ಒಂದೇ ದಿನದಲ್ಲಿ ರೂ. 72,500ರಷ್ಟು ಕುಸಿದ ಬೆಳ್ಳಿ; ಕಾರಣವೇನು?
ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಫೆಡರಲ್ ರಿಸರ್ವ್ ಅಧ್ಯಕ್ಷರಾಗಿ ಕೆವಿನ್ ವಾರ್ಷ್ ಅವರನ್ನು ನಾಮನಿರ್ದೇಶನ ಮಾಡಿದ್ದು, ಚಿನ್ನ-ಬೆಳ್ಳಿ ದರದ ಕುಸಿತಕ್ಕೆ ಪ್ರಾಥಮಿಕ ಪ್ರಚೋದನೆಯಾಗಿತ್ತು. ಶನಿವಾರ ನಡೆದ ವಹಿವಾಟಿನಲ್ಲಿ ಬೆಳ್ಳಿ ಧಾರಣೆಯು ಒಂದೇ ದಿನ ಕೆಜಿಗೆ ರೂ. 72,500ರಷ್ಟು ಕುಸಿದಿದೆ. ಹತ್ತು ದಿನಗಳ ಅವಧಿಯಲ್ಲಿ ರೂ. 1 ಲಕ್ಷ ಏರಿಕೆ ಕಂಡಿದ್ದ ಕೆಜಿ ಬೆಳ್ಳಿ ಶನಿವಾರ 72,500ರಷ್ಟು ಕುಸಿತಗೊಂಡಿದೆ. ಶುಕ್ರವಾರ ಭಾರತದಲ್ಲಿ 3.84 ಲಕ್ಷ ರೂ. ಇದ್ದ 1 ಕೆಜಿ ಬೆಳ್ಳಿ ದರವು ಶನಿವಾರ 3.12 ಲಕ್ಷ ರೂ. ಯಂತೆ ಮಾರಾಟವಾಗಿದೆ. 2025ರ ಡಿಸೆಂಬರ್ 31ರಂದು ಕೆಜಿ ಬೆಳ್ಳಿ ದರವು 2.39 ಲಕ್ಷ ರೂ. ಇತ್ತು. ಅದು ಈಗ 3.12 ಲಕ್ಷಕ್ಕೆ ತಲುಪಿದ್ದು, ಒಂದೇ ತಿಂಗಳಲ್ಲಿ ಶೇ 30ರಷ್ಟು ಹೆಚ್ಚಳವಾಗಿದೆ. ಎಂಸಿಎಕ್ಸ್ನಲ್ಲಿ ಬೆಳ್ಳಿದರ ಶೇ. 27ರಷ್ಟು ಕುಸಿದಿದ್ದು, ಕೆಜಿಗೆ 100,000 ರೂ. ಗಿಂತ ಹೆಚ್ಚು ಇಳಿದಿದೆ. ಶುಕ್ರವಾರದ (ಅಮೆರಿಕದ ಕಾಲಾವಧಿ) ಸರಕು ಮಾರುಕಟ್ಟೆ ವಹಿವಾಟಿನ ನಂತರ ಬೆಳ್ಳಿ ಬೆಲೆ 2,91,922 ರೂ. ಪ್ರತಿ ಕೆಜಿಗೆ ತಲುಪಿದ್ದು, ಹಿಂದಿನ ಮಾರುಕಟ್ಟೆ ಮುಕ್ತಾಯದ ಸಮಯದಲ್ಲಿ 3,99,893 ರೂ. ಪ್ರತಿ ಕೆಜಿ ಇತ್ತು. ಚಿನ್ನ- ಬೆಳ್ಳಿ ದಾಖಲೆಯ ಓಟದ ನಂತರ 2026 ಜನವರಿ 30ರಂದು ಶುಕ್ರವಾರ ಹೂಡಿಕೆದಾರರು ಲಾಭ ಗಳಿಕೆಯ ಮಾರಾಟದ ನಂತರ ಗರಿಷ್ಠ ಕುಸಿತ ಕಂಡಿದೆ. ಎನ್ರಿಚ್ ಮನಿ ಸಿಇಒ ಪೊನ್ಮುದಿ ಆರ್ ಅವರು ಹೇಳಿರುವ ಪ್ರಕಾರ, “ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಫೆಡರಲ್ ರಿಸರ್ವ್ ಅಧ್ಯಕ್ಷರಾಗಿ ಕೆವಿನ್ ವಾರ್ಷ್ ಅವರನ್ನು ನಾಮನಿರ್ದೇಶನ ಮಾಡಿದ್ದು, ಪ್ರಾಥಮಿಕ ಪ್ರಚೋದನೆಯಾಗಿತ್ತು. ಹಣದುಬ್ಬರ ನಿಯಂತ್ರಣ ಮತ್ತು ಫೆಡ್ ಸ್ವಾತಂತ್ರ್ಯದ ಮೇಲಿನ ಒತ್ತು ನೀಡುವ ಕುರಿತ ಘೋರ ನಿಲುವಿಗೆ ಪ್ರಸಿದ್ಧಿ ಪಡೆದ ವಾರ್ಷ್ ಆಯ್ಕೆ ತ್ವರಿತವಾಗಿ ಮಾರುಕಟ್ಟೆಯಲ್ಲಿ ಸಂಚಲನೆ ಮೂಡಿಸಲು ಕಾರಣವಾಗಿದೆ. ಅಮೆರಿಕನ್ ಡಾಲರ್ಗೆ ಬಲ ಬಂದ ತಕ್ಷಣ ಸರಕುಗಳ ಮೇಲೆ ಹೂಡಿಕೆ ಹೆಚ್ಚಾಯಿತು. ದಾಖಲೆ ಏರಿಕೆ ಕಂಡಿದ್ದ ಚಿನ್ನ ಮತ್ತು ಬೆಳ್ಳಿಯ ದರ ತ್ವರಿತವಾಗಿ ಸಡಿಲಗೊಳ್ಳಲಾರಂಭಿಸಿತು. ಫಲಿತಾಂಶವಾಗಿ ಕಂಡು ಬಂದ ಲಿಕ್ವಿಡೇಶನ್ನಲ್ಲಿ ಮಾರುಕಟ್ಟೆಯಲ್ಲಿ ಬೆಳ್ಳಿದರ ಧೂಳೀಪಟವಾಯಿತು. ಇದು ಮಾರುಕಟ್ಟೆಯ ರಚನಾತ್ಮಕ ಮರುತಿದ್ದುಪಡಿಗಿಂತ ಹೆಚ್ಚಾಗಿ ಪ್ರಚೋದನೆಯ ಫಲಿತಾಂಶದ ತ್ವರಿತವಾದ ಬದಲಾವಣೆಯಾಗಿದೆ.”
Union Budget 2026: ಕೇಂದ್ರ ಬಜೆಟ್ ಪ್ರಾರಂಭಿಸಿದ ನಿರ್ಮಲಾ ಸೀತಾರಾಮನ್
Union Budget 2026: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 2026 - 2027ನೇ ಸಾಲಿನ ಕೇಂದ್ರ ಬಜೆಟ್ ಮಂಡನೆ ಮಾಡಿದ್ದಾರೆ. ಬಜೆಟ್ ಮೇಲಿನ ಭಾಷಣ ಪ್ರಾರಂಭವಾಗಿದೆ. ಇದು ಇತಿಹಾಸದಲ್ಲೇ ಎರಡನೇ ಬಾರಿ ಭಾನುವಾರ ಮಂಡನೆಯಾಗಿರುವ ಬಜೆಟ್ ಆಗಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 9ನೇ ಬಾರಿ ಕೇಂದ್ರ ಬಜೆಟ್ ಮಂಡನೆ ಮಾಡಿದ್ದು,
LIVE - ಕೇಂದ್ರ ಬಜೆಟ್ ಮಂಡನೆಗೆ ಕ್ಷಣಗಣನೆ
ಹೊಸದಿಲ್ಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸತತ ಒಂಭತ್ತನೇ ಬಾರಿ ಕೇಂದ್ರ ಬಜೆಟ್ ಮಂಡಿಸಲು ಸಜ್ಜಾಗಿದ್ದಾರೆ. ಈ ಮೂಲಕ ಐತಿಹಾಸಿಕ ದಾಖಲೆ ಬರೆಯಲು ಅವರು ಅಣಿಯಾಗಿದ್ದಾರೆ. ರವಿವಾರ ಬೆಳಿಗ್ಗೆ 11 ಗಂಟೆಗೆ ಸಂಸತ್ನಲ್ಲಿ 2026–27ನೇ ಸಾಲಿನ ಕೇಂದ್ರ ಬಜೆಟ್ ಅನ್ನು ಮಂಡಿಸಲಿದ್ದಾರೆ. ಭೌಗೋಳಿಕ ರಾಜಕೀಯ ಅನಿಶ್ಚಿತತೆ, ಬಂಡವಾಳ ಹೊರ ಹರಿವು ಹಾಗೂ ಅಮೆರಿಕದ ಸುಂಕ ಹೇರಿಕೆಯಂತಹ ಅಂತರರಾಷ್ಟ್ರೀಯ ಸವಾಲುಗಳ ನಡುವೆ ದೇಶದ ಅರ್ಥವ್ಯವಸ್ಥೆಗೆ ಧಕ್ಕೆಯಾಗದಂತೆ ಆರ್ಥಿಕ ಸ್ಥಿರತೆ ಮತ್ತು ಅಭಿವೃದ್ಧಿ ನಡುವಿನ ಸಮತೋಲನ ಕಾಯ್ದುಕೊಳ್ಳುವ ಕ್ರಮಗಳನ್ನು ಈ ಬಜೆಟ್ನಲ್ಲಿ ಪ್ರಕಟಿಸುವ ಸಾಧ್ಯತೆಗಳಿವೆ. ದೇಶದ ಒಟ್ಟು ಆಂತರಿಕ ಉತ್ಪನ್ನದ (ಜಿಡಿಪಿ) ಗಾತ್ರವನ್ನೇ ಅಭಿವೃದ್ಧಿಯ ಪ್ರಮುಖ ಮಾನದಂಡವಾಗಿ ಸರ್ಕಾರ ಬಿಂಬಿಸುತ್ತಿದೆ ಎಂಬ ವಿರೋಧ ಪಕ್ಷಗಳ ಟೀಕೆಗಳ ನಡುವೆಯೇ ಸೀತಾರಾಮನ್ ಅವರು ಒಂಬತ್ತನೇ ಬಾರಿ ಬಜೆಟ್ ಮಂಡಿಸಲು ಸಿದ್ಧರಾಗಿದ್ದಾರೆ. ಜಾಗತಿಕ ವ್ಯಾಪಾರ ಅಸ್ಥಿರತೆ, ಚಿನ್ನ–ಬೆಳ್ಳಿ ಬೆಲೆ ಏರಿಕೆ, ಡಾಲರ್ ಎದುರು ರೂಪಾಯಿ ವಿನಿಮಯ ಮೌಲ್ಯ ಕುಸಿತ ಸೇರಿದಂತೆ ವಿವಿಧ ಸವಾಲುಗಳನ್ನು ಎದುರಿಸಲು ಅಗತ್ಯ ಕ್ರಮಗಳನ್ನು ಬಜೆಟ್ನಲ್ಲಿ ಘೋಷಿಸುವ ನಿರೀಕ್ಷೆಯಿದೆ.
ಕೇಂದ್ರ ಸರ್ಕಾರ ಪ್ರತಿ ವರ್ಷ ಫೆಬ್ರುವರಿ 1 ರಂದು ಬಜೆಟ್ ಮಂಡಿಸುತ್ತದೆ. ಈ ಬಾರಿ ಭಾನುವಾರವಿದ್ದರೂ ಬಜೆಟ್ ಮಂಡಿಸಲಾಗುತ್ತಿದೆ. ಈ ಹಿಂದಿನ ಸಂಪ್ರದಾಯವನ್ನು ಬದಲಿಸಿ, ಹಣಕಾಸು ವರ್ಷದ ಆರಂಭಕ್ಕೆ ಮುನ್ನವೇ ಯೋಜನೆಗಳನ್ನು ಜಾರಿಗೆ ತರಲು ಈ ಕ್ರಮ ಕೈಗೊಳ್ಳಲಾಗಿದೆ. 2017 ರಿಂದ ಅರುಣ್ ಜೇಟ್ಲಿ ಈ ಸಂಪ್ರದಾಯವನ್ನು ಆರಂಭಿಸಿದರು. ಬಜೆಟ್ ಮಂಡನೆ ಸಮಯದಲ್ಲೂ ಬದಲಾವಣೆ ತರಲಾಗಿದೆ. ದಿನಾಂಕ ಬದಲಾವಣೆಯ ಹಿಂದಿನ ರಾಜಕೀಯ ಉದ್ದೇಶದ ಆರೋಪವನ್ನು ಸುಪ್ರೀಂಕೋರ್ಟ್ ತಿರಸ್ಕರಿಸಿದೆ.
ಮೊಸರು &ಸಕ್ಕರೆ ತಿನ್ನಿಸಿ ಕೇಂದ್ರ ಬಜೆಟ್ ಆರಂಭಕ್ಕೆ ಶುಭ ಕೋರಿದ ರಾಷ್ಟ್ರಪತಿಗಳು... Union Budget 2026
ಪ್ರಪಂಚವೇ ಕಾದು ಕುಳಿತಿರುವ ಭಾರತದ ಕೇಂದ್ರ ಬಜೆಟ್ ಮಂಡನೆ ಆರಂಭ ಆಗಿದ್ದು, ಈ ಬಾರಿ ದೊಡ್ಡ ದೊಡ್ಡ ಘೋಷಣೆಗಳು ಹೊರಬೀಳುವ ನಿರೀಕ್ಷೆ ಮನೆಮಾಡಿದೆ. ಕೇಂದ್ರದ ಮೋದಿ ಅವರ ಸರ್ಕಾರ ಮಾಸ್ಟರ್ ಪ್ಲಾನ್ ಮಾಡಿ ಈ ಬಾರಿಯ ಬಜೆಟ್ ಮಂಡನೆ ಮಾಡುತ್ತಿದ್ದು, ಮುಂಬರುವ ಹಲವು ಚುನಾವಣೆಗಳಿಗೆ ಇದು ದೊಡ್ಡ ಅಸ್ತ್ರವಾಗುವ ನಿರೀಕ್ಷೆ ಇದೆ. ಅದರಲ್ಲೂ ಹಣಕಾಸು ಸಚಿವೆ ನಿರ್ಮಲಾ
ಮರಣ ಮೃದಂಗ ಬಾರಿಸುತ್ತಿರುವ ಉತ್ತರ ಕನ್ನಡದ ಹೆದ್ದಾರಿಗಳು: ಮೂರು ವರ್ಷಗಳಲ್ಲಿ 726 ಮಂದಿ ಮೃತ್ಯು
ಭಟ್ಕಳ: ಸೌಂದರ್ಯದ ಗಣಿ ಎನಿಸಿಕೊಂಡಿರುವ ಪ್ರವಾಸಿ ಜಿಲ್ಲೆ ಉತ್ತರ ಕನ್ನಡದ ರಾಷ್ಟ್ರೀಯ ಹೆದ್ದಾರಿಗಳು ಇದೀಗ ಮರಣ ಮೃದಂಗ ಬಾರಿಸುತ್ತಿವೆ. ಹದಗೆಟ್ಟ ರಸ್ತೆಗಳು, ಅವೈಜ್ಞಾನಿಕ ಕಾಮಗಾರಿ ಮತ್ತು ನಿಯಂತ್ರಣವಿಲ್ಲದ ವಾಹನ ಸಂಚಾರದಿಂದಾಗಿ ಜಿಲ್ಲೆಯ ಹೆದ್ದಾರಿಗಳು ರಕ್ತಸಿಕ್ತವಾಗುತ್ತಿವೆ. ಕಳೆದ ಮೂರು ವರ್ಷಗಳ ಅವಧಿಯಲ್ಲಿ ಜಿಲ್ಲಾದ್ಯಂತ ಸಂಭವಿಸಿರುವ ರಸ್ತೆ ಅಪಘಾತಗಳಲ್ಲಿ 726 ಮಂದಿ ಪ್ರಾಣ ಕಳೆದುಕೊಂಡಿದ್ದು, 5,124 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂಬುದು ಆತಂಕಕಾರಿ ಸಂಗತಿ. ಅಧಿಕೃತ ಅಂಕಿಅಂಶಗಳೇ ಎಚ್ಚರಿಕೆಯ ಗಂಟೆ ಜಿಲ್ಲಾ ಪೊಲೀಸ್ ಇಲಾಖೆಯ ಅಧಿಕೃತ ಅಂಕಿಅಂಶಗಳ ಪ್ರಕಾರ, 2023ರಿಂದ 2025ರ ವರೆಗೆ ರಸ್ತೆ ಅಪಘಾತಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಲೇ ಬಂದಿದೆ. 2023ರಲ್ಲಿ 233 ಅಪಘಾತಗಳು ಸಂಭವಿಸಿದ್ದು, 248 ಮಂದಿ ಸಾವನ್ನಪ್ಪಿದ್ದರೆ, 2024ರಲ್ಲಿ ಅಪಘಾತಗಳ ಸಂಖ್ಯೆ 264ಕ್ಕೆ ಏರಿಕೆಯಾಗಿದೆ. 2025ರಲ್ಲಿ ಇದುವರೆಗೆ 192 ಅಪಘಾತಗಳು ಸಂಭವಿಸಿದ್ದು, 214 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಹೆಚ್ಚಿನ ಅಪಘಾತಗಳು ರಾಷ್ಟ್ರೀಯ ಹೆದ್ದಾರಿಗಳಲ್ಲೇ ಸಂಭವಿಸುತ್ತಿದ್ದು, ಮಳೆಗಾಲದಲ್ಲಿ ಉಂಟಾಗುವ ದೊಡ್ಡ ಗುಂಡಿಗಳು ಮತ್ತು ಅಪೂರ್ಣ ಕಾಮಗಾರಿ ಈ ದುರಂತಗಳಿಗೆ ಪ್ರಮುಖ ಕಾರಣವಾಗಿವೆ. ಅಪಘಾತಗಳ ಹಾಟ್ ಸ್ಪಾಟ್ ಆಗಿರುವ ಭಟ್ಕಳ ರಾಷ್ಟ್ರೀಯ ಹೆದ್ದಾರಿ–66 ಹಾದುಹೋಗುವ ಭಟ್ಕಳ ವ್ಯಾಪ್ತಿಯಲ್ಲಿ ಸರಣಿ ಅಪಘಾತಗಳು ಸಂಭವಿಸುತ್ತಿರುವುದು ಸಾರ್ವಜನಿಕರಲ್ಲಿ ಭಾರೀ ಆತಂಕ ಮತ್ತು ಆಕ್ರೋಶ ಮೂಡಿಸಿದೆ. ಕೇವಲ 600 ಮೀಟರ್ ವ್ಯಾಪ್ತಿಯಲ್ಲೇ ಒಂದೇ ತಿಂಗಳಲ್ಲಿ ವಿದ್ಯಾರ್ಥಿಗಳು, ಯುವಕರು ಸೇರಿದಂತೆ ಆರು ಮಂದಿ ಜೀವ ಕಳೆದುಕೊಂಡಿರುವುದು ಹೆದ್ದಾರಿ ಯೋಜನೆಯ ಅವೈಜ್ಞಾನಿಕತೆಗೆ ಕನ್ನಡಿ ಹಿಡಿದಂತಿದೆ. ನವಾಯತ್ ಕಾಲನಿ, ಮುರ್ಡೇಶ್ವರ–ಬಸ್ತಿಮಕ್ಕಿ, ವೆಂಕಟಾಪುರ ಹಳೆಯ ಸೇತುವೆ ಸುತ್ತಮುತ್ತ ಸಂಭವಿಸುತ್ತಿರುವ ರಸ್ತೆ ಅಪಘಾತಗಳು ಸ್ಥಳೀಯರ ನಿದ್ದೆಗೆಡಿಸಿವೆ. ಹಳೆಯ ಸೇತುವೆ ಮುಚ್ಚಿ ಹೊಸ ಸೇತುವೆಯಲ್ಲಿ ದ್ವಿಮುಖ ಸಂಚಾರ ಆರಂಭಿಸಿದ ಬಳಿಕ ಅಪಘಾತಗ ಸಂಭವಿಸುವ ಅಪಾಯ ಇನ್ನಷ್ಟು ಹೆಚ್ಚಾಗಿದೆ ಎಂಬ ಆರೋಪ ಕೇಳಿಬರುತ್ತಿದೆ. ವಿಳಂಬಗೊಂಡ ಕಾಮಗಾರಿ, ಮರೀಚಿಕೆಯಾದ ಸರ್ವಿಸ್ ರಸ್ತೆ, ಹೆದ್ದಾರಿ ಅಗಲೀಕರಣ ಕಾಮಗಾರಿ ವರ್ಷಗಳಿಂದಲೂ ಮಂದಗತಿಯಲ್ಲಿ ಸಾಗುತ್ತಿರುವುದೇ ಅಪಘಾತಗಳಿಗೆ ಮೂಲ ಕಾರಣ ಎಂದು ನಾಗರಿಕರು ಆರೋಪಿಸುತ್ತಿದ್ದಾರೆ. ಮೂರು ವರ್ಷಗಳಲ್ಲಿ ಪೂರ್ಣಗೊಳ್ಳಬೇಕಿದ್ದ ಚತುಷ್ಪಥ ಹೆದ್ದಾರಿ ಯೋಜನೆಗೆ ದಶಕಕ್ಕೂ ಹೆಚ್ಚು ಕಾಲ ಕಳೆದರೂ ಕೆಲಸ ಮುಗಿದಿಲ್ಲ. ನಗರದ ಮಧ್ಯಭಾಗದಿಂದ ಹೆದ್ದಾರಿ ಹಾದುಹೋಗುವಂತಾಗಿರುವುದರಿಂದ ಪಾದಚಾರಿಗಳು, ದ್ವಿಚಕ್ರ ವಾಹನ ಸವಾರರು ಮತ್ತು ಸ್ಥಳೀಯರು ಪ್ರತಿನಿತ್ಯ ಜೀವಭಯದಲ್ಲಿ ಸಂಚರಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಅನೇಕ ಕಡೆಗಳಲ್ಲಿ ಸರ್ವಿಸ್ ರಸ್ತೆ ಇಲ್ಲ, ಸೂಚನಾ ಫಲಕಗಳ ಕೊರತೆ ಇದೆ. ಮಳೆಗಾಲದಲ್ಲಿ ಹೆದ್ದಾರಿ ಕೆರೆಯಂತಾಗಿ ಪರಿವರ್ತನೆಯಾಗುವುದು ಮತ್ತೊಂದು ದೊಡ್ಡ ಸಮಸ್ಯೆಯಾಗಿದೆ. ತ್ವರಿತ ಕ್ರಮಕ್ಕೆ ಸಾರ್ವಜನಿಕರ ಆಗ್ರಹ ಅಪಘಾತಗಳ ಪ್ರಮಾಣ ತಗ್ಗಿಸಲು ಹೆದ್ದಾರಿಯ ಅಪಾಯಕಾರಿ ತಿರುವುಗಳಲ್ಲಿ ಎಚ್ಚರಿಕೆ ಫಲಕಗಳು, ಬೀದಿದೀಪಗಳು ಮತ್ತು ಪಾದಚಾರಿಗಳಿಗೆ ಪ್ರತ್ಯೇಕ ಮಾರ್ಗಗಳನ್ನು ಕಲ್ಪಿಸುವುದು ತುರ್ತು ಅಗತ್ಯವಾಗಿದೆ. ಹೆದ್ದಾರಿ ಅಧಿಕಾರಿಗಳು ಕೇವಲ ಕಾಮಗಾರಿ ಮುಗಿಸುವುದಷ್ಟೇ ಅಲ್ಲದೆ, ಸಾರ್ವಜನಿಕರ ಜೀವ ರಕ್ಷಣೆಗೂ ಆದ್ಯತೆ ನೀಡಬೇಕೆಂದು ಜಿಲ್ಲೆಯ ಜನತೆ ಆಗ್ರಹಿಸುತ್ತಿದ್ದಾರೆ. ಶಿರೂರು ಟೋಲ್ ಗೇಟ್ ನಲ್ಲಿ ಸುಂಕ ವಸೂಲಿ ನಡೆಯುತ್ತಿದ್ದರೂ ಕಾಮಗಾರಿ ಅಪೂರ್ಣವಾಗಿರುವುದು ಜನರ ಅಸಮಾಧಾನಕ್ಕೆ ಕಾರಣವಾಗಿದೆ. ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಈಗಲಾದರೂ ಎಚ್ಚೆತ್ತುಕೊಂಡು ರಸ್ತೆ ಸುರಕ್ಷತೆಗೆ ವೈಜ್ಞಾನಿಕ ಕ್ರಮ ಕೈಗೊಳ್ಳದಿದ್ದರೆ, ಹೆದ್ದಾರಿಗಳು ಮತ್ತಷ್ಟು ರಕ್ತವನ್ನು ಹರಿಸಲಿವೆ. ಸತೀಶ್ ಕುಮಾರ್ ಇವು ಅಪಘಾತಗಳಲ್ಲ, ನಿರ್ಲಕ್ಷ್ಯದ ಕೊಲೆಗಳು: ಸತೀಶ್ ಕುಮಾರ್ ನಾಯ್ಕ “ರಾಷ್ಟ್ರೀಯ ಹೆದ್ದಾರಿ–66ರ ಅಗಲೀಕರಣ ಕಾಮಗಾರಿ ವಿಳಂಬದಿಂದ ಭಟ್ಕಳದಲ್ಲಿ ಜೀವಗಳೇ ಹೋಗುತ್ತಿವೆ. ಐಆರ್ ಬಿ ಕಂಪೆನಿ ಕಳೆದ 13 ವರ್ಷಗಳಿಂದ ನಾಗರಿಕರನ್ನು ಸತಾಯಿಸುತ್ತಲೇ ಬಂದಿದೆ. ಜಿಲ್ಲೆಯ ಇತರ ಭಾಗಗಳಿಗಿಂತ ಭಟ್ಕಳದಲ್ಲಿ ಕಾಮಗಾರಿಗೆ ಯಾವುದೇ ವೇಗ ಇಲ್ಲ. ಎರಡು ತಿಂಗಳ ಹಿಂದೆ ಯೋಜನಾ ನಿರ್ದೇಶಕರೊಂದಿಗೆ ನಡೆದ ಸಭೆಯಲ್ಲಿ ಒಂದು ವಾರದೊಳಗೆ ಕಾಮಗಾರಿ ಆರಂಭಿಸುವ ಭರವಸೆ ನೀಡಲಾಗಿತ್ತು. ಆದರೆ ಅದು ಕೇವಲ ಕಣ್ಣೊರೆಸುವ ಮಾತಾಗಿ ಉಳಿದಿದೆ'' ಎಂದು ನಾಗರಿಕ ಹಿತ ರಕ್ಷಣಾ ಸಮಿತಿ ಅಧ್ಯಕ್ಷ ಸತೀಶ್ ಕುಮಾರ್ ನಾಯ್ಕ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ''ಅಪೂರ್ಣ ಮತ್ತು ಅವ್ಯವಸ್ಥಿತ ಕಾಮಗಾರಿಯೇ ಇಂದು ಅಪಘಾತಗಳಿಗೆ ನೇರ ಕಾರಣವಾಗಿದೆ. ರಸ್ತೆ ವಿನ್ಯಾಸ ಸ್ಪಷ್ಟವಿಲ್ಲದೆ ಹೊರಗಿನ ಚಾಲಕರು ನುಗ್ಗುತ್ತಿದ್ದು, ಅದರ ಬೆಲೆ ಸ್ಥಳೀಯರು ತಮ್ಮ ಪ್ರಾಣಗಳಿಂದ ಕಟ್ಟಬೇಕಾಗಿದೆ. ಭಟ್ಕಳದಲ್ಲಿ ಇತ್ತೀಚೆಗೆ ಸಂಭವಿಸಿರುವ ಹಲವು ಅಪಘಾತಗಳು ಅಪಘಾತಗಳಲ್ಲ, ಐಆರ್ ಬಿ ಕಂಪೆನಿಯ ನಿರ್ಲಕ್ಷ್ಯದಿಂದ ನಡೆದ ಪ್ರಾಯೋಜಿತ ಕೊಲೆಗಳು”ಎಂದು ಹೇಳಿದ್ದಾರೆ. ಭಟ್ಕಳದಲ್ಲಿ ಬೈಪಾಸ್ ಬೇಡಿಕೆ ಕಡಗಣನೆಯಿಂದಲೇ ಸಮಸ್ಯೆ ಚತುಷ್ಪಥ ಹೆದ್ದಾರಿ ಯೋಜನೆ ಪ್ರಾರಂಭದ ಹಂತದಲ್ಲೇ ಸಂಚಾರ ದಟ್ಟಣೆ ಹಾಗೂ ಅಪಘಾತಗಳನ್ನು ತಪ್ಪಿಸುವ ಉದ್ದೇಶದಿಂದ ಭಟ್ಕಳ ಪಟ್ಟಣದ ಹೊರವಲಯದಲ್ಲಿ ಬೈಪಾಸ್ ರಸ್ತೆ ನಿರ್ಮಿಸುವಂತೆ ತಜ್ಞರು ಮತ್ತು ಸಾರ್ವಜನಿಕ ಪ್ರತಿನಿಧಿಗಳು ಸಲಹೆ ನೀಡಿದ್ದರು. ಶಂಸುದ್ದೀನ್ ವೃತ್ತದಿಂದ ಸರ್ಪನಕಟ್ಟೆ ಮೂಲಕ ಶಿರಾಲಿಗೆ ಸಂಪರ್ಕಿಸುವ ಸಮಾನಾಂತರ ಬೈಪಾಸ್ ಮಾರ್ಗದ ಯೋಜನೆಯೂ ರೂಪುಗೊಂಡಿತ್ತು. ಆದರೆ ಕೆಲವು ಪ್ರಭಾವಿ ವ್ಯಕ್ತಿಗಳ ಸ್ವಾರ್ಥ ಮತ್ತು ಭೂ ಹಿತಾಸಕ್ತಿಗಳ ಕಾರಣದಿಂದ ಈ ಯೋಜನೆ ಸ್ಥಗಿತಗೊಂಡು ಇಂದಿಗೂ ಜಾರಿಗೆ ಬಂದಿಲ್ಲ. ಬೈಪಾಸ್ ರಸ್ತೆ ನಿರ್ಮಾಣವಾಗಿದ್ದರೆ ನಗರದ ಮಧ್ಯಭಾಗ ಅಪಘಾತಗಳಿಂದ ಸುರಕ್ಷಿತವಾಗುತ್ತಿತ್ತು ಮತ್ತು ನಗರ ವಿಸ್ತರಣೆ ಸಹಜವಾಗಿ ಹೊರವಲಯದ ಕಡೆಗೆ ಸಾಗುತ್ತಿತ್ತು. ಆದರೆ ಭೂ ಮಾಫಿಯಾ ಹಾಗೂ ಶ್ರೀಮಂತ ಹೂಡಿಕೆದಾರರ ಒತ್ತಡಕ್ಕೆ ಮಣಿದ ಪುರಸಭೆ ಆಡಳಿತವು ಬೈಪಾಸ್ ಯೋಜನೆಯನ್ನು ಕೈಬಿಟ್ಟು ಅಸ್ತಿತ್ವದಲ್ಲಿರುವ ಹೆದ್ದಾರಿಯ ಅಗಲೀಕರಣಕ್ಕೆ ಮುಂದಾದುದು, ಇಂದಿನ ಅಪಾಯಕಾರಿ ಪರಿಸ್ಥಿತಿಗೆ ಕಾರಣವಾಗಿದೆ. -ಹಿರಿಯ ಪತ್ರಕರ್ತರು ಅಪಘಾತ ನಿಯಂತ್ರಣಕ್ಕೆ ಪೊಲೀಸ್ ಇಲಾಖೆಯಿಂದ ಕಠಿಣ ಕ್ರಮ ಜಿಲ್ಲೆಯಲ್ಲಿ ರಸ್ತೆ ಅಪಘಾತಗಳನ್ನು ನಿಯಂತ್ರಿಸಲು ಪೊಲೀಸ್ ಇಲಾಖೆ ಬಿಗಿಯಾದ ಕ್ರಮಗಳನ್ನು ಕೈಗೊಳ್ಳುತ್ತಿದೆ. 2025ರ ಅವಧಿಯಲ್ಲಿ ಮೋಟರ್ ವಾಹನ ಕಾಯ್ದೆಯಡಿ ಒಟ್ಟು 1,41,870 ಪ್ರಕರಣಗಳನ್ನು ದಾಖಲಿಸಲಾಗಿದೆ. ಅತಿ ವೇಗವಾಗಿ ಚಾಲನೆ ಮಾಡುತ್ತಿದ್ದ 1,139 ಚಾಲಕರ ಮೇಲೆ ಕ್ರಮ ಕೈಗೊಳ್ಳಲಾಗಿದ್ದು, ಒಟ್ಟು 2.84 ಕೋಟಿ ರೂಪಾಯಿ ದಂಡ ವಸೂಲಿ ಮಾಡಲಾಗಿದೆ. ಸಂಚಾರ ನಿಯಮ ಉಲ್ಲಂಘಿಸಿದ 810 ಚಾಲನಾ ಪರವಾನಿಗೆಗಳನ್ನು (DL) ಅಮಾನತುಗೊಳಿಸಲಾಗಿದೆ. ಆದರೆ ರಸ್ತೆ ಮೂಲಸೌಕರ್ಯವೇ ಸುರಕ್ಷಿತವಾಗಿಲ್ಲದ ಸಂದರ್ಭದಲ್ಲಿ ಕೇವಲ ದಂಡ ಮತ್ತು ಪ್ರಕರಣಗಳಿಂದ ಸಮಸ್ಯೆಗೆ ಪರಿಹಾರ ಸಿಗುವುದೇ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.
ನವದೆಹಲಿ: ಇಂದು (ಫೆಬ್ರವರಿ 1, 2026) ದೇಶದ ಇತಿಹಾಸದಲ್ಲೇ ದಾಖಲೆಯ ಸತತ 9ನೇ ಬಾರಿಗೆ ಕೇಂದ್ರ ಬಜೆಟ್ ಮಂಡಿಸುತ್ತಿರುವ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು, ತಮ್ಮ ಉಡುಗೆಯ ಮೂಲಕ ಮತ್ತೆ ಗಮನ ಸೆಳೆದಿದ್ದಾರೆ. ಕರ್ತವ್ಯ ಭವನಕ್ಕೆ ಆಗಮಿಸಿದ ಅವರು, ತಮಿಳುನಾಡಿನ ಶ್ರೀಮಂತ ಸಂಸ್ಕೃತಿಯನ್ನು ಬಿಂಬಿಸುವ ಸೊಗಸಾದ ಗಾಢ ನೇರಳೆ ಬಣ್ಣದ (ಮೆಜೆಂತಾ) ಕೈಮಗ್ಗದ ಕಾಂಜೀವರಂ ಸೀರೆಯನ್ನು
Gold Rate: ಕೇಂದ್ರ ಬಜೆಟ್ ಮಂಡನೆಗೂ ಮುನ್ನ ಚಿನ್ನ - ಬೆಳ್ಳಿ ಬೆಲೆ ಭರ್ಜರಿ ಇಳಿಕೆ
Gold Rate: ಕೇಂದ್ರ ಬಜೆಟ್ 2026ರ ಮಂಡನೆ ಮಾಡುವುದಕ್ಕೆ ಕ್ಷಣಗಣನೆ ಇರುವಾಗಲೇ ಚಿನ್ನ ಮತ್ತು ಬೆಳ್ಳಿ ಬೆಲೆಯು ಭರ್ಜರಿ ಇಳಿಕೆಯಾಗಿದೆ. ಕೇಂದ್ರ ಬಜೆಟ್ಗೆ ಕ್ಷಣಗಣನೆ ಪ್ರಾರಂಭವಾಗಿದೆ. ಈ ರೀತಿ ಇರುವಾಗಲೇ ಚಿನ್ನ ಮತ್ತು ಬೆಳ್ಳಿ ಬೆಲೆಯು ವಿಪರೀತವಾದ ಏರಿಳಿತವನ್ನು ಕಂಡಿದೆ. ಫೆಬ್ರವರಿ 1ರ 2026ರಂದು ಬೆಳಿಗ್ಗೆ 9.30ರ ವೇಳೆಗೆ ಶೇ. 12 ಬೆಳ್ಳಿ ಬೆಲೆ ಇಳಿಕೆಯಾಗಿದ್ದು, ಇದಾದ
ಈ ಬಾರಿ ಭರ್ಜರಿ ಮಾವು ಫಸಲು ಕೈ ಸೇರುವ ಸಾಧ್ಯತೆ; ಮಾರ್ಚ್ವರೆಗೆ ಮಳೆಯಾಗ್ಬಾರದು ಅಷ್ಟೇ!
ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಮಾವು ಬೆಳೆ ಈ ಬಾರಿ ಭರ್ಜರಿ ಫಸಲು ನೀಡುವ ನಿರೀಕ್ಷೆಯಲ್ಲಿದೆ. 5,300 ಹೆಕ್ಟೇರ್ಗೂ ಹೆಚ್ಚು ಪ್ರದೇಶದಲ್ಲಿ ಹೂವು ಚೆನ್ನಾಗಿ ಅರಳಿದ್ದು, ಡಿಸೆಂಬರ್ ಮತ್ತು ಜನವರಿಯಲ್ಲಿನ ಅನುಕೂಲಕರ ವಾತಾವರಣದಿಂದಾಗಿ ಉತ್ತಮ ಇಳುವರಿ ನಿರೀಕ್ಷಿಸಲಾಗಿದೆ. ಮಾರ್ಚ್ ವರೆಗೆ ಇದೇ ಪರಿಸ್ಥಿತಿ ಮುಂದುವರಿದರೆ ರೈತರಿಗೆ ಅನುಕೂಲವಾಗಲಿದೆ.
Union Budget 2026| ರಾಷ್ಟ್ರಪತಿಯನ್ನು ಭೇಟಿ ಮಾಡಿದ ಸಚಿವೆ ನಿರ್ಮಲಾ ಸೀತಾರಾಮನ್
ಹೊಸದಿಲ್ಲಿ: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ದಾಖಲೆಯ 9ನೇ ಬಜೆಟ್ ಮಂಡಿಸುವ ಮೊದಲು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿ ಮಾಡಿದರು. ಇದಕ್ಕೆ ಮೊದಲು ಕರ್ತವ್ಯ ಭವನದ ಹೊರಗೆ ನಿರ್ಮಲಾ ಸೀತಾರಾಮನ್ ಅವರು ತಮ್ಮ ತಂಡದೊಂದಿಗೆ ಬಜೆಟ್ ಟ್ಯಾಬ್ಲೆಟ್ನ್ನು ಪ್ರದರ್ಶಿಸಿದ್ದಾರೆ. ಇಂದು ಬೆಳಿಗ್ಗೆ 11 ಗಂಟೆಗೆ ಬಜೆಟ್ ಮಂಡನೆ ನಡೆಯಲಿದೆ. ಈ ಬಾರಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ತಮಿಳುನಾಡಿನ ನೇಯ್ಗೆ ಪರಂಪರೆಯನ್ನು ಗೌರವಿಸುವ ಸಲುವಾಗಿ ಕೈಮಗ್ಗದಿಂದ ತಯಾರಿಸಿದ ಕಾಂಜೀವರಂ ರೇಷ್ಮೆ ಸೀರೆಯನ್ನು ಧರಿಸಿದ್ದಾರೆ. ಪ್ರತಿ ಬಾರಿಯೂ ಬಜೆಟ್ ದಿನ ನಿರ್ಮಲಾ ಸೀತಾರಾಮನ್ ಅವರು ಧರಿಸುವ ಸೀರೆ ಟ್ರೆಂಡ್ ಆಗುತ್ತದೆ. ವಿಭಿನ್ನ ಸೀರೆಗಳನ್ನು ಉಟ್ಟುಕೊಂಡು ಬರುವ ಮೂಲಕ ನಿರ್ಮಲಾ ಅವರು ದೇಶದ ಜನತೆಯ ಗಮನ ಸೆಳೆಯುತ್ತಾರೆ. #WATCH | Delhi | Union Finance Minister Nirmala Sitharaman, along with her team, calls on President Droupadi Murmu before presenting her ninth consecutive Union Budget pic.twitter.com/96H5JV5obv — ANI (@ANI) February 1, 2026
ಬೀದರ್ ಹೇಳಿದ ಉತ್ತರ: ಓದುಗರಿಲ್ಲ ಅನ್ನುವುದು ಸುಳ್ಳು!
ವೀರಕಪುತ್ರ ಶ್ರೀನಿವಾಸ್ ಬೆಂಗಳೂರು ಮತ್ತು ಬೀದರ್ನಲ್ಲಿ ಆಯೋಜಿಸಿದ ಪುಸ್ತಕ ಸಂತೆಯನ್ನು ನಾನು ಬರೀ ಹಬ್ಬ, ಜಾತ್ರೆ, ಸಾಹಿತ್ಯೋತ್ಸವ ಎಂದು ಕರೆಯುವುದಿಲ್ಲ. ಅದು ಕೇವಲ ಪ್ರದರ್ಶನವೂ ಅಲ್ಲ, ಜಾತ್ರೆಯೂ ಅಲ್ಲ. ಅದು ಪುಸ್ತಕದ ಒಳಗೂ ಹೊರಗೂ ನಡೆಯುವ ಒಂದು ಗಂಭೀರ ಬೌದ್ಧಿಕ ಚಳುವಳಿ. ಈ ಕಾಲದಲ್ಲಿ, ಓದುಗನನ್ನೇ ಕೇಂದ್ರದಲ್ಲಿ ಇಟ್ಟುಕೊಂಡು ಸಾಹಿತ್ಯವನ್ನು ಮತ್ತೆ ಸಮಾಜದೊಳಗೆ ತರುವ ಇಂತಹ ಪ್ರಯತ್ನಗಳು ವಿರಳ. ಇಲ್ಲಿ ಸೇರಿದ ಜನಸಂಖ್ಯೆ ನನಗೆ ಮುಖ್ಯವಲ್ಲ; ಎಷ್ಟು ಮನಸ್ಸುಗಳು ಚಿಂತನೆಗೆ ಒಳಗಾದವು, ಎಷ್ಟು ಪ್ರಶ್ನೆಗಳು ಹುಟ್ಟಿದವು ಎಂಬುದೇ ಮುಖ್ಯ. ಸಾಮಾನ್ಯವಾಗಿ ನಮ್ಮಲ್ಲಿ ನಡೆಯುವ ಪುಸ್ತಕ ಮೇಳಗಳಲ್ಲಿ ಪುಸ್ತಕಗಳು ಇರುತ್ತವೆ, ಅವುಗಳನ್ನು ಬರೆದವರು ಇರುವುದಿಲ್ಲ. ಅಲ್ಲಿರುವ ಮಾರಾಟಗಾರರ ಮಾತುಗಳಲ್ಲಿ ಕಾಗದದ ದರ, ಮುದ್ರಣ ವೆಚ್ಚ, ರಿಯಾಯಿತಿ, ಲೆಕ್ಕಾಚಾರಗಳೇ ಹೆಚ್ಚಿರುತ್ತವೆ. ಪುಸ್ತಕದೊಳಗಿನ ಭಾಷೆ, ಆಲೋಚನೆ, ಕಾಲದ ನೋವು ಇವೆಲ್ಲವೂ ಅದೇ ಮೇಜಿನ ಮೇಲೆ ಮೌನವಾಗಿ ಮಲಗಿರುತ್ತವೆ. ರಾಜ್ಯ, ರಾಷ್ಟ್ರಮಟ್ಟದ ಸಾಹಿತ್ಯ ಸಮ್ಮೇಳನಗಳೂ ಹೀಗೆಯೇ. ಅಲ್ಲಿ ಪ್ರಬಂಧ ಮಂಡಿಸುವವರು ಇರುತ್ತಾರೆ, ಸಂಜೆ ಸನ್ಮಾನ ಪಡೆಯುವವರೂ ಇರುತ್ತಾರೆ. ಆದರೆ ಓದುಗರ ಮಧ್ಯೆ ಬೆರೆತು ಕುಳಿತುಕೊಳ್ಳುವ, ಬೇರೆಯವರ ಮಾತು ಕೇಳಲು ಕರೆಯದೇ ಬಂದ ಸಾಹಿತಿಗಳು, ತಮ್ಮ ಪುಸ್ತಕದ ಕುರಿತು ಪ್ರಶ್ನೆ ಕೇಳಿಸಿಕೊಳ್ಳಲು ಸಿದ್ಧರಾಗಿರುವ ಬರಹಗಾರರು ಕಾಣುವುದೇ ಇಲ್ಲ. ಸಾಹಿತ್ಯ ಅಲ್ಲಿ ವೇದಿಕೆಯ ಮೇಲಕ್ಕೆ ಏರುತ್ತದೆ, ಓದುಗ ಕೆಳಗೆ ಕುಳಿತುಕೊಳ್ಳುತ್ತಾನೆ. ಈ ಮೇಲ್ಮಟ್ಟ-ಕೆಳಮಟ್ಟದ ವ್ಯವಸ್ಥೆಯೇ ಸಾಹಿತ್ಯವನ್ನು ನಿಧಾನವಾಗಿ ಜನಜೀವನದಿಂದ ದೂರ ಸರಿಸುತ್ತದೆ. ಇಂತಹ ಸ್ಥಾಪಿತ ರೂಢಿಗಳಿಗೆ ವಿರುದ್ಧವಾಗಿ ನಿಂತದ್ದೇ ಈ ವೀರಕಪುತ್ರನ ಪುಸ್ತಕ ಸಂತೆ! ಇಲ್ಲಿ ಓದುಗರ ಎದುರುಗಡೆ ನೇರವಾಗಿ ಬರಹಗಾರನೇ ಕೂತಿರುತ್ತಾನೆ. ಅವನದ್ದೇ ಪುಸ್ತಕ ಕೈಯಲ್ಲಿ ಹಿಡಿದು ಓದುಗ ಕೇಳುವ ಪ್ರಶ್ನೆಗೆ, ಅದೇ ಪುಸ್ತಕ ಬರೆದ ವ್ಯಕ್ತಿಯೇ ಉತ್ತರಿಸುವ ವ್ಯವಸ್ಥೆಯಿದೆ. ‘ಪ್ರೀತಿಯಿಂದ....’ ಎಂದು ಷರಾ ಬರೆಯುವ ಕವಿ ಕಾಗದದೆಡೆಯಿಂದ ಬೆರಳು ತೆಗೆದು ಪಟ್ಟಂತ ಒಂದು ಕವನವನ್ನು ವಾಚಿಸಬಲ್ಲರು, ಅಷ್ಟರ ಮಟ್ಟಿಗೆ ಕವಿ ಮತ್ತು ಓದುಗ ಅಲ್ಲಿ ಮುಖಾಮುಖಿಯಾಗಬಲ್ಲರು. ಅದೇ ಹಾಡು ಕತೆ ಹುಟ್ಟಿದ ಸಮಯದ ಬಗ್ಗೆ ಚರ್ಚಿಸಬಲ್ಲರು. ಈ ಸಮ್ಮುಖದಲ್ಲಿ ದೊಡ್ಡ ಬೌದ್ಧಿಕ ತಿರುವಿದೆ. ಇಲ್ಲಿ ಓದುಗನಿಗೆ ಕೇವಲ ಪುಸ್ತಕ ಮಾತ್ರ ಸಿಗುವುದಿಲ್ಲ; ಪುಸ್ತಕ ಹುಟ್ಟಿದ ಹಿನ್ನೆಲೆ, ಬರಹಗಾರನ ಒಳತಲ್ಲಣ, ಭಾಷೆಯ ಆಯ್ಕೆ, ಬರಹದೊಡನೆಯ ಮೌನಗಳು, ಹೊಸ ಹೊಳಹು, ಸಂವೇದನೆ-ಎಲ್ಲವೂ ಮಾತಿನೊಳಗೆ ಬರುತ್ತವೆ. ಇನ್ನೊಂದು ಮಹತ್ವದ ಅಂಶವೆಂದರೆ, ಈ ಹಬ್ಬದಲ್ಲಿ ಸಾಹಿತ್ಯವನ್ನು ಕೇವಲ ‘ಓದುವ ವಸ್ತು’ವನ್ನಾಗಿ ಮಾತ್ರ ಸೀಮಿತಗೊಳಿಸಿಲ್ಲ. ಸಾಹಿತ್ಯದ ಸುತ್ತಲೂ ಇರುವ, ಅದು ಹುಟ್ಟುವ ಸಂಪೂರ್ಣ ಜಗತ್ತನ್ನೇ ಇಲ್ಲಿ ತೆರೆದಿಡಲಾಗಿದೆ. ಸಾಹಿತ್ಯ ಮತ್ತು ಸಮಾಜದ ಸಂಬಂಧ, ಸಾಹಿತ್ಯ ಮತ್ತು ಮಾಧ್ಯಮದ ಒತ್ತಡಗಳು, ಸಾಹಿತ್ಯ ಪ್ರಕಾರಗಳ ಬೆಳವಣಿಗೆ, ಪುಸ್ತಕ ಪ್ರಕಾಶನದ ರಾಜಕೀಯ, ಮಾರಾಟದ ಸಂಕಷ್ಟ, ಬಿಡುಗಡೆಗಳ ಅರ್ಥ, ಮುನ್ನುಡಿ-ಬೆನ್ನುಡಿಯ ಹಿಂದೆ ಕೆಲಸ ಮಾಡುವ ಶಕ್ತಿ ಸಮೀಕರಣಗಳು, ನವಮಾಧ್ಯಮದಲ್ಲಿ ಪುಸ್ತಕ ಮಾರಾಟ ಜಾಲ -ಇವೆಲ್ಲವೂ ಇಲ್ಲಿ ಚರ್ಚೆಗೆ ಬರುತ್ತವೆ. ಅಷ್ಟೇ ಅಲ್ಲ, ಪುಸ್ತಕದೊಳಗಿನ ಬೌದ್ಧಿಕತೆ ಜೊತೆಗೆ ಪುಸ್ತಕದ ಹೊರಗಿನ ಶ್ರಮವೂ ಓದುಗರಿಗೆ ಗೋಚರವಾಗುತ್ತದೆ. ಒಂದು ಪುಸ್ತಕವು ಬರಹಗಾರನ ಕೈಯಲ್ಲಿ ಹುಟ್ಟಿ, ಸಂಪಾದಕನ ಕಣ್ಣಲ್ಲಿ ತಿದ್ದಿಸಿಕೊಂಡು, ವಿನ್ಯಾಸಕಾರನ ಮನಸ್ಸಿನಲ್ಲಿ ರೂಪ ಪಡೆದು, ಮುದ್ರಣಾಲಯದ ಯಂತ್ರದಲ್ಲಿ ಜನ್ಮ ಪಡೆದು, ಕೊನೆಗೆ ಓದುಗನ ಕೈ ಸೇರುವವರೆಗಿನ ಸಂಪೂರ್ಣ ಪಯಣ ಇಲ್ಲಿ ಮಾತಿನ ವಿಷಯವಾಗುತ್ತದೆ. ಇದರಿಂದ ಓದುಗನ ದೃಷ್ಟಿ ಬದಲಾಗುತ್ತದೆ. ಪುಸ್ತಕವನ್ನು ತಿಳಿಯುವವನು ಅದನ್ನು ಸಂರಕ್ಷಿಸುವುದನ್ನೂ ಕಲಿಯುತ್ತಾನೆ. ವಿನ್ಯಾಸವನ್ನು ಅರ್ಥಮಾಡಿಕೊಂಡವನು ಕಾಗದವನ್ನು ಕಾಪಾಡುತ್ತಾನೆ. ಮುದ್ರಣದ ಕಷ್ಟ ಅರಿತವನು ಯಾವತ್ತೂ ಪುಸ್ತಕವನ್ನು ನಿರ್ಲಕ್ಷ್ಯವಾಗಿ ಎಸೆದುಹೋಗುವುದಿಲ್ಲ. ಇಂತಹ ಪುಸ್ತಕ ಸಂತೆಯಲ್ಲಿ ಓದುಗನಾಗಲೀ ಲೇಖಕನಾಗಲೀ ಎಂದಿಗೂ ಒಬ್ಬಂಟಿಯಾಗುವುದಿಲ್ಲ, ಓದುಗ ಮೌನವಾಗುವುದಿಲ್ಲ, ಸಾಹಿತ್ಯವೂ ದೇವಾಲಯವಾಗುವುದಿಲ್ಲ. ಅದು ನಿರಂತರ ಪ್ರಶ್ನೆ-ಉತ್ತರಗಳ ಮೂಲಕ ಜೀವಂತವಾಗುವ ಪ್ರಕ್ರಿಯೆಯಾಗುತ್ತದೆ. ಆದ್ದರಿಂದ ವೀರಕಪುತ್ರ ಶ್ರೀನಿವಾಸ್ ಬೆಂಗಳೂರು ಮತ್ತು ಬೀದರ್ನಲ್ಲಿ ಆಯೋಜಿಸಿದ ಪುಸ್ತಕ ಸಂತೆಯನ್ನು ನಾನು ಬರೀ ಹಬ್ಬ, ಜಾತ್ರೆ, ಸಾಹಿತ್ಯೋತ್ಸವ ಎಂದು ಕರೆಯುವುದಿಲ್ಲ. ಅದು ಕೇವಲ ಪ್ರದರ್ಶನವೂ ಅಲ್ಲ, ಜಾತ್ರೆಯೂ ಅಲ್ಲ. ಅದು ಪುಸ್ತಕದ ಒಳಗೂ ಹೊರಗೂ ನಡೆಯುವ ಒಂದು ಗಂಭೀರ ಬೌದ್ಧಿಕ ಚಳವಳಿ. ಈ ಕಾಲದಲ್ಲಿ, ಓದುಗನನ್ನೇ ಕೇಂದ್ರದಲ್ಲಿ ಇಟ್ಟುಕೊಂಡು ಸಾಹಿತ್ಯವನ್ನು ಮತ್ತೆ ಸಮಾಜದೊಳಗೆ ತರುವ ಇಂತಹ ಪ್ರಯತ್ನಗಳು ವಿರಳ. ಇಲ್ಲಿ ಸೇರಿದ ಜನಸಂಖ್ಯೆ ನನಗೆ ಮುಖ್ಯವಲ್ಲ; ಎಷ್ಟು ಮನಸ್ಸುಗಳು ಚಿಂತನೆಗೆ ಒಳಗಾದವು, ಎಷ್ಟು ಪ್ರಶ್ನೆಗಳು ಹುಟ್ಟಿದವು ಎಂಬುದೇ ಮುಖ್ಯ. ಬುದ್ಧಿ ಚಲಿಸಿದ ಜಾಗದಲ್ಲಿ ಸಾಹಿತ್ಯ ಚಲಿಸುತ್ತದೆ. ಸಾಹಿತ್ಯ ಉಳಿದ ಜಾಗದಲ್ಲಿ ಪ್ರಜಾಪ್ರಭುತ್ವ ಉಸಿರಾಡುತ್ತಿರುತ್ತದೆ ಎಂದು ನಂಬಿದವ ನಾನು. ಬೆಂಗಳೂರಿನಲ್ಲಿ ಎರಡು ಬಾರಿ ಪುಸ್ತಕ ಸಂತೆ ಏರ್ಪಡಿಸಿ ಲಕ್ಷಾಂತರ ಓದುಗರಿಗೆ ತಲುಪಿದ ವೀರಕಪುತ್ರ ಅದನ್ನು ಮೊನ್ನೆ ಕರ್ನಾಟಕದ ತುತ್ತತುದಿಯಾದ ಬೀದರ್ವರೆಗೆ ವಿಸ್ತರಿಸಿದರು. ಒಂದೇ ಒಂದು ಪುಸ್ತಕದ ಅಂಗಡಿಯಿಲ್ಲದ ಊರಲ್ಲಿ ಪುಸ್ತಕ ಮೇಳವನ್ನು ಆಯೋಜಿಸುವುದು ಎಷ್ಟು ಸಂಕಟದ ಕೆಲಸ ಅನ್ನುವುದು ಯಾರಿಗೂ ವಿವರಿಸಿ ಹೇಳಬೇಕಾದ ವಿಷಯವಲ್ಲ. ಇಂಥ ಹಿನ್ನೆಲೆಯಲ್ಲೇ ಪುಸ್ತಕ ಸಂತೆಯನ್ನು ಕನ್ನಡದ ತುತ್ತ ತುದಿಗೆ ವಿಸ್ತರಿಸುವುದೆಂದರೆ ಅದು ಯೋಜನೆಯ ವಿಷಯವಲ್ಲ, ಅದು ಅಪರೂಪದ ಬಂಡು ಧೈರ್ಯ. 2006ರಲ್ಲಿ ನಡೆದ ಸಾಹಿತ್ಯ ಸಮ್ಮೇಳನವನ್ನು ಹೊರತುಪಡಿಸಿದರೆ, ನಂತರದ ವರ್ಷಗಳಲ್ಲಿ ಬೀದರ್ನಲ್ಲಿ ಕನ್ನಡದ ಓದುಗರಿಗೆ, ಸಾಹಿತ್ಯಕ್ಕೆ ಸಂಬಂಧಪಟ್ಟ ದೊಡ್ಡ ಕಾರ್ಯಕ್ರಮಗಳೇ ನಡೆದಿಲ್ಲ ಎನ್ನುವುದು ವಾಸ್ತವ. ಹಾಗಂತ ಸಂಗೀತ ಅಥವಾ ಸಂಸ್ಕೃತಿಗೆ ಸಂಬಂಧಿಸಿದ ಕಾರ್ಯಕ್ರಮಗಳಿಗೆ ಜನ ಸೇರುವುದಿಲ್ಲ ಎಂದೇನಿಲ್ಲ. ಸಾವಿರಾರು ಜನ ಸೇರುವುದು ಬೀದರ್ನ ವೈಶಿಷ್ಟ್ಯ. ಅಲ್ಲಿ ಜನರ ಆಸಕ್ತಿಯ ಕೊರತೆ ಇರಲಿಲ್ಲ, ಪುಸ್ತಕಗಳ ಕೊರತೆ ಮಾತ್ರ ಇತ್ತು. ಓದಲು ಬೇಕಿತ್ತು, ಆದರೆ ಕೊಡುವವರು ಇರಲಿಲ್ಲ. ಅಕಾಡಮಿ, ಪುಸ್ತಕ ಪ್ರಾಧಿಕಾರ ಇವು ಆ ವಿಚಾರದ ಬಗ್ಗೆ ಯೋಚನೆ ಮಾಡಲಿಲ್ಲ. ಇಂಥ ಸಂದರ್ಭದಲ್ಲಿ ವೀರಲೋಕದ ಶ್ರೀನಿವಾಸ್ ಬೀದರ್ ಕಡೆ ಹೆಜ್ಜೆ ಇಟ್ಟದ್ದು ಅನೇಕರಿಗೆ ಅಚ್ಚರಿ ತಂದಿತ್ತು. ಬೆಂಗಳೂರಿನಂತಹ ರಾಜಧಾನಿಯಲ್ಲಿ ಎರಡು ಬಾರಿ ಪುಸ್ತಕ ಸಂತೆಯನ್ನು ಯಶಸ್ವಿಯಾಗಿ ಆಯೋಜಿಸಿ, ಲಕ್ಷಾಂತರ ಜನರಿಗೆ ಸಾವಿರಾರು ಪುಸ್ತಕಗಳನ್ನು ಪರಿಚಯಿಸಿದ ಅನುಭವ ಅವರಿಗಿತ್ತು. ಆದರೂ ಬೀದರ್ ವಿಷಯದಲ್ಲಿ ಒಂದು ಗೊಂದಲ ಇದ್ದದ್ದು ನಿಜ. ಜನ ಮೇಳಕ್ಕೆ ಬರುತ್ತಾರೆ ಎಂಬ ವಿಶ್ವಾಸ ಇದ್ದರೂ, ಅವರು ಪುಸ್ತಕ ಖರೀದಿಸುತ್ತಾರೋ ಇಲ್ಲವೋ ಎಂಬ ಅನುಮಾನ ಸಹಜವಾಗಿತ್ತು. ಆ ಅನುಮಾನವನ್ನೇ ಜೊತೆಯಾಗಿ ಕೊಂಡು ಅವರು ಬೀದರ್ಗೆ ಬಂದರು. ಅವರ ಜೊತೆಗೆ ಬಾಲ್ಕೀ ಮಠ ನಿಂತಿತು, ಗುರುನಾಥ್ ರಾಜಗೀರ ಬೆನ್ನಿಗೆ ನಿಂತರು, ಸಂತೆ ಆರಂಭವಾಯಿತು. ನಂತರ ನಡೆದದ್ದು ಎಲ್ಲ ನಿರೀಕ್ಷೆಗಳನ್ನು ಮೀರಿದ್ದು. ಬೀದರ್ ಜನರು ಮೇಳಕ್ಕೆ ಬಂದರು, ಪುಸ್ತಕ ನೋಡಿದರು, ಪುಸ್ತಕ ಖರೀದಿಸಿದರು. ಪುಸ್ತಕದ ಹಸಿವು ಅಲ್ಲಿ ಜೀವಂತವಾಗಿದೆ ಅನ್ನೋದನ್ನು ಆ ಮೇಳ ಸ್ಪಷ್ಟವಾಗಿ ತೋರಿಸಿತು. ಈ ರೀತಿಯ ‘ಹುಚ್ಚು ಸಾಹಸ’ ಮಾಡಿದ ಶ್ರೀನಿವಾಸ್ ಅವರನ್ನು ನಾನು ಕೇಳದೇ ಇರಲಿಲ್ಲ - ಲಾಭವಿಲ್ಲದ ಈ ಕ್ಷೇತ್ರದಲ್ಲಿ ಹೂಡಿಕೆ ಮಾಡುವುದರ ಪ್ರಯೋಜನ ಏನು ಎಂದು. ಅವರ ಉತ್ತರದಲ್ಲಿ ಲೌಕಿಕ ಲಾಭಕ್ಕಿಂತ ಹೆಚ್ಚು ಸಾಹಿತ್ಯದ ಮೌಲ್ಯ ಮತ್ತು ಓದುಗನ ಮನಸ್ಸು ಕಾಣಿಸಿತು. ‘‘ಮೂರುವರೆ ವರ್ಷಗಳ ಹಿಂದೆ ನಾನು ಪ್ರಕಾಶಕನಾಗಿ ಈ ಹೊಸ ಕ್ಷೇತ್ರಕ್ಕೆ ಕಾಲಿಟ್ಟಾಗ, ಬೆಂಗಳೂರು ಸೇರಿ ಇಡೀ ರಾಜ್ಯದಲ್ಲಿ ಕೇವಲ ಐದಾರು ಪುಸ್ತಕ ಅಂಗಡಿಗಳು ಮಾತ್ರ ಸಾಹಿತ್ಯ ಕೃತಿಗಳನ್ನು ಮಾರುತ್ತಿದ್ದವು. ಜನ ಪುಸ್ತಕದ ಕಡೆ ಬರ್ತಿಲ್ಲ ಅಂದ್ರೆ, ಪುಸ್ತಕವನ್ನೇ ಜನರ ಕಡೆ ಕೊಂಡೊಯ್ಯಬೇಕು ಅನ್ನೋ ನಿರ್ಧಾರಕ್ಕೆ ಬಂದೆ. ಹೋಟೆಲ್ಗಳ ಮುಂದೆ, ಆಸ್ಪತ್ರೆಗಳ ಎದುರು, ಮಾಲ್ಗಳ ಬಳಿ ಪುಸ್ತಕಗಳನ್ನು ಮಾರಾಟ ಮಾಡುವ ಪ್ರಯತ್ನ ಮಾಡಿದೆ. ಅದು ದೊಡ್ಡ ಮಟ್ಟದಲ್ಲಿ ಯಶಸ್ವಿಯಾಗಲಿಲ್ಲ. ನಂತರ ಕೆಲವು ವಿದ್ಯಾರ್ಥಿ -ಯುವಕರನ್ನು ಆಯ್ಕೆ ಮಾಡಿ, ವಿವಿಧ ಸ್ಥಳಗಳಲ್ಲಿ ಪುಸ್ತಕ ಪ್ರದರ್ಶನ ಮತ್ತು ಮಾರಾಟಕ್ಕೆ ನಿಯೋಜಿಸಲಾಯಿತು. ಈ ಸ್ವಯಂಕೃಷಿ ಅನ್ನುವ ಪುಸ್ತಕ ಪರಿಚಯ ಕಾರ್ಯಕ್ರಮ ಬೆಳಗ್ಗೆ ಏಳರಿಂದ ಹನ್ನೊಂದು ಗಂಟೆಯವರೆಗೆ ನಡೆಯುತ್ತಿತ್ತು. ಕೆಲಸ ಮಾಡಿದ ಯುವಕರಿಗೆ ಆ ಅವಧಿಗೆ ಸಾವಿರ ರೂಪಾಯಿ ಸಂಭಾವನೆ ನೀಡಲಾಗುತ್ತಿತ್ತು. ಈ ವ್ಯವಸ್ಥೆ ನಿಧಾನವಾಗಿ ಯಶಸ್ವಿಯಾಯಿತು. ಜನ ಪುಸ್ತಕ ನೋಡತೊಡಗಿದರು, ಪ್ರಶ್ನೆ ಕೇಳತೊಡಗಿದರು, ಖರೀದಿಸಲೂ ಆರಂಭಿಸಿದರು. ಅಲ್ಲಿಯೇ ‘ಪುಸ್ತಕ ಸಂತೆ’ ಅನ್ನುವ ಪರಿಕಲ್ಪನೆ ಹುಟ್ಟಿಕೊಂಡಿತು. ಇದ್ದಕ್ಕಿದ್ದಂತೆ ಲಕ್ಷಾಂತರ ಪುಸ್ತಕಗಳು ಮಾರಾಟವಾಗಬೇಕು, ಅಷ್ಟೇ ಓದುಗರು ಸೃಷ್ಟಿಯಾಗಬೇಕು ಅನ್ನೋದು ನನ್ನ ಉದ್ದೇಶವೇ ಅಲ್ಲ. ಇದು ಸರಕಾರದ ವಿರುದ್ಧದ ಹೋರಾಟವೂ ಅಲ್ಲ. ಓದುಗರೇ ಇಲ್ಲ ಎನ್ನುವ ಕೊರಗು ಸಮಸ್ಯೆಯ ಭಾಗವಾಗುವುದಕ್ಕಿಂತ, ಅದಕ್ಕೆ ಪರಿಹಾರವಾಗುವುದು ನನ್ನ ಆದ್ಯತೆ. ಈ ಕ್ಷೇತ್ರಕ್ಕೆ ಹೂಡಿಕೆ ಮಾಡುವಾಗ ತಕ್ಷಣಕ್ಕೆ ಮರಳಿ ಬರುವ ಲಾಭವನ್ನು ನಾನು ಎಂದಿಗೂ ಪರಿಗಣಿಸಿಲ್ಲ. ಸ್ವಲ್ಪ ಕಳೆದುಕೊಳ್ಳುವ ಉದ್ದೇಶದಿಂದಲೇ ಈ ನಿರ್ಧಾರಕ್ಕೆ ಬಂದೆ. ಅದು ಹಣವಾಗಿ ಮರಳಿ ಬರದಿದ್ದರೂ, ಭವಿಷ್ಯದಲ್ಲಿ ಬುದ್ಧಿಯ ರೂಪದಲ್ಲಿ ಮರಳಿ ಬರಬಹುದು ಅನ್ನೋ ನಿರೀಕ್ಷೆ, ದೂರದೃಷ್ಟಿ ನನ್ನದು’’ ಎನ್ನುತ್ತಾರೆ ವೀರಕಪುತ್ರ. ಯುವಕರು ಪುಸ್ತಕ ಓದುವುದಿಲ್ಲ, ಸಾಹಿತ್ಯಕ್ಕೆ ಭವಿಷ್ಯ ಇಲ್ಲ ಅನ್ನೋ ಮಾತು ಸಂಪೂರ್ಣ ಸುಳ್ಳು. ಒಮ್ಮೆ ಬೆಂಗಳೂರಿನ ಮೆಟ್ರೊದಲ್ಲಿ ಪ್ರಯಾಣಿಸಿ ನೋಡಿ, ಇವತ್ತಿಗೂ ಯುವಕರು ಬಹು ಮುಖ್ಯವಾಗಿ ಟೆಕ್ಕಿಗಳು, ವಿದ್ಯಾರ್ಥಿಗಳು ಅಲ್ಲಿ ಗಂಭೀರವಾಗಿ ಪುಸ್ತಕ ಓದುತ್ತಿರುವುದನ್ನು ಕಾಣಬಹುದು. ಆದರೆ ಅವರು ಓದುತ್ತಿರುವ ಪುಸ್ತಕಗಳು ನಮ್ಮ ಕಾಲದ ಕ್ಲಾಸಿಕ್ ಸಾಹಿತ್ಯವಾಗಿರದೆ, ಅಂತರ್ರಾಷ್ಟ್ರೀಯ ಮಟ್ಟದ ಆಂಗ್ಲ ಸಾಹಿತ್ಯವಾಗಿವೆ. ವರ್ತಮಾನದ ಅಗತ್ಯಕ್ಕೆ ತಕ್ಕಂತೆ ಹೊಸ ತಲೆಮಾರು ಸ್ಥಳೀಯತೆಯಿಂದ ಜಾಗತಿಕತೆಯ ಕಡೆಗೆ ಸರಿದಿರುವುದನ್ನು ನಾವು ಒಪ್ಪಿಕೊಳ್ಳಬೇಕು. ಈ ಬದಲಾವಣೆಯನ್ನು ಅರ್ಥಮಾಡಿಕೊಳ್ಳದೆ, ಅವರಿಗೆ ಬೇಕಾದ ಬೌದ್ಧಿಕ, ಸಾಹಿತಿಕ ಒಳಸುರಿಗಳನ್ನು ಸಿದ್ಧಗೊಳಿಸದೆ, ಅವರು ಓದುವುದೇ ಇಲ್ಲ ಎಂದು ಆರೋಪಿಸುವುದು ಅಕ್ಷಮ್ಯ ಹೌದು, ಸಾಹಿತ್ಯ, ಓದು, ಸಂಸ್ಕೃತಿ, ಬೌದ್ಧಿಕ ವಿಕಸನಕ್ಕಾಗಿ ಅನುದಾನ ಪಡೆಯುತ್ತಿರುವ ಪ್ರಭುತ್ವ ಪ್ರತಿನಿಧಿಸಂಸ್ಥೆಗಳು, ವಿಶ್ವವಿದ್ಯಾನಿಲಯಗಳು ಮಾಡಬೇಕಾದ ಕೆಲಸಗಳನ್ನು ಶ್ರೀನಿವಾಸ್ ಮಾಡುತ್ತಿದ್ದಾರೆ ಅನ್ನುವುದು ಅಭಿನಂದನೀಯ. ಇಷ್ಟಾದರೂ ತಪ್ಪು ಹಿಡಿಯುವ, ಟೀಕಿಸುವ ಸಹಿಸಲಾರದ ವಿಕೃತ ಮನಸ್ಸುಗಳು ಇದ್ದೇ ಇರುತ್ತವೆ. ಇಂಥ ಸಂದರ್ಭದಲ್ಲಾದರೂ ಓದುಗ, ಬರಹಗಾರರು ಇವೆಲ್ಲವನ್ನು ಕ್ಯಾರೆ ಅನ್ನದೆ ಶ್ರೀನಿವಾಸರಂಥ ಮುನ್ನುಗುವವರ ಜೊತೆ ನಿಲ್ಲುವುದು, ಅವರ ಪ್ರಯತ್ನಗಳಿಗೆ ಬೆಂಬಲ ನೀಡುವುದು, ಅವರ ಹಾದಿಯಲ್ಲಿ ಕೈಜೋಡಿಸುವುದು ನಮ್ಮಂತಹ ಕನ್ನಡಿಗರ ನಿಜವಾದ ಹೊಣೆ. ವೀರಕಪುತ್ರ ಶ್ರೀನಿವಾಸ್ ಅವರನ್ನು ನಾನು ಹೊಸ ಕಾಲದ, ಪುಸ್ತಕಸಂತೆಯ ಪಿತಾಮಹ ಎಂದು ಮಾತ್ರ ನೋಡಲು ಸಾಧ್ಯವಿಲ್ಲ. ಲೇಖಕ ಮತ್ತು ಒಬ್ಬ ಪ್ರಕಾಶಕನಾಗಿ ಅವರು ಬರಹಗಾರರಿಗೆ ಕೊಟ್ಟ ಗೌರವವನ್ನು ನಾನೂ ಅನುಭವಿಸಿದವ. ಬಿಡುಗಡೆಯ ದಿನವೇ ಕೈತುಂಬ ಪುಸ್ತಕದ ಪ್ರತಿಗಳೊಂದಿಗೆ ರಾಯಲ್ಟಿ ನೀಡಿದವರು. ಆ ಇಡೀ ಕಾರ್ಯಕ್ರಮವನ್ನು ಲೇಖಕನ ಘನತೆಯನ್ನು ಹೆಚ್ಚಿಸುವ ರೀತಿಯಲ್ಲಿ ರೂಪಿಸಿದರು. ವೀರಲೋಕ ಪ್ರಕಾಶನದ ಮೂಲಕ ಒಂದು ಪುಸ್ತಕ ಹೊರಬಂದ ನಂತರ, ಆ ಲೇಖಕನ ಪ್ರಭೆ ಮೊದಲಿಗಿಂತ ಹೆಚ್ಚಾಗಿ ವಿಸ್ತಾರಗೊಂಡಿರುವುದನ್ನು ನಾನು ಕಂಡಿದ್ದೇನೆ.ಅವರು ಸಾಹಿತ್ಯ, ಸಾಹಿತಿ, ಓದುಗನ ನಡುವೆ ಪುಸ್ತಕವನ್ನೇ ಕೇಂದ್ರದಲ್ಲಿ ಇಟ್ಟವರು. ಪುಸ್ತಕವನ್ನು ಸಂಸ್ಕೃತಿಯ ಸಾಧನವಾಗಿ ನೋಡುವ ದೃಷ್ಟಿ ಉಳ್ಳವರು ಮಾತ್ರ ಪುಸ್ತಕ ಮುದ್ರಿತವಾದರೆ ಸಾಲದು, ಅದು ಹೇಗಾದರೂ ಓದುಗರ ಕೈ ಸೇರಬೇಕೆಂದು ಹಪಹಪಿಸುತ್ತಾರೆ. ಬೀದರ್ನಲ್ಲಿ ನಡೆದದ್ದು ಪುಸ್ತಕಕ್ಕೆ ನೆಲ ಇಲ್ಲವೆಂದುಕೊಂಡಿದ್ದ ಊರುಗಳಿಗೆ, ಓದುಗರಿಲ್ಲವೆಂದುಕೊಂಡಿದ್ದ ಕಾಲಕ್ಕೆ ಕೊಟ್ಟ ಸ್ಪಷ್ಟ ಉತ್ತರ. ರಾಜಧಾನಿಯಿಂದ ಸಾವಿರಾರು ಕಿಲೋಮೀಟರ್ ದೂರದಲ್ಲಿ ಪುಸ್ತಕ ಮೇಳವನ್ನು ಆಯೋಜಿಸುವುದು ಸುಲಭದ ಕೆಲಸವಲ್ಲ. ಬೀದರ್ನಲ್ಲಿ ಗೆದ್ದವರಿಗೆ ಮುಂದೆ ಚಾಮರಾಜನಗರದಲ್ಲಿ ಗೆಲ್ಲುವುದು ಅಷ್ಟು ಕಷ್ಟವಾಗದು. ಗೆಳೆಯ, ಯಶಸ್ಸು ನಿಮ್ಮದಾಗಲಿ.
ಕೇಂದ್ರ ಬಜೆಟ್ ಗೂ ಮುನ್ನವೇ ಭಾರಿ ಏರಿಕೆಯಾದ ಎಲ್ ಪಿಜಿ ಸಿಲಿಂಡರ್ ದರ: ಹೆಚ್ಚಳ ಆಗಿದ್ದೆಷ್ಟು?
ಸಿಲಿಂಡರ್ ಬೆಲೆ ಆರಿ ಏರಿಕೆ ಆಗುವ ಮೂಲಕ ವಾಣಿಜ್ಯ ಬಳಕೆದಾರರಿಗೆ ಶಾಕ್ ನೀಡಿದೆ.
Gold Price: ಚಿನ್ನದ ಬೆಲೆ 1,50,000 ರೂಪಾಯಿಗೆ ಕುಸಿದು ಬೀಳುವ ಸಾಧ್ಯತೆ, ಕಾರಣ ಇಲ್ಲಿದೆ...
ಚಿನ್ನ.. ಚಿನ್ನ.. ಚಿನ್ನ.. ಹೀಗೆ ಎಲ್ಲಿ ಕೇಳಿದರೂ ಬರೀ ಚಿನ್ನದ ಬೆಲೆ ಏರಿಕೆ ಬಗ್ಗೆ ಹಾಗೂ ಬೆಳ್ಳಿ ಬೆಲೆ ಏರಿಕೆ ಬಗ್ಗೆ ಜನ ಮಾತನಾಡುತ್ತಿದ್ದಾರೆ. ಚಿನ್ನದ ಬೆಲೆ ದಿಢೀರ್ ಐತಿಹಾಸಿಕ ಮಟ್ಟಕ್ಕೆ ಏರಿಕೆ ಕಂಡ ನಂತರ ಚಿನ್ನ ಮಾರುಕಟ್ಟೆಯಲ್ಲಿ ತಲ್ಲಣ ಸೃಷ್ಟಿಯಾಗಿತ್ತು. ಅದರಲ್ಲೂ ಚಿನ್ನ ಬೆಲೆಯು ಇಷ್ಟೊಂದು ದೊಡ್ಡ ಮಟ್ಟದಲ್ಲಿ ಭಾರಿ ಏರಿಕೆ ಕಾಣುತ್ತಿದ್ದ ಕಾರಣಕ್ಕೆ ಆಭರಣ
CVoter Survey : ತಮಿಳುನಾಡು ಮತದಾರನ ನಾಡಿಮಿಡಿತ - ಅವ್ರನ್ನ ಬಿಟ್ಟು, ಇವ್ರನ್ನು ಬಿಟ್ಟು ಮತ್ತಿನ್ಯಾರು?
If Lok Sabha Election Conducted Today In Tamil Nadu : ಇಂಡಿಯಾ ಟುಡೇ - ಸಿವೋಟರ್ ಜಂಟಿಯಾಗಿ ಸಮೀಕ್ಷೆಯೊಂದನ್ನು ಹೊರತಂದಿದೆ. ಈಗ, ಲೋಕಸಭಾ ಚುನಾವಣೆ ನಡೆದ್ದಿದ್ದೇ ಆದಲ್ಲಿ, ಜನರ ನಾಡಿಮಿಡಿತ ಯಾರ ಪರವಾಗಿ ಎನ್ನುವ ಸರ್ವೇಯಲ್ಲಿ, ಜನರು, ಡಿಎಂಕೆ ನೇತೃತ್ವದ ಇಂಡಿಯಾ ಮೈತ್ರಿಕೂಟಕ್ಕೆ ಜೈ ಎಂದಿದ್ದಾರೆ. ಇದು, ಮುಂಬರುವ ವಿಧಾನಸಭಾ ಚುನಾವಣೆಯ ಮೇಲೆ ಹಿಡಿದಿರುವ ಕೈಗನ್ನಡಿಯೋ, ಎನ್ನುವುದು ಕಾದು ನೋಡಬೇಕಿದೆ.
ಅತ್ಯಂತ ಅನಾಹುತಕಾರಿ ಶಕ್ತಿ ಹೊಂದಿರುವ ತೇಲುವ ಕೋಟೆ!
ಅಂಕಿ ಅಂಶಗಳ ಕುರಿತು ಸರಿಯಾಗಿ ಆಲೋಚಿಸಿದರೆ, ಅದು ನಿಜಕ್ಕೂ ಆಶ್ಚರ್ಯ ಉಂಟುಮಾಡುತ್ತದೆ. ಯುಎಸ್ಎಸ್ ಅಬ್ರಹಾಂ ಲಿಂಕನ್ ನೌಕೆ 1,092 ಅಡಿಗಳಷ್ಟು ಉದ್ದವಿದ್ದು, ಇದು ಮೂರು ಫುಟ್ಬಾಲ್ ಮೈದಾನಗಳನ್ನು ಒಂದರ ನಂತರ ಒಂದರಂತೆ ಜೋಡಿಸುವುದಕ್ಕೆ ಸಮನಾಗಿರುತ್ತದೆ! ಇದು 252 ಅಡಿ ಅಗಲ ಹೊಂದಿದ್ದು, ಬಹುತೇಕ ಬೃಹತ್ ಕಟ್ಟಡಗಳಿಗಿಂತಲೂ ಹೆಚ್ಚು ಅಗಲವಾಗಿದೆ. ಆಯುಧಗಳು, ಪೂರೈಕೆಗಳು ಮತ್ತು ಸಿಬ್ಬಂದಿಯಿಂದ ತುಂಬಿದಾಗ, ಈ ನೌಕೆ 1 ಲಕ್ಷ ಟನ್ಗೂ ಹೆಚ್ಚಿನ ತೂಕ ಹೊಂದಿರುತ್ತದೆ. ದೊಡ್ಡ ನಗರವೊಂದು ನೀರಿನ ಮೇಲೆ ತೇಲುತ್ತಾ, ಪ್ರತೀ ಗಂಟೆಗೆ 56 ಕಿಲೋಮೀಟರ್ ವೇಗದಲ್ಲಿ ಸಾಗುತ್ತಾ, ಪ್ರತೀ ನಾಲ್ಕು ನಿಮಿಷಗಳಿಗೊಮ್ಮೆ ಹಾರಾಟ ನಡೆಸುವಷ್ಟು ಯುದ್ಧ ವಿಮಾನಗಳನ್ನು ಹೊತ್ತು ಸಾಗುವುದನ್ನು ಒಮ್ಮೆ ಕಲ್ಪಿಸಿಕೊಳ್ಳಿ. ಇದು ಕೇವಲ ಕಲ್ಪನೆಗೆ ಸೀಮಿತವಲ್ಲ. ಇದು ಅಮೆರಿಕದ ಅತ್ಯಂತ ಶಕ್ತಿಶಾಲಿ ಮಿಲಿಟರಿ ನೌಕೆಗಳಲ್ಲಿ ಒಂದಾದ ಯುಎಸ್ಎಸ್ ಅಬ್ರಹಾಂ ಲಿಂಕನ್ ವಿಮಾನ ವಾಹಕ ನೌಕೆಯ ಚಿತ್ರಣ. ಈ ಬೃಹತ್ ನೌಕೆ ಇರಾನ್ನ ಸನಿಹಕ್ಕೆ ತೆರಳುತ್ತಿದ್ದಂತೆ, ಇರಾನಿಯನ್ ಸರಕಾರ ಬೃಹತ್ ಗೋಡೆಯೊಂದರ ಮೇಲೆ ಅಮೆರಿಕಕ್ಕೆ ಎಚ್ಚರಿಕೆಯ ಸಂದೇಶ ರವಾನಿಸಿದೆ. ‘‘ನೀವು ಗಾಳಿಯನ್ನು ಬಿತ್ತಿದರೆ, ಅದರ ಫಸಲಾಗಿ ಬಿರುಗಾಳಿಯನ್ನೇ ಪಡೆಯುತ್ತೀರಿ’’ ಎಂದು ಟೆಹರಾನ್ ಅಮೆರಿಕವನ್ನು ಎಚ್ಚರಿಸಿದೆ. ಇದೊಂದು ಸರಳ ಸಂದೇಶವೇ ಈ ಒಂದು ಯುದ್ಧ ನೌಕೆ ಜಗತ್ತಿನ ಇತರ ದೇಶಗಳಲ್ಲಿ ಎಂತಹ ಕಳವಳ ಮೂಡಿಸುತ್ತದೆ ಎನ್ನುವುದಕ್ಕೆ ಸಾಕ್ಷಿಯಾಗಿದೆ. ಒಂದು ಸಶಕ್ತ ಯುದ್ಧ ನೌಕೆ ಮಾತುಗಳಿಗಿಂತ ಹೆಚ್ಚು ಗಟ್ಟಿಯಾದ, ಬಲವಾದ ಸಂದೇಶ ರವಾನಿಸಬಲ್ಲದು ಎನ್ನುವುದಕ್ಕೆ ಇದು ಸಾಕ್ಷಿಯಾಗಿದೆ. ಯುಎಸ್ಎಸ್ ಅಬ್ರಹಾಂ ಲಿಂಕನ್ ನೌಕೆಯನ್ನು 1989ರಲ್ಲಿ, ಅಂದರೆ 30ಕ್ಕೂ ಹೆಚ್ಚು ವರ್ಷಗಳ ಹಿಂದೆ ನಿರ್ಮಿಸಿ, ನೌಕಾಪಡೆಗೆ ಸೇರ್ಪಡೆಗೊಳಿಸಲಾಗಿತ್ತು. ಇದು ನಿಮಿಟ್ಜ್ ಕ್ಲಾಸ್ ಕ್ಯಾರಿಯರ್ಸ್ ಎನ್ನುವ ನೌಕಾ ವರ್ಗಕ್ಕೆ ಸೇರಿದ ನೌಕೆಯಾಗಿದೆ. ಇದನ್ನು ನಿಜಕ್ಕೂ ವಿಶೇಷವಾಗಿಸುವುದು ಇದು ಡೀಸೆಲ್ ಅಥವಾ ಪೆಟ್ರೋಲ್ನಂತಹ ಇಂಧನದ ಬದಲು, ಅಣು ಶಕ್ತಿಯನ್ನು ಬಳಸುವುದು. ಒಂದು ಕಾರನ್ನು ಇಂಧನ ಮರುಪೂರಣ ನಡೆಸದೆ, ಕೆಲವು ನೂರು ಕಿಲೋಮೀಟರ್ ತನಕ ಚಲಾಯಿಸಬಹುದು. ಆದರೆ, ಈ ನೌಕೆಯನ್ನು ಇಂಧನ ಮರುಪೂರಣದ ಅಗತ್ಯವೇ ಇಲ್ಲದೆ 20ಕ್ಕೂ ಹೆಚ್ಚು ವರ್ಷಗಳ ಕಾಲ ಚಲಾಯಿಸಬಹುದು. ಇದಕ್ಕೆ ನೌಕೆ ಹೊಂದಿರುವ ಎರಡು ಪರಮಾಣು ರಿಯಾಕ್ಟರ್ಗಳು ಪ್ರಮುಖ ಕಾರಣವಾಗಿವೆ. ಈ ರಿಯಾಕ್ಟರ್ಗಳು ನೌಕೆಯ ಒಳಗಿರುವ ಬೃಹತ್ ವಿದ್ಯುತ್ ಸ್ಥಾವರಗಳಂತೆ ಕಾರ್ಯಾಚರಿಸುತ್ತವೆ. ಇವು ಶಾಶ್ವತವಾಗಿ, ಅನಿಯಮಿತ ಶಕ್ತಿ ಪೂರೈಕೆ ನಡೆಸುತ್ತಲೇ ಇರುತ್ತವೆ. ಇಂತಹ ಅಸಾಧಾರಣ ಶಕ್ತಿ ಈ ನೌಕೆಯನ್ನು ಅಮೆರಿಕನ್ ಮಿಲಿಟರಿಗೆ ಅತ್ಯಂತ ಮುಖ್ಯವಾಗಿಸಿದ್ದು, ಅದು ಜಗತ್ತಿನಾದ್ಯಂತ ಶಕ್ತಿ ಪ್ರದರ್ಶನ ನಡೆಸುತ್ತದೆ. ಅಂಕಿ ಅಂಶಗಳ ಕುರಿತು ಸರಿಯಾಗಿ ಆಲೋಚಿಸಿದರೆ, ಅದು ನಿಜಕ್ಕೂ ಆಶ್ಚರ್ಯ ಉಂಟುಮಾಡುತ್ತದೆ. ಯುಎಸ್ಎಸ್ ಅಬ್ರಹಾಂ ಲಿಂಕನ್ 1,092 ಅಡಿಗಳಷ್ಟು ಉದ್ದವಿದ್ದು, ಇದು ಮೂರು ಫುಟ್ಬಾಲ್ ಮೈದಾನಗಳನ್ನು ಒಂದರ ನಂತರ ಒಂದರಂತೆ ಜೋಡಿಸುವುದಕ್ಕೆ ಸಮನಾಗಿರುತ್ತದೆ! ಇದು 252 ಅಡಿ ಅಗಲ ಹೊಂದಿದ್ದು, ಬಹುತೇಕ ಬೃಹತ್ ಕಟ್ಟಡಗಳಿಗಿಂತಲೂ ಹೆಚ್ಚು ಅಗಲವಾಗಿದೆ. ಆಯುಧಗಳು, ಪೂರೈಕೆಗಳು ಮತ್ತು ಸಿಬ್ಬಂದಿಯಿಂದ ತುಂಬಿದಾಗ, ಈ ನೌಕೆ 1 ಲಕ್ಷ ಟನ್ಗೂ ಹೆಚ್ಚಿನ ತೂಕ ಹೊಂದಿರುತ್ತದೆ. ಅಂದರೆ, ಇದು ಸಾವಿರಾರು ಕಾರುಗಳ ಒಟ್ಟು ತೂಕಕ್ಕಿಂತಲೂ ಹೆಚ್ಚಾಗಿದೆ. ಇಷ್ಟು ಭಾರೀ ತೂಕ ಹೊಂದಿದ್ದರೂ, ಇದು ಹೊಂದಿರುವ ಪರಮಾಣು ರಿಯಾಕ್ಟರ್ಗಳ ಕಾರಣದಿಂದಾಗಿ ಇತರೆಲ್ಲ ನೌಕೆಗಳಿಂದ ಹೆಚ್ಚು ವೇಗವಾಗಿ ಸಾಗಬಲ್ಲದು. ನೌಕೆ ನೀರಿನಾಳದಲ್ಲಿ 41 ಅಡಿಗಳಷ್ಟು ಕೆಳಗಿರಲಿದ್ದು, ಇದು ಜಗತ್ತಿನ ಯಾವುದೇ ರಾಷ್ಟ್ರ ನಿರ್ಮಿಸಿರುವ ಯುದ್ಧ ನೌಕೆಗಿಂತಲೂ ಅತ್ಯಂತ ಹೆಚ್ಚು ಬೃಹತ್ತಾಗಿದೆ. ಯುದ್ಧ ನೌಕೆಯ ಮೇಲ್ಭಾಗದಲ್ಲಿ ಫ್ಲೈಟ್ ಡೆಕ್ ಎಂದು ಕರೆಯಲ್ಪಡುವ ರನ್ವೇ ಇದ್ದು, ಒಟ್ಟಾರೆಯಾಗಿ 4.5 ಎಕರೆಗಳಷ್ಟು ವ್ಯಾಪ್ತಿ ಹೊಂದಿದೆ. ಇದನ್ನು ಸರಳವಾಗಿ ಸಮುದ್ರದ ಮೇಲೆ ತೇಲುವ ವಿಮಾನ ನಿಲ್ದಾಣ ಎಂದೂ ಕರೆಯಬಹುದು! ಈ ನೌಕೆ ಸಾಮಾನ್ಯವಾಗಿ 60ರಿಂದ 70 ವಿಭಿನ್ನ ವಿಮಾನಗಳನ್ನು ತನ್ನ ಕಾರ್ಯಾಚರಣೆಯನ್ನು ಆಧರಿಸಿ ಒಯ್ಯುತ್ತದೆ. ಇವುಗಳಲ್ಲಿ ಯುದ್ಧಕ್ಕೆ ಬಳಸುವ ಎಫ್/ಎ-18 ಸೂಪರ್ ಹಾರ್ನೆಟ್ಗಳು, ಗುರುತಿಸಲು ಕಷ್ಟವಾಗುವ ಎಫ್-35ಸಿ ಸ್ಟೆಲ್ತ್ ವಿಮಾನಗಳು, ಶತ್ರುಗಳ ರೇಡಾರ್ಗಳನ್ನು ಸ್ಥಗಿತಗೊಳಿಸುವ ಇಲೆಕ್ಟ್ರಾನಿಕ್ ವಾರ್ಫೇರ್ ವಿಮಾನಗಳು, ರಕ್ಷಣೆ ಮತ್ತು ಆ್ಯಂಟಿ ಸಬ್ಮರೀನ್ ಕಾರ್ಯಾಚರಣೆಗಳಿಗೆ ಬಳಸುವ ಹೆಲಿಕಾಪ್ಟರ್ಗಳು ಸೇರಿವೆ. ಅತ್ಯಂತ ತೂಕದ ಯುದ್ಧ ವಿಮಾನಗಳನ್ನು ಈ ನೌಕೆಯ ಸಣ್ಣದಾದ ರನ್ವೇ ಮೂಲಕ ಉಡಾವಣೆಗೊಳಿಸಲು ಇಂಜಿನಿಯರ್ಗಳು ‘ಫ್ಯಾಟ್ ಕ್ಯಾಟ್ಸ್’ ಎನ್ನುವ ಅಡ್ಡಹೆಸರು ಹೊಂದಿರುವ ಸ್ಟೀಮ್ ಕ್ಯಾಟಪುಲ್ಟ್ (ಹಬೆ ಕವಣೆಯಂತ್ರ) ಗಳನ್ನು ಅಭಿವೃದ್ಧಿ ಪಡಿಸಿದ್ದಾರೆ. ಈ ಫ್ಯಾಟ್ ಕ್ಯಾಟ್ಗಳು ಅತ್ಯದ್ಭುತ ಯಂತ್ರಗಳಾಗಿವೆ. ಇವು ಅತ್ಯಂತ ಒತ್ತಡದಲ್ಲಿರುವ ಬಿಸಿಯಾದ ಹಬೆಯನ್ನು ಬಳಸಿಕೊಂಡು, ಯುದ್ಧ ವಿಮಾನಗಳನ್ನು ಅತಿಯಾದ ಬಲದಿಂದ ಮುಂದಕ್ಕೆ ತಳ್ಳುತ್ತವೆ. ಇದರ ಪರಿಣಾಮವಾಗಿ, 37 ಟನ್ಗಳಷ್ಟು ತೂಕ ಹೊಂದಿರುವ, ಸಂಪೂರ್ಣ ನಿಲುಗಡೆಯಲ್ಲಿರುವ ಯುದ್ಧ ವಿಮಾನಗಳೂ ಕೇವಲ 3 ಸೆಕೆಂಡುಗಳಲ್ಲಿ ಪ್ರತೀ ಗಂಟೆಗೆ 289 ಕಿಲೋಮೀಟರ್ ವೇಗದಲ್ಲಿ ಹಾರತೊಡಗುತ್ತವೆ! ಇದು ಒಂದು ರೇಸ್ ಕಾರಿನ ವೇಗ ವರ್ಧನೆಗಿಂತಲೂ ಹೆಚ್ಚಿನ ಪ್ರಮಾಣದ್ದಾಗಿದೆ. ಈ ಯಂತ್ರಗಳು ನಿರಂತರವಾಗಿ, ಪ್ರತೀ ನಾಲ್ಕು ನಿಮಿಷಗಳಿಗೆ ಒಂದು ಯುದ್ಧ ವಿಮಾನವನ್ನು ಉಡಾವಣೆಗೊಳಿಸಬಲ್ಲವು. ಇದರಿಂದ ಯುಎಸ್ಎಸ್ ಅಬ್ರಹಾಂ ಲಿಂಕನ್ ಎಂದೂ ಬಾಗಿಲು ಹಾಕಿಕೊಳ್ಳದ ವಿಮಾನ ನಿಲ್ದಾಣದಂತೆ ಕೆಲಸ ಮಾಡುತ್ತಲೇ ಇರಬಲ್ಲದು. ಈ ಸಾಮರ್ಥ್ಯದಿಂದಾಗಿ ನೌಕೆ ಯಾವುದೇ ಕೊನೆಯಿಲ್ಲದೆ ಯುದ್ಧ ವಿಮಾನಗಳನ್ನು ಆಗಸಕ್ಕೆ ಚಿಮ್ಮಿಸುತ್ತಲೇ ಇರುತ್ತದೆ. ಇವೆಲ್ಲ ವಿಭಿನ್ನ ಏರ್ಕ್ರಾಫ್ಟ್ಗಳು ಜೊತೆಯಾಗಿ, ಕ್ಯಾರಿಯರ್ ಏರ್ ವಿಂಗ್ ಅನ್ನು ನಿರ್ಮಿಸುತ್ತವೆ. ಇದು ಹಲವು ಕಾರ್ಯಗಳನ್ನು ನಿರ್ವಹಿಸುವ ಯುದ್ಧ ವ್ಯವಸ್ಥೆಯಾಗಿದ್ದು, ಶತ್ರು ಗುರಿಗಳ ಮೇಲೆ ಆಗಸದಿಂದ ದಾಳಿ ನಡೆಸಬಲ್ಲವು, ನೌಕೆಗಳನ್ನು ಶತ್ರು ದಾಳಿಗಳಿಂದ ರಕ್ಷಿಸಬಲ್ಲವು, ಆಧುನಿಕ ಕ್ಯಾಮರಾ ಮತ್ತು ರೇಡಾರ್ಗಳನ್ನು ಬಳಸಿಕೊಂಡು, ಶತ್ರುಗಳ ಮೇಲೆ ಕಣ್ಣಿಡಬಲ್ಲವು, ಮತ್ತು ನೀರಿನಾಳದಲ್ಲಿ ಬಚ್ಚಿಟ್ಟುಕೊಂಡಿರುವ ಸಬ್ಮರೀನ್ಗಳನ್ನು ಬೇಟೆಯಾಡಬಲ್ಲವು. ಇದು ಒಂದು ರೀತಿಯಲ್ಲಿ ಒಂದು ಬೃಹತ್ ನೌಕೆಯಲ್ಲಿ ಸಂಪೂರ್ಣ ನೌಕಾಪಡೆ ವಾಸಿಸಿ, ಕಾರ್ಯಾಚರಿಸುವಂತಿರುತ್ತದೆ. ಜಗತ್ತಿನ ಇನ್ನಾವುದೇ ನೌಕಾಪಡೆಯ ವ್ಯವಸ್ಥೆಯೂ ಇಷ್ಟು ಶಕ್ತಿಶಾಲಿಯಾಗಿಲ್ಲ. 5,000ಕ್ಕೂ ಹೆಚ್ಚು ನಾವಿಕರು ಮತ್ತು ಮಿಲಿಟರಿ ಸಿಬ್ಬಂದಿ ಈ ನೌಕೆಯಲ್ಲಿ ಏಕಕಾಲಕ್ಕೆ ತಿಂಗಳಾನುಗಟ್ಟಲೆ ಮನೆಗಳಲ್ಲಿ ಇರುವಂತೆ ವಾಸಿಸುತ್ತಾರೆ. ಅವರು ಇತರ ಸಿಬ್ಬಂದಿಯೊಡನೆ ಸಣ್ಣ ಕೊಠಡಿಗಳನ್ನು ಹಂಚಿಕೊಂಡಿದ್ದು, ಗ್ಯಾಲೀ ಎಂದು ಕರೆಯುವ ದೊಡ್ಡ ಅಡುಗೆ ಕೋಣೆಗಳಲ್ಲಿ ಆಹಾರ ಸೇವಿಸುತ್ತಾರೆ. ಇನ್ನು ಎಲ್ಲ ಕಾರ್ಯಾಚರಣೆಗಳೂ ಸುಗಮವಾಗಿರಲು ತಮ್ಮ ಪಾಳಿಗಳಲ್ಲಿ ಕಾರ್ಯಾಚರಿಸುತ್ತಾರೆ. ಈ ನೌಕೆಯಲ್ಲಿ ಸಿಬ್ಬಂದಿ ವಿಶ್ರಾಂತಿ ಪಡೆಯಲು, ಸಿನೆಮಾ ವೀಕ್ಷಿಸಲು, ಸಮಯವಾದಾಗ ಕುಟುಂಬದೊಡನೆ ಸಂವಹನ ನಡೆಸಲು ವ್ಯವಸ್ಥೆಗಳಿವೆ. ಇನ್ನು ಪೂಜೆಗೆ ಮತ್ತು ಪ್ರಾರ್ಥನೆಗೂ ಇಲ್ಲಿ ಚಾಪೆಲ್ ಸೌಲಭ್ಯವಿದೆ. ಎಲ್ಲಕ್ಕಿಂತ ಮುಖ್ಯವಾಗಿ, ಈ ಬೃಹತ್ ನೌಕೆ ಒಂದು ಸರ್ವಸಜ್ಜಿತ ಆಸ್ಪತ್ರೆಯನ್ನು ಹೊಂದಿದ್ದು, ಅದು ಶಸ್ತ್ರಚಿಕಿತ್ಸೆಗಳನ್ನು ನಡೆಸುವ ಮತ್ತು ವೈದ್ಯಕೀಯ ತುರ್ತು ಪರಿಸ್ಥಿತಿಗಳನ್ನು ನಿಭಾಯಿಸುವ ತಜ್ಞ ವೈದ್ಯರನ್ನು ಹೊಂದಿದೆ. ನೌಕೆ ತಿಂಗಳಾನುಗಟ್ಟಲೆ ತೀರದಿಂದ ದೂರವಿರುವುದರಿಂದ ಈ ಸೌಲಭ್ಯಗಳನ್ನು ಹೊಂದಿರುವುದು ಅತ್ಯವಶ್ಯಕ. ಒಂದು ಸಶಸ್ತ್ರ ಆಯುಧವಾಗಿರುವುದರ ಆಚೆಗೆ, ಯುಎಸ್ಎಸ್ ಅಬ್ರಹಾಂ ಲಿಂಕನ್ ಸಾಕಷ್ಟು ಮಾನವೀಯ ನೆರವಿನ ಕಾರ್ಯಗಳನ್ನೂ ನಡೆಸುತ್ತದೆ. ಪೆಸಿಫಿಕ್ ಸಮುದ್ರದ ಗುವಾಮ್ನಂತಹ ದ್ವೀಪಗಳಿಗೆ ಭೇಟಿ ನೀಡುವಾಗ, ಈ ನೌಕೆಯ ಸಿಬ್ಬಂದಿ ಸ್ಥಳೀಯ ಸಮುದಾಯದ ಜನರಿಗೆ ಶಾಲೆಗಳನ್ನು ನಿರ್ಮಿಸಿ, ಉಚಿತ ವೈದ್ಯಕೀಯ ಶಿಬಿರಗಳನ್ನೂ ನಡೆಸುತ್ತಾರೆ. ಇದು ಮಿಲಿಟರಿ ಎನ್ನುವುದು ಶಕ್ತಿಯೊಡನೆ, ಸಾಮಾನ್ಯ ಜನರಿಗೆ ನೆರವಾಗುವ ಜವಾಬ್ದಾರಿಯೂ ಹೌದು ಎಂದು ನೆನಪಿಸುತ್ತದೆ. 2017ರಲ್ಲಿ ಯುಎಸ್ಎಸ್ ಅಬ್ರಹಾಂ ಲಿಂಕನ್ ಬೃಹತ್ ಮೇಲ್ದರ್ಜೆ ಕಾಮಗಾರಿ ಮತ್ತು ದುರಸ್ತಿಗೆ ಒಳಗಾಗಿತ್ತು. ಇದು ಪೂರ್ಣಗೊಳ್ಳಲು 4 ವರ್ಷಗಳೇ ಬೇಕಾಗಿತ್ತು. ಇದು ಹೊಸ ಪರಮಾಣು ಇಂಧನ, ಸುಧಾರಿತ ರೇಡಾರ್ ವ್ಯವಸ್ಥೆಗಳು, ಆಧುನಿಕ ಸಂವಹನ ಉಪಕರಣಗಳು ಮತ್ತು ಮುಂದಿನ ತಲೆಮಾರಿನ ಯುದ್ಧ ವಿಮಾನಗಳ ಉಡಾವಣೆಗೆ ಬೇಕಾದ ಇತರ ಉತ್ತಮ ಸೌಲಭ್ಯಗಳನ್ನೂ ಪಡೆದುಕೊಂಡಿತು. ಈ ವ್ಯವಸ್ಥೆಗಳಿಂದಾಗಿ, ನೌಕೆ ಇನ್ನೂ ಕನಿಷ್ಠ 25 ವರ್ಷಗಳ ಕಾಲ ಅಮೆರಿಕದ ಸೇವೆಗೆ ಲಭ್ಯವಿರಲಿದೆ. ಇಂದು ಯುಎಸ್ಎಸ್ ಅಬ್ರಹಾಂ ಲಿಂಕನ್ ಅಮೆರಿಕದ ಮಿಲಿಟರಿ ಸಾಮರ್ಥ್ಯ ಮತ್ತು ತಾಂತ್ರಿಕ ಶಕ್ತಿಯ ಸಂಕೇತವಾಗಿದೆ. ಇದು ಇಂಜಿನಿಯರಿಂಗ್ ಪ್ರಾವೀಣ್ಯತೆ, ಆಧುನಿಕ ತಂತ್ರಜ್ಞಾನ, ಮತ್ತು ಇದನ್ನು ತೇಲುವಂತೆ ಮಾಡಲು ಸಾವಿರಾರು ಜನರು ನಡೆಸುವ ಪ್ರಯತ್ನಗಳನ್ನು ಪ್ರತಿನಿಧಿಸುತ್ತದೆ. ಈ ತೇಲುವ ನಗರ ಹಗಲು, ರಾತ್ರಿ ಎನ್ನದೆ ನಿರಂತರವಾಗಿ ಕಾರ್ಯಾಚರಿಸುತ್ತಲೇ ಇರುತ್ತದೆ.
Union Budget 2026: ಕೇಂದ್ರ ಬಜೆಟ್ ಮಂಡನೆಗೆ ಕ್ಷಣಗಣನೆ..ಆರಂಭಿಕ ಪ್ರಕ್ರಿಯೆಗಳ ಸಂಕ್ಷಿಪ್ತ ಮಾಹಿತಿ
ನವದೆಹಲಿ: ಇಂದು ಭಾನುವಾರ ಇತಿಹಾಸದಲ್ಲೇ ಎರಡನೇ ಬಾರಿಗೆ ಭಾನುವಾರ ಕೇಂದ್ರ ಬಜೆಟ್ ಮಂಡನೆ ಆಗುತ್ತಿದೆ. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರ ಒಂಬತ್ತನೆ ಬಜೆಟ್ ಮಂಡನೆ ಇದಾಗಿದ್ದು, ಇದರ ಆರಂಭಕ್ಕೆ ಕ್ಷಣಗಣನೆ ಶುರುವಾಗಿದೆ. ಬಜೆಟ್ ಮಂಡನೆಗೂ ಮುನ್ನ ಏನೆಲ್ಲ ನಡೆಯುತ್ತದೆ. ಆ ಪ್ರಕ್ರಿಯೆಗಳ ಸಂಕ್ಷಿಪ್ತ ಮಾಹಿತಿ ಇಲ್ಲಿದೆ ಬೆಳಗ್ಗೆ 11 ಗಂಟೆಯಲ್ಲಿ ಲೋಕಸಭೆಯಲ್ಲಿ ನಿರ್ಮಲಾ ಸೀತಾರಾಮನ್ ಅವರು
ದಿಢೀರ್ 400 ರೂಪಾಯಿ ತಲುಪುತ್ತಾ ಕೋಳಿ ಬೆಲೆ? ಚಿಕನ್ ಸಪ್ಲೈ ಬಂದ್ ಮಾಡಲು ಚಿಂತನೆ... Karnataka Poultry Farmers
ಪ್ರಪಂಚದಲ್ಲಿ ಸಸ್ಯಾಹಾರ ಹಾಗೂ ಮಾಂಸಾಹಾರ ಎಂಬ ಎರಡು ಗುಂಪು ಇದ್ದು, ಹಲವರು ಈ ಎರಡನ್ನೂ ತಿನ್ನುತ್ತಾರೆ. ಹೀಗಿದ್ದಾಗ ಪ್ರತಿವರ್ಷ ಸುಮಾರು 25,000 ಮೆಟ್ರಿಕ್ ಟನ್ ಅಂದ್ರೆ 2.5 ಕೋಟಿ ಕೆಜಿಗೂ ಹೆಚ್ಚು ಕೋಳಿ ಮಾಂಸಕ್ಕೆ ಕರ್ನಾಟಕ ರಾಜ್ಯ ಒಂದರಲ್ಲೇ ಡಿಮ್ಯಾಂಡ್ ಇದೆ. ಇದೇ ಕಾರಣಕ್ಕೆ ಲಕ್ಷಾಂತರ ರೈತರು ಕೋಳಿ ಸಾಕಾಣಿಕೆ ನಂಬಿಕೊಂಡು ಜೀವನ ಸಾಗಿಸುತ್ತಿದ್ದು ಲಾಭಕ್ಕಿಂತ ನಷ್ಟವೇ
ಪುನರ್ವಸತಿಗೆ ಮುಂದಾಗದ ಸರಕಾರ; ಪುರುಷರು ಆತ್ಮಹತ್ಯೆಗೆ ಶರಣು; ಮಹಿಳೆಯರ ಗೋಳು ಕೇಳೋರ್ಯಾರು?
ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ವ್ಯಾಪ್ತಿಯಲ್ಲಿರುವ ವಡ್ಡಿನಕಾರ್ಕಿ ಗ್ರಾಮದ ಏಳು ಕುಟುಂಬಗಳು ಅಡಕೆ ಎಲೆಚುಕ್ಕಿ ರೋಗ ಮತ್ತು ಕಾಡು ಪ್ರಾಣಿಗಳ ಭಯದಿಂದ ತತ್ತರಿಸಿವೆ. ಮೂರು ವರ್ಷಗಳ ಹಿಂದೆ ನಡೆದ ಸರ್ವೆ ಬಳಿಕವೂ ಪುನರ್ವಸತಿ ಪರಿಹಾರ ದೊರಕದೆ, ಗ್ರಾಮಸ್ಥರು ಸ್ಥಳಾಂತರಕ್ಕೆ ತುದಿಗಾಲಲ್ಲಿ ನಿಂತಿದ್ದಾರೆ. ಮೂಲಸೌಲಭ್ಯಗಳಿಲ್ಲದೆ, ಮಕ್ಕಳಿಗೆ ಶಿಕ್ಷಣಕ್ಕೂ ತೊಂದರೆಯಾಗುತ್ತಿದೆ.
LPG Price: ಕೇಂದ್ರ ಬಜೆಟ್ 2026 ಮಂಡನೆಗೂ ಮನ್ನ ಎಲ್ಪಿಜಿ ಸಿಲಿಂಡರ್ ದರ ಭಾರಿ ಏರಿಕೆ
LPG Price: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು (ಫೆಬ್ರವರಿ 1) ಕೇಂದ್ರ ಬಜೆಟ್ 2026 ಮಂಡನೆ ಮಾಡಲಿದ್ದಾರೆ. ಇದಕ್ಕೂ ಮುನ್ನವೇ ವಾಣಿಜ್ಯ ಎಲ್ಪಿಜಿ ಸಿಲಿಂಡರ್ ಬೆಲೆ ಏರಿಕೆಯಾಗಿದೆ. ಹಾಗಾದ್ರೆ, ಕರ್ನಾಟಕದ ರಾಜಧಾನಿ ಬೆಂಗಳೂರು ಸೇರಿ ದೇಶದ ಪ್ರಮುಖ ನಗರಗಳಲ್ಲಿ ದರ ಎಷ್ಟಿದೆ ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ. ಇಂಧನ ಮಾರುಕಟ್ಟೆ ಕಂಪನಿಗಳು
ನದಿಗಳ ಒಡಲಿಗೆ ಕನ್ನ, ಮರಳು ಗಣಿಗಾರಿಕೆ ಅವ್ಯಾಹತ; ಬೇಕಿದೆ ಕಡಿವಾಣ
ತೀರ್ಥಹಳ್ಳಿ ತಾಲೂಕಿನಲ್ಲಿ ತುಂಗೆ, ಮಾಲತಿ, ಕುಶಾವತಿ ನದಿಗಳಲ್ಲಿ ಹಗಲುರಾತ್ರಿ ಅಕ್ರಮ ಮರಳು ಗಣಿಗಾರಿಕೆ ನಡೆಯುತ್ತಿದೆ. ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿ ಅಕ್ರಮ ತಡೆಯಲು ಮುಂದಾಗುತ್ತಿಲ್ಲ. ಇದರಿಂದಾಗಿ ಸರಕಾರಕ್ಕೆ ಕೋಟ್ಯಂತರ ರೂಪಾಯಿ ನಷ್ಟವಾಗುತ್ತಿದ್ದು, ಸಾರ್ವಜನಿಕ ವಲಯದಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ.
Petrol, Diesel Price: ಪೆಟ್ರೋಲ್, ಡೀಸೆಲ್ ದರದಲ್ಲಿ ಜಾಸ್ತಿ ಅಲ್ಲದಿದ್ದರೂ, ಸ್ವಲ್ಪ ಪ್ರಮಾಣದಲ್ಲಾದರೂ, ಏರಿಳಿತ ಆಗುತ್ತಿರುತ್ತದೆ. ಹಾಗಾದರೆ, ಇಂದು (ಫೆಬ್ರವರಿ 1) ಕೇಂದ್ರ ಬಜೆಟ್ ದಿನ ಬೆಂಗಳೂರು ಸೇರಿದಂತೆ ರಾಜ್ಯದ ಉಳಿದ ಜಿಲ್ಲೆಗಳಲ್ಲಿ ಲೀಟರ್ ಪೆಟ್ರೋಲ್, ಡೀಸೆಲ್ ಬೆಲೆ ಎಷ್ಟಿದೆ ಎನ್ನುವ ಅಂಕಿಅಂಶಗಳನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ. ಶಕ್ತಿಯ ಮೂಲಗಳು ಎನಿಸಿಕೊಂಡಿರುವ ಪೆಟ್ರೋಲ್ ಮತ್ತು ಡೀಸೆಲ್ ಇಂಧನ
ಜೆ.ಸಿ.ರಾಯ್ ಜೀವನದ ಕೊನೆಯ 15 ನಿಮಿಷಗಳು: ಕಡೆಯ ಬಯಕೆ ಏನು ಗೊತ್ತೇ?
ಬೆಂಗಳೂರು: ಕಾನ್ಫಿಡೆಂಟ್ ಗ್ರೂಪ್ ಮಾಲೀಕ ಹಾಗೂ ಖ್ಯಾತ ರಿಯಲ್ ಎಸ್ಟೇಟ್ ಉದ್ಯಮಿ ಜೆ.ಸಿ.ರಾಯ್ (57) ಬೆಂಗಳೂರಿನಲ್ಲಿ ಜನವರಿ 30ರಂದು ಆತ್ಮಹತ್ಯೆಗೆ ಶರಣಾಗಿದ್ದರು. ಭಾರತ ಹಾಗೂ ಯುಎಇಗಳಲ್ಲಿ ಐಷಾರಾಮಿ ರಿಯಲ್ ಎಸ್ಟೇಟ್ ಯೋಜನೆಗಳಿಗೆ ಹೆಸರಾಗಿದ್ದ ರಾಯ್ ಅವರಿಗೆ ಆದಾಯ ತೆರಿಗೆ ಇಲಾಖೆ ಸಮನ್ಸ್ ನೀಡಿದ ಬೆನ್ನಲ್ಲೇ ಸಾವಿಗೆ ಶರಣಾಗಿದ್ದರು. ಉದ್ಯಮಿಯ ಜೀವನದ ಕೊನೆಯ ಕ್ಷಣಗಳಲ್ಲಿ ಏನಾಯಿತು ಎಂಬ ಬಗೆಗಿನ ತನಿಖೆ ಕುತೂಹಲ ಕೆರಳಿಸಿದೆ. ರಾಯ್ ಕೊನೆಗೆ ಹೇಗೆ ಕಚೇರಿಗೆ ಬಂದರು, ಐಟಿ ಅಧಿಕಾರಿಗಳ ಜತೆ ಹೇಗೆ ಸಂವಾದ ನಡೆಸಿದರು, ಕೊನೆಗೆ ಹೇಗೆ ಮೌನಕ್ಕೆ ಶರಣಾದರು ಎಂಬ ಬಗ್ಗೆ ಹಾಗೂ ಮಾರಣಾಂತಿಕ ಗುಂಡೇಟಿನ ಗಾಯದೊಂದಿಗೆ ಬಳಿಕ ಪತ್ತೆಯಾದರು ಎನ್ನುವುದನ್ನು ಮಾಧ್ಯಮ ವರದಿಗಳು ಬಣ್ಣಿಸಿವೆ. ಅಧಿಕಾರಿಗಳು ಕೂಡಾ ಕೊನೆಯ 15 ನಿಮಿಷದ ಬಗೆಗೆ ಪರಿಶೀಲನೆ ನಡೆಸುತ್ತಿದ್ದಾರೆ. ಮಧ್ಯಾಹ್ನ 3ರ ಸುಮಾರಿಗೆ ವ್ಯವಸ್ಥಾಪಕ ನಿರ್ದೇಶಕ ಟಿ.ಎ.ಜೋಸೆಫ್ ಅವರ ಜತೆ ಐಟಿ ವಿಚಾರಣೆಗೆ ಸಹಕರಿಸಲು ಕಚೇರಿಗೆ ಆಗಮಿಸಿದ್ದರು. ಹಿಂದಿನ ತಿಂಗಳ ದಾಳಿಯ ಹಿನ್ನೆಲೆಯಲ್ಲಿ ಸತತ ಎರಡು ದಿನಗಳಿಂದ ಕೊಚ್ಚಿನ್ ಹಾಗೂ ಬೆಂಗಳೂರಿನಿಂದ ಆಗಮಿಸಿದ್ದ ತಂಡಗಳು ಸಂಯೋಜಿತ ಶೋಧ ಕಾರ್ಯ ನಡೆಸಿದ್ದವು. ತಮ್ಮ ಖಾಸಗಿ ಚೇಂಬರ್ಗೆ ಪ್ರವೇಶಿಸಿ ತಾಯಿಯ ಜತೆ ಮಾತನಾಡುವ ಇಂಗಿತ ವ್ಯಕ್ತಪಡಿಸಿದರು. ಆ ವೇಳೆ ಜೋಸೆಫ್ ಹೊರ ನಡೆದರು. ವಾಪಸ್ಸಾದಾಗ ಯಾರನ್ನೂ ಒಳಕ್ಕೆ ಬಿಡದಂತೆ ರಾಯ್ ಸೂಚಿಸಿದ್ದಾಗಿ ಭದ್ರತಾ ಸಿಬ್ಬಂದಿ ಹೇಳಿದರು. ತಕ್ಷಣವೇ ಕರೆ ಮಾಡಿ ವಾಪಸ್ಸಾಗುವುದಾಗಿ ಹೇಳಿ ಮತ್ತೊಂದು ಕೊಠಡಿಗೆ ತೆರಳಿದರು ಎಂದು ಅಧಿಕಾರಿಗಳು ಹೇಳಿದ್ದಾರೆ. 10 ನಿಮಿಷ ಬಳಿಕ ಜೋಸೆಫ್ ಕ್ಯಾಬಿನ್ ಬಾಗಿಲು ಬಡಿದರೂ ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ಒಳಗಿನಿಂದ ಬೀಗ ಹಾಕಿಕೊಂಡಿರುವುದು ಗಮನಕ್ಕೆ ಬಂದು ಬಾಗಿಲು ಒಡೆದು ನೋಡಿದಾಗ ರಾಯ್ ಅವರ ಅಂಗಿಯಲ್ಲಿ ರಕ್ತದ ಕಲೆಗಳಿದ್ದು, ಕುರ್ಚಿಯಲ್ಲಿ ಕುಳಿತಿದ್ದರು. ತಕ್ಷಣ ಆ್ಯಂಬುಲೆನ್ಸ್ ಮೂಲಕ ಎಚ್ಎಸ್ಆರ್ ಲೇಔಟ್ನ ನಾರಾಯಣ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಆಗಲೇ ರಾಯ್ ಮೃತಪಟ್ಟಿದ್ದಾಗಿ ವೈದ್ಯರು ಹೇಳಿದರು. ರಾಯ್ ತಲೆ ಹಾಗೂ ಎಡಭಾಗದಲ್ಲಿ ಎದೆಗೆ ಗುಂಡೇಟಿನ ಗಾಯಗಳಾಗಿದ್ದವು ಎಂದು ಪೊಲೀಸರು ಹೇಳಿದ್ದಾರೆ. ಲೈಸನ್ಸ್ ಹೊಂದಿದ್ದ ಪಿಸ್ತೂಲು ವಶಪಡಿಸಿಕೊಂಡು ವಿಧಿವಿಜ್ಞಾನ ಹಾಗೂ ಸಿಡಿತ ವಿಶ್ಲೇಷಣೆಗಾಗಿ ಕಳುಹಿಸಲಾಗಿದೆ.
Maharashtraದ ಪ್ರಥಮ ಮಹಿಳಾ ಡಿಸಿಎಂಗೆ ಮೂರು ಖಾತೆಗಳ ಹೊಣೆ
ಮುಂಬೈ: ಮಹಾರಾಷ್ಟ್ರದ ಉಪಮುಖ್ಯಮಂತ್ರಿಯಾಗಿದ್ದ ಅಜಿತ್ ಪವಾರ್ ವಿಮಾನ ದುರಂತದಲ್ಲಿ ಮಡಿದ ಮೂರೇ ದಿನಗಳಲ್ಲಿ ಪತ್ನಿ ಸುನೇತ್ರಾ ಪವಾರ್, ರಾಜ್ಯದ ಪ್ರಥಮ ಮಹಿಳಾ ಉಪಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಹೊಸದಾಗಿ ಸಂಪುಟ ಸೇರಿರುವ ಸುನೇತ್ರಾ ಅವರಿಗೆ ಅಬಕಾರ ಸುಂಕ, ಕ್ರೀಡೆ ಮತ್ತು ಯುವಜನ ವ್ಯವಹಾರ ಹಾಗೂ ಅಲ್ಪಸಂಖ್ಯಾತರ ಅಭಿವೃದ್ಧಿ ಖಾತೆಗಳನ್ನು ವಹಿಸಲಾಗಿದೆ. ಹಣಕಾಸು ಹಾಗೂ ಯೋಜನಾ ಖಾತೆಗಳನ್ನು ಅವರ ಪತಿ ಹೊಂದಿದ್ದರು. ಈ ಎರಡು ಖಾತೆಗಳನ್ನು ಇನ್ನು ಮುಂದೆ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ನಿಭಾಯಿಸಲಿದ್ದಾರೆ. ಇದಕ್ಕೂ ಮುನ್ನ 62 ವರ್ಷ ವಯಸ್ಸಿನ ಸುನೇತ್ರಾ ಪವಾರ್, ಎನ್ಸಿಪಿ ಶಾಸಕಾಂಗ ಪಕ್ಷದ ನಾಯಕಿಯಾಗಿ ಅವಿರೋಧ ಆಯ್ಕೆಯಾಗಿದ್ದರು. ಪಕ್ಷದ ಮುಖಂಡ ಛಗನ್ ಭುಜಬಲ್, ಸುನೇತ್ರಾ ಹೆಸರು ಮಂಡಿಸಿದ್ದು, ದಿಲೀಪ್ ಪಾಟೀಲ್ ಹಾಗೂ ಇತರ ಹಲವು ಶಾಸಕರು ಅನುಮೋದಿಸಿದರು. ಈ ನಿರ್ಧಾರದ ಮಾಹಿತಿಪತ್ರವನ್ನು ಮುಖ್ಯಮಂತ್ರಿಗೆ ಕಳುಹಿಸಲಾಗಿದ್ದು, ತಕ್ಷಣವೇ ಸಿಎಂ ಕಚೇರಿ ಅದನ್ನು ರಾಜ್ಯಪಾಲ ಆಚಾರ್ಯ ದೇವವ್ರತ ಅವರಿಗೆ ಕಳುಹಿಸಿತ್ತು. ಸುನೇತ್ರಾ ಪ್ರಮಾಣವಚನ ಸ್ವೀಕರಿಸಿದ ತಕ್ಷಣವೇ ಪ್ರಧಾನಿ ನರೇಂದ್ರ ಮೋದಿ ಶುಭ ಹಾರೈಸಿದ್ದಾರೆ. ಶಾಸಕ ರೋಹಿತ್ ಪವಾರ್ ಈ ಬಗ್ಗೆ ಎಕ್ಸ್ ಪೋಸ್ಟ್ ನಲ್ಲಿ, ಅಜಿತ್ ದಾದಾ ಸ್ಥಾನವನ್ನು ಯಾರೂ ತುಂಬಲು ಸಾಧ್ಯವಿಲ್ಲ; ಆದರೆ ಕೊನೆಪಕ್ಷ ಸುನೇತ್ರಾ ಅವರ ಮೂಲಕ ಅಜಿತ್ ದಾದಾ ಅವರನ್ನು ಸ್ವಲ್ಪಮಟ್ಟಿಗೆ ಕಾಣಬಹುದು ಎಂದು ತಿಳಿಸಿದ್ದಾರೆ.
ಇಂದು ಕೇಂದ್ರ ಬಜೆಟ್: ತೆರಿಗೆ ವಿನಾಯ್ತಿ ನಿರೀಕ್ಷೆಯಲ್ಲಿ ಉದ್ಯೋಗ ವಲಯ, ಮಧ್ಯಮವರ್ಗ
ಹೊಸದಿಲ್ಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇತ್ತೀಚಿನ ವರ್ಷಗಳ ಇತಿಹಾಸದಲ್ಲೇ ಮೊದಲ ಬಾರಿಗೆ ರವಿವಾರ ಕೇಂದ್ರ ಬಜೆಟ್ ಮಂಡಿಸುತ್ತಿದ್ದಾರೆ. ಕೇಂದ್ರ ಬಜೆಟ್ ಮೇಲೆ ಭಾರಿ ನಿರೀಕ್ಷೆ ಇರಿಸಿಕೊಂಡಿರುವ ಉದ್ಯೋಗ ವಲಯ, ಮಧ್ಯಮ ವರ್ಗದ ತೆರಿಗೆ ಪಾವತಿದಾರರು ಹೊಸ ಹಣಕಾಸು ವರ್ಷದಲ್ಲಿ ತೆರಿಗೆ ವಿನಾಯ್ತಿಯ ನಿರೀಕ್ಷೆಯಲ್ಲಿದ್ದಾರೆ. ಬೆಳಿಗ್ಗೆ 11 ಗಂಟೆಗೆ ಬಜೆಟ್ ಮಂಡನೆಯಾಗಲಿದೆ. ನಿರ್ಮಲಾ ಸೀತಾರಾಮನ್ ಅವರು ತೆರಿಗೆ ದರ, ಹೊಸ ಸ್ತರಗಳು, ಸ್ಟ್ಯಾಂಡರ್ಡ್ ಡಿಡಕ್ಷನ್ ಮಿತಿ ಹೆಚ್ಚಿಸುತ್ತಾರೆಯೇ ಎಂಬ ಕುತೂಹಲ ಮಧ್ಯಮ ವರ್ಗದ ತೆರಿಗೆ ಪಾವತಿದಾರರಲ್ಲಿ ವ್ಯಾಪಕವಾಗಿ ಇದೆ. ಹೊಸ ಹಾಗೂ ಹಳೆಯ ಆದಾಯ ತೆರಿಗೆ ವ್ಯವಸ್ಥೆಯ ಭವಿಷ್ಯದ ಬಗೆಗೂ ಕುತೂಹಲವಿದ್ದು, ಹೊಸ ತೆರಿಗೆ ವ್ಯವಸ್ಥೆ ಈ ಬಾರಿ ಮತ್ತಷ್ಟು ಆಕರ್ಷಕವಾಗಿರುತ್ತದೆಯೇ ಎನ್ನುವುದನ್ನು ಎಲ್ಲರೂ ಎದುರು ನೋಡುತ್ತಿದ್ದಾರೆ. ಹೊಸ ತೆರಿಗೆ ವ್ಯವಸ್ಥೆಯಡಿ ಕಡಿಮೆ ಆದಾಯ ತೆರಿಗೆ ದರಗಳು ಹಾಗೂ ಹೆಚ್ಚು ತಾರ್ಕಿಕ ತೆರಿಗೆ ಸ್ತರಗಳಿದ್ದು, ಸ್ಟ್ಯಾಂಡರ್ಡ್ ಡಿಡಕ್ಷನ್ ಮಿತಿಯೂ ಅಧಿಕ. ಆದಾಗ್ಯೂ ಇದರಲ್ಲಿ ಕಡಿತ ಹಾಗೂ ವಿನಾಯ್ತಿಗಳು ಅತ್ಯಲ್ಪ. ಇದಕ್ಕೆ ಹೋಲಿಸಿದರೆ ಹಳೆ ತೆರಿಗೆ ವ್ಯವಸ್ಥೆಯಲ್ಲಿ ಕಡಿಮೆ ಆದಾಯದವರಿಗೆ ತೆರಿಗೆ ದರಗಳು ಅಧಿಕವಿದ್ದು, 10 ಲಕ್ಷ ರೂಪಾಯಿ ಆದಾಯ ವರ್ಗಕ್ಕೆ ಶೇಕಡ 30ರಷ್ಟು ತೆರಿಗೆ ಇದೆ. ಹೊಸ ವ್ಯವಸ್ಥೆಯಡಿ ಈ ಮೊತ್ತಕ್ಕೆ ತೆರಿಗೆ ವಿನಾಯ್ತಿ ಇದೆ. ಆದರೆ ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80ಸಿ, 80ಡಿ, 80ಟಿಟಿಎ ಅಡಿಯಲ್ಲಿ ವಿವಿಧ ಕಡಿತಗಳು, ಗೃಹಸಾಲದ ಬಡ್ಡಿಯ ಪ್ರಯೋಜನಗಳು ಲಭ್ಯ. 2026ರ ಬಜೆಟ್ ಬಳಿಕ ಆದಾಯ ತೆರಿಗೆಯ ಭವಿಷ್ಯವೇನು ಎನ್ನುವುದನ್ನು ಕುತೂಹಲದಿಂದ ಮಧ್ಯಮ ವರ್ಗ ಕಾಯುತ್ತಿದೆ. ಅಭಿವೃದ್ಧಿಶೀಲ ಆರ್ಥಿಕತೆಗೆ ಪ್ರಬಲ ಉಳಿತಾಯ ಸಂಸ್ಕೃತ ಅನಿವಾರ್ಯವಾಗಿದ್ದು, ಈ ಹಿನ್ನೆಲೆಯಲ್ಲಿ ಹೊಸ ತೆರಿಗೆ ವ್ಯವಸ್ಥೆ ತೆರಿಗೆಯನ್ನು ಸರಳೀಕರಿಸಲು ಮುಂದಾಗಿದೆ ಎಂದು ತಿಳಿದುಬಂದಿದೆ. ಧೀರ್ಘಾವಧಿ ಉಳಿತಾಯ ಯೋಜನೆಗಳಾದ ಇಪಿಎಫ್, ಎನ್ಪಿಎಸ್, ಪಿಪಿಫ್ಗಳಂಥ ಧೀರ್ಘಾವಧಿ ಯೋಜನೆಗಳಿಗೆ ಉತ್ತೇಜನ ನೀಡಲಾಗುತ್ತಿದೆ ಎಂದು ತಿಳಿದುಂದಿದೆ.
Union Budget 2026: ವಿತ್ತ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು (ಫೆಬ್ರವರಿ 1) ಕೇಂದ್ರ ಬಜೆಟ್ 2026 ಅನ್ನು ಸಂಸತ್ತಿನಲ್ಲಿ ಮಂಡನೆ ಮಾಡಲಿದ್ದಾರೆ. ಈ ಬಜೆಟ್ನಲ್ಲಿ ಕರ್ನಾಟಕ ರಾಜ್ಯ ಸರ್ಕಾರ ಇಟ್ಟಿರುವ ಪ್ರಮುಖ ಬೇಡಿಕೆಗಳೇನು ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ. ಈ ಬಜೆಟ್ನಲ್ಲಿ ಆರ್ಥಿಕ ವೃದ್ಧಿಗೆ ವೇಗ ನೀಡುವುದು, ಉದ್ಯೋಗ ಸೃಷ್ಟಿ, ಮಧ್ಯಮ
ರಾಯಚೂರು ಉತ್ಸವದ ಅಂಗವಾಗಿ ಹೆಲಿಕಾಪ್ಟರ್ನಲ್ಲಿ ಹಾರಾಟ ನಡೆಸಲು ಜನ ಉತ್ಸುಕರಾಗಿದ್ದಾರೆ. ಆನ್ಲೈನ್ ನೋಂದಣಿಗೆ ಚಾಲನೆ ದೊರೆತಿದ್ದು, 125ಕ್ಕೂ ಹೆಚ್ಚು ಜನರು ಈಗಾಗಲೇ ಹಣ ಪಾವತಿಸಿ ಬುಕಿಂಗ್ ಮಾಡಿಕೊಂಡಿದ್ದಾರೆ. ಭರ್ಜರಿ ಪ್ರತಿಕ್ರಿಯೆ ಹಿನ್ನೆಲೆ, ಜಿಲ್ಲಾಡಳಿತ ಹೆಲಿಕಾಪ್ಟರ್ ಹಾರಾಟದ ದಿನವನ್ನು ವಿಸ್ತರಿಸುವ ಬಗ್ಗೆ ಚಿಂತನೆ ನಡೆಸಿದೆ.
ಬಗೆಹರಿಯದ ಬಿಡಿಎ ಲೇಔಟ್ ನೋಂದಣಿ ಗೊಂದಲ: ವಿನಾಯಿತಿ ನೀಡುವಂತೆ ಕೆ-ರೇರಾಗೆ ವಸತಿ ಇಲಾಖೆ ಸೂಚನೆ
ಬಿಡಿಎ ವಸತಿ ಯೋಜನೆಗಳನ್ನು ಕೆ-ರೇರಾದಲ್ಲಿ ನೋಂದಣಿ ಮಾಡಿಸುವುದು ಕಡ್ಡಾಯವಾಗಿದೆ. ಕೆ-ರೇರಾ ಆದೇಶ ನೀಡಿದ್ದರೂ ಬಿಡಿಎ ಅದನ್ನು ಪಾಲಿಸುತ್ತಿಲ್ಲ. ಕರ್ನಾಟಕ ಹೋಮ್ ಬೈಯರ್ಸ್ ಫೋರಂ ದೂರು ನೀಡಿದೆ. ವಸತಿ ಇಲಾಖೆ ಕೆ-ರೇರಾಗೆ ಸ್ಪಷ್ಟನೆ ನೀಡಲು ಸೂಚನೆ ನೀಡಿದೆ. ಬಿಡಿಎ ಕೂಡ ಪ್ರಮೋಟರ್ ಆಗಿ ಪರಿಗಣಿಸಲ್ಪಡುತ್ತದೆ. ರೇರಾ ನಿಯಮಗಳು ಬಿಡಿಎ ಕಾಯಿದೆಗಿಂತ ಮೇಲುಗೈ ಸಾಧಿಸುತ್ತವೆ.
ಫಿಲ್ಮ್ ಚೇಂಬರ್ ಅಧ್ಯಕ್ಷೆಯಾಗಿ ಜಯಮಾಲಾ ಆಯ್ಕೆ
ಬೆಂಗಳೂರು: ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಇಂದು ಚುನಾವಣೆ ನಡೆದಿದ್ದು, ನಟಿ ಜಯಮಾಲ ಗೆಲುವು ಸಾಧಿಸಿದ್ದಾರೆ. ಗುರುರಾಜ ಕಲ್ಯಾಣ ಮಂಟಪದಲ್ಲಿ ಈ ಚುನಾವಣೆ ನಡೆಯಿತು. ಈ ಭಾರಿಯ ಫಿಲ್ಮ್ ಚೇಂಬರ್ ಅಧ್ಯಕ್ಷ ಸ್ಥಾನಕ್ಕೆ ಹಿರಿಯ ನಟಿ ಜಯಮಾಲಾ ಹಾಗೂ ಫಿಲ್ಮ್ ಚೇಂಬರ್ ಮಾಜಿ ಅಧ್ಯಕ್ಷ ಭಾ.ಮಾ. ಹರೀಶ್ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿತ್ತು. ಅಂತಿಮವಾಗಿ 512 ಮತ ಪಡೆದು ಜಯಮಾಲಾ ಜಯಗಳಿಸಿದ್ದಾರೆ.
ಸ್ವಾವಲಂಬಿ ಭಾರತದ ನಿರ್ಮಾಣಕ್ಕೆ ಶಿಕ್ಷಣವೇ ಶಕ್ತಿ : ಥಾವರ್ ಚಂದ್ ಗೆಹ್ಲೋಟ್
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ 21ನೇ ಘಟಿಕೋತ್ಸವ
ಬಳ್ಳಾರಿ | ಭ್ರಾತೃತ್ವವಿಲ್ಲದೆ ಪ್ರಜಾಸತ್ತಾತ್ಮಕ ಭಾರತ ಉಳಿಯದು : ಎಚ್.ಮೋಹನ್ ಕುಮಾರ್
ಬಳ್ಳಾರಿ : ಭಾರತೀಯರಲ್ಲಿ ಪರಸ್ಪರ ಭ್ರಾತೃತ್ವದ ಸಂಬಂಧ ಇಲ್ಲದಿದ್ದರೆ ದೇಶವು ಪ್ರಜಾಸತ್ತಾತ್ಮಕವಾಗಿ ಉಳಿಯುವುದಿಲ್ಲ ಎಂಬುದು ಬಾಬಾಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರ ಸ್ಪಷ್ಟ ನಿಲುವಾಗಿತ್ತು ಎಂದು ಹೈಕೋರ್ಟ್ ವಕೀಲ ಎಚ್.ಮೋಹನ್ ಕುಮಾರ್ ಹೇಳಿದರು. ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಡಾ.ಬಿ.ಆರ್. ಅಂಬೇಡ್ಕರ್ ಸಭಾಂಗಣದಲ್ಲಿ, ವಿಶ್ವವಿದ್ಯಾಲಯದ ಡಾ.ಬಿ.ಆರ್.ಅಂಬೇಡ್ಕರ್ ತರಬೇತಿ, ಸಂಶೋಧನೆ ಮತ್ತು ವಿಸ್ತರಣಾ ಕೇಂದ್ರ ಹಾಗೂ ಮೈಸೂರು ಸಮಾಜ ಕಾರ್ಯಕರ್ತರ ಕ್ರಿಯಾ ಸಂಶೋಧನೆ ಸಂಸ್ಥೆ ಸಹಯೋಗದಲ್ಲಿ ಶುಕ್ರವಾರ ಆಯೋಜಿಸಿದ್ದ ‘ಅಂಬೇಡ್ಕರ್ ಅವರ ಬರಹಗಳು ಮತ್ತು ಭಾಷಣಗಳ ಮೂಲಕ ಭಾರತೀಯರನ್ನು ಅರ್ಥಮಾಡಿಕೊಳ್ಳುವಿಕೆ’ ಎಂಬ ವಿಷಯದ ಕುರಿತ ಮೂರು ದಿನಗಳ ಕಾರ್ಯಾಗಾರವನ್ನು ಅಂಬೇಡ್ಕರ್ ಹಾಗೂ ಬುದ್ಧರ ಭಾವಚಿತ್ರಗಳಿಗೆ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು. ಕೇಂದ್ರ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಡಾ. ಶ್ರೀನಿವಾಸ ಡಿ. ಮನಗಳ್ಳಿ ಮಾತನಾಡಿದರು. ಕಾರ್ಯಕ್ರಮದ ಸಂಯೋಜಕರಾಗಿಯೂ ಹಾಗೂ ಡಾ.ಬಿ.ಆರ್. ಅಂಬೇಡ್ಕರ್ ತರಬೇತಿ, ಸಂಶೋಧನೆ ಮತ್ತು ವಿಸ್ತರಣಾ ಕೇಂದ್ರದ ನಿರ್ದೇಶಕರಾಗಿಯೂ ಇರುವ ಪ್ರೊ. ಗೌರಿ ಮಾಣಿಕ್ ಮಾನಸ ಅವರು ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಲಂಡನ್ನ ಸಾಮಾಜಿಕ ಹಾಗೂ ಸಾಂಸ್ಕೃತಿಕ ಮನೋವಿಜ್ಞಾನ ಚಿಂತಕಿ ಚಾರುಮತಿ ಎಂ. ವೇದಿಕೆಯಲ್ಲಿದ್ದರು. ಎಸ್ಸಿ–ಎಸ್ಟಿ ಕೋಶದ ನಿರ್ದೇಶಕ ಡಾ.ಕುಮಾರ ಪ್ರಾಸ್ತಾವಿಕವಾಗಿ ಮಾತನಾಡಿ ಅತಿಥಿಗಳನ್ನು ಸ್ವಾಗತಿಸಿದರು. ಅನಿಲ್ ವಂದಿಸಿದರು. ವಿಶ್ವವಿದ್ಯಾಲಯದ ವಿವಿಧ ನಿಕಾಯಗಳ ಡೀನರು, ವಿಭಾಗದ ಮುಖ್ಯಸ್ಥರು, ಬೋಧಕ–ಬೋಧಕೇತರ ಸಿಬ್ಬಂದಿ ಹಾಗೂ ಸಂಶೋಧನಾ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ತುಮಕೂರು ಪಿಎಸ್ಐ ಲೋಕಾಯುಕ್ತ ಬಲೆಗೆ
ತುಮಕೂರು : ಠಾಣೆಯ ವಶದಲ್ಲಿದ್ದ ವಾಹನವನ್ನು ಬಿಡುಗಡೆ ಮಾಡಲು ಲಂಚ ಪಡೆದ ಆರೋಪದ ಮೇಲೆ ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆಯ ಪಿಎಸ್ಐ ಚೇತನ್ ಅವರನ್ನು ಲೋಕಾಯುಕ್ತ ಪೊಲೀಸರು ಶನಿವಾರ ಬೆಳಗಿನ ಜಾವ ಬಂಧಿಸಿದ್ದಾರೆ. ವಾಹನ ಬಿಡುಗಡೆಗೆ ಒಟ್ಟು 1 ಲಕ್ಷ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದ ಪಿಎಸ್ಐ ಚೇತನ್, ಮೊದಲ ಹಂತವಾಗಿ 40 ಸಾವಿರ ರೂ. ಪಡೆಯಲು ಸೂಚಿಸಿದ್ದರೆಂದು ಆರೋಪಿಸಲಾಗಿದೆ. ಈ ಹಣವನ್ನು ನೇರವಾಗಿ ತಮ್ಮ ಕೈಗೆ ನೀಡುವ ಬದಲು, ಕ್ಯಾತ್ಸಂದ್ರ ಸಮೀಪದ ಹೋಟೆಲ್ನ ಸಿಬ್ಬಂದಿಯೊಬ್ಬರಿಗೆ ನೀಡುವಂತೆ ವಾಹನ ಮಾಲಕರಿಗೆ ಸೂಚನೆ ನೀಡಿದ್ದರು ಎನ್ನಲಾಗಿದೆ. ಪಿಎಸ್ಐ ಚೇತನ್ ಅವರ ಲಂಚದ ಬೇಡಿಕೆಯಿಂದ ಬೇಸತ್ತ ವಾಹನ ಮಾಲಕರು ಈ ಕುರಿತು ಲೋಕಾಯುಕ್ತ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದರು. ದೂರಿನ ಪರಿಶೀಲನೆ ಬಳಿಕ ಲೋಕಾಯುಕ್ತ ಅಧಿಕಾರಿಗಳು ಯೋಜಿತ ಕಾರ್ಯಾಚರಣೆ ರೂಪಿಸಿದ್ದರು. ಶುಕ್ರವಾರ ರಾತ್ರಿ ಕ್ಯಾತ್ಸಂದ್ರದ ಹೋಟೆಲ್ನಲ್ಲಿ ಹೋಟೆಲ್ ಸಿಬ್ಬಂದಿ ಲಂಚದ ಹಣ ಪಡೆಯುವ ವೇಳೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ, ಸಿಬ್ಬಂದಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ನಂತರ ನಡೆಸಿದ ವಿಚಾರಣೆಯಲ್ಲಿ, ಹಣ ಪಿಎಸ್ಐ ಚೇತನ್ ಸೂಚನೆಯ ಮೇರೆಗೆ ಪಡೆಯಲಾಗುತ್ತಿತ್ತು ಎಂಬುದು ಬೆಳಕಿಗೆ ಬಂದಿದೆ. ಈ ಮಾಹಿತಿಯ ಆಧಾರದ ಮೇಲೆ ಶನಿವಾರ ಬೆಳಗಿನ ಜಾವ ಲೋಕಾಯುಕ್ತ ಪೊಲೀಸರು ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆಯ ಪಿಎಸ್ಐ ಚೇತನ್ ಅವರನ್ನು ಬಂಧಿಸಿದ್ದಾರೆ. ಬಂಧನದ ಬಳಿಕ ಮುಂದಿನ ವಿಚಾರಣೆಗಾಗಿ ಅವರನ್ನು ಲೋಕಾಯುಕ್ತ ಕಚೇರಿಗೆ ಕರೆದೊಯ್ಯಲಾಗಿದೆ.
ಮೈಸೂರಿನಲ್ಲಿ ಮಾದಕ ವಸ್ತು ಪ್ರಯೋಗಾಲಯ: ಖಚಿತಪಡಿಸಿದ ರಾಷ್ಟ್ರೀಯ ಮಾದಕ ವಸ್ತು ನಿಯಂತ್ರಣ ದಳ
ಮೈಸೂರು : ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಡ್ರಗ್ಸ್ ಪ್ರಯೋಗಾಲಯ ಇತ್ತು ಎಂಬುದನ್ನು ರಾಷ್ಟ್ರೀಯ ಮಾದಕ ವಸ್ತು ನಿಯಂತ್ರಣ ದಳ(ಎನ್ಸಿಬಿ) ಖಚಿತಪಡಿಸಿದೆ. ಮೈಸೂರಿನ ಹೆಬ್ಬಾಳ ಕೈಗಾರಿಕಾ ಪ್ರದೇಶದಲ್ಲಿ ಮಾದಕ ವಸ್ತುಗಳ ರಹಸ್ಯ ಉತ್ಪಾದನಾ ಪ್ರಯೋಗಾಲಯದ ಮೇಲೆ ದಾಳಿ ನಡೆಸಲಾಗಿತ್ತು ಎಂಬುದನ್ನು ಎನ್ಸಿಬಿ ಪ್ರಕಟಣೆ ಮೂಲಕ ತಿಳಿಸಿದೆ. ರಾಜಸ್ಥಾನದ ನಾಲ್ವರನ್ನು ಬಂಧಿಸಿ, 10 ಕೋಟಿ ರೂ. ಮೌಲ್ಯದ ಮಾದಕ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. 35 ಕೆ.ಜಿ ಮೆಫೆಡ್ರೋನ್(ಎಂಡಿ) ಇದ್ದ ಕರ್ನಾಟಕ ನೋಂದಣಿಯ ಫಾರ್ಚ್ಯುನರ್ ಕಾರನ್ನು ಅಧಿಕಾರಿಗಳು ಜನವರಿ 28ರಂದು ಗುಜರಾತ್ನಲ್ಲಿ ಪತ್ತೆಹಚ್ಚಿದ್ದರು. ಈ ಬಗ್ಗೆ ತನಿಖೆ ನಡೆಸಿದ ವೇಳೆ ಮೈಸೂರಿನಲ್ಲಿ ಅವರು ಪ್ರಯೋಗಾಲಯ ನಡೆಸುತ್ತಿರುವುದು ತನಿಖೆಯ ವೇಳೆ ಪತ್ತೆಯಾಗಿದೆ. ಈ ಮಾದಕ ವಸ್ತು ಸಾಗಣೆ ಜಾಲದ ಮಾಸ್ಟರ್ಮೈಂಡ್ ಎನ್ನಲಾದ ಮಹೀಂದ್ರ ಕುಮಾರ್ ವಿಷ್ಣೋಯಿ ಮತ್ತು ಇತರ ಮೂವರನ್ನು ಬಂಧಿಸಲಾಗಿದೆ. ಮೈಸೂರಿನಲ್ಲಿ ಗಜಪತ್ಲಾಲ್ ಎಂಬಾತನನ್ನು ಬಂಧಿಸಲಾಗಿದೆ. ’ಸ್ವಚ್ಛತೆಗೆ ಬಳಸುವ ರಾಸಾಯನಿಕ ವಸ್ತುಗಳ ತಯಾರಿಕಾ ಘಟಕದ ಹೆಸರಿನಲ್ಲಿ ಆರೋಪಿಗಳು 2024ರಲ್ಲಿ ಪ್ರಯೋಗಾಲಯವನ್ನು ನಿರ್ಮಿಸಿದ್ದರು. ಆರೋಪಿಗಳಲ್ಲಿ ಒಬ್ಬರಾದ ವಿಷ್ಣೋಯಿ ಸಂಬಂಧಿಯು ಕಟ್ಟಡವನ್ನು ಬಾಡಿಗೆಗೆ ನೀಡಿದ್ದರು’ ಎಂದು ಎನ್ಸಿಬಿ ಪ್ರಕಟಣೆ ತಿಳಿಸಿದೆ. 10 ಕೋಟಿ ರೂ. ಮೌಲ್ಯದ ಮಾದಕವಸ್ತು, 25.06 ಲಕ್ಷ ನಗದು, ಒಂದು ಎಸ್ಯುವಿ ಮತ್ತು 500 ಕೆ.ಜಿ ರಾಸಾಯನಿಕ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. ಹಲವು ಪ್ರಕರಣಗಳಲ್ಲಿ ಅಪರಾಧಿಯಾಗಿರುವ ವಿಷ್ಣೋಯಿ, ರಹಸ್ಯ ಪ್ರಯೋಗಾಲಯಗಳಲ್ಲಿ ಮಾದಕ ವಸ್ತುಗಳನ್ನು ತಯಾರಿಸುವ ಯೋಜನೆಯನ್ನು ಜೈಲಿನಲ್ಲಿ ಇದ್ದಾಗ ರೂಪಿಸಿದ್ದ. ಆತನ ವಿರುದ್ಧ ರಾಜಸ್ಥಾನದಲ್ಲಿ ಮೂರು ಮತ್ತು ಗುಜರಾತ್ ಒಂದು ಪ್ರಕರಣ ದಾಖಲಾಗಿದೆ ಎಂದು ಎನ್ಸಿಬಿ ತಿಳಿಸಿದೆ.
ಕನಕಗಿರಿ | ಹುಲ್ಲಿನ ಬಣವೆಗಳು ಬೆಂಕಿಗಾಹುತಿ
ಕನಕಗಿರಿ, ಜ. 31: ತಾಲೂಕಿನ ಹೀರಖೇಡಾ ಗ್ರಾಪಂ ವ್ಯಾಪ್ತಿಯ ನೀರಲೂಟಿ ಗ್ರಾಮದ ರೈತ ಸಣ್ಣ ಹನುಮಂತ ಎಂಬವರ ಹೊಲದಲ್ಲಿದ್ದ ಹುಲ್ಲಿನ ಬಣವೆಗಳು ಬೆಂಕಿಗಾಹುತಿಯಾದ ಘಟನೆ ಶನಿವಾರ ಸಂಭವಿಸಿದೆ. ಒಟ್ಟು ನಾಲ್ಕು ಟ್ರ್ಯಾಕ್ಟರ್ನಷ್ಟು ಭತ್ತದ ಹುಲ್ಲು ಸುಟ್ಟು ಹೋಗಿದ್ದು, ಅಂದಾಜು ಒಂದು ಲಕ್ಷ ರೂಪಾಯಿ ಮೊತ್ತದಷ್ಟು ಹುಲ್ಲು ನಷ್ಟವಾಗಿದೆ ಎಂದು ರೈತ ಸಣ್ಣ ಹನುಮಂತ ತಿಳಿಸಿದ್ದಾರೆ. ಘಟನಾ ಸ್ಥಳಕ್ಕೆ ಗಂಗಾವತಿ ಅಗ್ನಿಶಾಮಕ ಠಾಣಾಧಿಕಾರಿ ಎಲ್.ಆರ್.ಪೂಜಾರಿ ಹಾಗೂ ಸಿಬ್ಬಂದಿ ತೆರಳಿ ಬೆಂಕಿಯನ್ನು ನಂದಿಸಿದ್ದಾರೆ. ತಹಶೀಲ್ದಾರ್ ವಿಶ್ವನಾಥ ಮುರುಡಿ, ಕಂದಾಯ ನಿರೀಕ್ಷಕ ಮಂಜುನಾಥ, ಗ್ರಾಮ ಆಡಳಿತ ಅಧಿಕಾರಿ ಶಿವರಾಜ ಬೋವಿ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದ್ದಾರೆ.
ಕೊಪ್ಪಳ | ಕ್ವಿಟ್ ಬಲ್ಡೋಟಾ ಪೂರ್ವಭಾವಿ ಸಭೆ
ಫೆ.7ರಂದು 100 ದಿನಗಳನ್ನು ಪೂರೈಸಲಿರುವ ಪ್ರತಿಭಟನೆ
ಕಲಬುರಗಿ | ಡಾ.ಮುದ್ನಾರ್ ದತ್ತಾ ಅವರಿಗೆ ‘ವಿಶ್ವ ಹಿಂದಿ ಸೇತು ಸಮ್ಮಾನ್’ ಪ್ರಶಸ್ತಿ
ಕಲಬುರಗಿ : ಕಲಬುರಗಿಯ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾನಿಲಯದ ಹಿಂದಿ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ. ಮುದ್ನಾರ್ ದತ್ತಾ ಅವರಿಗೆ ಹಿಂದಿ ಭಾಷೆಯ ಜಾಗತಿಕ ಪ್ರಚಾರಕ್ಕೆ ನೀಡಿದ ಮಹತ್ವದ ಕೊಡುಗೆಗಾಗಿ ಪ್ರತಿಷ್ಠಿತ ‘ವಿಶ್ವ ಹಿಂದಿ ಸೇತು ಸಮ್ಮಾನ್’ ಪ್ರಶಸ್ತಿಯನ್ನು ಪ್ರದಾನ ಮಾಡಲಾಗಿದೆ. ಮಾರಿಷಸ್ನ ಹಿಂದಿ ಪ್ರಚಾರಿಣಿ ಸಭಾ ಈ ಗೌರವವನ್ನು ನೀಡಿದ್ದು, ಜ.12ರಂದು ಮಾರಿಷಸ್ನಲ್ಲಿ ನಡೆದ ‘ಹಿಂದಿ ಭಾಷೆಯಲ್ಲಿನ ಆವಿಷ್ಕಾರಗಳು’ ಅಂತರರಾಷ್ಟ್ರೀಯ ಸಮ್ಮೇಳನದ ಸಂದರ್ಭದಲ್ಲಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಿತು. ಈ ಸಮ್ಮೇಳನದಲ್ಲಿ ವಿವಿಧ ದೇಶಗಳ ವಿದ್ವಾಂಸರು, ಶಿಕ್ಷಣ ತಜ್ಞರು ಹಾಗೂ ಹಿಂದಿ ಭಾಷಾ ಅಭಿಮಾನಿಗಳು ಭಾಗವಹಿಸಿದ್ದರು. ಈ ಹಿಂದೆ, ಜ.9–10ರಂದು ವಿಶ್ವ ಹಿಂದಿ ಸಚಿವಾಲಯದ ಆಶ್ರಯದಲ್ಲಿ ನಡೆದ ಎರಡು ದಿನಗಳ ಅಂತರರಾಷ್ಟ್ರೀಯ ಸಮ್ಮೇಳನದಲ್ಲಿ ಡಾ. ಮುದ್ನಾರ್ ದತ್ತಾ ಅವರು “ಹಿಂದಿ ಬೋಧನೆಯಲ್ಲಿನ ಆವಿಷ್ಕಾರಗಳು” ಎಂಬ ವಿಷಯದ ಮೇಲೆ ಸಂಶೋಧನಾ ಪ್ರಬಂಧ ಮಂಡಿಸಿದ್ದರು. ಇದಲ್ಲದೆ, ಜ.12ರಂದು ಹಿಂದಿ ಪ್ರಚಾರಿಣಿ ಸಭಾ ಆಯೋಜಿಸಿದ್ದ ಒಂದು ದಿನದ ಅಂತರರಾಷ್ಟ್ರೀಯ ಹಿಂದಿ ಸಮ್ಮೇಳನದಲ್ಲಿ ಅವರು “ಹಿಂದಿ ಪ್ರಚಾರದಲ್ಲಿ ಸಾಮಾಜಿಕ ಮಾಧ್ಯಮಗಳ ಪಾತ್ರ” ಕುರಿತು ಮತ್ತೊಂದು ಪ್ರಬಂಧವನ್ನು ಮಂಡಿಸಿ ಗಮನ ಸೆಳೆದರು. ವಿಶ್ವ ಹಿಂದಿ ಸೆಕ್ರೆಟರಿಯೇಟ್ನ ಉದ್ಘಾಟನಾ ಅಧಿವೇಶನದಲ್ಲಿ ಮಾರಿಷಸ್ನ ಗೌರವಾನ್ವಿತ ಅಧ್ಯಕ್ಷ ಧರಮ್ಬೀರ್ ಗೋಖೂಲ್ ಅವರ ಉಪಸ್ಥಿತಿ ಕಾರ್ಯಕ್ರಮಕ್ಕೆ ವಿಶೇಷ ಗೌರವವನ್ನು ತಂದಿತು. ಈ ಸಂದರ್ಭದಲ್ಲಿ ಭಾರತೀಯ ಉಪ ಹೈಕಮಿಷನರ್ ಅಪರ್ಣಾ ಗಣೇಶನ್, ವಿಶ್ವ ಹಿಂದಿ ಸೆಕ್ರೆಟರಿಯೇಟ್ನ ಪ್ರಧಾನ ಕಾರ್ಯದರ್ಶಿ ಡಾ. ಮಾಧುರಿ ರಾಮಧಾರಿ, ಥೈಲ್ಯಾಂಡ್ನ ಸಿಲ್ಪಕರ್ಣ್ ವಿಶ್ವವಿದ್ಯಾಲಯದ ಖ್ಯಾತ ವಿದ್ವಾಂಸ ಪ್ರೊ. ಪರಮತ್ ಖಾಮ್ ಏಕ್, ಹಾಗೂ ಉಪ ಪ್ರಧಾನ ಕಾರ್ಯದರ್ಶಿ ಪ್ರೊ. ಶುಭಂಕರ್ ಮಿಶ್ರಾ ಉಪಸ್ಥಿತರಿದ್ದರು. ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಮಾರಿಷಸ್ನ ಶಿಕ್ಷಣ ಸಚಿವ ಡಾ. ಮಹೇಂದ್ರ ಗುಂಗಪ್ರಸಾದ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಹಿಂದಿ ಪ್ರಚಾರಿಣಿ ಸಭೆಯ ಅಧ್ಯಕ್ಷ ಪ್ರೊ. ಶುಭಂಕರ್ ಮಿಶ್ರಾ, ದೆಹಲಿ ವಿಶ್ವವಿದ್ಯಾಲಯದ ರೋಹಿಣಿ ರಾಮರೂಪ್, ಪ್ರೊ. ಜ್ಞಾನದತ್ ಧನಕ್ಚಂದ್, ಪ್ರೊ. ಕುಸುಮ್ ಮಲಿಕ್ ಸೇರಿದಂತೆ ಅನೇಕ ಗಣ್ಯ ವಿದ್ವಾಂಸರು ಉಪಸ್ಥಿತರಿದ್ದರು.
ನಂಜನಗೂಡು : ಗ್ರಾಮದ ಫೋಕಸ್ ಲೈಟ್ ಮೇಲೆ ಬಸವೇಶ್ವರರ ಬಾವುಟ ಅಳವಡಿಸಿದ ಹಿನ್ನಲೆ ಉಂಟಾದ ವಿವಾದ ಜಾತ್ರೆ ಸಂಭ್ರಮವನ್ನು ಮೊಟಕುಗೊಳಿಸಿದ ಘಟನೆ ನಂಜನಗೂಡು ತಾಲೂಕು ಹಗಿನವಾಳು ಗ್ರಾಮದಲ್ಲಿ ನಡೆದಿರುವುದು ವರದಿಯಾಗಿದೆ. ಬಾವುಟ ತೆಗೆಯುವ ವಿಚಾರದಲ್ಲಿ ಎರಡು ಸಮುದಾಯದ ನಡುವೆ ಉಂಟಾದ ಮಾತಿನ ಚಕಮಕಿ ಜಾತ್ರೆ ಸ್ಥಗಿತವಾಗುವಂತೆ ಮಾಡಿದೆ. ವಿಧ್ಯುಕ್ತ ಚಾಲನೆ ದೊರೆತು ಅದ್ದೂರಿಯಿಂದ ಆರಂಭವಾದ ರಥೋತ್ಸವ ರಸ್ತೆ ಮಧ್ಯದಲ್ಲೇ ಅನಾಥವಾಗಿ ನಿಂತಿದೆ. ಈ ಘಟನೆಯಿಂದ ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ನಂಜನಗೂಡು ತಾಲೂಕು ಹಗಿನವಾಳು ಗ್ರಾಮದ ಪಟ್ಟದ ಅಮ್ಮ ರಾಣಿ ದೇವತೆಯ ಜಾತ್ರಾ ಮಹೋತ್ಸವಕ್ಕೆ ಶನಿವಾರ ಚಾಲನೆ ದೊರೆಯಿತು. ಶನಿವಾರದಿಂದ ಮೂರು ದಿನಗಳ ಕಾಲ ನಡೆಯುವ ಜಾತ್ರಾ ಮಹೋತ್ಸವ ಕಣ್ತುಂಬಿಕೊಳ್ಳಲು ಸಾವಿರಾರು ಭಕ್ತರು ಆಗಮಿಸಿದ್ದರು. ದೇವಾಲಯದ ಸಮೀಪವಿರುವ ವೃತ್ತದ ಬಳಿ ಫೋಕಸ್ ಲೈಟ್ ಮೇಲೆ ಬಸವೇಶ್ವರರ ಭಾವಚಿತ್ರವಿರುವ ಬಾವುಟ ಅಳವಡಿಸಲಾಗಿತ್ತು. ಜಾತ್ರೆ ತೇರು ಇದೇ ವೃತ್ತದಿಂದ ಸಾಗಬೇಕಿತ್ತು. ಒಂದು ಸಮುದಾಯ ಬಾವುಟವನ್ನು ತೆರವುಗೊಳಿಸುವಂತೆ ಪಟ್ಟು ಹಿಡಿಯಿತು. ಮತ್ತೊಂದು ಸಮುದಾಯ ಬಾವುಟ ತೆರವುಗೊಳಿಸಲು ವಿರೋಧಿಸಿತು. ಸಧ್ಯ ಪೊಲೀಸರು ಸ್ಥಳಕ್ಕೆ ಬಂದು ಎರಡು ಸಮುದಾಯದ ಮುಖಂಡರ ಮನ ಒಲಿಕೆಗೆ ಯತ್ನಿಸಿದರಾದರೂ ಪಟ್ಟು ಸಡಿಲಿಸಲಿಲ್ಲ.ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ ಎಂದು ತಿಳಿದು ಬಂದಿದೆ.
ಯಾದಗಿರಿ : ಕರ್ನಾಟಕ ಸರ್ಕಾರದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ರಾಯಚೂರು ಜಿಲ್ಲೆಯ ತಿಂಥಣಿ ಬ್ರಿಡ್ಜ್ ಬಳಿ ಶ್ರೀ ಕಾಗಿನೆಲೆ ಮಹಾಸಂಸ್ಥಾನ ಕನಕ ಗುರುಪೀಠದ ವತಿಯಿಂದ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಭಾಗವಹಿಸಲಿರುವ ಹಿನ್ನೆಲೆಯಲ್ಲಿ, ಸಾರ್ವಜನಿಕರ ಸಂಚಾರಕ್ಕೆ ತಾತ್ಕಾಲಿಕ ಮಾರ್ಗ ಬದಲಾವಣೆ ಮಾಡಿ ಯಾದಗಿರಿ ಜಿಲ್ಲಾಧಿಕಾರಿ ಹರ್ಷಲ್ ಭೋಯರ್ ಅವರು ಆದೇಶ ಹೊರಡಿಸಿದ್ದಾರೆ. 2026ರ ಫೆಬ್ರವರಿ 1ರಂದು ಬೆಳಿಗ್ಗೆ 11 ರಿಂದ ಸಂಜೆ 4 ಗಂಟೆಯವರೆಗೆ ತಿಂಥಣಿ ಸೇತುವೆ ಮೂಲಕ ಸಂಚರಿಸುವ ಎಲ್ಲಾ ವಾಹನಗಳಿಗೆ ನಿರ್ಬಂಧ ವಿಧಿಸಲಾಗಿದ್ದು, ಅವುಗಳನ್ನು ಬದಲಿ ಮಾರ್ಗಗಳಿಂದ ಸಂಚರಿಸಲು ಸೂಚಿಸಲಾಗಿದೆ. ಬದಲಿ ಸಂಚಾರ ಮಾರ್ಗಗಳು : ತಿಂಥಣಿ ಬ್ರಿಡ್ಜ್ ಮೂಲಕ ಸಂಚರಿಸುವ ವಾಹನಗಳನ್ನು ದೇವಾಪೂರ ಕ್ರಾಸ್ – ಹುಣಸಗಿ – ಕೋಡೆಕಲ್ – ನಾರಾಯಣಪೂರ – ಲಿಂಗಸುಗೂರ ಮಾರ್ಗವಾಗಿ ಸಂಚರಿಸಲು ಸೂಚಿಸಲಾಗಿದೆ. ಲಿಂಗಸುಗೂರ ಕಡೆಯಿಂದ ಬರುವ ಸಾರ್ವಜನಿಕ ವಾಹನಗಳು ನಾರಾಯಣಪೂರ – ಕೋಡೆಕಲ್ – ಹುಣಸಗಿ – ದೇವಾಪೂರ ಕ್ರಾಸ್ ಮಾರ್ಗ ಬಳಸಬೇಕು. ಇದೇ ಅವಧಿಯಲ್ಲಿ ಶಾಂತಪೂರ ಕ್ರಾಸ್ನಿಂದ ತಿಂಥಣಿ ಬ್ರಿಡ್ಜ್ ವರೆಗೆ ರಸ್ತೆಯ ಎರಡು ಬದಿಗಳಲ್ಲಿಯೂ ಯಾವುದೇ ವಾಹನಗಳನ್ನು ನಿಲುಗಡೆ ಮಾಡದಂತೆ ತಾತ್ಕಾಲಿಕ ನಿಷೇಧ ವಿಧಿಸಲಾಗಿದೆ. ಸಾರ್ವಜನಿಕರಿಗೆ ಸುಗಮ ಸಂಚಾರ ವ್ಯವಸ್ಥೆ ಕಲ್ಪಿಸುವ ಉದ್ದೇಶದಿಂದ ಮೋಟಾರು ವಾಹನ ನಿಯಮಗಳು–1989ರಡಿ ಪ್ರದತ್ತ ಅಧಿಕಾರವನ್ನು ಬಳಸಿಕೊಂಡು ಈ ಆದೇಶವನ್ನು ಹೊರಡಿಸಲಾಗಿದೆ ಎಂದು ಜಿಲ್ಲಾಧಿಕಾರಿ ಹರ್ಷಲ್ ಭೋಯರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Ukraine Cold Wave: ಭೀಕರ ಚಳಿಯ ನಡುವೆ ಕೈಕೊಟ್ಟ ಕರೆಂಟ್, ನರಳಾಡುತ್ತಿರುವ ಕೋಟಿ ಕೋಟಿ ಉಕ್ರೇನ್ ಪ್ರಜೆಗಳು
ಉಕ್ರೇನ್ ನೆಲದಲ್ಲಿ ಒಂದಲ್ಲ ಒಂದು ಸಮಸ್ಯೆ ಹಾಗೂ ಕಿರಿಕ್ ಎದುರಾಗುತ್ತಲೇ ಇದೆ. ಹೀಗಿದ್ದಾಗ ರಷ್ಯಾ ಕೂಡ ದಾಳಿ ಮಾಡುವುದನ್ನು ನಿಲ್ಲಿಸುತ್ತಿಲ್ಲ, ಹೀಗಾಗಿ ರಷ್ಯಾ &ಉಕ್ರೇನ್ ಯುದ್ಧ ಈಗ ಘೋರ ಹಂತಕ್ಕೆ ಬಂದು ನಿಂತಿದೆ. ಇನ್ನೊಂದು ಕಡೆ ಭೀಕರ ಚಳಿ ಯುದ್ಧವನ್ನೂ ಮೀರಿಸುವ ಹಂತಕ್ಕೆ ಕಾಟ ಕೊಡುತ್ತಿದ್ದು, -20 ಡಿಗ್ರಿ ಸೆಲ್ಸಿಯಸ್ ವಾತಾವರಣದಲ್ಲಿ ಜನರು ಹೊರಗೆ ಬರಲು
ಯಾದಗಿರಿ | ದೇಶದಲ್ಲಿಯೇ ಕರ್ನಾಟಕದ ಶುಶ್ರೂಷಕರಿಗೆ ಹೆಚ್ಚಿನ ಬೇಡಿಕೆ: ಶ್ರೀಕಾಂತ ಪೂಲಾರಿ
ಯಾದಗಿರಿ : ಕೇರಳ ಸೇರಿದಂತೆ ಇತರ ರಾಜ್ಯಗಳ ನರ್ಸಿಂಗ್ ಸಿಬ್ಬಂದಿಗಳಿಗಿಂತ ಕರ್ನಾಟಕದ ನರ್ಸಿಂಗ್ ಪದವಿಧರರು ವೃತ್ತಿಯಲ್ಲಿ ಹೆಚ್ಚಿನ ನೈಪುಣ್ಯತೆ ಹೊಂದಿದ್ದಾರೆ. ಇದರಿಂದಾಗಿ ದೇಶ ಹಾಗೂ ವಿದೇಶಗಳಲ್ಲಿ ಅವರಿಗೆ ವಿಶೇಷ ಬೇಡಿಕೆ ಇದೆ ಎಂದು ವೈದ್ಯಕೀಯ ಶಿಕ್ಷಣ ಇಲಾಖೆ (ನರ್ಸಿಂಗ್ ಶಿಕ್ಷಣ) ಸಹಾಯಕ ನಿರ್ದೇಶಕ ಶ್ರೀಕಾಂತ ಪೂಲಾರಿ ತಿಳಿಸಿದ್ದಾರೆ. ನಗರದ ಸರ್ಕಾರಿ ಮೆಡಿಕಲ್ ಕಾಲೇಜಿನ ಸಭಾಂಗಣದಲ್ಲಿ ಯಾದಗಿರಿ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (ಯಿಮ್ಸ್) ಸರ್ಕಾರಿ ಶುಶ್ರೂಷಾ ಮಹಾವಿದ್ಯಾಲಯದ 2ನೇ ವರ್ಷದ ಬಿಎಸ್ಸಿ ನರ್ಸಿಂಗ್ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ದೀಪಧಾರೆ ಹಾಗೂ ಪ್ರತಿಜ್ಞಾ ವಿಧಿ ಸ್ವೀಕಾರ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಜಪಾನ್, ಇಟಲಿ, ದುಬೈ ಸೇರಿದಂತೆ ವಿಶ್ವದ ಅನೇಕ ರಾಷ್ಟ್ರಗಳಲ್ಲಿ ಕರ್ನಾಟಕದ ನರ್ಸಿಂಗ್ ಪದವಿಧರರಿಗೆ ಅಪಾರ ಉದ್ಯೋಗಾವಕಾಶಗಳಿದ್ದು, ವಿವಿಧ ದೇಶಗಳು ಸರ್ಕಾರದ ಮೂಲಕ ಅಧಿಕೃತ ಮನವಿ ಸಲ್ಲಿಸುತ್ತಿವೆ. ನರ್ಸಿಂಗ್ ಕೋರ್ಸ್ ಗ್ಯಾರಂಟಿ ಉದ್ಯೋಗ ನೀಡುವ ವೃತ್ತಿಪರ ಶಿಕ್ಷಣವಾಗಿದೆ ಎಂದು ಅವರು ಹೇಳಿದರು. ವಿದೇಶಗಳಲ್ಲಿ ಉದ್ಯೋಗ ಪಡೆಯಲು ಭಾಷಾ ಜ್ಞಾನ ಅತ್ಯಗತ್ಯವಾಗಿದ್ದು, ಈ ಹಿನ್ನೆಲೆಯಲ್ಲಿ ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ್ ಅವರ ಮಾರ್ಗದರ್ಶನದಲ್ಲಿ ವಿಶೇಷ ಹಣಕಾಸು ನೆರವಿನೊಂದಿಗೆ ಭಾಷಾ ತರಬೇತಿ ವ್ಯವಸ್ಥೆ ಮಾಡಲಾಗಿದೆ. ವಿದ್ಯಾರ್ಥಿಗಳು ಲಭ್ಯವಿರುವ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ರಾಜ್ಯದಲ್ಲಿ ಒಟ್ಟು 32 ಸರ್ಕಾರಿ ನರ್ಸಿಂಗ್ ಕಾಲೇಜುಗಳಿದ್ದು, ಪ್ರತಿವರ್ಷ ಸುಮಾರು 80 ಸಾವಿರ ವಿದ್ಯಾರ್ಥಿಗಳು ಪದವಿ ಪೂರ್ಣಗೊಳಿಸಿ ಸೇವೆಗೆ ಸೇರುತ್ತಿದ್ದಾರೆ. ಆದರೂ ನರ್ಸಿಂಗ್ ಕ್ಷೇತ್ರದಲ್ಲಿ ಇನ್ನೂ ಹೆಚ್ಚಿನ ಸಿಬ್ಬಂದಿಯ ಅಗತ್ಯವಿದೆ ಎಂದು ವಿವರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಮೆಡಿಕಲ್ ಕಾಲೇಜಿನ ಡೀನ್ ಡಾ. ಸಂದೀಪ್ ವಿ.ಎಚ್., ವೈದ್ಯರು ಚಿಕಿತ್ಸೆ ನೀಡಿದ ನಂತರ ರೋಗಿಯ ಆರೈಕೆ ಮತ್ತು ಗುಣಮುಖತೆಯಲ್ಲಿ ನರ್ಸಿಂಗ್ ಸಿಬ್ಬಂದಿಯ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದು ಹೇಳಿದರು. ಯಾವುದೇ ಸಂಕೋಚವಿಲ್ಲದೆ ಈ ವೃತ್ತಿಯನ್ನು ಆಯ್ಕೆ ಮಾಡಿಕೊಂಡು ಉತ್ತಮ ಸೇವೆ ಸಲ್ಲಿಸುವಂತೆ ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಕಾರ್ಯಕ್ರಮದಲ್ಲಿ ಡಿಎಸ್ ಡಾ. ರಿಜ್ವಾನ್ ಆಫ್ರಿನ್, ಡಾ. ಪಂಪಾಪತಿರೆಡ್ಡಿ ಕೊಲ್ಲೂರ್, ಹಣಕಾಸು ಅಧಿಕಾರಿ ಕಾಶಿನಾಥ ಅಲ್ಲೂರ್, ಪ್ರಾಚಾರ್ಯ ಸಿದ್ದರಾಮಪ್ಪ ಸಜ್ಜನ್ ಮಾತನಾಡಿದರು. ಮೆಡಿಕಲ್ ಅಧೀಕ್ಷಕ ಡಾ. ಸಂತೋಷ ಲಕ್ಷ್ಮಣ, ಡಾ. ಶಿವಕುಮಾರ, ಪ್ರಾಚಾರ್ಯೆ ಡಾ. ನವಾಜ್ ಉಮರ್, ಡಾ. ನಿರಂಜನ್ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಉಪಪ್ರಾಚಾರ್ಯ ಬಸವರಾಜ ಬಿರಾದಾರ ಸ್ವಾಗತಿಸಿದರು. ದಿನಾ ಕಾರ್ಯಕ್ರಮ ನಿರೂಪಣೆ ಮಾಡಿದರು. ರಫೀಕ್ ವಂದಿಸಿದರು. ಇದೇ ವೇಳೆ ಮೊದಲ ವರ್ಷದ ಮೂವರು ಟಾಪರ್ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಎರಡನೇ ವರ್ಷದ 100 ವಿದ್ಯಾರ್ಥಿಗಳು ದೀಪಧಾರೆ ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ಹೊಸದಿಲ್ಲಿ: ಎಸ್ಎನ್ಡಿಪಿ ಯೋಗಂ ಪ್ರಧಾನ ಕಾರ್ಯದರ್ಶಿ ವೆಲ್ಲಪ್ಪಳ್ಳಿ ನಟೇಶನ್ ಗೆ ಘೋಷಿಸಿದ ಪದ್ಮಭೂಷಣ ಪ್ರಶಸ್ತಿಯನ್ನು ಹಿಂಪಡೆಯುವಂತೆ ಕೋರಿ ಸಲ್ಲಿಸಲಾದ ದೂರನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಕೇಂದ್ರ ಗೃಹ ಸಚಿವಾಲಯಕ್ಕೆ ಕಳುಹಿಸಿದ್ದಾರೆ. ದೂರಿನಲ್ಲಿರುವ ಆರೋಪಗಳನ್ನು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಸಚಿವಾಲಯಕ್ಕೆ ಸೂಚಿಸಲಾಗಿದೆ. ‘ಸೇವ್ ಯೂನಿವರ್ಸಿಟಿ’ ಅಭಿಯಾನ ಸಮಿತಿಯ ಅಧ್ಯಕ್ಷ ಆರ್.ಎಸ್. ಶಶಿಕುಮಾರ್ ಅವರು ಈ ದೂರು ಸಲ್ಲಿಸಿದ್ದಾರೆ. ವೆಲ್ಲಪ್ಪಳ್ಳಿ ನಟೇಶನ್ ಅವರು ಹಿಂದಿನ ಸಂದರ್ಭಗಳಲ್ಲಿ ಪದ್ಮ ಪ್ರಶಸ್ತಿಗಳನ್ನು ಸಾರ್ವಜನಿಕವಾಗಿ ಅವಮಾನಿಸಿರುವ ಹೇಳಿಕೆಗಳನ್ನು ನೀಡಿದ್ದಾರೆ ಹಾಗೂ ಹಲವು ಕ್ರಿಮಿನಲ್ ಪ್ರಕರಣಗಳಲ್ಲಿ ಆರೋಪಿಯಾಗಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಇಂತಹ ವ್ಯಕ್ತಿಗೆ ಉನ್ನತ ನಾಗರಿಕ ಗೌರವ ನೀಡುವುದು ಅನರ್ಹ ಎಂದು ಹೇಳಲಾಗಿದೆ. ಪದ್ಮ ಪ್ರಶಸ್ತಿಯನ್ನು ಸಾರ್ವಜನಿಕವಾಗಿ ಅಪಹಾಸ್ಯ ಮಾಡಿದ ವ್ಯಕ್ತಿಗೆ ಅದೇ ಪ್ರಶಸ್ತಿಯನ್ನು ನೀಡುವುದು ಅದರ ಘನತೆಯನ್ನು ಕುಗ್ಗಿಸುವುದಲ್ಲದೆ, ಹಿಂದಿನ ಪ್ರಶಸ್ತಿ ಪುರಸ್ಕೃತರ ಗೌರವಕ್ಕೂ ಧಕ್ಕೆ ಉಂಟುಮಾಡುತ್ತದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಅಪರಾಧ ಪ್ರಕರಣಗಳನ್ನು ಎದುರಿಸುತ್ತಿರುವ ವ್ಯಕ್ತಿಗೆ ದೇಶದ ಉನ್ನತ ನಾಗರಿಕ ಗೌರವಗಳಲ್ಲಿ ಒಂದನ್ನು ನೀಡುವುದು ಸೂಕ್ತವಲ್ಲ ಎಂಬ ಅಭಿಪ್ರಾಯವನ್ನೂ ವ್ಯಕ್ತಪಡಿಸಲಾಗಿದೆ. ಮಾಧ್ಯಮ ಸಂವಾದದ ವೇಳೆ ವೆಲ್ಲಪ್ಪಳ್ಳಿ ನಟೇಶನ್ ಅವರು ಪದ್ಮ ಪ್ರಶಸ್ತಿಗಳ ಮೌಲ್ಯವನ್ನು ಪ್ರಶ್ನಿಸುವ ರೀತಿಯ ಹೇಳಿಕೆಗಳನ್ನು ನೀಡಿದ್ದು, ಅವುಗಳನ್ನು ಹಣದ ಮೂಲಕ ಪಡೆಯಬಹುದು ಎಂಬ ಮಾತುಗಳನ್ನು ಆಡಿದ್ದಾರೆ ಎಂದು ದೂರಿನಲ್ಲಿ ಹೇಳಲಾಗಿದೆ. ಪದ್ಮಭೂಷಣ ಪ್ರಶಸ್ತಿ ಘೋಷಣೆಗೆ ಮುನ್ನವೇ ಎಸ್ಎನ್ಡಿಪಿ ರಕ್ಷಣಾ ಸಮಿತಿಯು ಈ ನಿರ್ಧಾರಕ್ಕೆ ವಿರೋಧ ವ್ಯಕ್ತಪಡಿಸಿತ್ತು ಎಂಬುದನ್ನೂ ದೂರಿನಲ್ಲಿ ಉಲ್ಲೇಖಿಸಲಾಗಿದೆ. ಈ ವರ್ಷ ವೆಲ್ಲಪ್ಪಳ್ಳಿ ನಟೇಶನ್ ಹಾಗೂ ನಟ ಮಮ್ಮುಟ್ಟಿ ಅವರಿಗೆ ಪದ್ಮಭೂಷಣ ಪ್ರಶಸ್ತಿ ಘೋಷಿಸಲಾಗಿತ್ತು. ಅದೇ ವೇಳೆ ಕೇರಳದ ಮಾಜಿ ಮುಖ್ಯಮಂತ್ರಿ ವಿ.ಎಸ್. ಅಚ್ಯುತಾನಂದನ್, ಸುಪ್ರೀಂ ಕೋರ್ಟ್ನ ಮಾಜಿ ನ್ಯಾಯಮೂರ್ತಿ ಕೆ.ಟಿ. ಥಾಮಸ್ ಹಾಗೂ ಆರೆಸ್ಸೆಸ್ ಪ್ರಚಾರಕ ಮತ್ತು ‘ಜನ್ಮಭೂಮಿ’ ಮಾಜಿ ಸಂಪಾದಕ ಪಿ. ನಾರಾಯಣನ್ ಅವರಿಗೆ ಪದ್ಮವಿಭೂಷಣ ಪ್ರಶಸ್ತಿ ಘೋಷಿಸಲಾಗಿದೆ.
ಕೇಂದ್ರ ಬಜೆಟ್ನಲ್ಲಿ ಯಾದಗಿರಿಗೆ ವಿಶೇಷ ಪ್ಯಾಕೇಜ್ ಘೋಷಣೆಗೆ ಉಮೇಶ್ ಮುದ್ನಾಳ್ ಒತ್ತಾಯ
ಯಾದಗಿರಿ: ಜ.1ರಂದು ಮಂಡನೆಯಾಗಲಿರುವ ಕೇಂದ್ರ ಬಜೆಟ್ ಮೇಲೆ ಯಾದಗಿರಿ ಜಿಲ್ಲೆಯ ಜನರು ಬೆಟ್ಟದಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಶೈಕ್ಷಣಿಕವಾಗಿ ಹಾಗೂ ಸಾಮಾಜಿಕವಾಗಿ ಹಿಂದುಳಿದಿರುವ ಯಾದಗಿರಿ ಜಿಲ್ಲೆಗೆ ಕೇಂದ್ರ ಬಜೆಟ್ನಲ್ಲಿ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕು ಎಂದು ಸಾಮಾಜಿಕ ಹೋರಾಟಗಾರ ಉಮೇಶ್ ಮುದ್ನಾಳ್ ಆಗ್ರಹಿಸಿದ್ದಾರೆ. ಯಾದಗಿರಿ ಜಿಲ್ಲೆ ರೂಪುಗೊಂಡು 15 ವರ್ಷಗಳಾದರೂ ಸಾಮಾಜಿಕ ಹಾಗೂ ಆರ್ಥಿಕ ಅಭಿವೃದ್ಧಿ ಸಾಧಿಸಿಲ್ಲ. ಈ ಭಾಗದ ರಾಜಕಾರಣಿಗಳ ಇಚ್ಛಾಶಕ್ತಿ ಕೊರತೆಯಿಂದ ಅಭಿವೃದ್ಧಿ ಕುಂಠಿತವಾಗಿದೆ ಎಂದು ಆರೋಪಿಸಿದರು. ಕನಿಷ್ಠ ಈ ಬಾರಿ ಮಂಡನೆಯಾಗಲಿರುವ ಕೇಂದ್ರ ಬಜೆಟ್ನಲ್ಲಿ ಜಿಲ್ಲೆಯ ಇಬ್ಬರೂ ಸಂಸದರು ಜನರ ಪರವಾಗಿ ಧ್ವನಿ ಎತ್ತಬೇಕು ಎಂದು ಒತ್ತಾಯಿಸಿದರು. ಗುಂತಕಲ್ ರೈಲು ನಿಲ್ದಾಣದ ಬಳಿಕ ಎರಡನೇ ಅತಿಹೆಚ್ಚು ಆದಾಯ ನೀಡುವ ಯಾದಗಿರಿ ರೈಲು ನಿಲ್ದಾಣ ಮಾರ್ಗವಾಗಿ ಸಂಚರಿಸುವ 12 ಎಕ್ಸ್ಪ್ರೆಸ್ ರೈಲುಗಳು ಇಲ್ಲಿ ನಿಲುಗಡೆ ಆಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಕೊರೊನಾ ಅವಧಿಯಲ್ಲಿ ರದ್ದಾದ ಇಂಟರ್ಸಿಟಿ ಪ್ಯಾಸೆಂಜರ್ ರೈಲನ್ನು ಮರು ಆರಂಭಿಸಬೇಕು ಹಾಗೂ ರೈಲು ನಿಲ್ದಾಣಕ್ಕೆ ಹೈಟೆಕ್ ಸೌಲಭ್ಯಗಳನ್ನು ಒದಗಿಸಬೇಕು ಎಂದು ಆಗ್ರಹಿಸಿದರು. ಯಾದಗಿರಿ ಜಿಲ್ಲೆಗೆ ಇಂಜಿನಿಯರಿಂಗ್ ಕಾಲೇಜು ಸ್ಥಾಪನೆ ಮಾಡಬೇಕು. ಉದ್ಯೋಗಾಕಾಂಕ್ಷಿ ಯುವಕರಿಗೆ ಉದ್ಯೋಗಾವಕಾಶ ಕಲ್ಪಿಸುವ ಯೋಜನೆಗಳನ್ನು ಬಜೆಟ್ನಲ್ಲಿ ಘೋಷಿಸಬೇಕೆಂದು ಹೇಳಿದರು. ಇದಲ್ಲದೆ ರಾಜ್ಯದ ಬಹುತೇಕ ಹೆದ್ದಾರಿಗಳು ಸಂಪೂರ್ಣ ಹಾಳಾಗಿದ್ದು, ಕೂಡಲೇ ಹೆದ್ದಾರಿ ದುರಸ್ತಿ ಕಾರ್ಯಗಳಿಗೆ ಬಜೆಟ್ನಲ್ಲಿ ಅನುದಾನ ಒದಗಿಸಬೇಕೆಂದು ಉಮೇಶ್ ಮುದ್ನಾಳ್ ಒತ್ತಾಯಿಸಿದರು.
ದಾವಣಗೆರೆಯಲ್ಲಿ ಕಾಂಗ್ರೆಸ್ ನಾಯಕರೊಬ್ಬರ ಪುತ್ರ ಪೊಲೀಸರ ಮೇಲೆ ಹಲ್ಲೆ ನಡೆಸಿದ ಘಟನೆ ನಡೆದಿದೆ. ಜಿಲ್ಲಾಸ್ಪತ್ರೆ ಆವರಣದಲ್ಲಿ ನಡೆದ ಗಲಾಟೆ ವಿಚಾರವಾಗಿ ಪೊಲೀಸರು ಹಸನ್ ಎಂಬುವವರನ್ನು ವಶಕ್ಕೆ ಪಡೆಯಲು ತೆರಳಿದ್ದರು. ಈ ವೇಳೆ ಹಸನ್ ಪೊಲೀಸರನ್ನು ತಳ್ಳಾಡಿ, ಗಾಯಗೊಳಿಸಿ, ಪಿಎಸ್ಐ ಅವರ ಮೊಬೈಲ್ ಕಿತ್ತುಕೊಂಡಿದ್ದಾರೆ. ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.
‘ರಮಝಾನ್’ ಉರ್ದು ಮಾಧ್ಯಮ ಶಾಲಾ ವೇಳಾಪಟ್ಟಿ ಬದಲಾವಣೆ: ಸರಕಾರ ಆದೇಶ
ಬೆಂಗಳೂರು : 2025-26ನೆ ಶೈಕ್ಷಣಿಕ ಸಾಲಿನಲ್ಲಿ ರಾಜ್ಯದ ಎಲ್ಲ ಸರಕಾರಿ, ಅನುದಾನಿತ ಮತ್ತು ಅನುದಾನ ರಹಿತ ಉರ್ದು ಮಾಧ್ಯಮದ ಕಿರಿಯ, ಹಿರಿಯ ಹಾಗೂ ಪ್ರೌಢಶಾಲೆಗಳಿಗೆ ರಮಝಾನ್ ತಿಂಗಳು ಪ್ರಾರಂಭವಾದ ದಿನದಿಂದ ಮಾ.20ರವರೆಗೆ ಮಾತ್ರ ಶಾಲಾ ಅವಧಿಯ ವೇಳಾಪಟ್ಟಿ ಬದಲಾವಣೆ ಮಾಡಿ ಸರಕಾರ ಆದೇಶ ಹೊರಡಿಸಿದೆ. ಅವಧಿ-1 ಬೆಳಗ್ಗೆ 8 ಗಂಟೆಯಿಂದ 8.40, ಅವಧಿ-2 ಬೆಳಗ್ಗೆ 8.40 ರಿಂದ 9.20, ಅವಧಿ-3 ಬೆಳಗ್ಗೆ 9.20 ರಿಂದ 10ರವರೆಗೆ, ವಿರಾಮ ಬೆಳಗ್ಗೆ 10 ರಿಂದ 10.15ರವರೆಗೆ, ಅವಧಿ-4 ಬೆಳಗ್ಗೆ 10.15 ರಿಂದ 10.55, ಅವಧಿ-5 ಬೆಳಗ್ಗೆ 10.55 ರಿಂದ 11.35, ಅವಧಿ-6 ಬೆಳಗ್ಗೆ 11.35 ರಿಂದ ಮಧ್ಯಾಹ್ನ 12.10 ಹಾಗೂ ಅವಧಿ-7 ಮಧ್ಯಾಹ್ನ 12.10 ರಿಂದ 12.45ರವರೆಗೆ ವೇಳಾಪಟ್ಟಿಯನ್ನು ಬದಲಾಯಿಸಲಾಗಿದೆ. ಈ ವ್ಯವಸ್ಥೆಯಿಂದ ಶಾಲೆಗಳ ಕೆಲಸದ ಅವಧಿಯಲ್ಲಿ ಕಡಿಮೆ ಆಗುವ ಅವಧಿಯನ್ನು ಇತರೆ ರಜಾ ದಿನಗಳಲ್ಲಿ ಕಾರ್ಯ ನಿರ್ವಹಿಸುವ ಮೂಲಕ ಸರಿದೂಗಿಸಿಕೊಳ್ಳಬೇಕು. ರಾಜ್ಯದ ಸರಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಮುಸ್ಲಿಮ್ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ವರ್ಗದವರು ರಮಝಾನ್ ತಿಂಗಳಲ್ಲಿ ಉಪವಾಸ ವ್ರತವನ್ನು ಕೈಗೊಳ್ಳುವುದರಿಂದ ಅವರಿಗೆ ರಮಝಾನ್ ತಿಂಗಳಲ್ಲಿ ಪ್ರತಿದಿನ ಸಂಜೆ ಅರ್ಧ ಗಂಟೆ ಮುಂಚಿತವಾಗಿ ತೆರಳಲು ಅನುಮತಿಸಬಹುದು. 2025-26ನೆ ಸಾಲಿನ ಪ್ರಾಥಮಿಕ ಮತ್ತು ಪ್ರೌಢಶಾಲಾ ಪರೀಕ್ಷಾ ವೇಳಾಪಟ್ಟಿಯಂತೆ ನಡೆಸುವಂತೆ ಕ್ರಮ ವಹಿಸಬೇಕು ಹಾಗೂ 2025-26ನೆ ಸಾಲಿಗೆ ನಿಗದಿಪಡಿಸಿರುವ ಎಸೆಸೆಲ್ಸಿ ಪರೀಕ್ಷಾ ಕೇಂದ್ರ ಮತ್ತು ಪರೀಕ್ಷಾ ಕರ್ತವ್ಯ ನಿರತ ಉರ್ದು ಮಾಧ್ಯಮದ ಶಿಕ್ಷಕರಿಗೆ ಈ ಆದೇಶವು ಅನ್ವಯಿಸುವುದಿಲ್ಲ ಎಂದು ಶಾಲಾ ಶಿಕ್ಷಣ ಇಲಾಖೆ ಆಯುಕ್ತರ ಕಚೇರಿ ನಿರ್ದೇಶಕ(ಮೈನಾರಿಟಿ)ರು ಆದೇಶದಲ್ಲಿ ತಿಳಿಸಿದ್ದಾರೆ.
ಸುಳ್ಯ | ಎಲಿಮಲೆಯಲ್ಲಿ ಇಕ್ರಾಮುಸ್ಸುನ್ನ ದ್ವಿತೀಯ ಬಿರುದುದಾನ ಸಮ್ಮೇಳನ
ನುಸ್ರತುಲ್ ಇಸ್ಲಾಂ ಎಸೋಸಿಯೇಶನ್ನ 42ನೇ ವಾರ್ಷಿಕ ಸಮಾರಂಭ
ಫೆ.2ಕ್ಕೆ ‘ಮನರೇಗಾ’ ಮರು ಜಾರಿಗೆ ಆಗ್ರಹಿಸಿ ‘ಕಾರ್ಮಿಕರ ಮಹಾಪಂಚಾಯತ್’
ಬೆಂಗಳೂರು : ಗ್ರಾಮೀಣ ಕೃಷಿ ಕೂಲಿ ಕಾರ್ಮಿಕರಿಂದ ಉದ್ಯೋಗದ ಹಕ್ಕನ್ನು ಕಸಿದಿರುವ ವಿಬಿ-ಜಿ ರಾಮ್-ಜಿ ಕಾಯ್ದೆಯನ್ನು ವಿರೋಧಿಸಿ, ಮನರೇಗಾ ಮುಂದುವರೆಸಬೇಕು ಮತ್ತು ಬಲಪಡಿಸಬೇಕೆಂದು ಆಗ್ರಹಿಸಿ ‘ಮನರೇಗಾ ರಕ್ಷಣಾ ಒಕ್ಕೂಟ’ದ ವತಿಯಿಂದ ಫೆ.2ರಂದು ನಗರದ ಫ್ರೀಡಂ ಪಾರ್ಕ್ನಲ್ಲಿ ಕಾರ್ಮಿಕರ ಮಹಾಪಂಚಾಯತ್ ಅನ್ನು ಹಮ್ಮಿಕೊಳ್ಳಲಾಗಿದೆ. ಶನಿವಾರ ಒಕ್ಕೂಟದ ಪದಾಧಿಕಾರಿಗಳಾದ ಶಾರದಾ ಗೋಪಾಲ್, ಗಾಯತ್ರಿ ವಿ., ಶಂಸುದ್ದೀನ್ ಬಳಿಗಾರ್, ಪುಟ್ಟಮಾಧು, ವತ್ಸಲ ಆನೇಕಲ್, ನವೀನ್ ಎನ್. ಜಂಟಿ ಪತ್ರಿಕಾ ಹೇಳಿಕೆ ನೀಡಿದ್ದಾರೆ. ಒಕ್ಕೂಟ ಸರಕಾರವು ಗ್ರಾಮೀಣ ಜನರಿಗೆ ತಮ್ಮ ಊರಲ್ಲಿಯೇ ಕೆಲಸ ದೊರಕಿಸಿಕೊಡುತ್ತಿದ್ದ, ಮಹಿಳೆ ಮತ್ತು ಪುರುಷರಿಗೆ ಸಮಾನ ಕೂಲಿ ಕೊಡುತ್ತಿದ್ದ ‘ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ' ಯೋಜನೆಯನ್ನು ಕಿತ್ತೊಗೆದು, ಹೊಸ ವಿಬಿ-ಜಿರಾಮ್-ಜಿ ಎಂಬ ಕಾನೂನನ್ನು ತಂದಿದೆ ಎಂದಿದ್ದಾರೆ. ಎಲ್ಲೆಡೆ 125 ದಿನಗಳ ಕೆಲಸ ಎಂದು ಪ್ರಚಾರ ಪಡೆಯುತ್ತಿರುವ ಈ ಹೊಸ ಕಾನೂನು, ಜನರಿಗೆ ಉದ್ಯೋಗವನ್ನು ಗೌರವದ ಹಕ್ಕಾಗಿ ಇಟ್ಟಿಲ್ಲ. ಬದಲಿಗೆ ಒಕ್ಕೂಟ ಸರಕಾರ ನೀಡುವ ಭಿಕ್ಷೆಯಾಗಿ ಮಾರ್ಪಡಿಸಿದೆ. ಯಾವ ಪಂಚಾಯತಿಯಲ್ಲಿ ಕೆಲಸ ಸಿಗುತ್ತದೆ ಎಂಬ ಖಾತರಿ ಇಲ್ಲ. ಹಳ್ಳಿ ಜನರೇ ನಿರ್ಧರಿಸಿ ಸ್ಥಳೀಯ ಸಂಪನ್ಮೂಲಗಳನ್ನು ಹೆಚ್ಚಿಸುವಂಥ ಕೆಲಸಗಳಲ್ಲ. ವರ್ಷದ ಎಲ್ಲ ದಿನಗಳಲ್ಲೂ ಕೆಲಸವಿಲ್ಲ, ಅಂತಹ ಕಾನೂನು ಇದು. ತನ್ನ ಮೇಲಿನ ಹೊರೆಯ ಅರ್ಧ ಪಾಲನ್ನು ರಾಜ್ಯಗಳ ಮೇಲೆ ದಾಟಿಸಿರುವುದರಿಂದ ರಾಜ್ಯಗಳೂ ಜನರಿಗೆ ಕೆಲಸ ಕೊಡಲು ಉತ್ಸಾಹ ತೋರಲಿಕ್ಕಿಲ್ಲ ಎಂದು ಹೋರಾಟಗಾರರು ವಿವರಿಸಿದ್ದಾರೆ. ಜನರಿಗೆ ತಮ್ಮ ಊರಲ್ಲಿಯೇ ಕೆಲಸ ಸಿಗಬೇಕೆಂದರೆ, ಗ್ರಾಮಗಳ ಸಂಪನ್ಮೂಲ ವೃದ್ಧಿಯಾಗಬೇಕೆಂದರೆ ಹೊಸ ಕಾನೂನನ್ನು ಹಿಂಪಡೆದು ಸರಕಾರವು ಹಳೆಯ ಕಾನೂನನ್ನೇ ಮರು ಸ್ಥಾಪಿಸುವಂತಾಗಬೇಕು. ಅದು ಸುಲಭದ ಮಾತಲ್ಲ. ಜನರಿಂದ ತೀವ್ರ ಹೋರಾಟಗಳಾಗಬೇಕು. ‘ಮನರೇಗಾ ರಕ್ಷಣಾ ಒಕ್ಕೂಟ'ವು ರಾಜ್ಯಾದ್ಯಂತದಿಂದ ಕೂಲಿಕಾರರನ್ನು, ಸಣ್ಣ ರೈತರನ್ನು ಒಟ್ಟುಗೂಡಿಸಿ ಮೊದಲಿನ ಮನರೇಗಾ ಬೇಕೆಂಬ ಅವರ ಬೇಡಿಕೆ ದಿಲ್ಲಿಯವರಿಗೂ, ಅಧಿಕಾರಸ್ಥರಿಗೂ ಕೇಳುವಂತೆ ಮಾಡಲು ಪ್ರಯತ್ನಗಳನ್ನು ನಡೆಸಿದೆ. ಅಂತಹ ಪ್ರಯತ್ನಗಳಲ್ಲೊಂದು ಈ ಮಹಾ ಪಂಚಾಯತ್, ಕೂಲಿಕಾರ್ಮಿಕರು, ಮಹಿಳಾ ಕಾರ್ಮಿಕರು, ದಲಿತ ಕಾರ್ಮಿಕರು, ಸಣ್ಣ ರೈತರು, ದೊಡ್ಡ ಸಂಖ್ಯೆಯಲ್ಲಿ ಬೆಂಗಳೂರಿಗೆ ಬಂದು ಮಾತಾಡಲಿದ್ದಾರೆ ಎಂದು ಪದಾಧಿಕಾರಿಗಳು ತಿಳಿಸಿದ್ದಾರೆ.
ಬೆಂಬಲ ಬೆಲೆ ಖಾತರಿ ಕಾನೂನು ಜಾರಿಗೆ ಆಗ್ರಹಿಸಿ ‘ರೈತ ಜಾಗೃತಿ ಯಾತ್ರೆʼ
ಬೆಂಗಳೂರು : ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಖಾತರಿ ಕಾನೂನು ಜಾರಿಗಾಗಿ ದೇಶಾದ್ಯಂತ ರೈತರಿಂದ ಸಹಿ ಸಂಗ್ರಹ ಮಾಡುವ ಮೂಲಕ ರೈತ ಜಾಗೃತಿ ಯಾತ್ರೆ ನಡೆಸಲಾಗುತ್ತದೆ ಎಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಹಾಗೂ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ತಿಳಿಸಿದ್ದಾರೆ. ಶನಿವಾರ ನಗರದ ಪ್ರೆಸ್ಕ್ಲಬ್ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರೈತರಿಗೆ ಎಂಎಸ್ಪಿ ಖಾತರಿ ಕಾನೂನು ಇಲ್ಲದ ಕಾರಣ ವರ್ಷಕ್ಕೆ 15ಲಕ್ಷ ಕೋಟಿ ರೂ.ನಷ್ಟ ಅನುಭವಿಸುತ್ತಿದ್ದಾರೆ. ಇದರ ಹಿನ್ನೆಲೆಯಲ್ಲಿ ಫೆ.7ರಿಂದ ರೈತ ಜಾಗೃತಿ ಯಾತ್ರೆ ಕನ್ಯಾಕುಮಾರಿಯಿಂದ ಆರಂಭವಾಗಿ ಕೇರಳ, ಪಾಂಡಿಚರಿ, ತಮಿಳುನಾಡು ಮುಖಾಂತರ ಅಲ್ಲಿನ ಮುಖ್ಯಮಂತ್ರಿಗಳನ್ನು ಭೇಟಿ ಮಾಡುತ್ತಾ ಯಾತ್ರೆ ಸಾಗಲಿದೆ ಎಂದರು. ಈ ಮಾರ್ಗದಲ್ಲಿ ಸಿಗುವ ಹಳ್ಳಿಗಳ ರೈತರಿಂದ ಸಹಿ ಸಂಗ್ರಹ ಪಡೆದು ಮಾ.19 ರಂದು ಪ್ರಧಾನಿಗೆ ಸಲ್ಲಿಸಲಾಗುವುದು. 40 ದಿನಗಳ ನಂತರ ರೈತ ಯಾತ್ರೆ ಕಾಶ್ಮೀರಕ್ಕೆ ತಲುಪಿ, ದಿಲ್ಲಿಯ ರಾಮ್ ಲೀಲಾ ಮೈದಾನದಲ್ಲಿ ದೇಶದ ಎಲ್ಲ ರೈತರ ಬೃಹತ್ ಸಮಾವೇಶ ನಡೆಸಲಾಗುತ್ತದೆ ಎಂದು ಕುರುಬೂರು ಶಾಂತಕುಮಾರ್ ಮಾಹಿತಿ ನೀಡಿದರು. ಸುದ್ದಿಗೋಷ್ಠಿಯಲ್ಲಿ ರೈತ ಹೋರಾಟಗಾರರಾದ ಹತ್ತಳ್ಳಿ ದೇವರಾಜ್, ಗುರುದೇವ ನಾರಾಯಣ ಕುಮಾರ್, ನರಸರೆಡ್ಡಿ, ಶಿವಕುಮಾರ್, ಬೈರಾರೆಡ್ಡಿ, ನಾಗರಾಜ್ ಉಪಸ್ಥಿತರಿದ್ದರು.
ಗೃಹ ಸಚಿವರೇ ಅಸಹಾಯಕರಾದರೆ ಸರ್ಕಾರ ಅಕ್ರಮ ಮರಳು ಗಣಿಗಾರಿಕೆ ತಡೆಯುವುದೆಂಬ ಭರವಸೆ ಉಳಿಯದು : ಹೈಕೋರ್ಟ್
ಬೆಂಗಳೂರು : ಮರಳು ಅಕ್ರಮ ದಂಧೆಗೆ ಕಡಿವಾಣ ಹಾಕಲು ರಾಜ್ಯದ ಗೃಹ ಸಚಿವರೇ ಅಸಹಾಯಕತೆ ವ್ಯಕ್ತಪಡಿಸಿದರೆ ರಾಜ್ಯ ಸರ್ಕಾರವು ಅದಕ್ಕೆ ಕಡಿವಾಣ ಹಾಕಲಿದೆ ಎಂಬ ಭರವಸೆ ಹೊಂದಲು ಸಾಧ್ಯವಿಲ್ಲ ಎಂದಿರುವ ಹೈಕೋರ್ಟ್, ಇದೊಂದು ಗಂಭೀರ ವಿಚಾರವಾಗಿರುವುದರಿಂದ ನ್ಯಾಯಾಲಯದ ಮೇಲ್ವಿಚಾರಣೆಯಲ್ಲಿ ಕೇಂದ್ರೀಯ ಸಂಸ್ಥೆ ಅಥವಾ ವಿಶೇಷ ತನಿಖಾ ಸಂಸ್ಥೆಯಿಂದ ತನಿಖೆ (ಎಸ್ಐಟಿ) ನಡೆಸಬೇಕಾದ ಅಗತ್ಯವಿದೆ ಎಂದು ಹೇಳಿದೆ. ಗೃಹ ಸಚಿವ ಜಿ. ಪರಮೇಶ್ವರ್ ಅವರು ಜನವರಿ 27ರಂದು ಅಧಿವೇಶನದಲ್ಲಿ ಮಾತನಾಡುತ್ತಾ, ರಾಜ್ಯದಲ್ಲಿ ಪಕ್ಷಾತೀತವಾಗಿ ಹಲವು ಪ್ರಭಾವಿಗಳು ಮರಳು ದಂಧೆಯಲ್ಲಿ ಭಾಗಿಯಾಗಿದ್ದಾರೆ ಎಂದು ನೀಡಿರುವ ಹೇಳಿಕೆ ಕುರಿತು ಜನವರಿ 28ರಂದು ಮಾಧ್ಯಮಗಳು ಪ್ರಕಟಿಸಿರು ವರದಿಯನ್ನು ಉಲ್ಲೇಖಿಸಿ ನ್ಯಾಯಮೂರ್ತಿಗಳಾದ ಡಿ.ಕೆ. ಸಿಂಗ್ ಮತ್ತು ತಾರಾ ವಿತಾಸ್ತಾ ಗಂಜು ಅವರ ವಿಭಾಗೀಯ ನ್ಯಾಯಪೀಠ, ಸ್ವಯಂಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಲು ರಿಜಿಸ್ಟ್ರಿಗೆ ನಿರ್ದೇಶಿಸಿದೆ. ಇದೇ ವೇಳೆ, ಪ್ರತಿವಾದಿಗಳಾದ ರಾಜ್ಯ ಗೃಹ, ಗಣಿ ಮತ್ತು ಭೂ ವಿಜ್ಞಾನ ಹಾಗೂ ಅರಣ್ಯ ಮತ್ತು ಪರಿಸರ ಇಲಾಖೆಯ ಕಾರ್ಯದರ್ಶಿಗಳಿಗೆ ನೋಟಿಸ್ ಜಾರಿಗೊಳಿಸಿರುವ ನ್ಯಾಯಪೀಠ, 3 ವಾರಗಳಲ್ಲಿ ಆಕ್ಷೇಪಣೆ ಸಲ್ಲಿಸುವಂತೆ ಪ್ರತಿವಾದಿಗಳಿಗೆ ನಿರ್ದೇಶಿಸಿದೆ. ಜತೆಗೆ, ಪ್ರಕರಣ ದಾಖಲಿಸಿದ ಬಳಿಕ ಸ್ವಯಂಪ್ರೇರಿತ ಪಿಐಎಲ್ ಅನ್ನು ಸೂಕ್ತ ಪೀಠ ವಿಚಾರಣೆ ನಡೆಸಲು ನಿರ್ದೇಶಿಸಲು ಮುಖ್ಯ ನ್ಯಾಯಮೂರ್ತಿಗಳ ಮುಂದಿಡುವಂತೆ ನಿರ್ದೇಶಿಸಿದೆ. ಗೃಹ ಸಚಿವ ಜಿ ಪರಮೇಶ್ವರ್ ಅವರು, ಮರಳು ಅಕ್ರಮ ಸಾಗಣೆಯು ದೊಡ್ಡ ರ್ಯಾಕೆಟ್ ಆಗಿದ್ದು, ಅದರಲ್ಲಿ ಹಲವು ಪ್ರಭಾವಿಗಳು ಭಾಗಿಯಾಗಿದ್ದಾರೆ. ಇಲ್ಲಿ ನಾನು ಯಾರ ಹೆಸರನ್ನೂ ಹೇಳುತ್ತಿಲ್ಲ. ಏಕೆಂದರೆ ಅದು ಮುಜುಗರ ಉಂಟು ಮಾಡುತ್ತದೆ. ಸೀಮಿತ ಉತ್ತರ ನೀಡಿದ್ದು, ಈ ದಂಧೆಯಲ್ಲಿ ಹಲವು ಪ್ರಭಾವಿಗಳಿದ್ದಾರೆ. ಈ ಕುರಿತು ಚರ್ಚಿಸಲು ಸಭೆ ನಡೆಸಲಾಗುವುದು ಎಂದು ಹೇಳಿರುವುದನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ ಎಂದು ನ್ಯಾಯಪೀಠ ಆದೇಶದಲ್ಲಿ ಉಲ್ಲೇಖಿಸಿದೆ. ಮರಳು ಗಣಿಗಾರಿಕೆ ನಡೆಸಲು ಬಿಡ್ ಆಹ್ವಾನಿಸಲಾಗಿದೆ. ಆದರೆ, ಅವುಗಳನ್ನು ಇನ್ನೂ ಬಹಿರಂಗಪಡಿಸಿಲ್ಲ. ಹಣದ ಹೊಳೆ ಹರಿಸುವ ಈ ರ್ಯಾಕೆಟ್ನಲ್ಲಿ ದೊಡ್ಡ ತಿಮಿಂಗಿಲಗಳು ಭಾಗಿಯಾಗಿದ್ದು, ಮರಳು ಗಣಿಗಾರಿಕೆಯನ್ನು ಕಾನೂನಾತ್ಮಕಗೊಳಿಸುವುದು ಅವರಿಗೆ ಇಷ್ಟವಿಲ್ಲ. ಮರಳು ಗಣಿಗಾರಿಕೆಯ ಗುತ್ತಿಗೆಗಾರಿಗೆ ನೀಡಿದರೆ, ಹಣವು ಸರ್ಕಾರದ ಬೊಕ್ಕಸಕ್ಕೆ ಹೋಗಲಿದ್ದು, ಮಾಫಿಯಾಗಳಿಗೆ ಅಕ್ರಮ ಹಣ ಸಂದಾಯವಾಗುವುದು ನಿಂತು ಹೋಗಲಿದೆ ಎಂದು ವರದಿ ಮಾಡಲಾಗಿದೆ ಎಂದೂ ಆದೇಶದಲ್ಲಿ ದಾಖಲಿಸಲಾಗಿದೆ. ರಾತ್ರಿ ವೇಳೆಯಲ್ಲಿ ಕೃಷ್ಣಾ ನದಿ ತೀರದಲ್ಲಿ ಮರಳು ಅಕ್ರಮ ಸಾಗಣೆ ನಡೆಯುತ್ತಿದ್ದು, ಇದರಿಂದ ಬೆಳೆಗಳ ಮೇಲೆ ಧೂಳು ಕುಳಿತು ಫಸಲಿಗೆ ಹಾನಿಯಾಗುತ್ತಿದೆ ಎಂದು ರೈತರು ದೂರುತ್ತಿದ್ದಾರೆ. ವಿಶೇಷ ಕಾರ್ಯಾಚರಣಾ ದಳವು (ಎಸ್ಟಿಎಫ್) ನೆಪಮಾತ್ರಕ್ಕೆ ಉಳಿದಿದೆ. ಮರಳು ಅಕ್ರಮ ಗಣಿಗಾರಿಕೆ ನಡೆಯುವ ಜಾಗಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸದಿರುವುದು ಹಾಗೂ ಚೆಕ್ ಪೋಸ್ಟ್ಗಳು ಇಲ್ಲದೇ ಇರುವುದರಿಂದ ಅಕ್ರಮ ಚಟುವಟಿಕೆಯಲ್ಲಿ ಭಾಗಿಯಾಗಿರುವ ವಾಹನಗಳಿಂದ ಹಲವು ಸಾವುಗಳು ಸಂಭವಿಸಿವೆ. ರಾಯಚೂರು ಜಿಲ್ಲೆಯ ಮಹಿಳಾ ವಿಧಾನಸಭಾ ಸದಸ್ಯರೊಬ್ಬರು ಮರಳು ಮಾಫಿಯಾ ವಿಚಾರದ ಬಗ್ಗೆ ಧ್ವನಿ ಎತ್ತಿದ್ದಕ್ಕೆ ತಮಗೆ ಜೀವ ಬೆದರಿಕೆ ಇರುವುದರ ಕುರಿತು ದೂರಿದ್ದಾರೆ ಎಂದೂ ಆದೇಶದಲ್ಲಿ ವಿವರಿಸಲಾಗಿದೆ.
ಕಲಬುರಗಿಯ ಪೀಡೆನಾಶಕ ಪರೀಕ್ಷಾ ಪ್ರಯೋಗಾಲಯಕ್ಕೆ NABL ಮಾನ್ಯತೆ
ಕಲಬುರಗಿ : ಗುಣಮಟ್ಟ ಮತ್ತು ನಿಖರ ಪೀಡೆನಾಶಕ ಪರೀಕ್ಷಾ ವಿಧಾನಗಳನ್ನು ಅನುಸರಿಸುತ್ತಿರುವುದಕ್ಕಾಗಿ ಕಲಬುರಗಿಯ ರಾಜ್ಯ ಪೀಡೆನಾಶಕ ಪರೀಕ್ಷಾ ಪ್ರಯೋಗಾಲಯಕ್ಕೆ (SPTL) ರಾಷ್ಟ್ರೀಯ ಪರೀಕ್ಷೆ ಮತ್ತು ಮಾಪನಾಂಕ ನಿರ್ಣಯ ಪ್ರಯೋಗಾಲಯ ಮಂಡಳಿ (NABL)ಯಿಂದ ISO/IEC 17025 ಅಂತರರಾಷ್ಟ್ರೀಯ ಮಾನ್ಯತೆ ಲಭಿಸಿದೆ. ಈ ಮೂಲಕ ಪ್ರಯೋಗಾಲಯದ ಪರೀಕ್ಷಾ ವರದಿಗಳಿಗೆ ಅಂತರರಾಷ್ಟ್ರೀಯ ಮಾನ್ಯತೆ ದೊರೆತಂತಾಗಿದೆ. ISO/IEC 17025 ಮಾನ್ಯತೆ ಪಡೆಯುವ ಮೂಲಕ ಕಲಬುರಗಿ ರಾಜ್ಯ ಪೀಡೆನಾಶಕ ಪರೀಕ್ಷಾ ಪ್ರಯೋಗಾಲಯವು ಮಹತ್ವದ ಮೈಲಿಗಲ್ಲು ಸಾಧಿಸಿದ್ದು, ಕೃಷಿ ಗುಣಮಟ್ಟ ಭರವಸೆ ಮತ್ತು ತಾಂತ್ರಿಕ ಶ್ರೇಷ್ಠತೆಯನ್ನು ಬಲಪಡಿಸುವತ್ತ ದೊಡ್ಡ ಹೆಜ್ಜೆ ಇಟ್ಟಿದೆ. ಎನ್.ಎ.ಬಿ.ಎಲ್. ಮಾನ್ಯತೆಯು ಪ್ರಯೋಗಾಲಯದ ವಿಶ್ವಾಸಾರ್ಹತೆ, ನಿಖರತೆ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಲ್ಪಟ್ಟ ಕೀಟನಾಶಕ ಪರೀಕ್ಷಾ ಸೇವೆಗಳ ಬದ್ಧತೆಯನ್ನು ದೃಢಪಡಿಸುತ್ತದೆ. ಈ ಮಾನ್ಯತೆಯಿಂದ ಕಲಬುರಗಿ, ಯಾದಗಿರಿ, ಬೀದರ್ ಹಾಗೂ ವಿಜಯಪುರ ಜಿಲ್ಲೆಗಳ ರೈತರು, ಕೃಷಿ ಇನ್ಪುಟ್ ಪೂರೈಕೆದಾರರು ಮತ್ತು ಇತರ ಪಾಲುದಾರರಿಗೆ ಗುಣಮಟ್ಟದ ಪೀಡೆನಾಶಕಗಳ ಭರವಸೆ ದೊರೆಯಲಿದ್ದು, ಸುಸ್ಥಿರ ಕೃಷಿಗೆ ಉತ್ತೇಜನ ಸಿಗಲಿದೆ. ಇದರಿಂದ ಒಟ್ಟಾರೆ ಕಲ್ಯಾಣ ಕರ್ನಾಟಕ ಪ್ರದೇಶದ ಕೃಷಿ ವಲಯದ ಗುಣಮಟ್ಟ ಬಲಪಡಿಸುವಲ್ಲಿ ಈ ಪ್ರಯೋಗಾಲಯ ಮಹತ್ವದ ಪಾತ್ರ ವಹಿಸಲಿದೆ. ಕೀಟನಾಶಕ ಕಾಯ್ದೆ–1968ರ ಅಡಿಯಲ್ಲಿ ರೈತರಿಗೆ ಗುಣಮಟ್ಟದ ಪೀಡೆನಾಶಕಗಳನ್ನು ಖಚಿತಪಡಿಸುವ ಉದ್ದೇಶದಿಂದ 1997ರ ಏಪ್ರಿಲ್ನಲ್ಲಿ ಕಲಬುರಗಿಯಲ್ಲಿ ಸ್ಥಾಪಿಸಲಾದ ಈ ಪ್ರಯೋಗಾಲಯವು, ವಾರ್ಷಿಕವಾಗಿ 1,280 ಪೀಡೆನಾಶಕ ಮಾದರಿಗಳ ಪರೀಕ್ಷೆ ನಡೆಸುವ ಗುರಿ ಹೊಂದಿದೆ. ಕಳೆದ ಆರು ತಿಂಗಳುಗಳಲ್ಲಿ ಜಿಲ್ಲಾಡಳಿತ ಮತ್ತು ಕೃಷಿ ಜಂಟಿ ನಿರ್ದೇಶಕರ ಮಾರ್ಗದರ್ಶನದಲ್ಲಿ ಪ್ರಯೋಗಾಲಯ ತಂಡವು ಉಪಕರಣಗಳ ಮಾಪನಾಂಕ ನಿರ್ಣಯ, ಸಿಬ್ಬಂದಿಗೆ ಸಮಗ್ರ ತರಬೇತಿ, ಕಠಿಣ ಗುಣಮಟ್ಟ ನಿರ್ವಹಣಾ ವ್ಯವಸ್ಥೆ ಹಾಗೂ ಅಂತರಿಕ ಲೆಕ್ಕಪರಿಶೋಧನೆಗಳ ಮೂಲಕ ಗಮನಾರ್ಹ ಸಮರ್ಪಣೆಯನ್ನು ಪ್ರದರ್ಶಿಸಿದೆ. ಇದರ ಫಲವಾಗಿ ಎನ್.ಎ.ಬಿ.ಎಲ್. ತಂಡವು ಪ್ರಯೋಗಾಲಯದ ತಾಂತ್ರಿಕ ಸಾಮರ್ಥ್ಯವನ್ನು ಪರಿಶೀಲಿಸಿ ISO/IEC 17025 ಮಾನದಂಡದ ಪ್ರಕಾರ ಪ್ರಮಾಣೀಕರಿಸಿದೆ. ಈ ಮೂಲಕ ರಾಜ್ಯದಲ್ಲಿ ಒಟ್ಟು ಆರು ಎಸ್.ಪಿ.ಟಿ.ಎಲ್ ಪ್ರಯೋಗಾಲಯಗಳು ಎನ್.ಎ.ಬಿ.ಎಲ್ ಮಾನ್ಯತೆ ಪಡೆದಂತಾಗಿದೆ. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು ಮಾನ್ಯತೆ ಲಭಿಸಿರುವುದಕ್ಕೆ ಹರ್ಷ ವ್ಯಕ್ತಪಡಿಸಿ, ಮಾನ್ಯತಾ ಪ್ರಮಾಣಪತ್ರವನ್ನು ಪ್ರಯೋಗಾಲಯದ ಮುಖ್ಯಸ್ಥರಾಗಿರುವ ಉಪ ಕೃಷಿ ನಿರ್ದೇಶಕ ಜುಲ್ಫಿಖರ ಅಹೆಮದ್ ಅವರಿಗೆ ಔಪಚಾರಿಕವಾಗಿ ಹಸ್ತಾಂತರಿಸಿದರು. ಕಾರ್ಯಕ್ರಮದಲ್ಲಿ ಎಸ್.ಪಿ. ಅಡೂರು ಶ್ರೀನಿವಾಸಲು, ಜಂಟಿ ಕೃಷಿ ನಿರ್ದೇಶಕ ಸಮದ್ ಪಟೇಲ್, ಜಂಟಿ ಕೈಗಾರಿಕೆ ಕೇಂದ್ರದ ಜಂಟಿ ನಿರ್ದೇಶಕ ಅಬ್ದುಲ್ ಅಜೀಮ್ ಉಪಸ್ಥಿತರಿದ್ದರು.
ಕಲಬುರಗಿ | ವಿಬಿ ಜಿ ರಾಮ್ ಜಿ ಕಾಯ್ದೆ ಹಿಂಪಡೆಯುವಂತೆ ಆಗ್ರಹ
ಕೇಂದ್ರ ಸರಕಾರದಿಂದ ರೈತ, ಕೃಷಿ ಕಾರ್ಮಿಕರಿಗೆ ಮೋಸ: ಕೆ.ನೀಲಾ ಆಕ್ರೋಶ
ಆಳಂದ ರಸ್ತೆ ಅಗಲೀಕರಣ: ಸಂತ್ರಸ್ತರಿಗೆ ಪರಿಹಾರ ನೀಡುವಂತೆ ಆಗ್ರಹ
ಆಳಂದ : ಪಟ್ಟಣದ ಮುಖ್ಯ ರಸ್ತೆಯ ಅಗಲೀಕರಣ ಕಾರ್ಯವು ಅಭಿವೃದ್ಧಿಯ ಸಂಕೇತವಾಗಬೇಕಿದ್ದರೂ, ಇಂದು ಜನರ ಬದುಕಿಗೆ ಭೀತಿಯ ಸಂಕೇತವಾಗಿ ಪರಿಣಮಿಸಿದೆ. ರಸ್ತೆ ಅಗಲೀಕರಣದ ಹೆಸರಿನಲ್ಲಿ ಮನೆ, ಅಂಗಡಿ ಹಾಗೂ ಆಸ್ತಿ ಕಳೆದುಕೊಂಡ ಸಂತ್ರಸ್ತರಿಗೆ ತಕ್ಷಣ ಸೂಕ್ತ ಪರಿಹಾರ ನೀಡಬೇಕು ಎಂದು ಜಿಲ್ಲಾ ಜೆಡಿಎಸ್ ಮಹಿಳಾ ಘಟಕದ ಅಧ್ಯಕ್ಷೆ ಮಹೇಶ್ವರಿ ಎಸ್. ವಾಲಿ ಆಗ್ರಹಿಸಿದರು. ಶನಿವಾರ ಪಟ್ಟಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಸ್ತೆ ಅಗಲೀಕರಣದಿಂದ ನೂರಾರು ಕುಟುಂಬಗಳು ಮನೆ–ಮಠ ಕಳೆದುಕೊಂಡು ಬೀದಿಗೆ ಬೀಳುವ ಸ್ಥಿತಿಗೆ ತಲುಪಿವೆ. ಸಂತ್ರಸ್ತರ ಅಳಲು, ಆಡಳಿತದ ಮೌನ ಹಾಗೂ ರಾಜಕೀಯದ ಅಸ್ಪಷ್ಟತೆ ಆಳಂದವನ್ನು ಅಶಾಂತಿಯ ಅಂಚಿಗೆ ತಂದು ನಿಲ್ಲಿಸಿದೆ. ಆದರೆ ಈ ಜನರ ಕೂಗು ಸರ್ಕಾರದ ಕಿವಿಗೆ ಬೀಳುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. “ಪರಿಹಾರ ಕೊಡಲಾಗುವುದಿಲ್ಲ” ಎನ್ನುವ ಸರಳ ಉತ್ತರದ ಹಿಂದೆ ಯಾವ ಕಾನೂನು ಇದೆ? ಯಾವ ಸರ್ಕಾರದ ಆದೇಶ ಪತ್ರದ ಆಧಾರದಲ್ಲಿ ಜನರ ಮನೆ–ಅಂಗಡಿಗಳನ್ನು ಧ್ವಂಸಗೊಳಿಸಲಾಗುತ್ತಿದೆ? ಈ ಪ್ರಶ್ನೆಗಳಿಗೆ ಉತ್ತರ ಕೊಡಬೇಕಾದವರು ಆಡಳಿತವೇ ಹೊರತು ಬೀದಿಯಲ್ಲಿರುವ ಜನರಲ್ಲ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಸುಮಾರು 59ಕ್ಕೂ ಹೆಚ್ಚು ಸಂತ್ರಸ್ತರು ನ್ಯಾಯಾಲಯದ ಮೆಟ್ಟಿಲೇರಿರುವಾಗ, ನ್ಯಾಯಾಲಯದ ಆದೇಶಗಳನ್ನು ಕಡೆಗಣಿಸಿ ರಸ್ತೆ ಅಗಲೀಕರಣ ಕಾರ್ಯ ಮುಂದುವರಿಸುವುದು ಯಾವ ಪ್ರಜಾಪ್ರಭುತ್ವದ ಮಾದರಿ? ಎಂದು ಪ್ರಶ್ನಿಸಿದರು. ಸುದ್ದಿಗೋಷ್ಠಿಯಲ್ಲಿ ರಸ್ತೆ ಅಗಲೀಕರಣದಿಂದ ಆಸ್ತಿ ಕಳೆದುಕೊಂಡ ಪ್ರಣಯರಾಜ್ ಕಟಂಬಲೆ, ಸೂರಜ್ ಆಳಂದಕರ್, ವೀರಣ್ಣ ಮೇಲ್ಕೇರಿ, ಅಡವೀರಾಜ ಅತ್ನೂರೆ, ದತ್ತು ಕುಂಬಾರ, ಭರತ ಸಂಗಾ, ಸಿದ್ಧಾರೂಢ ಸ್ವಾಮಿ, ಕಿಶನ ರಂಗದಾಳ, ದಶರಥ ಬೋಸ್ಲೆ, ನಿತೀನ್ ಶಹಾ, ಅಮಿತಚಂದ ಶಹಾ, ಸಂಗಮೇಶ ಸಜ್ಜನ್, ಅಜೀತ ಶಹಾ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ರಾಯಚೂರು | ಬಾಲ್ಯ ವಿವಾಹ ನಿಷೇಧ ಜಾಗೃತಿ ಸಂಚಾರಿ ರಥಕ್ಕೆ ಹಸಿರು ನಿಶಾನೆ
ಮಕ್ಕಳು ಭವಿಷ್ಯ ರೂಪಿಸಿಕೊಳ್ಳುವತ್ತ ಗಮನ ಹರಿಸಲಿ: ನ್ಯಾ.ಹೆಚ್.ಎ.ಸಾತ್ವಿಕ್
Gaza Peace: ಗಾಜಾ ಶಾಂತಿ ಮಾತುಕತೆ ಜೊತೆಗೇ ನಿಲ್ಲದ ಕಾರ್ಯಾಚರಣೆ, ವಾಯುದಾಳಿಗೆ 27 ಬಲಿ?
ಇಸ್ರೇಲ್ ಮತ್ತು ಹಮಾಸ್ ನಡುವೆ ಗಾಜಾ ಪಟ್ಟಿಯಲ್ಲಿ ನಡೆಯುತ್ತಿರುವ ರಣಭೀಕರ ಯುದ್ಧವನ್ನು ನಿಲ್ಲಿಸಬೇಕು ಎಂಬುದು ಇಡೀ ಜಗತ್ತಿನ ಆಸೆ. ಇದೇ ಕಾರಣಕ್ಕೆ ಇಸ್ರೇಲ್ ಮತ್ತು ಹಮಾಸ್ ಯುದ್ಧ ನಿಲ್ಲಿಸಲು ಏನು ಸಾಧ್ಯವೋ ಅದನ್ನೆಲ್ಲಾ ಮಾಡುತ್ತಿವೆ ಜಗತ್ತಿನ ಶಕ್ತಿಶಾಲಿ ದೇಶಗಳು. ಆದರೂ ಈ ಯುದ್ಧ ನಿಲ್ಲಿಸುವುದು ಅಷ್ಟು ಸುಲಭದ ವಿಚಾರವಲ್ಲ, ಏಕೆಂದರೆ ಒಂದು ಕಡೆ ಯುದ್ಧ ನಿಲ್ಲಿಸಿ ಇನ್ನೇನು
ಹೊಸಪೇಟೆ | ಸಂಚಾರ ಪೊಲೀಸ್ ಠಾಣೆಯ ಎಸ್ಐ ಶೇಷಾಚಲಂ ನಾಯ್ಡುಗೆ ವಯೋನಿವೃತ್ತಿ ಬೀಳ್ಕೊಡುಗೆ
ವಿಜಯನಗರ (ಹೊಸಪೇಟೆ) :ಹೊಸಪೇಟೆ ನಗರದ ಸಂಚಾರ ಪೊಲೀಸ್ ಠಾಣೆಯ ಎಸ್ಐ ಶ್ರೀ ಶೇಷಾಚಲಂ ನಾಯ್ಡು ಅವರ ವಯೋನಿವೃತ್ತಿ ಕಾರ್ಯಕ್ರಮವನ್ನು ನಗರದ ರಾಯಲ್ ಫಂಕ್ಷನ್ ಹಾಲ್ನಲ್ಲಿ ಭಾನುವಾರ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳು, ಸಹೋದ್ಯೋಗಿಗಳು, ಬಂಧುಬಳಗ ಹಾಗೂ ಸ್ನೇಹಿತರು ಭಾಗವಹಿಸಿ, ಶ್ರೀ ಶೇಷಾಚಲಂ ನಾಯ್ಡು ಅವರ ದೀರ್ಘಕಾಲದ ಸೇವೆ, ಶಿಸ್ತುಬದ್ಧ ಕಾರ್ಯಶೈಲಿ ಹಾಗೂ ಪೊಲೀಸ್ ಇಲಾಖೆಗೆ ನೀಡಿದ ಅಮೂಲ್ಯ ಕೊಡುಗೆಗಳನ್ನು ಸ್ಮರಿಸಿದರು. ತಮ್ಮ ವೃತ್ತಿ ಜೀವನದಲ್ಲಿ ಸಂಚಾರ ನಿಯಂತ್ರಣ, ಸಾರ್ವಜನಿಕ ಸೇವೆ ಮತ್ತು ಶಿಸ್ತು ಕಾಪಾಡುವಲ್ಲಿ ಅವರು ಸಲ್ಲಿಸಿದ ಸೇವೆಯನ್ನು ಮೆಚ್ಚಿ, ಭಾಗವಹಿಸಿದ್ದ ಗಣ್ಯರು ಭಾವಪೂರ್ಣವಾಗಿ ಬೀಳ್ಕೊಡುಗೆ ನೀಡಿ ಶುಭ ಹಾರೈಸಿದರು.
ಕಲಬುರಗಿ ನಗರಕ್ಕೆ ಕಲುಷಿತ ನೀರು: ಮಹಾಪೌರ, ಆಯುಕ್ತರಿಂದ ಸ್ಪಷ್ಟನೆ
ಕಲಬುರಗಿ, ಜ.31: ಭೀಮಾ ಬ್ಯಾರೇಜ್ನಿಂದ ಕಲಬುರಗಿ ನಗರಕ್ಕೆ ನೀರು ಸರಬರಾಜು ಮಾಡುತ್ತಿರುವ ಶುದ್ಧೀಕರಣ ಘಟಕದಲ್ಲಿ ಯಂತ್ರಗಳಲ್ಲಿ ದೋಷಗಳು ಕಾಣಿಸಿಕೊಂಡಿದ್ದರಿಂದ ಕಲುಷಿತ ನೀರು ಸರಬರಾಜು ಆಗಿದೆ. ಹಾಗಾಗಿ ನೀರು ಪೂರೈಕೆ ಸ್ಥಗಿತಗೊಳಿಸಲಾಗಿತ್ತು ಎಂದು ಕಲಬುರಗಿ ಮಹಾನಗರ ಪಾಲಿಕೆಯ ಮಹಾಪೌರ ವರ್ಷಾ ಜಾನೆ ಹಾಗೂ ಪಾಲಿಕೆ ಆಯುಕ್ತ ಅವಿನಾಶ್ ಶಿಂಧೆ ಅವರು ಸ್ಪಷ್ಟನೆ ನೀಡಿದ್ದಾರೆ. ಶುಕ್ರವಾರ ಪಾಲಿಕೆಯ ಕಚೇರಿಯಲ್ಲಿ ಜಂಟಿಯಾಗಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಶುದ್ಧೀಕರಣ ಘಟಕದಲ್ಲಿ ತಾಂತ್ರಿಕ ತೊಂದರೆಯಾಗಿರುವ ಕಾರಣ ಹಾಳಾಗಿರುವ ಯಂತ್ರ ಸ್ಥಳೀಯವಾಗಿ ಲಭ್ಯವಿರಲಿಲ್ಲ. ಹಾಗಾಗಿ ಅವುಗಳನ್ನು ಮಹಾರಾಷ್ಟ್ರದ ಪುಣೆ, ಗುಜರಾತ್ ಕಡೆಗಳಿಂದ ತರಿಸಿ ಅಳವಡಿಸಲಾಗಿದೆ. ರವಿವಾರದಿಂದ ಮತ್ತೆ ಶುದ್ಧ ನೀರು ನಗರಕ್ಕೆ ಸರಬರಾಜು ಮಾಡಲಾಗುತ್ತಿದೆ ಎಂದರು. ಕಳೆದ ಒಂದು ವಾರದಿಂದ ಯಂತ್ರಗಳು ಕೆಟ್ಟು ಹೋಗಿದ್ದರಿಂದ ನೀರು ಸಮರ್ಪಕವಾಗಿ ಶುದ್ಧೀಕರಣ ಆಗುತ್ತಿರಲಿಲ್ಲ. ಹಾಗಾಗಿ ಕಲುಷಿತ ನೀರು ಸರಬರಾಜು ಆಗಿತ್ತು. ಇದನ್ನು ಎಚ್ಚೆತ್ತುಕೊಂಡೇ ನಾವು ನೀರು ಸರಬರಾಜು ಮಾಡುವುದನ್ನು ನಿಲ್ಲಿಸಿದ್ದೆವು. ಈಗ ಉತ್ತಮ ಯಂತ್ರಗಳ ಅಳವಡಿಕೆ ಮಾಡಿರುವುದರಿಂದ ಯೋಗ್ಯ ನೀರು ಸಿಗಲಿದೆ ಎಂದು ವಿವರಿಸಿದರು. ಕಳೆದ ಒಂದು ವಾರದಿಂದ ನೀರಿನ ಪೂರೈಕೆ ಆಗದೆ ಇರುವುದರಿಂದ ಹೆಚ್ಚಿನ ಕಡೆಗಳಲ್ಲಿ ಟ್ಯಾಂಕರ್ ನೀರು ಸರಬರಾಜು ಮಾಡಲಾಗಿದೆ. ಮುಂದಿನ ದಿನಗಳಲ್ಲಿ ನಿವಾಸಿಗಳಿಗೆ ತೊಂದರೆಯಾಗದಂತೆ ಸಮರ್ಪಕ ನೀರು ಒದಗಿಸುವಲ್ಲಿ ಪಾಲಿಕೆ ಶ್ರಮಿಸುತ್ತಿದೆ ಎಂದ ಪಾಲಿಕೆ ಆಯುಕ್ತರು, ಕೊಳವೆ ಬಾವಿ ದುರಸ್ತಿ, ಹೊಸ ಕೊಳವೆ ಬಾವಿ ಕೊರೆಯುವುದು ಸೇರಿದಂತೆ ಶುದ್ಧ ನೀರಿನ ಘಟಕಗಳ ಅಳವಡಿಕೆ, ಕಾರ್ಯವೂ ನಡೆಯುತ್ತಿದೆ ಎಂದು ತಿಳಿಸಿದರು.
Pakistan Economy: ಸಾಲಕ್ಕಾಗಿ ಭಿಕ್ಷೆ ಬೇಡುತ್ತಿರುವ ಬಗ್ಗೆ ಕೊನೆಗೂ ಒಪ್ಪಿಕೊಂಡ ಪಾಕ್ ಪ್ರಧಾನಿ ಷರೀಫ್
ಪಾಕಿಸ್ತಾನ ಆರ್ಥಿಕವಾಗಿ ಬೀದಿಗೆ ಬಂದು ನರಳುತ್ತಿರುವ ವಿಚಾರ ಇಡೀ ಜಗತ್ತಿಗೇ ಗೊತ್ತಾಗಿದ್ದು, ಈ ದೇಶ ತನ್ನನ್ನು ತಾನು ಮುನ್ನಡೆಸಿಕೊಂಡು ಹೋಗಲು ಆಗುತ್ತಿಲ್ಲ. ಅದರಲ್ಲೂ ಸ್ವತಃ ಪಾಕ್ ರಾಜಕಾರಣಿಗಳೇ ಇದೀಗ ಸಾಲಕ್ಕಾಗಿ ಭಿಕ್ಷೆ ಬೇಡುತ್ತಿರುವ ಬಗ್ಗೆ ಕೊನೆಗೂ ಸತ್ಯ ಒಪ್ಪಿಕೊಂಡಿದ್ದಾರೆ. ಈ ಮೂಲಕ ಜಾಗತಿಕ ಮಟ್ಟದಲ್ಲಿ ಪಾಕಿಸ್ತಾನಕ್ಕೆ ಗೌರವ ಯಾಕೆ ಕುಸಿಯುತ್ತಿದೆ ಎಂಬುದನ್ನ ಅವರೇ ಒಪ್ಪಿಕೊಂಡ ರೀತಿ ಕಾಣಿಸುತ್ತಿದೆ.
ಕಾರಾಗೃಹಗಳ ಮೇಲೆ 24 ಗಂಟೆಯೂ ನಿಗಾ: ಗಾಂಧಿನಗರದಲ್ಲಿ ಹೊಸ ಕಮಾಂಡ್ ಸೆಂಟರ್ ಆರಂಭ
ಬೆಂಗಳೂರು: ರಾಜ್ಯದ ಕಾರಾಗೃಹ ವ್ಯವಸ್ಥೆಯಲ್ಲಿ ತಂತ್ರಜ್ಞಾನ ಆಧಾರಿತ ಸುಧಾರಣೆಯತ್ತ ಸರ್ಕಾರ ಮತ್ತೊಂದು ಮಹತ್ವದ ಹೆಜ್ಜೆ ಇಟ್ಟಿದೆ. ಬೆಂಗಳೂರಿನ ಗಾಂಧಿನಗರದಲ್ಲಿರುವ ಕರ್ನಾಟಕ ರಾಜ್ಯ ಕಾರಾಗೃಹ ಮತ್ತು ಸುಧಾರಣಾ ಸೇವಾ ಇಲಾಖೆಯ ಪ್ರಧಾನ ಕಚೇರಿಯಲ್ಲಿ ನೂತನವಾಗಿ ಸ್ಥಾಪಿಸಲಾದ ಕಾರಾಗೃಹ ‘ಸೆಂಟ್ರಲ್ ಕಮಾಂಡ್ ಸೆಂಟರ್' ಅನ್ನು ಗೃಹ ಸಚಿವ ಜಿ.ಪರಮೇಶ್ವರ್ ಉದ್ಘಾಟಿಸಿದ್ದು, ಈ ಕೇಂದ್ರದ ಮೂಲಕ ರಾಜ್ಯದ ಎಲ್ಲ ಪ್ರಮುಖ ಕಾರಾಗೃಹಗಳ
ಮಕ್ಕಳಿಗೆ ಸಾಮಾಜಿಕ ಮಾಧ್ಯಮ ಬಳಕೆ ನಿಷೇಧಿಸಲು ಆಗ್ರಹಿಸಿ ಕೇಂದ್ರಕ್ಕೆ ಪತ್ರ: ಸಚಿವ ದಿನೇಶ್ ಗುಂಡೂರಾವ್
ಮಂಗಳೂರು, ಜ. 31: ಸಾಮಾಜಿಕ ಜಾಲಾತಾಣಗಳು ಮಕ್ಕಳ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುವ ವಿಚಾರ ಇದೊಂದು ಜಾಗತಿಕ ಸಮಸ್ಯೆಯಾಗಿದೆ. ಇದಕ್ಕೆ ಕಾನೂನಾತ್ಮಕವಾಗಿ ಸ್ಪಂದಿಸಬೇಕಾಗುತ್ತಿದೆ. ಇವತ್ತಿನ ಪೀಳಿಗೆಗೆ ಇದೊಂದು ದೊಡ್ಡ ಸಮಸ್ಯೆಯಾಗಿದೆ. ಆಸ್ತ್ರೇಲಿಯದಲ್ಲಿ ಈಗಾಗಲೇ ಮಕ್ಕಳಿಗೆ ಸಾಮಾಜಿಕ ಮಾಧ್ಯಮ ಬಳಕೆಯನ್ನು ನಿಷೇಧಿಸಲಾಗಿದೆ. ನಮ್ಮ ದೇಶದಲ್ಲಿ ಇದು ಅಗತ್ಯ. ಈ ವಿಚಾರದ ಬಗ್ಗೆ ಕೇಂದ್ರ ಆರೋಗ್ಯ ಸಚಿವ ಜೆ.ಪಿ. ನಡ್ಡಾ ಅವರಿಗೆ ಪತ್ರ ಬರೆಯಲಾಗುವುದು ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂ ರಾವ್ ಹೇಳಿದ್ದಾರೆ ಮಂಗಳೂರಿನಲ್ಲಿ ಶನಿವಾರ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದರು. ಸಾಮಾಜಿಕ ಜಾಲಾತಾಣಗಳು ಮಕ್ಕಳ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುವ ವಿಚಾರದ ಬಗ್ಗೆ ಮಾತನಾಡಿದ ಅವರು ಯುವ ಸಮುದಾಯ ಮಾನಸಿಕ ಖಿನ್ನತೆ , ಒತ್ತಡ ಮತ್ತಿತರ ಸಮಸ್ಯೆಯಿಂದ ಬಳಲುತ್ತಿರುವ ಪ್ರಕರಣಗಳು ನಮ್ಮಲ್ಲಿ ಜಾಸ್ತಿಯಾಗಿದೆ. ಇದೊಂದು ಯುವ ಪೀಳಿಗೆಗೆ ದೊಡ್ಡ ಸಮಸ್ಯೆಯಾಗಿದೆ ಆತ್ಮಹತ್ಯೆ ಉದ್ಯಮಿ ಸಿ.ಜೆ. ರಾಯ್ ಯಾವ ಕಾರಣಕ್ಕಾಗಿ ಆತ್ಮಹತ್ಯೆ ಮಾಡಿಕೊಂಡರು ಮತ್ತು ಏನಾಗಿದೆ ಎಂಬ ವಿಚಾರ ನನಗೆ ಗೊತ್ತಿಲ್ಲ. ಐಟಿ ಮತ್ತು ಈಡಿ ತಮ್ಮ ಜವಾಬ್ದಾರಿಯನ್ನು ನಿರ್ವಹಿಸಬೇಕಾಗುತ್ತದೆ. ರಾಯ್ ಆತ್ಮಹತ್ಯೆಗೆ ಈಡಿ ಹಾಗೂ ಐಟಿ ಒತ್ತಡ ಕಾರಣ ಎಂದು ನಾನು ಹೇಳುವುದಿಲ್ಲ ಎಂದರು. ದೇಶದಲ್ಲಿ ಈಡಿ , ಐಟಿ ಮತ್ತಿತರ ತನಿಖಾ ಸಂಸ್ಥೆಗಳನ್ನು ರಾಜಕೀಯ ಉದ್ದೇಶಕ್ಕಾಗಿ ಬಳಕೆಯಾಗುತ್ತಿದೆ. ಆದರೆ ರಾಯ್ ಆತ್ಮಹತ್ಯೆ ಈಡಿ ಮತ್ತು ಐಟಿ ಅಧಿಕಾರಿಗಳು ಒತ್ತಡವಿತ್ತು ಎಂದು ನನಗೆ ಹೇಳಲು ಸಾಧ್ಯವಿಲ್ಲ ಎಂದರು. ಬಿಲ್ ಬಾಕಿ ಇರುವುದು ನಿಜ: ಕಾಮಗಾರಿ ನಿರ್ವಹಿಸಿದ ಗುತ್ತಿಗೆದಾರರಿಗೆ ಬಿಲ್ ಬಾಕಿ ಇರುವ ವಿಚಾರಕ್ಕೆ ಸಂಬಂಧಿಸಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಸಚಿವ ದಿನೇಶ್ ಗುಂಡೂ ರಾವ್ ಅವರು ರಾಜ್ಯದಲ್ಲಿ ಎಲ್ಲ ಕಡೆ ಕಾಮಗಾರಿ ನಡೆಯುತ್ತಿದೆ. ಕೆಲವು ಕಾಮಗಾರಿಗಳ ಬಿಲ್ ಬಾಕಿ ಇರುವುದು ನಿಜ. ಕೇಂದ್ರ ಸರಕಾರದಿಂದ ಕೋಟ್ಯಂತರ ಹಣ ಬರಲು ಬಾಕಿ ಇದೆ.ಆದರೆ ವಿನಾ ಕಾರಣ ಗುತ್ತಿಗೆದಾರ ಸಂಘಟನೆಗಳು ಸರಕಾರದ ಮೇಲೆ ಇಲ್ಲ ಸಲ್ಲದ ಆರೋಪ ಮಾಡುವುದು ಸಲ್ಲದು. ಸರಕಾರದೊಂದಿಗೆ ಮಾತುಕತೆ ನಡೆಸಿ ಅವರು ತಮ್ಮ ಸಮಸ್ಯೆ ಇತ್ಯರ್ಥಗೊಳಿಸಲಿ ಎಂದು ಹೇಳಿದರು.
ಇಶಾನ್ ಕಿಶನ್ ಶತಕದ ಬಳಿಕ ಅರ್ಶದೀಪ್ ಸಿಂಗ್ ಫೈಫರ್! ಟೆಸ್ಟ್-ಏಕದಿನದಲ್ಲಿ ಹೋದ ಮಾನ ಟಿ20ಯಲ್ಲಿ ಬಂತು!
2024ರಲ್ಲಿ ಭಾರತ ತಂಡ ನ್ಯೂಜಿಲೆಂಜ್ ವಿರುದ್ಧ ಟೆಸ್ಟ್ ಸರಣಿಯಲ್ಲಿ 3-0 ವೈಟ್ ವಾಶ್ ಮುಖಭಂಗ ಅನುಭವಿಸಿತ್ತು. ಇತ್ತೀಚೆಗೆ ಮುಗಿದ ಏಕದಿನ ಸರಣಿಯಲ್ಲೂ 2-1 ಅಂತರದಲ್ಲಿ ಸೋಲನುಭವಿಸಿತ್ತು. ಟೆಸ್ಟ್ ಮತ್ತು ಏಕದಿನ ಸರಣಿಗಳಲ್ಲಿ ಹೋದ ಭಾರತದ ಮಾನ ಇದೀಗ ಟಿ20 ಕ್ರಿಕೆಟ್ ನಲ್ಲಿ ಬಂದಿದೆ. ನ್ಯೂಜಿಲೆಂಡ್ ವಿರುದ್ಧ 46 ರನ್ ಗಳ ಭರ್ಜರಿ ಜಯ ಸಾಧಿಸುವ ಮೂಲಕ ಐಸಿಸಿ ಟಿ20 ವಿಶ್ವಕಪ್ ಗೂ ಮುನ್ನ ನಡೆದ 5 ಪಂದ್ಯಗಳ ಟಿ20 ಸರಣಿಯನ್ನು 4-1 ಅಂತರದಿಂದ ಗೆದ್ದುಕೊಂಡಿದೆ. ಈ ಮೂಲಕ ತಾನೇಕೆ ಕ್ರಿಕೆಟ್ ಕ್ರಿಕೆಟ್ ನಲ್ಲಿ ನಂಬರ್ 1 ತಂಡ ಎಂಬುದನ್ನು ಮತ್ತೊಮ್ಮೆ ಸಾಬೀತು ಪಡಿಸಿದೆ. ಭಾರತಕ್ಕೆ ಇದು ನಿರಂತರ 13ನೇ ಟಿ20 ಸರಣಿ ಜಯವಾಗಿದೆ. ತಿರುವನಂತಪುರದಲ್ಲಿ ಶನಿವಾರ ನಡೆದದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ ನಿಗದಿತ 20 ಓವರ್ ಗಳಲ್ಲಿ 271 ರನ್ ಕಲೆ ಹಾಕಿತು. ಇದಕ್ಕುತ್ತರವಾಗಿ ನ್ಯೂಜಿಲೆಂಡ್ ತಂಡ 19.4 ಓವರ್ ಗಳಲ್ಲಿ 225 ರನ್ ಗಳಿಗೆ ಆಲೌಟ್ ಆಯಿತು. ರಸ್ ಗಳ ಪ್ರವಾಹವೇ ಹರಿದ ಪಂದ್ಯದಲ್ಲಿ ನ್ಯೂಜಿಲೆಂಡ್ ಬ್ಯಾಟರ್ ಗಳು ಸರ್ವಪ್ರಯತ್ನವನ್ನು ನಡೆಸಿದರೂ ಅಂತಿಮವಾಗಿ 46 ರನ್ ಗಳಿಂದ ಹಿಂದೆ ಉಳಿದರು. ಕಿವೀಸ್ ಬಳಗದಿಂದ ಫಿನ್ ಅಲೆನ್ ಅವರು ಕೇವಲ 38 ಎಸೆತಗಳಲ್ಲಿ 80 ರನ್ ಬಾರಿಸಿ ಭಾರತದ ಪಾಳಯಕ್ಕೆ ತಲೆನೋವಾಗಿದ್ದರು. ರಚಿನ್ ರವೀಂದ್ರ(17 ಎಸೆತಗಳಲ್ಲಿ 30 ರನ್ ) ಅವರು ಅಲೆನ್ ಗೆ ಉತ್ತಮ ಸಾಥ್ ನೀಡಿದರು. ಆದರೆ ಅಕ್ಷರ್ ಪಟೇಲ್ ಅವರು ಅವರನ್ನು ರಿಂಕು ಸಿಂಗ್ ಅವರಿಗೆ ಕ್ಯಾಚ್ ಕೊಡಿಸುವ ಮೂಲಕ ಕಿವೀಸ್ ರನ್ ಓಘಕ್ಕೆ ಕಡಿವಾಣ ಹಾಕಿದರು. ಆ ಮೇಲೆ ಡೆರಿಲ್ ಮಿಚೆಲ್(12 ಎಸೆತದಲ್ಲಿ 28), ಇಶ್ ಸೋಧಿ( 15 ಎಸೆತದಲ್ಲಿ 33) ವೇಗವಾಗಿ ರನ್ ಗಳಿಸುವ ಪ್ರಯತ್ನ ಮಾಡಿದರೂ ಗುರಿಯ ಸಮೀಪವೂ ಬರಲು ಸಾಧ್ಯವಾಗಲಿಲ್ಲ.ಇದಕ್ಕೂ ಮೊದಲು ಮತ್ತು ನಾಯಕ ಸೂರ್ಯಕುಮಾರ್ ಯಾದವ್ ಅವರ ಅದ್ಭುತ ಬ್ಯಾಟಿಂಗ್ ಪ್ರದರ್ಶನದ ಸಹಾಯದಿಂದ ಭಾರತ ತಂಡ ರನ್ ಗಳ ಪರ್ವತವೇರಿ ನಿಂತಿತು. ಇಶಾನ್ ಕಿಶನ್ ಅವರು 43 ಎಸೆತಗಳಿಂದ 6 ಬೌಂಡರಿ ಮತ್ತು 10 ಸಿಕ್ಸರ್ ಗಳಿದ್ದ 103 ರನ್ ಗಳಿಸಿದರು. ಇನ್ನು ಅವರು 30 ಎಸೆತಗಳಿಂದ 4 ಬೌಂಡರಿ ಮತ್ತು 6 ಸಿಕ್ಸರ್ ಗಳಿದ್ದ 63 ರನ್ ಹೊಡೆದರು. ಡೆತ್ ಓವರ್ ಗಳಲ್ಲಿ ಹಾರ್ದಿಕ್ ಪಾಂಡ್ಯ 17 ಎಸೆತಗಳಲ್ಲಿ 1 ಬೌಂಡರಿ ಮತ್ತು 4 ಸಿಕ್ಸರ್ ಗಳಿದ್ದ 42 ರನ್ ಗಳಿಸಿದ್ದು ಸಹ ತಂಡದ ಮೊತ್ತ ಮತ್ತಷ್ಟು ಹೆಚ್ಚಾಗಲು ಕಾರಣವಾಯಿತು. ಭಾರತದ ಬ್ಯಾಟಿಂಗ್ ಮುಂದೆ ನ್ಯೂಜಿಲೆಂಡ್ ತಂಡದ ಬೌಲರ್ ಗಳು ಅಕ್ಷರಶಃ ನಿರುತ್ತರರಾದರು. ಸಂಕ್ಷಿಪ್ತ ಸ್ಕೋರ್ ಭಾರತ 20 ಓವರ್ ಗಳಲ್ಲಿ 271/5, ಇಶಾನ್ ಕಿಶನ್ 103(43), ಸೂರ್ಯಕುಮಾರ್ ಯಾದವ್ 63(30), ಹಾರ್ದಿಕ್ ಪಾಂಡ್ಯ42(17), ಅಭಿಷೇಕ್ ಶರ್ಮಾ 30(16), ಲೋಕಿ ಫರ್ಗ್ಯುಸನ್ 41ಕ್ಕೆ2, ಜಾಕೋಬ್ ಡಫಿ 53ಕ್ಕೆ1, ಮಿಚೆಲ್ ಸ್ಯಾಂಟ್ನರ್ 60ಕ್ಕೆ 1. ನ್ಯೂಜಿಲೆಂಡ್ 19.4 ಓವರ್ ಗಳಲ್ಲಿ 225ಕ್ಕೆ ಆಲೌಟ್, ಫಿನ್ ಅಲೆನ್ 80(38), ಇಶ್ ಸೋಧಿ 33(15), ರಚಿನ್ ರವೀಂದ್ರ 30(17), ಡೆರಿಲ್ ಮಿಚೆಲ್ 26(12), ಅರ್ಶದೀಪ್ ಸಿಂಗ್ 51ಕ್ಕೆ 5, ಅಕ್ಷರ್ ಪಟೇಲ್ 33ಕ್ಕೆ 3, ವರುಣ್ ಚಕ್ರವರ್ತಿ 36ಕ್ಕೆ 1.
ಆಯುಷ್ನಿಂದ ಆನೇಕ ರೋಗಗಳ ನಿಯಂತ್ರಣ, ಚಿಕಿತ್ಸೆ ಸಾಧ್ಯ: ಸಚಿವ ದಿನೇಶ್ ಗುಂಡೂರಾವ್
ಮಂಗಳೂರು, ಜ.31: ಇಂದು ಜಗತ್ತಿನಲ್ಲಿ ಆಲೋಪತಿಗೆ ಬೇಡಿಕೆ ಆವಶ್ಯಕತೆ ಇದ್ದೇ ಇದೆ. ಇದರ ಜೊತೆಗೆ ಆಯುರ್ವೇದ, ಹೋಮಿಯೊಪತಿ, ಯುನಾನಿ ಮತ್ತಿತರ ಆಯುಷ್ ಪದ್ಧತಿಯ ಮೂಲಕ ಆನೇಕ ರೋಗಗಳ ನಿವಾರಣೆ ಮತ್ತು ರೋಗ ನಿಯಂತ್ರಣ ಮಾಡಲು ಸಾಧ್ಯ ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂ ರಾವ್ ಹೇಳಿದ್ದಾರೆ ನಗರದ ಡಾ. ಟಿ.ಎಂ.ಎ ಪೈ ಇಂಟರ್ ನ್ಯಾಷನಲ್ ಕನ್ವೆನ್ಶನ್ ಸೆಂಟರ್ನಲ್ಲಿ ಆಯುಷ್ ಹಬ್ಬ ಸಮಿತಿ 2026 ವತಿಯಿಂದ ಆಯೋಜಿಸಲಾದ ಎರಡು ದಿನಗಳ ಆಯುಷ್ ಹಬ್ಬ 2026ರಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ಆಯುಷ್ ಮೇಳವನ್ನು ಉತ್ತಮವಾಗಿ ಆಯೋಜಿಸಲಾಗಿದೆ.ದ.ಕ. ಮತ್ತು ಉಡುಪಿ ಜಿಲ್ಲೆಯಲ್ಲಿ ಆಯುಷ್ಗೆ ಬಹಳಷ್ಟು ಪ್ರಾಮುಖ್ಯತೆ ಇದೆ. ಆಯುಷ್ನಲ್ಲಿ ಉತ್ತಮ ಸಂಶೋಧನೆ ನಡೆದಿದೆ. ಪಾರಂಭಿಕ ವೈದ್ಯ ಪದ್ಥತಿಯನ್ನು ಸಂಶೋಧನೆ ಮಾಡಿರುವುದನ್ನು ಆಧುನಿಕ ಜಗತ್ತಿಗೆ ಮತ್ತೊಮ್ಮೆ ತಿಳಿಸುವ ಪ್ರಯತ್ನ ಅಗಿದೆ ಎಂದು ಶ್ಲಾಘಿಸಿದರು. ಸ್ವಸ್ಥ ಸಮಾಜ ನಿರ್ಮಾಣದಲ್ಲಿ ಪ್ರಾಚೀನ ವೈದ್ಯ ಪದ್ದತಿಯ ಪಾತ್ರ ದೊಡ್ಡದು. ಇದರ ಬಗ್ಗೆ ಜಾಗೃತಿ ಅಗತ್ಯ ಎಂದು ಉಪ್ಪಳ ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮದ ಮಠಾಧೀಶ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ ಹೇಳಿದ್ದಾರೆ. ನಗರದ ಡಾ. ಟಿ.ಎಂ.ಎ ಪೈ ಇಂಟರ್ ನ್ಯಾಷನಲ್ ಕನ್ವೆನ್ಶನ್ ಸೆಂಟರ್ನಲ್ಲಿ ಆಯುಷ್ ಹಬ್ಬ ಸಮಿತಿ 2026 ವತಿಯಿಂದ ಆಯೋಜಿಸಲಾದ ಎರಡು ದಿನಗಳ ಆಯುಷ್ ಹಬ್ಬ 2026ನ್ನು ಶನಿವಾರ ಉದ್ಘಾಟಿಸಿ ಮಾತನಾಡಿದರು. ಭಾರತೀಯ ಪ್ರಾಚೀನ ವೈದ್ಯ ಪದ್ದತಿಗಳು ದೈಹಿಕ ಮಾತ್ರವಲ್ಲದೆ ಮಾನಸಿಕ ಆರೋಗ್ಯವನ್ನು ಕೂಡ ನೀಡುತ್ತವೆ. ಇದು ಋಷಿ ಮುನಿಗಳು ಜಗತ್ತಿನ ಆರೋಗ್ಯ, ಕಲ್ಯಾಣಕ್ಕಾಗಿ ತೋರಿಸಿದ ಉತ್ತಮ ದಾರಿ ಎಂದು ನುಡಿದರು. ದೇಶದ ಶ್ರೀಮಂತವಾದ ವೈದ್ಯ ಪರಂಪರೆ ಉಳಿಸಬೇಕು. ಅಂತೆಯೇ ಮುಂದಿನ ಜನಾಂಗಕ್ಕಾಗಿ ನಮ್ಮ ಪ್ರಕೃತಿಯನ್ನು ಉಳಿಸುವ ಜವಾಬ್ದಾರಿ ಕೂಡ ನಮ್ಮೆಲ್ಲರ ಮೇಲಿದೆ ಎಂದು ಸ್ವಾಮೀಜಿ ಹೇಳಿದರು. ಮಂಗಳೂರು ಬಿಷಪ್ ಡಾ.ಪೀಟರ್ ಪೌಲ್ ಸಲ್ದಾನ್ಹ ಅವರು ಮಾತನಾಡಿ, ಅಲೋಪತಿ ಹಲವು ಕಾಯಿಲೆಗಳಿಗೆ ಲಸಿಕೆ, ಔಷಧಿ ನೀಡಿದೆ. ಆದರೆ ಇಂದು ಆಯುರ್ವೇದ, ಯುನಾನಿ ಮೊದಲಾದವುಗಳನ್ನು ಒಳಗೊಂಡ ಪಾರಂಪರಿಕವಾದ ಸಮಗ್ರ ವೈದ್ಯಪದ್ದತಿ ಕೂಡ ಜಾಗತಿಕವಾಗಿ ವ್ಯಾಪಕವಾಗಿ ಬಳಕೆಯಲ್ಲಿದೆ. ವಿಶ್ವ ಆರೋಗ್ಯ ಸಂಸ್ಥೆಯ ಇತ್ತೀಚಿನ ವರದಿ ಪ್ರಕಾರ ಶೇ 40- ಶೇ.90 ರಷ್ಟು ಮಂದಿ ಬೇರೆ ಬೇರೆ ರೀತಿಯ ಸಾಂಪ್ರದಾಯಿಕ ವೈದ್ಯಕೀಯ ಪದ್ದತಿಯನ್ನು ಅನುಸರಿಸುತ್ತಿದ್ದಾರೆ ಇದರ ಮಾರುಕಟ್ಟೆ ಕೂಡ ವಿಸ್ತರಣೆಯಾಗುತ್ತಿದೆ. ಆಲೋಪತಿಯಲ್ಲಿ ಗುಣವಾಗದ ಕೆಲವು ಕಾಯಿಲೆಗಳಿಗೆ ಆಯುರ್ವೇದದಲ್ಲಿ ಪರಿಹಾರ ದೊರೆಯುತ್ತಿದೆ. ಮಾನಸಿಕ, ದೈಹಿಕ ಆರೋಗ್ಯ, ನೆಮ್ಮದಿಗೆ ಆಯುಷ್ ಕಾರಣವಾಗಿದೆ ಎಂದು ಹೇಳಿದರು. ಪರಂಪರೆಯ ಆಹಾರ ಪದ್ದತಿ ಕಡೆಗೆ ಗಮನ ಹರಿಸಬೇಕಾಗಿದೆ: ಎಸ್ ವೈ ಎಸ್ ದ.ಕ ಜಿಲ್ಲಾಧ್ಯಕ್ಷ ಮೌಲಾನಾ ಅಬ್ದುಲ್ಅಝೀಝ್ ದಾರಿಮಿ ಅವರು ಮಾತನಾಡಿ, ಪ್ರಕೃತಿಯೊಂದಿಗೆ ಸೇರಿ ಬದುಕುವುದನ್ನು ನಮ್ಮ ಪಾರಂಪರಿಕ ಚಿಕಿತ್ಸಾ ಪದ್ದತಿ ಕಲಿಸಿಕೊಟ್ಟಿದೆ. ಮತ್ತೆ ಪರಂಪರೆಯ ಆಹಾರ ಪದ್ದತಿ, ವೈದ್ಯಕೀಯ ಪದ್ದತಿಯ ಕಡೆಗೆ ಹೆಚ್ಚು ಗಮನಹರಿಸಬೇಕಾಗಿದೆ ಎಂದು ಹೇಳಿದರು. ಮಾಹೆ ವಿವಿಯ ಪ್ರೊ ಚಾನ್ಸಲರ್ ಪ್ರೊ. ಎಚ್.ಎಸ್. ಬಳ್ಳಾಲ್ ಅವರು ಮಾತನಾಡಿ, ಇಂದು ಆಯುರ್ವೇದದ ಮೇಲಿನ ನಂಬಿಕೆ ಹೆಚ್ಚುತ್ತಿದೆ. ಮಾಹೆ ಆಯುರ್ವೇದಕ್ಕೂ ಆದ್ಯತೆ ನೀಡುತ್ತಿದೆ. ಹಲವು ಕಾಯಿಲೆಗಳಿಗೆ ಆಯುರ್ವೇದದಲ್ಲಿ ಪರಿಹಾರವಿದೆ. ಜೀವನದ ಗುಣಮಟ್ಟವನ್ನು ಹೆಚ್ಚಿಸಲು ಆಯುರ್ವೇದ ಸಹಾಯ ಮಾಡುತ್ತದೆ. ಆಯುರ್ವೇದದ ಬಗ್ಗೆ ಯುವ ಜನತೆಗೆ ಮನವರಿಕೆ ಮಾಡಿಕೊಡಬೇಕಾಗಿದೆ ಎಂದು ಹೇಳಿದರು. ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ವೇದವ್ಯಾಸ ಕಾಮತ್ ಅವರು ಮಾತನಾಡಿ, ಭಾರತದ ಪ್ರಾಚೀನ ವೈದ್ಯ ಪದ್ದತಿ ಶ್ರೀಮಂತವಾಗಿತ್ತು. ಇಂದಿಗೂ ಅದನ್ನು ಅನುಸರಿಸಿಕೊಂಡು ಬರಲಾಗುತ್ತಿದೆ. ಇದು ಋಷಿ ಮುನಿಗಳಿಂದ ಜಗತ್ತಿಗೆ ಲಭಿಸಿದ ವೈದ್ಯ ಪದ್ದತಿ. ದೈಹಿಕ ಕಾಯಿಲೆಗಳಿಗೆ ಔಷಧಿಯಾಗುವ ಜತೆಗೆ ಒತ್ತಡ ನಿವಾರಣೆ ಯಂತಹ ಮಾನಸಿಕ ಸಮಸ್ಯೆಗೂ ಪರಿಹಾರ ಒದಗಿಸುತ್ತದೆ. ಆಯುರ್ವೇದ ಸಹಿತ ಪಾರಂಪರಿಕ ವೈದ್ಯ ಪದ್ದತಿಯನ್ನು ಬೆಳೆಸುವುದಕ್ಕಾಗಿ ಕೇಂದ್ರ ಸರಕಾರ ಪ್ರತ್ಯೇಕ ಆಯುಷ್ ಸಚಿವಾಲಯ ರಚನೆ ಮಾಡಿದೆ ಎಂದು ಹೇಳಿದರು. ‘ಆಯುಷ್ ಹಬ್ಬ ಸಮಿತಿ- 2026‘ರ ಅಧ್ಯಕ್ಷ ಡಾ. ಕೇಶವ ಪಿ.ಕೆ ಅಧ್ಯಕ್ಷತೆ ವಹಿಸಿದ್ದರು. ದ.ಕ ಜಿಲ್ಲಾ ಆಯುಷ್ ಅಧಿಕಾರಿ ಡಾ. ಮುಹಮ್ಮದ್ ಇಕ್ಬಾಲ್, ಬೆಂಗಳೂರು ಎಸ್.ವ್ಯಾಸ ವಿಶ್ವವಿದ್ಯಾಲಯದ ಕುಲಪತಿ ಡಾ. ಎಚ್. ಆರ್. ನಾಗೇಂದ್ರ, ಶಾರದಾ ಸಮೂಹ ಸಂಸ್ಥೆಗಳ ಅಧ್ಯಕ್ಷ ಪ್ರೊ. ಎಂ.ಬಿ.ಪುರಾಣಿಕ್, ಎಸ್ ಡಿ ಎಂ ಆಯುರ್ವೇದ ಮೆಡಿಕಲ್ ಕಾಲೇಜುಗಳ ನಿರ್ದೇಶಕ ಡಾ.ಪ್ರಸನ್ನ ನರಸಿಂಹ ರಾವ್, ಡಾ.ಖಾಲಿದ್, ಕೋಟೆಕಲ್ ವೈದ್ಯಕೀಯ ಸಂಸ್ಥೆಯ ಡಾ. ಮಧು ವಾರಿಯರ್, ಆಯುರ್ವೇದ ಯುನಾನಿ ವೈದ್ಯ ಮಂಡಳಿಯ ಮಾಜಿ ಅಧ್ಯಕ್ಷ ಡಾ.ಸತ್ಯಮೂರ್ತಿ ಭಟ್, ಕಣಚೂರು ಸಮೂಹ ಸಂಸ್ಥೆಗಳ ಅಧ್ಯಕ್ಷ ಕಣಚೂರು ಮೋನು, ಸಂಘಟನಾ ಕಾರ್ಯದರ್ಶಿ ಡಾ.ಸಚಿನ್ ನಡ್ಕ ಉಪಸ್ಥಿತರಿದ್ದರು. ಆಯುಷ್ ಹಬ್ಬ ಸಮಿತಿಯ ಗೌರವಾಧ್ಯಕ್ಷೆ ಡಾ. ಆಶಾ ಜ್ಯೋತಿ ರೈ ಸ್ವಾಗತಿಸಿ ವಂದಿಸಿದರು. ಆರೋಗ್ಯಕರ ಆಹಾರ ಹಬ್ಬ, ಮಹಿಳಾ ಸ್ವಾಸ್ಥ್ಯ ಹಬ್ಬ, ಆಯುಷ್ ಸೌಂದರ್ಯ ಹಬ್ಬ, ಹೃದಯ ಆರೋಗ್ಯ ಸಂಭ್ರಮ, ನಾಡಿ ತರಂಗಿಣಿ, ಒತ್ತಡ ನಿರ್ವಹಣಾ ಕೌಶಲ್ಯ, ಸಂತೃಪ್ತ ಜೀವನ ಸಂಧ್ಯಾ, ಸ್ವದೇಶಿ ಸಾವಯವ ಹಬ್ಬ, ಸ್ವಾಸ್ಥ್ಯ ಪ್ರದರ್ಶನ ಮತ್ತು ಔಷಧ ಮಳಿಗೆಗಳು, ವೈದ್ಯಕೀಯ ಅಧೀವೇಶನದ ಹಾಕಥಾನ್, ಸಾಂಸ್ಕೃತಿಕ ವೈಭವ, ಮನರಂಜನಾ ಹಬ್ಬ, ಮಕ್ಕಳ ಹಬ್ಬ, ಆಯುಷ್ ಚಿಕಿತ್ಸಾ ದರ್ಶನ ಔಷಧಿ ಸಸ್ಯ ಪ್ರದರ್ಶನ, ಹಣ್ಣು ಹಂಪಲು, ತರಕಾರಿಗಳ ಆಯುಷ್ ಹಬ್ಬದಲ್ಲಿವೆ.
ಮೂಡಿಗೆರೆ ಶಾಸಕಿಯನ್ನು ಪಕ್ಷದಿಂದ ಉಚ್ಚಾಟಿಸಬೇಕಿತ್ತು : ಕೆ.ಮುಹಮ್ಮದ್
ಚಿಕ್ಕಮಗಳೂರು ಜಿಲ್ಲಾ ಮುಸ್ಲಿಮ್ ಒಕ್ಕೂಟದ ಸಭೆ
ಹಾಸನದಲ್ಲಿ ಸೈಟ್ ವಿಚಾರಕ್ಕೆ ನಟ ಯಶ್ನ ತಾಯಿ ಪುಷ್ಪಾ ಜಗಳ! ಏನ್ ರೌಡಿಸಂ ಮಾಡ್ತಿಯಾ? ಎಂದು ಆಕ್ರೋಶ; ಕೇಸ್ ದಾಖಲು
ಹಾಸನ ನಗರದ ವಿದ್ಯಾನಗರ ಬಡಾವಣೆಯಲ್ಲಿ ನಿವೇಶನದ ಮಾಲೀಕತ್ವ ವಿಚಾರವಾಗಿ ನಟ ಯಶ್ ಅವರ ತಾಯಿ ಪುಷ್ಪಾ ಮತ್ತು ಜಿಪಿಎ ಹೋಲ್ಡರ್ ದೇವರಾಜು ನಡುವೆ ತೀವ್ರ ವಾಗ್ವಾದ ನಡೆಯಿತು. ದಾಖಲೆಗಳ ಕುರಿತು ಪ್ರಶ್ನೆ ಎತ್ತಿದ ಪುಷ್ಪಾ, ತಮ್ಮ ಹಕ್ಕುಗಳಿಗಾಗಿ ಹೋರಾಡುತ್ತಿರುವುದಾಗಿ ತಿಳಿಸಿದರು. ಈ ಘಟನೆ ಸಂಬಂಧ ಐವರ ವಿರುದ್ಧ ಬಡಾವಣೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪಂಜಾಬ್ ಕಿಂಗ್ಸ್ನ ಯುವ ಲೆಗ್ ಸ್ಪಿನ್ನರ್ ವಿಶಾಲ್ ನಿಶಾದ್ ಅಚ್ಚರಿಯ ಹೇಳಿಕೆ ನೀಡಿದ್ದಾರೆ. ತಮ್ಮ ಆದರ್ಶವಾಗಿರುವ ವಿರಾಟ್ ಕೊಹ್ಲಿ ವಿಕೆಟ್ ಪಡೆದರೆ ಅವರ ಪಾದ ಮುಟ್ಟಿ ನಮಸ್ಕರಿಸುವುದಾಗಿ ಹೇಳಿದ್ದಾರೆ. ಉತ್ತರ ಪ್ರದೇಶ ಮೂಲದ ಪ್ರತಿಭಾವಂತ ಸ್ಪಿನ್ನರ್ ಕಠಿಣ ಪರಿಸ್ಥಿತಿಯಲ್ಲೂ ಛಲ ಬಿಡದೆ ಕ್ರಿಕೆಟ್ನಲ್ಲಿ ಯಶಸ್ಸು ಕಂಡವರು. ಯುಪಿಟಿ20 ಲೀಗ್ ನಲ್ಲಿ ಇವರ ಪ್ರತಿಭೆಯನ್ನು ಗಮನಿಸಿದ ಪಂಜಾಬ್ ಕಿಂಗ್ಸ್ ತಂಡ ಇವರನ್ನು ತನ್ನ ತೆಕ್ಕೆಗೆ ಸೆಳೆದುಕೊಂಡಿತ್ತ. ಇದೀಗ ಅವರು ತಮ್ಮ ಬಾಲ್ಯದ ಕನಸನ್ನು ನನಸಾಗಿಸಿಕೊಳ್ಳಲು ಉತ್ಸುಕರಾಗಿದ್ದಾರೆ.
ಬೆಂಗಳೂರಿನ ಎಚ್ಎಸ್ಆರ್ ಲೇಔಟ್ನಲ್ಲಿ ಬೆಳಗಿನ ವಾಕಿಂಗ್ಗೆ ತೆರಳಿದ್ದ ಟೆಕ್ಕಿ ಮಹಿಳೆಯ ಮೇಲೆ ನೆರೆಯವರ ಸಾಕು ನಾಯಿ ದಾಳಿ ನಡೆಸಿದೆ. ಈ ಘಟನೆಯಲ್ಲಿ ಮಹಿಳೆಗೆ ಮುಖ ಮತ್ತು ಕುತ್ತಿಗೆಗೆ ಗಂಭೀರ ಗಾಯಗಳಾಗಿದ್ದು, ಸುಮಾರು 50ಕ್ಕೂ ಹೆಚ್ಚು ಹೊಲಿಗೆ ಹಾಕಲಾಗಿದೆ. ನಾಯಿ ಮಾಲೀಕರ ವಿರುದ್ಧ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. ಗಾಯಗಳು ಶಾಶ್ವತವಾಗುವ ಸಾಧ್ಯತೆ ಇದೆ ಎಂದು ವೈದ್ಯರು ತಿಳಿಸಿದ್ದಾರೆ.
Union Budget 2026: 75 ವರ್ಷಗಳ ಬಜೆಟ್ ಪರಂಪರೆಗೆ ಬ್ರೇಕ್: ಹೊಸ ಹೆಜ್ಜೆ ಇಡಲಿದ್ದಾರೆ ನಿರ್ಮಲಾ ಸೀತಾರಾಮನ್
ನವದೆಹಲಿ: ಈ ವರ್ಷದ ಕೇಂದ್ರ ಬಜೆಟ್ (Union Budget 2026) 75 ವರ್ಷಗಳ ಹಿಂದಿನಿಂದ ನಡೆದುಕೊಂಡು ಬಂದಿರುವ ಪರಂಪರೆಯನ್ನು ಮುರಿಯಲು ಸಜ್ಜಾಗಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ತಮ್ಮ ಬಜೆಟ್ ಭಾಷಣದ ಭಾಗ-ಬಿ ಇದರಲ್ಲಿ ತೆರಿಗೆ ಘೋಷಣೆಗಳಿಗೆ ಮಾತ್ರ ಸೀಮಿತವಾಗದೇ, ಭಾರತದ ಆರ್ಥಿಕ ಭವಿಷ್ಯದ ಬಗ್ಗೆ ಸಮಗ್ರ ದೃಷ್ಟಿಕೋನವನ್ನು ಮಂಡಿಸುವ ಸಾಧ್ಯತೆ ಇದೆ ಎಂದು
ಹಣ ಬೇಡುತ್ತಾ ಜಗತ್ತು ಸುತ್ತಲು ನಮಗೆ ನಾಚಿಕೆಯಾಗುತ್ತದೆ: ಪಾಕ್ ಪ್ರಧಾನಿ ಷರೀಫ್
ಇಸ್ಲಮಾಬಾದ್: ತಾನು ಮತ್ತು ಸೇನಾ ಮುಖ್ಯಸ್ಥ ಆಸಿಮ್ ಮುನೀರ್ ಆರ್ಥಿಕ ನೆರವು ಬಯಸಿ ಜಗತ್ತನ್ನು ಸುತ್ತಿರುವುದಾಗಿ ಪಾಕಿಸ್ತಾನದ ಪ್ರಧಾನಿ ಷಹಬಾಜ್ ಷರೀಫ್ ಹೇಳಿದ್ದಾರೆ . ಶುಕ್ರವಾರ ರಾತ್ರಿ ಇಸ್ಲಮಾಬಾದ್ನಲ್ಲಿ ಪ್ರಮುಖ ರಫ್ತುದಾರರ ಜೊತೆ ನಡೆಸಿದ ಸಭೆಯಲ್ಲಿ ಷರೀಫ್ ` ಪಾಕಿಸ್ತಾನದ ಆರ್ಥಿಕ ಸ್ಥಿತಿಯಿಂದಾಗಿ ನಮ್ಮ ಮಿತ್ರರಾಷ್ಟ್ರಗಳೂ ಸಾಲ ನೀಡಲು ಹಿಂದೇಟು ಹಾಕುತ್ತಿವೆ. ಸಾಲ ಪಡೆಯಲು ಹೋಗುವವರ ತಲೆ ಯಾವತ್ತೂ ಬಾಗಿರುತ್ತದೆ ಎಂಬುದು ನಿಮಗೂ ತಿಳಿದಿದೆ. ಆಸಿಮ್ ಮುನೀರ್ ರೊಂದಿಗೆ ಹಣವನ್ನು ಬೇಡುತ್ತಾ ಜಗತ್ತನ್ನು ಸುತ್ತಲು ನಮಗೆ ನಾಚಿಕೆಯಾಗುತ್ತದೆ' ಎಂದು ಹೇಳಿರುವುದಾಗಿ ವರದಿಯಾಗಿದೆ.
ವೆನೆಝುವೆಲಾ ತೈಲವನ್ನು ಭಾರತ ಖರೀದಿಸಬಹುದು: ಅಮೆರಿಕ
ವಾಷಿಂಗ್ಟನ್: ರಶ್ಯದ ತೈಲ ಆದಾಯವನ್ನು ನಿಗ್ರಹಿಸುವ ಪ್ರಯತ್ನದ ಭಾಗವಾಗಿ ವೆನೆಝುವೆಲಾದ ತೈಲವನ್ನು ಖರೀದಿಸಲು ಭಾರತಕ್ಕೆ ಅಮೆರಿಕಾ ಆಹ್ವಾನ ನೀಡಿರುವುದಾಗಿ ಮೂಲಗಳನ್ನು ಉಲ್ಲೇಖಿಸಿ ರಾಯ್ಟರ್ಸ್ ವರದಿ ಮಾಡಿದೆ. ಭಾರತ ಸೇರಿದಂತೆ ವೆನೆಝುವೆಲಾದಿಂದ ಕಚ್ಛಾ ತೈಲ ಖರೀದಿಸುವ ದೇಶಗಳ ಮೇಲೆ ಅಮೆರಿಕಾ ಅಧ್ಯಕ್ಷ ಟ್ರಂಪ್ 2025ರ ಮಾರ್ಚ್ನಲ್ಲಿ 25% ತೆರಿಗೆ ವಿಧಿಸಿದ್ದರು. ಇದೀಗ ರಶ್ಯದಿಂದ ಭಾರತ ಖರೀದಿಸುವ ಕಚ್ಛಾ ತೈಲದ ಪ್ರಮಾಣವನ್ನು ಕಡಿಮೆಗೊಳಿಸುವ ಕ್ರಮವಾಗಿ ವೆನೆಝುವೆಲಾದ ಕಚ್ಛಾ ತೈಲವನ್ನು ಭಾರತಕ್ಕೆ ಪೂರೈಸುವ ಪ್ರಸ್ತಾಪವನ್ನು ಅಮೆರಿಕಾ ಆಡಳಿತ ಮುಂದಿರಿಸಿದೆ ಎಂದು ವರದಿ ಹೇಳಿದೆ.
ಮೂಡುಬಿದಿರೆ: 23ನೇ ವಷ೯ದ ಕೋಟಿ-ಚೆನ್ನಯ ಜೋಡುಕರೆ ಕಂಬಳಕ್ಕೆ ಚಾಲನೆ
ಮೂಡುಬಿದಿರೆ : ಶಾಸಕ ಉಮಾನಾಥ ಎ. ಕೋಟ್ಯಾನ್ ಸಾರಥ್ಯದಲ್ಲಿ ಮೂಡುಬಿದಿರೆ ಒಂಟಿಕಟ್ಟೆಯ ಕಡಲಕೆರೆ ನಿಸರ್ಗಧಾಮದ ವೀರರಾಣಿ ಅಬ್ಬಕ್ಕ ಸಂಸ್ಕೃತಿ ಗ್ರಾಮದಲ್ಲಿ ನಡೆಯುವ 23ನೇ ವರ್ಷದ ಹೊನಲು ಬೆಳಕಿನ ಕೋಟಿ-ಚೆನ್ನಯ ಕಂಬಳೋತ್ಸವವು ಶನಿವಾರ ಬೆಳಿಗ್ಗೆ ಆರಂಭಗೊಂಡಿತು. ಆಲಂಗಾರು ಬಡಗು ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮೋಕ್ತೇಸರ ವೇ. ಮೂ.ಈಶ್ವರ ಭಟ್, ಆಲಂಗಾರು ಚಚ್೯ನ ಧಮ೯ಗುರು । ಫಾ। ಮೆಲ್ವಿನ್ ನೊರೊನ್ಹಾ, ಕುಂಟಾಡಿ ಸುಧೀರ್ ಹೆಗ್ಡೆ ಅವರು ಉದ್ಘಾಟಿಸಿದರು. ನಂತರ ಮಾತನಾಡಿದ ಈಶ್ವರ ಭಟ್ ಅವರು ಜಾತಿ, ಮತ, ಅಂತರ ಮರೆತು ಒಗ್ಗಟ್ಟಾಗಲು ಕಂಬಳ ಸಹಕಾರಿ ಯಾಗಿದೆ. ಕಂಬಳ ಆಯೋಜಕರಿಗೆ, ಕೋಣಗಳ ಮಾಲೀಕರಿಗೆ, ಓಟಗಾರರಿಗೆ ಯಾವುದೇ ದೋಷವಿಲ್ಲದೆ ಕಂಬಳ ನಡೆಯಲಿ ಎಂದು ಶುಭ ಹಾರೈ ಸಿದರು. ಮೂಡುಬಿದಿರೆ ಚೌಟರ ಅರಮನೆ ಕುಲದೀಪ ಎಂ. ರವರ ಅಧ್ಯಕ್ಷತೆ ವಹಿಸಿದ್ದರು. ಇದಕ್ಕೂ ಮೊದಲು ಮೂಡುಬಿದಿರೆಯ ಪುತ್ತಿಗೆ, ಆಲಂಗಾರು, ಮಹಮ್ಮಾಯಿ, ಹನುಮಂತ ದೇವಸ್ಥಾನ, ನಾಗರಕಟ್ಟೆ ಗರಡಿ ಹಾಗೂ ಅಯ್ಯಪ್ಪ ಮಂದಿರದ ಪ್ರಸಾದವನ್ನು ಮತ್ತು ತೀಥ೯ವನ್ನು ಕಂಬಳ ಕರೆಗೆ ಪ್ರೋಕ್ಷಿಸಿದರು. ಕಂಬಳ ಸಮಿತಿಯ ಅಧ್ಯಕ್ಷ, ಶಾಸಕ ಉಮಾನಾಥ ಕೋಟ್ಯಾನ್, ಕಂಬಳ ಸಮಿತಿಯ ಪ್ರಧಾನ ಕಾಯ೯ದಶಿ೯ ಗುಣಪಾಲ ಕಡಂಬ, ಕಾಯ೯ದಶಿ೯ ರಂಜಿತ್ ಪೂಜಾರಿ, ಬಿಜೆಪಿ ಮುಲ್ಕಿ-ಮೂಡುಬಿದಿರೆ ಮಂಡಲದ ಪ್ರ.ಕಾಯ೯ದಶಿ೯ ಹರಿಪ್ರಸಾದ್, ಯುವ ಮೋಚಾ೯ದ ಅಧ್ಯಕ್ಷ ಕುಮಾರ್ ಪ್ರಸಾದ್, ರಾಜ್ಯ ಬಿಜೆಪಿ ಕಾಯ೯ಕಾರಿಣಿ ಸದಸ್ಯ ಕೆ. ಆರ್. ಪಂಡಿತ್, ವಕೀಲ ಸುರೇಶ್ ಕೆ. ಪೂಜಾರಿ ಪುರಸಭಾ ನಿಕಟಪೂವ೯ ಅಧ್ಯಕ್ಷೆ ಜಯಶ್ರೀ ಕೇಶವ್, ನಿಕಟಪೂವ೯ ಉಪಾಧ್ಯಕ್ಷ ನಾಗರಾಜ ಪೂಜಾರಿ, ಸದಸ್ಯರಾದ ನವೀನ್ ಶೆಟ್ಟಿ, ಪುರಸಭಾ ಮುಖ್ಯಾಧಿಕಾರಿ ಇಂದು ಎಂ, ಮೂಡುಬಿದಿರೆ ಲಯನ್ಸ್ ಕ್ಲಬ್ ಅಧ್ಯಕ್ಷ ಶಿವ ಪ್ರಸಾದ್ ಹೆಗ್ಡೆ, ವೆಂಕಟರಮಣ ಮತ್ತು ಹನುಮಂತ ದೇವಸ್ಥಾನಗಳ ಆಡಳಿತ ಮೊಕ್ತೇಸರ ಉಮೇಶ್ ಪೈ, ಬೆಳುವಾಯಿ ಗ್ರಾ. ಪಂ. ಸದಸ್ಯ ರಘು ಪೆಲಕುಂಜ, ಕೋಣಗಳ ಯಜಮಾನ ಇರುವೈಲು ಪಾಣಿಲ ಸತೀಶ್ಚಂದ್ರ ಪ್ರಮುಖರಾದ ದಿನೇಶ್ ಮಾರೂರು, ಲಕ್ಷ್ಮಣ್ ಪೂಜಾರಿ, ಯಶೋಧರ ದೇವಾಡಿಗ ಮತ್ತಿತರರು ಈ ಸಂದಭ೯ದಲ್ಲಿದ್ದರು.
ಕಾಂಗೋದಲ್ಲಿ ಗಣಿ ಕುಸಿತ: 200ಕ್ಕೂ ಅಧಿಕ ಮಂದಿ ಸಾವು
ಕಿನ್ಷಾಸ: ಪೂರ್ವ ಕಾಂಗೋ ಗಣರಾಜ್ಯದ ರುಬಯಾ ನಗರದಲ್ಲಿ ಗಣಿ ಕುಸಿದು 200ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ. ರುಬಯಾ ಗ್ರಾಮದಲ್ಲಿ ಧಾರಾಕಾರ ಮಳೆಯಿಂದಾಗಿ ಬುಧವಾರ ಗಣಿ ಕುಸಿದಿದೆ. ನಿರಂತರ ಸುರಿಯುತ್ತಿರುವ ಮಳೆಯು ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗೆ ತೊಡಕಾಗಿದ್ದು ಶನಿವಾರದವರೆಗೆ ಕನಿಷ್ಠ 200 ಮಂದಿಯ ಮೃತದೇಹವನ್ನು ಪತ್ತೆಹಚ್ಚಲಾಗಿದೆ ಎಂದು ಬಂಡುಕೋರರ ನಿಯಂತ್ರಣದಲ್ಲಿರುವ ಉತ್ತರ ಕಿವು ಪ್ರಾಂತದ ಗವರ್ನರ್ ಅವರ ವಕ್ತಾರರನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ. ಕೋಲ್ಟನ್ (ಮಂದ ಕಪ್ಪು ಲೋಹದ ಅದಿರು) ಗಣಿಯಲ್ಲಿ ದುರಂತ ಸಂಭವಿಸಿದ್ದು ಮಹಿಳೆಯರು ಮತ್ತು ಮಕ್ಕಳು ಮೃತಪಟ್ಟವರಲ್ಲಿ ಸೇರಿದ್ದಾರೆ. ಇವರಲ್ಲಿ ಕೆಲವರು ಗಣಿ ಸಂಸ್ಥೆಯ ಅಧಿಕೃತ ಸಿಬ್ಬಂದಿಗಳಲ್ಲ. ಸುಮಾರು 20 ಮಂದಿಯನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿ ಹೇಳಿದೆ. ಸೆಲ್ಫೋನ್, ಲ್ಯಾಪ್ಟಾಪ್ ಮುಂತಾದ ಆಧುನಿಕ ತಾಂತ್ರಿಕ ಸಾಧನಗಳ ಉತ್ಪಾದನೆಯಲ್ಲಿ ಕೋಲ್ಟನ್ ನಿರ್ಣಾಯಕ ಖನಿಜವಾಗಿದೆ.
CJ Roy Death: ಆದಾಯ ತೆರಿಗೆ ಇಲಾಖೆ ಅಧಿಕಾರಿಗಳನ್ನ ವಿಚಾರಣೆ ನಡೆಸಿದ ಬೆಂಗಳೂರು ಪೊಲೀಸ್! ಯಾರೆಲ್ಲಾ? ಏನಂದ್ರು?
ರಿಯಲ್ ಎಸ್ಟೇಟ್ ಉದ್ಯಮಿ ರಾಯ್ ಅವರ ಆತ್ಮಹತ್ಯೆ ಪ್ರಕರಣದಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ. ಐಟಿ ದಾಳಿಯೇ ಆತ್ಮಹತ್ಯೆಗೆ ಕಾರಣ ಎಂದು ಸಹೋದರ ಅನುಮಾನ ವ್ಯಕ್ತಪಡಿಸಿದ್ದು, ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ. ಹವಾಲ, ರಾಜಕೀಯ ನಂಟು ಆರೋಪಗಳನ್ನು ಪೊಲೀಸರು ತಳ್ಳಿಹಾಕಿದ್ದಾರೆ.
ಕುದ್ಮುಲ್ ರಂಗರಾವ್ ಸಮಾಧಿ ಸ್ಥಳ ಅಭಿವೃದ್ಧಿ : ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್
ಮಂಗಳೂರು: ನಗರದ ಅತ್ತಾವರ ಬಾಬುಗುಡ್ಡೆಯಲ್ಲಿರುವ ಕುದ್ಮುಲ್ರಂಗರಾವ್ಅವರ ಸಮಾಧಿ ಸ್ಥಳದ ಪರಿಸರ ಅಭಿವೃದ್ಧಿಗೆ ಅಗತ್ಯಕ್ರಮ ಕೈಗೊಳ್ಳಲಾಗುವುದು ಎಂದು ದಕ್ಷಿಣಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ. ಅವರು ಶನಿವಾರ ಕುದ್ಮುಲ್ ರಂಗರಾವ್ಅವರ ಸಮಾಧಿ ಸ್ಥಳಕ್ಕೆ ಭೇಟಿ ನೀಡಿ, ಗೌರವ ಸಲ್ಲಿಸಿದರು. ಅಂದಿನ ಕಾಲದಲ್ಲಿ ಸಮಾಜದಅತ್ಯಂತ ತಳಸ್ತರದಲ್ಲಿದ್ದ ಸಮಾಜದ ಏಳಿಗೆಗಾಗಿ ನಿಷ್ಕಳಂಕವಾಗಿ ಸೇವೆ ಸಲ್ಲಿಸಿದ ಕುದ್ಮುಲ್ ರಂಗರಾವ್ರಾಜ್ಯದ ಅದಮ್ಯ ಚೇತನ. ಯಾರ ವಿರೋಧವನ್ನು ಲೆಕ್ಕಿಸದೆ ಅವರು ದಲಿತರ ಶಿಕ್ಷಣ ಮತ್ತು ಸಾಮಾಜಿಕ ಏಳಿಗೆಗಾಗಿ ಹಗಲು ರಾತ್ರಿ ಶ್ರಮಿಸಿದರು ಎಂದು ಸಚಿವರು ಹೇಳಿದರು. ಅತ್ತಾವರದಲ್ಲಿರುವ ಕುದ್ಮುಲ್ ರಂಗರಾವ್ ಸಮಾಧಿ ಸ್ಥಳದ ಅಭಿವೃದ್ಧಿಗೆ ಅನುದಾನ ಈ ಹಿಂದೆಯೇ ಬಿಡುಗಡೆ ಯಾಗಿ, ಅರಣ್ಯ ಇಲಾಖೆ ತಕರಾರಿನಿಂದಾಗಿ ಅಭಿವೃದ್ಧಿಗೆ ತೊಡಕಾಗಿತ್ತು ಎಂದು ಮಾಹಿತಿ ತಿಳಿದುಬಂದಿದೆ. ಈ ಬಗ್ಗೆ ಶೀಘ್ರವೇ ಅರಣ್ಯ ಇಲಾಖೆಯೊಂದಿಗೆ ಚರ್ಚಿಸಿ, ಅಗತ್ಯಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ತಿಳಿಸಿದರು. ಇದೇ ಸಂದರ್ಭದಲ್ಲಿ ಸಚಿವರನ್ನು ಭೇಟಿಯಾದ ವಿವಿಧ ದಲಿತ ಸಂಘಟನೆಗಳು, ಕುದ್ಮುಲ್ ಸಮಾಧಿ ಸ್ಥಳದ ಅಭಿವೃದ್ಧಿಗೆ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಐವನ್ಡಿ ಸೋಜ, ಮೆಸ್ಕಾಂ ಅಧ್ಯಕ್ಷ ಹರೀಶ್ಕುಮಾರ್, ಪರಿಸರ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿ ಅಧ್ಯಕ್ಷೆ ಶಾಲೆಟ್ ಪಿಂಟೋ, ಮುಖಂಡರಾದ ಪದ್ಮರಾಜ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.
ಜನಸಾಮಾನ್ಯರಿಗೆ ನ್ಯಾಯ ಒದಗಿಸುವುದೇ ನ್ಯಾಯಾಲಯಗಳ ಕರ್ತವ್ಯ : ನ್ಯಾ. ಅಬ್ದುಲ್ ನಝೀರ್
ಮಂಗಳೂರು: ಜನಸಾಮಾನ್ಯರಿಗೆ ನ್ಯಾಯವನ್ನು ಒದಗಿಸುವುದಕ್ಕಾಗಿ ನ್ಯಾಯಾಲಯಗಳು ಕಾರ್ಯನಿರ್ವಹಿಸು ತ್ತಿದ್ದು, ಇದು ಸಾಂವಿಧಾನಿಕವಾಗಿರುತ್ತದೆ ಎಂದು ಆಂಧ್ರಪ್ರದೇಶದ ರಾಜ್ಯಪಾಲ ನ್ಯಾ. ಅಬ್ದುಲ್ ನಝೀರ್ ಹೇಳಿದ್ದಾರೆ. ಶನಿವಾರ ಪುತ್ತೂರಿನಲ್ಲಿ ನೂತನ ನ್ಯಾಯಾಲಯ ಸಂಕೀರ್ಣ ಉದ್ಘಾಟಿಸಿ ಮಾತನಾಡಿದರು. ನ್ಯಾಯಾಲಯವು ಕಾನೂನಿನ ಆಡಳಿತದ ಸಂಕೇತವಾಗಿದ್ದು, ಸಮಾಜದಲ್ಲಿ ಅನ್ಯಾಯದ ವಿರುದ್ಧ ಪ್ರತಿಯೊಬ್ಬರಿಗೆ ನ್ಯಾಯ ಒದಗಿಸಲು ಕಾರ್ಯನಿರ್ವಹಿಸುತ್ತದೆ. ನ್ಯಾಯಾಲಯಗಳಿಗೆ ಆಧುನಿಕ ಕಟ್ಟಡ ಮತ್ತು ತಂತ್ರಜ್ಞಾನಗಳು ಜನರಿಗೆ ತ್ವರಿತವಾಗಿ ನ್ಯಾಯ ಒದಗಿಸಲು ಪೂರಕ ಅಗತ್ಯಗಳಾಗಿದೆ ಎಂದು ಅವರು ಹೇಳಿದರು. ಸಂವಿಧಾನ ರಚನೆ ಸಂದರ್ಭ ದಕ್ಷಿಣ ಕನ್ನಡ ಜಿಲ್ಲೆಯ ಬೆನಗಲ್ ನರಸಿಂಹರಾವ್ ಅವರು ಮಹತ್ತರ ಪಾತ್ರ ನಿರ್ವಹಿಸಿದ್ದು, ಸಂವಿಧಾನದಲ್ಲಿ ಹಲವು ಪ್ರಮುಖ ಅಂಶಗಳನ್ನು ಕ್ರೋಢಿಕರಿಸಿರುತ್ತಾರೆ. ಡಾ.ಬಿ.ಆರ್ ಅಂಬೇಡ್ಕರ್ ಅವರು ಕೂಡ ಬೆನಗಲ್ ಅವರ ಶ್ರಮವನ್ನು ಗುರುತಿಸಿದ್ದರು ಎಂದು ಅಬ್ದುಲ್ ನಝೀರ್ ಹೇಳಿದರು. ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ವಿಭುಬಖ್ರು ಮಾತನಾಡಿ, ನ್ಯಾಯಾಲಯಗಳ ಕಟ್ಟಡದೊಂದಿಗೆ ನ್ಯಾಯಾಧೀಶರ ನಿಷ್ಠೆ ನ್ಯಾಯವಾದಿಗಳ ಬದ್ಧತೆ, ಹಾಗೂ ಸಿಬ್ಬಂದಿಗಳ ಕರ್ತವ್ಯವು ನ್ಯಾಯ ಒದಗಿಸಲು ಅಗತ್ಯವಾಗಿದೆ ಎಂದು ಹೇಳಿದರು. *ಒಟ್ಟು 12 ನ್ಯಾಯಾಲಯ ಸಭಾಂಗಣ: ಪುತ್ತೂರಿನ ನ್ಯಾಯಾಲಯ ಸಂಕೀರ್ಣದಲ್ಲಿ ಒಟ್ಟು 12 ನ್ಯಾಯಾಲಯ ಸಭಾಂಗಣಗಳಿವೆ. ಆಧುನಿಕ ಶೈಲಿಯಲ್ಲಿಕಟ್ಟಡ ನಿರ್ಮಾಣ ಮಾಡಿರುವುದು ಶ್ಲಾಘನೀಯ. ನ್ಯಾಯಾಲಯವು ಸಾಂವಿಧಾನಿಕ ಆಡಳಿತದ ಸಂಕೇತವಾಗಿದೆ ಎಂದು ಹೇಳಿದರು. *ಮಂಗಳೂರಿನಲ್ಲಿ 60 ಕೋಟಿರೂ. ವೆಚ್ಚದಲ್ಲಿ ಹೊಸ ನ್ಯಾಯಾಲಯ ಕಟ್ಟಡ : ಆರೋಗ್ಯ ಮತ್ತು ದಕ್ಷಿಣಕನ್ನಡ ಜಿಲ್ಲಾಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಮಾತನಾಡಿ, ಪುತ್ತೂರು ನ್ಯಾಯಾಲಯ ಕಟ್ಟಡ ರಾಜ್ಯದಲ್ಲಿಯೇ ತಾಲೂಕು ಕೇಂದ್ರದಲ್ಲಿರುವ ಅತಿದೊಡ್ಡ ಕಟ್ಟಡವಾಗಿದೆ. ಇಲ್ಲಿನ ಮೂಲ ಸೌಕರ್ಯಗಳಿಗೆ ಸರಕಾರವು ಎಲ್ಲಾರೀತಿಯ ಬೆಂಬಲ ನೀಡಲಿದೆ ಎಂದು ಹೇಳಿದರು. ಮಂಗಳೂರಿನಲ್ಲಿ 60 ಕೋಟಿರೂ. ವೆಚ್ಚದಲ್ಲಿ ಹೊಸ ನ್ಯಾಯಾಲಯ ಕಟ್ಟಡ ಬ್ಲಾಕ್ ನಿರ್ಮಿಸಲು ಅನುಮೋದನೆ ನೀಡಲಾಗಿದೆ. ಬೆಳ್ತಂಗಡಿಯಲ್ಲಿ 9 ಕೋಟಿ ರೂ. ಹೊಸ ನ್ಯಾಯಾಲಯ ಕಟ್ಟಡಕ್ಕೆ ಟೆಂಡರ್ ಪ್ರಕ್ರಿಯೆ ನಡೆಯುತ್ತಿದೆ ಎಂದು ಹೇಳಿದರು. ಮಂಗಳೂರಿನಲ್ಲಿ ಹೈಕೋರ್ಟ್ ಪೀಠಸ್ಥಾಪನೆ ಅಗತ್ಯವಾಗಿದೆ ಎಂದು ಅವರು ಹೇಳಿದರು. ಲೋಕಸಭಾ ಸದಸ್ಯ ಬ್ರಿಜೇಶ್ ಚೌಟ ಮಾತನಾಡಿ, ಮಂಗಳೂರಿನಲ್ಲಿ ಹೈಕೋರ್ಟ್ ಪೀಠವನ್ನು ಸ್ಥಾಪಿಸಬೇಕು ಎಂದು ಮನವಿ ಮಾಡಿದರು. ಪುತ್ತೂರು ಶಾಸಕ ಅಶೋಕ್ ಕುಮಾರ್ರೈ ಮಾತನಾಡಿ, ಪುತ್ತೂರು ನ್ಯಾಯಾಲಯ ಸಂಕೀರ್ಣಕ್ಕೆ ಎಲ್ಲಾ ಮೂಲ ಸೌಕರ್ಯ ಒದಗಿಸಲು ಸರಕಾರ ನೆರವು ನೀಡಲಿದೆ. ಪುತ್ತೂರು ಜಿಲ್ಲಾ ನ್ಯಾಯಾಲಯದ ವ್ಯಾಪ್ತಿಗೆ ಬೆಳ್ತಂಗಡಿ ತಾಲೂಕನ್ನು ಸೇರಿಸಬೇಕು ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ಭರತ್ಕುಮಾರ್, ಜಿಲ್ಲಾಧಿಕಾರಿದರ್ಶನ್ ಎಚ್ ವಿ, ಪುತ್ತೂರು ವಕೀಲರ ಸಂಘದ ಅಧ್ಯಕ್ಷ ಜಗನ್ನಾಥ ರೈ ಮತ್ತಿತರರು ಉಪಸ್ಥಿತರಿದ್ದರು. ಪ್ರಧಾನ ಜಿಲ್ಲಾ ನ್ಯಾಯಾಧೀಶ ಬಸವರಾಜ ಸ್ವಾಗತಿಸಿದರು.
ಪ್ರಾಯೋಗಿಕ ತರಬೇತಿಯಿಂದ ವೃತ್ತಿ ಅನ್ವೇಷಣೆಗೆ ನೆರವು: ಡಾ.ಸತೀಶ್ ರಾವ್
ಮಂಗಳೂರು, ಜ.31: ನಗರದ ಲೇಡಿಗೋಶನ್ ಆಸ್ಪತ್ರೆ ಆವರಣದಲ್ಲಿರುವ ಇಂಡಿಯನ್ ರೆಡ್ಕ್ರಾಸ್ ಸೊಸೈಟಿಯ ದ.ಕ.ಜಿಲ್ಲಾ ಘಟಕದ ರಕ್ತನಿಧಿ ಕೇಂದ್ರದಲ್ಲಿ ಒಂದು ತಿಂಗಳ ಕಾಲ ಪ್ರಾಯೋಗಿಕ ತರಬೇತಿ ಪಡೆದ ಪ್ರಥಮ ಬ್ಯಾಚ್ನ ವಿದ್ಯಾರ್ಥಿಗಳಿಗೆ ಶನಿವಾರ ಪ್ರಮಾಣ ಪತ್ರ ವಿತರಿಸಲಾಯಿತು. ಪ್ರಮಾಣ ಪತ್ರ ವಿತರಿಸಿದ ರೆಡ್ಕ್ರಾಸ್ ಸೊಸೈಟಿಯ ದ.ಕ.ಜಿಲ್ಲಾ ಘಟಕದ ಉಪಾಧ್ಯಕ್ಷ ಡಾ.ಸತೀಶ್ ರಾವ್ ಮಾತನಾಡಿ ‘ ವಿದ್ಯಾರ್ಥಿಗಳು ಅಧ್ಯಯನಕ್ಕೆ ಸಂಬಂಸಿ ಪಡೆಯುವ ತರಬೇತಿ ಹಾಗೂ ಕೌಶಲ್ಯಾಭಿವೃದ್ಧಿ ಉದ್ಯೋ ಗಾವಕಾಶವನ್ನು ಹೆಚ್ಚಿಸುತ್ತದೆ .ಭವಿಷ್ಯದಲ್ಲಿ ವೃತ್ತಿ ಅನ್ವೇಷಣೆಗೆ ನೆರವಾಗುತ್ತದೆ. ತರಬೇತಿ ಪಡೆಯುವುದರಿಂದ ವೃತ್ತಿ ಜೀವನದ ಆರಂಭಿಕ ಸವಾಲುಗಳನ್ನು ಎದುರಿಸುವ ಆತ್ಮ ವಿಶ್ವಾಸ ಬೆಳೆಯುತ್ತದೆ ಎಂದರು. ಮುಖ್ಯ ಅತಿಥಿಯಾಗಿದ್ದ ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ.ಹರೀಶ್ ರೈ ಶುಭ ಹಾರೈಸಿದರು. ರೆಡ್ಕ್ರಾಸ್ ಜಿಲ್ಲಾ ಘಟಕದ ಕಾರ್ಯದರ್ಶಿ ಕಿಶೋರ್ಚಂದ್ರ ಹೆಗಡೆ ಪ್ರಾಸ್ತಾವಿಕವಾಗಿ ಮಾತನಾಡಿ ‘ ವಿದ್ಯಾರ್ಥಿಗಳು ರಕ್ತ ಸಂಗ್ರಹ, ವರ್ಗೀಕರಣ, ರಕ್ತ ಹೊಂದಾಣಿಕೆ ಪರೀಕ್ಷೆ, ರಕ್ತದ ಘಟಕಗಳ ವರ್ಗೀಕರಣ ಸಹಿತ ಬ್ಲಡ್ ಬ್ಯಾಂಕ್ ಪೂರಕವಾದ ಪ್ರಾಯೋಗಿಕ ತರಬೇತಿ ಪಡೆದಿದ್ದು ಉದ್ಯೋಗಕ್ಕೆ ನೆರವಾಗಲು ಪ್ರಮಾಣ ಪತ್ರ ನೀಡಲಾಗಿದೆ ಎಂದರು. ರಕ್ತನಿ ಕೇಂದ್ರದ ತಾಂತ್ರಿಕ ಮೇಲ್ವಿಚಾರಕಿ ಮರಿಯಾ ಆರತಿ ಸೋನ್ಸ್ , ರಕ್ತನಿ ಕೇಂದ್ರದ ಸಿಬ್ಬಂದಿ ಪ್ರಿಯಾ, ಪ್ರತೀಕ್ಷಾ ಉಪಸ್ಥಿತರಿದ್ದರು.
ಫೆ.2: ಬ್ರಾಹ್ಮಣ ಅಭಿವೃದ್ಧಿ ನಿಗಮದಿಂದ ಮಾಹಿತಿ ಕಾರ್ಯಕ್ರಮ
ಉಡುಪಿ: ಉಡುಪಿ ತಾಲೂಕು ಬ್ರಾಹ್ಮಣ ಮಹಾಸಭಾ ಆಶ್ರಯ ದಲ್ಲಿ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ನಿಗಮದಿಂದ ಬ್ರಾಹ್ಮಣ ಸಮುದಾಯಕ್ಕೆ ಸಿಗುವ ನಾನಾ ಸೌಲಭ್ಯಗಳ ಬಗ್ಗೆ ಮಾಹಿತಿ ಕಾರ್ಯಕ್ರಮ ಫೆ.2ರಂದು ಸಂಜೆ 4 ಗಂಟೆಗೆ ನಗರದ ಗೋವಿಂದ ಕಲ್ಯಾಣ ಮಂಟಪದಲ್ಲಿ ನಡೆಯಲಿದೆ ಎಂದು ಉಡುಪಿ ತಾಲೂಕು ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಶ್ರೀಕಾಂತ ಉಪಾಧ್ಯ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಕಾರ್ಯಕ್ರಮದಲ್ಲಿ ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ, ನಿಗಮದ ನಿರ್ದೇಶಕ ಪಿ.ಎಂ. ಮಾಲ್ತೇಶ್, ಜಿಲ್ಲಾ ಮಹಿಳಾ ಕಾಂಗ್ರೆಸ್ ಸಮಿತಿ ಅಧ್ಯಕ್ಷೆ ಜ್ಯೋತಿ ಕೃಷ್ಣ ಹೆಬ್ಬಾರ್, ಉಡುಪಿ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ರಮೇಶ್ ಕಾಂಚನ್ ಉಪಸ್ಥಿತರಿರುವರು ಎಂದರು. ನಿಗಮಕ್ಕೆ ಸಂಬಂಧಪಟ್ಟ ಅಧಿಕಾರಿಗಳಿಂದ ಬ್ರಾಹ್ಮಣ ಸಮುದಾಯಕ್ಕೆ ವಿವಿಧ ನಿಗಮಗಳಿಂದ ದೊರೆಯುವ ನಾನಾ ಸವಲತ್ತುಗಳ ಬಗ್ಗೆ ಮಾಹಿತಿ ನೀಡಲಾಗುವುದು ಎಂದು ಅವರು ತಿಳಿಸಿದರು. ಸೌಲಭ್ಯ ಪಡೆಯಲು ರಾಜ್ಯ ನಿವಾಸಿಗಳಾದ ಬ್ರಾಹ್ಮಣ ಸಮುದಾಯದ 18ರಿಂದ 60 ವರ್ಷದೊಳಗಿನವರಾಗಿರ ಬೇಕು. ಆದಾಯ ತೆರಿಗೆ ಪಾವತಿದಾರ ರಾಗಿರಬಾರದು. ಇಎಸ್ಐ ಹಾಗೂ ಇಪಿಎಫ್ ಸೌಲಭ್ಯ ಪಡೆಯುತ್ತಿರ ಬಾರದು. ನೊಂದಣಿಗೆ ಅರ್ಜಿ ಸಲ್ಲಿಸುವಾಗ ಆಧಾರ್ ಕಾರ್ಡ್, ರೇಷನ್ ಕಾರ್ಡ ಹಾಗೂ ಬ್ಯಾಂಕ್ ಪಾಸ್ಪುಸ್ತಕ ತರಬೇಕು ಎಂದರು. ಸುದ್ದಿಗೋಷ್ಠಿಯಲ್ಲಿ ಮಹಾಸಭಾದ ಪದಾಧಿಕಾರಿಗಳಾದ ದುರ್ಗಾಪ್ರಸಾದ್ ಭಾರ್ಗವ, ಹಯವದನ ಭಟ್ಟ, ಶ್ರೀನಿವಾಸ ಬಲ್ಲಾಳ್ ಮಲ್ಲಂಪಳ್ಳಿ, ಹವ್ಯಕ ಮಹಾಸಭಾದ ಪ್ರೊ.ಶಂಕರ್, ರಾಜೇಂದ್ರ ಭಟ್ ಮತ್ತಿತರರು ಉಪಸ್ಥಿತರಿದ್ದರು.
ಮತದಾರರ ದಿನ: ಉಡುಪಿಯ ನವ್ಯಶ್ರೀಗೆ ರಾಜ್ಯಮಟ್ಟದ ಪ್ರಶಸ್ತಿ
ಉಡುಪಿ: 16ನೇ ರಾಷ್ಟ್ರೀಯ ಮತದಾರರ ದಿನಾಚರಣೆ -2026 ಅಂಗವಾಗಿ ‘ಶಾಲೆಗಳಲ್ಲಿ ಚುನಾವಣಾ ಸಾಕ್ಷರತಾ ಕ್ಲಬ್ಗಳ ಮಹತ್ವ’ ಎಂಬ ವಿಷಯದ ಕುರಿತು ನಡೆದ ಪ್ರಬಂಧ ಸ್ಪರ್ಧೆಯಲ್ಲಿ ಬ್ರಹ್ಮಾವರ ಕೆಪಿಎಸ್ನ ವಿದ್ಯಾರ್ಥಿನಿ ನವ್ಯಶ್ರೀ ರಾಜ್ಯಮಟ್ಟದಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾಳೆ. ತಾಲೂಕು ಮಟ್ಟ ಹಾಗೂ ಜಿಲ್ಲಾ ಮಟ್ಟದಲ್ಲಿ ಸ್ಪರ್ಧೆಗಳಲ್ಲಿ ವಿಜೇತಳಾಗಿ ಅಂತಿಮ ಹಂತದಲ್ಲಿ 33 ಜಿಲ್ಲೆಗಳ ಸ್ಪರ್ಧಿಗಳು ಭಾಗವಹಿಸಿದ್ದ ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ನವ್ಯಶ್ರೀ ದ್ವಿತೀಯ ಸ್ಥಾನ ಪಡೆದಿದ್ದಳು. ಬೆಂಗಳೂರಿನ ಪುರಭವನದಲ್ಲಿ ನಡೆದ ರಾಷ್ಟ್ರೀಯ ಮತದಾರರ ದಿನಾಚರಣೆ ಕಾರ್ಯಕ್ರಮದಲ್ಲಿ ಕರ್ನಾಟಕದ ರಾಜ್ಯಪಾಲರಾದಥಾವರಚಂದ್ ಗೆಹ್ಲೋಟ್ ಇವರಿಂದ ಪ್ರಶಸ್ತಿ ಪತ್ರ ನಗದು ಪುರಸ್ಕಾರವನ್ನು ನವ್ಯಶ್ರೀ ಸ್ವೀಕರಿಸಿದರು. ನವ್ಯಶ್ರೀ ಬೈಕಾಡಿಯ ಅಶೋಕ್ ಶೆಟ್ಟಿಗಾರ್ ಹಾಗೂ ಸುಧಾ ದಂಪತಿಗಳ ಪುತ್ರಿ.
ಫೆ.6ರಿಂದ ರಾಗಧನದಿಂದ ಸಂಗೀತ ತ್ರಿಮೂರ್ತಿ ಉತ್ಸವ
ಉಡುಪಿ, ಜ.31: ಉಡುಪಿಯ ಪ್ರತಿಷ್ಠಿತ ರಾಗಧನ ಸಂಸ್ಥೆಯ ಆಶ್ರಯದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ ಎಂ.ಜಿ.ಎಂ. ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ 38ನೆಯ ಶ್ರೀ ಪುರಂದರದಾಸರು ಮತ್ತು ಸಂಗೀತ ತ್ರಿಮೂರ್ತಿ ಉತ್ಸವ ಇದೇ ಫೆ.6ರಿಂದ 8ರವರೆಗೆ ನಡೆಯಲಿದೆ ಎಂದು ರಾಗಧನ ಸಂಸ್ಥೆಯ ಕಾರ್ಯದರ್ಶಿ ಉಮಾಶಂಕರಿ ತಿಳಿಸಿದ್ದಾರೆ. ಫೆ.6ರಂದು ಸಂಜೆ ಮಂಗಳೂರಿನ ‘ಆರೋಹಣಂ’ ಸಂಗೀತ ಶಾಲೆಯ ಡಾ.ಅನೀಶ್ ಭಟ್ ಇವರ ಶಿಷ್ಯರಿಂದ ಹಾಡುಗಾರಿಕೆ ಇದ್ದು, ಸಂಜೆ 6 ಗಂಟೆಗೆ ಮೈಸೂರಿನ ಖ್ಯಾತ ಕಲಾ ವಿಮರ್ಶಕರಾದ ಪ್ರೊ.ರಾಮಮೂರ್ತಿ ರಾವ್ ಇವರಿಂದ ಕಾರ್ಯಕ್ರಮ ಉದ್ಘಾಟನೆಗೊಳ್ಳಲಿದೆ. ಮುಖ್ಯ ಅತಿಥಿ ಗಳಾಗಿ ಅದಾನಿ ಸಂಸ್ಥೆಯ ಕಿಶೋರ್ ಆಳ್ವ, ಕನ್ನಡ ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಭಾಗವಹಿಸುವರು. ಕಾರ್ಯಕ್ರಮದಲ್ಲಿ ಇತ್ತೀಚೆಗೆ ಪುರಂದರ ಗಾನ ನರ್ತನ ಎಂಬ ಶೀರ್ಷಿಕೆಯಡಿ ಸತತವಾಗಿ 6 ಗಂಟೆ 13 ನಿಮಿಷಗಳ ಕಾಲ ಪುರಂದರದಾಸರ ಹಾಡುಗಳಿಗೆ ಸ್ವತಃ ಹಾಡಿಕೊಂಡು ನೃತ್ಯ ಪ್ರದರ್ಶನ ನೀಡಿ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ವಿಶ್ವ ದಾಖಲೆ ಸಾಧಿಸಿದ ದೀಕ್ಷಾ ರಾಮಕೃಷ್ಣ ಇವರನ್ನು ರಾಗ ಧನ ಸಂಸ್ಥೆಯ ವತಿಯಿಂದ ಗೌರವಿಸಲಾಗುವುದು. ಸಂಜೆ 6:30ಕ್ಕೆ ಚೆನ್ನೈನ ಖ್ಯಾತ ಸಂಗೀತಗಾರರಾದ ಸಾಯಿ ವಿಘ್ನೇಶ್ ಇವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಕಚೇರಿ ನಡೆಯಲಿದೆ. ಫೆ.7ರಂದು ಶನಿವಾರ ಅಪರಾಹ್ನ 2 ಗಂಟೆಗೆ ಪಿಳ್ಳಾರಿ ಗೀತೆಗಳು, ಶ್ರೀತ್ಯಾಗರಾಜರ ಘನ ಪಂಚ ರತ್ನ ಗೋಷ್ಠಿ ಗಾಯನ ನಡೆಯಲಿದೆ. ಸಂಜೆ 4:30ಕ್ಕೆ ಡಾ. ಸುಶೀಲಾ ಉಪಾಧ್ಯಾಯ ಸ್ಮರಣಾರ್ಥ ರಾಗಧನ ಪಲ್ಲವಿ ಪ್ರಶಸ್ತಿಯನ್ನು ಉಡುಪಿಯ ಪ್ರತಿಭಾವಂತ ಗಾಯಕಿ ಪ್ರಜ್ಞಾ ಅಡಿಗರಿಗೆ ಡಾ.ಗಣಪತಿ ಜೋಯಿಸ ಇವರು ಪ್ರದಾನ ಮಾಡುವರು. ಸಂಜೆ 5:30ಕ್ಕೆ ’ರಾಗಧನ ಪಲ್ಲವಿ ಪ್ರಶಸ್ತಿ’ ಪುರಸ್ಕೃತ ಪ್ರಜ್ಞಾ ಅಡಿಗ ಇವರ ಕಚೇರಿ ನಡೆಯಲಿದೆ. ಫೆಬ್ರವರಿ 8ರಂದು ಬೆಳಿಗ್ಗೆ 9 ರಿಂದ ಹಿಂದುಸ್ತಾನಿ ಗಾಯನ ಕಛೇರಿಯನ್ನು ಮಹಾರಾಷ್ಟ್ರದ ಧನಂಜಯ ಜೋಶಿ ನಡೆಸಿ ಕೊಡಲಿದ್ದಾರೆ. ಬೆಳಗ್ಗೆ 11:15ರಿಂದ ಕರ್ನಾಟಕ ಸಂಗೀತದ ತ್ರಿಮೂರ್ತಿಗಳು ವಿಷಯವಾಗಿ ಆತ್ರೇಯೀ ಕೃಷ್ಣಾ ಕಾರ್ಕಳ ಸಂಗೀತ ಪ್ರಾತ್ಯಕ್ಷಿಕೆ ನಡೆಸಿಕೊಡುವರು. ಅಪರಾಹ್ನ 2ರಿಂದ ಅದಿತಿ ಕೊಂಕೋಡಿ ಹಾಡುಗಾರಿಕೆ ನಡೆಸಿಕೊಡಲಿದ್ದಾರೆ. ಸಂಜೆ ಸಮಾರೋಪ ಸಮಾರಂಭದಲ್ಲಿ ಭರತನಾಟ್ಯ ಕಲಾವಿದೆ ಲಕ್ಷ್ಮಿ ಗುರುರಾಜ್ ಮತ್ತು ಡಾ. ಬಾಲಕೃಷ್ಣ ಮದ್ದೋಡಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಬಳಿಕ ಬೆಂಗಳೂರಿನ ವಿನಯ್ ಶರ್ಮ ಇವರ ಕರ್ನಾಟಕ ಶಾಸ್ತ್ರೀಯ ಸಂಗೀತ ಕಚೇರಿ ನಡೆಯಲಿದೆ ಎಂದು ರಾಗ ಧನ ಸಂಸ್ಥೆಯ ಕಾರ್ಯದರ್ಶಿ ಉಮಾಶಂಕರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ರಾಗಧನ ಪಲ್ಲವಿ ಪ್ರಶಸ್ತಿಗೆ ಪ್ರಜ್ಞಾ ಅಡಿಗ ಆಯ್ಕೆ
ಉಡುಪಿ: ಪ್ರಸಿದ್ಧ ಸಂಶೋಧಕಿ ಡಾ.ಸುಶೀಲಾ ಉಪಾಧ್ಯಾಯ ಸ್ಮರಣಾರ್ಥ ರಾಗಧನ ಸಂಸ್ಥೆ ಮೂಲಕ ನೀಡಲಾಗುವ ‘ರಾಗಧನ ಪಲ್ಲವಿ’ ಪ್ರಸಸ್ತಿಗೆ ಉಡುಪಿಯ ಪ್ರತಿಭಾವಂತ ಗಾಯಕಿ ಪ್ರಜ್ಞಾ ಅಡಿಗ ಅವರನ್ನು ಆಯ್ಕೆ ಮಾಡಲಾಗಿದೆ. ಇದೇ ಫೆ.7ರ ಶನಿವಾರ ಸಂಜೆ 5:30ಕ್ಕೆ ಉಡುಪಿಯ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ 38ನೆಯ ಶ್ರೀಪುರಂದರದಾಸ ಮತ್ತು ಸಂಗೀತ ತ್ರಿಮೂರ್ತಿ ಉತ್ಸವದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ರಾಗಧನ ಸಂಸ್ಥೆ ತಿಳಿಸಿದೆ. ಪ್ರಶಸ್ತಿಯನ್ನು ಡಾ.ಗಣಪತಿ ಜೋಯಿಸ್ ಪ್ರದಾನ ಮಾಡಲಿರುವರು. ಸಂಸ್ಥೆಯ ಅಧ್ಯಕ್ಷರಾದ ಡಾ.ಕಿರಣ್ ಹೆಬ್ಬಾರ್ ಅಧ್ಯಕ್ಷತೆ ವಹಿಸಲಿರುವರು. ನಂತರ ಪ್ರಜ್ಞಾ ಅಡಿಗ ಅವರ ರಾಗಂ.. ತಾನಂ.. ಪಲ್ಲವಿ.. ಗಾಯನ ನಡೆಯಲಿದೆ ಎಂದು ಸಂಸ್ಥೆಯ ಕಾರ್ಯದರ್ಶಿ ಉಮಾಶಂಕರಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ರಣಜಿ: ಕರ್ನಾಟಕದ ವಿರುದ್ಧ ಪಂಜಾಬ್ಗೆ 112 ರನ್ ಮುನ್ನಡೆ
ಮೊಹಾಲಿ: ನಾಯಕ ಉದಯ್ ಸಹರಾನ್ ಅರ್ಧಶತಕದ (ಔಟಾಗದೆ 63, 110 ಎಸೆತ, 4 ಬೌಂಡರಿ, 2 ಸಿಕ್ಸರ್)ನೆರವಿನಿಂದ ಪಂಜಾಬ್ ತಂಡ ರಣಜಿ ಟ್ರೋಫಿ ಟೂರ್ನಿಯ ‘ಬಿ’ ಗುಂಪಿನ ಪಂದ್ಯದಲ್ಲಿ ಕರ್ನಾಟಕ ಕ್ರಿಕೆಟ್ ತಂಡದ ವಿರುದ್ಧ 112 ರನ್ ಮುನ್ನಡೆಯಲ್ಲಿದೆ. ಮೂರನೇ ದಿನವಾದ ಶನಿವಾರ ದಿನದಾಟದಂತ್ಯಕ್ಕೆ ಪಂಜಾಬ್ ತಂಡವು ತನ್ನ ಎರಡನೇ ಇನಿಂಗ್ಸ್ನಲ್ಲಿ 3 ವಿಕೆಟ್ಗಳ 119 ರನ್ ಗಳಿಸಿದೆ. ಉದಯ್ ಹಾಗೂ ಅನ್ಮೋಲ್ಪ್ರೀತ್ ಸಿಂಗ್(6 ರನ್)ಕ್ರೀಸ್ ಕಾಯ್ದುಕೊಂಡಿದ್ದಾರೆ. ಆರಂಭಿಕ ಆಟಗಾರ ಅಭಿಜೀತ್ ಗರ್ಗ್ 33 ರನ್ ಗಳಿಸಿ ಔಟಾಗಿದ್ದಾರೆ. ಶ್ರೇಯಸ್ ಗೋಪಾಲ್(1-25), ಮುಹ್ಸಿನ್ ಖಾನ್(2-29)ಹಾಗೂ ಶಿಖರ್ ಶೆಟ್ಟಿ(1-43)ತಲಾ ಒಂದು ವಿಕೆಟ್ಗಳನ್ನು ಪಡೆದರು. ಇದಕ್ಕೂ ಮೊದಲು 6 ವಿಕೆಟ್ಗಳ ನಷ್ಟಕ್ಕೆ 255 ರನ್ನಿಂದ ತನ್ನ ಮೊದಲ ಇನಿಂಗ್ಸ್ ಮುಂದುವರಿಸಿದ ಕರ್ನಾಟಕ ತಂಡವು 316 ರನ್ ಗಳಿಸಿ ಆಲೌಟಾಯಿತು. ಕೇವಲ 7 ರನ್ ಮುನ್ನಡೆ ಪಡೆಯಿತು. 42 ರನ್ನಿಂದ ಬ್ಯಾಟಿಂಗ್ ಮುಂದುವರಿಸಿದ ಶ್ರೇಯಸ್ ಗೋಪಾಲ್(77 ರನ್, 195 ಎಸೆತ, 6 ಬೌಂಡರಿ)ಅರ್ಧಶತಕ ಗಳಿಸಿದರು. ವಿದ್ಯಾಧರ ಪಾಟೀಲ್ 34 ರನ್ ಗಳಿಸಿ ಔಟಾದರು. ಹರ್ಪ್ರೀತ್ ಬ್ರಾರ್(4-125), ಸುಖದೀಪ ಸಿಂಗ್(3-42)ಹಾಗೂ ಅನ್ಮೋಲ್ಜೀತ್ ಸಿಂಗ್(2-62)ಕರ್ನಾಟಕ ತಂಡವನ್ನು ಕಾಡಿದರು.
ನೇಜಾರು ತಾಯಿ ಮಕ್ಕಳ ಕಗ್ಗೊಲೆ ಪ್ರಕರಣ: ಎಂಟು ಸಾಕ್ಷಿಗಳ ವಿಚಾರಣೆ
ಉಡುಪಿ, ಜ.31: ನೇಜಾರು ತಾಯಿ ಮತ್ತು ಮೂವರು ಮಕ್ಕಳ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಜ.30 ಮತ್ತು ಜ.31ರಂದು ಒಟ್ಟು ಎಂಟು ಸಾಕ್ಷಿಗಳ ಮುಖ್ಯ ವಿಚಾರಣೆ ಹಾಗೂ ಪಾಟಿ ಸವಾಲು ಉಡುಪಿ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ನಡೆಯಿತು. ಪ್ರಕರಣಕ್ಕೆ ಸಂಬಂಧಿಸಿ ಮಹಜರು ನಡೆಸಿದ ಖಾಸಗಿ ಸಾಕ್ಷಿಗಳ ಮುಖ್ಯ ವಿಚಾರಣೆಯನ್ನು ವಿಶೇಷ ಸರಕಾರಿ ಅಭಿಯೋಜಕ ಶಿವಪ್ರಸಾದ್ ಆಳ್ವಾ ನಡೆಸಿದರೆ, ಆರೋಪಿ ಪರ ವಕೀಲ ರಾಜು ಪೂಜಾರಿ ಪಾಟಿಸವಾಲು ನಡೆಸಿ ದರು. ಈ ಮೂಲಕ ಈವರೆಗೆ ಈ ಪ್ರಕರಣದಲ್ಲಿ ಒಟ್ಟು 26 ಸಾಕ್ಷಿಗಳ ವಿಚಾರಣೆ ಪೂರ್ಣಗೊಂಡಿದೆ. ಮುಂದಿನ ವಿಚಾರಣೆಯನ್ನು ಫೆ.27 ಮತ್ತು 28ಕ್ಕೆ ನಿಗದಿಪಡಿಸಿ ನ್ಯಾಯಾಧೀಶರು ಆದೇಶ ಹೊರಡಿಸಿದರು. ಆ ದಿನದಂದು ಮತ್ತೆ 10-15 ಸಾಕ್ಷಿಗಳ ವಿಚಾರಣೆಗಾಗಿ ಸಮನ್ಸ್ ಜಾರಿ ಮಾಡಲು ಸೂಚಿಸಲಾಗಿದೆ. ಈ ಸಂದರ್ಭದಲ್ಲಿ ಆರೋಪಿ ಪ್ರವೀಣ್ ಚೌಗುಲೆಯನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರುಪಡಿಸಲಾಯಿತು.
ವಾಷಿಂಗ್ಟನ್: ಅಮೆರಿಕಾ ಸಂಸತ್ತು 2026ರ ಬಜೆಟನ್ನು ಗಡುವಿನೊಳಗೆ ಅನುಮೋದಿಸಲು ವಿಫಲಗೊಂಡ ಹಿನ್ನೆಲೆಯಲ್ಲಿ ಅಮೆರಿಕಾದ ಸರಕಾರ ಶನಿವಾರ ಭಾಗಶಃ ಸ್ಥಗಿತಗೊಂಡಿರುವುದಾಗಿ ಎಎಫ್ಪಿ ಸುದ್ದಿಸಂಸ್ಥೆ ವರದಿ ಮಾಡಿದೆ. ಮುಂದಿನ ವಾರದ ಆರಂಭದಲ್ಲಿ ಸೆನೆಟ್ ಬೆಂಬಲಿತ ನಿಧಿಯ ಒಪ್ಪಂದವನ್ನು ಸದನ ಅನುಮೋದಿಸುವ ನಿರೀಕ್ಷೆ ಇರುವುದರಿಂದ ಸ್ಥಗಿತ ಪ್ರಕ್ರಿಯೆ ಸಂಕ್ಷಿಪ್ತವಾಗಿರಬಹುದು ಎಂದು ಸಂಸದರು ಸೂಚನೆ ನೀಡಿದ್ದಾರೆ. ಮಿನಿಯಾಪೋಲಿಸ್ನಲ್ಲಿ ಫೆಡರಲ್ ವಲಸೆ ಅಧಿಕಾರಿಗಳ ಕೈಯಲ್ಲಿ ಇಬ್ಬರು ಸಾವನ್ನಪ್ಪಿದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ಡೆಮಾಕ್ರಟಿಕ್ ಸದಸ್ಯರು ರಾಷ್ಟ್ರೀಯ ಭದ್ರತಾ ಇಲಾಖೆಗೆ ಬಜೆಟ್ನಲ್ಲಿ ಹೊಸ ಅನುದಾನ ಮೀಸಲಿಡುವ ಚರ್ಚೆಗೆ ಅಡ್ಡಿಪಡಿಸಿದ್ದರಿಂದ ಬಜೆಟ್ ಅನುಮೋದನೆ ಕುರಿತ ಚರ್ಚೆ ಮುರಿದು ಬಿದ್ದಿದೆ ಎಂದು ವರದಿಯಾಗಿದೆ. ಇದು 75%ದಷ್ಟು ಫೆಡರಲ್ ಕಾರ್ಯಾಚರಣೆಯ ಮೇಲೆ ಪರಿಣಾಮ ಬೀರಲಿದೆ. ಮುಂದಿನ ವಾರದ ಆರಂಭದಲ್ಲಿ ಸದನ ಬಜೆಟ್ ಪ್ಯಾಕೇಜ್ಗೆ ಅನುಮೋದನೆ ನೀಡಿದರೆ ಕೆಲ ದಿನಗಳಲ್ಲೇ ಅನುದಾನವನ್ನು ಮರುಸ್ಥಾಪಿಸಬಹುದು ಎಂದು ವರದಿ ಹೇಳಿದೆ.
ವಿಬಿ ಜಿ ರಾಮ್ ಜೀ ಯೋಜನೆ ಜಾಗೃತಿ ಸಮಾವೇಶ
ಉಡುಪಿ, ಜ.31: ಬಿಜೆಪಿ ಉಡುಪಿ ಜಿಲ್ಲೆ ವತಿಯಿಂದ ವಿಬಿ ಜಿ ರಾಮ್ ಜೀ ವಿಕಸಿತ ಭಾರತ ಉದ್ಯೋಗ ಖಾತ್ರಿ ಮತ್ತು ಅಜೀವಿಕಾ ಮಿಷನ್(ಗ್ರಾಮೀಣ) ಕಾಯ್ದೆ ಜಾಗೃತಿ ಸಮಾವೇಶವನ್ನು ಕುಂಜಿಬೆಟ್ಟು ಶಾರದಾ ಕಲ್ಯಾಣ ಮಂಟಪದಲ್ಲಿ ಶನಿವಾರ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಮಾತನಾಡಿದರು. ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ, ರಾಜ್ಯ ಬಿಜೆಪಿ ರೈತ ಮೋರ್ಚಾದ ಪ್ರಧಾನ ಕಾರ್ಯದರ್ಶಿ ನವೀನ್ ಕುಮಾರ್, ರಾಜ್ಯ ಬಿಜೆಪಿ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಶಿಲ್ಪಾ ಜಿ.ಸುವರ್ಣ, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ಶ್ರೀಕಾಂತ್ ನಾಯಕ್, ಹೆರ್ಗ ದಿನಕರ್ ಶೆಟ್ಟಿ, ರೇಷ್ಮಾ ಶೆಟ್ಟಿ, ಜಿಲ್ಲಾ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಕಮಲಾಕ್ಷ್ ಹೆಬ್ಬಾರ್ ಉಪಸ್ಥಿತರಿದ್ದರು.
ನಿರ್ಮಲಾ ಸೀತಾರಾಮನ್ ಅವರು ಫೆ. 1ರಂದು 2026ರ ಬಜೆಟ್ ಮಂಡಿಸಲಿದ್ದಾರೆ. ಬಜೆಟ್ ಮಂಡನೆ ಕ್ರಮಕ್ಕೆ ಒಂದು ಪದ್ಧತಿಯಿದೆ. ಸಾಮಾನ್ಯವಾಗಿ ವಿತ್ತ ಸಚಿವರು ಓದುವ ಬಜೆಟ್ ಕಾಪಿಯಲ್ಲಿ ಭಾಗ - 1, ಭಾಗ -2 ಎಂಬ ಎರಡು ವಿಭಾಗಗಳಿರುತ್ತವೆ. ಆ ಎರಡನ್ನು ವಿತ್ತ ಸಚಿವರು ಓದುತ್ತಾರೆ. ಆದರೆ, ಈ ಬಾರಿ ಆಯ-ವ್ಯಯ ಮಂಡಿಸುವ ವೇಳೆ ನಿರ್ಮಲಾ ಸೀತಾರಾಮನ್ ಅವರು ಭಾಗ - 1 ಕೈಬಿಡುತ್ತಾರೆಂದು ಹೇಳಲಾಗಿದೆ. ಭಾಗ -1 ಕೈಬಿಡಲು ಕಾರಣವೇನು? ಇಲ್ಲಿದೆ ಮಾಹಿತಿ.
Sindhanur | ವಿದ್ಯಾರ್ಥಿನಿ ಸಾವಿನ ಪ್ರಕರಣ : ಸರಕಾರಿ ಶಾಲೆಯ ಪ್ರಭಾರಿ ಮುಖ್ಯಗುರು ಅಮಾನತು
ಸಿಂಧನೂರು : ತಾಲ್ಲೂಕಿನ ಕುರಕುಂದಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ 5ನೇ ತರಗತಿ ವಿದ್ಯಾರ್ಥಿನಿ ತನುಶ್ರೀ ಶ್ಯಾಮಪ್ಪ ಅವರ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ, ಶಾಲೆಯ ಪ್ರಭಾರಿ ಮುಖ್ಯಗುರು ಪರಸಪ್ಪ ಮೈಲಾರಪ್ಪ ಚಲವಾದಿ ಅವರನ್ನು ಅಮಾನತು ಮಾಡಿ ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಕೆ.ಡಿ. ಬಡಗೇರ ಆದೇಶ ಹೊರಡಿಸಿದ್ದಾರೆ. ವಿದ್ಯಾರ್ಥಿನಿ ತನುಶ್ರೀ ನೀರು ತರಲು ಹೋದ ವೇಳೆ ಬಿದ್ದು ಆಕಸ್ಮಿಕವಾಗಿ ಮೃತಪಟ್ಟಿದ್ದಳು. ಈ ಘಟನೆಯ ಬಳಿಕ ಕ್ಷೇತ್ರ ಶಿಕ್ಷಣಾಧಿಕಾರಿಗಳು ನಡೆಸಿದ ಸ್ಥಳ ಪರಿಶೀಲನೆಯಲ್ಲಿ, ಶಾಲೆಯ ಪ್ರಭಾರಿ ಮುಖ್ಯಗುರು ಪರಸಪ್ಪ ಅವರ ಬೇಜವಾಬ್ದಾರಿ ಮತ್ತು ನಿರ್ಲಕ್ಷ್ಯತನ ಮೇಲ್ನೋಟಕ್ಕೆ ಸಾಬೀತಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ವಿದ್ಯಾರ್ಥಿಗಳ ಸುರಕ್ಷತೆ ಕಾಪಾಡುವಲ್ಲಿ ವಿಫಲರಾಗಿರುವುದು ಗಂಭೀರವಾದ ಕರ್ತವ್ಯ ಲೋಪ ಎಂದು ಪರಿಗಣಿಸಿ, ಪ್ರಭಾರಿ ಮುಖ್ಯಗುರು ಪರಸಪ್ಪ ಚಲವಾದಿ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಸೇವೆಯಿಂದ ಅಮಾನತುಗೊಳಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ. ಅಮಾನತು ಅವಧಿಯಲ್ಲಿ ಸಕ್ಷಮ ಪ್ರಾಧಿಕಾರದ ಪೂರ್ವಾನುಮತಿ ಇಲ್ಲದೆ ಕೇಂದ್ರ ಸ್ಥಾನವನ್ನು ಬಿಟ್ಟು ಹೋಗದಂತೆ ಅವರಿಗೆ ಕಟ್ಟುನಿಟ್ಟಾಗಿ ಸೂಚನೆ ನೀಡಲಾಗಿದೆ.
Nikhil Kumaraswamy: ಚಾಮರಾಜನಗರ ವಿಧಾನಸಭಾ ಕ್ಷೇತ್ರದಿಂದ ನಿಖಿಲ್ ಕುಮಾರಸ್ವಾಮಿ ಸ್ಪರ್ಧೆ ಬಗ್ಗೆ ಸ್ಪಷ್ಟನೆ
ತುಮಕೂರು: ಚಾಮರಾಜನಗರದಲ್ಲಿ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ನಿಖಿಲ್ ಕುಮಾರಸ್ವಾಮಿ ಸ್ಪರ್ಧಿಸುತ್ತಾರೆ ಎಂಬ ವಿಚಾರ ಜೆಡಿಎಸ್ ಪಾಳಯದಲ್ಲಿ ಚರ್ಚೆಯಾಗುತ್ತಿದ್ದು, ಈ ಬಗ್ಗೆ ಮಾಧ್ಯಮಗಳ ಮೂಲಕ ನಿಖಿಲ್ ಕುಮಾರಸ್ವಾಮಿ ಸ್ಪಷ್ಟನೆ ನೀಡಿದ್ದಾರೆ. ನಾನು ಕ್ಲಿಯರ್ ಆಗಿ ಹೇಳುತ್ತೇನೆ ಯಾವುದೇ ಗೊಂದಲ ಮಾಡೋದು ಬೇಡ. ಚಾಮರಾಜನಗರದಲ್ಲಿ ಹಲವು ವರ್ಷಗಳಿಂದ ಪಕ್ಷಕ್ಕಾಗಿ ದುಡಿದ ಕಾರ್ಯಕರ್ತರು ಹಿರಿಯ ನಾಯಕರಿದ್ದಾರೆ.ಯಾವುದು ಯಾವುದು ಕ್ಷೇತ್ರಕ್ಕೆ ಮೂಗು ತೂರಿಸುವ
ರಾಯಚೂರು | ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚಾರಣೆ ಅಂಗವಾಗಿ ಸಾರ್ವಜನಿಕರಿಗೆ ಉಚಿತ ಹೆಲ್ಮೆಟ್ ವಿತರಣೆ ಕಾರ್ಯಕ್ರಮ
ಹೆಲ್ಮೆಟ್ ಧರಿಸದ ಕಾರಣ ರಸ್ತೆ ಅಪಘಾತಗಳಲ್ಲಿ ಜೀವ ಹಾನಿ : ಜಿಲ್ಲಾಧಿಕಾರಿ ನಿತಿಶ್ ಕೆ.
1455 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ವಿತರಣೆ
ಉಡುಪಿ, ಜ.31: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್ ವತಿಯಿಂದ ಮಲ್ಪೆ ಏಳೂರು ಮೊಗವೀರ ಭವನದಲ್ಲಿ ಶನಿವಾರ ಆಯೋಜಿಸಲಾದ ಉಡುಪಿ ಜಿಲ್ಲೆಯ 1455 ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ವಿತರಣೆ ಸಮಾರಂಭ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮವನ್ನು ಉಡುಪಿಯ ಮನೋ ವೈದ್ಯ ಡಾ. ಪಿ.ವಿ.ಭಂಡಾರಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಜೀವನ ದಲ್ಲಿ ಯಶಸ್ವಿಯಾಗಲು ಶೈಕ್ಷಣಿಕ ಸಾಧನೆಯ ಜೊತೆ ಜೊತೆಗೆ ಸವಾಲುಗಳನ್ನು ಎದುರಿಸಲು ಧನಾತ್ಮಕ ಚಿಂತನೆಯೊಂದಿಗೆ ಮಾನಸಿಕ ಸ್ಥೈರ್ಯವನ್ನು ಹೆಚ್ಚಿಸಿಕೊಳ್ಳುವುದು ಅಗತ್ಯವಾಗಿದೆ ಎಂದರು. ಸಂಪನ್ಮೂಲ ವ್ಯಕ್ತಿಯಾಗಿ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಪ್ರಾಂಶುಪಾಲ ಅಶೋಕ್ ಕಾಮತ್ ಮಾತನಾಡಿದರು. ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷ, ಉಡುಪಿ ಶಾಸಕ ಯಶ್ಪಾಲ್ ಸುವರ್ಣ ವಹಿಸಿದ್ದರು. ಈ ಸಂದರ್ಭದಲ್ಲಿ ಸಾಧಕರಾದ ರಾಮಚಂದ್ರ ಕುಂದರ್, ನಾಗರಾಜ ಸುವರ್ಣ ಹಾಗೂ ರಿಮ ರಾವ್ ಯು.ಬಿ. ಅವರನ್ನು ಸನ್ಮಾನಿಸಲಾಯಿತು. ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ. ಕೋಟ್ಯಾನ್, ಮಲ್ಪೆ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಗೋಪಾಲ ಸಿ.ಬಂಗೇರ, ನಗರಸಭೆ ಸದಸ್ಯ ಯೋಗೀಶ್ ಸಾಲ್ಯಾನ್, ಉದ್ಯಮಿ ಆನಂದ ಪಿ. ಸುವರ್ಣ, ಮಲ್ಪೆ ಏಳೂರು ಮೊಗವೀರ ಮಹಾಜನ ಸಂಘದ ಅಧ್ಯಕ್ಷ ರತ್ನಾಕರ ಸಾಲ್ಯಾನ್, ಆಳ ಸಮುದ್ರ ಮೀನುಗಾರರ ಸಹಕಾರಿ ಸಂಘದ ಅಧ್ಯಕ್ಷ ಸುಭಾಷ್ ಮೆಂಡನ್, ಮಲ್ಪೆ ಮೀನುಗಾರರ ಪ್ರಾಥಮಿಕ ಸಹಕಾರಿ ಸಂಘದ ಅಧ್ಯಕ್ಷ ಸತೀಶ್ ಕುಂರ್ದ, ಕೋಟ ಪರ್ಸೀನ್ ಮೀನುಗಾರರ ಸಹಕಾರಿ ಸಂಘದ ಅಧ್ಯಕ್ಷ ರಾಜೇಂದ್ರ ಸುವರ್ಣ, ಮಲ್ಪೆ ಮಹಿಳಾ ಮೀನುಗಾರರ ಸಹಕಾರಿ ಸಂಘದ ಅಧ್ಯಕ್ಷ ಗೀತಾ ಕರ್ಕೇರ, ನಗರಸಭೆಯ ಸದಸ್ಯರಾದ ಸುಂದರ ಕಲ್ಮಾಡಿ, ಎಡ್ಲಿನ್ ಕರ್ಕಡ, ಫೆಡರೇಶನ್ ಉಪಾಧ್ಯಕ್ಷ ದೇವಪ್ಪ ಕಾಂಚನ್, ವ್ಯವಸ್ಥಾಪಕ ನಿರ್ದೇಶಕಿ ದರ್ಶನ್ ಟಿ.ಕೆ. ಉಪಸ್ಥಿತರಿದ್ದರು. ವಿಜೇತ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
ಸಿ.ಜೆ.ರಾಯ್ ಅವರೇ ಗುಂಡು ಹೊಡೆದುಕೊಂಡರಾ ಅಥವಾ ಯಾರಾದರೂ ಗುಂಡು ಹೊಡೆದರಾ? : ಪ್ರದೀಪ್ ಈಶ್ವರ್ ಶಂಕೆ
ಬೆಂಗಳೂರು : ಉದ್ಯಮಿ ಸಿ.ಜೆ.ರಾಯ್ ಆತ್ಮಹತ್ಯೆ ಪ್ರಕರಣದಲ್ಲಿ ಹಲವು ಅನುಮಾನ ಇದ್ದು, ಅವರು ನಿಜವಾಗಿಯೂ ಪಿಸ್ತೂಲಿನಿಂದ ಗುಂಡು ಹೊಡೆದುಕೊಂಡರಾ ಅಥವಾ ಯಾರಾದರೂ ಗುಂಡು ಹೊಡೆದರಾ? ಎಂದು ಕಾಂಗ್ರೆಸ್ ಪ್ರದೀಪ್ ಈಶ್ವರ್ ಶಂಕೆ ವ್ಯಕ್ತಪಡಿಸಿದ್ದಾರೆ. ಕನಕಪುರದಲ್ಲಿ ನಡೆಯುತ್ತಿರುವ ಕನಕೋತ್ಸವದಲ್ಲಿ ಶನಿವಾರ ನಡೆದ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿಯಲ್ಲಿ ಉತ್ತಮ ಅಂಕ ಗಳಿಸಿದ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಘಟನೆ ಆದ ಸ್ಥಳದಲ್ಲಿ ಸಿಸಿಟಿವಿ ಇಲ್ಲ, ಇದ್ದವರು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಮಾತ್ರ. ಒಳಗಡೆ ಏನಾಗಿದೆ ಎನ್ನುವುದು ಗೊತ್ತಿಲ್ಲ ಎಂದರು. ನನಗಿರುವ ಪ್ರಾಥಮಿಕ ಮಾಹಿತಿ ಪ್ರಕಾರ ಬಿಜೆಪಿಯವರು ಚುನಾವಣೆಗೆ ನೂರಾರು ಕೋಟಿ ದುಡ್ಡು ಕೇಳಿದ್ದಾರೆ. ಅವರು ಹಣ ಕೊಡದಿದ್ದಕ್ಕೆ ಅವರನ್ನು ಗುರಿಯಾಗಿಸಿಕೊಂಡಿದ್ದಾರೆ. ಇಂತಹ ಭ್ರಷ್ಟ ಬಿಜೆಪಿಯಿಂದ ನಮ್ಮ ದೇಶ ಅಭಿವೃದ್ಧಿ ಆಗಲ್ಲ. ಅಶೋಕಣ್ಣ, ಸುನೀಲಣ್ಣ, ಯತ್ನಾಳ್ ಅವರು ಮಾತ್ರವಲ್ಲದೆ, ಮೈಸೂರಿನ ಒಂದು ಕೋತಿ ಎಲ್ಲದಕ್ಕೂ ಬಾಯಿ ಬಡಿದುಕೊಳ್ತಾರೆ. ಇದರ ಬಗ್ಗೆ ಯಾಕೆ ಯಾರೂ ಬಾಯಿ ಬಿಡುತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು. ಒಬ್ಬ ಸಾಮಾನ್ಯ ವ್ಯಕ್ತಿ ಹಣ ಸಂಪಾದನೆ ಮಾಡಲು ಬಿಜೆಪಿ ಬಿಡುತ್ತಿಲ್ಲ. ಅವರಿಗೆ ಸಾಲ ಇಲ್ಲ, ಯಾವುದೇ ಸಮಸ್ಯೆ ಇಲ್ಲ ಕಳೆದ ಒಂದು ತಿಂಗಳಿನಿಂದ ಆದಾಯ ತೆರಿಗೆ ಅಧಿಕಾರಿಗಳು ಅವರಿಗೆ ಕಿರುಕುಳ ನೀಡಿದೆ. ಕೇಂದ್ರದಲ್ಲಿ ಬಿಜೆಪಿ ಇದ್ದರೆ ಇದೇ ಕಿರುಕುಳ ಮುಂದುವರಿಯುತ್ತದೆ. ಈ ಬಗ್ಗೆ ಎಸ್ಐಟಿ ತನಿಖೆ ಆಗಲಿ ಎಂದು ಅವರು ಒತ್ತಾಯಿಸಿದರು.
ಕೆಮ್ಮಣ್ಣು ಪರಿಸರದಲ್ಲಿ ಚಿರತೆ: ಸ್ಥಳೀಯರಲ್ಲಿ ಆತಂಕ
ಉಡುಪಿ, ಜ.31: ಕೆಮ್ಮಣ್ಣು, ತೆಂಕನಿಡಿಯೂರು, ಬಡಾನಿಡಿಯೂರು ಹಾಗೂ ಕಲ್ಯಾಣಪುರ ಗ್ರಾಮಗಳ ವ್ಯಾಪ್ತಿಯಲ್ಲಿ ಚಿರತೆಯೊಂದು ಕಾಣಿಸಿ ಕೊಂಡಿದ್ದು, ಇದರಿಂದ ಸ್ಥಳೀಯರು ಭಯ ಭೀತರಾಗಿರುವ ಬಗ್ಗೆ ವರದಿಯಾಗಿದೆ. ಒಂದು ವಾರದ ಹಿಂದೆ ಅಂಬಾಗಿಲಿನ ಬಳಿ ಕಾಣಿಸಿಕೊಂಡ ಚಿರತೆ, ಬಳಿಕ ತೆಂಕನಿಡಿಯೂರು ಪ್ರದೇಶದಲ್ಲಿ ಕಂಡು ಬಂದಿದೆ ಎಂದು ಹೇಳಲಾಗುತ್ತಿದೆ. ಅಲ್ಲದೆ ಬಡಾನಿಡಿಯೂರು ಗ್ರಾಮದ ಕದಿಕೆ ಎಂಬಲ್ಲಿಯೂ ಚಿರತೆ ಕಾಣ ಸಿಕ್ಕಿದೆ ಎಂದು ತಿಳಿದುಬಂದಿದೆ. ಇದರಿಂದ ಈ ಪರಿಸರದ ಜನ ಭಯ ಭೀತರಾಗಿ ಅರಣ್ಯ ಇಲಾಖೆಯ ಮೊರೆ ಹೋಗಿದ್ದಾರೆ. ಈ ಸಂಬಂಧ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿರುವ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಎರಡು ದಿನಗಳ ಹಿಂದೆ ಕೆಮ್ಮಣ್ಣು ಸಮೀಪದ ಹಂಪನ ಕಟ್ಟೆ ಎಂಬಲ್ಲಿ ಚಿರತೆಯ ಸೆರೆಗೆ ಬೋನು ಇರಿಸಿದ್ದಾರೆ. ಆದರೆ ಈವರೆಗೆ ಚಿರತೆ ಸೆರೆಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸದೃಢ ಸಮಾಜದ ನಿರ್ಮಾಣದಲ್ಲಿ ಎಲ್ಲರ ಪಾತ್ರ ಮುಖ್ಯ: ಪ್ರೊ.ಪೇಮ್ನಾಥ್
ಶಿರ್ವ, ಜ.31: ಆರೋಗ್ಯ ಪೂರ್ಣ ಸಮಾಜದಲ್ಲಿ ಎಲ್ಲಾ ವೃತ್ತಿಗಳ ಪಾತ್ರವೂ ಪ್ರಾಮುಖ್ಯವಾಗಿದೆ. ಹಿಂದೆ ಪರಂಪರಗತವಾಗಿ ಒಂದೊಂದು ಸಮುದಾಯಗಳ ಕುಲಕಸುಬುಗಳಾಗಿ ಬೆಳೆದು ಬಂದಿದ್ದು, ಇಂದು ಜ್ಞಾನದ ಆವಿಷ್ಕಾರಗಳು ಬೆಳೆದಂತೆ ಶಿಕ್ಷಣದ ಆಧಾರದ ಮೇಲೆ ವಿವಿಧ ಕ್ಷೇತ್ರಗಳಲ್ಲಿ ಉದ್ಯೋಗ ಮಾಡಬಹುದಾಗಿದೆ ಎಂದು ಶಿರ್ವ ಸಂತಮೇರಿ ಪದವಿ ಕಾಲೇಜಿನ ಪ್ರಾಧ್ಯಾಪಕ ಪ್ರೊ.ಪೇಮ್ನಾಥ್ ಹೇಳಿದ್ದಾರೆ. ರೋಟರಿ ಅಂತಾರಾಷ್ಟ್ರೀಯ ವೃತ್ತಿ ಮಾಸಾಚರಣೆಯ ಅಂಗವಾಗಿ ಶುಕ್ರವಾರ ಬಂಟಕಲ್ಲು ರೋಟರಿ ಭವನದಲ್ಲಿ ಏರ್ಪಡಿಸಲಾದ ಸೌಹಾರ್ದ ಸಮ್ಮಿಲನ ಸಮಾರಂಭದಲ್ಲಿ ಅವರು ಮಾತನಾಡುತಿದ್ದರು. ಯಾವುದೇ ವೃತ್ತಿಯನ್ನು ಪ್ರೀತಿಸಿ, ಶ್ರದ್ಧೆ, ಪ್ರಾಮಾಣಿಕತೆುಂದ ನಿರ್ವಹಿಸಿ ದಾಗ ಯಶಸ್ಸನ್ನು ಸಾಧಿಸಬಹುದು. ಪ್ರತೀಯೊಂದು ವೃತ್ತಿಗೂ ಅದರದ್ದೇ ಆದ ಗೌರವ ಇದೆ. ಸದೃಢ ಸಮಾಜದ ನಿರ್ಮಾಣದಲ್ಲಿ ಎಲ್ಲಾ ವೃತ್ತಿ ಸೇವೆಗಳ ಪಾತ್ರ ಮಹತ್ವದ್ದಾಗಿದೆ ಎಂದರು. ಈ ಸಂದರ್ಭದಲ್ಲಿ ಸಮಾಜಮುಖಿ ಸಾಧನೆಗಳನ್ನು ಮಾಡಿದ ತೆಂಗಿನ ಕಾಯಿ ಕೀಳುವ ಮಧುಕರ, ರಿಕ್ಷಾ ಚಾಲಕ ತಿಯೋಡೋರ್ ಮತಾಯಸ್ ಬಿ.ಸಿ.ರೋಡ್, ಬಾಣಂತಿ ಮದ್ದು, ಅಡುಗೆಯ ಸೆಲಿನ್ ಮೆಂಡೋನ್ಸಾ, ಹೊಟೇಲ್ ಕಾರ್ಮಿಕ ಸೋಮನಾಥ, ಪಿಗ್ಮಿ ಸಂಗ್ರಾಹಕ ಸತೀಶ್, ಸೈಕಲ್ ರಿಪೇರಿ ತಂತ್ರಜ್ಞ ಸನಾವುಲ್ಲಾ ಅಸಾದಿ ಅವರನ್ನು ಸನ್ಮಾನಿಸಲಾಯಿತು. ಅಧ್ಯಕ್ಷತೆಯನ್ನು ರೋಟರಿ ಅದ್ಯಕ್ಷ ವಿಲಿಯಮ್ ಮಚಾದೊ ವಹಿಸಿದ್ದರು. ಕಾರ್ಯಕ್ರಮ ಸಂಯೋಜಕ ಡಾ.ವಿಟ್ಠಲ್ ನಾಯಕ್ ಪ್ರಾಸಾವ್ತಿಕವಾಗಿ ಮಾತನಾಡಿ ಸ್ವಾಗತಿಸಿದರು. ಮೆಲ್ವಿನ್ ಡಿಸೋಜ, ಮೈಕಲ್ ಮತಾಯಸ್, ಜಾಕ್ಲಿನ್ ಡಿಸೋಜ, ವಿಕ್ಟರ್ ಅಲ್ಮೇಡಾ, ಜೆಸಿಂತಾ ಡಿಸೋಜ, ರಘುಪತಿ ಐತಾಳ್ ಪರಿಚಯಿಸಿದರು. ರೋಟರಿ ಜಿಲ್ಲಾ ಮಾಜಿ ಸಹಾಯಕ ಗವರ್ನರ್ ಬಿ.ಪುಂಡಲೀಕ ಮರಾಠೆ ರೋಟರಿ ವೃತ್ತಿ ಸೇವಾ ಮಾಸಾಚರಣೆಯ ಮಹತ್ವ ತಿಳಿಸಿದರು. ವಿಷ್ಣುಮೂರ್ತಿ ಸರಳಾಯ ಶುಭಾಶಯ ಕೋರಿದರು. ಸಾರ್ಜಂಟ್ ರಫಾಯಲ್ ಮತಾಯಸ್, ಕ್ಲಬ್ ಸೇವಾ ನಿರ್ದೇಶಕ ಹೆರಾಲ್ಡ್ ಕುಟಿನ್ಹೊ ಸಹಕರಿಸಿದರು. ಕಾರ್ಯದರ್ಶಿ ಹೊನ್ನಯ್ಯ ಶೆಟ್ಟಿಗಾರ್ ವಂದಿಸಿದರು.
IND Vs NZ | ನ್ಯೂಝಿಲ್ಯಾಂಡ್ಗೆ 272 ರನ್ಗಳ ಬೃಹತ್ ಗುರಿ ನೀಡಿದ ಭಾರತ
ಇಶಾನ್ ಕಿಶನ್ ಸ್ಫೋಟಕ ಶತಕ

23 C