SENSEX
NIFTY
GOLD
USD/INR

Weather

29    C
...

ಮಂಗಳೂರು ಬಂದರಿಗೆ ಐಷಾರಾಮಿ ಕ್ರೂಸ್ ಹಡಗು “ಸೆವನ್ ಸೀಸ್ ಮರಿನರ್” ಆಗಮನ

ನವ ಮಂಗಳೂರು ಬಂದರು ಪ್ರಾಧಿಕಾರ (NMPA) ಇಂದು ಐಷಾರಾಮಿ ಕ್ರೂಸ್ ಹಡಗು ಸೆವನ್ ಸೀಸ್ ಮರಿನರ್ ಅನ್ನು ಸ್ವಾಗತಿಸಿದ್ದು, ಇದು ಭಾರತದ ಪಶ್ಚಿಮ ಕರಾವಳಿಯಲ್ಲಿ ಕ್ರೂಸ್ ಪ್ರವಾಸೋದ್ಯಮವನ್ನು ಉತ್ತೇಜಿಸುವ ಮತ್ತೊಂದು ಮಹತ್ವದ ಹೆಜ್ಜೆಯಾಗಿದೆ. ಬಹಾಮಾಸ್ ಧ್ವಜ ಹೊಂದಿರುವ ಈ ಹಡಗು ಕೊಚ್ಚಿಯಿಂದ ಆಗಮಿಸಿ, ಬೆರ್ಥ್ ನಂ. 4ರಲ್ಲಿ ನಿಲುಗಡೆಗೊಂಡಿತು. ಹಡಗಿನಲ್ಲಿ ಒಟ್ಟು 607 ಪ್ರಯಾಣಿಕರು ಮತ್ತು 460 ಸಿಬ್ಬಂದಿ ಸದಸ್ಯರು ಇದ್ದರು. ಈ ಹಡಗು ಮರ್ಮುಗೋವ್ ಕಡೆಗೆ ಮುಂದಿನ ಪ್ರಯಾಣವನ್ನು ಮುಂದುವರಿಸುತ್ತಿದೆ. ಹಡಗು ಮತ್ತು ಪ್ರಯಾಣಿಕರ ನಿರ್ವಹಣೆಯನ್ನು ಸುಗಮವಾಗಿ ನಡೆಸಲು NMPA, ಕಸ್ಟಮ್ಸ್, ಇಮಿಗ್ರೇಶನ್, CISF ಹಾಗೂ ಇತರೆ ಸಂಬಂಧಿತ ಸಂಸ್ಥೆಗಳೊಂದಿಗೆ ಸಮನ್ವಯ ಸಾಧಿಸಿತು. ಭೇಟಿ ನೀಡಿದ ಪ್ರವಾಸಿಗರಿಗೆ ಕಾರ್ಕಳ, ಮೂಡಬಿದ್ರಿ, ಪಿಲಿಕುಳ ಹಾಗೂ ಮಂಗಳೂರು ನಗರದ ಪ್ರಮುಖ ಪ್ರವಾಸಿ ತಾಣಗಳಿಗೆ ವಿಶೇಷ ಪ್ರವಾಸ ವ್ಯವಸ್ಥೆ ಮಾಡಲಾಗಿತ್ತು. ಈ ಯಶಸ್ವಿ ಕಾರ್ಯಾಚರಣೆ ನವ ಮಂಗಳೂರು ಬಂದರನ್ನು ಅಂತರಾಷ್ಟ್ರೀಯ ಕ್ರೂಸ್ ಪ್ರವಾಸೋದ್ಯಮದ ಪ್ರಮುಖ ತಾಣವಾಗಿ ರೂಪಿಸುವಲ್ಲಿ ಮತ್ತಷ್ಟು ಬಲ ತುಂಬಿದ್ದು, ಉತ್ತಮ ಮಟ್ಟದ ಸೇವೆಗಳನ್ನು ಒದಗಿಸುವಲ್ಲಿ NMPAಯ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ.      

ವಾರ್ತಾ ಭಾರತಿ 18 Apr 2026 10:27 pm

ಕದನ ವಿರಾಮ ವಿಸ್ತರಣೆ ಯೋಜನೆ ತಿರಸ್ಕರಿಸಿದ ಇರಾನ್: ವರದಿ

ಟೆಹರಾನ್, ಎ.18: ತಾತ್ಕಾಲಿಕ ಕದನ ವಿರಾಮವನ್ನು ವಿಸ್ತರಿಸುವ ಯೋಜನೆಯನ್ನು ಇರಾನ್ ತಿರಸ್ಕರಿಸಿದ್ದು, ನಡೆಯುತ್ತಿರುವ ಪ್ರಾದೇಶಿಕ ಸಂಘರ್ಷಕ್ಕೆ ಸಮಗ್ರ ಮತ್ತು ಶಾಶ್ವತವಾದ ಪರಿಹಾರಕ್ಕೆ ಒತ್ತಾಯಿಸಿದೆ ಎಂದು ವರದಿಯಾಗಿದೆ. ಸಂಘರ್ಷಕ್ಕೆ ಕಿರು ಅವಧಿಯ, ತಾತ್ಕಾಲಿಕ ವಿರಾಮಕ್ಕೆ ಇರಾನ್ ಒಪ್ಪುವುದಿಲ್ಲ. ಸಂಘರ್ಷದ ಚಕ್ರವು ಶಾಶ್ವತವಾಗಿ ಸ್ಥಗಿತಗೊಳ್ಳಬೇಕು. ಯಾವುದೇ ಒಪ್ಪಂದವು ಪ್ರದೇಶದಾದ್ಯಂತ `ಲೆಬನಾನ್‍ನಿಂದ ಕೆಂಪು ಸಮುದ್ರ'ದವರೆಗೆ ವಿಸ್ತರಿಸಬೇಕು. ಪರಮಾಣು ಕಾರ್ಯಕ್ರಮದ ಜೊತೆಗೆ, ಹಾರ್ಮುಝ್‌ ಜಲಸಂಧಿಯಲ್ಲಿ ನೌಕಾಯಾನ ಭದ್ರತೆ, ನಿರ್ಬಂಧ ತೆರವುಗೊಳಿಸುವ ವಿಷಯ ಸೇರಿದಂತೆ ವ್ಯಾಪಕ ಚರ್ಚೆ ನಡೆಯಬೇಕು ಎಂದು ಇರಾನ್ ಆಗ್ರಹಿಸಿದೆ. ಈ ಮಧ್ಯೆ, ಎರಡನೇ ಸುತ್ತಿನ ಮಾತುಕತೆಗೂ ಮುನ್ನ ತನ್ನ ಸಂವರ್ಧಿತ ಯುರೇನಿಯಂ ಅನ್ನು ಅಮೆರಿಕಕ್ಕೆ ಹಸ್ತಾಂತರಿಸಲು ಇರಾನ್‍ಗೆ ಅಮೆರಿಕ ನೆರವಾಗಲಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದು ಒಂದು ವೇಳೆ ಪಾಕಿಸ್ತಾನದಲ್ಲಿ ನಡೆಯಲಿರುವ ಎರಡನೇ ಸುತ್ತಿನ ಮಾತುಕತೆ ವಿಫಲಗೊಂಡರೆ, ಕದನ ವಿರಾಮ ಕೊನೆಗೊಳ್ಳಲಿದ್ದು ಇರಾನ್ ಮೇಲಿನ ಬಾಂಬ್ ದಾಳಿ ಮುಂದುವರಿಯುತ್ತದೆ ಎಂದು ಎಚ್ಚರಿಕೆ ನೀಡಿದೆ.

ವಾರ್ತಾ ಭಾರತಿ 18 Apr 2026 10:19 pm

ಲೆಬನಾನ್‍ನಲ್ಲಿ ಇಸ್ರೇಲ್ ತನ್ನ ಮಿಲಿಟರಿ ಕಾರ್ಯಾಚರಣೆಯನ್ನು ನಿಲ್ಲಸಬೇಕು: ಡೊನಾಲ್ಡ್‌ ಟ್ರಂಪ್

ವಾಶಿಂಗ್ಟನ್, ಎ.18: ಲೆಬನಾನ್‍ನಲ್ಲಿ ಇಸ್ರೇಲ್ ತನ್ನ ಮಿಲಿಟರಿ ಕಾರ್ಯಾಚರಣೆಯನ್ನು ನಿಲ್ಲಸಬೇಕು. ಐಡಿಎಫ್(ಇಸ್ರೇಲ್ ಭದ್ರತಾ ಪಡೆ) ಲೆಬನಾನ್‍ನಲ್ಲಿ ಕಟ್ಟಡಗಳನ್ನು ಸ್ಫೋಟಿಸುವುದನ್ನು ಮುಂದುವರಿಸಲು ಸಾಧ್ಯವಿಲ್ಲ. ಇದಕ್ಕೆ ನಾನು ಅವಕಾಶ ನೀಡುವುದಿಲ್ಲ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಗುರುವಾರ ಘೋಷಿಸಲಾದ ಇಸ್ರೇಲ್-ಲೆಬನಾನ್ ಕದನ ವಿರಾಮದ ಅಂಶಗಳಿಗೆ ಇಸ್ರೇಲ್‍ನ ಕ್ರಮಗಳು ಹೊಂದಿಕೆಯಾಗಬೇಕು. ಇರಾನ್‍ನೊಂದಿಗಿನ ಸಂಭಾವ್ಯ ಒಪ್ಪಂದವು ಇಸ್ರೇಲ್‍ನ ದೀರ್ಘಾವಧಿ ಭದ್ರತೆಗೆ ಪ್ರಯೋಜನಕಾರಿಯಾಗಿದೆ. ರಾಜತಾಂತ್ರಿಕ ನಿರ್ಣಯವು ಅಂತಿಮವಾಗಿ ಇಸ್ರೇಲಿ ಹಿತಾಸಕ್ತಿಗೆ ಪೂರಕವಾಗಿರುತ್ತದೆ ಎಂಬುದನ್ನು ಅವರು(ಇಸ್ರೇಲ್) ಅರ್ಥ ಮಾಡಿಕೊಳ್ಳಬೇಕು' ಎಂದು ಟ್ರಂಪ್ ಹೇಳಿರುವುದಾಗಿ ವರದಿಯಾಗಿದೆ.

ವಾರ್ತಾ ಭಾರತಿ 18 Apr 2026 10:14 pm

ಎ.20ರಂದು ಪಾಕಿಸ್ತಾನದಲ್ಲಿ ಅಮೆರಿಕ, ಇರಾನ್ ಮಾತುಕತೆ: ವರದಿ

ಟೆಹರಾನ್, ಎ.18: ಅಮೆರಿಕ ಮತ್ತು ಇರಾನ್ ನಡುವಿನ ಮತ್ತೊಂದು ಸುತ್ತಿನ ಮಾತುಕತೆ ಇಸ್ಲಮಾಬಾದ್‍ನಲ್ಲಿ ಎಪ್ರಿಲ್ 20ರಂದು ನಡೆಯುವ ನಿರೀಕ್ಷೆಯಿದೆ ಎಂದು ಇರಾನ್ ಸರಕಾರದ ಮೂಲಗಳನ್ನು ಉಲ್ಲೇಖಿಸಿ ಸಿಎನ್‍ಎನ್ ಶನಿವಾರ ವರದಿ ಮಾಡಿದೆ. ಈಜಿಪ್ಟ್ ಮತ್ತು ತುರ್ಕಿಯೆ ಬೆಂಬಲದೊಂದಿಗೆ ಪಾಕಿಸ್ತಾನ ಮಾತುಕತೆಗೆ ಮಧ್ಯಸ್ಥಿಕೆ ವಹಿಸಲಿದ್ದು ಎರಡೂ ಕಡೆಯ ನಿಯೋಗವು ರವಿವಾರ ಪಾಕಿಸ್ತಾನಕ್ಕೆ ಆಗಮಿಸುವ ನಿರೀಕ್ಷೆಯಿದೆ ಎಂದು ವರದಿ ಹೇಳಿದೆ. ಈ ಮಧ್ಯೆ, ಅಮೆರಿಕ ಮತ್ತು ಇರಾನ್ ನಡುವಿನ ಅಂತಿಮ ಒಪ್ಪಂದ ಎರಡು ದಿನಗಳ ಒಳಗೆ ಅಂತಿಮಗೊಳ್ಳುವ ಸಾಧ್ಯತೆಯಿದೆ. ಎರಡೂ ದೇಶಗಳ ನಿಯೋಗಗಳು ವಾರಾಂತ್ಯದಲ್ಲಿ ಸಭೆ ಸೇರಿ ಯುದ್ಧವನ್ನು ಕೊನೆಗೊಳಿಸುವ ಒಪ್ಪಂದವನ್ನು ಅಂತಿಮಗೊಳಿಸುವ ನಿರೀಕ್ಷೆಯಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಇರಾನಿಯನ್ನರು ಭೇಟಿಯಾಗಲು ಬಯಸುತ್ತಾರೆ. ಅವರು ಒಪ್ಪಂದ ಮಾಡಿಕೊಳ್ಳಲು ಅತ್ಯಂತ ಉತ್ಸುಕರಾಗಿದ್ದಾರೆ. ಶೀಘ್ರ ಒಪ್ಪಂದ ಅಂತಿಮಗೊಳ್ಳುವ ನಿರೀಕ್ಷೆಯಿದೆ ಎಂದು ಟ್ರಂಪ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ. ಇರಾನ್-ಅಮೆರಿಕ ಮಾತುಕತೆಗೆ ದಿನಾಂಕ ನಿಗದಿಯಾಗಿಲ್ಲ; ಇರಾನ್ ಪಾಕಿಸ್ತಾನದ ಮಧ್ಯಸ್ಥಿಕೆಯಲ್ಲಿ ಇರಾನ್ ಮತ್ತು ಅಮೆರಿಕದ ನಡುವೆ ನಡೆಯಲಿರುವ ಮುಂದಿನ ಸುತ್ತಿನ ಮಾತುಕತೆಗೆ ಯಾವುದೇ ದಿನಾಂಕ ನಿಗದಿಯಾಗಿಲ್ಲ ಎಂದು ಇರಾನ್‍ನ ಸಹಾಯಕ ವಿದೇಶಾಂಗ ಸಚಿವರು ಶನಿವಾರ ಹೇಳಿದ್ದಾರೆ. ನಾವು ಈಗ ಎರಡು ಕಡೆಯ ನಡುವಿನ ತಿಳುವಳಿಕೆಯ ಚೌಕಟ್ಟನ್ನು ಅಂತಿಮಗೊಳಿಸುವತ್ತ ಗಮನ ಹರಿಸಿದ್ದೇವೆ. ಚೌಕಟ್ಟನ್ನು ಒಪ್ಪಿಕೊಳ್ಳುವವರೆಗೆ ದಿನಾಂಕವನ್ನು ನಿಗದಿಗೊಳಿಸಲು ಸಾಧ್ಯವಿಲ್ಲ. ಫಲಪ್ರದವಾಗುವ ನಿರೀಕ್ಷೆ ಇಲ್ಲದ ಮಾತುಕತೆಯಲ್ಲಿ ಪಾಲ್ಗೊಳ್ಳುವುದರಲ್ಲಿ ಅರ್ಥ ಇಲ್ಲ ಎಂದು ಇರಾನ್‍ನ ಸಹಾಯಕ ವಿದೇಶಾಂಗ ಸಚಿವ ಸಯೀದ್ ಖತೀಬ್‍ಜಾದೆ ಶನಿವಾರ ಹೇಳಿದ್ದಾರೆ. ಈ ಮಧ್ಯೆ, ಅಮೆರಿಕ ಮತ್ತು ಇರಾನ್ ನಡುವಿನ ಮತ್ತೊಂದು ಸುತ್ತಿನ ಮಾತುಕತೆ ಇಸ್ಲಮಾಬಾದ್‍ನಲ್ಲಿ ಎಪ್ರಿಲ್ 20ರಂದು ನಡೆಯುವ ನಿರೀಕ್ಷೆಯಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಸಿಎನ್‍ಎನ್ ಶನಿವಾರ ವರದಿ ಮಾಡಿದೆ. ಈಜಿಪ್ಟ್ ಮತ್ತು ತುರ್ಕಿಯೆ ಬೆಂಬಲದೊಂದಿಗೆ ಪಾಕಿಸ್ತಾನ ಮಾತುಕತೆಗೆ ಮಧ್ಯಸ್ಥಿಕೆ ವಹಿಸಲಿದ್ದು ಎರಡೂ ಕಡೆಯ ನಿಯೋಗವು ರವಿವಾರ ಪಾಕಿಸ್ತಾನಕ್ಕೆ ಆಗಮಿಸುವ ನಿರೀಕ್ಷೆಯಿದೆ ಎಂದು ವರದಿ ಹೇಳಿದೆ. ಅಮೆರಿಕ ಮತ್ತು ಇರಾನ್ ನಡುವಿನ ಅಂತಿಮ ಒಪ್ಪಂದ ಎರಡು ದಿನಗಳ ಒಳಗೆ ಅಂತಿಮಗೊಳ್ಳುವ ಸಾಧ್ಯತೆಯಿದೆ. ಎರಡೂ ದೇಶಗಳ ನಿಯೋಗಗಳು ವಾರಾಂತ್ಯದಲ್ಲಿ ಸಭೆ ಸೇರಿ ಯುದ್ಧವನ್ನು ಕೊನೆಗೊಳಿಸುವ ಒಪ್ಪಂದವನ್ನು ಅಂತಿಮಗೊಳಿಸುವ ನಿರೀಕ್ಷೆಯಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. `ಇರಾನಿಯನ್ನರು ಭೇಟಿಯಾಗಲು ಬಯಸುತ್ತಾರೆ. ಅವರು ಒಪ್ಪಂದ ಮಾಡಿಕೊಳ್ಳಲು ಅತ್ಯಂತ ಉತ್ಸುಕರಾಗಿದ್ದಾರೆ. ಶೀಘ್ರ ಒಪ್ಪಂದ ಅಂತಿಮಗೊಳ್ಳುವ ನಿರೀಕ್ಷೆಯಿದೆ' ಎಂದು ಟ್ರಂಪ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ.

ವಾರ್ತಾ ಭಾರತಿ 18 Apr 2026 10:11 pm

ವಿಬಿ- ಜಿ ರಾಮ್‌ಜಿಯಡಿ ಸದ್ಯಕ್ಕಿಲ್ಲ ಹೊಸ ಕಾಮಗಾರಿ: ಕೆಡಿಪಿ ಸಭೆಯಲ್ಲಿ ಜನಪ್ರತಿನಿಧಿಗಳು - ಅಧಿಕಾರಿಗಳ ಚರ್ಚೆ

ಮಂಗಳೂರು: ವಿಬಿ- ಜಿ ರಾಮ್ ಜಿ (ವಿಕಾಸ್ ಭಾರತ್- ಜಿ ರಾಮ್ ಜಿ ) ಯಾಗಿ ಪುನರ್ ನಾಮಕರಣ ಗೊಂಡಿರುವ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ (ಎಂ ನರೇಗಾ)ದಡಿ ಹೊಸ ಕಾಮಗಾರಿ ಗಳಿಗೆ ಇನ್ನೂ ಅನುಮೋದನೆ ದೊರಕಿಲ್ಲ. ಕೇಂದ್ರದಿಂದ ಅಧಿಕೃತ ಅಧಿಸೂಚನೆ ಬಂದಿಲ್ಲ. ಹಾಗಾಗಿ ಕಳೆದ ವರ್ಷದಲ್ಲಿ ಅನುಮೋದನೆಗೊಂಡಿರುವ ಕೆಲಸ ಕಾರ್ಯಗಳು ಮುಂದಿನ ಆರು ತಿಂಗಳವರೆಗೆ ಮುಂದುವರಿಸಲು ಅವಕಾಶ ನೀಡಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ. ದ.ಕ. ಜಿಲ್ಲಾ ಪಂಚಾಯತ್‌ನ ನೇತ್ರಾವತಿ ಸಭಾಂಗಣದಲ್ಲಿ ಶನಿವಾರ ನಡೆದ ತ್ರೈ ಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ವಿಬಿ- ಜಿ ರಾಮ್ ಜಿ ಕುರಿತಾದ ಚರ್ಚೆಯ ವೇಳೆ ಈ ಪ್ರತಿಕ್ರಿಯೆ ನೀಡಿದರು. ವಿಬಿ- ಜಿ ರಾಮ್ ಜಿ (ವಿಕಾಸ್ ಭಾರತ್- ಜಿ ರಾಮ್ ಜಿ ) ಯೋಜನೆಗೆ ಕೇಂದ್ರ ಸಂಸಸ್ತು ಹಾಗೂ ರಾಷ್ಟ್ರಪತಿಗಳ ಅನುಮೋದನೆ ದೊರಕಿದೆ. ಆದರೆ ಯಾವುದೇ ರಾಜ್ಯಗಳಿಗೆ ಅಧಿಸೂಚನೆ ಬಂದಿಲ್ಲ. ಹಾಗಾಗಿ ಆರು ತಿಂಗಳ ಅವಧಿಗೆ ಹಿಂದಿನ ಅವಧಿಯಲ್ಲಿ ಅನುಮೋದನೆ ದೊರಕಿರುವ ಯೋಜನೆಗಳು ಮುಂದುವರಿಯಲಿವೆ. ಎಪ್ರಿಲ್‌ ತಿಂಗಳಿಗೆ ರಾಜ್ಯದಲ್ಲಿ 1.30 ಕೋಟಿ ಮಾನವ ದಿನಗಳ ಗುರಿ ನಿಗದಿಪಡಿಸಲಾಗಿದೆ. ಕೇಂದ್ರದ ಯುಕ್ತಧಾರಾ ಪೋರ್ಟಲ್‌ನಲ್ಲಿ ಪ್ರತಿ ವರ್ಷದ ಕ್ರಿಯಾಯೋಜನೆಯನ್ನು ನೀಡಲಾಗುತ್ತದೆ ಎಂದು ಸಭೆಯಲ್ಲಿ ಉಪಸ್ಥಿತರಿದ್ದ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಯೂ ಆಗಿರುವ ಸಮೀರ್ ಶುಕ್ಲಾ ಮಾಹಿತಿ ನೀಡಿದರು. ಬೆಳ್ತಂಗಡಿಯಲ್ಲಿ 94 ಸಿಯಡಿ 419 ಅರ್ಜಿಗಳು ಬಾಕಿ! ದ.ಕ. ಜಿಲ್ಲೆಯಲ್ಲಿ ಮೂಡಬಿದ್ರೆ, ಕಡಬ ಹೊರತುಪಡಿಸಿ ಉಳಿದೆಲ್ಲಾ ತಾಲೂಕುಗಳಲ್ಲಿ ಬಾಕಿ ಇರುವ ಅರ್ಜಿಗಳ ಸಂಖ್ಯೆ ಶೂನ್ಯ. 94 ಸಿ (ಗ್ರಾಮಾಂತರ) ಪ್ರದೇಶಗಳಲ್ಲಿ ಬೆಳ್ತಂಗಡಿಯಲ್ಲಿ 419 ಅರ್ಜಿಗಳು ವಿಲೇಗಾಗಿ ಬಾಕಿ ಉಳಿದಿವೆ. ಬೆಳ್ತಂಗಡಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬಾಕಿ ಇರುವ ಅರ್ಜಿಗಳು ಯಾವಾಗ ಇತ್ಯರ್ಥವಾಗುವುದು ಎಂದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಸಭೆಯಲ್ಲಿ ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. 2025ರ ಅಕ್ಟೋಬರ್ ಅಂತ್ಯಕ್ಕೆ ದ.ಕ. ಜಿಲ್ಲೆಯಲ್ಲಿ 2041 ಅರ್ಜಿಗಳು 94 ಸಿಯಡಿ ವಿಲೇಗೆ ಬಾಕಿ ಇದ್ದು, ಭಾಗಶ: ಅರಣ್ಯ ಇರುವ ಅರ್ಜಿಗಳನ್ನು ಹೊರತುಪಡಿಸಿ ಎಲ್ಲಾ ಅಜಿರ್ಇಗಳನ್ನು ಡಿಸೆಂಬರ್ ಒಳಗೆ ವಿಲೇಪಡಿಸಲು ತಹಶೀಲ್ದಾರರಿಗೆ ನಿರ್ದೇಶನ ನೀಡಲಾಗಿತ್ತು. ಅದರಂತೆ ಮೂಡಬಿದ್ರೆಯಲ್ಲಿ 43, ಕಡಬದಲ್ಲಿ 20 ಹಾಗೂ ಬೆಳ್ತಂಗಡಿಯಲ್ಲಿ 419 ಅರ್ಜಿಗಳು ವಿಲೇಗೆ ಬಾಕಿ ಇವೆ. ಬಾಕಿ ರುವ ಪ್ರಕರಣಗಳಲ್ಲಿ 480 ಅರಣ್ಯ ಅಭಿಪ್ರಾಯದಿಂದ ಬಾಕಿಯಾಗಿದ್ದು, ಬೆಳ್ತಂಗಡಿಯ 2 ಅರ್ಜಿಗಳು ತಕರಾರು ಆಕ್ಷೇಪದಿಂದ ಬಾಕಿಯಾಗಿವೆ ಎಂದರು. ಮಂದಿನ ಕೆಡಿಪಿ ಸಭೆಯೊಳಗೆ ಎಲ್ಲಾ ಅರ್ಜಿಗಳನ್ನು ವಿಲೇ ಮಾಡಿ ಶೂನ್ಯ ಬಾಕಿ ಆಗುವಂತೆ ಕ್ರಮ ವಹಿಸಿ ಎಂದು ಉಸ್ತುವಾರಿ ಸಚಿವರು ನಿರ್ದೇಶನ ನೀಡಿದರು. ನಗರ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ಏಕ ನಿವೇಶನ ಅನುಮೋದನೆ ಮಡುವಾಗ ಸಮಸ್ಯೆಯಾಗುತ್ತಿದೆ. ಮನೆ ನಿರ್ಮಾಣ ಪ್ರಕ್ರಿಯೆಗಳಿಗೆ ವರ್ಷಾನುಗಟ್ಟಲೆ ಸಮಯವಾಗುತ್ತಿದೆ ಎಂದು ನಾಮನಿರ್ದೇಶಿತ ಸದಸ್ಯ ಹಮೀದ್ ಕಿನ್ಯಾ ಬೇಸರ ವ್ಯಕ್ತಪಡಿಸಿದರು. ಕುಡಿಯುವ ನೀರು, ಪ್ರಾಕೃತಿಕ ವಿಕೋಪ- ಸನ್ನದ್ಧರಾಗಲು ಸೂಚನೆ ಬೇಸಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಹೋಗಲಾಡಿಸುವಿಕೆ ಹಾಗೂ ಮಳೆಗಾಲದ ಪ್ರಾಕೃತಿಕ ವಿಕೋಪ ತಡೆ ಗಟ್ಟುವ ನಿಟ್ಟಿನಲ್ಲಿ ಸೂಕ್ತ ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರು ಜಿಲ್ಲಾಡಳಿತಕ್ಕೆ ನಿರ್ದೇಶನ ನೀಡಿದರು. ಬೇಸಗೆಯ ನೀರಿನ ಬರ ಹಾಗೂ ಮಳೆಗಾಲದ ಪ್ರಾಕೃತಿಕ ಅವಘಡಗಳನ್ನು ಎದುರಿಸಲು ಜಿಲ್ಲಾಡಳಿತ ಕೈಗೊಂಡ ಸಿದ್ಧತೆ ಕುರಿತು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ ಮಾಹಿತಿ ಕೋರಿದಾಗ, ಜಿಲ್ಲಾಧಿಕಾರಿ ದರ್ಶನ್ ವಿವರ ನೀಡಿದರು. ಜನವರಿಯಲ್ಲೇ ಜಿ.ಪಂ. ಸಿಇಒ ಜೊತೆ ಎಲ್ಲ ತಾಲೂಕು ಮಟ್ಟದ ಅಧಿಕಾರಿಗಳ ಸಭೆ ನಡೆಸಲಾಗಿದೆ. ಕುಡಿವ ನೀರಿನ ಅಭಾವ ಇರುವ ಪ್ರದೇಶಗಳ ಪಟ್ಟಿಯನ್ನು ತರಿಸಿಕೊಂಡು ಕೈಗೊಳ್ಳಬೇಕಾದ ಕ್ರಮಗಳ ಕುರಿತಂತೆ ನಿರ್ದೇಶನ ನೀಡಲಾಗಿದೆ. ಕುಡಿವ ನೀರಿನ ಹಾಗೂ ಪ್ರಾಕೃತಿಕ ತೊಂದರೆ ನಿವಾರಣೆಗೆ ಆಯಾ ಸ್ಥಳೀಯ ಆಡಳಿತಗಳಿಗೆ ಸೂಕ್ತ ಕ್ರಮ ಕೈಗೊಳ್ಳುವ ಅಧಿಕಾರ ನೀಡಲಾಗಿದೆ ಎಂದರು. ಈಗಾಗಲೇ ಖಾಸಗಿ ಕೊಳವೆಬಾವಿಗಳನ್ನು ಗುರುತಿಸಲಾಗಿದ್ದು, ಅನಿವಾರ್ಯವಾದರೆ ಅವುಗಳನ್ನು ಬಳಸಿಕೊಳ್ಳಲು ನಿರ್ಧರಿಸಲಾಗಿದೆ. ಅತ್ಯಧಿಕ ಉಷ್ಣಾಂಶ, ಗುಡುಗು, ಸಿಡಿಲು, ಮಳೆ ಮುಂತಾದ ಪ್ರಾಕೃತಿಕ ತೊಂದರೆಗಳನ್ನು ಎದುರಿಸಲು ಆರೋಗ್ಯ ಕೇಂದ್ರಗಳನ್ನೂ ಸನ್ನದ್ಧ ಸ್ಥಿತಿಯಲ್ಲಿ ಇರಿಸಲಾಗಿದೆ. ಭೂಕುಸಿತ ತಡೆಗೆ ಕ್ರಮಕ್ಕೆ ಗ್ರಾಮೀಣ ಪ್ರದೇಶಗಳಿಗೆ 25 ಕೋಟಿ ರು.ಗಳಲ್ಲಿ ಕಾಮಗಾರಿಗೆ ಟೆಂಡರ್ ಪೂರ್ಣಗೊಂಡಿದೆ. ಮಹಾನಗರ ಪಾಲಿಕೆ ವ್ಯಾಪ್ತಿಗೆ 3.50 ಕೋಟಿ ರು. ಬಿಡುಗಡೆಯಾಗಿದ್ದು, ಚರಂಡಿಗಳ ಹೂಳೆತ್ತುವ ಕಾಮಗಾರಿಯೂ ಆರಂಭಗೊಂಡಿದೆ. ಪಾಲಿಕೆಯ 8 ಕಡೆಗಳಲ್ಲಿ ಕೃತಕ ನೆರೆ ಪೀಡಿತ ಪ್ರದೇಶಗಳಲ್ಲಿ ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ ಎಂದರು. ಮಂಗಳೂರು ಮಹಾನಗರಕ್ಕೆ ನೀರು ಪೂರೈಸುವ ತುಂಬೆ ಡ್ಯಾಂನಲ್ಲಿ ನೀರಿನ ಸಂಗ್ರಹ ಇದ್ದು, ಸದ್ಯದ ಮಟ್ಟಿಗೆ ನೀರಿನ ಕೊರತೆ ಇಲ್ಲ. ಜೂ. 15ರ ವರೆಗೆ ಸಾಕಾಗುವಷ್ಟು ನೀರಿನ ಸಂಗ್ರಹ ಇದೆ. ತುಂಬೆ ಡ್ಯಾಂ ಅಲ್ಲದೆ, ಎಎಂಆರ್, ಹರೇಕಳ ಡ್ಯಾಂನಿಂದಲೂ ನೀರು ಪಡೆಯಲಾಗುವುದು. ಪ್ರಸಕ್ತ ನೀರಿನ ಒಳ ಹರಿವು ಇದ್ದು, ಮೇ ಕೊನೆ ವಾರದಲ್ಲಿ ಅವಶ್ಯವಾದರೆ ಸಾರ್ವಜನಿಕರಿಗೆ ಮುಂಚಿತವಾಗಿ ಮಾಹಿತಿ ನೀಡಿ ನೀರಿನ ರೇಶನಿಂಗ್ ಮಾಡಲಾಗು ವುದು ಎಂದು ಜಿಲ್ಲಾಧಿಕಾರಿ ದರ್ಶನ್ ತಿಳಿಸಿದರು. ಗ್ರಾಮೀಣ ಭಾಗದ ಉಳ್ಳಾಲದಲ್ಲಿ ನಾಲ್ಕು ಗ್ರಾಮ ಪಂಚಾಯ್ತಿಗಳಲ್ಲಿ ಟ್ಯಾಂಕರ್‌ನಲ್ಲಿ ಕುಡಿವ ನೀರು ಪೂರೈಸಲಾ ಗುತ್ತಿದೆ. ಕೊಳವೆಬಾವಿಯಲ್ಲಿ ನೀರಿನ ಕೊರತೆ ಉಂಟಾದರೆ ಶಾಸಕರ ಅಧ್ಯಕ್ಷತೆಯ ಟಾಸ್ಕ್‌ಫೋರ್ಸ್ ಸಮಿತಿಯ ಅನುಮೋದನೆ ಪಡೆದು ಕಾಮಗಾರಿ ನಡೆಸಬೇಕಾಗುತ್ತದೆ. ಬಹುಗ್ರಾಮ ಕುಡಿವ ನೀರು ಹಾಗೂ ಸಿಂಗಲ್ ವಿಲೇಜ್ ಯೋಜನೆಯಡಿ ಸಾಧ್ಯವಾದಷ್ಟು ಮಟ್ಟಿಗೆ ಕುಡಿವ ನೀರಿನ ಅಭಾವ ನೀಗಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಜಿ.ಪಂ. ಸಿಇಒ ವಿನಾಯಕ ನರ್ವಾಡೆ ತಿಳಿಸಿದರು. ಸಭೆಯಲ್ಲಿ ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಉಪಾಧ್ಯಕ್ಷೆ ಪುಷ್ಪಾ ಅಮರನಾಥ್, ಜಿ.ಪಂ. ಸಿಇಒ ನರ್ವಾಡೆ ವಿನಾಯಕ ಕರ್ಬಾರಿ, ಉಪ ಅರಣ್ಯ ಸಂರಕ್ಷಣಾಧಿಕಾರಿ ರವಿಶಂಕರ್, ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ, ಪೊಲೀಸ್ ವರಿಷ್ಠಾಧಿಕಾರಿ ಡಾ. ಅರುಣ್ ಕುಮಾರ್ ಉಪಸ್ಥಿತರಿದ್ದರು. ಗುರುವಾಯನಕೆರೆಗೆ ಖಾಸಗಿ ಶಿಕ್ಷಣ ಸಂಸ್ಥೆಯ ಕೊಳಚೆ ನೀರು: ಸೂಕ್ತ ಕ್ರಮಕ್ಕೆ ನಿರ್ದೇಶನ ಬೆಳ್ತಂಗಡಿಯ ಗುರುವಾಯನಕೆರೆಗೆ ಖಾಸಗಿ ಶಿಕ್ಷಣ ಸಂಸ್ಥೆಯ ಶುದ್ಧೀಕರಿಸದ ಕೊಳಚೆ ನೀರು ಸೇರಿ ಮಲಿನವಾಗಿರುವ ಪ್ರಕರಣಕ್ಕೆ ಸಂಬಂಧಿಸಿ ಸಂಸ್ಥೆಯ ವಿರುದ್ಧ ಕ್ರಮ ವಹಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಮಾಲಿನ್ಯ ನಿಯಂತ್ರಣ ಮಂಡಳಿ ಸೇರಿದಂತೆ ಸಂಬಂಧಪಟ್ಟ ಇಲಾಖಾ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ದ.ಕ. ಜಿಲ್ಲಾ ಪಂಚಾಯತ್‌ನ ನೇತ್ರಾವತಿ ಸಭಾಂಗಣದಲ್ಲಿ ಶನಿವಾರ ನಡೆದ ಕೆಡಿಪಿ ಸಭೆಯಲ್ಲಿ ಶಾಸಕ ಹರೀಶ್ ಪೂಂಜಾ ಪ್ರಸ್ತಾವಿಸಿದ ವಿಷಯದ ಮೇರೆಗೆ ಅವರು ಈ ನಿರ್ದೇಶನ ನೀಡಿದರು. ನದಿಗೆ ಯಾವುದೇ ರೀತಿಯಲ್ಲಿ ಕೊಳಚೆ ನೀರು ಹರಿಯದಂತೆ ಮತ್ತು ನದಿ ನೀರು ಮಾಲಿನ್ಯವಾಗದಂತೆ ಕ್ರಮ ವಹಿಸಬೇಕು. ಮಾತ್ರವಲ್ಲದೆ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಮತ್ತೆ ಭೇಟಿ ನೀಡಿ ನದಿಗೆ ಕೊಳಚೆ ನೀರು ಮತ್ತೆ ಸೇರುತ್ತಿರುವುದೇ ಎಂಬುದನ್ನು ಪರಿಶೀಲಿಸಬೇಕು ಎಂದು ತಿಳಿಸಿದರು. ಗುರುವಾಯನಕೆರೆಯ ಸಮೀಪದಲ್ಲಿ ಕಾರ್ಯಾಚರಿಸುತ್ತಿರುವ ಖಾಸಗಿ ಶಿಕ್ಷಣ ಸಂಸ್ಥೆಯ ಕೊಳಚೆ ನೀರು ನದಿಗೆ ಸೇರಿ ಈಗಾಗಲೇ ಅಲ್ಲಿ ಮೀನುಗಳು ಸತ್ತಿವೆ ಎಂದು ವಿಷಯ ಪ್ರಸ್ತಾವಿಸಿದ ಶಾಸಕ ಹರೀಶ್ ಪೂಂಜಾ ಹೇಳಿದರು. ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿಯ ಮಂಗಳೂರು ಪ್ರಾದೇಶಿಕ ಅಧಿಕಾರಿ ಮಾಹಿತಿ ನೀಡಿ, ನದಿ ಮಾಲಿನಯದ ಬಗ್ಗೆ ಪರಿಶೀಲನೆ ನಡೆಸಿ ಈಗಾಗಲೇ ರಾಜ್ಯ ಮಂಡಳಿಗೆ ವರದಿ ನೀಡಲಾಗಿದೆ. ಸಂಸ್ಥೆಯು ಕೊಳಚೆ ನೀರು ಶುದ್ಧೀಕರಣ ಘಟಕ (ಎಸ್‌ಟಿಪಿ) ನಿರ್ಮಾಣ ಮಾಡದೆ ಅದನ್ನು ನದಿಗೆ ಬಿಟ್ಟಿರುವ ಕಾರಣ ಮೀನುಗಳು ಸತ್ತಿರುವುದು ದೃಢಪಟ್ಟಿದೆ. ಸಂಸ್ಥೆಯಲ್ಲಿ 3500 ಮಂದಿ ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದು, ಅದಕ್ಕೆ ಪೂರಕವಾಗಿ ಎಸ್‌ಟಿಪಿ ನಿರ್ಮಾಣ ಮಾಡದೆ ಇರುವುದು ಇದಕ್ಕೆ ಕಾರಣವಾಗಿದೆ. ಈ ನಿಟ್ಟಿನಲ್ಲಿ ಸಂಸ್ಥೆಯನ್ನು ಮುಚ್ಚುವಂತೆ ಕೋರಿ ರಾಜ್ಯ ಮಂಡಳಿಗೆ ಸಲ್ಲಿಸಿರುವ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಸಂಸ್ಥೆಯ ವಿರುದ್ಧ ಅಗತ್ಯ ಕ್ರಮಕ್ಕೆ ಶಿಫಾರಸು ಮಾಡಿ ಬೆಳ್ತಂಗಡಿ ತಹಶೀಲ್ದಾರ್, ತಾ.ಪಂ ಕಾರ್ಯನಿರ್ವಹಣಾಧಿಕಾರಿ ಹಾಗೂ ಪಿಡಿಒಗೆ ಪತ್ರ ಬರೆಯಲಾಗಿದೆ. ಈಗಾಗಲೇ ಆಗಿರುವ ಮಾಲಿನ್ಯಕ್ಕೆ ಸಂಸ್ಥೆಗೆ 1.09 ಕೋಟಿ ರೂ. ಪರಿಹಾರ ನೀಡುವಂತೆ ಹಾಗೂ ಕ್ರಿಮಿನಲ್ ಪ್ರಕರಣ ದಾಖಲಿಸುವ ಕುರಿತಂತೆ ಮಾಲಿನ್ಯ ನಿಯಂತ್ರಣ ರಾಜ್ಯ ಮಂಡಳಿಗೆ ಸಲ್ಲಿಸಿರುವ ವರದಿಯಲ್ಲಿ ಶಿಫಾರಸು ಮಾಡಲಾಗಿದೆ. ಆಡಳಿತಾತ್ಮಕ ಅನುಮೋದನೆ ದೊರೆತಾಗ ಸಂಸ್ಥೆಯ ವಿರುದ್ಧ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು. ಮಾಹಿತಿ ಪ್ರಕಾರ ಈಗಾಗಲೇ ಸಂಸ್ಥೆಯು ಹೊಸ ಎಸ್‌ಟಿಪಿ ನಿರ್ಮಾಣಕ್ಕೆ ಒಪ್ಪಿಕೊಂಡಿರುವುದಾಗಿ ಮಾಹಿತಿ ಇದೆ ಎಂದು ಮಾಲಿನ್ಯ ನಿಯಂತ್ರಣಾಧಿಕಾರಿ ಸಭೆಯಲ್ಲಿ ತಿಳಿಸಿದರು. ಇದು ಗಂಭೀರ ವಿಚಾರವಾಗಿದ್ದು ಜಲಮೂಲಗಳಿಗೆ ಕೊಳಚೆ ನೀರು ಹರಿಯದಂತೆ ಕ್ರಮವನ್ನು ವಹಿಸದೆ ಇರುವುದು ತಪ್ಪು. ಸಂಸ್ಥೆಗೆ ಪರಿಹಾರವಾಗಿ ನೀಡಲು ಆದೇಶಿಸಿರುವ ಮೊತ್ತವನ್ನು ಭರಿಸಿಕೊಂಡು ರಾಜ್ಯ ಮಂಡಳಿಯ ನಿರ್ದೇಶನದಂತೆ ಮುಂದಿನ ಕ್ರಮ ವಹಿಸಲು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಸೂಚಿಸಿದರು. ಧರ್ಮಸ್ಥಳ ಗ್ರಾಮ ಪಂಚಾಯತ್ ವ್ಯಾಪ್ತಿಯ ಜೋಡುಸ್ತಾನ ಎಂಬಲ್ಲಿ ಆಶ್ರಯ ಯೋಜನೆಯಡಿ ಒತ್ತುವರಿಯಾಗಿರುವ ಜಮೀನಿಗೆ ಸಂಬಂಧಿಸಿ ಸಮೀಕ್ಷೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಸಭೆಯಲ್ಲಿ ನಿರ್ದೇಶಿಸಿದರು.

ವಾರ್ತಾ ಭಾರತಿ 18 Apr 2026 9:56 pm

ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ 5.70 ಕೆ.ಜಿ. ಹೈಡ್ರೋಪೋನಿಕ್ ಗಾಂಜಾ ವಶ: ಆರೋಪಿಯ ಬಂಧನ

ಬೆಂಗಳೂರು: ದೇವನಹಳ್ಳಿಯಲ್ಲಿರುವ ಕೆಂಪೇಗೌಡ ವಿಮಾನ ನಿಲ್ದಾಣದ ಟರ್ಮಿನಲ್-2ರಲ್ಲಿ ಪ್ರಯಾಣಿಕನೊಬ್ಬನ ಲಗೇಜ್‍ನಲ್ಲಿ ಬಚ್ಚಿಟ್ಟಿದ್ದ 1.99 ಕೋಟಿ ಮೌಲ್ಯದ 5.70 ಕೆ.ಜಿ. ಹೈಡ್ರೋಪೋನಿಕ್ ಗಾಂಜಾವನ್ನು ಕಸ್ಟಮ್ಸ್ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಎ.18ರಂದು ಬ್ಯಾಂಕಾಕ್‍ನಿಂದ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ ಪ್ರಯಾಣಿಕನನ್ನು ತಪಾಸಣೆ ಘಟಕದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಪರಿಶೀಲನೆ ನಡೆಸಿದಾಗ ಲಗೇಜ್‍ನಲ್ಲಿ ಬಚ್ಚಿಟ್ಟಿದ್ದ 1.99 ಕೋಟಿ ಮೌಲ್ಯದ 5.70 ಕೆ.ಜಿ. ಹೈಡ್ರೋಪೋನಿಕ್ ಗಾಂಜಾ ಪತ್ತೆಯಾಗಿದೆ. ಸದ್ಯ, ಆರೋಪಿಯನ್ನು ಬಂಧಿಸಿ ಮಾಲನ್ನು ವಶಕ್ಕೆ ಪಡೆದುಕೊಳ್ಳಲಾಗಿದ್ದು, ಈ ಸಂಬಂಧ ಕೆಂಪೇಗೌಡ ವಿಮಾನ ನಿಲ್ದಾಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಕಸ್ಟಮ್ಸ್ ಅಧಿಕಾರಿಗಳು ತಿಳಿಸಿದ್ದಾರೆ.

ವಾರ್ತಾ ಭಾರತಿ 18 Apr 2026 9:49 pm

ಮಕ್ಕಳು ಬರೆದ ತಂದೆ - ತಾಯಿಯ ನೆನಪುಗಳ ಅತ್ಯುತ್ತಮ ಸಾಹಿತ್ಯ ಕೃತಿ: ಪ್ರೊ. ಬಿ.ಎ.ವಿವೇಕ ರೈ

‘ಕಾರಂತರ ಸುಳಿಯಲ್ಲಿ’ ಅನುವಾದಿತ ಕೃತಿ ಲೋಕಾರ್ಪಣೆ

ವಾರ್ತಾ ಭಾರತಿ 18 Apr 2026 9:39 pm

ಕಾಂಗ್ರೆಸ್ ಪಕ್ಷ ಎಂದಿಗೂ ಮುಸ್ಲಿಮರನ್ನು ಕೈ ಬಿಟ್ಟಿಲ್ಲ: ಶಾಸಕ ಎನ್.ಎ. ಹಾರಿಸ್

ಬೆಂಗಳೂರು: ಕಾಂಗ್ರೆಸ್ ಪಕ್ಷ ಎಂದಿಗೂ ಮುಸ್ಲಿಮರನ್ನು ಕೈ ಬಿಟ್ಟಿಲ್ಲ. ಚುನಾವಣೆಯಲ್ಲಿ ಸ್ಪರ್ಧಿಸಲು ನಮಗೆ ಟಿಕೆಟ್ ಕೊಡಿ ಎಂದು ಕೇಳುವುದು ನಮ್ಮ ಹಕ್ಕು. ಆದರೆ, ಯಾರಿಗೆ ಟಿಕೆಟ್ ಕೊಡಬೇಕು, ಯಾರಿಗೆ ಬೇಡ ಎಂದು ತೀರ್ಮಾನ ಮಾಡುವುದು ಪಕ್ಷಕ್ಕೆ ಬಿಟ್ಟ ವಿಚಾರ ಎಂದು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಹಾಗೂ ಶಾಸಕ ಎನ್.ಎ.ಹಾರಿಸ್ ತಿಳಿಸಿದರು. ಶನಿವಾರ ನಗರದಲ್ಲಿರುವ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಧಾನಪರಿಷತ್ ಸದಸ್ಯ ಅಬ್ದುಲ್ ಜಬ್ಬಾರ್ ಅವರನ್ನು ಕಾಂಗ್ರೆಸ್ ಪ್ರಾಥಮಿಕ ಸದಸ್ಯತ್ವದಿಂದ ವಜಾಗೊಳಿಸಿರುವುದು ಹಾಗೂ ಮುಖ್ಯಮಂತ್ರಿಯ ರಾಜಕೀಯ ಕಾರ್ಯದರ್ಶಿ ಹುದ್ದೆಯಿಂದ ನಸೀರ್ ಅಹ್ಮದ್ ಅವರನ್ನು ಬಿಡುಗಡೆ ಮಾಡಿರುವ ಕುರಿತು ಈ ಮೇಲಿನಂತೆ ಪ್ರತಿಕ್ರಿಯಿಸಿದರು. ಉಲಮಾಗಳು ರಾಜ್ಯದಲ್ಲಿನ ಪ್ರಸಕ್ತ ರಾಜಕೀಯ ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳಬೇಕು. ಏನೇ ಸಮಸ್ಯೆಗಳಿದ್ದರೂ ಅದನ್ನು ನಾಲ್ಕು ಗೋಡೆಗಳ ನಡುವೆ ಕೂತು ಮಾತುಕತೆಯ ಮೂಲಕ ಬಗೆಹರಿಸಿಕೊಳ್ಳಬೇಕು. ಮುಖ್ಯಮಂತ್ರಿ, ಕೆಪಿಸಿಸಿ ಅಧ್ಯಕ್ಷ ಹಾಗೂ ರಾಜ್ಯ ಉಸ್ತುವಾರಿ ಜೊತೆ ಮಾತುಕತೆ ನಡೆಸುವುದಾದರೆ ಅದಕ್ಕೆ ನಾವೆ ವ್ಯವಸ್ಥೆ ಮಾಡುತ್ತೇವೆ ಎಂದು ಅವರು ತಿಳಿಸಿದರು. ದಾವಣಗೆರೆ ಜಿಲ್ಲೆಯಲ್ಲಿ ಹಿರಿಯ ನಾಯಕರ ಪೈಕಿ ಅಬ್ದುಲ್ ಜಬ್ಬಾರ್ ಕೂಡ ಒಬ್ಬರು. ಉಪ ಚುನಾವಣೆಯಲ್ಲಿ ಸ್ಪರ್ಧಿಸಲು ಅವರು ಟಿಕೆಟ್ ಕೇಳಿದ್ದರು. ಆದರೆ, ಈಗಾಗಲೆ ಅವರು ಹಾಲಿ ವಿಧಾನಪರಿಷತ್ ಸದಸ್ಯರಾಗಿದ್ದಾರೆ. ಅವರು ಟಿಕೆಟ್ ಕೇಳುವುದರಲ್ಲಿ ತಪ್ಪೇನು ಇಲ್ಲ. ಆದರೆ, ಟಿಕೆಟ್ ಬೇರೆಯವರಿಗೆ ಘೋಷಣೆಯಾದ ನಂತರ ಏನೆಲ್ಲ ಬೆಳವಣಿಗೆ ಆಯಿತು ಎಂದು ಗಮನಿಸಬೇಕು ಎಂದು ಹಾರಿಸ್ ಹೇಳಿದರು. ಮುಸ್ಲಿಮರಿಗೆ ಈ ಬಾರಿ ಟಿಕೆಟ್ ಕೊಡುವಂತೆ ನಾವು ಕೇಳಿದೆವು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲರೂ ಒಂದಾಗಿ ಹೋಗಬೇಕು. ಅಬ್ದುಲ್ ಜಬ್ಬಾರ್ ವಿರುದ್ಧ ಕೈಗೊಂಡ ಕ್ರಮ ಇಡೀ ಸಮುದಾಯದ ವಿರುದ್ಧದ ಕ್ರಮ ಅಲ್ಲ. ಯಾರು ತಪ್ಪು ಮಾಡಿದ್ದಾರೋ ಅವರ ವಿರುದ್ಧ ಕ್ರಮ ಕೈಗೊಂಡಿದ್ದಾರೆ. ಅಲ್ಪಸಂಖ್ಯಾತ ಸಮುದಾಯದ ಎಲ್ಲರ ಮೇಲೂ ಕ್ರಮ ಕೈಗೊಂಡಿದ್ದಾರಾ? ಇಲ್ಲವಲ್ಲ ಎಂದು ಅವರು ತಿಳಿಸಿದರು. ನಸೀರ್ ಅಹ್ಮದ್ ಅವರು ಮುಖ್ಯಮಂತ್ರಿಯ ರಾಜಕೀಯ ಕಾರ್ಯದರ್ಶಿಯಾಗಿದ್ದರು. ಸಿದ್ದರಾಮಯ್ಯನವರ ಆಪ್ತರಾಗಿದ್ದಾರೆ. ಯಾವ ಕಾರಣಕ್ಕಾಗಿ ನಸೀರ್ ಅಹ್ಮದ್ ವಿರುದ್ಧ ಕ್ರಮ ಕೈಗೊಳ್ಳಲಾಯಿತು ಎಂದು ಗೊತ್ತಿಲ್ಲ. ಹಿಂದಿನ ಸರಕಾರದ ಅವಧಿಯಲ್ಲಿ ಅಝಾನ್, ಹಲಾಲ್, ಹಿಜಾಬ್, ಶಾಲೆ, ಕಾಲೇಜು, ಮದ್ರಸಾದ ವಿಚಾರಗಳಲ್ಲಿ ಏನೆಲ್ಲ ಬೆಳವಣಿಗೆ ಆಯಿತು ಎಂಬುದನ್ನು ನಾವು ಮರೆಯಬಾರದು ಎಂದು ಹಾರಿಸ್ ಹೇಳಿದರು. ನಮ್ಮ ಮೀಸಲಾತಿಯನ್ನೇ ಕಸಿದು ಬೇರೆ ಸಮುದಾಯಗಳಿಗೆ ಹಂಚಿದ್ದರು. ಈ ವಿಚಾರ ಈಗ ನ್ಯಾಯಾಲಯದಲ್ಲಿದೆ. ಆದಷ್ಟು ಬೇಗ ಈ ಸಮಸ್ಯೆಯನ್ನು ಬಗೆಹರಿಸಿ, ನಮ್ಮ ಮೀಸಲಾತಿ ನಮಗೆ ಸಿಗುವಂತೆ ಮಾಡಲು ಸರಕಾರ ಕ್ರಮ ಕೈಗೊಳ್ಳಲಿದೆ. ಈ ಸಂಬಂಧ ನಾವೆಲ್ಲ ಸೇರಿ ಒತ್ತಡ ಹಾಕುತ್ತಿದ್ದೇವೆ ಎಂದು ಹಾರಿಸ್ ತಿಳಿಸಿದರು.

ವಾರ್ತಾ ಭಾರತಿ 18 Apr 2026 9:38 pm

ಸಿಂಗಾಪುರದ ಕಂಪೆನಿಯಿಂದ ಮಣಿಪಾಲದ ಕಂಪೆನಿಗೆ 33 ಕೋಟಿ ರೂ. ವಂಚನೆ: ಪ್ರಕರಣ ದಾಖಲು

ಮಣಿಪಾಲ, ಎ.18: ಸಿಂಗಾಪುರದ ಕಂಪೆನಿಯೊಂದು ಮಣಿಪಾಲ ಕಂಪೆನಿಗೆ 33 ಕೋಟಿ ರೂ. ಹಣ ವಂಚಿಸಿರುವ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದೀಲಿಪ್ ಆರ್.ಅಡಿಗ (35) ಎಂಬವರು ಮಣಿಪಾಲ ಲಕ್ಷ್ಮೀಂದ್ರ ನಗರದಲ್ಲಿ ಎಮ್.ಎನ್.ಶೆಟ್ಟಿ ಟೆಕ್ನಾಲಜಿ ಪ್ರವೈಟ್ ಲಿಮಿಟೆಡ್ ಕಂಪೆನಿಯನ್ನು ನಡೆಸಿಕೊಂಡಿದ್ದರು. ಸಿಂಗಾಪುರ ಕಂಪೆನಿಯೊಂದರ ಸಿಇಓ ಆನಂದರಾವ್ ಎಂಬವರು ದೀಲಿಪ್ ಗೆ ಕರೆ ಮಾಡಿ ಕಂಪನಿಯಲ್ಲಿ ತಯಾರಾಗುವ ಸಿಎಂಎಸ್ ಪ್ರೋಡೆಕ್ಟ್‌ನ್ನು ಪಡೆದುಕೊಳ್ಳುವ ಬಗ್ಗೆ ಮಾತುಕತೆ ನಡೆಸಿದ್ದರು. ದೀಲಿಪ್ ಹೇಳಿದ ವ್ಯಾಲ್ಯೂಶೆನ್ ಪಟ್ಟಿಯನ್ನು ಇಮೇಲ್ ಮುಖಾಂತರ ನೋಡಿ 2019ರ ಜೂನ್‌ನಲ್ಲಿ 35ಲಕ್ಷ ರೂ. ನಗದು ಹಾಗೂ ಸಿಂಗಾಪುರ ಕಂಪನಿಯ 17.5 ಲಕ್ಷ ಶೇರ್‌ಗಳನ್ನು ನೀಡುವುದಾಗಿ ಆನಂದ ರಾವ್ ತಿಳಿಸಿದ್ದನು. ಈ ಶೇರ್ ಮೂರು ವರ್ಷದ ಬಳಿಕ 33 ಕೋಟಿ ಆಗಲಿದ್ದು ಕಂಪನಿಯ ಶೇರ್ 3 ವರ್ಷದಲ್ಲಿ 9 ಸಾವಿರ ಕೋಟಿ ಆಗುವುದಾಗಿ ಸುಳ್ಳು ಮಾಹಿತಿಯನ್ನು ನೀಡಿದ್ದನು. 2020ರ ಎಪ್ರಿಲ್‌ನಲ್ಲಿ ಶೇರ್ ತೆಗೆದುಕೊಳ್ಳುವ ಅಗ್ರಿಮೆಂಟ್ ಕಳುಹಿಸಿ ಕೊಟ್ಟಿದ್ದು ಅಗ್ರಿಮೆಂಟ್‌ನಂತೆ ಇವರು ವ್ಯವಹಾರ ಮಾಡಿಕೊಂಡಿದ್ದರು. ಈ ಅಗ್ರಿಮೆಂಟಿನಲ್ಲಿ ವ್ಯವಹಾರ ಆಗುವಾಗ ಸಿಂಗಾಪುರದ ಕಂಪನಿಯಲ್ಲಿ 35 ಮಿಲಿಯನ್ ಶೇರ್ ಇತ್ತು ಎಂಬುವುದಾಗಿ ಸುಳ್ಳು ಮಾಹಿತಿಯನ್ನು ನಮೂದಿಸಲಾಗಿತ್ತು. ಈ ಅಗ್ರಿಮೆಂಟ್‌ಗೆ ದೀಲಿಪ್ ಹಾಗೂ ಆನಂದ ರಾವ್ ಸಹಿ ಮಾಡಿದ್ದರು. ಅಗ್ರಿಮೆಂಟ್ ಆದ ಬಳಿಕ ಕಂಪನಿಯವರು ಹೇಳಿದಂತೆ ದೀಲಿಪ್ ಪ್ರೋಡೆಕ್ಟನ್ನು ಅವರಿಗೆ ಕಳುಹಿಸಿದ್ದರು. 2023ರ ಎ.6ರಂದು ಅಗ್ರಿಮೆಂಟ್ ಪ್ರಕಾರ ಮಾಡಿಕೊಂಡ ಒಪ್ಪಂದವು 3 ವರ್ಷಕ್ಕೆ ಮುಗಿದಿದ್ದು. ಅದರ ಪ್ರಕಾರ ವ್ಯಾಲ್ಯೂಷನ್ ವರದಿಯನ್ನು ನೀಡುವಂತೆ ಇ-ಮೇಲ್ ಮೂಲಕ ಕೋರಿಕೊಂಡಿದ್ದರು. ಆನಂದ ರಾವ್ ಕಂಪನಿಯ ಶೇರ್ ಪಾಲುದಾರರಾದ ಶ್ಯಾಮ್‌ದೀಪ್ ಎಂಬವರಿಗೆ 2024ರ ಅ.6ರಂದು ಇ-ಮೇಲ್ ಮುಖಾಂತರ ಒಂದು ಮಾಹಿತಿಯನ್ನು ಕಳುಹಿಸಿದ್ದು ಆ ಮಾಹಿತಿಯಲ್ಲಿ ಒಪ್ಪಂದದ ಬಗ್ಗೆ ಧೃಡಪಡಿಸಿದ್ದರು. ಅಲ್ಲದೇ ಪೋನ್ ಮೂಲಕ ಶ್ಯಾಮ್‌ದೀಪ್‌ಗೆ ವೀರಪ್ಪನ್ ಸುಬ್ರಹ್ಮಣ್ಯ ಅವರಿಂದ ಆನಂದ್ ರಾವ್ ಪೋನ್ ಮಾಡಿಸಿ 6.9 ಕೋಟಿ ನಗದು ಮತ್ತು 20 ಲಕ್ಷ ಶೇರ್‌ನ್ನು ನೀಡುವುದಾಗಿ ತಿಳಿಸಿದ್ದರು. ಆನಂದರಾವ್, ಕಂಪನಿಯ ಚೇರ್ಮೆನ್ ಪೀಟರ್ ಜಪ್ರೀ ಜರ್ಮೈನ್ ಹಾಗೂ ಸಿ.ಟಿ.ಓ ರಾಘವೇಂದ್ರ ಅಗರವಾಲ, ನಿರ್ದೇಶಕರಾದ ಸ್ಮಿತಾ ಶಾಹು ಮತ್ತು ಕಂಪನಿ ಬೋರ್ಡ್ ಸದಸ್ಯರಾದ ಅಸುತೋಷ್ ಶ್ರೀವತ್ಸವ ಸೇರಿಕೊಂಡು ದೀಲಿಪ್ ಕಂಪನಿಯಲ್ಲಿ ವ್ಯವಹಾರ ಮಾಡುವಂತೆ ನಂಬಿಸಿ ಕಂಪನಿಯಿಂದ ಬರಬೇಕಾದ 33 ಕೋಟಿ ರೂ. ಹಣವನ್ನು ನೀಡದೇ ನಂಬಿಸಿ ಮೋಸ ಮಾಡಿರುವುದಾಗಿ ದೂರಲಾಗಿದೆ.

ವಾರ್ತಾ ಭಾರತಿ 18 Apr 2026 9:32 pm

ಕಾಂಗ್ರೆಸ್ ಪಕ್ಷದಂತೆ ಡಿಎಂಕೆ ಇತಿಹಾಸ ದೊಡ್ಡದಿದೆ: ಡಿ.ಕೆ.ಶಿವಕುಮಾರ್

‘ಬೆಲೆ ಏರಿಕೆಯಿಂದ ಜನರನ್ನು ರಕ್ಷಿಸಲು ಗ್ಯಾರಂಟಿ ಯೋಜನೆ’

ವಾರ್ತಾ ಭಾರತಿ 18 Apr 2026 9:26 pm

ಮಹಿಳಾ ಮೀಸಲಾತಿ ತಡೆದ ವಿಪಕ್ಷಗಳ ಕೃತ್ಯ 'ಭ್ರೂಣಹತ್ಯೆ'ಗೆ ಸಮಾನ: ಕಾಂಗ್ರೆಸ್, ಟಿಎಂಸಿ, ಡಿಎಂಕೆ ವಿರುದ್ಧ ಮೋದಿ ಗುಡುಗು

ನವದೆಹಲಿ: ಮಹಿಳಾ ಮೀಸಲಾತಿ ಮಸೂದೆ ವಿರುದ್ಧ ಪ್ರತಿಪಕ್ಷಗಳು ಕೈಗೊಂಡಿರುವ ನಿಲುವನ್ನು ಪ್ರಧಾನಿ ನರೇಂದ್ರ ಮೋದಿ ತೀವ್ರವಾಗಿ ಖಂಡಿಸಿದ್ದಾರೆ. ವಿರೋಧ ಪಕ್ಷಗಳ ಈ ನಡೆಯನ್ನು 'ಹೆಣ್ಣು ಭ್ರೂಣಹತ್ಯೆ'ಗೆ ಹೋಲಿಸಿರುವ ಅವರು, ಕಾಂಗ್ರೆಸ್, ತೃಣಮೂಲ ಕಾಂಗ್ರೆಸ್ (TMC), ಮತ್ತು ಡಿಎಂಕೆ ಪಕ್ಷಗಳೇ ಇದಕ್ಕೆ ನೇರ ಹೊಣೆ ಹಾಗೂ ಅಪರಾಧಿಗಳು ಎಂದು ಗುಡುಗಿದ್ದಾರೆ. ನಮ್ಮ ಅತ್ಯುತ್ತಮ ಪ್ರಯತ್ನಗಳ ಹೊರತಾಗಿಯೂ ನಾರಿ ಶಕ್ತಿಯ

ಒನ್ ಇ೦ಡಿಯ 18 Apr 2026 9:22 pm

Belur | ಕೊನೆಗೂ ಒಂಟಿ ಕೋರೆ ಕಾಡಾನೆ ಸೆರೆ; ಮೂರು ದಿನಗಳ ಕಾರ್ಯಾಚರಣೆ ಯಶಸ್ವಿ

ಬೇಲೂರು: ತಾಲೂಕಿನಲ್ಲಿ ಆತಂಕ ಸೃಷ್ಟಿಸಿದ್ದ ಒಂಟಿ ಕೋರೆ ಕಾಡಾನೆಯನ್ನು ಸೆರೆಹಿಡಿಯುವ ಕಾರ್ಯಾಚರಣೆ ಮೂರನೇ ದಿನ ಯಶಸ್ವಿಯಾಗಿ ಪೂರ್ಣಗೊಂಡಿದೆ. ಕಳೆದ ಕೆಲವು ದಿನಗಳಿಂದ ಜನರಲ್ಲಿ ಭೀತಿ ಮೂಡಿಸಿದ್ದ ಈ ದೈತ್ಯಾಕಾರದ ಕಾಡಾನೆಯನ್ನು ಹಿಡಿಯಲು ಅರಣ್ಯ ಇಲಾಖೆಯು ವಿಶೇಷ ತಂಡವನ್ನು ರಚಿಸಿ ಹಗಲು-ರಾತ್ರಿ ಕಾರ್ಯಾಚರಣೆ ನಡೆಸುತ್ತಿತ್ತು. ಇಂದು ಬೆಳಿಗ್ಗೆ ಕಾರ್ಯಾಚರಣೆ ಆರಂಭಿಸಿದ ಅರಣ್ಯ ಇಲಾಖೆಯ ತಂಡವು ಬೇಲೂರು ತಾಲೂಕಿನ ಕಾನಳ್ಳಿ ಅರಣ್ಯ ಪ್ರದೇಶದಲ್ಲಿ ಕಾಡಾನೆಯಿರುವ ಸ್ಥಳವನ್ನು ನಿಖರವಾಗಿ ಪತ್ತೆಹಚ್ಚಿತು. ಇಟಿಎಫ್ (ಎಲಿಫೆಂಟ್ ಟಾಸ್ಕ್ ಫೋರ್ಸ್) ಸಿಬ್ಬಂದಿ ಹಾಗೂ ಅನುಭವಿಗಳಾದ ಕುಮ್ಕಿ ಆನೆಗಳ ಸಹಾಯದಿಂದ ಕಾಡಾನೆಯನ್ನು ಸುತ್ತುವರಿದು ನಿಯಂತ್ರಣಕ್ಕೆ ತರಲು ಕಾರ್ಯಚರಣೆ ಆರಂಭಿಸಲಾಯಿತು. ಕಾರ್ಯಾಚರಣೆಯಲ್ಲಿ ಪ್ರಮುಖ ಘಟ್ಟವಾಗಿ, ವೈದ್ಯರು ಕಾಡಾನೆಗೆ ಅರವಳಿಕೆ ಚುಚ್ಚುಮದ್ದು ನೀಡಿದರು. ಇಂಜೆಕ್ಷನ್ ನೀಡುತ್ತಿದ್ದಂತೆಯೇ, ಒಂಟಿ ಕೋರೆ ಕಾಡಾನೆ ಹಾಗೂ ಅದರ ಜೊತೆಯಲ್ಲಿದ್ದ ‘ಕ್ಯಾಪ್ಟನ್’ ಕಾಡಾನೆ ಏಕಾಏಕಿ ಓಡಲು ಆರಂಭಿಸಿತು. ಇದರಿಂದ ಕೆಲಕಾಲ ಗೊಂದಲ ಉಂಟಾದರೂ, ಕಾರ್ಯಾಚರಣಾ ತಂಡವು ಸಮರ್ಥವಾಗಿ ಎರಡೂ ಕಾಡಾನೆಗಳನ್ನು ಬೇರ್ಪಡಿಸಲು ಯಶಸ್ವಿಯಾಯಿತು. ಸ್ವಲ್ಪ ದೂರ ಓಡಿದ ಬಳಿಕ ಅರವಳಿಕೆಯ ಪರಿಣಾಮದಿಂದ ಒಂಟಿ ಕೋರೆ ಕಾಡಾನೆ ಪ್ರಜ್ಞೆ ತಪ್ಪಿ ನೆಲಕ್ಕುರುಳಿತು. ತಕ್ಷಣವೇ ಕುಮ್ಕಿ ಆನೆಗಳು ಕಾಡಾನೆಯನ್ನು ಸುತ್ತುವರಿದು ಭದ್ರತೆ ಒದಗಿಸಿತು. ನಂತರ ಸಿಬ್ಬಂದಿ ಕಾಡಾನೆಗೆ ನೀರು ಹಾಕಿ ಆರೈಕೆ ನಡೆಸಿ, ಸುರಕ್ಷಿತವಾಗಿ ಹಗ್ಗಗಳನ್ನು ಕಟ್ಟುವ ಮೂಲಕ ಸ್ಥಳಾಂತರಕ್ಕೆ ಸಿದ್ಧತೆ ನಡೆಸಿದರು. ಈ ಯಶಸ್ವಿ ಕಾರ್ಯಾಚರಣೆಯಿಂದ ಹಲವು ದಿನಗಳಿಂದ ಆತಂಕದಲ್ಲಿದ್ದ ಬೇಲೂರು ಭಾಗದ ಜನರು ನಿಟ್ಟುಸಿರು ಬಿಟ್ಟಿದ್ದಾರೆ. ಅರಣ್ಯ ಇಲಾಖೆಯ ಧೈರ್ಯಶಾಲಿ ಕ್ರಮ ಹಾಗೂ ಸಮನ್ವಯದಿಂದ ದೊಡ್ಡ ಅಪಾಯ ತಪ್ಪಿದಂತಾಗಿದೆ. ಸ್ಥಳಾಂತರದ ನಂತರ ಕಾಡಾನೆಯನ್ನು ಸುರಕ್ಷಿತ ಅರಣ್ಯ ಪ್ರದೇಶಕ್ಕೆ ಕಳುಹಿಸುವ ಯೋಜನೆ ರೂಪಿಸಲಾಗಿದ್ದು, ಮುಂದಿನ ಕ್ರಮ ಗಳನ್ನು ಇಲಾಖೆಯು ಕೈಗೊಂಡಿದೆ.

ವಾರ್ತಾ ಭಾರತಿ 18 Apr 2026 9:16 pm

ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಗೆಲ್ಲಬಹುದಾಗಿದ್ದ ಪಂದ್ಯವನ್ನು RCB ಕಳೆದುಕೊಂಡದ್ದು ಹೇಗೆ? ಇಲ್ಲಿದೆ 6 ಕಾರಣ

RCB Vs DC Match Highlights- ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಆರ್‌ಸಿಬಿ ತಂಡವು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 6 ವಿಕೆಟ್‌ಗಳ ಆಘಾತಕಾರಿ ಸೋಲು ಅನುಭವಿಸಿತು. ಉತ್ತಮ ಆರಂಭದ ಹೊರತಾಗಿಯೂ ಮಧ್ಯಮ ಕ್ರಮಾಂಕದ ವೈಫಲ್ಯದಿಂದ ಆರ್‌ಸಿಬಿ 175 ರನ್‌ಗಳ ಸಾಧಾರಣ ಮೊತ್ತಕ್ಕೆ ತೃಪ್ತಿಪಟ್ಟಿತು. ಅಕ್ಷರ್ ಪಟೇಲ್ ಮತ್ತು ಕುಲದೀಪ್ ಯಾದವ್ ಅವರ ಚಾಣಾಕ್ಷ ಬೌಲಿಂಗ್ ಆರ್‌ಸಿಬಿಯನ್ನು ಕಟ್ಟಿಹಾಕಿತು. ಡೆಲ್ಲಿ ತಂಡ ಆರಂಭಿಕ ಕುಸಿತ ಕಂಡರೂ, ಕೆಎಲ್ ರಾಹುಲ್ (57) ಮತ್ತು ಸ್ಟಬ್ಸ್ (60*) ಅವರ ಸಮಯೋಚಿತ ಜೊತೆಯಾಟ ಹಾಗೂ ಅಂತಿಮ ಓವರ್‌ನಲ್ಲಿ ಡೇವಿಡ್ ಮಿಲ್ಲರ್ ಸಿಡಿಸಿದ ಸಿಕ್ಸರ್‌ಗಳು ಡೆಲ್ಲಿಗೆ ರೋಚಕ ಗೆಲುವು ತಂದುಕೊಟ್ಟವು.

ವಿಜಯ ಕರ್ನಾಟಕ 18 Apr 2026 9:14 pm

ಕೊಡವೂರು ಶಂಕರನಾರಾಯಣ ದೇವಸ್ಥಾನದಲ್ಲಿ ಮಹಾ ರುದ್ರಯಾಗ

ಉಡುಪಿ, ಎ.18: ಕೊಡವೂರಿನಲ್ಲಿರುವ ಮಹೋತಭಾರ ಶ್ರೀಶಂಕರ ನಾರಾಯಣ ದೇವಸ್ಥಾನದಲ್ಲಿ ಅಪರೂಪದಲ್ಲಿ ಅಪರೂಪದ್ದಾದ ಮಹಾ ರುದ್ರಯಾಗ ಮೇ ತಿಂಗಳ 14ರಿಂದ 19ರವರೆಗೆ ನಡೆಯಲಿದೆ ಎಂದು ಮಹಾ ರುದ್ರಯಾಗ ಸಮಿತಿಯ ಕಾರ್ಯಾಧ್ಯಕ್ಷ ಪ್ರಸಾದ್‌ರಾಜ್ ಕಾಂಚನ್ ತಿಳಿಸಿದ್ದಾರೆ. ಕೊಡವೂರು ಶಂಕರನಾರಾಯಣ ದೇವಸ್ಥಾನದ ಆವರಣದಲ್ಲಿ ಇಂದು ಕರೆದ ಸುದ್ದಿಗೋಷ್ಠಿಯಲ್ಲಿ ಅವರು ಈ ವಿಷಯ ತಿಳಿಸಿದರು. ಆರು ದಿನಗಳ ಕಾಲ ನಡೆಯುವ ರುದ್ರಯಾಗದ ಸಂದರ್ಭದಲ್ಲಿ ವಿವಿಧ ಧಾರ್ಮಿಕ, ಮನರಂಜನೆ, ಕ್ರೀಡೋತ್ಸವ, ಆರೋಗ್ಯ ಶಿಬಿರ ಹಾಗೂ ಉದ್ಯೋಗ ಮೇಳವನ್ನೂ ಹಮ್ಮಿಕೊಳ್ಳಲಾಗುವುದು ಎಂದವರು ತಿಳಿಸಿದರು. ಇದಕ್ಕೆ ಪೂರ್ವಭಾವಿಯಾಗಿ ಮೇ 10ರಿಂದ 20ರವರೆಗೆ ಎಲ್ಲಾ ವಯೋಮಾನದವರ ಮನೋರಂಜನೆಗಾಗಿ ಬೃಹತ್ ವಸ್ತು ಪ್ರದರ್ಶನ, ಮಾರಾಟ ಮೇಳವನ್ನು ಆಯೋಜಿಸಲಾಗುತ್ತದೆ. ಮೇ 14ರಂದು ಮಲ್ಪೆ ಯಿಂದ ಕೊಡವೂರು ದೇವಸ್ಥಾನದವರೆಗೆ ಭವ್ಯ ಹೊರೆಕಾಣಿಕೆ ಮೆರವಣಿಯನ್ನು ಸಹ ಆಯೋಜಿಸಲಾಗುತ್ತದೆ ಎಂದು ಕಾಂಚನ್ ತಿಳಿಸಿದರು. ಮೇ15ರಿಂದ ಮಹಾ ರುದ್ರಯಾಗ, ಗಣಯಾಗದ ಧಾರ್ಮಿಕ ವಿಧಿವಿಧಾನಗಳು ಪ್ರಾರಂಭಗೊಳ್ಳುತ್ತವೆ.ಪ್ರತಿದಿನ ಸಂಜೆ ಧಾರ್ಮಿಕ ಹಾಗೂ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸಹ ಹಮ್ಮಿಕೊಳ್ಳಲಾಗುತ್ತದೆ. ಮೇ 16ರಂದು ಸಾರ್ವಜನಿಕರಿಗಾಗಿ ಆರೋಗ್ಯ ಶಿಬಿರ ನಡೆಯಲಿದೆ ಎಂದರು. ಮೇ 17ರಂದು ಮಲ್ಪೆ ಕಡಲತೀರದಲ್ಲಿ ತುಳುನಾಡಿನ ಸಾಂಪ್ರದಾಯಿಕ ಕ್ರೀಡೋತ್ಸವ ನಡೆಯಲಿವೆ. ಅಲ್ಲದೆ ಅಂದು ಸಂಜೆ ಮಲ್ಪೆ ಕಡಲತೀರದಲ್ಲಿ ವಾರಣಸಿಯ ಪುರೋಹಿತರಿಂದ ಗಂಗಾರತಿಯನ್ನು ಆಯೋಜಿಸಲಿದ್ದು, ಇದರಲ್ಲಿ ರಾಜ್ಯದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಭಾಗವಹಿಸುವರು. 18ರಂದು ಬೃಹತ್ ಉದ್ಯೋಗ ಮೇಳ ನಡೆಯಲಿದ್ದು, ಈಗಾಗಲೇ ಹಲವು ಬಹುರಾಷ್ಟ್ರೀಯ ಕಂಪೆನಿಗಳು ಸೇರಿ 50ಕ್ಕೂ ಅಧಿಕ ಕಂಪೆನಿಗಳು ನೊಂದಣಿಗೊಂಡಿದ್ದು, ಒಟ್ಟಾರೆ 100 ಕಂಪೆನಿಗಳು ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದರು. ವಿಶೇಷವಾಗಿ ಐದು ಸಾವಿರ ಮಹಿಳೆಯರಿಗೆ ಮಹಾ ರುದ್ರಯಾಗ ಸಂಕಲ್ಪದಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸ ಲಾಗುವುದು. ಮೇ 19ರಂದು ಮಹಾ ರುದ್ರಯಾಗದ ಪೂರ್ಣಾಹುತಿ ನಡೆಯಲಿದೆ. ಪ್ರತಿದಿನದ ಸಾಂಸ್ಕೃತಿಕ ಕಾರ್ಯಕ್ರಮಗಳು ಸಂಜೆ 5ರಿಂದ ರಾತ್ರಿ 8ಗಂಟೆಯವರೆಗೆ ನಡೆಯಲಿದೆ. ಪತ್ರಿಕಾಗೋಷ್ಠಿಯಲ್ಲಿ ಶಂಕರನಾರಾಯಣ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಪ್ರಕಾಶ್ ಕೊಡವೂರು, ವಾದಿರಾಜ ತಂತ್ರಿ ಪುತ್ತೂರು, ತಾರನಾಥ ಪೂಜಾರಿ, ರಮೇಶ್ ತಿಂಗಳಾಯ, ಬಾಲಕೃಷ್ಣ ಕೊಡವೂರು, ಧನಂಜಯ ಮಲ್ಪೆ, ನಂದಕಿಶೋರ್, ವಾದಿರಾಜ ಮುಂತಾದವರು ಉಪಸ್ಥಿತರಿದ್ದರು.

ವಾರ್ತಾ ಭಾರತಿ 18 Apr 2026 9:12 pm

ಹಾರ್ಮುಝ್ ಜಲಸಂಧಿಯಲ್ಲಿ ಭಾರತೀಯ ಹಡಗುಗಳ ಮೇಲೆ ಗುಂಡಿನ ದಾಳಿ: ಇರಾನ್ ರಾಯಭಾರಿಯನ್ನು ಕರೆಸಿ ಪ್ರತಿಭಟನೆ ವ್ಯಕ್ತಪಡಿಸಿದ ಭಾರತ

ಹೊಸದಿಲ್ಲಿ,ಎ.18: ಹಾರ್ಮುಝ್ ಜಲಸಂಧಿಯಲ್ಲಿ ಶನಿವಾರ ಭಾರತೀಯ ಧ್ವಜ ಹೊತ್ತ ಹಡಗಿನ ಮೇಲೆ ನಡೆದ ಗುಂಡಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿ ಭಾರತವು ಇರಾನ್ ರಾಯಭಾರಿ ಡಾ. ಮೊಹಮ್ಮದ್ ಫಥಾಲಿ ಅವರನ್ನು ಕರೆಸಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಪ್ರದೇಶದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆಯ ನಡುವೆಯೇ ಈ ರಾಜತಾಂತ್ರಿಕ ಕ್ರಮ ಕೈಗೊಳ್ಳಲಾಗಿದೆ. ಸರಕಾರಿ ಮೂಲಗಳ ಪ್ರಕಾರ, ನಾಗರಿಕ ಸಾಗಣೆಯಲ್ಲಿ ತೊಡಗಿದ್ದ ಹಡಗುಗಳ ಮೇಲೆ ಇರಾನ್ ಪಡೆಗಳು ಗುಂಡು ಹಾರಿಸಿದ ಘಟನೆಗಳ ಕುರಿತು ಗಂಭೀರ ಪ್ರಶ್ನೆಗಳು ಕೇಳಿಬಂದಿವೆ. ಈ ಹಿನ್ನೆಲೆಯಲ್ಲಿ ಭಾರತವು ತನ್ನ “ಗಂಭೀರ ಕಳವಳ ಮತ್ತು ಅಸಮಾಧಾನ”ವನ್ನು ವ್ಯಕ್ತಪಡಿಸಿದೆ. ಕಾರ್ಯತಂತ್ರದ ದೃಷ್ಟಿಯಿಂದ ಅತ್ಯಂತ ಮಹತ್ವದ ಜಲಮಾರ್ಗವಾಗಿರುವ ಹಾರ್ಮುಝ್ ಜಲಸಂಧಿಯಲ್ಲಿ ಭಾರತೀಯ ಧ್ವಜ ಹೊತ್ತ ಹಡಗಿನ ಮೇಲಿನ ದಾಳಿಯ ಘಟನೆ ಬಳಿಕ ವಿದೇಶಾಂಗ ಸಚಿವಾಲಯವು ತಕ್ಷಣ ಕ್ರಮ ಕೈಗೊಂಡು ಇರಾನ್ ರಾಯಭಾರಿಯನ್ನು ಕರೆಸಿದೆ ಎಂದು ತಿಳಿದುಬಂದಿದೆ. ಇದೇ ವೇಳೆ, ಘಟನೆಯ ಕುರಿತು ಟೆಹ್ರಾನ್‌ನಿಂದ ಸ್ಪಷ್ಟೀಕರಣ ಪಡೆಯುವ ನಿರೀಕ್ಷೆಯಿದೆ. ವಿಶ್ವದ ಅತ್ಯಂತ ಜನನಿಬಿಡ ಸಮುದ್ರ ಮಾರ್ಗಗಳಲ್ಲಿ ಒಂದಾದ ಈ ಜಲಸಂಧಿಯಲ್ಲಿ ಸಂಚರಿಸುವ ಹಡಗುಗಳ ವಿರುದ್ಧ ಇರಾನ್ ಪಡೆಗಳು ಯಾವ ಅಧಿಕಾರದಡಿ ದಾಳಿ ನಡೆಸಿವೆ ಎಂಬ ಪ್ರಶ್ನೆಯನ್ನು ಭಾರತ ಮುಂದಿಟ್ಟಿದೆ.

ವಾರ್ತಾ ಭಾರತಿ 18 Apr 2026 9:08 pm

ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಉಳಿಸಿಕೊಳ್ಳುವ ಹೋರಾಟದಲ್ಲಿ ರಾಹುಲ್ ಗಾಂಧಿ ಪಾತ್ರ ಭವಿಷ್ಯತ್ತಿನಲ್ಲಿ ಅತ್ಯಂತ ನಿರ್ಣಾಯಕವಾಗಿರಲಿದೆ: ಬಿ.ಕೆ. ಹರಿಪ್ರಸಾದ್

ಬೆಂಗಳೂರು: ‘ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಉಳಿಸಿಕೊಳ್ಳುವ ಹೋರಾಟದಲ್ಲಿ ಕಾಂಗ್ರೆಸ್ ನೇತೃತ್ವದ ವಿಪಕ್ಷಗಳು ಹಾಗೂ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರ ಪಾತ್ರ ಭವಿಷ್ಯತ್ತಿನಲ್ಲಿ ಅತ್ಯಂತ ನಿರ್ಣಾಯಕವಾಗಿರಲಿದೆ’ ಎಂದು ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ತಿಳಿಸಿದ್ದಾರೆ. ಶನಿವಾರ ಎಕ್ಸ್ ನಲ್ಲಿ ಪೋಸ್ಟ್ ಹಾಕಿರುವ ಅವರು, ‘ರಾಹುಲ್ ಗಾಂಧಿ ನೇತೃತ್ವದಲ್ಲಿ ದೇಶದ ವಿರೋಧ ಪಕ್ಷಗಳು ತೋರಿಸಿದ ನಿಲುವು, ಕೇವಲ ಮಸೂದೆಗಳ ವಿರುದ್ಧವಲ್ಲ, ಅದರ ಹಿಂದಿರುವ ಆರೆಸೆಸ್ಸ್ ಕೇಂದ್ರಿತ ಸಿದ್ಧಾಂತಾತ್ಮಕ ಚಿಂತನೆಯನ್ನು ಸೋಲಿಸಿದ ವಿಪಕ್ಷಗಳ ಒಗ್ಗಟ್ಟಿನ ಹೋರಾಟಕ್ಕೆ ಸಿಕ್ಕ ಜಯ. ಇದು ಸಂವಿಧಾನ ಉಳಿಸುವ ಸಂಘಟಿತ ಹೋರಾಟಕ್ಕೆ ಸಿಕ್ಕ ಜಯ. ಅಂತಿಮವಾಗಿ ಈ ಹೋರಾಟ ಇನ್ನೂ ಮುಗಿದಿಲ್ಲ. ಇದು ಸಂಸತ್ತಿನ ಒಳಗೆ-ಹೊರಗೆ ಮುಂದುವರಿಯುವ ಸಿದ್ಧಾಂತಗಳ ಸಂಘರ್ಷ’ ಎಂದು ಹೇಳಿದ್ದಾರೆ. ‘ಭಾರತ ದೇಶವು ಸ್ವಾತಂತ್ರ್ಯವನ್ನು ಪಡೆದದ್ದು ಲಕ್ಷಾಂತರ ಜನರ ತ್ಯಾಗ, ಹೋರಾಟ ಮತ್ತು ಬಲಿದಾನದ ಫಲ. ಆದರೆ ಆ ಸ್ವಾತಂತ್ರ್ಯದ ಆಶಯವನ್ನು ಕ್ರಮೇಣವಾಗಿ, ವ್ಯವಸ್ಥಿತವಾಗಿ ಸಿದ್ಧಾಂತದ ಆಧಾರದ ಮೇಲೆ ಮರು ಸಂರಚಿಸಲು ಆರೆಸೆಸ್ಸ್ ಕೇಂದ್ರಿತ ಸಂಘಟನೆಗಳು ದೀರ್ಘಕಾಲದಿಂದ ಪ್ರಯತ್ನಿಸುತ್ತಲೇ ಇದೆʼ ಎಂದು ಅವರು ಉಲ್ಲೇಖಿಸಿದ್ದಾರೆ. ಸಂಸತ್ತಿನಲ್ಲಿ ನಡೆದ ನಿನ್ನೆಯ ಘಟನೆಗಳನ್ನು ಭಾರತದ ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ಯಾವುದೇ ಒಂದು ಸಿದ್ಧಾಂತ, ಒಂದು ಸಂಘಟನೆ, ಸಂಪೂರ್ಣ ಅಧಿಕಾರವನ್ನು ತನ್ನ ನಿಯಂತ್ರಣಕ್ಕೆ ತರಲು ಸಾಧ್ಯವಿಲ್ಲ ಎಂಬ ಎಚ್ಚರಿಕೆಯನ್ನು ನೀಡಿದೆ. ಸಂಸತ್ತಿನ ಪ್ರಕ್ರಿಯೆಯೂ ಕೇವಲ ಬಿಜೆಪಿಯ ಸೋಲು ಅಥವಾ ಜಯದ ಪ್ರಶ್ನೆಯಲ್ಲ, ಇದು ಆರೆಸೆಸ್ಸ್ ನ ಸೈದ್ದಾಂತಿಕ ರಾಜಕೀಯ ವಿಸ್ತರಣೆಗೆ ಎದುರಾದ ಮೊದಲ ಭಾರಿ ಹಿನ್ನಡೆ’ ಎಂದು ಅವರು ವಿಶ್ಲೇಷಿಸಿದ್ದಾರೆ. ‘ಸಂವಿಧಾನದಡಿಯಲ್ಲಿ ನೊಂದಾವಣೆಯೇ ಆಗದ ಆರೆಸೆಸ್ಸ್ ಸಂಘಟನೆ ತನ್ನ ನೂರು ವರ್ಷದ ಇತಿಹಾಸದಲ್ಲಿ ಸಮಾಜದ ಒಳಗಿನ ವಿಭಿನ್ನತೆಯನ್ನು ಜಾತಿ, ಧರ್ಮ, ನಂಬಿಕೆ ಹಾಗೂ ಜನರ ಭಾವನೆಗಳನ್ನು ರಾಜಕೀಯ ಉಪಕರಣಗಳಾಗಿ ಬಳಸಿಕೊಂಡು ಒಂದು ನಿರ್ದಿಷ್ಟ ಸಾಂಸ್ಕೃತಿಕ-ರಾಜಕೀಯ ಏಕಾಧಿಪತ್ಯದ ಕಲ್ಪನೆಯನ್ನು ಬೆಳೆಸಲು ಯತ್ನಿಸುತ್ತಲಿದೆ ಎಂಬುದು ನನ್ನ ಸ್ಪಷ್ಟ ಅಭಿಪ್ರಾಯ ಎಂದು ಅವರು ತಿಳಿಸಿದ್ದಾರೆ. ನಿನ್ನೆ ಸಂಸತ್ತಿನಲ್ಲಿ ವಿಪಕ್ಷಗಳು ನೀಡಿದ ಶಾಸನಾತ್ಮಕ ಪ್ರತಿರೋಧವನ್ನು ಕೇವಲ ರಾಜಕೀಯ ವಿರೋಧವಾಗಿ ನೋಡಲು ಸಾಧ್ಯವಿಲ್ಲ. ಬಿಜೆಪಿಯನ್ನು ಇಲ್ಲಿ ಕೇವಲ ರಾಜಕೀಯ ಪಕ್ಷವೆಂದು ನೋಡಿದರೆ ವಿಶ್ಲೇಷಣೆ ಅಪೂರ್ಣವಾಗುತ್ತದೆ. ಅದು ಆರೆಸೆಸ್ಸ್ ನ ಸಿದ್ಧಾಂತಾತ್ಮಕ ಪ್ರಯೋಗಶಾಲೆಯಿಂದ ಹೊರಬಂದ ರಾಜಕೀಯ ರೂಪವಾಗಿದೆ. ಆರೆಸೆಸ್ಸ್ ಸಿದ್ಧಾಂತದ ನೆರಳಿನಲ್ಲಿ ನಡೆಯುತ್ತಿರುವ ಅಧಿಕಾರ ಕೇಂದ್ರೀಕರಣದ ಪ್ರಯತ್ನಗಳಿಗೆ ಬಿಜೆಪಿ ಪಕ್ಷವೂ ವೇದಿಕೆ ಎಂದು ಪರಿಭಾವಿಸಬೇಕಾಗಿದೆ ಎಂದು ಅವರು ತಿಳಿಸಿದ್ದಾರೆ. ಭಾರತ ದೇಶವು ಸ್ವಾತಂತ್ರ್ಯವನ್ನು ಪಡೆದದ್ದು ಲಕ್ಷಾಂತರ ಜನರ ತ್ಯಾಗ, ಹೋರಾಟ ಮತ್ತು ಬಲಿದಾನದ ಫಲ. ಆದರೆ ಆ ಸ್ವಾತಂತ್ರ್ಯದ ಆಶಯವನ್ನು ಕ್ರಮೇಣವಾಗಿ, ವ್ಯವಸ್ಥಿತವಾಗಿ ಸಿದ್ಧಾಂತದ ಆಧಾರದ ಮೇಲೆ ಮರು ಸಂರಚಿಸಲು @RSSorg ಕೇಂದ್ರಿತ ಸಂಘಟನೆಗಳು ದೀರ್ಘಕಾಲದಿಂದ ಪ್ರಯತ್ನಿಸುತ್ತಲೇ ಇದೆ. ಸಂಸತ್ತಿನಲ್ಲಿ ನಡೆದ ನಿನ್ನೆಯ ಘಟನೆಗಳನ್ನು ಭಾರತದ… — Hariprasad.B.K. (@HariprasadBK2) April 18, 2026

ವಾರ್ತಾ ಭಾರತಿ 18 Apr 2026 9:04 pm

Kuknoor | ಭಟಪನಹಳ್ಳಿಯಲ್ಲಿ ಇಟಗಿ ಭೀಮಾಂಬಿಕಾ ಜಾತ್ರೆ : 11 ಜೋಡಿಗಳ ಸಾಮೂಹಿಕ ವಿವಾಹ, ರಥೋತ್ಸವ

ಸೌಹಾರ್ದವೇ ಸಾರ್ಥಕ ಜೀವನದ ಮಾರ್ಗ: ಫಕೀರ ಸಿದ್ದರಾಮ ಮಹಾಸ್ವಾಮಿ

ವಾರ್ತಾ ಭಾರತಿ 18 Apr 2026 9:03 pm

ಸುರಪುರ | ಎ.19ರಿಂದ ರಸ್ತೆ ಅಗಲೀಕರಣಕ್ಕೆ ಆಗ್ರಹಿಸಿ ಹೆದ್ದಾರಿ ತಡೆದು ಪ್ರತಿಭಟನೆ

ಸುರಪುರ: ಬೀದರ್–ಶ್ರೀರಂಗಪಟ್ಟಣ ಹೆದ್ದಾರಿಯಲ್ಲಿ ನಿರಂತರವಾಗಿ ಅಪಘಾತಗಳು ಸಂಭವಿಸುತ್ತಿರುವ ಹಿನ್ನೆಲೆಯಲ್ಲಿ ರಸ್ತೆ ಅಗಲೀಕರಣಕ್ಕೆ ಒತ್ತಾಯಿಸಿ ಎ.19ರಿಂದ ಹೆದ್ದಾರಿ ಬಂದ್ ಮಾಡಿ ನಿರಂತರ ಪ್ರತಿಭಟನೆ ನಡೆಸಲಾಗುವುದು ಎಂದು ಮುಖಂಡ ಗಂಗಾಧರ ನಾಯಕ ತಿಂಥಣಿ ತಿಳಿಸಿದ್ದಾರೆ. ಈ ಕುರಿತು ತಹಸೀಲ್ದಾರ್ ಹಾಗೂ ಪೊಲೀಸ್ ಅಧಿಕಾರಿಗಳಿಗೆ ಮನವಿ ಸಲ್ಲಿಸಿ ಮಾತನಾಡಿದ ಅವರು, ಇತ್ತೀಚೆಗೆ ಖಾಸಗಿ ಬಸ್ ಮತ್ತು ಕಾರಿನ ನಡುವೆ ನಡೆದ ಭೀಕರ ಅಪಘಾತದಲ್ಲಿ ಒಂಬತ್ತು ಜನರು ಮೃತಪಟ್ಟಿರುವುದು ದುಃಖಕರ ಸಂಗತಿ. ಇದಕ್ಕೂ ಮೊದಲು ಕೂಡ ಇದೇ ರಸ್ತೆಯಲ್ಲಿ ಅನೇಕ ಅಪಘಾತಗಳು ನಡೆದಿದ್ದರೂ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ರಸ್ತೆ ಅಗಲೀಕರಣವಾಗದ ಕಾರಣ ಸಾರ್ವಜನಿಕರು ಜೀವ ಭಯದಲ್ಲಿ ಸಂಚರಿಸುವಂತಾಗಿದೆ. ಹೀಗಾಗಿ ಬೇಡಿಕೆ ಈಡೇರುವವರೆಗೂ ತಿಂಥಣಿ, ಬಂಡೊಳ್ಳಿ, ಶಾಂತಪುರ, ಹುಣಸಿಹೊಳೆ, ಲಿಂಗದಹಳ್ಳಿ ಸೇರಿದಂತೆ ಹಲವು ಗ್ರಾಮಗಳ ಜನರು ಹೆದ್ದಾರಿ ತಡೆದು ಪ್ರತಿಭಟನೆ ನಡೆಸಲಿದ್ದಾರೆ ಎಂದು ತಿಳಿಸಿದರು. ಪ್ರತಿಭಟನೆ ಸ್ಥಳಕ್ಕೆ ಜಿಲ್ಲಾಧಿಕಾರಿಗಳು ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಭೇಟಿ ನೀಡಿ ಮನವಿ ಸ್ವೀಕರಿಸುವವರೆಗೂ ಹೋರಾಟ ಮುಂದುವರಿಯಲಿದೆ ಎಂದು ಅವರು ಎಚ್ಚರಿಕೆ ನೀಡಿದರು. ಈ ಸಂದರ್ಭದಲ್ಲಿ ಮುಖಂಡರಾದ ಅಯ್ಯಣ್ಣ ಹಾಲಬಾವಿ, ರತ್ನರಾಜ ಸಾಲಿಮನಿ, ದೇವಿಂದ್ರಪ್ಪ ಮೇಟಿ ಗೌಡ್ರು, ಮಲ್ಲಿಕಾರ್ಜುನ ಬೇವಿನಾಳ, ಶರಣು ಮಕಾಶಿ ಲಿಂಗದಹಳ್ಳಿ ಎಸ್, ಸಂಜೀವಪ್ಪ ವೈ ನಾಯಕ, ಸಚಿನ ಕುಮಾರ ನಾಯಕ, ದೇವರಾಜ ಗಿರಣಿ, ಸೋಪಣ್ಣ ಹಾಲಬಾವಿ ಶಾಂತಪುರ, ಮರಿಲಿಂಗಪ್ಪ ಗುಡಿಮನಿ ಹುಣಸಿಹೊಳೆ, ಬೈರಣ್ಣ ಅಂಬಿಗೇರ, ಪರಮಣ್ಣ ಹಾಲಬಾವಿ, ಗುರುಬಸವ ಬಂಡೊಳ್ಳಿ, ಪರಮಣ್ಣ ಹಾಲಬಾವಿ ಎಪಿಎಂಸಿ ಮಾಜಿ ಸದಸ್ಯರು ಸೇರಿದಂತೆ ಅನೇಕರು ಭಾಗವಹಿಸಿದ್ದರು.

ವಾರ್ತಾ ಭಾರತಿ 18 Apr 2026 8:55 pm

ಮಣಿಪುರ| ಇಬ್ಬರು ಮಕ್ಕಳ ಹತ್ಯೆ ಖಂಡಿಸಿ ಮತ್ತೆ ಭುಗಿಲೆದ್ದ ಪ್ರತಿಭಟನೆ

ಇಂಫಾಲ, ಎ. 18: ಟ್ರೋಂಗ್ಲಾಓಬಿಯಲ್ಲಿ ನಡೆದ ಬಾಂಬ್ ದಾಳಿಯಲ್ಲಿ ಇಬ್ಬರು ಮಕ್ಕಳ ಹತ್ಯೆಯನ್ನು ಖಂಡಿಸಿ ಮಣಿಪುರದ ಇಂಫಾಲ್‌ ಪೂರ್ವದಲ್ಲಿ ಶುಕ್ರವಾರ ರಾತ್ರಿ ಜನರು ದೊಡ್ಡ ಸಂಖ್ಯೆಯಲ್ಲಿ ಬೀದಿಗಿಳಿದು ಪ್ರತಿಭಟನೆ ನಡೆಸಿದ್ದಾರೆ. ಇಂಫಾಲ ಪೂರ್ವದ ಖುರೈ ಲ್ಯಾಮ್ಲಾಂಗ್ ಬಝಾರ್‌ನಲ್ಲಿ ರಾತ್ರಿ ಪ್ರತಿಭಟನೆಗಳು ಭುಗಿಲೆದ್ದವು. ಅಲ್ಲಿ ದೊಡ್ಡ ಸಂಖ್ಯೆ ಜನರು ಕರ್ಫ್ಯೂ ಉಲ್ಲಂಘಿಸಿ ರ್ಯಾಲಿಯಲ್ಲಿ ಪಾಲ್ಗೊಂಡರು. ಇದರಿಂದ ಪರಿಸ್ಥಿತಿ ಉದ್ವಿಗ್ನಗೊಂಡಿತು. ಭದ್ರತಾ ಪಡೆಗಳು ಗುಂಪನ್ನು ನಿಯಂತ್ರಿಸಲು ಮುಂದಾದವು. ಅವರು ಪ್ರತಿಭಟನಕಾರರನ್ನು ಚದುರಿಸಲು ಅಶ್ರವಾಯು ಸೆಲ್ ಪ್ರಯೋಗಿಸಿದರು. ಈ ಸಂದರ್ಭ ನಡೆದ ಘರ್ಷಣೆಯಲ್ಲಿ ಹಲವರು ಗಾಯಗೊಂಡರು. ಗಾಯಗೊಂಡವರನ್ನು ಜವಾಹರ್ಲಾಲ್ ನೆಹರೂ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ ದಾಖಲಿಸಲಾಯಿತು.

ವಾರ್ತಾ ಭಾರತಿ 18 Apr 2026 8:54 pm

Yadgiri | ಮುಂಬೈ-ಬೆಂಗಳೂರು ವಂದೇಭಾರತ್‌ ರೈಲು ಆರಂಭಿಸಿ: ಭೀಮುನಾಯಕ್‌ ಆಗ್ರಹ

ಯಾದಗಿರಿ : ಬೆಂಗಳೂರು–ಮುಂಬೈ ವಂದೇ ಭಾರತ್ ಶಯನಯಾತ್ರೆ (ಸ್ಲೀಪರ್) ರೈಲು ಶೀಘ್ರ ಆರಂಭವಾಗಲಿದೆ ಎಂದು ಘೋಷಣೆ ನೀಡಿದ್ದರೂ, ಇದುವರೆಗೆ ಸೇವೆ ಆರಂಭವಾಗದಿರುವುದು ಅನುಮಾನಗಳಿಗೆ ಕಾರಣವಾಗಿದ್ದು, ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಟಿ.ಎನ್. ಭೀಮನಾಯಕ್ ಆಗ್ರಹಿಸಿದ್ದಾರೆ. ಈ ಕುರಿತು ಹೇಳಿಕೆ ನೀಡಿದ ಅವರು, ಈ ರೈಲು ಗಂಟೆಗೆ 160 ಕಿ.ಮೀ ವೇಗದಲ್ಲಿ ಸಂಚರಿಸುವ ಸಾಮರ್ಥ್ಯ ಹೊಂದಿದ್ದು, ಯಾದಗಿರಿ–ಬೆಂಗಳೂರು ನಡುವಿನ ಪ್ರಯಾಣವನ್ನು ಕೇವಲ ಐದುವರೆ ಗಂಟೆಗಳಲ್ಲಿ ಹಾಗೂ ಯಾದಗಿರಿ–ಮುಂಬೈ ನಡುವಿನ ಪ್ರಯಾಣವನ್ನು ಸುಮಾರು ಏಳು ಗಂಟೆಗಳಲ್ಲಿ ಮುಗಿಸಬಹುದಾಗಿದೆ ಎಂದು ತಿಳಿಸಿದರು. ಈ ರೈಲು ಆರಂಭವಾದರೆ ಕಲ್ಯಾಣ ಕರ್ನಾಟಕ ಭಾಗದ ಆರ್ಥಿಕತೆಗೆ ವೇಗ ಸಿಗಲಿದ್ದು, ವೇಗದ ಸಾರಿಗೆ ವ್ಯವಸ್ಥೆಗೆ ಮಹತ್ವದ ಬಲ ಸಿಗಲಿದೆ. ಆದ್ದರಿಂದ ಈ ರೈಲನ್ನು ತಕ್ಷಣ ಆರಂಭಿಸಬೇಕು ಎಂದು ಅವರು ಒತ್ತಾಯಿಸಿದರು. ಹುಬ್ಬಳ್ಳಿ–ಬೆಳಗಾವಿ ಮಾರ್ಗದಲ್ಲಿ ರೈಲು ಓಡಿಸುವ ಬದಲು ನಮ್ಮ ಭಾಗಕ್ಕೆ ಸಿಗಬೇಕಾದ ರೈಲನ್ನು ವಿಳಂಬ ಮಾಡಬಾರದು. ಅಗತ್ಯವಿದ್ದರೆ ಬೇರೆ ಮಾರ್ಗದಲ್ಲಿ ಹೆಚ್ಚುವರಿ ರೈಲು ಹಾಕಬಹುದು, ಆದರೆ ಕಲ್ಯಾಣ ಕರ್ನಾಟಕಕ್ಕೆ ಸಿಗಬೇಕಾದ ಸೇವೆಯನ್ನು ವಿಳಂಬಿಸುವುದು ಸರಿಯಲ್ಲ ಎಂದು ಹೇಳಿದರು. ಇದೇ ವೇಳೆ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ನೀಡಿದ ಹೇಳಿಕೆಗೆ ವಾರ ಕಳೆದರೂ ವೇಳಾಪಟ್ಟಿ ಪ್ರಕಟವಾಗದಿರುವುದು ಅಸಮಾಧಾನಕರ. ಈ ಹಿಂದೆ ನಮ್ಮ ಭಾಗಕ್ಕೆ ಸಿಗಬೇಕಿದ್ದ ಐಐಐಟಿ ಯೋಜನೆಯನ್ನು ಧಾರವಾಡಕ್ಕೆ ವರ್ಗಾಯಿಸಿದಂತೆ ಮತ್ತೆ ಅನ್ಯಾಯವಾದರೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು. ಈ ಕುರಿತು ರಾಯಚೂರು ಮತ್ತು ಕಲಬುರಗಿ ಸಂಸದರು ಕೂಡಲೇ ಎಚ್ಚೆತ್ತುಕೊಂಡು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರುವಂತೆ ಅವರು ಆಗ್ರಹಿಸಿದರು.

ವಾರ್ತಾ ಭಾರತಿ 18 Apr 2026 8:51 pm

ನೊಯ್ಡಾ ಹಿಂಸಾಚಾರದ ಮಾಸ್ಟರ್ ಮೈಂಡ್‌ ತಮಿಳುನಾಡಿನಲ್ಲಿ ಬಂಧನ

ಕಾರ್ಮಿಕರ ಪ್ರತಿಭಟನೆ ವೇಳೆ ನಡೆದಿದ್ದ ಹಿಂಸಾಚಾರ

ವಾರ್ತಾ ಭಾರತಿ 18 Apr 2026 8:50 pm

Yadgiri | ಮಹಿಳಾ ಮೀಸಲಾತಿ ಮಸೂದೆ ಅಸಂವಿಧಾನಿಕ ತಂತ್ರ: ಭೀಮಣ್ಣ ಮೇಟಿ

ಯಾದಗಿರಿ: ಮಹಿಳೆಯರ ಹೆಸರಿನಲ್ಲಿ ಸಂವಿಧಾನಕ್ಕೆ ಧಕ್ಕೆ ತರುವ ಅಸಂವಿಧಾನಿಕ ತಂತ್ರವನ್ನು ಬಳಸಿಕೊಂಡು ಮಂಡಿಸಲಾದ ಮಹಿಳಾ ಮೀಸಲಾತಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾಗಿದೆ ಎಂದು ಕೆಪಿಸಿಸಿ ಪ್ರಚಾರ ಸಮಿತಿ ರಾಜ್ಯ ಉಪಾಧ್ಯಕ್ಷ ಡಾ.ಭೀಮಣ್ಣ ಮೇಟಿ ಹೇಳಿದ್ದಾರೆ. ಈ ಕುರಿತು ಪತ್ರಿಕಾ ಹೇಳಿಕೆ ನೀಡಿದ ಅವರು, ಇದು ನಿಜವಾದ ಮಹಿಳಾ ಮೀಸಲಾತಿ ಬಿಲ್ ಅಲ್ಲ. ಬದಲಾಗಿ ಚುನಾವಣಾ ವ್ಯವಸ್ಥೆಯ ಮೇಲೆ ಹಿಡಿತ ಸಾಧಿಸಲು ಕೇಂದ್ರ ಸರ್ಕಾರ ಪ್ರಯತ್ನಿಸಿದೆ ಎಂದು ಆರೋಪಿಸಿದರು. ಲೋಕಸಭೆಯಲ್ಲಿ ಪ್ರತಿಪಕ್ಷಗಳು ಒಂದಾಗಿ, ಮೋದಿ ನೇತೃತ್ವದ ಸರ್ಕಾರ ಮಂಡಿಸಿದ ಮಸೂದೆಯನ್ನು ಒಪ್ಪಲು ಸಾಧ್ಯವಿಲ್ಲ ಎಂಬ ಸಂದೇಶ ನೀಡಿವೆ. ಬಿಜೆಪಿ ಸರ್ಕಾರಕ್ಕೆ ಮಹಿಳೆಯರ ಬಗ್ಗೆ ನಿಜವಾದ ಕಾಳಜಿ ಇಲ್ಲ ಎಂದು ಅವರು ಟೀಕಿಸಿದರು. ಭಾರತ ಪ್ರಜಾಪ್ರಭುತ್ವ ರಾಷ್ಟ್ರವಾಗಿದ್ದು, ಮಹಿಳಾ ಮೀಸಲಾತಿ ಹೆಸರಿನಲ್ಲಿ ಕ್ಷೇತ್ರ ಮರುವಿಂಗಡಣೆ ಮೂಲಕ ರಾಜಕೀಯ ಲಾಭ ಪಡೆಯಲು ಯತ್ನಿಸಲಾಗಿದೆ. ಈ ಹಿನ್ನೆಲೆಯಲ್ಲಿ ಲೋಕಸಭೆಯಲ್ಲಿ ಸರ್ಕಾರಕ್ಕೆ ಮುಖಭಂಗವಾಗಿದೆ ಎಂದು ಹೇಳಿದರು. ಮಹಿಳಾ ಸಬಲೀಕರಣಕ್ಕಿಂತ ರಾಜಕೀಯ ಲಾಭವೇ ಕೇಂದ್ರ ಸರ್ಕಾರದ ಉದ್ದೇಶವಾಗಿದೆ. ನಾರಿಯರ ಹೆಸರಿನಲ್ಲಿ ರಾಜಕೀಯ ಮಾಡುತ್ತಿರುವ ಬಿಜೆಪಿ ವಿರುದ್ಧ ಜನರು ಮುಂದಿನ ದಿನಗಳಲ್ಲಿ ತಕ್ಕ ಪ್ರತಿಕ್ರಿಯೆ ನೀಡಲಿದ್ದಾರೆ ಎಂದು ಅವರು ಎಚ್ಚರಿಸಿದರು.

ವಾರ್ತಾ ಭಾರತಿ 18 Apr 2026 8:47 pm

ವಿಪಕ್ಷಗಳು ಮಾಡಿದ ನಾರಿಶಕ್ತಿಯ ಭ್ರೂಣ ಹತ್ಯೆಗೆ ಕ್ಷಮೆ ಇಲ್ಲ; ದೇಶವನ್ನುದ್ದೇಶಿಸಿ ನರೇಂದ್ರ ಮೋದಿ ಭಾಷಣ

ಪ್ರಧಾನಮಂತ್ರಿ ನರೇಂದ್ರ ಮೋದಿ ಇಂದು (ಏ.18-ಶನಿವಾರ) ದೇಶವನ್ನುದ್ದೇಶಿಸಿ ಭಾಷಣ ಮಾಡಿದ್ದು, ನಿನ್ನೆ (ಏ.17-ಶುಕ್ರವಾರ) ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ವಿರುದ್ಧ ಮತ ಚಲಾಯಿಸಿದ ವಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಮಹಿಳಾ ಸಬಲೀಕರಣಕ್ಕೆ ದೊರೆತ ಐತಿಹಾಸಿಕ ಅವಕಾಶವನ್ನು ಭಾರತ ಕಳೆದುಕೊಂಡಿರುವುದು ಬೇಸರದ ಸಂಗತಿ ಎಂದು ಪ್ರಧಾನಿ ಮೋದಿ ತಮ್ಮ ಭಾಷಣದಲ್ಲಿ ಹೇಳಿದ್ದಾರೆ. ಸಂಸತ್ತಿನ ವಿಶೇಷ ಅಧಿವೇಶನವು ಸಂವಿಧಾನದ 131ನೇ ತಿದ್ದುಪಡಿ ಮಸೂದೆಯನ್ನು ಪಾಸ್‌ ಮಾಡದಿರುವ ಹಿನ್ನೆಲೆಯಲ್ಲಿ, ಪ್ರಧಾನಿ ಮೋದಿ ಅವರ ಇಂದಿನ ಭಾಷಣ ಮಹತ್ವ ಪಡೆದುಕೊಂಡಿದೆ.

ವಿಜಯ ಕರ್ನಾಟಕ 18 Apr 2026 8:34 pm

ಪಡುಬಿದ್ರೆ ದೇವಸ್ಥಾನದ ಬ್ರಹ್ಮಕಲಶೋತ್ಸವ: ಎ.26ರಂದು ಹಸಿರು ಹೊರೆಕಾಣಿಕೆ

ಡಾ. ಎಂ.ಎನ್. ರಾಜೇಂದ್ರ ಕುಮಾರ್ ರಿಂದ ಚಾಲನೆ

ವಾರ್ತಾ ಭಾರತಿ 18 Apr 2026 8:28 pm

ಸಂಸತ್‌ನ ಬಜೆಟ್ ಅಧಿವೇಶನಕ್ಕೆ ತೆರೆ| ರಾಜ್ಯಸಭೆ, ಲೋಕಸಭೆ ಅಧಿವೇಶನ ಅನಿರ್ದಿಷ್ಟಾವಧಿಗೆ ಮುಂದೂಡಿಕೆ

ಹೊಸದಿಲ್ಲಿ,ಎ.18: ಸಂಸತ್‌ನ ಬಜೆಟ್ ಅಧಿವೇಶನ ಶನಿವಾರ ಮುಕ್ತಾಯಗೊಂಡಿದ್ದು, ರಾಜ್ಯಸಭೆ ಹಾಗೂ ಲೋಕಸಭೆಯನ್ನು ಅನಿರ್ದಿಷ್ಟಾವಧಿಯವರೆಗೆ ಮುಂದೂಡಲಾಗಿದೆ. ಜನವರಿ 28ರಂದು ಆರಂಭಗೊಂಡ ಬಜೆಟ್ ಅಧಿವೇಶನದ ಅವಧಿಯಲ್ಲಿ ರಾಜ್ಯಸಭೆಯು ಒಟ್ಟು 157 ತಾಸುಗಳ ಹಾಗೂ 40 ನಿಮಿಷಗಳ ಕಾಲ ಕಾರ್ಯನಿರ್ವಹಿಸಿದೆಯೆಂದು ರಾಜ್ಯಸಭಾಧ್ಯಕ್ಷ ಸಿ.ಪಿ.ರಾಧಾಕೃಷ್ಣನ್ ಅವರು ತಿಳಿಸಿದರು. ಎಪ್ರಿಲ್ 16ರಿಂದ 18ರವರೆಗೆ ನಡೆದ ಮೂರು ದಿನಗಳ ವಿಶೇಷ ಬೈಠಕ್‌ನಲ್ಲಿ ಹರಿವಂಶ್ ಅವರನ್ನು ರಾಜ್ಯಸಭೆಯ ಉಪಾಧ್ಯಕ್ಷರಾಗಿ ಮೂರನೇ ಅವಧಿಗೆ ಆಯ್ಕೆ ಮಾಡಿತೆಂದು ಅವರು ತಿಳಿಸಿದರು. ಬಜೆಟ್ ಅಧಿವೇಶನದ ಆರಂಭದಲ್ಲಿ ರಾಷ್ಟ್ರಪತಿಯವರ ಭಾಷಣ ಮೇಲಿನ ವಂದನಾ ನಿರ್ಣಯದ ಕುರಿತ ಚರ್ಚೆಯಲ್ಲಿ 79 ಮಂದಿ ಸದಸ್ಯರು ಪಾಲ್ಗೊಂಡಿದ್ದರು .2026-27ನೇ ಸಾಲಿನ ಕೇಂದ್ರ ಬಜೆಟ್ ಕುರಿತ ವಿಸ್ತೃತ ಚರ್ಚೆಯಲ್ಲಿ 97 ಮಂದಿ ಸದಸ್ಯರು ಭಾಗವಹಿಸಿದ್ದರು. ಭಾರತ-ಅಮೆರಿಕ ವ್ಯಾಪಾರ ಒಪ್ಪಂದ ಹಾಗೂ ಪಶ್ಚಿಮ ಏಶ್ಯಾ ಪರಿಸ್ಥಿತಿಯ ಕುರಿತಾಗಿಯೂ ಸದಸ್ಯರು ಸ್ವಯಂಪ್ರೇರಿತ ಹೇಳಿಕೆಗಳನ್ನು ನೀಡಿದ್ದಾರೆಂದು ಅವರು ತಿಳಿಸಿದರು. ಈ ಬಜೆಟ್ ಅಧಿವೇಶನದಲ್ಲಿ ಒಟ್ಟು 117 ಪ್ರಶ್ನೆಗಳನ್ನು ಕೇಳಲಾಗಿತ್ತು. 446 ಶೂನ್ಯ ವೇಳೆಯಲ್ಲಿ ಹೇಳಿಕೆಗಳನ್ನು ನೀಡಲಾಗಿತ್ತು ಹಾಗೂ 207 ವಿಶೇಷ ಉಲ್ಲೇಖಗಳನ್ನು ಮಾಡಲಾಗಿತ್ತು ಎಂದವರು ತಿಳಿಸಿದರು. ಲೋಕಸಭೆಯ ಬಜೆಟ್ ಅಧಿವೇಶನವು ಶನಿವಾರ ಪೂರ್ವಾಹ್ನ 11:00 ಗಂಟೆಗೆ ಮುಕ್ತಾಯಗೊಂಡಿದ್ದು, ಸ್ಪೀಕರ್ ಓಂ ಬಿರ್ಲಾ ಅವರು ಸದನವನ್ನು ಅನಿರ್ದಿಷ್ಟಾವಧಿಗೆ ಮುಂದೂಡಿದರು. ಲೋಕಸಭೆಯ ಬಜೆಟ್ಅಧಿವೇಶನ ಮುಕ್ತಾಯದ ಮುನ್ನಾ ದಿನ ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿಗೆ ಅವಕಾಶ ಮಾಡಿಕೊಡುವ ಸಂವಿಧಾನ ತಿದ್ದುಪಡಿ ಮಸೂದೆಯು ಮೂರನೇ ಎರಡರಷ್ಟು ಬಹುಮತ ಪಡೆಯಲು ವಿಫಲವಾಗಿ, ಬಿದ್ದು ಹೋಗಿದೆ. ಸಂವಿಧಾನ ತಿದ್ದುಪಡಿ ಮಸೂದೆಯು ಲೋಕಸಭಾ ಸ್ಥಾನಗಳನ್ನು 543ರಿಂದ 816ಕ್ಕೆ ವಿಸ್ತರಿಸುವ ಪ್ರಸ್ತಾವನೆಯನ್ನು ಕೂಡಾ ಮಾಡಿತ್ತು.

ವಾರ್ತಾ ಭಾರತಿ 18 Apr 2026 8:26 pm

Bidar | ಜಿಲ್ಲೆಯಲ್ಲಿ ಎಪ್ರಿಲ್, ಮೇ ತಿಂಗಳಲ್ಲಿ ಬಿಸಿ ಹೀಟ್ ವೇವ್ ಸಾಧ್ಯತೆ : ಮುಂಜಾಗ್ರತೆ ವಹಿಸಲು ಡಿಸಿ ಸೂಚನೆ

ಬೀದರ್: ಭಾರತೀಯ ಹವಮಾನ ಇಲಾಖೆಯ ಮುನ್ಸೂಚನೆಯ ಪ್ರಕಾರ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಜಿಲ್ಲೆಯಲ್ಲಿ ಬಿಸಿ ಗಾಳಿ ತೀವ್ರವಾಗುವ ಸಾಧ್ಯತೆ ಇರುವ ಹಿನ್ನೆಲೆ, ಹೀಟ್ ವೇವ್‌ನಿಂದ ಸಾರ್ವಜನಿಕರು, ಕಾರ್ಮಿಕರು, ರೈತರು ಹಾಗೂ ಪ್ರಾಣಿಗಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಇದೆ. ಆದ್ದರಿಂದ ಮುಂಜಾಗ್ರತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ತಿಳಿಸಿದ್ದಾರೆ. ಕೃಷಿ ಮತ್ತು ತೋಟಗಾರಿಕೆ ಇಲಾಖೆಗೆ ಸೂಚನೆ ನೀಡಿರುವ ಅವರು, ರೈತರು ಬಿಸಿಲಿನ ಸಮಯದಲ್ಲಿ ಹೊಲದ ಕೆಲಸ ಮತ್ತು ನೀರಾವರಿ ತಪ್ಪಿಸಿ, ತೋಟಗಳು ಹಾಗೂ ನರ್ಸರಿಗಳ ಮೇಲ್ವಿಚಾರಣೆ ಹೆಚ್ಚಿಸಬೇಕು. ಎಳೆ ಸಸ್ಯಗಳಿಗೆ ನೆರಳು ಒದಗಿಸಬೇಕು ಎಂದು ತಿಳಿಸಿದ್ದಾರೆ. ಜಮೀನಿನ ಮೇವನ್ನು ಸುಡುವ ಬದಲು ಸಂಗ್ರಹಿಸುವ ಮೂಲಕ ಭೂಮಿಯ ಫಲವತ್ತತೆ ಕಾಪಾಡಿಕೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ. ಪಶು ಸಂಗೋಪನೆ ಇಲಾಖೆಗೆ, ಪ್ರಾಣಿಗಳಿಗೆ ತಂಪಾಗಿಸುವ ವ್ಯವಸ್ಥೆ ಮಾಡುವುದು, ನೀರು ಚಿಮುಕಿಸುವುದು, ಗಾಳಿಯ ಹರಿವನ್ನು ಹೆಚ್ಚಿಸುವುದು ಮತ್ತು ಶೆಡ್‌ಗಳನ್ನು ತಂಪಾಗಿಡುವ ಕ್ರಮಗಳನ್ನು ಕೈಗೊಳ್ಳಲು ಸೂಚಿಸಲಾಗಿದೆ. ಗರಿಷ್ಠ ಬಿಸಿಲಿನ ಸಮಯದಲ್ಲಿ ಪ್ರಾಣಿಗಳ ಚಲನವಲನವನ್ನು ನಿಯಂತ್ರಿಸಬೇಕು ಎಂದಿದ್ದಾರೆ. ಶಿಕ್ಷಣ ಇಲಾಖೆಗೆ, ವಿದ್ಯಾರ್ಥಿಗಳಿಗೆ ಹೊರಾಂಗಣ ಚಟುವಟಿಕೆಗಳನ್ನು ಕಡಿಮೆ ಮಾಡಿ, ಶಾಲೆ-ಕಾಲೇಜುಗಳಲ್ಲಿ ಕುಡಿಯುವ ನೀರಿನ ಲಭ್ಯತೆ ಹಾಗೂ ವಿಶ್ರಾಂತಿ ವ್ಯವಸ್ಥೆ ಒದಗಿಸಲು ಸೂಚಿಸಲಾಗಿದೆ. ಹೆಚ್ಚುವರಿ ಬಿಸಿಲಿನ ಪರಿಣಾಮದಿಂದ ಮಕ್ಕಳ ಆರೋಗ್ಯದ ಮೇಲೆ ನಿಗಾ ವಹಿಸಬೇಕು ಎಂದು ತಿಳಿಸಿದ್ದಾರೆ. ಆರೋಗ್ಯ ಇಲಾಖೆಗೆ, ಸರ್ಕಾರಿ ಆಸ್ಪತ್ರೆಗಳಲ್ಲಿ ORS, IV ದ್ರವಗಳು ಹಾಗೂ ಐಸ್ ಪ್ಯಾಕ್‌ಗಳ ಲಭ್ಯತೆ ಖಚಿತಪಡಿಸಿಕೊಳ್ಳಬೇಕು. ಶಾಖ ಸಂಬಂಧಿತ ಕಾಯಿಲೆಗಳ ಗುರುತಿಸುವಿಕೆ ಮತ್ತು ತುರ್ತು ಚಿಕಿತ್ಸೆ ಕುರಿತು ಸಿಬ್ಬಂದಿಗೆ ತರಬೇತಿ ನೀಡಬೇಕು ಎಂದು ನಿರ್ದೇಶನ ನೀಡಿದ್ದಾರೆ. ತಲೆ ಸುತ್ತು, ವಾಂತಿ, ಹೆಚ್ಚು ಬೆವರು, ದೇಹದ ತಾಪಮಾನ ಏರಿಕೆ ಇವು ಹೀಟ್ ಸ್ಟ್ರೋಕ್‌ನ ಲಕ್ಷಣಗಳಾಗಿವೆ. ಇಂತಹ ಲಕ್ಷಣಗಳು ಕಂಡುಬಂದರೆ ತಕ್ಷಣವೇ ವೈದ್ಯಕೀಯ ನೆರವು ಪಡೆಯಬೇಕು ಎಂದು ಸಾರ್ವಜನಿಕರಿಗೆ ಮನವಿ ಮಾಡಲಾಗಿದೆ.

ವಾರ್ತಾ ಭಾರತಿ 18 Apr 2026 8:26 pm

ಹಟ್ಟಿ | ‎ಕಾರ್ಮಿಕರ ಹಕ್ಕುಗಳಿಗಾಗಿ ಹಟ್ಟಿ ಚಿನ್ನದ ಗಣಿಯಲ್ಲಿ ಪ್ರತಿಭಟನೆ

ಹಟ್ಟಿ: ದೇಶವ್ಯಾಪಿ ಕಾರ್ಮಿಕರ ಹಕ್ಕುಗಳಿಗಾಗಿ ಏಪ್ರಿಲ್ 17ರಂದು ನೀಡಿದ ಕರೆ ಹಿನ್ನೆಲೆಯಲ್ಲಿ  (ಸಿಐಟಿಯು) ನೇತೃತ್ವದಲ್ಲಿ ಹಟ್ಟಿ ಚಿನ್ನದ ಗಣಿಯ ಕ್ಯಾಂಪ್‌ನಲ್ಲಿ ಕಾರ್ಮಿಕರು ಪ್ರತಿಭಟನೆ ನಡೆಸಿದರು. ಕೈಗಾರಿಕಾ ಪ್ರದೇಶಗಳಲ್ಲಿ ಕಾರ್ಮಿಕರ ಮೇಲೆ ನಡೆಯುತ್ತಿರುವ ದಮನವನ್ನು ಖಂಡಿಸಿ, ನೋಯ್ಡಾ, ಗುರುಗ್ರಾಮ್ ಸೇರಿದಂತೆ ರಾಷ್ಟ್ರೀಯ ರಾಜಧಾನಿ ಪ್ರದೇಶದ ಕಾರ್ಮಿಕರ ಹೋರಾಟಕ್ಕೆ ಬೆಂಬಲ ಸೂಚಿಸಿ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಮುಖಂಡರು, ದೇಶದಾದ್ಯಂತ ಕಾರ್ಮಿಕರ ಹಕ್ಕುಗಳನ್ನು ಕುಗ್ಗಿಸಲಾಗುತ್ತಿದೆ ಎಂದು ಆರೋಪಿಸಿದರು. ಗುತ್ತಿಗೆ ಕಾರ್ಮಿಕ ವ್ಯವಸ್ಥೆ, ಕಡಿಮೆ ವೇತನ, ದುಸ್ಥಿತಿ ಕೆಲಸದ ಪರಿಸ್ಥಿತಿಗಳು ಹಾಗೂ ಕಾರ್ಮಿಕ ವಿರೋಧಿ ಕಾನೂನುಗಳ ವಿರುದ್ಧ ಹೋರಾಟ ಅಗತ್ಯವಾಗಿದೆ ಎಂದು ಹೇಳಿದರು. ಕಾರ್ಮಿಕರು ತಿಂಗಳಿಗೆ 26,000 ರೂ. ಕನಿಷ್ಠ ವೇತನ, 8 ಗಂಟೆಗಳ ಕೆಲಸದ ಅವಧಿ, ಡಬಲ್ ಓವರ್‌ಟೈಮ್, PF, ESI ಸೇರಿದಂತೆ ಮೂಲಭೂತ ಸೌಲಭ್ಯಗಳನ್ನು ಒದಗಿಸುವಂತೆ ಆಗ್ರಹಿಸಿದರು. ಜೊತೆಗೆ ಗುತ್ತಿಗೆ ಕಾರ್ಮಿಕರಿಗೆ ಖಾಯಂ ಕಾರ್ಮಿಕರ ಸಮಾನ ಹಕ್ಕುಗಳನ್ನು ನೀಡಬೇಕು ಎಂದು ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ಭಾಗವಹಿಸಿದವರು ಸರ್ಕಾರದ ದಮನ ನೀತಿಯನ್ನು ಖಂಡಿಸಿ, ಬಂಧಿತ ಕಾರ್ಮಿಕರನ್ನು ತಕ್ಷಣ ಬಿಡುಗಡೆ ಮಾಡಬೇಕು ಮತ್ತು ಸುಳ್ಳು ಪ್ರಕರಣಗಳನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದರು. ಕಾರ್ಮಿಕರ ಹೋರಾಟವನ್ನು ದಮನದಿಂದ ನಿಲ್ಲಿಸಲು ಸಾಧ್ಯವಿಲ್ಲ, ಅದು ಇನ್ನಷ್ಟು ಬಲಗೊಳ್ಳುತ್ತದೆ ಎಂದು ಮುಖಂಡರು ಎಚ್ಚರಿಸಿದರು. ‎ಈ ಪ್ರತಿಭಟನೆಯಲ್ಲಿ  ಸಿಐಟಿಯು ಸಂಘಟನೆಯ ಜಿಲ್ಲಾ ಜಂಟಿ ಕಾರ್ಯದರ್ಶಿ ರಮೇಶ ವೀರಾಪೂರು, ಹ.ಚಿ.ಗ. ಕಾರ್ಮಿಕ ಮುಖಂಡರಾದ ವೆಂಕೋಬ್ ಮಿಯ್ಯಾಪೂರ, ರಮೇಶ ಬಾಬು, ಚಂದ್ರಶೇಖರ್ ನೆಲೋಗಿ,  ಮೊಹಿನುದ್ದೀನ್,  ಕೆಪಿಆರ್ ಎಸ್ ಮುಖಂಡ ಪೆಂಚಲಯ್ಯ, ಸಿಐಟಿಯುನ ಶೇಖ್ ಬಡೆ, ಫಕೃದ್ದೀನ್, ಅಲ್ಲಾಭಕ್ಷ, ಶ್ರೀಧರ್, ರಫಿ ಮಲ್ಲಾಪೂರು, ಬಸವರಾಜ್ ನಗನೂರು, ಜೆಎಂಎಸ್ ಮುಖಂಡರಾದ ವನಜಾಕ್ಷಿ, ಶಾಂತಕುಮಾರಿ, ದುರುಗಮ್ಮ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ವಾರ್ತಾ ಭಾರತಿ 18 Apr 2026 8:23 pm

RCB Vs DC IPL 2026: ಮಿಲ್ಲರ್‌ 'ಕಿಲ್ಲರ್' ಆಟಕ್ಕೆ ಮಣಿದ ಆರ್‌ಸಿಬಿ

RCB Vs DC IPL 2026: ಬೆಂಗಳೂರಿನ ಚಿನ್ನಸ್ವಾಮಿಯಲ್ಲಿ ಶನಿವಾರ (ಏಪ್ರಿಲ್‌ 18) ನಡೆದ ರೋಚಕ ಐಪಿಎಲ್ ಪಂದ್ಯದಲ್ಲಿ ಡೇವಿಡ್ ಮಿಲ್ಲರ್ ಅವರ ಸ್ಫೋಟಕ ಬ್ಯಾಟಿಂಗ್‌ ನೆರವಿನಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡವು ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ 6 ವಿಕೆಟ್‌ಗಳ ಭರ್ಜರಿ ಜಯ ದಾಖಲಿಸಿದೆ. ಸ್ಟಬ್ಸ್‌, ಕನ್ನಡಿಗ ಕೆಎಲ್‌ ರಾಹುಲ್‌ ಸಹ ಈ ಗೆಲುವಿಗೆ ಪ್ರಮುಖ ಕಾರಣಕರ್ತರಾಗಿದ್ದಾರೆ.

ಒನ್ ಇ೦ಡಿಯ 18 Apr 2026 8:22 pm

ರಶ್ಯದಿಂದ ತೈಲ ಖರೀದಿ ನಿರ್ಬಂಧ ವಿನಾಯಿತಿ 30 ದಿನ ವಿಸ್ತರಣೆ: ಅಮೆರಿಕ ಘೋಷಣೆ

ವಾಶಿಂಗ್ಟನ್,ಎ.18 ಭಾರತ ಸೇರಿದಂತೆ ಜಗತ್ತಿನಾದ್ಯಂತದ ರಾಷ್ಟ್ರಗಳಿಗೆ ರಶ್ಯದ ತೈಲ ಖರೀದಿ ಮೇಲಿನ ನಿರ್ಬಂಧಗಳಿಂದ ನೀಡಿರುವ ವಿನಾಯಿತಿಯನ್ನು ಇನ್ನೂ 30 ದಿನಗಳವರೆಗೆ ವಿಸ್ತರಿಸುವುದಾಗಿ ಅಮೆರಿಕ ಶುಕ್ರವಾರ ಘೋಷಿಸಿದೆ. ಅಮೆರಿಕದ ವಿದೇಶಾಂಗ ಸಚಿವಾಲಯವು ಶುಕ್ರವಾರ ತಡರಾತ್ರಿ ಈ ಬಗ್ಗೆ ಆದೇಶವನ್ನು ಹೊರಡಿಸಿದೆ. ಆದಾಗ್ಯೂ ಇರಾನ್‌ನಿಂದ ಇಂಧನವನ್ನು ಖರೀದಿಸುವುದಕ್ಕೆ ಪರವಾನಗಿಯನ್ನು ನೀಡಲಾಗಿಲ್ಲ. ಎರಡು ದಿನಗಳ ಹಿಂದೆ ಅಮೆರಿಕದ ವಿತ್ತ ಕಾರ್ಯದರ್ಶಿ ಸ್ಕಾಟ್ ಬೆಸ್ಸೆಂಟ್ ಅವರು, ರಶ್ಯದಿಂದ ತೈಲ ಖರೀದಿ ನಿರ್ಬಂಧಗಳಿಗೆ ನೀಡಲಾಗಿರುವ ವಿನಾಯಿತಿಯನ್ನು ವಿಸ್ತರಿಸುವುದಿಲ್ಲವೆಂದು ಹೇಳಿದ್ದರು. ಆದರೆ ದಿಢೀರ್ ಬೆಳವಣಿಗೆಯೊಂದರಲ್ಲಿ ಅಮೆರಿಕ ತನ್ನ ನಿಲುವನ್ನು ಬದಲಾಯಿಸಿದೆ. ಎಪ್ರಿಲ್ 17ರಂದು ಅಥವಾ ಅದಕ್ಕೆ ಮುನ್ನ ಹಡಗುಗಳಿಗೆ ಲೋಡ್ ಮಾಡಲಾದ ರಶ್ಯದ ಕಚ್ಚಾ ತೈಲ ಹಾಗೂ ಪೆಟ್ರೋಲಿಯಂ ಉತ್ಪನ್ನಗಳನ್ನು ಖರೀದಿಸಲು ತಾನು ಅವಕಾಶ ನೀಡುವುದಾಗಿ ಅಮೆರಿಕ ಘೋಷಿಸಿದೆ. ಭಾರತ ನಿರಾಳ? ಅಮೆರಿಕ-ಇರಾನ್ ಯುದ್ಧದ ಬಳಿಕ ಜಾಗತಿಕ ತೈಲ ಪೂರೈಕೆಯಲ್ಲಿ ತೀವ್ರ ಕೊರತೆಯುಂಟಾದ ಹಿನ್ನೆಲೆಯಲ್ಲಿ ಅಮೆರಿಕವು ರಶ್ಯದಿಂದ ತೈಲ ಖರೀದಿಯ ಮೇಲೆ ತಾನು ವಿಧಿಸಿದ್ದ ನಿರ್ಬಂಧಗಳನ್ನು ಮಾರ್ಚ್‌ನಲ್ಲಿ ತಾತ್ಕಾಲಿಕವಾಗಿ ತೆರವುಗೊಳಿಸಿತ್ತು. ಆದರೆ ಈ ರಿಯಾಯಿತಿಯ ಅವಧಿಯನ್ನು ವಿಸ್ತರಿಸಿರುವುದು ಭಾರತಕ್ಕೆ ಭಾರೀ ಪ್ರಯೋಜನಕಾರಿಯಾಗಲಿದೆ. ಅಮೆರಿಕ ರಶ್ಯದ ತೈಲ ಖರೀದಿಯ ಮೇಲಿನ ನಿರ್ಬಂಧಗಳನ್ನು ತಾತ್ಕಾಲಿಕವಾಗಿ ತೆರವುಗೊಳಿಸಿದ ಬೆನ್ನಲ್ಲೇ ಭಾರತವು ರಶ್ಯದಿಂದ 30 ದಶಲಕ್ಷ ಬ್ಯಾರೆಲ್ ತೈಲ ಖರೀದಿಗೆ ಆರ್ಡರ್ ಮಾಡಿತ್ತು. ಭಾರತವು ತನ್ನ ತೈಲ ಹಾಗೂ ಇಂಧನ ಅವಶ್ಯಕತೆಗಳಿಗಾಗಿ ಶೇ.90ರಷ್ಟು ಅಮದನ್ನೇ ಅವಲಂಭಿಸಿದೆ. ಹೀಗಾಗಿ ರಶ್ಯದ ನಿರ್ಬಂಧಗಳ ಮೇಲಿನ ರಿಯಾಯಿತಿಯ ಗಡುವನ್ನು ವಿಸ್ತರಣೆ ಮಾಡಿರುವುದು ಭಾರತಕ್ಕೆ ತಾತ್ಕಾಲಿಕವಾಗಿ ನಿರಾಳತೆಯನ್ನು ತಂದಿದೆ. ಅಮೆರಿಕ-ಇರಾನ್ ಯುದ್ಧದ ಹಿನ್ನೆಲೆಯಲ್ಲಿ ಮಧ್ಯಪ್ರಾಚ್ಯದ ರಾಷ್ಟ್ರಗಳಿಂದ ತೈಲ ಪೂರೈಕೆಗಳು ಒತ್ತಡದಲ್ಲಿರುವುದರಿಂದ ಭಾರತವು ಕಚ್ಚಾ ತೈಲಕ್ಕಾಗಿ ರಶ್ಯವನ್ನು ಹೆಚ್ಚಾಗಿ ಅವಲಂಭಿಸಿದೆ.

ವಾರ್ತಾ ಭಾರತಿ 18 Apr 2026 8:19 pm

Afzalpur | ಕಾಯಕ–ದಾಸೋಹದಿಂದ ಆರ್ಥಿಕ ಸಮಾನತೆ ಸಾಧ್ಯ: ಡಾ.ವಾಸುದೇವ ಸೇಡಂ

ಅಫಜಲಪುರ: ಪ್ರತಿಯೊಬ್ಬರೂ ಸತ್ಯಶುದ್ಧವಾದ ಕಾಯಕ ಮಾಡಿ, ಅದರ ಫಲವನ್ನು ಸಮಾಜದೊಂದಿಗೆ ದಾಸೋಹದ ರೂಪದಲ್ಲಿ ಹಂಚಿಕೊಂಡರೆ ಆರ್ಥಿಕ ಸಮಾನತೆ ಸಾಧ್ಯವಾಗುತ್ತದೆ. ಕಾಯಕ ಮತ್ತು ದಾಸೋಹ ಆರ್ಥಿಕತೆಯ ಎರಡು ಪ್ರಮುಖ ಸ್ತಂಭಗಳಾಗಿವೆ ಎಂದು ಗುವಿವಿ ವಿಶ್ರಾಂತ ಪ್ರಾಧ್ಯಾಪಕ ಡಾ. ವಾಸುದೇವ ಸೇಡಂ ಎಚ್. ಹೇಳಿದರು. ತಾಲೂಕಿನ ಗೊಬ್ಬುರವಾಡಿ ತಾಂಡಾದ ಸಂತ ಸೇವಾಲಾಲ ಮಹಾರಾಜ ಆಶ್ರಮದಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗ ವತಿಯಿಂದ ಬಸವ ಜಯಂತಿ ಅಂಗವಾಗಿ ಆಯೋಜಿಸಿದ್ದ ಸರಣಿ ಉಪನ್ಯಾಸ ಮಾಲಿಕೆ–8ರಲ್ಲಿ “ಬಸವಣ್ಣನವರ ಆರ್ಥಿಕ ಚಿಂತನೆಗಳು” ವಿಷಯದ ಕುರಿತು ಅವರು ಮಾತನಾಡಿದರು. ಬಸವಣ್ಣನವರ ಆರ್ಥಿಕ ಚಿಂತನೆಗಳು ಕೇವಲ ಸಿದ್ಧಾಂತಗಳಲ್ಲ, ಅವು ಸಮಾನತೆ ಮತ್ತು ಸಾಮಾಜಿಕ ನ್ಯಾಯದ ಆಧಾರದ ಮೇಲೆ ರೂಪುಗೊಂಡ ಪ್ರಾಯೋಗಿಕ ಜೀವನ ಮೌಲ್ಯಗಳಾಗಿವೆ ಎಂದು ಹೇಳಿದರು. “ಕಾಯಕವೇ ಕೈಲಾಸ”, “ದಾಸೋಹ ತತ್ವ” ಹಾಗೂ “ಆರ್ಥಿಕ ಸಮಾನತೆ” ಎಂಬ ಬಸವ ತತ್ವಗಳು ಇಂದಿನ ಸಮಾಜಕ್ಕೂ ಮಾರ್ಗದರ್ಶಕವಾಗಿವೆ ಎಂದು ಅಭಿಪ್ರಾಯಪಟ್ಟರು. ಕಾರ್ಯಕ್ರಮದಲ್ಲಿ ಆಶ್ರಮದ ಪೀಠಾಧಿಪತಿ ಪೂಜ್ಯ ಬಳಿರಾಮ ಮಹಾರಾಜ, ಉಪನ್ಯಾಸಕ ಹಾಗೂ ಬಳಗದ ಅಧ್ಯಕ್ಷ ಎಚ್.ಬಿ.ಪಾಟೀಲ, ಗೌರವ ಸಲಹೆಗಾರ ಶಿವಯೋಗೆಪ್ಪಾ ಎಸ್. ಬಿರಾದಾರ, ಪ್ರಮುಖರಾದ ಹರಿಶ್ಚಂದ್ರ ಪವಾರ, ಜಗನಾಥ ರಾಠೋಡ, ರಾಮಚಂದ್ರ ಜಾಧವ, ಜೈರಾಮ ಜಾಧವ,ಮಂಜುನಾಥ ಪವಾರ, ಸುಧೀರ ಜಾಧವ, ದತ್ತು ರಾಠೋಡ, ಗೀತಾ ರಾಠೋಡ ಇತರರಿದ್ದರು.

ವಾರ್ತಾ ಭಾರತಿ 18 Apr 2026 8:19 pm

ಒತ್ತಡಮಯ ಬದುಕಿಗೆ ಮ್ಯಾರಥಾನ್ ಪೂರಕ: ಡಾ.ಬಿ.ದಿನೇಶ್

ಕೊಣಾಜೆ; ಮ್ಯಾರಥಾನ್‌ನಂತಹ ಕ್ರೀಡೆಗಳು ಕೇವಲ ದೈಹಿಕ ಸಾಮರ್ಥ್ಯವನ್ನು ಹೆಚ್ಚಿಸುವುದು ಮಾತ್ರವಲ್ಲದೆ, ಮಾನಸಿಕ ಕ್ಷಮತೆಯನ್ನೂ ಬೆಳೆಸುತ್ತದೆ. ಇಂದಿನ ಒತ್ತಡಮಯ ಬದುಕಿಗೆ ಇದು ಪೂರಕವಾಗಿದೆ. ಎನ್‌ಎಸ್‌ಎಸ್ ಯೋಜನೆಯ ಮೂಲಕ ಇಂತಹ ಒಂದು ಅದ್ಭುತ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದು ಶ್ಲಾಘನೀಯವಾಗಿದೆ ಎಂದು ಬೆಂಗಳೂರಿನ ಶ್ರೀ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕರಾದ ಡಾ.ಬಿ.ದಿನೇಶ್ ಹೇಳಿದರು. ನಿಟ್ಟೆ ಇನ್‌ಸ್ಟಿಟ್ಯೂಟ್ ಆಫ್ ಅಲೈಡ್ ಹೆಲ್ತ್ ಸೈನ್ಸಸ್‌ನ ಎನ್‌ಎಸ್‌ಎಸ್ ಘಟಕ, ಕರ್ನಾಟಕ ಸರ್ಕಾರದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಕೇಂದ್ರ ಸರ್ಕಾರದ ಎನ್‌ಎಸ್‌ಎಸ್ ಪ್ರಾದೇಶಿಕ ನಿರ್ದೇಶನಾಲಯದ ಸಹಯೋಗದೊಂದಿಗೆ ದೇರಳಕಟ್ಟೆಯ ಕೆ.ಎಸ್.ಹೆಗ್ಡೆ ಆಡಿಟೋರಿಯಮ್ ಮುಂಭಾಗದಲ್ಲಿ ಶನಿವಾರ ಮುಂಜಾನೆ 5K ಮತ್ತು 10K ಎನ್‌ಎಸ್‌ಎಸ್ ಮ್ಯಾರಥಾನ್ ಗೆ ಚಾಲನೆ ನೀಡಿ ಅವರು ಮಾತನಾಡಿದರು. ನಿಟ್ಟೆ ಪರಿಗಣಿತ ವಿವಿಯ ಸಹ ಕುಲಾಧಿಪತಿ ಡಾ.ಎಂ. ಶಾಂತಾರಾಮ ಶೆಟ್ಟಿ ಮಾತನಾಡಿ ನಿಟ್ಟೆ ಸಂಸ್ಥೆಯು ಯಾವಾಗಲೂ ಶೈಕ್ಷಣಿಕ ಅಭಿವೃದ್ಧಿಯ ಜೊತೆಗೆ ವಿದ್ಯಾರ್ಥಿಗಳ ಸಮಗ್ರ ಬೆಳವಣಿಗೆಗೆ ಒತ್ತು ನೀಡುತ್ತಿದೆ.ಇಂದಿನ ಈ ಮ್ಯಾರಥಾನ್ ನಮ್ಮ ಸಮುದಾಯದ ಸ್ವಾಸ್ಥ್ಯ ಮತ್ತು ಸಂಘಟಿತ ಪ್ರಯತ್ನಕ್ಕೆ ಸಾಕ್ಷಿಯಾಗಿದೆಯೆಂದರು. ನಿಟ್ಟೆ ಪರಿಗಣಿತ ವಿವಿಯ ಕುಲಾಧಿಪತಿ ವಿಶಾಲ್ ಹೆಗ್ಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.ಎನ್‌ಎಸ್‌ಎಸ್ ಪ್ರಾದೇಶಿಕ ನಿರ್ದೇಶಕ ಗಿರಿಧರ್ ಉಪಾಧ್ಯಾಯ,ರಾಜ್ಯ ಎನ್‌ಎಸ್‌ಎಸ್ ಅಧಿಕಾರಿ ಡಾ.ಪ್ರತಾಪ್ ಲಿಂಗಯ್ಯ ಮುಖ್ಯ ಅತಿಥಿಗಳಾಗಿದ್ದರು.ಎನ್‌ಎಸ್‌ಎಸ್ ಸಂಯೋಜಕರಾದ ಶಶಿಕುಮಾರ್ ಶೆಟ್ಟಿ,ಡೀನ್ ಪ್ರೊ.ಡಾ.ಜಯಪ್ರಕಾಶ್ ಶೆಟ್ಟಿ,ಕಾರ್ಯಕ್ರಮ ಸಂಯೋಜಕರಾದ ಪ್ರತಿಮಾ ರೈ,ಅಂಶ್ಯಾ ರೈ ಹಾಗೂ ಡಾ.ವರ್ಷಾ ಶೆಟ್ಟಿ ಉಪಸ್ಥಿತರಿದರು. ಮ್ಯಾರಥಾನ್ನಲ್ಲಿ ದೇಶದ 150 ಕ್ಕೂ ಹೆಚ್ಚು ವಿದ್ಯಾಸಂಸ್ಥೆಗಳ ಸುಮಾರು 1700 ವಿದ್ಯಾರ್ಥಿಗಳು,ಎನ್ಎಸ್ಎಸ್ ಸ್ವಯಂ ಸೇವಕರು,ಅಧ್ಯಾಪಕರು,ಸಿಬ್ಬಂದಿಗಳು ಹಾಗೂ ಗೋವಾ ‌ಮೂಲದ ಅಂಗವೈಕಲ್ಯ ಹೊಂದಿರುವ ವಿವೇಕ್ ಸಿಂಗ್ ಭಾಗವಹಿಸುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾದರು‌.

ವಾರ್ತಾ ಭಾರತಿ 18 Apr 2026 8:15 pm

Aland | ಶಿಕ್ಷಣವೇ ಸಮಾನತೆಯ ದಾರಿ: ರಾಜೇಂದ್ರ ಕಡಗನ್

ಆಳಂದ: ಡಾ. ಅಂಬೇಡ್ಕರ್ ಅವರ ಚಿಂತನೆಗಳು ಇಂದಿಗೂ ಸಮಾಜಕ್ಕೆ ದಿಕ್ಕು ತೋರಿಸುತ್ತಿವೆ. ಶಿಕ್ಷಣದ ಮೂಲಕವೇ ವ್ಯಕ್ತಿ ಹಾಗೂ ಸಮಾಜದ ಅಭಿವೃದ್ಧಿ ಸಾಧ್ಯವೆಂದು ಸಂಪನ್ಮೂಲ ವ್ಯಕ್ತಿ ರಾಜೇಂದ್ರ ಕಡಗನ್ ಅವರು ಹೇಳಿದರು. ಪಟ್ಟಣದ ತಾಲೂಕು ಸಮಾಜ ಕಲ್ಯಾಣ ಇಲಾಖೆಯ ಆಶ್ರಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಡಾ.ಬಿ.ಆರ್.ಅಂಬೇಡ್ಕರ್ ಮೆಟ್ರಿಕ್ ನಂತರದ ಬಾಲಕರ ವಸತಿನಿಲಯದಲ್ಲಿ ಸಂವಿಧಾನ ಶಿಲ್ಪಿ ಭಾರತ ರತ್ನ ಡಾ.ಬಿ.ಆರ್.ಅಂಬೇಡ್ಕರ್ ಅವರ 135ನೇ ಜಯಂತಿ ಆಚರಣೆ ಹಾಗೂ ನಿಲಯದಲ್ಲಿ ಅತ್ಯಧಿಕ ಅಂಕಗಳನ್ನು ಪಡೆದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸುವ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸಕರಾಗಿ ಅವರು ಮಾತನಾಡಿದರು. ವಿದ್ಯಾರ್ಥಿಗಳು ಶ್ರಮಪಟ್ಟು ವಿದ್ಯಾಭ್ಯಾಸದಲ್ಲಿ ಮುಂದುವರಿಯಬೇಕು ಹಾಗೂ ತಮ್ಮ ಸಾಧನೆಗಳ ಮೂಲಕ ಸಮಾಜಕ್ಕೆ ಮಾದರಿಯಾಗಬೇಕು ಎಂದು ಸಲಹೆ ನೀಡಿದರು. ಕಾರ್ಯಕ್ರಮದಲ್ಲಿ ನಿಲಯ ಮೇಲ್ವಿಚಾರಕರಾದ ಸಿದ್ಧರಾಮ ಸಾಲೇಗಾಂವ ಮತ್ತು ನಿಲಯ ಪಾಲಕರಾದ ಗುಂಡೇರಾಯ ಅವರು ಅತಿಥಿಗಳಾಗಿ ಉಪಸ್ಥಿತರಿದ್ದರು. ವೇದಿಕೆಯಲ್ಲಿ ಪಿಯುಸಿ ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಪಡೆದ ಅಂಕುಶ ರಾಜೇಂದ್ರ, ಅರುಣ ಮಹಾದೇವ ಹಾಗೂ ಲವ ರಾಜೇಂದ್ರ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮವನ್ನು ನಿವೃತ್ತ ಸೈನಿಕ ಸಂಘದ ಅಧ್ಯಕ್ಷ ಸಿದ್ಧಲಿಂಗ ಮಲಶೆಟ್ಟಿ ನಿರೂಪಿಸಿದರು. ನಿಲಯಪಾಲಕರಾದ ನಿಂಗಣ್ಣ ದೊಡ್ಡಮನಿ ಸ್ವಾಗತಿಸಿದರು. ಈ ಸಂದರ್ಭದಲ್ಲಿ ಸಮತಾಲೋಕ ಶಿಕ್ಷಣ ಸಮಿತಿ ಹಾಗೂ ನಿವೃತ್ತ ಸೈನಿಕ ಸಂಘದ ಆಶ್ರಯದಲ್ಲಿ ನಡೆಯುತ್ತಿರುವ ಸೈನಿಕ ತರಬೇತಿ ಕೇಂದ್ರದ ಪ್ರಶಿಕ್ಷಣಾರ್ಥಿಗಳು, ವಸತಿನಿಲಯದ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

ವಾರ್ತಾ ಭಾರತಿ 18 Apr 2026 8:15 pm

Aland | ಕಬ್ಬು ಪೂರೈಸಿದ ರೈತರ ಬಿಲ್ ಪಾವತಿಗೆ ವಿಳಂಬವಾದರೆ ಹೋರಾಟ

ಆಳಂದ: ತಾಲೂಕಿನ ಭೂಸನೂರ ಬಳಿ ತಾಲೂಕಿನ ಭೂಸನೂರ ಎನ್‌ಎಸ್‌ಎಲ್ ಸಕ್ಕರೆ ಕಾರ್ಖಾನೆಗೆ ಕಬ್ಬು ಪೂರೈಸಿದ ರೈತರಿಗೆ ಬಿಲ್ ಪಾವತಿ ಮಾಡದೇ ಹೋದಲ್ಲಿ ರೈತರೊಂದಿಗೆ ಕಾರ್ಖಾನೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಗುವುದು ಎಂದು ಕರ್ನಾಟಕ ರಕ್ಷಣಾ ವೇದಿಕೆಯ ನಿಂಬರಗಾ ಹೋಬಳಿ ಘಟಕದ ಅಧ್ಯಕ್ಷ ಬಸವರಾಜ ಯಳಸಂಗಿ ಎಚ್ಚರಿಸಿದರು. ತಾಲೂಕಿನ ಭೂಸನೂರ ಬಳಿಯಿರುವ ಎನ್‌ಎಸ್‌ಎಲ್ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿಯ ಉಪಾಧ್ಯಕ್ಷರಿಗೆ ಲಿಖಿತವಾಗಿ ಬೇಡಿಕೆಯ ಮನವಿ ಸಲ್ಲಿಸಿ ಒತ್ತಾಯಿಸಿರುವ ಅವರು, ಕಬ್ಬು ಪೂರೈಕೆ ಮಾಡಿದ ರೈತರಿಗೆ ಬಿಲ್ ತಕ್ಷಣವೇ ಪಾವತಿಗೆ ಒತ್ತಾಯಿಸಿ ಮನವಿ ಸಲ್ಲಿಸಲಾಯಿತು. ರೈತರಿಗೆ ಬಿಲ್ ಇದುವರೆಗೂ ಪಾವತಿ ಮಾಡದೆ ಇರುವುದು ರೈತರಿಗೆ ತೊಂದರೆ ಎದುರಾಗಿದೆ. ಕಾರ್ಖಾನೆಯಿಂದ ಕಬ್ಬಿನ್ ಬಿಲ್‌ಪಾವತಿಗೆ ವಿಳಂಬದಿಂದಾಗಿ ರೈತರು ಗಂಭೀರ ಆರ್ಥಿಕ ಸಂಕಷ್ಟವನ್ನು ಎದುರಿಸತೊಡಗಿದ್ದಾರೆ. ಕೃಷಿ ಚುಟುವಟಿಕೆಗಳಿಗೆ ಮುಂದುವರೆಸಲು ತೊಂದರೆ ಆಗಿದೆ. ತಕ್ಷಣವೇ ಕಬ್ಬಿನ ಬಿಲ್ ರೈತರ ಖಾತೆಗೆ ಪಾವತಿಸಬೇಕು. ಇಲ್ಲವಾದಲ್ಲಿ ರೈತರೊಂದಿಗೆ ಕಾಖಾನೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಗುವುದು ಎಂದು ಮನವಿ ಸಲ್ಲಿಸಿ ಎಚ್ಚರಿಸಿದರು. ಕರವೇ ವಲಯ ಅಧ್ಯಕ್ಷ ಬಸವರಾಜ ಯಳಸಂಗಿ, ಕರ್ನಾಟಕ ರಾಜ್ಯ ರೈತ ಸಂಘದ ಹಾಗೂ ಹಸಿರು ಸೇನೆ ನಿಂಬರಗಾ ಅಧ್ಯಕ್ಷ ಧರ್ಮರಾಯ ಎಸ್.ಕಾಮಣಗೊಳ ಸೇರಿದಂತೆ ಇತರರು ಉಪಸ್ಥಿತರಿದ್ದು, ರೈತರ ಕಬ್ಬಿನ ಬಿಲ್ ತಕ್ಷಣಕ್ಕೆ ನೀಡಬೇಕು ಎಂದು ಆಗ್ರಹಿಸಿದರು. ಮನವಿ ಸ್ವೀಕರಿಸಿದ ಕಾರ್ಖಾನೆ ಉಪಾಧ್ಯಕ್ಷರು ಈಕುರಿತು ಬಿಲ್‌ಪಾವತಿಗೆ ಕ್ರಮ ವಹಿಸಲಾಗುತ್ತದೆ ಎಂದು ಭರವಸೆ ನೀಡಿದರು.

ವಾರ್ತಾ ಭಾರತಿ 18 Apr 2026 8:12 pm

ಹಾರ್ಮುಝ್‌ ಜಲಸಂಧಿಯಲ್ಲಿ ಭಾರತೀಯ ಧ್ವಜ ಹೊಂದಿರುವ ಸೂಪರ್‌ ಟ್ಯಾಂಕರ್‌ಗಳ ಮೇಲೆ ದಾಳಿ : ವರದಿ

ಹೊಸದಿಲ್ಲಿ, ಎ.18: ಜಗತ್ತಿನ ಅತ್ಯಂತ ಪ್ರಮುಖ ತೈಲ ಮಾರ್ಗಗಳಲ್ಲಿ ಒಂದಾದ ಹಾರ್ಮುಝ್ ಜಲಸಂಧಿ ಪ್ರದೇಶದಲ್ಲಿ ಉದ್ವಿಗ್ನತೆ ಮತ್ತಷ್ಟು ತೀವ್ರಗೊಂಡಿದ್ದು, ನೌಕಾಸಂಚಾರ ಅಸ್ತವ್ಯಸ್ತವಾಗಿದೆ. ಶನಿವಾರ ಇರಾನಿನ ಗನ್‌ ಬೋಟ್‌ಗಳಿಂದ ನಡೆದ ಗುಂಡಿನ ದಾಳಿಯ ಹಿನ್ನೆಲೆಯಲ್ಲಿ, ಭಾರತೀಯ ಧ್ವಜ ಹೊಂದಿರುವ ಸೂಪರ್‌ ಟ್ಯಾಂಕರ್ ಸೇರಿದಂತೆ ಹಲವಾರು ಹಡಗುಗಳು ಹಿಂತಿರುಗಿದವು ಎಂದು ಅಂತರರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. ಅಸೋಸಿಯೇಟೆಡ್ ಪ್ರೆಸ್ ಪ್ರಕಾರ, ಹಾರ್ಮುಝ್ ಮೂಲಕ ಸುಮಾರು 2 ಮಿಲಿಯನ್ ಬ್ಯಾರೆಲ್ ಇರಾಕಿ ಕಚ್ಚಾ ತೈಲವನ್ನು ಸಾಗಿಸುತ್ತಿದ್ದ ಭಾರತೀಯ ಟ್ಯಾಂಕರ್ ಮೇಲೆ ಗುಂಡಿನ ದಾಳಿ ನಡೆದಿದೆ. ದಾಳಿಯ ನಂತರ ಟ್ಯಾಂಕರ್ ದಿಕ್ಕು ಬದಲಿಸಿ ಹಿಂತಿರುಗಿದೆ. ಯುಕೆ ಮ್ಯಾರಿಟೈಮ್ ಟ್ರೇಡ್ ಆಪರೇಷನ್ಸ್ (UKMTO) ಮಾಹಿತಿ ಪ್ರಕಾರ, ಇರಾನ್‌ ನ ರೆವಲ್ಯೂಷನರಿ ಗಾರ್ಡ್‌ ಗೆ ಸೇರಿದ ಎರಡು ಗನ್‌ ಬೋಟ್‌ಗಳು ಜಲಸಂಧಿ ದಾಟುತ್ತಿದ್ದ ಟ್ಯಾಂಕರ್‌ ಗಳ ಮೇಲೆ ಗುಂಡು ಹಾರಿಸಿವೆ. ದಾಳಿಯಲ್ಲಿ ಹಡಗು ಮತ್ತು ಸಿಬ್ಬಂದಿ ಸುರಕ್ಷಿತವಾಗಿದ್ದಾರೆ ಎಂದು ತಿಳಿದುಬಂದಿದ್ದರೂ, ಹಡಗಿನ ಗುರುತು ಅಥವಾ ಗಮ್ಯಸ್ಥಾನವನ್ನು ಅಧಿಕಾರಿಗಳು ಬಹಿರಂಗಪಡಿಸಿಲ್ಲ. ಘಟನೆಯ ನಂತರ ಭಾರತೀಯ ಧ್ವಜ ಹೊಂದಿರುವ ಸೂಪರ್‌ ಟ್ಯಾಂಕರ್ ಸೇರಿ ಹಲವು ಹಡಗುಗಳು ತಮ್ಮ ಮಾರ್ಗವನ್ನು ಬದಲಿಸಿವೆ ಎಂದು TankerTrackers.com ತಿಳಿಸಿದೆ. ಇದೇ ವೇಳೆ, ಗ್ರೀಕ್ ಟ್ಯಾಂಕರ್‌ ಗಳೂ ದಿನದ ಆರಂಭದಲ್ಲೇ ಹಿಂತಿರುಗಿವೆ. ಅಮೆರಿಕ–ಇರಾನ್ ಮಾತುಕತೆಗಳು ಇನ್ನೂ ಸ್ಪಷ್ಟ ಫಲಿತಾಂಶ ನೀಡದಿರುವುದು ಪರಿಸ್ಥಿತಿಯನ್ನು ಮತ್ತಷ್ಟು ಗೊಂದಲಕರವಾಗಿಸಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೇತೃತ್ವದ ಆಡಳಿತ ಕೈಗೊಂಡ ‘ಆಪರೇಷನ್ ಎಪಿಕ್ ಫ್ಯೂರಿ’ ಕ್ರಮ ಹಾಗೂ ಅದಕ್ಕೆ ಪ್ರತಿಯಾಗಿ ಇರಾನ್ ಕೈಗೊಂಡ ಕ್ರಮಗಳಿಂದ ಕಳೆದ ಏಳು ವಾರಗಳಿಂದ ಉದ್ವಿಗ್ನತೆ ಹೆಚ್ಚಾಗಿದೆ. ಬ್ಲೂಮ್‌ಬರ್ಗ್ ವರದಿ ಪ್ರಕಾರ, ಟೆಹ್ರಾನ್‌ ನಿಂದ ಸ್ಪಷ್ಟ ಸಂದೇಶಗಳ ಕೊರತೆಯಿಂದ ಭಾರತೀಯ ಕಚ್ಚಾ ತೈಲ ಸಾಗಣೆ ಹಡಗುಗಳು ಜಾಗರೂಕರಾಗಿದ್ದು, ಹಾರ್ಮುಝ್ ಮಾರ್ಗವನ್ನು ತಾತ್ಕಾಲಿಕವಾಗಿ ತಪ್ಪಿಸುತ್ತಿವೆ. ಹಡಗು ಮಾಲೀಕರು ಈ ಮಾರ್ಗದ ಸುರಕ್ಷತೆ ಕುರಿತು ಆತಂಕ ವ್ಯಕ್ತಪಡಿಸಿದ್ದಾರೆ. ರಾಯಿಟರ್ಸ್ ವರದಿ ಪ್ರಕಾರ, ಶನಿವಾರ ಕನಿಷ್ಠ ಎರಡು ವಾಣಿಜ್ಯ ಹಡಗುಗಳು ಗುಂಡಿನ ದಾಳಿಗೆ ಒಳಗಾಗಿವೆ. ಇದರಿಂದ ಜಗತ್ತಿನ ಅತ್ಯಂತ ಜನನಿಬಿಡ ತೈಲ ಕಾರಿಡಾರ್‌ ಗಳಲ್ಲಿ ಒಂದಾದ ಹಾರ್ಮುಝ್‌ ನಲ್ಲಿ ಸಂಚಾರ ತೀವ್ರವಾಗಿ ನಿರ್ಬಂಧಿತವಾಗಿದೆ. ಇದೇ ವೇಳೆ, ಇಸ್ರೇಲ್–ಲೆಬನಾನ್ ನಡುವಿನ 10 ದಿನಗಳ ಕದನ ವಿರಾಮದ ನಂತರ ಭಾಗಶಃ ಒಪ್ಪಂದದ ನಿರೀಕ್ಷೆಗಳು ಮೂಡಿದ್ದರೂ, ಇತ್ತೀಚಿನ ಘಟನೆಗಳಿಂದ ಮತ್ತೆ ಅನಿಶ್ಚಿತತೆ ಹೆಚ್ಚಾಗಿದೆ.

ವಾರ್ತಾ ಭಾರತಿ 18 Apr 2026 8:09 pm

ಉಡುಪಿ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಆಮಂತ್ರಣ ಪತ್ರಿಕೆ ಬಿಡುಗಡೆ

ಉಡುಪಿ, ಎ.18: ಕನ್ನಡ ಸಾಹಿತ್ಯ ಪರಿಷತ್ ಉಡುಪಿ ತಾಲೂಕು ಘಟಕ ಇದರ ವತಿಯಿಂದ ಮೇ 3ರಂದು ಡಾ.ಭಾಸ್ಕರಾಂನಂದ ಕುಮಾರ್ ಅವರ ಸರ್ವಾಧ್ಯಕ್ಷತೆಯಲ್ಲಿ ನಡೆಯಲಿರುವ 16ನೇ ಕನ್ನಡ ಸಾಹಿತ್ಯ ಸಮ್ಮೇಳನ ಭೀಷ್ಮೋತ್ಸವದ ಆಮಂತ್ರಣ ಪತ್ರಿಕೆಯನ್ನು ಸಾಂಸ್ಕೃತಿಕ ರಾಯಭಾರಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಮೋಹನ್ ಆಳ್ವ ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ಕಸಾಪ ಉಡುಪಿ ತಾಲೂಕು ಅಧ್ಯಕ್ಷ ರವಿರಾಜ್ ಎಚ್.ಪಿ., ಕಸಾಪ ಗೌರವ ಸಲಹೆಗಾರರಾದ ಉಡುಪಿ ವಿಶ್ವನಾಥ್ ಶೆಣೈ, ಪ್ರೊ.ಶಂಕರ್, ಗೌರವ ಕಾರ್ಯದರ್ಶಿಗಳಾದ ಜನಾರ್ದನ್ ಕೊಡವೂರು, ರಂಜನಿ ವಸಂತ್, ಗೌರವ ಕೋಶಾದ್ಯಕ್ಷ ರಾಜೇಶ್ ಭಟ್ ಪಣಿಯಾಡಿ, ಮಾಧ್ಯಮ ಪ್ರತಿನಿಧಿ ಆಸ್ಟ್ರೋ ಮೋಹನ್, ಸಂಘಟನಾ ಕಾರ್ಯದರ್ಶಿ ರಾಘವೇಂದ್ರ ಪ್ರಭು ಕರ್ವಾಲು, ವಸಂತ್, ದೀಪಾ ಕರ್ಕಿ, ಚಂದ್ರಶೇಖರ್, ಸಾಮಾಜಿಕ ಜಾಲತಾಣ ಸಂಚಾಲಕ ಸಿದ್ದಬಸಯ್ಯ ಸ್ವಾಮಿ ಚಿಕ್ಕಮಠ ಮೊದಲಾದವರು ಉಪಸ್ಥಿತರಿದ್ದರು.

ವಾರ್ತಾ ಭಾರತಿ 18 Apr 2026 8:09 pm

ಉಡುಪಿ ನೂತನ ಬಿಷಪ್ ಡಾ.ಲೆಸ್ಲಿ ಕ್ಲಿಫರ್ಡ್ ಡಿಸೋಜರ ಪೀಠಾರೋಹಣಕ್ಕೆ ಸಿದ್ಧತೆ

ಉಡುಪಿ, ಎ.18: ಕಲ್ಯಾಣಪುರದ ಮಿಲಾಗ್ರಿಸ್ ಕಾಲೇಜು ಮೈದಾನದಲ್ಲಿ ಎ.20ರಂದು ನಡೆಯಲಿರುವ ಉಡುಪಿ ಧರ್ಮಕ್ಷೇತ್ರದ ದ್ವಿತೀಯ ಧರ್ಮಾಧ್ಯಕ್ಷ ಅತಿ ವಂ.ಡಾ.ಲೆಸ್ಲಿ ಕ್ಲಿಫರ್ಡ್ ಡಿಸೋಜ ಅವರ ಪೀಠಾ ರೋಹಣ ಸಮಾರಂಭಕ್ಕೆ ಸಿದ್ದತೆಗಳು ಪೂರ್ಣಗೊಂಡಿವೆ. ಸಂತೆಕಟ್ಟೆ ಬಸ್ ನಿಲ್ಡಾಣದಿಂದ ಮಿಲಾಗ್ರಿಸ್ ಪ್ರಧಾನಾಲಯಕ್ಕೆ ತೆರಳುವ ಮಾರ್ಗವನ್ನು ಸಂಪೂರ್ಣವಾಗಿ ಅಲಂಕ ರಿಸಲಾಗಿದ್ದು ಬೃಹತ್ ಗಾತ್ರದ ಸ್ವಾಗತ ಕಮಾನುಗಳನ್ನು ಅಳವಡಿಸಲಾಗಿದೆ. ದಾರಿಯುದ್ದಕ್ಕೂ ಶುಭಾಶಯ ಕೋರುವ ಫ್ಲೆಕ್ಸ್ ಅಳವಡಿಕೆ ಮಾಡಲಾಗಿದೆ. ಕಾರ್ಯಕ್ರಮದ ಪ್ರಧಾನ ವೇದಿಕೆ ಸಿದ್ದಗೊಂಡಿದ್ದು ಅದರಲ್ಲಿ ನೂತನ ಧರ್ಮಾಧ್ಯಕ್ಷರ ಅಭಿಷೇಕ ಹಾಗೂ ಪೀಠಾರೋಹಣ ಸಮಾರಂಭ ಪವಿತ್ರ ಬಲಿಪೂಜೆಯೊಂದಿಗೆ ನೆರವೇರಲಿದೆ. ವೇದಿಕೆಯಲ್ಲಿ ಸುಮಾರು 35 ಧರ್ಮಾಧ್ಯಕ್ಷರು ಆಸೀನರಾಗಲಿದ್ದು ಬಲಿಪೂಜೆಯ ಬಳಿಕದ ಸಾರ್ವಜನಿಕ ಅಭಿನಂದನಾ ಸಮಾರಂಭ ಕೂಡ ಅದೇ ವೇದಿಕೆಯಲ್ಲಿ ಜರುಗಲಿದೆ. ಭಕ್ತಾದಿಗಳಿಗೆ ಕುಳಿತುಕೊಳ್ಳಲು ಬೃಹತ್ ಪೆಂಡಾಲ್ ವ್ಯವಸ್ಥೆಗಳನ್ನು ಮಾಡಲಾಗಿದೆ. ಬಿಸಿಲಿನ ಶಾಖ ವಿಪರೀತ ಇರುವ ನಿಟ್ಟಿನಲ್ಲಿ ಸಾಕಷ್ಟು ಸಂಖ್ಯೆ ಫ್ಯಾನ್ ವ್ಯವಸ್ಥೆಯ ಜೊತೆಗೆ ಕುಡಿಯವ ನೀರಿನ ವ್ಯವಸ್ಥೆಗಳನ್ನು ಮಾಡಲಾಗಿದೆ. ಧರ್ಮಾಧ್ಯಕ್ಷರ ದೀಕ್ಷಾ ಸಮಾರಂಭ ಅತ್ಯಂತ ಪವಿತ್ರ ಕಾರ್ಯಕ್ರಮ ವಾಗಿದ್ದು ಈ ವೇಳೆಯಲ್ಲಿ ವೇದಿಕೆಯ ಬಳಿ ಕಾರ್ಯಕ್ರಮದ ಪಾವಿತ್ರ್ಯತೆ ಯನ್ನು ಕಾಪಾಡುವ ಸಲುವಾಗಿ ಸಾರ್ವಜನಿಕರಿಗೆ ಛಾಯಾಗ್ರಹಣ ಮತ್ತು ವೀಡಿಯೋ ಗ್ರಫಿ ನಿಷೇಧಿಸಿದೆ. ಮಾಧ್ಯಮದವರಿಗೆ ಫೋಟೊ ಮತ್ತು ವೀಡಿಯೊಗೆ ಸೂಕ್ತ ವ್ಯವಸ್ಥೆಗಳನ್ನು ಮಾಡಲಾಗಿದೆ. ಧರ್ಮಾಧ್ಯಕ್ಷರ ದೀಕ್ಷಾ ಸಮಾರಂಭವನ್ನು ಸಂಪೂರ್ಣವಾಗಿ ನೇರಪ್ರಸಾರ ಮಾಡಲಾಗುತ್ತಿದ್ದು ವಿದೇಶದಲ್ಲಿರುವ ಕ್ರೈಸ್ತ ಭಕ್ತಾದಿಗಳು ಕೂಡ ಕಾರ್ಯಕ್ರಮ ವೀಕ್ಷಿಸುವ ವ್ಯವಸ್ಥೆ ಮಾಡಲಾಗಿದೆ. ಕಾರ್ಯಕ್ರಮದ ಯಶಸ್ಸಿಗಾಗಿ ವಿವಿಧ ಸಮಿತಿಗಳ ಮೂಲಕ ತಯಾರಿಗಳು ಭರದಿಂದ ನಡೆದಿದ್ದು ಕೊನೆಯ ಹಂತದ ಕೆಲಸಗಳು ಮಾತ್ರ ಬಾಕಿ ಇವೆ. ಪಾರ್ಕಿಂಗ್ ಸ್ಥಳಗಳು: ಮಿಲಾಗ್ರಿಸ್ ಪ್ರಧಾನಾಲಯದ ಆವರಣದಲ್ಲಿ ನುನ್ಸಿಯೋ, ಕಾರ್ಡಿನಲ್, ಆರ್ಚ್ ಬಿಷಪ್ ಮತ್ತು ಇತರ ಧರ್ಮಾ ಧ್ಯಕ್ಷರುಗಳು, ಮಾಧ್ಯಮ ಹಾಗೂ ಗಾಯನ ತಂಡದ ವಾಹನಗಳು, ಮಿಲಾಗ್ರಿಸ್ ಆಂಗ್ಲ ಮಾಧ್ಯಮ ಶಾಲೆ ಹಾಗೂ ಕಾಲೇಜು ಆವರಣದಲ್ಲಿ ಧರ್ಮಗುರುಗಳು ಹಾಗೂ ಧರ್ಮಭಗಿನಿಯರು, ಸಂತೆಕಟ್ಟೆ ಮೌಂಟ್ ರೋಸರಿ ಚರ್ಚ್ ಆವರಣದಲ್ಲಿ ಸಾರ್ವಜನಿಕರ ವಾಹನಗಳಿಗೆ ಅವಕಾಶ ಕಲ್ಪಿಸಲಾಗಿದೆ. ವಿಲ್ಸನ್ ಫೆರ್ನಾಂಡಿಸ್ ಮೈದಾನದಲ್ಲಿ ಶಂಕರಪುರ ಮತ್ತು ಶಿರ್ವ ಚರ್ಚಿನ ಭಕ್ತಾದಿಗಳ ವಾಹನಗಳು(ಬಸ್ಸುಗಳನ್ನು ಹೊರತುಪಡಿಸಿ), ಪೈ ಶಾಲಾ ಆವರಣದಲ್ಲಿ ಗೌರವ ಅತಿಥಿಗಳು, ಜೊವಿಟಾ ಮೈದಾನ ಹಾಗೂ ರಸ್ತೆಯ ಇಕ್ಕೆಲ ಗಳಲ್ಲಿ ದ್ವಿಚಕ್ರ ವಾಹನಗಳನ್ನು ನಿಲ್ಲಿಸಲು ಅವಕಾಶವಿದೆ. ಮಿಲಾಗ್ರಿಸ್ ಹೋಮ್‌ನಲ್ಲಿ ಧರ್ಮಾಧ್ಯಕ್ಷರುಗಳ ವಾಹನಗಳು, ಆಲ್ವಿನ್ ನಜರೆತ್ ಮೈದಾನದಲ್ಲಿ ಕೆಮ್ಮಣ್ಣು, ಮೌಂಟ್ ರೋಸರಿ, ತೊಟ್ಟಂ, ಮಿಲಾಗ್ರಿಸ್ ಚರ್ಚಿನ ಭಕ್ತಾದಿಗಳ ವಾಹನ ನಿಲುಗಡೆಗೆ ಮತ್ತು ವಾಹನ ದಟ್ಟಣೆ ಹೆಚ್ಚಾದಲ್ಲಿ ನೇಜಾರು ಮೈದಾನದಲ್ಲಿ ಕೂಡ ನಿಲುಗಡೆಗೆ ಅವಕಾಶ ನೀಡಲಾಗಿದೆ. ಸಂತೆಕಟ್ಟೆ ಮೌಂಟ್ ರೋಸರಿ ಚರ್ಚ್ ಆವರಣದಲ್ಲಿ ವಾಹನ ನಿಲುಗಡೆ ಮಾಡುವವರಿಗೆ ಕಾರ್ಯಕ್ರಮದ ಸ್ಥಳದ ವರೆಗೆ ತಲುಪಿಸಲು ಪ್ರತ್ಯೇಕ ಬಸ್ಸುಗಳು ಮತ್ತು ಟೆಂಪೋ ವ್ಯವಸ್ಥೆ ಮಾಡಲಾಗಿದೆ.  

ವಾರ್ತಾ ಭಾರತಿ 18 Apr 2026 8:08 pm

ಅಫಜಲಪುರ–ಅರ್ಜುಣಗಿ ನಡುವೆ ಬಸ್ ಸಂಚಾರ ಪುನರಾರಂಭ: ಗ್ರಾಮಸ್ಥರಲ್ಲಿ ಹರ್ಷ

ಅಫಜಲಪುರ: ಬಡದಾಳ ಮಾರ್ಗವಾಗಿ ಅರ್ಜುಣಗಿ ಗ್ರಾಮಕ್ಕೆ ಬರುತ್ತಿದ್ದ ಬಸ್ ಸಂಚಾರ ಸ್ಥಗಿತಗೊಂಡಿದ್ದರಿಂದ ಗ್ರಾಮಸ್ಥರು ಹಾಗೂ ಶಾಲಾ-ಕಾಲೇಜು ವಿದ್ಯಾರ್ಥಿಗಳು ತೀವ್ರ ತೊಂದರೆ ಅನುಭವಿಸುತ್ತಿದ್ದರು. ಈ ಹಿನ್ನೆಲೆಯಲ್ಲಿ ಇದೀಗ ಅಫಜಲಪುರ ಬಸ್ ನಿಲ್ದಾಣದಿಂದ ದುಧನಿ ಮಾರ್ಗವಾಗಿ ಅರ್ಜುಣಗಿ ಗ್ರಾಮದವರೆಗೆ ಹೊಸ ಬಸ್ ಸಂಚಾರವನ್ನು ಆರಂಭಿಸಲಾಗಿದೆ. ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಅಧ್ಯಕ್ಷ ಅರುಣಕುಮಾರ ಪಾಟೀಲರು ಹಾಗೂ ಘಟಕ ವ್ಯವಸ್ಥಾಪಕ ಎ.ಎ. ಬೋವಿ ನೀಡಿದ ಭರವಸೆಯಂತೆ ಬಸ್ ಸೇವೆ ಪುನರಾರಂಭಗೊಂಡಿದ್ದು, ಗ್ರಾಮಸ್ಥರಲ್ಲಿ ಸಂತೋಷ ವ್ಯಕ್ತವಾಗಿದೆ. ಶನಿವಾರ ಅರ್ಜುಣಗಿ ಗ್ರಾಮಕ್ಕೆ ಮೊದಲ ಬಾರಿಗೆ ಬಂದ ಬಸ್‌ಗೆ ಪೂಜೆ ನೆರವೇರಿಸಲಾಯಿತು. ಇದೇ ವೇಳೆ ಬಸ್ ಸಿಬ್ಬಂದಿಯನ್ನು ಗ್ರಾಮಸ್ಥರು ಸನ್ಮಾನಿಸಿ ಗೌರವಿಸಿದರು. ಗ್ರಾಮದ ಬಹುಕಾಲದ ಸಮಸ್ಯೆಗೆ ಸ್ಪಂದನೆ ದೊರೆತಿರುವುದು ಸಂತಸದ ವಿಚಾರವಾಗಿದ್ದು, ಹೊಸ ಬಸ್ ಸಂಚಾರದಿಂದ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಗ್ರಾಮಸ್ಥರು ಅಭಿಪ್ರಾಯಪಟ್ಟರು. ಈ ಸಂದರ್ಭದಲ್ಲಿ ಗುರುಶಾಂತ್ ಬಿರಾದಾರ್, ಬಾಬು ಮಾಲಿ ಪಾಟೀಲ್, ಮಹದೇವಪ್ಪ ಕೋಣೆ, ಸುದೀಪ್ ಹಂಗರಗಿ, ಈರಣ್ಣ ಹಂಗರಗಿ, ರಹೇಮಾನ ಮನಿಯಾರ, ಶಶಿಕಾಂತ ಚವಾಣ, ಶಂಕರ್ ಚವಾಣ್, ತುಕಾರಾಮ ಚವಾಣ, ಗೋವಿಂದ ರಾಠೋಡ, ಕೆಕೆಆರ್‌ಟಿಸಿ ಸಿಬ್ಬಂದಿಗಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

ವಾರ್ತಾ ಭಾರತಿ 18 Apr 2026 8:07 pm

ಸುರಕ್ಷಿತ ಕ್ರಮ ಕೈಗೊಂಡರೂ ಹೆಚ್ಚುತ್ತಿವೆ ಅಪಘಾತಗಳ ಸಂಖ್ಯೆ: 2025 ರಲ್ಲಿ 43,129 ಪ್ರಕರಣ, 11,324 ಸಾವು

ಯಾದಗಿರಿಯಲ್ಲಿ ಶುಕ್ರವಾರ ನಡೆದ ಭೀಕರ ಅಪಘಾತ ಬೆಚ್ಚಿಬೀಳಿಸುವಂತಿದೆ. ಖಾಸಗಿ ಬಸ್ ಮತ್ತು ಕಾರಿನ ನಡುವೆ ನಡೆದ ಅಪಘಾತದಲ್ಲಿ 6 ಮಂದಿ ಮೃತಪಟ್ಟಿದ್ದಾರೆ. ರಾಜ್ಯದಲ್ಲಿ ಇತ್ತೀಚಿನ ದಿನಗಳಲ್ಲಿ ಇಂತಹ ಹಲವು ಭೀಕರ ಅಪಘಾತಗಳು ಸಂಭವಿಸಿವೆ. ಇದನ್ನು ನಿಯಂತ್ರಣ ಮಾಡಲು ಸಾರಿಗೆ ಇಲಾಖೆ ಸಾಕಷ್ಟು ಕ್ರಮಗಳನ್ನು ಕೈಗೊಳ್ಳುತ್ತಿದೆ. ಹಾಗಿದ್ದರೂ ಅಪಘಾತ ನಿಯಂತ್ರಣ ಮತ್ತು ಸಾವು ನೋವಿಗೆ ಕಡಿವಾಣ ಹಾಕಲು ಸಾಧ್ಯವಾಗಿಲ್ಲ. ಇದನ್ನು ನಿಯಂತ್ರಣ ಮಾಡುವುದು ಕೂಡಾ ಸವಾಲಿನ ಸಂಗತಿಯಾಗಿದೆ. ಈ ಕುರಿತಾದ ಮತ್ತಷ್ಟು ವಿವರ ಇಲ್ಲಿದೆ.

ವಿಜಯ ಕರ್ನಾಟಕ 18 Apr 2026 8:06 pm

Bengaluru | ಸಾಲದ ಹಣ ಹಿಂತಿರುಗಿಸದಕ್ಕೆ ತಂಗಿ-ಮೈದುನನ ಅಪಹರಿಸಿ ಹಲ್ಲೆ: ಅಕ್ಕ-ಭಾವ ಸಹಿತ ಮೂವರ ಬಂಧನ

ಬೆಂಗಳೂರು: ಸಾಲದ ಹಣವನ್ನು ಹಿಂತಿರುಗಿಸದ ಕಾರಣ ತಂಗಿ ಮತ್ತು ಮೈದುನನನ್ನು ಅಪಹರಿಸಿ ಹಲ್ಲೆ ಮಾಡಿದ ಆರೋಪದಡಿ ಅಕ್ಕ ಮತ್ತು ಭಾವ ಸೇರಿದಂತೆ ಮೂವರು ಆರೋಪಿಗಳನ್ನು ಇಲ್ಲಿನ ಹೆಬ್ಬಗೋಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಹಲ್ಲೆಗೊಳಗಾದ ಪೃಥ್ವಿ ಎಂಬವರು ನೀಡಿದ ದೂರಿನನ್ವಯ ಸಹೋದರಿ ಪ್ರಪುಲ್ಲಾ, ಭಾವ ಸಲೀಂ ಶೇಕ್, ಈತನ ಸಹಚರ ಬಿರೇಶ್ ಎಂಬವರನ್ನು ಬಂಧಿಸಿ ಹೆಚ್ಚಿನ ವಿಚಾರಣೆಗೊಳಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಹೆಬ್ಬಗೋಡಿಯ ಅನಂತನಗರದಲ್ಲಿ ವಾಸವಾಗಿರುವ ದೂರುದಾರ ಮಹಿಳೆ ಹಾಗೂ ಪತಿ ಅಭಿಜಿತ್ ಅವರ ಮನೆಗೆ ಎ.14ರ ರಾತ್ರಿ ಆರೋಪಿಗಳು ಬಂದು ಏಕಾಏಕಿ ಹಲ್ಲೆ ನಡೆಸಿದ್ದಾರೆ. ಹಣಕಾಸಿನ ವ್ಯವಹಾರ ಸಂಬಂಧ ಪೊಲೀಸ್ ಠಾಣೆಗೆ ಕರೆದೊಯ್ಯುವುದಾಗಿ ಹೇಳಿ ಕಾರಿನಲ್ಲಿ ಕೂರಿಸಿ ಅಪಹರಿಸಿದ್ದರು. ಮಾರ್ಗ ಮಧ್ಯೆ ಕಾರಿನಿಂದ ಇಳಿದು ಪರಾರಿಗೆ ಯತ್ನಿಸಿದರೂ ಹಲ್ಲೆ ಮಾಡಿ ನಾಗರಬಾವಿಯಲ್ಲಿ ಮನೆಗೆ ಕರೆದೊಯ್ದು ಗೃಹಬಂಧನದಲ್ಲಿ ಇರಿಸಿದ್ದರು ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ವಾರ್ತಾ ಭಾರತಿ 18 Apr 2026 8:01 pm

Chittapur | ಕುಂಬಾರ ಮಹಾಸಭಾ ಅಧ್ಯಕ್ಷರಾಗಿ ವಿಶ್ವನಾಥ ಆಯ್ಕೆ

ಚಿತ್ತಾಪುರ : ಅಖಿಲ ಭಾರತ ಕುಂಬಾರರ ಮಹಾಸಭಾದ ರಾಜ್ಯ ಘಟಕದಿಂದ ಚಿತ್ತಾಪುರ ತಾಲೂಕು ಘಟಕಕ್ಕೆ ನೂತನ ಅಧ್ಯಕ್ಷರನ್ನಾಗಿ ಸಮಾಜ ಸೇವಕ ವಿಶ್ವನಾಥ ಎಸ್.ಕುಂಬಾರ ಅವರನ್ನು ನೇಮಕ ಮಾಡಲಾಗಿದೆ. ಸಮಾಜ ಸೇವೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ವಿಶ್ವನಾಥ ಕುಂಬಾರ ಅವರ ಬದ್ಧತೆ ಮತ್ತು ಕಾರ್ಯ ವೈಖರಿ ಪರಿಗಣಿಸಿ ಮಹಾಸಭಾದ ರಾಜ್ಯ ಅಧ್ಯಕ್ಷರಾದ ನಿತ್ಯಾ ಭರಣ ಚೌಡಶೆಟ್ಟಿ, ಈ ನೇಮಕಾತಿ ಆದೇಶ ಹೊರಡಿಸಿದ್ದಾರೆ. ಸಂಘಟನೆಯ ನಿಯಮಾವಳಿಗಳಿಗೆ ಬದ್ಧರಾಗಿ ಶಿಸ್ತಿನಿಂದ ಸಮಾಜದ ಹಿತರಕ್ಷಣೆ ಕೆಲಸ ಮಾಡುವಂತೆ ಸೂಚಿಸಲಾಗಿದೆ. ತಾಲೂಕು ಮಟ್ಟದಲ್ಲಿ ಸಮಾಜವನ್ನು ಸಂಘಟನೆ ಮಾಡುವುದಲ್ಲದೇ ಸಮಾಜದ ಚಟುವಟಿಕೆಗಳನ್ನು ಮುನ್ನೆಡೆಸುವುದು ಸಮಾಜದ ಯುವಶಕ್ತಿ ಹಾಗೂ ಹಿಂದುಳಿದ ವರ್ಗಗಳ ಏಳಿಗೆಗಾಗಿ ವಿಶೇಷ ಕಾರ್ಯಕ್ರಮ ರೂಪಿಸುವುದು ಸಮಾಜದ ಒಳಿತಿಗೆ ಶ್ರಮಿಸಬೇಕು ಎಂದು ಆದೇಶ ಪತ್ರದಲ್ಲಿ ಸೂಚಿಸಲಾಗಿದೆ.

ವಾರ್ತಾ ಭಾರತಿ 18 Apr 2026 7:59 pm

300 ಕ್ವಿಂಟಾಲ್ ಬಿತ್ತನೆ ಬೀಜಕ್ಕೆ ಬೇಡಿಕೆ ಸಲ್ಲಿಕೆ: ಕಲ್ಲೇಶ್ ಪ್ರಸಾದ್

ಉಡುಪಿ ತಾಲೂಕು ಮಟ್ಟದ ಮಳೆಗಾಲ ಪೂರ್ವಸಿದ್ಧತಾ ಸಭೆ

ವಾರ್ತಾ ಭಾರತಿ 18 Apr 2026 7:58 pm

ಸಂಸತ್ತು ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳಾ ಪ್ರಾತಿನಿಧ್ಯ ಹೇಗಿದೆ?

ಲೋಕಸಭಾ ಕ್ಷೇತ್ರಗಳ ಸಂಖ್ಯೆಯನ್ನು 850ಕ್ಕೆ ಏರಿಸುವ ಮತ್ತು 2029ರ ಚುನಾವಣೆಯಿಂದ ಮಹಿಳೆಯರಿಗೆ ಶೇ 33 ಮೀಸಲಾತಿ ನೀಡುವ ಸಂವಿಧಾನ ತಿದ್ದುಪಡಿ ಮಸೂದೆಗೆ ಶುಕ್ರವಾರ ಲೋಕಸಭೆಯಲ್ಲಿ ಸೋಲಾಗಿದೆ. ಹಿಂದಿನ ಸಂಖ್ಯೆಗಳ ವಿಶ್ಲೇಷಣೆಯು ಪ್ರಾತಿನಿಧ್ಯದ ವಿಷಯದಲ್ಲಿ, ಶಾಸಕಾಂಗಗಳಲ್ಲಿ ಮಹಿಳೆಯರ ಪಾಲು ವಿರಳವಾಗಿ 15% ಅಂಕವನ್ನು ಮೀರಿದೆ ಎಂದು ತೋರಿಸುತ್ತದೆ. ಭಾರತದ ಸಂಸತ್ತಿನ ಕೆಳಮನೆಯಾದ ಲೋಕಸಭೆಯಲ್ಲಿ, ಈ ಅಂಕಿ ಅಂಶವು ಎಂದಿಗೂ ಅದನ್ನು ಮೀರಿಲ್ಲ. 1951-52ರಲ್ಲಿ ಕೇವಲ 4.9% (489 ಸ್ಥಾನಗಳಲ್ಲಿ 24) ರಿಂದ ಪ್ರಾರಂಭವಾದ ಈ ಸಂಖ್ಯೆ ಪ್ರಸ್ತುತ 2024-29 ರ ಅವಧಿಗೆ 13.6% (543 ಸ್ಥಾನಗಳಲ್ಲಿ 75) ಕ್ಕೆ ಏರಿದೆ. ಈ ವಿಷಯದಲ್ಲಿ ಅತ್ಯಧಿಕ ಸಂಖ್ಯೆ ಹಿಂದಿನ ಲೋಕಸಭೆಯಲ್ಲಿ (2019-24) ಕಂಡು ಬಂದಿದೆ, ಆಗ ಸದನದ ಸದಸ್ಯತ್ವದಲ್ಲಿ 543 ರಲ್ಲಿ 78 (14.36% ) ಮಹಿಳೆಯರು ಇದ್ದರು. ಮತ್ತೊಂದೆಡೆ, ಭಾರತದ ಅತ್ಯಂತ ಕಡಿಮೆ ಸಂಖ್ಯೆ 3.5% ರಷ್ಟು 6 ನೇ ಲೋಕಸಭೆಯ (1977-79) ಅವಧಿಯಲ್ಲಾಗಿತ್ತು. 1977ರ ಸಾರ್ವತ್ರಿಕ ಚುನಾವಣೆಯು ಅಂದಿನ ಪ್ರಧಾನಿ ಇಂದಿರಾ ಗಾಂಧಿಯವರು ಹೇರಿದ ತುರ್ತು ಪರಿಸ್ಥಿತಿಯ (1975-77) ನಂತರ ನಡೆಯಿತು. ಭಾರತದ ಮೊದಲ ಮಹಿಳಾ ಪ್ರಧಾನಿ ಇಂದಿರಾ ಗಾಂಧಿಯವರು 11 ವರ್ಷಗಳ ಕಾಲ ಅಧಿಕಾರದಲ್ಲಿದ್ದ ನಂತರ ಆ ಚುನಾವಣೆಯಲ್ಲಿ ಸೋತರು. ಲೋಕಸಭೆಯಲ್ಲಿ ಮಹಿಳೆಯರ ಶೇಕಡಾವಾರು ಪಾಲು ಕಾಲಾನಂತರದಲ್ಲಿ ಕ್ರಮೇಣ ಏರಿಕೆಯ ಪ್ರವೃತ್ತಿಯನ್ನು ಕಂಡಿದೆ. ಆದರೆ ಭಾರತವು ಎರಡಂಕಿಯ ಶೇಕಡಾವಾರು ಅಂಕಿಅಂಶವನ್ನು (2009 ರಲ್ಲಿ 10.9%) ತಲುಪಲು 15 ಸಾರ್ವತ್ರಿಕ ಚುನಾವಣೆಗಳನ್ನು ತೆಗೆದುಕೊಂಡಿತು. ಇದು ಮೀಸಲಾತಿಯನ್ನು ಜಾರಿಗೆ ತರದಿದ್ದರೆ ಮಹಿಳೆಯರು 33% ಅಂಕವನ್ನು ತಲುಪಲು ಇನ್ನೂ ಸ್ವಲ್ಪ ದೂರ ಸಾಗಬೇಕಾಗಿದೆ ಎಂಬ ಅಂಶವನ್ನು ಒತ್ತಿಹೇಳುತ್ತದೆ. ರಾಜ್ಯಸಭೆ ಅಥವಾ ಮೇಲ್ಮನೆ, ಜನರಿಂದ ನೇರವಾಗಿ ಆಯ್ಕೆಯಾದ ಸದಸ್ಯರನ್ನು ಹೊಂದಿರುವ ಶಾಸಕಾಂಗ ಸಂಸ್ಥೆಯಲ್ಲದಿದ್ದರೂ, ಪ್ರಸ್ತುತ ಒಟ್ಟು 245ರಲ್ಲಿ 39 ಮಹಿಳಾ ಸಂಸದರನ್ನು ಹೊಂದಿದೆ. ಇಲ್ಲಿನ ಮಹಿಳಾ ಪ್ರಾತಿನಿಧ್ಯ ಸುಮಾರು 16%. ಲೋಕಸಭೆಯಲ್ಲಿ ಪಕ್ಷವಾರು ಸಂಖ್ಯೆಗಳನ್ನು ನೋಡಿದರೆ ಕೆಳಮನೆಯಲ್ಲಿ ಕನಿಷ್ಠ 10 ಸಂಸದರನ್ನು ಹೊಂದಿರುವ ಎಲ್ಲಾ ಪಕ್ಷಗಳಲ್ಲಿ, ತೃಣಮೂಲ ಕಾಂಗ್ರೆಸ್‌ನ ಮಹಿಳಾ ಸಂಸದರ ಪಾಲು ಮಾತ್ರ 33% ಅಂಕವನ್ನು ಮೀರಿದೆ. ಅದರ 28 ಲೋಕಸಭಾ ಸಂಸದರಲ್ಲಿ 11 (39.3%) ಮಂದಿ ಮಹಿಳೆಯರಿದ್ದಾರೆ. ಜನತಾದಳ (ಯುನೈಟೆಡ್) 16.7% ಮಹಿಳಾ ಪ್ರಾತಿನಿಧ್ಯದೊಂದಿಗೆ ಎರಡನೇ ಸ್ಥಾನದಲ್ಲಿದೆ. ಆದರೆ ಒಟ್ಟು 12 ಜನರಲ್ಲಿ ಕೇವಲ ಇಬ್ಬರು ಮಹಿಳಾ ಸಂಸದರನ್ನು ಹೊಂದಿದೆ. ಲೋಕಸಭೆಯಲ್ಲಿ ಪಕ್ಷವಾರು ಸಂಖ್ಯೆಗಳನ್ನು ನೋಡಿದರೆ, ಕೆಳಮನೆಯಲ್ಲಿ ಕನಿಷ್ಠ 10 ಸಂಸದರನ್ನು ಹೊಂದಿರುವ ಎಲ್ಲಾ ಪಕ್ಷಗಳಲ್ಲಿ, ತೃಣಮೂಲ ಕಾಂಗ್ರೆಸ್‌ನ ಮಹಿಳಾ ಸಂಸದರ ಪಾಲು ಮಾತ್ರ 33% ಅಂಕವನ್ನು ಮೀರಿದೆ ಎಂದು ತೋರಿಸುತ್ತದೆ. ಆಡಳಿತಾರೂಢ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟವನ್ನು ಮುನ್ನಡೆಸುವ ಮತ್ತು ಲೋಕಸಭೆಯಲ್ಲಿ ಏಕೈಕ ಅತಿದೊಡ್ಡ ಪಕ್ಷವಾಗಿರುವ ಬಿಜೆಪಿ ಒಟ್ಟು 240 (12.9%) ರಲ್ಲಿ ಕೇವಲ 31 ಮಹಿಳಾ ಸಂಸದರನ್ನು ಹೊಂದಿದೆ. ಪ್ರಾಥಮಿಕ ವಿರೋಧ ಪಕ್ಷವಾಗಿರುವ ಮತ್ತು ಎರಡನೇ ಅತಿ ಹೆಚ್ಚು ಸಂಸದರನ್ನು ಹೊಂದಿರುವ ಕಾಂಗ್ರೆಸ್‌ನ ಸ್ಥಿತಿಯೂ ಉತ್ತಮವಾಗಿಲ್ಲ. ಅದರ 98 ಸಂಸದರಲ್ಲಿ ಇರುವುದು ಕೇವಲ 14 ಮಹಿಳೆಯರು (14.3%). ಕನಿಷ್ಠ 10 ಸಂಸದರನ್ನು ಹೊಂದಿರುವ ಪಕ್ಷಗಳಲ್ಲಿ ರಾಜ್ಯಸಭೆಯಲ್ಲಿಯೂ ತೃಣಮೂಲ ಕಾಂಗ್ರೆಸ್ ಶೇಕಡಾವಾರು ಸಂಖ್ಯೆಯಲ್ಲಿ ಮುಂಚೂಣಿಯಲ್ಲಿದೆ. ಅಲ್ಲಿ, ಅದರ 13 ಸಂಸದರಲ್ಲಿ ಆರು ಮಂದಿ ಮಹಿಳೆಯರು (46% ಪಾಲು) ಇದ್ದಾರೆ. ಕಾಂಗ್ರೆಸ್ ಮತ್ತು ಬಿಜೆಪಿ ಕ್ರಮವಾಗಿ 17.2% ಮತ್ತು 17% ಪಾಲನ್ನು ಹೊಂದಿದೆ. ದಿಲ್ಲಿ ಸ್ಕೂಲ್ ಆಫ್ ಎಕನಾಮಿಕ್ಸ್‌ನ ಸಮಾಜಶಾಸ್ತ್ರ ವಿಭಾಗದ ಮಾಜಿ ಮುಖ್ಯಸ್ಥ ಸತೀಶ್ ದೇಶಪಾಂಡೆ ಅವರ ಪ್ರಕಾರ, ಕೆಲವು ಪಕ್ಷಗಳ ಉನ್ನತ ನಾಯಕತ್ವವು ಮಹಿಳೆಯರನ್ನು ಸಂಸತ್ತಿಗೆ ಕಳುಹಿಸುವ ವಿಷಯದಲ್ಲಿ ಎಷ್ಟು ಗಂಭೀರವಾಗಿದೆ ಎಂಬುದರ ಸ್ಪಷ್ಟ ನಿದರ್ಶನ ಇದು. ಪಕ್ಷದ ಉನ್ನತ ನಾಯಕತ್ವವು ಆಸಕ್ತಿ ಹೊಂದಿರುವಾಗ ಮಾತ್ರ ಮಹಿಳೆಯರಿಗೆ ಪ್ರಾತಿನಿಧ್ಯ ಸಿಗುತ್ತದೆ, ಇಲ್ಲಾಂದ್ರೆ ಸಿಗುವುದಿಲ್ಲ ಎಂದು ಹೇಳಿರುವುದಾಗಿ ಇಂಡಿಯನ್ ಎಕ್ಸ್ ಪ್ರೆಸ್ ಉಲ್ಲೇಖಿಸಿದೆ. ರಾಜ್ಯಗಳಲ್ಲಿ ಹೇಗಿದೆ ಪ್ರಾತಿನಿಧ್ಯ? ಭಾರತದ 31 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಶಾಸಕಾಂಗಗಳ ದತ್ತಾಂಶಗಳನ್ನು ನೋಡಿದೆ ಛತ್ತೀಸ್‌ಗಢ (21.1%) ಹೊರತುಪಡಿಸಿ, ಬೇರೆ ಯಾವುದೇ ಹಾಲಿ ವಿಧಾನಸಭೆಯು 15% ಕ್ಕಿಂತ ಹೆಚ್ಚು ಮಹಿಳಾ ಶಾಸಕರನ್ನು ಹೊಂದಿಲ್ಲ. ವಾಸ್ತವವಾಗಿ, 1951-52ರಲ್ಲಿ ಭಾರತ ತನ್ನ ಮೊದಲ ಸಾರ್ವತ್ರಿಕ ಮತ್ತು ಪ್ರಾಂತೀಯ ಚುನಾವಣೆಗಳನ್ನು ನಡೆಸಿದ ನಂತರ, ಛತ್ತೀಸ್‌ಗಢದಲ್ಲಿ 2023ರ ರಾಜ್ಯ ಚುನಾವಣೆಯವರೆಗೆ, ಯಾವುದೇ ಭಾರತೀಯ ರಾಜ್ಯವು 15% ಕ್ಕಿಂತ ಹೆಚ್ಚು ಮಹಿಳಾ ಸದಸ್ಯರನ್ನು ಹೊಂದಿರಲಿಲ್ಲ. 19 ವಿಧಾನಸಭೆಗಳು 10% ಕ್ಕಿಂತ ಕಡಿಮೆ ಮಹಿಳೆಯರನ್ನು ಹೊಂದಿವೆ. ವಿಧಾನಸಭೆಗಳಲ್ಲಿ ಮಹಿಳಾ ಪ್ರಾತಿನಿಧ್ಯದ ವಿಷಯದಲ್ಲಿ, ತ್ರಿಪುರಾ 15% ರೊಂದಿಗೆ ಎರಡನೇ ಸ್ಥಾನದಲ್ಲಿದೆ. ನಂತರದ ಸ್ಥಾನದಲ್ಲಿ ಜಾರ್ಖಂಡ್ (14.8%), ಹರಿಯಾಣ (14.4%) ಮತ್ತು ಪಶ್ಚಿಮ ಬಂಗಾಳ (13.6%) ಇವೆ. ನಾಗಾಲ್ಯಾಂಡ್ ಮತ್ತು ಪುದುಚೇರಿಯಲ್ಲಿ ಮಹಿಳಾ ಶಾಸಕರ ಕಡಿಮೆ ಪಾಲು (ಎರಡೂ 3.3%) ಇವೆ. 2023ರಲ್ಲಿ ಮೊದಲ ಬಾರಿ ನಾಗಾಲ್ಯಾಂಡ್ ವಿಧಾನಸಭೆಗೆ ಇಬ್ಬರು ಮಹಿಳೆಯರು ಆಯ್ಕೆಯಾಗಿದ್ದರು. 19 ವಿಧಾನಸಭೆಗಳಲ್ಲಿ 10% ಕ್ಕಿಂತ ಕಡಿಮೆ ಮಹಿಳೆಯರು ಇದ್ದಾರೆ. ಅವುಗಳಲ್ಲಿ ಗುಜರಾತ್ (7.7%), ಮಹಾರಾಷ್ಟ್ರ (7.6%), ತಮಿಳುನಾಡು (7.3%), ಅಸ್ಸಾಂ (5.5%) ಮತ್ತು ಕರ್ನಾಟಕ (4.5%) ನಂತಹ ದೊಡ್ಡ ರಾಜ್ಯಗಳಿವೆ. ಭಾರತದ ಚುನಾಯಿತ ಶಾಸಕಾಂಗಗಳಲ್ಲಿ ಮಹಿಳೆಯರ ಪಾಲು 15% ದಾಟಲು ಏಕೆ ಹೆಣಗಾಡುತ್ತಿದೆ ಎಂಬುದರ ಕುರಿತು ಮಾತನಾಡಿದ ದೇಶಪಾಂಡೆ, ರಾಜಕೀಯವು ಅಧಿಕಾರದ ಬಗ್ಗೆ ಮತ್ತು ಅಧಿಕಾರವು ಯಾವುದೇ ರೀತಿಯ ದುರ್ಬಲ ಗುಂಪುಗಳಿಗೆ ಹೆಚ್ಚು ಆತಿಥ್ಯ ವಹಿಸುವುದಿಲ್ಲ. ಆದ್ದರಿಂದ, ಮಹಿಳೆಯರು ಪಿತೃಪ್ರಧಾನ ಸಮಾಜದಲ್ಲಿದ್ದಾರೆ. ಅವರು ಕಡಿಮೆ ಸವಲತ್ತು ಹೊಂದಿರುವ ಗುಂಪಾಗಿರುವುದರಿಂದ, ಅವರಿಗೆ ಈ ಕ್ಷೇತ್ರದಲ್ಲೂ ಅವರ ಪಾಲು ಸಿಗುವುದಿಲ್ಲ ಎಂದಿದ್ದಾರೆ. ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶ ಅಸ್ಸಾಂ, ಕೇರಳ, ತಮಿಳುನಾಡು, ಪಶ್ಚಿಮ ಬಂಗಾಳ ಮತ್ತು ಪುದುಚೇರಿಯಲ್ಲಿ ಪ್ರಸ್ತುತ ವಿಧಾನಸಭಾ ಚುನಾವಣೆಗಳು ನಡೆಯುತ್ತಿರುವುದರಿಂದ, ಮೇ 4 ರಂದು ಫಲಿತಾಂಶಗಳು ಪ್ರಕಟವಾದಾಗ ಈ ಶಾಸಕಾಂಗಗಳಲ್ಲಿನ ಶೇಕಡಾವಾರು ಸಂಖ್ಯೆಗಳು ಬದಲಾಗುವ ಸಾಧ್ಯತೆಯಿದೆ. ಸಂಸತ್ತಿನಲ್ಲಿ ಮಹಿಳೆಯರ ಪ್ರಾತಿನಿಧ್ಯದಲ್ಲಿ ಭಾರತ ಜಾಗತಿಕವಾಗಿ ಯಾವ ಸ್ಥಾನದಲ್ಲಿದೆ? ಅಂತರ-ಸಂಸದೀಯ ಒಕ್ಕೂಟ (IPU) ನಿರ್ವಹಿಸುವ ರಾಷ್ಟ್ರೀಯ ಸಂಸತ್ತುಗಳ ಟ್ರ್ಯಾಕರ್ ಪಾರ್ಲೈನ್‌ನ ಎಪ್ರಿಲ್ 2026ರ ದತ್ತಾಂಶದ ಪ್ರಕಾರ, ಸುಮಾರು 190 ದೇಶಗಳಲ್ಲಿ, ಸಂಸತ್ತಿನ ಕೆಳಮನೆಗಳಲ್ಲಿ ಮಹಿಳಾ ಪ್ರಾತಿನಿಧ್ಯದ ವಿಷಯದಲ್ಲಿ ಭಾರತ 147ನೇ ಸ್ಥಾನದಲ್ಲಿದೆ. IPU ಜಿನೀವಾ ಮೂಲದ ಜಾಗತಿಕ ಲಾಭರಹಿತ ಸಂಸ್ಥೆಯಾಗಿದ್ದು, ಇದು ಸಂಸದೀಯ ರಾಜತಾಂತ್ರಿಕತೆಯನ್ನು ಸುಗಮಗೊಳಿಸುತ್ತದೆ. ಇದು ವಿಶ್ವಾದ್ಯಂತ ಶಾಂತಿ, ಪ್ರಜಾಪ್ರಭುತ್ವ ಮತ್ತು ಸುಸ್ಥಿರ ಅಭಿವೃದ್ಧಿಯನ್ನು ಉತ್ತೇಜಿಸಲು ಸಂಸತ್ತುಗಳು ಮತ್ತು ಸಂಸದರಿಗೆ ಅಧಿಕಾರ ನೀಡುತ್ತದೆ. ಪುರುಷರಿಗೆ ಹೋಲಿಸಿದರೆ ಸಮಾನತೆ ಅಥವಾ ಹೆಚ್ಚಿನ ಸಂಖ್ಯೆಯ ಮಹಿಳೆಯರನ್ನು (ಕನಿಷ್ಠ 50%) ಸಾಧಿಸಿದ ಎಂಟು ದೇಶಗಳಿವೆ ಎಂದು ಪಾರ್ಲೈನ್ ​​ಡೇಟಾ ತೋರಿಸುತ್ತದೆ. ಅವು ರುವಾಂಡಾ, ಕ್ಯೂಬಾ, ನಿಕರಾಗುವಾ, ಕೋಸ್ಟರಿಕಾ, ಬೊಲಿವಿಯಾ, ಮೆಕ್ಸಿಕೊ, ಅಂಡೋರಾ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್. ಸುಮಾರು 56 ದೇಶಗಳು ತಮ್ಮ ರಾಷ್ಟ್ರೀಯ ಶಾಸಕಾಂಗಗಳಲ್ಲಿ 33% ಕ್ಕಿಂತ ಹೆಚ್ಚು ಮಹಿಳೆಯರನ್ನು ಹೊಂದಿವೆ. ಕಳೆದ ವರ್ಷ ಬಿಡುಗಡೆಯಾದ ಐಪಿಯು ವರದಿಯ ಪ್ರಕಾರ (“ಸಂಸತ್ತಿನಲ್ಲಿ ಮಹಿಳೆಯರು 1995-2025”), ಮಹಿಳೆಯರು ಹೊಂದಿರುವ ಸ್ಥಾನಗಳ ಶೇಕಡಾವಾರು ಪ್ರಮಾಣವು 1995ರಲ್ಲಿ 11.3% ರಿಂದ 2025ರಲ್ಲಿ 27.2% ಕ್ಕೆ ಏರಿದೆ. 2000ರಿಂದ 2015ರವರೆಗೆ ಸಂಸತ್ತಿನಲ್ಲಿ ಮಹಿಳೆಯರ ಪ್ರಮಾಣವು ಸ್ಥಿರವಾಗಿ ಏರಿದೆ ಎಂದು ವರದಿ ಹೇಳಿದ್ದು ಇತ್ತೀಚಿನ ವರ್ಷಗಳಲ್ಲಿ, ಈ ಪ್ರಗತಿ ನಿಧಾನವಾಗಿದೆ. ಉತ್ತಮವಾಗಿ ವಿನ್ಯಾಸಗೊಳಿಸಲಾದ ಕೋಟಾಗಳನ್ನು ಅನುಷ್ಠಾನಗೊಳಿಸುವುದು, ಮಹಿಳೆಯರ ಮೇಲಿನ ದೌರ್ಜನ್ಯವನ್ನು ಪರಿಹರಿಸುವಂತಹ ಹೆಚ್ಚಿನ ಲಿಂಗ ಸಮತೋಲನವನ್ನು ಖಚಿತಪಡಿಸಿಕೊಳ್ಳಲು ಕ್ರಮಗಳನ್ನು ತೆಗೆದುಕೊಂಡ ದೇಶಗಳು ಅತ್ಯಂತ ಶ್ಲಾಘನೀಯ ಪ್ರಗತಿಯನ್ನು ಕಂಡಿವೆ ಎಂದು ವರದಿ ಗಮನಿಸಿದೆ. ಸಂಸತ್ತುಗಳಿಗೆ ಆಯ್ಕೆಯಾದ ಮಹಿಳೆಯರ ಪಾಲಿನಲ್ಲಿ ಎರಡು ಅಂಶಗಳು ಗಮನಾರ್ಹ ವ್ಯತ್ಯಾಸವನ್ನುಂಟುಮಾಡಿವೆ ಎಂದು ಅದು ಹೇಳಿದೆ. ಅದೇನೆಂದರೆ ಚುನಾವಣಾ ವ್ಯವಸ್ಥೆಗಳು. ವಿಶೇಷವಾಗಿ ಅನುಪಾತದ ಪ್ರಾತಿನಿಧ್ಯ ಅಥವಾ ಮಿಶ್ರ ವ್ಯವಸ್ಥೆಗಳು -ಮತ್ತು ಮಹಿಳಾ ಕೋಟಾಗಳು. ಮಹಿಳಾ ಮೀಸಲಾತಿ ಜಾರಿಯಲ್ಲಿರುವ ದೇಶಗಳಲ್ಲಿ, ಚುನಾಯಿತ ಅಥವಾ ನೇಮಕಗೊಂಡ ಮಹಿಳೆಯರ ಪಾಲು 2024ರಲ್ಲಿ 31.2% ರಷ್ಟಿತ್ತು, ಆದರೆ ಅದು ಜಾರಿಯಲ್ಲಿಲ್ಲದ ದೇಶಗಳಲ್ಲಿ ಇದು 16.8% ರಷ್ಟಿದೆ ಎಂದು ವರದಿ ತೋರಿಸಿದೆ.

ವಾರ್ತಾ ಭಾರತಿ 18 Apr 2026 7:57 pm

Kalaburagi | ರಾಷ್ಟ್ರದಲ್ಲೇ ದಾಖಲೆ ಪ್ರಮಾಣದಲ್ಲಿ 40 ಸಾವಿರ ಪ್ರಕರಣ ಇತ್ಯರ್ಥ : ಬಿ.ವೆಂಕಟ್ ಸಿಂಗ್

ಮಾಹಿತಿ ಹಕ್ಕು ಕಾಯ್ದೆ ಕಾರ್ಯಾಗಾರ

ವಾರ್ತಾ ಭಾರತಿ 18 Apr 2026 7:56 pm

ಮಲಬದ್ಧತೆಗೆ ಪರಿಹಾರವಾಗಿರುವ ಔಷಧ ಯಾವುದು? ತಜ್ಞರು ಹೇಳುವುದೇನು?

ಕಪ್ಪು ಒಣದ್ರಾಕ್ಷಿಯನ್ನು ತಿನ್ನುವುದು ವಾಸ್ತವದಲ್ಲಿ ಮಲಬದ್ಧತೆಗೆ ಉತ್ತಮ ಔಷಧಿಯಾಗಲಿದೆ.

ವಾರ್ತಾ ಭಾರತಿ 18 Apr 2026 7:41 pm

Kalaburagi | ಬಾಕಿ ವೇತನ, ಭತ್ಯೆ ಬಿಡುಗಡೆಗೆ ಆಗ್ರಹಿಸಿ ಗುಲ್ಬರ್ಗಾ ವಿವಿಯ ಗುತ್ತಿಗೆ ನೌಕರರ ಧರಣಿ

ಕಲಬುರಗಿ: ಗುಲ್ಬರ್ಗ ವಿಶ್ವವಿದ್ಯಾಲಯದಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಸೇವೆ ಸಲ್ಲಿಸುತ್ತಿರುವ ನೌಕರರಿಗೆ ಕಳೆದ ಮೂರು ತಿಂಗಳಿನಿಂದ ವೇತನ ಪಾವತಿಯಾಗದ ಹಿನ್ನೆಲೆಯಲ್ಲಿ, “ಗುಲ್ಬರ್ಗಾ ವಿಶ್ವವಿದ್ಯಾಲಯದ ಗುತ್ತಿಗೆ ನೌಕರರ ಕಲ್ಯಾಣ ಸಂಘ”ದ ವತಿಯಿಂದ ಕಾರ್ಯಸೌಧದ ಮುಂದೆ ಶನಿವಾರ ಧರಣಿ ನಡೆಸಲಾಯಿತು. ಈ ವೇಳೆ ಕುಲಪತಿ ಪ್ರೊ. ಶಶಿಕಾಂತ್ ಹುಡಿಕೇರಿ, ಕುಲಸಚಿವ ಪ್ರೊ. ರಮೇಶ್ ಲಂಡನ್ಕರ್ ಹಾಗೂ ಸಿಂಡಿಕೇಟ್ ಸದಸ್ಯ ಉದಯಕಾಂತ ಪಾಟೀಲ ಅವರಿಗೆ ಮನವಿ ಸಲ್ಲಿಸಿ, 2026ರ ಜನವರಿ, ಫೆಬ್ರವರಿ ಮತ್ತು ಮಾರ್ಚ್ ತಿಂಗಳ ಬಾಕಿ ವೇತನವನ್ನು ತಕ್ಷಣ ಬಿಡುಗಡೆ ಮಾಡುವಂತೆ ಒತ್ತಾಯಿಸಿದರು. ಜೊತೆಗೆ 2025-26ನೇ ಸಾಲಿನ ತುಟ್ಟಿಭತ್ಯೆ (DA) ನೀಡಬೇಕೆಂದೂ ಆಗ್ರಹಿಸಿದರು. ಕಡಿಮೆ ವೇತನ – ಹೆಚ್ಚಿನ ಕೆಲಸ : ವಿಶ್ವವಿದ್ಯಾಲಯದ ಕಾಯಂ ನೌಕರರು ನಿವೃತ್ತಿಯಾಗುತ್ತಿರುವುದರಿಂದ ಅವರ ಕೆಲಸದ ಹೊರೆ ಗುತ್ತಿಗೆ ನೌಕರರ ಮೇಲೆ ಬೀಳುತ್ತಿದೆ. 15-20 ವರ್ಷಗಳಿಂದ ಕಡಿಮೆ ವೇತನದಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದರೂ, ವೇತನ ವಿಳಂಬದಿಂದ ಕುಟುಂಬ ನಿರ್ವಹಣೆ ಕಷ್ಟವಾಗಿದೆ ಎಂದು ನೌಕರರು ಅಳಲು ತೋಡಿಕೊಂಡಿದ್ದಾರೆ. ಕಾರ್ಮಿಕ ಇಲಾಖೆ ನಿಯಮದಂತೆ ಪ್ರತಿ ತಿಂಗಳ 7ರೊಳಗೆ ವೇತನ ಪಾವತಿಸಬೇಕು. ಆದರೆ ಮೂರು ತಿಂಗಳು ಸಂಬಳ ಸಿಗದಿರುವುದು ಗಂಭೀರ ಸಮಸ್ಯೆಯಾಗಿದ್ದು, ಇದರಿಂದ ಮಕ್ಕಳ ಶಿಕ್ಷಣ ಹಾಗೂ ವೃದ್ಧ ಪೋಷಕರ ಆರೈಕೆಯಲ್ಲೂ ತೊಂದರೆ ಉಂಟಾಗಿದೆ ಎಂದು ತಿಳಿಸಿದ್ದಾರೆ. ಕುಲಪತಿಗಳು “ನೀವು ನಮ್ಮ ನೌಕರರು ಅಲ್ಲ” ಎಂದು ಹೇಳುತ್ತಿರುವುದರ ಬಗ್ಗೆ ಸ್ಪಷ್ಟನೆ ನೀಡಬೇಕು. ಹಾಗಿದ್ದರೆ ನಾವು ಕಳೆದ ಹಲವು ವರ್ಷಗಳಿಂದ ಯಾರ ಅಡಿಯಲ್ಲಿ ಕೆಲಸ ಮಾಡುತ್ತಿದ್ದೇವೆ ಎಂಬ ಪ್ರಶ್ನೆಯನ್ನು ನೌಕರರು ಎತ್ತಿದ್ದಾರೆ. ಆರ್ಥಿಕ ಸಂಕಷ್ಟದಿಂದ ಜೀವನ ಸಂಕಷ್ಟಕ್ಕೆ ಸಿಲುಕಿರುವ ಹಿನ್ನೆಲೆಯಲ್ಲಿ, ತಕ್ಷಣವೇ ಬಾಕಿ ವೇತನ ಬಿಡುಗಡೆ ಮಾಡಿ ಸಮಸ್ಯೆಗೆ ಪರಿಹಾರ ಕಲ್ಪಿಸಬೇಕು ಎಂದು ಗುತ್ತಿಗೆ ನೌಕರರು ಒತ್ತಾಯಿಸಿದ್ದಾರೆ. ಈ ಸಂದರ್ಭದಲ್ಲಿ ಸಂಘದ ಗೌರವ ಅಧ್ಯಕ್ಷರಾದ ವಿಜಯಕುಮಾರ ಕೆಂಗನಾಳ, ಅಧ್ಯಕ್ಷರಾದ ಶೀಲಪ್ರಕಾಶ ದೊಡ್ಡಮನಿ ಹಾಗೂ ಕಾರ್ಯದರ್ಶಿ ಚಂದ್ರಶಾ ಎಂ.ಎಸ್. ಅವರ ನೇತೃತ್ವದಲ್ಲಿ 150ಕ್ಕೂ‌ ಹೆಚ್ಚು ನೌಕರರಿಂದ ಧರಣಿ ಮಾಡಿ ಮನವಿ ಸಲ್ಲಿಸಲಾಯಿತು.

ವಾರ್ತಾ ಭಾರತಿ 18 Apr 2026 7:38 pm

RCB Vs DC- ಬರ್ತ್ ಡೇ ಬಾಯ್ ಕೆಎಲ್ ರಾಹುಲ್ ಅರ್ಧಶತಕದ ಬಳಿಕ ಮಿಲ್ಲರ್ ಆರ್ಭಟ; ರೋಚಕ ಪಂದ್ಯದಲ್ಲಿ ಡೆಲ್ಲಿ ಮೇಲುಗೈ

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಈ ಬಾರಿಯೂ ಕನ್ನಡಿಗ ಕೆಎಲ್ ರಾಹುಲ್ ಅವರದ್ದೇ ಹವಾ. ಅದರಲ್ಲೂ ಬರ್ತ್ ಡೇ ಸ್ಪೆಷಲ್ ಆಗಿ ಸೊಗಸಾದ ಅರ್ಧಶತಕ. ಅವರು ಔಟಾದ ಬಳಿಕ ಪಂದ್ಯದ ಮೇಲೆ ಹಿಡಿತ ಸಾಧಿಸಲು ಯತ್ನಿಸಿದ ಆರ್ ಸಿಬಿಗೆ ಮುಳುವಾಗಿದ್ದು ಡೇವಿಡ್ ಮಿಲ್ಲರ್! ಅಂತಿಮ ಓವರ್ ವರೆಗೂ ಸಾಗಿದ ರೋಮಾಂಚಕ ಪಂದ್ಯದಲ್ಲಿ ಅವರು ಹೊಡೆದ 2 ಸಿಕ್ಸರ್ ಗಳ ನೆರವಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡವು ತಂಡದ ವಿರುದ್ಧ 6 ವಿಕೆಟ್ ಗಳ ಜಯ ದಾಖಲಿಸಿತು. ಈ ಮೂಲಕ ಆಡಿದ 5 ಪಂದ್ಯಗಳಲ್ಲಿ 3 ಗೆಲುವ ಸಂಪಾದಿಸಿದ ಅಕ್ಷರ್ ಪಟೇಲ್ ಬಳಗ 6 ಅಂಕಗಳೊಂದಿಗೆಯಲ್ಲಿ 4ನೇ ಸ್ಥಾನಕ್ಕೇರಿದೆ. ಆರ್ ಸಿಬಿ ಪಂದ್ಯ ಸೋತರೂ 8 ಅಂಕಗಳೊಂದಿಗೆ 2ನೇ ಸ್ಥಾನದಲ್ಲಿ ಮುಂದುವರಿದಿದೆ. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಏಪ್ರಿಲ್ 18ರ ಭಾನುವಾರದಂದು ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ನಿಗದಿತ 20 ಓವರ್ ಗಳಲ್ಲಿ 175 ರನ್ ಗಳನ್ನು ಗಳಿಸಿತು. ಇದಕ್ಕುತ್ತರವಾಗಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಇನ್ನೂ 1 ಎಸೆತಗಳು ಬಾಕಿ ಉಳಿದಿರುವಂತೆ 4 ವಿಕೆಟ್ ಕಳೆದುಕೊಂಡು ಜಯಭೇರಿ ಬಾರಿಸಿದರು. () ಫಿಲ್ ಸಾಲ್ಟ್ ಅರ್ಧಶತಕ ಇದಕ್ಕೂ ಮೊದಲು ಟಾಸ್ ಸೋತು ಬ್ಯಾಟಿಂಗ್ ಗೆ ಇಳಿಸಲ್ಪಟ್ಟ ಆರ್ ಸಿಬಿಯ ಆರಂಭಿಕರಾದ ವಿರಾಟ್ ಕೊಹ್ಲಿ (13 ಎಸೆತದಲ್ಲಿ 19 ರನ್) ಮತ್ತು ಫಿಲ್ ಸಾಲ್ಟ್ (38 ಎಸೆತದಲ್ಲಿ 63 ರನ್) ಅವರು ಪವರ್ ಪ್ಲೇನಲ್ಲಿ ಓವರ್ ಗೆ 10 ರನ್ ನಂತೆ ರನ್ ಗಳಿಸತೊಡಗಿದರು. 6ನೇ ಓವರ್ ನಲ್ಲಿ ಉತ್ತಮವಾಗಿ ಆಡುತ್ತಿದ್ದ ವಿರಾಟ್ ವಿಕೆಟ್ ಪತನವಾಯಿತು. ಆ ಬಳಿಕ ಫಿಲ್ ಸಾಲ್ಟ್ ಅವರು ಅರ್ಧಶತಕಕ್ಕಾಗಿ 30 ಎಸೆತಗಳನ್ನು ತೆಗೆದುಕೊಂಡರು. ದೇವದತ್ ಪಡಿಕ್ಕಲ್(13 ಎಸೆತದಲ್ಲಿ 18 ರನ್) ಅವರ ಜೊತೆ ಎರಡನೇ ವಿಕೆಟ್ ಗೆ 47 ರನ್ ಗಳ ಜೊತೆಯಾಟವಾಡಿದರು. ಚಂಡದ ಮೊತ್ತ 105 ಆಗಿದ್ದಾಗ ಫಿಲ್ ಸಾಲ್ಟ್ ವಿಕೆಟ್ ಪತನವಾಯಿತು. ಆ ಬಳಿಕ ಮಧ್ಯಮ ಕ್ರಮಾಂಕದಲ್ಲಿ ಎಲ್ಲಾ ಬ್ಯಾಟರ್ ಗಳು ಇನ್ನಿಂಗ್ಸ್ ಕಟ್ಟಲು ವಿಫಲರಾದರು. (17 ಎಸೆತಗಳಲ್ಲಿ 28) ಅವರು ಔಟಾದ ಬಳಿಕ ಅಂತೂ ವಿಕೆಟ್ ಗಳು ಪಟಪಟನೆ ಬಿದ್ದಿದ್ದರಿಂದ ತಂಡ ದೊಡ್ಡ ಮೊತ್ತ ಗಳಿಸಲು ಸಾಧ್ಯವಾಗಲಿಲ್ಲ. ರಾಯಲ್ ಚಾಲೆಂಜರ್ಸ್ ಬೆಂಗಳೂರು 20 ಓವರ್ ಗಳಲ್ಲಿ 175/8, ಸಾಲ್ಟ್ 63(38), ಡೇವಿಡ್ 28(17) ಕೊಹ್ಲಿ 19(13), ಪಡಿಕ್ಕಲ್ 18(13), ಅಕ್ಷರ್ 18ಕ್ಕೆ 2, ಕುಲ್ದೀಪ್ 32ಕ್ಕೆ2, ಎನ್ ಗಿಡಿ 39ಕ್ಕೆ2, ಮುಕೇಶ್ 32ಕ್ಕೆ 1. ಕೆಎಲ್ ರಾಹುಲ್ 57(34)ಸ ತ್ರಿಸ್ಟನ್ ಸ್ಟಬ್ಸ್ ಅಜೇಯ 60(47), ಅಕ್ಷರ್ ಪಟೇಲ್ ಗಾಯಾಳುವಾಗಿ ನಿವೃತ್ತಿ(26(19), ಡೇವಿಡ್ ಮಿಲ್ಲರ್ ಅಜೇಯ 22(10), ಭುವನೇಶ್ವರ ಕುಮಾರ್ 28ಕ್ಕೆ 3, ಕೃನಾಲ್ ಪಾಂಡ್ಯ 24ಕ್ಕೆ 1.

ವಿಜಯ ಕರ್ನಾಟಕ 18 Apr 2026 7:38 pm

ನೀರಿನ ಯೋಜನೆಗೆ ವರದಿ ಸಿದ್ಧಪಡಿಸಿ, ಸರಕಾರಕ್ಕೆ ಸಲ್ಲಿಕೆ: ಕಿರಣ್ ಕೊಡ್ಗಿ

ಕುಂದಾಪುರ ಪುರಸಭೆ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆ

ವಾರ್ತಾ ಭಾರತಿ 18 Apr 2026 7:33 pm

ಸರಳ, ಸಜ್ಜನಿಕೆ, ವಿನಯ, ಸೌಹಾರ್ದತೆ, ಜಾತ್ಯಾತೀತ ವ್ಯಕ್ತಿತ್ವ| ಉಡುಪಿ ಧರ್ಮಪ್ರಾಂತಕ್ಕೆ ಭದ್ರಬುನಾದಿ ಹಾಕಿಕೊಟ್ಟ ಬಿಷಪ್ ಜೆರಾಲ್ಡ್ ಐಸಾಕ್ ಲೋಬೊ ನಿವೃತ್ತಿ

ಉಡುಪಿ, ಎ.18: ಉಡುಪಿ ಧರ್ಮಕ್ಷೇತ್ರದ ದ್ವಿತೀಯ ಧರ್ಮಾಧ್ಯಕ್ಷರಾಗಿ ಅತಿ ವಂ. ಡಾ. ಲೆಸ್ಲಿ ಕ್ಲಿಫರ್ಡ್ ಡಿ’ಸೋಜಾರ ಧರ್ಮಾಧ್ಯಕ್ಷರ ಅಭಿಷೇಕ ಹಾಗೂ ಪೀಠಾರೋಹಣ ಸಮಾರಂಭ ಎ.20 ಸೋಮವಾರ ಕಲ್ಯಾಣಪುರದ ಮಿಲಾಗ್ರಿಸ್ ಕಾಲೇಜು ಮೈದಾನದಲ್ಲಿ ನೆರವೇರಲಿದೆ. ಇದೇ ವೇಳೆ ಧರ್ಮಕ್ಷೇತ್ರದ ಪ್ರಥಮ ಧರ್ಮಾಧ್ಯಕ್ಷರಾಗಿ ಡಾ. ಜೆರಾಲ್ಡ್ ಐಸಾಕ್ ಲೋಬೊ ತಮ್ಮ ದೂರದೃಷ್ಠಿತ್ವ ಚಿಂತನೆಯ ಭದ್ರಬುನಾದಿಯೊಂದಿಗೆ ಸದೃಢ ಧರ್ಮಕ್ಷೇತ್ರವಾಗಿ 14 ವರ್ಷಗಳ ಕಾಲ ಮುನ್ನಡೆಸಿ ಪ್ರಸ್ತುತ ನಿವೃತ್ತಿ ಯಾಗಿದ್ದಾರೆ. 2012ರ ಜುಲೈ 16ರಂದು ಪೋಪ್ ಬೆನೆಡಿಕ್ಟ್ ಘಿಗಿI ಅವರು ಮಂಗಳೂರಿ ನಿಂದ ಪ್ರತ್ಯೇಕಿಸಿ ಉಡುಪಿ ಧರ್ಮ ಪ್ರಾಂತದ ಘೋಷಣೆ ಮಾಡಿದ್ದರು. ಅಂದು ಶಿವಮೊಗ್ಗ ಧರ್ಮಕ್ಷೇತ್ರದ ಧರ್ಮಾಧ್ಯಕ್ಷರಾಗಿದ್ದ ಡಾ.ಜೆರಾಲ್ಡ್ ಐಸಾಕ್ ಲೋಬೊ ಅವರನ್ನು ಉಡುಪಿಗೆ ಮೊದಲ ಧರ್ಮಾಧ್ಯಕ್ಷರಾಗಿ ನೇಮಕ ಮಾಡಲಾಯಿತು. ಈ ಧರ್ಮಕ್ಷೇತ್ರವು ಕಾರ್ಕಳ, ಕುಂದಾಪುರ, ಕಾಪು, ಬೈಂದೂರು, ಹೆಬ್ರಿ, ಬ್ರಹ್ಮಾವರ ಹಾಗೂ ಉಡುಪಿ ತಾಲೂಕುಗಳನ್ನು ಒಳಗೊಂಡಿದೆ. ಬಿಷಪ್ ಜೆರಾಲ್ಡ್ ಅವರು ಧರ್ಮಾಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಸಂಪೂರ್ಣ ಹೊಸ ಧರ್ಮಕ್ಷೇತ್ರವನ್ನು ಪ್ರಾರಂಭಿಸಿ ಇದೀಗ ದೇಶದಲ್ಲಿಯೇ ಒಂದು ಮಾದರಿ ಧರ್ಮಪ್ರಾಂತವನ್ನಾಗಿಸಿದ ಕೀರ್ತಿ ಇವರದ್ದಾಗಿದೆ. ತನ್ನ ವೈಯುಕ್ತಿಕ ಆಶೆ ಆಕಾಂಕ್ಷೆಗಳಿಗೆ ಗಮನ ನೀಡದೆ, ಯಾವುದೇ ವೈಭವ ಆಡಂಬರಗಳಿಗೆ ಮುಂದಾಗದೇ, ಉಡುಪಿ ಚರ್ಚಿನ ಅಂದಿನ ಸೈಂಟ್ ಮೇರಿಸ್ ಶಾಲೆಯನ್ನು ಧರ್ಮಾಧ್ಯಕ್ಷರ ನಿವಾಸ ಮತ್ತು ಕಚೇರಿಗಳಿಗೆ ಮೀಸಲಾಗಿರಿಸಿ ತಮ್ಮ ಅಧಿಕಾರವನ್ನು ಆರಂಭಿಸಿದ್ದರು. ತಮಗೆ ಐಶಾರಾಮಿ ಮನೆ ಬೇಕು ಎನ್ನುವ ಚಿಂತೆ ಮಾಡದೆ ಶಾಲೆಯ ಒಂದು ತರಗತಿ ಕೋಣೆಯನ್ನು ತಮ್ಮ ವಾಸ್ತವ್ಯಕ್ಕೆ ಉಪಯೋಗಿಸಿ ಇಂದಿಗೆ ನಿವೃತ್ತಿಯಾಗುವ ಸಮಯದಲ್ಲಿ ಕೂಡ ಅದೇ ಕೋಣೆಯಲ್ಲಿ ಒಂದು ಮೇಜು, ಕುರ್ಚಿ ಮತ್ತು ಮಂಚದಲ್ಲಿಯೇ ಸತತ 14 ವರ್ಷಗಳನ್ನು ಕಳೆದವರು ಬಿಷಪ್ ಜೆರಾಲ್ಡ್ ಲೋಬೊ. ತಾನು ಸಾಮಾನ್ಯನಂತೆ ಬದುಕಿದ್ದರೂ ಮುಂದಿನ ಧರ್ಮಧ್ಯಕ್ಷರು ಅಂತಹ ಜೀವನ ಕಾಣಬಾರದು ಎಂಬ ನಿಟ್ಟಿನಲ್ಲಿ ಸುಸಜ್ಜಿತವಾದ ಧರ್ಮಾಧ್ಯಕ್ಷರ ನಿವಾಸ ನಿರ್ಮಾಣಕ್ಕೆ ಈಗಾಗಲೇ ಚಾಲನೆ ನೀಡಿದ್ದು ಅದೀಗ ನಿರ್ಮಾಣದ ಕೊನೆಯ ಹಂತದಲ್ಲಿದೆ. ತನ್ನ ಸಮುದಾಯದ ಜನರು ಸಮಾಜದಲ್ಲಿ ಉನ್ನತ ಸ್ಥಾನದಲ್ಲಿರಬೇಕು. ಪ್ರತಿಯೊಬ್ಬರೂ ಕೂಡ ಆರ್ಥಿಕವಾಗಿ, ಸಾಮಾಜಿಕವಾಗಿ ಸಬಲರಾಗಬೇಕು ಎಂಬ ಅಪೇಕ್ಷೆಯೊಂದಿಗೆ ವಿಶೇಷವಾದ ’ಪಾಸ್ಟರಲ್ ಪ್ಲ್ಯಾನ್ 2025’ ತಯಾರಿಸಿ ಅದನ್ನು ಕಾರ್ಯಗತಗೊಳಿಸಲು ಧರ್ಮಗುರು ಗಳೊಂದಿಗೆ ಸೇರಿಕೊಂಡು ಹಗಲಿರುಳು ಶ್ರಮಿಸಿದ ಕೀರ್ತಿ ಅವರದ್ದು. ಇದರ ಪರಿಣಾಮ ಇಂದು ಉಡುಪಿ ಧರ್ಮಪ್ರಾಂತದಲ್ಲಿ ಅಳವಡಿಸಿಕೊಂಡ ಈ ಪಾಸ್ಟರಲ್ ಪ್ಲ್ಯಾನ್ ಇಡೀ ಭಾರತದ ಧರ್ಮಪ್ರಾಂತಗಳಿಗೆ ಮಾತ್ರವಲ್ಲದೆ ವಿದೇಶದ ಹಲವಾರು ಧರ್ಮಪ್ರಾಂತ ಗಳಿಗೂ ಕೂಡ ಮಾದರಿಯಾಗಿದೆ ಎನ್ನುವುದು ವಿಶೇಷವಾಗಿದೆ. ಅದನ್ನೇ ಮುಂದುವರಿಸಿ 2030ರ ಹೊಸ ಯೋಜನೆ ಅನುಷ್ಠಾನ ಪ್ರಸ್ತುತ ನಡೆಯುತ್ತಿದೆ. ಯುವಜನರ ಶಿಕ್ಷಣಕ್ಕೆ ಮಹತ್ವ: ಸಮುದಾಯದ ಮಕ್ಕಳು ಉತ್ತಮ ಶಿಕ್ಷಣ ಹೊಂದಬೇಕು. ಪ್ರತಿ ಕುಟುಂಬದ ಮಗು ಕನಿಷ್ಠ ಪದವಿ ಶಿಕ್ಷಣ ಮುಗಿಸು ವುದರೊಂದಿಗೆ ಉತ್ತಮ ಕೆಲಸ ಪಡೆದು ಕುಟುಂಬವನ್ನು ನಿರ್ವಹಿಸಿಕೊಂಡು ಹೋಗು ವಂತಾಗಬೇಕು ಎಂಬ ನಿಟ್ಟಿನಲ್ಲಿ ವಿಶೇಷ ಯೋಜನೆ ರೂಪಿಸಿದರು. ಧರ್ಮಪ್ರಾಂತದ ಶೈಕ್ಷಣಿಕ ನಿಧಿಯನ್ನು ಆರಂಭಿಸಿ ಅದರ ಮೂಲಕ ಬಡ ಮಕ್ಕಳ ಶಿಕ್ಷಣಕ್ಕೆ ದಾರಿದೀಪವಾದರು. ಉನ್ನತ ವ್ಯಾಸಂಗ ಮಾಡಲು ಇಚ್ಚಿಸುವ ಮಕ್ಕಳಿಗೆ ಬಡ್ಡಿರಹಿತ ಸಾಲ ಯೋಜನೆಯ ಮೂಲಕ ಬಡ ಮಕ್ಕಳ ಜೀವನದಲ್ಲಿ ಆಶಾಕಿರಣವಾದರು. ಸಮುದಾಯದ ಮಕ್ಕಳು ಸರಕಾರಿ ಹುದ್ದೆಗಳನ್ನು ಪಡೆಯಬೇಕು ಎಂಬ ಸದುದ್ದೇಶದಿಂದ ನಿರಂತರ ಪ್ರಯತ್ನ ಮಾಡಿದ್ದಲ್ಲದೆ ಅವರಿಗೆ ಧರ್ಮಪ್ರಾಂತದ ಮೂಲಕ ಸೂಕ್ತ ತರಬೇತಿ ನೀಡುವಂತೆ ಮಾಡಿದರು. ಇದರ ಪರಿಣಾಮವಾಗಿ ಇಂದು ಹಲವಾರು ಯುವಜನರು ಉನ್ನತ ಸಾಧನೆ ತೋರಲು ಸಾಧ್ಯವಾಗಿದೆ. ಮಹಿಳೆಯರ ಸಬಲೀಕರಣ: ಮಹಿಳೆಯರು ಕುಟುಂಬದಲ್ಲಿ ಯಾರನ್ನೂ ಕೂಡ ಅವಲಂಬಿತರಾಗಿರದೆ ಸ್ವಂತವಾಗಿ ದುಡಿದು ತಮ್ಮ ಹಾಗೂ ಕುಟುಂಬದ ಪೋಷಣೆ ಮಾಡಬೇಕು ಎಂಬ ನಿಟ್ಟಿನಲ್ಲಿ ಸ್ವಸಹಾಯ ಸಂಘಗಳನ್ನು ಸ್ಥಾಪಿಸಿ ದ್ದಲ್ಲದೆ ಇವುಗಳ ಮೂಲಕ ಇಂದು ಧರ್ಮಪ್ರಾಂತದಲ್ಲಿ ಮಹಿಳೆ ಯರೇ ನಡೆಸುವಂತಹ ಒಂದು ಬ್ಯಾಂಕ್ ರಚನೆ ಮಾಡುವುದರ ಮೂಲಕ ಮಹಿಳೆಯರನ್ನು ಸಬಲೀಕರಣಗೊಳಿಸುವಲ್ಲಿ ಮುಖ್ಯಪಾತ್ರ ವಹಿಸಿದ್ದಾರೆ. ಬಡವರ ಆಶಾಕಿರಣ: ತನ್ನ ಧರ್ಮಪ್ರಾಂತದಲ್ಲಿ ಯಾರೂ ಬಡತನದ ರೇಖೆಗಿಂತ ಕೆಳಸಗೆ ಯಾರೂ ಇರಬಾರದು ಎಂಬ ಕನಸು ಕಂಡವರು ಬಿಷಪ್ ಜೆರಾಲ್ಡ್ ಲೋಬೊ. ಪ್ರತಿ ವರ್ಷ ಬಡವರಿಗಾಗಿ ಧರ್ಮಪ್ರಾಂತದ ಸಂಪದ ಸಂಸ್ಥೆಯ ಮೂಲಕ ಬಡವರಿಗಾಗಿ 50ಕ್ಕೂ ಅಧಿಕ ಮನೆ ನಿರ್ಮಾಣಕ್ಕೆ ನೆರವು, ಆರೋಗ್ಯ ಸಮಸ್ಯೆಯಿಂದ ಬಳಲುವವರಿಗೆ ಆರ್ಥಿಕ ನೆರವು ನೀಡಿದ್ದು ಕಳೆದ 14 ವರ್ಷಗಳಲ್ಲಿ ಹಲವು ಕೋಟಿಗಳಿಗೂ ಮಿಕ್ಕಿದ ನೆರವು ಬಡವರಿಗೆ ನೀಡುವ ಮೂಲಕ ಅವರ ಕಣ್ಣಿರು ಒರೆಸುವ ಕಾರ್ಯಕ್ಕೆ ನೆರವಾಗಿದ್ದಾರೆ. ಅನುಗ್ರಹ ಪಾಲನಾ ಕೇಂದ್ರ: ಧರ್ಮಪ್ರಾಂತದಲ್ಲಿ 21 ಆಯೋಗಗಳ ಮೂಲಕ ಪ್ರತಿಯೊಂದು ಕಾರ್ಯ ಚಟುವಟಿಕೆ ಗಳು ನಡೆಯುತ್ತಿದ್ದು ಇದಕ್ಕಾಗಿ ಸೂಕ್ತ ಕಚೇರಿಗಳಿರಬೇಕೆಂಬ ನಿಟ್ಟಿನಲ್ಲಿ ಅಂಬಾಗಿಲು ಸಮೀಪದ ಕಕ್ಕುಂಜೆ ಬಳಿ ಸುಸಜ್ಜಿತವಾದ ಅನುಗ್ರಹ ಪಾಲನಾ ಕೇಂದ್ರ ಸ್ಥಾಪನೆ ಬಿಷಪ್ ಜೆರಾಲ್ಡ್ ಅವರ ಬಹುದೊಡ್ಡ ಸಾಧನೆ ಎನ್ನಬಹುದು. ಈ ಕೇಂದ್ರದ ಮೂಲಕ ಧರ್ಮಪ್ರಾಂತದ ಧಾರ್ಮಿಕ, ಸಾಮಾಜಿಕ ಶೈಕ್ಷಣಿಕ ಪ್ರಗತಿಗೆ ಬಹುದೊಡ್ಡ ಸೇವೆ ನೀಡಿದಂತಾಗಿದೆ. ಧರ್ಮಪ್ರಾಂತಕ್ಕೆ ಪ್ರತ್ಯೇಕ ಪತ್ರಿಕೆ: ಧರ್ಮಪ್ರಾಂತದ ಆಗುಹೋಗುಗಳ ಮಾಹಿತಿ ಸಮುದಾಯದ ಪ್ರತಿಯೊಬ್ಬರಿಗೂ ಲಭಿಸಬೇಕು ಎಂಬ ನಿಟ್ಟಿನಲ್ಲಿ ಉಜ್ವಾಡ್ ಪತ್ರಿಕೆಯ ಸ್ಥಾಪನೆಗೆ ಬಿಷಪ್ ಜೆರಾಲ್ಡ್ ಅವರು ಕಾರಣ. ಮೊದಲು ಮಾಸಿಕವಾಗಿದ್ದ ಪತ್ರಿಕೆ ಪ್ರಸ್ತುತ ಪಾಕ್ಷಿಕವಾಗಿ ಪ್ರಕಟಗೊಳ್ಳುತ್ತಿದ್ದು 12 ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿದ್ದು ಅತೀ ಹೆಚ್ಚು ಜಾಹೀರಾತುದಾರರನ್ನು ಹೊಂದಿದೆ ಎಂಬ ಹೆಮ್ಮೆ ಅದಕ್ಕಿದೆ. ಅಲ್ಲದೆ ಧರ್ಮಪ್ರಾಂತಕ್ಕೆ ಸರ್ವ ಸುಸಜ್ಜಿತ ವಾದ ಅನುಸ್ವರ ಹೆಸರಿನಲ್ಲಿ ರೆಕಾರ್ಡಿಂಗ್ ಸ್ಟುಡಿಯೋ ಸಹ ನಿರ್ಮಿಸಿದ್ದು ಈ ಮೂಲಕ ಧರ್ಮಪ್ರಾಂತದ ಒಳ್ಳೆಯ ಸುದ್ದಿಗಳನ್ನು ಯೂಟ್ಯೂಬ್ ಚಾನಲ್ ಮುಖಾಂತರ ಸಮಾಜಕ್ಕೆ ತೋರ್ಪಡಿಸುವ ಕಾರ್ಯ ನಡೆದಿದೆ. ನಿವೃತ್ತ ಧರ್ಮಗುರುಗಳಿಗೆ ಮಿಲಾಗ್ರಿಸ್ ಹೋಮ್: ತಮ್ಮ ಜೀವನದ ಹಲವು ವರ್ಷಗಳನ್ನು ಚರ್ಚು, ಸಂಸ್ಥೆಗಳಲ್ಲಿ ಜನರ ಆಧ್ಯಾತ್ಮಿಕ, ಸಾಮಾಜಿಕ ಸೇವೆಗಳಿಗೆ ಮಿಸಲಾಗಿರಿಸಿದ ಹಿರಿಯ ಧರ್ಮಗುರುಗಳು ತಮ್ಮ ಜೀವನದ ನಿವೃತ್ತಿಯ ಬಳಿಕದ ಕಾಲವನ್ನು ಸಂತೋಷದಿಂದ, ಸಮಾಧಾನದಿಂದ ಕಳೆಯಬೇಕು ಎಂಬ ನಿಟ್ಟಿನಲ್ಲಿ ಕಲ್ಯಾಣಪುರ ದಲ್ಲಿ ಸುಸಜ್ಜಿತವಾದ ನಿವೃತ್ತ ಯಾಜಕರ ನಿವಾಸ ಮಿಲಾಗ್ರಿಸ್ ಹೋಮ್ ನಿರ್ಮಾಣ ಮಾಡಿರುವುದು ಬಿಷಪ್ ಜೆರಾಲ್ಡ್ ಅವರು ಇನ್ನೊಂದು ಸಾಧನೆಯಾಗಿದೆ. ಸೌಹಾರ್ದ ಸಮಾಜ ನಿರ್ಮಾಣಕ್ಕೆ ಬುನಾದಿ: ಉಡುಪಿ ಎಂಬುದು ಅಷ್ಟ ಮಠಗಳ ಊರು. ಇಲ್ಲಿ ಎಲ್ಲಾ ಧರ್ಮದ ಜನರು ಸೌಹಾರ್ದತೆಯಿಂದ ಬದುಕುತ್ತಾರೆ. ಕೆಲವು ಸಂದರ್ಭಗಳಲ್ಲಿ ಕೋಮು ದಳ್ಳುರಿಯ ಕಿಡಿ ಈ ಜಿಲ್ಲೆಗೆ ಬಾರ ದಂತೆ ಎಲ್ಲಾ ಧರ್ಮಗಳೊಂದಿಗೆ ಸೌಹಾರ್ದತೆಯ ಸಂದೇಶ ಸಾರುವಲ್ಲಿ ಮೊದಲ ಹೆಜ್ಜೆ ಇರಿಸಿದವರು ಬಿಷಪ್ ಜೆರಾಲ್ಡ್. ಪ್ರತಿ ಚರ್ಚುಗಳಲ್ಲಿ ಸೌಹಾರ್ದ ಸಮಿತಿಗಳನ್ನು ರಚಿಸಿ ಈ ಮೂಲಕ ಸ್ಥಳೀಯ ಮಟ್ಟದಲ್ಲಿ ಸೌಹಾರ್ದತೆಗೆ ಮೊದಲ ಪ್ರಾಶಸ್ತ್ಯ ನೀಡಿದರು. ಇತರ ಧರ್ಮಗಳ ಕಾರ್ಯಕ್ರಮಗಳಿಗೆ ಭೇಟಿ ನೀಡಿ ಪರಸ್ಪರ ಸೌಹಾರ್ದತೆಗೆ ಸಾಕ್ಷಿಯಾಗಿದ್ದಾರೆ. ಜನಸಾಮಾನ್ಯರ ಬಿಷಪ್: ಉನ್ನತ ಹುದ್ದೆಯಲ್ಲಿದ್ದರೂ ಕೂಡ ಮಕ್ಕಳು, ಯುವಕರು, ವೃದ್ದರು ಎಂಬ ಭೇಧಭಾವ ಮಾಡದೆ ಎಲ್ಲರೊಂದಿಗೆ ಬೆರೆತು ಬಾಳುವ ವಿಶೇಷ ಗುಣ ಬಿಷಪ್ ಜೆರಾಲ್ಡ್ ಲೋಬೊ ಅವರದ್ದಾಗಿದೆ. ಎಲ್ಲಾ ಧರ್ಮದ ಧಾರ್ಮಿಕ ನಾಯಕರೊಂದಿಗೆ, ಎಲ್ಲಾ ಪಕ್ಷದ ರಾಜಕೀಯ ಮುಖಂಡರೊಂದಿಗೆ ಉತ್ತಮ ಭಾಂಧವ್ಯ ಹೊಂದಿದ್ದರು. ಇದರಿಂದ ಇತರ ಧರ್ಮದವರು ಕೂಡ ಇವರನ್ನು ಜನಸಾಮಾನ್ಯರ ಬಿಷಪ್ ಎಂದು ಕರೆಯುತ್ತಿದ್ದಾರೆ. ಹೊಸ ತಂತ್ರಜ್ಞಾನಕ್ಕೆ ಮಹತ್ವ: ಜಗತ್ತು ಎಐ ತಂತ್ರಜ್ಞಾನದತ್ತ ಮುನ್ನುಗ್ಗುತ್ತಿದ್ದರೆ ಧರ್ಮಪ್ರಾಂತದ ಮಕ್ಕಳು ಮತ್ತು ಯುವಜನರೊಂದಿಗೆ ಕೂಡ ಅದೇ ಎಐ ಭಾಷೆಗಳ ಮೂಲಕ ಧರ್ಮಗುರುಗಳು ಮಾತನಾಡುವ ಅನಿವಾರ್ಯತೆ ಇಂದಿನ ಸಮಾಜದ್ದಾಗಿದೆ. ಇದನ್ನು ಮನಗಂಡ ಬಿಷಪ್ ಜೆರಾಲ್ಡ್ ಲೋಬೊ ಧರ್ಮಗುರುಗಳಿಗೆ ಕಾಲಕಾಲಕ್ಕೆ ಕೃತಕ ಬುದ್ದಿಮತ್ತೆಯ ಅರಿವು ನೀಡುವ ಕಾರ್ಯಾಗಾರಗಳ ಮೂಲಕ ಅವರನ್ನೂ ಕೂಡ ಇಂದಿನ ತಂತ್ರಜ್ಞಾನಕ್ಕೆ ಅನುಗುಣ ವಾಗಿ ತಯಾರು ಮಾಡುವ ವಿಶೇಷ ಕಾರ್ಯ ಮಾಡಿದ್ದಾರೆ. ಇತರ ಕ್ರೈಸ್ತ ಸಭೆಗಳೊಂದಿಗೆ ಐಕ್ಯತಾ ಸಂಬಂಧ: ರೋಮನ್ ಕಥೊಲಿಕ್ ಸಮುದಾಯಕ್ಕೆ ಮಾತ್ರವಲ್ಲದೆ ಇತರ ಕ್ರೈಸ್ತ ಸಭೆಗಳಾದ ಸಿಎಸ್‌ಐ, ಸೀರಿಯನ್ ಓರ್ಥೊಡಕ್ಸ್ ಹಾಗೂ ಇನ್ನಿತರ ಸಭೆಗಳೊಂದಿಗೆ ಅತ್ಯುತ್ತಮ ಸಂಬಂಧ ಹೊಂದಿದ್ದ ಬಿಷಪ್ ಅವರು ಅಗಾಗ ಎಲ್ಲಾ ಸಭೆಗಳನ್ನು ಒಗ್ಗೂಡಿಸಿ ಕಾರ್ಯಕ್ರಮಗಳನ್ನು ಮಾಡುವ ಮೂಲಕ ಕ್ರೈಸ್ತರು ನಾವೆಲ್ಲಾ ಒಂದು ಎಂಬ ಭಾವನೆ ಪ್ರತಿಯೊಬ್ಬರಲ್ಲಿ ಮೂಡಿಸಿದ್ದರು. ಇದರಿಂದಾಗಿ ಇತರ ಸಭೆಗಳ ಜನರೂ ಕೂಡ ಬಿಷಪ್ ಜೆರಾಲ್ಡ್‌ಲೋಬೊ ಅವರ ಬಗ್ಗೆ ‘ನಮ್ಮ ಬಿಷಪ್’ ಎಂಬ ಭಾವನೆ ತೋರಿಸುತ್ತಿದ್ದಾರೆ. ಧರ್ಮಪ್ರಾಂತದ ಧರ್ಮಾಧ್ಯಕ್ಷರಾಗಿ 14 ವರ್ಷಗಳ ಸುಧೀರ್ಘ ಸೇವೆಯಲ್ಲಿ ತನ್ನ ಧರ್ಮಪ್ರಾಂತ ಹಾಗೂ ತನ್ನ ಸಮುದಾಯದ ಏಳಿಗೆಗಾಗಿ ಸತತವಾಗಿ ಹಗಲಿರುಳು ದುಡಿದು ಪ್ರಸ್ತುತ ನಿವೃತ್ತಿಯಾಗಿ ತನ್ನ ಸೇವಾ ದಂಡವನ್ನು ಹೊಸ ಧರ್ಮಾಧ್ಯಕ್ಷರಿಗೆ ಹಸ್ತಾಂತರಿಸುವ ತವಕದಲ್ಲಿದ್ದಾರೆ. ಬಾಲ್ಯಾವಸ್ಥೆಯಿಂದ ಪ್ರೌಢಾವಸ್ಥೆಗೆ ತಲುಪಿರುವ ಉಡುಪಿ ಧರ್ಮಪ್ರಾಂತ ಇಂದು ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕವಾಗಿ ಸಬಲತೆಯನ್ನು ಕಂಡಿದೆ ಇದಕ್ಕೆ ಮುಖ್ಯ ಕಾರಣ ಬಿಷಪ್ ಜೆರಾಲ್ಡ್ ಲೋಬೊ ಅವರ ಅವಿರತ ಪರಿಶ್ರಮ. ಬಿಷಪ್ ಡಾ. ಜೆರಾಲ್ಡ್ ಅವರು ಹಾಕಿದ ಭದ್ರ ಅಡಿಪಾಯ, ನೀಡಿದ ಸ್ಪಷ್ಟವಾದ ಗುರಿ ಸದೃಢವಾಗಿ ಮುಂದುವರಿಯಲಿ ಎಂದು ಹಾರೈಸೋಣ.

ವಾರ್ತಾ ಭಾರತಿ 18 Apr 2026 7:30 pm

IPL 2026 | RCB ವಿರುದ್ಧ ದಿಲ್ಲಿಗೆ ರೋಚಕ ಜಯ

ಬೆಂಗಳೂರು: ಇಲ್ಲಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶನಿವಾರ ಐಪಿಎಲ್ ಟೂರ್ನಿಯ ಪಂದ್ಯದಲ್ಲಿ RCB ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ರೋಚಕ ಜಯ ಗಳಿಸಿದೆ.

ವಾರ್ತಾ ಭಾರತಿ 18 Apr 2026 7:30 pm

Women's Reservation Bill: ಮಹಿಳಾ ಪ್ರಾತಿನಿಧ್ಯಕ್ಕೆ ಮತ್ತೆ ಬ್ರೇಕ್: ವ್ಯವಸ್ಥಿತವಾಗಿ ನಡಿತಿದೆಯೇ ಹತ್ತಿಕ್ಕುವ ಪ್ರಯತ್ನ?

ಇದು ಒಂದು ಐತಿಹಾಸಿಕ ರಾತ್ರಿಯಾಗಬೇಕಿತ್ತು. ತಲೆಮಾರುಗಳಿಂದ ಕಾಯುತ್ತಿದ್ದ ಮಹಿಳೆಯರಿಗೆ ಸೂಕ್ತ ಪ್ರಾತಿನಿಧ್ಯ ನೀಡುವ ನಿಟ್ಟಿನಲ್ಲಿ ಭಾರತವು ನಿರ್ಣಾಯಕ ಹೆಜ್ಜೆ ಇಡುವ ರಾತ್ರಿ ಇದಾಗಬೇಕಿತ್ತು. ಆದರೆ, ಮಹಿಳೆಯರ ಏಳಿಗೆಯನ್ನು ಯಾರು ನಿಜವಾಗಿಯೂ ಬಯಸುತ್ತಾರೆ ಮತ್ತು ಅಧಿಕಾರ ಹಂಚಿಕೊಳ್ಳುವ ಸಮಯ ಬಂದಾಗ ಯಾರು ಹಿಂದೇಟು ಹಾಕುತ್ತಾರೆ ಎಂಬುದನ್ನು ಬಯಲು ಮಾಡಿದ ರಾತ್ರಿಯಾಗಿ ಇದು ಬದಲಾಯಿತು. ಏಪ್ರಿಲ್ 17 ರಂದು, ಲೋಕಸಭೆಯಲ್ಲಿ

ಒನ್ ಇ೦ಡಿಯ 18 Apr 2026 7:25 pm

ಬೆಂಗಳೂರಿನಲ್ಲಿ ದೃಢಪಟ್ಟ ಹಕ್ಕಿಜ್ವರ: ಸರಿಯಾಗಿ ಬೇಯಿಸಿ ಕೋಳಿ ಮಾಂಸ, ಮೊಟ್ಟೆ ಸೇವಿಸಿ ಎಂದು ಆರೋಗ್ಯ ಇಲಾಖೆ ಮನವಿ

ಬೆಂಗಳೂರಿನಲ್ಲಿ ಹಕ್ಕಿಜ್ವರ ದೃಢಪಟ್ಟಿದೆ. ಹೆಸರಘಟ್ಟದ ಮತ್ಕೂರು ಗ್ರಾಮದ ಕೋಳಿ ಸಾಕಾಣಿಕೆ ತರಬೇತಿ ಕೇಂದ್ರದಲ್ಲಿ ಇದೇ ತಿಂಗಳ 14 ರಂದು ತಪಾಸಣೆ ನಡೆಸಿದಾಗ ಭೋಪಾಲ್ ವರದಿಯ ಪ್ರಕಾರ H5N1 ಹಕ್ಕಿಜ್ವರ ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಎಲ್ಲಾ ರೀತಿಯ ಮುನ್ನೆಚ್ಚರಿಕೆಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಹಕ್ಕಿ ಜ್ವರದ ಹಿನ್ನೆಲೆಯಲ್ಲಿ ಯಾವುದೇ ರೀತಿಯ ಆತಂಕ ಬೇಡ ಎಂದು ಆರೋಗ್ಯ ಇಲಾಖೆ ತಿಳಿಸಿದೆ. ಅಲ್ಲದೆ, ಸರಿಯಾಗಿ ಬೇಯಿಸಿ ಕೋಳಿ ಮಾಂಸ ಮತ್ತು ಮೊಟ್ಟೆ ಸೇವಿಸಿ ಎಂದು ಮನವಿ ಮಾಡಿದೆ.

ವಿಜಯ ಕರ್ನಾಟಕ 18 Apr 2026 7:21 pm

‘ಟಗರು ಸುಮ್ ಸುಮ್ಮನೆ ಗುದ್ದಲ್ಲ, ಈಗ ಗುರಾಯಿಸ್ತಾ ಇದೆ’: ಸಿದ್ದರಾಮಯ್ಯ ಪರ ಮಹದೇವಪ್ಪ ಭರ್ಜರಿ ಬ್ಯಾಟಿಂಗ್!

ಟಗರು ಸುಮ್ ಸುಮ್ಮನೆ ಗುದ್ದಲ್ಲ, ಈಗ ಗುರಾಯಿಸ್ತಾ ಇದೆ. ಸಮಯ ಬಂದಾಗ ಏನು ಮಾಡಬೇಕೋ ಅದನ್ನು ಮಾಡುತ್ತದೆ ಎಂದು ಸಿಎಂ ಸಿದ್ದರಾಮಯ್ಯ ಅವರ ಪರವಾಗಿ ಡಾ. ಎಚ್ ಸಿ ಮಹದೇವಪ್ಪ ಭರ್ಜರಿ ಬ್ಯಾಟಿಂಗ್ ಮಾಡಿದ್ದಾರೆ. ಬೆಂಗಳೂರಿನಲ್ಲಿ ಶನಿವಾರ ಈ ಕರಿತಾಗಿ ಮಾತನಾಡಿದ ಅವರು, ಆಪ್ತರ ವಿರುದ್ಧ ಸರಣಿ ಕ್ರಮಗಳು ಆದರೂ ಸಿಎಂ ಸಿದ್ದರಾಮಯ್ಯ ಅವರ ಮೌನದ ಬಗ್ಗೆ ಕೆ ಎನ್ ರಾಜಣ್ಣ ಅವರ ಹೇಳಿಕೆಗೆ ಈ ರೀತಿಯಲ್ಲಿ ಪ್ರತಿಕ್ರಿಯೆ ನೀಡಿದರು.

ವಿಜಯ ಕರ್ನಾಟಕ 18 Apr 2026 7:11 pm

ವಿರಾಟ್‌ ಕೊಹ್ಲಿ ಅವರು ಕನ್ನಡಿಗ ಕೆಎಲ್‌ ರಾಹುಲ್‌ ಕ್ಯಾಚ್‌ ಹಿಡಿಯುತ್ತಿದ್ದಂತೆ ಖುಷಿಯಲ್ಲಿ ತೇಲಾಡಿದ ಅನುಷ್ಕಾ ಶರ್ಮಾ

RCB Vs DC IPL 2026: ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ರೋಚಕ ಪಂದ್ಯದಲ್ಲಿ ಆರ್‌ಸಿಬಿ ನೀಡಿದ 176 ರನ್‌ಗಳ ಗುರಿ ಬೆನ್ನಟ್ಟಿದ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಲ್ಕನೇ ವಿಕೆಟ್ ಪತನವಾಗಿದೆ. ಸ್ಪೋಟಕ ಬ್ಯಾಟಿಂಗ್ ಆಡಿದ ಕನ್ನಡಿಗ ಕೆ.ಎಲ್. ರಾಹುಲ್ ಅವರ ವಿಕೆಟ್ ಪಡೆಯುವಲ್ಲಿ ಕೃನಾಲ್ ಪಾಂಡ್ಯ ಯಶಸ್ವಿಯಾಗಿದ್ದಾರೆ. ಕೊಹ್ಲಿ ಅವರು ರಾಹುಲ್‌ ಅವರ ಕ್ಯಾಚ್ ಹಿಡಿದ

ಒನ್ ಇ೦ಡಿಯ 18 Apr 2026 7:08 pm

ಹಾರ್ಮುಜ್‌ ಜಲಸಂಧಿ ಬಳಿ ಭಾರತದತ್ತ ಹೊರಟಿದ್ದ 2 ಹಡಗುಗಳ ಮೇಲೆ ಇರಾನ್ ದಾಳಿ! ದೋಸ್ತಿ ಏನಾಯ್ತು?

ಆಘಾತಕಾರಿ ಬೆಳವಣಿಗೆಯೊಂದರಲ್ಲಿ ಹಾರ್ಮುಜ್‌ ಜಲಸಂಧಿಯನ್ನು ಮತ್ತೆ ತನ್ನ ನಿಯಂತ್ರಣಕ್ಕೆ ತೆಗೆದುಕೊಂಡಿರುವ ಇರಾನ್‌, ಈ ಪ್ರದೇಶದಲ್ಲಿ ಎಲ್ಲಾ ದೇಶಗಳ ತೈಲ ಟ್ಯಾಂಕರ್‌ಗಳ ಪ್ರಯಾಣಕ್ಕೆ ನಿರ್ಬಂಧ ವಿಧಿಸಿದೆ. ಈ ಮಧ್ಯೆ ಭಾರತೀಯ ಧ್ವಜ ಹೊತ್ತಿದ್ದ ಎರಡು ವಾಣಿಜ್ಯ ಹಡಗುಗಳ ಮೇಲೆ ಇರಾನ್‌ ಗನ್‌ಬೋಟ್‌ ಪಡೆ ದಾಳಿ ನಡೆಸಿದ್ದು, ಅದೃಷ್ಟವಶಾತ್‌ ಹಡಗಿನ ಎಲ್ಲಾ ಸಿಬ್ಬಂದಿ ಸುರಕ್ಷಿತವಾಗಿದ್ದಾರೆ ಎಂದು ಮೂಲಗಳು ಖಚಿತಪಡಿಸಿವೆ. ಭಾರತದ ಹಡುಗಳಿಗೆ ಹಾರ್ಮುಜ್‌ ಜಲಸಂಧಿ ತೆರೆದಿದೆ ಎಂದು ಇರಾನ್‌ ಹೇಳಿತ್ತು. ಇಲ್ಲಿದೆ ಮಾಹಿತಿ.

ವಿಜಯ ಕರ್ನಾಟಕ 18 Apr 2026 7:07 pm

Viral Video : ಇದು, ರಾಜಕೀಯ ಮೀರಿದ ಸೌಜನ್ಯತೆ - ಸಂಸತ್ತಿನಲ್ಲಿ ಖರ್ಗೆಗೆ ಕೇಂದ್ರ ಸಚಿವ ಜೆಪಿ ನಡ್ಡಾ ಆಸರೆ

Nadda helps Kharge : ರಾಜಕೀಯದಲ್ಲಿ ಆಡಳಿತ ಮತ್ತು ವಿಪಕ್ಷಗಳ ನಡುವೆ ಜಿದ್ದಾಜಿದ್ದಿನ ರಾಜಕಾರಣ ಇದ್ದಿದ್ದೇ. ಆದರೆ, ಇವೆಲ್ಲವನ್ನೂ ಮೀರಿ, ರಾಜಕೀಯ ನಾಯಕರು ಒಬ್ಬರು ಇನ್ನೊಬ್ಬರಿಗೆ ಕೊಡುವ ಗೌರವ, ಸೌಜನ್ಯತೆ ಅವಾಗಾವಾಗ ಸುದ್ದಿಯಾಗುತ್ತಿರುತ್ತದೆ. ಅಂತಹ, ವಿದ್ಯಮಾನವೊಂದು ಸಂಸತ್ತಿನಲ್ಲಿ ನಡೆದಿದೆ. ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆಯವರನ್ನು, ಜೆಪಿ ನಡ್ಡಾ ಕೈಹಿಡಿದು ಕರೆದುಕೊಂಡು ಬಂದಿದ್ದಾರೆ.

ವಿಜಯ ಕರ್ನಾಟಕ 18 Apr 2026 6:41 pm

ಮಧ್ಯರಾತ್ರಿ ದಕ್ಷಿಣ ಆಫ್ರಿಕಾದಿಂದ ಬೆಂಗಳೂರಿಗೆ ಬಂದ ಹೊಸ ಅತಿಥಿಗಳು! ಚೀತಾ ನೋಡಿ ಈಶ್ವರ್ ಖಂಡ್ರೆ ಫುಲ್ ಖುಷ್

ಬೆಂಗಳೂರಿಗೆ ಮಧ್ಯರಾತ್ರಿ ದಕ್ಷಿಣ ಆಫ್ರಿಕಾದಿಂದ ನಾಲ್ಕು ಚೀತಾಗಳನ್ನು ತರಲಾಗಿದೆ. ಬನ್ನೇರುಘಟ್ಟ ಮೃಗಾಲಯದಲ್ಲಿ ಮುಂದಿನ ದಿನಗಳಲ್ಲಿ ಇವು ಸಾರ್ವಜಕರಿಗೆ ವೀಕ್ಷಣೆಗೆ ಲಭ್ಯವಿರಲಿದೆ. ದಕ್ಷಿಣ ಆಫ್ರಿಕಾದಿಂದ ಬೆಂಗಳೂರಿಗೆ ಆಗಮಿಸಿರುವ ಈ ಚೀತಾಗಳಿಗೆ ಇಲ್ಲಿನ ವಾತಾವರಣ ಹಾಗೂ ಹವಾಮಾನ ಬದಲಾವಣೆಯಾಗುವ ಕಾರಣಗಳಿಂದ ತೊಂದರೆ ಆಗುವ ಸಾಧ್ಯತೆ ಇದೆ. ಹಾಗಾಗಿ ಯಾವುದೇ ರೀತಿಯಲ್ಲಿ ತೊಂದರೆ ಆಗದಂತೆ, ಆರೋಗ್ಯ ಸಮಸ್ಯೆ ಎದುರಾಗದ ರೀತಿಯಲ್ಲಿ ಸೂಕ್ತ ನಿಗಾ ಇಡಬೇಕು ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ಸೂಚನೆ ನೀಡಿದ್ದಾರೆ.

ವಿಜಯ ಕರ್ನಾಟಕ 18 Apr 2026 6:35 pm

Kalaburagi | ಸೋಲಾಪುರ ವಿಭಾಗದ ಭಿಗ್ವಾನ್ ರೈಲು ನಿಲ್ದಾಣದಲ್ಲಿ ಮೆಗಾ ಆರೋಗ್ಯ ತಪಾಸಣಾ ಶಿಬಿರ

ಕಲಬುರಗಿ: ಮಧ್ಯ ರೈಲ್ವೆಯ ಸೋಲಾಪುರ ವಿಭಾಗದ ವತಿಯಿಂದ ಭಿಗ್ವಾನ್ ರೈಲು ನಿಲ್ದಾಣದಲ್ಲಿ ಆಯೋಜಿಸಲಾದ ಮೆಗಾ ಆರೋಗ್ಯ ತಪಾಸಣಾ ಶಿಬಿರದಲ್ಲಿ ಒಟ್ಟು 131 ಮಂದಿಗೆ ಆರೋಗ್ಯ ತಪಾಸಣೆ ನಡೆಸಲಾಗಿದೆ ಎಂದು ಸಾರ್ವಜನಿಕ ಸಂಪರ್ಕ ಇಲಾಖೆ ತಿಳಿಸಿದೆ. ಶಿಬಿರದಲ್ಲಿ 101 ರೈಲ್ವೆ ಉದ್ಯೋಗಿಗಳು ಹಾಗೂ 30 ಕುಟುಂಬ ಸದಸ್ಯರು ಭಾಗವಹಿಸಿ ಆರೋಗ್ಯ ಪರೀಕ್ಷೆಗೊಳಪಟ್ಟರು. ರೈಲ್ವೆ ಸಮುದಾಯದಲ್ಲಿ ಆರೋಗ್ಯಕರ ಜೀವನಶೈಲಿಯ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಈ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು. ಶಿಬಿರದಲ್ಲಿ ಸಾಮಾನ್ಯ ಆರೋಗ್ಯ ತಪಾಸಣೆ, ಎತ್ತರ-ತೂಕ ಮಾಪನ, ರಕ್ತದೊತ್ತಡ ಪರಿಶೀಲನೆ, ಇಸಿಜಿ ಪರೀಕ್ಷೆ, ರಕ್ತ ಮಾದರಿ ಸಂಗ್ರಹಣೆ, ಕ್ಷಯರೋಗ ತಪಾಸಣೆ ಹಾಗೂ ಉಚಿತ ಔಷಧ ವಿತರಣೆ ಸೇರಿದಂತೆ ವಿವಿಧ ವೈದ್ಯಕೀಯ ಸೇವೆಗಳು ಒದಗಿಸಲಾಯಿತು. ಇದೇ ವೇಳೆ ಗರ್ಭಧಾರಣೆ ಪೂರ್ವ ಸಮಾಲೋಚನೆ, ತಾತ್ಕಾಲಿಕ ಹಾಗೂ ಶಾಶ್ವತ ಗರ್ಭನಿರೋಧಕ ವಿಧಾನಗಳು, ಗರ್ಭಕಂಠ ಮತ್ತು ಸ್ತನ ಕ್ಯಾನ್ಸರ್ ತಡೆಗಟ್ಟುವಿಕೆ, ಸ್ತನ ಸ್ವಯಂ ಪರೀಕ್ಷೆ ವಿಧಾನಗಳು, ಮಕ್ಕಳ ರೋಗನಿರೋಧಕ ಶಕ್ತಿ, HPV ಲಸಿಕೆ ಜಾಗೃತಿ, ರಕ್ತಹೀನತೆ ತಡೆ ಹಾಗೂ ಸಮತೋಲಿತ ಪೌಷ್ಟಿಕ ಆಹಾರದ ಮಹತ್ವ ಕುರಿತು ವಿಶೇಷವಾಗಿ ಜಾಗೃತಿ ಮೂಡಿಸಲಾಯಿತು. ಸೋಲಾಪುರ ವಿಭಾಗದ ಮುಖ್ಯ ವೈದ್ಯಕೀಯ ಅಧೀಕ್ಷಕ (CMS) ಡಾ. ಮಂಜುನಾಥ್ ಜಿ.ಎಸ್ ಮಾರ್ಗದರ್ಶನದಲ್ಲಿ ಸ್ತ್ರೀರೋಗತಜ್ಞ (ACMS/SUR) ಡಾ. ಕೃಷ್ಣ ಚಂದಕ್, ವೈದ್ಯ (ಸೀನಿಯರ್ DMO/SUR) ಡಾ. ಸತೀಶ್ ಬಾಬು, ನೇತ್ರಶಾಸ್ತ್ರಜ್ಞ (DMO/SUR) ಡಾ. ದೇವಿಲಾಲ್ ಚವಾಣ್, ಮೂಳೆಚಿಕಿತ್ಸಕ (DMO/SUR) ಡಾ. ರಥನ್ ಮೇಕಲ ಮತ್ತು ADMO/KWV ಡಾ. ಸೂರ್ಯ ತೇಜ ಅವರು ಸೇವೆ ಸಲ್ಲಿಸಿದರು

ವಾರ್ತಾ ಭಾರತಿ 18 Apr 2026 6:28 pm

Kalaburagi | ಐಟಿಐ ವಿದ್ಯಾರ್ಥಿಗಳಿಂದ 100 ಪ್ರಾಜೆಕ್ಟ್‌ಗಳ ಕೌಶಲ್ಯ ಪ್ರದರ್ಶನ

ಕಲಬುರಗಿ: ಗ್ರಾಮೀಣ ಭಾಗದ ಐಟಿಐ ವಿದ್ಯಾರ್ಥಿಗಳು ನಿರೀಕ್ಷೆಗೂ ಮೀರಿದ ತಾಂತ್ರಿಕ ಕೌಶಲ್ಯ ಪ್ರದರ್ಶಿಸಿರುವುದು ಶ್ಲಾಘನೀಯವಾಗಿದೆ. ಭವಿಷ್ಯದಲ್ಲಿ ಐಟಿಐ ಪಾಸಾದ ಅಭ್ಯರ್ಥಿಗಳಿಗೆ ಜೆಸ್ಕಾಂನಲ್ಲಿ ಅಪ್ರೆಂಟಿಶಿಪ್ ತರಬೇತಿ ಹಾಗೂ ಲೈನ್‌ಮನ್ ಹುದ್ದೆಗಳಲ್ಲಿ ಆದ್ಯತೆ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ಗುಲಬರ್ಗಾ ವಿದ್ಯುಚ್ಛಕ್ತಿ ಸರಬರಾಜು ಕಂಪನಿ (ಜೆಸ್ಕಾಂ) ಅಧ್ಯಕ್ಷ ಪ್ರವೀಣ ಪಾಟೀಲ ಹರವಾಳ ಹೇಳಿದರು. ನಗರದ ಸರ್ಕಾರಿ ಕೈಗಾರಿಕಾ ತರಬೇತಿ (ಪುರುಷ) ಸಂಸ್ಥೆಯಲ್ಲಿ ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆ ಹಾಗೂ ನೋಡಲ್ ಜಿಲ್ಲೆಯ ಸರ್ಕಾರಿ ಮತ್ತು ಅನುದಾನಿತ ಐಟಿಐ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಶನಿವಾರ ಆಯೋಜಿಸಿದ್ದ ತಾಂತ್ರಿಕ ಕೌಶಲ್ಯ ಸ್ಪರ್ಧೆ/ಪ್ರದರ್ಶನ–2026 ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸಂಸ್ಥೆಗಳ ಉನ್ನತೀಕರಣಕ್ಕೆ ಅಗತ್ಯವಿರುವ ಅನುದಾನಕ್ಕಾಗಿ ಸರ್ಕಾರದ ಮಟ್ಟದಲ್ಲಿ ಪ್ರಯತ್ನಿಸಲಾಗುವುದು ಎಂದ ಅವರು, ವಿದ್ಯಾರ್ಥಿಗಳ ಕೌಶಲ್ಯಾಭಿವೃದ್ಧಿಗೆ ಹೆಚ್ಚಿನ ಪ್ರೋತ್ಸಾಹ ನೀಡಲಾಗುವುದು ಎಂದು ತಿಳಿಸಿದರು. ಖ್ಯಾತ ಉದ್ಯಮಿ ಅರುಣಕುಮಾರ ಲೋಯಾ ಮಾತನಾಡಿ, ತರಬೇತಿದಾರರು ಕೇವಲ ಉದ್ಯೋಗಕ್ಕಾಗಿ ಕಾಯದೆ, ಸ್ವಂತ ಉದ್ಯಮ ಆರಂಭಿಸಿ ಇತರರಿಗೆ ಉದ್ಯೋಗ ನೀಡುವ ಮಟ್ಟಕ್ಕೆ ಬೆಳೆಯಬೇಕು ಎಂದು ಸಲಹೆ ನೀಡಿದರು. ದಾವಣಗೆರೆ ಐಟಿಒಟಿ ಜಂಟಿ ನಿರ್ದೇಶಕ ರವೀಂದ್ರನಾಥ ಎಸ್. ಬಾಳ್ಳಿ ಅವರು ಕೈಗಾರಿಕೆಗಳೊಂದಿಗೆ ಒಪ್ಪಂದ ಮಾಡಿಕೊಂಡು ತರಬೇತಿದಾರರಿಗೆ ಹೆಚ್ಚಿನ ಅವಕಾಶಗಳನ್ನು ಕಲ್ಪಿಸುವ ಅಗತ್ಯತೆಯನ್ನು ಒತ್ತಿಹೇಳಿದರು. ಜಿಲ್ಲೆಯ ವಿವಿಧ ಸರ್ಕಾರಿ ಹಾಗೂ ಅನುದಾನಿತ ಐಟಿಐ ಸಂಸ್ಥೆಗಳ ಸುಮಾರು 1000 ತರಬೇತಿದಾರರು ಈ ಬೃಹತ್ ಪ್ರದರ್ಶನದಲ್ಲಿ ಭಾಗವಹಿಸಿ ತಮ್ಮ ತಾಂತ್ರಿಕ ನೈಪುಣ್ಯತೆಯನ್ನು ಪ್ರದರ್ಶಿಸಿದರು. ಒಟ್ಟು 100 ತಾಂತ್ರಿಕ ಪ್ರಾಜೆಕ್ಟ್‌ಗಳು ಪ್ರದರ್ಶನದಲ್ಲಿ ಗಮನ ಸೆಳೆದವು. ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ವಿಭಾಗದಿಂದ 32, ಉತ್ಪಾದನಾ ವಿಭಾಗದಿಂದ 28, ಆಟೋಮೋಟಿವ್ ವಿಭಾಗದಿಂದ 19 ಸೇರಿದಂತೆ ಕನ್ಸ್ಟ್ರಕ್ಷನ್, ಐಟಿ ಹಾಗೂ ಇತರೆ ವಿಭಾಗಗಳ ಮಾದರಿಗಳು ವಿಶೇಷ ಆಕರ್ಷಣೆಯಾಗಿದ್ದವು. ಕಡಿಮೆ ಸಂಪನ್ಮೂಲಗಳಲ್ಲಿ ವಿದ್ಯಾರ್ಥಿಗಳು ರೂಪಿಸಿದ ಪ್ರಾಜೆಕ್ಟ್‌ಗಳು ಅವರ ಪ್ರಾಯೋಗಿಕ ಜ್ಞಾನವನ್ನು ಪ್ರತಿಬಿಂಬಿಸಿವೆ. ಸಂಸ್ಥೆಯ ಪ್ರಾಚಾರ್ಯರಾದ ಮುರಲಿಧರ ರತ್ನಗಿರಿ ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಉಪನಿರ್ದೇಶಕಿ ಡಾ. ರುಬಿನಾ ಪರ್ವೀನ್, ಶಕೀಲ ಅನ್ಸಾರಿ ಸೇರಿದಂತೆ ವಿವಿಧ ಐಟಿಐಗಳ ಪ್ರಾಚಾರ್ಯರು, ಬೋಧಕ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ವಾರ್ತಾ ಭಾರತಿ 18 Apr 2026 6:24 pm

ನಾಲಗೆಯಲ್ಲಿ ತುರಿಕೆಯಾಗದಂತೆ ಪೈನಾಪಲ್ ತಿನ್ನಬೇಕೆ ? ಇಲ್ಲಿದೆ ಐದು ಟಿಪ್ಸ್...

ಚಿನ್ನದ ಬಣ್ಣದ, ಸಿಹಿಯಾದ, ಸುಗಂಧ ಬೀರುವ ಪೈನಾಪಲ್ ನಲ್ಲಿ ರುಚಿ ಮಾತ್ರವಲ್ಲ, ವಿಟಮಿನ್ ಸಿ, ಮೂಳೆಗಳ ಬಲಕ್ಕೆ ಅಗತ್ಯವಾದ ಮ್ಯಾಂಗನೀಸ್, ಆ್ಯಂಟಿಆಕ್ಸಿಡೆಂಟ್‌ಗಳು ಇದರಲ್ಲಿ ಧಾರಾಳವಿದೆ. ಏನು ಪ್ರಯೋಜನ ಹೇಳಿ. ಹಲವರಿಗೆ ಇದನ್ನು ತಿನ್ನಲು ಗೊತ್ತಿಲ್ಲ. ಕಾರಣ ಬಾಯಲ್ಲಿ ಉಂಟಾಗುವ ತುರಿಕೆ. ಇದು ಏಕೆ ಸಂಭವಿಸುತ್ತದೆ ಎಂದು ನಿಮಗೆ ಗೊತ್ತೆ. ಯಾಕಾಗಿ ಈ ತುರಿಕೆ ? ನಾವು ಅನಾನಸನ್ನು ತಿನ್ನಲು ಆರಂಭಿಸುವಾಗ ತಿರುಗಿ ಅನಾನಸ್ ನಮ್ಮನ್ನು ತಿನ್ನಲು ನೋಡುವುದರಿಂದಲೇ ಈ ತುರಿಕೆಯುಂಟಾಗಲು ಕಾರಣ ಎಂದರೆ ನೀವು ನಂಬುತ್ತೀರಾ.! ಪೈನಾಪಲ್ ನಲ್ಲಿರುವ ಬ್ರೊಮೆಲೈನ್ ಎಂಬ ಎನ್‌ಝೈಮ್ ನಾಲಗೆ, ಬಾಯಲ್ಲಿ ತುರಿಕೆಯನ್ನುಂಟುಮಾಡುತ್ತದೆ. ಇದೊಂದು ಪ್ರೊಟೀನ್ ದಹನ ಎನ್‌ಝೈಮ್ ಆಗಿರುವುದರಿಂದ ಇದು ನಾಲಗೆ, ಬಾಯಿಯ ಕೋಶಗಳಲ್ಲಿರುವ ಪ್ರೊಟೀನ್‌ನೊಂದಿಗೆ ಪ್ರತಿಕ್ರಿಯಿಸುತ್ತದೆ. ಅನಾನಸಿನಲ್ಲಿರುವ ಸಿಟ್ರಿಕ್ ಆಸಿಡ್ ನಾಲಗೆಯಲ್ಲಿ ಉಂಟಾಗುವ ತುರಿಕೆಯನ್ನು ಹೆಚ್ಚಿಸುವಂತೆ ಮಾಡುತ್ತದೆ. ಸರಳವಾಗಿ ಹೇಳುವುದಾದರೆ, ನಾವು ಪೈನಾಪಲನ್ನು ದಹಿಸಲು ಆರಂಭಿಸುವ ಮೊದಲೇ ಆ ಹಣ್ಣು ನಮ್ಮ ನಾಲಗೆಯಲ್ಲಿರುವ ಕೋಶಗಳನ್ನು ದಹಿಸಲು ಶ್ರಮಿಸುತ್ತದೆ. ಇದರಿಂದಾಗಿ ತುರಿಕೆಯ ಅನುಭವವಾಗುತ್ತದೆ. ʼಬಿರಿಯಾನಿ ತಿಂದರೆ ಪೈನಾಪಲ್ ಜ್ಯೂಸ್ʼ ಸಾಮಾನ್ಯವಾಗಿ ಬಿರಿಯಾನಿಯೊಂದಿಗೆ ನಾವು ಏನನ್ನು ಕುಡಿಯುತ್ತೇವೆ ಹೇಳಿ? ಒಂದೋ ಸ್ಪ್ರೆ ಟ್, ಸೆವನ್‌ಅಪ್ ಅಥವಾ ಕೋಕಕೋಲ. ಮಿಡ್‌ಲ್‌ಈಸ್ಟ್ ದೇಶಗಳಲ್ಲಾದರೆ ವ್ಯಾಪಕವಾಗಿ ಪೆಪ್ಸಿ. ಇವುಗಳನ್ನು ಕುಡಿಯುವುದರಿಂದ ತಿಂದ ಬಿರಿಯಾನಿ ಕರಗುತ್ತದೋ ಇಲ್ಲವೋ ಗೊತ್ತಿಲ್ಲ. ಒಂದಂತೂ ಸತ್ಯ. ಬಿರಿಯಾನಿಯಂತಹ ಊಟ ಮಾಡಿದಾಗ ಕೂಡಲೆ ಒಂದು ಪೈನಾಪಲ್ ಜ್ಯೂಸ್ ಕುಡಿಯುವುದು ಅಥವಾ ಒಂದು ತುಂಡು ಪೈನ್‌ಆಪಲ್ ಹಣ್ಣು ತಿನ್ನುವುದು ತುಂಬಾ ಒಳ್ಳೆಯದು. ಕಾರಣ ಪೈನಾಪಲ್ ನಲ್ಲಿರುವ ಬ್ರೊಮೆಲೈನ್ ಬಿರಿಯಾನಿಯಲ್ಲಿರುವ ಮಾಂಸ ಬೇಗನೆ ಜೀರ್ಣವಾಗಲು ಸಹಾಯ ಮಾಡುತ್ತದೆ. ಜೊತೆಗೆ ಹೊಟ್ಟೆಯ ಭಾರ ಕಡಿಮೆ ಮಾಡಲು ಇದು ಉತ್ತಮವಾಗಿದೆ. ಆದರೆ ಒಂದು ಸಮಸ್ಯೆ ಉಂಟು. ಬಿರಿಯಾನಿಯ ಖಾರ ಮತ್ತು ಅನಾನಸಿನಲ್ಲಿರುವ ಆಸಿಡ್ ಮಿಶ್ರಣವಾಗಿ ಅಸಿಡಿಟಿ ಉಂಟಾಗುವ ಸಾಧ್ಯತೆಯಿದೆ. ಆದ್ದರಿಂದ ಒಂದೋ, ಎರಡೋ ತುಂಡು ತಿನ್ನುವುದು ಬುದ್ಧಿವಂತಿಕೆ. ನಾಲಗೆಯಲ್ಲಿ ತುರಿಕೆಯಾಗದಂತೆ ಪೈನಾಪಲ್ ತಿನ್ನಬೇಕೆ ? ಇಲ್ಲಿದೆ ಐದು ಟಿಪ್ಸ್... ► ಪೈನ್‌ಆಪಲ್ ಹಣ್ಣಿನ ಮಧ್ಯದ ಗಟ್ಟಿಯಾದ ಭಾಗದಲ್ಲಿ ಅತ್ಯಂತ ಹೆಚ್ಚು ಬ್ರೊಮೆಲೈನ್ ಇರುತ್ತದೆ. ಇದರಿಂದ ಆ ಭಾಗವನ್ನು ಕತ್ತರಿಸಿ ತೆಗೆದ ನಂತರ ತಿನ್ನುವುದರಿಂದ ತುರಿಕೆಯನ್ನು ಕಡಿಮೆ ಮಾಡಬಹುದು. ► ಅನಾನಸಿನ ತುಂಡುಗಳನ್ನು 10-15 ನಿಮಿಷ ತಂಪಾದ ಉಪ್ಪು ಮಿಶ್ರಿತ ನೀರಿನಲ್ಲಿಡಬೇಕು. ಇದು ಬ್ರೊಮೆಲೈನ್‌ನ ತೀವ್ರತೆ ಕಡಿಮೆ ಮಾಡಲು ನೆರವಾಗುತ್ತದೆ. ► ಮೊಸರು, ಹಾಲು ಅಥವಾ ಐಸ್‌ಕ್ರೀಂನಂತಹ ಆಹಾರದೊಂದಿಗೆ ಪೈನ್‌ಆಪಲ್ ತಿನ್ನುವುದು ನಾಲಗೆಯ ತುರಿಕೆಯನ್ನು ನಿವಾರಿಸಲು ಸಹಾಯ ಮಾಡುತ್ತದೆ. ಹಾಲುತ್ಪನ್ನಗಳಲ್ಲಿರುವ ಪ್ರೊಟೀನ್‌ನೊಂದಿಗೆ ಬ್ರೊಮೆಲೈನ್ ಪ್ರತಿಕ್ರಿಯಿಸುವುದರಿಂದ ಅದು ನಾಲಗೆಯ ಕೋಶಗಳನ್ನು ಬಾಧಿಸುವುದನ್ನು ತಡೆಯಬಹುದು. ► ಹಣ್ಣಾಗದ ಅಥವಾ ಅರ್ಧ ಹಣ್ಣಾದ ಪೈನಾಪಲ್ ನಲ್ಲಿ ಆಸಿಡ್, ಬ್ರೊಮೆಲೈನ್‌ನ ಪ್ರಮಾಣ ಹೆಚ್ಚಾಗಿರುತ್ತದೆ. ಆದ್ದರಿಂದ ಖರೀದಿಸುವಾಗ ಚಿನ್ನದ ಬಣ್ಣದಲ್ಲಿರುವ ಮಾಗಿದ ಹಣ್ಣನ್ನು ಆಯ್ಕೆ ಮಾಡುವುದು ತುಂಬಾ ಒಳ್ಳೆಯದು. ► ಪೈನಾಪಲ್ ಅನ್ನು ಗ್ರಿಲ್ ಮಾಡಿ ಅಥವಾ ಬೇಕ್ ಮಾಡಿ ತಿನ್ನುವುದು ಎನ್‌ಝೈಮ್‌ನ ಪ್ರತಿಕ್ರಿಯೆಯನ್ನು ಸಂಪೂರ್ಣವಾಗಿ ತಡೆಯಲು ಸಹಾಯ ಮಾಡುತ್ತದೆ. ಕೃಪೆ: manoramaonline

ವಾರ್ತಾ ಭಾರತಿ 18 Apr 2026 6:24 pm

ಕಲಬುರಗಿ ಕೋಟೆಯಲ್ಲಿ ಅಂತರರಾಷ್ಟ್ರೀಯ ಸ್ಮಾರಕ-ತಾಣಗಳ ದಿನಾಚರಣೆ

ಬಾರಾ ಗಾಜಿ ತೋಪ್ ಗಿನ್ನಿಸ್ ದಾಖಲೆಗೆ ಸೇರಿಸಿ: ಎಂಎಲ್ಸಿ ಕಮಕನೂರ ಒತ್ತಾಯ;

ವಾರ್ತಾ ಭಾರತಿ 18 Apr 2026 6:16 pm

Kalaburagi | ಪಿಡಿಎ ಇಂಜಿನಿಯರಿಂಗ್ ಕಾಲೇಜಿಗೆ ಯುಎಚ್‌ವಿ ನೋಡಲ್ ಕೇಂದ್ರ ಮಾನ್ಯತೆ

ಕಲಬುರಗಿ: ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಪಿಡಿಎ ಇಂಜಿನಿಯರಿಂಗ್ ಕಾಲೇಜು ಮತ್ತೊಂದು ಮಹತ್ವದ ಸಾಧನೆ ಸಾಧಿಸಿದ್ದು, ಎಐಸಿಟಿಇ ವತಿಯಿಂದ ಸಾರ್ವತ್ರಿಕ ಮಾನವ ಮೌಲ್ಯಗಳು (ಯುಎಚ್‌ವಿ) ನೋಡಲ್ ಕೇಂದ್ರವಾಗಿ ಮಾನ್ಯತೆ ಪಡೆದ ರಾಜ್ಯದ ಏಕೈಕ ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಕಳೆದ ಎರಡು ವರ್ಷಗಳಿಂದ ಕಾಲೇಜು ಯುಎಚ್‌ವಿ ಅಡಿಯಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸಂಸ್ಥೆಯ ಕಾರ್ಯಕ್ಷಮತೆಯನ್ನು ಹೆಚ್ಚಿಸಲು ನಿರಂತರ ಪ್ರಯತ್ನ ಮಾಡುತ್ತಿದೆ. ಸಂಸ್ಥೆಯ ಅಧ್ಯಕ್ಷರು ಹಾಗೂ ಆಡಳಿತ ಮಂಡಳಿ ಸದಸ್ಯರಿಗೆ ನಾಯಕತ್ವ ತರಬೇತಿ (LDP), ಸಂಸ್ಥೆಯ ಮುಖ್ಯಸ್ಥರಿಗೆ ನಿರ್ವಹಣಾ ತರಬೇತಿ (MDP) ಹಾಗೂ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗೆ ಅಧ್ಯಾಪನಾ ಅಭಿವೃದ್ಧಿ (FDP) ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ವಿದ್ಯಾರ್ಥಿಗಳಲ್ಲಿ ಮೌಲ್ಯಾಧಾರಿತ ಶಿಕ್ಷಣ ಬೆಳೆಸುವ ಉದ್ದೇಶದಿಂದ, ಹೊಸ ವಿದ್ಯಾರ್ಥಿಗಳಿಗೆ ಸ್ಟೂಡೆಂಟ್ ಇಂಡಕ್ಷನ್ ಪ್ರೋಗ್ರಾಂ ಮೂಲಕ ಯುಎಚ್‌ವಿ ಪರಿಚಯ ಮಾಡಲಾಗುತ್ತಿದ್ದು, ಇಂಜಿನಿಯರಿಂಗ್ 4ನೇ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ ಈ ವಿಷಯವನ್ನು ಪಠ್ಯಕ್ರಮದ ಭಾಗವಾಗಿ ಕಡ್ಡಾಯವಾಗಿ ಬೋಧಿಸಲಾಗುತ್ತಿದೆ. ಈ ಯೋಜನೆಯನ್ನು ಕಾಲೇಜಿನೊಳಗೆ ಮಾತ್ರ ಸೀಮಿತಗೊಳಿಸದೇ, ಸುತ್ತಮುತ್ತಲಿನ ಶಾಲೆಗಳು ಹಾಗೂ ಕಾಲೇಜುಗಳಿಗೂ ವಿಸ್ತರಿಸುವ ಉದ್ದೇಶ ಹೊಂದಲಾಗಿದೆ. ಸಂಸ್ಥೆಯ ಅಧ್ಯಕ್ಷ ಶಶೀಲ್ ಜಿ ನಮೋಶಿ, ಉಪಾಧ್ಯಕ್ಷ ರಾಜಾಭಿ ಭೀಮಳ್ಳಿ, ಕಾರ್ಯದರ್ಶಿ ಉದಯಕುಮಾರ್ ಚಿಂಚೋಳಿ, ಜಂಟಿ ಕಾರ್ಯದರ್ಶಿ ಡಾ. ಕೈಲಾಶ್ ಪಾಟೀಲ್ ಸೇರಿದಂತೆ ಆಡಳಿತ ಮಂಡಳಿ ಸದಸ್ಯರು ಈ ಕಾರ್ಯಗಳಿಗೆ ಪ್ರೋತ್ಸಾಹ ನೀಡುತ್ತಿದ್ದಾರೆ. ಪ್ರಾಚಾರ್ಯ ಡಾ. ಎಸ್.ಆರ್. ಪಾಟೀಲ್ ಹಾಗೂ ಅವರ ತಂಡದ ಶ್ರಮವನ್ನು ಮೆಚ್ಚಿ, 2026ರಲ್ಲಿ ನಡೆದ ವಿ.ಸಿ. ಕಾನ್‌ಕ್ಲೇವ್‌ನಲ್ಲಿ ಎಐಸಿಟಿಇ ವತಿಯಿಂದ ಪಿಡಿಎ ಇಂಜಿನಿಯರಿಂಗ್ ಕಾಲೇಜಿಗೆ ರಾಜ್ಯದ ಏಕೈಕ ಯುಎಚ್‌ವಿ ನೋಡಲ್ ಕೇಂದ್ರ ಎಂಬ ಪ್ರಮಾಣಪತ್ರ ನೀಡಿ ಗೌರವಿಸಲಾಗಿದೆ. ಈ ಸಾಧನೆಗೆ ಸಂಸ್ಥೆಯ ಆಡಳಿತ ಮಂಡಳಿ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳನ್ನು ಅಭಿನಂದಿಸಿದೆ.

ವಾರ್ತಾ ಭಾರತಿ 18 Apr 2026 6:12 pm

ಹೆಚ್‌ಡಿಎಫ್‌ಸಿ ನಾಲ್ಕನೇ ತ್ರೈಮಾಸಿಕ ಫಲಿತಾಂಶ ಪ್ರಕಟ; ಶೇ. 9ಕ್ಕೆ ಏರಿಕೆಯಾದ ನಿವ್ವಳ ಲಾಭ; ಪ್ರತಿ ಷೇರಿಗೆ 13 ರೂ. ಡಿವಿಡೆಂಡ್‌ ಘೋಷಣೆ

ಹೆಚ್‌ಡಿಎಫ್‌ಸಿ ಬ್ಯಾಂಕ್‌ ಇಂದು (ಏ.18-ಶನಿವಾರ) 2025-26ರ ಹಣಕಾಸು ವರ್ಷದ ತನ್ನ ನಾಲ್ಕನೇ ತ್ರೈಮಾಸಿಕ ವರದಿಯನ್ನು ಬಿಡುಗಡೆ ಮಾಡಿದ್ದು, ಮಾರುಕಟ್ಟೆಯ ನಿರೀಕ್ಷೆಗೂ ಮೀರಿ ಲಾಭ ಗಳಿಸಿದೆ. ಬ್ಯಾಂಕ್‌ನ ನಿವ್ವಳ ಲಾಭ ಶೇ.9ರಷ್ಟು ಏರಿಕೆಯಾಗಿದ್ದು, ತನ್ನ ಪ್ರತಿ ಷೇರಿಗೆ 13 ರೂ. ಡಿವಿಡೆಂಡ್ ಘೋಷಣೆ ಮಾಡಿದೆ. ಉಲ್ಲೇಖಿಸಿದ ಹಣಕಾಸು ವರ್ಷದಲ್ಲಿ ಏಕೀಕೃತ ನಿವ್ವಳ ಲಾಭ 19,221 ಕೋಟಿ ರೂ. ಆಗಿದೆ ಎಂದು ಹೆಚ್‌ಡಿಎಫ್‌ಸಿ ಬ್ಯಾಂಕ್‌ ಮಾಹಿತಿ ನೀಡಿದೆ. ಈ ಕುರಿತು ಇಲ್ಲಿದೆ ಮಾಹಿತಿ.

ವಿಜಯ ಕರ್ನಾಟಕ 18 Apr 2026 6:10 pm

Kalgi | ಜೆಜೆಎಮ್ ಕಳಪೆ ಕಾಮಗಾರಿ ವಿರುದ್ಧ ಶಾಸಕರಿಗೆ ದೂರು

ಕಾಳಗಿ : ಜೆಜೆಎಮ್ ಯೋಜನೆಯ ಕಾಮಗಾರಿ ಕಳಪೆ ಮಟ್ಟದಲ್ಲಿ ನಡೆಯುತ್ತಿರುವುದಾಗಿ ಆರೋಪಿಸಿ, ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಭೀಮ್ ಆರ್ಮಿ ಜಿಲ್ಲಾ ಸಮಿತಿಯ ಮುಖಂಡ ವಿಷ್ಣುಸ್ವಾಮಿ ಒತ್ತಾಯಿಸಿದರು. ತಾಲೂಕಿನ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಕ್ಷೇತ್ರದ ಶಾಸಕ ಡಾ. ಅವಿನಾಶ್ ಯಾದವ್ ಅವರನ್ನು ಭೇಟಿ ಮಾಡಿದ ಅವರು, ಮುಕರಂಭ ಗ್ರಾಮದಲ್ಲಿ ಕಳೆದ ಎರಡು ವರ್ಷಗಳಿಂದ ನಡೆಯುತ್ತಿರುವ ಜೆಜೆಎಮ್ ಕಾಮಗಾರಿ ಸಮರ್ಪಕವಾಗಿ ನಡೆಯುತ್ತಿಲ್ಲ ಎಂದು ದೂರಿದರು. ಬೋರವೆಲ್ ಕೊರೆಯದೇ, ಸರಿಯಾದ ಸಂಪರ್ಕ ವ್ಯವಸ್ಥೆ ಮಾಡದೇ ಅಸಮರ್ಪಕವಾಗಿ ಕಾಮಗಾರಿ ನಡೆಸಲಾಗಿದೆ ಎಂದು ಆರೋಪಿಸಿದ ಅವರು, ಸಂಬಂಧಿಸಿದ ಜೆಇಇ, ಎಇಇ ಹಾಗೂ ಗುತ್ತಿಗೆದಾರರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸಿ ಗ್ರಾಮಸ್ಥರಿಗೆ ಸಮರ್ಪಕ ಕುಡಿಯುವ ನೀರಿನ ಸೌಲಭ್ಯ ಒದಗಿಸಬೇಕು ಎಂದು ಒತ್ತಡ ಹೇರಿದರು.

ವಾರ್ತಾ ಭಾರತಿ 18 Apr 2026 6:06 pm

ಮಹಿಳಾ ಮೀಸಲಾತಿ ವಿರೋಧಿಸುವುದು ಸಮಾನತೆಯ ತತ್ವವನ್ನು ವಿರೋಧಿಸಿದಂತೆ: ಬಿ.ಎಸ್. ಯಡಿಯೂರಪ್ಪ

ಬೆಂಗಳೂರು: ಮಹಿಳಾ ಮೀಸಲಾತಿ ವಿರೋಧಿಸುವುದು ಸಮಾನತೆಯ ತತ್ವವನ್ನು ವಿರೋಧಿಸಿದಂತೆಯೇ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಆಕ್ಷೇಪಿಸಿದ್ದಾರೆ. ಶನಿವಾರ ನಗರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸುವುದು ನಿಶ್ಚಿತ ಎಂದರು. ವಿಪಕ್ಷಗಳ ಮಹಿಳಾ ವಿರೋಧಿ ನೀತಿಯನ್ನು ಖಂಡಿಸುತ್ತೇನೆ ಎಂದು ಹೇಳಿದರು. ಬಸವಣ್ಣನವರ ಅನುಭವ ಮಂಟಪದಲ್ಲಿ ಸಮಾನ ಅವಕಾಶ ಇತ್ತು. ಮಹಿಳೆಯರಿಗೆ ರಾಜಕೀಯದಲ್ಲಿ ಪ್ರವೇಶ ಸಿಗುವುದೆಂದರೆ ಅದು ಅವರ ಹಕ್ಕು. ಅದನ್ನು ವಿರೋಧಿಸುವುದು ಸಮಾನತೆಯ ವಿರುದ್ಧ ಎಂದು ಬಿಎಸ್‍ವೈ ನುಡಿದರು. ಹಣಕಾಸಿನ ವ್ಯವಹಾರ ಸರಿ ಮಾಡದೇ, ವಿದ್ಯುತ್ ದರವನ್ನು ಹೆಚ್ಚಳ ಮಾಡಿದ್ದು ಖಂಡಿತ ಸರಿಯಲ್ಲ. ಈ ನಿರ್ಧಾರವನ್ನು ತಕ್ಷಣ ವಾಪಸ್ ಪಡೆಯಬೇಕು. ಜನರು ನೆಮ್ಮದಿ, ಸ್ವಾಭಿಮಾನದಿಂದ ಬದುಕಲು ಅವಕಾಶ ಮಾಡಿಕೊಡಬೇಕು ಎಂದು ಯಡಿಯೂರಪ್ಪ ಒತ್ತಾಯಿಸಿದರು.

ವಾರ್ತಾ ಭಾರತಿ 18 Apr 2026 6:04 pm

ಯಾದಗಿರಿಯಲ್ಲಿ ಅಭಿವೃದ್ಧಿಗೆ ಆದ್ಯತೆ: ಶಾಸಕ ಚೆನ್ನಾರಡ್ಡಿ ಪಾಟೀಲ್ ತುನ್ನೂರು

ಯಾದಗಿರಿ: ಜಿಲ್ಲಾ ಕೇಂದ್ರವಾಗಿ 15 ವರ್ಷ ಪೂರೈಸಿರುವ ಯಾದಗಿರಿ ನಗರದಲ್ಲಿ ಜನಸಂಖ್ಯೆ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ವಾರ್ಡ್ ಮಟ್ಟದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡು ಮೂಲಭೂತ ಸೌಕರ್ಯಗಳನ್ನು ಒದಗಿಸಲು ಆದ್ಯತೆ ನೀಡಲಾಗುತ್ತಿದೆ ಎಂದು ಶಾಸಕ ಚನ್ನಾರಡ್ಡಿ ಪಾಟೀಲ್ ತುನ್ನೂರ ಹೇಳಿದರು. ನಗರದ ತಹಸೀಲ್ದಾರ್ ಕಚೇರಿ ಮುಂಭಾಗದ ವಾರ್ಡ್ ಸಂಖ್ಯೆ 26ರಲ್ಲಿ ನಗರಸಭೆಯ 2023-24ನೇ ಸಾಲಿನ ಎಸ್‌ಬಿಎಂ 2.0 (ನಗರ) ಯೋಜನೆಯಡಿ 12 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿದ ಸಾರ್ವಜನಿಕ ಶೌಚಾಲಯವನ್ನು ಉದ್ಘಾಟಿಸಿ, ಬಳಿಕ ವನಕೇರಿ ಬಡಾವಣೆಯಲ್ಲಿ ಮತ್ತೊಂದು 12 ಲಕ್ಷ ರೂ. ವೆಚ್ಚದ ಶೌಚಾಲಯ ನಿರ್ಮಾಣಕ್ಕೆ ಅಡಿಗಲ್ಲು ನೆರವೇರಿಸಿ ಅವರು ಮಾತನಾಡಿದರು. ನಗರದಲ್ಲಿ ಸುಗಮ ಸಂಚಾರಕ್ಕಾಗಿ ರಸ್ತೆ ವಿಭಜಕ ತಡೆಗೋಡೆಗಳನ್ನು ನಿರ್ಮಿಸಿದ್ದು, ಪ್ರಮುಖ ರಸ್ತೆ ಕಾಮಗಾರಿಗಳು ನಡೆಯುತ್ತಿವೆ. ಎಲ್ಲಾ ಭಾಗಗಳಲ್ಲಿ ಎಲ್‌ಇಡಿ ದೀಪಗಳನ್ನು ಅಳವಡಿಸಲಾಗಿದೆ ಎಂದು ತಿಳಿಸಿದರು. ಮಳೆಗಾಲದಲ್ಲಿ ನೀರು ನಿಂತು ಸಮಸ್ಯೆ ಉಂಟಾಗುವ ವಾರ್ಡ್‌ಗಳಲ್ಲಿ ಒಳಚರಂಡಿ ವ್ಯವಸ್ಥೆ ಅಗತ್ಯವಿದ್ದು, ಈ ಸಲ ರಾಜ್ಯ ಬಜೆಟ್‌ನಲ್ಲಿ 287 ಕೋಟಿ ರೂ. ಮೀಸಲಿಡಲಾಗಿದೆ. ಗುಣಮಟ್ಟದ ಕಾಮಗಾರಿಗಳ ಮೂಲಕ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸಲಾಗುವುದು ಎಂದು ಹೇಳಿದರು. ಜನರಿಗೆ ಉತ್ತಮ ಆರೋಗ್ಯ ಸೇವೆ ಒದಗಿಸಲು 100 ಕೋಟಿ ರೂ. ವೆಚ್ಚದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ಶೀಘ್ರ ಚಾಲನೆ ನೀಡಲಾಗುವುದು. ಹತ್ತಿಕುಣಿ ಕ್ರಾಸ್‌ನಿಂದ ಚಾಮನಳ್ಳಿ ಕ್ರಾಸ್‌ವರೆಗೆ 5 ಕೋಟಿ ರೂ. ವೆಚ್ಚದಲ್ಲಿ ರಸ್ತೆ ನಿರ್ಮಾಣಕ್ಕೂ ಟೆಂಡರ್ ಕರೆಯಲಾಗಿದೆ ಎಂದರು. ಭೀಮಾ ನದಿಯಿಂದ ಶುದ್ಧ ಕುಡಿಯುವ ನೀರು ಪೂರೈಕೆ ಕಾಮಗಾರಿ ಪ್ರಗತಿಯಲ್ಲಿದ್ದು, ಹೆಚ್ಚಿನ ಅನುದಾನಕ್ಕಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಭೇಟಿ ಮಾಡಿ ಕಾಮಗಾರಿ ವೇಗಗೊಳಿಸಲಾಗುವುದು ಎಂದು ಹೇಳಿದರು. ಕೃಷಿ ಮಾರುಕಟ್ಟೆ ಪ್ರದೇಶದಲ್ಲಿ 4 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಟೆಂಡರ್ ಕರೆಯಲಾಗಿದೆ. ನಗರ ಸ್ವಚ್ಛತೆಗೆ ನಗರಸಭೆ ಸಿಬ್ಬಂದಿ ಹೆಚ್ಚಿನ ಗಮನ ನೀಡಬೇಕು. ಸಾರ್ವಜನಿಕ ಶೌಚಾಲಯಗಳ ನಿರ್ವಹಣೆ ಸಮರ್ಪಕವಾಗಿರಬೇಕು ಎಂದು ಸೂಚಿಸಿದರು. ಈ ಸಂದರ್ಭದಲ್ಲಿ ತಹಶೀಲ್ದಾರ್‌ ಸುರೇಶ ಅಂಕಲಗಿ, ನಗರಸಭೆ ಆಯುಕ್ತ ಉಮೇಶ ಚವ್ಹಾಣ, ನಗರಸಭೆ ಸದಸ್ಯ ಚನ್ನಕೇಶಗೌಡ ಬಾಣತಿಹಾಳ, ತಿಮ್ಮಣ್ಣ ನಾಯಕ, ಸಾಯಿಬಣ್ಣ ಕೆಂಗೂರಿ, ಶರಣಗೌಡ ಬಲಕಲ್, ಸುರೇಶ ಮಡ್ಡಿ, ಸಾಯಿಬಣ್ಣ ಬಾಡಿಯಾಳ, ಮೃತ್ಯುಂಜಯ, ಗುತ್ತೆದಾರ ಅಶೋಕ, ನಗರಸಭೆ ಅಧಿಕಾರಿಗಳಾದ ಶರಣಮ್ಮ, ನಾಗರಾಜ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ವಾರ್ತಾ ಭಾರತಿ 18 Apr 2026 5:54 pm

RCB vs DC IPL 2026: ಆರ್‌ಸಿಬಿ ರನ್‌ ವೇಗಕ್ಕೆ ಕಡಿವಾಣ ಹಾಕಿದ ಡೆಲ್ಲಿ ಕ್ಯಾಲಿಟಲ್ಸ್‌

RCB Vs DC IPL 2026: ಬೆಂಗಳೂರು ಎಂ.ಚಿನ್ನಸ್ವಾಮಿಯಲ್ಲಿ ಶನಿವಾರ (ಏಪ್ರಿಲ್‌ 18) ನಡೆದ ಐಪಿಎಲ್‌ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ ಕೇವಲ 175 ರನ್ ಗಳಿಸಲಷ್ಟೇ ಶಕ್ತವಾಗಿದೆ. ಹಾಗಾದ್ರೆ ಯಾರು ಎಷ್ಟು ರನ್‌ಗಳನ್ನ ಕಲೆಹಾಕಿದರು ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.

ಒನ್ ಇ೦ಡಿಯ 18 Apr 2026 5:48 pm

IPL 2026- ಬದಲಾಗ್ತಾರಾ ಕೋಲ್ಕತ್ತಾ ನೈಟ್ ರೈಡರ್ಸ್ ಕೋಚ್? ಬ್ರೆಂಡನ್ ಮೆಕಂ ಹೆಸರು ತೇಲಿಬಿಟ್ಟ ಕೆವಿನ್ ಪೀಟರ್ಸನ್!

KKR Failure In IPL 2026- ಈ ಸೀಸನ್ ನಲ್ಲಿ ವೈಫಲ್ಯ ಅನುಭವಿಸುತ್ತಿರುವ ಕೋಲ್ಕತ್ತಾ ನೈಟ್ ರೈಡರ್ಸ್ (KKR) ತಂಡದ ಪ್ರಧಾನ ಕೋಚ್ ಬದಲಾವಣೆ ಕುರಿತು ಚರ್ಚೆ ಶುರುವಾಗಿದೆ. ಆಡಿದ ಆರು ಪಂದ್ಯಗಳಲ್ಲಿ ಒಂದೂ ಗೆಲುವು ಕಾಣದೆ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿರುವ ಕೆಕೆಆರ್ ತಂಡಕ್ಕೆ ಮುಂದಿನ ಸೀಸನ್‌ನಲ್ಲಿ ಬ್ರೆಂಡನ್ ಮೆಕಲಂ ಕೋಚ್ ಆಗಲಿದ್ದಾರೆ ಎಂದು ಕೆವಿನ್ ಪೀಟರ್ಸನ್ ಭವಿಷ್ಯ ನುಡಿದಿದ್ದಾರೆ. ಮೆಕಲಂ ಪ್ರಸ್ತುತ ಇಂಗ್ಲೆಂಡ್ ತಂಡದ ಕೋಚ್ ಆಗಿದ್ದರೂ, ಕೆಕೆಆರ್‌ನ ಕಳಪೆ ಪ್ರದರ್ಶನದಿಂದಾಗಿ ಪ್ರಸ್ತುತ ಕೋಚ್ ಅಭಿಷೇಕ್ ನಾಯರ್ ಪದಚ್ಯುತಿ ಮತ್ತು ತಂಡದಲ್ಲಿ ದೊಡ್ಡ ಮಟ್ಟದ ಬದಲಾವಣೆ ಆಗಬಹುದೆಂದು ಹೇಳಲಾಗುತ್ತಿದೆ.

ವಿಜಯ ಕರ್ನಾಟಕ 18 Apr 2026 5:30 pm

ಭಾರತೀಯ ರೈಲ್ವೆ ಸುರಕ್ಷತೆಯಲ್ಲಿ ಬೃಹತ್ ಸುಧಾರಣೆ: ತಂತ್ರಜ್ಞಾನದಿಂದ ಅಪಘಾತ ಪ್ರಮಾಣ ಇಳಿಕೆ

ನವದೆಹಲಿ: ವಿಶ್ವದಲ್ಲಿ ಬೃಹತ್ ಜಾಲ ಹೊಂದಿರುವ ಭಾರತೀಯ ರೈಲ್ವೆಯು ವ್ಯಾಪ್ತಿಯಲ್ಲಿ ಪ್ರತಿನಿತ್ಯ 25,000 ಕ್ಕೂ ಹೆಚ್ಚು ರೈಲುಗಳನ್ನು ಓಡಿಸುತ್ತಿದೆ. ಅದರಲ್ಲಿ 14,000 ಕ್ಕೂ ಹೆಚ್ಚು ಪ್ರಯಾಣಿಕ ರೈಲುಗಳಾಗಿವೆ. 2014 ರಿಂದ ಈವರೆಗೆ ರೈಲ್ವೆ ಮೂಲಭೂತ ಸೌಕರ್ಯ ಅಭಿವೃದ್ಧಿಪಡಿಸಲಾಗಿದೆ. ಪ್ರಯಾಣಿಕರ ಸುರಕ್ಷತೆಗೆ ಆದ್ಯೆತೆ ನೀಡಿರುವ ಕಾರಣ ಅಪಘಾತ ಪ್ರಮಾಣ ತೀವ್ರ ಸ್ವರೂಪದಲ್ಲಿ ಇಳಿಕೆ ಆಗಿದೆ. ಜೊತೆಗೆ ಜನರ ಸುಕ್ಷಿತೆಗೆ,

ಒನ್ ಇ೦ಡಿಯ 18 Apr 2026 5:29 pm

ದಾವಣಗೆರೆಯ ಹಿರಿಯ ಕಾಂಗ್ರೆಸ್ ಮುಖಂಡ ಸೈಯದ್ ಸೈಫುಲ್ಲಾ ಸಾಬ್ ನಿಧನ

ದಾವಣಗೆರೆ: ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರು, ಅಲ್ಪಸಂಖ್ಯಾತ ನಾಯಕರಾಗಿದ್ದ ಸೈಯದ್ ಕೆರೆಕಟ್ಟೆ ಸೈಫುಲ್ಲಾ ಸೈಫುಲ್ಲಾ ಸಾಬ್ ಶನಿವಾರ ನಿಧನರಾಗಿದ್ದಾರೆ. ಮೃತರಿಗೆ 79 ವರ್ಷ ವಯಸ್ಸಾಗಿತ್ತು. ಪತ್ನಿ, ಐವರು ಹೆಣ್ಣು ಮಕ್ಕಳು, ಪುತ್ರ ಸೈಯದ್ ಖಾಲಿದ್ ಅಹ್ಮದ್, ಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧುಬಳಗದವರನ್ನು ಅಗಲಿದ್ದಾರೆ. ಸೈಯದ್ ಸೈಫುಲ್ಲ ಸಾಬ್ ರವರು ಮಿಲ್ಲತ್ ವಿದ್ಯಾ ಸಂಸ್ಥೆಗಳ ಸಂಸ್ಥಾಪಕರೂ ಆಗಿದ್ದರು. ಕಾಂಗ್ರೆಸ್ ಪಕ್ಷದಲ್ಲಿ ಸಕ್ರಿಯರಾಗಿ ಗುರುತಿಸಿಕೊಂಡಿದ್ದ ಸೈಯದ್ ಸೈಫುಲ್ಲಾ ಸಾಬ್ ಅವರು ಸಿಎಂ ಸಿದ್ದರಾಮಯ್ಯ, ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಸೇರಿದಂತೆ ಕಾಂಗ್ರೆಸ್ ಹಿರಿಯ ನಾಯಕರ ಆಪ್ತರಾಗಿದ್ದರು. 2013ರಲ್ಲಿ ಕಾಂಗ್ರೆಸ್ ಟಿಕೆಟ್ ಸಿಗದ ಕಾರಣ ಜೆಡಿಎಸ್ ಸೇರಿ ಈ ಪಕ್ಷದಿಂದ ಸ್ಪರ್ಧಿಸಿ 26 ಸಾವಿರಕ್ಕೂ ಹೆಚ್ಚು ಮತಗಳನ್ನು ಪಡೆದಿದ್ದಾರೆ. ಕಾಂಗ್ರೆಸ್ ನಿಂದ ಸ್ಪರ್ಧಿಸಿದ್ದ ಶಾಮನೂರು ಶಿವಶಂಕರಪ್ಪರ ವಿರುದ್ಧ ಸೋತರೂ ಎರಡನೇ ಸ್ಥಾನ ಪಡೆದಿದ್ದರು. ಆಗ ಬಿಜೆಪಿ ಮೂರನೇ ಸ್ಥಾನಕ್ಕೆ ಹೋಗಿತ್ತು. ಮತ್ತೆ ಕಾಂಗ್ರೆಸ್ ಪಕ್ಷ ಸೇರಿದ್ದ ಅವರು, ಸಿದ್ದರಾಮಯ್ಯರ ಜೊತೆ ಉತ್ತಮ ಒಡನಾಟ ಹೊಂದಿದ್ದರು. ಅವರು ಸ್ನಾತಕೋತ್ತರ ವೃತ್ತಿಪರ ಬಿಎಸ್ಸಿ ಅನ್ನು ಮೈಸೂರು ವಿಶ್ವವಿದ್ಯಾಲಯದಿಂದ ಪಡೆದಿದ್ದರು. ದಾವಣಗೆರೆಯ ಡಿಆರ್ ಎಂ ಕಾಲೇಜಿನಲ್ಲಿ ಬಿ. ಎಡ್ ವ್ಯಾಸಂಗ ಮಾಡಿದ್ದರು. ಎಂ. ಎಂ. ಬಸಪ್ಪ ಶಿಕ್ಷಣ ಸಂಘದ ಕಾಲೇಜಿನಲ್ಲಿ ಪದವಿ ಪೂರೈಸಿದ್ದರು. ಅಂತ್ಯಕ್ರಿಯೆ: ಎಪ್ರಿಲ್ 19ರಂದು ಬೆಳಿಗ್ಗೆ 11 ಗಂಟೆಗೆ ದಾವಣಗೆರೆಯ ಪಿ. ಬಿ. ರಸ್ತೆಯಲ್ಲಿರುವ ಹಳೇ ಖಬರ್ ಸ್ತಾನದಲ್ಲಿ ಅಂತ್ಯಸಂಸ್ಕಾರ ನೆರವೇರಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

ವಾರ್ತಾ ಭಾರತಿ 18 Apr 2026 5:27 pm

ರಾಹುಲ್‌ ಗಾಂಧಿ ವಿರುದ್ಧ ದ್ವಿಪೌರತ್ವ ಹೋರಾಟ ನಡೆಸಿರುವ ವಿಘ್ನೇಶ್‌ ಶಿಶಿರ್‌ ಯಾರು? ಜೀವ ಬೆದರಿಕೆ ಹಿನ್ನೆಲೆಯಲ್ಲಿ Z+ ಭದ್ರತೆಗೆ ಆಗ್ರಹ!

ವಿಘ್ನೇಶ್‌ ಶಿಶಿರ್‌ ಸದ್ಯ ರಾಷ್ಟ್ರ ಮಟ್ಟದಲ್ಲಿ ಸದ್ದು ಮಾಡುತ್ತಿರುವ ಹೆಸರು. ಕಾಂಗ್ರೆಸ್‌ ಸಂಸದ ರಾಹುಲ್‌ ಗಾಂಧಿ ವಿರುದ್ಧ ಧ್ವಿಪೌರತ್ವ ಹೊಂದಿರುವ ಆರೋಪ ಹೊರಿಸಿರುವ ವಿಘ್ನೇಶ್‌ ಶಿಶಿರ್‌, ಲೋಕಸಭೆ ಪ್ರತಿಪಕ್ಷ ನಾಯಕನ ವಿರುದ್ಧ ಕಾನೂನು ಸಮರ ನಡೆಸುತ್ತಿದ್ದಾರೆ. ನಿನ್ನೆ (ಏ.17-ಶುಕ್ರವಾರ) ಅಲಹಾಬಾದ್‌ ಹೈಕೋರ್ಟ್‌ ರಾಹುಲ್‌ ಗಾಂಧಿ ವಿರುದ್ಧದ ದ್ವಿಪೌರತ್ವ ವಿವಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್‌ಐಆರ್‌ ದಾಖಲಿಸುವಂತೆ ಪೊಲೀಸರಿಗೆ ಆದೇಶ ನೀಡಿದೆ. ಜೀವ ಬೆದರಿಕೆ ಇರುವುದರಿಂದ ತಮಗೆ Z+ ಭದ್ರತೆ ಒದಗಿಸುವಂತೆ ವಿಘ್ನೇಶ್‌ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಹಾಗಿದ್ದರೆ ಯಾರು ಈ ವಿಘ್ನೇಶ್‌ ಶಿಶಿರ್?‌ ಇಲ್ಲಿದೆ ಮಾಹಿತಿ.

ವಿಜಯ ಕರ್ನಾಟಕ 18 Apr 2026 4:50 pm

ವೈರ್ಲೆಸ್ ಇಯರ್‌ಬಡ್‌ಗಳನ್ನು ಬಳಸುವುದು ಅಪಾಯಕಾರಿ ಎಂದು ಎಚ್ಚರಿಸಿದ ಯುಕೆ ತಜ್ಞ!

ಏರ್ಪಾಡ್ಗಳಿಗೆ ಸುತ್ತುವರಿದ ವಿಕಿರಣವನ್ನು ಹೋಲಿಸಲು EMF ಮೀಟರ್ ಬಳಸಿ ಪ್ರಾತ್ಯಕ್ಷಿಕೆಯನ್ನು ತೋರಿಸಿದ್ದಾರೆ ಪೌಷ್ಠಿಕ ತಜ್ಞ ಜಿಬ್ ಆಟ್ಕಿನ್ಸ್. ಯುನೈಟೆಡ್ ಕಿಂಗ್ಡಂನ ಪೌಷ್ಠಿಕ ತಜ್ಞ ಜಿಬ್ ಆಟ್ಕಿನ್ಸ್ ಇತ್ತೀಚೆಗೆ ವೈರ್ಲೆಸ್ ಇಯರ್ಬಡ್ಗಳನ್ನು ಬಳಸುವ ಬಗ್ಗೆ ಜನರನ್ನು ಎಚ್ಚರಿಸಿದ್ದಾರೆ. ಮಾತ್ರವಲ್ಲದೆ ವೈರ್ಲೆಸ್ ಇಯರ್ಬಡ್ಗಳ ಸುರಕ್ಷತೆ ಬಗ್ಗೆ ಚರ್ಚೆ ಹುಟ್ಟು ಹಾಕಿದ್ದಾರೆ. ವೈರ್ಲೆಸ್ ಇಯರ್ಬಡ್ಗಳು ವಿದ್ಯುತ್ಕಾಂತೀಯ ಕ್ಷೇತ್ರಗಳಿಂದ (EMF) ವಿಕಿರಣಕ್ಕೆ ಒಡ್ಡಿಕೊಳ್ಳುವುದರಿಂದ ಆರೋಗ್ಯಕ್ಕೆ ಹಾನಿಯಾಗಬಹುದು ಎಂದು ಎಚ್ಚರಿಸಿದ್ದಾರೆ. ಇದು ಸಂಭಾವ್ಯ ಕ್ಯಾನ್ಸರ್ ಕಾರಕ ಎಂದು ವರ್ಗೀಕರಿಸಲಾಗಿದೆ. ಬ್ಲೂಟೂತ್ ಸಾಧನಗಳು ತಲೆಬುರುಡೆಗೆ ನಿರಂತರವಾಗಿ ಸಮೀಪದಲ್ಲಿರುವುದು ನಿಧಾನವಾಗಿ ಮೆದುಳಿನ ಮೇಲೆ ಪರಿಣಾಮ ಬೀರಲಿದೆ. EMF ಗಮನಾರ್ಹ ಆರೋಗ್ಯ ಅಪಾಯ ಉಂಟು ಮಾಡಲಿದೆ ಎಂದು ವಿವರಿಸಿದ್ದಾರೆ. ಸಕ್ರಿಯವಾಗಿರುವಾಗ ಏರ್ಪಾಡ್ಗಳಿಗೆ ಸುತ್ತುವರಿದ ವಿಕಿರಣವನ್ನು ಹೋಲಿಸಲು EMF ಮೀಟರ್ ಬಳಸಿ ಅವರು ಪ್ರಾತ್ಯಕ್ಷಿಕೆಯನ್ನು ತೋರಿಸಿದ್ದಾರೆ. “ಏರ್ಪಾಡ್ಗಳನ್ನು ಧರಿಸುವುದರಿಂದ ನಿಮ್ಮ ಮೆದುಳಿಗೆ ಹಾನಿಯಾಗಲಿದೆ” ಎಂದು ಹೇಳಿದ ಅವರು EMF ಮೀಟರ್ ಬಳಿ ಏರ್ಪಾಡ್ಗಳನ್ನು ಇಟ್ಟು ಪರೀಕ್ಷಿಸಿ ತೋರಿಸಿದ್ದಾರೆ. “ಬ್ಲೂಟೂತ್ ಅನ್ನು EMF ಜೊತೆಗೆ ಇಟ್ಟಾಗ ಹೇಗೆ ಅದರ ಸಂಖ್ಯೆ ನಿಜವಾಗಿಯೂ ಹೆಚ್ಚಾಗಿದೆ ನೋಡಿ. ಈ ರೀತಿ ಹೆಡ್ಫೋನ್ ಬಳಸುವಾಗಲೆಲ್ಲ ವಿಕಿರಣವು ನೇರವಾಗಿ ನಿಮ್ಮ ಮೆದುಳಿಗೆ ಹೋಗುತ್ತದೆ” ಎಂದು ಅವರು ವಿವರಿಸಿದ್ದಾರೆ. ಪುನರಾವರ್ತನೆಯಾಗುವ ಸಂಕೇತಗಳಿಂದ ಅಪಾಯ ನಿಯಂತ್ರಕ ಸಂಸ್ಥೆಗಳು ಸಾಧನಗಳಿಂದ ಉತ್ಪತ್ತಿಯಾಗುವ ತಕ್ಷಣದ ಶಾಖದ ಮೇಲೆ ಗಮನ ಕೇಂದ್ರೀಕರಿಸುತ್ತವೆ. ನಿಜವಾದ ಅಪಾಯವು ಕಡಿಮೆ ಮಟ್ಟದ ಮಾನ್ಯತೆಯ ಸಂಚಿತ ಪರಿಣಾಮದಲ್ಲಿದೆ. ಬಹುತೇಕರು ತಲೆನೋವಿನಂತಹ ಸಮಸ್ಯೆಗಳನ್ನು ಎದುರಿಸುತ್ತಾರೆ. “ಸಣ್ಣ ಸಂಕೇತಗಳು ದಿನಕ್ಕೆ ಸಾವಿರಾರು ಬಾರಿ ಪುನರಾವರ್ತನೆಯಾಗುತ್ತವೆ. ಜೀವಕೋಶಗಳು ಹೇಗೆ ವರ್ತಿಸುತ್ತವೆ ಎನ್ನುವುದರ ಮೇಲೆ ಪ್ರಭಾವ ಬೀರಬಹುದು. ಮುಖ್ಯವಾಗಿ ಮೆದುಳಿನಂತಹ ಸೂಕ್ಷ್ಮ ಅಂಗಗಳಿಗೆ ಸಮೀಪದಲ್ಲಿರುವಾಗ ಸಮಸ್ಯೆ ತೀವ್ರವಾಗಲಿದೆ” ಎಂದು ಅವರು ಹೇಳಿದ್ದಾರೆ. ಗ್ರೇಡ್ 2ಬಿ ಕಾಸಿನೋಜೆನ್ ಬಗ್ಗೆ ಕಳವಳ ಇಂಟರ್ನ್ಯಾಷನಲ್ ಏಜಿನ್ಸಿ ಫಾರ್ ರಿಸರ್ಚ್ ಆನ್ ಕ್ಯಾನ್ಸರ್ ವರ್ಗೀಕರಣವನ್ನು ಉಲ್ಲೇಖಿಸಿರುವ ಪೌಷ್ಟಿಕ ತಜ್ಞರು ಎಚ್ಚರಿಸಿರುವ ಪ್ರಕಾರ, “ವಿಕಿರಣದ ಕಾಳಜಿಗಳು ಆಧುನಿಕ ಆತಂಕವಲ್ಲ. ಈ ರೀತಿಯ ರೇಡಿಯೋ ಫ್ರೀಕ್ವೆನ್ಸಿಯನ್ನು ವಾಸ್ತವದಲ್ಲಿ 2011ರಿಂದ ಗ್ರೇಡ್ 2ಬಿ ಕಾರ್ಸಿನೋಜೆನ್ ಎಂದು ಪಟ್ಟಿ ಮಾಡಲಾಗಿದೆ. ಪ್ರಮುಖ ವಿಜ್ಞಾನಿಗಳು EMF ಮಾನ್ಯತೆಯ ನಿಯಮಗಳನ್ನು ಬಿಗಿಗೊಳಿಸಬೇಕು ಎಂದು ಹೇಳಿದ್ದಾರೆ. ಆದರೆ ಹಣವಂತರು ತಮಗೆ ಬೇಕಾದಂತಹ ಉತ್ಪನ್ನಗಳನ್ನು ಹೊರತರುತ್ತಾರೆ.” ಅಸ್ತಿತ್ವದಲ್ಲಿರುವ ಸಂಶೋಧನೆಯು ಪ್ರಾಣಿಗಳ ಮಾದರಿಗಳ ಮೇಲೆ ಹೆಚ್ಚು ಅವಲಂಬಿತವಾಗಿದೆ ಎಂದು ವಾದಿಸುವ ವಿಮರ್ಶಕರನ್ನು ಉದ್ದೇಶಿಸಿ ಮಾತನಾಡಿದ ಅವರು ಕೆಲವು ಕಾಳಜಿಗಳನ್ನು ಎತ್ತಿ ತೋರಿಸಿದ್ದಾರೆ. • ಡಿಎನ್ಎ ಹಾನಿ : ಅನುವಂಶಿಕ ವಸ್ತುವಿನಲ್ಲಿ ರಚನಾತ್ಮಕ ಬದಲಾವಣೆಗಳಿಗೆ ಸಂಭಾವ್ಯತೆ • ಆಕ್ಸಿಡೇಟಿವ್ ಒತ್ತಡ : ಜೀವಕೋಶ ಮತ್ತು ಅಂಗಾಂಶ ಹಾನಿಗೆ ಕಾರಣವಾಗುವ ಅಸಮತೋಲನ • ರಕ್ತ-ಮಿದುಳಿನ ತಡೆಗೋಡೆ : ಹೆಚ್ಚಿನ ಪರ್ಮಿಯೇಬಿಲಿಟಿ ಇದೆ. ಅಂದರೆ ಮೆದುಳಿಗೆ ಪ್ರವೇಶಿಸುವ ವಿಷದ ಅಪಾಯ ಹೆಚ್ಚಿಸುತ್ತದೆ. ಪ್ರಾಣಿಗಳಲ್ಲಿ ಈ ಸಮಸ್ಯೆಗಳು ಕಂಡು ಬಂದಿರುವ ಸಂದರ್ಭದಲ್ಲಿ ಮಾನವರಲ್ಲೂ ಇವುಗಳು ಕಾಣಿಸುವುದಿಲ್ಲ ಎನ್ನುವುದು ಯಾರು ಖಾತರಿ ಕೊಡುತ್ತಾರೆ ಎಂದು ಜಿಬ್ ಪ್ರಶ್ನಸಿದ್ದಾರೆ. ವೈರ್ಲೆಸ್ ಇಯರ್ಬಡ್ ಸಮಸ್ಯೆ ಪರಿಹಾರ ಹೇಗೆ? ದೀರ್ಘಾವಧಿಯ ಎಲೆಕ್ಟ್ರೋಕೆಮಿಕಲ್ ಪರಿಣಾಮದ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಜಿಬ್ ಮೂರು ಹಂತದ ರಕ್ಷಣೆಯನ್ನು ಸೂಚಿಸಿದ್ದಾರೆ. • ಮೊದಲನೆಯದಾಗಿ ವೈರ್ ಇರುವ ಇಯರ್ಪ್ಯಾಡ್ಗೆ ಬದಲಾಗುವುದು. • ಫೋನ್ ಬಳಸುವಾಗ ಅದನ್ನು ದೇಹದಿಂದ ಸಾಧ್ಯವಾದಷ್ಟು ದೂರ ಇಡುವುದು. • ವೈರ್ಲೆಸ್ ಟೆಕ್ ಬಳಸುವಾಗ ವಿಶೇಷವಾಗಿ EMF ಕಡಿಮೆಗೊಳಿಸುವ ಸ್ಟಿಕರ್ಗಳನ್ನು ಬಳಸುವಂತೆ ಸೂಚಿಸಿದ್ದಾರೆ.

ವಾರ್ತಾ ಭಾರತಿ 18 Apr 2026 4:44 pm

ಮಾತೃಶಕ್ತಿಗೆ ಅವಮಾನ, ನಾರಿಶಕ್ತಿ ಕ್ಷಮಿಸೋಲ್ಲ ಎಂದ HDK : ಪಿಆರ್ ಸ್ಟಂಟ್ ಸಾಕು ಎಂದ ಕಾಂಗ್ರೆಸ್

Women Bill - Congress Vs BJP : ಮಹಿಳಾ ಮೀಸಲಾತಿ ಬಿಲ್ಲಿಗೆ ಸಂಬಂಧಿಸಿದಂತೆ, ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ವಾಕ್ಸಮರ ಮುಂದುವರಿದಿದೆ. ದಶಕಗಳಿಂದಲೂ, ಕಾಂಗ್ರೆಸ್ ಮಹಿಳಾ ವಿರೋಧಿ ಮನಸ್ಥಿತಿಯನ್ನು ಹೊಂದಿದೆ ಎಂದು ಕೇಂದ್ರ ಸಚಿವ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ. ನಿಮಗಷ್ಟು ಮಹಿಳೆಯರ ಬಗ್ಗೆ ಗೌರವವಿದ್ದರೆ, ಈಗಿರುವ ಕ್ಷೇತ್ರಗಳಲ್ಲೇ ಮೀಸಲಾತಿ ಪ್ರಕಟಿಸಿ ಎಂದು ಕಾಂಗ್ರೆಸ್ ಚಾಲೆಂಜ್ ಮಾಡಿದೆ.

ವಿಜಯ ಕರ್ನಾಟಕ 18 Apr 2026 4:35 pm

ಕಾಮಿಡಿ ಶೋ ರೀತಿಯಾದ ಪಾಕ್ ಸೂಪರ್ ಲೀಗ್ : ಯಾರು ಪ್ಲೇಯಿಂಗ್ ಇಲೆವೆನ್?ಯಾರು ಬದಲಿಗ ಎಂಬುದೇ ಗೊಂದಲ!

Pakistan Super League Comedies- ಪಾಕಿಸ್ತಾನ ಸೂಪರ್ ಲೀಗ್ (PSL) ನಲ್ಲಿ ಆಗುವ ಅವಾಂತರಗಳು ಒಂದೆರಡಲ್ಲ. ಹೀಗಾಗಿ ಅಲ್ಲಿನ ಚುಟುಕು ಕ್ರಿಕೆಟ್ ಲೀಗ್ ಕ್ರಿಕೆಟ್ ಗಿಂತಲೂ ಎಡವಟ್ಟುಗಳಿಗೇ ವಿಶ್ವವಿಖ್ಯಾತವಾಗುತ್ತಿದೆ. ಇದೀಗ ಅಂತೂ ಪಿಎಸ್ಎಲ್ ಕಾಮಿಡಿಗಳು ಎಂದು ಹೊಸ ಸಿರೀಸ್ ಅನ್ನೇ ಶುರುಮಾಡಬಹುದು ಎಂದು ನೆಚ್ಚಿಗರು ಮೂದಲಿಸುವಷ್ಟು. ಇದೀಗ ನಡೆದಿರುವ ಘಟನೆಯಂತೂ ಟೂರ್ನಿಯ ಬಗ್ಗೆ ಜನ ಅಪಹಾಸ್ಯ ಮಾಡುವಂತಾಗಿದೆ. ಕಿಂಗ್ಸ್ ಮತ್ತು ಮುಲ್ತಾನ್ ಸುಲ್ತಾನ್ಸ್ ನಡುವಿನ ಪಂದ್ಯದಲ್ಲಿ, ಗಾಯಗೊಂಡ ಮೂಲ ಆಟಗಾರ ಮತ್ತು ಆತನ ಬದಲಿ ಆಟಗಾರ ಇಬ್ಬರ ಹೆಸರೂ ಅಧಿಕೃತ 'ಪ್ಲೇಯಿಂಗ್ ಇಲೆವೆನ್' ಪಟ್ಟಿಯಲ್ಲಿ ಕಾಣಿಸಿಕೊಂಡಿತ್ತು. ಪಿಸಿಬಿ ಮತ್ತು ಮ್ಯಾನೇಜ್‌ಮೆಂಟ್ ನಡುವಿನ ಈ ಸಮನ್ವಯದ ಕೊರತೆಗೆ ಇದಕ್ಕಿಂತ ದೊಡ್ಡ ಸಾಕ್ಷಿ ಬೇಕಾ?

ವಿಜಯ ಕರ್ನಾಟಕ 18 Apr 2026 4:23 pm

ಕೇಂದ್ರ ಸರ್ಕಾರಿ ನೌಕರರಿಗೆ ಶೇ. 2ರಷ್ಟು ತುಟ್ಟಿಭತ್ಯೆ ಹೆಚ್ಚಳಕ್ಕೆ ಸಂಪುಟ ಅಸ್ತು

ಕೇಂದ್ರ ಸರ್ಕಾರಿ ನೌಕರರು ಹಾಗೂ ಪಿಂಚಣಿದಾರರಿಗೆ ಬಹುನಿರೀಕ್ಷಿತ ಸಿಹಿಸುದ್ದಿಯೊಂದು ಸಿಕ್ಕಿದೆ. ದೆಹಲಿಯಲ್ಲಿ ನಡೆದ ಮಹತ್ವದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ, ಸರ್ಕಾರಿ ನೌಕರರು ಮತ್ತು ಪಿಂಚಣಿದಾರರ ತುಟ್ಟಿಭತ್ಯೆಯನ್ನು (Dearness Allowance - DA) ಶೇಕಡಾ 2ರಷ್ಟು ಹೆಚ್ಚಿಸಲು ಅಧಿಕೃತವಾಗಿ ಅನುಮೋದನೆ ನೀಡಲಾಗಿದೆ ಎಂದು ಉನ್ನತ ಮೂಲಗಳು ತಿಳಿಸಿವೆ. ಸಾಮಾನ್ಯವಾಗಿ ಬೆಲೆ ಏರಿಕೆ ಮತ್ತು ಹಣದುಬ್ಬರಕ್ಕೆ ಅನುಗುಣವಾಗಿ ವರ್ಷಕ್ಕೆ

ಒನ್ ಇ೦ಡಿಯ 18 Apr 2026 4:10 pm

ಮಹಾರಾಷ್ಟ್ರದಂತೆ ಕರ್ನಾಟಕದಲ್ಲಿ ಆಟೋ, ಟ್ಯಾಕ್ಸಿ ಚಾಲಕರಿಗೆ ಕನ್ನಡ ಕಡ್ಡಾಯಗೊಳಿಸಿ: ಕೆಪಿಸಿಸಿ ಆಗ್ರಹ

ಬೆಂಗಳೂರು: ರಾಜಧಾನಿ ಬೆಂಗಳೂರಿನಂತಹ ನಗರಗಳಲ್ಲಿ ಆಟೋ, ಕ್ಯಾಬ್ ಚಾಲಕರು ಮತ್ತು ಪ್ರಯಾಣಿಕರ ಮಧ್ಯೆ ಜಗಳ, ಕಿರುಕುಳ, ಹಲ್ಲೆ, ಬೆದರಿಕೆಯಂತಹ ಘಟನೆಗಳು ನಡೆಯುತ್ತಲೇ ಇರುತ್ತವೆ. ಇದಕ್ಕೆ ಭಾಷೆಯು ಒಂದು ಪ್ರಮುಖ ಕಾರಣವಾಗಿದೆ. ಕನ್ನಡ ನೆಲದಲ್ಲಿ ಇಲ್ಲಿನ ಬಾಷೆ ಮಾತನಾಡದೇ ಹಿಂದಿ, ಇನ್ನಿತರ ಭಾಷೆ ಮಾತನಾಡಿದ್ದ ಚಾಲಕರು, ಪ್ರಯಾಣಿಕರಿಂದ ತೊಂದರೆ ಆಗಿತ್ತು. ಇಂತಹ ತೊಂದರೆ ತಪ್ಪಿಸುವ ಜೊತೆಗೆ ಕನ್ನಡಕ್ಕೆ ಆದ್ಯತೆ

ಒನ್ ಇ೦ಡಿಯ 18 Apr 2026 4:09 pm

Karnataka Weather: ಉತ್ತರ ಒಳನಾಡಿನಲ್ಲಿ 2 ದಿನ ಬಿಸಿಲ ಧಗೆ ಜತೆಗೆ ಆಲಿಕಲ್ಲು ಮಳೆ; ಜಿಲ್ಲೆಗಳಿಗೆ ಆರೆಂಜ್, ಯೆಲ್ಲೋ ಅಲರ್ಟ್‌

ಕರ್ನಾಟಕದಲ್ಲಿ ಬಿಸಿಲ ಧಗೆ ಮುಂದುವರಿದ್ದು, ಟ್ರಫ್‌ ಹಿನ್ನೆಲೆ ಏಪ್ರಿಲ್‌ 18 ರಿಂದ 4 ದಿನ ಮಳೆಯಾಗಲಿದೆ. ಅದರಲ್ಲೂ ಏಪ್ರಿಲ್‌ 18 ಮತ್ತು 19 ರಂದು ಉತ್ತರ ಕರ್ನಾಟಕದಲ್ಲಿ ಆಲಿಕಲ್ಲು ಮಳೆಯಾಗುವ ಸಾಧ್ಯತೆ ಇದೆ ಎಂದು ಮುನ್ನೆಚ್ಚರಿಕೆ ನೀಡಲಾಗಿದೆ. ಯಾವೆಲ್ಲಾ ಜಿಲ್ಲೆಗಳಿಗೆ ಅಲರ್ಟ್‌ ನೀಡಲಾಗಿದೆ? ಎಲ್ಲೆಲ್ಲಿ ಅಧಿಕ ಬಿಸಿಲು? ವಿವರ ಇಲ್ಲಿದೆ.

ವಿಜಯ ಕರ್ನಾಟಕ 18 Apr 2026 4:07 pm

ಕಾಂಗ್ರೆಸ್ ಪಕ್ಷದಂತೆ ಡಿಎಂಕೆ ಇತಿಹಾಸ ದೊಡ್ಡದಿದೆ: ಡಿಸಿಎಂ ಡಿ.ಕೆ.ಶಿವಕುಮಾರ್

''ಸಂಸತ್ತಿನಲ್ಲಿ ಇಂಡಿಯಾ ಮೈತ್ರಿಕೂಟಕ್ಕೆ ದೊಡ್ಡ ಗೆಲುವು ಸಿಕ್ಕಿದೆ''

ವಾರ್ತಾ ಭಾರತಿ 18 Apr 2026 4:05 pm

ರಾಜ್ಯದ ರೈತರಿಗೆ ಗುಡ್ ನ್ಯೂಸ್: ತೊಗರಿ ಖರೀದಿಗೆ ಒಂದು ತಿಂಗಳ ಅವಧಿ ವಿಸ್ತರಣೆ

ರಾಜ್ಯದ ರೈತರಿಗೆ ಗುಡ್ ನ್ಯೂಸ್ ಸಿಕ್ಕಿದೆ. ತೊಗರಿ ಖರೀದಿಗೆ ಒಂದು ತಿಂಗಳ ಅವಧಿ ವಿಸ್ತರಣೆ ನೀಡಲಾಗಿದೆ. ಕೇಂದ್ರ ಸಚಿವರು ರಾಜ್ಯದ ಮನವಿಯನ್ನು ಸಕಾರಾತ್ಮಕವಾಗಿ ಪರಿಗಣಿಸಿದ್ದಾರೆ ಎಂದು ಸಚಿವ ಚಲುವರಾಯಸ್ವಾಮಿ ಹೇಳಿದ್ದಾರೆ. ಪ್ರಸ್ತುತ ಸಾಲಿನ ಮುಂಗಾರು ಹಂಗಾಮಿನಲ್ಲಿ 59 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಸೂರ್ಯಕಾಂತಿ ಬಿತ್ತನೆಯಾಗಿದ್ದು, ಹಿಂಗಾರು ಹಂಗಾಮಿನ MSP ದರದಂತೆ ಕ್ವಿಂಟಾಲ್ ಗೆ 7721ರೂ ನಂತೆ 11 ಸಾವಿರ ಮೆಟ್ರಿಕ್ ಟನ್ ಸೂರ್ಯಕಾಂತಿ ಖರೀದಿಗಾಗಿ ಪ್ರಸ್ತಾವನೆ ಸಲ್ಲಿಸುವುದಾಗಿ ಮಾನ್ಯ ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಕೇಂದ್ರ ಸಚಿವರಿಗೆ ವಿನಂತಿಸಿದರು.

ವಿಜಯ ಕರ್ನಾಟಕ 18 Apr 2026 3:54 pm

ಕಲಬುರಗಿ | ದ್ವಿಚಕ್ರ ವಾಹನ ಅಪಘಾತಕ್ಕೀಡಾಗಿ ಪೊಲೀಸ್ ಕಾನ್ ಸ್ಟೇಬಲ್ ಮೃತ್ಯು

ಅಫ್ಝಲ್ ಪುರ, ಎ.18: ಸಂಚಾರದ ವೇಳೆ ಬೈಕ್ ನಿಯಂತ್ರಣ ತಪ್ಪಿ ಉರುಳಿಬಿದ್ದ ಪರಿಣಾಮ ಪೊಲೀಸ್ ಕಾನ್ ಸ್ಟೇಬಲ್ ಮೃತಪಟ್ಟ ಘಟನೆ ತಾಲೂಕಿನ ಗೊಬ್ಬೂರ ಬಿ ಗ್ರಾಮ ಸಮೀಪ ಇಂದು ಬೆಳಗ್ಗೆ ಸುಮಾರು 11 ಗಂಟೆ ಸುಮಾರಿಗೆ ನಡೆದಿದೆ. ಮೃತರನ್ನು ಶಿರವಾಳ ಗ್ರಾಮದ ನಿವಾಸಿ ಧರೆಪ್ಪ (24) ಎಂದು ಗುರುತಿಸಲಾಗಿದೆ. ಪೊಲೀಸ್ ಕಾನ್ ಸ್ಟೇಬಲ್ ಆಗಿದ್ದ ಇವರು ಕಲಬುರಗಿಯಿಂದ ಶಿರವಾಳ ಗ್ರಾಮಕ್ಕೆ ಬೈಕಿನಲ್ಲಿ ಬರುತ್ತಿದ್ದ ವೇಳೆ ನಿಯಂತ್ರಣ ತಪ್ಪಿ ಬೈಕಿ ಉರುಳಿಬಿದ್ದಿದ್ದ. ಇದರಿಂದ ಗಂಭೀರವಾಗಿ ಗಾಯಗೊಂಡಿದ್ದ ಅವರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದು ಬಂದಿದೆ. ಘಟನೆ ಸ್ಥಳಕ್ಕೆ ಆಳಂದ ಡಿವೈಎಸ್ಪಿ ತಮ್ಮರಾಯ ಪಾಟೀಲ, ಸಿಪಿಐ ಲಖನ್ ಮಸಗುಪ್ಪಿ ಹಾಗೂ ದೇವಲಗಂಗಾಪುರ ಪೊಲೀಸ್ ಠಾಣೆಯ ಪಿಎಸ್ಸೈ ಸಂಗೀತಾ ಶಿಂಧೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

ವಾರ್ತಾ ಭಾರತಿ 18 Apr 2026 3:36 pm

ರಾಜ್ಯದಲ್ಲಿ ನಗರಾಭಿವೃದ್ಧಿಗೆ 2600 ಕೋಟಿ ಅನುದಾನ: ಸಚಿವ ಬೈರತಿ ಸುರೇಶ್

ಮಂಗಳೂರು ನಗರಾಭಿವೃದ್ಧಿಯ 25 ಕಾಮಗಾರಿಗಳಿಗೆ ಶಿಲಾನ್ಯಾಸ

ವಾರ್ತಾ ಭಾರತಿ 18 Apr 2026 3:34 pm

ಚುನಾವಣೆಗೂ ಮುನ್ನವೇ ತಮಿಳುನಾಡು NDA ಅನ್ನು ಸೋಲಿಸಿದೆ: ಎಂ.ಕೆ.ಸ್ಟಾಲಿನ್

ದಿಂಡಿಗಲ್/ಥೇನಿ: ರಾಜ್ಯ ವಿಧಾನಸಭಾ ಚುನಾವಣೆಗೂ ಮುನ್ನವೇ ತಮಿಳುನಾಡು ಎನ್ಡಿಎಯನ್ನು ಪರಾಭವಗೊಳಿಸಿದೆ ಎಂದು ಕ್ಷೇತ್ರ ಪುನರ್ವಿಂಗಡಣೆ ಮಸೂದೆಯ ಸೋಲನ್ನು ಉಲ್ಲೇಖಿಸಿ ಶುಕ್ರವಾರ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಹೇಳಿದ್ದಾರೆ. ದಿಂಡಿಗಲ್ ನಲ್ಲಿ ಆಯೋಜನೆಗೊಂಡಿದ್ದ ಚುನಾವಣಾ ಪ್ರಚಾರ ಸಭೆಯನ್ನುದ್ದೇಶಿಸಿ ಮಾತನಾಡಿದ ಸ್ಟಾಲಿನ್, “ಚುನಾವಣೆಗೂ ಮುನ್ನವೇ NDA ಪರಾಭವವನ್ನು ಎದುರಿಸಿದೆ. ಇದು ಹೊಸದಲ್ಲವಾದರೂ, ಇದೊಂದು ಐತಿಹಾಸಿಕ ಗೆಲುವಾಗಿದೆ. ತಮಿಳುನಾಡು ದುರಹಂಕಾರಿ ಬಿಜೆಪಿಯನ್ನು ಪರಾಭವಗೊಳಿಸಿದೆ. ವಿರೋಧ ಪಕ್ಷಗಳ ಕಪ್ಪು ದಿರಿಸು ಹಾಗೂ ಕಪ್ಪು ಬಾವುಟ ಪ್ರದರ್ಶನವನ್ನು NDA ಸದಸ್ಯರು ಪ್ರಶ್ನಿಸಿದ್ದರು. ಆದರೆ, ಇದಷ್ಟೇ ಸಾಲದು, ಎಪ್ರಿಲ್ 23ರಂದು ಅವರಿಗೆ ನೈಜ ಪರಾಭವವನ್ನು ಹಸ್ತಾಂತರಿಸಬೇಕು. ಬಿಜೆಪಿ ತಮಿಳುನಾಡನ್ನು ಮುಟ್ಟುವ ಧೈರ್ಯ ಮಾಡಕೂಡದು. ಇಲ್ಲವಾದರೆ ಅವರು ಅದರ ಬಿಸಿಯನ್ನು ಅನುಭವಿಸಲಿದ್ದಾರೆ” ಎಂದು ಎಚ್ಚರಿಸಿದರು. ಇದು ಪ್ರಧಾನಿ ನರೇಂದ್ರ ಮೋದಿ ತಮ್ಮ 12 ವರ್ಷಗಳ ಆಡಳಿತದಲ್ಲಿ ಅನುಭವಿಸಿರುವ ಮೊದಲ ಪರಾಭವವಾಗಿದೆ ಎಂದು ಸ್ಟಾಲಿನ್ ಹೇಳಿದರು. “ಎಡಪ್ಪಾಡಿ ಕೆ. ಪಳನಿಸ್ವಾಮಿ ಚುನಾವಣೆಗೂ ಮುನ್ನವೇ ಅನುಭವಿಸಿರುವ ಮೊದಲ ಬೃಹತ್ ಸೋಲು ಇದಾಗಿದೆ. ಕಪ್ಪು ಶರ್ಟ್ ಗಳು ಕೇಸರಿ ಸೇನೆಯನ್ನು ಮಣಿಸಿವೆ. ಈ ತಿದ್ದುಪಡಿ ಮಸೂದೆಯನ್ನು ಮಹಿಳಾ ಮೀಸಲಾತಿ ಹೆಸರಲ್ಲಿ ತರಲಾಗಿತ್ತು ಹಾಗೂ ಈ ಮಸೂದೆಯನ್ನು ಇಂಡಿಯಾ ಮೈತ್ರಿಕೂಟ ಪರಾಭವಗೊಳಿಸಿತು” ಎಂದು ಅವರು ಹೇಳಿದರು. ಕ್ಷೇತ್ರ ಪುನರ್ವಿಂಗಡಣೆಯ ಬಗ್ಗೆ ಯಾವುದೇ ಸ್ಪಷ್ಟನೆ ನೀಡಿರಲಿಲ್ಲ. ತಮಿಳುನಾಡು ಪ್ರಾತಿನಿಧ್ಯಕ್ಕೆ ಯಾವುದೇ ಧಕ್ಕೆಯಾಗುವುದಿಲ್ಲ ಎಂದು ಕೇಂದ್ರ ಸರಕಾರ ಹೇಳುತ್ತಿದೆ. ಆದರೆ, ವಾಸ್ತವದ ಕಾನೂನಿನಲ್ಲಿ ಹಾಗೆ ಬರೆದಿಲ್ಲ ಎಂದೂ ಅವರು ಮಸೂದೆಯ ಕುರಿತು ಆಕ್ಷೇಪ ವ್ಯಕ್ತಪಡಿಸಿದರು. ಇದಕ್ಕೂ ಮುನ್ನ, ಅಂಡಿಪಟ್ಟಿಯಲ್ಲಿ ಮಾತನಾಡಿದ ಸ್ಟಾಲಿನ್, ಕೇಂದ್ರ ಸರಕಾರ ತಮಿಳು ಜನತೆಯ ವಿರುದ್ಧ ವಿಭಜನಕಾರಿ ಮತ್ತು ದ್ವೇಷಪ್ರೇರಿತ ರಾಜಕಾರಣದಲ್ಲಿ ತೊಡಗಿದ್ದು, ಕ್ಷೇತ್ರ ಪುನರ್ವಿಂಗಣೆಯ ಮೂಲಕ ತಮಿಳುನಾಡು ಸಂಸದರ ಸಂಖ್ಯೆಯನ್ನು ಕಡಿತಗೊಳಿಸಲು ಪ್ರಯತ್ನಿಸಿತ್ತು ಎಂದು ಆರೋಪಿಸಿದರು.

ವಾರ್ತಾ ಭಾರತಿ 18 Apr 2026 3:29 pm

ರಾತ್ರಿ 8-30ಕ್ಕೆ ದೇಶವನ್ನುದ್ದೇಶಿಸಿ ಮಾತನಾಡಲಿರುವ ನರೇಂದ್ರ ಮೋದಿ; ವಿಷಯ ಏನು? ಸಸ್ಪೆನ್ಸ್‌

ಮಹತ್ವದ ಬೆಳವಣಿಗೆಯೊಂದರಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಂದು (ಏ.18-ಶನಿವಾರ) ರಾತ್ರಿ 8-30ಕ್ಕೆ ದೇಶವನ್ನುದ್ದೇಶಿಸಿ ಭಾಷಣ ಮಾಡಲಿದ್ದಾರೆ. ಈ ಕುರಿತು ಮಾಹಿತಿ ನೀಡಿರುವ ಪ್ರಧಾನಿ ಕಚೇರಿ, ಪ್ರಧಾನಿ ಮೋದಿ ಅವರು ಮುಖ್ಯವಾದ ವಿಚಾರವನ್ನು ದೇಶದ ಜನರೊಂದಿಗೆ ಹಂಚಿಕೊಳ್ಳಲಿದ್ದಾರೆ ಎಂದು ಹೇಳಿದೆ. ಆದರೆ ಪ್ರಧಾನಿ ಯಾವ ವಿಚಾರವಾಗಿ ಮಾತನಾಡಲಿದ್ದಾರೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ನಿನ್ನೆ (ಏ.17-ಶುಕ್ರವಾರ) ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ಮತ್ತು ಕ್ಷೇತ್ರ ಪುನರ್‌ವಿಂಗಡಣೆ ಮಸೂದೆಗೆ ಸೋಲುಂಟಾಗಿರುವ ಹಿನ್ನೆಲೆಯಲ್ಲಿ, ಮೋದಿ ಅವರ ಈ ಭಾಷಣ ಮಹತ್ವ ಪಡೆದುಕೊಂಡಿದೆ.

ವಿಜಯ ಕರ್ನಾಟಕ 18 Apr 2026 3:26 pm

KL Rahul Birthday:ಆರ್‌ಸಿಬಿ-ಡಿಸಿ ಪಂದ್ಯಕ್ಕೂ ಮುನ್ನ ಪತಿ ಕೆಎಲ್ ರಾಹುಲ್ ಬಗ್ಗೆ ಪತ್ನಿ ಅಥಿಯಾ ಶೆಟ್ಟಿ ವಿಶೇಷ ಪೋಸ್ಟ್

KL Rahul Birthday: ಬೆಂಗಳೂರಿನ ಚಿನ್ನಸ್ವಾಮಿಯಲ್ಲಿ ಶನಿವಾರ (ಏಪ್ರಿಲ್‌ 18) ನಡೆಯುವ ಐಪಿಎಲ್‌ ಪಂದ್ಯದಲ್ಲಿ ಆರ್‌ಸಿಬಿಯು ಡೆಲ್ಲಿ ಕ್ಯಾಪಿಟಲ್ಸ್‌ ತಂಡವನ್ನು ಎದುರಿಸಲಿದೆ. ಮತ್ತೊಂದೆಡೆ ಇವತ್ತೇ ಡಿಸಿಯ ವಿಕೆಟ್‌ ಕೀಪರ್‌ ಹಾಗೂ ಸ್ಟಾರ್ ಬ್ಯಾಟರ್‌ ಕೆಎಲ್ ರಾಹುಲ್ ಅವರ 34ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಈ ಹಿನ್ನೆಲೆ ಅವರ ಪತ್ನಿ ಅಥಿಯಾ ಶೆಟ್ಟಿ ಅವರು ಸಾಮಾಜಿಕ ಜಾಲತಾಣದಲ್ಲಿ ಭಾವನಾತ್ಮಕ ಪೋಸ್ಟ್

ಒನ್ ಇ೦ಡಿಯ 18 Apr 2026 3:20 pm

ಖಾಸಗಿ ಆಸ್ಪತ್ರೆಗಳೊಂದಿಗೆ ಕರಾರು ಒಪ್ಪಂದ ರದ್ದತಿಗೆ ಒತ್ತಾಯಿಸಿ ಎ.28ರಂದು ಡಿವೈಎಫ್‌ಐ ಪಾದಯಾತ್ರೆ

ಉಸ್ತುವಾರಿ ಸಚಿವರ ಕಚೇರಿ ಚಲೋ ಪ್ರತಿಭಟನೆ

ವಾರ್ತಾ ಭಾರತಿ 18 Apr 2026 3:19 pm

ಬೇಸ್ ಕ್ಯಾಂಪ್‌ನಿಂದ ಕಂಪನಿಗಳಿಗೆ ಉತ್ತೇಜನ: ಡಾ. ಭರತ್ ಶೆಟ್ಟಿ

ಸಿಲಿಕಾನ್ ಬೀಚ್ ಪ್ರೋಗ್ರಾಂನ ‘ಬೇಸ್ ಕ್ಯಾಂಪ್’ಗೆ ಚಾಲನೆ

ವಾರ್ತಾ ಭಾರತಿ 18 Apr 2026 3:09 pm

ಉಡುಪಿಯ 137 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ

►750 ವಸತಿ ಪ್ರದೇಶಗಳಲ್ಲಿ ನೀರಿಗಾಗಿ ಹಾಹಾಕಾರ►ಕಳೆದ ಬಾರಿಗಿಂತ ಪರಿಸ್ಥಿತಿ ಗಂಭೀರ

ವಾರ್ತಾ ಭಾರತಿ 18 Apr 2026 3:06 pm

ಕೇಂದ್ರ ಸರ್ಕಾರಿ ನೌಕರರಿಗೆ ಗುಡ್‌ನ್ಯೂಸ್‌: ಶೇಕಡಾ 2ರಷ್ಟು ತುಟ್ಟಿಭತ್ಯೆ ಹೆಚ್ಚಳಕ್ಕೆ ಸಚಿವ ಸಂಪುಟ ಅಸ್ತು

ಕೇಂದ್ರ ಸರ್ಕಾರವು ತನ್ನ ನೌಕರರ ತುಟ್ಟಿಭತ್ಯೆಯನ್ನು (ಡಿಎ) ಶೇ. 2ರಷ್ಟು ಹೆಚ್ಚಿಸಿದೆ. ಕಳೆದ ಅಕ್ಟೋಬರ್‌ನಲ್ಲಿ ಶೇಕಡಾ 55 ರಿಂದ 58 ಕ್ಕೆ ಹೆಚ್ಚಳವಾಗಿದ್ದು, ಈ ಮತ್ತೆ ಏರಿಕೆ ಮಾಡಲಾಗಿದೆ. ಇದರಿಂದ ಲಕ್ಷಾಂತರ ನೌಕರರು ಹಾಗೂ ಪಿಂಚಣಿದಾರರಿಗೆ ನೆರವಾಗಲಿದೆ.

ವಿಜಯ ಕರ್ನಾಟಕ 18 Apr 2026 3:04 pm

ಇಂದು ರಾತ್ರಿ 8:30ಕ್ಕೆ ದೇಶವನ್ನುದ್ದೇಶಿಸಿ ಪ್ರಧಾನಿ ಮೋದಿ ಭಾಷಣ

ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಶನಿವಾರ ರಾತ್ರಿ 8:30ಕ್ಕೆ ದೇಶವನ್ನುದ್ದೇಶಿಸಿ ಭಾಷಣ ಮಾಡಲಿದ್ದಾರೆ. ಶುಕ್ರವಾರ ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ಮಸೂದೆ ಸೋಲನ್ನು ಕಂಡಿತ್ತು. ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ 33% ಸ್ಥಾನಗಳನ್ನು ಮೀಸಲಿಡುವ ತ್ವರಿತ ಮಹಿಳಾ ಮೀಸಲಾತಿ ಮಸೂದೆಗೆ ತಿದ್ದುಪಡಿಯನ್ನು ಅಂಗೀಕರಿಸುವಲ್ಲಿ ಎನ್‌ಡಿಎ ಸರಕಾರ ವಿಫಲವಾಗಿತ್ತು. ಇದರಿಂದ ಪ್ರಧಾನಿ ಮೋದಿ ಭಾಷಣ ಮಹತ್ವವನ್ನು ಪಡೆದುಕೊಂಡಿದೆ.

ವಾರ್ತಾ ಭಾರತಿ 18 Apr 2026 3:00 pm

NWKRTC ರಾಜರಥ ಹೊಸ ಎಸಿ ಸ್ಲೀಪರ್ 4 ಬಸ್‌ಗಳ ಸೇವೆ ಆರಂಭ; 2 ಮಾರ್ಗದಲ್ಲಿ ಸಂಚಾರ; 6 ಜಿಲ್ಲೆಗಳಿಗೆ ಅನುಕೂಲ

ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯು ಹೊಸ 2 ಮಾರ್ಗದಲ್ಲಿ ಎಸಿ ಸ್ಲೀಪರ್ ಬಸ್‌ ಸೇವೆಯನ್ನು ಆರಂಭಿಸಿದೆ. ಹುಬ್ಬಳ್ಳಿ - ಹೈದರಾಬಾದ್‌, ಬೆಳಗಾವಿ - ಹೈದರಾಬಾದ್‌ ನಡುವೆ ಈ ಬಸ್‌ಗಳು ಸಂಚಾರ ನಡೆಸಲಿವೆ. ಇದರಿಂದ ಉತ್ತರ ಹಾಗೂ ಕಲ್ಯಾಣದ ಕರ್ನಾಟಕದ 6 ಜಿಲ್ಲೆಗಳಿಗೆ ಅನುಕೂಲವಾಗಲಿದೆ. ಬಸ್‌ ವೇಳಾಪಟ್ಟಿ, ಮಾರ್ಗ ವಿವರ ಇಲ್ಲಿದೆ.

ವಿಜಯ ಕರ್ನಾಟಕ 18 Apr 2026 2:50 pm

ಅಮೆರಿಕದಿಂದ ಕದನ ವಿರಾಮ ಉಲ್ಲಂಘನೆ ಆರೋಪ: ಹಾರ್ಮುಝ್‌ ಜಲಸಂಧಿಯಲ್ಲಿ ಮತ್ತೆ ನಿರ್ಬಂಧ ಹೇರಿದ ಇರಾನ್ : ವರದಿ

ಟೆಹ್ರಾನ್‌: ಅಮೆರಿಕ ಕದನ ವಿರಾಮ ಉಲ್ಲಂಘನೆ ಮಾಡಿದೆ ಎಂದು ಆರೋಪಿಸಿ ಹಾರ್ಮುಝ್‌ ಜಲಸಂಧಿಯಲ್ಲಿ ಇರಾನ್ ಮತ್ತೆ ನಿರ್ಬಂಧಗಳನ್ನು ಹೇರಿರುವ ಬಗ್ಗೆ ವರದಿಯಾಗಿದೆ. ಅಮೆರಿಕ ನೌಕಾ ದಿಗ್ಬಂಧನ ಮುಂದುವರಿಸಿರುವುದರಿಂದ ಇರಾನ್ ಹಾರ್ಮುಝ್‌ ಜಲಸಂಧಿಯನ್ನು ತೆರೆಯುವ ತನ್ನ ಹಿಂದಿನ ನಿರ್ಧಾರವನ್ನು ಹಿಂಪಡೆದುಕೊಂಡಿದೆ. ಹಾರ್ಮುಝ್‌ ಜಲಸಂಧಿಯ ನಿಯಂತ್ರಣವು ಮತ್ತೆ ಹಿಂದಿನ ಸ್ಥಿತಿಗೆ ಮರಳಿದೆ ಎಂದು IRGC ಹೇಳಿದೆ. ಅದು ಸಶಸ್ತ್ರ ಪಡೆಗಳ ಕಟ್ಟುನಿಟ್ಟಾದ ನಿರ್ವಹಣೆ ಮತ್ತು ನಿಯಂತ್ರಣದಲ್ಲಿದೆ ಎಂದು ಇರಾನ್‌ ಮಿಲಿಟರಿ ಕಮಾಂಡ್ ಘೋಷಿಸಿದೆ. ಇರಾನ್ ಬಂದರುಗಳನ್ನು ಅಮೆರಿಕ ನಿರಂತರವಾಗಿ ದಿಗ್ಬಂಧನಗೊಳಿಸುತ್ತಿರುವುದರಿಂದ ಹಾರ್ಮುಝ್‌ ಜಲಸಂಧಿಯನ್ನು ನಿರ್ಬಂಧಿಸಿರುವುದಾಗಿ IRGC ಹೇಳಿದೆ. ಅಮೆರಿಕವು ದಿಗ್ಬಂಧನದ ಸೋಗಿನಲ್ಲಿ ಕಡಲ್ಗಳ್ಳತನ ಮತ್ತು ಸಮುದ್ರ ಕಳ್ಳತನದ ಕೃತ್ಯಗಳನ್ನು ಮುಂದುವರೆಸಿದೆ ಎಂದು IRGC ಆರೋಪಿಸಿದೆ.

ವಾರ್ತಾ ಭಾರತಿ 18 Apr 2026 2:48 pm