SENSEX
NIFTY
GOLD
USD/INR

Weather

23    C
...

ಮೆಕ್ಸಿಕೋ ದೇಶದಲ್ಲಿ ಅಲ್ಲೋಲ ಕಲ್ಲೋಲ, ಅಮೆರಿಕ ಪಕ್ಕದ ದೇಶದಲ್ಲಿ ಘೋರ ಪರಿಸ್ಥಿತಿ | Mexico Situation

ಅಮೆರಿಕ ಮತ್ತು ಮೆಕ್ಸಿಕೋ ಅಕ್ಕಪಕ್ಕದ ದೇಶಗಳಾಗಿದ್ದು, ಮೆಕ್ಸಿಕೋ ಜೊತೆಗೆ ಅಮೆರಿಕ ಅಷ್ಟೊಂದು ಉತ್ತಮ ಸಂಬಂಧ ಉಳಿಸಿಕೊಂಡಿಲ್ಲ. ಇತ್ತೀಚೆಗೆ ನೇರವಾಗಿ ಮೆಕ್ಸಿಕೋ ಮೇಲೆ ದಾಳಿ ಮಾಡುವ ಬಗ್ಗೆ ಕೂಡ ಅಮೆರಿಕ ಚಿಂತನೆ ನಡೆಸಿದೆ ಎಂಬ ಆರೋಪ ಕೇಳಿಬಂದಿತ್ತು. ಹಾಗೇ ಎರಡೂ ದೇಶಗಳ ಮಧ್ಯೆ ತಿಕ್ಕಾಟ ಕೂಡ ಹೆಚ್ಚಾಗುತ್ತಾ ಸಾಗಿತ್ತು. ಇಂತಹ ಪರಿಸ್ಥಿತಿಯಲ್ಲಿ ದಿಢೀರ್ ಮೆಕ್ಸಿಕೋ ದೇಶದಲ್ಲಿ ಅಲ್ಲೋಲ ಕಲ್ಲೋಲವೇ

ಒನ್ ಇ೦ಡಿಯ 24 Feb 2026 9:49 am

ಜಿಂಬಾಬ್ವೆ ವಿರುದ್ಧ ದೈತ್ಯ ಗೆಲುವು ದಾಖಲಿಸಿದ ವೆಸ್ಟ್‌ ಇಂಡೀಸ್‌; ಭಾರತದ ಸೆಮಿಫೈನಲ್‌ ಕನಸಿನ ಗತಿ ಏನು?

ಟಿ-20 ವಿಶ್ವಕಪ್‌ 2026ರಲ್ಲಿ ತನ್ನ ಪಯಣ ಮುಂದುವರೆಸಲು ಅನ್ಯ ತಂಡಗಳ ಫಲಿತಾಂಶದ ಮೇಲೆ ಅವಲಂಬಿತವಾಗಿರುವ ಭಾರತಕ್ಕೆ, ವೆಸ್ಟ್‌ ಇಂಡೀಸ್‌ ತಂಡ ಭಾರೀ ಆಘಾತ ನೀಡಿದೆ. ಜಿಂಬಾಬ್ವೆ ವಿರುದ್ಧ ಭರ್ಜರಿ ಜಯಗಳಿಸಿರುವ ವೆಸ್ಟ್‌ ಇಂಡೀಸ್‌, ಭಾರತದ ವಿಶ್ವಕಪ್‌ ಪಯಣವನ್ನು ಮತ್ತಷ್ಟು ದುಸ್ತರವಾಗಿಸಿದೆ. ವಾಂಖೆಡೆ ಕ್ರೀಡಾಂಗಣದಲ್ಲಿ ವೆಸ್ಟ್‌ ಇಂಡೀಸ್‌ ತಂಡ ಜಿಂಬಾಬ್ವೆ ತಂಡವನ್ನು ಬರೋಬ್ಬರಿ 107 ರನ್‌ಗಳ ಅಂತರದಿಂದ ಸೋಲಿಸಿದೆ. ಈ ಪಂದ್ಯ ಭಾರತದ ಸೆಮಿಫೈನಲ್‌ ಕನಸನ್ನು ಹೇಗೆ ಛಿದ್ರಗೊಳಿಸಬಹುದು? ಇಲ್ಲಿದೆ ಮಾಹಿತಿ.

ವಿಜಯ ಕರ್ನಾಟಕ 24 Feb 2026 9:37 am

ವೆಸ್ಟ್ಇಂಡೀಸ್ ಭರ್ಜರಿ ಗೆಲುವಿನ ಬಳಿಕ ಭಾರತದ ಸೆಮೀಸ್ ಹಾದಿ ಹೇಗೆ?

ಹೊಸದಿಲ್ಲಿ: ಟಿ20 ವಿಶ್ವಕಪ್ ಟೂರ್ನಿಯ ಗುಂಪು ಹಂತದಲ್ಲಿ ಅಜೇಯವಾಗಿ ಉಳಿದಿದ್ದ ಭಾರತ ತಂಡ ಎರಡನೇ ಹಂತದ ಮೊದಲ ಪಂದ್ಯದಲ್ಲೇ ದಕ್ಷಿಣ ಆಫ್ರಿಕಾ ವಿರುದ್ಧ 76 ರನ್ ಗಳ ಸೋಲಿನೊಂದಿಗೆ ಅಂಕಪಟ್ಟಿಯಲ್ಲಿ ದಿಢೀರ್ ಕುಸಿತ ಕಂಡಿತ್ತು. ದಕ್ಷಿಣ ಆಫ್ರಿಕಾ, ವೆಸ್ಟ್ಇಂಡೀಸ್ ಮತ್ತು ಜಿಂಬಾಬ್ವೆ ಜತೆ ಒಂದನೇ ಗುಂಪಿನಲ್ಲಿರುವ ಭಾರತ ಇದೀಗ ಸಂಕಷ್ಟಕ್ಕೆ ಸಿಲುಕಿದೆ. ಇದೇ ಗುಂಪಿನಲ್ಲಿರುವ ವೆಸ್ಟ್ಇಂಡೀಸ್ ತನ್ನ ಆರಂಭಿಕ ಪಂದ್ಯದಲ್ಲಿ ಜಿಂಬಾಬ್ವೆ ವಿರುದ್ಧ 107 ರನ್ ಗಳ ಭರ್ಜರಿ ಜಯ ಸಾಧಿಸಿದ್ದು, ಗುಂಪಿನಲ್ಲಿ ಅಗ್ರಸ್ಥಾನಕ್ಕೇರಿದೆ. ದಕ್ಷಿಣ ಆಫ್ರಿಕಾ ಎರಡನೇ ಸ್ಥಾನದಲ್ಲಿದ್ದು, ಭಾರತ ನಿವ್ವಳ ರನ್ ರೇಟ್ ಆಧಾರದಲ್ಲಿ ಮೂರನೇ ಸ್ಥಾನದಲ್ಲಿದೆ. ಭಾರತ ವಿರುದ್ಧದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಬೌಲಿಂಗ್ ಹಾಗೂ ಬ್ಯಾಟಿಂಗ್ ಎರಡರಲ್ಲೂ ಭಾರತವನ್ನು ಮಣಿಸಿ ಸರ್ವಾಂಗೀಣ ಪ್ರದರ್ಶನ ತೋರುವ ಮೂಲಕ ಎರಡು ಪ್ರಮುಖ ಅಂಕಗಳನ್ನು ಗಿಟ್ಟಿಸಿಕೊಂಡಿದೆ. ಜತೆಗೆ ಭಾರತದ ನಿವ್ವಳ ರನ್ ರೇಟ್ -3.800ಕ್ಕೆ ಇಳಿದಿದೆ. ಇದರಿಂದಾಗಿ ಭಾರತ ಉಳಿದ ಎರಡೂ ಪಂದ್ಯಗಳನ್ನು ಗೆಲ್ಲಲೇಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಭಾರತ ತಂಡ ವೆಸ್ಟ್ಇಂಡೀಸ್ ಹಾಗೂ ಜಿಂಬಾಬ್ವೆ ವಿರುದ್ಧದ ಎರಡೂ ಪಂದ್ಯಗಳನ್ನು ಗೆದ್ದಲ್ಲಿ ನಾಲ್ಕು ಅಂಕಗಳು ಲಭ್ಯವಾಗುತ್ತವೆ. ದಕ್ಷಿಣ ಆಫ್ರಿಕಾ ತನ್ನೆರಡೂ ಉಳಿಕೆ ಪಂದ್ಯಗಳನ್ನು ಗೆದ್ದಲ್ಲಿ ದಕ್ಷಿಣ ಆಫ್ರಿಕಾ ಹಾಗೂ ಭಾರತ ಅಂತಿಮ ನಾಲ್ಕರ ಘಟ್ಟಕ್ಕೆ ತೇರ್ಗಡೆಯಾಗುತ್ತವೆ. ಭಾರತ ಎರಡೂ ಪಂದ್ಯಗಳನ್ನು ಗೆದ್ದು ದಕ್ಷಿಣ ಆಫ್ರಿಕಾ ಒಂದನ್ನು ಸೋತಲ್ಲಿ ಎರಡೂ ತಂಡಗಳು ತಲಾ 4 ಅಂಕ ಪಡೆಯುತ್ತವೆ. ಆಗ ನಿವ್ವಳ ರನ್ ರೇಟ್ ಆಧಾರದಲ್ಲಿ ಅರ್ಹತೆ ನಿರ್ಧರಿಸಲ್ಪಡುತ್ತದೆ. ಭಾರತ ಎರಡೂ ಪಂದ್ಯ ಗೆದ್ದು, ಆಫ್ರಿಕಾ ತನ್ನೆರಡೂ ಪಂದ್ಯಗಳನ್ನು ಸೋತಲ್ಲಿ ಭಾರತ ಹಾಗೂ ವೆಸ್ಟ್ಇಂಡೀಸ್ ಸೆಮೀಸ್ ತಲುಪುತ್ತವೆ. ಆದರೆ ಭಾರತ ಒಂದು ಪಂದ್ಯ ಸೋತಲೂ ಭಾರತ ಟೂರ್ನಿಯಿಂದ ನಿರ್ಗಮಿಸಬೇಕಾಗುತ್ತದೆ. ಇದರಿಂದಾಗಿ ಭಾರತ ತಂಡ ಯಾವುದೇ ಪ್ರಮಾದ ಎಸಗದೇ ಎಚ್ಚರಿಕೆಯ ಹೆಜ್ಜೆ ಇಡಬೇಕಾಗಿದೆ.

ವಾರ್ತಾ ಭಾರತಿ 24 Feb 2026 9:31 am

Karnataka Budget: ರಾಜ್ಯದಲ್ಲಿ ದೇಶದ ಮೊದಲ AI ನೀತಿ ಅನುಷ್ಠಾನ ಘೋಷಣೆ ನಿರೀಕ್ಷೆ

ಬೆಂಗಳೂರು: ಕರ್ನಾಟಕ ರಾಜ್ಯದ ಜನರ ಗಮನ ಪ್ರಸಕ್ತ ಸಾಲಿನ ಕರ್ನಾಟಕ ರಾಜ್ಯ ಬಜೆಟ್ 2026 (Karnataka Budget 2026) ಮೇಲೆ ನೆಟ್ಟಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಲಿರುವ ಈ ಬಾರಿ ಬಜೆಟ್‌ನಲ್ಲಿ ಸುಮಾರು ಮೂರು ದಶಕಗಳ ನಂತರ ದೇಶದ ಮೊದಲ ಐಟಿ ನೀತಿಯನ್ನು ಕರ್ನಾಟಕದಲ್ಲಿ ಪರಿಚಯಿಸುವ ಬಗ್ಗೆ ಘೋಷಿಸಲಿದ್ದಾರೆ. ದೇಶವು ಸಮಗ್ರ ಕೃತಕ ಬುದ್ಧಿಮತ್ತೆ (AI) ಜೊತೆಗೆ

ಒನ್ ಇ೦ಡಿಯ 24 Feb 2026 9:08 am

Srisailam Padayatra 2026: ಮಾರ್ಚ್‌ 3ರಿಂದ ಶ್ರೀಶೈಲ ಪಾದಯಾತ್ರೆ; ಭಕ್ತರಿಂದ 151 ಕೆ.ಜಿ ತೂಕದ ಪಂಚಲೋಹದ ಗಂಟೆ ಅರ್ಪಣೆ

ಜಗತ್ಪ್ರಸಿದ್ಧ ಶ್ರೀಶೈಲ ಮಲ್ಲಿಕಾರ್ಜುನ ದೇವಸ್ಥಾನಕ್ಕೆ ಈ ಬಾರಿ ವಿಶೇಷ ಕೊಡುಗೆಯೊಂದು ಸಲ್ಲಿಕೆಯಾಗುತ್ತಿದೆ. ಉತ್ತರ ಕರ್ನಾಟಕದ ಮರಗಾಲು ಮಲ್ಲಯ್ಯಗಳ ಸಂಘ ಮತ್ತು ಬೆಂಗಳೂರಿನ ಅಮ್ಮ ಫೌಂಡೇಶನ್ ವತಿಯಿಂದ ಸಿದ್ಧಪಡಿಸಲಾದ 151 ಕೆ.ಜಿ ತೂಕದ ಬೃಹತ್ ಪಂಚಲೋಹದ ಗಂಟೆಯನ್ನು ಮಾರ್ಚ್ 14ರಂದು ಮಲ್ಲಿಕಾರ್ಜುನ ಸ್ವಾಮಿಗೆ ಸಮರ್ಪಿಸಲಾಗುತ್ತಿದೆ. ಬಾಗಲಕೋಟೆ ಹಾಗೂ ವಿಜಯಪುರ ಸೇರಿದಂತೆ ಉತ್ತರ ಕರ್ನಾಟಕದ ವಿವಿಧ ಜಿಲ್ಲೆಗಳ ಸುಮಾರು 150ಕ್ಕೂ

ಒನ್ ಇ೦ಡಿಯ 24 Feb 2026 8:46 am

Explained: ದಾರಿ ಯಾವುದಯ್ಯಾ ಭಾರತಕ್ಕೆ? ಭಾರತೀಯರು ಇರಾನ್‌ ನೆಲ, ಜಲ, ವಾಯು ಗಡಿ ದಾಟುವುದು ಹೇಗೆ? ಪಾಕಿಸ್ತಾನ ಟಚ್‌ ಮಾಡಂಗಿಲ್ಲ

ಅಮೆರಿಕ ಮತ್ತು ಇರಾನ್‌ ನಡುವಿನ ಉದ್ವಿಗ್ನತೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಎರಡೂ ರಾಷ್ಟ್ರಗಳು ಪರಸ್ಪರ ಬಂದೂಕು ಗುರಿಯಿಟ್ಟು ದಶಕಗಳೇ ಕಳೆದಿದ್ದರೂ, ಇತ್ತೀಚಿನ ಬೆಳವಣಿಗೆಗಳನ್ನು ಗಮನಿಸಿದರೆ, ಅವು ಈ ಬಾರಿ ಟ್ರಿಗರ್‌ ಒತ್ತುವುದು ಖಚಿತ ಎಂಬ ಮುನ್ಸೂಚನೆಗಳು ಕಂಡುಬರುತ್ತಿವೆ. ಅಮೆರಿಕ ಮತ್ತು ಇರಾನ್‌ ಪರಸ್ಪರ ಸರ್ವನಾಶದ ಎಚ್ಚರಿಕೆಗಳನ್ನು ನೀಡುತ್ತಿದ್ದು, ಈ ಹಿನ್ನೆಲೆಯಲ್ಲಿ ಭಾರತವು ಇರಾನ್‌ನಲ್ಲಿರುವ ಎಲ್ಲಾ ಭಾರತೀಯರಿಗೆ ಲಭ್ಯವಿರುವ ಸಾರಿಗೆ ವಿಧಾನಗಳ ಮೂಲಕ ದೇಶ ತೊರೆಯಿರಿ ಎಂದು ಸೂಚಿಸಿದೆ. ಹಾಗಿದ್ದರೆ ಭಾರತೀಯರು ಇರಾನ್‌ನಿಂದ ಭಾರತಕ್ಕೆ ಬರುವ ಮಾರ್ಗಗಳೇನು? ಇಲ್ಲಿದೆ ಸಂಪೂರ್ಣ ಮಾಹಿತಿ.

ವಿಜಯ ಕರ್ನಾಟಕ 24 Feb 2026 8:41 am

ಟೀಂ ಇಂಡಿಯಾ ಕಂಗೆಡಿಸಿದ ಹರಿಣಗಳ ದಾಳಿ : ತಂಡಕ್ಕೆ ಕಾಡುತ್ತಿದೆ ವಿರಾಟ್ ಕೊಹ್ಲಿ ಅನುಪಸ್ಥಿತಿಯ ಗಾಳಿ

T20 World Cup Matches : ದಕ್ಷಿಣ ಆಫ್ರಿಕಾ ವಿರುದ್ದದ ಪಂದ್ಯದಲ್ಲಿನ ಹೀನಾಯ ಸೋಲು, ಟೀಂ ಇಂಡಿಯಾವನ್ನು ಕಂಗೆಡಿಸಿದೆ. ತಂಡದಲ್ಲಿ ವಿರಾಟ್ ಕೊಹ್ಲಿ ಏನಾದರೂ ಇದ್ದಿದ್ದರೆ, ಸಿಂಗಲ್ ಸಿಂಗಲ್ ತೆಗೆದುಕೊಂಡೇ ತಂಡವನ್ನು ದಡ ಸೇರಿಸುತ್ತಿದ್ದರು ಎಂದು ಸಾಮಾಜಿಕ ಜಾಲತಾಣದಲ್ಲಿ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಚೇಸಿಂಗ್ ನಲ್ಲಿ ಅಸಾಮಾನ್ಯ ರೆಕಾರ್ಡ್ ಹೊಂದಿರುವ ಕೊಹ್ಲಿಯನ್ನು ಕ್ರಿಕೆಟ್ ಅಭಿಮಾನಿಗಳು ಬಹಳಷ್ಟು ನೆನಪಿಸಿಕೊಳ್ಳುತ್ತಿದ್ದಾರೆ.

ವಿಜಯ ಕರ್ನಾಟಕ 24 Feb 2026 8:31 am

Shivamogga | ಸ್ನೇಹಿತರ ನಡುವಿನ ಗಲಾಟೆ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಯ ಕೊಲೆಯಲ್ಲಿ ಅಂತ್ಯ

ಶಾಲೆ ತೊರೆದಿದ್ದ ಬಾಲಕರಿಂದ ಕೃತ್ಯ ಶಂಕೆ, ಇಬ್ಬರು ಅಪ್ರಾಪ್ತರು ವಶಕ್ಕೆ

ವಾರ್ತಾ ಭಾರತಿ 24 Feb 2026 8:26 am

ಖಾಲಿ ಹುದ್ದೆಗಳಿಗೆ ಅರ್ಹರು ನೇಮಕವಾಗಲಿ

ಇತ್ತೀಚಿನ ವರ್ಷಗಳಲ್ಲಿ ನವ ಉದಾರೀಕರಣದ ಆರ್ಥಿಕ ನೀತಿಯ ದುಷ್ಪರಿಣಾಮದಿಂದಾಗಿ ಶಿಕ್ಷಣ ಇಲಾಖೆ ಕೂಡ ಹಳಿ ತಪ್ಪುತ್ತಿದೆ.ಖಾಲಿ ಹುದ್ದೆಗಳಿಗೆ, ಅದರಲ್ಲೂ ಉಪನ್ಯಾಸಕರ ಹುದ್ದೆಗಳಿಗೆ ತಾತ್ಕಾಲಿಕ ನೇಮಕಾತಿ ಈಗ ಸಾಮಾನ್ಯವಾಗಿದೆ. ತುರಿಕೆ ಬಿಟ್ಟಾಗ ಕೆರೆದುಕೊಳ್ಳುವಂತೆ ಇಂಥ ತಾತ್ಕಾಲಿಕ ನೇಮಕಾತಿಗಳಿಂದ ಅರ್ಹ ಅಭ್ಯರ್ಥಿಗಳು ಬರಬೇಕಾದ ಜಾಗಗಳಲ್ಲಿ ಅನರ್ಹರು ಬರುತ್ತಿದ್ದಾರೆ. ಇಂಥವರು ನಕಲಿ ಪ್ರಮಾಣಪತ್ರ ಸಲ್ಲಿಸಿ ನೇಮಕಗೊಳ್ಳುತ್ತಾರೆ ಎಂಬುದು ಬರೀ ದೂರಲ್ಲ. ಅದರ ಹಗರಣ ಇತ್ತೀಚೆಗೆ ಬಯಲಿಗೆ ಬಂದಿದೆ. ರಾಜ್ಯ ಸರಕಾರದ ಪದವಿ ಕಾಲೇಜುಗಳಲ್ಲಿ ಸೇರಿಕೊಂಡಿದ್ದ 200ಕ್ಕೂ ಹೆಚ್ಚು ಅತಿಥಿ ಉಪನ್ಯಾಸಕರು ಇತ್ತೀಚೆಗೆ ತಮ್ಮ ಹುದ್ದೆಗಳಿಗೆ ತಾವಾಗಿ ರಾಜೀನಾಮೆ ನೀಡಿದ್ದಾರೆ. ಇದು ಸಹಜವಾಗಿ ನೀಡಿದ ರಾಜೀನಾಮೆ ಅಲ್ಲ. ಇದರ ಹಿಂದೆ ಭಾರೀ ಹಗರಣವೊಂದು ನಡೆದಿರುವ ಸಂದೇಹ ಉಂಟಾಗಿದೆ. ನೌಕರಿ ಸೇರುವುದಕ್ಕಾಗಿ ಕೆಲವರು ಸಲ್ಲಿಸಲಾಗಿದ್ದ ನಕಲಿ ಪ್ರಮಾಣಪತ್ರಗಳು ಅಸಲಿಯಾಗಿವೆಯೇ ಎಂಬ ಬಗ್ಗೆ ರಾಜ್ಯದ ಉನ್ನತ ಶಿಕ್ಷಣ ಇಲಾಖೆ ಪರಿಶೀಲನೆಯನ್ನು ನಡೆಸುತ್ತಿದೆ. ಈ ಪ್ರಕ್ರಿಯೆ ಶುರುವಾಗುತ್ತಿದ್ದಂತೆ ಒಂದೊಂದಾಗಿ ರಾಜೀನಾಮೆಗಳು ಬರುತ್ತಿವೆ. ವಾಸ್ತವವಾಗಿ ರಾಷ್ಟ್ರೀಯ ಅರ್ಹತಾ ಪರೀಕ್ಷೆ (ಎನ್‌ಇಟಿ) ಹಾಗೂ ರಾಜ್ಯ ಅರ್ಹತಾ ಪರೀಕ್ಷೆ (ಕೆ-ಸೆಟ್) ಯಲ್ಲಿ ಪಾಸಾಗಿದ್ದರೆ ಮಾತ್ರ ಪದವಿ ಕಾಲೇಜುಗಳಲ್ಲಿ ಉಪನ್ಯಾಸಕರಾಗಿ ಕೆಲಸಕ್ಕೆ ಸೇರಬಹುದು ಎಂಬ ನಿಯಮ ಇದೆ. ಪಿಎಚ್.ಡಿ. ಪ್ರಮಾಣಪತ್ರ ಇದ್ದರೆ ರಾಷ್ಟ್ರೀಯ ರಾಜ್ಯ ಪ್ರಮಾಣಪತ್ರ ಗಳ ಅವಶ್ಯಕತೆ ಇರುವುದಿಲ್ಲ. ಹೀಗಾಗಿ ಇದನ್ನು ದುರುಪಯೋಗ ಮಾಡಿಕೊಂಡ ಕೆಲವರು ನಕಲಿ ಪ್ರಮಾಣಪತ್ರ ಸಲ್ಲಿಸಿ ನೌಕರಿಗೆ ಸೇರಿಕೊಂಡಿದ್ದಾರೆಂಬ ದೂರುಗಳು ಇವೆ. ಇದರಿಂದಾಗಿ ಸಹಜವಾಗಿ ಆತಂಕ ಉಂಟಾಗುತ್ತದೆ. ಸಮರ್ಪಕವಾಗಿ ಪರಿಶೀಲನೆ ನಡೆಸದೆ ಇಂಥ ಪ್ರಮಾಣಪತ್ರಗಳನ್ನು ನಂಬಿ ನೇಮಕಾತಿ ಪ್ರಕ್ರಿಯೆ ನಡೆದದ್ದು ಹೇಗೆ ಎಂಬ ಪ್ರಶ್ನೆಗೆ ಉತ್ತರ ಬೇಕಾಗಿದೆ. ನಕಲಿ ಪ್ರಮಾಣಪತ್ರ ಸಲ್ಲಿಸಿ ನೇಮಕಗೊಂಡಿರುವುದು ಮಾತ್ರವಲ್ಲ, ತಮಗಿಂಥ ಅರ್ಹರಾಗಿದ್ದ ಇತರ ಅಭ್ಯರ್ಥಿಗಳಿಗೆ ಸಿಗಬಹುದಾಗಿದ್ದ ಅವಕಾಶ ವನ್ನು ಕಿತ್ತುಕೊಂಡಿದ್ದು ಇವರ ಅಕ್ಷಮ್ಯ ಅಪರಾಧವಾಗಿದೆ. ಇದು ಬಯಲಿಗೆ ಬರುವ ಸುಳಿವು ಸಿಗುತ್ತಿದ್ದಂತೆ, ಇಂಥವರು ತರಾತುರಿಯಲ್ಲಿ ರಾಜೀನಾಮೆ ನೀಡುವ ದಾರಿ ಹಿಡಿದಿದ್ದಾರೆ. ಇಂಥವರು ರಾಜೀನಾಮೆ ನೀಡಿದರೆಂಬ ಕಾರಣಕ್ಕಾಗಿ ಶಿಕ್ಷೆಯಿಂದ ಪಾರಾಗಲು ಅವಕಾಶ ಕೊಡಬಾರದು. ಪೊಲೀಸರ ಮೂಲಕ ತನಿಖೆ ನಡೆಸಿ ನಕಲಿ ಪ್ರಮಾಣ ಪತ್ರವನ್ನು ಹೇಗೆ ಪಡೆದರೆಂಬ ಬಗ್ಗೆ ಪತ್ತೆ ಹಚ್ಚುವುದು ಅಗತ್ಯವಾಗಿದೆ. ಇದರ ಹಿಂದೆ ಬಹುದೊಡ್ಡ ಜಾಲ ಇದ್ದಂತೆ ಕಾಣುತ್ತದೆ. ಕೆಲವು ವಿಶ್ವವಿದ್ಯಾನಿಲಯಗಳು, ಅವುಗಳಲ್ಲಿನ ಕೆಲವು ವಿಭಾಗಗಳ ಅಧಿಕಾರಿಗಳು ಇದರಲ್ಲಿ ಶಾಮೀಲಾಗದೆ ಇಂಥದೆಲ್ಲ ನಡೆಯುವುದಿಲ್ಲ. ಇದರ ಬಗ್ಗೆ ಸಮಗ್ರ ತನಿಖೆ ನಡೆದರೆ ಸತ್ಯ ಸಂಗತಿ ಬಯಲಿಗೆ ಬರಬಹುದು. ಈ ಬಗ್ಗೆ ಸಮಗ್ರವಾದ ತನಿಖೆ ನಡೆಸುವುದಾಗಿ ಶಿಕ್ಷಣ ಆಯುಕ್ತರು ಹೇಳಿದ್ದಾರೆ. ಈ ವಿಳಂಬವನ್ನು ಗಮನಿಸಿದರೆ ಊರು ಕೊಳ್ಳೆ ಹೊಡೆದು ಕೊಂಡು ಹೋದ ಮೇಲೆ ಮುಖ್ಯ ದ್ವಾರವನ್ನು ಭದ್ರ ಪಡಿಸುವ ಕೆಲಸ ನಡೆದಂತೆ ಕಾಣುತ್ತದೆ. ಇದು ಕೇವಲ ತಮ್ಮ ಸಮಾಧಾನಕ್ಕಾಗಿ ಮಾಡಿದ ಕೆಲಸ ಎಂಬ ಭಾವನೆ ಸಹಜವಾಗಿ ಬರುತ್ತದೆ. ನಕಲಿ ದಾಖಲೆಗಳನ್ನು ನೀಡಿದ ಕಾರಣಕ್ಕಾಗಿ 40 ಮಂದಿ ಸಹಾಯಕ ಪ್ರಾಧ್ಯಾಪಕರನ್ನು 2017ರಲ್ಲಿ ವಜಾ ಮಾಡಲಾಗಿತ್ತು.ಆದರೂ ಕೂಡ ನಕಲಿ ದಾಖಲೆಗಳನ್ನು ಸಲ್ಲಿಸುವುದು ನಿಂತಿಲ್ಲ. ಇಂಥವನ್ನು ತಡೆಯಬೇಕಾದರೆ ವಿಶ್ವವಿದ್ಯಾನಿಲಯಗಳು ಪಿಎಚ್.ಡಿ. ಹಾಗೂ ಎಂ.ಫಿಲ್. ಪಡೆದವರ ಮಾಹಿತಿಯನ್ನು ತಮ್ಮ ವೆಬ್‌ಸೈಟ್‌ಗಳ ಮೂಲಕ ಬಹಿರಂಗ ಪಡಿಸುವ ವ್ಯವಸ್ಥೆ ಅನುಷ್ಠಾನಕ್ಕೆ ಬರಬೇಕು. ಅಂಕಪಟ್ಟಿ, ಪದವಿ ಪ್ರಮಾಣಪತ್ರ ಸೇರಿದಂತೆ ಎಲ್ಲಾ ಪ್ರಮಾಣಪತ್ರಗಳನ್ನು ಡಿಜಿಟಲೈಸ್ ಮಾಡಬೇಕು. ಇಂಥ ಕ್ರಮಗಳಿಂದ ಅಕ್ರಮ ವ್ಯವಹಾರಗಳಿಗೆ ಕಡಿವಾಣ ಹಾಕಬಹುದು. ಅಷ್ಟೇ ಅಲ್ಲ ಪ್ರಮಾಣಪತ್ರವನ್ನು ಕಳೆದುಕೊಂಡ ವಿದ್ಯಾರ್ಥಿಗಳಿಗೆ ಅದನ್ನು ಪಡೆಯುವುದಕ್ಕೆ ಅನುಕೂಲವಾಗುತ್ತದೆ. ಸೇವೆಯಲ್ಲಿ ಇರುವ ಉಪನ್ಯಾಸಕರು ನಿವೃತ್ತರಾಗುತ್ತಿದ್ದಂತೆ ಅವರ ಹುದ್ದೆಗಳು ಖಾಲಿಯಾಗುತ್ತ ಬರುತ್ತವೆ. ಅಂಥ ಸಂದರ್ಭಗಳಲ್ಲಿ ಅತಿಥಿ ಉಪನ್ಯಾಸಕರಾಗಿ ನೇಮಕ ಮಾಡಿಕೊಳ್ಳುತ್ತ ಬರಲಾಗಿದೆ. ಇದೇ ಈ ಸಮಸ್ಯೆಗೆ ಮೂಲ ಕಾರಣವಾಗಿದೆ ಅಂದರೆ ತಪ್ಪಿಲ್ಲ. ಇಂಥ ತಾತ್ಕಾಲಿಕ ನೇಮಕ ಮಾಡಿಕೊಳ್ಳುವ ಪ್ರವೃತ್ತಿ ಸರಿಯಲ್ಲ. ಬೋಧಕ ಹುದ್ದೆಗಳು ಖಾಲಿಯಾದಂತೆಲ್ಲ ಅವುಗಳನ್ನು ಸಕಾಲಕ್ಕೆ ಭರ್ತಿ ಮಾಡಿಕೊಳ್ಳುವ ಕೆಲಸವನ್ನು ಸರಕಾರ ವಿಳಂಬವಿಲ್ಲದೆ ಮಾಡಬೇಕು. ನಕಲಿ ಪ್ರಮಾಣಪತ್ರಗಳನ್ನು, ನಕಲಿ ಪಿಎಚ್.ಡಿ.ಗಳನ್ನು ಸೃಷ್ಟಿಸಿ ಕೆಲಸಕ್ಕೆ ಸೇರುವವರು ವಿದ್ಯಾರ್ಥಿಗಳಿಗೆ ಎಂಥ ಪಾಠವನ್ನು ಮಾಡುತ್ತಾರೆ ಎಂಬುದನ್ನು ವಿವರಿಸಬೇಕಾಗಿಲ್ಲ. ಇಂತಹ ನಕಲಿಗಳು ಸಿಕ್ಕಿ ಬಿದ್ದಾಗ ಮಾನವೀಯ ಅನುಕಂಪದಿಂದ ಕೆಲಸವನ್ನು ಉಳಿಸಿಕೊಳ್ಳಲು ಅಂಗಲಾಚುತ್ತಾರೆ.ಆದರೆ ಅಂಥದ್ದಕ್ಕೆ ಸರಕಾರ ಮಣಿಯ ಬಾರದು. ಇದರಿಂದಾಗಿ ಅರ್ಹ ವಿದ್ಯಾರ್ಥಿಗಳ ಭವಿಷ್ಯ ಹಾಳಾಗುತ್ತದೆ. ನಕಲಿ ಪ್ರಮಾಣ ಪತ್ರಗಳು ಮಾತ್ರವಲ್ಲ ನಕಲಿ ಪಿಎಚ್.ಡಿ.ಗಳು, ಎಂ.ಫಿಲ್.ಗಳ ಹಾವಳಿಯೂ ವ್ಯಾಪಕವಾಗಿದೆ. ಇಂಥವರು ರಾಜಕೀಯ ಪ್ರಭಾವವನ್ನು ಬಳಸಿಕೊಂಡು ಕೆಲಸಕ್ಕೆ ಸೇರುವುದು ಮಾತ್ರವಲ್ಲ, ಅದನ್ನು ಕಾಪಾಡಿಕೊಳ್ಳಲು ಯತ್ನಿಸುತ್ತಾರೆ. ಇವರು ಯಾವುದೇ ಕಾರಣಕ್ಕೂ ಕ್ಷಮಾರ್ಹರಲ್ಲ. ಶಿಕ್ಷಣ ಕ್ಷೇತ್ರವನ್ನು ಇಂಥ ಅಪಾಯಕಾರಿ ಶಕ್ತಿಗಳ ಹಾವಳಿಯಿಂದ ಮುಕ್ತ ಗೊಳಿಸಬೇಕಾಗಿದೆ. ಇವುಗಳ ಜೊತೆಗೆ ಬಹುತೇಕ ವಿಶ್ವವಿದ್ಯಾನಿಲಯಗಳು ಕಂಡ ಕಂಡವರಿಗೆಲ್ಲ ನೀಡುವ ಗೌರವ ಡಾಕ್ಟರೇಟ್‌ಗಳ ಹಾವಳಿ ಕೂಡ ವಿಪರೀತವಾಗಿದೆ. ಇದಷ್ಟೇ ಅಲ್ಲ ವಿಶ್ವವಿದ್ಯಾನಿಲಯವೊಂದು ನೀಡುವ ನಾಡೋಜ ಪ್ರಶಸ್ತಿ ಕೂಡ ಅಪಾತ್ರರಿಗೆ ಸಲ್ಲುತ್ತಿದೆ. ಸಕ್ಕರೆ ಕಾರ್ಖಾನೆಯ ಮಾಲಕರು, ರಿಯಲ್ ಎಸ್ಟೇಟ್ ಮಂದಿ, ಅಧಿಕಾರದಲ್ಲಿರುವ ರಾಜಕಾರಣಿಗಳು, ಮಠಾಧೀಶರು ಗೌರವ ಡಾಕ್ಟರೇಟ್ ಪದವಿ ಪಡೆದು ಸಂಭ್ರಮಿಸುತ್ತಿದ್ದಾರೆ.ತಮ್ಮ ಹೆಸರಿನ ಮುಂದೆ ಡಾಕ್ಟರ್ ಎಂದು ಬರೆದುಕೊಳ್ಳುತ್ತಿದ್ದಾರೆ. ಇನ್ನು ಮುಂದೆ ಇಂಥದ್ದಕ್ಕೆ ಸರಕಾರ ಅವಕಾಶ ನೀಡಬಾರದು. ಕರ್ನಾಟಕದ ಶಿಕ್ಷಣ ಇಲಾಖೆಗೆ ಒಂದು ಘನತೆಯಿದೆ ಯಾವುದೇ ಕಾರಣಕ್ಕೂ ಅದನ್ನು ಕಳೆದುಕೊಳ್ಳಬಾರದು.

ವಾರ್ತಾ ಭಾರತಿ 24 Feb 2026 8:10 am

ಎರಡು ಎಐ ಡಾಟಾ ಸೋರಿಕೆ ಪ್ರಕರಣ: ಕೋಟ್ಯಂತರ ಮಂದಿಯ ಕೆವೈಸಿ ದಾಖಲೆ ಬಹಿರಂಗ

ಹೊಸದಿಲ್ಲಿ: ಎರಡು ಎಐ ಸಂಬಂಧಿತ ಆ್ಯಪ್ ಗಳಿಂದ ಬೃಹತ್ ಪ್ರಮಾಣದ ದತ್ತಾಂಶಗಳು ಸೋರಿಕೆಯಾಗಿರುವುದನ್ನು ಸೈಬರ್ ಭದ್ರತಾ ತಜ್ಞರು ಪತ್ತೆ ಮಾಡಿದ್ದು, ಇದರಿಂದ ಜಾಗತಿಕವಾಗಿ ಕೋಟ್ಯಂತರ ಬಳಕೆದಾರರ ಸೂಕ್ಷ್ಮ ವೈಯಕ್ತಿಕ ಹಾಗೂ ಮಾಧ್ಯಮ ಕಡತಗಳು ಬಹಿರಂಗಗೊಂಡಿವೆ. ಸೈಬರ್ ನ್ಯೂಸ್ ಈ ಎರಡು ಪ್ರತ್ಯೇಕ ಸೋರಿಕೆಗಳನ್ನು ವರದಿ ಮಾಡಿದ್ದು, ಕೋಟ್ಯಂತರ ದಾಖಲೆಗಳ ವಿಚಾರದಲ್ಲಿ ರಾಜಿ ಮಾಡಿಕೊಳ್ಳಬೇಕಾಗಿದೆ ಎಂದು ಭದ್ರತಾ ಸಂಶೋಧಕರು ಹೇಳಿದ್ದಾರೆ. ಎಐ ಚಾಲಿತ ಕೆವೈಸಿ ಸಾಧನದ ಆ್ಯಪ್ ನಲ್ಲಿ ಮೊದಲ ಸೋರಿಕೆ ವರದಿಯಾಗಿದೆ. ಡಿಜಿಟಲ್ ಗುರುತಿಸುವಿಕೆ ದೃಢೀಕರಣ ಸೇವಾ ಪೂರೈಕೆದಾರ ಕಂಪನಿ ಐಡಿಮೆರಿಟ್ ಇದನ್ನು ಬಳಸುತ್ತಿತ್ತು. ಈ ಕಂಪನಿ ಎಐ-ಚಾಲಿತ ಡಿಜಿಟಲ್ ಗುರುತಿಸುವಿಕೆ ದೃಢೀಕರಣ ಸೊಲ್ಯೂಶನ್ ಪೂರೈಕೆದಾರ ಕಂಪನಿಯಾಗಿದ್ದು, ಫಿನ್ ಟೆಕ್ ಮತ್ತು ಇತರ ಹಣಕಾಸು ಸೇವಾ ವಲಯಗಳಿಗೆ ನೈಜ-ಸಮಯದ ದೃಢೀಕರಣ ಸಾಧನಗಳನ್ನು ಒದಗಿಸುತ್ತದೆ. 2025ರ ನವೆಂಬರ್ 11ರಂದು ದತ್ತಾಂಶ ಸೋರಿಕೆಯಾಗಿರುವುದನ್ನು ನಮ್ಮ ಸಂಶೋಧಕರು ಪತ್ತೆ ಮಾಡಿ ತಕ್ಷಣವೇ ಕಂಪನಿಯನ್ನು ಸಂಪರ್ಕಿಸಿದ್ದರು. ಇದುವರೆಗೆ ಇದನ್ನು ದುರ್ಬಳಕೆ ಮಾಡಿಕೊಂಡ ಬಗ್ಗೆ ಪುರಾವೆಗಳು ಲಭ್ಯವಾಗಿಲ್ಲ ಎಂದು ಸಂಶೋಧಕರು ಹೇಳಿದ್ದಾರೆ. ಈ ಸೋರಿಕೆಯಲ್ಲಿ 26 ದೇಶಗಳ 100 ಕೋಟಿ ಮಂದಿಯ ಸೂಕ್ಷ್ಮ ವೈಯಕ್ತಿಕ ಮಾಹಿತಿಗಳು ಬಹಿರಂಗಗೊಂಡಿವೆ, ಅಮೆರಿಕದ 203 ದಶಲಕ್ಷ ದಾಖಲೆಗಳು ಬಹಿರಂಗವಾಗಿದ್ದು, ಮೆಕ್ಸಿಕೊ (124 ದಶಲಕ್ಷ), ಫಿಲಿಫೀನ್ಸ್ (72 ದಶಲಕ್ಷ) ಮುಂದಿನ ಸ್ಥಾನಗಳಲ್ಲಿವೆ. ಎರಡನೇ ಸೋರಿಕೆ ವಿಡಿಯೊ ಎಐ ಆರ್ಟ್ ಜನರೇಟರ್ ಅಂಡ್ ಮೇಕರ್ ಹೆಸರಿನ ಆ್ಯಂಡ್ರಾಯ್ಡ್ ಆ್ಯಪ್ ಗೆ ಸಂಬಂದಿಸಿದ್ದು, ಇದು ಗೂಗಲ್ ಪ್ಲೇನಲ್ಲಿ 5 ಲಕ್ಷ ಬಾರಿ ಡೌನ್ಲೋಡ್ ಆಗಿದೆ ಹಾಗೂ 11000 ವಿಮರ್ಶೆಯೊಂದಿಗೆ 4.3 ರೇಟಿಂಗ್ ಹೊಂದಿದೆ. ಈ ಸೋರಿಕೆಯಲ್ಲಿ ಸುಮಾರು 15 ಲಕ್ಷ ಬಳಕೆದಾರರ ಚಿತ್ರಗಳು ಹಾಗೂ 3.85 ಲಕ್ಷ ವಿಡಿಯೊಗಳು, ಎಐ ಬಳಸಿ ಬಳಕೆದಾರರು ಸೃಷ್ಟಿಸಿದ್ದ ಲಕ್ಷಾಂತರ ಮೀಡಿಯಾ ಫೈಲ್ ಗಳು ಸೋರಿಕೆಯಾಗಿವೆ ಎಂದು ಸಂಶೋಧಕರು ತಿಳಿಸಿದ್ದಾರೆ.

ವಾರ್ತಾ ಭಾರತಿ 24 Feb 2026 8:00 am

ಮೈಸೂರಲ್ಲಿ ಡ್ರಗ್ಸ್ ಜಾಲ ಭೇದಿಸಿದ ಪೊಲೀಸರು: ಮಾದಕ ವಸ್ತು ಸಾಗಿಸುತ್ತಿದ್ದ ನಾಲ್ವರ ಬಂಧನ

ಡ್ರಗ್ಸ್ ಮುಕ್ತ ಮೈಸೂರನ್ನಾಗಿ ಮಾಡಲು, ಹಲವು ತಿಂಗಳಿಂದ ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದು ಸೋಮಾರವೂ ಡ್ರಗ್ಸ್ ಸಾಗಿಸುತ್ತಿದ್ದ ನಾಲ್ವರನ್ನು ಬಂಧಿಸಲಾಗಿದೆ. 10 ಲಕ್ಷ ಮೌಲ್ಯದ ಡ್ರಗ್ಸ್, 8 ಲಕ್ಷ ಮೌಲ್ಯದ ಕಾರು, ಹಾಗೂ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ.

ವಿಜಯ ಕರ್ನಾಟಕ 24 Feb 2026 7:57 am

Gold Silver Rate : ಗಗನಕ್ಕೇರಿದ ಬಂಗಾರದ ಬೆಲೆ: ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ವಿವರ ಇಲ್ಲಿದೆ

ಮದುವೆ ಹಾಗೂ ಶುಭ ಸಮಾರಂಭಗಳ ಸೀಸನ್ ಭರದಿಂದ ಸಾಗುತ್ತಿರುವಾಗಲೇ ಆಭರಣ ಪ್ರಿಯರಿಗೆ ಚಿನ್ನದ ಮಾರುಕಟ್ಟೆಯಿಂದ ಬಿಗ್ ಶಾಕ್ ಎದುರಾಗಿದೆ. ಜಾಗತಿಕ ಮಾರುಕಟ್ಟೆಯಲ್ಲಿನ ದಿಢೀರ್ ಆರ್ಥಿಕ ಬೆಳವಣಿಗೆಗಳು, ವಿಶೇಷವಾಗಿ ಅಮೆರಿಕದ ಹೊಸ ಸುಂಕ ನೀತಿಗಳ ಪರಿಣಾಮವಾಗಿ ಭಾರತೀಯ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿ ದರ ಗಗನಕ್ಕೇರಿದೆ. ಮಂಗಳವಾರ, ಫೆಬ್ರವರಿ 24, 2026 ರಂದು ಚಿನ್ನದ ಬೆಲೆಯಲ್ಲಿ ನಿನ್ನೆಗಿಂತ ಭಾರಿ

ಒನ್ ಇ೦ಡಿಯ 24 Feb 2026 7:56 am

Credit Card: ಏಪ್ರಿಲ್ 1 ರಿಂದ ಬದಲಾಗಲಿವೆ ಪ್ರಮುಖ ಹಣಕಾಸು ನಿಯಮಗಳು: ಕ್ರೆಡಿಟ್ ಕಾರ್ಡ್ ಬಳಕೆದಾರರು ತಿಳಿದಿರಲೇಬೇಕಾದ ವಿಷಯವಿದು

Credit Card: ಕೇಂದ್ರ ಸರ್ಕಾರವು ಕ್ರೆಡಿಟ್ ಕಾರ್ಡ್‌ ವಿಚಾರದಲ್ಲಿ ಹಲವು ಮಹತ್ವದ ಬದಲಾವಣೆಗಳನ್ನು ಮಾಡಲು ಮುಂದಾಗಿದೆ. ಆನ್‌ಲೈನ್ ಖರೀದಿ ಹಾಗೂ ಯಾವುದಾದರೂ ದೂರದ ಪ್ರಯಾಣ ಬುಕಿಂಗ್‌ಗಳಿಂದ ಹಿಡಿದು ದುಬಾರಿ ವಸ್ತುಗಳು ಹಾಗೂ ಅತ್ಯಗತ್ಯವಾದ ವಸ್ತುಗಳನ್ನು ಖರೀದಿ ಮಾಡುವುದಕ್ಕೆ ಕ್ರೆಡಿಟ್ ಕಾರ್ಡ್‌ಗಳು ಅತ್ಯಂತ ಸಹಕಾರಿಯಾಗಿವೆ. ಭಾರತೀಯರು ಇಎಂಐ ಹಾಗೂ ಕ್ರೆಡಿಟ್ ಕಾರ್ಡ್‌ನ ಮೇಲೆ ಹೆಚ್ಚು ಅವಲಂಬಿತರಾಗಿದ್ದಾರೆ. ಅಲ್ಲದೆ ಕ್ರೆಡಿಟ್

ಒನ್ ಇ೦ಡಿಯ 24 Feb 2026 7:45 am

Jharkhand | ಏರ್ ಆ್ಯಂಬುಲೆನ್ಸ್ ಪತನ : ಏಳು ಮಂದಿಯೂ ಮೃತ್ಯು

ಹೊಸದಿಲ್ಲಿ: ಜಾರ್ಖಂಡ್ ನ ಚಾತ್ರ ಜಿಲ್ಲೆಯ ಸಿಮಾರಿಯಾ ಎಂಬಲ್ಲಿ ಸೋಮವಾರ ಸಂಜೆ ಸಂಭವಿಸಿದ ಅಪಘಾತದಲ್ಲಿ ರಾಂಚಿ-ದೆಹಲಿ ಏರ್ ಆ್ಯಂಬುಲೆನ್ಸ್ನಲ್ಲಿದ್ದ ಎಲ್ಲ ಎಳು ಮಂದಿ ಮೃತಪಟ್ಟಿದ್ದಾರೆ. ಅಪಘಾತಕ್ಕೀಡಾದ ಏರ್ ಆ್ಯಂಬುಲೆನ್ಸ್ನಲ್ಲಿದ್ದ ಎಲ್ಲ ಏಳು ಮಂದಿ ಮೃತಪಟ್ಟಿದ್ದಾರೆ. ವಿಮಾನ ರಾಂಚಿಯಿಂದ ದೆಹಲಿಗೆ ತೆರಳುತ್ತಿತ್ತು ಎಂದು ಚಾತ್ರ ಜಿಲ್ಲಾಧಿಕಾರಿ ಕೀರ್ತಿಶ್ರೀ ಜಿ ಹೇಳಿದ್ದಾರೆ. ರೆಡ್ಬರ್ಡ್ ಏರ್ವೇಸ್ ಪ್ರೈವೇಟ್ ಲಿಮಿಟೆಡ್ ನಿರ್ವಹಿಸುತ್ತಿದ್ದ ಬೀಚ್ಕ್ರಾಫ್ಟ್ ಸಿ90 (ವಿಐ-ಎಜೆವಿ) ರಾಂಚಿ ವಿಮಾನ ನಿಲ್ದಾಣದಿಂದ ರಾತ್ರಿ 7.11ಕ್ಕೆ ಟೇಕಾಫ್ ಆಗಿತ್ತು. 7.30ರ ವೇಳೆಗೆ ಸಂಪರ್ಕ ಕಡಿದುಕೊಂಡು ನಾಪತ್ತೆಯಾಗಿದ್ದ ವಿಮಾನ ಸಿಮಾರಿಯಾ ಬಳಿಯ ಬರಿಯಾಟ್ ಪಂಚಾಯ್ತಿ ಪ್ರದೇಶದಲ್ಲಿ ದಟ್ಟ ಕಾಡಿನ ಒಳಗೆ ಅಪಘಾತಕ್ಕೀಡಾಗಿತ್ತು. ಮೃತಪಟ್ಟ ಎಲ್ಲ ಏಳು ಮಂದಿಯ ಮೃತದೇಹಗಳನ್ನು ಪತ್ತೆ ಮಾಡಲಾಗಿದೆ. ಕ್ಯಾಪ್ಟನ್ ವಿವೇಕ್ ವಿಕಾಸ್ ಭಗತ್, ಕ್ಯಾಪ್ಟನ್ ಸೌರಜ್ದೀಪ್ ಸಿಂಗ್, ಸಂಜಯ್ ಕುಮಾರ್, ಡಾ.ವಿಕಾಸ್ ಕುಮಾರ್ ಗುಪ್ತಾ, ಸಚಿನ್ ಕುಮಾರ್ ಮಿಶ್ರಾ, ಅರ್ಚನಾದೇವಿ ಮತ್ತು ಧುರು ಕುಮಾರ್ ಮೃತ ದುರ್ದೈವಿಗಳು. ಎಂದು ಎಸ್ಡಿಪಿಓ ಶುಭಂ ಖಂಡೇವಾಲ್ ತಿಳಿಸಿದ್ದಾರೆ. ರಾಡಾರ್ ಸಂಪರ್ಕದಿಂದ ಕಡಿದುಕೊಳ್ಳುವ ಮುನ್ನ ಈ ವಿಮಾನ ಕೊಲ್ಕತ್ತಾ ವಾಯು ಸಂಚಾರ ನಿಯಂತ್ರಣ ವ್ಯವಸ್ಥೆಯನ್ನು ರಾತ್ರಿ 7.34ಕ್ಕೆ ಸಂಪರ್ಕಿಸಿತ್ತು. ಹವಾಮಾನ ವೈಪರೀತ್ಯ ಪರಿಸ್ಥಿತಿಯಿಂದಾಗಿ ಬೇರೆ ಮಾರ್ಗವಾಗಿ ತೆರಳಲು ಮನವಿ ಮಾಡಿಕೊಂಡ ತಕ್ಷಣವೇ ಸಂಪರ್ಕ ಕಡಿತಗೊಂಡಿತು ಎಂದು ನಾಗರಿಕ ವಿಮಾನಯಾನ ನಿರ್ದೇಶನಾಲಯ ವಿವರಿಸಿದೆ. ಟೇಕಾಫ್ ಆದ 20 ನಿಮಿಷಗಳಲ್ಲಿ ವಿಮಾನ ಏರ್ ಟ್ರಾಫಿಕ್ ಕಂಟ್ರೋಲ್ನಿಮದ ಸಂಪರ್ಕ ಕಡಿದುಕೊಂಡಿತ್ತು ಎಂದು ರಾಂಚಿ ವಿಮಾನ ನಿಲ್ದಾಣ ನಿರ್ದೇಶಕ ವಿನೋದ್ ಕುಮಾರ್ ಹೇಳಿದ್ದಾರೆ. ಪ್ರತೀಕೂಲ ಹವಾಮಾನ ದುರಂತಕ್ಕೆ ಕಾರಣವಾಗಿರಬೇಕು. ಆದರೆ ತನಿಖೆಯ ಬಳಿಕ ನೈಜ ಕಾರಣ ತಿಳಿಯಲಿದೆ ಎಂದು ಅವರು ತಿಳಿಸಿದ್ದಾರೆ.  

ವಾರ್ತಾ ಭಾರತಿ 24 Feb 2026 7:45 am

ಅಕ್ರಮ ಬಾಂಗ್ಲಾದೇಶಿ ವಲಸಿಗರಿಂದ ಲಂಚ ಸ್ವೀಕರಿಸಿ ಸಿಕ್ಕಿಬಿದ್ದ ಬಿಎಸ್‌ಎಫ್‌ ಕಮಾಂಡಂಟ್‌? 96 ಕೋಟಿ ರೂ. ವೈರಲ್‌ ವಿಡಿಯೋ ಅಸಲಿಯತ್ತೇನು?

ಪ್ರತ್ಯಕ್ಷ ಕಂಡರೂ ಪ್ರಮಾಣಿಸಿ ನೋಡು ಅಂತಾರೆ ನಮ್ಮ ಹಿರಿಯರು. ಅದೇ ರೀತಿ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುವ ಎಲ್ಲಾ ವಿಡಿಯೋಗಳು ಸತ್ಯವಾಗಿರುವುದಿಲ್ಲ. ವ್ಯಕ್ತಿಗಳ ಅಥವಾ ಸಂಸ್ಥೆಗಳ ತೇಜೋವಧೆ ಮಾಡುವ ಇಂತಹ ಸುಳ್ಳು ವಿಡಿಯೋಗಳನ್ನು ನಂಬುವುದಕ್ಕೂ ಮೊದಲು, ಅದರ ಸತ್ಯಾಸತ್ಯತೆಯನ್ನು ಪರಿಶೀಲಿಸಿಕೊಳ್ಳುವುದು ಒಳಿತು. ಇದಕ್ಕೆ ಸಾಕ್ಷಿ 2018ರಲ್ಲಿ ಕಳ್ಳಸಾಗಾಣೆದಾರರಿಂದ ಲಂಚ ಸ್ವೀಕರಿಸಿ ಸಿಕ್ಕಿಬದ್ದ ಬಿಎಸ್‌ಎಫ್‌ ಕಮಾಂಡೆಂಟ್‌ ಜಿಬು ಡಿ. ಮ್ಯಾಥ್ಯೂ ಮತ್ತು ಕಾನ್ಪುರ್‌ ಬಿಲ್ಡರ್‌ ಮನೆಯಲ್ಲಿ ದೊರೆತ 96 ಕೋಟಿ ರೂ. ಹಣದ ಸುಳ್ಳು ವಿಡಿಯೋ ವೈರಲ್‌ ಆಗಿರುವುದು ಸಾಕ್ಷಿ.

ವಿಜಯ ಕರ್ನಾಟಕ 24 Feb 2026 7:04 am

Karnataka Weather: ರಾಜ್ಯಾದ್ಯಂತ ಹೆಚ್ಚಿದ ಬಿಸಿಲಿನ ತಾಪ, ಬೆಂಗಳೂರು ಸೇರಿ ವಿವಿಧ ಜಿಲ್ಲೆಗಳ ಇಂದಿನ ಹವಾಮಾನ ಮಾಹಿತಿ ಇಲ್ಲಿದೆ

ಬೆಂಗಳೂರು: ಫೆಬ್ರವರಿ ಅಂತ್ಯ ಸಮೀಪಿಸುತ್ತಿದ್ದಂತೆ ಕರ್ನಾಟಕದಲ್ಲಿ ಚಳಿಯ ವಾತಾವರಣ ಬಹುತೇಕ ಸಂಪೂರ್ಣವಾಗಿ ಮಾಯವಾಗಿ, ಬೇಸಿಗೆಯ ಬಿಸಿಲು ಹೆಚ್ಚಾಗತೊಡಗಿದೆ. ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಮಳೆಯಾಗುವ ಮುನ್ಸೂಚನೆ ಹಿಂದೆ ಇದ್ದರೂ, ಈಗ ಬಹುತೇಕ ಜಿಲ್ಲೆಗಳಲ್ಲಿ ಒಣ ಹವೆ ಮುಂದುವರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಮುನ್ಸೂಚನೆ ನೀಡಿದೆ. ಮಂಗಳವಾರ, ಫೆಬ್ರವರಿ 24, 2026ರ ಹವಾಮಾನ ವರದಿಯ ಪ್ರಕಾರ, ರಾಜ್ಯದ

ಒನ್ ಇ೦ಡಿಯ 24 Feb 2026 7:02 am

ಹುಬ್ಬಳ್ಳಿ-ಧಾರವಾಡ ವಾಹನ ದಟ್ಟನೆ ನಿಯಂತ್ರಣಕ್ಕೆ ರಿಂಗ್‌ ರೋಡ್‌ ಅಗತ್ಯ :ಯೋಜನೆಗೆ ಬಜೆಟ್‌ನಲ್ಲಿ ಪರಿಹಾರದ ನಿರೀಕ್ಷೆ

ರಿಂಗ್‌ ರೋಡ್‌ ನಿರ್ಮಾಣದ ಯೋಜನೆಗೆ ಒಟ್ಟು 489 ಎಕರೆ ಜಾಗದ ಅವಶ್ಯಕತೆ ಇದ್ದು, ಅಂದಾಜು 876-900 ಕೋಟಿ ವೆಚ್ಚವಾಗಲಿದೆ ಎಂದು ಈ ಹಿಂದೆ ಹುಡಾ ಸರಕಾರಕ್ಕೆ ಸಲ್ಲಿಸಿದ ಡಿಪಿಆರ್‌ ವರದಿಯಲ್ಲಿ ಉಲ್ಲೇಖಿಸಿದೆ.

ವಿಜಯ ಕರ್ನಾಟಕ 24 Feb 2026 6:56 am

Air Ambulance Crash: ಜಾರ್ಖಂಡ್‌ನಲ್ಲಿ ಏರ್ ಆಂಬ್ಯುಲೆನ್ಸ್ ಪತನ; ರೋಗಿ ಸೇರಿ ಏಳು ಮಂದಿ ದುರ್ಮರಣ

ರಾಂಚಿ: ಜಾರ್ಖಂಡ್‌ನಿಂದ ದೆಹಲಿಗೆ ರೋಗಿಯನ್ನು ಹೊತ್ತೊಯ್ಯುತ್ತಿದ್ದ ಏರ್ ಆಂಬ್ಯುಲೆನ್ಸ್ ವಿಮಾನವೊಂದು ಸೋಮವಾರ ರಾತ್ರಿ ಭೀಕರ ಅಪಘಾತಕ್ಕೀಡಾಗಿದ್ದು, ವಿಮಾನದಲ್ಲಿದ್ದ ಎಲ್ಲಾ ಏಳು ಮಂದಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ರೆಡ್‌ಬರ್ಡ್ ಏವಿಯೇಷನ್ ಸಂಸ್ಥೆಗೆ ಸೇರಿದ ಈ ವಿಮಾನವು ಸೋಮವಾರ ಸಂಜೆ 7:11ಕ್ಕೆ ರಾಂಚಿಯಿಂದ ಟೇಕ್ ಆಫ್ ಆಗಿತ್ತು. ಆದರೆ, ಸಂಜೆ 7:34ರ ಸುಮಾರಿಗೆ ಕೋಲ್ಕತ್ತಾದ ಏರ್ ಟ್ರಾಫಿಕ್ ಕಂಟ್ರೋಲ್ (ATC)

ಒನ್ ಇ೦ಡಿಯ 24 Feb 2026 6:44 am

ಶಾಲೆಗೆ ಬರಲು ಆರೇಳು ಕಿಮೀ ನಡಿಗೆ; ಬಸ್‌ ಸೌಲಭ್ಯ ಒದಗಿಸಿದರೆ ಸಾಕು ಬೆಳಗಲಿದೆ ಮಕ್ಕಳ ಭವಿಷ್ಯದ ದೀವಿಗೆ

ಕೋಲಾರ ಜಿಲ್ಲೆ ಮಾಲೂರು ತಾಲೂಕಿನ ಗ್ರಾಮೀಣ ಭಾಗದ ಶಾಲಾ ವಿದ್ಯಾರ್ಥಿಗಳು, ಸೂಕ್ತ ಬಸ್‌ ಸೌಲಭ್ಯವಿಲ್ಲದೇ, ನಿತ್ಯವೂ ಶಾಲೆಗೆ ನಡೆದುಕೊಂಡು ಬರುವ ಪರಿಸ್ಥಿತಿ ಇದೆ. ಈ ಅಲೆದಾಟದಲ್ಲೇ ದಿನದ ಹೆಚ್ಚಿನ ಸಮಯ ಕಳೆದು ಹೋಗುತ್ತಿರುವುದರಿಂದ, ಇದರಿಂದ ಮಕ್ಕಳ ಶಿಕ್ಷಣದ ಮೇಲೂ ದುಷ್ಪರಿಣಾಮ ಬೀರುತ್ತಿದೆ. ಸ್ಥಳೀಯ ಆಡಳಿತ ಈಗಲಾದರೂ ಈ ಸಮಸ್ಯೆಯನ್ನು ಬಗೆಹರಿಸಿ, ಮಕ್ಕಳು ಸರಿಯಾಗಿ ಶಾಲೆ ತಲುಪುವಂತೆ ಸೂಕ್ತ ಬಸ್‌ ಸೌಲಭ್ಯವನ್ನು ಒದಗಿಸಿ ಕೊಡಬೇಕಿದೆ. ಈ ಕುರಿತು ಇಲ್ಲಿದೆ ಹೆಚ್ಚಿನ ಮಾಹಿತಿ.

ವಿಜಯ ಕರ್ನಾಟಕ 24 Feb 2026 5:41 am

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಶೈಕ್ಷಣಿಕ ರಂಗಕ್ಕೆ ಸಿಎಸ್‌ಆರ್‌ ಅಭಯ; ಹಳ್ಳಿ ಶಾಲೆಗಳ ಅಭಿವೃದ್ಧಿಗೆ ಒತ್ತು

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಸ್ವರೂಪ ದಿನದಿಂದ ದಿನಕ್ಕೆ ಬದಲಾಗುತ್ತಿದೆ. ಆಧುನಿಕತೆಯತ್ತ ಮುಖ ಮಾಡುತ್ತಿರುವ ಜಿಲ್ಲೆ, ಎಲ್ಲಾ ರಂಗಗಳಲ್ಲಿ ತೀವ್ರಗತಿಯ ಅಭಿವೃದ್ಧಿಯನ್ನು ಬಯಸಿದೆ. ಅದೇ ರೀತಿ ಜಿಲ್ಲೆಯ ಶೈಕ್ಷಣಿಕ ರಂಗ ಕೂಡ ಅಭಿವೃದ್ಧಿಯ ಬೇಡಿಕೆ ಇಟ್ಟಿದ್ದು, ಇದಕ್ಕೆ ಪೂರಕವಾಗಿ ಜಿಲ್ಲೆಯಲ್ಲಿ ಶಾಲೆ-ಕಾಲೇಜುಗಳ ಅಭಿವೃದ್ಧಿಗೆ ಯೋಜನೆ ರೂಪಿಸಲಾಗಿದೆ. ಪ್ರಮುಖವಾಗಿ ಸಿಎಸ್‌ಆರ್‌ ಅನುದಾನದಡಿ ಹಳ್ಳಿ ಶಾಲೆಗಳನ್ನು ಅಭಿವೃದ್ಧಿಪಡಿಸಲು ಮುಂದಾಗಿದ್ದು, ಸಿಎಸ್‌ಆರ್‌ ಅನುದಾನಲ್ಲಿ ಶಿಕ್ಷಕರ ನೇಮಕಾತಿಗೂ ಮುಂದಡಿ ಇಡಲಾಗಿದೆ. ಈ ಕುರಿತು ಇಲ್ಲಿದೆ ಸಂಪೂರ್ಣ ಮಾಹಿತಿ.

ವಿಜಯ ಕರ್ನಾಟಕ 24 Feb 2026 5:10 am

Air Ambulance Crash: ಜಾರ್ಖಂಡ್‌ನಿಂದ ದೆಹಲಿಗೆ 7 ಜನರನ್ನು ಹೊತ್ತೊಯ್ಯುತ್ತಿದ್ದ ವಿಮಾನ ಪತನ

Air Ambulance Crash: ಜಾರ್ಖಂಡ್‌ನಿಂದ ದೆಹಲಿಗೆ 7 ಜನರನ್ನು ಹೊತ್ತೊಯ್ಯುತ್ತಿದ್ದ ಏರ್ ಆಂಬ್ಯುಲೆನ್ಸ್ ರಾಂಚಿ ಬಳಿ ಸೋಮವಾರ (ಫೆಬ್ರವರಿ 23) ರಾತ್ರಿ ಪತನವಾಗಿದೆ. ಈ ಕುರಿತು ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) ಅಧಿಕೃತ ಮಾಹಿತಿ ನೀಡಿದೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ವಿಮಾನದಲ್ಲಿ ವೈದ್ಯಕೀಯ ಸಿಬ್ಬಂದಿ ಹಾಗೂ ರೋಗಿ ಸೇರಿದಂತೆ ಒಟ್ಟು ಏಳು ಮಂದಿ ಇದ್ದರು ಎನ್ನಲಾಗಿದೆ. ಇನ್ನೂ

ಒನ್ ಇ೦ಡಿಯ 24 Feb 2026 1:07 am

ಜಾರ್ಖಂಡ್‌ನ ಚಾತ್ರದಲ್ಲಿ ಏರ್ ಆ್ಯಂಬುಲೆನ್ಸ್ ಪತನ, ಓರ್ವ ಮೃತ್ಯು

ರಾಂಚಿ, ಫೆ. 23: ಇಬ್ಬರು ಸಿಬ್ಬಂದಿ ಸೇರಿದಂತೆ 7 ಮಂದಿ ಇದ್ದ ಏರ್ ಆ್ಯಂಬುಲೆನ್ಸ್ ಚಾತ್ರ ಜಿಲ್ಲೆಯ ಸಿಮರಿಯ ಸಮೀಪ ಪತನಗೊಂಡಿದ್ದು, ಓರ್ವ ಮೃತಪಟ್ಟಿರುವುದಾಗಿ ನಾಗರಿಕ ವಿಮಾನ ಯಾನ ಮಹಾ ನಿರ್ದೇಶನಾಲಯ (ಡಿಜಿಸಿಎ) ಸೋಮವಾರ ತಿಳಿಸಿದೆ. ಈ ಏರ್ ಆ್ಯಂಬುಲೆನ್ಸ್ ರಾಂಚಿ ವಿಮಾನ ನಿಲ್ದಾಣದಿಂದ ಹಾರಾಟ ಆರಂಭಿಸಿದ ಕೂಡಲೇ ರಾಡರ್‌ ನಿಂದ ಸಂಪರ್ಕ ಕಳೆದುಕೊಂಡಿತ್ತು ಎಂದು ಅದು ಹೇಳಿದೆ. ರೆಡ್ ಬರ್ಡ್ ಏರ್‌ವೇಸ್ ನಿರ್ವಹಿಸುತ್ತಿದ್ದ ಈ ಏರ್ ಆ್ಯಂಬುಲೆನ್ಸ್ ರಾಂಚಿ ಹಾಗೂ ದಿಲ್ಲಿ ನಡುವೆ ಹಾರಾಟ ನಡೆಸುತ್ತಿತ್ತು. ಅಪಘಾತಕ್ಕೀಡಾದ ವಿಮಾನದಲ್ಲಿ ರೋಗಿ, ವೈದ್ಯರು, ಅರೆವೈದ್ಯಕೀಯ ಸಿಬ್ಬಂದಿ ಹಾಗೂ ವಿಮಾನದ ಸಿಬ್ಬಂದಿ ಇದ್ದರೆಂದು ತಿಳಿದುಬಂದಿದೆ. ಅವಘಡದಲ್ಲಿ ಮೃತಪಟ್ಟವರನ್ನು ಸಂಜಯ್ ಕುಮಾರ್ ಎಂದು ಗುರುತಿಸಲಾಗಿದೆ. ಸುಟ್ಟಗಾಯಗಳ ಚಿಕಿತ್ಸೆಗಾಗಿ ಅವರನ್ನು ದಿಲ್ಲಿಗೆ ಕರೆದೊಯ್ಯಲಾಗುತ್ತಿತ್ತು. ಶೋಧ ಮತ್ತು ರಕ್ಷಣಾ ತಂಡ ಸ್ಥಳದಲ್ಲಿ ಕಾರ್ಯಾಚರಣೆ ನಡೆಸುತ್ತಿದೆ ಎಂದು ನಾಗರಿಕ ವಿಮಾನ ಯಾನ ಮಹಾ ನಿರ್ದೇಶನಾಲಯ ತಿಳಿಸಿದೆ.

ವಾರ್ತಾ ಭಾರತಿ 23 Feb 2026 11:51 pm

ಜಾರ್ಖಂಡ್‌ನಲ್ಲಿ ವಿಮಾನ ಪತನ: ರೋಗಿ, ವೈದ್ಯ ಸೇರಿ 7 ಮಂದಿಯನ್ನು ಸಾಗಿಸುತ್ತಿದ್ದ ಏರ್‌ ಆಂಬ್ಯುಲೆನ್ಸ್‌!

ಜಾರ್ಖಂಡ್‌ನಲ್ಲಿ 7 ಜನರನ್ನು ಹೊತ್ತೊಯ್ಯುತ್ತಿದ್ದ ವಿಮಾನ ಪತನಗೊಂಡಿದೆ. ಈ ಬಗ್ಗೆ ನಾಗರಿಕ ವಿಮಾನಯಾನ ನಿರ್ದೇಶನಾಲಯ ತಿಳಿಸಿದೆ. ​ರೆಡ್‌ಬರ್ಡ್ ಏರ್‌ವೇಸ್ ಪ್ರೈವೇಟ್ ಲಿಮಿಟೆಡ್‌ ಸಂಸ್ಥೆ ಸೇರಿದ ವಿಮಾನ ಇದಾಗಿದ್ದು, ಇಬ್ಬರು ಪೈಲಟ್‌, ರೋಗಿಗಳು ಸಹಾಯಕರು ಮೃತಪಟ್ಟಿದ್ದಾರೆ. ಈ ಬಗ್ಗೆ ಹೆಚ್ಚಿನ ವಿವರ ಇಲ್ಲಿದೆ.

ವಿಜಯ ಕರ್ನಾಟಕ 23 Feb 2026 11:34 pm

ಅಫಜಲಪುರ | ಸಂಪರ್ಕ ರಸ್ತೆಗಳ ಅಭಿವೃದ್ಧಿಯಿಂದ ದೇಶ ಅಭಿವೃದ್ಧಿ : ಶಾಸಕ ಎಂ.ವೈ.ಪಾಟೀಲ್

ನೂತನ ಬಸ್ ನಿಲ್ದಾಣಕ್ಕೆ ಶಂಕುಸ್ಥಾಪನೆ

ವಾರ್ತಾ ಭಾರತಿ 23 Feb 2026 11:31 pm

ಕೆಂಭಾವಿ | ಎತ್ತು ಕಳವು ಆರೋಪಿಯ ಬಂಧನ

ಕೆಂಭಾವಿ : ಎತ್ತುಗಳನ್ನು ಕಳವು ಮಾಡಿದ ಆರೋಪದಲ್ಲಿ ವ್ಯಕ್ತಿಯೋರ್ವನನ್ನು ಕೆಂಭಾವಿ ಪೊಲೀಸರು ಬಂಧಿಸಿದ್ದಾರೆ. ಕೆಂಭಾವಿ ನಿವಾಸಿ ಶರಣಪ್ಪ ಜಟೆಪ್ಪ ಕಟ್ಟಿಮನಿ ಬಂಧಿತ ಆರೋಪಿ. ಕೆಂಭಾವಿ ನಿವಾಸಿ ಮಲ್ಲಣ್ಣ ಎಂಬವರಿಗೆ ಸೇರಿದ ಸುಮಾರು 75,000 ರೂ. ಬೆಲೆಬಾಳುವ ಎತ್ತು ಫೆ. 20ರಂದು ರಾತ್ರಿ ಕಳುವಾಗಿತ್ತು. ರೈತ ಮಲ್ಲಣ್ಣ ಅವರು ಯಡ್ರಾಮಿ, ದೇವದುರ್ಗ ಸೇರಿದಂತೆ ಸುತ್ತಮುತ್ತಲಿನ ಸಂತೆ ಮತ್ತು ಜಾತ್ರೆಗಳಲ್ಲಿ ಹುಡುಕಾಡಿದರೂ ಎತ್ತು ಪತ್ತೆಯಾಗಿರಲಿಲ್ಲ. ಈ ಕುರಿತು ಅವರು ಕೆಂಭಾವಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ರೈತನ ದೂರಿನ ಗಂಭೀರತೆಯನ್ನು ಅರಿತ ಕೆಂಭಾವಿ ಕ್ರೈಮ್ ಪಿಎಸ್‌ಐ ಹಣಮಂತ್ರಾಯ ಸಿದ್ದಾಪುರ ಅವರು ತಕ್ಷಣ ಕಾರ್ಯಪ್ರವೃತ್ತರಾಗಿ ತಮ್ಮ ತಂಡದೊಂದಿಗೆ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದು, ಎತ್ತನ್ನು ವಶಪಡಿಸಿಕೊಂಡಿದ್ದಾರೆ. ರೈತ ಮಲ್ಲಣ್ಣ ಸಾಕಿದ ಎತ್ತನ್ನು ಮರಳಿ ಕೊಡಿಸಿದ ಕೆಂಭಾವಿ ಪೊಲೀಸರ ಕೆಲಸಕ್ಕೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ವಾರ್ತಾ ಭಾರತಿ 23 Feb 2026 11:25 pm

ಬಳ್ಳಾರಿ | ವಿವಿಧ ಯೋಜನೆಗಳ ಸೌಲಭ್ಯ ವಿತರಣೆ

ಬಳ್ಳಾರಿ : ಪಟ್ಟಣದ ಸಂಡೂರು ತಾಲೂಕು ಪಂಚಾಯಿತಿ ಆವರಣದಲ್ಲಿ ಇಂದು ಸಂಡೂರು ತಾಲೂಕಿನ ವಿವಿಧ ಸರ್ಕಾರಿ ಯೋಜನೆಗಳ ಫಲಾನುಭವಿಗಳಿಗೆ ಸೌಲಭ್ಯ ವಿತರಣೆ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಸಂಡೂರು ವಿಧಾನಸಭಾ ಕ್ಷೇತ್ರದ ಶಾಸಕಿ ಅನ್ನಪೂರ್ಣ ಈ ತುಕಾರಾಮ್ ಹಾಗೂ ಅಖಂಡ ಬಳ್ಳಾರಿ ಜಿಲ್ಲಾ ಸಂಸದ ಈ ತುಕಾರಾಮ್ ಭಾಗವಹಿಸಿ ಫಲಾನುಭವಿಗಳಿಗೆ ನೇರವಾಗಿ ಸೌಲಭ್ಯಗಳನ್ನು ವಿತರಿಸಿದರು. ಈ ಸಂದರ್ಭದಲ್ಲಿ ಸಾರ್ವಜನಿಕರ ಕುಂದುಕೊರತೆಗಳು ಮತ್ತು ಅಹವಾಲುಗಳನ್ನು ಸ್ವೀಕರಿಸಿದ ಜನಪ್ರತಿನಿಧಿಗಳು, ಜನರ ಸಮಸ್ಯೆಗಳನ್ನು ಮನಗಂಡು ಸಂಬಂಧಿಸಿದ ಅಧಿಕಾರಿಗಳಿಗೆ ತಕ್ಷಣ ಕ್ರಮ ಕೈಗೊಳ್ಳುವಂತೆ ಸೂಚಿಸಿದರು. ಸರ್ಕಾರದ ವಿವಿಧ ಯೋಜನೆಗಳು ನಿಜವಾದ ಅರ್ಹ ಫಲಾನುಭವಿಗಳಿಗೆ ತಲುಪುವಂತೆ ನಿರಂತರ ಪರಿಶೀಲನೆ ನಡೆಸಲಾಗುತ್ತಿದೆ ಎಂದು ತಿಳಿಸಿದರು. “ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸುವುದು ನಮ್ಮ ಮೊದಲ ಆದ್ಯತೆ. ಜನಸೇವೆ ನಮ್ಮ ಧ್ಯೇಯವಾಗಿದ್ದು, ಇನ್ನಷ್ಟು ಜನಪರ ಕಾರ್ಯಕ್ರಮಗಳನ್ನು ಕೈಗೊಳ್ಳುವ ಸಂಕಲ್ಪ ಹೊಂದಿದ್ದೇವೆ” ಎಂದು ಶಾಸಕಿ ಹಾಗೂ ಸಂಸದರು ಅಭಿಪ್ರಾಯಪಟ್ಟರು. ಕಾರ್ಯಕ್ರಮದಲ್ಲಿ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಮಡಗಿನಬಸಪ್ಪ, ಅಕ್ಷಯ್ ಲಾಡ್, ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

ವಾರ್ತಾ ಭಾರತಿ 23 Feb 2026 11:07 pm

ವಿಜಯನಗರ | ಸಂಪೂರ್ಣ ಒಳಮೀಸಲಾತಿ ಜಾರಿಗೆ ಆಗ್ರಹಿಸಿ ಪ್ರತಿಭಟನೆ

ವಿಜಯನಗರ : ರಾಜ್ಯಾದ್ಯಂತ ಸಂಪೂರ್ಣ ಒಳಮೀಸಲಾತಿ ಜಾರಿಗೆ ಕರೆ ನೀಡಿರುವ ಹಿನ್ನೆಲೆ, ವಿಜಯನಗರ ಜಿಲ್ಲೆಯಲ್ಲಿ ಸಾಮಾಜಿಕ ನ್ಯಾಯಕ್ಕಾಗಿ ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಜಾರಿ ಹೋರಾಟ ಸಮಿತಿಯ ನೇತೃತ್ವದಲ್ಲಿ ವಿವಿಧ ಸಂಘಟನೆಗಳ ಮುಖಂಡರು ಜಿಲ್ಲಾ ಆಡಳಿತ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದರು. ರಾಜ್ಯ ಸಂಚಾಲಕ ಕರಿಯಪ್ಪ ಗುಡಿಮನಿ ಮಾತನಾಡಿ, ಸರ್ಕಾರ ಒಳಮೀಸಲಾತಿ ಜಾರಿ ಮಾಡಿದರೂ ಕಳೆದ ಆರು ತಿಂಗಳಾದರೂ ಸಂಪೂರ್ಣವಾಗಿ ಜಾರಿಯಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಸಮಾಜ ಕಲ್ಯಾಣ ಇಲಾಖೆ ಸಚಿವ ಎಚ್.ಸಿ.ಮಹದೇವಪ್ಪ ಒಳಮೀಸಲಾತಿ ವಿಚಾರದಲ್ಲಿ ಸ್ವಜಾತಿ ಪರ ನಿಲುವು ತಾಳಿದ್ದಾರೆ ಎಂದು ಆರೋಪಿಸಿದರು. ಒಳಮೀಸಲಾತಿ ವಿರೋಧಿ ಬಲಗೈ ವಿದ್ಯಾರ್ಥಿ ಒಕ್ಕೂಟ ರಚನೆಗೂ ಸಚಿವರು ಕಾರಣರಾಗಿದ್ದಾರೆ ಎಂದು ದೂರಿದರು. ಮಾದಿಗರ ಒಳಮೀಸಲಾತಿ ಹೋರಾಟವು ಕೇವಲ ಒಂದು ಜಾತಿಗಾಗಿ ಅಲ್ಲದೆ ರಾಜ್ಯದ 101 ಪರಿಶಿಷ್ಟ ಜಾತಿ ಸಮುದಾಯಗಳಿಗೆ ನ್ಯಾಯ ಒದಗಿಸುವ ಉದ್ದೇಶದಿಂದ ನಡೆದದ್ದಾಗಿದೆ. ವಿಶೇಷವಾಗಿ ಬಿಕ್ಷಕ ಸಮುದಾಯಕ್ಕೆ ಮೊದಲು ನ್ಯಾಯ ನೀಡಬೇಕಾಗಿತ್ತು, ಆದರೆ ಸರ್ಕಾರ ದ್ರೋಹ ಮಾಡಿದೆ ಎಂದು ಹೇಳಿದರು. ಸರ್ಕಾರವು ನ್ಯಾಯಮೂರ್ತಿ ಎಚ್.ಎನ್. ನಾಗಮೋಹನ ದಾಸ್ ಅವರ ಅಧ್ಯಕ್ಷತೆಯಲ್ಲಿ ಆಯೋಗ ರಚಿಸಿತ್ತು. ಆಗಸ್ಟ್ 19 ಮತ್ತು 20ರಂದು ನಡೆದ ಅಧಿವೇಶನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜಕೀಯ ತೀರ್ಮಾನ ಕೈಗೊಂಡು ಒಳಮೀಸಲಾತಿ ಜಾರಿ ಮಾಡಿದರು. ಆದರೆ ಅಲೆಮಾರಿ ಸಮುದಾಯಕ್ಕೆ ನಿರೀಕ್ಷಿತ ನ್ಯಾಯ ಸಿಗಲಿಲ್ಲ ಎಂದು ಆರೋಪಿಸಿದರು. ಬೆಂಗಳೂರು ವಿಧಾನಸೌಧ ಹಾಗೂ ಬೆಳಗಾವಿ ಸರ್ಕ್ಯೂಟ್ ಹೌಸ್‌ನಲ್ಲಿ ನಡೆದ ಸಭೆಗಳಲ್ಲಿ ಅಲೆಮಾರಿ ಸಮುದಾಯಕ್ಕೆ ವಿಶೇಷ ಪ್ಯಾಕೇಜ್ ಘೋಷಿಸುವ ಭರವಸೆ ನೀಡಲಾಗಿತ್ತು. ಆದರೆ ಇದುವರೆಗೆ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಹೇಳಿದರು. ಬರುವ ಮಾ.6ರ ಬಜೆಟ್ ಅಧಿವೇಶನದಲ್ಲೇ ಸಂಪೂರ್ಣ ಒಳಮೀಸಲಾತಿ ಜಾರಿ ಮಾಡಿ, ಅಲೆಮಾರಿ ಸಮುದಾಯಕ್ಕೆ ವಿಶೇಷ ಪ್ಯಾಕೇಜ್ ಘೋಷಿಸಬೇಕು ಎಂದು ಒತ್ತಾಯಿಸಿದರು. ಮನವಿ ಪತ್ರದಲ್ಲಿ ಉಲ್ಲೇಖಿಸಿರುವ ಏಳು ಬೇಡಿಕೆಗಳನ್ನು ಈಡೇರಿಸುವಂತೆ ಉಸ್ತುವಾರಿ ಸಚಿವರ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು. ಹೋರಾಟದಲ್ಲಿ ನಗರಸಭೆ ಮಾಜಿ ಸದಸ್ಯ ಗೋವಿಂದರಾಜ್ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು ಮಾತನಾಡಿದರು. ನೂರಾರು ಸಂಖ್ಯೆಯಲ್ಲಿ ಕಾರ್ಯಕರ್ತರು ಭಾಗವಹಿಸಿ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದರು.

ವಾರ್ತಾ ಭಾರತಿ 23 Feb 2026 10:54 pm

ಹೊಸಪೇಟೆ | ಪರೀಕ್ಷಾ ಪೂರ್ವ ತಯಾರಿ ಅಂಗವಾಗಿ ವಿಶೇಷ ಉಪನ್ಯಾಸ

ವಿಜಯನಗರ : ಜಿಲ್ಲೆಯ ಹೊಸಪೇಟೆ ತಾಲ್ಲೂಕಿನ ನಾಗೇನಹಳ್ಳಿ ಗ್ರಾಮದ ಸರ್ಕಾರಿ ಉನ್ನತಕರಿಸಿದ ಪ್ರೌಢ ಶಾಲೆಯಲ್ಲಿ ಫೆಬ್ರವರಿ 22 ರಂದು ಪರೀಕ್ಷಾ ಪೂರ್ವ ತಯಾರಿಯ ಅಂಗವಾಗಿ ವಿಶೇಷ ಉಪನ್ಯಾಸ ಹಾಗೂ ಸಂವಾದ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಇದೇ ಶಾಲೆಯ ಹಳೆಯ ವಿದ್ಯಾರ್ಥಿ ಹಾಗೂ ಪ್ರಸ್ತುತ ಮಣಿಪಾಲ ಆಸ್ಪತ್ರೆಯಲ್ಲಿ ಮನೋವೈದ್ಯರಾಗಿರುವ ಡಾ. ವಿರೂಪಾಕ್ಷ ದೇವರಮನೆ ಅವರು ವಿದ್ಯಾರ್ಥಿಗಳೊಂದಿಗೆ ಆತ್ಮೀಯವಾಗಿ ಸಂವಾದ ನಡೆಸಿದರು. ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ಕೀಳಿರಿಮೆ ಹಾಗೂ ಸೋಮಾರಿತನ ಎಂಬ ಎರಡು ದುರ್ಗುಣಗಳೇ ವಿದ್ಯಾರ್ಥಿಗಳ ಅತ್ಯಂತ ದೊಡ್ಡ ಶತ್ರುಗಳು. ಇವುಗಳನ್ನು ಜಯಿಸಿದಾಗಲೇ ಜೀವನದಲ್ಲಿ ಖಚಿತ ಯಶಸ್ಸು ಸಾಧಿಸಬಹುದು” ಎಂದು ಹೇಳಿದರು. ಸರಳತೆಯಲ್ಲಿಯೇ ಮಹತ್ತರ ಸಾಧನೆ ಮಾಡಿದ ಅನೇಕ ಸಾಧಕರ ಉದಾಹರಣೆಗಳನ್ನು ನೀಡುತ್ತ ವಿದ್ಯಾರ್ಥಿಗಳಿಗೆ ಪ್ರೇರಣೆ ನೀಡಿದರು. ಉತ್ತಮ ಸ್ನೇಹಿತರ ಆಯ್ಕೆ ಅಗತ್ಯ ಪ್ರೌಢವಸ್ಥೆಯಲ್ಲಿ ಪೋಷಕರು ಮತ್ತು ಶಿಕ್ಷಕರಿಗಿಂತ ಸ್ನೇಹಿತರ ಸಲಹೆಗೆ ಹೆಚ್ಚು ಪ್ರಾಮುಖ್ಯತೆ ನೀಡುವ ಪ್ರವೃತ್ತಿ ಹೆಚ್ಚಿರುವುದನ್ನು ಉಲ್ಲೇಖಿಸಿ, “ಈ ವಯಸ್ಸಿನಲ್ಲಿ ಉತ್ತಮ ಗುಣಗಳಿರುವ ಸ್ನೇಹಿತರನ್ನೇ ಆಯ್ಕೆ ಮಾಡಿಕೊಳ್ಳಬೇಕು. ಅದು ಭವಿಷ್ಯದ ಯಶಸ್ಸಿಗೆ ಮಾರ್ಗದರ್ಶಿಯಾಗುತ್ತದೆ” ಎಂದು ಸಲಹೆ ನೀಡಿದರು. ಜೀವನದಲ್ಲಿ ಸಂಭವಿಸುವ ಋಣಾತ್ಮಕ ಘಟನೆಗಳನ್ನು ಮರೆತು ಧನಾತ್ಮಕ ಅಂಶಗಳನ್ನು ನೆನಪಿನಲ್ಲಿ ಇಟ್ಟು ಮುಂದುವರಿಯಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿ ಪ್ರಶ್ನೆಗಳನ್ನು ಕೇಳಿ ತಮ್ಮ ಸಂಶಯಗಳನ್ನು ನಿವಾರಿಸಿಕೊಂಡರು. ಶಾಲೆಯ ಮುಖ್ಯೋಪಾಧ್ಯಾಯರು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ವಾರ್ತಾ ಭಾರತಿ 23 Feb 2026 10:48 pm

ಫಾದರ್ ಮುಲ್ಲರ್ ವೈದ್ಯಕೀಯ ಕಾಲೇಜಿನಲ್ಲಿ ಪ್ರಸೂತಿ ಶಾಸ್ತ್ರ ಕಾರ್ಯಾಗಾರ

ಮಂಗಳೂರು: ಕಂಕನಾಡಿಯ ಫಾದರ್ ಮುಲ್ಲರ್ ವೈದ್ಯಕೀಯ ಕಾಲೇಜಿನ ಪ್ರಸೂತಿ ಮತ್ತು ಸ್ತ್ರೀರೋಗ ಶಾಸ್ತ್ರ ವಿಭಾಗದ ವತಿಯಿಂದ ಸ್ನಾತಕೋತ್ತರ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಳ್ಳಲಾಗಿದ್ದ ಎಫ್‌ಒಸಿಐಎಲ್ 2026 ಕಾರ್ಯಾಗಾರ ಇತ್ತೀಚೆಗೆ ಕಾಲೇಜಿನ ದಶಮಾನೋತ್ಸವ ಸ್ಮಾರಕ ಸಭಾಂಗಣದಲ್ಲಿ ಶನಿವಾರ ಯಶಸ್ವಿಯಾಗಿ ನಡೆಯಿತು. ಕಾರ್ಯಕ್ರಮವನ್ನು ಧಾರವಾಡದ ಎಸ್‌ಡಿಎಮ್ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಪ್ರೊಫೆಸರ್ ಡಾ. ರತ್ನಮಾಲಾ ಎಂ. ದೇಸಾಯಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ವೈದ್ಯಕೀಯ ಕ್ಷೇತ್ರದಲ್ಲಿ ನಿರಂತರ ಕಲಿಕೆ ಮತ್ತು ಪ್ರಾಯೋಗಿಕ ನೈಪುಣ್ಯತೆ ಅತ್ಯಗತ್ಯ ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಫಾದರ್ ಮುಲ್ಲರ್ ಚಾರಿಟೇಬಲ್ ಸಂಸ್ಥೆಗಳ ನಿರ್ದೇಶಕ ಫಾ. ಫಾಸ್ಟಿನ್ ಲ್ಯೂಕಾಸ್ ಲೋಬೋ ಸಮಾರಂಭದ ಅಧ್ಯಕ್ಷತೆ ವಹಿಸಿ ಆಶೀರ್ವಚನ ನೀಡಿದರು. ಹೈದರಾಬಾದ್‌ನ ಫರ್ನಾಂಡಿಸ್ ಆಸ್ಪತ್ರೆಯ ಡಾ. ಕಾಮೇಶ್ವರಿ ಸುರಂಪುಡಿ ಮತ್ತು ಡಾ. ವಿಶಾಖಾ ನಾಗರಾಜ್ ಗೌರವ ಅತಿಥಿಗಳಾಗಿ ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ವಿಭಾಗದ ಹಿರಿಯ ನಿವೃತ್ತ ಪ್ರಾಧ್ಯಾಪಕಿ ಡಾ. ಪ್ರೇಮಾ ಡಿಕುನ್ಹಾ ಅವರನ್ನು ಅವರ ಸುದೀರ್ಘ ಮತ್ತು ಸಮರ್ಪಣಾ ಮನೋಭಾವದ ಸೇವೆಯನ್ನು ಗುರುತಿಸಿ ಸನ್ಮಾನಿಸಲಾಯಿತು. *ಶೈಕ್ಷಣಿಕ ಗೋಷ್ಠಿ, ಕಾರ್ಯಾಗಾರ: ದಿನವಿಡೀ ನಡೆದ ಕಾರ್ಯಕ್ರಮದಲ್ಲಿ ವಿವಿಧ ವಿಷಯಗಳ ಕುರಿತು ತಜ್ಞರಿಂದ ಮಾಹಿತಿ ವಿನಿಮಯ ನಡೆಯಿತು. ಅಲ್ಟ್ರಾಸೌಂಡ್ ಮತ್ತು ಪೆಲ್ವಿಕ್ ಅನ್ಯಾಟಮಿ ಬಗ್ಗೆ ಡಾ. ಮಹೇಶ್, ಡಾ. ಪ್ರತಿಮಾ ಮತ್ತು ಡಾ. ಅಂಜುಮ್ ಇಫ್ತಿಕರ್, ಸಿಟಿಜಿ ಮತ್ತು ದಾಖಲಾತಿ: ಡಾ. ರತ್ನಮಾಲಾ ದೇಸಾಯಿ ಮತ್ತು ಡಾ. ಸುಜಯಾ ವಿ. ರಾವ್ ಮಾಹಿತಿ ನೀಡಿದರು. ಪ್ರಾಯೋಗಿಕ ತರಬೇತಿಯಲ್ಲಿ ಡಾ. ಶ್ರದ್ಧಾ ಶೆಟ್ಟಿ, ಡಾ. ಜಾಯ್ಲಿನ್ ಡಾಲ್ಮಿಡಾ, ಡಾ. ಶಾನನ್ ಫೆರ್ನಾಂಡಿಸ್, ಡಾ. ಚೇತನಾ ಬೋಳಂತಕೋಡಿ ಮತ್ತು ಡಾ. ಅಲ್ವೀರಾ ಡಿಸೋಜ, ಒತ್ತಡ ನಿರ್ವಹಣೆ ಬಗ್ಗೆ ಖ್ಯಾತ ಮನೋವೈದ್ಯೆ ಡಾ. ಕ್ಯಾರೋಲಿನ್ ಡಿಸೋಜ ಅವರು ಮಾನಸಿಕ ಒತ್ತಡ ನಿರ್ವಹಣೆಯ ಕುರಿತು ಮಾರ್ಗದರ್ಶನ ನೀಡಿದರು. ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿ ಹೈದರಾಬಾದ್‌ನ ತಜ್ಞರಿಂದ ‘ಪೆರಿನಿಯಲ್ ಟಿಯರ್ ರಿಪೇರ್’ ಕುರಿತು ಕಾರ್ಯಾಗಾರ ನಡೆಯಿತು. ವಿಭಾಗದ ಮುಖ್ಯಸ್ಥ ಡಾ. ಮಹೇಶ ನಾವಡ ಸ್ವಾಗತಿಸಿದರು. ಸಂಘಟನಾ ಕಾರ್ಯದರ್ಶಿ ಡಾ. ಏಕ್ತಾ ಎಂ. ಶೆಟ್ಟಿ ವಂದಿಸಿದರು, ಡಾ. ಜ್ಯೋತ್ಸ್‌ನಾ ಕೋಯೆಲ್ಹೊ ಸಹಕರಿಸಿದರು. ಡಾ. ಲಿಜಾ ಮೆಲಿಟಾ ಪಿಂಟೊ , ಡಾ. ನಿಶ್ಮಿತಾ ರೊಡ್ರಿಗಸ್ ಮತ್ತು ಡಾ. ನಿಕಿತಾ ಜೇಮ್ಸ್ ಕಾರ್ಯಕ್ರಮ ನಿರೂಪಿಸಿದರು. ಸುಮಾರು 100ಕ್ಕೂ ಹೆಚ್ಚು ಸ್ನಾತಕೋತ್ತರ ವಿದ್ಯಾರ್ಥಿಗಳು ಈ ಶಿಬಿರದ ಪ್ರಯೋಜನ ಪಡೆದರು.  

ವಾರ್ತಾ ಭಾರತಿ 23 Feb 2026 10:46 pm

Bengaluru | ಅಧಿಕಾರಿಗಳ ಸೋಗಿನಲ್ಲಿ 24 ಲಕ್ಷ ರೂ. ಸುಲಿಗೆ ಆರೋಪ: ಒಂಬತ್ತು ಮಂದಿಯ ಬಂಧನ

ಬೆಂಗಳೂರು, ಫೆ.23 : ಮಾನವ ಹಕ್ಕುಗಳ ಸಂರಕ್ಷಣೆ ಮತ್ತು ಭ್ರಷ್ಟಾಚಾರ ನಿಗ್ರಹ ದಳ‌ ಅಧಿಕಾರಿಗಳ ಸೋಗಿನಲ್ಲಿ 24 ಲಕ್ಷ ರೂ., ಹಣ ಸುಲಿಗೆ ಮಾಡಿರುವ ಆರೋಪದಡಿ 9 ಆರೋಪಿಗಳನ್ನು ದೇವನಹಳ್ಳಿ ಠಾಣಾ ಪೊಲೀಸರು ಬಂಧಿಸಿದ್ದಾರೆ. ದೇವನಹಳ್ಳಿ ಹೊರವಲಯದ ಪ್ರಸನ್ನಹಳ್ಳಿ ರಸ್ತೆಯಲ್ಲಿ ಈ ಘಟನೆ ನಡೆದಿದ್ದು, ಸದ್ಯ ಪ್ರಕರಣಕ್ಕೆ ಸಂಬಂಧಿದಂತೆ 12 ಜನರ ಪೈಕಿ ಕೃಷ್ಣಕುಮಾರ್, ವೇಣುಗೋಪಾಲ್, ಸಂಪಂಗಿ ರಾಮ, ನಾರಾಯಣಸ್ವಾಮಿ, ವೆಂಕಟೇಶ, ಮುರುಗೇಶನ್, ಶಿವ ಸೇರಿದಂತೆ 9 ಮಂದಿಯನ್ನು ಬಂಧಿಸಿ ಹಣವನ್ನು ಜಪ್ತಿ ಮಾಡಲಾಗಿದೆ. ಶಂಕರಪ್ಪ ಎಂಬುವವರಿಗೆ ಹಣ ದುಪ್ಪಟ್ಟು ಮಾಡಿಕೊಡುವುದಾಗಿ ಆರೋಪಿ ಕೃಷ್ಣ ಕುಮಾರ್​​​ ಹೇಳಿದ್ದು, ಅದರಂತೆ ಶಂಕರಪ್ಪ ಚಿನ್ನಾಭರಣ ಅಡವಿಟ್ಟು 24 ಲಕ್ಷ ರೂ ಹಣವನ್ನು ತಂದಿದ್ದಾರೆ. ಇತ್ತ ಮೊದಲೇ ಮಾಡಿಕೊಂಡಿದ್ದ ಸಂಚಿ​​ನಂತೆ ಖಾಸಗಿ ಕಾರಿನಲ್ಲಿ ಕೃಷ್ಣ ಕುಮಾರ್ ಸಹಚರರು ಮಾನವ ಹಕ್ಕುಗಳ ಸಂರಕ್ಷಣೆ ಮತ್ತು ಭ್ರಷ್ಟಾಚಾರ ನಿಗ್ರಹ ದಳ‌ ಹೆಸರಿನಲ್ಲಿ ಖಾಸಗಿ‌ ಕಾರ್​​ಗೆ ಫಲಕ ಹಾಕಿಕೊಂಡು ಅಧಿಕಾರಿಗಳ ಸೋಗಿನಲ್ಲಿ ಬಂದು 24 ಲಕ್ಷ ರೂ ಹಣವನ್ನು ದೋಚಿ ಪರಾರಿಯಾಗಿದ್ದಾರೆ. ಹಣ ಎಗರಿಸಿದ ನಂತರ ಆರೋಪಿ ಕೃಷ್ಣಕುಮಾರ್​​ ಪೊಲೀಸ್ ಠಾಣೆಗೆ ಬಂದು ತಾನೇ ದೂರು ನೀಡಿದ್ದ. ಪೊಲೀಸರ ವಿಚಾರಣೆ ವೇಳೆ ದೂರು‌ ನೀಡಿದ್ದ ಆರೋಪಿಯೇ ದರೋಡೆಕೋರ ಎನ್ನುವುದು ಬಯಲಾಗಿದೆ. ಸದ್ಯ ದೇವನಹಳ್ಳಿ ಠಾಣೆ ಪೊಲೀಸರು 12 ಜನರಲ್ಲಿ 9 ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.

ವಾರ್ತಾ ಭಾರತಿ 23 Feb 2026 10:45 pm

Bihar | ಶೈಕ್ಷಣಿಕ ಸಂಸ್ಥೆಗಳ ಬಳಿ ಮಾಂಸ ಮಾರಾಟ ಮಾಡುವುದರಿಂದ ಮಕ್ಕಳಲ್ಲಿ ಹಿಂಸಾಪ್ರವೃತ್ತಿ: DCM ವಿಜಯ್ ಕುಮಾರ್ ಸಿನ್ಹಾ

ಪಾಟ್ನಾ: ಮಕ್ಕಳಲ್ಲಿ ಹಿಂಸಾಪ್ರವೃತ್ತಿ ತಲೆದೋರುವುದನ್ನು ತಪ್ಪಿಸಲು ಧಾರ್ಮಿಕ ಸ್ಥಳಗಳು, ಶೈಕ್ಷಣಿಕ ಸಂಸ್ಥೆಗಳು ಹಾಗೂ ಜನನಿಬಿಡ ಪ್ರದೇಶಗಳಲ್ಲಿ ಮಾಂಸ ಮಾರಾಟ ಮಾಡುವುದನ್ನು ಬಿಹಾರದಲ್ಲಿ ನಿಷೇಧಿಸಲಾಗಿದೆ ಎಂದು ಬಿಹಾರ ಉಪ ಮುಖ್ಯಮಂತ್ರಿ ವಿಜಯ್ ಕುಮಾರ್ ಸಿನ್ಹಾ ಹೇಳಿದ್ದಾರೆ. ಪಟ್ಟಣ ಪ್ರದೇಶಗಳಲ್ಲಿ ಮುಕ್ತವಾಗಿ ಕಾರ್ಯಾಚರಿಸುತ್ತಿರುವ ಮಾಂಸ ಮಾರಾಟ ಮಳಿಗೆಗಳನ್ನು ಮುಚ್ಚುವಂತೆ ನಗರ ಪಾಲಿಕೆ ಆಯುಕ್ತರಿಗೆ ಬರೆದಿರುವ ಪತ್ರವನ್ನು ಉಲ್ಲೇಖಿಸಿ ಅವರು ಈ ಹೇಳಿಕೆ ನೀಡಿದ್ದಾರೆ. “ಇದು ಹೊಸ ಸರಕಾರದ ನೂತನ ಉಪಕ್ರಮವಾಗಿದೆ. ಬಿಹಾರದ ಬದಲಾಗುತ್ತಿರುವ ಮುಖ ಸ್ಪಷ್ಟವಾಗಿ ಗೋಚರವಾಗುತ್ತಿದೆ. ನಾವು ಸಭೆ ನಡೆಸಿ ಎತ್ತಲಾದ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಿದ್ದೇವೆ. ಆರೋಗ್ಯದ ದೃಷ್ಟಿಯಿಂದ, ಸಾಮಾಜಿಕ ಸಂವಹನ ಹಾಗೂ ಮಕ್ಕಳಲ್ಲಿ ಹಿಂಸಾಪ್ರವೃತ್ತಿಯನ್ನು ತಡೆಯಲು ನಾವು ಶೈಕ್ಷಣಿಕ ಸಂಸ್ಥೆಗಳು, ಧಾರ್ಮಿಕ ಸ್ಥಳಗಳು ಹಾಗೂ ಜನನಿಬಿಡ ಪ್ರದೇಶಗಳಲ್ಲಿ ಮಾಂಸ ಮತ್ತು ಮೀನು ಮಾರಾಟವನ್ನು ನಿಷೇಧಿಸಲಿದ್ದೇವೆ” ಎಂದು ಅವರು ರವಿವಾರ ಹೇಳಿದ್ದಾರೆ. ನಗರಾಭಿವೃದ್ಧಿ ಮತ್ತು ವಸತಿ ಸಚಿವರೂ ಆದ ವಿಜಯ್ ಕುಮಾರ್ ಸಿನ್ಹಾ, ಇಲಾಖೆಯ ಪ್ರಧಾನ ಕಾರ್ಯದರ್ಶಿ ವಿನಯ್ ಕುಮಾರ್ ಅವರಿಗೆ ಬರೆದಿರುವ ಪತ್ರವನ್ನು ಉಲ್ಲೇಖಿಸಿ ಮಾತನಾಡುತ್ತಿದ್ದರು. ಆದರೆ, ಜನರ ಆಹಾರ ಆಯ್ಕೆಯ ಬಗ್ಗೆ ಸರಕಾರಕ್ಕೆ ಯಾವುದೇ ತಕರಾರಿಲ್ಲ ಎಂದು ಸ್ಪಷ್ಟಪಡಿಸಿದ ವಿಜಯ್ ಕುಮಾರ್ ಸಿನ್ಹಾ, ಸಾಮಾಜಿಕ ಸಂವಹನ ಮತ್ತು ಶುದ್ಧತೆಯ ಚೈತನ್ಯ ಉಲ್ಲಂಘನೆಯಾಗದಿರುವುದನ್ನು ಖಾತರಿಪಡಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ. “ಯಾರೊಬ್ಬರ ಭಾವನೆಗಳನ್ನೂ ಘಾಸಿಗೊಳಿಸಬಾರದು ಹಾಗೂ ಪರಿಸರವನ್ನು ಕಲುಷಿತಗೊಳಿಸಬಾರದು” ಎಂದೂ ಅವರು ಹೇಳಿದ್ದಾರೆ. ಬಿಹಾರ ನಗರಾಡಳಿತ ಕಾಯ್ದೆ, 2007ರ ಅಡಿಯಲ್ಲಿ ಸೆಕ್ಷನ್ 345 ಅನ್ನು ಉಲ್ಲಂಘಿಸಿ ವಿವಿಧ ನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ಕಾನೂನುಬಾಹಿರವಾಗಿ ಮಾಂಸ ಮತ್ತು ಮೀನು ಮಳಿಗೆಗಳು ಕಾರ್ಯಾಚರಿಸುತ್ತಿವೆ ಎಂದು ಎಲ್ಲ ನಗರ ಪಾಲಿಕೆ ಆಯುಕ್ತರಿಗೆ ಅವರು ಪತ್ರ ಬರೆದಿದ್ದಾರೆ. ಆದರೆ, ಮಾಂಸ ಮಾರಾಟ ಮಳಿಗೆಗಳಿಂದ ಮಕ್ಕಳಲ್ಲಿ ಹಿಂಸಾಪ್ರವೃತ್ತಿ ತಲೆದೋರುತ್ತದೆ ಎಂದು ಅವರು ಈ ಪತ್ರದಲ್ಲಿ ಉಲ್ಲೇಖಿಸಿಲ್ಲ.

ವಾರ್ತಾ ಭಾರತಿ 23 Feb 2026 10:42 pm

Prakash Raj: ವಿಭಿನ್ನ ಆಹಾರ - ವಿಭಿನ್ನ ರುಚಿಯೊಂದಿಗೆ ಸೌಹಾರ್ದತೆಯಿಂದ ಬದುಕೋಣ: ನಟ ಪ್ರಕಾಶ್ ರಾಜ್ ಟ್ವೀಟ್ ವೈರಲ್

Prakash Raj: ನಟ ಪ್ರಕಾಶ್ ರಾಜ್ ಅವರು ಆಹಾರಕ್ಕೆ ಸಂಬಂಧಿಸಿದಂತೆ ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಮಾಡಿರುವ ಟ್ವೀಟ್ ವೈರಲ್ ಆಗುತ್ತಿದೆ. ಕೇರಳ ಸ್ಟೋರಿ 2 ಸಿನಿಮಾವೂ ಕೇರಳದಲ್ಲಿ ವಿವಾದ ಸ್ವರೂಪವನ್ನು ಪಡೆದುಕೊಂಡಿದೆ. ದೇಶದಾದ್ಯಂತ ಪರ - ವಿರೋಧ ಚರ್ಚೆಗಳು ನಡೆದಿವೆ. ಈ ಸಿನಿಮಾದಲ್ಲಿ ಒತ್ತಾಯ ಪೂರ್ವಕವಾಗಿ ಬೀಫ್‌ ತಿನ್ನಿಸುವ ದೃಶ್ಯವಿದ್ದು, ಇದಕ್ಕೆ ವಿರೋಧ ವ್ಯಕ್ತವಾಗಿದೆ. ಭಾನುವಾರ ಆಹಾರ

ಒನ್ ಇ೦ಡಿಯ 23 Feb 2026 10:41 pm

ಮಾ.28ರಿಂದ ಗಂಜಿಮಠದಲ್ಲಿ ರಾಷ್ಟ್ರೀಯ ಮಟ್ಟದ ಮೋಟಾರ್ ರ್‍ಯಾಲಿ

ಮಂಗಳೂರು, ಫೆ.23: ಇಂಡಿಯನ್ ಮೋಟಾರ್ ಸ್ಪೋರ್ಟ್ಸ್ ಕ್ಲಬ್ ಆಶ್ರಯದಲ್ಲಿ ರಾಷ್ಟ್ರೀಯ ಮಟ್ಟದ 400ನೇ ‘ಐಎಂಎಸ್‌ಸಿ ಆಫ್ ರೋಡ್ ಟ್ರೋಫಿ-2026’ ಮೋಟಾರ್ ರ್‍ಯಾಲಿ ಮಾ.28 ಮತ್ತು 29ರಂದು ಬೆಳಗ್ಗೆ 9ರಿಂದ ಸಂಜೆ 5.30ರವರೆಗೆ ಮಂಗಳೂರಿನ ಗಂಜಿಮಠದ ಒಡ್ಡೂರು ಫಾರ್ಮ್‌ನಲ್ಲಿ ಆಯೋಜಿಸಲಾಗಿದೆ ಎಂದು ಇಂಡಿಯನ್ ಮೋಟಾರ್ ಸ್ಪೋರ್ಟ್ಸ್ ಕ್ಲಬ್ ಕಾರ್ಯದರ್ಶಿ ಅಶ್ವಿನ್ ನಾಯಕ್ ತಿಳಿಸಿದ್ದಾರೆ. ಮಂಗಳೂರು ಪ್ರೆಸ್ ಕ್ಲಬ್‌ನಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಕ್ಲಬ್ 25ನೇ ವರ್ಷ ಪೂರೈಸುತ್ತಿರುವ ಸಂದರ್ಭದಲ್ಲಿ ಈ ರಾಷ್ಟ್ರಮಟ್ಟದ ಸ್ಪರ್ಧೆಯನ್ನು ಏರ್ಪಡಿಸಲಾಗಿದ್ದು, ಈ ರೋಮಾಂಚನಕಾರಿ ರ್ಯಾಲಿಯಲ್ಲಿ ಮಹಾರಾಷ್ಟ್ರ, ಗೋವಾ, ತಮಿಳುನಾಡು ಸೇರಿದಂತೆ ಹಲವು ರಾಜ್ಯಗಳ 400ಕ್ಕೂ ಅಧಿಕ ಸ್ಪರ್ಧಾಳುಗಳು ಭಾಗವಹಿಸುವ ನಿರೀಕ್ಷೆ ಇದೆ ಎಂದರು. ಮೊದಲ ದಿನವಾದ ಮಾ.28ರಂದು ಮಹಿಳಾ ವಿಭಾಗ, ಜೂನಿಯರ್ ವಿಭಾಗ, ಮಾಸ್ಟರ್ಸ್ ವಿಭಾಗ, ಜಿಮ್ನಿ ವಿಭಾಗ, ಥಾರ್ 2020, ಎಸ್‌ಯುವಿ, ಸ್ಟಾಕ್ ಡೀಸೆಲ್, ಸ್ಟಾಕ್ ಪೆಟ್ರೋಲ್ ವಿಭಾಗಗಳಲ್ಲಿ, ಎರಡನೇ ದಿನವಾದ ಮಾ.29ರಂದು ಮೋಡಿಫೈಡ್ ಪೆಟ್ರೋಲ್, ಮೋಡಿಫೈಡ್ ಡೀಸೆಲ್, ಓಪನ್ ಕ್ಲಾಸ್ ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದೆ ಎಂದರು. 15 ಲಕ್ಷ ರೂ. ಮೊತ್ತದ ಬಹುಮಾನ: ರಾಷ್ಟ್ರೀಯ ಮಟ್ಟದ 400ನೇ ‘ಐಎಂಎಸ್‌ಸಿ ಆಫ್ ರೋಡ್ ಟ್ರೋಫಿ-2026’ ರ್ಯಾಲಿಯಲ್ಲಿ ವಿಜೇತರಿಗೆ ಒಟ್ಟು 15 ಲಕ್ಷ ರೂ. ನಗದು ಬಹುಮಾನ, ಟ್ರೋಫಿಯನ್ನು ನೀಡಲಾಗುವುದು. ಸುಮಾರು 5 ಸಾವಿರಕ್ಕೂ ಅಧಿಕ ಪ್ರೇಕ್ಷಕರು ಪಾಲ್ಗೊಳ್ಳುವ ಸಾಧ್ಯತೆ ಇದೆ. ಮಹಿಳೆಯರಿಗಾಗಿ ಎರೈವ್ ಆ್ಯಂಡ್ ಡ್ರೈವ್ ವ್ಯವಸ್ಥೆ ಇದ್ದು ವಾಹನ ಇಲ್ಲದವರು ಕೂಡ ಆಗಮಿಸಬಹುದು. ಅವರಿಗೆ ಸ್ಪರ್ಧೆಗಾಗಿ ವಾಹನವನ್ನು ಸ್ಥಳದಲ್ಲಿಯೇ ಒದಗಿಸಲಾಗುವುದು ಎಂದು ಮಾಹಿತಿ ನೀಡಿದರು. ಕ್ಲಬ್‌ನ ಅಧ್ಯಕ್ಷ ಮೂಸಾ ಶರೀಫ್ ಮಾತನಾಡಿ, ಮಂಗಳೂರನ್ನು ಕೇಂದ್ರವಾಗಿಸಿಕೊಂಡು ಕಾರ್ಯನಿರ್ವಹಿಸುತ್ತಿರುವ ಐಎಂಎಸ್‌ಸಿ ಕಳೆದ 25 ವರ್ಷಗಳಿಂದ ಭಾರತೀಯ ಮೋಟಾರ್ ಸ್ಪೋರ್ಟ್ಸ್ ಕ್ಷೇತ್ರದಲ್ಲಿ ಮಹತ್ವದ ಪಾತ್ರ ವಹಿಸಿದೆ. ರ್ಯಾಲಿ, ಆಟೋಕ್ರಾಸ್, ಹಿಲ್ ಕ್ಲೈಂಬ್, ಮೋಟೋ ಕ್ರಾಸ್ ಸೇರಿದಂತೆ ವಿವಿಧ ಮಾದರಿಯ ಸ್ಪರ್ಧೆಗಳ ಮೂಲಕ ಜಮ್ಮು ಕಾಶ್ಮೀರ ಸೇರಿದಂತೆ ದೇಶದಾದ್ಯಂತ ಪ್ರತಿಭಾವಂತರಿಗೆ ವೇದಿಕೆ ಒದಗಿಸುತ್ತಿದ್ದು ಸುರಕ್ಷಿತ ಹಾಗೂ ವೃತ್ತಿಪರ ಕ್ರೀಡಾ ಸಂಸ್ಕೃತಿಗೆ ಉತ್ತೇಜನ ನೀಡುತ್ತಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಇಂಡಿಯನ್ ಮೋಟಾರ್ ಸ್ಪೋರ್ಟ್ಸ್ ಕ್ಲಬ್‌ನ ಸದಸ್ಯ ಸಂಜಯ್ ಉಪಸ್ಥಿತರಿದ್ದರು. 

ವಾರ್ತಾ ಭಾರತಿ 23 Feb 2026 10:41 pm

Raichur | ರಾಜ್ಯ ಬಜೆಟ್‌ನಲ್ಲಿ ಲೈಂಗಿಕ ಅಲ್ಪಸಂಖ್ಯಾತರಿಗೆ 200 ಕೋಟಿ ರೂ. ಮೀಸಲಿಡಲು ಒತ್ತಾಯ

ರಾಯಚೂರು : 2026-27ನೇ ಸಾಲಿನ ರಾಜ್ಯ ಬಜೆಟ್‌ನಲ್ಲಿ ಲಿಂಗತ್ವ ಮತ್ತು ಲೈಂಗಿಕ ಅಲ್ಪಸಂಖ್ಯಾತರ ಅಭಿವೃದ್ಧಿಗಾಗಿ ಪ್ರತ್ಯೇಕವಾಗಿ 200 ಕೋಟಿ ರೂ. ಮೀಸಲಿಡಬೇಕು ಎಂದು ಲಿಂಗತ್ವ ಮತ್ತು ಲೈಂಗಿಕ ಬಹುತ್ವಕ್ಕಾಗಿ ಚಳುವಳಿಯ ಹೋರಾಟಗಾರ ಮಹೇಶ ಪಾಟೀಲ ಒತ್ತಾಯಿಸಿದರು. ಸೋಮವಾರ ಪತ್ರಿಕಾಭವನದಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಲಿಂಗತ್ವ ಮತ್ತು ಲೈಂಗಿಕ ಅಲ್ಪಸಂಖ್ಯಾತರ ಅಭಿವೃದ್ಧಿಗಾಗಿ ವಾರ್ಷಿಕ ರೂ.200 ಕೋಟಿ ಮೀಸಲಿಡುವುದಾಗಿ ಘೋಷಿಸಿತ್ತು. ಆದ್ದರಿಂದ ಸರ್ಕಾರ ತನ್ನ ವಾಗ್ದಾನವನ್ನು ಈಡೇರಿಸಬೇಕು ಎಂದು ಹೇಳಿದರು. 2026ರ ಮಾರ್ಚ್ ಮೊದಲ ವಾರದಲ್ಲಿ ಆರಂಭವಾಗಲಿರುವ ಬಜೆಟ್ ಅಧಿವೇಶನದಲ್ಲಿ ಪ್ರತ್ಯೇಕ ಅನುದಾನ ಘೋಷಿಸಿ, ಕರ್ನಾಟಕ ಲಿಂಗತ್ವ ಮತ್ತು ಲೈಂಗಿಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮವನ್ನು ಸ್ಥಾಪಿಸಬೇಕು. ಸರ್ವತೋಮುಖ ಅಭಿವೃದ್ಧಿಗಾಗಿ ರೂ.250 ಕೋಟಿ ಪ್ರತ್ಯೇಕ ಬಜೆಟ್ ನೀಡಬೇಕು ಎಂದು ಆಗ್ರಹಿಸಿದರು. ಪ್ರತಿ ವರ್ಷ ಕನಿಷ್ಠ 500 ಮನೆಗಳನ್ನು ಹಂಚಿಕೆ ಮಾಡಬೇಕು. ಕೃಷಿಯಲ್ಲಿ ಆಸಕ್ತಿ ಹೊಂದಿರುವವರಿಗೆ 2 ಎಕರೆ ಕೃಷಿಯೋಗ್ಯ ಭೂಮಿ ನೀಡಬೇಕು. ಮೈತ್ರಿ ಪಿಂಚಣಿಯನ್ನು ತಿಂಗಳಿಗೆ ರೂ.2 ಸಾವಿರಕ್ಕೆ ಹೆಚ್ಚಿಸಬೇಕು. ಲಿಂಗತ್ವ ಅಲ್ಪಸಂಖ್ಯಾತರಿಗೆ ತಿಂಗಳಿಗೆ ರೂ.5 ಸಾವಿರ ವೃದ್ಧಾಪ್ಯ ಪಿಂಚಣಿ ನೀಡಬೇಕು. ಶೇ 1ರಷ್ಟು ಮೀಸಲಾತಿಯನ್ನು ಘೋಷಣೆಯಷ್ಟೇ ಅಲ್ಲದೆ ಜಾರಿಗೆ ತರಬೇಕು ಎಂದರು. ಸರ್ಕಾರಿ ಉದ್ಯೋಗಗಳಿಗೆ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ನೀಡಬೇಕು. ಉಚಿತ ಲಿಂಗತ್ವ ದೃಢೀಕರಣ ಶಸ್ತ್ರಚಿಕಿತ್ಸೆಗಳನ್ನು ಸರ್ಕಾರಿ ಆಸ್ಪತ್ರೆಗಳಲ್ಲಿ ಜಾರಿಗೊಳಿಸಿ, ಶಸ್ತ್ರಚಿಕಿತ್ಸೆಯ ನಂತರ 6 ತಿಂಗಳು ಪ್ರತಿ ತಿಂಗಳು ರೂ.5 ಸಾವಿರ ಪುನರ್ವಸತಿ ನೆರವು ನೀಡಬೇಕು. ಪ್ರತಿಯೊಂದು ಜಿಲ್ಲೆಯಲ್ಲಿ ಕನಿಷ್ಠ ಒಂದು ವಿಶೇಷ ಆರೋಗ್ಯ ಕೇಂದ್ರ ಸ್ಥಾಪಿಸಬೇಕು ಎಂದು ಒತ್ತಾಯಿಸಿದರು. ಪತ್ರಿಕಾಗೋಷ್ಠಿಯಲ್ಲಿ ಅಂಬಮ್ಮ, ವಿದ್ಯಾ ಪಾಟೀಲ, ಎಂ.ಆರ್. ಬೇರಿ ಹಾಗೂ ಅನಿಲಕುಮಾರ ಉಪಸ್ಥಿತರಿದ್ದರು.

ವಾರ್ತಾ ಭಾರತಿ 23 Feb 2026 10:40 pm

‘ಮಿಷನ್ ಪ್ರಕೃತಿ’ ರಾಜ್ಯದ ಹತ್ತು ಶಾಲೆಗಳಿಗೆ ‘ಅತ್ಯುತ್ತಮ ಶಾಲೆ' ಪ್ರಶಸ್ತಿ ಪ್ರದಾನ

ಬೆಂಗಳೂರು, ಫೆ. 23 : ಸಮಗ್ರ ಶಿಕ್ಷಣ ಕರ್ನಾಟಕ ಹಾಗೂ ಡಬ್ಲ್ಯೂಡಬ್ಲ್ಯೂಎಫ್ ಇಂಡಿಯಾ ಸಹಯೋಗದಲ್ಲಿ ಆಯೋಜಿಸಲಾಗಿದ್ದ ‘ಮಿಷನ್ ಪ್ರಕೃತಿ: ತರಗತಿಯಿಂದ ಸಂರಕ್ಷಣೆಯತ್ತ' ಕಾರ್ಯಕ್ರಮದಡಿಯಲ್ಲಿ ರಾಜ್ಯದ ಹತ್ತು ಅತ್ಯುತ್ತಮ ಶಾಲೆಗಳಿಗೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಸಚಿವ ಮಧು ಬಂಗಾರಪ್ಪ ಪ್ರಶಸ್ತಿ ಪ್ರದಾನ ಮಾಡಿದರು. ಸೋಮವಾರ ಇಲ್ಲಿನ ವಿಕಾಸಸೌಧದಲ್ಲಿ ನಡೆದ ಈ ಸಮಾರಂಭದಲ್ಲಿ ಇಲಾಖೆಯ ಆಯುಕ್ತ ವಿಕಾಸ್ ಕಿಶೋರ್ ಸುರಳ್ಕರ್, ಡಬ್ಲ್ಯೂಡಬ್ಲ್ಯೂಎಫ್ ಇಂಡಿಯಾದ ಸಿಇಒ ಕರಣ್ ಭಲ್ಲಾ ಹಾಗೂ ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು. ಈ ವೇಳೆ ಮಾತನಾಡಿದ ಸಚಿವ ಮಧು ಬಂಗಾರಪ್ಪ, ವಿದ್ಯಾರ್ಥಿಗಳು ಕೇವಲ ಅಂಕಗಳಿಗಾಗಿ ಓದಬಾರದು. ವಿಷಯವನ್ನು ಆಳವಾಗಿ ಅರ್ಥೈಸಿಕೊಳ್ಳುವುದರ ಕಡೆಗೆ ಗಮನ ಹರಿಸಬೇಕು. ಅರಿವು ಮೂಡಿದರೆ ಫಲಿತಾಂಶ ತಾನಾಗಿಯೇ ಉತ್ತಮವಾಗುತ್ತದೆ ಎಂದು ಕಿವಿಮಾತು ಹೇಳಿದರು. ತ್ಯಾಜ್ಯ ನಿರ್ವಹಣೆ ಕುರಿತು ಜಪಾನ್‍ನ ಉದಾಹರಣೆ ನೀಡಿದ ಅವರು, ಅಲ್ಲಿ ಕಸದ ಬುಟ್ಟಿಗಳು ಕಡಿಮೆ ಇದ್ದರೂ ಜನರು ತಮ್ಮ ಕಸವನ್ನು ತಾವೇ ಮನೆಗೆ ತೆಗೆದುಕೊಂಡು ಹೋಗಿ ವಿಲೇವಾರಿ ಮಾಡುತ್ತಾರೆ. ಅಂತಹ ಶಿಸ್ತು ನಮ್ಮಲ್ಲಿಯೂ ಬರಬೇಕು ಎಂದು ಆಶಯ ವ್ಯಕ್ತಪಡಿಸಿದರು. ಮುಂದಿನ ವರ್ಷದಿಂದ 1 ರಿಂದ 10ನೇ ತರಗತಿಯ ವರೆಗೆ ‘ನೈತಿಕ ವಿಜ್ಞಾನ' ಪಠ್ಯ ಪುಸ್ತಕವನ್ನು ಪರಿಚಯಿಸಲಾಗುವುದು. ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಳ್ಳುವುದು ಶಿಕ್ಷಣದ ಮೊದಲ ಮೆಟ್ಟಿಲು ಎಂದು ಅವರು ಪ್ರತಿಪಾದಿಸಿದರು. ಸರಕಾರಿ ಶಾಲಾ ಶಿಕ್ಷಕರ ಮೆರಿಟ್ ಮತ್ತು ಕಾರ್ಯಕ್ಷಮತೆಯನ್ನು ಶ್ಲಾಘಿಸಿದ ಸಚಿವರು, ವಿದ್ಯಾರ್ಥಿಗಳಿಗೆ ಸರಕಾರ ನೀಡುತ್ತಿರುವ ಬಿಸಿಯೂಟ, ರಾಗಿಮಾಲ್ಟ್, ಹಾಲು, ಮೊಟ್ಟೆ/ಬಾಳೆಹಣ್ಣು, ಪಠ್ಯಪುಸ್ತಕ ಮತ್ತು ಸಮವಸ್ತ್ರಗಳ ಸೌಲಭ್ಯವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಾದ ನಾಗಭೂಷಣ್ ಮತ್ತು ರೆಹಮಾನ್ ಬಿ. ಮಿಷನ್ ಪ್ರಕೃತಿಯಲ್ಲಿನ ತಮ್ಮ ಅನುಭವಗಳನ್ನು ಹಂಚಿಕೊಂಡರು. ವನ್ಯಜೀವಿಗಳ ರಕ್ಷಣೆ ಮತ್ತು ಪರಿಸರ ಸಂರಕ್ಷಣೆಯ ಮಹತ್ವವನ್ನು ಈ ಅಭಿಯಾನವು ತಮಗೆ ಹೇಗೆ ಕಲಿಸಿಕೊಟ್ಟಿತು ಎಂಬುದನ್ನು ವಿವರಿಸಿದರು. ಇದೇ ವೇಳೆ ಪ್ರಶಸ್ತಿ ವಿಜೇತ ಶಾಲೆಗಳಿಗೆ ಅಭಿನಂದನೆ ಸಲ್ಲಿಸಿದ ಸಚಿವ ಮಧು ಬಂಗಾರಪ್ಪ, ಇಲ್ಲಿ ಕಲಿತ ವಿಷಯಗಳನ್ನು ಇತರ ವಿದ್ಯಾರ್ಥಿಗಳಿಗೂ ಹಂಚಿಕೊಳ್ಳುವಂತೆ ಕರೆ ನೀಡಿದರು. ಪ್ರಶಸ್ತಿ ವಿಜೇತ 10 ಶಾಲೆಗಳನ್ನು ಈ ವೇಳೆ ಪರಿಸರ ಜಾಗೃತಿ ಮತ್ತು ಸುಸ್ಥಿರ ಅಭ್ಯಾಸಗಳಲ್ಲಿ ಅತ್ಯುತ್ತಮ ಸಾಧನೆ ಮಾಡಿದ್ದಕ್ಕಾಗಿ ಗೌರವಿಸಲಾಯಿತು: ಪ್ರಶಸ್ತಿ ವಿಜೇತ ಶಾಲೆಗಳು:  ಜಿ.ಎಂ.ಪಿ.ಎಚ್.ಎಸ್, ಎಮ್ಮಿಗನೂರು, ಬಳ್ಳಾರಿ. ಜಿ.ಕೆ.ಎಚ್.ಪಿ.ಎಸ್, ಕಾತ್ರಾಳ, ಕಾಗವಾಡ, ಬೆಳಗಾವಿ. ಜಿ.ಎಚ್.ಎಸ್, ಅಲಿಪುರ, ಚಿಕ್ಕಬಳ್ಳಾಪುರ. ಜಿ.ಎಚ್.ಪಿ.ಎಸ್, ಹಿರೇಗೋಣಿಗೆರೆ, ದಾವಣಗೆರೆ. ಜಿ.ಎಚ್.ಪಿ.ಎಸ್, ಜೋಡಳ್ಳಿ, ಕಲಘಟಗಿ. ಕೆ.ಪಿ.ಎಸ್, ಕೋಟೇಶ್ವರ, ಕುಂದಾಪುರ, ಉಡುಪಿ. ಡಿ.ಕೆ.ಜೆಡ್.ಪಿ, ಅಳಿಯೂರು, ದಕ್ಷಿಣ ಕನ್ನಡ. ಕೆ.ಎಸ್.ಎಸ್ ಜಿ.ಎಚ್.ಎಸ್, ಹಕ್ಲಾಡಿ, ಬೈಂದೂರು, ಉಡುಪಿ. ಕೆ.ಜಿ.ಬಿ.ವಿ, ಯಳಂದೂರು, ಚಾಮರಾಜನಗರ ಹಾಗೂ ಜಿ.ಎಚ್.ಪಿ.ಎಸ್, ಮಲ್ಲೂರು, ಉಡುಪಿ.

ವಾರ್ತಾ ಭಾರತಿ 23 Feb 2026 10:40 pm

ದೇವದುರ್ಗ | ಅಗ್ನಿ ಅವಘಡ ತಡೆ ಕುರಿತು ಅಣಕು ಪ್ರದರ್ಶನ

ದೇವದುರ್ಗ : ಪಟ್ಟಣದ ಪ್ರಾದೇಶಿಕ ಅರಣ್ಯ ವಲಯದ ವತಿಯಿಂದ ಸೋಮವಾರ ತಳವಾರ್ ದೊಡ್ಡಿ ಚಿಣ್ಣರ ಆಟದ ಮೈದಾನದಲ್ಲಿ ಕರ್ನಾಟಕ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆ ಸಹಯೋಗದಲ್ಲಿ ಆಕಸ್ಮಿಕ ಅಗ್ನಿ ಅವಘಡ ಸಂಭವಿಸಿದಾಗ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಅಣಕು ಪ್ರದರ್ಶನ ನಡೆಸಲಾಯಿತು. ಅರಣ್ಯ ವಲಯಾಧಿಕಾರಿ ಅಲಿಮುದ್ದೀನ್ ಮಾತನಾಡಿ, ಆಕಸ್ಮಿಕ ಅಗ್ನಿ ಅವಘಡ ಸಂಭವಿಸಿದಾಗ ಅಗ್ನಿಶಾಮಕ ಸಿಬ್ಬಂದಿಗಳ ಸೇವೆ ಶ್ಲಾಘನೀಯವಾಗಿದೆ. 24x7 ಹಗಲಿರುಳು ಸೇವೆಯಲ್ಲಿ ತೊಡಗಿರುವ ಅಗ್ನಿಶಾಮಕ ಸಿಬ್ಬಂದಿ ಅನಾಹುತಗಳನ್ನು ತಡೆಗಟ್ಟಲು ಪ್ರಾಣಪಣವಾಗಿ ಕಾರ್ಯನಿರ್ವಹಿಸುತ್ತಾರೆ. ಅಗ್ನಿ ಅವಘಡಗಳಿಗೆ ತಕ್ಷಣ ಸ್ಪಂದಿಸಿ ಜೀವ ರಕ್ಷಿಸುವ ಇಲಾಖೆಯೇ ಅಗ್ನಿಶಾಮಕ ಠಾಣೆ ಎಂದು ಹೇಳಿದರು. ಠಾಣಾಧಿಕಾರಿ ರವಿ ಕುಮಾರ ಮಾತನಾಡಿ, ಫೆಬ್ರವರಿ 23ನ್ನು ಅಗ್ನಿ ಅವಘಡ ಅರಿವು ಮತ್ತು ತಡೆ ದಿನವಾಗಿ ಆಚರಿಸಲಾಗುತ್ತದೆ. ಸುತ್ತಮುತ್ತ ಅಗ್ನಿ ಅವಘಡ ಸಂಭವಿಸಿದರೆ ತಕ್ಷಣ 108 ಸಂಖ್ಯೆಗೆ ಕರೆ ಮಾಡಿ ಮಾಹಿತಿ ನೀಡಬೇಕು. ಕಟ್ಟಡಗಳಲ್ಲಿ ಬೆಂಕಿ ಕಾಣಿಸಿಕೊಂಡರೆ ಜನರನ್ನು ಮೊದಲು ಸುರಕ್ಷಿತ ಸ್ಥಳಕ್ಕೆ ಕರೆದೊಯ್ಯಬೇಕು ಎಂದು ತಿಳಿಸಿದರು. ಎಲ್ಲ ತರಹದ ಬೆಂಕಿಯನ್ನು ನೀರಿನಿಂದ ನಂದಿಸಲಾಗುವುದಿಲ್ಲ. ಕೆಲವು ಸಂದರ್ಭಗಳಲ್ಲಿ ನೀರು ಬಳಸಿದರೆ ಬೆಂಕಿ ಹೆಚ್ಚಾಗುವ ಸಾಧ್ಯತೆಯೂ ಇದೆ. ಆದ್ದರಿಂದ ಅಗ್ನಿ ಅವಘಡ ಸಂಭವಿಸಿದ ತಕ್ಷಣ ಅಗ್ನಿಶಾಮಕ ಠಾಣೆಗೆ ಮಾಹಿತಿ ನೀಡಬೇಕು ಎಂದು ಸಲಹೆ ನೀಡಿದರು. ಈ ಸಂದರ್ಭದಲ್ಲಿ ಸಾಲಾರ್ ಹುಸೇನ್, ಹನುಮೇಶ ಯಾದವ್, ಬಸವರಾಜ್, ಆಂಜಿನಯ್ಯ, ಸಂಗಮೇಶ ಸೇರಿದಂತೆ ಸಿಬ್ಬಂದಿಗಳು ಉಪಸ್ಥಿತರಿದ್ದರು.

ವಾರ್ತಾ ಭಾರತಿ 23 Feb 2026 10:37 pm

ವನ್ಯಜೀವಿ ಸಂಚಾರದ ಬಗ್ಗೆ ಸ್ಥಳೀಯರಿಗೆ ತಕ್ಷಣ ಮಾಹಿತಿ ನೀಡಿ : ಈಶ್ವರ್ ಖಂಡ್ರೆ

ಬೆಂಗಳೂರು, ಫೆ.23 : ಅರಣ್ಯದಂಚಿನ ಜಮೀನುಗಳಲ್ಲಿ ವನ್ಯಜೀವಿಗಳ ಸಂಚಾರದ ಬಗ್ಗೆ ಕಮಾಂಡ್ ಕೇಂದ್ರಕ್ಕೆ ಮಾಹಿತಿ ಬಂದ ಕೂಡಲೇ ತೋಟದ ಬೆಳೆಗಾರರ ಸಂಘಟನೆ ಮತ್ತು ಕಾರ್ಮಿಕ ಸಂಘಟನೆಗಳಿಗೆ, ಸ್ಥಳೀಯ ಮುಖಂಡರಿಗೆ ಮಾಹಿತಿ ರವಾನಿಸಲು ಕ್ರಮ ವಹಿಸುವಂತೆ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ್ ಖಂಡ್ರೆ ಸೂಚನೆ ನೀಡಿದ್ದಾರೆ. ಚಿಕ್ಕಮಗಳೂರು ತಾಲೂಕು ಹುಣಸೆಹಳ್ಳಿ ಬಳಿಯ ತೋಟದಲ್ಲಿ ಕಳೆದ 7 ದಿನಗಳ ಅಂತರದಲ್ಲಿ ಇಬ್ಬರು ಕಾರ್ಮಿಕರು ಮೃತಪಟ್ಟಿರುವ ಹಿನ್ನೆಲೆಯಲ್ಲಿ ಸೋಮವಾರ ಉನ್ನತಾಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ತುರ್ತು ಸಭೆ ನಡೆಸಿದ ಅವರು, ವನ್ಯಜೀವಿ-ಮಾನವ ಸಂಘರ್ಷ ಇರುವ ಪ್ರದೇಶಗಳ ಸ್ಥಳೀಯ ಮುಖಂಡರ, ಗ್ರಾಮಗಳ ಜಮೀನು ಮಾಲಕರ ವಾಟ್ಸ್ ಅಪ್ ಗ್ರೂಪ್ ಮಾಡಿ ಮಾಹಿತಿ ಪ್ರಸಾರ ಮಾಡುವಂತೆ ಸೂಚಿಸಿದರು. ಮಾನವ ಜೀವ ಅತ್ಯಮೂಲ್ಯವಾದ್ದು, ಒಂದು ಜೀವಹಾನಿ ಆದ ಬಳಿಕ ಮತ್ತೊಂದು ಜೀವ ಹಾನಿ ಆಗಿರುವುದು ಅತ್ಯಂತ ನೋವಿನ ಸಂಗತಿ. ಅಧಿಕಾರಿಗಳು ಮತ್ತು ಸಿಬ್ಬಂದಿ ಇಂತಹ ಘಟನೆ ಮರುಕಳಿಸದಂತೆ 24/7 ನಿಗಾ ಇಡಬೇಕು. ಕಡ್ಡಾಯವಾಗಿ ಸೆಕ್ಷನ್ 144 ಜಾರಿ ಮಾಡಿ ವನ್ಯಜೀವಿ ಸರೆ ಕಾರ್ಯಾಚರಣೆ ನಡೆಸಬೇಕು. ಅತ್ಯಾಧುನಿಕ ಸಲಕರಣೆಗಳಾದ ಥರ್ಮಲ್ ಡ್ರೋನ್ ಬಳಕೆ ಮಾಡಬೇಕು ಎಂದು ಈಶ್ವರ್ ಖಂಡ್ರೆ ಸೂಚಿಸಿದರು. ಚಿಕ್ಕಮಗಳೂರಿನಲ್ಲಿ ಕಳೆದ ವಾರ ಆನೆ ದಾಳಿಯಿಂದ ವ್ಯಕ್ತಿ ಮೃತಪಟ್ಟ ಬಳಿಕ, ಆನೆ ಸೆರೆಗೆ ಕ್ರಮ ಕೈಗೊಳ್ಳಲಾಗಿತ್ತು. ಸ್ಥಳೀಯರಿಗೆ ತೋಟಕ್ಕೆ ಹೋಗದಂತೆ ಮಾಹಿತಿ ನೀಡಲಾಗಿತ್ತು. ಆದಾಗ್ಯೂ ತೋಟಕ್ಕೆ ಹೋದ ಕಾರಣ ಈ ಸಾವು ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿರುವುದಾಗಿ ಅವರು ಹೇಳಿದರು. ಅರಣ್ಯ ಇಲಾಖೆ ಮುನ್ನೆಚ್ಚರಿಕೆ ನೀಡಿದ ಬಳಿಕವೂ ತೋಟದ ಮಾಲಕರು ಕಾರ್ಮಿಕರನ್ನು ತೋಟಕ್ಕೆ ಕಳಿಸಿದರೆ ಅಂತಹ ಮಾಲಕರಿಗೆ ಎಚ್ಚರಿಕೆ ನೀಡಿ, ತೋಟದ ಮಾಲಕರಿಗೂ ಜವಾಬ್ದಾರಿ ಇರಬೇಕು. ನಿರ್ಲಕ್ಷ್ಯ ತೋರಿದರೆ ದೂರು ದಾಖಲಿಸಿ ಎಂದು ಈಶ್ವರ್ ಖಂಡ್ರೆ ತಿಳಿಸಿದರು. ಮಾಹಿತಿಯ ಪ್ರಕಾರ ಚಿಕ್ಕಮಗಳೂರು ಜಿಲ್ಲೆಯಲ್ಲಿ ಅರಣ್ಯದ ಹೊರಗೆ 35 ಆನೆಗಳು 3 ಗುಂಪಿನಲ್ಲಿ ಸಂಚರಿಸುತ್ತಿದ್ದು, ಬೇಸಿಗೆಯಲ್ಲಿ ಅವುಗಳು ಕಾಡಿನಿಂದ ಹೊರಬರುವುದು ಸಾಮಾನ್ಯ. ಆದಾಗ್ಯೂ ಸಿಬ್ಬಂದಿ ಮತ್ತು ಅಧಿಕಾರಿಗಳು ವನ್ಯಜೀವಿ-ಮಾನವ ಸಂಘರ್ಷ ಆಗದಂತೆ ನಿಗಾ ಇಡಬೇಕು. ಪ್ರತಿ ವರ್ಷ ವನ್ಯಜೀವಿ-ಮಾನವ ದಾಳಿಯಲ್ಲಿ ಆಗುತ್ತಿರುವ ಸಾವಿನ ಸಂಖ್ಯೆ ಇಳಿಕೆಯಾಗಬೇಕೇ ಹೊರತು, ಹೆಚ್ಚಳ ಆಗಬಾರದು ನೀವೆಲ್ಲರೂ ಪ್ರಾಮಾಣಿಕ ಪ್ರಯತ್ನ ಮಾಡಿ ಎಂದು ಅವರು ತಿಳಿಸಿದರು. ಹಿರಿಯ ಅಧಿಕಾರಿಗಳು ಕ್ಷೇತ್ರಕ್ಕೆ ಹೋಗುವಂತೆ ಸೂಚನೆ: ಬೇಸಿಗೆ ಹಿನ್ನೆಲೆಯಲ್ಲಿ ಮುಂದಿನ 2-3 ತಿಂಗಳು ಅತ್ಯಂತ ಕ್ಲಿಷ್ಟಕರವಾಗಿದ್ದು, ಹಿರಿಯ ಅಧಿಕಾರಿಗಳು ವನ್ಯಜೀವಿ-ಮಾನವ ಸಂಘರ್ಷ ಇರುವ ಪ್ರದೇಶಕ್ಕೆ ತೆರಳಿ, ಅಧಿಕಾರಿ, ಸಿಬ್ಬಂದಿಗೆ ಮಾರ್ಗದರ್ಶನ ಮಾಡಬೇಕು ಎಂದು ಈಶ್ವರ್ ಖಂಡ್ರೆ ಸೂಚಿಸಿದರು. ಸಭೆಯಲ್ಲಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ಅರಣ್ಯ ಪಡೆ ಮುಖ್ಯಸ್ಥರಾದ ಮೀನಾಕ್ಷಿ ನೇಗಿ, ಮುಖ್ಯ ವನ್ಯಜೀವಿ ಪರಿಪಾಲಕ ಕುಮಾರ್ ಪುಷ್ಕರ್, ಎಪಿಸಿಸಿಎಫ್ ಬಿಸ್ವಜಿತ್ ಮಿಶ್ರ, ಮನೋಜ್ ರಾಜನ್, ಸಿಎಫ್ ಪ್ರಭಾಕರನ್, ಕೊಪ್ಪ ವಲಯದ ಡಿಸಿಎಫ್ ಶಿವಶಂಕರ್ ಮತ್ತಿತರರು ಪಾಲ್ಗೊಂಡಿದ್ದರು. ‘ಸಫಾರಿ ಪುನಾರಂಭ: ಕಾಡಿನಂಚಿನ ಗ್ರಾಮಗಳಲ್ಲಿ ಸಭೆ ನಡೆಸಲು ಸೂಚನೆ’ ನಾಗರಹೊಳೆ ಮತ್ತು ಬಂಡೀಪುರದಲ್ಲಿ ಸಫಾರಿ ಪುನಾರಂಭ ಮಾಡಿರುವ ಬಗ್ಗೆ ಕೆಲವರು ಮಾತ್ರವೇ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ರಾಜ್ಯ ಸರಕಾರ ಸಫಾರಿಯಿಂದ ಬರುವ ಆದಾಯದಲ್ಲಿ ಶೇ.35ರಷ್ಟನ್ನು ಕಾಡಿನಂಚಿನ ಗ್ರಾಮದ ಜನರ ಕಲ್ಯಾಣಕ್ಕಾಗಿ ಬಳಸಲು ತೀರ್ಮಾನಿಸಿದ್ದು, ಗ್ರಾಮಗಳಲ್ಲಿ ಸಭೆ ನಡೆಸಿ, ಸ್ಥಳೀಯರ ಅಗತ್ಯಕ್ಕೆ ಅನುಗುಣವಾಗಿ ಕಾರ್ಯಕ್ರಮ ರೂಪಿಸಬೇಕು. ಯುವಜನರಿಗೆ ಕೌಶಲ್ಯ ತರಬೇತಿ ನೀಡಬೇಕು, ಕಾಡಿನಂಚಿನ ಶಾಲೆ ಕಾಲೇಜುಗಳಿಗೆ ಅಗತ್ಯ ಸಲಕರಣೆ ನೀಡಬೇಕು. ವನ್ಯಜೀವಿಗಳು ನಾಡಿಗೆ ಬಂದಾಗ ಹೇಗೆ ನಡೆದುಕೊಳ್ಳಬೇಕು ಎಂಬ ಬಗ್ಗೆ ಅರಿವು ಮೂಡಿಸಲು ಅಧಿಕಾರಿಗಳಿಗೆ ಈಶ್ವರ್ ಖಂಡ್ರೆ ಸೂಚಿಸಿದರು.

ವಾರ್ತಾ ಭಾರತಿ 23 Feb 2026 10:35 pm

ನನಗೆ ‘ದಿ ಕೇರಳ ಸ್ಟೋರಿ 2’ ಚಿತ್ರ ನೋಡುವ ಆಸಕ್ತಿಯಿಲ್ಲ’: ಕೇರಳ ಬಿಜೆಪಿ ಅಧ್ಯಕ್ಷ ರಾಜೀವ್ ಚಂದ್ರಶೇಖರ್

ಕೊಚ್ಚಿ, ಫೆ.23: ‘ದಿ ಕೇರಳ ಸ್ಟೋರಿ 2: ಗೋಸ್ ಬಿಯಾಂಡ್’ ಬಾಲಿವುಡ್ ಚಲನಚಿತ್ರ ವೀಕ್ಷಿಸುವ ಯಾವುದೇ ಯೋಜನೆ ಇಲ್ಲ ಎಂದು ಬಿಜೆಪಿ ಕೇರಳ ಘಟಕದ ಅಧ್ಯಕ್ಷ ರಾಜೀವ್ ಚಂದ್ರಶೇಖರ್ ಸೋಮವಾರ ಹೇಳಿದರು. ಚಿತ್ರದ ಟ್ರೇಲರ್ ಕೇರಳವನ್ನು ಕೆಟ್ಟದಾಗಿ ಚಿತ್ರಿಸುತ್ತದೆ ಎಂಬ ಆರೋಪದ ಹಿನ್ನೆಲೆಯಲ್ಲಿ ರಾಜಕೀಯ ಚರ್ಚೆ ತೀವ್ರಗೊಂಡಿರುವ ಸಂದರ್ಭದಲ್ಲಿ ಅವರು ಈ ನಿಲುವು ವ್ಯಕ್ತಪಡಿಸಿದರು. ಕೊಚ್ಚಿಯ ತ್ರಿಕ್ಕಾಕರದಲ್ಲಿ NDA ವಲಯ ಕಚೇರಿಯನ್ನು ಉದ್ಘಾಟಿಸಿದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, “ನನಗೆ ‘ದಿ ಕೇರಳ ಸ್ಟೋರಿ 2’ ಚಿತ್ರ ವೀಕ್ಷಿಸಲು ಆಸಕ್ತಿ ಇಲ್ಲ” ಎಂದು ಸ್ಪಷ್ಟಪಡಿಸಿದರು. “ಚಿತ್ರವನ್ನು ನೋಡಲು ಬಯಸುವವರು ನೋಡಬಹುದು. ಆಸಕ್ತಿ ಇಲ್ಲದವರು ನೋಡಬೇಕಾಗಿಲ್ಲ,” ಎಂದು ಹೇಳಿದರು. ಸಂವಿಧಾನ ಖಾತರಿಪಡಿಸಿರುವ ವಾಕ್ ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಉಲ್ಲೇಖಿಸಿದ ಅವರು, ಚಿತ್ರದಲ್ಲಿ ‘ಕಾನೂನುಬಾಹಿರ’ ಅಂಶಗಳಿದ್ದರೆ ಅದರ ಕುರಿತು ತೀರ್ಮಾನಿಸುವುದು ನ್ಯಾಯಾಲಯಗಳ ಕೆಲಸ ಎಂದು ಹೇಳಿದರು. “ಪ್ರತಿಯೊಬ್ಬರಿಗೂ ಚಲನಚಿತ್ರ ನಿರ್ಮಿಸುವ ಹಕ್ಕಿದೆ. ಅದರಲ್ಲಿ ಏನಾದರೂ ಕಾನೂನುಬಾಹಿರವಾಗಿದ್ದರೆ, ನ್ಯಾಯಾಲಯ ಅದನ್ನು ರದ್ದುಗೊಳಿಸುತ್ತದೆ,” ಎಂದು ರಾಜೀವ್‌ ಚಂದ್ರಶೇಖರ್ ಅಭಿಪ್ರಾಯಪಟ್ಟರು. ಈ ಹಿಂದೆ ‘ಎಂಪುರಾನ್’ ಚಿತ್ರದ ಸುತ್ತಲೂ ಉದ್ಭವಿಸಿದ್ದ ವಿವಾದದ ಸಂದರ್ಭದಲ್ಲಿಯೂ ತಾವು ಇದೇ ರೀತಿಯ ನಿಲುವು ತಾಳಿದ್ದಾಗಿ ಅವರು ಹೇಳಿದರು. ಮೋಹನ್ ಲಾಲ್ ಅಭಿನಯದ ಈ ಚಿತ್ರದಲ್ಲಿ ಗೋಧ್ರಾ ಗಲಭೆಗಳ ಚಿತ್ರಣವಿತ್ತು ಎಂದು ಹೇಳಲಾಗಿತ್ತು. ಬಳಿಕ ಅದು ಬಲಪಂಥೀಯ ಬೆಂಬಲಿಗರಿಂದ ಟೀಕೆಗೆ ಗುರಿಯಾಗಿ ಮರು–ಸೆನ್ಸಾರ್ ಪ್ರಕ್ರಿಯೆಗೆ ಒಳಗಾಗಬೇಕಾಯಿತು. ‘ದಿ ಕೇರಳ ಸ್ಟೋರಿ 2’ ಟ್ರೇಲರ್ ನಲ್ಲಿನ ವಿಷಯದ ಬಗ್ಗೆ ತಮಗೆ ಆಕ್ಷೇಪಣೆ ಇದೆಯೇ ಎಂಬ ಪ್ರಶ್ನೆಗೆ ನೇರ ಉತ್ತರ ನೀಡದೆ, “ನಾನು ಅದನ್ನು ನೋಡುವುದಿಲ್ಲ ಎಂದು ಹೇಳಿದ್ದೇನೆ,” ಎಂದು ಪುನರುಚ್ಚರಿಸಿದರು. ಜೊತೆಗೆ, “ನನಗೆ ‘ಧುರಂಧರ್’ ಚಿತ್ರ ಇಷ್ಟವಾಯಿತು. ಅದನ್ನು ಎರಡು ಬಾರಿ ನೋಡಿದ್ದೇನೆ,” ಎಂದು ರಾಜೀವ್‌ ಚಂದ್ರಶೇಖರ್ ಹೇಳಿದರು. ಈ ಬ್ಲಾಕ್ಬಸ್ಟರ್ ಸ್ಪೈ ಥ್ರಿಲ್ಲರ್ ಚಿತ್ರವು ಬಿಜೆಪಿಯ ರಾಜಕೀಯ ಹಿತಾಸಕ್ತಿಗಳಿಗೆ ಪೂರಕವಾಗಿದೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ ಚರ್ಚೆಗೆ ಕಾರಣವಾಗಿತ್ತು.

ವಾರ್ತಾ ಭಾರತಿ 23 Feb 2026 10:34 pm

Tumakuru | ಚಿನ್ನಾಭರಣ ದರೋಡೆಕೋರರನ್ನು ಸಿನಿಮೀಯ ರೀತಿಯಲ್ಲಿ ಬಂಧಿಸಿದ ಪೊಲೀಸರು

ಅರಣ್ಯ ಪ್ರದೇಶಕ್ಕೆ ನುಗ್ಗಿದ್ದ ಆರೋಪಿಗಳನ್ನು ಸುತ್ತುವರಿದು ಬಂಧನ

ವಾರ್ತಾ ಭಾರತಿ 23 Feb 2026 10:32 pm

ಪ್ರಸ್ತಾಪದಲ್ಲಿರುವ ಸಿಂಧನೂರು ಜಿಲ್ಲೆಗೆ ಸಿರವಾರ ತಾಲೂಕು ಸೇರ್ಪಡೆ ವಿರೋಧಿಸಿ ಬೃಹತ್ ಪ್ರತಿಭಟನೆ

ಸಿರವಾರ : ನೂತನವಾಗಿ ಪ್ರಸ್ತಾಪದಲ್ಲಿರುವ ಸಿಂಧನೂರು ಜಿಲ್ಲೆಗೆ ಸಿರವಾರ ತಾಲೂಕು ಸೇರ್ಪಡೆ ಮಾಡುವ ವಿಚಾರಕ್ಕೆ ಪಟ್ಟಣದಲ್ಲಿ ತೀವ್ರ ವಿರೋಧ ವ್ಯಕ್ತವಾಗಿದೆ. ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲೂ ಚರ್ಚೆ ನಡೆಯುತ್ತಿದ್ದು, ಸೋಮವಾರ ತಾಲೂಕು ಹೋರಾಟ ಸಮಿತಿ ವತಿಯಿಂದ ಬೃಹತ್ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಳ್ಳಲಾಯಿತು. ರಾಯಚೂರಿನಿಂದ ಸಿರವಾರ 36 ಕಿ.ಮೀ ದೂರದಲ್ಲಿದ್ದು, ಸಿಂಧನೂರು ಸುಮಾರು 80 ಕಿ.ಮೀ ದೂರದಲ್ಲಿದೆ. ಒಂದು ವೇಳೆ ಸಿರವಾರವನ್ನು ಸಿಂಧನೂರು ಜಿಲ್ಲೆಗೆ ಸೇರಿಸಿದರೆ ಜಿಲ್ಲಾ ಕಚೇರಿಗಳ ಕಾರ್ಯಗಳಿಗೆ ಜನರು ಹೆಚ್ಚಿನ ದೂರ ಪ್ರಯಾಣಿಸಬೇಕಾಗಿ ಬಂದು ತೊಂದರೆ ಅನುಭವಿಸಬೇಕಾಗುತ್ತದೆ ಎಂದು ಪ್ರತಿಭಟನಾಕಾರರು ಅಭಿಪ್ರಾಯಪಟ್ಟರು. ಪಟ್ಟಣದ ಹಿರಿಯ ವಾಣಿಜ್ಯೋಧ್ಯಮಿ ಚುಕ್ಕಿ ಸೂಗಪ್ಪ ಸಾಹುಕಾರ್ ಮಾತನಾಡಿ, “ಹೊಸ ಜಿಲ್ಲೆಗಳ ರಚನೆ ಜನರಿಗೆ ಅನುಕೂಲವಾಗಬೇಕೇ ಹೊರತು ಅನಾನುಕೂಲವಾಗಬಾರದು. ಸಿರವಾರವನ್ನು ಸಿಂಧನೂರು ಜಿಲ್ಲೆಗೆ ಸೇರಿಸಿದರೆ ಜನರಿಗೆ ಸಂಕಷ್ಟವಾಗಲಿದೆ. ತಕ್ಷಣ ಈ ನಿರ್ಧಾರವನ್ನು ಕೈಬಿಟ್ಟು ಸಿರವಾರ ತಾಲೂಕನ್ನು ರಾಯಚೂರು ಜಿಲ್ಲೆಯಲ್ಲಿ ಉಳಿಸಬೇಕು” ಎಂದು ಆಗ್ರಹಿಸಿದರು. ಪ್ರತಿಭಟನೆ ನಿರ್ಲಕ್ಷಿಸಿದರೆ ತೀವ್ರ ಹೋರಾಟಕ್ಕೆ ಮುಂದಾಗುವುದಾಗಿ ಎಚ್ಚರಿಸಿದರು. ವಿವಿಧ ಪಕ್ಷಗಳ ಮುಖಂಡರು ಹಾಗೂ ಸಂಘ-ಸಂಸ್ಥೆಗಳ ಪ್ರತಿನಿಧಿಗಳು ಒಕ್ಕೋರಲಿನಿಂದ ಸರ್ಕಾರವನ್ನು ನಿರ್ಧಾರ ಹಿಂಪಡೆಯುವಂತೆ ಒತ್ತಾಯಿಸಿದರು. ಬಳಿಕ ರಾಜ್ಯಪಾಲರಿಗೆ ಉದ್ದೇಶಿಸಿ ಬರೆದ ಮನವಿ ಪತ್ರವನ್ನು ರಾಯಚೂರು ಸಹಾಯಕ ಆಯುಕ್ತ ಹಂಪಣ್ಣ ಸಜ್ಜನ್ ಅವರಿಗೆ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಸಿರವಾರ ತಾಲೂಕು ಹೋರಾಟ ಸಮಿತಿ ಅಧ್ಯಕ್ಷರಾದ ಜೆ.ದೇವರಾಜಗೌಡ, ಮಾಜಿ ಶಾಸಕರಾದ ಗಂಗಾಧರ ನಾಯಕ, ಮುಖಂಡರಾದ ಜೆ.ಶರಣಪ್ಪಗೌಡ, ಎನ್.ಉದಯಕುಮಾರ್, ಜಿ.ಲೋಕರೆಡ್ಡಿ, ಮಲ್ಲಿಕಾರ್ಜುನ ವಕೀಲ ಜಕ್ಕಲದಿನ್ನಿ, ಮಲ್ಲಿಕಾರ್ಜುನ ಪಾಟೀಲ್ ಬಲ್ಲಟಿಗಿ, ಪ.ಪಂ. ಅಧ್ಯಕ್ಷ ಹಾಜಿ ಚೌದ್ರಿ, ರಮೇಶ ದರ್ಶನಕರ್, ದಾನನಗೌಡ, ಶಶಿಧರಗೌಡ ಹರವಿ, ವೈ.ಅಮರೇಶಪ್ಪಗೌಡ, ಚಂದ್ರಶೇಖರಯ್ಯಸ್ವಾಮಿ, ಸಿದ್ದರಾಮಯ್ಯಸ್ವಾಮಿ, ವೀರೇಶ ಸಾಹುಜಾರ್, ನರಸಿಂಹರಾವ್ ಕುಲ್ಕರ್ಣಿ, ಪ.ಪಂ. ಸದಸ್ಯರಾದ ಅಜೀತಕುಮಾರ್, ಹೊನ್ನಟಿಗಿ, ವಿನಯಕುಮಾರ್, ಹಸೇನ ಅಲೀ, ಹೆಚ್.ಮಾರ್ಕಪ್ಪ, ಡಾ: ಸುನೀಲ್ ಸರೋಧೆ, ಕರವೇ ಅಧ್ಯಕ್ಷರಾದ ರಾಘವೇಂದ್ರ ಖಾಜನಗೌಡ, ಡಿ.ಯಮನೂರು, ಎಲ್.ವಿ. ಸುರೇಶ, ಮೇಶಕ್ ದೊಡ್ಡಮನೆ, ಡೇವಿಡ್, ಸೇರಿದಂತೆ ಸಿರವಾರ ತಾಲೂಕಿನ ವಿವಿಧ ಪಕ್ಷಗಳ ಮುಖಂಡರು, ವಿವಿಧ ಸಂಘ - ಸಂಸ್ಥೆಗಳ ಮುಖಂಡರು, ಸಾರ್ವಜನಿಕರು ಇದ್ದರು.

ವಾರ್ತಾ ಭಾರತಿ 23 Feb 2026 10:31 pm

ಲಿಂಗಸುಗೂರು | ಮಟ್ಕಾ ನಡೆಸುತ್ತಿದ್ದ ಆರೋಪ : ಮೂವರ ಬಂಧನ

ಲಿಂಗಸುಗೂರು : ತಾಲೂಕಿನ ಹಟ್ಟಿ ಪಟ್ಟಣದ ಸಂತೆ ಬಜಾರ್ ಹಾಗೂ ಕಾಕಾನಗರ ಪ್ರದೇಶಗಳಲ್ಲಿ ಅಕ್ರಮ ಮಟ್ಕಾ ಜೂಜಾಟ ನಡೆಯುತ್ತಿದೆ ಎಂಬ ಖಚಿತ ಮಾಹಿತಿಯ ಮೇರೆಗೆ ಪೊಲೀಸರು ಏಕಕಾಲದಲ್ಲಿ ಮೂರು ಪ್ರತ್ಯೇಕ ದಾಳಿಗಳನ್ನು ನಡೆಸಿ ಮೂವರು ಮಟ್ಕಾ ಬುಕ್ಕಿಗಳನ್ನು ಬಂಧಿಸಿದ್ದಾರೆ. ಆರಕ್ಷಕ ನಿರೀಕ್ಷಕ ಶಿವಾನಂದ ಗಾಣಿಗೇರ ಅವರ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಸಿದ್ದರಾಮೇಶ (32), ಆದಪ್ಪ (54) ಹಾಗೂ ಸೈಯದ್ ಮಮ್ಮದ್ ಅಲಿ ಖಾದ್ರಿ ಅವರನ್ನು ಬಂಧಿಸಲಾಗಿದೆ. ಬಂಧಿತರು ಮಟ್ಕಾ ಚೀಟಿಗಳನ್ನು ಬರೆಯುತ್ತಿದ್ದು, ಹಣವನ್ನು ತಮ್ಮಲ್ಲೇ ಇಟ್ಟುಕೊಂಡು ಜೂಜಾಟ ನಡೆಸುತ್ತಿರುವುದಾಗಿ ಪ್ರಾಥಮಿಕ ವಿಚಾರಣೆಯಲ್ಲಿ ತಿಳಿದುಬಂದಿದೆ. ಆರೋಪಿಗಳಿಂದ 2,560 ರೂ. ನಗದು, ಮಟ್ಕಾ ಚೀಟಿಗಳು ಹಾಗೂ ಒಂದು ಪೆನ್ ವಶಪಡಿಸಿಕೊಳ್ಳಲಾಗಿದೆ. ಈ ಸಂಬಂಧ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಮೂವರ ವಿರುದ್ಧ ಮೂರು ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.

ವಾರ್ತಾ ಭಾರತಿ 23 Feb 2026 10:26 pm

ಅಲ್ಟಾಟೆಕ್ ಹೆಸರಿನಲ್ಲಿ 80 ಸಾವಿರ ರೂ. ಆನ್‌ಲೈನ್ ವಂಚನೆ: ದೂರು ದಾಖಲು

ಮಣಿಪಾಲ, ಫೆ.23: ಅಲ್ಟಾಟೆಕ್ ಕಂಪೆನಿ ಹೆಸರಿನಲ್ಲಿ ಇಂಜಿನಿಯರೊಬ್ಬ ರಿಗೆ ಸಾವಿರಾರು ರೂ. ಹಣ ಆನ್‌ಲೈನ್‌ನಲ್ಲಿ ವಂಚಿಸಿ ರುವ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತುಷಾರ್ ಎಚ್.ಪಿ.(42) ಎಂಬವರು ಮಣಿಪಾಲ ಹೆರ್ಗಾ ಗ್ರಾಮದ ಗೋಳಿಕಟ್ಟೆ ಎಂಬಲ್ಲಿ ಮನೆ ನಿರ್ಮಾಣ ಮಾಡು ತ್ತಿದ್ದು ಈ ಮನೆಯ ನಿರ್ಮಾಣಕ್ಕೆ ಕಿರಣ್ ಹಾಗೂ ಮಂಜುನಾಥ್ ಎಂಬ ಇಂಜಿನಿಯರ್ ಅವರಿಗೆ ವಹಿಸಿದ್ದರು. ಕಿರಣ್ ಕಾಂಕ್ರೀಟ್ ಮಾಡಲು ಆರ್‌ಎಂಸಿ ಸಪ್ಲಾಯರನ್ನು ಆನ್‌ಲೈನ್‌ನಲ್ಲಿ ಹುಡುಕುತ್ತಿದ್ದು, ಅಲ್ಲಿ ಸಿಕ್ಕಿದ ನಂಬರ್‌ಗೆ ಫೆ.21ರಂದು ಕರೆ ಮಾಡಿದರು. ಅವರು ಅಲ್ಟ್ರಾಟೆಕ್ ಕಂಪನಿಯಿಂದ ಮಾತನಾಡುತ್ತಿರುವುದು ಎಂದು ಹೇಳಿ, ಸೈಟ್ ಪರಿಶೀಲನೆ ಮಾಡುವ ಮೊದಲು ಮುಂಗಡ 80000ರೂ. ನೀಡುವಂತೆ ತಿಳಿಸಿದರು. ಅದನ್ನು ನಂಬಿ ಕಿರಣ್ ಆರೋಪಿಗಳು ತಿಳಿಸಿದ ಖಾತೆಗೆ 80 ಸಾವಿರ ರೂ. ಹಣವನ್ನು ಹಾಕಿದ್ದರು. ಆದರೆ ಆರೋಪಿಗಳು ಅಲ್ಟಾಟೆಕ್ ಕಂಪನಿಯ ಹೆಸರಿನಲ್ಲಿ ಕಿರಣ್ ಅವರಿಗೆ ಮೋಸ ಮಾಡಿರುವುದು ತಿಳಿದುಬಂದಿದೆ.

ವಾರ್ತಾ ಭಾರತಿ 23 Feb 2026 10:24 pm

ಹೂಡಿಕೆ ಹೆಸರಿನಲ್ಲಿ 5.39 ಲಕ್ಷ ರೂ. ಆನ್‌ಲೈನ್ ವಂಚನೆ: ಪ್ರಕರಣ ದಾಖಲು

ಕುಂದಾಪುರ, ಫೆ.23: ಹೂಡಿಕೆ ಮಾಡಿದರೆ ಹೆಚ್ಚಿನ ಲಾಭ ನೀಡುವುದಾಗಿ ನಂಬಿಸಿ ವ್ಯಕ್ತಿಯೊಬ್ಬರಿಗೆ ಲಕ್ಷಾಂತರ ರೂ. ಆನ್‌ಲೈನ್ ವಂಚನೆ ಎಸಗಿರುವ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬೆಳಗಾವಿ ಮೂಲದ ಪರಶುರಾಮ್ ಲಮಾಣಿ(29) ಎಂಬವರಿಗೆ ಫೆ.18ರಂದು ಅಪರಿಚಿತರು ಕರೆ ಮಾಡಿ, ಹೂಡಿಕೆ ಮಾಡಿದರೆ ಹೆಚ್ಚಿನ ಲಾಭ ನೀಡುವುದಾಗಿ ತಿಳಿಸಿದರು. ಇದನ್ನು ನಂಬಿದ ಅವರು, ವಿವಿಧ ಹಂತಗಳಲ್ಲಿ ಬೇರೆ ಬೇರೆ ಖಾತೆಗಳಿಗೆ ಒಟ್ಟು 5,39,200ರೂ. ಹಣವನ್ನು ಹೂಡಿಕೆ ಮಾಡಿದ್ದರು. ಆದರೆ ಆರೋಪಿಗಳು ಪರಶುರಾಮ್ ಅವರಿಗೆ ಯಾವುದೇ ಹಣವನ್ನು ನೀಡದೆ ವಂಚಿಸಿರುವುದಾಗಿ ದೂರಲಾಗಿದೆ.

ವಾರ್ತಾ ಭಾರತಿ 23 Feb 2026 10:22 pm

ಎಸ್‍ಐಆರ್ ವಿರುದ್ಧ ರಾಷ್ಟ್ರವ್ಯಾಪಿ ದೊಡ್ಡ ಪ್ರಮಾಣದಲ್ಲಿ ಜನಾಂದೋಲನ ನಡೆಯಬೇಕಾಗಿದೆ : ಶಿವಸುಂದರ್

ಮಂಡ್ಯ : ಚುನಾವಣಾ ಆಯೋಗವು ದೇಶಾದ್ಯಂತ ನಡೆಸುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ(ಎಸ್‍ಐಆರ್)ಯು ಪ್ರಜಾತಂತ್ರವನ್ನು ಕೊನೆಗೊಳಿಸುವ ಕೇಂದ್ರದ ಆಡಳಿತರೂಢ ಪಕ್ಷದ ಯತ್ನಕ್ಕೆ ಅಸ್ತ್ರವಾಗಿದೆ ಎಂದು ಚಿಂತಕ, ಅಂಕಣಕಾರ ಶಿವಸುಂದರ್ ಆರೋಪಿಸಿದ್ದಾರೆ. ಎದ್ದೇಳು ಕರ್ನಾಟಕ, ಕರ್ನಾಟಕ ಜನಶಕ್ತಿ, ರೈತ, ದಲಿತ, ಪ್ರಗತಿಪರ ಹಾಗೂ ಕನ್ನಡಪರ ಸಂಘಟನೆಗಳ ಸಹಯೋಗದಲ್ಲಿ ಎಸ್‍ಐಆರ್ ಕುರಿತು ಸೋಮವಾರ ಹಮ್ಮಿಕೊಂಡಿದ್ದ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಎಸ್‍ಐಆರ್‌ ನ ಪರಿಣಾಮ, ಅಪಾಯಗಳ ಕುರಿತು ವಿವರಿಸಿದರು. ದೇಶದ ಆಡಳಿತದ ಚುಕ್ಕಾಣಿಯನ್ನು ಯಾವುದೇ ಕಾರಣಕ್ಕೂ ಬಿಟ್ಟುಕೊಡಬಾರದೆಂಬ ತೀರ್ಮಾನಕ್ಕೆ ಬಿಜೆಪಿ, ಸಂಘಪರಿವಾರ ಬಂದಿದೆ. ಅದು ಕೈಗೂಡಬೇಕಾದರೆ ಸಂಸತ್ತಿನಲ್ಲಿ ತಮ್ಮ ಸಂಖ್ಯಾಬಲ ಹೆಚ್ಚಿಸಿಕೊಳ್ಳಬೇಕು. ಆ ಮೂಲಕ ಸಂವಿಧಾನದ ಮೂಲಭೂತ ನೆಲೆಯನ್ನು ಧ್ವಂಸಗೊಳಿಸಬೇಕು. ಅದಕ್ಕಾಗಿ ಎಸ್‍ಐಆರ್ ಅನ್ನು ದಾಳವಾಗಿ ಮಾಡಿಕೊಳ್ಳಲಾಗಿದೆ ಎಂದು ಅವರು ಹೇಳಿದರು. ತಮ್ಮ ಓಟ್ ಬ್ಯಾಂಕ್ ಅಲ್ಲದ ಅಲ್ಪಸಂಖ್ಯಾತರನ್ನು ಮತದಾನದ ಹಕ್ಕಿನಿಂದ ಹೊರಗಿಡುವ ಪ್ರಯತ್ನವನ್ನು ಸಿಎಎ, ಎನ್‍ಆರ್‍ಸಿ ಮೂಲಕ ನಡೆಸಲಾಯಿತು. ಆದರೆ, ಜನವಿರೋಧದಿಂದ ಅದನ್ನು ಕೈಬಿಡಲಾಯಿತು. ಈಗ ಎಸ್‍ಐಆರ್ ಮೂಲಕ ಅದನ್ನು ಈಡೇರಿಸಿಕೊಳ್ಳಲು ಹೊರಟಿದೆ. ಇದರಿಂದ ಅಲ್ಪಸಂಖ್ಯಾತರು ಮಾತ್ರವಲ್ಲ, ದಲಿತರು, ಹಿಂದುಳಿದವರು ಮತದಾನದ ಹಕ್ಕನ್ನು ಕಳೆದುಕೊಳ್ಳಲಿದ್ದಾರೆ ಎಂದು ಅವರು ವಿಶ್ಲೇಷಿಸಿದರು. ಈಗಾಗಲೇ ಎಸ್‍ಐಆರ್ ಮೂಲಕ ಬಿಹಾರದಲ್ಲಿ ಅಧಿಕಾರಿ ಹಿಡಿಯಲಾಗಿದೆ. ಮುಂದುವರಿದು ಪಶ್ಚಿಮ ಬಂಗಾಳ, ತಮಿಳುನಾಡು, ಕರ್ನಾಟಕ ಸೇರಿದಂತೆ ಚುನಾವಣಾ ಹತ್ತಿರದಲ್ಲಿರುವ ರಾಜ್ಯಗಳಲ್ಲಿ ಈ ಪ್ರಕ್ರಿಯೆ ನಡೆಯುತ್ತಿದೆ. ನಾನಾ ಕಾರಣ ನೀಡಿ ಲಕ್ಷಾಂತರ ಮತದಾರರನ್ನು ಪಟ್ಟಿಯಿಂದ ಕೈಬಿಡಲಾಗಿದೆ. ಮುಂದೆ ಎಲ್ಲಾ ರಾಜ್ಯಗಳಿಗೂ ವಿಸ್ತರಿಸುತ್ತದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು. ಮತದಾರರ ವಿಶೇಷ ಪರಿಷ್ಕರಣೆಗೆ 11 ದಾಖಲೆಗಳನ್ನು ಚುನಾವಣಾ ಆಯೋಗ ನಿಗದಿಪಡಿಸಿದೆ. ಇಷ್ಟೂ ದಾಖಲೆಗಳನ್ನು ದೇಶದ ಎಲ್ಲಾ ಪ್ರಜೆಗಳ ಹೊಂದಿರುವುದು ಸಾಧ್ಯವಿಲ್ಲ. ಕೇವಲ ಹೆಸರಿನಲ್ಲಿ ತಾಂತ್ರಿಕ ದೋಷದಿಂದ ಒಂದು ಅಕ್ಷರ ತಪ್ಪಾಗಿದ್ದರೂ ಆತ ಮತಪಟ್ಟಿಯಿಂದ ಹೊರದಬ್ಬುತ್ತಾನೆ. ಇದರ ಹಿಂದಿನ ಷಡ್ಯಂತ್ರವನ್ನು ನಾವು ಅರ್ಥಮಾಡಿಕೊಳ್ಳಬೇಕಾಗಿದೆ ಎಂದು ಅವರು ಹೇಳಿದರು. ಸಂವಿಧಾನಕ್ಕೆ ಕೊಡಲಿಪೆಟ್ಟು ನೀಡಲು ಹೊರಟಿರುವ ಎಸ್‍ಐಆರ್ ವಿರುದ್ಧ ರಾಷ್ಟ್ರವ್ಯಾಪಿ ದೊಡ್ಡ ಪ್ರಮಾಣದಲ್ಲಿ ಜನಾಂದೋಲನ ನಡೆಯಬೇಕಾಗಿದೆ. ಜನಪರ ಸಂಘಟನೆಗಳು ಈ ನಿಟ್ಟಿನಲ್ಲಿ ಜಾಗೃತಿಗೊಳಿಸುವ, ಹೋರಾಟಕ್ಕೆ ಅಣಿಗೊಳಿಸುವ ಜವಾಬ್ಧಾರಿಯನ್ನು ತೆಗೆದುಕೊಳ್ಳಬೇಕಾಗಿದೆ ಎಂದು ಅವರು ಸಲಹೆ ನೀಡಿದರು. ಮಹಿಳಾ ಮುನ್ನಡೆ ಸಂಘಟನೆಯ ಪೂರ್ಣೀಮಾ, ರೈತಸಂಘದ ಜಿಲ್ಲಾಧ್ಯಕ್ಷ ಎ.ಎಲ್.ಕೆಂಪೂಗೌಡ, ಕರ್ನಾಟಕ ಜನಶಕ್ತಿಯ ಸಿದ್ದರಾಜು, ದಸಂಸ ಮುಖಂಡ ಎಂ.ವಿ.ಕೃಷ್ಣ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು ಉಪಸ್ಥಿತರಿದ್ದರು.

ವಾರ್ತಾ ಭಾರತಿ 23 Feb 2026 10:18 pm

ಜೆಎನ್‌ಯುನಲ್ಲಿ ಎಡ, ಬಲ ಪಂಥೀಯ ವಿದ್ಯಾರ್ಥಿಗಳ ನಡುವೆ ಘರ್ಷಣೆ

ಹೊಸದಿಲ್ಲಿ, ಫೆ. 23: ಹೊಸದಿಲ್ಲಿಯ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದ ಉಪ ಕುಲಪತಿ ಸಾಂತಿಶ್ರೀ ಧೂಳಿಪುಡಿ ಪಂಡಿತ್‌ರ ರಾಜೀನಾಮೆಗೆ ಆಗ್ರಹಿಸಿ ಧರಣಿ ನಡೆದ ಬಳಿಕ, ಎಡಪಂಥೀಯ ಮತ್ತು ಬಲಪಂಥೀಯ ವಿದ್ಯಾರ್ಥಿ ಸಂಘಟನೆಗಳಿಗೆ ಸೇರಿದ ವಿದ್ಯಾರ್ಥಿಗಳ ನಡುವೆ ಸೋಮವಾರ ಮುಂಜಾನೆ ಘರ್ಷಣೆ ನಡೆದಿದೆ. ಫೆಬ್ರವರಿ 16ರಂದು ‘ದ ಸಂಡೇ ಗಾರ್ಡಿಯನ್’ಗೆ ನೀಡಿದ ಸಂದರ್ಶನವೊಂದರಲ್ಲಿ ಜಾತೀವಾದಿ ಹೇಳಿಕೆಗಳನ್ನು ನೀಡಿದ್ದಾರೆನ್ನಲಾದ ಉಪ ಕುಲಪತಿ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ವಿಶ್ವವಿದ್ಯಾಲಯ ಆವರಣದ ಪೂರ್ವ ದ್ವಾರದತ್ತ ಮೆರವಣಿಗೆಯಲ್ಲಿ ಸಾಗುವಂತೆ ಜವಾಹರಲಾಲ್ ನೆಹರೂ ವಿಶ್ವವಿದ್ಯಾನಿಲಯ ವಿದ್ಯಾರ್ಥಿ ಸಂಘ ಕರೆ ನೀಡಿತ್ತು. ‘‘ತಾವು ಸಂತ್ರಸ್ತರು ಎಂಬುದಾಗಿ ಶಾಶ್ವತವಾಗಿ ಹೇಳಿಕೊಳ್ಳುತ್ತಾ ಬಂದರೆ ದಲಿತರ ಅಭಿವೃದ್ಧಿ ಸಾಧ್ಯವಾಗುವುದಿಲ್ಲ’’ ಎಂದು ಅವರು ಆ ಸಂದರ್ಶನದಲ್ಲಿ ಹೇಳಿದ್ದಾರೆ. ಸೋಮವಾರ ಮುಂಜಾನೆ 1:30ರ ವೇಳೆಗೆ ಎಡಪಂಥೀಯ ಜವಾಹರಲಾಲ್ ನೆಹರೂ ವಿವಿ ವಿದ್ಯಾರ್ಥಿ ಸಂಘ ಮತ್ತು ಬಲಪಂಥೀಯ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ಗೆ ಸೇರಿದ ವಿದ್ಯಾರ್ಥಿಗಳ ನಡುವೆ ಘರ್ಷಣೆ ಸಂಭವಿಸಿತು. ವಿಶ್ವವಿದ್ಯಾಲಯ ಆಡಳಿತವು ಮೆರವಣಿಗೆಯಲ್ಲಿ ಸಾಗಿದ ವಿದ್ಯಾರ್ಥಿಗಳೊಂದಿಗೆ ಮಾತನಾಡದೆ, ಅವರ ವಿರುದ್ಧ ಎಬಿವಿಪಿ ಸದಸ್ಯರನ್ನು ಛೂ ಬಿಟ್ಟರು ಎಂದು ಪ್ರತಿಭಟನಾಕಾರರು ಆರೋಪಿಸಿದರು.

ವಾರ್ತಾ ಭಾರತಿ 23 Feb 2026 10:17 pm

ಪಶ್ಚಿಮದಂಡೆಯಲ್ಲಿ ಮಸೀದಿಗೆ ಬೆಂಕಿ ಹಚ್ಚಿದ ಇಸ್ರೇಲಿ ವಸಾಹತುಗಾರರು

ರಮಲ್ಲಾ, ಫೆ.23: ಇಸ್ರೇಲ್ ಆಕ್ರಮಿತ ಪಶ್ಚಿಮದಂಡೆಯಲ್ಲಿ ಮಸೀದಿಯೊಂದರಲ್ಲಿ ಸೋಮವಾರ ಬೆಳಿಗ್ಗೆ ಇಸ್ರೇಲಿ ವಸಾಹತುಗಾರರು ದಾಂಧಲೆ ನಡೆಸಿ ಬೆಂಕಿ ಹಚ್ಚಿರುವುದಾಗಿ ಫೆಲೆಸ್ತೀನ್ ಪ್ರಾಧಿಕಾರದ ಮೂಲಗಳು ಹೇಳಿವೆ. ನಬ್ಲೂಸ್ ಬಳಿಯ ಟೆಲ್ಲ್ ಪಟ್ಟಣದಲ್ಲಿರುವ ಅಬು ಬಕರ್ ಅಲ್-ಸಿದ್ದಿಕ್ ಮಸೀದಿಯ ಗೋಡೆಯ ಮೇಲೆ ಬಣ್ಣ ಎರಚಿ, ಆಕ್ಷೇಪಾರ್ಹ ಪದಗಳನ್ನು ಬರೆದ ಬಳಿಕ ಮಸೀದಿಗೆ ಬೆಂಕಿ ಹಚ್ಚಲಾಗಿದೆ. ಬೆಳಿಗ್ಗೆ ಪ್ರಾರ್ಥನೆಗೆ ಬಂದವರು ಮಸೀದಿಯ ಮುಖ್ಯ ದ್ವಾರದಿಂದ ಹೊಗೆ ಬರುತ್ತಿರುವುದನ್ನು ಗಮನಿಸಿ ಬೆಂಕಿಯನ್ನು ನಿಯಂತ್ರಿಸಿದ್ದಾರೆ. ಕೃತ್ಯದಲ್ಲಿ ಮಸೀದಿಯ ಕಿಟಕಿ ಗಾಜು ಮತ್ತು ಬಾಗಿಲಿಗೆ ಹಾನಿಯಾಗಿದೆ . ಇಬ್ಬರು ವ್ಯಕ್ತಿಗಳು ಗ್ಯಾಸೊಲಿನ್ ಮತ್ತು ಸ್ಪ್ರೇ ಪೈಂಟ್‍ನ ಕ್ಯಾನಿನೊಂದಿಗೆ ಮಸೀದಿಯತ್ತ ಹೋಗುತ್ತಿರುವುದು ಮತ್ತು ಕೆಲ ಹೊತ್ತಿನ ಬಳಿಕ ಅಲ್ಲಿಂದ ಓಡಿಹೋಗುತ್ತಿರುವುದು ಮಸೀದಿಯ ಸಿಸಿಟಿವಿಯಲ್ಲಿ ದಾಖಲಾಗಿದೆ ಎಂದು ಮೂಲಗಳು ಹೇಳಿವೆ.

ವಾರ್ತಾ ಭಾರತಿ 23 Feb 2026 10:13 pm

Bihar| ಅಕ್ರಮ ಕಾರ್ಖಾನೆ ಮೇಲೆ ದಾಳಿ: ನಕಲಿ ಔಷಧ, ಮಾದಕ ವಸ್ತು ವಶ

ಹೊಸದಿಲ್ಲಿ, ಫೆ. 23: ಪಾಟ್ನಾದ ಸಮೀಪ ನಕಲಿ ಔಷಧಗಳು, ಮಾದಕ ದ್ರವ್ಯವನ್ನು ಉತ್ಪಾದಿಸುವ ಹಾಗೂ ಮರು ಪ್ಯಾಕ್ ಮಾಡುವ ಅಕ್ರಮ ಕಾರ್ಖಾನೆಯ ಮೇಲೆ ದಿಲ್ಲಿ ಪೊಲೀಸರು ದಾಳಿ ನಡೆಸಿದ್ದಾರೆ. ಕ್ರೈಮ್ ಬ್ರಾಂಚ್ ಪೊಲೀಸ್ ಠಾಣೆಯಲ್ಲಿ ಎನ್‌ಡಿಪಿಎಸ್ ಕಾಯ್ದೆ ಅಡಿಯಲ್ಲಿ ದಾಖಲಾಗಿದ್ದ ಪ್ರಕರಣದ ತನಿಖೆಯ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಬಿಹಾರದಲ್ಲಿ ಇದೇ ರೀತಿಯ ಎರಡು ಅಕ್ರಮ ಔಷಧ ಘಟಕಗಳು ಪತ್ತೆಯಾದ ದಿನಗಳ ಬಳಿಕ ಈ ಬೆಳವಣಿಗೆ ನಡೆದಿದೆ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ. ಈ ಹಿಂದೆ ಬಂಧಿತರಾದವರು ನೀಡಿದ ಮಾಹಿತಿಯ ಆಧಾರದಲ್ಲಿ ಈ ದಾಳಿ ನಡೆಸಲಾಗಿದೆ ಎಂದು ಅವರು ಹೇಳಿದ್ದಾರೆ. ಈ ಘಟಕದಿಂದ ನಕಲಿ ಮಾತ್ರೆಗಳು, ಸಿರಪ್‌ಗಳು, ಯಂತ್ರಗಳು ಹಾಗೂ ಪ್ಯಾಕೇಜಿಂಗ್ ಸಾಮಗ್ರಿಗಳ ಬೃಹತ್ ಸಂಗ್ರಹವನ್ನು ವಶಪಡಿಸಿಕೊಳ್ಳಲಾಗಿದೆ. ಸೂಕ್ತ ಕಾನೂನು ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಅವಧಿ ಮೀರಿದ ಔಷಧಗಳನ್ನು ಮತ್ತೆ ಪ್ಯಾಕ್ ಮಾಡಿ ನಕಲಿ ವೈದ್ಯಕೀಯ ದಾರಿಗಳ ಮೂಲಕ ಮಾರುಕಟ್ಟೆಯಲ್ಲಿ ಹೆಚ್ಚಿನ ಬೆಲೆ ವಿತರಿಸಲಾಗುತ್ತಿದೆ. ಇದು ಸಾರ್ವಜನಿಕರ ಜೀವಕ್ಕೆ ಗಂಭೀರ ಅಪಾಯವನ್ನು ಉಂಟು ಮಾಡುತ್ತಿದೆ ಎಂದು ಅವರು ಹೇಳಿದ್ದಾರೆ.

ವಾರ್ತಾ ಭಾರತಿ 23 Feb 2026 10:10 pm

ಮಧ್ಯಪ್ರಾಚ್ಯಕ್ಕೆ `ವಾಯು ಸೇತುವೆ' ನಿರ್ಮಿಸಿದ ಅಮೆರಿಕ: ವರದಿ

ವಾಷಿಂಗ್ಟನ್, ಫೆ.23: ಇರಾನ್‍ನೊಂದಿಗೆ ಸಂಭಾವ್ಯ ಪರಮಾಣು ಒಪ್ಪಂದದ ಕುರಿತು ಮಾತುಕತೆಗಳು ಅನಿಶ್ಚಿತವಾಗಿರುವ ಹಿನ್ನೆಲೆಯಲ್ಲಿ ಅಮೆರಿಕ ಮಧ್ಯಪ್ರಾಚ್ಯಕ್ಕೆ ಮಿಲಿಟರಿ ವಿಮಾನಗಳ ನಿಯೋಜನೆಯನ್ನು ತೀವ್ರಗೊಳಿಸಿದೆ. ಪ್ರದೇಶಕ್ಕೆ ಸಿಬ್ಬಂದಿ, ಶಸ್ತ್ರಾಸ್ತ್ರ ಮತ್ತು ಉಪಕರಣಗಳನ್ನು ಸಾಗಿಸುವ ವಿಮಾನಗಳ `ಹರಿವು' ಹೆಚ್ಚಿರುವುದಾಗಿ ವರದಿಯಾಗಿದೆ. ವಿಮಾನಗಳ ಚಟುವಟಿಕೆಗಳ ಮೇಲೆ ನಿಗಾ ವಹಿಸುವ `ಫ್ಲೈಟ್ ರಾಡಾರ್' ಬಿಡುಗಡೆಗೊಳಿಸಿರುವ ವೀಡಿಯೊ ಅಮೆರಿಕದ ಸೇನಾ ನೆಲೆಯಿಂದ ಫೈಟರ್ ಜೆಟ್‍ಗಳು, ಆಗಸದಲ್ಲಿ ವಿಮಾನಗಳಿಗೆ ಇಂಧನ ಮರುತುಂಬಿಸುವ ಟ್ಯಾಂಕರ್ ವಿಮಾನಗಳು ಮತ್ತು ಸಾರಿಗೆ ವಿಮಾನಗಳು ನಿರ್ಗಮಿಸುತ್ತಿರುವುದನ್ನು ತೋರಿಸಿದೆ. ಅಟ್ಲಾಂಟಿಕ್‍ನಾದ್ಯಂತ ಯುರೋಪ್ ಮತ್ತು ಮೆಡಿಟರೇನಿಯನ್ ಮೇಲೆ ನಿರಂತರ ಹಾದು ಹೋಗುತ್ತಿರುವ ವಿಮಾನಗಳ ಸಾಲನ್ನು `ಡಿಜಟಿಲ್ ವಾಯು ಸೇತುವೆ' ಎಂದು ಬಣ್ಣಿಸಲಾಗಿದೆ. `ಏರ್ ಆ್ಯಂಡ್ ಸ್ಪೇಸ್ ಫೋರ್ಸಸ್' ಮ್ಯಾಗಝಿನ್ ಪ್ರಕಾರ ಹಲವು ವಿಧಗಳ ಯುದ್ದ ವಿಮಾನಗಳನ್ನು ನಿಯೋಜಿಸಲಾಗಿದೆ. ಜರ್ಮನಿಯ ಸ್ಪಾಂಗ್‍ದಹ್ಲೆಮ್ ವಾಯು ನೆಲೆ, ಇಟಲಿಯ ಆವಿಯಾನೊ ವಾಯುನೆಲೆ, ದಕ್ಷಿಣ ಕ್ಯಾಲಿಫೋರ್ನಿಯಾದ ಮೆಕಂಟೈರ್ ಜಾಯಿಂಟ್ ನ್ಯಾಷನಲ್ ಗಾರ್ಡ್ ನೆಲೆಯಿಂದ ಎಫ್-16 ಯುದ್ದವಿಮಾನಗಳು ಮಧ್ಯಪ್ರಾಚ್ಯದತ್ತ ಸಾಗುತ್ತಿವೆ. ಬ್ರಿಟನ್‍ನ ಆರ್‍ಎಎಫ್ ಲೇಕನ್‍ಹೆಲ್ತ್ ನೆಲೆಯಿಂದ ಎಫ್-15ಇ ಯುದ್ದವಿಮಾನ, ವರ್ಜೀನಿಯಾ ವಾಯುನೆಲೆಯಿಂದ ಎಫ್-22 ಯುದ್ದವಿಮಾನಗಳು ಮಧ್ಯಪ್ರಾಚ್ಯದತ್ತ ಧಾವಿಸುತ್ತಿವೆ. ಇದರ ಜೊತೆಗೆ ಆರ್‍ಸಿ-135 ರಿವೆಟ್ ಜಂಟಿ ಕಣ್ಗಾವಲು ವಿಮಾನ ಮತ್ತು ಪಿ-8 ಪೊಸಿಡಾನ್ ಕಡಲ ಬೇಹುಗಾರಿಕಾ ವಿಮಾನಗಳನ್ನೂ ಅಮೆರಿಕ ಸ್ಥಳಾಂತರಿಸುತ್ತಿದೆ ಎಂದು ವರದಿ ಹೇಳಿದೆ.

ವಾರ್ತಾ ಭಾರತಿ 23 Feb 2026 10:06 pm

ನಾಳೆ ಕೊಪ್ಪಳ ಬಂದ್: ಖಾಸಗಿ ಶಾಲೆಗಳಿಗೆ ರಜೆ ಘೋಷಣೆ

ಪರೀಕ್ಷೆ ಮುಂದೂಡಿದ ಕೊಪ್ಪಳ ವಿವಿ

ವಾರ್ತಾ ಭಾರತಿ 23 Feb 2026 10:06 pm

ರಾಯಚೂರು | ಸರಕಾರಿ ಶಾಲೆಗಳನ್ನು ಉಳಿಸದಿದ್ದರೆ ಸಂವಿಧಾನ ಉಳಿಯದು: ಡಾ.ನಿರಂಜನ ಆರಾಧ್ಯ

ರಾಯಚೂರು : ಸರ್ಕಾರಿ ಶಾಲೆಗಳು ಸಂವಿಧಾನದ ತೊಟ್ಟಿಲು ಇದ್ದಂತೆ. ಅವುಗಳನ್ನು ಉಳಿಸಿಕೊಳ್ಳದಿದ್ದರೆ ಸಂವಿಧಾನವನ್ನು ಉಳಿಸಿಕೊಳ್ಳಲು ಸಾಧ್ಯವಿಲ್ಲ. ಸಂವಿಧಾನದ ಆಶಯ ಈಡೇರಿಸಲು ಸಾರ್ವಜನಿಕ ಶಿಕ್ಷಣ ವ್ಯವಸ್ಥೆ ಬಲವಾಗಿರಬೇಕು ಎಂದು ಶಿಕ್ಷಣ ತಜ್ಞ ಡಾ. ನಿರಂಜನ ಆರಾಧ್ಯ ಹೇಳಿದರು. ನಗರದ ನವೋದಯ ಶಿಕ್ಷಣ ಸಂಸ್ಥೆಯ ಕೇಂದ್ರ ಗ್ರಂಥಾಲಯ ಸಭಾಂಗಣದಲ್ಲಿ ಸರ್ಕಾರಿ ಶಾಲೆಗಳ ಅಭಿವೃದ್ಧಿ ವೇದಿಕೆ, ಭಾರತ ಜ್ಞಾನ ವಿಜ್ಞಾನ ಸಮಿತಿ, ರಾಜ್ಯ ಮಹಿಳಾ ಒಕ್ಕೂಟ ಹಾಗೂ ಶಿಕ್ಷಣ ಹಕ್ಕಿಗಾಗಿ ಕಾರ್ಯನಿರ್ವಹಿಸುತ್ತಿರುವ ವಿವಿಧ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ನಡೆದ “ನಮ್ಮ ಶಾಲೆ ನಮ್ಮ ಹಕ್ಕು” ಕಾರ್ಯಕ್ರಮದಲ್ಲಿ ಅವರು ಕೆಪಿಎಸ್ ಶಾಲೆಗಳ ಸ್ಥಿತಿಗತಿ ಕುರಿತು ಅವಲೋಕನ ಮಂಡಿಸಿದರು. ಸಾರ್ವಜನಿಕ ಶಿಕ್ಷಣದಲ್ಲಿ ಇರುವ ಕನಿಷ್ಠ ಸೌಲಭ್ಯಗಳನ್ನು ಬಲಪಡಿಸುವ ಬದಲು, ಅವನ್ನು ಕುಗ್ಗಿಸುವ ಕ್ರಮಗಳು ನಡೆಯುತ್ತಿವೆ. ಶಿಕ್ಷಣವನ್ನು ಸಾಮಾಜಿಕ ಒಳಿತಿನ ಸಾಧನವೆಂದು ನೋಡುವ ಮನೋಭಾವ ಕುಂದಿದೆ. ಸರ್ಕಾರಿ ಶಾಲೆಗಳ ವಿಲೀನ ಪ್ರಕ್ರಿಯೆ ಸಂವಿಧಾನದ ಮೌಲ್ಯಗಳಿಗೆ ವಿರುದ್ಧವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು. ಕಾರ್ಪೊರೇಟ್ ಶಾಲೆಗಳನ್ನು ಮಾದರಿಯಾಗಿ ನೋಡುವುದು ಅಪಾಯಕಾರಿ ಬೆಳವಣಿಗೆ. 1950ರಿಂದ 1990ರ ದಶಕದವರೆಗೆ ಶಿಕ್ಷಣ ಕ್ಷೇತ್ರ ಅಭಿವೃದ್ಧಿಯ ಹಾದಿಯಲ್ಲಿ ಸಾಗಿದ್ದರೂ, 1990ರ ನಂತರದ ಆರ್ಥಿಕ ಮತ್ತು ನೀತಿ ಬದಲಾವಣೆಗಳಿಂದ ಸಾರ್ವಜನಿಕ ಶಿಕ್ಷಣ ವ್ಯವಸ್ಥೆ ಹದಗೆಟ್ಟಿದೆ ಎಂದು ಹೇಳಿದರು. ಸರ್ಕಾರಿ ಶಾಲೆಗಳ ಮೇಲಿನ ನಂಬಿಕೆ ಕುಸಿದಿದ್ದು, ಬಡ ಮತ್ತು ಗ್ರಾಮೀಣ ವಿದ್ಯಾರ್ಥಿಗಳು ಹೆಚ್ಚಿನ ಸಂಕಷ್ಟಕ್ಕೆ ಒಳಗಾಗುತ್ತಿದ್ದಾರೆ. ಎಲ್ಲ ಶಾಲೆಗಳನ್ನು ಮುಚ್ಚಿ ಒಂದೇ ಶಾಲೆ ಮಾಡುವ ನಿರ್ಧಾರ ಸಮಂಜಸವೇ ಎಂಬ ಪ್ರಶ್ನೆ ಉದ್ಭವಿಸುತ್ತದೆ ಎಂದು ಅವರು ಹೇಳಿದರು. ಸರ್ಕಾರಿ ಶಾಲೆಗಳಲ್ಲಿ ದೊರೆಯುವ ಬುನಾದಿ ಹಾಗೂ ಮೌಲ್ಯಾಧಾರಿತ ಶಿಕ್ಷಣ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಸಿಗುವುದಿಲ್ಲ. ಮ್ಯಾಗ್ನೇಟ್ ಶಾಲೆಗಳ ಪರಿಕಲ್ಪನೆ ಬಡವರ ಶಿಕ್ಷಣ ಹಕ್ಕನ್ನು ಕಸಿಯುವ ಹುನ್ನಾರವಾಗಿದ್ದು, ಇದರ ಹಿಂದೆ ಕಾರ್ಪೊರೇಟ್ ಪ್ರಭಾವವಿದೆ ಎಂದು ಆರೋಪಿಸಿದರು. ಸರ್ಕಾರ ಶಾಲೆಗಳ ವಿಲೀನ ಪ್ರಕ್ರಿಯೆಯನ್ನು ಕೈಬಿಟ್ಟು, ಖಾಲಿ ಇರುವ ಶಿಕ್ಷಕರ ಹುದ್ದೆಗಳನ್ನು ತಕ್ಷಣ ಭರ್ತಿ ಮಾಡಬೇಕು. ಕಲ್ಯಾಣ ಕರ್ನಾಟಕ ಭಾಗದಲ್ಲಿ ಶಿಕ್ಷಕರ ನೇಮಕಾತಿಯ ವೇಳೆ ಟಿಇಟಿ ವಿನಾಯಿತಿ ನೀಡುವ ಮೂಲಕ ಸ್ಥಳೀಯ ಅಭ್ಯರ್ಥಿಗಳಿಗೆ ಅವಕಾಶ ಕಲ್ಪಿಸಬೇಕು ಎಂದು ಡಾ. ನಿರಂಜನ ಆರಾಧ್ಯ ಆಗ್ರಹಿಸಿದರು.

ವಾರ್ತಾ ಭಾರತಿ 23 Feb 2026 10:01 pm

ಕುಂದಾಪುರ| ಅಪ್ರಾಪ್ತನಿಂದ ಪ್ರಚೋದನಕಾರಿ ಹೇಳಿಕೆಯ ವಿಡಿಯೋ ಚಿತ್ರೀಕರಣ: ಇಬ್ಬರು ಆರೋಪಿಗಳ ಬಂಧನ

ಕುಂದಾಪುರ: ಉತ್ತರ ಭಾರತದ ಕೂಲಿ ಕಾರ್ಮಿಕ ಕುಟುಂಬದ ಅಪ್ರಾಪ್ತ ಬಾಲಕನಿಂದ ಬಲವಂತವಾಗಿ ದೇಶದ್ರೋಹದ ಹೇಳಿಕೆ ದಾಖಲಿಸಿ ಆ ದೃಶ್ಯವನ್ನು ಮೊಬೈಲ್ ನಲ್ಲಿ ವಿಡಿಯೋ ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟು ಪ್ರಚೋದನೆ ನೀಡಿದ ಆರೋಪದಡಿಯಲ್ಲಿ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಶಶಾಂಕ್ ಹಾಗೂ ಪ್ರಮೋದ್ ಬಂಧಿತ ಆರೋಪಿಗಳು ಎಂದು ಪೊಲೀಸರು ತಿಳಿಸಿದ್ದಾರೆ. ಕುಂದಾಪುರದ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು ಬಾಲಕನ ತಂದೆ ನೀಡಿದ ದೂರಿನಂತೆ ಪ್ರಕರಣಕ್ಕೆ ಸಂಬಂಧಿಸಿ ಶಶಾಂಕ್ ಹಾಗೂ ಪ್ರಮೋದ್ ರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಅದೇ ರೀತಿ ಆರೋಪಿ ಶಶಾಂಕ್, ತನ್ನ‌ ಮೇಲೆಯೂ ಗುಂಪೊಂದು ಹಲ್ಲೆಗೆ ನಡೆಸಿದೆ ಎಂದು ಆರೋಪಿಸಿ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರತಿ ದೂರು ನೀಡಿದ್ದು ಅದರಂತೆಯೂ ಪ್ರಕರಣ ದಾಖಲಾಗಿದೆ ಎಂದು ತಿಳಿದುಬಂದಿದೆ. ವಿಡಿಯೋ ಹರಿಬಿಟ್ಟರೆ ಕಾನೂನು ಕ್ರಮ: ಎಸ್ಪಿ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಹೇರ್‌ಡ್ರೆಸ್ ಅಂಗಡಿಯೊಂದರಲ್ಲಿ ಬಿಹಾರ ಮೂಲದ 11 ವರ್ಷದ ಬಾಲಕನೊಬ್ಬ ಪ್ರಚೋದನಕಾರಿ ಘೋಷಣೆ ಕೂಗುವ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ವಿಚಾರದಲ್ಲಿ ಈಗಾಗಲೇ ಪ್ರಕರಣ ದಾಖಲಾಗಿ ತನಿಖೆ ನಡೆಯುತ್ತಿರುವುದರಿಂದ ಈ ವಿಡಿಯೋವನ್ನು ಸಾರ್ವಜನಿಕರು ಶೇರ್ ಮಾಡುವುದಾಗಲಿ ಅಥವಾ ಪೋಸ್ಟ್ ಮಾಡುವುದಾಗಲಿ ಮಾಡಬಾರದು. ಮಾಡಿದಲ್ಲಿ ಅವರ ವಿರುದ್ಧ ಐಟಿ‌ ಕಾಯ್ದೆ, ಜೆಜೆ ಆಕ್ಟ್, ಇತರ ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಂ ಶಂಕರ್ ತಿಳಿಸಿದ್ದಾರೆ.

ವಾರ್ತಾ ಭಾರತಿ 23 Feb 2026 9:59 pm

ಅಜಿತ್ ಪವಾರ್ ಮಹಾರಾಷ್ಟ್ರ ಎಂದೂ ಕಂಡಿರದ ಅತ್ಯುತ್ತಮ CM ಆಗಿರುತ್ತಿದ್ದರು: ಫಡ್ನವಿಸ್

ಮುಂಬೈ: “ಅಜಿತ್ ಪವಾರ್ ಮಹಾರಾಷ್ಟ್ರ ಎಂದೂ ಕಂಡಿರದ ಅತ್ಯುತ್ತಮ ಮುಖ್ಯಮಂತ್ರಿಯಾಗಿರುತ್ತಿದ್ದರು” ಎಂದು ಸೋಮವಾರ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಭಾವುಕವಾಗಿ ಹೇಳಿದ್ದಾರೆ. ಮಹಾರಾಷ್ಟ್ರ ವಿಧಾನಸಭೆಯ ಬಜೆಟ್ ಅಧಿವೇಶನದಲ್ಲಿ ಜನವರಿ 28ರಂದು ವಿಮಾನ ಅಪಘಾತದಲ್ಲಿ ಮೃತಪಟ್ಟ ಮಹಾರಾಷ್ಟ್ರದ ಮಾಜಿ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಅವರಿಗೆ ಶ್ರದ್ಧಾಂಜಲಿ ನಿರ್ಣಯ ಮಂಡಿಸಿ ಅವರು ಮಾತನಾಡುತ್ತಿದ್ದರು. ಮೊದಲಿಗೆ ಪ್ರತಿಸ್ಪರ್ಧಿಗಳಾಗಿ ರಾಜಕೀಯ ಜೀವನ ಆರಂಭಿಸಿ, ಬಳಿಕ ಸರ್ಕಾರದಲ್ಲಿ ಸಹೋದ್ಯೋಗಿಗಳಾದ ತಮ್ಮಿಬ್ಬರ ರಾಜಕೀಯ ಪಯಣವನ್ನು ಅವರು ಈ ವೇಳೆ ಸ್ಮರಿಸಿದರು. ಅಜಿತ್ ಪವಾರ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸುವಾಗ ಸಚಿವೆ ಅದಿತಿ ತತ್ಕರೆ ಹಾಗೂ ಅವರ ಸೋದರಳಿಯ ಮತ್ತು ಎನ್ಸಿಪಿ (ಎಸ್ಪಿ) ಶಾಸಕ ರೋಹಿತ್ ಪವಾರ್ ಗದ್ಗದಿತರಾಗಿದ್ದು ಕಂಡುಬಂತು. ಶಿವಸೇನೆ (ಉದ್ಧವ್ ಬಣ) ನಾಯಕ ಉದ್ಧವ್ ಠಾಕ್ರೆ ಹಾಗೂ ಶಿವಸೇನೆ (ಏಕನಾಥ್ ಶಿಂದೆ ಬಣ) ನಾಯಕ ಮತ್ತು ಉಪ ಮುಖ್ಯಮಂತ್ರಿ ಏಕನಾಥ್ ಶಿಂದೆ ಕೂಡ ಅಜಿತ್ ಪವಾರ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದರು. ಈ ವೇಳೆ ವಿಧಾನಸಭೆಯಲ್ಲಿ ಅಜಿತ್ ಪವಾರ್ ಅವರ ಸ್ಮಾರಕ ಸ್ಥಾಪಿಸುವ ಪ್ರಸ್ತಾವವನ್ನು ವಿಧಾನಸಭಾ ಸ್ಪೀಕರ್ ರಾಹುಲ್ ನಾರ್ವೇಕರ್ ಮಂಡಿಸಿದರು.

ವಾರ್ತಾ ಭಾರತಿ 23 Feb 2026 9:58 pm

3.25 ಲಕ್ಷ ಕೋಟಿ ರೂ.ದಾಟಿದ ರಾಜ್ಯದ ಜೈವಿಕ ಆರ್ಥಿಕತೆ : ಸಚಿವ ಪ್ರಿಯಾಂಕ್ ಖರ್ಗೆ

ಬೆಂಗಳೂರು, ಫೆ.23: ರಾಜ್ಯದ ಜೈವಿಕ ಆರ್ಥಿಕತೆಯು 2025ರಲ್ಲಿ 3,25,360 ಕೋಟಿ ರೂ.ಗಳಿಗೆ (39.2 ಶತಕೋಟಿ ಡಾಲರ್)ತಲುಪಿದ್ದು, ಸಂಶೋಧನೆ-ನೇತೃತ್ವದ ಜೊತೆಗೆ ತಯಾರಿಕೆ, ವಿತರಣೆ, ಸೇವೆಗಳವರೆಗೆ ಸಂಪೂರ್ಣ ಮೌಲ್ಯ ಸರಪಳಿ ಒಳಗೊಂಡಿರುವ, ತಯಾರಿಕೆ ಕೇಂದ್ರಿತ ಜೈವಿಕ ಆರ್ಥಿಕತೆಯು ರಾಜ್ಯದಲ್ಲಿ ಗಮನಾರ್ಹವಾಗಿ ವಿಸ್ತರಣೆಯಾಗುತ್ತಿದೆ ಎಂದು ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ. ಸೋಮವಾರ ನಗರದಲ್ಲಿ ಎಲೆಕ್ಟ್ರಾನಿಕ್ಸ್, ಐಟಿ-ಬಿಟಿ ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕರ್ನಾಟಕ ನಾವೀನ್ಯತೆ ಮತ್ತು ತಂತ್ರಜ್ಞಾನ ಸೊಸೈಟಿಯು (ಕೆಐಟಿಎಸ್), ಜೈವಿಕ ತಂತ್ರಜ್ಞಾನ ಉದ್ಯಮಗಳ ಸಂಘದ (ಎಬಿಎಲ್‍ಇ) ಸಹಯೋಗದಲ್ಲಿ ಸಿದ್ಧಪಡಿಸಿರುವ ರಾಜ್ಯದ ಜೈವಿಕ ಆರ್ಥಿಕತೆಯ ವರದಿ 2025 ಅನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು. ದೇಶದ ಅತ್ಯಂತ ಪ್ರಬುದ್ಧ ಮತ್ತು ನಾವೀನ್ಯತೆ ಆಧಾರಿತ ಜೈವಿಕ ತಂತ್ರಜ್ಞಾನ ವ್ಯವಸ್ಥೆಯಾಗಿ ಕರ್ನಾಟಕವು ಸುಸ್ಥಿರ ರೀತಿಯಲ್ಲಿ ತನ್ನ ಮುಂಚೂಣಿ ಸ್ಥಾನ ಕಾಯ್ದುಕೊಂಡಿರುವುದರ ಮೇಲೆ ಈ ವರದಿಯು ಬೆಳಕು ಚೆಲ್ಲಿದೆ. ಇದು ರಾಜ್ಯದ ಜೈವಿಕ ಆರ್ಥಿಕತೆಯ ಅಂಕಿ ಸಂಖ್ಯೆಗಳಲ್ಲಿನ ಹೆಚ್ಚಳವನ್ನಷ್ಟೇ ಪ್ರತಿಬಿಂಬಿಸುತ್ತಿಲ್ಲ. ರಾಜ್ಯದ ಸಮಗ್ರ ಆರ್ಥಿಕ ವ್ಯವಸ್ಥೆಯಲ್ಲಿ ಜೈವಿಕ ಆರ್ಥಿಕತೆಯು ಗಮನಾರ್ಹ ಪಾಲು ಹೊಂದಿರುವುದನ್ನೂ ಸೂಚಿಸುತ್ತದೆ ಎಂದು ಹೇಳಿದರು. ಜೈವಿಕ ತಂತ್ರಜ್ಞಾನವು ಆರ್ಥಿಕ ಬೆಳವಣಿಗೆ, ಕೈಗಾರಿಕಾ ನಾವೀನ್ಯತೆ ಮತ್ತು ಸಾಮಾಜಿಕ ಪ್ರಭಾವದ ಕೇಂದ್ರ ಚಾಲಕ ಶಕ್ತಿಯಾಗಿ ಅಭಿವೃದ್ಧಿಗೊಳ್ಳುತ್ತ ಮುನ್ನಡೆಯುತ್ತಿದೆ. ಡೀಪ್-ಟೆಕ್ ಸ್ಟಾರ್ಟ್‍ಅಪ್‍ಗಳಿಗೆ ಬೆಂಬಲ, ನಾವೀನ್ಯತೆ ಮೂಲಸೌಕರ್ಯಗಳ ಬಲಪಡಿಸುವಿಕೆ ಮತ್ತು ಬೆಂಗಳೂರು ಆಚೆಗಿನ ಪ್ರತಿಯೊಂದು ಪ್ರದೇಶಕ್ಕೂ ತಲುಪುವಂತೆ ಮಾಡುವ ಸಮಗ್ರ ಜೈವಿಕ ಉತ್ಪಾದನಾ ಆರ್ಥಿಕತೆ ನಿರ್ಮಿಸುವುದರತ್ತ ರಾಜ್ಯ ಸರಕಾರವು ಹೆಚ್ಚು ಗಮನ ನೀಡಲಿದೆ ಎಂದು ಪ್ರಿಯಾಂಕ್ ಖರ್ಗೆ ತಿಳಿಸಿದರು. ವರದಿಯ ಮುಖ್ಯಾಂಶಗಳು: ರಾಜ್ಯ ಜೈವಿಕ ಆರ್ಥಿಕತೆಯು 2025 ರಲ್ಲಿ 3,25,360 ಕೋಟಿ ರೂ.ಗಳಿಗೆ (39.2 ಶತಕೋಟಿ ಡಾಲರ್) ತಲುಪಿದ್ದು, ಇದು ಹಿಂದಿನ ವರ್ಷಗಳಿಗಿಂತ ಗರಿಷ್ಠ ಬೆಳವಣಿಗೆ ದಾಖಲಿಸಿದೆ. ರಾಜ್ಯವು ದೇಶದ ಜೈವಿಕ ಆರ್ಥಿಕತೆಗೆ ಶೇ.21ರಷ್ಟು ಕೊಡುಗೆ ನೀಡುತ್ತಿದೆ. ರಾಜ್ಯದ ಒಟ್ಟು ಆಂತರಿಕ ಉತ್ಪನ್ನದಲ್ಲಿ (ಜಿಎಸ್‍ಡಿಪಿ) ಶೇ.10ಕ್ಕಿಂತ ಹೆಚ್ಚು ಪಾಲು ಹೊಂದಿದೆ, ಜೈವಿಕ ತಂತ್ರಜ್ಞಾನವು ಆರ್ಥಿಕ ಬೆಳವಣಿಗೆಯ ಪ್ರಮುಖ ಎಂಜಿನ್ ಆಗಿರುವುದಕ್ಕೆ ನಿದರ್ಶನವಾಗಿದೆ. *ಜೈವಿಕ ಆರ್ಥಿಕತೆಯು 2023ರಲ್ಲಿದ್ದ 31 ಶತಕೋಟಿ ಡಾಲರ್‍ನಿಂದ ಈಗ 39.2 ಶತಕೋಟಿ ಡಾಲರ್‍ಗೆ ವಿಸ್ತರಿಸಿದೆ, ಇದು ಒಟ್ಟಾರೆ ಶೇ.26.5ರಷ್ಟು ಬೆಳವಣಿಗೆ ಸೂಚಿಸುತ್ತದೆ. ಈಗ ರಾಜ್ಯದ ಜಿಡಿಪಿಗೆ ಪ್ರತಿ ತ್ರೈಮಾಸಿಕದಲ್ಲಿ ಸರಿಸುಮಾರು 10 ಶತಕೋಟಿ ಡಾಲರ್ ಸೇರ್ಪಡೆ ಮಾಡುತ್ತಿದೆ. *ಜೈವಿಕ ಔಷಧಗಳು, ಕಡಿಮೆ ವೆಚ್ಚದ ಪರ್ಯಾಯ ಜೈವಿಕ ಔಷಧಿಗಳು (ಬಯೊಸಿಮಿಲರ್ಸ್), ಲಸಿಕೆಗಳು ಮತ್ತು ರೋಗ ಪತ್ತೆ ವಲಯಗಳು ಒಳಗೊಂಡಂತೆ ಶೇ.40 ಕ್ಕಿಂತ ಹೆಚ್ಚು ಪಾಲು (ಸುಮಾರು 16.44 ಶತಕೋಟಿ ಡಾಲರ್) ಹೊಂದಿವೆ. *ಸುಮಾರು 11.46 ಶತಕೋಟಿ ಡಾಲರ್ ಮೊತ್ತದ ಜೈವಿಕ ಕೈಗಾರಿಕಾ ತಂತ್ರಜ್ಞಾನ ವಲಯವು ಶೇ.29ರಷ್ಟು ಪಾಲು ಹೊಂದುವುದರ ಜೊತೆಗೆ ವೇಗವಾಗಿ ಬೆಳೆಯುತ್ತಿದೆ. ಇದು ರಾಜ್ಯವು ಬಲವಾದ ಜೈವಿಕ ತಯಾರಿಕಾ ಆರ್ಥಿಕತೆಯತ್ತ ಸಾಗುತ್ತಿರುವುದನ್ನು ಸೂಚಿಸುತ್ತದೆ. *ಶೇ.25.8 ಪಾಲು ಹೊಂದಿರುವ ಜೈವಿಕ ಸೇವೆಗಳು ಸ್ಥಿರವಾಗಿ ಬೆಳೆಯುತ್ತಲೇ ಇವೆ. ಜಾಗತಿಕ ಸಂಶೋಧನಾ ಸೇವೆಗಳು, ಡಿಜಿಟಲ್ ಆರೋಗ್ಯ ಮತ್ತು ನಾವೀನ್ಯತೆ-ನೇತೃತ್ವದ ಹೊರಗುತ್ತಿಗೆಯಲ್ಲಿ ಕರ್ನಾಟಕದ ಸ್ಥಾನವನ್ನು ಬಲಪಡಿಸುತ್ತಿವೆ. ಜೈವಿಕ ಕೃಷಿಯು ಸುಸ್ಥಿರ ಕೃಷಿ ಚಟುವಟಿಕೆ ಮತ್ತು ಕಚ್ಚಾ ಸಾಮಗ್ರಿಗಳ ನಾವೀನ್ಯತೆಗಳಿಗೆ ಕೊಡುಗೆ ನೀಡುತ್ತಿದೆ. *ರಾಜ್ಯದ ಜೈವಿಕ ಆರ್ಥಿಕತೆಯ ಬೆಳವಣಿಗೆಯು ವಿಕೇಂದ್ರಿಕರಣ ಆಗುತ್ತಿರುವುದರ ಬಗ್ಗೆಯೂ ವರದಿಯು ಬೆಳಕು ಚೆಲ್ಲಿದೆ. ಬೆಂಗಳೂರು ನಗರವು ರಾಜ್ಯದ ಜೈವಿಕ ಆರ್ಥಿಕತೆಯಲ್ಲಿ ಶೇ.54ರಷ್ಟು ಪಾಲು ಹೊಂದಿದೆ. ಮೈಸೂರು ಶೇ.8.7, ಬೆಳಗಾವಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳು ಒಟ್ಟಾಗಿ ಶೇ.9ಕ್ಕಿಂತ ಹೆಚ್ಚು ಪಾಲು ಹೊಂದಿವೆ. ಉತ್ತರ ಕರ್ನಾಟಕದ ಜಿಲ್ಲೆಗಳು ಕೃಷಿ-ಜೈವಿಕ ತಂತ್ರಜ್ಞಾನ ವಲಯಗಳಾಗಿ ಗಮನ ಸೆಳೆಯುತ್ತಿವೆ. *ಬೆಂಗಳೂರು ಆಚೆಗಿನ ಪ್ರಾದೇಶಿಕ ಜೈವಿಕ ತಂತ್ರಜ್ಞಾನ ಕಾರಿಡಾರ್‍ಗಳ ಬೆಳವಣಿಗೆಯು ಜೈವಿಕ ಆರ್ಥಿಕತೆಯು ರಾಜ್ಯವ್ಯಾಪಿ ಬೆಳವಣಿಗೆಯ ಎಂಜಿನ್ ಆಗಿ ಬದಲಾಗುತ್ತಿರುವುದನ್ನು ಸೂಚಿಸುತ್ತದೆ, ಇದು ಅಂತರ್ಗತ ಅಭಿವೃದ್ಧಿ, ಪ್ರಾದೇಶಿಕ ಉದ್ಯೋಗ ಮತ್ತು ಕೃಷಿ ಉತ್ಪನ್ನಗಳಿಗೆ ಹೊಸ ಮೌಲ್ಯ ಸೇರ್ಪಡೆ ಮಾಡಲು ನೆರವಾಗುತ್ತಿದೆ. *ರಾಜ್ಯದಲ್ಲಿ 2025ರಲ್ಲಿ 218 ಹೊಸ ಜೈವಿಕ ತಂತ್ರಜ್ಞಾನ ನವೋದ್ಯಮಗಳು ಸೇರ್ಪಡೆಯಾಗಿವೆ. ಅವುಗಳ ಒಟ್ಟಾರೆ ಸಂಖ್ಯೆ 1,451ಕ್ಕೆ ತಲುಪಿದ್ದು, ಶೇ.75ಕ್ಕಿಂತ ಹೆಚ್ಚು ನವೋದ್ಯಮಗಳು ಜೀವ ವಿಜ್ಞಾನ ಮತ್ತು ಆರೋಗ್ಯ ತಂತ್ರಜ್ಞಾನದ ಮೇಲೆ ಗಮನ ಕೇಂದ್ರೀಕರಿಸಿವೆ. ಬೆಂಗಳೂರಿನಲ್ಲಿ ಸುಮಾರು ಶೇ.54ರಷ್ಟು ನವೋದ್ಯಮಗಳಿದ್ದರೆ, ರಾಜ್ಯದಾದ್ಯಂತ ಪ್ರವರ್ಧಮಾನಕ್ಕೆ ಬರುತ್ತಿರುವ ಸ್ಟಾರ್ಟ್‍ಅಪ್ ಕ್ಲಸ್ಟರ್‍ಗಳೂ ವೇಗ ಪಡೆಯುತ್ತಿವೆ. ಬಂಡವಾಳ ಹೂಡಿಕೆ ಹೆಚ್ಚಳ: 2024ರ ಜನವರಿ ಮತ್ತು 2025ರ ಅಕ್ಟೋಬರ್ ನಡುವಣ ಅವಧಿಯಲ್ಲಿ ರಾಜ್ಯವು ಜೈವಿಕ ಔಷಧ, ವೈದ್ಯಕೀಯ ತಂತ್ರಜ್ಞಾನ, ಕಿಣ್ವ ಆಧಾರಿತ ಕೈಗಾರಿಕೆಗಳು (ಫಮರ್ಂಟೇಷನ್), ಡಿಜಿಟಲ್ ಆರೋಗ್ಯ, ಜೈವಿಕ ಕೃಷಿ ವಲಯಗಳು ಸೇರಿದಂತೆ ಸೇರಿದಂತೆ ಸುಮಾರು 40 ಒಪ್ಪಂದಗಳಲ್ಲಿ 1.14 ಶತಕೋಟಿ ಡಾಲರ್ ಮೊತ್ತದ ಬಂಡವಾಳ ಆಕರ್ಷಿಸಿದೆ. ಇದು ರಾಜ್ಯದ ಜೈವಿಕ ಉತ್ಪಾದನೆ ಮತ್ತು ಸಾಮಥ್ರ್ಯ ವೃದ್ಧಿಯಲ್ಲಿ ಹೂಡಿಕೆದಾರರ ಹೆಚ್ಚುತ್ತಿರುವ ವಿಶ್ವಾಸವನ್ನು ಸೂಚಿಸುತ್ತದೆ ಎಂದು ಪ್ರಿಯಾಂಕ್ ಖರ್ಗೆ ತಿಳಿಸಿದರು. ಎಬಿಎಲ್‍ಇ ಗೌರವ ಅಧ್ಯಕ್ಷ ಜಿ.ಎಸ್.ಕೃಷ್ಣನ್ ಮಾತನಾಡಿ, ಈ ವರದಿಯು ರಾಜ್ಯದ ಜೈವಿಕ ಆರ್ಥಿಕತೆಯು ವಲಯವಾರು ಸಮತೋಲನ ಮತ್ತು ನವೋದ್ಯಮ ವ್ಯವಸ್ಥೆಯ ಹೆಚ್ಚುತ್ತಿರುವ ಮಹತ್ವವನ್ನು ಒತ್ತಿ ಹೇಳುತ್ತದೆ ಎಂದು ತಿಳಿಸಿದರು. ಸಮಾರಂಭದಲ್ಲಿ ಎಲೆಕ್ಟ್ರಾನಿಕ್ಸ್, ಐಟಿ-ಬಿಟಿ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಕಾರ್ಯದರ್ಶಿ ಡಾ.ಮಂಜುಳಾ ಎನ್., ಕೆಐಟಿಎಸ್ ವ್ಯವಸ್ಥಾಪಕ ನಿರ್ದೇಶಕ ರಾಹುಲ್ ಶರಣಪ್ಪ ಸಂಕನೂರ ಸೇರಿದಂತೆ ಇನ್ನಿತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ವಾರ್ತಾ ಭಾರತಿ 23 Feb 2026 9:55 pm

'ಎಲ್ ಮೆಂಚೊ' ಎಂದೇ ಕುಖ್ಯಾತನಾಗಿದ್ದ ನೆಮೆಸಿಯೊ ಒಸೆಗುರಾ ಯಾರು? ಮೆಕ್ಸಿಕೊದಲ್ಲಿ ಏನಾಗುತ್ತಿದೆ?

'ಎಲ್ ಮೆಂಚೊ' ಎಂದೇ ಕುಖ್ಯಾತನಾಗಿದ್ದ ಅಕ್ರಮ ಮಾದಕ ವಸ್ತು ಸಾಗಣೆದಾರ ನೆಮೆಸಿಯೊ ಒಸೆಗುರಾ ನನ್ನು ಮೆಕ್ಸಿಕನ್ ಸೇನೆ ರವಿವಾರ (ಫೆ.22) ಹತ್ಯೆ ಮಾಡಿದೆ ಎಂದು ಮೆಕ್ಸಿಕೊದ ಅಧಿಕಾರಿಗಳು ತಿಳಿಸಿದ್ದಾರೆ. ಅಮೆರಿಕದ ಮೋಸ್ಟ್ ವಾಂಟೆಡ್ ವ್ಯಕ್ತಿಯಾಗಿದ್ದ ಈತನ ಹತ್ಯೆಯ ಬೆನ್ನಲ್ಲೇ ಮೆಕ್ಸಿಕೊದಲ್ಲಿ ಹಿಂಸಾಚಾರ ಭುಗಿಲೆದ್ದಿದೆ. ಜಲಿಸ್ಕೊದಲ್ಲಿ ನಡೆದ ಮಿಲಿಟರಿ ದಾಳಿಯ ಸಂದರ್ಭದಲ್ಲಿ ನೆಮೆಸಿಯೊ ಎಲ್ ಮೆಂಚೊ ಒಸೆಗುರಾ ಸೆರ್ವಾಂಟೆಸ್ ಅವರ ಹತ್ಯೆಯು ಮಾದಕವಸ್ತುಗಳ ವಿರುದ್ಧದ ಯುದ್ಧದಲ್ಲಿ ಒಂದು ಐತಿಹಾಸಿಕ ತಿರುವು ಎಂದು ಗುರುತಿಸಲಾಗಿದೆ. ಒಂದು ದಶಕದ ಹಿಂದೆ ಎಲ್ ಚಾಪೊ ಗುಜ್ಮಾನ್ ಸೆರೆಹಿಡಿಯಲ್ಪಟ್ಟ ನಂತರ ಸಂಘಟಿತ ಅಪರಾಧಕ್ಕೆ ಇದು ಅತ್ಯಂತ ಮಹತ್ವದ ಹೊಡೆತ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ►ಎಲ್ ಮೆಂಚೊ ಯಾರು? ಮೂಲತಃ ಪಶ್ಚಿಮ ರಾಜ್ಯವಾದ ಮೈಕೋವಕನ್ನ ನಿವಾಸಿ ಎಲ್ ಮೆಂಚೊ ಎಂದೇ ಕರೆಯಲ್ಪಡುವ ಒಸೆಗುರಾ ಸೆರ್ವಾಂಟೆಸ್ ಗೆ 59 ವರ್ಷ ವಯಸ್ಸು. ಸಂಘಟಿತ ಅಪರಾಧದೊಂದಿಗಿನ ಈತನ ನಂಟು ಕನಿಷ್ಠ ಮೂರು ದಶಕಗಳ ಹಿಂದಿನದು. 1994ರಲ್ಲಿ ಈತನನ್ನು ಅಮೆರಿಕದಲ್ಲಿ ಹೆರಾಯಿನ್ ಕಳ್ಳಸಾಗಣೆಗಾಗಿ ವಿಚಾರಣೆಗೆ ಒಳಪಡಿಸಲಾಯಿತು. ಈ ಅಪರಾಧದಲ್ಲಿ ಮೂರು ವರ್ಷಗಳ ಕಾಲ ಜೈಲು ಶಿಕ್ಷೆ ಅನುಭವಿಸಿದ್ದ. ಮೆಕ್ಸಿಕೊಗೆ ಹಿಂದಿರುಗಿದ ನಂತರ ಆತ ಮೆಕ್ಸಿಕೊದ ಮಾದಕವಸ್ತು ಕಳ್ಳಸಾಗಣೆ ಭೂಗತ ಜಗತ್ತಿನಲ್ಲಿ ಕುಖ್ಯಾತನಾದ. 2009ರಲ್ಲಿ ಎಲ್ ಮೆಂಚೊ ಜಲಿಸ್ಕೊ ನ್ಯೂ ಜನರೇಷನ್ ಕಾರ್ಟೆಲ್ (CJNG) ಅನ್ನು ಸ್ಥಾಪಿಸಿದ್ದು, ಇದು ಮೆಕ್ಸಿಕೊದ ಅತ್ಯಂತ ವೇಗವಾಗಿ ವಿಸ್ತರಿಸುತ್ತಿರುವ ಕ್ರಿಮಿನಲ್ ಸಂಘಟನೆಯಾಗಿ ಹೊರಹೊಮ್ಮಿತು. ಈ ಕಾರ್ಟೆಲ್ ಕೊಕೇನ್, ಮೆಥಾಂಫೆಟಮೈನ್ಗಳು, ಫೆಂಟನಿಲ್ ಮತ್ತು ವಲಸಿಗರನ್ನು ಯುನೈಟೆಡ್ ಸ್ಟೇಟ್ಸ್ಗೆ ಕಳ್ಳಸಾಗಣೆ ಮಾಡುವುದರಲ್ಲಿ ತೊಡಗಿತ್ತು. ಇದರ ಜತೆಗೆ ಡ್ರೋನ್ ಗಳು ಮತ್ತು ಸುಧಾರಿತ ಸ್ಫೋಟಕ ಸಾಧನಗಳನ್ನು ಬಳಸುವಂತಹ ನವೀನ ಹಿಂಸಾತ್ಮಕ ತಂತ್ರಗಳನ್ನು ಅಳವಡಿಸಿಕೊಂಡಿತ್ತು. ಈ ಕಾರ್ಟೆಲ್ ಮೆಕ್ಸಿಕನ್ ಸರ್ಕಾರದ ಮೇಲೆ ಹಿಂಸಾತ್ಮಕ ದಾಳಿಗಳನ್ನು ನಡೆಸಿದೆ. 2015ರಲ್ಲಿ ಆತ ಜಲಿಸ್ಕೊದಲ್ಲಿ ಮಿಲಿಟರಿ ಹೆಲಿಕಾಪ್ಟರ್ ಅನ್ನು ಹೊಡೆದುರುಳಿಸಲು ರಾಕೆಟ್ ಲಾಂಚರ್ ಬಳಸಿದ್ದನು. ಮೆಕ್ಸಿಕೊ ನಗರದಲ್ಲಿ ಪೊಲೀಸ್ ಮುಖ್ಯಸ್ಥ ಒಮರ್ ಗಾರ್ಸಿಯಾ ಹರ್ಫುಚ್ (ಈಗ ಮೆಕ್ಸಿಕೊದ ಫೆಡರಲ್ ಭದ್ರತಾ ಕಾರ್ಯದರ್ಶಿ) ವಿರುದ್ಧ ಬೃಹತ್, ಅತ್ಯಾಧುನಿಕ ಹೊಂಚುದಾಳಿಯನ್ನು ನಡೆಸಲಾಗಿತ್ತು. ಅವರು ದಾಳಿಯಿಂದ ಬದುಕುಳಿದಿದ್ದರೂ, ಕಾರ್ಟೆಲ್ ಎಷ್ಟು ಶಕ್ತಿಶಾಲಿಯಾಗಿದೆ ಎಂಬುದನ್ನು ಅದು ಜಗತ್ತಿಗೆ ತೋರಿಸಿತು. ತಮ್ಮ ಸಂಖ್ಯೆಯನ್ನು ಹೆಚ್ಚಿಸಲು, ಗುಂಪು ಹೊಸ ಸದಸ್ಯರನ್ನು ಸೇರ್ಪಡೆಗೊಳಿಸಲು ಆಕ್ರಮಣಕಾರಿ ಮತ್ತು ಸೃಜನಶೀಲ ಮಾರ್ಗಗಳನ್ನು ಬಳಸಿತು. ಇದರಲ್ಲಿ ಯುವಜನರನ್ನು ಆನ್ಲೈನ್ನಲ್ಲಿ ಗುರಿಯಾಗಿಸಲು ಸಾಮಾಜಿಕ ಮಾಧ್ಯಮ ಬಳಸುವುದೂ ಸೇರಿದೆ. ►ಟಪಲ್ಪಾದಲ್ಲಿ ದಾಳಿ ಎಲ್ ಮೆಂಚೊ ನನ್ನು ಸದೆಬಡಿಯುವ ಕಾರ್ಯಾಚರಣೆಯನ್ನು ಮೆಕ್ಸಿಕನ್ ವಾಯುಪಡೆ ಮತ್ತು ರಾಷ್ಟ್ರೀಯ ಗಾರ್ಡ್ನ ವಿಮಾನಗಳ ಬೆಂಬಲದೊಂದಿಗೆ ಮೆಕ್ಸಿಕನ್ ವಿಶೇಷ ಪಡೆಗಳು ಮುನ್ನಡೆಸಿದವು. ಈ ಕಾರ್ಯಾಚರಣೆಯನ್ನು ದೇಶೀಯವಾಗಿ ಯೋಜಿಸಿ ಕಾರ್ಯಗತಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದು ಯುನೈಟೆಡ್ ಸ್ಟೇಟ್ಸ್ ಒದಗಿಸಿದ ಪೂರಕ ಮಾಹಿತಿಯನ್ನೂ ಅವಲಂಬಿಸಿತ್ತು. ಹೊಸದಾಗಿ ರೂಪುಗೊಂಡ ಯುಎಸ್ ಮಿಲಿಟರಿ ನೇತೃತ್ವದ ಕಾರ್ಯಪಡೆ ಗುಪ್ತಚರ ಸೇವೆಯನ್ನು ಒದಗಿಸುವಲ್ಲಿ ಪಾತ್ರವಹಿಸಿದೆ ಎಂದು ಯುಎಸ್ ರಕ್ಷಣಾ ಅಧಿಕಾರಿಯೊಬ್ಬರು ರಾಯಿಟರ್ಸ್ಗೆ ತಿಳಿಸಿದ್ದಾರೆ. ಕಾರ್ಯಾಚರಣೆಯಲ್ಲಿ ಮೆಕ್ಸಿಕೊಗೆ ಸಹಾಯ ಮಾಡಲು ಯುನೈಟೆಡ್ ಸ್ಟೇಟ್ಸ್ ಗುಪ್ತಚರ ಬೆಂಬಲ ಒದಗಿಸಿದೆ ಎಂದು ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಕ್ಯಾರೋಲಿನ್ ಲೀವಿಟ್ ಹೇಳಿದ್ದಾರೆ. ಮೆಕ್ಸಿಕೊದ ಜಲಿಸ್ಕೊದ ಟಪಲ್ಪಾದಲ್ಲಿ ನಡೆದ ಕಾರ್ಯಾಚರಣೆಗೆ ಸಹಾಯ ಮಾಡಲು ಯುನೈಟೆಡ್ ಸ್ಟೇಟ್ಸ್ ಮೆಕ್ಸಿಕನ್ ಸರ್ಕಾರಕ್ಕೆ ಗುಪ್ತಚರ ಬೆಂಬಲ ನೀಡಿತು. ಇದರಲ್ಲಿ ನೆಮೆಸಿಯೊ 'ಎಲ್ ಮೆಂಚೊ' ಒಸೆಗುರಾ ಸೆರ್ವಾಂಟೆಸ್ ನನ್ನು ಹತ್ಯೆ ಮಾಡಲಾಯಿತು. ಎಲ್ ಮೆಂಚೊ ಯುನೈಟೆಡ್ ಸ್ಟೇಟ್ಸ್ಗೆ ಫೆಂಟನಿಲ್ ನ ಪ್ರಮುಖ ಕಳ್ಳಸಾಗಣೆದಾರನಾಗಿದ್ದನು. ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕಳೆದ ವರ್ಷ CJNG ಅನ್ನು ವಿದೇಶಿ ಭಯೋತ್ಪಾದಕ ಸಂಘಟನೆ ಎಂದು ಹೆಸರಿಸಿದ್ದರು ಎಂದು ಲೀವಿಟ್ ತಿಳಿಸಿದ್ದಾರೆ. ಘರ್ಷಣೆಯ ಸಮಯದಲ್ಲಿ ಭಾರೀ ಗುಂಡಿನ ದಾಳಿ ನಡೆದಿದೆ. ಹಲವಾರು ಕಾರ್ಟೆಲ್ ಸದಸ್ಯರು ಕೊಲ್ಲಲ್ಪಟ್ಟರು, ಇತರರು ಗಾಯಗೊಂಡರು. ಇಬ್ಬರು ಶಂಕಿತರನ್ನು ಬಂಧಿಸಲಾಯಿತು. ಅಧಿಕಾರಿಗಳು ಶಸ್ತ್ರಸಜ್ಜಿತ ವಾಹನಗಳು ಮತ್ತು ವಿಮಾನಗಳನ್ನು ಹೊಡೆದುರುಳಿಸುವ ಸಾಮರ್ಥ್ಯವಿರುವ ರಾಕೆಟ್ ಲಾಂಚರ್ಗಳು ಸೇರಿದಂತೆ ಹೆಚ್ಚಿನ ಶಕ್ತಿಯ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿದ್ದಾರೆ. ►ಮೆಕ್ಸಿಕೊದಲ್ಲಿ ಏನಾಗುತ್ತಿದೆ? ಒಸೆಗುರಾ ಸೆರ್ವಾಂಟೆಸ್ ಹತ್ಯೆಯ ನಂತರ ಬಂದೂಕುಧಾರಿಗಳು ದೇಶಾದ್ಯಂತ ಹಿಂಸಾಚಾರ ನಡೆಸಿದ್ದಾರೆ. ಕಾರ್ಟೆಲ್ ಸದಸ್ಯರು ಸುಮಾರು ಒಂದು ಡಜನ್ ಮೆಕ್ಸಿಕನ್ ರಾಜ್ಯಗಳಲ್ಲಿ ರಸ್ತೆಗಳನ್ನು ನಿರ್ಬಂಧಿಸಿ ವಾಹನಗಳಿಗೆ ಬೆಂಕಿ ಹಚ್ಚಿದ್ದಾರೆ. ಮೆಕ್ಸಿಕೊದ ಎರಡನೇ ಅತಿದೊಡ್ಡ ನಗರ ಹಾಗೂ ಜಲಿಸ್ಕೊದ ರಾಜಧಾನಿಯಾದ ಗ್ವಾಡಲಜರಾದಲ್ಲಿ ಜನರು ತಮ್ಮ ಮನೆಗಳಿಗೆ ಬೀಗ ಹಾಕಿಕೊಂಡಿದ್ದು, ಹಲವಾರು ರಾಜ್ಯಗಳಲ್ಲಿ ಶಾಲೆಗಳನ್ನು ರದ್ದುಗೊಳಿಸಲಾಗಿದೆ. ಇದಲ್ಲದೆ, ಗ್ವಾಟೆಮಾಲಾ ತನ್ನ ಮೆಕ್ಸಿಕೊ ಗಡಿಯಲ್ಲಿ ಭದ್ರತೆಯನ್ನು ಬಲಪಡಿಸಿದೆ. ಎಲ್ ಮೆಂಚೊ ಹತ್ಯೆಯಿಂದ ಟ್ರಂಪ್ ಆಡಳಿತದೊಂದಿಗಿನ ಮಾತುಕತೆಯಲ್ಲಿ ಮೆಕ್ಸಿಕೊಗೆ ಗಮನಾರ್ಹ ಪ್ರಯೋಜನ ಸಿಗಬಹುದು. ಸರ್ಕಾರವು ಡ್ರಗ್ ಕಾರ್ಟೆಲ್ಗಳನ್ನು ತಡೆಯಲು ಕ್ರಮ ಕೈಗೊಳ್ಳದಿದ್ದರೆ, ಅಮೆರಿಕ ಮೆಕ್ಸಿಕೊದ ಮೇಲೆ ಹೆಚ್ಚಿನ ಸುಂಕ ವಿಧಿಸುವುದಾಗಿ ಅಥವಾ ಸೈನ್ಯ ಕಳುಹಿಸುವುದಾಗಿ ತಿಂಗಳುಗಳಿಂದ ಬೆದರಿಕೆ ಹಾಕುತ್ತಿದೆ. ಆದಾಗ್ಯೂ, ಈ ಪ್ರಮುಖ ಗೆಲುವಿನೊಂದಿಗೆ ಮೆಕ್ಸಿಕೊದ ಭದ್ರತೆ ದೀರ್ಘಾವಧಿಯಲ್ಲಿ ನಿಜವಾಗಿಯೂ ಸುಧಾರಿಸುತ್ತದೆಯೇ ಎಂಬುದು ಇನ್ನೂ ಖಚಿತವಾಗಿಲ್ಲ. ►ಕಾರ್ಟೆಲ್ಗಳ ವಿರುದ್ಧದ ಯುಎಸ್ ಹೋರಾಟ ರವಿವಾರ (ಫೆಬ್ರವರಿ 22) ನಡೆದ ಕಾರ್ಯಾಚರಣೆಯಲ್ಲಿ ಯುಎಸ್ ಮತ್ತು ಮೆಕ್ಸಿಕೊ ನಡುವಿನ ಗುಪ್ತಚರ ಸಹಯೋಗವು ಕುಖ್ಯಾತ ಮೆಕ್ಸಿಕನ್ ಡ್ರಗ್ ಕಾರ್ಟೆಲ್ ನಾಯಕನ ಹತ್ಯೆಗೆ ಕಾರಣವಾಯಿತು. ಒಸೆಗುರಾ ಸೆರ್ವಾಂಟೆಸ್ ವಿರುದ್ಧ ಅಮೆರಿಕದಲ್ಲಿ ಹಲವು ಆರೋಪಗಳು ಕೇಳಿಬಂದಿದ್ದು, ಆತನ ಬಂಧನಕ್ಕೆ ಕಾರಣವಾಗುವ ಮಾಹಿತಿ ನೀಡಿದವರಿಗೆ ಅಮೆರಿಕ ವಿದೇಶಾಂಗ ಇಲಾಖೆ 15 ಮಿಲಿಯನ್ ಡಾಲರ್ ಬಹುಮಾನ ಘೋಷಿಸಿತ್ತು. ಟ್ರಂಪ್ ಆಡಳಿತವು ಒಂದು ವರ್ಷದ ಹಿಂದೆ ಜಲಿಸ್ಕೊ ನ್ಯೂ ಜನರೇಷನ್ ಕಾರ್ಟೆಲ್ ಅನ್ನು ವಿದೇಶಿ ಭಯೋತ್ಪಾದಕ ಸಂಘಟನೆ ಎಂದು ಹೆಸರಿಸಿತ್ತು. ಮೊದಲ ಟ್ರಂಪ್ ಆಡಳಿತದ ಅವಧಿಯಲ್ಲಿ ಮೆಕ್ಸಿಕೊಗೆ ಅಮೆರಿಕದ ರಾಯಭಾರಿಯಾಗಿದ್ದ ಅಮೆರಿಕದ ಉಪ ಕಾರ್ಯದರ್ಶಿ ಕ್ರಿಸ್ಟೋಫರ್ ಲ್ಯಾಂಡೌ, ಒಳ್ಳೆಯ ವ್ಯಕ್ತಿಗಳು ಕೆಟ್ಟ ವ್ಯಕ್ತಿಗಳಿಗಿಂತ ಬಲಶಾಲಿಗಳು. ಮೆಕ್ಸಿಕನ್ ರಾಷ್ಟ್ರದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯ ಪಡೆಗಳಿಗೆ ಅಭಿನಂದನೆಗಳು ಎಂದು ಸಾಮಾಜಿಕ ಮಾಧ್ಯಮ X ನಲ್ಲಿ ಪೋಸ್ಟ್ ಮಾಡಿದ್ದಾರೆ. ಡ್ರಗ್ ಎನ್ಫೋರ್ಸ್ಮೆಂಟ್ ಅಡ್ಮಿನಿಸ್ಟ್ರೇಷನ್ (DEA)ನ ಅಂತರರಾಷ್ಟ್ರೀಯ ಕಾರ್ಯಾಚರಣೆಗಳ ಮಾಜಿ ಮುಖ್ಯಸ್ಥ ಮೈಕ್ ವಿಜಿಲ್, ಮೆಕ್ಸಿಕೊ ಅತ್ಯಂತ ಶಕ್ತಿಶಾಲಿ ಕಾರ್ಟೆಲ್ಗಳ ವಿರುದ್ಧ ಆಕ್ರಮಣಕಾರಿಯಾಗಿ ಮತ್ತು ಪರಿಣಾಮಕಾರಿಯಾಗಿ ಹೋರಾಡುತ್ತಿದೆ ಎಂದು ಡೊನಾಲ್ಡ್ ಟ್ರಂಪ್ ಅವರ ಆಡಳಿತಕ್ಕೆ ಬಲವಾದ ಸಂದೇಶ ಕಳುಹಿಸಿದೆ ಎಂದು ಹೇಳಿದ್ದಾರೆ. ಜಲಿಸ್ಕೊ ನ್ಯೂ ಜನರೇಷನ್ ಕಾರ್ಟೆಲ್ ಜಲಿಸ್ಕೊ ಕಾರ್ಟೆಲ್ ಮೆಕ್ಸಿಕೊದ 32 ರಾಜ್ಯಗಳಲ್ಲಿ ಕನಿಷ್ಠ 21 ರಾಜ್ಯಗಳಲ್ಲಿ ಅಸ್ತಿತ್ವ ಹೊಂದಿದ್ದು, ಅಮೆರಿಕದ ಬಹುತೇಕ ಎಲ್ಲಾ ರಾಜ್ಯಗಳಲ್ಲಿ ಸಕ್ರಿಯವಾಗಿದೆ ಎಂದು ಯುಎಸ್ ಡ್ರಗ್ ಎನ್ಫೋರ್ಸ್ಮೆಂಟ್ ಅಡ್ಮಿನಿಸ್ಟ್ರೇಷನ್ ತಿಳಿಸಿದೆ. ಇದು ಜಾಗತಿಕ ಸಂಘಟನೆಯೂ ಆಗಿದ್ದು, ಅದರ ನಾಯಕನ ನಷ್ಟವನ್ನು ಮೆಕ್ಸಿಕೊದಾಚೆಗೂ ಅನುಭವಿಸಬಹುದು. ಎಲ್ ಮೆಂಚೊ ಎಲ್ಲವನ್ನೂ ನಿಯಂತ್ರಿಸುತ್ತಿದ್ದನು; ಆತ ಒಂದು ದೇಶದ ಸರ್ವಾಧಿಕಾರಿಯಂತೆ ಇದ್ದನು ಎಂದು ಮೈಕ್ ವಿಜಿಲ್ ಹೇಳಿದ್ದಾರೆ. ಆತನ ಅನುಪಸ್ಥಿತಿಯು ಕಾರ್ಟೆಲ್ನ ತ್ವರಿತ ಬೆಳವಣಿಗೆ ಮತ್ತು ವಿಸ್ತರಣೆಯನ್ನು ನಿಧಾನಗೊಳಿಸಬಹುದು. ಅವನ ಪ್ರತಿನಿಧಿಗಳು ಹೋರಾಡುತ್ತಿರುವ ಹಲವಾರು ರಂಗಗಳಲ್ಲಿ ಸಿನಾಲೋವಾ ಕಾರ್ಟೆಲ್ ವಿರುದ್ಧ ಆರಂಭದಲ್ಲಿ ದುರ್ಬಲಗೊಳ್ಳಬಹುದು. ಆದಾಗ್ಯೂ, ಎಲ್ ಚಾಪೊ ನ ಪುತ್ರರು ಮತ್ತು ಯುಎಸ್ ವಶದಲ್ಲಿರುವ ಇಸ್ಮಾಯಿಲ್ ಎಲ್ ಮೇಯೊ ಜಾಂಬಾಡಾಗೆ ನಿಷ್ಠರಾಗಿರುವ ಬಣದ ನಡುವೆ ಸಿನಾಲೋವಾ ತನ್ನದೇ ಆದ ಆಂತರಿಕ ಅಧಿಕಾರ ಹೋರಾಟದಲ್ಲಿ ಸಿಲುಕಿಕೊಂಡಿದೆ. ಒಸೆಗುರಾ ಸೆರ್ವಾಂಟೆಸ್ ನ ಸಂಬಂಧಿಕರು ಕಾರ್ಟೆಲ್ ನಿಯಂತ್ರಿಸಿದರೆ ಹಿಂಸಾಚಾರ ಮುಂದುವರಿಯಬಹುದು. ಇತರರು ಅಧಿಕಾರ ವಹಿಸಿಕೊಂಡರೆ, ಅವರು ತಮ್ಮ ಕೆಲಸವನ್ನು ಮುಂದುವರಿಸಲು ಹೆಚ್ಚು ಸಿದ್ಧರಾಗಿರಬಹುದು ಎಂದು ಭದ್ರತಾ ವಿಶ್ಲೇಷಕ ಡೇವಿಡ್ ಸೌಸೆಡೊ ಹೇಳಿದ್ದಾರೆ. ಜಲಿಸ್ಕೊದಲ್ಲಿ ನಡೆದ ಆರು ಪ್ರತ್ಯೇಕ ದಾಳಿಗಳಲ್ಲಿ ರಾಷ್ಟ್ರೀಯ ಗಾರ್ಡ್ನ 25 ಸದಸ್ಯರು ಸಾವಿಗೀಡಾಗಿದ್ದಾರೆ. ಜೈಲು ಸಿಬ್ಬಂದಿ, ರಾಜ್ಯ ಪ್ರಾಸಿಕ್ಯೂಟರ್ ಕಚೇರಿಯ ಏಜೆಂಟ್ ಮತ್ತು ಮಹಿಳೆಯೊಬ್ಬರು ಈ ದಾಳಿಯಲ್ಲಿ ಸಾವಿಗೀಡಾಗಿರುವುದಾಗಿ ಮೆಕ್ಸಿಕೊ ಭದ್ರತಾ ಕಾರ್ಯದರ್ಶಿ ಒಮರ್ ಗಾರ್ಸಿಯಾ ಹರ್ಫುಚ್ ಹೇಳಿದ್ದಾರೆ ಎಂದು ಅಸೋಸಿಯೇಟೆಡ್ ಪ್ರೆಸ್ ವರದಿ ಮಾಡಿದೆ. ►ಮೆಕ್ಸಿಕೊದಲ್ಲಿರುವ ಭಾರತೀಯರಿಗೆ ರಾಯಭಾರ ಕಚೇರಿ ಸಲಹೆ ಮೆಕ್ಸಿಕನ್ ಸೈನಿಕರು ಮಾದಕವಸ್ತು ಕಳ್ಳಸಾಗಣೆ ದಂಧೆಯ ಪ್ರಮುಖ ನಾಯಕನನ್ನು ಹತ್ಯೆ ಮಾಡಿದ ನಂತರ ಅಲ್ಲಿ ಭುಗಿಲೆದ್ದಿರುವ ಹಿಂಸಾಚಾರ, ರಸ್ತೆ ತಡೆ ಹಾಗೂ ವಿಮಾನ ರದ್ದತಿಯ ಹಿನ್ನೆಲೆ ಮೆಕ್ಸಿಕೊದಲ್ಲಿರುವ ಭಾರತೀಯ ನಾಗರಿಕರು ಮುಂದಿನ ಸೂಚನೆ ಬರುವವರೆಗೆ ಸುರಕ್ಷಿತ ಸ್ಥಳದಲ್ಲಿ ಆಶ್ರಯ ಪಡೆಯುವಂತೆ ಸೋಮವಾರ (ಫೆಬ್ರವರಿ 23, 2026) ಮೆಕ್ಸಿಕೊದಲ್ಲಿರುವ ಭಾರತೀಯ ರಾಯಭಾರ ಕಚೇರಿ ತಿಳಿಸಿದೆ. ಮೆಕ್ಸಿಕೊದಲ್ಲಿ ನಡೆಯುತ್ತಿರುವ ಭದ್ರತಾ ಕಾರ್ಯಾಚರಣೆಗಳು ಮತ್ತು ಸಂಬಂಧಿತ ರಸ್ತೆ ತಡೆಗಳಿಂದಾಗಿ, ಜಲಿಸ್ಕೊ ರಾಜ್ಯ (ಪೋರ್ಟೊ ವಲ್ಲರ್ಟಾ, ಚಾಪಲಾ ಮತ್ತು ಗ್ವಾಡಲಜರಾ ಪ್ರದೇಶಗಳು), ತಮೌಲಿಪಾಸ್ ರಾಜ್ಯ (ರೇನೋಸಾ ಮತ್ತು ಇತರ ಪುರಸಭೆಗಳ ಪ್ರದೇಶಗಳು), ಮೈಕೋಕಾನ್ ರಾಜ್ಯ, ಗೆರೆರೊ ರಾಜ್ಯ ಮತ್ತು ನ್ಯೂಯೆವೊ ಲಿಯಾನ್ ರಾಜ್ಯಗಳಲ್ಲಿ ಇರುವ ಭಾರತೀಯ ಪ್ರಜೆಗಳಿಗೆ ಸುರಕ್ಷಿತ ಸ್ಥಳವನ್ನು ಕಂಡುಕೊಳ್ಳಲು ಭಾರತದ ರಾಯಭಾರ ಕಚೇರಿ ಮನವಿ ಮಾಡಿದೆ. ಕಾನೂನು ಜಾರಿ ಚಟುವಟಿಕೆಗಳ ಸುತ್ತಮುತ್ತಲಿನ ಪ್ರದೇಶಗಳನ್ನು ತಪ್ಪಿಸಲು, ತಮ್ಮ ಸುತ್ತಮುತ್ತಲಿನ ಬಗ್ಗೆ ಜಾಗೃತರಾಗಿರಲು ಮತ್ತು ಜನಸಂದಣಿಯನ್ನು ತಪ್ಪಿಸಲು ಭಾರತೀಯ ನಾಗರಿಕರಿಗೆ ರಾಯಭಾರ ಕಚೇರಿ ಸೂಚಿಸಿದೆ. ಆಶ್ರಯ ಪಡೆದ ಸ್ಥಳದ ಹೊರಗೆ ಅನಗತ್ಯವಾಗಿ ಅಡ್ಡಾಡುವುದನ್ನು ತಪ್ಪಿಸಿ. ಅಪ್ಡೇಟ್ಗಳಿಗಾಗಿ ಸ್ಥಳೀಯ ಸುದ್ದಿಗಳನ್ನು ಅನುಸರಿಸಿ. ಸ್ಥಳೀಯ ಅಧಿಕಾರಿಗಳ ನಿರ್ದೇಶನಗಳನ್ನು ಅನುಸರಿಸಿ ಮತ್ತು ತುರ್ತು ಸಂದರ್ಭದಲ್ಲಿ 911 ಗೆ ಕರೆ ಮಾಡಿ. ನಿಮ್ಮ ಸ್ಥಳ ಮತ್ತು ಯೋಗಕ್ಷೇಮದ ಬಗ್ಗೆ ಕುಟುಂಬ ಮತ್ತು ಸ್ನೇಹಿತರಿಗೆ ಫೋನ್, ಮೆಸೇಜ್ ಹಾಗೂ ಸಾಮಾಜಿಕ ಮಾಧ್ಯಮಗಳ ಮೂಲಕ ತಿಳಿಸಿ ಎಂದು ಭಾರತೀಯ ರಾಯಭಾರ ಕಚೇರಿ X ನಲ್ಲಿ ಪೋಸ್ಟ್ ಮಾಡಿದೆ. ಭಾರತದ ರಾಯಭಾರ ಕಚೇರಿಯು ಭಾರತೀಯ ನಾಗರಿಕರಿಗೆ ಸಹಾಯವಾಣಿ ಸಂಖ್ಯೆಯನ್ನು ಒದಗಿಸಿದ್ದು, ಅದರ ಸಂಖ್ಯೆ: Embassy of India +52 55 4847 7539.

ವಾರ್ತಾ ಭಾರತಿ 23 Feb 2026 9:55 pm

DK Shivakumar: ಉದ್ಯೋಗ ಖಾತರಿ ಯೋಜನೆ ಕಾಂಗ್ರೆಸ್ ಕಾರ್ಯಕ್ರಮ ಮಾತ್ರವಲ್ಲ - ಇಡೀ ದೇಶದ ಕಾರ್ಯಕ್ರಮ: ಡಿಸಿಎಂ ಡಿ.ಕೆ ಶಿವಕುಮಾರ್

ಉದ್ಯೋಗ ಖಾತರಿ ಯೋಜನೆ ಕಾಂಗ್ರೆಸ್ ಕಾರ್ಯಕ್ರಮ ಮಾತ್ರವಲ್ಲ - ಇಡೀ ದೇಶದ ಕಾರ್ಯಕ್ರಮ ಎಂದು ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಹೇಳಿದ್ದಾರೆ. ವಿಬಿ-ಜಿರಾಮ್-ಜಿ ಯೋಜನೆ ಅನುಷ್ಠಾನ ಖಂಡಿಸಿ ಹಾಗೂ ಮನರೇಗಾ ಯೋಜನೆ ಪುನರ್ ಸ್ಥಾಪನೆಗೆ ಆಗ್ರಹಿಸಿ ಚಿಕ್ಕಬಳ್ಳಾಪುರದಲ್ಲಿ ಕೆಪಿಸಿಸಿ ವತಿಯಿಂದ ಆಯೋಜಿಸಿದ ನರೇಗಾ ಬಚಾವ್‌ ಆಂದೋಲನ ಕಾರ್ಯಕ್ರಮದಲ್ಲಿ ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲಾ

ಒನ್ ಇ೦ಡಿಯ 23 Feb 2026 9:43 pm

ಭಾರತದಿಂದ ಪ್ರಪ್ರಥಮ ಭಯೋತ್ಪಾದನಾ ನಿಗ್ರಹ ನೀತಿ ‘ಪ್ರಹಾರ್’ ಬಿಡುಗಡೆ

ಹೊಸದಿಲ್ಲಿ: ಸೋಮವಾರ ಪ್ರಪ್ರಥಮ ಭಯೋತ್ಪಾದನಾ ನಿಗ್ರಹ ನೀತಿ ‘ಪ್ರಹಾರ್’ ಅನ್ನು ಬಿಡುಗಡೆ ಮಾಡಿದ ಕೇಂದ್ರ ಸರ್ಕಾರ, ಗಡಿಯ ಹೊರಗಿನಿಂದ ನಡೆಯುವ ಪ್ರಾಯೋಜಿತ ಭಯೋತ್ಪಾದನೆಯಷ್ಟೇ ಅಲ್ಲದೆ, ಕ್ರಿಮಿನಲ್ ಹ್ಯಾಕರ್ ಗಳು ಹಾಗೂ ಸೈಬರ್ ದಾಳಿಗಳ ಮೂಲಕ ಭಾರತವನ್ನು ಗುರಿಯಾಗಿಸಿಕೊಳ್ಳುವುದನ್ನು ಮುಂದುವರಿಸುವ ಯಾವುದೇ ದೇಶಗಳನ್ನೂ ಭಯೋತ್ಪಾದಕ ದೇಶಗಳು ಎಂದು ವ್ಯಾಖ್ಯಾನಿಸಿದೆ. ಭಾರತವು ಜಲ, ನೆಲ ಹಾಗೂ ವಾಯು ಮಾರ್ಗಗಳನ್ನು ಒಳಗೊಂಡಂತೆ ಎಲ್ಲ ಮೂರು ರಂಗಗಳಲ್ಲೂ ಭಯೋತ್ಪಾದಕ ಬೆದರಿಕೆಯನ್ನು ಎದುರಿಸುತ್ತಿದ್ದು, ಇಂಧನ, ರೈಲ್ವೆ, ವಾಯುಯಾನ, ಬಂದರುಗಳು, ರಕ್ಷಣೆ, ಬಾಹ್ಯಾಕಾಶ ಮತ್ತು ಪರಮಾಣು ಇಂಧನ ಸೇರಿದಂತೆ ಭಾರತೀಯ ಆರ್ಥಿಕತೆಯ ಮಹತ್ವದ ಎಲ್ಲಾ ವಲಯಗಳನ್ನು ಭಯೋತ್ಪಾದಕರಿಂದ ರಕ್ಷಿಸಿಕೊಳ್ಳಲು ಅಗತ್ಯ ಸಾಮರ್ಥ್ಯವನ್ನು ಅಭಿವೃದ್ಧಿಪಡಿಸಲಾಗಿದೆ ಎಂದು ಈ ನೀತಿಯಲ್ಲಿ ಪ್ರತಿಪಾದಿಸಲಾಗಿದೆ. ಇದಕ್ಕೂ ಮುನ್ನ ರಾಷ್ಟ್ರೀಯ ಭಯೋತ್ಪಾದನಾ ನಿಗ್ರಹ ನೀತಿ ಮತ್ತು ವ್ಯೂಹತಂತ್ರವನ್ನು ಅಂತಿಮಗೊಳಿಸಲಾಗಿದ್ದು, ಅದನ್ನು ಶೀಘ್ರವೇ ಬಿಡುಗಡೆಗೊಳಿಸಲಾಗುತ್ತದೆ ಎಂದು ವರದಿಯಾಗಿತ್ತು. ಈ ನೀತಿಗೆ ‘PRAHAAR’ ಎಂದು ನಾಮಕರಣ ಮಾಡಲಾಗಿದ್ದು, ಕೇಂದ್ರ ಗೃಹ ಸಚಿವಾಲಯದ ವೆಬ್ಸೈಟ್ನಲ್ಲಿ ಅಪ್ಲೋಡ್ ಮಾಡಲಾಗಿದೆ. ಈ ನೀತಿಯಲ್ಲಿ, “ಭಾರತವು ಭಯೋತ್ಪಾದನೆಯನ್ನು ಯಾವುದೇ ನಿರ್ದಿಷ್ಟ ಧರ್ಮ, ಜನಾಂಗ, ರಾಷ್ಟ್ರೀಯತೆ ಅಥವಾ ನಾಗರಿಕತೆಗೆ ಸಂಪರ್ಕಿಸುವುದಿಲ್ಲ” ಎಂದು ಹೇಳಲಾಗಿದೆ. ಭಾರತವು ಜಿಹಾದಿ ಭಯೋತ್ಪಾದನಾ ನೆಲೆಗಳಷ್ಟೇ ಅಲ್ಲದೆ, ಅವುಗಳ ಮುಖ್ಯ ಸಂಘಟನೆಗಳು ಗಡಿಯ ಹೊರಗಿನಿಂದ ನಡೆಸುತ್ತಿರುವ ಪ್ರಾಯೋಜಿತ ಭಯೋತ್ಪಾದನೆಯಿಂದ ನಿರಂತರವಾಗಿ ತೊಂದರೆಗೀಡಾಗಿದ್ದು, ಈ ಭಯೋತ್ಪಾದಕ ಸಂಘಟನೆಗಳು ಭಾರತದಲ್ಲಿ ದಾಳಿಗಳ ಯೋಜನೆ, ಸಮನ್ವಯ ಹಾಗೂ ನೆರವು ಒದಗಿಸುವುದನ್ನು ಮುಂದುವರಿಸಿವೆ ಎಂದೂ ನೀತಿಯಲ್ಲಿ ಉಲ್ಲೇಖಿಸಲಾಗಿದೆ.

ವಾರ್ತಾ ಭಾರತಿ 23 Feb 2026 9:40 pm

ಸರಣಿ ಬಾಂಬ್ ಬೆದರಿಕೆ: ದಿಲ್ಲಿ ಮೆಟ್ರೊ ನಿಲ್ದಾಣಗಳಲ್ಲಿ ಬಿಗಿ ಬಂದೋಬಸ್ತ್

ಹೊಸದಿಲ್ಲಿ: ಇಮೇಲ್ ಮೂಲಕ ದಿಲ್ಲಿಯಾದ್ಯಂತ ಸರಣಿ ಬಾಂಬ್ ಬೆದರಿಕೆಗಳನ್ನು ಸ್ವೀಕರಿಸಿದ ಹಿನ್ನೆಲೆಯಲ್ಲಿ, ಎಲ್ಲ ದಿಲ್ಲಿ ಮೆಟ್ರೊ ನಿಲ್ದಾಣಗಳಲ್ಲಿನ ಭದ್ರತೆಯನ್ನು ಮತ್ತಷ್ಟು ಬಿಗಿಗೊಳಿಸಲಾಗಿದೆ ಎಂದು ಸೋಮವಾರ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಸೋಮವಾರ ಮುಂಜಾನೆ ದಿಲ್ಲಿ ಕಾರ್ಯಾಲಯ, ದಿಲ್ಲಿ ವಿಧಾನಸಭೆ, ಕೆಂಪು ಕೋಟೆ ಹಾಗೂ ಎರಡು ಶಾಲೆಗಳು ಸೇರಿದಂತೆ ವಿವಿಧ ಸಂಸ್ಥೆಗಳಿಗೆ ಬಾಂಬ್ ಬೆದರಿಕೆಯ ಇಮೇಲ್ಗಳನ್ನು ರವಾನಿಸಲಾಗಿದೆ. ಇದರ ಬೆನ್ನಿಗೇ ಭದ್ರತಾ ಸಂಸ್ಥೆಗಳಿಂದ ನಡೆದ ವ್ಯಾಪಕ ಶೋಧಗಳ ಬಳಿಕ, ಇವು ಹುಸಿ ಬಾಂಬ್ ಬೆದರಿಕೆಗಳು ಎಂದು ಘೋಷಿಸಲಾಗಿದೆ. ಈ ಕುರಿತು ಪ್ರತಿಕ್ರಿಯಿಸಿದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು, “ಬಾಂಬ್ ಬೆದರಿಕೆಗಳನ್ನು ರವಾನಿಸಿರುವ ದುಷ್ಕರ್ಮಿಗಳ ಐಪಿ ವಿಳಾಸಗಳನ್ನು ಪತ್ತೆ ಹಚ್ಚಲು ನಮ್ಮ ಸೈಬರ್ ತಂಡಗಳು ಪ್ರಯತ್ನಿಸುತ್ತಿವೆ. ಪೊಲೀಸರ ತನಿಖೆಯನ್ನು ದಿಕ್ಕು ತಪ್ಪಿಸಲು ಇಂತಹ ಅಪರಾಧಿಗಳು ವಿಪಿಎನ್ (ವರ್ಚುಯಲ್ ಪ್ರೈವೇಟ್ ನೆಟ್ವರ್ಕ್) ಬಳಸುತ್ತಿದ್ದಾರೆ. ಆದರೆ, ನಮ್ಮ ತಜ್ಞ ಅಧಿಕಾರಿಗಳು ದುಷ್ಕರ್ಮಿಗಳನ್ನು ಪತ್ತೆ ಹಚ್ಚಲಿದ್ದಾರೆ” ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಈ ಬಾಂಬ್ ಬೆದರಿಕೆಗಳ ಹಿನ್ನೆಲೆಯಲ್ಲಿ ದಿಲ್ಲಿ ಮೆಟ್ರೊ ನಿಲ್ದಾಣಗಳು ಸೇರಿದಂತೆ ಎಲ್ಲ ಪ್ರಮುಖ ಸಂಸ್ಥೆಗಳಲ್ಲಿ ಭದ್ರತಾ ವ್ಯವಸ್ಥೆಗಳನ್ನು ಪೊಲೀಸರು ಮತ್ತಷ್ಟು ಬಿಗಿಗೊಳಿಸಿದ್ದಾರೆ ಎಂದೂ ಅವರು ತಿಳಿಸಿದ್ದಾರೆ. “ದಿಲ್ಲಿ ಖಾಲಿಸ್ತಾನ ಆಗಲಿದೆ” ಎಂದು ಉಲ್ಲೇಖಿಸಲಾಗಿದ್ದ ಈ ಇಮೇಲ್ಗಳಲ್ಲಿ ದಿಲ್ಲಿ ಸೇನಾ ಶಾಲೆ, ಕೆಂಪು ಕೋಟೆ ಹಾಗೂ ಮೆಟ್ರೊ ನಿಲ್ದಾಣಗಳನ್ನು ಮುಂದಿನ ಮೂರು ದಿನಗಳಲ್ಲಿ ಸ್ಫೋಟಿಸಲಾಗುವುದು ಎಂದು ಬೆದರಿಕೆ ಒಡ್ಡಲಾಗಿತ್ತು. ಸೇನಾ ಶಾಲೆಯಲ್ಲಿ ಇಂದು ಮಧ್ಯಾಹ್ನ 1.11 ಗಂಟೆಗೆ, ವಿಧಾನಸಭೆಯಲ್ಲಿ ಮಧ್ಯಾಹ್ನ 3.11 ಗಂಟೆಗೆ ಹಾಗೂ ಕೆಂಪು ಕೋಟೆಯಲ್ಲಿ ಬೆಳಗ್ಗೆ 9.11 ಗಂಟೆಗೆ ಸ್ಫೋಟಗಳು ನಡೆಯಲಿವೆ ಎಂದು ಇಮೇಲ್ನಲ್ಲಿ ಬೆದರಿಕೆ ನೀಡಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಈ ಬಾಂಬ್ ಬೆದರಿಕೆ ಇಮೇಲ್ ನಲ್ಲಿ ನಿರ್ದಿಷ್ಟವಾಗಿ ಮೆಟ್ರೊ ನಿಲ್ದಾಣಗಳನ್ನು ಉಲ್ಲೇಖಿಸಿದ್ದುದರಿಂದ, ದಿಲ್ಲಿ ಮೆಟ್ರೊ ರೈಲು ನಿಗಮ ಜಾಲದ ಎಲ್ಲ ನಿಲ್ದಾಣಗಳ ಬಳಿ ಪೊಲೀಸರು ಭದ್ರತಾ ನಿಯೋಜನೆಯನ್ನು ಬಿಗಿಗೊಳಿಸಿದ್ದಾರೆ.

ವಾರ್ತಾ ಭಾರತಿ 23 Feb 2026 9:36 pm

Bidar | ಬಲಗೈ ಸಮುದಾಯದ ಹೋರಾಟಗಾರರ ಮೇಲೆ ದಾಖಲಿಸಿದ ಪ್ರಕರಣ ಹಿಂತೆಗೆದುಕೊಳ್ಳಲು ಮನವಿ

ಬೀದರ್ : ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲದಲ್ಲಿ ಬಲಗೈ ಸಮುದಾಯದ ಹೋರಾಟಗಾರರ ವಿರುದ್ಧ ದಾಖಲಿಸಿದ ಪ್ರಕರಣವನ್ನು ಹಿಂತೆಗೆದುಕೊಳ್ಳಬೇಕು ಎಂದು ದಲಿತ ವಿದ್ಯಾರ್ಥಿ ಪರಿಷತ್ ಮನವಿ ಮಾಡಿದೆ. ಜಿಲ್ಲಾಧಿಕಾರಿಗಳ ಮೂಲಕ ಗೃಹ ಸಚಿವರಿಗೆ ಸೋಮವಾರ ಸಲ್ಲಿಸಿದ ಮನವಿ ಪತ್ರದಲ್ಲಿ, ಸರ್ಕಾರ ಜಾರಿಗೆ ತಂದ ಒಳ ಮೀಸಲಾತಿ ನೀತಿಯಿಂದ ಬಲಗೈ ಸಮುದಾಯದ ವಿದ್ಯಾರ್ಥಿಗಳಿಗೆ ಶೈಕ್ಷಣಿಕ, ಸಾಮಾಜಿಕ, ಉದ್ಯೋಗ ಹಾಗೂ ಆರ್ಥಿಕ ಹಿನ್ನಡೆ ಉಂಟಾಗುತ್ತಿದೆ ಎಂದು ಆರೋಪಿಸಿ ಫೆ.19 ರಂದು ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲದಲ್ಲಿ ಪ್ರತಿಭಟನೆ ನಡೆಸಲಾಗಿತ್ತು. ಆದರೆ ಪ್ರತಿಭಟನೆ ಶಾಂತಿಯುತವಾಗಿ ನಡೆಸಿಲ್ಲ ಎಂದು ಪ್ರತಿಭಟನಾಕಾರರ ಮೇಲೆ ಪ್ರಕರಣ ದಾಖಲಿಸಲಾಗಿದೆ ಎಂದು ಆರೋಪಿಸಲಾಗಿದೆ. ಈ ಪ್ರತಿಭಟನೆಯಲ್ಲಿ ಸುಮಾರು ಎರಡು ಸಾವಿರಕ್ಕೂ ಅಧಿಕ ಜನರು ಭಾಗವಹಿಸಿದ್ದು, ಪ್ರತಿಭಟನಾಕಾರರು ಒಳ ಮೀಸಲಾತಿ ಸಂಬಂಧ ಹೊರಡಿಸಿದ ನೇಮಕಾತಿ ಆದೇಶಗಳಲ್ಲಿ ಬಲಗೈ ಸಮುದಾಯಕ್ಕೆ ಅನ್ಯಾಯವಾಗಿದೆ. ಅದನ್ನು ಮರು ಪರಿಶೀಲನೆ ಮಾಡುವಂತೆ ಸರ್ಕಾರಕ್ಕೆ ಆಗ್ರಹಿಸಿದ್ದರು. ಪ್ರತಿಭಟನೆಯ ವೇಳೆ ಮುಖ್ಯಮಂತ್ರಿಗಳು, ಗೃಹ ಸಚಿವರು ಹಾಗೂ ಸಮಾಜ ಕಲ್ಯಾಣ ಸಚಿವರ ಭಾವಚಿತ್ರಗಳಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದರು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಭಟನೆ ನಡೆಸುವುದು ಸಂವಿಧಾನಾತ್ಮಕ ಹಕ್ಕು ಎಂದು ಸಮಿತಿ ಹೇಳಿದ್ದು, ಹೋರಾಟಗಾರರ ವಿರುದ್ಧ ದಾಖಲಿಸಿದ ಪ್ರಕರಣವನ್ನು ತಕ್ಷಣ ಹಿಂಪಡೆಯಬೇಕು ಎಂದು ಒತ್ತಾಯಿಸಲಾಗಿದೆ. ಹೋರಾಟಗಾರರ ವಿರುದ್ಧ ದಾಖಲಿಸಿದ ಪ್ರಕರಣವನ್ನು ತಕ್ಷಣ ಹಿಂಪಡೆಯಬೇಕು. ಇಲ್ಲವಾದರೆ ಸರ್ಕಾರದ ವಿರುದ್ಧ ಮತ್ತಷ್ಟು ಹೋರಾಟ ರೂಪಿಸಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ. ಈ ಸಂದರ್ಭದಲ್ಲಿ ದಲಿತ ವಿದ್ಯಾರ್ಥಿ ಪರಿಷತ್ ಜಿಲ್ಲಾ ಸಂಚಾಲಕ ಸಂದೀಪ್ ಕಾಂಟೆ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಮೇಶ್ ಮಾಲೆ, ಜಿಲ್ಲಾ ಕಾರ್ಯದರ್ಶಿ ಅನೀಲ್ ಮಡ್ಡೆ, ಕರ್ನಾಟಕ ಪ್ರಜಾ ಶಕ್ತಿ ಸಮಿತಿಯ ಜಿಲ್ಲಾ ಉಪಾಧ್ಯಕ್ಷ ಮಹೇಂದ್ರಕುಮಾರ್ ಹೊಸಮನಿ, ಬಹುಜನ ಯುತ್ ಪ್ಯಾಂಥರ್ ಜಿಲ್ಲಾಧ್ಯಕ್ಷ ಜನಾರ್ಧನ್ ದೀನೆ ಹಾಗೂ ಯುವ ಮುಖಂಡ ಸಾಯಿ ಕೌರವ್ ಉಪಸ್ಥಿತರಿದ್ದರು.

ವಾರ್ತಾ ಭಾರತಿ 23 Feb 2026 9:35 pm

ನನ್ನ ಪದಚ್ಯುತಿಗೆ ಮಧ್ಯಂತರ ಸರಕಾರ ಪ್ರಯತ್ನಿಸಿತ್ತು: ಬಾಂಗ್ಲಾದೇಶದ ಅಧ್ಯಕ್ಷರ ಗಂಭೀರ ಆರೋಪ

ಢಾಕಾ, ಫೆ.23: ಬಾಂಗ್ಲಾದೇಶದಲ್ಲಿ ಸಂವಿಧಾನಾತ್ಮಕ ಶಿಷ್ಟಾಚಾರ ಉಲ್ಲಂಘನೆ ಮತ್ತು ಅಧಿಕಾರ ದುರುಪಯೋಗದ ಕುರಿತು ಗಂಭೀರ ರಾಜಕೀಯ ವಿವಾದ ಭುಗಿಲೆದ್ದಿದೆ. ದೇಶದ ಅಧ್ಯಕ್ಷ ಮೊಹಮ್ಮದ್ ಶಹಾಬುದ್ದೀನ್ ಅವರು ಮಧ್ಯಂತರ ಸರಕಾರದ ಮುಖ್ಯಸ್ಥರಾಗಿದ್ದ ಮುಹಮ್ಮದ್ ಯೂನುಸ್ ವಿರುದ್ಧ ತೀವ್ರ ಆರೋಪಗಳನ್ನು ಮಾಡಿದ್ದಾರೆ. ಬಾಂಗ್ಲಾದೇಶದ ದಿನಪತ್ರಿಕೆ ಕಲೇರ್ ಕಾಂತೊ ವರದಿ ಪ್ರಕಾರ, ಯೂನುಸ್ ನೇತೃತ್ವದ ಮಧ್ಯಂತರ ಸರಕಾರ ತನ್ನನ್ನು ಪದಚ್ಯುತಗೊಳಿಸಲು ಪ್ರಯತ್ನಿಸಿತ್ತು ಎಂದು ಶಹಾಬುದ್ದೀನ್ ಆರೋಪಿಸಿದ್ದಾರೆ. ಸಂವಿಧಾನಾತ್ಮಕ ನಿಯಮಗಳು ಹಾಗೂ ಸಾಂಸ್ಥಿಕ ಸಮನ್ವಯವನ್ನು ಯೂನುಸ್ ಪಾಲಿಸಲಿಲ್ಲ ಎಂದು ಅವರು ತಿಳಿಸಿದ್ದಾರೆ. “ಸರಕಾರದ ಪ್ರಮುಖ ನಿರ್ಧಾರಗಳು, ವಿದೇಶಿ ಭೇಟಿಗಳು ಹಾಗೂ ಅಂತಾರಾಷ್ಟ್ರೀಯ ಒಪ್ಪಂದಗಳ ಕುರಿತು ನನಗೆ ಮಾಹಿತಿ ನೀಡಲಾಗುತ್ತಿರಲಿಲ್ಲ. ಅಧ್ಯಕ್ಷರೊಂದಿಗೆ ನಿಯಮಿತ ಸಮಾಲೋಚನೆ ನಡೆಸುವ ಸಾಂವಿಧಾನಿಕ ಬಾಧ್ಯತೆಯನ್ನು ಅವರು ಪಾಲಿಸಲಿಲ್ಲ,” ಎಂದು ಶಹಾಬುದ್ದೀನ್ ಹೇಳಿದ್ದಾರೆ. ಸಂವಿಧಾನದ ಪ್ರಕಾರ ಸರಕಾರದ ಮುಖ್ಯಸ್ಥರು ವಿದೇಶ ಪ್ರವಾಸದಿಂದ ವಾಪಾಸಾದ ಬಳಿಕ ಅಧ್ಯಕ್ಷರನ್ನು ಭೇಟಿಯಾಗಿ ನಡೆದ ಸಭೆಗಳು ಹಾಗೂ ಮಾತುಕತೆಗಳ ಕುರಿತು ಲಿಖಿತ ಮಾಹಿತಿ ನೀಡಬೇಕು. ಆದರೆ ಯೂನುಸ್ ಸುಮಾರು 15 ಬಾರಿ ವಿದೇಶ ಪ್ರವಾಸ ಕೈಗೊಂಡಿದ್ದರೂ ಒಂದೇ ಬಾರಿಯೂ ತನಗೆ ಮಾಹಿತಿ ನೀಡಿರಲಿಲ್ಲ ಎಂದು ಅವರು ಆರೋಪಿಸಿದ್ದಾರೆ. ಅಮೆರಿಕದೊಂದಿಗೆ ಮಾಡಿಕೊಂಡ ಒಪ್ಪಂದ ಸೇರಿದಂತೆ ಹಲವು ಪ್ರಮುಖ ವಿಷಯಗಳಲ್ಲಿ ತನ್ನನ್ನು ಸಂಪೂರ್ಣವಾಗಿ ದೂರ ಇಡಲಾಗಿದೆ ಎಂದು ಅವರು ದೂರಿದ್ದಾರೆ. ರಾಷ್ಟ್ರದ ಹಿತಾಸಕ್ತಿಗೆ ಸಂಬಂಧಿಸಿದ ಒಪ್ಪಂದಗಳ ಬಗ್ಗೆ ಅಧ್ಯಕ್ಷರಿಗೆ ಮಾಹಿತಿ ನೀಡುವುದು ಸಾಂವಿಧಾನಿಕ ಕರ್ತವ್ಯವಾಗಿದ್ದರೂ ಅದನ್ನು ಪಾಲಿಸಲಾಗಿಲ್ಲ ಎಂದು ಶಹಾಬುದ್ದೀನ್ ಹೇಳಿದ್ದಾರೆ. ಕೊಸೊವೊ ಮತ್ತು ಖತರ್ ದೇಶಗಳಿಂದ ಬಂದ ಆಹ್ವಾನಗಳನ್ನು ಅಧಿಕಾರಿಗಳು ತನ್ನೊಂದಿಗೆ ಚರ್ಚಿಸದೆ ನಿರಾಕರಿಸಿದರೆಂದು ಅವರು ಆರೋಪಿಸಿದ್ದಾರೆ. “ರಾಷ್ಟ್ರದ ಕರ್ತವ್ಯದಲ್ಲಿ ನಿರತವಾಗಿರುವುದರಿಂದ ಭೇಟಿ ಸಾಧ್ಯವಿಲ್ಲ” ಎಂದು ಉಲ್ಲೇಖಿಸಿ ಪತ್ರ ಕಳುಹಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. ದೇಶದ ರಾಯಭಾರಿ ಕಚೇರಿಗಳಲ್ಲಿ ಅಧ್ಯಕ್ಷರ ಭಾವಚಿತ್ರ ಪ್ರದರ್ಶಿಸುವ ಸಂಪ್ರದಾಯವನ್ನು ಕೂಡ ಯೂನುಸ್ ಆಡಳಿತ ರಾತ್ರೋರಾತ್ರಿ ಬದಲಾಯಿಸಿದೆ ಎಂಬ ಆರೋಪ ಕೇಳಿಬಂದಿದೆ. ಒಂದು ಹಂತದಲ್ಲಿ ತನ್ನನ್ನು ಬದಲಾಯಿಸಿ ಮಾಜಿ ಮುಖ್ಯ ನ್ಯಾಯಾಧೀಶರನ್ನು ಅಧ್ಯಕ್ಷರನ್ನಾಗಿ ನೇಮಿಸುವ ಪ್ರಯತ್ನವೂ ನಡೆದಿತ್ತು, ಆದರೆ ಅದು ವಿಫಲವಾಯಿತು ಎಂದು ಶಹಾಬುದ್ದೀನ್ ಹೇಳಿದ್ದಾರೆ.

ವಾರ್ತಾ ಭಾರತಿ 23 Feb 2026 9:33 pm

ಕಾಂತಾರ ದೈವಪಾತ್ರಕ್ಕೆ ಅವಮಾನ: ಕೇಸ್‌ ರದ್ದು ಕೋರಿ ರಣವೀರ್‌ ಸಿಂಗ್‌ ಹೈಕೋರ್ಟ್‌ ಮೊರೆ; ತುರ್ತು ಏಕೆಂದು ಜಡ್ಜ್‌ ಗರಂ

ಕಾಂತಾರ ಸಿನಿಮಾ ದೈವಪಾತ್ರಕ್ಕೆ ಅವಮಾನ ಪ್ರಕರಣದಲ್ಲಿ ಬಾಲಿವುಡ್‌ ನಟ ರಣವೀರ್ ಸಿಂಗ್ ಮೇಲೆ ಖಾಸಗಿ ದೂರು ದಾಖಲಾಗಿದೆ. ಈ ದೂರು ರದ್ದು ಕೋರಿ ನಟ ಕರ್ನಾಟಕ ಹೈಕೋರ್ಟ್‌ ಮೊರೆ ಹೋಗಿದ್ದಾರೆ. ಇನ್ನು ವಿಚಾರಣೆ ತುರ್ತಾಗಿ ನಡೆಯಬೇಕೆಂದು ನಟನ ಪರ ವಕೀಲರು ಕೋರಿದಾಗ ನ್ಯಾಯಮೂರ್ತಿಗಳು ಗರಂ ಆಗಿದ್ದಾರೆ. ಮಂಗಳವಾರಕ್ಕೆ ವಿಚಾರಣೆ ನಿಗದಿಯಾಗಿದೆ.

ವಿಜಯ ಕರ್ನಾಟಕ 23 Feb 2026 9:30 pm

ಶೇ. 90ರಷ್ಟು ಕೆಮ್ಮು ಸಿರಪ್ ತಯಾರಿಕಾ ಸಂಸ್ಥೆಗಳಲ್ಲಿ ಲೋಪ: ಔಷಧ ನಿಯಂತ್ರಕರ ತಪಾಸಣೆಯಲ್ಲಿ ಬಯಲು

ಹೊಸದಿಲ್ಲಿ: ಭಾರತದಲ್ಲಿ ಹಾಗೂ ಹೊರದೇಶಗಳಲ್ಲಿ ಮಕ್ಕಳ ಸಾವಿಗೆ ಕಾರಣವಾಗಿದೆ ಎಂದು ಆರೋಪಿಸಲಾದ ಭಾರತದಲ್ಲಿ ತಯಾರಿಸಲಾದ ಕೆಮ್ಮು ಸಿರಪ್ ಗಳಿಗೆ ಸಂಬಂಧಿಸಿದಂತೆ ಪರಿಶೀಲನೆಯನ್ನು ಬಿಗಿಗೊಳಿಸಿದ ಬೆನ್ನಿಗೇ, ಸುಮಾರು ಶೇ. 90ರಷ್ಟು ಭಾರತೀಯ ಕೆಮ್ಮು ಸಿರಪ್ ತಯಾರಿಕಾ ಸಂಸ್ಥೆಗಳು ನಿಯಮಗಳ ಪಾಲನೆಯಲ್ಲಿ ಲೋಪಗಳನ್ನು ಎಸಗಿರುವುದು ಪತ್ತೆಯಾಗಿದೆ ಎಂದು ಸೋಮವಾರ ಭಾರತೀಯ ಔಷಧ ನಿಯಂತ್ರಣ ಪ್ರಾಧಿಕಾರದ ಮುಖ್ಯಸ್ಥ ರಾಜೀವ್ ರಘುವಂಶಿ ತಿಳಿಸಿದ್ದಾರೆ. ಕಳೆದ ವರ್ಷದ ಅಕ್ಟೋಬರ್ ತಿಂಗಳಲ್ಲಿ ಸಂಭವಿಸಿದ್ದ 24 ಮಕ್ಕಳ ಸಾವಿಗೆ ಕಾರಣ ಎಂದು ಆರೋಪಿಸಲಾಗಿದ್ದ ಒಂದು ಬ್ರ್ಯಾಂಡ್ ನ ಕೆಮ್ಮು ಸಿರಪ್ನಲ್ಲಿ ಕಲುಷಿತ ಡೈಎಥಿಲೀನ್ ಗ್ಲೈಕಾಲ್ ಇರುವುದು ಪತ್ತೆಯಾದ ನಂತರ ಈ ತಪಾಸಣೆಗಳನ್ನು ನಡೆಸಲಾಗಿತ್ತು. ‘ಕೋಲ್ಡ್ರಿಫ್’ ಎಂಬ ಈ ಕೆಮ್ಮು ಸಿರಪ್ ಅನ್ನು ತಮಿಳುನಾಡು ಮೂಲದ ಶ್ರೀಶನ್ ಫಾರ್ಮಸ್ಯೂಟಿಕಲ್ಸ್ ಎಂಬ ಔಷಧ ಕಂಪೆನಿ ತಯಾರಿಸಿತ್ತು. ಮುಂಬೈನಲ್ಲಿ ಇಂಡಿಯನ್ ಫಾರ್ಮಾಸ್ಯೂಟಿಕಲ್ಸ್ ಅಸೋಸಿಯೇಷನ್ ವತಿಯಿಂದ ಆಯೋಜಿಸಲಾದ 11ನೇ ಜಾಗತಿಕ ಫಾರ್ಮಾಸ್ಯೂಟಿಕಲ್ಸ್ ಗುಣಮಟ್ಟ ಶೃಂಗಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನ ಭಾರತೀಯ ಔಷಧ ನಿಯಂತ್ರಕ ರಾಜೀವ್ ರಘುವಂಶಿ, “ಗಂಭೀರವಾಗಿ ಪಾಲನೆಯಾಗದ ನಿಯಮಗಳ ವಿರುದ್ಧ ನಾವು ಗಂಭೀರ ಕ್ರಮಗಳನ್ನು ಕೈಗೊಂಡಿದ್ದೇವೆ. ಕೆಮ್ಮು ಸಿರಪ್ ತಯಾರಿಕೆಯಿಂದ ಕಳಪೆ ಗುಣಮಟ್ಟದ ಉತ್ಪನ್ನಗಳನ್ನು ತೆಗೆದುಹಾಕಲಾಗುವುದು ಎಂಬುದು ನನ್ನ ವಿಶ್ವಾಸವಾಗಿದೆ” ಎಂದು ಹೇಳಿದರು. ಯಾವುದೇ ಕಾಲಮಿತಿಯನ್ನು ನೀಡದೆ ಕೆಮ್ಮು ಸಿರಪ್ ಉತ್ಪನ್ನಗಳ ತಯಾರಿಕೆಯಲ್ಲಿ ಕಂಡುಬಂದ ಲೋಪಗಳನ್ನು ಬಗೆಹರಿಸಲು ನಾವು ಪ್ರಯತ್ನಿಸುತ್ತಿದ್ದೇವೆ ಎಂದು ಅವರು ತಿಳಿಸಿದರು. 2022ರಿಂದ ಇಲ್ಲಿಯವರೆಗೆ ಆಫ್ರಿಕಾ ಮತ್ತು ಮಧ್ಯ ಏಷ್ಯಾದಲ್ಲಿ 140ಕ್ಕೂ ಹೆಚ್ಚು ಮಕ್ಕಳ ಸಾವಿಗೆ ಭಾರತದಲ್ಲಿ ತಯಾರಾದ ಕೆಮ್ಮು ಸಿರಪ್ ಗಳು ಕಾರಣ ಎಂಬ ಆರೋಪಗಳು ಕೇಳಿಬಂದ ಬಳಿಕ, ಬಹುತೇಕ ಸಣ್ಣ ತಯಾರಿಕಾ ಕಂಪೆನಿಗಳೇ ಮೇಲುಗೈ ಸಾಧಿಸಿರುವ 42 ಶತಕೋಟಿ ಡಾಲರ್ ಮೌಲ್ಯದ ಔಷಧ ತಯಾರಿಕಾ ಕ್ಷೇತ್ರದ ಮೇಲೆ ನಿಗಾ ವಹಿಸಬೇಕು ಎಂಬ ಒತ್ತಡಕ್ಕೆ ಭಾರತೀಯ ಔಷಧ ನಿಯಂತ್ರಣ ಪ್ರಾಧಿಕಾರ ಒಳಗಾಗಿತ್ತು. ಈ ಆರೋಪಗಳಿಂದ ‘ಜಗತ್ತಿನ ಔಷಧಾಲಯ’ ಎಂಬ ಭಾರತದ ವಿಶ್ವಾಸಾರ್ಹತೆಗೆ ಧಕ್ಕೆಯಾಗಿತ್ತು.

ವಾರ್ತಾ ಭಾರತಿ 23 Feb 2026 9:28 pm

ಹುಮನಾಬಾದ್ | ಒಳಮೀಸಲಾತಿಯಲ್ಲಿ ಬಲಗೈ ಸಮುದಾಯಕ್ಕೆ ಅನ್ಯಾಯ ಆರೋಪ : ಪ್ರತಿಭಟನೆ

ನಗರದಲ್ಲಿ ಬಹುತೇಕ ಎಲ್ಲ ಅಂಗಡಿ ಮುಂಗಟ್ಟು ಬಂದ್

ವಾರ್ತಾ ಭಾರತಿ 23 Feb 2026 9:28 pm

ಬೀದರ್‌ನಲ್ಲಿ ರಾಜ್ಯ ಪತ್ರಕರ್ತರ ಸಮ್ಮೇಳನ ನಡೆಸುತ್ತಿರುವುದು ಖುಷಿ ವಿಚಾರ : ಬಸವರಾಜ್ ಹೊರಟ್ಟಿ

ಬೀದರ್ : ಬಸವಣ್ಣನವರ ಕರ್ಮಭೂಮಿ ಬೀದರ್‌ನಲ್ಲಿ 40ನೇ ಪತ್ರಕರ್ತರ ರಾಜ್ಯ ಸಮ್ಮೇಳನ ಮಾಡಲು ಮುಂದಾಗಿರುವುದು ಬಹಳ ಸಂತೋಷದ ಸಂಗತಿ. ಹೊರ ದೇಶಗಳಿಂದ ಪತ್ರಕರ್ತರನ್ನು ಸಮ್ಮೇಳನಕ್ಕೆ ಆಹ್ವಾನ ಮಾಡಲು ಮುಂದಾಗಿರುವುದು ಸ್ವಾಗತಾರ್ಹವಾಗಿದೆ. ಅವರು ಬೀದರ್‌ಗೆ ಬಂದು ಬಸವಣ್ಣನವರ ಬಗ್ಗೆ ಅರಿತುಕೊಳ್ಳಲು ಬಹಳಷ್ಟು ಅನುಕುಲ ಆಗಲಿದೆ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ಹೇಳಿದರು. ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಸೋಮವಾರ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಬೀದರ್ ಜಿಲ್ಲಾ ಘಟಕದಿಂದ 40ನೇ ಪತ್ರಕರ್ತರ ರಾಜ್ಯ ಸಮ್ಮೇಳನದ ಕಚೇರಿ ಉದ್ಘಾಟನೆ ಮಾಡಿ ಮಾತನಾಡಿರುವ ಅವರು, ಬಸವಣ್ಣನವರ ಪರಿಕಲ್ಪನೆ ಎತ್ತಿ ಹಿಡಿದವರು ಕೇವಲ ಬೀದರ್ ಜನರು ಮಾತ್ರ. ಇವರ ಮುಗ್ದ ಸ್ವಭಾವ, ಸಹಕಾರ ಮನೋಭಾವ, ಇತರರ ಬಗ್ಗೆ ಇವರಿಗಿರುವ ಕಾಳಜಿ ಇಡೀ ನಾಡಿಗೆ ಮಾದರಿ ಪ್ರಾಯವಾಗಿದೆ ಎಂದರು. ಮಾಧ್ಯಮಗಳಲ್ಲಿ ಇನ್ನು ಸಾಕಷ್ಟು ಮಹಿಳೆಯರು ತಮ್ಮನ್ನು ತಾವು ತೊಡಗಿಕೊಳ್ಳಬೇಕು. ಎಲ್ಲ ಕ್ಷೇತ್ರಗಳಲ್ಲಿ ತೋರಿದ ಅಭಿಲಾಷೆ ಈ ಕ್ಷೇತ್ರದಲ್ಲೂ ತೋರಬೇಕು. ಎಂದು ಹೇಳಿದ ಅವರು, ಮುಂಬರುವ ದಿನಗಳಲ್ಲಿ ತಾವು ನಿರ್ಧರಿಸಿದ ರಾಜ್ಯ ಸಮ್ಮೇಳನಕ್ಕೆ ಖಂಡಿತ ಆಗಮಿಸುವುದಾಗಿ ಹೊರಟ್ಟಿ ಭರವಸೆ ನೀಡಿದರು. ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ ಪ್ರಭಾಕರ್ ಸಮ್ಮೇಳನದ ವೆಬಸೈಟ್ ಅನಾವರಣಗೊಳಿಸಿದರು. ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಸ್ವಾಗತ ಸಮಿತಿಯ ಅಧ್ಯಕ್ಷ ಈಶ್ವರ್ ಖಂಡ್ರೆ, ಪೌರಾಡಳಿತ ಸಚಿವ ರಹಿಮ್ ಖಾನ್ ಅವರು ಮಾತನಾಡಿದರು. ಸಂಘದ ರಾಜ್ಯಾಧ್ಯಕ್ಷ ಶಿವಾನಂದ್ ತಗಡೂರು ಅಧ್ಯಕ್ಷತೆ ವಹಿಸಿದರು. ಸಂಘದ ಜಿಲ್ಲಾಧ್ಯಕ್ಷ ಅನಂದ್ ದೇವಪ್ಪ ಪ್ರಾಸ್ತಾವಿಕ ಮಾತನಾಡಿದರು. ಈ ಸಂದರ್ಭದಲ್ಲಿ ಸಂಘದ ರಾಜ್ಯ ಉಪಾಧ್ಯಕ್ಷ ಹೆಚ್.ಬು ಮದನಗೌಡ, ಮತ್ತಿಕೆರೆ ಜಯರಾಮ, ಅಜ್ಜಮಾಡ ರಮೇಶ್ ಕುಟ್ಟಪ್ಪ, ಕಾರ್ಯದರ್ಶಿಗಳಾದ ಪುಂಡಲೀಕ್ ಬಾಳೊಜಿ, ಸೋಮಶೇಖರ್ ಕೆರೆಗುಡು, ಖಜಾಂಚಿ ವಾಸುದೇವ್ ಹೊಳ್ಳ, ಸಂಘದ ಮಾಜಿ ರಾಜ್ಯ ಉಪಾಧ್ಯಕ್ಷ ಭವಾನಿಸಿಂಗ್ ಠಾಕೂರ್, ಅಡಾಕ ಸಮಿತಿ ಸದಸ್ಯರಾದ ಶಿವಕುಮಾರ್ ಸ್ವಾಮಿ, ಅಪ್ಪಾರಾವ್ ಸೌದಿ, ಮಾಜಿ ಜಿಲ್ಲಾಧ್ಯಕ್ಷರಾದ ಗಂಧರ್ವ ಸೇನಾ, ಮಲ್ಲಿಕಾರ್ಜುನ್ ಬಿರಾದಾರ್, ಬಸವರಾಜ್ ಕಾಮಶೆಟ್ಟಿ, ಅಶೋಕಕುಮಾರ್ ಕರಂಜಿ, ಡಿ.ಕೆ ಗಣಪತಿ, ದೀಪಕ್ ವಾಲಿ, ಡಾ.ರಜನೀಶ್ ವಾಲಿ ಇದ್ದರು. ಮಾಜಿ ಜಿಲ್ಲಾಧ್ಯಕ್ಷ ಬಾಬುವಾಲಿ ಕಾರ್ಯಕ್ರಮ ನಿರೂಪಿಸಿದರು. ಪ್ರಥ್ವಿರಾಜ್.ಎಸ್ ವಂದಿಸಿದರು.

ವಾರ್ತಾ ಭಾರತಿ 23 Feb 2026 9:24 pm

Bidar | ಹೋರಾಟದ ಮೂಲಕವೇ ಬದಲಾವಣೆ ಸಾಧ್ಯ : ಬಸವರಾಜ್ ಹೊರಟ್ಟಿ

ಬೀದರ್ : ಸಂಘಟನೆ ಎನ್ನುವುದು ಬಹಳ ಮುಖ್ಯವಾಗಿದೆ. ಮಹಿಳೆಯರು ಸಂಘವನ್ನು ಕಟ್ಟಿಕೊಂಡು ರಾಜ್ಯವ್ಯಾಪಿ ಸಂಘಟನೆ ರೂಪಿಸುತ್ತಿರುವುದು ಶ್ಲಾಘನೀಯವಾಗಿದೆ. ಹೋರಾಟದ ಮೂಲಕವೇ ಬದಲಾವಣೆ ಸಾಧ್ಯವಿದೆ ಎಂದು ವಿಧಾನ ಪರಿಷತ್ತಿನ ಸಭಾಪತಿ ಬಸವರಾಜ್ ಹೊರಟ್ಟಿ ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ನಗರದ ಚೆನ್ನಬಸವ ಪಟ್ಟದೇವರು ರಂಗಮಂದಿರದಲ್ಲಿ ಸೋಮವಾರ ಅಖಿಲ ಕರ್ನಾಟಕ ರಾಜ್ಯ ಸರಕಾರಿ ಮಹಿಳಾ ನೌಕರರ ಸಂಘ ಜಿಲ್ಲಾ ಘಟಕದ ವತಿಯಿಂದ ಹಮ್ಮಿಕೊಂಡಿದ್ದ ಜಿಲ್ಲಾ ಘಟಕದ ಉದ್ಘಾಟನೆ, ಪದಗ್ರಹಣ ಕಾರ್ಯಕ್ರಮ, ಸರಕಾರದ ಯೋಜನೆಗಳ ಅನುಷ್ಠಾನ ಮತ್ತು ಆಡಳಿತದಲ್ಲಿ ಮಹಿಳೆಯರ ಪಾತ್ರ ಕುರಿತು ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು. ಹೆಣ್ಣು ಮಕ್ಕಳು ಸಮಾಜದ ಎಲ್ಲಾ ರಂಗಗಳಲ್ಲಿ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುತ್ತಾರೆ. ಇನ್ನಷ್ಟು ಸಂಘಟಿತರಾಗಿ ಒಗ್ಗಟ್ಟು ಪ್ರದರ್ಶಿಸುವುದು ಅಗತ್ಯವಿದೆ. ತಮ್ಮ ಹಕ್ಕುಗಳಿಗಾಗಿ ನಿರಂತರ ಹೋರಾಟ ಮಾಡುವುದು ತುಂಬಾ ಅವಶ್ಯಕವಾಗಿದೆ ಎಂದು ಅವರು ಹೇಳಿದರು. ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ ಅವರು ಮಾತನಾಡಿ, ನಮ್ಮ ಸರ್ಕಾರ ಮಹಿಳೆಯರಿಗಾಗಿ ಋತುಚಕ್ರ ರಜೆ ಘೋಷಣೆ ಮಾಡುವ ಮೂಲಕ ಅವರ ನೋವಿಗೆ ಸ್ಪಂದಿಸಿದೆ. ಹೆಣ್ಣುಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಹಾಗೂ ಲಿಂಗ ತಾರತಮ್ಯಕ್ಕೆ ಕಡಿವಾಣ ಹಾಕಲು ಹಲವು ಕಾಯ್ದೆಗಳನ್ನು ಜಾರಿಗೆ ತಂದಿದೆ. ಅಖಿಲ ಕರ್ನಾಟಕ ರಾಜ್ಯ ಸರಕಾರಿ ಮಹಿಳಾ ಸಂಘದ ಚಟುವಟಿಕೆಗಳನ್ನು ಮೆಚ್ಚಿಕೊಂಡ ಅವರು, ಸಂಘಕ್ಕೆ ಅಗತ್ಯವಿದ್ದಲ್ಲಿ ಅನುದಾನ ನೀಡಲು ಸದಾ ಸಿದ್ಧನಿದ್ದೇನೆ ಎಂದು ಭರವಸೆ ನೀಡಿದರು. ಪೌರಾಡಳಿತ ಹಾಗೂ ಹಜ್ ಸಚಿವ ರಹೀಂ ಖಾನ್ ಅವರು ಮಾತನಾಡಿ, ಬೀದರ್‌ನಲ್ಲಿ ಮಹಿಳೆಯರು ಇಷ್ಟೊಂದು ಅಚ್ಚುಕಟ್ಟಾಗಿ ಹಾಗೂ ದೊಡ್ಡ ಪ್ರಮಾಣದಲ್ಲಿ ಕಾರ್ಯಕ್ರಮವನ್ನು ಆಯೋಜಿಸಿರುವುದು ತುಂಬಾ ಸಂತೋಷ ತಂದಿದೆ ಎಂದರು. ಈ ಸಂದರ್ಭದಲ್ಲಿ ಬಸವ ಕಲ್ಯಾಣದ ಶಿವಾನಂದ್ ಮಹಾಸ್ವಾಮಿ, ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ, ಅಖಿಲ ಕರ್ನಾಟಕ ರಾಜ್ಯ ಸರಕಾರಿ ಮಹಿಳಾ ನೌಕರರ ಸಂಘದ ರಾಜ್ಯ ಅಧ್ಯಕ್ಷೆ ರೋಶನಿ ಗೌಡ, ಸಿದ್ದಾರೆಡ್ಡಿ ಫೌಂಡೇಶನ್ ಅಧ್ಯಕ್ಷೆ ಗುರಮ್ಮಾ ಸಿದ್ದಾರೆಡ್ಡಿ ಅಕ್ಕಪಡೆ ರಾಜ್ಯ ಸಂಯೋಜಕಿ ಶೈನಿ ಪ್ರದೀಪ್ ಗುಂಟಿ, ಶಶಿಕಲಾ ಕೆ., ವೀಣಾ ಕೃಷ್ಣಮೂರ್ತಿ, ಸಿಂಧು ರಘು ಎಚ್.ಎಸ್, ಫಣಿಂದ್ರ ಪ್ರಸಾದ್, ಜಿಲ್ಲಾ ಘಟಕದ ಅಧ್ಯಕ್ಷೆ ಪಾರ್ವತಿ ವಿ. ಸೋನಾರೆ, ಔರಾದ್ ತಾಲೂಕು ವೈದ್ಯಧಿಕಾರಿ ಡಾ. ಗಾಯತ್ರಿ ಹಾಗೂ ಜೂನಿಯರ್ ಮಿಸ್ ಇಂಡಿಯಾ ಸೆಕೆಂಡ್ ರನ್ನರ್ ಆಫ್ ಪೂರ್ವಿ ಬಿರಾದಾರ್ ಸೇರಿದಂತೆ ಜಿಲ್ಲಾ ಸಮಿತಿಯ ಪದಾಧಿಕಾರಿಗಳು, ಜಿಲ್ಲೆಯ ಸರಕಾರಿ ಮಹಿಳಾ ಅಧಿಕಾರಿಗಳು ಮತ್ತು ಅನೇಕರು ಉಪಸ್ಥಿತರಿದ್ದರು.  

ವಾರ್ತಾ ಭಾರತಿ 23 Feb 2026 9:21 pm

ಭಾಸ್ಕರ್ ರಾವ್ ಸೋದರ ಅಳಿಯ ನಾಪತ್ತೆ! 8 ದಿನಗಳಿಂದ ಸಿಕ್ಕಿಲ್ಲ ಸುಳಿವು; ನೆರವು ಕೋರಿದ ಮಾಜಿ IPS ಅಧಿಕಾರಿ

ಭಾಸ್ಕರ್ ರಾವ್ ಅವರ ಸೋದರ ಸಂಬಂಧಿಯೊಬ್ಬರು ಕಳೆದ 8 ದಿನಗಳಿಂದ ಕಾಣಿಯಾಗಿದ್ದಾರೆ. ಬೆಂಗಳೂರಿನ ಪ್ರತಿಷ್ಠಿತ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿದ್ದು, ಫೆ.15 ರಂದು ಏಕಾಏಕಿ ನಾಪತ್ತೆಯಾಗಿದ್ದಾರೆ. ಸದ್ಯ ಅವರ ಹುಡುಕಾಟ ಬರದಿಂದ ಸಾಗಿದ್ದು, ಸಾಮಾಜಿಕ ಜಾಲತಾಣದಲ್ಲಿಯೂ ಪೋಸ್ಟ್‌ ಮಾಡಿ ಬಳಕೆದಾರರಿಗೆ ಕಾಣಿಯಾದ ವ್ಯಕ್ತಿಯ ಮಾಹಿತಿ ನೀಡಲು ಕೋರಿದ್ದಾರೆ.

ವಿಜಯ ಕರ್ನಾಟಕ 23 Feb 2026 9:20 pm

ಯಾದಗಿರಿ | ವಿವಿಧ ಕೋರ್ಟ್ ಗಳ ಮೇಲೆ ಬಾಂಬ್ ಬೆದರಿಕೆ : ಬಾಂಬ್ ತಪಾಸಣಾ ತಂಡದಿಂದ ಜನಸಂದಣಿ ಸ್ಥಳಗಳ ತಪಾಸಣೆ

ಯಾದಗಿರಿ: ರಾಜ್ಯದ ವಿವಿಧ ಜಿಲ್ಲೆಗಳ ಕೊರ್ಟ್ ಗಳ ಮೇಲೆ ಬಾಂಬ್ ದಾಳಿ ಮಾಡುವುದಾಗಿ ಮೆಲ್ ಮೂಲಕ ಮೆಸೆಜ್‌ ಬಂದ ಹಿನ್ನಲೆಯಲ್ಲಿ ನಗರದ ಜನಸಂದಣಿ ಇರುವ‌ ಸ್ಥಳಗಳಲ್ಲಿ ಸೋಮವಾರ ಬಾಂಬ್ ತಪಾಸಣಾ ತಂಡವು ಪರಿಶೀಲನೆ ನಡೆಸಿತು. ನಗರದ ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ, ಜಿಲ್ಲಾ ಕೋರ್ಟ್ ಸೇರಿದಂತೆಯೇ ವಿವಿಧಡೆ ತಪಾಸಣಾ ತಂಡ ಶ್ವಾನದಳದೊಂದಿಗೆ ಆಗಮಿಸಿ ಪ್ರಯಾಣಿಕರ ಲಗೇಜ್, ಅನುಮಾನಾಸ್ಪದ ವಸ್ತುಗಳನ್ನು ಪರಿಶೀಲಿಸಿದರು. ಈ ತಂಡವು ನಾಳೆಯಿಂದ ನಾರಾಯಣಪುರ ಜಲಾಶಯ ಸೇರಿದಂತೆಯೇ ಜಿಲ್ಲೆಯ ವಿವಿಧಡೆ ತೆರಳಿ ತಪಾಸಣೆ ಮಾಡಲಿದೆ ಎಂದು ಮೂಲಗಳು ತಿಳಿಸಿವೆ.

ವಾರ್ತಾ ಭಾರತಿ 23 Feb 2026 9:17 pm

ಮತ್ತೆ ಲೋಕಭವನಕ್ಕೆ ಒಳ ಮೀಸಲು ದೂರು; ರಾಜ್ಯಪಾಲರ ಭೇಟಿ ಮಾಡಿದ ಬಿಜೆಪಿ ನಿಯೋಗ

ರಾಜ್ಯದಲ್ಲಿ ಪರಿಶಿಷ್ಟ ಜಾತಿಗಳಿಗೆ ಒಳ ಮೀಸಲು ಸೌಲಭ್ಯ ಇದುವರೆಗೂ ಜಾರಿಯಾಗಿಲ್ಲ. ಈ ಬಗ್ಗೆ ಬಿಜೆಪಿ ಆಕ್ಷೇಪ ವ್ಯಕ್ತಪಡಿಸಿದೆ. ಮಾಜಿ ಡಿಸಿಎಂ ಗೋವಿಂದ ಕಾರಜೋಳ ನೇತೃತ್ವದಲ್ಲಿ ಬಿಜೆಪಿ ನಿಯೋಗ ರಾಜ್ಯಪಾಲರನ್ನು ಭೇಟಿಯಾಗಿ ವಿಚಾರವನ್ನು ಗಮನಕ್ಕೆ ತಂದಿದೆ.

ವಿಜಯ ಕರ್ನಾಟಕ 23 Feb 2026 9:10 pm

ಪ್ರತ್ಯೇಕ ಪ್ರಕರಣ: ಇಬ್ಬರು ನಾಪತ್ತೆ

ಮಣಿಪಾಲ, ಫೆ.23: ಗೋವಾದಲ್ಲಿ ಡೋಮಿನೋಸ್‌ನಲ್ಲಿ ಮ್ಯಾನೆಜರ್ ಆಗಿ ಕೆಲಸ ಮಾಡಿಕೊಂಡಿದ್ದ ಮಣಿಪಾಲ ರುದ್ರಪ್ರಿಯ ನಗರ ನಿವಾಸಿ ಅಶೋಕ್ ನಾಯ್ಕ ಎಂಬವರ ಮಗ ಅಮರ್ ನಾಯ್ಕ್(29) ಎಂಬವರು ಫೆ.18ರಂದು ಮದ್ಯಾಹ್ನ ಮನೆಯಿಂದ ಉಡುಪಿಗೆ ಹೋಗುವುದಾಗಿ ಹೇಳಿ ಹೋದವರು ಈವರೆಗೆ ವಾಪಾಸ್ಸು ಬಾರದೆ ನಾಪತ್ತೆಯಾಗಿದ್ದಾರೆ. 5.3 ಅಡಿ ಎತ್ತರ, ಎಣ್ಣೆ ಕಪ್ಪು ಮೈಬಣ್ಣ ಹೊಂದಿರುವ ಇವರು, ಬೂದು ಬಣ್ಣದ ಪ್ಯಾಂಟ್ ಕ್ರೀಮ್ ಕಲರ್ ಶರ್ಟ್ ಧರಿಸಿದ್ದರು. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಉಡುಪಿ: ಮಾನಸಿಕ ಖಿನ್ನತೆ ಖಾಯಿಲೆಯಿಂದ ಸಂತೆಕಟ್ಟೆ ಪುತ್ತೂರು ಗ್ರಾಮದ ಲಿಂಗೊಟ್ಟುಗುಡ್ಡೆ ನಿವಾಸಿ ಸುರೇಶ್ ಪೂಜಾರಿ(54) ಎಂಬವರು ಫೆ.21ರಂದು ಸಂಜೆ ಮನೆಯಿಂದ ಹೋದವರು ಈವರೆಗೆ ವಾಪಾಸ್ಸು ಬಾರದೆ ನಾಪತ್ತೆ ಯಾಗಿದ್ದಾರೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.

ವಾರ್ತಾ ಭಾರತಿ 23 Feb 2026 9:07 pm

ಶ್ರೀ ಪ್ರಭು ಕಾಲೇಜ್ ಮೈದಾನ ಜಾಗ ಹಂಚಿಕೆ ವಿರೋಧಿಸಿ ಸುರಪುರ ಸಂಪೂರ್ಣ ಬಂದ್

ಸುರಪುರ : ಪಟ್ಟಣದ ಶ್ರೀ ಪ್ರಭು ಕಾಲೇಜ್ ಮೈದಾನದಲ್ಲಿನ 21 ಗುಂಟೆ ಜಾಗವನ್ನು ಜಿಲ್ಲಾಧಿಕಾರಿಗಳು ಸಮಾಜ ಕಲ್ಯಾಣ ಇಲಾಖೆ ಹಾಗೂ ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಗೆ ನೀಡಿರುವ ಆದೇಶವನ್ನು ವಿರೋಧಿಸಿ ಸಾಮೂಹಿಕ ಸಂಘಟನೆಗಳ ಒಕ್ಕೂಟದ ಕರೆ ಮೇರೆಗೆ ಸುರಪುರ ಸಂಪೂರ್ಣ ಬಂದ್ ಮಾಡಿ ಪ್ರತಿಭಟನೆ ನಡೆಸಲಾಯಿತು. ಬೆಳಗ್ಗಿನಿಂದಲೇ ಎಲ್ಲಾ ವ್ಯಾಪಾರಸ್ಥರು ತಮ್ಮ ಅಂಗಡಿ-ಮುಂಗಟ್ಟುಗಳನ್ನು ಬಂದ್ ಮಾಡಿ ಪ್ರತಿಭಟನೆಗೆ ಬೆಂಬಲ ಸೂಚಿಸಿದರು. ಶ್ರೀ ಮಹರ್ಷಿ ವಾಲ್ಮೀಕಿ ನಾಯಕ ಸಂಘ ನೇತೃತ್ವದಲ್ಲಿ ಕನ್ನಡ ಪರ, ರೈತ ಪರ, ಕಾರ್ಮಿಕ ಹಾಗೂ ವಿವಿಧ ಸಮುದಾಯಗಳ 50ಕ್ಕೂ ಹೆಚ್ಚು ಸಂಘಟನೆಗಳು ಭಾಗವಹಿಸಿ ಜಿಲ್ಲಾಧಿಕಾರಿಗಳ ಆದೇಶವನ್ನು ಹಿಂಪಡೆಯುವಂತೆ ಒತ್ತಾಯಿಸಿದರು. ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಶಶಿಲ್ ಜಿ ನಮೋಶಿ ಮಾತನಾಡಿ, “ಪ್ರಭು ಕಾಲೇಜ್ ಮೈದಾನ ಸುರಪುರದ ಜನರ ಆಸ್ತಿ. ಇದರ ರಕ್ಷಣೆಗೆ ನೀವು ಹೋರಾಟ ನಡೆಸುತ್ತಿರುವುದು ಶ್ಲಾಘನೀಯ” ಎಂದು ಹೇಳಿದರು. ಪ್ರಕರಣ ನ್ಯಾಯಾಲಯದಲ್ಲಿದ್ದು, ಮೈದಾನದಲ್ಲಿ ಹಾಕಲಾಗಿರುವ ಧ್ವಜಗಳನ್ನು ತೆರವುಗೊಳಿಸಲು ನ್ಯಾಯಾಲಯ ಆದೇಶ ನೀಡಿದೆ. ಅಧಿಕಾರಿಗಳು ಕರ್ತವ್ಯ ಲೋಪ ಎಸಗುತ್ತಿದ್ದಾರೆ ಎಂದು ಆರೋಪಿಸಿದರು. ಯಥಾಸ್ಥಿತಿ ಕಾಪಾಡಲು ಒತ್ತಾಯ : ಮೈದಾನವನ್ನು ತಾಲೂಕಿನ ಎಲ್ಲಾ ಸಮುದಾಯಗಳ ವಿದ್ಯಾರ್ಥಿಗಳು ಆಟ-ಪಾಠಕ್ಕಾಗಿ ಬಳಸುತ್ತಿದ್ದಾರೆ. ಯಾರ ಅಭಿಪ್ರಾಯವನ್ನೂ ಕೇಳದೆ ಆದೇಶ ನೀಡಿರುವುದು ಖಂಡನೀಯ. ಆದೇಶವನ್ನು ಹಿಂಪಡೆದು ಯಥಾಸ್ಥಿತಿ ಮುಂದುವರಿಸಬೇಕು ಎಂದು ಒತ್ತಾಯಿಸಿದರು. ಯಾವುದೇ ಮುನ್ಸೂಚನೆ ಇಲ್ಲದೆ ಅಂಗಡಿಗಳಿಗೆ ಬೀಗ ಹಾಕಿರುವುದನ್ನು ತಕ್ಷಣ ತೆರವುಗೊಳಿಸಿ ವ್ಯಾಪಾರಕ್ಕೆ ಅವಕಾಶ ನೀಡಬೇಕು. ಬೇಡಿಕೆಗಳನ್ನು ಈಡೇರಿಸದಿದ್ದರೆ ನಿರಂತರ ಹೋರಾಟ ನಡೆಸುವುದಾಗಿ ಎಚ್ಚರಿಸಿದರು. ಈ ಸಂದರ್ಭದಲ್ಲಿ ಮುಖಂಡರಾದ ಸುರೇಶ ಸಜ್ಜನ್, ವೇಣುಗೋಪಾಲ ಜೇವರ್ಗಿ, ರಮೇಶ ದೊರೆ, ಹನುಮಂತ ಕಟ್ಟಿಮನಿ, ದಾನಪ್ಪ ಕಡಿಮನಿ, ಲಕ್ಷ್ಮಿಕಾಂತ ದೇವರಗೋನಾಲ, ಡಾ. ಉಪೇಂದ್ರ ನಾಯಕ, ಶಿವಮೋನಯ್ಯ ನಾಯಕ, ವೆಂಕಟೇಶ ನಾಯಕ, ನಾಗರಾಜ ಪ್ಯಾಪಲಿ, ಸೋಮಶೇಖರ ಶಾಬಾದಿ, ಶರಣಪ್ಪ ಕಲಿಕೇರಿ, ಶರಣಬಸವ ಹೂಗಾರ, ವಿಶ್ವರಾಜ, ಚಂದ್ರು ಎಲಿಗಾರ, ವಿನಾಯಕ ಕರಡಕಲ್, ಹಣಮಂತ ಬಿಲ್ಲವ್ ಇತರರು ಮಾತನಾಡಿದರು. ಅಪರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು. ಪ್ರತಿಭಟನೆಯಲ್ಲಿ ವಾಲ್ಮೀಕಿ ನಾಯಕ ಸಂಘದ ಅಧ್ಯಕ್ಷ ಭೀಮನಗೌಡ ಹೆಮನೂರ, ಗಂಗಾಧರ ನಾಯಕ, ಶರಣು ನಾಯಕ, ದೇವೇಂದ್ರಪ್ಪ ತಳವಾರಗೆರ, ರಂಗನಾಥ ನಾಯಕ, ಮಲ್ಲು ಹೊಸಮನಿ, ಕಾಳಪ್ಪ ಕವಾತಿ, ಭೀಮರಾಯ ಕುಂಬಾರ, ಮಲ್ಲೇಶಿ ಪಾಟೀಲ, ವಿಜಯಕುಮಾರ ಶೆಟ್ಟಿ, ದತ್ತು ಗುತ್ತೇದಾರ, ಧರ್ಮಣ್ಣ ದೊರೆ, ಭೀಮು ನಾಯಕ ಮಲ್ಲಿಬಾವಿ, ವೆಂಕಟೇಶ ಪ್ಯಾಪ್ಲಿ ಸೇರಿದಂತೆ ನೂರಾರು ಜನ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಸಾವಿರಾರು ಜನ ಭಾಗವಹಿಸಿದ್ದರು. ಅಪರ ಜಿಲ್ಲಾಧಿಕಾರಿ ರಮೇಶ ಕೋಲಾರ ಅವರು ಮಾತನಾಡಿ, ನಾಳೆ ಬೆಳಗ್ಗೆ ಕೀಲಿ ಹಾಕಿರುವ ಅಂಗಡಿಗಳನ್ನು ತೆರೆಯಲಾಗುವುದು. ಮೂರು-ನಾಲ್ಕು ದಿನಗಳಲ್ಲಿ ಮೈದಾನದಲ್ಲಿರುವ ಧ್ವಜಗಳನ್ನು ತೆರವುಗೊಳಿಸಲಾಗುವುದು. ಜಿಲ್ಲಾಧಿಕಾರಿಗಳ ಆದೇಶ ಕುರಿತು ಕ್ರಮಕ್ಕೆ ಪ್ರಾದೇಶಿಕ ಆಯುಕ್ತರಿಗೆ ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದರು. ಪ್ರಯಾಣಿಕರ ಪರದಾಟ ಪಟ್ಟಣ ಸಂಪೂರ್ಣ ಬಂದ್ ಆಗಿದ್ದರಿಂದ ಬಸ್ ಹಾಗೂ ಇತರ ವಾಹನ ಸಂಚಾರ ಸ್ಥಗಿತಗೊಂಡಿತು. ಬಸ್ ನಿಲ್ದಾಣ ಬಿಕೋ ಆಗಿ, ಮಾಹಿತಿ ತಿಳಿಯದೆ ಬಂದ ಪ್ರಯಾಣಿಕರು ಸಂಜೆಯವರೆಗೆ ಪರದಾಡುವಂತಾಯಿತು. ಪೊಲೀಸ್ ಬಂದೋಬಸ್ತ್ ಯಾವುದೇ ಅಹಿತಕರ ಘಟನೆ ನಡೆಯದಂತೆ ಡಿವೈಎಸ್ಪಿ ಜಾವಿದ್ ಇನಾಂದಾರ್ ನೇತೃತ್ವದಲ್ಲಿ, ಪಿಐ ಉಮೇಶ ಎಂ ನಾಯಕ ಹಾಗೂ ಯಶಹಾಪುರ ಪಿಐ ಎಸ್.ಎಂ ಪಾಟೀಲ್ ಅವರ ಮಾರ್ಗದರ್ಶನದಲ್ಲಿ ಭಾರಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಯಿತು.

ವಾರ್ತಾ ಭಾರತಿ 23 Feb 2026 9:03 pm

‘ಹಜ್ ಯಾತ್ರೆ-2026’ | ಮಾ.28ರೊಳಗೆ ವೈದ್ಯಕೀಯ ತಪಾಸಣೆ-ಲಸಿಕಾ ಕಾರ್ಯ ಪೂರ್ಣಗೊಳಿಸಬೇಕು: ಗುರುದತ್ತ ಹೆಗ್ಡೆ

ಬೆಂಗಳೂರು, ಫೆ. 23: ಪ್ರಸಕ್ತ ಸಾಲಿನ ಹಜ್ ಯಾತ್ರೆಗೆ ತೆರಳಲಿರುವ ಯಾತ್ರಿಕರ ವೈದ್ಯಕೀಯ ತಪಾಸಣೆ ಹಾಗೂ ಲಸಿಕಾ ಕಾರ್ಯಕ್ರಮವನ್ನು ಮಾ.28ರೊಳಗಾಗಿ ಪೂರ್ಣಗೊಳಿಸಬೇಕಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಆಯುಕ್ತ ಗುರುದತ್ತ ಹೆಗ್ಡೆ ತಿಳಿಸಿದ್ದಾರೆ. ಸೋಮವಾರ ಈ ಸಂಬಂಧ ವೈದ್ಯಕೀಯ ಶಿಕ್ಷಣ ಇಲಾಖೆಯ ನಿರ್ದೇಶಕರಿಗೆ ಸುತ್ತೋಲೆ ಹೊರಡಿಸಿರುವ ಅವರು, ಮಾನದಂಡ ಕಾರ್ಯಾಚರಣೆ ವಿಧಾನ ಅನುಸಾರ ಎಲ್ಲ ಚಟುವಟಿಕೆಗಳನ್ನು ಪೂರ್ಣಗೊಳಿಸುವ ನೊಡಲ್ ಅಧಿಕಾರಿಯಾಗಿ ಜಿಲ್ಲಾ ಆರ್‍ಸಿಎಚ್ ಅಧಿಕಾರಿಯನ್ನು ಗುರುತಿಸಲಾಗಿದೆ. ಸಮಗ್ರ ಮೇಲ್ವಿಚಾರಣೆ ಮತ್ತು ಸಮನ್ವಯ ಕಾರ್ಯವನ್ನು ಸಂಬಂಧಿತ ಜಿಲ್ಲಾ ಆರೋಗ್ಯಾಧಿಕಾರಿ ನಿರ್ವಹಿಸಲಿದ್ದಾರೆ ಎಂದು ಹೇಳಿದ್ದಾರೆ. ವೈದ್ಯಕೀಯ ಕಾಲೇಜಿನ ಡೀನ್ ಹಾಗೂ ನಿರ್ದೇಶಕರು, ಜಿಲ್ಲಾ ಶಸ್ತ್ರಚಿಕಿತ್ಸಕರು, ವೈದ್ಯಕೀಯ ಅಧೀಕ್ಷಕರು ಅಗತ್ಯ ಸಹಕಾರವನ್ನು ಒದಗಿಸಿ ಈ ಚಟುವಟಿಕೆಗಳು ಸುಗಮವಾಗಿ ನಡೆಯುವಂತೆ ಮಾಡಬೇಕು. ಆದುದರಿಂದ, ವೈದ್ಯಕೀಯ ಕಾಲೇಜುಗಳ ಡೀನ್ ಹಾಗೂ ನಿರ್ದೇಶಕರಿಗೆ, ನಿಮ್ಮ ಸಂಸ್ಥೆಯ ತಜ್ಞ ವೈದ್ಯರನ್ನು ಹಜ್ ಯಾತ್ರಿಕರ ವೈದ್ಯಕೀಯ ತಪಾಸಣೆ ತಂಡಗಳಿಗೆ ನಿಯೋಜಿಸಿ ಅಗತ್ಯ ಸಹಕಾರ ನೀಡುವಂತೆ ಸೂಚಿಸಬೇಕು ಎಂದು ಅವರು ತಿಳಿಸಿದ್ದಾರೆ. ವೈದ್ಯಕೀಯ ಕಾಲೇಜು ಆಸ್ಪತ್ರೆಗಳು, ವೈದ್ಯಕೀಯ ತಪಾಸಣೆಯಲ್ಲಿ ಭಾಗವಹಿಸುವ ತಜ್ಞರ ತಂಡದ ವಿವರಗಳು ಹಾಗೂ ಹಜ್ ಯಾತ್ರಿಕರಿಗಾಗಿ ಆಯೋಜಿಸಲಾದ ಆರೋಗ್ಯ ಶಿಬಿರಗಳ ದಿನಾಂಕಗಳನ್ನು ಸಲ್ಲಿಸಬೇಕು. ಹಾಗೆಯೇ, ಚಟುವಟಿಕೆಗಳ ದೈನಂದಿನ ಪ್ರಗತಿಯನ್ನು ಉಲ್ಲೇಖ ಮತ್ತು ಪರಿಶೀಲನೆಗಾಗಿ ವೆಬ್‍ಸೈಟ್ https://hphis.ehospital.nic.in/   ನಲ್ಲಿ ನಿಯಮಿತವಾಗಿ ನವೀಕರಿಸಬೇಕು ಎಂದು ಗುರುದತ್ತ ಹೆಗ್ಡೆ ಸೂಚಿಸಿದ್ದಾರೆ. ಸೂಚನೆ: ಬೆಂಗಳೂರಿನಲ್ಲಿ ತಪಾಸಣೆಗೆ ಒಳಪಡಬೇಕಿರುವ 3991 ಹಜ್ ಯಾತ್ರಿಕರನ್ನು ಗಮನದಲ್ಲಿಟ್ಟುಕೊಂಡು, ವಿಕ್ಟೋರಿಯಾ ಆಸ್ಪತ್ರೆ, ಅಟಲ್ ಬಿಹಾರಿ ವಾಜಪೇಯಿ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ, ಕೆ.ಸಿ.ಜನರಲ್ ಆಸ್ಪತ್ರೆ, ಜಯನಗರ ಜನರಲ್ ಆಸ್ಪತ್ರೆ, ಸರ್ ಸಿ.ವಿ.ರಾಮನ್ ಜನರಲ್ ಆಸ್ಪತ್ರೆ, ಕೆ.ಆರ್.ಪುರಂ ಜನರಲ್ ಆಸ್ಪತ್ರೆ ಹಾಗೂ ಯಲಹಂಕ ಜನರಲ್ ಆಸ್ಪತ್ರೆಯಲ್ಲಿ ಅಗತ್ಯ ವ್ಯವಸ್ಥೆಗಳನ್ನು ಮಾಡಬೇಕು. ಅಲ್ಲದೇ, ಈ ಎಲ್ಲ ಕಾರ್ಯಗಳನ್ನು ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು ಆಯುಕ್ತರು ತಿಳಿಸಿದ್ದಾರೆ.

ವಾರ್ತಾ ಭಾರತಿ 23 Feb 2026 8:58 pm

‘ಒಳಮೀಸಲಾತಿ’ ಸರ್ವಪಕ್ಷ ಸಭೆ ಕರೆಯಲು ಕೋರಿ ಸಿಎಂಗೆ ಛಲವಾದಿ ನಾರಾಯಣಸ್ವಾಮಿ ಪತ್ರ

ಬೆಂಗಳೂರು, ಫೆ. 23: ಪರಿಶಿಷ್ಟ ಜಾತಿಗಳ ಒಳ ಮೀಸಲಾತಿ ಹಾಗೂ ಎಸ್‍ಸಿಪಿ/ಟಿಎಸ್‍ಪಿ ಅನುದಾನ ಗ್ಯಾರಂಟಿಗಳಿಗೆ ಬಳಸುತ್ತಿರುವ ಕುರಿತು ಚರ್ಚಿಸಿ, ಸೂಕ್ತ ಕ್ರಮಗಳನ್ನು ಕೈಗೊಳ್ಳಲು ಸಮುದಾಯದ ಸರ್ವಪಕ್ಷಗಳ ಸಭೆಯನ್ನು ಕರೆಯಬೇಕು ಎಂದು ಕೋರಿ ಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಸಿಎಂಗೆ ಪತ್ರ ಬರೆದಿದ್ದಾರೆ. ಸೋಮವಾರ ಸಿಎಂಗೆ ಪತ್ರ ಬರೆದಿರುವ ಛಲವಾದಿ ನಾರಾಯಣಸ್ವಾಮಿ, ಒಳಮಿಸಲಾತಿ ಜಾರಿಯ ಎಲ್ಲ ಇಲಾಖೆಗಳ ಅನುಷ್ಠಾನ ಸ್ಥಿತಿಗತಿ ಕುರಿತು ಪರಿಶೀಲನಾ ವರದಿ ತರಿಸಿಕೊಂಡು ಬಹಿರಂಗಪಡಿಸಿಬೇಕು. ಬಲಗೈ ಸಮುದಾಯಗಳಿಗೆ ಉಂಟಾಗಿರುವ ಅನ್ಯಾಯಗಳನ್ನು ಅಧ್ಯಯನ ಮಾಡಲು ಉನ್ನತ ಮಟ್ಟದ ತಜ್ಞರ ಸಮಿತಿ ರಚಿಸಬೇಕು. ಶಿಕ್ಷಣ ಮತ್ತು ಉದ್ಯೋಗ ಕ್ಷೇತ್ರಗಳಲ್ಲಿ ಈಗಾಗಲೇ ನಡೆದ ನೇಮಕಾತಿ/ ಪ್ರವೇಶ ಪ್ರಕ್ರಿಯೆಗಳ ಮರುಪರಿಶೀಲನೆ ಮಾಡಬೇಕು. ಯಾವುದೇ ಉಪವರ್ಗಕ್ಕೆ ಅನ್ಯಾಯವಾಗದಂತೆ ಸಮತೋಲನ ಸಾಧಿಸುವ ತಿದ್ದುಪಡಿ ಮಾರ್ಗಸೂಚಿಗಳನ್ನು ಹೊರಡಿಸುವುದು ಎಂದು ಆಗ್ರಹಿಸಿದ್ದಾರೆ. ಒಳಮಿಸಲಾತಿ ಉದ್ದೇಶ ಎಲ್ಲ ಉಪವರ್ಗಗಳಿಗೆ ಸಮಾನ ಅವಕಾಶ ಕಲ್ಪಿಸುವುದಾಗಿದ್ದರೂ, ಪ್ರಸ್ತುತ ಬಲಗೈ ಸಮುದಾಯಗಳು ಶಿಕ್ಷಣ, ಉದ್ಯೋಗ ಮತ್ತು ನಿಗಮಗಳ ಯೋಜನೆಗಳ ಅನುಷ್ಠಾನದಲ್ಲಿ ಹಿಂದುಳಿಯುವ ಸ್ಥಿತಿ ನಿರ್ಮಾಣವಾಗಿದೆ. ಕೆಲವು ಇಲಾಖೆಗಳು ಸ್ಪಷ್ಟ ಮಾರ್ಗಸೂಚಿಗಳಿಲ್ಲದೆ ಮೀಸಲಾತಿ ಹಂಚಿಕೆ ಮಾಡುತ್ತಿರುವುದು ಗೊಂದಲಕ್ಕೆ ಕಾರಣವಾಗಿದೆ. ಇದರ ಪರಿಣಾಮವಾಗಿ ಸಾಮಾಜಿಕ ನ್ಯಾಯಕ್ಕೆ ಧಕ್ಕೆಯಾಗಿದೆ ಎಂದು ಅವರು ಆಕ್ಷೇಪಿಸಿದ್ದಾರೆ.

ವಾರ್ತಾ ಭಾರತಿ 23 Feb 2026 8:54 pm

ರಂಗಭೂಮಿ ಸಮಾಜದ ಪ್ರತಿಬಿಂಬ: ಡಾ.ಸುನೀತಾ

ಉಡುಪಿ, ಫೆ.23: ನಾಟಕ ಸೇರಿದಂತೆ ರಂಗಭೂಮಿಯು ಸಮಾಜದ ಪ್ರತಿಬಿಂಬ. ಎಲ್ಲ ಆಗುಹೋಗುಗಳಿಗೆ ಹಿಡಿವ ಕನ್ನಡಿ ಎಂದು ಕೋಟ ಲಕ್ಷ್ಮೀ ಸೋಮಬಂಗೇರ ಸರಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಧ್ಯಾಪಕ ಡಾ. ಸುನೀತಾ ವಿ. ಹೇಳಿದ್ದಾರೆ. ಸುಮನಸಾ ಕೊಡವೂರು ಸಾಂಸ್ಕೃತಿಕ ಸಂಘಟನೆಯ ನಾಟಕೋತ್ಸವ ರಂಗಹಬ್ಬ-14ರ ಎರಡನೇ ದಿನವಾದ ಸೋಮವಾರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು. ಸಿನಿಮಾಗಳು ಯಾವ ಸಂದೇಶವನ್ನು ಸಾರುತ್ತಿವೆ ಎಂದು ನೋಡಿದರೆ ಸಂದೇಶಗಳೇ ಕಾಣುತ್ತಿಲ್ಲ. ರೌಡಿಸಂ, ಹೊಡೆದಾಟಗಳೇ ಕಾಣುತ್ತವೆ. ಆದರೆ, ನಾಟಕಗಳು ಆ ರೀತಿಯಲ್ಲಿಲ್ಲ. ಇಂದಿಗೂ ಸಮಾಜದ ಸಮಸ್ಯೆಗಳನ್ನು, ಪಿಡುಗುಗಳನ್ನು ಪ್ರತಿಬಿಂಬಿಸುತ್ತಾ ಚಿಂತನೆಗೆ ಹಚ್ಚುತ್ತವೆ. ಅಲ್ಲದೆ, ಸಿನಿಮಾ ನಟರು ಅನೇಕ ರೀಟೇಕ್‌ಗಳನ್ನು ತೆಗೆದುಕೊಳ್ಳಲು ಅವಕಾಶ ಇರುತ್ತದೆ. ಆದರೆ, ರಂಗಭೂಮಿಯ ಕಲಾವಿದ ರಂಗದ ಮೇಲೆ ನಟಿಸಬೇಕು. ತಪ್ಪಾದರೆ ಅಲ್ಲಿ ರೀಟೇಕ್ ಇರುವುದಿಲ್ಲ. ಎಲ್ಲ ತಯಾರಿಗಳನ್ನು ಮಾಡಿಕೊಂಡು ಪ್ರದರ್ಶನ ನೀಡಬೇಕಾಗುತ್ತದೆ. ಹಾಗಾಗಿ ಶ್ರೇಷ್ಠ ನಟರು ರಂಗಭೂಮಿಯಿಂದ ಹೊರಹೊಮ್ಮುತ್ತಾರೆ ಎಂದು ವಿಶ್ಲೇಷಿಸಿದರು. ಕೆನರಾ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷ ಯು.ಮೋಹನ್ ಉಪಾಧ್ಯಾಯ ಮಾತನಾಡಿದರು. ರಂಗಕರ್ಮಿ ಕೃಷ್ಣ ವಿ.ಸುವರ್ಣ ಮಲ್ಪೆ ಅವರಿಗೆ ರಂಗಸಾಧಕ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಉದ್ಯಮಿ ಆನಂದ ಪಿ.ಸುವರ್ಣ, ಮಲ್ಪೆಯ ಉದ್ಯಮಿ ಸದಾನಂದ ಸಾಲ್ಯಾನ್, ಮಹಾಲಕ್ಷ್ಮೀ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ನಿರ್ದೇಶಕ ಸುರೇಶ್ ಬಿ.ಕರ್ಕೇರ, ಮಲ್ಪೆಯ ಬಿಲ್ಲವ ಸಮಾಜ ಸೇವಾ ಸಂಘದ ಉಪಾಧ್ಯಕ್ಷ ರತ್ನಾಕರ ಅಮಿನ್, ತಾಂಗದಗಡಿ ವೀರಮಾರುತಿ ವ್ಯಾಯಮ ಶಾಲೆಯ ಅಧ್ಯಕ್ಷ ಮನೋಜ್ ಕುಮಾರ್ ಹಾಗೂ ಸುಮನಸಾ ಕೊಡವೂರು ಸಾಂಸ್ಕೃತಿಕ ಸಂಘಟನೆಯ ಅಧ್ಯಕ್ಷ ಪ್ರಕಾಶ್ ಜಿ.ಕೊಡವೂರು ಉಪಸ್ಥಿತರಿದ್ದರು. ಸುಮನಸಾ ಕೊಡವೂರು ಗೌರವಾಧ್ಯಕ್ಷ ಎಂ.ಎಸ್.ಭಟ್ ಸ್ವಾಗತಿಸಿದರು. ನಿರ್ದೇಶಕ ದಿವಾಕರ ಕಟೀಲ್ ವಂದಿಸಿದರು. ಅಕ್ಷತ್ ಅಮಿನ್ ಕಾರ್ಯಕ್ರಮ ನಿರೂಪಿಸಿದರು.

ವಾರ್ತಾ ಭಾರತಿ 23 Feb 2026 8:46 pm

ಬೀದರ್ | ನಗರದಲ್ಲಿ ಗುಡುಗು ಸಹಿತ ಮಳೆ

ಬೀದರ್ : ನಗರದಲ್ಲಿ ಸೋಮವಾರ ರಾತ್ರಿ ಸುಮಾರು 8 ಗಂಟೆಯಿಂದ ಗುಡುಗು ಸಹಿತ ಮಳೆ ಸುರಿಯಿತು. ಮುಂಜಾನೆ ಮೋಡ ಕವಿದ ವಾತಾವರಣ ಮಳೆಯ ಮುನ್ಸೂಚನೆ ನೀಡುತ್ತಿತ್ತು. ಮಧ್ಯಾಹ್ನ ಸ್ವಲ್ಪ ಸಮಯ ಬಿಸಿಲು ಕಾಣಿಸಿಕೊಂಡರೂ, ಆವಾಗಾವಾಗ ಜೋರಾಗಿ ಗಾಳಿ ಬೀಸುತ್ತಿತ್ತು. ರಾತ್ರಿ ವೇಳೆಗೆ ಏಕಾಏಕಿ ಮಳೆ ಆರಂಭವಾಗಿ ಕೆಲಕಾಲ ಮುಂದುವರಿಯಿತು. ಬೇಸಿಗೆ ಕಾಲ ಪೂರ್ಣವಾಗಿ ಆರಂಭವಾಗುವ ಮುನ್ನವೇ ಮಳೆ ಬಂದಿರುವುದು ಗಮನಾರ್ಹವಾಗಿದೆ. ಕೆಲ ದಿನಗಳಿಂದ ಚಳಿ ಕಡಿಮೆಯಾಗುತ್ತಾ ಬಿಸಿಲಿನ ತೀವ್ರತೆ ಹೆಚ್ಚಾಗುತ್ತಿತ್ತು. ಇದೀಗ ಮಳೆ ಸುರಿದ ಹಿನ್ನೆಲೆಯಲ್ಲಿ ತಂಪಾದ ವಾತಾವರಣ ನಿರ್ಮಾಣವಾಗಿದೆ. ರೈತರು ಬೆಳೆದ ಬಹುತೇಕ ಬೆಳೆಗಳ ರಾಶಿ ಮಾಡಲಾಗಿದೆ. ಆದರೆ ಕೆಲವೆಡೆ ಕಡಲೆ ಮತ್ತು ಜೋಳದ ರಾಶಿ ಬಾಕಿ ಉಳಿದಿದೆ. ಮಳೆ ಮುಂದುವರಿದರೆ ರಾಶಿ ಮಾಡಿರುವ ಬೆಳೆಗಳಿಗೆ ಹಾನಿಯಾಗುವ ಸಾಧ್ಯತೆ ಇದೆ ಎಂಬ ಆತಂಕ ವ್ಯಕ್ತವಾಗಿದೆ.

ವಾರ್ತಾ ಭಾರತಿ 23 Feb 2026 8:42 pm

ನನ್ನ ಬಗ್ಗೆ ಮಾತನಾಡುವುದನ್ನು ನಿಲ್ಲಿಸಿದ ದಿನವೇ ರಾಜಕೀಯ ಕೊನೆ ಎಂದ ಪ್ರಿಯಾಂಕ್, ಕೆಣಕಿದರೆ ಸುಮ್ಮನಿರಲ್ಲ ಎಂದ ಛಲವಾದಿ

ಪ್ರಿಯಾಂಕ್‌ ಖರ್ಗೆ ಅವರಿಗೆ ಮಾಡೋದಿಕ್ಕೆ ಬೇರೆ ಏನೂ ಕೆಲಸವಿಲ್ಲ. ಅವರು ಕೇವಲ ಸಚಿವರು ಎಂಬ ಗೌರವ ಬಿಟ್ಟರೆ ಸಮಾಜದಲ್ಲಿ ಬೇರೆನೂ ಇಲ್ಲ. ಅವರು ದಲಿತರ ಪರ ಹೋರಾಡಿಯೇ ಇಲ್ಲ. ದಲಿತತ್ವ ಅವರಲ್ಲಿ ಇಲ್ಲ. ಬಾಬಾ ಸಾಹೇಬ್‌ ಅಂಬೇಡ್ಕರ್‌ ಅವರ ಹೆಸರು ಹೇಳುತ್ತಾರೆ ಹೊರತು ದಲಿತತ್ವ ಅವರ ಕುಟುಂಬದಲ್ಲಿ ಇಲ್ಲ ಎಂದು ವಿಧಾನ ಪರಿಷತ್‌ ನ ವಿಪಕ್ಷ ನಾಯಕ ಛಲವಾದಿ ನಾರಾಯಣ ಸ್ವಾಮಿ ಅವರು ಹೇಳಿದ್ದರು. ಅಲ್ಲದೆ, ಪ್ರಿಯಾಂಕ್‌ ಖರ್ಗೆ ಅವರು ರಾಜಕಾರಣಿಯೇ ಅಲ್ಲ. ಅಪ್ಪನ ನೆರಳಲ್ಲಿ ಅಧಿಕಾರ ಅನುಭವಿಸುತ್ತಿದ್ದಾರೆ. ಅವರಿಗೆ ಯಾವ ಬದ್ಧತೆಯೂ ಇಲ್ಲ. ಅವರ ತಳಬುಡ ಎಲ್ಲಾ ನನಗೆ ಗೊತ್ತಿದೆ ಎಂದು ವಾಗ್ದಾಳಿ ನಡೆಸಿದ್ದರು.

ವಿಜಯ ಕರ್ನಾಟಕ 23 Feb 2026 8:40 pm

ಎಲ್ಲ ದೇಶಗಳ ಮೇಲೆ ಶೇ.15 ಸುಂಕ ವಿಧಿಸಿದ ಟ್ರಂಪ್; ಹೊಸ ಸುಂಕ ನೀತಿಯಿಂದ ಯಾರಿಗೆ ಲಾಭ?

ಡೊನಾಲ್ಡ್ ಟ್ರಂಪ್ ಆಡಳಿತವು ವಿಧಿಸಿದ ಸುಂಕಗಳನ್ನು ಯುಎಸ್ ಸುಪ್ರೀಂ ಕೋರ್ಟ್ ರದ್ದುಗೊಳಿಸಿದ ಕೂಡಲೇ, ಮತ್ತೊಂದು ಕಾನೂನು ನಿಬಂಧನೆಯನ್ನು ಬಳಸಿಕೊಂಡು ಅಮೆರಿಕಕ್ಕೆ ಬರುವ ಎಲ್ಲಾ ಸರಕುಗಳ ಮೇಲೆ 10% ಸುಂಕವನ್ನು ವಿಧಿಸುವುದಾಗಿ ಅಮೆರಿಕ ಅಧ್ಯಕ್ಷರು ಶುಕ್ರವಾರ ಹೇಳಿದ್ದಾರೆ. ಇದಾಗಿ ಕೆಲವೇ ಗಂಟೆಗಳ ನಂತರ ಅದನ್ನು 15%ಕ್ಕೆ ಹೆಚ್ಚಿಸಿದ್ದಾರೆ. ಶನಿವಾರ (ಫೆಬ್ರವರಿ 21) ಘೋಷಿಸಲಾದ 15% ಸುಂಕಗಳು 1974ರ ವ್ಯಾಪಾರ ಕಾಯ್ದೆಯ ಸೆಕ್ಷನ್ 122ರ ಅಡಿಯಲ್ಲಿ ಅನುಮತಿಸಲಾದ ಗರಿಷ್ಠ ಸುಂಕವಾಗಿದೆ. ಇದು ತಾತ್ಕಾಲಿಕವಾಗಿದೆ, ಏಕೆಂದರೆ ಈ ನಿಬಂಧನೆಯು ಹೊಸ ಸುಂಕಗಳು ಸುಮಾರು ಐದು ತಿಂಗಳವರೆಗೆ ಮಾತ್ರ ಜಾರಿಯಲ್ಲಿರಲು ಅನುವು ಮಾಡಿಕೊಡುತ್ತದೆ. ಅದರ ನಂತರ, ಅಮೆರಿಕ ಸರ್ಕಾರವು ಯುಎಸ್ ಕಾಂಗ್ರೆಸ್ಸಿನ ಅನುಮೋದನೆಯನ್ನು ಪಡೆಯಬೇಕು. ಇದೀಗ, ಹೊಸ 15% ತೆರಿಗೆಯಿಂದಾಗಿ ಹೆಚ್ಚಿನ ಪ್ರಮುಖ ದೇಶಗಳು ವಾಸ್ತವವಾಗಿ ಉತ್ತಮ ಸ್ಥಿತಿಯಲ್ಲಿವೆ. ಯುಎಸ್ ಸುಪ್ರೀಂ ಕೋರ್ಟ್ ಶುಕ್ರವಾರ ಹಿಂದಿನ ಹೆಚ್ಚಿನ ತೆರಿಗೆಗಳನ್ನು ರದ್ದುಗೊಳಿಸಿದ ನಂತರ, ಭಾರತ, ಚೀನಾ, ದಕ್ಷಿಣ ಕೊರಿಯಾ, ಜಪಾನ್, ಬಹುತೇಕ ಎಲ್ಲಾ ಆಸಿಯಾನ್ ರಾಷ್ಟ್ರಗಳು, ಕಝಾಕಿಸ್ತಾನ್, ಟರ್ಕಿ, ದಕ್ಷಿಣ ಆಫ್ರಿಕಾ, ಲಿಬಿಯಾ, ಬ್ರೆಝಿಲ್, ಮೆಕ್ಸಿಕೊ ಮತ್ತು ಕೆನಡಾ ಸೇರಿದಂತೆ ಹಲವಾರು ರಾಷ್ಟ್ರಗಳು ಫೆಬ್ರವರಿ 24ರಿಂದ ಕಡಿಮೆ ದರಗಳನ್ನು ಪಾವತಿಸುತ್ತವೆ. ►ಹೊಸ ಸುಂಕ vs ಹಳೆಯ ಸುಂಕ ರಷ್ಯಾ, ಆಸ್ಟ್ರೇಲಿಯಾ, ಯುಕೆ, ಸೌದಿ ಅರೇಬಿಯಾ, ಯುಎಇ, ಖತರ್, ಉತ್ತರ ಮತ್ತು ಮಧ್ಯ ಆಫ್ರಿಕಾದ ಹೆಚ್ಚಿನ ಭಾಗ, ಅರ್ಜೆಂಟೀನಾ ಮತ್ತು ಕೊಲಂಬಿಯಾ ಈಗ ಹೆಚ್ಚಿನ ಸುಂಕ ಪಾವತಿಸುತ್ತಿವೆ. ಯುರೋಪಿಯನ್ ಒಕ್ಕೂಟ ಮತ್ತು ಸ್ಕ್ಯಾಂಡಿನೇವಿಯನ್ ರಾಷ್ಟ್ರಗಳು (ನಾರ್ವೆ, ಸ್ವೀಡನ್ ಮತ್ತು ಡೆನ್ಮಾರ್ಕ್) ಉನ್ನತ ನ್ಯಾಯಾಲಯ ರದ್ದುಗೊಳಿಸಿದ ಅಂತರರಾಷ್ಟ್ರೀಯ ತುರ್ತು ಆರ್ಥಿಕ ಅಧಿಕಾರ ಕಾಯ್ದೆ (IEEPA) ಅಡಿಯಲ್ಲಿ ವಿಧಿಸಲಾದ ಹಿಂದಿನ ಸುಂಕಗಳ ಅಡಿಯಲ್ಲಿವೆ. ಆಗಸ್ಟ್ 2025ರಿಂದ ಭಾರತವು ಅಮೆರಿಕಕ್ಕೆ 50% ಸಂಚಿತ ಸುಂಕ ನೀಡುತ್ತಿದೆ (ಪ್ರತಿ ಸುಂಕ ಮತ್ತು ರಷ್ಯಾದ ತೈಲ ಆಮದುಗಾಗಿ ಹೆಚ್ಚುವರಿ ಸುಂಕಗಳು). ಇದರರ್ಥ ಯುಎಸ್ಗೆ ಅದರ ಪರಿಣಾಮಕಾರಿ ಸುಂಕದ ಪ್ರಮಾಣವು ಚೀನಾಕ್ಕಿಂತ ಸ್ವಲ್ಪ ಹೆಚ್ಚಾಗಿದೆ. ಈ ತಿಂಗಳ ಆರಂಭದಲ್ಲಿ, ಭಾರತ ಮತ್ತು ಅಮೆರಿಕ ವ್ಯಾಪಾರ ಒಪ್ಪಂದಕ್ಕೆ ಒಪ್ಪಿಕೊಂಡವು. ಈ ಒಪ್ಪಂದಕ್ಕೂ ಮೊದಲು, ಭಾರತೀಯ ಸರಕುಗಳ ಮೇಲೆ ಭಾರಿ ಪ್ರಮಾಣದಲ್ಲಿ 50% ತೆರಿಗೆ ವಿಧಿಸಲಾಗುತ್ತಿತ್ತು. ಭಾರತವು ರಷ್ಯಾದಿಂದ ತೈಲವನ್ನು ಖರೀದಿಸುತ್ತಿದ್ದರಿಂದ ಇದು ಪ್ರಮಾಣಿತ 25% ತೆರಿಗೆ ಮತ್ತು 25% ದಂಡದಿಂದ ಕೂಡಿತ್ತು. ಹೊಸ ಒಪ್ಪಂದದ ಭಾಗವಾಗಿ, ಅಮೆರಿಕವು 25% ರಷ್ಯಾದ ತೈಲ ದಂಡವನ್ನು ತೆಗೆದುಹಾಕಿತು, ಇದರಿಂದಾಗಿ ತೆರಿಗೆಯನ್ನು 25%ಕ್ಕೆ ಇಳಿಸಲಾಯಿತು. ಒಪ್ಪಂದಕ್ಕೆ ಅಧಿಕೃತವಾಗಿ ಸಹಿ ಹಾಕಿದ ನಂತರ ಅದನ್ನು 18%ಕ್ಕೆ ಇಳಿಸುವುದು ಯೋಜನೆಯಾಗಿತ್ತು. ಈ ಮಧ್ಯೆ, ಚೀನಾ ಪ್ರತಿ ಸುಂಕಗಳನ್ನು ಎದುರಿಸಬೇಕಾಯಿತು. ಜೊತೆಗೆ IEEPA ಅಡಿಯಲ್ಲಿ ಮೆಕ್ಸಿಕೊ ಮತ್ತು ಕೆನಡಾ ಜೊತೆಗೆ ಫೆಂಟನಿಲ್ ಸುಂಕಗಳನ್ನು (ಫೆಂಟನಿಲ್ ತಡೆಗಟ್ಟುವಿಕೆಯ ನೆಪದಲ್ಲಿ ವಿಧಿಸಿದ ಸುಂಕ) ಎದುರಿಸಬೇಕಾಯಿತು. ಇವೆಲ್ಲವೂ ಒಟ್ಟಾರೆಯಾಗಿ 45%ವರೆಗೆ ತಲುಪಿದವು. ಹಳೆಯ IEEPA ರದ್ದು ಆಗಿರುವುದರಿಂದ, 15% ತೆರಿಗೆ ವಿಧಿಸುವುದರಿಂದ ಭಾರತ ಮತ್ತು ಚೀನಾ ಈಗ ಸಮಾನ ದರದಲ್ಲಿವೆ. ಕನಿಷ್ಠ ಟ್ರಂಪ್ ಹೊಸ ಕಾನೂನುಗಳ ಅಡಿಯಲ್ಲಿ ಸುಂಕಗಳನ್ನು ಹೇರುವವರೆಗೆ ಯಾವುದೇ ದೇಶವು ಇನ್ನೊಂದಕ್ಕೆ ಹೋಲಿಸಿದರೆ ವಿಶೇಷ ಅನುಕೂಲ ಅಥವಾ ಅನಾನುಕೂಲತೆಯನ್ನು ಹೊಂದಿರುವುದಿಲ್ಲ. ಈಗ ಅಮೆರಿಕದ ಸುಪ್ರೀಂ ಕೋರ್ಟ್ IEEPA ಬಳಕೆಯನ್ನು ವಿರೋಧಿಸಿ ತೀರ್ಪು ನೀಡಿರುವುದರಿಂದ, ಅಧ್ಯಕ್ಷ ಟ್ರಂಪ್ ಸಾಮಾಜಿಕ ಮಾಧ್ಯಮ ಪೋಸ್ಟ್ ಅಥವಾ ಸರಳ ಆದೇಶದ ಮೂಲಕ ತೆರಿಗೆಗಳನ್ನು ಬದಲಾಯಿಸಲು ಸಾಧ್ಯವಿಲ್ಲ. ಹೆಚ್ಚಿನ ತೆರಿಗೆಗಳನ್ನು ಮರಳಿ ತರಲು ಅವರು ಈಗ ನಿಧಾನವಾದ, ಹೆಚ್ಚು ಕಷ್ಟಕರವಾದ ಕಾನೂನು ಮಾರ್ಗಗಳನ್ನು ಬಳಸಬೇಕು. ಈ ಇತರ ಆಯ್ಕೆಗಳು ಹೆಚ್ಚು ಸೀಮಿತವಾಗಿವೆ. ತೆರಿಗೆಗಳು ವಾಸ್ತವವಾಗಿ ಅಗತ್ಯವೆಂದು ಸಾಬೀತುಪಡಿಸಲು ಸರ್ಕಾರಿ ಸಂಸ್ಥೆಗಳು ದೀರ್ಘ, ವಿವರವಾದ ತನಿಖೆಗಳನ್ನು ನಡೆಸುವ ಅಗತ್ಯವಿದೆ. ಸುಪ್ರೀಂ ಕೋರ್ಟ್ನ ತೀರ್ಪು ಟ್ರಂಪ್ ತಾನು ಬಯಸಿದ್ದನ್ನು ಏನು ಬೇಕಾದರೂ ಮಾಡಬಹುದು ಎಂಬ ಸೊಕ್ಕನ್ನು ಮುರಿದಿದೆ. ಈಗ ತೆರಿಗೆಗಳನ್ನು ನಿಗದಿಪಡಿಸುವ ಅವರ ಅಧಿಕಾರವನ್ನು ಕಡಿತಗೊಳಿಸಲಾಗಿರುವುದರಿಂದ, ಅಮೆರಿಕದ ವ್ಯಾಪಾರ ಪಾಲುದಾರರು ಮಾತುಕತೆಗಳಲ್ಲಿ ಹೆಚ್ಚು ಕಠಿಣವಾಗಬಹುದು. ಇದಕ್ಕೆ ಹೆಚ್ಚುವರಿಯಾಗಿ, ಟ್ರಂಪ್ ಆಡಳಿತವು ಕಳೆದ ವರ್ಷದಲ್ಲಿ ಸಂಗ್ರಹಿಸಿದ ಸುಂಕದ ಆದಾಯದ ಹೆಚ್ಚಿನ ಭಾಗವನ್ನು ಹಿಂದಿರುಗಿಸಬೇಕಾಗಬಹುದು, ಇದು ಅವಮಾನಕ್ಕೆ ಕಾರಣವಾಗಬಹುದು. ►ಇತರ ನ್ಯಾಯಾಂಗ ಬದಲಾವಣೆಗಳು ಟ್ರಂಪ್ ಮುಂದೆ ಹೆಚ್ಚಿನ ತೊಂದರೆಗಳನ್ನು ಎದುರಿಸಬೇಕಾಗಬಹುದು. ಜನ್ಮಸಿದ್ಧ ಪೌರತ್ವವನ್ನು ಕೊನೆಗೊಳಿಸುವ ಅವರ ಯೋಜನೆ ಮತ್ತು ಫೆಡರಲ್ ರಿಸರ್ವ್ ಮಂಡಳಿಯ ಸದಸ್ಯರನ್ನು ವಜಾಗೊಳಿಸುವ ಪ್ರಯತ್ನದಂತಹ ಅವರ ಆಡಳಿತವು ಗೆಲ್ಲಲು ಹೆಣಗಾಡುತ್ತಿರುವ ಹಲವಾರು ಇತರ ಪ್ರಕರಣಗಳನ್ನು ಸುಪ್ರೀಂ ಕೋರ್ಟ್ ಪ್ರಸ್ತುತ ಪರಿಶೀಲಿಸುತ್ತಿದೆ. ಟ್ರಂಪ್ ಅವರು ಬಯಸಿದಂತೆ ತೆರಿಗೆಗಳನ್ನು ನಿಗದಿಪಡಿಸುವ ಅಧಿಕಾರವನ್ನು ಮರಳಿ ಪಡೆಯಲು ಯುಎಸ್ ಕಾಂಗ್ರೆಸ್ ಅನುಮತಿ ನೀಡಬೇಕಾಗುತ್ತದೆ. ಆದಾಗ್ಯೂ, ರಿಪಬ್ಲಿಕನ್ನರು ಹೌಸ್ ಮತ್ತು ಸೆನೆಟ್ ಎರಡರಲ್ಲೂ ಬಹಳ ಕಡಿಮೆ ಬಹುಮತವನ್ನು ಹೊಂದಿರುವುದರಿಂದ ಮತ್ತು ನವೆಂಬರ್ನಲ್ಲಿ ಮಧ್ಯಂತರ ಚುನಾವಣೆಗಳು ಬರಲಿರುವ ಕಾರಣ, ಕಾಂಗ್ರೆಸ್ ಅವರಿಗೆ ಆ ಅಧಿಕಾರವನ್ನು ನೀಡುವ ಸಾಧ್ಯತೆ ಕಡಿಮೆ. ಟ್ರಂಪ್ ಅವರ ಆಮದುಗಳ ಮೇಲಿನ ತೆರಿಗೆಗಳು ಅಮೆರಿಕನ್ನರಿಗೆ ದೈನಂದಿನ ಜೀವನವನ್ನು ಹೆಚ್ಚು ದುಬಾರಿಯನ್ನಾಗಿ ಮಾಡಿವೆ. ಈ ವೆಚ್ಚಗಳನ್ನು ಖರೀದಿದಾರರಿಗೆ (ಹಣದುಬ್ಬರ ರೂಪದಲ್ಲಿ) ವರ್ಗಾಯಿಸಲಾಗುತ್ತಿರುವುದರಿಂದ, ಕೆಲವು ರಿಪಬ್ಲಿಕನ್ ರಾಜಕಾರಣಿಗಳು ಮುಂಬರುವ ಚುನಾವಣೆಗಳಲ್ಲಿ ತಮ್ಮ ಉದ್ಯೋಗಗಳನ್ನು ಕಳೆದುಕೊಳ್ಳುವ ಬಗ್ಗೆ ಚಿಂತಿತರಾಗಿದ್ದಾರೆ. ತಮ್ಮನ್ನು ಉಳಿಸಿಕೊಳ್ಳಲು, ಈ ರಿಪಬ್ಲಿಕನ್ನರು ಟ್ರಂಪ್ಗೆ ಬೆಂಬಲ ನೀಡುವುದನ್ನು ನಿಲ್ಲಿಸಬಹುದು ಮತ್ತು ಡೆಮೋಕ್ರಾಟ್ಗಳ ಜೊತೆ ಸೇರಬಹುದು. ಇದು ರಿಪಬ್ಲಿಕನ್ ಪಕ್ಷದೊಳಗೆ ದೊಡ್ಡ ಒಡಕನ್ನು ಉಂಟುಮಾಡಬಹುದು. ಯೇಲ್ ವಿಶ್ವವಿದ್ಯಾಲಯದ ಬಜೆಟ್ ಲ್ಯಾಬ್ ಪ್ರಕಾರ, ತೆರಿಗೆಗಳನ್ನು ತೆಗೆದುಹಾಕುವುದರಿಂದ ಆಮದುಗಳ ಮೇಲಿನ ಸರಾಸರಿ ತೆರಿಗೆ ದರವನ್ನು ಅರ್ಧದಷ್ಟು ಕಡಿತಗೊಳಿಸಬಹುದು. ಆದಾಗ್ಯೂ, ಅಮೆರಿಕ ಖಜಾನೆ ಕಾರ್ಯದರ್ಶಿ ಸ್ಕಾಟ್ ಬೆಸೆಂಟ್ ಅವರು ಕಳೆದುಹೋದ ಆದಾಯವನ್ನು ಸರಿದೂಗಿಸಲು ಹೊಸ ತೆರಿಗೆಗಳನ್ನು ರಚಿಸಲು ಅವರು ಮೂರು ವಿಭಿನ್ನ ಕಾನೂನುಗಳನ್ನು (ಸೆಕ್ಷನ್ 122, 232 ಮತ್ತು 301) ಸಂಯೋಜಿಸಿದರೆ ಸರ್ಕಾರವು ಯಾವುದೇ ಹಣವನ್ನು ಕಳೆದುಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ. ಟ್ರಂಪ್ ಆಡಳಿತವು ಈಗ ತನ್ನ ವ್ಯಾಪಾರ ನೀತಿಗಳನ್ನು ಸಕ್ರಿಯವಾಗಿಡಲು ಹೆಚ್ಚು ಸಂಕೀರ್ಣವಾದ ಕಾನೂನುಗಳನ್ನು ಬಳಸಬೇಕಾಗುತ್ತದೆ. ಒಂದು ಉತ್ಪನ್ನ ರಾಷ್ಟ್ರೀಯ ಭದ್ರತೆಗೆ ಬೆದರಿಕೆ ಹಾಕುತ್ತದೆ ಎಂದು ಸಾಬೀತಾದರೆ ಸೆಕ್ಷನ್ 232 ತೆರಿಗೆ ವಿಧಿಸಲು ಅವಕಾಶ ನೀಡುತ್ತದೆ, ಆದರೆ ಸೆಕ್ಷನ್ 301 ಅನ್ಯಾಯ ವ್ಯಾಪಾರ ನಿಯಮಗಳನ್ನು ಬಳಸುವ ದೇಶಗಳನ್ನು ಗುರಿಯಾಗಿಸುತ್ತದೆ. ಟ್ರಂಪ್ ಈ ನಿಬಂಧನೆಗಳನ್ನು ಬಳಸಲು ಬಯಸಿದ್ದರೂ, ಅವರು ಇನ್ನು ಮುಂದೆ ತಕ್ಷಣ ಕಾರ್ಯನಿರ್ವಹಿಸಲು ಸಾಧ್ಯವಿಲ್ಲ. ಅವರ ಹಿಂದಿನ ತುರ್ತು ಅಧಿಕಾರಗಳಿಗಿಂತ ಭಿನ್ನವಾಗಿ, ಈ ಕಾನೂನುಗಳಿಗೆ ತಿಂಗಳುಗಳ ಔಪಚಾರಿಕ ತನಿಖೆಗಳು, ಸಾರ್ವಜನಿಕ ವಿಚಾರಣೆಗಳು ಮತ್ತು ವಿವರವಾದ ವರದಿಗಳು ಬೇಕಾಗುತ್ತವೆ. ಇದು ಹೆಚ್ಚು ಕಷ್ಟಕರವಾಗಿರುತ್ತದೆ. ►ಲಾಭ ಯಾರಿಗೆ? ►ಭಾರತ ಅಂತರರಾಷ್ಟ್ರೀಯ ತುರ್ತು ಆರ್ಥಿಕ ಅಧಿಕಾರ ಕಾಯ್ದೆಯನ್ನು ಬಳಸಿಕೊಂಡು ಟ್ರಂಪ್ ಸುಂಕ ವಿಧಿಸಿದ್ದು ಕಾನೂನುಬಾಹಿರ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದ ನಂತರ, ಅಮೆರಿಕಕ್ಕೆ ರಫ್ತು ಮಾಡುವ ವಸ್ತುಗಳ ಮೇಲೆ ಚೀನಾ, ಭಾರತ ಮತ್ತು ಬ್ರೆಝಿಲ್ ದೇಶಗಳ ಉತ್ಪನ್ನಗಳ ಮೇಲಿನ ಸುಂಕ ಕಡಿಮೆಯಾಗಿದೆ. ಫೆಬ್ರವರಿ ಆರಂಭದಲ್ಲಿ ಭಾರತೀಯ ಸರಕುಗಳ ಮೇಲಿನ ಸುಂಕಗಳು 50%ಕ್ಕೆ ಏರಿ 25%ಕ್ಕೆ ಇಳಿದವು. ನಂತರ ಪ್ರಧಾನಿ ನರೇಂದ್ರ ಮೋದಿ ಮತ್ತು ಟ್ರಂಪ್ ವ್ಯಾಪಾರ ಒಪ್ಪಂದವನ್ನು ಅಂತಿಮಗೊಳಿಸಿದ ಬಳಿಕ ಅಮೆರಿಕವು 18%ಕ್ಕೆ ಮತ್ತೊಂದು ಕಡಿತವನ್ನು ಭರವಸೆ ನೀಡಿತು. ಶುಕ್ರವಾರದ ತೀರ್ಪಿನ ನಂತರ ಅವು 10%ಕ್ಕೆ ಇಳಿದು, ನಂತರ ಶನಿವಾರ 15%ಕ್ಕೆ ಏರಿತು. ►ಚೀನಾ ಸುಪ್ರೀಂ ಕೋರ್ಟ್ ತೀರ್ಪಿನ ನಂತರ ಟ್ರಂಪ್ ಆಡಳಿತವು ತನ್ನ ಸುಂಕ ವ್ಯವಸ್ಥೆಯನ್ನು ಇತರ ವ್ಯಾಪಾರ ಕ್ರಮಗಳ ಮೂಲಕ ಮುಂದುವರಿಸುವ ಕ್ರಮವನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ ಎಂದು ಚೀನಾ ಹೇಳಿದೆ. ವ್ಯಾಪಾರ ಯುದ್ಧದಲ್ಲಿ ರಕ್ಷಣಾತ್ಮಕ ನೀತಿಯು ಅಂತಿಮವಾಗಿ ಎಲ್ಲಾ ಕಡೆಯ ಆರ್ಥಿಕ ಪ್ರಗತಿಯನ್ನು ನಾಶಪಡಿಸುವುದರಿಂದ ಎಲ್ಲರೂ ಸೋಲುತ್ತಾರೆ ಎಂದು ಹೇಳಿ, ಟ್ರಂಪ್ ಘೋಷಿಸಿದ ಏಕಪಕ್ಷೀಯ ಸುಂಕಗಳನ್ನು ರದ್ದುಗೊಳಿಸುವಂತೆ ಅಮೆರಿಕವನ್ನು ಒತ್ತಾಯಿಸಿತ್ತು. ನ್ಯಾಯಾಲಯಗಳು 10% ಫೆಂಟನಿಲ್ ಸುಂಕವನ್ನು ತೆಗೆದುಹಾಕಿರುವುದರಿಂದ, ಚೀನಾದಂತಹ ದೇಶಗಳಿಗೆ ರಫ್ತುಗಳು ಈಗ ಕಡಿಮೆ ಕಠಿಣ ದರದ್ದಾಗಿವೆ. ಬೀಜಿಂಗ್ ಹೊರತುಪಡಿಸಿ, ಮೆಕ್ಸಿಕೊ ಕೂಡ ಫೆಂಟನಿಲ್-ಸಂಬಂಧಿತ ಸುಂಕಗಳನ್ನು ಹೊಂದಿತ್ತು. ಆ ಶುಲ್ಕಗಳು ಇನ್ನು ಮುಂದೆ ಅನ್ವಯಿಸದ ಕಾರಣ ಅದು ಸಹ ಪ್ರಯೋಜನ ಪಡೆಯುತ್ತದೆ. ►ಯಾರಿಗೆ ಹೊಡೆತ? ಬ್ರಿಟನ್ ಇತರ ಹಲವು ದೇಶಗಳಿಗಿಂತ 10% ಕಡಿಮೆ ಪ್ರತಿ ಸುಂಕದಿಂದ ಲಾಭ ಪಡೆಯುತ್ತಿತ್ತು. ಆದರೆ ಟ್ರಂಪ್ ಎಲ್ಲಾ ರಾಷ್ಟ್ರಗಳಿಗೆ ಅದನ್ನು 15%ಕ್ಕೆ ಹೆಚ್ಚಿಸಿರುವುದರಿಂದ ಈಗ ಹೆಚ್ಚಿನ ಸುಂಕಗಳನ್ನು ಎದುರಿಸಬೇಕಾಗಿದೆ. ಗ್ಲೋಬಲ್ ಟ್ರೇಡ್ ಅಲರ್ಟ್ ಪ್ರಕಾರ, ಯುಕೆ ಅತಿದೊಡ್ಡ ಏರಿಕೆಯನ್ನು ಎದುರಿಸಲಿದೆ. ಇಟಲಿ ಮತ್ತು ಸಿಂಗಾಪುರ ಕೂಡ ಹೆಚ್ಚುವರಿ ಸುಂಕ ಪಾವತಿಸಬೇಕಾಗುತ್ತದೆ. ಹೆಚ್ಚಿನ ದರದಿಂದ ಹೊರಗಿಡುವಂತೆ ಯುಕೆ ಅಧಿಕಾರಿಗಳು ಈಗ ತುರ್ತಾಗಿ ಯುಎಸ್ ಆಡಳಿತವನ್ನು ಮನವೊಲಿಸಲು ಪ್ರಯತ್ನಿಸುತ್ತಿದ್ದಾರೆ. ಇದು ಯುಎಸ್ಗೆ ಯುಕೆ ರಫ್ತಿನ ವೆಚ್ಚವನ್ನು 3 ಬಿಲಿಯನ್ ಪೌಂಡ್ ($4 ಬಿಲಿಯನ್)ವರೆಗೆ ಹೆಚ್ಚಿಸಬಹುದು ಮತ್ತು 40,000 ಬ್ರಿಟಿಷ್ ಕಂಪನಿಗಳ ಮೇಲೆ ಪರಿಣಾಮ ಬೀರಬಹುದು ಎಂದು ಬ್ರಿಟಿಷ್ ಚೇಂಬರ್ಸ್ ಆಫ್ ಕಾಮರ್ಸ್ ಹೇಳಿದೆ. ನಮ್ಮ ರಾಷ್ಟ್ರೀಯ ಹಿತಾಸಕ್ತಿಗೆ ಅನುಗುಣವಾಗಿ ನಾವು ಪರಿಗಣಿಸುವ ವಿಷಯಗಳನ್ನು ಮುಂದಿಟ್ಟು ಅಮೆರಿಕದೊಂದಿಗೆ ನಾವು ಉನ್ನತ ಮಟ್ಟದಲ್ಲಿ ಮಾತುಕತೆಗಳನ್ನು ನಡೆಸುತ್ತಿದ್ದೇವೆ ಎಂದು ಕ್ಯಾಬಿನೆಟ್ ಸಚಿವೆ ಬ್ರಿಡ್ಜೆಟ್ ಫಿಲಿಪ್ಸನ್ ರವಿವಾರ ಸ್ಕೈ ನ್ಯೂಸ್ಗೆ ತಿಳಿಸಿದ್ದಾರೆ. ►ಮುಂದಿನ ನಡೆ ಏನು? ಇತ್ತೀಚಿನ ಅಮೆರಿಕದ ಸುಪ್ರೀಂ ಕೋರ್ಟ್ ತೀರ್ಪು ಆಟದ ನಿಯಮಗಳನ್ನು ಸಂಪೂರ್ಣವಾಗಿ ಬದಲಾಯಿಸಿದೆ. ವ್ಯಾಪಾರ ಚಿಂತಕರ ಚಾವಡಿ GTRIಯ ಅಜಯ್ ಶ್ರೀವಾಸ್ತವ ಅವರ ಪ್ರಕಾರ, ಹೆಚ್ಚಿನ ತೆರಿಗೆಗಳಿಂದ ಒತ್ತಡಕ್ಕೊಳಗಾಗಿರುವ ಅನೇಕ ದೇಶಗಳು ಈಗ ತಾವು ಸಹಿ ಮಾಡಿದ ವ್ಯಾಪಾರ ಒಪ್ಪಂದಗಳಿಂದ ಹಿಂದೆ ಸರಿಯಬಹುದು. ಭಾರತಕ್ಕೆ ಇದು ಪ್ರಮುಖ ತಿರುವಾಗಿದೆ. ಭಾರತದಿಂದ ಅಮೆರಿಕಕ್ಕೆ ರಫ್ತಾಗುವ ಸುಮಾರು ಶೇ.55 ರಷ್ಟು ರಫ್ತುಗಳು ಶೇ.18 ರಷ್ಟು ಪ್ರತಿ ಸುಂಕದಿಂದ ಮುಕ್ತಗೊಳ್ಳುತ್ತವೆ ಮತ್ತು ಪ್ರಮಾಣಿತ ಎಂಎಫ್ಎನ್ (ಅತ್ಯಂತ ಅನುಕೂಲಕರ ರಾಷ್ಟ್ರ) ಸುಂಕಗಳಿಗೆ ಹಿಂತಿರುಗುತ್ತವೆ. ಆದಾಗ್ಯೂ, ಸೆಕ್ಷನ್ 232 ಸುಂಕಗಳು ಹಾಗೆಯೇ ಉಳಿದಿವೆ. ಇದರಲ್ಲಿ ಉಕ್ಕು ಮತ್ತು ಅಲ್ಯೂಮಿನಿಯಂ ಮೇಲೆ 50% ಹಾಗೂ ಕೆಲವು ಆಟೋ ಘಟಕಗಳ ಮೇಲೆ 25% ಸೇರಿವೆ. ಸ್ಮಾರ್ಟ್ಫೋನ್ಗಳು, ಪೆಟ್ರೋಲಿಯಂ ಉತ್ಪನ್ನಗಳು ಮತ್ತು ಔಷಧಿಗಳು ಸೇರಿದಂತೆ ರಫ್ತಿನ ಸರಿಸುಮಾರು 40% ವಿನಾಯಿತಿಯಾಗಿ ಉಳಿದಿವೆ. ಸುಪ್ರೀಂ ಕೋರ್ಟ್ ತೀರ್ಪು ಜಾಗತಿಕ ವ್ಯಾಪಾರ ಭೂದೃಶ್ಯವನ್ನು ಪುನರ್ರೂಪಿಸಿದೆ. ಇದು ಯುನೈಟೆಡ್ ಸ್ಟೇಟ್ಸ್ನೊಂದಿಗಿನ ಭಾರತದ ವ್ಯಾಪಾರ ಒಪ್ಪಂದದ ಪರಿಶೀಲನೆಯನ್ನು ಪ್ರೇರೇಪಿಸಬಹುದು. ಪ್ರತಿಸುಂಕಗಳು ಅಮೆರಿಕದ ಹತೋಟಿಯಾಗಿತ್ತು. ಆ ಹತೋಟಿ ಹೋದ ನಂತರ ಮಾತುಕತೆಗಳು ನಿಷ್ಪ್ರಯೋಜಕವಾಗುತ್ತವೆ. ವ್ಯಾಪಾರ ನೀತಿಯು ಹೊಸ ಹಂತವನ್ನು ಪ್ರವೇಶಿಸುತ್ತಿದೆ. ಇದು ಕಾರ್ಯನಿರ್ವಾಹಕ ಕ್ರಮಕ್ಕಿಂತ ಕಡಿಮೆ ಮತ್ತು ಕಾನೂನು ಮಿತಿಗಳು, ಶಾಸಕಾಂಗ ಅಧಿಕಾರ ಹಾಗೂ ಕಾರ್ಯತಂತ್ರದ ಮರುಮಾಪನದಿಂದ ಹೆಚ್ಚು ವ್ಯಾಖ್ಯಾನಿಸಲ್ಪಟ್ಟಿದೆ ಎಂದು ಶ್ರೀವಾಸ್ತವ ಹೇಳಿದ್ದಾರೆ. ಭಾರತ ಇನ್ನೂ ಅಮೆರಿಕ ಜೊತೆ ಒಪ್ಪಂದದ ಮಾತುಕತೆ ನಡೆಸುತ್ತಿದೆ. ನ್ಯಾಯಾಲಯದ ಆದೇಶದ ನಂತರ ಹಲವು ಅನಿಶ್ಚಿತತೆಗಳು ಎದುರಾಗಿರುವುದರಿಂದ, ಭಾರತ ಒಪ್ಪಂದದ ಪಠ್ಯವನ್ನು ಪೂರ್ಣಗೊಳಿಸಲು ವಾಷಿಂಗ್ಟನ್ಗೆ ಭಾರತೀಯ ಸಮಾಲೋಚಕರ ತಂಡದ ಭೇಟಿ ಮುಂದೂಡಲಾಗಿದೆ. ಇತ್ತೀಚಿನ ಬೆಳವಣಿಗೆಗಳು ಮತ್ತು ಅದರ ಪರಿಣಾಮಗಳನ್ನು ಮೌಲ್ಯಮಾಪನ ಮಾಡಲು ಉಭಯ ರಾಷ್ಟ್ರಗಳಿಗೆ ಸಮಯ ಸಿಕ್ಕ ನಂತರ ಭಾರತೀಯ ಮುಖ್ಯ ಸಮಾಲೋಚಕ ಮತ್ತು ತಂಡದ ಪ್ರಸ್ತಾವಿತ ಭೇಟಿಯನ್ನು ನಿಗದಿಪಡಿಸಬೇಕು ಎಂದು ಎರಡೂ ಕಡೆಯವರು ಅಭಿಪ್ರಾಯಪಟ್ಟಿದ್ದಾರೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ. ಹೊಸ ದಿನಾಂಕಗಳನ್ನು ಇನ್ನೂ ಘೋಷಿಸಲಾಗಿಲ್ಲ.

ವಾರ್ತಾ ಭಾರತಿ 23 Feb 2026 8:38 pm

ಯಾದಗಿರಿ | ಅಕ್ರಮ ಕಲ್ಲು ಗಣಿಗಾರಿಕೆ ವಿರೋಧಿಸಿದ ಹೋರಾಟಗಾರರಿಗೆ ಜೀವ ಬೆದರಿಕೆ ಆರೋಪ

ಗಣಿ ಇಲಾಖೆಯ ಹಿರಿಯ ಭೂ ವಿಜ್ಞಾನಿ ಅಮಾನತಿಗೆ ಭೀಮು ಪೂಜಾರಿ ಆಗ್ರಹ

ವಾರ್ತಾ ಭಾರತಿ 23 Feb 2026 8:37 pm

ಆರೋಗ್ಯ ಕೇಂದ್ರ, ಭೂ ತೆರಿಗೆ ಇಳಿಕೆಗೆ ಆಗ್ರಹ: ಸೋಮೇಶ್ವರ ಪುರಸಭೆ ಸಾಮಾನ್ಯ ಸಭೆ

ಉಳ್ಳಾಲ: ಪುರಸಭೆ ವ್ಯಾಪ್ತಿಯಲ್ಲಿ ಆರೋಗ್ಯ ಕೇಂದ್ರ ದ ಬಗ್ಗೆ ಸೋಮೇಶ್ವರ ಪುರಸಭೆಯಲ್ಲಿ ವ್ಯಾಪಕ ಚರ್ಚೆ ನಡೆಸಿದ ಸದಸ್ಯರು ಆರೋಗ್ಯ ಕೇಂದ್ರ ನಿರ್ಮಾಣಕ್ಕೆ ಒತ್ತಾಯಿಸಿದ ಘಟನೆ ಸೋಮೇಶ್ವರ ಪುರಸಭೆ ಸಾಮಾನ್ಯ ಸಭೆಯಲ್ಲಿ ನಡೆಯಿತು. ಸೋಮೇಶ್ವರ ಪುರಸಭೆ ಅಧ್ಯಕ್ಷ ಕಮಲ ಅವರ ಅಧ್ಯಕ್ಷತೆಯಲ್ಲಿ ಪುರಸಭೆ ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಆರೋಗ್ಯ ಅಧಿಕಾರಿ ಮಾತನಾಡಿ, ಆರೋಗ್ಯ ಕೇಂದ್ರ ಕೋಟೆಕಾರ್ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಇದೆ.ಸೋಮೇಶ್ವರ ದಲ್ಲಿ ನಿರ್ಮಿಸಲು ನಿವೇಶನ ಸಮಸ್ಯೆ ಇದೆ ಎಂದರು. ಸಲಾಮ್ ಉಚ್ಚಿಲ ಮಾತನಾಡಿ,ಸೋಮೇಶ್ವರ ಪುರಸಭೆ ವ್ಯಾಪ್ತಿಯಲ್ಲಿ ಆರೋಗ್ಯ ಕೇಂದ್ರ ಇಲ್ಲ. 30 ಸಾವಿರ ಜನಕ್ಕೆ ಒಂದು ಆರೋಗ್ಯ ಕೇಂದ್ರ ಇರಬೇಕು ಎಂಬ ನಿಯಮ ಇದೆ. ಇಲ್ಲಿ ಆರೋಗ್ಯ ಕೇಂದ್ರ, ಮೆಡಿಕಲ್ ಆಫೀಸರ್, ಆಶಾ ಕಾರ್ಯಕರ್ತೆಯರ ಕೊರತೆ ಇದೆ ಎಂದರು. ನಿವೇಶನ ಕಂದಾಯ ಇಲಾಖೆ ಮಂಜೂರು ಮಾಡಬೇಕು.ಅವರಿಗೆ ಮನವಿ ಮಾಡಿ ನಿವೇಶನ ಪಡೆಯಬೇಕು.ಈ ಕೆಲಸ ಆರೋಗ್ಯ ಇಲಾಖೆ ಮಾಡಬೇಕು ಎಂದು ಉಪಾಧ್ಯಕ್ಷ ರವಿಶಂಕರ್ ಹೇಳಿದರು. ಸಂಕೋಲಿಗೆಯಲ್ಲಿ ಅಂಚೆ ಇಲಾಖೆ ಗೆ ಇಟ್ಟ ಜಾಗ ಇದೆ.ಅಲ್ಲಿ ಆರೋಗ್ಯ ಇಲಾಖೆ ವ್ಯವಸ್ಥೆ ಮಾಡೋಣ ಎಂದು ಕೌನ್ಸಿಲರ್ ಸಲಾಮ್ ಉಚ್ಚಿಲ ಹೇಳುವ ಮೂಲಕ ಚರ್ಚೆಗೆ ತೆರೆ ಎಳೆದರು. ಭೂಮಿಗೆ ಚದರ ಅಡಿ ಗೆ ಶೇ.ಐದರಷ್ಟು ತೆರಿಗೆ ಪುರಸಭೆ ವಿಧಿಸಿದ್ದು ಸರಿಯಲ್ಲ .ಇದರಿಂದ ಜನರಿಗೆ ಹೊರೆ ಆಗುತ್ತಿದೆ. ಇದನ್ನು ಇಳಿಕೆ ಮಾಡುವಂತೆ ವಿರೋಧ ಪಕ್ಷದ ನಾಯಕ ಪುರುಷೋತ್ತಮ ಶೆಟ್ಟಿ ಪಿಲಾರ್ ಆಗ್ರಹಿಸಿದರು. ಇದಕ್ಕೆ ಇತರ ಸದಸ್ಯರು ಧ್ವನಿ ಗೂಡಿಸಿದ ಹಿನ್ನೆಲೆಯಲ್ಲಿ ಭೂ ತೆರಿಗೆಯನ್ನು ಮೂರು ಶೇಕಡಕ್ಕೆ ಇಳಿಸಲು ಸಭೆಯಲ್ಲಿ ನಿರ್ಧರಿಸಲಾಯಿತು. ನಾಲ್ಕು ತಿಂಗಳ ಹಿಂದೆ ನಡೆದ ಮೃತಪಟ್ಟ ದಯಾನಂದ ಗಟ್ಟಿ ಅವರು ನಾಯಿ ಕಚ್ಚಿ ಮೃತಪಟ್ಟಿದ್ದು ದೃಢವಾಗಿದೆ. ಅವರಿಗೆ ಪರಿಹಾರ ಕೊಡುವ ವ್ಯವಸ್ಥೆ ಮಾಡಲಾಗುವುದು ಎಂದು ಉಪಾಧ್ಯಕ್ಷ ರವಿಶಂಕರ್ ಸಭೆಗೆ ತಿಳಿಸಿದರು. ದಯಾನಂದ ಗಟ್ಟಿ ನಾಯಿ ಕಚ್ಚಿ ಮೃತಪಟ್ಟಿದ್ದು ದೃಢಪಟ್ಟ ಹಿನ್ನೆಲೆಯಲ್ಲಿ ಅವರಿಗೆ ಐದು ಲಕ್ಷ ಪುರಸಭೆ ವತಿಯಿಂದ ಚೆಕ್ ನೀಡಲಾಗುವುದು ಎಂದು ಮುಖ್ಯಾಧಿಕಾರಿ ಮತ್ತಡಿ ಘೋಷಿಸಿದರು. ಅಧ್ಯಕ್ಷ ಕಮಲ ಅವರು ದಯಾನಂದ ಗಟ್ಟಿ ಕುಟುಂಬ ಸ್ಥರಿಗೆ ಚೆಕ್ ವಿತರಣೆ ಮಾಡಿದರು. ಘನತ್ಯಾಜ್ಯ ವಿಲೇವಾರಿ, ಶುಲ್ಕ ಏರಿಕೆ ಮಾಡಿದ ಬಗ್ಗೆ ಸಭೆಯಲ್ಲಿ ಸದಸ್ಯರು ಮಾಡಿದ ಪ್ರಸ್ತಾಪಕ್ಕೆ ಪ್ರತಿಕ್ರಿಯಿಸಿದ ಮುಖ್ಯಾಧಿಕಾರಿ ಮತ್ತಡಿ ಅವರು, ಘನತ್ಯಾಜ್ಯ ವಿಲೇವಾರಿ ಮಂಗಳೂರಿನಲ್ಲಿ ಮಾಡಲಾಗುತ್ತಿದೆ.ಇದಕ್ಕೆ ನಾವು ಶುಲ್ಕ ಪಾವತಿ ಮಾಡಬೇಕು, ವಾಹನ, ಪೆಟ್ರೊಲ್ ನಾವೇ ನೀಡಬೇಕಾಗುತ್ತದೆ. ಇದಕ್ಕೆ ಜಾಸ್ತಿ ಖರ್ಚು ತಗಲುತ್ತದೆ ಎಂದರು. ಅಮೃತ ಕುಡಿಯುವ ನೀರಿನ ವ್ಯವಸ್ಥೆ ಸರಿಯಾಗಿಲ್ಲ. ಎಲ್ಲಾ ಕಡೆ ನೀರು ಬರುತ್ತಿಲ್ಲ.ಮೀಟರ್ ರೀಡಿಂಗ್ ಆಗುತ್ತದೆ. ಈಗ ಕುಡಿಯುವ ನೀರಿನ ಶುಲ್ಕ ಅಮೃತ್ ಯೋಜನೆಯಡಿ ಸಿಗುವ ನೀರಿಗೆ ಪಾವತಿ ಮಾಡಬೇಕೇ ಎಂಬ ಬಗ್ಗೆ ತೀರ್ಮಾನ ಮಾಡಿ ಎಂದು ಮನೋಜ್ ಹೇಳಿದರು. ಅಮೃತ ಕುಡಿಯುವ ನೀರು ಶುಲ್ಕ ಈಗ ವಿಧಿಸುವುದಿಲ್ಲ ಅದರ ಕಾರ್ಯ ಯೋಜನೆ ಪೂರ್ಣಗೊಂಡ ಬಳಿಕ ಶುಲ್ಕ ವಿಧಿಸಲಾಗುವುದು ಎಂದು ರವಿಶಂಕರ್ ಹೇಳಿದರು. ಪಿಲಾರ್ ನಲ್ಲಿ ಕಸ ಹಾಕಲಾಗುತ್ತಿದೆ.ಸಿಸಿ ಕೆಮರಾ ಸರಿಯಾಗಿಲ್ಲ. ಈ ಬಗ್ಗೆ ಕ್ರಮ ಆಗಬೇಕು ಎಂದು ಕೌನ್ಸಿಲರ್ ಪರ್ವೀನ್ ಆಗ್ರಹಿಸಿದರು. ಸಿಸಿ ಕ್ಯಾಮರಾ ಸರಿ ಇದೆಯಾ ಎಂದು ನೋಡಿ. ಸಿಸಿ ಕ್ಯಾಮೆರಾ ವರ್ಕ್ ಆಗ್ತಿಲ್ಲ. ಕಾಟಾಚಾರಕ್ಕೆ ಸಿ.ಸಿ ಕ್ಯಾಮೆರಾ ಅಳವಡಿಕೆ ಬೇಡ ಎಂದು ಜಯಪೂಜಾರಿ ಪುರಸಭೆ ಇಂಜಿನಿಯರ್ ಅವರನ್ನು ತರಾಟೆಗೈದರು. ಸಾಮಾನ್ಯ ಸಭೆಗೆ ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳು ಗೈರು ಆಗಿರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ಕೌನ್ಸಿಲ್ ಸಲಾಮ್ ಉಚ್ಚಿಲ ಅವರು, ರಾಷ್ಟ್ರೀಯ ಹೆದ್ದಾರಿ ಅವ್ಯವಸ್ಥೆ ಯಿಂದ ಉಚ್ಚಿಲ ಪರಿಸರ ದಲ್ಲಿ ಮಳೆ ನೀರು ಹರಿದು ಹಾನಿ ಆಗುತ್ತದೆ. ಈ ಬಾರಿ ಮಳೆ ಬರುವ ಮೊದಲೇ ಕ್ರಮ ಆಗಬೇಕು.ಅಧಿಕಾರಿಗಳಿಗೆ ನೋಟೀಸ್ ನೀಡಿ ರಾ.ಹೆ. ಸರ್ವಿಸ್ ರಸ್ತೆ ಸಮಸ್ಯೆ ಇತ್ಯರ್ಥ ಪಡಿಸುವ ಕೆಲಸ ಮಾಡಿ ಎಂದು ಸಭೆಯಲ್ಲಿ ಅಧ್ಯಕ್ಷರ ಗಮನ ಸೆಳೆದರು. ಪೌರ ಕಾರ್ಮಿಕರ ಸೇವೆಗೆ ನಿಯೋಜಿತರಾದ ಸುಧೀರ್ ಅವರನ್ನು ಪುರಸಭೆ ಯ ಖಾತೆ ನಿರ್ವಹಣೆಗೆ ನಿಯೋಜಿಸಬೇಕು ಎಂಬ ಸದಸ್ಯರ ಬೇಡಿಕೆಗೆ ಸಹಮತ ವ್ಯಕ್ತವಾಯಿತು. ಜಿಲ್ಲಾ ಯೋಜನಾ ಸಮಿತಿ ಸದಸ್ಯ ರಾಗಿ ಆಯ್ಕೆ ಆಗಿರುವ ಹರೀಶ್, ಮನೋಜ್,ಸೋನಾ ಶುಭಾಶಿನಿ ಅವರನ್ನು ಗೌರವಿಸಲಾಯಿತು. ಸಭೆಯಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷ ಪುರುಷೋತ್ತಮ ಗಟ್ಟಿ ಉಪಸ್ಥಿತರಿದ್ದರು.

ವಾರ್ತಾ ಭಾರತಿ 23 Feb 2026 8:35 pm

ಡಿಜಿಟಲ್ ಅರೆಸ್ಟ್ : ಗುಜರಾತ್‌ನಲ್ಲಿ ಶಿಕ್ಷಕಿಗೆ 99 ಲಕ್ಷ ರೂ. ವಂಚನೆ

ಗಾಂಧಿನಗರ, ಫೆ. 23: ಗುಜರಾತ್‌ನ ಗಾಂಧಿನಗರದ 65 ವರ್ಷದ ನಿವೃತ್ತ ಶಾಲಾ ಶಿಕ್ಷಕಿಯೋರ್ವರನ್ನು ಸೈಬರ್ ವಂಚಕರು ಸುಮಾರು ಒಂದು ತಿಂಗಳ ಕಾಲ ‘ಡಿಜಿಟಲ್ ಅರೆಸ್ಟ್’ನಲ್ಲಿ ಇರಿಸಿಕೊಂಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಕೇಂದ್ರ ತನಿಖಾಧಿಕಾರಿಗಳೆಂದು ಹೇಳಿಕೊಂಡ ಸೈಬರ್ ವಂಚಕರು ಅವರಿಗೆ 99 ಲಕ್ಷ ರೂ. ವಂಚಿಸಿದ್ದಾರೆ ಎಂದು ಅವರು ಹೇಳಿದ್ದಾರೆ. ಈ ಪ್ರಕರಣವನ್ನು ಈಗ ಗಾಂಧಿನಗರ ವಲಯ ಸೈಬರ್ ಕ್ರೈಮ್ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ದೂರಿನ ಪ್ರಕಾರ, ಗಾಂಧಿನಗರದ ಸೆಕ್ಟರ್ 8ರ ನಿವಾಸಿಯಾಗಿರುವ ಮಹಿಳೆ ಜನವರಿ 16ರಂದು ಅಪರಿಚಿತ ಸಂಖ್ಯೆಯಿಂದ ಫೋನ್ ಕರೆ ಸ್ವೀಕರಿಸಿದ್ದರು. ಕರೆ ಮಾಡಿದವರು ‘‘ನಿಮ್ಮ ಹೆಸರಿನಲ್ಲಿ ನೀಡಲಾದ ಸಿಮ್ ಕಾರ್ಡ್ ಅನ್ನು ಕಾನೂನುಬಾಹಿರ ಚಟುವಟಿಕೆಗಳು ಹಾಗೂ ಬೆದರಿಕೆ ಕರೆಗಳಿಗೆ ಬಳಸಲಾಗುತ್ತಿದೆ’’ ಎಂದು ಹೇಳಿದ್ದಾರೆ. ಸ್ವಲ್ಪ ಸಮಯದ ನಂತರ ಅಜಯ್ ಗುಪ್ತಾ ಎಂದು ಗುರುತಿಸಿಕೊಂಡ ವ್ಯಕ್ತಿಯೊಬ್ಬ ಮಹಿಳೆಯನ್ನು ವೀಡಿಯೊ ಕರೆಯ ಮೂಲಕ ಸಂಪರ್ಕಿಸಿದ್ದಾನೆ. ಅಲ್ಲದೆ, ತಾನು ಸಿಬಿಐ ಅಧಿಕಾರಿ ಎಂದು ತಿಳಿಸಿದ್ದಾನೆ. ‘‘ನಿಮ್ಮ ಬ್ಯಾಂಕ್ ಖಾತೆಗಳು ಆರೋಪಿ ವ್ಯಕ್ತಿಯೋರ್ವನ ಹಣ ಅಕ್ರಮ ವರ್ಗಾವಣೆ ತನಿಖೆಗೆ ಸಂಬಂಧಿಸಿವೆ’’ ಎಂದು ಕರೆ ಮಾಡಿದವನು ಹೇಳಿದ್ದಾನೆ. ‘‘ನಿಮ್ಮನ್ನು ಶೀಘ್ರದಲ್ಲಿ ಬಂಧಿಸಬಹುದು’’ ಎಂದು ಆತ ಎಚ್ಚರಿಸಿದ್ದಾನೆ. ‘‘ನಿಮ್ಮ ಹಣಕಾಸು ವ್ಯವಹಾರ ಪರಿಶೀಲಿಸಬೇಕು. ನಿಮ್ಮ ವಿರುದ್ಧ ಕಾನೂನು ಕ್ರಮ ಕೈಗೊಳ್ಳದೇ ಇರಲು ನಿಮ್ಮ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಹಾಗೂ ಅಂಚೆ ಕಚೇರಿಗಳಿಂದ ಹಲವು ಬ್ಯಾಂಕ್‌ಗಳಿಗೆ ಹಣ ವರ್ಗಾಯಿಸಬೇಕು’’ ಎಂದು ವಂಚಕರು ಮಹಿಳೆಗ ಒತ್ತಡ ಹೇರಿದ್ದಾರೆ. ಫೆಬ್ರವರಿ 5 ಹಾಗೂ ಫೆಬ್ರವರಿ 13ರ ನಡುವೆ ಆರ್‌ಟಿಜಿಎಸ್ ಮೂಲಕ ವಂಚಕರು ಹಣ ವರ್ಗಾಯಿಸಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ. ಕಾನೂನು ಕ್ರಮದ ಭೀತಿಯಿಂದ ನಿವೃತ್ತ ಶಿಕ್ಷಕಿ ಈ ಅವಧಿಯಲ್ಲಿ ಒಟ್ಟು 99 ಲಕ್ಷ ರೂ. ವರ್ಗಾಯಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ವಾರ್ತಾ ಭಾರತಿ 23 Feb 2026 8:34 pm

ಮಾದಕ ದ್ರವ್ಯ ಸಾಗಾಟ: ಬಿಎಸ್‌ಎಫ್ ಮಾಜಿ ಸಿಬ್ಬಂದಿಯ ಬಂಧನ

ಹೊಸದಿಲ್ಲಿ, ಫೆ. 23: ಗಡಿ ಭದ್ರತಾ ಪಡೆ (ಬಿಎಸ್‌ಎಫ್)ಯ ಸ್ಟಿಕ್ಕರ್‌ಗಳನ್ನು ಹೊಂದಿದ್ದ ಕಾರಿನಿಂದ ಹಲವು ಕೋಟಿ ರೂ. ಮೌಲ್ಯದ 3.3 ಕಿ.ಗ್ರಾಂ ಬ್ರೌನ್ ಶುಗರ್ ಅನ್ನು ಪಶ್ಚಿಮಬಂಗಾಳ ಪೊಲೀಸರು ವಶಪಡಿಸಿಕೊಂಡಿದ್ದಾರೆ. ತಪಾಸಣೆಯಿಂದ ತಪ್ಪಿಸಿಕೊಳ್ಳಲು ಗುರುತುಗಳ ನಕಲಿ ಅಥವಾ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಹೇಳಲಾದ ಮಾಜಿ ಬಿಎಸ್‌ಎಫ್ ಸಿಬ್ಬಂದಿಯನ್ನು ಬಂಧಿಸಲಾಗಿದೆ. ರವಿವಾರ ಬಿಹಾರದಿಂದ ಪಶ್ಚಿಮಬಂಗಾಳಕ್ಕೆ ಸಂದೇಹಾಸ್ಪದ ವಾಹನವೊಂದು ಪ್ರವೇಶಿಸುತ್ತಿರುವ ಬಗೆಗಿನ ಮಾಹಿತಿಯ ಹಿನ್ನೆಲೆಯಲ್ಲಿ ಕಾರ್ಯಪ್ರವೃತ್ತರಾದ ಬಿಧಾನ್‌ನಗರ ತನಿಖಾ ಕೇಂದ್ರದ ಅಧಿಕಾರಿಗಳು ಡಾರ್ಜಿಲಿಂಗ್ ಜಿಲ್ಲೆಯ ತಪಾಸಣಾ ಕೇಂದ್ರದಲ್ಲಿ ಈ ಮಾದಕ ದ್ರವ್ಯವನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಪೊಲೀಸರ ಪ್ರಕಾರ, ಈ ಕಾರು ಪ್ರಮುಖ ಬಿಎಸ್‌ಎಫ್ ಗುರುತು ಹಾಗೂ ಮಾರ್ಪಡಿಸಿದ ನಂಬರ್ ಪ್ಲೇಟ್ ಜೋಡಣೆಯಿಂದ ಗಮನ ಸೆಳೆಯಿತು. ಶೋಧ ನಡೆಸಿದಾಗ ನಂಬರ್ ಪ್ಲೇಟ್‌ನ ಹಿಂಭಾಗದಲ್ಲಿ ಒಂದು ರಂಧ್ರ ಕಂಡು ಬಂತು. ಅದರಲ್ಲಿ ಹಲವು ಪ್ಯಾಕೇಟ್‌ಗಳು ಬ್ರೌನ್ ಶುಗರ್ ಪತ್ತೆಯಾಯಿತು. ಚಾಲಕನನ್ನು ಬಿಹಾರದ ಕಟಿಹಾರ್‌ನ ಅಲೋಕ್ ಕುಮಾರ್ ರವಿಕರ್ ಎಂದು ಗುರುತಿಸಲಾಗಿದೆ. ಆರಂಭದಲ್ಲಿ ಆತ ತಾನು ಛತ್ತೀಸ್‌ಗಢದಲ್ಲಿ ನಿಯೋಜಿತ ಬಿಎಸ್‌ಎಫ್ ಇನ್ಸ್‌ಪೆಕ್ಟರ್, ವೈದ್ಯಕೀಯ ರಜೆಯಲ್ಲಿದ್ದೇನೆ ಎಂದು ತಿಳಿಸಿದ್ದಾನೆ. ತನ್ನ ಹೇಳಿಕೆಯನ್ನು ಬೆಂಬಲಿಸಲು ಗುರುತಿನ ಚೀಟಿ ತೋರಿಸಿದ್ದಾನೆ. ಆದರೆ, ಪರಿಶೀಲನೆ ನಡೆಸಿದಾಗ, ಆತ ಕ್ರಿಮಿನಲ್ ಹಿನ್ನೆಲೆ ಹೊಂದಿರುವ ಮಾಜಿ ಬಿಎಸ್‌ಎಫ್ ಸಿಬ್ಬಂದಿ ಎಂದು ತಿಳಿದು ಬಂದಿದೆ.

ವಾರ್ತಾ ಭಾರತಿ 23 Feb 2026 8:31 pm

ಫೆ.26ರಿಂದ ಕುಲಶೇಖರದಲ್ಲಿ ಬೃಹತ್ ಬೈಬಲ್ ಅಧಿವೇಶನ

ಮಂಗಳೂರು, ಫೆ.23: ಮಂಗಳೂರು ಧರ್ಮಪ್ರಾಂತ್ಯದ ಕಾರಿಸ್ಮಾತಿಕ್ ಸರ್ವಿಸ್ ಕಮ್ಯುನಿಯನ್ ಮತ್ತು ಬೈಬಲ್ ಆಯೋಗದ ಸಹಯೋಗದಲ್ಲಿ ಬೃಹತ್ ಬೈಬಲ್ ಅಧಿವೇಶನ ಫೆಬ್ರವರಿ 26ರಿಂದ ಮಾರ್ಚ್ 1ರವರೆಗೆ ಸಂಜೆ 4ರಿಂದ 8:30ರವರೆಗೆ ನಗರದ ಕುಲಶೇಖರ ಕೋರ್ಡೆಲ್ ಹೋಲಿ ಕ್ರಾಸ್ ಚರ್ಚ್ ಬಯಲು ಮೈದಾನದಲ್ಲಿ ನಡೆಯಲಿದೆ ಎಂದು ಕೆಥೋಲಿಕ್ ಮಂಗಳೂರು ಧರ್ಮಪ್ರಾಂತ್ಯದ ಸಾರ್ವಜನಿಕ ಸಂಪರ್ಕಾಧಿಕಾರಿ ಫಾ.ಜೆ.ಬಿ. ಸಲ್ಡಾನಾ ತಿಳಿಸಿದ್ದಾರೆ. ಮಂಗಳೂರು ಬಿಷಪ್ ಹೌಸ್‌ನಲ್ಲಿ ಸೋಮವಾರ ಅವರು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು. 2026ನೇ ಸಾಲಿನ ದೇವರ ವಾಕ್ಯದ ರವಿವಾರದ ಆಚರಣೆಯ ಪ್ರಯುಕ್ತ ಕ್ರೈಸ್ತ ಜಗದ್ಗುರು ಪೋಪ್ 14ನೇ ಲಿಯೊ ಅವರು, ಸಂತ ಪೌಲರು ಕೊಲೊಸ್ಸೆಯರಿಗೆ ಬರೆದ ಪತ್ರದ 3ನೇ ಅಧ್ಯಾಯದಿಂದ ಆರಿಸಿದ ‘ಕ್ರಿಸ್ತನ ವಾಕ್ಯವು ನಿಮ್ಮಲ್ಲಿ ನೆಲೆಸಿದೆ’ ಎಂಬ ವಾಕ್ಯವನ್ನು ಶೀರ್ಷಿಕೆಯಾಗಿ ನೀಡಿದ್ದರು. ಹಾಗಾಗಿ ಈ ಬೃಹತ್ ಬೈಬಲ್ ಅಧಿವೇಶನಕ್ಕೂ ಅದೇ ವಿಷಯವನ್ನು ಪ್ರಮುಖ ಶೀರ್ಷಿಕೆಯಾಗಿ ಆಯ್ಕೆ ಮಾಡಿದ್ದೇವೆ ಎಂದು ತಿಳಿಸಿದರು. ಅಧಿವೇಶನದ ಪ್ರತಿ ದಿನ ಪವಿತ್ರ ಬಲಿಪೂಜೆ, ಪವಿತ್ರ ಜಪಮಾಲೆಯ ಧ್ಯಾನ, ಬೈಬಲ್‌ನ ಹಳೆ ಮತ್ತು ಹೊಸ ಒಡಂಬಡಿಕೆಯಿಂದ ‘ತಮ್ಮ ಜನರೊಡನೆ ದೇವರ ಉಪಸ್ಥಿತಿ’ಯ ಕುರಿತು ಆಯ್ದ ವಿಷಯಗಳ ಮೇಲೆ ಕೊಂಕಣಿ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಪ್ರವಚನಗಳು, ದಿವ್ಯಸಂಸ್ಕಾರದ ಆರಾಧನೆ, ಸ್ತುತಿ- ಆರಾಧನೆ ಮತ್ತು ಪ್ರಾರ್ಥನೆ ಒಳಗೊಂಡಿರುತ್ತದೆ ಎಂದರು. ಅಧಿವೇಶನದಲ್ಲಿ ಎಂಟು ಮಂದಿ ಧರ್ಮಗುರುಗಳು ದೇವರ ವಾಕ್ಯವನ್ನು ಬೋಧಿಸಲಿದ್ದಾರೆ ಹಾಗೂ ನಾಲ್ಕು ಜನ ಧರ್ಮಗುರುಗಳು ಬೈಬಲ್ ಆಧಾರಿತ, ದಿವ್ಯಸಂಸ್ಕಾರದ ಆರಾಧನೆಯ ನೇತೃತ್ವ ವಹಿಸಲಿದ್ದಾರೆ. ದೇವರ ವಾಕ್ಯ ವನ್ನು ಆಚರಿಸಲು ಎಲ್ಲ ದಿನಗಳಲ್ಲೂ ಸರ್ವಿಸ್ ಕಮ್ಯೂನಿಯನ್ ಮುಂದಾಳುಗಳಿಂದ ಭಕ್ತಿಪೂರ್ವಕ ಗಾಯನ ಮತ್ತು ಸ್ತುತಿ-ಆರಾಧನೆ ನಡೆಯಲಿದೆ ಎಂದು ಫಾ.ಜೆ.ಬಿ. ಸಲ್ಡಾನಾ ತಿಳಿಸಿದರು. 8-10 ಸಾವಿರ ಮಂದಿ ಭಾಗಿ: ಬೈಬಲ್ ಅಧಿವೇಶನಕ್ಕೆ ಸರ್ವ ಸಿದ್ಧತೆ ನಡೆಸಲಾಗಿದೆ. ಕಳೆದ ವರ್ಷ 6-8 ಸಾವಿರ ಮಂದಿ ಪಾಲ್ಗೊಂಡಿದ್ದು, ಈ ಬಾರಿ 8-10 ಸಾವಿರ ಮಂದಿ ಭಾಗವಹಿಸುವ ನಿರೀಕ್ಷೆಯಿದೆ ಎಂದು ಮಾಹಿತಿ ನೀಡಿದರು. ನಮ್ಮ ನಡುವೆ ನೆಲೆಸಿರುವ ದೇವರ ವಾಕ್ಯವನ್ನು ಆಚರಿಸುವುದು, ಸಂಭ್ರಮಿಸುವುದು ಈ ಅಧಿವೇಶನದ ಪ್ರಮುಖ ಉದ್ದೇಶ. ಇದೊಂದು ಬೈಬಲ್ ಹಬ್ಬ. ಜನರ ಜೀವನದ ಹೋರಾಟಗಳಲ್ಲಿ, ಅವರ ಸುಖ- ದುಃಖಗಳಲ್ಲಿ ದೇವರು ಹೇಗೆ ಅವರೊಡನೆ ಸದಾ ಇದ್ದಾರೆ ಮತ್ತು ದೇವರಿಗೆ ಮೆಚ್ಚುಗೆಯಾಗುವ ಜೀವನವನ್ನು ರೂಪಿಸಿಕೊಳ್ಳಲು ದೇವರ ವಾಕ್ಯವು ಹೇಗೆ ಸಹಾಯ ಮಾಡುತ್ತದೆ ಎಂಬುದನ್ನು ಬೈಬಲ್‌ನ ಬೆಳಕಿನಲ್ಲಿ ವಿವರಿಸುವುದು ಈ ಅಧಿವೇಶನದ ಗುರಿಯಾಗಿದೆ ಎಂದು ಫಾ.ಜೆ.ಬಿ. ಸಲ್ಡಾನಾ ತಿಳಿಸಿದರು. ಇದೇ ಸಂದರ್ಭದಲ್ಲಿ ಸಮ್ಮೇಳನದ ಲೋಗೊವನ್ನು ಅನಾವರಣಗೊಳಿಸಲಾಯಿತು. ಮಂಗಳೂರು ಧರ್ಮಪ್ರಾಂತ್ಯದ ಶ್ರೇಷ್ಠಗುರು, ಅತಿ ವಂದನೀಯ ಮ್ಯಾಕ್ಸಿಂ ನೊರೋನಾ, ಮಂಗಳೂರು ಧರ್ಮಪ್ರಾಂತ್ಯದ ಸಾರ್ವಜನಿಕ ಸಂಪರ್ಕಾಧಿಕಾರಿ ರೊಯ್ ಕಾಸ್ತೆಲಿನೊ, ಮಂಗಳೂರು ಧರ್ಮಪ್ರಾಂತ್ಯದ ಕಾರಿಸ್ಮಾತಿಕ್ ಸಂಚಲನದ ಆಧ್ಯಾತ್ಮಿಕ ನಿರ್ದೇಶಕ ವಂ. ಕ್ಲಿಫರ್ಡ್ ಫೆರ್ನಾಂಡಿಸ್, ಮಂಗಳೂರು ಧರ್ಮಪ್ರಾಂತ್ಯದ ಬೈಬಲ್ ಆಯೋಗದ ಕಾರ್ಯದರ್ಶಿ ವಂ. ವಿನ್ಸೆಂಟ್ ಸಿಕ್ವೇರಾ, ಮಂಗಳೂರು ಧರ್ಮಪ್ರಾಂತ್ಯದ ಕಾರಿಸ್ಮಾತಿಕ್ ಸಂಚಾಲನದ ಸಂಯೋಜಕರಾದ ಡೊಲ್ಫಿ ಲೋಬೊ, ಮಂಗಳಜ್ಯೋತಿ ಕೇಂದ್ರದ ನಿರ್ದೇಶಕರಾದ ವಂ. ರೋಹಿತ್ ಡಿಕೋಸ್ಟಾ, ಕೆನರಾ ಕಮ್ಯೂನಿಕೇಶನ್ ನಿರ್ದೇಶಕ ವಂ.ಅನಿಲ್ ಫೆರ್ನಾಂಡಿಸ್, ಆಲ್ವಿನ್ ಡಿ’ಸೋಜ , ಎಲಿಯಾಸ್ ಫೆರ್ನಾಂಡಿಸ್ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ವಾರ್ತಾ ಭಾರತಿ 23 Feb 2026 8:31 pm

ಕಾಂಗ್ರೆಸ್ ಸರಕಾರದಿಂದ ದ್ವೇಷದ ರಾಜಕಾರಣ : ವಿಜಯೇಂದ್ರ

ಬೆಂಗಳೂರು : ‘ರಾಜ್ಯದ ಕಾಂಗ್ರೆಸ್ ಸರಕಾರವು ದ್ವೇಷದ ರಾಜಕಾರಣ ಮಾಡುತ್ತಿದೆ. ಭ್ರಷ್ಟಾಚಾರದ ವಿರುದ್ಧ ಮಾತನಾಡುವ ಯೋಗ್ಯತೆ, ನೈತಿಕತೆ ಕಾಂಗ್ರೆಸ್ ಪಕ್ಷದ ಮುಖಂಡರಿಗೆ ಇದೆಯೇ?’ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಪ್ರಶ್ನಿಸಿದ್ದಾರೆ. ಸೋಮವಾರ ವಿಧಾನಸೌಧದಲ್ಲಿನ ವಿಪಕ್ಷ ನಾಯಕ ಆರ್.ಅಶೋಕ್ ಅವರ ಕಚೇರಿಯಲ್ಲಿ ಮಾತನಾಡಿದ ಅವರು, ಈ ಸರಕಾರದ ಅವಧಿಯಲ್ಲಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ ನಡೆಯಿತು. ಪ್ರಾಮಾಣಿಕ ಅಧಿಕಾರಿ ಆತ್ಮಹತ್ಯೆ ಮಾಡಿಕೊಂಡರು. ಸಚಿವರೊಬ್ಬರು ರಾಜೀನಾಮೆ ನೀಡಿದರು. ಈ ಬಗ್ಗೆ ಕಾಂಗ್ರೆಸ್ ಮುಖಂಡರು ಮಾತನಾಡಲಿ ಎಂದು ಸವಾಲು ಹಾಕಿದರು. ಸರಕಾರವು ಅಧಿಕಾರಕ್ಕೆ ಬಂದಾಗಿನಿಂದ ಬಂಜಾರ ಸಮಾಜವನ್ನು ಟಾರ್ಗೆಟ್ ಮಾಡುತ್ತಿದೆ. ಈ ಸಮಾಜವು 30-40 ವರ್ಷಗಳಿಂದ ಬಿಜೆಪಿ ಜೊತೆ ಗಟ್ಟಿಯಾಗಿ ಗುರುತಿಸಿಕೊಂಡಿದೆ. ಬಿಜೆಪಿಯನ್ನು ರಾಜ್ಯದಲ್ಲಿ ಶೇ.100ಕ್ಕೆ ನೂರು ಬೆಂಬಲಿಸುತ್ತಿದೆ. ಇದರ ಪರಿಣಾಮವಾಗಿ ಸಿದ್ದರಾಮಯ್ಯರ ಸರಕಾರ ಎರಡೂವರೆ ವರ್ಷಗಳಲ್ಲಿ ಈ ಸಮಾಜಕ್ಕೆ ಅನ್ಯಾಯವೂ ಆಗಿದೆ ಎಂದು ಅವರು ದೂರಿದರು. ಖಜಾನೆ ಖಾಲಿಯೆ?: ಕುರಿಗಳ ಆಕಸ್ಮಿಕ ಸಾವಿನ ಸಂಬಂಧ 48 ಕೋಟಿ ರೂ.ಅನುಗ್ರಹ ಯೋಜನೆಯಡಿ ಬಾಕಿ ಉಳಿಸಿಕೊಂಡಿದ್ದಾರೆ. ರಾಜ್ಯ ಸರಕಾರದ ಖಜಾನೆ ಖಾಲಿ ಆಗಿದೆಯೇ?. ತಿಂಗಳಿಂದ ತಿಳಿಸಿದರೂ ಆ ಬಡ ಕುಟುಂಬಗಳಿಗೆ ಹಣ ಬಿಡುಗಡೆ ಮಾಡಿಲ್ಲವೇಕೆ? ಎಂದು ಕೇಳಿದ ಅವರು, ಸಿದ್ದರಾಮಯ್ಯನವರ ಕುರ್ಚಿ ಅಲ್ಲಾಡುವ ಸಂದರ್ಭದಲ್ಲಿ ಸಮಾಜ ನೆನಪಾಗುತ್ತದೆ ಎಂದು ಟೀಕಿಸಿದರು.

ವಾರ್ತಾ ಭಾರತಿ 23 Feb 2026 8:29 pm

ಬಾರಾಮತಿ ವಿಮಾನ ದುರಂತ | ಸಿಬಿಐ ಬೇಡ, ಸಿಐಡಿ ತನಿಖೆಯಾಗಲಿ: ರೋಹಿತ್ ಪವಾರ್

ಮುಂಬೈ, ಫೆ. 23: ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ಮೃತಪಟ್ಟ ವಿಮಾನ ಅಪಘಾತದ ಬಗ್ಗೆ ಸಿಬಿಐ ತನಿಖೆ ನಡೆಸುವ ಮಹಾರಾಷ್ಟ್ರ ಸರಕಾರದ ನಿರ್ಧಾರದ ವಿರುದ್ಧ ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷ (ಎನ್‌ಸಿಪಿ- ಶರದ್ ಪವಾರ್ ಬಣ)ದ ಶಾಸಕ ರೋಹಿತ್ ಪವಾರ್ ಸೋಮವಾರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದು ತನಿಖೆಯನ್ನು ವಿಳಂಬಗೊಳಿಸುತ್ತದೆ ಎಂದು ಹೇಳಿದ್ದಾರೆ. ಅಜಿತ್ ಪವಾರ್ ಮತ್ತು ಇತರ ನಾಲ್ವರು ಜನವರಿ 28ರಂದು ಬಾರಾಮತಿಯಲ್ಲಿ ನಡೆದ ವಿಮಾನ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಈ ಅಪಘಾತದ ಬಗ್ಗೆ ಸಿಬಿಐ ತನಿಖೆಗೆ ಆದೇಶ ನೀಡುವಂತೆ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಕೆಂದ್ರ ಗೃಹ ಸಚಿವ ಅಮಿತ್ ಶಾಗೆ ಮನವಿ ಮಾಡಿದ ಒಂದು ದಿನದ ಬಳಿಕ ರೋಹಿತ್ ಪವಾರ್ ಈ ಪ್ರತಿಕ್ರಿಯೆ ನೀಡಿದ್ದಾರೆ. ಸಿಬಿಐ ತನಿಖೆ ಕೋರುವ ಮನವಿಯೊಂದನ್ನು ಸಂಬಂಧಿತ ಕೇಂದ್ರ ಸಚಿವಾಲಯ, ನಾಗರಿಕ ವಾಯುಯಾನ ಮಹಾ ನಿರ್ದೇಶನಾಲಯ (ಡಿಜಿಸಿಎ) ಮತ್ತು ಮುಖ್ಯಮಂತ್ರಿ ಸೇರಿದಂತೆ ಸಂಬಂಧಪಟ್ಟ ಎಲ್ಲಾ ಪ್ರಾಧಿಕಾರಗಳಿಗೆ ಈಗಾಗಲೇ ಸಲ್ಲಿಸಲಾಗಿದೆ ಎಂದು ವಿಧಾನಭವನದ ಆವರಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ರೋಹಿತ್ ಪವಾರ್ ಹೇಳಿದರು. ತನಿಖೆಗೆ ಸಿಬಿಐ ಎದುರು ಸುಮಾರು 7,000 ಪ್ರಕರಣಗಳು ಬಾಕಿಯಿವೆ ಎಂದು ಹೇಳಿದ ಅವರು, ಈ ಪೈಕಿ ಸುಮಾರು 2,500 ಪ್ರಕರಣಗಳು ಹತ್ತು ವರ್ಷಗಳಿಗಿಂತಲೂ ಹೆಚ್ಚಿನ ಅವಧಿಯಿಂದ ಬಾಕಿಯಾಗಿವೆ ಎಂದರು. ‘‘ತನಿಖೆಯ ಹೆಸರಿನಲ್ಲಿ ಸಮಯ ವ್ಯಯ ಮಾಡುವುದನ್ನು ನಾವು ಸಹಿಸುವುದಿಲ್ಲ. ಈ ತನಿಖೆಯನ್ನು ಸಿಐಡಿ ಮಾಡಬಹುದು’’ ಎಂದು ಅವರು ಹೇಳಿದರು. ‘‘ಅಪಘಾತಕ್ಕೆ ಸಂಬಂಧಿಸಿದಂತೆ ಈವರೆಗೆ 30 ಶೇಕಡದಷ್ಟು ಮಾಹಿತಿಯನ್ನು ಮಾತ್ರ ಬಹಿರಂಗಗೊಳಿಸಲಾಗಿದೆ. ಉಳಿದ 70 ಶೇಕಡ ಮಾಹಿತಿ ಮುಖ್ಯಮಂತ್ರಿ ಬಳಿಯೇ ಇದೆ’’ ಎಂದರು. ವಿಮಾನದ ಬ್ಲ್ಯಾಕ್ ಬಾಕ್ಸ್ ಸುಟ್ಟು ಹೋಗಿರುವುದಕ್ಕೆ ಸಂಬಂಧಿಸಿದ ವರದಿಗಳ ಬಗ್ಗೆಯೂ ಅವರು ಆತಂಕ ವ್ಯಕ್ತಪಡಿಸಿದರು. ‘‘ಯಾವುದೇ ಅವ್ಯವಹಾರ ಬೆಳಕಿಗೆ ಬಂದರೆ, ಈ ಸರಕಾರ ಭಾರೀ ಬೆಲೆ ತೆರಬೇಕಾಗುತ್ತದೆ’’ ಎಂದು ಎಚ್ಚರಿಸಿದರು.

ವಾರ್ತಾ ಭಾರತಿ 23 Feb 2026 8:28 pm

ಲಾಭದ ಆಮಿಷವೊಡ್ಡಿ ಮಹಿಳೆಗೆ ವಂಚನೆ: ಪ್ರಕರಣ ದಾಖಲು

ಮಂಗಳೂರು, ಫೆ.23: ಹೂಡಿಕೆ ಮಾಡಿ ಹೆಚ್ಚಿನ ಲಾಭಗಳಿಸಬಹುದು ಎಂದು ಆಮಿಷವೊಡ್ಡಿ ಮಹಿಳೆಯೊಬ್ಬರಿಗೆ 19.06 ಲಕ್ಷ ರೂ. ವಂಚನೆಗೈದಿರುವ ಬಗ್ಗೆ ಉರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೊಬೈಲ್‌ನಲ್ಲಿ ಗೂಗಲ್ ಮೂಲಕ ಸಾಫ್ಟೋನಿಕ್ ವೆಬ್‌ಸೈಟ್ ಹುಡುಕಾಡಿ ಎಪಿಕೆ ಫೈಲ್ ಡೌನ್ಲೋಡ್ ಮಾಡಿದ್ದೆ ಬಳಿಕ ಸಾಫ್ಟೋನಿಕ್ ಆ್ಯಪ್ ಬಳಸಿ ಬ್ಯಾಂಕ್ ಖಾತೆಯ ವಿವರ ನೀಡಿದ್ದೆ. ಹೆಚ್ಚಿನ ಲಾಭದ ಉದ್ದೇಶದಿಂದ ಈ ಆ್ಯಪ್‌ನಲ್ಲಿರುವ ನಾನಾ ಕಂಪನಿಗಳಿಗೆ ಒಟ್ಟು 19,06,166 ಲಕ್ಷ ರೂ. ಹೂಡಿಕೆ ಮಾಡಿದ್ದೆ. ಜನವರಿಯಲ್ಲಿ 1 ಲಕ್ಷ ರೂ.ವಾಪಸ್ ಪಡೆದುಕೊಂಡಿದ್ದು, ನಂತರ ತನ್ನನ್ನು ಬ್ಲಾಕ್ ಮಾಡಿದ್ದರು ಎಂದು ವಂಚನೆಗೊಳಗಾದ ಮಹಿಳೆ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ವಾರ್ತಾ ಭಾರತಿ 23 Feb 2026 8:26 pm

ಶಹಾಪುರ | ಸರ್ಕಾರಿ ಆಸ್ಪತ್ರೆ ಮುಂದೆ ರೈತ ಸಂಘದಿಂದ ಪ್ರತಿಭಟನೆ

ಶಹಾಪುರ : ಸರ್ಕಾರಿ ಆಸ್ಪತ್ರೆಯಲ್ಲಿ ಅಗತ್ಯ ಔಷಧಿ ಹಾಗೂ ಇಂಜಕ್ಷನ್‌ಗಳ ಕೊರತೆಯಿಂದ ರೋಗಿಗಳು ಚಿಕಿತ್ಸೆ ಸಿಗದೆ ಸಂಕಷ್ಟ ಅನುಭವಿಸುತ್ತಿದ್ದಾರೆ ಎಂದು ಆರೋಪಿಸಿ ಕರ್ನಾಟಕ ಪ್ರಾಂತ ರೈತ ಸಂಘ ವತಿಯಿಂದ ಆಸ್ಪತ್ರೆ ಎದುರು ಪ್ರತಿಭಟನೆ ನಡೆಸಲಾಯಿತು. ಒಳರೋಗಿ ಮತ್ತು ಹೊರರೋಗಿಗಳಿಗೆ ಬೇಕಾದ ಔಷಧಿ ಸೌಲಭ್ಯಗಳು ಲಭ್ಯವಿಲ್ಲದಿದ್ದರೂ ಆಡಳಿತ ವೈದ್ಯಾಧಿಕಾರಿಗಳು ಹಾಗೂ ತಾಲೂಕು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ರಾತ್ರಿ ವೇಳೆಯಲ್ಲಿ ಆಸ್ಪತ್ರೆಗೆ ಬರುವ ರೋಗಿಗಳಿಗೆ ಚಿಕಿತ್ಸೆ ನೀಡದೇ ವೈದ್ಯರು ವಿಶ್ರಾಂತಿ ಕೊಠಡಿಯಲ್ಲಿ ನಿದ್ರಿಸುತ್ತಾರೆ. ಹೆರಿಗೆ ನೋವಿನಿಂದ ಬರುವ ಬಾಣಂತಿಯರನ್ನೂ ಭಯ ಹುಟ್ಟಿಸಿ ಜಿಲ್ಲಾ ಆಸ್ಪತ್ರೆಗೆ ಕಳುಹಿಸಲಾಗುತ್ತಿದೆ ಎಂದು ಸಂಘದ ಜಿಲ್ಲಾ ಅಧ್ಯಕ್ಷ ಚೆನ್ನಪ್ಪ ಆನೆಗುಂದಿ ಆರೋಪಿಸಿದರು. ರಕ್ತ ಪರೀಕ್ಷೆ ಸೇರಿದಂತೆ ಮೂಲಭೂತ ತಪಾಸಣೆಗಳಿಗೂ ಹೊರಗಡೆ ಹೋಗಬೇಕಾದ ಅನಿವಾರ್ಯತೆ ಉಂಟಾಗಿದೆ ಎಂದು ಅವರು ದೂರಿದರು. ಸಾಮಾನ್ಯ ನೋವಿಗೂ ಇಂಜಕ್ಷನ್ ನೀಡದೇ ಮಾತ್ರೆ ನೀಡಿ ಕಳುಹಿಸಲಾಗುತ್ತಿದೆ. ಅರವಳಿಕೆ ತಜ್ಞರಿದ್ದರೂ ಎಕ್ಸ್‌ರೇಗಾಗಿ ಹಲವು ದಿನಗಳಿಂದ ಆಸ್ಪತ್ರೆ ಸುತ್ತಾಡಬೇಕಾಗಿದೆ ಎಂದು ನೊಂದ ಮಹಿಳೆಯೊಬ್ಬರು ಅಳಲು ತೋಡಿಕೊಂಡರು. ಆಸ್ಪತ್ರೆಯಲ್ಲಿ ಕೂಡಲೇ ಮೂಲಭೂತ ಸೌಕರ್ಯಗಳನ್ನು ಒದಗಿಸದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಚೆನ್ನಪ್ಪ ಆನೆಗುಂದಿ ಎಚ್ಚರಿಸಿದರು. ಬಳಿಕ ಆಡಳಿತ ವೈದ್ಯಾಧಿಕಾರಿ ಡಾ. ಯಲ್ಲಪ್ಪ ಪಾಟೀಲ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು. ಪ್ರತಿಭಟನೆಯಲ್ಲಿ ಜಿಲ್ಲಾ ಉಪಾಧ್ಯಕ್ಷ ಎಸ್.ಎಂ. ಸಾಗರ, ತಾಲೂಕು ಅಧ್ಯಕ್ಷ ತಮ್ಮಣ್ಣ ಜಾಗಿರದಾರ, ಭೀಮಣ್ಣ ಟಫೆದಾರ, ಹೊನ್ನಪ್ಪ ಮಾನ್ಪಡೆ, ದೇವಕುಮಾರ, ಭೀಮರಾಯ ಪೂಜಾರಿ, ಅಮರಣ್ಣ ಸಾಹು, ಕೃಷಿ ಕೂಲಿಕಾರರ ಸಂಘದ ಗಂಗಮ್ಮ ಸೇರಿದಂತೆ ಅನೇಕ ಕಾರ್ಯಕರ್ತರು, ರೋಗಿಗಳು ಹಾಗೂ ಸಂಘದ ಪದಾಧಿಕಾರಿಗಳು ಪಾಲ್ಗೊಂಡಿದ್ದರು.

ವಾರ್ತಾ ಭಾರತಿ 23 Feb 2026 8:26 pm

ಮನರೇಗಾ ನಾಶವಾಗಲು ನಾವು ಬಿಡುವುದಿಲ್ಲ: ಸಮಾವೇಶದಲ್ಲಿ ಡಿಸಿಎಂ ಡಿಕೆಶಿ ಶಪಥ

ಬಿಜೆಪಿ ಏನೇ ಮಾಡಿದರೂ ಮನರೇಗಾ ನಾಶವಾಗಲು ನಾವು ಬಿಡುವುದಿಲ್ಲ. ಉದ್ಯೋಗ ಹಕ್ಕು ಕಿತ್ತುಕೊಳ್ಳಲು ನಾವು ಅವಕಾಶ ಕೊಡುವುದಿಲ್ಲ ಎಂದು ಮನ್ರೇಗಾ ಬಚಾವ್‌ ಆಂದೋಲನ ಸಮಾವೇಶಕ್ಕೆ ಚಾಲನೆ ನೀಡಿ ಡಿಸಿಎಂ ಡಿಕೆ ಶಿವಕುಮಾರ್ ಮಾತನಾಡಿದರು. ದೇಶದಲ್ಲಿ ಮಹಾತ್ಮ ಗಾಂಧಿ ಹೆಸರು ಅಳಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದರು.

ವಿಜಯ ಕರ್ನಾಟಕ 23 Feb 2026 8:25 pm

ಕೇರಳ ಸ್ಟೋರಿ-2 ಟ್ರೇಲರ್ | ‘ಎಕ್ಸ್’ನಲ್ಲಿ ಗೋಮಾಂಸ, ಹಂದಿ ಮಾಂಸ, ಮೀನಿನ ಖಾದ್ಯದ ಫೋಟೊ ಹಂಚಿಕೊಂಡ ಪ್ರಕಾಶ್ ರಾಜ್

ಚೆನ್ನೈ, ಫೆ. 23: ಈ ವಾರದಲ್ಲಿ ಬಿಡುಗಡೆಗೊಳ್ಳಲಿರುವ ‘ದಿ ಕೇರಳ ಸ್ಟೋರಿ-2’ ಕುರಿತು ಚರ್ಚೆ ನಡೆಯುತ್ತಿರುವ ನಡುವೆ ನಟ ಪ್ರಕಾಶ್ ರಾಜ್ ಅವರು ಹೇಳಿಕೆ ಎಲ್ಲರ ಗಮನ ಸೆಳೆದಿದೆ. ‘ದಿ ಕೇರಳ ಸ್ಟೋರಿ-2’ ಚಿತ್ರವನ್ನು ಕಾಮಾಖ್ಯ ನಾರಾಯಣ ಸಿಂಗ್ ನಿರ್ದೇಶಿಸಿದ್ದಾರೆ ಹಾಗೂ ವಿಪುಲ್ ಅಮೃತ್‌ಲಾಲ್ ಶಾ ನಿರ್ಮಾಣ ಮಾಡಿದ್ದಾರೆ. ಈ ಚಿತ್ರದ ಬಲವಂತವಾಗಿ ಗೋಮಾಂಸ ತಿನ್ನಿಸುವ ಹಾಗೂ ಮತಾಂತರದ ದೃಶ್ಯಗಳು ವಿವಾದಗಳಿಗೆ ಕಾರಣವಾಗಿವೆ.   ರವಿವಾರ ಪ್ರಕಾಶ್ ರಾಜ್ ಅವರು ತನ್ನ ‘ಎಕ್ಸ್’ ಖಾತೆಯಲ್ಲಿ ಹಂದಿ ಮಾಂಸ, ದನದ ಮಾಂಸ ಹಾಗೂ ಮೀನಿನ ಖಾದ್ಯಗಳ ಫೋಟೊ ಹಾಕಿಕೊಂಡಿದ್ದಾರೆ. ಅಲ್ಲದೆ, ‘‘ಕೇರಳದ ನಿಜವಾದ ಕಥೆಯೆಂದರೆ, ಇಲ್ಲಿ ಹಂದಿ ಮಾಂಸ, ಗೋಮಾಂಸ ಹಾಗೂ ಮೀನಿನ ಖಾದ್ಯಗಳು ಇವೆ. ಇದರೊಂದಿಗೆ ಸಸ್ಯಹಾರ ಕೂಡ ಇದೆ. ಆದರೆ, ಎಲ್ಲರೂ ಸೌಹಾರ್ದದಿಂದ ಬದುಕುತ್ತಿದ್ದಾರೆ’’ ಎಂದಿದ್ದಾರೆ. ಈ ಪೋಸ್ಟ್ ಅನ್ನು ಚಿತ್ರದ ಟ್ರೇಲರ್‌ನಲ್ಲಿ ಗಮನ ಸೆಳೆಯಲಾದ ವಿಷಯಕ್ಕೆ ಪ್ರತಿಕ್ರಿಯೆಯಾಗಿ ಪ್ರಕಾಶ್ ರಾಜ್ ಪೋಸ್ಟ್ ಮಾಡಿದ್ದಾರೆ ಎಂದು ಅರ್ಥೈಸಲಾಗಿದೆ.

ವಾರ್ತಾ ಭಾರತಿ 23 Feb 2026 8:24 pm

ಅಸಮರ್ಪಕ ಸೋಲಾರ್ ಅಳವಡಿಕೆ: ಗ್ರಾಹಕ ಪರಿಹಾರ ವೇದಿಕೆ ದಂಡ

ಮಂಗಳೂರು, ಫೆ.23: ಮನೆಯ ಮೇಲೆ ಅಳವಡಿಸಿದ ಸೋಲಾರ್ ಅಸಮರ್ಪಕವಾಗಿದ್ದು ನಿರೀಕ್ಷಿತ ರೀತಿಯಲ್ಲಿ ಕೆಲಸ ಮಾಡದಿದ್ದಕ್ಕೆ ಗ್ರಾಹಕ ಪರಿಹಾರ ವೇದಿಕೆಯು ಸೋಲಾರ್ ಕಂಪೆನಿಗೆ ದಂಡ ವಿಧಿಸಿದೆ. *ಪ್ರಕರಣದ ಹಿನ್ನೆಲೆ: ನಗರದ ಸೋಲಾರ್ ಕಂಪೆನಿಯೊಂದು ಮನೆಯ ತಾರೀಸಿನಲ್ಲಿ ಸೋಲಾರ್ ಅಳವಡಿಸಿದರೆ ಮನೆಯ ವಿದ್ಯುತ್ ಉಚಿತವಾಗಿ ದೊರೆಯಲಿದೆ. ಹೆಚ್ಚುವರಿ ಉಳಿಕೆಯಾದ ವಿದ್ಯುತ್‌ನ್ನು ಮೆಸ್ಕಾಮ್‌ಗೆ ಕೊಟ್ಟು ಅಲ್ಲಿಂದಲೂ ಲಾಭ ಪಡೆಯಬಹುದು ಎಂದು ಜಾಹೀರಾತು ನೀಡಿತ್ತು. ಅದರಂತೆ ನಗರದ ಬಲ್ಮಠ ನಿವಾಸಿ ಭಾರತೀಯ ಸೇನೆಯಿಂದ ನಿವೃತ್ತರಾಗಿದ್ದ ಡಾ.ಜಯರಾಮ್ ಎಸ್. ತನ್ನ ಮನೆಯ ಛಾವಣಿಗೆ ಕಂಪೆನಿಯಿಂದ 8,18,000 ರೂ. ಪಾವತಿಸಿ ಸೋಲಾರ್ ಅಳವಡಿಸಿದ್ದರು. ಕರಾರು ಪ್ರಕಾರ ದಿನವೊಂದಕ್ಕೆ 40 ಯೂನಿಟ್‌ಗಳಷ್ಟು ವಿದ್ಯುತ್ ಉತ್ಪಾದನೆಯಾಗುತ್ತದೆ ಎಂದು ಕಂಪೆನಿ ಭರವಸೆ ನೀಡಿತ್ತು. ಜೊತೆಗೆ 25 ವರ್ಷಗಳ ಗ್ಯಾರಂಟಿಯನ್ನೂ ನೀಡಿತ್ತು. ಆದರೆ ಕೆಲಕಾಲ ಮಾತ್ರ ಆಶ್ವಾಸನೆಯಂತೆ ವಿದ್ಯುತ್ ಉತ್ಪಾದನೆಯಾಗಿತ್ತು. ಈ ಬಗ್ಗೆ ಕಂಪೆನಿಗೆ ದೂರು ನೀಡಿದರೂ ಸ್ಪಂದಿಸಲಿಲ್ಲ. ಹಾಗಾಗಿ ಡಾ ಜಯರಾಮರು ಗ್ರಾಹಕ ಪರಿಹಾರ ವೇದಿಕೆಯ ಮೊರೆ ಹೋಗಿದ್ದರು. ವಾದ-ಪ್ರತಿವಾದ ಆಲಿಸಿದ ದ.ಕ.ಜಿಲ್ಲಾ ಗ್ರಾಹಕ ಪರಿಹಾರ ವೇದಿಕೆಯು 8,18,000 ರೂ.ಮೊತ್ತದೊಂದಿಗೆ ಮಾನಸಿಕ ವೇದನೆಗೆ 35,000 ರೂ. ಮತ್ತು ಸೇವಾ ನ್ಯೂನ್ಯತೆಗೆ ಪರಿಹಾರ ಹಾಗೂ 10,000 ರೂ. ನ್ಯಾಯಾಲಯದ ಖರ್ಚು ನೀಡಬೇಕೆಂದು ಆದೇಶಿಸಿದೆ. ದೂರುದಾರರ ಪರವಾಗಿ ನ್ಯಾಯವಾದಿ ಶಶಿರಾಜ್ ರಾವ್ ಕಾವೂರು ವಾದಿಸಿದ್ದರು.

ವಾರ್ತಾ ಭಾರತಿ 23 Feb 2026 8:23 pm

Explained : ಭಾರತದ ಮೇಲೆ ಕಣ್ಣಿಟ್ಟರೆ ಸುಮ್ಮನಿರಲ್ಲ: ಉಗ್ರರ ಮೇಲೆ ಮೋದಿ ಸರ್ಕಾರದ 'ಪ್ರಹಾರ್'! ಏನಿದು ಹೊಸ ನೀತಿ?

What Is Prahaar Policy : ಭಾರತ ಹೊಸ ಭಯೋತ್ಪಾದನಾ ವಿರೋಧಿ ನೀತಿ ಪ್ರಹಾರ್‌ ಅನ್ನು ಜಾರಿಗೆ ತಂದಿದೆ. ಈ ಪ್ರಹಾರ್ ಪಾಲಿಸಿ ನವ ಭಾರತದ ಹೊಸ ರಕ್ಷಣಾ ಕವಚ ಆಗಲಿದೆ ಎನ್ನಲಾಗುತ್ತಿದೆ. ಇದು ಭಯೋತ್ಪಾದನೆಯನ್ನ ಕೇವಲ ಒಂದು ಗನ್ ಫೈಟ್ ಆಗಿ ನೋಡದೆ, ಟೆಕ್ನಾಲಜಿ, ಕಾನೂನು, ಸಮಾಜ ಮತ್ತು ಇಂಟೆಲಿಜೆನ್ಸ್... ಹೀಗೆ ಎಲ್ಲಾ ರಂಗಗಳಲ್ಲೂ ಉಗ್ರರನ್ನ ಕಟ್ಟಿಹಾಕೋಕೆ ಮಾಡಿರೋ ಮಾಸ್ಟರ್ ಪ್ಲಾನ್ ಎಂದೇ ಹೇಳಬಹುದು. ಏನಿದು? ಹೇಗೆ ಕೆಲಸ ಮಾಡಲಿದೆ ಎಂಬುದನ್ನು ಈ ಲೇಖನದಲ್ಲಿ ನೋಡೋಣ.

ವಿಜಯ ಕರ್ನಾಟಕ 23 Feb 2026 8:20 pm

Bengaluru | ಸ್ಕೂಟರ್‌ಗೆ ಬುಲೇರೋ ವಾಹನ ಢಿಕ್ಕಿ; ಇಬ್ಬರು ಮೃತ್ಯು

ಬೆಂಗಳೂರು, ಫೆ.23: ಬುಲೇರೋ ವಾಹನ ಸ್ಕೂಟರ್‌ಗೆ ಢಿಕ್ಕಿ ಹೊಡೆದ ಪರಿಣಾಮ ಇಬ್ಬರು ಸವಾರರು ಮೃತಪಟ್ಟಿರುವ ಘಟನೆ ಕೆಆರ್‌ ಪುರ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಸೋಮವಾರ ಬೆಳಗಿನ ಜಾವ ಈ ಘಟನೆ ನಡೆದಿದ್ದು, ಮೃತಪಟ್ಟವರನ್ನು ಕೆಆರ್‌ ಪುರ ನಿವಾಸಿಗಳಾದ ನಿತಿನ್ (21) ಮತ್ತು ಪುನೀತ್ (25) ಎಂದು ಗುರುತಿಸಲಾಗಿದೆ. ನಿತಿನ್ ಸ್ಕೂಟರ್‍ನಲ್ಲಿ ಪುನೀತ್‍ನನ್ನು ಕರೆದುಕೊಂಡು ಇಂದು ಬೆಳಗಿನ ಜಾವ 1.30 ರ ಸುಮಾರಿನಲ್ಲಿ ಹೊಸಕೋಟೆ ಕಡೆಯಿಂದ ಕೆಆರ್‌ ಪುರದ ಕಡೆಗೆ ಹಳೆ ಮದ್ರಾಸ್ ರಸ್ತೆಯ ಬೂದಿಗೆರೆ ಮೇಲ್ಸುತುವೆ ಮೇಲೆ ಹೋಗುತ್ತಿದ್ದರು. ಅದೇ ಸಮಯದಲ್ಲಿ ಅತೀ ವೇಗವಾಗಿ ಬಂದ ಬುಲೇರೋ ವಾಹನ ಇವರ ಸ್ಕೂಟರ್‍ಗೆ ಢಿಕ್ಕಿ ಹೊಡೆದ ಪರಿಣಾಮ ಇಬ್ಬರೂ ಗಂಭೀರ ಗಾಯಗೊಂಡಿದ್ದಾರೆ. ಆನಂತರ ಸ್ಥಳೀಯರ ಸಹಾಯದಿಂದ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಾಗ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ. ಸುದ್ದಿ ತಿಳಿದು ಕೆಆರ್‌ ಪುರ ಸಂಚಾರ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಬುಲೇರೋ ವಾಹನ ಚಾಲಕ ಮಂಜುನಾಥ್ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

ವಾರ್ತಾ ಭಾರತಿ 23 Feb 2026 8:19 pm

ಉಡುಪಿ ಸರ್ವಿಸ್ ಬಸ್ ನಿಲ್ದಾಣದ ಅವ್ಯವಸ್ಥೆ ಸರಿಪಡಿಸಲು ಆಗ್ರಹ

ಉಡುಪಿ, ಫೆ.23: ಉಡುಪಿ ಸರ್ವಿಸ್ ಬಸ್ ನಿಲ್ದಾಣದ ಅವ್ಯವಸ್ಥೆಯನ್ನು ಸರಿಪಡಿಸುವಂತೆ ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಣದ ಜಿಲ್ಲಾಧ್ಯಕ್ಷ ಸುಜಯ್ ಪೂಜಾರಿ ಆಗ್ರಹಿಸಿದ್ದಾರೆ. ಉಡುಪಿ ನಗರದ ಸರ್ವಿಸ್ ಬಸ್ ನಿಲ್ದಾಣಕ್ಕೆ ಸಾವಿರಾರು ಪ್ರಯಾಣಿಕರು ಆಗಮಿಸುತ್ತಾರೆ. ಆದರೆ ಬಸ್ ನಿಲ್ದಾಣ ಮಾತ್ರ ಅವ್ಯವಸ್ಥೆಯ ಆಗರವಾಗಿದೆ. ಬಸ್ ನಿಲ್ದಾಣದಲ್ಲಿ ಯಾವುದೇ ಮೂಲ ಸೌಕರ್ಯಗಳಿಲ್ಲದೇ ಇರುವುದ ರಿಂದ ಪ್ರಯಾಣಿಕರು ಪರದಾಡುತ್ತಿದ್ದಾರೆ. ಕುಡಿಯುವ ನೀರಿನ ಘಟಕ ಶುಚಿತ್ವವಿಲ್ಲದೇ ಪ್ರಯಾಣಿಕರು ದುಡ್ಡು ಕೊಟ್ಟು ನೀರು ಕುಡಿಯಬೇಕಾದ ಪರಿಸ್ಥಿತಿ ಎದುರಾಗಿದೆ. ಪ್ರಯಾಣಿಕರು ಕುಳಿತುಕೊಳ್ಳುವ ಕೆಲವೊಂದು ಕುರ್ಚಿ ಮುರಿದು ಬಿದ್ದಿದ್ದು, ಆಸನದ ವ್ಯವಸ್ಥೆ ಇಲ್ಲದೆ ಪ್ರಯಾಣಿಕರು ಪರದಾಡುತ್ತಿದ್ದಾರೆ. ಬಸ್ ನಿಲ್ದಾಣದಲ್ಲಿ ಪ್ರಯಾಣಿಕರ ಅನೂಕೂಲಕ್ಕಾಗಿ ಮಹಿಳೆಯರಿಗೆ ಹಾಗೂ ಪುರುಷರಿಗೆ ಪ್ರತ್ಯೇಕ ಶೌಚಾಲಯ ನಿರ್ಮಾಣ ಮಾಡಿದ್ದರೂ ನಿರುಪಯುಕ್ತವಾಗಿವೆ. ಶೌಚಾಲಯದ ಕಾಮಗಾರಿ ಕಳಪೆಯಾಗಿದೆ. ಸುತ್ತ ಮುತ್ತಲ ಪ್ರದೇಶದಲ್ಲಿ ದುರ್ವಾಸನೆ ಬೀರುತ್ತಿದೆ. ಈ ಸಮಸ್ಯೆಯಿಂದ ನಿಲ್ದಾಣದಲ್ಲಿ ಪ್ರಯಾಣಿಕರು ಕುಳಿತುಕೊಳ್ಳಲು ಹಿಂದೇಟು ಹಾಕುವಂತಾಗಿದೆ. ಬಸ್ ನಿಲ್ದಾಣದ ಧೂಳುಮಯ ಅವರಣ ಮುಂತಾದವುಗಳಿಂದ ಪ್ರಯಾಣಿಕರಿಗೆ ಸಮಸ್ಯೆ ಎದುರಾಗಿದೆ. ಬಸ್ ನಿಲ್ದಾಣದಲ್ಲಿ ಅಲ್ಲಲ್ಲಿ ಕಸದ ರಾಶಿ ತಿಂಡಿ ಪೊಟ್ಟಣಗಳು ಬಿದ್ದಿರುವುದನ್ನು ದಿನನಿತ್ಯ ನೋಡಬಹುದು. ಅದೇ ಕಸದ ರಾಶಿಯ ಮದ್ಯೆ ಜನರು ನಿಂತಿರಬೇಕು. ಅಧಿಕಾರಿಗಳು ಸಾರ್ವಜನಿಕರಿಗೆ ಅವಶ್ಯವಿರುವ ಮೂಲ ಸೌಕರ್ಯ ಗಳನ್ನು ಒದಗಿಸದೆ ಜಾಣ ಕುರುಡು ಪ್ರದರ್ಶಿಸುತ್ತಿರು ವುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ. ಒಟ್ಟಿನಲ್ಲಿ ಬಸ್ ನಿಲ್ದಾಣದ ಅವ್ಯವಸ್ಥೆಗೆ ಪ್ರಯಾಣಿಕರು ನಿತ್ಯ ಹಿಡಿಶಾಪ ಹಾಕುತ್ತಿದ್ದಾರೆ. ಸಂಬಂಧಪಟ್ಟ ಅಧಿಕಾರಿ ಗಳು ಎಚ್ಛೆತ್ತುಕೊಂಡರೆ ತಕ್ಷಣ ಬಸ್ ನಿಲ್ದಾಣ ದುರಸ್ತಿ ಕಾಣಬಹುದು. ಈ ಎಲ್ಲಾ ಅವ್ಯವಸ್ಥೆಯನ್ನು ನಗರಸಭೆ ಸರಿಪಡಿಸಬೇಕು ಎಂದು ಕರವೇ ಜಿಲ್ಲಾಧ್ಯಕ್ಷ ಸುಜಯ್ ಪೂಜಾರಿ ಆಗ್ರಹಿಸಿದ್ದಾರೆ.

ವಾರ್ತಾ ಭಾರತಿ 23 Feb 2026 8:19 pm