SENSEX
NIFTY
GOLD
USD/INR

Weather

14    C
... ...View News by News Source

ಅಮೆರಿಕ: ಭಾರತೀಯ ಮಹಿಳೆಯ ಶವ ಮಾಜಿ ಪ್ರಿಯಕರನ ಫ್ಲ್ಯಾಟ್‌ನಲ್ಲಿ ಪತ್ತೆ!

ಲಾಸ್‌ವೇಗಸ್: ಸುಮಾರು 27 ವರ್ಷ ವಯಸ್ಸಿನ ಭಾರತೀಯ ಮಹಿಳೆಯ ಶವ ಹೊಸವರ್ಷದ ಮುನ್ನಾದಿನ ಆಕೆಯ ಮಾಜಿ ಪ್ರಿಯಕರನ ಮೆರಿಲ್ಯಾಂಡ್ ಅಪಾರ್ಟ್ಮೆಂಟ್ನಲ್ಲಿ ಇರಿತದ ಗಾಯದೊಂದಿಗೆ ಪತ್ತೆಯಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಮೃತ ಮಹಿಳೆಯನ್ನು ನಿಕಿತಾ ಗೊಡಿಶಾಲಾ ಎಂದು ಗುರುತಿಸಲಾಗಿದ್ದು, ಈಕೆ ಎಲಿಕಾಟ್ ಸಿಟಿಯಲ್ಲಿ ಡಾಟಾ ಮತ್ತು ಕಾರ್ಯತಂತ್ರ ವಿಶ್ಲೇಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದರು ಎಂದು ಹಾವರ್ಡ್ ಕೌಂಟಿ ಪೊಲೀಸರು ಹೇಳಿದ್ದಾರೆ. ಮಹಿಳೆಯ ಮಾಜಿ ಪ್ರಿಯಕರ ಅರ್ಜುನ್ ಶರ್ಮಾ (26) ಎಂಬಾತನ ಅಪಾರ್ಟ್ಮೆಂಟ್ನಲ್ಲಿ ಶವ ಪತ್ತೆಯಾಗಿದೆ. ಮಾಜಿ ಪ್ರಿಯಕರನ ವಿರುದ್ಧ ಕೊಲೆ ಪ್ರಕರಣ ದಾಖಲಿಸಿ ಬಂಧನ ವಾರಂಟ್ ಹೊರಡಿಸಲಾಗಿದೆ ಎಂದು ತನಿಖಾಧಿಕಾರಿಗಳು ಹೇಳಿದ್ದಾರೆ. ಡಿಸೆಂಬರ್ 31ರಂದು ಗೊಡಿಶಾಲಾ ಜತೆ ಮೆರಿಲ್ಯಾಂಡ್ ಸಿಟಿ ಅಪಾರ್ಟ್ಮೆಂಟ್ನಲ್ಲಿ ಅರ್ಜುನ್ ಕೊನೆಯ ಬಾರಿ ಕಾಣಿಸಿಕೊಂಡಿದ್ದು, ಜನವರಿ 2ರಿಂದ ನಾಪತ್ತೆಯಾಗಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ. ಜನವರಿ 3ರಂದು ಪತ್ತೆದಾರರು ಶೋಧ ನಡೆಸಿದಾಗ ಅಪಾರ್ಟ್ಮೆಂಟ್ನಲ್ಲಿ ಗೊಡಿಶಾಲಾ ಮೃತದೇಹ ಪತ್ತೆಯಾಗಿದ್ದು, ಇರಿತದ ಗಾಯಗಳಿದ್ದವು ಎಂದು ಅಧಿಕಾರಿಗಳು ವಿವರಿಸಿದ್ದಾರೆ. ಗೊಡಿಶಾಲಾ ನಾಪತ್ತೆಯಾದ ಬಗ್ಗೆ ವರದಿಯಾದ ದಿನವೇ ಆರೋಪಿ ಭಾರತಕ್ಕೆ ಪಲಾಯನ ಮಾಡಿದ್ದಾನೆ. ಡಿಸೆಂಬರ್ 31ರ ರಾತ್ರಿ 7 ಗಂಟೆಯ ಸುಮಾರಿಗೆ ಆರೋಪಿ ಕೊಲೆ ಮಾಡಿರಬೇಕು ಎಂದು ಪೊಲೀಸರು ಶಂಕಿಸಿದ್ದಾರೆ. ಹತ್ಯೆಯ ಕಾರಣ ತಿಳಿದುಬಂದಿಲ್ಲ. ನಿಕಿತಾ ಕುಟುಂಬದ ಜತೆ ಭಾರತೀಯ ರಾಯಭಾರ ಕಚೇರಿ ಸಂಪರ್ಕದಲ್ಲಿದ್ದು, ಎಲ್ಲ ಅಗತ್ಯ ಸಹಾಯ ನೀಡಲಾಗುವುದು ಎಂದು ಭಾರತೀಯ ಅಧಿಕಾರಿಗಳು ಹೇಳಿದ್ದಾರೆ.

ವಾರ್ತಾ ಭಾರತಿ 5 Jan 2026 7:50 am

ಅಸ್ಸಾಂನ ಮೊರಿಗಾಂವ್ ಜಿಲ್ಲೆಯಲ್ಲಿ 5.1 ತೀವ್ರತೆಯ ಭೂಕಂಪನ

 ಹೊಸದಿಲ್ಲಿ: ಅಸ್ಸಾಂನ ಮೊರಿಗಾಂವ್ ಜಿಲ್ಲೆಯಲ್ಲಿ ಸೋಮವಾರ ನಸುಕಿನಲ್ಲಿ 5.1 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪ ಮಾಪನ ಕೇಂದ್ರ (ಎನ್ಸಿಎಸ್) ಪ್ರಕಟಿಸಿದೆ. ಮಂಜಾನೆ 4 ಗಂಟೆ 17 ನಿಮಿಷಕ್ಕೆ ಭೂಕಂಪ ಸಂಭವಿಸಿದ್ದು, ಇದರ ಕೇಂದ್ರಬಿಂದು 50 ಕಿಲೋಮೀಟರ್ ಆಳದಲ್ಲಿತ್ತು. 26.37 ಡಿಗ್ರಿ ಉತ್ತರ ಅಕ್ಷಾಂಶ ಹಾಗೂ 92.29 ಡಿಗ್ರಿ ಪೂರ್ವ ರೇಖಾಂಶದಲ್ಲಿ ಕೇಂದ್ರ ಬಿಂದು ಇತ್ತು ಎಂದು ಎನ್ಸಿಎಸ್ ಸ್ಪಷ್ಟಪಡಿಸಿದೆ. ಯಾವುದೇ ಸಾವು ನೋವು ಅಥವಾ ಆಸ್ತಿ ಪಾಸ್ತಿಗಳಿಗೆ ಹಾನಿಯಾದ ವಿವರಗಳು ತಕ್ಷಣಕ್ಕೆ ಲಭ್ಯವಿಲ್ಲ. ಕೇಂದ್ರ ಅಸ್ಸಾಂನಲ್ಲಿ ಕೂಡಾ ನಿವಾಸಿಗಳಿಗೂ ಅಲ್ಪ ಅಥವಾ ಸಾಮಾನ್ಯ ಪ್ರಮಾಣದ ಕಂಪನದ ಅನುಭವವಾಗಿದೆ ಎಂದು ಮೂಲಗಳು ಹೇಳಿವೆ. ಅಧಿಕಾರಿಗಳು ಪರಿಸ್ಥಿತಿಯ ಮೇಲೆ ನಿಗಾ ಇರಿಸಿದ್ದಾರೆ.

ವಾರ್ತಾ ಭಾರತಿ 5 Jan 2026 7:40 am

ನಾನೂ ಹೋದೆ ಚಿತ್ರಸಂತೆಗೆ ! ಗಾಬರಿಯಾದೆ ಅಲ್ಲಿನ ಗದ್ದಲಕ್ಕೆ !

ವೃತ್ತಿಯಲ್ಲಿ ಪ್ರಾಧ್ಯಾಪಕಿ ಆಗಿರುವ ಡಾ.ಸಹನಾ ಪ್ರಸಾದ್ ಅವರು ಲೇಖಕಿಯೂ ಆಗಿದ್ದು, ಸಣ್ಣ ಕಥೆ, ಲೇಖನ, ಕಾದಂಬರಿಗಳನ್ನು, ಧಾರವಾಹಿಗಳನ್ನೂ ಬರೆದಿದ್ದಾರೆ. ಈವರೆಗೂ 15 ಸಾವಿರಕ್ಕೂ ಹೆಚ್ಚು ಲೇಖನಗಳು ಪ್ರಕಟಗೊಂಡಿವೆ. ಬೆಂಗಳೂರಿನ ಚಿತ್ರಸಂತೆಗೆ ಹೋದ ಅನುಭವದ ಕುರಿತು ಬರೆದ ಲೇಖನ ಇಲ್ಲಿದೆ.

ವಿಜಯ ಕರ್ನಾಟಕ 5 Jan 2026 7:07 am

ಅಸ್ಸಾಂನಲ್ಲಿ 5.1 ತೀವ್ರತೆಯ ಭೂಕಂಪ: ಮೊರಿಗಾಂವ್‌ ಜಿಲ್ಲೆಯಲ್ಲಿ ನಡುಗಿದ ಭೂಮಿ

ಹೊಸ ವರ್ಷದ ಆರಂಭದಲ್ಲಿ ಈಶಾನ್ಯ ಭಾರತದ ಅಸ್ಸಾಂ ರಾಜ್ಯದಲ್ಲಿ ಕಹಿ ಘಟನೆ ಸಂಭವಿಸಿದ್ದು, ಭೂಕಂಪಕ್ಕೆ ಭೂಮಿ ನಡುಗಿದೆ. ತಕ್ಷಣಕ್ಕೆ ಹಾನಿಗಳ ಮಾಹಿತಿ ಲಭ್ಯವಿಲ್ಲವಾದರೂ, ಬೆಳ್ಳಂಬೆಳಗ್ಗೆ ಭೂಮಿ ಕಂಪಿಸಿದ್ದರಿಂದ ಜನ ಭೀತಿಗೊಳಗಾಗಿದ್ದಾರೆ.

ವಿಜಯ ಕರ್ನಾಟಕ 5 Jan 2026 6:51 am

ಸಿದ್ದರಾಮಯ್ಯ ಕರ್ನಾಟಕದ ದೀರ್ಘಾವಧಿ ಮುಖ್ಯಮಂತ್ರಿ; ಜ.6ಕ್ಕೆ ದೇವರಾಜು ಅರಸರ ರೆಕಾರ್ಡ್‌ ಬ್ರೇಕ್!

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜನವರಿ 6ರಂದು ದೇವರಾಜ ಅರಸು ಅವರ ದಾಖಲೆಯನ್ನು ಸರಿಗಟ್ಟಲಿದ್ದು, ಅತಿ ಹೆಚ್ಚು ಅವಧಿಗೆ ರಾಜ್ಯದ ಚುಕ್ಕಾಣಿ ಹಿಡಿದ ಇತಿಹಾಸ ಸೃಷ್ಟಿಸಲಿದ್ದಾರೆ. ಅರಸು ಅವರು 2,792 ದಿನಗಳ ಕಾಲ ಅಧಿಕಾರದಲ್ಲಿದ್ದರು. ಸಿದ್ದರಾಮಯ್ಯ ಅವರು ತಮ್ಮ ಎರಡನೇ ಅವಧಿಯಲ್ಲಿ ಈ ದಾಖಲೆ ಮುರಿಯಲಿದ್ದಾರೆ.

ವಿಜಯ ಕರ್ನಾಟಕ 5 Jan 2026 6:44 am

ಹೊಸ ವರ್ಷಕ್ಕೆ ಕರೆಂಟ್‌ ಶಾಕ್‌! ಮೀಟರ್‌ ದರ ದುಪ್ಪಟ್ಟು ಏರಿಕೆ, ಹೊಸ ಗ್ರಾಹಕರಿಗೆ ಹೊರೆ

ಹೊಸ ವರ್ಷದಿಂದ ಮೆಸ್ಕಾಂ ಸ್ಮಾರ್ಟ್ ಮೀಟರ್ ಅಳವಡಿಕೆಗೆ ಮುಂದಾಗಿದೆ. ಕೃಷಿ ಪಂಪ್‌ಸೆಟ್ ಹೊರತುಪಡಿಸಿ ತಾತ್ಕಾಲಿಕ ಹಾಗೂ ಹೊಸ ಸಂಪರ್ಕ ಪಡೆಯುವ ಗ್ರಾಹಕರಿಗೆ ಇದು ಅನ್ವಯಿಸಲಿದೆ. ಆದರೆ ಹಿಂದಿನ ದರಕ್ಕೂ, ಹೊಸ ಶುಲ್ಕಕ್ಕೂ ಭಾರೀ ವ್ಯತ್ಯಾಸ ಇದ್ದು, ಗ್ರಾಹಕರನ್ನು ಕಂಗಾಲಾಗಿಸಿದೆ.

ವಿಜಯ ಕರ್ನಾಟಕ 5 Jan 2026 6:12 am

Karnataka weather: ಕರ್ನಾಟಕದ ಈ ಭಾಗಗಳಲ್ಲಿ ಚಳಿ, 3 ದಿನಗಳಲ್ಲಿ 8 ಜಿಲ್ಲೆಗಳಲ್ಲಿ ಮಳೆ: ಐಎಂಡಿ ರಿಪೋರ್ಟ್

ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಭಾಗದಲ್ಲಿ ಮೈ ಕೊರೆಯುವ ಚಳಿ ಮುಂದುವರಿದಿದೆ. ಆದರೆ ಮುಂದಿನ ಮೂರು ದಿನಗಳ ಅವಧಿಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮಳೆ ಆರ್ಭಟ ಶುರುವಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆಯು ಮುನ್ಸೂಚನೆ ನೀಡಿದೆ. ರಾಜ್ಯದಲ್ಲಿ ಸಾಮಾನ್ಯವಾಗಿ ಸಂಕ್ರಾಂತಿ ಸಮಯದಲ್ಲಿ ಚಳಿ ಹೆಚ್ಚಾಗುವುದು ಇದೆ. ಶಿವರಾತ್ರಿಯ ವರೆಗೂ ಚಳಿ ಇರುವುದು ಅದಾದ ನಂತರ ಕ್ರಮೇಣ ಬೇಸಿಗೆ

ಒನ್ ಇ೦ಡಿಯ 5 Jan 2026 5:59 am

ಸಿಂಗೇನ ಅಗ್ರಹಾರದಲ್ಲಿ ಬರಲಿದೆ ಎಪಿಎಂಸಿಯ ಮೆಗಾ ಮಾರುಕಟ್ಟೆ: ಕಲಾಸಿಪಾಳ್ಯ ಮಾರುಕಟ್ಟೆಯೂ ಸ್ಥಳಾಂತರ

ಬೆಂಗಳೂರು ಹೊರವಲಯದ ಸಿಂಗೇನ ಅಗ್ರಹಾರದಲ್ಲಿ ಹಣ್ಣು-ತರಕಾರಿ ಸಗಟು ಮಾರಾಟಕ್ಕಾಗಿ ಮೆಗಾ ಮಾರುಕಟ್ಟೆ ನಿರ್ಮಿಸಲು ಎಪಿಎಂಸಿ ಮುಂದಾಗಿದೆ. ಎರಡು ದಶಕಗಳ ವಿವಾದಿತ 42 ಎಕರೆ ಜಾಗ ಎಪಿಎಂಸಿ ಸುಪರ್ದಿಗೆ ಬಂದಿದ್ದು, ರೈತರಿಗೆ ಪರಿಹಾರ ನೀಡಲಾಗುವುದು. ಕಲಾಸಿಪಾಳ್ಯ ಮಾರುಕಟ್ಟೆಯನ್ನೂ ಇಲ್ಲಿಗೆ ಸ್ಥಳಾಂತರಿಸುವ ಚಿಂತನೆ ಇದೆ.

ವಿಜಯ ಕರ್ನಾಟಕ 5 Jan 2026 5:56 am

ವಿಜಯಪುರ ರೈಲು ನಿಲ್ದಾಣ: ಸಾಗಬೇಕಿದೆ ಅಭಿವೃದ್ಧಿ ಯಾನ, ತುರ್ತು ಅಗತ್ಯಗಳ ಪಟ್ಟಿ ಹೀಗಿದೆ..

ಸಂಪರ್ಕ ವ್ಯವಸ್ಥೆಯಲ್ಲಿ ರೈಲು ಸಾರಿಗೆಯೂ ಪ್ರಮುಖ. ಜತೆಗೆ ಅಭಿವೃದ್ಧಿಗೂ ಹೆಬ್ಬಾಗಿಲು ಇದ್ದಂತೆ. ಸಾಮಾನ್ಯನಿಂದ ಹಿಡಿದು ಶ್ರೀಮಂತರವರೆಗೆ ಎಲ್ಲರೂ ರೈಲು ಪ್ರಯಾಣ ಬಯಸುತ್ತಾರೆ. ಇತ್ತೀಚಿನ ವರ್ಷಗಳಲ್ಲಿ ರೈಲ್ವೆ ಜಾಲ ವಿಸ್ತಾರ, ಹಳಿ ಮತ್ತು ನಿಲ್ದಾಣಗಳ ಅಭಿವೃದ್ಧಿ ಕೆಲಸಗಳು ನಡೆದಿವೆ. ಜತೆಗೆ ಇನ್ನೂ ಪ್ರಯಾಣಿಕರಿಗೆ ಸೌಲಭ್ಯಗಳನ್ನು ಕಲ್ಪಿಸಬೇಕಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ರೈಲುಗಳು ಬಂದು ನಿಲ್ಲುವ ತಾಣಗಳ ಸ್ಥಿತಿಗತಿ ಕುರಿತು ಬೆಳಕು ಚೆಲ್ಲುವ 'ರೈಲು ನಿಲ್ದಾಣಗಳಲ್ಲಿ ವಿಕ ಪಯಣ' ಸರಣಿ ಇಂದಿನಿಂದ..

ವಿಜಯ ಕರ್ನಾಟಕ 5 Jan 2026 5:40 am

ಕೋಗಿಲು ಬಡಾವಣೆ ಅಕ್ರಮ ತೆರವು ವಿರೋಧಿಸಿ ಪ್ರತಿಭಟನೆ; ಸರಕಾರದ ಕ್ರಮವನ್ನು ಖಂಡಿಸಿದ ಎಸ್‌ಐಒ

ಬೆಂಗಳೂರು : ಕೋಗಿಲು ಬಡಾವಣೆ ಕೊಳೆಗೇರಿ ನಿವಾಸಿಗಳ ಹೋರಾಟ ಸಮಿತಿಯು ಇತ್ತೀಚೆಗೆ ತೆರವು ಕಾರ್ಯಾಚರಣೆ ನಡೆದ ಸ್ಥಳದಲ್ಲಿ ಬೃಹತ್ ಪ್ರತಿಭಟನೆಯನ್ನು ಆಯೋಜಿಸಿ, ನೆಲೆ ಕಳೆದುಕೊಂಡ ಕುಟುಂಬಗಳ ಸಂಕಷ್ಟದತ್ತ ತುರ್ತು ಗಮನ ಸೆಳೆಯಿತು. ಮನೆಗಳನ್ನು ಕಳೆದುಕೊಂಡ ಸಂತ್ರಸ್ತರಿಗೆ ಸರಕಾರವು ತಕ್ಷಣವೇ ಶಾಶ್ವತ ವಸತಿ ಕಲ್ಪಿಸಬೇಕು ಹಾಗೂ ಪುನರ್ವಸತಿ ಅವಧಿಯಲ್ಲಿ ಆರೋಗ್ಯ, ಆಹಾರ ಮತ್ತು ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕೆಂದು ಸಮಿತಿಯು ಒತ್ತಾಯಿಸಿದೆ. ಹೋರಾಟ ಸಮಿತಿಯ ಸದಸ್ಯ ಸಂಘಟನೆಯಾಗಿರುವ ಎಸ್‌ಐಒ (SIO) ಕರ್ನಾಟಕವು ಈ ನಿಲುವನ್ನು ಬೆಂಬಲಿಸುತ್ತದೆ. ನಿವಾಸಿಗಳಿಗೆ ಯಾವುದೇ ಪೂರ್ವ ಕಾನೂನು ನೋಟಿಸ್ ಅಥವಾ ಮುನ್ಸೂಚನೆ ನೀಡದೆ ಏಕಾಏಕಿ ತೆರವು ಕಾರ್ಯಾಚರಣೆ ನಡೆಸಿರುವುದು ಅತ್ಯಂತ ಖಂಡನೀಯ ಕೃತ್ಯ ಎಂದು ಎಸ್‌ಐಒ ಅಭಿಪ್ರಾಯಪಟ್ಟಿದೆ. ಪ್ರಜಾಪ್ರಭುತ್ವವು ಜನರಿಂದ, ಜನರಿಗಾಗಿ ಮತ್ತು ಜನರಿಗೋಸ್ಕರ ಅಸ್ತಿತ್ವದಲ್ಲಿದೆ ಎಂಬುದನ್ನು ಕಾಂಗ್ರೆಸ್ ನೇತೃತ್ವದ ಸರಕಾರಕ್ಕೆ ನೆನಪಿಸಲು ನಾವು ಬಯಸುತ್ತೇವೆ. ಆದ್ದರಿಂದ, ಸರಕಾರವು ತನ್ನ ನಾಗರಿಕರ ಹಿತಾಸಕ್ತಿ ಮತ್ತು ಕಲ್ಯಾಣಕ್ಕೆ ಸದಾ ಆದ್ಯತೆ ನೀಡಬೇಕಾಗಿದೆ. ಈ ತೆರವು ಕಾರ್ಯಾಚರಣೆಯು ಸಮುದಾಯದ ಯುವಜನರು ಮತ್ತು ಮಕ್ಕಳ ಮೇಲೆ ಗಂಭೀರವಾದ ಮಾನವೀಯ ಬಿಕ್ಕಟ್ಟನ್ನು ಉಂಟುಮಾಡಿದೆ. ನೂರಾರು ಮಕ್ಕಳು ಶಾಲಾ ಶಿಕ್ಷಣದಿಂದ ವಂಚಿತರಾಗಿದ್ದಾರೆ, ಇದು ಕಡ್ಡಾಯ ಶಿಕ್ಷಣವನ್ನು ಪ್ರತಿಪಾದಿಸುವ ‘ಶಿಕ್ಷಣ ಹಕ್ಕು ಕಾಯಿದೆ’ಗೆ (RTE) ನೇರ ವಿರುದ್ಧವಾಗಿದೆ. ವಾಸಸ್ಥಳವನ್ನು ಕೆಡವಿರುವುದರಿಂದ, ಈ ಮಕ್ಕಳು ಅಪಾಯಕಾರಿ ವಾತಾವರಣ ಮತ್ತು ಅನೈರ್ಮಲ್ಯದ ಪರಿಸ್ಥಿತಿಗೆ ತುತ್ತಾಗಿದ್ದು, ಅವರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುವ ಆತಂಕ ಎದುರಾಗಿದೆ ಎಂದು ತಿಳಿಸಿದೆ. ಫಕೀರ್ ಮತ್ತು ವಸೀಮ್ ಕಾಲೋನಿ ನಿವಾಸಿಗಳಿಗೆ ತಕ್ಷಣದ ಪರಿಹಾರ ಒದಗಿಸಲು ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗ, ಮಹಿಳಾ ಆಯೋಗ ಮತ್ತು ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು ಸರಕಾರದ ಮೇಲೆ ಒತ್ತಡ ಹೇರಬೇಕೆಂದು ನಾವು ಬಲವಾಗಿ ಆಗ್ರಹಿಸುತ್ತೇವೆ. ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಎಸ್‌ಐಒ ಕರ್ನಾಟಕದ ರಾಜ್ಯ ಕಾರ್ಯದರ್ಶಿ ಮುಹಮ್ಮದ್ ಹಯಾನ್ ಅವರು, ಪ್ರತಿಯೊಬ್ಬ ನಿವಾಸಿಗೂ ಸೂಕ್ತ ಪುನರ್ವಸತಿ ಸಿಗುವವರೆಗೂ ಈ ಹೋರಾಟ ನಿರಂತರವಾಗಿ ಮುಂದುವರಿಯಲಿದೆ, ಎಂದು ಎಚ್ಚರಿಸಿದರು. ಪ್ರತಿಭಟನೆಯಲ್ಲಿ ಎಸ್‌ಐಒ ಕರ್ನಾಟಕದ ಸದಸ್ಯರಾದ ವಸೀಮ್ ಮತ್ತು ನದೀಮ್ ಉಪಸ್ಥಿತರಿದ್ದು, ಸಂತ್ರಸ್ತ ಕುಟುಂಬಗಳಿಗೆ ಬೆಂಬಲ ಸೂಚಿಸಿದರು.

ವಾರ್ತಾ ಭಾರತಿ 5 Jan 2026 12:41 am

ಬೆಂಗಳೂರು ನಗರದ ಮೂಲಸೌಕರ್ಯ ಅಭಿವೃದ್ಧಿಗೆ 1.5 ಲಕ್ಷ ಕೋಟಿ ರೂ.ಹೂಡಿಕೆ : ಡಿ.ಕೆ.ಶಿವಕುಮಾರ್

ಬೆಂಗಳೂರು : ಬೆಂಗಳೂರು ನಗರದ ಜನಸಂಖ್ಯೆ ಮುಂದಿನ ಇಪ್ಪತ್ತರಿಂದ 25 ವರ್ಷಗಳಲ್ಲಿನ ದ್ವಿಗುಣಗೊಳ್ಳಲಿದ್ದು, ನಗರದ ಮೂಲಸೌಕರ್ಯ ಕೊರತೆ ನಿವಾರಿಸಲು 1.5ಲಕ್ಷ ಕೋಟಿ ರೂ.ವೆಚ್ಚ ಮಾಡಲು ತೀರ್ಮಾನಿಸಲಾಗಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ. ರವಿವಾರ ನಗರದ ಅರಮನೆ ಮೈದಾನದಲ್ಲಿ ಮಹಾವೀರ್ ಜೈನ್ ಶಿಕ್ಷಣ ಸಂಘದ ಬಿಬಿಯುಎಲ್ ಜೈನ ವಿದ್ಯಾಲಯ 40 ವರ್ಷ ಪೂರೈಸಿದ ಮತ್ತು ಸಿಬಿ ಭಂಡಾರಿ ಜೈನ್ ಕಾಲೇಜಿನ 25 ವರ್ಷಾಚರಣೆ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನಗರದ ಮೂಲಸೌಕರ್ಯದ ಸ್ವರೂಪವನ್ನು ಬದಲಿಸಬೇಕಿದೆ ಎಂದರು. ಇಲ್ಲಿರುವ ಎಲ್ಲರಿಗೂ ಸಂಚರಿಸಲು ಸ್ವಂತ ವಾಹನಗಳು ಬೇಕು. ಯಾರೂ ಸಾರ್ವಜನಿಕ ಸಾರಿಗೆ ವ್ಯವಸ್ಥೆಯಲ್ಲಿ ಓಡಾಡುವುದಿಲ್ಲ. 1.4ಕೋಟಿ ಜನಸಂಖ್ಯೆ ಇದ್ದರೆ 1.3ಕೋಟಿ ವಾಹನಗಳಿವೆ. ಹಾಗಾಗಿ ಸಂಚಾರಿ ಒತ್ತಡದ ಸಮಸ್ಯೆ ತೀವ್ರವಾಗಿದೆ. ನಗರದ ಜವಾಬ್ದಾರಿ ತೆಗೆದುಕೊಂಡ ನಂತರ ತಾವು ಸೌಕರ್ಯಕ್ಕೆ ಹೂಡಿಕೆಗೆ ಆದ್ಯತೆ ಕೊಡುತ್ತಿದ್ದೇನೆ. ಸಂಚಾರಿ ಒತ್ತಡ ಇದ್ದರೂ ಯಾರೂ ಬೆಂಗಳೂರು ಬಿಟ್ಟು ಹೋಗಲು ತಯಾರಿಲ್ಲ ಎಂದು ಅವರು ತಿಳಿಸಿದರು. ಬೆಂಗಳೂರು ಅತ್ಯಂತ ಪರಮೋಚ್ಚ ನಗರ. ಇಲ್ಲಿ ಉತ್ತಮ ಸಂಸ್ಕೃತಿ ಇದ್ದು, ಗುಣಮಟ್ಟದ ಶಿಕ್ಷಣಕ್ಕೆ ವಿಫುಲ ಅವಕಾಶಗಳಿವೆ. ಇಲ್ಲಿ ಅತಿಹೆಚ್ಚಿನ ಮಾನವ ಸಂಪನ್ಮೂಲವಿದೆ. ಕ್ಯಾಲಿಪೋರ್ನಿಯಾದಲ್ಲಿ 35ಲಕ್ಷ ಇಂಜಿನಿಯರ್‍ಗಳಿದ್ದು, ಬೆಂಗಳೂರು ಒಂದೇ ನಗರದಲ್ಲಿ 25ಲಕ್ಷ ಇಂಜಿನಿಯರ್ ಗಳಿದ್ದಾರೆ. ಇದು ಬೆಂಗಳೂರಿನ ಶಕ್ತಿಯಾಗಿದೆ. ವಾಜಪೇಯಿ ಪ್ರಧಾನಿಯಾಗಿದ್ದಾಗ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಶಂಕು ಸ್ಥಾಪನೆ ನೆರವೇರಿಸಲು ಆಗಮಿಸಿದ್ದಾಗ ವಿಶ್ವದ ನಾಯಕರು ಮೊದಲು ದಿಲ್ಲಿ ಬರುತ್ತಿದ್ದರು. ತರುವಾಯ ಮುಂಬೈ, ಚೆನ್ನೈ, ಬಾಂಬೆ, ಹೈದ್ರಾಬಾದ್ ನತ್ತ ತೆರಳುತ್ತಿದ್ದರು. ಆದರೆ ಇದೀಗ ಪರಿಸ್ಥಿತಿ ಬದಲಾಗಿದೆ. ಇದೀಗ ವಿಶ್ವದ ನಾಯಕರು ಮೊದಲು ಬೆಂಗಳೂರಿಗೆ ಬರುತ್ತಿದ್ದಾರೆ. ನಂತರ ಹೊಸದಿಲ್ಲಿಗೆ ತೆರಳುತ್ತಿದ್ದಾರೆ ಎಂದು ಮಾಜಿ ಪ್ರಧಾನಿ ಉದ್ಗರಿಸಿದ್ದರು. ಇದಕ್ಕೆ ಕಾರಣ ಗುಣಮಟ್ಟದ ಶಿಕ್ಷಣ ಎಂದು ಡಿ.ಕೆ.ಶಿವಕುಮಾರ್ ಪ್ರತಿಪಾದಿಸಿದರು. ರಾಜ್ಯಸಭಾ ಸದಸ್ಯ ಲೆಹರ್ ಸಿಂಗ್ ಮಾತನಾಡಿ, ಜೈನ ಸಮಾಜದ ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಮುಂದುವರೆಯಬೇಕಾದಲ್ಲಿ ಸಾಮಾಜಿಕ ಮಾಧ್ಯಮದಿಂದ ದೂರ ಇದ್ದು, ಕಠಿಣ ಪರಿಶ್ರಮದಿಂದ ಅಧ್ಯಯನ ಮಾಡಬೇಕು. ಜೈನ ಸಮುದಾಯ ಶೈಕ್ಷಣಿಕವಾಗಿ ಇನ್ನಷ್ಟು ಪ್ರಗತಿ ಸಾಧಿಸಲು ಪೋಷಕರು  ಆದ್ಯತೆ ನೀಡಬೇಕು. ಮಕ್ಕಳನ್ನು ಸಾಮಾಜಿಕ ಮಾಧ್ಯಮದಿಂದ ದೂರ ಇಡಬೇಕು ಎಂದರು. ಸಂಸದ ಪಿ.ಸಿ.ಮೋಹನ್ ಮಾತನಾಡಿ, ಒಂದು ಕಾಲದಲ್ಲಿ ಲಕ್ಷ್ಮಿ ಪುತ್ರರಿಗೆ ಮನ್ನಣೆ ದೊರೆಯುತ್ತಿತ್ತು. ಹಣವಂತರು, ವ್ಯಾಪಾರಿಗಳಿಗೆ ಮಣೆ ಹಾಕುತ್ತಿದ್ದರು. ಆದರೆ ಇಂದು ಕಾಲ ಬದಲಾಗಿದ್ದು, ಉನ್ನತ ಶಿಕ್ಷಣ ಪಡೆದು ಉತ್ತಮ ಉದ್ಯೋಗದಲ್ಲಿರುವವರಿಗೆ ಆದ್ಯತೆ ದೊರೆಯುತ್ತಿದೆ. ಶಿಕ್ಷಣಕ್ಕೆ ಪ್ರಧಾನ್ಯತೆ ದೊರೆಯುತ್ತಿರುವುದನ್ನು ಮನಗಂಡು ಉತ್ತಮ ಶಿಕ್ಷಣ ನೀಡಲು ಪ್ರತಿಯೊಬ್ಬರು ಮುಂದಾಗಬೇಕು ಎಂದರು. ಸಂಘದ ಅಧ್ಯಕ್ಷ ಚಂಪಾಲಾಲ್ ಭಂಡಾರಿ, ಸ್ಮರಣ ಸಂಚಿಕೆ ಸಮಿತಿ ಅಧ್ಯಕ್ಷ ಹೇಮರಾಜ್, ಆಚರಣಾ ಸಮಿತಿಯ ಅಧ್ಯಕ್ಷ ಪ್ರಕಾಶ್ ಜಿ. ಪಿರ್ಗಲ್, ಕಾರ್ಯದರ್ಶಿ ಚಂಪಾಲಾಲ್, ಕಾರ್ಯಕಾರಿ ಸಮಿತಿ ಸದಸ್ಯರು ಮತ್ತು ಶ್ರೀ ಮಹಾವೀರ್ ಜೈನ್ ಶಿಕ್ಷಣ ಸಂಘದ ಸದಸ್ಯರು ಸೇರಿದಂತೆ 2,000ಕ್ಕೂ ಹೆಚ್ಚು ಜನರು ಈ ಸಮಾರಂಭಕ್ಕೆ ಸಾಕ್ಷಿಯಾದರು.

ವಾರ್ತಾ ಭಾರತಿ 5 Jan 2026 12:31 am

ಆರ್ಯ ಈಡಿಗ ಸಮುದಾಯದ ಎಲ್ಲ ಪಂಗಡಗಳು ಒಗ್ಗೂಡಬೇಕು : ಕೋಟ ಶ್ರೀನಿವಾಸ ಪೂಜಾರಿ

ಬೆಂಗಳೂರು : ಆರ್ಯ ಈಡಿಗ ಸಮುದಾಯದ ಎಲ್ಲ ಪಂಗಡಗಳ ಮಹಿಳೆಯರನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸುವ ಅವಶ್ಯಕತೆ ಇದೆ ಎಂದು ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದ ಕೋಟ ಶ್ರೀನಿವಾಸ ಪೂಜಾರಿ ಕರೆ ನೀಡಿದ್ದಾರೆ. ರವಿವಾರ ಇಲ್ಲಿನ ನಿಮ್ಹಾನ್ಸ್ ಸಭಾಂಗಣದಲ್ಲಿ ಆರ್ಯ ಈಡಿಗ ಮಹಿಳಾ ಸಂಘದಿಂದ ಆಯೋಜಿಸಲಾಗಿದ್ದ ‘ನಾರಿ ಶಕ್ತಿ ರಾಷ್ಟ್ರೀಯ’ ಈಡಿಗ ಮಹಿಳಾ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಈಡಿಗ ಸಮುದಾಯಗಳು ಮತ್ತಷ್ಟು ಸಂಘಟಿತರಾಗಬೇಕು. ಈಡಿಗ ಸಮುದಾಯದ ಮಹಿಳೆಯರು ರಾಜಕೀಯ ಕ್ಷೇತ್ರಕ್ಕೆ ಬರುವಂತಾಗಬೇಕು ಎಂದರು. ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಮಾತನಾಡಿ, ಚಿಕ್ಕವನಿದ್ದಾಗ ನನಗೂ ನಮ್ಮೂರಿನಲ್ಲಿ ಅಸ್ಪೃಶ್ಯತೆಯ ಅನುಭವವಾಗಿತ್ತು, ನಮ್ಮೂರಿನ ಪೂಜಾರಿಯನ್ನು ನಾವು ಮುಟ್ಟಿದರೆ ಆತ ಪುನಃ ಸ್ನಾನ ಮಾಡಿಕೊಂಡು ಬರುತ್ತಿದ್ದರು. ಆದರೆ, ಬ್ರಹ್ಮಶ್ರೀ ನಾರಾಯಣ ಗುರುಗಳು ಆಸ್ಪಶ್ಯತೆಯ ವಿರುದ್ದ ಹೋರಾಟ ನಡೆಸಿದರು ಎಂದು ಸ್ಮರಿಸಿದರು. ನಾರಾಯಣಗರುಗಳು ಹಿಂದುಳಿದ ವರ್ಗಗಳಿಗೆ ಶಿಕ್ಷಣ ನೀಡಿದರು. ಸಮ ಸಮಾಜ ನಿರ್ಮಾಣಕ್ಕೆ ಶ್ರಮಿಸಿದರು. ಈಡಿಗ ಸಮುದಾಯಗಳು ಮತ್ತಷ್ಟು ಸಂಘಟಿತರಾಗಬೇಕು ಎಂದು ರಾಮಲಿಂಗಾರೆಡ್ಡಿ ಹೇಳಿದರು. ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮೀ ಚೌದರಿ ಮಾತನಾಡಿ, ಈಡಿಗ ಸಮುದಾಯದ ಹೆಣ್ಣು ಮಕ್ಕಳು ಇತೀಚೆಗೆ ಶಿಕ್ಷಿತರಾಗಿ ಸಂಘಟಿತರಾಗುವುದು ಅತ್ಯಂತ ಸಂತಸ ತಂದಿದೆ. ರಾಜಕೀಯ, ಸಾಮಾಜಿಕ ಕ್ಷೇತ್ರದಲ್ಲಿ ಈಡಿಗ ಸಮುದಾಯದ ಮಹಿಳೆಯರು ಭಾಗವಹಿಸಿ ಮುಖ್ಯವಾಹಿನಿಗೆ ಬರಬೇಕು ಎಂದು ಹೇಳಿದರು. ತೆಲಂಗಾಣ ಮಾಜಿ ಸಚಿವ ವಿ.ಶ್ರೀನಿವಾಸ ಗೌಡ ಮಾತನಾಡಿ, ಆಂಧಪ್ರದೇಶ, ತಮಿಳುನಾಡು, ಕೇರಳದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಈಡಿಗ ಸಮುದಾಯದವರು ವಾಸವಾಗಿದ್ದಾರೆ. ಈಡಿಗ ಮಹಿಳೆಯರು ರಾಷ್ಟ್ರೀಯ ಮಟ್ಟದಲ್ಲಿ ಒಂದಾಗುವ ಅವಶ್ಯಕತೆ ಇದೆ ಎಂದು ಹೇಳಿದರು. ಸಂಘದ ಅಧ್ಯಕ್ಷೆ ಡಾ.ನಳಿನಾಕ್ಷಿ ಸಣ್ಣಪ್ಪ ಮಾತನಾಡಿ, ಮಹಿಳಾ ಶಕ್ತಿಯನ್ನು ಬಲಪಡಿಸಲು ಸಮ್ಮೇಳನದ ಪ್ರಧಾನ ಉದ್ದೇಶವಾಗಿದೆ. ಸಮುದಾಯದ ಪರವಾಗಿ ವಿವಿಧ ಸರಕಾರಿ ಇಲಾಖೆಗಳಲ್ಲಿ ಮಂಡಳಿಗಳಲ್ಲಿ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಸಮರ್ಪಕ ಪ್ರಾತಿನಿಧ್ಯವನ್ನು ಪಡೆಯಲು ನಮ್ಮ ಬೇಡಿಕೆಗಳನ್ನು ಒಗ್ಗಟ್ಟಿನ ಧ್ವನಿಯಲ್ಲಿ ಮಂಡಿಸುವುದು ಈ ಸಮಾವೇಶದ ಆಶಯವಾಗಿದೆ ಎಂದರು ನಾರಾಯಣ ಗುರುಪೀಠದ ವಿಖ್ಯಾತಾನಂದ ಸ್ವಾಮೀಜಿ, ನಿಟ್ಟೂರು ಶ್ರೀನಾರಾಯಣ ಗುರು ಮಹಾಸಂಸ್ಥಾನ ಅಧ್ಯಕ್ಷ ರೇಣುಕಾನಂದ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಇದೇ ವೇಳೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮಹಿಳೆಯರನ್ನು ಸನ್ಮಾನಿಸಲಾಯಿತು. ಹಿಂ.ವರ್ಗಗಳ ಆಯೋಗದ ಸದಸ್ಯೆ ಪ್ರತಿಭಾ ಕುಳಾಯಿ, ನಾರಾಯಣ ಅಭಿವೃದ್ಧಿ ನಿಗಮ ಅಧ್ಯಕ್ಷೆ ಮಂಜುನಾಥ ಪೂಜಾರಿ, ಆರ್ಯ ಈಡಿಗ ಸಂಘದ ಅಧ್ಯಕ್ಷ ಡಾ.ಎಂ.ತಿಮ್ಮೇಗೌಡ, ಜನತಾ ಏಜಕೇಶನ್ ಸೊಸೈಟಿಯ ಅಧ್ಯಕ್ಷೆ ಡಾ.ರಾಜನಂದಿನಿ ಕಾಗೋಡು, ಅಧ್ಯಕ್ಷೆ ಅಶಿತ ಆನಂದ್ ಹಾಜರಿದ್ದರು.

ವಾರ್ತಾ ಭಾರತಿ 5 Jan 2026 12:22 am

ಕೋಗಿಲು | ಎಲ್ಲರಿಗೂ ಪುನರ್ವಸತಿ ಕಲ್ಪಿಸುವವರೆಗೂ ಹೋರಾಟ : ಮನೋಹರ್ ಎಲವರ್ತಿ

ಬೆಂಗಳೂರು : ಕೋಗಿಲು ಪ್ರಕರಣದಲ್ಲಿ ಮನೆಗಳು ನೆಲಸಮವಾದ ಎಲ್ಲರಿಗೂ ಪುನರ್ವಸತಿ ಕಲ್ಪಿಸುವವರೆಗೆ ಹೋರಾಟವನ್ನು ಮುಂದುವರಿಸುತ್ತೇವೆ ಎಂದು ದುಡಿಯುವ ಜನರ ವೇದಿಕೆಯ ಮನೋಹರ್ ಎಲವರ್ತಿ ತಿಳಿಸಿದ್ದಾರೆ. ರವಿವಾರ ಕೋಗಿಲು ಬಡಾವಣೆ ಸ್ಲಂ ನಿವಾಸಿಗಳ ಹೋರಾಟ ಸಮಿತಿ ವತಿಯಿಂದ ಮನೆ ತೆರವುಗೊಳಿಸುವ ಕಾರ್ಯಾಚರಣೆಯಿಂದ ಬಾಧಿಸಲ್ಪಟ್ಟ ಸಮುದಾಯಕ್ಕೆ ಪುನರ್ವಸತಿ ಕಲ್ಪಿಸುವಂತೆ ಕೋರಿ ಹಮ್ಮಿಕೊಂಡಿದ್ದ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕೋಗಿಲು ಬಡವಾಣೆ ಸ್ಲಂ ನಿವಾಸಿಗಳ ಹೋರಾಟ ಸಮಿತಿಯು 10ಕ್ಕೂ ಹೆಚ್ಚು ಪ್ರಗತಿಪರ ಸಂಘಟನೆಗಳನ್ನು ಒಳಗೊಂಡಿದೆ. ನಾವು ಸಾಂವಿಧಾನಿಕ ಮೌಲ್ಯಗಳು ಮತ್ತು ಶಾಂತಿಯುತ ಹೋರಾಟಕ್ಕೆ ಬದ್ಧರಾಗಿದ್ದೇವೆ ಎಂದರು. ಜನವಾದಿ ಮಹಿಳಾ ಸಂಘಟನೆಯ ಗೌರಮ್ಮ ಮಾತನಾಡಿ, ಯಾವುದೇ ಪೂರ್ವ ಸೂಚನೆ ಇಲ್ಲದೇ ಮನೆಗಳನ್ನು ನೆಲಸಮಗೊಳಿಸಿದ್ದಾರೆ. ಇವರಿಗೆ ತಕ್ಷಣವೇ ಪುನರ್ವಸತಿ ಕಲ್ಪಿಸಬೇಕು. ರಾಜ್ಯ ಮಾನವ ಹಕ್ಕುಗಳ ಆಯೋಗ ಮಾಡಿರುವ ಶಿಫಾರಸುಗಳನ್ನು ಕೂಡಲೇ ಜಾರಿಗೆ ತರಬೇಕು ಎಂದು ಒತ್ತಾಯಿಸಿದರು. ಕರ್ನಾಟಕ ಜನಾಂದೋಲನ ಸಂಘಟನೆ ವತಿಯಿಂದ ಮರಿಯಪ್ಪ ಅವರು ಮಾತನಾಡುತ್ತಾ, ಇದುವರೆಗೂ ಸರಕಾರ ನೀಡಿದ ವಾಗ್ದಾನಗಳನ್ನು ಈಡೇರಿಸಿಲ್ಲ, ಹೋರಾಟ ಒಂದೇ ದಾರಿ, ನಮ್ಮ ಗುರಿ ಮುಟ್ಟುವವರೆಗೂ ನಾವು ಒಗ್ಗಟ್ಟಿನಿಂದ ಇರೋಣ ಎಂದು ತಿಳಿಸಿದರು. ಸಿಐಟಿಯು ಉಮೇಶ್ ಮಾತನಾಡಿ, ಆರ್ಟಿಕಲ್ 19ರ ಪ್ರಕಾರ ಜನರಿಗೆ ಸ್ವತಂತ್ರವಾಗಿ ಎಲ್ಲಿ ಬೇಕಾದರೂ ಬದುಕುವ ಹಕ್ಕಿದೆ. ಮುಸಲ್ಮಾನರೆನ್ನುವ ಕಾರಣಕ್ಕಾಗಿ ವಿದೇಶಿಯರೆಂದು ಹಣೆಪಟ್ಟಿ ಹಚ್ಚುವುದು ಅಪರಾಧ ಎಂದು ಹೇಳಿದರು. ಸಭೆಯಲ್ಲಿ ಸ್ಲಂ ಜನರ ಸಂಘಟನೆಯ ಐಸ್ಸಾಕ್ ಅಮೃತರಾಜ್, ವೇದಿಕೆಯ ನಂದಿನಿ ಸೇರಿದಂತೆ ಜನವಾದಿ ಮಹಿಳಾ ಸಂಘಟನೆ, ಸ್ಲಂ ಜನರ ಸಂಘಟನೆ, ಕರ್ನಾಟಕ ಜನಾಂದೋಲನ ಸಂಘಟನೆ, ಕರ್ನಾಟಕ ಜನಶಕ್ತಿ, ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಸೇಶನ್, ಎನ್‌ಎಫ್‌ಐಡಬ್ಲ್ಯೂಯ, ಸಿಐಟಿಯು ಹಾಗೂ ಇನ್ನಿತರ ಜನಪರ ಸಂಘಟನೆಗಳ ಪ್ರತಿನಿಧಿಗಳು ಭಾಗವಹಿಸಿದ್ದರು.

ವಾರ್ತಾ ಭಾರತಿ 5 Jan 2026 12:18 am

ವೆನೆಝುವೆಲಾ ಮೇಲಿನ ಅಮೆರಿಕ ದಾಳಿಗೆ ಆಕ್ರೋಶ; ಅಮೆರಿಕದ ಪುಂಡಾಟಿಕೆ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿ ಸಿಪಿಎಂ, ಎಸ್‌ಯುಸಿಐ ಪ್ರತಿಭಟನೆ

ಬೆಂಗಳೂರು : ವೆನೆಝುವೆಲಾ ದೇಶದ ಮೇಲೆ ಅಮೆರಿಕ ನಡೆಸಿರುವ ದಾಳಿಯನ್ನು ಖಂಡಿಸಿ ಮಾರ್ಕ್ಸ್‌ವಾದಿ ಕಮ್ಯುನಿಸ್ಟ್ ಪಕ್ಷ (ಸಿಪಿಎಂ) ಹಾಗೂ ಸೋಷಿಯಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ (ಎಸ್‌ಯುಸಿಐ) ಪಕ್ಷದ ಕಾರ್ಯಕರ್ತರು ಪ್ರತ್ಯೇಕವಾಗಿ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರವಿವಾರ ಮಹಾಲಕ್ಷ್ಮೀ ಲೇಔಟ್‌ನಲ್ಲಿರುವ ಸಿಪಿಎಂ ಕಚೇರಿ ಸಮೀಪ ಹಾಗೂ ಫ್ರೀಡಂ ಪಾರ್ಕ್‌ನಲ್ಲಿ ಉಭಯ ಪಕ್ಷಗಳ ಹಲವು ಮಂದಿ ಕಾರ್ಯಕರ್ತರು, ವೆನೆಝುವೆಲಾ ದೇಶದ ಮೇಲೆ ಅಮೆರಿಕ ದಾಳಿಯನ್ನು ಖಂಡಿಸಿ ಧಿಕ್ಕಾರದ ಘೋಷಣೆ ಕೂಗಿದರು. ಅಲ್ಲದೆ, ಬಂಧಿಸಿರುವ ವೆನೆಝುವೆಲಾ ದೇಶದ ಅಧ್ಯಕ್ಷರನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು. ಈ ವೇಳೆ ಮಾತನಾಡಿದ ಸಿಪಿಎಂ ರಾಜ್ಯ ಕಾರ್ಯದರ್ಶಿ ಕೆ. ಪ್ರಕಾಶ್, ವೆನೆಝುವೆಲಾ ದೇಶದ ನಡೆದಿರುವ ದಾಳಿಯನ್ನು ಭಾರತ ಸೇರಿದಂತೆ ಇಡೀ ಪ್ರಪಂಚದ ಎಲ್ಲ ಸಾರ್ವಭೌಮ ದೇಶಗಳ ಮೇಲೆ ನಡೆದಿರುವ ಆಕ್ರಮಣ. ವೆನೆಝುವೆಲಾ ಅಧ್ಯಕ್ಷರನ್ನು ಬಿಡುಗಡೆ ಮಾಡುವಂತೆ ಭಾರತ ಸರಕಾರ ಅಮೆರಿಕವನ್ನು ಒತ್ತಾಯಿಸಬೇಕು. ವಿಶ್ವಸಂಸ್ಥೆ ಭದ್ರತಾ ಮಂಡಳಿ ಕೂಡಲೇ ಅಮೆರಿಕದ ಪುಂಡಾಟಿಕೆ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ವೆನೆಝುವೆಲಾ ದೇಶದ ಮೇಲೆ ಅಮೆರಿಕವು, ಏಕಪಕ್ಷೀಯ ಮಿಲಿಟರಿ ಆಕ್ರಮಣ ನಡೆಸಿ ಅಧ್ಯಕ್ಷ ನಿಕೊಲಸ್ ಮಡುರೊ, ಪತ್ನಿ ಸಿಲಿಯಾ ಅವರನ್ನು ಅಪಹರಣ ಮಾಡಿರುವುದು ಸರಿಯಲ್ಲ. ಅಮೆರಿಕ ವೆನೆಝುವೆಲಾದ ತೈಲ ಸಂಪತ್ತನ್ನು ಕೊಳ್ಳೆ ಹೊಡೆಯುವ ದುರುದ್ದೇಶಕ್ಕೆ ಅಡ್ಡಿಯಾಗಿರುವುದ್ದಕ್ಕಾಗಿ ಮಡುರೋ ಅವರನ್ನು ಪದಚ್ಯುತಗೊಳಿಸುವ ಮಿಲಿಟರಿ ಕಾರ್ಯಾಚರಣೆಯನ್ನು ನಡೆಸಿದೆ ಎಂದು ದೂರಿದರು. ಪ್ರತಿಭಟನೆಯಲ್ಲಿ ಸಿಪಿಎಂ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಗೋಪಾಲಕೃಷ್ಣ ಹರಳಹಳ್ಳಿ, ಚಂದ್ರಪ್ಪ ಹೊಸ್ಕೇರಾ, ಕೆ.ಎಸ್.ವಿಮಲಾ, ಟಿ.ಯಶವಂತ, ಸೂರಜ್ ನಿಧಿಯಂಗ್, ಹಲವರು ಭಾಗವಹಿಸಿದ್ದರು. ಮಿಲಿಟರಿ ಕಾರ್ಯಾಚರಣೆ ನಿಲ್ಲಿಸಲಿ ವೆನುಝುವೆಲಾದಲ್ಲಿ ಅಮೆರಿಕದ ಮಿಲಿಟರಿ ಕಾರ್ಯಾಚರಣೆಗಳನ್ನು ತಕ್ಷಣವೇ ನಿಲ್ಲಿಸಬೇಕು ಎಂದು ಸೋಷಿಯಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ ಪಕ್ಷವು ಆಗ್ರಹಿಸಿದೆ ಎಂದು ಬೆಂಗಳೂರು ಉತ್ತರ ಜಿಲ್ಲಾ ಸಮಿತಿ ಕಾರ್ಯದರ್ಶಿ ವಿ.ಜ್ಞಾನಮೂರ್ತಿ ತಿಳಿಸಿದ್ದಾರೆ. ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾದ ವೆನುಝುವೆಲಾ ಅಧ್ಯಕ್ಷ ನಿಕೋಲಸ್ ಮಡುರೊ ಮತ್ತು ಅವರ ಪತ್ನಿಯನ್ನು ಅಪಹರಿಸಿರುವುದು ‘ಘೋರ ಅಪರಾಧ’ ಮತ್ತು ‘ಹೇಡಿತನದ ಕೃತ್ಯ’. ಇದು ಅಮೆರಿಕದ ಆಕ್ರಮಣಕಾರಿ ನೀತಿಯ ಹಿಂದಿರುವ ಉದಾರವಾದಿ ಮುಖವಾಡವನ್ನು ಕಳಚಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನೆಯಲ್ಲಿ ಪಕ್ಷದ ಎಂ.ಎನ್.ಶ್ರೀರಾಮ್, ಎನ್.ರವಿ, ಶೋಭಾ ಎಸ್., ಸೇರಿದಂತೆ ಇನ್ನಿತರರು ಭಾಗವಹಿಸಿದ್ದರು.

ವಾರ್ತಾ ಭಾರತಿ 5 Jan 2026 12:13 am

Hassan | ವಿದ್ಯಾನಗರದಲ್ಲಿ ಅಕ್ರಮ ಕಾಂಪೌಂಡ್ ಆರೋಪ : ಯಶ್ ತಾಯಿ ಪುಷ್ಪಾ ನಿವಾಸದ ಬಳಿ ತೆರವು ಕಾರ್ಯಾಚರಣೆ

ಹಾಸನ : ನಗರದ ವಿದ್ಯಾನಗರದಲ್ಲಿ ಇರುವ ನಟ ಯಶ್ ಅವರ ತಾಯಿ ಪುಷ್ಪಾ ಅವರ ನಿವಾಸದ ಬಳಿ ಅಕ್ರಮವಾಗಿ ಕಾಂಪೌಂಡ್ ನಿರ್ಮಿಸಲಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ರವಿವಾರ ಬೆಳಗ್ಗೆ ಜೆಸಿಬಿ ಮೂಲಕ ಕಾಂಪೌಂಡ್ ತೆರವುಗೊಳಿಸುವ ಕಾರ್ಯಾಚರಣೆ ನಡೆದಿರುವುದು ವರದಿಯಾಗಿದೆ. ಲಕ್ಷ್ಮ್ಮಮ್ಮ ಎಂಬವರಿಗೆ ಸೇರಿರುವ ಜಾಗದಲ್ಲಿ ಅಕ್ರಮವಾಗಿ ಸುಮಾರು ಒಂದೂವರೆ ಸಾವಿರ ಅಡಿ ವ್ಯಾಪ್ತಿಯಲ್ಲಿ ಕಾಂಪೌಂಡ್ ಹಾಕಲಾಗಿದೆ ಎಂದು ಆರೋಪಿಸಲಾಗಿದ್ದು, ಲಕ್ಷ್ಮಮ್ಮ ಅವರ ಜಿಪಿಎ ಹೋಲ್ಡರ್ ದೇವರಾಜು ಅವರು ನ್ಯಾಯಾಲಯದ ಅನುಮತಿಯ ಮೇರೆಗೆ ಈ ಕಾಂಪೌಂಡ್ ಅನ್ನು ತೆರವುಗೊಳಿಸಿದ್ದಾರೆ ಎಂದು ತಿಳಿದುಬಂದಿದೆ. ದೇವರಾಜು ಅವರು ಮಾಧ್ಯಮದೊಂದಿಗೆ ಮಾತನಾಡಿ, ಪುಷ್ಪಾನಿವಾಸದ ಸುತ್ತಲೂ ನಿರ್ಮಿಸಲಾಗಿದ್ದ ಕಾಂಪೌಂಡ್ ನಮ್ಮ ಮೂಲ ಜಮೀನಿನೊಳಗೆ ಅಕ್ರಮವಾಗಿ ನಿರ್ಮಿಸಲಾಗಿತ್ತು. ಈ ಕುರಿತು ಕಾನೂನು ಹೋರಾಟ ನಡೆಸಿದ್ದು, ನ್ಯಾಯಾಲಯದ ಆದೇಶದಂತೆ ರವಿವಾರ ಕಾಂಪೌಂಡ್ ತೆರವು ಕಾರ್ಯ ಕೈಗೊಳ್ಳಲಾಗಿದೆ ಎಂದು ಸ್ಪಷ್ಟಪಡಿಸಿದರು. ಬೆಳ್ಳಂಬೆಳಗ್ಗೆ ನಡೆದ ಈ ಕಾರ್ಯಾಚರಣೆಯಿಂದ ವಿದ್ಯಾನಗರ ಪ್ರದೇಶದಲ್ಲಿ ಕೆಲಕಾಲ ಗೊಂದಲ ಉಂಟಾಗಿದ್ದು, ಸ್ಥಳಕ್ಕೆ ಸಾರ್ವಜನಿಕರು ಹಾಗೂ ಇತರರು ಆಗಮಿಸಿದ್ದರು. ಈ ಘಟನೆ ನಗರದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿದ್ದು, ಮುಂದಿನ ಕಾನೂನು ಪ್ರಕ್ರಿಯೆಗಳ ಬಗ್ಗೆ ಗಮನ ಸೆಳೆಯುತ್ತಿದೆ.

ವಾರ್ತಾ ಭಾರತಿ 5 Jan 2026 12:07 am

ವೆನೆಜುವೆಲಾ ಮೇಲೆ ಅಮೆರಿಕ ದಾಳಿ: ಭಾರತದ ‘ನಯರಾ’ ಪೆಟ್ರೋಲ್ ಬಂಕುಗಳಿಗೆ ಅನುಕೂಲ! ಜೊತೆಗೆ ಬರಲಿದೆ 9 ಸಾವಿರ ಕೋಟಿ ರೂ.!

ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ವೆನೆಜುವೆಲಾದ ಅಧ್ಯಕ್ಷ ನಿಕೋಲಸ್ ಮದುರೊ ಅವರನ್ನು ಬಂಧಿಸಿದ್ದಾರೆ. ಈ ಕಾರ್ಯಾಚರಣೆಯ ಹಿಂದಿನ ಮುಖ್ಯ ಕಾರಣ ತೈಲ ಎಂದು ಟ್ರಂಪ್ ಹೇಳಿದ್ದಾರೆ. ವೆನೆಜುವೆಲಾದಲ್ಲಿ ಕೇವಲ ಶೇಕಡಾ 1 ರಷ್ಟು ತೈಲ ಹೊರತೆಗೆಯಲಾಗುತ್ತಿದೆ. ಅಮೆರಿಕಾದ ಹೂಡಿಕೆ ಉತ್ಪಾದನೆ ಹೆಚ್ಚಿಸಿದರೆ ಜಾಗತಿಕ ತೈಲ ಬೆಲೆಗಳ ಮೇಲೆ ಪರಿಣಾಮ ಬೀರಬಹುದು.

ವಿಜಯ ಕರ್ನಾಟಕ 4 Jan 2026 11:58 pm

Arsikere | ಹಾರನಹಳ್ಳಿ ಮಸೀದಿ ಉದ್ಘಾಟಿಸಿದ ಕೋಡಿಮಠ ಸ್ವಾಮೀಜಿ

ಅರಸೀಕೆರೆ : ತಾಲೂಕಿನ ಹಾರನಹಳ್ಳಿ ಗ್ರಾಮದಲ್ಲಿ ಮಜ್ಜಿದ್ ಎ ಅಕ್ಸಾ ಉದ್ಘಾಟನೆಯನ್ನು ಕೋಡಿಮಠ ಕ್ಷೇತ್ರದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಉದ್ಘಾಟಿಸಿದ್ದಾರೆ. ಗ್ರಾಮದ ಸರ್ವ ಧರ್ಮದವರು ಮಸೀದಿ ದರ್ಶನವನ್ನು ಮಾಡಿ, ಸಹಭೋಜನ ಮಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಕೋಡಿಮಠ ಶ್ರೀ ಕ್ಷೇತ್ರದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ, ಮಸೀದಿ, ಮಂದಿರ, ಚರ್ಚ್ ಎಂಬವು ಕೇವಲ ಧಾರ್ಮಿಕ ಕಟ್ಟಡಗಳಲ್ಲ. ಅವು ಮಾನವೀಯತೆಯನ್ನು ಬೆಳೆಸುವ ಪವಿತ್ರ ಕೇಂದ್ರಗಳಾಗಿವೆ. ಧರ್ಮಗಳು ಬೇರೆಬೇರೆ ಇದ್ದರೂ ನಮ್ಮ ಗುರಿ ಒಂದೇ ಶಾಂತಿ, ಸಹಬಾಳ್ವೆ ಮತ್ತು ಮಾನವ ಕಲ್ಯಾಣ. ಹಾರನಹಳ್ಳಿ ಗ್ರಾಮದಲ್ಲಿ ಮಜ್ಜಿದ್ ಎ ಅಕ್ಸಾ ಉದ್ಘಾಟನೆ ಭಾವೈಕ್ಯತೆಗೆ ಹೊಸ ಸಂದೇಶ ನೀಡಿದೆ. ಎಲ್ಲ ಧರ್ಮದವರು ಪರಸ್ಪರ ಗೌರವದಿಂದ ಬದುಕಿದರೆ ಸಮಾಜ ಇನ್ನಷ್ಟು ಬಲಿಷ್ಠವಾಗುತ್ತದೆ’’ ಎಂದು ಹೇಳಿದರು. ಮಾಜಿ ಕೇಂದ್ರ ಸಚಿವ ಸಿ.ಎಂ. ಇಬ್ರಾಹಿಂ, ಶಾಸಕ ಹಾಗೂ ರಾಜ್ಯ ಗೃಹ ನಿರ್ಮಾಣ ಮಂಡಳಿ ಅಧ್ಯಕ್ಷ ಶಿವಲಿಂಗೇಗೌಡ, ಸಂಸದ ಶ್ರೇಯಸ್ ಪಟೇಲ್, ಅರಸೀಕೆರೆ ನಗರಸಭೆ ಮಾಜಿ ಅಧ್ಯಕ್ಷ ಸಮಿಉಲ್ಲಾ, ಗ್ರಾಮದ ಹಿರಿಯ ಕರೀಂ ಸಾಬ್ ಮಾತನಾಡಿದರು. ಮಸೀದಿ ಅಧ್ಯಕ್ಷ ಮುಹಮ್ಮದ್ ಅತಾವುಲ್ಲಾ ಕಾರ್ಯದರ್ಶಿ ಮುಬಾರಕ್ ಪಾಶ, ಜಂಟಿ ಕಾರ್ಯದರ್ಶಿ ನವಾಸ್, ಮತ್ತು ಪದಾಧಿಕಾರಿಗಳು, ತಾ ಪಂ ಮಾಜಿ ಅಧ್ಯಕ್ಷ ಶಿವಮೂರ್ತಿ, ತಾ ಪಂ ಮಾಜಿ ಸದಸ್ಯ ಧರ್ಮ ಶೇಖರ್, ಮಾಜಿ ಜಿ ಪಂ ಸದಸ್ಯ ಬಿಳಿ ಚೌಡಯ್ಯ, ಶುಂಟಿ ಉದ್ಯಮಿ ಮುನ್ನಾ ಪಿಜಿಡಿ , ಕಾಂಗ್ರೆಸ್ ಹಿರಿಯ ಮುಖಂಡರಾದ ಅಬ್ದುಲ್ ಹಾದಿ, ಖಡಕಡಿ ಪೀರ್ ಸಾಬ್, ಅಬ್ದುಲ್ ಸಮದ್, ಜಮಾಲುದ್ದೀನ್, ಮುಂತಾದವರು ಇದ್ದರು.

ವಾರ್ತಾ ಭಾರತಿ 4 Jan 2026 11:55 pm

ಕೆಂಪುಕೋಟೆ ಸ್ಫೋಟ ಪ್ರಕರಣ | ಪಾಕಿಸ್ತಾನಿ ಏಜೆಂಟ್‌ ಗಳನ್ನು ಸಂಪರ್ಕಿಸಲು ʼghostʼ ಸಿಮ್ ಬಳಕೆ: ವರದಿ

ಹೊಸದಿಲ್ಲಿ, ಜ.4: ನ. 10ರಂದು ನಡೆದ ಕೆಂಪುಕೋಟೆ ಬಾಂಬ್ ಸ್ಫೋಟ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಿಗಳು ಪಾಕಿಸ್ತಾನದ ಗುಪ್ತಚರ ಏಜೆಂಟ್‌ಗಳನ್ನು ಸಂಪರ್ಕಿಸಲು ʼghostʼ ಸಿಮ್ ಕಾರ್ಡ್‌ಗಳು ಹಾಗೂ ಎನ್‌ಕ್ರಿಪ್ಟ್ ಮಾಡಲಾದ ಸಂವಹನ ಆ್ಯಪ್‌ ಗಳನ್ನು ಬಳಸಿದ್ದರೆಂದು ತನಿಖೆಯಿಂದ ತಿಳಿದುಬಂದಿದೆ ಎಂದು ಪೊಲೀಸ್ ಅಧಿಕಾರಿಗಳು ರವಿವಾರ ತಿಳಿಸಿದ್ದಾರೆ. ಉನ್ನತ ಶಿಕ್ಷಣ ಪಡೆದ ಸುಶಿಕ್ಷಿತ ವೈದ್ಯರೂ ಸೇರಿ ಹಲವು ಮಂದಿ ಈ ಪ್ರಕರಣದಲ್ಲಿ ಭಾಗಿಯಾಗಿದ್ದರು. ತನಿಖೆಯಲ್ಲಿ ಬೆಳಕಿಗೆ ಬಂದ ಮಾಹಿತಿಯ ಆಧಾರದಲ್ಲಿ, ದೂರಸಂಪರ್ಕ ಇಲಾಖೆಯು ಕಳೆದ ವರ್ಷದ ನವೆಂಬರ್ 28ರಂದು ಮಹತ್ವದ ನಿರ್ದೇಶನ ಹೊರಡಿಸಿದ್ದು, ವಾಟ್ಸ್‌ಆ್ಯಪ್, ಟೆಲಿಗ್ರಾಮ್ ಮತ್ತು ಸಿಗ್ನಲ್‌ನಂತಹ ಆ್ಯಪ್ ಆಧಾರಿತ ಸಂವಹನ ಸೇವೆಗಳು ಮೊಬೈಲ್ ಫೋನ್‌ನಲ್ಲಿರುವ ಭೌತಿಕ ಸಿಮ್ ಕಾರ್ಡ್‌ಗೆ ನಿರಂತರವಾಗಿ ಸಂಪರ್ಕ ಹೊಂದಿರಬೇಕು ಎಂದು ಸೂಚಿಸಿದೆ. ಭದ್ರತಾ ಸಂಸ್ಥೆಗಳ ಕಣ್ತಪ್ಪಿಸಲು ಮುಝಮ್ಮಿಲ್ ಗ್ಯಾನೀ, ಅದೀಲ್ ರಾಥರ್ ಸೇರಿದಂತೆ ಆರೋಪಿಗಳು ‘ಡ್ಯುಯಲ್ ಫೋನ್’ ತಂತ್ರವನ್ನು ಬಳಸಿಕೊಂಡಿದ್ದರು. ಇವರು ʼghostʼ ಸಿಮ್ ಕಾರ್ಡ್‌ಗಳನ್ನು ಅಂತರ್ಜಾಲ ತಾಣಗಳ ಮೂಲಕ ಪಡೆದುಕೊಂಡಿದ್ದರು ಎಂದು ತನಿಖೆಯ ವೇಳೆ ಗೊತ್ತಾಗಿದೆ. ಕೆಂಪುಕೋಟೆ ಸಮೀಪ ಸ್ಫೋಟಕ ಸಾಧನಗಳನ್ನು ಹೊತ್ತೊಯ್ಯುತ್ತಿದ್ದಾಗ ಮೃತಪಟ್ಟ ಡಾ. ಉಮರ್ ಉನ್ ನಬಿ ಸೇರಿದಂತೆ ಪ್ರತಿಯೊಬ್ಬ ಆರೋಪಿಯೂ ಎರಡು ಅಥವಾ ಮೂರು ಮೊಬೈಲ್ ಫೋನ್‌ಗಳನ್ನು ಹೊಂದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ತಮ್ಮ ದಿನನಿತ್ಯದ ಖಾಸಗಿ ಹಾಗೂ ವೃತ್ತಿಪರ ಬಳಕೆಗೆ ಸ್ವಂತ ಹೆಸರಿನಲ್ಲಿ ಖರೀದಿಸಿದ ಸಿಮ್ ಬಳಸುತ್ತಿದ್ದ ಆರೋಪಿಗಳು, ಮತ್ತೊಂದು ಸಿಮ್ ಅನ್ನು ‘ಉಕಾಸ’, ‘ಫೈಝಾನ್’, ‘ಹಶ್ಮಿ’ ಎಂಬ ನಾಮಧೇಯಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದ ಪಾಕಿಸ್ತಾನಿ ಏಜೆಂಟ್‌ಗಳನ್ನು ಸಂಪರ್ಕಿಸಲು ಬಳಸಿದ್ದರು. ಈ ʼghostʼ ಸಿಮ್ ಕಾರ್ಡ್‌ಗಳನ್ನು ಸಂಶಯಕ್ಕೆ ಒಳಗಾಗದ ನಾಗರಿಕರ ಆಧಾರ್ ವಿವರಗಳನ್ನು ದುರ್ಬಳಕೆ ಮಾಡಿಕೊಂಡು ಖರೀದಿಸಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದೇ ಪ್ರಕರಣಕ್ಕೆ ಸಂಬಂಧಿಸಿ, ನಕಲಿ ಆಧಾರ್ ಕಾರ್ಡ್ ಬಳಸಿ ಸಿಮ್ ವಿತರಿಸುತ್ತಿದ್ದ ಪ್ರತ್ಯೇಕ ಜಾಲವನ್ನೂ ಜಮ್ಮು–ಕಾಶ್ಮೀರ ಪೊಲೀಸರು ಭೇದಿಸಿದ್ದಾರೆ.

ವಾರ್ತಾ ಭಾರತಿ 4 Jan 2026 11:48 pm

Hoskote | ನಿಧಿ ಆಸೆಗಾಗಿ ಮಗುವಿನ ಬಲಿಗೆ ಯತ್ನ?

ತಳ ಮಹಡಿಯಲ್ಲಿ ಅಗೆದು ಗುಂಡಿ ತೋಡಿರುವುದು ಪತ್ತೆ!

ವಾರ್ತಾ ಭಾರತಿ 4 Jan 2026 11:47 pm

Venezuelaದ ಮೇಲೆ ಅಮೆರಿಕ ವಾಯುದಾಳಿ: ವಿದ್ಯುತ್ ಸ್ಥಗಿತದಿಂದ ಕ್ಯಾರಕಾಸ್‌ನಲ್ಲಿರುವ ಭಾರತೀಯರು ಸಂಕಷ್ಟದಲ್ಲಿ

ಕ್ಯಾರಕಾಸ್ (ವೆನೆಝುವೆಲಾ): ಕ್ಯಾರಕಾಸ್ ಹಾಗೂ ಅದರ ಸುತ್ತಮುತ್ತಲಿನ ನಗರಗಳ ಮೇಲೆ ಅಮೆರಿಕ ವಾಯು ದಾಳಿ ನಡೆಸಿದ ಹಿನ್ನೆಲೆಯಲ್ಲಿ, ಅಲ್ಲಿರುವ ಭಾರತೀಯರು ತೀವ್ರ ಆತಂಕದ ಸ್ಥಿತಿಯಲ್ಲಿ ದಿನ ಕಳೆಯುತ್ತಿದ್ದಾರೆ ಎಂದು India Today ವರದಿ ಮಾಡಿದೆ. ಕ್ಯಾರಕಾಸ್ ಮತ್ತು ಅಕ್ಕಪಕ್ಕದ ಪ್ರದೇಶಗಳ ಮೇಲೆ ಅಮೆರಿಕ ವಾಯುದಾಳಿ ನಡೆಸಿದ್ದು, ವೆನೆಝುವೆಲಾದ ಅಧ್ಯಕ್ಷ ನಿಕೊಲಾಸ್ ಮಡುರೊ ಅವರನ್ನು ವಶಕ್ಕೆ ಪಡೆದು ನ್ಯೂಯಾರ್ಕ್‌ಗೆ ಕರೆದೊಯ್ದಿದೆ. ಈ ದಾಳಿಯಿಂದ ಕ್ಯಾರಕಾಸ್‌ನ ಪ್ರಮುಖ ಮೂಲಸೌಕರ್ಯಗಳು ಹಾಗೂ ವಿದ್ಯುತ್ ಗ್ರಿಡ್‌ಗಳಿಗೆ ಗಂಭೀರ ಸ್ವರೂಪದ ಹಾನಿಯಾಗಿದೆ. ಪರಿಣಾಮವಾಗಿ ವೆನೆಝುವೆಲಾ ರಾಜಧಾನಿಯ ಬಹುತೇಕ ಭಾಗಗಳು ಸಂಪೂರ್ಣ ಕತ್ತಲಲ್ಲಿ ಮುಳುಗಿವೆ. ಸಂವಹನ ಜಾಲಗಳು ತೀವ್ರ ವ್ಯತ್ಯಯಕ್ಕೆ ಒಳಗಾಗಿದ್ದು, ಬೀದಿಗಳು ನಿರ್ಜನವಾಗಿವೆ. ಅಂಗಡಿ–ಮುಂಗಟ್ಟುಗಳನ್ನು ಮುಚ್ಚಲಾಗಿದ್ದು, ಸಾರ್ವಜನಿಕ ಚಟುವಟಿಕೆಗಳು ಸಂಪೂರ್ಣವಾಗಿ ಸ್ಥಗಿತಗೊಂಡಿವೆ. ದೇಶದ ಮುಖ್ಯಸ್ಥನಿಲ್ಲದ ಸ್ಥಿತಿಯಲ್ಲಿ ವೆನೆಝುವೆಲಾ ಅತಂತ್ರ ಪರಿಸ್ಥಿತಿಗೆ ತಲುಪಿದೆ. ಲ್ಯಾಟಿನ್ ಅಮೆರಿಕದ ಈ ದೇಶದಲ್ಲಿ ವ್ಯಾಪಕ ಪ್ರಮಾಣದಲ್ಲಿ ಮೂಲಭೂತ ಸೌಕರ್ಯಗಳಿಗೆ ಸಂಭವಿಸಿರುವ ಹಾನಿಯ ಕುರಿತು, ಕ್ಯಾರಕಾಸ್‌ನಲ್ಲಿ ನೆಲೆಸಿರುವ ಭಾರತೀಯ ಸಮುದಾಯದ ಸದಸ್ಯರಾದ ಸುನೀಲ್ ಮಲ್ಹೋತ್ರಾ ವಿವರಿಸಿದ್ದಾರೆ. ಅಮೆರಿಕದ ವಾಯು ದಾಳಿಯ ಪರಿಣಾಮವಾಗಿ ಆಹಾರಕ್ಕಾಗಿ ದೊಡ್ಡ ಪ್ರಮಾಣದ ಸರತಿ ಸಾಲುಗಳು ನಿರ್ಮಾಣವಾಗಿದ್ದು, ಜನರಲ್ಲಿ ಭಯ ಮತ್ತು ಅನಿಶ್ಚಿತತೆಯ ವಾತಾವರಣ ಮನೆ ಮಾಡಿದೆ ಎಂದು ಅವರು ತಿಳಿಸಿದ್ದಾರೆ. “ಇಲ್ಲಿ ಎಲ್ಲೆಡೆ ಸಂಪೂರ್ಣ ವಿನಾಶ ಸಂಭವಿಸಿಲ್ಲ. ಕ್ಯಾರಕಾಸ್‌ನಲ್ಲಿರುವ ವಾಯು ನಿಲ್ದಾಣದ ಮೇಲೆ ದಾಳಿ ನಡೆದಿದೆ. ಅಲ್ಲದೆ ನಗರದಿಂದ ಸುಮಾರು 100 ಕಿಲೋಮೀಟರ್ ದೂರದಲ್ಲಿರುವ ದೇಶದ ಅತ್ಯಂತ ಬೃಹತ್ ವಾಯು ನೆಲೆಯ ಮೇಲೂ ದಾಳಿ ನಡೆಸಲಾಗಿದೆ. ಪ್ಯೂರ್ಟೊ ತಿಯುನಾ ಪ್ರದೇಶದಲ್ಲಿ ಅತಿ ಹೆಚ್ಚು ಹಾನಿಯಾಗಿದೆ. ಅಲ್ಲಿಯೇ ದೊಡ್ಡ ಪ್ರಮಾಣದ ನಷ್ಟ ಉಂಟಾಗಿದೆ,” ಎಂದು ಅವರು ತಿಳಿಸಿದ್ದಾರೆ. ಈ ದಾಳಿಗಳ ಬೆನ್ನಲ್ಲೇ ಪ್ರಮುಖ ಸಂಸ್ಥೆಗಳು ಹಾಗೂ ಅಂಗಡಿ–ಮುಂಗಟ್ಟುಗಳನ್ನು ಮುಚ್ಚಲಾಗಿದೆ. ಸಾರ್ವಜನಿಕ ಸಾರಿಗೆ ಸೇವೆಗಳನ್ನು ಅಮಾನತುಗೊಳಿಸಲಾಗಿದೆ. ಇದರಿಂದ ಇಡೀ ನಗರ ಸ್ತಬ್ಧ ಸ್ಥಿತಿಗೆ ತಲುಪಿದೆ. ಜನರು ಮನೆಗಳೊಳಗೇ ಉಳಿಯುವಂತಾಗಿದ್ದು, ಎಲ್ಲೆಡೆಯೂ ಅನಿಶ್ಚಿತತೆ ಆವರಿಸಿದೆ.ಹಾಗೂ ಅನಿಶ್ಚಿತತೆ ಹೆಚ್ಚಾಗಿದೆ ಎಂದು ತಿಳಿಸಿದ್ದಾರೆ.

ವಾರ್ತಾ ಭಾರತಿ 4 Jan 2026 11:09 pm

Venezuela ಕುರಿತು ಗಂಭೀರ ಕಳವಳ ವ್ಯಕ್ತಪಡಿಸಿದ ಕಾಂಗ್ರೆಸ್

ಎಡಪಕ್ಷಗಳಿಂದ ಅಮೆರಿಕದ ಆಕ್ರಮಣ ನಡೆಗೆ ಖಂಡನೆ

ವಾರ್ತಾ ಭಾರತಿ 4 Jan 2026 11:05 pm

ಪ್ರತಿ ಜಿಲ್ಲೆಯಲ್ಲೂ ಸಾಧಕರ ವಸ್ತುಸಂಗ್ರಹಾಲಯ: ಸಿಎಂ ಸಿದ್ದರಾಮಯ್ಯ

ಬೆಂಗಳೂರಿನ ಕರ್ನಾಟಕ ಚಿತ್ರಕಲಾ ಪರಿಷತ್ ಆವರಣದಲ್ಲಿ ನಡೆದ 23ನೇ ಚಿತ್ರಸಂತೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಿಎಂ ಸಿದ್ದರಾಮಯ್ಯ ಅವರು ಮಹತ್ವದ ವಿಚಾರವನ್ನು ಹಂಚಿಕೊಂಡರು. ಪ್ರತಿ ಜಿಲ್ಲೆಯಲ್ಲಿಯೂ ಸಾಧಕರ ವಸ್ತುಸಂಗ್ರಹಾಲಯ ನಿರ್ಮಾಣ ಮಾಡಬೇಕು ಎನ್ನುವ ಬೇಡಿಕೆ ಇದೆ. ನಮ್ಮ ಸರ್ಕಾರ ಅದನ್ನು ಸಕಾರಾತ್ಮಕವಾಗಿ ಸ್ವೀಕಾರ ಮಾಡಲಿದೆ ಎಂದು ಸುಳಿವು ನೀಡಿದರು. ಮುಖ್ಯಮಂತ್ರಿಯಾಗಿ 8ನೇ ಬಾರಿಗೆ ಚಿತ್ರ ಸಂತೆಯಲ್ಲಿ ಭಾಗವಹಿಸುತ್ತಿದ್ದೇನೆ ಎನ್ನುವುದು

ಒನ್ ಇ೦ಡಿಯ 4 Jan 2026 11:05 pm

ಸಿಎಂ ಸಿದ್ದರಾಮಯ್ಯ ತವರಲ್ಲಿ ದಲಿತ ಮುಖ್ಯಮಂತ್ರಿ ಕೂಗು; ಬೇಡಿಕೆ ಈಡೇರಿಸುವಂತೆ ಪ್ರತಿಭಟನೆ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರು ಜಿಲ್ಲೆ ಮೈಸೂರಿನಲ್ಲಿ ದಲಿತ ಮುಖ್ಯಮಂತ್ರಿ ಸ್ಥಾನಕ್ಕಾಗಿ ಕೂಗು ಕೇಳಿಬಂದಿದೆ. ಇದಕ್ಕಾಗಿ ಹೋರಾಟ ರೂಪಿಸಲು ನಿರ್ಧರಿಸಲಾಗಿದೆ. ದಲಿತರು ಕಾಂಗ್ರೆಸ್ ಪಕ್ಷಕ್ಕೆ ಜೀತ ಮಾಡಲಿಕ್ಕಿಲ್ಲ ಎಂದು ಜ್ಞಾನ ಪ್ರಕಾಶ ಸ್ವಾಮೀಜಿ ಹೇಳಿದ್ದಾರೆ. ದಲಿತರಿಗೆ ಮುಖ್ಯಮಂತ್ರಿ ಸ್ಥಾನ ನೀಡದಿದ್ದರೆ ಪಕ್ಷಕ್ಕೆ ಆಗುವ ಪರಿಣಾಮದ ಬಗ್ಗೆ ಎಚ್ಚರಿಕೆ ನೀಡಲಾಗಿದೆ. ಫೆಬ್ರವರಿ 15-16 ರಂದು ಬೆಂಗಳೂರಿನಲ್ಲಿಬೃಹತ್ ಸಭೆ ಆಯೋಜಿಸಲಾಗುವುದು.

ವಿಜಯ ಕರ್ನಾಟಕ 4 Jan 2026 10:48 pm

Gonikoppa | ಚಾಲಕ ನವಾಝ್ ಸಾವು ಪ್ರಕರಣ; ಮಹಿಳೆ ಸೇರಿ ಐವರು ಆರೋಪಿಗಳ ಬಂಧನ

ಮಡಿಕೇರಿ : ಗೋಣಿಕೊಪ್ಪಲಿನ ಹರಿಶ್ಚಂದ್ರಪುರದ ನಿವಾಸಿ ಚಾಲಕ ವೃತ್ತಿಯ ನವಾಝ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಮಹಿಳೆ ಸೇರಿದಂತೆ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಪೂರ್ಣಚಂದ್ರ ತೇಜಸ್ವಿ, ಕಾವ್ಯಾ, ಅಶೋಕ್, ಕುಮಾರ್ ಹಾಗೂ ಮಹೇಂದ್ರ ಬಂಧಿತ ಆರೋಪಿಗಳು. ಡಿ.31ರಂದು ರಾತ್ರಿ ತನ್ನ ಕಾರಿನಲ್ಲಿ ಕುಂದಾ ಗ್ರಾಮಕ್ಕೆ ತೆರಳಿದ್ದ ನವಾಝ್ ಪ್ರಜ್ಞಾಹೀನ ಸ್ಥಿತಿಯಲ್ಲಿ ರಸ್ತೆಯಲ್ಲಿ ಪತ್ತೆಯಾಗಿದ್ದರು. ಆಸ್ಪತ್ರೆಗೆ ದಾಖಲಿಸಿದ ಸಂದರ್ಭ ನವಾಝ್ ಮೃತಪಟ್ಟಿರುವುದಾಗಿ ತಿಳಿದು ಬಂದಿತ್ತು. ಈ ಕುರಿತು ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡು ಐವರನ್ನು ಬಂಧಿಸಿದ್ದಾರೆ. ಕುಂದಾ ಗ್ರಾಮಕ್ಕೆ ನಡುರಾತ್ರಿಯ ವೇಳೆ ತೆರಳಿದ್ದ ನವಾಝ್ ಮತ್ತೊಬ್ಬ ಚಾಲಕ ಪೂರ್ಣಚಂದ್ರ ತೇಜಸ್ವಿಯ ಮನೆ ಬಾಗಿಲು ಬಡಿದು ಆತನ ಪತ್ನಿ ಕಾವ್ಯಾಳ ಹೆಸರು ಕರೆದಿದ್ದ ಎಂದು ಹೇಳಲಾಗಿದೆ. ಈ ಸಂದರ್ಭ ಮನೆಯಿಂದ ಹೊರ ಬಂದ ತೇಜಸ್ವಿ ನವಾಝ್‌ನ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದ ಎನ್ನಲಾಗಿದೆ. ಅಲ್ಲದೆ ಅಶೋಕ್, ಕುಮಾರ್ ಹಾಗೂ ಮಹೇಂದ್ರನ ಸಹಕಾರ ಪಡೆದು ಹಲ್ಲೆ ನಡೆಸಿದ್ದ. ಹಲ್ಲೆಯಿಂದ ಪ್ರಜ್ಞಾಹೀನ ಸ್ಥಿತಿಗೆ ತಲುಪಿದ ನವಾಝ್‌ನನ್ನು ರಸ್ತೆ ಬದಿ ಬಿಟ್ಟು, ಆತನ ಕಾರನ್ನು ರಸ್ತೆ ಬದಿಯ ಚರಂಡಿಗೆ ತಳ್ಳಿ ಪ್ರಕರಣವನ್ನು ಅಪಘಾತ ಎಂದು ಪ್ರತಿಬಿಂಬಿಸುವ ಪ್ರಯತ್ನ ಮಾಡಿದ್ದರು ಎಂದು ಆರೋಪಿಸಲಾಗಿದೆ. ವಿರಾಜಪೇಟೆ ಡಿವೈಎಸ್ಪಿ ಮಹೇಶ್ ಕುಮಾರ್ ಮಾರ್ಗ ದರ್ಶನದಲ್ಲಿ ಗೋಣಿಕೊಪ್ಪ ವೃತ್ತ ನಿರೀಕ್ಷಕ ಶಿವರಾಜ್ ಮುಧೋಳ್, ಗೋಣಿಕೊಪ್ಪ ಠಾಣಾಧಿಕಾರಿ ಪ್ರದೀಪ್ ಕುಮಾರ್, ಪೊನ್ನಂಪೇಟೆ ಠಾಣಾಧಿಕಾರಿ ನವೀನ್ ಕುಮಾರ್ ಹಾಗೂ ಸಿಬ್ಬಂದಿ ಕಾರ್ಯಾಚರಣೆ ನಡೆಸಿದರು.

ವಾರ್ತಾ ಭಾರತಿ 4 Jan 2026 10:44 pm

NRI ಪ್ರವಾಸಿಗಳ್ ಕಲ್ಲೇಗ: ವಾರ್ಷಿಕ ಮಹಾಸಭೆ; ನೂತನ ಸಮಿತಿ ರಚನೆ

ಮಂಗಳೂರು: NRI ಪ್ರವಾಸಿಗಳ್ ಕಲ್ಲೇಗ ಜಮಾಅತ್ ಇದರ ವಾರ್ಷಿಕ ಮಹಾಸಭೆ ಇತ್ತೀಚೆಗೆ ನಡೆಯಿತು. ಕಲ್ಲೇಗ ಮಸೀದಿಯ ಖತೀಬರಾದ ಹಸನ್ ಹರ್ಷದಿ ದುಆ ನೆರವೇರಿಸಿದರು. ಸಭೆಯ ಅಧ್ಯಕ್ಷತೆಯನ್ನು ಮಮ್ಮುಚ್ಚ ಬೊಳ್ವಾರ್ ವಹಿಸಿದರು. ಸಮಿತಿಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಹಮೀದ್ ಕಬಕ ರವರು ವಾರ್ಷಿಕ ವರದಿ ವಾಚಿಸಿದರು. ಕೋಶಾಧಿಕಾರಿ ಬಾತಿಸ್ ಕಬಕ ರವರು ಲೆಕ್ಕಪತ್ರ ವನ್ನು ಮಂಡನೆ ಮಾಡಿದರು. ಬಳಿಕ ನೂತನ ಸಮಿತಿ ರಚನೆ ಮಾಡಲಾಯಿತು. ಅಧ್ಯಕ್ಷರಾಗಿ ಇಬ್ರಾಹಿಂ ಬಾತಿಶ್ ಕಬಕ, ಪ್ರಧಾನ ಕಾರ್ಯದರ್ಶಿಯಾಗಿ ಸಿದ್ದೀಕ್ ಕಲೆಂಬಿ, ಕೋಶಾಧಿಕಾರಿ ಅಕ್ಕೀ (ರಫೀಕ್ ಮುರ), ಉಪಾಧ್ಯಕ್ಷರುಗಳಾಗಿ ಅಶ್ರಫ್ ಬಿ. ಎಮ್ ಬೊಳ್ವಾರ್ ಮತ್ತು ಮುಸ್ತಫಾ ಬೊಳ್ವಾರ್, ಜೊತೆ ಕಾರ್ಯದರ್ಶಿಯಾಗಿ ರಶೀದ್ ಕಂಬಳ ಬೆಟ್ಟು , ಮತ್ತು ರಝಾಕ್ ಕಬಕ, ಸಂಘಟನಾ ಕಾರ್ಯ ದರ್ಶಿ ಅಬ್ದುಲ್ ಹಮೀದ್ ಕಬಕ ಆಯ್ಕೆಯಾದರು. ಕಾರ್ಯಕಾರಿ ಸಮಿತಿಯ ಸದಸ್ಯರಾಗಿಅದ್ದು ಪೊಳ್ಯ, ಅಝರ್ ಮುರ , ಅನ್ಸಾರ್ ಮುರ , ಶಾಫಿ ಮಂಜಲ್ಪಡ್ಪು , ಇಬ್ರಾಹಿಂ ಕಲ್ಲೇಗ , ಮೊಹಮ್ಮದ್ ಅಶ್ರಫ್ ಮುರ , ಮುಸ್ತಫಾ ಬೊಳ್ವಾರ್ , ಝುಬೈರ್ ಮುರ ಇವರನ್ನು ಆಯ್ಕೆ ಮಾಡಲಾಯಿತು. ಸಲಹೆ ಸಮಿತಿ ಸದಸ್ಯರಾಗಿ ಸುಲೈಮಾನ್ ಉಸ್ತಾದ್ , ಶಕೂರ್ ಹಾಜಿ , ಬಸೀರ್ ಹಾಜಿ , ಲತೀಫ್ ಹಾಜಿ , ಮಮ್ಮುಚ್ಚ ಬೊಳ್ವಾರ್ , ಹನೀಫ್ ಹಾಜಿ ಉದಯ , ಪಾರೂಕ್ ಮುರ , ಸಮದ್ ಕಲ್ಲೇಗ , ಮೊಹಿದುಚ್ಚ ಬೊಳ್ವಾರ್ , ಸಿದ್ದೀಕ್ ಕಲ್ಲೇಗ. ಇವರನ್ನು ಆಯ್ಕೆ ಮಾಡಲಾಯಿತು. ಇಕ್ಬಾಲ್ ನಗರ ವಂದಿಸಿದರು. ಕಾರ್ಯ ಕ್ರಮವನ್ನು ಹಮೀದ್ ಕಬಕ ರವರು ನಿರೂಪಿಸಿದರು. ಸುಲೈಮಾನ್ ಉಸ್ತಾದರು ಕಿರಾಆತ್ ಪಾರಾಯಣ ಮಾಡಿದರು.

ವಾರ್ತಾ ಭಾರತಿ 4 Jan 2026 10:41 pm

ನಿಮಗೂ ಬಿಸಿ ಮುಟ್ಟಿಸುತ್ತೇವೆ: ಕೊಲಂಬಿಯಾ ಅಧ್ಯಕ್ಷರಿಗೆ ಟ್ರಂಪ್ ಎಚ್ಚರಿಕೆ

ವಾಷಿಂಗ್ಟನ್, ಜ.4: ವೆನೆಝುವೆಲಾ ಅಧ್ಯಕ್ಷ ನಿಕೋಲಾಸ್ ಮಡುರೊರನ್ನು ಸೆರೆಹಿಡಿದ ಕಾರ್ಯಾಚರಣೆಯ ಬೆನ್ನಲ್ಲೇ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೊಲಂಬಿಯಾ ಅಧ್ಯಕ್ಷ ಗುಸ್ತಾವೊ ಪೆಟ್ರೋಗೆ ಎಚ್ಚರಿಕೆ ಸಂದೇಶ ರವಾನಿಸಿರುವುದು ಲ್ಯಾಟಿನ್ ಅಮೆರಿಕಾದ್ಯಂತ ಉದ್ವಿಗ್ನತೆಯನ್ನು ಮತ್ತಷ್ಟು ಹೆಚ್ಚಿಸಿದೆ. ‘ಅವರು ಕೊಕೈನ್ ತಯಾರಿಸಿ ಅಮೆರಿಕಾಕ್ಕೆ ಕಳುಹಿಸುತ್ತಿದ್ದಾರೆ. ಆದ್ದರಿಂದ ಅವರು ನಮ್ಮ ಗುರಿಯಾಗಬಹುದು’ ಎಂದು ಪೆಟ್ರೋ ಅವರನ್ನು ಉಲ್ಲೇಖಿಸಿ ಸುದ್ದಿಗೋಷ್ಠಿಯಲ್ಲಿ ಟ್ರಂಪ್ ಹೇಳಿದ್ದಾರೆ. ಶನಿವಾರ ಬೆಳಗ್ಗೆ ನಡೆಸಿದ ಕಾರ್ಯಾಚರಣೆಯಲ್ಲಿ ಅಮೆರಿಕದ ಪಡೆ ವೆನೆಝುವೆಲಾದ ಮೇಲೆ ದಾಳಿ ನಡೆಸಿ ಅಧ್ಯಕ್ಷ ನಿಕೋಲಾಸ್ ಮಡುರೊ ಹಾಗೂ ಅವರ ಪತ್ನಿಯನ್ನು ಸೆರೆಹಿಡಿದಿದೆ. ಅಮೆರಿಕದ ಕಾರ್ಯಾಚರಣೆಯು ಲ್ಯಾಟಿನ್ ಅಮೆರಿಕಾದ ಸಾರ್ವಭೌಮತ್ವದ ಮೇಲಿನ ದಾಳಿಯಾಗಿದ್ದು ಇದು ಮಾನವೀಯ ಬಿಕ್ಕಟ್ಟಿಗೆ ಕಾರಣವಾಗಬಹುದು ಎಂದು ಪೆಟ್ರೋ ತೀವ್ರವಾಗಿ ಖಂಡಿಸಿದ್ದರು. ‘ಅಮೆರಿಕದ ಕಾರ್ಯಾಚರಣೆಯ ಬೆನ್ನಲ್ಲೇ ಸರಕಾರ ರಾಷ್ಟ್ರೀಯ ಭದ್ರತಾ ಸಭೆಯನ್ನು ನಡೆಸಿದ್ದು, ವೆನೆಝುವೆಲಾದಿಂದ ಬೃಹತ್ ಪ್ರಮಾಣದಲ್ಲಿ ನಿರಾಶ್ರಿತರು ದೇಶದೊಳಗೆ ನುಗ್ಗುವ ಸಾಧ್ಯತೆಯ ಹಿನ್ನೆಲೆಯಲ್ಲಿ ಕೊಲಂಬಿಯಾ–ವೆನೆಝುವೆಲಾ ಗಡಿಯುದ್ದಕ್ಕೂ ಹೆಚ್ಚುವರಿ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದೆ’ ಎಂದು ಅವರು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ. ಅಂತರಾಷ್ಟ್ರೀಯ ಮಧ್ಯಪ್ರವೇಶಕ್ಕೆ ಒತ್ತಾಯಿಸಿದ ಪೆಟ್ರೋ, ವೆನೆಝುವೆಲಾ ಹಾಗೂ ಈ ಪ್ರದೇಶದ ಮೇಲಿನ ಆಕ್ರಮಣವನ್ನು ವಿಶ್ವಸಂಸ್ಥೆ ಭದ್ರತಾ ಮಂಡಳಿ ಪರಿಹರಿಸಬೇಕು ಎಂದು ಆಗ್ರಹಿಸಿದ್ದಾರೆ.

ವಾರ್ತಾ ಭಾರತಿ 4 Jan 2026 10:33 pm

ರಾಜಕೀಯ ಲಾಭಕ್ಕಾಗಿ ಪರ್ಯಾಯವನ್ನು ವಿವಾದವನ್ನಾಗಿಸುವ ಪ್ರಯತ್ನ ಅಪಾಯಕಾರಿ: ಸುನೀಲ್ ಬಂಗೇರ

ಉಡುಪಿ: ಪರ್ಯಾಯ ಶ್ರೀ ಕೃಷ್ಣ ಮಠದಂತಹ ಪವಿತ್ರ ಧಾರ್ಮಿಕ ಉತ್ಸವವನ್ನು ರಾಜಕೀಯ ಲಾಭಕ್ಕಾಗಿ ವಿವಾದದ ಕೇಂದ್ರ ಬಿಂದುಗೊಳಿಸುವ ಪ್ರಯತ್ನ ಅತ್ಯಂತ ಅಪಾಯಕಾರಿ ಹಾಗೂ ಖಂಡನೀಯ. ಪರ್ಯಾಯದಂತಹ ಪವಿತ್ರ ಉತ್ಸವಗಳನ್ನು ರಾಜಕೀಯ ಕಿತ್ತಾಟದ ಅಖಾಡವನ್ನಾಗಿ ಮಾಡುವ ಪ್ರಯತ್ನವನ್ನು ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ತಕ್ಷಣ ನಿಲ್ಲಿಸಬೇಕು ಎಂದು ಮಟ್ಟು ವಿಷ್ಣುಮೂರ್ತಿ ದೇವಸ್ಥಾನದ ಆಡಳಿತ ಮೊಕ್ತೇಸರ ಸುನಿಲ್ ಡಿ. ಬಂಗೇರ ತಿಳಿಸಿದ್ದಾರೆ. ಈ ಸಂಬಂಧ ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ನೀಡಿರುವ ಹೇಳಿಕೆ ಶಾಂತಿ ಕಾಪಾಡುವ ಜವಾಬ್ದಾರಿಯುತ ನಡೆಗಿಂತಲೂ, ಸಮಾಜದಲ್ಲಿ ಗೊಂದಲ ಮತ್ತು ಧ್ರುವೀಕರಣ ಉಂಟುಮಾಡುವ ರಾಜಕೀಯ ಉದ್ದೇಶವನ್ನು ಸ್ಪಷ್ಟಪಡಿಸುತ್ತದೆ. ಜನಪ್ರತಿನಿಧಿಯಾಗಿ ನಡೆದುಕೊಳ್ಳಬೇಕಾದ ವ್ಯಕ್ತಿಯೊಬ್ಬರು, ಧಾರ್ಮಿಕ ವಿಷಯಗಳನ್ನು ತಪ್ಪಾಗಿ ವ್ಯಾಖ್ಯಾನಿಸಿ, ನಿರ್ದಿಷ್ಟ ಸಮುದಾಯವನ್ನು ಗುರಿಯಾಗಿಸಿಕೊಂಡು ಮಾತನಾಡುವುದು ಅಸಹಿಷ್ಣು ರಾಜಕೀಯ ಮನಸ್ಥಿತಿಯ ಪ್ರತಿಬಿಂಬ. ಇದು ಧರ್ಮ ರಕ್ಷಣೆ ಅಲ್ಲ; ಇದು ಧರ್ಮವನ್ನು ಬಳಸಿಕೊಂಡು ರಾಜಕೀಯ ಬೇಳೆ ಬೇಯಿಸುವ ನಾಚಿಕೆಗೇಡಿತನ. ಯಶ್ ಪಾಲ್ ಸುವರ್ಣ ಪರ್ಯಾಯದಂತಹ ಸಂವೇದನಾಶೀಲ ಸಂದರ್ಭವನ್ನು ಆಯ್ಕೆ ಮಾಡಿಕೊಂಡು ಈ ರೀತಿಯ ಹೇಳಿಕೆ ನೀಡಿರುವುದು, ಉದ್ದೇಶಪೂರ್ವಕವಾಗಿ ಸಮಾಜದಲ್ಲಿ ಆತಂಕ ಮತ್ತು ಅನುಮಾನ ಬಿತ್ತುವ ತಂತ್ರದ ಭಾಗವೇ ಎಂಬ ಅನುಮಾನಕ್ಕೆ ಕಾರಣವಾಗುತ್ತದೆ. ಶಾಂತಿ ಮತ್ತು ಸೌಹಾರ್ದ ಕಾಪಾಡಬೇಕಾದ ಶಾಸಕರಿಂದ ಇಂತಹ ಪ್ರಚೋದನಾತ್ಮಕ ಭಾಷೆ ಹೊರಬರುವುದು ಅತೀವ ದುರದೃಷ್ಟಕರ ಎಂದು ಅವರು ಟೀಕಿಸಿದರು. ಸಮಾಜದಲ್ಲಿ ಅಶಾಂತಿ ಉಂಟಾದಲ್ಲಿ ಅದರ ಸಂಪೂರ್ಣ ನೈತಿಕ ಮತ್ತು ಸಾಮಾಜಿಕ ಹೊಣೆಗಾರಿಕೆಯಿಂದ ಯಶ್ ಪಾಲ್ ಸುವರ್ಣ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ನಂತರದ ದಿನಗಳಲ್ಲಿ ನೀಡುವ ಸ್ಪಷ್ಟೀಕರಣಗಳು ಅಥವಾ ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳುವ ಹೇಳಿಕೆಗಳಿಗೆ ಶಾಂತಿಪ್ರಿಯ ಜನತೆ ಮರುಳಾಗುವುದಿಲ್ಲ ಎಂಬುದನ್ನು ಸ್ಪಷ್ಟವಾಗಿ ಹೇಳಬೇಕು. ಧಾರ್ಮಿಕ ಭಾವನೆಗಳನ್ನು ಕೆರಳಿಸಿ ರಾಜಕೀಯ ಲಾಭ ಪಡೆಯುವ ಇಂತಹ ಪ್ರಯತ್ನಗಳು ಮುಂದುವರಿದಲ್ಲಿ, ಸಮಾಜದ ಸಹನೆ ಮಿತಿಯನ್ನು ಮೀರುವ ದಿನ ದೂರವಿಲ್ಲ. ಶಾಂತಿ, ಸಂಪ್ರದಾಯ ಮತ್ತು ಸಹಬಾಳ್ವೆಯನ್ನು ಗೌರವಿಸುವ ಜನರು ಮೌನವಾಗಿರುತ್ತಾರೆ ಎಂದು ಯಾರೂ ತಪ್ಪಾಗಿ ಅಂದಾಜು ಮಾಡಬಾರದು. ಇದು ಯಾವುದೇ ವೈಯಕ್ತಿಕ ದ್ವೇಷದ ಹೇಳಿಕೆ ಅಲ್ಲ, ಇದು ಸಮಾಜದ ಶಾಂತಿ ಮತ್ತು ಸೌಹಾರ್ದವನ್ನು ಕಾಪಾಡುವ ದೃಷ್ಟಿಯಿಂದ ನೀಡುವ ಕಠಿಣ ಮತ್ತು ಅಂತಿಮ ಎಚ್ಚರಿಕೆ ಎಂದು ಸುನಿಲ್ ಬಂಗೇರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಾರ್ತಾ ಭಾರತಿ 4 Jan 2026 10:27 pm

ಕಾಪು: ಕೈಗಾರಿಕೆಗಾಗಿ ಸಾವಿರಾರು ಎಕರೆ; ಬಡವರ ಮನೆ ನಿವೇಶನಕ್ಕಿಲ್ಲ ಜಾಗ

ಕಾಪು, ಜ.4: ಯುಪಿಸಿಎಲ್, ಸುಜ್ಲಾನ್, ಐಎಸ್ಪಿಆರ್‌ಎಲ್ ಸೇರಿದಂತೆ ದೊಡ್ಡ ದೊಡ್ಡ ಕೈಗಾರಿಕಾ ಘಟಕಗಳ ಸ್ಥಾಪನೆಗೆ, ವಿಸ್ತರಣೆಗೆ ಸಾವಿರಾರು ಎಕರೆ ಭೂಮಿಯನ್ನು ನೀಡಿರುವ ಕಾಪು ತಾಲೂಕಿನಲ್ಲಿ, ಬಡವನೊಬ್ಬ ಸ್ವಂತ ಮನೆ ಕಟ್ಟಿಕೊಳ್ಳಲು ಆಶೆಪಟ್ಟರೆ ಸರಕಾರದ ಬಳಿ ಜಾಗದ ಕೊರತೆ ಅಥವಾ ಇಚ್ಛಾಶಕ್ತಿಯ ಕೊರತೆ ಕಂಡುಬರುತ್ತಿದೆ. ಹೀಗಾಗಿ ಕಾಪು ತಾಲೂಕಿನಲ್ಲಿ ಬಡವರಿಗೆ ಸೂರು ಕಲ್ಪಿಸಲು ನಿವೇಶನ ಇಲ್ಲದೆ ಸಾವಿರಾರು ಮಂದಿ ಅರ್ಜಿ ಸಲ್ಲಿಸಿ ಚಾತಕಪಕ್ಷಿಯಂತೆ ತಲೆಯ ಮೇಲೊಂದು ಸ್ವಂತ ಸೂರಿನ ಕನಸು ಕಾಣುತ್ತಾ ಹಲವು ವರ್ಷಗಳಿಂದ ಕಾಯುತಿದ್ದಾರೆ. ಕಾಪು ಪುರಸಭೆ ಹಾಗೂ 16 ಗ್ರಾಮ ಪಂಚಾಯಿತಿಯನ್ನು ಹೊಂದಿರುವ ಕಾಪು ತಾಲೂಕಿನಲ್ಲಿ ಒಟ್ಟು 3825 ಮಂದಿ ನಿವೇಶನ ರಹಿತರ ಪಟ್ಟಿ ಇದೆ. ಆದರೆ ನಿವೇಶನ ಹಂಚಲು ಜಾಗದ ಕೊರತೆ ಹಾಗೂ ಕೆಲವೊಂದು ತಾಂತ್ರಿಕ ಕಾರಣಗಳಿಂದ ಜಾಗ ನೀಡಲು ಆಗದೆ ಬಾಕಿಯಾಗಿದೆ. ನಿವೇಶನ ರಹಿತರ ವಿವರ: ಕಾಪು ಪುರಸಭೆಯಲ್ಲಿ-113, ಉಚ್ಚಿಲ ಬಡಾ ಗ್ರಾಪಂ-227, ಬೆಳಪು- 171, ಬೆಳ್ಳೆ- 363, ಹೆಜಮಾಡಿ- 225, ಇನ್ನಂಜೆ- 62, ಕಟಪಾಡಿ- 113, ಕೋಟೆ- 148, ಕುರ್ಕಾಲು- 170, ಕುತ್ಯಾರು- 97, ಮಜೂರು- 240, ಮುದರಂಗಡಿ- 173, ಪಡುಬಿದ್ರಿ- 663, ಪಲಿಮಾರು- 337, ಶಿರ್ವ- 258, ಎರ್ಮಾಳು ತೆಂಕ- 218, ಎಲ್ಲೂರು- 247 ಸೇರಿ ಒಟ್ಟು 3825 ನಿವೇಶನ ರಹಿತರಿದ್ದಾರೆ. ಇವರೆಲ್ಲರೂ ಹಲವು ವರ್ಷಗಳಿಂದ ನಿವೇಶನಕ್ಕಾಗಿ ಅರ್ಜಿ ಸಲ್ಲಿಸಿದ್ದರೂ ನಿವೇಶನ ಸಿಗದೆ ಇಂದು ಸಿಗಬಹುದು ನಾಳೆ ಸಿಗಬಹುದು ಎಂಬ ನಿರೀಕ್ಷೆ ಯಲ್ಲಿದ್ದಾರೆ. ಇವರು ಸಲ್ಲಿಸಿದ ಅರ್ಜಿಗಳ ಪರಿಶೀಲನೆ ನಡೆಸಿದ ಬಳಿಕ ಸೂಕ್ತ ನಿವೇಶನ ರಹಿತರ ಪಟ್ಟಿ ಅಧಿಕಾರಿಗಳು ಸಿದ್ಧಪಡಿಸಲಿದ್ದಾರೆ. ಎಲ್ಲೆಲ್ಲಿ ಜಾಗ: ನಿವೇಶನ ರಹಿತರಿಗೆ ಜಾಗ ನೀಡಲು ಬೆಳ್ಳೆಯ ಕಟ್ಟಿಂಗೇರಿಯಲ್ಲಿ ಐದು ಎಕರೆ ಜಾಗವಿದೆ. ಪಲಿಮಾರಿನಲ್ಲಿ ಐದು ಎಕರೆಯ ಜಾಗವಿದ್ದರೂ, ಇದರಲ್ಲಿ ನಂದಿಕೂರಿನಿಂದ ವಿವಿಧ ಕಡೆಗಳಿಗೆ ವಿದ್ಯುತ್ ಟವರ್ ಹಾಗೂ ತಂತಿಗಳ ಸಂಪರ್ಕ ಇರುವುದರಿಂದ ಈ ಸ್ಥಳವನ್ನು ಹೊರತು ಪಡಿಸಿ ಎರಡು ಎಕ್ರೆ ಜಾಗವನ್ನು ಗುರುತಿಸಲಾಗಿದೆ. ಇದರ ಸರ್ವೇ ಕಾರ್ಯ ಇನ್ನಷ್ಟೆ ಅಗಬೇಕಾಗಿದೆ. ಮುದರಂಗಡಿಯಲ್ಲೂ ಐದು ಎಕರೆ ಜಾಗವನ್ನು ಗುರುತಿಸಲಾಗಿದ್ದು, ಸರ್ವೇ ಕಾರ್ಯ ಬಾಕಿ ಇವೆ. ಶಿರ್ವದಲ್ಲಿ ಕೆಲವೊಂದು ತಾಂತ್ರಿಕ ಕಾರಣಗಳಿಂದ ಜಾಗ ಗುರುತಿಸುವ ಪ್ರಕ್ರಿಯೆ ಬಾಕಿಯಾಗಿವೆ. ಕೈಗಾರಿಕಾ ವಲಯಗಳು: ಕಾಪು ತಾಲೂಕಿನಲ್ಲಿ ಬೃಹತ್ ಉದ್ದಿಮೆಗಳಾದ ಪಾದೂರು ಕಚ್ಚಾ ತೈಲ ಸಂಗ್ರಹಣಾ ಘಟಕ (ಐಎಸ್ಪಿಆರ್‌ಎಲ್), ಕಲ್ಲಿದ್ದಲು ಆಧಾರಿತ ಅದಾನಿ ಪವರ್ ಕಾರ್ಪೊರೇಷನ್, ಪಡುಬಿದ್ರಿಯಲ್ಲಿ ವಿಶೇಷ ಅರ್ಥಿಕ ವಲಯದೊಂದಿಗೆ ಮಧ್ಯಮ, ಸಣ್ಣ, ಭಾರಿ ಗಾತ್ರದ ಕೈಗಾರಿಕೆಗಳು, ನಂದಿಕೂರು, ಬೆಳಪುವಿನಲ್ಲಿ ಕೈಗಾರಿಕಾ ಪಾರ್ಕ್ ಕಾರ್ಯಾಚರಿಸುತ್ತಿವೆ. ಎಲ್ಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಾರ್ಯಾಚರಿಸುತ್ತಿರುವ ಅದಾನಿ ಪವರ್ ಲಿಮಿಟೆಡ್ ಎರಡನೇ ಹಂತದ ಉಷ್ಣ ವಿದ್ಯುತ್ ಸ್ಥಾವರ ಯೋಜನೆಯನ್ನು ಕೈಬಿಟ್ಟಿದ್ದು, ಇದರಿಂದ ಅದಾನಿ ಯೋಜನೆಯ ಎರಡನೇ ಹಂತದ ವಿಸ್ತರಣೆಗೆ ನೀಡಲಾದ 546 ಎಕರೆ ಭೂಮಿ ಈಗ ಮರಳಿ ಕೆಐಎಡಿಬಿ ಕೈವಶದಲ್ಲಿದೆ. ಯುಪಿಸಿಎಲ್‌ನಿಂದ ಮರಳಿ ಬಂದ ಜಮೀನಿಗಾಗಿ ಹಲವು ಯೋಜನೆಗಳು ಕಾದು ಕುಳಿತಿವೆ. ಅದನ್ನು ವಿಸ್ತರಿತ ಕೈಗಾರಿಕಾ ಪ್ರದೇಶವಾಗಿ ಮಾಡಲು ಜಿಲ್ಲಾಡಳಿತ ಉದ್ದೇಶಿಸಿದೆ. ವಿಮಾನ ನಿಲ್ದಾಣಕ್ಕೆ ಅಥವಾ ಕ್ರಿಕೆಟ್ ಸ್ಟೇಡಿಯಂಗೆ ಈ ಭೂಮಿಯನ್ನು ಪಡೆಯಲು ಪ್ರಯತ್ನಗಳು ಮೇಲ್ಮಟ್ಟದಲ್ಲಿ ನಡೆಯುತ್ತಿವೆ. ಕೊನೆಗೆ ಈ ಜಾಗವನ್ನು ಯಾವ ಯಾವ ಉದ್ದೇಶಗಳಿಗೆ ವಿಲೇವಾರಿ ಮಾಡಲು ಸರಕಾರ ನಿರ್ಧರಿಸುತ್ತದೆ ಎಂಬುದನ್ನು ಕಾದು ನೋಡಬೇಕಿದೆ. ‘ಕಾಪು ತಾಲೂಕು ಸೇರಿ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 9800 ನಿವೇಶನ ರಹಿತರ ಬೇಡಿಕೆ ಇದೆ. ಸರಕಾರ ತಲಾ 2.75 ಸೆಂಟ್ಸ್ ಜಾಗವನ್ನು ಬಡವರಿಗೆ, ನಿವೇಶನ ರಹಿತರಿಗೆ ನೀಡುತ್ತದೆ. ಆದರೆ ಈ ಬಗ್ಗೆ ಪ್ರತೀ ವಿಧಾನಸಭೆ ಯಲ್ಲೂ ಮಾತನಾಡಿದ್ದೇನೆ. ಈ ಬಗ್ಗೆ ಪ್ರಯತ್ನ ಮುಂದುವರಿದಿದೆ. ಡೀಮ್ಡ್ ಫಾರೆಸ್ಟ್, ಗೋಮಾಳ, ಹೊಳೆ ಬದಿ, ಕುಮ್ಕಿ ಜಾಗವನ್ನು ನೀಡದೆ ಇರಲು ಸರಕಾರದ ಆದೇಶವಿದೆ. ಬಡವರ ಪಾಲಿಗೆ ಸೂರು ಕಲ್ಪಿಸುವ ನಿಟ್ಟಿನಲ್ಲಿ ಕುಮ್ಕಿ ಜಾಗ ನೀಡಲು ಸರ್ಕಾರ ಆದೇಶದಲ್ಲಿ ಕೆಲವೊಂದು ಬದಲಾವಣೆ ಮಾಡಲು ಸರಕಾರ ಪೂರಕವಾಗಿ ಸ್ಪಂಧಿಸಬೇಕು. ಇದರಿಂದ ಬಡವರ ಸೂರಿನ ಕನಸು ನನಸಾಗಿಸಲು ಸಾಧ್ಯ. ಇದೊಂದು ಪುಣ್ಯದ ಕೆಲಸ. ಸಾವಿರಾರು ಜನ ಕಾಯುತಿದ್ದಾರೆ. ಮುಖ್ಯಮಂತ್ರಿಗಳು, ಅಧಿಕಾರಿಗಳು ಈ ಬೇಡಿಕೆಗೆ ಆದ್ಯತೆ ಮೇಲೆ ಸ್ಪಂದಿಸಬೇಕಿದೆ. -ಗುರ್ಮೆ ಸುರೇಶ್ ಶೆಟ್ಟಿ, ಕಾಪು ಶಾಸಕ.

ವಾರ್ತಾ ಭಾರತಿ 4 Jan 2026 10:24 pm

ಬೀದರ್: ಡಾ. ಕೆ.ಎಲ್. ಕೃಷ್ಣಮೂರ್ತಿ ಸ್ಮರಣಾರ್ಥ ಉಚಿತ ವೈದ್ಯಕೀಯ ಶಿಬಿರ

ಬೀದರ್ : ಡಾ. ಕೃಷ್ಣಮೂರ್ತಿ ಆಸ್ಪತ್ರೆ ವತಿಯಿಂದ ದಿವಂಗತ ಡಾ. ಕೆ.ಎಲ್. ಕೃಷ್ಣಮೂರ್ತಿ ಅವರ ಸ್ಮರಣಾರ್ಥವಾಗಿ ರವಿವಾರ ನಗರದ ಜೆಪಿ ನಗರದಲ್ಲಿರುವ ಬ್ರಹ್ಮಕುಮಾರೀಸ್ ಸೆಂಟರ್ ಪಾವನ್ ಧಾಮ್‌ನಲ್ಲಿ ಉಚಿತ ವೈದ್ಯಕೀಯ ಶಿಬಿರವನ್ನು ಆಯೋಜಿಸಲಾಯಿತು. ಪಾವನ್ ಧಾಮ್ ಕೇಂದ್ರದ ಸಂಚಾಲಕಿ ಬಿ.ಕೆ. ಪ್ರತಿಮಾ ಬಹೆನಜಿ ಅವರು ಶಿಬಿರದ ಉದ್ಘಾಟನೆ ನೆರವೇರಿಸಿದರು. ಶಿಬಿರದಲ್ಲಿ ನಾಡಿ ಆಮ್ಲಜನಕದ ಶುದ್ಧತ್ವ, ರಕ್ತದೊತ್ತಡ, ರಕ್ತದ ಗ್ಲೂಕೋಸ್, ರಕ್ತದ ಗುಂಪು, ಮೂಳೆ ಖನಿಜ ಸಾಂದ್ರತೆ, ಮಧುಮೇಹ ನ್ಯೂರೋಪಥಿ ಪರೀಕ್ಷೆ, ತೂಕ ಹಾಗೂ ಬಿಎಂಐ ಸೇರಿದಂತೆ ವಿವಿಧ ಸಾಮಾನ್ಯ ಆರೋಗ್ಯ ತಪಾಸಣೆಗಳನ್ನು ತಜ್ಞ ವೈದ್ಯರ ಮೇಲ್ವಿಚಾರಣೆಯಲ್ಲಿ ಉಚಿತವಾಗಿ ನಡೆಸಲಾಯಿತು. ಶಿಬಿರಕ್ಕೆ ಆಗಮಿಸಿದ ರೋಗಿಗಳಿಗೆ ವೈದ್ಯರು ಅಗತ್ಯ ಆರೋಗ್ಯ ಸಲಹೆಗಳನ್ನು ನೀಡಿ, ಮಧುಮೇಹ, ರಕ್ತದೊತ್ತಡ ಸೇರಿದಂತೆ ಇತರ ದೀರ್ಘಕಾಲಿಕ ರೋಗಗಳ ಬಗ್ಗೆ ಜಾಗೃತಿ ಮೂಡಿಸಿದರು. ಸಾರ್ವಜನಿಕ ಆರೋಗ್ಯ ಕಾಪಾಡುವ ಉದ್ದೇಶದಿಂದ ಈ ಶಿಬಿರವನ್ನು ಹಮ್ಮಿಕೊಳ್ಳಲಾಗಿದ್ದು, ಮುಂದಿನ ದಿನಗಳಲ್ಲಿ ಸಹ ಇಂತಹ ಸೇವಾ ಕಾರ್ಯಕ್ರಮಗಳನ್ನು ಮುಂದುವರಿಸಲಾಗುವುದು ಎಂದು ಡಾ. ಕೆ.ಎಲ್. ಕೃಷ್ಣಮೂರ್ತಿ ಆಸ್ಪತ್ರೆಯ ಡಾ. ರಘು ಕೃಷ್ಣಮೂರ್ತಿ ಅವರು ತಿಳಿಸಿದರು. ಈ ಉಚಿತ ವೈದ್ಯಕೀಯ ಶಿಬಿರದಲ್ಲಿ ಜಿಲ್ಲೆಯ ಸುಮಾರು 200 ಜನರು ಸದುಪಯೋಗ ಪಡೆದುಕೊಂಡರು. ಕಾರ್ಯಕ್ರಮದ ನಿರೂಪಣೆಯನ್ನು ಬಿ.ಕೆ ಗುರುದೇವಿ ಬಹೆನಜಿ ಮಾಡಿದರು. ಬಿ.ಕೆ ಮಂಗಲಾ ಬಹೆನಜಿ ಅವರು ಸ್ವಾಗತ ಕೋರಿದರು.

ವಾರ್ತಾ ಭಾರತಿ 4 Jan 2026 10:20 pm

Haryana: ಫರೀದಾಬಾದ್ ಸಾಮೂಹಿಕ ಅತ್ಯಾಚಾರ ಪ್ರಕರಣ | ವಾಹನವು ಆ್ಯಂಬುಲೆನ್ಸ್ ಆಗಿದ್ದರಿಂದ ಸುರಕ್ಷಿತವೆಂದು ನಂಬಿ ಸಂತ್ರಸ್ತೆ ಅದನ್ನು ಹತ್ತಿದ್ದಳು: ಕುಟುಂಬದ ಹೇಳಿಕೆ

ಗುರುಗ್ರಾಮ,ಜ.4: ಡಿ.30ರಂದು ಚಲಿಸುತ್ತಿದ್ದ ವಾಹನದಲ್ಲಿ ಸಾಮೂಹಿಕ ಅತ್ಯಾಚಾರಕ್ಕೊಳಗಾಗಿದ್ದ 25 ವರ್ಷದ ಸಂತ್ರಸ್ತೆಯ ಕುಟುಂಬವು, ಅಪರಾಧವು ಆ್ಯಂಬುಲೆನ್ಸ್‌ನೊಳಗೆ ನಡೆದಿತ್ತು ಎಂದು ಆರೋಪಿಸಿದೆ. ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ್ದ ಇಬ್ಬರು ದುಷ್ಕರ್ಮಿಗಳು ಆಕೆಯೊಂದಿಗೆ ಕ್ರೂರವಾಗಿ ವರ್ತಿಸಿ ಚಲಿಸುತ್ತಿದ್ದ ವಾಹನದಿಂದ ಹೊರಕ್ಕೆಸೆದಿದ್ದರು. ತಡರಾತ್ರಿ ದಟ್ಟವಾದ ಮಂಜಿನ ನಡುವೆ ತನ್ನ ಮನೆಗೆ ಮರಳುತ್ತಿದ್ದ ಮಹಿಳೆ, ಆ ದಾರಿಯಾಗಿ ಬರುತ್ತಿದ್ದ ಇಕೋ ವ್ಯಾನ್ ಆ್ಯಂಬುಲೆನ್ಸ್ ಆಗಿದ್ದರಿಂದ ಅದನ್ನು ನಂಬಿ ಲಿಫ್ಟ್ ಕೇಳಿದ್ದಳು ಎಂದು ಕುಟುಂಬ ಸದಸ್ಯರು ತಿಳಿಸಿದ್ದಾರೆ. ಪೋಲಿಸರು ವಶಕ್ಕೆ ತೆಗೆದುಕೊಂಡಿರುವ ಇಬ್ಬರು ವ್ಯಕ್ತಿಗಳು ನೋಯ್ಡಾ ಮತ್ತು ಫರೀದಾಬಾದ್‌ ನಲ್ಲಿ ಶಾಖೆಗಳನ್ನು ಹೊಂದಿರುವ ಖಾಸಗಿ ಆಸ್ಪತ್ರೆಯ ಆ್ಯಂಬುಲೆನ್ಸ್ ಸಿಬ್ಬಂದಿಯಾಗಿದ್ದಾರೆ ಎಂದು ಕುಟುಂಬವು ಆರೋಪಿಸಿದೆ. ಶಂಕಿತರನ್ನು ಬಂಧಿಸಿದ ಬಳಿಕ ಪೋಲಿಸರು ಇಕೋ ವ್ಯಾನ್‌ ಅನ್ನು ವಶಪಡಿಸಿಕೊಂಡಿದ್ದಾರೆ. ಆದರೆ ಅದನ್ನು ನಿಜಕ್ಕೂ ಆ್ಯಂಬುಲೆನ್ಸ್ ಆಗಿ ಬಳಸಲಾಗಿತ್ತೇ ಎಂಬ ಬಗ್ಗೆ ಯಾವುದೇ ಅಧಿಕೃತ ಮಾಹಿತಿಯಿಲ್ಲ. ಪೋಲಿಸರು ಗುರುತು ಪತ್ತೆ ಪರೇಡ್‌ ಗಾಗಿ ಕಾಯುತ್ತಿದ್ದು, ಸಂತ್ರಸ್ತೆ ಚೇತರಿಸಿಕೊಂಡ ಬಳಿಕವೇ ಅದು ಸಾಧ್ಯವಾಗಲಿದೆ. ಮುಖ, ಕಣ್ಣುಗಳು ಮತ್ತು ಭುಜಗಳಿಗೆ ತೀವ್ರ ಗಾಯಗೊಂಡಿರುವ ಆಕೆಗೆ ಪ್ರಸ್ತುತ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈ ನಡುವೆ, ಹೆಚ್ಚುತ್ತಿರುವ ಚಿಕಿತ್ಸಾ ವೆಚ್ಚವನ್ನು ಭರಿಸಲು ತಮಗೆ ಸಾಧ್ಯವಾಗುತ್ತಿಲ್ಲ ಎಂದು ಅಳಲು ತೋಡಿಕೊಂಡಿರುವ ಸಂತ್ರಸ್ತೆಯ ಅಕ್ಕ ನೆರವಿಗಾಗಿ ಕೋರಿದ್ದಾರೆ. ಕುಟುಂಬವು ಈಗಾಗಲೇ 45,000 ರೂ.ಗಳನ್ನು ಆಸ್ಪತ್ರೆಗೆ ಪಾವತಿಸಿದೆ. ಹಲವರು ಆಸ್ಪತ್ರೆಗೆ ಭೇಟಿ ನೀಡಿ ನೆರವಿನ ಭರವಸೆ ನೀಡಿದ್ದರೂ ಈವರೆಗೆ ಯಾರೂ ಹಣ ನೀಡಿಲ್ಲ ಎಂದು ಅವರು ಹೇಳಿದರು. ಆಸ್ಪತ್ರೆಯಲ್ಲಿರುವ ಸಂತ್ರಸ್ತೆಯನ್ನು ಭೇಟಿಯಾಗಲು ಕುಟುಂಬಕ್ಕೆ ಅವಕಾಶ ನೀಡುತ್ತಿಲ್ಲ ಎಂದು ಆಕೆ ಆರೋಪಿಸಿದರು. ಇದನ್ನು ಅಲ್ಲಗಳೆದ ಪೊಲೀಸ್ ಅಧಿಕಾರಿಯೋರ್ವರು, ವೈದ್ಯರ ಸಲಹೆಯ ಮೇರೆಗೆ ರೋಗಿ ಸೋಂಕಿಗೆ ತುತ್ತಾಗದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ ಎಂದರು. ಸಂತ್ರಸ್ತೆಯ ಇಬ್ಬರು ಪುಟ್ಟ ಮಕ್ಕಳು ಪ್ರಸ್ತುತ ತಮ್ಮ ಅಜ್ಜಿಯೊಂದಿಗೆ ವಾಸವಾಗಿದ್ದಾರೆ. ಮಹಿಳೆಗೆ ನಾಲ್ವರು ಸೋದರಿಯರು ಇದ್ದಾರೆ. ಆಕೆಯ ಪತಿ ದಿಲ್ಲಿಯಲ್ಲಿದ್ದು, ಇಬ್ಬರೂ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ.

ವಾರ್ತಾ ಭಾರತಿ 4 Jan 2026 10:20 pm

ಬೀದರ್‌| ದುಬಲಗುಂಡಿ ಗ್ರಾಮ ಪಂಚಾಯತ್ ಅಧ್ಯಕ್ಷರ ಸದಸ್ಯತ್ವ ರದ್ದು ಪಡಿಸುವಂತೆ ಜಿ.ಪಂ.ಸಿಇಒಗೆ ಮನವಿ

ಹುಮನಾಬಾದ್ : ತಾಲ್ಲೂಕಿನ ದುಬಲಗುಂಡಿ ಗ್ರಾಮ ಪಂಚಾಯತ್ ಅಧ್ಯಕ್ಷ ನಾಗರಾಜ ಭೋಜಗುಂಡಿ ಅವರು 11 ತಿಂಗಳಿಂದ ಇಲ್ಲಿವರೆಗೂ ಯಾವುದೇ ಸಾಮಾನ್ಯ ಸಭೆ ನಡೆಸದೆ ಬೇಜವಾಬ್ದಾರಿ ತೋರಿದ್ದಾರೆ ಎಂದು ಆರೋಪಿಸಿ, ಅವರ ಸದಸ್ಯತ್ವ ರದ್ದುಪಡಿಸಬೇಕು ಎಂದು ದುಬಲಗುಂಡಿ ಗ್ರಾಮ ಪಂಚಾಯತ್ ಸದಸ್ಯ ವಿಜಯಕುಮಾರ್ ನಾತೆ ಅವರು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಗಿರೀಶ್ ಬದೋಲೆಗೆ ಅವರಿಗೆ ಮನವಿಯನ್ನು ಸಲ್ಲಿಸಿದ್ದಾರೆ.   ಗ್ರಾಮ ಸ್ವರಾಜ ಮತ್ತು ಪಂಚಾಯತ್ ರಾಜ್ ಕಾಯ್ದೆ 1993ರ ಪ್ರಕರಣ 43(ಎ)(1)(ii) ರ ಮತ್ತು 48(4) ಅಡಿಯಲ್ಲಿ ಬೀದರ್‌ ಜಿಲ್ಲೆಯ ಹುಮನಾಬಾದ್‌ ತಾಲೂಕಿನ ದುಬಲಗುಂಡಿ ಗ್ರಾಮ ಪಂಚಾಯತ ಅಧ್ಯಕ್ಷ ನಾಗರಾಜ್ ಭೋಜಗೊಂಡ ಅವರನ್ನು ಸದಸ್ಯತ್ವದಿಂದ ಅನರ್ಹಗೊಳಿಸಲು ಹಾಗೂ ಪಂಚಾಯತ್ ಅಭಿವೃದ್ಧಿ ಅಧಿಕಾರಿ ರಘುನಾಥ್ ಅವರ ವಿರುದ್ದ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ. ದುಬಲಗುಂಡಿ ಗ್ರಾಮ ಪಂಚಾಯತ್‌ ಅಧ್ಯಕ್ಷನಾದ ನಂತರ 3 ಬಾರಿ ಮಾತ್ರ ಸಾಮಾನ್ಯ ಸಭೆ ಕರೆದಿದ್ದಾರೆ. 2025ರ ಜ.1ರಂದು ಇವರ ಅಧ್ಯಕ್ಷತೆಯಲ್ಲಿ ಕೊನೆ ತುರ್ತು ಸಭೆ ನಡೆದಿರುತ್ತದೆ.  ಅಧ್ಯಕ್ಷ ಹುದ್ದೆಯ ಪದಾವಧಿಯು ಪ್ರಾರಂಭದ ನಂತರ ನಡೆದ ಅನುಮೋದನೆಯ ಸಾಮಾನ್ಯ ಸಭೆ, ವಿಶೇಷ ಸಭೆ ಹಾಗೂ ತುರ್ತು ಸಭೆ ಸರಿಯಾಗಿ ಸಮಯಕ್ಕೆ ನಡೆಸಿಲ್ಲ ಎಂದು ಅವರು ಆರೋಪಿಸಿದ್ದಾರೆ.   15ನೇ ಹಣಕಾಸು ಯೋಜನೆಯಲ್ಲಿ ಕೆಲಸ ಮಾಡದೆ ನಿಯಮಗಳು ಗಾಳಿಗೆ ತೂರಿ ಮನ ಬಂದಂತೆ ಸರಕಾರದ ಹಣವನ್ನು ದುರುಪಯೋಗ ಪಡಿಸಿಕೊಳ್ಳಲಾಗಿದೆ. ಅದೇ ರೀತಿ ಯಾವುದೇ ಅಭಿವೃದ್ಧಿ ಕೆಲಸಗಳು ಮಾಡದೇ ಸರಕಾರದ ಹಣವನ್ನು ನಕಲಿ ಬಿಲ್ಲುಗಳನ್ನು ಸೃಷ್ಟಿಸಿ ಸರಕಾರಕ್ಕೆ ಮೋಸ ಮಾಡಿರುತ್ತಾರೆ. ಅಧ್ಯಕ್ಷರ ಜೊತೆಯಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಕೂಡಾ ಶಾಮಿಲಾಗಿ ಅಕ್ರಮ ಮತ್ತು ಅವ್ಯವಾಹಾರದಲ್ಲಿ ತೊಡಗಿದ್ದಾರೆ. ಹಾಗಾಗಿ ಇವರಿಬ್ಬರ ವಿರುದ್ಧ ಸೂಕ್ತ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು ಎಂದು ಗಿರೀಶ್ ಬದೋಲೆ ಪತ್ರದಲ್ಲಿ ಒತ್ತಾಯಿಸಿದ್ದಾರೆ.

ವಾರ್ತಾ ಭಾರತಿ 4 Jan 2026 10:16 pm

ಭೂ ಒತ್ತುವರಿ ಆರೋಪ; ಹಾಸನದಲ್ಲಿ ನಟ ಯಶ್‌ ಮನೆ ಕಾಂಪೌಂಡ್‌ ಒತ್ತುವರಿ ತೆರವು

ಖ್ಯಾತ ಚಲನಚಿತ್ರನಟ ಯಶ್ ಅವರ ಹಾಸನ ವಿದ್ಯಾನಗರ ಬಡಾವಣೆಯ ಮನೆ ಮುಂದಿನ ಕಾಂಪೌಂಡ್ ಅನ್ನು ನ್ಯಾಯಾಲಯದ ಆದೇಸದ ಅನ್ವಯ ಭಾನುವಾರ ಜೆಸಿಬಿ ಮೂಲಕ ತೆರವುಗೊಳಿಸಲಾಯಿತು. ಯಶ್ ತಾಯಿ ಪುಷ್ಪ ಅವರ ಮನೆಯ ಕಾಂಪೌಂಡ್ ಒತ್ತುವರಿ ಮಾಡಿ ನಿರ್ಮಿಸಲಾಗಿದೆ ಎಂದು ದೇವೇಗೌಡ ಎಂಬುವರು ನ್ಯಾಯಾಲಯದ ಮೊರೆ ಹೋಗಿದ್ದರು.ವಿಚಾರಣೆ ಫೂರ್ಣಗೊಳಿಸಿದ ನ್ಯಾಯಾಲಯ ದೇವರಾಜೇಗೌಡ ಪರ ತೀರ್ಪು ನೀಡಿತ್ತು.

ವಿಜಯ ಕರ್ನಾಟಕ 4 Jan 2026 10:14 pm

ಬಜ್ಪೆ, ಕಿನ್ನಿಗೋಳಿ ಪಟ್ಟಣ ಪಂಚಾಯತ್ ಬಿಜೆಪಿ ಗೆಲುವು ಕರ್ನಾಟಕದ ಮುಂದಿನ ಚುನಾವಣೆಗೆ ದಿಕ್ಸೂಚಿ: ಸಂಸದ ಬ್ರಿಜೇಶ್ ಚೌಟ

ಮಂಗಳೂರು,ಜ.4: ಕಿನ್ನಿಗೋಳಿ ಹಾಗೂ ಬಜ್ಪೆ ಪಟ್ಟಣ ಪಂಚಾಯತ್ ಚುನಾವಣೆ ಗೆಲುವು ಕರಾವಳಿ ಜನರ ಸ್ವಾಭಿಮಾನ ಕೆಣಕಿರುವ ಕಾಂಗ್ರೆಸ್‌ಗೆ ತಕ್ಕ ಉತ್ತರವಾಗಿದ್ದು, ಆ ಮೂಲಕ ಬಿಜೆಪಿಯ ಈ ವಿಜಯಯಾತ್ರೆಯು ಇದೀಗ ಕಟೀಲು ಶ್ರೀ ದುರ್ಗಾ ಪರಮೇಶ್ವರಿ ಕ್ಷೇತ್ರದಿಂದಲೇ ಆರಂಭವಾಗಿದೆ ಎಂದು ದಕ್ಷಿಣ ಕನ್ನಡ ಸಂಸದ ಬ್ರಿಜೇಶ್ ಚೌಟ ಹೇಳಿದ್ದಾರೆ. ಕಿನ್ನಿಗೋಳಿ ಹಾಗೂ ಬಜ್ಪೆ ಪಟ್ಟಣ ಪಂಚಾಯತ್ ಚುನಾಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿದ ಹಿನ್ನಲೆಯಲ್ಲಿ ರವಿವಾರ ಕ್ಷೇತ್ರ ವ್ಯಾಪ್ತಿಯಲ್ಲಿ ನಡೆದ ವಿಜಯೋತ್ಸವ ಹಾಗೂ ಗೆಲುವು ಸಾಧಿಸಿದ ಅಭ್ಯರ್ಥಿಗಳ ಅಭಿನಂದನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಬಜ್ಪೆ ಹಾಗೂ ಕಿನ್ನಿಗೋಳಿ ಪಟ್ಟಣ ಪಂಚಾಯತ್‌ನಲ್ಲಿನ ಬಿಜೆಪಿ ಅಭ್ಯರ್ಥಿಗಳ ಈ ಗೆಲುವು ಅತ್ಯಂತ ವಿಶಿಷ್ಟವಾದ ಗೆಲುವು. ಬಜ್ಪೆ ಅಥವಾ ಕಿನ್ನಿಗೋಳಿಗೆ ಸೀಮಿತವಾದ ಗೆಲುವು ಇದಲ್ಲ; ಬದಲಿಗೆ ಇಡೀ ಕರಾವಳಿ ಕರ್ನಾಟಕದ ಬಿಜೆಪಿ ಕಾರ್ಯಕರ್ತರು ಹಾಗೂ ಮತದಾರರ ಸ್ವಾಭಿಮಾನದ ಗೆಲುವು ಎಂದು ನುಡಿದರು. ಕರಾವಳಿ ಜನರು ಹಿಂದುತ್ವ, ರಾಷ್ಟ್ರೀಯತೆ ಪರ ಇರುವವರು. ಜಿಲ್ಲೆಯ ಜನರ ಸ್ವಾಭಿಮಾನ ಕೆಣಿಕಿಸುವುದಕ್ಕೆ ಅಥವಾ ಅವಮಾನಿಸುವ ಯತ್ನ ಮಾಡಿದರೆ ಮುಂದೆ ಯಾವುದೇ ಚುನಾವಣೆ ಬಂದರೂ ಕರಾವಳಿ ಮಾತ್ರವಲ್ಲ ರಾಜ್ಯದಲ್ಲೇ ಇದೇ ರೀತಿಯ ಉತ್ತರವನ್ನು ಮತದಾರರು ನೀಡುತ್ತಾರೆ ಎಂದು  ಚೌಟ ಸವಾಲು ಹಾಕಿದ್ದಾರೆ. ರಾಜ್ಯದಲ್ಲಿ ಯಾವಾಗ ಚುನಾವಣೆ ಬರಬಹುದು ಎಂದು ಹೇಳುವುದಕ್ಕೆ ಸಾಧ್ಯವಿಲ್ಲ ಹಾಗೂ ಅದನ್ನು ಎದುರಿಸು ವುದಕ್ಕೆ ನಮ್ಮ ಕಾರ್ಯಕರ್ತರು ಸಿದ್ಧರಾಗಿರಬೇಕು. ಬಜಪೆ ಹಾಗೂ ಮುಲ್ಕಿ ಪಟ್ಟಣ ಪಂಚಾಯತ್ನಲ್ಲಿ ಬಿಜೆಪಿ ಗೆಲುವು ಸಾಧಿಸುವುದಕ್ಕೆ ಇಲ್ಲಿನ ಮತದಾರರು ಹಾಗೂ ಅಭಿವೃದ್ಧಿಯೇ ಮುಖ್ಯ ಕಾರಣ. ಶಾಸಕರಾದ ಉಮಾನಾಥ ಕೋಟ್ಯಾನ್ ಅವರು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಮಾದರಿಯಲ್ಲೇ ಮುಲ್ಕಿ ಕ್ಷೇತ್ರವನ್ನು ಅಭಿವೃದ್ಧಿಪಡಿ ಸುತ್ತಿದ್ದಾರೆ. ಅಭಿವೃದ್ಧಿಯಲ್ಲಿ ಯಾವುದೇ ರಾಜಕೀಯ ಮಾಡದೆ ಮತದಾರರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡುತ್ತಿದ್ದಾರೆ. ಬಜ್ಪೆ ಹಾಗೂ ಕಿನ್ನಿಗೋಳಿ ಪಟ್ಟಣ ಪಂಚಾಯತ್ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಬಿಜೆಪಿ ಅಭ್ಯರ್ಥಿಗಳನ್ನು ಅಭಿನಂದಿಸಲಾಯಿತು. ಇದಕ್ಕೂ ಮೊದಲು ಎರಡೂ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿರುವ ಅಭ್ಯರ್ಥಿಗಳು ಹಾಗೂ ಪಕ್ಷದ ಕಾರ್ಯಕರ್ತರು ಪುನರೂರು ದ್ವಾರದಿಂದ ಕಟೀಲು ದೇವಸ್ಥಾನದವರೆಗೆ ಹಾಗೂ ಮರವೂರಿನಿಂದ ಸ್ವಾಮಿಲಪದವು ಜಂಕ್ಷನ್ವರೆಗೂ ವಿಜಯೋತ್ಸವ ಮೆರವಣಿಗೆ ನಡೆಸಿದರು. ಶಾಸಕ ಉಮಾನಾಥ ಕೋಟ್ಯಾನ್, ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ , ಮೂಲ್ಕಿ ಮೂಡುಬಿದಿರೆ ಮಂಡಲ ಅಧ್ಯಕ್ಷ ದಿನೇಶ್ ಪುತ್ರನ್ ಸೇರಿದಂತೆ ಹಲವು ಮುಖಂಡರು, ಪದಾಧಿಕಾರಿಗಳು ಭಾಗವಹಿಸಿದ್ದರು.

ವಾರ್ತಾ ಭಾರತಿ 4 Jan 2026 10:13 pm

Venezuela ತೈಲರಂಗದ ಮೇಲೆ ಅಮೆರಿಕ ಹಿಡಿತದಿಂದ ಭಾರತಕ್ಕೆ ಲಾಭ?

►ವೆನೆಝುವೆಲಾದಲ್ಲಿ ಭಾರತೀಯ ಕಂಪೆನಿಗಳಿಂದ ಕಚ್ಚಾ ತೈಲ ಉತ್ಪಾದನೆ ಪುನಾರಂಭ ಸಾಧ್ಯತೆ►ಮಡುರೊ ಸರಕಾರ ಬಾಕಿಯಿರಿಸಿದ್ದ 1 ಶತಕೋಟಿ ಡಾಲರ್ ಮರುಪಾವತಿಯ ನಿರೀಕ್ಷೆ

ವಾರ್ತಾ ಭಾರತಿ 4 Jan 2026 10:10 pm

ದಸಂಸ ಪರ್ಯಾಯ ರಾಜಕಾರಣ ಕಟ್ಟುವುದು ಅನಿವಾರ್ಯ : ಎನ್.ವೆಂಕಟೇಶ್

ʼದಲಿತ ಸಾಹಿತ್ಯ ಮತ್ತು ಚಳವಳಿ-50 ಅಧ್ಯಯನʼ ಸಮಾರೋಪ ಸಮಾರಂಭ

ವಾರ್ತಾ ಭಾರತಿ 4 Jan 2026 10:09 pm

ಬೀದರ್‌| ಸಾವಿತ್ರಿಬಾಯಿ ಫುಲೆ ಸಾಂಸ್ಕೃತಿಕ ಮಹಿಳಾ ಸಂಘದಿಂದ ಸಾವಿತ್ರಿಬಾಯಿ ಫುಲೆ ಜನ್ಮ ದಿನಾಚರಣೆ

ಭಾಲ್ಕಿ : ತಾಲೂಕಿನ ವಳಸಂಗ ಗ್ರಾಮದಲ್ಲಿ ಸಾವಿತ್ರಿಬಾಯಿ ಫುಲೆ ಸಾಂಸ್ಕೃತಿಕ ಮಹಿಳಾ ಸಂಘದ ವತಿಯಿಂದ ಸಾವಿತ್ರಿಬಾಯಿ ಫುಲೆ ಅವರ ಜನ್ಮ ದಿನಾಚರಣೆಯನ್ನು ಆಚರಿಸಲಾಯಿತು.  ಕಾರ್ಯಕ್ರಮದಲ್ಲಿ ಸಾವಿತ್ರಿಬಾಯಿ ಫುಲೆ ಸಾಂಸ್ಕೃತಿಕ ಮಹಿಳಾ ಸಂಘದ ಸದಸ್ಯರು ಬುದ್ಧ, ಬಸವ, ಅಂಬೇಡ್ಕರ್ ಹಾಗೂ ಫುಲೆ ದಂಪತಿಗಳ ಬಗ್ಗೆ ಭಜನೆ ಹಾಡುವ ಮೂಲಕ ಮಹಾನ್ ವ್ಯಕ್ತಿಗಳ ತತ್ವ ಸಿದ್ಧಾಂತ ತಿಳಿಸಿದರು. ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷೆ ದ್ರೌಪತಿ ಗಾಯಕವಾಡ್, ಜನಾಬಾಯಿ, ಅಲ್ಲಿಕಾ, ಇಂದುಮತಿ, ವಿಮಲಾಬಾಯಿ, ಗೌರಮ್ಮ, ಮುತ್ತಮ್ಮ, ಉಮೇಶ್ ಗಾಯಕವಾಡ್, ಸಚಿನ್, ಭೀಮ್, ಧನರಾಜ್ ಸೇರಿದಂತೆ ಗ್ರಾಮದ ಇತರ ಮುಖಂಡರು ಉಪಸ್ಥಿತರಿದ್ದರು.

ವಾರ್ತಾ ಭಾರತಿ 4 Jan 2026 10:07 pm

ಸುಳ್ಯ: ಕೆರೆಯಲ್ಲಿ ತಾಯಿ, ಮಗುವಿನ ಮೃತದೇಹ ಪತ್ತೆ; ಆತ್ಮಹತ್ಯೆ ಶಂಕೆ

ಸುಳ್ಯ: ತಾಯಿ ಮತ್ತು ಮೂರು ವರ್ಷದ ಮಗುವಿನ ಮೃತದೇಹ ಮನೆ ಸಮೀಪದ ಕೆರೆಯಲ್ಲಿ ಪತ್ತೆಯಾಗಿರುವ ಘಟನೆ ಬೆಳ್ಳಾರೆ ಪೊಲೀಸ್ ಠಾಣಾ ವ್ಯಾಪ್ತಿಯ ಕೊಡಿಯಾಲ ಗ್ರಾಮದಲ್ಲಿ ರವಿವಾರ ನಡೆದಿದೆ. ಸುಳ್ಯ ತಾಲೂಕಿನ ಕೊಡಿಯಾಲ ಗ್ರಾಮದ ಆರ್ವಾರ ಹರೀಶ್ ಎಂಬವರ ಪತ್ನಿ ಮಧುಶ್ರೀ (34) ಹಾಗೂ ಅವರ ಮೂರು ವರ್ಷದ ಮಗು ಧನ್ವಿ ಮೃತರು. ಹರೀಶ್ ಅವರು ತನ್ನ ತಂದೆ, ತಾಯಿ, ಪತ್ನಿ, ಮಗುವಿನೊಂದಿಗ ಆರ್ವಾರ ಮನೆಯಲ್ಲಿ ವಾಸಿಸುತ್ತಿದ್ದು, ಶನಿವಾರ ರಾತ್ರಿ ಮಲಗಿದ್ದ ತಾಯಿ, ಮಗು ರವಿವಾರ ಬೆಳಗ್ಗೆ ಕಾಣದೇ ಇದ್ದ ಸಂದರ್ಭ ಹುಡುಕಾಡಿದಾಗ ಮನೆ ಸಮೀಪದ ಇನ್ನೊಬ್ಬರ ಜಾಗದ ಕೆರೆಯಲ್ಲಿ ತಾಯಿ ಹಾಗೂ ಮಗುವಿನ ಮೃತದೇಹ ಪತ್ತೆಯಾಗಿದೆ. ಮಧುಶ್ರೀ ಅವರು ಮಗುವನ್ನು ಬಟ್ಟೆಯಲ್ಲಿ ತನ್ನ ಸೊಂಟಕ್ಕೆ ಕಟ್ಟಿಕೊಂಡು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ದೂರಲಾಗಿದೆ. ಪುತ್ತೂರು ಬೆಟಗೇರಿಯವರಾದ ಮಧುಶ್ರೀ ಅವರು ನಾಲ್ಕು ವರ್ಷದ ಹಿಂದೆ ಹರೀಶ್ ಅವರನ್ನು ವಿವಾಹ ಆಗಿದ್ದರು. ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಬೆಳ್ಳಾರೆ ಠಾಣಾ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವಾರ್ತಾ ಭಾರತಿ 4 Jan 2026 10:06 pm

ಕಲಬುರಗಿ| ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ಆರೋಪ: ಉಪನ್ಯಾಸಕನ ಬಂಧನ

ಕಲಬುರಗಿ(ಅಫಜಲಪುರ): ಹೊಸ ವರ್ಷದ ಗಿಫ್ಟ್ ಕೊಡುವುದಾಗಿ ಪುಸಲಾಯಿಸಿ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪದಲ್ಲಿ ಉಪನ್ಯಾಸಕನೋರ್ವನನ್ನು ಅಫಜಲಪುರ ಪೊಲೀಸರು ಬಂಧಿಸಿದ್ದಾರೆ.   ಅಫಜಲಪುರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿರುವ ಪದವಿಪೂರ್ವ ಕಾಲೇಜೊಂದರಲ್ಲಿ ಅರ್ಥಶಾಸ್ತ್ರ ವಿಷಯದ ಬೋಧಕ ರಾಜಕುಮಾರ್‌ ಕುಂಬಾರ ಬಂಧಿತ ಆರೋಪಿ. ಜನವರಿ 1ರಂದು ವಿದ್ಯಾರ್ಥಿನಿಗೆ ಹೊಸ ವರ್ಷದ ಗಿಫ್ಟ್ ಕೊಡುವುದಾಗಿ ಪುಸಲಾಯಿಸಿ ಲೈಂಗಿಕ ಕಿರುಕುಳ ನೀಡಿರುವ ಆರೋಪ ರಾಜಕುಮಾರ್‌ ವಿರುದ್ಧ ವ್ಯಕ್ತವಾಗಿತ್ತು. ಈ ಕುರಿತು ಅಫಜಲಪುರದಲ್ಲಿ ಶನಿವಾರ ಪ್ರಕರಣವೂ ದಾಖಲಾಗಿತ್ತು. ಈ ಕುರಿತು ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಆರೋಪಿಯನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆಂದು ಪೊಲೀಸ್ ಮೂಲಗಳು ತಿಳಿಸಿವೆ.

ವಾರ್ತಾ ಭಾರತಿ 4 Jan 2026 10:02 pm

Venezuela | ಬಂಧನದ ಬಳಿಕ ‘ಹ್ಯಾಪಿ ನ್ಯೂ ಇಯರ್’ ಎಂದ ಮಡುರೊ!

ವಾಷಿಂಗ್ಟನ್, ಜ.4: ಶನಿವಾರ ಮುಂಜಾನೆ ವೆನೆಝುವೆಲಾ ಅಧ್ಯಕ್ಷ ನಿಕೊಲಸ್ ಮಡುರೊ ಮತ್ತು ಅವರ ಪತ್ನಿ ಸಿಲಿಯಾ ಫ್ಲೋರ್ಸ್ ಅವರನ್ನು ಅಮೆರಿಕದ ಸೇನೆ ವೆನೆಝುವೆಲಾದ ರಾಜಧಾನಿಯಲ್ಲಿ ಸೆರೆಹಿಡಿದ ಬಳಿಕ ನಡೆದ ಕೆಲವು ವಿದ್ಯಮಾನಗಳು: ಮಡುರೊ ಮತ್ತು ಅವರ ಪತ್ನಿ ಮಲಗಿದ್ದಾಗಲೇ ಅಮೆರಿಕದ ಕಾರ್ಯಾಚರಣೆ ನಡೆದಿದೆ. ಮಡುರೊ ಹಾಗೂ ಪತ್ನಿಯನ್ನು ಬೆಡ್‌ರೂಂನಿಂದ ಹೊರಗೆ ಎಳೆದು ತರಲಾಗಿದೆ ಎಂದು ಮೂಲಗಳು ತಿಳಿಸಿವೆ. ನ್ಯೂಯಾರ್ಕ್‌ನ ಸ್ಟಿವರ್ಟ್ ‘ಏರ್ ನ್ಯಾಷನಲ್ ಗಾರ್ಡ್’ ಸೇನಾನೆಲೆಯಲ್ಲಿ ವಿಮಾನದಿಂದ ಮಡುರೊ ಕೆಳಗಿಳಿಯುತ್ತಿರುವುದು ಮತ್ತು ಹತ್ತಕ್ಕೂ ಹೆಚ್ಚು ಫೆಡರಲ್ ಭದ್ರತಾ ಸಿಬ್ಬಂದಿ ಅವರನ್ನು ಕರೆದೊಯ್ಯುವ ವೀಡಿಯೊವನ್ನು ಪ್ರಸಾರ ಮಾಡಲಾಗಿದೆ. ಅಲ್ಲಿಂದ ಮ್ಯಾನ್‌ಹ್ಯಾಟನ್‌ ಗೆ ಹೆಲಿಕಾಪ್ಟರ್ ಮೂಲಕ ಕರೆದೊಯ್ದು, ನಂತರ ಮತ್ತೊಂದು ಹೆಲಿಕಾಪ್ಟರ್‌ ನಲ್ಲಿ ಬ್ರೂಕ್ಲಿನ್ ಬಂಧನ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ. ಕೆಲ ಹೊತ್ತಿನ ಬಳಿಕ, ಪೊಲೀಸರ ಪೆರೇಡ್‌ ನಲ್ಲಿ ಮಡುರೊ ನಡೆದುಕೊಂಡು ಹೋಗುತ್ತಿರುವ ವೀಡಿಯೊವನ್ನು ಶ್ವೇತಭವನ ಪೋಸ್ಟ್ ಮಾಡಿದೆ. ಕೋಣೆಯಲ್ಲಿದ್ದವರಿಗೆ ಮಡುರೊ ‘ಗುಡ್ ನೈಟ್’ ಮತ್ತು ‘ಹ್ಯಾಪಿ ನ್ಯೂ ಇಯರ್’ ಎಂದು ಹೇಳುತ್ತಿರುವುದನ್ನೂ ವೀಡಿಯೊ ತೋರಿಸಿದೆ.

ವಾರ್ತಾ ಭಾರತಿ 4 Jan 2026 10:00 pm

Venezuela | ಏನೆಲ್ಲಾ ಬೆಳವಣಿಗೆಗಳು ನಡೆಯಿತು?

ವಾಷಿಂಗ್ಟನ್: ಮಡುರೊರನ್ನು ಹೊತ್ತ ವಿಮಾನವು ಶನಿವಾರ ತಡರಾತ್ರಿ ನ್ಯೂಯಾರ್ಕ್ ನಗರದ ಬಳಿ ಲ್ಯಾಂಡ್ ಆಗಿದ್ದು, ಅಲ್ಲಿಂದ ಅವರನ್ನು ಹೆಲಿಕಾಪ್ಟರ್ ಮೂಲಕ ಬಿಗಿ ಪೊಲೀಸ್ ಭದ್ರತೆಯಲ್ಲಿ ನ್ಯೂಯಾರ್ಕ್‌ನ ಬ್ರೂಕ್ಲಿನ್‌ನಲ್ಲಿರುವ ಮೆಟ್ರೊಪಾಲಿಟನ್ ಬಂಧನ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ. ► ಮಡುರೊ ವಿರುದ್ಧ ಮಾದಕ ವಸ್ತು ಭಯೋತ್ಪಾದನೆ ಮತ್ತು ಶಸ್ತ್ರಾಸ್ತ್ರ ಪ್ರಕರಣ ದಾಖಲಿಸಲಾಗಿದೆ. ಸೋಮವಾರ ಮ್ಯಾನ್‌ಹ್ಯಾಟನ್ ಫೆಡರಲ್ ನ್ಯಾಯಾಲಯದಲ್ಲಿ ಪ್ರಾಥಮಿಕ ವಿಚಾರಣೆಗೆ ಹಾಜರಾಗುವ ನಿರೀಕ್ಷೆಯಿದೆ. ► ಮಧ್ಯಂತರ ಅಧ್ಯಕ್ಷೆಯಾಗಿ ಅಧಿಕಾರ ವಹಿಸಿಕೊಂಡು ಕರ್ತವ್ಯ ನಿರ್ವಹಿಸುವಂತೆ ಉಪಾಧ್ಯಕ್ಷೆ ಡೆಲ್ಸಿ ರಾಡ್ರಿಗಸ್‌ಗೆ ವೆನೆಝುವೆಲಾದ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದೆ. ► ವಿಪಕ್ಷದ ಅಭ್ಯರ್ಥಿಯೇ ಮಧ್ಯಂತರ ಅಧ್ಯಕ್ಷರಾಗಬೇಕು ಎಂದು ವಿರೋಧ ಪಕ್ಷದ ನಾಯಕಿ ಮರಿಯಾ ಕೊರಿನಾ ಮಚಾಡೊ ಆಗ್ರಹಿಸಿದ್ದಾರೆ. ► ಮಡುರೊ ಅವರನ್ನು ಅಪಹರಿಸಲಾಗಿದೆ ಎಂದು ವೆನೆಝುವೆಲಾದ ಕೆಲವರು ಖಂಡಿಸಿದ್ದರೆ, ಇನ್ನೂ ಕೆಲವರು ಸಂಭ್ರಮಾಚರಿಸಿರುವುದಾಗಿ ವರದಿಯಾಗಿದೆ. ►  ಮಧ್ಯರಾತ್ರಿಯಿಂದ ಕೆರಿಬಿಯನ್ ವಾಯುಪ್ರದೇಶದ ಮೂಲಕ ವಿಮಾನ ಸಂಚಾರವನ್ನು ಪುನರಾರಂಭಿಸಲು ನಿರ್ಧರಿಸಲಾಗಿದೆ.

ವಾರ್ತಾ ಭಾರತಿ 4 Jan 2026 9:57 pm

ಜಯಲಕ್ಷ್ಮಿ ಎಸ್. ಜೋಕಟ್ಟೆ ಅವರ ʼಕವಿತೆಗಳುʼ ಕೃತಿ ಬಿಡುಗಡೆ

ಮಂಗಳೂರು, ಜ.4: ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾನೂನು ಕಾಲೇಜು,ಮಂಗಳೂರು ಇವರ ಜಂಟಿ ಆಶ್ರಯದಲ್ಲಿ ಮುಂಬಯಿಯ ಕವಯಿತ್ರಿ ಜಯಲಕ್ಷ್ಮಿ ಎಸ್. ಜೋಕಟ್ಟೆಯವರ ಕವಿತೆಗಳು ಸಂಕಲನವು ಅವರ ಹುಟ್ಟುಹಬ್ಬದ ದಿನವಾದ ಜ.3ರಂದು ಎಸ್ ಡಿ ಎಂ ಲಾ ಕಾಲೇಜ್ ಸಭಾಗೃಹದಲ್ಲಿ ಬಿಡುಗಡೆಗೊಂಡಿತು. ಕವಿತಾಸಂಕಲನ ಬಿಡುಗಡೆ ಮಾಡಿದ ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಡಾ. ಎಂ. ಪಿ. ಶ್ರೀನಾಥ್ ಅವರು ಮಾತನಾಡಿ ಜಯಲಕ್ಷ್ಮೀ ಅವರ ಹುಟ್ಟುಹಬ್ಬದಂದೇ ಅವರ ಚೊಚ್ಚಲ ಕವಿತಾ ಸಂಕಲನ ಕನ್ನಡ ಸಾಹಿತ್ಯ ಪರಿಷತ್ತು ವೇದಿಕೆಯಿಂದ ಬಿಡುಗಡೆ ಯಾಗುತ್ತಿರುವುದು ಸಂತೋಷವಾದರೆ ಅವರು ಇಂದು ನಮ್ಮ ಜೊತೆಗಿಲ್ಲ ಅನ್ನುವುದಕ್ಕೆ ದು:ಖವೂ ಆಗುತ್ತಿದೆ ಎಂದು ನುಡಿದರು. ಮುಂಬಯಿಯಲ್ಲಿ ಪತ್ರಕರ್ತರಾಗಿರುವ ಅವರ ಲಕ್ಷ್ಮಿ ಅವರ ಪತಿ ಶ್ರೀನಿವಾಸ ಜೋಕಟ್ಟೆಯವರು ನನಗೆ ಮೂರು ದಶಕಗಳಿಂದ ಪರಿಚಿತರು. ಮುಂಬಯಿಯ ಸಾಹಿತ್ಯ ವಲಯವನ್ನು ನಾವು ಮರೆಯುವಂತಿಲ್ಲ ಎಂದರು. ಅಧ್ಯಕ್ಷತೆಯನ್ನು ವಹಿಸಿದ್ದ ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮಾಜಿ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ್ ಮಾತನಾಡಿ ಜಯಲಕ್ಷ್ಮಿ ಅವರು ಕವನ ಸಂಕಲನ ತರಬೇಕು ಎಂದು ಬರೆದವರಲ್ಲ. ಹಾಗಾಗಿ ಅವರ ಕವನಗಳು ಗಟ್ಟಿತನವನ್ನು ಉಳಿಸಿಕೊಂಡಿವೆ. ಅನುಭವದ ಮೂಸೆಯಿಂದ ಮೂಡಿಬಂದಂತಹ ಕವಿತಾ ರಚನೆಗಳು ಜನಮಾನಸವನ್ನು ತಲುಪುವಲ್ಲಿ ಯಶಸ್ವಿಯಾಗುತ್ತವೆ ಎಂದರು. ಮುಖ್ಯ ಅತಿಥಿ ಮಂಗಳೂರಿನ ಹಿರಿಯ ಸಾಹಿತಿ, ಉಪನ್ಯಾಸಕಿ ಡಾ. ಮೀನಾಕ್ಷಿ ರಾಮಚಂದ್ರ ಅವರು ಎರಡು ದಶಕಗಳ ನಂತರ ಮತ್ತೆ ಶ್ರೀನಿವಾಸ ಜೋಕಟ್ಟೆ ಅವರ ಜೊತೆ ವೇದಿಕೆಯಲ್ಲಿದ್ದೇನೆ. ಆದರೆ ಇಂದು ಖುಷಿ ನೋವು ಎರಡೂ ಜೊತೆಗಿದೆ. ನಾವು ಬದುಕಿನಲ್ಲಿನ ನೋವನ್ನು ಮರೆತು ದೃಢ ಮನಸ್ಸು ಕಾಪಾಡಿಕೊಂಡು ಮುಂದುವರಿಯಬೇಕಾದ ಅನಿವಾರ್ಯತೆ ನಮ್ಮ ಎದುರಿಗಿದೆ ಎಂದು ಹೇಳಿದರು. ಜಯಲಕ್ಷ್ಮಿ ಜೋಕಟ್ಟೆಯವರ ಕವಿತೆಗಳು’ ಕೃತಿಯ ಸಂಪಾದಕರಾದ ಅವರ ಪತಿ ಶ್ರೀನಿವಾಸ ಜೋಕಟ್ಟೆ ಮಾತನಾಡುತ್ತಾ ಏಳೆಂಟು ವರ್ಷ ಕವಿತಾ ಕ್ಷೇತ್ರದಲ್ಲಿ ಆಸಕ್ತಿ ಹೊಂದಿದ್ದ ಜಯಲಕ್ಷ್ಮಿ ಅವರು ಕನ್ನಡದ ಹಲವು ಪತ್ರಿಕೆಗಳಲ್ಲಿ ಕವನಗಳನ್ನು ಪ್ರಕಟಿಸಿದ್ದರು. ಅವರು ತಾವು ಬರೆದ ಕವಿತೆಗಳನ್ನು ವಿಮರ್ಶಕಿ ಸುನಂದಾ ಪ್ರಕಾಶ ಕಡಮೆ ಅವರಿಗೆ ಪ್ರತಿಕ್ರಿಯೆಗಾಗಿ ಕಳುಹಿಸುತ್ತಿದ್ದರು. ಸುನಂದಾ ಕಡಮೆ ಅವರು ಆ ಕವನಗಳನ್ನು ಕಂಪ್ಯೂಟರ್‌ನಲ್ಲಿ ಡಿಲೀಟ್ ಮಾಡದೆ ಹಾಗೆಯೇ ಉಳಿಸಿಕೊಂಡಿದ್ದರಿಂದಲೇ ಈ ಕವಿತಾ ಸಂಕಲನ ಹೊರಬರಲು ಸಾಧ್ಯವಾಯಿತು ಎನ್ನುತ್ತಾ, ನಂತರ ಜಯಲಕ್ಷ್ಮಿ ಯವರು ತಮ್ಮ ಕವಿತಾ ರಚನೆಯನ್ನು ನಿಲ್ಲಿಸಿ ನನ್ನ ಬರಹಗಳಿಗೇ ಹೆಚ್ಚಿನ ಮಹತ್ವ ನೀಡುತ್ತಾ ಬಂದರು ಎಂದು ನೆನಪಿಸಿಕೊಂಡರು. ಮಂಗಳೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಮಂಜುನಾಥ ಎಸ್.ರೇವಣಕರ್ ಅವರು ಚೊಚ್ಚಲ ಕವಿತಾಸಂಕಲನಕ್ಕೆ ಶುಭ ಹಾರೈಸಿದರು.  ಈ ಸಂದರ್ಭದಲ್ಲಿ ಜಯಲಕ್ಷ್ಮಿ ಅವರ ಮಧುಬನ- ಮಳೆಗಾನ ಎಂಬ ಕವಿತೆಯನ್ನು ಹಳೆಮನೆ ರಾಜಶೇಖರ ಉಜಿರೆ ವಾಚಿಸಿದರು. ಪತ್ರಕರ್ತ ರೇಮಂಡ್ ಡಿ ಕುನ್ಹಾ ತಾಕೊಡೆ ಸ್ವಾಗತಿಸಿದರು.ಸಾಹಿತಿ ಅರುಣ ನಾಗರಾಜ ವಂದಿಸಿದರು. ವಿಮರ್ಶಕ ಹಳೆಮನೆ ರಾಜಶೇಖರ ಉಜಿರೆ ಕಾರ್ಯಕ್ರಮ ನಿರೂಪಿಸಿದರು.

ವಾರ್ತಾ ಭಾರತಿ 4 Jan 2026 9:53 pm

ಕಳೆದ ವರ್ಷ ಇವರು ಪಾವತಿಸಿದ್ದು 120 ಕೋಟಿ ರೂ.! ದೇಶದಲ್ಲೇ ಗರಿಷ್ಠ ತೆರಿಗೆ ಕಟ್ಟಿದ ಇವರು ಕ್ರಿಕೆಟರ್ ಅಲ್ಲ, ಉದ್ಯಮಿಯಲ್ಲ! ಹಾಗಾದ್ರೆ ಯಾರು?

ಇವರು 2024-25ನೇ ಸಾಲಿನಲ್ಲಿ 120 ಕೋಟಿ ರೂ. ತೆರಿಗೆ ಪಾವತಿಸಿ, ಕಳೆದ ವರ್ಷ ಅತಿ ಹೆಚ್ಚು ತೆರಿಗೆ ಪಾವತಿಸಿದ್ದ ಬಾಲಿವುಡ್ ನಟ ಶಾರೂಖ್ ಖಾನ್ ಅವರನ್ನು ಹಿಂದಿಕ್ಕಿದ್ದಾರೆ. ಆ ಮೂಲಕ, ದೇಶದ ಅತಿ ಹೆಚ್ಚು ತೆರಿಗೆ ಪಾವತಿಸಿದ ವೈಯಕ್ತಿಕ ವ್ಯಕ್ತಿಯಾಗಿ ಹೊರಹೊಮ್ಮಿದ್ದಾರೆ. ಸುಮಾರು 350 ಕೋಟಿ ರೂ. ಆದಾಯ ಗಳಿಸಿರುವ ಇವರ ತೆರಿಗೆ ಪಾವತಿ ಕಳೆದ ವರ್ಷಕ್ಕಿಂತ 69% ಹೆಚ್ಚಳ ಕಂಡಿದೆ. ಇವರು ಯಾರು? ಇಲ್ಲಿದೆ ವಿವರಣೆ.

ವಿಜಯ ಕರ್ನಾಟಕ 4 Jan 2026 9:53 pm

ಮಂಗಳೂರಿನಲ್ಲಿ ಪವಿತ್ರ ಪರಮ ಪ್ರಸಾದದ ಮೆರವಣಿಗೆ

ಮಂಗಳೂರು, ಜ.4: ಯೇಸು ಕ್ರಿಸ್ತರ ದೈವದರ್ಶನ ಮಹೋತ್ಸವ (ಎಪಿಫನಿ) ಪ್ರಯುಕ್ತ ಮಂಗಳೂರು ಧರ್ಮಪ್ರಾಂತದ ವತಿಯಿಂದ ವಾರ್ಷಿಕ ಪರಮ ಪವಿತ್ರ ಪ್ರಸಾದದ ಭವ್ಯ ಮೆರವಣಿಗೆಯು ರವಿವಾರ ಮಿಲಾಗ್ರಿಸ್ ಚರ್ಚ್‌ನಿಂದ ರೊಸಾರಿಯೊ ಕೆಥೆಡ್ರಲ್‌ವರೆಗೆ ನಡೆಯಿತು. ಪ್ರವಚನ ನೀಡಿದ ಮಂಗಳೂರು ಧರ್ಮಪ್ರಾಂತದ ಬಿಷಪ್ ಡಾ.ಪೀಟರ್ ಪಾವ್ಲ್ ಸಲ್ಡಾನ್ಹಾ ಪರಮ ಪವಿತ್ರ ಪ್ರಸಾದದಲ್ಲಿ ನಾವು ಜಗತ್ತಿನ ಜ್ಯೋತಿಯಾಗಲು ಶಕ್ತಿಯನ್ನು ಪಡೆಯುತ್ತೇವೆ. ನಮ್ಮ ಜೀವನದ ಪ್ರತಿಯೊಂದು ಹಂತದಲ್ಲೂ ಕ್ರಿಸ್ತನ ಪ್ರೀತಿಯನ್ನು ಪ್ರತಿಬಿಂಬಿಸಲು ನಮಗೆ ಪ್ರೇರಣೆ ಸಿಗುತ್ತದೆ ಎಂದರು. *ಬಲಿಪೂಜೆಯ ಬಳಿಕ ಪವಿತ್ರ ಪ್ರಸಾದವನ್ನು ಹೊತ್ತ ಅಲಂಕೃತ ವಾಹನ ನಗರದ ಪ್ರಮುಖ ರಸ್ತೆಗಳಲ್ಲಿ ಸಾಗಿತು. ಹಂಪನಕಟ್ಟೆ, ಕ್ಲಾಕ್ ಟವರ್ ವೃತ್ತ, ಎ.ಬಿ. ಶೆಟ್ಟಿ ವೃತ್ತ, ನೆಹರೂ ವೃತ್ತದ ಮೂಲಕ ಸಾಗಿದ ಮೆರವಣಿಗೆಯಲ್ಲಿ ಸಾವಿರಾರು ಭಕ್ತಾದಿಗಳು ಪಾಲ್ಗೊಂಡರು. *ರೊಸಾರಿಯೊ ಕೆಥೆಡ್ರಲ್ ಆವರಣದಲ್ಲಿ ನಡೆದ ಸಮಾರೋಪ ಕಾರ್ಯಕ್ರಮದಲ್ಲಿ ಸಂದೇಶ ನೀಡಿದ ಫಾ.ಅಬ್ರಹಾಂ ಡಿಸೋಜ ದೇವರ ಪ್ರೀತಿಯು ಕೇವಲ ಪ್ರಾರ್ಥನೆಗೆ ಸೀಮಿತವಾಗಿರಬಾರದು. ಅದು ಬಡವರ, ನಿರ್ಗತಿಕರ ಮತ್ತು ಸಮಾಜದ ಕಟ್ಟಕಡೆಯ ವ್ಯಕ್ತಿಯ ಸೇವೆಯಲ್ಲಿ ವ್ಯಕ್ತವಾಗಬೇಕು. ದೇವರನ್ನು ಪ್ರೀತಿಸುವುದೆಂದರೆ ಬಡವರಲ್ಲಿ ಕ್ರಿಸ್ತನನ್ನು ಕಾಣುವುದು ಮತ್ತು ನಮ್ಮ ಕಾರ್ಯಗಳ ಮೂಲಕ ಅವರಿಗೆ ಸೇವೆ ಸಲ್ಲಿಸುವುದಾಗಿದೆ ಎಂದರು. *2026ರ ಮಕ್ಕಳ ವರ್ಷ ಘೋಷಣೆ: ಪವಿತ್ರ ಪ್ರಸಾದದ ಆಶೀರ್ವಾದದ ನಂತರ, ಬಿಷಪ್ ನಮ್ಮ ಮಕ್ಕಳು ದೇವರ ರಾಜ್ಯದ ಫಲಗಳು ಎಂಬ ಧ್ಯೇಯವಾಕ್ಯವಿರುವ ಸ್ಮರಣಾರ್ಥ ಲಾಂಛನವನ್ನು ಅನಾವರಣಗೊಳಿಸುವ ಮೂಲಕ, 2026ನೇ ವರ್ಷವನ್ನು ಅಧಿಕೃತವಾಗಿ ‘ಮಕ್ಕಳ ವರ್ಷ’ ಎಂದು ಘೋಷಿಸಿದರು. ಬಳಿಕ ಮಾತನಾಡಿದ ಬಿಷಪ್, 18 ವರ್ಷದೊಳಗಿನ ಮಕ್ಕಳ ಕ್ಷೇಮಕ್ಕೆ ವಿಶೇಷ ಆದ್ಯತೆ ನೀಡಬೇಕು. ಅವರಿಗೆ ಕೇವಲ ಶಿಕ್ಷಣವಷ್ಟೇ ಅಲ್ಲ ಮಾನವೀಯ ಮೌಲ್ಯಗಳು, ಭಾವನಾತ್ಮಕ ಮತ್ತು ಆಧ್ಯಾತ್ಮಿಕ ಬೆಳವಣಿಗೆಯ ಬಗ್ಗೆ ಮಾರ್ಗದರ್ಶನ ನೀಡುವ ಅಗತ್ಯವಿದೆ ಎಂದರು. ರೊಸಾರಿಯೊ ಕೆಥೆಡ್ರಲ್‌ನಲ್ಲಿ ನಡೆದ ಆರಾಧನೆ ಮತ್ತು ಪ್ರಾರ್ಥನಾ ವಿಧಿಯನ್ನು ಬೈಬಲ್ ಆಯೋಗದ ಕಾರ್ಯದರ್ಶಿ ಡಾ. ವಿನ್ಸೆಂಟ್ ಸಿಕ್ವೇರಾ ನಡೆಸಿಕೊಟ್ಟರು. ಸಮಾರೋಪ ಕಾರ್ಯಕ್ರಮವನ್ನು ಮಂಗಳ ಜ್ಯೋತಿ ಲಿಟರ್ಜಿಕಲ್ ಸೆಂಟರ್‌ನ ನಿರ್ದೇಶಕ ಫಾ.ರೋಹಿತ್ ಡಿಕೋಸ್ಟಾ ಸಂಘಟಿಸಿದರು.    

ವಾರ್ತಾ ಭಾರತಿ 4 Jan 2026 9:43 pm

ಬ್ಯಾರಿ ಕ್ಷೇತ್ರ ಅಧ್ಯಯನದಿಂದ ಹೊಸ ವಿಚಾರಗಳು ಬೆಳಕಿಗೆ: ರಹ್ಮಾನ್ ಕುತ್ತೆತ್ತೂರು

ಮಂಗಳೂರು ತಾಲೂಕು ಬ್ಯಾರಿ ಸಾಹಿತ್ಯ ಸಮ್ಮೇಳನ

ವಾರ್ತಾ ಭಾರತಿ 4 Jan 2026 9:41 pm

ರಾಷ್ಟ್ರಮಟ್ಟದ 'ಆಟೋ ಎಕ್ಸ್' ರ‍್ಯಾಲಿ, ಮೋಟಾರ್ ಸ್ಪೋರ್ಟ್ಸ್‌ಗೆ ಚಾಲನೆ

ಮೂಡುಬಿದಿರೆ: ತ್ರಿಭುವನ್ ಆಟೋಮೋಟಿವ್ ಕ್ಲಬ್ ಮತ್ತು ಬೆದ್ರ ಅಡ್ವೆಂಚರಸ್ ಕ್ಲಬ್ ಸಂಯುಕ್ತ ಆಶ್ರಯದಲ್ಲಿ, ಐಎಂಎಸ್‌ಸಿ ಮೋಟಾರ್ ಸ್ಪೋರ್ಟ್ಸ್‌ ಹಾಗೂ ಫೆಡರೇಶನ್ ಆಫ್ ಮೋಟಾರ್ ಸ್ಪೋರ್ಟ್ಸ್ ಕ್ಲಬ್ಸ್ ಆಫ್ ಇಂಡಿಯಾ ಸಹಯೋಗದಲ್ಲಿ ಕಲ್ಲಬೆಟ್ಟು ಮಾರಿಗುಡಿ ಬಳಿಯ ಪಂಚರತ್ನ ಮೈದಾನದಲ್ಲಿ ಆಯೋಜಿಸಲಾದ ಚತುಶ್ಚಕ್ರ ಹಾಗೂ ದ್ವಿಚಕ್ರ ವಾಹನಗಳ ರಾಷ್ಟ್ರಮಟ್ಟದ `ಆಟೋ ಎಕ್ಸ್' ರ‍್ಯಾಲಿ ಹಾಗೂ ಮೋಟಾರ್ ಸ್ಪೋರ್ಟ್ಸ್‌ಗೆ ರವಿವಾರ ನಡೆಯಿತು. ಚೌಟರ ಅರಮನೆಯ ಕುಲದೀಪ್ ಎಂ. ಹಾಗೂ ಉದ್ಯಮಿ, ರ‍್ಯಾಲಿ ನಡೆಸಲು ಮೈದಾನ ನೀಡಿದ ತಿಮ್ಮಯ್ಯ ಶೆಟ್ಟಿ ಅವರು ರ‍್ಯಾಲಿಗೆ ಅಧಿಕೃತ ಚಾಲನೆ ನೀಡಿ ಶುಭ ಹಾರೈ ಸಿದರು. ಕ್ರೀಡಾ ಇಲಾಖೆಯ ಅಧಿಕಾರಿ ಪ್ರದೀಪ್ ಡಿಸೋಜ, ಪುರಸಭೆ ಸದಸ್ಯ ಸುರೇಶ್ ಕೋಟ್ಯಾನ್, ಎಸ್.ಸಿ.ಎಸ್ ಬ್ಯಾಂಕ್ ಅಧ್ಯಕ್ಷ ಬಾಹುಬಲಿ ಪ್ರಸಾದ್, ಉದ್ಯಮಿಗಳಾದ ಕೆ. ಶ್ರೀಪತಿ ಭಟ್, ಅಶ್ವಿನ್ ಜೆ.ಪಿರೇರಾ, ಮಹೇಂದ್ರವರ್ಮ ಜೈನ್, ಅಬು ಅಲಾ ಪುತ್ತಿಗೆ, ಕೃಷ್ಣರಾಜ್ ಹೆಗ್ಡೆ, ನ್ಯೂ ವೈಬ್ರೆಂಟ್ ಕಾಲೇಜಿನ ಟ್ರಸ್ಟಿಗಳಾದ ಚಂದ್ರಶೇಖರ್ ರಾಜೆ ಅರಸ್, ಡಾ.ಎಸ್.ಎನ್ ವೆಂಕಟೇಶ್ ನಾಯಕ್, ಯೋಗೇಶ್ ಬೆಡೇಕರ್, ರೇಸಿಂಗ್ ಸಾಧಕ ಮೂಸಾ ಶರೀಫ್, ಮೂಡುಬಿದಿರೆ ಲಯನ್ಸ್ ಕ್ಲಬ್ ನ ಅಧ್ಯಕ್ಷ ಶಿವಪ್ರಸಾದ್ ಹೆಗ್ಡೆ ಸಹಿತ ಗಣ್ಯರಿದ್ದರು. ರ‍್ಯಾಲಿ ಆಯೋಜನೆಯ ಪ್ರಮುಖರಾದ ಅಕ್ಷಯ್ ಜೈನ್, ಪ್ರತಾಪ್ ಕುಮಾರ್, ಧೀರಜ್ ಕೊಳಕೆ, ಚೆಂಗಪ್ಪ, ಸಿ.ಎಚ್.ಗಫೂರ್, ಯತಿರಾಜ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.  

ವಾರ್ತಾ ಭಾರತಿ 4 Jan 2026 9:34 pm

ಬಳ್ಳಾರಿ ಬ್ಯಾನರ್‌ ಸಂಘರ್ಷ, ಕೋಗಿಲು ವಿವಾದ; ಬೆಂಗಳೂರಿನಲ್ಲಿ ಜ.5ರಂದು ಬಿಜೆಪಿ ಹೋರಾಟ

ಶಾಸಕ ಜನಾರ್ದನ ರೆಡ್ಡಿ ಹತ್ಯೆ ಸಂಚು ಮತ್ತು ಹಲ್ಲೆ ಯತ್ನ ಖಂಡಿಸಿ, ಬೆಂಗಳೂರಿನಲ್ಲಿ ಬಿಜೆಪಿ ವತಿಯಿಂದ ಸೋಮವಾರ ಪ್ರತಿಭಟನೆ ನಡೆಸಲಾಗುವುದು. ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಗುವುದು ಎಂದು ವಿಪಕ್ಷ ನಾಯಕ ಆರ್. ಅಶೋಕ್ ಹೇಳಿದ್ದಾರೆ. ಕಾಂಗ್ರೆಸ್‌ನ ಸತ್ಯಶೋಧನಾ ಸಮಿತಿ ಸುಳ್ಳು ಶೋಧನಾ ಸಮಿತಿಯಾಗಿದ್ದು, ಪೊಲೀಸ್ ಠಾಣೆಗಳು ಕಾಂಗ್ರೆಸ್ ಕಚೇರಿಗಳಾಗಿವೆ ಎಂದು ಅವರು ಆರೋಪಿಸಿದರು.

ವಿಜಯ ಕರ್ನಾಟಕ 4 Jan 2026 9:32 pm

ಡಿಜಿಟಲ್ ಅರೆಸ್ಟ್ | ಮುಂಬೈ ಪೊಲೀಸರ ಸೋಗಿನಲ್ಲಿ ಹೈದರಾಬಾದ್‌ ನ ವ್ಯಕ್ತಿಯಿಂದ 7.12 ಕೋಟಿ ರೂ. ಸುಲಿಗೆ!

ಹೈದರಾಬಾದ್, ಜ.4: ಮುಂಬೈ ಪೊಲೀಸ್ ಅಧಿಕಾರಿಗಳ ಸೋಗಿನಲ್ಲಿ ಸೈಬರ್ ವಂಚಕರ ತಂಡವೊಂದು ಹೈದರಾಬಾದ್‌ ನ 81 ವರ್ಷದ ವಯೋವೃದ್ಧರೊಬ್ಬರನ್ನು ‘ಡಿಜಿಟಲ್ ಬಂಧನ’ದಲ್ಲಿರಿಸಿ 7.12 ಕೋಟಿ ರೂ. ದೋಚಿದ ಪ್ರಕರಣ ರವಿವಾರ ವರದಿಯಾಗಿದೆ. ಮಾದಕದ್ರವ್ಯ ಕಳ್ಳಸಾಗಣೆ ಜಾಲದಲ್ಲಿ ಶಾಮೀಲಾಗಿದ್ದೀರೆಂದು ವೃದ್ಧ ವ್ಯಕ್ತಿಗೆ ಬೆದರಿಕೆ ಹಾಕಿರುವ ವಂಚಕರು, ದೃಢೀಕರಣದ ನೆಪದಲ್ಲಿ ಹಣ ಸುಲಿಗೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಕೊರಿಯರ್ ಕಂಪೆನಿಯವರೆಂದು ಹೇಳಿಕೊಂಡು ವಂಚಕರು ಅಕ್ಟೋಬರ್ 27ರಂದು ವೃದ್ಧ ವ್ಯಕ್ತಿಗೆ ಕರೆ ಮಾಡಿ, ತಮ್ಮ ಹೆಸರಿನಲ್ಲಿ ಮುಂಬೈನಿಂದ ಥೈಲ್ಯಾಂಡ್‌ ಗೆ ಪಾರ್ಸೆಲ್ ಕಳುಹಿಸಲಾಗಿದ್ದು, ಅದರಲ್ಲಿ ಎಂಡಿಎಂಎ ಮಾದಕದ್ರವ್ಯವಿತ್ತು. ಅಲ್ಲದೆ ಪಾಸ್‌ಪೋರ್ಟ್‌ ಗಳು, ಕೆಲವು ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್‌ಗಳೂ ಪತ್ತೆಯಾಗಿವೆ. ಈ ಪಾರ್ಸೆಲ್‌ ನ್ನು ತಡೆಹಿಡಿಯಲಾಗಿದ್ದು, ಪ್ರಕರಣದ ತನಿಖೆಯನ್ನು ಮುಂಬೈ ಪೊಲೀಸರಿಗೆ ಒಪ್ಪಿಸಲಾಗಿದೆ ಎಂದು ತಿಳಿಸಿದ್ದರು. ಬಳಿಕ ಇನ್ನೋರ್ವ ವ್ಯಕ್ತಿ ಮುಂಬೈ ಪೊಲೀಸ್ ಅಧಿಕಾರಿಯ ಸೋಗಿನಲ್ಲಿ ವೃದ್ಧರಿಗೆ ಕರೆ ಮಾಡಿದ್ದು, ಮಾದಕದ್ರವ್ಯ ಕಳ್ಳಸಾಗಣೆ, ಕಪ್ಪುಹಣ ಬಿಳುಪು ಹಾಗೂ ಭಯೋತ್ಪಾದಕ ಚಟುವಟಿಕೆಗಳ ಬೃಹತ್ ಜಾಲದಲ್ಲಿ ಅವರು ಶಾಮೀಲಾಗಿದ್ದಾರೆಂದು ಆಪಾದಿಸಿದ್ದನು. ವೃದ್ಧರ ಬ್ಯಾಂಕ್ ಖಾತೆ ಹಾಗೂ ಹೂಡಿಕೆಗಳ ವಿವರಗಳನ್ನು ದೃಢಪಡಿಸುವ ನೆಪದಲ್ಲಿ, ಪ್ರಕರಣದಿಂದ ಹೊರಬರಬೇಕಾದರೆ ತಾನು ಸೂಚಿಸಿದ ಬ್ಯಾಂಕ್ ಖಾತೆಗಳಿಗೆ ಹಣ ವರ್ಗಾಯಿಸುವಂತೆ ಮತ್ತು ನಿರಪರಾಧಿಯೆಂದು ದೃಢಪಟ್ಟ ಬಳಿಕ ಹಣವನ್ನು ಹಿಂತಿರುಗಿಸಲಾಗುವುದೆಂದು ತಿಳಿಸಿದ್ದನು. ಈ ವಿಷಯವಾಗಿ ಯಾರೊಂದಿಗೂ ಮಾತನಾಡದಂತೆ ಆತ ಎಚ್ಚರಿಕೆ ನೀಡಿದ್ದನು. ಅಮಾಯಕ ವಯೋವೃದ್ಧರು ಎರಡು ತಿಂಗಳ ಅವಧಿಯಲ್ಲಿ 7.12 ಕೋಟಿ ವರ್ಗಾಯಿಸಿದ್ದರು. ಇನ್ನೂ 1.2 ಕೋಟಿ ವರ್ಗಾಯಿಸುವಂತೆ ವಂಚಕರು ಒತ್ತಾಯಿಸಿದಾಗ ತಾವು ಮೋಸಹೋಗಿರುವುದು ಅವರಿಗೆ ಅರಿವಾಯಿತು. ಆನಂತರ ಅವರು ಡಿಸೆಂಬರ್ 30ರಂದು ತೆಲಂಗಾಣ ಸೈಬರ್ ಭದ್ರತಾ ದಳ(ಟಿಜಿಸಿಎಸ್‌ಬಿ)ಕ್ಕೆ ದೂರು ನೀಡಿದರು. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಸಂತ್ರಸ್ತ ವ್ಯಕ್ತಿ ಈ ಹಿಂದೆ ಉದ್ಯಮವೊಂದನ್ನು ನಡೆಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ವಾರ್ತಾ ಭಾರತಿ 4 Jan 2026 9:30 pm

ಕ್ರಿಸ್ಮಸ್ ಸಂದರ್ಭ ಕ್ರೈಸ್ತರ ಮೇಲೆ ದಾಳಿ; ಕಳವಳ ವ್ಯಕ್ತಪಡಿಸಿದ ಬಿಜೆಪಿ ಮಿತ್ರ ಪಕ್ಷ ಎನ್‌ಪಿಪಿ

ಚೆನ್ನೈ, ಜ. 4: ಕ್ರಿಸ್ಮಸ್ ಆಚರಣೆ ಸಂದರ್ಭ ಹಲವು ರಾಜ್ಯಗಳಲ್ಲಿ ಕ್ರೈಸ್ತರ ಮೇಲಿನ ದಾಳಿ ಕುರಿತು ಬಿಜೆಪಿಯ ಮಿತ್ರ ಪಕ್ಷವಾಗಿರುವ ನ್ಯಾಷನಲ್ ಪೀಪಲ್ಸ್ ಪಾರ್ಟಿ ಕಳವಳ ವ್ಯಕ್ತಪಡಿಸಿದೆ. ಛತ್ತೀಸ್‌ ಗಢದ ರಾಯಪುರ, ಅಸ್ಸಾಂನ ನಲ್ಬರಿ, ಮಧ್ಯಪ್ರದೇಶದ ಜಬಲ್ಪುರ, ಕೇರಳದ ಪಾಲಕ್ಕಾಡ್, ಉತ್ತರಾಖಂಡದ ಹರಿದ್ವಾರ್ ಹಾಗೂ ದಿಲ್ಲಿ ಸೇರಿದಂತೆ ದೇಶಾದ್ಯಂತ ಡಿಸೆಂಬರ್‌ ನಲ್ಲಿ ಕ್ರೈಸ್ತರ ಮೇಲೆ ದಾಳಿ ಹಾಗೂ ಕ್ರಿಸ್ಮಸ್ ಆಚರಣೆಗೆ ಅಡ್ಡಿ ಉಂಟು ಮಾಡಿದ ಹಲವು ಘಟನೆಗಳು ವರದಿಯಾಗಿವೆ. ಈ ಹಿನ್ನೆಲೆಯಲ್ಲಿ ಎನ್‌ಪಿಪಿಯ ಮೇಘಾಲಯದ ಕಾರ್ಯಾಧ್ಯಕ್ಷ ಹ್ಯಾಮ್ಲೆಟ್ಸನ್ ದೊಹ್ಲಿಂಗ್, ಇಂತಹ ದಾಳಿಗಳನ್ನು ತಡೆಯಲು ಕಠಿಣ ಕ್ರಮ ಕೈಗೊಳ್ಳುವಂತೆ ಕೋರಿ ಸಂಬಂಧಿತ ರಾಜ್ಯ ಸರಕಾರಗಳಿಗೆ ಮೇಘಾಲಯ ಸರಕಾರ ಪತ್ರ ಬರೆಯುವಂತೆ ಪಕ್ಷ ಆಗ್ರಹಿಸಲಿದೆ ಎಂದಿದ್ದಾರೆ. ‘‘ನಾವು ಈ ಘಟನೆಗಳನ್ನು ತೀವ್ರವಾಗಿ ವಿರೋಧಿಸುತ್ತೇವೆ. ಇಂತಹ ಘಟನೆಗಳು ಪುನರಾವರ್ತನೆ ಆಗಬಾರದು ಎಂದು ಪ್ರತಿಪಾದಿಸುತ್ತೇವೆ. ನಾವು ಇಂತಹ ಘಟನೆಗಳನ್ನು ಒಪ್ಪಿಕೊಳ್ಳುವುದಿಲ್ಲ ಹಾಗೂ ಸಹಿಸುವುದಿಲ್ಲ’’ ಎಂದು ದೊಹ್ಲಿಂಗ್ ಹೇಳಿದ್ದಾರೆ. ‘‘ನಾನು ಪಕ್ಷದ ಕಳವಳವನ್ನು ಪಕ್ಷದ ಮುಖ್ಯಸ್ಥ ಹಾಗೂ ಮೇಘಾಲಯದ ಮುಖ್ಯಮಂತ್ರಿ ಕಾನ್ರಾಡ್ ಸಂಗ್ಮಾ ಅವರಿಗೆ ನೇರವಾಗಿ ತಿಳಿಸಿದ್ದೇನೆ’’ ಎಂದು ಅವರು ಹೇಳಿದರು. ನಾಗಾಲ್ಯಾಂಡ್ ಬ್ಯಾಪಿಸ್ಟ್ ಚರ್ಚ್ ಕೌನ್ಸಿಲ್ ಕೂಡ ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬಹಿರಂಗ ಪತ್ರ ಬರೆದಿದೆ. ದೇಶಾದ್ಯಂತ ಕ್ರೈಸ್ತರ ಮೇಲೆ ದಾಳಿಗಳು ಹೆಚ್ಚುತ್ತಿರುವ ಬಗ್ಗೆ ಅದು ಕಳವಳ ಹಾಗೂ ತೀವ್ರ ವಿಷಾದ ವ್ಯಕ್ತಪಡಿಸಿದೆ. ವಿಶೇಷವಾಗಿ ಕ್ರಿಸ್ಮಸ್ ಸಮಯದಲ್ಲಿ ಇಂತಹ ದಾಳಿಗಳು ಹೆಚ್ಚಾಗುತ್ತವೆ ಎಂದು ಅದು ಹೇಳಿದೆ. ಪ್ರಧಾನಿ ಮಧ್ಯಪ್ರವೇಶಿಸುವಂತೆ ಕೌನ್ಸಿಲ್ ಆಗ್ರಹಿಸಿದೆ.

ವಾರ್ತಾ ಭಾರತಿ 4 Jan 2026 9:29 pm

ಕಾನೂನುಬಾಹಿರ ವಿಷಯ ಪೋಸ್ಟ್ ಮಾಡುವ ಖಾತೆಗಳ ಶಾಶ್ವತ ಅಮಾನತಿಗೆ X ಸಜ್ಜು

ಹೊಸದಿಲ್ಲಿ, ಜ. 4: ಮೈಕ್ರೋಬ್ಲಾಗಿಂಗ್ ಸೈಟ್ ಎಕ್ಸ್ ಕಾನೂನುಬಾಹಿರ ವಿಷಯಗಳನ್ನು ತೆಗೆದುಹಾಕುವ, ಅಂತಹ ಪೋಸ್ಟ್‌ ಗಳನ್ನು ಮಾಡುವ ಖಾತೆಗಳನ್ನು ಶಾಶ್ವತವಾಗಿ ಅಮಾನತುಗೊಳಿಸುವ ಮತ್ತು ಅಗತ್ಯವಿದ್ದರೆ ಸ್ಥಳೀಯ ಸರಕಾರಗಳು ಹಾಗೂ ಕಾನೂನು ಜಾರಿ ಏಜೆನ್ಸಿಗಳೊಂದಿಗೆ ಕೆಲಸ ಮಾಡುವ ಮೂಲಕ ಅಂತಹ ವಿಷಯಗಳ ವಿರುದ್ಧ ಕ್ರಮ ಕೈಗೊಳ್ಳಲಿದೆ ಎಂದು ಎಲಾನ್ ಮಸ್ಕ್ ಒಡೆತನದ ಸಾಮಾಜಿಕ ವೇದಿಕೆ ರವಿವಾರ ತಿಳಿಸಿದೆ. ಕಾನೂನುಬಾಹಿರ ವಿಷಯವನ್ನು ಸೃಷ್ಟಿಸಲು ವೇದಿಕೆಯ ಕೃತಕ ಬುದ್ಧಿಮತ್ತೆ (AI) ಸೇವೆ ‘ಗ್ರೋಕ್’ ಅನ್ನು ಬಳಸುವವರು ಮಕ್ಕಳ ಲೈಂಗಿಕ ಶೋಷಣೆ ಸೇರಿದಂತೆ ಕಾನೂನುಬಾಹಿರ ವಿಷಯವನ್ನು ಪೋಸ್ಟ್ ಮಾಡುವವರಂತೆಯೇ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಎಕ್ಸ್‌ನ ಗ್ಲೋಬಲ್ ಗವರ್ನ್‌ಮೆಂಟ್ ಅಫೇರ್ಸ್ (ಜಿಜಿಎ) ಖಾತೆ ಎಚ್ಚರಿಕೆ ನೀಡಿದೆ. ‘ಅನುಚಿತ ಚಿತ್ರಗಳ’ ಕುರಿತು ಪೋಸ್ಟ್‌ಗೆ ಪ್ರತಿಕ್ರಿಯಿಸಿದ್ದ ಮಸ್ಕ್ ಎಕ್ಸ್‌ನಲ್ಲಿ ಇದೇ ರೀತಿಯ ಎಚ್ಚರಿಕೆಯನ್ನು ನೀಡಿದ್ದು, ಜಿಜಿಎ ತನ್ನ ಹೇಳಿಕೆಯಲ್ಲಿ ಮಸ್ಕ್ ನಿಲುವನ್ನು ಪುನರುಚ್ಚರಿಸಿದೆ. ಜಿಜಿಎ ಹ್ಯಾಂಡಲ್ ಎಕ್ಸ್ ನಿಯಮಗಳಿಗೆ ಲಿಂಕ್‌ವೊಂದನ್ನು ಹಂಚಿಕೊಂಡಿದೆ. ಪರಸ್ಪರ ಸಮ್ಮತಿಯೊಂದಿಗೆ ನಿರ್ಮಿಸಲಾದ ಮತ್ತು ವಿತರಿಸಲಾದ ವಯಸ್ಕರ ನಗ್ನತೆ ಅಥವಾ ಲೈಂಗಿಕ ನಡವಳಿಕೆಯ ವಿಷಯವನ್ನು, ಅದನ್ನು ಸೂಕ್ತವಾಗಿ ಉಲ್ಲೇಖ ಮಾಡಿದ್ದರೆ ಮತ್ತು ಪ್ರಮುಖವಾಗಿ ಪ್ರದರ್ಶಿಸದಿದ್ದರೆ, ಹಂಚಿಕೊಳ್ಳಲು ಈ ನಿಯಮಗಳು ಅನುಮತಿಸುತ್ತವೆ. ಸ್ಥಳೀಯ ಕಾನೂನುಗಳನ್ನು ಉಲ್ಲಂಘಿಸುವ ಅಸಭ್ಯ, ಅಶ್ಲೀಲ ಮತ್ತು ಇತರ ಕಾನೂನುಬಾಹಿರ ವಿಷಯಗಳನ್ನು ಎಕ್ಸ್‌ನಲ್ಲಿ ಅಪ್‌ಲೋಡ್ ಮಾಡುತ್ತಿರುವುದನ್ನು ಭಾರತ ಸರಕಾರ ಆಕ್ಷೇಪಿಸಿತ್ತು. ಜ. 2ರಂದು ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು, ವಿಶೇಷವಾಗಿ AI ಆ್ಯಪ್ ಗ್ರೋಕ್‌ ನಿಂದ ರಚಿತ ಎಲ್ಲ ಅಸಭ್ಯ, ಅಶ್ಲೀಲ ಮತ್ತು ಕಾನೂನುಬಾಹಿರ ವಿಷಯಗಳನ್ನು ತಕ್ಷಣ ತೆಗೆದುಹಾಕುವಂತೆ, ಇಲ್ಲದಿದ್ದರೆ ಕಾನೂನಿನಡಿ ಕ್ರಮ ಎದುರಿಸುವಂತೆ ಎಕ್ಸ್‌ಗೆ ತಾಕೀತು ಮಾಡಿತ್ತು. ಈ ಹಿನ್ನೆಲೆಯಲ್ಲಿ ಮಸ್ಕ್ ಮತ್ತು ಜಿಜಿಎ ಹೇಳಿಕೆಗಳು ಹೊರಬಿದ್ದಿವೆ. ಆಕ್ಷೇಪಾರ್ಹ ವಿಷಯ, ಬಳಕೆದಾರರು ಮತ್ತು ಖಾತೆಗಳ ವಿರುದ್ಧ ಕ್ರಮ ಕೈಗೊಳ್ಳುವಂತೆಯೂ ಸಚಿವಾಲಯವು ಎಕ್ಸ್‌ ಗೆ ನಿರ್ದೇಶನ ನೀಡಿತ್ತು. ಆದೇಶ ಹೊರಡಿಸಿದ ದಿನಾಂಕದಿಂದ 72 ಗಂಟೆಗಳಲ್ಲಿ ವಿವರವಾದ ಕ್ರಮಾನುಷ್ಠಾನ ವರದಿಯನ್ನು ಸಲ್ಲಿಸುವಂತೆ ಸಚಿವಾಲಯವು ಅಮೆರಿಕ ಮೂಲದ ಎಕ್ಸ್‌ ಗೆ ಸೂಚಿಸಿತ್ತು.

ವಾರ್ತಾ ಭಾರತಿ 4 Jan 2026 9:28 pm

ಮುಲ್ಕಿ: ನ್ಯಾಯಾಲಯಕ್ಕೆ ಹಾಜರಾಗದೆ ತಲೆ ಮರೆಸಿಕೊಂಡಿದ್ದ ಆರೋಪಿ ಸೆರೆ

ಮುಲ್ಕಿ: ಪ್ರಕರಣವೊಂದರಲ್ಲಿ ಭಾಗಿಯಾಗಿ ಎರಡು ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೇ ತಲೆ ಮರೆಸಿಕೊಂಡಿದ್ದ ಆರೋಪಿಯನ್ನು ಮುಲ್ಕಿ ಪೊಲೀಸರು ಬಂಧಿಸಿದ್ದಾರೆ. ಮುಲ್ಕಿ ಕೊಲ್ನಾಡು ಕೆ.ಎಸ್. ರಾವ್‌ ನಗರ ನಿವಾಸಿ ಪ್ರಹ್ಲಾದ್ (19) ಬಂಧಿತ ಆರೋಪಿ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಪ್ರಹ್ಲಾದ್ ವಿರುದ್ಧ ಮುಲ್ಕಿ ಪೊಲೀಸ್ ಠಾಣೆಯಲ್ಲಿ ಅ.ಕ್ರ. 78/2023ರಲ್ಲಿ ಕಲಂ 306, 34ಐಪಿಸಿಗಳಡಿ ಪ್ರಕರಣ ದಾಖಲಾಗಿತ್ತು. ಈ ಸಂಬಂಧ ಆರೋಪಿಯ ಬಂಧನಕ್ಕಾಗಿ ನ್ಯಾಯಾಲಯವು ಹಲವು ಬಾರಿ ದಸ್ತಗಿರಿಯ ವಾರೆಂಟ್‌ ಹೊರಡಿಸಿತ್ತು. ಆದರೆ ಎರಡು ವರ್ಷಗಳಿಂದ ಆರೋಪಿಯು ತಲೆ ಮರೆಸಿಕೊಂಡಿದ್ದ. ಸದ್ಯ ಆರೋಪಿಯನ್ನು ಬಂಧಿಸಿರುವ ಪೊಲೀಸರು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ಆತನಿಗೆ‌ ನ್ಯಾಯಾಂಗ ಬಂಧನ‌ ವಿಧಿಸಿದೆ.

ವಾರ್ತಾ ಭಾರತಿ 4 Jan 2026 9:27 pm

Tamil Nadu | ಪೊಂಗಲ್ ಹಬ್ಬಕ್ಕೆ ಪ್ರತಿ ಪಡಿತರ ಚೀಟಿದಾರರಿಗೆ 3 ಸಾವಿರ ರೂ.ನೆರವು ಘೋಷಿಸಿದ ಸರಕಾರ

ಚೆನ್ನೈ, ಜ. 4: ಪೊಂಗಲ್ ಹಬ್ಬದ ಹಿನ್ನೆಲೆಯಲ್ಲಿ ರಾಜ್ಯದ 2.22 ಕೋಟಿ ಪಡಿತರ ಚೀಟಿದಾರರಿಗೆ ಹಾಗೂ ಶ್ರೀಲಂಕಾದ ತಮಿಳರ ಪುನರ್ವಸತಿ ಶಿಬಿರಗಳಲ್ಲಿ ವಾಸಿಸುತ್ತಿರುವ ಸುಮಾರು 19,000 ಕುಟುಂಬಗಳಿಗೆ ತಲಾ 3,000 ರೂ. ನಗದು ಉಡುಗೊರೆ ನೀಡುವುದಾಗಿ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ರವಿವಾರ ಘೋಷಿಸಿದ್ದಾರೆ. ರಾಜ್ಯ ಸರಕಾರ ಅಕ್ಕಿ, ಸಕ್ಕರೆ, ಕಬ್ಬು ಹಾಗೂ ಧೋತಿ, ಸೀರೆಯನ್ನು ಒಳಗೊಂಡ ಪೊಂಗಲ್ ಉಡುಗೊರೆ ʼಹ್ಯಾಂಪರ್ʼ ಜೊತೆಗೆ 3,000 ರೂ. ನಗದು ಉಡುಗೊರೆಯನ್ನು ನೀಡಲಿದೆ ಎಂದು ಅವರು ತಿಳಿಸಿದ್ದಾರೆ. ಈ ವರ್ಷ ರಾಜ್ಯ ಸರಕಾರ ಪೊಂಗಲ್ ಉಡುಗೊರೆ ಯೋಜನೆ ಜಾರಿಗಾಗಿ 6,936.18 ಕೋಟಿ ರೂ.ಗಳನ್ನು ಮಂಜೂರು ಮಾಡಿದೆ. ಈ ನಗದು ಉಡುಗೊರೆಯನ್ನು ಪಡಿತರ ಅಂಗಡಿ ನೌಕರರ ಮೂಲಕ ವಿತರಿಸಲಾಗುವುದು ಎಂದು ಸರಕಾರ ಹೇಳಿದೆ. ಎಪ್ರಿಲ್ ಅಥವಾ ಮೇ ತಿಂಗಳಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ತಮಿಳುನಾಡಿನ ಡಿಎಂಕೆ ಸರಕಾರ ಪೊಂಗಲ್ ಉಡುಗೊರೆಯ ಜೊತೆಗೆ ನಗದು ರೂಪದ ನೆರವು ನೀಡುತ್ತಿದೆ ಎಂದು ಹೇಳಲಾಗುತ್ತಿದೆ.

ವಾರ್ತಾ ಭಾರತಿ 4 Jan 2026 9:27 pm

Uttarakhand | ಹಾವು ಕಡಿತದಿಂದ 50 ದಿನಗಳಲ್ಲಿ 13 ಮಂದಿ ಮೃತ್ಯು

ಡೆಹ್ರಾಡೂನ್, ಜ. 4: ಉತ್ತರಾಖಂಡದಲ್ಲಿ ಕಳೆದ ಸುಮಾರು 50 ದಿನಗಳಲ್ಲಿ ಹಾವು ಕಡಿತದಿಂದ 13 ಮಂದಿ ಸಾವನ್ನಪ್ಪಿದ್ದಾರೆ. 23 ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಉತ್ತರಾಖಂಡದ ಅರಣ್ಯ ಇಲಾಖೆ ತಿಳಿಸಿದೆ. 2013ರಿಂದ ರಾಜ್ಯದಲ್ಲಿ ಹಾವು ಕಚ್ಚಿ ಒಟ್ಟು 274 ಮಂದಿ ಸಾವನ್ನಪ್ಪಿದ್ದಾರೆ ಎಂದು ಅದು ತಿಳಿಸಿದೆ. ಉತ್ತರಾಖಂಡದಲ್ಲಿ ವನ್ಯಜೀವಿಗಳ ದಾಳಿ ಹೆಚ್ಚಾಗಲು ಹವಾಮಾನ ಬದಲಾವಣೆಯೇ ಪ್ರಮುಖ ಕಾರಣ ಎಂದು ಅರಣ್ಯ ಇಲಾಖೆ ಹೇಳಿದೆ. ಇತ್ತೀಚಿನ ದತ್ತಾಂಶದ ಪ್ರಕಾರ, ಚಳಿಗಾಲದಲ್ಲಿ ಕರಡಿ ಮತ್ತು ಚಿರತೆಗಳು ಮಾತ್ರವಲ್ಲದೆ ವಿಷಪೂರಿತ ಹಾವುಗಳೂ ಸಕ್ರಿಯವಾಗುತ್ತವೆ. ಕರಡಿ ಹಾಗೂ ಹಾವು ಸೇರಿದಂತೆ ಹಲವು ವನ್ಯಜೀವಿಗಳಿಗೆ ಚಳಿಗಾಲ ಸಾಂಪ್ರದಾಯಿಕವಾಗಿ ದೀರ್ಘ ನಿದ್ರೆಯ ಕಾಲ ಎಂದು ಉತ್ತರಾಖಂಡದ ಅರಣ್ಯ ಸಚಿವ ಸುಬೋಧ್ ಉನಿಯಾಲ್ ತಿಳಿಸಿದ್ದಾರೆ. ಸಾಮಾನ್ಯವಾಗಿ ಈ ಪ್ರಾಣಿಗಳು ಚಳಿಗಾಲದಲ್ಲಿ ಮೂರು ತಿಂಗಳು ಸುಪ್ತ ಸ್ಥಿತಿಯಲ್ಲಿ ಇರುತ್ತವೆ. ಇದರಿಂದ ದಾಳಿಯ ಘಟನೆಗಳು ಕಡಿಮೆಯಾಗುತ್ತವೆ. ಆದರೆ ಈ ವರ್ಷ ಪರಿಸ್ಥಿತಿ ಭಿನ್ನವಾಗಿದೆ. ಅವುಗಳು ಸುಪ್ತಾವಸ್ಥೆಯಲ್ಲಿ ಇಲ್ಲ. ಅವುಗಳ ಚಟುವಟಿಕೆ ಹೆಚ್ಚಾಗಿದೆ. ಅದರಿಂದಾಗಿ ಹೆಚ್ಚು ಪ್ರಕರಣಗಳು ದಾಖಲಾಗಿವೆ ಎಂದು ಅವರು ತಿಳಿಸಿದ್ದಾರೆ.

ವಾರ್ತಾ ಭಾರತಿ 4 Jan 2026 9:26 pm

ಆನ್‌ಲೈನ್ ಹೂಡಿಕೆ ಹೆಸರಿನಲ್ಲಿ 30.32ಲಕ್ಷ ರೂ. ವಂಚನೆ: ಪ್ರಕರಣ ದಾಖಲು

ಉಡುಪಿ, ಜ.4: ಆನ್‌ಲೈನ್ ಹೂಡಿಕೆ ಹೆಸರಿನಲ್ಲಿ ವ್ಯಕ್ತಿಯೊಬ್ಬರಿಗೆ ಲಕ್ಷಾಂತರ ರೂ. ವಂಚಿಸಿರುವ ಬಗ್ಗೆ ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಣಿಪಾಲ ಎಂಐಟಿಯ ನಿವೃತ್ತ ನೌಕರ ಉಮಾನಂದ ಕೆ.ವಿ.(61) ಎಂಬವರು ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡುತ್ತಿದ್ದು, ಇವರಿಗೆ ಅ.22ರಂದು ಅಪರಿಚಿತ ವ್ಯಕ್ತಿ ಸಂದೇಶ ಕಳುಹಿಸಿ, ಹಣ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭಾಂಶ ನೀಡುವುದಾಗಿ ತಿಳಿಸಿದ್ದನು. ಅದರಂತೆ ಉಮಾನಂದ ನ.6ರಿಂದ ಡಿ.31ರವರೆಗೆ ವಿವಿಧ ಹೆಸರಿನ ಸ್ಟಾಕ್ ಮಾರ್ಕೇಟ್ ಕಂಪೆನಿಗಳಲ್ಲಿ ಆರೋಪಿ ಸೂಚಿಸಿದ ವಿವಿಧ ಖಾತೆಗಳಿಗೆ ಒಟ್ಟು 30,32,000ರೂ. ಹಣವನ್ನು ಹೂಡಿಕೆ ಮಾಡಿದ್ದರು. ಆದರೆ ಈ ಕಂಪೆನಿಗಳು ಉಮಾನಂದ ಈವರೆಗೆ ಹೂಡಿಕೆ ಮಾಡಿದ ಹಣವನ್ನಾಗಲೀ ಅಥವಾ ಲಾಭಾಂಶವನ್ನಾಗಲೀ ವಾಪಾಸು ನೀಡದೇ ಮೋಸ ಮಾಡಿರುವುದಾಗಿ ದೂರಲಾಗಿದೆ.

ವಾರ್ತಾ ಭಾರತಿ 4 Jan 2026 9:20 pm

ಕಂಬಕ್ಕೆ ಬುಲೆಟ್ ಢಿಕ್ಕಿ: ಸವಾರ ಮೃತ್ಯು

ಕಾಪು, ಜ.4: ಬುಲೆಟ್ ಬೈಕ್ ರಸ್ತೆ ಬದಿಯ ಕಂಬಕ್ಕೆ ಢಿಕ್ಕಿ ಹೊಡೆದ ಪರಿಣಾಮ ಸವಾರೊಬ್ಬರು ಮೃತಪಟ್ಟ ಘಟನೆ ಕೋಟೆ ಗ್ರಾಮದ ತೌಡಬೆಟ್ಟುವಿನ ನಾಗಬನದ ಹತ್ತಿರ ಜ.3ರಂದು ರಾತ್ರಿ ವೇಳೆ ನಡೆದಿದೆ. ಮೃತರನ್ನು ಸಂಜಯ್ ಮಾಂಝಿ ಎಂದು ಗುರುತಿಸಲಾಗಿದೆ. ಪಳ್ಳಿಗುಡ್ಡೆಯಿಂದ ಕಿನ್ನಿಗುಡ್ಡೆ ಕಡೆಗೆ ಹೋಗುತ್ತಿದ್ದ ಬುಲೆಟ್ ಬೈಕ್ ಎದುರನಿಂದ ಬರುತ್ತಿದ್ದ ಕಾರನ್ನು ತಪ್ಪಿಸಲು ಹೋಗಿ ರಸ್ತೆಯ ಬದಿಯಲ್ಲಿದ್ದ ಕಂಬಕ್ಕೆ ಡಿಕ್ಕಿ ಹೊಡೆಯಿತ್ತೆನ್ನಲಾಗಿದೆ. ಇದರ ಪರಿಣಾಮ ಬೈಕ್ ಸವಾರ ಸಂಜಯ್ ಮಾಂಝಿ ತೀವ್ರ ಗಾಯಗೊಂಡರೆನ್ನಲಾಗಿದೆ. ಗಂಭೀರ ಸ್ಥಿತಿಯಲ್ಲಿದ್ದ ಅವರು, ಉಡುಪಿ ಜಿಲ್ಲಾ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗುವ ದಾರಿ ಮಧ್ಯೆ ಮೃತಪಟ್ಟರೆಂದು ತಿಳಿದುಬಂದಿದೆ. ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಾರ್ತಾ ಭಾರತಿ 4 Jan 2026 9:18 pm

ಅಂಪಾರು ಸೊಸೈಟಿ ಸಿಇಓನಿಂದ ಕೋಟ್ಯಂತರ ರೂ. ಅವ್ಯವಹಾರ ಆರೋಪ: ಪ್ರಕರಣ ದಾಖಲು

ಶಂಕರನಾರಾಯಣ, ಜ.4: ಅಂಪಾರು ಸಹಕಾರಿ ವ್ಯವಸಾಯಿಕ ಸಂಘದ 2023-2024ನೇ ಸಾಲಿನಲ್ಲಿ ಪ್ರಭಾರ ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಇಓ)ಯಾಗಿ ಕರ್ತವ್ಯ ನಿರ್ವಹಿಸಿದ್ದ ಸದಾಶಿವ ವೈದ್ಯ ಕೋಟ್ಯಂತರ ರೂ. ಅವ್ಯವಹಾರ ಎಸಗಿರುವ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸದಾಶಿವ ವೈದ್ಯ ತನ್ನ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ಬಡ್ಡಿ ಖಾತೆಗೆ ನಕಲಿ ಖರ್ಚು ಬರೆದು, ನಕಲಿ ಠೇವಣಿ ಸೃಷ್ಟಿಸಿ, ಉಳಿತಾಯ ಖಾತೆಯಲ್ಲಿ ಅವ್ಯವಹಾರ ಮಾಡಿ ಒಟ್ಟು 3,95,65,000ರೂ. ಹಣವನ್ನು ತನ್ನ ಸ್ವಂತಕ್ಕೆ ಬಳಸಿಕೊಂಡಿದ್ದನು. ಎಲ್ಲಾ ಹೊಂದಾಣಿಕೆ ಲೆಕ್ಕಗಳು ಸಂಘದ ಕಂಪ್ಯೂಟರ್‌ನಲ್ಲಿರುವ ದಾಖಲೆಗಳ ಮೂಲಕ ದಾಖಲಾಗಿದೆ.  ಸದಾಶಿವ ವೈದ್ಯ ನಕಲಿ ಠೇವಣಿ ಖಾತೆ, ಉಳಿತಾಯ ಖಾತೆ, ಸಾಲದ ಖಾತೆಗಳು, ಆತನ ಸಂಬಂಧಿಕರಿಗೆ ಸೇರಿದ ಖಾತೆಯ ಮೂಲಕ ಸಂಘದ ಹಣ ಪಡೆದುಕೊಂಡಿದ್ದು, ಪ್ರಸ್ತುತ ಸಿಇಓ ಪ್ರವೀಣ ಕುಮಾರ್ ಶೆಟ್ಟಿ ಅವರಿಗೆ ಈ ವಿಷಯ ಪರಿಶೀಲನೆ ಸಂದರ್ಭ ತಿಳಿದುಬಂದಿದೆ. ಸದಾಶಿವ ವೈದ್ಯ ಸಂಸ್ಥೆ ಮತ್ತು ಗ್ರಾಹಕರಿಗೆ ವಂಚನೆ ಮಾಡುವ ಉದ್ದೇಶದಿಂದ ನಕಲಿ ಪಾಸ್ ವರ್ಡ್ ಸೃಷ್ಟಿಸಿ ಒಟ್ಟು 3,95,65,000ರೂ. ಹಣವನ್ನು ತನ್ನ ಸ್ವಂತಕ್ಕೆ ಬಳಸಿಕೊಂಡು ದುರುಪಯೋಗ ಮಾಡಿರುವುದಾಗಿ ದೂರಲಾಗಿದೆ.

ವಾರ್ತಾ ಭಾರತಿ 4 Jan 2026 9:14 pm

ವೆನೆಜುವೆಲಾ ಮೇಲಿನ ಅಮೇರಿಕಾ ದಾಳಿ ಖಂಡಿಸಿ ಸಿಪಿಎಂ ಪ್ರತಿಭಟನೆ

ಕುಂದಾಪುರ, ಜ.4: ಸಾಮ್ರಾಜ್ಯಶಾಹಿ ಅಮೆರಿಕಾ ಸಮಾಜವಾದಿ ಸುಳ್ಳು ಆರೋಪಗಳನ್ನು ಹೊರಿಸಿ ಸಾರ್ವಭೌಮ ರಾಷ್ಟ್ರವಾಗಿರುವ ವೆನೆಜುವೆಲಾ ದೇಶದ ಮೇಲೆ ದಾಳಿ ನಡೆಸುತ್ತಿರುವುದು ಖಂಡನೀಯ ಎಂದು ಸಿಪಿಎಂ ಉಡುಪಿ ಜಿಲ್ಲಾ ಕಾರ್ಯದರ್ಶಿ ಸುರೇಶ್ ಕಲ್ಲಾಗರ ಹೇಳಿದ್ದಾರೆ. ಸಿಪಿಐಎಂ ಉಡುಪಿ ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ವೆನೆಜುವೆಲಾ ಮೇಲಿನ ಅಮೇರಿಕಾ ದಾಳಿಯನ್ನು ಖಂಡಿಸಿ ಕುಂದಾಪುರ ಹಂಚು ಕಾರ್ಮಿಕರ ಭವನದಲ್ಲಿ ರವಿವಾರ ನಡೆದ ಪ್ರತಿಭಟನಾ ಸಭೆಯನ್ನುದ್ದೇಶಿಸಿ ಅವರು ಮಾತನಾಡುತಿದ್ದರು. ವೆನೆಜುವೆಲಾ ದೇಶದಲ್ಲಿನ ತೈಲ ಸಂಪತ್ತನ್ನು ಲೂಟಿ ಹೊಡೆಯಲು ಅಮೆರಿಕಾದ ಸಂಚಿನ ಭಾಗವಾಗಿ ವೆನೆಜುವೆಲಾ ಮೇಲೆ ದಾಳಿ ನಡೆಸಿ ಅಲ್ಲಿನ ಅಧ್ಯಕ್ಷ ಮಡುರೊ ಮತ್ತು ಅವರ ಪತ್ನಿಯನ್ನು ಬಂಧಿಸಿದೆ. ಇದನ್ನು ಶಾಂತಿ ಬಯಸುವ ಎಲ್ಲರೂ ವಿರೋಧಿಸಬೇಕು ಎಂದು ಅವರು ತಿಳಿಸಿದರು. ಯುದ್ದದಾಹಿ, ದರೋಡೆಕೋರ ನೀತಿಯ ಅಮೆರಿಕಾ ಅಧ್ಯಕ್ಷ ತನ್ನ ವೈಫಲ್ಯಗಳನ್ನು ಮುಚ್ಚಿಡಲು ಸಮಾಜವಾದಿ ವೆನೆಜುವೆಲಾ ಮೇಲೆ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾನೆ. ಕೂಡಲೇ ವೆನೆಜುವೆಲಾ ಅಧ್ಯಕ್ಷರು ಹಾಗೂ ಅವರ ಪತ್ನಿ ಬಿಡುಗಡೆ ಮಾಡಬೇಕು. ಭಾರತ ಸರಕಾರ ಅಮೆರಿಕಾದ ಗೊಡ್ಡು ಬೆದರಿಕೆಗೆ ಮಣಿಯದೇ ವೆನೆಜುವೆಲಾ ಪರ ನಿಲ್ಲಬೇಕು ಎಂದು ಅವರು ಆಗ್ರಹಿಸಿದರು. ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯ ಎಚ್.ನರಸಿಂಹ ಮಾತನಾಡಿ, ಅಮೇರಿಕಾದ ಅಧ್ಯಕ್ಷ ಟ್ರಂಪ್ ನೀತಿಗಳು ಭಾರತ ದೇಶದ ದುಡಿಯುವ ವರ್ಗದ ಜನಜೀವನದ ಮೇಲೂ ದುಷ್ಪರಿಣಾಮ ಬೀರುತ್ತಿದೆ. ಜಗತ್ತಿನಲ್ಲಿ ಉಕ್ರೇನ್, ರಷ್ಯಾ ಹಾಗೂ ಇಸ್ರೇಲ್ ಪ್ಯಾಲೇಸ್ಟನ್ ಮೇಲೆ ನಡೆಸುತ್ತಿರುವ ದಾಳಿ ಸಾಮ್ರಾಜ್ಯಶಾಹಿ ಅಮೇರಿಕವೇ ನಡೆಸುತ್ತಿದೆ. ಮುಂದೆ ಭಾರತ ಅಮೆರಿಕಾದ ಷರತ್ತುಗಳಿಗೆ ಒಪ್ಪದಿದ್ದರೆ ನಮ್ಮ ದೇಶದ ಮೇಲೂ ದಾಳಿಯಾಗುವ ಅಪಾಯವಿದೆ ಎಂದು ಎಚ್ಚರಿಸಿದರು. ಪ್ರತಿಭಟನೆಯಲ್ಲಿ ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯ ಶಶಿಧರ ಗೊಲ್ಲ, ಜಿಲ್ಲಾ ಸಮಿತಿ ಸದಸ್ಯರಾದ ಶೀಲಾವತಿ, ಬಲ್ಕೀಸ್, ಕುಂದಾಪುರ ತಾಲೂಕು ಸಮಿತಿ ಸದಸ್ಯ ಚಿಕ್ಕ ಮೊಗವೀರ, ಮುಖಂಡರಾದ ಸಂತೋಷ್ ಹೆಮ್ಮಾಡಿ, ಅಣ್ಣಪ್ಪ ಅಬ್ಬಿಗುಡ್ಡಿ, ರಾಮಚಂದ್ರ ನಾವಡ ಮೊದಲಾದವರು ಉಪಸ್ಥಿತರಿದ್ದರು.

ವಾರ್ತಾ ಭಾರತಿ 4 Jan 2026 9:10 pm

ಆರ್ ಸಿಬಿ ಬ್ಯಾಟಿಂಗ್ ಆರ್ಡರ್ 2026: ವಿರಾಟ್ ಕೊಹ್ಲಿ, ಫಿಲ್ ಸಾಲ್ಟ್ ಮತ್ತೆ ಓಪನರ್ಸ್ - ಅಯ್ಯರ್ ತಂಡದಲ್ಲಿಲ್ಲ

2026ರ ಇಂಡಿಯನ್ ಪ್ರೀಮಿಯರ್ ಲೀಗ್‌ಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ತನ್ನ ಆಟಗಾರರ ಪಟ್ಟಿಯನ್ನು ಪ್ರಕಟಿಸಿದೆ. ಈ ಬಾರಿ ಚಾಂಪಿಯನ್ ಆಗಿ ಸೀಸನ್ ಆರಂಭಿಸುತ್ತಿರುವ ಆರ್‌ಸಿಬಿ, ವಿರಾಟ್ ಕೊಹ್ಲಿ ಮತ್ತು ಫಿಲ್ ಸಾಲ್ಟ್ ಅವರನ್ನು ಓಪನರ್ಸ್‌ ಆಗಿ ಕಣಕ್ಕಿಳಿಸಲಿದೆ. ತಂಡವು 17 ಆಟಗಾರರನ್ನು ಉಳಿಸಿಕೊಂಡಿದೆ. ಅನುಭವಿ ಆಟಗಾರರಾದ ಕೊಹ್ಲಿ, ಸಾಲ್ಟ್, ಪಟೀದಾರ್, ಪಾಂಡ್ಯ, ಹ್ಯಾಝಲ್‌ವುಡ್ ಮತ್ತು ಯಶ್ ದಯಾಳ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಆರ್‌ಸಿಬಿ ಪ್ರಶಸ್ತಿಯನ್ನು ಉಳಿಸಿಕೊಳ್ಳಲು ಸಿದ್ಧವಾಗಿದೆ.

ವಿಜಯ ಕರ್ನಾಟಕ 4 Jan 2026 9:09 pm

KSRTC: ಈ ಮಾರ್ಗಗಳಲ್ಲಿ ಕೆಎಸ್ಆರ್‌ಟಿಸಿ ಬಸ್ ಪ್ರಯಾಣ ದರ ಕಡಿತ

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ (ಕೆಎಸ್‌ಆರ್‌ಟಿಸಿ) ಮಂಗಳೂರು ವಿಭಾಗವು ಕರಾವಳಿ ಮತ್ತು ಬೆಂಗಳೂರು ನಡುವಿನ ಪ್ರೀಮಿಯಂ ಬಸ್ ಸೇವೆಗಳ ಟಿಕೆಟ್ ದರಗಳನ್ನು ಕಡಿತಗೊಳಿಸಿದೆ. ಸೋಮವಾರದಿಂದಲೇ (ಜ.5) ಈ ಪರಿಷ್ಕೃತ ದರಗಳು ಅನ್ವಯವಾಗಲಿವೆ. ಕೆಎಸ್‌ಆರ್‌ಟಿಸಿ ಮಂಗಳೂರು ವಿಭಾಗದಿಂದ ಕುಂದಾಪುರ, ಉಡುಪಿ, ಮಂಗಳೂರಿನಿಂದ ಬೆಂಗಳೂರಿಗೆ ಕಾರ್ಯಾಚರಣೆ ನಡೆಸುವ ಕೆಲವು ಬಸ್‌ಗಳ ಪ್ರಯಾಣ ದರವನ್ನು ಶೇ 10ರಿಂದ 15ರಷ್ಟು ಕಡಿತಗೊಳಿಸಲಾಗಿದೆ.

ಒನ್ ಇ೦ಡಿಯ 4 Jan 2026 8:55 pm

Jharkhand | UPSC ಅನುತ್ತೀರ್ಣ; 7 ವರ್ಷ IAS ಅಧಿಕಾರಿಯ ಸೋಗು ಹಾಕಿದ್ದ ವಂಚಕನ ಬಂಧನ

ಪಲಾಮು (ಜಾರ್ಖಂಡ್): ಯುಪಿಎಸ್‌ಸಿ ನಾಗರಿಕ ಸೇವಾ ಪರೀಕ್ಷೆಗಳಲ್ಲಿ ಅನುತ್ತೀರ್ಣನಾದರೂ, ಸುಮಾರು ಏಳು ವರ್ಷಗಳ ಕಾಲ ತಾನು IAS ಅಧಿಕಾರಿ ಎಂದು ಸೋಗು ಹಾಕಿಕೊಂಡು ಅಡ್ಡಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ಜಾರ್ಖಂಡ್ ಪೊಲೀಸರು ಬಂಧಿಸಿದ್ದಾರೆ. ತನ್ನ ಸಂಬಂಧಿಕರೊಬ್ಬರಿಗೆ ಸಂಬಂಧಿಸಿದ ಭೂ ವಿವಾದದಲ್ಲಿ ಸಹಾಯ ಮಾಡುವ ಉದ್ದೇಶದಿಂದ ಪಲಾಮು ಜಿಲ್ಲೆಯ ಹುಸೇನಾಬಾದ್ ಪೊಲೀಸ್ ಠಾಣೆಗೆ ಬಂದಿದ್ದ ಈ ವ್ಯಕ್ತಿಯ ವರ್ತನೆ ಪೊಲೀಸರಲ್ಲಿ ಅನುಮಾನ ಹುಟ್ಟಿಸಿತು. ಹೆಚ್ಚಿನ ವಿಚಾರಣೆ ವೇಳೆ, ಆತ ಮೊದಲಿಗೆ ತಾನು IAS ಅಧಿಕಾರಿ ಎಂದು ಹೇಳಿಕೊಂಡಿದ್ದರೂ, ನಂತರ ತಾನು IAS ಅಲ್ಲ, IPTAFS ಅಧಿಕಾರಿ ಎಂದು ಹೇಳಿಕೊಂಡು, ಈ ಸೇವೆ IASಗೆ ಸಮಾನವಾಗಿದೆ ಎಂದು ಹೇಳಿದ್ದಾನೆ ಎಂದು ತಿಳಿದು ಬಂದಿದೆ. ಹುಸೇನಾಬಾದ್ ಪೊಲೀಸ್ ಠಾಣಾಧಿಕಾರಿ ಸೋನು ಕುಮಾರ್ ಚೌಧರಿ ನೀಡಿದ ಅಧಿಕೃತ ಹೇಳಿಕೆಯ ಪ್ರಕಾರ, ಜನವರಿ 2ರಂದು 35 ವರ್ಷದ ವ್ಯಕ್ತಿಯೊಬ್ಬ ಠಾಣೆಗೆ ಬಂದು, ತಾನು 2014ರ ಬ್ಯಾಚ್‌ ನ ಒಡಿಶಾ ಕೇಡರ್ IAS ಅಧಿಕಾರಿ ಎಂದು ಪರಿಚಯಿಸಿಕೊಂಡಿದ್ದಾನೆ. ಭುವನೇಶ್ವರದಲ್ಲಿ ಮುಖ್ಯ ಲೆಕ್ಕಪತ್ರಾಧಿಕಾರಿಯಾಗಿ ನಿಯೋಜನೆಯಾಗಿದ್ದೇನೆ ಎಂದು ಹೇಳಿಕೊಂಡಿದ್ದ ಆತ, ತನ್ನ ಹುಟ್ಟೂರು ಕುಖಿ ಗ್ರಾಮದಲ್ಲಿ ವೈಯಕ್ತಿಕ ಕೆಲಸಕ್ಕಾಗಿ ರಜೆಯಲ್ಲಿದ್ದೇನೆ ಎಂದು ತಿಳಿಸಿದ್ದಾನೆ. ಇದೇ ವೇಳೆ, ಹುಸೇನಾಬಾದ್ ಪ್ರದೇಶದಲ್ಲಿ ತನ್ನ ಸಂಬಂಧಿಕರೊಬ್ಬರಿಗೆ ಸಂಬಂಧಿಸಿದ ಭೂ ವಿವಾದದಲ್ಲಿ ನೆರವು ಪಡೆಯಲು ಠಾಣೆಗೆ ಬಂದಿದ್ದಾಗಿ ಹೇಳಿದ್ದಾನೆ ಎನ್ನಲಾಗಿದೆ. ಈ ವೇಳೆ ಪೊಲೀಸರು IAS ಅಧಿಕಾರಿಗೆ ನೀಡುವ ಶಿಷ್ಟಾಚಾರವನ್ನು ಪಾಲಿಸಿದರು. ಆದರೆ ಆತ ಒಡಿಶಾ ಕೇಡರ್ ಅಧಿಕಾರಿ ಎಂದು ಹೇಳಿಕೊಂಡಿದ್ದರೂ, ಡೆಹ್ರಾಡೂನ್, ಹೈದರಾಬಾದ್ ಹಾಗೂ ಭುವನೇಶ್ವರಗಳಲ್ಲಿ ನಿಯೋಜನೆಯಾಗಿದ್ದೇನೆ ಎಂದು ಹೇಳಿದ್ದರಿಂದ ಠಾಣಾಧಿಕಾರಿಗೆ ಅನುಮಾನ ಹುಟ್ಟಿತು. ಹೆಚ್ಚಿನ ಪ್ರಶ್ನೆಗಳಿಗೆ ಉತ್ತರಿಸುವ ವೇಳೆ, ಆತ ತನ್ನ ಹೇಳಿಕೆಯನ್ನು ಬದಲಾಯಿಸಿ ತಾನು IAS ಅಲ್ಲ, IPTAFS ಅಧಿಕಾರಿ ಎಂದು ಹೇಳಿಕೊಂಡಿದ್ದಾನೆ. “ಯಾವುದೇ ಅಧಿಕೃತ ಮಾತುಕತೆಯ ವೇಳೆ ಒಬ್ಬ ಸೇವೆಯಲ್ಲಿರುವ ಅಧಿಕಾರಿ ತನ್ನ ಹುದ್ದೆಯನ್ನು ಹೀಗೆ ಆಕಸ್ಮಿಕವಾಗಿ ಬದಲಾಯಿಸುವುದಿಲ್ಲ. ಈ ಬದಲಾವಣೆಯೇ ಗಂಭೀರ ಅನುಮಾನಕ್ಕೆ ಕಾರಣವಾಯಿತು,” ಎಂದು ಠಾಣಾಧಿಕಾರಿ ಸೋನು ಕುಮಾರ್ ಚೌಧರಿ ತಿಳಿಸಿದ್ದಾರೆ. ಆ ವ್ಯಕ್ತಿ ಪೊಲೀಸ್ ಠಾಣೆಯಿಂದ ಹೊರಟ ಬಳಿಕ, ಈ ವಿಷಯವನ್ನು ಹುಸೇನಾಬಾದ್ ಉಪವಿಭಾಗೀಯ ಪೊಲೀಸ್ ಅಧಿಕಾರಿ (ಎಸ್‌ಡಿಪಿಒ) ಅವರಿಗೆ ತಿಳಿಸಲಾಯಿತು. ಎಸ್‌ಡಿಪಿಒ ಮಟ್ಟದಲ್ಲಿ ನಡೆಸಿದ ಪರಿಶೀಲನೆಯಲ್ಲಿ, ಆತ ನೀಡಿದ್ದ ಹೆಸರು, ಬ್ಯಾಚ್, ಕೇಡರ್ ಅಥವಾ ಸೇವಾ ವಿವರಗಳಿಗೆ ಹೊಂದುವ ಯಾವುದೇ ಅಧಿಕಾರಿ ಇಲ್ಲ ಎಂಬುದು ದೃಢಪಟ್ಟಿತು. ಅನಂತರ ಆ ವ್ಯಕ್ತಿಯನ್ನು ಹತ್ತಿರದ ಪ್ರದೇಶದಿಂದ ಪತ್ತೆಹಚ್ಚಿ ಮತ್ತೆ ಪೊಲೀಸ್ ಠಾಣೆಗೆ ಕರೆತರಲಾಯಿತು. ಜಾರ್ಖಂಡ್ ನೋಂದಣಿ ಸಂಖ್ಯೆಯುಳ್ಳ ಆತನ ಹುಂಡೈ ಔರಾ ಕಾರನ್ನೂ ವಶಕ್ಕೆ ಪಡೆಯಲಾಯಿತು. ನಿರಂತರ ವಿಚಾರಣೆಯ ವೇಳೆ, ಆತ ತಾನು IAS ಅಧಿಕಾರಿ ಅಲ್ಲ ಹಾಗೂ ಯಾವುದೇ ಕೇಂದ್ರ ನಾಗರಿಕ ಸೇವೆಯಲ್ಲಿಲ್ಲ ಎಂಬುದನ್ನು ಆತ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಹೈದರ್ ನಗರ ಪೊಲೀಸರು ಹಾಗೂ ಸ್ಥಳೀಯ ಮೂಲಗಳ ಮೂಲಕ ನಡೆಸಿದ ವಿಚಾರಣೆಯಲ್ಲಿ, ಈ ವ್ಯಕ್ತಿ ಹಲವು ವರ್ಷಗಳಿಂದ ತನ್ನ ಗ್ರಾಮ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ತಾನು IAS ಅಧಿಕಾರಿ ಎಂದು ಪರಿಚಯಿಸಿಕೊಳ್ಳುತ್ತಿದ್ದ ಎಂದು ತಿಳಿದುಬಂದಿದೆ. ಕಾರಿನ ಮುಂಭಾಗದಲ್ಲಿ “ಭಾರತ ಸರ್ಕಾರ, ದೂರಸಂಪರ್ಕ ಇಲಾಖೆ” ಎಂದು ಬರೆದಿರುವ ನೀಲಿ ಬಣ್ಣದ ನಾಮಫಲಕ ಅಂಟಿಸಿಕೊಂಡು ಸಂಚರಿಸುತ್ತಿದ್ದ ಆತ, ಪೊಲೀಸ್ ಠಾಣೆಗಳು ಹಾಗೂ ಸರ್ಕಾರಿ ಕಚೇರಿಗಳಲ್ಲಿ ಪ್ರಭಾವ ಬೀರುವ ಉದ್ದೇಶದಿಂದ ಈ ನಕಲಿ ಗುರುತನ್ನು ಬಳಸುತ್ತಿದ್ದನೆಂದು ಪೊಲೀಸರು ತಿಳಿಸಿದ್ದಾರೆ. ವಿಚಾರಣೆಯ ವೇಳೆ, IAS ಅಧಿಕಾರಿ ಆಗುವುದು ತನ್ನ ತಂದೆಯ ಕನಸಾಗಿತ್ತು ಎಂದು ಆತ ಹೇಳಿಕೊಂಡಿದ್ದಾನೆ. ಯುಪಿಎಸ್‌ಸಿ ನಾಗರಿಕ ಸೇವಾ ಪರೀಕ್ಷೆಗೆ ತಯಾರಿ ನಡೆಸಲು ದಿಲ್ಲಿಗೆ ತೆರಳಿ ನಾಲ್ಕು ಬಾರಿ ಪರೀಕ್ಷೆ ಬರೆದಿದ್ದೇನೆ; ಒಮ್ಮೆ ಪ್ರಾಥಮಿಕ ಪರೀಕ್ಷೆಯಲ್ಲಿ ಉತ್ತೀರ್ಣನಾದರೂ ಅಂತಿಮ ಪಟ್ಟಿಯಲ್ಲಿ ಸ್ಥಾನ ಪಡೆಯಲು ವಿಫಲನಾದೆ ಎಂದು ಅವನು ತಿಳಿಸಿದ್ದಾನೆ. ತಂದೆಯ ನಿರಾಶೆಯನ್ನು ಎದುರಿಸಲು ಆಗದೆ, ತಾನು IAS ಅಧಿಕಾರಿಯಾಗಿದ್ದೇನೆ ಎಂದು ಕುಟುಂಬಕ್ಕೆ ತಿಳಿಸಿ, ವರ್ಷಗಳ ಕಾಲ ಈ ವಂಚನೆಯನ್ನು ಮುಂದುವರಿಸಿದ್ದೇನೆ ಎಂದು ಆತ ಒಪ್ಪಿಕೊಂಡಿದ್ದಾನೆ. ಆತನ ಬಳಿ, ರಾಜೇಶ್ ಕುಮಾರ್ ಜೂನಿಯರ್–ಗ್ರೇಡ್ ಮುಖ್ಯ ಖಾತೆ ಅಧಿಕಾರಿ ಎಂದು ಹೇಳಿಕೊಳ್ಳುವ ನಕಲಿ ಗುರುತಿನ ಚೀಟಿ, ಮೊಬೈಲ್ ಸಂಖ್ಯೆ, ಚಾಣಕ್ಯ IAS ಅಕಾಡೆಮಿ ಗುರುತಿನ ಚೀಟಿ, ಲೈಬ್ರರಿ ಕಾರ್ಡ್ ಹಾಗೂ ಕಾರಿನ ಮೇಲಿದ್ದ ಸರ್ಕಾರಿ ನೀಲಿ ನಾಮಫಲಕ ಸೇರಿದಂತೆ ಹಲವು ದಾಖಲೆಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಕುರಿತು ಮಾತನಾಡಿದ ಹುಸೇನಾಬಾದ್ ಎಸ್‌ಡಿಪಿಒ ಮುಹಮ್ಮದ್ ಯಾಕೂಬ್, ಇಂತಹ ಸೋಗು ಹಾಕುವ ಪ್ರಕರಣಗಳು ಅಪರೂಪವಲ್ಲ ಎಂದು ಹೇಳಿದರು. “ಸೇವೆಯ ವಿವರ, ಹುದ್ದೆ ಅಥವಾ ಕೇಡರ್ ಬಗ್ಗೆ ಆಳವಾಗಿ ಪ್ರಶ್ನಿಸಿದಾಗ ಇಂತಹವರು ಗೊಂದಲಕಾರಿ ಉತ್ತರಗಳನ್ನು ನೀಡುತ್ತಾರೆ. IASನಿಂದ ಮತ್ತೊಂದು ಸೇವೆಗೆ ತಮ್ಮ ಹೇಳಿಕೆಯನ್ನು ಪದೇಪದೇ ಬದಲಾಯಿಸುವುದೇ ಎಚ್ಚರಿಕೆಯ ಸಂಕೇತ. ಈ ಪ್ರಕರಣದಲ್ಲಿ ಮೊದಲಿಗೆ ಆರೋಪಿಯೊಂದಿಗೆ ಮಾತನಾಡಿದ ಪೊಲೀಸ್ ಅಧಿಕಾರಿಯಿಂದಲೇ ಈ ವಂಚನೆ ಪತ್ತೆಯಾಗಲು ಕಾರಣವಾಯಿತು”, ಎಂದು ಅವರು ಹೇಳಿದರು. ನಂತರ ಆ ವ್ಯಕ್ತಿಯನ್ನು ಬಂಧಿಸಿ ಭಾರತೀಯ ನ್ಯಾಯ ಸಂಹಿತೆಯ ಸಂಬಂಧಿತ ನಿಬಂಧನೆಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ. ಸೌಜನ್ಯ: indianexpress.com

ವಾರ್ತಾ ಭಾರತಿ 4 Jan 2026 8:54 pm

ಬಳ್ಳಾರಿ ಗುಂಪು ಘರ್ಷಣೆ: ನ್ಯಾಯಾಂಗ ತನಿಖೆಗೆ ಆರ್.ಅಶೋಕ್‌ ಒತ್ತಾಯ

ಆರೋಪಿಗಳ ಪರವಾಗಿ ಸರಕಾರ ನಿಂತಿದೆ: ಛಲವಾದಿ ನಾರಾಯಣಸ್ವಾಮಿ ಆರೋಪ

ವಾರ್ತಾ ಭಾರತಿ 4 Jan 2026 8:52 pm

ಬಳ್ಳಾರಿ ಗಲಾಟೆ ಪ್ರಕರಣ | ಸಿಐಡಿ ತನಿಖೆಗೆ ಚಿಂತನೆ : ಗೃಹ ಸಚಿವ ಜಿ.ಪರಮೇಶ್ವರ್

ಬೆಂಗಳೂರು, ಜ.4: ಬಳ್ಳಾರಿ ಗಲಾಟೆ ಪ್ರಕರಣದ ತನಿಖೆಯ ಹೊಣೆಯನ್ನು ಸಿಐಡಿಗೆ ಒಪ್ಪಿಸುವ ಚಿಂತನೆ ಇದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ. ರವಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಳ್ಳಾರಿ ಗಲಾಟೆ ಪ್ರಕರಣ ಗಂಭೀರ ಸ್ವರೂಪ ಪಡೆದುಕೊಂಡಿದೆ. ಈ ನಿಟ್ಟಿನಲ್ಲಿ ತನಿಖೆಯ ಹೊಣೆಯನ್ನು ಸಿಐಡಿ ಅಧಿಕಾರಿಗಳಿಗೆ ನೀಡಬೇಕು ಎನ್ನುವ ಚಿಂತನೆ ಇದೆ. ಹಾಗಾಗಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜೊತೆ ಚರ್ಚೆ ನಡೆಸಿದ ಬಳಿಕ ಮುಂದಿನ ತೀರ್ಮಾನ ಪ್ರಕಟಿಸುತ್ತೇವೆ ಎಂದು ತಿಳಿಸಿದರು. ಬಳ್ಳಾರಿ ಗಲಾಟೆಯಲ್ಲಿ ಗುಂಡಿನ ಸದ್ದು ಬಂದಿರುವುದು ಖಾಸಗಿ ವ್ಯಕ್ತಿಯ ಪಿಸ್ತೂಲಿನಿಂದ. ಈಗಾಗಲೇ ಘಟನೆಗೆ ಸಂಬಂಧಿಸಿದಂತೆ ಖಾಸಗಿ ಗನ್‍ಮ್ಯಾನ್‍ಗಳ ಪಿಸ್ತೂಲುಗಳನ್ನು ವಶಕ್ಕೆ ಪಡೆದುಕೊಂಡಿದ್ದೇವೆ. ಯಾವ ಪಿಸ್ತೂಲಿನಿಂದ ಗುಂಡು ಹಾರಿಸಲಾಗಿದೆ ಎಂದು ಪರಿಶೀಲನೆ ಮಾಡಲು ತಜ್ಞರಿಗೆ ಕೊಡಲಾಗಿದೆ ಎಂದು ಅವರು ಹೇಳಿದರು.

ವಾರ್ತಾ ಭಾರತಿ 4 Jan 2026 8:46 pm

ಬೆಂಗಳೂರು ಚಿತ್ರಸಂತೆಗೆ ತೆರೆ; ಕಲಾ ರಸಿಕರಿಗೆ ಪ್ರಕೃತಿ ಚಿತ್ರಣ ಉಣಬಡಿಸಿದ 1532 ಕಲಾವಿದರು

ಪ್ರಕೃತಿ ವಿಷಯಾಧಾರಿತಯ ನಡೆದ ಬೆಂಗಳೂರಿನ ಚಿತ್ರಸಂತೆಗೆ ಕಲೆ, ಕಲಾವಿದರು ಮತ್ತು ಕಲಾಸಕ್ತರನ್ನು ಒಂದುಗೂಡಿಸಿತು. ಪ್ರಕೃತಿ, ಗ್ರಾಮೀಣ ಬದುಕು, ಆಧುನಿಕ ಜೀವನದ ತೊಳಲಾಟಗಳನ್ನು ಬಿಂಬಿಸುವ ನಾನಾ ಶೈಲಿಯ ಕಲಾಕೃತಿಗಳು ಲಕ್ಷಾಂತರ ಜನರನ್ನು ಸೆಳೆದವು. ಮರದ ಕಲಾಕೃತಿಗಳು, ಸೆಂಟೆಡ್ ಕ್ಯಾಂಡಲ್‌ಗಳು, ರೆಸಿನ್ ಆರ್ಟ್, ಮತ್ತು ಜಗತ್ತಿನ ಪ್ರಸಿದ್ಧ ವ್ಯಕ್ತಿಗಳ ಚಿತ್ರಗಳು ವಿಶೇಷ ಆಕರ್ಷಣೆಯಾಗಿದ್ದವು.

ವಿಜಯ ಕರ್ನಾಟಕ 4 Jan 2026 8:40 pm

ಗರೋಡಿ ಕ್ಷೇತ್ರದಲ್ಲಿ ಕೋಳಿ ಅಂಕ ನಡೆಸದಿರಲು ಆಡಳಿತ ಮಂಡಳಿ ನಿರ್ಧಾರ

ಮಂಗಳೂರು,ಜ.4:ಕಂಕನಾಡಿಯ ಶ್ರೀ ಬ್ರಹ್ಮ ಬೈದರ್ಕಳ ಗರೋಡಿ ಕ್ಷೇತ್ರದಲ್ಲಿ ವರ್ಷಾವಧಿ ಉತ್ಸವದ ಸಂದರ್ಭ ಕಳೆದ ಒಂದೂವರೆ ಶತಮಾನದಿಂದ ನಡೆಸಲಾಗುತ್ತಿದ್ದ ಕೋಳಿ ಅಂಕವನ್ನು ಈ ಬಾರಿ ನಡೆಸದಿರಲು ಆಡಳಿತ ಮಂಡಳಿ ತೀರ್ಮಾನನಿಸಿದೆ. ಪೊಲೀಸ್ ಇಲಾಖೆಯು ಕೆಲವು ಷರತ್ತುಗಳನ್ನು ಸೂಚಿಸಿದ ಹಿನ್ನಲೆಯಲ್ಲಿ ಈ ತೀರ್ಮಾನಕ್ಕೆ ಬರಲಾಗಿದೆ ಎಂದು ತಿಳಿದು ಬಂದಿದೆ. ಕೋಳಿ ಅಂಕಕ್ಕೆ ಅನುಮತಿ ನೀಡುವಂತೆ 15 ದಿನದಿಂದ ಪೊಲೀಸ್ ಇಲಾಖೆ ಹಾಗೂ ಎಲ್ಲಾ ಪಕ್ಷಗಳ ಜನಪ್ರತಿನಿಧಿ ಗಳಿಗೆ ಮನವಿ ಸಲ್ಲಿಸಲಾಗಿದೆ. ಆದರೆ ಅನುಮತಿ ಸಿಕ್ಕಿಲ್ಲ. ಪೊಲೀಸರು ಷರತ್ತು ವಿಧಿಸಿ ಕೋಳಿ ಅಂಕ ನಡೆಸುವಂತೆ ಸೂಚಿಸಿದ್ದಾರೆ. ಹಾಗಾಗಿ ಕೋಳಿ ಅಂಕ ನಿಲ್ಲಿಸಲಾಗಿದೆ ಎಂದು ಕ್ಷೇತ್ರದ ಅಧ್ಯಕ್ಷ ಚಿತ್ತರಂಜನ್ ತಿಳಿಸಿದ್ದಾರೆ. ಕೋಳಿ ಅಂಕದ ನೆಪದಲ್ಲಿ ಜೂಜಾಟಕ್ಕೆ ಅವಕಾಶ ಇಲ್ಲ ಎಂದು ಈಗಾಗಲೇ ಕ್ಷೇತ್ರದ ಆಡಳಿ ಮಂಡಳಿಯವರಿಗೆ ಸೂಚನೆ ನೀಡಲಾಗಿದೆ. ಒಂದು ವೇಳೆ ಜೂಜಾಟ ಕಂಡು ಬಂದರೆ ಪ್ರಕರಣ ದಾಖಲಿಸುವುದಾಗಿ ತಿಳಿಸಿದ್ದೆವು. ಕ್ಷೇತ್ರದ ಸಂಪ್ರದಾಯದ ಪ್ರಕಾರ ಪ್ರತಿ ವರ್ಷ ಕೋಳಿ ಅಂಕ ನಡೆಸಲು ಅವಕಾಶ ಕೊಡಿ ಎಂದು ಆಡಳಿತ ಮಂಡಳಿಯವರು ಕೇಳಿದ್ದರು. ಸೀಮಿತ ಅವಧಿಯಲ್ಲಿ ನಿಕಟ ಮೇಲ್ವಿಚಾರಣೆಯಲ್ಲಿ ಸಂಪ್ರದಾಯ ಪಾಲಿಸಬಹುದು. ಆದರೆ ಜೂಜಿಗೆ ಅವಕಾಶ ಇಲ್ಲದಂತೆ ನೋಡಿಕೊಳ್ಳಲು ಸೂಚಿಸಿದ್ದೇವೆ ಎಂದು ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ.

ವಾರ್ತಾ ಭಾರತಿ 4 Jan 2026 8:26 pm

ಬಳ್ಳಾರಿ ಗುಂಪು ಘರ್ಷಣೆ | ಸಿಐಡಿ/ಎಸ್‍ಐಟಿಗೆ ವಹಿಸುವ ಬಗ್ಗೆ ಸಿಎಂ-ಗೃಹ ಸಚಿವರು ತೀರ್ಮಾನಿಸುತ್ತಾರೆ : ಡಿ.ಕೆ.ಶಿವಕುಮಾರ್

ಬೆಂಗಳೂರು : ‘ಶಾಸಕ ಗಾಲಿ ಜನಾರ್ದನ ರೆಡ್ಡಿ ಝಡ್ ಶ್ರೇಣಿಯ ಭದ್ರತೆಯಾದರೂ ಕೇಳಲಿ, ಇರಾನ್, ಅಮೆರಿಕಾದಿಂದಾದರೂ ಭದ್ರತೆ ತೆಗೆದುಕೊಂಡು ಬರಲಿ. ಇವರು ಯಾರನ್ನಾದರೂ ನೇಮಿಸಿಕೊಳ್ಳಲಿ, ಬೇಡ ಎಂದವರು ಯಾರು’ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಇಂದಿಲ್ಲಿ ಲೇವಡಿ ಮಾಡಿದ್ದಾರೆ. ರವಿವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಬಳ್ಳಾರಿ ಗಲಭೆ ಬಗ್ಗೆ ಎಚ್.ಎಂ.ರೇವಣ್ಣ ಅವರು ಒಳ್ಳೆಯ ಮಾಹಿತಿಗಳನ್ನು ಪಡೆದುಕೊಂಡು ಬಂದಿದ್ದಾರೆ. ಕೆಲ ಅಧಿಕೃತ ಹಾಗೂ ಅನಧಿಕೃತ ವಿಚಾರಗಳನ್ನು ಭೇಟಿ ಮಾಡಿ ಮಾಹಿತಿ ನೀಡಿದ್ದಾರೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ವಾಲ್ಮೀಕಿ ಎಲ್ಲರಿಗೂ ಸೇರಿದವರು: ಎಲ್ಲ ಕಡೆಯೂ ಪ್ರತಿಮೆಗಳನ್ನು ಇಡುತ್ತಾರೆ. ಇದಕ್ಕೆ ಅಸೂಯೆ ಏಕೆ? ಮಹರ್ಷಿ ವಾಲ್ಮೀಕಿಯವರು ಒಂದು ಸಮುದಾಯಕ್ಕೆ ಸೇರಿದವರಲ್ಲ, ಬದಲಿಗೆ ಎಲ್ಲ ಸಮುದಾಯದ ಆಸ್ತಿ. ಅವರು ಬರೆದಿರುವ ರಾಮಯಣವನ್ನು ಎಲ್ಲರೂ ಓದುವುದಿಲ್ಲವೇ?. ಹೀಗಿರುವಾಗ ಅವರ ಬ್ಯಾನರ್ ಹಾಕಲು ಜನಾರ್ಧನ ರೆಡ್ಡಿ ಆಕ್ಷೇಪ ವ್ಯಕ್ತಪಡಿಸಿದ್ದು ಸರಿಯಲ್ಲ ಎಂದು ಆಕ್ಷೇಪಿಸಿದರು. ಜನಾರ್ದನ ರೆಡ್ಡಿ ರಕ್ಷಣೆಗೆ ಬಿಜೆಪಿ ಪಕ್ಷದ ನೂರು ಮಂದಿ ಕಾರ್ಯಕರ್ತರನ್ನು ಅವರು ತಯಾರಿ ಮಾಡಿಕೊಳ್ಳಲಿ. ಬಳ್ಳಾರಿ ಗಲಭೆಯ ತನಿಖೆಯನ್ನು ಸಿಐಡಿ ಅಥವಾ ಎಸ್‍ಐಟಿಗೆ ವಹಿಸುವ ಬಗ್ಗೆ ಸಿಎಂ ಹಾಗೂ ಗೃಹ ಸಚಿವರು ತೀರ್ಮಾನ ಮಾಡುತ್ತಾರೆ. ಈ ಬಗ್ಗೆ ಯಾವ ಚರ್ಚೆಯೂ ನನಗೆ ಗೊತ್ತಿಲ್ಲ ಎಂದರು.

ವಾರ್ತಾ ಭಾರತಿ 4 Jan 2026 8:24 pm

ಕಲ್ಯಾಣ ಕರ್ನಾಟಕದ ರೈಲ್ವೆ ಅಭಿವೃದ್ಧಿಗೆ 12,900 ಕೋಟಿ ರೂ.ಅನುದಾನ: ಕೇಂದ್ರ ಸಚಿವ ವಿ.ಸೋಮಣ್ಣ

ವಿಜಯನಗರ: ಅಭಿವೃದ್ಧಿ ವಿಷಯದಲ್ಲಿ ರಾಜಕಾರಣ ಬೆರೆಸಬಾರದು ಎಂಬುದು ಪ್ರಧಾನಿ ನರೇಂದ್ರ ಮೋದಿಯವರ ಸ್ಪಷ್ಟ ಸಂದೇಶವಾಗಿದೆ. ಕಲ್ಯಾಣ ಕರ್ನಾಟಕ ಭಾಗದ ರೈಲ್ವೆ ಯೋಜನೆಗಳಿಗಾಗಿ ಕೇಂದ್ರ ಸರಕಾರ ಬರೋಬ್ಬರಿ 12,900 ಕೋಟಿ ರೂಪಾಯಿಗಳ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ಕೇಂದ್ರ ಜಲಶಕ್ತಿ ಹಾಗೂ ರೈಲ್ವೆ ರಾಜ್ಯ ಖಾತೆ ಸಚಿವ ವಿ.ಸೋಮಣ್ಣ ತಿಳಿಸಿದರು. ರವಿವಾರ ಹಗರಿಬೊಮ್ಮನಹಳ್ಳಿಯಲ್ಲಿ ಲೆವೆಲ್ ಕ್ರಾಸಿಂಗ್ 35ರ ಮೇಲ್ಸೇತುವೆ ಕಾಮಗಾರಿಗೆ ಭೂಮಿ ಪೂಜೆ ಹಾಗೂ ಶಂಕುಸ್ಥಾಪನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಸಚಿವ ವಿ.ಸೋಮಣ್ಣ, ಈ ಭಾಗದ ಅಭಿವೃದ್ಧಿ ಕಾಮಗಾರಿಗಳ ಕುರಿತು ಸಮಗ್ರ ಮಾಹಿತಿ ನೀಡಿದರು. ಹಿಂದೆ ಕರ್ನಾಟಕಕ್ಕೆ ರೈಲ್ವೆ ಇಲಾಖೆಯಿಂದ ವಾರ್ಷಿಕವಾಗಿ ಕೇವಲ 882 ಕೋಟಿ ರೂ. ಅನುದಾನ ಬರುತ್ತಿತ್ತು. ಆದರೆ ಮೋದಿ ಸರಕಾರ ಬಂದ ನಂತರ ವಾರ್ಷಿಕವಾಗಿ 7,500 ರಿಂದ 8,000 ಕೋಟಿ ರೂ.ಅನುದಾನ ನೀಡಲಾಗುತ್ತಿದೆ ಎಂದು ಸೋಮಣ್ಣ ಅಂಕಿಅಂಶ ಸಹಿತ ವಿವರಿಸಿದರು. ಬಳ್ಳಾರಿ-ಚಿಕ್ಕಜಾಜೂರು ಜೋಡಿ ಮಾರ್ಗ ಯೋಜನೆಗೆ 2025ರ ಜೂನ್‌ನಲ್ಲಿ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ. ಸುಮಾರು 3,400 ಕೋಟಿ ರೂ. ವೆಚ್ಚದ ಈ ಯೋಜನೆಯು ಈ ಭಾಗದ ರೈಲ್ವೆ ಸಂಪರ್ಕದಲ್ಲಿ ಕ್ರಾಂತಿಕಾರಿ ಬದಲಾವಣೆ ತರಲಿದೆ ಎಂದು ಸಚಿವರು ತಿಳಿಸಿದರು. ಹಗರಿಬೊಮ್ಮನಹಳ್ಳಿಯ ಎಲ್.ಸಿ 35ರ ಬದಲಿಗೆ ಗುಂಡಾ ರೋಡ್-ಕೊಟ್ಟೂರು ನಡುವೆ 38.7 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ ನಡೆಯುತ್ತಿದೆ. ಎಲ್.ಸಿ 37 ಮತ್ತು 38ರ ಕಾಮಗಾರಿಗಳಿಗೂ ಚಾಲನೆ ನೀಡಲಾಗಿದೆ. ಹೊಸಪೇಟೆ ಟಿ.ಬಿ ಡ್ಯಾಂ ಬಳಿ ಬಸ್‌ಗಳು ನಿಲ್ಲಲು ಕಷ್ಟವಾಗುತ್ತಿದ್ದು, ಅಲ್ಲಿ ಮೇಲ್ಸೇತುವೆ ನಿರ್ಮಿಸಲಾಗುವುದು. ಹೊಸಪೇಟೆ-ಹಂಪಿ ರಸ್ತೆಯ (ಎಲ್.ಸಿ 85) ಕಾಮಗಾರಿಗೆ 26 ಕೋಟಿ ರೂ. ಮಂಜೂರಾಗಿದ್ದು, ಜೂನ್ ಒಳಗಾಗಿ ಪೂರ್ಣಗೊಳ್ಳಲಿದೆ. ಹೊಸಪೇಟೆ ರೈಲ್ವೆ ನಿಲ್ದಾಣವನ್ನು 15.17 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುತ್ತಿದ್ದು, ಈಗಾಗಲೇ ಶೇ. 80ರಷ್ಟು ಕಾಮಗಾರಿ ಪೂರ್ಣಗೊಂಡಿದೆ ಎಂದು ಸೋಮಣ್ಣ ಹೇಳಿದರು.   ಹಂಪಾಪಟ್ಟಣ ಮತ್ತು ಹಗರಿಬೊಮ್ಮನಹಳ್ಳಿ ಸಂಪರ್ಕಕ್ಕೆ ಅಗತ್ಯವಿರುವ 1 ಎಕರೆ 41 ಗುಂಟೆ ಜಮೀನನ್ನು ಭೂಸ್ವಾಧೀನ ಪಡಿಸಿಕೊಳ್ಳಲು ವಿಳಂಬ ಮಾಡದಂತೆ ಜಿಲ್ಲಾಧಿಕಾರಿಗಳಿಗೆ ಸಚಿವರು ವೇದಿಕೆಯಲ್ಲೇ ಸೂಚನೆ ನೀಡಿದರು. ರೈಲ್ವೆ ಕಾಮಗಾರಿಗಳಿಗೆ ಅಗತ್ಯವಿರುವ ಅನುಮತಿಗಳನ್ನು ತ್ವರಿತವಾಗಿ ನೀಡುವಂತೆ ಜಿಲ್ಲಾಡಳಿತಕ್ಕೆ ತಾಕೀತು ಮಾಡಿದರು. ಈ ವೇಳೆ ಮಾತನಾಡಿದ ಸಂಸದರಾದ ಈ.ತುಕಾರಾಂ, ವಿಜಯನಗರ ಹಾಗೂ ಬಳ್ಳಾರಿ ಜಿಲ್ಲೆಯಲ್ಲಿ ಹೆಚ್ಚು ಗಣಿಗಾರಿಕೆ ನಡೆಯುತ್ತಿದೆ ಮತ್ತು ಹಲವು ಕಾರ್ಖಾನೆಗಳಿವೆ. ಜೊತೆಗೆ ಪ್ರವಾಸೋದ್ಯಮದಲ್ಲಿ ಅವಳಿ ಜಿಲ್ಲೆ ಮುಂಚೂಣಿಯಲ್ಲಿದ್ದು ರೈಲ್ವೆ ಡಬ್ಲಿಂಗ್ ಸೇರಿದಂತೆ ವಿದ್ಯುದ್ದೀಕರಣ, ಮೇಲ್ಸೇತುವೆ, ಕೆಳಸೇತುವೆಗಳ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಬೇಕು ಎಂದು ರೈಲ್ವೆ ಸಚಿವರಿಗೆ ಮನವಿ ಮಾಡಿದರು. ಈ ಸಂದರ್ಭದಲ್ಲಿ ಶಾಸಕ ನೇಮಿರಾಜ್ ನಾಯಕ್, ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ, ಪೊಲೀಸ್ ಅಧೀಕ್ಷಕಿ ಎಸ್.ಜಹ್ನಾವಿ, ಮಾಜಿ ಶಾಸಕರಾದ ಚಂದ್ರಾ ನಾಯ್ಕ್, ಸ್ವಾಮೀಜಿಗಳಾದ ಮರಿಯಮ್ಮನಹಳ್ಳಿ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ, ಡಾ: ಮಹೇಶ್ವರ ಸ್ವಾಮೀಜಿ, ಹೆಚ್.ಬಿ.ಹಳ್ಳಿ ಹಾಲ್ ಸಿದ್ದೇಶ್ವರ ಸ್ವಾಮೀಜಿ, ರೈಲ್ವೆ ಇಲಾಖೆಯ ಸಿಇಓ ಅಜೆಯಶರ್ಮ, ಎಡಿಆರ್ ಎಂ ವಿಷ್ಣುಭೂಷಣ್ ಹಾಗೂ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ವಾರ್ತಾ ಭಾರತಿ 4 Jan 2026 8:24 pm

ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜು: 2001ರ ಎಂಬಿಬಿಎಸ್ ವಿದ್ಯಾರ್ಥಿಗಳ ಪುನರ್ಮಿಲನ

ಮಂಗಳೂರು, ಜ.4: ಫಾದರ್ ಮುಲ್ಲರ್ ವೈದ್ಯಕೀಯ ಕಾಲೇಜಿನ 2001ರ ಎಂಬಿಬಿಎಸ್ ಬ್ಯಾಚ್‌ನ ವಿದ್ಯಾರ್ಥಿಗಳ ಪುನರ್ಮಿಲನ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು. ಜಗತ್ತಿನ ನಾನಾ ಕಡೆ ಇರುವ 2001ರ ಬ್ಯಾಚ್‌ನ ವಿದ್ಯಾರ್ಥಿಗಳು ಒಟ್ಟು ಸೇರಿ ತಮ್ಮ 25 ವರ್ಷಗಳ ಸಂಭ್ರಮ ವನ್ನು ಆಚರಿಸಿದರು. ಫಾದರ್ ಮುಲ್ಲರ್ ಸಂಸ್ಥೆಗಳ ನಿರ್ದೇಶಕರಾದ ಫಾದರ್ ಫೌಸ್ಟಿನ್ ಲೋಬೊ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾದ ಡಾ. ಅನಿಲ್ ಶೆಟ್ಟಿ, ಪೀಡಿಯಾಟ್ರಿಕ್ಸ್ ಮುಖ್ಯಸ್ಥ ಡಾ. ರಶ್ಮಿ, ಡಾ. ನಿಬು, ಡಾ. ದಿಲೀಪ್ ಮತ್ತು ಡಾ. ಅಂಜುಮ್ ಶುಭ ಹಾರೈಸಿದರು. 2001ರ ಬ್ಯಾಚ್‌ನ ಡೀನ್ ಡಾ. ಸಂಜೀವ್ ರೈ , ಡಾ. ಆಶಾ ನೃತ್ಯವನ್ನು ಪ್ರದರ್ಶಿಸಿದರು. 2001ರಲ್ಲಿ ಪ್ರಾಧ್ಯಾಪಕರು ಮತ್ತು ಶಿಕ್ಷಕರನ್ನು ವಿದ್ಯಾರ್ಥಿಗಳು ಸನ್ಮಾನಿಸಿದರು. ಡಾ. ಜಾಯ್ಲೀನ್ ಡಿ, ಡಾ. ಕ್ರಿಸ್ಲ್ ಮತ್ತು ಡಾ. ಅನಾಹಿತಾ ಕಾರ್ಯಕ್ರಮ ನಿರೂಪಿಸಿದರು.   

ವಾರ್ತಾ ಭಾರತಿ 4 Jan 2026 8:14 pm

ಅಡ್ಯಾರ್‌ನ ಸಹ್ಯಾದ್ರಿಯಲ್ಲಿ ರಣಜಿ ಪಂದ್ಯ ಆಯೋಜಿಲು ಪ್ರಯತ್ನ : ಜಾವಗಲ್ ಶ್ರೀನಾಥ್

ಐಎಂಎ -ಎ.ಎಂ.ಸಿ. ಪ್ರೀಮಿಯರ್ ಲೀಗ್‌ ಕ್ರಿಕೆಟ್ ಪಂದ್ಯಾಟ

ವಾರ್ತಾ ಭಾರತಿ 4 Jan 2026 8:11 pm

ಬೆಂಗಳೂರಿನ ಮೂಲ ಸೌಕರ್ಯ ಅಭಿವೃದ್ಧಿಗೆ 1.5 ಲಕ್ಷ ಕೋಟಿ ರೂ ಹೂಡಿಕೆ: ಡಿಕೆ ಶಿವಕುಮಾರ್

ಬೆಂಗಳೂರಿನ ಜನಸಂಖ್ಯೆ ಮುಂದಿನ 20-25 ವರ್ಷಗಳಲ್ಲಿ ದ್ವಿಗುಣಗೊಳ್ಳುವ ಸಾಧ್ಯತೆ ಇದೆ. ಈ ಹಿನ್ನೆಲೆ ಮುಂದೆ ಕಾಡಲಿರುವ ಮೂಲಸೌಕರ್ಯ ಅಭಿವೃದ್ಧಿ ಕೊರತೆ ನೀಗಿಸಲು 1.5 ಲಕ್ಷ ಕೋಟಿ ರೂ. ಹೂಡಿಕೆ ಮಾಡಲಾಗುವುದು ಎಂದು ಡಿಸಿಎಂ ಡಿ.ಕೆ. ಶಿವಕುಮಾರ್‌ ಹೇಳಿದರು. ನಗರದ ಸಂಚಾರ ದಟ್ಟಣೆ ಸಮಸ್ಯೆ ತೀವ್ರವಾಗಿದ್ದು, ಇದನ್ನು ನಿವಾರಿಸಲು ಆದ್ಯತೆ ನೀಡಲಾಗುತ್ತಿದೆ. ಬೆಂಗಳೂರು ಅತ್ಯುತ್ತಮ ಸಂಸ್ಕೃತಿ, ಶಿಕ್ಷಣ ಮತ್ತು ಮಾನವ ಸಂಪನ್ಮೂಲ ಹೊಂದಿರುವ ನಗರವಾಗಿದೆ ಎಂದು ಅವರು ಹೇಳಿದರು.

ವಿಜಯ ಕರ್ನಾಟಕ 4 Jan 2026 8:10 pm

Venezuela | ಜನರ ಒಳಿತೇ ಮೇಲುಗೈ ಸಾಧಿಸಬೇಕು: ಪೋಪ್ ಲಿಯೋ XIV ಕಳವಳ

ವ್ಯಾಟಿಕನ್, ಜ.4: ವೆನೆಝುವೆಲಾದಲ್ಲಿ ಅಮೆರಿಕದ ಮಿಲಿಟರಿ ದಾಳಿಗಳ ಬಳಿಕ ಉಂಟಾಗಿರುವ ಬೆಳವಣಿಗೆಗಳ ಕುರಿತು ಪೋಪ್ ಲಿಯೋ XIV ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ವೆನೆಝುವೆಲಾದ ಜನರ ಒಳಿತೇ ಎಲ್ಲದಕ್ಕಿಂತ ಮೇಲುಗೈ ಸಾಧಿಸಬೇಕು ಎಂದು ಅವರು ಹೇಳಿದ್ದಾರೆ. It is with deep concern that I am following the developments in Venezuela. The good of the beloved Venezuelan people must prevail over every other consideration. This must lead to the overcoming of violence, and to the pursuit of paths of justice and peace. I pray for all this,… — Pope Leo XIV (@Pontifex) January 4, 2026 ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿನ ಪೋಸ್ಟ್ ನಲ್ಲಿ ಪೋಪ್, ವೆನೆಝುವೆಲಾದ ಪರಿಸ್ಥಿತಿಯನ್ನು ತಾವು ನಿರಂತರವಾಗಿ ಗಮನಿಸುತ್ತಿರುವುದಾಗಿ ತಿಳಿಸಿದರು. “ವೆನೆಝುವೆಲಾದ ಬೆಳವಣಿಗೆಗಳನ್ನು ನಾನು ಆಳವಾದ ಕಳವಳದಿಂದ ನೋಡುತ್ತಿದ್ದೇನೆ. ಪ್ರೀತಿಯ ವೆನೆಝುವೆಲಾದ ಜನರ ಒಳಿತೇ ಇತರ ಎಲ್ಲ ಅಂಶಗಳಿಗಿಂತ ಮುಖ್ಯವಾಗಬೇಕು. ಇದು ಹಿಂಸಾಚಾರವನ್ನು ಮೀರಿಸಿ ನ್ಯಾಯ ಮತ್ತು ಶಾಂತಿಯ ಹಾದಿಯಲ್ಲಿ ಸಾಗಲು ದಾರಿ ಮಾಡಿಕೊಡಬೇಕು. ಇದಕ್ಕಾಗಿ ನಾನು ಪ್ರಾರ್ಥಿಸುತ್ತಿದ್ದೇನೆ. ವಿಶ್ವದಾದ್ಯಂತದ ಜನರು ಪ್ರಾರ್ಥನೆಗೆ ಕೈಜೋಡಿಸಬೇಕು”, ಎಂದು ಅವರು ಮನವಿ ಮಾಡಿದರು. ಸೇಂಟ್ ಪೀಟರ್ಸ್ ಸ್ಕ್ವೇರ್ ನಲ್ಲಿ ರವಿವಾರದ ಪ್ರಾರ್ಥನಾ ಸಭೆಯಲ್ಲಿ ಮಾತನಾಡಿದ ಪೋಪ್ ಲಿಯೋ XIV, ವೆನೆಝುವೆಲಾ ಸ್ವತಂತ್ರ ರಾಷ್ಟ್ರವಾಗಿ ಉಳಿಯಬೇಕೆಂದು ಕರೆ ನೀಡಿದರು. ದೇಶದ ಸಾರ್ವಭೌಮತ್ವವನ್ನು ಖಾತರಿಪಡಿಸುವ ಜೊತೆಗೆ, ಹಿಂಸಾಚಾರವನ್ನು ಮೀರಿಸಿ ನ್ಯಾಯ ಮತ್ತು ಶಾಂತಿಯ ಮಾರ್ಗದಲ್ಲಿ ಸಾಗುವಲ್ಲಿ ವಿಳಂಬವಾಗಬಾರದು. ಎಂದು ಅವರು ಅಭಿಪ್ರಾಯಪಟ್ಟರು. ಈ ಹಿಂದೆ, ಟ್ರಂಪ್ ಆಡಳಿತದ ಕೆಲವು ಬಲಪಂಥೀಯ ನೀತಿಗಳನ್ನು ಪೋಪ್ ಲಿಯೋ XIV ಸಾರ್ವಜನಿಕವಾಗಿ ಟೀಕಿಸಿದ್ದರು. ಮಿಲಿಟರಿ ಬಲ ಪ್ರಯೋಗಿಸಿ ಮಡುರೊ ಅವರನ್ನು ಅಧಿಕಾರದಿಂದ ಪದಚ್ಯತಗೊಳಿಸುವುದನ್ನು ತಪ್ಪಿಸುವಂತೆ ಡಿಸೆಂಬರ್‌ ನಲ್ಲಿ ಅವರು ಅಮೆರಿಕ ಅಧ್ಯಕ್ಷರಿಗೆ ಮನವಿ ಮಾಡಿದ್ದರು.

ವಾರ್ತಾ ಭಾರತಿ 4 Jan 2026 8:08 pm

ಕಲಬುರಗಿ| ಕರ್ನಾಟಕ ಬಹುಜನ ಜಾಗೃತಿ ವೇದಿಕೆ ಜಿಲ್ಲಾಧ್ಯಕ್ಷರಾಗಿ ಚಂದ್ರಶಾ ಎನ್. ಗಾಯಕವಾಡ ನೇಮಕ

ಆಳಂದ: ಕರ್ನಾಟಕ ಬಹುಜನ ಜಾಗೃತಿ ವೇದಿಕೆಯಿಂದ ನಡೆದ ಕಾರ್ಯಕರ್ತರ ಮಹತ್ವದ ಸಭೆಯಲ್ಲಿ ಸಂಘಟನೆಯ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಪೂರ್ಣಗೊಂಡಿದ್ದು, ಚಂದ್ರಶಾ ಎನ್.ಗಾಯಕವಾಡ ಅವರನ್ನು ಜಿಲ್ಲೆಯ ಅಧ್ಯಕ್ಷರಾಗಿ ಅಧಿಕೃತವಾಗಿ ನೇಮಕ ಮಾಡಲಾಯಿತು.   ಸಭೆಯನ್ನು ಉದ್ದೇಶಿಸಿ ಮಾತನಾಡಿದ ವೇದಿಕೆಯ ರಾಜ್ಯಾಧ್ಯಕ್ಷ ದತ್ತಾತ್ರೆಯ ಎಸ್. ಕಟ್ಟಿಮನಿ ಅವರು, ಬಹುಜನರ ಹಕ್ಕುಗಳ ರಕ್ಷಣೆ, ಸಾಮಾಜಿಕ ನ್ಯಾಯ, ಸಮಾನತೆ ಹಾಗೂ ಸಂವಿಧಾನಾತ್ಮಕ ಮೌಲ್ಯಗಳ ಅನುಷ್ಠಾನಕ್ಕಾಗಿ ವೇದಿಕೆ ನಿರಂತರ ಹೋರಾಟ ನಡೆಸುತ್ತಿದೆ ಎಂದು ತಿಳಿಸಿದರು. ಸಂಘಟನೆ ನೆಲಮಟ್ಟದಲ್ಲಿ ಬಲಿಷ್ಠವಾಗಬೇಕಾದ ಅಗತ್ಯವಿದ್ದು, ಅದಕ್ಕಾಗಿ ಸಮರ್ಪಿತ ಹಾಗೂ ಹೋರಾಟದ ಮನೋಭಾವ ಹೊಂದಿರುವ ನಾಯಕತ್ವ ಅವಶ್ಯಕ ಎಂದು ಹೇಳಿದರು. ಸಭೆಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಜೀವನ್‌ ಕುಮಾರ್‌ ಎನ್. ವಾಘ್ಮಾರೆ ಸೇರಿದಂತೆ ಇತರ ಪದಾಧಿಕಾರಿಗಳನ್ನು ನೇಮಕ ಮಾಡಲಾಯಿತು.   ಈ ಸಂದರ್ಭದಲ್ಲಿ ಮುಖಂಡ ಚನ್ನವೀರ ಕಾಳಕಿಂಗೆ, ದಶವಂತ ಬಿ.ಕಣಮಸಕರ್, ಟೈಗರ್ ವಿಗ್ನಶ್ವರ್‌, ಗೌತಮ ಕಾಂಬಳೆ, ರೈತ ಸಂಘದ ಜಿಲ್ಲಾಧ್ಯಕ್ಷ ನಾಗೇಂದ್ರ ಥಂಬೆ, ಭೀಮ ಆರ್ಮಿ ಜಿಲ್ಲಾಧ್ಯಕ್ಷ ಉದಯಕುಮಾರ ಬಿ. ಬಣಗೆ, ರಾಜ್ಯ ಯುವ ಅಧ್ಯಕ್ಷ ಸಂತೋಷ ಪಾಳಾ, ಡಿಸಿಸಿ ನಿರ್ದೇಶಕ ಪಂಡಿತ ನಡಗೇರಿ, ಮಲ್ಲು ಅಟ್ಟೂರ, ಆಕಾಶ ಸಿಂಧೆ, ಗೌರಿಶಂಕರ್‌  ಕೆ.ಕೆ.ನಗರ ಮತ್ತು ಸಿದ್ಧಾರ್ಥ ವಿ. ದಾಂಬ್ರೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.  

ವಾರ್ತಾ ಭಾರತಿ 4 Jan 2026 8:07 pm

ಕಲಬುರಗಿ| ಸಿಸಿ ರಸ್ತೆ ಕಾಮಗಾರಿಗೆ ಶಾಸಕ ಅಲ್ಲಮಪ್ರಭು ಪಾಟೀಲ್ ಚಾಲನೆ

ಕಲಬುರಗಿ: ನಗರದ ಶ್ರೀ ಮಹಾಂತೇಶ್ವರ ಕಾಲೋನಿಯಲ್ಲಿ ಕೆಕೆಆರ್‌ಡಿಬಿ ಅನುದಾನದಲ್ಲಿ 40 ಲಕ್ಷ ರೂಪಾಯಿ ವೆಚ್ಚದ ಸಿಸಿ ರಸ್ತೆ ಕಾಮಗಾರಿಗೆ ದಕ್ಷಿಣ ಮತಕ್ಷೇತ್ರದ ಶಾಸಕರಾದ ಅಲ್ಲಮಪ್ರಭು ಪಾಟೀಲ್ ಅವರು ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮುಖಂಡರಾದ ಸಿಎ ಪಾಟೀಲ್, ಧರ್ಮರಾಜ್ ಹೇರೂರ್, ಶರಣಗೌಡ ಪಾಟೀಲ್, ಶರಣು ಬಿರಾದಾರ್, ಪರಮೇಶ್ವರ್ ದೇಸಾಯಿ, ಸೋಮಶೇಖರ್ ಮಠ, ಶಿವರಾಜ್ ನಾಯಕ್, ಬಸವಗೌಡ ಪಾಟೀಲ್, ಮಲ್ಲಿಕಾರ್ಜುನ್ ದೇಸಾಯಿ, ಶರಣು ಬಂದರವಾಡ, ಶಿವಶರಣಪ್ಪ ಜಮಾದಾರ್, ಶಿವಾನಂದಯ್ಯ ಹಿರೇಮಠ್, ಹನುಮಂತರಾಯ ಕಪ್ಪನೂರ್, ಮಹಾಂತಪ್ಪ ಜಮಾದಾರ್, ಶರಣಯ್ಯ ಸಾಗರಮಠ, ಮನೋಜ್ ಕಪನೂರ, ಗುರುದೇವ್ ವಿಶ್ವಕರ್ಮ, ಉಮೇಶ್ ಜಾದವ್, ಸಿದ್ದರಾಮ ಸೋಮ, ಬಸವರಾಜ್ ಜಯಪ್ಪಗೌಡ, ಗೌತಮ್ ಕಳಸ್ಕರ್, ಶಿವರಾಜ ಸುತಾರ್, ಶಿವರುದ್ರಯ್ಯ ಸಂದಿಮನಿ, ಕಿರಣ್ ಕುಲ್ಕಾಣಿ, ಸಂತೋಷ್ ಹಿರೇಮಠ್ ಸೇರಿದಂತೆ ಹಲವರು ಉಪಸ್ಥಿತರಿದ್ದರು. 

ವಾರ್ತಾ ಭಾರತಿ 4 Jan 2026 8:02 pm

WPL 2026 RCB: ಆರ್‌ಸಿಬಿ ಪಂದ್ಯಗಳ ವೇಳಾಪಟ್ಟಿ

WPL 2026 RCB: ಡಬ್ಲ್ಯೂಪಿಎಲ್ 2025ರಲ್ಲಿ ಮುಂಬೈ ಇಂಡಿಯನ್ಸ್‌ ತಂಡ ಚಾಂಪಿಯನ್‌ ಆಗಿದೆ. ಇದೀಗ ಎಲ್ಲರ ಚಿತ್ತ 2026 ರತ್ತ ನೆಟ್ಟಿದೆ. ಉದ್ಘಾಟನಾ ಪಂದ್ಯ ಆರ್‌ಸಿಬಿ ಹಾಗೂ ಎಂಐ ನಡುವೆ ಜನವರಿ 9ರಂದು ಮುಂಬೈನಲ್ಲಿ ನಡೆಯಲಿದೆ. ಹಾಗಾದ್ರೆ ಈ ಬಾರಿಯ ಆವೃತ್ತಿಯಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ ಎಷ್ಟು ಪಂದ್ಯಗಳನ್ನಾಡಲಿದೆ ಹಾಗೂ ಯಾವ ತಂಡಗಳ ಮೇಲೆ ಎನ್ನುವ

ಒನ್ ಇ೦ಡಿಯ 4 Jan 2026 8:00 pm

ಕಲಬುರಗಿ| ರೈತ ನಾಯಕರ ಬಿಡುಗಡೆಗೆ ಎಐಕೆಕೆಎಂಎಸ್ ಆಗ್ರಹ

ಕಲಬುರಗಿ: ವಿಜಯಪುರದಲ್ಲಿ ಸರಕಾರಿ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆ ಸ್ಥಾಪನೆಗೆ ಆಗ್ರಹಿಸಿ ಹಾಗೂ ಸರಕಾರ ಜಾರಿಗೊಳಿಸಲು ಹೊರಟಿರುವ ಪಿಪಿಪಿ (ಸಾರ್ವಜನಿಕ–ಖಾಸಗಿ ಸಹಭಾಗಿತ್ವ) ಮಾದರಿಯನ್ನು ವಿರೋಧಿಸಿ ಹೋರಾಟ ನಡೆಸುತ್ತಿದ್ದ ವೇಳೆ ಎಐಕೆಕೆಎಂಎಸ್ ರೈತ ಸಂಘಟನೆಯ ಅಖಿಲ ಭಾರತ ಮಂಡಳಿ ಸದಸ್ಯ ಬಿ.ಭಗವಾನರೆಡ್ಡಿ, ಅನೀಲ್ ಹೊಸಮನಿ ಸೇರಿದಂತೆ ಇತರ ಹೋರಾಟಗಾರರನ್ನು ಪೊಲೀಸರು ಬಂಧಿಸಿರುವ ಕ್ರಮವನ್ನು ಎಐಕೆಕೆಎಂಎಸ್ ಹಲಕರಟಿ ಗ್ರಾಮ ಘಟಕದ ಪದಾಧಿಕಾರಿಗಳು ಖಂಡಿಸಿದ್ದಾರೆ. ಈ ಕುರಿತು ಹಲಕರಟಿ ಗ್ರಾಪಂ ಪಿಡಿಒ ಗೋಪಾಲ ಕಟ್ಟಿಮನಿ ಮತ್ತು ಅಧ್ಯಕ್ಷ ಸಿದ್ದುಗೌಡ ಪಾಟೀಲ ಅವರ ಮೂಲಕ ರಾಜ್ಯ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರಿಗೆ ಮನವಿ ಸಲ್ಲಿಸಿ, ಬಂಧಿತ ನಾಯಕರನ್ನು ತಕ್ಷಣವೇ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ. ಸರಕಾರ ಜನರ ನ್ಯಾಯಸಮ್ಮತ ಬೇಡಿಕೆಗಳನ್ನು ನಿರಂತರವಾಗಿ ನಿರ್ಲಕ್ಷಿಸಿದ ಹಿನ್ನೆಲೆಯಲ್ಲಿ, ಹಲವು ದಿನಗಳಿಂದ ವಿಜಯಪುರದಲ್ಲಿ ಶಾಂತಿಯುತವಾಗಿ ಹೋರಾಟ ನಡೆಯುತ್ತಿತ್ತು. ಈ ಚಳವಳಿಗೆ ವಿಜಯಪುರ ಜಿಲ್ಲೆಯಾದ್ಯಂತ ವ್ಯಾಪಕ ಜನಬೆಂಬಲ ಲಭಿಸಿತ್ತು. ಶುಕ್ರವಾರ ವಿಜಯಪುರದ ಉಸ್ತುವಾರಿ ಸಚಿವರ ನಿವಾಸದ ಮುಂದೆ ಪ್ರತಿಭಟನೆ ನಡೆಸುತ್ತಿದ್ದ ಸಂದರ್ಭದಲ್ಲಿ, ಕಾಮ್ರೇಡ್ ಭಗವಾನ್ ರೆಡ್ಡಿ, ಅನೀಲ್ ಹೊಸಮನಿ ಸೇರಿದಂತೆ ಇತರ ನಾಯಕರನ್ನು ಪೊಲೀಸರು ಅಕ್ರಮವಾಗಿ ಬಂಧಿಸುವ ಮೂಲಕ ಜಾಮೀನು ರಹಿತ ಸೆಕ್ಷನ್‌ಗಳನ್ನು ಒಳಗೊಂಡ ಸುಳ್ಳು ಮತ್ತು ಕೃತಕ ಪ್ರಕರಣಗಳನ್ನು ದಾಖಲಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಇದು ಹೋರಾಟಗಳನ್ನು ಹತ್ತಿಕ್ಕುವ ಸರಕಾರದ ಷಡ್ಯಂತ್ರವಾಗಿದೆ ಎಂದು ಸಂಘಟಕರು ಆರೋಪಿಸಿದ್ದಾರೆ. ಜನರಿಗೆ ಲಭ್ಯವಾಗಬೇಕಾದ ಸಾರ್ವಜನಿಕ ಆರೋಗ್ಯ ಸೇವೆಗಾಗಿ ನಡೆಯುತ್ತಿರುವ ಜನಾಂದೋಲನವನ್ನು ಕುಗ್ಗಿಸಲು ಕಾಂಗ್ರೆಸ್ ಸರಕಾರ ಅತ್ಯಂತ ಹೀನ ಮತ್ತು ಅಧಿಕಾರಶಾಹಿ ಕ್ರಮ ಅನುಸರಿಸಿದೆ. ಜನರನ್ನು ಭಯಭೀತಗೊಳಿಸಿ ಹೋರಾಟಗಳು ಇನ್ನಷ್ಟು ವ್ಯಾಪಿಸುವುದನ್ನು ತಡೆಯುವುದೇ ಈ ಬಂಧನದ ಉದ್ದೇಶವಾಗಿದೆ. ಬಂಧನಕ್ಕೊಳಗಾಗಿರುವ ಕಾಮ್ರೇಡ್ ಭಗವಾನ್ ರೆಡ್ಡಿ ಅವರು ವಿಜಯಪುರ ಜಿಲ್ಲೆ ಸೇರಿದಂತೆ ಕರ್ನಾಟಕದಾದ್ಯಂತ ಹಲವು ಜನಪರ ಹೋರಾಟಗಳ ಮುಂಚೂಣಿಯಲ್ಲಿದ್ದು, ಖಾಸಗೀಕರಣದ ವಿರುದ್ಧ ಹಾಗೂ ಸಾರ್ವಜನಿಕ ಹಿತಾಸಕ್ತಿಗಾಗಿ ಸದಾ ಹೋರಾಡಿಕೊಂಡು ಬಂದಿದ್ದಾರೆ. ಇಂತಹ ನಾಯಕರನ್ನು ಗುರಿಯಾಗಿಸುವುದು ಸರಕಾರದ ಜನವಿರೋಧಿ ಮತ್ತು ಕಾರ್ಪೊರೇಟ್ ಪರ ಧೋರಣೆಯನ್ನು ಬಹಿರಂಗಪಡಿಸುತ್ತದೆ ಎಂದು ದೂರಿದ್ದಾರೆ. ಬಂಧಿತ ಹೋರಾಟಗಾರರನ್ನು ಬೇಷರತ್ತಾಗಿ ಬಿಡುಗಡೆ ಮಾಡಬೇಕು. ಇಲ್ಲದಿದ್ದರೆ ರಾಜ್ಯಾದ್ಯಂತ ತೀವ್ರ ಹೋರಾಟಕ್ಕೆ ಮುಂದಾಗಬೇಕಾಗುತ್ತದೆ ಎಂದು ಎಐಕೆಕೆಎಂಎಸ್ ರೈತ ಸಂಘಟನೆಯ ಅಧ್ಯಕ್ಷ ಭೀಮಪ್ಪ ಮಾಟ್ನಳ್ಳಿ, ಕಾರ್ಯದರ್ಶಿ ಸಾಬಣ್ಣ ಸುಣಗಾರ ಸರಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ವಾರ್ತಾ ಭಾರತಿ 4 Jan 2026 7:59 pm

ಮಂಗಳೂರು: ಬೀದಿ ನಾಯಿಗಳಿಗಾಗಿ ಪ್ರಾಣಿ ಪ್ರಿಯ ಸಂಘಗಳಿಂದ ಪ್ರತಿಭಟನೆ

ಮಂಗಳೂರು,ಜ.4: ನಾಯಿಗಳ ವಿಚಾರಕ್ಕೆ ಸಂಬಂಧಿಸಿ ನ.7ರಂದು ಸುಪ್ರೀಂ ಕೋರ್ಟ್ ಹೊರಡಿಸಿದ ಮಧ್ಯಂತರ ತೀರ್ಪನ್ನು ವಿರೋಧಿಸಿ ಮತ್ತು ಬೀದಿ ನಾಯಿಗಳ ನಿರ್ವಹಣೆಗೆ ವೈಜ್ಞಾನಿಕ ಹಾಗೂ ಮಾನವೀಯ ಕ್ರಮಗಳನ್ನು ಜಾರಿಗೊಳಿಸುವಂತೆ ಆಗ್ರಹಿಸಿ ಅಖಿಲ ಭಾರತ ಮಟ್ಟದ ಪ್ರಾಣಿ ಕಲ್ಯಾಣ ಸಂಘಟನೆಗಳು ಹಾಗೂ ಪ್ರಾಣಿಪ್ರಿಯರು ರವಿವಾರ ನಗರದ ಮಿನಿ ವಿಧಾನಸೌಧದ ಮುಂದೆ ಪ್ರತಿಭಟನೆ ನಡೆಸಿದರು. ನಗರದಲ್ಲಿ 25 ಸಾವಿರಕ್ಕೂ ಅಧಿಕ ಬೀದಿ ನಾಯಿಗಳಿವೆ. ಹಾಗಾಗಿ ಒಂದೇ ಎನಿಮಲ್ ಬರ್ತ್ ಕಂಟ್ರೋಲ್ ಕೇಂದ್ರ ಸಾಲದು. ಸರಕಾರ ತಕ್ಷಣ ನಗರ ಸೇರಿದಂತೆ ಎಲ್ಲೆಡೆ ಹೆಚ್ಚಿನ ಎಬಿಸಿ ಕೇಂದ್ರಗಳನ್ನು ಸ್ಥಾಪಿಸಬೇಕು ಎಂದು ಅನಿಮಲ್ ಕೇರ್ ಟ್ರಸ್ಟ್‌ನ ಸುಮಾ ನಾಯಕ್ ಆಗ್ರಹಿಸಿದರು. ನ.7ರಿಂದ ಪ್ರಾಣಿ ಕಲ್ಯಾಣ ಸಂಘಟನೆಗಳು ಸಲ್ಲಿಸಿರುವ ಹಸ್ತಕ್ಷೇಪ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ವಿಚಾರಣೆಗೆ ಕೈಗೆತ್ತಿಕೊಳ್ಳುತ್ತಿಲ್ಲ. ಈ ಹಿನ್ನೆಲೆಯಲ್ಲಿ ನಮ್ಮ ಆಗ್ರಹವು ಕೇಂದ್ರ ಮಟ್ಟಕ್ಕೆ ತಲುಪಿಸುವ ನಿಟ್ಟಿನಲ್ಲಿ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗೆ ಉದ್ದೇಶಿಸಿ ಪೋಸ್ಟಲ್ ಚಳವಳಿ ನಡೆಸಲಾಗಿದೆ. ಇದು ಪ್ರಜಾಪ್ರಭುತ್ವ ದೇಶವಾಗಿರುವು ದರಿಂದ ನಾಗರಿಕರು ಮತ್ತು ಪ್ರಾಣಿ ಕಲ್ಯಾಣ ಸಂಘಟನೆಗಳ ಮನವಿಗಳನ್ನು ನ್ಯಾಯಾಲಯ ಆಲಿಸಬೇಕು ಎಂದು ಆಗ್ರಹಿಸಿದರು. ಸಂಘಟನೆಯ ದಿನೇಶ್ ಪೈ, ಹರೀಶ್ ರಾಜ್‌ಕುಮಾರ್, ಪ್ರಾಣಿ ರಕ್ಷಕರಾದ ರಜನಿ ಶೆಟ್ಟಿ, ಡಾ. ಶೃತಿ ರಾವ್ ಉಪಸ್ಥಿತರಿದ್ದರು.

ವಾರ್ತಾ ಭಾರತಿ 4 Jan 2026 7:59 pm

ಕವಯತ್ರಿ ಸಿಹಾನ ಬಿ.ಎಂ.ಗೆ ಪಯಸ್ವಿನಿ ಪ್ರಶಸ್ತಿ

ಕಾಸರಗೋಡು, ಜ.4: ಕಾಸರಗೋಡು ಕನ್ನಡ ಭವನದ ಅಂತರ್ ರಾಜ್ಯ ಪ್ರಶಸ್ತಿಯಾದ ಕನ್ನಡ ಪಯಸ್ವಿನಿ ಅಚೀವ್ಮೆಂಟ್ ಅವಾರ್ಟ್ 2026ಕ್ಕೆ ಕವಯತ್ರಿ, ಸಂಘಟಕಿ ಸಿಹಾನ ಬಿ. ಎಂ. ಆಯ್ಕೆಯಾಗಿದ್ದಾರೆ. ತನ್ನ ಪ್ರಥಮ ಕವನ ಸಂಕಲನ ಶ್ವೇತ ಪಾರಿವಾಳಕ್ಕೆ ಕನ್ನಡ ಭವನದಿಂದ ಕಾವ್ಯ ಪ್ರಶಸ್ತಿ ಪಡೆದಿದ್ದ ಸಿಹಾನ ಅವರಿಗೆ ಕನ್ನಡ ಭವನದ ಕನ್ನಡ ಪಯಸ್ವಿನಿ ಪ್ರಶಸ್ತಿಯನ್ನು ಜ.18ರಂದು ನುಳ್ಳಿಪ್ಪಾಡಿಯ ಕನ್ನಡ ಭವನ ರಜತ ಸಂಭ್ರಮ-ನಾಡುನುಡಿ ಹಬ್ಬ ಕಾರ್ಯಕ್ರಮದಲ್ಲಿ ಪ್ರದಾನ ಮಾಡಲಾಗುವುದು ಎಂದು ಕನ್ನಡ ಭವನ ಸ್ಥಾಪಕ ಅಧ್ಯಕ್ಷ ಡಾ.ವಾಮನ್ ರಾವ್ ಬೇಕಲ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ವಾರ್ತಾ ಭಾರತಿ 4 Jan 2026 7:56 pm

ಬಳ್ಳಾರಿ ಗಂಪು ಘರ್ಷಣೆ ಬಗ್ಗೆ ಹೈಕೋರ್ಟ್ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆಯಾಗಲಿ: ಕೇಂದ್ರ ಸಚಿವ ವಿ.ಸೋಮಣ್ಣ ಆಗ್ರಹ

ಬಳ್ಳಾರಿ: ಮುಖ್ಯಮಂತ್ರಿ ಸಿದ್ದರಾಮಯ್ಯನವರೇ, ನೀವು ದೇವರಾಜ ಅರಸು ಅವರ ಆಡಳಿತ ಅವಧಿಯನ್ನು ಮೀರಿಸುತ್ತಿದ್ದೀರಿ. ಇಂತಹ ದಿನಗಳಲ್ಲಿ ಈ ಘಟನೆಯಿಂದ ನಿಮ್ಮ ಸರಕಾರಕ್ಕೆ ಕೆಟ್ಟ ಹೆಸರು ಬರುವಂತೆ ಮಾಡಿಕೊಳ್ಳಬೇಡಿ ಎಂಬ ಸಲಹೆಯನ್ನು ಕೇಂದ್ರ ಸಚಿವ ವಿ ಸೋಮಣ್ಣ ನೀಡಿದರು. ಮಾಜಿ ಸಚಿವ ಜನಾರ್ದನ ರೆಡ್ಡಿಯವರ ನಿವಾಸದ ಮುಂದೆ ಜ.1ರಂದು ರಾತ್ರಿ ನಡೆದಿದ್ದ ಗುಂಡಿನ ದಾಳಿ ಹಾಗೂ ಕಾಂಗ್ರೆಸ್ ನ ಓರ್ವ ಕಾರ್ಯಕರ್ತನ ಹತ್ಯೆ ಪ್ರಕರಣದ ಕುರಿತು ಹಾಲಿ ಹೈಕೋರ್ಟ್ ನ್ಯಾಯಾಧೀಶರಿಂದ ತನಿಖೆ ನಡೆಸಬೇಕು‌ ಎಂದು ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ರಾಜ್ಯ ಸರಕಾರಕ್ಕೆ ಒತ್ತಾಯಿಸಿದ್ದಾರೆ. ಬಳ್ಳಾರಿಯಲ್ಲಿ ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಸಚಿವ ವಿ.ಸೋಮಣ್ಣ, ಈ ಘಟನೆಯನ್ನು ಸಿಐಡಿ ತನಿಖೆಗೆ ನೀಡುವುದಾಗಿ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ. ಇದು ಸರಿಯಲ್ಲ. ನೀವು ನ್ಯಾಯಾಧೀಶರಿಂದ ತನಿಖೆ ಮಾಡಿಸದೇ ಇದ್ದರೆ ಸಿಬಿಐಗೆ ನೀಡಿ. ಇಲ್ಲದಿದ್ದರೆ ಬಳ್ಳಾರಿಯಿಂದಲೇ ಅಧಿಕಾರಕ್ಕೆ ಬಂದ ನಿಮಗೆ ನಿಮ್ಮ ಆಡಳಿತಕ್ಕೆ ಕೆಟ್ಟ ಹೆಸರು ಬರಲಿದೆ ಎಂದರು. ನೀವೇ ದ್ವೇಷ ಭಾಷಣ ನಿಷೇಧ ಕಾಯ್ದೆ ಜಾರಿಗೆ ತಂದಿದ್ದೀರಿ. ಭರತ್ ರೆಡ್ಡಿ ಮೊದಲ ಬಾರಿಗೆ ಶಾಸಕನಾಗಿದ್ದಾನೆ. ಆತನಿಗೆ ಇನ್ನೂ ರಾಜಕೀಯ ನಡವಳಿಕೆ ತಿಳಿದಂತೆ ಇಲ್ಲ. ಬೇಕಿದ್ದರೆ ನನ್ನ ಬಳಿ ಆರು ತಿಂಗಳು ಬಂದರೆ ತರಬೇತಿ ನೀಡುವೆ. ಭರತ್ ರೆಡ್ಡಿ ಯಾವ ಶಾಲೆಯಲ್ಲಿ ಓದಿದ್ದಾನೋ ಗೊತ್ತಿಲ್ಲ. ಆತನ ಮಾತುಗಳಲ್ಲಿ ಸಂಯಮ ಇಲ್ಲ. ದ್ವೇಷದ ಮಾತುಗಳು ಬರುವುದು ಸರಿಯಲ್ಲ ಎಂದು ವಿ ಸೋಮಣ್ಣ ಹೇಳಿದರು.

ವಾರ್ತಾ ಭಾರತಿ 4 Jan 2026 7:50 pm

ಪರಿಷತ್‍ನಲ್ಲಿ ಕೈಗೊಂಡ ನೇರ ನೇಮಕಾತಿ ಪ್ರಕ್ರಿಯೆ ಮಾದರಿ : ಮುಖ್ಯಮಂತ್ರಿ ಸಿದ್ದರಾಮಯ್ಯ

ಬೆಂಗಳೂರು : ವಿಧಾನ ಪರಿಷತ್ತಿನ ಸಚಿವಾಲಯದಲ್ಲಿನ ಸಿಬ್ಬಂದಿ ನೇಮಕಕ್ಕೆ ನೇರ ನೇಮಕಾತಿ ಪ್ರಕ್ರಿಯೆ ನಡೆಸಿದ್ದು, ಆದೇಶ ಪತ್ರಗಳನ್ನು ನೀಡಿರುವುದು ಅತ್ಯಂತ ಪ್ರಶಂಸನೀಯ ಮತ್ತು ಇತರೆ ಸರಕಾರಿ ಇಲಾಖೆಗಳಿಗೆ ಸಭಾಪತಿ ಬಸವರಾಜ ಹೊರಟ್ಟಿ ಅವರ ನಡೆ ನಿಜಕ್ಕೂ ಮಾದರಿಯಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಶನಿವಾರ ಸಿಎಂ ನಿವಾಸ ಕಾವೇರಿಯಲ್ಲಿ ನೇರ ನೇಮಕವಾದ ಸಿಬ್ಬಂದಿಗೆ ಆದೇಶ ಪತ್ರವನ್ನು ನೀಡಿದ ಅವರು, ಪರಿಷತ್ತಿನ ಇತಿಹಾಸದಲ್ಲಿ ಪ್ರಪ್ರಥಮ ಬಾರಿಗೆ ಕೆಇಎ ಮೂಲಕ ಆಯ್ಕೆ ಮಾಡಲು ನಿರ್ಧರಿಸಿ, ಪಾರದರ್ಶಕವಾಗಿ ಲಿಖಿತ ಪರೀಕ್ಷೆ ನಡೆಸಿ ಶೇ.1:5 ಅನುಪಾತದಲ್ಲಿ ಮೆರಿಟ್ ಪಟ್ಟಿ ಪಡೆದು ಶೇ.1:1 ಅನುಪಾತ ಆಯ್ಕೆ ಪಟ್ಟಿ ತಯಾರಿಸಿ, ಗೊಂದಲಗಳಿಗೆ ಆಸ್ಪದ ನೀಡದಂತೆ ಮತ್ತು ಪಾರದರ್ಶಕವಾಗಿ ನಡೆಸಲಾಗಿದೆ ಎಂದರು. ನೇಮಕಾತಿಯ ಎಲ್ಲ ಪ್ರಕ್ರಿಯೆಗಳನ್ನು ಸಿ.ಸಿ ಕ್ಯಾಮೆರಾಗಳ ಕಣ್ಗಾವಲಿನಲ್ಲಿ ನಡೆಸಿರುವುದು ಪಾರದರ್ಶಕ ಮತ್ತು ವೃತ್ತಿಪರತೆಯಿಂದ ಅಂತಿಮ ಅಂಕಪಟ್ಟಿ ಸಿದ್ಧಪಡಿಸಿದ್ದು, ಅದಕ್ಕೆ ಸಿಎಂ ಸಾಂಕೇತಿಕವಾಗಿ ನೇಮಕಾತಿ ಆದೇಶ ಪತ್ರಗಳನ್ನು ನೀಡಿದ್ದಾರೆ. ಸದರಿ ಆಯ್ಕೆ ಪಟ್ಟಿಯಲ್ಲಿ ಸ್ಥಾನ ಪಡೆದವರು ಹೆಚ್ಚಿನವರು ಗ್ರಾಮೀಣ ಪ್ರತಿಭೆಗಳು ಮತ್ತು ಪದವಿಗಳ, ಸ್ನಾತಕೋತ್ತರ ಪದವಿಗಳಲ್ಲಿ ರ್ಯಾಂಕ್ ವಿಜೇತರು ಸೇರಿರುವುದು ಅಭಿನಂದನೀಯ ಎಂದು ತಿಳಿಸಲಾಗಿದೆ.

ವಾರ್ತಾ ಭಾರತಿ 4 Jan 2026 7:49 pm

ಯಕ್ಷಗಾನದ ಮೂಲಕ ಕಲೆ, ಸಂಸ್ಕೃತಿಯನ್ನು ಉಳಿಸುವ ಕೆಲಸ ಆಗಿದೆ: ಬ್ರಿಜೇಶ್ ಚೌಟ

ಮಂಗಳೂರು,ಜ.4;ಯಕ್ಷಗಾನದ ಮೂಲಕ ಈ ನೆಲದ ಕಲೆ ಮತ್ರು ಸಂಸ್ಜೃತಿಯನ್ನು ಉಳಿಸುವ ಕೆಲಸ ಆಗಿದೆ ಎಂದು ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ತಿಳಿಸಿದ್ದಾರೆ. ಅವರು ರವಿವಾರ ಅಡ್ಯಾರ್ ಸಹ್ಯಾದ್ರಿ ಕಾಲೇಜು ಆವರಣದಲ್ಲಿ ಯಕ್ಷಧ್ರುವ ಪಟ್ಲ ಫೌಂಡೇಶನ್ ಘಟಕಗಳ ಸಹಯೋಗ ದೊಂದಿಗೆ ನಡೆದ ಯಕ್ಷಧ್ರುವ-ಯಕ್ಷ ಶಿಕ್ಷಣ ಯೋಜನೆಯ ವಿದ್ಯಾರ್ಥಿಗಳ ಯಕ್ಷಧ್ರುವ ವಿದ್ಯಾರ್ಥಿ ಸಮ್ಮಿಲನ 2025-26 ವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು. ಕರಾವಳಿಯ ಜನತೆ ಇಲ್ಲಿನ ಸಂಸ್ಕೃತಿಯನ್ನು ಜೀವನದಲ್ಲಿ ಅಳವಡಿ ಸಿಕೊಂಡು ಬದುಕುತ್ತಿರುವವರು ಎಂದು ದಕ್ಷಿಣ ಕನ್ನಡ ಜಿಲ್ಲೆಯ ಸಂಸದ  ಬ್ರಿಜೇಶ್ ಚೌಟ ತಿಳಿಸಿದರು. ಯಕ್ಷಗಾನದ ಮೂಲಕ ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ದೇಶ ಕಟ್ಟುವ ರಾಷ್ಟ್ರೀಯ ನಿರ್ಮಾಣದ ಕೆಲಸ ಮಾಡುತ್ತಿದೆ. ಯಕ್ಷಗಾನಕ್ಕೆ ದೀರ್ಘಕಾಲಿಕವಾದ ಇತಿಹಾಸ ಇದೆ. ಇದು ಹೀಗೆಯೆ ಮುಂದುವರಿಯಲಿ ಎಂದವರು ತಿಳಿಸಿದರು. ಯಕ್ಷಗಾನ ಶ್ರೇಷ್ಠಕಲೆ. ವಿಶ್ವಮಟ್ಟದಲ್ಲಿ ಬೆಳೆಯುತ್ತಿದೆ. ದೇಶ ಉಳಿಯ ಬೇಕಾದರೆ ನಮ್ಮ ಸಂಸ್ಕೃತಿ ಬೆಳೆಯಬೇಕು, ಉಳಿಯ ಬೇಕು, ಶಾಲಾ ಕಾಲೇಜುಗಳ ಪ್ರೋತ್ಸಾಹ ಮತ್ತು ಪೋಷಕರ ಬೆಂಬಲದಿಂದ ಇಂತಹ ಕಾರ್ಯಕ್ರಮ ಗಳನ್ನು ಆಯೋಜಿಸಲು ಸಾಧ್ಯವಾಯಿತು ಎಂದು ಪಟ್ಲ ಸತೀಶ್ ಶೆಟ್ಟಿ ತಿಳಿಸಿದರು. ಸಮಾರಂಭದಲ್ಲಿ ಉದ್ಯಮಿ, ಕಲಾಪೋಷಕ ಬೆಳಿಯೂರುಗುತ್ತು ಎಂ ರವೀಂದ್ರನಾಥ ಆಳ್ವ, ಯಕ್ಷಧ್ರುವ ಯಕ್ಷಶಿಕ್ಷಣದ ಪ್ರಧಾನ ಸಂಚಾಲಕ ಪಣಂಬೂರು ವಾಸುದೇವ ಐತಾಳ, ಉದ್ಯಮಿ ಕೆ ಜಯರಾಮ ಶೇಖ ಅಡ್ಯಾರ್, ಪಟ್ಲ ಫೌಂಡೇಶನ್ ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿ ಕೆ ಪುರುಷೋತ್ತಮ ಭಂಡಾರಿ ಅಡ್ಯಾರ್, ಕೋಶಾಧಿಕಾರಿ ಸಿಎ ಸುದೇಶ್ ಕುಮಾರ್ ರೈ, ಸಂಘಟನಾ ಕಾರ್ಯದರ್ಶಿ ಪ್ರದೀಪ್ ಆಳ್ವ ಕದ್ರಿ, ಬಾಳ ಜಗನ್ನಾಥ ಶೆಟ್ಟಿ, ಕೇಂದ್ರೀಯ ಮಹಿಳಾ ಘಟಕದ ಗೌರವಾಧ್ಯೆಕ್ಷೆ ಆರತಿ ಆಳ್ವ, ಅಧ್ಯೆಕ್ಷೆ ಪೂರ್ಣಿಮ ಯತೀಶ್ ರೈ, ಪ್ರಭಾಕರ ಜೋಷಿ, ಯಕ್ಷಧ್ರುವ ಯಕ್ಷಶಿಕ್ಷಣದ ಸಂಯೋಜಕ ದೀವಿತ್ ಎಸ್ ಕೆ ಪೆರಾಡಿ ಹಾಗೂ ವಿವಿಧ ಘಟಕಗಳ ಅಧ್ಯಕ್ಷರು ಉಪಸ್ಥಿತರಿದ್ದರು. ಪುರುಷೋತ್ತಮ‌ ಭಂಡಾರಿ ಸ್ವಾಗತಿಸಿ ಪ್ರಸ್ತಾವಿಕವಾಗಿ ಮಾತನಾಡಿದರು. ಸಲಹಾ ಸಮಿತಿ ಸದಸ್ಯ ದೇವದಾಸ ಶೆಟ್ಟಿ ಬಂಟ್ವಾಳ ಕಾರ್ಯಕ್ರಮ‌ ನಿರ್ವಹಿಸಿದರು. ಮೂರನೇ ವರ್ಷದ ಯಕ್ಷದ್ರುವ ಯಕ್ಷಶಿಕ್ಷಣ ಯೋಜನೆಯ ಯಕ್ಷದ್ರುವ ವಿದ್ಯಾರ್ಥಿ ಸಮ್ಮಿಲನದಲ್ಲಿ 16 ಶಾಲೆಗಳ 650 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಎರಡು ವೇದಿಕೆಗಳಲ್ಲಿ ಕಾರ್ಯಕ್ರಮ‌ ನಡೆಯಿತು.

ವಾರ್ತಾ ಭಾರತಿ 4 Jan 2026 7:49 pm

ಕೋಳಿ ಅಂಕ ವಿಚಾರ| ಸಾಮಾಜಿಕ ಜಾಲತಾಣಗಳಲ್ಲಿ ತೇಜೋವಧೆ: ಪ್ರಕರಣ ದಾಖಲು

ಮಂಗಳೂರು: ಕೋಳಿ ಅಂಕಕ್ಕೆ ಅನುಮತಿ ನೀಡುವ ವಿಚಾರಕ್ಕೆ ಸಂಬಂಧಿಸಿ ಸಾಮಾಜಿಕ ಜಾಲತಾಣದಲ್ಲಿ ರಾಜಕೀಯ ವ್ಯಕ್ತಿಗಳ ಬಗ್ಗೆ ಅವಹೇಳನಕಾರಿಯಾಗಿ ಸಂದೇಶ ಹಾಕಿದ್ದಲ್ಲದೆ ಅವರ ತೇಜೋವಧೆ ನಡೆಸಿದ ಆರೋಪದ ಮೇರೆಗೆ ಫೇಸ್‌ಬುಕ್ ಖಾತೆದಾರನ ವಿರುದ್ಧ ಕಂಕನಾಡಿ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ. ಕಲಿಯುಗ ಕಲ್ಕಿ ಎಂಬ ಫೇಸ್‌ಬುಕ್ ಹಾಗೂ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಆರೋಪಿಯು ಪ್ರಚೋದನಾಕಾರಿ ಪೋಸ್ಟ್ ಮಾಡಿ ಸಮಾಜದ ನಾನಾ ಧರ್ಮ ಹಾಗೂ ವರ್ಗಗಳ ಜನರಲ್ಲಿ ದ್ವೇಷದ ಭಾವನೆ ಹುಟ್ಟು ಹಾಕಿ ಅಪರಾಧ ಕೃತ್ಯವೆಸಗುವಂತೆ ಹಾಗೂ ದ್ವೇಷ ಭಾವನೆ ಹುಟ್ಟುವಂತೆ ಮಾಡಿದ್ದಾನೆ. ಸಾರ್ವಜನಿಕ ಶಾಂತಿ ಮತ್ತು ನೆಮ್ಮದಿ ಹಾಳು ಮಾಡುವ ಉದ್ದೇಶದಿಂದ ಸಾಮಾಜಿಕ ಜಾಲತಾಣದ ಮೂಲಕ ದುಷ್ಟ್ರೇರಣೆಗೆ ಎಡೆ ಮಾಡಿಕೊಡುವಂತಹ ಪೋಸ್ಟ್‌ಗಳನ್ನು ಹರಡಿದ್ದಾನೆ. ಈತ ಈ ಹಿಂದೆ ದೇವಸ್ಥಾನದಲ್ಲೂ ರಾಜಕೀಯ ತರಲು ಬಯಸಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ವಾರ್ತಾ ಭಾರತಿ 4 Jan 2026 7:43 pm

ಮರ್ಯಾದಾ ಹತ್ಯೆ ನಿಯಂತ್ರಣಕ್ಕೆ ವಿಶೇಷ ಕಾನೂನು ರಚನೆ: ಸಿಎಂ ಸಿದ್ದರಾಮಯ್ಯ

ಇತ್ತೀಚಿಗೆ ಹುಬ್ಬಳ್ಳಿಯ ಇನಾಂ ವೀರಾಪುರ ಗ್ರಾಮದಲ್ಲಿ ನಡೆದ ಏಳು ತಿಂಗಳ ಗರ್ಭಿಣಿ ಮಾನ್ಯ ಅವರ ಮರ್ಯಾದಾ ಹತ್ಯೆ ಪ್ರಕರಣವು ಇಡೀ ರಾಜ್ಯವನ್ನು ಬೆಚ್ಚಿಬೀಳಿಸಿತ್ತು. ಈ ಘಟನೆಗೆ ತೀವ್ರ ಖಂಡನೆಯೂ ವ್ಯಕ್ತವಾಗಿ ಇಂತಹ ಹತ್ಯೆಗಳನ್ನು ಹತ್ತಿಕ್ಕಲು ಕಠಿಣ ಕಾನೂನು ಜಾರಿಗೆ ತರಬೇಕು ಎಂಬ ಒತ್ತಾಯ ಕೇಳಿಬಂದಿತ್ತು. ಈ ಸಂಬಂಧ ಸಿಎಂ ಸಿದ್ದರಾಮಯ್ಯ ಅವರು ಮಹತ್ವದ ವಿಚಾರ ಹಂಚಿಕೊಂಡಿದ್ದಾರೆ. ಮರ್ಯಾದಾ

ಒನ್ ಇ೦ಡಿಯ 4 Jan 2026 7:41 pm

ಪರ್ಕಳ ಪೇಟೆಯಲ್ಲಿ ಸೂಪರ್ ಮೂನ್ ವಿಕ್ಷಣೆ

ಉಡುಪಿ, ಜ.4: ಈ ಬಾರಿಯ ಸೂಪರ್‌ಮೂನ್‌ನ್ನು ರೂವಾರಿ ಆರ್.ಮನೋಹಕರ್ ಅವಿಷ್ಕರಿಸಿದ ದೂರದರ್ಶಕದ ಮೂಲಕ ಪರ್ಕಳ ರಾಷ್ಟ್ರೀಯ ಹೆದ್ದಾರಿಯ ಬಳಿ ವೀಕ್ಷಿಸಲಾಯಿತು. ಕಾರ್ಯಕ್ರಮವನ್ನು ಆಯುಷ್ ಫೆಡರೇಶನ್ ಆಫ್ ಇಂಡಿಯಾ ಉಡುಪಿ ತಾಲೂಕು ಕಾರ್ಯದರ್ಶಿ, ಆಯುರ್ವೇದ ವೈದ್ಯ ಡಾ.ಸಂದೀಪ್ ಸನಿಲ್ ಮೂಡನಿಡಂಬೂರು. ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಉಡುಪಿಯ ಠಾಣಾ ಎಎಸ್ಸೈ ಕಿಶೋರ್, ಕಾರ್ಯಕ್ರಮ ಸಂಘಟಕ ಗಣೇಶ್‌ರಾಜ್ ಸರಳೆಬೆಟ್ಟು, ಅಣ್ಣಪ್ಪ ಕರ್ಕೇರ, ರಾಜೇಶ್ ಪ್ರಭು ಪರ್ಕಳ, ಸುಧೀರ್ ಶೆಟ್ಟಿ ಹಿರಿಯಡ್ಕ, ಸುರೇಶ ಆಚಾರ್ಯ ಪರ್ಕಳ, ಶಮಿತ್ ಶೆಟ್ಟಿ, ಜಯ ದೀಪ್ ನಾಯಕ್ ಮೊದಲಾದವರು ಉಪಸ್ಥಿತರಿದ್ದರು. ಸಾರ್ವಜನಿಕರು, ವಿದ್ಯಾರ್ಥಿಗಳು ಸೂಪರ್ ಮೂನ್ ಅನ್ನು ಬಹಳ ಹತ್ತಿರದಲ್ಲಿ ವೀಕ್ಷಿಸಿದರು. ಮೋಡ ಕವಿದ ವಾತಾವರಣದಿಂದ ಚಂದ್ರ ಆಗಾಗ್ಗೆ ಮರೆಯಾಗುತ್ತಿತ್ತು.

ವಾರ್ತಾ ಭಾರತಿ 4 Jan 2026 7:37 pm

ದರ್ಶನ್ ಪತ್ನಿ ವಿಜಯಲಕ್ಷ್ಮೀಗೆ ಅಶ್ಲೀಲ ಕಮೆಂಟ್‌ ಪ್ರಕರಣ: ಇಬ್ಬರ ಬಂಧನ

ಬೆಂಗಳೂರು : ಸಾಮಾಜಿಕ ಮಾಧ್ಯಮದಲ್ಲಿ ನಟ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮೀ ಅವರಿಗೆ ಅಶ್ಲೀಲ ಕಮೆಂಟ್‌ ಹಾಕಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು ಮತ್ತಿಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಆ ಮೂಲಕ ಪ್ರಕರಣದಲ್ಲಿ ಈವರೆಗೆ ಬಂಧಿತರ ಸಂಖ್ಯೆ 4ಕ್ಕೆ ಏರಿಕೆ ಆಗಿದೆ. ಹುಬ್ಬಳ್ಳಿಯಲ್ಲಿ ಪೆಟ್ರೋಲ್ ಬಂಕ್ ಮ್ಯಾನೇಜರ್ ಆಗಿರುವ ನಾಗರಾಜ್ ತಳವಾರ ಹಾಗೂ ಧಾರವಾಡದಲ್ಲಿ ಆಡಿಟರ್ ಆಗಿ ಕೆಲಸ ಮಾಡುತ್ತಿದ್ದ ಪ್ರಶಾಂತ್ ತಳವಾರ ಬಂಧಿತ ವ್ಯಕ್ತಿಗಳಾಗಿದ್ದಾರೆ. ಇತ್ತೀಚೆಗೆ ತಮಗೆ ಸೋಶಿಯಲ್ ಮೀಡಿಯಾದಲ್ಲಿ ಅಶ್ಲೀಲ ಕಮೆಂಟ್‌ ಬಂದಿದೆ ಎಂದು ಪೊಲೀಸರಿಗೆ ವಿಜಯಲಕ್ಷ್ಮೀ ಅವರು ದೂರು ನೀಡಿದ್ದರು. ದೂರಿನ ಅನ್ವಯ ಪ್ರಕರಣವನ್ನು ದಾಖಲಿಸಿಕೊಂಡ ಪೋಲಿಸರು, ಮೊದಲು ಚಿಕ್ಕಬಾಣಾವರದ ಆಟೋ ಚಾಲಕ ಚಂದ್ರು ಹಾಗೂ ದಾವಣಗೆರೆ ಮೂಲದ ಇಂಜಿನಿಯರ್ ನಿತಿನ್ ಎಂಬಾತನನ್ನು ಪೊಲೀಸರು ಬಂಧಿಸಿದ್ದರು. ಈಗ ಮತ್ತಿಬ್ಬರನ್ನು ಪೊಲೀಸರು ಬಂದಿದ್ದಾರೆ.

ವಾರ್ತಾ ಭಾರತಿ 4 Jan 2026 7:35 pm

ಗ್ಯಾರೇಜ್ ಉದ್ಯಮ ಸುಧಾರಿತ ತಂತ್ರಜ್ಞಾನಕ್ಕೆ ಹೊಂದಿಕೊಳ್ಳುವುದು ಅಗತ್ಯ: ಪಾಬ್ಲಾ

ಮಣಿಪಾಲ, ಜ.4: ವೇಗವಾಗಿ ಬೆಳೆಯುತ್ತಿರುವ ಆಧುನಿಕ ತಂತ್ರಜ್ಞಾನದ ಈ ಯುಗದಲ್ಲಿ ಖಾಸಗಿ ಗ್ಯಾರೇಜು ಉದ್ಯಮಿಗಳು ಸುಧಾರಿತ ತಂತ್ರಜ್ಞಾನಕ್ಕೆ ತಮ್ಮನ್ನು ಹೊಂದಾಣಿಕೆ ಮಾಡಿಕೊಳ್ಳುವ ಅವಶ್ಯಕತೆ ಇದೆ ಎಂದು ಮಣಿಪಾಲ ಕೌಶಲ್ಯ ತರಬೇತಿ ಕೇಂದ್ರದ ಬ್ರಿಗೇಡಿಯರ್ ಡಾ.ಸುರ್ಜಿತ್ ಸಿಂಗ್ ಪಾಬ್ಲಾ ಹೇಳಿದ್ದಾರೆ. ಉಡುಪಿ ಜಿಲ್ಲಾ ಗ್ಯಾರೇಜ್ ಮಾಲಕರ ಸಂಘದ ಆಶ್ರಯದಲ್ಲಿ ಡಾ.ಟಿಎಂಎ ಪೈ ಪಾಲಿಟೆಕ್ನಿಕ್ ಇದರ ಅಂಗ ಸಂಸ್ಥೆ ಎಂಎಸ್‌ಡಿಸಿಯ ಸಹಭಾಗಿತ್ವದಲ್ಲಿ ಮಣಿಪಾಲದಲ್ಲಿ ರವಿವಾರ ಆಯೋಜಿಸಲಾದ ಸುಧಾರಿತ ತಂತ್ರಜ್ಞಾನದ (ಬಿಎಸ್-6) ದ್ವಿಚಕ್ರ ವಾಹನಗಳ ದುರಸ್ತಿ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು. ಪಾಲಿಟೆಕ್ನಿಕ್ ಪ್ರಾಂಶುಪಾಲ ಬಿ.ಎಚ್.ವಿ. ಪೈ ಮಾತನಾಡಿ, ಕಾಲೇಜು ಸಾಮಾಜಿಕ ಕಾರ್ಯಕ್ರಮಗಳಿಗೆ ವ್ಯಾಪಕ ಪ್ರೋತ್ಸಾಹ ನೀಡಿ ಉದಯೋನ್ಮುಖ ತಂತ್ರಜ್ಞರಿಗೆ ಬದುಕು ರೂಪಿಸಿಕೊಳ್ಳುವ ಅವಕಾಶಗಳನ್ನು ನಿರಂತರವಾಗಿ ಕಲ್ಪಿಸುತ್ತಿದೆ ಎಂದು ಹೇಳಿದರು. ಅಧ್ಯಕ್ಷತೆಯನ್ನು ಜಿಲ್ಲಾ ಗ್ಯಾರೇಜ್ ಮಾಲಕರ ಸಂಘದ ಅಧ್ಯಕ್ಷ ರೋಷನ್ ಕರ್ಕಡ ಕಾಪು ವಹಿಸಿದ್ದರು. ಎಂಎಸ್‌ಡಿಸಿ ರಿಜಿಸ್ಟ್ರಾರ್ ಡಾ.ಆಂಜಯ್ಯ ದೇವಿನೇನಿ, ಆಟೋಮೊಬೈಲ್ ವಿಭಾಗದ ಉಸ್ತುವಾರಿ ಹಿತೇಂದರ್, ಸಂಘದ ಸ್ಥಾಪಕ ಅಧ್ಯಕ್ಷ ಪ್ರಭಾಕರ್ ಕೆ., ಹಿರಿಯ ಸಲಹೆಗಾರ ಯಾದವ್ ಶೆಟ್ಟಿಗಾರ್, ಉಪಾಧ್ಯಕ್ಷರಾದ ಎಸ್.ಜಿ.ಕೃಷ್ಣ, ವಿನಯ್ ಕುಮಾರ್ ಕಲ್ಮಾಡಿ, ಕ್ರೀಡಾ ಕಾರ್ಯದರ್ಶಿ ಮಧುಸೂದನ್ ಕನ್ನರ್ಪಾಡಿ ಮತ್ತಿತರರು ಉಪಸ್ಥಿತರಿದ್ದರು. ಕೋಶಾಧಿಕಾರಿ ಸಂತೋಷ್ ಕುಮಾರ್ ಸ್ವಾಗತಿಸಿದರು. ಜೊತೆ ಕಾರ್ಯದರ್ಶಿ ರವಿ ಹಿರಿಯಡ್ಕ ವಂದಿಸಿದರು. ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಮಣಿಪಾಲ್ ಶಿಬಿರ ಸಂಯೋಜಿಸಿ ನಿರೂಪಿಸಿದರು.

ವಾರ್ತಾ ಭಾರತಿ 4 Jan 2026 7:35 pm

ಸಾವಿತ್ರಿಬಾಯಿ ಪುಲೆ ಹೆಸರಲ್ಲಿ ಶಿಕ್ಷಕರ ದಿನ ಆಚರಣೆಯಾಗಲಿ: ಸುಂದರ ಮಾಸ್ತರ್

ಬ್ರಹ್ಮಾವರ, ಜ.4: ಮನುಸ್ಮ್ರತಿ ಆಚರಣೆಯಲ್ಲಿದ್ದ ಆ ಕಾಲದಲ್ಲಿ ಈ ದೇಶದ ದಲಿತರಿಗೆ ಮತ್ತು ಮಹಿಳೆಯರಿಗೆ ಶಿಕ್ಷಣ ಕೊಟ್ಟ ಹಾಗೂ ಎಲ್ಲಾ ಅವಮಾನಗಳನ್ನು ಅನುಭವಿಸಿಯೂ ಈ ದೇಶದ ಶೋಷಿತರಿಗೆ ಶಿಕ್ಷಣ ಬೆಳಕನ್ನು ತೋರಿದ ಮಹಾ ಮಾತೆ ಸಾವಿತ್ರಿ ಬಾಯಿ ಪುಲೆ ಅವರ ಹೆಸರಲ್ಲಿ ಶಿಕ್ಷಕರ ದಿನವನ್ನು ಆಚರಿಸಬೇಕು ಎಂದು ದಸಂಸ ಅಂಬೇಡ್ಕರ್ ವಾದ ರಾಜ್ಯ ಸಂಘಟನಾ ಸಂಚಾಲಕ ಸುಂದರ ಮಾಸ್ತರ್ ಹೇಳಿದ್ದಾರೆ. ಬ್ರಹ್ಮಾವರ ತೆಂಕು ಬಿರ್ತಿ ಅಂಬೇಡ್ಕರ್ ಯುವಕ ಮಂಡಲ, ಆದಿ ದ್ರಾವಿಡ ಸಹಕಾರ ಸಂಘ, ಸಾವಿತ್ರಿ ಬಾಯಿ ಪುಲೆ ಗ್ರಂಥಾಲಯಗಳ ಸಂಯುಕ್ತ ಆಶ್ರಯದಲ್ಲಿ ಶನಿವಾರ ಬಿರ್ತಿಯ ಅಂಬೇಡ್ಕರ್ ಭವನದಲ್ಲಿ ನಡೆದ ಅಕ್ಷರದವ್ವನ ಅರಿವು ಕಾರ್ಯಕ್ರಮ ಸಾವಿತ್ರಿ ಬಾಯಿ ಪುಲೆ ಜನ್ಮದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಸ್ವಾತಂತ್ರ್ಯ ಪೂರ್ವದಲ್ಲಿ ದಲಿತರಿಗೆ ಮತ್ತು ಮಹಿಳೆಯರಿಗೆ ಶಿಕ್ಷಣ ನಿಷೇಧ ಇತ್ತು. ಅಂತಹ ಕಾಲದಲ್ಲಿ ದಲಿತ ರೊಂದಿಗೆ ಮಹಿಳೆಯರಿಗೂ ಶಾಲೆ ತೆರೆದ ಈ ದೇಶದ ಮೊದಲ ಮಹಿಳಾ ಶಿಕ್ಷಕಿ ಸಾವಿತ್ರಿ ಬಾಯಿ ಪುಲೆ ಹೆಸರಲ್ಲಿ ಅತ್ಯಗತ್ಯವಾಗಿ ಶಿಕ್ಷಕರ ದಿನಾಚರಣೆ ಆಚರಿಸಬೇಕಿತ್ತು. ಆದರೆ ರಾಜಕೀಯ ಕಾರಣಗಳಿಂದ ಅದು ಸಾಧ್ಯವಾಗದೇ ಇರುವುದು ದುರಂತ ಎಂದರು. ಮುಖ್ಯ ಅತಿಥಿಯಾಗಿ ದಸಂಸ ಮೈಸೂರು ವಿಭಾಗೀಯ ಸಂಘಟನಾ ಸಂಚಾಲಕ ಶ್ಯಾಮರಾಜ್ ಬಿರ್ತಿ ಮಾತನಾಡಿ, ಸಾವಿತ್ರಿ ಬಾಯಿ ಪುಲೆ ಶಾಲೆಗೆ ಪಾಠ ಮಾಡಲು ಹೋಗುವಾಗ ಮೇಲ್ವರ್ಗದವರು ಸೆಗಣಿ, ಕಲ್ಲುಗಳನ್ನು ಎಸೆಯುತ್ತಿ ದ್ದರು. ಅದಕ್ಕಾಗಿ ಅವರು ಶಾಲೆಗೆ ಹೋಗುವಾಗ ಎರಡು ಸೀರೆಯನ್ನು ತೆಗೆದುಕೊಂಡು ಹೋಗುತ್ತಿದ್ದರು. ಶಾಲೆಗೆ ಹೋಗುವಾಗ ವಿರೋಧಿಗಳು ಎಸೆದ ಸೆಗಣಿ ಮತ್ತು ಮಣ್ಣಿನಿಂದ ಮಲಿನಗೊಂಡ ಸೀರೆಯನ್ನು ಶಾಲೆಯಲ್ಲಿ ಬದಲಾಯಿಸಿ ಬೇರೆ ಸೀರೆಯನ್ನು ಉಟ್ಟು ಪಾಠ ಮಾಡುತ್ತಿದ್ದರು ಎಂದರು. ಸಾವಿತ್ರಿ ಅವರಿಗೆ ದಲಿತರಿಗೆ ಶಿಕ್ಷಣ ಕೊಡಬಾರದು ಎಂದು ಬೆದರಿಕೆಯನ್ನೂ ಒಡ್ಡಲಾಗುತ್ತಿತ್ತು. ಆದರೆ ಅವರು ಅದನ್ನೆಲ್ಲ ಅನುಭವಿಸಿ ದರು. ತುಂಬಾ ಕಷ್ಟಪಟ್ಟ ಅಕ್ಷರದವ್ವ ಸಾವಿತ್ರಿ ಬಾಯಿ ಪುಲೆ ದಲಿತರಿಗೆ, ಮಹಿಳೆಯರಿಗೆ ಈ ದೇಶದಲ್ಲಿ ಶಾಲೆಗಳನ್ನು ತೆರೆದರು ಎಂದು ಅವರು ತಿಳಿಸಿದರು. ನ್ಯಾಷನಲ್ ಇನ್ಶೂರೆನ್ಸ್‌ನ ನಿವೃತ್ತ ಅಧಿಕಾರಿ ಬೋಜರಾಜ್ ಕಾವ್ರಾಡಿ, ಆಧಿಧ್ರಾವಿಡ ಸಹಕಾರ ಸಂಘದ ಅಧ್ಯಕ್ಷ ಸುಧಾಕರ ಮಾಸ್ಟರ್, ಅಂಬೇಡ್ಕರ್ ಯುವಕ ಮಂಡಲದ ಕಾರ್ಯದರ್ಶಿ ಅನಿಲ ಬಿರ್ತಿ ಮುಖ್ಯ ಅತಿಥಿಗಳಾಗಿದ್ದರು. ಪ್ರಮುಖರಾದ ಮಂಜುನಾಥ ಬಾಳ್ಕದ್ರು, ಶ್ರೀನಿವಾಸ ವಡ್ಡರ್ಸೆ, ಹರೀಶ್ಚಂದ್ರ ಕೆ.ಡಿ., ಬಿರ್ತಿ ಸುರೇಶ, ಪ್ರಶಾಂತ್ ಬಿರ್ತಿ, ಶಿವಾನಂದ ಬಿರ್ತಿ, ಚತನ್ಯ ಬಿರ್ತಿ, ಕಿಶನ ಬಿರ್ತಿ, ಉಮೇಶ ಕಪಿಲೇಶ್ವರ, ಪ್ರಕಾಶ್ ಹೇರೂರು, ನಿಖಿಲ ಹಂದಾಡಿ, ಪ್ರದೀಪ ಕುಕ್ಕುಡೆ, ಸುಮನ ಟೀಚರ್, ಬಬಿತ ಟೀಚರ್, ಮಮತಾ ಉಪಸ್ಥಿತರಿದ್ದರು. ಗಣೇಶ ಬಿರ್ತಿ ಸ್ವಾಗತಿಸಿದರು. ಲಿಂಗಪ್ಪ ಮಾಸ್ಟರ್ ಕಾರ್ಯಕ್ರಮ ನಿರೂಪಿದರು.

ವಾರ್ತಾ ಭಾರತಿ 4 Jan 2026 7:33 pm

ಉಳ್ಳೂರು: ವಿದ್ಯಾಪೋಷಕ್ ವಿದ್ಯಾರ್ಥಿನಿಗೆ ಮನೆ ಹಸ್ತಾಂತರ

ಕುಂದಾಪುರ, ಜ.4: ವಿದ್ಯಾಪೋಷಕ್ ಪ್ರಥಮ ಪಿ.ಯು.ವಿದ್ಯಾರ್ಥಿನಿ, ಉಳ್ಳೂರಿನ ತೃಪ್ತಿಗೆ ದೀಪಾ ಮತ್ತು ಅರುಣ ಕುಮಾರ್ ಸುಮಾರು 7 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿಕೊಟ್ಟ ‘ಶ್ರೀಸಿದ್ಧಿವಿನಾಯಕ’ ಮನೆಯನ್ನು ರವಿವಾರ ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ ಉದ್ಘಾಟಿಸಿದರು. ಶ್ರೀಸಿದ್ಧಿವಿನಾಯಕ ಕ್ಯಾಶ್ಯು ಇಂಡಸ್ಟ್ರೀಸ್ ಮಾಲಕ ಅರುಣ್ ಕುಮಾರ್ ಶೆಟ್ಟಿ, ಕುಂದಾಪುರ, ವಿಠ್ಠಲ ಶೆಟ್ಟಿ ಚಾರಿಟೇಬಲ್ ಟ್ರಸ್ಟ್‌ನ ಪ್ರವರ್ತಕ ಕೊರ್ಗಿ ವಿಠ್ಠಲ ಶೆಟ್ಟಿ, ತೆಕ್ಕಟ್ಟೆ ರೋಟರಿ ಅಧ್ಯಕ್ಷ ಮಲ್ಯಾಡಿ ಸುಧೀರ್ ಕುಮಾರ್ ಶೆಟ್ಟಿ ಮಾತನಾಡಿದರು. ಪಂಚಾಯತ್ ಉಪಾಧ್ಯಕ್ಷೆ ಬೇಬಿ, ಸದಸ್ಯರಾದ ರಾಮಚಂದ್ರ ಶೇರಿಗಾರ್, ಜಯಶ್ರೀ ಶೆಟ್ಟಿ ಹಾಗೂ ಯಕ್ಷಗಾನ ಕಲಾರಂಗದ ಎಸ್.ವಿ. ಭಟ್, ಕೆ.ಸದಾಶಿವ ರಾವ್, ಯು.ವಿಶ್ವನಾಥ ಶೆಣೈ, ಭುವನ ಪ್ರಸಾದ ಹೆಗ್ಡೆ, ಅನಂತರಾಜ ಉಪಾಧ್ಯ, ಸಂತೋಷ ಕುಮಾರ್ ಶೆಟ್ಟಿ, ಕಿಶೋರ್ ಸಿ.ಉದ್ಯಾವರ, ಗಣಪತಿ ಭಟ್, ಜಯರಾಮ ಪಡಿಯಾರ್, ಅಜಿತ್ ಕುಮಾರ್, ವಿಶ್ವನಾಥ, ವೈಷ್ಣವಿ, ಸನಕ ಕಡೆಕಾರ್ ಉಪಸ್ಥಿತರಿದ್ದರು. ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ.ಗಂಗಾಧರ ರಾವ್ ಸ್ವಾಗತಿಸಿದರು. ನಾರಾಯಣ ಎಂ.ಹೆಗಡೆ ವಂದಿಸಿದರು. ಕಾರ್ಯದರ್ಶಿ ಮುರಲಿ ಕಡೆಕಾರ್ ಕಾರ್ಯಕ್ರಮ ನಿರೂಪಿಸಿದರು.

ವಾರ್ತಾ ಭಾರತಿ 4 Jan 2026 7:32 pm

ಅರಣ್ಯ ಇಲಾಖೆ ಮೇಲೆ ತಂತ್ರಜ್ಞಾನಕ್ಕೆ ಸ್ಪಂದಿಸುವ ಒತ್ತಡ: ಡಿಎಫ್‌ಓ ಗಣಪತಿ ಕೆ.

ಉಡುಪಿ: ಇಂದಿನ ಹೊಸ ಹೊಸ ತಂತ್ರಜ್ಞಾನಕ್ಕೆ ಹೊಂದಿಕೊಂಡು ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬಂದಿ ಕಾರ್ಯನಿರ್ವ ಹಿಸಬೇಕಾಗಿರುವುದು ಅಗತ್ಯವಾಗಿದೆ. ಆಧುನಿಕ ತಂತ್ರಜ್ಞಾನಕ್ಕೆ ಸ್ಪಂದಿಸುವ ಒತ್ತಡ ಇಲಾಖೆಯ ಮೇಲಿದೆ ಎಂದು ಕುಂದಾಪುರ ಪ್ರಾದೇಶಿಕ ವಿಭಾಗದ ಉಪ ಅರಣ್ಯ ಸಂರಕ್ಷಣಾಕಾರಿ ಗಣಪತಿ ಕೆ. ಹೇಳಿದ್ದಾರೆ. ಉಡುಪಿಯ ಕಿದಿಯೂರು ಹೋಟೆಲಿನ ಶೇಷಶಯನ ಸಭಾಂಗಣದಲ್ಲಿ ರವಿವಾರ ನಡೆದ ಉಡುಪಿ ಜಿಲ್ಲಾ ಉಪ ವಲಯ ಅರಣ್ಯಾಕಾರಿಗಳ ಸಂಘದ ರಜತ ಸಂಭ್ರಮ, ನೂತನ ವರ್ಷ 2026 ಡೈರಿ ಬಿಡುಗಡೆ, ನಿವೃತ್ತ ಉಪ ವಲಯ ಅರಣ್ಯ ಅಧಿಕಾರಿಗಳಗೆ ಸನ್ಮಾನ, ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಅವರು ಮಾತನಾಡುತಿದ್ದರು. ಹಿಂದೆ ಅರಣ್ಯ ಇಲಾಖೆ ಜನರಿಂದ ದೂರವಿತ್ತು. ಆದರೆ ಇಂದು ಜನಸ್ನೇಹಿಯಾಗಿ ಕಾರ್ಯಾಚರಿಸುತ್ತಿದೆ. ಇಲಾಖೆ ಮತ್ತು ಜನರ ಮಧ್ಯೆ ಸಕರಾತ್ಮಕ ಬದಲಾವಣೆಯಾಗಿದೆ. ಪಶ್ಚಿಮ ಘಟ್ಟ ಹಾಗೂ ಸಮುದ್ರದ ಮಧ್ಯೆ ಸುಮಾರು 25 ಕಿ.ಮೀ.ಅಗಲದ ಈ ಕರಾವಳಿ ಭೂಭಾಗ ಹೆಚ್ಚುತ್ತಿರುವ ಜನಸಂಖ್ಯೆ, ಅಭಿವೃದ್ಧಿಯ ಜೊತೆಗೆ ಅರಣ್ಯ, ವನ್ಯ ಜೀವಿ ಸಂರಕ್ಷಣೆಯ ಮಹತ್ತರ ಕಾರ್ಯ ಇಲಾಖೆ ಮೇಲಿದೆ. ಈ ನಿಟ್ಟಿನಲ್ಲಿ ಇಲಾಖೆಗೆ ಜನಪ್ರತಿನಿಧಿಗಳ ಸಹಕಾರ ಅತ್ಯಗತ್ಯ ಎಂದರು. ಕಾರ್ಯಕ್ರಮವನ್ನು ಉದ್ಘಾಟಿಸಿದ ಎಲ್ಲೂರು ಅದಾನಿ ಪವರ್‌ನ ಅಧ್ಯಕ್ಷರು ಹಾಗೂ ಕಾರ್ಯನಿರ್ವಾಹಕ ನಿರ್ದೇಶಕ ಕಿಶೋರ್ ಆಳ್ವ ಮಾತನಾಡಿ, ಪ್ರಸ್ತುತ ಅರಣ್ಯ ಇಲಾಖೆಯಲ್ಲಿನ ದಕ್ಷ ಅಧಿಕಾರಿಗಳು ಹಾಗೂ ಸಿಬಂದಿಗಳ ಕರ್ತವ್ಯ ನಿಷ್ಠೆ ಪ್ರಶಂಸನೀಯ. ಬಹಳಷ್ಟು ಮಂದಿ ಅರಣ್ಯ ರಕ್ಷಣೆಗಾಗಿ ಹುತಾತ್ಮರಾಗಿದ್ದಾರೆ. ಅವರ ಕೊಡುಗೆಯನ್ನು ನಾವು ಮರೆಯುವ ಹಾಗಿಲ್ಲ ಎಂದು ತಿಳಿಸಿದರು. ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಮಾತನಾಡಿ, ಜಿಲ್ಲೆಯಲ್ಲಿ ಕಸ್ತೂರಿ ರಂಗನ್ ವರದಿ ಜಾರಿಯ ವಿರುದ್ಧ ಜನಾಕ್ರೋಶವಿದೆ. ಪ್ರಸ್ತುತ ಬದಲಾಗುತ್ತಿರುವ ಹವಾಮಾನ ವೈಪರೀತ್ಯದಿಂದಾಗಿ ಕಸ್ತೂರಿ ರಂಗನ್ ವರದಿ ಜಾರಿಯಾಗಬೇಕು ಎಂಬ ಆಗ್ರಹವೂ ಇದೆ. ಇದರ ಮಧ್ಯೆಯೆ ಅರಣ್ಯ ಇಲಾಖೆ ಕಾರ್ಯನಿರ್ವಹಿಸುವುದು ಬಹಳ ದೊಡ್ಡ ಸವಾಲು ಆಗಿದೆ ಎಂದು ಹೇಳಿದರು. ಮಾಜಿ ಶಾಸಕ ಕೆ.ರಘುಪತಿ ಭಟ್ ಮಾತನಾಡಿ, ಅಭಿವೃದ್ಧಿ ಹಾಗೂ ಅರಣ್ಯ ಸಂರಕ್ಷಣೆ ಎರಡೂ ಸಮತೋಲನವಾಗಿ ಸಾಗುವ ಆವಶ್ಯಕತೆಯಿದೆ. ಒಂದೆಡೆ ಸುಪ್ರೀಂ ಕೋರ್ಟಿನ ಆದೇಶದ ಪಾಲನೆ ಹಾಗೂ ಅರಣ್ಯ ಕಾಯ್ದೆಗಳ ಅನುಷ್ಠಾನದ ಮಧ್ಯೆ ಅರಣ್ಯ ಇಲಾಖೆ ಮಾನವೀಯತೆಗೆ ಹೆಚ್ಚು ಒತ್ತು ನೀಡಿ ಕಾರ್ಯ ನಿರ್ವಹಿಸಬೇಕು. ಇಲಾಖೆ ಹಾಗೂ ಜನಪ್ರತಿನಿಧಿಗಳ ನಡುವೆ ಹೊಂದಾಣಿಕೆ ಅನಿವಾರ್ಯ. ಒಟ್ಟಾರೆ ಅರಣ್ಯಾಧಿಕಾರಿಗಳ ಪರಿಸ್ಥಿತಿ ತಂತಿಯ ಮೇಲೆ ನಡಿಗೆ ಎಂಬಂತಾಗಿದೆ ಎಂದರು. ಮುಖ್ಯ ಅತಿಥಿಗಳಾಗಿ ಕುದುರೆಮುಖ ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಸಿವರಾಮ ಬಾಬು ಎಂ., ಉಡುಪಿ ಸಾಮಾಜಿಕ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಕಾರಿ ರವೀಂದ್ರ ಕುಮಾರ್ ಡಿ.ಎನ್., ಸಹಾಯಕ ಅರಣ್ಯ ಸಂರಕ್ಷಣಾಕಾರಿಗಳಾದ ಪಿ.ಶ್ರೀಧರ್ ಮೂಡಬಿದ್ರೆ, ಪ್ರಕಾಶ್ ಪೂಜಾರಿ, ಎನ್.ಸತೀಶ್, ಜಿ.ಡಿ.ದಿನೇಶ್, ಜಿಲ್ಲಾ ಸರಕಾರಿ ನೌಕರರ ಸಂಘದ ಅಧ್ಯಕ್ಷ ದಿನಕರ ಶೆಟ್ಟಿ ಅಂಪಾರು, ಸಂಸದರ ಆಪ್ತ ಸಹಾಯಕ ಹರೀಶ್ ಕುಮಾರ್ ಶೆಟ್ಟಿ, ವಲಯ ಅರಣ್ಯಾಕಾರಿಗಳ ಸಂಘ ಬೆಂಗಳೂರು ಇದರ ಪ್ರಧಾನ ಕಾರ್ಯದರ್ಶಿ ಕಿರಣ್ ಕುಮಾರ್, ಜಿಲ್ಲಾ ಗಸ್ತು ಅರಣ್ಯ ಪಾಲಕರ ಮತ್ತು ವೀಕ್ಷಕರ ಸಂಘದ ಅಧ್ಯಕ್ಷ ಕೇಶವ ಪೂಜಾರಿ ಎಂ. ಸಂಘದ ಉಪಾಧ್ಯಕ್ಷ ಕರುಣಾಕರ ಜೆ.ಆಚಾರ್ಯ, ಪ್ರಧಾನ ಕಾರ್ಯದರ್ಶಿ ರವಿ, ಜೊತೆ ಕಾರ್ಯದರ್ಶಿ ನಾಗರಾಜ್, ಖಜಾಂಚಿ ಗೋವಿಂದ ಎಂ.ಪಟಗಾರ್ ಮೊದಲಾದವರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ನಿವೃತ್ತ ಉಪವಲಯ ಅರಣ್ಯಾಧಿಕಾರಿಗಳಿಗೆ ಸನ್ಮಾನ ಹಾಗೂ ಪರಿಸರ ಮತ್ತು ಇತರ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಸಾಧಕರಿಗೆ ಗೌರವಾರ್ಪಣೆ, ಎಸೆಸೆಲ್ಸಿ ಪಿಯುಸಿ, ಪದವಿ, ಸ್ನಾತಕೋತ್ತರ ಪದವಿ ವಿಭಾಗದಲ್ಲಿ ಉತ್ತಮ ಸಾಧನೆ ಮಾಡಿರುವ ಸಂಘದ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ, ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆಯಲ್ಲಿ ವಿಜೇತರಾದ ವರಿಗೆ ಬಹುಮಾನ, ರಕ್ತದಾನಿಗಳಿಗೆ ಗೌರವಾರ್ಪಣೆ ನಡೆಯಿತು. ಸಂಘದ ಅಧ್ಯಕ್ಷ ನಾಗೇಶ ಬಿಲ್ಲವ ಸ್ವಾಗತಿಸಿದರು. ದಾಮೋದರ ಶರ್ಮ ಹಾಗೂ ಪ್ರಶಾಂತ್ ಶೆಟ್ಟಿ ಹಾವಂಜೆ ಕಾರ್ಯಕ್ರಮ ನಿರೂಪಿಸಿದರು.

ವಾರ್ತಾ ಭಾರತಿ 4 Jan 2026 7:30 pm

21ನೆ ದಿನವೂ ಮುಂದುವರೆದ ಕೊರಗರ ಧರಣಿ

ಉಡುಪಿ, ಜ.4: ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟ ಕರ್ನಾಟಕ-ಕೇರಳ ನೇತೃತ್ವದಲ್ಲಿ ಕೊರಗ ಸಮುದಾಯದ ಯುವ ಜನತೆಗೆ ಸರಕಾರಿ ಉದ್ಯೋಗಗಳಲ್ಲಿ ನೇರ ನೇಮಕಾತಿ ಒದಗಿಸುವಂತೆ ಒತ್ತಾಯಿಸಿ ಉಡುಪಿ ಜಿಲ್ಲಾಧಿಕಾರಿ ಕಚೇರಿ ಮುಂದೆ ನಡೆಯುತ್ತಿರುವ ಅಹೋರಾತ್ರಿ ಧರಣಿ ಸತ್ಯಾಗ್ರಹ ರವಿವಾರ 21ನೆ ದಿನಕ್ಕೆ ಕಾಲಿರಿಸಿದ್ದು, ಬೇಡಿಕೆ ಈಡೇರಿಸುವಂತೆ ಧರಣಿಯನ್ನು ಮುಂದುವರೆಸಲಾಗಿದೆ. ಈ ಸಂದರ್ಭದಲ್ಲಿ ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟದ ಅಧ್ಯಕ್ಷೆ ಸುಶೀಲಾ ನಾಡ, ಮಾಜಿ ಅಧ್ಯಕ್ಷೆ ಅಮ್ಮಣ್ಣೆ ಚೋರಾಡಿ, ಸಂಯೋಜಕ ಕೆ.ಪುತ್ರನ್ ಹೆಬ್ರಿ, ಪ್ರಮುಖರಾದ ಸುಪ್ರಿಯಾ ಕಿನ್ನಿಗೋಳಿ, ಸುರೇಶ್ ಕಾಪು, ದಿವಾಕರ ಕಳ್ತೂರು, ಆಶಾ ಕೆಮ್ಮಡೆ ಮೊದಲಾದವರು ಉಪಸ್ಥಿತರಿದ್ದರು.

ವಾರ್ತಾ ಭಾರತಿ 4 Jan 2026 7:27 pm

ಉಡುಪಿ ನಗರಸಭೆ ಮಾಜಿ ಉಪಾಧ್ಯಕ್ಷೆ ಇಂದಿರಾ ಶೇಖರ್ ನಿಧನ

ಉಡುಪಿ, ಜ.4: ಉಡುಪಿ ನಗರಸಭೆಯ ಮಾಜಿ ಉಪಾಧ್ಯಕ್ಷೆ ಕಲ್ಮಾಡಿಯ ಇಂದಿರಾ ಶೇಖರ್(68) ಜ.4ರಂದು ಹೃದಯಾಘಾತದಿಂದ ನಿಧನರಾದರು. ಬಿಜೆಪಿ ಜಿಲ್ಲಾ ಕಾರ್ಯಕಾರಣಿ ಸದಸ್ಯೆಯಾಗಿದ್ದ ಅವರು ಸತತ ಎರಡು ಬಾರಿ ಬಿಜೆಪಿ ಪಕ್ಷದಿಂದ ಕಲ್ಮಾಡಿ ವಾರ್ಡ್‌ನ ನಗರಸಭಾ ಸದಸ್ಯರಾಗಿ ಆಯ್ಕೆಯಾಗಿದ್ದರು. ಈ ಸಂದರ್ಭದಲ್ಲಿ ಅವರು ಒಂದು ಬಾರಿ ನಗರಸಭೆ ಉಪಾಧ್ಯಕ್ಷೆಯಾಗಿಯೂ ಸೇವೆ ಸಲ್ಲಿಸಿದ್ದರು. ಕಲ್ಮಾಡಿ ಉದಯಕಲಾ ಯುವಕ ಮಂಡಲ, ಮಲ್ಪೆ ಬಿಲ್ಲವ ಸಮಾಜ ಸೇವಾ ಸಂಘದ ಮಹಿಳಾ ಘಟಕ, ಕಲ್ಮಾಡಿ ಬಿಲ್ಲುಗುಡ್ಡೆ ಪಂಚದೈವ ಕ್ಷೇತ್ರ, ಕಲ್ಮಾಡಿ ಮಹಿಳಾ ಮಂಡಲ ಸೇರಿದಂತೆ ಹಲವಾರು ಸಂಘಟನೆಯಲ್ಲಿ ಸಕ್ರೀರಾಗಿದ್ದರು. ಮೃತರ ನಿಧನಕ್ಕೆ ಸಂಸದ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ಯಶ್‌ಪಾಲ್ ಎ.ಸುವರ್ಣ, ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ನಗರಸಭಾ ಸದಸ್ಯ ಸುಂದರ್ ಜೆ.ಕಲ್ಮಾಡಿ, ಬಿಜೆಪಿ ಜಿಲ್ಲಾಧ್ಯಕ್ಷ ಕುತ್ಯಾರ್ ನವೀನ್ ಶೆಟ್ಟಿ ಸಂತಾಪ ವ್ಯಕ್ತಪಡಿಸಿದ್ದಾರೆ.

ವಾರ್ತಾ ಭಾರತಿ 4 Jan 2026 7:25 pm

ಕರ್ನಾಟಕದಲ್ಲಿ 1,464 ಕೋಟಿ ರೂಪಾಯಿಗಳ ನಕಲಿ ಬಿಲ್ಲಿಂಗ್ ಜಾಲ ಪತ್ತೆ: ನಾಲ್ವರ ಬಂಧನ; ಏನಿದು ಪ್ರಕರಣ

ಕರ್ನಾಟಕ ಮತ್ತು ತಮಿಳುನಾಡಿನಲ್ಲಿ ದೊಡ್ಡ ತೆರಿಗೆ ವಂಚನೆ ಜಾಲವನ್ನು ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು ಪತ್ತೆಹಚ್ಚಿದ್ದಾರೆ. ನಕಲಿ ದಾಖಲೆಗಳನ್ನು ಬಳಸಿ ಜಿಎಸ್‌ಟಿ ನೋಂದಣಿ ಪಡೆದು, ನಕಲಿ ಇನ್‌ವಾಯ್ಸ್‌ಗಳ ಮೂಲಕ ತೆರಿಗೆ ವಂಚನೆ ಎಸಗಲಾಗಿದೆ. ಬೆಂಗಳೂರು, ಚೆನ್ನೈ ಸೇರಿದಂತೆ ಹಲವೆಡೆ ದಾಳಿ ನಡೆಸಿ ಮಹತ್ವದ ಸಾಕ್ಷ್ಯಗಳನ್ನು ವಶಪಡಿಸಿಕೊಳ್ಳಲಾಗಿದೆ. ನಾಲ್ವರು ಪ್ರಮುಖ ಸೂತ್ರಧಾರಿಗಳನ್ನು ಬಂಧಿಸಲಾಗಿದೆ. ತನಿಖೆ ಮುಂದುವರಿದಿದೆ.

ವಿಜಯ ಕರ್ನಾಟಕ 4 Jan 2026 7:24 pm