Sindhanur | ರೀಲ್ಸ್ ಮಾಡಲು ನದಿಗೆ ಹಾರಿದ ಯುವಕ; ನೀರಿನಲ್ಲಿದ್ದ ಕಲ್ಲು ತಲೆಗೆ ಬಡಿದು ಮೃತ್ಯು
ಸಿಂಧನೂರು : ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ ಹಾರಿದ ಯುವಕನೋರ್ವನಿಗೆ ತಲೆಗೆ ತೀವ್ರ ಪೆಟ್ಟು ಬಿದ್ದು ಮೃತಪಟ್ಟ ಘಟನೆ ತಾಲೂಕಿನ ಮುಕ್ಕುಂದಾ ಗ್ರಾಮದಲ್ಲಿ ರವಿವಾರ ಸಂಜೆ ನಡೆದಿದೆ. ಮೃತ ಯುವಕವನ್ನು ಸಿಂಧನೂರಿನ ಗಂಗಾನಗರದ ಅಮನ್ ಖಾನ್ (22) ಎಂದು ಗುರುತಿಸಲಾಗಿದೆ. ರವಿವಾರ ಅಮನ್ ಖಾನ್ ಮೂವರು ಸ್ನೇಹಿತರೊಂದಿಗೆ ಮುಕ್ಕುಂದಾ ಹತ್ತಿರದ ನದಿಗೆ ಹೋಗಿದ್ದನು ಎನ್ನಲಾಗಿದೆ. ಮಧ್ಯಾಹ್ನ ಊಟ ಮುಗಿಸಿದ ನಂತರ ಸಂಜೆ ವೇಳೆಗೆ ಸ್ನೇಹಿತರೊಂದಿಗೆ ನದಿ ತಟದಲ್ಲಿ ರೀಲ್ಸ್ ಮಾಡಲು ಮುಂದಾಗಿದ್ದಾನೆ. ತನ್ನ ಗೆಳೆಯನಿಗೆ ವಿಡಿಯೋ ಮಾಡಲು ಹೇಳಿ ನದಿಗೆ ಜಿಗಿದಿದ್ದಾನೆ. ನೀರಿನಾಳದಲ್ಲಿನ ಗುಂಡು ಕಲ್ಲಿಗೆ ತಲೆ ಬಡಿದಿದ್ದು, ತೀವ್ರವಾಗಿ ಪೆಟ್ಟಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂದು ಆತನ ಸ್ನೇಹಿತರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆಂದು ತಿಳದುಬಂದಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಸಿಂಧನೂರಿನ ಸಾರ್ವಜನಿಕ ಆಸ್ಪತ್ರೆಗೆ ತರಲಾಗಿದೆ. ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Gruha Arogya Scheme: ಗೃಹ ಆರೋಗ್ಯ ಯೋಜನೆ ವರದಿ ಶಾಕ್: ಗ್ರಾಮೀಣ ಪ್ರದೇಶದಲ್ಲೇ ಈ ಆರೋಗ್ಯ ಸಮಸ್ಯೆ ಹೆಚ್ಚು
Gruha Arogya Scheme: ಕರ್ನಾಟಕ ಕಾಂಗ್ರೆಸ್ ಸರ್ಕಾರವು ಪರಿಚಯಿಸಿರುವ ಗೃಹ ಆರೋಗ್ಯ ಯೋಜನೆಯಲ್ಲಿ ಹಲವು ಗಂಭೀರವಾದ ವಿಚಾರಗಳು ಬೆಳಕಿಗೆ ಬಂದಿವೆ. ಈ ಬಗ್ಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಮಹತ್ವದ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಬೆಂಗಳೂರು ಸೇರಿದಂತೆ ಕರ್ನಾಟಕದಾದ್ಯಂತ ಗ್ರಾಮೀಣ ಹಾಗೂ ನಗರ ಪ್ರದೇಶದಲ್ಲಿ ಇರುವವರ ಆರೋಗ್ಯ ಪರೀಕ್ಷೆ ಮಾಡುವ ಉದ್ದೇಶದಿಂದ ಕರ್ನಾಟಕ ಸರ್ಕಾರವು ಗೃಹ ಆರೋಗ್ಯ
ನ್ಯೂಯಾರ್ಕ್: ನ್ಯೂಯಾರ್ಕ್ನ ಲಾಗ್ವಾರ್ಡಿಯಾ ವಿಮಾನ ನಿಲ್ದಾಣದಲ್ಲಿ ಏರ್ ಕೆನಡಾ ಎಕ್ಸ್ಪ್ರೆಸ್ ವಿಮಾನ ಲ್ಯಾಂಡಿಂಗ್ ವೇಳೆ ಅಗ್ನಿಶಾಮಕ ವಾಹನವೊಂದಕ್ಕೆ ಢಿಕ್ಕಿ ಹೊಡೆದ ಪರಿಣಾಮ ಪೈಲಟ್ ಹಾಗೂ ಸಹ ಪೈಲಟ್ ಮೃತಪಟ್ಟಿರುವ ಘಟನೆ ರವಿವಾರ ತಡರಾತ್ರಿ ನಡೆದಿದೆ. ಈ ಘಟನೆಯಲ್ಲಿ ಹಲವರು ಗಾಯಗೊಂಡಿದ್ದಾರೆ. ಘಟನೆ ಬಳಿಕ, ಲಾಗಾರ್ಡಿಯಾ ವಿಮಾನ ನಿಲ್ದಾಣದಲ್ಲಿ ವಿಮಾನ ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ವರದಿಯಾಗಿದೆ. ರವಿವಾರ ತಡರಾತ್ರಿ ಲಾ ಗಾರ್ಡಿಯಾ ವಿಮಾನ ನಿಲ್ದಾಣದಲ್ಲಿ ಏರ್ ಕೆನಡಾ ಎಕ್ಸ್ ಪ್ರೆಸ್ ವಿಮಾನ ಭೂಸ್ಪರ್ಶ ಮಾಡುತ್ತಿದ್ದಂತೆಯೇ ವಿಮಾನ ನಿಲ್ದಾಣದಲ್ಲಿ ನಿಂತಿದ್ದ ಅಗ್ನಿಶಾಮಕ ವಾಹನಕ್ಕೆ ಢಿಕ್ಕಿ ಹೊಡೆದಿದೆ. ಈ ಅಪಘಾತದಲ್ಲಿ ವಿಮಾನದ ಪೈಲಟ್ ಹಾಗೂ ಸಹ ಪೈಲಟ್ ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ. ಅಪಘಾತಕ್ಕೀಡಾದ ಅಗ್ನಿಶಾಮಕ ವಾಹನವನ್ನು ಸರ್ಜೆಂಟ್ ಹಾಗೂ ಪೊಲೀಸ್ ಅಧಿಕಾರಿ ಸೇರಿದಂತೆ ಇಬ್ಬರು ಪೊಲೀಸ್ ಅಧಿಕಾರಿಗಳು ಚಲಾಯಿಸುತ್ತಿದ್ದರು. ಅವರ ಕಾಲುಗಳು ಮುರಿದಿದ್ದು, ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ವರದಿಯಾಗಿದೆ. ವಿಮಾನದ ಟ್ರ್ಯಾಕಿಂಗ್ ದತ್ತಾಂಶದ ಪ್ರಕಾರ, ವಿಮಾನವು ಸ್ಥಳೀಯ ಕಾಲಮಾನ ರಾತ್ರಿ 11.37ಕ್ಕೆ ಭೂಸ್ಪರ್ಶ ಮಾಡಿದೆ.
ಭಾರತಕ್ಕೆ ಏನಾಗಲ್ಲ, ಇಂತಹ ಅದೆಷ್ಟು ಬಿಕ್ಕಟ್ಟು ಎದುರಿಸಿಲ್ಲ? ಲೋಕಸಭೆಯಲ್ಲಿ ನರೇಂದ್ರ ಮೋದಿ ಭಾಷಣದ ಡಿಟೇಲ್ಸ್
ಅಮೆರಿಕ-ಇಸ್ರೇಲ್ ಮತ್ತು ಇರಾನ್ ನಡುವನ ಸುದೀರ್ಘ ಸಂಘರ್ಷದಿಂದಾಗಿ ಭಾರತದಲ್ಲಿ ತೈಲ ಮತ್ತು ಅನಿಲ ಬಿಕ್ಕಟ್ಟು ಸೃಷ್ಟಿಯಾಗಿದ್ದು, ಈ ಬಿಕ್ಕಟ್ಟಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಭಾರತ ನಡೆಸಿರುವ ಪ್ರಯತ್ನಗಳನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಲೋಕಸಭೆಯಲ್ಲಿ ಇಂದು (ಮಾ.23-ಸೋಮವಾರ) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಎಲ್ಲಾ ಬಗೆಯ ತಾತ್ಕಾಲಿಕ ಬಿಕ್ಕಟ್ಟುಗಳಿಗೆ ಪರಿಹಾರ ಒದಗಿಸಲಾಗುತ್ತಿದೆಯಲ್ಲದೇ, ಜಾಗತಿಕ ಶಾಂತಿ ಸ್ಥಾಪನೆಗಾಗಿ ಭಾರತ ತನ್ನ ಪ್ರಾಮಾಣಿಕ ಪ್ರಯತ್ನಗಳನ್ನು ಮುಂದುವರೆಸುವುದಾಗಿ ಭರವಸೆ ನೀಡಿದರು. ಪ್ರಧಾನಿ ಮೋದಿ ಭಾಷಣದ ಸಂಪೂರ್ಣ ವಿವರ ಇಲ್ಲಿದೆ.
'ನೀತಿ ಪಾಲಿಸಿದ್ದೇವೆ' - ಶಾಮನೂರು ಕುಟುಂಬಕ್ಕೆ ಟಿಕೆಟ್ ನೀಡಿದ ಕಾರಣ ಹೇಳಿದ ಸಿಎಂ ಸಿದ್ದರಾಮಯ್ಯ
ದಾವಣಗೆರೆ ದಕ್ಷಿಣ ಕ್ಷೇತ್ರ ಉಪ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿ ಸಮರ್ಥ್ ಶಾಮನೂರು ಅವರು ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಉಪಸ್ಥಿತಿಯಲ್ಲಿ ನಾಮಪತ್ರ ಸಲ್ಲಿಸಿದ್ದಾರೆ. ಈ ವೇಳೆ ಸಿಎಂ ಮಾತನಾಡಿದ್ದು, ಶಾಮನೂರು ಕುಟುಂಬಕ್ಕೆ ಯಾಕೆ ಟಿಕೆಟ್ ನೀಡಿದ್ದು ಎಂದು ಕಾರಣ ಕೊಟ್ಟಿದ್ದಾರೆ. ನಂತರ ಅಭ್ಯರ್ಥಿ ಜತೆ ಸಿಎಂ, ಡಿಸಿಎಂ, ಎಲ್ಲರು ಕೈ ಹಿಡಿದು ಒಗ್ಗಟ್ಟು ಪ್ರದರ್ಶಿಸಿದರು.
ಮಹಿಳೆಯರ ಮೇಲೆ ಮೂಡುಬಿದಿರೆ ಸಿಐನಿಂದ ದೌರ್ಜನ್ಯ: ಪ್ರಕರಣವನ್ನು ಸಿಐಡಿ ತನಿಖೆಗೆ ನೀಡಿದ ಸರ್ಕಾರ
ಮಹಿಳೆಯರ ಮೇಲೆ ಮಂಗಳೂರಿನ ಮೂಡುಬಿದಿರೆ ಪೊಲೀಸ್ ಇನ್ಸ್ಪೆಕ್ಟರ್ ಎಸಗಿರುವ ದೌರ್ಜನ್ಯ ಎಸಗಿರುವ ಆರೋಪದ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಿರುವುದಾಗಿ ಗೃಹ ಸಚಿವ ಡಾ. ಜಿ.ಪರಮೇಶ್ವರ ಅವರು ತಿಳಿಸಿದ್ದಾರೆ. ಅಲ್ಲದೆ, ಗೃಹ ಸಚಿವರನ್ನು ಭೇಟಿ ಮಾಡಿದ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ ಅವರು ಸಹ ನ್ಯಾಯಸಿಗುವ ಭರವಸೆ ನೀಡಿರುವುದಾಗಿ ತಿಳಿಸಿದ್ದಾರೆ.
ದಾವಣಗೆರೆ ದಕ್ಷಿಣ ಕಾಂಗ್ರೆಸ್ ಟಿಕೆಟ್ ವಿಚಾರ | ಅಸಮಾಧಾನ ಬಗೆಹರಿಸಲಾಗುವುದು : ಸಿದ್ದರಾಮಯ್ಯ
ಅಲ್ಪಸಂಖ್ಯಾತ ಸಮುದಾಯಕ್ಕೆ ಸೂಕ್ತ ಪ್ರಾತಿನಿಧ್ಯ ನೀಡುತ್ತೇವೆ ಎಂದ ಸಿಎಂ
''ಒಳಮೀಸಲಾತಿ ರೋಸ್ಟರ್ ಹಂಚಿಕೆ ವಿರೋಧಿಸಿ ಮಾ.24ರಂದು ಪ್ರತಿಭಟನೆ''
ಮಂಗಳೂರು, ಮಾ.23: ಒಳಮೀಸಲಾತಿ ರೋಸ್ಟರ್ ಹಂಚಿಕೆ ವಿರೋಧಿಸಿ ಮಾ.24ರಂದು ಬೆಳಗ್ಗೆ 10ಕ್ಕೆ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಬೃಹತ್ ಪ್ರತಿಭಟನೆ ಆಯೋಜಿಸಲಾಗಿದೆ. ಚಿತ್ರದುರ್ಗ ಭೋವಿ ಗುರುಪೀಠದ ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಮಹಾಸ್ವಾಮೀಜಿ ನೇತೃತ್ವದಲ್ಲಿ ಭೋವಿ, ಬಂಜಾರ, ಕೊರಮ, ಕೊರಚ, ಛಲವಾದಿ ಮತ್ತು ಚರ್ಮಕಾರ ಸೂಕ್ಷ್ಮಜಾತಿಗಳ ಜತೆಸೇರಿ ಈ ಪ್ರತಿಭಟನೆ ನಡೆಸಲಾಗುತ್ತಿದೆ ಎಂದು ಭೋವಿ ಸಮುದಾಯದ ಮುಖಂಡ ಪವನ್ ಕುಮಾರ್ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಪರಿಶಿಷ್ಟ ಜಾತಿಯ ಒಳಮೀಸಲಾತಿಗೆ ಸಂಬಂಧಿಸಿ ನ್ಯಾ. ನಾಗಮೋಹನ್ ದಾಸ್ ಆಯೋಗದ ವರದಿಯಲ್ಲಿನ ದತ್ತಾಂಶ ಪೂರ್ವಾಗ್ರಹ ಪೀಡಿತವಾಗಿದೆ. ಸೋರಿಕೆಯಾಗಿರುವ ವರದಿಯ ಅಂಶಗಳ ಅಪೂರ್ಣ, ಅವೈಜ್ಞಾನಿಕ, ಅಸ್ಪಷ್ಟ ಹಾಗೂ ನ್ಯಾಯಸಮ್ಮತವಲ್ಲದ ಶಿಫಾರಸುಗಳನ್ನು ಒಳಗೊಂಡಿದೆ. ಕಳೆದ 50 ವರ್ಷಗಳಿಂದ 101 ಸಮುದಾಯಗಳ ಸ್ಥಿತಿಗತಿಗಳ ಮಾಹಿತಿ ಪಡೆದು ಸಮೀಕ್ಷೆಯ ಸಮಗ್ರ ದತ್ತಾಂಶಗಳನ್ನು ಬಿಡುಗಡೆ ಮಾಡಬೇಕು, ಪರಿಶಿಷ್ಟ ಜಾತಿ ಪಟ್ಟಿಯಲ್ಲಿರುವ 101 ಸಮುದಾಯಗಳಿಂದ ಆಕ್ಷೇಪಣೆ ಸ್ವೀಕರಿಸಲು ಕಾಲಾವಕಾಶ ನೀಡಬೇಕು ಎಂದವರು ಒತ್ತಾಯಿಸಿದರು. ವರದಿಯಲ್ಲಿ ಛಲವಾದಿ, ಬಂಜಾರ, ಭೋವಿ, ಕೊರಮ, ಕೊರಚ, ಚರ್ಮಕಾರ, ಸಮಗಾರ ಸಹಿತ ಕೆಲವು ಸಮುದಾಯಗಳಿಗೆ ಅನ್ಯಾಯವಾಗಿದೆ. ಸರಕಾರ ಹೊಸ ಆಯೋಗ ರಚಿಸಿ ಅನ್ಯಾಯ ಸರಿಪಡಿಸಬೇಕು, ಎಲ್ಲ ಸಮುದಾಯದ ಮುಖಂಡರ ಸಭೆ ನಡೆಸಬೇಕು ಎಂಬ ಬೇಡಿಕೆಗೆ ಸ್ಪಂದಿಸದಿರುವ ಕಾರಣ ಪ್ರತಿಭಟನೆ ಆಯೋಜಿಸಲಾಗಿದೆ ಎಂದರು. ಈ ಎಲ್ಲ ಸಮಸ್ಯೆಯಿಂದ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ಭೋವಿ ಜನಾಂಗದವರಿಗೆ ಜಾತಿ ಪ್ರಮಾಣಪತ್ರ ನೀಡುತ್ತಿಲ್ಲ ಎಂದು ಆರೋಪಿಸಿದರು.
ಮಾ.26ರಿಂದ 28ರವರೆಗೆ ಬಂಟ್ವಾಳದಲ್ಲಿ ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ
ಕರಾವಳಿಯ ವಸ್ತು ಸಂಗ್ರಹ, ಗುಡಿಕೈಗಾರಿಕೆ, ಪುಸ್ತಕ ಮಳಿಗೆಗಳ ಆಕರ್ಷಣೆ
Bagalkot by-election | ಕಾಂಗ್ರೆಸ್, ಬಿಜೆಪಿ ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ
ಬಾಗಲಕೋಟೆ : ಮಾಜಿ ಸಚಿವ ಎಚ್.ವೈ.ಮೇಟಿ ಅವರ ನಿಧನದಿಂದಾಗಿ ತೆರವಾಗಿದ್ದ ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಹಿನ್ನಲೆ, ಇಂದು (ಮಾ.23) ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿತ್ತು. ಈ ಹಿನ್ನಲೆಯಲ್ಲಿ ಬಿಜೆಪಿ ಪಕ್ಷದಿಂದ ವೀರಣ್ಣ ಚರಂತಿಮಠ ಅವರು ನಾಮಪತ್ರ ಸಲ್ಲಿಸಿದ್ದಾರೆ. ಈ ಸಂದರ್ಭದಲ್ಲಿ ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ, ಬಿಜೆಪಿ ರಾಜ್ಯಾಧ್ಯಕ್ಷರಾದ ಬಿ.ವೈ.ವಿಜಯೇಂದ್ರ, ಸಂಸದರಾದ ಗೋವಿಂದ ಕಾರಜೋಳ, ಪಿ.ಸಿ ಗದ್ದಿಗೌಡರ್, ಮಾಜಿ ಸಚಿವರಾದ ಮುರಗೇಶ್ ನಿರಾಣಿ, ಅರವಿಂದ ಲಿಂಬಾವಳಿ ಸೇರಿದಂತೆ ಇತರ ಮುಖಂಡರು ಭಾಗವಹಿಸಿದ್ದರು. ಈ ವೇಳೆ ಮಾತನಾಡಿದ ವೀರಣ್ಣ ಚರಂತಿಮಠ ಅವರು, ʼರಾಜ್ಯ ಸರಕಾರದ ವೈಫಲ್ಯದಿಂದಾಗಿ ಜನ ಬದಲಾವಣೆ ಬಯಸಿದ್ದಾರೆ. ದಾವಣಗೆರೆ ಹಾಗೂ ಬಾಗಲಕೋಟೆ ಮತಕ್ಷೇತ್ರದಲ್ಲಿ ಆಡಳಿತ ಪಕ್ಷ ಇದ್ದರೂ ಸಹ ಬಿಜೆಪಿ ಗೆಲುವು ಖಚಿತʼ ಎಂದು ವಿಶ್ವಾಸ ವ್ಯಕ್ತಪಡಿಸಿದರು. ನಾಮಪತ್ರ ಸಲ್ಲಿಸಿದ ಉಮೇಶ್ ಮೇಟಿ : ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಉಮೇಶ್ ಮೇಟಿ ಅವರು ನಾಮಪತ್ರ ಸಲ್ಲಿಕೆ ಮಾಡಿದರು. ನಾಮಪತ್ರ ಸಲ್ಲಿಕೆ ಮಾಡುವ ಸಮಯದಲ್ಲಿ ಸಚಿವರಾದ ಸತೀಶ್ ಜಾರಕಿಹೊಳಿ, ಆರ್.ಬಿ.ತಿಮ್ಮಾಪುರ ಸೇರಿದಂತೆ ಇತರ ಮುಖಂಡರು ಭಾಗಿಯಾಗಿದ್ದರು. ಈ ಸಂದರ್ಭದಲ್ಲಿ ಅಭ್ಯರ್ಥಿ ಉಮೇಶ್ ಮೇಟಿ ಮಾತನಾಡಿ, ʼಕಾಂಗ್ರೆಸ್ ಸರಕಾರದಲ್ಲಿ ಆಗಿರುವ ಅಭಿವೃದ್ಧಿ ಹಾಗೂ ಗ್ಯಾರಂಟಿ ಯೋಜನೆಯಿಂದಾಗಿ ಕಾಂಗ್ರೆಸ್ ಪಕ್ಷದ ಗೆಲುವು ಖಚಿತʼ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಎಂಜಲು ಕಾಸಿಗಾಗಿ ದೇಶದ ಸುರಕ್ಷತೆಯನ್ನೇ ಅಪಾಯಕ್ಕೆ ದೂಡುವ ದೇಶದ್ರೋಹಿಗಳು ನಮ್ಮ-ನಿಮ್ಮ ನಡುವೆಯೇ ಇರಬಹುದು. ಇದಕ್ಕೆ ಪುಷ್ಠಿ ಎಂಬಂತೆ ರಾಷ್ಟ್ರ ರಾಜಧಾನಿ ಹೊಸದಿಲ್ಲಿ ಸಮೀಪ ಪಾಕಿಸ್ತಾನದ ಪರವಾಗಿ ಬೇಹುಗಾರಿಕೆ ನಡೆಸುತ್ತಿದ್ದ ಆರೋಪದ ಮೇಲೆ ಮೂವರನ್ನು ಬಂಧಿಸಲಾಗಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು 18 ಜನರನ್ನು ಇದುವರೆಗೆ ಬಂಧಿಸಲಾಗಿದೆ. ದೇಶದ ಪ್ರಮುಖ ನಗರಗಳಲ್ಲಿ ಸೌರಚಾಲಿತ ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸುವ ಮೂಲಕ, ಈ ಪ್ರದೇಶಗಳ ಚಟುವಟಿಕೆಗಳ ಬಗ್ಗೆ ಐಎಸ್ಐಗೆ ಮಾಹಿತಿ ರವಾನಿಸುವುದು ಬಂಧಿತರ ಉದ್ದೇಶವಾಗಿತ್ತು ಎಂಬುದು ತನಿಖೆಯಿಂದ ತಿಳಿದುಬಂದಿದೆ.
► ಘಟನೆಯಲ್ಲಿ ಗಾಯಗೊಂಡಿದ್ದ 30ಕ್ಕೂ ಅಧಿಕ ಜನ► ಇರಾನ್ ಡ್ರೋನ್ ದಾಳಿ ನಡೆಸಿದೆ ಎಂದು ಹೇಳಿದ್ದ ಬಹರೈನ್, ಅಮೆರಿಕ
ಕೆನಡಾದ ಮಾಂಟ್ರಿಯಲ್ ವಿಮಾನ ನಿಲ್ದಾಣದಿಂದ ನ್ಯೂಯಾರ್ಕ್ ಗೆ ಬರುತ್ತಿದ್ದ ಏರ್ ಕೆನಡಾ ಎಕ್ಸ್ಪ್ರೆಸ್ ವಿಮಾನ ನ್ಯೂಯಾರ್ಕ್ನ ಲಾಗಾರ್ಡಿಯಾ ವಿಮಾನ ನಿಲ್ದಾಣದಲ್ಲಿ ಎಮರ್ಜೆನ್ಸಿ ಲ್ಯಾಂಡಿಂಗ್ ವೇಳೆ ರನ್ ವೇಯಲ್ಲಿದ್ದ ಅಗ್ನಿಶಾಮಕ ಟ್ರಕ್ಗೆ ಡಿಕ್ಕಿ ಹೊಡೆದಿದೆ. ಈ ಘಟನೆಯಲ್ಲಿ ಜನ ಗಾಯಗೊಂಡಿರುವ ವರದಿಯಾಗಿದ್ದು, ವಿಮಾನ ನಿಲ್ದಾಣದಲ್ಲಿನ ಎಲ್ಲಾ ವಿಮಾನ ಹಾರಟಗಳನ್ನು ಸ್ಥಗಿತಗೊಳಿಸಿರುವುದಾಗಿ FAA ತಿಳಿಸಿದೆ. ಇನ್ನು, ಈ ಅಪಘಾತದ ದೃಶ್ಯಾವಳಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.
CBSE ಶಾಲೆಗಳಲ್ಲಿ ಋತುಚಕ್ರ ನೈರ್ಮಲ್ಯ ಕಡ್ಡಾಯ: ಸುಪ್ರೀಂ ಕೋರ್ಟ್ ಆದೇಶದ ಬೆನ್ನಲ್ಲೇ ಹೊಸ ನಿಯಮ ಜಾರಿ
ಶಾಲಾ ವಿದ್ಯಾರ್ಥಿನಿಯರಿಗೆ ಸುರಕ್ಷಿತ ವಾತಾವರಣ ನಿರ್ಮಿಸುವ ಮಹತ್ವದ ಹೆಜ್ಜೆಯಾಗಿ, ಕೇಂದ್ರೀಯ ಮಾಧ್ಯಮಿಕ ಶಿಕ್ಷಣ ಮಂಡಳಿ (CBSE) ತನ್ನ ವ್ಯಾಪ್ತಿಗೆ ಒಳಪಡುವ ಎಲ್ಲಾ ಶಾಲೆಗಳಲ್ಲಿ 'ಋತುಚಕ್ರದ ನೈರ್ಮಲ್ಯ ನಿರ್ವಹಣಾ' (Menstrual Hygiene Management - MHM) ಅಭ್ಯಾಸಗಳನ್ನು ಕಡ್ಡಾಯವಾಗಿ ಜಾರಿಗೊಳಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಭಾರತದ ಸುಪ್ರೀಂ ಕೋರ್ಟ್ ಇತ್ತೀಚೆಗೆ ನೀಡಿದ ಐತಿಹಾಸಿಕ ತೀರ್ಪಿನ ಹಿನ್ನೆಲೆಯಲ್ಲಿ ಈ ಮಹತ್ವದ
Gold Rate Fall : ಬೆಂಗಳೂರಿನಲ್ಲಿ 24 ಕ್ಯಾರಟ್ ಹತ್ತು ಗ್ರಾಂ ಚಿನ್ನದ ಬೆಲೆ 5,950 ಇಳಿಕೆ
ಮಾರ್ಚ್ 23, 2026 ರ ಮಾರುಕಟ್ಟೆ ವರದಿಯ ಪ್ರಕಾರ, ಭಾರತದ ಪ್ರಮುಖ ನಗರಗಳಲ್ಲಿ ಚಿನ್ನ ಮತ್ತು ಬೆಳ್ಳಿಯ ದರಗಳಲ್ಲಿ ಗಣನೀಯ ಇಳಿಕೆ ಕಂಡುಬಂದಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಬೆಳವಣಿಗೆಗಳು ಮತ್ತು ಅಮೆರಿಕ-ಇರಾನ್ ನಡುವಿನ ಉದ್ವಿಗ್ನತೆಯಿಂದಾಗಿ ಹೂಡಿಕೆದಾರರಲ್ಲಿ ಉಂಟಾಗಿರುವ ಆತಂಕವು ದೇಶೀಯ ಮಾರುಕಟ್ಟೆಯ ಮೇಲೂ ನೇರ ಪರಿಣಾಮ ಬೀರಿದೆ.
ದೇಶಾದ್ಯಂತ ಸಂಭ್ರಮದ ಈದುಲ್ ಫಿತ್ರ್; ಚಿತ್ರಗಳಲ್ಲಿ ನೋಡಿ...
Udupi | ಟೆಂಪೋ -ಬೈಕ್ ಮುಖಾಮುಖಿ ಢಿಕ್ಕಿ: ಸವಾರ ಮೃತ್ಯು
ಮಣಿಪಾಲ, ಮಾ.23: ಬೈಕ್ ಮತ್ತು ಟೆಂಪೋ ಮಧ್ಯೆ ಮಣಿಪಾಲ ಅತ್ರಾಡಿಯ ಕಬ್ಯಾಡಿ ಅರ್ಮನ್ ರಟ್ ಫ್ಯಾಕ್ಟರಿ ಬಳಿ ಸೋಮವಾರ ಬೆಳಗ್ಗೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಸವಾರರೊಬ್ಬರು ಸ್ಥಳದಲ್ಲೇ ಮೃತಪಟ್ಟ ಬಗ್ಗೆ ವರದಿಯಾಗಿದೆ. ಮೃತರನ್ನು ಹೆರ್ಗ ಗ್ರಾಮದ ಭಾಸ್ಕರ ನಾಯಕ್(70) ಎಂದು ಗುರುತಿಸಲಾಗಿದೆ. ಆತ್ರಾಡಿಯಿಂದ ಮೂಡುಬೆಳ್ಳೆ ಕಡೆಗೆ ಹೋಗುತ್ತಿದ್ದ 407 ಟೆಂಪೋ ಎದುರಿನಲ್ಲಿ ಬರುತ್ತಿದ್ದ ಬೈಕ್ಗೆ ಢಿಕ್ಕಿ ಹೊಡೆಯಿತೆನ್ನಲಾಗಿದೆ. ಇದರಿಂದ ಬೈಕಿನಲ್ಲಿದ್ದ ಇಬ್ಬರು ಸವಾರರು ಬೈಕ್ ಸಮೇತ ರಸ್ತೆಗೆ ಬಿದ್ದರು. ಇದರಲ್ಲಿ ಗಂಭೀರವಾಗಿ ಗಾಯಗೊಂಡ ಭಾಸ್ಕರ ನಾಯಕ್ ಸ್ಥಳದಲ್ಲೇ ಮೃತಪಟ್ಟರು ಎಂದು ತಿಳಿದುಬಂದಿದೆ. ಬೈಕಿನ ಹಿಂಬದಿ ಸವಾರನ ಕಾಲು ತುಂಡಾಗಿದ್ದು, ತೀವ್ರವಾಗಿ ಗಾಯಗೊಂಡಿದ್ದಾರೆ. ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ.
ವಿಧಾನ ಪರಿಷತ್ ಮಾಜಿ ಸದಸ್ಯ ಕರಿಯಣ್ಣ ಸಂಗಟಿ ನಿಧನ
ಕೊಪ್ಪಳ : ವಿಧಾನ ಪರಿಷತ್ ಮಾಜಿ ಸದಸ್ಯ ಕರಿಯಣ್ಣ ಎಚ್. ಸಂಗಟಿ(61) ಸೋಮವಾರ ಬೆಳಗಿನ ಜಾವ ಬೆಂಗಳೂರಿನ ಅಪೋಲೊ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಅವರು ಬಹು ಅಂಗಾಂಗಗಳ ವೈಫಲ್ಯ ಸಮಸ್ಯೆಯಿಂದ ಬಳಲುತ್ತಿದ್ದರು. ಮೃತರು ಪತ್ನಿ, ಮೂವರು ಪುತ್ರರು, ಮೂವರು ಪುತ್ರಿಯರ ಸಹಿತ ಅಪಾರ ಬಂಧುಬಳಗವನ್ನು ಅಗಲಿದ್ದಾರೆ. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಕರಿಯಣ್ಣ, 2008ರ ವಿಧಾನಸಭಾ ಚುನಾವಣೆಯಲ್ಲಿ ಕೊಪ್ಪಳ ಕ್ಷೇತ್ರದಿಂದ ಪಕ್ಷೇತರರಾಗಿ, 2018ರ ಚುನಾವಣೆಯಲ್ಲಿ ಗಂಗಾವತಿ ಕ್ಷೇತ್ರದಿಂದ ಜೆಡಿಎಸ್ ಪಕ್ಷದಿಂದ ಸ್ಪರ್ಧೆ ಮಾಡಿದ್ದರು. ಕೊಪ್ಪಳ ಜಿಲ್ಲಾ ಪಂಚಾಯತ್ ಅಧ್ಯಕ್ಷರಾಗಿ, ಕಾಳಿದಾಸ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾಗಿ, ರಾಜೀವ್ ಗಾಂಧಿ ಯುವ ಮಂಡಲದ ಅಧ್ಯಕ್ಷರಾಗಿ ಹಾಗೂ ಜಿಲ್ಲೆಯ ವಿವಿಧ ಹುದ್ದೆಗಳಲ್ಲಿ ಅವರು ಕಾರ್ಯನಿರ್ವಹಿಸಿದ್ದರು. ಸಚಿವ ಶಿವರಾಜ ತಂಗಡಗಿ ಸಂತಾಪ ಕೊಪ್ಪಳ ಜಿಲ್ಲೆಯ ಹಿರಿಯ ರಾಜಕೀಯ ಮುತ್ಸದ್ದಿ ಹಾಗೂ ವಿಧಾನ ಪರಿಷತ್ ಮಾಜಿ ಸದಸ್ಯ ಕರಿಯಣ್ಣ. ಎಚ್.ಸಂಗಟಿ ಅವರ ನಿಧನಕ್ಕೆ ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ. ವಿಧಾನ ಪರಿಷತ್ತಿನ ಸದಸ್ಯರಾಗಿ ಒಳ್ಳೆಯ ಸಂಸದೀಯ ಪಟುವಾಗಿ ಗುರುತಿಸಿಕೊಂಡಿದ್ದರು. ಅವರ ನಿಧನ ನೋವನ್ನುಂಟು ಮಾಡಿದೆ. ಅವರ ಕುಟುಂಬಕ್ಕೆ ಹಾಗೂ ಅವರ ಅನುಯಾಯಿಗಳಿಗೆ ಈ ದುಃಖ ಭರಿಸುವ ಶಕ್ತಿ ಭಗವಂತ ಕೊಡಲಿ ಎಂದು ತಂಗಡಗಿ ತಮ್ಮ ಸಂತಾಪ ಸಂದೇಶದಲ್ಲಿ ತಿಳಿಸಿದ್ದಾರೆ.
ನಾನು ಆರೋಗ್ಯವಾಗಿದ್ದೇನೆ, ಆತಂಕಪಡುವ ಅಗತ್ಯವಿಲ್ಲ : ಶಿವರಾಜ್ ತಂಗಡಗಿ ಸ್ಪಷ್ಟನೆ
ಬೆಂಗಳೂರು : ʼನಾನು ಆರೋಗ್ಯವಾಗಿದ್ದು, ಯಾರು ಆತಂಕಪಡುವ ಅಗತ್ಯವಿಲ್ಲʼ ಎಂದು ಕನ್ನಡ ಮತ್ತು ಸಂಸ್ಕೃತಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಶಿವರಾಜ್ ಎಸ್.ತಂಗಡಗಿ ಅವರು ಸ್ಪಷ್ಟಪಡಿಸಿದ್ದಾರೆ. ವಿವಿಧ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸುವ ಕಾರ್ಯಕ್ರಮವಿದ್ದ ಕಾರಣ ನಾಲ್ಕು ದಿನಗಳ ಹಿಂದೆ ನನ್ನ ಕನಕಗಿರಿ ಮತಕ್ಷೇತ್ರಕ್ಕೆ ಹೋಗಿದ್ದೆ. ಕಾರ್ಯಕ್ರಮ ಮುಗಿಸಿಕೊಂಡು ಕೊಪ್ಪಳದಿಂದ ಬೆಂಗಳೂರಿಗೆ ಹೊರಟು ಬರುವಾಗ ರವಿವಾರ ರಾತ್ರಿ ಮಾರ್ಗ ಮಧ್ಯೆ ಎದೆ ಚುಚ್ಚಿದ ಅನುಭವ ಆಯಿತು. ಈ ಹಿನ್ನೆಲೆಯಲ್ಲಿ ನನ್ನ ಕುಟುಂಬದ ವೈದ್ಯರೊಂದಿಗೆ ಕರೆ ಮಾಡಿ ಮಾತನಾಡಿದೆ. ಮುನ್ನೆಚ್ಚರಿಕೆ ಕ್ರಮವಾಗಿ ತುಮಕೂರಿನ ಸಿದ್ಧಗಂಗಾ ಆಸ್ಪತ್ರೆಯಲ್ಲಿ ಒಮ್ಮೆ ತಪಾಸಣೆ ಮಾಡಿಸುವಂತೆ ಸೂಚಿಸಿದರು. ಹೀಗಾಗಿ ಇಲ್ಲಿನ ಆಸ್ಪತ್ರೆಯಲ್ಲಿ ಇಸಿಜಿ ಮಾಡಿಸಿದೆ. ಯಾವುದೇ ತೊಂದರೆ ಇಲ್ಲ ಎಂದು ವೈದ್ಯರು ತಿಳಿಸಿದ್ದಾರೆ. ಗ್ಯಾಸ್ಟ್ರಿಕ್ ಸಮಸ್ಯೆಯಿಂದ ಈ ರೀತಿ ಆಗಿದೆ. ಯಾರು ಆತಂಕಪಡುವ ಅಗತ್ಯವಿಲ್ಲ. ನಾನು ಸೋಮವಾರ ಬೆಳಗ್ಗೆ ವಿಧಾನಸಭೆ ಅಧಿವೇಶನದಲ್ಲಿ ಎಂದಿನಂತೆ ಪಾಲ್ಗೊಳ್ಳುತ್ತೇನೆ ಎಂದು ತಿಳಿಸಿದರು. ಯಾರು ಕೂಡ ವದಂತಿಯನ್ನು ಹಬ್ಬಿಸುವುದು ಬೇಡ. ಆಸ್ಪತ್ರೆಗೆ ಭೇಟಿ ನೀಡಿ ತಪಾಸಣೆ ಮಾಡಿಸಿದ್ದೇನೆ ಅಷ್ಟೇ. ಆರೋಗ್ಯವಾಗಿದ್ದೇನೆ ಎಂದರು.
ಇಂದು ಪಶ್ಚಿಮ ಏಶ್ಯ ಬಿಕ್ಕಟ್ಟಿನ ಕುರಿತು ಸಂಸತ್ತಿನಲ್ಲಿ ಮಾತನಾಡಲಿರುವ ಪ್ರಧಾನಿ ಮೋದಿ
ಹೊಸದಿಲ್ಲಿ: ಪಶ್ಚಿಮ ಏಶ್ಯ ಬಿಕ್ಕಟ್ಟಿನ ಕುರಿತು ಇಂದು (ಸೋಮವಾರ) ಮಧ್ಯಾಹ್ನ 2 ಗಂಟೆಗೆ ಪ್ರಧಾನಿ ನರೇಂದ್ರ ಮೋದಿ ಸಂಸತ್ತನ್ನುದ್ದೇಶಿಸಿ ಮಾತನಾಡಲಿದ್ದಾರೆ. ಪಶ್ಚಿಮ ಏಶ್ಯ ಬಿಕ್ಕಟ್ಟಿನಿಂದ ಆಗಿರುವ ಜಾಗತಿಕ ಏರುಪೇರು ಹಾಗೂ ಅದರಿಂದ ಭಾರತದ ಮೇಲಾಗಲಿರುವ ಪರಿಣಾಮಗಳ ಕುರಿತು, ನಿರ್ದಿಷ್ಟವಾಗಿ ಆಹಾರ, ಇಂಧನ ಹಾಗೂ ರಸಗೊಬ್ಬರ ಭದ್ರತೆಯ ಮೇಲೆ ಆಗಲಿರುವ ಪರಿಣಾಮದ ಕುರಿತು ಮೌಲ್ಯಮಾಪನ ಮಾಡಲು ಉನ್ನತ ಮಟ್ಟದ ಪರಾಮರ್ಶೆ ನಡೆಸಿದ ಮರುದಿನವೇ ಅವರು ಸಂಸತ್ತನ್ನುದ್ದೇಶಿಸಿ ಮಾತನಾಡಲಿದ್ದಾರೆ. ಇರಾನ್ ಮೇಲೆ ಕಳೆದ ನಾಲ್ಕು ವಾರಗಳಿಂದ ಇಸ್ರೇಲ್ ಹಾಗೂ ಅಮೆರಿಕ ಜಂಟಿಯಾಗಿ ನಡೆಸುತ್ತಿರುವ ದಾಳಿಯಿಂದ ಜಾಗತಿಕ ಪೂರೈಕೆ ಸರಪಣಿ ಏರುಪೇರಾಗಿದ್ದು, ಜಾಗತಿಕ ಆರ್ಥಿಕತೆ ಅಸ್ತವ್ಯಸ್ತಗೊಂಡಿದೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಇಂದು ಪಶ್ಚಿಮ ಏಶ್ಯ ಬಿಕ್ಕಟ್ಟನ್ನು ಕುರಿತು ಸಂಸತ್ತಿನಲ್ಲಿ ಮಾತನಾಡಲಿದ್ದಾರೆ.
ಉಡುಪಿ: ಕ್ರಿಕೆಟಿಗ, ಸಂಘಟಕ ಸಮೀರ್ ಶರೀಫ್ ನಿಧನ
ಉಡುಪಿ: ಕ್ರಿಕೆಟಿಗ, ಸಂಘಟಕ ಉದ್ಯಾವರ ಪಾಂದೆ ನಿವಾಸಿ ಸಮೀರ್ ಶರೀಫ್ (43) ಸೋಮವಾರ ಬೆಳಗ್ಗೆ ಅಲ್ಪಕಾಲದ ಅಸೌಖ್ಯದಿಂದ ನಿಧನರಾದರು. ಅದ್ಭುತ ಕ್ರಿಕೆಟಿಗ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ಉದ್ಯಾವರ ಫ್ರೆಂಡ್ಸ್ ಸರ್ಕಲ್ ಇದರ ಸಕ್ರಿಯ ಸದಸ್ಯ, ಉದ್ಯಾವರ ಮುಹಿಯುದ್ದೀನ್ ಜುಮಾ ಮಸೀದಿಯ ಜಮಾಅತ್ ಸದಸ್ಯಯಾಗಿದ್ದ ಸಮೀರ್ ಶರೀಫ್ ದುಬೈಯಲ್ಲಿ ಉದ್ಯೋಗಿಯಾಗಿದ್ದರು. ದುಬೈ ಕನ್ನಡ ಸಂಘ, ಬ್ಯಾರಿ ಸಂಘಟನೆ ಸಾಹಿತಿ ಉದ್ಯಾವರ ಫ್ರೆಂಡ್ಸ್ ಸರ್ಕಲ್ ಸಕ್ರಿಯ ಸದಸ್ಯರಾಗಿ ಸಮಾಜ ಸೇವಕರಾಗಿ ಗುರುತಿಸಿಕೊಂಡಿದ್ದರು. ಮೃತರು ಪತ್ನಿ, ಪುತ್ರ, ಪುತ್ರಿಯನ್ನು ಅಗಲಿದ್ದಾರೆ. ಇವರ ನಿಧನಕ್ಕೆ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಮಾಜಿ ಶಾಸಕ ವಿನಯ ಕುಮಾರ್ ಸೊರಕೆ ಸಹಿತ ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.
ರಾಜ್ಯದಲ್ಲಿ 1 ಲಕ್ಷಕ್ಕೂ ಅಧಿಕ ಸರ್ಕಾರಿ ಜಮೀನು ಗುಳುಂ! ಹಾಸನ, ಬೆಂಗಳೂರಿನಲ್ಲಿ ಅಧಿಕ
ರಾಜ್ಯದಲ್ಲಿ ಸರ್ಕಾರಿ ಭೂಮಿಯ ವ್ಯವಸ್ಥಿತ ಒತ್ತುವರಿಯು ಆತಂಕಕಾರಿ ಮಟ್ಟಕ್ಕೆ ತಲುಪಿದ್ದು, ಒಟ್ಟು 1,11,098 ಸರ್ಕಾರಿ ಸ್ವತ್ತುಗಳು ಅಕ್ರಮವಾಗಿ ಕಬಳಿಕೆಯಾಗಿವೆ. ಸುಮಾರು 1,95,021.17 ಎಕರೆಯಷ್ಟು ಬೃಹತ್ ವಿಸ್ತೀರ್ಣದ ಜಮೀನು ಪ್ರಭಾವಿಗಳ ಮತ್ತು ಇತರರ ಪಾಲಾಗಿದ್ದು, ಇದರಲ್ಲಿ ಅಮೂಲ್ಯವಾದ ಗೋಮಾಳಗಳು ಹಾಗೂ ಕೆರೆ ಅಂಗಳಗಳು ಸೇರಿವೆ. ಶಕ್ತಿಯುತ ವ್ಯಕ್ತಿಗಳ ಕೈಯಾಗಿರುವ ಈ ಒತ್ತುವರಿಗಳನ್ನು ತೆರವುಗೊಳಿಸುವುದು ಸರ್ಕಾರಕ್ಕೆ ದೊಡ್ಡ ಸವಾಲಾಗಿ ಪರಿಣಮಿಸಿದ್ದು, ಸಾರ್ವಜನಿಕ ಆಸ್ತಿಯನ್ನು ರಕ್ಷಿಸುವ ಕಾರ್ಯಕ್ಕೆ ಅಡ್ಡಿಯಾಗಿದೆ.
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ!
Stock Market Crash Today:ಜಾಗತಿಕವಾಗಿ ಆಗುತ್ತಿರುವ ಬದಲಾವಣೆಗಳ ಪ್ರಭಾವವು ಇಂದು ಸೋಮವಾರ (ಮಾ.23) ಷೇರು ಪೇಟೆಯ ಮೇಲೆ ಉಂಟಾಗಿದೆ. ತೈಲ ಬೆಲೆ ಏರಿಕೆ ಮತ್ತು ಜಾಗತಿಕ ಉದ್ವಿಗ್ನತೆ ಕಾರಣದಿಂದಾಗಿ ಷೇರು ಮಾರುಕಟ್ಟೆಯಲ್ಲಿ ನೆಗಟಿವ್ ಟ್ರೆಂಡ್ ಮುಂದುವರಿದಿದೆ. ಸೆನ್ಸೆಕ್ಸ್ ಮತ್ತು ನಿಫ್ಟಿ ಆರಂಭಿಕ ವಹಿವಾಟಿನಲ್ಲಿ ತೀವ್ರವಾಗಿ ಕುಸಿತ ಕಂಡಿವೆ. ಎಂದಿನಂತೆ 9.30ಕ್ಕೆ ಷೇರು ಪೇಟೆ ತೆರೆಯಿತು. ಬೆಳಗ್ಗೆ 10:29
ಯುದ್ಧ ಕೇವಲ ವಿನಾಶವನ್ನು ಮಾತ್ರ ಹೊತ್ತು ತರುತ್ತದೆ. ಯುದ್ಧದಿಂದ ಕೇವಲ ನಷ್ಟ ಮಾತ್ರ ಸಂಭವಿಸುತ್ತದೆ. ಈ ಸಾರ್ವಕಾಲಿಕ ಸತ್ಯವನ್ನು ಜಗತ್ತು ಎಷ್ಟು ಬೇಗ ಅರ್ಥ ಮಾಡಿಕೊಳ್ಳುತ್ತದೆಯೋ ಅಷ್ಟು ಒಳ್ಳೆಯದು. ಏಕೆಂದರೆ ಪ್ರಸ್ತುತ ಅಮೆರಿಕ-ಇಸ್ರೇಲ್ ಮತ್ತು ಇರಾನ್ ನಡುವಿನ ಸಂಘರ್ಷ ಇಂತದ್ದೇ ಸರ್ವನಾಶದ ಸಂದೇಶವನ್ನು ನೀಡುತ್ತಿದೆ. ಯುದ್ಧ ಆರಂಭವಾದಾಗಿನಿಂದ ಇಂದಿನವರೆಗೆ ಎಲ್ಲೆಡೆಯೂ ವಿನಾಶ ಮತ್ತು ನಷ್ಟದ ಸುದ್ದಿಗಳೇ. ಇದಕ್ಕೆ ಪುಷ್ಠಿ ಎಂಬಂತೆ ಇಂದು (ಮಾ.23-ಸೋಮವಾರ) ಭಾರತೀಯ ಷೇರು ಮಾರುಕಟ್ಟೆ ಭಾರೀ ಕುಸಿತ ಕಂಡಿದೆ. ಸೆನ್ಸೆಕ್ಸ್ ಮತ್ತು ನಿಫ್ಟಿ ಕಥೆ ಏನು ಹೇಳ್ತಿವಿ ಬನ್ನಿ.
Moodbidri: ಮಹಿಳೆಯರನ್ನು ಮಂಚಕ್ಕೆ ಕರೆದಿದ್ದ ಆರೋಪ: ಮೂಡುಬಿದರೆ ಇನ್ಸ್ಪೆಕ್ಟರ್ ದೌರ್ಜನ್ಯ ಪ್ರಕರಣ ಸಿಐಡಿ ತನಿಖೆ
Moodbidri Assault Case: ಮಹಿಳೆಯರ ಮೇಲೆ ಮೂಡುಬಿದರೆ ಪೊಲೀಸ್ ಇನ್ಸ್ಪೆಕ್ಟರ್ ದೌರ್ಜನ್ಯ ಎಸಗಿರುವ ಆರೋಪಕ್ಕೆ ಸಂಬಂಧಿಸಿದ ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸುವಂತೆ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ಸೂಚನೆ ನೀಡಿದ್ದೇನೆ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ ಅವರು ತಿಳಿಸಿದ್ದಾರೆ. ಮೂಡುಬಿದರೆ ಪೊಲೀಸ್ ಇನ್ಸ್ಪೆಕ್ಟರ್ ಸಂದೇಶ್ ಪಿ.ಜಿ. ಅವರ ವಿರುದ್ಧ ಲೈಂಗಿಕ ಕಿರುಕುಳ, ದೌರ್ಜನ್ಯ ಮತ್ತು ಅಧಿಕಾರ ದುರುಪಯೋಗದ
ಯುದ್ದ ಪೀಡಿತ ಇರಾನ್ ನಲ್ಲಿನ ಸಂತ್ರಸ್ತರ ಬೆಂಬಲಕ್ಕೆ ಕಾಶ್ಮೀರದ ಜನತೆ ದೇಣಿಗೆ ಸಂಗ್ರಹ ಮಾಡಿದ್ದು, ನಗದು, ಚಿನ್ನ ಮತ್ತು ಇತರ ಬೆಲೆಬಾಳುವ ವಸ್ತುಗಳನ್ನು ದೇಣಿಗೆಯಾಗಿ ನೀಡಿದ್ದಾರೆ. ಈ ಕುರಿತು ತಮ್ಮ ಅಧಿಕೃತ X ಖಾತೆಯಲ್ಲಿ ಪೋಸ್ಟ್ ಮಾಡಿದ ಭಾರತದಲ್ಲಿರುವ ಇರಾನಿ ರಾಯಭಾರ ಕಚೇರಿ ಯುದ್ದದ ಸಮಯದಲ್ಲಿ ಇರಾನ್ ಜನರೊಂದಿಗೆ ನಿಂತಿದ್ದಕ್ಕಾಗಿ ಕಾಶ್ಮೀರದ ದಯಾಳು ಜನರಿಗೆ ಧನ್ಯವಾದ ತಿಳಿಸಿದ್ದು, ಭಾರತೀಯರ ದಯೆಯನ್ನು ಎಂದಿಗೂ ಮರೆಯುವುದಿಲ್ಲ ಎಂದು ಬರೆದುಕೊಂಡಿದ್ದಾರೆ.
ಮಾಲ್ಡೀವ್ಸ್ನಲ್ಲಿ ಬೋಟ್ ಅಪಘಾತ: ನಾಪತ್ತೆಯಾಗಿರುವ ಭಾರತದ ಖ್ಯಾತ ರ್ಯಾಲಿ ಪಟು ಹರಿ ಸಿಂಗ್ಗಾಗಿ ಮುಂದುವರಿದ ಶೋಧ
ಮಾಲ್ಡೀವ್ಸ್: ಸಮುದ್ರದಲ್ಲಿ ಸಂಭವಿಸಿದ ಭೀಕರ ಸ್ಪೀಡ್ಬೋಟ್ (ವೇಗದ ದೋಣಿ) ಅಪಘಾತದಲ್ಲಿ ಭಾರತದ ಖ್ಯಾತ ಮೋಟಾರ್ ಸ್ಪೋರ್ಟ್ಸ್ ದಿಗ್ಗಜ, ಐದು ಬಾರಿಯ ರಾಷ್ಟ್ರೀಯ ರ್ಯಾಲಿ ಚಾಂಪಿಯನ್ ಹರಿ ಸಿಂಗ್ (59) ನಾಪತ್ತೆಯಾಗಿದ್ದಾರೆ. ಈ ದುರಂತ ನಡೆದು 48 ಗಂಟೆಗಳಿಗೂ ಹೆಚ್ಚು ಕಾಲ ಕಳೆದಿದ್ದು, ಅವರಿಗಾಗಿ ತೀವ್ರ ಶೋಧ ಕಾರ್ಯ ಮುಂದುವರಿದಿದೆ. ಇದೇ ಬೋಟ್ನಲ್ಲಿದ್ದ ರೇಮಂಡ್ ಗ್ರೂಪ್ನ ಅಧ್ಯಕ್ಷ ಹಾಗೂ
ರಕ್ಷಣೆ ನೀಡಬೇಕಾದ ಪೊಲೀಸರೇ ಅಪರಾಧ ಕೃತ್ಯಗಳಲ್ಲಿ ಭಾಗಿ ; 2 ವರ್ಷಗಳಲ್ಲಿ 340 ಪ್ರಕರಣ
ಪೊಲೀಸ್ ಇಲಾಖೆಯಲ್ಲಿ ಕಳೆದ ಎರಡು ವರ್ಷಗಳಲ್ಲಿ 2 ಡಿವೈಎಸ್ ಪಿ, ಪಿಐ/ ಆರ್ ಪಿ ಐ- 14, ಪಿಎಸ್ಐ- 30 ಹಾಗೂ ಎಎಸ್ಐ -29 ಮಂದಿ ಕಾನೂನು ಬಾಹಿರ ಕೃತ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಅವರ ವಿರುದ್ಧ ಎಫ್ ಐ ಆರ್ ಕೂಡಾ ದಾಖಲಾಗಿದೆ. ಉನ್ನತ ಹುದ್ದೆಯ ಅಧಿಕಾರಿಗಳು ಈ ಪಟ್ಟಿಯಲ್ಲಿರುವುದು ಆತಂಕಕಾರಿ.
ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ವಿರುದ್ಧ ರಘುಪತಿ ಭಟ್ ರಿಂದ ಅನಿರ್ದಿಷ್ಟಾವಧಿ ಧರಣಿ ಆರಂಭ
ಉಡುಪಿ: ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರ ಕಳೆದ ಎರಡು ವರ್ಷಗಳಿಂದ ಏಕ ವಿನ್ಯಾಸ ನಕ್ಷೆ ಅನುಮೋದನೆಗೆ ಆದೇಶ ನೀಡದೆ ಸತಾಯಿಸುತ್ತಿದೆ ಎಂದು ಆರೋಪಿಸಿ ಮಾಜಿ ಶಾಸಕ ರಘುಪತಿ ಭಟ್ ಇಂದಿನಿಂದ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ವನ್ನು ಪ್ರಾಧಿಕಾರದ ಕಚೇರಿ ಮುಂದೆ ಆರಂಭಿಸಿದ್ದಾರೆ. ಬಡಾನಿಡಿಯೂರು ಗ್ರಾಮದ 90 ಸೆಂಟ್ಸ್ ಜಾಗದಲ್ಲಿ ರೆಸಾರ್ಟ್ ನಿರ್ಮಿಸುವ ಉದ್ದೇಶದಿಂದ ಜಾಗಕ್ಕೆ ಏಕ ವಿನ್ಯಾಸ ನಕ್ಷೆ ನೀಡುವಂತೆ ರಘುಪತಿ ಭಟ್ 2024ರ ಮಾ.20ರಂದು ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸಿದ್ದು ಅದಕ್ಕೆ ಈವರೆಗೆ ಅನುಮೋದನೆ ನೀಡದೆ ಸತಾಯಿಸಲಾಗುತ್ತಿದೆ ಎಂದು ಆರೋಪಿಸಿ ಬೆಳಗ್ಗೆ 9:30ರಿಂದ ಧರಣಿ ಆರಂಭಿಸಿದ್ದಾರೆ. ಏಕ ವಿನ್ಯಾಸ ನಕ್ಷೆಗೆ ಅನುಮೋದನೆ ನೀಡಬೇಕು ಇಲ್ಲವೇ ನೀಡಲು ಆಗುವುದಿಲ್ಲ ಎಂಬುದಾಗಿ ಹಿಂಬರಹ ನೀಡಬೇಕು. ಅಲ್ಲಿಯವರೆಗೆ ಧರಣಿ ಮುಂದುವರಿಸಲಾಗುವುದು. ಹಿಂಬರಹ ನೀಡಿದರೆ ಅದರಂತೆ ಮುಂದೆ ಕಾನೂನು ಹೋರಾಟ ನಡೆಸಲಾಗುವುದು ಎಂದು ರಘುಪತಿ ಭಟ್ ಹೇಳಿದರು. ರಘುಪತಿ ಭಟ್ ಅವರ ಹೋರಾಟಕ್ಕೆ ಬೆಂಬಲ ಸೂಚಿಸಿ ವಿವಿಧ ಸಂಘ-ಸಂಸ್ಥೆಗಳು ಹಾಗೂ ಸಾರ್ವಜನಿಕರು ಈ ಧರಣಿಯಲ್ಲಿ ಪಾಲ್ಗೊಂಡಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪ್ರಾಧಿಕಾರದ ಆಯುಕ್ತ ಮಹೇಶ್ ಜೆ., ರಘುಪತಿ ಭಟ್ ಸಲ್ಲಿಸಿರುವ ಅರ್ಜಿಯಲ್ಲಿ ಯಾವುದೇ ಕಾನೂನು ತೊಡಕು ಇಲ್ಲ. ಕರಾವಳಿ ಯುವಕ ಮಂಡಲ ಹೈಕೋರ್ಟ್ ನಲ್ಲಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ಬಗ್ಗೆ ಕಾನೂನು ಸಲಹೆ ಪಡೆದುಕೊಂಡು ಮುಂದಿನ ಕ್ರಮವನ್ನು ಕೈಗೊಳ್ಳಲಾಗುವುದು ಎಂದರು. ಪ್ರಾಧಿಕಾರದ ಅದ್ಯಕ್ಷ ದಿನಕರ ಹೇರೂರು ಮಾತನಾಡಿ, ಬಡಾನಿಡಿಯೂರು ಏಕನಿವೇಶನಕ್ಕೆ ಅರ್ಜಿ ಬಗ್ಗೆ ಪ್ರಾಧಿಕಾರದ ಸಾಮಾನ್ಯ ಸಭೆಯಲ್ಲಿ ಚರ್ಚೆ ಆಗಿದೆ. ಅಂತಿಮ ಹಂತಕ್ಕೆ ಬರಬೇಕು ಎಂಬುದಾಗಿ ನಿರ್ಣಯ ಮಾಡಿದ್ದೇವೆ. ಕಾನೂನು ಪ್ರಕಾರ ಕ್ರಮ ತೆಗೆದುಕೊಳ್ಳುವಂತೆ ಆಯುಕ್ತರಿಗೆ ಸೂಚನೆ ನೀಡಿದ್ದೇವೆ. ಆದರೂ ಆಯುಕ್ತರು ಕಾನೂನು ಪಾಲನೆ ಮಾಡುತ್ತಿಲ್ಲ ಎಂದು ತಿಳಿಸಿದರು.
ನ್ಯೂಯಾರ್ಕ್: ನ್ಯೂಯಾರ್ಕ್ನ ಲಾಗ್ವಾರ್ಡಿಯಾ ವಿಮಾನ ನಿಲ್ದಾಣದಲ್ಲಿ ಏರ್ ಕೆನಡಾ ಎಕ್ಸ್ಪ್ರೆಸ್ ವಿಮಾನ ಲ್ಯಾಂಡಿಂಗ್ ವೇಳೆ ಅಗ್ನಿಶಾಮಕ ವಾಹನವೊಂದಕ್ಕೆ ಢಿಕ್ಕಿ ಹೊಡೆದಿದೆ. ಘಟನೆಯಲ್ಲಿ ಹಲವರು ಗಾಯಗೊಂಡಿದ್ದಾರೆ ಎಂದು NDTV ವರದಿ ಮಾಡಿದೆ. ಫ್ಲೈಟ್ ಟ್ರ್ಯಾಕಿಂಗ್ ವೆಬ್ಸೈಟ್ FlightRadar24 ಪ್ರಕಾರ, ಈ ವಿಮಾನವು ಮಾಂಟ್ರಿಯಲ್ನಿಂದ ನ್ಯೂಯಾರ್ಕ್ಗೆ ಬರುತ್ತಿದ್ದಾಗ ಲ್ಯಾಂಡಿಂಗ್ ವೇಳೆ ವಿಮಾನ ನಿಲ್ದಾಣದಲ್ಲಿದ್ದ ವಾಹನವೊಂದಕ್ಕೆ ಢಿಕ್ಕಿ ಹೊಡೆದಿದೆ. ಘಟನೆ ಬಳಿಕ, ಲಾಗಾರ್ಡಿಯಾ ವಿಮಾನ ನಿಲ್ದಾಣದಲ್ಲಿ ವಿಮಾನ ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ಯುಎಸ್ ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್ ತಿಳಿಸಿದೆ. ವಿಮಾನ ನಿಲ್ದಾಣದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿರುವ ಕುರಿತು ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಚಿನ್ನ-ಬೆಳ್ಳಿ ಭಾರೀ ಕುಸಿತ; ಇಂದಿನ ದರವೆಷ್ಟು?
ಅಂತಾರಾಷ್ಟ್ರೀಯ ಮಟ್ಟದಲ್ಲಿ ತೈಲ ಬೆಲೆ ಏರಿಕೆ ಮತ್ತು ಡಾಲರ್ ಬೆಲೆ ಸ್ಥಿರವಾಗಿರುವ ಹಿನ್ನೆಲೆಯಲ್ಲಿ ಚಿನ್ನದ ಬೆಲೆಗಳು ಕುಸಿತ ಕಂಡಿವೆ. ಜನವರಿಯಲ್ಲಿ ಅತ್ಯಧಿಕ ಏರಿಕೆ ಕಂಡಿದ್ದ ಶುದ್ಧ ಚಿನ್ನದ ಬೆಲೆ ನಂತರ ಕುಸಿತ ಕಂಡು ಫೆಬ್ರವರಿ ತಿಂಗಳಿಡೀ ಸ್ಥಿರವಾಗಿ ನಿಂತಿತ್ತು. ಆದರೆ ಮಾರ್ಚ್ ತಿಂಗಳಲ್ಲಿ ಕುಸಿಯುತ್ತಲೇ ಬಂದಿದೆ. ಕಳೆದ ವಾರದಲ್ಲಿ ಗುರುವಾರ, ಶುಕ್ರವಾರ ಮತ್ತು ಶನಿವಾರ ಸತತ ಕುಸಿತದ ನಂತರ ಶುದ್ಧ ಚಿನ್ನದ ಬೆಲೆಯು 15 ಸಾವಿರದ ಮಿತಿಯೊಳಗೆ ಬಂದು ನಿಂತಿತ್ತು. ಈ ವಾರದ ಗುರುವಾರ ಶೇ 5ರಷ್ಟು ಕುಸಿತ ಕಂಡಿದ್ದ ಚಿನ್ನದ ಬೆಲೆ ಶುಕ್ರವಾರ ಬೆಳಿಗ್ಗೆ ಶೇ 2ರಷ್ಟು ಏರಿಕೆ ಕಂಡಿದೆ. ಆದರೆ ಶುಕ್ರವಾರ ಸಂಜೆ ತೀವ್ರ ಬೆಲೆ ಕುಸಿತ ಕಂಡುಬಂದಿದೆ. ಶನಿವಾರ ಮತ್ತೆ ಕುಸಿತ ಕಂಡಿರುವ ಶುದ್ಧ ಚಿನ್ನದ ಬೆಲೆ ಸೋಮವಾರ ಬೆಳಗಿನ ವಹಿವಾಟಿನಲ್ಲಿ ಇನ್ನಷ್ಟು ಕುಸಿತ ಕಂಡು ಹತ್ತು ಗ್ರಾಂಗೆ 1,40,020 ರೂ.ಗೆ ಬಂದು ನಿಂತಿದೆ. ಇರಾನ್ ವಿರುದ್ಧ ಅಮೆರಿಕ ಮತ್ತು ಇಸ್ರೇಲ್ ಜೊತೆಗೂಡಿ ನಡೆಸಿರುವ ಸೇನಾ ಕ್ರಮಗಳೊಂದಿಗೆ ಆರಂಭವಾದ ಪಶ್ಚಿಮ ಏಷ್ಯಾ ಬಿಕ್ಕಟ್ಟಿನ ನಂತರ ಭಾರತದಲ್ಲಿ ಚಿನ್ನದ ಬೆಲೆಗಳು ಕುಸಿಯಲು ಆರಂಭಿಸಿವೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ತೈಲ ಬೆಲೆ ಏರಿಕೆ ಮತ್ತು ಡಾಲರ್ ಬೆಲೆ ಸ್ಥಿರವಾಗಿರುವ ಹಿನ್ನೆಲೆಯಲ್ಲಿ ಚಿನ್ನದ ಬೆಲೆಗಳು ಕುಸಿತ ಕಂಡಿವೆ. ಡಾಲರ್ ದುಬಾರಿಯಾದಾಗ ಚಿನ್ನ ಖರೀದಿ ದುಬಾರಿಯಾಗುತ್ತದೆ. ಹೀಗಾಗಿ ಮಾರ್ಚ್ ಆರಂಭದಿಂದ ಈವರೆಗೆ ಚಿನ್ನ ಮತ್ತು ಬೆಳ್ಳಿ ಬೆಲೆಗಳು ಕ್ರಮವಾಗಿ ಶೇ 12 ಮತ್ತು ಶೇ 17ರಷ್ಟು ಕುಸಿದಿವೆ. ಇಂದಿನ ಚಿನ್ನದ ದರ ಹೇಗಿದೆ? ಮಾರ್ಚ್ 23ರಂದು ಸೋಮವಾರ ಬೆಂಗಳೂರಿನ ಮಾರುಕಟ್ಟೆಗಳಲ್ಲಿ 24 ಕ್ಯಾರೆಟ್ ಶುದ್ಧ ಚಿನ್ನದ ಬೆಲೆ ಶನಿವಾರ ಸಂಜೆಯ ಬೆಲೆಗೆ ಹೋಲಿಸಿದರೆ ಪ್ರತಿ ಗ್ರಾಂಗೆ 595 ರೂ. ಕುಸಿತ ಕಂಡು ಹತ್ತು ಗ್ರಾಂ ಬೆಲೆ 1,40,020 ರೂ. ಗೆ ಬಂದು ನಿಂತಿದೆ. ಆಭರಣ ಚಿನ್ನವಾದ 22 ಕ್ಯಾರೆಟ್ ಬೆಲೆಯು ಪ್ರತಿ ಗ್ರಾಂಗೆ 545 ರೂ. ಕುಸಿತ ಕಂಡು ಹತ್ತು ಗ್ರಾಂಗೆ 1,28,350 ರೂ. ಗೆ ತಲುಪಿದೆ. 18 ಕ್ಯಾರೆಟ್ ಚಿನ್ನವು ಪ್ರತಿ ಗ್ರಾಂಗೆ 446 ರೂ. ಕುಸಿತವಾಗಿ ಹತ್ತು ಗ್ರಾಂಗೆ 1,05,020 ರೂ. ಗೆ ತಲುಪಿದೆ. ಮಂಗಳೂರಿನಲ್ಲಿ ಚಿನ್ನದ ದರವೆಷ್ಟಿದೆ? ಮಾರ್ಚ್ 23ರಂದು ಸೋಮವಾರ ಬೆಳಗಿನ 11 ಗಂಟೆಯ ವಹಿವಾಟಿನಲ್ಲಿ ಮಂಗಳೂರಿನಲ್ಲಿ ಚಿನ್ನದ ಬೆಲೆ ಮತ್ತೆ ಭಾರೀ ಕುಸಿತ ಕಂಡುಬಂದಿದೆ. ಒಂದು ಗ್ರಾಂ 24 ಕ್ಯಾರೆಟ್ ಚಿನ್ನದ ದರ 14,002 (-595) ರೂ. ನಷ್ಟಿದೆ. ಒಂದು ಗ್ರಾಂ 22 ಕ್ಯಾರೆಟ್ ಚಿನ್ನದ 12,835 (-545) ರೂ. ಮತ್ತು ಒಂದು ಗ್ರಾಂ 18 ಕ್ಯಾರೆಟ್ ಚಿನ್ನದ ದರ 10,502 (-446) ರೂ. ಬೆಲೆಗೆ ತಲುಪಿದೆ. ಸತತ ಕುಸಿತ ಕಾಣುತ್ತಿರುವ ಬೆಳ್ಳಿ ಮಾರ್ಚ್ ಆರಂಭದಲ್ಲಿ ಹೆಚ್ಚು ಏರಿಳಿತ ಕಾಣದೆ ಸ್ಥಿರವಾಗಿದ್ದ ಬೆಳ್ಳಿ ದರ, ಮಾರ್ಚ್ 09ರ ನಂತರ ಕುಸಿತದ ಹಾದಿಯಲ್ಲಿದೆ. ಕಳೆದ ಸೋಮವಾರ ಮಾರ್ಚ್ 16ರಂದು ಮತ್ತೆ ಪ್ರತಿ ಗ್ರಾಂಗೆ 5 ರೂ. ಕುಸಿದು ಪ್ರತಿ ಕೆಜಿ ಬೆಳ್ಳಿಯ ಬೆಲೆ 2,70,000 ರೂ.ಗೆ ತಲುಪಿದರೆ, ಮಂಗಳವಾರ ಪ್ರತಿ ಗ್ರಾಂಗೆ 5 ರೂ. ಏರಿಕೆಯಾಗಿ ಪ್ರತಿ ಕೆಜಿಗೆ ಮತ್ತೆ 2,75,000 ರೂ.ಗೆ ಬಂದು ನಿಂತಿದೆ. ಬುಧವಾರ ಪ್ರತಿಗ್ರಾಂಗೆ 10 ರೂ. ಕುಸಿತ, ಗುರುವಾರ ಮತ್ತು ಶುಕ್ರವಾರ ತಲಾ ಪ್ರತಿ ಗ್ರಾಂಗೆ 5 ರೂ. ಕುಸಿತ ಕಂಡು ಪ್ರತಿ ಕೆಜಿಗೆ 2,55,000 ರೂ.ಗೆ ಕುಸಿದಿದೆ. ಶನಿವಾರ ಪ್ರತಿ ಗ್ರಾಂಗೆ 10 ರೂ. ಕಡಿಮೆಯಾಗಿ ಪ್ರತಿ ಕೆಜಿಗೆ 2,45,000 ರೂ.ಗೆ ಕುಸಿದಿದೆ. ಇದೀಗ ಸೋಮವಾರ ಪ್ರತಿ ಗ್ರಾಂಗೆ 15 ರೂ. ಕುಸಿತ ಕಂಡು ಪ್ರತಿ ಕೆಜಿಗೆ 2,30,000 ರೂ.ಗೆ ಬಂದು ತಲುಪಿದೆ. ವಿವಿಧ ನಗರಗಳಲ್ಲಿ 1 ಗ್ರಾಮ್ ಚಿನ್ನದ ದರ (ಬೆಳಗಿನ ವಹಿವಾಟು) ಹೇಗಿದೆ? ದಿಲ್ಲಿ: 24 ಕ್ಯಾರೆಟ್ ಚಿನ್ನದ ದರ 14,017 (-595) ರೂ., 22 ಕ್ಯಾರೆಟ್ ಚಿನ್ನದ ದರ 12,850 (-545) ರೂ. ಮುಂಬೈ: 24 ಕ್ಯಾರೆಟ್ ಚಿನ್ನದ ದರ 14,002 (-595) ರೂ., 22 ಕ್ಯಾರೆಟ್ ಚಿನ್ನದ ದರ 12,835 (-545) ರೂ. ಅಹಮದಾಬಾದ್: 24 ಕ್ಯಾರೆಟ್ ಚಿನ್ನದ ದರ 14,007 (-595) ರೂ., 22 ಕ್ಯಾರೆಟ್ ಚಿನ್ನದ ದರ 12,840 (-545) ರೂ. ಚೆನ್ನೈ: 24 ಕ್ಯಾರೆಟ್ ಚಿನ್ನದ ದರ 14,128 (-730) ರೂ., 22 ಕ್ಯಾರೆಟ್ ಚಿನ್ನದ ದರ 12,950 (-670) ರೂ ಕೋಲ್ಕತ್ತಾ: 24 ಕ್ಯಾರೆಟ್ ಚಿನ್ನದ ದರ 14,002 (-595) ರೂ., 22 ಕ್ಯಾರೆಟ್ ಚಿನ್ನದ ದರ 12,835 (-545) ರೂ. ಹೈದರಾಬಾದ್: 24 ಕ್ಯಾರೆಟ್ ಚಿನ್ನದ ದರ 14,002 (-595) ರೂ., 22 ಕ್ಯಾರೆಟ್ ಚಿನ್ನದ ದರ 12,835 (-545) ರೂ. ಜೈಪುರ: 24 ಕ್ಯಾರೆಟ್ ಚಿನ್ನದ ದರ 14,017 (-595) ರೂ., 22 ಕ್ಯಾರೆಟ್ ಚಿನ್ನದ ದರ 12,850 (-545) ರೂ. ಚಂಡೀಗಢ: 24 ಕ್ಯಾರೆಟ್ ಚಿನ್ನದ ದರ 14,017 (-595) ರೂ., 22 ಕ್ಯಾರೆಟ್ ಚಿನ್ನದ ದರ 12,850 (-545) ರೂ. ಲಕ್ನೋ: 24 ಕ್ಯಾರೆಟ್ ಚಿನ್ನದ ದರ 14,017 (-595) ರೂ., 22 ಕ್ಯಾರೆಟ್ ಚಿನ್ನದ ದರ 12,850 (-545) ರೂ.
ಬೆರಳಚ್ಚು ಎಂಬುದು ಪ್ರಜಾಪ್ರಭುತ್ವದ ಅಸ್ತ್ರವೋ ಅಥವಾ ಅಡೆತಡೆಯೋ?
-ಡಾ.ವಿಜಯಕುಮಾರ ಎಚ್.ಕೆ. ಮಾನ್ಯರೇ, ಪಡಿತರ ಮತ್ತು ಪಿಂಚಣಿಗೆ ಬಯೋಮೆಟ್ರಿಕ್ ಕಡ್ಡಾಯವಿರುವಾಗ ಚುನಾವಣೆಯಲ್ಲಿ ಇದಕ್ಕೇಕೆ ವಿನಾಯಿತಿ? ಭಾರತದಂತಹ ವಿಶಾಲ ದೇಶದಲ್ಲಿ. ಶೇ. 20 ರಿಂದ 22 ರಷ್ಟು ನಕಲಿ ಮತದಾನ ತಡೆಯಲು ತಂತ್ರಜ್ಞಾನ ಅನಿವಾರ್ಯ. ಆದರೆ ಕೇವಲ ಯಂತ್ರಗಳ ಮೇಲೆ ಅವಲಂಬಿತವಾಗುವುದು ಅಪಾಯಕಾರಿ. ತಾಂತ್ರಿಕ ದೋಷದಿಂದ ಒಬ್ಬನೇ ಒಬ್ಬ ಅರ್ಹ ಮತದಾರನಿಗೆ ಹಕ್ಕು ನಿರಾಕರಣೆಯಾದರೂ ಅದು ಸಂವಿಧಾನಕ್ಕೆ ಮಾಡುವ ದ್ರೋಹ. ಗೌಪ್ಯತೆ ಮತ್ತು ಭದ್ರತೆಯ ನಡುವಿನ ಸಮತೋಲನ ಕಾಯ್ದುಕೊಳ್ಳುವುದು ಮುಖ್ಯ. ಹಸಿವು ನೀಗಿಸಲು ಬಳಸುವ ಬೆರಳಚ್ಚು ಪ್ರಜೆಯ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಸಾಧನವಾಗಬಾರದು. ಡಿಜಿಟಲ್ ಇಂಡಿಯಾದಲ್ಲಿ ಪಾರದರ್ಶಕತೆ ಬೇಕು ಆದರೆ ಅದು ಬಡವರ ಮತ್ತು ತಾಂತ್ರಿಕ ಜ್ಞಾನವಿಲ್ಲದವರ ಮತದಾನದ ಹಕ್ಕನ್ನು ಕಸಿದುಕೊಳ್ಳಬಾರದು. ವ್ಯವಸ್ಥೆಯ ಸುಧಾರಣೆ ಹೆಸರಿನಲ್ಲಿ ಪಜಾಪ್ರಭುತ್ವದ ಮೂಲ ಆಶಯಕ್ಕೆ ಧಕ್ಕೆಯಾಗದಂತೆ ಎಚ್ಚರವಹಿಸುವುದು ಇಂದಿನ ತುರ್ತು ಅಗತ್ಯವಾಗಿದೆ ಹೀಗಾಗಿ ಬೆರಳಚ್ಚು ಮತದಾನ ಸಮಯದಲ್ಲಿ ಕಡ್ಡಾಯಗೊಳ್ಳಲಿ.
ಯಾದಗಿರಿ : ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣ !
ಇನ್ನೂ ಮಾರ್ಚ್ ತಿಂಗಳು ಮುಗಿದಿಲ್ಲ. ಆದರೆ, ಈಗಾಗಲೇ ಅನೇಕ ಕಡೆಗಳಲ್ಲಿನೀರಿನ ಸಮಸ್ಯೆ ಗಂಭೀರತೆ ಪಡೆದುಕೊಳ್ಳುತ್ತಿದೆ. ಏಪ್ರೀಲ್ ಹಾಗೂ ಮೇ ತಿಂಗಳಲ್ಲಿಇನ್ನಷ್ಟು ಸಂಕಷ್ಟ ಜನರು ಎದುರಿಸಬೇಕಾಗಲಿದೆ ಎಂಬ ಭೀತಿಯೂ ಇದೆ. ಜನರ ಕಷ್ಟವನ್ನು ಆಡಳಿತ ವ್ಯವಸ್ಥೆ ಅರಿತು ಅಗತ್ಯ ಪ್ರಮಾಣದ ನೀರು ಸರಬರಾಜಿನ ವ್ಯವಸ್ಥೆ ಮಾಡಬೇಕು ಎಂದು ಗ್ರಾಮಸ್ಥರ ಆಗ್ರಹವಾಗಿದೆ.
\ಕಾಂಗ್ರೆಸ್ನಿಂದ ದಲಿತ ದ್ರೋಹ: 14,200 ಕೋಟಿ ರೂ ಎಸ್ಸಿಎಸ್ಪಿ/ಟಿಎಸ್ಪಿ ಹಣ ಗ್ಯಾರಂಟಿ ಪಾಲು''
ಕರ್ನಾಟಕದಲ್ಲಿ ಶೋಷಿತರ ಅಭಿವೃದ್ಧಿಯ ಹೆಸರಲ್ಲಿ ಅಧಿಕಾರಕ್ಕೆ ಬಂದ ರಾಜ್ಯ ಕಾಂಗ್ರೆಸ್ ಸರ್ಕಾರ, ದಲಿತರಿಗೆ ಮೀಸಲಿಟ್ಟ ಹಣದಲ್ಲಿ ಕೋಟ್ಯಾಂತರ ರೂಪಾಯಿ ದುರ್ಬಳಕೆ ಮಾಡಿಕೊಂಡಿದೆ. ಅಸಾಮರ್ಥ್ಯ ಮುಚ್ಚಿಕೊಳ್ಳಲು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಸಮುದಾಯಗಳ ಬೆನ್ನಿಗೆ ನಯವಾಗಿ ಇರಿಯುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಹಾಗೂ ವಿಪಕ್ಷ ನಾಯಕ ಆರ್.ಅಶೋಕ್ ದೂರಿದ್ದಾರೆ. ಇಂದು ಎಕ್ಸ್ ಪೋಸ್ಟ್ ಮಾಡಿರುವ ಬಿ.ವೈ.ವಿಜಯೇಂದ್ರ
ದೇಶದಲ್ಲಿ LPG ಬಿಕ್ಕಟ್ಟಿನಿಂದಾಗಿ ಸಂಕಷ್ಟ ಎದುರಿಸುತ್ತಿರುವ ಬೆಂಗಳೂರಿನ PGಗಳಿಗೆ ಪ್ರತಿದಿನ ಕನಿಷ್ಠ 500 ಎಲ್ಪಿಜಿ ಸಿಲಿಂಡರ್ಗಳನ್ನು ನೀಡುವಂತೆ ಸರ್ಕಾರವನ್ನು ಒತ್ತಾಯಿಸಲು ಪಿಜಿ ಮಾಲೀಕರ ಕಲ್ಯಾಣ ಸಂಘದ ಒಕ್ಕೂಟ ಸಭೆ ನಡೆಸಿ ನಿರ್ಧಾರಕ್ಕೆ ಬಂದಿದೆ. LPG ಪೂರೈಕೆಯಲ್ಲಿನ ವ್ಯತ್ಯಯದಿಂದಾಗಿ ರಾಜಧಾನಿಯಲ್ಲಿನ ಸುಮಾರು 15ಸಾವಿರ PGಗಳಲ್ಲಿ ಆಹಾರ ವಿತರಣೆಯಲ್ಲಿ ಉಂಟಾದ ವ್ಯತ್ಯಯಗಳ ಬೆನ್ನಲ್ಲೇ, ಈ ಸಮಸ್ಯೆಗೆ ಸೂಕ್ತ ಪರಿಹಾರಕ್ಕಾಗಿ ತಕ್ಷಣವೃ ಸಿಲಿಂಡರ್ ಸರಬರಾಜು ಮಾಡುವಂತೆ ಬೇಡಿಕೆಯಿಟ್ಟಿದೆ.
Shaheed Diwas 2026: ಭಗತ್ ಸಿಂಗ್ ಅಮರ್ ರಹೇ! ಹುತಾತ್ಮ ಕ್ರಾಂತಿಕಾರಿಗಳಿಗೆ ನರೇಂದ್ರ ಮೋದಿ ಶ್ರದ್ಧಾಂಜಲಿ
ಇಂದು (ಮಾ.23-ಸೋಮವಾರ) ಭಾರತ ಮಾತೆಯನ್ನು ದಾಸ್ಯದ ಸಂಕೋಲೆಯಿಂದ ಬಿಡಿಸಲು ಹೋರಾಡಿದ ವೀರ ಕ್ರಾಂತಿಕಾರಿಗಳಾದ ಭಗತ್ ಸಿಂಗ್, ಸುಖ್ದೇವ್ ಮತ್ತು ರಾಜಗುರು ಅವರು ಹುತಾತ್ಮರಾದ ದಿನ. 23 ಮಾರ್ಚ್, 1931ರಂದು ಬ್ರಿಟಿಷ್ ಆಡಳಿತ ಭಾರತಾಂಬೆಯ ಈ ಮೂವರು ಸುಪುತ್ರರನ್ನು ನೇಣಿಗೇರಿಸಿತ್ತು. ಶಹೀದ್ ದಿವಸ್ ಎಂದು ಆಚರಿಸಲಾಗುವ ಇಂದಿನ ದಿನ, ಈ ಹುತಾತ್ಮ ಕ್ರಾಂತಿಕಾರಿಗಳಿಗೆ ಮೀಸಲು. ಪ್ರಧಾನಮಂತ್ರಿ ನರೇಂದ್ರ ಮೋದಿ ಸೇರಿದಂತೆ ಅನೇಕ ಗಣ್ಯರು ಹುತಾತ್ಮ ಕ್ರಾಂತಿಕಾರಿಗಳಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ಇಲ್ಲಿದೆ ಮಾಹಿತಿ.
ಬೆಂಗಳೂರು -ಮೈಸೂರು ಹೆದ್ದಾರಿಯಲ್ಲಿ ಭೀಕರ ಅಪಘಾತ: ಡಿವೈಡರ್ಗೆ ಬಸ್ ಡಿಕ್ಕಿ – ನಾಲ್ವರು ಸಾವು
ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸೋಮವಾರ ಮುಂಜಾನೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ನಾಲ್ವರು ಪ್ರಯಾಣಿಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ವಾರದ ಮೊದಲ ದಿನವೇ ನಡೆದ ಈ ಭೀಕರ ದುರಂತವು ಹೆದ್ದಾರಿ ಪ್ರಯಾಣಿಕರಲ್ಲಿ ಆತಂಕ ಮೂಡಿಸಿದ್ದು, ಅಪಘಾತದ ತೀವ್ರತೆಗೆ ವಾಹನವು ಸಂಪೂರ್ಣ ಜಖಂಗೊಂಡಿದೆ.
Assam ವಿಧಾನಸಭಾ ಚುನಾವಣೆ| ಬಿಜೆಪಿ ತೊರೆದ ಸಚಿವೆ ನಂದಿತಾ ಗರ್ಲೋಸಾ: ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ
ಗುವಾಹಟಿ: ಅಸ್ಸಾಂ ವಿಧಾನಸಭಾ ಚುನಾವಣೆಗೆ ಬಿಜೆಪಿ ಟಿಕೆಟ್ ನಿರಾಕರಿಸಿದ ಬೆನ್ನಲ್ಲೆ ಅಸ್ಸಾಂ ಸಚಿವೆ ನಂದಿತಾ ಗರ್ಲೋಸಾ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ. ಅಸ್ಸಾಂ ಕಾಂಗ್ರೆಸ್ ಮಾಧ್ಯಮ ಘಟಕ ಹಾಫ್ಲಾಂಗ್ನಲ್ಲಿ ಗಾರ್ಲೋಸಾ ಅವರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದ ಫೋಟೋವನ್ನು ಹಂಚಿಕೊಂಡಿದೆ. ಅಸ್ಸಾಂ ರಾಜ್ಯದ ಕ್ರೀಡೆ ಮತ್ತು ಯುವಜನ ಕಲ್ಯಾಣ ಸಚಿವರಾಗಿದ್ದ ನಂದಿತಾ ಗರ್ಲೋಸಾ, ಕಾಂಗ್ರೆಸ್ ನಾಯಕ ನಿರ್ಮಲ್ ಲ್ಯಾಂಗ್ಥಾಸಾ ಅವರ ಸಮ್ಮುಖದಲ್ಲಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ. ಮುಂಬರುವ ಚುನಾವಣೆಯಲ್ಲಿ ಅವರು ಹಾಫ್ಲಾಂಗ್ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದಾರೆ ಎಂದು ತಿಳಿದು ಬಂದಿದೆ. ರವಿವಾರ ಬಿಡುಗಡೆ ಮಾಡಿದ ಐದನೇ ಪಟ್ಟಿಯಲ್ಲಿ ಕಾಂಗ್ರೆಸ್ ಹಾಫ್ಲಾಂಗ್ ಕ್ಷೇತ್ರಕ್ಕೆ ನಿರ್ಮಲ್ ಲ್ಯಾಂಗ್ಥಾಸಾ ಅವರನ್ನು ಅಭ್ಯರ್ಥಿಯಾಗಿ ಘೋಷಿಸಿತ್ತು. ಆದರೆ ಗೋರ್ಲೋಸಾ ಪಕ್ಷ ಸೇರ್ಪಡೆಯಾದ ನಂತರ, ನಿರ್ಮಲ್ ಲ್ಯಾಂಗ್ಥಾಸಾ ಅವರ ಬದಲು ಗೋರ್ಲೋಸಾ ಅವರಿಗೆ ಪಕ್ಷದ ಅಭ್ಯರ್ಥಿಯಾಗಿ ಟಿಕೆಟ್ ನೀಡಲಾಗಿದೆ ಎಂದು ತಿಳಿದು ಬಂದಿದೆ.
ಧುರಂಧರ್ : ಸೂಕ್ಷ್ಮವಾದ ’ನಯಾ ಭಾರತ್’ ಸಂದೇಶ ಮತ್ತು ಸಮಾಜದಲ್ಲಿ ರಾಷ್ಟ್ರೀಯತೆ ಜಾಗೃತಗೊಳಿಸುವ ಸಿನಿಮಾ
Aditya Dhar Dhurandhar movie impact : ಆದಿತ್ಯ ಧರ್ ನಿರ್ದೇಶನದ ಧುರಂಧರ್ ಸಿನಿಮಾದ ಎರಡನೇ ಪಾರ್ಟ್ ಬಿಡುಗಡೆಗೊಂಡಿದೆ. ಭಾರೀ ಹೈಪ್ ಹುಟ್ಟುಹಾಕಿದ್ದ ಈ ಸಿನಿಮಾ ನಿರೀಕ್ಷೆಯಂತೆ ಬಾಕ್ಸಾಫೀಸ್’ ಅನ್ನು ಸೂರೆ ಹೊಡೆಯುತ್ತಿದೆ. ಚಿತ್ರ ನೋಡಿ ಹೊರಬರುವ ಪ್ರೇಕ್ಷಕನಿಗೆ ದೇಶದ ಮೇಲೆ ಇನ್ನಷ್ಟು ಅಭಿಮಾನ ಹೆಚ್ಚಿಸುವಲ್ಲಿ ಚಿತ್ರ ಯಶಸ್ವಿಯಾಗಿದೆ ಎನ್ನುವುದು ಒಟ್ಟಾರೆ ಜನಾಭಿಪ್ರಾಯವಾಗಿದೆ. ನೋಟು ಬ್ಯಾನ್ ಮಾಡಲು ಕಾರಣವೇನು ಎನ್ನುವುದನ್ನೂ ಚಿತ್ರದಲ್ಲಿ ನಿರ್ಭೀತಿಯಿಂದ ತೋರಿಸಲಾಗಿದೆ.
ಯಾವುದೇ ದೇಶ ಪ್ರೇಮಿ ವ್ಯಕ್ತಿಯು ದೇಶದ ಪ್ರಜೆಗಳನ್ನು ಜಾತಿ, ಮತದ ಹೆಸರಿನಲ್ಲಿ ವಿಭಜಿಸುವುದಿಲ್ಲ. ದೇಶದ ನಾಗರಿಕರೆಲ್ಲ ಒಂದೇ, ಅವರೆಲ್ಲರೂ ಭಾರತೀಯರು ಎಂದು ಹೇಳುತ್ತಾನೆ.ಆದರೆ ಹಿಂದೂಗಳೇ ಒಂದಾಗಿ, ಮುಸಲ್ಮಾನರೇ ಒಂದಾಗಿ, ಕ್ರೈಸ್ತರೇ ಒಂದಾಗಿ ಎಂದು ಕರೆ ನೀಡುವವರು ದೇಶಪ್ರೇಮಿಗಳಲ್ಲ. ಅವರು ದೇಶ ದ್ರೋಹಿಗಳು. ಭಾರತೀಯರೇ ಒಂದಾಗಿ ಎಂದು ಹೇಳುವವರು ಮಾತ್ರ ನಿಜವಾದ ದೇಶಪ್ರೇಮಿಗಳು ಅಂದರೆ ತಪ್ಪಿಲ್ಲ. ನಮ್ಮ ಇತಿಹಾಸದ ಮಹಾ ಚೇತನಗಳು ಎಂದಿಗೂ ತಮ್ಮನ್ನು ಯಾವುದೇ ಜಾತಿ, ಮತದ ಜೊತೆಗೆ ಗುರುತಿಸಿಕೊಂಡವರಲ್ಲ.ಇಂಥ ಜಾತಿಯವರೆಂದು ಹೇಳಿಕೊಂಡವರಲ್ಲ. ರಾಜ ಮನೆತನಗಳಿಂದ ಬಂದವರಿಗೆ ಜಾತಿಯ ಹಂಗಿರಲಿಲ್ಲ. ಸಾಧು, ಸನ್ಯಾಸಿಗಳು ಕೂಡ ಯಾವುದೇ ಜಾತಿ, ಮತಕ್ಕೆ ಸೇರಿದವರಲ್ಲ.ಇವರೆಲ್ಲರಿಗೂ ಜಾತಿ, ಮತ,ಪೂಜೆ, ಪ್ರಾರ್ಥನೆ, ಅರ್ಚನೆ , ಇತ್ಯಾದಿಗಳು ಇದ್ದರೂ ಅದನ್ನು ತಮ್ಮ ಮನೆಯ ಹೊಸ್ತಿಲಿನ ಒಳಗೆ ಮಾತ್ರ ಇಟ್ಟುಕೊಂಡವರು. ಅವರ ದೇಶವೆಂದರೆ ತಮ್ಮ ಸಂಸ್ಥಾನದ ವ್ಯಾಪ್ತಿಗೊಳಪಡುವ ಪ್ರದೇಶ ಮಾತ್ರ. ತಮ್ಮ ಅರಸೊತ್ತಿಗೆಯ ಪ್ರದೇಶದಲ್ಲಿ ಯಾವುದೇ ಪ್ರಜೆಯನ್ನು ಜಾತಿ ಮತದ ಸಂಕುಚಿತ ದೃಷ್ಟಿಯಿಂದ ನೋಡಿದವರಲ್ಲ. ಅಂತಲೇ ಅವರ ಆಸ್ಥಾನಗಳಲ್ಲಿ ಎಲ್ಲ ಕೋಮು ಜಾತಿಗಳಿಗೆ ಸೇರಿದವರು ಇರುತ್ತಿದ್ದರು. ಜಾತಿ ವ್ಯವಸ್ಥೆಯ ಮೇಲು ಕೀಳುಗಳ ವಿರುದ್ಧ ಹೋರಾಡಿ ಪ್ರಾಣವನ್ನೇ ಅರ್ಪಿಸಿದ ಬಸವಣ್ಣ, ತನ್ನ ರಾಜ ಸಂಸ್ಥಾನಕ್ಕೆ ಬ್ರಿಟಿಷ್ ಆಡಳಿತದಿಂದ ಧಕ್ಕೆ ಬಂದಾಗ ಎಲ್ಲ ಸಮುದಾಯಗಳನ್ನು ಕಟ್ಟಿಕೊಂಡು ಹೋರಾಟ ಮಾಡಿದ ಕಿತ್ತೂರು ಚೆನ್ನಮ್ಮ ಮತ್ತು ಆಕೆಯ ಮಗನಂತಿದ್ದ ಸಂಗೊಳ್ಳಿ ರಾಯಣ್ಣ, ಬ್ರಿಟಿಷ್ ವಸಾಹತುಶಾಹಿಯ ಜೊತೆಗೆ ರಾಜಿ ಮಾಡಿಕೊಂಡಿದ್ದರೆ ಶ್ರೀ ರಂಗಪಟ್ಟಣ ಮಾತ್ರವಲ್ಲ ಮೈಸೂರು ಸಂಸ್ಥಾನದ ರಾಜನಾಗಿ ಮುಂದುವರಿಯಬಹುದಾದ ಟಿಪ್ಪು ಸುಲ್ತಾನ್, ಬೆಂಗಳೂರಿನಲ್ಲಿ ಮುಸಲ್ಮಾನರು ಸೇರಿದಂತೆ ಎಲ್ಲರನ್ನೂ ಸಮಾನವಾಗಿ ಕಂಡ ಮಾಗಡಿ ಕೆಂಪೇಗೌಡ, ಇವರು ನಾಲ್ವರನ್ನು ಉದಾಹರಣೆಯಾಗಿ ಇಟ್ಟುಕೊಂಡರೆ ನಮ್ಮ ಸಮಾಜ ಇವರೆಲ್ಲರನ್ನು ಹೇಗೆ ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಗೊತ್ತಾಗುತ್ತದೆ. ಆದರೆ ಆಧುನಿಕ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಂಕುಚಿತ ಜಾತಿ , ಮತಗಳ ಭಾವನೆ ನಗಣ್ಯವಾಗಬೇಕಾಗಿತ್ತು.ಆದರೆ ಅದು ಮತ್ತೆ ಹೊಸ ಹೊಸ ರೂಪ ತಾಳಿ ವಕ್ಕರಿಸುತ್ತಲೇ ಇದೆ. ವಿಶ್ವ ಮಾನವರಾಗಲು ರಾಷ್ಟ್ರ ಕವಿ ಕುವೆಂಪು ಅವರು ನೀಡಿದ ಕರೆ ಕೇವಲ ಭಾಷಣಕ್ಕಾಗಿ ಬಳಕೆಯಾಗುತ್ತಿದೆ.ಬದಲಾಗಿ ನಮ್ಮ ಚರಿತ್ರೆಯ ಮಹಾನ್ ಹೋರಾಟಗಾರರನ್ನು, ಪುರೋಗಾಮಿ ಆಡಳಿತ ಗಾರರನ್ನು ಜಾತಿಯ ಕಂಬಕ್ಕೆ ಕಟ್ಟಿ ಹಾಕಿ ರಾಜಕೀಯ ಲಾಭ ಮಾಡಿಕೊಳ್ಳುವ ಮಸಲತ್ತು ನಡೆದಿದೆ ಇತಿಹಾಸದ ಮಹಾ ಚೇತನಗಳನ್ನು ಜಾತಿ ಮತ ಮಾತ್ರವಲ್ಲ ಉಪ ಜಾತಿ ರಾಜಕಾರಣಕ್ಕೆ ಬಳಸಿಕೊಳ್ಳುವ ಚಾಳಿ ನಿರಾತಂಕವಾಗಿ ಮುಂದುವರಿದಿದೆ. ಕಿತ್ತೂರು ಚೆನ್ನಮ್ಮ ರಾಣಿಯನ್ನು ಲಿಂಗಾಯತ ಪಂಚಮಸಾಲಿ ಉಪ ಪಂಗಡಕ್ಕೆ ಕಟ್ಟಿ ಹಾಕಲಾಗಿದೆ. ಬಸವಣ್ಣನವರನ್ನು ಲಿಂಗಾಯತರೆಂದು ಹಣೆಪಟ್ಟಿ ಹಚ್ಚಲಾಗುತ್ತದೆ. ಕೆಂಪೇಗೌಡರನ್ನು ಒಕ್ಕಲಿಗ ಸಮುದಾಯದ ಐಕಾನ್ ಆಗಿ ಬಿಂಬಿಸಲಾಗುತ್ತದೆ. ಟಿಪ್ಪು ಸುಲ್ತಾನ್ ಮುಸ್ಲಿಮ್ ಆಗಿ ಹುಟ್ಟಿರುವ ಕಾರಣಕ್ಕಾಗಿ ಅವರ ಜಯಂತಿಯನ್ನೇ ಆಚರಿಸಕೂಡದೆಂದು ಆಕ್ಷೇಪ ಮಾಡಲಾಗುತ್ತಿದೆ. ಚುನಾವಣೆಯಲ್ಲಿ ಓಟಿನ ಬ್ಯಾಂಕ್ ಆಗುವ ಸಾಮರ್ಥ್ಯ ವಿಲ್ಲದ ಸಮುದಾಯಗಳಿಗೆ ಸೇರಿದವರೆನ್ನಲಾದ ಮಹಾ ಚೇತನಗಳನ್ನು ಕಡೆಗಣಿಸಿರುವುದೇಕೆ. ಪಂಪ,ರನ್ನ ಇವರ ಹೆಸರಿನಲ್ಲಿ ಒಂದು ಸ್ಮಾರಕ ವಾಗಲಿ, ಪ್ರಾಧಿಕಾರವಾಗಲಿ, ಪ್ರತಿಷ್ಠಾನವಾಗಲಿ ಯಾಕೆ ಇಲ್ಲ. ಈ ಪ್ರಶ್ನೆಯನ್ನು ಕನ್ನಡದ ಹಿರಿಯ ಲೇಖಕ ಬರಗೂರು ರಾಮಚಂದ್ರಪ್ಪನವರು ಹಾಕಿದ್ದಾರೆ.ಸರಕಾರ ನಿರ್ಲಕ್ಷಿಸಿದರೂ ಸಾಹಿತ್ಯ ವಲಯದಿಂದಾದರೂ ಇದಕ್ಕೆ ಒತ್ತಡ ಬರಬೇಕಾಗಿತ್ತಲ್ಲ, ಯಾಕೆ ಬಂದಿಲ್ಲ. ಸರಕಾರದ ಆದ್ಯತೆ ಇದಾಗಿರಲಿಕ್ಕಿಲ್ಲ, ಪ್ರತಿಷ್ಠಾನ, ಪ್ರಾಧಿಕಾರಗಳಿಂದ ಕವಿಯ ಹೆಸರನ್ನು ಉಳಿಸಬೇಕಾಗಿಲ್ಲ ಅವರ ಸಾಹಿತ್ಯವೇ ಸಾರ್ವಕಾಲಿಕ ಎಂದು ಹೇಳಿದರೂ ಕೂಡ ಕವಿಯ ಸಾಹಿತ್ಯ ಮತ್ತು ವಿಚಾರಗಳ ಅಧ್ಯಯನಕ್ಕೆ ಸಾಂಸ್ಥಿಕ ಪ್ರಯತ್ನ ಬೇಕಲ್ಲವೇ? ಬುದ್ಧ, ಬಸವಣ್ಣ, ಬಾಬಾಸಾಹೇಬರು ಯಾವುದೇ ಒಂದು ಸಮುದಾಯಕ್ಕೆ ಸೇರಿದವರಲ್ಲ. ಅದೇ ರೀತಿ ಕಿತ್ತೂರು ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ, ಕನಕದಾಸ, ಇಂಥ ಎಲ್ಲರಿಗೂ ಸೇರಿದ ಬೆಳಕಿನ ಕಿರಣಗಳನ್ನು ಯಾವುದೋ ಒಂದು ಸಮುದಾಯಕ್ಕೆ ಸೀಮಿತಗೊಳಿಸುವುದು ಸರಿಯಲ್ಲ. ಅವರನ್ನು ಬಳಸಿಕೊಂಡು ಚುನಾವಣೆಯಲ್ಲಿ ಟಿಕೆಟ್ ಕೇಳುವುದು, ಗೆದ್ದ ಮೇಲೆ ಮಂತ್ರಿ ಸ್ಥಾನ ಕೇಳುವುದು ಅವರಿಗೆ ಅಪಚಾರ ಮಾಡಿದಂತಲ್ಲದೇ ಬೇರೇನೂ ಅಲ್ಲ. ದೇಶದ ಮಹಾ ಚೇತನಗಳನ್ನು ಅತ್ಯಂತ ಹೆಚ್ಚು ದುರುಪಯೋಗ ಮಾಡಿಕೊಂಡ ಸಂಘಟನೆ ಯಾವುದೆಂಬುದನ್ನು ವಿವರಿಸಬೇಕಾಗಿಲ್ಲ. ತನ್ನ ಜನಾಂಗ ದ್ವೇಷದ ಕೋಮುವಾದಿ ರಾಜಕೀಯಕ್ಕೆ ಈ ಸಂಘಟನೆ ದುರ್ಬಳಕೆ ಮಾಡಿಕೊಂಡ ನಮ್ಮ ಹೆಮ್ಮೆಯ ನೇತಾರರ ಸಂಖ್ಯೆಯನ್ನು ಲೆಕ್ಕ ಇಡಲಾಗುವುದಿಲ್ಲ.ಸ್ವಾಮಿ ವಿವೇಕಾನಂದ, ಶಹೀದ್ ಭಗತ್ ಸಿಂಗ್, ನೇತಾಜಿ ಸುಭಾಷ್ಚಂದ್ರ ಭೋಸ್, ಬಸವಣ್ಣ, ಶಿವಾಜಿ, ಕಿತ್ತೂರು ಚೆನ್ನಮ್ಮ ಹೀಗೆ ಜಾತಿಮತವನ್ನು ಮೀರಿ ಮಾನವತೆಗಾಗಿ ಮಿಡಿದ ಮಹಾಚೇತನಗಳನ್ನು ಈ ಸಂಘಟನೆ ತನ್ನ ಜನ ವಿಭಜಕ ಕಾರ್ಯಕ್ರಮಗಳಲ್ಲಿ ಬಳಸಿಕೊಳ್ಳುತ್ತ ಬಂದಿದೆ. ರಾಷ್ಟ್ರೀಯ ಸ್ವಯಂ ಸೇವಕ ಸಂಘಕ್ಕೆ ನೂರು ವರ್ಷ ತುಂಬಿದ ಸಂದರ್ಭದಲ್ಲಿ ದೇಶವ್ಯಾ ಪಿಯಾಗಿ ಅಲ್ಲಲ್ಲಿ ಹಿಂದೂ ಸಮಾವೇಶಗಳು ನಡೆಯುತ್ತಿವೆ. ಮುಂಚೆ ದೇಶಭಕ್ತಿಯ ಬಗ್ಗೆ, ಭಾರತೀಯತೆ ಬಗ್ಗೆ ಮಾತನಾಡುತ್ತಿದ್ದ ಈ ಸಂಘಟನೆ ಈಗ ಅಪ್ಪಿ ತಪ್ಪಿಯೂ ದೇಶದ ಬಗ್ಗೆ ಮಾತಾಡುವುದಿಲ್ಲ. ಬಹುತ್ವ ಭಾರತದಲ್ಲಿ ಹಿಂದೂಗಳೆಂದು ಈ ಸಂಘಟನೆ ಕರೆಯುವ ವಿವಿಧ ಜಾತಿ ಸಮುದಾಯಗಳ ಜನರು, ಇದರಾಚೆ ಪ್ರತ್ಯೇಕ ಧರ್ಮಗಳೆಂದು ಕರೆಯಲ್ಪಡುವ ಬೌದ್ಧ, ಜೈನ, ಸಿಖ್, ಕ್ರೈಸ್ತ, ಹಾಗೂ ಮುಸ್ಲಿಮ್ ಸಮುದಾಯಗಳು ಎಲ್ಲರೂ ಇದ್ದಾರೆ. ಇವರೆಲ್ಲ ಸೇರಿಯೇ ಬಹುತ್ವ ಭಾರತವಾಗಿದೆ. ಬಹು ಧರ್ಮಗಳು, ಬಹು ಸಂಸ್ಕೃತಿಗಳು, ಬಹು ಭಾಷೆಗಳನ್ನು ಒಳಗೊಂಡ ಈ ನೆಲದಲ್ಲಿ ಹಿಂದೂಗಳಿಗೆ ಅಪಾಯ ಎದುರಾಗಿದೆ ಎಂದು ಭಯ ಹುಟ್ಟಿಸಿ ಪ್ರಚೋದನಕಾರಿ ಭಾಷಣಗಳನ್ನು ಮಾಡಲಾಗುತ್ತದೆ. ಈ ಸಮಾವೇಶಗಳಲ್ಲಿ ಸುಭಾಷ್ ಚಂದ್ರ ಭೋಸ್, ಭಗತ್ ಸಿಂಗ್, ಶಿವಾಜಿ ಹಾಗೂ ಬಸವಣ್ಣನವರ ಫೋಟೊಗಳನ್ನು ವೇದಿಕೆಯ ಮೇಲೆ ಹಾಕುವ ಉದ್ದೇಶವೇನು? ಇವರಾರೂ ಕೋಮು ರಾಜಕಾರಣ ಮಾಡಿದವರಲ್ಲ. ಸುಭಾಷ್ ಚಂದ್ರ ಭೋಸ್ ಜಾತ್ಯತೀತ, ಸಮಾಜವಾದಿ ಭಾರತದ ಕನಸು ಕಂಡವರು. ಭಗತ್ ಸಿಂಗ್ ಅವರಂತೂ ಕಟ್ಟಾ ಎಡಪಂಥೀಯರು. ಅವರು ಬಯಸಿದ್ದು ಸಮತಾವಾದಿ ಭಾರತವನ್ನು. ಬಸವಣ್ಣನವರಂತೂ ಅಂತರ್ಜಾತಿ,ಅಂತಧರ್ರ್ಮೀಯ ಮದುವೆಗಳನ್ನು ಮಾಡಿಸುವ ಮೂಲಕ ಶ್ರೇಣೀಕೃತ ಜಾತಿ ವ್ಯವಸ್ಥೆಗೆ ಬಲವಾದ ಏಟು ಕೊಟ್ಟವರು. ಶಿವಾಜಿಯಂತೂ ಬಡವರ, ದಲಿತರ, ಹಿಂದುಳಿದವರ ರಾಜ ಎಂದು ಹೆಸರು ಮಾಡಿದವರು.ಇಂಥ ಉದಾತ್ತ ಚೇತನಗಳನ್ನು ಜನ ವಿಭಜಕ ರಾಜಕಾರಣಕ್ಕೆ ಬಳಸಿಕೊಳ್ಳುವುದು ಅವರಿಗೆ ಮಾಡುವ ಅಪಚಾರವಲ್ಲವೇ? ಇವರಾರೂ ಕೋಮುವಾದಿ ಹಿಂದುತ್ವವನ್ನು ಒಪ್ಪಿದವರಲ್ಲ. ಇತಿಹಾಸದಲ್ಲಿ ಹೆಸರು ಮಾಡಿದವರು,ತ್ಯಾಗ, ಬಲಿದಾನ ಮಾಡಿದವರ ಹೆಸರು ಮತ್ತು ಪಟಗಳನ್ನು ದುರ್ಬಳಕೆ ಮಾಡಿಕೊಳ್ಳುವುದನ್ನು ತಡೆಯಲು ಕಾನೂನು ರೂಪಿಸುವಂತೆ ಸರಕಾರದ ಮೇಲೆ ಒತ್ತಡ ತರುವುದು ಇಂದಿನ ತುರ್ತು ಅಗತ್ಯವಾಗಿದೆ. ಅದೇ ರೀತಿ ದೇವಾಲಯಗಳ ಬಳಿ, ಪೂಜಾ ಮಂದಿರಗಳು ಹತ್ತಿರ ಜಾತ್ರೆ, ರಥೋತ್ಸವಗಳ ಸಮೀಪ ಕೋಮುವಾದಿ ಶಕ್ತಿಗಳು ನುಸುಳದಂತೆ ಎಚ್ಚರ ವಹಿಸುವುದು ಇಂದಿನ ಅಗತ್ಯವಾಗಿದೆ. ಇವುಗಳನ್ನು ತಮ್ಮ ಕೋಮುವಾದಿ ರಾಜಕಾರಣಕ್ಕೆ ದುರ್ಬಳಕೆ ಮಾಡಿಕೊಳ್ಳುವ ಶಕ್ತಿಗಳು ಅಶಾಂತಿಯನ್ನು ಉಂಟು ಮಾಡುತ್ತಿವೆೆ. ಯಾವುದೇ ದೇಶ ಪ್ರೇಮಿ ವ್ಯಕ್ತಿಯು ದೇಶದ ಪ್ರಜೆಗಳನ್ನು ಜಾತಿ, ಮತದ ಹೆಸರಿನಲ್ಲಿ ವಿಭಜಿಸುವುದಿಲ್ಲ. ದೇಶದ ನಾಗರಿಕರೆಲ್ಲ ಒಂದೇ, ಅವರೆಲ್ಲರೂ ಭಾರತೀಯರು ಎಂದು ಹೇಳುತ್ತಾನೆ.ಆದರೆ ಹಿಂದೂಗಳೇ ಒಂದಾಗಿ, ಮುಸಲ್ಮಾನರೇ ಒಂದಾಗಿ, ಕ್ರೈಸ್ತರೇ ಒಂದಾಗಿ ಎಂದು ಕರೆ ನೀಡುವವರು ದೇಶಪ್ರೇಮಿಗಳಲ್ಲ. ಅವರು ದೇಶ ದ್ರೋಹಿಗಳು. ಭಾರತೀಯರೇ ಒಂದಾಗಿ ಎಂದು ಹೇಳುವವರು ಮಾತ್ರ ನಿಜವಾದ ದೇಶಪ್ರೇಮಿಗಳು ಅಂದರೆ ತಪ್ಪಿಲ್ಲ.
Highways: ದೇಶದ 40,000 ಕಿಮೀ ಹೆದ್ದಾರಿಗೆ AI ಟಚ್, ನಿರ್ವಹಣೆ ಮತ್ತಷ್ಟು ಸುಲಭ, ಇಲ್ಲಿದೆ ಮಾಹಿತಿ
National Highways: ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನ ಐಟಿ ಬಿಟಿ ಕಂಪನಿಗಳು, ಕಾರ್ಪೋರೇಟ್ ಸಂಸ್ಥೆಗಳು ಸೇರಿದಂತೆ ಹಲವಾರು ಕ್ಷೇತ್ರಕ್ಕೆ ಕಾಲಿಟ್ಟಿದೆ. ಇದೀಗ ಭಾರತದ ರಾಷ್ಟ್ರೀಯ ಹೆದ್ದಾರಿಗಳಲ್ಲೂ ಎಐ ತನ್ನ ಪ್ರಭಾವ ಬೀರಲಿದೆ. ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ದೇಶದ ಹೈವೇಗಳಲ್ಲಿ ಸುಧಾರಿತ AI-ಚಾಲಿತ ಮೇಲ್ವಿಚಾರಣಾ ವ್ಯವಸ್ಥೆಯನ್ನು ಪರಿಚಯಿಸಲು ಮುಂಗಾಗಿದ್ದು, ಅಗತ್ಯ ಸಿದ್ಧತೆ ಮಾಡಿಕೊಂಡಿದೆ. ಹೌದು, ಭಾರತದ
ಚನ್ನಪಟ್ಟಣ | ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ವೇಯಲ್ಲಿ ಭೀಕರ ಅಪಘಾತ: ನಾಲ್ವರು ಮೃತ್ಯು
ರಾಮನಗರ: ಖಾಸಗಿ ಬಸ್ಸೊಂದು ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ ಗೆ ಢಿಕ್ಕಿ ಹೊಡೆದ ಪರಿಣಾಮ ನಾಲ್ವರು ಸ್ಥಳದಲ್ಲೇ ಮೃತಪಟ್ಟ ಘಟನೆ ಬೆಂಗಳೂರು ದಕ್ಷಿಣ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಪುಟ್ಟಪ್ಪನದೊಡ್ಡಿ ಬಳಿ ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ವೇಯಲ್ಲಿ ಸೋಮವಾರ ಮುಂಜಾನೆ ಸಂಭವಿಸಿದೆ. ಮೃತರನ್ನು ಕೇರಳದ ಮಹಮ್ಮದ್ ಫರ್ಹಾನ್ (22) ಮತ್ತು ರಫೀಝ್ (45), ಬೆಂಗಳೂರಿನ ಕಲಾಸಿಪಾಳ್ಯ ನಿವಾಸಿ ರಶೀದ್ (45) ಮತ್ತು ಆಡುಗೋಡಿಯ ಅಣ್ಣೆಪಾಳ್ಯ ನಿವಾಸಿ ಶಾಕೀರ್ (27) ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಕೇರಳದವರಾದ ಅಬ್ದುಲ್ಲಾ ಮತ್ತು ಅಲೇನ್ ಎಂಬವರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ. ಕೇರಳದ ಪಿ.ಕೆ. ಟ್ರಾವೆಲ್ಸ್ ಸಂಸ್ಥೆಗೆ ಸೇರಿದ ಈ ಬಸ್ ತಡರಾತ್ರಿ ಕೇರಳದ ಕ್ಯಾಲಿಕೆಟ್ ನಿಂದ ಬೆಂಗಳೂರಿಗೆ ಹೊರಟಿತ್ತು. ಬೆಳಗಿನ ಜಾವ 4:10ರ ಸುಮಾರಿಗೆ ಚನ್ನಪಟ್ಟಣ ತಾಲೂಕಿನ ಪುಟ್ಟಪ್ಪನದೊಡ್ಡಿ ಬಳಿ ತಲುಪಿದಾಗ ಚಾಲಕನ ನಿಯಂತ್ರಣ ತಪ್ಪಿದ ಬಸ್ ರಸ್ತೆ ಬದಿಯ ಡಿವೈಡರ್ ಗೆ ಢಿಕ್ಕಿ ಹೊಡೆದಿದೆ ಎಂದು ತಿಳಿದುಬಂದಿದೆ. ಅಪಘಾತ ವೇಳೆ ಬಸ್ಸಿನಲ್ಲಿ 42 ಮಂದಿ ಪ್ರಯಾಣಿಕರಿದ್ದರು. ಚನ್ನಪಟ್ಟಣ ಸಂಚಾರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಮಧ್ಯಪ್ರಾಚ್ಯದಲ್ಲಿನ ಯುದ್ದದಿಂದಾಗಿ ದೇಶದಲ್ಲಿ ಎದುರಾದ LPG ಬಿಕ್ಕಟ್ಟಿನ ನಡುವೆ PNG ಅಳವಡಿಕೆಯನ್ನು ಉತ್ತೇಜಿಸುವ ಮೂಲಕ ಭವಿಷ್ಯದಲ್ಲಿ ಇಂಧನ ಅನಿಶ್ಚಿತತೆ ಉಂಟಾಗದಂತೆ ಅನಿಲ ವಿತರಣಾ ಜಾಲ ಸುಗಮಗೊಳಿಸಲು ಸರ್ಕಾರ ಕ್ರಮಕೈಗೊಂಡಿದೆ. ಈ ನಿಟ್ಟನಲ್ಲಿ ನಗರಗಳಲ್ಲಿ ವಾಣಿಜ್ಯ ಸಿಲಿಂಡರ್ ಬಳಕೆ ಗ್ರಾಹಕರಿಗೂ ಸಹ PNGಯನ್ನು ಅಳವಡಿಸಿಕೊಳ್ಳುವಂತೆ ಪ್ರೋತ್ಸಾಹ ನೀಡುತ್ತಿದ್ದು, ಸದ್ಯದ ಮಟ್ಟಿಗೆ LPG ಪೂರೈಕೆಯಲ್ಲಿ ಯಾವುದೇ ಕೊರತೆ ಇಲ್ಲ ಎಂದು ತಿಳಿಸಿದೆ. ಅಲ್ಲದೆ, LPG ಪೂರೈಕೆಯನ್ನು ಸಹ ಕ್ರಮೇಣ ಹೆಚ್ಚಳಮಾಡಿದೆ ಎಂದು ವರದಿಯಾಗಿದೆ.
ಅಬುಧಾಬಿ| ಭದ್ರತಾ ಪಡೆಗಳು ಹೊಡೆದುರುಳಿಸಿದ ಕ್ಷಿಪಣಿಯ ಅವಶೇಷಗಳು ಬಿದ್ದು ಭಾರತೀಯ ಪ್ರಜೆಗೆ ಗಾಯ
ಅಬುಧಾಬಿ: ಯುಎಇ ಭದ್ರತಾ ಪಡೆ ಹೊಡೆದುರುಳಿಸಿದ ಬ್ಯಾಲಿಸ್ಟಿಕ್ ಕ್ಷಿಪಣಿಯ ಅವಶೇಷಗಳು ಬಿದ್ದು ಭಾರತೀಯ ಪ್ರಜೆಯೊಬ್ಬರು ಗಾಯಗೊಂಡಿದ್ದಾರೆ ಎಂದು ಅಬುಧಾಬಿ ಮಾಧ್ಯಮ ಕಚೇರಿ ಸೋಮವಾರ ತಿಳಿಸಿದೆ. ಈ ಘಟನೆ ಅಬುಧಾಬಿಯ ಅಲ್ ಶವಾಮೆಖ್ ಪ್ರದೇಶದಲ್ಲಿ ನಡೆದಿದೆ. ಈ ಕುರಿತು ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಅಬುಧಾಬಿ ಮಾಧ್ಯಮ ಕಚೇರಿ, ವಾಯು ರಕ್ಷಣಾ ವ್ಯವಸ್ಥೆಗಳು ಬ್ಯಾಲಿಸ್ಟಿಕ್ ಕ್ಷಿಪಣಿಯನ್ನು ಯಶಸ್ವಿಯಾಗಿ ತಡೆದ ನಂತರ ಅಲ್ ಶವಾಮೇಖ್ ಪ್ರದೇಶದಲ್ಲಿ ಅವಶೇಷಗಳು ಬಿದ್ದು ಭಾರತೀಯ ಪ್ರಜೆಯೊಬ್ಬರಿಗೆ ಸಣ್ಣಪುಟ್ಟ ಗಾಯವಾಗಿದೆ. ಸಾರ್ವಜನಿಕರು ಅಧಿಕೃತ ಮೂಲಗಳಿಂದ ಮಾತ್ರ ಮಾಹಿತಿಯನ್ನು ಪಡೆಯಬೇಕು. ವದಂತಿ ಅಥವಾ ಪರಿಶೀಲಿಸದ ಮಾಹಿತಿಯನ್ನು ಹರಡುವುದನ್ನು ತಪ್ಪಿಸಬೇಕು ಎಂದು ಹೇಳಿದೆ. ಮಧ್ಯಪ್ರಾಚ್ಯ ಸಂಘರ್ಷ ಮುಂದುವರಿದಿರುವ ಮಧ್ಯೆ 25 ಯುಎವಿಗಳು, 4 ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಹೊಡೆದುರುಳಿಸಿರುವುದಾಗಿ ಯುನೈಟೆಡ್ ಅರಬ್ ಎಮಿರೇಟ್ಸ್(ಯುಎಇ) ರವಿವಾರ ತಿಳಿಸಿತ್ತು.
ಬೆಂಗಳೂರು: ಆರ್ಥಿಕವಾಗಿ ಹಿಂದುಳಿದ ಹಾಗೂ ದುರ್ಬಲ ವರ್ಗದ ಕುಟುಂಬಗಳಿಗೊಂದು ಮಹತ್ವದ ಹಾಗೂ ಸಿಹಿಸುದ್ದಿ. 2026-27ನೇ ಶೈಕ್ಷಣಿಕ ಸಾಲಿನ ಶಿಕ್ಷಣ ಹಕ್ಕು ಕಾಯ್ದೆ (ಆರ್ಟಿಇ - RTE) ಅಡಿ ಖಾಸಗಿ ಅನುದಾನ ರಹಿತ ಶಾಲೆಗಳಲ್ಲಿ ಶೇ. 25ರಷ್ಟು ಉಚಿತ ಸೀಟು ಪಡೆಯಲು ಪ್ರವೇಶಾತಿ ಪ್ರಕ್ರಿಯೆಯು ಇದೇ ಏಪ್ರಿಲ್ 9, 2026 ರಿಂದ ಅಧಿಕೃತವಾಗಿ ಆರಂಭವಾಗಲಿದೆ. ತಮ್ಮ ಮಕ್ಕಳನ್ನು ಪ್ರತಿಷ್ಠಿತ
ಹುಬ್ಬಳ್ಳಿ ಧಾರವಾಡ : ಹೊಸೂರು ಫಲಾನುಭವಿಗಳಿಗೆ ಇನ್ನೂ ಸಿಗದ ಮನೆ ಭಾಗ್ಯ
ಹೊಸೂರಿನ ವಸತಿ ಸಮುಚ್ಛಯದ ಮನೆಗಳ ಹಸ್ತಾಂತರ ಪ್ರಕ್ರಿಯೆಯು ದಸರಾ, ಸಂಕ್ರಾಂತಿ ಮತ್ತು ಯುಗಾದಿಯಂತಹ ಪ್ರಮುಖ ಹಬ್ಬಗಳು ಕಳೆದರೂ ಪೂರ್ಣಗೊಳ್ಳದೆ ವಿಳಂಬವಾಗುತ್ತಿದೆ. ಪ್ರತಿ ಹಬ್ಬದ ಸಂದರ್ಭದಲ್ಲೂ ಮನೆಗಳನ್ನು ಹಸ್ತಾಂತರಿಸುವ ಭರವಸೆ ನೀಡಲಾಗುತ್ತಿದ್ದರೂ, ಫಲಾನುಭವಿಗಳಿಗೆ ಮಾತ್ರ ಇನ್ನೂ ಆ ಭಾಗ್ಯ ಸಿಕ್ಕಿಲ್ಲ. ಈ ನಿರಂತರ ವಿಳಂಬದಿಂದಾಗಿ ಮನೆಗಳ ಹಸ್ತಾಂತರಕ್ಕೆ ಎದುರಾಗಿರುವ ತಾಂತ್ರಿಕ ಅಥವಾ ಆಡಳಿತಾತ್ಮಕ ಅಡೆತಡೆಗಳೇನು ಎಂಬ ಗೊಂದಲ ಮತ್ತು ಆತಂಕ ಫಲಾನುಭವಿಗಳಲ್ಲಿ ಮನೆಮಾಡಿದೆ.
ಶಾಮನೂರು ಕುಟುಂಬದ ಎದುರು ಹೀನಾಯ ಸೋತ ಕಾಂಗ್ರೆಸ್
ದಾವಣಗೆರೆ ದಕ್ಷಿಣ ವಿಧಾನಸಭಾ ಉಪಚುನಾವಣೆಯ ಫಲಿತಾಂಶ ಪ್ರಕಟವಾಗಿದೆ. ಶಾಮನೂರು ಕುಟುಂಬದ ಎದುರು ಕಾಂಗ್ರೆಸ್ ಹೀನಾಯವಾಗಿ ಪರಾಭವಗೊಂಡಿದೆ. ಎಂದಿನಂತೆ ಅಥವಾ ಬೇರೆ ಕಡೆಯಂತೆ ಸ್ವತಃ ಕಾಂಗ್ರೆಸ್ ನಾಯಕರೇ ಕಾಂಗ್ರೆಸ್ ಪಕ್ಷವನ್ನು ಶಾಮನೂರು ಕುಟುಂಬದ ಎದುರು ಮಂಡಿಯೂರುವಂತೆ ಮಾಡಿದ್ದಾರೆ. ಗೆದ್ದ ಶಾಮನೂರು ಕುಟುಂಬದ್ದು ಯೋಜಿತ ಕಾರ್ಯತಂತ್ರ ಮತ್ತು ದರ್ಪದ ವರ್ತನೆ. ಸೋತ ಕಾಂಗ್ರೆಸ್ನದು ಮತ್ತು ಸೋಲಿಸಿದ ಕಾಂಗ್ರೆಸ್ ನಾಯಕರದ್ದು ಬೇಜವಾಬ್ದಾರಿತನದ ಪರಮಾವಧಿ. ಸೋತವರ ಬಗ್ಗೆ ಕನಿಕರ ಇರಬೇಕು; ಹಾಗಾಗಿ ಮೊದಲು ಸೋತ ಕಾಂಗ್ರೆಸ್ ಬಗ್ಗೆ ಹಾಗೂ ಸೋಲಿಸಿದ ಕಾಂಗ್ರೆಸ್ ನಾಯಕರ ಬಗ್ಗೆ ನೋಡೋಣ. ಈ ಉಪಚುನಾವಣೆ ಸೋತಿದ್ದರೆ ಸರಕಾರ ಪತನವಾಗುತ್ತಿತ್ತೆ? ಸಿದ್ದರಾಮಯ್ಯ ಈ ಕಾರಣಕ್ಕೆ ಕುರ್ಚಿ ಕಳೆದುಕೊಳ್ಳುತ್ತಿದ್ದರೆ? ಅಥವಾ ಈ ಗೆಲುವಿನ ಕಾರಣಕ್ಕೆ ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿಯಾಗುತ್ತಿದ್ದರೆ? ಈ ಯಾವ ಪ್ರಶ್ನೆಗಳಿಗೂ ಯಾರೊಬ್ಬರೂ ‘ಹೌದು’ ಎಂದು ಉತ್ತರ ಕೊಡಲಾರರು. ಆದರೂ ಏಕೆ ಕಾಂಗ್ರೆಸ್ ಪ್ರಯೋಗಕ್ಕೆ ಮುಂದಾಗಲಿಲ್ಲ? ಮುಸ್ಲಿಮರೇ ಹೆಚ್ಚು ಮತದಾರರಿರುವ ಕ್ಷೇತ್ರದಲ್ಲಿ ಮುಸ್ಲಿಮರಿಗೆ ಏಕೆ ಟಿಕೆಟ್ ನೀಡಲಿಲ್ಲ? ತನ್ನ ಸಾಂಪ್ರದಾಯಿಕ ಮತಗಳ ಬಗ್ಗೆ ಕಾಂಗ್ರೆಸ್ಗೆ ಏಕೆ ನಂಬಿಕೆ ಇಲ್ಲ? ಮುಸ್ಲಿಮರ ಮತವನ್ನು ಬೇರೆ ಅಭ್ಯರ್ಥಿಗಳಿಗೆ ಹಾಕಿಸುವ ನಾಯಕರಿಗೆ ಬೇರೆಯವರ ಮತಗಳನ್ನು ಮುಸ್ಲಿಮ್ ಅಭ್ಯರ್ಥಿಗೆ ಹಾಕಿಸಲು ಏಕೆ ಸಾಧ್ಯವಿಲ್ಲ? ಮೃತಪಟ್ಟವರ ಕುಟುಂಬಗಳಿಗೆ ಟಿಕೆಟ್ ಕೊಡುವುದು ವಾಡಿಕೆ, ಚುನಾವಣೆ ಸೋತರೆ ಸರಕಾರದ ವರ್ಚಸ್ಸಿಗೆ ಧಕ್ಕೆಯಾಗುತ್ತದೆ ಎಂಬ ಸಬೂಬುಗಳನ್ನು ಹೇಳಿ ಅಲ್ಪಸಂಖ್ಯಾತ ನಾಯಕರ ಬಾಯಿ ಮುಚ್ಚಿಸ ಲಾಗಿದೆ. 2019ರಲ್ಲಿ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಿಂದ (ಸಾರ್ವತ್ರಿಕ ಚುನಾವಣೆಯಲ್ಲಿ) ಅನಂತಕುಮಾರ್ ಮಡದಿ ತೇಜಸ್ವಿನಿಗೆ ಟಿಕೆಟ್ ಕೊಡಬೇಕು ಎಂಬ ಒತ್ತಡವಿತ್ತು. ಆದರೂ ಬಿಜೆಪಿ ಪ್ರಯೋಗ ಮಾಡಿ ಯಶಸ್ವಿಯಾಯಿತು. ಇದು ಕಾಂಗ್ರೆಸ್ನಲ್ಲಿ ಏಕೆ ಸಾಧ್ಯವಾಗಲ್ಲ? ವರ್ಚಸ್ಸಿನ ವಿಷಯಕ್ಕೆ ಬರುವುದಾದರೆ ಸರಕಾರಕ್ಕೆ ವರ್ಚಸ್ಸು ಹೆಚ್ಚಿಸಿಕೊಳ್ಳಲು ನೂರು ದಾರಿಗಳಿವೆ. ಈಗ ಸರಕಾರ ವರ್ಚಸ್ಸು ಕಳೆದುಕೊಳ್ಳುತ್ತಿರುವುದಕ್ಕೂ ಸಾವಿರ ಕಾರಣಗಳಿವೆ. ‘ವಾಡಿಕೆ-ವರ್ಚಸ್ಸು’ ಎನ್ನುವವು ಶಾಮನೂರು ಕುಟುಂಬಕ್ಕೆ ಟಿಕೆಟ್ ಕೊಡಲು ರಾಜ್ಯ ಕಾಂಗ್ರೆಸ್ ನಾಯಕರು ಹುಡುಕಿಕೊಂಡ ನೆಪಗಳಷ್ಟೇ. ಕಾಂಗ್ರೆಸ್ ಪಕ್ಷವನ್ನು ಸೋಲಿಸಿದವರ ಪೈಕಿ ಮೊದಲಿಗರು ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್. ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಇವರಿಬ್ಬರೇ ನಿರ್ಣಾಯಕರಾಗಿದ್ದರು. ಇಬ್ಬರೂ ಜೊತೆಯಾಗಿ ದಾವಣಗೆರೆಯಲ್ಲಿ ಅಲ್ಪಸಂಖ್ಯಾತರಿಗೆ ಅವಕಾಶ ಕೊಡೋಣ ಎಂದು ನಿರ್ಧರಿಸಿದ್ದರೆ ಹೈಕಮಾಂಡ್ ಕೂಡ ತಗಾದೆ ತೆಗೆಯುತ್ತಿರಲಿಲ್ಲ. ಆದರೆ ಒಬ್ಬರಿಗೆ ಸಚಿವರನ್ನು ತಮ್ಮತ್ತ ಉಳಿಸಿಕೊಳ್ಳುವ ಉದ್ದೇಶ. ಇನ್ನೊಬ್ಬರಿಗೆ ಸಚಿವರನ್ನು ತಮ್ಮತ್ತ ಸೆಳೆದುಕೊಳ್ಳುವ ತವಕ. ಇವರ ಆಶೋತ್ತರಗಳಿಗೆ ಸತ್ತದ್ದು ಅಲ್ಪಸಂಖ್ಯಾತರಿಗಿದ್ದ ಅಪರೂಪದ ಅವಕಾಶ. ನಂತರದ ಸರದಿ ಮಲ್ಲಿಕಾರ್ಜುನ ಖರ್ಗೆ ಅವರದು. ಅವರಾದರೂ ರಾಜ್ಯ ನಾಯಕರಿಗೆ ತಿಳಿ ಹೇಳಬಹುದಿತ್ತು. ಆದರೆ ನಿಯೋಗವೊಂದು ಅವರ ಬಳಿ ಹೋಗಿ ಮುಸ್ಲಿಮರಿಗೆ ಟಿಕೆಟ್ ಕೊಡಿ ಎಂದು ಕೇಳಿಕೊಂಡಾಗ ಜಾಣತನದಿಂದ ನುಣುಚಿಕೊಂಡಿದ್ದಾರೆ. ಒಳಮೀಸಲಾತಿ ವಿಷಯದಲ್ಲಿ ಮಾತನಾಡಿದಂತೆ ‘ಸಿದ್ದರಾಮಯ್ಯ ಬಳಿ ಹೋಗಿ ಕೇಳಿ’ ಎಂದು ಹೇಳಿ ಕೈತೊಳೆದುಕೊಂಡಿದ್ದಾರೆ. ವಾಸ್ತವವಾಗಿ ಮಲ್ಲಿಕಾರ್ಜುನ ಖರ್ಗೆ ಮತ್ತು ಶಾಮನೂರು ಶಿವಶಂಕರಪ್ಪ ಗಳಸ್ಯ ಕಂಠಸ್ಯ ಗೆಳೆಯರು. ಸ್ನೇಹಿತನ ಮೊಮ್ಮಗನಿಗೆ ಟಿಕೆಟ್ ನಿರಾಕರಿಸಲು ಅವರಿಂದ ಸಾಧ್ಯವಾಗಿಲ್ಲ. ಗೆದ್ದ ಶಾಮನೂರು ಕುಟುಂಬದ್ದು ಯೋಜಿತ ಕಾರ್ಯತಂತ್ರ. ಶಾಮನೂರು ಶಿವಶಂಕರಪ್ಪ ತೀರಿಕೊಂಡಾಗಲೇ ಅವರ ಕುಟುಂಬ ಸಮರ್ಥ್ ಉತ್ತರಾಧಿಕಾರಿ ಎಂದು ನಿರ್ಧರಿಸಿತ್ತು. ಈ ಮಾತಿಗೆ ಪುರಾವೆಗಳನ್ನು ಬಯಸುವವರು ಶಾಮನೂರು ಶಿವಶಂಕರಪ್ಪ ನೆನಪಿನ ಕಾರ್ಯಕ್ರಮವನ್ನು ನೆನಪಿಸಿಕೊಳ್ಳಬೇಕು. ಅದು ಶಾಮನೂರರನ್ನು ನೆನಪಿಸಿಕೊಳ್ಳಲು ಎನ್ನುವುದಕ್ಕಿಂತ ಮಿಗಿಲಾಗಿ ಸಾರ್ವಜನಿಕ ಜೀವನಕ್ಕೆ ಸಮರ್ಥ್ ಎಂಬ ಕುಡಿಯನ್ನು ಪರಿಚಯಿಸಲು ಆಯೋಜಿಸಿದ ಕಾರ್ಯಕ್ರಮದಂತಿತ್ತು. ಈ ಉದ್ದೇಶ ಇಲ್ಲದಿದ್ದರೆ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಮತ್ತಿತರರಿಗೆ ಸಮರ್ಥ್ ಕೈಯಿಂದ ಸನ್ಮಾನ ಮಾಡಿಸುವ ಜರೂರತ್ತು ಏನಿತ್ತು? ಅಲ್ಲಿಂದ ಶುರುವಾಗಿ ಸಮರ್ಥ್ ದಾವಣಗೆರೆ ಬೆಣ್ಣೆ ದೋಸೆ ಉಯ್ಯುವವರೆಗೆ ಪ್ರಚಾರ ನಡೆದಿತ್ತು. ಮುಂದಿನ ಹಂತ ಟಿಕೆಟ್ ಘೋಷಣೆಗೂ ಮುನ್ನವೇ ಸಮರ್ಥ್ ನಾಮಪತ್ರ ಸಲ್ಲಿಸಿದ್ದು. ಇದು ಕೂಡ ಟಿಕೆಟ್ ಸಿಗುತ್ತೆ ಎನ್ನುವ ವಿಶ್ವಾಸಕ್ಕಿಂತ ಹೆಚ್ಚಾಗಿ ‘ನಮಗಲ್ಲದೆ ಬೇರಾರಿಗೆ ಟಿಕೆಟ್ ಕೊಡಲು ಸಾಧ್ಯ?’ ಎಂದು ಸವಾಲೆಸೆದಂತಿತ್ತು. ನಮಗೇ ಟಿಕೆಟ್ ಕೊಡಬೇಕೆಂದು ಒತ್ತಡ ಹೇರಲು ಅನುಸರಿಸಿದ ತಂತ್ರಗಾರಿಕೆಯಾಗಿತ್ತು. ಅದು ಬ್ಲ್ಯಾಕ್ಮೇಲ್ ಎನ್ನುವುದಕ್ಕೆ ನಾಮಪತ್ರ ಸಲ್ಲಿಕೆ ಸಂದರ್ಭದಲ್ಲಿ ಪತ್ರಕರ್ತರಿಗೆ ಸಮರ್ಥ್ ಕೇಳಿದ ಪ್ರಶ್ನೆಗಳಲ್ಲಿ ಪುರಾವೆಗಳು ಸಿಗುತ್ತವೆ. ಪತ್ರಕರ್ತರು ‘ಸ್ವತಂತ್ರ ಅಭ್ಯರ್ಥಿ ಅಥವಾ ಕಾಂಗ್ರೆಸ್?’ ಎಂದು ಇನ್ನೂ ಪ್ರಶ್ನೆಯನ್ನೇ ಪೂರ್ತಿ ಮಾಡಿರಲಿಲ್ಲ. ಅಷ್ಟರಲ್ಲೇ ‘ಎಂಥಾ ಪ್ರಶ್ನೆ ಕೇಳ್ತೀರಿ? ಶಾಮನೂರು ಶಿವಶಂಕರಪ್ಪ ಬಗ್ಗೆ ಓದಿದ್ದೀರಾ? ಮಧ್ಯ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷವನ್ನು ಕಟ್ಟಿರುವವರು ಅವರೇ’ ಎಂದು ದಬಾಯಿಸಿದರು. ಶಾಮನೂರು ಕುಟುಂಬದ ಇಂಥ ದಬ್ಬಾಳಿಕೆಗೆ ದಶಕಗಳ ಇತಿಹಾಸವಿದೆ. ಸಂಪುಟ ಪುನರ್ ರಚನೆ ವೇಳೆ ನಿಮ್ಮನ್ನು ಕೈಬಿಡಲಾಗುತ್ತದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ್ದ ಶಾಮನೂರು ಶಿವಶಂಕರಪ್ಪ ‘ನನ್ನ ಹತ್ತಿರ ಸರಕಾರಿ ಕಾರಿಗಿಂತ ಒಳ್ಳೆಯ ಕಾರುಗಳಿವೆ’ ಎಂಬ ಉದ್ದಟತನದ ಉತ್ತರ ನೀಡಿದ್ದರು. ಗೂಟದ ಕಾರಿಗಾಗಿ ಗೋಗರೆದು ಮಂತ್ರಿಯಾಗಿದ್ದನ್ನು ಮರೆತಿದ್ದರು. ಇನ್ನೊಮ್ಮೆ ಬಿಜೆಪಿಯ ಯಡಿಯೂರಪ್ಪ ಗೆಲ್ಲಬೇಕು ಎಂದು ಕರೆಕೊಟ್ಟು ಪಕ್ಷದ ಶಿಸ್ತನ್ನು ಖುಲ್ಲಂಖುಲ್ಲಾ ಉಲ್ಲಂಘನೆ ಮಾಡಿದ್ದರು. ಕಾಂಗ್ರೆಸ್ ಚಿಹ್ನೆಯಿಂದ ಗೆದ್ದು ಬರುತ್ತಿದ್ದ ಅವರು ಪಕ್ಷದ ಪ್ರಣಾಳಿಕೆಯಲ್ಲಿದ್ದ ಜಾತಿಗಣತಿಯನ್ನು ವಿರೋಧಿಸಿದರು. ಒಕ್ಕಲಿಗ ಮತ್ತು ಲಿಂಗಾಯತರನ್ನು ಎದುರು ಹಾಕಿಕೊಂಡರೆ ರಾಜ್ಯಭಾರ ಮಾಡಲು ಸಾಧ್ಯವೇ? ಎಂದು ಬ್ಲ್ಯಾಕ್ಮೇಲ್ ಮಾಡಿದ್ದರು. ಶಾಮನೂರು ಶಿವಶಂಕರಪ್ಪ ದರ್ಪದ ಪ್ರತಿಬಿಂಬಗಳು ಪುತ್ರ ಎಸ್.ಎಸ್. ಮಲ್ಲಿಕಾರ್ಜನ್ ಅವರಲ್ಲೂ ಕಾಣಸಿಗುತ್ತವೆ. ಮಲ್ಲಿಕಾರ್ಜುನ್ ಇತ್ತೀಚೆಗೆ ‘ತಮ್ಮ ಮಗನಿಗೆ ಟಿಕೆಟ್ ಕೊಡದಿದ್ದರೆ ರಾಜೀನಾಮೆ ಕೊಡುತ್ತೇನೆ’ ಎಂದು ಬೆದರಿಕೆ ಹಾಕಿದ್ದರು. ಆದರೆ ಆ ಕೆಲಸವನ್ನು ನಾಜೂಕಾಗಿ ಮಾಡಿದರು. ಬಹಿರಂಗವಾಗಿ ಹೇಳಿದ್ದರೆ ಮಾಧ್ಯಮದಲ್ಲಿ ಸುದ್ದಿಯಾಗುತ್ತಿತ್ತು, ಪಕ್ಷಕ್ಕೆ ಮುಜುಗರವಾಗುತ್ತಿತ್ತು, ಅದು ಅವರಿಗೂ ಕಂಟಕವಾಗುತ್ತಿತ್ತು. ಅದಕ್ಕೋಸ್ಕರ ‘ಟಿಕೆಟ್ ಸಿಗದಿದ್ದರೆ ರಾಜೀನಾಮೆ ಕೊಡಲಿದ್ದಾರಂತೆ’ ಎಂಬ ಸುದ್ದಿಯನ್ನು ಹರಿಬಿಟ್ಟರು. ಇದು ಅವರ ಬ್ಲ್ಯಾಕ್ಮೇಲ್ ತಂತ್ರಗಾರಿಕೆಗೆ ಸಿಗುವ ಇನ್ನೊಂದು ಉದಾಹರಣೆ. ಮೊದಲನೆಯದು ಟಿಕೆಟ್ ಘೋಷಣೆಗೂ ಮುನ್ನವೇ ನಾಮಪತ್ರ ಸಲ್ಲಿಸಿದ ಪ್ರಹಸನ. ಮೂರನೆಯದು ದಾವಣಗೆರೆಯಲ್ಲಿ ಟಿಕೆಟ್ ಕೇಳಲು ಝಮೀರ್ ಅಹಮದ್ ಖಾನ್ ಯಾರು? ಎಂದು ಧಮಕಿ ಹಾಕಿದ್ದು. ತಾನು ಶಾಮನೂರು ಶಿವಶಂಕರಪ್ಪ ಮತ್ತು ಎಸ್.ಎಸ್. ಮಲ್ಲಿಕಾರ್ಜನ್ ಅವರ ಪ್ರತಿನಿಧಿ ಎನ್ನುವುದನ್ನು ಸಮರ್ಥ್ ಪತ್ರಕರ್ತರಿಗೆ ಧಮಕಿ ಹಾಕುವ ಮೂಲಕ ಸಾಬೀತು ಮಾಡಿದ್ದಾರೆ. ಅಧಿಕಾರ ಮತ್ತು ಹಣ ಜೊತೆಯಾದರೆ ಹೀಗಾಗುತ್ತದೆ. ಏನು ಬೇಕಾದರೂ ಮಾಡಿ ಜಯಿಸಿಕೊಳ್ಳಬಹುದು, ಏನನ್ನು ಮಾತನಾಡಿಯೂ ಅರಗಿಸಿಕೊಳ್ಳಬಹುದು ಎಂಬ ಯಜಮಾನಿಕೆಯ ನಡೆ ನೂರ್ಮಡಿ ಆಗುತ್ತದೆ. ಅದನ್ನು ಬಹಳ ಹಿಂದೆಯೇ ದೇವರಾಜ ಅರಸು ಅಂದಾಜು ಮಾಡಿದ್ದರು. ನಿಜವಾದ ಅರಸು ಭವಿಷ್ಯ! ಆಗ ಶಾಮನೂರು ಶಿವಶಂಕರಪ್ಪ ದುಡ್ಡಿನ ಕುಳ ಅಷ್ಟೇ. ರಾಜಕಾರಣದಲ್ಲಿ ಏನೂ ಆಗಿರಲಿಲ್ಲ. ಏನಾದರೂ ಆಗಬೇಕೆಂದು ಹಾತೊರೆಯುತ್ತಿದ್ದರು. ಒಮ್ಮೆ ಎಚ್ ವಿಶ್ವನಾಥ್ ಬಳಿ ‘ನನ್ನನ್ನು ದೇವರಾಜ ಅರಸು ಅವರಿಗೆ ಪರಿಚಯಿಸು, ನನಗೆ ಟಿಕೆಟ್ ಕೊಡಲು ಹೇಳು, ಎಷ್ಟೇ ಖರ್ಚಾದರೂ ಸರಿ ಗೆದ್ದು ಬರುತ್ತೇನೆ’ ಎಂದು ದುಂಬಾಲು ಬಿದ್ದಿದ್ದರು. ವಿಶ್ವನಾಥ್ ಮೈಸೂರಿನ ಕಡೆಯವರಾಗಿದ್ದ ಕಾರಣಕ್ಕೆ ಅರಸುಗೆ ಸ್ವಲ್ಪ ಹತ್ತಿರ ಇದ್ದರೆಂದು ವಿಶ್ವನಾಥ್ ಅವರ ಬೆನ್ನುಹತ್ತಿದ್ದರು. ಕಾಟ ತಾಳಲಾರದೆ ವಿಶ್ವನಾಥ್ ಒಮ್ಮೆ ಶಾಮನೂರರನ್ನು ದೇವರಾಜ ಅರಸು ಅವರಿದ್ದ ಬಾಲಬ್ರೂಯಿ ಅತಿಥಿಗೃಹಕ್ಕೆ ಕರೆದ್ಯೊಯ್ದಿದ್ದಾರೆ. ಅರಸು ಬಳಿ ‘ಇವರು (ಶಾಮನೂರು) ತುಂಬಾ ಶ್ರೀಮಂತರು, ಟಿಕೆಟ್ ಕೊಟ್ಟರೆ ಗೆದ್ದು ಬರುತ್ತಾರೆ’ ಎಂದು ವಿಶ್ವನಾಥ್ ವಿಷಯ ಪ್ರಸ್ತಾಪಿಸಿದ್ದಾರೆ. ‘ನೋಡೋಣ’ ಎಂದು ಇಬ್ಬರನ್ನು ಕಳುಹಿಸಿಕೊಟ್ಟ ಅರಸು ಗೇಟಿಗೆ ಫೋನ್ ಮಾಡಿ ವಿಶ್ವನಾಥ್ ಒಬ್ಬರನ್ನೇ ಮತ್ತೆ ಒಳಗೆ ಕಳಿಸುವಂತೆ ತಿಳಿಸಿದ್ದಾರೆ. ಒಳಗೆ ಹೋದ ವಿಶ್ವನಾಥ್ ಅವರಿಗೆ ‘ನಿನ್ನ ಸ್ನೇಹಿತರ ವ್ಯಾಪಾರ-ವ್ಯವಹಾರಕ್ಕೆ ಎಷ್ಟು ಬೇಕಾದರೂ ಸಹಾಯ ಮಾಡು, ನೀನೂ ಸಹಾಯ ತೆಗೆದುಕೋ, ಆದರೆ ಹಣವಂತರು ರಾಜಕೀಯಕ್ಕೆ ಬರುವುದು ಬೇಡ, ಹಣ ಮತ್ತು ಅಧಿಕಾರ ಒಂದಾದರೆ ನಿನ್ನಂಥವರು ರಾಜಕಾರಣ ಮಾಡಲು ಸಾಧ್ಯವಿಲ್ಲ’ ಎಂದಿದ್ದರಂತೆ. ಅರಸು ಮಾತು ನಿಜವಾಗಿದೆ. ಸಮರ್ಥ್ ಅಂಥವರಿಗೆ ಟಿಕೆಟ್ ಸಿಗುತ್ತದೆ. ಬಡವರ ಮಕ್ಕಳು ಬೆಳೆಯಲು ಸಾಧ್ಯವೇ? ತುರ್ತಾಗಿ ಕಾಂಗ್ರೆಸ್ ಸೋಲಬೇಕಾಗಿದೆ! ಶಾಮನೂರು ಕುಟುಂಬ ಕಾಂಗ್ರೆಸ್ ಪಕ್ಷಕ್ಕೆ ಬ್ಲ್ಯಾಕ್ಮೇಲ್ ಮಾಡಿ ಟಿಕೆಟ್ ತೆಗೆದುಕೊಂಡಿದೆ. ಎಸ್.ಎಸ್. ಮಲ್ಲಿಕಾರ್ಜುನ್, ‘ಶ್ರೀನಿವಾಸ್ (ಬಿಜೆಪಿ ಅಭ್ಯರ್ಥಿ) ನನ್ನ ಸ್ನೇಹಿತ, ನಗುನಗುತ್ತಾ ಚುನಾವಣೆ ಮಾಡೋಣ’ ಎಂದಿದ್ದಾರೆ. ಪಕ್ಷೇತರನಾಗಿ ಕಣಕ್ಕಿಳಿಯುವೆ ಎಂದು ಅಬ್ಬರಿಸಿದ್ದ ವಿನಯ್ ಕುಮಾರ್ ತಣ್ಣಗಾಗಿದ್ದಾರೆ. ಬಿಜೆಪಿ ಆಶ್ಚರ್ಯಕರವಾಗಿ ಪರಿಶಿಷ್ಟ ಪಂಗಡಕ್ಕೆ ಮಣೆಹಾಕಿದೆ. ಈ ಎಲ್ಲಾ ಬೆಳವಣಿಗೆಗಳನ್ನು ನೋಡಿದರೆ ಹೊಂದಾಣಿಕೆಯಿಂದ ಸಮರ್ಥ್ ಗೆಲ್ಲಬಹುದು. ಆದರೆ ಅರಸು ಹೇಳಿದಂತೆ ಕೆಲವೊಮ್ಮೆ ಅಜ್ಞಾತ ಮತದಾರರು ತಕ್ಕ ಪಾಠ ಕಳಿಸುತ್ತಾರೆ. ಉದಾಹರಣೆಗೆ ಜಾತಿ, ಎಚ್.ಡಿ. ದೇವೇಗೌಡ, ಎಚ್.ಡಿ. ಕುಮಾರಸ್ವಾಮಿ, ಮಂತ್ರಿವರ್ಯರು, ಹಣದ ಹೊಳೆ ಎಲ್ಲಾ ಜೊತೆಯಾಗಿ ಕೆಲಸ ಮಾಡಿದರೂ ಮಂಡ್ಯದ ಜನ ನಿಖಿಲ್ ಕುಮಾರಸ್ವಾಮಿಯನ್ನು ಗೆಲ್ಲಿಸಲಿಲ್ಲ. ಮಂಡ್ಯದವರಂತೆ ದಾವಣಗೆರೆ ದಕ್ಷಿಣದ ಮತದಾರರು ಮನಸ್ಸು ಮಾಡಿದರೆ ಬ್ಲ್ಯಾಕ್ಮೇಲ್ ಮೂಲಕ ಟಿಕೆಟ್ ಪಡೆಯುವವರಿಗೆ, ಹೊಂದಾಣಿಕೆಯಿಂದ ಗೆಲ್ಲುತ್ತೇವೆ ಎಂದುಕೊಂಡಿರುವವರಿಗೆ, ನಮ್ಮ ಮನೆಯ ಯುವಕರು ಮಾತ್ರ ರಾಜಕಾರಣಕ್ಕೆ ಬರಬೇಕು ಎಂದುಕೊಂಡವರಿಗೆ ಬುದ್ಧಿ ಕಲಿಸಬಹುದು. ಮೇಲಾಗಿ ಅರ್ಜೆಂಟಾಗಿ ಕಾಂಗ್ರೆಸ್ ಪಕ್ಷಕ್ಕೆ ಒಂದು ಸೋಲು ಬೇಕಾಗಿದೆ. ಸೋಮಾರಿತನದಿಂದ ಹೊಸತನಕ್ಕೆ ಒಗ್ಗಿಕೊಳ್ಳಲೊಲ್ಲದ, ಹೊಸಬರಿಗೆ ಅವಕಾಶ ಕೊಡದ, ಅಧಿಕಾರದ ಅಂಧಕಾರದಲ್ಲಿ ಮುಳುಗಿದ ಕಾಂಗ್ರೆಸ್ ಪಕ್ಷದ ಕಣ್ಣು ತೆರೆಸಲು ಸೋಲಿನಿಂದ ಮಾತ್ರ ಸಾಧ್ಯ. ಆಫ್ ದಿ ರೆಕಾರ್ಡ್! ದಾವಣಗೆರೆ ದಕ್ಷಿಣದಲ್ಲಿ ಗೆಲ್ಲುವುದು ಗ್ಯಾರಂಟಿ ಎನ್ನುವ ವಾತಾವರಣ ಇದ್ದರೆ ಬಿಜೆಪಿ ಪರಿಶಿಷ್ಟ ಪಂಗಡಕ್ಕೆ ಟಿಕೆಟ್ ಕೊಡುತ್ತಿತ್ತಾ? ಬಿಜೆಪಿಯಲ್ಲಿರುವ ಪ್ರಬಲ ಸಮುದಾಯದ ನಾಯಕರು ಕ್ಷೇತ್ರವನ್ನು ಸುಲಭದಲ್ಲಿ ಬಿಟ್ಟುಕೊಡುತ್ತಿದ್ದಾರಾ?
ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆ : ಸ್ಪರ್ಧಿಸದಿರಲು ಎಐಎಂಐಎಂ ನಿರ್ಧಾರ
ದಾವಣಗೆರೆ : ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರಕ್ಕೆ ನಡೆಯುವ ಉಪ ಚುನಾವಣೆಗೆ ಅಸದುದ್ದೀನ್ ಉವೈಸಿ ನೇತೃತ್ವದ ಎಐಎಂಐಎಂ ಸ್ಪರ್ಧಿಸದಿರಲು ನಿರ್ಧರಿಸಿದೆ. ಅಸದುದ್ದೀನ್ ಉವೈಸಿಯವರ ಮಾರ್ಗದರ್ಶನದಂತೆ ಪಕ್ಷದ ರಾಜ್ಯಾಧ್ಯಕ್ಷರು ದಾವಣಗೆರೆ ದಕ್ಷಿಣ ಉಪಚುನಾವಣೆಯಲ್ಲಿ ಸ್ಪರ್ಧಿಸದಂತೆ ಸೂಚಿಸಿದ್ದಾರೆ. ಆದ್ದರಿಂದ ಎಐಎಂಐಎಂ ಈ ಉಪ ಚುನಾವಣೆಗೆ ನಾಮಪತ್ರ ಸಲ್ಲಿಸುವುದಿಲ್ಲ ಎಂದು ಪಕ್ಷದ ದಾವಣಗೆರೆ ಜಿಲ್ಲಾಧ್ಯಕ್ಷ ಮುಹಮ್ಮದ್ ಅಲಿ ಶೊಐಬ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ. ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರಕ್ಕೆ ಎಪ್ರಿಲ್ 9ರಂದು ಉಪ ಚುನಾವಣೆ ನಡೆಯಲಿದೆ.
Explained: ಹಾರ್ಮುಜ್ ಜಲಸಂಧಿ ದಾಟುವ ಹಡಗುಗಳಿಗೆ 2 ಮಿಲಿಯನ್ ಡಾಲರ್ ಟೋಲ್; ಭಾರತದಿಂದಲೂ ಹಣ ಕೀಳುತ್ತಾ ಇರಾನ್?
ನೀನು ಚಾಪೆ ಕೆಳಗೆ ತೂರಿದರೆ ನಾನು ರಂಗೋಲಿ ಕೆಳಗೆ ತೂರುತ್ತೇನೆ ಎಂಬಂತೆ, ಹಾರ್ಮುಜ್ ಜಲಸಂಧಿ ತೆರೆಯಲು 48 ಗಂಟೆಗಳ ಡೆಡ್ಲೈನ್ ನೀಡಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ, ಇರಾನ್ ಮತ್ತೊಂದು ಶಾಕ್ ನೀಡಿದೆ. ಹಾರ್ಮುಜ್ ಜಲಸಂಧಿಯನ್ನು ಹಾದುಹೋಗುವ ವಾಣಿಜ್ಯ ಹಡಗುಗಳ ಮೇಲೆ ಇರಾನ್ 2 ಮಿಲಿಯನ್ ಡಾಲರ್ ಟೋಲ್ ವಿಧಿಸಿದೆ. ಅಲ್ಲದೇ ತನ್ನ ವಿದ್ಯುತ್ ಘಟಕಗಳ ಮೇಲೆ ಅಮೆರಿಕ ಮತ್ತು ಇರಾನ್ ದಾಳಿ ಮಾಡಿದರೆ, ಹಾರ್ಮುಜ್ ಜಲಸಂಧಿಯನ್ನೇ ಮುಚ್ಚುವುದಾಗಿ ಇರಾನ್ ಎಚ್ಚರಿಸಿದೆ. ಇದರಿಂದ ಭಾರತದ ಮೇಲಾಗುವ ಪರಿಣಾಮವೇನು? ನೋಡೋಣ ಬನ್ನಿ.
ನೀರಿಲ್ಲದ ಮೇಲೆ ಚಿನ್ನದ ಸೂರಿದ್ದರೇನು ?
ನೀರು... ಈ ಭುವಿಯ ಸಕಲ ಜೀವ ಸಂಕುಲಗಳ ಬದುಕಿನ ಚೇತನಾ ಶಕ್ತಿ, ಆದರೂ ನೀರಿನ ಬಗ್ಗೆ ನಿರಾಸಕ್ತಿ! ನೀರೆಂದರೆ ಕ್ಷುಲ್ಲಕ. ಇನ್ನು ಕೇವಲ 20 ವರುಷದಲ್ಲಿ ಜಗತ್ತಿನ ಕೋಟ್ಯಂತರ ಜನರಿಗೆ ಕುಡಿಯಲು ಶುದ್ಧ ನೀರಿಲ್ಲದೇ ಭೀಕರ ಬರಗಾಲದ ಛಾಯೆ ವಿಶ್ವವನ್ನು ಆವರಿಸುತ್ತಿದೆ. ಈಗಿನ ಯುವ ಸಮೂಹ ಕೋಕಾ ಕೋಲ, ಸ್ಪ್ರೈಟ್ಗೆ ನೀಡುವ ಮಹತ್ವವನ್ನು ನೀರಿಗೆ ಕೊಡುತ್ತಾ ಇಲ್ಲ. ಹಿಂದೊಮ್ಮೆ ಮಾತು ಹೀಗಿತ್ತು, ಮುಂದೆ 3 ನೇ ಮಹಾಯುದ್ಧ ಆದರೆ ಅದು ನೀರಿಗಾಗಿ ಎಂದು?! ಆಗ ಈ ಮಾತಿಗೆ ಗೇಲಿ ಮಾಡಿದವರೂ ಇದ್ದಾರೆ. ಆದರೆ ನೀರಿಗಾಗಿ ಯುದ್ಧ ಅಗೋಚರವಾಗಿ ಬಹಳಷ್ಟು ವರುಷಗಳ ಹಿಂದೆಯೇ ಆರಂಭವಾಗಿ ಬಿಟ್ಟಿದೆ. ಸಿಂಧೂ ನದಿಗೆ ನಮ್ಮ ದೇಶ ಮತ್ತು ಪಾಕಿಸ್ತಾನಕ್ಕೆ, ಅದೇ ರೀತಿ ಬ್ರಹ್ಮ ಪುತ್ರ ನದಿಗೆ ನಮ್ಮ ಮತ್ತು ಚೀನಾ ದೇಶದ ನಡುವೆ ದ್ವೇಷದ ವಿವಾದವಿದೆ. ಕಾವೇರಿ ನದಿಗೆ ಕರ್ನಾಟಕ - ತಮಿಳು ನಾಡು, ಮುನ್ನ ಪೆರಿಯಾರ್ ನದಿಗೆ ಕೇರಳ - ತಮಿಳುನಾಡು, ಮಹಾದಾಯಿ ನದಿಗೆ ಕರ್ನಾಟಕ - ಗೋವಾ, ನರ್ಮದಾ ನದಿಗೆ ಮಹಾರಾಷ್ಟ - ಗುಜರಾತ್, ನಡುವೆ ನದಿ ನೀರಿನ ವ್ಯಾಜ್ಯಗಳಿವೆ. ಪೂಜ್ಯ ಭಾವನೆಯಿಂದ ಗೌರವಿಸಬೇಕಾದ ನದಿಗಳಲ್ಲಿ ವ್ಯಾಜ್ಯ ಹುಟ್ಟಿಸುತ್ತಾ ಇದ್ದೇವೆ ಮತ್ತು ತ್ಯಾಜ್ಯಗಳನ್ನು ಎಸೆದು ಮಲಿನ ಮಾಡುತ್ತಿರುವ ಜನತೆ ಮತ್ತು ರಾಜಕೀಯ ವ್ಯವಸ್ಥೆಗೆ ನದಿಗಳ ಮಹತ್ವ ಮತ್ತು ಅಗತ್ಯಗಳ ಬಗ್ಗೆ ಅರ್ಥವೇ ಆಗುವುದಿಲ್ಲ, ಅರ್ಥ ಆದರೂ ಅರ್ಥ ಆಗದವರಂತೆ ‘ಅರ್ಥ’ ಮಾಡುವವರ ನಡುವೆ ಮೌನವಾಗಿರುವುದೇ ನಮ್ಮ ದೊಡ್ಡ ದುರಂತ!?! ಒಬ್ಬ ವ್ಯಕ್ತಿ ಬೆಳಗ್ಗೆ ಎದ್ದು ಹಲ್ಲುಜ್ಜುವಲ್ಲಿಂದ ರಾತ್ರಿ ಮಲಗುವ ತನಕ 100 ಲೀಟರ್ ನೀರನ್ನು ಬಳಸಿಕೊಳ್ಳುತ್ತಾನೆ. ಈ ಭುವಿಯ ಇಂಗುವ 3 ಪಟ್ಟು ಹೆಚ್ಚು ನೀರನ್ನು ಮನುಜ ಸಾಮ್ರಾಜ್ಯ ಬಳಸಿಕೊಳ್ಳುವುದರಿಂದಲೇ ಇಂದು ನೀರಿನ ಸಮಸ್ಯೆ ಹೆಚ್ಚಾಗುತ್ತಿರುವುದು. ಈಗಿನ ರಾಜಕೀಯದ ನೀರಾತಿoಡಿಡಿಥಿ ವ್ಯವಸ್ಥೆ ಹೇಗಿದೆಯೆಂದರೆ ‘ಅಭಿವೃದ್ಧಿ’ ಎಂಬ ನೆಪದಲ್ಲಿ ಯಾವ ನದಿಯಲ್ಲಿ ಎಷ್ಟು ನೀರಿದೆ? ಯಾವ ನದಿಗೆ ಯಾವ ಯೋಜನೆ ಮಾಡಿದರೆ ಅದರ ಮೂಲ ಸ್ಥಾನಕ್ಕೆ ಯಾವ ರೀತಿಯ ಏಟು ಬೀಳಬಹುದು? ಯಾವ ಅಣೆಕಟ್ಟು ಕಟ್ಟಿದರೆ ನದಿಯ ಜೀವಂತಿಕೆಗೆ ಮಾರಣಾಂತಿಕ ಗಾಯ ಆಗಬಹುದು? ಎಂಬ ಯಾವ ಲೆಕ್ಕಾಚಾರವನ್ನೂ ಇಟ್ಟುಕೊಳ್ಳದೆ ನೀರು ಹರಿಸುತ್ತೇವೆ ಎನ್ನುವುದೇ ಈಗಿನ ನೀರಿನ ಸಮಸ್ಯೆಗಳಿಗೆ ಕಾರಣವಾಗುವುದು. ನಗರಗಳು ಬಹಳ ವೇಗದಿಂದ ಬೆಳೆಯುತ್ತಿವೆ, ನಗರ ಬೆಳೆದಷ್ಟೋ ನೀರಿನ ಬೇಡಿಕೆ ಹೆಚ್ಚಾಗುತ್ತಿದೆ. ಇಲ್ಲಿ ನೀರಿನ ಅಸಮತೋಲನ ಆಗುತ್ತಿರುವುದೆಲ್ಲಿ ಅಂದರೆ ನದಿ ನೀರಿನ ಬೇಡಿಕೆ ಹೆಚ್ಚಾದಂತೆ ನೀರಾವರಿ ಯೋಜನೆ, ಕಾಮಗಾರಿ, ನೀರು ಶೇಖರಣೆ ಹೆಚ್ಚಾಗುತ್ತದೆ. ಆದರೆ ನದಿಗಳ ಮೂಲಸ್ಥಾನಗಳು ವರ್ಷದಿಂದ ವರ್ಷಕ್ಕೆ ಬಡಕಲಾಗುತ್ತಿವೆ, ನೀರಿನ ಹರಿವು ಕಡಿಮೆಯಾಗುತ್ತಿದೆ. ನದಿ ನೀರಿನ ಸೂಕ್ಷ್ಮ ಪ್ರದೇಶಗಳಲ್ಲಿ ಭೂ ಕುಸಿತ, ಮಣ್ಣಿನ ಸವಕಳಿ, ಕಾಡ್ಗಿಚ್ಚು ಗಳಾಗಿ ನದಿ ಮೂಲಕ್ಕೆ ಗೀರು ಗಾಯಗಳಾಗಿ ನದಿಗಳ ಮೆದುಳಿಗೇ ಏಟು ಬೀಳುತ್ತಿವೆ. ವಿದ್ಯುತ್ ಉತ್ಪಾದನೆಗಾಗಿ ನದಿಗಳ ಅಲ್ಲಲ್ಲಿ ಮಿನಿ ಜಲ ವಿದ್ಯುತ್ ಯೋಜನೆಗಳನ್ನು ಮಾಡಿ ಗೀರು ಗಾಯಕ್ಕೆ ಮತ್ತೆ ಗಾಯವಾದಂತಾಯಿತು. ನೀರಾವರಿ ಎಂಬ ‘ಬ್ರಾಂಡ್’ ಲೇಪನದಿಂದ ಕಳೆದ 14 ವರುಷಗಳಿಂದ ಕೇವಲ ಓಟು - ನೋಟು - ಸೀಟು ಎಂಬ ದೃಷ್ಟಿ ಕೋನದಲ್ಲಿ 25 ಸಾವಿರ ಕೋಟಿ ರೂ. ವೆಚ್ಚದ ಎತ್ತಿನಹೊಳೆ ಯೋಜನೆಯನ್ನೇ ಗಮನಿಸಿ. ಕೇವಲ ಯೋಜನೆಯ ಕಾಮಗಾರಿ ಮತ್ತು ಬಜೆಟ್ ನಲ್ಲಿ ದೊಡ್ಡ ಮೊತ್ತದ ಹಣದ ಹರಿವಿಗೆ ಪ್ರಾಧಾನ್ಯತೆ ನೀಡುವುದೇ ಹೊರತು ನೀರಿನ ಹರಿವಿನ ಬಗ್ಗೆ ಯಾವ ಚಿಂತನೆಯನ್ನೇ ಇಟ್ಟುಕೊಳ್ಳದ ನಮ್ಮ ವ್ಯವಸ್ಥೆ ನೀರಾವರಿ ಅಂತ ಹೇಳಿ ಇನ್ನೆಷ್ಟು ನದಿಗಳನ್ನು ಹಂತ, ಹಂತವಾಗಿ ನಿರ್ಜೀವ ಮಾಡಲಿದ್ದಾರೋ? ಇತ್ತ ನೇತ್ರಾವತಿ ನದಿಗೆ ಎತ್ತಿನ ಹೊಳೆ ಯೋಜನೆ ಬಲವಾದ ಏಟು ನೀಡುತ್ತಿದ್ದಂತೆಯೇ ಅತ್ತ ಅಘನಾಷಿನಿ, ಶರಾವತಿ, ಹೇಮಾವತಿ, ಗಂಗಾವಳಿ ಎಲ್ಲಾ ನದಿಗಳೂ ನಮ್ಮ ವ್ಯವಸ್ಥೆಯ ಅಸಂಬದ್ಧ ಯೋಜನೆಗಳಿಗೆ ಬಲಿಪಶು ವಾಗಿ ಕಣ್ಣೀರು ಹಾಕುತ್ತಿದ್ದು ಆ ಕಣ್ಣೀರು ನದಿ ನೀರಿನ ಜೊತೆ ಕಾಣದಂತೆ ಮಾಯವಾಗುತ್ತಿದೆ. ಪಶ್ಚಿಮ ಘಟ್ಟದ ಅತೀ ಸೂಕ್ಷ್ಮ ತಾಣಗಳಾದ ನದಿ ಮೂಲ, ಹುಲ್ಲುಗಾವಲು, ಮಳೆಕಾಡನ್ನು ಸಂರಕ್ಷಣೆ ಮಾಡದೇ ಹೋದರೆ ಮುಂದೊಂದು ದಿನ ನಮ್ಮ ರಾಜ್ಯದ ಬಹುತೇಕ ನದಿಗಳು ಅತ್ತ ಜೀವನೂ ಇರದೇ ಇತ್ತ ಸಾಯಲೂ ಆಗದೇ ಸಂದಿಗ್ಧ ಪರಿಸ್ಥಿತಿಯಲ್ಲಿ ಮೌನವಾದರೆ ಎಂತಹ ಭೀಕರ ಬರಗಾಲದ ದುರಂತವನ್ನು ನಾವು ಅನುಭವಿಸಬೇಕಾಗುತ್ತದೆ. ಇನ್ನು ನದಿಯ ಫಲಾನುಭವಿಗಳಾದ ಜನತೆ ನದಿಯನ್ನು ಕೇವಲ ತುಚ್ಛವಾಗಿ ನೋಡುವುದೆಂದರೆ ನದಿ ಎಷ್ಟು ನೆಮ್ಮದಿಯಾಗಿ ಉಳಿದೀತು? ನದಿಗಳೆಂದರೆ ಕಸದ ತೊಟ್ಟಿ. ತ್ಯಾಜ್ಯ ಎಸೆಯಲು, ಕೊಳಚೆ ನೀರು, ನಗರದ ಚರಂಡಿ ಬಿಡಲು ನದಿಗಳೇ ಬೇಕು ಅದೇ ನದಿಯ ನೀರು ಧಾರ್ಮಿಕ ಶ್ರದ್ಧಾ ಕೇಂದ್ರಗಳಲ್ಲಿ ದೇವರ ಅಭಿಷೇಕ, ತೀರ್ಥಕ್ಕೂ ಉಪಯೋಗವಾಗುವುದು ಎಂದು ಅದೇ ತೀರ್ಥ ಕುಡಿದ ಬುದ್ಧಿವಂತರಿಗೂ ಅರ್ಥವಾಗುವುದಿಲ್ಲ. ಹೋದ ಮಳೆಗಾಲ ಅತೀ ಮಳೆ ಸುರಿದಿದ್ದು ಇಂದಿಗೂ ಮಳೆ ಬರುತ್ತಲೇ ಇದೆ. ಆದರೆ ಇಷ್ಟೆಲ್ಲಾ ಧಾರಾಳ ಮಳೆ ಬಂದಿದ್ದರೂ ಈಗ 40 ಡಿಗ್ರಿಗಿಂತಲೂ ತಾಪ ಹೆಚ್ಚಾಗುತ್ತಾ, ಇಡೀ ದೇಶವೇ ಬರಗಾಲದ ಹೊದಿಕೆಯನ್ನು ಮುಚ್ಚಿ ಕೊಂಡಿದೆ. ಹಾಗಾದರೆ ಇಷ್ಟೆಲ್ಲಾ ಮಳೆಯಾಗಿಯೂ ತಾಪ, ಬರಗಾಲದ ಕೊಡುಗೆ ಪಡೆದ ನಾವು ಮಳೆ ನೀರು ಹರಿದು ಹೋಗುವ ಮತ್ತು ಮಳೆ ನೀರು ಶೇಖರಣೆ (ಅಂತರ್ಜಲ) ಆಗುವ ಪ್ರದೇಶಗಳನ್ನು ಕಾಂಕ್ರಿಟ್, ಕಾಮಗಾರಿ, ಕಡಿತ ಅಂತ ಹೇಳಿ ಕೆಡಿಸಿ ಬಿಟ್ಟಿದ್ದೇವೆ. ನದಿಗಳನ್ನು ಸಂರಕ್ಷಣೆ ಮಾಡುವ ಕಿಂಚಿತ್ ಯೋಚನೆಯಾದರೂ ಉಳಿದರೆ ಮುಂದಿನ ದಿನಗಳಲ್ಲಿ ಅಷ್ಟೊಂದು ಆಗದಿದ್ದರೂ, ಇಷ್ಟೊಂದು ಆಗುವುದನ್ನು ಮಾಡಿ ಈ ಭುವಿಯ ಹಸಿರು ಚಾದರ ಮತ್ತು ಹಂದರವನ್ನು ಕಟ್ಟಿಕೊಂಡು ಭದ್ರವಾಗಿರಬಹುದು. ಕಟ್ಟ ಕಡೆಯದಾಗಿ ನೀರಿನ ರಕ್ಷಣೆಗೆ ಒಂದೇ ಒಂದು ಪರಿಹಾರ ಅದೇನೆಂದರೆ ನದಿ ಮೂಲಗಳನ್ನು ಅದರ ಪಾಡಿಗೆ ಬಿಟ್ಟು ಬಿಡಿ, ಅಲ್ಲಿ ಯಾವ ಮಾನವ ಹಸ್ತಕ್ಷೇಪವೂ ಆಗದಿರಲಿ.
ಹೆಪ್ಪು ಗಟ್ಟಿದ ನೀರಿನಂತೆ ಪಾವನ, ರಂಜಿತಾಳನ್ನು ನೆನೆಯುತ್ತಾ...
ಮೊನ್ನೆ ಗಾಂಧಿಭವನದಲ್ಲಿ ನಮ್ಮ ನಾಡಿನ ಹಿರಿಯ ಚಿಂತಕರು, ಲೇಖಕರು ಆಗಿರುವ ‘ಬರಗೂರು’ ಮೇಷ್ಟ್ರು ಬಂಡಾಯ ಸಾಹಿತ್ಯ ಹೊಸತಲೆಮಾರಿಗೆ ಎನ್ನುವ ಕಾರ್ಯಕ್ರಮ ಮಾಡಿ ‘ವೈಚಾರಿಕ ಚಿಂತನೆ ಮತ್ತು ಕವಿಗೋಷ್ಠಿಯನ್ನು’ ಏರ್ಪಡಿಸಿದ್ದರು. ನಾನು ಕವಿಗೋಷ್ಠಿಯ ಆಧ್ಯಕ್ಷತೆ ವಹಿಸಿದ್ದೆ. ಒಂದು ಗಂಭೀರವಾದ ಕವಿಗೋಷ್ಠಿ ಅದು. ನನ್ನ ನಂತರದ ತಲೆಮಾರಿನ ಬಹಳ ಮುಖ್ಯವಾದ ಕವಿಗಳು ಭಾಗವಹಿಸಿದ್ದರು. ಕವಿ ಲಕ್ಷ್ಮಿನಾರಾಯಣಸ್ವಾಮಿ‘ಶರಣೆ ಸಂಕವ್ವೆ’ಯ ಕುರಿತು ಖಂಡಕಾವ್ಯದ ಕೆಲವು ಭಾಗಗಳನ್ನು ಓದುವಾಗ ಅದರ ಚಿತ್ರ ನನ್ನ ಕಣ್ಣಿಗೆ ಕಾಣುವಂತೆ ಭಾಸವಾಯಿತು. ಇನ್ನೊಬ್ಬ ಕವಿ ಮಂಜುನಾಥ್ ಎಸ್. ‘ಒಂದು ರಾಜಕೀಯ ನೆನಪು’- ಶೀರ್ಷಿಕೆಯ ಪದ್ಯ ಓದುತ್ತಾ ನೀರು ಹೆಪ್ಪುಗಟ್ಟುತ್ತಿತ್ತು.. ಹಾಲು ಉಪ್ಪುಗಟ್ಟುತ್ತಿತ್ತು.. ಎನ್ನುವ ಸಾಲುಗಳನ್ನು ಓದಿದರು. ಈ ನೀರು ಹೆಪ್ಪುಗಟ್ಟುವುದರ ಸಂಕೇತ ಮತ್ತು ರೂಪಕ ನೋವು ಮತ್ತುದುಃಖದ ಹೆಪ್ಪುಗಟ್ಟುವಿಕೆಯನ್ನು ಸೂಚಿಸುತ್ತದೆ. ಈ ದೇಶದ ರಾಜಕಾರಣ, ಜಾತಿ-ಧರ್ಮ-ಬಂಡವಾಳಶಾಹಿ.... ಎಲ್ಲವೂ ಹೇಗೆ ಸಾಮಾನ್ಯರನ್ನು ತುಳಿಯುತ್ತದೆ ಎಂದರೆ ಅಂತಿಮವಾಗಿ ಹೆಣ್ಣುಮಕ್ಕಳ ಎದೆಗಳನ್ನು ಹೆಪ್ಪುಗಟ್ಟಿಸುವಂತೆ. ನೀರು ಇಲ್ಲದೆ ಹೋದರೆ ಜಗತ್ತೇ ನಿಂತು ಹೋಗುತ್ತದೆ. ಹಾಗೇ ಹೆಪ್ಪುಗಟ್ಟುವುದು ಎಂದರೆ ಇಂಗಿ ಹೋಗುವ ಸೂಚನೆ. ಈ ಸಾಲುಗಳು ಕೇಳುತ್ತಿದ್ದರೆ ಎಂತಹವರನ್ನು ತಣ್ಣಗೆ ನಡುಗಿಸಿಬಿಡುತ್ತದೆ. ಇಡೀ ಜಗತ್ತೇ ಹೆಣ್ಣುಮಕ್ಕಳ ಮೇಲೆ ನಿಂತಿದೆ. ದುಷ್ಟ ದುರಹಂಕಾರಿ ಗಂಡು ತಾನು ಏನು ಬೇಕಾದರೂ ಮಾಡಬಲ್ಲೆ ಎನ್ನುತ್ತಾ.. ಯುದ್ಧಕ್ಕೆ ಕಾರಣವಾಗುತ್ತಾನೆ. ಯುದ್ಧ ಮಾಡಿಸುತ್ತಾನೆ. ಇದರಿಂದ ಹೆಚ್ಚು ಆತಂಕಗೊಳ್ಳುವವರು ಮಕ್ಕಳು ಮತ್ತು ಮಹಿಳೆಯರು. ಹೊಟ್ಟೆಯಲ್ಲಿ ಮಗುವನ್ನಿಟ್ಟುಕೊಂಡು ಯುದ್ಧಕ್ಕೆ ಹೋದ ಗಂಡನನ್ನು ನೆನೆಯುತ್ತಾ, ತಾಯಿ ಮಗನನ್ನು ನೆನೆಯುತ್ತಾ, ಮಗಳು ಅಪ್ಪನನ್ನು ನೆನೆಯುವ ದುಗುಡವನ್ನು ಯಾವ ಪದಗಳಿಂದಲೂ ವಿವರಿಸಲಾಗದು. ಇಷ್ಟೆಲ್ಲವನ್ನೂ ಮೀರಿ ಈ ಯುದ್ಧಕೋರರು ಸಕಲವನ್ನು ಕೊಡುವ ಈ ಭೂಮಿಯನ್ನು ಬರಡಾಗಿಸುತ್ತಿರುವುದು ಜಗತ್ತಿನ ಘೋರ ದುರಂತವೇ ಸರಿ. ಬೇಡ ಎಂದರೂ ಜಾಗತಿಕ ಯುದ್ಧ ನಮ್ಮನ್ನು ತಟ್ಟಿದೆ. ಅದರ ಬಿಸಿಯನ್ನು ಈಗಾಗಲೇ ಅನುಭವಿಸುತ್ತಿದ್ದೇವೆ. ಮನುಷ್ಯ ಎಷ್ಟು ಕ್ಷುಲ್ಲಕ ಮತ್ತು ಸಂಕೀರ್ಣ ಎಂದರೆ ತನ್ನಂತೆ ಇರುವ ಮನುಷ್ಯನ ಮೇಲೆ ಯುದ್ಧ ಮಾಡುತ್ತಾನೆ ಮತ್ತು ಪ್ರೀತಿ ಕೂಡ ಮಾಡುತ್ತಾನೆ. ಮನುಷ್ಯ ಬುದ್ಧಿಜೀವಿಯೂ ಹೌದು! ವಿವೇಕಿಯೂ ಹೌದು! ಆದರೆ ಏನು ಅರಿಯದ 160 ಮಕ್ಕಳ ಜೀವತೆಗೆಯುವ ಹಕ್ಕನ್ನು ಯುದ್ಧಕ್ಕೆ ಕೊಟ್ಟಿದ್ದು ಯಾರು? ಎಂದು ಇಡೀ ಜಗತ್ತು ಪ್ರಶ್ನೆ ಮಾಡಬೇಕು. ಜಗತ್ತಿನಲ್ಲಿ ನಡೆಯುವ ಇಂತಹ ಯುದ್ಧದ ದುಷ್ಕೃತ್ಯಗಳನ್ನು ಪ್ರಾರ್ಥನೆಗಳು ನಿಲ್ಲಿಸಲು ಸಾಧ್ಯವೇ? ಸಾವಿಗೀಡಾದವರು ಮತ್ತೆ ಜೀವ ಪಡೆಯಲು ಸಾಧ್ಯವೇ? ಆದರೆ ಇರುವ ಜೀವಗಳನ್ನು ಉಳಿಸಲು ನಮ್ಮ ಪ್ರಾರ್ಥನೆಯ ಮನವಿ. ಮನುಷ್ಯ ತನ್ನನ್ನು ತಾನೇ ನುಂಗುವ ಪರಿ ಮಾತ್ರ ಮನುಷ್ಯನಿಗೆ ಪ್ರಕೃತಿ ಕೊಟ್ಟ ಶಾಪವೇ ಹೌದು. ಈ ಮನುಷ್ಯ ಯಾರಿಂದಲೂ ಪಾಠ ಕಲಿಯುವುದಿಲ್ಲ ಎಂದು ಈಗಾಗಲೇ ಗೊತ್ತಾಗಿದೆ. ಹಾಗಂತ ಕೈ ಚೆಲ್ಲಿ ಕೂರಬಾರದು. ಇಲ್ಲದಿದ್ದರೆ ಹಿಂಸೆಯ ಪಾಲನ್ನು ನಾವು ಹೊರಬೇಕಾಗುತ್ತದೆ. ಇರಲಿ, ಇದನ್ನೆಲ್ಲಾ ಹೇಳುವಾಗಲೂ ಕೂಡ ದುಃಖ ಮತ್ತು ನೋವಿನ ಸುದ್ದಿಯನ್ನು ನಿಮ್ಮೊಟ್ಟಿಗೆ ಹಂಚಿಕೊಳ್ಳಬೇಕಲ್ಲ ಎನ್ನುವ ಚಡಪಡಿಕೆ ನನಗೆ. ಆದರೂ ಈ ಭಾರವನ್ನು ಹಗುರ ಮಾಡಿಕೊಳ್ಳಲಿಕ್ಕೆ ನಿಮ್ಮೊಟ್ಟಿಗೆ ಹಂಚಿಕೊಳ್ಳಬೇಕಾಗಿದೆ. ಕಲೆ, ಸಾಹಿತ್ಯ, ನಾಟಕ, ಸಂಗೀತ ಮನುಷ್ಯನ ದುಃಖ ದುಮ್ಮಾನಗಳನ್ನು ಭಾವನೆಗಳ ಮೂಲಕ ಸೃಜಿಸಿಕೊಂಡು ಮನುಷ್ಯ ಹಗುರಾಗುತ್ತಾನೆ ಎನ್ನುವುದು ನಮ್ಮೆಲ್ಲರಿಗೂ ತಿಳಿದ ವಿಷಯವೇ. ಆದರೆ ಹುಟ್ಟಿ ಬೆಳೆಯುತ್ತಾ ಬೆಳೆಯುತ್ತಾ ಸುಖ-ದುಃಖಗಳನ್ನು ಅರಿಯುತ್ತಾ ಒಂದು ಅದ್ಭುತ ಪ್ರಪಂಚದಲ್ಲಿ ನಾನಿದ್ದೇನೆ ಎನ್ನುವ ಸುಂದರ ಭಾವನೆಗಳೊಟ್ಟಿಗೆ ಕವಿತೆಗಳನ್ನು ಬರೆಯುತ್ತಾ ನನ್ನೊಳಗೆ ನನ್ನನ್ನೇ ಇಲ್ಲವಾಗಿಸುವ ಕಾಯಿಲೆ ಇದೆಯೆಂದು ಗೊತ್ತಾದಾಗ ಮತ್ತು ಈ ಆಧುನಿಕ ಸಂದರ್ಭದಲ್ಲೂ ಈ ಜೀವ ಉಳಿಸುವ ಔಷಧ ಅಥವಾ ಮದ್ದು ಇಲ್ಲವೆಂದಾಗ ಆಗುವ ಆಘಾತ ಯಾರಿಗೂ ಬೇಡ. ಇತ್ತೀಚೆಗೆ ಪಾವನ ಎನ್ನುವಾಕೆ ಅತ್ಯುತ್ತಮವಾದ ಕವಿತೆಗಳ ಬರೆದು 2016 ರಲ್ಲಿ ‘ಅಲೆಮಾರಿ ಮೀರಾ’ ಎನ್ನುವ ಅಪರೂಪದ ಕವನ ಸಂಕಲವನ್ನು ಪ್ರಕಟಿಸಿ ತನ್ನೊಳಗೆ ಬೇಯುತ್ತಾ.. ನೋಯುತ್ತಾ... ಚಿಟ್ಟೆಯಾಗುವ, ರೆಕ್ಕೆಯಾಗುವ, ದುಃಖದಲ್ಲೂ ಆನಂದವನ್ನು ಕಾಣುವ, ಆನಂದದಲ್ಲೂ ದುಃಖವನ್ನು ಕುಡಿಯುವ ಈ ಹೆಣ್ಣುಮಗಳ ಬಗ್ಗೆ ನಾನು ತುಂಬ ತಡವಾಗಿ ತಿಳಿದುಕೊಂಡೆ. ಸಾಮಾನ್ಯವಾಗಿ ನಾನು ಯಾರೇ ಕವಿತೆ ಬರೆದರೂ ಓದುವೆನು. ಓದಿ ಖುಷಿಯಾದರೆ ತಕ್ಷಣವೇ ಆ ಕವಿತೆ ಕುರಿತು ಅಭಿನಂದಿಸಿ ಮಾತನಾಡುತ್ತೇನೆ. ಆದರೆ ಈ ಪಾವನ ನನ್ನ ಗಮನಕ್ಕೆ ಬರಲಿಲ್ಲ. ಬಹುತೇಕ ಈ ನಾಡಿನಲ್ಲಿ ಹೊಸ ತಲೆಮಾರಿನ ಕವಿಗಳು ತುಂಬಾ ಚೆನ್ನಾಗಿ ಪದ್ಯ, ಕಥೆ, ಕಾದಂಬರಿ ಬರೆಯುತ್ತಿದ್ದಾರೆ. ನಾನು, ನಾನು ಬರೆದುದಕ್ಕಿಂತ ಉಳಿದವರು ಬರೆದುದನ್ನು ನೋಡಿ ಸಂತೋಷ ಪಡುವುದೇ ಹೆಚ್ಚು. ಈ ಸಂಕಲನಕ್ಕೆ ನಮ್ಮ ನಾಡಿನ ಹಿರಿಯ ಕವಯಿತ್ರಿ ಪ್ರತಿಭಾ ನಂದಕುಮಾರ್ ಒಂದು ಖಾಸಗಿ ಪತ್ರದ ಹಾಗೆ ಮುನ್ನುಡಿ ಬರೆದಿದ್ದಾರೆ. ಆ ಮುನ್ನುಡಿಯೇ ಒಂದು ಗದ್ಯದ ಕಾವ್ಯವಾಗಿ ಪಾವನಳ ಬದುಕಿನ ಕಾವ್ಯವನ್ನು ಹಾಡಾಗಿಸಿದ್ದಾರೆ. ಆ ಹಾಡು ಎದೆತುಂಬಿ ಹಾಡುವ ಹಾಗೇ ದುಃಖ ತುಂಬಿದ ಹಾಡಿನಂತೆ ಕೇಳಿಸುತ್ತದೆ. ಪಾವನ ಅಂದ್ರೆ ಜೀವ ಪ್ರೀತಿಯ ಜೇನುಗೂಡು. ಎಂ.ಕಾಂ ಓದಿ ಅಂಕಿ-ಸಂಖ್ಯೆಗಳ ಒಳಗೆ ಮುಳುಗಿ ಹೋಗದೆ ತನ್ನದೇ ಕನಸಿನ ಬದುಕನ್ನು ಕಟ್ಟಿಕೊಂಡಿದ್ದವರು. ಬಿ.ಕಾಂ ಓದುವಾಗ ಈಕೆಯ ಭಾವರಾಗದ ಜುಗಲ್ ಬಂದಿಯನ್ನು ರಂಗದ ತುಂಬೆಲ್ಲ ಹರಡಿ ಅತ್ಯುತ್ತಮ ನಟಿಯಾಗಿ, ಕಾಲೇಜು ನಾಟಕೋತ್ಸವದಲ್ಲಿ ಮಿಂಚಿದವಳು ಮತ್ತು ಭಾರತಯಾತ್ರ ಕೇಂದ್ರ ನಡೆಸುವ ನಾಟಕೋತ್ಸವದಲ್ಲಿ ‘ಉತ್ತಮ ನಾಟಕ ವಿಮರ್ಶೆ’ಗಾಗಿ ಪಿ. ಲಂಕೇಶ್ ಪ್ರಶಸ್ತಿ ಲಭಿಸಿತ್ತು. ತುಂಬಾ ಕ್ರಿಯಾ ಶೀಲವಾಗಿದ್ದ ಹೆಣ್ಣುಮಗಳು ಈಗ ನಮ್ಮೊಡನೆ ಇಲ್ಲವೆಂದು ನೆನಪಿಸಿಕೊಂಡರೆ ನೋವಾಗುತ್ತದೆ. ನಾವು ಪ್ರತಿವರ್ಷ ತಾಯಿಯ ನೆನಪಿನಲ್ಲಿ ಹಿರಿಯರ ಹಬ್ಬ ಮಾಡುತ್ತೇವೆ. ಆ ಹಬ್ಬಕ್ಕೆ ನಮ್ಮ ಪ್ರೀತಿಯ ಹುಡುಗ ಕವಿ ಪ್ರಮೋದ್ನನ್ನು ಕರೆದಿದ್ದೆವು. ಪ್ರಮೋದ್ ಆ ದಿನ ನಮ್ಮ ಮನೆಯಲ್ಲಿ ಹಾಜರಿದ್ದ. ಪಾವನ ಆ ದಿನ ಬೆಂಗಳೂರಿಗೆ ಬಂದಿದ್ದು ಮಾರನೆಯ ದಿನ ಆಕೆಗೊಂದು ಪರೀಕ್ಷೆ ಇತ್ತು. ಪ್ರಮೋದ್ ಮತ್ತು ನನ್ನ ಸೊಸೆ ಹಾಗೂ ನಮ್ಮ ಮನೆಯವರು ಪಾವನಳನ್ನು ತುಂಬಾ ಪ್ರೀತಿಯಿಂದ ಒತ್ತಾಯ ಮಾಡಿ ಕರೆದಿದ್ದರು. ಪಾವನ ನಮ್ಮ ಮನೆಗೆ ಬರಲೇ ಇಲ್ಲ ಎನ್ನುವುದನ್ನು ಈಗಲೂ ನೆನೆಸಿಕೊಂಡರೆ ಮನಸ್ಸಿಗೆ ಸಂಕಟವಾಗುತ್ತದೆ. ಹೃದಯಸಂಬಂಧಿ ಅನಾರೋಗ್ಯದಿಂದ ಬಳಲುತ್ತಿದ್ದ ಹೆಣ್ಣುಮಗಳು ತನ್ನ ಹೃದಯದ ವಿರುದ್ಧ ಗೆಲ್ಲಲಿಲ್ಲ ಆದರೆ ಲೋಕದ ಹೃದಯಗಳಿಂದ ಗೆದ್ದ ಕವಿಯಾಗಿದ್ದಾರೆ. ಆಕೆ ಬರೆದ ‘ಅಲೆಮಾರಿ ಮೀರಾ’ ಎಲ್ಲರೂ ಓದಲೇಬೇಕಾದ ಕೃತಿಯಾಗಿದೆ. ಆ ಕೃತಿಯ ಕವಿತೆಗಳು ಚಿತ್ರಗಳು, ಪದಗಳು ನಮ್ಮನ್ನು ಇನ್ನಿಲ್ಲದಂತೆ ಕಾಡಿಸುತ್ತಿದೆ. ಆಕೆ ಬರೆದ ಕವಿತೆ ಸಾಲುಗಳು ಹೀಗಿವೆ; ಇಲ್ಲಿಗೆ ಸಾಕು... ಇನ್ನು ಬರೆಯಬಾರದೆಂದು ಹಠಹಿಡಿದುಕೂತವಳು ಇನ್ನೆಂದೂ ಪದಗಳ ಸಂಗವೇ ಸಲ್ಲದೆಂದು ಸಾಗಿದವಳು ಅಪ್ಪ, ಅರಿವು ಧರ್ಮ ದೇವರು ಹೆಣ್ಣು ಗಂಡು ಆಕಾಶ ಕೊನೆಗೆ ಭೂಮಿ ಮರ ಇನ್ಯಾವುದರ ಸೊಲ್ಲೆತ್ತಕೂಡದು ಎಂದು ಮೊಂಡುಕೂತೆನಷ್ಟೇ. ಕಾಲು ನಿಲ್ಲಿಸಬಹುದು ನಾನು ಓಡುವ ಕಾಲನ ನಾ ಹೇಗೆ ನಿಲ್ಲಿಸಲಿ ಎನ್ನುವ ಪ್ರಶ್ನೆ ಎಲ್ಲರದ್ದು. ಈ ಕವಿ ಇವತ್ತು ಮತ್ತು ನಿನ್ನೆ, ನಾಳೆಗಳ ಬಗ್ಗೆ ಗಂಭೀರವಾಗಿ ತನ್ನ ಕಾವ್ಯದ ಮೂಲಕ ಅಭಿವ್ಯಕ್ತಿಸಿ ಹೋಗಿದ್ದಾರೆ. ಕವಿ ಒಬ್ಬಂಟಿ ಹೌದು ಮತ್ತು ಅಲ್ಲ. ಲೋಕವನ್ನೇ ತನ್ನ ಜಗತ್ತನ್ನಾಗಿಸಿಕೊಂಡು ಜಗತ್ತಿನೊಳಗೆ ಕವಿ ಮಾತಾಡುತ್ತಾಳೆ. ಕಾಲದ ಬಗ್ಗೆ ಪಾವನ ಎಷ್ಟು ಅರ್ಥಪೂರ್ಣವಾಗಿ ಮಾತನಾಡಿದ್ದಾರೆಂದರೆ ‘ಈ ಜೀವಗಳು ಬಂದು ಹೋಗುತ್ತವೆ, ನನ್ನನ್ನು ಒಳಗೊಂಡಂತೆ’ ಎನ್ನುವಂತೆ. ಪ್ರೀತಿ ಕಾಳಜಿಯಿಂದ ಈ ಜಗತ್ತಿನಲ್ಲಿ ಪ್ರತಿಕ್ಷಣವು ನಾವು ಬದುಕಬೇಕು. ಅಂತಹದ್ದನ್ನು ರೂಢಿಸಿಕೊಳ್ಳಬೇಕು. ಒಂದು ಕ್ಷಣವನ್ನು ಯಾರೂ ಕೊಡುವುದಿಲ್ಲ. ಇರುವಷ್ಟು ಗಳಿಗೆಗಳನ್ನು ಅನುಭವಿಸಬೇಕು. ಜೀವಿಸಬೇಕು. ಪಾವನ ಬದುಕನ್ನು, ಕಾವ್ಯವನ್ನು, ಸಮಾಜವನ್ನು ಮತ್ತು ಜನರನ್ನು ತುಂಬಾ ತೀವ್ರವಾಗಿ ಗಾಢವಾಗಿ ಪ್ರೀತಿಸಿದವಳು. ಈಕೆಯ ಕಾವ್ಯದ ಜೀವದ್ರವ್ಯ ಹೇಗೆ ಉಸಿರಾಡುತ್ತಿದೆ ಎನ್ನುವುದನ್ನು ಆಕೆಯ ಕವಿತೆಗಳನ್ನು ಓದಿಯೇ ತಿಳಿದುಕೊಳ್ಳಬೇಕು. ಇವತ್ತು ಬರುತ್ತಿರುವ ಕಾವ್ಯದ ರಾಶಿಯೊಳಗೆ ಈಕೆಯ ಕವಿತೆಗಳು ಬೇರೆಯಾಗಿಯೇ ಕಾಣಿಸುತ್ತವೆ. ತನ್ನ ದೇಹ ಮತ್ತು ಕಾಯಿಲೆಯನ್ನು ನೆನಪು ಮಾಡಿಕೊಳ್ಳುತ್ತಾ ಹೀಗೊಂದು ದೀರ್ಘಕನಸು ಎಂಬ ಪದ್ಯದಲ್ಲಿ- ಈಗೀಗ ನನ್ನಂತೆ ಕೃಷವಾಗುತ್ತಿವೆ ನನ್ನದೇ ಕವನಗಳು ಹೇಳುತ್ತಾರೆ ಎಷ್ಟೊಂದು ಬಾಲಿಶ ನಿನ್ನಂತೆ ನಿನ್ನ ಸಾಲುಗಳು... ನಾ ಸೋತು ಉಸಿರಾಟ ಕಷ್ಟವಾಗಿ ಕುಸಿದು ಬೀಳುತ್ತೇನೆ. -ಇಂತಹ ಸಾಲುಗಳನ್ನು ಓದುವಾಗ ಎಸ್.ಮಂಜುನಾಥ ಅವರ ಕವಿತೆಯ ‘ನೀರು ಹೆಪ್ಪುಗಟ್ಟುತ್ತದೆ’ ಎನ್ನುವ ಸಾಲು ಸಾಂದರ್ಭಿಕವಾಗಿ ನೆನಪಾಗುತ್ತದೆ. ಹೂವಾಗಿ ಅರಳಿ ನಲಿಯಬೇಕಿದ್ದ ಇಂತಹ ಚೈತನ್ಯದ ಹೆಣ್ಣುಮಕ್ಕಳು ಈ ಲೋಕವನ್ನು ಅಗಲುವುದೆಂದರೆ ಆ ರೋಗಕ್ಕೊಂದು ಧಿಕ್ಕಾರವಿರಲಿ. ಚಿಕ್ಕವಯಸ್ಸಿನಲ್ಲೇ ಮಹತ್ವದ ಕಾವ್ಯವನ್ನು ಬರೆದ ಪಾವನ ನಮ್ಮೊಳಗೆ ಯಾವತ್ತೂ ಜೀವಂತ. ತನ್ನ ಸಂಕಲನದ ಮುನ್ನುಡಿಯಲ್ಲಿ ‘‘ನಾನ್ಯಾವತ್ತೂ ಕವಿತೆಗಳನ್ನು ಬರೆಯಬೇಕು ಎಂದು ಕೂತು ಪಟ್ಟು ಹಿಡಿದು ಬರೆದವಳಲ್ಲ. ನನ್ನೊಳಗೆ ತಂತಾನೆ ಹುಟ್ಟಿದವು. ಸಹಜವಾಗಿ ಅರಳಿದವು. ನಾನು ಪ್ರತಿಬಾರಿ ಪ್ರತಿ ಚರಾಚರಿ ಜೀವಿಯಲ್ಲಿ ಹುಡುಕಿ ಅಲೆದಿದ್ದು ಈ ಜಗತ್ತಿನ ಸೌಂದರ್ಯವನ್ನು ಮತ್ತು ಅದರೊಳಗಿನ ಪ್ರೀತಿಯನ್ನು. ಹಾಗೇ ಹುಡುಕಿ ಅಲೆಯುವಾಗಲೆಲ್ಲಾ ನನ್ನೊಳಗಿನ ಭಾವನೆಗಳಿಗೂ, ನನ್ನೊಳಗಿನ ಹೆಣ್ತನಕ್ಕೂ, ಹೊರಗಿನ ವೈರುಧ್ಯಗಳಿಗೂ ಸಾಕಷ್ಟು ತಿಕ್ಕಾಟ, ಸಂಧಾನ ಎಲ್ಲವೂ ನಡೆದಿದೆ’’ ಎಂದು ಬರೆದಿದ್ದಾರೆ. ಇವೆಲ್ಲವನ್ನೂ ಮೀರಿಯೂ ಮನುಷ್ಯ ಪ್ರೀತಿಯನ್ನರಸಿ ಈಗಲೂ ನನ್ನೊಳಗಿನ ಮೀರಾ ಅಲೆಯುತ್ತಲಿದ್ದಾಳೆ ನಿಜ. ಪಾವನ ಕೂಡ ನಮ್ಮೊಳಗಿನ ಕಾವ್ಯದ ಉಸಿರಾಟದಲ್ಲಿ ಎಲ್ಲರೊಂದಿಗೆ ಅಲೆಯುತ್ತಿದ್ದಾಳೆ. ಹೋಗಿ ಬಾ ಪಾವನ. ನಿನ್ನುಸಿರು ಈ ಪ್ರಕೃತಿಯಲ್ಲಿ ನಿತ್ಯ ನಿರಂತರ ಚಲನೆಯಲ್ಲಿ. ಕೃಷಿ ಕೂಲಿ ಕುಟುಂಬದಲ್ಲಿ ಹುಟ್ಟಿದವಳು ರಂಜಿತಾ. ಕೊಡಗು ಎಂದಾಕ್ಷಣ ಎಲ್ಲರ ಕಣ್ಣು ಮನಸ್ಸುಗಳು ಅರಳುತ್ತವೆ. ಕಾಫಿ ಮತ್ತು ಪ್ರಕೃತಿ ಸೌಂದರ್ಯದಿಂದಲೂ, ಕ್ರೀಡೆ, ಸೈನ್ಯ, ಶೌರ್ಯದಲ್ಲೂ ಕೊಡಗಿನವರು ಒಂದು ಹೆಜ್ಜೆ ಮುಂದೆ ಇದ್ದಾರೆ. ಆದರೆ ಇವರ ಕಾಫಿ ತೋಟದಲ್ಲಿ ಕೂಲಿ ಕೆಲಸ ಮಾಡುವ ಇವರ ಶ್ರೀಮಂತಿಕೆಯನ್ನು ಹೆಚ್ಚಿಸುವ ಐಷಾರಾಮಿ ಯಾಗಿ ಬದುಕುವಂತೆ ಮಾಡುವ ಕೃಷಿ ಕೂಲಿ ಕಾರ್ಮಿಕರ ಬದುಕು ಮೂರಾ ಬಟ್ಟೆಯಾಗಿರುತ್ತದೆ. ಇದೊಂದು ರೀತಿಯ ಜೀತ ಪದ್ಧತಿ. ಒಮ್ಮೆ ಕಾಫಿ ತೋಟದಲ್ಲಿ ಲೈನ್ ಮನೆಗಳಿಗೆ ಸೇರಿಕೊಂಡರೆ ಅದು ಮುಗಿಯದ ಬಂಧನದ ಬದುಕಾಗುತ್ತದೆ. ಇದೊಂದು ರೀತಿಯ ಚಾಲ್ತಿಯಲ್ಲಿರುವ ಜೀತಪದ್ಧತಿಯಾಗಿದೆ. ಕೊಡಗು ಮತ್ತು ಮಲೆನಾಡಿನ ಪ್ರದೇಶಗಳಲ್ಲಿ ದಲಿತರ ಬದುಕು ಅಯೋಮಯವಾಗಿದೆ. ಬೇರೆ ಬೇರೆ ರಾಜ್ಯಗಳಿಂದ ಬಂದ ಬಡವರು ಅಕ್ಕಪಕ್ಕದ ಜಿಲ್ಲೆಗಳಿಂದ ಬಂದ ಆದಿವಾಸಿಗಳ ಬದುಕು ಹಾಗೆಯೇ ಸ್ಥಳೀಯವಾಗಿ ತಲೆಮಾರುಗಳಿಂದ ಅಸ್ಪಶ್ಯತೆಯನ್ನು ತಿಂದುಂಡು ಬದುಕಿದವರು ಇಲ್ಲಿದ್ದಾರೆ. ಇದರ ನಡುವೆ ಕೂಡ ಸ್ವತಂತ್ರವಾಗಿ ಅಕ್ಷರಗಳಿಗೆ ತೆರೆದುಕೊಂಡವರು ಬೆರಳೆಣಿಕೆ ಜನ ಮಾತ್ರ. ಈ ನಡುವೆ ಸರಕಾರ ಕೊಡುವ ಸವಲತ್ತಿನಿಂದ ಶೋಷಿತ ಸಮುದಾಯ ಒಂದಿಷ್ಟು ಬೆಳಕು ಕಾಣುತ್ತಿದೆ. ಹಾಗೇ 70ರ ದಶಕದಲ್ಲಿ ಅರಿವಿನ ದಾರಿ ತೋರಿದ ದಲಿತ ಸಂಘರ್ಷ ಸಮಿತಿಯ ಅರಿವು ಕೂಡ ಈ ಭಾಗಕ್ಕೆ ಬಂದಿದೆ. ಹೀಗೆ ಅಲ್ಲಲ್ಲಿ ಮಿಣುಕು ಹುಳಗಳು ಬೀದಿ ದೀಪಗಳು ಎಚ್ಚರ ತಂದಿದೆ. ರಂಜಿತಾ ಕೂಡ ಕೃಷಿಕೂಲಿ ಕಾರ್ಮಿಕರ ಕುಟುಂಬದಲ್ಲೇ ಬಂದವಳು. ಯಾರೋ ಹಿರಿಯರು ತೋರಿದ ಮಾರ್ಗದಲ್ಲಿ ಪದವಿ ವ್ಯಾಸಂಗಕ್ಕಾಗಿ ಮೈಸೂರಿಗೆ ಬಂದಿದ್ದಾಳೆ. ಅಲ್ಲಿ ಪತ್ರಿಕೋದ್ಯಮ ಪದವಿ ಮಾಡುತ್ತಾ ಮೈಸೂರಿನಲ್ಲಿ ನಡೆಯುವ ಪ್ರಗತಿಪರ ಹೋರಾಟಗಳಲ್ಲಿ ಭಾಗವಹಿಸಿದ್ದಾಳೆ. ಒಂದಿಷ್ಟು ‘ಬಾಬಾ ಸಾಹೇಬ್ ಅಂಬೇಡ್ಕರ್’ ರವರ ವಿಚಾರಧಾರೆಗಳನ್ನು ಮೈಗೂಡಿಸಿಕೊಂಡಿದ್ದಾಳೆ. ಇದರಿಂದ ತನ್ನೂರಿನಲ್ಲಿ ತಮ್ಮ ಸಮುದಾಯದಲ್ಲಿ ಆಗುತ್ತಿರುವ ಶೋಷಣೆಯ ಬಗ್ಗೆ ಅರಿವಿದೆ. ಇಂತಹ ವಿಚಾರಗಳ ಬಗ್ಗೆ ತನ್ನ ಸಹೋದರನೊಂದಿಗೆ ಆಗಾಗ ಚರ್ಚಿಸಿದ್ದು ಉಂಟು. ಇವತ್ತಿನ ಆಧುನಿಕ ಸಂದರ್ಭದ ತಾಂತ್ರಿಕ ಸವಲತ್ತುಗಳು ಯಾರನ್ನು ಹೊರತುಪಡಿಸಿಲ್ಲ. ಆಕಸ್ಮಿಕವಾಗಿ ಇನ್ಸ್ಟಾಗ್ರಾಂ ನಲ್ಲಿ ಒಬ್ಬ ಹುಡುಗ ಪರಿಚಯವಾಗಿದ್ದಾನೆ. ಪರಿಚಯ ಸ್ನೇಹವಾಗಿ, ಸ್ನೇಹ ಪ್ರೀತಿಯಾಗಿ ಪರಿವರ್ತನೆಗೊಂಡಿದೆ. ಕೆಲವು ದಿನಗಳ ಹಿಂದೆ ರಂಜಿತಾಳೇ ಬಂದು ಆ ಹುಡುಗನೊಟ್ಟಿಗೆ ಬದುಕುತ್ತಿದ್ದಳು. ಪ್ರೀತಿ ಪ್ರೇಮಗಳಲ್ಲಿ ಎಷ್ಟು ಆಳವಾದ ಪ್ರೀತಿ ಇರುತ್ತದೋ ಆ ಪ್ರೀತಿ ಸಣ್ಣಪುಟ್ಟ ವಿಚಾರಕ್ಕೂ ಜಗಳವಾಗುತ್ತದೆ. ಅತಿರೇಕಕ್ಕೆ ಹೋಗುತ್ತದೆ. ಈ ವಿಷಯದ ಕುರಿತು ತನ್ನ ಸಹೋದರ ನಿತೀಶ್ ಜೊತೆ ಮಾತನಾಡಿದ್ದು ಉಂಟು. ಅಷ್ಟರಲ್ಲಾಗಲೇ ಸಣ್ಣ ವಿಷಯ ದೊಡ್ಡ ಜಗಳಕ್ಕೆ ಕಾರಣವಾಗಿ ತನ್ನ ಜೀವಕ್ಕೆ ಅಪಾಯವಿರುವುದನ್ನು ಬೆಂಗಳೂರಿನಲ್ಲಿರುವ ಹತ್ತಿರದ ಸಂಬಂಧಿಕರಿಗೂ ಹೇಳಿಕೊಂಡಿದ್ದಾಳೆ. ಹೀಗೆ ಹೇಳಿಕೊಂಡ ಕೆಲವು ಗಂಟೆಗಳ ನಂತರ ಆ ಕಡೆಯಿಂದ ಹುಡುಗ ರಂಜಿತಾ ಅನಾಹುತ ಮಾಡಿಕೊಂಡಿದ್ದಾಳೆಂದು ಪೋನ್ ಮಾಡಿ ತಿಳಿಸುತ್ತಾನೆ. ಈ ಮಾತು ಕೂಡ ಅನುಮಾನಾಸ್ಪದವಾಗಿ ಕಂಡು ಬಂದಿದೆ. ಇಷ್ಟು ಮಾತನ್ನು ಹೇಳುವಾಗ ಅವಳ ಸಹೋದರ ನನ್ನ ಅಕ್ಕ ಇಂತಹ ದುಸ್ಸಾಹಸಕ್ಕೆ ಕೈ ಹಾಕುವವಳಲ್ಲ. ಅನ್ನ ಮಾಡಿ ಚಿಕನ್ ಸಾಂಬರಿಗೆ ಸಿದ್ಧತೆ ಮಾಡಿಕೊಂಡಿದ್ದಳು ಎಂಬುದನ್ನು ಕೂಡ ತಿಳಿಸಿದ್ದಾರೆ. ಇಂತಹ ಘಟನೆಗಳು ಆಗದಂತೆ ಸಮಾಜ ಎಚ್ಚರ ವಹಿಸಬೇಕು. ಯಾಕೆಂದರೆ ರಂಜಿತಾ ಬೆಳೆದು ಬಂದ ರೀತಿ ಮತ್ತು ಶಿಕ್ಷಣ ಪಡೆದು ಪತ್ರಿಕೋದ್ಯಮ ವಿದ್ಯಾರ್ಥಿಯಾಗಿ ಅಷ್ಟೇ ಅಲ್ಲದೆ ಡಾ. ಅಂಬೇಡ್ಕರ್ ವಿಚಾರಧಾರೆಗಳನ್ನು ತಿಳಿದು ಅನ್ಯಾಯದ ವಿರುದ್ಧ ಹೋರಾಟಗಳಲ್ಲಿ ಭಾಗವಹಿಸುತ್ತಿದ್ದ ಇವಳು ಉಳಿದ ಯುವ ಸಮೂಹಕ್ಕೆ ರೋಲ್ ಮಾಡಲ್ ಆಗಬೇಕಿತ್ತು. ಆದರೆ ಪ್ರೀತಿ-ಪ್ರೇಮ ಎನ್ನುವ ಮಾಯೆಗೆ ಸಿಲುಕಿ ತನ್ನ ಬದುಕನ್ನೇ ಕಳೆದುಕೊಂಡಳು. ಪ್ರಸ್ತುತ ಕಾಲದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಸಿಲುಕಿ ಯುವತಿಯರು ಪ್ರೀತಿ-ಪ್ರೇಮಕ್ಕೆ ಒಳಗಾಗುತ್ತಾರೆ. ಅವರು ಬೆಳೆದು ಬಂದ ರೀತಿ, ತಾನು ಕೂಡ ಹೊಸ ಬದುಕನ್ನು ಸ್ವಾಭಿಮಾನದಿಂದ ಸ್ವತಂತ್ರವಾಗಿ ಜೀವಿಸಬೇಕು ಎನ್ನುವ ತುಡಿತ, ‘ಅದು ತಪ್ಪಲ್ಲ’. ಒಂದು ವೇಳೆ ಆ ಹುಡುಗ/ ಹುಡುಗಿ ಅರ್ಥಮಾಡಿಕೊಳ್ಳಲು ಆಗದಿದ್ದಾಗ ಅಥವಾ ಇಬ್ಬರಲ್ಲೂ ಅನ್ಯೋನ್ಯತೆ ಇಲ್ಲ ಅಂದಾಗ ಪರಸ್ಪರರ ಒಪ್ಪಿಗೆ ಮೇರೆಗೆ ದೂರವಾಗಿ ಮತ್ತೊಂದು ಬದುಕನ್ನು ಕಟ್ಟಿಕೊಳ್ಳುವ ಧೈರ್ಯ ಮಾಡಬೇಕೇ ವಿನಃ ಆತುರದ ನಿರ್ಧಾರ ತೆಗೆದುಕೊಳ್ಳಬಾರದು. ಹಾಗೆಯೇ ನಂಬಿ ಬಂದ ಹೆಣ್ಣುಮಕ್ಕಳನ್ನು ತಮ್ಮ ಸ್ವಾರ್ಥಕ್ಕೆ ಬಳಸಿಕೊಳ್ಳದೆ, ಗೌರವಯುತವಾಗಿ ಬದುಕುವುದಕ್ಕೂ ಬಿಡಬೇಕು. ಒಂದು ಹೆಣ್ಣುಮಗಳ ಹೋರಾಟ ಕೋಟಿ ಜನರ ವಿಶ್ವಾಸವನ್ನು ಹೆಚ್ಚಿಸುವಂತಹದ್ದು. ಇಂತಹ ವಿಶ್ವಾಸವನ್ನು ಬಾಬಾ ಸಾಹೇಬ್ ಅಂಬೇಡ್ಕರ್ ನಂಬಿದ್ದರು. ಪಾವನ ದೀರ್ಘಕಾಲದ ಅನಾರೋಗ್ಯದಿಂದ ಅಗಲಿದರೆ, ರಂಜಿತಾ ಪ್ರೀತಿ-ಪ್ರೇಮದ ಬಲೆಗೆ ಸಿಲುಕಿ ನಾವು ಅವಳನ್ನು ಕಳೆದುಕೊಂಡೆವು. ಶೋಷಣೆಯಿಂದ ತೆವಳುತ್ತಾ ಎದ್ದು ನಿಂತ ರಂಜಿತಾ ತರಹ ಅನೇಕ ಯುವತಿಯರು ಈ ಸಮಾಜದಲ್ಲಿ ನಮ್ಮ ಕಣ್ಣೆದುರು ಇರಬಹುದು. ಅವರೆಲ್ಲರಿಗೂ ಒಂದು ಮನವಿ. ಬದುಕು ನಮ್ಮ ಕೈಯಲ್ಲಿದೆ. ಸಕಾರಾತ್ಮಕ ಚಿಂತನೆಗಳಿಂದ ಜೀವನವನ್ನು ಕಟ್ಟಿಕೊಳ್ಳಿ. ಇದಕ್ಕೆ ಸಂವಿಧಾನದಲ್ಲೂ ಅವಕಾಶವಿದೆ. ಸಮಾಜ ಕೂಡ ಪೂರಕವಾಗಿ ಸ್ಪಂದಿಸಬೇಕು. ದಯವಿಟ್ಟು... ಅನಾಹುತಕ್ಕೊಳಪಡುವ ಮುನ್ನ ನಿಮ್ಮ ಆತ್ಮಸಾಕ್ಷಿಗೆ ಪ್ರಶ್ನಿಸಿ. ಇರಬೇಕಿತ್ತು ಸಾಸಿವೆಗಳನ್ನು ಹೊರಲು ರಂಜಿತಾ, ಪಾವನ ರಾಗಿತೆನೆಗಳಂತೆ ಎಲ್ಲರೆದೆಯ ಕನಸುಗಳಾಗಿ ಮತ್ತೆ ಹುಟ್ಟಿ ಮತ್ತೆ ಭಿತ್ತಿ ಉಳಿಯಬೇಕಿತ್ತು ಮುಗುಳ್ನಗೆಯ ಬುದ್ಧರಾಗಿ ಈಗಲೂ ನೀವು ಮೈತ್ರಿಯ ಬೇರುಗಳಾಗಿ ನಮ್ಮೊಳಗೆ.
ಹೊಸಕೋಟೆ | ಪರಿಸರ ಮಾಲಿನ್ಯಕ್ಕೆ ಕಾರಣವಾಗುವ ರಸ್ತೆ ಬದಿಗಳ ಕಸದ ರಾಶಿ
ಹೊಸಕೋಟೆ : ತಾಲೂಕಿನಲ್ಲಿ ಎಲ್ಲಿ ನೋಡಿದರೂ ಕಸದ ರಾಶಿ ಬೆಟ್ಟದಂತೆ ದಿನದಿಂದ ದಿನಕ್ಕೆ ಬೆಳೆಯುತ್ತಿದೆ. ಇದನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡದೆ ತ್ಯಾಜ್ಯಕ್ಕೆ ಬೆಂಕಿ ಹಚ್ಚುವುದು ಸಾಮಾನ್ಯವಾಗಿ ಬಿಟ್ಟಿದೆ. ಬೇಸಿಗೆ ಆರಂಭವಾಗಿರುವುದರಿಂದ ಹೆದ್ದಾರಿ, ಕರೆ, ಕುಂಟೆ ಹಾಗೂ ಖಾಲಿ ಜಾಗಗಳಲ್ಲಿ ಸುರಿಯುವ ಕಸವನ್ನು ಸುಡುವ ಕೆಟ್ಟ ಚಾಳಿ ಹೆಚ್ಚಾಗಿದೆ. ಬೇರೆ ಋತುವಿನಲ್ಲಿ ಕಸದ ರಾಶಿ ಹೆಚ್ಚಾದರೆ ಮಾತ್ರ ಬೆಂಕಿ ಹಚ್ಚಲಾಗುತ್ತದೆ. ಆದರೆ ಬೇಸಿಗೆಯಲ್ಲಿ ಪ್ರತಿ ಬಾರಿ ತ್ಯಾಜ್ಯ ಸುರಿದಾಗಲೆಲ್ಲ ಬೆಂಕಿ ಹಚ್ಚಲಾಗುತ್ತಿದೆ. ಇದರಿಂದ ಪರಿಸರ ಮಾಲಿನ್ಯ ಆಗುವುದಲ್ಲದೆ, ಅಸ್ತಮಾ, ಶ್ವಾಸಕೋಶ ಸಂಬಂಧಿತ ರೋಗಿಗಳಿಗೆ ತೊಂದರೆ ಆಗುತ್ತಿದೆ. ಆರೋಗ್ಯವಂತರಲ್ಲಿಯೂ ಉಸಿರಾಟದ ಸಮಸ್ಯೆ ಉಂಟು ಮಾಡುತ್ತಿದೆ. ಪ್ಲಾಸ್ಟಿಕ್ನಂತಹ ಮಾರಕ ವಸ್ತುಗಳು ಬೇಯುವಾಗ ಹೊರಹೊಮ್ಮುವ ಹೊಗೆ ಜನರ ಆರೋಗ್ಯವನ್ನು ನಿಧನವಾಗಿ ಸುಡುತ್ತಿದೆ. ಜನ ಜಾನುವಾರು ಆರೋಗ್ಯ ಮಾತ್ರವಲ್ಲದೆ ಪಕ್ಷಿ, ಇಲಿ-ಹೆಗ್ಗಣ, ಹಾವು ಮತ್ತಿತರ ಕೀಟ ಪ್ರಬೇಧಗಳಿಗೂ ಧಕ್ಕೆ ಉಂಟಾಗುತ್ತಿದೆ. ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಕಾಯ್ದೆ 2010 ಮತ್ತು ಘನತ್ಯಾಜ್ಯನಿರ್ವಹಣಾ ನಿಯಮಗಳ ಅಡಿಯಲ್ಲಿ ರಸ್ತೆ ಬದಿಗಳಲ್ಲಿ ಕಸಗಳನ್ನು ಸುಡುವುದು ಕಾನೂನುಬಾಹಿರ ಮತ್ತು ದಂಡನೀಯ ಅಪರಾಧವಾಗಿದೆ. ತಾಲೂಕಿನ ಕೆರೆ ಕುಂಟೆ, ರಾಷ್ಟ್ರೀಯ ಹೆದ್ದಾರಿ-ಕೋಲಾರ, ಹೊಸಕೋಟೆ ಮತ್ತು ಜಂಗಮಕೋಟೆ ಹೆದ್ದಾರಿಯಲ್ಲಿ ನಂದಗುಡಿವರೆಗೂ. ಹೊಸಕೋಟೆ ಡೇರಿ ಮುಂಭಾಗದ ಗುಡ್ಡ, ಖಾಲಿ ಜಾಗ, ಅಪಾರ್ಟೆಂಟ್ ಮೊದಲಾದ ಕಡೆ ಅವ್ಯಾಹತವಾಗಿ ಕಸಕ್ಕೆ ಬೆಂಕಿ ಹಚ್ಚುತ್ತಿದ್ದರೂ ನಗರಸಭೆ, ತಾಲೂಕು ಪಂಚಾಯತ್, ಗ್ರಾಮ ಪಂಚಾಯತ್, ಪರಿಸರ ಮತ್ತು ಮಾಲಿನ್ಯ ನಿಯಂತ್ರಣ ಮಂಡಳಿ ಜಾಣ ಕುರುಡತನ ಪ್ರದರ್ಶಿಸುತ್ತಿದ್ದಾರೆ. ಈ ಸಂಸ್ಥೆಗಳು ಇದೆಯೋ ಇಲ್ಲವೋ ಎಂಬ ಅನುಮಾನ ಸ್ಥಳೀಯರಲ್ಲಿ ಮೂಡಿದೆ. ನಾಯಿ ಕಾಟ ಹೆಚ್ಚಳ : ಹೊಸಕೋಟೆ ಹೊರವಲಯದ ರಸ್ತೆ ಬದಿಗಳಲ್ಲಿ ಎಲ್ಲೆಂದರಲ್ಲಿ ಪ್ಲಾಸ್ಟಿಕ್ ಕವರ್ಗಳಲ್ಲಿ ತ್ಯಾಜ್ಯ ಎಸೆಯುತ್ತಿದ್ದಾರೆ. ಆಹಾರಕ್ಕಾಗಿ ನಾಯಿಗಳು ತ್ಯಾಜ್ಯವನ್ನು ಚೆಲ್ಲಾಪಿಲ್ಲಿ ಮಾಡುತ್ತಿವೆ. ಅಲ್ಲದೇ ರಸ್ತೆಯಲ್ಲಿ ಸಂಚರಿಸುವ ವಾಹನಗಳಿಗೆ ಸಿಲುಕಿ ವಾಹನ ಅಪಘಾತಕ್ಕೂ ಕಾರಣವಾಗುತ್ತಿದೆ. ರೇಷ್ಮೆ ಹುಳು ಸಾಕಣೆಗೆ ಬಳಸುವ ಹಿಪ್ಪು ನೇರಳೆ ಸೊಪ್ಪು ಮೇಲೆ ಹೊಗೆಯ ಕಿಟ್ಟ ಕುಳಿತುಕೊಳ್ಳತ್ತದೆ. ಇದೇ ಸೊಪ್ಪು ತಿಂದು ಹುಳುಗಳು ತೊಂದೆ ಕಟ್ಟುತ್ತವೆ. ಇದರಿಂದ ಅವು ಗೂಡುಕಟ್ಟುವುದಿಲ್ಲ -ಗೋಪಾಲಪ್ಪರೇಷ್ಮೆ ಬೆಳೆಗಾರ, ಚಿಕ್ಕಕೋಲಿಗ ಹೊಸಕೋಟೆ ತಾಲೂಕಿನಲ್ಲಿ ಯಾವುದೇ ರಸ್ತೆಗೆ ಹೋದರೂ ಕಸದ ರಾಶಿ ಸರ್ವೇ ಸಾಮಾನ್ಯವಾಗಿದೆ. ಇದಕ್ಕೆ ಪಂಚಾಯತ್ ಮತ್ತು ಸ್ಥಳೀಯ ಆಡಳಿತದ ನಿರ್ಲಕ್ಷ್ಯವೇ ಕಾರಣ -ಆರ್. ಉಮೇಶ್ ಸೂಲಿಬೆಲೆ,ತಾಲೂಕು ಅಧ್ಯಕ್ಷರು, ಮಾನವ ಹಕ್ಕುಗಳ ಜಾಗೃತಿ ಸಮಿತಿ
ಸಾಹಿತ್ಯ ಅಕಾಡಮಿಯಿಂದ ಡಾ.ಅಂಬೇಡ್ಕರ್ ಕುರಿತ ಪುಸ್ತಕ ಪ್ರಕಟಣೆ
ಬೆಂಗಳೂರು : ಸಂವಿಧಾನ ಶಿಲ್ಪಿಡಾ.ಬಿ.ಆರ್.ಅಂಬೇಡ್ಕರ್ ಜೀವನ ಮತ್ತು ಅವರ ವಿಚಾರಗಳ ಕುರಿತು ಪರ-ವಿರೋಧದ ಚರ್ಚೆಗಳಾಗುತ್ತಿರುತ್ತವೆ. ಅನೇಕ ಬಾರಿ ಅಂಬೇಡ್ಕರ್ ಕುರಿತು ಸುಳ್ಳು ಪ್ರಚಾರಗಳನ್ನು ನಡೆಸಲಾಗುತ್ತದೆ. ಆ ರೀತಿಯ ಸುಳ್ಳುಗಳನ್ನು ತಡೆದು ಡಾ.ಅಂಬೇಡ್ಕರ್ ಮತ್ತವರ ವಿಚಾರಗಳ ಸತ್ಯಾಂಶವನ್ನು ಜನರಿಗೆ ತಿಳಿಸುವ ಉದ್ದೇಶದಿಂದ ಕರ್ನಾಟಕ ಸಾಹಿತ್ಯ ಅಕಾಡಮಿ ಡಾ.ಬಿ.ಆರ್.ಅಂಬೇಡ್ಕರ್ ಪುಸ್ತಕ ಪ್ರಕಟಿಸುವ ಯೋಜನೆಯೊಂದನ್ನು ಕೈಗೆತ್ತಿಕೊಂಡಿದೆ. ಡಾ.ಅಂಬೇಡ್ಕರ್ ಅವರ ಬಗ್ಗೆ ಸುಮಾರು 200ರಿಂದ 250 ಪುಟಗಳ ಪುಸ್ತಕವನ್ನು ಸಿದ್ಧಪಡಿಸಿ, ಅತ್ಯಂತ ಕಡಿಮೆ ಬೆಲೆಗೆ ಎಲ್ಲರಿಗೂ ತಲುಪಿಸಬೇಕು ಎನ್ನುವುದು ಸರಕಾರದ ಆಶಯವಾಗಿದೆ. ಅದಕ್ಕಾಗಿ ಸರಕಾರವೇ ಒಂದು ಸಲಹಾ ಮಂಡಳಿಯನ್ನು ಕೂಡ ರಚನೆ ಮಾಡಿದೆ. ಜೊತೆಗೆ ರವಿಕುಮಾರ್ ನೀಹಾ, ಡಾ.ಸಿದ್ದೇಶ್ ನೆಲ್ಲಿಕಟ್ಟೆ ಅವರು ಪುಸ್ತಕದ ಸಂಪಾದಕರಾಗಿದ್ದಾರೆ. ಡಾ.ಅಂಬೇಡ್ಕರ್ ಬಗ್ಗೆ ತುಂಬಾ ಕಪೋಲಕಲ್ಪಿತ ವಿಚಾರಗಳಿವೆ. ವಾಟ್ಸ್ಆ್ಯಪ್ ವಿವಿಯಿಂದ ಅನೇಕ ಸುಳ್ಳು ವಿಚಾರಗಳನ್ನು ಹರಡಲಾಗುತ್ತದೆ. ಅದಕ್ಕಾಗಿ ಅಂಬೇಡ್ಕರ್ ಕುರಿತು ಸಂಶೋಧನೆ ಮಾಡಿ ಲೇಖನಗಳನ್ನು ಬರೆಯುವ ಲೇಖಕರನ್ನು ಹುಡುಕಿ ಪುಸ್ತಕ ಬರೆಸುವ ಕೆಲಸವನ್ನು ಸಾಹಿತ್ಯ ಅಕಾಡಮಿ ಮಾಡುತ್ತಿದೆ. ಅಂಬೇಡ್ಕರ್ ಕೃತಿಗೆ ಲೇಖನ ಬರೆಯುವ ಲೇಖಕರಿಗೆ ಎ.15 ಮತ್ತು 16ರಂದು ಬೆಂಗಳೂರಿನಲ್ಲಿ ಶಿಬಿರ ನಡೆಸಿ, ಶಿಬಿರದಲ್ಲಿ ಲೇಖಕರ ಜೊತೆಗೆ ಸಲಹಾ ಮಂಡಳಿ ಸಂವಾದ ನಡೆಸುತ್ತದೆ. ಅಲ್ಲಿ ಲೇಖನ ಹೇಗಿರಬೇಕು ಎನ್ನುವ ಕುರಿತು ಮಾರ್ಗದರ್ಶನ ನೀಡಲಾಗುತ್ತದೆ. ಶಿಬಿರ ಮುಗಿದ ನಂತರ ಒಂದು ತಿಂಗಳು ಕಾಲಾವಕಾಶದಲ್ಲಿ ಪುಸ್ತಕ ಸಿದ್ಧವಾಗಲಿದೆ. ಅಂಬೇಡ್ಕರ್ ಅವರ ಜೀವನ, ಹೋರಾಟ ಮತ್ತು ಅವರ ಬರವಣಿಗೆ ಕುರಿತು ಸುಮಾರು 30 ವಿಷಯಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಅಂಬೇಡ್ಕರ್ ಅವರು ರಾಜಕೀಯ, ಆರ್ಥಿಕ, ಸಾಮಾಜಿಕ ಅನಿಷ್ಟಗಳ ಬಗ್ಗೆ ಮಾತ್ರ ಯೋಚನೆ ಮಾಡಿಲ್ಲ. ಅದರ ಜೊತೆಗೆ ಸೌಂದರ್ಯ ಮೀಮಾಂಸೆ, ಸಂಗೀತದ ಬಗ್ಗೆ ಯೋಚನೆ ಮಾಡಿದ್ದಾರೆ. ಅಂಬೇಡ್ಕರ್ ಅವರದು ಬಹುಮುಖ ಆಸಕ್ತಿಯ ಮನಸ್ಥಿತಿಯಾಗಿದೆ. ಅದೆನ್ನೆಲ್ಲವನ್ನು ಶೋಧಿಸುವ ಕೆಲಸ ಮಾಡಲಾಗುವುದು ಎನ್ನುವುದು ಕರ್ನಾಟಕ ಸಾಹಿತ್ಯ ಅಕಾಡಮಿಯ ಅಧ್ಯಕ್ಷ ಎಲ್.ಎನ್.ಮುಕುಂದರಾಜ್ ಅಭಿಪ್ರಾಯವಾಗಿದೆ. ಸಲಹಾ ಸಮಿತಿ ಸದಸ್ಯರು : ಡಾ.ಬಿ.ಆರ್.ಅಂಬೇಡ್ಕರ್ ಅವರ ಜೀವನ ಮತ್ತು ವಿಚಾರಗಳ ಕುರಿತು ಕೃತಿ ರಚನೆ ಮಾಡಲು ಸರಕಾರ ಸಲಹಾ ಸಮಿತಿ ರಚನೆ ಮಾಡಿದ್ದು, ಸಮಿತಿಯಲ್ಲಿ ಹಿರಿಯ ಚಿಂತಕ ಡಾ.ಬಂಜಗೆರೆ ಜಯಪ್ರಕಾಶ್, ಹಿರಿಯ ಪತ್ರಕರ್ತ ಇಂದೂಧರ ಹೊನ್ನಾಪುರ, ಲೇಖಕಿ ಡಾ.ದು.ಸರಸ್ವತಿ, ಡಾ.ಎಚ್.ಟಿ.ಪೋತೆ ಅವರು ಸೇರಿ ಇನ್ನಿತರರು ಇದ್ದಾರೆ ಎಂದು ಎಲ್.ಎನ್.ಮುಕುಂದರಾಜ್ ಮಾಹಿತಿ ನೀಡಿದ್ದಾರೆ. ಡಾ.ಅಂಬೇಡ್ಕರ್ ನಮ್ಮ ಕಾಲಕ್ಕೆ ಸರಿಯಾಗಿ ಧಕ್ಕುತ್ತಿಲ್ಲ. ಡಾ.ಬಿ.ಆರ್.ಅಂಬೇಡ್ಕರ್ ಕುರಿತು ವಾಸ್ತವ ವಿಚಾರವನ್ನು ಜನರಿಗೆ ಅರ್ಥಮಾಡಿಸುವ ಜವಾಬ್ಧಾರಿ ಪ್ರಜ್ಞಾವಂತ ಲೇಖರ ಮೇಲಿದೆ. ಸಂವಿಧಾನ ಮತ್ತು ಪ್ರಜಾಪ್ರಭುತ್ವ ವಿರೋಧಿ ಶಕ್ತಿಗಳು ಅಂಬೇಡ್ಕರ್ ಅವರ ಹೆಸರನ್ನು ದುರ್ಬಳಕೆ ಮಾಡಿಕೊಂಡು, ಸುಳ್ಳುಗಳನ್ನು ಸೃಷ್ಠಿಸಿ ಪ್ರಚಾರ ಮಾಡುತ್ತಿವೆ. ಆದ್ದರಿಂದ ಜನರಿಗೆ ಸತ್ಯವನ್ನು ತಿಳಿಸುವ ಕೆಲಸ ಮಾಡಬೇಕಿದೆ. -ಎಲ್.ಎನ್.ಮುಕುಂದರಾಜ್, ಅಧ್ಯಕ್ಷ, ಕರ್ನಾಟಕ ಸಾಹಿತ್ಯ ಅಕಾಡಮಿ
ಗುಂಪು ಮರದ ಆನಂದ್ ಹಸಿರೇ ಉಸಿರು ಎಂಬ ಸಂದೇಶದ ಹರಿಕಾರ
ಚಿಕ್ಕಬಳ್ಳಾಪುರ : ಜಿಲ್ಲೆಯ ಗುಡಿಬಂಡೆ ವಿನಾಯಕ ನಗರದ ನಿವಾಸಿ ಆನಂದ್ ಕುಮಾರ್ ಗುಂಪು ಮರದ ಆನಂದ್ ಎಂದೇ ಕರೆಯಲ್ಪಡುವ ಅವರು ಚಿಕ್ಕಬಳ್ಳಾಪುರ ಜಿಲ್ಲೆಯ ಬರಡು ಭೂಮಿಯಲ್ಲಿ ಹಸಿರು ಕ್ರಾಂತಿಯ ಬೀಜ ಬಿತ್ತಿದ ಅಪರೂಪದ ಪರಿಸರ ಹಿತಚಿಂತಕರೆಂದರೆ ಗುಂಪುಮರದ ಆನಂದ್. ವೃತ್ತಿಯಲ್ಲಿ ಶಿಕ್ಷಕರಾಗಿರುವ ಇವರು ಮೂವತ್ತು ವರ್ಷಗಳಿಂದ ಚಿಕ್ಕಬಳ್ಳಾಪುರ ಪಂಚಗಿರಿ ಬೋಧನ ಪ್ರೌಢಶಾಲೆಯಲ್ಲಿ ಸೇವೆ ಸಲ್ಲಿಸುತ್ತಾ, ಪಾಠ ಬೋಧನೆಗೆ ಮಾತ್ರ ಸೀಮಿತವಾಗದೆ ಪರಿಸರ ಸಂರಕ್ಷಣೆಯನ್ನು ತಮ್ಮ ಜೀವನದ ಧ್ಯೇಯವನ್ನಾಗಿಸಿಕೊಂಡಿದ್ದಾರೆ. ಮೂರು ಲಕ್ಷಕ್ಕೂ ಹೆಚ್ಚು ಸಸಿಗಳ ನೆಡುವಿಕೆ : ಶಾಲಾ ಆವರಣಗಳು, ಧಾರ್ಮಿಕ ಕ್ಷೇತ್ರಗಳು,ಸಾರ್ವಜನಿಕ ಸ್ಥಳಗಳು ಸೇರಿದಂತೆ ಜಿಲ್ಲೆಯಲ್ಲಿ ಇದುವರೆಗೆ ಸುಮಾರು ಮೂರು ಲಕ್ಷಕ್ಕೂ ಹೆಚ್ಚು ಸಸಿಗಳನ್ನು ನೆಟ್ಟು ಮಕ್ಕಳಲ್ಲಿ ಹಾಗೂ ಸಾರ್ವಜನಿಕರಲ್ಲಿ ಪರಿಸರ ಜಾಗೃತಿ ಮೂಡಿಸಿದ್ದಾರೆ. ಬರಗಾಲಕ್ಕೆ ತುತ್ತಾಗುವ ಜಿಲ್ಲೆಯಲ್ಲಿ ಹಸಿರು ಸಂಸ್ಕೃತಿ ಬೆಳೆಸಲು ಶ್ರಮಿಸುತ್ತಿದ್ದಾರೆ. ಇನ್ನೂ ಚಿಕ್ಕಬಳ್ಳಾಪುರ ಹಾಗೂ ಕೋಲಾರ ಜಿಲ್ಲೆಗಳು ರಾಜ್ಯದಲ್ಲಿ ಕಡಿಮೆ ಮಳೆಯ ಜಿಲ್ಲೆಗಳಾಗಿವೆ. ಸಾವಿರ ಅಡಿಗೆ ಕುಸಿದ ಅಂತರ್ಜಲ ಮಟ್ಟ,ಕುಡಿಯುವ ನೀರಿನಲ್ಲಿ ಫ್ಲೋರೈಡ್ ಪ್ರಮಾಣ ಹೆಚ್ಚಳ ಇವು ಜಿಲ್ಲೆಯ ಭವಿಷ್ಯಕ್ಕೆ ಎಚ್ಚರಿಕೆಯ ಗಂಟೆ. ಈ ಹಿನ್ನೆಲೆ ಸಮಾಜದಲ್ಲಿ ಪರಿಸರ ಕಾಳಜಿಯ ಬೀಜ ಬಿತ್ತುತ್ತಿದ್ದಾರೆ. ಮಾವು, ನುಗ್ಗೆ, ನೇರಳೆ, ಅರಳಿ, ಬೇವು ಸೇರಿದಂತೆ ಅನೇಕ ಸಸಿಗಳನ್ನು ಸ್ವಂತ ಖರ್ಚಿನಲ್ಲಿ ಖರೀದಿಸಿ ಉಚಿತವಾಗಿ ಹಂಚುವ ಮೂಲಕ ನಿಸ್ವಾರ್ಥ ಸೇವೆ ಸಲ್ಲಿಸುತ್ತಿದ್ದಾರೆ. ಸಾಲುಮರದ ತಿಮ್ಮಕ್ಕರಿಂದ ಧೀಕ್ಷೆ : ಪರಿಸರ ಸಂರಕ್ಷಣೆಯ ಪ್ರತೀಕವಾದ ಸಾಲುಮರದ ತಿಮ್ಮಕ್ಕರಿಂದ ಪ್ರೇರಣೆ ಮತ್ತು ಧೀಕ್ಷೆ ಪಡೆದು ಬರಡು ಜಿಲ್ಲೆಯಾದ ಚಿಕ್ಕಬಳ್ಳಾಪುರದಲ್ಲಿ ಹಸಿರು ಕ್ರಾಂತಿ ಮಾಡುವ ಸಂಕಲ್ಪ ಕೈಗೊಂಡಿದ್ದಾರೆ. ವಾರದಲ್ಲಿ ಒಂದು ದಿನ ಪರಿಸರ ಜಾಗೃತಿ ಕಾರ್ಯಕ್ರಮಗಳನ್ನು ನಡೆಸುವುದು ಅವರ ನಿಯಮ. ಶಾಲೆಗಳು ಹಸಿರುಮಯ : ಜಿಲ್ಲೆಯ ಅನೇಕ ಶಾಲೆ ಕಾಲೇಜುಗಳು ಗುಂಪು ಮರದ ಆನಂದ್ ಅವರ ಮಾರ್ಗದರ್ಶನದಲ್ಲಿ ತಮ್ಮ ಆವರಣಗಳನ್ನು ಹಸಿರುಮಯಗೊಳಿಸಿವೆ. ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಕೈಜೋಡಿಸಿ ಖಾಲಿ ಜಾಗಗಳನ್ನು ಮರಗಳಿಂದ ತುಂಬಿಸಿದ್ದಾರೆ. ಯಾವುದೇ ಸಭೆ, ಸಮಾರಂಭಗಳಿಗೆ ಆಹ್ವಾನ ಬಂದರೂ ಬರಿಗೈಯಲ್ಲಿ ಹೋಗುವುದಿಲ್ಲ ಒಂದು ಸಸಿಯೊಂದಿಗೆ ಹಾಜರಾಗುತ್ತಾರೆ. ರಾಜಕಾರಣಿಗಳು, ವೈದ್ಯರು, ಅಧಿಕಾರಿಗಳು, ನ್ಯಾಯಾಧೀಶರು, ಕಲಾವಿದರು ಎಲ್ಲರನ್ನೂ ಸಸಿ ನೆಡುವ ಕಾರ್ಯಕ್ರಮಗಳಲ್ಲಿ ಭಾಗಿಯಾಗಿಸಿ ಪರಿಸರ ಅರಿವು ಮೂಡಿಸುತ್ತಿದ್ದಾರೆ. ‘‘ಹಸಿರೇ ಉಸಿರು’’ ಕವನ ಸಂಕಲನ : ಬಿಡುವಿನ ವೇಳೆಯಲ್ಲಿ ‘‘ಹಸಿರೇ ಉಸಿರು’’ ಎಂಬ ಕವನ ಸಂಕಲನಕ್ಕಾಗಿ 60ಕ್ಕೂ ಹೆಚ್ಚು ಕವನಗಳನ್ನು ರಚಿಸಿದ್ದಾರೆ. ಇದರ ಜೊತೆಗೆ ರಕ್ತದಾನ ಶಿಬಿರ, ನೇತ್ರ ಚಿಕಿತ್ಸಾ ಶಿಬಿರ, ಬಡವರಿಗೆ ಬಟ್ಟೆ ವಿತರಣೆ, ಗಡಿನಾಡಿನಲ್ಲಿ ಕನ್ನಡ ಜಾಗೃತಿ ಮುಂತಾದ ಸಾಮಾಜಿಕ ಕಾರ್ಯಗಳಲ್ಲಿ ಆನಂದ್ ತೊಡಗಿಸಿಕೊಂಡಿದ್ದಾರೆ. ಪ್ರಶಸ್ತಿಗಳು ಮತ್ತು ಗೌರವಗಳು : ಗುಂಪು ಮರದ ಆನಂದ್ ಅವರಿಗೆ ಸೊಷಿಯಲ್ ಆಕ್ಷನ್ ಅವಾರ್ಡ್, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಜಿಲ್ಲಾ ಪರಿಸರ ಪ್ರಿಯ ಪ್ರಶಸ್ತಿ, ಜಿಲ್ಲಾ ವೃಕ್ಷಮಿತ್ರ ಪ್ರಶಸ್ತಿ, ಗಾಂಧಿ ಗ್ರಾಮೀಣ ಪ್ರಶಸ್ತಿ, ರಾಜ್ಯ ಮಟ್ಟದ ಸಾಲುಮರದ ತಿಮ್ಮಕ್ಕ ಹಸಿರು ಪ್ರಶಸ್ತಿ ಸೇರಿದಂತೆ ಅನೇಕ ಗೌರವಗಳು ಲಭಿಸಿವೆ. ಇದಲ್ಲದೆ ರಾಷ್ಟ್ರೀಯ ವನಸಿರಿ ರತ್ನ ಪ್ರಶಸ್ತಿಯನ್ನು ಮೇನಕಾ ಗಾಂಧಿ ಅವರಿಂದ ಸ್ವೀಕರಿಸಿದ್ದು ವಿಶೇಷ. ಕರ್ನಾಟಕ ರಾಜ್ಯ ಪರಿಸರ ಪ್ರಶಸ್ತಿಯನ್ನು ಸಿದ್ದರಾಮಯ್ಯ ಅವರಿಂದ ಪಡೆದಿದ್ದಾರೆ. ಡಾ.ರಾಧಾಕೃಷ್ಣ ಉತ್ತಮ ಶಿಕ್ಷಕ ಪ್ರಶಸ್ತಿ, ಗೌರವ ಡಾಕ್ಟರೇಟ್(ಮೈಸೂರು), ಸೇವಾ ರತ್ನ, ನಾಡಭೂಷಣ ಸೇರಿದಂತೆ ನೂರಾರು ಸಂಘ ಸಂಸ್ಥೆಗಳ ಸನ್ಮಾನಗಳು ಇವರ ಸಾಧನೆಯ ಸಾಕ್ಷಿ. ಪರಿಸರವನ್ನು ಉಳಿಸುವುದು ನಮ್ಮೆಲ್ಲರ ಸಾಮೂಹಿಕ ಜವಾಬ್ದಾರಿ. ಮರಗಳು ನಮಗೆ ಪ್ರಾಣವಾಯು ನೀಡುತ್ತವೆ, ನೆರಳು ನೀಡುತ್ತವೆ, ಮಳೆಯನ್ನೂ ಆಕರ್ಷಿಸುತ್ತವೆ. ಇಂದು ಅಂತರ್ಜಲ ಕುಸಿತ, ಫ್ಲೋರೈಡ್ ಸಮಸ್ಯೆ, ಬರಗಾಲ ಇವುಗಳಿಗೆ ಮೂಲ ಕಾರಣ ಮರಗಳ ನಾಶ. ಒಂದು ಮರ ಕಡಿದರೆ ಹತ್ತು ಮರಗಳನ್ನು ಬೆಳೆಸುವ ಸಂಕಲ್ಪ ಪ್ರತಿಯೊಬ್ಬರೂ ಮಾಡಬೇಕು.ವರ್ಷಕ್ಕೆ ಕನಿಷ್ಠ ಒಂದು ಸಸಿ ನೆಟ್ಟು ಅದನ್ನು ಮಗುವಿನಂತೆ ಸಾಕಿದರೆ ನಮ್ಮ ಜಿಲ್ಲೆ ಹಸಿರುಮಯವಾಗುತ್ತದೆ. ಹಸಿರೇ ಉಸಿರು ಪರಿಸರ ಉಳಿದರೆ ಮಾತ್ರ ನಮ್ಮ ಮುಂದಿನ ಪೀಳಿಗೆ ಸುರಕ್ಷಿತವಾಗಿರುತ್ತದೆ, ಪ್ರತಿಯೊಬ್ಬರೂ ಶುಭ ಸಂದರ್ಭಗಳಲ್ಲಿ ಗಿಡ ನೆಡುವ ಮೂಲಕ ಸಮಾಜಕ್ಕೆ ಪರಿಸರ ಉಳಿಸಿ ಮರ ಗಿಡ ಬೆಳೆಸಿ ಎಂಬ ಸಂದೇಶ ನೀಡಬೇಕು. -ಗುಂಪು ಮರದ ಆನಂದ್, ರಾಜ್ಯ ಪ್ರಶಸ್ತಿ ಪುರಸ್ಕೃತ,(ಪರಿಸರ ಸೇವೆ), ಶಿಕ್ಷಕ, ಚಿಕ್ಕಬಳ್ಳಾಪುರ
ಬಾಗಲಕೋಟೆ ಉಪಚುನಾವಣೆ: ಮೇಟಿ ಪುತ್ರನಿಗೆ ಕಾಂಗ್ರೆಸ್ ಟಿಕೆಟ್
‘ಕೈ’ ಹಿಡಿಯುತ್ತಾ ಆಡಳಿತಾರೂಢ ಪಕ್ಷದ ಲೆಕ್ಕಾಚಾರ?
ಮೈಸೂರು ; ಬಾಂಬ್ ಬೆದರಿಕೆ ಪತ್ತೆ ಕಗ್ಗಂಟು
Gemini saidಹಿಂದೆ ಕಚೇರಿಗಳಿಗೆ ಕರೆ ಮಾಡುವ ಮೂಲಕ ಕೇಳಿಬರುತ್ತಿದ್ದ ಬಾಂಬ್ ಬೆದರಿಕೆಗಳು ಈಗ ಇ-ಮೇಲ್ ಸಂದೇಶಗಳ ರೂಪ ಪಡೆದುಕೊಳ್ಳುತ್ತಿವೆ. ಇಂತಹ ಹುಸಿ ಬೆದರಿಕೆ ಸಂದೇಶಗಳನ್ನು ಕಳುಹಿಸುವವರನ್ನು ಪತ್ತೆಹಚ್ಚುವುದು ಸದ್ಯ ಪೊಲೀಸ್ ಇಲಾಖೆಗೆ ದೊಡ್ಡ ತಾಂತ್ರಿಕ ಸವಾಲಾಗಿ ಪರಿಣಮಿಸಿದೆ.
IPL 2026 | ಪಂಜಾಬ್ ಕಿಂಗ್ಸ್ ಗೆ ಶ್ರೇಯಸ್ ಅಯ್ಯರ್ ಸಾರಥ್ಯ : ಫರ್ಗ್ಯುಸನ್ ಜಾಗಕ್ಕೆ ಯಾರು?
ಮುಂಬೈ: ಕಳೆದ ಐಪಿಎಲ್ ಸೀಸನ್ನಲ್ಲಿ ನಿರಂತರವಾಗಿ ಉತ್ತಮ ಪ್ರದರ್ಶನ ನೀಡುತ್ತಾ ಬಂದ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ಪಂಜಾಬ್ ಕಿಂಗ್ಸ್ ತಂಡ ಈ ಬಾರಿ ಮತ್ತೆ ಶ್ರೇಯಸ್ ಅಯ್ಯರ್ ಸಾರಥ್ಯದಲ್ಲಿ ಉತ್ತಮ ಪ್ರದರ್ಶನ ನೀಡಲು ಸಜ್ಜಾಗಿದೆ. ಲೀಗ್ ಹಂತದಲ್ಲಿ ಅಗ್ರಸ್ಥಾನದಲ್ಲಿದ್ದ ಪಂಜಾಬ್ 2014ರ ಬಳಿಕ ಮೊದಲ ಬಾರಿಗೆ ಪ್ರಶಸ್ತಿ ಸುತ್ತಿನಲ್ಲಿ ಸೆಣೆಸಿತ್ತು. 2026ರ ಐಪಿಎಲ್ ಸೀಸನ್ನಲ್ಲಿ ಕೂಡಾ ಪ್ರಮುಖ ಹಳೆಯ ಆಟಗಾರರನ್ನು ಉಳಿಸಿಕೊಂಡಿದ್ದು, ಮಿನಿ ಹರಾಜಿನಲ್ಲಿ ನಾಲ್ವರನ್ನು ಖರೀದಿಸಿದೆ. ಆಸ್ಟ್ರೇಲಿಯಾದ ಆಲ್ರೌಂಡರ್ ಬೆನ್ ದ್ವರ್ಶುಯಿಸ್ (ರೂ. 4.4 ಕೊಟಿ), ಕೂಪರ್ ಕೊನಿಲಿ (3 ಕೋಟಿ) ಅವರು ಮಧ್ಯಮ ಕ್ರಮಾಂಕವನ್ನು ಬಲಪಡಿಸುವ ಸಾಧ್ಯತೆ ಇದೆ. ವಿಕೆಟ್ ಕೀಪರ್ ಪ್ರಭ್ಸಿಮ್ರನ್ ಸಿಂಗ್ 2025ರ ಸೀಸನ್ನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದು, ಆರಂಭಿಕ ಆಟಗಾರನಾಗಿ ನಿರಂತರವಾಗಿ ಉತ್ತಮ ಪ್ರದರ್ಶನ ನೀಡುತ್ತಾ ಬಂದಿದ್ದರು. 17 ಪಂದ್ಯಗಳಲ್ಲಿ 32.29 ಸರಾಸರಿಯಲ್ಲಿ 549 ರನ್ಗಳನ್ನು ಕಲೆ ಹಾಕಿದ್ದಲ್ಲದೇ 160ಕ್ಕೂ ಅಧಿಕ ಸ್ಟ್ರೈಕ್ರೇಟ್ ಹೊಂದಿದ್ದರು. ಈ ಬಾರಿಯೂ ಆರಂಭಿಕ ಆಟಗಾರ ಮತ್ತು ವಿಕೆಟ್ ಕೀಪಿಂಗ್ ಜವಾಬ್ದಾರಿಯನ್ನು ಅವರು ನಿಭಾಯಿಸಲಿದ್ದಾರೆ. ಕಳೆದ ಬಾರಿ ಐಪಿಎಲ್ಗೆ ಪದಾರ್ಪಣೆ ಮಾಡಿದ್ದ ಪ್ರಿಯಾಂಶ್ ಆರ್ಯ 17 ಪಂದ್ಯಗಳಲ್ಲಿ 475 ರನ್ ಕಲೆಹಾಕಿದ್ದರು. ಅದ್ಭುತ ಎನಿಸುವ 179.25 ಸ್ಟ್ರೈಕ್ರೇಟ್ ಹೊಂಡಿದ್ದರು. ಚೊಚ್ಚಲ ಟೂರ್ನಿಯಲ್ಲಿ ಅದ್ಭುತ ಪ್ರದರ್ಶನ ನೀಡಿದ ಖ್ಯಾತಿಗೆ ಪಾತ್ರರಾಗಿದ್ದ ಅವರು ಪ್ರಭ್ಸಿಮ್ರನ್ ಅವರಿಗೆ ಸಾಥ್ ನೀಡಲಿದ್ದಾರೆ. ಪಂಜಾಬ್ ಕಿಂಗ್ಸ್ ತಂಡ ನಾಯಕ ಶ್ರೇಯಸ್ ಅಯ್ಯರ್ ಅವರನ್ನು 26,75 ಕೋಟಿ ರೂಪಾಯಿಗೆ ಖರೀದಿಸಿತ್ತು. ಅದಕ್ಕೆ ತಕ್ಕ ಪ್ರದರ್ಶನ ನೀಡಿದ ಅವರು, 11 ವರ್ಷ ಬಳಿಕ ತಂಡವನ್ನು ಫೈನಲ್ಗೆ ಒಯ್ದಿದ್ದರು. ಸೀಸನ್ನಲ್ಲಿ 600ಕ್ಕೂ ಹೆಚ್ಚು ರನ್ ಕಲೆ ಹಾಕಿದ್ದರು. ನೇಹಲ್ ವಡೇರಾ, ಶಶಾಂಕ್ ಸಿಂಗ್,ಮಾಕ್ರ್ಯೂಸ್ ಸ್ಟೋನಿಸ್ ಮಧ್ಯಮಕ್ರಮಾಂಕಕ್ಕೆ ಶಕ್ತಿ ತುಂಬಲಿದ್ದಾರೆ. ವೇಗಿ ಮಾರ್ಕೊ ಜಾನ್ಸನ್, ಅಜ್ಮತ್ತುಲ್ಲಾ ಒಮ್ರಾಜಿ, ಕ್ಸೇವಿಯರ್ ಬಟ್ರ್ಲೆಟ್, ಅರ್ಷದೀಪ್ ಸಿಂಗ್, ಯಜುವೇಂದ್ರ ಚಾಹಲ್ ಹೀಗೆ ಬೌಲಿಂಗ್ ಬತ್ತಳಿಕೆಯಲ್ಲಿ ಹಲವು ಅಸ್ತ್ರಗಳಿವೆ.
ವಿಶ್ವವಿದ್ಯಾನಿಲಯಗಳ ಶೈಕ್ಷಣಿಕ ದಾಖಲೆಗಳಿಗಾಗಿ ವಿದ್ಯಾರ್ಥಿಗಳ ಪರದಾಟ
ಮುದ್ರಿತ ಅಂಕಪಟ್ಟಿಗಳನ್ನು ನೀಡುತ್ತಿಲ್ಲ, ಡಿಜಿಲಾಕರ್ನಲ್ಲಿಯೂ ಅಂಕಪಟ್ಟಿಗಳಿಲ್ಲ
ಮಾರ್ಚ್ 23ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ
Petrol, Diesel Price: ಶಕ್ತಿಯ ಮೂಲಗಳು ಎನಿಸಿಕೊಂಡಿರುವ ಪೆಟ್ರೋಲ್ ಮತ್ತು ಡೀಸೆಲ್ ಇಂಧನ ಅತ್ಯವಶ್ಯಕವಾಗಿ ಬೇಕಾಗುವ ಸಂಪನ್ಮೂಲಗಳಾಗಿವೆ. ಹಾಗಾದ್ರೆ, ಬೆಂಗಳೂರು ಸೇರಿದಂತೆ ಕರ್ನಾಟಕದ ಇತರ ಜಿಲ್ಲೆಗಳಲ್ಲಿ ಇಂದು (ಮಾರ್ಚ್ 23) ಲೀಟರ್ ಪೆಟ್ರೋಲ್, ಡೀಸೆಲ್ ಬೆಲೆ ಎಷ್ಟಿದೆ ಎಂದು ಇಲ್ಲಿ ತಿಳಿಯಿರಿ. ಇತ್ತೀಚಿನ ದಿನಗಳಲ್ಲಿ ಎಲೆಕ್ಟ್ರಿಕ್ ವಾಹನಗಳು ಹೆಚ್ಚಾಗುತ್ತಿವೆ. ಹಾಗಂತ ಇಂಧನದ ಬೇಡಿಕೆ ಏನು ಕಡಿಮೆ ಆಗಿಲ್ಲ.
ಕಾರು ಡ್ರಿಪ್ಟಿಂಗ್ ಪುಂಡಾಟ : ಮುತ್ತಪ್ಪ ರೈ ಪುತ್ರನಿಗೆ ನೋಟಿಸ್, ವಿಚಾರಣೆಗೆ ಬರುವಂತೆ ಸೂಚನೆ
ಬೆಂಗಳೂರಿನ ಮಹಾತ್ಮ ಗಾಂಧಿ ರಸ್ತೆಯ ಅನಿಲ್ ಕುಂಬ್ಳೆ ವೃತ್ತದ ಬಳಿ ಲ್ಯಾಂಬೋರ್ಗಿನಿ ಕಾರಿನಲ್ಲಿ ಅಪಾಯಕಾರಿಯಾಗಿ ಡ್ರಿಫ್ಟಿಂಗ್ ಮಾಡುವ ಮೂಲಕ ಸಾರ್ವಜನಿಕರಿಗೆ ಆತಂಕ ಮೂಡಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಬ್ಬನ್ಪಾರ್ಕ್ ಸಂಚಾರ ಠಾಣೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಈ ಪುಂಡಾಟದ ಹಿನ್ನೆಲೆಯಲ್ಲಿ ಮುತ್ತಪ್ಪ ರೈ ಅವರ ಪುತ್ರ ರಿಕ್ಕಿ ರೈ ಅವರಿಗೆ ಪೊಲೀಸರು ನೋಟಿಸ್ ಜಾರಿ ಮಾಡಿದ್ದು, ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಿದ್ದಾರೆ.
ಶಿವಪುರ ಸರಕಾರಿ ಶಾಲಾ ವಿದ್ಯಾರ್ಥಿಗಳಿಂದ ತರಕಾರಿ ತೋಟ !
ಮಧ್ಯಾಹ್ನದ ಬಿಸಿಯೂಟಕ್ಕೆ ಮಕ್ಕಳೇ ಬೆಳೆಸಿದ ಸಾವಯವ ತರಕಾರಿ
ಸಾವಯವ ಕೃಷಿಯಿಂದ ಕಲ್ಲಂಗಡಿ ಬೆಳೆದು ಯಶಸ್ಸು ಕಂಡ ಬಾಳುರ್ ಗ್ರಾಮದ ರೈತ
ಸಾವಯವ ಕೃಷಿ ಮೂಲಕವೇ ಕಲ್ಲಂಗಡಿ ಬೆಳೆದು ಯಶಸ್ಸು ಸಾಧಿಸಿ ಬೀದರ್ನ ತಂದೆ-ಮಗ ಇತರ ರೈತರಿಗೆ ಮಾದರಿಯಾಗಿದ್ದಾರೆ. ತಂದೆ ಪೂರ್ಣಕಾಲಿಕ ಕೃಷಿಕರಾಗಿದ್ದು, ಮಗ ಕಂಪೆನಿ ಕೆಲಸದಲ್ಲಿದ್ದರೂ, ರಜೆ ಹಾಕಿ ಕೃಷಿ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಆ ಮೂಲಕ ಅರೆ ಕಾಲಿಕ ಕೃಷಿಕರಾಗಿ ತಂದೆಗೆ ಬೆನ್ನೆಲುಬಾಗಿದ್ದಾರೆ. ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಬಾಳುರ್ ಗ್ರಾಮದ ರೈತ ರಾಜಕುಮಾರ್ ಪಾಂಚಾಳ್ ಅವರು ಸಾವಯವ ಕೃಷಿಯಿಂದ ಸುಮಾರು ಐದು ಎಕರೆ ಭೂಮಿಯಲ್ಲಿ ಕಲ್ಲಂಗಡಿ ಹಣ್ಣು ಬೆಳೆದಿದ್ದು, ಅದಕ್ಕೆ ಅವರ ಮಗ ಸಚಿನ್ ಪಾಂಚಾಳ್ ಅವರು ಸಾಥ್ ನೀಡುತ್ತಿದ್ದಾರೆ. ರಾಜಕುಮಾರ್ ಪಾಂಚಾಳ್ ಅವರಿಗೆ ಸುಮಾರು 7 ಎಕರೆ ಜಮೀನು ಇದ್ದು, 3-4 ವರ್ಷಗಳಿಂದ ಅವರು ಕಲ್ಲಂಗಡಿ ಬೆಳೆಯುತ್ತಿದ್ದಾರೆ. ಈ ವರ್ಷ ತೋಟಗಾರಿಕೆ ಇಲಾಖೆಯಿಂದ ಮಾಹಿತಿ ಪಡೆದುಕೊಂಡು ಸಂಪೂರ್ಣವಾಗಿ ಸಾವಯವ ಕೃಷಿ ಪದ್ಧತಿ ಅಳವಡಿಸಿಕೊಂಡು ಕಲ್ಲಂಗಡಿ ಬೆಳೆದಿದ್ದಾರೆ. ಈ ವರ್ಷ 5 ಎಕರೆ ಜಮೀನಿನಲ್ಲಿ 3 ಲಕ್ಷ ರೂ. ಬಂಡವಾಳ ಹಾಕಿ ಕಲ್ಲಂಗಡಿ ಬೆಳೆದಿದ್ದಾರೆ. ಅವರ ಮಗ ಸಚಿನ್ ಪಾಂಚಾಳ್ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಾರೆ. ತಮ್ಮ ಹೊಲದಲ್ಲಿ ಕಲ್ಲಂಗಡಿ ಬೆಳೆ ಹಾಕಿದ್ದರಿಂದ ಸಚಿನ್ ಅವರು ತಮ್ಮ ಕಂಪನಿ ಕೆಲಸಕ್ಕೆ ಮೂರು ತಿಂಗಳಿಂದ ರಜೆ ಹಾಕಿ ಕಲ್ಲಂಗಡಿ ಬೆಳೆ ಬೆಳೆಯಲು ಅವರ ತಂದೆಯ ಸಹಾಯಕ್ಕೆ ನಿಂತಿದ್ದಾರೆ. ನಂತರ ಕಲ್ಲಂಗಡಿ ಹಣ್ಣಿನ ಕಟಾವು ಆಗಿ, ರಾಶಿ ಆದ ಬಳಿಕ ಮರಳಿ ಕಂಪನಿ ಕೆಲಸಕ್ಕೆ ತೆರಳುತ್ತಾರೆ. ಆ ಮೂಲಕ ಕಂಪೆನಿ ಕೆಲಸಕ್ಕೆ ರಜೆ ಹಾಕಿ ತಂದೆಗೆ ಸಾಥ್ ನೀಡುತ್ತಿದ್ದಾರೆ. ಮಣ್ಣಿನಿಂದ ದೂರವಾಗಿ ಕಂಪೆನಿ ಕೆಲಸಗಳ ದರ್ಬಾರ್ ಹಿಂದೆ ಓಡುವ ಯುವ ಜನಾಂಗಕ್ಕೆ ಇವರು ಮಾದರಿಯಾಗಿದ್ದಾರೆ. ‘ತೋಟಗಾರಿಕೆ ಇಲಾಖೆಯ ಬಗ್ಗೆ ನಮಗೆ ಯಾವುದೇ ರೀತಿಯಲ್ಲಿ ಮಾಹಿತಿ ಇರಲಿಲ್ಲ. ಒಂದು ಸಲ ತೋಟಗಾರಿಕೆ ಇಲಾಖೆಗೆ ಭೇಟಿ ನೀಡಿದಾಗ ಅಲ್ಲಿನ ಅಧಿಕಾರಿಗಳು ನಮಗೆ ಒಳ್ಳೆ ರೀತಿಯಿಂದ ಸ್ಪಂದಿಸಿ, ಆತ್ಮೀಯವಾಗಿ ಮಾತನಾಡಿಸಿದರು. ಮಣ್ಣಿನ ಪರೀಕ್ಷೆ ಮಾಡಿಸಲು ಹೇಳಿದರು. ಹಾಗೆಯೇ ಕೆಲವೊಂದು ರೀತಿಯ ಗೊಬ್ಬರ ಹಾಕುವುದಕ್ಕೂ ಕೂಡ ಅವರು ಸಲಹೆ ನೀಡಿದರು. ಅವರ ಸಲಹೆಯಂತೆ ನಾವು ಎಲ್ಲವೂ ಮಾಡಿಸಿದ್ದೇವೆ. ಹಾಗಾಗಿಯೇ ಬೇರೆಯವರ ಬೆಳೆಗಿಂತಲೂ ನಮ್ಮ ಬೆಳೆ ಚೆನ್ನಾಗಿ ಬಂದಿದೆ’ ಎಂದು ಸಚಿನ್ ಪಾಂಚಾಳ್ ಹೇಳುತ್ತಾರೆ. ಸುತ್ತಮುತ್ತಲಿನ ಎಲ್ಲ ರೈತರಿಗಿಂತ ತಮ್ಮ ಕಲ್ಲಂಗಡಿ ಫಸಲು ಬಂದಿತ್ತು. ಇದರಿಂದ 6ರಿಂದ7 ಲಕ್ಷ ರೂ. ಆದಾಯ ಬರುವ ನಿರೀಕ್ಷೆ ಇತ್ತು. ಆದರೆ ಮಾರುಕಟ್ಟೆಯಲ್ಲಿ ಕಲ್ಲಂಗಡಿಯ ಬೆಲೆ ಕುಸಿತ ಇರುವುದರಿಂದ ನಿರೀಕ್ಷೆ ಮಟ್ಟದಲ್ಲಿ ಲಾಭ ಬರುವುದಿಲ್ಲ ಎನ್ನುವುದು ಅವರ ಅಭಿಪ್ರಾಯ. ಕಲ್ಲಂಗಡಿ ಹಣ್ಣುಗಳನ್ನು ನೇರವಾಗಿ ಇವರು ಮಾರುಕಟ್ಟೆಗೆ ಕಳುಹಿಸುವುದಿಲ್ಲ. ಮಧ್ಯವರ್ತಿಗಳೇ ಇವರು ಬೆಳೆದ ಹೊಲಕ್ಕೆ ಬಂದು ಖರೀದಿಸಿಕೊಂಡು ಹೋಗುತ್ತಾರೆ. ಮಧ್ಯವರ್ತಿಗಳಿಂದಲೂ ಕೂಡ ಇವರ ಲಾಭಾಂಶದಲ್ಲಿ ಏರುಪೇರಾಗಬಹುದು. ಅಲ್ಲದೆ, ಇತ್ತೀಚಿಗೆ ಮಳೆ ಬೀಳುತ್ತಿರುವುದರಿಂದ ವಾತಾವರಣ ತಂಪಾಗಿದೆ. ಹಾಗಾಗಿ ತಂಪಾದ ವಾತಾವರಣದಲ್ಲಿ ಕಲ್ಲಂಗಡಿ ಹಣ್ಣು ಮಾರುಕಟ್ಟೆ ಕುಸಿಯುತ್ತದೆ. ಆದ್ದರಿಂದ ಬದಲಾದ ವಾತಾವರಣ ಕೂಡ ಅವರ ಲಾಭದ ಮೇಲೆ ಪರಿಣಾಮ ಬೀರಬಹುದು ಎಂಬ ಆತಂಕವಿದೆ. ನಾನು ಕಂಪನಿಯಲ್ಲಿ ಕೆಲಸ ಮಾಡುತ್ತೇನೆ. ನಮ್ಮ ತಂದೆ ಕಲ್ಲಂಗಡಿ ಬೆಳೆಯುತ್ತಿದ್ದುದರಿಂದ ನಾನು ಕೆಲಸಕ್ಕೆ ರಜೆ ಹಾಕಿ ಅವರಿಗೆ ಸಹಾಯ ಮಾಡುತ್ತಿದ್ದೇನೆ. ಸಾವಯವ ಕೃಷಿಯಿಂದ ನಮ್ಮ ಬೆಳೆ ಚೆನ್ನಾಗಿ ಬಂದಿದ್ದು, ಒಳ್ಳೆ ಆದಾಯ ಬರುವ ನಿರೀಕ್ಷೆ ಇತ್ತು. ಮಾರುಕಟ್ಟೆಯಲ್ಲಿ ಬೆಲೆ ಕಡಿಮೆ ಇರುವುದರಿಂದ ಆದಾಯದಲ್ಲಿ ಕುಸಿತವಾಗುವ ಆತಂಕವಿದೆ. - ಸಚಿನ್ ಪಾಂಚಾಳ್, ರೈತನ ಮಗ. ಸಾವಯವ ಕೃಷಿಯಲ್ಲಿ ಸಾಗುವಳಿ ಮಾಡಿದಾಗ ಭೂಮಿ ಆರೋಗ್ಯದ ಜೊತೆಗೆ ಇಡೀ ಮಾನವ ಕುಲದ ಆರೋಗ್ಯ ಕಾಪಾಡಬಹುದು. ಸಾಗುವಳಿ ಕೃಷಿಯಿಂದ ಕಡಿಮೆ ಖರ್ಚಿನಲ್ಲಿ ಅಧಿಕ ಲಾಭ ಪಡೆಯಬಹುದು. ಟ್ರೈಕೋಡರ್ಮಾ, ಸೋಡೊನೊಮೋಸ್ ಹಾಕಿದರೆ ಮಣ್ಣಿನಿಂದ ಹರಡುವ ರೋಗಗಳು ನಿಯಂತ್ರಣದಲ್ಲಿಡಬಹುದು. - ನಿಲಂಜನ್, ಸಹಾಯಕ ನಿರ್ದೇಶಕ, ತೋಟಗಾರಿಕೆ ಜೈವಿಕ ಕೇಂದ್ರ
ಮರದ ಪೀಠೋಪಕರಣಗಳಿಗೆ ಪ್ರೆಪೋಟಿ ನೀಡುತ್ತಿರುವ ‘ತೆಂಗಿನ ನಾರಿನ ಉತ್ಪನ್ನಗಳು’
‘ರಾಜ್ಯ ತೆಂಗಿನ ನಾರಿನ ಅಭಿವೃದ್ಧಿ ನಿಗಮ ನಿಯಮಿತ’ದ ವತಿಯಿಂದ ಗ್ರಾಮೀಣ ಮಹಿಳೆಯರು ತೆಂಗಿನ ನಾರಿನಿಂದ ತಯಾರಿಸಿರುವ ಉತ್ಪನ್ನಗಳು, ಮರದ ಪೀಠೋಪಕರಣಗಳಿಗಿಂತ ಭಿನ್ನ, ಸೌಂದರ್ಯ, ಪರಿಸರ ಸ್ನೇಹಿಯಾಗಿವೆ. ಅಲ್ಲದೆ, ಅಗ್ಗದ ಬೆಲೆಯಲ್ಲಿ ಕೈಗೆಟುಕುತ್ತಿದ್ದು, ಜನರನ್ನು ಆಕರ್ಷಿಸುತ್ತಿವೆ. ಭಾರತದಲ್ಲಿ ನೈಸರ್ಗಿಕ ಸಂಪನ್ಮೂಲಗಳಿಂದ ಹಲವು ಉಪಯುಕ್ತ ವಸ್ತುಗಳನ್ನು ತಯಾರಿಸಲಾಗುತ್ತದೆ. ಅವುಗಳಲ್ಲಿ ತೆಂಗಿನ ನಾರಿನ ಉತ್ಪನ್ನಗಳು ಮತ್ತು ಮರದ ಉತ್ಪನ್ನಗಳು ಪ್ರಮುಖವಾಗಿವೆ. ಈ ಎರಡೂ ಉತ್ಪನ್ನಗಳು ಜನರ ದೈನಂದಿನ ಜೀವನದಲ್ಲಿ ಉಪಯೋಗವಾಗುತ್ತವೆ. ಆದರೆ ಅವುಗಳ ಗುಣಲಕ್ಷಣ, ತಯಾರಿಕೆ ವಿಧಾನ ಮತ್ತು ಬಳಕೆಗಳಲ್ಲಿ ಹಲವು ವ್ಯತ್ಯಾಸಗಳಿವೆ. ತೆಂಗಿನಕಾಯಿ ರಾಜ್ಯದಲ್ಲಿ ಬಹಳ ಪ್ರಮುಖವಾದ ಕೃಷಿ ಉತ್ಪನ್ನವಾಗಿದೆ. ತೆಂಗಿನ ಮರದ ಪ್ರತಿಯೊಂದು ಭಾಗವೂ ಮನುಷ್ಯನಿಗೆ ಉಪಯೋಗವಾಗುತ್ತದೆ. ತೆಂಗಿನಕಾಯಿ ಆಹಾರಕ್ಕೆ ಮಾತ್ರವಲ್ಲದೆ, ಕಾಯಿಯ ಹೊರಚಿಪ್ಪಿನಿಂದ ದೊರೆಯುವ ನಾರನ್ನು ಬಳಸಿ ಹಲವಾರು ಉಪಯುಕ್ತ ಉತ್ಪನ್ನಗಳನ್ನು ತಯಾರಿಸಲಾಗುತ್ತದೆ. ತೆಂಗಿನ ನಾರು ಬಲವಾದ ಮತ್ತು ದೀರ್ಘಕಾಲ ಬಾಳಿಕೆ ಬರುವ ಗುಣ ಹೊಂದಿದೆ. ಇದು ನೀರಿಗೆ ಮತ್ತು ತೇವಾಂಶಕ್ಕೆ ಸಹನೀಯವಾಗಿರುವುದರಿಂದ ಸುಲಭವಾಗಿ ಹಾಳಾಗುವುದಿಲ್ಲ. ಆದುದರಿಂದ ಈ ನಾರನ್ನು ಬಳಸಿ ತಯಾರಿಸಿದ ಉತ್ಪನ್ನಗಳು ಹೆಚ್ಚು ಕಾಲ ಬಳಸಬಹುದು. ನಾರು ಸಂಪೂರ್ಣವಾಗಿ ಪ್ರಕೃತಿಯಿಂದ ದೊರೆಯು ವುದರಿಂದ ಇದು ಪರಿಸರ ಸ್ನೇಹಿಯಾಗಿದ್ದು, ಮಣ್ಣಿನಲ್ಲಿ ಸುಲಭವಾಗಿ ಕರಗುತ್ತದೆ. ತೆಂಗಿನ ನಾರಿನಿಂದ ಹಲವಾರು ವಿಧದ ವಸ್ತುಗಳನ್ನು ತಯಾರಿಸಲಾಗುತ್ತದೆ. ಆ ನಿಟ್ಟಿನಲ್ಲಿ ರಾಜ್ಯ ತೆಂಗಿನ ನಾರಿನ ಅಭಿವೃದ್ಧಿ ನಿಗಮ ನಿಯಮಿತದ ವತಿಯಿಂದ ಗ್ರಾಮೀಣ ಮಹಿಳೆಯರು ತೆಂಗಿನ ನಾರಿನಿಂದ ತಯಾರಿಸಿದ ಡಚ್ ಮ್ಯಾಟ್, ಸಾರ್ವೆ ಹುಡಿ, ಪಾಟ್ಗಳು, ನಾರಿನ ಬೆಡ್ಗಳು, ಮಣ್ಣಿಗೆ ಪೂರಕವಾದ ಕಾಯರ್ ಪಿತ್ ಗೊಬ್ಬರ, ಕುರ್ಚಿಗಳು, ಬಾಗಿಲು, ಸಾವಯವ ಕೃಷಿಗೆ ಪೂರಕವಾದ ತೆಂಗಿನ ನಾರಿನ ಚೀಲ ಮೊದಲಾದವು ಮರದ ಹಲಗೆಯಿಂದ ತಯಾರಿಸಿದ ಉತ್ಪನ್ನಗಳಿಗಿಂತಲೂ ಯಾವುದೇ ರೀತಿಯಲ್ಲೂ ಕಡಿಮೆ ಇಲ್ಲ ಎನ್ನುವಂತಿದೆ. ಪ್ರಸಕ್ತ ವರ್ಷದಲ್ಲಿ ತೆಂಗಿನ ನಾರಿನ ಉತ್ಪನ್ನಗಳಿಂದ ಅಂದಾಜು 100 ಕೋಟಿ ರೂ.ಯಷ್ಟು ಆದಾಯ ವಹಿವಾಟು ಮಾಡುವ ಗುರಿಯನ್ನು ಇಟ್ಟುಕೊಳ್ಳಲಾಗಿದೆ. ತೆಂಗಿನ ನಾರಿನ ಉತ್ಪನ್ನಗಳ ತಯಾರಿಕೆಯಿಂದ ಗ್ರಾಮೀಣ ಮಹಿಳೆಯರಿಗೆ ಉದ್ಯೋಗ ಸೃಷ್ಟಿಯಾಗಲಿದೆ. ಪ್ರಸ್ತುತ ನಿಗಮದ 35 ಯೂನಿಟ್ಗಳಲ್ಲಿ ಮಹಿಳೆಯರೇ ಕೆಲಸ ಮಾಡುತ್ತಿದ್ದಾರೆ. 1,500ಕ್ಕೂ ಹೆಚ್ಚು ಉದ್ಯೋಗ ಸೃಷ್ಟಿಗೆ ಬೇಡಿಕೆ ಇದೆ. ಯಾವುದೇ ಸ್ವ-ಉದ್ದಿಮೆದಾರರು 1 ಕೋಟಿ ರೂ.ಬಂಡವಾಳ ಹೂಡಿಕೆ ಮಾಡಿದ್ದಲ್ಲಿ, 100 ಮಂದಿಗೆ ಉದ್ಯೋಗ ಕಲ್ಪಿಸಬಹುದು. ಸದ್ಯ ದೇವಾಲಯಗಳು, ಮಠ-ಮಂದಿರಗಳು, ಕಚೇರಿಗಳಲ್ಲಿ ಬಳಸಬಹುದಾದ ತೆಂಗಿನ ನಾರಿನ ಉತ್ಪನ್ನಗಳನ್ನು ಪರಿಚಯಿಸಲಾಗಿದೆ. ಆನ್ಲೈನ್ ಮಾರುಕಟ್ಟೆಗಿಂತ ಕಡಿಮೆ ದರದಲ್ಲಿ ಇವುಗಳು ಲಭ್ಯವಾಗಲಿದೆ. -ಸಿ.ಎನ್.ಶಿವಪ್ರಕಾಶ್, ರಾಜ್ಯ ತೆಂಗು ನಾರಿನ ಅಭಿವೃದ್ಧಿ ನಿಗಮ ನಿಯಮಿತ ವ್ಯವಸ್ಥಾಪಕ ನಿರ್ದೇಶಕ ತೆಂಗಿನ ಮರವನ್ನು ‘ಕಲ್ಪವೃಕ್ಷ’ ಎಂದು ಕರೆಯುತ್ತಾರೆ. ತೆಂಗಿನ ಮರದ ಪ್ರತಿಯೊಂದು ಭಾಗವೂ ಮಾನವನಿಗೆ ಉಪಯೋಗವಾಗುತ್ತದೆ. ಇತ್ತೀಚಿನ ದಿನಗಳಲ್ಲಿ ತೋಟಗಾರಿಕೆಯಲ್ಲಿ ಕೋಯರ್ ಪೀಟ್ (ತೆಂಗಿನ ನಾರಿನ ಪುಡಿ) ಮೂಲಕ ಗಿಡಗಳನ್ನು ಬೆಳೆಸಲು ಬಳಸಲಾಗುತ್ತಿದೆ. ಇದು ಮಣ್ಣಿನಲ್ಲಿ ತೇವವನ್ನು ಉಳಿಸಿಕೊಳ್ಳಲು ಸಹಾಯ ಮಾಡುತ್ತದೆ ಮತ್ತು ಗಿಡಗಳ ಬೆಳವಣಿಗೆಗೆ ಅನುಕೂಲಕರವಾಗುತ್ತದೆ. ತೆಂಗಿನಕಾಯಿಯನ್ನು ಪ್ರತಿಯೊಬ್ಬರು ಬಳಸುತ್ತಾರೆ. ಕೊಬ್ಬರಿ ತೆಗೆದುಕೊಂಡ ನಂತರ, ಚಿಪ್ಪನ್ನು ಎಸೆಯುತ್ತಾರೆ. ತೋಟಗಾರಿಕೆ ಇಲಾಖೆ ತೆಂಗಿನ ನಾರಿನಿಂದ ಆಗುವ ಉಪಯೋಗಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಕೆಲಸ ಮಾಡಬೇಕು. -ರವಿ ಪ್ರಕಾಶ್, ರೈತ ರಾಜ್ಯ ತೆಂಗಿನ ನಾರಿನ ಅಭಿವೃದ್ಧಿ ನಿಗಮ ನಿಯಮಿತವು ಸಣ್ಣ ಉದ್ಯಮ ಕ್ಷೇತ್ರವಾಗಿದ್ದರೂ, ಇದರಲ್ಲಿ ಹೆಚ್ಚು ಉದ್ಯೋಗ ಸೃಷ್ಟಿಯಾಗುತ್ತದೆ. ಅದರಲ್ಲೂ ಗ್ರಾಮೀಣ ಮಹಿಳೆಯರಿಗೆ ಉದ್ಯೋಗಾವಕಾಶಗಳು ಸಿಗುವುದರಿಂದ ಸರಕಾರ ತೆಂಗುನಾರಿನ ಉತ್ಪನ್ನಗಳಿಗೆ ಪ್ರೋತ್ಸಾಹ ನೀಡಬೇಕು. ತೆಂಗುನಾರಿನ ಉತ್ಪನ್ನಗಳನ್ನು ಜನರಿಗೆ ಸುಲಭವಾಗಿ ತಲುಪಿಸುವ ಮಾರುಕಟ್ಟೆ ವ್ಯವಸ್ಥೆಯನ್ನು ಕಲ್ಪಿಸಿಕೊಡುವ ಪ್ರಯತ್ನ ಮಾಡಬೇಕು. ಮುಂದಿನ ದಿನಗಳಲ್ಲಿ ತೆಂಗುನಾರಿನ ಮೂಲಕ ಉತ್ಪನ್ನವಾಗುವ ಎಲ್ಲ ವಸ್ತುಗಳನ್ನು ಸರಕಾರಿ ಕಚೇರಿಗಳು, ದೇವಸ್ಥಾನಗಳು, ವಸತಿ ನಿಲಯಗಳಲ್ಲಿ ಬಳಸಲು ಆದೇಶ ಹೊರಡಿಸಲಾಗುವುದು. -ಶರಣಬಸಪ್ಪ ದರ್ಶನಾಪುರ, ಸಣ್ಣ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ದಿಮೆ ಸಚಿವ
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ
ಬೆಂಗಳೂರು: ಮದುವೆ ಹಾಗೂ ಶುಭ ಸಮಾರಂಭಗಳ ಸೀಸನ್ನಲ್ಲಿ ಆಭರಣ ಖರೀದಿಸಲು ಕಾಯುತ್ತಿರುವ ಗ್ರಾಹಕರಿಗೆ ಇದು ಭರ್ಜರಿ ಸಿಹಿಸುದ್ದಿ. ಇಂದು (ಮಾರ್ಚ್ 23, 2026) ಜಾಗತಿಕ ಮಾರುಕಟ್ಟೆಯಲ್ಲಿನ ದಿಢೀರ್ ಏರಿಳಿತಗಳ ಪರಿಣಾಮವಾಗಿ ಬಂಗಾರದ ದರದಲ್ಲಿ ಇಳಿಕೆ ಕಂಡುಬಂದಿದೆ. ವಿಶೇಷವಾಗಿ ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ ಗಮನಾರ್ಹವಾಗಿ ತಗ್ಗಿದ್ದು, ಆಭರಣ ಪ್ರಿಯರ ಮೊಗದಲ್ಲಿ ಮಂದಹಾಸ ಮೂಡಿಸಿದೆ. ಬಂಗಾರ ಹಾಗೂ ಬೆಳ್ಳಿ
ಯುಎಪಿಎ ದುರ್ಬಳಕೆ ವಿಕಸಿತ ಭಾರತಕ್ಕೆ ಮಾದರಿ ಅಲ್ಲ : ಸುಪ್ರೀಂ ನ್ಯಾಯಮೂರ್ತಿ
ಹೊಸದಿಲ್ಲಿ: ದೇಶವನ್ನು 2047ರ ಒಳಗೆ ವಿಕಸಿತ ಭಾರತನ್ನಾಗಿ ಮಾಡುವ ರಾಜಕೀಯ ಮುಖಂಡರ ಗುರಿಯಲ್ಲಿ ಚರ್ಚೆಗೆ ಮತ್ತು ಭಿನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಹೆಚ್ಚಿನ ಅವಕಾಶ ಇರಬೇಕು ಎಂದು ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಉಜ್ಜಲ್ ಭೂಯಾನ್ ಪ್ರತಿಪಾದಿಸಿದ್ದಾರೆ. ಚರ್ಚೆ ಮತ್ತು ಭಿನ್ನಾಭಿಪ್ರಾಯವನ್ನು ಅಪರಾಧೀಕರಿಸದೇ ಜಾತಿ ಆಧರಿತ ತಾರತಮ್ಯ ಮತ್ತು ದಲಿತರ ಮೇಲಿನ ದೌರ್ಜನ್ಯದಂಥ ಆಳವಾದ ಸಾಮಾಜಿಕ ದೋಷಗಳನ್ನು ಅಳಿಸುವುದು ಅಗತ್ಯ ಎಂದು ವಿಶ್ಲೇಷಿಸಿದ್ದಾರೆ. ಬೆಂಗಳೂರಿನಲ್ಲಿ ಮೊದಲ ಬಾರಿಗೆ ಸುಪ್ರೀಂಕೋರ್ಟ್ ವಕೀಲರ ಸಂಘದ ರಾಷ್ಟ್ರೀಯ ಸಮ್ಮೇಳನವನ್ನು ಉದ್ದೇಶಿಸಿ ಮಾತನಾಡಿದ ಅವರು, ಭಯೋತ್ಪಾದನಾ ವಿರೋಧಿ ಕಾನೂನು ಹಾಗೂ ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆಯ ಅನ್ವಯ ವಿವೇಚನಾರಹಿತ ಬಂಧನ ಮತ್ತು ಶಿಕ್ಷೆ ನೀಡುವ ಕ್ರಮ ವಿಕಸಿತ ಭಾರತಕ್ಕೆ ಮಾದರಿಯಾಗದು ಎಂದು ಹೇಳಿದರು. ವಿಕಸಿತ ಭಾರತದ ನನ್ನ ಮಾದರಿಯು ಸಂಪತ್ತಿನ ಸಮಾನ ಹಂಚಿಕೆ ಮತ್ತು ತಾರತಮ್ಯದ ಸಂಪೂರ್ಣ ನಿರ್ಮೂಲನೆಯಾಗಿದ್ದು, ಇದು ಸಂವಿಧಾನದ ನಿರ್ದೇಶನ ತತ್ವಗಳೂ ಆಗಿವೆ ಎಂದು ಪ್ರತಿಪಾದಿಸಿದರು. ವಿಕಸಿತ ಭಾರತದಲ್ಲಿ ನ್ಯಾಯಾಂಗ ನ್ಯಾಯಾಂಗವಾಗಿಯೇ ಉಳಿಯಬೇಕು.. ಅದು ಶಾಶ್ವತ ವಿಮರ್ಶಕನೂ ಆಗಬಾರದು ಅಥವಾ ಚೀಯರ್ಲೀಡರ್ ಕೂಡಾ ಆಗಬಾರದು ಎಂದು ಮಾರ್ಮಿಕವಾಗಿ ನುಡಿದರು. ಯುಎಪಿಎ ಅಡಿಯಲ್ಲಿ 2019ರಿಂದ 2023ರವರೆಗೆ ಬಂಧಿತರಾದವರ ಬಗ್ಗೆ ಅಂಕಿ ಅಂಶಗಳನ್ನು ಪ್ರಸ್ತುತಪಡಿಸಿದ ನ್ಯಾಯಮೂರ್ತಿಗಳು, ಕಾಯ್ದೆಯಡಿ ಸಾವಿರಾರು ಮಂದಿಯನ್ನು ಬಂಧಿಸಲಾಗಿದೆ. ಆದರೆ ಸರಾಸರಿ ಶಿಕ್ಷೆ ದರ ಶೇಕಡ 5ಕ್ಕಿಂತ ಕಡಿಮೆ ಇದೆ ಎಂದರು. ಇದು ಶಿಕ್ಷೆ ವಿಧಿಸುವ ಪ್ರಮಾಣ ನಿರಂತರವಾಗಿ ಕಡಿಮೆ ಇರುವುದನ್ನು ಸೂಚಿಸುತ್ತದೆ. ಇದು ಕಾಯ್ದೆಯ ದುರ್ಬಳಕೆಯನ್ನು ಬಿಂಬಿಸುತ್ತದೆ ಎಂದು ವಿಶ್ಲೇಷಿಸಿದರು.
ಇಂಧನ ತಾಣಗಳ ಮೇಲೆ ಅಮೆರಿಕ ದಾಳಿ ಮಾಡಿದರೆ ಹಾರ್ಮುಝ್ ಜಲಸಂಧಿಯನ್ನು ಸಂಪೂರ್ಣವಾಗಿ ಮುಚ್ಚುವ ಎಚ್ಚರಿಕೆ ನೀಡಿದ ಇರಾನ್
ಟೆಹರಾನ್: ದೇಶದ ಇಂಧನ ಮೂಲಸೌಕರ್ಯಗಳ ಮೇಲೆ ಅಮೆರಿಕ- ಇಸ್ರೇಲ್ ದಾಳಿ ನಡೆಸಿದರೆ ಟೆಹರಾನ್ ಜಲಸಂಧಿಯನ್ನು ಸಂಪೂರ್ಣವಾಗಿ ಮುಚ್ಚುವುವಾಗಿ ಇರಾನ್ ಬೆದರಿಕೆ ಹಾಕಿದೆ. 48 ಗಂಟೆಗಳ ಒಳಗಾಗಿ ಇರಾನ್ನ ಇಂಧನ ಸೌಕರ್ಯಗಳ ಮೇಲೆ ದಾಳಿ ನಡೆಸುವ ಬೆದರಿಕೆಯನ್ನು ಟ್ರಂಪ್ ಹಾಕಿದ ಬೆನ್ನಲ್ಲೇ ಇರಾನ್ ಈ ಎಚ್ಚರಿಕೆ ನೀಡಿದೆ. ಅಂತೆಯೇ ವಿವಿಧ ಗಲ್ಫ್ ದೇಶಗಳಲ್ಲಿರುವ ಅಮೆರಿಕನ್ ನೆಲೆಗಳು ದಾಳಿಯ ಕಾನೂನುಬದ್ಧ ಗುರಿಗಳಾಗುತ್ತವೆ ಎಂದು ಇಸ್ಲಾಮಿಕ್ ರೆವಲ್ಯೂಶನರಿ ಗಾರ್ಡ್ ಕಾಪ್ರ್ಸ್ (ಐಆರ್ಜಿಸಿ) ಹೇಳಿದೆ. ಯಾವುದೇ ಬೆದರಿಕೆ ಇಲ್ಲದೇ ಹಾರ್ಮುಝ್ ಜಲಸಂಧಿಯನ್ನು 48 ಗಂಟೆಗಳ ಒಳಗಾಗಿ ಸಂಪೂರ್ಣವಾಗಿ ಮುಕ್ತಗೊಳಿಸದಿದ್ದರೆ, ಅಮೆರಿಕ ಮೊದಲು ಅತಿದೊಡ್ಡ ಸೌಲಭ್ಯ ಸೇರಿದಂತೆ ಇರಾನ್ನ ವಿವಿಧ ವಿದ್ಯುತ್ ಕೇಂದ್ರಗಳ ಮೇಲೆ ದಾಳಿ ನಡೆಸುವುದು ಅನಿವಾರ್ಯವಾಗುತ್ತದೆ ಎಂದು ಎಚ್ಚರಿಸಿದ್ದರು. ಅಮೆರಿಕದ ಎಚ್ಚರಿಕೆಯ ಬಗ್ಗೆ ಪ್ರತಿಕ್ರಿಯಿಸಿದ ಇರಾನ್ ಸ್ಪೀಕರ್ ಮೊಹ್ಮದ್ ಬಕರ್ ಕಲಿಬಾಫ್, ಒಂದು ವೇಳೆ ಇರಾನ್ನ ಮೂಲಸೌಕರ್ಯಗಳನ್ನು ಗುರಿ ಮಾಡಿದರೆ, ಇಡೀ ಈ ಭಾಗದಲ್ಲಿರುವ ಪ್ರಮುಖ ಅಮೆರಿಕನ್ ಸೌಕರ್ಯಗಳನ್ನು ಮುಂದೆಂದೂ ಸರಿಪಡಿಸಲು ಆಗದ ರೀತಿಯಲ್ಲಿ ಧ್ವಂಸಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ. ಅಮೆರಿಕಕ್ಕೆ ಸಂಬಂಧಿಸಿದ ವಿದ್ಯುತ್, ಜಲ ಮೂಲಸೌಕರ್ಯ ಮತ್ತು ತಂತ್ರಜ್ಞಾನವನ್ನು ಗುರಿ ಮಾಡಲಾಗುವುದು ಎಂದು ಇರಾನ್ ಸೇನೆ ಬೆದರಿಕೆ ಹಾಕಿದೆ. ಹಾರ್ಮುಝ್ ಜಲಸಂಧಿ ಮುಚ್ಚಿರುತ್ತದೆ ಎಂದು ಪುನರುಚ್ಚರಿಸಿರುವ ಇರಾನ್ನ ರೆವಲ್ಯೂಶನರಿ ಗಾಡ್ರ್ಸ್, ಹಾರ್ಮುಝ್ ಜಲಸಂಧಿಯನ್ನು ಸಂಪೂರ್ಣವಾಗಿ ಮುಚ್ಚಲಾಗುವುದು ಹಾಗೂ ನಮ್ಮ ಹಾನಿಗೀಡಾದ ವಿದ್ಯುತ್ ಘಟಕಗಳು ಸಂಪೂರ್ಣ ದುರಸ್ತಿಯಾಗುವರೆಗೂ ಅದನ್ನು ತೆರೆಯುವುದಿಲ್ಲ ಎಂದು ಹೇಳಿಕೆ ನೀಡಿದೆ.
ಮಧ್ಯಪ್ರಾಚ್ಯ ಸಂಘರ್ಷ | ಇರಾನ್ನ ಬಾನುಲಿ ಕೇಂದ್ರದ ಮೇಲೆ ಇಸ್ರೇಲ್ ದಾಳಿ, 100 ಡಾಲರ್ ದಾಟಿದ ಕಚ್ಚಾ ತೈಲ ದರ
ಟೆಹರಾನ್ : ಕಳೆದ 24 ದಿನಗಳಿಂದ ನಡೆಯುತ್ತಿರುವ ಗಲ್ಫ್ ಯುದ್ಧ ಸೋಮವಾರ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಇರಾನ್ನ ಬಂದರ್ ಅಬ್ಬಾಸ್ನಲ್ಲಿರುವ ಬಾನುಲಿ ಕೇಂದ್ರದ ಮೇಲೆ ಇಸ್ರೇಲ್ ಸೋಮವಾರ ನಸುಕಿನಲ್ಲಿ ನಡೆಸಿದ ದಾಳಿಯಲ್ಲಿ ಕನಿಷ್ಠ ಒಬ್ಬರು ಮೃತಪಟ್ಟಿದ್ದಾರೆ. ಏತನ್ಮಧ್ಯೆ ಸಂಘರ್ಷ ಶಮನದ ಸೂಚನೆಗಳು ಇಲ್ಲದ ಹಿನ್ನೆಲೆಯಲ್ಲಿ ತೈಲ ದರ ಏರಿಕೆ ಮುಂದುವರಿದಿದ್ದು, ಸೋಮವಾರ ಮುಂಜಾನೆ ಪ್ರತಿ ಬ್ಯಾರಲ್ ಕಚ್ಚಾ ತೈಲದ ದರ 0.44 ಶೇಕಡದಷ್ಟು ಹೆಚ್ಚಿ 100 ಡಾಲರ್ ದಾಟಿದೆ. ಶನಿವಾರ ಈ ದರ 98.66 ಡಾಲರ್ ಆಗಿತ್ತು. ನಾರ್ಥ್ ಸೀ ಬ್ರೆಂಟ್ ಕ್ರೂಡ್ ದರ ಅಂದರೆ ಜಾಗತಿಕ ಬೆಂಚ್ಮಾರ್ಕ್ ಬೆಲೆ ಬ್ಯಾರಲ್ಗೆ 112.17 ಡಾಲರ್ ಆಗಿದೆ. ಫೆಬ್ರವರಿ 27ರ ವೇಳೆಗೆ ಇದು ಪ್ರತಿ ಬ್ಯಾರಲ್ಗೆ 72.48 ಡಾಳರ್ ಆಗಿತ್ತು. ಅಮೆರಿಕದ ಖಜಾನೆ ಕಾರ್ಯದರ್ಶಿ ಸ್ಕಾಟ್ ಬೆಸೆಂಟ್ ಸೋಮವಾರ ಹೇಳಿಕೆ ನೀಡಿ, ಇರಾನ್ ಆಡಳಿತವನ್ನು ಟ್ರಂಪ್ ನಿಶ್ಶಕ್ತಗೊಳಿಸಿ, ಅಪಾಯಕಾರಿಯಲ್ಲದ ರೀತಿಯಲ್ಲಿ ಮಾಡುವುದರಿಂದ ಮಧ್ಯಪ್ರಾಚ್ಯದಲ್ಲಿ ಶಾಂತಿ ನೆಲೆಸಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ವಿಶ್ವವನ್ನು ಸುರಕ್ಷಿತ ತಾಣವಾಗಿಸುವುದು ಟ್ರಂಪ್ ಗುರಿ ಎಂದು ಅವರು ವಿಶ್ಲೇಷಿಸಿದ್ದಾರೆ.
ಉತ್ತರ ಮಲಬಾರಿನ ವಿದ್ಯುತ್ ಸಮಸ್ಯೆಗೆ ಪರಿಹಾರ ; ಉಡುಪಿ-ಕರಿಂದಳಂ ವಿದ್ಯುತ್ ಕಾರಿಡಾರ್ ಸಿದ್ಧ
ಉತ್ತರ ಮಲಬಾರಿನ ವಿದ್ಯುತ್ ಸಮಸ್ಯೆಗೆ ಶಾಶ್ವತ ಪರಿಹಾರ ನೀಡಲಿರುವ ಉಡುಪಿ-ಕರಿಂದಳಂ 400 ಕೆವಿ ವಿದ್ಯುತ್ ಮಾರ್ಗದ ನಿರ್ಮಾಣವು ಜಿಲ್ಲೆಯಲ್ಲಿ ಅಂತಿಮ ಹಂತಕ್ಕೆ ತಲುಪಿದ್ದು, ಒಟ್ಟು 47 ಕಿ.ಮೀ. ವ್ಯಾಪ್ತಿಯಲ್ಲಿ ಈಗಾಗಲೇ 35 ಕಿ.ಮೀ. ತಂತಿ ಎಳೆಯುವ ಕಾರ್ಯ ಯಶಸ್ವಿಯಾಗಿ ಪೂರ್ಣಗೊಂಡಿದೆ.
ವಿಜಯನಗರ | ನದಿಯಲ್ಲಿ ಈಜಲು ತೆರಳಿದ್ದ ಇಬ್ಬರು ಸಹೋದರರು ಮೃತ್ಯು
ಹರಪನಹಳ್ಳಿ (ವಿಜಯನಗರ) : ತಾಲ್ಲೂಕಿನ ಹಲುವಾಗಲು ಗ್ರಾಮದ ಬಳಿ ತುಂಗಭದ್ರಾ ನದಿಯಲ್ಲಿ ಈಜಲು ತೆರಳಿದ್ದ ಇಬ್ಬರು ಸಹೋದರರು ಭಾನುವಾರ ಸಂಜೆ ತಂದೆಯ ಕಣ್ಣೆದುರಲ್ಲೇ ಮುಳುಗಿ ಮೃತಪಟ್ಟಿರುವ ಘಟನೆ ನಡೆದಿದೆ. ಈ ವೇಳೆ ನೀರಲ್ಲಿ ಮುಳುಗುತ್ತಿದ್ದ ಕಿರಿಯ ಪುತ್ರನನ್ನು ತಂದೆ ರಕ್ಷಿಸಿದ್ದಾರೆ ಎಂದು ತಿಳಿದು ಬಂದಿದೆ. ಮೃತರನ್ನು ಹಲುವಾಗಲು ಗ್ರಾಮದ ನಿವಾಸಿ ಕೃಷಿಕ ಮಂಜಪ್ಪ ಅವರ ಪುತ್ರರಾದ ಎಂ.ಜಿ.ಮನು (19) ಮತ್ತು ಎಂ.ಜಿ. ಪ್ರಜ್ವಲ್ (18) ಎಂದು ಗುರುತಿಸಲಾಗಿದೆ. ಮನು ಬಿ.ಇ. ಪ್ರಥಮ ವರ್ಷದ ವಿದ್ಯಾರ್ಥಿಯಾಗಿದ್ದು, ಪ್ರಜ್ವಲ್ ಪಿಯುಸಿ ವ್ಯಾಸಂಗ ಮಾಡುತ್ತಿದ್ದರು. ಮಂಜಪ್ಪ ಅವರು ತಮ್ಮ ಮೂವರು ಮಕ್ಕಳೊಂದಿಗೆ ನದಿ ದಂಡೆಗೆ ತೆರಳಿದ್ದ ವೇಳೆ, ಈಜಲು ನೀರಿಗೆ ಇಳಿದ ಮಕ್ಕಳು ಆಯತಪ್ಪಿ ಕೊಚ್ಚಿಕೊಂಡು ಹೋಗಿದ್ದಾರೆ. ತಕ್ಷಣವೇ ನೀರಿಗೆ ಇಳಿದ ಮಂಜಪ್ಪ ಅವರು ಕಿರಿಯ ಪುತ್ರ ಚಿರಂಜೀವಿಯನ್ನು ರಕ್ಷಿಸಿದ್ದಾರೆ. ಆದರೆ ಉಳಿದ ಇಬ್ಬರು ಪುತ್ರರನ್ನು ಉಳಿಸಲು ಸಾಧ್ಯವಾಗದೇ, ತಂದೆಯ ಕಣ್ಣೆದುರಲ್ಲೇ ಅವರು ನೀರುಪಾಲಾದರು ಎಂದು ತಿಳಿದು ಬಂದಿದೆ. ಘಟನೆಯ ಮಾಹಿತಿ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ಮೃತದೇಹಗಳನ್ನು ಹೊರತೆಗೆದು ಸರ್ಕಾರಿ ಆಸ್ಪತ್ರೆಗೆ ಸಾಗಿಸಿದ್ದಾರೆ. ಎಸ್ಪಿ ಎಸ್. ಜಾಹ್ನವಿ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಹಲುವಾಗಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD
ಭಾರತೀಯ ಹವಾಮಾನ ಇಲಾಖೆ (IMD) ನೀಡಿರುವ ವರದಿ ಪ್ರಕಾರ, ಬೇಸಿಗೆಯ ಕಡು ಬಿಸಿಲಿನಿಂದ ಕಂಗೆಟ್ಟಿದ್ದ ಕರ್ನಾಟಕದ ಜನತೆಗೆ ವರುಣದೇವ ಕೊನೆಗೂ ತಂಪೆರೆಯಲಿದ್ದಾನೆ. ಹೌದು, ಇಂದು (ಮಾರ್ಚ್ 23) ರಾಜ್ಯದ ಹವಾಮಾನದಲ್ಲಿ ದಿಢೀರ್ ಹಾಗೂ ಅನಿರೀಕ್ಷಿತ ಬದಲಾವಣೆಯಾಗಿದ್ದು, ಹಲವು ಜಿಲ್ಲೆಗಳಲ್ಲಿ ಗುಡುಗು ಸಹಿತ ಭಾರಿ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಕಳೆದ ಕೆಲವು ವಾರಗಳಿಂದ ಏರುತ್ತಿದ್ದ ತಾಪಮಾನದಿಂದ
ದ್ರಾಕ್ಷಿ ಬೆಳೆಗಾರರ ಕನಸು ಛಿದ್ರಗೊಳಿಸಿದ ಆಲಿಕಲ್ಲು; ಬೇಸಿಗೆ ದಿಢೀರ್ ಮಳೆಯಿಂದ ಭಾರಿ ಬೆಳೆ ನಷ್ಟ
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಬಿದ್ದ ಆಲಿಕಲ್ಲುಮಳೆಯಿಂದ 142 ಹೆಕ್ಟೇರ್ಗೂ ಹೆಚ್ಚು ಪ್ರದೇಶದಲ್ಲಿ ಬೆಳೆದಿದ್ದ ನಾನಾ ಬೆಳೆಗಳಿಗೆ ಹಾನಿಯಾಗಿದೆ. ಅದರಲ್ಲೂ ದ್ರಾಕ್ಷಿ ಬೆಳೆಯದ್ದೇ ಸಿಂಹಪಾಲು. 142 ಹೆಕ್ಟೇರ್ ಪೈಕಿ 55 ಹೆಕ್ಟೇರ್ನಷ್ಟು ದ್ರಾಕ್ಷಿ ಬೆಳೆಗೆ ಹಾನಿಯಾಗಿದೆ. ಉಳಿದಂತೆ 26 ಹೆಕ್ಟೇರ್ ಮಾವು, 6 ಹೆಕ್ಟೇರ್ ಚೆಂಡು ಹೂವು, ಆಲೂಗಡ್ಡೆ, ಸೇವಂತಿ, ಟೊಮೆಟೊ ಸೇರಿ ತೋಟಗಾರಿಕೆ ಇಲಾಖೆ ಪ್ರಕಾರ ಒಟ್ಟು ಜಿಲ್ಲಾದ್ಯಂತ 142 ಹೆಕ್ಟೇರ್ ಪ್ರದೇಶದಲ್ಲಿ ಬೆಳೆದಿರುವ ಬೆಳೆಗೆ ಹಾನಿಯಾಗಿದೆ.
ಮಾಲೂರಿಗೆ ಮಾರ್ಕಂಡೇಯ ಡ್ಯಾಂ ನೀರು? ರೈತರಿಗೆ ಆಗಲಿದೆ ಅನ್ಯಾಯ
ಕೋಲಾರದ ಮಿನಿ ಕೆಆರ್ಎಸ್ ಎಂದೇ ಖ್ಯಾತಿ ಪಡೆದಿರುವ ಮಾರ್ಕಂಡೇಯ ಡ್ಯಾಂ ನೀರನ್ನು ಮಾಲೂರು ತಾಲೂಕಿಗೆ ಕುಡಿಯಲು ಪೂರೈಸಲು ಸಿದ್ಧತೆ ನಡೆಯುತ್ತಿದೆ. ಅದು ನಡೆದಿದ್ದೇ ಆದರೆ ಡ್ಯಾಂ ನಿರ್ಮಾಣಕ್ಕೆ ವಂತಿಕೆ ನೀಡಿದ್ದ ರೈತರಿಗೆ ಅನ್ಯಾಯ ಆಗುವುದರ ಜತೆಗೆ ಯರಗೋಳ್ ಡ್ಯಾಂಗೂ ಕಂಟಕ ಎದುರಾಗುವ ಸಾಧ್ಯತೆ ಇದೆ.
ಮಾ.25ಕ್ಕೆ ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ‘ಪ್ರತಿಭಟನಾ ಸಮಾವೇಶ’
ಬೆಂಗಳೂರು : ರಾಜ್ಯ ಸರಕಾರವು ಕೇವಲ ಒಂದು ಸಮುದಾಯದ ಒತ್ತಾಯಕ್ಕೆ ಮಣಿದು ನ್ಯಾ.ನಾಗಮೋಹನ್ ದಾಸ್ ಆಯೋಗದ ವರದಿಯಂತೆ ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಜಾರಿ ಮಾಡುತ್ತಿರುವುದನ್ನು ಖಂಡಿಸಿ, ಮಾ.25ರಂದು ಫ್ರೀಡಂ ಪಾರ್ಕ್ನಲ್ಲಿ ಪ್ರತಿಭಟನಾ ಸಮಾವೇಶವನ್ನು ನಡೆಸಲಾಗುತ್ತಿದೆ ಎಂದು ಕರ್ನಾಟಕ ರಾಜ್ಯ ಬಲಗೈ ಸಮುದಾಯಗಳ ಒಕ್ಕೂಟದ ರಾಜ್ಯಾಧ್ಯಕ್ಷ ಹಾಗೂ ಮೈಸೂರಿನ ಉರಿಲಿಂಗ ಪೆದ್ದಿ ಮಠದ ಶ್ರೀಜ್ಞಾನ ಪ್ರಕಾಶ್ ಸ್ವಾಮೀಜಿ ತಿಳಿಸಿದ್ದಾರೆ. ರವಿವಾರ ಪ್ರಕಟನೆ ಹೊರಡಿಸಿರುವ ಅವರು, ಸರಕಾರ ಮೀಸಲಾತಿ ವರ್ಗೀಕರಣಕ್ಕಾಗಿ ನೇಮಕ ಮಾಡಿದ ನಾಗಮೋಹನ್ ದಾಸ್ ಆಯೋಗದ ವರದಿಯು ಅವೈಜ್ಞಾನಿಕ, ದೋಷಪೂರಿತ ಹಾಗೂ ಪಕ್ಷಪಾತದಿಂದ ಕೂಡಿದೆ. ವರದಿಯು ರೋಸ್ಟರ್ ವ್ಯವಸ್ಥೆಗಳ ವಿರುದ್ಧವಾಗಿದೆ. ಹೀಗಾಗಿ ಮಾ.25ರಂದು ನಗರದ ಫ್ರೀಡಂ ಪಾರ್ಕ್ನಲ್ಲಿ ಬೃಹತ್ ಪ್ರತಿಭಟನಾ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದಿದ್ದಾರೆ. ಪರಿಶಿಷ್ಟ ಜಾತಿಗಳ ಒಳಮಿಸಲಾತಿ ವಿಚಾರದಲ್ಲಿ ಸರ್ಕಾರ ಕೈಗೊಂಡಿರುವ ಕ್ರಮಗಳು ಅವೈಜ್ಞಾನಿಕವಾಗಿದೆ. ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ಅವರ ಏಕಸದಸ್ಯ ಆಯೋಗದ ವರದಿ ಅಪೂರ್ಣವಾಗಿದ್ದು, ಸಮೀಕ್ಷೆ ಸರಿಯಾದ ರೀತಿಯಲ್ಲಿ ನಡೆದಿಲ್ಲ ಎಂಬ ಆಕ್ಷೇಪವನ್ನು ಹಲವಾರು ಸಂಘಟನೆಗಳು ವ್ಯಕ್ತಪಡಿಸಿವೆ. ಆದರೆ ಆಯೋಗವು ಅದನ್ನು ಪರಿಗಣಿಸದೆ ವರದಿ ಸಲ್ಲಿಸಿದೆ. ಇದೊಂದು ಒಳ ಮೀಸಲಾತಿಯಲ್ಲಿ ಬಲಗೈ ಹಾಗೂ ಮತ್ತಿತರ ಸಮುದಾಯದಗಳಿಗೆ ಮರಣ ಶಾಸನವಾಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ. ಮೀಸಲಾತಿ ಪ್ರಮಾಣವನ್ನು ಶೇ.17ರಷ್ಟು ಹೆಚ್ಚಿಸಿದ್ದ ರಾಜ್ಯ ಸರಕಾರದ ಆದೇಶಕ್ಕೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ಸಾಮಾನ್ಯ ವರ್ಗದವರು ನೇಮಕಾತಿ ಪ್ರಕ್ರಿಯೆಯನ್ನು ಕೈಗೊಳ್ಳಬೇಕು ಎಂದು ಹೋರಾಟ ರೂಪಿಸಿದ ಹಿನ್ನೆಲೆಯಲ್ಲಿ, ರಾಜ್ಯ ಸರಕಾರವು ಫೆ.27ರಂದು ಶೇ.15ರ ಪ್ರಮಾಣದಲ್ಲಿ ಒಳಮೀಸಲಾತಿ ರಹಿತ ನೇಮಕ ಮಾಡಲು ಆದೇಶ ಹೊರಡಿಸಿದೆ. ಆದರೆ, 101 ಜಾತಿಗಳಲ್ಲಿ ಒಂದು ಸಮುದಾಯವು ಶೇ.15 ಮೀಸಲಾತಿಯಲ್ಲಿ ಒಳಮೀಸಲಾತಿಯನ್ನು ಅಳವಡಿಸಬೇಕೆಂದು ಹೋರಾಟ ಮಾಡುತ್ತಿದೆ. ಈ ಹೋರಾಟಕ್ಕೆ ಮಣಿದ ಸರಕಾರ ಮಾ.27ಕ್ಕೆ ರಾಜ್ಯ ಸಚಿವ ಸಂಪುಟದ ವಿಶೇಷ ಸಭೆಯನ್ನು ಏರ್ಪಡಿಸಿರುವುದು ಸರಿಯಲ್ಲ ಎಂದು ಅವರು ಖಂಡಿಸಿದ್ದಾರೆ. ಸಚಿವ ಸಂಪುಟ ಸಭೆಯಲ್ಲಿ ಶೇ.15 ಪ್ರಮಾಣದಲ್ಲಿ ಒಳಮೀಸಲಾತಿಯನ್ನು ಅಳವಡಿಸಬಾರದು. ಒಂದು ವೇಳೆ ಅಳವಡಿಸಿದರೆ, ಮುಂದೆ ಆಗುವ ಎಲ್ಲ ಅನಾಹುತಗಳಿಗೆ ರಾಜ್ಯ ಸರಕಾರವೇ ಜವಾಬ್ದಾರಿಯಾಗಬೇಕಾಗುತ್ತದೆ ಎಂದು ಜ್ಞಾನ ಪ್ರಕಾಶ್ ಸ್ವಾಮೀಜಿ ಎಚ್ಚರಿಕೆ ನೀಡಿದ್ದಾರೆ. ಸಮಾವೇಶದ ಹಕ್ಕೋತ್ತಾಯಗಳು •ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ಕೈಗೊಂಡಿರುವ ಕುಟುಂಬಗಳ ಸಮೀಕ್ಷೆಯ ಅಂಕಿ-ಅಂಶಗಳೊಂದಿಗೆ ನ್ಯಾಯಮೂರ್ತಿ ನಾಗಮೋಹನ್ದಾಸ್ ಆಯೋಗದ ಅಂಕಿ ಅಂಶಗಳನ್ನು ಹೋಲಿಕೆ ಮಾಡಿ, ವ್ಯತ್ಯಾಸಗಳು ಕಂಡುಬಂದರೆ, ಪರಿಶಿಷ್ಟ ಜಾತಿಯ ಎಲ್ಲ ಕುಟುಂಬಗಳ ಸಮೀಕ್ಷೆಯನ್ನು ಮತ್ತೊಮ್ಮೆ ಕೈಗೊಳ್ಳುವುದು. •2025ರ ಸೆ.3ರಂದು ರಾಜ್ಯ ಸರಕಾರವು ಯಾವುದೇ ಮಾನದಂಡವನ್ನು ಅನುಸರಿಸದೇ ಅವೈಜ್ಞಾನಿಕವಾಗಿ ಹೊರಡಿಸಿರುವ ಮೀಸಲಾತಿ ಆದೇಶವನ್ನು ಹಿಂಪಡೆಯುವುದು. •ನಿರ್ದೇಶನದಂತೆ ಜಾತಿ ಪ್ರಮಾಣ ಪತ್ರಗಳನ್ನು ಪ್ರವರ್ಗ ಎ, ಬಿ ಮತ್ತು ಸಿ ಎಂದು ವರ್ಗೀಕರಿಸಿರುವುದನ್ನು ಹಿಂಪಡೆದು ಮೂಲ ಜಾತಿಗಳನ್ನು ನಮೂದಿಸಿ ಜಾತಿ ಪ್ರಮಾಣ ಪತ್ರಗಳನ್ನು ನೀಡಲು ಸೂಕ್ತ ಆದೇಶ ಹೊರಡಿಸುವುದು. •ಚಿತ್ರದುರ್ಗ ಜಿಲ್ಲೆಯಲ್ಲಿ ಹೊಲಯ ಸಮುದಾಯ ಕೇವಲ 223 ಎಂದು ನ್ಯಾಯಮೂರ್ತಿ ನಾಗಮೋಹನ್ದಾಸ್ ವರದಿಯಲ್ಲಿ ದಾಖಲಿಸಿರುವುದನ್ನು ಮರು ಪರಿಶೀಲಿಸಿ ಉದ್ದೇಶ ಪೂರ್ವಕವಾಗಿ ಬಲಗೈ ಸಮುದಾಯದ ಜನಸಂಖ್ಯೆಯನ್ನು ಕಡಿಮೆ ಮಾಡಿರುವ ಆಯೋಗದ ಅಧ್ಯಕ್ಷರು ಹಾಗೂ ಅಧಿಕಾರಿಗಳ ಮೇಲೆ ದೌರ್ಜನ್ಯ ತಡೆ ಕಾಯ್ದೆಯನ್ವಯ ಮೊಕದ್ದಮೆ ದಾಖಲಿಸಲು ವಿಶೇಷ ತನಿಖಾ ತಂಡವನ್ನು ನೇಮಕ ಮಾಡುವುದು.
ದಲಿತರ ಪ್ರತಿಭೆಗೆ ಸರಿಸಾಟಿ ಯಾವುದು ಇಲ್ಲ : ಮುಕುಂದರಾಜ್
‘ಕನ್ನಡ ಸಾಹಿತ್ಯದಲ್ಲಿ ದಲಿತ ಪ್ರಜ್ಞೆ’ ಕುರಿತ ಉಪನ್ಯಾಸ, ಕವಿಗೋಷ್ಠಿ ಹಾಗೂ ಪ್ರಬಂಧ ಸ್ಪರ್ಧೆ
ಸಾಹಿತ್ಯ ಕ್ಷೆೇತ್ರಕ್ಕೆ ಅಧಿಕಾರಿಗಳಿಂದ ಕೊಡುಗೆ : ಚಿರಂಜೀವಿ ಸಿಂಗ್
ಬೆಂಗಳೂರು : ವಿವಿಧ ಕ್ಷೇತ್ರಗಳಲ್ಲಿ ವೃತ್ತಿ ನಿರ್ವಹಿಸಿದ ಹಲವಾರು ಸರಕಾರಿ ಅಧಿಕಾರಿಗಳು ಪ್ರವೃತ್ತಿಯಾಗಿ ಸಾಹಿತ್ಯ ಕ್ಷೇತ್ರದಲ್ಲಿ ತೊಡಗಿಸಿಕೊಂಡು ಬರವಣಿಗೆ ಮೂಲಕ ಗಮನ ಸೆಳೆದಿದ್ದು, ಇದು ಸಾಹಿತ್ಯ ಕ್ಷೇತ್ರಕ್ಕೆ ಉತ್ತಮ ಕೊಡುಗೆಯಾಗಿದೆ ಎಂದು ನಿವೃತ್ತ ಐಎಎಸ್ ಅಧಿಕಾರಿ ಚಿರಂಜೀವಿ ಸಿಂಗ್ ತಿಳಿಸಿದ್ದಾರೆ. ರವಿವಾರ ನಗರದ ಚಿತ್ರಕಲಾ ಪರಿಷತ್ನಲ್ಲಿ ಅಭಿರುಚಿ ಪ್ರಕಾಶನ ಮತ್ತು ಕಾಡುಮಲ್ಲೇಶ್ವರ ಗೆಳೆಯರ ಬಳಗದ ವತಿಯಿಂದ ನಡೆದ ನಿವೃತ್ತ ಐಜಿಪಿ ಸಿ.ಚಂದ್ರಶೇಖರ್ ಅವರ ಆತ್ಮಕಥೆ ‘ರಿಸನ್ ಪಾಯಿಸನ್ಸ್ ಪ್ಯಾಷನ್’ ಪುಸ್ತಕ ಲೋಕರ್ಪಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಅಧಿಕಾರಿಗಳಾಗಿ ಸಾಹಿತ್ಯ ರಚಿಸಿದ ಸಾಲಿಗೆ ಸಿ.ಚಂದ್ರಶೇಖರ್ ಸೇರ್ಪಡೆಯಾಗುತ್ತಾರೆ. ಈ ಕೃತಿ ಅತ್ಯಂತ ಆಸಕ್ತಿದಾಯಕವಾಗಿದ್ದು, ಇವರ ಬರವಣಿಗೆಯಲ್ಲಿ ಸಾಹಿತ್ಯದ ಬೆಳಕಿದೆ ಎಂದು ಅವರು ಹೇಳಿದರು. ನಿವೃತ್ತ ಐಜಿಪಿ, ಲೇಖಕ ಸಿ.ಚಂದ್ರಶೇಖರ್ ಮಾತನಾಡಿ, ಇದು ನನ್ನ ಜೀವನದ ಕಥೆ ಅನ್ನುವ ಬದಲು ನಾನು ನೋಡಿದ ವ್ಯಕ್ತಿಗಳು, ಸಮಾಜದಲ್ಲಿ ನಡೆದ ನೈಜ ಘಟನೆಗಳು. ರೈತ ಸಂಘಟನೆ ಹೋರಾಟದ ವಿಷಯಗಳನ್ನು ಒಳಗೊಂಡಿದೆ. ಇದು ನನ್ನ ನಾಲ್ಕನೇ ಪುಸ್ತಕವಾಗಿದೆ ಎಂದರು. ರೈತ ಹೋರಾಟಗಾರರಾದ ನಂಜುಂಡಸ್ವಾಮಿ, ಎಚ್.ಎಸ್.ರುದ್ರಪ್ಪ, ಸುಂದರೇಶ್, ಕಡಿದಾಳು ಶಾಮಣ್ಣ ಅವರ ಜೊತೆಯಲ್ಲಿ ಉತ್ತಮ ಒಡನಾಟದಿಂದ ರೈತ ಚಳವಳಿ, ರೈತರ ಸಮಸ್ಯೆಗಳು ನನಗೆ ಅರ್ಥವಾಯಿತು ಎಂದರು. ಈ ಸಂದರ್ಭದಲ್ಲಿ ಕಾಡು ಮಲ್ಲೇಶ್ವರ ಗೆಳಯರ ಬಳಗದ ಅಧ್ಯಕ್ಷ ಬಿ.ಕೆ.ಶಿವರಾಂ, ಪ್ರಕಾಶಕರಾದ ಅಭಿರುಚಿ ಗಣೇಶ್, ಸುಚಿತಾ ನಾಗೇಶ್, ಮತ್ತಿತರರು ಉಪಸ್ಥಿತರಿದ್ದರು.
ಕನ್ನಡ ಪ್ರಜ್ಞೆ ಸಂವಿಧಾನವನ್ನು ಗೌರವಿಸುವ ಪ್ರಜ್ಞೆ : ಪ್ರೊ.ಎಸ್.ಜಿ.ಸಿದ್ದರಾಮಯ್ಯ
‘ಬಸವ ಪ್ರಶಸ್ತಿ’ ಪ್ರದಾನ ಸಮಾರಂಭ
Belagavi | ಅಗ್ನಿ ಅವಘಡ: 12ಕ್ಕೂ ಹೆಚ್ಚು ಅಂಗಡಿಗಳು ಭಸ್ಮ
ಬೆಳಗಾವಿ : ತಾಲೂಕಿನ ಜುಗೂಳ ಗ್ರಾಮದ ಬಜಾರ ಪೇಟೆಯಲ್ಲಿ ಶನಿವಾರ ತಡರಾತ್ರಿ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ ಸುಮಾರು 12ರಿಂದ 15 ಅಂಗಡಿಗಳು ಸಂಪೂರ್ಣವಾಗಿ ಬೆಂಕಿಗಾಹುತಿಯಾಗಿದ್ದು, ಲಕ್ಷಾಂತರ ರೂಪಾಯಿ ಮೌಲ್ಯದ ಆಸ್ತಿಪಾಸ್ತಿಗಳು ನಷ್ಟವಾಗಿವೆ ಎಂದು ವರದಿಯಾಗಿದೆ. ವಿದ್ಯುತ್ ಶಾರ್ಟ್ ಸರ್ಕ್ಯೂಟ್ನಿಂದ ಬೆಂಕಿ ಕಾಣಿಸಿಕೊಂಡಿದ್ದು, ಕ್ಷಣಾರ್ಧದಲ್ಲಿ ಪಕ್ಕದ ಅಂಗಡಿಗಳಿಗೆ ವ್ಯಾಪಿಸಿ ಭಾರೀ ಅನಾಹುತಕ್ಕೆ ಕಾರಣವಾಗಿದೆ. ಸಿದ್ದೇಶ್ವರ ನೀರಾವರಿ ಸಂಘ, ಗೋಮ್ಮಟೇಶ್ವರ ನೀರಾವರಿ ಸಂಘ, ಸಾಗರ ನೀರಾವರಿ ಸಂಘ, ಅಡಿವೆಪ್ಪಾ ಭನಾಜರ ಜೈ ಜೀನೇಂದ್ರ ಹೊಟೇಲ್, ಪ್ರಕಾಶ ಮಡಿವಾಳರ ಲಾಂಡ್ರಿ ಅಂಗಡಿ, ಸಿದ್ಧಾಂತ ಶಿರಗುಪ್ಪೆಯ ಕೀಟನಾಶಕ ಮತ್ತು ಕೃಷಿ ಔಷಧ ಅಂಗಡಿ, ಅಮೀತ ಶಿಂಧೆಯ ಸಲೂನ್, ಶೋಭಾ ಘಟಗೆ ಪೈಪ್ ಅಂಗಡಿ, ಭೋಲೆನಾಥ ಐಸ್ ಕ್ರೀಮ್ ಅಂಗಡಿ, ಕುಂಥಿನಾಥ ಭನಾಜ ಅಂಗಡಿ, ಮಾರುತಿ ಮಿಣಚೆಯ ಫೋಟೊ ಸ್ಟೂಡಿಯೊ ಮತ್ತು ಕಂಪ್ಯೂಟರ್ ಸೆಂಟರ್ ಸೇರಿದಂತೆ ಅನೇಕ ಅಂಗಡಿಗಳು ಬೆಂಕಿಗೆ ಆಹುತಿಯಾಗಿವೆ. ಸುದ್ದಿ ತಿಳಿಯುತ್ತಿದ್ದಂತೆಯೇ ರಾಯಬಾಗ, ಅಥಣಿ ಹಾಗೂ ಉಗಾರ ಸಕ್ಕರೆ ಕಾರ್ಖಾನೆಯ ಅಗ್ನಿ ಶಾಮಕ ದಳದ ವಾಹನಗಳು ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ನಂದಿಸಿ ಹೆಚ್ಚಿನ ಅನಾಹುತ ತಪ್ಪಿಸಿದರು. ಈ ಘಟನೆ ಕಾಗವಾಡ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸಂಭವಿಸಿದ್ದು, ರವಿವಾರ ಕಾಗವಾಡ ತಹಶೀಲ್ದಾರ್ ರವೀಂದ್ರ ಹಾದಿಮನಿ, ಪಿಎಸ್ಐ ರಾಘವೇಂದ್ರ ಖೋತ ಹಾಗೂ ಹೆಸ್ಕಾಂ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ದಾವಣಗೆರೆಯಲ್ಲಿ ಕಾಂಗ್ರೆಸ್ಗೆ ಬಂಡಾಯದ ಬಿಸಿ; ಪಕ್ಷೇತರ ಅಭ್ಯರ್ಥಿಯಾಗಿ ಸಾದಿಕ್ ಪೈಲ್ವಾನ್ ಸ್ಪರ್ಧೆ
ಬೆಂಗಳೂರು : ದಾವಣಗೆರೆ ದಕ್ಷಿಣ, ಬಾಗಲಕೋಟೆ ಕ್ಷೇತ್ರಗಳ ಉಪಚುನಾವಣೆಗೆ ಆಡಳಿತಾರೂಢ ಕಾಂಗ್ರೆಸ್ ಪಕ್ಷವು ತನ್ನ ಅಭ್ಯರ್ಥಿಗಳನ್ನು ಘೋಷಣೆ ಮಾಡಿದೆ. ಇದರ ಬೆನ್ನಲ್ಲೇ ಎರಡೂ ಕ್ಷೇತ್ರಗಳಲ್ಲಿಯೂ ಬಂಡಾಯ ಏರ್ಪಟ್ಟಿದ್ದು, ಪಕ್ಷದ ಅಧಿಕೃತ ಅಭ್ಯರ್ಥಿಗಳ ವಿರುದ್ಧವೇ ನಾಮಪತ್ರ ಸಲ್ಲಿಸುವ ಎಚ್ಚರಿಕೆ ನೀಡಲಾಗಿದೆ. ತೀವ್ರ ಕುತೂಹಲಕ್ಕೆ ಕಾರಣವಾಗಿದ್ದ ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಶಾಮನೂರು ಶಿವಶಂಕರಪ್ಪ ಅವರ ಮೊಮ್ಮಗ ಸಮರ್ಥ್ ಮಲ್ಲಿಕಾರ್ಜುನ್ಗೆ ಹೈಕಮಾಂಡ್ ಟಿಕೆಟ್ ಪ್ರಕಟಿಸಿದೆ. ಹೀಗಾಗಿ ಟಿಕೆಟ್ ಆಕಾಂಕ್ಷಿಯಾಗಿದ್ದ ಕಾಂಗ್ರೆಸ್ ಮುಖಂಡ ಸಾದಿಕ್ ಪೈಲ್ವಾನ್ ಮಾ.23ರಂದು ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸುವುದಾಗಿ ಪ್ರಕಟಿಸಿದ್ದಾರೆ. ಮುಸ್ಲಿಮ್ ಸಮುದಾಯದ ಅಭ್ಯರ್ಥಿಗೆ ಟಿಕೆಟ್ ನೀಡಬೇಕೆಂದು ಪಟ್ಟು ಹಿಡಿದಿದ್ದ ಅಲ್ಪಸಂಖ್ಯಾತರು, ಇದೀಗ ಕಾಂಗ್ರೆಸ್ ಪಕ್ಷದ ವಿರುದ್ಧವೇ ಸಿಡಿದೆದ್ದಿದ್ದಾರೆ. ಟಿಕೆಟ್ ಕೈತಪ್ಪಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ಸಾದಿಕ್ ಪೈಲ್ವಾನ್, ಸ್ವಪಕ್ಷದ ವಿರುದ್ಧವೇ ತೊಡೆತಟ್ಟಿದ್ದು, ‘ಯಾವುದೇ ಕಾರಣಕ್ಕೂ ಸ್ಪರ್ಧೆಯಿಂದ ಹಿಂದೆ ಸರಿಯುವುದಿಲ್ಲ’ ಎಂದು ಸವಾಲು ಹಾಕಿದ್ದಾರೆ. ಈ ಮಧ್ಯೆ ಈಗಾಗಲೇ ಮಾ.20ರಂದು ನಾಮಪತ್ರ ಸಲ್ಲಿಸಿರುವ ಮೆಹಬೂಬ್ ಪಕ್ಷೇತರ ಅಭ್ಯರ್ಥಿಯಾಗಿದ್ದು, ‘ಕಾಂಗ್ರೆಸ್ ಪಕ್ಷದಿಂದ ಮುಸ್ಲಿಮ್ ಅಭ್ಯರ್ಥಿಗೆ ಟಿಕೆಟ್ ನೀಡಿಲ್ಲ. ಆದುದರಿಂದ ಕಾಂಗ್ರೆಸ್ ಪಕ್ಷಕ್ಕೆ ಈ ಬಾರಿ ಸೋಲಿನ ರುಚಿಯುಣಿಸಲು ನಮ್ಮ ಸಮುದಾಯ ಸಜ್ಜಾಗಿದೆ. ಅಲ್ಪಸಂಖ್ಯಾತರ ಮತಗಳಿಂದಲೇ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಪಕ್ಷಕ್ಕೆ ಉಪ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲಿದ್ದೇವೆ’ ಎಂದು ಎಚ್ಚರಿಕೆ ನೀಡಿದ್ದಾರೆ. ಮಾ.20ರಂದು ಪಕ್ಷದ ‘ಬಿ ಫಾರಂ’ ಇಲ್ಲದೆ ನಾಮಪತ್ರ ಸಲ್ಲಿಕೆ ಮಾಡಿದ್ದ ಕಾಂಗ್ರೆಸ್ ಅಭ್ಯರ್ಥಿ ಸಮರ್ಥ್ ಮಲ್ಲಿಕಾರ್ಜುನ್, ಬಿಜೆಪಿ ಅಭ್ಯರ್ಥಿ ಶ್ರೀನಿವಾಸ್ ದಾಸಕರಿಯಪ್ಪ ಹಾಗೂ ಪಕ್ಷೇತರರು ಸೇರಿದಂತೆ ಒಟ್ಟು 8 ಮಂದಿಯಿಂದ 9 ನಾಮಪತ್ರ ಸಲ್ಲಿಕೆಯಾಗಿದ್ದವು. ಮಾ.23ರಂದು ಕಾಂಗ್ರೆಸ್ ಅಭ್ಯರ್ಥಿ ಮತ್ತೊಮ್ಮೆ ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ. ದಾವಣಗೆರೆ ದಕ್ಷಿಣದಲ್ಲಿ ಅಹಿಂದ ವರ್ಗ ಹಾಗೂ ಮುಸ್ಲಿಮ್ ಸಮುದಾಯ ಬಹುಸಂಖ್ಯಾತರಾಗಿದ್ದರೂ ಕಾಂಗ್ರೆಸ್ ಹೈಕಮಾಂಡ್ ಮುಸ್ಲಿಮ್ ಸಮುದಾಯಕ್ಕೆ ಟಿಕೆಟ್ ನೀಡದಿರುವುದು ಬೇಸರ ತರಿಸಿದೆ. ಶಾಮನೂರು ಕುಟುಂಬದಲ್ಲಿ ಈಗಾಗಲೇ ಸಚಿವರೂ ಇದ್ದಾರೆ. ಸಂಸದರೂ ಇದ್ದಾರೆ. ಈಗ ಮಗನಿಗೂ ಟಿಕೆಟ್ ನೀಡಿರುವುದು ಯಾವ ನ್ಯಾಯ?. ಸಾಮಾನ್ಯ ಕಾರ್ಯಕರ್ತರಿಗೂ ಅವಕಾಶ ನೀಡಬೇಕಿತ್ತು. ಈ ಹಿನ್ನೆಲೆಯಲ್ಲಿ ಸೋಮವಾರ ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯಲಿದ್ದೇನೆ. ಅಪಾರ ಜನಸಂಖ್ಯೆಯಲ್ಲಿ ಬೇತೂರು ವೃತ್ತದಿಂದ ಮೆರವಣಿಗೆ ಮುಖಾಂತರ ನಾಮಪತ್ರ ಸಲ್ಲಿಸಲಾಗುವುದು. ನಮ್ಮ ಗೆಲುವಿಗೆ ಎಲ್ಲ ಸಮುದಾಯ ಸಹಕಾರ ನೀಡಲಿದೆ ಎಂದು ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಸಾದಿಕ್ ಪೈಲ್ವಾನ್ ತಿಳಿಸಿದ್ದಾರೆ. ಬಾಗಲಕೋಟೆ ಕ್ಷೇತ್ರದಲ್ಲಿಯೂ ಎಚ್.ವೈ.ಮೇಟಿ ಅವರ ಕಿರಿಯ ಪುತ್ರ ಉಮೇಶ್ ಮೇಟಿಗೆ ಟಿಕೆಟ್ ಪ್ರಕಟಿಸಿದ್ದು, ಹಿರಿಯ ಪುತ್ರ ಮಲ್ಲಿಕಾರ್ಜುನ, ಪುತ್ರಿಯರಾದ ಬಾಯಕ್ಕ ಮತ್ತು ಮಹಾದೇವಿ ಯಾವ ತೀರ್ಮಾನ ಕೈಗೊಳ್ಳಲಿದ್ದಾರೆ ಎಂಬುದು ಇನ್ನೂ ನಿಗೂಢವಾಗಿದೆ. ಎರಡು ಕ್ಷೇತ್ರಗಳಲ್ಲಿ ಕುಟುಂಬದ ಸದಸ್ಯರಿಗೆ ಮಣೆಹಾಕಿದ್ದು, ಪಕ್ಷಕ್ಕಾಗಿ ದುಡಿದ ಕಾರ್ಯಕರ್ತರನ್ನು ನಿರ್ಲಕ್ಷಿಸಲಾಗಿದೆ ಎಂಬ ಆರೋಪ ಕೇಳಿಬಂದಿದೆ.
ಪಶ್ಚಿಮ ಏಶ್ಯದ ಸಂಘರ್ಷ | PSL ಟೂರ್ನಿಯ ಆರಂಭಿಕ ಪಂದ್ಯಗಳಲ್ಲಿ ಮೈದಾನದೊಳಗೆ ಪ್ರೇಕ್ಷಕರ ಪ್ರವೇಶಕ್ಕೆ ನಿರ್ಬಂಧ
ಲಾಹೋರ್: ಪಶ್ಚಿಮ ಏಶ್ಯದ ಸಂಘರ್ಷದ ಕಾರಣದಿಂದಾಗಿ ಈ ಬಾರಿಯ ಪಾಕಿಸ್ತಾನ ಸೂಪರ್ ಲೀಗ್(ಪಿಎಸ್ಎಲ್)ಟೂರ್ನಿಯ ಆರಂಭಿಕ ಪಂದ್ಯಗಳಲ್ಲಿ ಪ್ರೇಕ್ಷಕರಿಗೆ ಮೈದಾನದೊಳಗೆ ಪ್ರವೇಶ ನಿರ್ಬಂಧಿಸಲಾಗಿದೆ ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ(ಪಿಸಿಬಿ)ತಿಳಿಸಿದೆ. ‘‘ಪಿಎಸ್ಎಲ್ ಟೂರ್ನಿಯು ಅಂತರ್ರಾಷ್ಟ್ರೀಯ ಬ್ರ್ಯಾಂಡ್ ಆಗಿದೆ. ಅದು ನಮ್ಮ ಹೆಮ್ಮೆ. ಈ ಬಾರಿಯ ಟೂರ್ನಿಯು ಮಾರ್ಚ್ 26ರಿಂದ ಆರಂಭವಾಗಲಿದೆ. ಆದರೆ ಯುದ್ಧದ ಕಾರಣದಿಂದ ಪ್ರೇಕ್ಷಕರಿಲ್ಲದೆ ಪಂದ್ಯಗಳು ನಡೆಯುತ್ತವೆ’’ಎಂದು ಪಿಸಿಬಿ ಅಧ್ಯಕ್ಷ ಮುಹ್ಸಿನ್ ನಖ್ವಿ ಹೇಳಿದ್ದಾರೆ. ಪಿಎಸ್ಎಲ್ ಟೂರ್ನಿಯ 11ನೇ ಆವೃತ್ತಿಯನ್ನು ಎರಡು ಮೈದಾನಗಳಿಗಷ್ಟೇ ಸೀಮಿತಗೊಳಿಸಲಾಗಿದೆ. ಲಾಹೋರ್ ಹಾಗೂ ಕರಾಚಿಯಲ್ಲಿ ಪಂದ್ಯಗಳು ನಡೆಯುತ್ತವೆ ಎಂದು ಹೇಳಿದ್ದಾರೆ. ‘‘ಸರಕಾರದ ಆದೇಶದ ಪ್ರಕಾರ, ಮುಂಜಾಗ್ರತಾ ಕ್ರಮವಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಉದ್ಘಾಟನಾ ಕಾರ್ಯಕ್ರಮವನ್ನು ಕೂಡ ರದ್ದುಗೊಳಿಸಲಾಗಿದೆ. ಆದರೆ ಯಾವುದೇ ಭದ್ರತಾ ಸಮಸ್ಯೆ ಇಲ್ಲ. ರವಿವಾರ ರಾತ್ರಿಯಿಂದಲೇ ವಿದೇಶಿ ಆಟಗಾರರು ಪಾಕಿಸ್ತಾನಕ್ಕೆ ಆಗಮಿಸಲಿದ್ದಾರೆ. ಮೈದಾನದೊಳಗೆ ಪ್ರೇಕ್ಷಕರಿಗೆ ಪ್ರವೇಶವಿಲ್ಲದ ಕಾರಣ ಅದರಿಂದ ಫ್ರಾಂಚೈಸಿಗಳಿಗೆ ಆಗುವ ನಷ್ಟವನ್ನು ಪಿಸಿಬಿ ಭರಿಸಲಿದೆ’’ ಎಂದು ನಖ್ವಿ ತಿಳಿಸಿದ್ದಾರೆ.
ರೊನಾಲ್ಡೊ ವೈಯಕ್ತಿಕ ಸಾಧನೆಗಳಿಗಿಂತಲೂ ತಂಡದ ಯಶಸ್ಸಿಗಾಗಿ ಹೆಚ್ಚು ಶ್ರಮಿಸುತ್ತಿದ್ದಾರೆ: ಮಾರ್ಟಿನೆಝ್
ಮ್ಯಾಡ್ರಿಡ್: ಸ್ಟಾರ್ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ತನ್ನ ವೃತ್ತಿಜೀವನದ 1,000ನೇ ಗೋಲುಗಳ ಮೈಲಿಗಲ್ಲನ್ನು ಬೆನ್ನಟ್ಟುತ್ತಿದ್ದಾರೆ ಎಂಬ ಹೇಳಿಕೆಯನ್ನು ಪೋರ್ಚುಗಲ್ ರಾಷ್ಟ್ರೀಯ ಫುಟ್ಬಾಲ್ ತಂಡದ ಮುಖ್ಯ ತರಬೇತುದಾರ ರಾಬರ್ಟೊ ಮಾರ್ಟಿನೆಝ್ ತಳ್ಳಿ ಹಾಕಿದ್ದಾರೆ. ಅನುಭವಿ ಫಾರ್ವರ್ಡ್ ಆಟಗಾರ ವೈಯಕ್ತಿಕ ಸಾಧನೆಗಳಿಗಿಂತಲೂ ತಂಡದ ಯಶಸ್ಸಿಗಾಗಿ ಹೆಚ್ಚು ಶ್ರಮಿಸುತ್ತಿದ್ದಾರೆ ಎಂದು ಹೇಳಿದ್ದಾರೆ. ತಮ್ಮ ವೃತ್ತಿಜೀವನದುದ್ದಕ್ಕೂ ಈಗಾಗಲೇ 950ಕ್ಕೂ ಅಧಿಕ ಗೋಲುಗಳನ್ನು ಗಳಿಸಿರುವ ಹಾಗೂ ಪೋರ್ಚುಗಲ್ ಮತ್ತು ಅಲ್ ನಸ್ರ್ ಎರಡರಲ್ಲೂ ಆಡುತ್ತಿರುವ ರೊನಾಲ್ಡೊ ಅವರು ಸದ್ಯ ಸ್ನಾಯು ಸೆಳೆತದಿಂದ ಚೇತರಿಸಿಕೊಳ್ಳುತ್ತಿದ್ದಾರೆ. ಮುನ್ನಚ್ಚರಿಕೆಯ ಕ್ರಮವಾಗಿ 41ರ ವಯಸ್ಸಿನ ರೊನಾಲ್ಡೊ ಅವರನ್ನು ಅಂತರ್ರಾಷ್ಟ್ರೀಯ ಸ್ನೇಹಪರ ಪಂದ್ಯಗಳಿಗೆ ಪೋರ್ಚುಗಲ್ ತಂಡದಲ್ಲಿ ಸೇರಿಸಿಕೊಳ್ಳಲಾಗಿಲ್ಲ. ಗಾಯದಿಂದ ಬಳಲುತ್ತಿರುವ ಹೊರತಾಗಿಯೂ ಈ ಋತುವಿನಲ್ಲಿ ರೊನಾಲ್ಡೊ ಉತ್ತಮ ಫಾರ್ಮ್ ನಲ್ಲಿದ್ದಾರೆ. ನಿರಂತರವಾಗಿ ತಮ್ಮ ಫುಟ್ಬಾಲ್ ಕ್ಲಬ್ಗಳಿಗಾಗಿ ಗೋಲುಗಳನ್ನು ಗಳಿಸುತ್ತಿದ್ದಾರೆ. ಅತ್ಯುತ್ತಮ ಸ್ಕೋರಿಂಗ್ ದರವನ್ನು ಕಾಯ್ದುಕೊಂಡಿದ್ದಾರೆ. ಅವರ ಪ್ರದರ್ಶನವು ಮುಂಬರುವ ಫಿಫಾ ವಿಶ್ವಕಪ್ನಲ್ಲಿ ಅವರ ಪಾಲ್ಗೊಳ್ಳುವಿಕೆಯ ನಿರೀಕ್ಷೆಗಳನ್ನು ಹೆಚ್ಚಿಸಿವೆ. ಅಲ್ಲಿ ಅವರು ನಿರ್ಣಾಯಕ ಪಾತ್ರವಹಿಸುವ ಸಾಧ್ಯತೆಯಿದೆ. ರೊನಾಲ್ಡೊ ಅವರು ದಾಖಲೆ ನಿರ್ಮಿಸುವುದರಲ್ಲಿ ವ್ಯಸ್ತರಾಗಿದ್ದಾರೆ ಎಂಬ ಮಾತನ್ನು ತಳ್ಳಿ ಹಾಕಿದ ಮಾರ್ಟಿನೆಝ್, ಇತ್ತೀಚೆಗಿನ ಸ್ಪರ್ಧೆಗಳಲ್ಲಿ ಅವರು ನಿಸ್ವಾರ್ಥ ಪ್ರದರ್ಶನ ನೀಡಿದ್ದಾರೆ ಎಂದರು. ‘‘ನಾನು ಈ ಮಾತನ್ನು ಒಪ್ಪುವುದಿಲ್ಲ. ಕ್ರಿಸ್ಟಿಯಾನೊ ರೊನಾಲ್ಡೊ ಯುರೋಪಿಯನ್ ಚಾಂಪಿಯನ್ಶಿಪ್ ನಲ್ಲಿ ಮತ್ತೊಂದು ದಾಖಲೆಯನ್ನು ಮುರಿಯಲು ಗೋಲು ಗಳಿಸುವತ್ತ ಗಮನ ಹರಿಸಿದ್ದರೆ, ಬ್ರುನೊ ಫೆರ್ನಾಂಡಿಸ್ಗೆ ತುರ್ಕಿಯಾ ವಿರುದ್ಧದ ಪಂದ್ಯದಲ್ಲಿ ಅಸಿಸ್ಟ್ ಮಾಡಲು ಆಗುತ್ತಿರಲಿಲ್ಲ’’ ಎಂದರು. ‘‘ನಮ್ಮ ಆಟಗಾರರು ದಾಖಲೆಗಳು ಅಥವಾ ವೈಯಕ್ತಿಕ ಗುರಿಗಳನ್ನು ಮನಸ್ಸಿನಲ್ಲಿಟ್ಟುಕೊಂಡಿದ್ದಾರೆ ಎಂಬುದು ನಿಜವಲ್ಲ. ಯುರೋಪಿಯನ್ ಚಾಂಪಿಯನ್ಶಿಪ್ನಲ್ಲಿ ನಮ್ಮ ಅನುಭವಿ ಆಟಗಾರರಲ್ಲಿ ಹೆಚ್ಚು ವಿಭಿನ್ನ ರೀತಿಯ ಜವಾಬ್ದಾರಿ, ಉತ್ತಮ ಪ್ರದರ್ಶನ ನೀಡುವ ಹೊಣೆಗಾರಿಕೆಯನ್ನು ನಾನು ನೋಡಿದ್ದೇನೆ’’ ಎಂದು ಮಾರ್ಟಿನೆಝ್ ಹೇಳಿದರು. 2026ರ ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ಪೋರ್ಚುಗಲ್ ತಂಡವು ‘ಕೆ’ ಗುಂಪಿನಲ್ಲಿ ಉಜ್ಬೇಕಿಸ್ತಾನ ಹಾಗೂ ಕೊಲಂಬಿಯಾದೊಂದಿಗೆ ಸ್ಥಾನ ಪಡೆದಿದೆ.ಜೂನ್ 17ರಂದು ತನ್ನ ವಿಶ್ವಕಪ್ ಅಭಿಯಾನ ಆರಂಭಿಸಲಿದೆ. ತನ್ನ ಚೊಚ್ಚಲ ವಿಶ್ವಕಪ್ ಪ್ರಶಸ್ತಿ ಗೆಲ್ಲುವ ಕನಸು ಕಾಣುತ್ತಿರುವ ಪೋರ್ಚುಗಲ್ ತಂಡವನ್ನು ರೊನಾಲ್ಡೊ ನಾಯಕನಾಗಿ ಮುನ್ನಡೆಸುವ ನಿರೀಕ್ಷೆ ಇದೆ.
ಕ್ರಿಕೆಟ್ ಪಂದ್ಯದ ವೇಳೆ ಹೃದಯಾಘಾತ; ಕ್ರಿಕೆಟಿಗ ಮೃತ್ಯು
ಶಹಜಹಾನ್ ಪುರ್ (ಉತ್ತರ ಪ್ರದೇಶ): ಕ್ರಿಕೆಟ್ ಪಂದ್ಯದ ವೇಳೆ 30 ವರ್ಷದ ಕ್ರಿಕೆಟಿಗರೊಬ್ಬರು ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ನಡೆದಿದೆ. ಈ ಘಟನೆ ಶನಿವಾರ ಉತ್ತರ ಪ್ರದೇಶದ ಶಹಜಹಾನ್ ಪುರ್ ಜಿಲ್ಲೆಯಲ್ಲಿ ನಡೆದಿದ್ದು, ಪಂದ್ಯದ ಮಧ್ಯದಲ್ಲೇ ಕ್ರಿಕೆಟಿಗರೊಬ್ಬರು ಕುಸಿದು ಬಿದ್ದು ಮೃತಪಟ್ಟಿದ್ದಾರೆ. ವರದಿಗಳ ಪ್ರಕಾರ, ಬ್ಯಾಟಿಂಗ್ ಮಾಡುವಾಗ, ಅಸೌಖ್ಯಕ್ಕೀಡಾಗಿದ್ದಂತೆ ಕಂಡು ಬಂದಿದ್ದರು ಎಂದು ಹೇಳಲಾಗಿದೆ. ಸೋನಾಲ್ ಚಂದ್ರ ಮೃತಪಟ್ಟ ಕ್ರಿಕೆಟಿಗ. ಆಗಷ್ಟೇ ತಮ್ಮ ಬ್ಯಾಟಿಂಗ್ ಮುಗಿಸಿದ್ದ ಅವರು, ಮೈದಾನದಿಂದ ಪೆವಿಲಿಯನ್ ಗೆ ಹಿಂದಿರುಗುತ್ತಿದ್ದಂತೆಯೇ ಕುಸಿದು ಬಿದ್ದು ಮೃತಪಟ್ಟರು ಎಂದು ಅವರ ಸ್ನೇಹಿತರು ತಿಳಿಸಿದ್ದಾರೆ. ಕುಸಿದು ಬಿದ್ದ ಸೋನಾಲ್ ಚಂದ್ರರನ್ನು ಚಿಕಿತ್ಸೆಗಾಗಿ ಸಮೀಪದ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆದರೆ, 40 ನಿಮಿಷಗಳ ಚಿಕಿತ್ಸೆಯ ಬಳಿಕವೂ, ಅವರ ಆರೋಗ್ಯ ಸ್ಥಿತಿ ಮತ್ತಷ್ಟು ವಿಷಮಿಸಿದೆ. ಹೀಗಾಗಿ, ಆತನನ್ನು ಬರೇಲಿಯ ಮತ್ತೊಂದು ಆಸ್ಪತ್ರೆಗೆ ಕರೆದೊಯ್ಯುವಂತೆ ವೈದ್ಯರು ಶಿಫಾರಸು ಮಾಡಿದ್ದಾರೆ. ಆದರೆ, ಅವರು ಮಾರ್ಗಮಧ್ಯದಲ್ಲೇ ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದ್ದಾರೆ. ಪಂದ್ಯದ ವೇಳೆ ಸೋನಾಲ್ ಚಂದ್ರ ಅವರೇ ಖುದ್ದಾಗಿ ಪಂದ್ಯದ ವಿಡಿಯೊ ಚಿತ್ರೀಕರಣ ನಡೆಸುತ್ತಿದ್ದರು. ಈ ವಿಡಿಯೊದಲ್ಲಿ ಅವರು ಅಸ್ವಸ್ಥಗೊಳ್ಳುವುದಕ್ಕೂ ಕೆಲವೇ ಕ್ಷಣಗಳ ಮುನ್ನಿನ ದೃಶ್ಯಗಳು ಸೆರೆಯಾಗಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಈ ಘಟನೆಯ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಕ್ರಿಕೆಟ್ ವ್ಯಾಮೋಹಿಯಾಗಿದ್ದ ಸೋನಾಲ್ ಚಂದ್ರ ಇದುವರೆಗೆ ನೂರಕ್ಕೂ ಹೆಚ್ಚು ಪಂದ್ಯಗಳಲ್ಲಿ ಭಾಗವಹಿಸಿದ್ದಾರೆ ಹಾಗೂ ಅವರು ಅರ್ಹತೆ ಪಡೆದ ಅಂಪೈರ್ ಆಗಿದ್ದರು ಎಂದು ಸ್ನೇಹಿತರು ತಿಳಿಸಿದ್ದಾರೆ. 26-year-old Sonal Chandra of #Shahjahanpur died of a #heartattack while he was having his batting shot recorded with a drone. It is reported that moments after capturing the shot, he suddenly felt chest pain and collapsed. His family immediately rushed him to the hospital, 1/2 pic.twitter.com/fddkxDcVun — Siraj Noorani (@sirajnoorani) March 22, 2026
ನಕಲಿ ಚಲನ್ ಸೈಬರ್ ವಂಚನೆ: 12 ಲಕ್ಷ ರೂ. ಕಳೆದುಕೊಂಡ ಶಾಸಕ!
ಪೊಲವರಂ (ಆಂಧ್ರನಪ್ರದೇಶ): ದೋಷಪೂರಿತ ಎಪಿಕೆ ಫೈಲ್ ಅನ್ನು ಕ್ಲಿಕ್ ಮಾಡಿದ ಪರಿಣಾಮ, ಜನಸೇನಾ ಶಾಸಕ ಸಿ.ಬಾಲರಾಜು 12 ಲಕ್ಷ ರೂ. ಕಳೆದುಕೊಂಡಿದ್ದಾರೆ. ಈ ಸಂಬಂಧ ಸೈಬರ್ ವಂಚನೆ ಪ್ರಕರಣವನ್ನು ಪೊಲೀಸರು ದಾಖಲಿಸಿಕೊಂಡಿದ್ದಾರೆ ಎಂದು ರವಿವಾರ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಮಾರ್ಚ್ 6ರಂದು ತಿಳಿಯದೆ ತನಗೆ ಬಂದಿದ್ದ ಲಿಂಕ್ ಅನ್ನು ಶಾಸಕ ಕ್ಲಿಕ್ ಮಾಡಿದ್ದಾರೆ. ಇದರಿಂದ ಅವರ ಬ್ಯಾಂಕ್ ಖಾತೆಯಲ್ಲಿ ಅನಧಿಕೃತ ವಹಿವಾಟು ನಡೆದಿದ್ದು, ಈ ಸಂಬಂಧ ಅವರು ರಾಷ್ಟ್ರೀಯ ಸೈಬರ್ ಅಪರಾಧ ಸಹಾಯವಾಣಿಯನ್ನು ಸಂಪರ್ಕಿಸಿ, ದೂರನ್ನು ದಾಖಲಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. “ರಸ್ತೆ ಸಾರಿಗೆ ಪ್ರಾಧಿಕಾರದ ಚಲನ್ ಎಂದು ಬಿಂಬಿತವಾಗಿದ್ದ ದೋಷಪೂರಿತ ಎಪಿಕೆ ಫೈಲ್ ಅನ್ನು ಕ್ಲಿಕ್ ಮಾಡಿದ್ದರಿಂದ, ಪೊಲವರಂ ವಿಧಾನಸಭಾ ಕ್ಷೇತ್ರದ ಜನಸೇನಾ ಶಾಸಕ ಸಿ.ಬಾಲರಾಜು 12 ಲಕ್ಷ ರೂ. ಅನ್ನು ಕಳೆದುಕೊಂಡಿದ್ದು, ಈ ಸಂಬಂಧ ನಾವು ಪ್ರಕರಣವೊಂದನ್ನು ದಾಖಲಿಸಿಕೊಂಡಿದ್ದೇವೆ” ಎಂದು ಅವರು ತಿಳಿಸಿದ್ದಾರೆ. ಶಂಕಿತ ಎಪಿಕೆ ಫೈಲ್ ಅನ್ನು ಕ್ಲಿಕ್ ಮಾಡುತ್ತಿದ್ದಂತೆಯೇ, ವಂಚಕರು ಶಾಸಕರ ಬ್ಯಾಂಕ್ ಖಾತೆಯಲ್ಲಿದ್ದ ಎಲ್ಲ ಹಣವನ್ನೂ ವರ್ಗಾಯಿಸಿಕೊಂಡಿದ್ದಾರೆ ಎಂದು ಅವರು ಹೇಳಿದ್ದಾರೆ. ಬಳಿಕ, ಈ ದೂರನ್ನು ಮಾರ್ಚ್ 21ರಂದು ಸ್ಥಳೀಯ ಪೊಲೀಸ್ ಠಾಣೆಗೆ ಮುಂದಿನ ತನಿಖೆಗಾಗಿ ವರ್ಗಾಯಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. ಈ ನಡುವೆ, ಪೊಲೀಸರು ಭಾರತೀಯ ನ್ಯಾಯ ಸಂಹಿತೆಯ ವಿವಿಧ ಸೆಕ್ಷನ್ ಗಳಡಿ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆಗೆ ಚಾಲನೆ ನೀಡಿದ್ದಾರೆ. ವರ್ಗಾಯಿಸಿಕೊಂಡಿರುವ ಹಣವನ್ನು ಪಶ್ಚಿಮ ಬಂಗಾಳದಲ್ಲಿನ ಎಟಿಎಂ ಕೇಂದ್ರವೊಂದರ ಮೂಲಕ ನಗದೀಕರಿಸಿಕೊಂಡಿರುವುದು ಬ್ಯಾಂಕ್ ಸ್ಟೇಟ್ ಮೆಂಟ್ ಗಳ ಮೂಲಕ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಘಟನೆಯಲ್ಲಿ ಸಂಘಟಿತ ಜಾಲವೊಂದು ಭಾಗಿಯಾಗಿದೆ ಎಂದು ಶಂಕಿಸಲಾಗಿದ್ದು, ಈ ಜಾಲಕ್ಕೆ ಸೈಬರ್ ವಂಚನೆಯಲ್ಲದೆ ಅಂತಾರಾಷ್ಟ್ರೀಯ ಸಂಪರ್ಕಗಳೂ ಇರಬಹುದು ಎಂಬ ಅನುಮಾನ ಕೂಡಾ ವ್ಯಕ್ತವಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.
West Bengal | ಮೀನಿನೊಂದಿಗೆ ಪ್ರಚಾರ ನಡೆಸಿದ ಬಿಜೆಪಿ ಅಭ್ಯರ್ಥಿ; ಕಾರಣವೇನು ಗೊತ್ತೇ?
ಕೋಲ್ಕತ್ತಾ: ಒಂದು ವೇಳೆ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ, ಮಾಂಸಾಹಾರವನ್ನು ನಿಷೇಧಿಸುತ್ತದೆ ಎಂಬ ಆಡಳಿತಾರೂಢ ಟಿಎಂಸಿ ಪ್ರಚಾರಕ್ಕೆ ತಿರುಗೇಟು ನೀಡಲು ಮುಂದಾಗಿರುವ ಬಿಜೆಪಿ ಅಭ್ಯರ್ಥಿಯೊಬ್ಬರು, ರವಿವಾರ ಪಶ್ಚಿಮ ಬಂಗಾಳದ ಸಹಜ ಆಹಾರ ಕ್ರಮವಾದ ಮೀನಿನೊಂದಿಗೆ ಪ್ರಚಾರ ನಡೆಸಿದ ಘಟನೆ ನಡೆದಿದೆ. ಬಿದ್ಧನ್ ನಗರ್ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಡಾ. ಶರದ್ವತ್ ಮುಖೋಪಾಧ್ಯಾಯ್ ಅವರ ಈ ಅಸಹಜ ಪ್ರಚಾರ ತಕ್ಷಣವೇ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಬಿಧಾನ್ ನಗರ್ ಕ್ಷೇತ್ರದಲ್ಲಿ ಕಾಟ್ಲಾ ಮೀನಿನೊಂದಿಗೆ ಮತದಾರರೊಂದಿಗೆ ಸಂವಾದ ನಡೆಸಿದ ಡಾ. ಶರದ್ವತ್ ಮುಖೋಪಾಧ್ಯಾಯ್, ಟಿಎಂಸಿ ಆರೋಪವನ್ನು ಸುಳ್ಳು ಅಪಪ್ರಚಾರ ಎಂದು ತಳ್ಳಿ ಹಾಕಿದರು. “ನಮ್ಮ ವಿರುದ್ಧ ಸುಳ್ಳುಗಳನ್ನು ಹೆಣೆಯಲಾಗುತ್ತಿದೆ. ನಾವು ನಮ್ಮ ಆಯ್ಕೆಯ ಪ್ರಕಾರ ಮೀನು, ಕೋಳಿ ಮತ್ತು ಕುರಿಯನ್ನು ಸೇವಿಸುತ್ತೇವೆ. ನಾನಿಂದು ಬಂಗಾಳಿ ವಿವಾಹದ ವೇಳೆ ವಧುವಿನ ಕಡೆಯವರು ವರನ ಮನೆಗೆ ಉಡುಗೊರೆಯಾಗಿ ಕಳಿಸುವ ಈ ಮೀನಿನೊಂದಿಗೆ ನಾನಿಂದು ಇಲ್ಲಿಗೆ ಬಂದಿದ್ದೇನೆ” ಎಂದು ಅವರು ಹೇಳಿದರು. ಒಂದು ವೇಳೆ ಬಿಜೆಪಿ ಅಧಿಕಾರಕ್ಕೆ ಬಂದರೆ, ಪಶ್ಚಿಮ ಬಂಗಾಳದ ಆಹಾರ ಸಂಸ್ಕೃತಿಯಲ್ಲಿ ಹಸ್ತಕ್ಷೇಪ ಮಾಡಲಿದೆ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸೇರಿದಂತೆ ಹಲವಾರು ಟಿಎಂಸಿ ನಾಯಕರು ನಿರಂತರವಾಗಿ ಆರೋಪಿಸುತ್ತಿದ್ದಾರೆ. ಬಿಹಾರ ಮತ್ತು ಗುಜರಾತ್ ನಂತಹ ಎನ್ಡಿಎ ಆಳ್ವಿಕೆ ಇರುವ ರಾಜ್ಯಗಳಲ್ಲಿ, ಕೆಲವು ಹಬ್ಬಗಳ ವೇಳೆ ಮೀನು ಹಾಗೂ ಮಾಂಸ ಮಾರಾಟವನ್ನು ನಿಷೇಧಿಸಿರುವುದನ್ನು ಅವರು ಉಲ್ಲೇಖಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಬಿಜೆಪಿ ಅಭ್ಯರ್ಥಿ ಡಾ. ಶರದ್ವತ್ ಅವರ ಈ ಅಸಹಜ ಪ್ರಚಾರ ಮಹತ್ವ ಪಡೆದುಕೊಂಡಿದೆ. हिंदी पट्टी के बीजेपी नेता,टीवी न्यूज़ वाले और बीजेपी समर्थक गौर से देख में,बंगाल चुनाव में नवरात्रि के बीच बीजेपी नेता Dr. Sharadwat Mukherjee हाथ में मछली लेकर प्रचार कर रहे हैं । बस ईमानदारी से उत्तर देंगे,ऐसा कोई विपक्षी नेता करता तो कितनी डिबेट होती ? कितनी भावना आहत होती?… pic.twitter.com/ym2s3ES9nI — YOUTH_ARMY (@Youth_Army_IN) March 22, 2026
ಮುಸ್ಲಿಮರಿಗೆ ಟಿಕೆಟ್ ನೀಡದೆ ಅನ್ಯಾಯ ಆರೋಪ; ಕಾಂಗ್ರೆಸ್ ವಿರುದ್ಧ ದಾವಣಗೆರೆಯಲ್ಲಿ ಪ್ರತಿಭಟನೆ
ದಾವಣಗೆರೆ : ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದಿಂದ ಮುಸ್ಲಿಮರಿಗೆ ಟಿಕೆಟ್ ನೀಡದಿರುವುದನ್ನು ವಿರೋಧಿಸಿ ಸಮುದಾಯದವರು ರವಿವಾರ ಇಲ್ಲಿನ ಅಖ್ತರ್ ರಝಾ ವೃತ್ತದಲ್ಲಿ ಬೃಹತ್ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲ, ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್, ಎಸ್.ಎಸ್,ಮಲ್ಲಿಕಾರ್ಜುನ, ಅಹಿಂದ ವಿರೋಧಿ, ಅಲ್ಪಸಂಖ್ಯಾತರಿಗೆ ಟಿಕೆಟ್ ನೀಡದ ಸರಕಾರಕ್ಕೆ ಧಿಕ್ಕಾರ, ಧಿಕ್ಕಾರ ಎಂದು ಘೋಷಣೆಗಳನ್ನು ಕೂಗಿದರು. ಅಲ್ಲದೆ, ಹಿಂದುಳಿದ ಮುಸ್ಲಿಮ್ ಸಮಾಜಕ್ಕೆ ಟಿಕೆಟ್ ನೀಡದ ರಾಜ್ಯ ಸರಕಾರ ಹಿಂದುಳಿದ ಸಮುದಾಯದ ವಿರೋಧಿಯಾಗಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ಅಖ್ತರ್ ರಝಾ ವೃತ್ತದಲ್ಲಿ ಸಾವಿರಾರು ಮಂದಿ ಜಮಾಯಿಸಿದ್ದರಿಂದ 2 ಗಂಟೆಗಳ ಕಾಲ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು. ಬಳಿಕ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪ್ರತಿಭಟನಾಕಾರರನ್ನು ಚದುರಿಸಿ ಸ್ಥಳದಲ್ಲಿ ಭದ್ರತೆ ಕೈಗೊಂಡರು. ಬಿಜೆಪಿಗೆ ಮತ ಹಾಕ್ತೀವಿ: ‘ಈ ಬಾರಿ ಬಿಜೆಪಿಗಾದರೂ ಮತ ಹಾಕುತ್ತೇವೆ. ಆದರೆ, ಕಾಂಗ್ರೆಸ್ ಗೆ ಮತ ನೀಡಲ್ಲ. ಚುನಾವಣೆ ದಿನದಂದು ಟೀ, ನೀರು ಕೊಟ್ಟು ಬಿಜೆಪಿ ಪರ ಮತ ಹಾಕುವಂತೆ ಕೇಳುತ್ತೇವೆ. ಒಟ್ಟಿನಲ್ಲಿ ಕಾಂಗ್ರೆಸ್ನ್ನು ಸೋಲಿಸುವುದು ನಮ್ಮ ಉದ್ದೇಶ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ಕಾಂಗ್ರೆಸ್ನಲ್ಲಿ ಸಾಮಾಜಿಕ ನ್ಯಾಯ ಸಿಗುವ ವಿಶ್ವಾಸವಿತ್ತು. ಆದರೆ, ಮುಸ್ಲಿಮ್ ಸಮಾಜಕ್ಕೆ ಟಿಕೆಟ್ ನೀಡದೆ ವಿಶ್ವಾಸ ದ್ರೋಹ ಮಾಡಿದೆ. ಕಳೆದ 2 ತಿಂಗಳುಗಳಿಂದ ನಮ್ಮ ಸಮಾಜಕ್ಕೆ ಟಿಕೆಟ್ ನೀಡುವಂತೆ ಹೋರಾಟ ನಡೆಸಿಕೊಂಡು ಬಂದಿದ್ದೇವೆ. ಆದರೆ, ಕಾಂಗ್ರೆಸ್ ನೀಡದೆ ನಮಗೆ ಅನ್ಯಾಯ ಮಾಡಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಪಾಕಿಸ್ತಾನ: ಉಗ್ರರ ದಾಳಿಯಲ್ಲಿ ಮೂವರು ಪೊಲೀಸರ ಸಾವು
ಪೇಷಾವರ: ಪಾಕಿಸ್ತಾನದ ಖೈಬರ್ ಪಖ್ತೂಂಕ್ವಾ ಪ್ರಾಂತದ ಕುರ್ರಮ್ ಜಿಲ್ಲೆಯಲ್ಲಿ ಪೊಲೀಸರ ಮೇಲೆ ತೆಹ್ರೀಕೆ ತಾಲಿಬಾನ್ ಪಾಕಿಸ್ತಾನ್(ಟಿಟಿಪಿ)ಯೊಂದಿಗೆ ಗುರುತಿಸಿಕೊಂಡಿರುವ ಸಶಸ್ತ್ರ ಹೋರಾಟಗಾರರು ನಡೆಸಿದ ಗುಂಡಿನ ದಾಳಿಯಲ್ಲಿ ಮೂವರು ಪೊಲೀಸರು ಸಾವನ್ನಪ್ಪಿದ್ದು ಇತರ ಹಲವರು ಗಾಯಗೊಂಡಿರುವುದಾಗಿ ವರದಿಯಾಗಿದೆ. ದಾಳಿಯ ಬಳಿಕ ನಡೆದ ಗುಂಡಿನ ಚಕಮಕಿಯಲ್ಲಿ ನಾಲ್ವರು ಉಗ್ರರೂ ಹತರಾಗಿದ್ದಾರೆ. ಪ್ರದೇಶಕ್ಕೆ ಹೆಚ್ಚುವರಿ ಭದ್ರತಾ ಸಿಬ್ಬಂದಿಯನ್ನು ರವಾನಿಸಲಾಗಿದೆ ಎಂದು ವರದಿ ಹೇಳಿದೆ. ಈ ಮಧ್ಯೆ , ಲಾಹೋರ್ ನ ಹೊರವಲಯದಲ್ಲಿ ಶನಿವಾರ ಈದ್ ಪ್ರಾರ್ಥನೆಯ ಬಳಿಕ ಲಷ್ಕರ್-ಎ-ತೈಬಾ(ಎಲ್ಇಟಿ) ಭಯೋತ್ಪಾದಕ ಸಂಘಟನೆಯ ಕಮಾಂಡರ್ ಬಿಲಾಲ್ ಆರಿಫ್ ಸರಾಫಿಯನ್ನು ಕುಟುಂಬದ ಸದಸ್ಯರೇ ಚೂರಿಯಿಂದ ಇರಿದ ಬಳಿಕ ಗುಂಡಿಕ್ಕಿ ಹತ್ಯೆ ನಡೆಸಿರುವುದಾಗಿ ಮೂಲಗಳನ್ನು ಉಲ್ಲೇಖಿಸಿ ಎನ್ಡಿಟಿವಿ ವರದಿ ಮಾಡಿದೆ. ವಿಶ್ವಸಂಸ್ಥೆಯು ಭಯೋತ್ಪಾದಕ ಪಟ್ಟಿಯಲ್ಲಿ ಗುರುತಿಸಿರುವ ಎಲ್ಇಟಿಯೊಂದಿಗೆ ಬಿಲಾಲ್ ಸರಾಫಿ 2005ರಿಂದ ಸಂಪರ್ಕದಲ್ಲಿದ್ದು ಎಲ್ಇಟಿಗೆ ದೇಣಿಗೆ ಸಂಗ್ರಹಿಸುವ ಕಾರ್ಯದಲ್ಲಿ ಸಕ್ರಿಯ ಪಾತ್ರ ವಹಿಸುತ್ತಿದ್ದ ಎಂದು ವರದಿ ಹೇಳಿದೆ.
ಸುಡಾನ್: ಆಸ್ಪತ್ರೆಯ ಮೇಲೆ ದಾಳಿ; ಕನಿಷ್ಠ 64 ಮಂದಿ ಸಾವು
ಖಾರ್ಟೂಮ್: ಸುಡಾನ್ನ ಪಶ್ಚಿಮ ದಾರ್ಫುರ್ ಪ್ರಾಂತದ ಆಸ್ಪತ್ರೆಯ ಮೇಲೆ ಕಳೆದ ವಾರ ನಡೆದ ದಾಳಿಯಲ್ಲಿ 13 ಮಕ್ಕಳ ಸಹಿತ ಕನಿಷ್ಠ 64 ಮಂದಿ ಸಾವನ್ನಪ್ಪಿರುವುದಾಗಿ ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಅಲ್ ದೈನ್ ಬೋಧನಾ ಆಸ್ಪತ್ರೆಯ ಮೇಲಿನ ದಾಳಿಯಲ್ಲಿ ಇತರ ಕನಿಷ್ಠ 89 ಜನರು ಗಾಯಗೊಂಡಿದ್ದಾರೆ ಮತ್ತು ಆಸ್ಪತ್ರೆಯ ಕಾರ್ಯನಿರ್ವಹಣೆಗೆ ತೊಡಕಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥ ಟೆಡ್ರೋಸ್ ಘೆಬ್ರಯೇಸಸ್ `ಎಕ್ಸ್'ನಲ್ಲಿ ಪೋಸ್ಟ್ ಮಾಡಿದ್ದಾರೆ. ಆಸ್ಪತ್ರೆಯ ಸಮೀಪದ ಪೊಲೀಸ್ ಠಾಣೆ ದಾಳಿಯ ಗುರಿಯಾಗಿತ್ತು ಎಂದು ಇಬ್ಬರು ಮಿಲಿಟರಿ ಅಧಿಕಾರಿಗಳು ಹೇಳಿರುವುದಾಗಿ ವರದಿಯಾಗಿದೆ. 2023ರ ಎಪ್ರಿಲ್ನಲ್ಲಿ ಮಿಲಿಟರಿ ಮತ್ತು ಅರೆ ಸೇನಾಪಡೆಯ ನಡುವೆ ಅಧಿಕಾರಕ್ಕಾಗಿನ ತಿಕ್ಕಾಟವು ದೇಶದಾದ್ಯಂತ ಯುದ್ಧವಾಗಿ ಉಲ್ಬಣಗೊಂಡಿದೆ.
ದೇವದುರ್ಗ | ಇಂಧನ ಕೊರತೆ ಆತಂಕ : ಪೆಟ್ರೋಲ್ ಬಂಕ್ ಬಳಿ ಮುಗಿಬಿದ್ದ ಜನರು !
ದೇವದುರ್ಗ: ಪಟ್ಟಣದಲ್ಲಿರುವ ಮೂರು ಪೆಟ್ರೋಲ್ ಬಂಕ್ಗಳಲ್ಲಿ ಭಾನುವಾರ ಸಂಜೆ ಇಂಧನ ಖಾಲಿಯಾಗಿದ್ದರಿಂದ, ಕೇವಲ ಒಂದೇ ಬಂಕ್ನಲ್ಲಿ ಪೆಟ್ರೋಲ್ ಲಭ್ಯವಿದ್ದ ಹಿನ್ನೆಲೆಯಲ್ಲಿ ಸಾರ್ವಜನಿಕರು ಆತಂಕಗೊಂಡು ಆ ಬಂಕ್ಗೆ ಮುಗಿಬಿದ್ದ ಘಟನೆ ನಡೆದಿದೆ. ಶಾಹಪೂರ ರಸ್ತೆಯಲ್ಲಿರುವ ನಯರಾ ಪೆಟ್ರೋಲ್ ಬಂಕ್ನಲ್ಲಿ ಮಾತ್ರ ಇಂಧನ ಲಭ್ಯವಿದ್ದ ಕಾರಣ, ವಾಹನಗಳ ಜೊತೆಗೆ ಖಾಲಿ ಬಾಟಲ್ ಹಾಗೂ ಕ್ಯಾನ್ಗಳನ್ನು ಹಿಡಿದು ಜನರು ಉದ್ದ ಸಾಲಿನಲ್ಲಿ ನಿಂತು ಪೆಟ್ರೋಲ್ ಹಾಗೂ ಡೀಸೆಲ್ ಖರೀದಿಸಲು ಹರಸಾಹಸ ಪಟ್ಟರು. ಈ ವೇಳೆ ಕೆಲಕಾಲ ಗೊಂದಲದ ವಾತಾವರಣವೂ ನಿರ್ಮಾಣವಾಗಿತ್ತು. ವದಂತಿಗಳು ಹರಡುತ್ತಿದ್ದಂತೆಯೇ ಬಂಕ್ ಮಾಲಕರು ಸ್ಪಷ್ಟನೆ ನೀಡಿ, ಪಟ್ಟಣದಲ್ಲಿ ಇಂಧನ ಕೊರತೆ ಇಲ್ಲ ಎಂದು ತಿಳಿಸಿದ್ದಾರೆ. ಆದಾಗ್ಯೂ, ಇತರ ಬಂಕ್ಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಖಾಲಿಯಾಗಿರುವುದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ತೈಲ ಸರಬರಾಜಿನಲ್ಲಿ ವ್ಯತ್ಯಾಸ ಉಂಟಾಗಿರುವ ಹಿನ್ನೆಲೆಯಲ್ಲಿ, ಕೆಲವರು ಇಂಧನವನ್ನು ಸಂಗ್ರಹಿಸಿ ಮಾರಾಟ ಮಾಡುತ್ತಿದ್ದಾರೆ ಎಂಬ ಆರೋಪಗಳು ಕೂಡ ಕೇಳಿಬರುತ್ತಿವೆ.
ಪಶ್ಚಿಮ ಏಷ್ಯಾದ ಸಂಘರ್ಷದಿಂದ ಜಾಗತಿಕ ಇಂಧನ ವ್ಯವಸ್ಥೆ ತತ್ತರ: ಐಇಎ ಕಳವಳ
ಪ್ಯಾರಿಸ್: ಇರಾನ್ನಲ್ಲಿನ ಯುದ್ಧವು 4 ದಿನಗಳ ಜಾಗತಿಕ ಇಂಧನ ಪೂರೈಕೆಯನ್ನು ಅಳಿಸಿಹಾಕಿದ್ದು 50% ಬೆಲೆ ಏರಿಕೆಯನ್ನು ಪ್ರಚೋದಿಸಿದೆ. ಮಧ್ಯ ಪ್ರಾಚ್ಯದ ಸಂಘರ್ಷವು ಜಾಗತಿಕ ಇಂಧನ ವ್ಯವಸ್ಥೆಗೆ ಆಘಾತ ನೀಡಿದ್ದು ತೀವ್ರ ಪರಿಣಾಮಕ್ಕೆ ಕಾರಣವಾಗಿದೆ ಎಂದು ಅಂತರರಾಷ್ಟ್ರೀಯ ಇಂಧನ ಸಂಸ್ಥೆ (ಐಇಎ) ಕಳವಳ ವ್ಯಕ್ತಪಡಿಸಿದೆ. ಮಾರ್ಚ್ 2ರಂದು ಹಾರ್ಮುಜ್ ಜಲಸಂಧಿಯನ್ನು ಮುಚ್ಚಿರುವುದರಿಂದ ಸುಮಾರು 20%ದಷ್ಟು ಜಾಗತಿಕ ತೈಲ ಮತ್ತು ದ್ರವೀಕೃತ ನೈಸರ್ಗಿಕ ಅನಿಲ ಹರಿವಿಗೆ ಅಡ್ಡಿಯಾಗಿದೆ. ಇದರ ಜೊತೆಗೆ ಪಶ್ಚಿಮ ಏಷ್ಯದಾದ್ಯಂತ ಇಂಧನ ಮೂಲಸೌಕರ್ಯಗಳನ್ನು ಗುರಿಯಾಗಿಸಿ ಇಸ್ರೇಲ್ ಮತ್ತು ಇರಾನ್ನ ದಾಳಿಗಳು ಅನಿಲ ಕ್ಷೇತ್ರಗಳು, ತೈಲ ಸಂಸ್ಕರಣಾಗಾರಗಳು ಮತ್ತು ರಫ್ತು ಟರ್ಮಿನಲ್ಗಳನ್ನೂ ಹಾನಿಗೊಳಿಸಿದ್ದು ದುರಸ್ತಿಗೆ ಹಲವು ವರ್ಷಗಳು ಬೇಕಾಗಬಹುದು ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ. ಈ ಪರಿಸ್ಥಿತಿಯು ಮಾರುಕಟ್ಟೆಯಲ್ಲಿ ಆತಂಕ, ಗೊಂದಲವನ್ನು ಸೃಷ್ಟಿಸಿದ್ದು ಸುಮಾರು 400 ದಶಲಕ್ಷ ಬ್ಯಾರೆಲ್ಗಳಷ್ಟು ತೈಲ(ಸುಮಾರು 4 ದಿನಗಳ ಜಾಗತಿಕ ಪೂರೈಕೆ)ವನ್ನು ಮಾರುಕಟ್ಟೆಯಿಂದ ಅಳಿಸಿಹಾಕಿದೆ. ಇದು ತೈಲದ ಬೆಲೆಯಲ್ಲಿ ಸುಮಾರು 50% ಹೆಚ್ಚಳಕ್ಕೆ ಕಾರಣವಾಗಿದೆ. ಇದು ಜಾಗತಿಕ ಇಂಧನ ಪೂರೈಕೆಗೆ ಎದುರಾಗಿರುವ ಅತ್ಯಂತ ತೀವ್ರವಾದ ಅಡ್ಡಿಯಾಗಿದೆ. ತ್ವರಿತ ಕ್ರಮಗಳನ್ನು ಕೈಗೊಳ್ಳದಿದ್ದರೆ ಇಂಧನ ಮಾರುಕಟ್ಟೆ ಮತ್ತು ಆರ್ಥಿಕತೆಗಳ ಮೇಲಿನ ಪರಿಣಾಮ ತೀವ್ರಗೊಳ್ಳುತ್ತಾ ಹೋಗುತ್ತದೆ ಎಂದು ಐಇಎ ವರದಿ ಎಚ್ಚರಿಸಿದೆ.
ಇಸ್ರೇಲ್ ಮೇಲೆ ವಾಯುಪ್ರಾಬಲ್ಯ: ಇರಾನ್ ಪ್ರತಿಪಾದನೆ
ಟೆಹ್ರಾನ್: ಇಸ್ರೇಲ್ ಜೊತೆ ನಡೆಯುತ್ತಿರುವ ಯುದ್ಧದಲ್ಲಿ ಮೇಲುಗೈ ಸಾಧಿಸಿದ್ದು ಇಸ್ರೇಲ್ನ ವಾಯು ರಕ್ಷಣಾ ವ್ಯವಸ್ಥೆ ಇನ್ನು ಮುಂದೆ ತನ್ನ ಕ್ಷಿಪಣಿಗಳನ್ನು ಪ್ರತಿಬಂಧಿಸಲು ಸಾಧ್ಯವಿಲ್ಲ ಎಂದು ಇರಾನ್ ಪ್ರತಿಪಾದಿಸಿದೆ. ಅರಾದ್ ಮತ್ತು ದಿಮೋನ ನಗರಗಳ ಮೇಲಿನ ದಾಳಿಯ ಬಳಿಕ ಇರಾನ್ ಇಸ್ರೇಲ್ನ ಆಗಸದ ಮೇಲೆ ಕ್ಷಿಪಣಿ ಪ್ರಾಬಲ್ಯ ಸಾಧಿಸಿದೆ ಎಂದು ಇರಾನ್ನ ಇಸ್ಲಾಮಿಕ್ ರೆವೊಲ್ಯುಷನರಿ ಗಾರ್ಡ್ ಕಾಪ್ರ್ಸ್(IRGC) ಹೇಳಿದ್ದು ಮುಂಬರುವ ದಾಳಿಯ ಅಲೆಗಳು ಹೊಸ ತಂತ್ರಗಳು ಮತ್ತು ವ್ಯವಸ್ಥೆಗಳನ್ನು ಬಳಸುತ್ತವೆ. ಇದು ಇಸ್ರೇಲಿ ಮತ್ತು ಅಮೆರಿಕನ್ ಪಡೆಗಳನ್ನು `ಮೂಕವಿಸ್ಮಿತರನ್ನಾಗಿ' ಮಾಡಲಿವೆ ಎಂದು ಎಚ್ಚರಿಸಿದೆ. ಹೆಚ್ಚು ಸುರಕ್ಷಿತ ಡಿಮೊನ ಪ್ರದೇಶದಲ್ಲಿ ಕ್ಷಿಪಣಿಗಳನ್ನು ಪ್ರತಿಬಂಧಿಸುವಲ್ಲಿ ಇಸ್ರೇಲ್ನ ಅಸಮರ್ಥತೆಯು ಅದರ ಆಕಾಶವು ಅಸುರಕ್ಷಿತ ಎಂಬುದನ್ನು ತೋರಿಸಿದೆ ಮತ್ತು ಸಂಘರ್ಷದ ಹೊಸ ಹಂತವನ್ನು ಸೂಚಿಸುತ್ತದೆ ಎಂದು ಇರಾನ್ ಸರಕಾರದ ಮೂಲಗಳು ಹೇಳಿವೆ.
IPL 2026 | ಗಾಯಗೊಂಡಿರುವ, ಅಲಭ್ಯರಾಗಿರುವ ಆಟಗಾರರ ಪಟ್ಟಿ ಇಲ್ಲಿದೆ...
ಹೊಸದಿಲ್ಲಿ: ಈ ವರ್ಷದ ಐಪಿಎಲ್ ಟಿ-20 ಟೂರ್ನಿ ಆರಂಭವಾಗುವ ಮೊದಲೇ ಹಲವು ಆಟಗಾರರು ಗಾಯದ ಸಮಸ್ಯೆಯಿಂದಾಗಿ ಹೊರಗುಳಿದಿದ್ದಾರೆ. ಕೆಲವೇ ವಾರಗಳ ಹಿಂದೆ ಟಿ-20 ವಿಶ್ವಕಪ್ ಟೂರ್ನಿಯು ಕೊನೆಗೊಂಡಿರುವ ಕಾರಣ ಈ ವರ್ಷ ಆಟಗಾರರು ಸಾಕಷ್ಟು ಟಿ-20 ಪಂದ್ಯಗಳನ್ನಾಡಿದ್ದಾರೆ. ಗಾಯಗೊಂಡಿರುವ ಹಾಗೂ ಟೂರ್ನಿಗೆ ಅಲಭ್ಯರಾಗಿರುವ ವಿವಿಧ ಫ್ರಾಂಚೈಸಿಗಳ ಆಟಗಾರರ ಪಟ್ಟಿ ಇಂತಿದೆ. ಕೋಲ್ಕತಾ ನೈಟ್ ರೈಡರ್ಸ್: ಆಕಾಶ್ ದೀಪ್- ಬೆನ್ನುನೋವಿನಿಂದ ಸಮಯಕ್ಕೆ ಸರಿಯಾಗಿ ಚೇತರಿಸಿಕೊಳ್ಳುವಲ್ಲಿ ವಿಫಲವಾಗಿರುವ ಆಕಾಶ್ ದೀಪ್ ಸಿಂಗ್ ಪ್ರಸಕ್ತ ಪಂದ್ಯಾವಳಿಯಿಂದಲೇ ಹೊರ ನಡೆದಿದ್ದಾರೆ. ಹರ್ಷಿತ್ ರಾಣಾ- ಭಾರತದ ವೇಗದ ಬೌಲರ್ ರಾಣಾ ಮಂಡಿ ಶಸ್ತ್ರಚಿಕಿತ್ಸೆಯಿಂದ ಚೇತರಿಸಿಕೊಳ್ಳುತ್ತಿದ್ದಾರೆ. ಪೂರ್ಣ ಪಂದ್ಯಾವಳಿಯಿಂದ ಹೊರಗುಳಿಯದೇ ಇದ್ದರೂ ಬಹುತೇಕ ಪಂದ್ಯಗಳಿಗೆ ಲಭ್ಯವಿರುವುದಿಲ್ಲ. ಮಥೀಶ ಪಥಿರಣ- ಇತ್ತೀಚೆಗೆ ಕೊನೆಗೊಂಡಿರುವ ಟಿ-20 ವಿಶ್ವಕಪ್ ಟೂರ್ನಿಯ ವೇಳೆ ಕಾಲುನೋವಿಗೆ ಒಳಗಾಗಿರುವ ಶ್ರೀಲಂಕಾದ ವೇಗಿ ಮಥೀಶ ಪಥಿರಣ ಎಪ್ರಿಲ್ ಮಧ್ಯಭಾಗದಲ್ಲಿ ಟೂರ್ನಿಗೆ ಲಭ್ಯವಿರಲಿದ್ದಾರೆ. ಸನ್ರೈಸರ್ಸ್ ಹೈದರಾಬಾದ್: ಪ್ಯಾಟ್ ಕಮಿನ್ಸ್- SRH ನ ನಾಯಕ ಕಮಿನ್ಸ್ ಬೆನ್ನುನೋವಿನಿಂದ ಚೇತರಿಸಿಕೊಳ್ಳುತ್ತಿದ್ದಾರೆ. ಪಂದ್ಯಾವಳಿಯ ಮಧ್ಯಭಾಗದಲ್ಲಿ ವಾಪಸಾಗುವ ನಿರೀಕ್ಷೆ ಇದೆ. ಜಾಕ್ ಎಡ್ವರ್ಡ್ಸ್-ಕಾಲು ನೋವಿನ ಕಾರಣದಿಂದ ಆಸ್ಟ್ರೇಲಿಯದ ಆಲ್ರೌಂಡರ್ ಜಾಕ್ ಎಡ್ವರ್ಡ್ಸ್ ಸಂಪೂರ್ಣ ಪಂದ್ಯಾವಳಿಯಿಂದ ಹೊರಗುಳಿದಿದ್ದಾರೆ. ರಾಜಸ್ಥಾನ ರಾಯಲ್ಸ್: ಸ್ಯಾಮ್ ಕರ್ರನ್- ಇಂಗ್ಲೆಂಡ್ ಆಲ್ರೌಂಡರ್ ಕರ್ರನ್ ಇಡೀ ಐಪಿಎಲ್ ಋತುವಿನಿಂದ ಹೊರಗುಳಿದಿದ್ದಾರೆ. ಟಿ-20 ವಿಶ್ವಕಪ್ ನಲ್ಲಿ ಸೆಮಿ ಫೈನಲ್ ಗೆ ತಲುಪಿದ್ದ ಇಂಗ್ಲೆಂಡ್ ತಂಡದಲ್ಲಿದ್ದ ಕರ್ರನ್ ಈ ವೇಳೆ ಗಾಯಗೊಂಡಿದ್ದರು ಎನ್ನಲಾಗಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು: ಜೋಶ್ ಹೇಝಲ್ವುಡ್: ಕಳೆದ ಕೆಲವು ತಿಂಗಳುಗಳಿಂದ ಸಕ್ರಿಯ ಕ್ರಿಕೆಟ್ ನಿಂದ ದೂರವಿರುವ ಆಸ್ಟ್ರೇಲಿಯದ ವೇಗದ ಬೌಲರ್ ಜೋಶ್ ಹೇಝಲ್ವುಡ್ ಮೊದಲ ಕೆಲವು ಪಂದ್ಯಗಳಲ್ಲಿ RCB ತಂಡದಲ್ಲಿ ಲಭ್ಯವಿರುವ ಸಾಧ್ಯತೆ ಇಲ್ಲ. ಗಾಯದ ಸಮಸ್ಯೆಯ ಕಾರಣಕ್ಕೆ ಆ್ಯಶಸ್ ಸರಣಿಯಲ್ಲಿ ಆಸ್ಟ್ರೇಲಿಯ ತಂಡದಲ್ಲಿ ಅವರು ಲಭ್ಯವಿರಲಿಲ್ಲ. ಚೆನ್ನೈಸೂಪರ್ ಕಿಂಗ್ಸ್: ನಾಥನ್ ಎಲ್ಲಿಸ್- ದೇಶೀಯ ಏಕದಿನ ಕಪ್ ಫೈನಲ್ ಪಂದ್ಯದ ವೇಳೆ ಮಂಡಿರಜ್ಜು ಗಾಯಕ್ಕೆ ಒಳಗಾಗಿರುವ ಆಸ್ಟ್ರೇಲಿಯದ ವೇಗದ ಬೌಲರ್ ನಾಥನ್ ಎಲ್ಲಿಸ್ ಇಡೀ ಟೂರ್ನಿಯಿಂದ ಹೊರಗುಳಿದಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್: ಮಿಚೆಲ್ ಸ್ಟಾರ್ಕ್- ಈ ವರ್ಷದ ಐಪಿಎಲ್ ನಲ್ಲಿ ಡೆಲ್ಲಿ ಫ್ರಾಂಚೈಸಿ ಪರ ಆಸ್ಟ್ರೇಲಿಯದ ವೇಗಿ ಮಿಚೆಲ್ ಸ್ಟಾರ್ಕ್ ಕೆಲವು ಪಂದ್ಯಗಳನ್ನು ಆಡುವ ಸಾಧ್ಯತೆಯಿದೆ. ಬಿಡುವಿಲ್ಲದ ಅಂತರ್ರಾಷ್ಟ್ರೀಯ ಕ್ರಿಕೆಟ್ ಕ್ಯಾಲೆಂಡರ್ನ ಹಿನ್ನೆಲೆಯಲ್ಲಿ ಸ್ಟಾರ್ಕ್ ಅವರ ಕೆಲಸದ ಒತ್ತಡದತ್ತ ಕ್ರಿಕೆಟ್ ಆಸ್ಟ್ರೇಲಿಯ ನಿಗಾವಹಿಸಿದೆ. ಪಂಜಾಬ್ ಕಿಂಗ್ಸ್: ಲಾಕಿ ಫರ್ಗ್ಯುಸನ್-ತನ್ನ ಕುಟುಂಬದೊಂದಿಗೆ ಹೆಚ್ಚಿನ ಸಮಯ ಕಳೆಯಲು ಆದ್ಯತೆ ನೀಡಿರುವ ನ್ಯೂಝಿಲ್ಯಾಂಡ್ ನ ವೇಗದ ಬೌಲರ್ ಫರ್ಗ್ಯುಸನ್ ಪಂದ್ಯಾವಳಿಯ ಆರಂಭಿಕ ಪಂದ್ಯಗಳಲ್ಲಿ ಲಭ್ಯ ಇರುವುದಿಲ್ಲ. ಅವರಿಗೆ ಯಾವುದೇ ಫಿಟ್ನೆಸ್ ಸಮಸ್ಯೆ ಇಲ್ಲ.

31 C