SENSEX
NIFTY
GOLD
USD/INR

Weather

26    C
...

New Railway Line: ಆಂಧ್ರ ಸಂಪರ್ಕಿಸುವ ತುಮಕೂರು-ರಾಯದುರ್ಗ ರೈಲು ಯೋಜನೆ, 83 ಕಿಮೀ ಕಾರ್ಯಾರಂಭ, ಅಪ್ಡೇಟ್

Tumakur-Rayadurg Railway Line: ಕೇಂದ್ರ ರೈಲ್ವೆ ಇಲಾಖೆಯು ತನ್ನ ವ್ಯಾಪ್ತಿಯ ಎಲ್ಲ ವಲಯಗಳಲ್ಲಿ ಅಗತ್ಯವಿರುವ ಕಡೆಗಳಲ್ಲಿ ಹೊಸ ರೈಲು ಯೋಜನೆಗಳನ್ನು ಆರಂಭಿಸಿದೆ. ಇದರಲ್ಲಿ ಹೊಸ ಮಾರ್ಗ ನಿರ್ಮಾಣ ಪ್ರಗತಿಯಲ್ಲಿದೆ. ಈ ಪೈಕಿ ಕರ್ನಾಟಕ ಮತ್ತು ಆಂಧ್ರ ಪ್ರದೇಶದ ನಡುವೆ ಹೊಸ ರೈಲು ಮಾರ್ಗದ ಬಗ್ಗೆ ನೈಋತ್ಯ ರೈಲ್ವೆಯು ಮಹತ್ವದ ಅಪ್ಡೇಟ್ ನೀಡಿದೆ. ಯಾವ ಮಾರ್ಗ, ಎಷ್ಟು ಕಿಲೋ

ಒನ್ ಇ೦ಡಿಯ 21 Feb 2026 11:18 am

ಲೆಬನಾನ್ ಮೇಲೆ ದಾಳಿ ಆರಂಭಿಸಿದ ಇಸ್ರೇಲ್ ಸೇನೆ, ಇರಾನ್ ಜೊತೆಗೆ ಹೊಸ ತಲೆನೋವು ಶುರು... Israel And Lebanon

ಮಧ್ಯಪ್ರಾಚ್ಯದ ಹಣೆಬರಹವೇ ಸರಿ ಇಲ್ಲ ಅಂತಾ ಕಾಣುತ್ತದೆ, ಏಕೆಂದರೆ ಇಡೀ ಜಗತ್ತಿನಲ್ಲೇ ಅತಿಹೆಚ್ಚು ತೈಲ ಸಂಪತ್ತು ಹೊಂದಿದ್ದರೂ ಅಲ್ಲಿನ ಜನರಿಗೆ ನೆಮ್ಮದಿಯೇ ಇಲ್ಲ. ಪದೇ ಪದೇ ಅಲ್ಲಿ ನಡೆಯುವ ಯುದ್ಧ ಹಾಗೂ ಸಂಘರ್ಷದ ಪರಿಣಾಮ ಈಗಾಗಲೇ ಮಧ್ಯಪ್ರಾಚ್ಯ ಭಾಗದಲ್ಲಿ ದೊಡ್ಡ ತಲೆನೋವು ಶುರುವಾಗಿದೆ. ಇರಾನ್ ಮತ್ತು ಅಮೆರಿಕ ನಡುವೆ ಯಾವುದೇ ಕ್ಷಣದಲ್ಲಿ ಯುದ್ಧ ನಡೆಯುವ ಸಾಧ್ಯತೆ ಕೂಡ

ಒನ್ ಇ೦ಡಿಯ 21 Feb 2026 11:11 am

US ಸುಪ್ರೀಂ ಕೋರ್ಟ್‌ ತೀರ್ಪಿನ ಬೆನ್ನಲ್ಲೆ ಶೇ.10ರಷ್ಟು ಹೊಸ ಜಾಗತಿಕ ಸುಂಕ ಘೋಷಿಸಿದ ಡೊನಾಲ್ಡ್‌ ಟ್ರಂಪ್‌

ಭಾರತ-ಅಮೆರಿಕ ನಡುವಿನ ವ್ಯಾಪಾರ ಒಪ್ಪಂದದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದ ಅಮೆರಿಕ ಅಧ್ಯಕ್ಷ

ವಾರ್ತಾ ಭಾರತಿ 21 Feb 2026 10:55 am

ಕೆಂಪು ಕೋಟೆ ಬಳಿ ಮತ್ತೊಂದು ಸ್ಪೋಟಕ್ಕೆ ಪಾಕಿಸ್ತಾನದ ಲಷ್ಕರ್‌ ಸಂಚು ಬಯಲು; ಭಾರತದ ನೆಮ್ಮದಿಯ ಶತ್ರುಗಳು!

ಭಾರತದ ನೆಮ್ಮದಿಯನ್ನು ಹಾಳು ಮಾಡುಲು ಹೊಂಚು ಹಾಕಿರುವ ಭಯೋತ್ಪಾದಕ ಸಂಘಟನೆಗಳು, ಭಾರತದ ಮೇಲೆ ದಾಳಿಗಳನ್ನು ತೀವ್ರಗೊಳಿಸಲು ಯೋಜನೆ ರೂಪಿಸುತ್ತಿವೆ, ಇದಕ್ಕೆ ಸಾಕ್ಷಿ ಎಂಬಂತೆ, ಹೊಸದಿಲ್ಲಿಯ ಕೆಂಪು ಕೋಟೆಯೂ ಸೇರಿದಂತೆ ಭಾರತದ ಹಲವು ನಗರಗಳಲ್ಲಿ ಸ್ಫೋಟ ಕೃತ್ಯಗಳನ್ನು ನಡೆಸಲು, ಪಾಕಿಸ್ತಾನ ಮೂಲದ ಲಷ್ಕರ್‌-ಎ-ತೋಯ್ಬಾ ಉಗ್ರ ಸಂಘಟನೆ ಸಂಚು ರೂಪಿಸಿದೆ ಎಂಬ ಆಘಾತಕಾರಿ ಸಂಗತಿ ಬಯಲಾಗಿದೆ. ಈ ಕುರಿತು ಭಾರತೀಯ ಗುಪ್ತಚರ ಇಲಾಖೆ ಬಿಡುಗಡೆ ಮಾಡಿರುವ ವರದಿಯಲ್ಲಿ ಏನಿದೆ? ಇಲ್ಲಿದೆ ಸಂಪೂರ್ಣ ಮಾಹಿತಿ.

ವಿಜಯ ಕರ್ನಾಟಕ 21 Feb 2026 10:51 am

ರಣರಂಗವನ್ನು ಬಿಟ್ಟು ಓಡಿ ಹೋಗುವ ಹೇಡಿ ನಾನಾಗಲಾರೆ: ಸಿಎಂ ಸಿದ್ದರಾಮಯ್ಯ ಪೋಸ್ಟ್‌

ಬೆಂಗಳೂರು, ಫೆಬ್ರವರಿ 21: ರಾಜ್ಯದಲ್ಲಿ ಸಿಎಂ ಬದಲಾವಣೆ ಕುರಿತು ಮಾತುಗಳು ಕೇಳಿಬರುತ್ತಿವೆ. ಈ ನಡುವೆ ಸಿಎಂ ಸಿದ್ದರಾಮಯ್ಯ ಅವರು ಸಾಮಾಜಿಕ ಜಾಲತಾಣ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡ ಸುದೀರ್ಘ ಪೋಸ್ಟ್ ಇದೀಗ ಭಾರೀ ಚರ್ಚೆಗೆ ಕಾರಣವಾಗಿದೆ. ಹಾಗಾದ್ರೆ, ಅದರಲ್ಲಿ ಏನೆಲ್ಲಾ ಇದೆ ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ. ಈ ಪೋಸ್ಟ್‌ನಲ್ಲಿ ಸಿಎಂ ಸಿದ್ದರಾಯಮ್ಮ ಅವರನ್ನು ತುಳಿಯಲು

ಒನ್ ಇ೦ಡಿಯ 21 Feb 2026 10:48 am

ಕರ್ನಾಟಕ ವಿ.ವಿ.ಗೆ ಕುಲಸಚಿವರೇ ಕಂಟಕ

ಕರ್ನಾಟಕ ಸರಕಾರ ವಿಶ್ವವಿದ್ಯಾನಿಲಯಗಳಿಗೆ ಕುಲಸಚಿವರನ್ನಾಗಿ ನೇಮಕ ಮಾಡುವಾಗ ಕನಿಷ್ಠ ಪಕ್ಷ ಶೈಕ್ಷಣಿಕ ವಲಯದ ಮಹತ್ವ ಗೊತ್ತಿರುವ ಪ್ರಾಮಾಣಿಕರನ್ನು ಆಯ್ಕೆ ಮಾಡಬೇಕು. ಯಾರು ಒಪ್ಪಲಿ ಬಿಡಲಿ ಈ ಹೊತ್ತಿಗೂ ವಿಶ್ವವಿದ್ಯಾನಿಲಯಗಳ ಪದವಿಗಳಿಗೆ ಒಂದು ಮೌಲ್ಯ ಮತ್ತು ಪಾವಿತ್ರ್ಯ ಇದೆ. ಇಂತಹ ಪದವಿಗಳನ್ನು ಹೆಚ್ಚು ಮೌಲ್ಯಯುತ ಮಾಡಬೇಕೆಂದರೆ ಕಳಂಕಿತರನ್ನು ವಿಶ್ವವಿದ್ಯಾನಿಲಯಗಳ ಆಡಳಿತ ವ್ಯವಸ್ಥೆಯಿಂದ ದೂರ ಇಡಬೇಕು. ಕರ್ನಾಟಕದಲ್ಲಿ ಭಾರತೀಯ ಜನತಾ ಪಕ್ಷದ ಬಿ.ಎಸ್. ಯಡಿಯೂರಪ್ಪ ಮತ್ತು ಬಸವರಾಜ ಬೊಮ್ಮಾಯಿಯವರು ಮುಖ್ಯಮಂತ್ರಿಗಳಾಗಿದ್ದ ಅವಧಿಯಲ್ಲಿ ಡಾ. ಸಿ.ಎನ್. ಅಶ್ವಥ್ ನಾರಾಯಣ ಅವರು ಉನ್ನತ ಶಿಕ್ಷಣ ಇಲಾಖೆಗೆ ಮಂತ್ರಿಯಾಗಿದ್ದರು. ಉನ್ನತ ಶಿಕ್ಷಣ ಇಲಾಖೆಯ ಜೊತೆಗೆ ಅನಾಯಾಸವಾಗಿ ಹಣ ತಂದು ಕೊಡುವ ಐ.ಟಿ., ಬಿ.ಟಿ. ಖಾತೆಯ ಸಚಿವರಾಗಿದ್ದರು. ವೈದ್ಯಕೀಯ ಶಿಕ್ಷಣ ಪಡೆದು ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾನಿಲಯದ ಅಕಾಡಮಿಕ್ ಕೌನ್ಸಿಲ್ ಸದಸ್ಯರಾಗಿ ಕಾರ್ಯ ನಿರ್ವಹಿಸಿ ಅನುಭವ ಪಡೆದಿದ್ದ ಡಾ. ಸಿ.ಎನ್. ಅಶ್ವಥ್ ನಾರಾಯಣ ಅವರು ಉನ್ನತ ಶಿಕ್ಷಣ ಇಲಾಖೆಯ ಮಂತ್ರಿಯಾಗುವ ಅವಕಾಶ ಸಿಕ್ಕಾಗ ಅತ್ಯುತ್ತಮ ಕೆಲಸ ಮಾಡಿ ಹೆಸರು ಮಾಡಬಹುದಿತ್ತು. ಸುದೀರ್ಘ ನಾಲ್ಕು ವರ್ಷಗಳ ಕಾಲ ಉನ್ನತ ಶಿಕ್ಷಣ ಸಚಿವರಾಗಿದ್ದ ಡಾ. ಸಿ.ಎನ್. ಅಶ್ವಥ್ ನಾರಾಯಣ ಅವರು ಮನಸ್ಸು ಮಾಡಿದ್ದರೆ ರಾಜ್ಯದ ಎಲ್ಲ ವಿಶ್ವವಿದ್ಯಾನಿಲಯಗಳನ್ನು ಅತ್ಯುತ್ತಮ ಶೈಕ್ಷಣಿಕ ಕೇಂದ್ರಗಳನ್ನಾಗಿ ರೂಪಿಸಬಹುದಿತ್ತು. ಡಾ. ಸಿ.ಎನ್. ಅಶ್ವಥ್ ನಾರಾಯಣ ಅವರು ರಾಜ್ಯದಲ್ಲಿ ಉನ್ನತ ಶಿಕ್ಷಣ ಸಚಿವರಾಗಿದ್ದಾಗ ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರ ಆಡಳಿತ ನಡೆಸುತ್ತಿತ್ತು. ಕರ್ನಾಟಕದ ಎಲ್ಲ ಸರಕಾರಿ ವಿಶ್ವವಿದ್ಯಾನಿಲಯಗಳಲ್ಲಿ ಪ್ರತಿಶತ ಅರುವತ್ತರಷ್ಟು ಬೋಧಕ ಮತ್ತು ಬೋಧಕೇತರ ಹುದ್ದೆಗಳು ಖಾಲಿ ಇದ್ದವು. ಈಗ ಖಾಲಿ ಹುದ್ದೆಗಳ ಸಂಖ್ಯೆ ಮತ್ತಷ್ಟು ಹೆಚ್ಚಾಗಿದೆ. ಬೋಧಕ ಹುದ್ದೆಗಳು ಖಾಲಿ ಇರುವುದರಿಂದ ವಿಶ್ವವಿದ್ಯಾನಿಲಯಗಳಲ್ಲಿ ಸಂಶೋಧನಾ ಚಟುವಟಿಕೆಗಳು ಸಂಪೂರ್ಣ ಸ್ಥಗಿತಗೊಂಡಿವೆ. ಸ್ನಾತಕೋತ್ತರ ಪದವಿ ಪೂರೈಸಿರುವ ವಿದ್ಯಾರ್ಥಿಗಳಿಗೆ ಪಿಎಚ್.ಡಿ. ಅಧ್ಯಯನ ಕೈಗೊಳ್ಳಲು ಮಾರ್ಗದರ್ಶಕರೇ ಲಭ್ಯ ಇಲ್ಲ. ಅಷ್ಟು ಮಾತ್ರವಲ್ಲ: ರಾಜ್ಯದ ಬಹುಪಾಲು ವಿಶ್ವವಿದ್ಯಾನಿಲಯಗಳು ಮೂಲಭೂತ ಸೌಕರ್ಯಗಳಿಲ್ಲದೆ ಕಳೆಗುಂದಿವೆ. ಕೇಂದ್ರ ಸರಕಾರದಿಂದ ಹೆಚ್ಚು ಅನುದಾನ ತಂದು ಸರಕಾರಿ ವಿಶ್ವವಿದ್ಯಾನಿಲಯಗಳನ್ನು ಖಾಸಗಿ ವಿವಿಗಳಿಗೆ ಮೀರಿಸುವಂತೆ ಅತ್ಯುತ್ತಮ ಗುಣಮಟ್ಟದಲ್ಲಿ ಪುನರ್ ಸಂಘಟಿಸಬಹುದಿತ್ತು. ಶತಮಾನ ಪೂರೈಸಿರುವ ಮೈಸೂರು ವಿಶ್ವವಿದ್ಯಾನಿಲಯಕ್ಕೆ ಕೇಂದ್ರೀಯ ವಿಶ್ವವಿದ್ಯಾನಿಲಯವನ್ನಾಗಿ ಪರಿವರ್ತಿಸಬಹುದಿತ್ತು. ಎಪ್ಪತ್ತೈದು ವರ್ಷಗಳನ್ನು ಪೂರೈಸಿರುವ ಕರ್ನಾಟಕ ವಿಶ್ವವಿದ್ಯಾನಿಲಯವನ್ನು ವಿಶ್ವಭಾರತಿ ವಿಶ್ವವಿದ್ಯಾನಿಲಯದ ಅಂತರ್‌ರಾಷ್ಟ್ರೀಯ ಮಟ್ಟದ ಮನ್ನಣೆಗೆ ಪಾತ್ರವಾಗುವಂತೆ ಪುನರ್ ರೂಪಿಸಲು ಅವಕಾಶಗಳಿದ್ದವು. 64 ವರ್ಷಗಳನ್ನು ಪೂರೈಸಿರುವ ಜ್ಞಾನಭಾರತಿ (ಬೆಂಗಳೂರು ವಿಶ್ವವಿದ್ಯಾನಿಲಯ)ಯನ್ನು ಬನಾರಸ್ ಹಿಂದೂ ವಿಶ್ವವಿದ್ಯಾನಿಲಯದ ಹಾಗೆ ಅತ್ಯುತ್ತಮ ಗುಣಮಟ್ಟದ ಸಂಶೋಧನಾ ಕೇಂದ್ರವನ್ನಾಗಿ ಕಟ್ಟಬಹುದಿತ್ತು. ಅವಕಾಶ ಇದ್ದಾಗ ಅತ್ಯುತ್ತಮ ಕೆಲಸಗಳನ್ನು ಮಾಡದ ಡಾ. ಸಿ.ಎನ್. ಅಶ್ವಥ್ ನಾರಾಯಣ ಅವರು ಮೂರು ಕೆಟ್ಟ ನಿರ್ಧಾರಗಳನ್ನು ಕೈಗೊಳ್ಳುವ ಮೂಲಕ ರಾಜ್ಯದ ಪ್ರತಿಷ್ಠಿತ ವಿಶ್ವವಿದ್ಯಾನಿಲಯಗಳನ್ನು ದುಸ್ಥಿತಿಗೆ ತಳ್ಳಿದರು. ಯುಯುಸಿಎಂಎಸ್ ವೆಬ್ ಪೋರ್ಟಲ್ ಪರಿಚಯಿಸುವ ಮೂಲಕ ಕರ್ನಾಟಕದ ಎಲ್ಲ ವಿಶ್ವವಿದ್ಯಾನಿಲಯಗಳ ಸ್ವಾಯತ್ತೆ ಕಿತ್ತುಕೊಂಡರು. ಬೀದರ್, ಹಾವೇರಿ, ಹಾಸನ, ಕೊಡಗು, ಕೊಪ್ಪಳ, ಬಾಗಲಕೋಟೆ, ಮಂಡ್ಯ ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ ಹೊಸ ವಿಶ್ವವಿದ್ಯಾನಿಲಯಗಳನ್ನು ಸ್ಥಾಪಿಸಿ, ಅತ್ಯಂತ ಪ್ರತಿಷ್ಠಿತ ವಿಶ್ವವಿದ್ಯಾನಿಲಯಗಳು ನಿತ್ರಾಣ ಸ್ಥಿತಿಗೆ ತಲುಪುವಂತೆ ಮಾಡಿದರು. ಮೂರನೆಯ ಅತ್ಯಂತ ಕೆಟ್ಟ ನಿರ್ಧಾರವೆಂದರೆ, ಕೆಎಎಸ್ ಅಧಿಕಾರಿಗಳನ್ನು ವಿಶ್ವವಿದ್ಯಾನಿಲಯಗಳ ಕುಲಸಚಿವರನ್ನಾಗಿ ಕಳುಹಿಸುವ ಆದೇಶ ಮಾಡಿದ್ದು. ದೇಶದ ಪ್ರತಿಷ್ಠಿತ ಕೇಂದ್ರೀಯ ವಿಶ್ವವಿದ್ಯಾನಿಲಯಗಳಲ್ಲಾಗಲಿ, ಐಐಟಿಗಳಲ್ಲಾಗಲಿ, ಸರಕಾರದ ಸೇವೆಗಳಲ್ಲಿರುವ ಅಧಿಕಾರಿಗಳನ್ನು ಕುಲಸಚಿವರನ್ನಾಗಿ ನೇಮಿಸುವ ನಿಯಮ ಇಲ್ಲ. ಬೆಂಗಳೂರಿನಲ್ಲಿ ವಿ.ಕೆ.ಆರ್.ವಿ. ರಾವ್ ಸ್ಥಾಪಿಸಿದ (1972) ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆಯ ಅಧ್ಯಯನ ಸಂಸ್ಥೆಯ (ಐಸೆಕ್) ಕುಲಸಚಿವರ ನೇಮಕಾತಿಯಲ್ಲೂ ಅಧಿಕಾರಿಗಳಿಗೆ ಅವಕಾಶ ಕಲ್ಪಿಸಿಲ್ಲ. ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ಮತ್ತು ಹಂಪಿಯ ಕನ್ನಡ ವಿಶ್ವವಿದ್ಯಾನಿಲಯದ ಕುಲಸಚಿವರ ನೇಮಕಾತಿಯ ಅಧಿಕಾರ ಸಿಂಡಿಕೇಟ್-ಕುಲಪತಿಗಳಿಗೆ ನೀಡಲಾಗಿದೆ. ಒಂದು ವಿಶ್ವವಿದ್ಯಾನಿಲಯಕ್ಕೆ ಕುಲಸಚಿವರನ್ನು ನೇಮಿಸಿಕೊಳ್ಳುವ ಅಧಿಕಾರ ಸಿಂಡಿಕೇಟ್ ಮತ್ತು ಕುಲಸಚಿವರಿಗೆ ಇದ್ದರೆ ಸುಗಮ ಆಡಳಿತ ಸಾಧ್ಯವಾಗುತ್ತದೆ. ಡಾ.ಸಿ.ಎನ್. ಅಶ್ವಥ್ ನಾರಾಯಣ ಉನ್ನತ ಶಿಕ್ಷಣ ಸಚಿವರಾಗುವುದಕ್ಕೂ ಮೊದಲು ಹಿರಿಯ ಪ್ರಾಧ್ಯಾಪಕರನ್ನು ಕುಲಸಚಿವರನ್ನಾಗಿ ನೇಮಿಸುವ ಪರಿಪಾಠ ಇತ್ತು. ಆಗಲೂ ಸಮಸ್ಯೆಗಳಿದ್ದವು. ಆದರೆ ಕೆಎಎಸ್ ಅಧಿಕಾರಿಗಳನ್ನು ವಿಶ್ವವಿದ್ಯಾನಿಲಯಗಳ ಕುಲಸಚಿವರನ್ನಾಗಿ ನೇಮಕ ಮಾಡಿದ ಮೇಲೆ ಸಂಘರ್ಷಗಳು ಹೆಚ್ಚಾಗಿವೆ. ಕುಲಪತಿ, ಕುಲಸಚಿವ ಮತ್ತು ಸಿಂಡಿಕೇಟ್ ಸದಸ್ಯರ ನಡುವೆ ಸಮನ್ವಯತೆ ಇಲ್ಲದಿದ್ದರೆ ವಿಶ್ವವಿದ್ಯಾನಿಲಯಗಳು ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದಲು ಸಾಧ್ಯವಾಗುವುದಿಲ್ಲ. ಕರ್ನಾಟಕದ ಎಲ್ಲ ವಿಶ್ವವಿದ್ಯಾನಿಲಯಗಳು ಸದ್ಯ ಕೆಎಎಸ್ ಅಧಿಕಾರಿಗಳನ್ನು ಕುಲಸಚಿವರನ್ನಾಗಿ ಹೊಂದಿವೆ. ಬೆರಳೆಣಿಕೆಯ ಅಧಿಕಾರಿಗಳು ಸಂಘರ್ಷವಿಲ್ಲದೆ ಶೈಕ್ಷಣಿಕ ಮಹತ್ವ ಅರಿತು ಕಾರ್ಯ ನಿರ್ವಹಿಸುತ್ತಿರಬಹುದು. ಆದರೆ ಬಹುತೇಕ ಕಡೆ ಸಮನ್ವಯತೆಯ ಕೊರತೆ ಢಾಳಾಗಿ ಎದ್ದು ಕಾಣುತ್ತದೆ. ಆದರೆ ಧಾರವಾಡದ ಕರ್ನಾಟಕ ವಿಶ್ವವಿದ್ಯಾನಿಲಯದಲ್ಲಿ ಕುಲಪತಿ -ಕುಲಸಚಿವರ ನಡುವೆ ಸಮನ್ವಯತೆ ಸಾಧ್ಯವಾಗದೆ ಅಭಿವೃದ್ಧಿ ಕಾರ್ಯಗಳು ಸಂಪೂರ್ಣ ಸ್ಥಗಿತಗೊಂಡಿವೆ. ಸಿಂಡಿಕೇಟ್ ಮತ್ತು ಅಕಾಡಮಿಯ ಸದಸ್ಯರು ಬೇಸತ್ತು ಹೋಗಿದ್ದಾರೆ. ಕರ್ನಾಟಕ ಸರಕಾರ ಪ್ರಾಮಾಣಿಕರು ಮತ್ತು ಕ್ರಿಯಾಶೀಲರನ್ನು ಸಿಂಡಿಕೇಟ್-ಅಕಾಡಮಿಕ್ ಸದಸ್ಯರನ್ನಾಗಿ ನೇಮಿಸಿದೆ. ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್ ಅವರು ಯಾರಿಗೂ ಕಿರುಕುಳ ಕೊಡದ ಸಜ್ಜನ ವ್ಯಕ್ತಿ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಾಮಾಜಿಕ ನ್ಯಾಯ, ಪ್ರಾದೇಶಿಕ ನ್ಯಾಯ ಮತ್ತು ಪ್ರಾಮಾಣಿಕತೆ-ದಕ್ಷತೆಯನ್ನು ಪರಿಗಣಿಸಿ ಅತ್ಯುತ್ತಮ ಶೈಕ್ಷಣಿಕ ಹಿನ್ನೆಲೆಯುಳ್ಳವರನ್ನೇ ಕುಲಪತಿಯನ್ನಾಗಿ ನೇಮಿಸಿದ್ದಾರೆ. ಮುಖ್ಯಮಂತ್ರಿ ಕಚೇರಿ ಹಣವಿಲ್ಲದವರೂ, ಪ್ರತಿಭಾವಂತರು ಕಲಪತಿಯಾಗಬಹುದು ಎಂಬುದನ್ನು ರುಜುವಾತುಪಡಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಾಮಾಜಿಕ ನ್ಯಾಯ, ಪ್ರತಿಭಾ ನ್ಯಾಯದ ಆಧಾರದಲ್ಲಿ ಕಳೆದ ಏಳು ತಿಂಗಳ ಹಿಂದೆ ಪ್ರೊ. ಎ.ಎಂ. ಖಾನ್ ಅವರನ್ನು ಧಾರವಾಡದ ಕರ್ನಾಟಕ ವಿಶ್ವವಿದ್ಯಾನಿಲಯಕ್ಕೆ ಕುಲಪತಿಯನ್ನಾಗಿ ನೇಮಿಸಲು ರಾಜ್ಯಪಾಲರಿಗೆ ಶಿಫಾರಸು ಮಾಡಿದ್ದರು. ರಾಜ್ಯಪಾಲರು ಕೂಡಾ ಅನಗತ್ಯ ರಾಜಕೀಯ ಮಾಡದೆ ಸರಕಾರದ ಶಿಫಾರಸನ್ನು ಮಾನ್ಯ ಮಾಡಿ ಮಂಗಳೂರು ವಿಶ್ವವಿದ್ಯಾನಿಲಯದ ಹಿರಿಯ ಪ್ರಾಧ್ಯಾಪಕ ಪ್ರೊ. ಎ.ಎಂ. ಖಾನ್ ಅವರನ್ನು ಕುಲಪತಿಯನ್ನಾಗಿ ನೇಮಿಸಿ ಆದೇಶ ಹೊರಡಿಸಿದರು. ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಪ್ರಾಧ್ಯಾಪಕರಾಗಿ, ಮುಖ್ಯಸ್ಥರಾಗಿ, ಡೀನ್ ಆಗಿ, ಮೌಲ್ಯ ಮಾಪನ ಮತ್ತು ಆಡಳಿತಾಂಗದ ಕುಲಸಚಿವರಾಗಿ ಅತ್ಯುತ್ತಮ ಕೆಲಸ ಮಾಡಿ ಸೈ ಎನಿಸಿಕೊಂಡವರು. ಇಲೆಕ್ಟ್ರಾನಿಕ್ಸ್ ವಿಷಯದ ಮೇಲೆ ಪ್ರಭುತ್ವ ಸಾಧಿಸಿರುವ ಪ್ರೊ. ಖಾನ್ ಅವರು ಬೆಲ್ಜಿಯಂ ವಿಶ್ವವಿದ್ಯಾನಿಲಯದಲ್ಲಿ ಪಿಎಚ್.ಡಿ. ಅಧ್ಯಯನ ಕೈಗೊಂಡಿದ್ದಾರೆ. ಬಯೋ ಮೆಡಿಕಲ್ ಇಮೇಜ್ ಪ್ರೊಸೆಸ್ಸಿಂಗ್, ಕಂಪ್ಯೂಟರ್ ನೆಟ್ ವರ್ಕ್ಸ್ ಸೇರಿದಂತೆ ವಿವಿಧ ವಲಯದಲ್ಲಿ ವಿಶೇಷ ಸಂಶೋಧನೆ ಮಾಡಿ ಅಪಾರ ಖ್ಯಾತಿ ಪಡೆದಿದ್ದಾರೆ. ಎಲ್ಲಕ್ಕೂ ಮಿಗಿಲಾಗಿ ಪ್ರಾಮಾಣಿಕ ವ್ಯಕ್ತಿತ್ವ ಕಾಪಾಡಿಕೊಂಡಿದ್ದಾರೆ. ದಕ್ಷರು, ಕ್ರಿಯಾಶೀಲರೂ ಆಗಿರುವ ಪ್ರೊ. ಎ.ಎಂ. ಖಾನ್ ಅವರ ಅಧಿಕಾರಾವಧಿಯಲ್ಲಿ ಕರ್ನಾಟಕ ವಿಶ್ವವಿದ್ಯಾನಿಲಯಕ್ಕೆ ಕಾಯಕಲ್ಪ ದೊರೆಯಬಹುದೆಂದು ಆ ಭಾಗದ ಜನರು ಕನಸುಗಣ್ಣಿನಿಂದ ಎದುರು ನೋಡುತ್ತಿದ್ದರು. ಪ್ರೊ. ಎ.ಎಂ. ಖಾನ್ ಅವರು ಮೂಲತಃ ಧಾರವಾಡದವರು. ಕರ್ನಾಟಕ ವಿಶ್ವವಿದ್ಯಾನಿಲಯದ ಭವ್ಯ ಪರಂಪರೆಯ ಬಗ್ಗೆ ಅಪಾರ ಗೌರವ ಹೊಂದಿದದವರು. ಎಲ್ಲಕ್ಕೂ ಮಿಗಿಲಾಗಿ ಆದರ್ಶ ಶಿಕ್ಷಕರ ಮಗನಾಗಿ ಕರ್ನಾಟಕ ವಿಶ್ವವಿದ್ಯಾನಿಲಯದ ಉನ್ನತ ಶೈಕ್ಷಣಿಕ ಪರಂಪರೆಯನ್ನು ವಿಸ್ತರಿಸುವ ಹಂಬಲ ಹೊತ್ತು ಕುಲಪತಿ ಹುದ್ದೆಯ ಜವಾಬ್ದಾರಿ ವಹಿಸಿಕೊಂಡಿದ್ದರು. ಧಾರವಾಡದ ಕರ್ನಾಟಕ ಕಾಲೇಜು ಮುಂಬೈ ಸರಕಾರದ ಅವಧಿಯಲ್ಲಿ ಆರಂಭವಾಗಿತ್ತು. ದಿವಾನ್ ರಾವ್ ಬಹಾದ್ದೂರು ರೊದ್ದ ಶ್ರೀನಿವಾಸರಾವ್ ಮತ್ತು ರಾವ್ ಬಹಾದ್ದೂರು ಆರ್.ಸಿ. ಅರಟಾಳ್ ರುದ್ರಗೌಡರ ಪ್ರಯತ್ನದ ಫಲವಾಗಿ 1917ರಲ್ಲಿ ಕರ್ನಾಟಕ ಕಾಲೇಜು ಆರಂಭವಾಯಿತು. ಆಗ ಅದು ಮುಂಬೈ ವಿಶ್ವವಿದ್ಯಾನಿಲಯದ ವ್ಯಾಪ್ತಿಗೆ ಸೇರಿತ್ತು. ಕರ್ನಾಟಕ ಕಾಲೇಜು ಆರಂಭವಾಗುವುದಕ್ಕೂ ಮುನ್ನ ಉತ್ತರ ಕರ್ನಾಟಕದ ವಿದ್ಯಾರ್ಥಿಗಳು ವಿದ್ಯಾಭ್ಯಾಸಕ್ಕಾಗಿ ಮುಂಬೈ, ಪುಣೆ ನಗರಗಳಿಗೆ ಹೋಗಬೇಕಿತ್ತು. ಬ್ರಿಟಿಷ್ ಕಾಲದ ಮುಂಬೈ ಪ್ರಾಂತದ ಶಾಸನ ಸಭೆಯಲ್ಲಿ ಹುಬ್ಬಳ್ಳಿಯ ಸರ್ ಸಿದ್ದಪ್ಪ ತೋಟಪ್ಪ ಕಂಬಳಿಯವರು ಸದಸ್ಯರಾಗಿದ್ದರು. ಅವರ ಪ್ರಭಾವದ ಕಾರಣಕ್ಕೆ ಕರ್ನಾಟಕ ಕಾಲೇಜು ಆರಂಭವಾಯಿತು. ಮೊದ ಮೊದಲು ಕಲಾ ಮತ್ತು ವಿಜ್ಞಾನ ವಿಭಾಗಗಳು ಆರಂಭವಾಗಿದ್ದವು. ನಂತರ ವಾಣಿಜ್ಯ, ಅರ್ಥ ಶಾಸ್ತ್ರದ ವಿಭಾಗಗಳು ಶುರುವಾದವು. ಕರ್ನಾಟಕ ಕಾಲೇಜಿನ ಮೊದಲ ಪ್ರಿನ್ಸಿಪಾಲರಾಗಿ ಖ್ಯಾತ ವಿಜ್ಞಾನಿ ಭಾರತ ರತ್ನ ಸಿ.ವಿ. ರಾಮನ್ ಕಾರ್ಯ ನಿರ್ವಹಿಸಿದ್ದಾರೆ. ಡಿ.ಸಿ. ಪಾವಟೆ, ವಿ.ಕೆ. ಗೋಕಾಕ, ನಂದನ್ ನೀಲಕೇಣಿ, ಗಿರೀಶ್ ಕಾರ್ನಾಡ್, ಚಂದ್ರಶೇಖರ ಕಂಬಾರ ಕರ್ನಾಟಕ ಕಾಲೇಜಿನ ಹಳೆಯ ವಿದ್ಯಾರ್ಥಿಗಳು. ಕರ್ನಾಟಕ ವಿಶ್ವವಿದ್ಯಾನಿಲಯ ಸ್ಥಾಪನೆಯಾಗಿ ಎಪ್ಪತ್ತೈದು ವರ್ಷಗಳು ಕಳೆದಿವೆ. ಕರ್ನಾಟಕ ಕಾಲೇಜು ಶತಮಾನ ಪೂರೈಸಿದ ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಸರ್ ಸಿದ್ದಪ್ಪ ಕಂಬಳಿಯವರು ಮುಂಬೈ ಪ್ರಾಂತದ ಧಾನಜಿ ಶಹಾ ಕೂಪರ್ ಸರಕಾರದಲ್ಲಿ ಶಿಕ್ಷಣ, ಕೃಷಿ, ಅಬಕಾರಿ ಸಚಿವರಾಗಿದ್ದರು. 1949ರಲ್ಲಿ ಮುಂಬೈ ವಿಧಾನಸಭೆಯಲ್ಲಿ ಕರ್ನಾಟಕ ವಿಶ್ವವಿದ್ಯಾನಿಲಯದ ಕಾಯ್ದೆ ಪಾಸ್ ಆಯಿತು. 1950ರಲ್ಲಿ ಕರ್ನಾಟಕ ವಿಶ್ವವಿದ್ಯಾನಿಲಯ ಕಾರ್ಯಾರಂಭ ಮಾಡಿತು. ಮೊದಲ ಕುಲಪತಿಯಾಗಿ ಆರ್. ಜಹಾಗೀರದಾರ್ ನೇಮಕೊಂಡಿದ್ದರು. ಈ ವಿಶ್ವವಿದ್ಯಾನಿಲಯದ ಅಧೀನದಲ್ಲಿ ಐದು ಕಾಲೇಜುಗಳು ಒಂದು ಪಬ್ಲಿಕ್ ಶಾಲೆ ಕಾರ್ಯ ನಿರ್ವಹಿಸುತ್ತವೆ. ಕರ್ನಾಟಕ ಕಲಾ ಕಾಲೇಜು, ಕರ್ನಾಟಕ ವಿಜ್ಞಾನ ಕಾಲೇಜು, ವಿಶ್ವವಿದ್ಯಾನಿಲಯದ ಶಿಕ್ಷಣ ಕಾಲೇಜು, ಸರ್ ಸಿದ್ದಪ್ಪ ಕಂಬಳಿ ಕಾನೂನು ಮಹಾವಿದ್ಯಾನಿಲಯ, ಸಂಗೀತ ಮತ್ತು ಲಲಿತ ಕಲಾ ಮಹಾವಿದ್ಯಾನಿಲಯ ಕಾರ್ಯ ನಿರ್ವಹಿಸುತ್ತಿವೆ. ಈಗಲೂ ಕರ್ನಾಟಕ ವಿಜ್ಞಾನ ಕಾಲೇಜು ಅತ್ಯಂತ ಬೇಡಿಕೆಯುಳ್ಳ ಮಹಾವಿದ್ಯಾನಿಲಯವಾಗಿದೆ. ಕರ್ನಾಟಕ ವಿಶ್ವವಿದ್ಯಾನಿಲಯಕ್ಕೆ ಇಲ್ಲಿಯವರೆಗೆ ಅದರ ಘನತೆ ಗೌರವ ಹೆಚ್ಚಿಸುವ ವ್ಯಕ್ತಿಗಳೇ ಕುಲಪತಿಗಳಾಗಿ ಕಾರ್ಯ ನಿರ್ವಹಿಸಿದ್ದಾರೆ. ಖ್ಯಾತ ಶಿಕ್ಷಣ ತಜ್ಞ ಡಾ. ಡಿ.ಸಿ. ಪಾವಟೆ ಕರ್ನಾಟಕ ವಿಶ್ವವಿದ್ಯಾನಿಲಯಕ್ಕೆ ಭದ್ರ ಬುನಾದಿ ಹಾಕಿದವರಲ್ಲಿ ಪ್ರಮುಖರು. ಡಾ. ಎ.ಎಸ್. ಅಡಕೆ, ಖ್ಯಾತ ಭಾಷಾ ವಿಜ್ಞಾನಿ ಡಾ. ಆರ್.ಸಿ. ಹಿರೇಮಠ, ಖ್ಯಾತ ಅರ್ಥ ಶಾಸ್ತ್ರಜ್ಞ ಡಾ. ಡಿ.ಎಂ. ನಂಜುಂಡಪ್ಪ, ಡಾ. ಜಿ.ಕೆ. ನಾರಾಯಣ ರೆಡ್ಡಿ, ಡಾ. ಎ.ಎಂ. ಪಟಾಣ ಮುಂತಾದವರು ವಿಶ್ವವಿದ್ಯಾನಿಲಯದ ಶ್ರೇಯೋಭಿವೃದ್ಧಿಗೆ ಶಕ್ತಿ ಮೀರಿ ಶ್ರಮಿಸಿದ್ದಾರೆ. ಡಾ. ಎ.ಎಂ. ಪಟಾಣ ಅವರು ಎಲ್ಲ ಸಮುದಾಯದ ಪ್ರತಿಭಾವಂತರನ್ನು ಹುಡುಕಿ ಪ್ರಾಧ್ಯಾಪಕ ಹುದ್ದೆ ನೀಡಿದ್ದರು. ಕರ್ನಾಟಕ ವಿಶ್ವವಿದ್ಯಾನಿಲಯದ ಹೆಸರು ಈ ಹೊತ್ತು ರಾಷ್ಟ್ರೀಯ ಅಂತಾರ್‌ರಾಷ್ಟ್ರೀಯ ಮಟ್ಟದಲ್ಲಿ ಬೆಳಗಲು ಸಾಧ್ಯವಾಗಿದ್ದು ಆ ಎಲ್ಲ ಮಹನೀಯರ ಉದಾತ್ತ ಚಿಂತನೆಗಳಿಂದ, ಜಾತ್ಯತೀತ ನಡೆಯಿಂದ. ಒಂದು ಕಾಲದಲ್ಲಿ ಕರ್ನಾಟಕ ವಿಶ್ವವಿದ್ಯಾನಿಲಯದ ವ್ಯಾಪ್ತಿಗೆ ಧಾರವಾಡ, ಬೆಳಗಾವಿ, ಉತ್ತರ ಕನ್ನಡ, ವಿಜಯಪುರ, ಕಲಬುರಗಿ, ರಾಯಚೂರು, ಬೀದರ್, ಬಳ್ಳಾರಿ ಜಿಲ್ಲೆಗಳು ಸೇರಿದ್ದವು. 1980ರಲ್ಲಿ ಕಲಬುರ್ಗಿ ವಿಶ್ವವಿದ್ಯಾನಿಲಯವಾಗಿ ಕೆಲವು ಜಿಲ್ಲೆಗಳು ಕಳಚಿಕೊಂಡವು. 1953-1965ರವರೆಗೆ ಮಣಿಪಾಲ ತಾಂತ್ರಿಕ ಮಹಾವಿದ್ಯಾಲಯ ಮತ್ತು ಮಣಿಪಾಲದ ಕಸ್ತೂರ್‌ಬಾ ಮೆಡಿಕಲ್ ಮಹಾವಿದ್ಯಾಲಯ ಕರ್ನಾಟಕ ವಿಶ್ವವಿದ್ಯಾನಿಲಯದ ವ್ಯಾಪ್ತಿಗೆ ಸೇರಿದ್ದವು. ಜೆ. ಅಲೆಕ್ಸಾಂಡರ್, ಡಾ. ಜಿ.ಎಸ್. ಅಮೂರ್, ಸುರೇಶ್ ಹೆಬ್ಲೀಕರ್, ಟಿ.ಎಂ.ಪೈ, ಗಿರೀಶ್ ಕಾರ್ನಾಡ್, ಅನಿಲ್ ಸಹಸ್ರ ಬುಧೆ ಈ ವಿಶ್ವವಿದ್ಯಾನಿಲಯದ ಹಳೆಯ ವಿದ್ಯಾರ್ಥಿಗಳು. ಇಂತಹ ಶ್ರೇಷ್ಠ ವಿಶ್ವವಿದ್ಯಾನಿಲಯದಲ್ಲಿ ಕುಲಪತಿ -ಕುಲಸಚಿವ ಹುದ್ದೆ ಅಲಂಕರಿಸುವುದೆಂದರೆ ಅತ್ಯಂತ ಗೌರವದ ಪ್ರತೀಕ. ಆದರೆ ಕೆಲವರಿಗೆ ಒಂದು ಸಂಸ್ಥೆಯ ಘನತೆ ಗೌರವ ತಿಳಿದಿರುವುದಿಲ್ಲ. ಅತ್ಯಂತ ಪ್ರತಿಷ್ಠಿತ ಕರ್ನಾಟಕ ವಿಶ್ವವಿದ್ಯಾನಿಲಯಕ್ಕೆ ಕುಲಸಚಿವನ್ನಾರಾಗಿ ಕೆ. ಎಸ್. ಅಧಿಕಾರಿ ಡಾ. ಶಂಕರಪ್ಪ ವಣಿಕ್ಯಾಳ ಅವರನ್ನು ಕರ್ನಾಟಕ ಸರಕಾರ ನೇಮಿಸಿದೆ. ಡಾ. ಶಂಕರಪ್ಪ ವಣಿಕ್ಯಾಳ ಅವರ ಸಂಬಂಧಿ ಶಂಕರಣ್ಣ ವಣಿಕ್ಯಾಳ ಎರಡು ಬಾರಿ ಜಿಲ್ಲಾ ಪಂಚಾಯತ್ ಸದಸ್ಯರಾಗಿದ್ದರು. ಒಂದು ಅವಧಿಗೆ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಶಹಾಪುರ ತಾಲೂಕಿನ ನಗನೂರು ಗ್ರಾಮದ ಡಾ. ಶಂಕರಪ್ಪ ವಣಿಕ್ಯಾಳ ಪ್ರತಿಭಾವಂತ. ಪಿಎಸ್‌ಐ ಮತ್ತು ಸರಕಾರಿ ಪ್ರೌಢ ಶಾಲೆಯ ಮುಖ್ಯ ಶಿಕ್ಷಕರ ಹುದ್ದೆಗೆ ಆಯ್ಕೆಯಾದವರು. ತಹಶೀಲ್ದಾರ್ ಹುದ್ದೆಯಲ್ಲಿ ಕಾರ್ಯ ನಿರ್ವಹಿಸಿದವರು. ಆದರೆ ಹುದ್ದೆ ದೊರಕಿದಾಗ ಜನೋಪಯೋಗಿ ಕೆಲಸದಲ್ಲಿ ತೊಡಗಿಸಿಕೊಂಡಿದ್ದರೆ ಡಾ. ಶಂಕರಪ್ಪ ವಣಿಕ್ಯಾಳ ಬೇಡಿಕೆಯುಳ್ಳ ಅಧಿಕಾರಿಯಾಗಿ ಹೊರ ಹೊಮ್ಮುತ್ತಿದ್ದರು. ಅತ್ಯಂತ ಸಜ್ಜನ ಮತ್ತು ಪ್ರಾಮಾಣಿಕ ರಾಜಕಾರಣಿ ಹಾಲಿ ಮಂತ್ರಿ ಶರಣಬಸಪ್ಪ ದರ್ಶನಾಪುರ ಅವರು ಡಾ. ಶಂಕರಪ್ಪ ವಣಿಕ್ಯಾಳ ಅವರನ್ನು ಶಹಾಪುರ ತಾಲೂಕಿನ ತಹಶೀಲ್ದಾರ್ ಹುದ್ದೆಗೆ ಹಾಕಿಸಿಕೊಂಡಿದ್ದರು. ಆದರೆ ವಣಿಕ್ಯಾಳ ಅವರ ಕಾರ್ಯ ವೈಖರಿ ಕಂಡು ಹೌಹಾರಿದ ದರ್ಶನಾಪುರ ಅವರು ಅಂದಿನ ಕಲಬುರಗಿ ಜಿಲ್ಲಾಧಿಕಾರಿ ಪಂಕಜ ಪಾಂಡೆಯವರಿಗೆ ಹೇಳಿ ತಕ್ಷಣವೇ ಶಹಾಪುರದಿಂದ ರಿಲೀವ್ ಮಾಡಿಸಿದ್ದರು. ಡಾ. ಶಂಕರಪ್ಪ ಅವರನ್ನು ಸರಕಾರ ಬಸವ ಕಲ್ಯಾಣ ಅಭಿವೃದ್ಧಿ ಪ್ರಾಧಿಕಾರದ ಆಡಳಿತ ಅಧಿಕಾರಿಯನ್ನಾಗಿ ವರ್ಗಾವಣೆ ಮಾಡಿತ್ತು. ಅಲ್ಲಿ ಅಂದಾಜು ರೂ. 800ಕೋಟಿ ಹಣವಿತ್ತು. ಆಗ ಮಂತ್ರಿಯಾಗಿದ್ದ ಹಾಲಿ ವೀರಶೈವ ಲಿಂಗಾಯತ ಮಹಾಸಭಾದ ಅಧ್ಯಕ್ಷರು ಮತ್ತು ಈಗ ಅರಣ್ಯ ಖಾತೆಯ ಮಂತ್ರಿಯಾಗಿರುವ ಈಶ್ವರ್ ಖಂಡ್ರೆಯವರು ಅಲ್ಲಿಗೆ ಬರಲು ಬಿಡಲೇ ಇಲ್ಲ. ಕಾರಣ ಡಾ. ಶಂಕರಪ್ಪ ವಣಿಕ್ಯಾಳ ಅವರ ಕಾರ್ಯ ವೈಖರಿ. ವಣಿಕ್ಯಾಳ ಅವರು ಕಲಬುರಗಿ ಜಿಲ್ಲೆಯ ಹೆಚ್ಚುವರಿ ಜಿಲ್ಲಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದಾರೆ. 2022ರ ಮಾರ್ಚ್ ತಿಂಗಳಲ್ಲಿ ಡಾ. ಶಂಕರಪ್ಪ ವಣಿಕ್ಯಾಳ ಅವರನ್ನು ಕಲಬುರ್ಗಿ ಮಹಾನಗರ ಪಾಲಿಕೆಯ ಆಯುಕ್ತರನ್ನಾಗಿ ವರ್ಗಾವಣೆ ಮಾಡಿದ್ದರು. ಇವರ ಕಾರ್ಯವೈಖರಿಗೆ ಬೇಸತ್ತ ಕೆಲವರು ಗುಸು ಗುಸು ಮಾತನಾಡಿಕೊಳ್ಳುತ್ತಿದ್ದರು. ಅದೇ ವರ್ಷದ ಜೂನ್ ತಿಂಗಳಲ್ಲಿ ಲಂಚಕ್ಕೆ ಪೀಡಿಸುತ್ತಿದ್ದಾರೆಂದು ಶರಣಬಸಪ್ಪ ಅಂಬೇಸಿಂಗ್ ಎಂಬವರು ಭ್ರಷ್ಟಾಚಾರ ನಿಗ್ರಹ ದಳಕ್ಕೆ ದೂರು ನೀಡಿದ್ದರು. ಕೋವಿಡ್ ಸುರಕ್ಷಾ ಹೆಲ್ಪ್‌ಲೈನ್ ಕಾರ್ಯ ನಿರ್ವಹಿಸಿದ್ದ ಶರಣಪ್ಪ ರೂ. 7.5ಲಕ್ಷದ ಬಿಲ್ ಪಾವತಿಸುವಂತೆ ಹಲವು ಬಾರಿ ಮನವಿ ಮಾಡಿದ್ದಾರೆ. ಡಾ. ಶಂಕರಪ್ಪ ಅವರ ಅಕೌಂಟಂಟ್ ಚೆನ್ನಪ್ಪ ಬನ್ನೂರ್ ಮೂಲಕ ಹಣದ ವ್ಯವಹಾರ ನಡೆಸಿ ಎಸಿಬಿ ತಂಡ ರೆಡ್ ಹ್ಯಾಂಡ್ ಆಗಿ ಬಲೆಗೆ ಹಾಕಿದೆ. ಡಾ. ಶಂಕರಪ್ಪ ಅವರ ಮನೆ ಶೋಧ ನಡೆಸಿದ ಎಸಿಬಿ ತಂಡ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ನಾಲ್ಕು ದಿನ ನ್ಯಾಯಾಂಗ ಬಂಧನದಲ್ಲಿದ್ದು ಜಾಮೀನು ಕೋರಿ ಕಲಬುರಗಿ ಹೈಕೋರ್ಟ್ ಮೊರೆ ಹೋಗಿದ್ದಾರೆ. ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಗಿರೀಶ್ ಕಾಶೇಂಪುರ್ ಎಸಿಬಿ ಪರ ಸಮರ್ಥ ವಾದ ಮಂಡಿಸಿ ಜಾಮೀನು ನಿರಾಕರಣೆಗೆ ಭೂಮಿಕೆ ಸಿದ್ಧಪಡಿಸಿದ್ದಾರೆ. ಆಗ ನ್ಯಾಯಾಧೀಶರಾಗಿದ್ದ ಗೌರವಾನ್ವಿತ ಎಂ.ಜಿ. ಮೇಡಂ ಅವರು ಜಾಮೀನು ನಿರಾಕರಿಸಿದ್ದಾರೆ. ಅನಿವಾರ್ಯವಾಗಿ ಡಾ. ಶಂಕರಪ್ಪ ವಣಿಕ್ಯಾಳ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನ ವಾಸ ಅನುಭವಿಸುವಂತಾಗಿದೆ. ಕರ್ನಾಟಕ ಸರಕಾರ ವಿಶ್ವವಿದ್ಯಾನಿಲಯಗಳಿಗೆ ಕುಲಸಚಿವರನ್ನಾಗಿ ನೇಮಕ ಮಾಡುವಾಗ ಕನಿಷ್ಠ ಪಕ್ಷ ಶೈಕ್ಷಣಿಕ ವಲಯದ ಮಹತ್ವ ಗೊತ್ತಿರುವ ಪ್ರಾಮಾಣಿಕರನ್ನು ಆಯ್ಕೆ ಮಾಡಬೇಕು. ಯಾರು ಒಪ್ಪಲಿ ಬಿಡಲಿ ಈ ಹೊತ್ತಿಗೂ ವಿಶ್ವವಿದ್ಯಾನಿಲಯಗಳ ಪದವಿಗಳಿಗೆ ಒಂದು ಮೌಲ್ಯ ಮತ್ತು ಪಾವಿತ್ರ್ಯ ಇದೆ. ಇಂತಹ ಪದವಿಗಳನ್ನು ಹೆಚ್ಚು ಮೌಲ್ಯಯುತ ಮಾಡಬೇಕೆಂದರೆ ಕಳಂಕಿತರನ್ನು ವಿಶ್ವವಿದ್ಯಾನಿಲಯಗಳ ಆಡಳಿತ ವ್ಯವಸ್ಥೆಯಿಂದ ದೂರ ಇಡಬೇಕು. ಕಳಂಕಿತ ಅಧಿಕಾರಿಗೆ ಹುದ್ದೆ ನಿರಾಕರಿಸಲು ಆಗುವುದಿಲ್ಲ. ಎಲ್ಲೋ ಒಂದು ಕಡೆ ವ್ಯವಸ್ಥೆ ಮಾಡಲಿ. ಜೈಲಿಗೆ ಹೋಗಿ ಬಂದ ಡಾ. ಶಂಕರಪ್ಪ ವಣಿಕ್ಯಾಳ ಅವರನ್ನು ಕರ್ನಾಟಕ ವಿಶ್ವವಿದ್ಯಾನಿಲಯದಂತಹ ಭವ್ಯ ಪರಂಪರೆಯುಳ್ಳ ಸಂಸ್ಥೆಗೆ ಕುಲಸಚಿವರನ್ನಾಗಿ ನೇಮಕ ಮಾಡಿದರೆ ಕೆಟ್ಟ ಹೆಸರು ಬರದೇ ಇರುತ್ತದೆಯೇ? ಡಾ. ಶಂಕರಪ್ಪ ವಣಿಕ್ಯಾಳ ಅವರು ಸಂವೇದನಾಶೀಲ ವ್ಯಕ್ತಿಯಾಗಿದ್ದರೆ ಹಳೆಯ ಕಳಂಕ ತೊಡೆದು ಕೊಳ್ಳುವ ಸಂಕಲ್ಪ ಮಾಡುತ್ತಿದ್ದರು. ಆದರೆ ವಣಿಕ್ಯಾಳ ಅವರಿಗೆ ಬದಲಾಗುವ ಇರಾದೆಯೇ ಇಲ್ಲ. ಎಷ್ಟೇ ಹೆಸರು ಕೆಡಲಿ ದುಡ್ಡು ಮಾಡಲೇಬೇಕೆಂದು ನಿರ್ಧಾರ ಮಾಡಿಕೊಂಡ ಆತ ಸದ್ಯ ಕರ್ನಾಟಕ ವಿಶ್ವವಿದ್ಯಾನಿಲಯಕ್ಕೆ ಕಂಟಕವಾಗಿ ಪರಿಣಮಿಸಿದ್ದಾರೆ. ಕಳೆದ ಏಳು ತಿಂಗಳಿಂದ ಕರ್ನಾಟಕ ವಿಶ್ವವಿದ್ಯಾನಿಲಯದ ಆಡಳಿತ ವ್ಯವಸ್ಥೆ ಸ್ಥಗಿತಗೊಂಡಿದೆ. ಅಕಾಡಮಿಕ್ ಕೌನ್ಸಿಲ್ ಮತ್ತು ಸಿಂಡಿಕೇಟ್ ಸಭೆಗಳಲ್ಲಿ ಕೈಗೊಂಡ ನಿರ್ಣಯಗಳನ್ನು ಅನುಷ್ಠಾನಗೊಳಿಸುವುದು ಆಡಳಿತದ ಕುಲಸಚಿವ ಮತ್ತು ಮೌಲ್ಯಮಾಪನ ಕುಲಸಚಿವರ ಆದ್ಯ ಕರ್ತವ್ಯ. ಮುಂದಿನ ಸಭೆಯಲ್ಲಿ ಅನುಪಾಲನ ವರದಿ ಮಂಡಿಸಬೇಕೇ ಹೊರತು ಕಾನೂನು ಅಭಿಪ್ರಾಯ ಕೋರಲಾಗಿದೆ ಎಂದು ಹೇಳಕೂಡದು. ಡಾ. ಶಂಕರಪ್ಪ ವಣಿಕ್ಯಾಳ ತನ್ನ ಘನತೆ ಗೌರವವನ್ನು ಕಳೆದುಕೊಂಡಿದ್ದಲ್ಲದೆ ಈಗ ಕರ್ನಾಟಕ ವಿಶ್ವವಿದ್ಯಾನಿಲಯಕ್ಕೆ ಕಂಟಕವಾಗಿದ್ದು ಬಹು ದೊಡ್ಡ ದುರಂತ. ಕುಲಪತಿ ಮತ್ತು ಆಡಳಿತ ಮಂಡಳಿಯ ನಿರ್ಧಾರಗಳನ್ನು ಅನುಷ್ಠಾನಗೊಳಿಸಲು ಅಡ್ಡಿಯಾಗುವುದೆಂದರೆ ಘನ ರಾಜ್ಯಪಾಲರಿಗೆ, ಸರಕಾರಕ್ಕೆ ಅಗೌರವ ತೋರಿದಂತೆ. ಒಂದು ವಿಶ್ವವಿದ್ಯಾನಿಲಯ ವ್ಯವಸ್ಥೆಯಲ್ಲಿ ಸಿಂಡಿಕೇಟ್, ಅಕಾಡಮಿಕ್ ಕೌನ್ಸಿಲ್ ಅತ್ಯುನ್ನತ ಪ್ರಾಧಿಕಾರ. ಕುಲಪತಿ ಆ ಸಂಸ್ಥೆಯ ಮುಖ್ಯಸ್ಥರು. ಶಾಸನ ಬದ್ಧ ಪ್ರಾಧಿಕಾರಗಳು ಮತ್ತು ಸ್ಥಾನಕ್ಕೆ ಧಿಕ್ಕರಿಸಿ ಕಾರ್ಯ ನಿರ್ವಹಿಸುವುದು ಅಪರಾಧವೇ ಸರಿ. ಕರ್ನಾಟಕ ವಿಶ್ವವಿದ್ಯಾನಿಲಯದ ಘನತೆ ಗೌರವಕ್ಕೆ ನಿತ್ಯ ಚ್ಯುತಿ ತರುತ್ತಿರುವ ಕುಲಸಚಿವರನ್ನು ತಕ್ಷಣವೇ ಬೇರೆಡೆಗೆ ವರ್ಗಾಯಿಸಬೇಕು. ಅತ್ಯುತ್ತಮ ಕೆಲಸ ಮಾಡಬೇಕೆಂಬ ಹಂಬಲದ ಕುಲಪತಿ ಮತ್ತು ಸಿಂಡಿಕೇಟ್, ಅಕಾಡಮಿಕ್ ಕೌನ್ಸಿಲ್ ಸದಸ್ಯರ ಅತ್ಯುತ್ಸಾಹಕ್ಕೆ ಸರಕಾರ ಒತ್ತಾಸೆಯಾಗಿ ನಿಲ್ಲಬೇಕು. ಉನ್ನತ ಶಿಕ್ಷಣ ಸಚಿವರಾದ ಸುಧಾಕರ್ ಅವರು ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಒಳ್ಳೆಯ ಕೆಲಸ ಮಾಡುವಾಗ ಯಾವತ್ತೂ ಹಿಂದೆ ಬಿದ್ದಿಲ್ಲ. ಕರ್ನಾಟಕ ವಿಶ್ವವಿದ್ಯಾನಿಲಯದ ಕೆಟ್ಟ ನಿದರ್ಶನ ಎಲ್ಲೆಡೆ ಪಸರಿಸುವ ಮುನ್ನ ಸರಕಾರ ಕಠಿಣ ನಿರ್ಧಾರ ಕೈಗೊಳ್ಳಬೇಕು

ವಾರ್ತಾ ಭಾರತಿ 21 Feb 2026 10:40 am

ಈ ‘ಗೋವಾ ಮಾದರಿ’ಯಲ್ಲಿ ನಮಗೇನು ಪಾಠ ಇದೆ?

ಇಂದು ಕನ್ನಡ ಕರಾವಳಿ ಎಗ್ಗಿಲ್ಲದೆ ‘ಆನಿಪಾಲು’ ಆಗುತ್ತಿದೆ, ಸ್ಥಳೀಯರು ನಮಗೆ ಕೊಡಿರೆಂದು ಕೇಳದ, ವಿಷವೂಡುವ, ಇಲ್ಲಿನ ಪರಿಸರ ಮತ್ತು ಜನಪದಗಳನ್ನು ಹೇಳಹೆಸರಿಲ್ಲದಂತೆ ನಾಶಮಾಡಬಲ್ಲ ಯೋಜನೆಗಳನ್ನು ‘ಡೇಬಲಾಪ್‌ಮೇಂಟ್’ ಹೆಸರಿನಲ್ಲಿ ಇಲ್ಲಿಗೆ ತಂದು ಸುರಿಯಲಾಗುತ್ತಿದೆ. ಇಂತಹ ಸನ್ನಿವೇಶದಲ್ಲಿ, ಇಲ್ಲಿನ ಅಸ್ಮಿತೆಗೆ ಧಕ್ಕೆ ಬಂದಾಗ ಜನ ಹೇಗೆ ರಾಜಕೀಯ, ಪಂಥ, ಪರಾಕ್ರಮಗಳನ್ನೆಲ್ಲ ಮರೆತು ನಾಡಿನ ಹಿತದೃಷ್ಟಿಯಿಂದ ಪ್ರತಿಕ್ರಿಯಿಸಬೇಕು ಎಂಬುದಕ್ಕೆ ಗೋವಾದ ಈ ಮಾದರಿ ನಮಗೆ ಪಾಠ ಆಗಬೇಕು. ಗೋವಾದಲ್ಲೊಂದು ವಿಶಿಷ್ಟ ವಿದ್ಯಮಾನ ನಡೆಯುತ್ತಿದೆ. ದಕ್ಷಿಣ ಗೋವಾದ ದಾಬೋಲಿಮ್‌ನಲ್ಲಿರುವ ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಮುಚ್ಚಬೇಕೆಂಬ ‘ಆನಿ ಒತ್ತಡ’ವನ್ನು ಗೋವಾದ ಬಿಜೆಪಿ, ಕಾಂಗ್ರೆಸ್, AAP, ಇತರ ಪ್ರಾದೇಶಿಕ ಪಕ್ಷಗಳೆಲ್ಲವೂ ಒಟ್ಟಾಗಿ ಒಕ್ಕೊರಲಿನಿಂದ ವಿರೋಧಿಸುತ್ತಿವೆ ಮತ್ತು ತಮ್ಮ ಅಭಿಪ್ರಾಯವನ್ನು ಮೀರಿ ಅಂತಹದೇನಾದರೂ ಸಂಭವಿಸಿದರೆ, ಎಲ್ಲರೂ ಒಟ್ಟಾಗಿ ಹೋರಾಟ ಕಟ್ಟುವ ಎಚ್ಚರಿಕೆಗಳೂ ಹೊರಬೀಳುತ್ತಿವೆ. ಈ ಜನಾಭಿಪ್ರಾಯದ ಮಹಾಪೂರಕ್ಕೆ ದೇಶದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಸದ್ಯಕ್ಕೆ ಮಣಿದಿರುವಂತೆ ಕಾಣಿಸುತ್ತಿದೆ. ವಿಷಯ ಏನೆಂದರೆ, ಪುಟ್ಟ ರಾಜ್ಯವಾಗಿರುವ ಗೋವಾದಲ್ಲಿ ಎರಡು ವಿಮಾನ ನಿಲ್ದಾಣಗಳಿವೆ. ಒಂದು ದಕ್ಷಿಣ ಗೋವಾದ ದಾಬೋಲಿಮ್‌ನಲ್ಲಿರುವ ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣವಾದರೆ, ಇನ್ನೊಂದು ಉತ್ತರ ಗೋವಾದ ಮೋಪಾದಲ್ಲಿ ಇರುವ ‘ಮನೋಹರ್ ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣ’. ಈ ಮೋಪಾದಲ್ಲಿರುವ ವಿಮಾನ ನಿಲ್ದಾಣವನ್ನು GMR ಎಂಬ ಖಾಸಗಿ ಸಂಸ್ಥೆ ನಿರ್ವಹಿಸುತ್ತಿದೆ. ದೇಶದ ಪ್ರಮುಖ ವಿಮಾನ ನಿಲ್ದಾಣ ನಿರ್ವಹಣಾ ಸಂಸ್ಥೆಗಳಲ್ಲಿ GMR ಕೂಡ ಒಂದು. ದಾಬೋಲಿಮ್‌ನಲ್ಲಿರುವ ವಿಮಾನ ನಿಲ್ದಾಣ ಮುಚ್ಚಿಕೊಂಡರೆ, ತಮ್ಮ ಮೋಪಾ ವಿಮಾನ ನಿಲ್ದಾಣಕ್ಕೆ ಹೆಚ್ಚಿನ ಲಾಭ ಇದೆ ಎಂಬುದು ಖಾಸಗಿ ನಿರ್ವಾಹಕರ ದೂರಾಲೋಚನೆ ಇರುವಂತಿದೆ. ಖಾಸಗಿ ದೂರಾಲೋಚನೆಯ ಹಿಂದೆ ಒಂದು ಬಲವಾದ ಕಾರಣ ಇದೆ. ದಾಬೋಲಿಮ್‌ನಲ್ಲಿರುವ ವಿಮಾನ ನಿಲ್ದಾಣವನ್ನು 1955ರಲ್ಲಿ ಪೋರ್ಚುಗೀಸರು ನಿರ್ಮಿಸಿದ್ದರು. 1961ರಲ್ಲಿ ಗೋವಾ ವಿಮೋಚನೆ ಆದ ಬಳಿಕ, ಈ ನಿಲ್ದಾಣವನ್ನು ಭಾರತೀಯ ನೌಕಾಪಡೆಯ ವಿಮಾನಗಳ ವಿಭಾಗ ನಿರ್ವಹಿಸುತ್ತಾ ಬಂದಿದೆ. ಹಾಗಾಗಿ, ಈ ವಿಮಾನ ನಿಲ್ದಾಣ ಇನ್ನೂ ಭಾರತೀಯ ರಕ್ಷಣಾ ಇಲಾಖೆಯ ಸುಪರ್ದಿಯಲ್ಲೇ ಇದೆ. ಅದು ನೌಕಾಪಡೆಯ ಐಎನ್‌ಎಸ್ ಹಂಸ ಹೆಲಿಕಾಪ್ಟರ್‌ಗಳ ಏರ್‌ಬೇಸ್ ಕೂಡ ಹೌದು. ಆ ಏರ್‌ಬೇಸಿನ ಒಂದು ಭಾಗವನ್ನು ಭಾರತೀಯ ವಿಮಾನಯಾನ ಪ್ರಾಧಿಕಾರವು (ಎಎಐ) ನಾಗರಿಕ ವಿಮಾನಯಾನಕ್ಕೆ ಬಳಸುತ್ತಿದೆ. ಅಲ್ಲಿನ ಏರ್ ಟ್ರಾಫಿಕ್ ನಿಯಂತ್ರಣ ಇನ್ನೂ ನೌಕಾಪಡೆಯ ಕೈಯಲ್ಲಿದೆ. ಅಲ್ಲಿ 1983ರಲ್ಲಿ ಡೊಮೆಸ್ಟಿಕ್ ಟರ್ಮಿನಲ್ ಮತ್ತು 1996ರಲ್ಲಿ ಇಂಟರ್‌ನ್ಯಾಷನಲ್ ಟರ್ಮಿನಲ್‌ಗಳನ್ನು ನಿರ್ಮಿಸಲಾಗಿದೆ. 2006ರಲ್ಲಿ ನಾಗರಿಕ ವಿಮಾನಯಾನ ಇಲಾಖೆಯು ಅಲ್ಲಿ ನಿಲ್ದಾಣ ವಿಸ್ತರಣೆಗೆ ಹೊರಟಿತಾದರೂ, ಭೂಸ್ವಾಧೀನಕ್ಕೆ ನೌಕಾಪಡೆಯ ಕಡೆಯಿಂದ ಪೂರಕ ಅಭಿಪ್ರಾಯ ವ್ಯಕ್ತ ಆಗದೆ, ಯೋಜನೆ ನನೆಗುದಿಗೆ ಬಿದ್ದಿತ್ತು. ಈ ನಡುವೆ, ಉತ್ತರ ಗೋವಾದ ಮೋಪಾದಲ್ಲಿ ಮನೋಹರ್ ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣ ಆರಂಭಗೊಂಡ ಬಳಿಕ, ದಾಬೋಲಿಮ್‌ನಲ್ಲಿ ವಿಸ್ತರಣೆಗೆ ಅಡಚಣೆಗಳಿರುವ ಹಿನ್ನೆಲೆಯಲ್ಲಿ ನಾಗರಿಕ ವಿಮಾನಯಾನ ಇಲಾಖೆಯು ದಾಬೋಲಿಮ್ ನಿಲ್ದಾಣವನ್ನು ನಾಗರಿಕ ಬಳಕೆಗೆ ಮುಚ್ಚುವ ಯೋಚನೆ ಮಾಡಿತ್ತು. ಆದರೆ ಸಾರ್ವಜನಿಕರಿಂದ ತೀವ್ರ ಪ್ರತಿರೋಧ ಎದುರಾದ ಹಿನ್ನೆಲೆಯಲ್ಲಿ ಆ ತೀರ್ಮಾನವನ್ನು ಕೈಬಿಟ್ಟು, 2010ರಲ್ಲಿ ದಾಬೋಲಿಮ್ ನಿಲ್ದಾಣವನ್ನು ವಿಸ್ತರಿಸುವ, ಮೇಲ್ದರ್ಜೆಗೆ ಏರಿಸುವ, ನವೀಕರಿಸುವ ಪ್ರಕ್ರಿಯೆ ಆರಂಭಿಸಲಾಗಿತ್ತು. ಕಡೆಗೆ ನವೀಕೃತ-ವಿಸ್ತರಿತ ದಾಬೋಲಿಮ್ ವಿಮಾನ ನಿಲ್ದಾಣ ಉದ್ಘಾಟನೆಗೊಂಡದ್ದು 2013ರಲ್ಲಿ. ಈ ವಿಚಾರದಲ್ಲಿ ಈಗ ಮತ್ತೊಮ್ಮೆ ಗದ್ದಲ ಎದ್ದಿದೆ. ಮೋಪಾ ನಿಲ್ದಾಣದ ನಿರ್ವಹಣೆ ಮಾಡುತ್ತಿರುವ ಖಾಸಗಿ ಸಂಸ್ಥೆಯು ಗೋವಾದ ಪ್ರವಾಸೋದ್ಯಮ ಸಾಧ್ಯತೆಗಳು ಮತ್ತು ತನ್ನ ಲಾಭವನ್ನು ಗಮನದಲ್ಲಿ ಇರಿಸಿಕೊಂಡು, ದಕ್ಷಿಣ ಗೋವಾದ ದಾಬೋಲಿಮ್ ನಿಲ್ದಾಣವನ್ನು ಮುಚ್ಚಬೇಕೆಂದು ಮತ್ತು ಪೂರ್ಣಪ್ರಮಾಣದ ನೌಸೇನಾ ನೆಲೆಯಾಗಿ ಅಭಿವೃದ್ಧಿಪಡಿಸಬೇಕೆಂದು ಬಲವಾದ ಲಾಬಿ ಮಾಡುತ್ತಿದೆಯಂತೆ. ಒಂದು ವೇಳೆ ಈ ಲಾಬಿ ಜಯಪ್ರದವಾದರೆ, ಅಂತರ್‌ರಾಷ್ಟ್ರೀಯ ಪ್ರವಾಸೋದ್ಯಮವೇ ಆದಾಯ ಮೂಲ ಆಗಿರುವ ಗೋವಾದ ದಾಬೋಲಿಮ್‌ಗೆ ದೊಡ್ಡ ಪ್ರಮಾಣದಲ್ಲಿ ಬಂದಿಳಿಯುತ್ತಿರುವ ವಿದೇಶಿ ಪ್ರಯಾಣಿಕರು ಮತ್ತು ದೇಶಿ ಪ್ರಯಾಣಿಕರು (ವಾರ್ಷಿಕ ಅಂದಾಜು ಸುಮಾರು 60 ಲಕ್ಷಕ್ಕೂ ಮಿಕ್ಕಿ ಮಂದಿ) ಉತ್ತರ ಗೋವಾದ ಖಾಸಗಿ ನಿರ್ವಹಣೆಯ ನಿಲ್ದಾಣ ಮೋಪಾದಲ್ಲಿಯೇ ಇಳಿದು ಅಲ್ಲಿಂದ ಮೂರು ತಾಸು ಬಾಡಿಗೆ ಕಾರಿನಲ್ಲಿ ಪ್ರಯಾಣಿಸಿ (ಬಾಡಿಗೆ ಅಂದಾಜು 4,500-5,000 ರೂ.) ದಕ್ಷಿಣ ಗೋವಾದ ಪಾಲೋಲಿಮ್ ತಲುಪಬೇಕಾಗುತ್ತದೆ. ಸ್ಟ್ರಾಟಜಿಕ್ ಆಗಿ, ಗೋವಾದ ಎಲ್ಲ ಪ್ರಮುಖ ಪ್ರವಾಸಿ ತಾಣಗಳಿಗೆ ದಾಬೋಲಿಮ್ ಸಮಾನದೂರದಲ್ಲಿರುವುದರಿಂದ ಬಹುತೇಕ ಗೋವನ್ನರು ದಾಬೋಲಿಮ್ ನಿಲ್ದಾಣ ಮುಚ್ಚುವುದನ್ನು ವಿರೋಧಿಸುತ್ತಿದ್ದಾರೆ. ಈ ವಿವಾದಕ್ಕೆ ಸಂಬಂಧಿಸಿದಂತೆ ಕಳೆದ ವಾರ ದಿಲ್ಲಿಯಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರನ್ನು ಭೇಟಿ ಮಾಡಿ ಚರ್ಚಿಸಿರುವ ಗೋವಾದ ಸಾರಿಗೆ ಸಚಿವ ಮತ್ತು ದಾಬೋಲಿಮ್ ಶಾಸಕ ಮೌವಿನ್ ಗೊಧಿಣೊ ಅವರು ಈ ಎಲ್ಲ ವಿವರಗಳನ್ನು ಬಿಚ್ಚಿಟ್ಟಿದ್ದು, ರಕ್ಷಣಾ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆಂದು ಹೇಳಿದ್ದಾರೆ. ಇದೇ ವೇಳೆಗೆ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅವರು ಕೂಡ ಹೇಳಿಕೆ ನೀಡಿ, ‘‘ದಾಬೋಲಿಮ್ ನಿಲ್ದಾಣದಲ್ಲಿ ನಾಗರಿಕ ವಿಮಾನಯಾನ ಸ್ಥಗಿತಗೊಳ್ಳಲಿದೆ ಎಂಬುದು ಸುಳ್ಳು ಸುದ್ದಿ ಮತ್ತು ತಪ್ಪು ಹಾದಿಗೆಳೆಯುವಂತಹದು’’ ಎಂದು ಸ್ಪಷ್ಟಪಡಿಸಿದ್ದಾರೆ. ಬಹುತೇಕ ಎಲ್ಲ ರಾಜಕೀಯ ಪಕ್ಷಗಳು, ಪ್ರವಾಸೋದ್ಯಮ ವ್ಯವಹಾರಸ್ಥರು ದಾಬೋಲಿಮ್ ವಿಮಾನ ನಿಲ್ದಾಣ ಮುಚ್ಚುಗಡೆಯಾದರೆ, ರಾಜ್ಯದಲ್ಲಿ ಪ್ರವಾಸೋದ್ಯಮವನ್ನೇ ಅವಲಂಬಿಸಿ ಬದುಕು ಕಟ್ಟಿಕೊಂಡಿರುವ ಶೇ. 65 ಜನರಿಗೆ ಮತ್ತು ಗೋವಾದ ಒಟ್ಟು ಪ್ರವಾಸೋದ್ಯಮ ರಂಗಕ್ಕೇ ಅದು ಮಾರಕ ಹೊಡೆತವಾಗಲಿದೆ ಎಂದು ಒಕ್ಕೊರಲಿನಿಂದ ಹೇಳಿದ್ದಾರೆ. ಇದನ್ನು ಪ್ರತಿಭಟಿಸುವುದಕ್ಕೂ ಅವರು ಸನ್ನದ್ಧರಾಗುತ್ತಿದ್ದಾರೆ. ನಮಗೇನು ಪಾಠ? ಗೋವಾದ ಈ ಘಟನೆಯಲ್ಲಿ, ಅದೇ ಪಶ್ಚಿಮ ಕರಾವಳಿಯ ಮುಂದುವರಿಕೆ ಆಗಿರುವ ಕರ್ನಾಟಕ ಕರಾವಳಿಗೂ ಪಾಠ ಇದೆ. ಮೊದಲನೆಯದಾಗಿ, ದಾಬೋಲಿಮ್ ವಿಮಾನ ನಿಲ್ದಾಣವು ಒಂದು ವೇಳೆ ಸೇನಾನೆಲೆಯಾಗಿ ಉಳಿಯದೆ ಸಂಪೂರ್ಣವಾಗಿ ನಾಗರಿಕ ವಿಮಾನಯಾನಕ್ಕೆ ಸೀಮಿತಗೊಂಡರೆ, ಸಹಜವಾಗಿಯೇ ನೌಸೇನಾ ವಾಯುನೆಲೆಯು ಕಾರವಾರದ ಸೀಬರ್ಡ್ ನೌಕಾನೆಲೆಗೆ ಸ್ಥಳಾಂತರಗೊಳ್ಳಬೇಕಾಗುತ್ತದೆ. ದೇಶದ ಭದ್ರತೆ ಆದ್ಯತೆಯ ಸಂಗತಿಯೇ ಆದರೂ, ಈಗಾಗಲೇ ಕರ್ನಾಟಕ ಕರಾವಳಿಯನ್ನು ಆವರಿಸುತ್ತಿರುವ ಖಾಸಗಿ ಚಟುವಟಿಕೆಗಳ ಜೊತೆಗೆ ಸೇನಾ ಚಟುವಟಿಕೆಗಳೂ ವಿಸ್ತಾರಗೊಳ್ಳತೊಡಗಿದರೆ, ಅದರ ಸಾಧಕ-ಬಾಧಕಗಳನ್ನು, ಕರಾವಳಿ ಕರ್ನಾಟಕದ ಧಾರಣ ಶಕ್ತಿಯನ್ನು ಅಧ್ಯಯನ ನಡೆಸುವ ತುರ್ತು ಇದೆ. ಎರಡನೆಯದಾಗಿ, ದೇಶದ ಎಲ್ಲೆಡೆ ವಿಮಾನ ನಿಲ್ದಾಣಗಳು ಖಾಸಗೀಕರಣಗೊಳ್ಳುತ್ತಿವೆ. ಈ ಗುತ್ತಿಗೆ ಪಡೆದುಕೊಳ್ಳುವ, ವಿಮಾನ ನಿಲ್ದಾಣಗಳ ಉಸ್ತುವಾರಿ ಹೊರುವ ಪ್ರಭಾವಿ ‘ಆನಿಗಳು’ ಮುಂದಿನ ದಿನಗಳಲ್ಲಿ ಹೇಗೆ ಕಾರ್ಯಾಚರಿಸಬಹುದೆಂಬುದಕ್ಕೆ ಈ ಪ್ರಕರಣ ಒಂದು ಒಳ್ಳೆಯ ನಿದರ್ಶನ. ಈ ಪ್ರಭಾವಿಗಳು ತಮ್ಮ ಲಾಭದ ಮೂಗಿನ ನೇರಕ್ಕೆ ತೀರ್ಮಾನಗಳನ್ನು ತೆಗೆದುಕೊಳ್ಳುವಂತೆ ಪ್ರಭುತ್ವದ ಮೇಲೆ ಒತ್ತಡ ಹೇರತೊಡಗಿದರೆ, ಅದು ದೇಶದ ಸಾರ್ವಜನಿಕ ಹಿತಾಸಕ್ತಿಗಳ ಮೇಲೆ ಯಾವ ರೀತಿಯ ಪ್ರಭಾವ ಬೀರಬಹುದೆಂಬುದನ್ನು ಅರ್ಥೈಸಿಕೊಳ್ಳಬೇಕಾಗಿದೆ. ಮೂರನೆಯದಾಗಿ, ಪ್ರಭಾವೀ ಆನಿಗಳು ರಾಜಕೀಯ ಲಾಬಿಗಳಲ್ಲಿ ತೊಡಗಿಕೊಂಡಾಗ, ಅದು ಪ್ರಾದೇಶಿಕ ಅಸ್ಮಿತೆಗೆ ಧಕ್ಕೆ ತರುವಂತಹ ಸ್ಥಿತಿಯನ್ನು ಮುಂದೊಡ್ಡಿದರೆ, ಆಗ ನಾಡಿನ ಜನತೆ ಹೇಗೆ ಪ್ರತಿಕ್ರಿಯಿಸಬಹುದು ಎಂಬುದಕ್ಕೆ ಈ ಗೋವಾದ ಮಾದರಿ ಅನುಸರಣಯೋಗ್ಯ ಮಾದರಿ ಅನ್ನಿಸುತ್ತದೆ. ಬ್ಯಾಂಕಿಂಗ್‌ನ ತೊಟ್ಟಿಲು ಎಂದೆನ್ನಿಸಿಕೊಂಡಿದ್ದ ಕರ್ನಾಟಕ ಕರಾವಳಿಯ ಎಲ್ಲ ಬ್ಯಾಂಕುಗಳೂ ಏಕಾಏಕಿ ಹೇಳಹೆಸರಿಲ್ಲದಂತೆ ಮಾಯವಾದಾಗ ನಮ್ಮ ನಾಗರಿಕ ಪ್ರತಿಕ್ರಿಯೆ ಹೇಗಿತ್ತು ಎಂಬುದನ್ನು ನೆನಪಿಸಿಕೊಳ್ಳಿ. ಪ್ರಭುತ್ವದ ಪರ-ವಿರುದ್ಧ ವಾಗ್ವಾದಗಳ ಅಬ್ಬರದಲ್ಲಿ ನಮ್ಮದೆಂಬ ಯಾವ ಬ್ಯಾಂಕೂ ನಮಗೆ ಉಳಿಯಲಿಲ್ಲ. ಗುಜರಾತ್ ಬ್ಯಾಂಕುಗಳು ಅವನ್ನು ನುಂಗಿಬಿಟ್ಟವು. ಇಂದು ಕನ್ನಡ ಕರಾವಳಿ ಎಗ್ಗಿಲ್ಲದೆ ‘ಆನಿಪಾಲು’ ಆಗುತ್ತಿದೆ, ಸ್ಥಳೀಯರು ನಮಗೆ ಕೊಡಿರೆಂದು ಕೇಳದ, ವಿಷವೂಡುವ, ಇಲ್ಲಿನ ಪರಿಸರ ಮತ್ತು ಜನಪದಗಳನ್ನು ಹೇಳಹೆಸರಿಲ್ಲದಂತೆ ನಾಶಮಾಡಬಲ್ಲ ಯೋಜನೆಗಳನ್ನು ‘ಡೇಬಲಾಪ್‌ಮೇಂಟ್’ ಹೆಸರಿನಲ್ಲಿ ಇಲ್ಲಿಗೆ ತಂದು ಸುರಿಯಲಾಗುತ್ತಿದೆ. ಇಂತಹ ಸನ್ನಿವೇಶದಲ್ಲಿ, ಇಲ್ಲಿನ ಅಸ್ಮಿತೆಗೆ ಧಕ್ಕೆ ಬಂದಾಗ ಜನ ಹೇಗೆ ರಾಜಕೀಯ, ಪಂಥ, ಪರಾಕ್ರಮಗಳನ್ನೆಲ್ಲ ಮರೆತು ನಾಡಿನ ಹಿತದೃಷ್ಟಿಯಿಂದ ಪ್ರತಿಕ್ರಿಯಿಸಬೇಕು ಎಂಬುದಕ್ಕೆ ಗೋವಾದ ಈ ಮಾದರಿ ನಮಗೆ ಪಾಠ ಆಗಬೇಕು.

ವಾರ್ತಾ ಭಾರತಿ 21 Feb 2026 10:08 am

ಇರಾನ್ ವಿರುದ್ಧ ಯಾವುದೇ ಕ್ಷಣದಲ್ಲಿ ಅಮೆರಿಕ ಸೇನಾ ಕಾರ್ಯಾಚರಣೆ ಶುರು ಸಾಧ್ಯತೆ, ಭೀತಿ ಶುರು... US Military

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆಜ್ಞೆ ಪಾಲಿಸಲು ಇದೀಗ ಸುಮಾರು ಅರ್ಧ ಲಕ್ಷದಷ್ಟು ಅಮೆರಿಕ ಸೈನಿಕರು ಸಜ್ಜಾಗಿದ್ದಾರೆ. ಇರಾನ್ ವಿಚಾರದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇನ್ನು ಕೆಲವೇ ಗಂಟೆಗಳಲ್ಲಿ ಮಹತ್ವದ ಆದೇಶ ಹೊರಡಿಸುವ ಸಾಧ್ಯತೆ ಹೆಚ್ಚಾಗಿದ್ದು, ಇರಾನ್ ವಿರುದ್ಧ ಈ ಸಮಯದಲ್ಲಿ ಸೇನಾ ಕಾರ್ಯಾಚರಣೆ ಮೂಲಕ ಯುದ್ಧ ಘೋಷಣೆ ಆಗುವುದು ಬಹುತೇಕ ನಿಶ್ಚಿತವಾಗಿದೆ ಎನ್ನಲಾಗಿದೆ.

ಒನ್ ಇ೦ಡಿಯ 21 Feb 2026 10:02 am

ಶೇ. 10ರಷ್ಟು ಜಾಗತಿಕ ಸುಂಕ ಆದೇಶಕ್ಕೆ ಸಹಿ ಹಾಕಿದ ಡೊನಾಲ್ಡ್‌ ಟ್ರಂಪ್;‌ ಸೋಲು ಒಪ್ಪಿಕೊಳ್ಳಲು ಪ್ರತಿಷ್ಠೆ ಅಡ್ಡಿ!

ಕಳೆದ ವರ್ಷ ವಿವಿಧ ದೇಶಗಳ ಮೇಲೆ ಭಿನ್ನ ಪ್ರಮಾಣದ ಸುಂಕಗಳನ್ನು ಹೇರಿ ಬೀಗಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ಯುಎಸ್‌ ಸುಪ್ರೀಂಕೋರ್ಟ್‌ನ ಸುಂಕ ರದ್ದತಿ ಆದೇಶದ ಬಳಿಕ, ಸುಂಕಗಳನ್ನು ಹೇರಲು ಹೊಸ ಮಾರ್ಗಗಳನ್ನು ಹುಡುಕುತ್ತಿದ್ದಾರೆ. ಅದರಂತೆ ಜಾಗತಿಕ ಆಮದು ಮೇಲೆ ಯುಎಸ್‌ ಸುಂಕವನ್ನು ಶೇ. 10ಕ್ಕೆ ನಿಗದಿಪಡಿಸುವ ಕಾರ್ಯಕಾರಿ ಆದೇಶಕ್ಕೆ, ಡೊನಾಲ್ಡ್‌ ಟ್ರಂಪ್ ಸಹಿ ಹಾಕಿದ್ದಾರೆ. ಈ ಆದೇಶ ತಕ್ಷಣದಿಂದಲೇ ಜಾರಿಗೆ ಬರಲಿದೆ ಎಂದು ಟ್ರಂಪ್ ಘೋಷಿಸಿದ್ದಾರೆ.‌ ಇಲ್ಲಿದೆ ಮಾಹಿತಿ.

ವಿಜಯ ಕರ್ನಾಟಕ 21 Feb 2026 9:27 am

ರಾಷ್ಟ್ರೀಯ ಹೆದ್ದಾರಿ ವಾಹನ ಸವಾರರು ಗಮನಿಸಲೇಬೇಕಾದ ಮಾಹಿತಿ: ಏಪ್ರಿಲ್‌ 1ರಿಂದ ಈ ನಿಯಮದಲ್ಲಿ ಮಹತ್ವದ ಬದಲಾವಣೆ

NHAI: ದೇಶಾದ್ಯಂತ ರಾಷ್ಟ್ರೀಯ ಹೆದ್ದಾರಿ ಟೋಲ್ ವ್ಯವಸ್ಥೆಯನ್ನು ಸಂಪೂರ್ಣ ಡಿಜಿಟಲ್ ರೂಪಕ್ಕೆ ಪರಿವರ್ತಿಸಲು ಕೇಂದ್ರ ಸರ್ಕಾರ ಮಹತ್ವದ ಹೆಜ್ಜೆ ಇಡಲು ಸಜ್ಜಾಗಿದೆ. ಏಪ್ರಿಲ್ 1, 2026ರಿಂದ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI)ದ ವ್ಯಾಪ್ತಿಯಲ್ಲಿರುವ ಎಲ್ಲಾ ಟೋಲ್ ಪ್ಲಾಜಾಗಳಲ್ಲಿ ನಗದು ಪಾವತಿಯನ್ನು ಸಂಪೂರ್ಣವಾಗಿ ನಿಲ್ಲಿಸಲು ನಿರ್ಧಾರ ಮಾಡಿದೆ. ಈ ಕುರಿತು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ

ಒನ್ ಇ೦ಡಿಯ 21 Feb 2026 9:13 am

ಪೌರಕಾರ್ಮಿಕರ ಶ್ರಮಕ್ಕೆ ಕೃತಜ್ಞತಾ ನಮನ

ಸಚ್ಛನಗರದ ಶಿಲ್ಪಿಗಳಿಗೆ ಮಾನ್ಯತೆ ಅಗತ್ಯ

ವಾರ್ತಾ ಭಾರತಿ 21 Feb 2026 9:08 am

ಫ್ರೀಬೀಸ್ - ಸುಪ್ರೀಂಕೋರ್ಟ್ ಗರಂ : ಚಾಟಿ ಬೀಸಿದ್ದು ಬರೀ ಒಬ್ಬರಿಗೆ ಮಾತ್ರ ಅಲ್ಲ - ಅದು ಸಕಲರಿಗೂ

SC on Freebies : ಚುನಾವಣೆ ಹತ್ತಿರ ಬರುತ್ತಿದ್ದಂತೆಯೇ, ಅಧಿಕಾರಕ್ಕೇರಲು ರಾಜಕೀಯ ಪಕ್ಷಗಳು ನೀಡುವ ಉಚಿತ ಗ್ಯಾರಂಟಿಯ ಬಗ್ಗೆ ಸರ್ವೊಚ್ಚ ನ್ಯಾಯಾಲಯ ತೀವ್ರ ಅಸಮಾಧಾನವನ್ನು ವ್ಯಕ್ತ ಪಡಿಸಿದೆ. ಇದು ದೇಶ ಕಟ್ಟುವ ಕೆಲಸವಲ್ಲ, ನೀವು ಏನು ಮಾಡುತ್ತಿದ್ದೀರಿ ಎನ್ನುವ ಅರಿವು ನಿಮಗಿದೆಯೇ ಎಂದು ಪ್ರಶ್ನಿಸಿದೆ. ಇದು, ತಮಿಳುನಾಡು ಸರ್ಕಾರದ ಅರ್ಜಿಗೆ ಸಂಬಂಧಿಸಿದ್ದಾಗಿದರೂ, ಎಲ್ಲಾ ರಾಜ್ಯಗಳಿಗೆ ಅನ್ವಯವಾಗುವಂತೆ ಚಾಟಿ ಬೀಸಿದೆ.

ವಿಜಯ ಕರ್ನಾಟಕ 21 Feb 2026 9:02 am

Explained: ಡೊನಾಲ್ಡ್‌ ಟ್ರಂಪ್‌ಗೆ ಆದ ನಷ್ಟದಿಂದ ಭಾರತಕ್ಕೆ ಲಾಭ? ಸುಂಕ ಆದೇಶ ಬದಲಿಸಲಿದೆ ವ್ಯಾಪಾರ ಒಪ್ಪಂದ ಹಣೆಬರಹ

ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಸುಂಕ ಸಮರಕ್ಕೆ ಬ್ರೇಕ್‌ ಹಾಕಿರುವ ಯುಎಸ್‌ ಸುಪ್ರಿಂಕೋರ್ಟ್‌, ಟ್ರಂಪ್‌ ಆಡಳಿತದ ಇಡೀ ಸುಂಕ ನೀತಿಯನ್ನೇ ಕಾನೂನುಬಾಹಿರ ಎಂದು ಘೋಷಿಸಿದೆ. ಅಮೆರಿಕದ ಸರ್ವೋಚ್ಚ ನ್ಯಾಯಾಲಯದ ಈ ಐತಿಹಾಸಿಕ ತೀರ್ಪು, ಡೊನಾಲ್ಡ್‌ ಟ್ರಂಪ್‌ ಅವರ ಸುಂಕ ಯುದ್ದೋನ್ಮಾದಕ್ಕೆ ಭಾರೀ ಹೊಡೆತ ನೀಡಿದೆ. ಆದಾಗ್ಯೂ, ಅಮೆರಿಕ ಅಧ್ಯಕ್ಷರು ತಮ್ಮ ಸುಂಕ ನೀತಿ ಮುಂದವರೆಸಲು ಭಿನ್ನ ದಾರಿ ಕಂಡುಕೊಂಡಿದ್ದಾರೆ. ಆದರೆ ಯುಎಸ್‌ ಸುಪ್ರೀಂಕೋರ್ಟ್‌ ತೀರ್ಪು ಭಾರತ-ಅಮೆರಿಕ ವ್ಯಾಪಾರ ಒಪ್ಪಂದ ಮಾತುಕತೆಗಳ ಮೇಲೆ ಏನು ಪರಿಣಾಮ ಬೀರಬಹುದು? ಇಲ್ಲಿದೆ ವಿಶ್ಲೇಷಣಾತ್ಮಕ ವರದಿ.

ವಿಜಯ ಕರ್ನಾಟಕ 21 Feb 2026 8:50 am

ಪುತ್ತೂರು: ರೈಲ್ವೆ ಹಳಿಯಲ್ಲಿ ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆ

ಪುತ್ತೂರು: ನಗರದ ಹಾರಾಡಿ ಸಮೀಪದ ರೈಲ್ವೆ ಹಳಿಯಲ್ಲಿ ರೈಲು ಡಿಕ್ಕಿಯಾದ ಸ್ಥಿತಿಯಲ್ಲಿ ಅಪರಿಚಿತ ವ್ಯಕ್ತಿಯೊಬ್ಬರ ಮೃತದೇಹ ಶುಕ್ರವಾರ ರಾತ್ರಿ ಪತ್ತೆಯಾಗಿದೆ. ಹಳಿಯ ಬಳಿ ಶವವನ್ನು ಗಮನಿಸಿದ ಸ್ಥಳೀಯರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ಪಡೆದ ಪುತ್ತೂರು ಠಾಣಾ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದರು. ಪ್ರಾಥಮಿಕ ಮಾಹಿತಿಯಂತೆ ರೈಲು ಡಿಕ್ಕಿಯಿಂದಲೇ ವ್ಯಕ್ತಿ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ. ಮೃತರ ಗುರುತು ಇನ್ನೂ ಪತ್ತೆಯಾಗಿಲ್ಲ ಎಂದು ತಿಳಿದುಬಂದಿದ್ದು, ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

ವಾರ್ತಾ ಭಾರತಿ 21 Feb 2026 8:49 am

Bagalkot | ಜಮಖಂಡಿಯಲ್ಲಿ ಟ್ರ್ಯಾಕ್ಟರ್ ಟ್ರಾಲಿ ಪಲ್ಟಿ; 2 ವರ್ಷದ ಮಗು ಸೇರಿ ನಾಲ್ವರು ಮೃತ್ಯು, ಹಲವರಿಗೆ ಗಾಯ

ಬಾಗಲಕೋಟೆ: ಕಬ್ಬು ಕತ್ತರಿಸುವ ಕಾರ್ಮಿಕರನ್ನು ಹೊತ್ತು ಸಾಗುತ್ತಿದ್ದ ಟ್ರ್ಯಾಕ್ಟರ್ ನ ಟ್ರಾಲಿ ತುಂಡಾಗಿ ಪಲ್ಟಿಯಾದ ಪರಿಣಾಮ 2 ವರ್ಷದ ಮಗು ಸೇರಿ ನಾಲ್ವರು ಸ್ಥಳದಲ್ಲೇ ಮೃತಪಟ್ಟ ಘಟನೆ ಜಿಲ್ಲೆಯ ಜಮಖಂಡಿ ನಗರದ ಕಟ್ಟೆ ಕೆರೆ ಸಮೀಪ ಶನಿವಾರ ಬೆಳಗ್ಗಿನ ಜಾವ 2 ಗಂಟೆಯ ವೇಳೆ ಸಂಭವಿಸಿದೆ. ಮೃತರನ್ನು ಮನೀಷ್ ಪಾಂಡೆ (23), ಹಲಕಿ ಪಾಂಡೆ (2), ಲಕ್ಷ್ಮಿ ಚಿರಮಡಿ (27) ಹಾಗೂ ರೇಖಾ ಭೂಕೆ ಎಂದು ಗುರುತಿಸಲಾಗಿದೆ. ಇವರು ಮಹಾರಾಷ್ಟ್ರ ರಾಜ್ಯದ ಯುವತ್ಮಾಳ್ ಜಿಲ್ಲೆಯ ಬೂಸಾ ತಾಲ್ಲೂಕಿನ ಗುಪವಾಡಿ ನಿವಾಸಿಗಳೆಂದು ತಿಳಿದುಬಂದಿದೆ. ಚಾಲಕನ ನಿಯಂತ್ರಣ ತಪ್ಪಿದ ಟ್ರ್ಯಾಕ್ಟರ್ ಕಂದಕಕ್ಕೆ ಬಿದ್ದು ಟ್ರಾಲಿ ಪಲ್ಟಿಯಾಗಿದ್ದು, ಪರಿಣಾಮವಾಗಿ ಸ್ಥಳದಲ್ಲೇ ನಾಲ್ವರು ಮೃತಪಟ್ಟಿದ್ದಾರೆ. 10ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು, ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯ ಮಾಹಿತಿ ತಿಳಿದು ಸ್ಥಳಕ್ಕೆ ಜಮಖಂಡಿ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

ವಾರ್ತಾ ಭಾರತಿ 21 Feb 2026 8:10 am

ನಾನೇ ಎಲ್ಲಾ, ನನ್ನ ಬಿಟ್ಟೆ ಬೇರೆನಿಲ್ಲ; ಸುಂಕ ರದ್ದು ಮಾಡಿದ ಯುಎಸ್‌ ಸುಪ್ರೀಂಕೋರ್ಟ್‌ ನ್ಯಾಯಾಧೀಶರನ್ನು ಮೂರ್ಖರು ಎಂದ ಡೊನಾಲ್ಡ್‌ ಟ್ರಂಪ್!

ಜಟ್ಟಿ ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಎಂಬಂತೆ, ಜಾಗತಿಕ ಸುಂಕಗಳನ್ನು ಕಾನೂನುಬಾಹಿರ ಎಂದು ಘೋಷಿಸಿದ ಅಮೆರಿಕದ ಸುಪ್ರೀಂಕೋರ್ಟ್‌ ವಿರುದ್ಧವೇ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ತಿರುಗಿ ಬಿದ್ದಿದ್ದಾರೆ. ಸುಂಕದ ವಿರುದ್ಧ ಆದೇಶ ಹೊರಡಿಸಿದ ಸುಪ್ರೀಂಕೋರ್ಟ್‌ ನ್ಯಾಯಾಧೀಶರನ್ನುಮೂರ್ಖರು ಎಂದು ಕರೆದಿರುವ ಡೊನಾಲ್ಡ್‌ ಟ್ರಂಪ್‌, ಯಾವುದೇ ಅಳುಕಿಲ್ಲದೇ ತಮ್ಮ ಸುಂಕ ನೀತಿಗಳನ್ನು ಮುಂದುವರೆಸುವುದಾಗಿ ಘೋಷಿಸಿದ್ದಾರೆ. ಅಂದರೆ ಅಮೆರಿಕ ಅಧ್ಯಕ್ಷರು ತಮ್ಮದೇ ದೇಶದ ಸರ್ವೋಚ್ಚ ನ್ಯಾಯಾಲಯದ ತೀರ್ಪಿನ ವಿರುದ್ಧ ನಡೆದುಕೊಳ್ಳಲಿದ್ದಾರೆ. ಈ ಕುರಿತು ಇಲ್ಲಿದೆ ಹೆಚ್ಚಿನ ಮಾಹಿತಿ.

ವಿಜಯ ಕರ್ನಾಟಕ 21 Feb 2026 7:15 am

ಟೋಲ್ ಪ್ಲಾಝಾಗಳಲ್ಲಿ ಏಪ್ರಿಲ್ 1ರಿಂದ ನಗದು ಪಾವತಿ ಇಲ್ಲ!

ಹೊಸದಿಲ್ಲಿ: ರಾಷ್ಟ್ರೀಯ ಹೆದ್ದಾರಿಗಳ ಟೋಲ್ ಪ್ಲಾಝಾಗಳಲ್ಲಿ ಏಪ್ರಿಲ್ 1ರಿಂದ ನಗದು ಪಾವತಿಗೆ ಅವಕಾಶವಿಲ್ಲ. ವಾಹನ ಚಾಲಕರು ಕಡ್ಡಾಯವಾಗಿ ಮೊತ್ತವನ್ನು ಡಿಜಿಟಲ್ ವಿಧಾನದಲ್ಲೇ ಅಂದರೆ ಫಾಸ್ಟ್ಯಾಗ್ ಅಥವಾ ಯುಪಿಐ ಮೂಲಕವೇ ಪಾವತಿಸಬೇಕಾಗುತ್ತದೆ. ದೇಶಾದ್ಯಂತ ನೂತನ ವ್ಯವಸ್ಥೆ ಹೊಸ ಹಣಕಾಸು ವರ್ಷದ ಆರಂಭದ ದಿನ ಜಾರಿಗೆ ಬರಲಿದೆ ಎಂದು ಭಾರತದ ರಾಷ್ಟ್ರೀಯ ಹೆದ್ದಾರಿಗಳ ಪ್ರಾಧಿಕಾರ ಸ್ಪಷ್ಟಪಡಿಸಿದೆ. ಪ್ರಸ್ತುತ ನಿಯಮಾವಳಿಗಳ ಪ್ರಕಾರ, ಟೋಲ್ ಪ್ಲಾಝಾ ದಾಟುವ ವಾಹನಗಳು ಅಧಿಕೃತ ಫಾಸ್ಟ್ಯಾಗ್ ಹೊಂದಿಲ್ಲದಿದ್ದಲ್ಲಿ, ನಗದು ರೂಪದಲ್ಲಿ ಪಾವತಿಸುವಾಗ ಅನ್ವಯವಾಗುವ ಸುಂಕದ ದುಪ್ಪಟ್ಟು ಮೊತ್ತವನ್ನು ಪಾವತಿಸಬೇಕಾಗುತ್ತದೆ. ಯುಪಿಐ ಮೂಲಕ ಪಾವತಿಸುವುದಾದಲ್ಲಿ ಆಯಾ ವಾಹನ ವರ್ಗಕ್ಕೆ ಅನ್ವಯವಾಗುವ ಸುಂಕದ 1.25 ಪಟ್ಟು ತೆರಬೇಕಾಗುತ್ತದೆ. ನಗದು ಪಾವತಿಯನ್ನು ಕಡಿಮೆ ಮಾಡುವ ಸಲುವಾಗಿ ಯುಪಿಐ ಮೂಲಕ ಪಾವತಿಯನ್ನು ನವೆಂಬರ್‌ನಲ್ಲಿ ಆರಂಭಿಸಲಾಗಿತ್ತು. ಸಂಗ್ರಹವಾಗುವ ಒಟ್ಟು ಸುಂಕದ ಪೈಕಿ ಶೇಕಡ 2ರಷ್ಟು ಯುಪಿಐ ಮೂಲಕ ಸಂಗ್ರಹವಾಗುತ್ತಿದೆ. ಶೇಕಡ 1ರಷ್ಟು ಪಾವತಿಯಾಗುತ್ತಿರುವ ನಗದು ಪಾವತಿಯನ್ನು ಇದೀಗ ಸ್ಥಗಿತಗೊಳಿಸಲಾಗುತ್ತಿದೆ. ತಿಂಗಳುಗಳ ಹಿಂದೆ ಅರ್ಧದಷ್ಟು ಸಂಗ್ರಹ ನಗದು ರೂಪದಲ್ಲಿ ಆಗುತ್ತಿತ್ತು. ಎಲ್ಲ ಟೋಲ್ ಪ್ಲಾಝಾಗಳಲ್ಲಿ ಯುಪಿಐ ವ್ಯವಸ್ಥೆ ಇದೆ ಎಂದು ಅಧಿಕಾರಿಯೊಬ್ಬರು ವಿವರಿಸಿದ್ದಾರೆ. ಏ.1ರಿಂದ ನಗದು ಪಾವತಿಯನ್ನು ಸ್ಥಗಿತಗೊಳಿಸಿದ ಬಳಿಕ, ವ್ಯಾಪಕವಾಗಿ ನಗದು ರೂಪದಲ್ಲಿ ಪಾವತಿಯಾಗುತ್ತಿರುವ ದಂಡ ಮೊತ್ತದ ಸಮಸ್ಯೆಯನ್ನು ಹೇಗೆ ಇತ್ಯರ್ಥಪಡಿಸಬೇಕು ಎಂಬ ಬಗ್ಗೆ ಸರ್ಕಾರ ಪರಿಶೀಲನೆ ನಡೆಸುತ್ತಿದೆ ಎಂದು ತಿಳಿದುಬಂದಿದೆ. ಓವರ್‌ಲೋಡ್ ಮತ್ತಿತರ ಪ್ರಕರಣಗಳಲ್ಲಿ ವಿಧಿಸುವ ದಂಡವನ್ನು ಹೆಚ್ಚಾಗಿ ನಗದು ರೂಪದಲ್ಲೇ ಪಾವತಿಸಲಾಗುತ್ತಿದೆ. ಈ ದಂಡ ಪಾವತಿಯನ್ನು ಕೂಡಾ ಹೆಚ್ಚು ತಾರ್ಕಿಕಗೊಳಿಸುವ ಮತ್ತು ನಗದು ರಹಿತ ವ್ಯವಹಾರವನ್ನು ಸುಗಮಗೊಳಿಸುವ ಪ್ರಸ್ತಾವನೆ ಪರಿಶೀಲನೆಯಲ್ಲಿದೆ ಎಂದು ಅವರು ವಿವರಿಸಿದ್ದಾರೆ.

ವಾರ್ತಾ ಭಾರತಿ 21 Feb 2026 7:10 am

Karnataka Rains: ಚಂಡಮಾರುತ ಪರಿಚಲನೆ ತೀವ್ರತೆ, ಒಳನಾಡು ಜಿಲ್ಲೆಗಳಲ್ಲಿ ಗುಡಗು ಸಹಿತ ಮಳೆ ಮುನ್ಸೂಚನೆ

ಬೆಂಗಳೂರು: ಕರ್ನಾಟಕದಲ್ಲಿ ಬಿರು ಬೇಸಿಗೆ ಶುರುವಾಗಿದೆ. ಕೆಲವೆಡೆ ಗರಿಷ್ಠ ತಾಪಮಾನದ ಅನುಭವ ಇನ್ನೂವರೆಗೆ ಆಗಿಲ್ಲ. ಈ ಮಧ್ಯೆ ಎರಡು ದಿನಗಳ ಹಿಂದೆ ರಾಜ್ಯದ ಪುತ್ತೂರು ಸುತ್ತಮುತ್ತ ಕೆಲ ಕಾಲ ಜೋರು ಮಳೆ ದಾಖಲಾಗಿತ್ತು. ವಾತಾವರಣದಲ್ಲಿ ಸುಮಾರು 04 ಕಡೆಗಳಲ್ಲಿ ವಾಯು ಚಂಡಮಾರುತ ಪರಿಚಲನೆಯಂತಹ ವೈಪರೀತ್ಯಗಳು ಉಂಟಾಗಿರುವ ಕಾರಣ ನಾಳೆ ಫೆಬ್ರವರಿ 22 ಭಾನುವಾರದಿಂದ ಒಳನಾಡಿನ ಹಲವು ಜಿಲ್ಲೆಗಳಲ್ಲಿ

ಒನ್ ಇ೦ಡಿಯ 21 Feb 2026 6:55 am

ಪರೀಕ್ಷೆಯಲ್ಲಿ ನಕಲು ಪ್ರಶ್ನಿಸಿದ ಶಿಕ್ಷಕನ ಮೇಲೆ ವಿದ್ಯಾರ್ಥಿಯಿಂದ ಹಲ್ಲೆ; ಶಹಬಾಜ್ ರಾಮಾಚಾರಿ ಅಲ್ಲ ದುರಾಚಾರಿ!

ವೈದ್ಯಕೀಯ ಪರೀಕ್ಷೆಯಲ್ಲಿ ತನ್ನ ನಕಲು ತಡೆದ ಶಿಕ್ಷಕನ ಮೇಲೆ ವಿದ್ಯಾರ್ಥಿಯೋರ್ಯ ಹಲ್ಲೆ ನಡೆಸಿದ ಘಟನೆ ಕಲುಬುರಗಿಯ ಡಾ. ಮಾಲಕರೆಡ್ಡಿ ಹೋಮಿಯೋಪತಿ ವೈದ್ಯಕೀಯ ಕಾಲೇಜಿನಲ್ಲಿ ನಡೆದಿದೆ. ಆಂತರಿಕ ಪರೀಕ್ಷೆಯಲ್ಲಿ ನಕಲು ಮಾಡುವಾಗ ಸಿಕ್ಕಿಬಿದ್ದ ವಿದ್ಯಾರ್ಥಿ ಶಹಬಾಜ್‌, ಪರೀಕ್ಷಾ ಕೊಠಡಿಯಿಂದ ಹೊರಹಾಕಿದ ಅಸಿಸ್ಟಂಟ್‌ ಪ್ರೊಫೆಸರ್‌ ಶಿವರಾಜಕುಮಾರ್‌ ಅವರ ಮೇಲೆ ಹಲ್ಲೆ ಮಾಡಿರುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ. ವಿದ್ಯಾರ್ಥಿಯ ಈ ವರ್ತನೆಗೆ ಇದೀಗ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಈ ಕುರಿತು ಇಲ್ಲಿದೆ ಹೆಚ್ಚಿನ ಮಾಹಿತಿ.

ವಿಜಯ ಕರ್ನಾಟಕ 21 Feb 2026 6:34 am

ಬೆಂಗಳೂರು ಗ್ರಾಮಾಂತರ ಜಿಲ್ಲೆ ವ್ಯಾಪ್ತಿಯ ಮುಜರಾಯಿ ದೇಗುಲಗಳಲ್ಲಿ ಪ್ಲಾಸ್ಟಿಕ್‌ ಬ್ಯಾನ್‌; ಚೆಕ್‌ಪೋಸ್ಟ್‌ ಸ್ಥಾಪನೆ

ಮಹತ್ವದ ಬೆಳವಣಿಗೆಯೊಂದರಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆ ವ್ಯಾಪ್ತಿಗೆ ಒಳಪಡುವ ಮುಜರಾಯಿ ದೇಗುಲಗಳಲ್ಲಿ ಪ್ಲಾಸ್ಟಿನ್‌ ಬಳಕೆ ನಿಷೇಧ ಮಾಡಿ, ಜಿಲ್ಲಾಡಳಿತ ಆದೇಶ ಹೊರಡಿಸಿದೆ. ಅಲ್ಲದೇ ಈ ದೇವಸ್ಥಾನಳಿಗೆ ಭೇಟಿ ನೀಡುವ ಸಾರ್ವಜನಿಕರು, ಪ್ಲಾಸ್ಟಿಕ್‌ ತರದಂತೆ ತಡೆಯಲು, ದೇವಸ್ಥಾನದ ಆವರಣದಲ್ಲಿ ಚೆಕ್‌ಪೋಸ್ಟ್‌ ಸ್ಥಾಪನೆ ಮಾಡಲು ನಿರ್ಧರಿಸಲಾಗಿದೆ. ಪಿಡಿಒಗಳಿಗೆ ಪ್ಲಾಸ್ಟಿಕ್‌ ಬಳಕೆ ನಿಷೇಧ ಆದೇಶ ಜಾರಿಗೊಳಿಸುವ ಹೊಣೆ ಹೊರಿಸಲಾಗಿದೆ. ಅಲ್ಲದೇ ವಾಣಿಜ್ಯ ಮತ್ತು ತೆರಿಗೆ ಇಲಾಖೆ ಅಧಿಕಾರಿಗಳ ತಂಡ ದೇವಾಲಯಗಳಲ್ಲಿ ಪ್ಲಾಸ್ಟಿಕ್‌ ಬಳಕೆ ಮೇಲೆ ನಿಗಾ ಇರಿಸಲು ಆಗ್ಗಾಗ್ಗೆ ಪರಿಶೀಲನೆ ನಡೆಸಲಿದೆ.

ವಿಜಯ ಕರ್ನಾಟಕ 21 Feb 2026 5:43 am

ಕಸದಿಂದ ಶಾಸಕರಿಗೆ ಸಿಕ್ತು 350 ಕೋಟಿ ರೂ. ಅನುದಾನ, ಬಡಿದಾಟದ ಬಳಿಕ ಅನುಸಂಧಾನ; ಯಾವ ಕ್ಷೇತ್ರಕ್ಕೆ ಎಷ್ಟು?

ರಾಜಧಾನಿ ಬೆಂಗಳೂರಿನಲ್ಲಿ ಭುಗಿಲೆದ್ದಿದ್ದ ಕಸ ವಿಲೇವಾರಿ ವಿವಾದ ಸುಖಾಂತ್ಯ ಕಂಡಿದೆ. ಜೊತೆಗೆ ಈ ವಿವಾದ ಕಸ ವಿಲೇವಾರಿ ಘಟಕಗಳು ಇರುವ ವಿಧಾನಸಭಾ ಕ್ಷೇತ್ರಕ್ಕೆ ಅನುದಾನದ ಹೊಳೆಯನ್ನೂ ಹರಿಸಿದೆ. ಹೌದು, ರಾಜ್ಯ ಸರ್ಕಾರ ಭೂಭರ್ತಿ ಘಟಕಗಳ ವ್ಯಾಪ್ತಿಯ ವಿಧಾನಸಭಾ ಕ್ಷೇತ್ರಗಳಿಗೆ ಒಟ್ಟು 350 ಕೋಟಿ ರೂ. ಅನುದಾನ ಘೋಷಣೆ ಮಾಡಿದ್ದು, ಆಯಾ ಕ್ಷೇತ್ರಗಳ ಶಾಸಕರು ಫುಲ್‌ ಖುಷ್‌ ಆಗಿದ್ದಾರೆ. ಹಾಗಿದ್ದರೆ ಯಾವ ಕ್ಷೇತ್ರಕ್ಕೆ ಎಷ್ಟು ಅನುದಾನ ನೀಡಲಾಗಿದೆ? ಇಲ್ಲಿದೆ ಸಂಪೂರ್ಣ ವಿವರ.

ವಿಜಯ ಕರ್ನಾಟಕ 21 Feb 2026 5:03 am

`ಕಾಮಿಡಿ ಕಿಲಾಡಿಗಳು' ಸಂಚಿಕೆಯಲ್ಲಿ ಹಿಂದೂ ದೇವತೆಗಳಿಗೆ ಅಪಮಾನ: ತೀರ್ಪುಗಾರರನ್ನೂ ತನಿಖೆಗೆ ಒಳಪಡಿಸಲು ಪ್ರಯತ್ನ ಎಂದು ಆರೋಪ

ಬೆಂಗಳೂರು: ಕಾಮಿಡಿ ಕಿಲಾಡಿಗಳು ಕಾರ್ಯಕ್ರಮದ ಸಂಚಿಕೆಯಲ್ಲಿ ಹಿಂದೂ ದೇವತೆಗಳಿಗೆ ಅಪಮಾನ ಮಾಡಿದ ಆರೋಪ ಸಂಬಂಧದ ತನಿಖೆಗೆ ಹಾಜರಾಗಿ ಎಲ್ಲ ರೀತಿಯ ಸಹಕಾರ ನೀಡಿದ್ದರೂ ಪೊಲೀಸರು ಕಾರ್ಯಕ್ರಮದ ತೀರ್ಪುಗಾರರನ್ನೂ ತನಿಖೆಗೆ ಒಳಪಡಿಸಲು ಬಯಸುತ್ತಿದ್ದಾರೆ ಎಂದು ಹೈಕೋರ್ಟ್‌ನಲ್ಲಿ ಶುಕ್ರವಾರ ಆರೋಪಿಸಿದೆ.ನಗರದ ಸುಬ್ರಹ್ಮಣ್ಯಪುರ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್‌ ರದ್ದು ಕೋರಿ ಝೀ ಎಂಟರ್‌ಪ್ರೈಸಸ್‌ನ ಪ್ರತಿನಿಧಿ ದೀಪಕ್‌ ಶ್ರೀರಾಮುಲು ಹಾಗೂ ಕಾಮಿಡಿ ಕಿಲಾಡಿಗಳು ಕಾರ್ಯಕ್ರಮದ ನಿರ್ದೇಶಕ ಕೆ. ಅನಿಲ್‌ ಕುಮಾರ್‌ ಅವರು ಸಲ್ಲಿಸಿರುವ ಕ್ರಿಮಿನಲ್‌ ಅರ್ಜಿ ಕುರಿತು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ ವಿಚಾರಣೆ ನಡೆಸಿತು. ತೀರ್ಪುಗಾರರಿಗೆ ಯಾಕೆ ತೊಂದರೆ? ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲ ಸಂದೇಶ್‌ ಚೌಟ,''ಅರ್ಜಿದಾರರು ತನಿಖೆಗೆ ಹಾಜರಾಗಿದ್ದಾರೆ. ಈ ಸಂದರ್ಭದಲ್ಲಿ ಪೊಲೀಸರು ಕಾರ್ಯಕ್ರಮದ ತೀರ್ಪುಗಾರರಾದ ತಾರಾ, ಜಗ್ಗೇಶ್‌ ಹಾಗೂ ಮತ್ತೊಬ್ಬ ಸೆಲೆಬ್ರಿಟಿಯನ್ನೂ ತನಿಖೆಗೆ ಹಾಜರಾಗಬೇಕೆಂದು ಬಯಸಿದ್ದಾರೆ. ವಿದ್ಯುನ್ಮಾನ ಸಾಕ್ಷ್ಯಗಳು ಲಭ್ಯವಿದೆಯಾದರೂ, ತೀರ್ಪುಗಾರರನ್ನು ತನಿಖೆಗೆ ಕರೆಸುವಷ್ಟು ಕಠಿಣ ನಿಲುವು ತಾಳುವ ಅಗತ್ಯವಿಲ್ಲ,'' ಎಂದರು.ಅದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, 'ತೀರ್ಪುಗಾರರನ್ನು ಏಕೆ ಕರೆಸಬೇಕು? ಅವರಿಗೆ ಏಕೆ ತೊಂದರೆ ಕೊಡುತ್ತೀರಿ,' ಎಂದು ಸರಕಾರಿ ಪರ ವಕೀಲರನ್ನು ಪ್ರಶ್ನಿಸಿತಲ್ಲದೆ, 'ತೀರ್ಪುಗಾರರಿಗೆ ಪೊಲೀಸರು ನೀಡಿರುವ ಸಮನ್ಸ್‌ ಪ್ರತಿ ಎಲ್ಲಿ' ಎಂದು ವಕೀಲರನ್ನು ಕೇಳಿತು. ಇದಕ್ಕೆ ಸಂದೇಶ್‌ ಚೌಟ ಪ್ರತಿಕ್ರಿಯಿಸಿ, 'ಪೊಲೀಸರು ಸಮನ್ಸ್‌ ನೀಡಿಲ್ಲ. ನಾವು ತನಿಖೆಗೆ ಹಾಜರಾದ ಸಂದರ್ಭದಲ್ಲಿ ನಮ್ಮ ಮೂಲಕ ತೀರ್ಪುಗಾರರನ್ನು ಕರೆಸುವ ಯತ್ನ ಮಾಡುತ್ತಿದ್ದಾರೆ. ಅವರ ವಿಳಾಸ ಮತ್ತಿತರ ವಿವರಗಳನ್ನು ನೀಡುವಂತೆ ಕೇಳುತ್ತಿದ್ದಾರೆ ಎಂದು ಮಾಹಿತಿ ನೀಡಿದರು. ಫೆಬ್ರವರಿ 27ಕ್ಕೆ ವಿಚಾರಣೆ ಮುಂದೂಡಿಕೆ ಹೈಕೋರ್ಟ್ ನ್ಯಾಯಪೀಠ ಅರ್ಜಿ ವಿಚಾರಣೆಯನ್ನು ಫೆಬ್ರವರಿ 27ಕ್ಕೆ ಮುಂದೂಡಿತು. ಆ ವೇಳೆ ವಕೀಲರು, 'ಮುಂದಿನ ವಿಚಾರಣೆ ವೇಳೆ ವಿವಾದಿತ ಸಂಚಿಕೆಯನ್ನು ನ್ಯಾಯಾಲಯಕ್ಕೆ ತೋರಿಸಲು ಅನುಮತಿಸಬೇಕು. ನಾಟಕವೊಂದರ ರಿಹರ್ಸಲ್‌ ಅನ್ನು ಹಾಸ್ಯದ ಮೂಲಕ ತೋರಿಸಲಾಗಿದೆಯಷ್ಟೇ' ಎಂದರು. ಅದರ ಬಗ್ಗೆ ಮುಂದಿನ ವಿಚಾರಣೆ ವೇಳೆ ನೋಡೋಣ ಎಂದು ತಿಳಿಸಿದ ನ್ಯಾಯಪೀಠ, ಝೀ ವಾಹಿನಿ, ಕಾರ್ಯಕ್ರಮದ ಕಲಾವಿದರು, ನಿರ್ದೇಶಕರ ವಿರುದ್ಧ ಬಲವಂತದ ಕ್ರಮ ಜರುಗಿಸದಂತೆ ಈ ಹಿಂದೆ ನೀಡಿದ್ದ ಮಧ್ಯಂತರ ಆದೇಶವನ್ನು ವಿಸ್ತರಣೆ ಮಾಡಿತು.

ವಿಜಯ ಕರ್ನಾಟಕ 20 Feb 2026 11:52 pm

ನಾಳೆಯಿಂದ ಸಫಾರಿ ಪುನಾರಂಭ | ಷರತ್ತುಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಿ : ಅಧಿಕಾರಿಗಳಿಗೆ ಈಶ್ವರ್ ಖಂಡ್ರೆ ಸೂಚನೆ

ಮೈಸೂರು : ಮಾನವ-ಹುಲಿ ಸಂಘರ್ಷದ ಹಿನ್ನೆಲೆಯಲ್ಲಿ ನವೆಂಬರ್ 7ರಂದು ಸ್ಥಗಿತಗೊಳಿಸಲಾಗಿದ್ದ ಸಫಾರಿಯನ್ನು ಫೆ.21ರಿಂದ ಷರತ್ತುಬದ್ಧವಾಗಿ ಪುನರಾರಂಭಿಸಲು ನಿರ್ಧರಿಸಿದ್ದು, ಈ ಷರತ್ತುಗಳನ್ನು ಕಟ್ಟುನಿಟ್ಟಾಗಿ ಜಾರಿ ಮಾಡುವಂತೆ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ್ ಖಂಡ್ರೆ ಅಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡಿದ್ದಾರೆ. ಮೈಸೂರಿನಲ್ಲಿ ಶುಕ್ರವಾರ ಮೈಸೂರು, ಕೊಡಗು ಮತ್ತು ಚಾಮರಾಜನಗರ ವಿಭಾಗದ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ಬಹುತೇಕ ಫೆ.21ರಿಂದ ಸಫಾರಿ ಆರಂಭಿಸಲು ಅಧಿಕೃತ ಆದೇಶ ಹೊರಡಿಸಲಾಗುವುದು. ಈ ಆದೇಶದಲ್ಲಿರುವ ಷರತ್ತುಗಳ ಉಲ್ಲಂಘನೆ ಆದರೆ, ಸಂಬಂಧಿತ ಅಧಿಕಾರಿಗಳನ್ನೇ ಹೊಣೆ ಮಾಡಲಾಗುವುದು ಎಂದರು. ನ.7ಕ್ಕೆ ಮೊದಲು ಬಳಕೆಯಾಗುತ್ತಿದ್ದ ಸಫಾರಿ ವಾಹನಗಳ ಶೇ.50ರಷ್ಟು ವಾಹನ ಮತ್ತು ಸಿಬ್ಬಂದಿಯನ್ನು ಮಾತ್ರವೇ ಬಳಕೆ ಮಾಡಬೇಕು. ಹೆಚ್ಚಾಗಿ ಬಸ್ ಗಳ ಮೂಲಕ ಸಫಾರಿ ನಡೆಸಬೇಕು. ಅತ್ಯಂತ ಕಡಿಮೆ ಸಂಖ್ಯೆಯಲ್ಲಿ ಕ್ಯಾಂಪರ್ ಮತ್ತು ಜೀಪ್ ಬಳಕೆ ಮಾಡಬೇಕು ಈ ಬಗ್ಗೆ ಸ್ಪಷ್ಟ ಆದೇಶ ಹೊರಡಿಸಲಾಗುವುದು ಎಂದರು. ಬಂಡೀಪುರ ಮತ್ತು ನಾಗರಹೊಳೆ ಅರಣ್ಯ ಪ್ರದೇಶದಲ್ಲಿ ಮಾನವ-ವನ್ಯಜೀವಿ ಸಂಘರ್ಷ ಇರುವ ಪ್ರದೇಶವನ್ನು ಗುರುತಿಸಬೇಕು. ಆ ಪ್ರದೇಶದಲ್ಲಿ ಗಸ್ತು ಹೆಚ್ಚಿಸಬೇಕು. ವನ್ಯಜೀವಿಗಳು ವಸತಿ ಪ್ರದೇಶಕ್ಕೆ ಬಾರದಂತೆ, ಜೀವಹಾನಿ, ಬೆಳೆ ಹಾನಿ ಮಾಡದಂತೆ ಎಚ್ಚರಿಕೆ ವಹಿಸಬೇಕು ಎಂದು ನಿರ್ದೇಶನ ನೀಡಿದರು. ಅರಣ್ಯ ಸಂರಕ್ಷಣೆ, ವನ್ಯಜೀವಿ ಸಂರಕ್ಷಣೆ ಆಗಬೇಕಾದರೆ ಸ್ಥಳೀಯರ ನೆರವು, ಸಹಕಾರ, ಸಹಯೋಗ ಅತ್ಯಂತ ಮುಖ್ಯ. ಈ ನಿಟ್ಟಿನಲ್ಲಿ ಅರಣ್ಯ ಸಿಬ್ಬಂದಿ ಸ್ಥಳೀಯರೊಂದಿಗೆ ಸೌಹಾರ್ದಯುತವಾಗಿ ವರ್ತಿಸಬೇಕು. ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅರಣ್ಯ ಸಂರಕ್ಷಣೆ ಮಾಡಬೇಕು ಎಂದರು. ಸಭೆಯಲ್ಲಿ ಸಿಸಿಎಫ್ ಮಾಲತಿ ಪ್ರಿಯಾ, ಹುಲಿ ಯೋಜನೆಯ ನಿರ್ದೇಶಕ ರಮೇಶ್ ಕುಮಾರ್, ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ರವಿಶಂಕರ್, ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾದ ಶ್ರೀಪತಿ, ಸೋನಾಲ್, ಪ್ರಭಾಕರನ್, ಸೀಮಾ ಮತ್ತಿತರರು ಪಾಲ್ಗೊಂಡಿದ್ದರು. ಮಾನವ ಜೀವ ರಕ್ಷಣೆಗೆ ಆದ್ಯತೆ : ವನ್ಯಜೀವಿಗಳ ರಕ್ಷಣೆಯ ಜೊತೆಗೆ ಕಾಡಿನಂಚಿನಲ್ಲಿ ವಾಸಿಸುತ್ತಿರುವ ನಿವಾಸಿಗಳ ಜೀವ ರಕ್ಷಣೆಯೂ ಅರಣ್ಯ ಇಲಾಖೆಯ ಪ್ರಥಮ ಆದ್ಯತೆ ಆಗಿದೆ. ಇದರ ಜೊತೆಗೆ ಬೆಳೆ ರಕ್ಷಣೆಗೂ ಒತ್ತು ನೀಡಬೇಕು. ಸಫಾರಿಯಿಂದ ಬರುವ ಆದಾಯದಲ್ಲಿ ಶೇ.35ರಷ್ಟು ಹಣವನ್ನು ಅರಣ್ಯದಂಚಿನ ವಸತಿ ಪ್ರದೇಶಗಳಲ್ಲಿನ ಯುವಜನರಿಗೆ ಕೌಶಲ್ಯ ತರಬೇತಿ ನೀಡಲು, ಜಾನುವಾರುಗಳಿಗೆ ಮೇವು ಒದಗಿಸಲು, ಮಕ್ಕಳಿಗೆ ಶಿಕ್ಷಣ ಕೊಡಿಸಲು ವಿನಿಯೋಗಿಸಬೇಕು ಎಂದು ಸಚಿವ ಈಶ್ವರ್ ಖಂಡ್ರೆ ತಿಳಿಸಿದರು. ಪ್ರಮುಖ ಅಂಶಗಳು ► ಬಂಡೀಪುರ ಅರಣ್ಯದ ಗಡಿಯಲ್ಲಿ 100 ಕಿ.ಲೋ. ಮೀಟರ್ ಅತ್ಯಂತ ಸೂಕ್ಷ್ಮಪ್ರದೇಶ ► 5 ಕಿ.ಮೀ.ಗೆ ಒಂದರಂತೆ 25 ಶಿಬಿರ ನಿರ್ಮಾಣ ► ಪ್ರತಿ ಶಿಬಿರದಲ್ಲಿ ಸ್ಥಳೀಯರನ್ನು ಕಾಡಿನ ಮಿತ್ರ ಎಂದು ನೇಮಕ ಮಾಡಿಕೊಳ್ಳಬೇಕು ► ಥರ್ಮಲ್ ಡ್ರೋನ್, ವಾಹನ ಇತ್ಯಾದಿ ಸೌಲಭ್ಯ ಬೇಕಿದ್ದರೂ ಲಿಖಿತ ಪ್ರಸ್ತಾವ ಸಲ್ಲಿಸಬೇಕು ► ಅರಣ್ಯ ಇಲಾಖೆ ಆಂತರಿಕವಾಗಿ ಅಭಿವೃದ್ಧಿಪಡಿಸಿರುವ ಇ-ಗಸ್ತು ತಂತ್ರಾಂಶ ಬಳಕೆ ಮಾಡಬೇಕು ► ಹುಲಿ ಸಂರಕ್ಷಿತ ಪ್ರದೇಶದಲ್ಲಿ ಹೊರಗುತ್ತಿಗೆಯ ಸಿಬ್ಬಂದಿ ಇ-ಸ್ಟ್ರೈಪ್ ಬಳಕೆ ಮಾಡಬೇಕು ► ಸಮಗ್ರ ಕಮಾಂಡ್ ಕೇಂದ್ರದಲ್ಲಿ ವನ್ಯಜೀವಿಗಳ ಚಲನವಲನದ ಬಗ್ಗೆ ನಿಗಾ ಇಡಬೇಕು ► 1926 ದೂರವಾಣಿ ಸಂಖ್ಯೆಗೆ ಬರುವ ದೂರು ಮತ್ತು ಮಾಹಿತಿಗೆ ತಕ್ಷಣ ಸ್ಪಂದಿಸಬೇಕು

ವಾರ್ತಾ ಭಾರತಿ 20 Feb 2026 11:46 pm

Kalaburagi | ಮಕ್ಕಳು ಕೊಡುಗೈ ದಾನಿಯಾಗಬೇಕು: ಬಸವರಾಜ ಪಾಟೀಲ ಸೇಡಂ

ಕಲಬುರಗಿ: ಮಕ್ಕಳು ಕೊಡುವವರಾಗಬೇಕು, ಬೇಡುವವರಾಗಬಾರದು. ಸಮಾಜಕ್ಕೆ ದಾನಿಯಾಗುವ ಮನೋಭಾವ ಬೆಳೆಸಿಕೊಳ್ಳಬೇಕು. ಆಕಾಶದಲ್ಲಿ ಹಾರುವ ಹಕ್ಕಿಗಳಂತೆ ಸ್ವತಂತ್ರವಾಗಿ, ಆತ್ಮವಿಶ್ವಾಸದಿಂದ ಬದುಕಲು ಮಕ್ಕಳಿಗೆ ಪೋಷಕರು ಮತ್ತು ಶಿಕ್ಷಕರು ಅವಕಾಶ ಕಲ್ಪಿಸಬೇಕು ಎಂದು ಮಾಜಿ ಸಂಸದ ಬಸವರಾಜ ಪಾಟೀಲ ಸೇಡಂ ಹೇಳಿದರು. ನಗರದ ರಾಮತೀರ್ಥ ದೇವಸ್ಥಾನದ ಸಮೀಪದ ಕಲ್ಯಾಣ ಮಂಟಪದಲ್ಲಿ ಶ್ರೀ ಮಂದಾರ ಪುಷ್ಪ ಶಿಕ್ಷಣ ಮತ್ತು ಕಲ್ಯಾಣ ಸಂಸ್ಥೆಯ ಲಕ್ಷ್ಮೀಬಾಯಿ ಸಾತಲಿಂಗಪ್ಪ ಮೇತ್ರೆ ಪ್ರಾಥಮಿಕ ಶಾಲೆ ಹಾಗೂ ಶ್ರೀ ಮಂದಾರ ಪುಷ್ಪ ಶಾಲೆಯ 21ನೇ ವಾರ್ಷಿಕ ಸ್ನೇಹ ಸಮ್ಮೇಳನ ‘ರಂಗಿತರಂಗ ವೈಭವ’ ಕಾರ್ಯಕ್ರಮವು ಭಾನುವಾರ ಅದ್ದೂರಿಯಾಗಿ ಹಾಗೂ ಸಂಭ್ರಮದ ವಾತಾವರಣದಲ್ಲಿ ನಡೆಯಿತು. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಾಬುರಾವ್ ಯಡ್ರಾಮಿ ಮಾತನಾಡಿ, ಮಕ್ಕಳಿಗೆ ಪ್ರೀತಿ ಮತ್ತು ಶಿಸ್ತು ಎರಡೂ ಅಗತ್ಯ. ಶಿಕ್ಷಕರು ಮಕ್ಕಳನ್ನು ತಿದ್ದಿದಾಗ ಪಾಲಕರು ಪ್ರಶ್ನಿಸುವ ಬದಲು ಸಹಕರಿಸಬೇಕು. ಆಗ ಮಾತ್ರ ಮಕ್ಕಳಲ್ಲಿ ವಿದ್ಯೆಯ ಜೊತೆಗೆ ಸಂಸ್ಕಾರವೂ ಬೆಳೆಯುತ್ತದೆ. ಇಲ್ಲವಾದರೆ ತಪ್ಪು ದಾರಿಯಲ್ಲಿ ಹೋಗಿ ಜೀವನ ಹಾಳಾಗುವ ಸಾಧ್ಯತೆ ಇರುತ್ತದೆ ಎಂದು ಎಚ್ಚರಿಸಿದರು. ನಿವೃತ್ತ ತಹಶೀಲ್ದಾರ್ ಜಿ.ಎಲ್. ಮೇತ್ರೆ ಕಾರ್ಯಕ್ರಮವನ್ನು ಉದ್ಘಾಟಿಸಿ ವಿದ್ಯಾರ್ಥಿಗಳಿಗೆ ಶುಭಾಶಯ ಕೋರಿದರು. ವೇದಿಕೆಯಲ್ಲಿ ಪತ್ರಕರ್ತ ಶರಣಗೌಡ ಪಾಟೀಲ ಪಾಳಾ, ಬಿಐಇಆರ್‌ಟಿ ಮಲ್ಲಮ್ಮ ಆಲ್ಗೂಡ, ಸಿಆರ್‌ಪಿ ಅಶ್ವಿನಿ ಕುಲಕರ್ಣಿ, ಕಲ್ಲನಗೌಡ ಎಸ್., ಶಿಕ್ಷಕ ಸೂರ್ಯಕಾಂತ್ ಯಲ್ದೆ ಹಾಗೂ ಉದ್ಯಮಿ ಬಸವರಾಜ ಪಾಟೀಲ ಉಪಸ್ಥಿತರಿದ್ದರು. ಶಿಕ್ಷಣ ಸಂಸ್ಥೆಯ ಅಧ್ಯಕ್ಷ ರವಿಕುಮಾರ ನೀಲೂರ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಲೋಹಿತ್ ಕುಮಾರ್ ನೀಲೂರ, ಸಂಯೋಗಿತ ಲೋಹಿತ್, ಮಲ್ಲಿನಾಥ ಅಷ್ಟಗಿ, ಮಹದೇವಪ್ಪ ಪಗಡೆ, ಗುರುನಾಥ ಶಿವಪೂರೆ ಸೇರಿದಂತೆ ಅನೇಕ ಗಣ್ಯರು ಮತ್ತು ಪಾಲಕರು ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಶಿಕ್ಷಕ ಶಿವಕುಮಾರ್ ಕಾರ್ಯಕ್ರಮವನ್ನು ನಿರೂಪಿಸಿದರು. ಕಾರ್ಯಕ್ರಮದ ಅಂಗವಾಗಿ ವಿದ್ಯಾರ್ಥಿಗಳು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಮನಮೋಹಕವಾಗಿ ಪ್ರದರ್ಶಿಸಿ ಸಭಿಕರ ಮನಗೆದ್ದರು. ನೃತ್ಯ, ನಾಟಕ, ಗಾನ ಹಾಗೂ ದೇಶಭಕ್ತಿ ಆಧಾರಿತ ಪ್ರದರ್ಶನಗಳು ವಿಶೇಷ ಆಕರ್ಷಣೆಯಾಗಿದ್ದವು. ಕಾರ್ಯಕ್ರಮವು ಶಿಸ್ತಿನಿಂದ ಹಾಗೂ ಉತ್ಸಾಹಭರಿತ ವಾತಾವರಣದಲ್ಲಿ ನೆರವೇರಿತು.

ವಾರ್ತಾ ಭಾರತಿ 20 Feb 2026 11:37 pm

ಮಂಗಳೂರು: ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ಪ್ರಕರಣ; ಆರೋಪಿ ಸೆರೆ

ಬಂಟ್ವಾಳ: ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದ ಆರೋಪಿಯೋರ್ವನನ್ನು ಇಲ್ಲಿನ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಬಂಟ್ವಾಳ ಮೇರಮಜಲು ನಿವಾಸಿ ಪ್ರಶಾಂತ್ @ ಪ್ರಸಾದ್ (30) ಎಂದು ಗುರುತಿಸಲಾಗಿದೆ. ಬಂಧಿತನನ್ನು ವಿಚಾರಣೆ ನಡೆಸಿದ ಪೊಲೀಸರು ಈತ ಗಾಂಜಾವನ್ನು ಶೇಖರಿಸಿಟ್ಟು ಗಿರಾಕಿಗಳಿಗೆ ಮಾರಾಟ ಮಾಡಲು ಬಂದಿರುವುದಾಗಿ ತಿಳಿಸಿದ್ದ, ತಪಾಸಣೆಯ ವೇಳೆ ಆತನ ಬಳಿ 180 ಗ್ರಾಂ ಗಾಂಜಾವನ್ನು ಪತ್ತೆಯಾಗಿರುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ. ಮಾದಕವಸ್ತು, ದ್ವಿಚಕ್ರ ವಾಹನ ಸಹಿತ ಆರೋಪಿಯನ್ನು  ಪೊಲೀಸರು ಬಂಧಿಸಿದ್ದು, ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವಾರ್ತಾ ಭಾರತಿ 20 Feb 2026 11:37 pm

ಹೊಸಪೇಟೆ | ಕುಡುಕರ ಅಡ್ಡೆಯಾದ ಯೋಗ ಮಂದಿರ

ಹೊಸಪೇಟೆ : ನಗರದ ಹೊರವಲಯದಲ್ಲಿರುವ ಐತಿಹಾಸಿಕ ಪ್ರವಾಸಿ ತಾಣ ಜೋಳದರಾಶಿ ಗುಡ್ಡದ ಮೇಲಿನ ಯೋಗ ಮಂದಿರದಲ್ಲಿ ಕಿಡಿಗೇಡಿಗಳ ಹಾವಳಿ ಹೆಚ್ಚಾಗುತ್ತಿರುವುದು ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ. ಸುಮಾರು 20 ಕೋಟಿ ರೂ. ವೆಚ್ಚದಲ್ಲಿ ಜೋಳದರಾಶಿ ಗುಡ್ಡದ ಮೇಲೆ ಬೃಹತ್ ಶ್ರೀ ಕೃಷ್ಣದೇವರಾಯನ ಪ್ರತಿಮೆ ಪ್ರತಿಷ್ಠಾಪನೆಗೆ ಯೋಜನೆ ರೂಪಿಸಲಾಗಿತ್ತು. ಗುಡ್ಡದ ಮೇಲಿನಿಂದ ಹಂಪಿ, ಅಂಜನಾದ್ರಿ ಹಾಗೂ ತುಂಗಭದ್ರಾ ಜಲಾಶಯ ವೀಕ್ಷಣೆಗೆ ಅನುಕೂಲವಾಗುವಂತೆ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿತ್ತು. ಆದರೆ ಯೋಜನೆ ಅಪೂರ್ಣವಾಗಿದ್ದು, ಸ್ಥಳವು ಇದೀಗ ಕುಡುಕರ ಹಾಗೂ ಕಿಡಿಗೇಡಿಗಳ ಅಡ್ಡೆಯಾಗಿ ಮಾರ್ಪಟ್ಟಿದೆ. ಯೋಗ ಮಂದಿರದ ಬಾಗಿಲು ಮತ್ತು ಕಿಟಕಿಗಳು ಒಡೆದು ಹಾನಿಗೊಳಪಡಿಸಲಾಗಿದೆ. ಅಲ್ಲದೆ ಅನೈತಿಕ ಚಟುವಟಿಕೆಗಳು ನಡೆಯುತ್ತಿರುವ ಬಗ್ಗೆ ಸ್ಥಳೀಯರು ದೂರಿದ್ದಾರೆ. ಆದಷ್ಟು ಬೇಗ ಯೋಗ ಮಂದಿರವನ್ನು ಸಾರ್ವಜನಿಕರಿಗೆ ಮುಕ್ತಗೊಳಿಸಿ, ರಾಜಕೀಯ ಭೇದಭಾವ ಬದಿಗೊತ್ತಿ ಅಭಿವೃದ್ಧಿ ಕಾಮಗಾರಿಗಳನ್ನು ಪೂರ್ಣಗೊಳಿಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.

ವಾರ್ತಾ ಭಾರತಿ 20 Feb 2026 11:35 pm

ಸಾರಕ್ಕಿ ಕೆರೆ ಬಫರ್ ವಲಯದ ಒತ್ತುವರಿ ತೆರವಿಗೆ ಸಮಿತಿ ರಚಿಸಿ; ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ

ಬೆಂಗಳೂರು : ಜೆ.ಪಿ.ನಗರದ ಪುಟ್ಟೇನಹಳ್ಳಿ ಬಳಿಯ ಸಾರಕ್ಕಿ ಕೆರೆ ಬಫರ್‌ ವಲಯದ ಒತ್ತುವರಿ ಮತ್ತು ಅನಧಿಕೃತ ಕಟ್ಟಡಗಳನ್ನು ತೆರವುಗೊಳಿಸಲು ಸಮಿತಿ ರಚನೆ ಮಾಡುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ನಿರ್ದೇಶಿಸಿದೆ. ಸಾರಕ್ಕಿ ಕೆರೆ ಬಫರ್‌ ವಲಯದಲ್ಲಿನ ಒತ್ತುವರಿ ತೆರವುಗೊಳಿಸಲು ಸರ್ಕಾರ ಮತ್ತು ಸಂಬಂಧಪಟ್ಟ ಪ್ರಾಧಿಕಾರಗಳಿಗೆ ನಿರ್ದೇಶಿಸುವಂತೆ ಕೋರಿ ಸಾರಕ್ಕಿ ಕೆರೆ ಪ್ರದೇಶ ಅಭಿವೃದ್ಧಿ ಟ್ರಸ್ಟ್‌ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಹಾಗೂ ನ್ಯಾಯಮೂರ್ತಿ ಸಿ.ಎಂ. ಪೂಣಚ್ಚ ಅವರಿದ್ದ ವಿಭಾಗೀಯ ನ್ಯಾಯಪೀಠ ಶುಕ್ರವಾರ ವಿಚಾರಣೆ ನಡೆಸಿತು. ಕೆಲ ಕಾಲ ಅರ್ಜಿ ಆಲಿಸಿದ ನ್ಯಾಯಪೀಠ, ಕೆರೆ ಪ್ರದೇಶ ಒತ್ತುವರಿ ತೆರವಿಗೆ ಅಗತ್ಯ ಕ್ರಮ ಕೈಗೊಳ್ಳಲು ಬೆಂಗಳೂರು ನಗರ ಜಿಲ್ಲಾಧಿಕಾರಿ, ಬಿಬಿಎಂಪಿ/ಜಿಬಿಎ ಮತ್ತು ಕೆರೆ ಅಭಿವೃದ್ಧಿ ಪ್ರಾಧಿಕಾರದ ಪ್ರತಿನಿಧಿಗಳು ಸೇರಿದಂತೆ ಸಂಬಂಧಪಟ್ಟ ಅಗತ್ಯವಿರುವ ಉಳಿದ ಪಾಲುದಾರರನ್ನು ಒಳಗೊಂಡ ಸಮಿತಿ ರಚಿಸಬೇಕು ಎಂದು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ನಿರ್ದೇಶಿಸಿತು. ಜತೆಗೆ, ಮೂರು ವಾರದೊಳಗೆ ಈ ಸಮಿತಿ ರಚಿಸಿ ಆದೇಶ ಹೊರಡಿಸಬೇಕು. ಸಮಿತಿ ಸದಸ್ಯರು ಕೆರೆ ಪ್ರದೇಶಕ್ಕೆ ಸ್ಥಳಕ್ಕೆ ಭೇಟಿ ನೀಡಿ ಕೆರೆ ಬಫರ್‌ ವಲಯದಲ್ಲಿ ನಿರ್ಮಾಣ ಮಾಡಿರುವ ಕಟ್ಟಡ ಮತ್ತು ಒತ್ತುವರಿದಾರರನ್ನು ಗುರುತಿಸಿ ನೋಟಿಫೈ ಮಾಡಬೇಕು. ಕೆರೆ ಸಂರಕ್ಷಣೆ ನಿಟ್ಟಿನಲ್ಲಿ ಒತ್ತುವರಿ ತೆರವು ಸೇರಿದಂತೆ ಇನ್ನುಳಿದ ಕ್ರಮ ನಡೆಸಬೇಕು. ಸಮಿತಿಯು ನೋಡಲ್‌ ಅಧಿಕಾರಿಯ ಮೂಲಕ 3 ತಿಂಗಳಲ್ಲಿ ಈ ಆದೇಶದ ಅನುಪಾಲನಾ ವರದಿ ಸಲ್ಲಿಸಬೇಕು. ಸಮಿತಿ ಪ್ರಕಟಿಸುವ ಪಟ್ಟಿಯಲ್ಲಿ ಹೆಸರಿಸಲಾದ ಒತ್ತುವರಿದಾರರ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ ಎಂದು ತಿಳಿಸಿದ ನ್ಯಾಯಪೀಠ ಅರ್ಜಿ ಇತ್ಯರ್ಥಪಡಿಸಿತು. ಇದೇ ವೇಳೆ, ನ್ಯಾಯಾಲಯದ ಈ ಆದೇಶದ ಅನುಪಾಲನಾ ವರದಿ ಸಲ್ಲಿಕೆಗಾಗಿ ಜೂನ್ 30ಕ್ಕೆ ಅರ್ಜಿಯನ್ನು ನ್ಯಾಯಾಲಯದ ಮುಂದೆ ಪಟ್ಟಿಮಾಡಬೇಕು ಎಂದು ರಿಜಿಸ್ಟ್ರಿಗೆ ನ್ಯಾಯಪೀಠ ನಿರ್ದೇಶಿಸಿದೆ.

ವಾರ್ತಾ ಭಾರತಿ 20 Feb 2026 11:28 pm

ಉತ್ತರ ಕನ್ನಡ ಜಿಲ್ಲೆಯಲ್ಲಿ ‘ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ’ ಸ್ಥಾಪಿಸಲು ಆರ್.ವಿ.ದೇಶಪಾಂಡೆ ಮನವಿ

ಬೆಂಗಳೂರು : ಉತ್ತರ ಕನ್ನಡ ಜಿಲ್ಲೆಯ ಜನರ ದೀರ್ಘಕಾಲದ ಬೇಡಿಕೆಯಾಗಿರುವ ಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಗೆ ಹೆಚ್ಚುವರಿ ಮೂಲಸೌಕರ್ಯಗಳಿಂದ ಬಲಪಡಿಸಿ ‘ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ’ಯಾಗಿ ಅಭಿವೃದ್ಧಿಪಡಿಸಲು ಬಜೆಟ್‍ನಲ್ಲಿ ಅಗತ್ಯ ಅನುದಾನವನ್ನು ಮೀಸಲಿಡಬೇಕು ಎಂದು ಮಾಜಿ ಸಚಿವ ಆರ್.ವಿ.ದೇಶಪಾಂಡೆ ಮನವಿ ಮಾಡಿದ್ದಾರೆ. ಶುಕ್ರವಾರ ಈ ಸಂಬಂಧ ಸಿಎಂ, ವೈದ್ಯಕೀಯ ಶಿಕ್ಷಣ ಸಚಿವರಿಗೆ ಪತ್ರ ಬರೆದಿರುವ ಅವರು, ಉತ್ತರಕನ್ನಡ ಜಿಲ್ಲೆಯು ವಿಶಾಲ ಭೌಗೋಳಿಕ ವ್ಯಾಪ್ತಿ ಹೊಂದಿರುವ ಜಿಲ್ಲೆಯಾಗಿದೆ. ಇತ್ತೀಚಿನ ದಿನಗಳಲ್ಲಿ ಅಪಘಾತಗಳ ಪ್ರಮಾಣ ಹಾಗೂ ಗಂಭೀರ ಆರೋಗ್ಯ ಸಮಸ್ಯೆಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಜಿಲ್ಲೆಯಲ್ಲೇ ಆಸ್ಪತ್ರೆಯ ಕೊರತೆಯಿಂದ ರೋಗಿಗಳು ಹುಬ್ಬಳ್ಳಿ, ಮಣಿಪಾಲ, ಬೆಳಗಾವಿ, ಗೋವಾ, ಬೆಂಗಳೂರಿಗೆ ಚಿಕಿತ್ಸೆಗಾಗಿ ತೆರಳಬೇಕಾದ ಅನಿವಾರ್ಯ ಸ್ಥಿತಿ ನಿರ್ಮಾಣವಾಗಿದೆ ಎಂದು ಗಮನ ಸೆಳೆದಿದ್ದಾರೆ. ಜಿಲ್ಲೆಯ ವಿವಿಧ ಸ್ಥಳಗಳಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪನೆಗಾಗಿ ಹೋರಾಟಗಳು ನಡೆಯುತ್ತಿವೆ. ಪ್ರಸ್ತುತ ಜಿಲ್ಲಾಕೇಂದ್ರ ಕಾರವಾರದಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಕ್ರಿಮ್ಸ್)ಈಗಾಗಲೇ ಮೂಲಭೂತ ಆರೋಗ್ಯ ಸೇವೆಗಳನ್ನು ಒದಗಿಸುತ್ತಿದೆ. ಈ ಸಂಸ್ಥೆಗೆ ಅಗತ್ಯ ಹೆಚ್ಚುವರಿ ಮೂಲಸೌಕರ್ಯ ಒದಗಿಸಿ ಅದನ್ನು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಾಗಿ ಅಭಿವೃದ್ಧಿಪಡಿಸಿದಲ್ಲಿ, ಜಿಲ್ಲೆಯ ಜನತೆಗೆ ಗುಣಮಟ್ಟದ ಚಿಕಿತ್ಸೆ ಲಭ್ಯವಾಗುತ್ತದೆ. ತುರ್ತು ಪರಿಸ್ಥಿತಿಗಳಲ್ಲಿ ಅನೇಕ ಜೀವಗಳನ್ನು ರಕ್ಷಿಸಲು ಸಹಕಾರಿಯಾಗಲಿದೆ ಎಂದು ಅವರು ಕೋರಿದ್ದಾರೆ.

ವಾರ್ತಾ ಭಾರತಿ 20 Feb 2026 11:24 pm

ವಿಜಯನಗರ | ಬಿಜೆಪಿ ಕಾರ್ಯಕರ್ತರ ಸಂಘಟನಾ ಸಮಾವೇಶ

ವಿಜಯನಗರ: ಕಾಂಗ್ರೆಸ್‌ನ ಭ್ರಷ್ಟಾಚಾರ ತಡೆಯಲು ಬಿಜೆಪಿ ಜಾರಿಗೆ ತಂದಿರುವ ವಿಬಿ ಜಿ ರಾಮ್ ಜಿ ಕಾಯ್ದೆಯ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಕಾರ್ಯಕರ್ತರು ಮುಂದಾಗಬೇಕು ಎಂದು ಮಾಜಿ ಕೇಂದ್ರ ಸಚಿವ ಜಿ.ಎಂ ಸಿದ್ದೇಶ್ವರ ಕರೆ ನೀಡಿದರು. ನಗರದ ತರಳಬಾಳು ಕಲ್ಯಾಣ ಮಂಟಪದಲ್ಲಿ ಶುಕ್ರವಾರ ಬಿಜೆಪಿ ಪಕ್ಷದಿಂದ ಆಯೋಜಿಸಿದ್ದ ವಿಬಿ ಜಿ ರಾಮ್ ಜಿ ಜನಜಾಗೃತಿ ಹಾಗೂ ಕಾಂಗ್ರೆಸ್ ಸರ್ಕಾರದ ದುರಾಡಳಿತ ಖಂಡನಾ ಸಭೆಯನ್ನು ಉದ್ಘಾಟಿಸಿ ಮಾತನಾಡಿದ               ಅವರು, ಕೇಂದ್ರ ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸುವಲ್ಲಿ ಕಾರ್ಯಕರ್ತರು ಸಕ್ರಿಯರಾಗಬೇಕು ಎಂದರು.  ಮುಂದಿನ ದಿನಗಳಲ್ಲಿ ಬಿಜೆಪಿ ಸ್ಪಷ್ಟ ಬಹುಮತ ಪಡೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಅವರು, 60 ಕೆರೆ ನೀರು ಪೂರೈಕೆ ಯೋಜನೆ ಸಾಕಾರವಾಗದಿರುವುದನ್ನು ಖಂಡಿಸಿದರು. ನೀರಿನ ಸದ್ಬಳಕೆ ಮೂಲಕ ಗುಳೆ ಹೋಗುವ ಪರಿಸ್ಥಿತಿಯನ್ನು ತಡೆಯಲಾಗುವುದು ಎಂದರು. ಕಾರ್ಯಕ್ರಮದಲ್ಲಿ ಹರಿಹರ ಶಾಸಕ ಬಿ.ಪಿ ಹರೀಶ್, ಮಾಜಿ ಸಂಸದ ವೈ.ದೇವೇಂದ್ರಪ್ಪ, ಗಾಯತ್ರಿ ಸಿದ್ದೇಶ್ವರ, ಡಾ.ರಮೇಶ್, ಮುತ್ತಿಗೆ ವಾಗೇಶ್, ಕಂಚಿಕೆರೆ ಕೆಂಚಪ್ಪ ಮಾತಾನಾಡಿದರು. ಈ ಸಂದರ್ಭದಲ್ಲಿ ರಾಜ್ಯ ಎಸ್.ಟಿ ಘಟಕದ ಉಪಾಧ್ಯಕ್ಷ ಶ್ರೀನಿವಾಸ ದಾಸಕರಿಯಪ್ಪ, ಜಿಲ್ಲಾ ಬಿಜೆಪಿ ಎಸ್ ಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಕಣಿವೆಹಳ್ಳಿ, ಮಾಜಿ ಮಂಡಲ ಅಧ್ಯಕ್ಷ ಸತ್ತೂರು ಹಾಲೇಶ್, ಎಸ್.ಪಿ ನಾಯ್ಕ, ಓಂಕಾರ ಗೌಡ, ಬಂದೋಳ ಮಂಜುನಾಥ್, ಪಾಟೀಲ್ ಕೆಂಚನಗೌಡ, ಮಂಜುನಾಥ್ ಹಿಜಂತ್ಕರ್, ಸಣ್ಣ ಹಾಲಪ್ಪ, ಕುಸುಮಾ ಜಗದೀಶ್, ಕೆ.ಎಂ ಪ್ರಾಣೇಶ್, ಕೆ.ಮಲ್ಲಿಕಾರ್ಜುನ, ಕೆ.ಲಿಂಗಾನಂದ ಇತರರು ಭಾಗಿಯಾಗಿದ್ದರು.

ವಾರ್ತಾ ಭಾರತಿ 20 Feb 2026 11:24 pm

ಕುಡಿಯುವ ನೀರನ್ನು ಆಗಾಗ ಪರೀಕ್ಷೆ ಮಾಡಿಸಲು ಸೂಚನೆ : ಡಾ.ಶಾಲಿನಿ ರಜನೀಶ್

ಬೆಂಗಳೂರು : ಗ್ರಾಮೀಣ ಭಾಗದಲ್ಲಿ ಜಲ ಜೀವನ್ ಮಿಷನ್ ಯೋಜನೆಯಡಿ ನಲ್ಲಿಗಳ ಮೂಲಕ ನೀಡಲಾಗುತ್ತಿರುವ ಕುಡಿಯುವ ನೀರನ್ನು ಆಗಾಗ ಪರೀಕ್ಷೆಗೆ ಒಳಪಡಿಸಬೇಕು ಎಂದು ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್ ಇಂದಿಲ್ಲಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಶುಕ್ರವಾರ ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ಕೇಂದ್ರದ ಗ್ರಾಮೀಣ ಕುಡಿಯುವ ನೀರು ಸರಬರಾಜು ಯೋಜನೆಯಡಿ ಬರುವ ಜಲ ಜೀವನ ಮಿಷನ್ ಅನುಷ್ಟಾನ ಸಮಿತಿ ಸಭೆಯನ್ನು ನಡೆಸಿದ ಅವರು, ‘ಯೋಜನೆಯಡಿ ನಲ್ಲಿಗಳನ್ನು ಅಳವಡಿಸಿದರೆ ಕೆಲಸ ಮುಗಿಯುವುದಿಲ್ಲ. ಅಳವಡಿಸಿರುವ ನಲ್ಲಿ ಗಳಲ್ಲಿ ನೀರು ಬರುತ್ತಿದೆಯೇ ಅಥವಾ ಇಲ್ಲವೇ ಎಂಬುದನ್ನು ಮೇಲ್ವಿಚಾರಣೆ ಮಾಡುವ ಜೊತೆಗೆ ನೀರಿನ ಗುಣಮಟ್ಟವನ್ನು ಆಗಾಗ ಪರೀಕ್ಷೆ ಮಾಡಿಸಬೇಕೆಂದು ನಿರ್ದೇಶನ ನೀಡಿದರು. ಬಳಿಕ ಪ್ರತಿಕ್ರಿಯಿಸಿದ ನೀರು ಸಂಪನ್ಮೂಲ ಅಭಿವೃದ್ಧಿ ಇಲಾಖೆಯ ಹಿರಿಯ ಅಧಿಕಾರಿ, ‘ಇದುವರೆವಿಗೂ 26,591 ಹಳ್ಳಿಗಳ ಪೈಕಿ 24,558 ಹಳ್ಳಿಗಳಲ್ಲಿ ಒದಗಿಸಲಾಗುತ್ತಿರುವ ನೀರಿನ ಗುಣಮಟ್ಟವನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ಸಾರ್ವಜನಿಕರಿಗೆ ತಾವು ಕುಡಿಯುತ್ತಿರುವ ನೀರಿನ ಸುರಕ್ಷತೆಯನ್ನು ಸ್ವತಃ ಅವರೇ ಖಾತ್ರಿ ಪಡಿಸಿಕೊಳ್ಳಬಹುದಾದ ವರದಿ ನೀಡುವ ಕ್ಯೂ ಆರ್ ಕೋಡ್ ತಂತ್ರಜ್ಞಾನವನ್ನು ಅಳವಡಿಸಲಾಗಿದೆ, ಹಾಗೂ ನೀರಿನ ಟ್ಯಾಂಕ್‍ಗಳನ್ನು ಜನರ ಸಮ್ಮುಖದಲ್ಲಿಯೇ ಸ್ವಚ್ಛ ಮಾಡಿಸಲಾಗುತ್ತದೆ ಎಂದು ಮಾಹಿತಿ ನೀಡಿದರು. ಜನರು ಕುಡಿಯು ನೀರಿನ ಪರೀಕ್ಷೆಯು ನೂರಕ್ಕೆ ನೂರಷ್ಟು ಆಗಲೇಬೇಕು. ಹಾಗೆಯೇ ಕೆಲದಿನಗಳಲ್ಲೇ ಬೇಸಿಗೆ ಬರಲಿರುವುದರಿಂದ ಗ್ರಾಮೀಣ ಭಾಗದ ಜನರಿಗೆ ಕುಡಿಯುವ ನೀರಿನ ಯಾವುದೇ ರೀತಿಯ ತೊಂದರೆಯಾಗದಂತೆ ಕ್ರಮವಹಿಸಬೇಕು ಎಂದು ಶಾಲಿನಿ ರಜನೀಶ್ ಸೂಚಿಸಿದರು. ಕೇಂದ್ರ ಜಲಶಕ್ತಿ ಸಚಿವಾಲಯದ ಹಿರಿಯ ಅಧಿಕಾರಿ ಅಂಕಿತಾ ಆನ್‍ಲೈನ್ ಮೂಲಕ ಸಭೆಯಲ್ಲಿ ಭಾಗವಹಿಸಿ, ಕೇಂದ್ರ ಸರಕಾರದಿಂದ ಜಲ ಜೀವನ ಮಿಷನ್ ಅಡಿ ಆಗಿರುವ ಕ್ರಮಗಳ ಕುರಿತು ಮುಖ್ಯ ಕಾರ್ಯದರ್ಶಿ ಅವರಿಗೆ ಮಾಹಿತಿಯನ್ನು ನೀಡಿದರು. ರಾಜ್ಯದಲ್ಲಿ ಜಲ ಜೀವನ್ ಮಿಷನ್ ಯೋಜನೆಯನ್ನು ಉತ್ತಮವಾಗಿ ಅನುಷ್ಟಾನ ಗೊಳಿಸುತ್ತಿರುವುದರಿಂದ ಕೇಂದ್ರದಿಂದ ಬರಬೇಕಾದ ಅನುದಾನವನ್ನು ಸಮಯಕ್ಕೆ ಸರಿಯಾಗಿ ಬಿಡುಗಡೆ ಮಾಡಿಸಬೇಕೆಂದು ಶಾಲಿನಿ ರಜನೀಶ್, ಕೇಂದ್ರ ಸರಕಾರದ ಅಧಿಕಾರಿಗೆ ಮನವಿ ಮಾಡಿದರು. ನೀರು ಸರಬರಾಜು ವ್ಯವಸ್ಥೆಗಳನ್ನು ಮೌಲ್ಯಮಾಪನ ಮಾಡುವ ಸಲುವಾಗಿ ಪರಿಚಯಿಸಿಲಾಗಿರುವ ಜಲ ಸೇವಾ ಅಂಕಲನ್ ಅನ್ನು ರಾಜ್ಯದಲ್ಲಿ ಒಟ್ಟು 870 ಗ್ರಾ.ಪಂ.ತಿಗಳಲ್ಲಿ ಅಳವಡಿಸಲಾಗಿದ್ದು, ಅವುಗಳಲ್ಲಿ 855 ಗ್ರಾ. ಪಂ.ಗಳಲ್ಲಿ ಮೌಲ್ಯಮಾಪನವನ್ನು ಪೂರ್ಣಗೊಳಿಸಲಾಗಿದ್ದು, ಉಳಿದ 15 ಗ್ರಾ.ಪಂ.ಗಳಲ್ಲಿ ಪ್ರಗತಿಯಲ್ಲಿದೆ ಎಂದು ಮುಖ್ಯ ಕಾರ್ಯದರ್ಶಿ ತಿಳಿಸಿದರು. ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಹಾಗೂ ಅಭಿವೃದ್ಧಿ ಆಯುಕ್ತೆ ಉಮಾ ಮಹಾದೇವನ್, ಆರ್ಥಿಕ ಇಲಾಖೆಯ ಜಂಟಿ ಕಾರ್ಯದರ್ಶಿ ಸಮೀರ್ ಶುಕ್ಲಾ ಸೇರಿದಂತೆ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು ಈ ವೇಳೆ ಉಪಸ್ಥಿತರಿದ್ದರು.

ವಾರ್ತಾ ಭಾರತಿ 20 Feb 2026 11:20 pm

ಜಿಬಿಎ ಸದಸ್ಯರ ಸಂಖ್ಯೆ ಹೆಚ್ಚಿಸಿ ಪರಿಷ್ಕೃತ ಆದೇಶ ಹೊರಡಿಸಿದ ಸರಕಾರ

ಬೆಂಗಳೂರು : ರಾಜ್ಯ ಸರಕಾರವು ಹಿಂದೆ ಹೊರಡಿಸಿದ್ದ ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ರಚನೆ ಆದೇಶವನ್ನು ಪರಿಷ್ಕರಣೆ ಮಾಡಿದ್ದು, ಸದಸ್ಯರ ಸಂಖ್ಯೆಯನ್ನು ಹೆಚ್ಚಳ ಮಾಡಿ ಹೊಸ ಆದೇಶವನ್ನು ಹೊರಡಿಸಿದೆ. 2025ರ ಆ.26ರಂದು ಹೊರಡಿಸಿದ್ದ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ರಚನೆಯ ಆದೇಶದಲ್ಲಿ ವಿಧಾನ ಸಭೆಯ ಸದಸ್ಯರು, ವಿಧಾನ ಪರಿಷತ್ತಿನ ಸದಸ್ಯರು, ಅಧಿಕಾರಿಗಳು ಸೇರಿ 73 ಪದನಿಮಿತ್ತ ಸದಸ್ಯರಿದ್ದರು. ಈಗ ಪರಿಷ್ಕೃತ ಆದೇಶದಲ್ಲಿ 84 ಮಂದಿ ಪದನಿಮಿತ್ತ ಸದಸ್ಯರಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಅಧ್ಯಕ್ಷರಾಗಿದ್ದು, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಉಪಾಧ್ಯಕ್ಷರಾಗಿದ್ದಾರೆ.  

ವಾರ್ತಾ ಭಾರತಿ 20 Feb 2026 11:11 pm

ರೈತರ ಕೃಷಿ ಚಟುವಟಿಕೆಗಳಿಗಾಗಿ ಪ್ರತಿದಿನ 7 ಗಂಟೆ ವಿದ್ಯುತ್ ಪೂರೈಸಿ : ಸಂತೋಷ್ ಲಾಡ್

ಧಾರವಾಡ : ಬೇಸಿಗೆ ಆರಂಭವಾಗುತ್ತಿರುವುದರಿಂದ ಜಿಲ್ಲೆಯಲ್ಲಿ ಕೃಷಿ ಚಟುವಟಿಕೆಗಳಿಗೆ ತೊಂದರೆ ಆಗದಂತೆ ಹೆಸ್ಕಾಂ ಸಂಸ್ಥೆಯವರು ಕ್ರಮ ವಹಿಸಬೇಕು. ಸರಕಾರದ ನಿಯಮದಂತೆ ಕೃಷಿ ಪಂಪ್‍ಸೆಟ್‍ಗಳಿಗೆ ಪ್ರತಿದಿನ 7 ಗಂಟೆಗಳ ಕಾಲ ನಿರಂತರವಾಗಿ ವಿದ್ಯುತ್ ಪೂರೈಸಬೇಕು. ರೈತರಿಗೆ ಅನುಕೂಲವಾಗುವಂತೆ, ಆದಷ್ಟೂ ಹಗಲು ಅಥವಾ ಸಂಜೆ ಹೊತ್ತಿನಲ್ಲಿ ವಿದ್ಯುತ್ ಪೂರೈಸಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್‌ ಲಾಡ್ ಹೇಳಿದರು. ಶುಕ್ರವಾರ ನಗರದಲ್ಲಿರುವ ಜಿಲ್ಲಾಧಿಕಾರಿ ಕಚೇರಿಯ ನೂತನ ಸಭಾಂಗಣದಲ್ಲಿ ಹೆಸ್ಕಾಂ ಸಂಸ್ಥೆಯ ವಿವಿಧ ಕಾಮಗಾರಿಗಳ ಪ್ರಗತಿ ಹಾಗೂ ಬೇಸಿಗೆ ಅವಧಿಯ ವಿದ್ಯುತ್ ಪೂರೈಕೆ ಸಿದ್ದತೆ ಕುರಿತು ಹೆಸ್ಕಾಂ ಅಧಿಕಾರಿಗಳೊಂದಿಗೆ ನಡೆಸಿದ ಸಭೆಯಲ್ಲಿ ಅವರು ಮಾತನಾಡಿದರು. ಜಿಲ್ಲೆಯಲ್ಲಿ 67 ಕೃಷಿ ವಿದ್ಯುತ್ ಫೀಡರ್‍ಗಳಿವೆ. ಇದರಲ್ಲಿ 41 ಫೀಡರ್‍ಗಳಿಂದ ಬೆಳಗ್ಗೆ 7 ರಿಂದ ಸಂಜೆ 4 ಗಂಟೆಯೊಳಗೆ, 12 ಫೀಡರ್‍ಗಳಿಗೆ ಸಂಜೆ 6 ರಿಂದ ರಾತ್ರಿ 9 ಗಂಟೆ ಹಾಗೂ ರಾತ್ರಿ 10 ರಿಂದ ಮಧ್ಯರಾತ್ರಿ 1 ಗಂಟೆಯೊಳಗೆ ಮತ್ತು 8 ಫೀಡರ್‍ಗಳಿಂದ ಬೆಳಗ್ಗೆ 6 ರಿಂದ 10 ಗಂಟೆವರೆಗೆ ಮತ್ತು ಬೆಳಗ್ಗೆ 10 ರಿಂದ ಮಧ್ಯಾಹ್ನ 1 ಗಂಟೆಯವರೆಗೆ, ಹೀಗೆ ನಿಗದಿತ ಫೀಡರ್‍ಗಳಿಂದ ವಿವಿಧ ಅವಧಿಯಲ್ಲಿ ಒಟ್ಟು 7 ತಾಸು ಕೃಷಿ ಚಟುವಟಿಕೆಗಳಿಗಾಗಿ ವಿದ್ಯುತ್ ಪೂರೈಸಲಾಗುತ್ತಿದೆ ಎಂದು ಹೆಸ್ಕಾಂ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ ಎಂದು ಅವರು ಹೇಳಿದರು. ಹಿಂಗಾರು ಗೋಧಿ, ಭತ್ತ, ಕಬ್ಬು ಬೆಳೆಗಳಿಗೆ ಹೆಚ್ಚು ನೀರಿನ ಅಗತ್ಯವಿದ್ದು, ರೈತರು ನೀರಾವರಿಗಾಗಿ ಕೊಳವೆ ಬಾವಿಗಳನ್ನು ಹೆಚ್ಚಾಗಿ ಅವಲಂಬಿಸಿದ್ದಾರೆ. ಕಲಘಟಗಿ, ಅಳ್ನಾವರ ಮತ್ತು ಜಿಲ್ಲೆಯ ಇತರ ಭಾಗಗಳಲ್ಲಿ ಸರಿಯಾಗಿ ವಿದ್ಯುತ್ ಪೂರೈಕೆಯಾಗುತ್ತಿಲ್ಲ, ತಡ ರಾತ್ರಿ ವಿದ್ಯುತ್ ನೀಡುವುದರಿಂದ ನೀರು ಹಾಯಿಸಲು ತೊಂದರೆಯಾಗುತ್ತಿದೆ ಎಂದು ರೈತರು ಕರೆ ಮಾಡಿ, ಸಮಸ್ಯೆ ಹೇಳುತ್ತಿದ್ದಾರೆ ಎಂದು ಸಂತೋಷ್ ಲಾಡ್ ತಿಳಿಸಿದರು. ಹೆಸ್ಕಾಂ ಅಧಿಕಾರಿಗಳು ವಿದ್ಯುತ್ ಪೂರೈಕೆಯನ್ನು ಪಾಳಿ ಆಧಾರದಲ್ಲಿ ಮಾಡಿದರೂ ಪರವಾಗಿಲ್ಲ, ಆದರೆ ತೀರಾ ಮಧ್ಯರಾತ್ರಿ ವಿದ್ಯುತ್ ಪೂರೈಸಿದರೆ, ರಾತ್ರಿ ಹೊತ್ತಲ್ಲಿ ರೈತರಿಗೆ ತೊಂದರೆ ಆಗುತ್ತದೆ. ಇದನ್ನು ಪರಿಶೀಲಿಸಿ ಕ್ರಮವಹಿಸಬೇಕು ಎಂದು ಅವರು ತಿಳಿಸಿದರು. ಅತೀ ಹೆಚ್ಚು ಸಮಸ್ಯೆ ಉಂಟಾಗುತ್ತಿರುವ ತಬಕದಹೊನ್ನಳ್ಳಿ ವಿದ್ಯುತ್ ವಿತರಣಾ ಕೇಂದ್ರವನ್ನು ಉನ್ನತಿಕರಿಸುವ ಕಾರ್ಯ ಪ್ರಗತಿಯಲ್ಲಿದೆ. ಜಿಲ್ಲಾಧಿಕಾರಿಗಳು, ಹೆಸ್ಕಾಂ ಅಧಿಕಾರಿ, ಇಂಜನೀಯರ್‍ಗಳೊಂದಿಗೆ ತಬಕದಹೊನ್ನಳ್ಳಿ ವಿದ್ಯುತ್ ವಿತರಣಾ ಕೇಂದ್ರಕ್ಕೆ ಭೇಟಿ ನೀಡಿ, ಕಾಮಗಾರಿ ಪ್ರಗತಿ ಪರಿಶೀಲಿಸಲು ಸಚಿವರು ಸೂಚಿಸಿದರು. ನಿಗದಿ ಮತ್ತು ಅರಳಿಕಟ್ಟಿ ಕ್ರಾಸ್, ಬಮ್ಮಿಗಟ್ಟಿ ಸೇರಿ ಮೂರು ಗ್ರಾಮಗಳಿಗೆ ಹೊಸದಾಗಿ ವಿದ್ಯುತ್ ವಿತರಣಾ ಕೇಂದ್ರ ಸ್ಥಾಪಿಸಲು ಸರಕಾರದಿಂದ ಈಗಾಗಲೇ ಕ್ರಮಕೈಗೊಳ್ಳಲಾಗಿದೆ. ಟೆಂಡರ್, ಗುತ್ತಿಗೆದಾರ ಸಮಸ್ಯೆಗಳಿಂದ ವಿಳಂಬವಾಗುತ್ತಿದೆ ಎಂದು ಹೇಳಿದ ಸಂತೋಷ್ ಲಾಡ್, ಕೆಪಿಟಿಸಿಎಲ್ ನೂತನ ವ್ಯವಸ್ಥಾಪಕ ನಿರ್ದೇಶಕ ರಾಮ್ ಪ್ರಸಾತ್ ಮನೋಹರ್ ಅವರಿಗೆ ದೂರವಾಣಿ ಕರೆ ಮಾಡಿ, ತಕ್ಷಣ ಸಮಸ್ಯೆ ಬಗೆಹರಿಸಲು ಸೂಚಿಸಿದರು. ಜಿಲ್ಲಾಧಿಕಾರಿ ಸ್ನೇಹಲ್ ಆರ್. ಮಾತನಾಡಿ, ಬೇಡಿಕೆಗಿಂತ ಹೆಚ್ಚು ವಿದ್ಯುತ್ ಲಭ್ಯವಿದೆ. ಹೆಸ್ಕಾಂ ಅಧಿಕಾರಿಗಳು ವಿದ್ಯುತ್ ವಿತರಣೆ ಬಗ್ಗೆ ಸರಿಯಾದ ಕ್ರಮ ವಹಿಸಬೇಕು. ಕಾಮಗಾರಿಗಳನ್ನು ತೀವ್ರಗೊಳಿಸಿ, ಬೇಗ ಮುಗಿಸಬೇಕು. ರೈತರು ಟಿಸಿ ಬಯಸಿದಲ್ಲಿ ಬೇಗನೆ ಪೂರೈಸಬೇಕು. ಅಗತ್ಯಗಳಿಗೆ ಅನುಗುಣವಾಗಿ ಟಿಸಿಗಳ ಹೆಚ್ಚು ದಾಸ್ತಾನು ಹೊಂದಬೇಕು ಎಂದು ತಿಳಿಸಿದರು. ಹೆಸ್ಕಾಂ ಅಧ್ಯಕ್ಷ ಸೈಯದ್ ಅಝೀಮ್ ಪೀರ್ ಎಸ್.ಖಾದ್ರಿ, ಮಹಾನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭುವನೇಶ್ ಪಾಟೀಲ್, ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ. ಅವರು ವೇದಿಕೆಯಲ್ಲಿ ಇದ್ದರು.

ವಾರ್ತಾ ಭಾರತಿ 20 Feb 2026 11:02 pm

ಕೊಟ್ಟೂರು | ಕವಿ ಸರ್ವಜ್ಞ ಜಯಂತಿ ಆಚರಣೆ

ಕೊಟ್ಟೂರು: ನಗರದ ತಾಲೂಕು ಕಚೇರಿಯ ಮಹಾತ್ಮ ಗಾಂಧೀಜಿ ಸಭಾಂಗಣದಲ್ಲಿ ಕವಿ ಸರ್ವಜ್ಞ ಜಯಂತಿಯನ್ನು ಆಯೋಜಿಸಲಾಯಿತು. ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಅಮರೇಶ್ ಜಿ.ಕೆ., ತಾಲೂಕು ಕುಂಬಾರ ಸಮಾಜದ ಅಧ್ಯಕ್ಷ ಕೊಟ್ರೇಶಪ್ಪ, ಹೆಚ್ ಜಿ, ಮುಖಂಡರಾದ ವಿರೇಶ ಸಿ., ನಾಗರಾಜ ಕೆ., ಕೊಟ್ರೇಶ್ ಸಿ, ಮೂಗಣ್ಣ ಸಿ., ಶಾಂತಲಿಂಗಪ್ಪ ಸಿ., ಕಂದಾಯ ನಿರೀಕ್ಷಕ ಡಿ ಶಿವಕುಮಾರ್, ಗ್ರಾ.ಆ.ಅ ಶರಣಪ್ಪ, ರಮೇಶ, ಸಿದ್ದೇಶ, ಹರೀಶ್, ಭೂಮಾಪನ ಸೂಪರ್ವೈಜರ್ ಬಸವರಾಜ, ಭೂಮಾಪಕ ಭರಮಣ್ಣ, ಗುರುಬಸವರಾಜ ಹಾಗೂ ಇತರರು ಉಪಸ್ಥಿತರಿದ್ದರು.

ವಾರ್ತಾ ಭಾರತಿ 20 Feb 2026 10:58 pm

ನಟರಾಜ್ ಗೌಡ ಅವರಿಗೆ ಸಚಿವ ಸ್ಥಾನಮಾನ ನೀಡಿದ ರಾಜ್ಯ ಸರಕಾರ

ಬೆಂಗಳೂರು : ರಾಜ್ಯ ಸರಕಾರವು ಕರ್ನಾಟಕ ಕಾಂಪೋಸ್ಟ್ ಅಭಿವೃದ್ಧಿ ನಿಗಮದ ಅಧ್ಯಕ್ಷ ಎ.ಎನ್. ನಟರಾಜ್ ಗೌಡ ಅವರಿಗೆ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದ ವರೆಗೆ ರಾಜ್ಯ ಸಚಿವ ದರ್ಜೆ ಸ್ಥಾನಮಾನವನ್ನು ನೀಡಿ ಆದೇಶಿಸಿದೆ. ಇದಕ್ಕೆ ಸಂಬಂಧಿಸಿದಂತೆ ಅಧಿನಿಯಮ/ನಿಯಮಗಳು ತಕ್ಷಣದಿಂದ ಅಧ್ಯಕ್ಷರಿಗೆ ಕಾರ್ಯನಿರ್ವಹಿಸುವಂತೆ ಆದೇಶ ಹೊರಡಿಸಿ, ರಾಜ್ಯ ಸಚಿವರ ಸ್ಥಾನಮಾನಕ್ಕೆ ಅನ್ವಯಿಸುವ ಸೌಲಭ್ಯಗಳನ್ನು ಒದಗಿಸಬೇಕು ಎಂದು ಎಂದು ಆಡಳಿತ ಇಲಾಖೆಗೆ ಸೂಚಿಸಿದೆ.

ವಾರ್ತಾ ಭಾರತಿ 20 Feb 2026 10:57 pm

ಕೊಟ್ಟೂರು | ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮ

ಒಳ್ಳೆಯ ಸಂಸ್ಕಾರ, ಶಿಕ್ಷಣದೊಂದಿಗೆ ಆದರ್ಶ ವಿದ್ಯಾರ್ಥಿಗಳಾಗಬೇಕು: ಶಾಸಕ ಡಾ.ಶ್ರೀನಿವಾಸ್

ವಾರ್ತಾ ಭಾರತಿ 20 Feb 2026 10:44 pm

ಮರಳು ದಂಧೆ ಬಗ್ಗೆ ಸಚಿವ ಪರಮೇಶ್ವರ್ ಅಸಹಾಯಕತೆ: ಉತ್ತರಿಸಲು ಸರಕಾರಕ್ಕೆ 4 ವಾರದ ಗಡುವು ನೀಡಿದ ಹೈಕೋರ್ಟ್

Sand Mafia In Karnataka- ರಾಜ್ಯದಲ್ಲಿ ಅಕ್ರಮ ಮರಳುಗಾರಿಕೆ ತಡೆಯಲು ಸಾಧ್ಯವಾಗುತ್ತಿಲ್ಲ ಎಂದು ಗೃಹ ಸಚಿವ ಡಾ ಜಿ ಪರಮೇಶ್ವರ ಅವರು ನೀಡಿರುವ ಹೇಳಿಕೆಯನ್ನು ಕರ್ನಾಟಕ ಹೈಕೋರ್ಟ್ ಬಹಳ ಗಂಭೀರವಾಗಿ ಪರಿಗಣಿಸಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಮರಳು ಮರಳು ಗಣಿಗಾರಿಕೆ ತಡೆಗೆ ಯಾವ ರೀತಿಯ ಕ್ರಮ ಕೈಗೊಂಡಿದೆ ಎಂಬ ಬಗ್ಗೆ ಉತ್ತರಿಸಲು 4 ವಾರಗಳ ಗಡುವನ್ನು ನೀಡಿದೆ. ಸಚಿವ ಪರಮೇಶ್ವರ ಅವರ ಹೇಳಿಕೆಯ ಬಗ್ಗೆ ಮಾಧ್ಯಮ ವರದಿಗಳನ್ನು ಆಧರಿಸಿ ನ್ಯಾಯಾಲಯವೇ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಿ ವಿಚಾರಣೆಗೆ ಮುಂದಾಗಿದೆ.

ವಿಜಯ ಕರ್ನಾಟಕ 20 Feb 2026 10:37 pm

Ballari | ಸ್ವಾಗತ ಫಲಕ ಕಳಚಿ ಬಿದ್ದು ಕಾರ್ಮಿಕ ಮೃತ್ಯು, ಇಬ್ಬರಿಗೆ ಗಾಯ

ಬಳ್ಳಾರಿ / ಕಂಪ್ಲಿ : ಕೋಟೆಯ ತುಂಗಭದ್ರಾ ನದಿ ಸೇತುವೆ ದ್ವಾರದಲ್ಲಿ ಕಬ್ಬಿಣದ ಸ್ವಾಗತ ಫಲಕವನ್ನು ಕ್ರೇನ್‌ನಿಂದ ಅಳವಡಿಸುವ ವೇಳೆ ಫಲಕ ಕಳಚಿ ಬಿದ್ದು ಒರ್ವ ಕಾರ್ಮಿಕ ಮೃತಪಟ್ಟಿದ್ದು, ಇಬ್ಬರು ಗಾಯಗೊಂಡ ಘಟನೆ ಗುರುವಾರ ಸಂಭವಿಸಿದೆ. ಪಟ್ಟಣದ 4ನೇ ವಾರ್ಡ್ ನಿವಾಸಿ, ವೆಲ್ಡಿಂಗ್ ಲೇಬರ್ ಶೆಕ್ಷಾ (35) ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಗಾಯಗೊಂಡ ಅವರನ್ನು ತಕ್ಷಣ ಕಂಪ್ಲಿಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿತ್ತು. ನಂತರ ಹೆಚ್ಚಿನ ಚಿಕಿತ್ಸೆಗೆ ಗಂಗಾವತಿಗೆ ಕರೆದೊಯ್ಯುವಾಗ ಮಾರ್ಗ ಮಧ್ಯೆ ಅವರು ಮೃತಪಟ್ಟಿದ್ದಾರೆ. ಇನಾಯತ್ (32) ಅವರಿಗೆ ಗಂಭೀರ ಗಾಯಗಳಾಗಿದ್ದು, ಕರೀಮ್ (21) ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ತಿಳಿದುಬಂದಿದೆ. ಘಟನಾ ಸ್ಥಳಕ್ಕೆ ಪಿಐ ಕೆ.ಬಿ. ವಾಸುಕುಮಾರ್ ಹಾಗೂ ಪಿಎಸ್‌ಐ ಅವಿನಾಶ್ ಕಾಂಬ್ಳೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿದ್ದು, ಮುಂದಿನ ಕ್ರಮ ಕೈಗೊಳ್ಳಲಾಗಿದೆ.

ವಾರ್ತಾ ಭಾರತಿ 20 Feb 2026 10:37 pm

ಬಮೂಲ್‌ನಿಂದ ಜಿಪಿಎಸ್‌ ಸೌಲಭ್ಯಯುಳ್ಳ ಇ-ಹಾಲು ಡೆಲಿವರಿ ವಾಹನ ಪರಿಚಯ

ಬೆಂಗಳೂರು: ಹಾಲು ಮತ್ತು ಹಾಲಿನ ಉತ್ಪನ್ನಗಳ ಗುಣಮಟ್ಟ ಕಾಪಾಡುವ ಜೊತೆಗೆ ವಿತರಣಾ ವ್ಯವಸ್ಥೆಯನ್ನು ಆಧುನೀಕರಿಸಲು ಬೆಂಗಳೂರು ಸಹಕಾರ ಹಾಲು ಒಕ್ಕೂಟವು (ಬಮೂಲ್‌) ಮಹತ್ವದ ಕ್ರಮ ಕೈಗೊಂಡಿದೆ. ಬಮೂಲ್‌ ಕೇಂದ್ರ ಕಚೇರಿಯಲ್ಲಿ ಇ-ಹಾಲು ಡೆಲಿವರಿ ವಾಹನಗಳ (EV) ಮಾದರಿಯನ್ನು ಪರೀಕ್ಷಾರ್ಥವಾಗಿ ಪರಿಶೀಲಿಸಲಾಗಿದ್ದು, ಶೀಘ್ರದಲ್ಲೇ ಹಂತ ಹಂತವಾಗಿ ಜಾರಿಗೆ ತರಲು ಚಿಂತನೆ ನಡೆಸಲಾಗಿದೆ. ಅಧಿಕೃತ ಮಾರಾಟಗಾರರಿಗೆ ಹಾಲು ಮತ್ತು ಹಾಲಿನ

ಒನ್ ಇ೦ಡಿಯ 20 Feb 2026 10:36 pm

ಬೆಂಗಳೂರಿನ ಸಂಚಾರ ನಿರ್ವಹಣಾ ಕೇಂದ್ರಕ್ಕೆ ನೆದರ್‌ಲ್ಯಾಂಡ್‌ನ ಪ್ರಧಾನಿ ಮೆಚ್ಚುಗೆ

ಬೆಂಗಳೂರು : ಸಿಲಿಕಾನ್ ಸಿಟಿ ಬೆಂಗಳೂರಿನ ಸಂಚಾರ ನಿರ್ವಹಣೆಗಾಗಿ ತಂತ್ರಜ್ಞಾನವನ್ನು ಯಶಸ್ವಿಯಾಗಿ ಸಂಯೋಜಿಸಿರುವ ಬೆಂಗಳೂರು ಸಂಚಾರ ನಿರ್ವಹಣಾ ಕೇಂದ್ರಕ್ಕೆ ನೆದರ್‌ಲ್ಯಾಂಡ್‌ ನ ಪ್ರಧಾನಿ ಡಿಕ್ ಸ್ಕೂಫ್ ಭೇಟಿ ನೀಡಿ ಮೆಚ್ಚುಗೆ ವ್ಯಕ್ತಪಡಿಸಿದರು. ಶುಕ್ರವಾರ ಇಲ್ಲಿನ ಟಿಎಂಸಿ ಕೇಂದ್ರಕ್ಕೆ ಭೇಟಿ ನೀಡಿದ ಅವರು, ಬೆಂಗಳೂರು ನಗರದ ಸಂಚಾರ ವ್ಯವಸ್ಥೆಯನ್ನು ವಿಶ್ಲೇಷಿಸಲು ಮತ್ತು ನಿರ್ವಹಿಸಲು ತಂತ್ರಜ್ಞಾನ ಆಧಾರಿತ ವಿಧಾನವಾದ ಅಸ್ತ್ರಂನ ಬಳಕೆ ಹಾಗೂ ಅದರ ಪ್ರಗತಿಯ ಕುರಿತು ಮಾಹಿತಿ ಪಡೆದರು. ಸುರಕ್ಷಿತ ಸಂಚಾರಕ್ಕಾಗಿ ಪೊಲೀಸರು ಬಳಸುತ್ತಿರುವ ಎಐ ಕ್ಯಾಮೆರಾಗಳು, ರಿಯಲ್-ಟೈಮ್ ಟ್ರಾಫಿಕ್ ಮಾನಿಟರಿಂಗ್ ಮತ್ತು ಅಡ್ವಾನ್ಸ್ಡ್ ಸಿಗ್ನಲ್ ಸಿಸ್ಟಮ್‍ಗಳ ಬಗ್ಗೆ ಅವರಿಗೆ ಮಾಹಿತಿ ನೀಡಲಾಯಿತು. ತಂತ್ರಜ್ಞಾನದ ಮೂಲಕ ಸಂಚಾರ ವ್ಯವಸ್ಥೆಯನ್ನು ಹೇಗೆ ಸುಧಾರಿಸಲಾಗುತ್ತಿದೆ ಎಂಬುದನ್ನು ಅವರು ವೀಕ್ಷಿಸಿದರು. ಇದೇ ವೇಳೆ ಸಂಚಾರ ಪೊಲೀಸ್ ಅಧಿಕಾರಿಗಳು, ಅಸ್ತ್ರಂ ವ್ಯವಸ್ಥೆಯು ಪರಿಣಾಮಕಾರಿಯಾಗಿ ಬಳಕೆಯಾಗುತ್ತಿದ್ದು, ಇತರ ನಗರಗಳ ಪೊಲೀಸ್ ಇಲಾಖೆಗಳೂ ಸಹ ಇದನ್ನ ಅಳವಡಿಸಿಕೊಳ್ಳಲು ಬಯಸುತ್ತಿವೆ. ಇತ್ತೀಚೆಗೆ ಹೈದರಾಬಾದ್ ಸಹ ಈ ತಂತ್ರಜ್ಞಾನವನ್ನು ಬಯಸಿದ್ದು, ಅಸ್ತ್ರಂನ ಒಂದು ಸಣ್ಣ ಭಾಗವನ್ನು ತನ್ನ ಪೊಲೀಸ್ ವ್ಯವಸ್ಥೆಯಲ್ಲಿ ಅಳವಡಿಸಿಕೊಂಡಿದೆ. ತಾಂತ್ರಿಕ ಏಕೀಕರಣದ ಬಗ್ಗೆ ತಿಳಿದುಕೊಳ್ಳಲು ಹೊಸದಿಲ್ಲಿ ಪೊಲೀಸರು ಸಹ TMC ಬೇಟಿ ನೀಡಿದ್ದರು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ರಾಜ್ಯ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಡಾ.ಎಂ.ಎ.ಸಲೀಂ, ಬೆಂಗಳೂರು ನಗರ ಪೆÇಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್, ಜಂಟಿ ಪೆÇಲೀಸ್ ಆಯುಕ್ತ (ಸಂಚಾರ) ಕಾರ್ತಿಕ್ ರೆಡ್ಡಿ ಸೇರಿದಂತೆ ಪ್ರಮುಖರಿದ್ದರು.

ವಾರ್ತಾ ಭಾರತಿ 20 Feb 2026 10:32 pm

ವಿಧಾನಸೌಧದಲ್ಲಿ ಮಾಧ್ಯಮಗಳಿಗೆ ನಿರ್ಬಂಧ: ಗಾಂಧಿ ಪ್ರತಿಮೆ ಮುಂದೆ ಪತ್ರಕರ್ತರ ಮೌನ ಪ್ರತಿಭಟನೆ

ಬೆಂಗಳೂರು : ವಿಧಾನಸೌಧದಲ್ಲಿ ಮೀಸಲಿಟ್ಟ ಜಾಗದಲ್ಲಿ ಮಾತ್ರ ಮಾಧ್ಯಮ ಪ್ರತಿನಿಧಿಗಳು ಹೇಳಿಕೆಗಳನ್ನು ಪಡೆಯಬೇಕು ಎಂದು ಸೂಚಿಸಿರುವ ‘ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ’ (ಡಿಪಿಎಆರ್) ಆದೇಶವನ್ನು ವಿರೋಧಿಸಿ ಮಾಧ್ಯಮ ಪ್ರತಿನಿಧಿಗಳು ವಿಧಾನಸೌಧ-ವಿಕಾಸಸೌಧದಲ್ಲಿ ಮಧ್ಯೆದಲ್ಲಿರುವ ಗಾಂಧಿ ಪ್ರತಿಮೆ ಎದುರು ಮೌನ ಪ್ರತಿಭಟನೆ ನಡೆಸಿದರು. ಶುಕ್ರವಾರ ಬೆಳಗ್ಗೆ ಇಲ್ಲಿನ ಗಾಂಧಿ ಪ್ರತಿಮೆ ಬಳಿ ಜಮಾಯಿಸಿದ ಪತ್ರಕರ್ತರು, ಕಪ್ಪು ಬಟ್ಟೆ ಹಾಗೂ ಮುಖಕ್ಕೆ ಕಪ್ಪು ಮಾಸ್ಕ್ ಧರಿಸಿ, ಸಿಬ್ಬಂದಿ ಹಾಗೂ ಆಡಳಿತ ಸುಧಾರಣೆ ಇಲಾಖೆಯ ಹೊಸ ನಿರ್ಬಂಧಕ್ಕೆ ವಿರೋಧ ವ್ಯಕ್ತಪಡಿಸಿದರು. ಶಾಂತಿಯುತ ಪ್ರತಿರೋಧದ ಮೂಲಕ ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಕಾಪಾಡಲು, ಮಾಧ್ಯಮ ಸ್ವಾತಂತ್ರ್ಯವನ್ನು ರಕ್ಷಿಸಲು ಮತ್ತು ಪಾರದರ್ಶಕ ಹಾಗೂ ಸ್ವತಂತ್ರ ಪತ್ರಿಕೋದ್ಯಮಕ್ಕೆ ಅಡ್ಡಿಯಾಗುವ ನಿರ್ಬಂಧಗಳನ್ನು ಮರುಪರಿಶೀಲಿಸುವಂತೆ ರಾಜ್ಯ ಸರಕಾರಕ್ಕೆ ಮನವಿ ಮಾಡಲಾಯಿತು. ಪ್ರತಿಭಟನೆ ವಿಚಾರ ತಿಳಿದು ಕೂಡಲೇ ಪ್ರತಿಭಟನಾ ಸ್ಥಳಕ್ಕೆ ಧಾವಿಸಿದ ಸಿಎಂ ಸಿದ್ದರಾಮಯ್ಯರ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ಮನವಿ ಪತ್ರ ಸ್ವೀಕರಿಸಿ, ಈ ಸಮಸ್ಯೆ ಬಗೆಹರಿಸಲಾಗುವುದು ಎಂದು ವಿಶ್ವಾಸ ವ್ಯಕ್ತಪಡಿಸಿದರು. ಪತ್ರದಲ್ಲಿ ಏನಿದೆ?: ವಿಧಾನಸೌಧ ಭದ್ರತಾ ವಿಭಾಗದ ಡಿಸಿಪಿ ಬರೆದಿರುವ ಪತ್ರದಲ್ಲಿನ ಕೋರಿಕೆಯ ಮೇರೆಗೆ ವಾರ್ತಾ ಮತ್ತು ಪ್ರಚಾರ ಇಲಾಖೆಯು ಶಿಫಾರಸು ಮಾಡುವ ಮಾಧ್ಯಮ ಪ್ರತಿನಿಧಿಗಳಿಗೆ ಮಾತ್ರ ಡಿಪಿಎಆರ್(ಕಾರ್ಯಕಾರಿ) ಗುರುತಿನ ಚೀಟಿ ವಿತರಿಸುತ್ತಿದೆ. ಈ ಗುರುತಿನ ಚೀಟಿ ಹೊಂದಿರುವ ಎಲ್ಲ ಪತ್ರಿಕಾ ಮಾಧ್ಯಮ ಪ್ರತಿನಿಧಿಗಳು, ಭದ್ರತಾ ಹಿತದೃಷ್ಟಿಯಿಂದ ವಿಧಾನಸೌಧದ ಪಶ್ಚಿಮ ದ್ವಾರದ ಪೋರ್ಟಿಕೊ ಬಳಿ ನಿಗದಿಪಡಿಸಿರುವ ಸ್ಥಳದಲ್ಲಿ ಮಾತ್ರ ಹೇಳಿಕೆಗಳನ್ನು(ಬೈಟ್) ಪಡೆದುಕೊಳ್ಳಬೇಕು. ವಿಧಾನಸೌಧದ ಒಳಗೆ ಪ್ರವೇಶಿಸುವ ಸಂದರ್ಭದಲ್ಲಿ ಹೇಳಿಕೆಯನ್ನು ತೆಗೆದುಕೊಳ್ಳಲು, ಸಂದರ್ಶನ ನಡೆಸಲು ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ, ಸಚಿವರು, ಗಣ್ಯರನ್ನು ಹಿಂಬಾಲಿಸದಂತೆ ಸೂಕ್ತ ಸಲಹೆ ಸೂಚನೆಗಳನ್ನು ನೀಡಬೇಕು ಎಂದು ಪತ್ರದಲ್ಲಿ ಡಿಪಿಎಆರ್ ಕಾರ್ಯದರ್ಶಿ ತಿಳಿಸಿದ್ದಾರೆ.

ವಾರ್ತಾ ಭಾರತಿ 20 Feb 2026 10:26 pm

ಚಿನ್ನಸ್ವಾಮಿ ಕಾಲ್ತುಳಿತ ಪ್ರಕರಣ; ಎಸ್ಒಪಿಯಲ್ಲಿನ ಅಂಶಗಳನ್ನು ಮಸೂದೆಯಲ್ಲಿ ಸೇರಿಸುವ ಕುರಿತು ಸರ್ಕಾರದ ನಿಲುವು ಕೇಳಿದ ಹೈಕೋರ್ಟ್

ಬೆಂಗಳೂರು: ಜನಸಂದಣಿ ನಿಯಂತ್ರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಬಿಡುಗಡೆ ಮಾಡಿರುವ ಪ್ರಮಾಣೀಕೃತ ಕಾರ್ಯವಿಧಾನದ (ಎಸ್‌ಒಪಿ) ಪ್ರಮುಖ ಅಂಶಗಳನ್ನು ಕರ್ನಾಟಕ ಜನಸಂದಣಿ ನಿಯಂತ್ರಣ (ಕಾರ್ಯಕ್ರಮ ಮತ್ತು ಗುಂಪುಗೂಡುವ ಸ್ಥಳಗಳಲ್ಲಿ ಜನಸಂದಣಿಯ ನಿಯಂತ್ರಣ) ಮಸೂದೆಯಲ್ಲಿ ಸೇರ್ಪಡೆ ಮಾಡುವ ಸಲಹೆ ಕುರಿತು ನಿಲುವು ತಿಳಿಸಲು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ನಿರ್ದೇಶಿಸಿದೆ. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಮುಂಭಾಗ ಸಂಭವಿಸಿದ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ದಾಖಲಿಸಿಕೊಂಡಿರುವ ಸ್ವಯಂಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು‌ ಶುಕ್ರವಾರ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಹಾಗೂ ನ್ಯಾಯಮೂರ್ತಿ ಸಿ.ಎಂ. ಪೂಣಚ್ಚ ಅವರಿದ್ದ ವಿಭಾಗೀಯ ನ್ಯಾಯಪೀಠ ಈ ನಿರ್ದೇಶನ ನೀಡಿತು. ಇದಕ್ಕೂ ಮುನ್ನ ಪ್ರಕರಣ ಅಮೈಕಸ್‌ ಕ್ಯೂರಿಯಾದ ಹಿರಿಯ ವಕೀಲೆ ಎಸ್‌. ಸುಶೀಲಾ ಅವರು, 2025ರ ಸೆಪ್ಟೆಂಬರ್ 1ರಂದು ರಾಜ್ಯ ಸರ್ಕಾರ ಎಸ್‌ಒಪಿ ರೂಪಿಸಿದ್ದು, ನಮಗೆ ಸಲಹೆ ನೀಡಲು ಕೋರಲಾಗಿತ್ತು. ಅದರಂತೆ, ನವೆಂಬರ್ 3ರಂದು ನಾವು ನಮ್ಮ ಸಲಹೆ ನೀಡಿದ್ದೇವೆ. ನವೆಂಬರ್ 26ರಂದು ಮತ್ತೆ ಹೆಚ್ಚುವರಿಯಾಗಿ ಕೆಲವು ಸಲಹೆಗಳನ್ನು ನೀಡಲಾಗಿದೆ. ಇದೆಲ್ಲವನ್ನೂ ಅಡಕಗೊಳಿಸಿ 2026 ಜನವರಿ 13ರಂದು ರಾಜ್ಯ ಸರ್ಕಾರ ಪರಿಷ್ಕೃತ ಎಸ್‌ಒಪಿ ರೂಪಿಸಿದೆ. ಈ ಮಧ್ಯೆ, 2025ರ ಆಗಸ್ಟ್ 20ರಂದು ರಾಜ್ಯ ಸರ್ಕಾರ ಜನಸಂದಣಿ ನಿಯಂತ್ರಣಕ್ಕೆ ಮಸೂದೆ ರೂಪಿಸಿದ್ದು, ಅದು ಸದನ ಸಮಿತಿಯ ಪರಿಗಣನೆಯಲ್ಲಿದೆ. ಮಸೂದೆಗೆ ಹೋಲಿಕೆ ಮಾಡಿದರೆ ಎಸ್‌ಒಪಿ ಅತ್ಯಂತ ಪರಿಣಾಮಕಾರಿಯಾಗಿದೆ. ಇಲ್ಲಿನ ಅಂಶಗಳನ್ನು ಅಲ್ಲಿ ಅಡಕಗೊಳಿಸಿದರೆ ಒಳ್ಳೆಯದು ಎಂದರು. ಮುಂದುವರಿದು, ಆರ್‌ಸಿಬಿಯು ಮುಂದಿನ ಐಪಿಎಲ್‌ ಟೂರ್ನಿಯ ಪಂದ್ಯಗಳನ್ನು ಇಲ್ಲಿ ನಡೆಸಲು ಬಯಸಿದೆ ಎನ್ನಲಾಗಿದೆ. ಅದಕ್ಕೂ ಮುನ್ನ ಎಸ್‌ಒಪಿಯನ್ನು ಜಾರಿಗೊಳಿಸಬೇಕು. ಏನಾಗುತ್ತದೆ ಎಂಬುದನ್ನು ಇಡೀ ದೇಶ ಬೆರಗುಗಣ್ಣಿನಿಂದ ನೋಡುತ್ತಿದೆ ಎಂದರು. ಹಿರಿಯ ವಕೀಲ ಸಿ.ಕೆ. ನಂದಕುಮಾರ್ ಅವರು, ಎಸ್‌ಒಪಿ ಮತ್ತು ಕಾಯ್ದೆಯು ವಿಭಿನ್ನ ಉದ್ದೇಶಕ್ಕಾಗಿ ರೂಪಿಸಲಾಗಿದೆ. ಎಲ್ಲರೂ ಸಮಾನ ಉದ್ದೇಶಕ್ಕಾಗಿ ಕೆಲಸ ಮಾಡಬೇಕು ಎಂದರು. ಆಗ ನ್ಯಾಯಪೀಠ, ಎಸ್‌ಒಪಿಯಲ್ಲಿ ಸೂಚಿಸಿರುವ ಕೆಲವು ಕ್ರಮಗಳನ್ನು ಮಸೂದೆಯಲ್ಲಿ ಅಡಕಗೊಳಿಸಬೇಕು. ಒಂದೊಮ್ಮೆ ಮಸೂದೆ ಕಾಯ್ದೆಯಾದರೂ ಎಸ್‌ಒಪಿಯನ್ನು ಯಾವಾಗ ಬೇಕಾದರೂ ಜಾರಿಗೊಳಿಸಬಹುದು. ಹೇಗೆ ಮುನ್ನಡೆಯಲು ಬಯಸುತ್ತೀರಿ ಎಂದು ತಿಳಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿತು. ಸರ್ಕಾರದ ಪರ ಹಾಜರಿದ್ದ ವಕೀಲೆ ನಿಲೋಫರ್ ಅಕ್ಬರ್ ಅವರು, ಅಡ್ವೊಕೇಟ್‌ ಜನರಲ್‌ ಸೋಮವಾರ ವಿಚಾರಣೆಯಲ್ಲಿ ಭಾಗಿಯಾಗಲಿದ್ದು, ಕಾಲವಕಾಶ ನೀಡಬೇಕು ಎಂದು ಕೋರಿದರು. ಇದನ್ನು ಪರಿಗಣಿಸಿದ ನ್ಯಾಯಪೀಠ, ಜನಸಂದಣಿ ನಿಯಂತ್ರಣ ಮಸೂದೆಯಲ್ಲಿ ಎಸ್‌ಒಪಿಯ ಪ್ರಮುಖ ಅಂಶಗಳನ್ನು ಸೇರಿಸುವ ಸಲಹೆ ಕುರಿತು ನಿಲುವು ತಿಳಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿ, ವಿಚಾರಣೆಯನ್ನು ಫೆಬ್ರವರಿ 23ಕ್ಕೆ ಮುಂದೂಡಿತು. ಈ ಮಧ್ಯೆ, ಕಾಲ್ತುಳಿತದಲ್ಲಿ ಮೃತಪಟ್ಟ ಸಂತ್ರಸ್ತರ ಕುಟುಂಬಸ್ಥರಿಗೆ ಪರಿಹಾರ ಹಂಚಿಕೆಯಲ್ಲಿ ತಾರತಮ್ಯ ಮಾಡಲಾಗಿದೆ. ಇದನ್ನು ಸರಿಪಡಿಸುವ ಸಂಬಂಧ ಮಧ್ಯಂತರ ಅರ್ಜಿ ಸಲ್ಲಿಸಲಾಗಿದ್ದು, ಅದನ್ನು ಪರಿಗಣಿಸಬೇಕು ಎಂದು ವಕೀಲ ರಮೇಶ್‌ ನಾಯ್ಕ್‌ ಸಲ್ಲಿಸಿದ್ದ ಮಧ್ಯಂತರ ಅರ್ಜಿ ಪರಿಗಣಿಸಲು ನಿರಕಾರಿಸಿದ ಪೀಠ, ಮಧ್ಯಂತರ ಅರ್ಜಿ ವಜಾಗೊಳಿಸಿತು.

ವಾರ್ತಾ ಭಾರತಿ 20 Feb 2026 10:20 pm

ಅಕ್ರಮ ಮರಳು ಗಣಿಗಾರಿಕೆ; ಸ್ವಯಂ ಪ್ರೇರಿತ ಪಿಐಎಲ್‌ ಕುರಿತು ನಾಲ್ಕು ವಾರದಲ್ಲಿ ಉತ್ತರಿಸಲು ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ

ಬೆಂಗಳೂರು : ರಾಜ್ಯದಲ್ಲಿ ಅಕ್ರಮ ಮರಳು ಗಣಿಗಾರಿಕೆ ನಿಯಂತ್ರಣದ ಬಗ್ಗೆ ಅಸಹಾಯಕತೆ ವ್ಯಕ್ತಪಡಿಸಿ ಗೃಹ ಸಚಿವ ಡಾ. ಜಿ. ಪರಮೇಶ್ವರ್ ನೀಡಿದ್ದ ಹೇಳಿಕೆಗೆ ಸಂಬಂಧಿಸಿದಂತೆ ದಾಖಲಿಸಿಕೊಳ್ಳಲಾಗಿರುವ ಸ್ವಯಂಪ್ರೇರಿತ ಪಿಐಎಲ್ ಸಂಬಂಧ ನಾಲ್ಕು ವಾರಗಳಲ್ಲಿ ಉತ್ತರಿಸುವಂತೆ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶಿಸಿದೆ. ಅಕ್ರಮ ಮರಳುಗಾರಿಗೆ ಒಂದು ದೊಡ್ಡ ದಂಧೆಯಾಗಿದ್ದು, ಬಲಾಢ್ಯರು ಮತ್ತು ಪ್ರಭಾವಿಗಳು ಇದರಲ್ಲಿ ಇದ್ದಾರೆ ಎಂದು ಅಕ್ರಮ ಮರಳು ಗಣಿಗಾರಿಕೆ ತಡೆಯುವ ವಿಚಾರದಲ್ಲಿ ಅಸಹಾಯಕತೆ ವ್ಯಕ್ತಪಡಿಸಿ ಗೃಹ ಸಚಿವ ಡಾ. ಜಿ. ಪರಮೇಶ್ವರ್ ವಿಧಾನಸಭೆ ಅಧಿವೇಶನದಲ್ಲಿ ನೀಡಿದ್ದ ಹೇಳಿಕೆ ಉಲ್ಲೇಖಿಸಿ ಜನವರಿ 28ರಂದು ಮಾಧ್ಯಮಗಳಲ್ಲಿ ವರದಿ ಪ್ರಕಟಗೊಂಡಿದ್ದವು. ಮಾಧ್ಯಮಗಳ ವರದಿ ಆಧರಿಸಿ ಜನವರಿ 29ರಂದು ಸ್ವಯಂಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಿಕೊಳ್ಳಲು ನ್ಯಾಯಮೂರ್ತಿ ಡಿ.ಕೆ. ಸಿಂಗ್ ನೇತೃತ್ವದ ವಿಭಾಗೀಯ ನ್ಯಾಯಪೀಠ ಆದೇಶಿಸಿತ್ತು. ಅಲ್ಲದೇ, ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣಾ ವ್ಯಾಪ್ತಿ ಹೊಂದಿರುವ ಮುಖ್ಯ ನ್ಯಾಯಮೂರ್ತಿಗಳ ಮುಂದೆ ಈ ಅರ್ಜಿ ಮಂಡಿಸುವಂತೆ ಹೈಕೋರ್ಟ್ ರಿಜಿಸ್ಟ್ರಿಗೆ ಸೂಚಿಸಿ, ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿಗೊಳಿಸಿತ್ತು. ಈ ಸ್ವಯಂಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿಯು ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಹಾಗೂ ನ್ಯಾಯಮೂರ್ತಿ ಸಿ.ಎಂ. ಪೂಣಚ್ಚ ಅವರಿದ್ದ ವಿಭಾಗೀಯ ನ್ಯಾಯಪೀಠದ ಮುಂದೆ ಶುಕ್ರವಾರ ವಿಚಾರಣೆಗೆ ನಿಗದಿಯಾಗಿತ್ತು. ರಾಜ್ಯ ಸರ್ಕಾರದ ಪರ ವಕೀಲರು, ಅರ್ಜಿಗೆ ಸಂಬಂಧಿಸಿದಂತೆ ಆಕ್ಷೇಪಣೆ ಮತ್ತು ಪ್ರತಿಕ್ರಿಯೆ ಸಲ್ಲಿಸಲು ಕಾಲಾವಕಾಶ ಕೋರಿದರು. ಇದನ್ನು ಪರಿಗಣಿಸಿದ ನ್ಯಾಯಪೀಠ, ಅರ್ಜಿಗೆ ನಾಲ್ಕು ವಾರಗಳಲ್ಲಿ ಉತ್ತರಿಸುವಂತೆ ಸರ್ಕಾರಕ್ಕೆ ನಿರ್ದೇಶಿಸಿ, ವಿಚಾರಣೆಯನ್ನು ಏಪ್ರಿಲ್ 7ಕ್ಕೆ ಮುಂದೂಡಿತು. ಗೃಹ ಸಚಿವರು ಏನು ಹೇಳಿದ್ದರು? ದೇವದುರ್ಗ ಕ್ಷೇತ್ರದ ಶಾಸಕಿ ಅವರಿಗೆ ಬೆದರಿಕೆ ಹಾಕಿದ ವಿಚಾರಕ್ಕೆ ಸದನದಲ್ಲಿ ಪ್ರತಿಕ್ರಿಯೆ ನೀಡಿದ್ದ ಗೃಹ ಸಚಿವರು, ವಿವಿಧ ಮಾಧ್ಯಮಗಳಲ್ಲಿ ವರದಿಯಾಗಿರುವಂತೆ ಅಕ್ರಮ ಮರಳು ಗಣಿಗಾರಿಕೆ ಒಂದು ದೊಡ್ಡ ದಂಧೆ. ಇದು ಸ್ವಲ್ಪ ಮುಜುಗರದ ಸಂಗತಿಯಾಗಿರುವುದರಿಂದ ನಾನು ಯಾವುದೇ ವಿವರಣೆಯನ್ನು ನೀಡುವುದಿಲ್ಲ ಅಥವಾ ಯಾರ ಹೆಸರನ್ನೂ ಹೇಳುವುದಿಲ್ಲ. ನಾನು ಸೀಮಿತವಾಗಿ ಉತ್ತರವನ್ನು ಮಾತ್ರ ನೀಡಿದ್ದೇನೆ. ಆದರೆ, ಇದು ಅನೇಕ ಪ್ರಭಾವಿ ಜನರನ್ನು ಒಳಗೊಂಡಿದೆ. ಈ ವಿಷಯವನ್ನು ಚರ್ಚಿಸಲು ನಾನು ಸಭೆ ಕರೆಯುತ್ತೇನೆ ಎಂದಿದ್ದರು. ಗೃಹ ಸಚಿವರೇ ಅಸಹಾಯಕರಾದರೆ ಭರವಸೆ ಉಳಿಯದು: ಗೃಹ ಸಚಿವರ ಹೇಳಿಕೆ ಕುರಿತು ಮಾಧ್ಯಮಗಳಲ್ಲಿ ಪ್ರಕಟಗೊಂಡಿದ್ದ ವರದಿಗಳನ್ನು ಉಲ್ಲೇಖಿಸಿದ್ದ ಹೈಕೋರ್ಟ್, ರಾಜ್ಯದಲ್ಲಿ ಅಕ್ರಮ ಮರಳು ಗಣಿಗಾರಿಕೆಯಲ್ಲಿ ಎಲ್ಲ ಪಕ್ಷಗಳ ಪ್ರಭಾವಿಗಳು ಭಾಗಿಯಾಗಿದ್ದಾರೆ ಎಂದು ಗೃಹ ಸಚಿವರು ಸದನದಲ್ಲಿ ಹೇಳಿದ್ದನ್ನು ಮಾಧ್ಯಮಗಳು ವರದಿ ಮಾಡಿವೆ. ಇದಕ್ಕೆ ಕಡಿವಾಣ ಹಾಕುವ ವಿಚಾರದಲ್ಲಿ ಗೃಹ ಸಚಿವರು ಅಸಹಾಯಕತೆ ವ್ಯಕ್ತಪಡಿಸಿದ ಬಗ್ಗೆಯೂ ಮಾಧ್ಯಮಗಳು ವರದಿ ಮಾಡಿವೆ. ಮೈನಿಂಗ್ ಮಾಫಿಯಾಗೆ ಕಡಿವಾಣ ಹಾಕಲು ಈ ರೀತಿ ಒಬ್ಬ ಗೃಹ ಸಚಿವರೇ ಅಸಹಾಯಕತೆ ವ್ಯಕ್ತಪಡಿಸಿದರೆ, ರಾಜ್ಯದಲ್ಲಿ ಅಕ್ರಮ ಮರಳು ಗಣಿಗಾರಿಕೆಯನ್ನು ರಾಜ್ಯದ ಆಡಳಿತ ಯಂತ್ರದಿಂದ ತಡೆಯಬಹುದು ಎಂಬ ನಿರೀಕ್ಷೆಯಿಲ್ಲ. ಇದೊಂದು ಗಂಭೀರ ವಿಷಯವಾಗಿದ್ದು ನ್ಯಾಯಾಲಯದ ಮೇಲ್ವಿಚಾರಣೆಯಲ್ಲಿ ಕೇಂದ್ರ ತನಿಖಾ ದಳ ಅಥವಾ ವಿಶೇಷ ತನಿಖಾ ತಂಡ (ಎಸ್ಐಟಿ) ತನಿಖೆ ನಡೆಯಬೇಕಾಗಿದೆ ಎಂದು ನ್ಯಾಯಮೂರ್ತಿ ಡಿ.ಕೆ. ಸಿಂಗ್ ನೇತೃತ್ವದ ವಿಭಾಗೀಯ ನ್ಯಾಯಪೀಠ ಜನವರಿ 29ರಂದು ಹೇಳಿತ್ತು.

ವಾರ್ತಾ ಭಾರತಿ 20 Feb 2026 10:17 pm

Global tariffs: ಟ್ರಂಪ್ ಜಾರಿಗೆ ತಂದಿದ್ದ ಜಾಗತಿಕ ಸುಂಕಗಳು ರದ್ದು: ಅಮೆರಿಕ ಸುಪ್ರೀಂ ಕೋರ್ಟ್‌ನಿಂದ ಮಹತ್ವದ ತೀರ್ಪು

ಅಮೆರಿಕದ ಆರ್ಥಿಕ ಮತ್ತು ರಾಜಕೀಯ ವಲಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾದ ಪ್ರಕರಣದ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ಗೆ ಭಾರೀ ಹಿನ್ನಡೆಯಾಗಿದೆ. 6-3 ಮತಗಳ ಬಹುಮತದಿಂದ ಟ್ರಂಪ್‌ ಜಾರಿಗೆ ತಂದಿದ್ದ ಜಾಗತಿಕ ಸುಂಕಗಳನ್ನು ಅಲ್ಲಿನ ಸುಪ್ರೀಂಕೋರ್ಟ್‌ ಅಸಂವಿಧಾನಿಕವೆಂದು ಘೋಷಿಸಿ ರದ್ದುಗೊಳಿಸಿದೆ. ಟ್ರಂಪ್ ಆಡಳಿತವು ತುರ್ತು ಅಧಿಕಾರ ಕಾಯ್ದೆಯಡಿ, ಅಮೆರಿಕದ ವ್ಯಾಪಾರ ಹಿತಾಸಕ್ತಿಗಳನ್ನು ರಕ್ಷಿಸುವುದು ಎಂಬ ಕಾರಣ ನೀಡಿ, ಬಹುತೇಕ

ಒನ್ ಇ೦ಡಿಯ 20 Feb 2026 10:11 pm

Epstein files | ಸಂತ್ರಸ್ತರಿಗೆ 35 ದಶಲಕ್ಷ ಡಾಲರ್ ಪರಿಹಾರ ಪಾವತಿಸಲು ಎಪ್ಸ್ಟೀನ್ ಎಸ್ಟೇಟ್ ಒಪ್ಪಿಗೆ

ನ್ಯೂಯಾರ್ಕ್, ಫೆ.20: ಲೈಂಗಿಕ ಅಪರಾಧಿ ಜೆಫ್ರೀ ಎಪ್ಸ್ಟೀನ್‍ನ ಇಬ್ಬರು ಸಲಹೆಗಾರರು ಯುವತಿಯರು ಮತ್ತು ಹದಿಹರೆಯದ ಹುಡುಗಿಯರ ಲೈಂಗಿಕ ಕಳ್ಳಸಾಗಣೆಗೆ ಸಹಾಯ ಮತ್ತು ಉತ್ತೇಜನ ನೀಡುತ್ತಿದ್ದರು ಎಂದು ಆರೋಪಿಸಿ ದಾಖಲಿಸಲಾದ ಪ್ರಕರಣವನ್ನು ಇತ್ಯರ್ಥಗೊಳಿಸಲು ಸಂತ್ರಸ್ತರಿಗೆ 35 ದಶಲಕ್ಷ ಡಾಲರ್ ಪರಿಹಾರ ಪಾವತಿಸಲು ಜೆಫ್ರೀ ಎಪ್ಸ್ಟೀನ್ ಎಸ್ಟೇಟ್ ಒಪ್ಪಿಕೊಂಡಿರುವುದಾಗಿ ವರದಿಯಾಗಿದೆ. ಎಪ್ಸ್ಟೀನ್ ಪ್ರಕರಣದ ಸಂತ್ರಸ್ತರನ್ನು ಪ್ರತಿನಿಧಿಸುವ ಕಾನೂನು ಸಂಸ್ಥೆ ಈ ಬಗ್ಗೆ ಗುರುವಾರ ಮಾಹಿತಿ ನೀಡಿದೆ. ಇದನ್ನು ನ್ಯಾಯಾಧೀಶರು ಅನುಮೋದಿಸಿದರೆ ಎಪ್ಸ್ಟೀನ್ ಎಸ್ಟೇಟ್‍ನ ಸಹ- ನಿರ್ವಾಹಕರಾದ, ಎಪ್ಸ್ಟೀನ್‍ನ ಮಾಜಿ ವಕೀಲ ಡ್ಯಾರೆನ್ ಇಂಡೈಕ್ ಮತ್ತು ಮಾಜಿ ಲೆಕ್ಕಪತ್ರಾಧಿಕಾರಿ ರಿಚರ್ಡ್ ಕಹ್ನ್ ವಿರುದ್ದ 2024ರಲ್ಲಿ ದಾಖಲಿಸಿರುವ ಮೊಕದ್ದಮೆ ಅಂತ್ಯಗೊಳ್ಳಲಿದೆ. 1995ರ ಜನವರಿ 1ರಿಂದ 2019ರ ಆಗಸ್ಟ್‌ 10ರವರೆಗೆ ಅಂದರೆ ಎಪ್ಸ್ಟೀನ್ ಜೈಲಿನಲ್ಲಿ ಮೃತಪಟ್ಟ ದಿನಾಂಕದವರೆಗೆ, ಆತನಿಂದ ಲೈಂಗಿಕ ದೌರ್ಜನ್ಯ, ಶೋಷಣೆ ಅಥವಾ ಮಾನವ ಕಳ್ಳಸಾಗಣೆಗೆ ಒಳಗಾದವರು ಈ ಪರಿಹಾರದ ವ್ಯಾಪ್ತಿಗೆ ಒಳಪಡಲಿದ್ದಾರೆ. 40 ಅಥವಾ ಅದಕ್ಕಿಂತ ಹೆಚ್ಚು ಮಂದಿ ಪರಿಹಾರ ಪಡೆಯಲು ಅರ್ಹರಿದ್ದರೆ ಎಪ್ಸ್ಟೀನ್ ಎಸ್ಟೇಟ್‌ ಅವರಿಗೆ 35 ಮಿಲಿಯನ್‌ ಡಾಲರ್ ಪಾವತಿಸಲಿದೆ. ಅರ್ಹರ ಸಂಖ್ಯೆ 40 ಕ್ಕಿಂತ ಕಡಿಮೆಯಿದ್ದರೆ 25 ಮಿಲಿಯನ್‌ ಡಾಲರ್ ನೀಡಲಾಗುತ್ತದೆ ಎಂದು ಸ್ಪಷ್ಟಪಡಿಸಲಾಗಿದೆ. ಇತ್ಯರ್ಥಕ್ಕೆ ನ್ಯೂಯಾರ್ಕ್‌ ನ ಫೆಡರಲ್ ನ್ಯಾಯಾಧೀಶರಿಂದ ಅಂತಿಮ ಅನುಮೋದನೆ ದೊರಕಬೇಕಿದೆ. ಎಪ್ಸ್ಟೀನ್ ಎಸ್ಟೇಟ್‌ ನ ಸಹ-ಕಾರ್ಯನಿರ್ವಾಹಕರಾಗಿ ಎಪ್ಸ್ಟೀನ್ ನ ಮಾಜಿ ವಕೀಲ ಡ್ಯಾರೆನ್ ಇಂಡೈಕ್ ಹಾಗೂ ಮಾಜಿ ಲೆಕ್ಕಪರಿಶೋಧಕ ರಿಚರ್ಡ್ ಕಾನ್ ಕಾರ್ಯನಿರ್ವಹಿಸುತ್ತಿದ್ದಾರೆ. ಸಂತ್ರಸ್ತರನ್ನು ಪ್ರತಿನಿಧಿಸುತ್ತಿರುವ ಕಾನೂನು ಸಂಸ್ಥೆ ಬೋಯೀಸ್ ಷಿಲ್ಲರ್ ಫ್ಲೆಕ್ಸ್ನರ್ LLP, ಮೊಕದ್ದಮೆಯಲ್ಲಿ ಎಷ್ಟು ಮಂದಿ ಸೇರಿದ್ದಾರೆ ಎಂಬುದರ ಕುರಿತು ಪ್ರತಿಕ್ರಿಯೆ ನೀಡಿಲ್ಲ. ಆದರೆ ಬ್ಲೂಮ್‌ಬರ್ಗ್ ನ್ಯೂಸ್ ವರದಿ ಪ್ರಕಾರ, ಕನಿಷ್ಠ 40 ಮಂದಿ ಸಂತ್ರಸ್ತರಿದ್ದಾರೆ ಎನ್ನಲಾಗಿದೆ. ಎಪ್ಸ್ಟೀನ್ ವಿರುದ್ಧದ ತನಿಖೆಗೆ ಸಂಬಂಧಿಸಿದ ಲಕ್ಷಾಂತರ ದಾಖಲೆಗಳು, ಫೊಟೋಗಳು ಹಾಗೂ ವೀಡಿಯೊಗಳನ್ನು ಅಮೆರಿಕದ ನ್ಯಾಯ ಇಲಾಖೆ ಇತ್ತೀಚೆಗೆ ಬಿಡುಗಡೆ ಮಾಡಿರುವ ಹಿನ್ನೆಲೆಯಲ್ಲಿ ಪ್ರಕರಣದ ಇತ್ಯರ್ಥದ ಪ್ರಸ್ತಾವನೆಗೆ ಹೆಚ್ಚಿನ ಗಮನ ಸೆಳೆದಿದೆ. ಪ್ರಭಾವಿ ರಾಜಕಾರಣಿಗಳು, ಉದ್ಯಮಿಗಳು, ಶಿಕ್ಷಣ ತಜ್ಞರು ಹಾಗೂ ಸೆಲೆಬ್ರಿಟಿಗಳೊಂದಿಗೆ ಸಂಪರ್ಕ ಹೊಂದಿದ್ದ ಎಪ್ಸ್ಟೀನ್ ಪ್ರಕರಣವು ಜಾಗತಿಕ ಮಟ್ಟದಲ್ಲಿ ದೊಡ್ಡ ವಿವಾದಕ್ಕೆ ಕಾರಣವಾಗಿತ್ತು.

ವಾರ್ತಾ ಭಾರತಿ 20 Feb 2026 10:10 pm

ಮದುವೆಯಾಗಲು ಹೊರಟಿದ್ದ ಪ್ರೇಮಿಗಳ ಕಾರು ಹಿರೇಕೆರೂರಲ್ಲಿ ಪಲ್ಟಿ: ಮರ್ಯಾದೆಗಂಜಿ ಪ್ರೇಯಸಿ ಪರಾರಿ!

ಹಾವೇರಿ: ಇದು ಏನೋ ಮಾಡಲು ಇನ್ನೇನೋ ಆದ ಘಟನೆ. ಮದುವೆಯಾಗಲೆಂದು ಹೊರಟಿದ್ದ ಜೋಡಿಯ ಕಾರು ಅಪಘಾತಕ್ಕೀಡಾಗಿ ಹುಡುಗ ಆಸ್ಪತ್ರೆ ಸೇರಿದ್ದರೆ, ಹುಡುಗಿ ಮರ್ಯಾದೆಗಂಜಿ ಪರಾರಿಯಾಗಿದ್ದಾರೆ. ಹಾವೇರಿ ಜಿಲ್ಲೆಯಿಂದ ಹೀಗೊಂದು ಘಟನೆ ವರದಿಯಾಗಿದೆ. ಪರಸ್ಪರ ಪ್ರೀತಿಸುತ್ತಿದ್ದ ಜೋಡಿ ಮದುವೆಯಾಗಲು ಹೋಗುತ್ತಿದ್ದ ವೇಳೆ ಕಾರು ಪಲ್ಟಿಯಾದ ಪರಿಣಾಮ ಮೂವರು ಗಾಯಗೊಂಡು, ಯುವತಿ ಪರಾರಿಯಾದ ಘಟನೆ ಹಿರೇಕೆರೂರು ತಾಲೂಕಿನ ಚೆನ್ನಹಳ್ಳಿ ಗ್ರಾಮದ ಬಳಿ ನಡೆದಿದೆ. ಗಾಯಗೊಂಡ ಯುವಕ ಮತ್ತು ಆತನ ಇಬ್ಬರು ಸ್ನೇಹಿತರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಅಪಘಾತದಲ್ಲಿ ಸ್ವಲ್ಪದರಲ್ಲಿಯೇ ಪಾರಾದ ಯುವತಿ ಮರ್ಯಾದೆಗಂಜಿ ಪರಾರಿಯಾಗಿದ್ದಾಳೆ ಘಟನೆ ವಿವರ ಬೆಂಗಳೂರಲ್ಲಿ ಕೆಲಸ ಮಾಡುತ್ತಿದ್ದ ಹಿರೇಕೆರೂರು ತಾಲೂಕಿನ ಯುವತಿ ಹಾಗೂ ಯುವಕ ಪರಸ್ಪರ ಪ್ರೀತಿಸುತ್ತಿದ್ದರು. ಇಬ್ಬರೂ ತಮ್ಮ ಪೋಷಕರ ಕಣ್ಣು ತಪ್ಪಿಸಿ ಮದುವೆಯಾಗುವ ಯೋಚನೆಯಲ್ಲಿದ್ದರು. ಕೆಲ ದಿನಗಳ ಹಿಂದೆ ಯುವತಿ ಜಾತ್ರೆಗೆಂದು ಊರಿಗೆ ಬಂದಿದ್ದಳು. ಈ ವೇಳೆ ಯುವತಿಯನ್ನು ಕರೆದುಕೊಂಡು ಹೋಗಿ ಮದುವೆ ಆಗುವ ತಯಾರಿಯಲ್ಲಿದ್ದ ಯುವಕ, ಇದಕ್ಕಾಗಿ ಇಬ್ಬರು ಸ್ನೇಹಿತರ ಜೊತೆಗೆ ಹಿರೇಕೆರೂರು ತಾಲೂಕಿಗೆ ಬಂದಿದ್ದರು.ಯುವಕನಿಗೆ ಆತ ಇಬ್ಬರು ಗೆಳೆಯರು ಸಾಥ್‌ ಕೊಟ್ಟಿದ್ದು, ಯುವತಿಯನ್ನು ಕಾರಿನಲ್ಲಿ ಬೆಂಗಳೂರಿಗೆ ಕರೆದೊಯ್ಯುತ್ತಿದ್ದರು. ಈ ವೇಳೆ ಯುವತಿಯ ಪೋಷಕರು ಹುಡುಕುತ್ತಾ ಬರಬಹುದು ಎಂಬ ಭಯದಲ್ಲಿ ಕಾರನ್ನು ವೇಗವಾಗಿ ಚಲಾಯಿಸುತ್ತಿದ್ದರು. ಈ ವೇಳೆ ನಿಯಂತ್ರಣ ಕಳೆದುಕೊಂಡ ಚನ್ನಹಳ್ಳಿ ತಾಂಡಾ ಬಳಿ ಕಾರು ಪಲ್ಟಿಯಾಗಿ ಸಂಪೂರ್ಣ ಜಖಂಗೊಂಡಿದೆ. ಯುವತಿ ಬೆಂಗಳೂರಿಗೆ ಅಪಘಾತದ ತೀವ್ರತೆಗೆ ಕಾರಿನೊಳಗಿದ್ದ ಮೂವರು ಯುವಕರಿಗೂ ಗಂಭೀರ ಗಾಯಗಳಾಗಿವೆ. ಹಿಂದಿನ ಸೀಟಿನಲ್ಲಿ ಕುಳಿತಿದ್ದ ಯುವತಿ ಮಾತ್ರ ಸ್ವಲ್ಪದರಲ್ಲಿಯೇ ಪ್ರಾಣಾಪಾಯದಿಂದ ಪಾರಾಗಿದ್ದಾಳೆ. ಆಕೆಗೆ ದೊಡ್ಡ ಮಟ್ಟಿನ ಗಾಯವಾಗಿರಲಿಲ್ಲ ಎಂದು ಹೇಳಲಾಗಿದೆ. ಊರ ಬಳಿಯೇ ಕಾರು ಪಲ್ಟಿಯಾದ ಕಾರಣ ರಕ್ಷಣೆಗೆ ಜನ ಸೇರಿದ್ದಾರೆ. ಸಹಜವಾಗಿಯೇ ಯಾರು ಏನು ಎತ್ತ ಎಂದು ವಿಚಾರಿಸತೊಡಗಿದ್ದಾರೆ. ಈ ವೇಳೆ ಪ್ರಿಯಕರ ಮತ್ತು ಅವರ ಉಳಿದ ಗೆಳೆಯರು ಆಸ್ಪತ್ರೆಯ ಕಡೆಗೆ ತೆರಳಿದರೆ ಯುವತಿ ಮಾತ್ರ ಮರ್ಯಾದೆಗೆ ಅಂಜಿ ಅಲ್ಲಿಂದ ಹೊರಡಲು ತೀರ್ಮಾನಿಸಿದರು. ಬಳಿಕ ಅವರಿವರ ಬಳಿ ಡ್ರಾಪ್‌ ಪಡೆದು ಬೆಂಗಳೂರಿಗೆ ತೆರಳುವ ಬಸ್‌ ಹಿಡಿದು ಮನೆ ಸೇರಿದ್ದಾಳೆ. ಹಿರೇಕೆರೂರು ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ವಿಜಯ ಕರ್ನಾಟಕ 20 Feb 2026 10:10 pm

ನೀರ್ಕೆರೆ ಸೇತುವೆ ಕಾಮಗಾರಿ : ಸಂಪಿಗೆ-ಅಶ್ವತ್ಥಪುರ ವಾಹನ ಸಂಚಾರ ನಿರ್ಬಂಧ

ಮೂಡುಬಿದಿರೆ: ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಾಲ್ಲೂಕಿನ ಸಂಪಿಗೆ–ಅಶ್ವತ್ಥಪುರ–ನೀರ್ಕೆರೆ–ಮಂಜನಕಟ್ಟೆ ರಸ್ತೆಯಲ್ಲಿರುವ ನೀರ್ಕೆರೆ ಸೇತುವೆ ಕಾಮಗಾರಿಯ ಹಿನ್ನೆಲೆಯಲ್ಲಿ ಆ ಭಾಗದಲ್ಲಿ ಎಲ್ಲಾ ತರದ ವಾಹನ ಸಂಚಾರವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದೆ. ಸುಮಾರು ರೂ.9.90 ಕೋಟಿ ಅಂದಾಜು ವೆಚ್ಚದಲ್ಲಿ ಸೇತುವೆ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದ್ದು, ಸಾರ್ವಜನಿಕರ ಸುರಕ್ಷತೆ ಮತ್ತು ಸಂಚಾರದ ಸುಗಮತೆ ದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ. ಕಾಮಗಾರಿ ನಡೆಯುವ ಸ್ಥಳದಲ್ಲಿ ಬ್ಯಾರಿಕೇಡ್‌ಗಳು ಹಾಗೂ ಎಚ್ಚರಿಕೆ ಫಲಕಗಳನ್ನು ಅಳವಡಿಸಲಾಗುತ್ತದೆ. ನಿಯಮ ಉಲ್ಲಂಘಿ ಸುವವರ ವಿರುದ್ಧ ಮೋಟಾರು ವಾಹನ ತಿದ್ದುಪಡಿ ಕಾಯ್ದೆ 2019ರ ಸೆಕ್ಷನ್ 198(ಎ) ಅನ್ವಯ ಕ್ರಮ ಕೈಗೊಳ್ಳಲಾ ಗುವುದು ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ. ಪರ್ಯಾಯ ಮಾರ್ಗಗಳು:- ನೀರ್ಕೆರೆ–ಸಂಪಿಗೆ ಮಾರ್ಗದಲ್ಲಿ ಸಂಚರಿಸುವ ವಾಹನಗಳು ನೀರ್ಕೆರೆ–ಮುದಿಪು–ಮುಲ್ಕಿ ಮೂಲಕ ರಾಷ್ಟ್ರೀಯ ಹೆದ್ದಾರಿಯನ್ನು ಬಳಸಬೇಕು. ಮಂಜನಕಟ್ಟೆ–ಅಶ್ವತ್ಥಾಪುರ ಭಾಗದ ವಾಹನಗಳು ಸಮೀಪದ ಪರ್ಯಾಯ ರಸ್ತೆಗಳ ಮೂಲಕ ಸಂಚರಿಸುವಂತೆ ಸೂಚಿಸಲಾಗಿದೆ. ಈ ಆದೇಶವು ಫೆಬ್ರವರಿ 23, 2026ರಿಂದ ಫೆಬ್ರವರಿ 22, 2028ರವರೆಗೆ, ಅಂದರೆ 24 ತಿಂಗಳ ಅವಧಿಗೆ ಜಾರಿಯಲ್ಲಿರಲಿದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಾರ್ತಾ ಭಾರತಿ 20 Feb 2026 10:09 pm

ಕೇರಳ ಸ್ಟೋರಿ-2 ಚಿತ್ರದ ವಿರುದ್ಧ ಟೀಕೆ: ವಿರೋಧಿಗಳಿಗೆ ಬಿಜೆಪಿ ಮುಖ್ಯಸ್ಥ ರಾಜೀವ್ ಚಂದ್ರಶೇಖರ್ ತಿರುಗೇಟು

ತಿರುವನಂತಪುರಂ: “ಇನ್ನೇನು ಬಿಡುಗಡೆಯಾಗಲಿರುವ ಕೇರಳ ಸ್ಟೋರಿ-2 ಚಲನಚಿತ್ರವು ಕೋಮು ವಿಭಜನೆಯನ್ನು ಪ್ರಚೋದಿಸುವ ಗುರಿ ಹೊಂದಿರುವ ದ್ವೇಷ ಕಾರುವ ಚಿತ್ರ” ಎಂದು ಹೇಳಿಕೆ ನೀಡಿದ್ದ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಗೆ ತಿರುಗೇಟು ನೀಡಿರುವ ಕೇರಳ ಬಿಜೆಪಿ ಮುಖ್ಯಸ್ಥ ರಾಜೀವ್ ಚಂದ್ರಶೇಖರ್, “ನಿಮ್ಮದು ಸೋಗಲಾಡಿತನ ಮತ್ತು ರಾಜಕೀಯ ವಿಮುಖತೆ” ಎಂದು ಆರೋಪಿಸಿದ್ದಾರೆ. ANI ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ ರಾಜೀವ್ ಚಂದ್ರಶೇಖರ್, “ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಅಭಿವ್ಯಕ್ತಿ ಸ್ವಾತಂತ್ರ್ಯದ ವಿಚಾರದಲ್ಲಿ ಆಯ್ಕೆ ಮಾಡಿದಂತೆ ಮಾತನಾಡುತ್ತಿದ್ದಾರೆ. ಬಿಜೆಪಿಯ ವಿರುದ್ಧದ ಚಲನಚಿತ್ರ ಬಿಡುಗಡೆಯಾದಾಗ ನಾವು ಪ್ರತಿಭಟಿಸಲಿಲ್ಲ. ಅವರು ಆಗ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಉಲ್ಲೇಖಿಸಿದ್ದರು. ಅವರ ರಾಜಕೀಯ ಚಿಂತನೆಗೆ ವಿರುದ್ಧವಾಗಿ ಯಾರಾದರೂ ಚಲನಚಿತ್ರ ಮಾಡಿದ ಕೂಡಲೇ ಅದು ಹೇಗೆ ಸಮಸ್ಯೆಯಾಗುತ್ತದೆ?” ಎಂದು ಪ್ರಶ್ನಿಸಿದ್ದಾರೆ. “ಎಡ ಪ್ರಜಾಸತ್ತಾತ್ಮಕ ರಂಗದ ಹತ್ತು ವರ್ಷಗಳ ವೈಫಲ್ಯದಿಂದ ಜನರ ಗಮನವನ್ನು ಬೇರೆಡೆಗೆ ಸೆಳೆಯಲು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಟೀಕೆ ಮಾಡಲು ಪ್ರಯತ್ನಿಸುತ್ತಿದ್ದಾರೆ” ಎಂದು ಅವರು ಆರೋಪಿಸಿದ್ದಾರೆ. ಚಿತ್ರ ನಿರ್ಮಾಪಕರು ಹಾಗೂ ಪ್ರೇಕ್ಷಕರಿಗೆ ಸಮಾನ ಹಕ್ಕುಗಳಿದ್ದು, ಯಾರೂ ಕೂಡ ಮುಖ್ಯಮಂತ್ರಿಯನ್ನು ಸಮುದಾಯಗಳ ರಕ್ಷಕರನ್ನಾಗಿ ನೇಮಿಸಿಲ್ಲ ಎಂದು ತಿರುಗೇಟು ನೀಡಿದ್ದಾರೆ. “ಇಂದು ಪ್ರತಿಯೊಬ್ಬ ಭಾರತೀಯನಿಗೂ, ಪ್ರತಿಯೊಬ್ಬ ಮಲಯಾಳಿಗೂ ಒಂದೇ ಮೂಲಭೂತ ಹಕ್ಕುಗಳು ದೊರೆತಿವೆ. ಇದರಲ್ಲಿ ನಿಮಗೆ ಸಮಸ್ಯೆ ಕಂಡುಬಂದರೆ, ಅಥವಾ ಚಲನಚಿತ್ರದಲ್ಲಿ ಏನಾದರೂ ಕಾನೂನುಬಾಹಿರ ಅಂಶ ಕಂಡುಬಂದರೆ, ನ್ಯಾಯಾಲಯಕ್ಕೆ ಹೋಗಿ. ಆದರೆ ಜನರನ್ನು ಬೆದರಿಸಲು ಪ್ರಯತ್ನಿಸಬೇಡಿ. ಭಯವನ್ನು ಸೃಷ್ಟಿಸಲು ನಿಮ್ಮ ಮುಖ್ಯಮಂತ್ರಿ ಸ್ಥಾನವನ್ನು ಬಳಸಿಕೊಳ್ಳಬೇಡಿ. ಚಲನಚಿತ್ರ ಪ್ರದರ್ಶನಗೊಳ್ಳಲಿದೆ” ಎಂದು ಅವರು ತರಾಟೆಗೆ ತೆಗೆದುಕೊಂಡಿದ್ದಾರೆ. ಇದಕ್ಕೂ ಮುನ್ನ, ಗುರುವಾರ ಬೆಳಗ್ಗೆ ‘ದಿ ಕೇರಳ ಸ್ಟೋರಿ’ ಚಲನಚಿತ್ರದ ಎರಡನೇ ಭಾಗಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದ ಮುಖ್ಯಮಂತ್ರಿ ಪಿಣರಾಯಿ ವಿಜಯನ್, “ಈ ಚಲನಚಿತ್ರವು ಧಾರ್ಮಿಕ ದ್ವೇಷವನ್ನು ಪ್ರಚೋದಿಸುತ್ತದೆ” ಎಂದು ಪುನರುಚ್ಚರಿಸಿದ್ದರು. ಈ ಚಿತ್ರವು ನಮ್ಮ ಜಾತ್ಯತೀತ ಹೆಣಿಗೆಗೆ ಧಕ್ಕೆ ತರುವ ಮತ್ತೊಂದು ಪ್ರಯತ್ನ ಎಂದು ಅವರು ದೂರಿದ್ದರು.

ವಾರ್ತಾ ಭಾರತಿ 20 Feb 2026 10:05 pm

ಅಮೆರಿಕದ ಸಾಮ್ರಾಜ್ಯಶಾಹಿತ್ವ ಜಗತ್ತಿನಲ್ಲಿ ಅಶಾಂತಿ, ಹಸಿವಿಗೆ ಕಾರಣವಾಗುತ್ತಿದೆ: ಪ್ರೊ. ರಾಜೇಂದ್ರ ಉಡುಪ

► ಮಂಗಳೂರಿನಲ್ಲಿ ಕೆಂಪು ಪುಸ್ತಕ ದಿನಾಚರಣೆ ►ಯುಎಸ್ ಸಾಮ್ರಾಜ್ಯಶಾಹಿ-ಭಾರತದ ಜನತೆಯ ಶತ್ರು ಕೃತಿ ಬಿಡುಗಡೆ

ವಾರ್ತಾ ಭಾರತಿ 20 Feb 2026 9:59 pm

ಇರಾನ್‍ನೊಂದಿಗೆ ಒಪ್ಪಂದ ಅಥವಾ ಮಿಲಿಟರಿ ಕಾರ್ಯಾಚರಣೆ ಬಗ್ಗೆ 10 ದಿನಗಳಲ್ಲಿ ಸ್ಪಷ್ಟವಾಗಲಿದೆ: ಡೊನಾಲ್ಡ್ ಟ್ರಂಪ್

ವಾಷಿಂಗ್ಟನ್, ಫೆ.20: ಇರಾನ್ ಒಪ್ಪಂದಕ್ಕೆ ಸಮ್ಮತಿಸುತ್ತದೆಯೇ ಅಥವಾ ಕೆಟ್ಟ ಸಂಗತಿ ಸಂಭವಿಸುತ್ತದೆಯೇ ಎಂಬುದನ್ನು 10 ದಿನಗಳಲ್ಲಿ ಜಗತ್ತು ನೋಡಲಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಗುರುವಾರ ವಾಷಿಂಗ್ಟನ್‍ನಲ್ಲಿ ಶಾಂತಿ ಮಂಡಳಿ ಸಭೆಯಲ್ಲಿ ಮಾತನಾಡಿದ ಟ್ರಂಪ್ ಇರಾನ್ ಜೊತೆಗಿನ ಪರಮಾಣು ಮಾತುಕತೆಯನ್ನು ಉಲ್ಲೇಖಿಸಿದರು. ನಮ್ಮ ಪ್ರತಿನಿಧಿಗಳಾದ ಸ್ಟೀವ್ ವಿಟ್ಕಾಫ್ ಮತ್ತು ಜರೆಡ್ ಕುಷ್ನರ್ ಇರಾನ್‍ನೊಂದಿಗೆ ಉತ್ತಮ ಸಭೆ ನಡೆಸಿದ್ದಾರೆ. ನಾವು ಅರ್ಥಪೂರ್ಣ ಒಪ್ಪಂದ ಮಾಡಿಕೊಳ್ಳಬೇಕಾಗಿದೆ. ಇಲ್ಲದಿದ್ದರೆ ಕೆಟ್ಟ ಸಂಗತಿಗಳು ಘಟಿಸಬಹುದು. ಬಹುಷಃ ಮುಂದಿನ 10 ದಿನಗಳಲ್ಲಿ ಈ ಎರಡರಲ್ಲಿ ಒಂದರ ಬಗ್ಗೆ ತೀರ್ಮಾನವಾಗಲಿದೆ' ಎಂದು ಟ್ರಂಪ್ ಹೇಳಿರುವುದಾಗಿ ವರದಿಯಾಗಿದೆ.

ವಾರ್ತಾ ಭಾರತಿ 20 Feb 2026 9:49 pm

ಅಮೆರಿಕ| ಟ್ರಂಪ್ ಸುಂಕಾಸ್ತ್ರದ ವಿರುದ್ಧ ತೀರ್ಪು ನೀಡಿದ ಸುಪ್ರೀಂಕೋರ್ಟ್

ವಾಷಿಂಗ್ಟನ್, ಫೆ.20: ಅಮೆರಿಕದ ಸುಪ್ರೀಂಕೋರ್ಟ್ ಅಧ್ಯಕ್ಷ ಟ್ರಂಪ್ ಅವರ ವ್ಯಾಪಕವಾದ ಜಾಗತಿಕ ಸುಂಕಗಳ ಕಾನೂನುಬದ್ಧತೆಯ ವಿರುದ್ಧ ತೀರ್ಪು ನೀಡಿದೆ ಮತ್ತು ಟ್ರಂಪ್ ಆಡಳಿತದ ಕ್ರಮವನ್ನು ಖಂಡಿಸಿರುವುದಾಗಿ ವರದಿಯಾಗಿದೆ. 1967ರ `ಇಂಟರ್‍ನ್ಯಾಷನಲ್ ಎಮರ್ಜೆನ್ಸಿ ಇಕನಾಮಿಕ್ ಪವರ್ ಆ್ಯಕ್ಟ್' ಅಧ್ಯಕ್ಷರಿಗೆ ತೆರಿಗೆ ವಿಧಿಸಲು ಅಧಿಕಾರ ನೀಡುವುದಿಲ್ಲ ಎಂದು ಸುಪ್ರೀಂಕೋರ್ಟ್ 6-3ರ ಬಹುಮತದ ತೀರ್ಪಿನಲ್ಲಿ ತಿಳಿಸಿದೆ.

ವಾರ್ತಾ ಭಾರತಿ 20 Feb 2026 9:47 pm

ವಂಚನೆ ಪ್ರಕರಣ: ತಲೆಮರೆಸಿಕೊಂಡಿದ್ದ ಆರೋಪಿ ಸೆರೆ

ಉಳ್ಳಾಲ : ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ 15 ವರ್ಷದಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ ಬಂಧಿತ ಆರೋಪಿಯನ್ನು ಬೆಂಗಳೂರು ನಿವಾಸಿ ಅಜಯ್ ಪ್ರಸಾದ್ (41) ಎಂದು ಗುರುತಿಸಲಾಗಿದೆ. ಆರೋಪಿಯು ನ್ಯಾನೊ ಫೋರೆಕ್ಸ್ ಇಂಡಿಯಾ ಎಂಬ ಸಂಸ್ಥೆಯ ಪೋರೆಕ್ಸ್ ರೋಬೊಟ್ ಸಾಪ್ಟ್ ವೇರ್ ಮೂಲಕ ಕರೆನ್ಸಿ ಟ್ರೇಡಿಂಗ್ ಮತ್ತು ಷೇರು ವ್ಯವಹಾರದಲ್ಲಿ ತಿಂಗಳಿಗೆ ಶೇ .40 ಲಾಭ ಹಾಗೂ ಶೇ.20 ಮರುಪಾವತಿ ನೀಡುವುದಾಗಿ ನಂಬಿಸಿ , ವಿವಿಧ ಗ್ರಾಹಕರಿಂದ ಸುಮಾರು 1. 20 ಕೋಟಿ ಹಣವನ್ನು ಪಡೆದುಕೊಂಡಿದ್ದ .ಆದರೆ ಪಡೆದ ಹಣವನ್ನು ವಾಪಸ್ ನೀಡದೇ ವಂಚನೆ ಮಾಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ 2011ರಲ್ಲಿ ಮೂರು ಪ್ರಕರಣಗಳು ದಾಖಲಾಗಿದ್ದವು. ಈ ಪ್ರಕರಣದ ಆರೋಪಿ ಅಜಯ್ ಪ್ರಸಾದ್ ಎಂಬಾತ ನ್ಯಾಯಾಲಯಕ್ಕೆ ಹಾಜರಾಗದೇ ಸುಮಾರು 15 ವರ್ಷಗಳಿಂದ ತಲೆಮರೆಸಿಕೊಂಡಿದ್ದ . ಆತನನ್ನು ಇಂದು ಉಳ್ಳಾಲ ಪೊಲೀಸ್ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿ ತಂಡ ಬೆಂಗಳೂರಿನಲ್ಲಿ ದಸ್ತಗಿರಿ ಮಾಡಿ ಮಂಗಳೂರು ನಗರದ ಏಳನೇ ಜೆ.ಎಂ.ಎಫ್.ಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ . ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನಕ್ಕೆ ವಿಧಿಸಿದೆ.

ವಾರ್ತಾ ಭಾರತಿ 20 Feb 2026 9:44 pm

ಗಾಝಾ ಶಾಂತಿ ಮಂಡಳಿ ಸಭೆಯಲ್ಲಿ ವೀಕ್ಷಕ ರಾಷ್ಟ್ರವಾಗಿ ಪಾಲ್ಗೊಂಡ ಭಾರತ

ವಾಷಿಂಗ್ಟನ್, ಫೆ.20: ವಾಷಿಂಗ್ಟನ್‍ನಲ್ಲಿ ಗುರುವಾರ ನಡೆದ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೇತೃತ್ವದ ಗಾಝಾ ಶಾಂತಿ ಮಂಡಳಿಯ ಉದ್ಘಾಟನಾ ಸಭೆಯಲ್ಲಿ ಭಾರತ ವೀಕ್ಷಕ ರಾಷ್ಟ್ರವಾಗಿ ಪಾಲ್ಗೊಂಡಿದೆ. ಸಭೆಯಲ್ಲಿ ಸುಮಾರು 50 ದೇಶಗಳ ಪ್ರತಿನಿಧಿಗಳು ಭಾಗವಹಿಸಿದ್ದು ವಾಷಿಂಗ್ಟನ್‍ನಲ್ಲಿ ಭಾರತದ ರಾಯಭಾರಿ ಕಚೇರಿಯ ಉನ್ನತ ರಾಜತಾಂತ್ರಿಕ ಅಧಿಕಾರಿ ನಮ್ಗ್ಯಾ ಸಿ. ಖಂಪಾ ಅವರು ಭಾರತವನ್ನು ಪ್ರತಿನಿಧಿಸಿದ್ದರು. ದಾವೋಸ್‍ನಲ್ಲಿ ಜನವರಿ 22ರಂದು ಟ್ರಂಪ್ ಶಾಂತಿ ಮಂಡಳಿಗೆ ಅಧಿಕೃತವಾಗಿ ಚಾಲನೆ ನೀಡಿದ ಸಭೆಯಲ್ಲಿ ಭಾರತ ಪಾಲ್ಗೊಂಡಿರಲಿಲ್ಲ.

ವಾರ್ತಾ ಭಾರತಿ 20 Feb 2026 9:43 pm

ಟಿ20 ವಿಶ್ವಕಪ್| ಅಭಿಷೇಕ್‌ರನ್ನು ತಂಡದಿಂದ ಕೈಬಿಡುವ ಬಗ್ಗೆ ಚರ್ಚೆ ನಡೆದಿಲ್ಲ: ಕೋಚ್

ಹೊಸದಿಲ್ಲಿ, ಫೆ. 20: ಐಸಿಸಿ ಟಿ20 ವಿಶ್ವಕಪ್ 2026ರಲ್ಲಿ ಭಾರತೀಯ ಆರಂಭಿಕ ಬ್ಯಾಟರ್ ಅಭಿಷೇಕ್ ಶರ್ಮಾ ಕಳಪೆ ಫಾರ್ಮ್‌ನಲ್ಲಿದ್ದಾರೆ. ಅವರು ಗುಂಪು ಹಂತದಲ್ಲಿ ಸತತ ಮೂರು ಬಾರಿ ಶೂನ್ಯಕ್ಕೆ ಔಟಾಗಿದ್ದಾರೆ. ಅವರ ಕಳಪೆ ನಿರ್ವಹಣೆ ಬಗ್ಗೆ ಕಳವಳ ವ್ಯಕ್ತವಾಗಿದ್ದರೂ, ತಂಡಾಡಳಿತವು ಈಗಲೂ ಬಲವಾಗಿ ಅವರ ಬೆಂಬಲಕ್ಕೆ ನಿಂತಿದೆ. ಅವರನ್ನು ತಂಡದಿಂದ ಕೈಬಿಡುವ ಯಾವುದೇ ಸಾಧ್ಯತೆಯನ್ನು ಟೀಮ್ ಇಂಡಿಯಾ ಬೌಲಿಂಗ್ ಕೋಚ್ ಮೋರ್ನ್ ಮೊರ್ಕೆಲ್ ತಳ್ಳಿಹಾಕಿದ್ದಾರೆ. ‘‘ಅಭಿಷೇಕ್ ಶರ್ಮಾ ಬಗ್ಗೆ ಯಾವುದೇ ಚರ್ಚೆಯಾಗಿಲ್ಲ. ಅವರು ತಂಡ ಮತ್ತು ಪ್ರೇಕ್ಷಕರಿಗಾಗಿ ಉತ್ತಮ ನಿರ್ವಹಣೆ ನೀಡಲಿದ್ದಾರೆ. ಅವರ ಬ್ಯಾಟಿಂಗ್ ನೋಡುವುದೇ ಆನಂದ. ಅವರು ನೆಟ್‌ನಲ್ಲಿ ಒಳ್ಳೆಯ ಬ್ಯಾಟಿಂಗ್ ಪ್ರದರ್ಶನ ನೀಡುತ್ತಿದ್ದಾರೆ’’ ಎಂದು ಅವರು ಹೇಳಿದರು. 25 ವರ್ಷದ ಬ್ಯಾಟರ್ ಅಭಿಷೇಕ್ ಶರ್ಮಾರ ಮೇಲೆ ಒತ್ತಡವು ಪರಿಣಾಮ ಬೀರುತ್ತಿದೆ ಎಂದು ಭಾರತ ತಂಡದ ಮಾಜಿ ನಾಯಕ ಸುನೀಲ್ ಗವಾಸ್ಕರ್ ಅಭಿಪ್ರಾಯಪಡುತ್ತಾರೆ. ಅವರು ಕ್ರೀಸ್‌ನಲ್ಲಿ ನೆಲೆಯೂರುವ ಬದಲು, ಮೊದಲ ಎಸೆತದಿಂದಲೇ ದೊಡ್ಡ ಹೊಡೆತಗಳನ್ನು ಹೊಡೆಯಲು ಭಾರೀ ಪ್ರಯತ್ನಗಳನ್ನು ಮಾಡುತ್ತಾರೆ ಎಂದು ಅವರು ಹೇಳಿದರು. ‘‘ಅಭಿಷೇಕ್ ಶರ್ಮಾ ಉತ್ತಮ ಆಟಗಾರ. ಆದರೆ, ನಿರೀಕ್ಷೆಗಳ ಭಾರ ಅವರ ಮೇಲಿದೆ. ಅವರು ಅಮೆರಿಕ ವಿರುದ್ಧದ ಪಂದ್ಯದಲ್ಲಿ ಉತ್ತಮ ಆರಂಭವನ್ನು ಮಾಡಿದ್ದರೆ, ಕತೆಯೇ ಬೇರೆಯಾಗಿರುತ್ತಿತ್ತು. ಈಗ, ದೊಡ್ಡ ಸಿಕ್ಸರ್ ಹೊಡೆತಗಾರ ಹಾಗೂ ಶ್ರೇಷ್ಠ ಬ್ಯಾಟರ್ ಎಂಬ ಒತ್ತಡ ಕಾಣಿಸಿಕೊಳ್ಳುತ್ತಿದೆ’’ ಎಂದು ಗವಾಸ್ಕರ್ ಅಭಿಪ್ರಾಯಪಟ್ಟರು.

ವಾರ್ತಾ ಭಾರತಿ 20 Feb 2026 9:41 pm

ಭಾರತ ಹಲವು ವೈಶಿಷ್ಟ್ಯಗಳ ಸಂಗಮ : ಪ್ರಹ್ಲಾದ್ ಜೋಶಿ

ಲಿಂಗಸುಗೂರು: ಭಾರತವು ಸಾಂಸ್ಕೃತಿಕ ನೆಲೆಯುಳ್ಳ ರಾಷ್ಟ್ರವಾಗಿದ್ದು, ಅನೇಕ ವೈಶಿಷ್ಟ್ಯಗಳ ಸಂಗಮವಾಗಿದೆ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಹ್ಲಾದ್ ಜೋಶಿ ಹೇಳಿದರು. ತಾಲೂಕಿನ ಗೆಜ್ಜಲಗಟ್ಟಾದ ವೀರನಾಗಮ್ಮ ದೇವಿ ನೂತನ ದೇವಾಲಯ ಲೋಕಾರ್ಪಣೆ ಹಾಗೂ ಬ್ರಹ್ಮಕಲಶೋತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು, ಜ್ಞಾನ, ವಿಜ್ಞಾನ, ಧರ್ಮ ಮತ್ತು ಸಂಪ್ರದಾಯಗಳ ಪರಿಕಲ್ಪನೆ ಭಾರತದಲ್ಲಿ ಅಗಾಧವಾಗಿದೆ. ಈ ಹಿನ್ನಲೆಯಲ್ಲಿ ಭಾರತದ ಹಿರಿಮೆಯನ್ನು ವಿಶ್ವವೇ ಕೊಂಡಾಡುತ್ತಿದೆ ಎಂದು ಅಭಿಪ್ರಾಯಪಟ್ಟರು. ಸಮಾಜದಲ್ಲಿ ಅಸ್ಪೃಶ್ಯತೆ ಎಂಬ ಅಂಶವನ್ನು ಒಪ್ಪಲು ಸಾಧ್ಯವಿಲ್ಲ. ಅಸ್ಪೃಶ್ಯತೆಯನ್ನು ನಿವಾರಿಸಿ ದೇಶ ಮತ್ತು ಸಮಾಜವನ್ನು ಒಗ್ಗೂಡಿಸುವಲ್ಲಿ ಮಠಾಧೀಶರು ಮುನ್ನಡೆಯಬೇಕು ಎಂದು ಆಶಿಸಿದರು. ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ದೇಶದಾದ್ಯಂತ ಧಾರ್ಮಿಕ, ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಪುನರುತ್ಥಾನ ಕಾರ್ಯಗಳು ನಡೆಯುತ್ತಿವೆ. ಮಕ್ಕಳಲ್ಲಿ ಸಾಂಸ್ಕೃತಿಕ ಅರಿವು ಮೂಡಿಸಲು ವಿಶೇಷ ಕಾರ್ಯಕ್ರಮಗಳು ಹಮ್ಮಿಕೊಳ್ಳಲಾಗುತ್ತಿವೆ ಎಂದರು. ಕಾರ್ಯಕ್ರಮದಲ್ಲಿ ಕೊಲ್ಲೂರು ಮೂಕಾಂಬಿಕಾ ದೇವಾಲಯದ ಪ್ರಧಾನ ಅರ್ಚಕ ಡಾ. ಕೆ.ಎನ್. ನರಸಿಂಹ ಅಡಿಗರವರ ನೇತೃತ್ವದಲ್ಲಿ ಪ್ರಾಣಪ್ರತಿಷ್ಠೆ ನೆರವೇರಿತು. ಜಗದ್ಗುರು ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಮಹಾಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಈ ಸಂದರ್ಭದಲ್ಲಿ ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಪರಿಷತ್ ಸದಸ್ಯ ಸಿ.ಟಿ. ರವಿ, ಶಾಸಕ ಮಾನಪ್ಪ ವಜ್ಜಲ, ಶಿವರಾಜ ಪಾಟೀಲ, ಮಾಜಿ ಶಾಸಕ ಪ್ರತಾಪ್ ಗೌಡ ಪಾಟೀಲ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ವಾರ್ತಾ ಭಾರತಿ 20 Feb 2026 9:41 pm

AI ಶೃಂಗಸಭೆಯಲ್ಲಿ ಮಳಿಗೆ ಸ್ಥಾಪನೆ: ಗಲ್ಗೋಟಿಯಾಸ್‌ ವಿವಿಗೆ ಸಿಂಹಪಾಲು?

ಹೊಸದಿಲ್ಲಿ, ಫೆ.20: ರೊಬೊಡಾಗ್ ವಿವಾದದ ಮೂಲಕ ದೇಶಕ್ಕೆ ಮುಜುಗರವನ್ನು ಸೃಷ್ಟಿಸಿದ ಗಲ್ಗೋಟಿಯಾಸ್ ವಿಶ್ವವಿದ್ಯಾನಿಲಯಕ್ಕೆ ಎಐ ಶೃಂಗಸಭೆಯ ವಸ್ತುಪ್ರದರ್ಶನ ಸ್ಥಳದಲ್ಲಿ, ದೇಶದ ನಾಲ್ಕು ಪ್ರತಿಷ್ಠಿತ ಐಐಟಿಗಳು ಹಾಗೂ ಒಂದು ಸಂಶೋಧನಾ ಸಂಸ್ಥೆಗೆ ಮಳಿಗೆಗಳ ಸ್ಥಾಪನೆಗೆ ನೀಡಲಾಗಿದ್ದ ಒಟ್ಟು ಸ್ಥಳಾವಕಾಶಕ್ಕಿಂತಲೂ ಹೆಚ್ಚು ವಿಸ್ತೀರ್ಣದ ಜಾಗವನ್ನು ಪಡೆದಿರುವುದು ಈಗ ಬೆಳಕಿಗೆ ಬಂದಿದೆ. ಎಐ ಶೃಂಗಸಭೆಯ ವಸ್ತುಪ್ರದರ್ಶನ ಮಳಿಗೆಗಳನ್ನು ಸ್ಥಾಪಿಸಲಾಗಿದ್ದ ಭಾರತ ಮಂಡಪಂನ ಹಾಲ್ ಸಂಖ್ಯೆ 6ರಲ್ಲಿ ಖಾಸಗಿ ಶಿಕ್ಷಣಸಂಸ್ಥೆಯಾದ ಗಲ್ಗೋಟಿಯಾಸ್ ವಿಶ್ವವಿದ್ಯಾನಿಲಯಕ್ಕೆ 155 ಚದರ ಮೀಟರ್‌ನ ಬೂತ್ ನೀಡಲಾಗಿತ್ತು. ಇದು ದೇಶದ ನಾಲ್ಕು ಐಐಟಿಗಳು ಹಾಗೂ ಸಂಶೋಧನಾ ಸಂಸ್ಥೆಗೆ ನೀಡಲಾಗಿದ್ದ ಸ್ಥಳವಕಾಶದ ಶೇ.15ಕ್ಕಿಂತಲೂ ಅಧಿಕವೆಂದು ವರದಿಯೊಂದು ಬೆಟ್ಟು ಮಾಡಿ ತೋರಿಸಿದೆ. ಐಐಟಿ ಬಾಂಬೆ (35 ಚದರ ಮೀಟರ್, ಐಐಟಿ ಮದ್ರಾಸ್ (35 ಚದರ ಮೀಟರ್), ಐಐಟಿ ಗಾಂಧಿನಗರ (18 ಚದರ ಮೀಟರ್) ಹಾಗೂ ಐಐಟಿ ಕಾನ್ಪುರದ ಐರಾವತ ಸಂಶೋಧನಾ ಪ್ರತಿಷ್ಠಾನ (18 ಚದರ ಮೀಟರ್) ಇವುಗಳಿಗೆ ನೀಡಲಾಗಿದ್ದ ಒಟ್ಟು ಸ್ಥಳಾವಕಾಶವು 130 ಚದರ ಮೀಟರ್ ಆಗಿದೆ. ಈ ಐಐಟಿಗಳು, ಕೃತಕಬುದ್ದಿಮತ್ತೆ ಆಧಾರಿತ ಪ್ರವಾಹ ಮುನ್ನೆಚ್ಚರಿಕೆ ವ್ಯವಸ್ಥೆಗಳು, ಭಾಷಣ ಸಿಂಥೆಸಿಸ್ ಹಾಗೂ ತ್ಯಾಜ್ಯ ಬೇರ್ಪಡುವಿಕೆ ವಿಧಾನಗಳು ಇತ್ಯಾದಿಗಳನ್ನು ಪ್ರದರ್ಶಿಸಿದ್ದವು. ಗಲ್ಗೋಟಿಯಾಸ್ ವಿವಿಯು ತನ್ನ ಮಳಿಗೆಯಲ್ಲಿ ಪ್ರದರ್ಶಿಸಿದ್ದ ರೊಬೊಡಾಗ್ ಚೀನಾ ನಿರ್ಮಿತ ‘ನೂನಿಟ್ರೀ ಜಿಓ2 ರೊಬೊಟ್’ ಎಂಬುದು ಬೆಳಕಿಗೆ ಬಂದು ಭಾರೀ ವಿವಾದಕ್ಕೆ ಕಾರಣವಾಗಿತ್ತು. ಆನಂತರ ಈ ವಿಶ್ವವಿದ್ಯಾನಿಲಯವನ್ನು ವಸ್ತುಪ್ರದರ್ಶನ ಮಳಿಗೆಯಿಂದ ತೆರವುಗೊಳಿಸಲಾಗಿತ್ತು ಮತ್ತು ಎಐ ಶೃಂಗಸಭೆಯಿಂದ ಹೊರಗಿಡಲಾಗಿತ್ತು. ರೊಬೊಡಾಗ್ ವಿವಾದದ ಬಳಿಕ ನೇಹಾಸಿಂಗ್ ಅವರು ಸಾಮಾಜಿಕ ಜಾಲತಾಣ ಲಿಂಕ್‌ಡೆನ್‌ನಲ್ಲಿರುವ ತನ್ನ ಪ್ರೊಫೈಲ್‌ನಲ್ಲಿ ಓಪನ್ ಟು ವರ್ಕ್ ಎಂದು ಹ್ಯಾಶ್‌ಟಾಗ್ ಮಾಡಿದ್ದರು. ಸಾಮಾನ್ಯವಾಗಿ ಹೊಸ ಉದ್ಯೋಗ ಅರಸುವವರು ತಮ್ಮ ಪ್ರೊಫೈಲ್ ಟೂಲ್‌ಗಳಲ್ಲಿ ಈ ರೀತಿ ಹ್ಯಾಶ್‌ಟ್ಯಾಗ್ ಮಾಡುತ್ತಾರೆ. ಈ ಹಿನ್ನೆಲೆಯಲ್ಲಿ ನೇಹಾಸಿಂಗ್ ಅವರು ಗೊಲ್ಗೋಟಿಯಾಸ್ ವಿವಿಯನ್ನು ತೊರೆದಿದ್ದಾರೆಯೇ ಎಂಬ ಬಗ್ಗೆ ಸಂದೇಹಗಳು ವ್ಯಕ್ತವಾಗಿದ್ದವು.

ವಾರ್ತಾ ಭಾರತಿ 20 Feb 2026 9:39 pm

ಮಧ್ಯಪ್ರದೇಶ| ಜಬಲ್‌ಪುರ ಸಮೀಪ ಎರಡು ಸಮುದಾಯಗಳ ನಡುವೆ ಘರ್ಷಣೆ: 49 ಮಂದಿಯ ಬಂಧನ

ಜಬಲ್‌ಪುರ,ಫೆ.20: ಮಧ್ಯಪ್ರದೇಶದ ಜಬಲ್‌ಪುರ ಜಿಲ್ಲೆಯ ಸಿಲ್ಹೋರಾ ಪಟ್ಟಣದಲ್ಲಿ ಎರಡು ಸಮುದಾಯಗಳಿಗೆ ಸೇರಿದ ಗುಂಪುಗಳ ನಡುವೆ ಶುಕ್ರವಾರ ಘರ್ಷಣೆ ಭುಗಿಲೆದ್ದಿದ್ದು, ಕಲ್ಲೂತೂರಾಟ ಹಾಗೂ ದಾಂಧಲೆ ನಡೆದಿದೆ. ಗಲಭೆ ನಿರತರನ್ನು ಚದುರಿಸಲು ಪೊಲೀಸರು ಲಾಠಿಚಾರ್ಜ್ ನಡೆಸಿದ್ದಾರೆ ಹಾಗೂ ಅಶ್ರುವಾಯು ಶೆಲ್‌ಗಳನ್ನು ಸಿಡಿಸಿದ್ದಾರೆ. ಗಲಭೆಗೆ ಸಂಬಂಧಿಸಿ 49 ಮಂದಿಯನ್ನು ಬಂಧಿಸಲಾಗಿದೆಯೆಂದು ಅಧಿಕಾರಿಗಳು ತಿಳಿಸಿದ್ದಾರೆ. ಆಝಾದ್ ಚೌಕ ಪ್ರದೇಶದಲ್ಲಿ ಬೆಳಗ್ಗೆ 10 ಗಂಟೆಗೆ ಗಲಭೆ ಭುಗಿಲೆದ್ದಿದ್ದು, ಆನಂತರ ಸ್ಥಳದಲ್ಲಿ ಭಾರೀ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಯಿತು. ಪ್ರದೇಶದಲ್ಲಿ ಶಾಂತಿ, ಸುವ್ಯವಸ್ಥೆಯನ್ನು ಕಾಪಾಡಲು ನಿರ್ದೇಶನಗಳನ್ನು ನೀಡಲಾಗಿದೆ ಎಂದು ಉಪಮುಖ್ಯಮಂತ್ರಿ ರಾಜೇಂದ್ರ ಶುಕ್ಲಾ ತಿಳಿಸಿದ್ದಾರೆ. ಆಝಾದ್‌ಚೌಕ ಪ್ರದೇಶದಲ್ಲಿ ದೇವಾಲಯ ಹಾಗೂ ಮಸೀದಿ ಆಸುಪಾಸಿನಲ್ಲಿವೆ. ಶುಕ್ರವಾರ ಪೂಜೆಯ ವೇಳೆ ದೇವಾಲಯದ ಸುರಕ್ಷತಾ ಕಂಬಿಗೆ ಹಾನಿಯಾಗಿದೆಯೆಂಬ ವಿಚಾರವಾಗಿ ಎರಡು ಗುಂಪುಗಳ ನಡುವೆ ವಾಗ್ವಾದವುಂಟಾಗಿತ್ತು. ಆನಂತರ ಇತ್ತಂಡಗಳೂ ಪರಸ್ಪರ ಕಲ್ಲುತೂರಾಟದಲ್ಲಿ ತೊಡಗಿದವು ಮತ್ತು ಪರಿಸರದಲ್ಲಿದ್ದ ಅಂಗಡಿ ಮತ್ತು ವಾಹನಗಳಿಗೆ ಹಾನಿಯೆಸಗಿದರೆಂದು ಪೊಲೀಸರು ತಿಳಿಸಿದ್ದಾರೆ. ಪರಿಸ್ಥಿತಿ ಈಗ ನಿಯಂತ್ರಣದಲ್ಲಿದ್ದು, ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯ ಅವಲೋಕನ ನಡೆಸುತ್ತಿದ್ದಾರೆ.

ವಾರ್ತಾ ಭಾರತಿ 20 Feb 2026 9:37 pm

ಕನಕಗಿರಿ | ಪಿನಾಯಿಲ್ ಕುಡಿದು ಯುವಕ ಆತ್ಮಹತ್ಯೆ

ಕನಕಗಿರಿ: ಮದ್ಯ ವ್ಯಸನಕ್ಕೆ ಒಳಗಾಗಿದ್ದ ಯುವಕನೊರ್ವ ಮನೆಯಲ್ಲಿ ಬಾಗಿಲು ಹಾಕಿಕೊಂಡು ಪಿನಾಯಿಲ್ ಕುಡಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಸಮೀಪದ ಸುಳೇಕಲ್ ಗ್ರಾಮದಲ್ಲಿ ಗುರುವಾರ ರಾತ್ರಿ ನಡೆದಿದೆ. ಮೃತರನ್ನು  ನಾಗರಾಜ ಚನ್ನದಾಸರ (37) ಎಂದು ಗುರುತಿಸಲಾಗಿದೆ.  ಕಳೆದ 15 ವರ್ಷಗಳಿಂದ ವಿಪರೀತ ಮದ್ಯಪಾನ ಮಾಡುತ್ತಿದ್ದರು ಎಂದು ತಿಳಿದುಬಂದಿದೆ. ಈ ಕುರಿತು ಮೃತನ ಪತ್ನಿ ಲಲಿತಮ್ಮ ನೀಡಿದ ದೂರಿನಲ್ಲಿ, ಗಂಡನಿಗೆ ಮದ್ಯಪಾನ ಬಿಡುವಂತೆ ನಾನು ಹಾಗೂ ಮಾವ ಹನುಮೇಶ ಮತ್ತು ಸಮಾಜದ ಹಿರಿಯರು ಹಲವು ಬಾರಿ ಸಲಹೆ ನೀಡಿದ್ದರೂ ದಿನನಿತ್ಯ ಮದ್ಯ ಸೇವನೆ ಮುಂದುವರಿಸಿದ್ದರು. ಗುರುವಾರ ಬೆಳಿಗ್ಗೆ ಕುಡಿದ ಅಮಲಿನಲ್ಲಿ ಪಿನಾಯಿಲ್ ಸೇವಿಸಿದ್ದಾರೆ ಎಂದು ತಿಳಿಸಿದ್ದಾರೆ. ನಂತರ ಬಾಗಿಲು ತೆರೆಯುವಾಗ ಪಿನಾಯಿಲ್ ಕುಡಿದಿರುವುದು ಗೊತ್ತಾಗಿ ಮೊದಲು ಕನಕಗಿರಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಗಂಗಾವತಿ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ತಿಳಿಸಿದ್ದಾರೆ. ಈ ಸಾವಿನಲ್ಲಿ ಯಾವುದೇ ಅನುಮಾನವಿಲ್ಲ ಎಂದು ಪತ್ನಿ ದೂರು ನೀಡಿದ್ದು, ಪ್ರಕರಣ ದಾಖಲಿಸಲಾಗಿದೆ ಎಂದು ಪಿ.ಐ ವಿ. ನಾರಾಯಣ ತಿಳಿಸಿದ್ದಾರೆ. ಆತ್ಮಹತ್ಯೆಯ ಯೋಚನೆ ಬಂದಾಗ ಅದನ್ನು ನಿಗ್ರಹಿಸಲು ರಾಜ್ಯ ಸರಕಾರದ ಅರೋಗ್ಯ ಇಲಾಖೆಯ ಹೆಲ್ಪ್ ಲೈನ್ 104 ಸಹಾಯ ಮಾಡುತ್ತದೆ. ಅದರ ಜೊತೆಗೆ Tele-MANAS ನ 14416 ಅನ್ನೂ ಸಂಪರ್ಕಿಸಬಹುದು.

ವಾರ್ತಾ ಭಾರತಿ 20 Feb 2026 9:37 pm

ಉಡುಪಿ: ಕುರ್ಚಿಯಿಂದ ಕುಸಿದು ಬಿದ್ದು ಯುವಕ ಮೃತ್ಯು

ಕಾರ್ಕಳ, ಫೆ.20: ಮನೆಯಲ್ಲಿ ಕುರ್ಚಿಯಲ್ಲಿ ಕುಳಿತುಕೊಂಡಿದ್ದ ಯುವಕನೋರ್ವ ಕುಸಿದು ಬಿದ್ದು ಮೃತಪಟ್ಟ ಘಟನೆ ಯರ್ಲಪಾಡಿ ಎಂಬಲ್ಲಿ ಫೆ.19ರಂದು ಮಧ್ಯಾಹ್ನ ವೇಳೆ ನಡೆದಿದೆ. ಮೃತರನ್ನು ಯರ್ಲಪಾಡಿ ಗ್ರಾಮದ ಹೇಮಲತಾ ಎಂಬವರ ಮಗ ಸುಹೇಶ್(22) ಎಂದು ಗುರುತಿಸಲಾಗಿದೆ. ಕಳೆದ 15 ದಿನಗಳಿಂದ ಕೆಮ್ಮು ವಿನಿಂದ ಬಳಲುತ್ತಿದ್ದ ಇವರು ಔಷಧಿ ಸೇವಿಸುತ್ತಿದ್ದರು. ಫೆ.19ರಂದು ಮಧ್ಯಾಹ್ನ ಮನೆಯ ಡೈನಿಂಗ್ ರೂಮ್‌ನ ಕುರ್ಚಿಯಲ್ಲಿ ಕುಳಿತು ಕೊಂಡಿದ್ದ ಸುಹೇಶ್, ಒಮ್ಮೆಲೆ ಬೊಬ್ಬೆ ಹಾಕುತ್ತಾ ಕೆಳಗೆ ಬಿದ್ದರೆನ್ನಲಾಗಿದೆ. ಬಳಿಕ ನರಳಾಡಿ ತೀವ್ರವಾಗಿ ಅಸ್ವಸ್ಥಗೊಂಡ ಅವರನ್ನು ಕೂಡಲೇ ಕಾರ್ಕಳದ ಖಾಸಗಿ ಆಸ್ಫತ್ರೆಗೆ ಕರೆದುಕೊಂಡು ಹೋದರು. ಅಲ್ಲಿ ಪರೀಕ್ಷಿಸಿದ ವೈದ್ಯರು ಸುಹೇಶ್ ದಾರಿ ಮಧ್ಯೆ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಾರ್ತಾ ಭಾರತಿ 20 Feb 2026 9:34 pm

ಕನಕಗಿರಿ | ಕಸಾಪ ಚಟುವಟಿಕೆಗಳು ಕ್ಷೀಣಿಸಿವೆ: ಶೇಖರಗೌಡ ಮಾಲಿಪಾಟೀಲ ಟೀಕೆ

ಕನಕಗಿರಿ: ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟ ಪೂರ್ವ ಅಧ್ಯಕ್ಷರ ದುರಾಡಳಿತ ಹಾಗೂ ಸರ್ವಾಧಿಕಾರಿ ಧೋರಣೆಯಿಂದ ರಾಜ್ಯದಲ್ಲಿ ಕಸಾಪ ಚಟುವಟಿಕೆಗಳು ಕ್ಷೀಣಿಸಿವೆ ಎಂದು ಸಾಹಿತಿ ಹಾಗೂ ಕೃಷಿಕ ಸಮಾಜದ ಜಿಲ್ಲಾಧ್ಯಕ್ಷ ಶೇಖರಗೌಡ ಮಾಲಿಪಾಟೀಲ ಗುಮಗೇರಾ ಆರೋಪಿಸಿದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಕೊಪ್ಪಳ, ತಾಲ್ಲೂಕು ಘಟಕ ಕನಕಗಿರಿ ಹಾಗೂ ಪ್ರತಿಮಾ-ಸೃಷ್ಠಿ ಪ್ರಕಾಶನ ಸಹಯೋಗದಲ್ಲಿ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಶುಕ್ರವಾರ ಆಯೋಜಿಸಿದ್ದ ನಿವೃತ್ತ ಶಿಕ್ಷಕ ಕನಕಪ್ಪ ದಂಡಿನ ಅವರ ‘ಒಡಲೊಳಗಿನ ಭಾವ’ ಕವನ ಸಂಕಲನ ಬಿಡುಗಡೆ, ಸಾಧಕರ ಸನ್ಮಾನ ಮತ್ತು ಜನಪದ ಸಂಭ್ರಮ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಸಾಹಿತ್ಯ ಸಮ್ಮೇಳನಗಳಿಗೆ ಅನುದಾನ ಬಿಡುಗಡೆ ಮಾಡುವಲ್ಲಿ ಬೆಂಬಲಿಗರಿಗೆ ಮಾತ್ರ ಆದ್ಯತೆ ನೀಡಿ, ವಿರೋಧಿಗಳಿಗೆ ಅನ್ಯಾಯ ಮಾಡಲಾಗಿದೆ. ಇದರ ಪರಿಣಾಮವಾಗಿ ಅನೇಕ ಕಡೆ ಸಾಹಿತ್ಯ ಸಮ್ಮೇಳನಗಳು ನಡೆಯುತ್ತಿಲ್ಲ ಎಂದು ಹೇಳಿದರು. ಆಡಳಿತಾಧಿಕಾರಿ ಬಂದ ನಂತರ ಕಸಾಪಕ್ಕೆ ಪುನಃ ಶಕ್ತಿ ಬಂದಿದೆ ಎಂದು ಅಭಿಪ್ರಾಯಪಟ್ಟರು. ಭಾಷೆಯ ಬೆಳವಣಿಗೆಯಲ್ಲಿ ಕಸಾಪದ ಕೊಡುಗೆ ಅಪಾರವಾಗಿದ್ದು, ಶಿಕ್ಷಣ ಮತ್ತು ಸಾಹಿತ್ಯ ಪರಸ್ಪರ ಸಂಬಂಧ ಹೊಂದಿವೆ ಎಂದು ಹೇಳಿದರು. ಸಾಹಿತಿ ಅಲ್ಲಾಗಿರಿರಾಜ ಮಾತನಾಡಿ, ಸಾಹಿತ್ಯವನ್ನು ಶ್ರೀಮಂತಗೊಳಿಸುವುದರ ಜೊತೆಗೆ ಸಾಹಿತಿಯೂ ಆರ್ಥಿಕವಾಗಿ ಸದೃಢರಾಗಬೇಕು. ಪುಸ್ತಕ ಪ್ರಕಟಣೆಗೆ ಸಾಲ ಮಾಡಿ ಸಂಕಷ್ಟಕ್ಕೆ ಒಳಗಾಗಬಾರದು ಎಂದರು. ಪ್ರತಿಯೊಂದು ಮನೆಯಲ್ಲೂ ಸಾಹಿತಿಗಳು ಬೆಳೆಯಬೇಕು. ಬಡತನ, ಶೋಷಣೆ, ದಲಿತ, ಬಂಡಾಯ ಮತ್ತು ಮಹಿಳಾ ವೇದನೆಗಳಂತಹ ಸಾಮಾಜಿಕ ಅಂಶಗಳು ಸಾಹಿತ್ಯದಲ್ಲಿ ಪ್ರತಿಫಲಿಸಬೇಕು ಎಂದು ಸಲಹೆ ನೀಡಿದರು. ನಿವೃತ್ತ ಪ್ರಾಂಶುಪಾಲ ಜಿ. ಅನಿಲಕುಮಾರ ಹಾಗೂ ಚಿಂತಕ ಡಿ.ಕೆ. ಮಾಳಿ ಮಾತನಾಡಿ, ಪಾಲಕರು ಮಕ್ಕಳನ್ನು ಟಿವಿ ಮತ್ತು ಮೊಬೈಲ್‌ಗಳಿಂದ ದೂರವಿಟ್ಟು ಪುಸ್ತಕ ಹಾಗೂ ಪತ್ರಿಕೆಗಳ ಓದಿಗೆ ಉತ್ತೇಜನ ನೀಡಬೇಕು. ಸರ್ಕಾರಿ ಶಾಲೆಗಳ ಸಬಲೀಕರಣದಲ್ಲಿ ಪಾಲಕರ ಸಹಕಾರ ಅತ್ಯವಶ್ಯಕ ಎಂದರು. ಸಾಹಿತಿ ಅಜಮೀರ ನಂದಾಪುರ ಅವರು ಕೃತಿಯ ಕುರಿತು ವಿವರಿಸಿದರು. ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಹನುಮೇಶ ನಾಯಕ,‌ ಎಪಿಎಂಸಿ ಮಾಜಿ ಅಧ್ಯಕ್ಷ ಡಾ.‌ಡಿ.ಎಂ.‌ಅರವಟಗಿಮಠ, ಪ್ರಮುಖರಾದ ಸಿದ್ದಪ್ಪ ನೀರ್ಲೂಟಿ, ಕವಿ ಕನಕಪ್ಪ ದಂಡೀನ್, ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ಮೆಹಬೂಬಹುಸೇನ ಮಾತನಾಡಿದರು. ಪಟ್ಟಣ ಪಂಚಾಯತ್‌ ಅಧ್ಯಕ್ಷೆ ತನುಶ್ರೀ ಟಿಜೆ. ರಾಮಚಂದ್ರ, ಕಸಾಪ ಜಿಲ್ಲಾಧ್ಯಕ್ಷ ಶರಣೆಗೌಡ ಪೊಲೀಸ್ ಪಾಟೀಲ , ಪಪಂ ಉಪಾಧ್ಯಕ್ಷ ಕಂಠಿರಂಗ ನಾಯಕ, ಪ್ರಮುಖ ಶರಣಬಸಪ್ಪ ಭತ್ತದ, ವಿರುಪಣ್ಣ‌ ಕಲ್ಲೂರು, ಶಿವರೆಡ್ಡಿ ಖ್ಯಾಡೆದ, ಮಲ್ಲಿಕಾರ್ಜುನಗೌಡ, ವೆಂಕಟೇಶ ಕುಲಕರ್ಣಿ, ತಾ.ಪಂ ಮಾಜಿ ಅಧ್ಯಕ್ಷ ಬಸಂತಗೌಡ, ಉಪ ಪ್ರಾಂಶುಪಾಲ ಜಗದೀಶ ಹಾದಿಮನಿ, ಜೆಸ್ಕಾಂ ನಿವೃತ್ತ ಅಧಿಕಾರಿ ಜಂಬಣ್ಣ ದಂಡಿನ, ತಾ.ಪಂ ಪ್ರಭಾರ ಇಒ ರಾಜಶೇಖರ , ಸಿಡಿಪಿಒ ವಿರೂಪಾಕ್ಷಯ್ಯ, ನೌಕರ ಸಂಘದ ತಾಲ್ಲೂಕು ಅಧ್ಯಕ್ಷೆ ಶಂಶಾದಬೇಗ್ಂ, ಪ್ರಭಾರ ಪ್ರಾಂಶುಪಾಲ ಅಮರೇಶ ದೇವರಾಳ, ಕನ್ನಡ ಜಾಗೃತಿ ಸಮಿತಿ ಸದಸ್ಯ ಈಶ್ವರ ಹಲಗಿ, ಆದರ್ಶ ಶಾಲೆಯ ಮುಖ್ಯಶಿಕ್ಷಕ ಶಿವಕುಮಾರ ಇದ್ದರು. ಗಾಯಕ ಮೆಹಬೂಬ ಕಿಲ್ಲೇದಾರ ಅವರಿಂದ ಜನಪದ ಸಂಭ್ರಮ ಕಾರ್ಯಕ್ರಮ ನಡೆಯಿತು. ಈ ಸಮಯದಲ್ಲಿ ಮೆಹಬೂಬಹುಸೇನ‌ ಬೇವಿನಾಳ, ಮಂಜುನಾಥರೆಡ್ಡಿ ಮಾದಿನಾಳ, ಮಾರುತಿ ಪೂಜಾರ, ಯಂಕೋಬ ಸಂಕನಾಳ, ದುರಗಪ್ಪ ವಣಿಕೇರಿ,‌ ಜಯಲಕ್ಷ್ಮೀ ವಾಲ್ಮೀಕಿ, ಛತ್ರಪ್ಪ ತಂಬೂರಿ, ಎಂ. ಬಿ.‌ಕುಕನೂರು, ಡಿ.‌ಕನಕಪ್ಪ, ಶಾಮೀದಸಾಬ ಲೈನದಾರ, ಮಲ್ಲಿಕಾರ್ಜುನ ಮಸಾರಿಕ್ಯಾಂಪ್ ಸಾಧಕರನ್ನು ಸನ್ಮಾನಿಸಲಾಯಿತು. ಪ್ರತಿಮಾ‌ ಪ್ರಾರ್ಥಿಸಿದರು. ಭವಾನಿ ಸಂಗಡಿಗರು ನಾಡಗೀತೆ ಹಾಡಿದರು. ಬಾಲಾಜಿ ಸ್ವಾಗತಿಸಿದರು. ಪರಸಪ್ಪ ಹೊರಪೇಟೆ ವಂದಿಸಿದರು.

ವಾರ್ತಾ ಭಾರತಿ 20 Feb 2026 9:32 pm

ಉಡುಪಿ : ಪೊಲೀಸ್ ಇಲಾಖೆಗೆ ಜೀಪು ಹಸ್ತಾಂತರ

ಉಡುಪಿ, ಫೆ.20: ಕೊಂಕಣ ರೈಲ್ವೆ ಕಾರ್ಪೋರೇಶನ್ ಲಿಮಿಟೆಡ್ ಸಂಸ್ಥೆಯ ವತಿಯಿಂದ ಸಂಸ್ಥೆಯ ಸಿಎಸ್‌ಆರ್ ಅಡಿಯಲ್ಲಿ ಉಡುಪಿ ಜಿಲ್ಲಾ ಪೊಲೀಸ್ ಇಲಾಖೆಗೆ ಬೊಲೆರೋ ಜೀಪ್ ವಾಹನವನ್ನು ಹಸ್ತಾಂತರಿಸಲಾಯಿತು. ಜಿಲ್ಲಾ ಪೊಲೀಸ್ ಅಧೀಕ್ಷಕರ ಕಚೇರಿಯಲ್ಲಿ ಶುಕ್ರವಾರ ಈ ವಾಹನವನ್ನು ಕಾರವಾರ ರೀಜನಲ್ ರೈಲ್ವೆ ಮ್ಯಾನೇಜರ್ ಆಶಾ ಶೆಟ್ಟಿ, ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರ ಉಪಸ್ಥಿತಿಯಲ್ಲಿ ಅಧಿಕೃತವಾಗಿ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಮ್ ಶಂಕರ್ ಅವರಿಗೆ ವಾಹನವನ್ನು ಹಸ್ತಾಂತರಿಸಿದರು.

ವಾರ್ತಾ ಭಾರತಿ 20 Feb 2026 9:30 pm

ಕರ್ತವ್ಯ ನಿರತ ಖಾಸಗಿ ಬಸ್ ನಿರ್ವಾಹಕನ ಮೇಲೆ ಹಲ್ಲೆ: ಕಾನೂನು ಕ್ರಮಕ್ಕೆ ಮನವಿ

ಬಂಟ್ವಾಳ, ಫೆ.20: ಕರ್ತವ್ಯ ನಿರತ ಖಾಸಗಿ ಬಸ್ ನಿರ್ವಾಹಕನ ಮೇಲೆ ನಡೆದ ಹಲ್ಲೆಯನ್ನು ಖಂಡಿಸಿರುವ ರಾಣಿ ಅಬ್ಬಕ್ಕ ಬಸ್ ವರ್ಕರ್ಸ್ ಯೂನಿಯನ್. ಈ ಬಗ್ಗೆ ಸೂಕ್ತ ಕ್ರಮ ಜರುಗಿಸುವಂತೆ ಬಂಟ್ವಾಳ ಗ್ರಾಮಾಂತರ ಠಾಣೆಯ ಪೊಲೀಸ್ ಇನ್‌ಸ್ಪೆಕ್ಟರ್‌ಗೆ ಮನವಿ ಸಲ್ಲಿಸಿದೆ. ಹಲ್ಲೆಯಿಂದ ಗಾಯಗೊಂಡ ನಿರ್ವಾಹಕನನ್ನು ಆಸ್ಪತ್ರೆಗೆ ಭೇಟಿ ನೀಡಿ ಧೈರ್ಯ ತುಂಬಿದ ಸಂಘದ ಪದಾಧಿಕಾರಿಗಳು ಕರ್ತವ್ಯದಲ್ಲಿದ್ದ ನೌಕರರ ಮೇಲೆ ಹಲ್ಲೆ ನಡೆಸಿರುವುದು ಅಕ್ಷಮ್ಯವಾಗಿದೆ. ಆರೋಪಿಯ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು. ನೌಕರರ ಭದ್ರತೆ ಹಾಗೂ ಗೌರವ ಕಾಪಾಡುವ ನಿಟ್ಟಿನಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಪೊಲೀಸ್ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಂಘದ ಅಧ್ಯಕ್ಷ ಉಸ್ಮಾನ್ ಅಲ್ತಾಫ್ ಮನವಿ ಮಾಡಿದ್ದಾರೆ.

ವಾರ್ತಾ ಭಾರತಿ 20 Feb 2026 9:27 pm

Bengaluru | ಹಳಿ ತಪ್ಪಿದ ಚಾಲಕರಹಿತ ಮೆಟ್ರೋ ರೈಲು

ಬೆಂಗಳೂರು : ನಗರದ ಹಳದಿ ಮಾರ್ಗದಲ್ಲಿ ಸಂಚಾರ ಮಾಡುತ್ತಿರುವ ಚಾಲಕರಹಿತ ಮೆಟ್ರೋ ರೈಲು ಹಳಿ ತಪ್ಪಿದ ಘಟನೆ ಜ.15ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ ಎಂದು ವರದಿಯಾಗಿದೆ. ಹೆಬ್ಬಗೋಡಿ ಡಿಪೋದಲ್ಲಿ ಈ ಅವಘಡ ಸಂಭವಿಸಿದ್ದು, ಡಿಪೋದಿಂದ ಬೊಮ್ಮಸಂದ್ರ ಮೆಟ್ರೋ ನಿಲ್ದಾಣದತ್ತ ಸಾಗುತ್ತಿದ್ದ ವೇಳೆ ಮೂರನೇ ಚಾಲಕರಹಿತ ರೈಲು ಹಳಿ ತಪ್ಪಿರುವುದು ತಿಳಿದುಬಂದಿದೆ. ಘಟನೆಯ ಕುರಿತಾಗಿ ರೈಲು ಆಪರೇಟರ್, ಡಿಪೋ ಕಂಟ್ರೋಲರ್ ಹಾಗೂ ಇತರ ಸಿಬ್ಬಂದಿಗಳನ್ನು ತನಿಖೆಗೆ ಒಳಪಡಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಹಳಿ ತಪ್ಪಿದ ಪರಿಣಾಮ ಟ್ರ್ಯಾಕ್ ಸ್ಲೀಪರ್‍ಗಳು(ಹಳಿ ಆಧಾರಗಳು) ಹಾಗೂ ರೋಲಿಂಗ್ ಸ್ಟಾಕ್ ಘಟಕಗಳಿಗೆ ಹಾನಿಯಾಗಿದೆ. 

ವಾರ್ತಾ ಭಾರತಿ 20 Feb 2026 9:26 pm

ಬಾಗಲಕೋಟೆ ಘಟನೆ ಖಂಡನೀಯ: ಪ್ರಹ್ಲಾದ್ ಜೋಶಿ

ಕಲಬುರಗಿ: ಬಾಗಲಕೋಟೆಯಲ್ಲಿ ಛತ್ರಪತಿ ಶಿವಾಜಿ ಮಹಾರಾಜ ಅವರ ಮೂರ್ತಿಗೆ ಚಪ್ಪಲಿ ಎಸೆದ ಘಟನೆ ಖಂಡನೀಯ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ. ಕಲಬುರಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂತಹ ಘಟನೆಗಳು ಸಮಾಜದಲ್ಲಿ ಅಶಾಂತಿ ಮೂಡಿಸುತ್ತವೆ. ತಪ್ಪು ಮಾಡಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಹಿಂದೂ-ಮುಸ್ಲಿಂ ಎಂಬ ಭೇದವಿಲ್ಲದೆ ತಪ್ಪಿತಸ್ಥರನ್ನೇ ಬಂಧಿಸಬೇಕು ಎಂದು ಒತ್ತಾಯಿಸಿದರು. ರಾಜ್ಯದಲ್ಲಿ ಪೊಲೀಸರ ಮೇಲೆ ಒತ್ತಡ ಹೇರುವ ರಾಜಕೀಯ ನಡೆಯುತ್ತಿದೆ ಎಂದು ಆರೋಪಿಸಿದ ಅವರು, “ಕಾಂಗ್ರೆಸ್ ತುಷ್ಟೀಕರಣ ರಾಜಕೀಯ ಮಾಡುತ್ತಿದೆ. ಕೇವಲ ಒಂದು ಸಮುದಾಯದ ಮತಬ್ಯಾಂಕ್ ದೃಷ್ಟಿಯಿಂದ ನಡೆದುಕೊಳ್ಳುವುದು ಸರಿಯಲ್ಲ” ಎಂದು ಟೀಕಿಸಿದರು. ಎಐ ಸಮ್ಮಿಟ್ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ಕಾರ್ಯಕರ್ತರ ದಾಳಿಯನ್ನು ಖಂಡಿಸಿದ ಅವರು, “ದೇಶದ ಮಾನ-ಮರ್ಯಾದೆಗೆ ಧಕ್ಕೆಯಾಗುವಂತಹ ವರ್ತನೆ ಇದು. ಇದೇ ವೇಳೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿ, ಅವರ ಹೇಳಿಕೆಗಳು ಜವಾಬ್ದಾರಿಯುತವಾಗಿಲ್ಲ. ಅಲ್ಲದೆ, ಮಲ್ಲಿಕಾರ್ಜುನ ಖರ್ಗೆ ಅವರು ದೇಶದ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು. ಫ್ರೀ ಗ್ಯಾರೆಂಟಿ ಯೋಜನೆಗಳ ಕುರಿತು ಮಾತನಾಡಿದ ಪ್ರಹ್ಲಾದ್ ಜೋಶಿ, “ಸ್ವತಃ ಕಾಂಗ್ರೆಸ್ ನಾಯಕರು ಗ್ಯಾರೆಂಟಿಗಳಿಂದ ಅಭಿವೃದ್ಧಿ ಕಾಮಗಾರಿಗಳಿಗೆ ಹಣದ ಕೊರತೆ ಉಂಟಾಗಿದೆ ಎಂದು ಒಪ್ಪಿಕೊಂಡಿದ್ದಾರೆ. ಮುಂದೆ ಯಾವುದೇ ಪಕ್ಷ ಗ್ಯಾರೆಂಟಿ ನೀಡುವ ಮುನ್ನ ಆರ್ಥಿಕ ಪರಿಣಾಮಗಳನ್ನು ಪರಿಗಣಿಸಬೇಕು,” ಎಂದು ಹೇಳಿದರು.

ವಾರ್ತಾ ಭಾರತಿ 20 Feb 2026 9:24 pm

ಥರ್ಮೋಬಾರಿಕ್ ವ್ಯಾಕ್ಯೂಮ್ ಬಾಂಬ್ ಬಳಸಿ 2,842 ಗಾಝಾ ನಿವಾಸಿಗಳನ್ನು 'ಆವಿಯಾಗಿಸಿತೇ' ಇಸ್ರೇಲ್? ಏನಿದು ಥರ್ಮೋಬಾರಿಕ್ ಶಸ್ತ್ರಾಸ್ತ್ರ?

ಗಾಝಾ ನಿವಾಸಿಗಳ ಮೇಲೆ ಇಸ್ರೇಲ್ ನಿಷೇಧಿತ ಅಧಿಕ-ತಾಪಮಾನದ ಥರ್ಮೋಬಾರಿಕ್ ವ್ಯಾಕ್ಯೂಮ್ ಬಾಂಬ್ ಬಳಸಿದೆ ಎಂದು Aljazeera ವರದಿ ಮಾಡಿದೆ. ಅ.2023 ರಿಂದ ಸುಮಾರು 2,842 ಜನರು ಕಣ್ಮರೆಯಾಗಿದ್ದಾರೆ ಎಂದು ಗಾಝಾ ನಾಗರಿಕ ರಕ್ಷಣಾ ತಂಡಗಳು ದಾಖಲಿಸಿವೆ ಎಂದು Aljazeera ನಡೆಸಿದ ತನಿಖಾ ವರದಿ ಹೇಳಿದೆ. ತನಿಖೆಯ ಪ್ರಕಾರ, ದಾಳಿ ನಡೆದ ಸ್ಥಳಗಳಲ್ಲಿ ಈ ಜನರು ಕಣ್ಮರೆಯಾಗಿದ್ದಾರೆ. ಕ್ಷಿಪಣಿ ದಾಳಿಯಲ್ಲಿ ಕಣ್ಮರೆಯಾದವರನ್ನು ಗುರುತಿಸಲು ತನಿಖೆಯು method of elimination ವಿಧಾನವನ್ನು ಬಳಸುತ್ತದೆ. ಗುರಿಯಿಟ್ಟ ಕಟ್ಟಡದೊಳಗೆ ಎಷ್ಟು ಜನರಿದ್ದಾರೆಂದು ತಂಡಗಳು ಮೊದಲು ನಿಖರವಾಗಿ ನಿರ್ಧರಿಸುತ್ತವೆ. ನಂತರ ಆ ಸಂಖ್ಯೆಯನ್ನು ಅಲ್ಲಿ ಪತ್ತೆಯಾದ ಶವಗಳೊಂದಿಗೆ ಹೋಲಿಸುತ್ತವೆ. ಒಂದು ಕುಟುಂಬವು ಐದು ಜನರು ಇದ್ದಾರೆ ಎಂದು ದೃಢಪಡಿಸಿದ್ದರೆ, ಅಲ್ಲಿ ಕೇವಲ ಮೂರು ಶವಗಳು ಕಂಡುಬಂದರೆ, ಸಮಗ್ರ ಹುಡುಕಾಟವು ಯಾವುದೇ ಅವಶೇಷಗಳನ್ನು ಪತ್ತೆಹಚ್ಚಲು ವಿಫಲವಾದ ನಂತರವೇ ಉಳಿದ ಎರಡು ಶವಗಳು ಆವಿಯಾಗಿವೆ ಎಂದು ವರ್ಗೀಕರಿಸಲಾಗುತ್ತದೆ. ಈ ಸಂದರ್ಭಗಳಲ್ಲಿ ಉಳಿದಿರುವ ಏಕೈಕ ಪುರಾವೆಗಳು ಗೋಡೆಗಳ ಮೇಲೆ ರಕ್ತದ ಗುರುತುಗಳು ಅಥವಾ ದೇಹದ ಸಣ್ಣ ತುಣುಕುಗಳಂತಹ ಕುರುಹುಗಳಾಗಿರುತ್ತವೆ ಎಂದು ಗಾಝಾ ನಾಗರಿಕ ರಕ್ಷಣಾ ವಕ್ತಾರ ಮಹಮೂದ್ ಬಸಲ್ ವಿವರಿಸಿದ್ದಾರೆ. ಥರ್ಮೋಬಾರಿಕ್ ಅಥವಾ ನಿರ್ವಾತ ಬಾಂಬ್‌ಗಳು ಎಂದರೇನು? ನಿರ್ವಾತ ಅಥವಾ ಏರೋಸಾಲ್ ಬಾಂಬ್‌ಗಳು ಎಂದೂ ಕರೆಯಲ್ಪಡುವ ಥರ್ಮೋಬಾರಿಕ್ ಅಥವಾ ಥರ್ಮಲ್ ಬಾಂಬ್‌ಗಳು ವಿಷಕಾರಿ ಪುಡಿ ಲೋಹಗಳು ಮತ್ತು ಸಾವಯವ ಪದಾರ್ಥಗಳನ್ನು ಒಳಗೊಂಡ ವಿವಿಧ ಇಂಧನಗಳಿಂದ ಕೂಡಿರುತ್ತವೆ. ಇದು ಸ್ಫೋಟಿಸಿದ ನಂತರ ಆಮ್ಲಜನಕದ ಸಹಾಯದಿಂದ ದೊಡ್ಡ ಪ್ರಮಾಣದ ಬೆಂಕಿ ಹೊತ್ತಿಕೊಳ್ಳುತ್ತದೆ. ಇದರಿಂದ ತೀವ್ರ ತಾಪಮಾನ ಮತ್ತು ಒತ್ತಡದ ಅಲೆಗಳು ಉಂಟಾಗುತ್ತವೆ. Aljazeera ಜೊತೆ ಮಾತನಾಡಿದ ರಷ್ಯಾದ ಮಿಲಿಟರಿ ತಜ್ಞ ವಾಸಿಲಿ ಫಟಿಗರೋವ್, ಈ ಶಸ್ತ್ರಾಸ್ತ್ರಗಳು ಕೇವಲ ಕೊಲ್ಲುವುದಲ್ಲ, ಅವು ವಸ್ತುವನ್ನೇ ಅಳಿಸಿಹಾಕುತ್ತವೆ ಎಂದು ಹೇಳಿದ್ದಾರೆ. ಥರ್ಮೋಬಾರಿಕ್ ಬಾಂಬ್‌ನಲ್ಲಿ ಎರಡು ಹಂತದ ಸ್ಫೋಟ ಉಂಟಾಗುತ್ತದೆ. ಮೊದಲ ಹಂತದಲ್ಲಿ ಇಂಧನ ಅಥವಾ ಸೂಕ್ಷ್ಮ ಕಣಗಳು ಗಾಳಿಯಲ್ಲಿ ಹರಡುತ್ತವೆ. ನಂತರ ಸ್ಫೋಟ ಸಂಭವಿಸುತ್ತದೆ. ಈ ಸ್ಫೋಟವು ಆಮ್ಲಜನಕದೊಂದಿಗೆ ಸೇರಿ ಬೆಂಕಿಯುಂಡೆಯಾಗಿ ಮಾರ್ಪಡುತ್ತದೆ. ಸ್ಫೋಟದ ತಾಪಮಾನವು 3,500 ಡಿಗ್ರಿ ಸೆಲ್ಸಿಯಸ್ ವರೆಗೆ ತಲುಪಬಹುದು. ಹೆಚ್ಚು ಹೊತ್ತು ಉರಿಯುವಂತೆ ಮಾಡಲು ಅಲ್ಯೂಮಿನಿಯಂ, ಮೆಗ್ನೀಸಿಯಮ್ ಮತ್ತು ಟೈಟಾನಿಯಂ ಪುಡಿಗಳನ್ನು ರಾಸಾಯನಿಕ ಮಿಶ್ರಣಕ್ಕೆ ಸೇರಿಸಲಾಗುತ್ತದೆ. ಇದರಿಂದ ಸ್ಫೋಟದ ತಾಪಮಾನವು 2,500 ರಿಂದ 3,000 ಡಿಗ್ರಿ ಸೆಲ್ಸಿಯಸ್‌ಗೆ ಹೆಚ್ಚುತ್ತದೆ ಎಂದು ಫಟಿಗರೋವ್ ತಿಳಿಸಿದ್ದಾರೆ. ಈ ಶಾಖವು ಹೆಚ್ಚಾಗಿ TNT ಮತ್ತು ಅಲ್ಯೂಮಿನಿಯಂ ಪುಡಿಯ ಮಿಶ್ರಣದಿಂದ ಉತ್ಪತ್ತಿಯಾಗುತ್ತದೆ. ಇದನ್ನು ಟ್ರೈಟೋನಲ್ ಎಂದು ಕರೆಯಲಾಗುತ್ತದೆ. ಇದನ್ನು ಹೆಚ್ಚಾಗಿ MK-84 ನಂತಹ ಅಮೆರಿಕ ನಿರ್ಮಿತ ಶಸ್ತ್ರಾಸ್ತ್ರಗಳಲ್ಲಿ ಬಳಸಲಾಗುತ್ತದೆ. Aljazeera ವರದಿಯು ಗಾಝಾದಲ್ಲಿರುವ ಅಲ್-ತಾಬಿನ್ ಶಾಲೆಯನ್ನು ಉದಾಹರಣೆಯಾಗಿ ಉಲ್ಲೇಖಿಸಿದೆ. ಇಸ್ರೇಲಿ ದಾಳಿಯ ನಂತರ, ದಾಳಿಯ ಮೊದಲು ಸ್ಥಳದಲ್ಲಿದ್ದ ಜನರ ಶವಗಳನ್ನು ಕುಟುಂಬಗಳಿಗೆ ಹುಡುಕಲು ಸಾಧ್ಯವಾಗಲಿಲ್ಲ ಎಂದು ವರದಿ ಹೇಳಿದೆ. ಗಾಝಾದಲ್ಲಿರುವ ಪ್ಯಾಲೆಸ್ಟೀನಿಯನ್ ಆರೋಗ್ಯ ಸಚಿವಾಲಯದ ಮಹಾನಿರ್ದೇಶಕ ಡಾ. ಮುನೀರ್ ಅಲ್-ಬರ್ಷ್ ಅವರು, ನೀರಿನ ಕುದಿಯುವ ಬಿಂದು 100 ಡಿಗ್ರಿ ಸೆಲ್ಸಿಯಸ್ ಆಗಿದೆ. ದೇಹವು ಬೃಹತ್ ಒತ್ತಡ ಮತ್ತು ಆಕ್ಸಿಡೇಶನ್ ಸೇರಿ 3,000 ಡಿಗ್ರಿಗಿಂತ ಹೆಚ್ಚಿನ ಶಕ್ತಿಗೆ ಒಡ್ಡಿಕೊಂಡಾಗ ದ್ರವಗಳು ತಕ್ಷಣವೇ ಕುದಿಯುತ್ತವೆ. ಆಗ ಅಂಗಾಂಶಗಳು ಆವಿಯಾಗಿ ಬೂದಿಯಾಗುತ್ತವೆ ಎಂದು ತಿಳಿಸಿದ್ದಾರೆ. ಶಸ್ತ್ರಾಸ್ತ್ರಗಳನ್ನು ವಿಶಾಲ ಪ್ರದೇಶದಲ್ಲಿ ದೊಡ್ಡ ಸ್ಫೋಟ ಉಂಟುಮಾಡುವಂತೆ ವಿನ್ಯಾಸಗೊಳಿಸಲಾಗಿದೆ. ಸಾಂಪ್ರದಾಯಿಕ ಸ್ಫೋಟಕಗಳಂತೆ ಇಲ್ಲಿ ಸಹ ಅತಿಯಾದ ಒತ್ತಡದಿಂದ ಹಾನಿ ಉಂಟಾಗುತ್ತದೆ. ಗಾಝಾದಲ್ಲಿ ಬಳಸಲಾದ ಮೂರು ವಿಭಿನ್ನ ಯುಎಸ್ ನಿರ್ಮಿತ ಬಾಂಬ್‌ಗಳು MK-84 'ಹ್ಯಾಮರ್': 3,500 ಡಿಗ್ರಿ ಸೆಲ್ಸಿಯಸ್ ವರೆಗೆ ಶಾಖ ಉತ್ಪಾದಿಸುವ ಟ್ರೈಟೋನಲ್‌ನಿಂದ ತುಂಬಿದ ದೊಡ್ಡ ಬಾಂಬ್. BLU-109 ಬಂಕರ್ ಬಸ್ಟರ್: PBXN-109 ಸ್ಫೋಟಕ ಮಿಶ್ರಣವನ್ನು ಬಳಸಿಕೊಂಡು ಸ್ಫೋಟಗೊಳ್ಳುವ ಮೊದಲು ಸ್ವತಃ ನೆಲದೊಳಗೆ ಹೂತುಹೋಗುವ ಬಾಂಬ್. GBU-39: ಇದು ನಿಖರ-ನಿರ್ದೇಶಿತ ಬಾಂಬ್ ಆಗಿದ್ದು, ಕಟ್ಟಡವನ್ನು ಸಂಪೂರ್ಣವಾಗಿ ಧ್ವಂಸಗೊಳಿಸದೆ ಕೋಣೆಯೊಳಗಿನವರನ್ನು ಕೊಲ್ಲುವಂತೆ ವಿನ್ಯಾಸಗೊಳಿಸಲಾಗಿದೆ. ರಚನೆಗಳನ್ನು ಪುಡಿಮಾಡಲು ಬೃಹತ್ ಸ್ಫೋಟವನ್ನು ಅವಲಂಬಿಸುವ ಬದಲು, ಇದು AFX-757 ಎಂಬ ವಿಶೇಷ ಸ್ಫೋಟಕವನ್ನು ಬಳಸುತ್ತದೆ. ಮೊದಲಿಗೆ ಹೆಚ್ಚಿನ ತೀವ್ರತೆಯ ಒತ್ತಡದ ತರಂಗವು ಶ್ವಾಸಕೋಶದಂತಹ ಆಂತರಿಕ ಅಂಗಗಳನ್ನು ಛಿದ್ರಗೊಳಿಸುತ್ತದೆ. ನಂತರ ತಕ್ಷಣವೇ ಉಷ್ಣ ತರಂಗ ಬಂದು ಮಾನವ ಅಂಗಾಂಶವನ್ನು ಸುಡುವ ಸಾಮರ್ಥ್ಯವಿರುವ ತೀವ್ರ ಶಾಖವನ್ನು ಉಂಟುಮಾಡುತ್ತದೆ. ಅಲ್-ತಾಬಿನ್ ಶಾಲೆಯ ದಾಳಿಯಲ್ಲಿ GBU-39 ತುಣುಕುಗಳು ಪತ್ತೆಯಾಗಿವೆ ಎಂದು ವರದಿ ಹೇಳಿದೆ. ಅವುಗಳನ್ನು ಎಲ್ಲಿ ಬಳಸಲಾಗಿದೆ? ದ್ವಿತೀಯ ಮಹಾಯುದ್ಧದ ಸಂದರ್ಭದಲ್ಲಿ ಜರ್ಮನ್ ಸೈನ್ಯ ಥರ್ಮೋಬಾರಿಕ್ ಬಾಂಬ್ ಬಳಸಿತ್ತು. 1960ರ ದಶಕದಲ್ಲಿ ಅಮೆರಿಕ ವಿಯೆಟ್ನಾಂ ಯುದ್ಧದಲ್ಲಿ ಅವುಗಳನ್ನು ಬಳಸಿದಾಗ ಅವು ವ್ಯಾಪಕವಾಗಿ ಅಭಿವೃದ್ಧಿಪಡಿಸಲ್ಪಟ್ಟವು. 1960ರ ದಶಕದಿಂದಲೂ ರಷ್ಯಾ ಮತ್ತು ಪಾಶ್ಚಿಮಾತ್ಯ ಪಡೆಗಳು ಈ ಬಾಂಬ್‌ಗಳನ್ನು ಬಳಸುತ್ತಿವೆ. ಅಮೆರಿಕವು ಅವುಗಳನ್ನು ಅಫ್ಘಾನಿಸ್ತಾನದಲ್ಲಿ ಬಳಸಿತ್ತು. 2001ರಲ್ಲಿ ಟೋರಾ ಬೋರಾ ಪರ್ವತಗಳ ಗುಹೆಗಳಲ್ಲಿ ಅಡಗಿದ್ದ ಅಲ್-ಖೈದಾ ಪಡೆಗಳ ವಿರುದ್ಧ ಮತ್ತು 2017ರಲ್ಲಿ ಇಸ್ಲಾಮಿಕ್ ಸ್ಟೇಟ್ ವಿರುದ್ಧ. ರಷ್ಯಾವು ಸಣ್ಣ ಯುದ್ಧತಂತ್ರದ ಶಸ್ತ್ರಾಸ್ತ್ರಗಳಿಂದ ಹಿಡಿದು ಬೃಹತ್ ಬಾಂಬ್‌ಗಳವರೆಗೆ ಹಲವು ವ್ಯವಸ್ಥೆಗಳನ್ನು ಹೊಂದಿದೆ. ಡಾನ್‌ಬಾಸ್ ಪ್ರದೇಶದಲ್ಲಿ ರಷ್ಯಾ ಬೆಂಬಲಿತ ಪ್ರತ್ಯೇಕತಾವಾದಿಗಳು ಇದನ್ನು ಹಲವು ವರ್ಷಗಳಿಂದ ಬಳಸುತ್ತಿದ್ದಾರೆ ಎಂದು ಆಸ್ಟ್ರೇಲಿಯನ್ ಸ್ಟ್ರಾಟೆಜಿಕ್ ಪಾಲಿಸಿ ಇನ್‌ಸ್ಟಿಟ್ಯೂಟ್‌ನ ಹಿರಿಯ ವಿಶ್ಲೇಷಕ ಡಾ. ಮಾರ್ಕಸ್ ಹೆಲ್ಲಿಯರ್ ತಿಳಿಸಿದ್ದಾರೆ. 1999ರಲ್ಲಿ ಚೆಚೆನ್ಯಾ ಯುದ್ಧದಲ್ಲಿ ರಷ್ಯಾ ಅವುಗಳನ್ನು ಬಳಸಿದ್ದು, ಮಾನವ ಹಕ್ಕುಗಳ ಆಯೋಗ ಇದನ್ನು ಖಂಡಿಸಿತ್ತು. ಸಿರಿಯನ್ ಅಂತರ್ಯುದ್ಧದಲ್ಲಿ ಬಶರ್ ಅಲ್-ಅಸ್ಸಾದ್ ಆಡಳಿತವು ರಷ್ಯಾ ನಿರ್ಮಿತ ಥರ್ಮೋಬಾರಿಕ್ ಶಸ್ತ್ರಾಸ್ತ್ರಗಳನ್ನು ಬಳಸಿದೆ ಎಂದು ವರದಿಯಾಗಿದೆ. 2022ರಲ್ಲಿ ಉಕ್ರೇನ್ ಯುದ್ಧದ ಆರಂಭದಲ್ಲಿ ರಷ್ಯಾ ಥರ್ಮೋಬಾರಿಕ್ ಶಸ್ತ್ರಾಸ್ತ್ರಗಳನ್ನು ಬಳಸಿದೆ ಎಂದು ಉಕ್ರೇನಿಯನ್ ಸರ್ಕಾರ ಆರೋಪಿಸಿತ್ತು. ಥರ್ಮೋಬಾರಿಕ್ ಶಸ್ತ್ರಾಸ್ತ್ರಗಳನ್ನು ನಿಷೇಧಿಸಲಾಗಿದೆಯೇ? ಥರ್ಮೋಬಾರಿಕ್ ಶಸ್ತ್ರಾಸ್ತ್ರಗಳನ್ನು ಅಂತರರಾಷ್ಟ್ರೀಯ ಕಾನೂನಿನಡಿಯಲ್ಲಿ ನಿರ್ದಿಷ್ಟವಾಗಿ ನಿಷೇಧಿಸಲಾಗಿಲ್ಲ. ಆದರೆ ಅಂತರರಾಷ್ಟ್ರೀಯ ಮಾನವೀಯ ಕಾನೂನು ಈ ಶಸ್ತ್ರಾಸ್ತ್ರಗಳ ಬಳಕೆಯನ್ನು ಎರಡು ಪ್ರಮುಖ ತತ್ವಗಳ ಮೂಲಕ ನಿಯಂತ್ರಿಸುತ್ತದೆ: ವ್ಯತ್ಯಾಸ (Distinction) ಮತ್ತು ಅನುಪಾತ (Proportionality). ಈ ನಿಯಮಗಳ ಪ್ರಕಾರ, ಮಿಲಿಟರಿ ಪಡೆಗಳು ಬಾಂಬ್ ಬಳಸುವ ಮೊದಲು ನಾಗರಿಕರನ್ನು ಮಿಲಿಟರಿ ಗುರಿಗಳಿಂದ ಬೇರ್ಪಡಿಸುವ ಅಗತ್ಯವಿದೆ. ನೇರ ಮಿಲಿಟರಿ ಲಾಭಕ್ಕೆ ಹೋಲಿಸಿದರೆ ನಿರೀಕ್ಷಿತ ನಾಗರಿಕ ಸಾವುನೋವುಗಳು ವಿಪರೀತವಾಗಿರುವಲ್ಲಿ ದಾಳಿಗಳನ್ನು ನಡೆಸುವುದು ನಿಷೇಧಿಸಲಾಗಿದೆ. ಈ ಸ್ಫೋಟಕಗಳು ಬೃಹತ್ ಹಾಗೂ ನಿಯಂತ್ರಿಸಲಾಗದ ಸ್ಫೋಟವನ್ನು ಉಂಟುಮಾಡುವ ಸಾಧ್ಯತೆಯಿರುವುದರಿಂದ, ಜನನಿಬಿಡ ಪ್ರದೇಶಗಳಲ್ಲಿ ಅವುಗಳ ಬಳಕೆಯ ಬಗ್ಗೆ ಮಾನವ ಹಕ್ಕುಗಳ ಸಂಸ್ಥೆಗಳು ಕಳವಳ ವ್ಯಕ್ತಪಡಿಸಿವೆ.

ವಾರ್ತಾ ಭಾರತಿ 20 Feb 2026 9:22 pm

S I R : ಗುಜರಾತ್, ಲಕ್ಷದ್ವೀಪ, ಪುದುಚೇರಿಯಲ್ಲಿ ಮತದಾರರ ಪಟ್ಟಿಯಿಂದ 69 ಲಕ್ಷ ಮತದಾರರು ಹೊರಕ್ಕೆ: ಚುನಾವಣಾ ಆಯೋಗದ ಅಂಕಿ-ಅಂಶಗಳಲ್ಲಿ ಬಹಿರಂಗ

ಹೊಸದಿಲ್ಲಿ, ಫೆ. 20: ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್)ಯ ಬಳಿಕ, ಗುಜರಾತ್, ಲಕ್ಷದ್ವೀಪ ಮತ್ತು ಪುದುಚೇರಿಯ ಮತದಾರರ ಪಟ್ಟಿಗಳಿಂದ ಸುಮಾರು 69 ಲಕ್ಷ ಹೆಸರುಗಳನ್ನು ತೆಗೆದುಹಾಕಲಾಗಿದೆ. ಚುನಾವಣಾ ಆಯೋಗವು ಶುಕ್ರವಾರ ಈ ಸಂಬಂಧಿ ಅಂಕಿಅಂಶಗಳನ್ನು ಬಿಡುಗಡೆ ಗೊಳಿಸಿದೆ. ಕಳೆದ ವರ್ಷದ ಅಕ್ಟೋಬರ್ 27ರಂದು ವಿಶೇಷ ತೀವ್ರ ಪರಿಷ್ಕರಣೆಯನ್ನು ಘೋಷಿಸಿದ ಬಳಿಕ, ಗುಜರಾತ್ ಮತ್ತು ಎರಡು ಕೇಂದ್ರಾಡಳಿತ ಪ್ರದೇಶಗಳ ಒಟ್ಟು ಮತದಾರರ ಸಂಖ್ಯೆ 5.19 ಕೋಟಿ ಆಗಿತ್ತು. ಪರಿಷ್ಕರಣೆಯ ಬಳಿಕ ಪ್ರಕಟಿಸಲಾದ ಅಂತಿಮ ಪಟ್ಟಿಗಳಲ್ಲಿ ಒಟ್ಟು ಮತದಾರರ ಸಂಖ್ಯೆ 4.50 ಕೋಟಿ ಆಗಿದೆ. ಅಂದರೆ ಮತದಾರರ ಸಂಖ್ಯೆ ಮೊದಲಿನ ಪಟ್ಟಿಗಿಂತ 68.9 ಲಕ್ಷ ಕಡಿಮೆ ಆಗಿದೆ. ಎಸ್‌ಐಆರ್ ಮೊದಲು, ಗುಜರಾತ್ ಮತದಾರರ ಪಟ್ಟಿಯಲ್ಲಿ 5.08 ಕೋಟಿ ಮತದಾರರಿದ್ದಿರು. ಈಗ ಪಟ್ಟಿಯು 4.40 ಕೋಟಿಗೆ ಇಳಿದಿದೆ. ಪಟ್ಟಿಯಿಂದ 68.12 ಲಕ್ಷ, ಅಂದರೆ 13.40 ಶೇಕಡ ಮತದಾರರು ಹೊರಬಿದ್ದಿದ್ದಾರೆ. ಲಕ್ಷದ್ವೀಪದಲ್ಲಿ, ಮೊದಲು 57,813 ಮತದಾರರಿದ್ದರು. ಈಗ ಅದು 57,607ಕ್ಕೆ ಇಳಿದಿದೆ. 206, ಅಂದರೆ 0.36 ಶೇಕಡ ಮತದಾರರು ಪಟ್ಟಿಯಿಂದ ಹೊರಬಿದ್ದಿದ್ದಾರೆ. ಚುನಾವಣೆಗೆ ಸಜ್ಜಾಗುತ್ತಿರುವ ಪುದುಚೇರಿಯಲ್ಲಿ, ಎಸ್‌ಐಆರ್‌ಗಿಂತ ಮೊದಲು 10.21 ಲಕ್ಷ ಮತದಾರರಿದ್ದರು. ಈಗ ಅದು 9.44 ಲಕ್ಷಕ್ಕೆ ಇಳಿದಿದೆ. 7.57 ಶೇಕಡ ಮತದಾರರು ಹೊರಬಿದ್ದಿದ್ದಾರೆ.

ವಾರ್ತಾ ಭಾರತಿ 20 Feb 2026 9:21 pm

Kalaburagi | ಜೀವ ರಕ್ಷಣೆ ಪ್ರತಿಯೊಬ್ಬ ವ್ಯಕ್ತಿಯ ಜವಾಬ್ದಾರಿ: ಡಾ.ಸಂಗಮೇಶ ಶೇರಿ

ಪ್ರಥಮ ಚಿಕಿತ್ಸಾ ತರಬೇತಿ ಕಾರ್ಯಕ್ರಮ

ವಾರ್ತಾ ಭಾರತಿ 20 Feb 2026 9:21 pm

ಕರ್ನಾಟಕ ಬ್ಯಾಂಕಿನಿಂದ ಉಚಿತ ವೈದ್ಯಕೀಯ ತಪಾಸಣೆ, ರಕ್ತದಾನ ಶಿಬಿರ

ಉಡುಪಿ, ಫೆ.20: ಕರ್ನಾಟಕ ಬ್ಯಾಂಕಿನ ಉಡುಪಿ ವಲಯ ಕಚೇರಿ ವತಿಯಿಂದ ಬ್ಯಾಂಕಿನ 102ನೇ ಸಂಸ್ಥಾಪಕರ ದಿನಾಚರಣೆ ಅಂಗವಾಗಿ ಜಿಲ್ಲಾ ಆಸ್ಪತ್ರೆಯ ರಕ್ತ ನಿಧಿ ಕೇಂದ್ರ, ಜಿಲ್ಲಾ ಆಸ್ಪತ್ರೆ ಎನ್‌ಸಿಡಿ ವಿಭಾಗ ಮತ್ತು ಗಾಂಧಿ ಆಸ್ಪತ್ರೆಯ ಸಂಯುಕ್ತ ಆಶ್ರಯದಲ್ಲಿ, ಉಡುಪಿಯ ಅಂಬಾಗಿಲಿನ ಕರ್ನಾಟಕ ಬ್ಯಾಂಕಿನ ಉಡುಪಿ ವಲಯ ಕಚೇರಿಯಲ್ಲಿ ಬುಧವಾರ ಉಚಿತ ವೈದ್ಯಕೀಯ ತಪಾಸಣೆ ಮತ್ತು ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮ ಉದ್ಘಾಟಿಸಿದ ಕರ್ನಾಟಕ ಬ್ಯಾಂಕಿನ ನಿರ್ದೇಶಕ ಬಾಲಕೃಷ್ಣ ಹಲಸೆ ಮಾತನಾಡಿ, ರಕ್ತದಾನದಂತಹ ಮಹಾನ್ ಕಾರ್ಯದಲ್ಲಿ ಅರ್ಹರು ಪಾಲ್ಗೊಳ್ಳುವುದರೊಂದಿಗೆ, ರಕ್ತದ ಅವಶ್ಯಕತೆ ಇರುವವರಿಗೆ ನೆರವಾಗುವ ಸಾಮಾಜಿಕ ಕಾರ್ಯದಲ್ಲಿ ಬ್ಯಾಂಕಿನೊಂದಿಗೆ ಕೈ ಜೋಡಿಸಬೇಕು ಎಂದರು. ಜಿಲ್ಲಾ ಆಸ್ಪತ್ರೆಯ ಜಿಲ್ಲಾ ಸರ್ಜನ್ ಡಾ.ಹೆಚ್ ಅಶೋಕ್ ಮಾತನಾಡಿ, ರಕ್ತದಾನ ಮನುಷ್ಯನ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ. ದೇಶದಲ್ಲಿ ಪ್ರತಿವರ್ಷ 41 ದಶಲಕ್ಷ ಯುನಿಟ್ ರಕ್ತದ ಕೊರತೆ ಎದುರಾಗುತ್ತಿದೆ. ಸಮಯಕ್ಕೆ ಸರಿಯಾಗಿ ರಕ್ತ ಸಿಗದೆ ವಿವಿಧ ಕಾಯಿಲೆಗಳಿಂದ ಬಳಲುತ್ತಿರುವ ರೋಗಿಗಳು, ಅಪಘಾತದ ಗಾಯಾಳುಗಳು ಮೃತಪಡುತ್ತಿದ್ದಾರೆ. ಅಮೂಲ್ಯವಾದ ಜೀವಗಳನ್ನು ಉಳಿಸಲು ರಕ್ತದಾನ ಅತಿ ಅಗತ್ಯವಾಗಿದ್ದು, ಪ್ರತಿಯೊಬ್ಬರೂ ಸ್ವಯಂ ಪ್ರೇರಿತ ರಾಗಿ ರಕ್ತದಾನ ಮಾಡಲು ಮುಂದೆ ಬರಬೇಕು ಎಂದು ಕರೆ ನೀಡಿದರು. ಗಾಂಧಿ ಆಸ್ಪತ್ರೆಯ ಮುಖ್ಯಸ್ಥ ಡಾ.ಹರಿಶ್ಚಂದ್ರ ಮಾತನಾಡಿ, ಜನಸಾಮಾನ್ಯ ರಲ್ಲಿ ರಕ್ತದಾನದ ಬಗ್ಗೆ ತಪ್ಪು ಕಲ್ಪನೆಗಳಿದ್ದು, ಇದನ್ನು ಮೊದಲು ಹೋಗಲಾಡಿ ಸಬೇಕು. ಹೆಚ್ಚು ಜನರು ಸೇರುವ ಕೇಂದ್ರಗಳಲ್ಲಿ ನಿಯಮಿತವಾಗಿ ರಕ್ತದಾನ ಶಿಬಿರ ಆಯೋಜಿಸಬೇಕು ಎಂದು ಸಲಹೆ ನೀಡಿದರು. ಕರ್ನಾಟಕ ಬ್ಯಾಂಕ್ ಉಡುಪಿ ಪ್ರಾದೇಶಿಕ ಕಛೇರಿಯ ಸಹಾಯಕ ಮಹಾ ಪ್ರಬಂಧಕ ಮತ್ತು ವಲಯ ಮುಖ್ಯಸ್ಥ ರಮೇಶ್ ವೈದ್ಯ ಮಾತನಾಡಿ, ತುರ್ತು ಪರಿಸ್ಥಿತಿಗಳಲ್ಲಿ ರಕ್ತದ ಅಗತ್ಯವಿದ್ದಾಗ ನಾವು ನಂಬುವುದು ನಮ್ಮಲ್ಲಿರುವ ಉತ್ತಮವಾದ ಬ್ಲಡ್ ಬ್ಯಾಂಕ್ ವ್ಯವಸ್ಥೆಗಳನ್ನು. ರಕ್ತದಾನ ಮಾಡುವುದರಿಂದ ನಾವು ಇನ್ನೊಬ್ಬರ ಜೀವ ಉಳಿಯಲು ಕಾರಣರಾಗುತ್ತೇವೆ ಎಂದು ಹೇಳಿದರು. ಜಿಲ್ಲಾ ಆಸ್ಪತ್ರೆಯ ರಕ್ತ ನಿಧಿ ಕೇಂದ್ರದ ಮುಖ್ಯಸ್ಥೆ ಡಾ.ವೀಣಾ ಕುಮಾರಿ ರಕ್ತದಾನ ಮಹತ್ವ ಕುರಿತು ಉಪನ್ಯಾಸ ನೀಡಿದರು.ಕಾರ್ಯಕ್ರಮದಲ್ಲಿ ಗಾಂಧಿ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ.ವ್ಯಾಸರಾಜ ತಂತ್ರಿ, ಕರ್ನಾಟಕ ಬ್ಯಾಂಕಿನ ಅಧಿಕಾರಿಗಳು ಉಪಸ್ಥಿತರಿದ್ದರು. ಕರ್ನಾಟಕ ಬ್ಯಾಂಕಿನ ಮುಖ್ಯ ಪ್ರಬಂದಕ ಸುಬ್ರಹ್ಮಣ್ಯ ಬಾರ್ವೆ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಶಿಬಿರದಲ್ಲಿ ಸುಮಾರು 50 ಮಂದಿ ರಕ್ತದಾನ ಮಾಡಿದರು. 56 ಮಂದಿ ಇಸಿಜಿ ಪರೀಕ್ಷೆ, 40 ಮಂದಿ ದಂತ ಪರೀಕ್ಷೆಗೆ, 67 ಜನರು ಮಧುಮೇಹ ಮತ್ತು ರಕ್ತದೊತ್ತಡ ಪರೀಕ್ಷೆಗೆ ಒಳಗಾದರು.

ವಾರ್ತಾ ಭಾರತಿ 20 Feb 2026 9:20 pm

ಟ್ರಂಪ್ ಜಾರಿಗೆ ತಂದಿದ್ದ ಬಹುತೇಕ ಸುಂಕ ರದ್ದು! ತುರ್ತು ಕಾನೂನು ದುರ್ಬಳಕೆಗೆ ಅಮೆರಿಕದ ಸುಪ್ರೀಂ ಕೋರ್ಟ್ ಚಾಟಿಯೇಟು

Donald Trump Tariffs- ಡೊನಾಲ್ಡ್ ಟ್ರಂಪ್ ಅವರು ತುರ್ತು ಕಾನೂನು ದುರ್ಬಳಕೆ ಮಾಡಿ ಭಾರತವೂ ಸೇರಿದಂತೆ ಬಹುತೇಕ ದೇಶಗಳಿಗೆ ವಿಪರೀತ ಸುಂಕ ಹೇರಿ ತಲೆನೋವು ಉಂಟುಮಾಡಿದ್ದರು. ಆದರೆ ಅವರು ಜಾರಿಗೊಳಿಸಿದ ಬಹುತೇಕ ಸುಂಕವನ್ನು ಅಕ್ರಮ ಎಂದು ತಿಳಿಸಿರುವ ಅಲ್ಲಿನ ಸುಪ್ರೀಂ ಕೋರ್ಟ್ ಅಮಾನ್ಯಗೊಳಿಸಿವೆ. ಹೀಗಾಗಿ ಈ ಸುಂಕನೀತಿಯಿಂದ ತತ್ತರಿಸಿದ್ದ ದೇಶಗಳು ಇದೀಗ ನಿರಾಳವಾಗಿವೆ. ಇದು ಡೊನಾಲ್ಡ್ ಟ್ರಂಪ್ ಅವರ ಆಡಳಿತ ಸರ್ಕಾರಕ್ಕೆ ಬಹುದೊಡ್ಡ ಹಿನ್ನಡೆಯಾಗಿದೆ. ಈ ತೀರ್ಪು ಎಲ್ಲಾ ಸುಂಕಗಳಿಗೆ ಅನ್ವಯಿಸುವುದಿಲ್ಲ ಎಂಬುದು ಸಹ ಗಮನಿಸಬೇಕಾದ ಅಂಶವಾಗಿದೆ.

ವಿಜಯ ಕರ್ನಾಟಕ 20 Feb 2026 9:20 pm

ಉಡುಪಿ ಅಗ್ನಿಶಾಮಕ ದಳದ ಸತೀಶ್‌ಗೆ ಕೇಂದ್ರ ಗೃಹ ಮಂತ್ರಾಲಯದ ಪದಕ

ಉಡುಪಿ, ಫೆ.20: ಕರ್ನಾಟಕ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯ ಉಡುಪಿ ಅಗ್ನಿಶಾಮಕ ಠಾಣೆಯಲ್ಲಿ ಅಗ್ನಿಶಾಮಕರಾಗಿ ಕರ್ತವ್ಯ ನಿರ್ವಸುತ್ತಿರುವ ಸತೀಶ್ ಅವರಿಗೆ, ಇಲಾಖೆಯು ಉತ್ತಮ ಹಾಗೂ ನಿಷ್ಠೆಯ ಸೇವೆಗಾಗಿ, ತುರ್ತು ಪರಿಸ್ಥಿತಿಯಲ್ಲಿ ಶ್ರೇಷ್ಠ ಕಾರ್ಯಕ್ಕಾಗಿ ಕೇಂದ್ರ ಸರಕಾರದ ಗೃಹ ಮಂತ್ರಾಲಯವು ನೀಡುವ ಪ್ರಶಸ್ತಿಯನ್ನು ಪಡೆದಿದ್ದಾರೆ. ಸತೀಶ್ ಅವರು ಈ ಪದಕವನ್ನು ರಾಜ್ಯ ಪೊಲೀಸ್ ಮಹಾನಿರ್ದೇಶಕ ಹಾಗೂ ಕರ್ನಾಟಕ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಪೊಲೀಸ್ ಮಹಾನಿರ್ದೇಶಕರ ಉಪಸ್ಥಿತಿಯಲ್ಲಿ ಇತ್ತೀಚೆಗೆ ಪಡೆದಿದ್ದಾರೆ. 2005ರಲ್ಲಿ ಕರ್ನಾಟಕ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಗೆ ಸೇರ್ಪಡೆಗೊಂಡು ಆರ್.ಎ. ಮುಂಡ್ಕೂರ್ ತರಬೇತಿ ವಿದ್ಯಾಲಯ ದಲ್ಲಿ ತರಬೇತಿ ಪಡೆದು 2006ರಲ್ಲಿ ಮೂಡಬಿದ್ರೆ ಅಗ್ನಿಶಾಮಕ ಠಾಣೆಯಲ್ಲಿ ಕರ್ತವ್ಯಕ್ಕೆ ಸೇರ್ವಡೆಗೊಂಡರು. 2018ರಲ್ಲಿ ಮೈಸೂರು ಹೆಬ್ಬಾಳ ಅಗ್ನಿಶಾಮಕ ಠಾಣೆಗೆ ಪದೋನ್ನತಿ ವರ್ಗಾವಣೆ ಪಡೆದು ಪ್ರಸ್ತುತ ಉಡುಪಿ ಅಗ್ನಿಶಾಮಕ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ತಮ್ಮ ಕರ್ತವ್ಯದ ಅವಧಿಯಲ್ಲಿ ಜನರ ಪ್ರಾಣ ಹಾಗೂ ಆಸ್ತಿಗಳ ರಕ್ಷಣೆಗಾಗಿ ಹಲವು ಪುರಸ್ಕಾರಗಳು ಹಾಗೂ ಸೆಲ್ಯೂಟ್‌ದ ಸೈಲೆಂಟ್ ಸ್ಟಾರ್ ಪ್ರಶಸ್ತಿಯನ್ನು ಪಡೆದಿದ್ದಾರೆ ಎಂದು ಜಿಲ್ಲಾ ಅಗ್ನಿಶಾಮಕ ಅಧಿಕಾರಿಗಳ ಪ್ರಕಟಣೆ ತಿಳಿಸಿದೆ.

ವಾರ್ತಾ ಭಾರತಿ 20 Feb 2026 9:18 pm

ಕೋರ್ಟ್ ಆದೇಶದ ಹೊರತಾಗಿಯೂ ಎಸ್‌ಐಟಿ ರಚಿಸಲು ವಿಫಲ; ಗೃಹ ಇಲಾಖೆ ಕಾರ್ಯದರ್ಶಿ ಖುದ್ದು ಹಾಜರಾತಿಗೆ ಹೈಕೋರ್ಟ್ ತಾಕೀತು

ಬೆಂಗಳೂರು : ನ್ಯಾಯಾಲಯ ಆದೇಶ ಹೊರಡಿಸಿ 5 ತಿಂಗಳು ಕಳೆದರೂ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಶಿಬಾಜೆ ಗ್ರಾಮದ ಸಾರಾ ಫಾರ್ಮ್ಸ್‌ ಉದ್ಯೋಗಿ ಶ್ರೀಧರ್‌ ಎಂಬುವರ ಸಾವಿನ ಪ್ರಕರಣದ ಮರು ತನಿಖೆಗೆ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸದಿರುವುದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಹೈಕೋರ್ಟ್‌, ರಾಜ್ಯ ಗೃಹ ಇಲಾಖೆ ಕಾರ್ಯದರ್ಶಿಯ ಖುದ್ದು ಹಾಜರಾತಿಗೆ ನಿರ್ದೇಶಿಸಿದೆ. ಸಾರಾ ಫಾರ್ಮ್ಸ್‌ ಮ್ಯಾನೇಜರ್‌ ಹರೀಶ್‌ ಮುಗರೆ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ನಿರ್ದೇಶನ ನೀಡಿದೆ. ಶ್ರೀಧರ್‌ ಸಾವಿನ ಪ್ರಕರಣದ ಮರು ತನಿಖೆ ಮಾಡಲು ರಾಜ್ಯ ಸರ್ಕಾರ 4 ವಾರದಲ್ಲಿ ಎಸ್ಐಟಿ ರಚನೆ ಮಾಡಬೇಕು. ತನಿಖೆ ಆರಂಭಿಸಿದ ದಿನದಿಂದ 4 ತಿಂಗಳಲ್ಲಿ ಸಂಬಂಧಪಟ್ಟ ನ್ಯಾಯಾಲಯಕ್ಕೆ ಎಸ್‌ಐಟಿ ಅಂತಿಮ ವರದಿ ಸಲ್ಲಿಸಬೇಕು ಎಂದು 2025ರ ಸೆಪ್ಟೆಂಬರ್ 9ರಂದು ಹೈಕೋರ್ಟ್‌ ಆದೇಶಿಸಿದೆ. ಆದರೆ, ಈವರೆಗೂ ಎಸ್ಐಟಿ ರಚನೆಯಾಗಿಲ್ಲ ಎಂದು ಅರ್ಜಿದಾರರ ಪರ ವಕೀಲರು ನ್ಯಾಯಾಲಯದ ಗಮನಕ್ಕೆ ತಂದಿದ್ದಾರೆ. ಆದ್ದರಿಂದ, ಈ ಕುರಿತು ವಿವರಣೆ ನೀಡಲು ಫೆಬ್ರವರಿ 21ರ (ಶನಿವಾರ) ಮಧ್ಯಾಹ್ನ 2.30ಕ್ಕೆ ರಾಜ್ಯ ಗೃಹ ಇಲಾಖೆ ಕಾರ್ಯದರ್ಶಿ ಖುದ್ದು ಹಾಜರಾಗಬೇಕು ಎಂದು ನ್ಯಾಯಪೀಠ ತಾಕೀತು ಮಾಡಿದೆ. ಪ್ರಕರಣವೇನು? ಅರ್ಜಿದಾರ ಹರೀಶ್‌ ಮುಗರೆ 2025ರ ಏಪ್ರಿಲ್‌ನಲ್ಲಿ ಹೈಕೊರ್ಟ್‌ಗೆ ರಿಟ್ ಅರ್ಜಿ ಸಲ್ಲಿಸಿ, ನಾನು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಗಂಡಿ ತಾಲೂಕಿನ ಶಿಬಾಜೆ ಗ್ರಾಮದ ಸಾರಾ ಫಾರ್ಮ್ಸ್‌ ನಲ್ಲಿ ಮ್ಯಾನೇಜರ್‌ ಆಗಿ ಕೆಲಸ ಮಾಡುತ್ತಿದ್ದೇನೆ. ನಮ್ಮ ಫಾರ್ಮ್‌ನ ಉದ್ಯೋಗಿಯಾಗಿದ್ದ ಶ್ರೀಧರ್‌ ಮೇಲೆ 2022ರ ಡಿಸೆಂಬರ್ 17ರಂದು ಕೆಲವರು ಹಲ್ಲೆ ಮಾಡಿದ್ದರು. ಆಗ ನಾನು ಆತನಿಗೆ ಚಿಕಿತ್ಸೆ ನೀಡಿ, ಫಾರ್ಮ್ ಕರೆದೊಯ್ದು ಅಲ್ಲೇ ತಂಗಲು ಸೂಚಿಸಿದ್ದೆ. ಮರು ದಿನ ಡಿಸೆಂಬರ್ 18ರಂದು ಬೆಳಗ್ಗೆ 6.30ಕ್ಕೆ ಫಾರ್ಮ್‌ಗೆ ಹೋದಾಗ, ಯಾರೋ ಕೆಲ ಆರೋಪಿಗಳು ಫೆನ್ಸ್ ತುಂಡು ಮಾಡಿ, ಒಳಗೆ ಪ್ರವೇಶಿಸಿದ್ದರು. ಶ್ರೀಧರ್‌ ಅನ್ನು ಕೊಲೆಗೈದು ಫಾರ್ಮ್‌ ಮಧ್ಯದಲ್ಲಿ ಮೃತದೇಹ ಬಿಸಾಡಿದ್ದರು. ಈ ಕುರಿತು ಧರ್ಮಸ್ಥಳ ಪೊಲೀಸ್‌ ಠಾಣೆಗೆ ನಾನು ದೂರು ನೀಡಿದ್ದೆ ಎಂದು ಅರ್ಜಿಯಲ್ಲಿ ವಿವರಿಸಿದ್ದರು. ಪ್ರಕರಣದ ತನಿಖೆ ನಡೆಸಿದ್ದ ಪೊಲೀಸರು ಐಪಿಸಿ ಸೆಕ್ಷನ್‌ 302 (ಕೊಲೆ) ಮತ್ತು 393 (ದರೋಡೆ) ಅಪರಾಧದಡಿಯಲ್ಲದೆ ಐಪಿಸಿ ಸೆಕ್ಷನ್‌ 323 ಅಡಿಯಲ್ಲಿ ಸ್ವಯಂಪ್ರೇರಣೆಯಿಂದ ನೋವುಂಟು ಮಾಡಿದ ಅಪರಾಧ ಸಂಬಂಧ ವಿಚಾರಣಾ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ. ಅದು ಗಂಭೀರ ಸ್ವರೂಪವಲ್ಲದ ಅಪರಾಧವಾಗಿದೆ. ಇನ್ನೂ ಪೊಲೀಸರಿಗೆ ದಾರಿ ತಪ್ಪಿಸಿದ ಆರೋಪದಲ್ಲಿ ನನ್ನ ವಿರುದ್ಧವೇ ಪ್ರತ್ಯೇಕ ಪ್ರಕರಣ ದಾಖಲಿಸಲಾಗಿದೆ. ಆದ್ದರಿಂದ, ಶ್ರೀಧರ್‌ ಕೊಲೆ ಪ್ರಕರಣದ ಮರು ತನಿಖೆಗೆ ಆದೇಶಿಸಬೇಕು ಎಂದು ಹರೀಶ್‌ ಮುಗರೆ ಅರ್ಜಿಯಲ್ಲಿ ಕೋರಿದ್ದರು. ಅರ್ಜಿಯನ್ನು 2025ರ ಸೆಪ್ಟೆಂಬರ್ 9ರಂದು ಪುರಸ್ಕರಿಸಿದ್ದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ನ್ಯಾಯಪೀಠ, ಶ್ರೀಧರ್‌ ಸಾವು ಪ್ರಕರಣದ ಮರು ತನಿಖೆಗೆ ಎಸ್‌ಐಟಿ ರಚಿಸುವಂತೆ ಸರ್ಕಾರಕ್ಕೆ ನಿರ್ದೇಶಿಸಿತ್ತು. ಈ ಆದೇಶ ಪಾಲನೆಯಾಗಿಲ್ಲ ಎಂದು ಅರ್ಜಿದಾರರು ಶುಕ್ರವಾರ ನ್ಯಾಯಾಲಯದ ಗಮನಕ್ಕೆ ತಂದರು.

ವಾರ್ತಾ ಭಾರತಿ 20 Feb 2026 9:18 pm

ಕಲಬುರಗಿ | ಮುರುಗೇಶ ನಿರಾಣಿ ಸೇರಿ ಮೂವರಿಗೆ ಗೌರವ ಡಾಕ್ಟರೇಟ್: ಡಾ.ಉಮೇಶ್ ಜಾಧವ್ ಅಭಿನಂದನೆ

ಕಲಬುರಗಿ: ಗುಲ್ಬರ್ಗಾ ವಿಶ್ವವಿದ್ಯಾಲಯದ 43ನೇ ವಾರ್ಷಿಕ ಘಟಿಕೋತ್ಸವದಲ್ಲಿ ಸಾಮಾಜಿಕ ಮತ್ತು ರಾಜಕೀಯ ಕ್ಷೇತ್ರದಲ್ಲಿನ ಅನುಪಮ ಸೇವೆಯನ್ನು ಪರಿಗಣಿಸಿ ನಾಡಿನ ಹಿರಿಯ ಮುಖಂಡರಾದ ಮುರುಗೇಶ್ ನಿರಾಣಿ, ಪಿ.ಜಿ.ಆರ್ ಸಿಂಧ್ಯಾ ಮತ್ತು ಹೋರಾಟಗಾರ ಕೇದಾರ ಲಿಂಗಯ್ಯ ಹಿರೇಮಠ್ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡುತ್ತಿರುವುದಕ್ಕೆ ಮಾಜಿ ಲೋಕಸಭಾ ಸದಸ್ಯರಾದ ಡಾ.ಉಮೇಶ್ ಜಾಧವ್ ಅಭಿನಂದನೆ ಸಲ್ಲಿಸಿದ್ದಾರೆ. ಸಮಾಜಮುಖಿಯಾಗಿ ಕೆಲಸ ಮಾಡಿದ ಮೂವರು ಮಹನೀಯರನ್ನು ಗುಲ್ಬರ್ಗಾ ವಿಶ್ವವಿದ್ಯಾಲಯವು ಗುರುತಿಸಿ ರಾಜ್ಯಪಾಲರು ಆದ ವಿಶ್ವವಿದ್ಯಾಲಯದ ಕುಲಾಧಿಪತಿ ಥಾವರಚಂದ ಗೆಹ್ಲೋಟ್ ಗೌರವ ಡಾಕ್ಟರೇಟ್ ಪ್ರಶಸ್ತಿಗೆ ಆಯ್ಕೆ ಮಾಡಿದ್ದು ಸಂತಸದ ಸಂಗತಿಯಾಗಿದೆ. ಮೂವರು ಕೂಡ ವಿವಿಧ ಕ್ಷೇತ್ರಗಳಲ್ಲಿ ತಮ್ಮ ಅಪಾರ ಕೊಡುಗೆಯನ್ನು ನೀಡಿ ಸಮಾಜವನ್ನು ಅಭಿವೃದ್ಧಿಯತ್ತ ಕೊಂಡೊಯ್ಯಲು ಶ್ರಮಿಸಿದ್ದಾರೆ ಎಂದರು. ಮುರುಗೇಶ್ ನಿರಾಣಿಯವರು ರಾಜ್ಯದ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಖಾತೆಯ ಸಚಿವರಾಗಿ ಮತ್ತು ಕಲಬುರಗಿ ಜಿಲ್ಲೆಯ ಉಸ್ತುವಾರಿ ಸಚಿವರಾಗಿದ್ದಾಗ ಈ ಭಾಗಕ್ಕೆ ಅಪಾರವಾದ ಕೊಡುಗೆಯನ್ನು ಕೊಟ್ಟಿದ್ದಾರೆ. ಮಾತ್ರವಲ್ಲ ಉದ್ಯಮಿಗಳಾಗಿ ರಾಷ್ಟ್ರ ಕಂಡ ಶ್ರೇಷ್ಠ ಕೈಗಾರಿಕೋದ್ಯಮಿಯಾಗಿ ಸಹಕಾರಿ ಸಂಘವನ್ನು ಬೆಳೆಸಿದ ಮಹಾನ್ ವ್ಯಕ್ತಿಯಾಗಿದ್ದಾರೆ ಎಂದು ಡಾ. ಜಾಧವ್ ತಿಳಿಸಿದ್ದಾರೆ. ಮೂವರು ಗಣ್ಯರನ್ನು ಗೌರವ ಡಾಕ್ಟರೇಟ್ ಗೆ ಆಯ್ಕೆ ಮಾಡಿದ ಗುಲ್ಬರ್ಗಾ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ. ಶಶಿಕಾಂತ ಉಡಿಕೇರಿ ಅವರಿಗೂ ಕೂಡ ಅಭಿನಂದನೆ ಹಾಗೂ ಫೆ.24ರಂದು ನಡೆಯಲಿರುವ ವಿವಿಯ 43ನೇ ಘಟಿಕೋತ್ಸವ ಯಶಸ್ವಿಯಾಗಲೆಂದು ಹಾರೈಸುತ್ತೇನೆ ಎಂಬುದಾಗಿ ಜಾಧವ್ ತಿಳಿಸಿದ್ದಾರೆ.

ವಾರ್ತಾ ಭಾರತಿ 20 Feb 2026 9:16 pm

ಕಲಬುರಗಿ | ಶರಣ ಹಡಪದ ಅಪ್ಪಣ್ಣನವರ ಮೂರ್ತಿ ಸ್ಥಾಪನೆಗೆ ಮನವಿ

ಕಲಬುರಗಿ: ಬಸವಕಲ್ಯಾಣದಲ್ಲಿರುವ ವಿಶ್ವಗುರು ಬಸವಣ್ಣ ಅವರ ಅರಿವಿನ ಮನೆಯ ಪಕ್ಕದಲ್ಲಿರುವ ಶರಣ ಹಡಪದ ಅಪ್ಪಣ್ಣ ಅವರ ಅರಿವಿನ ಗವಿಯಲ್ಲಿ ಅಪ್ಪಣ್ಣನವರ ಮೂರ್ತಿಯನ್ನು ಸ್ಥಾಪಿಸಬೇಕೆಂದು ಅಖಿಲ ಕರ್ನಾಟಕ ಹಡಪದ ಅಪ್ಪಣ್ಣ ಸಮಾಜ ಸೇವಾ ಸಂಘ ಆಗ್ರಹಿಸಿದೆ. ಶುಕ್ರವಾರ ಕಲಬುರಗಿ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದ ಸಂಘದ ಪದಾಧಿಕಾರಿಗಳು, 12ನೇ ಶತಮಾನದ ವಿಶ್ವಗುರು ಬಸವಣ್ಣನವರ ಆಪ್ತಕಾರ್ಯದರ್ಶಿಯಾಗಿದ್ದ ಹಡಪದ ಅಪ್ಪಣ್ಣನವರ ಅರಿವಿನ ಗವಿಯು ಬಸವಣ್ಣನವರ ಅರಿವಿನ ಮನೆಯ ಪಕ್ಕದಲ್ಲಿದೆ ಎಂದು ತಿಳಿಸಿದ್ದಾರೆ. ಈ ಗವಿಯಲ್ಲಿ ಕಾನೂನುಬಾಹಿರವಾಗಿ ಹಾಗೂ ಸರ್ಕಾರ ಮತ್ತು ಸಂಬಂಧಿತ ಪ್ರಾಧಿಕಾರದ ಆದೇಶವನ್ನು ಮೀರಿ ಬೇರೆ ಶರಣರ-ಶರಣೀಯರ ಮೂರ್ತಿಯನ್ನು ಬಸವೇಶ್ವರ ದೇವಸ್ಥಾನದ ಪಂಚಕಮಿಟಿ ಸ್ಥಾಪಿಸಿದೆ ಎಂದು ಅವರು ಆರೋಪಿಸಿದ್ದಾರೆ. ಆದ್ದರಿಂದ ಗವಿಯಲ್ಲಿ ಸ್ಥಾಪಿಸಿರುವ ಬೇರೆ ಮೂರ್ತಿಯನ್ನು ತೆರವುಗೊಳಿಸಿ, ಹಡಪದ ಅಪ್ಪಣ್ಣನವರ ಮೂರ್ತಿಯನ್ನು ಪ್ರತಿಷ್ಠಾಪಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ. ಈ ಸಂದರ್ಭದಲ್ಲಿ ಹಡಪದ ಸಮಾಜದ ತಾಲೂಕು ಅಧ್ಯಕ್ಷ ಚಂದ್ರಶೇಖರ ತೊನಸನಹಳ್ಳಿ, ಕಾರ್ಯದರ್ಶಿ ರಮೇಶ್ ಕವಲಗಾ, ವಿನೋದ ಅಂಬಲಗಾ, ಭಗವಂತ ಹಡಪದ ಕಿರಣಗಿ, ರಮೇಶ್ ಹಡಪದ ನಿಲೂರು, ಆಕಾಶ್ ತಳವಾರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

ವಾರ್ತಾ ಭಾರತಿ 20 Feb 2026 9:13 pm

ಫೆ.25ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕಾರ್ಕಳಕ್ಕೆ ಭೇಟಿ

ಉಡುಪಿ, ಫೆ.20: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಫೆ.25ರಂದು ಉಡುಪಿ ಜಿಲ್ಲೆಯ ಕಾರ್ಕಳಕ್ಕೆ ಭೇಟಿ ನೀಡಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. ಫೆ.25ರಂದು ಬೆಳಗ್ಗೆ 11ಗಂಟೆಗೆ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸುವ ಮುಖ್ಯಮಂತ್ರಿಗಳು ಹೆಲಿಕಾಪ್ಟರ್ ಮೂಲಕ 11:30ಕ್ಕೆ ಕಾರ್ಕಳದ ತಾಲೂಕು ಕ್ರೀಡಾಂಗಣದ ಹೆಲಿಪ್ಯಾಡ್‌ನಲ್ಲಿ ಬಂದಿಳಿಯಲಿದ್ದಾರೆ. ಮೊದಲು ಜಿಲ್ಲಾಡಳಿತ, ಜಿಪಂ, ಸಮಾಜ ಕಲ್ಯಾಣ ಇಲಾಖೆ ಹಾಗೂ ಬೆಏಂಗಳೂರಿನ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ವತಿಯಿಂದ ಆಯೋಜಿಸಲಾಗಿರುವ ಡಾ.ಬಿ.ಆರ್.ಅಂಬೇಡ್ಕರ್ ಕಟ್ಟಡವನ್ನು ಕಾರ್ಕಳ ಕಾಬೆಟ್ಟು ನಲ್ಲಿ ಉದ್ಘಾಟಿಸಲಿದ್ದಾರೆ. ಬಳಿಕ ಕುಕ್ಕುಂದೂರು ಕಿಸಾನ್ ಸಭಾ ಟ್ರಸ್ಟ್ ಆಯೋಜಿಸಿರುವ ಟ್ರಸ್ಟ್‌ನ ಮಹಾತ್ಮಗಾಂಧಿ ವಸತಿ ಪ್ರೌಢ ಶಾಲೆಯಲ್ಲಿ ‘ಕಿಸಾನ್ ಸಭಾ ಸಭಾಂಗಣವನ್ನು ಉದ್ಘಾಟಸಲಿದ್ದಾರೆ. ಅಲ್ಲದೇ ಶಾಲೆಯ 35ನೇ ವರ್ಷದ ಸಮಾರಂಭದಲ್ಲೂ ಪಾಲ್ಗೊಳ್ಳಲಿದ್ದಾರೆ. ಕಾರ್ಯಕ್ರಮದ ಬಳಿಕ ಉಡುಪಿ ಜಿಲ್ಲೆಯ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಸಭೆ ನಡೆಸುವ ಮುಖ್ಯಮಂತ್ರಿಗಳು ಸಂಜೆ 4ಗಂಟೆಗೆ ಹೆಲಿಕಾಪ್ಟರ್ ಮೂಲಕ ಮಂಗಳೂರು ವಿಮಾನ ನಿಲ್ದಾಣಕ್ಕೆ ತೆರಳಿ ಅಲ್ಲಿಂದ ಮೈಸೂರಿಗೆ ಪ್ರಯಾಣ ಬೆಳೆಸಲಿದ್ದಾರೆ.

ವಾರ್ತಾ ಭಾರತಿ 20 Feb 2026 9:10 pm

ಕಲಬುರಗಿ | ಕರ್ನಾಟಕ ಒನ್ ಕೇಂದ್ರ ಸ್ಥಾಪಿಸಲು ಅರ್ಜಿ ಆಹ್ವಾನ

ಕಲಬುರಗಿ: “ಕರ್ನಾಟಕ ಒನ್” ಯೋಜನೆಯಡಿ ಒಂದೇ ಸೂರಿನಡಿ ಎಲ್ಲಾ ರೀತಿಯ ನಾಗರಿಕ ಸೇವೆ ಪೂರೈಸಲು 2025-26ನೇ ಸಾಲಿಗೆ ಕಲಬುರಗಿ ಜಿಲ್ಲೆಯ ಈ ಕೆಳಕಂಡ ತಾಲೂಕುಗಳಲ್ಲಿ ಫ್ರಾಂಚೈಸಿಗಳ ಮೂಲಕ ಕರ್ನಾಟಕ ಒನ್ ಕೇಂದ್ರಗಳನ್ನು ಸ್ಥಾಪಿಸಲು ಆಸಕ್ತಿಯುಳ್ಳ ಅಭ್ಯರ್ಥಿಗಳಿಂದ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ ಎಂದು ಕಲಬುರಗಿ ಹೆಚ್ಚುವರಿ ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ. ಸದ್ಯ ಕರ್ನಾಟಕ ಒನ್ ಸ್ಥಾಪನೆಗಾಗಿ ಬಾಕಿಯಿರುವ ಕಲಬುರಗಿ ಜಿಲ್ಲೆಯ ಅಫಜಲಪುರ, ಚಿಂಚೋಳಿ, ಜೇವರ್ಗಿ, ಕಲಬುರಗಿ, ಕಾಳಗಿ, ಕಮಲಾಪುರ, ಸೇಡಂ ಹಾಗೂ ಶಹಾಬಾದ ತಾಲೂಕುಗಳಲ್ಲಿ ಫ್ರಾಂಚೈಸಿಗಳ ಮೂಲಕ ಕರ್ನಾಟಕ ಒನ್ ಕೇಂದ್ರಗಳನ್ನು ಸ್ಥಾಪಿಸಲು ಅರ್ಜಿ ಸಲ್ಲಿಸಬಹುದಾಗಿದೆ. ಆಸಕ್ತಿಯುಳ್ಳ ಅಭ್ಯರ್ಥಿಗಳು https://www.karnatakaone.gov.in/Public/FrachiseeTerms ವೆಬ್‍ಸೈಟ್‍ ನಲ್ಲಿ ಆನ್‍ಲೈನ್ ಮೂಲಕ 2026ರ ಮಾರ್ಚ್ 2ರ ಸಂಜೆ 6 ಗಂಟೆಯೊಳಗಾಗಿ ಅರ್ಜಿ ಸಲ್ಲಿಸಬೇಕು. ಅರ್ಜಿಗಳನ್ನು ಬೇರೆ ಯಾವುದೇ ರೂಪದಲ್ಲಿ ಅರ್ಜಿ ಸಲ್ಲಿಸಿದ್ದಲ್ಲಿ ಪರಿಗಣಿಸಲಾಗುವುದಿಲ್ಲ ಎಂದು ಅವರು ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಇ-ಮೇಲ್ ವಿಳಾಸ om-edcs@karnataka.gov.in ಹಾಗೂ ದೂರವಾಣಿ ಸಂಖ್ಯೆ 080-24410574 ಗೆ ಸರ್ಕಾರಿ ರಜೆಯನ್ನು ಹೊರತುಪಡಿಸಿ ಎಲ್ಲಾ ಕೆಲಸ ದಿನಗಳಂದು ಪ್ರತಿದಿನ ಬೆಳಿಗ್ಗೆ 10 ರಿಂದ ಸಂಜೆ 6 ಗಂಟೆಯವರೆಗೆ ಸಂಪರ್ಕಿಸಲು ಕೋರಲಾಗಿದೆ.

ವಾರ್ತಾ ಭಾರತಿ 20 Feb 2026 9:09 pm

ಕಾಂಗ್ರೆಸ್‌ನಲ್ಲಿ 'ಹಳೆ ಬೇರು-ಹೊಸ ಚಿಗುರು' ಸಂಘರ್ಷ: ರಾಹುಲ್ ಗಾಂಧಿ ನಾಯಕತ್ವಕ್ಕೆ ಹಿರಿಯರ ಬೆಂಬಲ ಅನಿವಾರ್ಯವೇ?

ಕಾಂಗ್ರೆಸ್ ಪಕ್ಷದ ಹಳೆಯ ನಾಯಕರು ಮತ್ತು ರಾಹುಲ್ ಗಾಂಧಿ ಅವರ ನಡುವಿನ ಸಂಬಂಧ ಇಂದಿಗೂ ಒಂದು ದೊಡ್ಡ ಪ್ರಶ್ನೆಯಾಗಿದೆ. ಚುನಾವಣೆಗಳಲ್ಲಿ ಪಕ್ಷಕ್ಕೆ ಸೋಲಾದಾಗ ಅಥವಾ ಪಕ್ಷದ ಒಳಗೆ ಗೊಂದಲ ಉಂಟಾದಾಗ, ಹಿರಿಯರು ರಾಹುಲ್ ಅವರ ನಾಯಕತ್ವವನ್ನು ಪೂರ್ತಿಯಾಗಿ ಒಪ್ಪಿಕೊಳ್ಳುತ್ತಾರೆಯೇ? ಎಂಬ ಚರ್ಚೆ ಶುರುವಾಗುತ್ತದೆ. ಇದು ಕೇವಲ ಒಬ್ಬರನ್ನೊಬ್ಬರು ವಿರೋಧಿಸುವ ವಿಷಯವಲ್ಲ; ಬದಲಾಗಿ ಹಿರಿಯರ ಅನುಭವ ಮತ್ತು ಹೊಸಬರ

ಒನ್ ಇ೦ಡಿಯ 20 Feb 2026 9:09 pm

ರಾಜಕೀಯ ಆರೋಪ ಪ್ರತ್ಯಾರೋಪಕ್ಕೆ ಕಾರಣವಾದ ಬಾಗಲಕೋಟೆ ಸಂಘರ್ಷ: ಕಾಂಗ್ರೆಸ್ ವಿರುದ್ಧ ಮುಗಿಬಿದ್ದ ಬಿಜೆಪಿ

ಬಾಗಲಕೋಟೆಯಲ್ಲಿ ಶಿವಾಜಿ ಜಯಂತಿ ಮೆರವಣಿಗೆ ವೇಳೆ ನಡೆದ ಘಟನೆ ಬಿಜೆಪಿ ಮತ್ತು ಕಾಂಗ್ರೆಸ್ ನಡುವಿನ ಜಟಾಪಟಿಗೆ ಕಾರಣವಾಗುತ್ತಿದೆ. ಸರ್ಕಾರದ ವಿರುದ್ಧ ಬಿಜೆಪಿ ನಾಯಕರು ಮುಗಿಬಿದ್ದಿದ್ದಾರೆ. ಒಂದು ವರ್ಗದ ತುಷ್ಟೀಕರಣ ನೀತಿಯೇ ಗಲಭೆಗೆ ಕಾರಣ ಎಂದು ಆರೋಪ ಮಾಡಿದ್ದಾರೆ. ವಿಪಕ್ಷ ನಾಯಕ ಆರ್ ಅಶೋಕ್ ಸೇರಿದಂತೆ ಬಿಜೆಪಿಯ ಹಲವು ನಾಯಕರು ಈ ಕುರತಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಹಾಗಾದರೆ ಬಾಗಲಕೋಟೆ ಘಟನೆ ಯಾವ ರೀತಿಯಲ್ಲಿ ರಾಜಕೀಯ ಆರೋಪ ಪ್ರತ್ಯಾರೋಪಕ್ಕೆ ಎಡೆಮಾಡಿಕೊಟ್ಟಿದೆ? ಮತ್ತಷ್ಟು ವಿವರ ಇಲ್ಲಿದೆ.

ವಿಜಯ ಕರ್ನಾಟಕ 20 Feb 2026 9:08 pm

ಗೂಡ್ಸ್ ವಾಹನ ಢಿಕ್ಕಿ: ಸ್ಕೂಟರ್ ಸವಾರ ಮೃತ್ಯು

ಬ್ರಹ್ಮಾವರ, ಫೆ.20: ಗೂಡ್ಸ್ ವಾಹನವೊಂದು ಸ್ಕೂಟರ್‌ಗೆ ಢಿಕ್ಕಿ ಹೊಡೆದ ಪರಿಣಾಮ ಸವಾರರೊಬ್ಬರು ಮೃತಪಟ್ಟ ಘಟನೆ ಆರೂರು ಕ್ರಾಸ್ (ಕುಂಜಾಲು) ಎಂಬಲ್ಲಿ ಫೆ.20ರಂದು ಬೆಳಗ್ಗೆ ನಡೆದಿದೆ. ಮೃತರನ್ನು ಆರೂರಿನ ಶೇಖರ್ ಟಿ.ಕುಲಾಲ್ ಎಂದು ಗುರುತಿಸಲಾಗಿದೆ. ಆರೂರು ಮುಖ್ಯ ರಸ್ತೆಯನ್ನು ದಾಟಿ ಡಿವೈಡರ್ ಪಾಸ್ ಮಾಡುತ್ತಿದ್ದ ಸ್ಕೂಟರ್‌ಗೆ ಪೇತ್ರಿ ಕಡೆಯಿಂದ ಬ್ರಹ್ಮಾವರ ಕಡೆಗೆ ಹೋಗುತ್ತಿದ್ದ ಗೂಡ್ಸ್ ವಾಹನ ಹಿಂದಿನಿಂದ ಢಿಕ್ಕಿ ಹೊಡೆಯಿತ್ತೆನ್ನಲಾಗಿದೆ. ಇದರಿಂದ ಗಂಭೀರವಾಗಿ ಗಾಯಗೊಂಡ ಶೇಖರ್ ಕುಲಾಲ್ ಬ್ರಹ್ಮಾವರದ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗುವ ದಾರಿ ಮಧ್ಯೆ ಮೃತಪಟ್ಟರೆಂದು ತಿಳಿದುಬಂದಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಾರ್ತಾ ಭಾರತಿ 20 Feb 2026 9:07 pm

ಕಲಬುರಗಿ | ನಾಟಕ ನೋಡುವುದರಿಂದ ಯೋಚನಾ ಲಹರಿ ಬದಲಾವಣೆ : ಅರುಂಧತಿ ನಾಗ್

ಕಲಬುರಗಿ: ರಂಗಭೂಮಿಯ ಚಟುವಟಿಕೆಗಳು ಮುಖ್ಯ ನಗರಗಳಿಗೆ ಸೀಮಿತವಾಗಿರುವ ಇಂದಿನ ಸಂದರ್ಭದಲ್ಲಿ ಜಿಲ್ಲಾಡಳಿತದಿಂದ ರಾಷ್ಟ್ರೀಯ ನಾಟಕೋತ್ಸವ ಹಮ್ಮಿಕೊಳ್ಳುತ್ತಿರುವುದು ಹಾಗೂ ಅದಕ್ಕೆ ರಂಗಶಂಕರ ಸಹಯೋಗ ನೀಡುತ್ತಿರುವುದು ಸಂತಸದ ಸಂಗತಿ ಎಂದು ಹಿರಿಯ ರಂಗಕರ್ಮಿ ಅರುಂಧತಿ ನಾಗ್ ಅಭಿಪ್ರಾಯಪಟ್ಟರು. ಜಿಲ್ಲಾಡಳಿತ, ಕಲಬುರಗಿ ನೆಕ್ಸ್ಟ್ ಫೌಂಡೇಷನ್ ಮತ್ತು ರಂಗಶಂಕರ ಸಹಯೋಗದಲ್ಲಿ ಫೆ.21ರಿಂದ 28ರವರೆಗೆ ನಡೆಯಲಿರುವ ‘ಕಲಬುರಗಿ ನಾಟಕೋತ್ಸವ-26’ ಪೂರ್ವತಯಾರಿ ಕುರಿತು ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ರಂಗಭೂಮಿ ಬದುಕಿನ ಪ್ರತಿರೂಪವಾಗಿದ್ದು, ನಾಟಕ ವೀಕ್ಷಣೆ ಮನುಷ್ಯರ ಚಿಂತನಾ ಲಹರಿಯನ್ನು ಬದಲಿಸುತ್ತದೆ. ರಂಗಶಂಕರಕ್ಕೆ ಈಗ 21 ವರ್ಷ ಪೂರ್ಣಗೊಂಡಿದ್ದು, ತಾವು ಹವ್ಯಾಸಿ ರಂಗಕರ್ಮಿಯಾಗಿ 50 ವರ್ಷ ಪೂರೈಸುತ್ತಿರುವ ಸಂದರ್ಭದಲ್ಲಿ ಈ ನಾಟಕೋತ್ಸವ ವೈಯಕ್ತಿಕವಾಗಿ ಮಹತ್ವದ್ದಾಗಿದೆ ಎಂದು ಹೇಳಿದರು. ಮೊದಲ ಬಾರಿಗೆ ಕಲಬುರಗಿಗೆ ಆಗಮಿಸಿರುವುದಾಗಿ ತಿಳಿಸಿದ ಅವರು, ಬೆಂಗಳೂರಿನ ಅತ್ಯುತ್ತಮ ಕಲಾತಂಡಗಳು ಹಾಗೂ ಹಿಂದಿ ನಾಟಕಗಳು ಸಹ ಇಲ್ಲಿ ಪ್ರದರ್ಶನಗೊಳ್ಳಲಿವೆ. ರಾಷ್ಟ್ರೀಯ ಮಟ್ಟದ ರಂಗಾನುಭವವನ್ನು ಇಲ್ಲಿನ ಜನರಿಗೆ ನೀಡುವುದು ಉದ್ದೇಶ ಎಂದು ತಿಳಿಸಿದರು. ತಮ್ಮ ರಂಗಭೂಮಿ ಪಯಣದ ಆರಂಭದಲ್ಲಿ ಶಂಕರ್ ನಾಗ್ ಅವರೊಂದಿಗೆ ಕಂಡ ಅನುಭವಗಳನ್ನು ಸ್ಮರಿಸಿ, ಮೊಬೈಲ್ ಮತ್ತು ಟಿವಿ ಬಿಟ್ಟು ಜನರು ನಾಟಕ ವೀಕ್ಷಿಸಲು ಮುಂದಾಗಬೇಕು ಎಂದು ಮನವಿ ಮಾಡಿದರು. ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಮಾತನಾಡಿ, ಕಲಬುರಗಿಯ ಸರ್ವತೋಮುಖ ಅಭಿವೃದ್ಧಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ಅಗತ್ಯ. ಈ ನಾಟಕೋತ್ಸವದ ಜೊತೆಗೆ ಮುಂದಿನ ದಿನಗಳಲ್ಲಿ ಚಲನಚಿತ್ರೋತ್ಸವ ಮತ್ತು ಸಾಹಿತ್ಯೋತ್ಸವಗಳನ್ನೂ ಹಮ್ಮಿಕೊಳ್ಳುವ ಯೋಜನೆ ಇದೆ ಎಂದು ತಿಳಿಸಿದರು. ಪ್ರತಿದಿನ ಸಂಜೆ 7 ಗಂಟೆಗೆ ಡಾ. ಎಸ್.ಎಂ. ಪಂಡಿತ್ ರಂಗಮಂದಿರದಲ್ಲಿ ನಾಟಕ ಪ್ರದರ್ಶನ ನಡೆಯಲಿದೆ. ಅದಕ್ಕೂ ಮೊದಲು ಬೀದಿನಾಟಕ, ಜಾನಪದ ಗೀತೆಗಳು ಸೇರಿದಂತೆ ವಿವಿಧ ಕಾರ್ಯಕ್ರಮಗಳು ನಡೆಯಲಿವೆ. 8 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಮುಖ್ಯ ಪ್ರದರ್ಶನಕ್ಕೆ ಅವಕಾಶವಿಲ್ಲ. ಒಂದು ನಾಟಕಕ್ಕೆ 100 ರೂ. ಟಿಕೆಟ್ ನಿಗದಿಪಡಿಸಲಾಗಿದ್ದು, ಆನ್‌ಲೈನ್ ಹಾಗೂ ಸ್ಥಳದಲ್ಲಿಯೇ ಲಭ್ಯವಿರುತ್ತದೆ. ಮಕ್ಕಳಿಗಾಗಿ ಕಲಬುರಗಿ ರಂಗಾಯಣದಲ್ಲಿ ವಿಶೇಷ ನಾಟಕಗಳನ್ನು ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಭವನದಲ್ಲಿ ಸಂವಾದ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ರಂಗಶಂಕರದ ಹಿರಿಯ ಸದಸ್ಯ ಸುರೇಂದ್ರನಾಥ ಅವರು, ರಾಜ್ಯ ಹಾಗೂ ಇತರೆ ಭಾಷೆಗಳ ಅತ್ಯುತ್ತಮ ನಾಟಕಗಳನ್ನು ಆಯ್ಕೆ ಮಾಡಲಾಗಿದೆ ಎಂದು ಹೇಳಿದರು. ಮುಂದಿನ ಐದು ವರ್ಷಗಳ ಕಾಲ ನಾಟಕೋತ್ಸವವನ್ನು ನಿರಂತರವಾಗಿ ಹಮ್ಮಿಕೊಳ್ಳುವ ಯೋಜನೆ ರೂಪಿಸಲಾಗಿದ್ದು, ಕಲಬುರಗಿಯಲ್ಲಿ ರಂಗಸಂಸ್ಕೃತಿ ಬೆಳೆಸುವ ಉದ್ದೇಶವಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ, ಸಹಾಯಕ ಆಯುಕ್ತರು ಹಾಗೂ ಕಲಬುರಗಿ ರಂಗಾಯಣದ ನಿರ್ದೇಶಕಿ ಸುಜಾತ ಜಂಗಮಶೆಟ್ಟಿ ಉಪಸ್ಥಿತರಿದ್ದರು.

ವಾರ್ತಾ ಭಾರತಿ 20 Feb 2026 9:07 pm

ಫೆ.22ರಂದು ಅಭಯಹಸ್ತ ಟ್ರಸ್ಟ್‌ನ 300ನೇ ರಕ್ತದಾನ ಶಿಬಿರ

ಉಡುಪಿ, ಫೆ.20: ಜಿಲ್ಲೆ ಕೊರೋನಾದಿಂದ ಬಸವಳಿದು ರೋಗಿಗಳ ಜೀವ ಉಳಿಸಲು ರಕ್ತದ ಕೊರತೆ ಉಂಟಾದಾಗ, ತುರ್ತು ರಕ್ತದಾನಕ್ಕಾಗಿ ವಾಟ್ಸಪ್ ಗ್ರೂಪ್ ಮೂಲಕ ಹುಟ್ಟಿಕೊಂಡ ಸಂಸ್ಥೆ ಅಭಯಹಸ್ತ ಬೆಳೆದು ಇದೀಗ 300ನೇ ರಕ್ತದಾನ ಶಿಬಿರಕ್ಕೆ ಮುಂದಾಗಿದೆ ಎಂದು ಅಭಯಹಸ್ತ ಚಾರಿಟೇಬಲ್ ಟ್ರಸ್ಟ್‌ನ ಅಧ್ಯಕ್ಷ ಸತೀಶ್ ಸಾಲ್ಯಾನ್ ಮಣಿಪಾಲ ತಿಳಿಸಿದ್ದಾರೆ. ಅಭಯಹಸ್ತ ಟ್ರಸ್ಟ್‌ನ 300ನೇ ರಕ್ತದಾನ ಶಿಬಿರ ‘ಹೆಗ್ಗುರುತು-300’ ಕುರಿತು ಮಾಹಿತಿ ನೀಡಲು ಇಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ರಕ್ತದಾನ ಶಿಬಿರ ಫೆ.22ರಂದು ಮಣಿಪಾಲ ಕೆಎಂಸಿಯ ಡಾ.ಟಿ.ಎಂ.ಎ.ಪೈ ಹಾಲ್‌ನಲ್ಲಿ ನಡೆಯಲಿದೆ ಎಂದರು. ಜಿಲ್ಲೆಯಲ್ಲಿ 1000ಕ್ಕೂ ಅಧಿಕ ರಕ್ತದಾನ ಶಿಬಿರ ನಡೆಸಿರುವ ಮೊಗವೀರ ಯುವ ವೇದಿಕೆಯನ್ನು ಹೊರತು ಪಡಿಸಿದರೆ ಅತ್ಯಧಿಕ ರಕ್ತದಾನ ಶಿಬಿರ ನಡೆಸಿದ ಹೆಗ್ಗಳಿಕೆ ನಮ್ಮ ಟ್ರಸ್ಟ್‌ಗಿದೆ ಎಂದ ಸತೀಶ್ ಸಾಲ್ಯಾನ್, ಈ ಬಾರಿ 200ರಿಂದ 30 ಯುನಿಟ್ ರಕ್ತ ಸಂಗ್ರಹಿಸುವ ಗುರಿಯನ್ನು ಹಾಕಿಕೊಳ್ಳಲಾಗಿದೆ ಎಂದರು. ತುರ್ತು ಸಂದರ್ಭದಲ್ಲಿ ವಾಟ್ಸಪ್ ಗ್ರೂಪ್ ಮೂಲಕ ಮೂರ್ತರೂಪಕ್ಕೆ ಬಂದ ನಮ್ಮ ಟ್ರಸ್ಟ್, ಕೊರೋನಾದ ವಿಷಮ ಪರಿಸ್ಥಿತಿಯಲ್ಲಿ ಉಡುಪಿ ಸುತ್ತಮುತ್ತಲಿನ ಆಸ್ಪತ್ರೆಗಳಲ್ಲಿದ್ದ ರಕ್ತದ ಕೊರತೆಯನ್ನು ನೀಗಿಸುವ ಪ್ರಯತ್ನ ನಡೆಸಿತ್ತು. 2020ರ ಮೇ 9ರಂದು ಮೊದಲ ರಕ್ತದಾನ ಶಿಬಿರ ನಡೆಸಿದ ಟ್ರಸ್ಟ್ ಕಳೆದ ಆರು ವರ್ಷಗಳ ಅವಧಿಯಲ್ಲಿ ವಿವಿಧ ಸಂಘಟನೆಗಳ ಸಹಕಾರದೊಂದಿಗೆ ನಡೆಸಿದ ರಕ್ತದಾನ ಶಿಬಿರಗಳಲ್ಲಿ 40,000ಕ್ಕೂ ಅಧಿಕ ಯೂನಿಟ್ ರಕ್ತವನ್ನು ಸಂಗ್ರಹಿಸಿ ಸಾವಿರಾರು ಜೀವನಗಳನ್ನು ಉಳಿಸಿದ ಧನ್ಯತೆಯನ್ನು ಹೊಂದಿದೆ ಎಂದರು. ಟ್ರಸ್ಟ್ ಉಡುಪಿ ಮಾತಞ್ರವಲ್ಲದೇ ದಕ್ಷಿಣ ಕನ್ನಡ, ಉತ್ತರ ಕನ್ನಡ, ಚಿಕ್ಕಮಗಳೂರು, ಬೆಂಗಳೂರು ಹಾಗೂ ದುಬಾಯಿಗಳಲ್ಲೂ ರಕ್ತದಾನ ಶಿಬಿರ ಹಾಗೂ ರಕ್ತದಾನ ಕುರಿತು ಜಾಗೃತಿ ಕಾರ್ಯಕ್ರಮಗಳನ್ನು ಏರ್ಪಡಿಸಿ ವಿವಿದ ಆಸ್ಪತ್ರೆಗಳಿಗೆ ತುರ್ತು ರಕ್ತವನ್ನು ಪೂರೈಕೆ ಮಾಡಿದೆ ಎಂದರು. ಒಂದು ವರ್ಷದ ಅವಧಿಯಲ್ಲಿ (2023) ನಾವು 8000 ಯುನಿಟ್ ರಕ್ತ ಸಂಗ್ರಹಿಸಿ ರಾಜ್ಯ ಆರೋಗ್ಯ ಇಲಾಖೆಯಿಂದ ಸನ್ಮಾನಿತರಾಗಿದ್ದೇವೆ ಎಂದು ಸಾಲ್ಯಾನ್ ತಿಳಿಸಿದರು. 300ನೇ ರಕ್ತದಾನ ಶಿಬಿರ ಬೆಳಗ್ಗೆ 8:30ರಿಂದ ಅಪರಾಹ್ನ 1:00ಗಂಟೆಯ ವರೆಗೆ ನಡೆಯಲಿದೆ. ಬೆಳಗ್ಗೆ 9:30ಕ್ಕೆ ಉದ್ಘಾಟನಾ ಕಾರ್ಯಕ್ರಮ ನಡೆಯಲಿದ್ದು, ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಉದ್ಘಾಟಿಸಲಿದ್ದಾರೆ. ಟ್ರಸ್ಟ್‌ನ ಪ್ರದಾನ ಕಾರ್ಯದರ್ಶಿ ದಿನೇಶ್ ಹೆಗ್ಡೆ ಆತ್ರಾಡಿ ಅಧ್ಯಕ್ಷತೆ ವಹಿಸಲಿದ್ದಾರೆ. ಎಂಐಟಿಯ ನಿರ್ದೇಶಕ ಕಮಾಂಡರ್ ಡಾ.ಅನಿಲ್ ರಾಣಾ, ಡಿವೈಎಸ್ಪಿ ಕೆ.ಯು. ಬೆಳ್ಳಿಯಪ್ಪ, ಜಿಲ್ಲಾ ಸರ್ಜನ್ ಡಾ.ಎಚ್.ಅಶೋಕ್, ಕೆಎಂಸಿಯ ರಕ್ತ ಕೇಂದ್ರದ ಮುಖ್ಯಸ್ಥ ಡಾ.ಗಣೇಶ್ ಮೋಹನ್ ಹಾಗೂ ಇತರರು ಉಪಸ್ಥಿತರಿರಲಿದ್ದಾರೆ. 11:00ಗಂಟೆಗೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಸಂಸದ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ಯಶಪಾಲ್ ಸುವರ್ಣ, ಗುರ್ಮೆ ಸುರೇಶ್ ಶೆಟ್ಟಿ ಹಾಗೂ ಇತರರು ಪಾಲ್ಗೊಳ್ಳಲಿದ್ದು, ರಕ್ತದಾನಿಗಳಿಗೆ ಸ್ಮರಣಿಕೆ ಹಾಗೂ ಪ್ರಶಂಸಾ ಪತ್ರಗಳನ್ನು ವಿತರಿಸಲಾಗುವುದು ಎಂದರು. ಪತ್ರಿಕಾಗೋಷ್ಠಿಯಲ್ಲಿ ಟ್ರಸ್ಟ್‌ನ ಹರಿಪ್ರಸಾದ್, ದಿನೇಶ್ ಹೆಗ್ಡೆ ಆತ್ರಾಡಿ ಹಾಗೂ ಶರತ್ ಕಾಂಚನ್ ಹಾನಗಲ್ಲು ಉಪಸ್ಥಿತರಿದ್ದರು.

ವಾರ್ತಾ ಭಾರತಿ 20 Feb 2026 9:05 pm

ಫೆ.22ರಿಂದ ಸುಮನಸಾ ಕೊಡವೂರು ‘ರಂಗಹಬ್ಬ-14’ ನಾಟಕೋತ್ಸವ

ಉಡುಪಿ, ಫೆ.20: ಉಡುಪಿಯ ಪ್ರಮುಖ ರಂಗ ತಂಡಗಳಲ್ಲೊಂದಾದ ಸುಮನಸಾ ಕೊಡವೂರು ಇವರ 14ನೇ ವರ್ಷದ ನಾಟಕೋತ್ಸವ ‘ರಂಗ ಹಬ್ಬ-14’ ಇದೇ ಫೆ.22ರಿಂದ 28ರವರೆಗೆ ವೈವಿದ್ಯಮಯ ನಾಟಕಗಳ ಪ್ರಸ್ತುತಿ ಯೊಂದಿಗೆ ನಡೆಯಲಿದೆ ಎಂದು ಸುಮನಸಾದ ಗೌರವಾಧ್ಯಕ್ಷ ಎಂ. ಎಸ್.ಭಟ್ ತಿಳಿಸಿದ್ದಾರೆ. ಉಡುಪಿ ಪ್ರೆಸ್ ಕ್ಲಬ್‌ನಲ್ಲಿ ಇಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು, ಉಡುಪಿ ನಗರಸಭೆ ಹಾಗೂ ಸಂಸ್ಕೃತಿ ನಿರ್ದೇಶನಾಲಯ ಹೊಸದಿಲ್ಲಿ ಇವರ ಸಹಯೋಗದೊಂದಿಗೆ ಈ ಬಾರಿಯ ನಾಟಕೋತ್ಸವ ನಡೆಯಲಿದೆ ಎಂದರು. ನಾಟಕೋತ್ಸವ ಎಂದಿನಂತೆ ಅಜ್ಜರಕಾಡಿನಲ್ಲಿರುವ ಭುಜಂಗ ಪಾರ್ಕ್‌ನ ಬಯಲು ರಂಗ ಮಂದಿರದಲ್ಲಿ ಪ್ರತಿದಿನ ಸಂಜೆ 6:30ಕ್ಕೆ ಪ್ರಾರಂಭಗೊಳ್ಳಲಿದೆ. ಈ ಬಾರಿಯ ರಂಗಹಬ್ಬವನ್ನು ತುಳು ರಂಗಭೂಮಿಯ ಹಿರಿಯ ರಂಗಕರ್ಮಿ ಹಾಗೂ ಚಲನಚಿತ್ರರಂಗದ ಹಿರಿಯ ನಟ ಡಾ.ಪಿ. ಸಂಜೀವ ದಂಡೇಕೇರಿ ಉದ್ಘಾಟಿಸಲಿದ್ದಾರೆ ಎಂದು ತಿಳಿಸಿದರು. ಉಡುಪಿ ಶಾಸಕ ಯಶಪಾಲ್ ಸುವರ್ಣರ ಅಧ್ಯಕ್ಷತೆಯಲ್ಲಿ ನಡೆಯುವ ಉದ್ಘಾಟನಾ ಕಾರ್ಯಕ್ರಮದಲ್ಲಿ ಉದ್ಯಮಿ ಗಳಾದ ಮುಂಬಯಿಯ ಸೂರ್ಯಕಾಂತ್ ಜೆ.ಸುವರ್ಣ, ನಾಗರಾಜ್ ಸುವರ್ಣ, ರವೀಂದ್ರ ಕೆ.ಶೆಟ್ಟಿ, ರತ್ನಾಕರ್ ಅಮೀನ್, ಸಂತೋಷ್ ಉದ್ಯಾವರ ಉಪಸ್ಥಿತರಿರುವರು ಎಂದರು. ಪ್ರತಿದಿನದ ನಾಟಕದ ಸಂದರ್ಭದಲ್ಲಿ ಜಿಲ್ಲೆಯ ಓರ್ವ ರಂಗ ಸಾಧಕರನ್ನು ಸನ್ಮಾನಿಸಲಾಗುವುದು. ಅಲ್ಲದೇ ಅದೃಷ್ಟದ ಪ್ರೇಕ್ಷಕರಿಗೆ ಟ್ರಾವೆಲಿಂಗ್ ಬ್ಯಾಗ್ ಕೊಡುಗೆ ನೀಡಲಾಗುತ್ತದೆ. ಪ್ರತಿದಿನವೂ ವಿಭಿನ್ನ ಅಭಿವ್ಯಕ್ತಿಯ ನಾಟಕಗಳನ್ನು ಪ್ರಸ್ತುತ ಪಡಿಲಾಗುತ್ತದೆ ಎಂದು ಎಂ.ಎಸ್.ಭಟ್ ತಿಳಿಸಿದರು. ಫೆ.22ರಂದು ಮಂಗಳೂರಿನ ಜರ್ನಿ ಥೇಟರ್ ಗ್ರೂಪ್ ಕನ್ನಡ ನಾಟಕ ‘ಸಾಹೇಬರು ಬರುತ್ತಾರೆ’ ಪ್ರದರ್ಶಿಸಲಿದೆ. ಹಿರಿಯ ರಂಗಕರ್ಮಿ ಸಂತೋಷ್ ಶೆಟ್ಟಿ ಹಿರಿಯಡ್ಕ ಸನ್ಮಾನಗೊಳ್ಳಲಿದ್ದಾರೆ. 23ರಂದು ಸುಮನತಾ ಕೊಡವೂರು ತಂಡದ ಪ್ರಶಸ್ತಿ ವಿಜೇತ ತುಳು ನಾಟಕ ‘ಯೇಸ’ ಪ್ರದರ್ಶನಗೊಳ್ಳಲಿದೆ. ಸಾಧಕ ಕೃಷ್ಣಪ್ಪ ಮಲ್ಪೆ ಇವರು ಸನ್ಮಾನಗೊಳ್ಳಲಿದ್ದಾರೆ. ಫೆ.24ರಂದು ಶಿವಮೊಗ್ಗದ ಸಹ್ಯಾದ್ರಿ ಕಲಾತಂಡದ ಕನ್ನಡ ನಾಟಕ ‘ಜೋಕುಮಾರ ಸ್ವಾಮಿ’ ಪ್ರದರ್ಶನಗೊಳ್ಳಲಿದ್ದು, ರಮೇಶ್ ಕೆ.ಪುತ್ತೂರು ಸನ್ಮಾನಗೊಳ್ಳಲಿದ್ದಾರೆ. 25ರಂದು ಸುಮನಸಾ ಕೊಡವೂರು ಇವರಿಂದ ಕನ್ನಡ ಯಕ್ಷ ನಾಟಕ ‘ಮೈಂದ ದ್ವಿವಿದ ಕಾಳಗ’ ನಡೆಯಲಿದ್ದು, ನಿತ್ಯಾನಂದ ಶೆಟ್ಟಿಗಾರ್ ಕುಕ್ಕಿಕಟ್ಟೆ ಅವರನ್ನು ಸನ್ಮಾನ ಸ್ವೀಕರಿಸಲಿದ್ದಾರೆ. ಫೆ.26ರಂದು ಪಾಂಡಿಚೇರಿಯ ಆದಿಶಕ್ತಿ ಥಿಯೇಟರ್ ‘ಎ ಉಮೆನ್ ಆರ್ ನಾಟ್ ಟು ಬಿ’ ಇಂಗ್ಲೀಷ್ ನಾಟಕ ಪ್ರಸ್ತುತ ಪಡಿಸಲಿದ್ದಾರೆ. ಅಂದು ಕುಸುಮಾ ಕಾಮತ್ ಅವರನ್ನು ಸನ್ಮಾನಿಸಲಾಗುತ್ತದೆ. 27ರಂದು ಸುಮನಸಾ ಕೊಡವೂರು ತಂಡದ ಪ್ರಶಸ್ತಿ ವಿಜೇತ ಕನ್ನಡ ನಾಟಕ ‘ಈದಿ’ ಪ್ರದರ್ಶನ ಗೊಳ್ಳಲಿದೆ. ರಮೇಶ್ ಕೆ.ಪಣಿಯಾಡಿ ಅವರನ್ನು ರಂಗಸಾಧಕರಾಗಿ ಅಭಿನಂದಿಸಲಾಗುವುದು ಎಂದರು. ಕೊನೆಯ ದಿನವಾದ ಫೆ.28ರಂದು ಮೈಸೂರಿನ ರಂಗವಲ್ಲಿ ತಂಡ ‘ಪರಮೇಶಿ ಪ್ರೇಮ ಪ್ರಸಂಗ’ ನಾಟಕವನ್ನು ಪ್ರದರ್ಶಿಸಲಿದೆ. ಅಂದು ಯಕ್ಷಗುರು ಯು.ದುಗ್ಗಪ್ಪ ಅವರ ನೆನಪಿನಲ್ಲಿ ನೀಡುವ ‘ಯಕ್ಷಸುಮ’ ಪ್ರಶಸ್ತಿಯನ್ನು ಯಕ್ಷ ಗಾನ ಗುರುಗಳಾದ ಬಿ.ಕೃಷ್ಣಸ್ವಾಮಿ ಜೋಷಿ ಅವರಿಗೆ ಪ್ರದಾನ ಮಾಡಲಾಗುತ್ತದೆ ಎಂದು ಭಟ್ ವಿವರಿಸಿದರು. ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಉದ್ಯಮಿ ಹರಿಯಪ್ಪ ಕೋಟ್ಯಾನ್ ವಹಿಸಲಿದ್ದು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪೂರ್ಣಿಮಾ, ಪ್ರಮೋದ್ ಮಧ್ವರಾಜ್, ಪೌರಾಯುಕ್ತ ಮಹಾಂತೇಶ್ ಹಂಗರಗಿ, ಉದ್ಯಮಿ ಮಹಮ್ಮದ್ ಮೌಲಾ, ಜನಾರ್ದನ ಕೊಡವೂರು ಹಾಗೂ ಇತರರು ಪಾಲ್ಗೊಳ್ಳಲಿದ್ದಾರೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಸುಮನಸಾದ ಅಧ್ಯಕ್ಷ ಪ್ರಕಾಶ್ ಜಿ.ಕೊಡವೂರು, ಉಪಾಧ್ಯಕ್ಷ ವಿನಯಕುಮಾರ್, ಪ್ರಧಾನ ಕಾರ್ಯದರ್ಶಿ ಚಂದ್ರಕಾಂತ್ ಕುಂದರ್, ಸಂಚಾಲಕ ಭಾಸ್ಕರ್ ಪಾಲನ್ ಹಾಗೂ ನಿರ್ದೇಶಕ ದಿವಾಕರ್ ಕಟೀಲ್ ಉಪಸ್ಥಿತರಿದ್ದರು.

ವಾರ್ತಾ ಭಾರತಿ 20 Feb 2026 9:03 pm

Rahul Chahar Divorce: ಟೀಂ ಇಂಡಿಯಾ ಕ್ರಿಕೆಟರ್ ರಾಹುಲ್‌ ಚಹರ್ ಬಾಳಲ್ಲಿ ಬಿರುಗಳಿ

Rahul Chahar Divorce: ಇತ್ತೀಚಿನ ದಿನಗಳಲ್ಲಿ ವಿಚ್ಛೇದನ ಅನ್ನುವು ಒಂದು ಟ್ರೆಂಡ್‌ ಆಗಿಬಿಟ್ಟಿದೆ. ಅದರಲ್ಲೂ, ಹೆಚ್ಚಾಗಿ ಸೆಲೆಬ್ರೆಟಿಗಳು ಇಂತಹ ದಾರಿ ಹಿಡಿಯುತ್ತಿದ್ದಾರೆ. ಇದೀಗ ಟೀಂ ಇಂಡಿಯಾ ಹಾಗೂ ಐಪಿಎಲ್‌ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸ್ಪಿನ್ನರ್ ರಾಹುಲ್ ಚಹರ್ ಅವರು (ಫೆಬ್ರವರಿ 20)ರಂದು ತಮ್ಮ ಪತ್ನಿ ಇಶಾನಿ ಜೋಹರ್‌ನಿಂದ ವಿಚ್ಛೇದನ ಪಡೆದಿದ್ದಾರೆ. ಈ ಬಗ್ಗೆ ಚಹರ್ ಸಾಮಾಜಿಕ

ಒನ್ ಇ೦ಡಿಯ 20 Feb 2026 9:02 pm

ಪಾಮ್‍ಬೀಚ್ ವಿಮಾನ ನಿಲ್ದಾಣಕ್ಕೆ ಟ್ರಂಪ್ ಹೆಸರು ಮರುನಾಮಕರಣಕ್ಕೆ ನಿರ್ಧಾರ

ನ್ಯೂಯಾರ್ಕ್, ಫೆ.19: ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಗೌರವಾರ್ಥವಾಗಿ ಫ್ಲೋರಿಡಾ ಸಂಸದರು ಪಾಮ್‍ಬೀಚ್ ವಿಮಾನ ನಿಲ್ದಾಣವನ್ನು `ಡೊನಾಲ್ಡ್ ಜೆ. ಟ್ರಂಪ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ' ಎಂದು ಮರುನಾಮಕರಣ ಮಾಡಲು ನಿರ್ಧರಿಸಿರುವಂತೆಯೇ ಈ ಹೆಸರನ್ನು ಟ್ರೇಡ್‍ಮಾರ್ಕ್ ಮಾಡಲು ಟ್ರಂಪ್ ಅವರ ವಕೀಲರು ಅರ್ಜಿ ಸಲ್ಲಿಸಿರುವುದಾಗಿ ವರದಿಯಾಗಿದೆ. ಪಾಮ್ ಬೀಚ್ ವಿಮಾನ ನಿಲ್ದಾಣಕ್ಕೆ ಟ್ರಂಪ್ ಹೆಸರು ಮರುನಾಮಕರಣ ಮಾಡುವ ಮಸೂದೆಯನ್ನು ಗುರುವಾರ ರಾಜ್ಯದ ಸಂಸತ್ತಿನಲ್ಲಿ ಅಂಗೀಕರಿಸಲಾಗಿದ್ದು ಮಸೂದೆಗೆ ಗವರ್ನರ್ ಸಹಿ ಹಾಕುವ ನಿರೀಕ್ಷೆಯಿದೆ. ವಿಮಾನ ನಿಲ್ದಾಣಕ್ಕೆ ಮರು ನಾಮಕರಣ ಮಾಡುವುದನ್ನು ಫೆಡರಲ್ ವಾಯುಯಾನ ಪ್ರಾಧಿಕಾರ ಅನುಮೋದಿಸಬೇಕಿದೆ. ಈ ಮಧ್ಯೆ, ಅಮೆರಿಕದ ಪೇಟೆಂಟ್ ಮತ್ತು ಟ್ರೇಡ್‍ಮಾರ್ಕ್ ಕಚೇರಿಯಲ್ಲಿ ಸಲ್ಲಿಸಲಾಗಿರುವ ಅರ್ಜಿಯಲ್ಲಿ `ಡಿಜೆಟಿ(ಡೊನಾಲ್ಡ್ ಜೆ.ಟ್ರಂಪ್) ಎಂಬ ಹೆಸರನ್ನೂ ಟ್ರೇಡ್‍ಮಾರ್ಕ್ ಮಾಡಲು ಕೋರಲಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಟ್ರಂಪ್ ಅವರ ಕುಟುಂಬದ ವ್ಯವಹಾರಗಳ ಪ್ರತಿನಿಧಿ `ಅತ್ಯಂತ ಗುರುತಿಸಲ್ಪಟ್ಟಿರುವ ಜಾಗತಿಕ ಬ್ರ್ಯಾಂಡ್(ಟ್ರಂಪ್)ನ ವಾಣಿಜ್ಯ ದುರ್ಬಳಕೆಯನ್ನು ತಪ್ಪಿಸುವ ಉದ್ದೇಶದ ಕ್ರಮ ಇದಾಗಿದೆ' ಎಂದು ಹೇಳಿದ್ದಾರೆ.

ವಾರ್ತಾ ಭಾರತಿ 20 Feb 2026 9:01 pm

ಉಡುಪಿ| ಆಸ್ತಿ ತೆರಿಗೆ ವಂಚನೆ ಪ್ರಕರಣ: ಮಹಿಳೆ ಸಹಿತ ಇಬ್ಬರ ಬಂಧನ

ಉಡುಪಿ, ಫೆ.20: ಉಡುಪಿ ನಗರಸಭೆಯ ಆಸ್ತಿ ತೆರಿಗೆ ಹಣವನ್ನು ದುರ್ಬಳಕೆ ಮಾಡಿ ಸರಕಾರಕ್ಕೆ ವಂಚನೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿ ಮಹಿಳೆ ಸೇರಿದಂತೆ ಇಬ್ಬರನ್ನು ಉಡುಪಿ ನಗರ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ನಗರಸಭೆ ಹೊರಗಡೆ ತೆರಿಗೆ ಸಲಹೆಗಾರ್ತಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಶಾಲಿನಿ ಹಾಗೂ ಬ್ಯಾಂಕ್ ಸಿಬ್ಬಂದಿ ಗಣೇಶ್ ಎಂದು ಗುರುತಿಸಲಾಗಿದೆ. ಆನಂದ ಸುವರ್ಣ ಎಂಬವರು ಕಲ್ಮಾಡಿಯಲ್ಲಿ ರುವ ತನ್ನ ಕಟ್ಟಡಕ್ಕೆ ಸಂಬಂಧಪಟ್ಟಂತೆ 2025ರ ಅ.16ರಂದು 12 ವರ್ಷಗಳ ಆಸ್ತಿ ತೆರಿಗೆ ಮೊತ್ತ ಒಟ್ಟು 34,730 ರೂ. ಹಣವನ್ನು ನಗರಸಭೆ ಕಚೇರಿಯಲ್ಲಿ ಹೊರಗಡೆ ಕೆಲಸ ಮಾಡಿ ಕೊಂಡಿರುವ ಶಾಲಿನಿ ಎಂಬಾಕೆಗೆ ನೀಡಿದ್ದು, ಅದಕ್ಕೆ ಶಾಲಿನಿ ತೆರಿಗೆ ಸ್ವೀಕೃತಿ ಆದ ಬಗ್ಗೆ ಸ್ವೀಕೃತಿಯನ್ನು ನೀಡಿದ್ದರು. ಇತ್ತೀಚೆಗೆ ಆನಂದ ಸುವರ್ಣ ಆಸ್ತಿ ತೆರಿಗೆ ಪೋರ್ಟಲ್‌ನಲ್ಲಿ ತೆರಿಗೆ ಪಾವತಿಯಾದ ಬಗ್ಗೆ ತಪಾಸಣೆ ನಡೆಸಿದಾಗ ತೆರಿಗೆ ಪಾವತಿ ಆಗದೇ ಪೆಂಡಿಂಗ್ ಇರುವ ಬಗ್ಗೆ ತಿಳಿದು ಬಂತು. ಈ ವಿಚಾರವನ್ನು ಆನಂದ ಸುವರ್ಣ ಪೌರಾಯುಕ್ತರ ಗಮನಕ್ಕೆ ತಂದಿದ್ದು, ಅವರು ಕೂಡ ಪರಿಶೀಲಿಸಿದಾಗ ಪೆಂಡಿಂಗ್ ಇರುವುದು ಕಂಡು ಬಂದಿದೆ. ನಂತರ ಕಚೇರಿಯಲ್ಲಿ ಕೆಲಸವನ್ನು ಮಾಡಿಕೊಂಡಿರುವ ಶಾಲಿನಿ ಅವರನ್ನು ಕರೆದು ವಿಚಾರಿಸಿದಾಗ ಆಕೆ ತಪ್ಪು ಒಪ್ಪಿಕೊಂಡಿದ್ದು, 2026ರ ಫೆ.16ರಂದು ಆಕೆ ಆನಂದ ಸುವರ್ಣ ರವರ ಹೆಸರಿನಲ್ಲಿ ಹೊಸ ಚಲನ್ ಜನರೇಟ್ ಮಾಡಿ ಒಟ್ಟು 35,213ರೂ. ಭರಿಸಿದ್ದಳು. ಶಾಲಿನಿ, ಆನಂದ ಸುವರ್ಣ ನೀಡಿದ ತೆರಿಗೆ ಹಣವನ್ನು ಸರಕಾರಕ್ಕೆ ಕಟ್ಟದೇ ಚಲನ್‌ನಲ್ಲಿ ಯೂನಿಯನ್ ಬ್ಯಾಂಕ್‌ನ ಮೊಹರನ್ನು ಹಾಕಿ ತೆರಿಗೆ ಹಣವನ್ನು ದುರ್ಬಳಕೆ ಮಾಡಿ ಇನ್ನಿತರರೊಂದಿಗೆ ಸೇರಿ ಸರಕಾರಕ್ಕೆ ವಂಚನೆ ಮಾಡಿರುವ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಾರ್ತಾ ಭಾರತಿ 20 Feb 2026 8:58 pm

ಎಲ್ಲಾ ಒಂದೇ ಎತ್ತರ, ಹೆಲ್ಮೆಟ್ ತೆಗೆದರೆ ಅವರ ತಲೆ ಮೇಲೆ ಬಿಲಿಯಡ್ರ್ಸ್ ಆಡಬಹುದು: ಚೀನೀ ಸೈನಿಕರ ಬಗ್ಗೆ ಟ್ರಂಪ್ ಹೇಳಿಕೆ

ವಾಷಿಂಗ್ಟನ್, ಫೆ.20: ಗುರುವಾರ ವಾಷಿಂಗ್ಟನ್‍ನಲ್ಲಿ ನಡೆದ ಶಾಂತಿ ಮಂಡಳಿ ಸಭೆಯಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ಹಿಂದಿನ ಚೀನಾ ಭೇಟಿಯನ್ನು ನೆನಪಿಸಿಕೊಂಡು ಚೀನೀ ಅಧ್ಯಕ್ಷರು ತನ್ನನ್ನು ಅತ್ಯುತ್ತಮವಾಗಿ ಸತ್ಕರಿಸಿದ್ದರು ಎಂದು ಸ್ಮರಿಸಿಕೊಂಡರು ಎಂದು ಮಾಧ್ಯಮಗಳು ವರದಿ ಮಾಡಿವೆ. ಕಳೆದ ಬಾರಿ ನಾನು ಚೀನಾಕ್ಕೆ ಹೋಗಿದ್ದಾಗ ಅಧ್ಯಕ್ಷ ಕ್ಸಿ ಜಿಂಪಿಂಗ್ ಉತ್ತಮವಾಗಿ ಸತ್ಕರಿಸಿದರು. ಯೋಧರಿಂದ ಗೌರವ ವಂದನೆ ಕಾರ್ಯಕ್ರಮ ಏರ್ಪಡಿಸಿದ್ದರು. ಇದು ಬಹಳ ಅದ್ಭುತವಾಗಿತ್ತು. ಒಂದೇ ಎತ್ತರದ ಅನೇಕ ಸೈನಿಕರನ್ನು ನಾನು ಅದುವರೆಗೆ ನೋಡಿರಲಿಲ್ಲ. ಅವರು ತಮ್ಮ ಹೆಲ್ಮೆಟ್‍ಗಳನ್ನು ಕೆಳಗಿಳಿಸಿದರೆ ಅವರ ತಲೆಯ ಮೇಲೆ ಬಿಲಿಯಡ್ರ್ಸ್ ಆಡಬಹುದು ಎಂದು ನಾನು ಹೇಳಿದೆ. ಇದು ಬಹಳ ಅದ್ಭುತ ವಿಷಯ' ಎಂದು ಗುರುವಾರದ ಸಭೆಯಲ್ಲಿ ಟ್ರಂಪ್ ಹೇಳಿದಾಗ ಸಭೆ ನಗೆಗಡಲಲ್ಲಿ ಮುಳುಗಿತ್ತು ಎಂದು ವರದಿಯಾಗಿದೆ. ಶಾಂತಿ ಮಂಡಳಿಯಲ್ಲಿ ಚೀನಾ ಮತ್ತು ರಶ್ಯ ಇರಬೇಕೆಂಬುದು ನಮ್ಮ ಆಶಯ. ಅವರನ್ನೂ ಆಹ್ವಾನಿಸಿದ್ದೇವೆ ಎಂದ ಟ್ರಂಪ್ `ಯುದ್ಧದಿಂದ ಜರ್ಝರಿತಗೊಂಡ ಗಾಝಾದಲ್ಲಿ ಶಾಂತಿ ಮರುಸ್ಥಾಪಿಸಲಾಗುವುದು. ನಾವು ಗಾಝಾಕ್ಕೆ ನೆರವಾಗಲಿದ್ದೇವೆ. ಅದನ್ನು ಸರಿಪಡಿಸುತ್ತೇವೆ ಮತ್ತು ಯಶಸ್ವಿಗೊಳಿಸುತ್ತೇವೆ. ಈ ಉಪಕ್ರಮಕ್ಕೆ ಅಮೆರಿಕ 10 ಶತಕೋಟಿ ಡಾಲರ್ ದೇಣಿಗೆ ನೀಡುತ್ತದೆ' ಎಂದು ಘೋಷಿಸಿದರು. ಗಾಝಾ ಮರು ನಿರ್ಮಾಣ ಉಪಕ್ರಮಗಳಿಗೆ ಖತರ್, ಸೌದಿ ಅರೆಬಿಯಾ ಮತ್ತು ಯುಎಇ ಸೇರಿದಂತೆ ಹಲವು ದೇಶಗಳು ತಲಾ 1 ಶತಕೋಟಿ ಡಾಲರ್ ದೇಣಿಗೆ ನೀಡಲು ಒಪ್ಪಿಕೊಂಡಿವೆ ಎಂದು ಶ್ವೇತಭವನ ಹೇಳಿದೆ.

ವಾರ್ತಾ ಭಾರತಿ 20 Feb 2026 8:55 pm

ಕಾಂಗ್ರೆಸ್ ಸರಕಾರದ ಒಳಜಗಳದಿಂದ ಜನರು ಬೇಸತ್ತಿದ್ದಾರೆ: ಛಲವಾದಿ ನಾರಾಯಣಸ್ವಾಮಿ

ಲಿಂಗಸುಗೂರು: ಕಾಂಗ್ರೆಸ್ ಪಕ್ಷದಲ್ಲಿನ ಗುಂಪುಗಾರಿಕೆ ಹಾಗೂ ಪರಸ್ಪರ ಆರೋಪ-ಪ್ರತ್ಯಾರೋಪಗಳಿಂದ ಜನರು ಬೇಸತ್ತು ಹೋಗಿದ್ದಾರೆ ಎಂದು ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಆರೋಪಿಸಿದರು. ಲಿಂಗಸುಗೂರು ತಾಲೂಕಿನ ಹಟ್ಟಿ ಚಿನ್ನದ ಗಣಿ ಪಟ್ಟಣದ ಅತಿಥಿ ಗೃಹದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲೋಕೋಪಯೋಗಿ ಇಲಾಖೆಯ ಸಚಿವರ ಹೇಳಿಕೆ ಆಕ್ಷೇಪಾರ್ಹವಾಗಿದೆ. “ರಾಜ್ಯದಲ್ಲಿ ಹಿಂದೆ ಭ್ರಷ್ಟಾಚಾರ ಇತ್ತು, ಈಗಲೂ ಇದೆ, ಮುಂದೆಯೂ ಇರಲಿದೆ” ಎಂಬ ಹೇಳಿಕೆಯ ಮೂಲಕ ಕಾಂಗ್ರೆಸ್ ಸರ್ಕಾರವೇ ಭ್ರಷ್ಟಾಚಾರದಲ್ಲಿ ತೊಡಗಿರುವುದನ್ನು ಬಹಿರಂಗಪಡಿಸಿದೆ ಎಂದು ಟೀಕಿಸಿದರು. ಐದು ಗ್ಯಾರಂಟಿ ಯೋಜನೆಗಳು ಸಮರ್ಪಕವಾಗಿ ಜನರಿಗೆ ತಲುಪಿಲ್ಲ. ಟಿಎಸ್‌ಪಿ ಹಾಗೂ ಎಸ್‌ಸಿ/ಎಸ್‌ಟಿ ಮೀಸಲು ನಿಧಿಗಳನ್ನು ಸರ್ಕಾರ ದುರುಪಯೋಗಪಡಿಸಿಕೊಂಡಿದೆ. ರಾಜ್ಯದಲ್ಲಿ ನಿರುದ್ಯೋಗ ತಾಂಡವವಾಡುತ್ತಿದೆ. ನೇಮಕಾತಿ ಪ್ರಕ್ರಿಯೆಯಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಆರೋಪಿಸಿದರು. ಕಾಂಗ್ರೆಸ್ ಪಕ್ಷದೊಳಗಿನ ಕೆಲ ನಾಯಕರ ಹೇಳಿಕೆಗಳನ್ನು ಉಲ್ಲೇಖಿಸಿ, ಒಳಜಗಳ ಮತ್ತು ಗುಂಪು ರಾಜಕೀಯ ಮುಂದುವರಿದರೆ ಜನರು ಮುಂದಿನ ದಿನಗಳಲ್ಲಿ ಕಾಂಗ್ರೆಸ್‌ಗೆ ಪಾಠ ಕಲಿಸಲಿದ್ದಾರೆ ಎಂದು ಹೇಳಿದರು.

ವಾರ್ತಾ ಭಾರತಿ 20 Feb 2026 8:54 pm

ವೀಕ್ಷಣೆಯಲ್ಲಿ ಹೊಸ ದಾಖಲೆ ಬರೆದ ಭಾರತ-ಪಾಕಿಸ್ತಾನ ಟಿ-20 ವಿಶ್ವಕಪ್ ಪಂದ್ಯ

ಹೊಸದಿಲ್ಲಿ, ಫೆ.20: ಕೊಲಂಬೊದ ಆರ್.ಪ್ರೇಮದಾಸ ಸ್ಟೇಡಿಯಂನಲ್ಲಿ ಫೆ.15ರಂದು ನಡೆದಿದ್ದ ಟಿ-20 ವಿಶ್ವಕಪ್ ಪಂದ್ಯದಲ್ಲಿ ಭಾರತ ಹಾಗೂ ಪಾಕಿಸ್ತಾನ ಕ್ರಿಕೆಟ್ ತಂಡಗಳು ಮುಖಾಮುಖಿಯಾಗಿದ್ದವು. ಪ್ರಸಕ್ತ ವಿಶ್ವಕಪ್‌ನಲ್ಲಿ ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯವು ಜಿಯೋ ಹಾಟ್‌ಸ್ಟಾರ್‌ನಲ್ಲಿ ಅತ್ಯಂತ ಹೆಚ್ಚು ವೀಕ್ಷಣೆ ಪಡೆದ ಪಂದ್ಯವಾಗಿದೆ. ಭಾರತದ ಅಧಿಕೃತ ಪ್ರಸಾರ ಹಾಗೂ ಡಿಜಿಟಲ್ ಪಾಲುದಾರ ಜಿಯೋಸ್ಟಾರ್ ಪ್ರಕಾರ, ಭಾರತ ಹಾಗೂ ಪಾಕಿಸ್ತಾನ ನಡುವಿನ ವಿಶ್ವಕಪ್ ಪಂದ್ಯಕ್ಕೆ ಜಿಯೋ ಹಾಟ್‌ಸ್ಟಾರ್‌ನಲ್ಲಿ ಅಭೂತಪೂರ್ವ ಸ್ಪಂದನೆ ವ್ಯಕ್ತವಾಗಿದೆ. ಬರೋಬ್ಬರಿ 163 ಮಿಲಿಯನ್(16.30 ಕೋಟಿ)ವೀಕ್ಷಣೆ ಕಂಡಿದೆ. ಇದು ಯಾವುದೇ ಟಿ-20 ವಿಶ್ವಕಪ್ ಪಂದ್ಯಕ್ಕಿಂತಲೂ ಅತಿ ಹೆಚ್ಚಾಗಿದೆ. ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವೆ 2024ರಲ್ಲಿ ನಡೆದಿದ್ದ ಟಿ-20 ವಿಶ್ವಕಪ್ ಫೈನಲ್‌ನ ಡಿಜಿಟಲ್ ವೀಕ್ಷಕರ ಸಂಖ್ಯೆಯನ್ನು ಸಹ ಇದು ಮೀರಿಸಿದೆ. 2024ರ ಆವೃತ್ತಿಯಲ್ಲಿ ಭಾರತ-ಪಾಕಿಸ್ತಾನ ತಂಡಗಳ ಮುಖಾಮುಖಿಗೆ ಹೋಲಿಸಿದರೆ, 2026ರ ಈ ಪಂದ್ಯವು ಶೇ.56ರಷ್ಟು ಹೆಚ್ಚಿನ ವೀಕ್ಷಣೆಯನ್ನು ದಾಖಲಿಸಿದೆ. ಮೊಬೈಲ್‌ನಲ್ಲಿ ಇದು ಯಾವುದೆ ಐಸಿಸಿ ಟಿ-20 ಲೀಗ್ ಹಂತದ ಪಂದ್ಯಕ್ಕಿಂತಲೂ ಅತಿ ಹೆಚ್ಚು ವೀಕ್ಷಣೆ ಕಂಡಿದೆ. ಇದು ಹಿಂದಿನ ಭಾರತ-ಪಾಕಿಸ್ತಾನ ಮುಖಾಮುಖಿಗಿಂತ 1.2ಪಟ್ಟು ಹೆಚ್ಚಾಗಿದೆ. ಭಾರತ ಹಾಗೂ ಪಾಕಿಸ್ತಾನ ನಡುವಿನ ಪೈಪೋಟಿಯು ಸಾಕಷ್ಟು ಜನಪ್ರಿಯತೆ ಹೊಂದಿದೆ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಈ ಪಂದ್ಯವು ಭಾರೀ ಗಮನ ಸೆಳೆದಿದ್ದು, 20 ಬಿಲಿಯನ್ ನಿಮಿಷಗಳ ವೀಕ್ಷಣೆ ಸಮಯವನ್ನು ದಾಖಲಿಸಿದೆ. ಇದು ಹಿಂದಿನ ಟಿ-20 ವಿಶ್ವಕಪ್ ಪಂದ್ಯಕ್ಕಿಂತ ಶೇ.42ರಷ್ಟು ಹೆಚ್ಚಾಗಿದೆ. ಇತ್ತೀಚೆಗೆ ನಡೆದಿದ್ದ ವಿಶ್ವಕಪ್ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ 61 ರನ್‌ಗಳ ಅಂತರದಿಂದ ಜಯ ಸಾಧಿಸುವ ಮೂಲಕ ಭಾರತ ತಂಡ ಪ್ರಾಬಲ್ಯ ಸಾಧಿಸಿತ್ತು. ಮೊದಲು ಬ್ಯಾಟಿಂಗ್ ಮಾಡಿದ್ದ ಭಾರತ ತಂಡವು 7 ವಿಕೆಟ್‌ಗಳ ನಷ್ಟಕ್ಕೆ 175 ರನ್ ಗಳಿಸಿತ್ತು. ಇಶಾನ್ ಕಿಶನ್ 77 ರನ್ ಗಳಿಸಿದ್ದರು. ಗೆಲ್ಲಲು 176 ರನ್ ಗುರಿ ಪಡೆದಿದ್ದ ಪಾಕಿಸ್ತಾನ ತಂಡವು ಬುಮ್ರಾ, ಅಕ್ಷರ್ ಪಟೇಲ್ ಹಾಗೂ ವರುಣ್ ಚಕ್ರವರ್ತಿ ಬೌಲಿಂಗ್ ದಾಳಿಗೆ ತತ್ತರಿಸಿ 114 ರನ್‌ಗೆ ಆಲೌಟಾಯಿತು. ಟಿ-20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ಹಾಗೂ ಪಾಕಿಸ್ತಾನ ಒಟ್ಟು 9 ಬಾರಿ ಮುಖಾಮುಖಿಯಾಗಿದ್ದು, ಕೇವಲ ಒಂದು ಬಾರಿ ಮಾತ್ರ ಪಾಕಿಸ್ತಾನ ಪಂದ್ಯವನ್ನು ಗೆದ್ದಿತ್ತು. ಭಾರತ ಹಾಗೂ ಪಾಕಿಸ್ತಾನ ಪಂದ್ಯವು ಟೆಲಿವಿಷನ್ ರೇಟಿಂಗ್‌ನಲ್ಲಿ(ಟಿವಿಆರ್)ಶೇ.71ರಷ್ಟು ಏರಿಕೆ ಕಂಡಿದೆ. ಇದು 2021ರ ನಂತರ ಟಿವಿಯಲ್ಲಿ ಅತ್ಯಂತ ಹೆಚ್ಚು ರೇಟಿಂಗ್ ಪಡೆದ ಟಿ-20 ಪಂದ್ಯವಾಗಿದೆ. ‘‘ಭಾರತ-ಪಾಕಿಸ್ತಾನ ನಡುವಿನ ಪಂದ್ಯದ ಅಭೂತಪೂರ್ವ ವೀಕ್ಷಕರ ಸಂಖ್ಯೆ ಹಾಗೂ ಭಾಗವಹಿಸುವಿಕೆಯ ಸಂಖ್ಯೆಯು ಐಸಿಸಿ ಪುರುಷರ ಟಿ-20 ವಿಶ್ವಕಪ್‌ನ ಕುರಿತು ಅಭಿಮಾನಿಗಳು ಹೊಂದಿರುವ ಗೀಳಿಗೆ ಮತ್ತಷ್ಟು ಪುರಾವೆಯಾಗಿದೆ’’ಎಂದು ಜಿಯೋಸ್ಟಾರ್‌ನ ಕ್ರೀಡಾವಿಭಾಗದ ಮುಖ್ಯಸ್ಥ ಸಿದ್ದಾರ್ಥ್ ಶರ್ಮಾ ಅಭಿಪ್ರಾಯಪಟ್ಟಿದ್ದಾರೆ.

ವಾರ್ತಾ ಭಾರತಿ 20 Feb 2026 8:51 pm

ಅಫ್ಘಾನಿಸ್ತಾನಕ್ಕೆ ವಿದಾಯ ಕೋರಿದ ಕೋಚ್ ಜೋನಾಥನ್ ಟ್ರಾಟ್

ಹೊಸದಿಲ್ಲಿ, ಫೆ.20: ಅಫ್ಘಾನಿಸ್ತಾನ ಕ್ರಿಕೆಟ್ ತಂಡ 2026ರ ಟಿ-20 ವಿಶ್ವಕಪ್‌ನಲ್ಲಿ ಕೊನೆಯ ಗ್ರೂಪ್ ಹಂತದ ಪಂದ್ಯ ಆಡಿದ ನಂತರ ನಿರ್ಗಮನ ಕೋಚ್ ಜೋನಾಥನ್ ಟ್ರಾಟ್, ಅಫ್ಘಾನ್ ತಂಡದೊಂದಿಗೆ ಕಳೆದ ತನ್ನ ಅವಧಿಯನ್ನು ನೆನಪಿಸಿಕೊಂಡರು. ಭವಿಷ್ಯದ ಕೋಚಿಂಗ್ ಅವಕಾಶಗಳ ಬಗ್ಗೆ ತನ್ನ ಯೋಚನೆಗಳನ್ನು ಹಂಚಿಕೊಂಡರು. ಚೆನ್ನೈನಲ್ಲಿ ಗುರುವಾರ ಕೆನಡಾ ತಂಡದ ವಿರುದ್ಧ 82 ರನ್‌ಗಳ ಅಂತರದಿಂದ ಗೆದ್ದ ಹೊರತಾಗಿಯೂ ಅಫ್ಘಾನಿಸ್ತಾನ ತಂಡವು ಪಂದ್ಯಾವಳಿಯಿಂದ ನಿರ್ಗಮಿಸಿದೆ. ಟ್ರಾಟ್ 2022ರಲ್ಲಿ ಅಫ್ಘಾನ್ ತಂಡದ ಕೋಚ್ ಹುದ್ದೆ ವಹಿಸಿಕೊಂಡ ನಂತರ ಆಟಗಾರರೊಂದಿಗೆ ಮುಕ್ತವಾಗಿ ಬೆರೆತಿದ್ದರು. ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಅಫ್ಘಾನಿಸ್ತಾನ ತಂಡ ಉತ್ತಮ ಪ್ರದರ್ಶನ ನೀಡುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಟ್ರಾಟ್ ತರಬೇತಿಯಡಿಯಲ್ಲಿ ಅಫ್ಘಾನಿಸ್ತಾನ ತಂಡ ಅತ್ಯಂತ ಮಹತ್ವದ ಸಾಧನೆಯನ್ನು ಮಾಡಿದೆ. 2024ರಲ್ಲಿ ಮೊದಲ ಬಾರಿ ಟಿ-20 ವಿಶ್ವಕಪ್‌ನಲ್ಲಿ ಸೆಮಿ ಫೈನಲ್‌ಗೆ ತಲುಪಿದ್ದು ಹಾಗೂ ಅಗ್ರ ರ್ಯಾಂಕಿನ ತಂಡಗಳ ವಿರುದ್ದ ಐತಿಹಾಸಿಕ ಗೆಲುವು ಇದರಲ್ಲಿ ಸೇರಿದೆ. ಈ ಎಲ್ಲ ಮೈಲಿಗಲ್ಲುಗಳು ದೇಶದ ಜಾಗತಿಕ ಕ್ರಿಕೆಟ್ ಘನತೆಯನ್ನು ಬಲಗೊಳಿಸಿದೆ. ‘‘ಅಫ್ಘಾನಿಸ್ತಾನ ತಂಡಕ್ಕೆ ಕೋಚಿಂಗ್ ನೀಡುವುದು ನನ್ನ ಯೋಜನೆಯ ಭಾಗವಾಗಿರಲಿಲ್ಲ. ಗ್ರಹಾಂ ಥೋರ್ಪೆ ಕೋಚ್ ಆಗಬೇಕಾಗಿತ್ತು. ದುರದೃಷ್ಟವಶಾತ್ ಅವರು ಕೋಚ್ ಆಗಲಿಲ್ಲ. ಆಗ ನನಗೆ ಈ ಹುದ್ದೆಯನ್ನು ನೀಡಲಾಯಿತು. ಅದನ್ನು ನಾನು ಸಂತೋಷದಿಂದ ಸ್ವೀಕರಿಸಿದ್ದೆೆ. ಕೋಚ್ ಆಗಿ ನನ್ನ ಬೆಳವಣಿಗೆಯಲ್ಲಿ ಗ್ರಹಾಂ ಪ್ರಮುಖ ಪಾತ್ರವಹಿಸಿದ್ದಾರೆ. ಇಸಿಬಿಯಲ್ಲಿ ನನಗೆ ಅವಕಾಶ ನೀಡಿದ್ದರು. ಕೋಚ್ ಆಗಿ ನನ್ನ ಮೇಲೆ ಸಂಪೂರ್ಣ ನಂಬಿಕೆ ಇಟ್ಟಿದ್ದರು’’ ಎಂದು ಟ್ರಾಟ್ ಹೇಳಿದರು.

ವಾರ್ತಾ ಭಾರತಿ 20 Feb 2026 8:48 pm

’ಕುರಿಗಾಹಿ ಸಿಎಂ ಆಗಿದ್ದು ಹಲವರ ಕಣ್ಣು ಕೆಂಪಾಗಲು ಕಾರಣ’ : ಸಿಎಂ ಹೂಡಿದ ಜಾತಿ ಅಸ್ತ್ರದ ಗುರಿ ಯಾರತ್ತ?

CM Siddaramaiah on Social Justice : ಕುರಿ ಕಾಯುವವನು ರಾಜ್ಯದ ಮುಖ್ಯಮಂತ್ರಿ ಆಗಿ ಬಿಟ್ಟನಲ್ಲಾ ಎನ್ನುವ ಅಸಹನೆ, ಅಸೂಯೆ ಕೆಲವರಲ್ಲಿ ಕುದಿಯುತ್ತಿದೆ ಎಂದು ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಸಿಎಂ ಯಾರನ್ನು ಟಾರ್ಗೆಟ್ ಮಾಡಿ ಈ ಹೇಳಿಕೆಯನ್ನು ನೀಡಿದ್ದಾರೆ ಎನ್ನುವ ಕುತೂಹಲವಂತೂ ಇದೆ. ಇದನ್ನು, ಬಿಜೆಪಿ ಮತ್ತು ಜೆಡಿಎಸ್ ನಾಯಕರಿಗೆ ಟಾರ್ಗೆಟ್ ಮಾಡಿ ಸಿದ್ದರಾಮಯ್ಯ ಹೇಳಿರಬಹುದು ಎಂದು ವ್ಯಾಖ್ಯಾನಿಸಲಾಗುತ್ತಿದೆ.

ವಿಜಯ ಕರ್ನಾಟಕ 20 Feb 2026 8:47 pm

ಪಾಕಿಸ್ತಾನದ ಮಾಜಿ ಆಟಗಾರರ ನಿಂದನೆ: ಶಾದಾಬ್ ಖಾನ್‌ಗೆ ಛೀಮಾರಿ ಹಾಕಿದ ಪಿಸಿಬಿ

ಕರಾಚಿ, ಫೆ.20: ಈಗ ನಡೆಯುತ್ತಿರುವ ಟಿ-20 ವಿಶ್ವಕಪ್ ವೇಳೆ ಮಾಜಿ ಆಟಗಾರರನ್ನು ನಿಂದಿಸಿದ ಶಾದಾಬ್ ಖಾನ್ ಬಗ್ಗೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ(ಪಿಸಿಬಿ)ತನ್ನ ಅಸಮಾಧಾನ ವ್ಯಕ್ತಪಡಿಸಿದೆ. ತನ್ನ ಆಯ್ಕೆಯನ್ನು ಟೀಕಿಸಿದ್ದ ಮಾಜಿ ಆಟಗಾರರ ಬಗ್ಗೆ ಆಲ್‌ರೌಂಡರ್ ಖಾನ್ ನೀಡಿದ್ದ ಹೇಳಿಕೆ ಬಗ್ಗೆ ಕ್ರಿಕೆಟ್ ಮಂಡಳಿ ಅಸಮಾಧಾನಗೊಂಡಿದೆ. ಕೊಲಂಬೊದಲ್ಲಿ ಬುಧವಾರ ನಡೆದ ನಮೀಬಿಯಾ ತಂಡ ವಿರುದ್ಧ ಪಾಕಿಸ್ತಾನ ತಂಡವು 102 ರನ್‌ಗಳ ಅಂತರದಿಂದ ಜಯಶಾಲಿಯಾಗಲು ಪ್ರಮುಖ ಪಾತ್ರವಹಿಸಿದ ನಂತರ ತನ್ನ ಟೀಕಾಕಾರರ ಕುರಿತು ಶಾದಾಬ್ ಖಾನ್ ಖಾರವಾಗಿ ಪ್ರತಿಕ್ರಿಯಿಸಿದ್ದರು. ‘‘ಮಾಜಿ ಆಟಗಾರರು ತಮ್ಮದೇ ಆದ ಅಭಿಪ್ರಾಯಗಳನ್ನು ಹೊಂದಿದ್ದಾರೆ. ಅವರು(ಮಾಜಿ ಆಟಗಾರರು)ಲೆಜೆಂಡ್‌ಗಳು, ಆದರೆ ಅವರು ನಾವು ಸಾಧಿಸಿದ್ದನ್ನು ಸಾಧಿಸಿಲ್ಲ. ನಾವು ವಿಶ್ವಕಪ್‌ನಲ್ಲಿ ಭಾರತವನ್ನು ಮಣಿಸಿದ್ದೆವು’’ ಎಂದು ನಮೀಬಿಯಾ ವಿರುದ್ದ 22 ಎಸೆತಗಳಲ್ಲಿ 36 ರನ್ ಹಾಗೂ 13 ರನ್‌ಗೆ ಮೂರು ವಿಕೆಟ್‌ಗಳನ್ನು ಪಡೆದಿದ್ದ ಶಾದಾಬ್ ಹೇಳಿದ್ದಾರೆ. ‘‘ಬುಧವಾರ ರಾತ್ರಿ ಪಂದ್ಯದ ನಂತರ ನಡೆದ ಪತ್ರಿಕಾಗೋಷ್ಠಿಯಲ್ಲಿ ಶಾದಾಬ್ ಮಿತಿಯನ್ನು ಮೀರಿದ್ದಾರೆ. ಮಾವ ಸಕ್ಲೇನ್ ಮುಷ್ತಾಕ್ ಸಹಿತ ಎಲ್ಲ ಮಾಜಿ ಆಟಗಾರರ ಬಗ್ಗೆ ಶಾದಾಬ್‌ಗೆ ಚೆನ್ನಾಗಿ ಗೊತ್ತಿದೆ. ಸಕ್ಲೇನ್ ಮುಷ್ತಾಕ್ ಗೌರವಾನ್ವಿತ ಹಾಗೂ ಪಾಕಿಸ್ತಾನದ ಶ್ರೇಷ್ಠ ಆಟಗಾರನಾಗಿದ್ದಾರೆ. ಶಾದಾಬ್ ಎಲ್ಲರಿಗೂ ಗೌರವ ನೀಡಬೇಕಾಗಿತ್ತು. ಇಂತಹ ಭಾಷೆ ಬಳಸಬಾರದಿತ್ತು’’ಎಂದು ಟೀಮ್ ಮ್ಯಾನೇಜರ್ ನವೀದ್ ಚೀಮಾ ಹೇಳಿಕೆಯನ್ನು ಉಲ್ಲೇಖಿಸಿ ‘ಟೆಲಿಕಾಮ್ ಏಶ್ಯ ಸ್ಪೋರ್ಟ್ಸ್’ ವರದಿ ಮಾಡಿದೆ. ಪಾಕಿಸ್ತಾನ ತಂಡವು ಶನಿವಾರ ಕೊಲಂಬೊದಲ್ಲಿ ತನ್ನ ಮೊದಲ ಸೂಪರ್-8 ಪಂದ್ಯದಲ್ಲಿ ನ್ಯೂಝಿಲ್ಯಾಂಡ್ ತಂಡವನ್ನು ಎದುರಿಸಲಿದೆ. ಆನಂತರ ಫೆ.24ರಂದು ಪಲ್ಲೆಕೆಲೆಯಲ್ಲಿ ಇಂಗ್ಲೆಂಡ್ ತಂಡ ಹಾಗೂ ನಾಲ್ಕು ದಿನಗಳ ನಂತರ ಅದೇ ಮೈದಾನದಲ್ಲಿ ಶ್ರೀಲಂಕಾ ತಂಡದ ವಿರುದ್ಧ ಸೆಣಸಾಡಲಿದೆ.

ವಾರ್ತಾ ಭಾರತಿ 20 Feb 2026 8:46 pm

ಶಸ್ತ್ರಚಿಕಿತ್ಸೆಗೆ ಶಿಫಾರಸು ಮಾಡುವ ಆ್ಯಂಟಿಬಯೋಟಿಕ್ ಗಳಲ್ಲಿ ಅರ್ಧದಷ್ಟು ಸೂಕ್ತವಲ್ಲ: ಅಧ್ಯಯನ ವರದಿ

ಆಸ್ಟ್ರೇಲಿಯಾದಲ್ಲಿ ಆ್ಯಂಟಿಬಯೋಟಿಕ್ ಬಳಕೆಯ ಕುರಿತ ಇತ್ತೀಚಿನ ಅಧ್ಯಯನ ವರದಿಯೊಂದು ಅದರಲ್ಲಿನ ಪ್ರಗತಿ ಮತ್ತು ಸಮಸ್ಯೆಗಳನ್ನು ತೋರಿಸಿದೆ. ಶಸ್ತ್ರಚಿಕಿತ್ಸೆಯ ಸಮಯದಲ್ಲಿ ಆ್ಯಂಟಿಬಯೋಟಿಕ್ ಗಳನ್ನು ಹೆಚ್ಚಾಗಿ ತಪ್ಪಾಗಿ ಬಳಸಲಾಗುತ್ತಿದೆ ಮತ್ತು ವೃದ್ಧಾಶ್ರಮಗಳಲ್ಲಿ ದೀರ್ಘಕಾಲದವರೆಗೆ ಅವುಗಳನ್ನು ಬಳಸಲಾಗುತ್ತಿದೆ ಎಂದು ವರದಿ ತಿಳಿಸಿದೆ. ವೃದ್ಧರ ಆರೈಕೆ ಕೇಂದ್ರಗಳಲ್ಲಿ ದೀರ್ಘಾವಧಿಯ ಪ್ರಿಸ್ಕ್ರಿಪ್ಷನ್‌ ಗಳು ಅಧಿಕವಾಗಿದ್ದು, ಇದು ವಯಸ್ಸಾದ ರೋಗಿಗಳಿಗೆ ಅಡ್ಡಪರಿಣಾಮಗಳ ಅಪಾಯವನ್ನು ಹೆಚ್ಚಿಸುತ್ತದೆ. ಒಂದು ದಶಕದ ಹಿಂದೆ ಇದ್ದಕ್ಕಿಂತ ಸಮುದಾಯದಲ್ಲಿ ಆ್ಯಂಟಿಬಯೋಟಿಕ್ ಗಳನ್ನು ಶಿಫಾರಸು ಮಾಡುವ ಪ್ರಮಾಣ ಕಡಿಮೆಯಾಗಿದ್ದರೂ, ಆಸ್ಪತ್ರೆಗಳಲ್ಲಿ ಆ್ಯಂಟಿಬಯೋಟಿಕ್ ಶಿಫಾರಸು ಮಾಡುವ ಪ್ರಕ್ರಿಯೆಯನ್ನು ಸುಧಾರಿಸಲು ಇನ್ನೂ ಅವಕಾಶವಿದೆ ಎಂದು ವರದಿ ಸೂಚಿಸುತ್ತದೆ. ಆ್ಯಂಟಿಬಯೋಟಿಕ್ ಬಳಕೆ ಮತ್ತು ಪ್ರತಿರೋಧ ಏಕೆ ಮುಖ್ಯ? ಆಸ್ಪತ್ರೆಗಳಲ್ಲಿ ಮತ್ತು ಸಮುದಾಯದಲ್ಲಿ ಆ್ಯಂಟಿಬಯೋಟಿಕ್ ಬಳಕೆಯನ್ನು ಪ್ರೇರೇಪಿಸುವ ಅಂಶಗಳು ಸಾಮಾನ್ಯವಾಗಿ ವಿಭಿನ್ನವಾಗಿರುತ್ತವೆ. ಆಸ್ಪತ್ರೆಗಳಲ್ಲಿ ಸೋಂಕು ಹೊಂದಿರುವ ಹೆಚ್ಚಿನ ರೋಗಿಗಳು ಇರುತ್ತಾರೆ. ಇವು ರೋಗಿಗಳು ನಿರೋಧಕ ಸೋಂಕುಗಳಿಗೆ ಒಳಗಾಗುವ ಸಾಧ್ಯತೆ ಹೆಚ್ಚು ಇರುವ ಸ್ಥಳಗಳಾಗಿವೆ. ಇಲ್ಲಿ ಮುಖ್ಯ ಸವಾಲು ಎಂದರೆ ಅನಾರೋಗ್ಯಪೀಡಿತ ರೋಗಿಗಳು ಆ್ಯಂಟಿಬಯೋಟಿಕ್ ಗಳನ್ನು ತ್ವರಿತವಾಗಿ ಪಡೆಯುವುದನ್ನು ಖಚಿತಪಡಿಸಿಕೊಳ್ಳುವುದು ಮತ್ತು ಅವುಗಳನ್ನು ಅನಗತ್ಯವಾಗಿ ಅತಿಯಾಗಿ ಬಳಸುವುದನ್ನು ತಪ್ಪಿಸುವುದಾಗಿದೆ. ಸಮುದಾಯದಲ್ಲಿ ವೈದ್ಯರು ಆ್ಯಂಟಿಬಯೋಟಿಕ್ ಗಳ ಅಗತ್ಯವಿದೆಯೇ ಅಥವಾ ರೋಗಿಯು ಅವುಗಳಿಲ್ಲದೆ ಚೇತರಿಸಿಕೊಳ್ಳಬಹುದೇ ಎಂದು ಎಚ್ಚರಿಕೆಯಿಂದ ತೀರ್ಮಾನಿಸಬೇಕು. ಈ ಸಮಸ್ಯೆಯನ್ನು ವೈಯಕ್ತಿಕ ರೋಗಿಗಳ ಮಟ್ಟದಲ್ಲಿ ನೋಡಿದರೆ ಅಪಾಯಗಳು ಸಣ್ಣದಾಗಿ ಅನಿಸಬಹುದು. ಆದರೆ ಹೆಚ್ಚಿನ ಜನರಿಗೆ ತಪ್ಪಾದ ಆ್ಯಂಟಿಬಯೋಟಿಕ್ ಬಳಕೆ ಅಥವಾ ಅಗತ್ಯವಿಲ್ಲದ ಬಳಕೆ ದೀರ್ಘಕಾಲದಲ್ಲಿ ಆ್ಯಂಟಿಬಯೋಟಿಕ್ ಪ್ರತಿರೋಧದ ಅಪಾಯವನ್ನು ಹೆಚ್ಚಿಸುತ್ತದೆ. ಬ್ಯಾಕ್ಟೀರಿಯಾಗಳು ಸಾಮಾನ್ಯ ಚಿಕಿತ್ಸಾ ಆಯ್ಕೆಗಳಿಗೆ ನಿರೋಧಕವಾಗುವುದರಿಂದ, ಚಿಕಿತ್ಸೆಯಿದ್ದರೂ ಸೋಂಕುಗಳು ಮುಂದುವರಿಯಬಹುದು. ಇದು ಆಯ್ಕೆಯ ಒತ್ತಡದಿಂದ ಸಂಭವಿಸುತ್ತದೆ. ಇದರರ್ಥ ಬ್ಯಾಕ್ಟೀರಿಯಾಗಳು ಆ್ಯಂಟಿಬಯೋಟಿಕ್ ಗಳ ಪರಿಣಾಮವನ್ನು ತಪ್ಪಿಸಲು ಸಹಾಯಕವಾಗುವ ಬದಲಾವಣೆಗಳನ್ನು ಅಭಿವೃದ್ಧಿಪಡಿಸುತ್ತವೆ. ಈ ನಿರೋಧಕ ತಳಿಗಳು ಬೆಳೆಯುತ್ತಲೇ ಇರುತ್ತವೆ ಮತ್ತು ಹರಡುತ್ತಲೇ ಇರುತ್ತವೆ. ►ಶಸ್ತ್ರಚಿಕಿತ್ಸೆಯಲ್ಲಿ ಆ್ಯಂಟಿಬಯೋಟಿಕ್ ಗಳನ್ನು ಏಕೆ ಬಳಸಲಾಗುತ್ತದೆ? ಶಸ್ತ್ರಚಿಕಿತ್ಸೆಯ ಸಮಯದಲ್ಲಿ ಸೋಂಕು ತಡೆಗಟ್ಟುವ ಕ್ರಮವಾಗಿ ಆ್ಯಂಟಿಬಯೋಟಿಕ್ ಗಳನ್ನು ಬಳಸಲಾಗುತ್ತದೆ. ಸೋಂಕಿನ ಹೆಚ್ಚಿನ ಅಪಾಯವಿರುವ ಕಾರ್ಯವಿಧಾನಗಳಿಗೆ ಮಾತ್ರ ಮತ್ತು ಅಲ್ಪಾವಧಿಗೆ — ಸಾಮಾನ್ಯವಾಗಿ ಶಸ್ತ್ರಚಿಕಿತ್ಸೆಗೆ ಮೊದಲು ಒಂದೇ ಡೋಸ್ ಅಥವಾ ನಂತರ 24 ಗಂಟೆಗಳವರೆಗೆ — ಅವು ಅಗತ್ಯವಾಗಿರುತ್ತದೆ. ಶಸ್ತ್ರಚಿಕಿತ್ಸೆಯ ಸಮಯದಲ್ಲಿ ಬಳಸಲಾಗುವ ಸುಮಾರು 43% ಆ್ಯಂಟಿಬಯೋಟಿಕ್ ಗಳನ್ನು ತಪ್ಪಾಗಿ ನೀಡಲಾಗುತ್ತದೆ ಎಂದು ವರದಿ ಬಹಿರಂಗಪಡಿಸಿದೆ. ಇದನ್ನು ಸರಿಪಡಿಸಲು ವೈದ್ಯರು ಮೂರು ಪ್ರಮುಖ ಗುರಿಗಳ ಮೇಲೆ ಕೇಂದ್ರೀಕರಿಸಬೇಕು: • ಅಗತ್ಯವಿದ್ದಾಗ ಮಾತ್ರ : ಸೋಂಕಿನ ಹೆಚ್ಚಿನ ಅಪಾಯವಿರುವ ಶಸ್ತ್ರಚಿಕಿತ್ಸೆಗಳಿಗೆ ಮಾತ್ರ ಆ್ಯಂಟಿಬಯೋಟಿಕ್ ಬಳಕೆ. • ಸರಿಯಾದ ಸಮಯ : ಔಷಧವನ್ನು ಸರಿಯಾದ ಸಮಯದಲ್ಲಿ ನೀಡಬೇಕು; ಶಸ್ತ್ರಚಿಕಿತ್ಸೆಗೆ ಒಂದು ಗಂಟೆ ಮೊದಲು ನೀಡುವುದು ಸೂಕ್ತ. • ಸರಿಯಾದ ಹೊಂದಾಣಿಕೆ : ಅನಗತ್ಯ ಅಡ್ಡಪರಿಣಾಮಗಳನ್ನು ಉಂಟುಮಾಡದೆ ನಿರ್ದಿಷ್ಟ ಸೂಕ್ಷ್ಮಜೀವಿಗಳನ್ನು ನಾಶಮಾಡುವಷ್ಟು ಬಲವಾದ ಔಷಧವನ್ನು ಆರಿಸಬೇಕು. ಶಸ್ತ್ರಚಿಕಿತ್ಸೆಯಲ್ಲಿ ಅನುಚಿತ ಆ್ಯಂಟಿಬಯೋಟಿಕ್ ಬಳಕೆಯಿಂದ ಹಲವಾರು ಪರಿಣಾಮಗಳು ಉಂಟಾಗಬಹುದು. ತಪ್ಪು ಸಮಯದಲ್ಲಿ (ತುಂಬಾ ಬೇಗ ಅಥವಾ ತಡವಾಗಿ) ನೀಡುವುದರಿಂದ ಅದರ ಪರಿಣಾಮಕಾರಿತ್ವ ಕಡಿಮೆಯಾಗುತ್ತದೆ. ಸೋಂಕಿನ ಕಡಿಮೆ ಅಪಾಯವಿರುವ ಶಸ್ತ್ರಚಿಕಿತ್ಸೆಗಳಲ್ಲಿ ಅಥವಾ ಅನಗತ್ಯವಾಗಿ ದೀರ್ಘಾವಧಿಗೆ ಬಳಸುವುದರಿಂದ ರೋಗಿಗಳು ಅತಿಸಾರದಂತಹ ಅಡ್ಡಪರಿಣಾಮಗಳಿಗೆ ಒಳಗಾಗುವ ಅಪಾಯವಿದೆ. ಜೊತೆಗೆ ಆ್ಯಂಟಿಬಯೋಟಿಕ್ ಪ್ರತಿರೋಧದ ಅಪಾಯವೂ ಹೆಚ್ಚುತ್ತದೆ. ►ವೃದ್ಧಾಶ್ರಮಗಳಲ್ಲಿ ವೃದ್ಧಾಶ್ರಮಗಳಲ್ಲಿ ಇರುವ ಹಿರಿಯ ನಾಗರಿಕರು ಹೆಚ್ಚಿನ ಪ್ರಮಾಣದಲ್ಲಿ ಆ್ಯಂಟಿಬಯೋಟಿಕ್ ಗಳನ್ನು ಪಡೆಯುತ್ತಾರೆ ಎಂದು ವರದಿ ತೋರಿಸಿದೆ. ಐದು ನಿವಾಸಿಗಳಲ್ಲಿ ನಾಲ್ವರು (79.5%) ಪ್ರತಿ ವರ್ಷ ಕನಿಷ್ಠ ಒಂದು ಆ್ಯಂಟಿಬಯೋಟಿಕ್ ಪ್ರಿಸ್ಕ್ರಿಪ್ಷನ್ ಪಡೆಯುತ್ತಾರೆ. ಸುಮಾರು ಮೂವರಲ್ಲಿ ಒಬ್ಬರಿಗೆ (34.7%) ಆರು ತಿಂಗಳಿಗಿಂತ ಹೆಚ್ಚು ಕಾಲ ಆ್ಯಂಟಿಬಯೋಟಿಕ್ ನೀಡಲಾಗಿದೆ. ವೃದ್ಧರು ಸೋಂಕುಗಳಿಗೆ ಹೆಚ್ಚು ಒಳಗಾಗುವ ಅಪಾಯ ಹೊಂದಿರುತ್ತಾರೆ. ಕೆಲವೊಮ್ಮೆ ಇವರಲ್ಲಿ ಸೋಂಕಿನ ಲಕ್ಷಣಗಳನ್ನು ಗುರುತಿಸುವುದು ಕಷ್ಟವಾಗುತ್ತದೆ. ಆದ್ದರಿಂದ ಸೋಂಕು ತಡೆಗಟ್ಟಲು ಕೆಲವೊಮ್ಮೆ ಆ್ಯಂಟಿಬಯೋಟಿಕ್ ಬಳಕೆ ಸೂಕ್ತವಾಗಬಹುದು. ಆದರೆ ಅದು ಕೊನೆಯ ಆಯ್ಕೆಯಾಗಿರಬೇಕು. ಏಕೆಂದರೆ ಆ್ಯಂಟಿಬಯೋಟಿಕ್ ತೆಗೆದುಕೊಂಡ ನಂತರವೂ ಸೋಂಕು ಸಂಭವಿಸಿದರೆ, ಸೂಕ್ಷ್ಮಜೀವಿಗಳು ಔಷಧಿಗೆ ನಿರೋಧಕವಾಗಿವೆ ಎಂಬುದನ್ನು ಸೂಚಿಸುತ್ತದೆ. ಇಂತಹ ಸಂದರ್ಭಗಳಲ್ಲಿ ಚಿಕಿತ್ಸೆ ನೀಡುವುದು ಕಷ್ಟಕರವಾಗುತ್ತದೆ. ►ವರದಿಯಲ್ಲಿ ಏನಿದೆ? ವರದಿ ಗಂಭೀರ ಆಂಟಿಮೈಕ್ರೊಬಿಯಲ್ ಪ್ರತಿರೋಧಗಳನ್ನು ಸಹ ಎತ್ತಿ ತೋರಿಸಿದೆ. ಇವು ಪ್ರಮುಖ ಬೆದರಿಕೆ ಉಂಟುಮಾಡುವ ಸೂಪರ್‌ಬಗ್‌ಗಳು. ಈ ಸೂಕ್ಷ್ಮಜೀವಿಗಳು ಅತ್ಯಂತ ಶಕ್ತಿಶಾಲಿಯಾಗಿದ್ದು, ಆ್ಯಂಟಿಬಯೋಟಿಕ್ ಗಳಿಗೆ ಗಂಭೀರ ಸವಾಲು ಎಸೆದುತ್ತವೆ. ಈ ಸೋಂಕುಗಳನ್ನು ನಿವಾರಿಸುವುದು ಕಷ್ಟವಾಗುವುದರಿಂದ, ರೋಗಿಗಳಿಗೆ ವಿಶೇಷ ಔಷಧಗಳು ಮತ್ತು ತೀವ್ರ ವೈದ್ಯಕೀಯ ಆರೈಕೆ ಅಗತ್ಯವಾಗುತ್ತದೆ. 2022ರಿಂದ ವರದಿಯಾಗುತ್ತಿದ್ದ ಈ ಜೀವಿಗಳ ಸಂಖ್ಯೆ 2024ರಲ್ಲಿ ದ್ವಿಗುಣಗೊಂಡಿದ್ದು, ಪ್ರತಿದಿನ ಒಂಭತ್ತು ಪ್ರಕರಣಗಳಿಗೆ ತಲುಪಿದೆ. ಈ ಸೂಪರ್‌ಬಗ್‌ಗಳು ಹಲವಾರು ಬಾರಿ ವಿದೇಶ ಪ್ರಯಾಣದ ವೇಳೆ ಪತ್ತೆಯಾಗುತ್ತವೆ ಎಂದು ವರದಿ ಉಲ್ಲೇಖಿಸಿದೆ. ಇದು ಆ್ಯಂಟಿಬಯೋಟಿಕ್ ಪ್ರತಿರೋಧವು ಕೇವಲ ಸ್ಥಳೀಯ ಸಮಸ್ಯೆಯಲ್ಲ, ಗಡಿಗಳನ್ನು ಮೀರಿ ಹರಡುವ ಜಾಗತಿಕ ಸಮಸ್ಯೆಯಾಗಿದೆ ಎಂಬುದನ್ನು ತೋರಿಸುತ್ತದೆ. ►ಆ್ಯಂಟಿಬಯೋಟಿಕ್ ಪ್ರತಿರೋಧವನ್ನು ಕಡಿಮೆ ಮಾಡಲು ಏನು ಮಾಡಬಹುದು? • ಹಲವಾರು ಸೋಂಕುಗಳು ತಾವಾಗಿಯೇ ಗುಣವಾಗುತ್ತವೆ; ಆ್ಯಂಟಿಬಯೋಟಿಕ್ ಗಳ ಅಗತ್ಯವಿಲ್ಲ ಎಂಬ ಅರಿವು ಮೂಡಿಸುವುದು. • ವಯಸ್ಸಾದವರಿಗೆ ನೀಡುವ ಔಷಧಿಗಳನ್ನು ನಿಯಮಿತವಾಗಿ ಪರಿಶೀಲಿಸಿ, ಅವು ಇನ್ನೂ ಅಗತ್ಯವಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳುವುದು. • ಆ್ಯಂಟಿಬಯೋಟಿಕ್ ಗಳನ್ನು ಅಗತ್ಯವಿರುವ ಕಡಿಮೆ ಅವಧಿಯಲ್ಲಿ ಮತ್ತು ಪರಿಣಾಮಕಾರಿಯಾಗಿ ಬಳಸುವುದು. • ಆಸ್ಪತ್ರೆ, ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಮೇಲ್ವಿಚಾರಣಾ ಕಾರ್ಯಕ್ರಮಗಳಿಗೆ ಬಲವಾದ ಬೆಂಬಲ ಒದಗಿಸುವುದು. • ನಿರೋಧಕ ಬ್ಯಾಕ್ಟೀರಿಯಾ ಸೋಂಕುಗಳ ಮೇಲ್ವಿಚಾರಣೆ ಮಾಡಿ ನಿಯಂತ್ರಣ ನೀತಿಗಳನ್ನು ರೂಪಿಸುವುದು. • ಆಸ್ಪತ್ರೆಗಳಲ್ಲಿ ಮತ್ತು ಸಮುದಾಯದಲ್ಲಿ ನಿರೋಧಕ ಜೀವಿಗಳ ಅಡ್ಡ-ಪ್ರಸರಣವನ್ನು ಕಡಿಮೆ ಮಾಡುವುದು. • ಶುದ್ಧ ನೀರು, ನೈರ್ಮಲ್ಯ ಮತ್ತು ಲಸಿಕೆಗಳ ಮೂಲಕ ಸೋಂಕು ತಡೆಗಟ್ಟುವುದು. • ಹೊಸ ಆ್ಯಂಟಿಬಯೋಟಿಕ್ ಗಳು ಮತ್ತು ಇತರ ಚಿಕಿತ್ಸೆಗಳನ್ನು ಅಭಿವೃದ್ಧಿಪಡಿಸಲು ವಿಜ್ಞಾನಿಗಳು ಮತ್ತು ಕಂಪನಿಗಳಿಗೆ ಪ್ರೋತ್ಸಾಹ ಮತ್ತು ಬೆಂಬಲ ಒದಗಿಸುವುದು. ಆಸ್ಟ್ರೇಲಿಯಾದಾದ್ಯಂತ ಆ್ಯಂಟಿಬಯೋಟಿಕ್ ಬಳಕೆಯ ಒಟ್ಟಾರೆ ಚಿತ್ರವನ್ನು ಈ ವರದಿ ಭಾಗಶಃ ಮಾತ್ರ ನೀಡುತ್ತದೆ. ದೇಶದ ಸುಮಾರು 60% ಆ್ಯಂಟಿಬಯೋಟಿಕ್ ಗಳನ್ನು ಪ್ರಾಣಿಗಳಲ್ಲಿ ಬಳಸಲಾಗುತ್ತದೆ ಎಂದು ಅಂದಾಜಿಸಲಾಗಿದೆ. ಇತ್ತೀಚಿನ ಉದಾಹರಣೆಯಾಗಿ ಟ್ಯಾಸ್ಮೆನಿಯನ್ ಸಾಲ್ಮನ್ ಸಾಕಾಣಿಕೆ ಕೇಂದ್ರಗಳಲ್ಲಿ ಫ್ಲೋರ್‌ಫೆನಿಕಾಲ್ ಬಳಕೆಯನ್ನು ಉಲ್ಲೇಖಿಸಲಾಗಿದೆ. ಇದು ಮಾನವರಿಗೆ ಚಿಕಿತ್ಸೆ ನೀಡಲು ಬಳಸುವ ಕ್ಲೋರಂಫೆನಿಕಾಲ್‌ಗೆ ನಿಕಟ ಸಂಬಂಧ ಹೊಂದಿದೆ. ►ಭಾರತದಲ್ಲಿ ಆಂಟಿಬಯೋಟಿಕ್ ಬಳಕೆ ವಿಶ್ವ ಆರೋಗ್ಯ ಸಂಸ್ಥೆ (WHO) ವರದಿ ಪ್ರಕಾರ, 2023ರಲ್ಲಿ ಭಾರತದಲ್ಲಿ ಸಾಮಾನ್ಯವಾಗಿ ಬಳಸುವ ಆ್ಯಂಟಿಬಯೋಟಿಕ್ ಗಳಿಗೆ ಸುಮಾರು ಮೂರು ಬ್ಯಾಕ್ಟೀರಿಯಾ ಸೋಂಕುಗಳು ನಿರೋಧಕವಾಗಿವೆ. ಜಾಗತಿಕವಾಗಿ ಇದು ಆರು ದೃಢಪಟ್ಟ ಸೋಂಕುಗಳಲ್ಲಿ ಒಂದಾಗಿದೆ. ಲ್ಯಾನ್ಸೆಟ್ ಕ್ಲಿನಿಕಲ್ ಮೆಡಿಸಿನ್ ಜರ್ನಲ್‌ನಲ್ಲಿ ಪ್ರಕಟವಾದ ಅಧ್ಯಯನ ಪ್ರಕಾರ, ಶೇ. 80 ಕ್ಕಿಂತ ಹೆಚ್ಚು ಭಾರತೀಯ ರೋಗಿಗಳು ಬಹುಔಷಧ ನಿರೋಧಕ ಜೀವಿಗಳನ್ನು (MDROs) ಹೊಂದಿದ್ದಾರೆ. 2025ರಲ್ಲಿ ಪ್ರಕಟವಾದ ವರದಿ ಪ್ರಕಾರ ಭಾರತದಲ್ಲಿ ಶೇ. 83 ರಷ್ಟು ರೋಗಿಗಳು ಔಷಧ ನಿರೋಧಕ ಬ್ಯಾಕ್ಟೀರಿಯಾವನ್ನು ಹೊಂದಿದ್ದರು. ಇಟಲಿಯಲ್ಲಿ ಶೇ. 31.5, ಅಮೆರಿಕದಲ್ಲಿ ಶೇ. 20.1 ಮತ್ತು ನೆದರ್‌ಲ್ಯಾಂಡ್ಸ್‌ನಲ್ಲಿ ಶೇ. 10.8 ರಷ್ಟು ರೋಗಿಗಳು ಇಂತಹ ಸೋಂಕು ಹೊಂದಿದ್ದರು ಎಂದು ತಿಳಿಸಲಾಗಿದೆ. ಕಳೆದ ವರ್ಷದ ‘ಮನ ಕಿ ಬಾತ್’ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಮಾತನಾಡಿ, ಆ್ಯಂಟಿಬಯೋಟಿಕ್ ಗಳನ್ನು ವೈದ್ಯರ ಸಲಹೆಯ ಮೇರೆಗೆ ಮಾತ್ರ ತೆಗೆದುಕೊಳ್ಳಬೇಕು ಎಂದು ಹೇಳಿದ್ದಾರೆ. ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ICMR) ವರದಿಯನ್ನು ಉಲ್ಲೇಖಿಸಿದ ಅವರು, ಆ್ಯಂಟಿಬಯೋಟಿಕ್ ಗಳ ದುರುಪಯೋಗವು ಸಾರ್ವಜನಿಕ ಆರೋಗ್ಯಕ್ಕೆ ಗಂಭೀರ ಬೆದರಿಕೆಯಾಗಿದೆ ಎಂದು ಹೇಳಿದ್ದಾರೆ. ಬ್ಯಾಕ್ಟೀರಿಯಾಗಳು ಚಿಕಿತ್ಸೆಗೆ ಹೆಚ್ಚು ನಿರೋಧಕವಾಗುತ್ತಿರುವ ಸಂದರ್ಭದಲ್ಲಿ, ಪ್ರಿಸ್ಕ್ರಿಪ್ಷನ್ ಇಲ್ಲದೆ ಅಥವಾ ಆಕಸ್ಮಿಕವಾಗಿ ಆ್ಯಂಟಿಬಯೋಟಿಕ್ ಗಳನ್ನು ಬಳಸುವುದು ಸೋಂಕುಗಳ ಹರಡುವಿಕೆಗೆ ಕಾರಣವಾಗುತ್ತದೆ ಎಂದು ICMR ಸಂಶೋಧನೆಗಳು ಸೂಚಿಸುತ್ತವೆ. ಸ್ವಯಂ-ಔಷಧಿ ಮಾಡುವ ಪ್ರವೃತ್ತಿ ವಿರುದ್ಧ ಎಚ್ಚರಿಕೆ ನೀಡಲಾಗಿದೆ. ಅನೇಕರು ಒಂದೇ ಮಾತ್ರೆ ಪ್ರತಿಯೊಂದು ಸಮಸ್ಯೆಯನ್ನು ಪರಿಹರಿಸುತ್ತದೆ ಎಂದು ನಂಬುವುದು ತಪ್ಪು. ಇದು ಆ್ಯಂಟಿಬಯೋಟಿಕ್ ದುರುಪಯೋಗದಿಂದ ಸೋಂಕುಗಳ ಹೆಚ್ಚಳಕ್ಕೆ ಕಾರಣವಾಗುತ್ತಿದೆ. 2025 ಡಿಸೆಂಬರ್ 28ರಂದು ಪ್ರಸಾರವಾದ ಕಾರ್ಯಕ್ರಮದಲ್ಲಿ ನಾಗರಿಕರು ಔಷಧಿಗಳನ್ನು ಜವಾಬ್ದಾರಿಯಿಂದ ಬಳಸಬೇಕು ಎಂದು ಪ್ರಧಾನಿ ಸಲಹೆ ನೀಡಿದ್ದಾರೆ.

ವಾರ್ತಾ ಭಾರತಿ 20 Feb 2026 8:42 pm