ಉಡುಪಿ, ಜ.24: ಉಡುಪಿ ಶೀರೂರು ಮಠದ ವೇದವರ್ಧನ ತೀರ್ಥ ಸ್ವಾಮೀಜಿಯ ಪ್ರಥಮ ಪರ್ಯಾಯದ ಪ್ರಯುಕ್ತ ನಿರಂತರ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಯಕ್ಷಗಾನ ಕಲಾರಂಗ ಉಡುಪಿ ಸಂಯೋಜನೆಯಲ್ಲಿ ಶುಕ್ರವಾರ ವಿವಿಧ ಅತಿಥಿ ಕಲಾವಿದರ ಕೂಡುವಿಕೆಯಲ್ಲಿ ’ನಳ-ದಮಯಂತಿ’ ಯಕ್ಷಗಾನ ಪ್ರದರ್ಶನ ರಾಜಾಂಗಣದಲ್ಲಿ ನಡೆಯಿತು. ಹಿಮ್ಮೇಳದಲ್ಲಿ ಜನ್ಸಾಲೆ ರಾಘವೇಂದ್ರ ಆಚಾರ್ಯ, ಹಿಲ್ಲೂರು ರಾಮಕೃಷ್ಣ ಹೆಗಡೆ, ಪರಮೇಶ್ವರ ಭಂಡಾರಿ ಕರ್ಕಿ, ಶಶಾಂಕ ಆಚಾರ್ಯ, ಶಿವಾನಂದ ಕೋಟ, ಮುಮ್ಮೇಳದಲ್ಲಿ ಬಳ್ಕೂರು ಕೃಷ್ಣ ಯಾಜಿ(ಋತುಪರ್ಣ), ಕೊಂಡದಕುಳಿ ರಾಮಚಂದ್ರ ಹೆಗಡೆ(ನಳ ಮಹಾರಾಜ), ಅಶೋಕ್ ಭಟ್ ಸಿದ್ಧಾಪುರ(ಶನಿ), ಚಪ್ಪರಮನೆ ಶ್ರೀಧರ ಹೆಗಡೆ(ಹಾಸ್ಯ) ಮೂರೂರು ಸುಬ್ರಹ್ಮಣ್ಯ ಹೆಗಡೆ(ದಮಯಂತಿ), ಮುಗ್ವಾ ಗಣೇಶ್ ನಾಯ್ಕ, ವಿನಯ್ ಬೇರೊಳ್ಳಿ, ನಿರಂಜನ ಜಾಗ್ನಳ್ಳಿ, ದೀಪಕ್ ಕುಂಕಿ ಪಾತ್ರ ನಿರ್ವಹಿಸಿದರು. ಶೀರೂರು ಮಠದ ಹೊರೆಕಾಣಿಕೆ ಸಮಿತಿಯ ಸಂಚಾಲಕ ಸುಪ್ರಸಾದ ಶೆಟ್ಟಿ ಬೈಕಾಡಿ ಸ್ವಾಗತಿಸಿದರು. ಪ್ರದರ್ಶನದ ಬಳಿಕ ಎಲ್ಲ ಕಲಾವಿದರಿಗೆ ಪರ್ಯಾಯ ಶೀರೂರು ಮಠದ ವೇದವರ್ಧನ ತೀರ್ಥ ಸ್ವಾಮೀಜಿ ಅನುಗ್ರಹ ಮಂತ್ರಾ ಕ್ಷತೆ, ಕೃಷ್ಣನ ಮೂರ್ತಿ ನೀಡಿ ಆಶೀರ್ವದಿಸಿದರು.
ಜ.28: ವಿಶೇಷ ಶಾಲಾ ಶಿಕ್ಷಕರು, ಶಿಕ್ಷಕೇತರ ಸಿಬ್ಬಂದಿಗಳಿಂದ ರಾಜ್ಯಮಟ್ಟದ ಸಾರ್ವತ್ರಿಕ ಮುಷ್ಕರ
ಉಡುಪಿ, ಜ.24: ರಾಜ್ಯದ ವಿಶೇಷ ಶಾಲೆಗಳು ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಶಿಶು ಕೇಂದ್ರೀತ ಯೋಜನೆಯಡಿಯಲ್ಲಿ ಅನುದಾನ ಪಡೆಯುತ್ತಿರುವ ವಿಶೇಷ ಶಾಲೆಗಳ ಶಿಕ್ಷಕರು ಹಾಗೂ ಶಿಕ್ಷಕೇತರ ಸಿಬ್ಬಂದಿ ಜ.28ರಂದು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಸಾರ್ವತ್ರಿಕ ಮುಷ್ಕರವನ್ನು ನಡೆಸಲಿದ್ದಾರೆ ಎಂದು ಕರ್ನಾಟಕ ರಾಜ್ಯ ವಿಶೇಷ ಶಿಕ್ಷಕರು ಹಾಗೂ ಶಿಕ್ಷಕೇತರರ ಸಂಘದ ಅಧ್ಯಕ್ಷೆ ಡಾ.ಕಾಂತಿ ಹರೀಶ್ ತಿಳಿಸಿದ್ದಾರೆ. ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕ ರಾಜ್ಯ ವಿಶೇಷ ಶಿಕ್ಷಕರು ಹಾಗೂ ಶಿಕ್ಷಕೇತರರ ಸಂಘ ಹಾಗೂ ಉಡುಪಿ ಜಿಲ್ಲಾ ವಿಶೇಷ ಶಿಕ್ಷಕರು ಹಾಗೂ ಶಿಕ್ಷಕೇತರ ಸಂಘಗಳ ನೇತೃತ್ವದಲ್ಲಿ ನಡೆ ಯುವ ಈ ಮುಷ್ಕರದಲ್ಲಿ ರಾಜ್ಯದ ಎಲ್ಲ 180 ಶಿಶು ಕೇಂದ್ರೀತ ಯೋಜನೆಯಡಿಯಲ್ಲಿ ಅನುದಾನ ಪಡೆಯುತ್ತಿರುವ ವಿಶೇಷ ಶಾಲೆಗಳು ಕೈಜೋಡಿಸಲಿವೆ ಎಂದರು. ಪ್ರಮುಖ ಬೇಡಿಕೆಗಳು: ಸಮಾನ ಕೆಲಸಕ್ಕೆ ಸಮಾನ ವೇತನ ಎಂಬಂತೆ ಶಿಶು ಕೇಂದ್ರೀತ ಯೋಜನೆಯಡಿಯಲ್ಲಿ ಅನುದಾನ ಪಡೆಯುತ್ತಿರುವ ವಿಶೇಷ ಶಾಲೆಗಳ ಶಿಕ್ಷಕ ಹಾಗೂ ಶಿಕ್ಷಕೇತರ ಸಿಬಂದಿಗಳಿಗೆ 1982 ಅನುದಾನಕ್ಕೆ ಬರುವ ಸಿಬ್ಬಂದಿಗಳಿಗೆ ಸಿಗುವ ಎಲ್ಲ ಸೌಲಭ್ಯಗಳನ್ನು ಜಾರಿಗೊಳಿಸಬೇಕು. ಈ ಹಿಂದೆ ವಿಧಾನಸಭಾ ಅಧ್ಯಕ್ಷರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ತೆಗೆದುಕೊಂಡ ನಿರ್ಧಾರದಂತೆ ರಾಜ್ಯದ ವಿಶೇಷ ಶಾಲೆಗಳ ಅನುದಾನವನ್ನು ಶೇ.40ಕ್ಕೇರಿಕೆ ಮಾಡಿ ಸರಕಾರಕ್ಕೆ ನೀಡಿರುವ ಪ್ರಸ್ತಾವನೆಯನ್ನು ಕೂಡಲೇ ಮಂಜೂರು ಮಾಡಬೇಕು. ಸರ್ವೋಚ್ಛ ನ್ಯಾಯಾಲಯ ನೀಡಿರುವ ಆದೇಶದ ಪ್ರಕಾರ ರಾಜ್ಯದ ವಿಶೇಷ ಶಾಲೆಗಳ ವಿಶೇಷ ಶಿಕ್ಷಕರಿಗೆ ಪೂರ್ಣ ಪ್ರಮಾಣದ ಆರ್ಥಿಕ ಸೌಲಭ್ಯ ಒದಗಿಸಬೇಕು. ಶಿಶು ಕೇಂದ್ರೀತ ಸಹಾಯಧನ ಯೋಜನೆಗೆ ಸಂಬಂಧಿಸಿ ದಂತೆ ಇರುವ ಮಾರ್ಗದರ್ಶಿಯನ್ನು ಪ್ರತಿ 5 ವರ್ಷಕ್ಕೊಮ್ಮೆ ಪುನರ್ ರಚಿಸಿ ಆಯ್ದ ವಿಶೇಶ ಶಾಲೆಗಳ ಪರಿಣತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ವಿಶೇಷ ಶಾಲೆಗಳಿಗೆ ಇಲಾಖೆ ನೀಡುವ ಅನುದಾನವನ್ನು ಪ್ರತಿವರ್ಷ ಎರಡು ಕಂತು ಗಳಲ್ಲಿ ನೀಡಬೇಕು ಎಂದು ಅವರು ಆಗ್ರಹಿಸಿದರು. ಸುದ್ದಿಗೋಷ್ಠಿಯಲ್ಲಿ ರಾಜ್ಯ ಸಂಘದ ಗೌರವಾಧ್ಯಕ್ಷೆ ಆಗ್ನೇಸ್ ಕುಂದರ್, ಜಿಲ್ಲಾಧ್ಯಕ್ಷ ಎಚ್.ರವೀಂದ್ರ, ಕಾರ್ಯದರ್ಶಿ ಶಶಿಕಲಾ ಕೋಟ್ಯಾನ್, ಯೂನಸ್, ದಿಲ್ದಾರ್, ಕೌಸರ್ ಉಪಸ್ಥಿತರಿದ್ದರು. ‘ಏಳು ವಿಶೇಷ ಮಕ್ಕಳಿಗೆ ಒಬ್ಬರು ಅನುಪಾತದಂತೆ ಶಿಕ್ಷಕರ ನೇಮಕಾತಿ ಮಾಡಿಕೊಳ್ಳಲಾಗುತ್ತದೆ. ರಾಜ್ಯದಲ್ಲಿರುವ ಶಿಶು ಕೇಂದ್ರೀತ ಯೋಜನೆಯಡಿ ಯಲ್ಲಿ ಅನುದಾನ ಪಡೆಯುತ್ತಿರುವ 180 ವಿಶೇಷ ಶಾಲೆಗಳಲ್ಲಿ 3500 ಶಿಕ್ಷಕರು ಹಾಗೂ 2500ರೂ. ಶಿಕ್ಷಕೇತರರು ದುಡಿಯುತ್ತಿದ್ದು, ಇವರಲ್ಲಿ ಶಿಕ್ಷಕರಿಗೆ 20ಸಾವಿರ ರೂ., ಸಹಾಯಕರಿಗೆ 13ಸಾವಿರ ರೂ., ಅಡುಗೆ ಕೆಲಸದವರಿಗೆ 12ಸಾವಿರ ರೂ. ಗೌರವಧನ ನೀಡಲಾಗುತ್ತದೆ. ಆದರೆ ಸರಕಾರ ಅನುದಾನವು ಸಮಯಕ್ಕೆ ಸರಿಯಾಗಿ ಬಾರದ ಕಾರಣ ಇವರಿಗೆ ವೇತನ ವಿಳಂಬವಾಗುತ್ತಿದೆ’ -ಡಾ.ಕಾಂತಿ ಹರೀಶ್, ರಾಜ್ಯಾಧ್ಯಕ್ಷರು.
ರಾಜ್ಯದಲ್ಲಿದ್ದಾರೆ ಒಟ್ಟು 10,365 ಟ್ರಾನ್ಸ್ ಜೆಂಡರ್: ಲಿಂಗತ್ವ ಅಲ್ಪಸಂಖ್ಯಾತರ ಸಮೀಕ್ಷಾ ವರದಿ ಸರ್ಕಾರಕ್ಕೆ ಸಲ್ಲಿಕೆ
ಬೆಂಗಳೂರು: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಬಹುನಿರೀಕ್ಷಿತ 2025-26ನೇ ಸಾಲಿನ ಲಿಂಗತ್ವ ಅಲ್ಪಸಂಖ್ಯಾತರ (ಟ್ರಾನ್ಸ್ ಜೆಂಡರ್) ಮೂಲ ಹಂತದ ಸಮೀಕ್ಷಾ ವರದಿ ರಾಜ್ಯ ಸರ್ಕಾರಕ್ಕೆ ಸಲ್ಲಿಕೆಯಾಗಿದೆ. ರಾಜ್ಯದಲ್ಲಿ ಪ್ರಸ್ತುತ ಲಿಂಗತ್ವ ಅಲ್ಪಸಂಖ್ಯಾತರ ಅಭಿವೃದ್ಧಿಗಾಗಿ ಹಾಗೂ ಅವರ ಹಕ್ಕುಗಳ ರಕ್ಷಣೆಗಾಗಿ ಇರುವ ಕಾರ್ಯಕ್ರಮಗಳು, ಲಿಂಗತ್ವ ಅಲ್ಪಸಂಖ್ಯಾತರ ಪುನರ್ವಸತಿಗಾಗಿ
ರಾಜ್ಯಪಾಲರಿಗೆ ಅಗೌರವ ಆರೋಪ: ಬಿ.ಕೆ ಹರಿಪ್ರಸಾದ್, ಎಸ್. ರವಿ ಅಮಾನತಿಗೆ ಬಿಜೆಪಿ ಆಗ್ರಹ
ಮಂಗಳೂರು : ಜಂಟಿ ಅಧಿವೇಶನನ್ನು ಉದ್ದೇಶಿಸಿ ರಾಜ್ಯಪಾಲರು ಆರಂಭ ಹಾಗೂ ಕೊನೆಯ ಸಾಲು ಓದಿದರೆ ಇಡೀ ಭಾಷಣವನ್ನೇ ಓದಿದಂತೆ. ಇದು ಸಂವಿಧಾನಾತ್ಮಕವಾಗಿ ಸರಿಯಾಗಿಯೇ ಇದೆ. ಆದರೆ ಸಾಂವಿಧಾನಿಕ ಹುದ್ದೆಯ ರಾಜ್ಯಪಾಲರಿಗೆ ಪರಿಷತ್ ಸದಸ್ಯರಾದ ಬಿ.ಕೆ.ಹರಿಪ್ರಸಾದ್ ಮತ್ತು ಎಸ್. ರವಿ ಅಗೌರವ ತೋರಿದ್ದು, ಅವರ ವಿರುದ್ಧ ಸ್ಪೀಕರ್ ಅಮಾನತಿನ ಕ್ರಮ ಕೈಗೊಳ್ಳಬೇಕು ಎಂದು ವಿಧಾನ ಪರಿಷತ್ ಸದಸ್ಯ ಪ್ರತಾಪ್ಸಿಂಹ ನಾಯಕ್ ಆಗ್ರಹಿಸಿದ್ದಾರೆ. ಮಂಗಳೂರಿನ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯಪಾಲರು ಸದನಕ್ಕೆ ಆಗಮಿಸಿ ತೆರಳುವವರೆಗೆ ಅವರಿಗೆ ಸಾಂವಿಧಾನಿಕ ಗೌರವ ನೀಡಬೇಕಾದ್ದು ಶಾಸಕರ ಆದ್ಯ ಕರ್ತವ್ಯ. ಅದರ ಬದಲು ಹಿರಿಯ ಅನುಭವಿ ಸದಸ್ಯರಾದ ಬಿ.ಕೆ.ಹರಿಪ್ರಸಾದ್ ಮತ್ತು ರವಿ ಅವರು ರಾಜ್ಯಪಾಲರನ್ನೇ ತಡೆಯಲು ಮುಂದಾಗಿ ಹೈಡ್ರಾಮಾ ಸೃಷ್ಟಿಸಿರುವುದು ಸರಿಯಲ್ಲ. ಅವರಾಗಿಯೇ ಅವರ ಅಂಗಿ ಹರಿದುಕೊಂಡು ಬಳಿಕ ವಿಪಕ್ಷ ಸದಸ್ಯರ ಮೇಲೆ ಆರೋಪಿಸಿದ್ದಾರೆ. ಈ ಬಗ್ಗೆಯೂ ಸ್ಪೀಕರ್ ತನಿಖೆ ನಡೆಸಬೇಕಾಗಿದೆ ಎಂದು ಆಗ್ರಹಿಸಿದರು. ಬಿ.ಕೆ.ಹರಿಪ್ರಸಾದ್ ಮತ್ತು ರವಿ ಅವರ ವರ್ತನೆ ವಿರುದ್ಧ ಸ್ಪೀಕರ್ಗೆ ವಿಪಕ್ಷ ಬಿಜೆಪಿ ದೂರು ನೀಡಿದೆ. ಈ ಹಿನ್ನೆಲೆಯಲ್ಲಿ ಸದನದ ನೀತಿ ನಿರೂಪಣೆ ಸಮಿತಿಗೆ ದೂರನ್ನು ಸ್ಪೀಕರ್ ವರ್ಗಾಯಿಸಿದ್ದಾರೆ. ಈಗ ಆಡಳಿತ ಪಕ್ಷದ ಸಚೇತಕರು ಈ ಬಗ್ಗೆ ಮರು ಪರಿಶೀಲಿಸುವಂತೆ ಸ್ಪೀಕರ್ ಅವರನ್ನು ಕೋರಿದ್ದು, ಮಂಗಳವಾರ ತೀರ್ಮಾನವನ್ನು ತಿಳಿಸುವುದಾಗಿ ಸ್ಪೀಕರ್ ಹೇಳಿದ್ದಾರೆ. ಆದರೆ ಯಾವುದೇ ಕಾರಣಕ್ಕೂ ನೀತಿ ನಿರೂಪಣೆ ಸಮಿತಿಗೆ ನೀಡಿರುವುದನ್ನು ಮರು ಪರಿಶೀಲಿಸಿ ವಾಪಸ್ ಪಡೆಯಲು ಸ್ಪೀಕರ್ ಮುಂದಾಗಬಾರದು. ಸಚೇತಕರ ಕೋರಿಕೆಯನ್ನು ಸರಾಸಗಟ ತಿರಸ್ಕರಿಸಬೇಕು. ಮಾತ್ರವಲ್ಲ ಹರಿಪ್ರಸಾದ್ರ ಅಂಗಿ ಹರಿದ ಬಗ್ಗೆ ತನಿಖೆ ನಡೆಸಬೇಕು ಎಂದು ಪ್ರತಾಪ್ಸಿಂಹ ನಾಯಕ್ ಒತ್ತಾಯಿಸಿದರು. ಪ್ರಸಕ್ತ ರಾಜ್ಯದಲ್ಲಿ ಮುಖ್ಯಮಂತ್ರಿ ಅಧಿಕಾರ ಹಸ್ತಾಂತರ ಬಗ್ಗೆ ಚರ್ಚೆ ನಡೆಯುತ್ತಿದೆ. ಅಲ್ಲದೆ ಸರ್ಕಾರದ ಆಡಳಿತ ವೈಫಲ್ಯದ ಬಗ್ಗೆಯೂ ಆರೋಪಗಳು ಕೇಳಿಬರುತ್ತಿವೆ. ಹೀಗಾಗಿ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಜಿ ರಾಮ್ ಜೀ ಮಸೂದೆ ವಿಚಾರವನ್ನು ವಿವಾದಕ್ಕೆ ಬಳಸಿ ಜನತೆಯ ಗಮನ ಬೇರೆ ಕಡೆಗೆ ಸೆಳೆಯುವ ಉದ್ದೇಶವನ್ನು ರಾಜ್ಯ ಸರ್ಕಾರ ಹಾಗೂ ಕಾಂಗ್ರೆಸ್ ಹೊಂದಿದೆ. ಈ ವಿಶೇಷ ಅಧಿವೇಶನದಲ್ಲಿ ಆಡಳಿತ ಶಾಸಕರು ಮಾತ್ರವಲ್ಲ ಸಚಿವರು ಕೂಡ ವಿಪಕ್ಷಗಳಿಗೆ ಮಾತನಾಡಲು ಸದನದಲ್ಲಿ ಅವಕಾಶ ನೀಡುತ್ತಿಲ್ಲ. ಇದೇ ರೀತಿ ಗದ್ದಲದಲ್ಲೇ ಅಧಿವೇಶನವನ್ನು ಮುಕ್ತಾಯಗೊಳಿಸುವ ಇರಾದೆಯನ್ನು ಆಡಳಿತ ಕಾಂಗ್ರೆಸ್ ಹೊಂದಿದಂತಿದೆ ಎಂದು ಪ್ರತಾಪ್ಸಿಂಹ ನಾಯಕ್ ಹೇಳಿದರು. ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು, ಮುಖಂಡರಾದ ರಾಜಗೋಪಾಲ ರೈ, ಸುಜಿತ್ ಪ್ರತಾಪ್, ರವೀಂದ್ರ ಶೆಟ್ಟಿ ಉಳಿದೊಟ್ಟು, ಶೋಭೇಂದ್ರ ಸಸಿಹಿತ್ಲು, ವಸಂತ ಪೂಜಾರಿ ಉಪಸ್ಥಿತರಿದ್ದರು.
ಬೆಂಗಳೂರು: ರಾಜ್ಯದ ಸಾವಿರಾರು ಸರ್ಕಾರಿ ಶಾಲಾ ಶಿಕ್ಷಕರು ದೀರ್ಘಕಾಲದಿಂದ ನಿರೀಕ್ಷಿಸುತ್ತಿದ್ದ ಬಡ್ತಿ ಪ್ರಕ್ರಿಯೆಯಲ್ಲಿ ಮಹತ್ವದ ಬದಲಾವಣೆಯಾಗುವ ಕಾಲ ಸನ್ನಿಹಿತವಾಗಿದೆ. ರಾಜ್ಯ ಸರ್ಕಾರವು ಶಿಕ್ಷಕರ ಬಡ್ತಿ ನಿಯಮಗಳನ್ನು ಪರಿಷ್ಕರಿಸಲು ನಿರ್ಧರಿಸಿದ್ದು, ಈ ಮೂಲಕ ಪ್ರಾಥಮಿಕ ಶಾಲಾ ಶಿಕ್ಷಕರು ಮತ್ತು ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಮುಖ್ಯ ಶಿಕ್ಷಕರ ಹುದ್ದೆಗೆ ಏರಲು ಸಮಾನ ಅವಕಾಶ ಕಲ್ಪಿಸಲು ಮುಂದಾಗಿದೆ. ಈ ಸಂಬಂಧ
ರೊಸಾರಿಯೊ ಕ್ಯಾಥೆಡ್ರಲ್ನಲ್ಲಿ ಎಕ್ಯುಮೆನಿಕಲ್ ಕನ್ನಡ ಪ್ರಾರ್ಥನಾ ಸೇವೆ
ಮಂಗಳೂರು: ಬೋಳಾರದ ರೊಸಾರಿಯೊ ಕ್ಯಾಥೆಡ್ರಲ್, ಜೆಪ್ಪುವಿನ ಸಿಎಸ್ಐ ಕಾಂತಿ ಚರ್ಚ್ ಹಾಗೂ ಮಂಗಳೂರಿನ ಸಿಎಸ್ಐ ಸೇಂಟ್ ಪೌಲ್ಸ್ ಚರ್ಚ್ ಜಂಟಿಯಾಗಿ ರೊಸಾರಿಯೊ ಕ್ಯಾಥೆಡ್ರಲ್ನಲ್ಲಿ ಎಕ್ಯುಮೆನಿಕಲ್ ಕನ್ನಡ ಪ್ರಾರ್ಥನಾ ಸೇವೆಯನ್ನು ಆಯೋಜಿಸಿತು. ರೊಜಾರಿಯೊ ಕ್ಯಾಥೆಡ್ರಲ್ ನ ಧರ್ಮಗುರುಗಳಾದ ಫಾ. ವಲೇರಿಯನ್ ಡಿಸೋಜಾ ಸಭೆಯನ್ನು ಸ್ವಾಗತಿಸಿ, ಜೆಪ್ಪುವಿನ ಸಿಎಸ್ಐ ಕಾಂತಿ ಚರ್ಚ್ನ ಪಾಸ್ಟರ್ ಗೇಬ್ರಿಯಲ್ ರೋನಿತ್, ಸಿಎಸ್ಐ ಸೇಂಟ್ ಪೌಲ್ಸ್ ಚರ್ಚ್ನ ವಂ| ಬಿನು ಸಿ. ಜಾನ್ ಹಾಗೂ ರೊಸಾರಿಯೊ ಕ್ಯಾಥೆಡ್ರಲ್ನ ಫಾ. ವಲೇರಿಯನ್ ಫೆರ್ನಾಂಡಿಸ್ ಅವರೊಂದಿಗೆ ಪ್ರಾರ್ಥನಾ ಸೇವೆಯನ್ನು ನಡೆಸಿಕೊಟ್ಟರು. ಕ್ರಿಶ್ಚಿಯನ್ ಸಮುದಾಯಗಳ ನಡುವಿನ ಏಕತೆ ಮತ್ತು ಸಾಮರಸ್ಯವನ್ನು ಸಂಕೇತಿಸುವ ದೀಪ ಬೆಳಗಿಸುವುದರೊಂದಿಗೆ ಪ್ರಾರ್ಥನಾ ಸೇವೆಗೆ ಉದ್ಘಾಟನೆ ನೀಡಲಾಯಿತು. ರೊಸಾರಿಯೊ ಕ್ಯಾಥೆಡ್ರಲ್ ಚರ್ಚ್ ನ ಪಾಲನಾ ಮಂಡಳಿಯ ಉಪಾಧ್ಯಕ್ಷ ಸಿರಿಲ್ ರೊಸಾರಿಯೊ, ಕಾರ್ಯದರ್ಶಿ ಐಡಾ ಫುರ್ಟಾಡೊ, 21 ಆಯೋಗಗಳ ಸಂಯೋಜಕ ಆಲ್ಡ್ರಿನ್ ವಾಜ್, ಎಕ್ಯುಮೆನಿಸಂ ಆಯೋಗದ ಸಂಚಾಲಕಿ ಮೇರಿ ಎ. ಡಿಸೋಜಾ ಸೇರಿದಂತೆ ಬೋಳಾರದ ರೊಸಾರಿಯೊ ಕ್ಯಾಥೆಡ್ರಲ್, ಜೆಪ್ಪುವಿನ ಸಿಎಸ್ಐ ಕಾಂತಿ ಚರ್ಚ್ ಮತ್ತು ಮಂಗಳೂರಿನ ಸಿಎಸ್ಐ ಸೇಂಟ್ ಪೌಲ್ಸ್ ಚರ್ಚ್ನ ಪಾಲನಾ ಮಂಡಳಿಯ ಸದಸ್ಯರು ಪ್ರಾರ್ಥನಾ ಸೇವೆಯಲ್ಲಿ ಭಾಗವಹಿಸಿದ್ದರು.
2024-25ರಲ್ಲಿ 71 ದೇಶಭ್ರಷ್ಟರು ವಿದೇಶಗಳಲ್ಲಿ ಪತ್ತೆ; ಕಳೆದ 12 ವರ್ಷಗಳಲ್ಲಿ ಅತ್ಯಂತ ಹೆಚ್ಚು: ವರದಿ
ಹೊಸದಿಲ್ಲಿ: ವಿವಿಧ ಅಪರಾಧ ಪ್ರಕರಣಗಳಲ್ಲಿ ಭಾರತಕ್ಕೆ ಬೇಕಾಗಿರುವ 71 ದೇಶಭ್ರಷ್ಟರು 2024-25ರಲ್ಲಿ ವಿದೇಶಗಳಲ್ಲಿ ಪತ್ತೆಯಾಗಿದ್ದು, ಇದು ಕಳೆದ 12 ವರ್ಷಗಳಲ್ಲಿ ಅತ್ಯಂತ ಹೆಚ್ಚು ಎಂದು ಸರಕಾರಿ ದತ್ತಾಂಶಗಳು ತೋರಿಸಿವೆ ಎಂದು thehindu.com ವರದಿ ಮಾಡಿದೆ. ಸಿಬ್ಬಂದಿ ಮತ್ತು ತರಬೇತಿ ಇಲಾಖೆಯ (ಡಿಒಪಿಟಿ) 2024-25ರ ವಾರ್ಷಿಕ ವರದಿಯ ಪ್ರಕಾರ ಸಿಬಿಐ ಭಾರತಕ್ಕೆ ಬೇಕಾಗಿರುವ 71 ಜನರು ವಿದೇಶಗಳಲ್ಲಿರುವುದನ್ನು ಪತ್ತೆ ಹಚ್ಚಿದೆ ಮತ್ತು ಆ ವರ್ಷ 27 ದೇಶಭ್ರಷ್ಟರು ಭಾರತಕ್ಕೆ ಮರಳಿದ್ದಾರೆ. ಹಿಂದಿನ ವರ್ಷಗಳ ಡಿಒಪಿಟಿ ವರದಿಗಳ ಪ್ರಕಾರ ಕಳೆದ ದಶಕದಲ್ಲಿ ವಿದೇಶಗಳಲ್ಲಿ ಪತ್ತೆಯಾಗಿದ್ದ ದೇಶಭ್ರಷ್ಟರ ಸಂಖ್ಯೆ 15 (2013)ಮತ್ತು 42 (2015)ರ ನಡುವೆ ಇತ್ತು. ಕಳೆದ ವರ್ಷ ಇಂತಹವರ ಸಂಖ್ಯೆ 71ಕ್ಕೇರಿದೆ. ವಾರ್ಷಿಕವಾಗಿ ಭಾರತಕ್ಕೆ ಹಸ್ತಾಂತರಿಸಲ್ಪಟ್ಟ ಅಥವಾ ಗಡಿಪಾರುಗೊಂಡ ದೇಶಭ್ರಷ್ಟರ ಸಂಖ್ಯೆ 5 ಮತ್ತು 29ರ ನಡುವೆ ಇದ್ದು, ಅತ್ಯಧಿಕ ಸಂಖ್ಯೆಯ ದೇಶಭ್ರಷ್ಟರನ್ನು 2023ರಲ್ಲಿ ಭಾರತಕ್ಕೆ ಒಪ್ಪಿಸಲಾಗಿತ್ತು. ವಿದೇಶಾಂಗ ಸಚಿವಾಲಯವು ಡಿ.19,2025ರಂದು ಸಂಸತ್ತಿನಲ್ಲಿ ನೀಡಿದ ಉತ್ತರದ ಪ್ರಕಾರ ಭಾರತವು 48 ದೇಶಗಳೊಂದಿಗೆ ಹಸ್ತಾಂತರ ಒಪ್ಪಂದಗಳು ಮತ್ತು 12 ದೇಶಗಳೊಂದಿಗೆ ಹಸ್ತಾಂತರ ವ್ಯವಸ್ಥೆಗಳನ್ನು ಹೊಂದಿದೆ. ಭಾರತವು ಭ್ರಷ್ಟಾಚಾರದ ವಿರುದ್ಧ ವಿಸ್ವಸಂಸ್ಥೆಯ ನಿರ್ಣಯದಂತಹ ಬಹುಪಕ್ಷೀಯ ನಿರ್ಣಯಗಳೊಂದಿಗೂ ಗುರುತಿಸಿಕೊಂಡಿದೆ. ಇವು ಈ ನಿರ್ಣಯಗಳೊಂದಿಗೆ ಗುರುತಿಸಿಕೊಂಡಿರುವ ಇತರ ದೇಶಗಳಿಂದ ದೇಶಭ್ರಷ್ಟರನ್ನು ಮರಳಿ ತರಲು ಕಾನೂನು ಬೆಂಬಲವಾಗಿ ಕಾರ್ಯ ನಿರ್ವಹಿಸುತ್ತವೆ. ಕಳೆದ ಐದು ವರ್ಷಗಳಲ್ಲಿ ಭಾರತವು 137 ಹಸ್ತಾಂತರ ಮನವಿಗಳನ್ನು ವಿದೇಶಗಳಿಗೆ ಸಲ್ಲಿಸಿದೆ. 134 ಮನವಿಗಳು ಸ್ವೀಕೃತವಾಗಿದ್ದರೂ ಈ ಪೈಕಿ 125 ಮನವಿಗಳು ಇನ್ನೂ ವಿದೇಶಿ ಸರಕಾರಗಳ ಬಳಿ ಬಾಕಿಯುಳಿದಿವೆ. ಮೂರು ಮನವಿಗಳು ತಿರಸ್ಕೃತಗೊಂಡಿವೆ ಎಂದು ವಿದೇಶಾಂಗ ಸಚಿವಾಲಯವು ತಿಳಿಸಿತ್ತು. ಕಳೆದ ಐದು ವರ್ಷಗಳಲ್ಲಿ ದೇಶದಿಂದ ಪರಾರಿಯಾಗಿದ್ದ 25 ಜನರನ್ನು ಯಶಸ್ವಿಯಾಗಿ ಭಾರತಕ್ಕೆ ಹಸ್ತಾಂತರಿಸಿಕೊಳ್ಳಲಾಗಿದೆ ಎಂದೂ ಅದು ತಿಳಿಸಿದೆ. ಸಿಬಿಐನ ಜಾಗತಿಕ ಕಾರ್ಯಾಚರಣೆಗಳ ಕೇಂದ್ರವು ವಿದೇಶಿ ಕಾನೂನು ಜಾರಿ ಸಂಸ್ಥೆಗಳ ಸಹಕಾರದೊಂದಿಗೆ ಇಂಟರ್ಪೋಲ್ ಮೂಲಕ ಅಪೇಕ್ಷಿತ ಕ್ರಿಮಿನಲ್ಗಳು ಮತ್ತು ದೇಶಭ್ರಷ್ಟರನ್ನು ಪತ್ತೆ ಹಚ್ಚುತ್ತದೆ. ಅಪೇಕ್ಷಿತ ಅಪರಾಧಿಗಳು ಇರುವ ಸ್ಥಳವನ್ನು ಖಚಿತಪಡಿಸಿಕೊಂಡ ಬಳಿಕ ಅವರನ್ನು ಭಾರತಕ್ಕೆ ಮರಳಿ ಕರೆತರಲು ಸಿಬಿಐ ಸಂಬಂಧಿತ ಕಾನೂನು ಜಾರಿ ಸಂಸ್ಥೆಗಳು,ಸಂಬಂಧಿತ ದೇಶಗಳಲ್ಲಿಯ ಇಂಟರ್ಪೋಲ್ ನ್ಯಾಷನಲ್ ಸೆಂಟ್ರಲ್ ಬ್ಯೂರೋ,ಗೃಹ ಮತ್ತು ವಿದೇಶಾಂಗ ವ್ಯವಹಾರಗಳ ಸಚಿವಾಲಯಗಳೊಂದಿಗೆ ಸಮನ್ವಯ ಸಾಧಿಸುತ್ತದೆ ಎಂದು ವರದಿಯು ತಿಳಿಸಿದೆ. 2024-25ರ ಅವಧಿಯಲ್ಲಿ 74 ಲೆಟರ್ಸ್ ರೊಗೇಟರಿ ಅಥವಾ ನ್ಯಾಯಾಂಗ ವಿನಂತಿಗಳನ್ನು ವಿದೇಶಿ ಸರಕಾರಗಳಿಗೆ ಕಳುಹಿಸಲಾಗಿತ್ತು. ಈ ಪೈಕಿ 54 ಸಿಬಿಐ ಪ್ರಕರಣಗಳಿಗೆ ಹಾಗೂ 20 ರಾಜ್ಯ ಮತ್ತು ಕೇಂದ್ರ ಕಾನೂನು ಜಾರಿ ಸಂಸ್ಥೆಗಳಿಗೆ ಸಂಬಂಧಿಸಿದ್ದವು. 2024-25ರಲ್ಲಿ 42 ನ್ಯಾಯಾಂಗ ವಿನಂತಿಗಳು ಸಂಪೂರ್ಣವಾಗಿ ಕಾರ್ಯಗತಗೊಂಡಿದ್ದವು. 2025,ಮಾ.31ಕ್ಕೆ ಇತರ ದೇಶಗಳಲ್ಲಿ ಒಟ್ಟು 533 ನ್ಯಾಯಾಂಗ ಮನವಿಗಳು ಬಾಕಿಯಿದ್ದವು ಎಂದೂ ವರದಿ ತಿಳಿಸಿದೆ.
ʼವಿಬಿ-ಜಿ ರಾಮ್ ಜಿʼ ಜಾರಿ ಮಾಡಲು ನಾವು ಬಿಡುವುದಿಲ್ಲ: ಮಲ್ಲಿಕಾರ್ಜುನ ಖರ್ಗೆ
ಹುಬ್ಬಳ್ಳಿ: 42,345 ಮನೆಗಳ ಹಸ್ತಾಂತರ ಕಾರ್ಯಕ್ರಮ
ಹುಬ್ಬಳ್ಳಿಯಲ್ಲಿ ಮನೆ ಹಂಚಿಕೆ ಕಾರ್ಯಕ್ರಮ: 1.35 ಲಕ್ಷ ಮಂದಿಗೆ ರುಚಿಕರ ಊಟದ ವ್ಯವಸ್ಥೆ
ಹುಬ್ಬಳ್ಳಿ: ಕರ್ನಾಟಕ ಕೊಳಚೆ ಅಭಿವೃದ್ಧಿ ಮಂಡಳಿಯಿಂದ ಹುಬ್ಬಳ್ಳಿಯಲ್ಲಿ ಆಯೋಜಿಸಿರುವ ಮನೆ ಹಂಚಿಕೆಯ ಕಾರ್ಯಕ್ರಮವು ಸರಿಸುಮಾರು ಎರಡು ಲಕ್ಷಕ್ಕೂ ಅಧಿಕ ಜನಸ್ತೋಮ ಸಾಕ್ಷಿಯಾಗಿದ್ದು, ಕಾರ್ಯಕ್ರಮಕ್ಕೆ ಆಗಮಿಸಿದ ಸಾರ್ವಜನಿಕರಿಗೆ ಕಲ್ಪಿಸಲಾದ ಆಹಾರ ವ್ಯವಸ್ಥೆ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಭಾರೀ ಜನಸಂದಣಿ ನಡುವೆಯೂ ಬಂದವರಿಗೆ ರುಚಿಕರವಾದ, ಶುಚಿ ಹಾಗೂ ಶಿಸ್ತುಬದ್ಧ ಆಹಾರ ಉಣಬಡಿಸಲಾಯಿತು. ಇದನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ ಹಿನ್ನೆಲೆ 1.35 ಲಕ್ಷಕ್ಕೂ
ʼಹೋಂವರ್ಕ್ʼ ಮಾಡಿಲ್ಲ ಎಂದು ಪುತ್ರಿಯನ್ನೇ ಹತ್ಯೆಗೈದ ತಂದೆ!
ಫರೀದಾಬಾದ್: ಹೋಂವರ್ಕ್ ಮಾಡದಿದ್ದಕ್ಕೆ ವ್ಯಕ್ತಿಯೋರ್ವ ತನ್ನ ನಾಲ್ಕು ವರ್ಷದ ಪುತ್ರಿಯನ್ನೇ ಥಳಿಸಿ ಹತ್ಯೆಗೈದ ಘಟನೆ ಫರೀದಾಬಾದ್ ನಲ್ಲಿ ನಡೆದಿದೆ ಎಂದು ಶುಕ್ರವಾರ ಪೊಲೀಸರು ತಿಳಿಸಿದ್ದಾರೆ. ಈ ಕುರಿತು ಆರೋಪಿಯ ಪತ್ನಿ ನೀಡಿದ ದೂರನ್ನು ಆಧರಿಸಿ, ಪೊಲೀಸರು ಆತನನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಕೃಷ್ಣ ಜೈಸ್ವಾಲ್ (31) ಎಂದು ಗುರುತಿಸಲಾಗಿದೆ. ದೈನಂದಿನ ಮನೆಪಾಠದಲ್ಲಿ ತನ್ನ ಪುತ್ರಿಯು 50ರ ಸಂಖ್ಯೆಯವರೆಗೆ ಬರೆಯಲು ವಿಫಲವಾಗಿದ್ದರಿಂದ ಕುಪಿತಗೊಂಡಿರುವ ಆರೋಪಿ ಕೃಷ್ಣ ಜೈಸ್ವಾಲ್ ಆಕೆಯನ್ನು ಮನ ಬಂದಂತೆ ಥಳಿಸಿದ್ದು, ಆಕೆ ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ಬಳಿಕ, ಈ ಕುರಿತು ಬಾಲಕಿಯ ತಾಯಿ ನೀಡಿದ ದೂರನ್ನು ಆಧರಿಸಿ ಸೆಕ್ಟರ್ 58 ಠಾಣೆಯ ಪೊಲೀಸರು ಆತನನ್ನು ಬಂಧಿಸಿದ್ದಾರೆ. ಆರೋಪಿಯನ್ನು ನಗರ ನ್ಯಾಯಾಲಯವೊಂದರ ಮುಂದೆ ಹಾಜರುಪಡಿಸಲಾಗಿದ್ದು, ಆತನನ್ನು ಒಂದು ದಿನದ ಮಟ್ಟಿಗೆ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ ಎಂದು PTI ಸುದ್ದಿ ಸಂಸ್ಥೆ ವರದಿ ಮಾಡಿದೆ. ಉತ್ತರ ಪ್ರದೇಶದ ಖೇರಾಟಿಯಾ ಗ್ರಾಮದ ನಿವಾಸಿಯಾದ ಕೃಷ್ಣ ಜೈಸ್ವಾಲ್, ಫರೀದಾಬಾದ್ ನ ಬಾಡಿಗೆ ಮನೆಯೊಂದರಲ್ಲಿ ತನ್ನ ಕುಟುಂಬದೊಂದಿಗೆ ವಾಸಿಸುತ್ತಿದ್ದ ಎನ್ನಲಾಗಿದೆ. ಕೃಷ್ಣ ಜೈಸ್ವಾಲ್ ಹಾಗೂ ಆತನ ಪತ್ನಿಯಿಬ್ಬರೂ ಖಾಸಗಿ ಕಂಪನಿಗಳಲ್ಲಿ ಉದ್ಯೋಗಿಗಳಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಪತ್ನಿಯು ಉದ್ಯೋಗಕ್ಕೆ ತೆರಳಿದಾಗ, ಬೆಳಗ್ಗೆ ಮನೆಯಲ್ಲೇ ಉಳಿದುಕೊಳ್ಳುತ್ತಿದ್ದ ಕೃಷ್ಣ ಜೈಸ್ವಾಲ್, ತನ್ನ ಮಕ್ಕಳನ್ನು ನೋಡಿಕೊಳ್ಳುತ್ತಿದ್ದ ಹಾಗೂ ತನ್ನ ಪುತ್ರಿಯ ವ್ಯಾಸಂಗದ ಮೇಲೆ ನಿಗಾ ವಹಿಸುತ್ತಿದ್ದ ಎನ್ನಲಾಗಿದೆ. ಜನವರಿ 21ರಂದು ಈ ಘಟನೆ ನಡೆದಿದ್ದು, ಕೃಷ್ಣ ಜೈಸ್ವಾಲ್ ತನ್ನ ಪುತ್ರಿಗೆ ಒಂದರಿಂದ 50ರವರೆಗೆ ಅಂಕಿಗಳನ್ನು ಬರೆಯುವಂತೆ ಸೂಚಿಸಿದ್ದಾನೆ. ಆದರೆ, ಬಾಲಕಿಗೆ ಬರೆಯಲು ಸಾಧ್ಯವಾಗದಿದ್ದಾಗ ಕೋಪಗೊಂಡ ಆತ, ಪುತ್ರಿಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ ಎಂದು ಹೇಳಲಾಗಿದೆ. ಪತ್ನಿಯು ಸಂಜೆ ಮನೆಗೆ ಮರಳಿದಾಗ ಈ ಘಟನೆ ಬೆಳಕಿಗೆ ಬಂದಿದ್ದು, ಮನೆಯಲ್ಲಿ ಬಾಲಕಿಯು ಮೃತ ಸ್ಥಿತಿಯಲ್ಲಿ ಬಿದ್ದಿರುವುದು ಪತ್ತೆಯಾಗಿದೆ. ತಕ್ಷಣವೇ ಕೃಷ್ಣ ಜೈಸ್ವಾಲ್ ಪತ್ನಿ ಈ ಕುರಿತು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. “ಈ ಸಂಬಂಧ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಮುಂದಿನ ತನಿಖೆಗಾಗಿ ಆರೋಪಿಯನ್ನು ಪೊಲೀಸರ ವಶಕ್ಕೆ ಪಡೆಯಲಾಗಿದೆ. ಮರಣೋತ್ತರ ಪರೀಕ್ಷೆಯ ನಂತರ ಮೃತದೇಹವನ್ನು ಕುಟುಂಬದ ಸದಸ್ಯರಿಗೆ ಹಸ್ತಾಂತರಿಸಲಾಗಿದೆ” ಎಂದು ಫರೀದಾಬಾದ್ ಪೊಲೀಸರೊಬ್ಬರು ತಿಳಿಸಿದ್ದಾರೆ.
ಸಿರುಗುಪ್ಪ | ಮತದಾರರ ಪಟ್ಟಿ ಪರಿಷ್ಕರಣೆ ನಿರಂತರ ಪ್ರಕ್ರಿಯೆಯಾಗಬೇಕು : ರಾಜೇಶ್
ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯಕ್ರಮ
ಬೆಂಗಳೂರಿನ ಗದ್ದಲ ತೊರೆದು ಈಶಾನ್ಯ ರಾಜ್ಯದ ಪ್ರಕೃತಿ ಮಡಿಲಿನ ಹಳ್ಳಿಗೆ ಹೋದ ಉದ್ಯಮಿ! ಈಗ ಅಲ್ಲಿಂದಲೇ ಕೆಲಸ!
ಬೆಂಗಳೂರಿನ ಉದ್ಯಮಿ ಸೌಮ್ಯ ಸಕ್ಸೇನಾ ಅವರು 24 ಗಂಟೆಗಳ ಪ್ರಯಾಣದ ನಂತರ ಈಶಾನ್ಯ ಭಾರತದ ಒಂದು ಪುಟ್ಟ ಹಳ್ಳಿಗೆ ತಲುಪಿದ್ದಾರೆ. ಅಲ್ಲಿನ ಜನರು ಊಟ ಹಂಚಿಕೊಂಡು ತಿನ್ನುತ್ತಾರೆ, ಪ್ರತಿಯೊಂದು ಮನೆಯಲ್ಲೂ ಸ್ವಂತ ಕೆರೆ ಇದೆ, ಮತ್ತು ಹೊರಗಿನವರಿಗೆ ಚಹಾ/ಕಾಫಿಗೆ ಆಹ್ವಾನಿಸುತ್ತಾರೆ. ಈ ಅನುಭವ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
Donald Trump: ಕೆನಡಾ ವಿರುದ್ಧ ಮತ್ತೆ ಗುಡುಗಿದ ಡೊನಾಲ್ಡ್ ಟ್ರಂಪ್, ಚೀನಾ ವಿಚಾರ ಪ್ರಸ್ತಾಪ ಮಾಡಿದ್ದು ಏಕೆ?
ಅಮೆರಿಕ ಅಧ್ಯಕ್ಷರ ಕೋಪ ಕೆನಡಾ ಮೇಲೆ ನೆಟ್ಟಿದ್ದು, ಪದೇ ಪದೇ ಅಮೆರಿಕದ ನೇರೆ ದೇಶದ ನಿರ್ಧಾರಗಳ ಬಗ್ಗೆ ಬೇಸರ ಹೊರ ಹಾಕುತ್ತಿದ್ದಾರೆ. ಹಲವು ದಿನಗಳಿಂದ ಡೊನಾಲ್ಡ್ ಟ್ರಂಪ್ ಮತ್ತು ಕೆನಡಾ ಮಧ್ಯೆ ಕಿರಿಕ್ ನಡೆಯುತ್ತಲೇ ಇದೆ. ಯಾವಾಗ ಟ್ರಂಪ್ ಅವರು ಕೆನಡಾ ಕೂಡ ಅಮೆರಿಕದ ಭಾಗ ಎನ್ನುತ್ತಾ, ಅದನ್ನು ಬಿಂಬಿಸುವ ರೀತಿ ನಕ್ಷೆ ಪ್ರದರ್ಶನ ಮಾಡಿದರೋ ಅಲ್ಲಿಂದ
ರದ್ದಾಗುತ್ತಾ ಭಾರತದ ಮೇಲಿನ 25% ಸುಂಕ? ಮಹತ್ವದ ಸುಳಿವು ನೀಡಿದ ಅಮೆರಿಕದ ಟ್ರೆಷರಿ ಕಾರ್ಯದರ್ಶಿ
ಅಮೆರಿಕದ ಟ್ರೆಷರಿ ಕಾರ್ಯದರ್ಶಿ ಸ್ಕಾಟ್ ಬೆಸೆಂಟ್ ಅವರು ದಾವೋಸ್ನಲ್ಲಿ ಮಹತ್ವದ ಹೇಳಿಕೆ ನೀಡಿದ್ದು, ಭಾರತದ ಮೇಲಿನ ಶೇ. 25ರಷ್ಟು ಸುಂಕವನ್ನು ತೆಗೆದುಹಾಕುವ ಬಗ್ಗೆ ಸುಳಿವು ನೀಡಿದ್ದಾರೆ. ಅಮೆರಿಕದ ಸುಂಕದ ಭಯದಿಂದ ಭಾರತವು ರಷ್ಯಾದಿಂದ ತೈಲ ಖರೀದಿಯನ್ನು ಗಣನೀಯವಾಗಿ ಕಡಿಮೆ ಮಾಡಿದೆ, ಇದು ಅಮೆರಿಕಕ್ಕೆ ಸಿಕ್ಕ ಯಶಸ್ಸು ಎಂದು ಅವರು ಹೇಳಿದ್ದಾರೆ. ಇದೇ ವೇಳೆ, ಭಾರತ ಸಂಸ್ಕರಿಸಿದ ರಷ್ಯಾ ತೈಲವನ್ನೇ ಯುರೋಪ್ ರಾಷ್ಟ್ರಗಳು ಖರೀದಿಸುತ್ತಿರುವುದನ್ನು ಅವರು 'ಮೂರ್ಖತನ' ಎಂದು ಟೀಕಿಸಿದ್ದಾರೆ.
2026ರ ಟಿ20 ವಿಶ್ವಕಪ್: ಪಂದ್ಯದ ಗತಿಯನ್ನೇ ಬದಲಿಸಬಲ್ಲ 'ಅದೃಶ್ಯ' 12ನೇ ಆಟಗಾರ; ಪಂದ್ಯದ ಮೇಲೆ ಇಬ್ಬನಿಯ ಪರಿಣಾಮ ಏನು?
ಟಿ-20 ವಿಶ್ವಕಪ್ನಲ್ಲಿ ಇಬ್ಬನಿ ಒಂದು ನಿರ್ಣಾಯಕ ಅಂಶವಾಗಲಿದೆ. ಸಂಜೆಯ ಪಂದ್ಯಗಳಲ್ಲಿ, ಇಬ್ಬನಿಯ ಕಾರಣದಿಂದಾಗಿ ಚೆಂಡು ಜಾರುವ ಸಾಧ್ಯತೆ ಹೆಚ್ಚಿದ್ದು, ಇದು ಬ್ಯಾಟಿಂಗ್ಗೆ ಹೆಚ್ಚು ಸಹಕಾರಿಯಾಗಲಿದೆ. ಹೀಗಾಗಿ, ಟಾಸ್ ಗೆಲ್ಲುವ ತಂಡಕ್ಕೆ ಗೆಲುವಿನ ಸಾಧ್ಯತೆಗಳು ಹೆಚ್ಚಾಗುತ್ತವೆ. ಈ 'ಅದೃಶ್ಯ ಪ್ರತಿಸ್ಪರ್ಧಿಯ' ಪರಿಣಾಮವನ್ನು ಕಡಿಮೆ ಮಾಡಲು, ಪಂದ್ಯಗಳ ಆರಂಭಿಕ ಸಮಯವನ್ನು ಬದಲಾಯಿಸುವ ಬಗ್ಗೆ ತಜ್ಞರು ಚಿಂತಿಸಿದ್ದಾರೆ. ಈ ಬಾರಿ 'ಅದೃಶ್ಯ 12ನೇ ಆಟಗಾರ' ಯಾರಿಗೆ ಕೈ ಹಿಡಿಯುತ್ತಾನೆ ಎಂಬುದು ಕುತೂಹಲ ಕೆರಳಿಸಿದೆ.
ಹೊಸದಿಲ್ಲಿ: ಕಳೆದ ವರ್ಷ ಅಮೆರಿಕದ ಸೆಕ್ಯೂರಿಟೀಸ್ ಆ್ಯಂಡ್ ಎಕ್ಸ್ಚೇಂಜ್ ಕಮಿಷನ್ (ಯುಎಸ್ ಎಸ್ಇಸಿ) ಹೊರಡಿಸಿದ್ದ ಸಮನ್ಸ್ಗಳನ್ನು ಗೌತಮ್ ಅದಾನಿ ಮತ್ತು ಸಾಗರ್ ಅದಾನಿ ಅವರಿಗೆ ಔಪಚಾರಿಕವಾಗಿ ಜಾರಿಗೊಳಿಸಲು ಕಾನೂನು ಮತ್ತು ನ್ಯಾಯ ಸಚಿವಾಲಯವು ನಿರಾಕರಿಸಿತ್ತು. ಶಾಯಿಯ ಸಹಿ ಮತ್ತು ಅಧಿಕೃತ ಮುದ್ರೆ ಇಲ್ಲದ್ದು ಹಾಗೂ ಸಮನ್ಸ್ ಜಾರಿಗೊಳಿಸಲು ತಾಂತ್ರಿಕ ಆಕ್ಷೇಪಣೆ;ಇವುಗಳನ್ನು ಅದು ತನ್ನ ನಿರಾಕರಣೆಗೆ ಕಾರಣಗಳನ್ನಾಗಿ ಉಲ್ಲೇಖಿಸಿತ್ತು. ನ್ಯೂಯಾರ್ಕ್ ನ್ಯಾಯಾಲಯದ ದಾಖಲೆಗಳು ಇದನ್ನು ಬಹಿರಂಗಗೊಳಿಸಿವೆ ಎಂದು indianexpress.com ವರದಿ ಮಾಡಿದೆ. ಈ ಹಿನ್ನೆಲೆಯಲ್ಲಿ ಎಸ್ಇಸಿ ಅಂತರರಾಷ್ಟ್ರೀಯ ನಿಯಮಗಳನ್ನು ಬದಿಗೊತ್ತಿ ಅದಾನಿಗಳಿಗೆ ಇಮೇಲ್ ಮೂಲಕ ಸಮನ್ಸ್ ಜಾರಿಗೊಳಿಸಲು ನ್ಯಾಯಾಲಯದ ಅನುಮತಿಯನ್ನು ಕೋರಿದೆ. ಈ ಸುದ್ದಿ ಶುಕ್ರವಾರ ಭಾರತೀಯ ಶೇರು ಮಾರುಕಟ್ಟೆಗಳ ಮೇಲೆ ಪರಿಣಾಮ ಬೀರಿದ್ದು,Indian Express ಯ ವರದಿಯಂತೆ ಅದಾನಿ ಗ್ರೂಪ್ ಕಂಪನಿಗಳ ಶೇರುಗಳು ಶೇ.14.6ರವರೆಗೂ ಕುಸಿದಿದ್ದವು. ಸಚಿವಾಲಯದ ನಿಲುವು ಮತ್ತು ಹೇಗ್ ನಿರ್ಣಯಕ್ಕೆ ಅನುಗುಣವಾಗಿ ಮೊದಲ ಬಾರಿ ಸಮನ್ಸ್ ಹೊರಡಿಸಿದ ಬಳಿಕ ವ್ಯರ್ಥವಾಗಿರುವ ಸಮಯವನ್ನು ಗಮನಿಸಿದರೆ ಭಾರತವು ಸಮನ್ಸ್ ಜಾರಿಗೊಳಿಸುತ್ತದೆ ಎಂದು ತಾನು ನಿರೀಕ್ಷಿಸಿಲ್ಲ ಎಂದು ಎಸ್ಇಸಿ ನ್ಯಾಯಾಲಯಕ್ಕೆ ಸಲ್ಲಿಸಿರುವ ಅರ್ಜಿಯಲ್ಲಿ ತಿಳಿಸಿದೆ. ಭಾರತ ಸರಕಾರದೊಂದಿಗಿನ ಸಂವಹನದ ಪ್ರತಿಗಳನ್ನು ಅದು ಅರ್ಜಿಯೊಂದಿಗೆ ಲಗತ್ತಿಸಿದೆ. ಸಚಿವಾಲಯವು ಮೇ 2025 ಮತ್ತು ಡಿಸೆಂಬರ್ 2025ರಲ್ಲಿ; ಹೀಗೆ ಎರಡು ಬಾರಿ ಅದಾನಿಗಳಿಗೆ ಎಸ್ಇಸಿ ಸಮನ್ಸ್ ಜಾರಿಗೊಳಿಸಲು ನಿರಾಕರಿಸಿತ್ತು. ನವಂಬರ್ 2024ರಲ್ಲಿ ದಾಖಲಿಸಿರುವ ದೂರಿನಲ್ಲಿ ಗೌತಮ್ ಅದಾನಿ ಮತ್ತು ಸಾಗರ್ ಅದಾನಿ ಅವರು 2021ರ ಅದಾನಿ ಗ್ರಿನ್ ಎನರ್ಜಿಯ ಸಾಲ ಬಾಂಡ್ಗಳ ಯೋಜನೆಗೆ ಸಂಬಂಧಿಸಿದಂತೆ ಸುಳ್ಳು ಮತ್ತು ದಾರಿ ತಪ್ಪಿಸುವ ಜಾಹೀರಾತುಗಳ ಮೂಲಕ ಯುಎಸ್ ಸೆಕ್ಯೂರಿಟಿ ಕಾನೂನುಗಳನ್ನು ಉಲ್ಲಂಘಿಸಿದ್ದಾರೆ ಎಂದು ಆರೋಪಿಸಲಾಗಿದೆ. ಅಮೆರಿಕದ ನ್ಯಾಯ ಇಲಾಖೆಯು ಲಂಚದ ಆರೋಪದಲ್ಲಿ ಗ್ರೂಪ್ ಅಧ್ಯಕ್ಷ ಗೌತಮ್ ಅದಾನಿ ಮತ್ತು ಸಂಬಂಧಿತ ಆರು ಸಂಸ್ಥೆಗಳ ವಿರುದ್ಧ ದೋಷಾರೋಪಣೆ ಮಾಡಿದ ಬಳಿಕ ಅದಾನಿ ಗ್ರೂಪ್ 600 ಮಿಲಿಯನ್ ಡಾಲರ್ಗಳ ಬಾಂಡ್ ವಿತರಣೆ ಯೋಜನೆಯನ್ನು ಹಿಂದೆಗೆದುಕೊಂಡಿತ್ತು. ಕ್ರಿಮಿನಲ್ ಪ್ರಕರಣದ ಹೊರತಾಗಿ ಸೆಕ್ಯೂರಿಟಿಸ್ ಕಾನೂನುಗಳ ಉಲ್ಲಂಘನೆ ಆರೋಪದಲ್ಲಿ ಸಿವಿಲ್ ಮೊಕದ್ದಮೆಯನ್ನು ಎಸ್ಇಸಿ ಮುಂದುವರಿಸಿದೆ. ಫೆ.2025ರಲ್ಲಿ ಎಸ್ಇಸಿ ಹೇಗ್ ನಿರ್ಣಯದಡಿ ಅದಾನಿಗಳಿಗೆ ಸಮನ್ಸ್ ಜಾರಿಗೊಳಿಸಲು ನೆರವಾಗುವಂತೆ ವಿಧ್ಯುಕ್ತ ಮನವಿಯನ್ನು ಕಾನೂನು ಸಚಿವಾಲಯಕ್ಕೆ ಸಲ್ಲಿಸಿತ್ತು. ಸಮನ್ಸ್ ಜೊತೆಗೆ ಲಗತ್ತಿಸಿರುವ ಪತ್ರದಲ್ಲಿ ಶಾಯಿಯಿಂದ ಮಾಡಿದ ಸಹಿಯಿಲ್ಲ,ಅಗತ್ಯ ಫಾರಮ್ಗಳ ಮೇಲೆ ಅಧಿಕೃತ ಮುದ್ರೆಯಿಲ್ಲ. ಹೀಗಾಗಿ ದಾಖಲೆಗಳು/ವಿನಂತಿಯನ್ನು ದೃಢೀಕರಿಸಲು ಸಾಧ್ಯವಿಲ್ಲ. ಆದ್ದರಿಂದ ಅಗತ್ಯ ಕ್ರಮಕ್ಕಾಗಿ ದಾಖಲೆಗಳನ್ನು ನಿಮಗೆ ಹಿಂದಿರುಗಿಸಲಾಗುತ್ತದೆ ಎಂದು ಸಚಿವಾಲಯವು ಎಸ್ಇಸಿ ಮನವಿಗೆ ತನ್ನ ಉತ್ತರದಲ್ಲಿ ತಿಳಿಸಿತ್ತು. ನಂತರ ಅದೇ ತಿಂಗಳು ದಾಖಲೆಗಳನ್ನು ಮರುಸಲ್ಲಿಸಿದ್ದ ಎಸ್ಇಸಿ ಹೇಗ್ ನಿರ್ಣಯದಡಿ ಇಂತಹ ಔಪಚಾರಿಕತೆಗಳು ಕಡ್ಡಾಯವಲ್ಲ ಎಂದು ವಾದಿಸಿತ್ತು. ಡಿಸೆಂಬರ್ನಲ್ಲಿ ಕಾನೂನು ಸಚಿವಾಲಯವು ಅಮೆರಿಕದ ಕಾನೂನನ್ನು ಉಲ್ಲೇಖಿಸಿ ಸಮನ್ಸ್ ಜಾರಿಗೆ ಮತ್ತೊಮ್ಮೆ ನಿರಾಕರಿಸಿತ್ತು. ಅದಾನಿ ಗ್ರೂಪ್ ತನ್ನ ವಿರುದ್ಧ ಎಸ್ಇಸಿ ಆರೋಪಗಳನ್ನು ನಿರಾಧಾರವೆಂದು ಪದೇ ಪದೇ ತಿರಸ್ಕರಿಸಿದ್ದು,ಸಾಧ್ಯವಿರುವ ಎಲ್ಲ ಕಾನೂನು ಮಾರ್ಗಗಳನ್ನು ಬಳಸಿಕೊಳ್ಳುವುದಾಗಿ ಹೇಳಿದೆ. ಶುಕ್ರವಾರ ರಾತ್ರಿ ಶೇರು ವಿನಿಮಯ ಕೇಂದ್ರಗಳಿಗೆ ಸಲ್ಲಿಸಿದ ಹೇಳಿಕೆಯಲ್ಲಿ ಅದಾನಿ ಗ್ರೀನ್,ಕಂಪನಿಯು ಈ ಪ್ರಕ್ರಿಯೆಯಲ್ಲಿ ಕಕ್ಷಿಯಲ್ಲ ಮತ್ತು ಅದರ ವಿರುದ್ಧ ಅಮೆರಿಕದ ವಿದೇಶಿ ಭ್ರಷ್ಟಾಚಾರ ಕಾಯ್ದೆಯ ಉಲ್ಲಂಘನೆ ಆರೋಪವನ್ನು ಹೊರಿಸಲಾಗಿಲ್ಲ. ಎಸ್ಇಸಿ ಪ್ರಕ್ರಿಯೆಯಗಳು ಸಿವಿಲ್ ಸ್ವರೂಪದ್ದಾಗಿವೆ ಎಂದು ತಿಳಿಸಿದೆ.
ಆಪರೇಷನ್ ಸಿಂಧೂರ್ ಕುರಿತ ನಿಲುವಿಗೆ ಕ್ಷಮೆಯಾಚಿಸುವುದಿಲ್ಲ: ಸಂಸದ ಶಶಿ ತರೂರ್
“ಕಾಂಗ್ರೆಸ್ ಪಕ್ಷದ ನಿಲುವನ್ನು ಉಲ್ಲಂಘಿಸಿಲ್ಲ”
ಪತ್ನಿ ಹೆಸರಲ್ಲಿ ‘ಮೆಲಾನಿಯಾ’ ಚಿತ್ರ ನಿರ್ಮಿಸಿದ ಡೊನಾಲ್ಡ್ ಟ್ರಂಪ್! ಜ. 30ರಂದು ವಿಶ್ವದಾದ್ಯಂತ ಬಿಡುಗಡೆ!
ಡೊನಾಲ್ಡ್ ಟ್ರಂಪ್ ಅವರ ಪತ್ನಿ ಮೆಲಾನಿಯಾ ಟ್ರಂಪ್ ಕುರಿತಾದ ಹೊಸ ಸಾಕ್ಷ್ಯಚಿತ್ರವೊಂದು ಬಿಡುಗಡೆಯಾಗಲಿದೆ. 2021ರಲ್ಲಿ ಅಧಿಕಾರ ಕಳೆದುಕೊಂಡ ನಂತರ ಟ್ರಂಪ್ ಅವರ ಆತ್ಮವಿಶ್ವಾಸವನ್ನು ಹೆಚ್ಚಿಸಿ, ಅವರನ್ನು ಮತ್ತೆ ಚುನಾವಣೆಗೆ ಸಿದ್ಧಪಡಿಸುವಲ್ಲಿ ಮೆಲಾನಿಯಾ ಅವರ ಮಹತ್ವದ ಪಾತ್ರವನ್ನು ಈ ಚಿತ್ರ ಅನಾವರಣಗೊಳಿಸುತ್ತದೆ. ಖುದ್ದು ಮೆಲಾನಿಯಾ ಅವರೇ ನಿರ್ಮಿಸಿರುವ ಈ ಚಿತ್ರವು 27 ದೇಶಗಳಲ್ಲಿ ಪ್ರದರ್ಶನಗೊಳ್ಳಲಿದೆ.
Holidays: ಲಾಂಗ್ ವೀಕೆಂಡ್ ಮೋಜು, ಪ್ರವಾಸಿಗರು ಇಷ್ಟಪಟ್ಟು ಬುಕ್ ಮಾಡಿದ ತಾಣಗಳಿವು
ಇದೇ ಜನವರಿ 26ರಂದು ಸೋಮವಾರ ಗಣರಾಜ್ಯೋತ್ಸವ ಆಚರಣೆ ನಡೆಯಲಿದೆ. ಅಂದು ಸಹ ಒಂದು ದಿನ ರಜೆ ಇರಲಿದ್ದು, ಶನಿವಾರ, ಭಾನುವಾರ ಸೇರಿ ಒಟ್ಟು ಮೂರು ದಿನ ಲಾಂಗ್ ವೀಕೆಂಡ್ ಸಿಗಲಿದೆ. ಈ ಹಿನ್ನೆಲೆಯಲ್ಲಿ ರಜಾ ದಿನಗಳ ಮಸ್ತಿಗೆ ಜನರು ಅನೇಕ ಸ್ಥಳಗಳಿಗೆ ಭೇಟಿ ನೀಡಲು ಪ್ಲಾನ್ ಮಾಡಿದ್ದಾರೆ. ಯಾವೆಲ್ಲ ಸ್ಥಳಗಳು ಹೆಚ್ಚು ಹೆಚ್ಚು ಬುಕ್ ಆಗಿವೆ ಎಂದು
ರಾಯಚೂರು | ಎಸೆಸೆಲ್ಸಿ ವಿದ್ಯಾರ್ಥಿಗಳಿಗೆ ಅಭ್ಯಾಸ ಪುಸ್ತಕ ವಿತರಣೆ
ದೊಡ್ಡ ಕನಸಿರಲಿ ಯಶಸ್ವಿಗೆ ಶ್ರಮ ಇರಲಿ : ಡಾ.ಈರಣ್ಣ ಕೋಸಗಿ
ರೇವಣ್ಣ ಕುಟುಂಬವನ್ನು ಮುಗಿಸಲು ಹೊರಟವರು ರಾಜ್ಯದಲ್ಲಿ ಏನೇನು ಮಾಡ್ತಿದ್ದಾರೆ ನಾನು ಹೇಳಲಾ? ಎಚ್ಡಿಡಿ ಕಿಡಿ
ಹಾಸನದಲ್ಲಿ ಜೆಡಿಎಸ್ ಪಕ್ಷ ಬಲಿಷ್ಠವಾಗಿದೆ. ರೇವಣ್ಣ ಕುಟುಂಬವನ್ನು ಮುಗಿಸಲು ಹೊರಟಿರುವ ಆಡಳಿತಗಾರರ ವಿರುದ್ಧ ಎಚ್ಡಿಡಿ ಕಿಡಿ ಕಾರಿದ್ದಾರೆ. ಹಾಸನ ಜಿಲ್ಲೆಯಲ್ಲಿ ಅಭಿವೃದ್ಧಿ ಕುಂಠಿತಗೊಂಡಿದೆ. ಮುಂದಿನ ದಿನಗಳಲ್ಲಿ ಬಿಜೆಪಿ ಜೊತೆಗೂಡಿ ಅಭಿವೃದ್ಧಿ ಕಾರ್ಯಗಳನ್ನು ಮಾಡುವುದಾಗಿ ಎಚ್ಡಿಡಿ ಹೇಳಿದ್ದಾರೆ. ರಾಜ್ಯದಲ್ಲಿ ಜೆಡಿಎಸ್ ಪಕ್ಷ ಜನರ ಪಕ್ಷವಾಗಿದೆ.
ಡಿಕೆಶಿ ಕನಸಿನ ’ಸಿಎಂ’ ಪಟ್ಟದ ಬಗ್ಗೆ ಕೋಡಿಶ್ರೀ ಭವಿಷ್ಯ: ಅಡ್ಡಗೋಡೆ ಮೇಲಿನ ದೀಪದ ಹಿಂದೆ ಅಡಗಿದೆಯೇ ಗಾದಿ ಸೀಕ್ರೆಟ್?
DK Shivakumar will become CM or not ? ಅರಸೀಕೆರೆ ಕೋಡಿಮಠ ಸಂಸ್ಥಾನದ ಕೋಡಿಮಠದ ಶ್ರೀಗಳು, ಮಕರ ಸಂಕ್ರಾಂತಿಯ ನಂತರ ಭವಿಷ್ಯ ನುಡಿಯುವುದಾಗಿ ಹೇಳಿದ್ದರು. ಆದರೆ, ಸಂಕ್ರಾಂತಿಯ ಆಸುಪಾಸಿನಲ್ಲಿ ಅವರು ಹೇಳಿದ ಭವಿಷ್ಯ ಎಲ್ಲೂ ವರದಿಯಾಗಿಲ್ಲ. ಡಿಕೆ ಶಿವಕುಮಾರ್ ಮುಖ್ಯಮಂತ್ರಿ ಸ್ಥಾನದ ಭವಿಷ್ಯದ ಬಗ್ಗೆ ಕೋಡಿಶ್ರೀಗಳು ಏನು ಒನ್ ಲೈನರ್’ನಲ್ಲಿ ಹೇಳಿದ್ದರು?
ಸದನದಲ್ಲಿ ಶಿಸ್ತು ರೂಪಿಸಲು ಕಾಲೇಜು ಕಲಿಸಿದ ಪಾಠ ನೆರವಾಗಿದೆ : ಸ್ಪೀಕರ್ ಯು.ಟಿ.ಖಾದರ್
ಮಹಾವೀರ ಕಾಲೇಜು ಹಳೆ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ ಕಾರ್ಯಕ್ರಮ
ಬಳ್ಳಾರಿ ಮಾಡೆಲ್ ಹೌಸ್ಗೆ ಬೆಂಕಿ: ಭರತ್ ರೆಡ್ಡಿ ವಿರುದ್ಧ ಜನಾರ್ದನ ರೆಡ್ಡಿ ಗಂಭೀರ ಆರೋಪ; ಸಿಬಿಐ ತನಿಖೆಗೆ ಪಟ್ಟು
ಬಳ್ಳಾರಿಯ ಲೇಔಟ್ ಒಂದರ ಮಾಡೆಲ್ ಹೌಸ್ಗೆ ಬೆಂಕಿ ಬಿದ್ದ ಘಟನೆಗೆ ಸಂಬಂಧಿಸಿದಂತೆ ಮಾಜಿ ಸಚಿವ ಜನಾರ್ದನ ರೆಡ್ಡಿ ಅವರು ಶಾಸಕ ಭರತ್ ರೆಡ್ಡಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಭರತ್ ರೆಡ್ಡಿ ಅವರ ಕುಮ್ಮಕ್ಕಿನಿಂದಲೇ ಅವರ ಬೆಂಬಲಿಗರು ಈ ಕೃತ್ಯ ಎಸಗಿದ್ದಾರೆ ಎಂದು ರೆಡ್ಡಿ ಆರೋಪಿಸಿದ್ದಾರೆ. ಮೂರು ತಿಂಗಳ ಹಿಂದೆ ಇದೇ ಜಾಗದಲ್ಲಿ ಕಳ್ಳತನ ನಡೆದಾಗ ಬಂಧಿತರಾದವರನ್ನು ಎಎಸ್ಪಿ ರವಿ ಮತ್ತು ಭರತ್ ರೆಡ್ಡಿ ಬಿಡುಗಡೆ ಮಾಡಿಸಿದ್ದರು, ಅವರೇ ಈಗ ಈ ಕೃತ್ಯ ಎಸಗಿದ್ದಾರೆ ಎಂದಿದ್ದಾರೆ. ಈ ಪ್ರಕರಣವನ್ನು ಸಿಬಿಐಗೆ ವಹಿಸಬೇಕೆಂದು ಒತ್ತಾಯಿಸಿರುವ ಜನಾರ್ದನ ರೆಡ್ಡಿ, ಮಂಗಳವಾರ ಸದನದಲ್ಲಿ ಈ ವಿಷಯ ಪ್ರಸ್ತಾಪಿಸುವುದಾಗಿ ಹೇಳಿದ್ದಾರೆ.
₹13,070 ಕೋಟಿ ಹೂಡಿಕೆ ವಾಗ್ದಾನಕ್ಕೆ ದಾವೋಸ್ನಲ್ಲಿ ಅಧಿಕೃತ ಮುದ್ರೆ: ಎಂಬಿ ಪಾಟೀಲ
ರಾಜ್ಯ ಸರ್ಕಾರದ ಜೊತೆ ಪಾಲುದಾರಿಕೆಯ ಒಪ್ಪಂದ ಮಾಡಿಕೊಳ್ಳುವುದಕ್ಕೆ ಅಮೆರಿಕದ ವೈಮಾಂತರಿಕ್ಷ ಕಂಪನಿ ವೊಯೆಜರ್ ಟೆಕ್ನಾಲಜೀಸ್, ಬಾಹ್ಯಾಕಾಶ ತಂತ್ರಜ್ಞಾನ ಕಂಪನಿ ವಾಸ್ಟ್ ಸ್ಪೇಸ್ ಕಂಪನಿ ಆಸಕ್ತಿ ವ್ಯಕ್ತಪಡಿಸಿವೆ. ಯುಎಇ ಮೂಲದ ಬಹುರಾಷ್ಟ್ರೀಯ ಉದ್ಯಮ ಸಮೂಹವಾಗಿರುವ ಕ್ರೆಸೆಂಟ್ ಎಂಟರ್ಪ್ರೈಸಿಸ್ , ರಾಜ್ಯದ ಉದ್ದಿಮೆ ಹಾಗೂ ಕಂಪನಿಗಳಲ್ಲಿ ಹೂಡಿಕೆ ಮಾಡಲು ಮುಂದೆ ಬಂದಿದೆ. ರಾಜ್ಯದಲ್ಲಿನ ಉದ್ದಿಮೆ ಸ್ನೇಹಿ ಹಾಗೂ ನಾವೀನ್ಯತಾ ವ್ಯವಸ್ಥೆಯ ಸದ್ಬಳಕೆ ಮಾಡಿಕೊಳ್ಳಲು ಸ್ವಿಸ್ ಕಂಪನಿಗಳಿಗೆ ಅನುಕೂಲತೆ ಕಲ್ಪಿಸುವ ಉದ್ದೇಶದಿಂದ ತಿಳಿವಳಿಕೆಯ ಒಪ್ಪಂದ ಪತ್ರಕ್ಕೆ (ಎಂಒಯು) ಅಂಕಿತ ಹಾಕಲಾಗಿದೆ. ವಹಿವಾಟು ವಿಸ್ತರಣೆ ಕುರಿತು ರಾಜ್ಯ ಸರ್ಕಾರದ ಜೊತೆ ವಿಸ್ತೃತ ಯೋಜನಾ ಪ್ರಸ್ತಾವ ಹಂಚಿಕೊಳ್ಳುವುದಾಗಿ ನ್ಯಾಚುರಲ್ ಫೈಬರ್ ವೆಲ್ಡಿಂಗ್ (ಎನ್ಎಫ್ಡಬ್ಲ್ಯು ಅರ್ಥ್) ತಿಳಿಸಿದೆ ಎಂದು ಸಚಿವರು ವಿವರಿಸಿದ್ದಾರೆ.
ಸಹಕಾರ ಕಾಯ್ದೆ- ಆರ್ಬಿಐ ನಿಯಮಾವಳಿಗೂ ವ್ಯತ್ಯಾಸ; ಕಾನೂನು ತಜ್ಞರ ಜತೆ ಸಮಾಲೋಚನೆ ಅಗತ್ಯ : ಎಂ.ಎನ್.ರಾಜೇಂದ್ರ ಕುಮಾರ್
ರಾಜ್ಯ ಮಟ್ಟದ ಕಾರ್ಯದಕ್ಷತೆ ತರಬೇತಿ ಕಾರ್ಯಕ್ರಮ
ಚೀನಾ ಯುವತಿ ಕೈ ಹಿಡಿದ ಕಾಫಿನಾಡಿನ ಯುವಕ: ಸಂಪ್ರದಾಯಿಕ ಉಡುಗೆಯಲ್ಲಿ ಹಸೆಮಣೆ ಏರಿದ ಜೋಡಿ
ಚಿಕ್ಕಮಗಳೂರಿನಲ್ಲಿ ಅಪರೂಪದ ವಿವಾಹ ಜರುಗಿದೆ. ಚೀನಾದ ಯುವತಿ ಜೇಡ್ ಮತ್ತು ಕಾಫಿ ನಾಡಿನ ಯುವಕ ರೂಪಕ್ ಭಾರತೀಯ ಸಂಪ್ರದಾಯದಂತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಆಸ್ಟ್ರೇಲಿಯಾದಲ್ಲಿ ಅಧ್ಯಯನ ಮಾಡುತ್ತಿದ್ದಾಗ ಇವರ ಪರಿಚಯ ಸ್ನೇಹವಾಗಿ, ಬಳಿಕ ಪ್ರೀತಿಗೆ ತಿರುಗಿತ್ತು. ಹಿಂದೂ ಸಂಪ್ರದಾಯದಂತೆ ನಡೆದ ಈ ವಿವಾಹಕ್ಕೆ ಹಲವು ಗಣ್ಯರು ಸಾಕ್ಷಿಯಾಗಿದ್ದರು. ದೇಶ, ಭಾಷೆ, ಮತದ ಭೇದ ಮೀರಿದ ಇವರ ಪ್ರೀತಿಗೆ ಎಲ್ಲರೂ ಶುಭ ಹಾರೈಸಿದ್ದಾರೆ.
13,070 ಕೋಟಿ ಹೂಡಿಕೆ ವಾಗ್ದಾನಕ್ಕೆ ದಾವೋಸ್ನಲ್ಲಿ ಅಧಿಕೃತ ಮುದ್ರೆ : ಸಚಿವ ಎಂ.ಬಿ.ಪಾಟೀಲ್
ʼನೋಕಿಯಾ, ಕ್ಲೌಡ್ಫ್ಲೇರ್, ವಾಸ್ಟ್ಸ್ಪೇಸ್, ಮೆಂಜಿಸ್ ಏವಿಯೇಷನ್, ಟಾಟಾ ಸನ್ಸ್, ಅಮೆಜಾನ್ ವೆಬ್ ಸರ್ವಿಸಸ್ ಮುಖ್ಯಸ್ಥರ ಜೊತೆ ಸಮಾಲೋಚನೆʼ
ವಿಮಾನ ಜೋಡಣೆಗೂ ಇಳಿದ ಅದಾನಿ, ವಿಶ್ವದ 3ನೇ ಅತಿದೊಡ್ಡ ವಿಮಾನ ತಯಾರಕ ಕಂಪನಿ ಎಂಬ್ರಾಯರ್ ಜೊತೆ ಒಪ್ಪಂದ
ಅದಾನಿ ಏರೋಸ್ಪೇಸ್ ಮತ್ತು ಬ್ರೆಜಿಲ್ನ ಎಂಬ್ರಾಯರ್ ಕಂಪನಿಗಳು ಮಹತ್ವದ ಒಪ್ಪಂದಕ್ಕೆ ಮುಂದಿನ ವಾರ ಸಹಿ ಹಾಕಲಿವೆ. ಈ ಒಪ್ಪಂದದ ಪ್ರಕಾರ, ಭಾರತದಲ್ಲಿ ವಾಣಿಜ್ಯ ವಿಮಾನಗಳ ಜೋಡಣಾ ಘಟಕವನ್ನು ಸ್ಥಾಪಿಸಲಾಗುತ್ತದೆ. ವಿಮಾನಗಳನ್ನು ಸ್ಥಳೀಯವಾಗಿಯೇ ಉತ್ಪಾದಿಸಬೇಕೆಂಬ ಸರ್ಕಾರದ ಒತ್ತಾಸೆಗೆ ಇದು ಮೊದಲ ದೊಡ್ಡ ಯಶಸ್ಸಾಗಿದೆ. ಮುಂದಿನ 20 ವರ್ಷಗಳಲ್ಲಿ ಭಾರತದಲ್ಲಿ ಸಣ್ಣ ಗಾತ್ರದ ವಿಮಾನಗಳಿಗೆ ಭಾರೀ ಬೇಡಿಕೆ ಬರಲಿದ್ದು, ಈ ಪಾಲುದಾರಿಕೆ ಅದಕ್ಕೆ ಪೂರಕವಾಗಿ ಕೆಲಸ ಮಾಡಲಿದೆ.
ಜಾರ್ಜಿಯಾದಲ್ಲಿ ಕೌಟುಂಬಿಕ ಕಲಹ ಮಾರಣಾಂತಿಕವಾಗಿ ಪರಿಣಮಿಸಿದ್ದು, ಭಾರತೀಯ ಮೂಲದ ವಿಜಯ್ ಕುಮಾರ್ ತನ್ನ ಪತ್ನಿ ಸೇರಿ ನಾಲ್ವರನ್ನು ಗುಂಡಿಟ್ಟು ಕೊಂದಿದ್ದಾನೆ. ಘಟನೆಯ ವೇಳೆ ಮಕ್ಕಳು ಸುರಕ್ಷಿತವಾಗಿದ್ದು, ಸಮಯೋಚಿತವಾಗಿ ಪೊಲೀಸರಿಗೆ ಕರೆ ಮಾಡಿ ಆರೋಪಿಯ ಬಂಧನಕ್ಕೆ ಸಹಾಯ ಮಾಡಿದ್ದಾರೆ. ಭಾರತೀಯ ರಾಯಭಾರ ಕಚೇರಿ ಘಟನೆಯ ಬಗ್ಗೆ ವಿಷಾದ ವ್ಯಕ್ತಪಡಿಸಿದೆ.
ತಮಿಳುನಾಡು ಸರ್ಕಾರ ಮತ್ತು ರಾಜ್ಯಪಾಲರ ನಡುವೆ ಮತ್ತೆ ಸಂಘರ್ಷ ತಲೆದೋರಿದೆ. ರಾಜ್ಯಪಾಲರು ಸರ್ಕಾರದ ಭಾಷಣ ಓದಲು ನಿರಾಕರಿಸಿ ಹೊರನಡೆದಿದ್ದಾರೆ. ಮುಖ್ಯಮಂತ್ರಿ ಸ್ಟಾಲಿನ್ ಈ ಕ್ರಮವನ್ನು ಖಂಡಿಸಿದ್ದಾರೆ. ರಾಜ್ಯಪಾಲರ ಭಾಷಣ ಸಂಪ್ರದಾಯ ರದ್ದುಗೊಳಿಸಲು ಸಂವಿಧಾನ ತಿದ್ದುಪಡಿ ಬಗ್ಗೆ ಚರ್ಚಿಸುವುದಾಗಿ ಹೇಳಿದ್ದಾರೆ. ಇದು ಬಿಜೆಪಿ ಅಲ್ಲದ ರಾಜ್ಯಗಳಲ್ಲಿ ನಡೆಯುತ್ತಿರುವ ವಿದ್ಯಮಾನವಾಗಿದೆ.
ಆರ್ಎಸ್ಎಸ್ ಬಿಜೆಪಿಯನ್ನು ನಿಯಂತ್ರಿಸುತ್ತಿದೆ, ಇದು ವಂಶಪಾರಂಪರ್ಯಕ್ಕಿಂತ ದೊಡ್ಡದು: ಡಿಎಂಕೆ ನಾಯಕ ಅಣ್ಣಾದೊರೈ
ತಮಿಳುನಾಡಿನಲ್ಲಿ ರಾಜಕೀಯ ಕಾವು ಏರಿದೆ. ಪ್ರಧಾನಿ ಮೋದಿ ಡಿಎಂಕೆ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರೆ, ಡಿಎಂಕೆ ನಾಯಕ ಅಣ್ಣಾದೊರೈ ಬಿಜೆಪಿ ಮತ್ತು ಆರ್ಎಸ್ಎಸ್ ವಿರುದ್ಧ ಹರಿಹಾಯ್ದಿದ್ದಾರೆ. ಬಿಜೆಪಿ ಆರ್ಎಸ್ಎಸ್ನಿಂದ ನಿಯಂತ್ರಿಸಲ್ಪಡುತ್ತಿದ್ದು, ಇದು ವಂಶಪಾರಂಪರ್ಯಕ್ಕಿಂತ ಕೆಟ್ಟದ್ದು ಎಂದು ಆರೋಪಿಸಿದ್ದಾರೆ. ಎನ್ಡಿಎ ತಮಿಳುನಾಡಿಗೆ ದ್ರೋಹ ಬಗೆದಿದೆ ಎಂದೂ ಹೇಳಿದ್ದಾರೆ.
ಹುಬ್ಬಳ್ಳಿ: ಖಾಸಗಿ ಹೋಟೆಲ್ನಲ್ಲಿ ಮಲ್ಲಿಕಾರ್ಜುನ ಖರ್ಗೆ–ಸಿದ್ದರಾಮಯ್ಯ ಭೇಟಿ
ಹುಬ್ಬಳ್ಳಿ: ವಸತಿ ಇಲಾಖೆಯ ಆಯೋಜನೆಯಲ್ಲಿ ನಡೆಯುತ್ತಿರುವ ಐತಿಹಾಸಿಕ 42,345 ಮನೆಗಳ ವಿತರಣಾ ಕಾರ್ಯಕ್ರಮಕ್ಕಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹುಬ್ಬಳ್ಳಿಯ ವಿಮಾನ ನಿಲ್ದಾಣಕ್ಕೆ ಆಗಮಿಸಿದರು. ಈ ವೇಳೆ ಧಾರವಾಡ ಜಿಲ್ಲಾಡಳಿತದಿಂದ ಅವರಿಗೆ ಗೌರವ ವಂದನೆ ಸಲ್ಲಿಸಲಾಯಿತು. ನಂತರ, ಕಾರ್ಯಕ್ರಮಕ್ಕೆ ಆಗಮಿಸಿದ್ದ ಎಐಸಿಸಿ ಅಧ್ಯಕ್ಷರು ಹಾಗೂ ರಾಜ್ಯಸಭೆಯ ಪ್ರತಿಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರನ್ನು ಹುಬ್ಬಳ್ಳಿಯ ಖಾಸಗಿ ಹೋಟೆಲಿನಲ್ಲಿ ಭೇಟಿ ಮಾಡಿ, ಕುಶಲೋಪರಿ ವಿಚಾರಿಸಿದರು. ಈ ಸಂದರ್ಭದಲ್ಲಿ ಸಚಿವರಾದ ಕೆ.ಹೆಚ್. ಮುನಿಯಪ್ಪ, ಹೆಚ್.ಸಿ. ಮಹದೇವಪ್ಪ, ಜಮೀರ್ ಅಹಮದ್ ಖಾನ್, ಮಾಜಿ ಸಚಿವ ನಾಗೇಂದ್ರ ಸೇರಿದಂತೆ ಹಲವು ಪ್ರಮುಖರು ಉಪಸ್ಥಿತರಿದ್ದರು.
Gold Safety: ಚಿನ್ನ ಬ್ಯಾಂಕ್ ಲಾಕರ್ನಲ್ಲಿ ಇಟ್ಟಿದ್ದೀರಾ? ಹಾಗಾದರೆ ತಪ್ಪದೇ ಈ ಸುದ್ದಿ ಓದಿ...
ಚಿನ್ನದ ಬೆಲೆ ಆಕಾಶ ತಲುಪಿದ್ದು, ನೋಡ ನೋಡುತ್ತಲೇ ಚಿನ್ನ ಹಾಗೂ ಬೆಳ್ಳಿಗೆ ಭಾರಿ ಡಿಮ್ಯಾಂಡ್ ಬಂದುಬಿಟ್ಟಿದೆ. ಚಿನ್ನದ ಬೆಲೆ ಇನ್ನೂ ಹೆಚ್ಚಾಗುತ್ತೆ, ಅಲ್ಲದೆ ಕೆಲವೇ ದಿನಗಳಲ್ಲಿ ಬಂಗಾರದ ಬೆಲೆಯು ಪ್ರತಿ 10 ಗ್ರಾಂಗೆ 1,70,000 ರೂಪಾಯಿಗೆ ತಲುಪಲಿದೆ ಎಂದು ತಜ್ಞರು ಮುನ್ಸೂಚನೆ ನೀಡಿದ್ದಾರೆ. ಈ ಎಲ್ಲಾ ಚರ್ಚೆಗಳ ನಡುವೆ ಹೊಸ ಚಿಂತೆ ಶುರುವಾಗಿದೆ. ಅದು ಏನೆಂದರೆ ಬಹುತೇಕರು
ಪ್ರತಿಭಟನಾಕಾರರ ಮೇಲಿನ ಇರಾನ್ನ ದಮನಕಾರಿ ಕ್ರಮ ಖಂಡಿಸುವ UNHRC ನಿರ್ಣಯದ ವಿರುದ್ಧ ಮತ ಚಲಾಯಿಸಿದ ಭಾರತ
ಹೊಸದಿಲ್ಲಿ: ಸರಕಾರಿ ವಿರೋಧಿ ಪ್ರತಿಭಟನಾಕಾರರ ಮೇಲೆ ಇರಾನ್ ನಡೆಸಿದ ದಮನಕಾರಿ ಕ್ರಮವನ್ನು ಖಂಡಿಸುವ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಯ ನಿರ್ಣಯದ ವಿರುದ್ಧ ಭಾರತ ಮತ ಚಲಾಯಿಸಿರುವ ಬಗ್ಗೆ scroll.in ವರದಿ ಮಾಡಿದೆ. ಇರಾನ್ನ ಕ್ರೂರ ದಬ್ಬಾಳಿಕೆಯನ್ನು ಕೊನೆಗೊಳಿಸಬೇಕೆಂದು ಒತ್ತಾಯಿಸುವ ನಿರ್ಣಯವನ್ನು 47 ಸದಸ್ಯರ ಮಂಡಳಿಯು ಅಂಗೀಕರಿಸಿದೆ. ಮಂಡಳಿಯ 25 ಸದಸ್ಯರು ನಿರ್ಣಯದ ಪರವಾಗಿ ಮತ ಚಲಾಯಿಸಿದರೆ, 14 ಸದಸ್ಯರು ಮತದಾನದಿಂದ ದೂರ ಉಳಿದರು. ಭಾರತ ಮತ್ತು ಚೀನಾ ಸೇರಿದಂತೆ ಏಳು ರಾಷ್ಟ್ರಗಳು ನಿರ್ಣಯಕ್ಕೆ ವಿರೋಧವನ್ನು ವ್ಯಕ್ತಪಡಿಸಿವೆ. ಹೆಚ್ಚುತ್ತಿರುವ ಹಣದುಬ್ಬರ ಮತ್ತು ಆರ್ಥಿಕ ಸಂಕಷ್ಟವನ್ನು ಖಂಡಿಸಿ ಇರಾನ್ ನಲ್ಲಿ ಡಿಸೆಂಬರ್ 28 ರಂದು ಪ್ರತಿಭಟನೆ ಪ್ರಾರಂಭವಾಗಿದ್ದವು. 100 ಕ್ಕೂ ಹೆಚ್ಚು ಪಟ್ಟಣಗಳಿಗೆ ಪ್ರತಿಭಟನೆ ವಿಸ್ತರಿಸಿತ್ತು. ಮಂಡಳಿಯು ತನ್ನ ನಿರ್ಣಯದಲ್ಲಿ ಸಾವಿರಾರು ಜನರ ಪ್ರಾಣ ಹಾನಿಗೆ ಕಾರಣವಾದ ಶಾಂತಿಯುತ ಪ್ರತಿಭಟನೆಗಳ ಹಿಂಸಾತ್ಮಕ ದಮನವನ್ನು ಖಂಡಿಸುತ್ತದೆ ಎಂದು ಹೇಳಿದೆ. ಮಾನವ ಹಕ್ಕುಗಳನ್ನು ಗೌರವಿಸಲು, ರಕ್ಷಿಸಲು ಇರಾನ್ ಸರಕಾರವನ್ನು ಒತ್ತಾಯಿಸಿದೆ. ಕಾನೂನುಬಾಹಿರ ಹತ್ಯೆಗಳು, ಬಲವಂತದ ಕಣ್ಮರೆ ಮತ್ತು ಪ್ರತಿಭಟನಾಕಾರರ ಬಂಧನಗಳನ್ನು ಕೊನೆಗೊಳಿಸಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವಂತೆ ನಿರ್ಣಯದಲ್ಲಿ ಇರಾನ್ಗೆ ಆಗ್ರಹಿಸಿದೆ. ಪ್ರತಿಭಟನೆಯಲ್ಲಿ ಕನಿಷ್ಠ 5,002 ಮಂದಿ ಮೃತಪಟ್ಟಿದ್ದು ಇದರಲ್ಲಿ 4,716 ಪ್ರತಿಭಟನಾಕಾರರು, 203 ಮಂದಿ ಸರಕಾರಕ್ಕೆ ಸಂಬಂಧಿಸಿದವರು, 43 ಮಕ್ಕಳು, 40 ಮಂದಿ ನಾಗರಿಕರು ಸೇರಿದ್ದಾರೆ. ಪ್ರತಿಭಟನೆಗೆ ಸಂಬಂಧಿಸಿ 26,800 ಮಂದಿಯನ್ನು ಬಂಧಿಸಲಾಗಿದೆ ಎಂದು ಅಮೆರಿಕಾ ಮೂಲದ `ಹ್ಯೂಮನ್ ರೈಟ್ಸ್ ಆಕ್ಟಿವಿಸ್ಟ್ಸ್ ನ್ಯೂಸ್ ಏಜೆನ್ಸಿ' ಹೇಳಿದೆ.
ಕರ್ತವ್ಯ ಪಥದಲ್ಲಿ ಕರ್ನಾಟಕದ ಸ್ತಬ್ಧಚಿತ್ರಕ್ಕೆ ನೀಡದೆ ಅಪಮಾನ ಆರೋಪ: ಕೇಂದ್ರದ ವಿರುದ್ಧ ಪ್ರದೀಪ್ ಈಶ್ವರ್ ಕೆಂಡ
ಸಂಸದ ತೇಜಸ್ವಿ ಸೂರ್ಯ ಅವರು ಯಾವಾಗಲೂ ರನ್ನಿಂಗ್ ರೇಸ್ನಲ್ಲಿ ಇರುತ್ತಾರೆ. ಆದರೆ ಈ ಬಾರಿಯ ಗಣರಾಜ್ಯೋತ್ಸವದಂದು ನಮ್ಮ ಟ್ಯಾಬ್ಲೋ ಕರ್ತವ್ಯ ಪಥದಲ್ಲಿ ಹೋಗುತ್ತದೋ ಇಲ್ಲವೋ ಎಂಬುದರ ಬಗ್ಗೆ ಜನರಿಗೆ ಸ್ಪಷ್ಟನೆ ನೀಡಿ ಎಂದು ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ಆಗ್ರಹಿಸಿದರು. ಬೆಂಗಳೂರಿನಲ್ಲಿ ಶನಿವಾರ ಮಾತನಾಡಿದ ಅವರು, ಬಿಜೆಪಿ ಸಂಸದರ ವಿರುದ್ಧ ಕಿಡಿಕಾರಿದರು. ಕೇರಳ ಮತ್ತು ತಮಿಳುನಾಡಿನ ಟ್ಯಾಬ್ಲೋಗಳಿಗೆ ಚುನಾವಣಾ ಉದ್ದೇಶದಿಂದ ಅವಕಾಶ ಕೊಡಲಾಗಿದೆ ಎಂದು ಇದೇ ಸಂದರ್ಭದಲ್ಲಿ ಹೇಳಿದರು. ಮತ್ತಷ್ಟು ವಿವರ ಇಲ್ಲಿದೆ.
ಗುಡಿಹಳ್ಳಿ-ಕಬ್ಬಳ್ಳಿ: ಗುಂಡಿಗಳಾಗಿ ಮಾರ್ಪಟ್ಟ ರಸ್ತೆ
ತಿಂಗಳೊಳಗೆ ರಸ್ತೆ ದುರಸ್ಥಿ ಮಾಡುವುದಾಗಿ ಹೇಳಿ ನಾಪತ್ತೆಯಾದ ಇಂಜಿನಿಯರ್!
ವಿದೇಶಿ ವಿನಿಮಯ ನಿಧಿ ಒಂದೇ ವಾರದಲ್ಲಿ ₹1.3 ಲಕ್ಷ ಕೋಟಿ ಏರಿಕೆ, ₹76.57 ಲಕ್ಷ ಕೋಟಿಗೆ ಜಂಪ್
ಭಾರತೀಯ ರಿಸರ್ವ್ ಬ್ಯಾಂಕ್ ಇತ್ತೀಚೆಗೆ ಬಿಡುಗಡೆ ಮಾಡಿದ ದತ್ತಾಂಶದ ಪ್ರಕಾರ, ಜನವರಿ 16ಕ್ಕೆ ಅಂತ್ಯಗೊಂಡ ವಾರದಲ್ಲಿ ಭಾರತದ ವಿದೇಶಿ ವಿನಿಮಯ ಮೀಸಲು ನಿಧಿಯು 14.17 ಶತಕೋಟಿ ಡಾಲರ್ ಏರಿಕೆಯಾಗಿ, 701.36 ಶತಕೋಟಿ ಡಾಲರ್ಗೆ ತಲುಪಿದೆ. ವಿದೇಶಿ ಕರೆನ್ಸಿ ಆಸ್ತಿಗಳು 9.65 ಶತಕೋಟಿ ಡಾಲರ್ ಮತ್ತು ಚಿನ್ನದ ಮೀಸಲು 4.62 ಶತಕೋಟಿ ಡಾಲರ್ ಹೆಚ್ಚಳವಾಗಿರುವುದು ಈ ಏರಿಕೆಗೆ ಮುಖ್ಯ ಕಾರಣವಾಗಿದೆ. ಇದೇ ವೇಳೆ, ಎಸ್ಡಿಆರ್ ಮತ್ತು ಐಎಂಎಫ್ ಮೀಸಲುಗಳಲ್ಲಿ ಅಲ್ಪ ಇಳಿಕೆ ಕಂಡುಬಂದಿದೆ.
ಕೊಪ್ಪಳ ಜಿಲ್ಲಾಸ್ಪತ್ರೆಗೆ ಬೇಕಿದೆ ಇಂದಿರಾ ಕ್ಯಾಂಟೀನ್
ಕೊಪ್ಪಳ ಜಿಲ್ಲಾಸ್ಪತ್ರೆಯಲ್ಲಿ ಇಂದಿರಾ ಕ್ಯಾಂಟೀನ್ನ ಅವಶ್ಯಕತೆ ಇದೆ. ಇಂದಿರಾ ಕ್ಯಾಂಟೀನ್ ಪ್ರಾರಂಭವಾದರೆ ಬಡಜನರಿಗೆ ಅನುಕೂಲವಾಗಲಿದೆ ಎಂಬ ಬೇಡಿಕೆ ಸಾರ್ವಜನಿಕ ವಲಯದಿಂದ ಕೇಳಿಬಂದಿದೆ. ಜಿಲ್ಲಾಸ್ಪತ್ರೆಗೆ ನಿರಂತರವಾಗಿ ರೋಗಿಗಳು ಬರುತ್ತಾರೆ. ಬರುವ ಬಡ ರೋಗಿಗಳ ಕುಟುಂಬದವರು, ರೋಗಿಗಳ ಸಹಾಯಕರು ಕೂಡ ಬಂದು ದಿನಗಟ್ಟಲೆ ಇಲ್ಲೇ ಇರಬೇಕಾಗುತ್ತದೆ. ಇಂತಹ ಸಂದರ್ಭದಲ್ಲಿ ಅವರು ಬೇರೆ ಕಡೆ ಹೋಗಿ ಊಟ ಮಾಡುವಷ್ಟು ಸಮಯವಾಗಲಿ ಅಥವಾ ಹಣವಾಗಲಿ ಅವರ ಬಳಿ ಇರುವುದಿಲ್ಲ, ಆಸ್ಪತ್ರೆಗೆ ಬರುವ ಬಹುತೇಕ ಜನರು ಬಡವರೇ ಆಗಿರುತ್ತಾರೆ. ಅದರಲ್ಲೂ ದೂರದ ಊರಿನಿಂದ ಬರುವವರೇ ಹೆಚ್ಚಾಗಿರುವುದರಿಂದ ಇಂದಿರಾ ಕ್ಯಾಂಟೀನ್ನ ಅವಶ್ಯಕತೆ ಎದ್ದು ಕಾಣುತ್ತಿದೆ. ಬಡವರ ಹಸಿವು ನೀಗಿಸುವ ಉದ್ದೇಶದಿಂದ ಸರಕಾರ ಜಾರಿಗೆ ತಂದಿರುವ ಇಂದಿರಾ ಕ್ಯಾಂಟೀನ್ ಯೋಜನೆಯು ನೂರಾರು ಬಡ ಜನರ ಹೊಟ್ಟೆಯ ಹಸಿವನ್ನು ನೀಗಿಸಲಿದೆ. ಬಡ ರೋಗಿಗಳಿಗೆ ಆಸ್ಪತ್ರೆಯ ವತಿಯಿಂದ ಊಟೋಪಚಾರದ ವ್ಯವಸ್ಥೆ ಇದ್ದು, ರೋಗಿಗಳ ಜೊತೆ ಬಂದವರಿಗೆ ಯಾವುದೇ ವ್ಯವಸ್ಥೆ ಇಲ್ಲ ಎಂಬ ದೂರು ಕೇಳಿಬಂದಿದೆ. ಕೊಪ್ಪಳ ಜಿಲ್ಲಾಸ್ಪತ್ರೆಯು ಸುಮಾರು 250 ಹಾಸಿಗೆಗಳ ಸಾಮರ್ಥ್ಯ ಹೊಂದಿದ್ದು, ನೂರು ಹಾಸಿಗೆಗಳ ಸಾಮರ್ಥ್ಯದ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಕೂಡ ಇರುವುದರಿಂದ ಕ್ಯಾಂಟೀನ್ ಬೇಡಿಕೆ ಹೆಚ್ಚಾಗಿದೆ. ಇಲ್ಲಿಂದ ಸ್ವಲ್ಪ ದೂರದಲ್ಲೇ ಜಿಲ್ಲಾಧಿಕಾರಿ ಮತ್ತು ಜಿಪಂ ಕಾರ್ಯಾಲಯಗಳು ಕೂಡ ಇರುವುದರಿಂದ ನಿತ್ಯ ರೈತರು, ಕೂಲಿ ಕಾರ್ಮಿಕರು, ಬಡವರು ಹಾಗೂ ವಿದ್ಯಾರ್ಥಿಗಳು ಸಾಕಷ್ಟು ಸಂಖ್ಯೆಯಲ್ಲಿ ಬರುತ್ತಾರೆ. ಇವರಲ್ಲಿ ಹೆಚ್ಚಿನ ವರಿಗೆ 150-200ರೂ. ಕೊಟ್ಟು ಆಹಾರ ತಿನ್ನುವಷ್ಟು ಸಾಧ್ಯವಾಗುವುದಿಲ್ಲ. ಸದ್ಯ ಕೊಪ್ಪಳ ನಗರ ವ್ಯಾಪ್ತಿಯಲ್ಲಿ ಇಂದಿರಾಕ್ಯಾಂಟೀನ್ ಮಾತ್ರ ಇದ್ದು, ಇನ್ನೊಂದು ಇಂದಿರಾ ಕ್ಯಾಂಟೀನ್ ಪ್ರಾರಂಭಿಸಬೇಕು ಎಂದು ಜನರು ಆಗ್ರಹಿಸಿದ್ದಾರೆ. ಕೊಪ್ಪಳ ಜಿಲ್ಲಾಸ್ಪತ್ರೆಯಲ್ಲಿ ಒಂದು ಒಂದು ಇಂದಿರಾ ಕ್ಯಾಂಟೀನ್ ಪ್ರಾರಂಭಿಸಬೇಕ. ಆ ಮೂಲಕ ಸರಕಾರ ಬಡಜನರ ಹಸಿವು ನೀಗಿಸುವ ಕಾರ್ಯವನ್ನು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಮಾಡಬೇಕು. -ಎಂ.ಕೃಷ್ಣವಂಶಿ, ಸ್ಥಳೀಯ ನಿವಾಸಿ
Bengaluru Commuters: ಬೈಕ್ ಟ್ಯಾಕ್ಸಿಗಳ ವಿಚಾರದಲ್ಲಿ ಬೆಂಗಳೂರು ಜನರ ಡಿಮ್ಯಾಂಡ್ ಇದು, ಸರ್ಕಾರ ಒಪ್ಪುತ್ತಾ?
ಬೆಂಗಳೂರು ಮಹಾನಗರದಲ್ಲಿ ಬೈಕ್ ಟ್ಯಾಕ್ಸಿ ಅಬ್ಬರ ಮತ್ತೆ ಶುರುವಾಗುತ್ತಿದೆ, ಬೈಕ್ ಟ್ಯಾಕ್ಸಿಗೆ ಈಗ ಅನುಮತಿ ಸಿಕ್ಕ ನಂತರ ಪ್ರಯಾಣಿಕರು ಖುಷಿಯಾಗಿದ್ದಾರೆ. ಆದರೆ ಆಟೋ ಹಾಗೂ ಕ್ಯಾಬ್ ಚಾಲಕರು ಈ ಬಗ್ಗೆ ತೀವ್ರ ಅಸಮಾಧಾನ ಹೊರ ಹಾಕುತ್ತಿದ್ದಾರೆ. ಒಬ್ಬರೇ ಪ್ರಯಾಣಿಸುವಾಗ, ಕಡಿಮೆ ದೂರದ ಪ್ರಯಾಣಕ್ಕೆ ಬೈಕ್ ಟ್ಯಾಕ್ಸಿ ಅವಲಂಬಿಸಿರುವ ಲಕ್ಷಾಂತರ ದೈನಂದಿನ ಪ್ರಯಾಣಿಕರು ತಮ್ಮ ದಿನನಿತ್ಯದ ಕಾರ್ಯ ನಡೆಸುತ್ತಿದ್ದಾರೆ.
13,070 ಕೋಟಿ ಹೂಡಿಕೆ ವಾಗ್ದಾನಕ್ಕೆ ದಾವೋಸ್ನಲ್ಲಿ ಅಧಿಕೃತ ಮುದ್ರೆ: ಎಂ.ಬಿ.ಪಾಟೀಲ
ಬೆಂಗಳೂರು: ಸ್ವಿಟ್ಜರ್ಲೆಂಡ್ನ ದಾವೋಸ್ನಲ್ಲಿ ನಡೆದ ವಿಶ್ವ ಆರ್ಥಿಕ ವೇದಿಕೆಯ (ಡಬ್ಲ್ಯುಇಎಫ್) ಸಮಾವೇಶವು, ವೈಮಾಂತರಿಕ್ಷ, ಆಹಾರ ಸಂಸ್ಕರಣೆ, ಡೇಟಾ ಕೇಂದ್ರ, ಡಿಜಿಟಲ್ ಮೂಲಸೌಲಭ್ಯ, ಶುದ್ಧ ಇಂಧನ, ಅತ್ಯಾಧುನಿಕ ತಯಾರಿಕೆ ಮತ್ತಿತರ ವಲಯಗಳಲ್ಲಿನ ಹೂಡಿಕೆ, ವಿಸ್ತರಣೆ ಮತ್ತು ಪಾಲುದಾರಿಕೆಗಳಲ್ಲಿ ಕರ್ನಾಟಕವು ಮುಂಬರುವ ದಿನಗಳಲ್ಲಿ ಭಾರಿ ಮುನ್ನಡೆ ಸಾಧಿಸಲು ಚಿಮ್ಮು ಹಲಗೆಯಾಗಿ ಪರಿಣಮಿಸಿದ್ದು, 13,070 ಕೋಟಿ ಹೂಡಿಕೆ ವಾಗ್ದಾನಕ್ಕೆ ಅಧಿಕೃತ ಮುದ್ರೆ
'ದೇಶಭಕ್ತಿಯಲ್ಲಿ ನಾವು ಯಾರಿಗೂ ಕಡಿಮೆ ಇಲ್ಲ': ತಮಿಳುನಾಡು ರಾಜ್ಯಪಾಲ ಆರ್.ಎನ್. ರವಿ ವಿರುದ್ಧ ಸ್ಟಾಲಿನ್ ವಾಗ್ದಾಳಿ
ಹೊಸದಿಲ್ಲಿ: ಅಧಿವೇಶನದ ಆರಂಭದಲ್ಲಿ ಸಾಂಪ್ರದಾಯಿಕ ಭಾಷಣವನ್ನು ಓದಲು ನಿರಾಕರಿಸುವ ಮೂಲಕ ಸಾಂವಿಧಾನಿಕ ಸಂಪ್ರದಾಯಗಳನ್ನು ದುರ್ಬಲಗೊಳಿಸಿದ್ದಾರೆ ಮತ್ತು ತಮ್ಮ ಹುದ್ದೆಗೆ ಕಳಂಕ ತಂದಿದ್ದಾರೆ ಎಂದು ರಾಜ್ಯಪಾಲ ಆರ್. ಎನ್. ರವಿ ವಿರುದ್ಧ ತಮಿಳುನಾಡು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಶನಿವಾರ ತೀವ್ರ ವಾಗ್ದಾಳಿ ನಡೆಸಿದರು. ಕೋಟ್ಯಂತರ ಜನರಿಂದ ಆಯ್ಕೆಯಾದ ಈ ಸರಕಾರ ಸಿದ್ಧಪಡಿಸಿದ ಭಾಷಣವನ್ನು ಓದದೆ ರಾಜ್ಯಪಾಲರು ತಮ್ಮ ಹುದ್ದೆಯ ಘನತೆಗೆ ಧಕ್ಕೆ ಮಾಡಿದ್ದಾರೆ” ಎಂದು ಸ್ಟಾಲಿನ್ ವಿಧಾನಸಭೆಯಲ್ಲಿ ಹೇಳಿದರು. ದೇಶಭಕ್ತಿಯಲ್ಲಿ ನಾವು ಯಾರಿಗೂ ಕಡಿಮೆ ಇಲ್ಲ ಮತ್ತು ಯಾರೂ ನಮಗೆ ದೇಶ ಭಕ್ತಿಯನ್ನು ಕಲಿಸುವ ಅಗತ್ಯವಿಲ್ಲ. ರಾಷ್ಟ್ರಗೀತೆಯ ಮೇಲಿನ ಗೌರವವು ರಾಜ್ಯದ ರಾಜಕೀಯ ಸಂಸ್ಕೃತಿಯಲ್ಲಿ ಆಳವಾಗಿ ಬೇರೂರಿದೆ ಎಂದು ಹೇಳಿದರು. ರಾಜ್ಯಪಾಲರ ವರ್ತನೆ ತಮಗೆ ನೋವನ್ನುಂಟು ಮಾಡಿದೆ. ರಾಜ್ಯಪಾಲರು ಸರಕಾರದ ವಿರುದ್ಧ ವರ್ತಿಸುತ್ತಿದ್ದಾರೆ. ನಾನು ರಾಷ್ಟ್ರ ಮತ್ತು ರಾಷ್ಟ್ರಗೀತೆಯ ಬಗ್ಗೆ ಆಳವಾದ ಗೌರವವನ್ನು ಹೊಂದಿರುವ ವ್ಯಕ್ತಿ ಎಂದು ಸ್ಟಾಲಿನ್ ಹೇಳಿದರು. ತಮಿಳುನಾಡು ವಿಧಾನಸಭೆಯಲ್ಲಿ ಕಲಾಪದ ಆರಂಭದಲ್ಲಿ ತಮಿಳು ಥಾಯ್ ವಳ್ತು(Tamil Thai Vazhthu) ಮತ್ತು ಕೊನೆಯಲ್ಲಿ ರಾಷ್ಟ್ರಗೀತೆಯನ್ನು ಹಾಡುವುದು ಸಂಪ್ರದಾಯವಾಗಿತ್ತು ಎಂದು ಸ್ಟಾಲಿನ್ ಹೇಳಿದರು. ತಮಿಳುನಾಡು ಇತರ ರಾಜ್ಯಗಳಿಗಿಂತ ಹೆಚ್ಚು ಅಭಿವೃದ್ಧಿ ಹೊಂದಿದೆ. ಇದಕ್ಕೆ ಕಾರಣ ನಮ್ಮ ಯೋಜನೆಗಳು. ಈ ಸರಕಾರದ ಮಟ್ಟಿಗೆ ಹೇಳುವುದಾದರೆ, ಸಾಧನೆಯ ಮೇಲೆ ಸಾಧನೆಯನ್ನು ಸೃಷ್ಟಿಸುವುದು ದ್ರಾವಿಡ ಮಾದರಿ ಸರಕಾರದ ವಿಶಿಷ್ಟ ಲಕ್ಷಣವಾಗಿದೆ ಎಂದು ಸ್ಟಾಲಿನ್ ಹೇಳಿದರು.
ಮುದ್ದೇಬಿಹಾಳ ನಗರಸಭೆ ಆಗುವುದು ಯಾವಾಗ?
ಮುದ್ದೇಬಿಹಾಳ: ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕು ಕೇಂದ್ರ ಇಂದು ಕೇವಲ ಸಾಮಾನ್ಯ ಪಟ್ಟಣವಲ್ಲ. ವೇಗವಾಗಿ ಹೆಚ್ಚುತ್ತಿರುವ ಜನಸಂಖ್ಯೆ, ವ್ಯಾಪಾರ-ವಹಿವಾಟಿನ ವಿಸ್ತರಣೆ, ಶಿಕ್ಷಣ, ಆರೋಗ್ಯ, ಸಾರಿಗೆ ಕ್ಷೇತ್ರಗಳ ಬೆಳವಣಿಗೆ, ಬ್ಯಾಂಕ್ಗಳು, ಮಾರುಕಟ್ಟೆಗಳು ಹಾಗೂ ಸರಕಾರಿ ಕಚೇರಿಗಳ ವ್ಯವಸ್ಥೆಯಿಂದ ಹೊಂದಿದ ಪಟ್ಟಣ ಈಗಾಗಲೇ ನಗರ ಸ್ವರೂಪ ಪಡೆದುಕೊಂಡಿದೆ. ಆದರೂ ಆಡಳಿತಾತ್ಮಕವಾಗಿ ಇನ್ನೂ ಪುರಸಭೆ ಸ್ಥಾನಮಾನಕ್ಕೆ ಸೀಮಿತವಾಗಿರುವುದು ಯಾಕೆ? ಎಂಬ ಪ್ರಶ್ನೆ ಇಲ್ಲಿನ ಜನರನ್ನು ಕಾಡುತ್ತಿದೆ. ರಾಜ್ಯ ಸರಕಾರದ ನಿಯಮಾವಳಿಗಳ ಪ್ರಕಾರ ನಿರ್ದಿಷ್ಟ ಜನಸಂಖ್ಯೆ, ಆದಾಯ ಮೂಲಗಳು, ವ್ಯಾಪಾರ ಚಟುವಟಿಕೆಗಳು ಹಾಗೂ ಮೂಲಸೌಕರ್ಯಗಳ ಮಾನದಂಡಗಳನ್ನು ಪೂರೈಸಿದರೆ ಪಟ್ಟಣವನ್ನು ನಗರಸಭೆಯಾಗಿ ಮೇಲ್ದರ್ಜೆಗೆ ಏರಿಸಬಹುದು. ಈ ಎಲ್ಲ ಮಾನದಂಡಗಳನ್ನು ಮುದ್ದೇಬಿಹಾಳ ಹೊಂದಿದ್ದು, ಬಹಳ ಹಿಂದೆಯೇ ನಗರಸಭೆಯಾಗಬೇಕಿತ್ತು ಎನ್ನುವುದು ಕೇವಲ ಜನಾಭಿಪ್ರಾಯವಲ್ಲ, ವಾಸ್ತವವೂ ಹೌದು. ಪಟ್ಟಣದಲ್ಲಿ ದಿನದಿಂದ ದಿನಕ್ಕೆ ವಾಹನ ಸಂಚಾರ ಹೆಚ್ಚುತ್ತಿದೆ. ವ್ಯಾಪಾರ ವಹಿವಾಟು ತಾಲೂಕು ಮಟ್ಟವನ್ನು ಮೀರಿ ಜಿಲ್ಲಾ ಮಟ್ಟದಂತಾಗಿದೆ. ಖಾಸಗಿ ಆಸ್ಪತ್ರೆಗಳು, ಶಿಕ್ಷಣ ಸಂಸ್ಥೆಗಳು, ವಾಣಿಜ್ಯ ಸಂಕೀರ್ಣಗಳು, ಬ್ಯಾಂಕ್ಗಳು ಹಾಗೂ ಸುತ್ತಮುತ್ತಲ ಗ್ರಾಮಗಳ ಜನಸಂಚಾರ ಮುದ್ದೇಬಿಹಾಳ ಪಟ್ಟಣವನ್ನು ಪ್ರಮುಖ ಕೇಂದ್ರಬಿಂದುವಾಗಿಸಿದೆ. ಆದರೆ ಇನ್ನೊಂದೆಡೆ ಚರಂಡಿ ವ್ಯವಸ್ಥೆಯ ಅವ್ಯವಸ್ಥೆ, ಮುಖ್ಯ ಬಜಾರಿನಲ್ಲಿ ರಸ್ತೆ ಅಗಲೀಕರಣದ ಕೊರತೆ, ವೈಜ್ಞಾನಿಕ ಕಸ ನಿರ್ವಹಣೆಯ ಅಭಾವ, ಉದ್ಯಾನಗಳ ಕೊರತೆ, ಬೀದಿ ದೀಪಗಳ ಸಮಸ್ಯೆ ಮತ್ತು ಸಮರ್ಪಕ ಕುಡಿಯುವ ನೀರಿನ ಕೊರತೆ ಜನರನ್ನು ಪ್ರತಿದಿನವೂ ಬೆಂಬಿಡದೆ ಕಾಡುತ್ತಿದೆ. ಮುದ್ದೇಬಿಹಾಳಕ್ಕೆ ನಗರಸಭೆ ಸ್ಥಾನಮಾನ ದೊರೆತರೆ ಸರಕಾರದಿಂದ ಹೆಚ್ಚಿನ ಅನುದಾನ, ವಿಶೇಷ ಯೋಜನೆಗಳು ಹಾಗೂ ನಗರಾಭಿವೃದ್ಧಿ ನಿಧಿಗಳ ಲಭ್ಯತೆ ಸಿಗಲಿದೆ. ಪುರಸಭೆ ಪಟ್ಟದಿಂದ ಹೊರಬಂದರೆ ಪಟ್ಟಣದ ಯುವಜನರಿಗೆ ಉದ್ಯೋಗಾವಕಾಶಗಳು ಹೆಚ್ಚಾಗಿ ಸಿಗುವುದರಿಂದ ಒಟ್ಟಾರೆ ಅಭಿವೃದ್ಧಿಗೆ ಹೊಸ ದಿಕ್ಕು ತೋರಿದಂತಾಗುತ್ತದೆ. ಸ್ಥಳೀಯ ಶಾಸಕ ಹಾಗೂ ಸಾಬೂನು ಮತ್ತು ಮಾರ್ಜಕ ನಿಗಮದ ನಿಯಮಿತ ಅಧ್ಯಕ್ಷ ಸಿ.ಎಸ್. ನಾಡಗೌಡ ಅಪ್ಪಾಜಿ ಅವರು ಮುದ್ದೇಬಿಹಾಳವನ್ನು ನಗರಸಭೆಯನ್ನಾಗಿಸಲು ಮೊದಲ ಬಾರಿಗೆ ಧ್ವನಿ ಎತ್ತಿದವರು. ಅವರ ಪ್ರಯತ್ನದಿಂದ ಹಲವು ಯೋಜನೆಗಳು ಪಟ್ಟಣಕ್ಕೆ ಬಂದಿವೆ. ಇದೇ ವೇಳೆ, ಮೈಸೂರು ಸ್ಯಾಂಡಲ್ ಸೋಪ್ ಕಾರ್ಖಾನೆಯನ್ನು ವಿಜಯಪುರ ಕ್ಕಿಂತ ಮುದ್ದೇಬಿಹಾಳದಲ್ಲೇ ಸ್ಥಾಪಿಸಬೇಕು ಎಂಬ ಜನರ ಆಗ್ರಹವೂ ಕೇಳಿಬರುತ್ತಿದೆ. ಬಿದರಕುಂದಿ, ಕುಂಟೋಜಿ, ಶಿರೋಳ, ಹಡಲಗೇರಿ ಸೇರಿ ಇನ್ನೂ ಕೆಲವು ಸುತ್ತಮುತ್ತಲ ಗ್ರಾಮಗಳನ್ನು ಮುದ್ದೇಬಿಹಾಳ ಪಟ್ಟಣಕ್ಕೆ ಸೇರಿಸಿದರೆ ಜನಸಂಖ್ಯೆ, ವ್ಯಾಪ್ತಿ ಹಾಗೂ ಸಂಪನ್ಮೂಲಗಳ ದೃಷ್ಟಿಯಿಂದ ಮುದ್ದೇಬಿಹಾಳದ ನಗರಸಭೆ ಸ್ಥಾನಮಾನ ಪಡೆಯುವ ಅರ್ಹತೆ ಮತ್ತಷ್ಟು ಬಲವಾಗುತ್ತದೆ. ಹಾಗಿದ್ದರೂ ನಗರಸಭೆ ಯಾಕೆ ಈ ಪ್ರಕ್ರಿಯೆಗೆ ಮುಂದಾಗುತ್ತಿಲ್ಲ ಎಂಬ ಪ್ರಶ್ನೆಗೆ ಇನ್ನೂ ಸ್ಪಷ್ಟ ಉತ್ತರ ಸಿಕ್ಕಿಲ್ಲ. ನಗರಸಭೆ ಸ್ಥಾನಮಾನ ಸಿಗದಿರುವುದಕ್ಕೆ ಕಾರಣ ಯಾರು?. ಇದು ಜನಪ್ರತಿನಿಧಿಗಳ ನಿರ್ಲಕ್ಷ್ಯವೇ?. ಅಧಿಕಾರಿಗಳ ಉದಾಸೀನವೇ? ಅಥವಾ ರಾಜಕೀಯ ಇಚ್ಛಾಶಕ್ತಿಯ ಕೊರತೆಯೇ? ಎಂಬುದು ಪ್ರಶ್ನೆ ಜನರಲ್ಲಿ ಮೂಡಿದೆ. ಕೆಲಕಾಲ ಈ ವಿಷಯವನ್ನು ಮುನ್ನೆಲೆಗೆ ತಂದ ಬಳಿಕ ಮರೆತುಬಿಡುವ ಸಂಸ್ಕೃತಿಯೇ ಮುದ್ದೇಬಿಹಾಳದ ಅಭಿವೃದ್ಧಿಗೆ ಶಾಪವಾಗುತ್ತಿದೆ ಎಂದು ಪ್ರಗತಿಪರ ಸಂಘಟನೆಗಳು ಆರೋಪಿಸುತ್ತಿವೆ. ಮುದ್ದೇಬಿಹಾಳ ನಗರಸಭೆ ವಿಚಾರದಲ್ಲಿ ನಾಗರಿಕರು, ವ್ಯಾಪಾರಸ್ಥರು, ವಿವಿಧ ಸಂಘಟನೆಗಳು, ಪತ್ರಕರ್ತರು ಹಾಗೂ ಜನಪ್ರತಿನಿಧಿಗಳು ಒಂದೇ ಧ್ವನಿಯಲ್ಲಿ ಮಾತನಾಡಿದಾಗ ಮಾತ್ರ ರಾಜ್ಯ ಸರಕಾರದ ಗಮನ ಸೆಳೆಯಲು ಸಾಧ್ಯ ಎನ್ನುವುದು ಅವರ ಜನಾಭಿಪ್ರಾಯ. ವಿಜಯಪುರ ಜಿಲ್ಲಾ ಕೇಂದ್ರದಿಂದ ಸುಮಾರು 90 ಕಿ.ಮೀ ದೂರದಲ್ಲಿರುವ ಮುದ್ದೇಬಿಹಾಳ ಪಟ್ಟಣವು ವ್ಯಾಪಾರ, ಶಿಕ್ಷಣ ಹಾಗೂ ಸಾರಿಗೆ ದೃಷ್ಟಿಯಿಂದ ಮಹತ್ವ ಹೊಂದಿದೆ. ಪಟ್ಟಣದ ಅಭಿವೃದ್ಧಿಗೆ ವಿವಿಧ ಅವಧಿಗಳಲ್ಲಿ ಜನಪ್ರತಿನಿಧಿಗಳು ಹಲವು ಭರವಸೆಗಳನ್ನು ನೀಡಿದ್ದಾರೆ. ಹಿಂದಿನ ಶಾಸಕ ಎ.ಎಸ್. ಪಾಟೀಲ್ ನಡಹಳ್ಳಿ ಅವರು ಮುದ್ದೇಬಿಹಾಳಕ್ಕೆ ಆರ್ಟಿಒ ಹಾಗೂ ಎಸಿ ಕಚೇರಿ ಮಂಜೂರು ಮಾಡುವುದಾಗಿ ಹೇಳಿದ್ದರು. ಆ ಸಂದರ್ಭದಲ್ಲಿ ಸಾರಿಗೆ ಸಚಿವರಾಗಿದ್ದ ಲಕ್ಷ್ಮಣ ಸವದಿ ಅವರು ಆರ್ಟಿಒ ಕಚೇರಿ ಮಂಜೂರಾತಿ ಮಾಡಿದ್ದರು. ಆದರೆ ಅದು ಇನ್ನೂ ಕಾರ್ಯರೂಪಕ್ಕೆ ಬಂದಿಲ್ಲ. ಈಗಿನ ಶಾಸಕ ಸಿ.ಎಸ್. ನಾಡಗೌಡರ ಪ್ರಯತ್ನದಿಂದ ಕೃಷಿ ಸಂಶೋಧನಾ ಕೇಂದ್ರಕ್ಕೆ ಮಂಜೂರಾತಿ ದೊರೆತಿದ್ದರೂ, ಅದಿನ್ನೂ ಕಾರ್ಯಾರಂಭ ಮಾಡಿಲ್ಲ. ಜನಸಂಖ್ಯೆ ಆಧಾರದ ಮೇಲೆ ನಗರ ಪೊಲೀಸ್ ಠಾಣೆ, ಎಸಿ ಕಚೇರಿ ಹಾಗೂ ಗ್ರಾಮೀಣ ಬಸ್ ನಿಲ್ದಾಣ ಮುದ್ದೇಬಿಹಾಳಕ್ಕೆ ಅಗತ್ಯವಿದೆ. ಶಾಸಕರು ವಿಶೇಷ ಕಾಳಜಿಯಿಂದ ಮಂಜೂರು ಮಾಡಿಸಿದರೆ ಮುದ್ದೇಬಿಹಾಳ ಪಟ್ಟಣ ಇನ್ನಷ್ಟು ಅಭಿವೃದ್ಧಿಯಾಗಲಿದೆ ಎಂಬುದು ಜನರ ಆಶಯ.
ಕೇಂದ್ರ ಸರ್ಕಾರವು 18ನೇ ರೋಜ್ಗಾರ್ ಮೇಳದಲ್ಲಿ 61,000ಕ್ಕೂ ಹೆಚ್ಚು ಯುವಕರಿಗೆ ನೇಮಕಾತಿ ಪತ್ರಗಳನ್ನು ವಿತರಿಸಿದೆ. ಪ್ರಧಾನಿ ನರೇಂದ್ರ ಮೋದಿ ಅವರು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಅಭ್ಯರ್ಥಿಗಳಿಗೆ ಶುಭ ಹಾರೈಸಿದರು. ಕೇಂದ್ರದ ವಿವಿಧ ಇಲಾಖೆಗಳಲ್ಲಿ ಹೊಸದಾಗಿ ಆಯ್ಕೆಯಾದವರು ಸೇವೆ ಸಲ್ಲಿಸಲಿದ್ದಾರೆ. ಇದುವರೆಗೆ 11 ಲಕ್ಷಕ್ಕೂ ಅಧಿಕ ನೇಮಕಾತಿ ಪತ್ರಗಳನ್ನು ವಿತರಿಸಲಾಗಿದೆ. ಭಾರತೀಯ ಯುವಕರಿಗೆ ಜಾಗತಿಕ ಮಟ್ಟದಲ್ಲಿ ಅವಕಾಶಗಳು ತೆರೆದುಕೊಳ್ಳಲಿವೆ.
ದಕ್ಷಿಣ ಗೆಲ್ಲಲು ಮೊಳಗಿದ ಪ್ರಧಾನಿ ಮೋದಿ ಕಹಳೆ
ಪ್ರಧಾನಿ ನರೇಂದ್ರ ಮೋದಿ ಅವರು ಕೇರಳ ಮತ್ತು ತಮಿಳುನಾಡು ಚುನಾವಣೆಗಳಿಗೆ ಪ್ರಚಾರ ಆರಂಭಿಸಿದ್ದಾರೆ. ಉಭಯ ರಾಜ್ಯಗಳ ಆಡಳಿತಾರೂಢ ಪಕ್ಷಗಳ ಭ್ರಷ್ಟಾಚಾರ, ಹಿಂದೂ ವಿರೋಧಿ ಧೋರಣೆ ಮತ್ತು ಅಪರಾಧಗಳ ಬಗ್ಗೆ ಅವರು ಟೀಕಿಸಿದ್ದಾರೆ. ಕೇರಳದಲ್ಲಿ ಬದಲಾವಣೆ ನಿರೀಕ್ಷಿಸಲಾಗಿದೆ. ತಮಿಳುನಾಡಿನಲ್ಲಿ ಡಿಎಂಕೆ ಸರ್ಕಾರದ ಭ್ರಷ್ಟಾಚಾರ, ಮಾಫಿಯಾ ಮತ್ತು ಅಪರಾಧಗಳ ಬಗ್ಗೆ ಮೋದಿ ಆರೋಪಿಸಿದ್ದಾರೆ. ಎನ್ಡಿಎ ಸರ್ಕಾರ ಅಧಿಕಾರಕ್ಕೆ ಬರುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಕುಂದಾಪುರ: ಖಾಸಗಿ ಬಸ್- ಬೈಕ್ ಮುಖಾಮುಖಿ ಢಿಕ್ಕಿ; ಸವಾರ ಮೃತ್ಯು
ಕುಂದಾಪುರ: ಖಾಸಗಿ ಬಸ್ ಹಾಗೂ ಬೈಕ್ ಮುಖಾಮುಖಿ ಢಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಮೃತಪಟ್ಟ ಘಟನೆ ಶನಿವಾರ ಕುಂದಾಪುರ ತಾಲೂಕಿನ ಶೆಟ್ರಕಟ್ಟೆ ತಿರುವಿನಲ್ಲಿ ನಡೆದಿದೆ. ಸೌಕೂರು ನಿವಾಸಿ ವಿಜಯ್ (36) ಮೃತ ಯುವಕ. ತ್ರಾಸಿಯಲ್ಲಿ ಫಾಸ್ಟ್ ಫುಡ್ ಅಂಗಡಿ ನಡೆಸುತ್ತಿದ್ದ ವಿಜಯ್, ಶನಿವಾರ ಬೆಳಿಗ್ಗೆ ಆಹಾರ ವಸ್ತುಗಳನ್ನು ಖರೀದಿಸಿ ಬೈಕಿನಲ್ಲಿ ತಲ್ಲೂರು ಮೂಲಕ ಸೌಕೂರು ಕಡೆಗೆ ಮರಳುತ್ತಿದ್ದಾಗ ಘಟನೆ ನಡೆದಿದೆ. ಶೆಟ್ರಕಟ್ಟೆ ತಿರುವಿನಲ್ಲಿ ಖಾಸಗಿ ಬಸ್ವೊಂದನ್ನು ಓವರ್ ಟೇಕ್ ಮಾಡುವಾಗ ಎದುರಿನಿಂದ ಬಂದ ಇನ್ನೊಂದು ಖಾಸಗಿ ಬಸ್ ಗೆ ಢಿಕ್ಕಿ ಹೊಡೆದಿದೆ. ಢಿಕ್ಕಿಯ ರಭಸಕ್ಕೆ ವಿಜಯ್ಗೆ ಗಂಭೀರ ಗಾಯಗಳಾಗಿದ್ದು ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಕುಂದಾಪುರ ಸಂಚಾರ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.
ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗ್ರೀನ್ ಲ್ಯಾಂಡ್ ಅನ್ನು ಸ್ವಾಧೀನಪಡಿಸಿಕೊಳ್ಳುವ ಉತ್ಸಾಹದಲ್ಲಿದ್ದು, ಇದಕ್ಕೆ ಎನೂ ಬೇಕಾದರೂ ಮಾಡತ್ತೇನೆ ಎಂದು ಹಠಕ್ಕೆ ಬಿದ್ದಿದ್ದಾರೆ ಎಂದು ಎಲ್ಲರಿಗೂ ಗೊತ್ತೇ ಇರುವ ವಿಚಾರ. ಅಂತಯೇ ತಂತ್ರಜ್ಞಾನ ಯುಗದಲ್ಲಿ AIಯನ್ನು ಸಾಫ್ಟ್ ಪವರ್ ಆಗಿ ಹೇಗೆ ಬಳಕೆ ಮಾಡಬೇಕು ಎಂಬ ನೈಪುಣ್ಯತೆಯಲ್ಲಿ ಜಾಗತಿಕ ನಾಯಕರ ಪಟ್ಟಿಯಲ್ಲಿ ಟ್ರಂಪ್ ಮುನ್ನಲೆಯಲ್ಲಿದ್ದಾರೆ. ಆದರೆ, ನೈಪುಣ್ಯತೆ ಹಾಗೂ ಹಂಬಲ ಮಾತ್ರವಲ್ಲ, ಇದರೊಂದಿಗೆ ಕೊಂಚ ಸಾಮಾನ್ಯ ಜ್ಞಾನವೂ ಇರಬೇಕು. ಇದರಲ್ಲಿ ಎಡವಿದ ಟ್ರಂಪ್ ಆಡಳಿತ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಟ್ರೋಲಿಗರ ಆಹಾರವಾಗುತ್ತಿದೆ.
ಇಶಾನ್ ಕಿಶನ್ ವಿರುದ್ಧ ಸಿಟ್ಟಾಗಿದ್ದಕ್ಕೆ ಕಾರಣ ಬಿಚ್ಚಿಟ್ಟ ಸೂರ್ಯಕುಮಾರ್ ಯಾದವ್!
ರಾಯ್ಪುರ್: ಇಲ್ಲಿನ ಶಹೀದ್ ವೀರ್ ನಾರಾಯಣ್ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನ್ಯೂಝಿಲೆಂಡ್ ವಿರುದ್ಧದ ಎರಡನೆ ಟಿ-20 ಪಂದ್ಯದಲ್ಲಿ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿದ ಇಶಾನ್ ಕಿಶನ್ ರನ್ನು ಭಾರತ ತಂಡದ ನಾಯಕ ಸೂರ್ಯಕುಮಾರ್ ಯಾದವ್ ಮನಸಾರೆ ಕೊಂಡಾಡಿದ್ದಾರೆ. ಇದೇ ವೇಳೆ, ಪವರ್ ಪ್ಲೇ ಅವಧಿಯಲ್ಲಿ ನನಗೆ ಬ್ಯಾಟಿಂಗ್ ಗೆ ಅವಕಾಶ ನೀಡದೆ ಇದ್ದುದರಿಂದ, ನಾನು ಇಶಾನ್ ಕಿಶನ್ ಮೇಲೆ ಸಿಟ್ಟಾಗಿದ್ದೆ ಎಂಬ ಸಂಗತಿಯನ್ನು ಸೂರ್ಯಕುಮಾರ್ ಯಾದವ್ ಒಪ್ಪಿಕೊಂಡಿದ್ದಾರೆ. ಟಾಸ್ ಸೋತು ಬ್ಯಾಟಿಂಗ್ ಗೆ ಇಳಿಸಲ್ಪಟ್ಟ ನ್ಯೂಝಿಲೆಂಡ್ ತಂಡ, ನಿಗದಿತ 20 ಓವರ್ ಗಳಲ್ಲಿ 208 ರನ್ ಗಳ ಬೃಹತ್ ಮೊತ್ತವನ್ನು ಕಲೆ ಹಾಕಿತ್ತು. ಈ ಮೊತ್ತವನ್ನು ಬೆನ್ನತ್ತಿದ ಭಾರತ ತಂಡ, ಕೇವಲ 6 ರನ್ ಗಳಿಸುವಷ್ಟರಲ್ಲಿ ಆರಂಭಿಕ ಆಟಗಾರರಾದ ಸಂಜು ಸ್ಯಾಮ್ಸನ್ ಹಾಗೂ ಅಭಿಷೇಕ್ ಶರ್ಮರನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಈ ಹಂತದಲ್ಲಿ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ ಇಶಾನ್ ಕಿಶನ್, ನ್ಯೂಝಿಲೆಂಡ್ ಬೌಲರ್ ಗಳನ್ನು ಕಂಗೆಡಿಸಿದರು. ಕೇವಲ 32 ಬಾಲ್ ಗಳಲ್ಲಿ 76 ರನ್ ಸಿಡಿಸಿದ ಇಶಾನ್ ಕಿಶನ್, ಪಂದ್ಯವನ್ನು ನ್ಯೂಝಿಲೆಂಡ್ ಹಿಡಿತದಿಂದ ಕಿತ್ತುಕೊಂಡರು. ಇದಲ್ಲದೆ, ಸೂರ್ಯಕುಮಾರ್ ಯಾದವ್ ಅವರೊಂದಿಗಿನ ಜೊತೆಯಾಟದಲ್ಲಿ ಕೇವಲ ಎಂಟು ಓವರ್ ಗಳಲ್ಲಿ 122 ರನ್ ಗಳಿಸುವ ಮೂಲಕ ಪಂದ್ಯಕ್ಕೆ ದೊಡ್ಡ ತಿರುವು ನೀಡಿದರು. ಪಂದ್ಯ ಮುಕ್ತಾಯಗೊಂಡ ಬಳಿಕ, ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಸೂರ್ಯಕುಮಾರ್ ಯಾದವ್, “ಮಧ್ಯಾಹ್ನ ಇಶಾನ್ ಕಿಶನ್ ಊಟ ಮಾಡಿದ್ದರೋ ಇಲ್ಲವೊ ನನಗೆ ತಿಳಿಯದು. ಆದರೆ, ಬ್ಯಾಟಿಂಗ್ ಮಾಡುತ್ತಿರುವ ತಂಡವೊಂದು ಕೇವಲ 6 ರನ್ ಗೆ 2 ವಿಕೆಟ್ ಕಳೆದುಕೊಂಡ ಬಳಿಕ, ಪವರ್ ಪ್ಲೇನಲ್ಲಿ 60 ಚಿಲ್ಲರೆ ರನ್ ಗಳಿಸಿದ್ದನ್ನು ನಾನಂತೂ ಎಂದೂ ನೋಡಿಲ್ಲ. ಆದರೆ, ನಮ್ಮ ಬ್ಯಾಟರ್ ಗಳು ಇದೇ ರೀತಿ ಆಡಬೇಕಿದೆ. ಆತ ನನಗೆ ಪವರ್ ಪ್ಲೇನಲ್ಲಿ ಬ್ಯಾಟಿಂಗ್ ಮಾಡಲು ಅವಕಾಶ ನೀಡದೆ ಇದ್ದುದರಿಂದ ಕೋಪಗೊಂಡಿದ್ದೆ. ಆದರೆ, ನಾನು ಸಿಟ್ಟನ್ನು ಹಿಡಿತದಲ್ಲಿಟ್ಟುಕೊಳ್ಳುವಲ್ಲಿ ಯಶಸ್ವಿಯಾದೆ” ಎಂದು ಲಘು ಹಾಸ್ಯದ ಧಾಟಿಯಲ್ಲಿ ಹೇಳಿದರು.
Gold Rate Today: ಮತ್ತೆ ದುಬಾರಿಯಾದ ಚಿನ್ನ, ಇಂದಿನ ದರಪಟ್ಟಿ ಇಲ್ಲಿದೆ
ಚಿನ್ನದ ಮಾರುಕಟ್ಟೆಯಲ್ಲಿ ಇಂದು ಮತ್ತೆ ಬೆಲೆ ಏರಿಕೆ ಕಂಡುಬಂದಿದ್ದು, ಗ್ರಾಹಕರಿಗೆ ಶಾಕ್ ನೀಡಿದೆ. ಬೆಂಗಳೂರಿನಲ್ಲಿ 24 ಕ್ಯಾರೆಟ್, 22 ಕ್ಯಾರೆಟ್ ಹಾಗೂ 18 ಕ್ಯಾರೆಟ್ ಚಿನ್ನದ ದರಗಳಲ್ಲಿ ಏರಿಕೆ ದಾಖಲಾಗಿದೆ. ನಿನ್ನೆಗಿಂತ ಇಂದಿನ ದರದಲ್ಲಿ ಪ್ರತಿಗ್ರಾಂಗೆ ನೂರಾರು ರೂಪಾಯಿ ಹೆಚ್ಚಳವಾಗಿದ್ದು, ಮದುವೆ ಮತ್ತು ಹೂಡಿಕೆ ಉದ್ದೇಶದ ಖರೀದಿದಾರರು ಚಿಂತೆಯಲ್ಲಿದ್ದಾರೆ. ಜನವರಿ 24ರಂದು ಬೆಂಗಳೂರಿನಲ್ಲಿ ಚಿನ್ನದ ದರಗಳಲ್ಲಿ ಮತ್ತೆ
ಹುಬ್ಬಳ್ಳಿಯಲ್ಲಿ ಮನೆ ಹಂಚಿಕೆ ಕಾರ್ಯಕ್ರಮಕ್ಕೂ ಮುನ್ನ ಅವಘಡ; ಸಿಎಂ, ಜಮೀರ್ ಕಟೌಟ್ ಬಿದ್ದು ನಾಲ್ವರಿಗೆ ಗಾಯ
ಹುಬ್ಬಳ್ಳಿಯ ಮಂಟೋರ ರಸ್ತೆಯಲ್ಲಿ ಕೊಳಗೇರಿ ಅಭಿವೃದ್ಧಿ ಮಂಡಳಿಯ ವತಿಯಿಂದ ಮನೆ ವಿತರಣೆಯ ಕಾರ್ಯಕ್ರಮ ಆಯೋಜಿಸಲಾಗಿತ್ತು. ಇದಕ್ಕಾಗಿ ಸಿದ್ಧತೆ ನಡೆದಿತ್ತು. ಈ ವೇಳೆ ಬೃಹತ್ ಕಟೌಟ್ಗಳು ಮುರಿದು ಬಿದ್ದಿವೆ. ಈ ಘಟನೆಯಲ್ಲಿ ಮನೆ ಕೇಳಲು ಬಂದಿದ್ದ ಮಹಿಳೆಯೂ ಸೇರಿದಂತೆ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರಿಗೆ ಹುಬ್ಬಳ್ಳಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ.
ವಾಹನ ಚಾಲಕರಿಗೆ ನಿಯಮಿತ ಕಣ್ಣಿನ ತಪಾಸಣೆ ಅನಿವಾರ್ಯ : ದೀಪಕ್
ವಿಶೇಷ ರಸ್ತೆ ಸುರಕ್ಷತಾ ಜಾಗೃತಿ ಕಾರ್ಯಕ್ರಮ
ಉಡುಪಿ: ಜಿಲ್ಲಾಸ್ಪತ್ರೆಯಿಂದ ಪರಾರಿಯಾಗಿದ್ದ ಹಲ್ಲೆ ಪ್ರಕರಣದ ಆರೋಪಿ ಬಂಧನ
ಉಡುಪಿ, ಜ.24: ಬ್ರಹ್ಮಾವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ಉಡುಪಿ ಜಿಲ್ಲಾಸ್ಪತ್ರೆಯಿಂದ ಪರಾರಿಯಾಗಿದ್ದ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ತೆಂಕನಿಡಿಯೂರು ನಿವಾಸಿ ಕಿರಣ್ ಪಿಂಟೋ(49) ಬಂಧಿತ ಆರೋಪಿ. ಜ.18ರಂದು ಬ್ರಹ್ಮಾವರದ ಬಾರ್ ಎದುರು ನಡೆದ ಹಲ್ಲೆ ಪ್ರಕರಣದಲ್ಲಿ ಆರೋಪಿಯಾಗಿದ್ದ ಕಿರಣ್ ಪಿಂಟೋ, ಗಾಯಗೊಂಡು ಉಡುಪಿ ಅಜ್ಜರಕಾಡು ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿದ್ದನು. ಈತ ಜ.21 ರಂದು ಬೆಳಗಿನ ಜಾವ ಆಸ್ಪತ್ರೆಯಿಂದ ತಪ್ಪಿಸಿಕೊಂಡು ಪರಾರಿಯಾಗಿದ್ದನು. ಈತನಿಗಾಗಿ ಪೊಲೀಸರು ತೀವ್ರ ಹುಡುಕಾಟ ನಡೆಸಿದ ಬ್ರಹ್ಮಾವರ ಪೊಲೀಸರು ಜ.24ರಂದು ಬಂಧಿಸಿ, ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.
ಅಮೆರಿಕದ ಸಂಭಾವ್ಯ ದಾಳಿಯ ಎಚ್ಚರಿಕೆಯಿಂದ ಡೆನ್ಮಾರ್ಕ್, ತನ್ನ ಗ್ರೀನ್ಲ್ಯಾಂಡ್ ಪ್ರದೇಶದಲ್ಲಿ ಸೇನೆಯನ್ನು ಉನ್ನತ ಸನ್ನದ್ಧತೆಯಲ್ಲಿರಿಸಿದೆ. ಶತ್ರುಗಳ ಮೇಲೆ ಗುಂಡು ಹಾರಿಸಲು ಸಿದ್ಧವಿದ್ದ ಸೇನೆಗೆ, 'ಆರ್ಕ್ಟಿಕ್ ಎಂಡ್ಯೂರೆನ್ಸ್' ಕಾರ್ಯಾಚರಣೆಯಡಿ ಸೈನಿಕರು ಮತ್ತು ಯುದ್ಧೋಪಕರಣಗಳನ್ನು ರವಾನಿಸಲಾಯಿತು. ಟ್ರಂಪ್ ಅವರ ಹೇಳಿಕೆಯ ನಂತರ ಪರಿಸ್ಥಿತಿ ತಿಳಿಗೊಂಡಿತು, ನ್ಯಾಟೋ ಮಿತ್ರರಾಷ್ಟ್ರಗಳ ಬೆಂಬಲವೂ ದೊರಕಿತ್ತು ಎಂಬ ಸಂಗತಿ ಬೆಳಕಿಗೆ ಬಂದಿದೆ.
ಚಿಕ್ಕಮಗಳೂರು: ಸರ್ಕಲ್ ಇನ್ಸ್ಪೆಕ್ಟರ್ ಆಗಿ ಬಡ್ತಿ ಪಡೆದ ಖಾದರ್ ಅವರಿಗೆ ಸನ್ಮಾನ
ಚಿಕ್ಕಮಗಳೂರು: ಇತ್ತೀಚೆಗೆ ಸರ್ಕಲ್ ಇನ್ಸ್ಪೆಕ್ಟರ್ ಆಗಿ ಬಡ್ತಿ ಹೊಂದಿದ ಖಾದರ್ ಅವರಿಗೆ ಚಿಕ್ಕಮಗಳೂರು ಬದ್ರಿಯಾ ಜುಮ್ಮಾ ಮಸೀದಿಯ ಸಮಿತಿಯ ವತಿಯಿಂದ ಶಾಲು ಹೊದಿಸಿ ಸನ್ಮಾನಿಸಲಾಯಿತು. ಈ ಕಾರ್ಯಕ್ರಮದಲ್ಲಿ ಸಮಿತಿಯ ಅಧ್ಯಕ್ಷ ಸಿ.ಎಸ್. ಖಲಂದರ್ ಹಾಜಿ, ಕಾರ್ಯದರ್ಶಿ ಮೊಹಮ್ಮದ್ ಇಸ್ಮಾಯಿಲ್, ಮಸೀದಿಯ ಖತೀಬ್ ಶರೀಫ್ ಸಖಾಫಿ, ಹಿರಿಯರಾದ ಕೆ. ಮೊಹಮ್ಮದ್, ಬಿ.ಎಸ್. ಮೊಹಮ್ಮದ್, ಅಬ್ದುಲ್ಲ ಹಾಜಿ, ಇಂಪಲ್ ನಾಸಿರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
Gold Price: ಚಿನ್ನದ ಬೆಲೆ 1,58,620 ರೂಪಾಯಿ, ಕೇಂದ್ರ ಬಜೆಟ್ನಲ್ಲಿ ಬಂಗಾರದ ಬೆಲೆ ಇಳಿಕೆಗೆ ಸಿಗುತ್ತಾ ಬೆಂಬಲ?
ಚಿನ್ನ ಚಿನ್ನ, ಎಲ್ಲಿ ಕೇಳಿದರೂ &ನೋಡಿದರೂ ಬರೀ ಬಂಗಾರದ ಬೆಲೆಯ ಬಗ್ಗೆ ಚರ್ಚೆ ಜೋರಾಗಿದೆ. ಯಾಕಂದ್ರೆ ಇದೀಗ ಚಿನ್ನದ ಬೆಲೆ ಅಷ್ಟು ದೊಡ್ಡ ಮಟ್ಟದಲ್ಲಿ ಏರಿಕೆ ಕಾಣುತ್ತಿದ್ದು, ಚಿನ್ನದ ಜೊತೆಗೆ ಬೆಳ್ಳಿ ಬೆಲೆ ಕೂಡ ಆಕಾಶ ಮುಟ್ಟುತ್ತಿದೆ. ನೋಡ ನೋಡುತ್ತಲೇ ಚಿನ್ನದ ಬೆಲೆ ಬರೋಬ್ಬರಿ 1,58,620 ರೂಪಾಯಿ ಪ್ರತಿ 10 ಗ್ರಾಂಗೆ ತಲುಪಿದ್ದು, ಬಡವರು ಹಾಗೂ
ಬಳ್ಳಾರಿ ಮಾಡಲ್ ನಿವಾಸಕ್ಕೆ ಬೆಂಕಿ ಪ್ರಕರಣ ; ಎಸ್ಪಿ ಪ್ರತಿಕ್ರಿಯಿಸಿದ್ಹೀಗೆ
ಬಳ್ಳಾರಿಯ ಜಿ-ಸ್ಕ್ವಾಯರ್ ಲೇಔಟ್ನಲ್ಲಿರುವ ಮಾಡೆಲ್ ಮನೆಗೆ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದಾರೆ. ಈ ಘಟನೆ ಶುಕ್ರವಾರ ರಾತ್ರಿ ನಡೆದಿದ್ದು, ಅಪರಿಚಿತರ ವಿರುದ್ಧ ಪ್ರಕರಣ ದಾಖಲಾಗಿದೆ. ಘಟನಾ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು, 8 ಮಂದಿಯನ್ನು ವಶಕ್ಕೆ ಪಡೆದಿದ್ದಾರೆ. ಸಿಗರೇಟ್ನಿಂದ ಬೆಂಕಿ ತಗುಲಿರಬಹುದು ಎಂದು ಶಂಕಿಸಲಾಗಿದೆ.
ಕಲ್ಲಡ್ಕ: ಅನುಗ್ರಹ ಮಹಿಳಾ ಕಾಲೇಜಿಲ್ಲಿ NEET/CET ಕ್ರ್ಯಾಶ್ ಕೋರ್ಸ್ ಕುರಿತು ಮಾಹಿತಿ ಕಾರ್ಯಾಗಾರ
ಬಂಟ್ವಾಳ: MEIF ಹಾಗೂ ಯೆನೆಪೋಯ ಕಾಲೇಜಿನ ಸಹಭಾಗಿತ್ವದಲ್ಲಿ ಹಮ್ಮಿಕೊಳ್ಳಲಾದ ಉಚಿತ NEET/CET ಕ್ರ್ಯಾಶ್ ಕೋರ್ಸ್ಗಳ ಕುರಿತು ಮಾಹಿತಿ ಉಪನ್ಯಾಸ ಕಾರ್ಯಕ್ರಮ ಕಲ್ಲಡ್ಕದ ಅನುಗ್ರಹ ಮಹಿಳಾ ಕಾಲೇಜಿನಲ್ಲಿ ಶುಕ್ರವಾರ ನಡೆಯಿತು. ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಯಾಗಿ ಯೆನೆಪೋಯ ಪದವಿ ಪೂರ್ವ ಕಾಲೇಜಿನ ಮುಖ್ಯಸ್ಥರು ಹಾಗೂ ನಿರ್ದೇಶಕರು, YCAL Bahrain (Yenepoya Center for Advanced Learning) ಸಂಸ್ಥೆಯ ಸಿನಾನ್ ಝಕರಿಯ ಅವರು ಆಗಮಿಸಿದ್ದರು. ಅವರು ಪ್ರಥಮ ಹಾಗೂ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿನಿಯರಿಗೆ NEET/CET ಪರೀಕ್ಷೆಗಳ ಕುರಿತು ಸಮಗ್ರ ಮಾಹಿತಿಯನ್ನು ನೀಡಿದರು. ಜೊತೆಗೆ MEIF ಹಾಗೂ ಯೆನೆಪೋಯ ಕಾಲೇಜಿನ ಸಹಭಾಗಿತ್ವದಲ್ಲಿ ನಡೆಯುವ ಉಚಿತ NEET/CET ಕ್ರ್ಯಾಶ್ ಕೋರ್ಸ್ ಮತ್ತು ಅದರ ಉಚಿತ ಸೀಟ್ ಹಂಚಿಕೆ ಕುರಿತು ವಿವರಿಸಿದರು. ಈ ಮಾಹಿತಿ ಮತ್ತು ವಿವರಣಾತ್ಮಕ ಕಾರ್ಯಕ್ರಮವು ಕಾಲೇಜಿನ ವಿದ್ಯಾರ್ಥಿನಿಯರಿಗೆ ಬಹಳ ಉಪಯುಕ್ತವಾಗಿದ್ದು, NEET/CET ಕೋರ್ಸ್ಗಳಿಗೆ ಸಂಬಂಧಿಸಿದ ತಮ್ಮ ಗೊಂದಲಗಳನ್ನು ಚರ್ಚಿಸಿ ಸ್ಪಷ್ಟ ಪರಿಹಾರವನ್ನು ಪಡೆದುಕೊಂಡರು. ಕಾರ್ಯಕ್ರಮದಲ್ಲಿ ಅನುಗ್ರಹ ಮಹಿಳಾ ಕಾಲೇಜಿನ ಖಜಾಂಜಿ ಹೈದರ್ ಅಲಿ, ಕಾಲೇಜಿನ ಪ್ರಾಂಶುಪಾಲೆ ಡಾ. ಹೇಮಲತಾ ಬಿ. ಡಿ., ಹಾಗೂ ಬೋಧಕ ಮತ್ತು ಬೋಧಕೇತರ ವೃಂದದವರು ಉಪಸ್ಥಿತರಿದ್ದರು. ಪ್ರಥಮ ಪಿಯುಸಿ PCMB ವಿದ್ಯಾರ್ಥಿನಿ ನುಹಾ ಮರ್ಯಮ್ ಕಿರಾಅತ್ ಪಠಿಸಿದರು. ವಿಜ್ಞಾನ ವಿಭಾಗದ ಉಪನ್ಯಾಸಕಿ ಕವಿತಾ ಕುಮಾರಿ ಕೆ. ಅವರು ಅತಿಥಿಗಳನ್ನು ಸ್ವಾಗತಿಸಿ, ಕಾರ್ಯಕ್ರಮವನ್ನು ನಿರೂಪಿಸಿ ವಂದಿಸಿದರು.
ಬಳ್ಳಾರಿಯಲ್ಲಿ ನಿಲ್ಲದ ಸಂಘರ್ಷ: ಜನಾರ್ದನ ರೆಡ್ಡಿ ಮಾಡೆಲ್ ಹೌಸ್ಗೆ ಬೆಂಕಿ ಇದೀಗ ಬಿಜೆಪಿಗೆ ಸಿಕ್ಕ ಹೊಸ ಅಸ್ತ್ರ
ಬಳ್ಳಾರಿಯಲ್ಲಿ ಬ್ಯಾನರ್ ವಿಚಾರವಾಗಿ ಆರಂಭಗೊಂಡ ರಾಜಕೀಯ ಸಂಘರ್ಷ ಸದ್ಯ ನಿಲ್ಲುವ ಲಕ್ಷಣಗಳು ಗೋಚರಿಸುತ್ತಿಲ್ಲ. ಈ ನಡುವೆ ಬಳ್ಳಾರಿಯಲ್ಲಿ ಗಾಲಿ ಜನಾರ್ದನ ರೆಡ್ಡಿ ಮಾಡೆಲ್ ಹೌಸ್ಗೆ ಬೆಂಕಿ ಹಚ್ಚಲಾಗಿದೆ. ಈ ಘಟನೆ ಇದೀಗ ಬಿಜೆಪಿಗೆ ಹೊಸ ಅಸ್ತ್ರ ಸಿಕ್ಕಂತಾಗಿದೆ. ಘಟನೆಯನ್ನು ಖಂಡಿಸಿ ಬಿಜೆಪಿ ಪ್ರತಿಭಟನೆ ನಡೆಸಿದೆ. ಈ ನಡುವೆ ಐವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಆದರೆ ಇದು ಭರತ್ ರೆಡ್ಡಿಯದ್ದೇ ಕೃತ್ಯ ಎಂದು ಬಿಜೆಪಿ ಶಾಸಕ ಗಾಲಿ ಜನಾರ್ದನ ರೆಡ್ಡಿ ಅರೋಪ ಮಾಡಿದ್ದಾರೆ.
T-20 World Cup 2026: ಬಿಸಿಸಿಐಗೆ ಸೆಡ್ಡು ಹೊಡೆದ ಬಾಂಗ್ಲಾಗೆ ಕೋಟಿ ಕೋಟಿ ನಷ್ಟ
T-20 World Cup 2026 Bangladesh: ಫೆಬ್ರವರಿ 7ರಿಂದ ಟಿ-20 ವಿಶ್ವಪ್ ಆರಂಭ ಆಗಲಿದೆ. ಈ ಟೂರ್ನಿಯಿಂದ ಬಾಂಗ್ಲಾ ತಂಡ ಹಿಂದೆ ಸರಿದಿದೆ. ಇದರಿಂದ ಬಾಂಗ್ಲಾದೇಶಕ್ಕೆ ಕೋಟಿ.. ಕೋಟಿ ನಷ್ಟವಾಗಲಿದೆ. ಹಾಗಾದ್ರೆ, ಎಷ್ಟು ಎನ್ನುವ ಸಂಪೂರ್ಣ ಮಾಹಿತಿಯನ್ನು ಅಂಕಿಅಂಶಗಳ ಸಹಿತ ಇಲ್ಲಿ ನೀಡಲಾಗಿದೆ ತಿಳಿಯಿರಿ. ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ (ಬಿಸಿಬಿ) ತನ್ನ 2026 ಟಿ-20 ವಿಶ್ವಕಪ್ ಗ್ರೂಪ್
ಅಮೆರಿಕ| ಪತ್ನಿ ಮತ್ತು ಮೂವರು ಸಂಬಂಧಿಕರನ್ನು ಗುಂಡಿಕ್ಕಿ ಹತ್ಯೆಗೈದ ಭಾರತೀಯ ಮೂಲದ ವ್ಯಕ್ತಿ
ನ್ಯೂಯಾರ್ಕ್: ಅಮೆರಿಕದ ಜಾರ್ಜಿಯಾದಲ್ಲಿ ಭಾರತೀಯ ಮೂಲದ ವ್ಯಕ್ತಿಯೊಬ್ಬ ತನ್ನ ಪತ್ನಿ ಮತ್ತು ಅವರ ಮೂವರು ಸಂಬಂಧಿಕರನ್ನು ಮನೆಯೊಳಗೆ ಗುಂಡಿಕ್ಕಿ ಹತ್ಯೆ ಮಾಡಿದ್ದು, ಆತನನ್ನು ಬಂಧಿಸಲಾಗಿದೆ ಎಂದು ವರದಿಯಾಗಿದೆ. ಈ ವಿಷಯವು ಕೌಟುಂಬಿಕ ಕಲಹಕ್ಕೆ ಸಂಬಂಧಿಸಿದ್ದಾಗಿದ್ದು, ಆರೋಪಿ ವಿಜಯ್ ಕುಮಾರ್ ಎಂಬಾತನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆಯ ಸಮಯದಲ್ಲಿ, ಮೂವರು ಮಕ್ಕಳು ಮನೆಯೊಳಗೆ ಕ್ಲೋಸೆಟ್ನಲ್ಲಿ ಅಡಗಿ ಕುಳಿತುಕೊಂಡಿದ್ದರು ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ. ಮೃತರನ್ನು ಕುಮಾರ್ ಪತ್ನಿ ಮೀಮು ಡೋಗ್ರಾ (43), ಗೌರವ್ ಕುಮಾರ್ (33), ನಿಧಿ ಚಂದರ್ (37) ಮತ್ತು ಹರೀಶ್ ಚಂದರ್ (38) ಎಂದು ಗುರುತಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಅಟ್ಲಾಂಟಾದಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಈ ಕುರಿತು ಪ್ರತಿಕ್ರಿಯಿಸಿ, ಮೃತರ ಕುಟುಂಬಕ್ಕೆ ಸಾಧ್ಯವಿರುವ ಎಲ್ಲಾ ಸಹಾಯವನ್ನು ನೀಡುವುದಾಗಿ ಭರವಸೆ ನೀಡಿದೆ. ಬ್ರೂಕ್ ಐವಿ ಕೋರ್ಟ್ನ 1000 ಬ್ಲಾಕ್ನಲ್ಲಿ ಗುಂಡಿನ ದಾಳಿ ನಡೆದಿರುವ ಬಗ್ಗೆ ಶುಕ್ರವಾರ ಬೆಳಗಿನ ಜಾವ 2.30ರ ಸುಮಾರಿಗೆ ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ಸ್ಥಳಕ್ಕೆ ತೆರಳಿ ಪೊಲೀಸರು ಪರಿಶೀಲನೆ ನಡೆಸಿದಾಗ ನಾಲ್ವರ ಮೃತದೇಹ ಪತ್ತೆಯಾಗಿತ್ತು ಎಂದು ವರದಿಯಾಗಿದೆ.
ಪರವಾನಗಿ ಪಡೆದ ಪಿಸ್ತೂಲ್ ಹೇಗೆ ಕೆಲಸ ಮಾಡುತ್ತೆ ಎಂದು ನೋಡಲು ಮ್ಯಾಂಗ್ರೋವ್ ಪ್ರದೇಶಕ್ಕೆ ಗುಂಡು ಹಾರಿಸಿದೆ. ಗಾಳಿ ಬಲವಾಗಿ ಬೀಸುತ್ತಿದ್ದ ಕಾರಣ ಗುಂಡು ವಸತಿ ಕಟ್ಟಡದ ಮೇಲೆ ಬಿದ್ದಿದೆ ಎಂದು ಬಂಧಿತ ನಟ ಕಮಾಲ್ ರಶೀದ್ ಖಾನ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪರವಾನಗಿ ಪಡೆದ ಬಂದೂಕಿನಿಂದ ನಾಲ್ಕು ಸುತ್ತು ಗುಂಡು ಹಾರಿಸಿದ್ದಾರೆ ಎನ್ನಲಾಗಿದೆ. ಅದೇ ಕಟ್ಟಡದಲ್ಲಿ ಬಾಲಿವುಡ್ನ ಬರಹಾಗಾರ ಮತ್ತು ಮಾಡೆಲ್ ಇದ್ದರು ಎನ್ನಲಾಗುತ್ತಿದೆ.
ಹುಬ್ಬಳ್ಳಿ: ಮನೆ ಹಸ್ತಾಂತರ ಕಾರ್ಯಕ್ರಮದ ವೇಳೆ ಕುಸಿದು ಬಿದ್ದ ಕಟೌಟ್; ಮಹಿಳೆ ಸೇರಿ ಮೂವರಿಗೆ ಗಾಯ
ಹುಬ್ಬಳ್ಳಿ: ನಗರದ ಮಂಟೂರ ರಸ್ತೆಯಲ್ಲಿ ಕೊಳಗೇರಿ ಅಭಿವೃದ್ಧಿ ಮಂಡಳಿ ಹಾಗೂ ವಸತಿ ಇಲಾಖೆಯ ಸಹಯೋಗದಲ್ಲಿ ಇಂದು ಮನೆ ಹಂಚಿಕೆ ಕಾರ್ಯಕ್ರಮ ನಡೆಯುತ್ತಿದ್ದು, ಈ ಕಾರ್ಯಕ್ರಮಕ್ಕಾಗಿ ಅಳವಡಿಸಿದ್ದ ಬೃಹತ್ ಕಟೌಟ್ ಬಿದ್ದು ಮಹಿಳೆ ಸೇರಿದಂತೆ ಮೂವರು ಗಾಯಗೊಂಡಿರುವ ಘಟನೆ ಶನಿವಾರ ಬೆಳಗ್ಗೆ ಸಂಭವಿಸಿದೆ. ಗಾಯಗೊಂಡವರು ಕಟೌಟ್ ಅಳವಡಿಸುವ ಕಾರ್ಯದಲ್ಲಿ ತೊಡಗಿದ್ದ ಕಾರ್ಮಿಕರಾದ ಬ್ಯಾಹಟ್ಟಿ ಗ್ರಾಮದ ನಿವಾಸಿಗಳಾದ ಶಂಕರ್ ಹಡಪದ (32) ಮತ್ತು ಮಂಜುನಾಥ ವರ್ಣೇಕರ್ (33) ಎಂದು ಗುರುತಿಸಲಾಗಿದೆ. ಮತ್ತೊಬ್ಬರು ಗಂಗಾಧರ ನಗರದ ನಿವಾಸಿ ಶಾಂತಾ (60)ಅವರು ಕಾರ್ಯಕ್ರಮ ವೀಕ್ಷಣೆಗೆ ಆಗಮಿಸಿದ್ದರು ಎಂದು ತಿಳಿದುಬಂದಿದೆ. ಗಾಯಗೊಂಡ ಮೂವರಲ್ಲಿ ಇಬ್ಬರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದ್ದು, ಮತ್ತೊಬ್ಬರನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾಂಗ್ರೆಸ್ ಪಕ್ಷದ ವತಿಯಿಂದ ಮಂಟೂರ ರಸ್ತೆಯ ಎರಡೂ ಬದಿಗಳಲ್ಲಿ ಹಾಗೂ ಕಾರ್ಯಕ್ರಮ ನಡೆಯುವ ಸ್ಥಳದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವ ಜಮೀರ್ ಅಹ್ಮದ್ ಖಾನ್ ಸೇರಿದಂತೆ ಇತರೆ ಕಾಂಗ್ರೆಸ್ ನಾಯಕರ ಬೃಹತ್ ಕಟೌಟ್ಗಳನ್ನು ಅಳವಡಿಸಲಾಗಿತ್ತು. ಮಲ್ಲಿಕಾರ್ಜುನ ಖರ್ಗೆ ಅವರ ಕಟೌಟ್ ನಂತರ, ಮುಖ್ಯಮಂತ್ರಿ ಹಾಗೂ ಸಚಿವ ಜಮೀರ್ ಅಹ್ಮದ್ ಖಾನ್ ಅವರ ಫೋಟೋಗಳಿದ್ದ ಎರಡು ಕಟೌಟ್ಗಳು ಒಂದರ ಮೇಲೆ ಒಂದು ಬಿದ್ದು, ಅವುಗಳ ಕೆಳಗಿದ್ದ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಕಟೌಟ್ಗಳು ಸುಮಾರು 30–35 ಅಡಿ ಎತ್ತರವಾಗಿದ್ದು, ಅವುಗಳಿಗೆ ಆಧಾರವಾಗಿ ಕಟ್ಟಿಗೆಗಳನ್ನು ಅಳವಡಿಸಲಾಗಿತ್ತು. ಕಟೌಟ್ ಬಿದ್ದ ವೇಳೆ ಕಟ್ಟಿಗೆಗಳು ದೇಹಕ್ಕೆ ಚುಚ್ಚಿ ಗಾಯಗಳಾಗಿವೆ ಎನ್ನಲಾಗಿದೆ. ಈ ಕುರಿತು ಹೆಚ್ಚಿನ ಮಾಹಿತಿ ಸಂಗ್ರಹಿಸಲಾಗುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಕಟೌಟ್ ಬಿದ್ದ ಸ್ಥಳದಿಂದ ಕೇವಲ ಕೆಲವೇ ಅಡಿಗಳ ದೂರದಲ್ಲಿ ಹತ್ತಕ್ಕೂ ಹೆಚ್ಚು ಪೊಲೀಸರು ನಿಂತಿದ್ದರು. ಕೂದಲೆಳೆ ಅಂತರದಲ್ಲಿ ದೊಡ್ಡ ಅನಾಹುತವೊಂದು ತಪ್ಪಿದಂತಾಗಿದೆ. ಭದ್ರತೆ ಹಾಗೂ ಕಾರ್ಯಕ್ರಮದ ಆಯೋಜನೆಯಲ್ಲಿ ನಡೆದ ನಿರ್ಲಕ್ಷ್ಯದ ವಿರುದ್ಧ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸದ್ಯ ಗಾಯಾಳುಗಳು ಪ್ರಾಣಾಪಾಯದಿಂದ ಪಾರಾಗಿದ್ದು, ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮುಂದುವರಿಸಲಾಗಿದೆ. ಕುಸಿದ ಕಟೌಟ್ ಅನ್ನು ತೆರವುಗೊಳಿಸಿ, ಅಗತ್ಯ ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ಕಾರ್ಯಕ್ರಮ ಮುಂದುವರಿಸಲು ಅವಕಾಶ ಕಲ್ಪಿಸಲಾಗಿದೆ.
ದಾವೋಸ್ನಲ್ಲಿ ನಡೆದ ವಿಶ್ವ ಆರ್ಥಿಕ ವೇದಿಕೆಯಲ್ಲಿ, ಟೆಸ್ಲಾ ಸಿಇಒ ಎಲಾನ್ ಮಸ್ಕ್, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ 'ಶಾಂತಿ ಮಂಡಳಿ' (Board of Peace) ಎಂಬ ಉಪಕ್ರಮವನ್ನು ತಮಾಷೆಯಾಗಿ ಟೀಕಿಸಿದರು. ವೆನೆಜುವೆಲಾ ಮತ್ತು ಗ್ರೀನ್ಲ್ಯಾಂಡ್ ವಿಚಾರದಲ್ಲಿ ಟ್ರಂಪ್ ಅವರ ನಿರ್ಧಾರಗಳನ್ನು ಮಸ್ಕ್ ಪ್ರಶ್ನಿಸಿದರು. ಒಂದು ಕಾಲದಲ್ಲಿ ಟ್ರಂಪ್ ಅವರ ಆಪ್ತರಾಗಿದ್ದ ಮಸ್ಕ್, ಈಗ ಅವರೊಂದಿಗೆ ಭಿನ್ನಾಭಿಪ್ರಾಯ ಹೊಂದಿದ್ದಾರೆ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ.
ಕೆಎಲ್ಇ ಸಂಸ್ಥೆ ಕಾರ್ಯಾಧ್ಯಕ್ಷರ ಸ್ಥಾನ ಸದ್ಯ ಖಾಲಿ; ನಿರ್ಣಾಯಕ ಹುದ್ದೆ ಅಲಂಕರಿಸುವ ಸವಾಲು
ನಾಲ್ಕು ದಶಕಗಳ ನಂತರ ಕೆಎಲ್ಇ ಸೊಸೈಟಿಯ ಕಾರ್ಯಾಧ್ಯಕ್ಷ ಸ್ಥಾನದಿಂದ ಡಾ. ಪ್ರಭಾಕರ ಕೋರೆ ಹಿಂದೆ ಸರಿದಿದ್ದಾರೆ. ಶಾಸಕ ಮಹಾಂತೇಶ ಕೌಜಲಗಿ ಅಧ್ಯಕ್ಷರಾಗಿ, ಬಸವರಾಜ ತಟವಟಿ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದು, ಕಾರ್ಯಾಧ್ಯಕ್ಷರ ಆಯ್ಕೆ ಕುತೂಹಲ ಮೂಡಿಸಿದೆ. ಕೋರೆ ಅವರ ಮಾರ್ಗದರ್ಶನ ಮುಂದೆಯೂ ಸಂಸ್ಥೆಗೆ ಅಗತ್ಯವಿದೆ ಎಂದು ಹಿರಿಯ ನಿರ್ದೇಶಕರು ಅಭಿಪ್ರಾಯಪಟ್ಟಿದ್ದಾರೆ.
ಮಂಗಳೂರಿನಲ್ಲಿ ಫಲಪುಷ್ಪ ಪ್ರದರ್ಶನ-2026 ಶುಕ್ರವಾರ ಉದ್ಘಾಟನೆಗೊಂಡಿದೆ. ಹೂವಿನಿಂದ ನಿರ್ಮಿಸಿದ ವಂದೇ ಭಾರತ್ ರೈಲು ಮಾದರಿ ಪ್ರದರ್ಶನದ ಪ್ರಮುಖ ಆಕರ್ಷಣೆಯಾಗಿದೆ. ತರಕಾರಿ ಕೆತ್ತನೆಗಳು, ಹಣ್ಣುಗಳಲ್ಲಿ ಕೆತ್ತಿದ ವ್ಯಕ್ತಿರೂಪಗಳು, ಹಲಸಿನ ಮರ, ನೂರಾರು ಹೂ ಕುಂಡಗಳು ಪ್ರದರ್ಶನದಲ್ಲಿವೆ. ಕೃಷಿ ಯಂತ್ರೋಪಕರಣಗಳು, ಬೀಜ, ಗೊಬ್ಬರ, ಸ್ವದೇಶಿ ಉತ್ಪನ್ನಗಳ ಮಳಿಗೆಗಳು ಇಲ್ಲಿವೆ. ಪ್ರದರ್ಶನವು ಜನವರಿ 26 ರವರೆಗೆ ಬೆಳಿಗ್ಗೆ 8 ರಿಂದ ರಾತ್ರಿ 8 ರವರೆಗೆ ತೆರೆದಿರುತ್ತದೆ.
ತುಮಕೂರು: ನಾನು ಐದು ಬಾರಿ ಸಾವಿನ ಹತ್ತಿರಕ್ಕೆ ಹೋಗಿ ಬಂದಿದ್ದೇನೆ. ದೇವರ ಆಶೀರ್ವಾದದಿಂದಲೇ ನಾನು ಇನ್ನೂ ಬದುಕಿದ್ದೇನೆ ಎಂದು ಭಾವಿಸಿದ್ದೇನೆ. ನಮಗೆ ಒಂದು ಅವಕಾಶ ಕೊಡಿ. ಐದು ವರ್ಷಗಳ ಉತ್ತಮ ಸರ್ಕಾರ ನೋಡುತ್ತೇವೆ. ಇದು ಜೆಡಿಎಸ್ ಬಿಜೆಪಿ ಸರ್ಕಾರ ಅಲ್ಲ, ಆರೂವರೆ ಕೋಟಿ ಕನ್ನಡಿಗರ ಸರ್ಕಾರ ತರುತ್ತೇವೆ. ಅದಕ್ಕೆ ಅವಕಾಶ ಕೊಡಿ ಎಂದು ಕೇಂದ್ರ ಸಚಿವ ಹೆಚ್.ಡಿ.
ಇನ್ನಷ್ಟು ವೃದ್ಧಿಸಲು ಸಜ್ಜಾದ ಭಾರತದ ಬಾಹ್ಯಾಕಾಶ ಬಜೆಟ್ -ಗಿರೀಶ್ ಲಿಂಗಣ್ಣ ಬರಹ
ಪ್ರತಿ ಸಲವೂ ನಾವು ರಾತ್ರಿಯ ಆಕಾಶವನ್ನು ತಲೆಯೆತ್ತಿ ನೋಡಿದಾಗ, ಅದರಾಚೆಗೆ ಏನೆಲ್ಲ ಇರಬಹುದು ಎನ್ನುವ ಆಶ್ಚರ್ಯದ ಭಾವ ಮೂಡುತ್ತದೆ. ಭಾರತಕ್ಕೆ ಈ ಕುತೂಹಲವೇ ಈಗೊಂದು ಯೋಜನೆಯಾಗಿ ರೂಪುಗೊಂಡಿದೆ. ದಶಕಗಳ ಹಿಂದೆ ಸಣ್ಣಪುಟ್ಟ ಉಪಗ್ರಹಗಳ ಮೂಲಕ ಆರಂಭಗೊಂಡ ಭಾರತದ ಬಾಹ್ಯಾಕಾಶ ಯಾನ ಈಗ ಚಂದ್ರನ ಅನ್ವೇಷಿಸಿರದ ದಕ್ಷಿಣ ಧ್ರುವವನ್ನು ಮುಟ್ಟುವ ತನಕ ಬೆಳೆದಿದೆ. ಪ್ರಸ್ತುತ ಕೇಂದ್ರ ಬಜೆಟ್ ನಮ್ಮ
ಮೋದಿ-ಅಮಿತ್ ಶಾ ‘ಕೈಗೊಂಬೆ’ ಅಧ್ಯಕ್ಷ
ಇತ್ತೀಚೆಗಷ್ಟೇ ನಡೆದ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಆರ್ಜೆಡಿಯ ತೇಜಸ್ವಿ ಯಾದವ್ ಎಸೆಸೆಲ್ಸಿ ಪಾಸು ಮಾಡದ ಅನ್ಪಡ್ ಎಂದು ಬಿಜೆಪಿಯವರು ಮೂದಲಿಸಿದ್ದರು. ಈಗ ಮೋದಿ-ಅಮಿತ್ ಶಾ ಜೋಡಿ ಕೇವಲ ಪಿಯುಸಿ ಪಾಸಾದ ನಿತಿನ್ ನಬಿನ್ ಅವರನ್ನು ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಸ್ಥಾನದಲ್ಲಿ ಪ್ರತಿಷ್ಠಾಪಿಸಿದ್ದಾರೆ. ವಿದ್ಯಾವಂತರ ಪಕ್ಷವೆಂದೇ ಖ್ಯಾತಿ ಪಡೆದ ಬಿಜೆಪಿಗೆ ಕನಿಷ್ಠ ಪಕ್ಷ ಪದವಿ ಪೂರೈಸಿದ ರಾಷ್ಟ್ರೀಯ ಅಧ್ಯಕ್ಷ ದೊರೆಯಲಿಲ್ಲವಲ್ಲ! ಭಾರತೀಯ ಜನತಾ ಪಕ್ಷವನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಸಂಪೂರ್ಣವಾಗಿ ತಮ್ಮ ಹಿಡಿತಕ್ಕೆ ತೆಗೆದುಕೊಂಡಿದ್ದಾರೆ. ಆ ಪಕ್ಷದ ಹಿರಿಯ ನಾಯಕರು ಮತ್ತು ಸಂಘ ಪರಿವಾರದ ಮುಖಂಡರು ಮೋದಿ-ಅಮಿತ್ ಶಾ ಜೋಡಿಯ ನಿರ್ಧಾರಗಳನ್ನು ಮರು ಮಾತಿಲ್ಲದೆ ಒಪ್ಪಿಕೊಳ್ಳುವ ಹಂತ ತಲುಪಿದ್ದಾರೆ. ಕೆಲವು ಮಾಧ್ಯಮಗಳು ತಮ್ಮ ಸಮಾಧಾನಕ್ಕೆ ಸಂಘ ಪರಿವಾರದ ಪ್ರಾಮುಖ್ಯತೆ ಇದೆ ಎಂದು ರುಜುವಾತುಪಡಿಸಲು ಕತೆಗಳನ್ನು ಹೆಣೆಯುತ್ತಲೇ ಇರುತ್ತವೆ. ಸಂಘ ಪರಿವಾರದ ಮುಖಂಡರ ಅನುಮತಿಯಿಲ್ಲದೇ ಬಿಜೆಪಿಯಲ್ಲಿ ಹುಲ್ಲು ಕಡ್ಡಿಯೂ ಅಲುಗಾಡದು ಎಂಬ ಅಭಿಪ್ರಾಯಗಳನ್ನು ಮೂಡಿಸಲು ಪ್ರಯತ್ನಿಸುತ್ತಲೇ ಇರುತ್ತವೆ. ಭಾರತೀಯ ಜನತಾ ಪಕ್ಷವನ್ನು ಶಿಸ್ತಿನ ಪಕ್ಷವೆಂದು ಒಂದು ಕಾಲದಲ್ಲಿ ಅತಿಯಾಗಿ ಪ್ರಚಾರ ಮಾಡಲಾಯಿತು. ಅಷ್ಟು ಮಾತ್ರವಲ್ಲ ಸೈದ್ಧಾಂತಿಕ ನೆಲೆಯುಳ್ಳ ಪಕ್ಷವೆಂದು ನಂಬಲಾಗಿತ್ತು. ಆದರೆ ಈಗ ಅದು ಕೇವಲ ಚುಣಾವಣೆಗಳನ್ನು ಗೆಲ್ಲುವ ಯಂತ್ರವಾಗಿ ಬದಲಾಗಿದೆ. ಬಿಜೆಪಿಯನ್ನು ವಿರೋಧ ಪಕ್ಷಗಳು: ಭ್ರಷ್ಟರ ಕಳಂಕವನ್ನು ತೊಳೆಯವ ವಾಷಿಂಗ್ ಮಷಿನ್ ಎಂದೂ ಗೇಲಿ ಮಾಡುತ್ತಿರುತ್ತಾರೆ. ಕೋಮುವಾದಿ ಅಜೆಂಡಾವನ್ನು ಬಗಲಲ್ಲಿ ಇಟ್ಟುಕೊಂಡು ಅವಕಾಶವಾದಿ ರಾಜಕಾರಣ ಮಾಡುವಲ್ಲಿ ಈಗ ಬಿಜೆಪಿ ಮುಂಚೂಣಿಯಲ್ಲಿದೆ. ‘ಸಬ್ಕಾ ಸಾಥ್ ಸಬ್ಕಾ ವಿಕಾಸ್’ ಮತ್ತು ವಿಕಸಿತ ಭಾರತದ ಕನಸುಗಳನ್ನು ಯುವ ಜನರಲ್ಲಿ ಬಿತ್ತುತ್ತಲೇ ಭಾರತವನ್ನು ಕೋಮುವಾದಿ ಪ್ರಯೋಗಶಾಲೆಯನ್ನಾಗಿ ಮಾಡಿದ್ದಾರೆ. ಆಧುನಿಕ ಭಾರತದ ಭ್ರಮೆ ಬಿತ್ತುತ್ತಲೇ ದೇಶವನ್ನು ನೂರು ವರ್ಷಗಳಷ್ಟು ಹಿಂದಕ್ಕೆ ತಳ್ಳುತ್ತಿದ್ದಾರೆ. ಸದ್ಯ ಭಾರತ ಆಧುನಿಕ ಕಾಲದ ಒಂದೂ ಸಮಸ್ಯೆಯನ್ನು ಎದುರುಗೊಳ್ಳುತ್ತಿಲ್ಲ. ಬಡತನ, ನಿರುದ್ಯೋಗ ನಮ್ಮ ಕಾಲದ ಜ್ವಲಂತ ಸಮಸ್ಯೆಗಳಾಗಿದ್ದರೂ ಜಾತೀಯತೆ, ಕೋಮುವಾದ ನಿತ್ಯ ನರ್ತಿಸುವ ಭೂತವಾಗಿ ಪರಿಣಮಿಸಿವೆ. ಭಾರತೀಯ ಜನತಾ ಪಕ್ಷದ ಇತಿಹಾಸದಲ್ಲೇ ಅತಿ ಕಡಿಮೆ ವಿದ್ಯಾಭ್ಯಾಸ ಹೊಂದಿದ ರಾಷ್ಟ್ರೀಯ ಅಧ್ಯಕ್ಷನೆಂದರೆ ನಿತಿನ್ ನಬಿನ್ ಮಾತ್ರ. ಬಿಜೆಪಿಯವರು ‘ಅತಿ ಕಿರಿಯ’ ವಯಸ್ಸಿನ ರಾಷ್ಟ್ರೀಯ ಅಧ್ಯಕ್ಷ ಎಂದು ಪ್ರಚಾರ ಪಡೆಯುತ್ತಿದ್ದಾರೆ. ಇತ್ತೀಚೆಗಷ್ಟೇ ನಡೆದ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಆರ್ಜೆಡಿಯ ತೇಜಸ್ವಿ ಯಾದವ್ ಎಸೆಸೆಲ್ಸಿ ಪಾಸು ಮಾಡದ ಅನ್ಪಡ್ ಎಂದು ಮೂದಲಿಸಿದ್ದರು. ಈಗ ಮೋದಿ-ಅಮಿತ್ ಶಾ ಜೋಡಿ ಕೇವಲ ಪಿಯುಸಿ ಪಾಸಾದ ನಿತಿನ್ ನಬಿನ್ ಅವರನ್ನು ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಸ್ಥಾನದಲ್ಲಿ ಪ್ರತಿಷ್ಠಾಪಿಸಿದ್ದಾರೆ. ವಿದ್ಯಾವಂತರ ಪಕ್ಷವೆಂದೇ ಖ್ಯಾತಿ ಪಡೆದ ಬಿಜೆಪಿಗೆ ಕನಿಷ್ಠ ಪಕ್ಷ ಪದವಿ ಪೂರೈಸಿದ ರಾಷ್ಟ್ರೀಯ ಅಧ್ಯಕ್ಷ ದೊರೆಯಲಿಲ್ಲವಲ್ಲ! ಭಾರತೀಯ ಜನಸಂಘದ ಕಾಲದಿಂದಲೂ ಸಂಘ ಪರಿವಾರದ ತತ್ವ ಸಿದ್ಧಾಂತಗಳಿಗೆ ಅಲ್ಪ ಪ್ರಮಾಣದ ನಗರವಾಸಿ ವಿದ್ಯಾವಂತ ಮಧ್ಯಮ ವರ್ಗದವರು ಅಭಿಮಾನಿಗಳಾಗಿದ್ದರು. 1980ರಲ್ಲಿ ಭಾರತೀಯ ಜನತಾ ಪಕ್ಷ ಅಸ್ತಿತ್ವಕ್ಕೆ ಬಂದ ಮೇಲೂ ಹಲವು ವರ್ಷಗಳ ಕಾಲ ಅದು ನಗರ ಕೇಂದ್ರಿತ ಮಧ್ಯಮವರ್ಗದ ವಲಯದಲ್ಲಷ್ಟೇ ಜನಪ್ರಿಯವಾಗಿತ್ತು. ರಾಷ್ಟ್ರೀಯ ಸ್ವಯಂ ಸೇವಕ ಸಂಘವೇ ಬಿಜೆಪಿಯ ಮಾತೃ ಸಂಸ್ಥೆಯಾಗಿತ್ತು. ಭಾರತೀಯ ಜನತಾ ಪಕ್ಷದ ಮೊದಲ ರಾಷ್ಟ್ರೀಯ ಅಧ್ಯಕ್ಷ ಅಟಲ್ ಬಿಹಾರಿ ವಾಜಪೇಯಿಯವರು ಮೂಲತಃ ಸಂಘ ಪರಿವಾರದವರು. ಆರೆಸ್ಸೆಸ್ ತತ್ವ ಸಿದ್ಧಾಂತಗಳ ಹಾದಿಯಲ್ಲೇ ರಾಜಕೀಯ ಜೀವನ ರೂಪಿಸಿಕೊಂಡವರು. ಕವಿ ಮತ್ತು ಉದಾರವಾದಿ ರಾಜಕಾರಣಿಯಾಗಿದ್ದರಿಂದ ಪರ ಸಿದ್ಧಾಂತ ಸಹಿಷ್ಣು ಆಗಿದ್ದರು. ಸಂಕುಚಿತ ನೆಲೆಯಲ್ಲಿ ರಾಜಕೀಯ ಮಾಡುತ್ತಿರಲಿಲ್ಲ. ಅಧಿಕಾರಕ್ಕಾಗಿ ಅವಕಾಶವಾದಿ ರಾಜಕಾರಣ ಮಾಡುತ್ತಿರಲಿಲ್ಲ. ಅಟಲ್ ಬಿಹಾರಿ ವಾಜಪೇಯಿ ಸೇರಿದಂತೆ ಹಳೆಯ ಕಾಲದ ಬಿಜೆಪಿ ನಾಯಕರು ತಾವು ನಂಬಿದ ತತ್ವ ಸಿದ್ಧಾಂತಗಳ ಚೌಕಟ್ಟಿನಲ್ಲಿ ರಾಜಕಾರಣ ಮಾಡುತ್ತಿದ್ದರು. ಅಷ್ಟು ಮಾತ್ರವಲ್ಲ ಪ್ರಬುದ್ಧ ಮತ್ತು ಉದಾರವಾದಿಯಾಗಿ ನಡೆದುಕೊಳ್ಳುತ್ತಿದ್ದರು. ಎಲ್ಲಕ್ಕೂ ಮಿಗಿಲಾಗಿ ಅಟಲ್ ಬಿಹಾರಿ ವಾಜಪೇಯಿ, ಎಲ್. ಕೆ. ಅಡ್ವಾಣಿ, ಡಾ. ಮುರಳಿ ಮನೋಹರ್ ಜೋಶಿ ಪದವಿ ಪೂರೈಸಿದ ವಿದ್ಯಾವಂತರಾಗಿದ್ದರು. ಹೌದು ಅವರೂ ಕೋಮುವಾದಿ ರಾಜಕಾರಣದ ಭಾಗವಾಗಿದ್ದರು. ಅವರ ಶಕ್ತಿ ಮತ್ತು ದೌರ್ಬಲ್ಯಗಳು ಕಣ್ಣಿಗೆ ಢಾಳಾಗಿ ಗೋಚರಿಸುತ್ತಿದ್ದವು. ಹಳೆಯ ಕಾಲದ ಬಿಜೆಪಿ ನಾಯಕರು ಹಿಂದುತ್ವದ ಪ್ರತಿಪಾದಕರಾಗಿದ್ದರು. ಅಷ್ಟಾಗಿ ಜಾತಿ ಸಮೀಕರಣದ ಮೇಲೆ ನಂಬಿಕೆ ಇರಲಿಲ್ಲ. ಆದರೆ ನಿರಂತರ ಚುನಾವಣಾ ಸೋಲುಗಳಿಂದ ಜರ್ಜರಿತರಾದ ಅವರು ಮೊದಲು ಹಿಂದೂ-ಮುಸ್ಲಿಮ್ ಮತಗಳ ಧ್ರುವೀಕರಣಕ್ಕೆ ಯತ್ನಿಸಿದ್ದರು. ನಂತರ ಜಾತಿ ಸಮೀಕರಣ ರೂಪಿಸಲು ಮುಂದಾದರು. ಅಷ್ಟಾಗಿಯೂ ಪ್ರತೀ ಆಯ್ಕೆಗೂ ಸಂಘದ ಹಿನ್ನೆಲೆ ಕಡ್ಡಾಯವಾಗಿ ಪರಿಗಣಿಸುತ್ತಿದ್ದರು. ಬಿಜೆಪಿಯ ಮೊದಲ ರಾಷ್ಟ್ರೀಯ ಅಧ್ಯಕ್ಷ ಅಟಲ್ ಬಿಹಾರಿ ವಾಜಪೇಯಿಯವರು ಆರು ವರ್ಷಗಳ ಕಾಲ ಆ ಹುದ್ದೆಯಲ್ಲಿ ಇದ್ದರು. ತಮ್ಮ ಉತ್ತರಾಧಿಕಾರಿ ಆಯ್ಕೆಯಲ್ಲಿ ಸಂಘದ ಬದ್ಧತೆ ಮತ್ತು ಕ್ರಿಯಾಶೀಲತೆಯನ್ನು ಪ್ರಮುಖ ಮಾನದಂಡವನ್ನಾಗಿ ಪರಿಗಣಿಸಿದ್ದರು. ಅಟಲ್ ಬಿಹಾರಿ ವಾಜಪೇಯಿ ಅವರಿಗೆ ಸರಿಸಮವಾದ ಆರೆಸ್ಸೆಸ್ ಮೂಲದ ಎಲ್.ಕೆ. ಅಡ್ವಾಣಿಯವರನ್ನು ಬಿಜೆಪಿಯ ಎರಡನೇ ರಾಷ್ಟ್ರೀಯ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿತ್ತು. ಹಾಗೆ ನೋಡಿದರೆ ಬಿಜೆಪಿಗೆ ಅತಿ ಹೆಚ್ಚು ಕಾಲ ರಾಷ್ಟ್ರೀಯ ಅಧ್ಯಕ್ಷರಾಗಿ ಎಲ್.ಕೆ. ಅಡ್ವಾಣಿ ಕಾರ್ಯ ನಿರ್ವಹಿಸಿದ್ದರು. 1986ರಲ್ಲಿ ಬಿಜೆಪಿಯ ಎರಡನೇ ರಾಷ್ಟ್ರೀಯ ಅಧ್ಯಕ್ಷರಾಗಿ ಆಯ್ಕೆಯಾದ ಅಡ್ವಾಣಿಯವರು ಐದು ವರ್ಷಗಳ ಕಾಲ ಆ ಹುದ್ದೆಯಲ್ಲಿ ಇದ್ದರು. ಮೂರು ಅವಧಿಗೆ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷರಾಗಿದ್ದ ಎಲ್.ಕೆ. ಅಡ್ವಾಣಿಯವರು ಕೋಮು ರಾಜಕಾರಣದ ರಕ್ತಸಿಕ್ತ ಇತಿಹಾಸ ಸೃಷ್ಟಿಸಿದವರು. ಬಿಜೆಪಿ ಲೋಕಸಭಾ ಸದಸ್ಯರ ಹೆಚ್ಚಳಕ್ಕೆ, ಬಾಬರಿ ಮಸೀದಿ ಧ್ವಂಸಕ್ಕೆ ಮತ್ತು ಕೋಮು ದಳ್ಳುರಿಗೆ ಕಾರಣೀಭೂತರಾದ ಎಲ್.ಕೆ. ಅಡ್ವಾಣಿಯವರು ಖಳ ನಾಯಕ ಪಾತ್ರ ನಿಭಾಯಿಸಿದರೇ ಹೊರತು ಭಾರತದ ಪ್ರಧಾನಿ ಹುದ್ದೆ ಅಲಂಕರಿಸಲೇ ಇಲ್ಲ. ಅಟಲ್ ಬಿಹಾರಿ ವಾಜಪೇಯಿ ಅವರಿಗೆ ಉದಾರವಾದಿ, ಜಂಟಲ್ ಮ್ಯಾನ್ ಇಮೇಜ್ ಇದ್ದರೆ ಎಲ್.ಕೆ. ಅಡ್ವಾಣಿಗೆ ಬಾಬರಿ ಮಸೀದಿ ದ್ವಂಸದ ಖಳ ನಾಯಕನ ಕಳಂಕ ಅಂಟಿದೆ. ಮಹಾಭಾರತದ ಕರ್ಣನಂತೆ ಎಲ್.ಕೆ. ಅಡ್ವಾಣಿ ಒಂದು ದಿನ ಸಂಘ ಪರಿವಾರದ ಅವಕೃಪೆಗೂ ಒಳಗಾದವರು (ಜಿನ್ನಾ ಹೊಗಳಿದ್ದಕ್ಕೆ)ನಾಲ್ಕು ವರ್ಷಗಳ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷರಾಗಿದ್ದ ಡಾ. ಮುರಳಿ ಮನೋಹರ್ ಜೋಶಿ ವಾಜಪೇಯಿ, ಅಡ್ವಾಣಿಯವರ ಸಮ ಜೋಡಿ. ಭಾರತೀಯ ಜನತಾ ಪಕ್ಷ ಕಟ್ಟಿದ ಪ್ರಮುಖರಲ್ಲಿ ಒಬ್ಬರು. ಆರೆಸ್ಸೆಸ್ ಮೂಲದ ಡಾ. ಮುರಳಿ ಮನೋಹರ್ ಜೋಶಿ ಉತ್ತಮ ಶಿಕ್ಷಣ ಪಡೆದವರು. ಆದರೆ ಕಾಲಾಂತರದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಅವಕೃಪೆಗೆ ಒಳಗಾದವರು. ತಮ್ಮ ದುಡಿಮೆಗೆ ರಾಷ್ಟ್ರಪತಿ ಹುದ್ದೆ ನಿರೀಕ್ಷಿಸಿ ಹತಾಶರಾದವರು. ಆರೆಸ್ಸೆಸ್ ಮೂಲದ ಕುಶಾಭಾವು ಠಾಕ್ರೆ, ಬಂಗಾರು ಲಕ್ಷ್ಮಣ, ವೆಂಕಯ್ಯ ನಾಯ್ಡು ಒಂದೆರಡು ವರ್ಷಗಳ ಕಾಲ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಸ್ಥಾನ ಅಲಂಕರಿಸಿದವರು. ದಲಿತ ಸಮುದಾಯಕ್ಕೆ ಸೇರಿದ ಬಂಗಾರು ಲಕ್ಷ್ಮಣ ಲಂಚ ಪ್ರಕರಣದಲ್ಲಿ ತಲೆ ದಂಡ ತೆತ್ತವರು. ನರೇಂದ್ರ ಮೋದಿ ರಾಷ್ಟ್ರ ರಾಜಕಾರಣಕ್ಕೆ ಬರುವ ಮುಂಚೆ ಭಾರತೀಯ ಜನತಾ ಪಕ್ಷದ ಪ್ರಮುಖ ನಿರ್ಧಾರಗಳನ್ನು ತ್ರಿಮೂರ್ತಿಗಳಾದ ಅಟಲ್ ಬಿಹಾರಿ ವಾಜಪೇಯಿ, ಎಲ್.ಕೆ. ಅಡ್ವಾಣಿ, ಡಾ. ಮುರಳಿ ಮನೋಹರ್ ಜೋಶಿಯವರು ಕೈಗೊಳ್ಳುತ್ತಿದ್ದರು. ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಹುದ್ದೆಗೆ ಅಭ್ಯರ್ಥಿಯನ್ನು ಆಯ್ಕೆ ಮಾಡುವಾಗ ಸಂಘ ಮೂಲ, ಕ್ರಿಯಾಶೀಲತೆ ಮತ್ತು ಶೈಕ್ಷಣಿಕ ಹಿನ್ನೆಲೆಯನ್ನು ಪರಿಗಣಿಸುತ್ತಿದ್ದರು. ಅಡ್ವಾಣಿ ಹೊರತು ಪಡಿಸಿದರೆ ಹೆಚ್ಚು ಕಾಲ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಸ್ಥಾನದಲ್ಲಿದ್ದವರು ರಾಜನಾಥ್ ಸಿಂಗ್. ತ್ರಿಮೂರ್ತಿಗಳ ಪ್ರೀತಿಗೆ ಪಾತ್ರರಾಗಿದ್ದ ರಾಜನಾಥ್ ಸಿಂಗ್ ಸವ್ಯ ಸಾಚಿಯಂತೆ ಕಾರ್ಯ ನಿರ್ವಹಿಸಿದವರು. ಸಂಘದ ಹಿನ್ನೆಲೆ ಜೊತೆಗೆ ಪ್ರಬುದ್ಧ ರಾಜಕಾರಣಿ ಇಮೇಜ್ ಕಾಪಾಡಿಕೊಂಡವರು. ಬಿಜೆಪಿಯ ತ್ರಿಮೂರ್ತಿಗಳು ಅತ್ಯಂತ ಕ್ರಿಯಾಶೀಲರಾಗಿದ್ದ ಹತ್ತು ಹಲವು ಜನ ವಿದ್ಯಾವಂತ ಯುವ ನಾಯಕರನ್ನು ಬೆಳೆಸಿದ್ದರು. ಒಂದು ನೂರು ವರ್ಷಗಳ ಕಾಲ ಬಿಜೆಪಿಗೆ ನಾಯಕತ್ವದ ಕೊರತೆಯೇ ಆಗುತ್ತಿರಲಿಲ್ಲ. ಪ್ರಮೋದ್ ಮಹಾಜನ್, ಅರುಣ್ ಜೇಟ್ಲಿ, ಮನೋಹರ್ ಪಾರಿಕ್ಕರ್, ಎಚ್.ಎನ್. ಅನಂತಕುಮಾರ್, ನಿತಿನ್ ಗಡ್ಕರಿ, ಸುಷ್ಮಾ ಸ್ವರಾಜ್, ಯಡಿಯೂರಪ್ಪ, ಕಲ್ಯಾಣ ಸಿಂಗ್, ರಾಜನಾಥ್ ಸಿಂಗ್ ಮತ್ತು ನರೇಂದ್ರ ಮೋದಿ. ನರೇಂದ್ರ ಮೋದಿಯವರನ್ನು ಉಗ್ರ ಹಿಂದುತ್ವದ ಕಾರಣಕ್ಕೆ ಬೆಳೆಸಿದವರು ಎಲ್.ಕೆ. ಅಡ್ವಾಣಿಯವರೇ. ಎಲ್.ಕೆ. ಅಡ್ವಾಣಿಯವರಿಗೆ ಪ್ರಧಾನಿ ಹುದ್ದೆ ದಕ್ಕದಂತೆ ಮಾಡಿದ ನರೇಂದ್ರ ಮೋದಿಯವರು ತ್ರಿಮೂರ್ತಿಗಳು ಬೆಳೆಸಿದ ಬಿಜೆಪಿಯ ಕುಡಿಗಳನ್ನು ಅಲ್ಲಲ್ಲೇ ಚಿವುಟಿ ಹಾಕಿದರು. 2009ರಲ್ಲಿ ಬಿಜೆಪಿ ಎಲ್.ಕೆ. ಅಡ್ವಾಣಿಯವರನ್ನು ಪ್ರಧಾನ ಮಂತ್ರಿ ಅಭ್ಯರ್ಥಿ ಎಂದು ಬಿಂಬಿಸಿತ್ತು. ಆಗ ನರೇಂದ್ರ ಮೋದಿ ಗುಜರಾತ್ ಮುಖ್ಯಮಂತ್ರಿಯಾಗಿದ್ದರು. ಯಡಿಯೂರಪ್ಪ ಕರ್ನಾಟಕದಲ್ಲಿ ಮುಖ್ಯಮಂತ್ರಿ ಹುದ್ದೆಯಲ್ಲಿದ್ದರು. ಯಡಿಯೂರಪ್ಪ ಹರಸಾಹಸ ಮಾಡಿ ಕರ್ನಾಟಕದಿಂದ ಹತ್ತೊಂಭತ್ತು ಸಂಸದರನ್ನು ಕಳುಹಿಸಿಕೊಟ್ಟಿದ್ದರು. ನರೇಂದ್ರ ಮೋದಿ ತನ್ನ ಗುರು ಎಲ್. ಕೆ. ಅಡ್ವಾಣಿ ಪ್ರಧಾನಿ ಆಗಲೆಂದು ಕಿಂಚಿತ್ತೂ ಪ್ರಯತ್ನಿಸಲಿಲ್ಲ. ಆಗ ಗುಜರಾತ್ ರಾಜ್ಯದಿಂದ ಕೇವಲ ಹನ್ನೆರಡು ಸಂಸದರನ್ನು ಮೋದಿ ಕೊಡುಗೆಯಾಗಿ ನೀಡಿದ್ದರು. ಮೋದಿ ಪ್ರಧಾನಿಯಾದ ವರ್ಷದಿಂದ ಗುಜರಾತ್ನಲ್ಲಿ 26ಕ್ಕೆ 26 ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯವರೇ ಗೆಲ್ಲುತ್ತಾರೆ. ಹಾಗೆ ನೋಡಿದರೆ ನಿತಿನ್ ಗಡ್ಕರಿಯೇ ಬಿಜೆಪಿಯ ಕೊನೆಯ ಅಧ್ಯಕ್ಷರು: ತ್ರಿಮೂರ್ತಿಗಳು ಮತ್ತು ಸಂಘ ಪರಿವಾರದ ಮುಖಂಡರು ಸೇರಿ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷರನ್ನು ಆಯ್ಕೆ ಮಾಡಿದ್ದು. ನರೇಂದ್ರ ಮೋದಿ ಪ್ರಧಾನ ಮಂತ್ರಿ ಅಭ್ಯರ್ಥಿ ಎಂದು ಘೋಷಣೆಯಾದಾಗ ರಾಜನಾಥ್ ಸಿಂಗ್ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷರಾಗಿದ್ದರು. ಮೋದಿ ತಮ್ಮ ಅನುಕೂಲಕ್ಕೆ, ಸಂಘ ಪರಿವಾರದ ಮುಖಂಡರನ್ನು ಒಪ್ಪಿಸಿ ರಾಜನಾಥ್ ಸಿಂಗ್ ಅವರಿಗೆ ಆ ಹುದ್ದೆ ಕೊಡಿಸಿದ್ದರು. ನಂತರ ಬಿಜೆಪಿಗೆ ರಾಷ್ಟ್ರೀಯ ಅಧ್ಯಕ್ಷರಾಗಿ ಬಂದವರೆಲ್ಲ ಮೋದಿಯವರ ಆಜ್ಞಾ ಪಾಲಕರೇ. ನರೇಂದ್ರ ಮೋದಿಯವರ ಮೊದಲ ಅವಧಿಯ ಕೇಂದ್ರ ಸರಕಾರದಲ್ಲಿ ರಾಜನಾಥ್ ಸಿಂಗ್ ನಂಬರ್ ಟು ಸ್ಥಾನದಲ್ಲಿದ್ದರು. ಗೃಹಖಾತೆ ಅವರ ಹೆಗಲೇರಿತ್ತು. ಎರಡು ಮತ್ತು ಮೂರನೇ ಅವಧಿಯಲ್ಲಿ ರಾಜನಾಥ್ ಸಿಂಗ್ ಕೇಂದ್ರ ಸಂಪುಟದಲ್ಲಿ ಸಚಿವರಾಗಿದ್ದಾರೆ. ಆದರೆ ಅಮಿತ್ ಶಾ ಕೈ ಕೆಳಗೆ. ನಾಲ್ಕು ವರ್ಷಗಳ ಕಾಲ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷರಾಗಿದ್ದ ನಾಗಪುರದ ನಿತಿನ್ ಗಡ್ಕರಿ ಇಲ್ಲಿಯವರೆಗೆ ಮಂತ್ರಿಯಾಗಿ ಉಳಿದಿದ್ದೇ ಹೆಚ್ಚು. ಅತ್ಯುತ್ತಮ ಕೆಲಸಗಾರ ಎಂಬ ಹೆಗ್ಗಳಿಕೆ ಇದ್ದರೂ ಮೋದಿ ಯುಗದಲ್ಲಿ ಹೆಚ್ಚಿನ ಪ್ರಾಮುಖ್ಯತೆ ಇಲ್ಲ. ಸಂಘ ಪರಿವಾರದಲ್ಲಿ ಕ್ರಿಯಾಶೀಲರಾಗಿದ್ದವರೇ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷರಾಗುತ್ತಾರೆ ಎಂಬ ಪ್ರತೀತಿ ಅಳಿಸಿ ಹಾಕಿದ ಮೋದಿ-ಅಮಿತ್ ಶಾ ಜೋಡಿ ಅಕ್ಷರಶಃ ತಮಗೆ ಬೇಕಾದವರನ್ನು ಆ ಸ್ಥಾನದಲ್ಲಿ ಕೂರಿಸುತ್ತಿದ್ದಾರೆ. ಒಂದು ಬಾರಿ ಬಿಜೆಪಿ ಲೋಕಸಭಾ ಸದಸ್ಯರಾಗಿದ್ದ ಜಯಶ್ರೀ ಬ್ಯಾನರ್ಜಿ ಯಾರಿಗೂ ಗೊತ್ತಿಲ್ಲ. ಹಿಮಾಚಲ ಪ್ರದೇಶ ಮೂಲದ ಬಿಹಾರದ ಪಾಟ್ನಾದಲ್ಲಿ ಜನಿಸಿದ್ದ ಜಗನ್ನಾಥ್ ಪ್ರಕಾಶ್ ನಡ್ಡಾ 2014ಕ್ಕೂ ಮುಂಚೆ ಅಮಿತ್ ಶಾ ಸಹಾಯಕನಂತೆ ಕಾರ್ಯ ನಿರ್ವಹಿಸುತ್ತಿದ್ದರು. ಅಮಿತ್ ಶಾ ತೋರಿಕೆಗೆ ಸಂಘದ ಆಜ್ಞಾ ಪಾಲಕನ ಪೋಸು ಕೊಟ್ಟರೂ ಆತ ಮೋದಿಯವರಿಗೆ ಬೇಕಾಗಿದ್ದನ್ನೇ ಜಾರಿ ಮಾಡುತ್ತಿದ್ದರು. ಅಮಿತ್ ಶಾ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿದ್ದಾಗ ಜೆ.ಪಿ. ನಡ್ಡಾ, ರಾಮ ಮಾಧವ ಮುಂತಾದವರು ಕೈ ಚೀಲ ಹಿಡಿಯುವ ಹಿಂಬಾಲಕರು. ಈಗ ಆ ಹಿಂಬಾಲಕರಿಗೆ ಶುಕ್ರ ದೆಸೆ ಒದಗಿ ಬಂದಿದೆ. ಜೆ.ಪಿ. ನಡ್ಡಾ ಹೆಚ್ಚು ಓದಿದವರಾಗಿದ್ದರು. ಬ್ರಾಹ್ಮಣ ಎಂಬ ಬಿರುದಾವಳಿ ಇತ್ತು. ಆದರೆ ಆತ ಕೂಡ ಆರೆಸ್ಸೆಸ್ ಗರಡಿಯಲ್ಲಿ ಬೆಳೆದವರಲ್ಲ. ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತು ಸೇರಿದಂತೆ ಸಂಘ ಪರಿವಾರದ ಯಾವ ಸಂಘಟನೆಯಲ್ಲೂ ಕ್ರಿಯಾಶೀಲವಾಗಿ ತೊಡಗಿಸಿಕೊಂಡವರಲ್ಲ. ಜಯಶ್ರೀ ಬ್ಯಾನರ್ಜಿಯವರ ಅಳಿಯ ಎಂಬ ಕಾರಣಕ್ಕೆ (ಡಿಎನ್ಎ)ಹಿಮಾಚಲ ಪ್ರದೇಶ ವಿಧಾನಸಭಾ ಸದಸ್ಯರಾದರು, ಮಂತ್ರಿಯಾದರು. ಅಮಿತ್ ಶಾ ಕೈಗೊಂಬೆಯಾಗಿದ್ದಕ್ಕೆ ಮೊದಲು ನರೇಂದ್ರ ಮೋದಿ ಸಂಪುಟದಲ್ಲಿ ಆರೋಗ್ಯ ಮಂತ್ರಿಯಾದರು. ನಂತರ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿ ಅಮೋಘ ಗುಲಾಮಗಿರಿ ಮಾಡಿದರು. ಈಗ ಮತ್ತೆ ಮೋದಿ ಸಂಪುಟದಲ್ಲಿ ಆರೋಗ್ಯ ಮಂತ್ರಿ. ಕರ್ನಾಟಕದ ಡಾ. ಸಿ.ಎನ್. ಮಂಜುನಾಥ್ ಅವರಲ್ಲಿ ಇರುವ ತಜ್ಞತೆ ನಡ್ಡಾ ಅವರಲ್ಲಿ ಇಲ್ಲ. ಆದರೆ ಗುಲಾಮಗಿರಿ ರಕ್ಷಣಾ ಕವಚದಂತೆ ಅವರನ್ನು ಕಾಪಾಡುತ್ತಿದೆ. ಈಗ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷರಾಗಿ ಆಯ್ಕೆಯಾದ ನಿತಿನ್ ನಬಿನ್ ಪಿಯುಸಿ ಓದಿದ ಒಬ್ಬ ನಿಯತ್ತಿನ ಸೇವಕ ಅಷ್ಟೇ. ಆರೆಸ್ಸೆಸ್ ಅಂಗ ಸಂಸ್ಥೆಯ ಯಾವ ಸಂಘಟನೆಯಲ್ಲೂ ಕಾರ್ಯ ನಿರ್ವಹಿಸಿದ ಅನುಭವ ಇಲ್ಲ. ನಿತಿನ್ ನಬಿನ್ ತಂದೆ ನಬಿನ್ ಕಿಶೋರ್ ಪ್ರಸಾದ್ ಸಿನ್ಹಾ ಬಿಹಾರ ರಾಜ್ಯದ ಪಾಟ್ನಾ ಪಶ್ಚಿಮ ವಿಧಾನಸಭಾ ಕ್ಷೇತ್ರದಿಂದ ಮೂರು ಬಾರಿ ಬಿಜೆಪಿ ಟಿಕೆಟ್ ಮೇಲೆ ಗೆದ್ದು ಶಾಸಕರಾಗಿದ್ದರು. 2006ರಲ್ಲಿ ಹಠಾತ್ತನೇ ನಿಧನರಾದಾಗ ಡಿಎನ್ಎ ಕಾರಣಕ್ಕೆ ಅವರ ಪುತ್ರ ಇಪ್ಪತ್ತಾರು ವಯಸ್ಸಿನ ನಿತಿನ್ ನಬಿನ್ ಅಭ್ಯರ್ಥಿಯಾಗುತ್ತಾರೆ. ನಿರೀಕ್ಷೆಯಂತೆ ಅನುಕಂಪದ ಅಲೆಯಲ್ಲಿ ಭಾರೀ ಅಂತರದಲ್ಲಿ ಗೆಲುವು ಸಾಧಿಸುತ್ತಾರೆ. ಶಾಸಕನಾದ ಮೇಲೆ ಭಾರತೀಯ ಜನತಾ ಪಕ್ಷದ ಯುವ ಮೋರ್ಚಾದ ರಾಜ್ಯ ಅಧ್ಯಕ್ಷರಾಗುತ್ತಾರೆ. ನಂತರ ಭಾರತೀಯ ಜನತಾ ಪಕ್ಷದ ಯುವ ಮೋರ್ಚಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸುತ್ತಾರೆ. ನಿತಿನ್ ನಬಿನ್ ಹೆಗ್ಗಳಿಕೆಯೆಂದರೆ ಇಲ್ಲಿಯವರೆಗೆ ಚುನಾವಣಾ ರಾಜಕೀಯದಲ್ಲಿ ಸೋಲು ಅನುಭವಿಸಿಲ್ಲ. 2006ರ ಉಪಚುನಾವಣೆಯಲ್ಲಿ ಗೆದ್ದ ನಿತಿನ್ ನಬಿನ್ ಕ್ಷೇತ್ರ ಮರುವಿಂಗಡಣೆಯಾದ ಮೇಲೆ ಬಂಕಿಪುರ ವಿಧಾನಸಭಾ ಕ್ಷೇತ್ರದಿಂದ ಸತತ ನಾಲ್ಕು ಬಾರಿ ಗೆಲುವು ಸಾಧಿಸಿದ್ದಾರೆ. 2024ರಿಂದ 2025ರವರೆಗೆ ನಿತೀಶ್ ಕುಮಾರ್ ಸಚಿವ ಸಂಪುಟದಲ್ಲಿ ಕಾನೂನು ಸೇರಿದಂತೆ ಪ್ರಮುಖ ಖಾತೆಗಳ ಮಂತ್ರಿಯಾಗಿ ಕಾರ್ಯ ನಿರ್ವಹಿಸಿದ್ದಾರೆ. ನಿತಿನ್ ನಬಿನ್ ಚುನಾವಣಾ ರಾಜಕಾರಣದಲ್ಲಿ ನಿರಂತರ ಗೆಲುವು ಸಾಧಿಸಲು ಅಪ್ಪನ ಹೆಸರು ಮತ್ತು ಆತ ಹುಟ್ಟಿದ ಜಾತಿ ಬೆಂಬಲಕ್ಕೆ ನಿಂತಿ ರುತ್ತವೆ. ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಸ್ಥಾನಕ್ಕೆ ಬರಲು ಗುಲಾಮಿ ವ್ಯಕ್ತಿತ್ವ ಮತ್ತು ಆತ ಪ್ರತಿನಿಧಿಸುವ ಕಾಯಸ್ಥ ಜಾತಿಯೂ ಪ್ರಮುಖ ಪಾತ್ರ ವಹಿಸಿದೆ. ಕಾಯಸ್ಥ ಸಮುದಾಯದ ಜನಸಂಖ್ಯೆ ಹಲವು ಉತ್ತರದ ರಾಜ್ಯಗಳಲ್ಲಿ ಗಣನೀಯ ಪ್ರಮಾಣದಲ್ಲಿ ಇದೆ. ಉತ್ತರ ಪ್ರದೇಶ, ಬಿಹಾರ ಮತ್ತು ಪಶ್ಚಿಮ ಬಂಗಾಳದಲ್ಲಿ ಕಾಯಸ್ಥರು ಹೆಚ್ಚಿದ್ದಾರೆ. ಅಸ್ಸಾಂ, ಜಾರ್ಖಂಡ್, ಒಡಿಶಾ, ದಿಲ್ಲಿ, ಮಧ್ಯಪ್ರದೇಶ, ಉತ್ತರಾಖಂಡ, ರಾಜಸ್ಥಾನ, ಮಹಾರಾಷ್ಟ್ರ ರಾಜ್ಯದಲ್ಲೂ ಕಾಯಸ್ಥರ ಸಂಖ್ಯಾ ಬಾಹುಳ್ಯವಿದೆ. ಪಶ್ಚಿಮ ಬಂಗಾಳ, ಉತ್ತರ ಪ್ರದೇಶ ಚುನಾವಣೆಯನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ನಿತೀನ್ ನಬಿನ್ ಆಯ್ಕೆ ನಡೆದಿದೆ. ಯುವ ನಾಯಕತ್ವದ ಕೈಯಲ್ಲಿ ಬಿಜೆಪಿ ಎನ್ನುವುದು ಬೊಗಳೆ ಭಾಷಣ. ಈಗಲೂ ಬಿಜೆಪಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಕಪಿಮುಷ್ಟಿಯಲ್ಲಿದೆ. ತಮಗೆ ಬೇಕಾದವರಿಗೆ ಸಚಿವ ಸಂಪುಟದಲ್ಲಿ ಸ್ಥಾನ ನೀಡುತ್ತಾರೆ. ತಮಗೆ ನಿಯತ್ತು ತೋರಿದವರಿಗೆ ರಾಜ್ಯ ಅಧ್ಯಕ್ಷ ಸ್ಥಾನ, ಮುಖ್ಯಮಂತ್ರಿ ಹುದ್ದೆ ದಯಪಾಲಿಸುತ್ತಾರೆ. ಪಾಪ ಕರ್ನಾಟಕದ ಸಂತೋಷ್ ಜೀ ಈ ಜೀ ಹುಜೂರು ಸಂಸ್ಕೃತಿಯ ಭಾಗವಾದರಲ್ಲ. ಇಂಜಿನಿಯರಿಂಗ್ ಪದವೀಧರ. ಸಂಘದ ಗರಡಿಯಲ್ಲಿ ಬೆಳೆದ ಅಪಾರ ವಿದ್ವತ್ ಇರುವ ಬಿ.ಎಲ್. ಸಂತೋಷ್ ಪಿಯುಸಿ ಓದಿದ ನಿತಿನ್ ನಬಿನ್ ಕೈಯಲ್ಲಿ ಕೆಲಸ ಮಾಡುವ ಅನಿವಾರ್ಯತೆ ಸೃಷ್ಟಿಯಾಯಿತಲ್ಲ. ಸರ್ವಾಧಿಕಾರಿ ಹುಟ್ಟು ಪಡೆಯುವುದು ಇದೇ ಬಗೆಯಲ್ಲಿ.
ಮಣಿಪುರದಲ್ಲಿ ಭಯೋತ್ಪಾದಕರ ವಿರುದ್ಧ ಭಾರತೀಯ ಸೇನೆ ನಡೆಸಿದ ದಾಳಿಯಲ್ಲಿ ಭಾರೀ ಪ್ರಮಾಣದಲ್ಲಿ ಶಸ್ತ್ರಾಸ್ತ್ರಗಳು, ಮದ್ದುಗುಂಡುಗಳು ಮತ್ತು ನಗದನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಕಳೆದ ಕೆಲವು ವಾರಗಳಿಂದ ಸಾಮಾಜಿಕ ಮಾಧ್ಯಮಗಳಲ್ಲಿ ವೀಡಿಯೊ ವೈರಲ್ ಆಗಿದೆ. ಆದರೆ, ಮಣಿಪುರದಲ್ಲಿ ಭಾರತೀಯ ಸೇನೆ ಭಾರೀ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿದೆಯಾ? ವೈರಲ್ ವೀಡಿಯೊದ ಅಸಲಿಯತ್ತೇನು? ಜೂನ್ 10 ರಂದು @TIgerNS3 ಎಂಬ X ಬಳಕೆದಾರ ವೀಡಿಯೊವೊಂದನ್ನು ಪೋಸ್ಟ್ ಮಾಡಿ, ಸಶಸ್ತ್ರ ಪಡೆಗಳು ದಾಳಿ ನಡೆಸಿ ಮಣಿಪುರದ ವಿಮೋಚನಾ ವಿರೋಧಿ ಸಾಮಾಜಿಕ ಘಟಕಗಳಿಂದ ಭಾರಿ ಪ್ರಮಾಣದಲ್ಲಿ ನಗದು, ಬಂದೂಕುಗಳು, ಶಸ್ತ್ರಾಸ್ತ್ರಗಳು ಮತ್ತು ಯುದ್ಧಸಾಮಗ್ರಿಗಳ ದೊಡ್ಡ ದಾಸ್ತಾನುಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಬರೆದುಕೊಂಡಿದ್ದಾರೆ. ಇದಲ್ಲದೆ ಹ್ಯಾಶ್ಟ್ಯಾಗ್ನಲ್ಲಿ ಕುಕಿ ಭಯೋತ್ಪಾದಕರು ಎಂದು ಕೂಡ ಬರೆದಿದ್ದಾರೆ. ಸುಮಾರು ಒಂದು ತಿಂಗಳ ಹಿಂದೆ X ಬಳಕೆದಾರರಾಗಿರುವ ಜಿತೇಂದ್ರ ಪ್ರತಾಪ್ ಸಿಂಗ್(@jpsin1) ಇದೇ ರೀತಿಯ ಶೀರ್ಷಿಕೆಯೊಂದಿಗೆ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಮಣಿಪುರದಲ್ಲಿ, ಭಾರತೀಯ ಸೇನೆಯು ಭಯೋತ್ಪಾದಕರಿಂದ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳು ಮತ್ತು ಹಣವನ್ನು ವಶಪಡಿಸಿಕೊಂಡಿದೆ ಎಂದು ಹೇಳಿಕೊಂಡಿದ್ದಾರೆ. ಈಗ ಅದೇ ವೀಡಿಯೊ ಬಳಸಿಕೊಂಡು ಮಣಿಪುರದ ಮಸೀದಿಯಲ್ಲಿ ಸಿಕ್ಕ ಆಯುಧಗಳಿವು ಹಾಗೆ ಇದನ್ನು ಎಲ್ಲಾ ಹಿಂದೂ ಬಾಂಧವರಿಗೆ ಹಂಚಿಕೊಳ್ಳಿ ಎಂಬ ಒಕ್ಕಣೆಯೊಂದಿಗೆ ವಾಟ್ಸ್ ಆಪ್ ನಲ್ಲಿ ಶೇರ್ ಮಾಡಲಾಗುತ್ತಿದೆ. ಇದೇ ರೀತಿಯ ನಿರೂಪಣೆಯೊಂದಿಗೆ ಹಲವಾರು ಎಕ್ಸ್ ಬಳಕೆದಾರರು ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ವಾಸ್ತವವೇನು? ವೈರಲ್ ವೀಡಿಯೊದಲ್ಲಿದ್ದ ವ್ಯಕ್ತಿಗಳು ಧರಿಸಿದ್ದ ಯೂನಿಫಾರ್ಮ್ಗಳ ಮೇಲೆ BNRA ಲೋಗೋ ಇರುವುದನ್ನು ನಾವು ಗಮನಿಸಿದ್ದೇವೆ. BNRA ಎಂದರೆ ಬರ್ಮಾ ನ್ಯಾಷನಲ್ ರೆವಲ್ಯೂಷನರಿ ಆರ್ಮಿ (Burma National Revolutionary Army). ಇದು ಮ್ಯಾನ್ಮಾರ್ 2023ರ ಸೆಪ್ಟೆಂಬರ್ 9ರಂದು ಸ್ಥಾಪನೆಯಾದ ಹೊಸ ಸೇನಾ ಸಂಘಟನೆಯಾಗಿದೆ. ಆದ್ದರಿಂದ ಈ ವೈರಲ್ ವೀಡಿಯೊಗೂ ಭಾರತಕ್ಕೂ ಸಂಬಂಧವುವಿಲ್ಲ ಎಂದು altnews.in ನಡೆಸಿದ ಸತ್ಯಶೋಧನೆಯು ಬಹಿರಂಗಗೊಳಿಸಿದೆ. BNRAಯ ಅಧಿಕೃತ ಫೇಸ್ಬುಕ್ ಪುಟದಲ್ಲಿರುವ BNRA ಲೋಗೋ ಮತ್ತು ವಿಡಿಯೋದಲ್ಲಿನ ಸೈನಿಕರ ಯೂನಿಫಾರ್ಮ್ಗಳಲ್ಲಿದ್ದ ಲೋಗೊಗಳನ್ನು ಪರಿಶೀಲನೆ ನಡೆಸಿದಾಗ ಎರಡೂ ಹೋಲಿಕೆಯಾಗಿದೆ. ಈ ವೀಡಿಯೊದಲ್ಲಿ ಕಂಡು ಬಂದಿರುವುದು ಬರ್ಮಾ ನ್ಯಾಷನಲ್ ರೆವಲ್ಯೂಷನರಿ ಆರ್ಮಿಯೇ ಎಂಬುದನ್ನು ದೃಢಪಡಿಸುತ್ತದೆ. ಹೆಚ್ಚುವರಿಯಾಗಿ ವೀಡಿಯೊದ ಕೊನೆಯಲ್ಲಿ, ಮಧ್ಯದಲ್ಲಿ ಬಿಳಿ ವೃತ್ತವಿರುವ ನೀಲಿ, ಕೆಂಪು ಮತ್ತು ಹಸಿರು ಬಣ್ಣದ ಧ್ವಜ ಕಂಡು ಬಂದಿದೆ. ಅದರೊಳಗೆ ಕೆಲವು ಆಕೃತಿಯನ್ನು ರಚಿಸಲಾಗಿದೆ. ಈ ಕುರಿತು ಹೆಚ್ಚಿನ ಪರಿಶೀಲನೆ ನಡೆಸಿದಾಗ ಈ ಧ್ವಜವು ಚಿನ್ ರಾಷ್ಟ್ರೀಯ ರಕ್ಷಣಾ ಪಡೆ (CNDF)ಗೆ ಸೇರಿದೆ ಎನ್ನುವುದು ಬಹಿರಂಗವಾಗಿದೆ. ಇದು ಮ್ಯಾನ್ಮಾರ್ನ ಚಿನ್ ರಾಜ್ಯದಿಂದ ಕಾರ್ಯನಿರ್ವಹಿಸುವ ಬಂಡಾಯ ಗುಂಪು. ಚಿನ್ ಭಾರತದ ಮಣಿಪುರ ರಾಜ್ಯದೊಂದಿಗೆ ಗಡಿಗಳನ್ನು ಹಂಚಿಕೊಳ್ಳುತ್ತದೆ. ಈ ಕುರಿತು ಹೆಚ್ಚಿನ ಪರಿಶೀಲನೆ ನಡೆಸಿದಾಗ ಏಪ್ರಿಲ್ 24ರ ಫೇಸ್ಬುಕ್ ಪೋಸ್ಟ್ವೊಂದು ಗಮನಕ್ಕೆ ಬಂದಿದೆ. ಅದರಲ್ಲಿ ಶೀರ್ಷಿಕೆಯನ್ನು ಮಿಜೋ ಭಾಷೆಯಲ್ಲಿ ಬರೆಯಲಾಗಿದೆ ಮತ್ತು ಸಿಬಿ ಗುಂಪು ಮತ್ತು ಅವರ ಪೂರ್ವಜರು ಫಲಮ್ ಗ್ರಾಮದಲ್ಲಿ 268 ಜನರನ್ನು ಸೋಲಿಸಿದರು ಮತ್ತು ಶಸ್ತ್ರಾಸ್ತ್ರಗಳು ಮತ್ತು ಹಣವನ್ನು ವಶಪಡಿಸಿಕೊಂಡರು ಎಂದು ಬರೆದಿರುವುದು ಕಂಡು ಬಂದಿದೆ. ಈ ಕುರಿತು ಮತ್ತಷ್ಟು ಪರಿಶೀಲನೆ ನಡೆಸಿದಾಗ ಮ್ಯಾನ್ಮಾರ್ ಮೂಲದ ಮಾಧ್ಯಮ ಸಂಸ್ಥೆಯಾದ Khit Thit ಮೀಡಿಯಾದ ಏಪ್ರಿಲ್ 10 ರ ಫೇಸ್ಬುಕ್ ಪೋಸ್ಟ್ ದೊರೆತಿದೆ. ಅದರಲ್ಲಿ ಆ ಪೋಸ್ಟ್ನಲ್ಲಿ ವೈರಲ್ ಆಗಿರುವ ವೀಡಿಯೊವನ್ನು ಹಂಚಿಕೊಳ್ಳಲಾಗಿದೆ ಮತ್ತು ಬರ್ಮೀಸ್ ಭಾಷೆಯಲ್ಲಿ, ಫಲಂ ಪಟ್ಟಣಕ್ಕಾಗಿ ನಡೆದ ಯುದ್ಧದಲ್ಲಿ ಲಕ್ಷಾಂತರ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ. ಏಪ್ರಿಲ್ 9ರಂದು ಸಂಪೂರ್ಣ ಫಲಂ ಪಟ್ಟಣವನ್ನು ಅಂತಿಮ ದಾಳಿ ಮಾಡಿ ವಶಪಡಿಸಿಕೊಳ್ಳಲಾಗಿದೆ. ಚಿನ್ ನಿಯಿನೌಂಗ್ ಗುಂಪು( Chin Nyinaung group) ಮಿಲಿಟರಿ ಕೌನ್ಸಿಲ್ನಿಂದ ಸಾವಿರಾರು ಪ್ರಮಾಣದ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಂಡಿದೆ ಎಂದು ಬರೆಯಲಾಗಿದೆ. ಮ್ಯಾನ್ಮಾರ್ ಮೂಲದ ಹಲವಾರು ಇತರ ಸುದ್ದಿ ಸಂಸ್ಥೆಗಳು ಕೂಡ ಇದೇ ರೀತಿ ವರದಿ ಮಾಡಿವೆ. ಇದರಿಂದಾಗಿ ವೈರಲ್ ಕ್ಲಿಪ್ ಮ್ಯಾನ್ಮಾರ್ನದ್ದಾಗಿದೆ ಎಂಬುದು ಸ್ಪಷ್ಟವಾಗಿದೆ. ಇದಕ್ಕೂ ಮಣಿಪುರಕ್ಕೂ ಯಾವುದೇ ಸಂಬಂಧವಿಲ್ಲ ಎನ್ನುವುದು ಬಹಿರಂಗವಾಗಿದೆ.
India and European Union: ಭಾರತ ಮತ್ತು ಯುರೋಪ್ ನಡುವೆ ಮಹತ್ವದ ವ್ಯಾಪಾರ ಒಪ್ಪಂದ, ಅಂತಿಮ ಮಾತುಕತೆಗೆ ಕ್ಷಣಗಣನೆ
ಭಾರತ ಮತ್ತು ಯುರೋಪ್ ದೇಶಗಳ ನಡುವೆ ಗಟ್ಟಿಯಾದ ಸಂಬಂಧ ಇದ್ದು, ಅಮೆರಿಕ ಮೀರಿಸುವ ರೀತಿ ಎರಡೂ ಒಕ್ಕೂಟಗಳು ವ್ಯಾಪಾರ ಮತ್ತು ವಹಿವಾಟು ನಡೆಸುತ್ತವೆ. ಅದರಲ್ಲೂ ಪ್ರತಿವರ್ಷವೂ ಭಾರತ ಲಕ್ಷಾಂತರ ಕೋಟಿ ರೂಪಾಯಿ ಮೌಲ್ಯದ ವಸ್ತುಗಳನ್ನು ಯುರೋಪ್ ನೆಲಕ್ಕೆ ರಫ್ತು ಮಾಡಿ ಲಾಭ ಮಾಡುತ್ತಿದೆ. ಹಾಗೇ ಯುರೋಪ್ ಒಕ್ಕೂಟಕ್ಕೂ ಭಾರತದ ಜೊತೆಗಿನ ವ್ಯಾಪಾರ ಸಾಕಷ್ಟು ಲಾಭ ನೀಡುತ್ತಿದೆ. ಹೀಗಾಗಿ
ರಾಜ್ಯಪಾಲರು Vs ಸರ್ಕಾರ : ಜ. 26ರ ಭಾಷಣಕ್ಕೂ ಸಿದ್ದರಾಮಯ್ಯ ಸರ್ಕಾರದ ಸ್ಕ್ರಿಪ್ಟ್ - ಮತ್ತೆ ಸಾಂವಿಧಾನಿಕ ಸಂಘರ್ಷ?
Governor Speech in Republic Day : ವಿಧಾನಮಂಡಲದ ಅಧಿವೇಶನದ ವೇಳೆ ನಡೆದ ವಿದ್ಯಮಾನ ಮತ್ತೊಮ್ಮೆ ಪುನರಾವರ್ತನೆ ಆಗುತ್ತಾ ಎನ್ನುವುದು ಕುತೂಹಲಕ್ಕೆ ಕಾರಣವಾಗಿದೆ. ಜನವರಿ 26 ಗಣರಾಜ್ಯೋತ್ಸವದ ದಿನದಂದೂ, ರಾಜ್ಯಪಾಲರು, ಸಾಮಾನ್ಯವಾಗಿ ಸರ್ಕಾರ ಸಿದ್ದಪಡಿಸಿ ಕೊಡುವ ಭಾಷಣವನ್ನೇ ಓದುವುದು ಹಿಂದಿನಿಂದಲೂ ನಡೆದುಕೊಂಡು ಬಂದ ಸಂಪ್ರದಾಯ.
Heavy Rain Alert: ತಮಿಳುನಾಡು ಸೇರಿದಂತೆ ಈ ರಾಜ್ಯಗಳಲ್ಲಿ ಇನ್ನೆರಡು ದಿನ ಭಾರೀ ಮಳೆ ಸಾಧ್ಯತೆ
ನವದೆಹಲಿ: ಜನವರಿ 26ರಿಂದ 28ರವರೆಗೆ ಉತ್ತರ ಪಶ್ಚಿಮ ಭಾರತವನ್ನು ಮತ್ತೊಂದು ತೀವ್ರ ವಾಯುಚಲನೆ ಪ್ರಭಾವಿಸುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಈ ವಾಯುಚಲನೆಯ ಪರಿಣಾಮವಾಗಿ ಜನವರಿ 27ರಂದು ಪಶ್ಚಿಮ ಹಿಮಾಲಯ ಪ್ರದೇಶಗಳಲ್ಲಿ ಕೆಲವೆಡೆ ಭಾರೀ ಮಳೆ ಹಾಗೂ ಹಿಮಪಾತ ಸಂಭವಿಸುವ ಸಾಧ್ಯತೆ ಇದೆ. ಈಗಾಗಲೇ ಜಮ್ಮು-ಕಾಶ್ಮೀರ-ಲಡಾಖ್ ಮತ್ತು ಹಿಮಾಚಲ ಪ್ರದೇಶಗಳ ಬಹುತೇಕ
ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಉಪನಗರ ರೈಲು ಸಂಪರ್ಕ ಕಲ್ಪಿಸುವ ಮಹತ್ವಾಕಾಂಕ್ಷೆಯ ಯೋಜನೆಗೆ ಹಸಿರು ನಿಶಾನೆ ದೊರೆತಿದೆ! 4,100 ಕೋಟಿ ರೂ. ಬಜೆಟ್ನಲ್ಲಿ, 2030ರ ಮಾರ್ಚ್ ವೇಳೆಗೆ ಕಾರ್ಯಗತಗೊಳ್ಳುವ ಗುರಿಯೊಂದಿಗೆ, ಮೆಜೆಸ್ಟಿಕ್ನಿಂದ ವಿಮಾನ ನಿಲ್ದಾಣದವರೆಗೆ 8.5 ಕಿ.ಮೀ ರೈಲು ಮಾರ್ಗ ನಿರ್ಮಾಣವಾಗಲಿದೆ. ಇದು ನಗರದ ಸಂಚಾರ ದಟ್ಟಣೆಗೆ ದೊಡ್ಡ ಪರಿಹಾರ ನೀಡಲಿದ್ದು, ಬೆಂಗಳೂರಿನ ಸಾರಿಗೆ ಜಾಲಕ್ಕೆ ಕ್ರಾಂತಿಕಾರಕ ಬದಲಾವಣೆ ತರಲಿದೆ.
ಬೆಳ್ಳಂದೂರು ಕೆರೆಯ ಬಫರ್ ಝೋನ್ ವ್ಯಾಪ್ತಿಯಲ್ಲಿ ಖಾಸಗಿ ವ್ಯಕ್ತಿಗಳು ಕಟ್ಟಡದ ತ್ಯಾಜ್ಯವನ್ನು ಕೆರೆಯ ಮಧ್ಯೆ ಸುರಿಯುತ್ತಿರುವುದನ್ನು ಕಂಡು ಸುತ್ತಮುತ್ತಲಿನ ನಿವಾಸಿಗಳು ಕಂಗಾಲಾಗಿದ್ದಾರೆ. ಒತ್ತುವರಿ ಬಗ್ಗೆ ದೂರು ನೀಡಿದರೂ ಸಹ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ. ಹೀಗಾಗಿ ಸಿದ್ದರಾಮಯ್ಯನವರಿಗೆ ಮನವಿ ಪತ್ರ ಕೊಡಲಾಗಿದೆ ಎಂದು ವಕೀಲರೊಬ್ಬರು ತಿಳಿಸಿದ್ದಾರೆ. ಒತ್ತುವರಿಯಿಂದ ಸಮಸ್ಯೆಯಾಗುತ್ತದೆ ಎಂದು ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮನರೇಗಾ ವಿಚಾರದಲ್ಲಿ ವಿಶೇಷ ಅಧಿವೇಶನ ಕರೆದು ಕೇಂದ್ರ ಸರ್ಕಾರಕ್ಕೆ ಠಕ್ಕರ್ ನೀಡಲು ಪ್ಲ್ಯಾನ್ ಮಾಡಿಕೊಂಡಿರುವ ಕಾಂಗ್ರೆಸ್ ಸರ್ಕಾರ ಇದೀಗ ಅಬಕಾರಿ ಇಲಾಖೆ ಸಚಿವ ಆರ್ ಬಿ ತಿಮ್ಮಾಪುರ ವಿರುದ್ಧದ ಹಗರಣ ಆರೋಪದಿಂದ ಕಂಗಾಲಾಗಿದೆ. ಸದನದಲ್ಲಿ ಈಗಾಗಲೇ ಈ ವಿಚಾರ ಪ್ರಸ್ತಾಪ ಮಾಡಿರುವ ಬಿಜೆಪಿ ಸಚಿವರ ತಲೆದಂಡಕ್ಕೆ ಒತ್ತಾಯ ಮಾಡಿದೆ. ಉಭಯ ಸದನದಲ್ಲಿ ನಿಲುವಳಿ ಸೂಚನೆ ನೀಡುವ ಮೂಲಕ ಈ ಪ್ರಕರಣವನ್ನು ದೊಡ್ಡ ಮಟ್ಟದಲ್ಲಿ ಬಿಂಬಿಸಲು ವಿಪಕ್ಷ ಸಜ್ಜಾಗಿದೆ. ಹೀಗಾಗಿ ಇದು ಸರ್ಕಾರಕ್ಕೆ ತಲೆವೋವಾಗಿ ಮಾರ್ಪಟ್ಟಿದೆ.
ಬೆಂಗಳೂರು–ಮಂಗಳೂರು ರಾಷ್ಟ್ರೀಯ ಹೆದ್ದಾರಿ ಕಾಮಗಾರಿ: ಮೇ ಒಳಗೆ ಸಂಚಾರ ಮುಕ್ತಗೊಳಿಸಲು ಸೂಚನೆ
ಹಾಸನ: ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ಹಾಸನ ವ್ಯಾಪ್ತಿಯಲ್ಲಿನ ನಡೆಯುತ್ತಿರುವ ಕಾಮಗಾರಿಗಳಿಂದ ಉಂಟಾಗಿರುವ ಸಮಸ್ಯೆಗಳ ಕುರಿತು ಸಚಿವ ಕೃಷ್ಣ ಬೈರೇಗೌಡ ಅವರ ಅಧ್ಯಕ್ಷತೆಯಲ್ಲಿ ಹಾಸನ ಸಂಸದ ಶ್ರೇಯಸ್ ಎಂ.ಪಟೇಲ್ ಅವರು ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಗುತ್ತಿಗೆದಾರರೊಂದಿಗೆ ಮಹತ್ವದ ಸಭೆ ನಡೆಸಿದರು. ಸಭೆಯಲ್ಲಿ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಗಳ ಬಗ್ಗೆ ಚರ್ಚಿಸಿ, ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ಸ್ಪಷ್ಟ ನಿರ್ದೇಶನ ನೀಡಲಾಯಿತು. ಸುಮಾರು
ಅಮೆರಿಕಾದಲ್ಲಿ H-1B ವೀಸಾಗಳ ದುರುಪಯೋಗದ ಕುರಿತು ಟೆಕ್ಸಾಸ್ ಮೂಲದ MAGA ಬೆಂಬಲಿತ ಪತ್ರಕರ್ತ ಬ್ಲೇಕ್ ಕ್ರೆಸೆಸ್ ಅವರ ಹೇಳಿಕೆಗಳು ಭಾರತೀಯ ವಿರೋಧಿ ಮತ್ತು ಹಿಂದೂ ವಿರೋಧಿ ಭಾವನೆಗಳನ್ನು ಕೆರಳಿಸಿವೆ. ವೀಸಾ ಕಾರ್ಯಕ್ರಮದ ದುರ್ಬಳಕೆಯ ಬಗ್ಗೆ ಸಾರ ಗೊಂಜಾಲೆಸ್ ಬಿಡುಗಡೆ ಮಾಡಿದ ವಿಡಿಯೋಗಳ ಬೆನ್ನಲ್ಲೇ ಕ್ರೆಸೆಸ್ ಅಮೆರಿಕಾದ ಟೆಕ್ಸಾಸ್ ನಲ್ಲಿ ಪ್ರತಿ ಮನೆಯನ್ನು ಭಾರತೀಯುರ ಆಕ್ರಮಿಸಿಕೊಂಡಿದ್ದಾರೆ. ಅವರ ಮನೆಗಳಲ್ಲಿ ರಾಕ್ಷಸ ರೀತಿ ಕಾಣುವ ಆನೆಯ ವಿಗ್ರಹವಿದೆ ಎಂದು ಹೇಳುವ ಮೂಲಕ ಈ ಜನಾಂಗೀಯ ನಿಂದನೆಯ ವಿವಾದ ಸೃಷ್ಟಿಸಿದ್ದು, ಈ ಹೇಳಿಕೆಗಳು ದ್ವೇಷಪೂರಿತವಾಗಿವೆ ಎಂದು ಭಾರತೀಯ ವಲಸಿಗರು ಕಿಡಿಕಾರುತ್ತಿದ್ದಾರೆ.
ಮಲೆ ಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆ, ದ್ವಿಚಕ್ರ ವಾಹನ ಸಂಚಾರ ನಿರ್ಬಂಧ ಮುಂದುವರಿಕೆ
ಮಲೆಮಹದೇಶ್ವರ ಬೆಟ್ಟದಲ್ಲಿ ಚಿರತೆ ಸೆರೆ ಸಿಕ್ಕಿದೆ. ಆದರೂ, ಪಾದಯಾತ್ರೆ ಮತ್ತು ದ್ವಿಚಕ್ರ ವಾಹನ ಸಂಚಾರದ ಮೇಲಿನ ನಿರ್ಬಂಧವನ್ನು ಜಿಲ್ಲಾಡಳಿತ ಮುಂದುವರಿಸಿದೆ. ಜನವರಿ 24ರವರೆಗೆ ಈ ನಿರ್ಬಂಧ ಜಾರಿಯಲ್ಲಿರುತ್ತದೆ. ಅರಣ್ಯಾಧಿಕಾರಿಗಳು ಡ್ರೋನ್ ಬಳಸಿ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಸಾರ್ವಜನಿಕರ ಸುರಕ್ಷತೆಗಾಗಿ ಈ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ. ಇನ್ನಷ್ಟು ಚಿರತೆಗಳ ಉಪಟಳದ ಬಗ್ಗೆ ಖಚಿತಪಡಿಸಿಕೊಳ್ಳಲು ಈ ಕಾರ್ಯಾಚರಣೆ ನಡೆಯುತ್ತಿದೆ.
ಅದಾನಿ ಗ್ರೀನ್ ಎನರ್ಜಿ ದಾಖಲೆ ಸಾಧನೆ; 9 ತಿಂಗಳಲ್ಲಿ ಶೇ 37ರಷ್ಟು ಬೆಳವಣಿಗೆ
ಅಹಮದಾಬಾದ್: ಭಾರತದ ಅತಿದೊಡ್ಡ ಹಾಗೂ ವೇಗವಾಗಿ ಬೆಳೆಯುತ್ತಿರುವ ಶುದ್ಧ ನವೀಕರಿಸಬಹುದಾದ ಇಂಧನ ಸಂಸ್ಥೆಯಾದ ಅದಾನಿ ಗ್ರೀನ್ ಎನರ್ಜಿ ಲಿಮಿಟೆಡ್ (ಎಜಿಇಎಲ್) 2025 ಡಿಸೆಂಬರ್ 31ಕ್ಕೆ ಅಂತ್ಯಗೊಂಡ ಹಣಕಾಸು ಅವಧಿಯ (Q3 ಮತ್ತು 9M FY26) ಫಲಿತಾಂಶಗಳನ್ನು ಪ್ರಕಟಿಸಿದ್ದು, ವರ್ಷದಿಂದ ವರ್ಷಕ್ಕೆ ಶೇ 37ರಷ್ಟು ಬೆಳವಣಿಗೆ ದಾಖಲಿಸಿರುವುದಾಗಿ ಘೋಷಿಸಿದೆ. ಹಸಿರು ಇಂಧನ ಕ್ಷೇತ್ರದಲ್ಲಿ ಭಾರೀ ಗ್ರೀನ್ಫೀಲ್ಡ್ ಸಾಮರ್ಥ್ಯ ವೃದ್ಧಿ,
ಕಲಬುರಗಿಯಿಂದ ಚತುಷ್ಪಥವಿಲ್ಲ; ಬೆಂಗಳೂರು ಪ್ರಯಾಣ ಬಲು ಹೈರಾಣ
ಕಲಬುರಗಿಯಲ್ಲಿ ಚತುಷ್ಪಥ ಹೆದ್ದಾರಿಗಳಿಲ್ಲದಿರುವುದು ಜನರಲ್ಲಿ ಅಸಮಾಧಾನ ಮೂಡಿಸಿದೆ. ಇದರಿಂದ ಕೈಗಾರಿಕೆ ಮತ್ತು ಆರ್ಥಿಕ ಅಭಿವೃದ್ಧಿಗೆ ಹಿನ್ನಡೆಯಾಗುತ್ತಿದೆ. ಜೇವರ್ಗಿಯಿಂದ ಬಳ್ಳಾರಿ, ಹುಮನಾಬಾದ್ನಿಂದ ವಿಜಯಪುರ, ಕಲಬುರಗಿಯಿಂದ ಕೃಷ್ಣ ಹೆದ್ದಾರಿಗಳನ್ನು ಚತುಷ್ಪಥವನ್ನಾಗಿ ಅಭಿವೃದ್ಧಿಪಡಿಸಬೇಕೆಂಬುದು ಜನರ ಆಗ್ರಹವಾಗಿದೆ. ಇದು ಉತ್ತರ ಕರ್ನಾಟಕವನ್ನು ದಕ್ಷಿಣ ಕರ್ನಾಟಕಕ್ಕೆ ಸಂಪರ್ಕಿಸುತ್ತದೆ.
ಮಂಡ್ಯ: ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಕುರಿತು ಮಾಜಿ ಸಂಸದೆ ಸುಮಲತಾ ಅಂಬರೀಶ್ ಹಾಗೂ ಮಾಜಿ ಸಚಿವ ಕೆ.ಸಿ.ನಾರಾಯಣಗೌಡ ವಿರೋಧ ವ್ಯಕ್ತಪಡಿಸಿದ್ದ ಬೆನ್ನಲ್ಲೇ, ಬಿಜೆಪಿ ನಾಯಕರಿಗೆ ಟಕ್ಕರ್ ನೀಡಿರುವ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರು ಮೈತ್ರಿ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಮಂಡ್ಯದ ಹನಕೆರೆಯಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ನಿಖಿಲ್ ಕುಮಾರಸ್ವಾಮಿ ಅವರು,
ಜನವರಿ 24ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ
Petrol, Diesel Price: ಪೆಟ್ರೋಲ್, ಡೀಸೆಲ್ ದರದಲ್ಲಿ ಜಾಸ್ತಿ ಅಲ್ಲದಿದ್ದರೂ, ಸ್ವಲ್ಪ ಪ್ರಮಾಣದಲ್ಲಾದರೂ, ಏರಿಳಿತ ಆಗುತ್ತಿರುತ್ತದೆ. ಹಾಗಾದರೆ, ಇಂದು (ಜನವರಿ 24) ಬೆಂಗಳೂರು ಸೇರಿದಂತೆ ರಾಜ್ಯದ ಉಳಿದ ಜಿಲ್ಲೆಗಳಲ್ಲಿ ಲೀಟರ್ ಪೆಟ್ರೋಲ್, ಡೀಸೆಲ್ ಬೆಲೆ ಎಷ್ಟಿದೆ ಎನ್ನುವ ಅಂಕಿಅಂಶಗಳನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ. ಶಕ್ತಿಯ ಮೂಲಗಳು ಎನಿಸಿಕೊಂಡಿರುವ ಪೆಟ್ರೋಲ್ ಮತ್ತು ಡೀಸೆಲ್ ಇಂಧನ ಅತ್ಯವಶ್ಯಕವಾಗಿ ಬೇಕಾಗುವ ಸಂಪನ್ಮೂಲಗಳಾಗಿವೆ.
ಚಾಮರಾಜನಗರ–ತಮಿಳುನಾಡು ಅಂತರರಾಜ್ಯ ಹೆದ್ದಾರಿಯಲ್ಲಿ ಜೋಡಿ ಚಿರತೆಗಳ ಸಂಚಾರ: ಜನರಲ್ಲಿ ಆತಂಕ
ಚಾಮರಾಜನಗರ: ಕರ್ನಾಟಕ–ತಮಿಳುನಾಡು ಸಂಪರ್ಕಿಸುವ ಚಾಮರಾಜನಗರ ಜಿಲ್ಲೆಯ ಲೊಕ್ಕನಹಳ್ಳಿ–ಒಡೆಯರಪಾಳ್ಯ ನಡುವಿನ ಅಂತರರಾಜ್ಯ ಹೆದ್ದಾರಿಯಲ್ಲಿ ಜೋಡಿ ಚಿರತೆಗಳು ಕಾಣಿಸಿಕೊಂಡಿದ್ದು, ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಕೊಳ್ಳೇಗಾಲ–ಲೊಕ್ಕನಹಳ್ಳಿ ಮಾರ್ಗವಾಗಿ ತಮಿಳುನಾಡಿಗೆ ತೆರಳುವ ಅಂತರರಾಜ್ಯ ಹೆದ್ದಾರಿಯ ಚಿಕ್ಕರಂಗಶೆಟ್ಟಿ ದೊಡ್ಡಿ ಸಮೀಪ ರಸ್ತೆ ಬದಿಯಲ್ಲಿ ಶುಕ್ರವಾರ ರಾತ್ರಿ ಸುಮಾರು 9.30ರ ವೇಳೆಗೆ ಜೋಡಿ ಚಿರತೆಗಳು ಕಾಣಿಸಿಕೊಂಡಿವೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಈ ಪ್ರದೇಶವು ಬಿಳಿಗಿರಿರಂಗನಾಥಸ್ವಾಮಿ ಹುಲಿ ಸಂರಕ್ಷಿತ ಅರಣ್ಯಕ್ಕೆ ಹೊಂದಿಕೊಂಡಿದ್ದು, ಇತ್ತೀಚಿನ ದಿನಗಳಲ್ಲಿ ಚಿರತೆಗಳ ಸಂಚಾರ ಹೆಚ್ಚಾಗಿದೆ. ವಿಶೇಷವಾಗಿ ಬೇಟೆಗಾಗಿ ರಸ್ತೆ ಬದಿಯಲ್ಲಿ ಹೊಂಚು ಹಾಕುತ್ತಿರುವ ಚಿರತೆಗಳಿಂದ ಸುತ್ತಮುತ್ತಲಿನ ಗ್ರಾಮಸ್ಥರು ಜೀವಭಯದಲ್ಲಿದ್ದು, ವಾಹನ ಸವಾರರು ಹಾಗೂ ಸಾರ್ವಜನಿಕರಲ್ಲಿ ಆತಂಕ ವಾತಾವರಣ ನಿರ್ಮಾಣವಾಗಿದೆ.
ಅತ್ತ ದರಿ (ಅಮೆರಿಕದ ತಾರಿಫ್); ಇತ್ತ ಪುಲಿ (ಚೀನಾ ಜೊತೆ ಟ್ರೇಡ್ ಡೆಫಿಸಿಟ್)
ಜಗತ್ತಿನ ಅತಿದೊಡ್ಡ ಆರ್ಥಿಕತೆಯಾದ ಅಮೆರಿಕ ಹುಚ್ಚಾಟದಲ್ಲಿ ತೊಡಗಿದ್ದರೆ, ಎರಡನೇ ದೊಡ್ಡ ಆರ್ಥಿಕತೆಯಾದ ಚೀನಾ ತನ್ನ ಆಂತರಿಕ ಆರ್ಥಿಕ ಸಮತೋಲನಕ್ಕೆ ಬೇರೆ ದೇಶಗಳಿಗೆ ರಫ್ತನ್ನು ಅವಲಂಬಿಸಿಕೊಂಡು ಕುಳಿತಿದೆ. ಈ ಎರಡೂ ಕಡೆಯ ಒತ್ತಡಗಳು ಭಾರತದ ಒಳಗೆ ಆರ್ಥಿಕ ಸಂಕಟಗಳಿಗೆ ಹಾದಿ ತೆರೆಯುತ್ತಿದ್ದು, ಭಾರತ ಸರಕಾರಕ್ಕೆ ಅತ್ತ ದರಿ ಇತ್ತ ಪುಲಿ ಎಂಬಂತಾಗಿದೆ. ಬೇರೆಲ್ಲ ಸದ್ದುಗಳನ್ನೂ ಮರೆಸುವಂತೆ ಸ್ವಪ್ರಶಂಸೆಯ ತಮಟೆ ಸದ್ದು ಬಾರಿಸುತ್ತಿರಬೇಕೆಂಬ ಗುತ್ತಿಗೆಯನ್ನು ಮಾಧ್ಯಮಗಳಿಗೆ ಕೊಟ್ಟಿರುವ ಭಾರತ ಸರಕಾರವನ್ನು ‘ವಿಶ್ವಗುರು’ ಎಂದು ಬಿಂಬಿಸುತ್ತಿರುವ ಮಾಧ್ಯಮಗಳು, ವಾಸ್ತವಕ್ಕೆ ಮುಖಾಮುಖಿ ಆಗದೇ ಹೋದರೆ, ಈಗಾಗಲೇ ಕೆಟ್ಟು ಕೆರ ಹಿಡಿದಿರುವ ಮಾಧ್ಯಮಗಳ ವಿಶ್ವಾಸಾರ್ಹತೆ ಸಾರ್ವಜನಿಕರ ಅಸಹನೆಗೆ ತುತ್ತಾಗುವ ದಿನಗಳು ದೂರ ಇಲ್ಲ ಎಂದು ಬಲವಾಗಿ ಅನ್ನಿಸತೊಡಗಿದೆ. ಸರಕಾರದ ಪರ ಮಾಧ್ಯಮಗಳ ವಕೀಲಿಕೆ ಯಾವ ಮಟ್ಟಿಗಿದೆ ಎಂದರೆ, ಅಮೆರಿಕದ ಮುನಿಸಿನ ಬೆನ್ನಲ್ಲೇ ಭಾರತ-ಚೀನಾಗಳ ಸಂಬಂಧ ಹೊಸದಾಗಿ ಚಿಗುರುತ್ತಿದೆ ಡ್ರಾಗನ್-ಆನೆ ಜೋಡಿಯಾಗಿವೆ ಎಂದೆಲ್ಲ ನೆರೇಟಿವ್ಗಳನ್ನು ಹೆಣೆಯಲಾಗುತ್ತಿದೆ. ಈ ಸನ್ನಿವೇಶವನ್ನು ಹೇಗೆ ನೋಡಬೇಕು? ಅಮೆರಿಕದ ದಂಡಸುಂಕ ವೈಧಾನಿಕ ಹುಚ್ಚಾಟದಲ್ಲಿ (method in madness) ತೊಡಗಿಕೊಂಡಿರುವ ಅಮೆರಿಕ ಅಧ್ಯಕ್ಷರು ಹೊರನೋಟಕ್ಕೆ ತೀರಾ ಅಸಡ್ಡಾಳ ಅನ್ನಿಸುವ ಹಲವು ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದು, ತನ್ನ ವಿದೇಶ ನೀತಿ, ಆರ್ಥಿಕ ನೀತಿಗಳಲ್ಲಿ ಆತ್ಮಘಾತಕ ಅನ್ನಿಸುವಷ್ಟು ವಿಪರೀತಕ್ಕೆ ತಲುಪಿದ್ದಾರೆ. ಮುಕ್ತ ಮಾರುಕಟ್ಟೆಯ ಪ್ರತಿಪಾದಕ ದೇಶವಾಗಿದ್ದೂ, ಎಲ್ಲ ಅಂತರ್ರಾಷ್ಟ್ರೀಯ ಒಪ್ಪಂದಗಳನ್ನು ಉಲ್ಲಂಘಿಸಿ, ಅಧ್ಯಕ್ಷ ಟ್ರಂಪ್ ಅವರ ಮರ್ಜಿಗೆ ತಕ್ಕಂತೆ, ಹಲವು ದೇಶಗಳ ಮೇಲೆ ವಿಧಿಸಲಾಗುತ್ತಿರುವ ಈ ಶಿಕ್ಷಾರೂಪದ ತಾರಿಫ್ಗಳು ಅಮೆರಿಕವು ಆಮದು ಮಾಡಿಕೊಳ್ಳುತ್ತಿರುವ ಸರಕಿನ ಮೇಲೆ ಮತ್ತು ಆ ಮೂಲಕ ಅಮೆರಿಕದ ಆರ್ಥಿಕತೆಯ ಮೇಲೆ ಪರಿಣಾಮ ಬೀರಿ, ಹಣದುಬ್ಬರ ಮತ್ತು ಆದಾಯ ಕುಸಿತಕ್ಕೆ ಕಾರಣ ಆಗಬಹುದು, ಸರಬರಾಜು ವ್ಯವಸ್ಥೆಯ ಮೇಲೆ ಆಘಾತ (supply shock) ಉಂಟಾಗಿ ಅಮೆರಿಕದ ರಿಸರ್ವ್ ಬ್ಯಾಂಕ್ (US Fedaral reserve) ಅಸಹಾಯಕವಾಗಬಹುದೆಂಬ ನಿರೀಕ್ಷೆ ಅರ್ಥಶಾಸ್ತ್ರಜ್ಞರ ವಲಯಗಳಲ್ಲಿತ್ತು. ಅಂತಹದೇನೂ ಗಂಭೀರವಾದುದು ಸಂಭವಿಸಿದಂತಿಲ್ಲ. ಈಗ ಅದಕ್ಕೆ ಕಾರಣಗಳನ್ನು ಹುಡುಕುವಲ್ಲಿ ಅಮೆರಿಕದ ಅರ್ಥಶಾಸ್ತ್ರಜ್ಞರು ವ್ಯಸ್ತರಿದ್ದಾರೆ. ಅಮೆರಿಕ ಆತ್ಮಘಾತಕ ತೀರ್ಮಾನಗಳನ್ನು ತೆಗೆದುಕೊಂಡೂ, ಅಲ್ಲಿ ಸಮಸ್ಯೆ ಆಗುತ್ತಿಲ್ಲ ಎಂದರೆ ಅದರ ಅರ್ಥ, ಅಮೆರಿಕ ಅಧ್ಯಕ್ಷರ ಹುಚ್ಚಾಟಗಳಲ್ಲಿ ಒಂದು ಸ್ಪಷ್ಟ ಯೋಚನೆ, ತಂತ್ರಗಾರಿಕೆ ಇದೆ ಎಂದೇ ಅಲ್ಲವೆ? ಅಧ್ಯಕ್ಷ ಟ್ರಂಪ್, ಎಣ್ಣೆಗಾಗಿ ವೆನೆಝುವೆಲಾ, ಎಣ್ಣೆ ಮತ್ತು ನೈಸರ್ಗಿಕ ಅನಿಲ ದಾಸ್ತಾನು ಇರುವ ಗ್ರೀನ್ಲ್ಯಾಂಡ್ ತನಗೆ ಬೇಕೇಬೇಕು ಎಂದು ವರಾತ ಹಿಡಿದು ಕುಳಿತಿದ್ದಾರೆ. ನೊಬೆಲ್ ಶಾಂತಿ ಪ್ರಶಸ್ತಿ ಪಡೆಯಲಾಗದಿದ್ದರೂ ಅದನ್ನು ಕಾಲಡಿಗೆ ತರಿಸಿಕೊಂಡಿದ್ದಾರೆ. ಹೊಸದೊಂದು ‘ಶಾಂತಿ ಮಂಡಳಿ’ಯ (board of peace) ಮೂಲಕ ಹೊಸ ವರ್ಲ್ಡ್ ಆರ್ಡರ್ ರೂಪಿಸುವ ಪ್ರಯತ್ನದಲ್ಲಿದ್ದಾರೆ. ರಶ್ಯದಿಂದ ತೈಲ ಖರೀದಿಸಿದ್ದಕ್ಕಾಗಿ ಭಾರತ ಸಹಿತ ಹಲವು ದೇಶಗಳಿಂದ ಅಮೆರಿಕಕ್ಕೆ ಬಂದಿಳಿಯುತ್ತಿರುವ ಆಮದಿನ ಮೇಲೆ ಮುಲಾಜೇ ಇಲ್ಲದೆ ದಂಡಸುಂಕ ವಿಧಿಸುತ್ತಿದ್ದಾರೆ. ಚೀನಾದ ಟ್ರೇಡ್ ಸರ್ಪ್ಲಸ್ ಚೀನಾದ ಸನ್ನಿವೇಶ ಬೇರೆಯದೇ ರೀತಿಯದು. ಜನವರಿ 14ರಂದು ಚೀನಾದ 2025ನೇ ಸಾಲಿನ ಆಮದು-ರಫ್ತಿನ ಅಧಿಕೃತ ಅಂಕಿಅಂಶಗಳನ್ನು ಅಲ್ಲಿನ ಸರಕಾರ ಬಿಡುಗಡೆ ಮಾಡಿದ್ದು, ಅವರ ಆಮದಿಗೆ ಹೋಲಿಸಿದರೆ, ರಫ್ತು 1.19 ಟ್ರಿಲಿಯನ್ ಅಮೆರಿಕನ್ ಡಾಲರ್ನಷ್ಟು (ಅಂದಾಜು 1,090 ಲಕ್ಷ ಕೋಟಿ ರೂ.ಗಳು) ಹೆಚ್ಚು ದಾಖಲಾಗಿದೆ (ಟ್ರೇಡ್ ಸರ್ಪ್ಲಸ್). ಇದು, ಅಮೆರಿಕದ ಕೈಯಲ್ಲಿದ್ದ ಉದಾರೀಕರಣ-ಜಾಗತೀಕರಣ ಪ್ರಕ್ರಿಯೆಯ ಜಾಗತಿಕ ನಾಯಕತ್ವವನ್ನು ಚೀನಾ ವಹಿಸಿಕೊಳ್ಳುತ್ತಿರುವುದರ ಸಂಕೇತ ಎಂದು ಹೊರನೋಟಕ್ಕೆ ಅನಿಸುತ್ತಿದೆಯಾದರೂ, ವಾಸ್ತವ ಬೇರೆಯೇ ಇದೆ. ಈ ಅತಿಯಾದ ಟ್ರೇಡ್ ಸರ್ಪ್ಲಸ್ ಕೂಡ ಅಸಮತೋಲನವೇ. ಯಾವುದೇ ಮಾರುಕಟ್ಟೆಯಲ್ಲಿ ಬೇಡಿಕೆಗಿಂತ ಸರಬರಾಜು ಹೆಚ್ಚಾಗತೊಡಗಿದಾಗ, ಏನಾಗುತ್ತದೆಯೋ ಅದು ಚೀನಾದಲ್ಲೂ ಆಗತೊಡಗಿದೆ. ಬೆಲೆ ಇಳಿತದ ಕಾರಣದಿಂದಾಗಿ ಅಲ್ಲಿ ನಿರುದ್ಯೋಗ, ರಿಯಲ್ ಎಸ್ಟೇಟ್ ಮಾರುಕಟ್ಟೆ ಕುಸಿತದಂತಹ ಬೆಳವಣಿಗೆಗಳು ಕಾಣಿಸತೊಡಗಿವೆಯಂತೆ. ಜನ ಹಣ ಖರ್ಚು ಮಾಡುವ, ಚಲಾವಣೆಗೆ ಬಿಡುವ ಬದಲು ಶೇಖರಿಸಿಟ್ಟುಕೊಂಡು ಅವಕಾಶಕ್ಕಾಗಿ ಕಾಯತೊಡಗಿದ್ದಾರೆ. ಈ ಎಲ್ಲ ಒತ್ತಡಗಳನ್ನು ನಿಭಾಯಿಸಲು ಚೀನಾವು ಅಡ್ಡಾದಿಡ್ಡಿ ಬೆಲೆಗೆ ತನ್ನ ಉತ್ಪಾದನೆಗಳನ್ನು ದೇಶದಿಂದ ಹೊರಗೆ ರಫ್ತು ಮಾಡತೊಡಗಿದೆ. ಐರೋಪ್ಯ ಸಮುದಾಯದ ದೇಶಗಳು, ಬ್ರಿಟನ್, ಜಪಾನ್, ಭಾರತ ಮಾತ್ರವಲ್ಲದೆ ಸಣ್ಣ ಮತ್ತು ಮಧ್ಯಮ ಆದಾಯದ ಹಲವು ದೇಶಗಳು ಚೀನೀ ಸರಕುಗಳ ಸುರಿದಾಣ (dumping ground) ಆಗತೊಡಗಿವೆ. ಹೀಗೆ ಸುರಿದಾಣ ಆದಾಗ, ಆ ದೇಶಗಳ ಸ್ಥಳೀಯ ಸಣ್ಣ-ಮಧ್ಯಮ ಗಾತ್ರದ ಉತ್ಪಾದಕ ಸಂಸ್ಥೆಗಳಿಗೆ ಚೀನೀ ಮಾಲಿನ ಜೊತೆ ದರದ ಸ್ಪರ್ಧೆ ಕಷ್ಟವಾಗಿ, ಅವರ ಕತ್ತು ಹಿಸುಕಿದಂತಾಗುತ್ತದೆ. ಬಹುತೇಕ ಎಲ್ಲ ದೇಶಗಳೂ ಈಗ ಈ ಬಗ್ಗೆ ಎಚ್ಚರಗೊಳ್ಳತೊಡಗಿವೆ. ಮೆಕ್ಸಿಕೊ ಚೀನಾದ ಆಮದುಗಳಿಗೆ ದಂಡಸುಂಕ ವಿಧಿಸಲಾರಂಭಿಸಿದೆ. ಫ್ರಾನ್ಸ್ ಅಧ್ಯಕ್ಷ ಇಮ್ಯಾನುಯಲ್ ಮ್ಯಾಕ್ರಾನ್, ಐರೋಪ್ಯ ಸಮುದಾಯದ ಅಧ್ಯಕ್ಷೆ ಅರ್ಸುಲಾ ವಾಂಡರ್ಲಿನ್ ಮತ್ತಿತರರು ಈ ಬಗ್ಗೆ ಚೀನಾ ಜೊತೆ ಜಾಗತಿಕ ವೇದಿಕೆಗಳಲ್ಲಿ ತಗಾದೆ ಎತ್ತತೊಡಗಿದ್ದಾರೆ. ಒಟ್ಟಿನಲ್ಲಿ ಜಗತ್ತಿನ ಅತಿದೊಡ್ಡ ಆರ್ಥಿಕತೆಯಾದ ಅಮೆರಿಕ, ಹುಚ್ಚಾಟದಲ್ಲಿ ತೊಡಗಿದ್ದರೆ, ಎರಡನೇ ದೊಡ್ಡ ಆರ್ಥಿಕತೆಯಾದ ಚೀನಾ ತನ್ನ ಆಂತರಿಕ ಆರ್ಥಿಕ ಸಮತೋಲನಕ್ಕೆ ಬೇರೆ ದೇಶಗಳಿಗೆ ರಫ್ತನ್ನು ಅವಲಂಬಿಸಿಕೊಂಡು ಕುಳಿತಿದೆ. ಈ ಎರಡೂ ಕಡೆಯ ಒತ್ತಡಗಳು ಭಾರತದ ಒಳಗೆ ಆರ್ಥಿಕ ಸಂಕಟಗಳಿಗೆ ಹಾದಿ ತೆರೆಯುತ್ತಿದ್ದು, ಭಾರತ ಸರಕಾರಕ್ಕೆ ಅತ್ತ ದರಿ ಇತ್ತ ಪುಲಿ ಎಂಬಂತಾಗಿದೆ. ಭಾರತದ್ದೇನು ಸನ್ನಿವೇಶ? ಭಾರತದ್ದು ಚೀನಾಕ್ಕೆ ಹೋಲಿಸಿದರೆ ತದ್ವಿರುದ್ಧ ಸ್ಥಿತಿ. ನಮ್ಮ 24-25ನೇ ಸಾಲಿನ (Apr-Oct) ಟ್ರೇಡ್ ಡೆಫಿಸಿಟ್ 5.86 ಲಕ್ಷ ಕೋಟಿ ರೂ. (ಅಂದಾಜು 63.97 ಬಿಲಿಯನ್ ಅಮೆರಿಕನ್ ಡಾಲರ್). ಅಂದರೆ, ನಮ್ಮ ಆಮದು ಪ್ರಮಾಣವು ರಫ್ತಿಗಿಂತ ಅಷ್ಟು ಹೆಚ್ಚು. ನಮ್ಮ ಈ ಟ್ರೇಡ್ ಡೆಫಿಸಿಟ್ನಲ್ಲಿ, ಶೇ. 99 ಭಾಗ ಚೀನಾದ್ದೇ ಹೊಂಡ. ಜಗತ್ತಿನ ಯಾವುದೇ ದೇಶಗಳಿಗೆ ಹೋಲಿಸಿದರೆ ಒಂದು ದೇಶದ ಜೊತೆ ಇನ್ನೊಂದು ದೇಶದ ಅತಿದೊಡ್ಡ ವಾಣಿಜ್ಯ ಕಂದರವಂತೆ ಇದು. ಭಾರತ ಇಂದಿಗೂ ಚೀನಾದಿಂದ ಸುಮಾರು 7,000 ಬಗೆಯ ಉತ್ಪನ್ನಗಳನ್ನು ಆಮದು ಮಾಡಿಕೊಳ್ಳುತ್ತಿದೆ. ಈ ಟ್ರೇಡ್ ಡೆಫಿಸಿಟ್ ಕಂದರ ವರ್ಷಂಪ್ರತಿ ಹಿಗ್ಗುತ್ತಿದ್ದು, 2023-24ಕ್ಕೆ ಹೋಲಿಸಿದರೆ ಶೇ. 10.1 ಹೆಚ್ಚಿದೆ ಎಂದು ಸರಕಾರವೇ ಸಂಸತ್ತಿನಲ್ಲಿ ಅಂಕಿಅಂಶಗಳನ್ನು ನೀಡಿದೆ (ಲೋಕಸಭೆಯ ಚುಕ್ಕೆರಹಿತ ಪ್ರಶ್ನೆ ಸಂಖ್ಯೆ 2537, ದಿನಾಂಕ 16/12/2025). ಈ ಟ್ರೇಡ್ ಡೆಫಿಸಿಟ್ ಕಂದರಕ್ಕೆ ಕಾರಣ, ನಾವು ಚೀನಾದಿಂದ ಆಮದು ಮಾಡಿಕೊಳ್ಳುತ್ತಿರುವ ವಾಹನ ಬಿಡಿಭಾಗಗಳು, ಔಷಧಿ ಕಚ್ಚಾ ಸಾಮಗ್ರಿಗಳು, ಇಲೆಕ್ಟ್ರಾನಿಕ್ ಬಿಡಿ ಭಾಗಗಳು, ಅಸೆಂಬ್ಲಿಗಳು, ಮೊಬೈಲ್ ಫೋನ್ ಭಾಗಗಳು, ಯಂತ್ರೋಪಕರಣಗಳು ಮತ್ತವುಗಳ ಬಿಡಿಭಾಗಗಳಂತಹ ಕಚ್ಚಾ ಸಾಮಗ್ರಿಗಳು, ಮಧ್ಯಂತರಿ ಸರಕುಗಳು ಮತ್ತು ಬಂಡವಾಳ ಸರಕುಗಳು. ಅವನ್ನು ಇಲ್ಲಿ ಮೌಲ್ಯ ವರ್ಧಿಸಿ, ಅಂತಿಮ ಉತ್ಪನ್ನಗಳನ್ನು ತಯಾರಿಸಿ ಮಾರಲಾಗುತ್ತಿದೆ ಎಂದು ಸಮರ್ಥಿಸಿಕೊಂಡಿರುವ ವಾಣಿಜ್ಯ ಖಾತೆಯ ರಾಜ್ಯಸಚಿವ ಜಿತಿನ್ ಪ್ರಸಾದ್ ಅವರು, ಈ ಆಮದು-ರಫ್ತು ಸಂತುಲನ ಸಾಧಿಸಲು ಅಂತರ್ ಸಚಿವಾಲಯ ಸಮಿತಿಯೊಂದನ್ನು (ಐಎಂಸಿ) ರಚಿಸಲಾಗಿದೆ ಎಂದೂ ಸಂಸತ್ತಿನಲ್ಲಿ ಹೇಳಿಕೊಂಡಿದ್ದಾರೆ. ಸರಕಾರ ಏನೇ ಸಮರ್ಥನೆಗೆ ಇಳಿದರೂ, ಇಲ್ಲಿ ಡಾಲರ್ ಎದುರು ಕುಸಿಯುತ್ತಿರುವ ರೂಪಾಯಿ ದರ ಇಲ್ಲಿನ ಸಣ್ಣಪುಟ್ಟ ಉದ್ಯಮಗಳ ಸಹಾಯಕ್ಕೆ ಬರುತ್ತಿಲ್ಲ. ಭಾರತದ ಇಲೆಕ್ಟ್ರಾನಿಕ್ಸ್, ಔಷಧಿ ಉತ್ಪಾದನೆಗಳು, ಯಂತ್ರೋಪಕರಣಗಳ ಉತ್ಪಾದಕರು ತಮ್ಮ ಸಂರಚನೆಯಲ್ಲೇ ಚೀನಾ ಮೇಲೆ ಅವಲಂಬಿತರು. ನಮ್ಮಲ್ಲಿ ಉತ್ಪಾದನೆ ಆಗಬೇಕೆಂದರೆ, ನಾವು ಚೀನಾದಿಂದ ಅಗತ್ಯ ಕಚ್ಚಾವಸ್ತುಗಳನ್ನು ಆಮದು ಮಾಡಿಕೊಳ್ಳುವುದು ಅನಿವಾರ್ಯ ಮತ್ತು ರೂಪಾಯಿ ದರವು ಡಾಲರ್ ಎದುರು ಕುಸಿಯುತ್ತಾ ಸಾಗಿದಂತೆಲ್ಲ, ಭಾರತ ಹೆಚ್ಚು ರೂಪಾಯಿಗಳನ್ನು ತೆತ್ತು ತನ್ನ ಆಮದು ಸರಕುಗಳನ್ನು ತರಿಸಿಕೊಳ್ಳಬೇಕಾಗುತ್ತದೆ. ದೇಶದ ಆಂತರಿಕ ಸನ್ನಿವೇಶ, ಜಾಗತಿಕ ಆರ್ಥಿಕ ಸನ್ನಿವೇಶಗಳ ಹಿನ್ನೆಲೆಯಲ್ಲಿ ಭಾರತದಲ್ಲೀಗ ಡಾಲರ್ ಬೆಲೆ 100ರೂ.ಗಳ ಸನಿಹಕ್ಕೆ ನಾಗಾಲೋಟದಿಂದ ಸಾಗುತ್ತಿದೆ. ಇದು ದೇಸೀ ಉದ್ಯಮಗಳಿಗೆ ನುಂಗಲಾರದ ತುತ್ತು. ರೂಪಾಯಿಯನ್ನು ಹಿಡಿತದಲ್ಲಿಟ್ಟುಕೊಳ್ಳುವ, ದೇಶದ ಹಿತಾಸಕ್ತಿಗಳನ್ನು ರಕ್ಷಿಸುವ ರಿಸರ್ವ್ ಬ್ಯಾಂಕಿನ ಪ್ರಯತ್ನಗಳೆಲ್ಲದರ ಹೊರತಾಗಿಯೂ ಡಾಲರ್ ಗಗನಕ್ಕೇರುತ್ತಿದೆ. ಚೀನಾದ ಟ್ರೇಡ್ ಡೆಫಿಸಿಟ್ ನಿಯಂತ್ರಿಸುವುದಕ್ಕೆ ಕಳೆದ ವರ್ಷದ ಇಕನಾಮಿಕ್ ಸರ್ವೇಯಲ್ಲಿ ದೇಶದ ಮುಖ್ಯ ಆರ್ಥಿಕ ಸಲಹೆಗಾರ ಅನಂತ್ ನಾಗೇಶ್ವರನ್ ಅವರು, ಚೀನಾಕ್ಕೆ ಭಾರತದಲ್ಲಿ ನೇರ ಹೂಡಿಕೆಗೆ ಅವಕಾಶ (FDI) ಮಾಡಿಕೊಡಬಹುದೆಂಬ ಸಲಹೆ ನೀಡಿದ್ದರು. ಆ ನಿಟ್ಟಿನಲ್ಲಿ ಯಾವುದೇ ಕ್ರಮವನ್ನು ಸರಕಾರ ಈ ತನಕ ತೆಗೆದುಕೊಂಡಂತಿಲ್ಲ. ಕಬ್ಬಿಣ, ಸೋಲಾರ್ ಪ್ಯಾನಲ್, ಕೆಲವು ರಾಸಾಯನಿಕಗಳಂತಹ ಪ್ರಬಲ ಲಾಬಿ ಇರುವ ಉದ್ಯಮವಲಯಗಳಲ್ಲಿ ಮಾತ್ರ ಭಾರತ ಸರಕಾರ ದೇಶದೊಳಗಿನ ಉದ್ಯಮಗಳ ಹಿತಾಸಕ್ತಿ ರಕ್ಷಿಸಲು ಮತ್ತು ಚೀನಾದ ಅತಿರಫ್ತನ್ನು ನಿಯಂತ್ರಿಸಲು ಡಂಪಿಂಗ್ ನಿರೋಧಕ ತೆರಿಗೆ ವಿಧಿಸಿ ಕೈತೊಳೆದುಕೊಂಡಿದೆ. ಉಳಿದಂತೆ ಭಾರತದ ಮಾರುಕಟ್ಟೆಯಲ್ಲಿ ಈವತ್ತಿಗೂ ಚೀನಾದ್ದೇ ಆಟ. ಅತ್ತ ಅಮೆರಿಕದ ತಾರಿಫ್ ಇತ್ತ ಚೀನಾದ ಅನಿವಾರ್ಯ ಅವಲಂಬನೆಗಳ ಕಾರಣದಿಂದಾಗಿ ಅಡಕತ್ತರಿಗೆ ಸಿಲುಕಿರುವ ಭಾರತ, ಅದರಿಂದ ಹೊರಬರಲು ಸನ್ನಿವೇಶವನ್ನು ಒಟ್ಟಂದದಲ್ಲಿ ಅರ್ಥೈಸಿಕೊಳ್ಳುವ ಮತ್ತು ಆರ್ಥಿಕ ಪರಿಣತರ ಸಹಾಯ ಪಡೆಯುವ ಬದಲು, ತನ್ನ ಡಿಯರ್ ಮೀಡಿಯಾಗಳ ಮೂಲಕ ‘ಸಬ್ ಚೆಂಗಾಸಿ’ ಎಂದು ತುತ್ತೂರಿ ಊದಿಸುತ್ತಿರುವುದು, ಬಹಳ ದುಬಾರಿ ತಮಾಷೆ ಆಗಿ ಪರಿಣಮಿಸಲಿದೆ.
ದೇಶದ ನಾಗರಿಕ ಪ್ರದೇಶಗಳಲ್ಲಿ 7ತಿಂಗಳಲ್ಲಿ 800 ಡ್ರೋನ್ ದಾಳಿ ಮಾಡಿದ ಪಾಕಿಸ್ತಾನ: ಭಾರತ ಕೊಟ್ಟ ಉತ್ತರ ಹೇಗಿತ್ತು?
ಪಾಕಿಸ್ತಾನವು ಭಾರತದ ವಿರುದ್ಧ ಡ್ರೋನ್ ದಾಳಿಗಳನ್ನು ಹೆಚ್ಚಿಸಿದೆ. ಕಳೆದ ವರ್ಷದ 'ಆಪರೇಷನ್ ಸಿಂದೂರ' ನಂತರ 800 ಡ್ರೋನ್ ಗಳನ್ನು ಪ್ರಯೋಗಿಸಲಾಗಿದೆ. ಭಾರತೀಯ ವಾಯು ರಕ್ಷಣಾ ವ್ಯವಸ್ಥೆ ಈ ದಾಳಿಗಳನ್ನು ವಿಫಲಗೊಳಿಸಿದೆ. ರಾಜಸ್ಥಾನ, ಪಂಜಾಬ್ ಗಡಿ ಮೂಲಕ ಪ್ರವೇಶಿಸಲು ಯತ್ನಿಸಿದ ಡ್ರೋನ್ ಗಳನ್ನು ಹೊಡೆದುರುಳಿಸಲಾಗಿದೆ. ಶಸ್ತ್ರಾಸ್ತ್ರ, ಮಾದಕ ದ್ರವ್ಯ ಸಾಗಾಟಕ್ಕೆ ಡ್ರೋನ್ ಗಳನ್ನು ಬಳಸಲಾಗಿದೆ. ಗಡಿ ಭದ್ರತೆಯನ್ನು ಹೆಚ್ಚಿಸಲಾಗಿದೆ.
ಅಫಜಲಪುರ: ಟ್ಯಾಂಕರ್–ಬಸ್ ಢಿಕ್ಕಿ: ಹಲವರಿಗೆ ಗಾಯ
ಕಲಬುರಗಿ: ಬಸ್ ಮತ್ತು ಟ್ಯಾಂಕರ್ ನಡುವೆ ಭೀಕರ ಅಪಘಾತ ಸಂಭವಿಸಿ, ಹಲವರಿಗೆ ಸಣ್ಣಪುಟ್ಟ ಗಾಯಗಳಾಗಿರುವ ಘಟನೆ ತಾಲ್ಲೂಕಿನ ಗೊಬ್ಬೂರ (ಬಿ)–ಚೌಡಾಪುರ ಮಧ್ಯೆ ಇರುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಶುಕ್ರವಾರ ಸಂಜೆ ನಡೆದಿದೆ. ಗಾಯಾಳುಗಳನ್ನು ತಕ್ಷಣವೇ ತುರ್ತು ಚಿಕಿತ್ಸೆಗಾಗಿ ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯ ಮಾಹಿತಿ ಪಡೆದ ದೇವಲ ಗಾಣಗಾಪುರ ಪೊಲೀಸ್ ಠಾಣೆಯ ಪಿಎಸ್ಐ ಸಂಗೀತಾ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪ್ರಾಥಮಿಕ ತನಿಖೆಯ ಪ್ರಕಾರ, ಟ್ಯಾಂಕರ್ ಚಾಲಕರ ಅಜಾಗರೂಕತೆಯಿಂದಲೇ ಅಪಘಾತ ಸಂಭವಿಸಿರುವುದು ತಿಳಿದುಬಂದಿದೆ. ಈ ಕುರಿತು ದೇವಲ ಗಾಣಗಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
SSLC: ಇನ್ಮುಂದೆ ಎಸ್ಎಸ್ಎಲ್ಸಿ ಟಾಪರ್ಗಳಿಗೆ ಲ್ಯಾಪ್ಟಾಪ್ ಬದಲು ₹50,000 ನಗದು
ಬೆಂಗಳೂರು: ರಾಜ್ಯದ ಎಸ್ಎಸ್ಎಲ್ಸಿ (SSLC) ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆಯನ್ನು ಪ್ರೋತ್ಸಾಹಿಸಲು ಸರ್ಕಾರ ನೀಡುತ್ತಿದ್ದ ಬಹುಮಾನದ ಸ್ವರೂಪದಲ್ಲಿ ಮಹತ್ವದ ಬದಲಾವಣೆಯಾಗಿದೆ. ಪ್ರತಿ ಜಿಲ್ಲೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿ ಮೊದಲ ಮೂರು ಸ್ಥಾನಗಳನ್ನು ಪಡೆಯುವ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಈ ಹಿಂದೆ ನೀಡಲಾಗುತ್ತಿದ್ದ ಲ್ಯಾಪ್ಟಾಪ್ ಬದಲಿಗೆ, ಈಗ ನೇರವಾಗಿ 50,000 ರೂಪಾಯಿಗಳ ನಗದು ಬಹುಮಾನವನ್ನು ನೀಡುವ ಸಂಬಂಧ ಶಿಕ್ಷಣ ಇಲಾಖೆ
ಈ ದೇಶದಲ್ಲಿ ರಸ್ತೆಗಳಿರುವುದೇ ಅಪಘಾತ ಸಂಭವಿಸುವುದಕ್ಕಾಗಿ ಎಂದು ನಾವು ನಂಬಿಕೊಂಡು ಬಂದಿದ್ದೇವೆ. ಸರಕಾರದ ಅಂಕಿಅಂಶಗಳ ಪ್ರಕಾರ ಈ ದೇಶದಲ್ಲಿ ಪ್ರತಿದಿನ 485 ಜನರು ರಸ್ತೆ ಅಪಘಾತದಿಂದ ಮೃತಪಡುತ್ತಾರೆ. ದಿನಾ ಸಾಯುವವರಿಗೆ ಅಳುವವರು ಯಾರು? ಎಂಬಂತೆ, ಇದರ ಹಿಂದಿರುವ ವ್ಯವಸ್ಥೆಯ ವೈಫಲ್ಯಗಳು ಚರ್ಚೆಯಾಗುವುದು ಅಪರೂಪ. ಹೀಗಿರುವ ಹೊತ್ತಿನಲ್ಲೇ ನೊಯ್ಡಾದಲ್ಲಿ ನಡೆದಿರುವ ಕಾರು ಅವಘಡವೊಂದು ದೇಶಾದ್ಯಂತ ಭಾರೀ ಚರ್ಚೆಗೊಳಗಾಗುತ್ತಿದೆ. ಘಟನೆ ನಡೆದಿರುವುದು ಉತ್ತರ ಪ್ರದೇಶದ ನೊಯ್ಡಾದಲ್ಲಿ. ಸಾಫ್ಟ್ವೇರ್ ಇಂಜಿನಿಯರ್ ಯುವರಾಜ್ ಮೆಹ್ತಾ ಎಂಬವರು ಗುರುಗ್ರಾಮ್ನಲ್ಲಿರುವ ತನ್ನ ಕಚೇರಿಯಿಂದ ನೊಯ್ಡಾದಲ್ಲಿರುವ ತಮ್ಮ ನಿವಾಸಕ್ಕೆ ತೆರಳುವ ಸಂದರ್ಭದಲ್ಲಿ ಕಾರು ನಿಯಂತ್ರಣ ತಪ್ಪಿ ರಸ್ತೆಯ ಪಕ್ಕದಲ್ಲಿರುವ ನೀರು ತುಂಬಿದ ಹೊಂಡಕ್ಕೆ ಬಿದ್ದಿದೆ. ಈ ಸಂದರ್ಭದಲ್ಲಿ ಯಾರಾದರೂ ನೆರವಿಗೆ ಬಂದಿದ್ದರೆ ಆ ಯುವಕ ಬದುಕುಳಿಯುವ ಸಾಧ್ಯತೆಗಳಿತ್ತು. ಕಾರು ನೀರಿನ ಆಳಕ್ಕಿಳಿಯುತ್ತಿದ್ದಂತೆಯೇ ಯುವಕ ಕಾರಿನ ಮೇಲೆ ಏರಿ ನಿಂತು ಸಹಾಯಕ್ಕಾಗಿ ಕೂಗಿದ್ದಾರೆೆ. ಮಧ್ಯೆ ತನ್ನ ತಂದೆಗೆ ಕರೆ ಮಾಡಿ ಸಹಾಯ ಮಾಡುವಂತೆ ಮನವಿ ಮಾಡಿದ್ದಾರೆೆ. ಮೆಹ್ತಾ ಅವರು ಸುಮಾರು ಒಂದೂವರೆ ಗಂಟೆಗೂ ಹೆಚ್ಚು ಕಾಲ ಸಹಾಯಕ್ಕಾಗಿ ಕೂಗುತ್ತಲೇ ಇದ್ದರು. ಈ ನಡುವೆ ಕಾರು ನಿಧಾನವಾಗಿ ನೀರಿನಲ್ಲಿ ಮುಳುಗಿತು.ಯುವಕನೂ ನೀರು ಪಾಲಾದ. ಅಪಘಾತ ಸಂಭವಿಸಿದ ಬಳಿಕ ಸುಮಾರು ಒಂದೂವರೆ ಗಂಟೆಗಳ ಕಾಲ ಯುವಕ ಸಹಾಯಕ್ಕಾಗಿ ಮೊರೆಯಿಟ್ಟಿದ್ದ. ಇಷ್ಟು ಸಮಯಾವಕಾಶವಿದ್ದರೂ ಆತನನ್ನು ರಕ್ಷಿಸಲು ನಮ್ಮ ವ್ಯವಸ್ಥೆ ಯಾಕೆ ವಿಫಲವಾಯಿತು ಎನ್ನುವುದು ಇದೀಗ ಚರ್ಚೆಯ ವಿಷಯವಾಗಿದೆ. ಕಾರು ಮುಳುಗುವವರೆಗೆ ಅಂದರೆ ಸುಮಾರು 90 ನಿಮಿಷಗಳ ಕಾಲ ಮೆಹ್ತಾ ಅವರು ಕಾರಿನ ಮೇಲೆಯೇ ಇದ್ದರು. ಸಹಾಯ ಯಾಚಿಸುತ್ತಿದ್ದರು. ವಿಪರ್ಯಾಸವೆಂದರೆ ಅದಾಗಲೇ ಅಲ್ಲಿ ಜನರು ನೆರೆದಿದ್ದರು. ಆದರೆ ಯಾರೂ ನೆರವಿಗೆ ಧಾವಿಸಲಿಲ್ಲ. ಹಲವರು ಘಟನೆಯನ್ನು ಮೊಬೈಲ್ನಲ್ಲಿ ಚಿತ್ರೀಕರಿಸುತ್ತಿದ್ದರು. ಸುಮಾರು 2:30ರ ಹೊತ್ತಿಗೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ, ರಾಜ್ಯ ವಿಪತ್ತು ನಿರ್ವಹಣಾ ಪಡೆ, ಅಗ್ನಿಶಾಮಕ ದಳ ಹಾಗೂ ಪೊಲೀಸರು ಆಗಮಿಸಿದರಾದರೂ ತಕ್ಷಣ ಕಾರ್ಯಾಚರಣೆ ನಡೆಸಲು ಹಿಂಜರಿದರು. ಆರುಗಂಟೆಗಳ ಬಳಿಕ ಯುವಕನ ಮೃತದೇಹವನ್ನು ಮೇಲೆತ್ತುವಲ್ಲಿ ತಂಡವು ಯಶಸ್ವಿಯಾಯಿತು. ಅಪಘಾತಕ್ಕೆ ದಟ್ಟ ಮಂಜು ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ. ಕಾರು ತಡೆ ಗೋಡೆಗೆ ಢಿಕ್ಕಿ ಹೊಡೆದು ಬಳಿಕ ನೀರಿನ ಹೊಂಡಕ್ಕೆ ಬಿದ್ದಿದೆ. ಇದನ್ನು ಅಪಘಾತ ಎಂದು ಕರೆಯಬಹುದು. ಆದರೆ ಆ ಬಳಿಕ ನಡೆದಿರುವುದು ಅಪಘಾತದ ಭಾಗವಾಗಿರಲಿಲ್ಲ. ಆತ ಮೃತಪಟ್ಟಿರುವುದು ಅವಘಡದಿಂದಲ್ಲ. ಬದಲಿಗೆ ವ್ಯವಸ್ಥೆಯ ಬೇಜವಾಬ್ದಾರಿ ಯಿಂದ. ಯಾವುದೋ ದಟ್ಟಾರಣ್ಯದ ಮಧ್ಯೆ ನಡೆದ ದುರಂತ ಇದಾಗಿರಲಿಲ್ಲ. ರಕ್ಷಣಾ ಕಾರ್ಯಾಚರಣೆಯು ತರಾತುರಿಯಲ್ಲಿ ನಡೆದಿದ್ದರೆ ಯುವಕನ ಪ್ರಾಣವನ್ನು ಉಳಿಸುವುದಕ್ಕೆ ಅವಕಾಶವಿತ್ತು. ಅವಘಡ ನಡೆದ ಸ್ಥಳಕ್ಕೆ ಆಗಮಿಸಿದ ರಕ್ಷಣಾ ಸಿಬ್ಬಂದಿ ಸುಮಾರು ಒಂದೂವರೆ ಗಂಟೆಯ ಕಾಲ ಮೀನಾಮೇಷ ಎಣಿಸುತ್ತಿದ್ದರು ಎಂದು ಸ್ಥಳೀಯರು ಆರೋಪಿಸಿದ್ದಾರೆ. ವಿಪರ್ಯಾಸವೆಂದರೆ, ಸೇರಿದ ಜನರು ಕೂಡ ಸಂತ್ರಸ್ತನ ನೆರವಿಗೆ ಮುಂದಾಗುವ ಬದಲು ಮೊಬೈಲ್ನಲ್ಲಿ ಚಿತ್ರೀಕರಣ ಮಾಡುತ್ತಿದ್ದರು. ನೆರೆದ ಮಂದಿಯಲ್ಲಿ ಒಂದಿಷ್ಟು ಮಾನವೀಯತೆ ಜೀವಂತವಾಗಿದ್ದಿದ್ದರೆ ಯುವಕನೂ ಇಂದು ಜೀವಂತವಾಗಿರುತ್ತಿದ್ದ. ದುರಂತ ಮಾಧ್ಯಮಗಳಲ್ಲಿ ಸುದ್ದಿಯಾಗುತ್ತಿದ್ದಂತೆಯೇ ಮೆಹ್ತಾರ ಕಾರು ಉರುಳಿ ಬಿದ್ದ ಆಳವಾದ ಹೊಂಡದ ಸ್ಥಳದ ಮಾಲಕತ್ವ ಹೊಂದಿದ್ದ ಎರಡು ಕಟ್ಟಡ ಸಂಸ್ಥೆಗಳ ವಿರುದ್ಧ ಎಫ್ಐಆರ್ ದಾಖಲಾಗಿದೆ. ತನಿಖೆಗೆ ಮೂವರು ಸದಸ್ಯರನ್ನು ಒಳಗೊಂಡ ಸಿಟ್ ತಂಡವನ್ನು ನೇಮಕ ಮಾಡಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ಮೂವರನ್ನು ಬಂಧಿಸಲಾಗಿದೆ. ಆದರೆ, ಸಂತ್ರಸ್ತನನ್ನು ಬದುಕಿಸಲು ಸಮಯಾವಕಾಶವಿದ್ದರೂ ಅದರಲ್ಲಿ ವಿಫಲರಾಗಿರುವ ರಕ್ಷಣಾ ದಳಗಳ ವಿರುದ್ಧ ಇನ್ನೂ ದೂರು ದಾಖಲಾಗಿಲ್ಲ. ಎಸ್ಡಿಆರ್ಎಫ್ ಸಿಬ್ಬಂದಿ ಸ್ಥಳಕ್ಕೆ ತಲುಪಿದಾಗ ಕಾರು ಇನ್ನೂ ಪೂರ್ಣವಾಗಿ ಹೊಂಡದಲ್ಲಿ ಮುಳುಗಿರಲಿಲ್ಲ. ಆದರೆ ಹೇಗೆ ರಕ್ಷಿಸುವುದು ಎನ್ನುವ ಗೊಂದಲದಲ್ಲೇ ಸಿಬ್ಬಂದಿ ಕಾಲ ಕಳೆದಿದ್ದರು. ಈ ಹೊತ್ತಿಗೆ ಅಲ್ಲಿಗೆ ಬಂದಿದ್ದ ಒಬ್ಬ ಗಿಗ್ ಏಜೆಂಟ್ ಸೊಂಟಕ್ಕೆ ಹಗ್ಗ ಕಟ್ಟಿ ನೀರಿಗಿಳಿಯಬೇಕಾಯಿತು. ‘ನೀರು ತುಂಬಾತಣ್ಣಗಿದೆ ಮಾತ್ರವಲ್ಲ, ಹೊಂಡದೊಳಗೆ ಕಟ್ಟಡ ನಿರ್ಮಾಣಕ್ಕೆ ಬಳಸಿದ ಕಬ್ಬಿಣದ ರಾಡ್ಗಳಿವೆ’ ಎಂಬ ಕಾರಣದಿಂದ ಸಿಬ್ಬಂದಿ ನೀರಿಗಿಳಿಯಲು ಹಿಂಜರಿದಿದ್ದರು. ಸಮಯಕ್ಕೆ ಸರಿಯಾಗಿ ಕಾರ್ಯಾಚರಣೆ ನಡೆದಿದ್ದರೆ ಸಂತ್ರಸ್ತ ಬದುಕಿ ಉಳಿಯುತ್ತಿದ್ದ ಎನ್ನುವುದು ಸ್ಥಳೀಯರ ಅಭಿಪ್ರಾಯ. ರಕ್ಷಣಾ ಕಾರ್ಯಕ್ಕೆ ಬೇಕಾಗಿರುವ ಯಾವುದೇ ಅತ್ಯಾಧುನಿಕ ಉಪಕರಣಗಳು ಸಿಬ್ಬಂದಿಯ ಬಳಿ ಇಲ್ಲದೇ ಇರುವುದು ಈ ಸಂದರ್ಭದಲ್ಲಿ ಬೆಳಕಿಗೆ ಬಂದಿದೆ. ಈಜು ಬರದೇ ಇರುವುದೂ ಅವರು ನೀರಿಗಿಳಿಯದೇ ಇರಲು ಇನ್ನೊಂದು ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಸಂತ್ರಸ್ತ ಸಾಫ್ಟ್ವೇರ್ ಇಂಜಿನಿಯರ್ ಆಗಿರುವುದರಿಂದ ಈ ದುರಂತ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಯಿತು. ಸಾಮಾನ್ಯ ಕೂಲಿಕಾರ್ಮಿಕನಾಗಿದ್ದರೆ ಆತನ ಕೂಗು ಆ ಹೊಂಡದೊಳಗೇ ಹೂತು ಹೋಗಿ ಬಿಡುತ್ತಿತ್ತು. ದುರಂತ ಸಂಭವಿಸಿದ ಬಳಿಕವಾದರೂ ಇಲ್ಲಿ ಹೊಂಡದ ಮಾಲಕರ ವಿರುದ್ಧ ದೂರು ದಾಖಲಾಗಿ ಅವರ ಬಂಧನವಾಯಿತು. ಅದೆಷ್ಟೋ ಅಕ್ರಮ ಕಲ್ಲು ಕೋರೆಯ ಗಣಿ ಹೊಂಡಗಳು ಮಳೆಗಾಲದಲ್ಲಿ ನೀರು ತುಂಬಿ ಪ್ರತಿ ವರ್ಷ ನೂರಾರು ಸಾವುಗಳಿಗೆ, ಅವಘಡಗಳಿಗೆ ಕಾರಣವಾಗುತ್ತವೆೆ. ಆದರೆ ಯಾರ ವಿರುದ್ಧವೂ ಪ್ರಕರಣ ದಾಖಲಾಗುವುದಿಲ್ಲ. ಆ ಹೊಂಡಗಳು ಮುಚ್ಚಲ್ಪಡುವುದೂ ಇಲ್ಲ. ಯಾಕೆಂದರೆ ಇಲ್ಲಿ ಅವಘಡಗಳು ಸುದ್ದಿಯಾಗಿ ಅದನ್ನು ಗಂಭೀರವಾಗಿ ತೆಗೆದುಕೊಳ್ಳಬೇಕಾದರೆ ಸಂತ್ರಸ್ತನ ಹಿನ್ನೆಲೆ, ಜಾತಿ, ವರ್ಗವೂ ಮುಖ್ಯವಾಗುತ್ತದೆ. ಕನಿಷ್ಠ ನೊಯ್ಡಾದ ದುರಂತ ಜನರ ಗಮನವನ್ನಾದರೂ ಸೆಳೆಯಿತಲ್ಲ, ದುರಂತ ಸಂಭವಿಸಿದ ಬಳಿಕವಾದರೂ ಅಪಾಯಕಾರಿ ಹೊಂಡವನ್ನು ತೆರೆದಿಟ್ಟವರ ಬಂಧನವಾಯಿತಲ್ಲ ಎಂದು ಜನರು ಸಮಾಧಾನ ಪಡಬೇಕಾಗಿದೆ. ಅಂತಹ ನೂರಾರು ಹೊಂಡಗಳು ರಸ್ತೆಯ ಪಕ್ಕದಲ್ಲೇ ಅಮಾಯಕರ ಜೀವಕ್ಕಾಗಿ ಬಾಯಿ ತೆರೆದು ಕಾಯುತ್ತಿವೆ. ಅವೆಲ್ಲ ಮುಚ್ಚಬೇಕಾದರೆ ಮತ್ತು ಆ ಹೊಂಡದ ಮಾಲಕರ ವಿರುದ್ಧ ಪ್ರಕರಣ ದಾಖಲಾಗಬೇಕಾದರೆ ಇನ್ನೆಷ್ಟು ಮಹ್ತಾಗಳು ಬಲಿಯಾಗಬೇಕು? ಎಂದು ಜನರು ಕೇಳುತ್ತಿದ್ದಾರೆ.
ರಾಜ್ಯದಲ್ಲಿ ಶೂನ್ಯ ಬಡ್ಡಿ ದರದ ಕೃಷಿ ಸಾಲಕ್ಕೆ ಬೇಡಿಕೆ ಹೆಚ್ಚಳ: 1 ವರ್ಷದಲ್ಲಿ ಬರೋಬ್ಬರಿ 23,673 ಕೋಟಿ ಸಾಲ ವಿತರಣೆ
ರಾಜ್ಯದಲ್ಲಿ ಶೂನ್ಯ ಬಡ್ಡಿ ದರದ ಕೃಷಿ ಸಾಲಕ್ಕೆ ಹೆಚ್ಚಿನ ಬೇಡಿಕೆ ಬಂದಿದೆ. ಕಳೆದ ಹಣಕಾಸು ವರ್ಷದಲ್ಲಿ ದಾಖಲೆ ಪ್ರಮಾಣದಲ್ಲಿ ಸಾಲ ವಿತರಿಸಲಾಗಿದೆ. 2024-25ನೇ ಸಾಲಿನಲ್ಲಿ 23,673 ಕೋಟಿ ರೂ. ಸಾಲವನ್ನು 26.36 ಲಕ್ಷ ರೈತರಿಗೆ ನೀಡಲಾಗಿದೆ. ಕೃಷಿ ಚಟುವಟಿಕೆಗಳಿಗೆ ಉತ್ತೇಜನ ನೀಡಲು ಈ ಯೋಜನೆ ಜಾರಿಯಲ್ಲಿದೆ. ರೈತರು ಇದರ ಸದುಪಯೋಗ ಪಡೆದುಕೊಳ್ಳುತ್ತಿದ್ದಾರೆ.
ಇನ್ಮುಂದೆ ನಂದಿನಿ ಹಾಲು, ಮೊಸರು 10ರೂ.ಗೂ ಸಿಗುತ್ತೆ; ತುಪ್ಪ, ಪನ್ನೀರ್ ಸೇರಿ ಇತರ ಉತ್ಪನ್ನಗಳ ದರ ಹೇಗಿದೆ?
ಇಲ್ಲಿಯವರೆಗೂ ನಂದಿನಿ ಗ್ರಾಹಕರು ದುಬಾರಿ ಹಣಕೊಟ್ಟು ಅರ್ಧ ಲೀಟರ್ ಹಾಗೂ ಒಂದು ಲೀಟರ್ ಹಾಲು ಮತ್ತು ಮೊಸರು ಖರೀದಿ ಮಾಡುತ್ತಿದ್ದರು. ಆದರೆ, ಫ್ರಿಡ್ಜ್ ಇಲ್ಲದ ಜನರಿಗೆ ಕಷ್ಟವಾಗುತ್ತಿತ್ತು. ಇನ್ಮುಂದೆ ಎಲ್ಲ ನಂದಿನಿ ಮಳಿಗೆಯಲ್ಲಿ 160 ಎಂಎಲ್ಗೆ 10 ರೂ. ಹಾಗೂ ಮೊಸರು 140 ಎಂಎಲ್ ಪ್ಯಾಕ್ಗೆ 10 ರೂ. ಮಾರಾಟ ಮಾಡಲು ಕೆಎಂಎಫ್ ಮುಂದಾಗಿದೆ.

25 C