುವಂತೆ ಸಲಹೆ ನೀಡಲಾಗಿದೆ. ರಸ ಹೀರುವ ಕೀಟಗಳು, ಬಿಳಿ ನೊಣ ಹಾಗೂ ನುಸಿ ನಿಯಂತ್ರಣಕ್ಕಾಗಿ ಎಕರೆಗೆ 8 ಹಳದಿ ಮೋಹಕ ಅಂಟು ಬಲೆಗಳನ್ನು ಅಳವಡಿಸಬೇಕು. ಹನಿ ನೀರಾವರಿ ಪದ್ಧತಿ ಅನುಸರಿಸಿ, ಪೋಷಕಾಂಶಗಳನ್ನು ಸಮಯಕ್ಕೆ ಸರಿಯಾಗಿ ಪೂರೈಸಿದರೆ ಉತ್ತಮ ಬೆಳೆಯನ್ನು ಪಡೆಯಬಹುದು ಎಂದು ತಿಳಿಸಿದ್ದಾರೆ. ಪ್ರಸ್ತುತ ಜಿಲ್ಲೆಯಲ್ಲಿ ಕಲ್ಲಂಗಡಿಗೆ ಉತ್ತಮ ಬೇಡಿಕೆ ಇದ್ದು, ರೈತರ ಹೊಲದಲ್ಲೇ ಪ್ರತಿ ಕಿಲೋಗೆ ₹18 ರಿಂದ ₹22 ದರದಲ್ಲಿ ಖರೀದಿ ನಡೆಯುತ್ತಿದೆ. ಬೇಸಿಗೆ ತಾಪಮಾನ ಏರಿಕೆಯಾಗುತ್ತಿದ್ದಂತೆ ತಂಪು ಪಾನೀಯಗಳು ಹಾಗೂ ಹಣ್ಣಿನ ರಸಗಳಿಗೆ ಬೇಡಿಕೆ ಹೆಚ್ಚುತ್ತಿರುವುದು ಗಮನಾರ್ಹವಾಗಿದೆ.
ಬಾಂಗ್ಲಾದೇಶದ ಸಾರ್ವತ್ರಿಕ ಚುನಾವಣೆಗೆ ಮತದಾನ ಇಂದು (ಗುರುವಾರ) ನಡೆದಿದ್ದು, ಮಾಜಿ ಪ್ರಧಾನಿ ಶೇಖ್ ಹಸೀನಾ ಅವರು ಅಧಿಕಾರದಿಂದ ಕೆಳಗಿಳಿದ ಬಳಿಕ ನಡೆಯುತ್ತಿರುವ ಮೊದಲ ಚುನಾವಣೆಯಾಗಿದೆ. 2024ರ ಆಗಸ್ಟ್ನಲ್ಲಿ ವಿದ್ಯಾರ್ಥಿಗಳು ದೇಶದಾದ್ಯಂತ ಪ್ರತಿಭಟನೆ ನಡೆಸಿ ಹಸೀನಾ ನೇತೃತ್ವದ ಸರ್ಕಾರವನ್ನು ಕಿತ್ತೊಗೆಯಿದ್ದರು. ಮತದಾನವು ಬೆಳಿಗ್ಗೆ 7.30ಕ್ಕೆ ಪ್ರಾರಂಭವಾಗಿ ಸಂಜೆ 4.30ಕ್ಕೆ (ಸ್ಥಳೀಯ ಸಮಯ) ಮುಕ್ತಾಯವಾಯಿತು. ಆ ಬಳಿಕ ಮತ ಎಣಿಕೆ ನಡೆಯಲಿದೆ. ಬಾಂಗ್ಲಾದೇಶದ ಸಂಸತ್ತು 350 ಸದಸ್ಯರನ್ನು ಹೊಂದಿದೆ. ಒಟ್ಟು 350 ಸ್ಥಾನಗಳಲ್ಲಿ 300 ಸ್ಥಾನಗಳನ್ನು ನೇರ ಮತದಾನದ ಮೂಲಕ ಭರ್ತಿ ಮಾಡಲಾಗುತ್ತದೆ; ಉಳಿದ 50 ಸ್ಥಾನಗಳನ್ನು ಮಹಿಳೆಯರಿಗೆ ಮೀಸಲಿಡಲಾಗಿದೆ. ಅವನ್ನು ಅನುಪಾತಾತ್ಮಕ ಪ್ರತಿನಿಧಿತ್ವದ ಮೂಲಕ ಭರ್ತಿ ಮಾಡಲಾಗುತ್ತದೆ. ಸರ್ಕಾರ ರಚಿಸಲು ಒಂದು ಪಕ್ಷ ಅಥವಾ ಮೈತ್ರಿಕೂಟವು ನೇರ ಮತದಾನದ ಮೂಲಕ ಭರ್ತಿಯಾದ 300 ಸ್ಥಾನಗಳಲ್ಲಿ ಕನಿಷ್ಠ 151 ಸ್ಥಾನಗಳನ್ನು ಗೆಲ್ಲಬೇಕು. ಈ ಚುನಾವಣೆಯಲ್ಲಿ ಯಾರು ಸ್ಪರ್ಧಿಸುತ್ತಿದ್ದಾರೆ? ಈ ಚುನಾವಣೆಯಲ್ಲಿ 275 ಸ್ವತಂತ್ರರು ಸೇರಿದಂತೆ ಒಟ್ಟು 2,034 ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದಾರೆ. ಅಲ್ಪಸಂಖ್ಯಾತ ಹಿಂದೂ ಸಮುದಾಯದ 80 ಅಭ್ಯರ್ಥಿಗಳು ಹಾಗೂ 85 ಮಹಿಳಾ ಅಭ್ಯರ್ಥಿಗಳು ಕಣದಲ್ಲಿದ್ದಾರೆ. 2024ರ ಜಾತಿಯಾ ಸಂಸದ್ನಲ್ಲಿ 17 ಹಿಂದೂ ಸಂಸದರಿದ್ದರು. ಪ್ರಸ್ತುತ ಬಾಂಗ್ಲಾದೇಶದಲ್ಲಿ 59 ನೋಂದಾಯಿತ ರಾಜಕೀಯ ಪಕ್ಷಗಳಿದ್ದು, ಅವುಗಳಲ್ಲಿ 51 ಪಕ್ಷಗಳು ಚುನಾವಣೆಯಲ್ಲಿ ಭಾಗವಹಿಸುತ್ತಿವೆ. ಎರಡು ಪ್ರಮುಖ ಬಣಗಳಿವೆ — ಬಾಂಗ್ಲಾದೇಶ ರಾಷ್ಟ್ರೀಯತಾವಾದಿ ಪಕ್ಷ (BNP) ಮತ್ತು ಜಮಾತ್-ಇ-ಇಸ್ಲಾಮಿ ಹಾಗೂ ನ್ಯಾಷನಲ್ ಸಿಟಿಜನ್ ಪಾರ್ಟಿ (NCP) ಸೇರಿದಂತೆ 11 ಪಕ್ಷಗಳ ಮೈತ್ರಿಕೂಟ. BNP 300ರಲ್ಲಿ 292 ಸ್ಥಾನಗಳಿಗೆ ಸ್ಪರ್ಧಿಸುತ್ತಿದ್ದು, ಉಳಿದ ಸ್ಥಾನಗಳಲ್ಲಿ ಅದರ ಮೈತ್ರಿ ಪಾಲುದಾರರು ಸ್ಪರ್ಧಿಸುತ್ತಿದ್ದಾರೆ. ಜಮಾತ್ 224 ಸ್ಥಾನಗಳಲ್ಲಿ ಸ್ಪರ್ಧಿಸುತ್ತಿದೆ; ಅವರ ಬಳಿ ಯಾವುದೇ ಮಹಿಳಾ ಅಭ್ಯರ್ಥಿಗಳಿಲ್ಲ, ಒಬ್ಬ ಹಿಂದೂ ಅಭ್ಯರ್ಥಿ ಕಣದಲ್ಲಿದ್ದಾರೆ. ಜುಲೈ ಕ್ರಾಂತಿಯ ನಂತರ ಹೊರಹೊಮ್ಮಿದ ಯುವ ಪಕ್ಷವಾದ ನ್ಯಾಷನಲ್ ಸಿಟಿಜನ್ ಪಾರ್ಟಿ 30 ಸ್ಥಾನಗಳಲ್ಲಿ ಸ್ಪರ್ಧಿಸುತ್ತಿದೆ. ಎರಡು ಪ್ರಮುಖ ಬಣಗಳ ಹೊರತಾಗಿ, ಜೆಐಬಿ ನೇತೃತ್ವದ ಮೈತ್ರಿಕೂಟದಿಂದ ಬೇರ್ಪಟ್ಟ ಇಸ್ಲಾಮಿ ಆಂದೋಲನ್ ಬಾಂಗ್ಲಾದೇಶ ಹಾಗೂ ಹಸೀನಾ ಅವರ ಅವಾಮಿ ಲೀಗ್ನ ದೀರ್ಘಕಾಲದ ಮಿತ್ರ ಪಕ್ಷವಾದ ಜತಿಯಾ ಪಕ್ಷವು ಸ್ವತಂತ್ರವಾಗಿ ಸ್ಪರ್ಧಿಸುತ್ತಿವೆ. ಪ್ರಮುಖ ಸ್ಪರ್ಧೆ ಯಾರ ನಡುವೆ? ಆಗಸ್ಟ್ 2024 ರಲ್ಲಿ ವಿದ್ಯಾರ್ಥಿಗಳ ನೇತೃತ್ವದ ದಂಗೆಯ ನಂತರ ಹಸೀನಾ ಬಾಂಗ್ಲಾದೇಶ ತೊರೆದರು. ನಂತರದ ಹದಿನೆಂಟು ತಿಂಗಳಲ್ಲಿ ಬಾಂಗ್ಲಾದೇಶದ ರಾಜಕೀಯ ಭೂದೃಶ್ಯವು ನಾಟಕೀಯವಾಗಿ ಬದಲಾಗಿದೆ. ಮುಖ್ಯ ಸಲಹೆಗಾರ ಮುಹಮ್ಮದ್ ಯೂನಸ್ ಅವರ ಮಧ್ಯಂತರ ಆಡಳಿತವು ಹಸೀನಾ ಅವರ ಅವಾಮಿ ಲೀಗ್ ಅನ್ನು ಚುನಾವಣೆಯಲ್ಲಿ ಸ್ಪರ್ಧಿಸುವುದನ್ನು ನಿಷೇಧಿಸಿದೆ. ತಾರಿಕ್ ರೆಹಮಾನ್ ನೇತೃತ್ವದ ಬಾಂಗ್ಲಾದೇಶ ರಾಷ್ಟ್ರೀಯತಾವಾದಿ ಪಕ್ಷ ಮತ್ತು ಹೊಸದಾಗಿ ರೂಪುಗೊಂಡ 11 ಪಕ್ಷಗಳ ಮೈತ್ರಿಕೂಟದ ನಡುವೆ ಸ್ಪರ್ಧೆ ಇದೆ. ಈ ಮೈತ್ರಿಕೂಟವನ್ನು ಬಾಂಗ್ಲಾದೇಶ ಜಮಾತ್-ಇ-ಇಸ್ಲಾಮಿ ಮತ್ತು ರಾಷ್ಟ್ರೀಯ ನಾಗರಿಕ ಪಕ್ಷ ಮುನ್ನಡೆಸುತ್ತಿದೆ. ಬಾಂಗ್ಲಾದೇಶದ ಮಾಜಿ ಪ್ರಧಾನಿ ಖಲೀದಾ ಜಿಯಾ ಅವರ ಪುತ್ರ ತಾರಿಕ್ ರೆಹಮಾನ್ ಬಿಎನ್ಪಿಯ ನೇತೃತ್ವ ವಹಿಸಿದ್ದಾರೆ. ಅಭಿಪ್ರಾಯ ಸಂಗ್ರಹಗಳು ಸೂಚಿಸುವಂತೆ, ರೆಹಮಾನ್ ದೇಶದ ಮುಂದಿನ ಪ್ರಧಾನಿಯಾಗಬಹುದು. ರೆಹಮಾನ್ ಅವರ ತಾಯಿ ಖಲೀದಾ ಜಿಯಾ ಡಿಸೆಂಬರ್ 2025 ರಲ್ಲಿ ನಿಧನರಾದರು. ಲಂಡನ್ನಲ್ಲಿ ಗಡಿಪಾರು ಜೀವನ ನಡೆಸಿದ ನಂತರ ರೆಹಮಾನ್ ಬಿಎನ್ಪಿ ಅಧ್ಯಕ್ಷರ ಪಾತ್ರವನ್ನು ವಹಿಸಿಕೊಂಡರು. ಹಸೀನಾ ಆಳ್ವಿಕೆಯಲ್ಲಿ ಬಾಂಗ್ಲಾದೇಶದಲ್ಲಿ ತನ್ನ ವಿರುದ್ಧ ನಡೆದ ಹಲವಾರು ಕ್ರಿಮಿನಲ್ ತನಿಖೆಗಳನ್ನು ತಪ್ಪಿಸಲು ಜಿಯಾ 17 ವರ್ಷಗಳ ಕಾಲ ಸ್ವಯಂ ಪ್ರೇರಿತ ದೇಶಭ್ರಷ್ಟರಾಗಿದ್ದರು. ಅವಾಮಿ ಲೀಗ್ ಅಧಿಕಾರದಿಂದ ಪದಚ್ಯುತಗೊಂಡ ನಂತರ ಅವರ ವಿರುದ್ಧದ ಎಲ್ಲಾ ಪ್ರಕರಣಗಳನ್ನು ಕೈಬಿಡಲಾಗಿದೆ. ಬಿಎನ್ಪಿ 10 ಪಕ್ಷಗಳ ಒಕ್ಕೂಟವಾಗಿದೆ. 2024 ರ ಹಸೀನಾ ವಿರೋಧಿ ಪ್ರತಿಭಟನೆಗಳಲ್ಲಿ ಪ್ರಮುಖರಾಗಿದ್ದ ವಿದ್ಯಾರ್ಥಿಗಳ ನೇತೃತ್ವದ ನ್ಯಾಷನಲ್ ಸಿಟಿಜನ್ ಪಾರ್ಟಿ ಸೇರಿದಂತೆ 11 ಪಕ್ಷಗಳ ಜಮಾತ್-ಇ-ಇಸ್ಲಾಮಿ ನೇತೃತ್ವದ ಮೈತ್ರಿಕೂಟದಿಂದ ಇದು ಸವಾಲನ್ನು ಎದುರಿಸುತ್ತಿದೆ. ಜಮಾತ್-ಇ-ಇಸ್ಲಾಮಿಯನ್ನು 67 ವರ್ಷದ ಶಫಿಕುರ್ ರೆಹಮಾನ್ ಮುನ್ನಡೆಸುತ್ತಿದ್ದಾರೆ. ಅವರು ಆಯ್ಕೆಯಾದರೆ ಪ್ರಜಾಪ್ರಭುತ್ವ ಹಕ್ಕುಗಳನ್ನು ರಕ್ಷಿಸುವುದಾಗಿ ಪ್ರತಿಜ್ಞೆ ಮಾಡಿದ್ದಾರೆ. ಅವಾಮಿ ಲೀಗ್ ನ ಸ್ಥಿತಿ ಏನು? ಬಾಂಗ್ಲಾದೇಶದ ಪದಚ್ಯುತ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರ ಪಕ್ಷವಾಗಿದ್ದ ಅವಾಮಿ ಲೀಗ್ (AL) ನ ನೋಂದಣಿಯನ್ನು ಬಾಂಗ್ಲಾದೇಶ ಚುನಾವಣಾ ಆಯೋಗ ಅಮಾನತುಗೊಳಿಸಿದೆ. ಮೇ 2025 ರಲ್ಲಿ ಮೊಹಮ್ಮದ್ ಯೂನಸ್ ನೇತೃತ್ವದ ಮಧ್ಯಂತರ ಸರ್ಕಾರವು ಭಯೋತ್ಪಾದನಾ ವಿರೋಧಿ ಕಾಯ್ದೆಯಡಿಯಲ್ಲಿ ಅವಾಮಿ ಲೀಗ್ನ ಎಲ್ಲಾ ಚಟುವಟಿಕೆಗಳನ್ನು ನಿಷೇಧಿಸಿತು. ಟ್ರಾನ್ಸ್ಪರೆನ್ಸಿ ಇಂಟರ್ನ್ಯಾಷನಲ್ ಬಾಂಗ್ಲಾದೇಶದ ಪ್ರಕಾರ, ನವೆಂಬರ್ 19, 2025 ರ ಹೊತ್ತಿಗೆ ಅವಾಮಿ ಲೀಗ್ ಕಾರ್ಯಕರ್ತರು ಮತ್ತು ಬೆಂಬಲಿಗರ ವಿರುದ್ಧ ದೇಶಾದ್ಯಂತ 1,785 ಪ್ರಕರಣಗಳು ದಾಖಲಾಗಿವೆ. ಪಕ್ಷವು ಚುನಾವಣೆಯನ್ನು ಬಹಿಷ್ಕರಿಸಿದೆ. ತನ್ನ ಬೆಂಬಲಿಗರಿಗೆ ಮತ ಚಲಾಯಿಸದಂತೆ ಸೂಚಿಸಿದೆ ಎಂದು ಅವಾಮಿ ಲೀಗ್ನ ಜಂಟಿ ಪ್ರಧಾನ ಕಾರ್ಯದರ್ಶಿ ಎಎಫ್ಎಂ ಬಹಾವುದ್ದೀನ್ ನಸೀಮ್ ಹೇಳಿರುವುದಾಗಿ ಫೆಬ್ರವರಿ 8 ರಂದು ‘the hindu’ ವರದಿ ಮಾಡಿದೆ. ಚುನಾವಣೆಗಳು ಪ್ರಜಾಪ್ರಭುತ್ವ ವಿರೋಧಿ, ಜನಸಂಖ್ಯೆಯ ಹೆಚ್ಚಿನ ಭಾಗವು ಮತದಾನವನ್ನು ಬಹಿಷ್ಕರಿಸುತ್ತದೆ ಎಂದು ಹಸೀನಾ ಹೇಳಿದ್ದಾರೆ. ರಾಷ್ಟ್ರೀಯ ಜನಾಭಿಪ್ರಾಯ ಸಂಗ್ರಹ ಎಂದರೇನು? ಸಾರ್ವತ್ರಿಕ ಚುನಾವಣೆಗಳ ಜೊತೆಗೆ ನಾಗರಿಕರು ಜುಲೈ ಚಾರ್ಟರ್ನಲ್ಲಿ “ಹೌದು” ಅಥವಾ “ಇಲ್ಲ” ಎಂದು ಮತ ಚಲಾಯಿಸಬೇಕಾಗುತ್ತದೆ. ಹಸೀನಾ ಅವರನ್ನು ಪದಚ್ಯುತಗೊಳಿಸಿದ ನಂತರ 2024 ರಲ್ಲಿ ಅವರ ಸರ್ಕಾರದ ವಿರುದ್ಧದ ಸಾಮೂಹಿಕ ಪ್ರತಿಭಟನೆಗಳ ಬಳಿಕ ನೊಬೆಲ್ ಪ್ರಶಸ್ತಿ ವಿಜೇತ ಮೊಹಮ್ಮದ್ ಯೂನಸ್ ಅವರನ್ನು ಮಧ್ಯಂತರ ಸರ್ಕಾರದ ಮುಖ್ಯ ಸಲಹೆಗಾರರನ್ನಾಗಿ ನೇಮಿಸಲಾಯಿತು. ಅವರನ್ನೇ ರಾಷ್ಟ್ರೀಯ ಒಮ್ಮತ ಆಯೋಗದ (National Consensus Commission–NCC) ಅಧ್ಯಕ್ಷರನ್ನಾಗಿಯೂ ಮಾಡಲಾಯಿತು. ಸಾಂವಿಧಾನಿಕ, ಚುನಾವಣಾ ಮತ್ತು ನ್ಯಾಯಾಂಗ ತಿದ್ದುಪಡಿಗಳನ್ನು ಒಳಗೊಂಡಂತೆ ರಾಜ್ಯಕ್ಕೆ ರಚನಾತ್ಮಕ ಸುಧಾರಣೆಗಳನ್ನು ಎನ್ಸಿಸಿ ಸೂಚಿಸಬೇಕಾಗಿತ್ತು. ಎನ್ಸಿಸಿ ಯ 166 ಶಿಫಾರಸುಗಳಲ್ಲಿ 84 ಶಿಫಾರಸುಗಳು “National Charter of July 2025” ರೂಪಿಸುವ ಪರವಾಗಿದ್ದವು. ಚಾರ್ಟರ್ ನಲ್ಲಿನ ಪ್ರಮುಖ ಸುಧಾರಣೆಗಳು ಸಾಂವಿಧಾನಿಕ ಸಂಸ್ಥೆಗಳನ್ನು ಹೆಚ್ಚು ಸ್ವತಂತ್ರಗೊಳಿಸುವುದು, ದ್ವಿಸದಸ್ಯ ಶಾಸಕಾಂಗವನ್ನು ಪ್ರಸ್ತಾಪಿಸುವುದು ಮತ್ತು ಸಂಸತ್ತಿನಲ್ಲಿ ಮಹಿಳಾ ಪ್ರಾತಿನಿಧ್ಯವನ್ನು ಹೆಚ್ಚಿಸುವುದರ ಮೇಲೆ ಕೇಂದ್ರೀಕೃತವಾಗಿವೆ. “ಹೌದು” ಮತ ಮೇಲುಗೈ ಸಾಧಿಸಿದರೆ ಹೊಸದಾಗಿ ರಚನೆಯಾದ ಸಂಸತ್ತು 180 ದಿನಗಳಲ್ಲಿ ಚಾರ್ಟರ್ನ ನಿಬಂಧನೆಗಳನ್ನು ಕಾರ್ಯಗತಗೊಳಿಸಲು ಬದ್ಧವಾಗಿರುತ್ತದೆ. “ಇಲ್ಲ” ಎಂದಾದರೆ ಬಾಂಗ್ಲಾದೇಶದ ಭವಿಷ್ಯದ ಮೇಲೆ ಏಕಪಕ್ಷೀಯ ಆಡಳಿತ ಮತ್ತು ದುರ್ಬಲ ಸಂಸ್ಥೆಗಳ ಅಪಾಯ ಎದುರಾಗುತ್ತದೆ. ಜನಾಭಿಪ್ರಾಯ ಸಂಗ್ರಹ ಏಕೆ ಬೇಕು? 2024 ರ ದಂಗೆಯ ನಂತರ ಸಾಂಸ್ಥಿಕ ಸುಧಾರಣೆಗಳ ಮೂಲಕ ಉತ್ತಮ ಆಡಳಿತ, ಪ್ರಜಾಪ್ರಭುತ್ವ ಮತ್ತು ಸಾಮಾಜಿಕ ನ್ಯಾಯವನ್ನು ಸ್ಥಾಪಿಸಲು ಹಾಗೂ “ಸರ್ವಾಧಿಕಾರಿ ಮತ್ತು ಫ್ಯಾಸಿಸ್ಟ್ ಆಡಳಿತದ ಪುನರಾವರ್ತನೆಯನ್ನು” ತಡೆಯಲು ರಚಿಸಲಾದ ‘ಜುಲೈ ಚಾರ್ಟರ್’ ಅನ್ನು ಅನುಷ್ಠಾನಗೊಳಿಸುವುದರ ಮೇಲೆ ಜನಾಭಿಪ್ರಾಯ ಸಂಗ್ರಹ ಕೇಂದ್ರೀಕೃತವಾಗಿದೆ. ಹಸೀನಾ ಪದಚ್ಯುತಗೊಂಡ ನಂತರ ಅಧಿಕಾರ ವಹಿಸಿಕೊಂಡ ಮಧ್ಯಂತರ ಸರ್ಕಾರವು ನವೆಂಬರ್ನಲ್ಲಿ ಚಾರ್ಟರ್ ಅನುಷ್ಠಾನ ಆದೇಶವನ್ನು ಅನುಮೋದಿಸಿತು. ಪ್ರಮುಖ ಬದಲಾವಣೆಗಳಿಗೆ ಸಾರ್ವಜನಿಕ ಅನುಮೋದನೆ ಅಗತ್ಯ ಎಂದು ಇದು ಹೇಳಿದೆ. ಹೊಸ ಸಾಂವಿಧಾನಿಕ ಸಂಸ್ಥೆಗಳ ರಚನೆ ಮತ್ತು ಸಾಂವಿಧಾನಿಕ ತಿದ್ದುಪಡಿಗಳಿಗೆ ಬಹುಮತದ ಅನುಮೋದನೆ ಅಗತ್ಯವಿರುವ ದ್ವಿಸದಸ್ಯ ಸಂಸತ್ತಿನ ಪರಿಚಯ ಸೇರಿದಂತೆ ನಾಲ್ಕು ಪ್ರಮುಖ ಸುಧಾರಣೆಗಳ ಬಗ್ಗೆ ಮತದಾರರು ನಿರ್ಧರಿಸಲಿದ್ದಾರೆ. ಪ್ರಧಾನ ಮಂತ್ರಿಗಳ ಅವಧಿ ಮಿತಿಗಳು ಮತ್ತು ವರ್ಧಿತ ಅಧ್ಯಕ್ಷೀಯ ಅಧಿಕಾರಗಳು ಸೇರಿದಂತೆ ರಾಜಕೀಯ ಪಕ್ಷಗಳ ಬದ್ಧತೆಗಳಿಗೆ ಅನುಗುಣವಾಗಿ ಹೆಚ್ಚಿನ ಬದಲಾವಣೆಗಳೊಂದಿಗೆ 30 ಚಾರ್ಟರ್ ಸುಧಾರಣೆಗಳ ಅನುಷ್ಠಾನದ ಪ್ರಶ್ನೆಗಳನ್ನೂ ಇದು ಒಳಗೊಂಡಿದೆ. ಇಲ್ಲಿ ಪ್ರತಿಯೊಬ್ಬ ವ್ಯಕ್ತಿಯೂ ರಹಸ್ಯ ಮತದಾನದ ಮೂಲಕ ತಮ್ಮ ಮತವನ್ನು ಚಲಾಯಿಸುತ್ತಾರೆ. “Yes” ಬಹುಮತವಾದರೆ ಅದರ ಮೊದಲ ಅಧಿವೇಶನದಿಂದ 180 ಕೆಲಸದ ದಿನಗಳಲ್ಲಿ ಸುಧಾರಣೆಗಳನ್ನು ಪೂರ್ಣಗೊಳಿಸಲು ಸಾಂವಿಧಾನಿಕ ಸುಧಾರಣಾ ಮಂಡಳಿಯನ್ನು ರಚಿಸಲಾಗುತ್ತದೆ. ಭಾರತ–ಬಾಂಗ್ಲಾದೇಶ ಸಂಬಂಧ ಹದಗೆಟ್ಟಿದ್ದು ಹೇಗೆ? ಹಸ್ತಾಂತರದ ವಿನಂತಿಗಳ ಹೊರತಾಗಿಯೂ ಹಸೀನಾಗೆ ಆಶ್ರಯ ನೀಡಿದ್ದಕ್ಕಾಗಿ ಭಾರತವನ್ನು ಗುರಿಯಾಗಿಸಿಕೊಂಡಿರುವ ಬಾಂಗ್ಲಾದೇಶದ ಒಂದು ವರ್ಗ, ವಿಶೇಷವಾಗಿ ಯುವಕರು ಮತ್ತು Gen Z (ಜೆನ್ ಝೀ), ಭಾರತವು ದೇಶದ ವ್ಯವಹಾರಗಳಲ್ಲಿ ಮಧ್ಯಪ್ರವೇಶಿಸುತ್ತಿದೆ ಎಂದು ಭಾವಿಸುತ್ತಾರೆ. ಇದು ಅಲ್ಲಿ ತೀವ್ರ ಭಾರತ ವಿರೋಧಿ ಭಾವನೆಯನ್ನು ಹುಟ್ಟುಹಾಕಿದೆ. ಗಡಿ ಹತ್ಯೆಗಳು ಮತ್ತು ನೀರು ಹಂಚಿಕೆ ವಿವಾದಗಳಂತಹ ದೀರ್ಘಕಾಲದ ದೂರುಗಳು ಒತ್ತಡವನ್ನು ಹೆಚ್ಚಿಸಿವೆ. ಆದಾಗ್ಯೂ ಭಾರತವು ಬಾಂಗ್ಲಾದೇಶದ ಆಂತರಿಕ ವ್ಯವಹಾರಗಳಲ್ಲಿ ಎಂದಿಗೂ ಮಧ್ಯಪ್ರವೇಶಿಸಿಲ್ಲ. ಚೀನಾ ಮತ್ತು ಪಾಕಿಸ್ತಾನ ದೇಶಗಳೊಂದಿಗೆ ಯೂನಸ್ ಅವರಿಗೆ ಉತ್ತಮ ಸಂಪರ್ಕವಿದೆ. 2025 ರಲ್ಲಿ ಬೀಜಿಂಗ್ ಅನ್ನು ತನ್ನ ಮೊದಲ ವಿದೇಶ ಪ್ರವಾಸದ ತಾಣವನ್ನಾಗಿ ಮಾಡಿಕೊಂಡರು, ಇದು ಸಂಪ್ರದಾಯಕ್ಕೆ ವಿರುದ್ಧವಾಗಿದೆ. ಈ ಹಿಂದೆ ಯೂನಸ್ “ಭಾರತದ ಈಶಾನ್ಯ ರಾಜ್ಯಗಳಿಗೆ ಸಮುದ್ರದೊಂದಿಗೆ ನೇರ ಸಂಪರ್ಕ ಇಲ್ಲ. ನಾವೇ ಸಮುದ್ರದ ಮೇಲೆ ನಿಯಂತ್ರಣ ಹೊಂದಿದ್ದೇವೆ. ಇದು ವಿಪುಲ ಅವಕಾಶಗಳನ್ನು ಸೃಷ್ಟಿಸಿದೆ. ಚೀನಾ ಈ ಸಮುದ್ರ ಭಾಗವನ್ನು ತನ್ನ ಆರ್ಥಿಕ ಚಟುವಟಿಕೆಗಳ ವಿಸ್ತರಣೆಗೆ ಬಳಸಿಕೊಳ್ಳಬಹುದು” ಎಂದು ಹೇಳಿದ್ದರು. ಚೀನಾದ ನೆಲದಲ್ಲಿ ಭಾರತದ ಬಗ್ಗೆ ಅವರಾಡಿದ ಮಾತುಗಳು ಭಾರತವನ್ನು ಕೆರಳಿಸಿತ್ತು. ಪ್ರಸ್ತುತ ಚೀನಾ ಬಾಂಗ್ಲಾದೇಶದಲ್ಲಿ ಹಲವಾರು ಉನ್ನತ ಮಟ್ಟದ ಮೂಲಸೌಕರ್ಯ ಯೋಜನೆಗಳಲ್ಲಿ ತೊಡಗಿಸಿಕೊಂಡಿದೆ. ಭಾರತದ ‘ಚಿಕನ್ಸ್ ನೆಕ್’ ಪ್ರದೇಶಕ್ಕೆ ಹತ್ತಿರದ ರಂಗ್ಪುರದಲ್ಲಿರುವ ಲಾಲ್ಮೋನಿರ್ಹತ್ ವಾಯುನೆಲೆಯ ಪುನರುಜ್ಜೀವನ, ಮೊಂಗ್ಲಾ ಬಂದರಿನ ಆಧುನೀಕರಣ ಮತ್ತು ತೀಸ್ತಾ ನದಿಯ ನೀರು ನಿರ್ವಹಣಾ ಯೋಜನೆ ಸೇರಿವೆ. ಇತ್ತೀಚೆಗೆ ಭಾರತದ ಸಮೀಪದ ಉತ್ತರ ವಾಯುನೆಲೆಯಲ್ಲಿ ಡ್ರೋನ್ ಸ್ಥಾವರ ನಿರ್ಮಾಣಕ್ಕೂ ಒಪ್ಪಂದವಾಗಿದೆ. ಎಲ್ಲ ವಿಷಯದಲ್ಲಿಯೂ ಭಾರತ ಕಾದು ನೋಡುವ ನೀತಿಯನ್ನು ಅನುಸರಿಸುತ್ತಿದೆ. ಪಾಕಿಸ್ತಾನದೊಂದಿಗೆ ಬಾಂಗ್ಲಾ ನಂಟು ಪಾಕಿಸ್ತಾನದೊಂದಿಗಿನ ಬಾಂಗ್ಲಾದೇಶದ ಸಂಬಂಧ ವಿಶೇಷವಾಗಿ ಕಳವಳಕಾರಿಯಾಗಿದೆ. ಇತ್ತೀಚಿನ ತಿಂಗಳುಗಳಲ್ಲಿ ಇಸ್ಲಾಮಾಬಾದ್ನ ಮಿಲಿಟರಿ ನಾಯಕತ್ವ ಢಾಕಾಗೆ ಭೇಟಿ ನೀಡುತ್ತಿದೆ. 1971 ರ ನಂತರ ಈ ದೇಶಗಳು ಇಷ್ಟು ನಿಕಟವಾಗಿ ತೊಡಗಿಸಿಕೊಂಡಿರುವುದು ಇದೇ ಮೊದಲು. ಬಾಂಗ್ಲಾದೇಶ ಪಾಕಿಸ್ತಾನ ಮಾಡಿದ ದೌರ್ಜನ್ಯಗಳನ್ನು ಮರೆತಿದ್ದು, 14 ವರ್ಷಗಳ ಬಳಿಕ ನೇರ ವಿಮಾನಯಾನಗಳನ್ನು ಪುನರಾರಂಭಿಸಿದೆ. ಚಿತ್ತಗಾಂಗ್–ಕರಾಚಿ ನಡುವೆ ನೇರ ಸಮುದ್ರ ಸಂಪರ್ಕ ಸ್ಥಾಪಿಸಿದೆ. ಢಾಕಾ ಮತ್ತು ಇಸ್ಲಾಮಾಬಾದ್ ರಕ್ಷಣಾ ಸಹಕಾರಕ್ಕೂ ಮುಂದಾಗಿದ್ದು, ಬಾಂಗ್ಲಾದೇಶ JF–17 ಯುದ್ಧ ವಿಮಾನ ಖರೀದಿಯನ್ನು ಪರಿಗಣಿಸುತ್ತಿದೆ ಎಂದು ವರದಿಗಳು ಸೂಚಿಸುತ್ತವೆ. ಈ ಜೆಟ್ ಅನ್ನು ಚೀನಾ–ಪಾಕಿಸ್ತಾನ ಜಂಟಿಯಾಗಿ ಉತ್ಪಾದಿಸುತ್ತವೆ. ಬಾಂಗ್ಲಾದೇಶ ಚುನಾವಣೆಯನ್ನು ಭಾರತ ಹೇಗೆ ನೋಡುತ್ತದೆ? ಭಾರತಕ್ಕೆ ಬಾಂಗ್ಲಾದೇಶ ಕೇವಲ ನೆರೆಯ ರಾಷ್ಟ್ರವಲ್ಲ. ಭಾರತದ ಐದು ರಾಜ್ಯಗಳು ಬಾಂಗ್ಲಾದೇಶದೊಂದಿಗೆ ಗಡಿಯನ್ನು ಹಂಚಿಕೊಂಡಿವೆ. ಹೀಗಾಗಿ ಗಡಿ ಭದ್ರತೆಯಲ್ಲಿ ಇದು ಅನಿವಾರ್ಯ ಪಾತ್ರ ವಹಿಸುತ್ತದೆ. ಹಸೀನಾ ಆಳ್ವಿಕೆಯಲ್ಲಿ ಬಾಂಗ್ಲಾದೇಶದಲ್ಲಿ ನೆಲೆಸಿದ್ದ ಭಾರತ ವಿರೋಧಿ ದಂಗೆಕೋರರನ್ನು ಹತ್ತಿಕ್ಕಲು ಅವರು ಸಹಾಯ ಮಾಡಿದರು. ಮತ್ತೊಂದೆಡೆ 2001–2006 ರ ಅವಧಿಯಲ್ಲಿ ಬಿಎನ್ಪಿ ಆಡಳಿತದ ವೇಳೆ ಸಂಬಂಧಗಳು ಹದಗೆಟ್ಟವು. ಬಾಂಗ್ಲಾದೇಶ ವ್ಯಾಪಾರ ಮತ್ತು ಸಾಗಣೆಗೆ ಭಾರತವನ್ನು ಅವಲಂಬಿಸಿದೆ. ಭಾರತ ಏಷ್ಯಾದಲ್ಲಿ ಬಾಂಗ್ಲಾದೇಶದ ಅತಿದೊಡ್ಡ ವ್ಯಾಪಾರ ಪಾಲುದಾರ. ಆದಾಗ್ಯೂ ಪರಸ್ಪರ ವ್ಯಾಪಾರದ ಮೇಲಿನ ನಿರ್ಬಂಧಗಳಿಂದ ಬಾಂಗ್ಲಾದೇಶಕ್ಕೆ ಭಾರತದ ರಫ್ತುಗಳು 5% ಕ್ಕಿಂತ ಕಡಿಮೆಯಾಗಿದೆ. ಭಾರತವು ಬಾಂಗ್ಲಾದೇಶದ ರಫ್ತುಗಳಿಗೆ ಪ್ರಮುಖ ಸಾಗಣೆ ಪ್ರವೇಶವನ್ನು ಸ್ಥಗಿತಗೊಳಿಸಿದ್ದು, ಸಿದ್ಧ ಉಡುಪುಗಳ ಆಮದು ಕೂಡ ಸ್ಥಗಿತಗೊಂಡಿದೆ. ಈ ಕ್ರಮಗಳು ಬಾಂಗ್ಲಾದೇಶದ ರಫ್ತಿನ ಸುಮಾರು 42% ರ ಮೇಲೆ ಪರಿಣಾಮ ಬೀರಿವೆ. ರಾಜತಾಂತ್ರಿಕ ಕ್ಷೇತ್ರದಲ್ಲಿಯೂ ಒತ್ತಡ ಹೆಚ್ಚಿದ್ದು, ವೈದ್ಯಕೀಯ ವೀಸಾ ಸೇವೆಗಳನ್ನೂ ಉಭಯ ದೇಶಗಳು ಭಾಗಶಃ ಸ್ಥಗಿತಗೊಳಿಸಿವೆ. ಬಿಎನ್ಪಿ, ಜಮಾತ್ ಗೆ ಭಾರತದ ಸಂಪರ್ಕ ಹೊಸದಾಗಿ ಚುನಾಯಿತ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಭಾರತ–ಬಾಂಗ್ಲಾದೇಶ ವ್ಯಾಪಾರ ಮತ್ತು ರಾಜತಾಂತ್ರಿಕ ಸಮಸ್ಯೆಗಳನ್ನು ಬಗೆಹರಿಸುವ ನಿರೀಕ್ಷೆ ಇದೆ. ಕಳೆದ ತಿಂಗಳು ವಿದೇಶಾಂಗ ಸಚಿವ ಎಸ್. ಜೈಶಂಕರ್ ಖಲೀದಾ ಜಿಯಾ ಅವರ ಅಂತ್ಯಕ್ರಿಯೆಗಾಗಿ ಢಾಕಾಗೆ ತೆರಳಿ ತಾರಿಕ್ ರೆಹಮಾನ್ ಅವರನ್ನು ಭೇಟಿ ಮಾಡಿ ಪ್ರಧಾನಿ ನರೇಂದ್ರ ಮೋದಿ ಅವರ ಪತ್ರ ಹಸ್ತಾಂತರಿಸಿದರು. ಹಸೀನಾ ಯುಗದ ಪಕ್ಷದ ಮೇಲಿನ ನಿಷೇಧ ಸಡಿಲವಾದ ನಂತರ ಜಮಾತ್ ಮತ್ತೆ ರಾಜಕೀಯ ಅಂಗಳಕ್ಕೆ ಪ್ರವೇಶಿಸಿದ್ದು, ಭಾರತವೂ ಸಂವಾದ ಆರಂಭಿಸಿದೆ. ಐತಿಹಾಸಿಕವಾಗಿ ಬಿಎನ್ಪಿಯ ಮಿತ್ರಪಕ್ಷವಾಗಿದ್ದ ಜಮಾತ್ ಈಶಾನ್ಯ ವಿರೊಧಿ ಗುಂಪುಗಳಿಗೆ ಪ್ರೋತ್ಸಾಹ ನೀಡಿದ ಆರೋಪಗಳನ್ನು ಎದುರಿಸಿದೆ. ಕಳೆದ ವರ್ಷ ಭಾರತೀಯ ಅಧಿಕಾರಿಗಳು ನಾಲ್ಕು ಬಾರಿ ಮಾತುಕತೆ ನಡೆಸಿದ್ದಾರೆ ಎಂಬ ವರದಿಗಳಿವೆ. ಢಾಕಾ ಹೋಟೆಲ್ನಲ್ಲಿ ನಡೆದ ಭಾರತೀಯ ಹೈಕಮಿಷನ್ ನ ಗಣರಾಜ್ಯೋತ್ಸವ ಸ್ವಾಗತಕ್ಕೂ ಆಹ್ವಾನ ಕಳುಹಿಸಲಾಗಿದೆ. ಜಮಾತ್ ಇದೇ ಮೊದಲ ಬಾರಿಗೆ ಖುಲ್ನಾದಿಂದ ಕೃಷ್ಣ ನಂದಿ ಎಂಬ ಹಿಂದೂ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ.
ಚಿಂಚೋಳಿ | ಸಾಲು ಮರದ ತಿಮ್ಮಕ್ಕನ ವೃಕ್ಷೋಧಾಮಕ್ಕೆ ಶಾಸಕ ಡಾ.ಅವಿನಾಶ ಜಾಧವ ಭೇಟಿ
ಚಿಂಚೋಳಿ: ಕರ್ನಾಟಕ ಅಭಿವೃದ್ಧಿ ಮಂಡಳಿಯಿಂದ 50 ಲಕ್ಷ ರೂ. ಅನುದಾನದಡಿಯಲ್ಲಿ ಪೋಲಕಪಳ್ಳಿಯ ಸಾಲು ಮರದ ತಿಮ್ಮಕ್ಕನ ವೃಕ್ಷೋಧಾಮವನ್ನು ಅಭಿವೃದ್ಧಿಪಡಿಸಲಾಗಿದೆ ಎಂದು ಶಾಸಕ ಡಾ.ಅವಿನಾಶ ಜಾಧವ ತಿಳಿಸಿದ್ದಾರೆ. ತಾಲೂಕಿನ ಪೋಲಕಪಳ್ಳಿ ಗ್ರಾಮದ ಹೊರವಲಯದಲ್ಲಿರುವ ವೃಕ್ಷೋಧಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು, ಚೆಟ್ಟಿನಾಡ ಸಿಮೆಂಟ ಕಂಪನಿಯಿಂದ CSR ಅಡಿಯಲ್ಲಿ 29 ಲಕ್ಷ ರೂ. ಹಾಗೂ ಕೆಕೆಆರ್ಡಿಬಿಯಿಂದ ಉದ್ಯಾನ ಅಭಿವೃದ್ಧಿಗೆ 50 ಲಕ್ಷ ರೂ. ಅನುದಾನ ದೊರೆತಿದೆ ಎಂದು ಹೇಳಿದರು. ಮುಂದಿನ ಹಂತದಲ್ಲಿ ಇನ್ನಷ್ಟು ಅಭಿವೃದ್ಧಿಗೆ ಹೆಚ್ಚಿನ ಅನುದಾನ ತರಲು ಪ್ರಯತ್ನಿಸಲಾಗುವುದು ಎಂದರು. ಪ್ರಾದೇಶಿಕ ವಲಯ ಅರಣ್ಯಾಧಿಕಾರಿ ಜಗನ್ನಾಥ ಕೊರಳ್ಳಿ ಮಾತನಾಡಿ, 20 ಎಕರೆ ಪ್ರದೇಶದಲ್ಲಿ ವೃಕ್ಷೋಧಾಮವನ್ನು ಅಭಿವೃದ್ಧಿಪಡಿಸಲಾಗಿದ್ದು, ಬಿದಿರು ತೋಟ, ಕಿರು ಮೃಗಾಲಯ ಹಾಗೂ ಅರಳಿ, ಹಾಲು, ನೇರಳೆ, ಬೇವು, ಸಿಸು ಸೇರಿದಂತೆ ವಿವಿಧ ಕಾಡು ಜಾತಿಯ ಮರಗಳನ್ನು ನೆಡಲಾಗಿದೆ ಎಂದು ಮಾಹಿತಿ ನೀಡಿದರು. ಹೆಚ್ಚಿನ ಅಭಿವೃದ್ಧಿಗೆ ಸುಮಾರು 2 ಕೋಟಿ ರೂ. ಅನುದಾನ ನೀಡಿದರೆ ವೃಕ್ಷೋಧಾಮವನ್ನು ಮತ್ತಷ್ಟು ಸುಧಾರಿಸಲು ಅನುಕೂಲವಾಗುತ್ತದೆ ಎಂದು ಶಾಸಕರಿಗೆ ಮನವಿ ಮಾಡಿದರು. ವನ್ಯಜೀವಿ ಧಾಮದ ಅರಣ್ಯಾಧಿಕಾರಿ ಸಂಜುಕುಮಾರ ಚವ್ಹಾಣ ಮಾತನಾಡಿದರು. ಈ ಸಂದರ್ಭದಲ್ಲಿ ಜಗನ್ನಾಥ ಕೊರಳ್ಳಿ, ಗೋಪಾಲರಾವ್ ಕಟ್ಟಿಮನಿ, ಅಶೋಕ ಚವ್ಹಾಣ್, ವೀರಭದ್ರಪ್ಪ, ಸಿದ್ದೂರೂಡ, ಶ್ರೀಮಂತ ಕಟ್ಟಿಮನಿ, ಕೆ.ಎಂ.ಬಾರಿ, ಜಗದೀಶ್ ಸಿಂಗ್ ಠಾಕೂರ್, ವೀರೇಶ್ ಯಂಪಳ್ಳಿ, ಭೀಮಶೆಟ್ಟಿ ಮೂರಡಾ, ಅನೀಲಕುಮಾರ ಕಂಟ್ಲಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಅಂತರರಾಷ್ಟ್ರೀಯ ವಂಚನೆಯನ್ನು ಹತ್ತಿಕ್ಕುವ ನಿಟ್ಟಿನಲ್ಲಿ ಇತ್ತೀಚಿನ ವಾರಗಳಲ್ಲಿ ಕಾಂಬೋಡಿಯಾ ಸುಮಾರು 200 ಸ್ಕ್ಯಾಮ್ ಸೆಂಟರ್ಗಳನ್ನು ಮುಚ್ಚಿದೆ ಎಂದು ಹಿರಿಯ ಸರ್ಕಾರಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. “ನಾವು ಈಗ ಸುಮಾರು 190 ಕೇಂದ್ರಗಳನ್ನು ಮುಚ್ಚಿದ್ದೇವೆ” ಎಂದು ಹಿರಿಯ ಸಚಿವ ಹಾಗೂ ಕಾಂಬೋಡಿಯಾದ ಆನ್ಲೈನ್ ಹಗರಣಗಳ ವಿರುದ್ಧದ ಆಯೋಗದ ಅಧ್ಯಕ್ಷೆ ಚೈ ಸಿನಾರಿತ್ ಅವರು ರಾಯಿಟರ್ಸ್ಗೆ ತಿಳಿಸಿದ್ದಾರೆ. ಕಳೆದ ವರ್ಷದ ಕೊನೆಯಲ್ಲಿ ಪ್ರಾರಂಭವಾದ ಬೃಹತ್ ಕಾರ್ಯಾಚರಣೆಯ ವೇಳೆ ಅಧಿಕಾರಿಗಳು 173 ಹಿರಿಯ ಅಪರಾಧಿಗಳನ್ನು ಬಂಧಿಸಿದ್ದು, 11,000 ಮಂದಿಯನ್ನು ಗಡಿಪಾರು ಮಾಡಿದ್ದಾರೆ. ಚೀನಾ ಮೂಲದ ಹಗರಣದ ಕಿಂಗ್ಪಿನ್ನನ್ನು ಅಮೆರಿಕ ದೋಷಾರೋಪಣೆ ಮಾಡಿದ ನಂತರ ಚೀನಾ ಗಡಿಪಾರು ಮಾಡಿತು ಎಂದು ಚೈ ತಿಳಿಸಿದ್ದಾರೆ. ಸಾವಿರಾರು ಕಾರ್ಮಿಕರು ತಮ್ಮ ತಾಯ್ನಾಡಿಗೆ ಮರಳಲು ಈ ಕಾಂಪೌಂಡ್ಗಳಿಂದ ಓಡಿಹೋಗುತ್ತಿದ್ದಾರೆ. ಇವರಲ್ಲಿ ಹಲವರು ಅಪರಾಧಿಗಳಲ್ಲ; ಅವರು ಮಾನವ ಕಳ್ಳಸಾಗಣೆಗೆ ಒಳಗಾದವರು. ತಮ್ಮ ಇಚ್ಛೆಗೆ ವಿರುದ್ಧವಾಗಿ ಬಂಧಿಸಲ್ಪಟ್ಟು, ಭಯಾನಕ ಹಾಗೂ ಹಿಂಸಾತ್ಮಕ ಪರಿಸ್ಥಿತಿಗಳಲ್ಲಿ ಕೆಲಸ ಮಾಡಲು ಒತ್ತಾಯಿಸಲ್ಪಟ್ಟಿದ್ದರು. ಅನೇಕರು ಹಣವಿಲ್ಲದೆ ಹಾಗೂ ಯಾವುದೇ ದಾಖಲೆಗಳಿಲ್ಲದೆ ಪಲಾಯನ ಮಾಡುತ್ತಿರುವುದರಿಂದ ಅಮ್ನೆಸ್ಟಿ ಇಂಟರ್ನ್ಯಾಷನಲ್ ಈ ಪರಿಸ್ಥಿತಿಯನ್ನು “ಮಾನವೀಯ ಬಿಕ್ಕಟ್ಟು” ಎಂದು ವರ್ಣಿಸಿದೆ. ದಕ್ಷಿಣ ಕಾಂಬೋಡಿಯಾದ ಕಂಪೋಟ್ ಪ್ರಾಂತ್ಯದಲ್ಲಿ ಅಪರಾಧಿಗಳು ಜನರನ್ನು ವಂಚಿಸಲು ಬಳಸುತ್ತಿದ್ದ ದೊಡ್ಡ ಕೊಠಡಿಗಳನ್ನು ವರದಿಗಾರರಿಗೆ ತೋರಿಸಲಾಯಿತು. ಅದರಲ್ಲಿ ಕಂಪ್ಯೂಟರ್ ಸ್ಟೇಷನ್ಗಳು ಮತ್ತು ಜನರನ್ನು ಹೇಗೆ ವಂಚಿಸುವುದು ಎಂಬುದನ್ನು ಸೂಚಿಸುವ ದಾಖಲೆಗಳು ತುಂಬಿದ್ದವು. ಫೋನ್ ಕರೆಗಳಿಗಾಗಿ ಸ್ಟುಡಿಯೋ ಬೂತ್ಗಳು ಹಾಗೂ ನಕಲಿ ಭಾರತೀಯ ಪೊಲೀಸ್ ಠಾಣೆಗಳೂ ಇದ್ದವು. ಒಂದು ಕೇಂದ್ರದಲ್ಲಿ ಮಹಾತ್ಮ ಗಾಂಧಿ ಮತ್ತು ಬಿ.ಆರ್. ಅಂಬೇಡ್ಕರ್ ಅವರ ಫೋಟೋಗಳು, ಕೇಂದ್ರ ತನಿಖಾ ದಳ (CBI) ಲಾಂಛನ ಹೊಂದಿರುವ ಫಲಕಗಳು, ಗ್ರೇಟರ್ ಮುಂಬೈ ಪೊಲೀಸರ ಪೋಸ್ಟರ್ಗಳೂ ಕಂಡುಬಂದವು. ಇವೆಲ್ಲವನ್ನೂ “ಡಿಜಿಟಲ್ ಬಂಧನ” ಹಗರಣಗಳ ಮೂಲಕ ಭಾರತೀಯರನ್ನು ವಂಚಿಸಲು ಬಳಸಲಾಗುತ್ತಿತ್ತು. ಆದಾಗ್ಯೂ, ನೋಮ್ ಪೆನ್ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಈ ವಿಷಯದ ಕುರಿತು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. “ಮೈ ಕ್ಯಾಸಿನೊ” ಎಂದು ಕರೆಯಲ್ಪಡುವ ಕಂಪೋಟ್ ಕ್ಯಾಸಿನೊ ಸಂಕೀರ್ಣದೊಳಗೆ ಯಾರನ್ನೂ ಬಂಧಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆಪಾದಿತ ಬಾಸ್ ಹಾಗೂ ಉದ್ಯಮಿ ಲೈ ಕುವಾಂಗ್ ಬಂಧನದ ನಂತರ ಕಾರ್ಮಿಕರು ಓಡಿಹೋದರು. ಓಡಿಹೋದವರನ್ನು ಬಂಧಿಸಲು ಸಾಕಷ್ಟು ಪೊಲೀಸರು ಇರಲಿಲ್ಲ ಎನ್ನಲಾಗಿದೆ. ಬಂಧನದಲ್ಲಿರುವ ಲೈ ಕುವಾಂಗ್ ಅವರ ಪ್ರತಿನಿಧಿಗಳ ಸಂಪರ್ಕ ವಿವರಗಳು ತಕ್ಷಣ ಲಭ್ಯವಾಗಿಲ್ಲ. “ಇಡೀ ಪ್ರಾಂತ್ಯದಲ್ಲಿ ನಮಗೆ ಕೇವಲ 1,000 ಪೊಲೀಸರು ಇದ್ದಾರೆ. ಸುಮಾರು 300 ಮಿಲಿಟರಿ ಪೊಲೀಸರು ಇದ್ದಾರೆ,” ಎಂದು ಕಂಪೋಟ್ ಪ್ರಾಂತೀಯ ಪೊಲೀಸ್ ಮುಖ್ಯಸ್ಥ ಮಾವೋ ಚನ್ಮೋಥುರಿತ್ ಹೇಳಿದ್ದಾರೆ. “ಎರಡೂ ಪಡೆಗಳನ್ನು ಒಟ್ಟುಗೂಡಿಸಿದರೂ ಅವರನ್ನು ತಡೆಯಲು ಸಾಧ್ಯವಾಗಲಿಲ್ಲ. ಅವರು ಸ್ಥಳ ತೊರೆದಾಗ ಸುಮಾರು 6,000–7,000 ಜನರಿದ್ದರು” ಎಂದಿದ್ದಾರೆ. ಡಿಸೆಂಬರ್ನಲ್ಲಿ ಗಡಿ ಸಂಘರ್ಷದ ವೇಳೆ ಥಾಯ್ ಪಡೆಗಳು ಬಾಂಬ್ ದಾಳಿ ನಡೆಸಿ ಆಕ್ರಮಿಸಿಕೊಂಡ ಕಾಂಬೋಡಿಯನ್ ಪ್ರದೇಶದಲ್ಲಿ ಪ್ರತ್ಯೇಕ ವ್ಯವಸ್ಥೆಯನ್ನು ನೋಡಲು ಥಾಯ್ ಅಧಿಕಾರಿಗಳು ಮಾಧ್ಯಮ ಹಾಗೂ ವಿದೇಶಿ ಪ್ರತಿನಿಧಿಗಳನ್ನು ಕರೆದೊಯ್ದಿದ್ದರು. ಅಲ್ಲಿ ಭೇಟಿ ನೀಡಿದ ರಾಯಿಟರ್ಸ್ ವರದಿಗಾರರು ಅನೇಕ ದೇಶಗಳ ನಕಲಿ ಪೊಲೀಸ್ ಠಾಣೆಗಳು ಮತ್ತು ದಾಖಲೆಗಳ ಸಂಗ್ರಹ ಸೇರಿದಂತೆ ಇದೇ ರೀತಿಯ ವಸ್ತುಗಳನ್ನು ಪತ್ತೆಹಚ್ಚಿದ್ದಾರೆ. ಕಾಂಬೋಡಿಯಾದಲ್ಲಿ ಸ್ಕ್ಯಾಮ್ ಫ್ಯಾಕ್ಟರಿಗಳನ್ನು ಕಡಿಮೆ ಮಾಡಲು ಪ್ರಯತ್ನಿಸಿದರೂ ಅವುಗಳ ಹರಡುವಿಕೆಯನ್ನು ಸಂಪೂರ್ಣವಾಗಿ ತಡೆಯಲು ಸಾಧ್ಯವಾಗಲಿಲ್ಲ. ಇತ್ತೀಚಿನ ಅಭಿಯಾನವು ವಿಶಾಲ ವ್ಯಾಪ್ತಿಯಲ್ಲಿದ್ದು, ಇಂಥ ಸ್ಥಳಗಳನ್ನು ಮುಚ್ಚುವುದು ಮತ್ತು ಹಗರಣದಲ್ಲಿ ಭಾಗಿಯಾದವರನ್ನು ಬಂಧಿಸುವುದರ ಮೇಲೆ ಕೇಂದ್ರೀಕರಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ವಂಚನೆಗಳ ಪುರಾವೆ ವಶಪಡಿಸಿದ ಥಾಯ್ ಸೇನೆ ಥೈಲ್ಯಾಂಡ್ ಸೇನೆ ಫೆಬ್ರವರಿ 2ರಂದು ಕಾಂಬೋಡಿಯನ್ ಹಗರಣ ಸಂಕೀರ್ಣದಿಂದ ವಂಚನೆಗಳ ಪುರಾವೆಗಳನ್ನು ವಶಪಡಿಸಿಕೊಂಡಿದೆ ಎಂದು ತಿಳಿಸಿದೆ. ವಿವಾದಿತ ಕಾಂಬೋಡಿಯಾ–ಥೈಲ್ಯಾಂಡ್ ಗಡಿಯಲ್ಲಿರುವ O’Smach ಸಂಕೀರ್ಣವನ್ನು ಕಳೆದ ವರ್ಷ ಉಭಯ ದೇಶಗಳ ನಡುವಿನ ಘರ್ಷಣೆಯ ಸಂದರ್ಭದಲ್ಲಿ ಥಾಯ್ ಪಡೆಗಳು ವಶಪಡಿಸಿಕೊಂಡಿದ್ದವು. ಈ ಸಂಕೀರ್ಣದಲ್ಲಿ ಸಾವಿರಾರು ಜನರಿದ್ದು, ಅವರಲ್ಲಿ ಹಲವರು ಮಾನವ ಕಳ್ಳಸಾಗಣೆಯ ಸಂತ್ರಸ್ತರಾಗಿದ್ದರು. ಅಪರಿಚಿತರನ್ನು ವಂಚಿಸಲು ಇವರನ್ನು ಬಳಸಲಾಗುತ್ತಿತ್ತು ಎಂದು ಥಾಯ್ ಮಿಲಿಟರಿ ಹೇಳಿದೆ. ಒಂದು ಕಟ್ಟಡದಲ್ಲಿ ಟಾರ್ಗೆಟ್ ಲಿಸ್ಟ್ಗಳು, ಸಂಪರ್ಕ ವಿವರಗಳು ಹಾಗೂ ಹಗರಣ ಸಂವಾದಗಳ ಸ್ಕ್ರಿಪ್ಟ್ಗಳನ್ನು ಒಳಗೊಂಡ ದಾಖಲೆಗಳು ಎಲ್ಲೆಡೆ ಹರಡಿಕೊಂಡಿದ್ದವು. ಸಿಂಗಾಪುರ, ಚೀನಾ, ಭಾರತ, ಇಂಡೋನೇಷ್ಯಾ, ವಿಯೆಟ್ನಾಂ ಮತ್ತು ಆಸ್ಟ್ರೇಲಿಯಾ ಸೇರಿದಂತೆ ಕನಿಷ್ಠ ಏಳು ದೇಶಗಳ ಪೊಲೀಸ್ ಕಚೇರಿಯಂತೆ ಕಾಣುವ ಕೊಠಡಿಗಳನ್ನೂ ಸ್ಥಾಪಿಸಲಾಗಿತ್ತು. “ವಂಚಕರು ಉತ್ತಮವಾಗಿ ಸಂಘಟಿತರಾಗಿದ್ದಾರೆ. ಉತ್ತಮ ಮೂಲಸೌಕರ್ಯ ಮತ್ತು ವ್ಯವಸ್ಥೆಗಳನ್ನು ಹೊಂದಿದ್ದಾರೆ. ಜೊತೆಗೆ ಕೆಲಸದ ಹರಿವು ಮತ್ತು ವಂಚನೆಗಳಿಗೆ ಹಲವು ತಂತ್ರಗಳನ್ನು ಬಳಸುತ್ತಿದ್ದಾರೆ,” ಎಂದು ಥಾಯ್ ಸೇನೆಯ ಗುಪ್ತಚರ ಘಟಕದ ನಿರ್ದೇಶಕ ಲೆಫ್ಟಿನೆಂಟ್ ಜನರಲ್ ತೀರನನ್ ನಂದಕ್ವಾಂಗ್ ಹೇಳಿದ್ದಾರೆ. ಸಂಕೀರ್ಣದಲ್ಲಿನ ಒಂದು ಕೋಣೆಯಲ್ಲಿ ವಿಯೆಟ್ನಾಂ ಬ್ಯಾಂಕ್ ಶಾಖೆಯಂತೆ ಕಾಣುವ ಪ್ರತಿಕೃತಿ ಇತ್ತು. ಸೇವಾ ಕೌಂಟರ್ಗಳು, ಬ್ಯಾನರ್ಗಳು ಮತ್ತು ಕಾಯುವ ಪ್ರದೇಶವನ್ನೂ ಹೊಂದಿತ್ತು. ಈ ಸೆಟಪ್ ಗಳು ಹಗರಣದ ಅಗತ್ಯ ಅಂಶಗಳಾಗಿದ್ದವು. ಅಧಿಕಾರಿಗಳಂತೆ ಅಥವಾ ಕಾನೂನು ಜಾರಿ ಸಂಸ್ಥೆಗಳ ಪ್ರತಿನಿಧಿಗಳಂತೆ ನಟಿಸುವ ವಂಚಕರು ಮುಗ್ಧ ಜನರನ್ನು ಗುರಿಯಾಗಿಸಿಕೊಂಡು, ಸೂಚನೆ ಪಾಲಿಸದಿದ್ದರೆ ಬಂಧನ ಅಥವಾ ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂದು ಬೆದರಿಸುತ್ತಿದ್ದರು. ಕಾಂಬೋಡಿಯಾ ಮತ್ತು ಇತರೆಡೆಗಳಲ್ಲಿ ಇಂತಹ ವಂಚನಾ ಕಾರ್ಯಾಚರಣೆಗಳು ಪ್ರಪಂಚದಾದ್ಯಂತದ ಜನರಿಂದ ಶತಕೋಟಿ ಡಾಲರ್ಗಳನ್ನು ವಂಚಿಸಿವೆ. ಅನೇಕ ದೇಶಗಳ ಜನರನ್ನು ಗುಲಾಮರಂತಿರುವ ಪರಿಸ್ಥಿತಿಗಳಲ್ಲಿ ಕೆಲಸ ಮಾಡಲು ಬಲವಂತಪಡಿಸಿರುವುದಾಗಿ ತಜ್ಞರು ತಿಳಿಸಿದ್ದಾರೆ. ಡಿಜಿಟಲ್ ಬಂಧನ ಹಗರಣಗಳ ವಿರುದ್ಧ ಭಾರತದ ಹೋರಾಟಕ್ಕೆ ಇದು ಏಕೆ ಮುಖ್ಯ? ಭಾರತವು ಹೆಚ್ಚುತ್ತಿರುವ ಸೈಬರ್ ವಂಚನೆಗಳನ್ನು ಎದುರಿಸುತ್ತಿರುವ ಸಂದರ್ಭದಲ್ಲಿ, ವಿಶೇಷವಾಗಿ ಹಿರಿಯ ನಾಗರಿಕರನ್ನು ಗುರಿಯಾಗಿಸಿಕೊಂಡ “ಡಿಜಿಟಲ್ ಬಂಧನ” ಹಗರಣಗಳಿಗೆ ಕಡಿವಾಣ ಹಾಕುವುದು ಅತ್ಯಂತ ಮುಖ್ಯವಾಗಿದೆ. ಕೇಂದ್ರ ಗೃಹ ಸಚಿವಾಲಯದ ವಿಭಾಗವಾದ ಭಾರತೀಯ ಸೈಬರ್ ಅಪರಾಧ ಸಮನ್ವಯ ಕೇಂದ್ರ (I4C) ವರದಿಯ ಪ್ರಕಾರ, ಕಳೆದ ಆರು ವರ್ಷಗಳಲ್ಲಿ ಭಾರತೀಯರು ವಿವಿಧ ವಂಚನೆ ಪ್ರಕರಣಗಳಲ್ಲಿ ₹52,976 ಕೋಟಿಗೂ ಹೆಚ್ಚು ಹಣ ಕಳೆದುಕೊಂಡಿದ್ದಾರೆ. ಡಿಜಿಟಲ್ ಅರೆಸ್ಟ್ ಹಗರಣಗಳ ತನಿಖೆಯನ್ನು ವಹಿಸಿಕೊಳ್ಳಲು ಭಾರತದ ಸುಪ್ರೀಂ ಕೋರ್ಟ್ ಕೇಂದ್ರ ತನಿಖಾ ದಳಕ್ಕೆ ಸೂಚಿಸಿದ್ದು, ಈ ಸಮಸ್ಯೆಯನ್ನು “ತಕ್ಷಣದ ಗಮನ ಅಗತ್ಯವಿರುವ ವಿಷಯ” ಎಂದು ಕರೆದಿದೆ. ಭ್ರಷ್ಟಾಚಾರ ತಡೆ ಕಾಯ್ದೆಯಡಿ ಬ್ಯಾಂಕರ್ಗಳ ಪಾತ್ರ ಪರಿಶೀಲಿಸಲು ಸಿಬಿಐಗೆ ಮುಕ್ತ ಹಸ್ತ ನೀಡಲಾಗಿದೆ. ವಂಚನೆ ಖಾತೆಗಳು — ‘ಮ್ಯೂಲ್ ಖಾತೆಗಳು’ — ಮೂಲಕ ಹಣವನ್ನು ವೇಗವಾಗಿ ವರ್ಗಾಯಿಸಲಾಗುತ್ತದೆ. ಅನುಮಾನಾಸ್ಪದ ಖಾತೆಗಳನ್ನು ಪತ್ತೆಹಚ್ಚಲು ಹಾಗೂ ಅಪರಾಧದ ಆದಾಯವನ್ನು ತಕ್ಷಣ ಸ್ಥಗಿತಗೊಳಿಸಲು ಕೃತಕ ಬುದ್ಧಿಮತ್ತೆ (AI) ಅಥವಾ ಯಂತ್ರ ಕಲಿಕೆ (ML) ವ್ಯವಸ್ಥೆಗಳನ್ನು ಬಳಸುವ ಸಾಧ್ಯತೆ ಕುರಿತು ಭಾರತೀಯ ರಿಸರ್ವ್ ಬ್ಯಾಂಕ್ (RBI) ಪರಿಶೀಲಿಸಲು ಸೂಚಿಸಲಾಗಿದೆ. ಹೆಚ್ಚಿನ ಡಿಜಿಟಲ್ ವಂಚನೆಗಳು ಕರೆ ಮಾಡುವವರಿಂದ ಹಿಡಿದು ಭ್ರಷ್ಟ ಬ್ಯಾಂಕರ್ಗಳು, ಮ್ಯೂಲ್ ಖಾತೆಗಳವರೆಗೆ ಇಡೀ ಪರಿಸರ ವ್ಯವಸ್ಥೆಯನ್ನು ಒಳಗೊಂಡ ಅತ್ಯಾಧುನಿಕ ಅಂತರರಾಷ್ಟ್ರೀಯ ನೆಟ್ವರ್ಕ್ಗಳಿಂದ ನಡೆಯುತ್ತಿವೆ. ಉದಾಹರಣೆಗೆ, ದೆಹಲಿ ಪೊಲೀಸರು ಕಳೆದ ತಿಂಗಳು ತೈವಾನ್ ಸಂಪರ್ಕ ಹೊಂದಿದ ಅಂತರರಾಷ್ಟ್ರೀಯ ಸೈಬರ್ ಅಪರಾಧ ಸಿಂಡಿಕೇಟ್ ಅನ್ನು ಭೇದಿಸಿದ್ದು, ಭಯೋತ್ಪಾದನಾ ವಿರೋಧಿ ಮತ್ತು ಕಾನೂನು ಜಾರಿ ಅಧಿಕಾರಿಗಳಂತೆ ನಟಿಸಿ ಭಾರತದಾದ್ಯಂತ ಸುಮಾರು ₹100 ಕೋಟಿ ವಂಚಿಸಿರುವ ಆರೋಪವಿದೆ. ಆರೋಪಿಗಳಲ್ಲಿ ಹಲವರು ಈ ಹಿಂದೆ ಕಾಂಬೋಡಿಯಾದ ಹಗರಣ ಕೇಂದ್ರಗಳಲ್ಲಿ ಕೆಲಸ ಮಾಡಿದ್ದರು. ಪಾಕಿಸ್ತಾನ ಮೂಲದ ಹ್ಯಾಂಡ್ಲರ್ನಿಂದ ನೇಮಕಗೊಂಡು ಹಣಕಾಸು ಪಡೆಯುತ್ತಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ನೇಪಾಳದ ವಕೀಲರೊಬ್ಬರು ದೂರದಿಂದ ಕಾರ್ಯಾಚರಣೆಗಳನ್ನು ಮೇಲ್ವಿಚಾರಣೆ ಮಾಡುತ್ತಿದ್ದರೆಂಬ ಶಂಕೆಯೂ ವ್ಯಕ್ತವಾಗಿದೆ. ಅದೇ ರೀತಿ, The Indian Express ವರದಿ ಪ್ರಕಾರ, ದೆಹಲಿ ಪೊಲೀಸರು ವೃದ್ಧ ದಂಪತಿಗೆ ₹14.85 ಕೋಟಿ ವಂಚಿಸಿದ ಆರೋಪದಲ್ಲಿ ಏಳು ಮಂದಿಯನ್ನು ಬಂಧಿಸಿದ್ದಾರೆ. ಮೂರು ರಾಜ್ಯಗಳಲ್ಲಿ ಸರ್ಕಾರೇತರ ಸಂಸ್ಥೆಗಳು (NGO), ಅಂತರರಾಷ್ಟ್ರೀಯ ಸೈಬರ್ ಅಪರಾಧ ಸಿಂಡಿಕೇಟ್ ಹಾಗೂ ಮ್ಯೂಲ್ ಖಾತೆಗಳನ್ನು ಒಳಗೊಂಡ ಸಂಕೀರ್ಣ “ಡಿಜಿಟಲ್ ಅರೆಸ್ಟ್” ಮೂಲಕ ಈ ಹಗರಣ ನಡೆದಿದೆ ಎಂದು ಆರೋಪಿಸಲಾಗಿದೆ. ಅಂತರರಾಷ್ಟ್ರೀಯ ಸಿಂಡಿಕೇಟ್ನಲ್ಲಿ ಕಾಂಬೋಡಿಯಾ ಮತ್ತು ನೇಪಾಳ ಮೂಲದ ವಂಚಕರು ಸೇರಿದ್ದಾರೆ. ವಾಸ್ತವವಾಗಿ, ಕಾಂಬೋಡಿಯಾ, ವಿಯೆಟ್ನಾಂ ಹಾಗೂ ಮ್ಯಾನ್ಮಾರ್ ದೇಶಗಳು ಡಿಜಿಟಲ್ ಅರೆಸ್ಟ್ ಸೇರಿದಂತೆ ಜಾಗತಿಕ ಡಿಜಿಟಲ್ ಹಗರಣಗಳ ಪ್ರಮುಖ ಕೇಂದ್ರಗಳಾಗಿವೆ.
ಕಾರ್ಕಳ, ಫೆ.12: ಬೆಳ್ಮಣ್ ಗ್ರಾಮದ ಬೆಳ್ಮಣ್ ಪೇಟೆಯ ಕೋಳಿ ಅಂಗಡಿಯ ಬಳಿ ಫೆ.11ರಂದು ಸಂಜೆ ವೇಳೆ ಮಟ್ಕಾ ಜುಗಾರಿ ಆಟ ನಡೆಸುತ್ತಿದ್ದ ಉಚ್ಚಿಲ ಮುಳ್ಳಗುಡ್ಡೆಯ ಕೀರ್ತನ್(31) ಹಾಗೂ ನಂದಳಿಕೆಯ ಯೋಗೀಶ(58) ಎಂಬವರನ್ನು ಕಾರ್ಕಳ ಗ್ರಾಮಾಂತರ ಪೋಲೀಸರು 2,440ರೂ. ನಗದು ಸಹಿತ ವಶಕ್ಕೆ ಪಡೆದುಕೊಂಡಿದ್ದಾರೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೆಲಸದ ಸ್ಥಳಗಳಲ್ಲಿ ಜಾತಿ ತಾರತಮ್ಯ| ಮಲ್ಲಿಕಾರ್ಜುನ ಖರ್ಗೆ ಕಳವಳ
ಹೊಸದಿಲ್ಲಿ, ಫೆ. 12: ಕೆಲಸದ ಸ್ಥಳಗಳಲ್ಲಿ ಜಾತಿ ತಾರತಮ್ಯದ ಕುರಿತು ಕಾಂಗ್ರೆಸ್ನ ಹಿರಿಯ ನಾಯಕ ಹಾಗೂ ರಾಜ್ಯ ಸಭೆಯಲ್ಲಿ ಪ್ರತಿಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಗುರುವಾರ ಕಳವಳ ವ್ಯಕ್ತಪಡಿಸಿದ್ದಾರೆ. ಒಡಿಶಾದಲ್ಲಿ ಅಂಗನವಾಡಿಯ ದಲಿತ ಕಾರ್ಯಕರ್ತೆ ಬೇಯಿಸಿದ ಆಹಾರವನ್ನು ಒಂದು ನಿರ್ದಿಷ್ಟ ಸಮುದಾಯದ ಜನರು ತಮ್ಮ ಮಕ್ಕಳು ತಿನ್ನುವುದಕ್ಕೆ ವಿರೋಧ ವ್ಯಕ್ತಪಡಿಸಿದ ಘಟನೆಯನ್ನು ಅವರು ಉಲ್ಲೇಖಿಸಿದ್ದಾರೆ. ಮೇಲ್ಮನೆಯ ಶೂನ್ಯ ವೇಳೆಯಲ್ಲಿ ಖರ್ಗೆ ಅವರು ಈ ವಿಷಯ ಎತ್ತಿದರು. ಈ 21ನೇ ಶತಮಾನದಲ್ಲಿ ನಾವು ಸಾಮಾಜಿಕ ಅಭಿವೃದ್ಧಿ, ಸಾಮಾಜಿಕ ಸುಧಾರಣೆ ಹಾಗೂ ಹಿಂದೂಗಳ ಏಕತೆಯ ಬಗ್ಗೆ ಮಾತನಾಡುತ್ತಿದ್ದೇವೆ. ಈ ಸಂದರ್ಭ ಒಡಿಶಾದ ಅಂಗನವಾಡಿ ಕೇಂದ್ರದಲ್ಲಿ ಸಹಾಯಕಿ ಹಾಗೂ ಅಡುಗೆಯವರಾಗಿ ಕೆಲಸ ಮಾಡುವ ದಲಿತ ಮಹಿಳೆಯೊಬ್ಬರು ಬೇಯಿಸಿದ ಆಹಾರವನ್ನು ಒಂದು ನಿರ್ದಿಷ್ಟ ಸಮುದಾಯದ ಜನರು ತಮ್ಮ ಮಕ್ಕಳು ತಿನ್ನುವುದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಈ ಅಂಗನವಾಡಿ ಕೇಂದ್ರವನ್ನು ಕಳೆದ ಮೂರು ತಿಂಗಳಿಂದ ಬಹಿಷ್ಕರಿಸಲಾಗಿದೆ ಎಂದು ಹೇಳಿದ್ದಾರೆ. ಅಂಗನವಾಡಿ ಕೇಂದ್ರ ಮಕ್ಕಳ ದೈಹಿಕ ಹಾಗೂ ಮಾನಸಿಕ ಬೆಳವಣಿಗೆಯ ಅಡಿಪಾಯ. ‘‘ಆದರೆ, ಇಂತಹ ಜನಾಂಗೀಯ ತಾರತಮ್ಯ ಇದ್ದರೆ, ಅದು ಮಕ್ಕಳ ಬೆಳವಣಿಗೆ ಮೇಲೆ ಪರಿಣಾಮ ಉಂಟು ಬೀರುತ್ತದೆ. ಇಂತಹ ಘಟನೆಗಳು ಸಂವಿಧಾನದ ವಿಧಿ 21ಎಯ ಅಡಿಯಲ್ಲಿ ನೀಡಲಾದ ಶಿಕ್ಷಣದ ಹಕ್ಕಿನ ಮೇಲೆ ನೇರ ಪರಿಣಾಮ ಉಂಟು ಮಾಡುತ್ತದೆ’’ ಎಂದು ಹೇಳಿದ್ದಾರೆ. ಕೆಲಸದ ಸ್ಥಳಗಳಲ್ಲಿ ಜಾತಿ ತಾರತಮ್ಯ ದೇಶದ ವಿವಿಧ ಭಾಗಗಳಿಂದ ವರದಿಯಾಗುತ್ತಿದೆ. ಸಕಾಲದಲ್ಲಿ ತನಿಖೆ ನಡೆದಿದ್ದರೆ, ಅನಂತರದ ಘಟನೆಗಳನ್ನು ತಪ್ಪಿಸಬಹುದಿತ್ತು ಎಂದು ತಿಳಿಸಿದ್ದಾರೆ. ಇತರ ರಾಜ್ಯಗಳ ನಿದರ್ಶನಗಳನ್ನು ಉಲ್ಲೇಖಿಸುತ್ತಾ ಖರ್ಗೆ ಅವರು, ಕೆಲವು ವರ್ಷಗಳ ಹಿಂದೆ ಮಧ್ಯಪ್ರದೇಶದಲ್ಲಿ ಆದಿವಾಸಿ ವ್ಯಕ್ತಿಯೋರ್ವನ ಮೇಲೆ ಮೂತ್ರ ವಿಸರ್ಜನೆ ಮಾಡಿದ ಘಟನೆಯನ್ನು ನೆನಪಿಸಿಕೊಂಡರು. ಕಳೆದ ವರ್ಷ ಗುಜರಾತ್ನಲ್ಲಿ ಜಾತಿ ತಾರತಮ್ಯದ ಕಾರಣಕ್ಕೆ ಸರಕಾರಿ ದಲಿತ ಅಧಿಕಾರಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡರು ಎಂದು ಹೇಳಿದರು. ‘‘ಈ ಘಟನೆಗಳು ಜಾತಿ ತಾರತಮ್ಯ ಸಾಮಾಜಿಕ ಹಾಗೂ ರಾಜಕೀಯ ಜೀವನಕ್ಕೆ ಮಾತ್ರ ಸೀಮಿತವಾಗಿಲ್ಲ. ಬದಲಾಗಿ ಕೆಲಸದ ಸ್ಥಳಗಳಲ್ಲಿಯೂ ವ್ಯಾಪಕವಾಗಿದೆ ಎಂದು ತೋರಿಸುತ್ತದೆ’’ ಎಂದು ಹೇಳಿದರು.
ಪಿಕಪ್ ವಾಹನ ಹರಿದು ಸ್ಕೂಟರ್ ಸವಾರ ಮೃತ್ಯು
ಉಡುಪಿ, ಫೆ.12: ಪಿಕಪ್ ವಾಹನವೊಂದು ಮೈಮೇಲೆ ಹರಿದ ಪರಿಣಾಮ ಅಪಘಾತದಿಂದ ರಸ್ತೆಗೆ ಬಿದ್ದ ಸ್ಕೂಟರ್ ಸವಾರರೊಬ್ಬರು ಮೃತಪಟ್ಟ ಘಟನೆ ಉಡುಪಿ ಎಂಜಿಎಂ ಕಾಲೇಜಿನ ಎದುರು ರಾಷ್ಟ್ರೀಯ ಹೆದ್ದಾರಿ 169(ಎ)ರಲ್ಲಿ ಗುರುವಾರ ಮಧ್ಯಾಹ್ನ ವೇಳೆ ನಡೆದಿದೆ. ಮೃತರನ್ನು ಗೋಪಾಲ್ ಮೂಲ್ಯ ಸಗ್ರಿ(71) ಎಂದು ಗುರುತಿಸಲಾಗಿದೆ. ಮಣಿಪಾಲ ಕಡೆಗೆ ಹೋಗುತ್ತಿದ್ದ ಸ್ಕೂಟರ್ಗೆ ಬುಲೆಟ್ ಢಿಕ್ಕಿ ಹೊಡೆಯಿತ್ತೆನ್ನ ಲಾಗಿದೆ. ಇದರಿಂದ ರಸ್ತೆಗೆ ಬಿದ್ದ ಸ್ಕೂಟರ್ ಸವಾರ ಗೋಪಾಲ ಅವರ ಮೇಲೆ ಹಿಂದಿ ನಿಂದ ಬರುತ್ತಿದ್ದ ಪಿಕಪ್ ವಾಹನ ಹರಿಯಿತ್ತೆನ್ನಲಾಗಿದೆ. ಅಪಘಾತದಿಂದ ಗಂಭೀರವಾಗಿ ಗಾಯಗೊಂಡ ಅವರನ್ನು ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟರೆಂದು ತಿಳಿದುಬಂದಿದೆ. ಈ ಬಗ್ಗೆ ಉಡುಪಿ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಂದಾರ್ತಿ: ಯಕ್ಷಗಾನ ಕಲಾರಂಗದ 87ನೇ ಮನೆ ಹಸ್ತಾಂತರ
ಬ್ರಹ್ಮಾವರ, ಫೆ.12: ಯಕ್ಷಗಾನ ಕಲಾರಂಗ ವಿದ್ಯಾಪೋಷಕ್ನ ಪ್ರಥಮ ಪಿಯುಸಿ ವಿದ್ಯಾರ್ಥಿನಿ ಅಂಕಿತಾಳ ಬಡ ಕುಟುಂಬಕ್ಕೆ ಬ್ರಹ್ಮಾವರ ತಾಲೂಕಿನ ನಾಲ್ಕೂರಿನಲ್ಲಿ ಮಂದಾರ್ತಿಯ ನಿವೃತ್ತ ಉಪನ್ಯಾಸಕ ಸೂರ್ಯನಾರಾಯಣ ಅಡಿಗ ಮತ್ತು ಗಿರಿಜಾ ಸೂರ್ಯನಾರಾಯಣ ಅಡಿಗ ದಂಪತಿ ವೈವಾಹಿಕ ಸುವರ್ಣ ವರ್ಷಾಚರಣೆಯ ನೆನಪಿನಲ್ಲಿ ನಿರ್ಮಿಸಿ ಕೊಟ್ಟ ನೂತನ ಮನೆ ‘ಶ್ರೀದೇವಿ ಕೃಪಾ’ದ ಹಸ್ತಾಂತರ ಬುಧವಾರ ನಡೆಯಿತು. ಮನೆಯನ್ನು ಮಂದಾರ್ತಿ ಶ್ರೀದುರ್ಗಾಪರಮೇಶ್ವರೀ ದೇವಸ್ಥಾನದ ಆಡಳಿತ ಮೊಕ್ತೇಸರ ಎಚ್. ಧನಂಜಯ ಶೆಟ್ಟಿ ಜ್ಯೋತಿ ಬೆಳಗಿಸಿ ಉದ್ಘಾಟಿಸಿ ದರು. ಅಧ್ಯಕ್ಷತೆಯನ್ನು ಉಡುಪಿ ಶಾಸಕ ಯಶ್ಪಾಲ್ ಸುವರ್ಣ ವಹಿಸಿದ್ದರು. ಸೂರ್ಯನಾರಾಯಣ ದಂಪತಿಗಳು ಸುಮಾರು 6.5 ಲಕ್ಷ ರೂ.ವೆಚ್ಚದಲ್ಲಿ ಈ ಮನೆಯನ್ನು ನಿರ್ಮಿಸಿದ್ದಾರೆ. ಯಕ್ಷಗಾನ ಕಲಾರಂಗ ಯಾವ ಆಡಂಬರವಿಲ್ಲದೆ ಪ್ರಾಮಾಣಿಕತೆ ಮತ್ತು ನಿರಂತರ ಸಮಾಜ ಮುಖಿ ಕಾರ್ಯಕ್ರಮ ಗಳ ಮೂಲಕ ಸಮಾಜದ ಪ್ರೀತಿ ವಿಶ್ವಾಸ ಗಳಿಸಿದೆ ಎಂದು ಧನಂಜಯ ಶೆಟ್ಟಿ ನುಡಿದರು. ಮನೆಯ ಪ್ರಾಯೋಜಕ ಸೂರ್ಯನಾರಾಯಣ ಅಡಿಗ ಮಾತನಾಡಿ, ಇದು ನನ್ನ ಬದುಕಿನ ಅತ್ಯಂತ ಸಂತಸದ ಕ್ಷಣ. ಇಂತಹ ಒಂದು ಅವಕಾಶ ಕಲ್ಪಿಸಿದ ಯಕ್ಷಗಾನ ಕಲಾರಂಗಕ್ಕೆ ಕೃತಜ್ಞನಾಗಿದ್ದೇನೆ ಎಂದರು. ನೇತಾಜಿ ಸೇವಾ ವೇದಿಕೆಯ ಸ್ಥಾಪಕಾಧ್ಯಕ್ಷ ಪ್ರಸಾದ್ ಹೆಗ್ಡೆ ಮಾರಾಳಿ, ಪ್ರತಾಪ್ ಹೆಗ್ಡೆ ಮಾರಾಳಿ, ಶೇಡಿಕೊಡ್ಲು ವಿಠಲ ಶೆಟ್ಟಿ, ಪಂಚಾಯತ್ ಅಧ್ಯಕ್ಷೆ ಶೋಭಾ ಕೆ. ಪೂಜಾರಿ, ಅಶೋಕ್ ಭಟ್, ಅಡಿಗರ ಪುತ್ರಿ ವಾಣಿ ವಿ. ಹೇರ್ಳೆ ಅತಿಥಿಗಳಾಗಿ ಆಗಮಿಸಿದ್ದರು. ನಾಲ್ಕೂರು ಶಾಲೆಯ ಮುಖ್ಯೋಪಾದ್ಯಾಯ ಕೃಷ್ಣ ನಾಯ್ಕ್, ಯಕ್ಷಗುರು ಮಹೇಶ್ ಮಂದಾರ್ತಿ, ಕೆ.ಅಣ್ಣಾಜಿ ರಾವ್, ರಾಜು ಕುಲಾಲ್ ಮುಂತಾದ ವರು ಉಪಸ್ಥಿತರಿದ್ದರು. ಯಕ್ಷಗಾನ ಕಲಾರಂಗ ಸಂಸ್ಥೆಯ ಪದಾಧಿಕಾರಿಗಳಾದ ಪ್ರೊ. ಕೆ. ಸದಾಶಿವ ರಾವ್, ವಿದ್ಯಾಪ್ರಸಾದ್, ಸದಸ್ಯರಾದ ಯು. ವಿಶ್ವನಾಥ ಶೆಣೈ, ಯು.ಎಸ್. ರಾಜಗೋಪಾಲ ಆಚಾರ್ಯ, ಭುವನಪ್ರಸಾದ ಹೆಗ್ಡೆ, ವಿಜಯ ಕುಮಾರ್ ಮುದ್ರಾಡಿ, ಎಚ್. ಸುಜಯೀಂದ್ರ ಹಂದೆ, ಗಣೇಶ ಬ್ರಹ್ಮಾವರ, ಸುದರ್ಶನ ಬಾಯರಿ, ಸುಜಯ್ ಶೆಟ್ಟಿ, ಕೆ.ಯೋಗೀಶ್ ಪೈ ಭಾಗವಹಿಸಿದ್ದರು. ಅಧ್ಯಕ್ಷ ಎಂ. ಗಂಗಾಧರ ರಾವ್ ಸ್ವಾಗತಿಸಿ, ನಾರಾಯಣ ಎಂ. ಹೆಗಡೆ ವಂದಿಸಿದರು. ಕಾರ್ಯದರ್ಶಿ ಮುರಲಿ ಕಡೆಕಾರ್ ಪ್ರಸ್ತಾವನೆಯ ಮಾತುಗಳೊಂದಿಗೆ ಕಾರ್ಯಕ್ರಮ ನಿರೂಪಿಸಿದರು.
ಮಂದಾರ್ತಿ ಜಾತ್ರೆ: ಮದ್ಯ ಮಾರಾಟ ನಿಷೇಧ
ಉಡುಪಿ, ಫೆ.12: ಬ್ರಹ್ಮಾವರ ಪೊಲೀಸ್ ಠಾಣಾ ಸರಹದ್ದಿನ ಹೆಗ್ಗುಂಜೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಮಂದಾರ್ತಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವಾರ್ಷಿಕ ಜಾತ್ರೆ ಪ್ರಯುಕ್ತ ಕಾನೂನು ಸುವ್ಯವಸ್ಥೆ ಮತ್ತು ಸಾರ್ವಜನಿಕ ಶಾಂತಿ ಕಾಪಾಡುವ ದೃಷ್ಟಿಯಿಂದ ಫೆ.13ರ ಬೆಳಗ್ಗೆ 6ಗಂಟೆಯಿಂದ ಫೆ.16ರ ಬೆಳಗ್ಗೆ 6ಗಂಟೆಯವರೆಗೆ ಮದ್ಯ ಮಾರಾ ಟದ ಸನ್ನದುಗಳನ್ನು ಹೊಂದಿರುವ ಬಾರ್ ರೆಸ್ಟೋರೆಂಟ್ ಮತ್ತು ವೈನ್ ಶಾಪ್ಗಳ ಮದ್ಯ ಮಾರಾಟವನ್ನು ನಿಷೇಧಿಸಿ, ಅಬಕಾರಿ ಸನ್ನದುಗಳನ್ನು ಮುಚ್ಚಲು ಆದೇಶ ಹೊರಡಿಸಿದ್ದಾರೆ. ಹೆಗ್ಗುಂಜೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಈ ನಿಷೇಧ ಲಾಗು ಇದ್ದು, ಈ ಅವಧಿಯನ್ನು ಒಣದಿನವೆಂದು ಘೋಷಿಸಿ , ಮದ್ಯ ಮಾರಾಟ ನಿಷೇಧಿಸಿ ಜಿಲ್ಲಾ ದಂಡಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ ಆದೇಶದಲ್ಲಿ ತಿಳಿಸಿದ್ದಾರೆ.
ಸಿಎಲ್-7 ಸನ್ನದುಗಳ ನಿಯಮ ಉಲ್ಲಂಘನೆ: ಅಮಾನತು
ಉಡುಪಿ, ಫೆ.12: ಜಿಲ್ಲೆಯಲ್ಲಿ ಅಬಕಾರಿ ಇಲಾಖೆಯಲ್ಲಿ ಸಿಎಲ್-7 ಸನ್ನದುಗಳಲ್ಲಿ ನಿಯಮಗಳನ್ನು ಉಲ್ಲಂಘಿಸಿ ಸನ್ನದನ್ನು ಕಾನೂನು ಬಾಹಿರ ಚಟುವಟಿಕೆಗಳಿಗೆ ಬಳಸಿಕೊಂಡಿರುವುದು ದೃಢಪಟ್ಟ ಹಿನ್ನೆಲೆಯಲ್ಲಿ ಬ್ರಹ್ಮಾವರ ತಾಲೂಕು ವಾರಂಬಳ್ಳಿ ಗ್ರಾಮದಲ್ಲಿರುವ ಮಾಲ್ಗುಡಿ ಕಂಫರ್ಟ್ (ಓಝೋನ್ ಬಾರ್ ರೆಸ್ಟೋರೆಂಟ್) ಹಾಗೂ ಬ್ರಹ್ಮಾವರ ತಾಲೂಕು ಹೇರಾಡಿ ಗ್ರಾಮ ಧರ್ಮಸಾಲೆ ಎಂಬಲ್ಲಿರುವ ರಶ್ಮಿ ಬೋರ್ಡಿಂಗ್ ಲಾಡ್ಜಿಂಗ್ ಎಂಬ 2 ಸನ್ನದುಗಳನ್ನು ಐದು ದಿನಗಳ ಕಾಲ ಉಡುಪಿ ಜಿಲ್ಲಾಧಿಕಾರಿ ಅಮಾನತುಗೊಳಿಸಿದ್ದಾರೆ ಎಂದು ಅಬಕಾರಿ ಉಪ ಆಯುಕ್ತರ ಪ್ರಕಟಣೆ ತಿಳಿಸಿದೆ.
ಆಳಂದ | ಕಾರ್ಮಿಕ ಸಂಘಟನೆಗಳ ಮುಷ್ಕರಕ್ಕೆ ಬೆಂಬಲಿಸಿ ಅಂಗನವಾಡಿ ನೌಕರರಿಂದ ಪ್ರತಿಭಟನೆ
ಆಳಂದ: ದೇಶವ್ಯಾಪಿ ನಡೆದ ಕೇಂದ್ರ ಕಾರ್ಮಿಕ ಸಂಘಟನೆಗಳ ಕರೆಯ ಮೆರೆಗೆ ಆಳಂದ ತಾಲೂಕು ಅಂಗನವಾಡಿ ನೌಕರರ ಮುಷ್ಕರಕ್ಕೆ ಬೆಂಬಲಿಸಿ ತಾಲೂಕು ನೌಕರರರ ಸಂಘದ ಆಶ್ರಯದಲ್ಲಿ ಪಟ್ಟಣದ ಬಸ್ ನಿಲ್ದಾಣದಿಂದ 5 ಕಿ.ಮೀ ದೂರದ ಆಡಳಿತಸೌಧ ವರೆಗೆ ಪ್ರತಿಭಟನಾ ರ್ಯಾಲಿ ನಡೆಸಿ ತಹಶೀಲ್ದಾರ್ ಅಣ್ಣಾರಾವ್ ಪಾಟೀಲ ಮೂಲಕ ಸರ್ಕಾರಕ್ಕೆ ಬೇಡಿಕೆಯ ಮನವಿ ಸಲ್ಲಿಸಿದರು. ಶಿಕ್ಷಣ ಇಲಾಖೆ ಎಲ್ಕೆಜಿ, ಯುಕೆಜಿ ನಡೆಸುವುದನ್ನು ನಿಲ್ಲಿಸಿ ಅಂಗನವಾಡಿ ಕೇಂದ್ರಗಳಲ್ಲಿ ನಡೆಸಿ ಅಗತ್ಯವಿರುವ ಬಜೆಟ್ ನೀಡಬೇಕು. 4 ಕಾರ್ಮಿಕ ಸಂಹಿತೆಗಳು ರದ್ದುಗೊಳಿಸಬೇಕು. ಶ್ರಮಶಕ್ತಿ ನೀತಿ 2025ರ ಬೇಡವೇ ಬೇಡಾ, ಮುಟ್ಟಿನ ರಜೆ ನೀಡಬೇಕು. 56 ಲಕ್ಷ ಸೀಮ್ ಕಾರ್ಮಿಕರ ಸೇವಾ ಷರತ್ತುಗಳ ಸುಧಾರಣೆ ಪ್ರತ್ಯೇಕ ವೇತನ ಆಯೋಗ ಐಸಿಡಿಎಸ್ ಯೋಜನೆಯನ್ನು ಖಾಯಂಗೊಳಿಸಬೇಕು ಅಲ್ಲದೆ ಇದನ್ನು ಖಾಯಂ ಮಾಡುವತನಕ ಪ್ರತ್ಯೆಕ ನಿರ್ದೇಶನಾಲಯವನ್ನು ರಚಿಸಬೇಕು ಎಂದು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಪ್ರಾಂತ ರೈತ ಸಂಘದ ಜಿಲ್ಲಾ ಹಿರಿಯ ಮುಖಂಡ ಪಾಂಡುರಂಗ ಮಾವಿನಕರ, ತಾಲೂಕು ಕಾರ್ಯದರ್ಶಿ ಸಲ್ಮಾನ ಖಾನ್ ನಗರ, ಪ್ರಮೋದ ಎನ್. ಪಂಚಾಳ, ಅಂಗನವಾಡಿ ನೌಕರರ ಸಂಘದ ಅಧ್ಯಕ್ಷೆ ಪುಷ್ಪಾವತಿ ಚಟ್ಟಿ, ಕಾರ್ಯದರ್ಶಿ ರಾಜಮತಿ ಬಿ. ಪಾಟೀಲ, ಉಪಾಧ್ಯಕ್ಷೆ ಮಲ್ಲಮ್ಮಾ ಹೆಬಳಿ, ಶರಣಮ್ಮಾ ಸರಸಂಬಾ, ಇಂದುಮತಿ, ರೂಪಾ ಇಕ್ಕಳಕಿ ಸಮರ್ಥ ಸೇರಿದಂತೆ ಅನೇಕರು ಇದ್ದರು.
Kalaburagi | ಕೇಂದ್ರ ಜವಳಿ ಸಚಿವಾಲಯದಿಂದ ಕಲಾವಿದ ಡಾ.ರೆಹಮಾನ ಪಟೇಲ್ ಗೆ ಫೆಲೋಶಿಪ್ ಮಂಜೂರು
ಕಲಬುರಗಿ: ನಗರದ ಖ್ಯಾತ ಕಲಾವಿದ ಹಾಗೂ ಸಂಶೋಧಕ ಡಾ. ರೆಹಮಾನ ಪಟೇಲ್ ಅವರಿಗೆ ಕೇಂದ್ರ ಜವಳಿ ಸಚಿವಾಲಯದ ಅಧೀನದಲ್ಲಿರುವ ಅಭಿವೃದ್ಧಿ ಆಯುಕ್ತರ ಕಚೇರಿ (ಹಸ್ತಶಿಲ್ಪ), ಹಸ್ತಶಿಲ್ಪ ಸೇವಾ ಕೇಂದ್ರ, ಧಾರವಾಡದಿಂದ ಮೂರು ತಿಂಗಳ ಫೆಲೋಶಿಪ್ ಮಂಜೂರು ಮಾಡಲಾಗಿದೆ. “ಸುರಪುರ ಚಿತ್ರಕಲೆಯ ಕೈಗಾರಿಕಾ ಅಧ್ಯಯನ ವರದಿ” ಎಂಬ ವಿಷಯದ ಮೇಲೆ ಶೈಕ್ಷಣಿಕ ಪಾಲುದಾರರಾಗಿ ಆಯ್ಕೆಯಾದ ಅವರಿಗೆ 1,05,000 ರೂ. ಅನುದಾನವನ್ನು ಮಂಜೂರು ಮಾಡಲಾಗಿದೆ. ಸುರಪುರ ಚಿತ್ರಕಲೆಯ ಪರಂಪರೆ, ಪದ್ಧತಿಗಳು, ಬಳಕೆಯ ವಸ್ತುಗಳು, ಸಾಂಸ್ಕೃತಿಕ ಮಹತ್ವ, ಇಂದಿನ ಸವಾಲುಗಳು, ಬೆಳವಣಿಗೆ ಮತ್ತು ನವೀನತೆ, ಬ್ರ್ಯಾಂಡ್ ಪ್ರಚಾರ ಹಾಗೂ ಸರಕು ಸರಪಳಿ ಅಭಿವೃದ್ಧಿ ಸಾಧ್ಯತೆಗಳ ಕುರಿತು ಕೈಗಾರಿಕಾ ಆಧಾರಿತ ಸಮಗ್ರ ಅಧ್ಯಯನ ನಡೆಸಿ ಅಂತಿಮ ವರದಿಯನ್ನು ಕೇಂದ್ರ ಜವಳಿ ಸಚಿವಾಲಯಕ್ಕೆ ಸಲ್ಲಿಸಲಾಗಿದೆ. 18ನೇ ಶತಮಾನದ ಅಪರೂಪದ ಚಿಕಣಿ ಕಲಾ ಪ್ರಕಾರವಾದ ಸುರಪುರ ಚಿತ್ರಕಲೆ ಪ್ರೋತ್ಸಾಹದ ಕೊರತೆ, ಕ್ಷೀಣಿಸುತ್ತಿರುವ ಕಲಾವಿದರು ಹಾಗೂ ಸಾಂಸ್ಥಿಕ ಬೆಂಬಲದ ಅಭಾವದಿಂದ ಅಳಿವಿನ ಅಂಚಿನಲ್ಲಿದೆ. ಇತಿಹಾಸಪೂರ್ವಕ ಹಿನ್ನೆಲೆ ಮತ್ತು ಸಾಂಸ್ಕೃತಿಕ ವೈಶಿಷ್ಟ್ಯತೆ ಹೊಂದಿರುವ ಈ ಕಲಾರೂಪವು ಭೌಗೋಳಿಕ ಸೂಚ್ಯಂಕ (GI) ನೋಂದಣಿಗೆ ಅಗತ್ಯವಾದ ಮಾನದಂಡಗಳನ್ನು ಪೂರೈಸುತ್ತದೆ ಎಂಬುದನ್ನು ಅಧ್ಯಯನದಲ್ಲಿ ಉಲ್ಲೇಖಿಸಲಾಗಿದೆ. ರಾಷ್ಟ್ರೀಯ ಹಸ್ತಶಿಲ್ಪ ಅಭಿವೃದ್ಧಿ ಕಾರ್ಯಕ್ರಮದಡಿ ಸುರಪುರ ಚಿತ್ರಕಲಾ ಕ್ಲಸ್ಟರ್ ಸ್ಥಾಪನೆಗಾಗಿ 38.27 ಲಕ್ಷ ರೂ. ಮೊತ್ತದ ಆರ್ಥಿಕ ಸಹಾಯ ಯೋಜನೆಯನ್ನು ಡಾ. ಪಟೇಲ್ ಪ್ರಸ್ತಾಪಿಸಿದ್ದಾರೆ. ಸುರಪುರ ಚಿತ್ರಕಲೆ ಕೇವಲ ಕಲಾರೂಪವಲ್ಲ; ಅದು ಭಕ್ತಿ, ಕೈಚಳಕ ಮತ್ತು ಸಮುದಾಯದ ಪರಂಪರೆಯನ್ನು ಪ್ರತಿಬಿಂಬಿಸುವ ಅಮೂಲ್ಯ ಸಾಂಸ್ಕೃತಿಕ ಸಂಪತ್ತಾಗಿದೆ. ಸೂಕ್ತ ಹಸ್ತಕ್ಷೇಪ ಮತ್ತು ಸಹಕಾರ ದೊರೆತಲ್ಲಿ ಈ ಪರಂಪರೆ ಪುನರುಜ್ಜೀವನ ಪಡೆದು ಭವಿಷ್ಯ ಪೀಳಿಗೆಗಳಿಗೆ ಪ್ರೇರಣೆಯಾಗಲಿದೆ ಎಂದು ಡಾ. ಪಟೇಲ್ ತಿಳಿಸಿದ್ದಾರೆ. ಡಾ. ರೆಹಮಾನ ಪಟೇಲ್ ಅವರು ಮೂರು ದಶಕಗಳಿಗೂ ಹೆಚ್ಚು ಕಾಲ ಸುರಪುರ ಚಿತ್ರಕಲೆಯೊಂದಿಗೆ ತೊಡಗಿಸಿಕೊಂಡಿದ್ದು, ರಾಜ್ಯ, ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಅನೇಕ ಪ್ರಶಸ್ತಿಗಳನ್ನು ಪಡೆದಿದ್ದಾರೆ.
ಬೆಂಗಳೂರು : ಲೋಕಾಯುಕ್ತ ವಿಶೇಷ ಪೊಲೀಸ್ ತನಿಖಾ ದಳದ (ಎಸ್ಐಟಿ) ಮುಖ್ಯಸ್ಥ ಎಂ.ಚಂದ್ರಶೇಖರ್ ಅವರಿಗೆ ಬೆದರಿಕೆ ಹಾಕಿದ ಪ್ರಕರಣವನ್ನು ಸ್ವಪ್ರತಿಷ್ಠೆಗೆ ಅಂಟಿಕೊಳ್ಳದೆ, ಪರಸ್ಪರ ಚರ್ಚಿಸುವ ಮೂಲಕ ಇತ್ಯರ್ಥಪಡಿಸಿಕೊಳ್ಳುವಂತೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಮತ್ತು ಲೋಕಾಯುಕ್ತ ಎಸ್ಐಟಿ ಮುಖ್ಯಸ್ಥ ಎಂ.ಚಂದ್ರಶೇಖರ್ ಅವರಿಗೆ ಹೈಕೋರ್ಟ್ ಗುರುವಾರ ಸಲಹೆ ನೀಡಿದೆ. ಬೆಂಗಳೂರಿನ ಸಂಜಯನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್ಐಆರ್ ಹಾಗೂ ನಗರದ 42ನೇ ಎಸಿಎಂಎಂ ನ್ಯಾಯಾಲಯದ (ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ) ವಿಚಾರಣೆ ರದ್ದು ಕೋರಿ ಕುಮಾರಸ್ವಾಮಿ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಸುನೀಲ್ ದತ್ ಯಾದವ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿತು. ಕುಮಾರಸ್ವಾಮಿ ಪರ ಹಿರಿಯ ವಕೀಲ ಹಸ್ಮತ್ ಪಾಷಾ ವಾದ ಮಂಡಿಸಿ, ಪ್ರಕರಣದಲ್ಲಿ ದೂರುದಾರರಾದ ಚಂದ್ರಶೇಖರ್ ಅವರಿಗೆ ಕುಮಾರಸ್ವಾಮಿ ಅವರು ಬೆದರಿಕೆ ಹಾಕಿಲ್ಲ. ಅವರಿಬ್ಬರ ನಡುವೆ ಯಾವುದೇ ಸಂಭಾಷಣೆ ನಡೆದಿಲ್ಲ. ಕುಮಾರಸ್ವಾಮಿ ಅವರು ಮಾಧ್ಯಮದವರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ಅದನ್ನು ಆಧರಿಸಿ ಚಂದ್ರಶೇಖರ್ ದೂರು ದಾಖಲಿಸಿದ್ದಾರೆ ಎಂದು ಪ್ರಕರಣಕ್ಕೆ ಸಂಬಂಧಿಸಿದ ಎಲ್ಲ ಬೆಳವಣಿಗೆಗಳನ್ನು ನ್ಯಾಯಪೀಠಕ್ಕೆ ವಿವರಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿಗಳು, ಅರ್ಜಿದಾರರು ಮತ್ತು ದೂರುದಾರರ ಹಿತದೃಷ್ಟಿಯಿಂದ ಒಂದು ಸಲಹೆ ನೀಡುತ್ತೇನೆ. ಕುಮಾರಸ್ವಾಮಿ ಮತ್ತು ಚಂದ್ರಶೇಖರ್ ಅವರು ಸಾರ್ವಜನಿಕ ವ್ಯವಸ್ಥೆಯಲ್ಲಿ ಇರುವವರು. ಸಾರ್ವಜನಿಕ ಜೀವನದಲ್ಲಿ ಇಂಥ ಪ್ರಕರಣಗಳು ಎದುರಾಗುವುದು ಸಹಜ. ಮುಂದೆ ಎಲ್ಲಿಯಾದರೂ ಈ ಇಬ್ಬರು ಮುಖಾಮುಖಿ ಭೇಟಿಯಾಗುವ ಸಾಧ್ಯತೆ ಇದ್ದೇ ಇರುತ್ತದೆ. ಆದ್ದರಿಂದ, ಇಬ್ಬರೂ ಸ್ವ-ಪ್ರತಿಷ್ಠೆ ಬಿಟ್ಟು, ಪರಸ್ಪರ ಚರ್ಚಿಸಿ, ರಾಜಿ ಸಂಧಾನ ಮಾಡಿಕೊಂಡು ಪ್ರಕರಣವನ್ನು ಹಿಂಪಡೆಯುವುದು ಸೂಕ್ತ ಎಂದು ತಿಳಿಸಿದರು. ಚರ್ಚೆ ಮೂಲಕ ಪ್ರಕರಣ ಇತ್ಯರ್ಥ ಮಾಡಿಕೊಳ್ಳುವ ಬಗ್ಗೆ ದೂರುದಾರರು ಮತ್ತು ಅರ್ಜಿದಾರರು ಮುಕ್ತ ಮನಸ್ಸಿನಿಂದ ಮಾತನಾಡಲಿ. ಈ ಪ್ರಕರಣ ಮುಂದುವರಿಸುವುದರಿಂದ ಇಬ್ಬರಿಗೂ ಯಾವುದೇ ಲಾಭವಿಲ್ಲ. ಕೇವಲ ಮಾಧ್ಯಮಗಳಿಗೆ ಸುದ್ದಿಯಾಗುತ್ತದೆ ಅಷ್ಟೇ ಎಂದರು. ಅದಕ್ಕೆ ಸಮ್ಮತಿಸಿದ ಹಸ್ಮತ್ ಪಾಷಾ, ಕುಮಾರಸ್ವಾಮಿ ಅವರಿಗೆ ನ್ಯಾಯಾಲಯದ ಸಲಹೆಯನ್ನು ತಿಳಿಸುವುದಾಗಿ ಭರವಸೆ ನೀಡಿದರು. ಬಳಿಕ ನ್ಯಾಯಪೀಠ, ಪ್ರಕರಣ ಹಿಂಪಡೆಯುವ ಕುರಿತು ಕುಮಾರಸ್ವಾಮಿ ಹಾಗೂ ಚಂದ್ರಶೇಖರ್ ಅವರು ಚರ್ಚಿಸಿ ನ್ಯಾಯಾಲಯಕ್ಕೆ ತೀರ್ಮಾನ ತಿಳಿಸಬೇಕು. ಒಂದೊಮ್ಮೆ ಪ್ರಕರಣವನ್ನು ಮುಂದುವರಿಸುವ ತೀರ್ಮಾನ ಕೈಗೊಂಡರೆ, ನ್ಯಾಯಾಲಯ ಮೆರಿಟ್ (ವಿಚಾರಣಾ ಅರ್ಹತೆ) ಆಧಾರದಲ್ಲಿ ಅರ್ಜಿಗಳ ವಿಚಾರಣೆ ಮುಂದುವರಿಸಿ ನಿರ್ಧಾರ ಕೈಗೊಳ್ಳಲಿದೆ ಎಂದು ತಿಳಿಸಿ, ವಿಚಾರಣೆಯನ್ನು ಫೆಬ್ರವರಿ 19ಕ್ಕೆ ಮುಂದೂಡಿತು. ಪ್ರಕರಣವೇನು? ಅಕ್ರಮ ಗಣಿಗಾರಿಕೆ ಪ್ರಕರಣದ ತನಿಖೆಯ ಮೇಲೆ ಪ್ರಭಾವ ಬೀರುವ ಉದ್ದೇಶದಿಂದ ಎಚ್.ಡಿ. ಕುಮಾರಸ್ವಾಮಿ ಅವರು ಮಾಧ್ಯಮಗೋಷ್ಠಿಯಲ್ಲಿ ನನ್ನ ವಿರುದ್ಧ ಮಾನಹಾನಿ ಹೇಳಿಕೆ ನೀಡುವುದರ ಜತೆಗೆ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ಲೋಕಾಯುಕ್ತದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಹಾಗೂ ವಿಶೇಷ ಪೊಲೀಸ್ ತನಿಖಾ ದಳದ ಮುಖ್ಯಸ್ಥರಾದ ಎಂ. ಚಂದ್ರಶೇಖರ್ 2024ರಲ್ಲಿ ದೂರು ದಾಖಲಿಸಿದ್ದರು. ಈ ದೂರು ಆಧರಿಸಿ ಬೆಂಗಳೂರಿನ ಸಂಜಯ್ನಗರ ಪೊಲೀಸ್ ಠಾಣೆಯಲ್ಲಿ ಬಿಎನ್ಎಸ್ ಸೆಕ್ಷನ್ 224 (ಸರ್ಕಾರಿ ನೌಕರರಿಗೆ ಅವರ ಅಧಿಕೃತ ಕರ್ತವ್ಯಗಳ ಮೇಲೆ ಪ್ರಭಾವ ಬೀರಲು ಬೆದರಿಕೆ ಹಾಕಿದೆ) ಆರೋಪದಲ್ಲಿ ಎಫ್ಐಆರ್ ದಾಖಲಾಗಿತ್ತು. ಪ್ರಕರಣವನ್ನು ನಗರದ 42ನೇ ಎಸಿಎಂಎಂ ನ್ಯಾಯಾಲು ವಿಚಾರಣೆ ನಡೆಸುತ್ತಿದೆ. ಇದರಿಂದ, ಎಫ್ಐಆರ್ ಮತ್ತು ವಿಚಾರಣಾ ನ್ಯಾಯಾಲಯದ ಪ್ರಕ್ರಿಯೆ ರದ್ದು ಕೋರಿ ಕುಮಾರಸ್ವಾಮಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ.
Kalaburagi | ಎಸೆಸೆಲ್ಸಿ ಪರೀಕ್ಷೆ ಮುಗಿಯುವವರೆಗೂ ಟಿವಿ, ಮೊಬೈಲ್ ಆಫ್ !
ಯಡ್ರಾಮಿ ತಾಲೂಕು ಪಂಚಾಯತ್ನಿಂದ ಆದೇಶ
ಫೆ.14: ಫಾತಿಮಾ ರಲಿಯಾರ ಕವನ ಸಂಕಲನ ಬಿಡುಗಡೆ
ಉಡುಪಿ, ಫೆ.12: ಇಲ್ಲಿನ ಎಂ.ಜಿ.ಎಂ ಕಾಲೇಜಿನ ಗೀತಾಂಜಲಿ ಸಭಾಂಗಣದಲ್ಲಿ ಲೇಖಕಿ ಫಾತಿಮಾ ರಲಿಯಾ ಅವರ ’ಅವಳ ಕಾಲು ಸೋಲದಿರಲಿ’ ಕವನ ಸಂಕಲನದ ಮರುಬಿಡುಗಡೆ ಮತ್ತು ಸಂವಾದ ಕಾರ್ಯಕ್ರಮವು ಫೆ.14ರ ಸಂಜೆ 4ಕ್ಕೆ ನಡೆಯಲಿದೆ. ಉದಯ ಗಾಂವ್ಕರ್ ಪುಸ್ತಕ ಬಿಡುಗಡೆ ಮಾಡಲಿದ್ದು, ಪುಸ್ತಕದ ಕುರಿತು ಸುಲೋಚನ ಪಚ್ಚಿನಡ್ಕ ಮಾತಾಡಲಿದ್ದಾರೆ. ಆ ನಂತರ ಸಂವಾದ ಕಾರ್ಯಕ್ರಮ ನಡೆಯಲಿದೆ. ಫಾತಿಮಾ ರಲಿಯಾರ ಈ ಮೂರನೇ ಕೃತಿಯನ್ನು ’ಉಡುಗೊರೆ ಪ್ರಕಾಶನ’ವು 2024ರಲ್ಲಿ ಪ್ರಕಟಿಸಿತ್ತು. ಉಳಿದಂತೆ ’ಕಡಲು ನೋಡಲು ಹೋದವಳು’, ’ಒಡೆಯಲಾರದ ಒಡಪು’ ಮತ್ತು ’ಕೀಮೋ’ ಕೃತಿಯು ಕಾರ್ಯಕ್ರಮದಲ್ಲಿ ರಿಯಾಯಿತಿ ದರದಲ್ಲಿ ಲಭ್ಯವಿದೆ ಎಂದು ಪ್ರಕಟನೆ ತಿಳಿಸಿದೆ.
ಸಚಿವ ಸಂಪುಟ ಸಭೆ: ಐಪಿಎಲ್ ಪಂದ್ಯಾವಳಿ - ಬಜೆಟ್ ಬಗ್ಗೆ ರಾಜ್ಯ ಸರ್ಕಾರ ಮಹತ್ವದ ತೀರ್ಮಾನ
ಆರ್ಸಿಬಿ ಅಭಿಮಾನಿಗಳಿಗೆ ರಾಜ್ಯ ಸರ್ಕಾರ ಗುಡ್ನ್ಯೂಸ್ ನೀಡಿದೆ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಪಂದ್ಯಕ್ಕೆ ಸಚಿವ ಸಂಪುಟ ಸಭೆ ಅನುಮತಿ ನೀಡಿದೆ. ಮಾರ್ಚ್ 26 ರಿಂದ ಮೇ 31 ವರೆಗೆ ಈ ಬಾರಿ ಐಪಿಎಲ್ ಪಂದ್ಯವಳಿ ನಡೆಯಲಿವೆ.
ಸಾಕುನಾಯಿಗೆ ಥಳಿಸಿದ ಆರೋಪ: ಪ್ರಕರಣ ದಾಖಲು
ಮಂಗಳೂರು, ಫೆ.12: ಮನೆಯೊಂದರ ಸಾಕು ನಾಯಿ ಮರಿಗೆ ಥಳಿಸಿದ ಆರೋಪದ ಮೇರೆಗೆ ಪ್ರಭಾನಂದ ಶೆಣೈ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಫೆ.9ರಂದು ಸಂಜೆ 4ಕ್ಕೆ ಪ್ರಭಾನಂದ ಶೆಣೈ ತಾನು ವಾಸವಾಗಿರುವ ಅಪಾರ್ಟ್ಮೆಂಟ್ನ ನೆಲ ಮಾಳಿಗೆಯಲ್ಲಿದ್ದ ನಾಯಿಮರಿಯನ್ನು ಬೆನ್ನಟ್ಟಿ ಹೊಡೆದು ತೀವ್ರವಾಗಿ ಗಾಯಗೊಳಿಸಿ ಎಸೆದು ಹೋಗಿದ್ದಾರೆ. ಗಾಯಗೊಂಡ ನಾಯಿ ಮರಿಗೆ ತಾನು ಖಾಸಗಿ ಕ್ಲಿನಿಕ್ನಲ್ಲಿ ಚಿಕಿತ್ಸೆ ಕೊಡಿಸಿದ್ದು, ಮರುದಿನ ಶಕ್ತಿನಗರದ ಎನಿಮಲ್ ಕೇರ್ ಟ್ರಸ್ಟ್ ಶೆಲ್ಟರ್ನಲ್ಲಿ ಚಿಕಿತ್ಸೆ ಬಗ್ಗೆ ದಾಖಲು ಮಾಡಿರುವೆ. ನಾಯಿ ಮರಿಗೆ ಥಳಿಸಿ ಮಾರಣಾಂತಿಕವಾಗಿ ಗಾಯಗೊಳಿಸಿ ಪ್ರಾಣಿ ಹಿಂಸೆ ನೀಡಿದ ಆರೋಪಿಯ ವಿರುದ್ಧ ಕ್ರಮ ಜರುಗಿಸಬೇಕು ಎಂದು ಕಿಶೋರ್ ಸಾಲ್ಯಾನ್ ಕಂಕನಾಡಿ ನಗರ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.
ಹಣ ಬಿಡುಗಡೆಗೊಳಿಸದಿದ್ದರೆ ಮಾ.5ರಂದು ಪ್ರತಿಭಟನೆ: ಗುತ್ತಿಗೆದಾರರ ಸಂಘ ಎಚ್ಚರಿಕೆ
ಮಂಗಳೂರು, ಫೆ.12: ಗುತ್ತಿಗೆದಾರರ 37 ಸಾವಿರ ಕೋ.ರೂ. ಬಿಲ್ಲನ್ನು ರಾಜ್ಯ ಸರಕಾರವು ಬಾಕಿ ಇರಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ತಕ್ಷಣ ಹಣ ಬಿಡುಗಡೆಗೆ ಕ್ರಮಕೈಗೊಳ್ಳಬೇಕು. ಇಲ್ಲದಿದ್ದಲ್ಲಿ ಮಾ.5ರಂದು ಕಾಮಗಾರಿ ಸ್ಥಗಿತಗೊಳಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಗುತ್ತಿಗೆದಾರರ ಸಂಘದ ರಾಜ್ಯಾಧ್ಯಕ್ಷ ಆರ್.ಮಂಜುನಾಥ್ ಎಚ್ಚರಿಸಿದರು. ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸರಕಾರ ಬಿಲ್ ಬಾಕಿಯಿಡುವುದರ ಜೊತೆಗೆ ಕಾಮಗಾರಿಯನ್ನೂ ನೀಡುತ್ತಿಲ್ಲ. ಕೆಆರ್ಡಿಎಲ್, ನಿರ್ಮಿತಿ ಕೇಂದ್ರಗಳಲ್ಲದೆ ಹೊರ ರಾಜ್ಯಗಳ ಬೃಹತ್ ಗುತ್ತಿಗೆ ದಾರರಿಗೆ ಪ್ಯಾಕೇಜ್ ಕಾಮಗಾರಿ ನೀಡುತ್ತಿದೆ ಎಂದು ಆರೋಪಿಸಿದರು. ಹಿಂದಿನ ಅಧ್ಯಕ್ಷ ಕೆಂಪಣ್ಣ ಕಾಲದಿಂದ ನಾವು ಹೋರಾಟ ನಡೆಸಿಕೊಂಡು ಬಂದಿದ್ದೇವೆ. ಮೂರು ವರ್ಷದಿಂದ ಬಿಲ್ಗಾಗಿ ಕಾಯುತ್ತಿದ್ದೇವೆ. ಮುಖ್ಯಮಂತ್ರಿ ಮತ್ತು ಸಚಿವರಿಗೆ ಸಾಕಷ್ಟು ಬಾರಿ ಮನವಿ ಸಲ್ಲಿಸಿದ್ದೇವೆ. ಈ ಪತ್ರ ವ್ಯವಹಾರಗಳು ಹಾಗೂ ಬಾಕಿ ಮೊತ್ತ ಕುರಿತು 100 ಪುಟಗಳ ಮನವಿಯನ್ನು ಸರಕಾರದ ಮುಖ್ಯ ಕಾರ್ಯದರ್ಶಿಗೆ ಸಲ್ಲಿಸಿದ್ದೇವೆ. ಕೆಲವು ಸಚಿವರು ಸಭೆ ಕರೆದಿದ್ದಾರೆ. ಆದರೂ ಹಣ ಬಿಡುಗಡೆಯ ಬಗ್ಗೆ ಮುಖ್ಯಮಂತ್ರಿ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಮಂಜುನಾಥ್ ಹೇಳಿದರು. ಹಳೆಯ ಸರಕಾರದ ಬಾಕಿ ಎಂದು ಮುಖ್ಯಮಂತ್ರಿ ಹೇಳುತ್ತಿದ್ದಾರೆ. ನಮಗೆ ಎಲ್ಲಾ ಸರಕಾರವೂ ಒಂದೇ ಆಗಿದೆ. ನಾವು ಕಾಮಗಾರಿ ಮಾಡಬೇಕ ಮತ್ತು ಹಣ ಸಿಗಬೇಕು. ಮುಖ್ಯಮಂತ್ರಿ ತುರ್ತು ಸಭೆ ಕರೆಯದೆ ನಮ್ಮೀ ಸಮಸ್ಯೆಗೆ ಪರಿಹಾರ ಸಿಗುವುದಿಲ್ಲ ಎಂದ ಮಂಜುನಾಥ್, ಹಾಲಿ ಸರಕಾರ ಶೇ.80 ಪರ್ಸೆಂಟೇಜ್ ಪಡೆಯುತ್ತಿದೆ ಎಂದು ಪ್ರತಿಪಕ್ಷದ ನಾಯಕ ಆರ್.ಅಶೋಕ್ ಹೇಳುತ್ತಿದ್ದಾರೆ. ಅವರು ರಾಜಕೀಯ ಮಾಡುವ ಬದಲು ಬಾಕಿ ಮೊತ್ತದ ಬಿಡುಗಡೆಗೆ ಒತ್ತಡ ಹೇರಳಿ ಎಂದರು. ಮಾ.5ರ ಪ್ರತಿಭಟನೆ ಹಿನ್ನೆಲೆಯಲ್ಲಿ ನಾವು ಎಲ್ಲಾ ಜಿಲ್ಲೆಗಳಿಗೆ ಪ್ರವಾಸ ಕೈಗೊಂಡಿದ್ದೇವೆ. ಗುತ್ತಿಗೆದಾರರ ಅಭಿಪ್ರಾಯ ಪಡೆದು ಕಾರ್ಯಾಚರಿಸುತ್ತಿದ್ದೇವೆ. ಶಾಂತಿಯುತವಾಗಿ ನಡೆಯುವ ಪ್ರತಿಭಟನೆಯಲ್ಲಿ 30 ಸಾವಿರ ಮಂದಿ ಭಾಗವಹಿಸುವ ನಿರೀಕ್ಷೆ ಇದೆ ಎಂದರು. ಸುದ್ದಿಗೋಷ್ಠಿಯಲ್ಲಿ ಗುತ್ತಿಗೆದಾರರ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಚೆಂಗಪ್ಪ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಬ್ದುನ್ನಾಸಿರ್ ಕೆ.ಕೆ. ಮತ್ತಿತರರು ಉಪಸ್ಥಿತರಿದ್ದರು. ಈಗ ಪರ್ಸೆಂಟೇಜ್ ಹೆಚ್ಚು ಹಿಂದಿನ ಸರಕಾರಕ್ಕೆ ಶೇ.40 ಪರ್ಸೆಂಟೇಜ್ ಕೊಡಬೇಕು ಎಂದು ಕೆಂಪ್ಪಣ್ಣ ಮಾಡಿದ್ದ ಆರೋಪ ನಮಗೆ ಸಾಬೀತು ಮಾಡಲಾಗದೆ ನಾವು ಜೈಲಿಗೆ ಹೋಗಿ ಬರುವ ಪರಿಸ್ಥಿತಿ ಬಂದಿತ್ತು. ಈಗ ಎಲ್ಲ ಹಂತದಲ್ಲೂ ಲಂಚ ಕೊಡಬೇಕು. ಪರ್ಸೆಂಟೇಜ್ ಮೊತ್ತ ಹೆಚ್ಚಾಗಿದ್ದು, ಎಷ್ಟು ಎಂದು ಹೇಳುವ ಪರಿಸ್ಥಿತಿಯಲ್ಲಿಲ್ಲ. ಸಿಎಂ ಸಭೆ ಕರೆದರೆ, ಯಾರ್ಯಾರಿಗೆ ಎಷ್ಟು ಕೊಡುತ್ತೇವೆ ಎಂಬುದನ್ನು ಬಹಿರಂಗಪಡಿಸುತ್ತೇವೆ ಎಂದು ಆರ್. ಮಂಜುನಾಥ್ ಹೇಳಿದರು. ದ.ಕ. ಜಿಲ್ಲೆಯ ಗುತ್ತಿಗೆದಾರರ 1,162.27 ಕೋ.ರೂ. ಬಿಲ್ ಬಾಕಿ ಇದೆ ಎಂದು ಜಿಲ್ಲಾ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆ.ರಾಧಾಕೃಷ್ಣ ನಾಯ್ಕ್ ಹೇಳಿದರು. ಲೋಕೋಪಯೋಗಿ ಇಲಾಖೆಯ 300 ಕೋ.ರೂ., ಸಣ್ಣ ನೀರಾವರಿ ಇಲಾಖೆಯ 647 ಕೋ. ರೂ., ದ.ಕ. ಜಿಪಂನ 6.27 ಕೋ.ರೂ. ಮತ್ತು ಗ್ರಾಮೀಣ ನೀರು ಸರಬರಾಜಿನ 209 ಕೋ.ರೂ. ಬಾಕಿ ಇದೆ. ಜಲಜೀವನ್ ಮಿಷನ್ ಯೋಜನೆಯ ಕೇಂದ್ರ ಸರಕಾರದ ಪಾಲು 1,450 ಕೋಟಿ ರೂ. ಬಾಕಿ ಇದೆ. ಅದನ್ನು ರಾಜ್ಯ ಸರಕಾರ ಬಿಡುಗಡೆ ಮಾಡಿಸಿಕೊಡಬೇಕು ಎಂದು ಮನವಿ ಮಾಡಿದರು.
ನಿರ್ಮಲಾ ಸೀತಾರಾಮನ್ ಭೇಟಿಯಾದ ಎಚ್.ಡಿ. ದೇವೇಗೌಡರು: ಹಲಸು, ಹುಣಸೆ, ನೇರಳೆ ಮಂಡಳಿ ಸ್ಥಾಪನೆಗೆ ವಿಶೇಷ ಮನವಿ
ನವದೆಹಲಿ: ದೇಶದ ಕೃಷಿ ವಲಯದ ಬಗ್ಗೆ ಸದಾ ಕಾಳಜಿ ಹೊಂದಿರುವ ಮಾಜಿ ಪ್ರಧಾನಿ ಹಾಗೂ ರಾಜ್ಯಸಭಾ ಸದಸ್ಯರಾದ ಎಚ್.ಡಿ. ದೇವೇಗೌಡರು, ಮತ್ತೊಮ್ಮೆ ರೈತರ ಪರವಾಗಿ ದೆಹಲಿಯಲ್ಲಿ ಧ್ವನಿ ಎತ್ತಿದ್ದಾರೆ. ಗುರುವಾರ (ಫೆಬ್ರವರಿ 12, 2026) ನವದೆಹಲಿಯಲ್ಲಿ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರನ್ನು ಭೇಟಿಯಾದ ಗೌಡರು, ಕರ್ನಾಟಕದ
Kalaburagi | ಪಿಎಂ ಶ್ರಮ ಯೋಜನೆಯಡಿ ನೂರರಷ್ಟು ಪ್ರಗತಿ ಸಾಧಿಸಿ : ಡಿಸಿ ಬಿ.ಫೌಝಿಯಾ ತರನ್ನುಮ್
ಕಲಬುರಗಿ: ಜಿಲ್ಲೆಯ ಅಸಂಘಟಿತ ಕಾರ್ಮಿಕರ ಉಜ್ವಲ ಭವಿಷ್ಯಕ್ಕಾಗಿ ‘ಪ್ರಧಾನಮಂತ್ರಿ ಶ್ರಮಯೋಗಿ ಮಾನ್-ಧನ್’ (PMSYM) ಯೋಜನೆಯಡಿ ಜ.15ರಿಂದ ಮಾ.15ರವರೆಗೆ ನಡೆಯುವ ವಿಶೇಷ ನೋಂದಣಿ ಅಭಿಯಾನದಲ್ಲಿ ಶೇ.100 ಪ್ರಗತಿ ಸಾಧಿಸಲು ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಬಿ. ಫೌಝಿಯಾ ತರನ್ನುಮ್ ಅಧಿಕಾರಿಗಳಿಗೆ ಸೂಚಿಸಿದರು. ಗುರುವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ವಿಶೇಷ ನೋಂದಣಿ ಅಭಿಯಾನ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕಾರ್ಮಿಕ ಇಲಾಖೆ ಹಾಗೂ ಇತರ ಸಂಬಂಧಿತ ಇಲಾಖೆಗಳ ಸಮನ್ವಯದೊಂದಿಗೆ ಜಿಲ್ಲೆಯ ಅಸಂಘಟಿತ ಕಾರ್ಮಿಕರಿಗೆ ಯೋಜನೆಯ ಬಗ್ಗೆ ಮಾಹಿತಿ ನೀಡಬೇಕು. ಅವರನ್ನು ನೋಂದಣಿ ಮಾಡಿಕೊಳ್ಳಲು ಪ್ರೋತ್ಸಾಹಿಸಬೇಕು ಎಂದು ಸೂಚಿಸಿದರು. ಜಿಲ್ಲೆಯಲ್ಲಿ ಈಗಾಗಲೇ 8,014 ಕಾರ್ಮಿಕರು ನೋಂದಾಯಿಸಿಕೊಂಡಿದ್ದಾರೆ. ಮುಂದಿನ ಮೂರು ತಿಂಗಳಲ್ಲಿ ಕನಿಷ್ಠ 30,000 ಕಾರ್ಮಿಕರನ್ನು ನೋಂದಾಯಿಸುವ ಗುರಿ ಇಟ್ಟುಕೊಳ್ಳಬೇಕು ಎಂದು ಹೇಳಿದರು. ಗ್ರಾಮ ಪಂಚಾಯತ್, ಹೋಬಳಿ ಹಾಗೂ ತಾಲೂಕು ಮಟ್ಟದಲ್ಲಿ ವಿಶೇಷ ನೋಂದಣಿ ಶಿಬಿರಗಳನ್ನು ಆಯೋಜಿಸಿ ಹೆಚ್ಚು ಕಾರ್ಮಿಕರನ್ನು ಒಳಗೊಳ್ಳಬೇಕು ಎಂದು ತಿಳಿಸಿದರು. ರಾಜ್ಯ ಸರ್ಕಾರ ನೀಡಿದ ಗುರಿಗಿಂತಲೂ ಮಿಗಿಲಾಗಿ ಸಾಧನೆ ಮಾಡಬೇಕು ಎಂದು ಅಧಿಕಾರಿಗಳಿಗೆ ಪ್ರೇರಣೆ ನೀಡಿದರು. ಹೆಚ್ಚಿನ ಮಾಹಿತಿಗಾಗಿ ಕೇಂದ್ರ ಹಾಗೂ ಸರ್ಕಾರದ ಕಾರ್ಮಿಕ ಇಲಾಖೆ ಕಚೇರಿಗಳು, ಎಲ್.ಐ.ಸಿಯ ಶಾಖಾ ಕಚೇರಿಗಳು, ಇ.ಪಿ.ಎಫ್.ಒ ಮತ್ತು ಇ.ಎಫ್.ಐ.ಸಿ ಕಚೇರಿಗಳು ಹಾಗೂ ಕಾರ್ಮಿಕ ಸಹಾಯವಾಣಿ 155214, ಟೋಲ್ ಪ್ರೀಕಾಲ್ ಸೆಂಟರ್ ಸಂಖ್ಯೆ 1800-267-6888 ಗೆ ಸಂಪರ್ಕಿಸಬಹುದು ಎಂದು ಹೇಳಿದರು. ಸಭೆಯಲ್ಲಿ ಜಿಲ್ಲಾ ಕಾರ್ಮಿಕಾಧಿಕಾರಿ ಶರಣಪ್ಪ ಆರ್. ಹಳಿಮನಿ ಪಿಪಿಟಿ ಮೂಲಕ ಯೋಜನೆ ವಿವರಿಸಿದರು. ಸಹಾಯಕ ಕಾರ್ಮಿಕ ಆಯುಕ್ತ ಮೊಹಮ್ಮದ್ ಬಷೀರ್ ಅನ್ಸಾರಿ, ಕೃಷಿ ಜಂಟಿ ನಿರ್ದೇಶಕ ಸಮದ್ ಪಟೇಲ್, ಶಾಲಾ ಶಿಕ್ಷಣ ಉಪನಿರ್ದೇಶಕಿ ಶಂಕ್ರಮ್ಮ ಡವಳಗಿ, ಜಿಲ್ಲಾ ಬಾಲ ಕಾರ್ಮಿಕ ಯೋಜನಾ ನಿರ್ದೇಶಕ ಸಂತೋಷ ಕುಲಕರ್ಣಿ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಅಸಂಘಟಿತ ಕಾರ್ಮಿಕರು ಉಪಸ್ಥಿತರಿದ್ದರು.
ಅಂಬಲಪಾಡಿ ಅಂಡರ್ಪಾಸ್ ಸರ್ವಿಸ್ ರಸ್ತೆ ಅಗಲೀಕರಣಕ್ಕೆ ಆಗ್ರಹಿಸಿ ಸಂಸದರಿಗೆ ಮನವಿ
ಉಡುಪಿ, ಫೆ.12: ಅಂಬಲಪಾಡಿ ರಾಷ್ಟ್ರೀಯ ಹೆದ್ದಾರಿ 66ರ ಸರ್ವಿಸ್ ರಸ್ತೆ ಅಗಲೀಕರಣ ಮತ್ತು ವಿವಿಧ ಅಭಿವೃದ್ಧಿ ಕಾಮಗಾರಿಗಳ ಶೀಘ್ರ ಅನುಷ್ಠಾನಗೊಳಿಸುವಂತೆ ಆಗ್ರಹಿಸಿ ರಾಷ್ಟ್ರೀಯ ಹೆದ್ದಾರಿ 66 ಅಂಬಲಪಾಡಿ ಬಳಕೆದಾರರ ಹಿತ ರಕ್ಷಣಾ ವೇದಿಕೆ ವತಿಯಿಂದ ಉಡುಪಿ- ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಮನವಿ ಸಲ್ಲಿಸಲಾಯಿತು. ರಾ.ಹೆ.66 ಅಂಬಲಪಾಡಿ ಇದರ ಸರ್ವಿಸ್ ರಸ್ತೆಗೆ ಭೂಸ್ವಾಧೀನ ಮಾಡಿರುವ ಸ್ಥಳದಲ್ಲಿ ರಸ್ತೆ ಅಗಲೀಕರಣ, ರಾ.ಹೆ.66 ಅಂಬಲಪಾಡಿ ಅಂಡರ್ ಪಾಸ್ನ ಪೂರ್ವ ಮತ್ತು ಪಶ್ಚಿಮ ಭಾಗದಲ್ಲಿ ಉಡುಪಿ ನಗರವನ್ನು ಸಂಪರ್ಕಿ ಸುವ ಉಡುಪಿ ನಗರಸಭೆಯ ರಸ್ತೆಯನ್ನು ಅಂಡರ್ ಪಾಸ್ ದ್ವಾರಕ್ಕೆ ಸಮನಾಗಿ ಅಗಲೀಕರಣಗೊಳಿಸಬೇಕು. ಅಂಬಲಪಾಡಿ ಅಂಡರ್ ಪಾಸ್ನ ಜಂಕ್ಷನ್ ರಸ್ತೆಯನ್ನು ರಾ.ಹೆ. ಪ್ರಾಧಿಕಾರದ ನಿಯಮದಂತೆ ಅಂಡರ್ ಪಾಸ್ ಮಧ್ಯದಿಂದ 30 ಮೀಟರ್ ವಿಸ್ತೀರ್ಣದ ಸುತ್ತಳತೆಯಲ್ಲಿ ಅಗಲೀಕರಣಗೊಳಿಸಿ ಲಘು ಮತ್ತು ಘನ ವಾಹನಗಳ ಸುಗಮ, ಸುರಕ್ಷಿತ ಸಂಚಾರಕ್ಕೆ ಅನುವು ಮಾಡಿಕೊಡಬೇಕು. ಅಂಬಲಪಾಡಿ ಅಂಡರ್ ಪಾಸ್ ವಿನ್ಯಾಸದಲ್ಲಿರುವಂತೆ ಫೂಟ್ಪಾತ್ ನಲ್ಲಿ ಸುರಕ್ಷಿತ ಜನ ಸಂಚಾರಕ್ಕಾಗಿ ಸರ್ವಿಸ್ ರಸ್ತೆಗೆ ಟ್ರಾಫಿಕ್ ಸಿಗ್ನಲ್ ಅಳವಡಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ. ಮನವಿಗೆ ಸ್ಪಂದಿಸಿದ ಸಂಸದ ಕೋಟ, ಶೀಘ್ರ ರಾ.ಹೆ.66 ಅಂಬಲಪಾಡಿ ಕಾಮಗಾರಿಯ ಪ್ರಗತಿ ಪರಿಶೀಲನೆಯನ್ನು ನಡೆಸಿ, ತುರ್ತಾಗಿ ನಡೆಯಬೇಕಾಗಿರುವ ಅಗತ್ಯ ಕಾಮಗಾರಿಗಳ ಅನುಷ್ಠಾನಕ್ಕೆ ಅಧಿಕಾರಿಗಳಿಗೆ ಸ್ಪಷ್ಟ ನಿರ್ದೇಶನ ವನ್ನು ನೀಡುವ ಜೊತೆಗೆ ಮನವಿಯಲ್ಲಿ ಉಲ್ಲೇಖಿಸಿರುವ ಪ್ರಮುಖ ಬೇಡಿಕೆಗಳಿಗೆ ಸ್ಪಂದನೆ ನೀಡುವುದಾಗಿ ತಿಳಿಸಿದರು. ಈ ಸಂದರ್ಭದಲ್ಲಿ ಅಂಬಲಪಾಡಿ ಬಳಕೆದಾರರ ಹಿತರಕ್ಷಣಾ ವೇದಿಕೆಯ ಸಂಚಾಲಕ ಭಾಸ್ಕರ್ ಶೆಟ್ಟಿ ಕಡೆಕಾರು, ಬಿಜೆಪಿ ಜಿಲ್ಲಾ ಕೋಶಾಧಿಕಾರಿ ಪ್ರವೀಣ್ ಕುರ್ಮಾ ಶೆಟ್ಟಿ ಕಪ್ಪೆಟ್ಟು, ನಿಕಟಪೂರ್ವ ನಗರಸಭಾ ಸದಸ್ಯ ಹರೀಶ್ ಶೆಟ್ಟಿ ಅಂಬಲಪಾಡಿ, ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಶಿವಕುಮಾರ್ ಅಂಬಲಪಾಡಿ, ಶ್ರೀಕಾಂತ್ ಶೆಟ್ಟಿ ಅಂಬಲಪಾಡಿ ಮುಂತಾದವರು ಉಪಸ್ಥಿತರಿದ್ದರು.
ದಿಲ್ಲಿಯ ಕೆಂಪುಕೋಟೆ ಬಳಿ ಸ್ಫೋಟ| ವಿಶ್ವಸಂಸ್ಥೆಯ ವರದಿಯಲ್ಲಿ ಮಹತ್ವದ ಅಂಶಗಳು ಉಲ್ಲೇಖ
ವಿಶ್ವಸಂಸ್ಥೆ, ಫೆ. 12: ವರ್ಷಗಳ ನಿರ್ಬಂಧಗಳು ಮತ್ತು ಅಂತಾರಾಷ್ಟ್ರೀಯ ಒತ್ತಡದ ಹೊರತಾಗಿಯೂ ಜೈಷೆ ಮುಹಮ್ಮದ್ ಸೇರಿದಂತೆ ದಕ್ಷಿಣ ಏಶ್ಯಾ ಮೂಲದ ಭಯೋತ್ಪಾದಕ ಸಂಘಟನೆಯ ನಿರಂತರ ಚಟುವಟಿಕೆಗಳ ಬಗ್ಗೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಮೇಲ್ವಿಚಾರಣಾ ವರದಿ ಬೆಳಕು ಚೆಲ್ಲಿದೆ. ಫೆಬ್ರವರಿ 4ರಂದು ಭದ್ರತಾ ಮಂಡಳಿಗೆ ಸಲ್ಲಿಸಲಾದ 37ನೇ ವರದಿಯು ಜಾಗತಿಕ ಭಯೋತ್ಪಾದನಾ ನಿಗ್ರಹ ಸಂಸ್ಥೆಗಳು ಹಲವಾರು ಪ್ರಾದೇಶಿಕ ಸಂಘಟನೆಗಳನ್ನು ಸಕ್ರಿಯ ಬೆದರಿಕೆಗಳಾಗಿ ಪರಿಗಣಿಸಿರುವುದನ್ನು ಮುಂದುವರಿಸಿದೆ. ಇದುವರೆಗಿನ ಕಟ್ಟುನಿಟ್ಟಿನ ಕ್ರಮಗಳ ಹೊರತಾಗಿಯೂ ಜೆಇಎಂ ಇನ್ನೂ ಸಕ್ರಿಯವಾಗಿಯೇ ಉಳಿದಿದೆ ಎಂದು ಹೇಳಿದೆ. 2025ರ ನವೆಂಬರ್ 9ರಂದು ದಿಲ್ಲಿಯ ಕೆಂಪುಕೋಟೆ ಬಳಿ ನಡೆದ ಶಂಕಿತ ಆತ್ಮಹತ್ಯಾ ಬಾಂಬ್ ದಾಳಿಯನ್ನೂ ವರದಿ ಉಲ್ಲೇಖಿಸಿದೆ. ಆ ದಾಳಿಯನ್ನು ಜೆಇಎಂಗೆ ಸಂಪರ್ಕಿಸಿದ್ದು ಒಂದು ಸದಸ್ಯ ರಾಷ್ಟ್ರ(ವಿಶ್ವಸಂಸ್ಥೆಯ ಸದಸ್ಯ ರಾಷ್ಟ್ರ) ಒದಗಿಸಿದ ಮಾಹಿತಿಯ ಆಧಾರದ ಮೇಲೆ ದಾಳಿ ನಡೆಸಿರುವುದಾಗಿ ವರದಿ ತಿಳಿಸಿದೆ. ಈ ಉಲ್ಲೇಖವು ಸಂಬಂಧಿತ ಪಾಲುದಾರ ದೇಶದ ಮೌಲ್ಯಮಾಪನವನ್ನು ಪ್ರತಿಬಿಂಬಿಸುತ್ತದೆ ಮತ್ತು ಸ್ವತಂತ್ರ ವಿಶ್ವಸಂಸ್ಥೆ ನಿರ್ಣಯವನ್ನು ಪ್ರತಿನಿಧಿಸುವುದಿಲ್ಲ ಎಂದು ವಿಶ್ವಸಂಸ್ಥೆ ಸ್ಪಷ್ಟಪಡಿಸಿದೆ. 2025ರ ಅಕ್ಟೋಬರ್ 8ರಂದು ಜೆಇಎಂನ ಮಹಿಳಾ ವಿಭಾಗದ ಸ್ಥಾಪನೆಯನ್ನು ಜೆಇಎಂ ಮುಖ್ಯಸ್ಥ ಮಸೂದ್ ಅಝರ್ ಘೋಷಿಸಿರುವುದನ್ನೂ ವರದಿ ಉಲ್ಲೇಖಿಸಿದ್ದು ಈ ಬೆಳವಣಿಗೆಗಳು ಗುಂಪಿನ ರಚನೆಯನ್ನು ಮರುರೂಪಿಸಲು ಮತ್ತು ವಿಸ್ತರಿಸಲು ವ್ಯಾಪಕ ಪ್ರಯತ್ನಗಳ ಭಾಗವಾಗಿದೆ ಎಂದು ಕಳವಳ ವ್ಯಕ್ತಪಡಿಸಿದೆ.
ತರಬೇತಿಯಿಂದ ಸೃಜನಶೀಲತೆ ಪಕ್ವಗೊಳ್ಳುತ್ತದೆ: ಬಿ.ರಾಜೀವ ಶೆಟ್ಟಿ
ಉಡುಪಿ, ಫೆ.12: ಸೃಜನಶೀಲತೆ ಎಂಬುದು ಪ್ರತಿಯೊಬ್ಬ ವ್ಯಕ್ತಿಯಲ್ಲೂ ಅಂತರ್ಗತವಾಗಿರುತ್ತದೆ. ಈ ಶಕ್ತಿ ಹೊರಬರಲು ಪರಿಣಾಮಕಾರಿಯಾದ ತರಬೇತಿಯ ಅಗತ್ಯವಿದೆ. ತರಬೇತಿಯಿಂದ ಸೃಜನಶೀಲತೆ ಪಕ್ವಗೊಳ್ಳುತ್ತದೆ ಎಂದು ಭಾರತೀಯ ರೆಡ್ಕ್ರಾಸ್ನ ಕರ್ನಾಟಕ ಸಭಾಪತಿ ಬಸ್ರೂರು ರಾಜೀವ ಶೆಟ್ಟಿ ಹೇಳಿದ್ದಾರೆ. ಬ್ರಹ್ಮಗಿರಿಯಲ್ಲಿರುವ ಭಾರತೀಯ ರೆಡ್ಕ್ರಾಸ್ ಸಭಾಂಗಣದಲ್ಲಿ ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಭಾರತೀಯ ರೆಡ್ಕ್ರಾಸ್ನ ಉಡುಪಿ ಜಿಲ್ಲಾ ಘಟಕಗಳ ಜಂಟಿ ಸಹಯೋಗದಲ್ಲಿ ಆಯೋಜಿ ಸಲಾದ ಎರಡು ದಿನಗಳ ಸೃಜನಶೀಲತೆ ಮತ್ತು ವ್ಯಕ್ತಿ ವಿಕಸನ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ದೇಶದ ಭವಿಷ್ಯವನ್ನು ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸಲಿರುವ ಯುವಜನರಲ್ಲಿ ಸೃಜನಶೀಲತೆ ಮತ್ತು ನಾಯಕತ್ವ ಕೌಶಲ್ಯಗಳನ್ನು ಅಭಿವೃದ್ಧಿ ಪಡಿಸುವ ಉದ್ದೇಶದಿಂದ ಸೃಜನಶೀಲತೆ ಮತ್ತು ವ್ಯಕ್ತಿ ವಿಕಸನ ಶಿಬಿರವನ್ನು ಆಯೋಜಿಸಲಾಗಿದೆ. ಯುವಜನತೆ ತರಬೇತಿಯ ಲಾಭ ಪಡೆದುಕೊಂಡು ಸಮಾಜಕ್ಕೆ ಉತ್ತಮ ಕೊಡುಗೆ ನೀಡುವಂತಾಗಬೇಕು ಎಂದವರು ಹೇಳಿದರು. ಸಮಾಜದಲ್ಲಿ ಯಾವುದೇ ಕರ್ತವ್ಯ ನಿರ್ವಹಿಸುವಾಗ ನಾಯಕತ್ವ ಗುಣ ಅತೀ ಮುಖ್ಯವಾಗಿರುತ್ತದೆ. ದೇಶದಲ್ಲಿ 18ರಿಂದ 35 ವರ್ಷದೊಳಗಿನ ಯುವಜನರ ಸಂಖ್ಯೆಯು ಸುಮಾರು ಶೇ.60-65ರಷ್ಟಿದೆ. ಬಲಿಷ್ಠ ರಾಷ್ಟ್ರ ನಿರ್ಮಾಣಕ್ಕೆ ಯುವಸಮುದಾಯವು ತಮ್ಮದೇ ರೀತಿಯಲ್ಲಿ ಕೊಡುಗೆ ನೀಡುವಂತಾಗಬೇಕು ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತೆಂಕನಿಡಿಯೂರು ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದ ಪ್ರಾಂಶುಪಾಲ ಪ್ರೊ. ನಿತ್ಯಾನಂದ ವಿ. ಗಾಂವಕರ ಮಾತನಾಡಿ, ಪ್ರತಿಯೊಬ್ಬ ಮನುಷ್ಯ ನಲ್ಲಿಯೂ ಸೃಜನಶೀಲತೆ ಅಡಗಿರುತ್ತದೆ. ಯುವಸಮುದಾಯವನ್ನು ಉತ್ತಮ ದಾರಿಯಲ್ಲಿ ಕೊಂಡೊಯ್ಯುವ ನಿಟ್ಟಿನಲ್ಲಿ ಹಾಗೂ ಯುವಜನರ ಸರ್ವಾಂಗೀಣ ಅಭಿವೃದ್ಧಿಗಾಗಿ ತರಬೇತಿ ಶಿಬಿರವನ್ನು ಆಯೋಜಿಸಲಾಗಿದೆ. ಯುವ ರೆಡ್ಕ್ರಾಸ್ ಸ್ವಯಂಸೇವಕರು ಇದರ ಸದುಪಯೋಗ ಪಡೆದು ಕೊಳ್ಳುವಂತೆ ತಿಳಿಸಿದರು. ಸಂಪನ್ಮೂಲ ವ್ಯಕ್ತಿಗಳಾದ ಎಸಿಟಿಯ ತರಬೇತಿ ಡೀನ್ ಡಾ.ವಿವೇಕಾನಂದ ತರಬೇತಿಯ ಸ್ವರೂಪವನ್ನು ವಿವರಿಸಿ ದರು. ಕಾರ್ಯಕ್ರಮದಲ್ಲಿ ರೆಡ್ಕ್ರಾಸ್ ಆಡಳಿತ ಮಂಡಳಿಯ ಸದಸ್ಯ ಟಿ. ಚಂದ್ರಶೇಖರ್, ಸಂಪನ್ಮೂಲ ವ್ಯಕ್ತಿಗಳಾದ ಎಸಿಟಿ ಕೇಂದ್ರ ಹುಬ್ಬಳ್ಳಿಯ ಮುಖ್ಯಸ್ಥೆ ಯಶವಂತಿ ಉಪಸ್ಥಿತರಿದ್ದರು. ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಡಾ. ರೋಶನ್ ಕುಮಾರ್ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ರೆಡ್ಕ್ರಾಸ್ ಘಟಕದ ಗೌರವ ಕಾರ್ಯದರ್ಶಿ ಡಾ.ಗಣನಾಥ ಎಕ್ಕಾರು ಕಾರ್ಯಕ್ರಮ ನಿರೂಪಿಸಿದರು. ತರಬೇತಿಯಲ್ಲಿ ಉಡುಪಿ ಜಿಲ್ಲೆಯ ವಿವಿಧ ತಾಲೂಕುಗಳ ನೂರು ವಿದ್ಯಾರ್ಥಿಗಳು ಹಾಗೂ ಯುವಕರು ಪಾಲ್ಗೊಂಡಿದ್ದಾರೆ.
T20 World Cup- ನಮೀಬಿಯಾ ವಿರುದ್ಧವೂ ವಿಫಲ! ಚಿನ್ನದಂಥ ಅವಕಾಶ ಕೈಚೆಲ್ಲಿದ ಸಂಜು ಸ್ಯಾಮ್ಸನ್ ವಿಪರೀತ ಟ್ರೋಲ್!
India Vs Namibia - ಇನ್ನೇನು ಸಂಜು ಸ್ಯಾಮ್ಸನ್ ಅವರ ಕತೆ ಮುಗಿದೇ ಹೋಯಿತು ಎಂದು ಅಂದುಕೊಳ್ಳುತ್ತಿರಬೇಕಾದರೆ ನಮೀಬಿಯಾ ವಿರುದ್ಧ ಅಪೂರ್ವ ಅವಕಾಶ ಅವರಿಗೆ ಸಿಕ್ಕಿತ್ತು. ಆರಂಭವೇನೋ ಉತ್ತಮವಾಗಿಯೇ ಇತ್ತು. 3 ಸಿಕ್ಸರ್ ಸಹ ಬಾರಿಸಿದ್ದರು. ಆದರೆ ತಪ್ಪಾದ ಹೊಡೆತವೊಂದನ್ನು ಹೊಡೆದು ಅವರು ವಿಕೆಟ್ ಕಳೆದುಕೊಂಡಿದ್ದಾರೆ. ಇದು ಸಾಮಾಜಿಕ ಜಾಲತಾಣಗಳಲ್ಲಿ ವಿಪರೀತ ಟ್ರೋಲ್ ಆಗುತ್ತಿದೆ. ಅವರು ಕೊನೆಯದಾಗಿ ಆಡಿದ್ದು ಯಾವಾಗ ಎಂದು ಕಾಲೆಳೆದಿದ್ದಾರೆ ನೆಟ್ಟಿಗರು. ಇದೇ ವೇಳೆ ಮತ್ತೊಬ್ಬ ವಿಕೆಟ್ ಕೀಪರ್ ಬ್ಯಾಟರ್ ಇಶಾನ್ ಕಿಶಾನ್ ಅರ್ಧಶತಕ ಹೊಡೆದಿದ್ದಾರೆ.
ಚೆನಾಬ್ ಮೆಗಾ ಅಣೆಕಟ್ಟು ಯೋಜನೆಗೆ ಪಾಕಿಸ್ತಾನ ವಿರೋಧ
ಇಸ್ಲಮಾಬಾದ್, ಫೆ.12: ಜಮ್ಮು ಮತ್ತು ಕಾಶ್ಮೀರದಲ್ಲಿ ಚೆನಾಬ್ ನದಿಗೆ ಭಾರತ ನಿರ್ಮಿಸಲು ಯೋಜಿಸಿರುವ ಅಣೆಕಟ್ಟು ಯೋಜನೆಯನ್ನು ಪಾಕಿಸ್ತಾನ ವಿರೋಧಿಸಿದ್ದು ಭಾರತ ಅಂತಾರಾಷ್ಟ್ರೀಯ ಒಪ್ಪಂದದ ಬಾಧ್ಯತೆಗಳನ್ನು ಉಲ್ಲಂಘಿಸಿದೆ ಎಂದು ಆರೋಪಿಸಿದೆ. ಸಿಂಧೂ ಜಲ ಒಪ್ಪಂದವನ್ನು ಅಮಾನತುಗೊಳಿಸಿದ ಬಳಿಕ ಭಾರತವು 5,129 ಕೋಟಿ ರೂ. ವೆಚ್ಚದ ಸಾವಳಕೋಟೆ ಜಲವಿದ್ಯುತ್ ಯೋಜನೆಯ ಕಾಮಗಾರಿ ಆರಂಭಿಸಿದೆ. ಇದು 1960ರ ಒಪ್ಪಂದದ ಉಲ್ಲಂಘನೆಯಾಗಿದ್ದು ಪಾಕಿಸ್ತಾನಕ್ಕೆ ಹರಿಯುವ ನೀರನ್ನು ತಡೆಹಿಡಿಯುವ ಭಾರತದ ಕಾರ್ಯತಂತ್ರದ ಭಾಗವಾಗಿದೆ ಎಂದು ಪಾಕಿಸ್ತಾನ ಆರೋಪಿಸಿರುವುದಾಗಿ ಮೂಲಗಳನ್ನು ಉಲ್ಲೇಖಿಸಿ ನ್ಯೂಸ್18 ವರದಿ ಮಾಡಿದೆ. ಅಂತಾರಾಷ್ಟ್ರೀಯ ವ್ಯವಸ್ಥೆಯಾದ ಸಿಂಧೂ ಜಲ ಒಪ್ಪಂದಕ್ಕೆ ಎರಡೂ ಪಕ್ಷಗಳು ಬದ್ಧವಾಗಿರಬೇಕು ಮತ್ತು ಯಾವುದೇ ಏಕಪಕ್ಷೀಯ ಕ್ರಮಗಳು ಮತ್ತು ಧಿಕ್ಕಾರಗಳು ಈ ಕಾನೂನು ವಾಸ್ತವತೆಯನ್ನು ಬದಲಾಯಿಸುವುದಿಲ್ಲ ಎಂದು ಪಾಕಿಸ್ತಾನದ ವಿದೇಶಾಂಗ ಇಲಾಖೆಯ ವಕ್ತಾರ ತಾಹಿರ್ ಅಂದ್ರಾಬಿ ಹೇಳಿದ್ದಾರೆ.
Property Good News: ಮನೆ ಬಾಗಿಲಿಗೆ ಇ - ಪೌತಿ ಖಾತೆ: ಸಚಿವ ಕೃಷ್ಣ ಬೈರೇಗೌಡ
Property Good News: ಕಂದಾಯ ಇಲಾಖೆಯ ಗ್ರಾಮ ಆಡಳಿತ ಅಧಿಕಾರಿ, ಗ್ರಾಮ ಸೇವಕರು ಮನೆ ಬಾಗಿಲಿಗೆ ಬಂದು ಮೃತ ವ್ಯಕ್ತಿಗಳ ಹೆಸರಿನಲ್ಲಿರುವ ಜಮೀನುಗಳನ್ನು ಅವರ ವಾರಸುದಾರರ ಹೆಸರಿಗೆ ಪೌತಿ ಖಾತೆ ಮಾಡಿಕೊಡುವ ಅಭಿಯಾನ ಕೈಗೊಂಡಿದ್ದು ವಾರಸುದಾರರು ಇದಕ್ಕೆ ಸಹಕರಿಸಬೇಕೆಂದು ಕಂದಾಯ ಸಚಿವರಾದ ಕೃಷ್ಣ ಬೈರೇಗೌಡ ಅವರು ಮನವಿ ಮಾಡಿದ್ದಾರೆ. ಗುರುವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಜಿಲ್ಲಾ
ಆರ್ಸಿಬಿ ಅಭಿಮಾನಿಗಳಿಗೆ ರಾಜ್ಯ ಸರ್ಕಾರ ಗುಡ್ ನ್ಯೂಸ್: ಬೆಂಗಳೂರು ಚಿನ್ನಸ್ವಾಮಿಯಲ್ಲಿ ಐಪಿಎಲ್ ಆಡಿಸಲು ಅನುಮತಿ
IPL 2026: ಬೆಂಗಳೂರು ನಗರದಲ್ಲಿರುವ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್ ಪಂದ್ಯಗಳನ್ನು ಆಯೋಜಿಸಲು ರಾಜ್ಯ ಸರ್ಕಾರ ಅನುಮತಿ ನೀಡಿದೆ.
ಅಕ್ರಮ ಹಣ ವರ್ಗಾವಣೆ ಪ್ರಕರಣ | ವೀರೇಂದ್ರ ಪಪ್ಪಿ ಜಾಮೀನು ರದ್ದು ಕೋರಿ ಈಡಿ ಅರ್ಜಿ; ಶಾಸಕರಿಗೆ ಹೈಕೋರ್ಟ್ ನೋಟಿಸ್
ಬೆಂಗಳೂರು : ಆನ್ಲೈನ್ ಮತ್ತು ಆಫ್ಲೈನ್ ಬೆಟ್ಟಿಂಗ್ ಆರೋಪಕ್ಕೆ ಸಂಬಂಧಿಸಿದಂತೆ ಅಕ್ರಮ ಹಣ ವರ್ಗಾವಣೆ (ಪಿಎಂಎಲ್) ಕಾಯ್ದೆಯಡಿ ಬಂಧನಕ್ಕೊಳಗಾಗಿದ್ದ ಶಾಸಕ ಕೆ.ಸಿ. ವೀರೇಂದ್ರ ಅವರಿಗೆ ಮಂಜೂರಾಗಿರುವ ಜಾಮೀನು ರದ್ದುಕೋರಿ ಜಾರಿ ನಿರ್ದೇಶನಾಲಯ (ಈಡಿ) ಸಲ್ಲಿಸಿರುವ ಅರ್ಜಿ ಸಂಬಂಧ ವೀರೇಂದ್ರ ಅವರಿಗೆ ಹೈಕೋರ್ಟ್ ನೋಟಿಸ್ ಜಾರಿಗೊಳಿಸಿದೆ. ಪ್ರಕರಣದಲ್ಲಿ ವಿರೇಂದ್ರ ಅವರಿಗೆ ಜಾಮೀನು ನೀಡಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ 2025ರ ಡಿಸೆಂಬರ್ 30ರಂದು ಹೊರಡಿಸಿದ್ದ ಆದೇಶ ರದ್ದು ಕೋರಿ ಈಡಿ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಸುನೀಲ್ ದತ್ ಯಾದವ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿತು. ಈಡಿ ಪರ ವಕೀಲರು ಹಾಜರಾಗಿ, ಪ್ರತಿವಾದಿ ವಿರೇಂದ್ರ ಅವರಿಗೆ ವಿಶೇಷ ನ್ಯಾಯಾಲಯವು ಮಂಜೂರು ಮಾಡಿರುವ ಜಾಮೀನು ರದ್ದುಪಡಿಸಲು ಕೋರಿ ಈ ಅರ್ಜಿ ಸಲ್ಲಿಸಲಾಗಿದೆ ಎಂದು ನ್ಯಾಯಪೀಠಕ್ಕೆ ವಿವರಿಸಿದರು. ಅದನ್ನು ಪರಿಗಣಿಸಿದ ನ್ಯಾಯಪೀಠ, ಪ್ರತಿವಾದಿ ವಿರೇಂದ್ರ ಅವರಿಗೆ ನೋಟಿಸ್ ಜಾರಿಗೊಳಿಸಿ ಅರ್ಜಿ ವಿಚಾರಣೆಯನ್ನು ಫೆಬ್ರವರಿ 26ಕ್ಕೆ ಮುಂದೂಡಿತು. ಪ್ರಕರಣದ ಹಿನ್ನೆಲೆ: 2025ರ ಆಗಸ್ಟ್ 22 ಮತ್ತು 23ರಂದು ಜಾರಿ ನಿರ್ದೇಶನಾಲಯದ (ಈಡಿ) ಬೆಂಗಳೂರು ಕಚೇರಿಯ ಅಧಿಕಾರಿಗಳು ಚಿತ್ರದುರ್ಗ, ಬೆಂಗಳೂರು, ಹುಬ್ಬಳ್ಳಿ, ಜೋಧಪುರ, ಗ್ಯಾಂಗ್ಟೋಕ್, ಮುಂಬೈ ಮತ್ತು ಗೋವಾ ಸೇರಿ ದೇಶದ ವಿವಿಧ 31 ಕಡೆಗಳಲ್ಲಿ (ಪಪ್ಪಿ ಕ್ಯಾಸಿನೊ ಗೋಲ್ಡ್, ಓಸಿಯನ್ ರಿವರ್ಸ್ ಕ್ಯಾಸಿನೊ, ಪಪ್ಪೀಸ್ ಕ್ಯಾಸಿನೊ ಪ್ರೈಡ್, ಓಸಿಯನ್ 7 ಕ್ಯಾಸಿನೊ, ಬಿಗ್ ಡ್ಯಾಡಿ ಕ್ಯಾಸಿನೊ ಮುಂತಾದ ಕ್ಯಾಸಿನೊ ಅಡ್ಡೆಗಳಲ್ಲಿ) ಅಕ್ರಮ ಆಫ್ಲೈನ್ ಮತ್ತು ಆನ್ಲೈನ್ ಬೆಟ್ಟಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಶೋಧ ನಡೆಸಿದ್ದರು. ಆ ವೇಳೆ ಕಿಂಗ್ 567, ರಾಜ 567 ಇತ್ಯಾದಿ ಹೆಸರಿನಲ್ಲಿ ವೀರೇಂದ್ರ ಪಪ್ಪಿ ಅವರು ಹಲವು ಬೆಟ್ಟಿಂಗ್ ಸೈಟ್ಗಳನ್ನು ನಡೆಸುತ್ತಿರುವುದು ಪತ್ತೆಯಾಗಿದೆ. ವೀರೇಂದ್ರ ಪಪ್ಪಿ ಸಹೋದರ ಕೆ.ಸಿ. ತಿಪ್ಪೇಸ್ವಾಮಿಯು ದುಬೈನಿಂದ ಡೈಮಂಡ್ ಸಾಫ್ಟ್ಟೆಕ್, ಟಿಆರ್ಎಸ್ ಟೆಕ್ನಾಲಜೀಸ್, ಪ್ರೈಮ್9ಟೆಕ್ನಾಲಜೀಸ್ ಹೆಸರಿನ 3 ಉದ್ಯಮಗಳನ್ನು ನಡೆಸುತ್ತಿರುವುದು ಪತ್ತೆಯಾಗಿದೆ ಎಂದು ಈಡಿ ಹೇಳಿತ್ತು. ಶೋಧದ ವೇಳೆ 12 ಕೋಟಿ ರೂ. ನಗದು, 1 ಕೋಟಿ ವಿದೇಶಿ ನೋಟು, 6 ಕೋಟಿ ಮೌಲ್ಯದ ಚಿನ್ನಾಭರಣ, 10 ಕೆಜಿ ಬೆಳ್ಳಿ ಹಾಗೂ 4 ವಾಹನಗಳನ್ನು ಪಿಎಂಎಲ್ ಕಾಯ್ದೆ ಅಡಿ ಜಪ್ತಿ ಮಾಡಲಾಗಿತ್ತು. ಇದರ ಜತೆಗೆ 17 ಬ್ಯಾಂಕ್ ಖಾತೆ ಮತ್ತು 2 ಲಾಕರ್ಗಳನ್ನು ಜಪ್ತಿ ಮಾಡಲಾಗಿತ್ತು. ಕ್ಯಾಸಿನೊ ಒಂದರ ಗುತ್ತಿಗೆ ಪಡೆಯಲು ಸಿಕ್ಕಿಂನ ಗ್ಯಾಂಗ್ಟೋಕ್ಗೆ ತೆರಳಿದ್ದ ವೀರೇಂದ್ರ ಪಪ್ಪಿಯನ್ನು ಆಗಸ್ಟ್ 23ರಂದು ಈಡಿ ಅಧಿಕಾರಿಗಳು ಬಂಧಿಸಿದ್ದರು. ವೀರೇಂದ್ರ ವಿರುದ್ಧ ಅಕ್ಟೋಬರ್ 18ರಂದು ವಿಶೇಷ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಲಾಗಿತ್ತು. ನ್ಯಾಯಾಂಗ ಬಂಧನದಲ್ಲಿದ್ದ ವಿರೇಂದ್ರ ಅವರಿಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ 2025ರ ಡಿಸೆಂಬರ್ 30ರಂದು ಜಾಮೀನು ಮಂಜೂರು ಮಾಡಿತ್ತು. ಇದನ್ನು ಪ್ರಶ್ನಿಸಿ ಈಡಿ ಹೈಕೋರ್ಟ್ ಮೆಟ್ಟಿಲೇರಿದೆ.
ಬಿ.ಇಡಿ. ದಾಖಲಾತಿ : ಆರನೆಯ ಸುತ್ತಿನ ಸೀಟು ಹಂಚಿಕೆ ಪಟ್ಟಿ ಪ್ರಕಟ
ಬೆಂಗಳೂರು : ಶಿಕ್ಷಣ ಇಲಾಖೆಯು 2025ನೇ ಸಾಲಿನ ಬಿ.ಇಡಿ. ದಾಖಲಾತಿ ಸಂಬಂಧಿಸಿದಂತೆ ಆರನೆಯ ಸುತ್ತಿನ ಸೀಟು ಹಂಚಿಕೆ ಪಟ್ಟಿಯನ್ನು https://sts.karnataka.gov.in/GPSTRHK ವೆಬ್ಸೈಟ್ನಲ್ಲಿ ಪ್ರಕಟಿಸಿದ್ದು, ನಿಗದಿತ ದಿನಾಂಕದೊಳಗೆ ಸಂಬಂಧಿಸಿದ ಕಾಲೇಜಿಗೆ ಸೇರ್ಪಡೆಗೊಳ್ಳಲು ಸೂಚಿಸಿದೆ. ಐದನೆಯ ಪಟ್ಟಿಯ ಹಂಚಿಕೆ ಪ್ರಕಾರ ಸೇರ್ಪಡೆಯಾಗಿ ಉಳಿಕೆಯಾಗಿರುವ ಸೀಟುಗಳ ಕಾಲೇಜುವಾರು ಸೀಟ್ ಮ್ಯಾಟ್ರಿಕ್ಸ್ ಅನ್ನು ಫೆ.9ರಂದು https://schooleducation.karnataka.gov.in/ ವೆಬ್ಸೈಟ್ನಲ್ಲಿ ಪ್ರಕಟಿಸಿದ್ದು, ಕಾಲೇಜುಗಳಿಗೆ ದಾಖಲಾಗದ ಅಭ್ಯರ್ಥಿಗಳು ಆರನೆಯ ಸುತ್ತಿನ ಸೀಟು ಹಂಚಿಕೆಗಾಗಿ ತಮ್ಮ ಅಭಿಮತವನ್ನು ದಾಖಲಿಸಲು ಫೆ.11ರವರೆಗೆ ಅವಕಾಶವನ್ನು ಕಲ್ಪಿಸಲಾಗಿತ್ತು. ಅದರಂತೆ ಈಗ ಆರನೆಯ ಸುತ್ತಿನ ಸೀಟು ಹಂಚಿಕೆ ಪಟ್ಟಿಯನ್ನು ಪ್ರಕಟಿಸಿದೆ. ಅಭ್ಯರ್ಥಿಗಳು ಈಗ ಹಂಚಿಕೆಯಾದ ಕಾಲೇಜುಗಳಿಗೆ ಸೇರಬಯಸಿದಲ್ಲಿ ತಮ್ಮ ಯೂಸರ್ ಐಡಿ ಮತ್ತು ಪಾಸ್ವರ್ಡನ್ನು ಬಳಸಿ ನಿಗದಿತ ಶುಲ್ಕದ ಚಲನ್ ಅನ್ನು ಮುದ್ರಿಸಿಕೊಂಡು ಭಾರತೀಯ ಸ್ಟೇಟ್ ಬ್ಯಾಂಕಿನ ಯಾವುದೇ ಶಾಖೆಯಲ್ಲಿ ಪಾವತಿಸಿ ಅದರ ಮೂಲ ಪ್ರತಿ ಹಾಗೂ ಇತರೆ ಎಲ್ಲಾ ಮೂಲ ದಾಖಲೆಗಳೊಂದಿಗೆ ಸಂಬಂಧಿಸಿದ ಜಿಲ್ಲಾ ನೋಡಲ್ ಕೇಂದ್ರಕ್ಕೆ ಹಾಜರಾಗಿ ಸಲ್ಲಿಸಿ, ಫೆ.17ರೊಳಗೆ ದಾಖಲಾತಿ ಪತ್ರವನ್ನು ಪಡೆದುಕೊಳ್ಳಬೇಕು ಎಂದು ಶಿಕ್ಷಣ ಇಲಾಖೆಯು ಪ್ರಕಟನೆಯಲ್ಲಿ ತಿಳಿಸಿದೆ.
‘ಸೇವಾಭೂಷಣ ಪ್ರಶಸ್ತಿ’ಗೆ ಯು.ಶ್ರೀಧರ್ ಆಯ್ಕೆ
ಉಡುಪಿ, ಫೆ.12: ಉಡುಪಿಯ ಯಕ್ಷಗಾನ ಕಲಾರಂಗವು ಪ್ರತಿವರ್ಷ ನೀಡುವ ‘ಸೇವಾಭೂಷಣ ಪ್ರಶಸ್ತಿ’ಯನ್ನು ಈ ಬಾರಿ ಹಿರಿಯ ಸಮಾಜ ಸೇವಕ, ನಿವೃತ್ತ ಬ್ಯಾಂಕ್ ಅಧಿಕಾರಿ, ಲೇಖಕ ಯು.ಶ್ರೀಧರ್ ಅವರಿಗೆ ನೀಡಿ ಗೌರವಿಸಲಾಗುತ್ತಿದೆ. ಯಕ್ಷಗಾನ ಕಲಾರಂಗದಲ್ಲಿ 27 ವರ್ಷಗಳ ಕಾಲ ಕೋಶಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದ ಎಸ್.ಗೋಪಾಲಕೃಷ್ಣರ ನೆನಪಿನಲ್ಲಿ ಈ ಪ್ರಶಸ್ತಿಯನ್ನು ನೀಡಲಾಗುತ್ತಿತ್ತು. ಈ ವರ್ಷದಿಂದ 35ವರ್ಷಗಳ ಕಾಲ ಜೊತೆಕಾರ್ಯದರ್ಶಿ ಯಾಗಿ ದುಡಿದ ಎಚ್.ಎನ್.ಶೃಂಗೇಶ್ವರರ ಹೆಸರನ್ನು ಪ್ರಶಸ್ತಿಗೆ ಸೇರ್ಪಡೆ ಮಾಡಲು ಯಕ್ಷಗಾನ ಕಲಾರಂಗ ನಿರ್ಧರಿಸಿದೆ. ನಾರಾಯಣ ಗುರುಗಳ ಕುರಿತು ಹಲವು ಕೃತಿಗಳನ್ನು ರಚಿಸಿರುವ ಯು. ಶ್ರೀಧರ್, ನಾರಾಯಣ ಗುರುಗಳ ತತ್ವೋಪದೇಶ ಗಳನ್ನು ಮೈಗೂಡಿಸಿಕೊಂಡ ವರು. ಪುಸ್ತಕವನ್ನು ಉಚಿತವಾಗಿ ಹಂಚುತ್ತಾ ಗುರುಗಳ ಜೀವನ ಮೌಲ್ಯಗಳನ್ನು ಸಮಾಜದಲ್ಲಿ ಪ್ರಸಾರ ಮಾಡಲು ಪ್ರಯತ್ನಿಸುತಿದ್ದಾರೆ. ಜೊತೆಗೆ ನೊಂದವ ರಿಗೆ, ಸಂಸ್ಥೆಗಳಿಗೆ ನೆರವು ನೀಡುತ್ತಾ ಸಮಾಜದ ಒಳಿತಿಗಾಗಿ ಸ್ಪಂದಿಸುವಲ್ಲಿ ಕ್ರಿಯಾಶೀಲರಾಗಿದ್ದಾರೆ. ಪ್ರಶಸ್ತಿ ಪ್ರದಾನ ಸಮಾರಂಭ ಫೆಬ್ರವರಿ 27ರಂದು ಸಂಸ್ಥೆಯ ಐವೈಸಿ ಸಭಾಂಗಣದಲ್ಲಿ ಜರಗಲಿದೆ ಎಂದು ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರ ರಾವ್ ಹಾಗೂ ಕಾರ್ಯದರ್ಶಿ ಮುರಲಿ ಕಡೆಕಾರ್ ತಿಳಿಸಿದ್ದಾರೆ.
‘ಹೆಬ್ಬಾಳ- ಸರ್ಜಾಪುರ ಮೆಟ್ರೋ ಯೋಜನೆ’ಗೆ ಅನುಮೋದನೆ ನಿರಾಕರಿಸಿದ ಕೇಂದ್ರ ಸರಕಾರ
ಬೆಂಗಳೂರು : ನಗರದ ಹೆಬ್ಬಾಳ-ಸರ್ಜಾಪುರ ಮೆಟ್ರೋ ಯೋಜನೆಗೆ ಸಂಬಂಧಿಸಿದ ಡಿಪಿಆರ್ ಅನುಮೋದನೆಗೆ ಕೇಂದ್ರ ಸರಕಾರ ನಿರಾಕರಿಸಿದ್ದು, ಯೋಜನೆಯನ್ನು ಮರುಪರಿಶೀಲನೆಗೆ ಕಳುಹಿಸಿದೆ. ರಾಜ್ಯ ಸರಕಾರವು ಹೆಬ್ಬಾಳ–ಸರ್ಜಾಪುರ ಮೆಟ್ರೋ ಕಾರಿಡಾರ್ ಗೆ ಸಂಬಂಧಿಸಿದಂತೆ 28,405 ಕೋಟಿ ರೂ. ವೆಚ್ಚದ ವಿಸ್ತೃತ ಯೋಜನಾ ವರದಿ (ಡಿಪಿಆರ್) ಅನ್ನು ಕೇಂದ್ರಕ್ಕೆ ಸಲ್ಲಿಸಿತ್ತು. ಆದರೆ ಯೋಜನಾ ವೆಚ್ಚ ಹೆಚ್ಚಾಗಿದೆ ಮತ್ತು ಡಬಲ್ ಡೆಕ್ಕರ್ ಸಂಯೋಜನೆಯಿಂದ ಯೋಜನೆಯ ಉದ್ದೇಶಕ್ಕೆ ಧಕ್ಕೆ ಉಂಟಾಗಬಹುದು ಎಂಬ ಕಾರಣ ನೀಡಿ ಕೇಂದ್ರ ಸರಕಾರ ಮರುಪರಿಶೀಲನೆಗೆ ವಾಪಸ್ ಕಳುಹಿಸಿದೆ. ರಾಜ್ಯ ಸರಕಾರದ ಪ್ರಸ್ತಾವನೆಯಂತೆ ಹೆಬ್ಬಾಳ–ಸರ್ಜಾಪುರ ಮೆಟ್ರೋ ಮಾರ್ಗದ ಉದ್ದ 37 ಕಿಲೋಮೀಟರ್ ಆಗಿದ್ದು, ಒಟ್ಟು 28 ಮೆಟ್ರೋ ನಿಲ್ದಾಣಗಳಿದ್ದವು. ಈ ಮಾರ್ಗ ಕಾರ್ಯರೂಪಕ್ಕೆ ಬಂದರೆ ಐಟಿ ಕಾರಿಡಾರ್, ಟೆಕ್ ಪಾರ್ಕ್ಗಳು ಮತ್ತು ವಸತಿ ಪ್ರದೇಶಗಳಿಗೆ ಭಾರೀ ಅನುಕೂಲವಾಗಲಿದೆ. ಆದರೆ ಯೋಜನೆಯನ್ನು ಸಂಪೂರ್ಣವಾಗಿ ಮರುಪರಿಶೀಲಿಸಿ ಹೊಸ ಪ್ರಸ್ತಾವ ಸಲ್ಲಿಸುವಂತೆ ಕೇಂದ್ರವು ರಾಜ್ಯ ಸರಕಾರಕ್ಕೆ ಸೂಚನೆ ನೀಡಿದೆ.
ಸುರಪುರ | ವಿಬಿ ಜಿ-ರಾಮ್-ಜಿ ಯೋಜನೆ ಹಿಂಪಡೆಯಲು ಕೇಂದ್ರಕ್ಕೆ ಒತ್ತಾಯ: ಶಾಸಕ ರಾಜಾ ವೇಣುಗೋಪಾಲ ನಾಯಕ
ಸುರಪುರ : ವಿಬಿ ಜಿ-ರಾಮ್-ಜಿ ಯೋಜನೆಯನ್ನು ಹಿಂಪಡೆಯಲು ರಾಜ್ಯ ಸರ್ಕಾರವು ಕೇಂದ್ರ ಸರ್ಕಾರದ ಮೇಲೆ ಒತ್ತಾಯ ಮಾಡಲಿದೆ. ಕಾರ್ಮಿಕರು ಮುಂದಿಟ್ಟಿರುವ ಬೇಡಿಕೆಗಳಿಗೆ ನಮ್ಮ ಸರ್ಕಾರ ಬೆಂಬಲವಾಗಿ ನಿಂತು ಕೇಂದ್ರದ ವಿರುದ್ಧ ಹೋರಾಟ ನಡೆಸಲಿದೆ ಎಂದು ಶಾಸಕ ರಾಜಾ ವೇಣುಗೋಪಾಲ ನಾಯಕ ತಿಳಿಸಿದ್ದಾರೆ. ನಗರದ ಮಹಾತ್ಮ ಗಾಂಧಿ ವೃತ್ತದಲ್ಲಿ ಕಾರ್ಮಿಕ ಸಂಘಟನೆಗಳು ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ರಾಜ್ಯ ಸರ್ಕಾರವು ಕಾರ್ಮಿಕರು, ಹಿಂದುಳಿದವರು, ಅಲ್ಪಸಂಖ್ಯಾತರು, ವಿದ್ಯಾರ್ಥಿಗಳು ಹಾಗೂ ಮಹಿಳೆಯರ ಏಳಿಗೆಗಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಆದರೆ ಕೇಂದ್ರ ಸರ್ಕಾರ ರೈತರು ಹಾಗೂ ಕಾರ್ಮಿಕರ ಹಿತಕ್ಕೆ ವಿರುದ್ಧವಾದ ನಿಲುವು ಅನುಸರಿಸುತ್ತಿದ್ದು, ಈಗ ವಿಬಿ ಜಿ-ರಾಮ್-ಜಿ ಯೋಜನೆಯನ್ನು ಜಾರಿಗೊಳಿಸಲು ಮುಂದಾಗಿದೆ. ಈ ಯೋಜನೆ ಕಾರ್ಮಿಕರಿಗೆ ಅನುಕೂಲಕರವಾಗಿಲ್ಲ ಎಂದು ವಿರೋಧ ವ್ಯಕ್ತಪಡಿಸಿದರು. ಕಾರ್ಮಿಕರ ಯಾವುದೇ ನ್ಯಾಯಸಮ್ಮತ ಬೇಡಿಕೆಗಳನ್ನು ಈಡೇರಿಸಲು ರಾಜ್ಯ ಸರ್ಕಾರ ಸಿದ್ಧವಾಗಿದೆ. ವೈಯಕ್ತಿಕವಾಗಿ ನಾನು ಕೂಡ ನಿಮ್ಮ ಬೇಡಿಕೆಗಳ ಈಡೇರಿಕೆಗೆ ಸದಾ ಶ್ರಮಿಸುವೆ ಎಂದು ಭರವಸೆ ನೀಡಿದರು. ಇದೇ ಸಂದರ್ಭದಲ್ಲಿ ಹೋರಾಟಗಾರರು ತಮ್ಮ ವಿವಿಧ ಬೇಡಿಕೆಗಳನ್ನು ಕೇಂದ್ರ ಸರ್ಕಾರ ಈಡೇರಿಸುವಂತೆ ಒತ್ತಾಯಿಸಿ ಶಾಸಕರಿಗೆ ಮನವಿ ಸಲ್ಲಿಸಿದರು. ಪ್ರತಿಭಟನೆಯಲ್ಲಿ ರಾಜಾ ಕುಮಾರ ನಾಯಕ, ರಾಜಾ ವಾಸುದೇವ ನಾಯಕ, ಮಲ್ಲಣ್ಣ ಸಾಹುಕಾರ ಮುಧೋಳ, ನಿಂಗರಾಜ ಬಾಚಿಮಟ್ಟಿ, ಸೂಗುರೇಶ ವಾರದ, ವೆಂಕಟೇಶ ಹೊಸಮನಿ, ದೇವಿಂದ್ರಪ್ಪ ಪತ್ತಾರ, ಅಹ್ಮದ್ ಪಠಾಣ್, ಅಬ್ದುಲ್ ಗಫರ್ ನಗನೂರಿ, ಹಣಮಂತ್ರಾಯ ಮಡಿವಾಳ, ದೊಡ್ಡ ದೇಸಾಯಿ, ಬಸ್ಸಮ್ಮ ಆಲ್ಹಾಳ, ಪ್ರಕಾಶ ಆಲ್ಹಾಳ, ನಸೀಮಾ ಮುದನೂರ, ತಿಮ್ಮಯ್ಯ ತಳವಾರ ಸೇರಿದಂತೆ ಅನೇಕರು ಭಾಗವಹಿಸಿದ್ದರು.
ಸ್ವಂತಿಕೆಯಿಂದ ಕೆಲಸ ಮಾಡಿ, ನೀವು ಬಿಜೆಪಿಯಿಂದ ಉದ್ಯೋಗ ಪಡೆದಿಲ್ಲ: ಮಾಧ್ಯಮಗಳ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ
ರಾಹುಲ್ ಗಾಂಧಿ ವಿರುದ್ಧ ನಿರ್ಣಯ ಮಂಡನೆಗೆ ಬಿಜೆಪಿ ಸಂಸದ ನಿಶಿಕಾಂತ್ ದುಬೆಯಿಂದ ನೋಟಿಸ್
ಚಿನ್ನಸ್ವಾಮಿ ಕ್ರಿಡಾಂಗಣದಲ್ಲಿ ಕ್ರಿಕೆಟ್ ಪಂದ್ಯಾವಳಿ: ಮೈದಾನದ ಪರಿಶೀಲನಾ ವರದಿ ಸಲ್ಲಿಕೆ
ಬೆಂಗಳೂರು : ಚಿನ್ನಸ್ವಾಮಿ ಕ್ರಿಡಾಂಗಣದಲ್ಲಿ ಕ್ರಿಕೆಟ್ ಪಂದ್ಯಾವಳಿಗೆ ಅನುಮತಿ ನೀಡುವ ಬಗ್ಗೆ ಪೊಲೀಸ್ ಇಲಾಖೆಯ ಅಧಿಕಾರಿಗಳು ಮೈದಾನದ ಪರಿಶೀಲನಾ ವರದಿ ಸಲ್ಲಿಕೆ ಮಾಡಿದರು. ಗುರುವಾರ ವಿಧಾನಸೌಧದಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ರಿಕೆಟ್ ಪಂದ್ಯಾವಳಿಗಳನ್ನು ಆಯೋಜಿಸುವ ಕುರಿತಂತೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಗೃಹ ಇಲಾಖೆಯ ಅಪರ ಮುಖ್ಯಕಾರ್ಯದರ್ಶಿ ತುಷಾರ್ ಗಿರಿನಾಥ್, ರಾಜ್ಯ ಪೊಲೀಸ್ ಮಹಾನಿರ್ದೇಶಕ ಡಾ.ಎಂ.ಎ.ಸಲೀಂ, ಜಿಬಿಎ ಆಯುಕ್ತ ಮಹೇಶ್ವರ್ ರಾವ್, ಗೃಹ ಇಲಾಖೆಯ ಕಾರ್ಯದರ್ಶಿ ಕೆ.ವಿ.ಶರತ್ಚಂದ್ರ, ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್, ಕೆಎಸ್ಸಿಎ ಅಧ್ಯಕ್ಷ ವೆಂಕಟೇಶ್ ಪ್ರಸಾದ್, ಕೆಎಸ್ಸಿಎ ಕಾರ್ಯದರ್ಶಿ ಹಾಗೂ ಆರ್ಸಿಬಿ ಪದಾಧಿಕಾರಿಗಳು ಉಪಸ್ಥಿತರಿದ್ದರು. ಈ ವೇಳೆ ಸಭೆಯಲ್ಲಿ ಅಧಿಕಾರಿಗಳು ಮೈದಾನದ ಪರಿಶೀಲನಾ ವರದಿ ಸಲ್ಲಿಸಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಎಪಿಎಲ್ ಪಂದ್ಯ ನಡೆಸಲು ಎಲ್ಲರೂ ಸಹಮತ ವ್ಯಕ್ತಪಡಿಸಿದರು. ಸಭೆ ಬಳಿಕ ಮಾತನಾಡಿದ ಡಾ.ಜಿ.ಪರಮೇಶ್ವರ್, ಗೃಹ ಇಲಾಖೆಯ ವರದಿ ಬಂದಿತ್ತು. ಅದರ ಬಗ್ಗೆ ಸಂಪೂರ್ಣವಾಗಿ ಚರ್ಚೆ ಮಾಡಿದ್ದೇವೆ. ಮುಂದೆ ಎಲ್ಲ ರೀತಿಯ ಜವಾಬ್ದಾರಿ ಕೆಎಸ್ಸಿಎ, ಆರ್ಸಿಬಿ ಅವರದ್ದೇ ಎಂದು ಸಭೆಯಲ್ಲಿ ಉಲ್ಲೇಖಿಸಲಾಗಿದೆ ಎಂದರು. ಕೆಎಸ್ಸಿಎ ಅಧ್ಯಕ್ಷ ವೆಂಕಟೇಶ ಪ್ರಸಾದ್ ಮಾತನಾಡಿ, ಸಭೆಯಲ್ಲಿ ಐಪಿಎಲ್ ಉದ್ಘಾಟನೆ, ಅಂತಾರಾಷ್ಟ್ರೀಯ ಪಂದ್ಯಗಳ ಸಂಬಂಧ ಮಾತಕತೆ ಆಗಿದೆ. ಐಪಿಎಲ್ ಉದ್ಘಾಟನಾ ಪಂದ್ಯಗಳಿಗೆ ಬೇಕಾದ ತುರ್ತು ಕ್ರಮಗಳಿಗೆ ಮುಂದಾಗಿದ್ದೇವೆ. ಆರ್ಸಿಬಿಯವರು ಒಪ್ಪಿದ್ದಾರೆ ಎಂದರು.
ಬೆಳ್ತಂಗಡಿ: ವಿದ್ಯಾರ್ಥಿಗಳನ್ನು ಪಿಕಪ್, ಟಿಪ್ಪರ್ನಲ್ಲಿ ಅಧ್ಯಯನಕ್ಕೆ ಕರೆದೊಯ್ದ ಮುಖ್ಯೋಪಾಧ್ಯಾಯ ಅಮಾನತು
► ವಾಹನ ಮತ್ತು ಚಾಲಕರ ವಿರುದ್ಧ ಪ್ರಕರಣ ದಾಖಲು
Yadgiri | ಕೇಂದ್ರ ಸರಕಾರದ ವಿದ್ಯುತ್ ಕಾಯ್ದೆ ತಿದ್ದುಪಡಿ ವಿರೋಧಿಸಿ ಜೆಸ್ಕಾಂ ಕಚೇರಿ ಎದುರು ಪ್ರತಿಭಟನೆ
ಯಾದಗಿರಿ: ಬರುವ ಲೋಕಸಭಾ ಅಧಿವೇಶನದಲ್ಲಿ ವಿದ್ಯುತ್ ಕಾಯ್ದೆ ಬಿಲ್ಲಿಗೆ ತಿದ್ದುಪಡಿ ತರಲು ಕೇಂದ್ರ ಸರ್ಕಾರ ಮುಂದಾಗಿರುವುದನ್ನು ವಿರೋಧಿಸಿ ಕರ್ನಾಟಕ ವಿದ್ಯುತ್ ಪ್ರಸರಣಾ ನೌಕರರ ಸಂಘ (ರಿ.ನಂ. 659) ಹಾಗೂ ಜಿಲ್ಲಾ ಒಕ್ಕೂಟದ ವತಿಯಿಂದ ನಗರದ ಜೆಸ್ಕಾಂ ವಿಭಾಗೀಯ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಜೆಸ್ಕಾಂ ಕಾರ್ಯನಿರ್ವಾಹಕ ಇಂಜಿನಿಯರ್ ರಾಘವೇಂದ್ರ ಅವರು, ಇಂಧನ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ಮತ್ತು ಕಾರ್ಮಿಕರು ದಶಕಗಳಿಂದ ಪ್ರಾಮಾಣಿಕವಾಗಿ ಕೆಲಸ ಮಾಡಿದ ಪರಿಣಾಮ ದೇಶದಲ್ಲಿ ಹಲವು ಕ್ಷೇತ್ರಗಳಲ್ಲಿ ಅಭಿವೃದ್ಧಿ ಕಂಡಿದ್ದೇವೆ. ಇಂತಹ ಸಂದರ್ಭದಲ್ಲಿ ವಿದ್ಯುತ್ ಇಲಾಖೆಯನ್ನು ಖಾಸಗೀಕರಣ ಮಾಡುವ ನಿರ್ಧಾರ ನೌಕರರು, ರೈತರು ಮತ್ತು ಕಾರ್ಮಿಕರ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು. ವಿದ್ಯುತ್ ಇಲಾಖೆ ಸಿಬ್ಬಂದಿ ಅನೇಕ ಸವಾಲುಗಳನ್ನು ಎದುರಿಸಿ ರೈತರು, ಗ್ರಾಹಕರು ಹಾಗೂ ಕೈಗಾರಿಕೆಗಳಿಗೆ ನಿರಂತರ ವಿದ್ಯುತ್ ಪೂರೈಕೆ ಮಾಡಲು ಶ್ರಮಿಸಿದ್ದಾರೆ. ಕರ್ತವ್ಯ ನಿರ್ವಹಣೆಯ ವೇಳೆ ಕೆಲವರು ಪ್ರಾಣ ತ್ಯಾಗ ಕೂಡ ಮಾಡಿದ್ದಾರೆ. ಸರ್ಕಾರ ಈ ಸೇವೆಯನ್ನು ಪರಿಗಣಿಸಿ ಖಾಸಗೀಕರಣ ಕ್ರಮವನ್ನು ಕೈಬಿಡಬೇಕು ಎಂದು ಅವರು ಆಗ್ರಹಿಸಿದರು. ಕೇಂದ್ರ ಸರ್ಕಾರ ಈಗಾಗಲೇ ಕೆಲವು ಸಾರ್ವಜನಿಕ ವಲಯ ಸಂಸ್ಥೆಗಳನ್ನು ಖಾಸಗೀಕರಣ ಮಾಡಿದ್ದು, ಇದರಿಂದ ಸಾವಿರಾರು ನೌಕರರಿಗೆ ಅನ್ಯಾಯವಾಗಿದೆ. ಇದೇ ಪರಿಸ್ಥಿತಿ ವಿದ್ಯುತ್ ಇಲಾಖೆಯಲ್ಲೂ ಉಂಟಾಗುವ ಸಾಧ್ಯತೆ ಇದೆ. ಆದ್ದರಿಂದ ಸರ್ಕಾರ ತನ್ನ ನಿರ್ಧಾರವನ್ನು ಹಿಂಪಡೆಯಬೇಕು, ಇಲ್ಲದಿದ್ದರೆ ದೇಶವ್ಯಾಪಿ ಉಗ್ರ ಪ್ರತಿಭಟನೆ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು. ಜೆಸ್ಕಾಂ ನೌಕರರ ಸಂಘದ ಅಧ್ಯಕ್ಷ ಯಮನಪ್ಪ ಟಣಕೇದಾರ ಹಾಗೂ ಮುಖಂಡ ಚಂದಪ್ಪ ಗುಲಸರಂ ಮಾತನಾಡಿ, ವಿದ್ಯುತ್ ಇಲಾಖೆಯ ಬೆಳವಣಿಗೆ ಮತ್ತು ನೌಕರರ ಪರಿಶ್ರಮವನ್ನು ವಿವರಿಸಿದರು. ಈ ಸಂದರ್ಭದಲ್ಲಿ ಕೆಪಿಟಿಸಿಎಲ್ ಕಾರ್ಯನಿರ್ವಾಹಕ ಅಭಿಯಂತರ ಶಂಕರ ಗುತ್ತಿ, ಲೆಕ್ಕಾಧಿಕಾರಿ ಬಸವರಾಜ ಮಾರುತಿ, ಅಶೋಕ, ಸಹಾಯಕ ಕಾರ್ಯಪಾಲಕ ಇಂಜಿನಿಯರ್ಗಳಾದ ಮಾರ್ಥಂಡೇಶ್ವರ, ರಾಠೋಡ್, ಜರೀನಾ ಬೇಗಂ, ಮಾಣಿಕರಾವ್ ಕುಲಕರ್ಣಿ, ಅಯ್ಯಪ್ಪ ಸುಂಗಲಕರ್ ಸೇರಿದಂತೆ ಜೆಸ್ಕಾಂನ ವಿವಿಧ ವಿಭಾಗಗಳ ಅಧಿಕಾರಿಗಳು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.
Kannada: ಮಲಯಾಳಂ ಜಾಮಿಂಗ್ ಸೆಷನ್ಗೆ ಅವಕಾಶ; ದೊಡ್ಡ ಅಪರಾಧ ಎಂದು ತಿಳಿದಿರಲಿಲ್ಲ: ಮೈಸೂರು ಕೆಫೆ ಸ್ಪಷ್ಟನೆ
ಮೈಸೂರು: ಮೈಸೂರಿನ ಖಾಸಗಿ Ikigai ಕೆಫೆಯಲ್ಲಿ ಆಯೋಜನೆ ಮಾಡಲಾಗಿದ್ದ ಮಲಯಾಳಂ ಜಾಮಿಂಗ್ (ಮಲಯಾಳಂ ಸಂಗೀತ ಕಾರ್ಯಕ್ರಮ)ಗೆ ಕನ್ನಡಿಗರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ ನಂತರ ಈ ಕಾರ್ಯಕ್ರವನ್ನು ರದ್ದು ಮಾಡಲಾಗಿದೆ. ಕನ್ನಡಿಗರು ಪರಭಾಷಾ ಸಂಗೀತ ಕಾರ್ಯಕ್ರಮಕ್ಕೆ ಅವಕಾಶ ನೀಡಬಾರದು ಎಂದು ಆಕ್ಷೇಪ ವ್ಯಕ್ತಪಡಿಸಿದ್ದು, ಸೋಷಿಯಲ್ ಮೀಡಿಯಾದಲ್ಲಿ ಈ ವಿಚಾರವು ಗುರುವಾರ ಭಾರೀ ಚರ್ಚೆಗೆ ಕಾರಣವಾಗಿತ್ತು. ಏನಿದು ವಿವಾದ ಹಾಗೂ
ಟಿ-20 ವಿಶ್ವಕಪ್| ಒಮಾನ್ ವಿರುದ್ಧ ಶ್ರೀಲಂಕಾ ತಂಡಕ್ಕೆ ಭರ್ಜರಿ ಜಯ
ಹೊಸದಿಲ್ಲಿ, ಫೆ.12: ಪವನ್ ರತ್ನನಾಯಕೆ(60 ರನ್,28 ಎಸೆತ,8 ಬೌಂಡರಿ, 1 ಸಿಕ್ಸರ್), ನಾಯಕ ದಸುನ್ ಶನಕ(50 ರನ್, 20 ಎಸೆತ, 2 ಬೌಂಡರಿ, 5 ಸಿಕ್ಸರ್) ಅವರ ಬಿರುಸಿನ ಬ್ಯಾಟಿಂಗ್, ಕುಶಾಲ್ ಮೆಂಡಿಸ್ ಅವರ ತಾಳ್ಮೆಯ ಅರ್ಧಶತಕದ(61 ರನ್, 45 ಎಸೆತ,7 ಬೌಂಡರಿ) ನೆರವಿನಿಂದ ಟಿ-20 ವಿಶ್ವಕಪ್ ಟೂರ್ನಿಯ ‘ಬಿ’ ಗುಂಪಿನ ಪಂದ್ಯದಲ್ಲಿ ಒಮಾನ್ ತಂಡದ ವಿರುದ್ಧ ಶ್ರೀಲಂಕಾ ತಂಡವು 105 ರನ್ಗಳ ಅಂತರದಿಂದ ಭರ್ಜರಿ ಜಯ ದಾಖಲಿಸಿದೆ. ರತ್ನನಾಯಕೆ(60 ರನ್, 28 ಎಸೆತ)ಹಾಗೂ ಶನಕ(50 ರನ್, 20 ಎಸೆತ)ತನ್ನ ಫಾರ್ಮ್ಗೆ ಮರಳಿದರೆ, ಕುಶಾಲ್ ಮೆಂಡಿಸ್(61 ರನ್, 45 ಎಸೆತ)ಪೋಷಕನ ಪಾತ್ರವಹಿಸಿ ಶ್ರೀಲಂಕಾ ತಂಡವು ಟಿ-20 ವಿಶ್ವಕಪ್ ಇತಿಹಾಸದಲ್ಲಿ ಎರಡನೇ ಗರಿಷ್ಠ ಮೊತ್ತ (5 ವಿಕೆಟ್ಗಳ ನಷ್ಟಕ್ಕೆ 225 ರನ್) ಗಳಿಸಲು ನೆರವಾದರು. ಪ್ರಸಕ್ತ ಪಂದ್ಯಾವಳಿಯಲ್ಲಿ ತಂಡವೊಂದರ ಗರಿಷ್ಠ ಸೋರ್ ಇದಾಗಿದೆ. ಗೆಲ್ಲಲು ಕಠಿಣ ಗುರಿ ಬೆನ್ನಟ್ಟಿದ ಒಮಾನ್ ತಂಡ ಆರಂಭಿಕ ಆಘಾತದಿಂದ ಚೇತರಿಸಿಕೊಳ್ಳುವಲ್ಲಿ ವಿಫಲವಾಯಿತು. ಭಾರೀ ಒತ್ತಡದಿಂದ ಹೊರಬರಲಾಗದೆ ನಿಗದಿತ 20 ಓವರ್ಗಳಲ್ಲಿ 9 ವಿಕೆಟ್ಗಳ ನಷ್ಟಕ್ಕೆ ಕೇವಲ 120 ರನ್ ಗಳಿಸಿತು. ನಾಯಕ ಜತಿಂದರ್ ಸಿಂಗ್(1 ರನ್) ಮೊದಲ ಓವರ್ನಲ್ಲಿ ದುಶ್ಮಂತ ಚಾಮೀರಗೆ ವಿಕೆಟ್ ಒಪ್ಪಿಸಿದರು. ಆಮೀರ್ ಕಲೀಮ್(6 ರನ್) ಹಾಗೂ ಮಹಮ್ಮದ್ ಮಿರ್ಝಾ(9 ರನ್) ಒಂದಂಕಿ ಗಳಿಸಿ ಔಟಾದಾಗ ಪವರ್ ಪ್ಲೇ ವೇಗೆೆ ಒಮಾನ್ ತಂಡವು 36 ರನ್ಗೆ ಮೂರು ವಿಕೆಟ್ಗಳನ್ನು ಕಳೆದುಕೊಂಡಿತು. ಚಾಮೀರ ಹೊಸ ಚೆಂಡಿನಲ್ಲಿ ಎರಡು ವಿಕೆಟ್ಗಳನ್ನು(2-19) ಕಬಳಿಸಿದರೆ, ಮಹೀಶ್ ತೀಕ್ಷಣ ತನ್ನ ನಾಲ್ಕು ಓವರ್ಗಳಲ್ಲಿ 11 ರನ್ಗೆ ಎರಡು ವಿಕೆಟ್ಗಳನ್ನು ಕಬಳಿಸಿ ಮಿತವ್ಯಯಿ ಬೌಲರ್ ಎನಿಸಿಕೊಂಡರು. ಆರು ಎಸೆತಗಳಲ್ಲಿ ಮೂರು ವಿಕೆಟ್ಗಳನ್ನು ಉದುರಿಸಿಕೊಂಡ ಒಮಾನ್ 91 ರನ್ಗೆ ಆರು ವಿಕೆಟ್ಗಳನ್ನು ಕಳೆದುಕೊಂಡಿತು. ಮುಹಮ್ಮದ್ ನದೀಮ್(ಔಟಾಗದೆ 53, 56 ಎಸೆತ, 3 ಬೌಂಡರಿ, 1 ಸಿಕ್ಸರ್) ಟಿ-20 ಕ್ರಿಕೆಟ್ನಲ್ಲಿ ತನ್ನ ಮೂರನೇ ಅರ್ಧಶತಕವನ್ನು ಕಲೆ ಹಾಕಿದರು. ಈ ಮೂಲಕ ಏಕಾಂಗಿ ಹೋರಾಟ ನೀಡಿದರು. 43ರ ವಯಸ್ಸಿನ ನದೀಮ್ ಐಸಿಸಿ ಟೂರ್ನಿಯಲ್ಲಿ ಅರ್ಧಶತಕ ಗಳಿಸಿದ ಹಿರಿಯ ಆಟಗಾರ ಎನಿಸಿಕೊಂಡರು. ಈ ಹಿಂದೆ 1996ರ ಏಕದಿನ ವಿಶ್ವಕಪ್ ಪಂದ್ಯದಲ್ಲಿ ನೆದರ್ಲ್ಯಾಂಡ್ಸ್ನ ಫ್ಲಾವಿಯನ್ ಅಪೊನ್ಸೊ(43 ವರ್ಷ)ಪಾಕಿಸ್ತಾನದ ವಿರುದ್ಧ 58 ರನ್ ಗಳಿಸಿದ್ದರು. ಇದಕ್ಕೂ ಮೊದಲು ಬ್ಯಾಟಿಂಗ್ಗೆ ಇಳಿಸಲ್ಪಟ್ಟಿದ್ದ ಲಂಕಾ ತಂಡ ಉತ್ತಮ ಮೊತ್ತ ಗಳಿಸಿತು. ಐರ್ಲ್ಯಾಂಡ್ ವಿರುದ್ಧದ ತನ್ನ ಮೊದಲ ವಿಶ್ವಕಪ್ ಪಂದ್ಯದಲ್ಲಿ 5 ರನ್ ಗಳಿಸಿದ್ದ ರತ್ನನಾಯಕೆ ಕೇವಲ 24 ಎಸೆತಗಳಲ್ಲಿ ತನ್ನ ಚೊಚ್ಚಲ ಟಿ-20 ಅರ್ಧಶತಕ ಗಳಿಸಿದರು. ಎಂಟು ಬೌಂಡರಿ ಹಾಗೂ ಒಂದು ಸಿಕ್ಸರ್ ಸಿಡಿಸಿದ 23ರ ವಯಸ್ಸಿನ ರತ್ನನಾಯಕೆ ಜೀವನಶ್ರೇಷ್ಠ ಇನಿಂಗ್ಸ್ ಆಡಿದರು. 52 ಎಸೆತಗಳಲ್ಲಿ 94 ರನ್ ಕಲೆ ಹಾಕಿದ ರತ್ನನಾಯಕೆ ಹಾಗೂ ಕುಶಾಲ್ ಮಧ್ಯಮ ಓವರ್ಗಳಲ್ಲಿ 9 ರನ್ರೇಟ್ನಲ್ಲಿ ರನ್ ಕಲೆ ಹಾಕಿದರು. 19ನೇ ಓವರ್ನಲ್ಲಿ ವಿಕೆಟ್ ಒಪ್ಪಿಸಿದ ಕುಶಾಲ್ ಏಳು ಬೌಂಡರಿಗಳನ್ನು ಗಳಿಸಿದರು. ಇತ್ತೀಚೆಗೆ ರನ್ ಗಳಿಸಲು ಪರದಾಟ ನಡೆಸುತ್ತಿದ್ದ ಶನಕ 19 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಟಿ-20 ವಿಶ್ವಕಪ್ ಇತಿಹಾಸದಲ್ಲಿ ವೇಗದ ಅರ್ಧಶತಕ ಗಳಿಸಿದ ಶ್ರೀಲಂಕಾದ ಮೊದಲ ಆಟಗಾರ ಎನಿಸಿಕೊಂಡರು. ಕಮಿಂಡು ಮೆಂಡಿಸ್(ಔಟಾಗದೆ 19, 7 ಎಸೆತ)ಶಾ ಫೈಸಲ್ ಎಸೆತದಲ್ಲಿ ಸತತ ಎರಡು ಸಿಕ್ಸರ್ ಸಿಡಿಸಿ ಇನಿಂಗ್ಸ್ಗೆ ಅಂತಿಮ ಸ್ಪರ್ಶ ನೀಡಿದರು. ಲಂಕಾವು ಕೊನೆಯ ನಾಲ್ಕು ಓವರ್ಗಳಲ್ಲಿ 65 ರನ್ ಕಲೆ ಹಾಕಿತು. ಎರಡು ಪಂದ್ಯಗಳಲ್ಲಿ ಎರಡು ಗೆಲುವು ದಾಖಲಿಸಿರುವ 2014ರ ಚಾಂಪಿಯನ್ ಶ್ರೀಲಂಕಾ ತಂಡ ಇದೀಗ ‘ಬಿ’ ಗುಂಪಿನಲ್ಲಿ ಅಗ್ರ ಸ್ಥಾನದಲ್ಲಿದೆ.
ಪಾಕಿಸ್ತಾನ ಸೂಪರ್ ಲೀಗ್: ದುಬಾರಿ ಆಟಗಾರನಾಗಿ ಹೊರಹೊಮ್ಮಿದ ಸ್ಟೀವನ್ ಸ್ಮಿತ್
ಹೊಸದಿಲ್ಲಿ, ಫೆ.12: ಆಸ್ಟ್ರೇಲಿಯದ ಹಿರಿಯ ಬ್ಯಾಟರ್ ಸ್ಟೀವನ್ ಸ್ಮಿತ್ 11ನೇ ಆವೃತ್ತಿಯ ಪಂದ್ಯಾವಳಿಗಿಂತ ಮೊದಲು 14 ಕೋಟಿ ಪಾಕಿಸ್ತಾನ ರೂಪಾಯಿ ಮೊತ್ತದ ಒಪ್ಪಂದಕ್ಕೆ ಸಹಿ ಹಾಕುವ ಮೂಲಕ ಪಾಕಿಸ್ತಾನ ಸೂಪರ್ ಲೀಗ್ ಇತಿಹಾಸದಲ್ಲಿ ಅತ್ಯಂತ ದುಬಾರಿ ಆಟಗಾರನಾಗಿ ಹೊರಹೊಮ್ಮಿದ್ದಾರೆ. ಆಸ್ಟ್ರೇಲಿಯದ ಟಿ-20 ವಿಶ್ವಕಪ್ ತಂಡದಲ್ಲಿ ಗಾಯಾಳು ಮಿಚೆಲ್ ಮಾರ್ಷ್ ಬದಲಿಗೆ ಆಡಲು ಸಜ್ಜಾಗಿರುವ ಸ್ಮಿತ್ ಅವರನ್ನು ಹೊಸ ಫ್ರಾಂಚೈಸಿ ಸಿಯಾಲ್ಕೋಟ್ ಸ್ಟಾಲಿಯನ್ಸ್ ಸುಮಾರು 500,000 ಯು.ಎಸ್. ಡಾಲರ್ ನೀಡಿ ಖರೀದಿಸಿದೆ. ಪಿಎಸ್ಎಲ್ ಅನ್ನು ಆರರಿಂದ ಎಂಟು ತಂಡಗಳಿಗೆ ವಿಸ್ತರಿಸಲಾಗಿದ್ದು, ಪಾಕಿಸ್ತಾನ ಕ್ರಿಕೆಟ್ ಮಂಡಳಿ ಇದೇ ಮೊದಲ ಬಾರಿ ಆಟಗಾರರ ಹರಾಜನ್ನು ಪರಿಚಯಿಸಿದೆ. ಕಳೆದೊಂದು ದಶಕದಿಂದ ಚಾಲ್ತಿಯಲ್ಲಿದ್ದ ಡ್ರಾಫ್ಟ್ ವ್ಯವಸ್ಥೆಯನ್ನು ಕೈಬಿಡಲಾಗಿದೆ. ಲಾಹೋರ್ನಲ್ಲಿ ಬುಧವಾರ ಹರಾಜು ಪ್ರಕ್ರಿಯೆ ನಡೆದಿದ್ದು, ಡೇವಿಡ್ ವಾರ್ನರ್, ಆ್ಯಡಮ್ ಝಂಪಾ, ಡ್ಯಾರಿಲ್ ಮಿಚೆಲ್, ಮಾರ್ಕ್ ಚಾಪ್ಮನ್, ಮುಸ್ತಫಿಝುರ್ರಹ್ಮಾನ್, ಡೆವೊನ್ ಕಾನ್ವೇ, ರಿಲ್ಲಿ ರೊಸ್ಸೌ, ತಬ್ರೈಝ್ ಶಮ್ಸಿ, ದಸುನ್ ಶನಕ, ಕುಶಾಲ್ ಮೆಂಡಿಸ್ ಹಾಗೂ ಮಾರ್ಕಸ್ ಲ್ಯಾಬುಶೇನ್ ಸಹಿತ ಹಲವು ವಿದೇಶಿ ಆಟಗಾರರು ಸಹಿ ಹಾಕಿದ್ದಾರೆ. ಎಂಟು ಫ್ರಾಂಚೈಸಿಗಳು ಒಟ್ಟು 103 ಆಟಗಾರರೊಂದಿಗೆ ಸಹಿ ಹಾಕಿದೆ. ವೇಗದ ಬೌಲರ್ ನಸೀಂ ಶಾ ಪಾಕಿಸ್ತಾನದ ಅತ್ಯಂತ ದುಬಾರಿ ಆಟಗಾರ ಎನಿಸಿಕೊಂಡರು. ಶಾ ಅವರನ್ನು ಇಸ್ಲಾಮಾಬಾದ್ ಯುನೈಟೆಡ್ ಫ್ರಾಂಚೈಸಿಯು 8.65 ಕೋಟಿ ಪಾಕಿಸ್ತಾನ ರೂ.ಗೆ ಖರೀದಿಸಿದೆ. ಪಿಎಸ್ಎಲ್ ಟೂರ್ನಿಯು ಈ ಬಾರಿ ಮಾರ್ಚ್ 26ರಿಂದ ಮೇ 3ರ ತನಕ ನಡೆಯಲಿದೆ.
Yadgiri | ದೇವದಾಸಿ ಮಹಿಳೆಯರು ಆರೋಗ್ಯದ ಬಗ್ಗೆ ಜಾಗರೂಕರಾಗಬೇಕು: ಡಾ.ಮಹೇಶ ಬಿರದಾರ
ಯಾದಗಿರಿ: ದೇವದಾಸಿ ಮಹಿಳೆಯರಿಗೆ ವಿವಿಧ ರೋಗಗಳು ತಗುಲುವ ಸಾಧ್ಯತೆ ಇರುವುದರಿಂದ ತಮ್ಮ ಆರೋಗ್ಯದ ಕಡೆ ವಿಶೇಷ ಗಮನ ಹರಿಸಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಮಹೇಶ ಬಿರದಾರ ಸಲಹೆ ನೀಡಿದರು. ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಭಾಂಗಣದಲ್ಲಿ ಫೆ.11ರಂದು ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ದೇವದಾಸಿ ಪುನರ್ವಸತಿ ಯೋಜನೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಜಿಲ್ಲಾ ಆರೋಗ್ಯ ಇಲಾಖೆ ಸಂಯುಕ್ತಾಶ್ರಯದಲ್ಲಿ ಮಾಜಿ ದೇವದಾಸಿ ಮಹಿಳೆಯರಿಗಾಗಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ಆರೋಗ್ಯ ತಪಾಸಣೆ ಮತ್ತು ಜಾಗೃತಿ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಮಾಜಿ ದೇವದಾಸಿ ಮಹಿಳೆಯರು ನಿಯಮಿತವಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು. ಸರ್ಕಾರದಿಂದ ಲಭ್ಯವಿರುವ ಆರೋಗ್ಯ ಸೌಲಭ್ಯಗಳನ್ನು ಪಡೆಯಬೇಕು. ಪೌಷ್ಟಿಕ ಆಹಾರ ಸೇವಿಸಿ ರಕ್ತಹೀನತೆ ತಪ್ಪಿಸಿಕೊಳ್ಳಬೇಕು ಎಂದು ಅವರು ತಿಳಿಸಿದರು. ದೇವದಾಸಿ ಪದ್ಧತಿ ಸಮಾಜಕ್ಕೆ ಅಂಟಿದ ಕಳಂಕವಾಗಿದ್ದು, ಇದರ ಪರಿಣಾಮವಾಗಿ ಹಲವಾರು ಆರೋಗ್ಯ ಸಮಸ್ಯೆಗಳು ಉಂಟಾಗುವ ಸಾಧ್ಯತೆ ಇದೆ ಎಂದು ಹೇಳಿದರು. ದೇವದಾಸಿ ಪುನರ್ವಸತಿ ಯೋಜನೆಯ ಯೋಜನಾ ಅಧಿಕಾರಿ ಶಿವಮಂಗಳ ಮಾತನಾಡಿ, ಮಾಜಿ ದೇವದಾಸಿ ಮಹಿಳೆಯರನ್ನು ಆರ್ಥಿಕವಾಗಿ ಸಬಲೀಕರಣಗೊಳಿಸಲು ಹಾಗೂ ಅನಿಷ್ಟ ಪದ್ಧತಿಯಿಂದ ಹೊರಬರಲು ಆರೋಗ್ಯ ಶಿಬಿರಗಳು ಸೇರಿದಂತೆ ವಿವಿಧ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಮಹಿಳೆಯರು ಈ ಕಾರ್ಯಕ್ರಮಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು. ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ. ಸಂಜೀವ್ ಕುಮಾರ ರಾಯಚೂರಕರ್ ಮಾತನಾಡಿ, ಬೇಸಿಗೆ ಕಾಲದಲ್ಲಿ ಶುದ್ಧ ನೀರು ಅಥವಾ ಕುದಿಸಿ ಆರಿಸಿದ ನೀರನ್ನು ಸೇವಿಸಬೇಕು. ಸಂಕ್ರಾಮಿಕ ರೋಗಗಳು ಹರಡದಂತೆ ಮುಂಜಾಗ್ರತೆ ವಹಿಸಬೇಕು ಎಂದರು. ತಾಲೂಕು ಆರೋಗ್ಯಾಧಿಕಾರಿ ಡಾ. ಹನಮಂತ ರೆಡ್ಡಿ ಮಾತನಾಡಿ, ಬೇಸಿಗೆಯಲ್ಲಿ ಬೆಳಗ್ಗೆ ಮತ್ತು ಸಂಜೆ ಸಮಯದಲ್ಲಿ ಕೆಲಸಗಳನ್ನು ನಿರ್ವಹಿಸಬೇಕು. ಬಿಸಿಲಿನಲ್ಲಿ ಹೊರಗೆ ಹೋಗುವ ಸಂದರ್ಭಗಳಲ್ಲಿ ಕೊಡೆ, ಟೊಪ್ಪಿ ಹಾಗೂ ನೀರಿನ ಬಾಟಲಿ ತೆಗೆದುಕೊಂಡು ಹೋಗಬೇಕು. ಮನೆಯಲ್ಲಿ ಕುದಿಸಿ ಆರಿಸಿದ ನೀರನ್ನು ಕುಡಿಯುವಂತೆ ಸಲಹೆ ನೀಡಿದರು. ಈ ಸಂದರ್ಭದಲ್ಲಿ ಶಿಶು ಅಭಿವೃದ್ಧಿ ಯೊಜನಾಧಿಕಾರಿಗಳಾದ ದಿಪೀಕಾ ಬಿ.ವಿ., ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿಗಳಾದ ಡಾ.ಮಲ್ಲಪ್ಪ, ಜಿಲ್ಲಾ ಸರ್ವೇಕ್ಷಣಾಧಿಕಾರಿಗಳಾದ ಡಾ.ಎಮ್.ಎಸ್.ಪಾಟೀಲ್, ಜಿಲ್ಲಾ ಮಲೇರಿಯಾ ನಿಯಂತ್ರಣಾಧಿಕಾರಿಗಳಾದ ಡಾ.ಎಮ್.ಎ.ಸಾಜಿದ್, ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿಗಳಾದ ಡಾ.ಜ್ಯೋತಿ ಕಟ್ಟಿಮನಿ, ಜಿಲ್ಲಾ ಎನ್.ಸಿ.ಡಿ ಕಾರ್ಯಕ್ರಮ ಅಧಿಕಾರಿಗಳಾದ ಡಾ.ಪದ್ಮಾನಂದ ಗಾಯಕ್ವಾಡ್, ಸುರಪುರ ತಾಲೂಕು ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶ್ರೀಬಸವರಾಜ ಸಜ್ಜನ್, ಉಪ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿಗಳಾದ ಜಗನ್ನಾಥ, ಡಾ.ವಿನುತಾ, ಡಾ.ಕ್ಷಿತೀಜ, ಆರೋಗ್ಯ ಇಲಾಖೆ ಅಧಿಕಾರಿ, ಸಿಬ್ಬಂದಿಗಳು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ದಿ ಇಲಾಖೆ ಅಧಿಕಾರಿ,ಸಿಬ್ಬಂದಿ ವರ್ಗದವರು, ಮಾಜಿ ದೇವದಾಸಿಯರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿಗಳಾದ ಶ್ರೀಮತಿಲಕ್ಷ್ಮೀ ಮುಂಡಾಸ ನಿರೂಪಿಸಿದರು, ವಂದನಾರ್ಪಣೆ ಮಾಳಪ್ಪ ಯಾದವ್ ನೆರವೇರಿಸಿದರು.
ಏಶ್ಯನ್ ಚಾಂಪಿಯನ್ಶಿಪ್| ಚಿನ್ನ ಗೆದ್ದ ಪ್ರತಾಪ್ ಸಿಂಗ್ ಥೋಮರ್
ಹೊಸದಿಲ್ಲಿ, ಫೆ.12: ಏಶ್ಯನ್ ಚಾಂಪಿಯನ್ಶಿಪ್ನ ಪುರುಷರ 50 ಮೀ. ರೈಫಲ್ 3 ಪೊಸಿಶನ್ಸ್ ಸ್ಪರ್ಧೆಯಲ್ಲಿ ಭಾರತವು ಕ್ಲೀನ್ಸ್ವೀಪ್ ಸಾಧಿಸಿದ್ದು, ಸಹ ಸ್ಪರ್ಧಿ ನೀರಜ್ ಕುಮಾರ್ರನ್ನು ಸೋಲಿಸಿದ ಐಶ್ವರಿ ಪ್ರತಾಪ್ ಸಿಂಗ್ ತೋಮರ್ ಚಿನ್ನದ ಪದಕ ಜಯಿಸಿದ್ದಾರೆ. ಕಂಚಿನ ಪದಕದೊಂದಿಗೆ ಅಖಿಲ್ ಶೆರೊನ್(343.2)ನಿರ್ಗಮಿಸಿದ ನಂತರ ಇಬ್ಬರು ಭಾರತೀಯರು ಫೈನಲ್ನಲ್ಲಿ ಆಡಲು ಸಜ್ಜುಗೊಂಡಾಗ ಕುಮಾರ್ ಅವರು ಎದುರಾಳಿ ತೋಮರ್ ವಿರುದ್ಧ 0.2ರಿಂದ ಮುನ್ನಡೆಯಲ್ಲಿದ್ದರು. ಅರ್ಹತಾ ಸುತ್ತಿನಲ್ಲಿ ಅಗ್ರ ಸ್ಥಾನ ಪಡೆದಿದ್ದ ಕುಮಾರ್ 10.3 ಅಂಕ ಗಳಿಸಿದರೆ, ಥೋಮರ್ 10.7 ಅಂಕ ಗಳಿಸಿ ಕಳೆದ ವರ್ಷ ಕಝಕ್ಸ್ತಾನದಲ್ಲಿ ಗೆದ್ದಿರುವ ತನ್ನ ಚಿನ್ನದ ಪದಕವನ್ನು ಉಳಿಸಿಕೊಂಡರು. ತೋಮರ್ ವಿಶ್ವ ದಾಖಲೆಯೊಂದಿಗೆ(362)ಚಿನ್ನದ ಪದಕ ಜಯಿಸಿದರೆ, ಕುಮಾರ್ 361.8 ಅಂಕ ಗಳಿಸಿ ಬೆಳ್ಳಿ ಪದಕ ತನ್ನದಾಗಿಸಿಕೊಂಡರು. ಭಾರತದ ಮೂವರು ಶೂಟರ್ಗಳು ಅರ್ಹತಾ ಸುತ್ತಿನಲ್ಲಿ ಒಟ್ಟು 1,769 ಅಂಕ ಗಳಿಸಿ ಟೀಮ್ ವಿಭಾಗದಲ್ಲಿ ಚಿನ್ನದ ಪದಕ ಗೆದ್ದುಕೊಂಡರು. ಜಪಾನ್(1,754)ಹಾಗೂ ಕಝಕ್ಸ್ತಾನ(1,748) ಕ್ರಮವಾಗಿ ಬೆಳ್ಳಿ ಹಾಗೂ ಕಂಚಿನ ಪದಕ ಜಯಿಸಿದ್ದಾರೆ. ಅರ್ಹತಾ ಸುತ್ತಿನಲ್ಲಿ ರುದ್ರಾಂಕ್ಷ್ ಪಾಟೀಲ್(591) ಹಾಗೂ ನಿಖಿಲ್ ತನ್ವರ್(587)ಕ್ರಮವಾಗಿ ಎರಡನೇ ಹಾಗೂ ಆರನೇ ಸ್ಥಾನ ಪಡೆದಿದ್ದಾರೆ. ರ್ಯಾಂಕಿಂಗ್ ಪಾಯಿಂಟ್ಸ್ನಲ್ಲಿ ಮಾತ್ರ ಸ್ಪರ್ಧಿಸುತ್ತಿರುವ ಕಾರಣ ಈ ಇಬ್ಬರು ಎಂಟು ಸ್ಪರ್ಧಿಗಳಿದ್ದ ಫೈನಲ್ನಲ್ಲಿ ಸೆಣಸಾಡಿಲ್ಲ. ಜೂನಿಯರ್ ಪುರುಷರ ಸ್ಪರ್ಧೆಯಲ್ಲಿ ವಿಶ್ವ ದಾಖಲೆಯ ಅಂಕದೊಂದಿಗೆ(353.2)ಎ. ಕಮಾರ್ಕರ್ ಚಿನ್ನದ ಪದಕ ಗೆದ್ದುಕೊಂಡರು. ಮನ್ವೇಂದರ್ ಸಿಂಗ್ ಶೆಖಾವತ್(338.6)ಕಂಚಿನ ಪದಕ ಗೆದ್ದುಕೊಂಡರೆ, ಡಿಮಿಟ್ರಿ ಕಿಮ್(348.5)ಎರಡನೇ ಸ್ಥಾನ ಪಡೆದಿದ್ದು, ಬೆಳ್ಳಿ ಪದಕ ಸ್ವೀಕರಿಸಿದರು.
ರೈಲ್ವೆ ಕಾಮಗಾರಿ: ಬೆಂಗಳೂರು ಹುಬ್ಬಳ್ಳಿ ಶಿವಮೊಗ್ಗ ಮಾರ್ಗದ ಜನಶತಾಬ್ದಿ ರದ್ದು! ವಂದೇ ಭಾರತ್ ಸೇರಿ 10 ರೈಲು ವ್ಯತ್ಯಯ
ರೈಲ್ವೆ ಕಾಮಗಾರಿ ನಡೆಯುತ್ತಿದ್ದು, ಬೆಂಗಳೂರು ಶಿವಮೊಗ್ಗ ಹುಬ್ಬಳ್ಳಿ ಮಾರ್ಗದ ಜನಶತಾಬ್ದಿ, ವಂದೇ ಭಾರತ್ ಸೇರಿ 10 ರೈಲು ಸಂಚಾರ ವ್ಯತ್ಯಯ ಉಂಟಾಗಲಿದೆ. ಫೆಬ್ರವರಿ ಕೊನೆಯ ವಾರ ಹಾಗೂ ಮಾರ್ಚ್ ಮೊದಲ ವಾರದಲ್ಲಿ ಈ ಬದಲಾವಣೆಯಾಗಲಿದೆ. ಈ ಬಗ್ಗೆ ರೈಲ್ವೆ ಇಲಾಖೆ ಮಾಹಿತಿ ನೀಡಿದೆ.
Yadgiri | ಭ್ರೂಣಲಿಂಗ ಪತ್ತೆ ತಂತ್ರ ವಿಧಾನಗಳ ನಿಷೇಧ ಕಾಯ್ದೆಯ ತರಬೇತಿ ಕಾರ್ಯಾಗಾರ
ಭ್ರೂಣಲಿಂಗ ಪತ್ತೆ ಕಾನೂನು ಮಾನವೀಯತೆ ಕಾಪಾಡಲು ಅಗತ್ಯ: ನ್ಯಾ.ಮರಿಯಪ್ಪ
ಬೆಂಗಳೂರು ನಗರದಲ್ಲಿ ಕಾರ್ಮಿಕ ಸಂಘಟನೆಗಳ ಮುಷ್ಕರಕ್ಕೆ ನೀರಸ ಪ್ರತಿಕ್ರಿಯೆ
ಬೆಂಗಳೂರು : ಕೇಂದ್ರ ಸರಕಾರದ ನಾಲ್ಕು ಕಾರ್ಮಿಕ ಕಾನೂನುಗಳನ್ನು ರದ್ದುಗೊಳಿಸುವಂತೆ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ, ‘ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ಹಾಗೂ ಸಂಯುಕ್ತ ಹೋರಾಟ-ಕರ್ನಾಟಕ’ದ ವತಿಯಿಂದ ಕರೆ ನೀಡಲಾಗಿದ್ದ ದೇಶ ವ್ಯಾಪಿ ಸಾರ್ವತ್ರಿಕ ಮುಷ್ಕರಕ್ಕೆ ರಾಜಧಾನಿ ಬೆಂಗಳೂರು ನಗರದಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು. ಕಾರ್ಮಿಕ ಸಂಘಟನೆಗಳು ಸೇರಿದಂತೆ 11ಕ್ಕೂ ಅಧಿಕ ಸಂಘಟನೆಗಳು ಮುಷ್ಕರಕ್ಕೆ ಬೆಂಬಲ ಸೂಚಿಸಿದ್ದರೂ ಬೆಂಗಳೂರಿನಲ್ಲಿ ಮುಷ್ಕರದ ಬಿಸಿ ಜನಸಾಮಾನ್ಯರಿಗೆ ಅಷ್ಟಾಗಿ ತಟ್ಟಲಿಲ್ಲ. ಕೆಎಸ್ಸಾರ್ಟಿಸಿ, ಬಿಎಂಟಿಸಿ ಸೇರಿದಂತೆ ಸಾರ್ವಜನಿಕ ಸಾರಿಗೆ ಸಂಚಾರ, ಅಂಗಡಿ ಮುಂಗಟ್ಟುಗಳು, ಶಾಲಾ-ಕಾಲೇಜು ಹಾಗೂ ಸರಕಾರಿ ಕಚೇರಿಗಳು ಎಂದಿನಂತೆ ಕಾರ್ಯ ನಿರ್ವಹಿಸಿದವು. ನಗರದ ಪುರಭವನ ವೃತ್ತದಲ್ಲಿ ಜಮಾಯಿಸಿದ್ದ ಸಾವಿರಾರು ಮಂದಿ ಕಾರ್ಮಿಕರು ಹಾಗೂ ಕಾರ್ಮಿಕ ಮುಖಂಡರು, ಕೇಂದ್ರ ಹಾಗೂ ರಾಜ್ಯ ಸರಕಾರದ ಕಾರ್ಮಿಕ ವಿರೋಧಿ ನೀತಿ ಖಂಡಿಸಿ, ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಮಾತನಾಡಿದ ಸಿಪಿಎಂ ಕಾರ್ಯದರ್ಶಿ ಕೆ.ಪ್ರಕಾಶ್, ‘ಕೇವಲ ಫ್ರೀಡಂ ಪಾರ್ಕ್ನಲ್ಲಿ ಮಾತ್ರ ಪ್ರತಿಭಟನೆ ಮಾಡಬೇಕು ಎನ್ನುವುದು ನಿರಂಕುಶ ಪ್ರಭುತ್ವದ ವಿಧಾನ. ಪ್ರಜಾಪ್ರಭುತ್ವದಲ್ಲಿ ಎಲ್ಲಿ ಬೇಕಾದರೂ ಶಾಂತಿಯುತ, ಕಾನೂನುಬದ್ಧ ಹೋರಾಟ ಮಾಡಲು ಅವಕಾಶ ಇರಬೇಕು. ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರಕಾರಕ್ಕೆ ಅನೇಕ ಬಾರಿ ಮನವಿ ಸಲ್ಲಿಸಿದ್ದೇವೆ. ಹಿಂದೆ ಬಿಜೆಪಿ ಇದೇ ರೀತಿಯಾಗಿ ವರ್ತಿಸಿರುವ ಕಾರಣಕ್ಕೆ ಬಿಜೆಪಿಗೆ ಜನರು ಸರಿಯಾದ ಪಾಠ ಕಲಿಸಿದ್ದಾರೆ ಎಂದು ಎಚ್ಚರಿಸಿದರು. ವಕೀಲ ವಿನಯ್ ಶ್ರೀನಿವಾಸ್ ಮಾತನಾಡಿ, ‘ಪ್ರತಿಭಟನೆ ಮಾಡುವುದು ನಮ್ಮ ಮೂಲಭೂತ ಹಕ್ಕು. ಪೊಲೀಸರು ಅಮಾನವೀಯವಾಗಿ ಮಹಿಳೆಯರನ್ನು ನೋಡದೇ ಎಳೆದು ಬಸ್ನಲ್ಲಿ ತುಂಬಿದ್ದಾರೆ. ಕರ್ನಾಟಕದಲ್ಲಿ ಎಲ್ಲ ಕಡೆಯೂ ಹಿಂದೂ ಸಮಾಜೋತ್ಸವ ಮಾಡಲು ಅನುಮತಿ ನೀಡಿದ ಪೊಲೀಸರು ಕಾರ್ಮಿಕರು ನ್ಯಾಯ ಕೇಳಲು ಪುರಭವನಕ್ಕೆ ಬಂದರೆ ಯಾಕೆ ಬಿಡುವುದಿಲ್ಲ. ಕಾಂಗ್ರೆಸ್ ಸರಕಾರ ಬಿಜೆಪಿ ಜೊತೆಗೆ ಶಾಮೀಲಾಗಿ ಕಾರ್ಮಿಕ ವಿರೋಧಿ ನೀತಿಯನ್ನು ತರುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನೆಯಲ್ಲಿ ರೈತ ಮುಖಂಡ ಬಡಗಲಪುರ ನಾಗೇಂದ್ರ, ಜನಶಕ್ತಿಯ ನೂರ್ ಶ್ರೀಧರ್, ಯಶವಂತ, ಕಾರ್ಮಿಕ ಮುಖಂಡರಾದ ವಿಜಯ್ ಭಾಸ್ಕರ್, ಕ್ಲಿಪ್ಟನ್ ರೊಝಾರಿಯೋ, ಅಪ್ಪಣ್ಣ, ಅಮ್ಜದ್ ಮತ್ತಿತರರು ಭಾಗವಹಿಸಿದ್ದರು. ಪ್ರಮುಖ ಆಗ್ರಹಗಳು : ಕೇಂದ್ರ ಸರಕಾರ ಜಾರಿಗೆ ತಂದಿರುವ 4 ಕಾರ್ಮಿಕ ಸಂಹಿತೆಗಳನ್ನು ರದ್ದುಗೊಳಿಸುವುದು. ಮಹಾತ್ಮ ಗಾಂಧಿ ನರೇಗಾ ಯೋಜನೆಯನ್ನು ಪುನರ್ ಸ್ಥಾಪಿಸಿ, ವಿಬಿ ಜಿ ರಾಮ್ಜಿ ಕಾಯ್ದೆಯನ್ನು ರದ್ದುಗೊಳಿಸಬೇಕು. ಭೂ ಸ್ವಾಧೀನ ಕಾಯ್ದೆ ಹಾಗೂ ಭೂಸುಧಾರಣಾ, ಎಪಿಎಂಸಿ, ಜಾನುವಾರು ಸಂರಕ್ಷಣಾ ತಿದ್ದುಪಡಿ ಕಾಯ್ದೆಯನ್ನು ಹಿಂಪಡೆಯಬೇಕು. ವಿದ್ಯುಚ್ಚಕ್ತಿಯ ಖಾಸಗೀಕರಣವನ್ನು ಕೈಬಿಟ್ಟು, ಬೀಜ ಮಸೂದೆಯನ್ನು ಕೂಡ ಹಿಂಪಡೆಯಬೇಕು. 2025ರ ಆಗಸ್ಟ್ ನಲ್ಲಿ ಕನಿಷ್ಠ ವೇತನ ಸಲಹಾ ಮಂಡಳಿ ನೀಡಿರುವ ಶಿಫಾರಸ್ಸನ್ನು ಅಂತಿಮ ಅಧಿಸೂಚನೆಯನ್ನಾಗಿ ಹೊರಡಿಸಬೇಕು. ಕರ್ನಾಟಕ ಸರಕಾರ ಕಾರ್ಮಿಕ ಸಂಹಿತೆಗಳಿಗೆ ತಂದಿರುವ ಗೆಜೆಟ್ ನೋಟಿಫಿಕೇಷನ್ ಹಿಂಪಡೆಯಬೇಕು ಎಂದು ಪ್ರತಿಭಟನಾನಿರತರು ಆಗ್ರಹಿಸಿದ್ದಾರೆ. ಪ್ರತಿಭಟನಾನಿರತರು ವಶಕ್ಕೆ, ಬಿಡುಗಡೆ: ನಗರದ ಪುರಭವನದ ಬಳಿ ಪ್ರತಿಭಟನೆ ಮಾಡುತ್ತಿದ್ದ ಸಾವಿರಾರು ಸಂಖ್ಯೆಯ ಪ್ರತಿಭಟನಾಕಾರರು ಮತ್ತು ಕಾರ್ಮಿಕ ನಾಯಕರನ್ನು ಪೊಲೀಸರು ವಶಕ್ಕೆ ಪಡೆದು, ಆಡುಗೋಡಿಯಲ್ಲಿರುವ ಕೇಂದ್ರ ಸಶಸ್ತ್ರ ಮೀಸಲು ಪಡೆ ಮೈದಾನಕ್ಕೆ ಕರೆದುಕೊಂಡು ಹೋಗಿ, ಕೆಲ ಸಮಯದ ನಂತರ ಮತ್ತೆ ಫ್ರೀಡಂ ಪಾರ್ಕ್ಗೆ ಕರೆ ತಂದಿರುವುದಾಗಿ ಜೆಸಿಟಿಯು ಸಂಚಾಲಕ ಕೆ.ವಿ.ಭಟ್ ತಿಳಿಸಿದ್ದಾರೆ. ನಗರದ ಹೊರವಲಯದಲ್ಲಿ ಬಂದ್ ಯಶಸ್ವಿ: ಕಾರ್ಖಾನೆಗಳಲ್ಲಿ ಕೆಲಸ ಮಾಡುವ ಸಾವಿರಾರು ಕಾರ್ಮಿಕರು ಕೆಲಸದಿಂದ ಹೊರಬಂದು ಬಂದ್ಗೆ ಬೆಂಬಲ ವ್ಯಕ್ತಪಡಿಸಿದ್ದು, ಬೆಂಗಳೂರು ನಗರದ ಹೊರವಲಯದಲ್ಲಿನ ಜಿಗಣಿ, ಬೊಮ್ಮಸಂದ್ರ, ಹೊಸಕೋಟೆ, ದೊಡ್ಡಬಳ್ಳಾಪುರ, ವೈಟ್ಫೀಲ್ಡ್, ನೆಲಮಂಗಲ, ದಾಬಸ್ಪೇಟೆ ಸೇರಿ ಎಲ್ಲಾ ಕೈಗಾರಿಕಾ ಪ್ರದೇಶಗಳಲ್ಲಿ ಸಾವಿರಾರು ಕಾರ್ಮಿಕರು ಜಮಾಯಿಸಿ ಮೆರವಣಿಗೆ ನಡೆಸುವ ಮೂಲಕ ಬಂದ್ ಯಶಸ್ವಿಗೊಳಿಸಿದರು ಎಂದು ಜೆಸಿಟಿಯು ಸಂಚಾಲಕ ಕೆ.ವಿ.ಭಟ್ ತಿಳಿಸಿದ್ದಾರೆ.
ಅಕ್ಷರ ದಾಸೋಹ ನೌಕರರ ಹಕ್ಕುಗಳನ್ನು ರಕ್ಷಿಸಿರಿ : ವಸಂತ ಆಚಾರಿ
ಮಂಗಳೂರು, ಫೆ.12: ಅಕ್ಷರದಾಸೋಹ ನೌಕರರ ಸಂವಿಧಾನಬದ್ದ ಹಕ್ಕುಗಳನ್ನು ರಕ್ಷಿಸ ಬೇಕೆಂದು ಸಿಐಟಿಯು ದ.ಕ.ಜಿಲ್ಲಾ ಉಪಾಧ್ಯಕ್ಷ ವಸಂತ ಆಚಾರಿಯವರು ಹೇಳಿದ್ದಾರೆ. ಮಂಗಳೂರು ಮಿನಿ ವಿಧಾನ ಸೌಧದ ಮುಂದುಗಡೆ ಗುರುವಾರ ನಡೆದ ಅಕ್ಷರ ದಾಸೋಹ ನೌಕರರ ಪ್ರತಿಭಟನಾ ಪ್ರದರ್ಶನವನ್ನು ಉದ್ದೇಶಿಸಿ ಮಾತನಾಡಿದರು. ಇಂದು ರಾಜ್ಯದಾದ್ಯಂತ ಅಕ್ಷರ ದಾಸೋಹ ನೌಕರರು ಮುಷ್ಕರದಲ್ಲಿ ಭಾಗವಹಿಸಿ ಕೇಂದ್ರ ಸರಕಾರದ 4ಕಾರ್ಮಿಕ ಸಂಹಿತೆಯನ್ನುವಾಪಾಸು ಪಡೆಯಬೇಕೆಂದು ಧ್ವನಿಗೂಡಿಸಿದ್ದಾರೆ. ಕೇಂದ್ರ ಸರಕಾರ ಕಳೆದ 13 ವರುಷಗಳಿಂದ ಬಿಸಿಯೂಟ ಯೋಜನೆಗೆ ಅನುದಾನವನ್ನೆ ಏರಿಸಲಿಲ್ಲ.ಬದಲಿಗೆ ಅನುದಾನವನ್ನು ಕಡಿತ ಮಾಡಿದೆ.ಈ ಬಾರಿಯ ಬಜೆಟ್ನಲ್ಲಿ ಕೂಡಾ ನಗಣ್ಯ ಮಾಡಲಾಗಿದೆ ಎಂದರು. ಬಿಸಿಯೂಟ ಕಾರ್ಮಿಕರಿಗೆ ಕನಿಷ್ಠ ಕೂಲಿನಿಗದಿ ಪಡಿಸಬೇಕು, ಕೆಲಸದ ಭದ್ರತೆ ನೀಡ ಬೇಕು,ಪಿಂಚಣಿ ತಿಂಗಳಿಗೆ ರೂ.10,000 ನೀಡಬೇಕು ಎಂದ ಅವರು ಯಾವುದೆ ಕಾರಣಕ್ಕೂ ಶಾಲೆಗಳಿಗೆ ಇಸ್ಕಾನ್ ಸಂಸ್ಥೆ ಆಹಾರ ಪೂರೈ ಸಲು ಅವಕಾಶ ನೀಡಬಾರದು .ರಾಜ್ಯ ಸರಕಾರ ಬಜೆಟ್ಲ್ಲಿ ಬಿಸಿಯೂಟ ಕಾರ್ಮಿಕರ ವೇತನ ವನ್ನು ಏರಿಸ ಬೇಕೆಂದು ಒತ್ತಾಯಿಸಿದರು. ಪ್ರಾಸ್ತವಿಕವಾಗಿ ಸಂಘದ ಜಿಲ್ಲಾಧ್ಯಕ್ಷ ಭವ್ಯ ಮಾತನಾಡಿ ಸಾರ್ವತ್ರಿಕ ಮುಷ್ಕರವನ್ನು ಬೆಂಬಲಿಸಿ ಮುಷ್ಕರ ಮಾಡಿದ ಎಲ್ಲಾ ಕಾರ್ಮಿಕರನ್ನು ಅಭಿನಂದಿ ಸಿದರು. ಪ್ರತಿಭಟನಾ ಪ್ರದರ್ಶನದ ನೇತ್ರತ್ವವನ್ನು ಮುಂದಾಳುಗಳಾದ ಉಮಾವತಿ, ಶಭಾನಾಬಾನು, ರೇಖಾಲತಾ, ಆಸ್ಮಾ, ಶಾಲಿನಿ ಮುಂತಾದವರು ವಹಿಸಿದ್ದರು.
Bidar | ಸಾಮಾಜಿಕ ಜಾಲತಾಣದಲ್ಲಿ ಧಾರ್ಮಿಕ ಭಾವನೆಗೆ ಧಕ್ಕೆ ತರುವವರ ವಿರುದ್ಧ ಕ್ರಮ : ಎಸ್ಪಿ ಪ್ರದೀಪ್ ಗುಂಟಿ
ಬೀದರ್: ಸಾಮಾಜಿಕ ಜಾಲತಾಣಗಳಲ್ಲಿ ಜಾತಿ ಹಾಗೂ ಧರ್ಮದ ಹೆಸರಿನಲ್ಲಿ ಸಾರ್ವಜನಿಕರ ಭಾವನೆಗಳಿಗೆ ಧಕ್ಕೆ ತರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ಪ್ರದೀಪ್ ಗುಂಟಿ ಅವರು ಪ್ರಕಟಣೆ ಮೂಲಕ ಎಚ್ಚರಿಸಿದ್ದಾರೆ. ಯಾವುದೇ ಜಾತಿ, ಧರ್ಮದ ಭಾವನೆಗಳಿಗೆ ಧಕ್ಕೆ ತರುವ ಅಥವಾ ಅಪಮಾನವಾಗುವ ರೀತಿಯ ಹೇಳಿಕೆಗಳಿಂದ ದೂರವಿರಬೇಕು. ಇಂತಹ ಹೇಳಿಕೆಗಳು ಅಥವಾ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವುದೂ ಅಪರಾಧವಾಗಿದೆ. ಈ ರೀತಿಯ ವಿಷಯಗಳು ಕಂಡು ಬಂದಲ್ಲಿ ತಕ್ಷಣವೇ ಪೊಲೀಸರ ಗಮನಕ್ಕೆ ತರಬೇಕೆಂದು ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ. ಕೆಲವರು ಉದ್ದೇಶಪೂರ್ವಕವಾಗಿ ಧಾರ್ಮಿಕ ಜಗಳ, ತಕರಾರು ಉಂಟುಮಾಡುವ ರೀತಿಯಲ್ಲಿ ಹೇಳಿಕೆಗಳು ಮತ್ತು ವಿಡಿಯೋಗಳನ್ನು ಹರಿಬಿಡುತ್ತಿದ್ದಾರೆ. ಇಂತಹ ಪೋಸ್ಟ್ಗಳನ್ನು ತಮ್ಮ ಜಾಲತಾಣದ ಮೂಲಕ ಹಂಚಿಕೊಂಡರೂ ಕಾನೂನು ಸಮಸ್ಯೆ ಎದುರಿಸಬೇಕಾಗುತ್ತದೆ ಎಂದು ಅವರು ತಿಳಿಸಿದ್ದಾರೆ. ಬೀದರ್ ಜಿಲ್ಲೆಯ ವ್ಯಾಪ್ತಿಯಲ್ಲಿ ಇಂತಹ ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗಿದವರ ವಿರುದ್ಧ ಪ್ರಕರಣ ದಾಖಲಿಸಿ, ಕಮ್ಯೂನಲ್ ರೌಡಿ ಶೀಟ್ ತೆರೆಯಲಾಗುವುದು ಹಾಗೂ ಅಗತ್ಯವಿದ್ದರೆ ಗಡಿಪಾರು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ. ಅಟ್ಟರ್ಗಾ ಗ್ರಾಮದ ವ್ಯಕ್ತಿಯೊಬ್ಬರು ಮತ್ತೊಬ್ಬರೊಂದಿಗೆ ಸೇರಿ ಮರಾಠಿ ಹಾಗೂ ಹಿಂದಿ ಭಾಷೆಯಲ್ಲಿ ವಿಡಿಯೋ ಮೂಲಕ ಶ್ರೀರಾಮ ಮತ್ತು ಶ್ರೀಕೃಷ್ಣರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿ, ಅವಾಚ್ಯ ಶಬ್ದಗಳಿಂದ ನಿಂದಿಸಿರುವುದು ಹಾಗೂ ಮಹಾತ್ಮ ಗಾಂಧಿಜಿಯವರ ಬಗ್ಗೆ ಅವಮಾನಕಾರಿ ಹೇಳಿಕೆ ನೀಡಿರುವುದಾಗಿ ಆರೋಪಿಸಲಾಗಿದೆ. ಸಂಬಂಧಿತ ವಿಡಿಯೋವನ್ನು ಫೇಸ್ಬುಕ್ನಲ್ಲಿ ಹಂಚಲಾಗಿದ್ದು, ಈ ಕುರಿತು ಮೆಹಕರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರೆದಿದೆ ಎಂದು ಎಸ್ಪಿ ಮಾಹಿತಿ ನೀಡಿದ್ದಾರೆ.
ಶಿಕ್ಷಣ ಸಂಸ್ಥೆಗಳು ರಾಷ್ಟ್ರೀಯ ಅಭಿವೃದ್ಧಿಯ ಆಧಾರಸ್ತಂಭ: ಸ್ಪೀಕರ್ ಯುಟಿ ಖಾದರ್
ಮಂಗಳೂರು: ಶಿಕ್ಷಣ ಸಂಸ್ಥೆಗಳು ರಾಷ್ಟ್ರೀಯ ಅಭಿವೃದ್ಧಿಯ ಆಧಾರಸ್ತಂಭಗಳಾಗಿವೆ ಎಂದು ಕರ್ನಾಟಕ ವಿಧಾನ ಸಭೆಯ ಸ್ಪೀಕರ್ ಯು.ಟಿ.ಖಾದರ್ ಹೇಳಿದ್ದಾರೆ. ನಗರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾಗಿರುವ ವಾಮಂಜೂರಿನ ಸೈಂಟ್ ಜೋಸೆಫ್ ಇಂಜಿನಿಯರಿಂಗ್ ಕಾಲೇಜು (ಎಸ್ಜೆಇಸಿ) ಸ್ಥಾಪನೆಯ ರಜತ ವರ್ಷಾಚರಣೆಯ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ಶಿಕ್ಷಣವು ಕುಟುಂಬಗಳನ್ನು ಮಾತ್ರವಲ್ಲದೆ ಇಡೀ ರಾಷ್ಟ್ರವನ್ನು ಉನ್ನತೀಕರಿಸುತ್ತದೆ . ಇಂಜಿನಿಯರ್ಗಳು ದೇಶದ ನಿರ್ಮಾಣದ ಶಿಲ್ಪಿಗಳು.ದೇಶವನ್ನು ರೂಪಿಸುವಲ್ಲಿ ಇಂಜಿನಿಯರ್ಗಳ ಪಾತ್ರ ದೊಡ್ಡದು ಎಂದರು. ಐಕ್ಯೂ ಜೊತೆಗೆ ರಾಷ್ಟ್ರ ನಿರ್ಮಾಣದಲ್ಲಿ ಭಾವನಾತ್ಮಕತೆ ಮತ್ತು ಕೃತಕ ಬುದ್ಧಿಮತ್ತೆ ಅಗತ್ಯವೆಂದು ಹೇಳಿದರು. ಮಾಜಿ ಸಚಿವ ಬಿ. ರಮಾನಾಥ ರೈ ಅವರು ‘ಕಾಫಿ ಟೇಬಲ್ ಬುಕ್’ ನೆನಪಿನ ಸಂಚಿಕೆಯ ಮುಖಪುಟವನ್ನು ಬಿಡುಗಡೆಗೊಳಿಸಿದರು. ಮಾಜಿ ಶಾಸಕ ಜೆ.ಆರ್.ಲೋಬೊ ಅವರು ಸಿಬ್ಬಂದಿಯ ವರ್ಷದ ಯೋಜನೆಗಳ ಪಟ್ಟಿಯನ್ನು ಲೋಕಾರ್ಪಣೆಗೊಳಿಸಿದರು. ಮಂಗಳೂರು ನಗರ ಉತ್ತರ ಕ್ಷೇತ್ರದ ಶಾಸಕ ಡಾ. ಭರತ್ ಶೆಟ್ಟಿ ವೈ ಅವರು ಬೆಳ್ಳಿ ಹಬ್ಬದ ನೆನಪಿಗಾಗಿ ವಿದ್ಯಾರ್ಥಿ ವೇತನಗಳನ್ನು ಘೋಷಿಸಿ, ಸಂಸ್ಥೆಯ ಸಾಮಾಜಿಕ ಜವಾಬ್ದಾರಿಯನ್ನು ಶ್ಲಾಘಿಸಿದರು. ಉಡುಪಿ ಧರ್ಮಪ್ರಾಂತ್ಯದ ಬಿಷಪ್ ವಂ.ಡಾ. ಜೆರಾಲ್ಡ್ ಐಸಾಕ್ ನವಮೂಲ ಸೌಕರ್ಯ ಯೋಜನೆಗಳ ವೀಡಿಯೊ ಅನಾವರಣಗೊಳಿಸಿದರು. ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಹಾಗೂ ಎಸ್ಜೆಇಸಿ ಅಧ್ಯಕ್ಷ ಅತಿ ವಂ. ಡಾ. ಪೀಟರ್ ಪಾಲ್ ಸಲ್ದಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಸಂಸ್ಥೆಯ ಬೆಳವಣಿಗೆಗೆ ಶ್ರಮಿಸಿದ ಪ್ರತಿಯೊಬ್ಬರ ತ್ಯಾಗವನ್ನು ಸ್ಮರಿಸಿದರು. ಕಾಲೇಜಿನ ನಿರ್ದೇಶಕ ವಂ. ಫಾ. ವಿಲ್ಫ್ರೇಡ್ ಡಿ ಸೋಜ ಸ್ವಾಗತಿಸಿದರು. ಪ್ರಾಂಶುಪಾಲ ಡಾ. ರಿಯೊ ಡಿ ಸೋಜ ಸಂಸ್ಥೆಯ ಪಯಣದ ಬಗ್ಗೆ ವರದಿ ಮಂಡಿಸಿದರು. ಸಬೀನಾ ರಚನಾ ಕ್ರಾಸ್ಟಾ ವಂದಿಸಿದರು. ಸ್ಮಿತಾ ಡಿ ಸೋಜ ಮತ್ತು ಡಾ. ಅಶ್ವಿನ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಸಂಚಾಲಕರಾದ ವಿನೂತನ್ ಕಲಿವೀರ್ ಮತ್ತು ಡಾ. ಬಿನು ಕೆ. ಜಿ. ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು. ಸಭಾ ಕಾರ್ಯಕ್ರಮದ ನಂತರ ವಿದ್ಯಾರ್ಥಿಗಳಿಂದ ವೈವಿಧ್ಯಮಯ ಸಾಂಸ್ಕೃತಿಕ ಪ್ರದರ್ಶನಗಳು ನಡೆದವು. ಭಾರತದ ವಿವಿಧ ರಾಜ್ಯಗಳ ಜಾನಪದ ನೃತ್ಯಗಳು ಪ್ರೇಕ್ಷಕರ ಮನಸೂರೆಗೊಂಡವು. ಸಮಾರಂಭವು ರಾಷ್ಟ್ರಗೀತೆಯೊಂದಿಗೆ ಮುಕ್ತಾಯಗೊಂಡಿತು.
ಮೋದಿ ಸರಕಾರ ನೀತಿ ನಿರೂಪಣೆಯಲ್ಲಿ ಕಾರ್ಮಿಕರು, ರೈತರನ್ನು ನಿರ್ಲಕ್ಷಿಸುತ್ತಿದೆ: ರಾಹುಲ್ ಗಾಂಧಿ
ಹೊಸದಿಲ್ಲಿ,ಫೆ.12: ಕೇಂದ್ರೀಯ ಕಾರ್ಮಿಕ ಸಂಘಟನೆಗಳು ಗುರುವಾರ ಕರೆ ನೀಡಿದ್ದ ರಾಷ್ಟ್ರವ್ಯಾಪಿ ಮುಷ್ಕರಕ್ಕೆ ಕಾಂಗ್ರೆಸ್ ಬೆಂಬಲ ವ್ಯಕ್ತಪಡಿಸಿದ್ದು,ಸರಕಾರವು ಕಾರ್ಮಿಕರು ಮತ್ತು ರೈತರ ಭವಿಷ್ಯದ ಮೇಲೆ ಪ್ರತಿಕೂಲ ಪರಿಣಾಮಗಳನ್ನು ಬೀರುವ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಅವರನ್ನು ನಿರ್ಲಕ್ಷಿಸಿದೆ ಎಂದು ಲೋಕಸಭೆಯಲ್ಲಿ ವಿಪಕ್ಷ ನಾಯಕ ರಾಹುಲ್ ಗಾಂಧಿಯವರು ಆರೋಪಿಸಿದ್ದಾರೆ. ಕೇಂದ್ರದ ‘ಕಾರ್ಮಿಕ ವಿರೋಧಿ, ರೈತ ವಿರೋಧಿ ಮತ್ತು ಕಾರ್ಪೊರೇಟ್ ಪರ’ ನೀತಿಗಳನ್ನು ವಿರೋಧಿಸಿ ಕೇಂದ್ರೀಯ ಕಾರ್ಮಿಕ ಒಕ್ಕೂಟಗಳ ವೇದಿಕೆಯೊಂದಿಗೆ ಸಂಯೋಜಿತ ನೌಕರರು ಮತ್ತು ಕಾರ್ಮಿಕರು ದಿನವಿಡೀ ಮುಷ್ಕರ ನಡೆಸಿದರು. ನೂತನ ಕಾರ್ಮಿಕ ಸಂಹಿತೆಗಳು ಮತ್ತು ಆರ್ಥಿಕ ನಿರ್ಧಾರಗಳ ಕುರಿತು ಕಳವಳಗಳನ್ನು ವ್ಯಕ್ತಪಡಿಸಿ ರಾಷ್ಟ್ರವ್ಯಾಪಿ ಮುಷ್ಕರದಲ್ಲಿ ಸುಮಾರು 30 ಲಕ್ಷ ಕಾರ್ಮಿಕರು ಭಾಗವಹಿಸಿದ್ದರು ಎಂದು ಜಂಟಿ ವೇದಿಕೆ ತಿಳಿಸಿದೆ. ಲಕ್ಷಾಂತರ ಕಾರ್ಮಿಕರು ಮತ್ತು ರೈತರು ತಮ್ಮ ಹಕ್ಕುಗಳಿಗಾಗಿ ಬೀದಿಗಿಳಿದಿದ್ದಾರೆ ಎಂದು ಎಕ್ಸ್ ಪೋಸ್ಟ್ನಲ್ಲಿ ಹೇಳಿರುವ ರಾಹುಲ್ ಗಾಂಧಿ, ಅವರ ಕಳವಳಗಳಿಗೆ ಪ್ರಧಾನಿ ಮೋದಿ ಈಗಲಾದರೂ ಕಿವಿಗೊಡುತ್ತಾರೆಯೇ ಅಥವಾ ಅವರು ತುಂಬ ಬಲವಾದ ‘ಹಿಡಿತ’ದಲ್ಲಿದ್ದಾರೆಯೇ ಎಂದು ಪ್ರಶ್ನಿಸಿದ್ದಾರೆ. ನಾಲ್ಕು ನೂತನ ಕಾರ್ಮಿಕ ಸಂಹಿತೆಗಳು ಕಾರ್ಮಿಕ ರಕ್ಷಣೆಗಳನ್ನು ದುರ್ಬಲಗೊಳಿಸಬಹುದು ಎಂದು ಕಾರ್ಮಿಕರು ಭೀತಿ ಪಟ್ಟುಕೊಂಡಿದ್ದರೆ, ಭಾರತ-ಅಮೆರಿಕ ವ್ಯಾಪಾರ ಒಪ್ಪಂದವು ತಮ್ಮ ಜೀವನೋಪಾಯಗಳ ಮೇಲೆ ಪ್ರತಿಕೂಲ ಪರಿಣಾಮಗಳನ್ನು ಬೀರಬಹುದು ಎಂಬ ಆತಂಕ ರೈತರಲ್ಲಿ ಮನೆ ಮಾಡಿದೆ, ಮನರೇಗಾವನ್ನು ರದ್ದುಗೊಳಿಸುವುದು ಗ್ರಾಮೀಣ ಸಮುದಾಯಗಳಿಗೆ ಪ್ರಮುಖ ಸುರಕ್ಷತಾ ಜಾಲವನ್ನು ತೆಗೆದುಹಾಕುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರೂ ಭಾರತ ಬಂದ್ನ್ನು ಬೆಂಬಲಿಸಿದರು. ದೇಶಾದ್ಯಂತ ಕಾರ್ಮಿಕ ಒಕ್ಕೂಟಗಳು, ರೈತರು ಮತ್ತು ಕಾರ್ಮಿಕರು ಕಾರ್ಮಿಕ ಕಾನೂನುಗಳು ಮತ್ತು ವ್ಯಾಪಾರ ಒಪ್ಪಂದವನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ ಎಂದು ಹೇಳಿದ ಅವರು, ಮನರೇಗಾ ಅಡಿಯಲ್ಲಿಯ ಉದ್ಯೋಗ ಖಾತರಿಗಳನ್ನು ಕಿತ್ತುಕೊಳ್ಳಲಾಗುತ್ತಿದೆ ಎಂದು ಆರೋಪಿಸಿದರು. ಸರಕಾರವು ವಿದೇಶಿ ಒತ್ತಡಗಳಿಗೆ ಮಣಿಯುತ್ತಿದೆ ಮತ್ತು ‘ಮೋಸದ ಒಪ್ಪಂದ’ದ ಮೂಲಕ ಕಾರ್ಮಿಕರು ಮತ್ತು ರೈತರ ಭವಿಷ್ಯವನ್ನು ಗಿರವಿ ಇಡುತ್ತಿದೆ ಎಂದು ಆರೋಪಿಸಿದರು. ಆಡಳಿತ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದ ಮಲ್ಲಿಕಾರ್ಜುನ ಖರ್ಗೆ, ‘ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಬೆಂಬಲಿಸಿ ಘೋಷಣೆಗಳನ್ನು ಕೂಗಿದವರು ಭಾರತದ ರಾಷ್ಟ್ರೀಯ ಹಿತಾಸಕ್ತಿಗೆ ಹಾನಿಯನ್ನುಂಟು ಮಾಡಿದ್ದಾರೆ. ಸರಕಾರದ ನೀತಿಗಳ ವಿರುದ್ಧ ಕಾರ್ಮಿಕರು,ಸಣ್ಣ ವ್ಯಾಪಾರಿಗಳು ಸಾಮಾನ್ಯ ನಾಗರಿಕರಲ್ಲಿ ಪ್ರತಿರೋಧ ಹೆಚ್ಚುತ್ತಿದೆ. ಬೀದಿಗಳಿಂದ ಸಂಸತ್ತಿಗೆ ನಮ್ಮ ಹೋರಾಟ ಮುಂದುವರಿಯುತ್ತದೆ’ ಎಂದು ಹೇಳಿದರು.
ISC 12 ನೇ ತರಗತಿ ಪರೀಕ್ಷೆ ಇಂದಿನಿಂದ: ಮೊದಲ ದಿನ 1.5 ಲಕ್ಷ ಮಕ್ಕಳು ಹಾಜರಿ
ನವದೆಹಲಿ : ದೇಶಾದ್ಯಂತ ಕೌನ್ಸಿಲ್ ಫಾರ್ ದಿ ಇಂಡಿಯನ್ ಸ್ಕೂಲ್ ಸರ್ಟಿಫಿಕೇಟ್ ಎಕ್ಸಾಮಿನೇಷನ್ಸ್ (CISCE) ನಡೆಸುವ ಐಎಸ್ಸಿ (12ನೇ ತರಗತಿ) ವಾರ್ಷಿಕ ಬೋರ್ಡ್ ಪರೀಕ್ಷೆಗಳು ಇಂದು (ಗುರುವಾರ, ಫೆಬ್ರವರಿ 12) ಅಧಿಕೃತವಾಗಿ ಆರಂಭಗೊಂಡಿವೆ. ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯ ನಿರ್ಧರಿಸುವ ಈ ಪರೀಕ್ಷೆ ಮನಃಶಾಸ್ತ್ರ (Psychology) ವಿಷಯದ ಮೂಲಕ ಚಾಲನೆ ದೊರೆತಿದೆ. ಇಂದು ಮಧ್ಯಾಹ್ನ ನಡೆದ ಪರೀಕ್ಷೆಯಲ್ಲಿ ದೇಶಾದ್ಯಂತ
ಮಂಗಳೂರು: ದೂರು ನೀಡಲು ಠಾಣೆಗೆ ಹೋದ ವ್ಯಕ್ತಿಯ ಬಂಧನ
ಮಂಗಳೂರು: ಕ್ಷುಲ್ಲಕ ವಿಚಾರಕ್ಕೆ ನೆರಮನೆಯ ಮೇಲೆ ದೂರು ನೀಡಲು ಠಾಣೆಗೆ ಹೋದ ವ್ಯಕ್ತಿಯನ್ನೇ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ ಘಟನೆ ನಗರದಲ್ಲಿ ನಡೆದಿದೆ. ನಗರದ ಅಪಾರ್ಟ್ಮೆಂಟ್ ನಿವಾಸಿ ಹಾಗೂ ಬ್ಯಾಂಕ್ವೊಂದರ ಸಿಬ್ಬಂದಿ ಮಂಜಪ್ಪ ಸುರೇಂದ್ರನ್ ಬಂಧನಕ್ಕೊಳಗಾದ ಆರೋಪಿ. ಮನೆಯ ಅಂಗಳದಲ್ಲಿ ಶಟಲ್ ಆಟವಾಡುತ್ತಿದ್ದ ಬಗ್ಗೆ ಮಂಜಪ್ಪ ಸುರೇಂದ್ರ ಕಾವೂರು ಪೊಲೀಸರಿಗೆ ದೂರು ನೀಡಲು ತೆರಳಿದ್ದರು. ಅಲ್ಲಿ ದಾಂಧಲೆ ಮಾಡಿದ ಆರೋಪದಲ್ಲಿ ಪೊಲೀಸರು ಮಂಜಪ್ಪ ಸುರೇಂದ್ರನ್ನನ್ನು ಬಂಧಿಸಿ ಮಂಗಳೂರಿನ ಮೂರನೇ ಜೆಎಂಎಫ್ಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
Bidar | ಕೆಕೆಆರ್ಟಿಸಿ ಬಸ್ಸುಗಳ ಮೇಲೆ ತಂಬಾಕು ಜಾಹೀರಾತು ಖಂಡಿಸಿ ಕನ್ನಡ ಸೇನೆಯಿಂದ ಪ್ರತಿಭಟನೆ
ಬೀದರ್: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (ಕೆಕೆಆರ್ಟಿಸಿ) ಬಸ್ಸುಗಳ ಮೇಲೆ ಗುಟ್ಕಾ, ತಂಬಾಕು ಹಾಗೂ ಸಿಗರೇಟ್ ಉತ್ಪನ್ನಗಳ ಜಾಹೀರಾತು ಪೋಸ್ಟರ್ಗಳನ್ನು ಅಂಟಿಸಿರುವುದನ್ನು ಖಂಡಿಸಿ ಕನ್ನಡ ಸೇನೆಯು ಗುರುವಾರ ನಗರದಲ್ಲಿ ಪ್ರತಿಭಟನೆ ನಡೆಸಿತು. ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿ ಕನ್ನಡ ಸೇನೆಯ ಜಿಲ್ಲಾಧ್ಯಕ್ಷ ಸುಭಾಷ್ ಕೆ. ನಾಡೆ ಅವರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ, ಬಸ್ಸುಗಳ ಮೇಲಿದ್ದ ಮಾದಕ ವಸ್ತುಗಳ ಜಾಹೀರಾತು ಪೋಸ್ಟರ್ಗಳನ್ನು ತೆರವುಗೊಳಿಸಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಯಿತು. ಪ್ರತಿಭಟನಾಕಾರರು ಮಾತನಾಡಿ, ಕೆಕೆಆರ್ಟಿಸಿ ಸರ್ಕಾರದ ಅಂಗ ಸಂಸ್ಥೆಯಾಗಿದ್ದು, ಜನಸೇವೆ ಹಾಗೂ ಸಾರ್ವಜನಿಕ ಆರೋಗ್ಯ ಕಾಪಾಡುವುದು ಅದರ ಮುಖ್ಯ ಕರ್ತವ್ಯವಾಗಿದೆ. ಆದರೆ ಜೀವಕ್ಕೆ ಹಾನಿಕಾರಕವೆಂದು ಸರ್ಕಾರವೇ ಎಚ್ಚರಿಕೆ ನೀಡಿರುವ ತಂಬಾಕು ಉತ್ಪನ್ನಗಳ ಜಾಹೀರಾತುಗಳನ್ನು ಸಾರ್ವಜನಿಕ ಸಾರಿಗೆ ಬಸ್ಸುಗಳ ಮೇಲೆ ಪ್ರದರ್ಶಿಸುವುದು ಕಾನೂನು ಮತ್ತು ನೈತಿಕತೆಗೆ ವಿರುದ್ಧವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಗ್ರಾಮೀಣ ಹಾಗೂ ಹಳ್ಳಿ ಭಾಗಗಳಲ್ಲಿ ಸಂಚರಿಸುವ ಬಸ್ಸುಗಳ ಮೇಲಿನ ಇಂತಹ ಜಾಹೀರಾತುಗಳು ಯುವಜನರನ್ನು ವ್ಯಸನದತ್ತ ಆಕರ್ಷಿಸಿ ಸಾಮಾಜಿಕ ಹಾನಿಗೆ ಕಾರಣವಾಗುತ್ತವೆ. ಆದ್ದರಿಂದ ತಂಬಾಕು ಹಾಗೂ ಗುಟ್ಕಾ ಜಾಹೀರಾತುಗಳನ್ನು ಕೂಡಲೇ ಸಂಪೂರ್ಣವಾಗಿ ತೆರವುಗೊಳಿಸುವಂತೆ ಕೆಕೆಆರ್ಟಿಸಿ ಅಧಿಕಾರಿಗಳಿಗೆ ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ಕನ್ನಡ ಸೇನೆ ರಾಜ್ಯ ಉಪಾಧ್ಯಕ್ಷ ರವಿ ಸ್ವಾಮಿ ನಿರ್ಣಾ, ಬೀದರ್ ತಾಲೂಕಾಧ್ಯಕ್ಷ ರಾಜು ಮಂಗಲ್ಪೇಟ್, ಜಿಲ್ಲಾ ಉಪಾಧ್ಯಕ್ಷ ಪ್ರಭು ಶೆಟ್ಟಿ ಪಸರಗಿ, ಮಳಸಕಾಂತ್ ವಾಗೆ, ಸೋಮನಾಥ್ ವರಟ್ಟಿ, ಪರಶುರಾಮ್ ಮೈಸೂರು, ಚನ್ನಬಸವ ಘಾಳೆ, ನಾಗಶೆಟ್ಟಿ ಸಜ್ಜನ್ ಶೆಟ್ಟಿ, ಲಕ್ಷ್ಮಣ್ ಅಲ್ಲುರೆ, ತಿಪ್ಪಾರೆಡ್ಡಿ, ರಮೇಶ್ ಧೂಳು ಹಾಗೂ ಉದಯ ಹೀಬಾರೆ ಸೇರಿದಂತೆ ಹಲವು ಕಾರ್ಯಕರ್ತರು ಭಾಗವಹಿಸಿದ್ದರು.
ಹೊಸದಿಲ್ಲಿ,ಫೆ.12: ಪ್ರತಿಪಕ್ಷಗಳ ಸಂಸದರು ಗುರುವಾರ ಭಾರತ-ಅಮೆರಿಕ ವ್ಯಾಪಾರ ಒಪ್ಪಂದವನ್ನು ವಿರೋಧಿಸಿ ಸಂಸತ್ತಿನ ಹೊರಗೆ ಮಕರ ದ್ವಾರದಲ್ಲಿ ಪ್ರತಿಭಟನೆ ನಡೆಸಿದರು. ಇದೊಂದು ಮೋಸದ ಒಪ್ಪಂದವಾಗಿದೆ ಎಂದು ಅವರು ಬಣ್ಣಿಸಿದರು. ಫಲಕಗಳನ್ನು ಹಿಡಿದುಕೊಂಡಿದ್ದ ಸಂಸದರು ಸರಕಾರದ ವಿವಿಧ ನೀತಿಗಳ ವಿರುದ್ಧ ಕೇಂದ್ರೀಯ ಕಾರ್ಮಿಕ ಸಂಘಟನೆಗಳು ಗುರುವಾರ ಕರೆ ನೀಡಿದ್ದ ಭಾರತ ಬಂದ್ಗೆ ಬೆಂಬಲವನ್ನೂ ವ್ಯಕ್ತಪಡಿಸಿದರು. ಇದಕ್ಕೂ ಮುನ್ನ ಬೆಳಿಗ್ಗೆ ಲೋಕಸಭೆಯು ಸಮಾವೇಶಗೊಂಡ ಬೆನ್ನಿಗೇ ಭಾರತ-ಅಮೆರಿಕ ವ್ಯಾಪಾರ ಒಪ್ಪಂದ ಮತ್ತು ಇತರ ವಿಷಯಗಳ ಕುರಿತು ಪ್ರತಿಪಕ್ಷಗಳ ಪ್ರತಿಭಟನೆಯಿಂದಾಗಿ ಸದನವನ್ನು ಮಧ್ಯಾಹ್ನ 12 ಗಂಟೆಯವರೆಗೆ ಮುಂದೂಡಲಾಯಿತು. ಈ ನಡುವೆ ಲೋಕಸಭೆಯಲ್ಲಿ ಕಾಂಗ್ರೆಸ್ ಸಂಸದ ಮನೀಷ್ ತಿವಾರಿಯವರು ಭಾರತ-ಅಮೆರಿಕ ಮಧ್ಯಂತರ ವ್ಯಾಪಾರ ಒಪ್ಪಂದ ಮತ್ತು ಜಂಟಿ ಹೇಳಿಕೆಯಿಂದ ಉದ್ಭವಿಸಿರುವ ‘ಗಂಭೀರ ಕಳವಳಗಳ’ ಕುರಿತು ಚರ್ಚೆಯನ್ನು ಕೋರಿ ನಿಲುವಳಿ ಸೂಚನೆಯನ್ನು ಮಂಡಿಸಿದರು. ಜಂಟಿ ಹೇಳಿಕೆಯು ರಷ್ಯಾದಿಂದ ತೈಲ ಖರೀದಿಗಳು ಮತ್ತು ಕೃಷಿ ಸಂಬಂಧಿತ ರಿಯಾಯತಿಗಳಿಗೆ ಸಂಬಂಧಿಸಿದ ಕಟ್ಟುಪಾಡುಗಳನ್ನು ಒಳಗೊಂಡಿದೆ ಎಂದು ನಿಲುವಳಿ ಸೂಚನೆಯಲ್ಲಿ ಆರೋಪಿಸಿರುವ ಅವರು, ಇಂತಹ ಕ್ರಮಗಳು ಭಾರತದ ಇಂಧನ ಭದ್ರತೆ, ರೈತರ ಹಿತಾಸಕ್ತಿಗಳು ಮತ್ತು ವ್ಯೆಹಾತ್ಮಕ ಸ್ವಾಯತ್ತತೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟು ಹಾಕಬಹುದು ಎಂದು ಹೇಳಿದ್ದಾರೆ.
ಅಖಿಲ ಭಾರತ ಸಾರ್ವತ್ರಿಕ ಮುಷ್ಕರ : ಹುಮನಾಬಾದ್ ನಲ್ಲಿ ಪ್ರತಿಭಟನೆ
ಹುಮನಾಬಾದ್: ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ದೇಶದಾದ್ಯಂತ ನಡೆದ ಮುಷ್ಕರಕ್ಕೆ ಬೆಂಬಲ ಸೂಚಿಸಿ, ಗುರುವಾರ ಹುಮನಾಬಾದ್ ಪಟ್ಟಣದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು. ಪಟ್ಟಣದ ಪ್ರವಾಸಿ ಮಂದಿರದಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆ ಅಂಬೇಡ್ಕರ್ ವೃತ್ತದವರೆಗೆ ಸಾಗಿತು. ಅಲ್ಲಿ ಪ್ರತಿಭಟನಾಕಾರರು ಮಾನವ ಸರಪಳಿ ನಿರ್ಮಿಸಿ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನೆಯಲ್ಲಿ ಸಿಐಟಿಯು, ಹುಮನಾಬಾದ್ ಹಾಗೂ ಚಿಟಗುಪ್ಪ ತಾಲೂಕು ಕಟ್ಟಡ ಕಾರ್ಮಿಕರ ಸಂಘ, ಅಂಗನವಾಡಿ ಮತ್ತು ಬಿಸಿಯೂಟ ನೌಕರರ ಸಂಘ, ರೈತ ಸಂಘ, ಕೃಷಿ ಕೂಲಿಕಾರರ ಸಂಘ, ಜನವಾದಿ ಮಹಿಳಾ ಸಂಘಟನೆ ಸೇರಿದಂತೆ ಹಲವು ಸಂಘಟನೆಗಳು ಭಾಗವಹಿಸಿದ್ದವು. ಕಟ್ಟಡ ಕಾರ್ಮಿಕ ತಾಲೂಕು ಅಧ್ಯಕ್ಷ ಶಶಿಕುಮಾರ್ ಡಾಂಗೆ ಮಾತನಾಡಿ, ಕೇಂದ್ರ ಸರ್ಕಾರ ಕಾರ್ಪೊರೇಟ್ ಪರ ನೀತಿಗಳನ್ನು ಅನುಸರಿಸುತ್ತಿದ್ದು, ಬಡವರು ಮತ್ತು ಕಾರ್ಮಿಕರ ಮೇಲೆ ಭಾರ ಹೆಚ್ಚಿಸುತ್ತಿದೆ ಎಂದು ಆರೋಪಿಸಿದರು. ಕೂಲಿ ಕಾರ್ಮಿಕರು ಮತ್ತು ರೈತರ ವಿರುದ್ಧ ಕಾನೂನು ತರುವ ಕ್ರಮಗಳನ್ನು ಖಂಡಿಸಿ, ಇಂತಹ ಸರ್ಕಾರ ನಮಗೆ ಬೇಕಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ನಾಲ್ಕು ಕಾರ್ಮಿಕ ಸಂಹಿತೆಗಳನ್ನು ರದ್ದುಪಡಿಸಬೇಕು. ರಾಜ್ಯ ಸರ್ಕಾರ ಕಾರ್ಮಿಕ ಸಮಿತಿಗಳಿಗೆ ತಂದಿರುವ ಕರಡು ಅಧಿಸೂಚನೆಗಳನ್ನು ವಾಪಸ್ಸು ಪಡೆಯಬೇಕು. ಮನರೇಗಾ ಯೋಜನೆಯನ್ನು ಪುನರ್ ಸ್ಥಾಪಿಸಬೇಕು. ಕೃಷಿ ವಿರೋಧಿ ತಿದ್ದುಪಡಿ, ವಿದ್ಯುತ್ ಮಸೂದೆ ಹಾಗೂ ವಿಮಾ ತಿದ್ದುಪಡಿ ಕಾಯ್ದೆಗಳನ್ನು ಹಿಂಪಡೆಯಬೇಕು. ಕನಿಷ್ಠ ವೇತನ ಅಧಿಸೂಚನೆ ಜಾರಿಗೆ ತರಬೇಕು ಎಂದು ಆಗ್ರಹಿಸಲಾಯಿತು. ಸ್ಕೀಮ್ ನೌಕರರನ್ನು ಕಾರ್ಮಿಕರೆಂದು ಪರಿಗಣಿಸಿ ಕನಿಷ್ಠ ವೇತನ ಕಾಯ್ದೆ ಜಾರಿಗೊಳಿಸಬೇಕು. ಅಸಂಘಟಿತ ಕಾರ್ಮಿಕರಿಗೆ ಸಮಗ್ರ ಸಾಮಾಜಿಕ ಭದ್ರತೆ ಸೌಲಭ್ಯ ಒದಗಿಸಬೇಕು. ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಜಾರಿಗೊಳಿಸಬೇಕು. ಅಗತ್ಯ ವಸ್ತುಗಳ ಬೆಲೆ ಏರಿಕೆ ನಿಯಂತ್ರಿಸಬೇಕು. ಮೋಟಾರು ವಾಹನ ತಿದ್ದುಪಡಿ ಕಾಯ್ದೆಯಡಿ ವಿಧಿಸಿರುವ ದುಬಾರಿ ದಂಡಗಳನ್ನು ಕಡಿತಗೊಳಿಸಬೇಕು ಎಂದು ಒತ್ತಾಯಿಸಿದರು. ಸಿಐಟಿಯು ಅಧ್ಯಕ್ಷ ಪ್ರಭು ಸಂತೋಷಕರ್, ಜನವಾದಿ ಮಹಿಳಾ ಸಂಘದ ಜಿಲ್ಲಾ ಕಾರ್ಯದರ್ಶಿ ರೇಷ್ಮಾ, ಅಕ್ಷರ ದಾಸೋಹ ನೌಕರ ಸಂಘದ ಅಧ್ಯಕ್ಷೆ ರೇಖಾ, ಅಂಗನವಾಡಿ ನೌಕರರ ಸಂಘದ ಕಾರ್ಯದರ್ಶಿ ಜಗದೇವಿ ಪತ್ರಿ, ಕಾರ್ಮಿಕ ಸಂಘದ ಗೌಸೊದ್ದೀನ್ ಸೇರಿದಂತೆ ಹುಮನಾಬಾದ್ ಹಾಗೂ ಚಿಟಗುಪ್ಪ ಭಾಗದ ಕಾರ್ಮಿಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
Bangladesh Election: ಬಾಂಗ್ಲಾದೇಶ ಚುನಾವಣೆಯಲ್ಲಿ ಸೋಲು, ಗೆಲುವಿನ ಲೆಕ್ಕಾಚಾರ ಶುರು
ಬಾಂಗ್ಲಾದೇಶ ಮತ್ತು ಭಾರತದ ನಡುವೆ ಸಂಬಂಧ ಕೆಟ್ಟು ಹೋಗಿದ್ದು, ಬಾಂಗ್ಲಾದೇಶದ ಕಿತಾಪತಿ ಇದೀಗ ಎರಡೂ ದೇಶಗಳ ನಡುವೆ ದೊಡ್ಡ ಅಂತರ ತಂದಿದೆ. ಅದರಲ್ಲೂ ಬಾಂಗ್ಲಾದೇಶದ ರಾಜಕಾರಣಿಗಳು ಮತ್ತು ಅಲ್ಲಿನ ಅಧಿಕಾರಿಗಳು ಮಾಡುತ್ತಿರುವ ಕಿರಿಕ್ ಒಂದು ಕಾಲದ ಆತ್ಮೀಯ ದೇಶಗಳನ್ನು ದೂರವಾಗುವ ರೀತಿ ಮಾಡಿದೆ. ಅಲ್ಲದೆ ಬಾಂಗ್ಲಾ ನೆಲದಲ್ಲಿ ಹಿಂದೂಗಳನ್ನು ಟಾರ್ಗೆಟ್ ಮಾಡಿ ಹಿಂಸಾಚಾರ ನಡೆಸುತ್ತಿರುವ &ಗಲಭೆಗೆ
ಕೇಂದ್ರ ಸರಕಾರದ ವಿರುದ್ಧ ಮಡಿಕೇರಿಯಲ್ಲಿ ಕಾರ್ಮಿಕ ಸಂಘಟನೆಗಳಿಂದ ಪ್ರತಿಭಟನೆ
ಮಡಿಕೇರಿ : ದುಡಿಯುವ ವರ್ಗಕ್ಕೆ ಮಾರಕವಾಗಿರುವ ಕೇಂದ್ರ ಸರಕಾರದ ನಾಲ್ಕು ಕಾರ್ಮಿಕ ಕೋಡ್ಗಳನ್ನು ಹಿಂದಕ್ಕೆ ಪಡೆಯಬೇಕು, ನರೇಗಾ ಯೋಜನೆಯನ್ನು ಮತ್ತೆ ಆರಂಭಿಸಬೇಕೆಂದು ಆಗ್ರಹಿಸಿ ಕೇಂದ್ರ ಕಾರ್ಮಿಕ ಸಂಘಟನೆಗಳು ಮತ್ತು ಸ್ವತಂತ್ರ ಒಕ್ಕೂಟಗಳಿಂದ ನಗರದಲ್ಲಿಂದು ಪ್ರತಿಭಟನೆ ನಡೆಯಿತು. ಜಂಟಿ ಕ್ರಿಯಾ ಸಮಿತಿಯ ಪ್ರಮುಖರ ನೇತೃತ್ವದಲ್ಲಿ ಗುರುವಾರ ಬೆಳಗ್ಗೆ ನಗರದ ಹಳೇ ಖಾಸಗಿ ಬಸ್ ನಿಲ್ದಾಣದ ಬಳಿಯಿಂದ ವಿವಿಧ ಕಾರ್ಮಿಕ ಸಂಘಟನೆಗಳ ನೂರಾರು ಮಂದಿ ಘೋಷಣೆಗಳ ಸಹಿತ ನಗರದ ಮುಖ್ಯ ಬೀದಿಯಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು. ಗಾಂಧಿ ಮೈದಾನದಲ್ಲಿ ಸಮಾವೇಶಗೊಂಡು, ಕೇಂದ್ರದ ಕಾರ್ಮಿಕ ವಿರೋಧಿ ನೀತಿಗಳ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಪಿ.ಆರ್.ಭರತ್ ಮಾತನಾಡಿ, ಹಲ ದಶಕಗಳ ಹೋರಾಟಗಳಿಂದ ಕಾರ್ಮಿಕರಿಗೆ ನ್ಯಾಯ ಒದಗಿಸುವ 41 ಕಾನೂನುಗಳನ್ನು ದುಡಿಯುವ ವರ್ಗ ಪಡೆದುಕೊಂಡಿದೆ. ಇಂತಹ ಕಾನೂನುಗಳಲ್ಲಿ 21 ಕಾನೂನುಗಳನ್ನು ಇಂದಿನ ಕೇಂದ್ರ ಸರಕಾರ ನಾಲ್ಕು ಲೇಬರ್ ಕೋಡ್ಗಳನ್ನಾಗಿ ಬದಲಿಸುವ ಮೂಲಕ, ಕಾರ್ಮಿಕ ಮೂಲಭೂತ ಹಕ್ಕುಗಳನ್ನು ಕಸಿದುಕೊಳ್ಳುತ್ತಿದೆ. ಆ ಮೂಲಕ ಬಂಡವಾಳಶಾಹಿಗಳಿಗೆ ಅನುಕೂಲತೆಯನ್ನು ಕಲ್ಪಿಸಲು ಮುಂದಾಗಿದೆ ಎಂದು ಆರೋಪಿಸಿದರು. ಕಾರ್ಮಿಕ ಕಾಯ್ದೆಗಳ ನಾಲ್ಕು ಕೋಡ್ಗಳ ವಿರುದ್ಧ ಕಾರ್ಮಿಕ ಸಂಘಟನೆಗಳಿಂದ ದೇಶವ್ಯಾಪಿ ದೊಡ್ಡ ಮಟ್ಟದ ಹೋರಾಟಗಳು ನಡೆದಿದೆ. ಹೀಗಿದ್ದೂ ಕೇಂದ್ರ ಸರ್ವಾಧಿಕಾರಿ ಧೋರಣೆಯಿಂದ ಇವುಗಳನ್ನು ಜಾರಿ ಮಾಡಿದೆ. ಇದು ಕೇವಲ ಬಂಡವಾಳಶಾಹಿ ವರ್ಗವನ್ನು ಓಲೈಸುವ ಮತ್ತು ಅವರನ್ನು ಮತ್ತಷ್ಟು ಶ್ರೀಮಂತರನ್ನಾಗಿಸುವ ಪ್ರಯತ್ನವಾಗಿದೆ ಎಂದು ಟೀಕಿಸಿದರು. ಜಿಲ್ಲಾ ಕಾಂಗ್ರೆಸ್ ಪಕ್ಷದ ಪ್ರಮುಖ ಹಾಗೂ ರೈತ ಸಂಘದ ಮುಖಂಡ ನೆರವಂಡ ಉಮೇಶ್ ಮಾತನಾಡಿದರು. ಕರ್ನಾಟಕ ಸರಕಾರ ಕಾರ್ಮಿಕ ಸಂಹಿತೆಗಳಿಗೆ ಸೇವಾ ನಿಯಮಾವಳಿಗಳನ್ನು ರಚಿಸಬಾರದು ಮತ್ತು ಉಳಿದ ಎಲ್ಲಾ ಜನ ವಿರೋಧಿ ಮಸೂದೆಗಳನ್ನು ಹಿಂದಕ್ಕೆ ಪಡೆಯಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು. ಪ್ರತಿಭಟನೆಯ ಸಂದರ್ಭ ಸ್ಥಳಕ್ಕೆ ಆಗಮಿಸಿದ ಹೆಚ್ಚುವರಿ ಜಿಲ್ಲಾಧಿಕಾರಿ ಆರ್.ಐಶ್ವರ್ಯ ಅವರಿಗೆ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿಯ ಪ್ರಮುಖರು ಮನವಿ ಪತ್ರ ಸಲ್ಲಿಸಿದರು. ಪ್ರತಿಭಟನೆಯಲ್ಲಿ ಎಐಟಿಯುಸಿ ಜಿಲ್ಲಾಧ್ಯಕ್ಷ ಹೆಚ್.ಎಂ.ಸೋಮಪ್ಪ, ಸಿಐಟಿಯು ಜಿಲ್ಲಾಧ್ಯಕ್ಷ ಎ.ಸಿ.ಸಾಬು, ಜಂಟಿ ಕ್ರಿಯಾ ಸಮಿತಿಯ ಡಿ.ಎಸ್.ನಿರ್ವಾಣಪ್ಪ, ಕಾಂಗ್ರೆಸ್ ಮುಖಂಡರಾದ ಟಿ.ಪಿ.ರಮೇಶ್, ಜಿಲ್ಲಾ ಕಾಂಗ್ರೆಸ್ನ ಕಾರ್ಮಿಕ ವಿಭಾಗದ ಅಧ್ಯಕ್ಷ ಕೆ.ಆರ್.ದಿನೇಶ್, ಗೌರವ ಕಾರ್ಯದರ್ಶಿ ಮಿನಾಜ್ ಪ್ರವೀಣ್, ಎಐಟಿಯುಸಿ ಜಿಲ್ಲಾ ಉಪಾಧ್ಯಕ್ಷರಾದ ಮಣಿ, ಐಎನ್ಟಿಯುಸಿ ಜಿಲ್ಲಾಧ್ಯಕ್ಷ ಅಣ್ಣಯ್ಯ, ಕೊಡಗು ಜಿಲ್ಲಾ ಜನರಲ್ ವರ್ಕರ್ಸ್ ಯೂನಿಯನ್ ಕಾರ್ಯದರ್ಶಿ ಮಹದೇವ್, ಅಂಗನವಾಡಿ ಕಾರ್ಯಕರ್ತೆಯರ ಸಂಘದ ಜಿಲ್ಲಾಧ್ಯಕ್ಷೆ ಸುಮಿತ್ರ, ಪ್ರಧಾನ ಕಾರ್ಯದರ್ಶಿ ಜಮುನ, ಬಿಸಿ ಊಟ ಕಾರ್ಮಿಕರ ಸಂಘದ ಅಧ್ಯಕ್ಷೆ ಕುಸುಮ, ಕಾಫಿ ಕ್ಯೂರಿಂಗ್ ವರ್ಕರ್ಸ್ ಯೂನಿಯನ್ ಅಧ್ಯಕ್ಷರಾದ ಮಂಜುನಾಥ್, ಆಸ್ಪತ್ರೆ ನೌಕರರ ಸಂಘದ ಅಧ್ಯಕ್ಷೆ ಜಾನಕಿ, ತೋಟ ಕಾರ್ಮಿಕ ಸಂಘದ ಪುಷ್ಪ, ಕಟ್ಟಡ ಕಾರ್ಮಿಕರ ಸಂಘದ ಪ್ರಧಾನ ಕಾರ್ಯದರ್ಶಿ ಶಾಜಿ ರಮೇಶ್, ರೈತ ಸಂಘದ ಮುಖಂಡರಾದ ಲಕ್ಷ್ಮಣ್, ಕರ್ನಾಟಕ ಪ್ರಾಂತ ರೈತ ಸಂಘದ ಪ್ರಮುಖ ಟಿ.ಟಿ.ಉದಯ ಕುಮಾರ್ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.
Bidar | ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ
ಬೀದರ್ : ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ದೇಶದಾದ್ಯಂತ ನಡೆದ ಮುಷ್ಕರದ ಹಿನ್ನೆಲೆಯಲ್ಲಿ, ಗುರುವಾರ ನಗರದಲ್ಲಿ ಸಂಯುಕ್ತ ಕಿಸಾನ್ ಮೋರ್ಚಾ ಹಾಗೂ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ವತಿಯಿಂದ ಬೃಹತ್ ಪ್ರತಿಭಟನೆ ನಡೆಯಿತು. ನಗರದ ಅಂಬೇಡ್ಕರ್ ವೃತ್ತದ ಸಮೀಪ ಕರ್ನಾಟಕ ರಾಜ್ಯ ರೈತ ಸಂಘ, ಅಖಿಲ ಭಾರತ ಕಿಸಾನ್ ಸಭಾ, ದಲಿತ ಸಂಘರ್ಷ ಸಮಿತಿ, ಎಐಟಿಯುಸಿ, ಸಿಐಟಿಯು, ಎಐಯುಟಿಯುಸಿ ಸೇರಿದಂತೆ ಹಲವು ಸಂಘಟನೆಗಳ ನೂರಾರು ಕಾರ್ಯಕರ್ತರು ಮಾನವ ಸರಪಳಿ ನಿರ್ಮಿಸಿ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಸಹಾಯಕ ಆಯುಕ್ತರ ಮೂಲಕ ರಾಷ್ಟ್ರಪತಿ ಹಾಗೂ ಮುಖ್ಯಮಂತ್ರಿಗಳಿಗೆ ಸಲ್ಲಿಸಿದ ಮನವಿ ಪತ್ರದಲ್ಲಿ, ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮುಕ್ತ ವ್ಯಾಪಾರ ಒಪ್ಪಂದಗಳ ಮೂಲಕ ಬಹುರಾಷ್ಟ್ರೀಯ ಕಂಪನಿಗಳಿಗೆ ಅವಕಾಶ ಕಲ್ಪಿಸುತ್ತಿದ್ದು, ಇದರಿಂದ ದೇಶದ ಕೃಷಿ ವಲಯಕ್ಕೆ ಭಾರೀ ಹೊಡೆತ ಬೀಳಲಿದೆ ಎಂದು ಆರೋಪಿಸಲಾಗಿದೆ. ಭಾರತದಲ್ಲಿ ಕೃಷಿ ವಲಯವು ಸುಮಾರು ಶೇ.50 ರಷ್ಟು ಉದ್ಯೋಗ ಒದಗಿಸುತ್ತಿದ್ದು, ಕಾರ್ಪೊರೇಟ್ ಪರ ನೀತಿಗಳಿಂದ ಕೃಷಿ ಮತ್ತು ಹೈನುಗಾರಿಕೆ ಕ್ಷೇತ್ರ ಸಂಕಷ್ಟಕ್ಕೆ ಸಿಲುಕಲಿದೆ. ದೇಶವು ಡಬ್ಲ್ಯೂಟಿಒದಿಂದ ಹೊರ ಬರಬೇಕು ಎಂದು ಆಗ್ರಹಿಸಲಾಗಿದೆ. ಮೂರು ಕೃಷಿ ಕಾಯ್ದೆಗಳನ್ನು ಹಿಂಪಡೆಯುವಾಗ ನೀಡಿದ ಭರವಸೆಗಳನ್ನು ಕೇಂದ್ರ ಸರ್ಕಾರ ಈಡೇರಿಸಿಲ್ಲ. ಕನಿಷ್ಠ ಬೆಂಬಲ ಬೆಲೆ (ಎಂಎಸ್ಪಿ)ಗೆ ಸಂಸತ್ತಿನಲ್ಲಿ ಕಾನೂನು ರೂಪಿಸಬೇಕು. ಭಾರತ-ಅಮೇರಿಕಾ ವ್ಯಾಪಾರ ಒಪ್ಪಂದವನ್ನು ರದ್ದುಪಡಿಸಬೇಕು. ರೈತರ ಎಲ್ಲಾ ಸಾಲ ಮನ್ನಾ ಮಾಡಬೇಕು ಎಂದು ಒತ್ತಾಯಿಸಲಾಗಿದೆ. 29 ಕಾರ್ಮಿಕ ಕಾಯ್ದೆಗಳನ್ನು ರದ್ದುಪಡಿಸಿ ಜಾರಿಗೆ ತರಲಾಗುತ್ತಿರುವ 4 ಕಾರ್ಮಿಕ ಸಂಹಿತೆಗಳನ್ನು ಹಿಂಪಡೆಯಬೇಕು. ಮನರೇಗಾ ಕಾಯ್ದೆ ಮುಂದುವರಿಸಬೇಕು. ಅಂಗನವಾಡಿ, ಆಶಾ ಮತ್ತು ಬಿಸಿಯೂಟ ಕಾರ್ಯಕರ್ತರಿಗೆ ತಿಂಗಳಿಗೆ 10,000 ರೂ. ನಿವೃತ್ತಿ ವೇತನ ಹಾಗೂ ಗ್ರೂಪ್-ಸಿ ನೌಕರರ ಹುದ್ದೆ ನೀಡಿ 25,000 ರೂ. ಸಂಬಳ ನಿಗದಿ ಮಾಡಬೇಕು. ಕಟ್ಟಡ ಕಾರ್ಮಿಕರ ಪಿಂಚಣಿ ಬಿಡುಗಡೆ, ಮನೆ ಮಂಜೂರಾತಿಗೆ 5 ಲಕ್ಷ ರೂ. ಮತ್ತು ವೈದ್ಯಕೀಯ ವೆಚ್ಚಕ್ಕೆ ಪ್ರತಿ ತಿಂಗಳು 5,000 ರೂ. ನೀಡಬೇಕು. ವಿದ್ಯುತ್ ಮಸೂದೆ ಮತ್ತು ಬೀಜ ಮಸೂದೆ ಹಿಂಪಡೆಯಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು. ಪ್ರತಿಭಟನೆಯಲ್ಲಿ ಎಸ್ಕೆಎಂ ಸಂಚಾಲಕ ಬಾಬುರಾವ್ ಹೊನ್ನಾ, ಕೆಆರ್ಆರ್ಎಸ್ (ಪುಟ್ಟಣ್ಣ) ಸಂಚಾಲಕ ಮಲ್ಲಿಕಾರ್ಜುನ್ ಸ್ವಾಮಿ, ನಾಗಶೆಟ್ಟಿ ಲಂಜವಾಡ್, ಡಿಎಸ್ಎಸ್ನ ಅರುಣ್ ಪಟೇಲ್, ಎಐಕೆಎಸ್ ಗೌರವಾಧ್ಯಕ್ಷ ವಿರಶೆಟ್ಟಿ ವಟಂಬೆ, ಜೆಸಿಟಿಯು ಸಂಚಾಲಕ ಮಹೇಶ್ ನಾಡಗೌಡ, ಎಐಕೆಎಸ್ ಜಿಲ್ಲಾಧ್ಯಕ್ಷ ನಜೀರ್ ಅಹಮ್ಮದ್ ಸೇರಿದಂತೆ ಅನೇಕ ಮುಖಂಡರು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.
ಜಿನೆವಾ, ಫೆ.12: ಆಕ್ರಮಿತ ಪಶ್ಚಿಮದಂಡೆಯ ಮೇಲಿನ ನಿಯಂತ್ರಣವನ್ನು ಬಿಗಿಗೊಳಿಸುವ ಇಸ್ರೇಲ್ನ ಯೋಜನೆಗಳು ಮತ್ತಷ್ಟು ವಸಾಹತು ವಿಸ್ತರಣೆಗೆ ದಾರಿ ಮಾಡಿಕೊಡುತ್ತದೆ ಮತ್ತು ಅಕ್ರಮ ಸ್ವಾಧೀನವನ್ನು ಬಲಪಡಿಸುವತ್ತ ಒಂದು ಹೆಜ್ಜೆಯಾಗಿದೆ ಎಂದು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮುಖ್ಯಸ್ಥ ವೋಕರ್ ಟರ್ಕ್ ಹೇಳಿದ್ದಾರೆ. ಯೋಜನೆಯು ಯಹೂದಿ ಇಸ್ರೇಲಿಗಳಿಗೆ ಪಶ್ಚಿಮದಂಡೆ ಭೂಮಿಯನ್ನು ನೇರವಾಗಿ ಖರೀದಿಸಲು ಅವಕಾಶ ನೀಡುತ್ತದೆ ಮತ್ತು ಫೆಲೆಸ್ತೀನಿಯನ್ ಪ್ರಾಧಿಕಾರ(ಪಿಎ) ಅಧಿಕಾರವನ್ನು ಚಲಾಯಿಸುವ ಪ್ರದೇಶಗಳ ಮೇಲೆ ಇಸ್ರೇಲ್ ನಿಯಂತ್ರಣವನ್ನು ವಿಸ್ತರಿಸುವ ಅಂಶಗಳನ್ನು ಒಳಗೊಂಡಿದೆ. ಇತ್ತೀಚಿನ ಕ್ರಮಗಳು ಫೆಲೆಸ್ತೀನೀಯರ ಸ್ವ-ನಿರ್ಣಯದ ಹಕ್ಕನ್ನು ಉಲ್ಲಂಘಿಸುತ್ತದೆ ಮತ್ತು ಸ್ವಾಧೀನಪಡಿಸಿಕೊಳ್ಳುವ ಅಪಾಯವನ್ನು ಹೆಚ್ಚಿಸಿದೆ. ಇಸ್ರೇಲಿ ಭದ್ರತಾ ಸಂಪುಟ ಅನುಮೋದಿಸಿದ ನಿರ್ಧಾರಗಳು ಸ್ವಯಂ ನಿರ್ಣಯದ ಹಕ್ಕಿನ ಸ್ಪಷ್ಟ ಉಲ್ಲಂಘನೆಯೊಂದಿಗೆ ಫೆಲೆಸ್ತೀನಿಯನ್ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವ ಸರಣಿ ಕಾರ್ಯಕ್ರಮಗಳಿಗೆ ಹೊಸ ಸೇರ್ಪಡೆಯಾಗಿದೆ' ಎಂದು ಮಾನವ ಹಕ್ಕುಗಳಿಗಾಗಿನ ವಿಶ್ವಸಂಸ್ಥೆ ಕಮಿಷನರ್ ವೋಕರ್ ಟರ್ಕ್ ಕಳವಳ ವ್ಯಕ್ತಪಡಿಸಿದ್ದಾರೆ. ಕಾರ್ಯಸಾಧ್ಯವಾದ ಫೆಲೆಸ್ತೀನಿಯನ್ ರಾಷ್ಟ್ರವನ್ನು ಅಸಾಧ್ಯವಾಗಿಸುವ ಕಡೆಗೆ ಇಸ್ರೇಲಿ ಅಧಿಕಾರಿಗಳ ಮತ್ತೊಂದು ಹೆಜ್ಜೆಯಾಗಿದೆ. ಈ ನಿರ್ಧಾರಗಳು ಅನುಷ್ಠಾನಗೊಂಡರೆ ಅವರು (ಇಸ್ರೇಲ್) ನಿಸ್ಸಂದೇಹವಾಗಿ ಫೆಲೆಸ್ತೀನೀಯರ ವಿಲೇವಾರಿ ಮತ್ತು ಅವರ ಬಲವಂತದ ವರ್ಗಾವಣೆಯನ್ನು ವೇಗಗೊಳಿಸುತ್ತಾರೆ ಮತ್ತು ಹೆಚ್ಚು ಅಕ್ರಮ ಇಸ್ರೇಲಿ ವಸಾಹತುಗಳ ಸೃಷ್ಟಿಗೆ ಕಾರಣರಾಗುತ್ತಾರೆ. ಇದು ಫೆಲೆಸ್ತೀನಿಯನ್ನರನ್ನು ತಮ್ಮ ನೈಸರ್ಗಿಕ ಸಂಪನ್ಮೂಲಗಳಿಂದ ಮತ್ತಷ್ಟು ವಂಚಿತಗೊಳಿಸುತ್ತದೆ' ಎಂದು ಟರ್ಕ್ ಕಳವಳ ವ್ಯಕ್ತಪಡಿಸಿದ್ದಾರೆ. ಇಸ್ರೇಲ್ 1967ರಿಂದ ಪಶ್ಚಿಮದಂಡೆಯನ್ನು ಆಕ್ರಮಿಸಿದೆ. ಇಸ್ರೇಲ್ ಸ್ವಾಧೀನಪಡಿಸಿಕೊಂಡಿರುವ ಪೂರ್ವ ಜೆರುಸಲೇಂ ಹೊರತುಪಡಿಸಿ, 5 ಲಕ್ಷಕ್ಕೂ ಹೆಚ್ಚು ಇಸ್ರೇಲಿಯನ್ನರು ಪಶ್ಚಿಮ ದಂಡೆಯಾದ್ಯಂತ ನೆಲೆಸಿದ್ದು ಇದು ಅಂತಾರಾಷ್ಟ್ರೀಯ ಕಾನೂನಿನ ಅಡಿಯಲ್ಲಿ ಕಾನೂನುಬಾಹಿರವಾಗಿದೆ. ಈ ಪ್ರದೇಶದಲ್ಲಿ ಸುಮಾರು 30 ಲಕ್ಷ ಫೆಲೆಸ್ತೀನೀಯರು ವಾಸಿಸುತ್ತಿದ್ದಾರೆ. ಇದು ಇಸ್ರೇಲ್ನ ನಿಯಂತ್ರಣ ಮತ್ತು ಕಾನೂನುಬಾಹಿರ ಸ್ವಾಧೀನತೆಯನ್ನು ಬಲಪಡಿಸುತ್ತದೆ. ಆಕ್ರಮಿತ ಫೆಲೆಸ್ತೀನಿಯನ್ ಪ್ರದೇಶದ ಜನಸಂಖ್ಯಾ ಶಾಸ್ತ್ರವನ್ನು ಶಾಶ್ವತವಾಗಿ ಬದಲಾಯಿಸುವ ತ್ವರಿತ ಕ್ರಮಗಳನ್ನು ನಾವು ನೋಡುತ್ತಿದ್ದೇವೆ. ಜನರ ಭೂಮಿಯನ್ನು ಕಿತ್ತುಕೊಂಡು ಅವರನ್ನು ಸ್ಥಳಾಂತರಗೊಳ್ಳಲು ಒತ್ತಾಯಿಸಲಾಗುತ್ತದೆ. ಇದಕ್ಕೆ ಉನ್ನತ ಇಸ್ರೇಲಿ ಅಧಿಕಾರಿಗಳ ಬೆಂಬಲವಿದೆ. ಈ ನಿರ್ಧಾರ ಮತ್ತು ಕ್ರಮಗಳನ್ನು ತಕ್ಷಣ ಹಿಂಪಡೆಯಬೇಕು ಎಂದು ವೋಕರ್ ಟರ್ಕ್ ಆಗ್ರಹಿಸಿದ್ದಾರೆ.

18 C