ಕೊಡಗಿನ ಹೋಂಸ್ಟೇನಲ್ಲಿ ವಿದೇಶಿ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ: ಇಬ್ಬರು ಅಂದರ್
ಕೊಡಗು ಜಿಲ್ಲೆಯ ಕುಟ್ಟ ಗ್ರಾಮ ಪಂಚಾಯತ್ ವ್ಯಾಪ್ತಿಯ 'ದೇವಿ ವಿಲ್ಲಾ' ಹೋಂಸ್ಟೇನಲ್ಲಿ ತಂಗಿದ್ದ ಅಮೆರಿಕ ಮೂಲದ ಪ್ರವಾಸಿ ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಅಲ್ಲಿ ಕೆಲಸಕ್ಕಿದ್ದ ಜಾರ್ಖಂಡ್ ಮೂಲದ ವೃಜೇಶ್ ಕುಮಾರ್ ಎಂಬಾತ ಮಹಿಳೆಗೆ ಪಾನೀಯದಲ್ಲಿ ಅಮಲು ಪದಾರ್ಥ ನೀಡಿ, ಅವರು ಪ್ರಜ್ಞೆ ತಪ್ಪಿದ ನಂತರ ಈ ಕೃತ್ಯ ಎಸಗಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
Viral : ದುಪ್ಪಟ್ಟು ಸಂಬಳ ಕೊಟ್ರೂ ಕಾರ್ಪೊರೇಟ್ ಕೆಲಸಕ್ಕೆ ವಾಪಸ್ ಹೋಗಲ್ಲ: 5 ಕಾರಣ ಬಿಚ್ಚಿಟ್ಟ ದುಬೈ ಮೂಲದ ಮಹಿಳೆ
ಇತ್ತೀಚಿನ ದಿನಗಳಲ್ಲಿ ಅನೇಕ ಯುವಕ-ಯುವತಿಯರು ತಮ್ಮ ಕಾರ್ಪೊರೇಟ್ ಉದ್ಯೋಗದ ಒತ್ತಡವನ್ನು ತಾಳಲಾರದೆ ಕೆಲಸ ತೊರೆಯುತ್ತಿರುವ ಘಟನೆಗಳನ್ನು ನಾವು ನೋಡುತ್ತಿದ್ದೇವೆ. ಇದೀಗ ದುಬೈನಲ್ಲಿ ನೆಲೆಸಿರುವ ಸ್ಪೇನ್ ಮೂಲದ ಮಹಿಳೆಯೊಬ್ಬರು, ಸಂಬಳವನ್ನು ದುಪ್ಪಟ್ಟು ಮಾಡಿದರೂ ತಾನು ಮತ್ತೆ ಎಂದಿಗೂ ಕಾರ್ಪೊರೇಟ್ ಜಗತ್ತಿಗೆ ಮರಳುವುದಿಲ್ಲ ಎಂದು ಹೇಳಿದ್ದಾರೆ. ರೊಸಿಯೋ ಫಾಲಗನ್ (Rocio Falagan) ಎಂಬುವವರು, ತಮ್ಮ ಉದ್ಯೋಗವನ್ನು ತೊರೆದ ನಂತರ ತಮ್ಮ
Kanakagiri | ನೀರಿಗಾಗಿ ಖಾಲಿ ಕೊಡ ಹಿಡಿದು ಸಚಿವರ ಎದುರು ಗ್ರಾಮಸ್ಥರ ಪ್ರತಿಭಟನೆ
ಕನಕಗಿರಿ : ತಾಲೂಕಿನ ನವಲಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ವಿವಿಧ ಕಾಮಗಾರಿಗಳಿ ಶಂಕುಸ್ಥಾಪನೆ ನೇರವರಿಸಿ ತೆರುಳುತ್ತಿರುವಾಗ ಸಂಕನಾಳ ಗ್ರಾಮದ ಮಹಿಳೆಯರು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಅವರ ವಾಹನ ಅಡ್ಡಗಟ್ಟಿ ಖಾಲಿ ಕೊಡ ಹಿಡಿದು ನೀರು ಕೊಡಿ ಎಂದು ಆಗ್ರಹಿಸಿ ಪ್ರತಿಭಟನೆ ನಡೆಸಿದರು. ಈ ಗ್ರಾಮದಲ್ಲಿ ನೂರಕ್ಕು ಹೆಚ್ಚು ಮನೆಗಳು ಇವೆ. ಗ್ರಾಮೀಣ ಭಾಗದಲ್ಲಿ ತೀವ್ರಗೊಂಡಿರುವ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವಂತೆ ಅಳಲು ತೊಡಗಿಕೊಂಡರು. ಗ್ರಾಮಸ್ಥರಾದ ನೀಲಮ್ಮ, ಪಾರ್ವತಿ, ಮಲ್ಲಮ್ಮ, ಕಮಲಾಕ್ಷಿ, ಚಂದ್ರಮ್ಮ, ಅಕ್ಕ ನಾಗಮ್ಮ, ನಾಗರಾಜ ಪಂಪಾಪತಿ ಶಂಕ್ರಪ್ಪ ಬಿರನಗೌಡ ಶರಣಪ್ಪ ಬಸವರಾಜ ಇತರರು ಇದ್ದರು.
ಹಜ್-2026 | ಭಾರತೀಯ ಯಾತ್ರಿಕರಿಗೆ ಸಹಾಯವಾಣಿ ಪ್ರಕಟಿಸಿದ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯ
ಹೊಸದಿಲ್ಲಿ: 2026ರ ಹಜ್ ಯಾತ್ರೆ ಹಿನ್ನೆಲೆ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯವು ಸಹಾಯವಾಣಿ ಸಂಖ್ಯೆಗಳು ಮತ್ತು ಇಮೇಲ್ಗಳನ್ನು ಪ್ರಕಟಿಸಿದೆ. ಈ ಕುರಿತು ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯ, ಪಾಸ್ಪೋರ್ಟ್ , ವೀಸಾ, ಹಜ್ ಕುರಿತು ವಿಚಾರಣೆಗಾಗಿ ಸಂಪರ್ಕಿಸಬೇಕಾದ ಸಹಾಯವಾಣಿ ಸಂಖ್ಯೆಯನ್ನು ಪ್ರಕಟಿಸಿದೆ. ಇದಲ್ಲದೆ ತುರ್ತು ಸಹಾಯವಾಣಿ, ಮರಣ ಸಂಭವಿಸಿದಲ್ಲಿ ವಿಚಾರಣೆ, ನೆರವು, ಆರ್ಟಿಐಯಡಿ ಮಾಹಿತಿಗಾಗಿ ಸಹಾಯವಾಣಿಯನ್ನು ಸಂಪರ್ಕಿಸುವಂತೆ ಪ್ರಕಟಿಸಿದೆ. ಅಗತ್ಯ ಸಹಾಯಕ್ಕಾಗಿ ಜಿದ್ದಾದಲ್ಲಿನ ಭಾರತೀಯ ಕಾನ್ಸುಲೇಟ್ ಜನರಲ್ ಕಚೇರಿಗೆ ಸಂಪರ್ಕಿಸುವಂತೆ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯ ತಿಳಿಸಿದೆ. ನೀವು ವಾಟ್ಸಾಪ್ ಮೂಲಕವೂ ಕಚೇರಿಯನ್ನು ಸಂಪರ್ಕಿಸಬಹುದಾಗಿದೆ. Landline Numbers: 00966126614276 / 00966122614093 Toll Free: 8002440003 Mobile: +966556122301 WhatsApp No: +966 536209704 Emergency Service: 0554403023
2018 ರಂತೆ ಕರ್ನಾಟಕಕ್ಕೆ ಸಿಗುತ್ತಿರುವ ಕಾವೇರಿ ನೀರು ಈಗ ಸಾಲುತ್ತಿಲ್ಲ, ಹೆಚ್ಚುವರಿಯಾಗಿ 70 ಟಿಎಂಸಿ ನೀರು ನೀಡುವಂತೆ ಸುಪ್ರೀಂ ಗೆ ಮನವಿ ಮಾಡಲು ಕಾವೇರಿ ನದಿ ರಕ್ಷಣಾ ಸಮಿತಿ ಸಿದ್ಧತೆ ನಡೆಸಿದೆ.
ಸಮುದಾಯ ಶೌಚಾಲಯ ಬಂದ್: ಸಾರ್ವಜನಿಕರ ಪರದಾಟ
ಅಫಜಲಪುರ: ಪಟ್ಟಣಗಳ ಅಭಿವೃದ್ಧಿ ಎಂದರೆ ಕೇವಲ ಕಟ್ಟಡಗಳು, ರಸ್ತೆ ನಿರ್ಮಾಣವಷ್ಟೇ ಅಲ್ಲ ಜನರ ದಿನನಿತ್ಯದ ಅಗತ್ಯಗಳನ್ನು ಪೂರೈಸುವ ಮೂಲಭೂತ ಸೌಲಭ್ಯಗಳೂ ಸಮಾನವಾಗಿ ಮಹತ್ವ ಪಡೆದಿವೆ. ಇಂತಹ ಸೌಲಭ್ಯಗಳಲ್ಲಿ ಶೌಚಾಲಯಗಳು ಅತ್ಯಂತ ಅಗತ್ಯವಾದವು. ಆದರೆ, ಜನರ ಸೌಕರ್ಯಕ್ಕಾಗಿ ನಿರ್ಮಿಸಲಾದ ಶೌಚಾಲಯವೇ ಮುಚ್ಚಿದ ಸ್ಥಿತಿಯಲ್ಲಿದ್ದರೆ, ಅದು ಅಭಿವೃದ್ಧಿಯ ಅರ್ಥವನ್ನೇ ಪ್ರಶ್ನಿಸುವಂತಾಗಿದೆ. ಅಫಜಲಪುರ ಪಟ್ಟಣದ ಹೃದಯ ಭಾಗವಾದ ಬಸವೇಶ್ವರ ವೃತ್ತದ ಸಮೀಪದಲ್ಲಿರುವ ಸಮುದಾಯ ಶೌಚಾಲಯವು ಕಳೆದ 2-3 ತಿಂಗಳಿಂದ ಮುಚ್ಚಿದ್ದು, ಇರುವುದರಿಂದ ಸಾರ್ವಜನಿಕರು ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ. ಪ್ರತಿದಿನ ಸಾವಿರಾರು ಪ್ರಯಾಣಿಕರು ಸಂಚರಿಸುವ ಈ ಪ್ರಮುಖ ಸ್ಥಳದಿಂದ ಮಹಾರಾಷ್ಟ್ರ ಸೇರಿದಂತೆ ವಿವಿಧ ಭಾಗಗಳಿಗೆ ತೆರಳುವವರು ಶೌಚಾಲಯ ಸೌಲಭ್ಯ ಇಲ್ಲದೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಅತ್ಯಂತ ಅಗತ್ಯವಿರುವ ಮೂಲಭೂತ ಸೌಲಭ್ಯವೇ ಇಲ್ಲದಿರುವುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ. ಯಾವ ಕಾರಣಕ್ಕೆ ಶೌಚಾಲಯವನ್ನು ಮುಚ್ಚಲಾಗಿದೆ ಎಂಬುದು ತಿಳಿದಿಲ್ಲ. ಆದರೆ ಇದರ ಪರಿಣಾಮವಾಗಿ ಜನರ ಪರದಾಟ ತಪ್ಪಿಲ್ಲ. ಈ ಪ್ರದೇಶದಲ್ಲಿ ಗ್ಯಾರೇಜ್ಗಳು, ಹೋಟೆಲ್ಗಳು, ರೆಸ್ಟೋರೆಂಟ್ಗಳು, ಕಟ್ಟಿಂಗ್ ಶಾಪ್ ಗಳು,ಕೆಇಬಿ ಕಚೇರಿ, ಪೆಟ್ರೋಲ್ ಬಂಕ್ ಸೇರಿದಂತೆ ಅನೇಕ ವ್ಯಾಪಾರ ಕೇಂದ್ರಗಳು ಕಾರ್ಯನಿರ್ವಹಿಸುತ್ತಿದ್ದರೂ, ಶೌಚಾಲಯ ಮುಚ್ಚಿರುವುದರಿಂದ ವ್ಯಾಪಾರಸ್ಥರು ಹಾಗೂ ಗ್ರಾಹಕರು ಸಂಕಷ್ಟಕ್ಕೆ ಒಳಗಾಗುತ್ತಿದ್ದಾರೆ. ಶೌಚಾಲಯ ಮುಚ್ಚಿರುವ ಕಾರಣ ಸಾರ್ವಜನಿಕರು ಬಯಲಲ್ಲಿ ಶೌಚ ಮಾಡಲು ನಿರ್ಬಂಧಿತರಾಗಿದ್ದು, ಪರಿಸರ ಮಾಲಿನ್ಯ ಹೆಚ್ಚುವುದರ ಜೊತೆಗೆ ಸಾರ್ವಜನಿಕ ಆರೋಗ್ಯದ ಮೇಲೂ ದುಷ್ಪರಿಣಾಮ ಬೀರುತ್ತಿದೆ. ಮಹಿಳೆಯರು, ವೃದ್ಧರು ಹಾಗೂ ಮಕ್ಕಳು ಹೆಚ್ಚಿನ ತೊಂದರೆ ಅನುಭವಿಸುತ್ತಿದ್ದಾರೆ. ಸಾರ್ವಜನಿಕರ ಮೂಲಭೂತ ಅಗತ್ಯಗಳನ್ನು ಪೂರೈಸುವುದು ಪುರಸಭೆಯ ಪ್ರಮುಖ ಜವಾಬ್ದಾರಿಯಾಗಿದೆ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ, ಮುಚ್ಚಿದ ಶೌಚಾಲಯವನ್ನು ತಕ್ಷಣವೇ ಪುನಃ ಸಾರ್ವಜನಿಕ ಬಳಕೆಗೆ ತೆರೆಯಬೇಕು. -ಪ್ರತಿಭಾ ಮಹಿಂದ್ರಕರ್, ಸ್ಥಳೀಯ ಈ ಶೌಚಾಲಯ ಬಹಳ ಅಗತ್ಯವಾಗಿದೆ. ಬಸವೇಶ್ವರ ವೃತ್ತದಿಂದ ದಿನನಿತ್ಯ ಸಾವಿರಾರು ಪ್ರಯಾಣಿಕರು ವಿವಿಧ ಭಾಗಗಳಿಗೆ ತೆರಳುತ್ತಾರೆ. ಆದರೆ ತುರ್ತಾಗಿ ಶೌಚಾಲಯ ಬಳಸಬೇಕಾದರೆ ಸೌಲಭ್ಯ ಇಲ್ಲದೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಅಧಿಕಾರಿಗಳು ಈ ಸಮಸ್ಯೆಯನ್ನು ಶೀಘ್ರ ಪರಿಹರಿಸಲು ಮುಂದಾಗಬೇಕು. -ಶ್ರೀಕಾಂತ ದಿವಾಣಜಿ, ಕರವೇ ಅಧ್ಯಕ್ಷರು, ಅಫಜಲಪುರ ಕಳೆದ 2-3 ತಿಂಗಳಿಂದ ಶೌಚಾಲಯ ಮುಚ್ಚಿರುವುದು ಬೇಸರ ತಂದಿದೆ.ಸಂಬಂಧಪಟ್ಟ ಅಧಿಕಾರಿಗಳು ಈ ಕಡೆ ಗಮನ ಹರಿಸದೆ ಇರುವುದೇ ವಿಷಾದನೀಯ. ತಕ್ಷಣವೇ ಶೌಚಾಲಯವನ್ನು ಆರಂಭಿಸಿ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಬೇಕು. -ಸಿದ್ದು ಎಸ್.ಪೂಜಾರಿ ಮುಖಂಡರು, ಅಫಜಲಪುರ
FACT CHECK | ಪ್ರಧಾನಿ ಮೋದಿಗೆ ಜಲ್ ಮುರಿ ಮಾಡಿಕೊಟ್ಟ ಅಂಗಡಿ ವ್ಯಾಪಾರಿ ‘NSG ಕಮಾಂಡೋ’ ಅಲ್ಲ; ವೈರಲ್ ಫೋಟೋ ನಕಲಿ
ಜಾರ್ ಗ್ರಾಮ್: ಕೊಲ್ಕತ್ತಾದಲ್ಲಿ ಪ್ರಧಾನಿ ಮೋದಿಗೆ ಜಲ್ ಮುರಿ ಮಾಡಿಕೊಟ್ಟ ಅಂಗಡಿ ವ್ಯಾಪಾರಿ ನಿಜವಾಗಿ ಪ್ರಧಾನಿ ಭದ್ರತೆ ನೋಡಿಕೊಳ್ಳುವ SPG ಕಮಾಂಡೊ ಎಂದು ಪೋಸ್ಟರ್ ಗಳು ವೈರಲ್ ಆಗುತ್ತಿವೆ. ಆದರೆ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದ “ಮಾರಾಟಗಾರ NSG ಕಮಾಂಡೋ” ಎಂಬ ಹೇಳಿಕೆ ಸುಳ್ಳು ಎಂದು ಬಹಿರಂಗವಾಗಿದ್ದು, ಅದಕ್ಕೆ ಆಧಾರವಾಗಿದ್ದ ಫೋಟೋ ಕೂಡ ಕೃತಕ ಬುದ್ಧಿಮತ್ತೆ (AI) ರಚಿತ ಚಿತ್ರ ಎಂದು ವಾರ್ತಾ ಭಾರತಿ ತಾಂತ್ರಿಕ ಪರಿಣತರ ಪರಿಶೀಲನೆ ಬಳಿಕ ಖಚಿತಪಡಿಸಿಕೊಂಡಿದೆ. ಪ್ರಧಾನಿ ಮೋದಿ ಪಶ್ಚಿಮ ಬಂಗಾಳದ ಜಾರ್ ಗ್ರಾಮ್ ಗೆ ಭೇಟಿ ನೀಡಿದ್ದ ವೇಳೆ ರಸ್ತೆಬದಿಯ ಸಣ್ಣ ಅಂಗಡಿಯಲ್ಲಿ ನಿಂತು ಜಲ್ ಮುರಿ ಸವಿದ ಕ್ಷಣ ಗಮನ ಸೆಳೆದಿತ್ತು. ಈ ಘಟನೆ ಬಳಿಕ ವ್ಯಾಪಾರಿಯ ಅಂಗಡಿ ಜನಸಂದಣಿಯಿಂದ ಕಿಕ್ಕಿರಿದಿದೆ. ಅಂಗಡಿಗೆ ಭೇಟಿ ನೀಡಿದ ವೇಳೆ ಪ್ರಧಾನಿ ಮೋದಿಯವರು ಜಲ್ ಮುರಿ ಮಾರಾಟಗಾರನೊಂದಿಗೆ ಸುಮಾರು 10 ನಿಮಿಷಗಳ ಕಾಲ ಮಾತನಾಡಿದ್ದರು. ಈ ವೇಳೆ ಹೆಸರು, ಶಿಕ್ಷಣ, ಕುಟುಂಬ ಹಿನ್ನೆಲೆಯ ಬಗ್ಗೆ ವಿಚಾರಿಸಿದ್ದಾರೆ ಎಂದು ತಿಳಿದುಬಂದಿದೆ. ಜಲ್ ಮುರಿಯ ರುಚಿಗೆ ಪ್ರಧಾನಿ ತೃಪ್ತಿ ವ್ಯಕ್ತಪಡಿಸಿದ್ದಾರೆ ಎಂದು ಮಾರಾಟಗಾರ ಹೇಳಿದ್ದರು. ಈ ನಡುವೆ “ಮಾರಾಟಗಾರ NSG ಕಮಾಂಡೋ” ಎಂಬ ಹೇಳಿಕೆ ಸಾಮಾಜಿಕ ಮಾಧ್ಯಮಗಳಲ್ಲಿ ವೇಗವಾಗಿ ವೈರಲ್ ಆಯಿತು. ಅದನ್ನು ಬೆಂಬಲಿಸುವಂತೆ ವೈರಲ್ ಆದ ಫೋಟೋ, ಪರಿಶೀಲನೆ ವೇಳೆ ನಕಲಿ ಎಂದು ಬಹಿರಂಗವಾಗಿದೆ. AI ತಂತ್ರಜ್ಞಾನ ಬಳಸಿ ಸೃಷ್ಟಿಸಲ್ಪಟ್ಟ ಈ ಚಿತ್ರಕ್ಕೆ ಯಾವುದೇ ಅಧಿಕೃತ ದೃಢೀಕರಣ ಇಲ್ಲ. ವ್ಯಾಪಾರಿಯು NSG ಕಮಾಂಡೋ ಎಂಬ ಆರೋಪಕ್ಕೆ ಯಾವುದೇ ಆಧಾರವಿಲ್ಲ ಎಂಬುದು ಸ್ಪಷ್ಟವಾಗಿದೆ.
ಸಿದ್ದರಾಮಯ್ಯಗೆ ಕೆ.ಎನ್ ರಾಜಣ್ಣನೇ ಮಾಟ ಮಂತ್ರ ಮಾಡಿಸಿರಬೇಕು: ಮಾಗಡಿ ಬಾಲಕೃಷ್ಣ ಲೇವಡಿ
ಸಿಎಂ ಸಿದ್ದರಾಮಯ್ಯ ಅವರಿಗೆ ಮಾಟ ಮಂತ್ರ ಮಾಡಲಾಗಿದೆ ಎಂಬ ಕೆ ಎನ್ ರಾಜಣ್ಣ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಕಾಂಗ್ರೆಸ್ ಶಾಸಕ ಮಾಗಡಿ ಬಾಲಕೃಷ್ಣ ಮಾಟ ಮಂತ್ರ ಮಾಡಿಸೋದಾದರೆ ರಾಜಣ್ಣನವರೇ ಮಾಡಿಸಿರಬೇಕು ಎಂದು ಲೇವಡಿ ಮಾಡಿದ್ದಾರೆ. ಅಲ್ಲದೆ, ರಾಜಣ್ಣ ಈ ಕುರಿತು ಗಂಭೀರವಾಗಿ ಹೇಳಿರಲಿಕ್ಕಿಲ್ಲ, ಜೊತೆಗೆ ಮಾಟ ಮಂತ್ರ ಮಾಡಿಸಿ ಅಧಿಕಾರ ಕೊಡಿಸುವ ಕಾಲ ಹೊಯ್ತು ಎಂದು ತಿಳಿಸಿದ್ದಾರೆ. ಜೊತೆಗೆ ಮುಸ್ಲಿಂ ಸಮುದಾಯದಿಂದ ಕಾಂಗ್ರೆಸ್ ಗೆ ಎಚ್ಚರಿಕೆ ಇದನ್ನು ಹೈಕಮಾಂಡ್ ಗಮನಿಸುತ್ತದೆ ಎಂದು ತಿಳಿಸಿದ್ದಾರೆ.
ರಾಯಚೂರು ಎಪಿಎಂಸಿಯಲ್ಲಿ ಕುಡಿಯಲು ನೀರಿಲ್ಲ
ಹಣ ಪಾವತಿಸಿ ನೀರು ಖರೀದಿಸುತ್ತಿರುವ ರೈತರು, ಹಮಾಲಿ ಕಾರ್ಮಿಕರು
Chamarajanagar | ಕಾವೇರಿ ನದಿ ದಡದ ಬಳಿ ವ್ಯಕ್ತಿಯ ಅಸ್ಥಿಪಂಜರ ಪತ್ತೆ
ಚಾಮರಾಜನಗರ : ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲ್ಲೂಕಿನ ಸತ್ತೇಗಾಲ ಜಾಗೇರಿಯ ಬೂದಗಟ್ಟೆ ದೊಡ್ಡಿ ಸಮೀಪದ ಕಾವೇರಿ ನದಿ ದಡದ ಬಳಿ ಸುಮಾರು 50-60 ವರ್ಷ ವಯಸ್ಸಿನ ಅಪರಿಚಿತ ಗಂಡಸಿನ ಅಸ್ಥಿಪಂಜರ ಪತ್ತೆಯಾಗಿದೆ. ಕಾವೇದಿ ನದಿ ದಡದ ಬಳಿ ವ್ಯಕ್ತಿಯೊಬ್ಬರ ಗುರುತು ಹಿಡಿಯಲಾಗದ ಸ್ಥಿತಿಯಲ್ಲಿ ಅಸ್ಥಿಪಂಜರ ದೊರೆತ್ತಿರುವ ಬಗ್ಗೆ ಅರಣ್ಯ ಇಲಾಖೆಯ ಅಧಿಕಾರಿ ಲಿಂಗರಾಜುರವರು ಪೊಲೀಸರಿಗೆ ನೀಡಿದ್ದು, ಸ್ಥಳಕ್ಕೆ ಗ್ರಾಮಾಂತರ ಪೊಲೀಸ್ ಠಾಣೆಯ ಪಿಎಸ್ಐ ಸುಪ್ರೀತ್ ಹಾಗೂ ಸಿಬ್ಬಂದಿಗಳು ತೆರಳಿ ಪರಿಶೀಲನೆ ಮಾಡಿ, ನಂತರ ಅಂಬ್ಯುಲೆನ್ಸ್ ನಲ್ಲಿ ಮೃತದೇಹವನ್ನು ಚಾಮರಾಜನಗರದ ಸಿಮ್ಸ್ ಗೆ ರವಾನಿಸಲಾಯಿತು. ಮೃತ ದೇಹ ಪತ್ತೆಯಾದ ಸ್ಥಳಕ್ಕೆ ಅಪರಾಧ ಪತ್ತೆ ದಳದ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲಿಸಿ, ಸುಮಾರು ಎರಡರಿಂದ ಮೂರು ತಿಂಗಳ ಕಾಲ ಹಿಂದೆ ಸಾವನ್ನಪ್ಪಿರುಬಹುದು ಶಂಕಿಸಿದ್ದಾರೆ. ಈ ಸಂಬಂಧ ಕೊಳ್ಳೇಗಾಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು, ವಾರಸುದಾರರ ಪತ್ತೆಗೆ ಕ್ರಮ ಜರುಗಿಸಿದ್ದಾರೆ.
ನಶಿಸುತ್ತಿರುವ ಓದುವ ಸಂಸ್ಕೃತಿ ಮತ್ತು ಪುಸ್ತಕದ ಗೂಡುಗಳಾಗುತ್ತಿರುವ ಗ್ರಂಥಾಲಯಗಳು
ಇಂದಿನ ತಾಂತ್ರಿಕ ಯುಗದಲ್ಲಿ ಜ್ಞಾನದ ವಿಸ್ತಾರವು ಬೆರಳ ತುದಿಗೆ ಬಂದು ನಿಂತಿದೆ. ಆದರೆ, ಈ ಸುಲಭ ಲಭ್ಯತೆಯ ನಡುವೆ ನಾವು ಅತ್ಯಂತ ಮೌಲ್ಯಯುತವಾದ ‘ಓದುವ ಸಂಸ್ಕೃತಿ’ಯನ್ನು ಕಳೆದುಕೊಳ್ಳುತ್ತಿದ್ದೇವೆಯೇ ಎಂಬ ಆತಂಕ ಎದುರಾಗಿದೆ. ಒಂದು ಕಾಲದಲ್ಲಿ ಹಳ್ಳಿ ಮತ್ತು ಪಟ್ಟಣಗಳ ಸಾಂಸ್ಕೃತಿಕ ಕೇಂದ್ರಗಳಾಗಿದ್ದ ಗ್ರಂಥಾಲಯಗಳು ಇಂದು ಕೇವಲ ಪುಸ್ತಕಗಳ ಸಂಗ್ರಹಾಲಯಗಳಾಗಿ ಅಥವಾ ‘ಪುಸ್ತಕದ ಗೂಡು’ಗಳಾಗಿ ಮಾರ್ಪಡುತ್ತಿರುವುದು ವಿಷಾದನೀಯ ಸಂಗತಿ. ಅದರಲ್ಲೂ ವಿಶೇಷವಾಗಿ ಪಂಚಾಯತ್ ಮಟ್ಟದಲ್ಲಿ ಸರಕಾರವು ಜಾರಿಗೆ ತಂದಿರುವ ಗ್ರಂಥಾಲಯಗಳು ಹೆಸರಿಗೆ ಮಾತ್ರ ಅಸ್ತಿತ್ವದಲ್ಲಿವೆ. ಹಿಂದೆ ಹಳ್ಳಿಗಳಲ್ಲಿಯೂ ಸಹ ಪತ್ರಿಕೆಗಳು ಬಂದ ತಕ್ಷಣ ಅವುಗಳನ್ನು ಓದಲು ಜನ ಮುಗಿಬೀಳುತ್ತಿದ್ದರು. ಬೆಳಗ್ಗೆ ಎದ್ದ ತಕ್ಷಣ ಕಾಫಿಯ ಹಬೆಯೊಂದಿಗೆ ಕೈಯಲ್ಲಿ ದಿನಪತ್ರಿಕೆ ಹಿಡಿದು ದೇಶ-ವಿದೇಶಗಳ ವಿದ್ಯಮಾನಗಳನ್ನು ಚರ್ಚಿಸುವುದು ಅಂದಿನ ದಿನಚರಿಯ ಹೆಮ್ಮೆಯ ವಿಷಯವಾಗಿತ್ತು. ಆದರೆ ಇಂದು ಪರಿಸ್ಥಿತಿ ಸಂಪೂರ್ಣ ಬದಲಾಗಿದೆ. ಜನರ ಕೈಯಲ್ಲಿ ಪತ್ರಿಕೆಗಳ ಬದಲಿಗೆ ಸ್ಮಾರ್ಟ್ಫೋನ್ಗಳು ರಾರಾಜಿಸುತ್ತಿವೆ. ಸೋಶಿಯಲ್ ಮೀಡಿಯಾ ಅಥವಾ ಸಾಮಾಜಿಕ ಜಾಲತಾಣಗಳ ಅಬ್ಬರದಿಂದಾಗಿ ಜನರ ಓದುವ ಹವ್ಯಾಸವು ಕೇವಲ ಸ್ಕ್ರೋಲಿಂಗ್ಗೆ ಸೀಮಿತವಾಗಿದೆ. ಯಾವುದೇ ಸುದ್ದಿಯಿರಲಿ, ಲೇಖನವಿರಲಿ ಅಥವಾ ಸಾಹಿತ್ಯಿಕ ಕೃತಿಯಿರಲಿ, ಅದು ಡಿಜಿಟಲ್ ರೂಪದಲ್ಲಿ ಸಿಗುತ್ತಿದೆ ಎಂಬ ಭ್ರಮೆಯಲ್ಲಿ ಜನರು ನೈಜ ಓದಿನಿಂದ ಮತ್ತು ಗ್ರಂಥಾಲಯದ ಸಂಪರ್ಕದಿಂದ ದೂರವಾಗುತ್ತಿದ್ದಾರೆ. ಪತ್ರಿಕೆಗಳಲ್ಲಿ ಬರುವ ಆಳವಾದ ವಿಶ್ಲೇಷಣೆಗಳು, ಸಂಪಾದಕೀಯಗಳು ಮತ್ತು ಸಾಪ್ತಾಹಿಕ ಮ್ಯಾಗಝಿನ್ಗಳಲ್ಲಿನ ಚಿಂತನಶೀಲ ಲೇಖನಗಳನ್ನು ಓದುವ ತಾಳ್ಮೆ ಇಂದಿನ ತಲೆಮಾರಿನಲ್ಲಿ ಕ್ಷೀಣಿಸುತ್ತಿದೆ. ಉದಾಹರಣೆಗೆ, ಹಿಂದೆ ಒಂದು ಹಳ್ಳಿಯ ಗ್ರಂಥಾಲಯದಲ್ಲಿ ರಾಜ್ಯದ ಪ್ರಮುಖ ಪತ್ರಿಕೆಗಳನ್ನು ಓದಲು ಹಿರಿಯರಿಂದ ಹಿಡಿದು ಶಾಲಾ ವಿದ್ಯಾರ್ಥಿಗಳವರೆಗೆ ಎಲ್ಲರೂ ಸಾಲುಗಟ್ಟಿ ನಿಲ್ಲುತ್ತಿದ್ದರು. ಅಲ್ಲಿ ನಡೆಯುತ್ತಿದ್ದ ಸಾರ್ವಜನಿಕ ಚರ್ಚೆಗಳು ಸಾಮಾನ್ಯ ಜನರ ಜ್ಞಾನದ ಹರವನ್ನು ವಿಸ್ತರಿಸುತ್ತಿದ್ದವು. ಪತ್ರಿಕೆಯ ಪ್ರತೀ ಪುಟವನ್ನೂ ಅಕ್ಷರ ಅಕ್ಷರವಾಗಿ ಓದುತ್ತಿದ್ದ ಆ ಕಾಲದಲ್ಲಿ, ಮನುಷ್ಯನ ಆಲೋಚನಾ ಕ್ರಮದಲ್ಲಿ ಒಂದು ರೀತಿಯ ಪ್ರಬುದ್ಧತೆ ಇರುತ್ತಿತ್ತು. ಆದರೆ ಇಂದು ಅದೇ ಗ್ರಂಥಾಲಯದ ಮೂಲೆಗಳಲ್ಲಿ ಪತ್ರಿಕೆಗಳು ಮತ್ತು ನಿಯತಕಾಲಿಕೆಗಳು ಯಾರೂ ಮುಟ್ಟದೆಯೇ ಧೂಳು ಹಿಡಿಯುತ್ತಿವೆ. ಜನರು ಕೇವಲ ವಾಟ್ಸ್ಆ್ಯಪ್ ಫಾರ್ವರ್ಡ್ ಸಂದೇಶಗಳು ಅಥವಾ ಫೇಸ್ಬುಕ್ನ ತುಣುಕುಗಳನ್ನು ಓದಿ ಅದನ್ನೇ ಸಂಪೂರ್ಣ ಸತ್ಯವೆಂದು ನಂಬುತ್ತಿದ್ದಾರೆ. ಇದರಿಂದಾಗಿ ವಿಷಯದ ಆಳವಾದ ಅಧ್ಯಯನ ಮರೆಯಾಗಿ, ಮೇಲ್ಪದರದ ತಪ್ಪು ಮಾಹಿತಿಗಳೇ ಜ್ಞಾನದ ರೂಪ ಪಡೆಯುತ್ತಿವೆ. ಪುಸ್ತಕಗಳನ್ನು ಕೈಯಲ್ಲಿ ಹಿಡಿದು, ಪುಟಗಳನ್ನು ತಿರುಗಿಸಿ ಓದುವಾಗ ಸಿಗುವ ಆ ಅನುಭೂತಿ, ಕಾಗದದ ವಾಸನೆ ಮತ್ತು ಅಕ್ಷರಗಳ ನಡುವಿನ ಭಾವನಾತ್ಮಕ ಅನುಸಂಧಾನ ಇಂದು ಮೊಬೈಲ್ ಪರದೆಯ ನಿರಂತರ ಹೊಳಪಿನಲ್ಲಿ ಕಳೆದುಹೋಗಿದೆ. ಓದುವ ಸಂಸ್ಕೃತಿಯು ಕೇವಲ ಮಾಹಿತಿಯನ್ನು ಪಡೆಯುವ ಮಾರ್ಗವಲ್ಲ, ಅದು ವ್ಯಕ್ತಿತ್ವದ ವಿಕಸನಕ್ಕೆ ಮತ್ತು ಏಕಾಗ್ರತೆಗೆ ಪೂರಕವಾದ ಪ್ರಕ್ರಿಯೆ. ಗ್ರಂಥಾಲಯಕ್ಕೆ ಹೋಗುವುದು ಒಂದು ಕಾಲದಲ್ಲಿ ಶಿಸ್ತು ಮತ್ತು ಜ್ಞಾನದ ಕಡೆಗಿನ ಹಂಬಲದ ಸಂಕೇತವಾಗಿತ್ತು. ಆದರೆ ಈಗ ಎಲ್ಲವೂ ‘ಇನ್ಸ್ಟಂಟ್’ ಆಗಿ ಸಿಗಬೇಕೆಂಬ ಆತುರದಲ್ಲಿ ಸಾಹಿತ್ಯದ ಸತ್ವವನ್ನು ಸವಿಯುವವರು ಕಡಿಮೆಯಾಗುತ್ತಿದ್ದಾರೆ. ಉದಾಹರಣೆಗೆ, ಒಂದು ಕಾದಂಬರಿಯನ್ನು ತಿಂಗಳುಗಟ್ಟಲೆ ಓದಿ ಅದರ ಪಾತ್ರಗಳೊಂದಿಗೆ ಜೀವಿಸುತ್ತಿದ್ದ ಕಾಲವಿತ್ತು; ಆದರೆ ಇಂದು ಕೇವಲ ಐದು ನಿಮಿಷದ ಸಾರಾಂಶದ ವೀಡಿಯೊ ನೋಡಿ ಪುಸ್ತಕ ಓದಿದ ತೃಪ್ತಿ ಪಡೆಯುವ ಅಪಾಯಕಾರಿ ಪ್ರವೃತ್ತಿ ಬೆಳೆಯುತ್ತಿದೆ. ಪಂಚಾಯತ್ ಹಂತದ ಗ್ರಂಥಾಲಯಗಳು ಓದುಗರಿಲ್ಲದೆ ಬಿಕೋ ಎನ್ನುತ್ತಿರುವುದು ಸಮಾಜದ ಬೌದ್ಧಿಕ ಅಧಃಪತನದ ದಿಕ್ಸೂಚಿಯಾಗಿದೆ. ಡಿಜಿಟಲ್ ಲೋಕದ ಅತಿಯಾದ ಅವಲಂಬನೆಯಿಂದಾಗಿ ಜನರ ಸ್ಮರಣಶಕ್ತಿ ಮತ್ತು ವಿಶ್ಲೇಷಣಾ ಸಾಮರ್ಥ್ಯ ಕುಂಠಿತಗೊಳ್ಳುತ್ತಿದೆ. ನಾವು ಸುದ್ದಿಗಳನ್ನು ತಿಳಿಯಲು ಬಳಸುವ ಸಾಮಾಜಿಕ ಜಾಲತಾಣಗಳು ಕೇವಲ ಮಾಹಿತಿಯ ತುಣುಕುಗಳನ್ನು ನೀಡುತ್ತವೆಯೇ ಹೊರತು, ಆಳವಾದ ವಿವೇಚನೆಯನ್ನಲ್ಲ. ಒಂದು ಉತ್ತಮ ಪುಸ್ತಕ ಅಥವಾ ಪತ್ರಿಕೆಯ ಲೇಖನವು ಮನುಷ್ಯನ ಆಲೋಚನಾ ಕ್ರಮವನ್ನೇ ಬದಲಿಸುವ ಶಕ್ತಿ ಹೊಂದಿರುತ್ತದೆ. ಜ್ಞಾನವೆನ್ನುವುದು ಸಾಗರವಿದ್ದಂತೆ, ಆದರೆ ಸೋಶಿಯಲ್ ಮೀಡಿಯಾದಲ್ಲಿ ನಮಗೆ ಸಿಗುತ್ತಿರುವುದು ಕೇವಲ ಅಲೆಗಳ ಅಬ್ಬರವಷ್ಟೇ. ಇಂದಿನ ಯುವ ಪೀಳಿಗೆಗೆ ಗ್ರಂಥಾಲಯಗಳು ಕೇವಲ ಹಳೆಯ ಕಟ್ಟಡಗಳಂತೆ ಕಾಣುತ್ತಿವೆ. ಹಳ್ಳಿಗಳ ಮಟ್ಟದಲ್ಲಿ ಗ್ರಂಥಪಾಲಕರು ಪತ್ರಿಕೆಗಳನ್ನು ಜೋಡಿಸಿ ಇಟ್ಟುಕೊಂಡು ಓದುಗರಿಗಾಗಿ ಕಾಯುವ ಪರಿಸ್ಥಿತಿ ಬಂದಿದೆ. ಪುಸ್ತಕಗಳ ಆಯ್ಕೆಯಲ್ಲಿಯೂ ಒಂದು ಕಾಲದಲ್ಲಿ ವೈವಿಧ್ಯ ಇರುತ್ತಿತ್ತು. ಕಥೆ, ಕವನ, ವಿಜ್ಞಾನ, ಕಲೆ ಹೀಗೆ ಹತ್ತು ಹಲವು ವಿಷಯಗಳತ್ತ ಆಸಕ್ತಿ ಇರುತ್ತಿತ್ತು. ಆದರೆ ಇಂದು ಎಲ್ಲವೂ ವಾಣಿಜ್ಯೀಕರಣಗೊಂಡಿದ್ದು, ಕೇವಲ ಪರೀಕ್ಷೆಗಾಗಿ ಓದುವ ಸಂಸ್ಕೃತಿ ಮಾತ್ರ ಉಳಿದುಕೊಂಡಿದೆ. ಪತ್ರಿಕೆಗಳಲ್ಲಿ ಬರುವ ಕೃತಿ ವಿಮರ್ಶೆಗಳು ಅಥವಾ ಸಣ್ಣ ಕಥೆಗಳನ್ನು ಓದುವವರ ಸಂಖ್ಯೆ ಬೆರಳೆಣಿಕೆಯಷ್ಟಾಗಿದೆ. ಇದು ಮುಂದುವರಿದರೆ ಸಾಹಿತ್ಯ ಲೋಕಕ್ಕೂ ದೊಡ್ಡ ಹೊಡೆತ ಬೀಳಲಿದೆ. ಹೊಸ ಬರಹಗಾರರಿಗೆ ವೇದಿಕೆಯಾಗಿದ್ದ ಈ ಪತ್ರಿಕೆಗಳು ಮತ್ತು ಅವುಗಳನ್ನು ಜನರಿಗೆ ತಲುಪಿಸುತ್ತಿದ್ದ ಗ್ರಂಥಾಲಯಗಳು ಮೌನವಾಗುತ್ತಿರುವುದು ಆತಂಕಕಾರಿ. ಉದಾಹರಣೆಗೆ, ಈ ಹಿಂದೆ ಸಾಹಿತ್ಯಿಕ ಪತ್ರಿಕೆಗಳು ಬಿಡುಗಡೆಯಾದಾಗ ಅದನ್ನು ಓದಲೆಂದೇ ಸಾರ್ವಜನಿಕರು ಗ್ರಂಥಾಲಯದ ಹೊರಗೆ ಕಾಯುತ್ತಿದ್ದರು. ಈಗ ಸಾರ್ವಜನಿಕ ಗ್ರಂಥಾಲಯಗಳಲ್ಲಿ ಕೇವಲ ಹಿರಿಯ ನಾಗರಿಕರು ಅಥವಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಓದುವ ಅಭ್ಯರ್ಥಿಗಳು ಮಾತ್ರ ಕಾಣಿಸಿಕೊಳ್ಳುತ್ತಿದ್ದಾರೆ. ಸಾಹಿತ್ಯದ ಓದಿಗಾಗಿ ಗ್ರಂಥಾಲಯಕ್ಕೆ ಬರುವವರ ಸಂಖ್ಯೆ ಸೊನ್ನೆಗಿಳಿಯುತ್ತಿದೆ. ನಮ್ಮ ಸುತ್ತಮುತ್ತಲಿನ ಪಂಚಾಯತ್ ಗ್ರಂಥಾಲಯಗಳನ್ನು ಗಮನಿಸಿದರೆ ಅಲ್ಲಿನ ಅಲ್ಮೆರಾಗಳಲ್ಲಿ ಜೋಡಿಸಿರುವ ಜ್ಞಾನಪೀಠ ಪುರಸ್ಕೃತ ಕೃತಿಗಳು, ಇತಿಹಾಸದ ದಾಖಲೆಗಳು ಮತ್ತು ಪ್ರಸಿದ್ಧ ಬರಹಗಾರರ ಪುಸ್ತಕಗಳು ಮೌನವಾಗಿ ಅಳುತ್ತಿವೆ ಎನಿಸುತ್ತದೆ. ನಾವು ಮಾಹಿತಿಯ ಹೊಳೆಯಲ್ಲಿ ಕೊಚ್ಚಿ ಹೋಗುತ್ತಿದ್ದೇವೆ ಆದರೆ ಜ್ಞಾನದ ಬಾಯಾರಿಕೆಯಲ್ಲಿ ಬಳಲುತ್ತಿದ್ದೇವೆ. ಸೋಶಿಯಲ್ ಮೀಡಿಯಾದಲ್ಲಿ ಬರುವ ‘ರೀಲ್ಸ್’ ಮತ್ತು ‘ಶಾರ್ಟ್ಸ್’ಗಳ ಮಾಯಾಲೋಕ ನಮಗೆ ಯಾವುದರ ಬಗ್ಗೆಯೂ ಆಳವಾಗಿ ಯೋಚಿಸಲು ಬಿಡುತ್ತಿಲ್ಲ. ಪತ್ರಿಕೆಯ ಮೊದಲ ಪುಟದಿಂದ ಕೊನೆಯ ಪುಟದವರೆಗೂ ಪ್ರತಿಯೊಂದು ಸುದ್ದಿಯನ್ನು ತಾಳ್ಮೆಯಿಂದ ಓದಿ ಅದರ ಒಳಾರ್ಥಗಳನ್ನು ಚರ್ಚಿಸುವ ಸುಸಂಸ್ಕೃತ ಸಮಾಜ ಮತ್ತೆ ನಿರ್ಮಾಣವಾಗಬೇಕಿದೆ. ಡಿಜಿಟಲ್ ಸಾಧನಗಳು ನಮ್ಮ ಅನುಕೂಲಕ್ಕಾಗಿ ಇರಲಿ, ಅವು ನಮ್ಮ ಆಲೋಚನಾ ಶಕ್ತಿಯನ್ನೇ ನುಂಗಿ ಹಾಕುವ ರಾಕ್ಷಸರಾಗಬಾರದು. ಲೇಖಕರು ತಮ್ಮ ಕೃತಿಗಳನ್ನು ಪತ್ರಿಕೆಗಳ ಮೂಲಕ ಜನರಿಗೆ ತಲುಪಿಸಿದಾಗ, ಅವುಗಳನ್ನು ಓದುವ ಜನರೇ ಇಲ್ಲದಿದ್ದರೆ ಆ ಸೃಜನಶೀಲತೆಗೆ ಬೆಲೆ ಎಲ್ಲಿದೆ?. ಗ್ರಂಥಾಲಯಗಳು ಮತ್ತೆ ಜ್ಞಾನದ ಬೆಳಕನ್ನು ಹರಡುವ ಕೇಂದ್ರಗಳಾಗಬೇಕಿದೆ. ಶಾಲಾ ಕಾಲೇಜುಗಳಲ್ಲಿ ಶಿಕ್ಷಕರು ವಿದ್ಯಾರ್ಥಿಗಳನ್ನು ಗ್ರಂಥಾಲಯಕ್ಕೆ ಕರೆದೊಯ್ಯುವ ಮೂಲಕ ಅವರಲ್ಲಿ ಪುಸ್ತಕ ಪ್ರೇಮವನ್ನು ಬೆಳೆಸಬೇಕು. ಮೊಬೈಲ್ ಪರದೆಯ ಆಚೆಗಿನ ಅದ್ಭುತ ಜಗತ್ತನ್ನು ಪರಿಚಯಿಸಬೇಕು. ಯುವಜನತೆ ಮತ್ತು ಮಕ್ಕಳು ಮತ್ತೆ ಪುಸ್ತಕಗಳತ್ತ ಮುಖ ಮಾಡದಿದ್ದರೆ, ಭವಿಷ್ಯದಲ್ಲಿ ಲೇಖನಿ ಮತ್ತು ಪುಸ್ತಕಗಳ ನಡುವಿನ ಸಂಬಂಧ ಕೇವಲ ಇತಿಹಾಸದ ವಸ್ತುಸಂಗ್ರಹಾಲಯಗಳಲ್ಲಿ ಮಾತ್ರ ಉಳಿಯಬಹುದು. ಓದುವ ಸಂಸ್ಕೃತಿಯನ್ನು ಪುನರುಜ್ಜೀವನಗೊಳಿಸುವುದು ಎಂದರೆ ಅದು ಕೇವಲ ಅಕ್ಷರಗಳನ್ನು ಉಳಿಸುವುದಲ್ಲ, ಬದಲಾಗಿ ಒಂದು ಪ್ರಬುದ್ಧ ಮತ್ತು ಸುಸಂಸ್ಕೃತ ಸಮಾಜದ ವೈಚಾರಿಕತೆಯನ್ನು ಕಾಪಾಡುವುದಾಗಿದೆ. ಪ್ರತಿಯೊಬ್ಬರೂ ದಿನದಲ್ಲಿ ಕನಿಷ್ಠ ಅರ್ಧ ಗಂಟೆಯಾದರೂ ಪತ್ರಿಕೆ ಅಥವಾ ಒಂದು ಪುಸ್ತಕದ ಪುಟವನ್ನು ಓದುವ ಪ್ರತಿಜ್ಞೆ ಮಾಡಬೇಕಿದೆ. ಆಗ ಮಾತ್ರ ಈ ಪುಸ್ತಕದ ಗೂಡುಗಳು ಮತ್ತೆ ಜ್ಞಾನದ ಗಣಿಗಳಾಗಿ ಮಾರ್ಪಡಲು ಸಾಧ್ಯ. ಸಮಾಜವು ಬೌದ್ಧಿಕವಾಗಿ ಶ್ರೀಮಂತವಾಗಬೇಕಾದರೆ ಗ್ರಂಥಾಲಯಗಳ ಸಂರಕ್ಷಣೆ ಮತ್ತು ಓದುವ ಸಂಸ್ಕೃತಿಯ ಪುನರ್ಸ್ಥಾಪನೆ ಅತಿ ಅವಶ್ಯಕವಾಗಿದೆ. ಪತ್ರಿಕೆಯ ಅಕ್ಷರಗಳು ಮತ್ತು ಪುಸ್ತಕದ ಪುಟಗಳು ನಮ್ಮನ್ನು ಮತ್ತೆ ಎಚ್ಚರಿಸುವಂತಾಗಲಿ. ಅಕ್ಷರವೇ ಶಕ್ತಿ, ಓದೇ ಸಂಸ್ಕೃತಿ ಎಂಬ ಸತ್ಯವನ್ನು ನಾವು ಮರೆಯಬಾರದು.
ವಾಷಿಂಗ್ಟನ್: ಇರಾನ್ ಮೇಲಿನ ಯುದ್ಧ ಮತ್ತು ಪೋಪ್ ಲಿಯೋ ಅವರೊಂದಿಗಿನ ಭಿನ್ನಾಭಿಪ್ರಾಯದ ಹಿನ್ನೆಲೆ ಅಮೆರಿಕದಲ್ಲಿ ಅನೇಕ ಜನರು ಟ್ರಂಪ್ ಅವರ ಮಾನಸಿಕ ಸ್ಥಿತಿಗತಿ ಬಗ್ಗೆ ಪ್ರಶ್ನಿಸಿದ್ದಾರೆ. ಇದಲ್ಲದೆ ಇತ್ತೀಚಿನ ದಿನಗಳಲ್ಲಿ ಡೊನಾಲ್ಡ್ ಟ್ರಂಪ್ ಅವರ ಆಡಳಿತಕ್ಕೆ ಅನುಮೋದನೆ ರೇಟಿಂಗ್ ಅತ್ಯಂತ ಕಡಿಮೆ ಮಟ್ಟದಲ್ಲಿದೆ ಎಂದು Reuters/Ipsos ಸಮೀಕ್ಷೆ ಪತ್ತೆ ಹಚ್ಚಿದೆ. ಆರು ದಿನಗಳ ಕಾಲ ನಡೆದ ಈ ಸಾರ್ವಜನಿಕ ಅಭಿಪ್ರಾಯ ಸಮೀಕ್ಷೆ ಸೋಮವಾರ ಪೂರ್ಣಗೊಂಡಿದ್ದು, ಕೇವಲ 36% ಅಮೆರಿಕನ್ನರು ಮಾತ್ರ ಟ್ರಂಪ್ ಅವರ ಕಾರ್ಯಕ್ಷಮತೆಯನ್ನು ಅನುಮೋದಿಸಿದ್ದಾರೆ. 2025ರ ಜನವರಿ 20ರಂದು ಪ್ರಮಾಣವಚನ ಸ್ವೀಕರಿಸಿದ ಬಳಿಕ ಆರಂಭಿಕ ಅವಧಿಯಲ್ಲಿ ಟ್ರಂಪ್ ಅವರಿಗೆ 47% ಅನುಮೋದನೆ ದೊರೆತಿದ್ದು ಅದು ಈ ಅವಧಿಯಲ್ಲಿ ಅವರು ಪಡೆದ ಗರಿಷ್ಠ ಮಟ್ಟವಾದ ಅನುಮೋದನೆಯಾಗಿತ್ತು. ಇರಾನ್ ಮೇಲಿನ ಯುದ್ಧದ ನಂತರ ಅಮೆರಿಕದಲ್ಲಿ ಪೆಟ್ರೋಲ್ ಬೆಲೆ ಹೆಚ್ಚಳವಾದ್ದರಿಂದ ಡೊನಾಲ್ಡ್ ಟ್ರಂಪ್ ಒತ್ತಡದಲ್ಲಿದ್ದಾರೆ. ಇರಾನ್ ವಿರುದ್ಧದ ಅಮೆರಿಕದ ಮಿಲಿಟರಿ ದಾಳಿಯನ್ನು ಸುಮಾರು 36% ಅಮೆರಿಕನ್ನರು ಅನುಮೋದಿಸಿದ್ದಾರೆ. ಟ್ರಂಪ್ ಅವರ ರಿಪಬ್ಲಿಕನ್ ಪಕ್ಷದ ಕೆಲವು ಸದಸ್ಯರು ಸೇರಿದಂತೆ ಅನೇಕ ಅಮೆರಿಕನ್ನರು, 79 ವರ್ಷದ ಟ್ರಂಪ್ ಅವರ ಮಾನಸಿಕ ಸ್ಥಿತಿಗತಿ ಬಗ್ಗೆ ಕೆಲವು ಕಳವಳಗಳನ್ನು ವ್ಯಕ್ತಪಡಿಸಿದ್ದಾರೆ ಎಂದು ಸಮೀಕ್ಷೆಯು ತಿಳಿಸಿದೆ. ಕೇವಲ 26% ಅಮೆರಿಕನ್ನರು ಮಾತ್ರ ಟ್ರಂಪ್ ಅವರನ್ನು ಶಾಂತ ಸ್ವಭಾವದವ ಎಂದು ಪರಿಗಣಿಸುತ್ತಾರೆ ಎಂದು ಹೇಳಿದ್ದಾರೆ. ಈ ಪ್ರಶ್ನೆಗೆ ಉತ್ತರಿಸುವಲ್ಲಿ ರಿಪಬ್ಲಿಕನ್ ಪಕ್ಷದ ಸದಸ್ಯರಲ್ಲಿ ಭಿನ್ನಾಭಿಪ್ರಾಯ ಕಂಡುಬಂದಿದೆ. 53% ಮಂದಿ ಅವರನ್ನು ʼಶಾಂತ ಸ್ವಭಾವದವʼರು ಎಂದು ಹೇಳಿದ್ದಾರೆ. ಆದರೆ 46% ಮಂದಿ ಟ್ರಂಪ್ ಶಾಂತ ಸ್ವಭಾವದವರಲ್ಲ ಎಂದು ಹೇಳಿದ್ದಾರೆ. ಇನ್ನೂ ಕೆಲವರು ಈ ಪ್ರಶ್ನೆಗೆ ಉತ್ತರಿಸಲು ನಿರಾಕರಿಸಿದ್ದಾರೆ. ಇತ್ತೀಚೆಗೆ ಟ್ರಂಪ್ ಅವರು ಸಾಮಾಜಿಕ ಮಾಧ್ಯಮಗಳಲ್ಲಿ ಇರಾನ್ ನಾಗರಿಕತೆಯನ್ನು ಅಳಿಸಿಹಾಕುವ ಬೆದರಿಕೆಯನ್ನು ಹಾಕಿದ್ದರು. ಪೋಪ್ ಲಿಯೋ ಅವರನ್ನು ಟೀಕಿಸಿದ್ದರು. ಟ್ರಂಪ್ ಇರಾನ್ನ ಎಲ್ಲಾ ಸೇತುವೆಗಳು ಮತ್ತು ವಿದ್ಯುತ್ ಸ್ಥಾವರಗಳನ್ನು ನಾಶಮಾಡುವುದಾಗಿ ಬೆದರಿಕೆ ಹಾಕಿದ್ದರು. ಈ ಬಗ್ಗೆ ಅಮೆರಿಕದಲ್ಲೇ ವಿರೋಧ ವ್ಯಕ್ತವಾಗಿತ್ತು.
ದಿಲ್ಲಿಯಲ್ಲಿ ಒಂದೇ ಸಮನೆ ಏರುತ್ತಿದೆ ತಾಪಮಾನ, 'ಯೆಲ್ಲೋ ಅಲರ್ಟ್' ಘೋಷಣೆ
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಾಯುಮಾಲಿನ್ಯದ ಬೆನ್ನಲ್ಲೇ ಈಗ ಸುಡುವ ಬಿಸಿಲಿನ ಪ್ರತಾಪ ಶುರುವಾಗಿದೆ. ತೀವ್ರ ತಾಪಮಾನದಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಭಾರತೀಯ ಹವಾಮಾನ ಇಲಾಖೆಯು ಏಪ್ರಿಲ್ 22 ರಂದು ನಗರಕ್ಕೆ 'ಯೆಲ್ಲೋ ಅಲರ್ಟ್' ಘೋಷಿಸಿದೆ. ಮುಂದಿನ ಕೆಲವು ದಿನಗಳ ಕಾಲ ತೀವ್ರವಾದ ಬಿಸಿಗಾಳಿ ಬೀಸುವ ಎಚ್ಚರಿಕೆ ನೀಡಿದೆ. ದೆಹಲಿಯ ಹಲವು ಭಾಗಗಳಲ್ಲಿ ಗರಿಷ್ಠ ತಾಪಮಾನವು 41C ನಿಂದ 44C ವರೆಗೆ ಏರಿಕೆಯಾಗುವ ಸಾಧ್ಯತೆಯಿದೆ.
ಬಡತನದಲ್ಲಿ ಅರಳಿದ ಪ್ರತಿಭೆಗಳ ಮುಡಿಗೇರಿದ ಚಿನ್ನದ ಪದಕ
ಅಕ್ಕಮಹಾದೇವಿ ಮಹಿಳಾ ವಿವಿಯ 17ನೇ ಘಟಿಕೋತ್ಸವ
SSLC Result: ತೃತೀಯ ಭಾಷೆಗೆ ಗ್ರೇಡ್ ಬದಲು ಅಂಕ ಫಿಕ್ಸ್: ವಿದ್ಯಾರ್ಥಿಗಳಿಂದ ಗ್ರೇಸ್ ಮಾರ್ಕ್ಸ್ಗೆ ಡಿಮ್ಯಾಂಡ್
ಇತ್ತೀಚೆಗೆ ಮುಕ್ತಾಯಗೊಂಡ ಈ ವರ್ಷದ ಎಸ್ಎಸ್ಎಲ್ಸಿ ಪರೀಕ್ಷೆ ಬರೆದ ವಿದ್ಯಾರ್ಥಿಗಳಿಗೆ ತೃತೀಯ ಭಾಷೆಯ ಮೌಲ್ಯಮಾಪನದ ಕುರಿತು ಉಂಟಾಗಿರುವ ಗೊಂದಲ ಇನ್ನೂ ಬಗೆಹರಿದ ಹಾಗೆ ಕಾಣುತ್ತಿಲ್ಲ. ಈ ವರ್ಷ ತೃತೀಯ ಭಾಷೆಯ ಪತ್ರಿಕೆಗೆ ಸರ್ಕಾರ ಹೇಳಿರುವ ಹಾಗೆ ಗ್ರೇಡ್ಗಳನ್ನು ನೀಡುವ ಬದಲು ಹಿಂದಿನಂತೆಯೇ ಅಂಕಗಳನ್ನು ನೀಡಲಾಗುವುದು ಎಂದು ಕರ್ನಾಟಕ ಹೈಕೋರ್ಟ್ ಮಂಗಳವಾರ ಸ್ಪಷ್ಟಪಡಿಸಿದೆ. ಇದರ ಜೊತೆಗೆ ಪರೀಕ್ಷಾ ನಿಯಮಗಳಲ್ಲಿ
ಬೆಂಗಳೂರು Fly 19 ವಿಮಾನದಲ್ಲಿ ಮತ್ತೆ ದೋಷ: 2 ತಾಸು ತಡವಾಗಿ ಹುಬ್ಬಳ್ಳಿಯಲ್ಲಿ ಲ್ಯಾಂಡ್, ಸುರಕ್ಷತೆಯ ಪ್ರಶ್ನೆ..
ಹುಬ್ಬಳ್ಳಿ: ಹೈದರಾಬಾದ್ನಿಂದ ಹುಬ್ಬಳ್ಳಿಗೆ ಬರುತ್ತಿದ್ದ Fly- 91 ವಿಮಾನದಲ್ಲಿ ತಾಂತ್ರಿಕ ದೋಷ ಕಂಡು ಬಂದು ನಾಲ್ಕು ಗಂಟೆ ತಡವಾಗಿ ತುರ್ತು ಲ್ಯಾಂಡ್ ಆಗಿತ್ತು. ಇದೀಗ ಬೆಂಗಳೂರು-ಹುಬ್ಬಳ್ಳಿಗೆ ತೆರಳಿದ್ದ ಅದೇ Fly- 91ವಿಮಾನದಲ್ಲಿ ಮತ್ತೆ ಅಂಥದ್ದೆ ತೊಂದರೆ ಆಗಿದೆ. ಹೀಗಾಗಿ ಎರಡು ಗಂಟೆಗಳ ಕಾಲ ಆಗಸದಲ್ಲೇ ಹಾರಾಡಿ ನಂತರ ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗಿದೆ. ಈ ಅವಧಿಯಲ್ಲಿ
ಬೆಂಗಳೂರಿನಲ್ಲಿ ಇಂದು ಚಿನ್ನದ ಬೆಲೆಯಲ್ಲಿ ಮತ್ತೆ ಇಳಿಕೆ ಕಂಡುಬಂದಿದ್ದು, ಆಭರಣ ಪ್ರಿಯರಿಗೆ ಮತ್ತು ಹೂಡಿಕೆದಾರರಿಗೆ ಇದು ಸಮಾಧಾನಕರ ಸುದ್ದಿಯಾಗಿದೆ. ಜಾಗತಿಕ ಮಾರುಕಟ್ಟೆಯ ಏರಿಳಿತಗಳ ನಡುವೆಯೂ ಸ್ಥಳೀಯವಾಗಿ ಚಿನ್ನದ ದರವು ಗ್ರಾಹಕರಿಗೆ ತುಸು ನಿರಾಳ ತಂದಿದೆ. 24 ಕ್ಯಾರೆಟ್ ಮತ್ತು 22 ಕ್ಯಾರೆಟ್ ಎರಡೂ ವಿಭಾಗಗಳಲ್ಲಿ ಬೆಲೆಯು ಅಲ್ಪ ಪ್ರಮಾಣದಲ್ಲಿ ಇಳಿಕೆಯಾಗಿದ್ದು, ಇಂದಿನ ದರ ವಿವರ ಇಲ್ಲಿದೆ. ಇಂದಿನ
ದೆಹಲಿಯಲ್ಲಿ ದೋಸ್ತಿ, ಬಂಗಾಳದಲ್ಲಿ ಕುಸ್ತಿ: ರಾಹುಲ್ ಗಾಂಧಿ ಕೋಲ್ಕತ್ತ ಭೇಟಿಗೆ ಮಮತಾ ಬ್ಯಾನರ್ಜಿ ಬ್ರೇಕ್
April 23rd Rahul Gandhi visit cancelled : ಚುನಾವಣಾ ಹೊಸ್ತಿಲಲ್ಲಿರುವ ಪಶ್ಚಿಮ ಬಂಗಾಳದಲ್ಲಿ ರಾಜಕೀಯ ನಾಯಕರ ಆರೋಪ/ ಪ್ರತ್ಯಾರೋಪ, ಪರಾಕಷ್ಠೆಗೆ ತಲುಪಿದೆ. ಎರಡನೇ ಹಂತದಲ್ಲಿ ಕೋಲ್ಕತ್ತದಲ್ಲಿ ಚುನಾವಣೆ ನಡೆಯುತ್ತಿದೆ. ರಾಜಧಾನಿಗೆ ಚುನಾವಣಾ ಪ್ರಚಾರಕ್ಕೆ ಬರಬೇಕಾಗಿದ್ದ ರಾಹುಲ್ ಗಾಂಧಿಗೆ, ಸರ್ಕಾರ ಅನುಮತಿಯನ್ನು ನಿರಾಕರಿಸಿದೆ ಎಂದು ಕಾಂಗ್ರೆಸ್ ಆರೋಪಿಸಿದೆ. ಇದನ್ನು ತೃಣಮೂಲ ಕಾಂಗ್ರೆಸ್ ನಿರಾಕರಿಸಿದೆ.
ಕೊಡಗಿನ ಹೋಂಸ್ಟೇಯಲ್ಲಿ ವಿದೇಶಿ ಮಹಿಳೆಗೆ ಲೈಂಗಿಕ ಕಿರುಕುಳ ಆರೋಪ : ಇಬ್ಬರ ಬಂಧನ
ಮಡಿಕೇರಿ ಏ.22 : ಪ್ರವಾಸಕ್ಕೆಂದು ಬಂದಿದ್ದ ವಿದೇಶಿ ಮಹಿಳೆಗೆ ಕೊಡಗು ಜಿಲ್ಲೆಯ ಹೋಂಸ್ಟೇಯೊoದರಲ್ಲಿ ಲೈಂಗಿಕ ಕಿರುಕುಳವಾಗಿದೆ ಎನ್ನುವ ಆರೋಪದಡಿ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಕಳೆದ ವಾರ ಅಮೆರಿಕಾ ಮೂಲದ ಮಹಿಳೆಯೊಬ್ಬರು ದಕ್ಷಿಣ ಕೊಡಗಿನ ಕುಟ್ಟ ಗ್ರಾಮದ ಹೋಂಸ್ಟೇಯೊoದರಲ್ಲಿ ತಂಗಿದ್ದ ಸಂದರ್ಭ ಲೈಂಗಿಕ ಕಿರುಕುಳ ನಡೆದಿತ್ತು ಎನ್ನುವ ಆರೋಪ ಕೇಳಿ ಬಂದಿತ್ತು. ಈ ಆರೋಪದಡಿ ಹೋಂಸ್ಟೇಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಜಾರ್ಖಂಡ್ ಮೂಲದ ಓರ್ವ ಸಿಬ್ಬಂದಿ ಹಾಗೂ ಹೋಂಸ್ಟೇ ಮಾಲೀಕರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಲೈಂಗಿಕ ಕಿರುಕುಳ ಆರೋಪದಡಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಸ್ಪಷ್ಟಪಡಿಸಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಎನ್.ಬಿಂದುಮಣಿ ಅವರು ತನಿಖೆ ಪ್ರಗತಿಯಲ್ಲಿರುವುದರಿಂದ ಹೆಚ್ಚಿನ ಮಾಹಿತಿಯನ್ನು ಇಲ್ಲಿಯವರೆಗೆ ಹಂಚಿಕೊಂಡಿಲ್ಲ. ಕೊಡಗಿನ ಹೋಂಸ್ಟೇಯಲ್ಲಿ ತನಗಾದ ಅನ್ಯಾಯದ ಬಗ್ಗೆ ದೆಹಲಿಯಲ್ಲಿರುವ ಅಮೆರಿಕಾ ರಾಯಭಾರ ಕಚೇರಿಗೆ ಮಹಿಳೆ ದೂರು ನೀಡಿದ ನಂತರ ತನಿಖೆ ಚುರುಕುಗೊಂಡಿದೆ ಎಂದು ತಿಳಿದುಬಂದಿದೆ. ಪ್ರಕರಣವನ್ನು ಪೊಲೀಸ್ ಇಲಾಖೆ ಗೌಪ್ಯವಾಗಿಟ್ಟಿರುವ ಬಗ್ಗೆ ಸಾರ್ವಜನಿಕ ವಲಯದಲ್ಲಿ ಅಸಮಾಧಾನ ವ್ಯಕ್ತವಾಗಿದೆ.
ರಾಜಕೀಯ ಚದುರಂಗದಾಟದಲ್ಲಿ ಮಾಟ-ಮಂತ್ರದ ಎಂಟ್ರಿ: ‘ವೈಚಾರಿಕ’ ಸಿದ್ದುಗೆ ‘ಮೌಢ್ಯ’ ಪರೀಕ್ಷೆ!
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೈಲೆಂಟ್ ಆಗಿದ್ದು, ಮೊದಲಿನ ಖದರ್ ಇಲ್ಲದಿರುವುದಕ್ಕೆ ಮಾಟ, ಮಂತ್ರ ಪ್ರಯೋಗ ಆಗಿರಬಹುದು ಎಂದು ಮಾಜಿ ಸಚಿವ ಕೆ.ಎನ್.ರಾಜಣ್ಣ ಶಂಕೆ ವ್ಯಕ್ತಪಡಿಸಿದ್ದಾರೆ. ‘‘ಸಿದ್ದರಾಮಯ್ಯ ಅವರು ಮೊದಲಿನಷ್ಟು ಕ್ರಿಯಾಶೀಲರಾಗಿಲ್ಲ. ಯಾರೋ ಮಾಟ, ಮಂತ್ರ ಮಾಡಿಸಿರಬಹುದು ಎಂದು ಜನ ಮಾತನಾಡಿಕೊಳ್ಳುತ್ತಿದ್ದಾರೆ. ಸಿಎಂ ಮಂಕಾಗಿರುವುದನ್ನು ನೋಡಿ ನಮಗೂ ಅದೇ ಯೋಚನೆ ಬಂದಿದೆ,’’ ಎಂದು ರಾಜಣ್ಣ ಹೇಳಿದ್ದಾರೆ.
ಬಿಜೆಪಿಯ ಪುರುಷ ಮೀಸಲಾತಿ ಕುತಂತ್ರವೇನೋ ಸೋತಿತು; ಮಹಿಳಾ ಮೀಸಲಾತಿ ಗೆಲ್ಲುವುದೆಂದು? ಹೇಗೆ?
ವಾಸ್ತವದಲ್ಲಿ ಮಹಿಳಾ ಮೀಸಲಾತಿಯನ್ನು ತ್ವರಿತವಾಗಿ ಜಾರಿ ಮಾಡಲು ಬೇಕಿದ್ದದ್ದು ಒಂದು ಸರಳ ತಿದ್ದುಪಡಿ ಮಾತ್ರ. 2023ರಲ್ಲಿ ಸಂವಿಧಾನಕ್ಕೆ 344ಎ ತಿದ್ದುಪಡಿಯ ಮೂಲಕ ಮೋದಿ ಸರಕಾರ ಮಹಿಳಾ ಮೀಸಲಾತಿ ಜಾರಿಗೆ ವಿಧಿಸಿದ್ದ 2026ರ ಸೆನ್ಸಸ್ ಮತ್ತು ಅದನ್ನು ಆಧರಿಸಿದ ಡಿಲಿಮಿಟೇಶನ್ ಸಂಕೋಲೆಗಳನ್ನು ತೆಗೆದು ಹಾಕುವ ಸರಳ ತಿದ್ದುಪಡಿ. ಆದರೆ ಮೋದಿ ಸರಕಾರದ ಉದ್ದೇಶವೇ ಬೇರೆ ಇತ್ತು. ಅದು ಮಹಿಳಾ ಮೀಸಲಾತಿಯ ಮುಸುಕಿನಲ್ಲಿ ಜಾರಿಗೆ ಮಾಡಬೇಕಿದ್ದದ್ದು ಕುತಂತ್ರದ ಡಿಲಿಮಿಟೇಷನ್. ವಾಸ್ತವವಾಗಿ 2023ರಲ್ಲೇ ಸರ್ವ ಪಕ್ಷಗಳ ಸರ್ವಾನುಮೋದನೆಯೊಂದಿಗೆ ಸಂವಿಧಾನದ ಆರ್ಟಿಕಲ್ 334ಎ ತಿದ್ದುಪಡಿ ತಂದು ಮಹಿಳಾ ಮೀಸಲಾತಿಯನ್ನು ಕಾನೂನು ಮಾಡಿಯಾಗಿತ್ತು. ಆಗ ವಿರೋಧ ಪಕ್ಷಗಳೆಲ್ಲ ಒಕ್ಕೊರಲಿನಿಂದ ಮಸೂದೆಯನ್ನು ಬೆಂಬಲಿಸಿದರೂ ಹಾಲಿ 543 ಸ್ಥಾನಗಳಲ್ಲೇ ಶೇ. 33ರ ಮೀಸಲಾತಿಯನ್ನು ಕಲ್ಪಿಸಬೇಕೆಂದು ಮತ್ತು 2024ರ ಲೋಕಸಭಾ ಚುನಾವಣೆಯಲ್ಲೇ ಮಹಿಳಾ ಮೀಸಲಾತಿಯನ್ನು ಜಾರಿಗೆ ತರುವಂತೆ ಆಗ್ರಹಿಸಿದ್ದವು. ಆದರೆ ಮೋದಿ ಸರಕಾರ ಆ ಪ್ರಸ್ತಾವವನ್ನು ಖಡಾಖಂಡಿತವಾಗಿ ವಿರೋಧಿಸಿತ್ತು. ಬದಲಿಗೆ ಮಹಿಳಾ ಮೀಸಲಾತಿಯು 2026ರ ಸೆನ್ಸಸ್ ಆಧರಿಸಿದ ಡಿಲಿಮಿಟೇಷನ್ ಮಾಡಿದ ನಂತರ ಜಾರಿಗೆ ಬರುವುದು ಎಂಬ ಅನಗತ್ಯ ಷರತ್ತನ್ನು ಹಠ ಹಿಡಿದು ಸೇರಿಸಿತು. ಹೀಗಾಗಿ 2023ರಲ್ಲೇ ಮಸೂದೆ ಜಾರಿಯಾದರೂ ಮಹಿಳಾ ಮೀಸಲಾತಿ ಮಾತ್ರ 2034ರ ತನಕ ಜಾರಿ ಮಾಡಲಾಗದ ಷರತ್ತುಗಳನ್ನು ಸೇರಿಸಿದ್ದೇ ಮೋದಿ ಸರಕಾರ. ಆದರೆ ಮೊನ್ನೆ ದಿಢೀರನೆ ಉಲ್ಟಾ ಹೊಡೆದ ಮೋದಿ ಸರಕಾರ ಮಹಿಳಾ ಮೀಸಲಾತಿಯನ್ನು ತ್ವರಿತವಾಗಿ ಜಾರಿ ಮಾಡುವ ಉದ್ದೇಶ ಎಂದು ಹೇಳಿಕೊಂಡು ಸಂವಿಧಾನದ 131ನೇ ತಿದ್ದುಪಡಿ ಮಸೂದೆಯನ್ನು ಜಾರಿ ಮಾಡಲು ದಿಢೀರನೆ ಸಂಸತ್ತಿನ ವಿಶೇಷ ಅಧಿವೇಶನವನ್ನು ಕರೆಯಿತು. ವಾಸ್ತವದಲ್ಲಿ ಮಹಿಳಾ ಮೀಸಲಾತಿಯನ್ನು ತ್ವರಿತವಾಗಿ ಜಾರಿ ಮಾಡಲು ಬೇಕಿದ್ದದ್ದು ಒಂದು ಸರಳ ತಿದ್ದುಪಡಿ ಮಾತ್ರ. 2023ರಲ್ಲಿ ಸಂವಿಧಾನಕ್ಕೆ 344ಎ ತಿದ್ದುಪಡಿಯ ಮೂಲಕ ಮೋದಿ ಸರಕಾರ ಮಹಿಳಾ ಮೀಸಲಾತಿ ಜಾರಿಗೆ ವಿಧಿಸಿದ್ದ 2026ರ ಸೆನ್ಸಸ್ ಮತ್ತು ಅದನ್ನು ಆಧರಿಸಿದ ಡಿಲಿಮಿಟೇಶನ್ ಸಂಕೋಲೆಗಳನ್ನು ತೆಗೆದು ಹಾಕುವ ಸರಳ ತಿದ್ದುಪಡಿ. ಆದರೆ ಮೋದಿ ಸರಕಾರದ ಉದ್ದೇಶವೇ ಬೇರೆ ಇತ್ತು. ಅದು ಮಹಿಳಾ ಮೀಸಲಾತಿಯ ಮುಸುಕಿನಲ್ಲಿ ಜಾರಿಗೆ ಮಾಡಬೇಕಿದ್ದದ್ದು ಕುತಂತ್ರದ ಡಿಲಿಮಿಟೇಷನ್. ಹೀಗಾಗಿ 131ನೇ ಸಂವಿಧಾನ ತಿದ್ದುಪಡಿ ಮಸೂದೆಯಲ್ಲಿ 2011ರ ಸೆನ್ಸಸ್ ಅನ್ನು ಆಧರಿಸಿ ಡಿಲಿಮಿಟೇಷನ್ ನಡೆಸಿ ಮಹಿಳಾ ಮೀಸಲಾತಿಯನ್ನು 2029ರ ಚುನಾವಣೆಗೆ ಜಾರಿಗೆ ತರುವುದಾಗಿ ಘೋಷಿಸಿತು. ಸಂಸತ್ತಿನ ಸ್ಥಾನಬಲವನ್ನು ಯಾವುದೇ ಸಾಂವಿಧಾನಿಕ ಸಮರ್ಥನೆಯಿಲ್ಲದೆ 816ಕ್ಕೆ ಏರಿಸಿ ಅದರಲ್ಲಿ ಶೇ. 33ರಷ್ಟು ಅಂದರೆ 273 ಸ್ಥಾನಗಳನ್ನು ಮೀಸಲಿಡುವುದಾಗಿ ಪ್ರಸ್ತಾವ ಮಾಡಿತ್ತು. ಅದರ ಬಗ್ಗೆ ದಕ್ಷಿಣ ರಾಜ್ಯಗಳು ತೀವ್ರವಾದ ವಿರೋಧ ವ್ಯಕ್ತಪಡಿಸುತ್ತಿದ್ದಂತೆ ಎಲ್ಲಾ ರಾಜ್ಯಗಳ ಸ್ಥಾನಗಳನ್ನು ಶೇ. 50ರಷ್ಟು ಸಮಾನವಾಗಿ ಏರಿಸುವ ಸುಳ್ಳು ಭರವಸೆಗಳನ್ನು ನೀಡಲು ಪ್ರಯತ್ನಿಸಿತು. ಆದರೆ: ಮೊದಲನೆಯದಾಗಿ ಎಲ್ಲಾ ರಾಜ್ಯಗಳ ಸೀಟುಗಳನ್ನು ಶೇ. 50ಕ್ಕೆ ಸಮಾನವಾಗಿ ಏರಿಕೆ ಮಾಡುವ ಪ್ರಸ್ತಾವವೇ ಮಸೂದೆಯಲ್ಲಿ ಇರಲಿಲ್ಲ. ಎರಡನೆಯದಾಗಿ ಪ್ರತಿಯೊಂದು ರಾಜ್ಯಗಳ ಜನಸಂಖ್ಯಾ ಏರಿಕೆಯ ಪ್ರಮಾಣಕ್ಕೆ ತಕ್ಕಂತೆ ಸೀಟುಗಳನ್ನು ಏರಿಸದೆ ಎಲ್ಲಾ ರಾಜ್ಯಗಳಲ್ಲೂ ಏಕಪ್ರಕಾರವಾಗಿ ಶೇ. 50ರಷ್ಟು ಸ್ಥಾನಗಳ ಏರಿಕೆ ಮಾಡುವುದು ಯಾವುದೇ ಸಾಂವಿಧಾನಿಕ ಸಮರ್ಥನೆ ಇರಲಿಲ್ಲ. ಹೀಗಾಗಿ ಅಂತಹ ಏರಿಕೆ ಸಾಧ್ಯವೂ ಇರಲಿಲ್ಲ. ಮೂರನೆಯದಾಗಿ ಸಂಸತ್ತಿನ ಸ್ಥಾನಬಲವನ್ನು 543ರಿಂದ 816ಕ್ಕೆ ಏರಿಸಿ ಅದರಲ್ಲಿ ಶೇ. 33ರಷ್ಟು ಮೀಸಲಾತಿಯನ್ನು ಮಹಿಳೆಯರಿಗೆ ಮೀಸಲಾತಿ ನೀಡುವ ಹಿಂದಿನ ತರ್ಕವೇ ಪುರುಷಾಧಿಪತ್ಯವನ್ನು ಓಲೈಸುವುದಾಗಿತ್ತು. ಅದನ್ನು ಬಿಜೆಪಿಯೇ ಪರೋಕ್ಷವಾಗಿ ಒಪ್ಪಿಕೊಂಡಿದೆ. ಮಹಿಳಾ ಮೀಸಲಾತಿಯೋ? ಪುರುಷ ಮೀಸಲಾತಿಯೋ? ಏಕೆಂದರೆ ಸಮಾಜದಲ್ಲಿ ಮಹಿಳೆಯರು ಶೇ. 50ರಷ್ಟಿದ್ದರೂ ಈಗಿರುವ 543 ಸೀಟುಗಳಲ್ಲಿ ಶೇ. 90ರಷ್ಟು ಪುರುಷರೇ ಆಕ್ರಮಿಸಿದ್ದಾರೆ. ಅದರೊಳಗೆ ಶೇ. 33 ಮೀಸಲಾತಿ ಕಲ್ಪಿಸಿದ್ದರೆ, ಪುರುಷರ ಪಟ್ಟಭದ್ರ ಹಿತಾಸಕ್ತಿಗೆ ಧಕ್ಕೆ ಬರುತ್ತಿತ್ತು. ಏಕೆಂದರೆ ಆಗ ಪುರುಷರು 180 ಸ್ಥಾನಗಳನ್ನು ಮಹಿಳೆಯರಿಗೆ ಬಿಟ್ಟುಕೊಡಬೇಕಾಗುತ್ತಿತ್ತು. ಆದ್ದರಿಂದ ಪುರುಷರ ಆಸಕ್ತಿಗಳಿಗೆ ಧಕ್ಕೆ ಬರದಂತೆ ನೋಡಿಕೊಳ್ಳಲೆಂದೇ ಒಟ್ಟಾರೆ ಸಂಸತ್ತಿನ ಸ್ಥಾನಗಳನ್ನು 543 ರಿಂದ 816ಕ್ಕೆ ಏರಿಸುವ ಪ್ರಸ್ತಾವವನ್ನು ಬಿಜೆಪಿ ಮಾಡಿತ್ತು. ಆಗ 543 ಸೀಟುಗಳನ್ನೂ ಪುರುಷರಿಗೆ ಮೀಸಲಿರಿಸಿ ಹೆಚ್ಚುವರಿ 273 ಸೀಟುಗಳನ್ನು ಮಹಿಳೆಯರಿಗೆ ನೀಡುವುದು ಬಿಜೆಪಿಯ ಗಂಡು ಧೋರಣೆಯ ಪ್ರಸ್ತಾವವಾಗಿತ್ತು. ಹೀಗಾಗಿ ಮೋದಿ ಸರಕಾರ ಮುಂದಿಟ್ಟಿದ್ದು ಸಾರದಲ್ಲಿ ಅಬಾಧಿತ ಪುರುಷ ಮೀಸಲಾತಿ ಮಸೂದೆಯೇ ವಿನಾ, ಮಹಿಳಾ ಮೀಸಲಾತಿ ಮಸೂದೆಯಲ್ಲ. ಮೋದಿಯ ಡಿಲಿಮಿಟೇಶನ್ (ಕ್ಷೇತ್ರ ಪುನರ್ ವಿಂಗಡಣೆ) ಕುತಂತ್ರಗಳು ಅಷ್ಟೇ ಮುಖ್ಯವಾಗಿ ಕಗ್ಗಂಟಾಗಿರುವ ಕ್ಷೇತ್ರ ಪುನರ್ ವಿಂಗಡಣೆ (ಡಿಲಿಮಿಟೇಶನ್)ಯನ್ನು ಮಹಿಳಾ ಮೀಸಲಾತಿಯ ಮುಸುಕಿನಲ್ಲಿ ಬಿಜೆಪಿಗೆ ಅನುಕೂಲವಾಗುವಂತೆ ಜಾರಿ ಮಾಡಿಬಿಡುವುದು 131ನೇ ಸಂವಿಧಾನ ತಿದ್ದುಪಡಿಯ ಹಿಂದಿನ ಮೋದಿ ಸರಕಾರದ ಮತ್ತೊಂದು ಹೀನ ಹುನ್ನಾರವಾಗಿತ್ತು. ನಮ್ಮ ಸಂವಿಧಾನವು ಒಬ್ಬ ವ್ಯಕ್ತಿಗೆ ಒಂದು ವೋಟು ಮತ್ತು ಒಂದು ವೋಟಿಗೆ ಒಂದು ಮೌಲ್ಯ ಎಂಬ ಪ್ರಜಾತಾಂತ್ರಿಕ ಮೌಲ್ಯದ ಆಧಾರದ ಮೇಲೆ ಭಾರತದ ಸಂಸದೀಯ ಪ್ರಜಾತಂತ್ರವನ್ನು ರೂಪಿಸಿದೆ. ಅದು ಕಾರ್ಯಗತವಾಗಬೇಕೆಂದರೆ ದೇಶಾದ್ಯಂತ ಎಲ್ಲಾ ಶಾಸನ ಸಭಾ ಮತ್ತು ಲೋಕಸಭಾ ಸ್ಥಾನಗಳಲ್ಲೂ ಹೆಚ್ಚು ಕಡಿಮೆ ಒಂದೇ ಪ್ರಮಾಣದ ಜನಸಂಖ್ಯೆಗೆ ತಲಾ ಒಂದು ಪ್ರತಿನಿಧಿ ಇರುವಂತೆ ಸಂವಿಧಾನದಲ್ಲಿ ನಿರ್ದೇಶನವಿದೆ. ಆ ಕಾರಣದಿಂದಲೇ ಹತ್ತು ವರ್ಷಕ್ಕೊಮ್ಮೆ ನಡೆಯುವ ಸೆನ್ಸಸ್ ನಂತರ ಅದನ್ನು ಆಧರಿಸಿ ಎಲ್ಲಾ ಚುನಾವಣಾ ಕ್ಷೇತ್ರಗಳಲ್ಲಿ ಸರಾಸರಿ ಒಂದೇ ಪ್ರಮಾಣದ ಜನಸಂಖ್ಯೆ ಇರುವಂತೆ ಒಳ ಕ್ಷೇತ್ರ ಪುನರ್ ವಿಂಗಡಣೆ ಹಾಗೂ ಜನಸಂಖ್ಯೆ ಏರಿಕೆಗೆ ಅನುಗುಣವಾಗಿ ಒಟ್ಟಾರೆ ಸ್ಥಾನಗಳ ಏರಿಕೆಯನ್ನು ಮಾಡುವಂತೆಯೂ ಸಂವಿಧಾನ ನಿರ್ದೇಶನ ನೀಡುತ್ತದೆ. ಆದರೆ ಐತಿಹಾಸಿಕ ಮತ್ತು ಸಾಮಾಜಿಕ ಕಾರಣಗಳಿಂದಾಗಿ ಹಿಂದಿ-ಹಿಂದುತ್ವ ರಾಜಕಾರಣದ ಪ್ರಭಾವ ಹೆಚ್ಚಿರುವ ಉತ್ತರ ಭಾರತದ ಜನಸಂಖ್ಯೆ ಉಳಿದ ಭಾರತಕ್ಕೆ ಹೋಲಿಸಿದಲ್ಲಿ ಹೆಚ್ಚುತ್ತಾ ಹೋಯಿತು. ಮತ್ತೊಂದು ಬಗೆಯ ಐತಿಹಾಸಿಕ ಮತ್ತು ಸಾಮಾಜಿಕ ಕಾರಣಗಳಿಂದಾಗಿ ಉತ್ತರದ ಹಿಂದಿ-ಹಿಂದುತ್ವ ರಾಜ್ಯಗಳಿಗೆ ಹೋಲಿಸಿದಲ್ಲಿ ದಕ್ಷಿಣ ಭಾರತದ ರಾಜ್ಯಗಳಲ್ಲಿ ಜನಸಂಖ್ಯೆ ನಿಯಂತ್ರಣವಾಗತೊಡಗಿತು. ಅದೇ ರೀತಿ ಕೆಲವು ಪೂರ್ವ ಹಾಗೂ ಈಶಾನ್ಯ ರಾಜ್ಯಗಳಲ್ಲೂ ಕೂಡ. ಈ ಕಾರಣದಿಂದಾಗಿ ಸಂಸತ್ತಿನಲ್ಲಿ ಹಿಂದಿ-ಹಿಂದುತ್ವ ಭಾರತದ ಪ್ರಾತಿನಿಧ್ಯ 1971ರ ವೇಳೆಗೆ ಶೇ. 40ಕ್ಕೇ ಏರಿದ್ದರೆ ದಕ್ಷಿಣ ಭಾರತದ ಪ್ರಾತಿನಿಧ್ಯ ಶೇ. 24ಕ್ಕೆ ಕುಸಿದಿತ್ತು. ಇದು ಹೀಗೆ ಮುಂದುವರಿದರೆ ಅಪಾರ ಪ್ರಾದೇಶಿಕ ಅಸಮತೋಲನಕ್ಕೆ ಕಾರಣವಾಗುವ ಅಪಾಯ ಇದ್ದಿದ್ದರಿಂದ 1976ರಲ್ಲಿ ಇಂದಿರಾ ಗಾಂಧಿ ಸರಕಾರ ಸಂವಿಧಾನ ತಿದ್ದುಪಡಿ ತಂದು 25 ವರ್ಷಗಳ ತನಕ ಡಿಲಿಮಿಟೇಶನ್-ಕ್ಷೇತ್ರ ಪ್ರಮಾಣ ಏರಿಕೆ ಮತ್ತು ಪುನರ್ ವಿಂಗಡಣೆಗೆ ನಿಷೇಧ ಹೇರಿದರು. ಈ ಅವಧಿಯಲ್ಲಿ ಉತ್ತರ ಭಾರತದ ಜನಸಂಖ್ಯಾ ಏರಿಕೆಯನ್ನೂ ನಿಯಂತ್ರಿಸುವ ಉದ್ದೇಶ ಅದರ ಹಿಂದಿತ್ತು. ಆದರೆ 2001ರ ವೇಳೆಗೂ ಉತ್ತರ-ದಕ್ಷಿಣ ಜನಸಂಖ್ಯಾ ಏರಿಕೆಯಲ್ಲಿ ಸಮತೋಲನ ಸಾಧ್ಯವಾಗದೇ ಇದ್ದಿದ್ದರಿಂದ ಅಂದಿನ ವಾಜಪೇಯಿ ಸರಕಾರ ಮತ್ತೊಂದು ಸಂವಿಧಾನ ತಿದ್ದುಪಡಿ ತಂದು ಚುನಾವಣಾ ಕ್ಷೇತ್ರಗಳ ಪ್ರಮಾಣ ಹೆಚ್ಚಿಸುವ ಡಿಲಿಮಿಟೇಶನ್ ಅನ್ನು 2026ರ ನಂತರ ನಡೆಯುವ ಸೆನ್ಸಸ್ ತನಕ ಮುಂದೂಡಿದರು. ಆದರೆ ರಾಜ್ಯದೊಳಗಿನ ಕ್ಷೇತ್ರಗಳಲ್ಲಿ ಸರಾಸರಿ ಏಕರೂಪಿ ಜನಸಂಖ್ಯೆ ಇರುವಂತೆ ಮಾಡಲು ಸ್ಥಾನಗಳ ಪ್ರಮಾಣವನ್ನು ಹೆಚ್ಚಿಸದೆ ರಾಜ್ಯಗಳೊಳಗಿನ ಕ್ಷೇತ್ರಗಳನ್ನು ಪುನರ್ ವಿಂಗಡಣೆ ಮಾಡಲು ಅನುಮತಿಸಿತು. ಆದರೆ ಈಗಲೂ ಆ ಸಮಸ್ಯೆ ಹಾಗೆಯೇ ಮುಂದುವರಿದಿದೆ. ಇದು ಏಕಕಾಲದಲ್ಲಿ ಹಲವು ಸಮಸ್ಯೆಗಳನ್ನು ಮುಂದಕ್ಕೆ ತಂದಿದೆ. ಉದಾಹರಣೆಗೆ 1971ರ ಜನಸಂಖ್ಯೆಗೆ ಅನುಗುಣವಾಗಿ ಲೋಕಸಭಾ ಸ್ಥಾನಗಳನ್ನು ಸ್ಥಿರಗೊಳಿಸಲಾಗಿದೆ. 1971ರಲ್ಲಿ ಉತ್ತರ ಪ್ರದೇಶದ ಜನಸಂಖ್ಯೆ ಅಂದಾಜು 9 ಕೋಟಿ. ಉತ್ತರ ಪ್ರದೇಶಕ್ಕೆ ನಿಗದಿ ಪಡಿಸಲಾದ ಲೋಕಸಭಾ ಸ್ಥಾನಗಳು 85. (2000ರಲ್ಲಿ ಉತ್ತರ ಪ್ರದೇಶ ವಿಭಜನೆಯಾಗಿ ಉತ್ತರಾಖಂಡ ಪ್ರತ್ಯೇಕ ರಾಜ್ಯವಾದ ಮೇಲೆ ಉತ್ತರ ಪ್ರದೇಶದ ಸ್ಥಾನ ಬಲವನ್ನು 1971ರ ಲೆಕ್ಕಾಚಾರದಲ್ಲೇ 80ಕ್ಕೆ ನಿಗದಿ ಪಡಿಸಲಾಯಿತು.) ಅಂದರೆ 1971ರಲ್ಲಿ ಉತ್ತರ ಪ್ರದೇಶದಲ್ಲಿ ತಲಾ 11 ಲಕ್ಷ ಜನರಿಗೆ ಒಬ್ಬ ಲೋಕಸಭಾ ಪ್ರತಿನಿಧಿಯಿದ್ದರು. ಈಗ ಉತ್ತರ ಪ್ರದೇಶದ ಜನಸಂಖ್ಯೆ ಅಂದಾಜು 25 ಕೋಟಿ. ಅಂದರೆ ಈಗ ಉತ್ತರ ಪ್ರದೇಶದಲ್ಲಿ ಅಂದಾಜು 31 ಲಕ್ಷ ಜನರಿಗೆ ಒಬ್ಬ ಪ್ರತಿನಿಧಿಯಾಗಿದೆ. ಇದಕ್ಕೆ ಪ್ರತಿಯಾಗಿ 1971ರಲ್ಲಿ ಕರ್ನಾಟಕದ ಲೋಕಸಭಾ ಸ್ಥಾನಗಳ ಸಂಖ್ಯೆ 27 ಮತ್ತು ಜನಸಂಖ್ಯೆ 3 ಕೋಟಿ. ಅಂದರೆ ಅಂದಾಜು 11 ಲಕ್ಷ ಜನರಿಗೆ ಒಬ್ಬ ಪ್ರತಿನಿಧಿ. 2025ರಲ್ಲಿ ಕರ್ನಾಟಕದ ಅಂದಾಜು ಜನಸಂಖ್ಯೆ 7 ಕೋಟಿ. ಅಂದರೆ ಪ್ರತೀ 25 ಲಕ್ಷ ಜನರಿಗೊಬ್ಬ ಪ್ರತಿನಿಧಿ. ಉತ್ತರ ಪ್ರದೇಶದಲ್ಲಿ 31 ಲಕ್ಷ ಜನರಿಗೊಬ್ಬರು ಪ್ರತಿನಿಧಿ! ಕರ್ನಾಟಕದಲ್ಲಿ 25 ಲಕ್ಷ ಜನರಿಗೊಬ್ಬ ಪ್ರತಿನಿಧಿ. ಹೀಗಾಗಿ ಒಂದು ವೋಟಿಗೆ ಒಂದು ಮೌಲ್ಯ ಎನ್ನುವ ಪ್ರಜಾತಾಂತ್ರಿಕ ತತ್ವದ ಅನುಸಾರ ಜನಸಂಖ್ಯಾ ಬಾಹುಳ್ಯ ಇರುವ ರಾಜ್ಯಗಳಿಗೆ ತಾರತಮ್ಯವಾಗುತ್ತದೆ. ಹಾಗೆಂದು ತಲಾ 15 ಲಕ್ಷ ಜನರಿಗೆ ಒಬ್ಬ ಪ್ರತಿನಿಧಿ ಎಂದು ಪ್ರಜಾತಾಂತ್ರಿಕ ಮೌಲ್ಯವನ್ನು ಮಾತ್ರ ಅನ್ವಯ ಮಾಡಿದರೆ ಉತ್ತರ ಪ್ರದೇಶಕ್ಕೆ 166 ಸ್ಥಾನಗಳು ದಕ್ಕುತ್ತವೆ. ಕರ್ನಾಟಕಕ್ಕೆ 46 ಸ್ಥಾನಗಳು ಅಥವಾ ಉಳಿದ ದಕ್ಷಿಣ ರಾಜ್ಯಗಳ ಒಟ್ಟಾರೆ ಪ್ರಮಾಣ ಹೆಚ್ಚಾದರೂ ಅನುಪಾತದಲ್ಲಿ ಉತ್ತರದ ಹಿಂದಿ-ಹಿಂದುತ್ವ ರಾಜ್ಯಗಳ ಪ್ರಾತಿನಿಧ್ಯ ಶೇ. 40ರಿಂದ 45ಕ್ಕೆ ಏರಿದರೆ, ದಕ್ಷಿಣದ ಪ್ರಾತಿನಿಧ್ಯ ಶೇ. 24ರಿಂದ 20ಕ್ಕೆ ಕುಸಿಯುತ್ತದೆ. ಇದು ಪ್ರಾದೇಶಿಕ ಪ್ರಾತಿನಿಧ್ಯ ಸಮತೋಲನಕ್ಕೆ ಮಾತ್ರವಲ್ಲದೆ ದೇಶದಲ್ಲಿ ಅಧಿಕಾರ ಹಿಡಿಯಲು ದಕ್ಷಿಣದ ಮತ್ತು ಪೂರ್ವ-ಈಶಾನ್ಯ ರಾಜ್ಯಗಳ ಅಗತ್ಯವೇ ಇಲ್ಲದಂತೆ ಮಾಡುತ್ತದೆ. ಹೀಗಾಗಿ ಈ ಸಂದರ್ಭದಲ್ಲಿ ಡಿಲಿಮಿಟೇಶನ್ ಮಾಡುವುದು ಹಿಂದಿ-ಹಿಂದುತ್ವ ರಾಜ್ಯಗಳಲ್ಲಿ ಪ್ರಬಲವಾಗಿರುವ ಬಿಜೆಪಿಗೆ ಮಾತ್ರ ಸಹಾಯ ಮಾಡುತ್ತದೆ. ಅಷ್ಟು ಮಾತ್ರವಲ್ಲ, ಕಾಶ್ಮೀರ ಮತ್ತು ಅಸ್ಸಾಂ ರಾಜ್ಯಗಳೊಳಗಿನ ಕ್ಷೇತ್ರಗಳ ಪುನರ್ ವಿಂಗಡಣೆಯನ್ನು ಬಿಜೆಪಿ ಸರಕಾರ ಮುಸ್ಲಿಮ್ ಬಾಹುಳ್ಯವಿರುವ ಕ್ಷೇತ್ರಗಳನ್ನು ದುರ್ಬಲಗೊಳಿಸುವ ರೀತಿಯಲ್ಲಿ ಕೋಮುವಾದಿ ಪುನರ್ ವಿಂಗಡಣೆ ಮಾಡಿದೆ. ಎಸ್ಐಆರ್ ಆದ ನಂತರವಂತೂ ಬಿಜೆಪಿಯೇತರ ರಾಜ್ಯಗಳಲ್ಲಿ ಬಿಜೆಪಿ ವಿರೋಧಿ ವೋಟುಗಳನ್ನೇ ಕಡಿತ ಮಾಡಿರುವುದರಿಂದ ಉತ್ತರ-ದಕ್ಷಿಣ ತಾರತಮ್ಯ ಇನ್ನೂಹೆಚ್ಚಾಗುತ್ತಿದೆ. ಎಲ್ಲಕ್ಕಿಂತ ಹೆಚ್ಚಾಗಿ ಪಕ್ಷಾಂತರ ನಿಷೇಧ ಕಾನೂನು ಜಾರಿಗೆ ಬಂದು ಎಲ್ಲಾ ಪ್ರತಿನಿಧಿಗಳು ಆಯ್ಕೆ ಮಾಡಿದ ಜನರಿಗೆ ಬಾಧ್ಯರಾಗದೆ ಆಯ್ಕೆಯಾದ ಪಕ್ಷಕ್ಕೆ ಗುಲಾಮರಾಗಿರುವುದರಿಂದ, ಲೋಕಸಭೆಯಲ್ಲಿ ಚರ್ಚೆಗಳೇ ನಡೆಯದೆ ಮಸೂದೆಗಳು ಪಾಸಾಗುತ್ತಿರುವ, ರಾಜ್ಯಗಳ ಅಧಿಕಾರವೆಲ್ಲವನ್ನೂ ಕಿತ್ತುಕೊಂಡು ಕೇಂದ್ರವು ಸರ್ವಾಧಿಕಾರಿ ಫ್ಯಾಶಿಸ್ಟ್ ಆಗುತ್ತಿರುವ ಸಂದರ್ಭದಲ್ಲಿ ಲೋಕಸಭೆಯ ಸ್ಥಾನಗಳ ಸಂಖ್ಯೆ ಹೆಚ್ಚಳದ ಡಿಲಿಮಿಟೇಶನ್ ಸಮಾಲೋಚನೆ ಮತ್ತು ಸರ್ವ ಸಮ್ಮತಿಯ ಅಗತ್ಯವನ್ನು ಕೇಳುತ್ತದೆ. ಆದರೆ ಮೋದಿ ಸರಕಾರ ಅತ್ಯಂತ ಕುತಂತ್ರದಿಂದ ಮಹಿಳಾ ಮೀಸಲಾತಿಯ ಮುಸುಕಿನಲ್ಲಿ ಡಿಲಿಮಿಟೇಶನ್ ಮಾಡುವ ಕುತಂತ್ರವನ್ನು ಮಾಡಲು ಹೊರಟಿತ್ತು. ಹಾಗಾದರೆ 131ನೇ ಸಂವಿಧಾನ ತಿದ್ದುಪಡಿ ಮಸೂದೆಗೆ ಬೇಕಿರುವ 2/3ರಷ್ಟು ಬಹುಮತ ಇಲ್ಲವೆಂದು ಸ್ಪಷ್ಟವಾಗಿ ಗೊತ್ತಿದ್ದರೂ ಆತುರಾತುರವಾಗಿ ವಿಶೇಷ ಅಧಿವೇಶನದ ಮೂಲಕ ಅದನ್ನು ಮಂಡಿಸುವ ದುಸ್ಸಾಹಸವನ್ನು ಮಾಡಿದ್ದಾದರೂ ಏಕೆ? ಮಹಿಳೆಯರನ್ನು ಮೂರ್ಖರೆಂದು ಭಾವಿಸುವ ಕುತಂತ್ರಿ ಮಸೂದೆಗಳು ಕಾರಣ ಸ್ಪಷ್ಟ: ಬಿಜೆಪಿಗೆ ಮಹಿಳಾ ಮೀಸಲಾತಿಯ ಬಗ್ಗೆ ಯಾವುದೇ ಬದ್ಧತೆ ಇಲ್ಲ. 2023ರಲ್ಲಿ ಮಸೂದೆಯನ್ನು ಮಂಡಿಸಿದಾಗಲೂ ಅದು 2024ರ ಚುನಾವಣೆಯಲ್ಲಿ ಮಹಿಳಾ ಮತಗಳನ್ನು ಮೋಸದಿಂದ ಸೆಳೆಯುವ ಉದ್ದೇಶವನ್ನು ಹೊಂದಿತ್ತೇ ವಿನಾ ಮಹಿಳಾ ಮೀಸಲಾತಿ ಮಸೂದೆಯನ್ನು ಜಾರಿ ಮಾಡುವ ಉದ್ದೇಶವಿರಲಿಲ್ಲ. ಏಕೆಂದರೆ 2023ರ ಮಸೂದೆಯಲ್ಲೇ 2026ರ ನಂತರ ನಡೆಯುವ ಸೆನ್ಸಸ್ ಆಧರಿಸಿ ನಡೆಯುವ ಡಿಲಿಮಿಟೇಷನ್ (ಕ್ಷೇತ್ರ ಪುನರ್ ವಿಂಗಡಣೆ) ಆದ ಮೇಲೆ ಮಹಿಳಾ ಮೀಸಲಾತಿ ಜಾರಿಯಾಗಲಿದೆ ಎಂಬ ಷರತ್ತುಗಳಿದ್ದವು. ಅಂದರೆ 2023ರಲ್ಲೇ ಈ ಮಸೂದೆ ಪಾಸಾದರೂ ಅದು ಜಾರಿಗೆ ಬರುತ್ತಿದ್ದದ್ದು 2034ರ ಚುನಾವಣೆಯ ಹೊತ್ತಿಗೆ. ಹಾಗೆ ನೋಡಿದರೆ 2023ರ ಮಸೂದೆಯು ಸಂಸತ್ನ ಎರಡೂ ಮನೆಗಳಲ್ಲಿ ಪಾಸಾಗಿ, ರಾಷ್ಟ್ರಪತಿಗಳ ಅನುಮೋದನೆ ದೊರೆತು ಗೆಝೆಟ್ ಕೂಡಾ ಆಗಿತ್ತು. ಆದರೆ ಅದರ ಜಾರಿಯ ದಿನಾಂಕ ಘೋಷಣೆಯಾದದ್ದು ಮಾತ್ರ ಮೂರು ವರ್ಷಗಳ ನಂತರ! ಈ ಹೊಸ ಮಸೂದೆಯ ಚರ್ಚೆ ವಿಫಲವಾಗುತ್ತದೆ ಎಂಬ ಸೂಚನೆ ಸಿಕ್ಕ ನಂತರ ಎಪ್ರಿಲ್ 16, 2026ರಂದು! ಆದ್ದರಿಂದ ಕಾರಣ ಸ್ಪಷ್ಟ. 2034ರ ತನಕ ಜಾರಿಯಾಗದ ಮಹಿಳಾ ಮೀಸಲಾತಿ ಮಸೂದೆಯನ್ನು ಆತುರಾತುರವಾಗಿ 2023ರಲ್ಲೇ ಮಂಡಿಸಿದ್ದು 2024ರ ಚುನಾವಣೆಯಲ್ಲಿ ಮಹಿಳಾ ಪರ ಎಂಬ ಸೋಗು ಹೊಡೆದು ಮೋಸದಿಂದ ಮಹಿಳಾ ಮತ ಬಾಚಲು. ಹಾಗೆಯೇ ಈಗ 2026ರ ಎಪ್ರಿಲ್ನಲ್ಲಿ ಐದು ರಾಜ್ಯಗಳ ಚುನಾವಣೆ ನಡೆಯುತ್ತಿರುವಾಗ, ಸಂವಿಧಾನ ತಿದ್ದುಪಡಿ ಜಾರಿಗೆ ಬೇಕಾದ ಸ್ಥಾನಬಲ ಇಲ್ಲ ಎಂದು ಗೊತ್ತಿದ್ದರೂ ಸೋಲುವ ಮಸೂದೆಯನ್ನು ಮಂಡಿಸಿದ್ದು ಮಹಿಳಾ ಮೀಸಲಾತಿಯ ಬಗೆಗಿನ ಬದ್ಧತೆಗಾಗಿಯಲ್ಲ. ಹಾಲಿ ಐದು ರಾಜ್ಯಗಳಲ್ಲಿ ನಡೆಯುತ್ತಿರುವ ಚುನಾವಣೆಗಳಲ್ಲಿ ಬಿಜೆಪಿ ಮಾತ್ರ ಮಹಿಳಾ ಪರ, ಉಳಿದ ಎಲ್ಲಾ ವಿರೋಧ ಪಕ್ಷಗಳು ಮಹಿಳಾ ವಿರೋಧಿ ಎಂಬ ಅಬ್ಬರದ ಸುಳ್ಳು ಪ್ರಚಾರ ನಡೆಸಲು. ಆ ಮೂಲಕ ವಿರೋಧ ಪಕ್ಷಗಳು ಬಲವಾಗಿರುವ ಪ. ಬಂಗಾಳ, ತಮಿಳುನಾಡು ರಾಜ್ಯಗಳಲ್ಲಿ ತನ್ನ ಬಲವನ್ನು ಹೆಚ್ಚಿಸಿಕೊಳ್ಳಲು... ಹೀಗಾಗಿ ಸಾರದಲ್ಲಿ ಪುರುಷ ಮೀಸಲಾತಿ ಮಸೂದೆಯನ್ನು ಜಾರಿಗೆ ತರುವ ಮೂಲಕ ಹಾಗೂ ಮಹಿಳಾ ಮೀಸಲಾತಿಯ ಪರಿಕಲ್ಪನೆಗೆ ಮತ್ತು ಅದನ್ನು ಜಾರಿ ಮಾಡುವ ಪ್ರಕ್ರಿಯೆಗೆ ದ್ರೋಹ ಬಗೆಯುವ ಮೂಲಕ ಬಿಜೆಪಿ ಮತ್ತೊಮ್ಮೆ ತಾನು ಮಹಿಳಾ ವಿರೋಧಿ ಎಂದು ಸಾಬೀತು ಪಡಿಸಿಕೊಂಡಿದೆ. ಮಹಿಳಾ ಮೀಸಲಾತಿಗೆ ಬದ್ಧರಿದ್ದಲ್ಲಿ ಕಾನೂನೇಕೆ ಬೇಕು? ಆದರೆ ವಿರೋಧ ಪಕ್ಷಗಳಾದರೂ ಮಹಿಳಾ ಮೀಸಲಾತಿಗೆ ಬದ್ಧವಾಗಿದೆಯೇ? ಅವುಗಳ ಈ ಹಿಂದಿನ ಇತಿಹಾಸ ನೋಡಿದರೆ ಅವುಗಳ ಪಕ್ಷ ರಚನೆಯಲ್ಲಾಗಲೀ, ಸೀಟುಗಳ ವಿತರಣೆಯಲ್ಲಾಗಲೀ, ಅಧಿಕಾರ ಹಂಚಿಕೆಯಲ್ಲಾಗಲೀ ಆ ಬದ್ಧತೆಯೇನೂ ಕಂಡು ಬರುವುದಿಲ್ಲ. ಏಕೆಂದರೆ ಕಾಯ್ದೆ ಇರಲಿ ಬಿಡಲಿ, ಪಕ್ಷಗಳು ಶೇ. 33ರಷ್ಟು ಸೀಟುಗಳನ್ನು ಮಹಿಳೆಯರಿಗೆ ಕೊಡುವುದಕ್ಕೆ 1951ರಿಂದಲೂ ಯಾವ ಅಡ್ಡಿಯಿರಲಿಲ್ಲ. ಆದರೆ ರಾಜ್ಯ ಮಟ್ಟದಲ್ಲಿ ಟಿಎಂಸಿ ಪಕ್ಷವೊಂದನ್ನು ಹೊರತು ಪಡಿಸಿದರೆ ನಾರಿ ಶಕ್ತಿ, ಸಬಲೀಕರಣ ಎಂದೆಲ್ಲಾ ಅಬ್ಬರದ ನಾರಾಬಾಜಿ ಮಾಡುವ ಬಿಜೆಪಿಯಾಗಲೀ, ಇತರ ವಿರೋಧ ಪಕ್ಷಗಳಾಗಲೀ ಮಹಿಳೆಯರಿಗೆ ಶೇ. 33ರಷ್ಟು ಸೀಟುಗಳಿರಲಿ, ಶೇ. 15ರಷ್ಟು ಸೀಟುಗಳನ್ನೂ ಕೊಟ್ಟಿಲ್ಲ. ಕೆಲವು ಉದಾಹರಣೆಗಳನ್ನು ಗಮನಿಸೋಣ: -2024ರ ಲೋಕಸಭಾ ಚುನಾವಣೆಗಳಲ್ಲಿ ವಿವಿಧ ಪಕ್ಷಗಳು ಮಹಿಳೆಯರಿಗೆ ಕೊಟ್ಟ ಟಿಕೆಟ್ಗಳು ಹೀಗಿವೆ: ಬಿಜೆಪಿ ಶೇ. 15, ಕಾಂಗ್ರೆಸ್ ಶೇ. 12.5, ಸಿಪಿಐ (ಎಂ) ಶೇ. 13, ಬಿಎಸ್ಪಿ ಶೇ. 8, ಟಿಎಂಸಿ ಶೇ. 25. -2019ರ ಲೋಕಸಭಾ ಚುನಾವಣೆಗಳಲ್ಲಿ ವಿವಿಧ ಪಕ್ಷಗಳು ಮಹಿಳೆಯರಿಗೆ ಕೊಟ್ಟ ಟಿಕೆಟ್ಗಳು: ಬಿಜೆಪಿ ಶೇ. 12.6, ಕಾಂಗ್ರೆಸ್ ಶೇ. 12.8, ಸಿಪಿಐ (ಎಂ) ಶೇ. 12, ಬಿಎಸ್ಪಿ ಶೇ. 12.6, ಟಿಎಂಸಿ ಶೇ. 40.5. ಅದರ ಹಿಂದಿನ ಚುನಾವಣಾ ಅಂಕಿಅಂಶಗಳು ಇದಕ್ಕಿಂತ ಹೊರತೇನಲ್ಲ. ನಾರಿ ಪರ ಎಂದು ಬೊಬ್ಬಿರಿಯುವ ಬಿಜೆಪಿ ಮಹಿಳೆಯರಿಗೆ ಶೇ. 33 ಇರಲಿ ಅದರ ಅರ್ಧದಷ್ಟು ಸೀಟುಗಳನ್ನೂ ಕೊಟ್ಟಿಲ್ಲ. ವಿರೋಧ ಪಕ್ಷಗಳಲ್ಲಿ ಟಿಎಂಸಿಯನ್ನು ಬಿಟ್ಟರೆ ಮಿಕ್ಕೆಲ್ಲ ವಿರೋಧ ಪಕ್ಷಗಳು ಮಹಿಳಾ ನಿರ್ಲಕ್ಷ್ಯದಲ್ಲಿ ಬಿಜೆಪಿಗೆ ಪೈಪೋಟಿಯನ್ನೇ ಕೊಡುತ್ತಿವೆ. ಇದರ ಜೊತೆಗೆ ಟಿಕೆಟ್ ಕೊಟ್ಟ ಮಹಿಳೆಯರಲ್ಲಿ ಗಂಡನ, ತಂದೆಯ ಬದಲಿಗೆ ಅಥವಾ ಮತ್ತಿತರ ಪುರುಷ ಕಾರಣಗಳಿಗೆ ಟಿಕೆಟ್ ಕೊಟ್ಟಿರುವುದೇ ಹೆಚ್ಚು ಹಾಗೂ ಅದರಲ್ಲೂ ಹಿಂದೂ ಮೇಲ್ಜಾತಿ ಮತ್ತು ಮೇಲ್ವರ್ಗಗಳ ಮಹಿಳೆಯರೇ ಎಲ್ಲಾ ಪಕ್ಷಗಳಲ್ಲೂ ಹೆಚ್ಚು. ಸಾಮಾಜಿಕ ನ್ಯಾಯ ಎಂಬುದು ಸಂವಿಧಾನ ಒಪ್ಪಿಕೊಳ್ಳುವ ಎಲ್ಲಾ ಪಕ್ಷಗಳ ಹೊಣೆಗಾರಿಕೆ. ಅದನ್ನು ಪಾಲಿಸಲು ಕಾನೂನಾಗುವ ತನಕ ಕಾಯುವ ಅಗತ್ಯವೇನಿದೆ? ಸಾಮಾಜಿಕ ನ್ಯಾಯವನ್ನು ಪಕ್ಷಗಳು ಪಾಲಿಸಬೇಕೆಂದರೆ ಕಾನೂನಿನ ಹಂಗಿಲ್ಲದೆ ಮಹಿಳೆಯರಿಗೆ ಮತ್ತು ಶೋಷಿತ ಸಮುದಾಯಗಳಿಗೆ ಪ್ರಾತಿನಿಧ್ಯ ನೀಡಬೇಕು. ಮತ್ತು ಪಕ್ಷಗಳು ತಮ್ಮೆಲ್ಲಾ ಶಕ್ತಿಗಳನ್ನು ಬಳಸಿ ಅವರನ್ನು ಗೆಲ್ಲಿಸಿಕೊಳ್ಳಬೇಕು. ಅದನ್ನು ಬಿಟ್ಟು ಗೆಲ್ಲುವ ಕುದುರೆಗಳನ್ನು ಅದು ಕೆಲವೇ ಲಾಯಗಳ ಪುರುಷ ಕುದುರೆಗಳನ್ನೇ ಗೆಲ್ಲಿಸುವುದು ಸಕಲ ಪಕ್ಷಗಳೂ ಸಾಮಾಜಿಕ ನ್ಯಾಯಕ್ಕೆ ಮಾಡುತ್ತಿರುವ ಅನ್ಯಾಯ. ಫ್ಯಾಶಿಸ್ಟ್ ಬಿಜೆಪಿ ಸಾಮಾಜಿಕ ನ್ಯಾಯದ ಪರಿಕಲ್ಪನೆಗೆ ವಿರೋಧ. ಆದರೆ ವಿರೋಧ ಪಕ್ಷಗಳು ತಾವು ಫ್ಯಾಶಿಸ್ಟ್ ಬಿಜೆಪಿಗಿಂತ ಭಿನ್ನ ಎನ್ನುವುದಾದರೆ: -2023ರ ಮಹಿಳಾ ಮೀಸಲಾತಿ ಕಾಯ್ದೆಗೆ ವಿಧಿಸಿರುವ 2026ರ ಸೆನ್ಸಸ್ ಮತ್ತು ಡಿಲಿಮಿಟೇಷನ್ ಸಂಕೋಲೆಗಳನ್ನು ತೆಗೆಯಬೇಕೆಂದು ಆಗ್ರಹಿಸಬೇಕು. -ಈಗಿರುವ 543 ಸೀಟುಗಳಲ್ಲೇ ಶೇ. 33ರಷ್ಟು ಎಂದರೆ 180 ಸೀಟುಗಳನ್ನು ಮೀಸಲಿಡುವ ಮತ್ತು ಅದರೊಳಗೆ ವಂಚಿತ ಸಮುದಾಯಗಳ ಒಳ ಪ್ರಾತಿನಿಧ್ಯವನ್ನು ಖಾತರಿ ಮಾಡುವ ತಿದ್ದುಪಡಿಗಳನ್ನು ಮಾಡುವ ಮಸೂದೆಯನ್ನು ಮುಂದಿನ ಅಧಿವೇಶನದಲ್ಲೇ ಮಂಡಿಸಬೇಕೆಂದು ಸಂಸತ್ನಲ್ಲಿ ಆಗ್ರಹಿಸಬೇಕು. -ಕಾನೂನಿನ ಹಂಗಿಲ್ಲದೆ ತಮ್ಮ ತಮ್ಮ ಪಕ್ಷಗಳಲ್ಲಿ ಶೇ. 33 ಟಿಕೇಟ್ಗಳನ್ನು ಮಹಿಳೆಯರಿಗೆ (ಒಳ ಪ್ರಾತಿನಿಧ್ಯದೊಂದಿಗೆ ) ಕೊಟ್ಟು ಅವರನ್ನು ಗೆಲ್ಲಿಸಿ ಕೊಂಡು ಬರಲು ಪಕ್ಷದ ಎಲ್ಲಾ ಸಂಪನ್ಮೂಲಗಳನ್ನು ಬಳಸಲು ಸಿದ್ಧರಾಗಬೇಕು. ಇಲ್ಲದಿದ್ದರೆ ಮಹಿಳಾ ಭಾರತವನ್ನು ಪುರುಷ ಭಾರತ ಸೋಲಿಸುತ್ತಲೇ ಇರುವ ಪಕ್ಷಾತೀತ, ಧರ್ಮಾತೀತ, ಮನುವಾದಿ ಪರಂಪರೆ ಮುಂದುವರಿಯುತ್ತಲೇ ಹೋಗುತ್ತದೆ. ಅಂದಹಾಗೆ, ಸಮಾಜದ ಶೇ. 50ರಷ್ಟಿರುವ ಮಹಿಳೆಯರಿಗೆ ಕೇವಲ ಶೇ. 33ರಷ್ಟು ಮೀಸಲಾತಿ ಏಕೆ ಎಂಬ ಪ್ರಶ್ನೆಯನ್ನೇ ಯಾರೂ ಏಕೆ ಕೇಳುತ್ತಿಲ್ಲ??
ಬಿಜೆಪಿ ಅಪಪ್ರಚಾರಕ್ಕೆ ಅಭಿವೃದ್ದಿ ಕಾರ್ಯಗಳ ಮೂಲಕವೇ ಉತ್ತರ: ಸಿ.ಎಂ ಸಿದ್ದರಾಮಯ್ಯ ತಿರುಗೇಟು
ಪಿರಿಯಾಪಟ್ಟಣ: ಬಿಜೆಪಿಯ ಅಪಪ್ರಚಾರಕ್ಕೆ ಅಭಿವೃದ್ದಿ ಕಾರ್ಯಗಳ ಮೂಲಕವೇ ಉತ್ತರ ನೀಡುತ್ತಿದ್ದೇವೆ. ನಮ್ಮ ಅಭಿವೃದ್ಧಿ ಕಾರ್ಯಗಳು ಜನರಿಗೆ ಮುಟ್ಟಿವೆ. ಜನ ನಮ್ಮ ಪರವಾಗಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಿಜೆಪಿಗೆ ಖಡಕ್ ಉತ್ತರ ನೀಡಿದರು.ಅವರು ಮೈಸೂರು ಜಿಲ್ಲಾಡಳಿತ ಮತ್ತು ಜಿಲ್ಲಾಪಂಚಾಯತ್ ವತಿಯಿಂದ ಪಿರಿಯಾಪಟ್ಟಣದ ಪಾರೆಕೊಪ್ಪಲಿನಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಶಕ್ತಿ ದೇವತೆ ಶ್ರೀ ಮಸಣಿಕಮ್ಮ ದೇವಸ್ಥಾನ ನಿರ್ಮಾಣ, ಒಕ್ಕಲಿಗ ಸಂಘದ ಸಹಯೋಗದೊಂದಿಗೆ ನಿರ್ಮಿಸುತ್ತಿರುವ ಕುವೆಂಪು ಭವನ ಹಾಗೂ ಬೆಟ್ಟದ ಪುರ ಗ್ರಾಮದ ಶ್ರೀ ಸಿಡಿಲು ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನ ಬೆಟ್ಟಕ್ಕೆ […] The post ಬಿಜೆಪಿ ಅಪಪ್ರಚಾರಕ್ಕೆ ಅಭಿವೃದ್ದಿ ಕಾರ್ಯಗಳ ಮೂಲಕವೇ ಉತ್ತರ: ಸಿ.ಎಂ ಸಿದ್ದರಾಮಯ್ಯ ತಿರುಗೇಟು first appeared on Vistara News .
ಸಂಪಾದಕೀಯ | ಪಹಲ್ಗಾಮ್ ಭದ್ರತಾ ವೈಫಲ್ಯಕ್ಕೆ ಒಂದು ವರ್ಷ
ಸಂಪಾದಕೀಯ | ಪಹಲ್ಗಾಮ್ ಭದ್ರತಾ ವೈಫಲ್ಯಕ್ಕೆ ಒಂದು ವರ್ಷ
ವಿಶ್ವ ಭೂ ದಿನ: ಬೊಗಸೆ ಉಸಿರು ಸಾಲ ಕೊಡುವಿರಾ? ಶತಮಾನದಾಚೆಯ ನಿಮ್ಮ ಮರಿಮೊಮ್ಮಗಳ ಪತ್ರ! 6 ಪ್ರಮುಖ ಅಂಶಗಳು ಉಲ್ಲೇಖ!
ಇವತ್ತಿಗೆ ಸರಿಯಾಗಿ 100 ವರುಷಗಳ ನಂತರ, 2126 ನೇ ಇಸವಿ. ಸೂರ್ಯ ಇಂದು ಬೆಳಗ್ಗಿನಿಂದಲೇ ಬೆಂಕಿ ಉಗುಳಲು ಶುರುಮಾಡಿದ್ದಾನೆ. 15 ವರುಷದ ಪುಟಾಣಿಯೊಬ್ಬಳು, ತನ್ನ ಇನ್ಫ್ರಾರೆಡ್ ಕನ್ನಡಕವನ್ನು ಸರಿಪಡಿಸಿಕೊಳ್ಳುತ್ತಾ, ತನ್ನ ತಾತ, ಮುತ್ತಾತಂದಿರ ಕಾಲದ ಆಲ್ಬಮ್ಮುಗಳನ್ನು ಸ್ಮಾರ್ಟ್ ಪ್ರಾಜೆಕ್ಟರ್ನಲ್ಲಿ ನೋಡುತ್ತಿದ್ದಳು. ತಾನಿರುವ ಭೂಮಿ ಕೆಂಡವಾಗಿರುವ ಹೊತ್ತಿನಲ್ಲಿ ಆಕೆ ತನ್ನ ಪೂರ್ವಜರನ್ನು ನೆನೆದು, ಈ ಪತ್ರ ಬರೆಯುತ್ತಿದ್ದಾಳೆ. ಆ ಪೂರ್ವಜರೆಂದರೆ, ಈಗಿನ ನಾವು -ನೀವಷ್ಟೇ ..
ಇರಾನ್ ಮೇಲಿನ ದಾಳಿ ಸದ್ಯಕ್ಕೆ ಸ್ಥಗಿತ: ಪಾಕ್ ಮಧ್ಯಸ್ಥಿಕೆಗೆ ಟ್ರಂಪ್ ಸಮ್ಮತಿ
ಪಶ್ಚಿಮ ಏಷ್ಯಾದಲ್ಲಿ ಯುದ್ಧದ ಭೀತಿ ಸ್ಫೋಟಕ ಹಂತ ತಲುಪಿರುವಾಗಲೇ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್ ವಿರುದ್ಧದ ದಾಳಿಯನ್ನು ಸದ್ಯಕ್ಕೆ ತಡೆಹಿಡಿಯುವ ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ. ಈ ಹಿಂದೆ ಘೋಷಿಸಲಾಗಿದ್ದ ಕದನ ವಿರಾಮದ ಅವಧಿ ಬುಧವಾರಕ್ಕೆ ಅಂತ್ಯಗೊಂಡಿದ್ದರೂ, ರಾಜತಾಂತ್ರಿಕತೆಗೆ ಮತ್ತೊಂದು ಅವಕಾಶ ನೀಡುವ ಸಲುವಾಗಿ ಟ್ರಂಪ್ ಈ ಕ್ರಮಕ್ಕೆ ಮುಂದಾಗಿದ್ದಾರೆ. ಇರಾನ್ ಕಡೆಯಿಂದ ಅಧಿಕೃತ ಮತ್ತು ಏಕೀಕೃತ ಸಂಧಾನದ ಪ್ರಸ್ತಾಪ ಬರುವವರೆಗೆ ಅಮೆರಿಕದ ಸೇನೆ ಯಾವುದೇ ಆಕ್ರಮಣ ಮಾಡುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಆದರೆ, ಅಮೆರಿಕದ ಪಡೆಗಳು […] The post ಇರಾನ್ ಮೇಲಿನ ದಾಳಿ ಸದ್ಯಕ್ಕೆ ಸ್ಥಗಿತ: ಪಾಕ್ ಮಧ್ಯಸ್ಥಿಕೆಗೆ ಟ್ರಂಪ್ ಸಮ್ಮತಿ first appeared on Vistara News .
ತಮಿಳುನಾಡು ಚುನಾವಣೆಗೆ ಕ್ಷಣಗಣನೆ: ನಾಳೆ 234 ವಿಧಾನಸಭಾ ಕ್ಷೇತ್ರಗಳಿಗೆ ಮತದಾನ, ಯುವ ಮತದಾರರ ಒಲವು ಯಾರತ್ತ?
ಇಡೀ ದೇಶವೇ ಕುತೂಹಲದಿಂದ ಎದುರು ನೋಡುತ್ತಿರುವ ತಮಿಳುನಾಡು ವಿಧಾನಸಭೆಯ ಎಲ್ಲ 234 ಕ್ಷೇತ್ರಗಳಿಗೆ ನಾಳೆ (ಏಪ್ರಿಲ್ 23) ಒಂದೇ ಹಂತದಲ್ಲಿ ಮತದಾನ ನಡೆಯಲಿದೆ. ದಶಕಗಳಿಂದ ಕಂಡುಬರುತ್ತಿದ್ದ ಸಾಂಪ್ರದಾಯಿಕ ರಾಜಕಾರಣಕ್ಕೆ ಈ ಬಾರಿ ನಟ ವಿಜಯ್ ಅವರ ಪ್ರವೇಶ ಹೊಸ ಆಯಾಮ ನೀಡಿದ್ದು, ಬಹಿರಂಗ ಪ್ರಚಾರಕ್ಕೆ ತೆರೆಬಿದ್ದ ಬೆನ್ನಲ್ಲೇ ಈಗ ಎಲ್ಲರ ಗಮನ ಮತಗಟ್ಟೆಗಳತ್ತ ನೆಟ್ಟಿದೆ. ಆಡಳಿತಾರೂಢ ಡಿಎಂಕೆ
SSLC 2026 ಫಲಿತಾಂಶ ಬಿಡುಗಡೆ ಅಪ್ಡೇಟ್; ಅಂಕಪಟ್ಟಿ ಡೌನ್ಲೋಡ್ ಮಾಡೋದು ಹೇಗೆ, ಇಲ್ಲಿದೆ ವಿವರ
ಬೆಂಗಳೂರು; ರಾಜ್ಯದಲ್ಲಿ ಎಸ್ಎಸ್ಎಲ್ಸಿ (SSLC Results 2026) ಪರೀಕ್ಷೆಯ ಫಲಿತಾಂಶದ ಮೇಲೆ ಅಪಾರ ನಿರೀಕ್ಷೆಗಳು ಸೃಷ್ಟಿಯಾಗಿವೆ. ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿಯು (KSEAB) ಶೀಘ್ರದಲ್ಲೇ 10ನೇ ತರಗತಿ ಬೋರ್ಡ್ ಪರೀಕ್ಷೆ 2026 ಫಲಿತಾಂಶ ಬಿಡುಗಡೆ ಮಾಡಲಿದೆ. ಈ ಮೊದಲು ಏಪ್ರಿಲ್ 24ರಂದು ಫಲಿತಾಂಶ ಪ್ರಕಟವಾಗಲಿದೆ ಎನ್ನಲಾಗಿತ್ತು. ಈ ವಾರ ಫಲಿತಾಂಶ ಬಿಡುಗಡೆ ದಿನಾಂಕ ಸಹ
ಘಟನೆ ಬಗ್ಗೆ ನ್ಯಾಯಯುತ, ನಿಷ್ಪಕ್ಷಪಾತ ತನಿಖೆಗೆ ಒತ್ತಾಯ
ಪೆಟ್ಟಿಗೆ ದೈವಗಳನ್ನು ಪೂಜಿಸುವ ಡುಂಗ್ರಿ ಗರಾಸಿಯ
ಅತ್ಯಂತ ಬಡತನ, ಅನಕ್ಷರತೆ, ಅಪೌಷ್ಟಿಕತೆಯಿಂದ ನರಳುತ್ತಿರುವ ಈ ಸಮುದಾಯ ಹೊಟ್ಟೆಪಾಡಿಗಾಗಿ ಚಿಂದಿ ಆಯುವುದು, ಪ್ಲಾಸ್ಟಿಕ್ ಆಯುವುದನ್ನೇ ಕಸುಬನ್ನಾಗಿ ಮಾಡಿಕೊಂಡಿದೆ. ಕೆಲವು ಕಡೆ ಹಾದಿಬೀದಿ ಓಡಾಡಿ ಸುಗಂಧ ದ್ರವ್ಯ ಮಾರಾಟ, ಒಳನಾಡು ಮೀನುಗಾರಿಕೆ, ಪ್ಲಾಸ್ಟಿಕ್ ಸಾಮಾನು ಮಾರಾಟ ಮಾಡಿ ಹೊಟ್ಟೆ ತುಂಬಿಸಿಕೊಳ್ಳುತ್ತಾರೆ. ಕೆಂಪು ವಸ್ತ್ರದಲ್ಲಿ ಸುತ್ತಿದ ಪೆಟ್ಟಿಗೆ ದೇವರುಗಳನ್ನು ಅಲ್ಲಲ್ಲಿ ನೋಡಿರುತ್ತೀರಿ. ಇವರಿಗೆ ಎಷ್ಟೇ ಕಿತ್ತುತಿನ್ನುವ ಬಡತನವಿದ್ದರೂ ಬೆಳ್ಳಿಯ ಮೂರ್ತಿಗಳನ್ನು ಜೋಪಾನವಾಗಿ ಪೆಟ್ಟಿಗೆಯಲ್ಲಿಟ್ಟು, ಅದಕ್ಕೆ ಕೆಂಪು ವಸ್ತ್ರ ಸುತ್ತಿ, ಅಲೆಮಾರಿಗಳಾದ ತಾವು ಹೋದಲ್ಲೆಲ್ಲ ಕೊಂಡು ಹೋಗುತ್ತಾರೆ. ಇವರ ಕೆಂಪು ಬಟ್ಟೆ ಸುತ್ತಿದ ಪೆಟ್ಟಿಗೆ ದೇವರುಗಳನ್ನು, ಬಣ್ಣಬಣ್ಣದ ಧ್ವಜಗಳನ್ನು ಕಂಡಾಕ್ಷಣ ಇವರು ಡುಂಗ್ರಿ ಗರಾಸಿಯ ಸಮುದಾಯಕ್ಕೆ ಸೇರಿದವರು ಎಂದು ಗುರುತು ಹಚ್ಚಬಹುದು. ಅಲೆಮಾರಿಗಳಲ್ಲೇ ಕೊಂಚ ವಿಶಿಷ್ಟ ಸಮುದಾಯ ‘ಡುಂಗ್ರಿ ಗರಾಸಿಯ’. ಹೆಸರೇ ವಿಚಿತ್ರ ಎನಿಸುತ್ತದೆ. ‘ಡುಂಗರ್’ ಎಂದರೆ ಗುಜರಾತಿ ಭಾಷೆಯಲ್ಲಿ ಬೆಟ್ಟವಂತೆ, ‘ಘರ್’ ಎಂದರೆ ಮನೆ, ‘ಸಿಯಾ’ ಎಂದರೆ ಮಕ್ಕಳು. ಒಟ್ಟಾರೆ ‘ಡುಂಗ್ರಿ ಗರಾಸಿಯ’ ಎಂದರೆ ಬೆಟ್ಟದ ತಪ್ಪಲಲ್ಲಿ ವಾಸಿಸುವ ಮಕ್ಕಳು ಎಂದು ಈ ಸಮುದಾಯದಲ್ಲಿ ಒಂದಷ್ಟು ಅರಿವು ಇರುವ ಹಿರಿಯರು ಹೇಳುತ್ತಾರೆ. ಇವರು ಟೆಂಟುಗಳನ್ನು ನಿರ್ಮಿಸುವ ವಿಧಾನವೂ ವಿಶಿಷ್ಟವಾಗಿದೆ. ಟೆಂಟ್ ಹಾಕುವ ಮುಂಚೆ ದೇವರ ಧ್ವಜಗಳನ್ನು ನೆಡುತ್ತಾರೆ. ಅದರ ಪಕ್ಕದಲ್ಲಿ ‘ಭಗತ್’ ಅಂದರೆ ಪೂಜಾರಿಯ ಟೆಂಟು. ಇವುಗಳ ಹಿಂಭಾಗದಲ್ಲಿ ಮಿಕ್ಕವರೆಲ್ಲ ಗುಡಾರ ಅಥವಾ ಟೆಂಟುಗಳನ್ನು ಹಾಕುತ್ತಾರೆ. ದೇವರ ಧ್ವಜದ ಬಳಿ ಹೆಂಗಸರನ್ನು ನಿಷೇಧಿಸಲಾಗುತ್ತದೆ. ಈ ಧ್ವಜಗಳಿಗೆ ಭಗತ್ ನಿತ್ಯ ಪೂಜೆ ಮಾಡುತ್ತಾ ಧ್ವಜಗಳನ್ನು ಕಾಪಾಡುತ್ತಾನೆ. ಈ ಸಮುದಾಯದವರು ಹಿಂದೆ ಬೈಲ, ವಾಗಿಯ, ಕಿಸನ್, ಆತ್ಮ, ಸೋಜಿಯ ಎಂಬ ಹೆಸರುಗಳನ್ನು ಇಟ್ಟುಕೊಳ್ಳುತ್ತಿದ್ದರು. ಈ ಹೆಸರುಗಳಿಂದಲೇ ಇವರನ್ನು ಡುಂಗ್ರಿ ಗರಾಸಿಯ ಎಂದು ಗುರುತಿಸಬಹುದಿತ್ತು. ಈಚೆಗೆ ಒಂದಷ್ಟು ಆಧುನಿಕತೆಗೆ ತೆರೆದುಕೊಂಡಿದ್ದು ರವಿ, ಶೇಖರ್, ಮಂಜುನಾಥ್, ರಮೇಶ್ ಅಂತ ಹೆಸರುಗಳನ್ನು ಇಟ್ಟುಕೊಂಡು ನಿಧಾನವಾಗಿ ತಮ್ಮ ಅಸ್ಮಿತೆಯ ಹೆಸರುಗಳಿಂದ ದೂರವಾಗುತ್ತಿದ್ದಾರೆ. ಡುಂಗ್ರಿ ಗರಾಸಿಯ ಸಮುದಾಯ ಮೂಲತಃ ಗುಜರಾತ್ ಮತ್ತು ರಾಜಸ್ಥಾನದಿಂದ ಕರ್ನಾಟಕಕ್ಕೆ ನೂರಾರು ವರ್ಷಗಳ ಹಿಂದೆಯೇ ಬಂದಿದೆ ಎಂದು ಕುಲಶಾಸ್ತ್ರೀಯ ಅಧ್ಯಯನಕಾರರು ಹೇಳುತ್ತಾರೆ. ಬುಡಕಟ್ಟುಗಳ ಪಟ್ಟಿಯಲ್ಲಿ ಡುಂಗ್ರಿ ಗರಾಸಿಯ ಸಮುದಾಯ ‘ಭಿಲ್’ ಬುಡಕಟ್ಟು ಸಮುದಾಯದ ಭಿಲ್ ಗರಾಸಿಯ, ಥೋಲಿಭಿಲ್, ಡಂಗ್ರಿಭಿಲ್, ಮೊವಾಸಿಭಿಲ್, ರಾವಲ್ ಭಿಲ್, ತಡ್ಲಿಭಿಲ್, ಭಗಾಲಿಯ ಭಿಲಾಲ್, ಪಾವ್ರ ವಾಸವ ಮತ್ತು ವಾಸವೆ ಎಂಬ ಸಮನಾಂತರ ಹೆಸರುಗಳೊಂದಿಗೆ ಕೇಂದ್ರ ಬುಡಕಟ್ಟು ಪಟ್ಟಿಯಲ್ಲಿ ಗುರುತಿಸಲ್ಪಟ್ಟಿದೆ. ಆದರೆ ಕರ್ನಾಟಕದಲ್ಲಿ ಮಾತ್ರ ಡುಂಗ್ರಿ ಗರಾಸಿಯ ಎಂಬ ಹೆಸರಿನೊಂದಿಗೆ ಮೈಸೂರು, ಉತ್ತರ ಕನ್ನಡ, ಧಾರವಾಡ, ದಾವಣಗೆರೆ, ಬಳ್ಳಾರಿ, ಬೆಳಗಾವಿ ಜಿಲ್ಲೆಗಳ ಗ್ರಾಮೀಣ ಪ್ರದೇಶಗಳಲ್ಲಿ ವಿರಳವಾಗಿ ವಾಸವಿದ್ದಾರೆ. ಪುರುಷಪ್ರದಾನ ವ್ಯವಸ್ಥೆಯನ್ನು ಕಡ್ಡಾಯವಾಗಿ ಪಾಲಿಸುವ ಈ ಸಮುದಾಯದಲ್ಲಿ ಮಹಿಳೆಯರ ಪ್ರಾತಿನಿಧ್ಯ ಅತೀ ಕಡಿಮೆ. ಕರ್ನಾಟಕದಲ್ಲಿ ವಾಸವಿರುವ ಡುಂಗ್ರಿ ಗರಾಸಿಯ ಸಮುದಾಯದಲ್ಲಿ ಹನ್ನೊಂದು ಬಳಿಗಳಿವೆ. ಇವುಗಳ ನಡುವಿನ ಒಳಸಂಬಂಧಗಳು ನಿಷೇಧಿಸಲ್ಪಟ್ಟಿವೆ. ಮಣಿಯಾಣಿ, ಖಾಗಳ್, ಉಮ್ಮಟ್, ಮಾಂಗ್ಳ್ಯ, ಓಡಿಯಾರ್, ಜುಂದಾ, ಪಂವಾರ್, ಘಟಾಣ್, ಮಕ್ವಾಣ, ಗೋಡ್ ಮತ್ತು ವಾಘೇಲ ಎಂದು ಈ ಬಳಿಗಳನ್ನು ಕರೆಯುತ್ತಾರೆ. ಈ ಸಮುದಾಯದಲ್ಲಿ ಇನ್ನೂ ಕುಲಪಂಚಾಯಿತಿಗಳು ಹಾಗೇ ಇವೆ. ಅತ್ಯಂತ ಬಡತನ, ಅನಕ್ಷರತೆ, ಅಪೌಷ್ಟಿಕತೆಯಿಂದ ನರಳುತ್ತಿರುವ ಈ ಸಮುದಾಯ ಹೊಟ್ಟೆಪಾಡಿಗಾಗಿ ಚಿಂದಿ ಆಯುವುದು, ಪ್ಲಾಸ್ಟಿಕ್ ಆಯುವುದನ್ನೇ ಕಸುಬನ್ನಾಗಿ ಮಾಡಿಕೊಂಡಿದೆ. ಕೆಲವು ಕಡೆ ಹಾದಿಬೀದಿ ಓಡಾಡಿ ಸುಗಂಧ ದ್ರವ್ಯ ಮಾರಾಟ, ಒಳನಾಡು ಮೀನುಗಾರಿಕೆ, ಪ್ಲಾಸ್ಟಿಕ್ ಸಾಮಾನು ಮಾರಾಟ ಮಾಡಿ ಹೊಟ್ಟೆ ತುಂಬಿಸಿಕೊಳ್ಳುತ್ತಾರೆ. ಡುಂಗ್ರಿ ಗರಾಸಿಯ ಸಮುದಾಯದ ಕುರಿತು ಬರೆಯಲು ಸಿದ್ಧತೆ ಮಾಡಿಕೊಳ್ಳುತ್ತಿರುವ ಸಂದರ್ಭದಲ್ಲೇ ಹುಣಸೂರಿನ ಪಕ್ಷಿರಾಜಪುರದಲ್ಲಿ ವಾಸವಿರುವ ಡುಂಗ್ರಿ ಗರಾಸಿಯ ಸಮುದಾಯಕ್ಕೆ ಸೇರಿದ ರವಿ ಎಂಬ ಹುಡುಗ ನನಗೆ ಫೋನ್ ಮಾಡಿ ತನ್ನ ಸಮುದಾಯಕ್ಕೆ ಸೇರಿದ ನಾಲ್ಕು ಜನ ಹುಡುಗರನ್ನು ಗುಂಡ್ಲುಪೇಟೆ ಪೊಲೀಸರು ಕರೆದೊಯ್ದ ಬಗ್ಗೆ ಆತಂಕದಿಂದ ‘‘ಯಾವ ತಪ್ಪು ಮಾಡದಿದ್ದರೂ ಏನನ್ನೋ ಕದ್ದ ಆರೋಪದ ಮೇಲೆ ನಮ್ಮ ನಾಲ್ಕು ಜನ ಹುಡುಗರನ್ನು ಗುಂಡ್ಲುಪೇಟೆ ಪೊಲೀಸ್ ಠಾಣೆಯ ಪೊಲೀಸರು ಕೊಂಡೊಯ್ದಿದ್ದಾರೆ.. ನೀವು ಮಾತನಾಡಿ ಬಿಡಿಸಿ ಸರ್..’’ ಅಂತ ಅಂಗಲಾಚಿದ. ನಾನು ಗುಂಡ್ಲು ಪೇಟೆ ಇನ್ಸ್ಪೆಕ್ಟರ್ಗೆ ಫೋನ್ ಮಾಡಿ ಮಾತಾಡಿದೆ. ‘‘ಇವರು ಹೆಬುಚಿಯಲ್ ಅಫೆಂಡರ್ಸ್ ತರ ಕಾಣಲ್ಲ ಸರ್.. ಒಂದಷ್ಟು ವಿಚಾರಣೆ ಮಾಡಿ ಕಳಿಸುತ್ತೇನೆ’’ ಅಂದರು. ಇಡೀ ಸಮುದಾಯದ ಹೆಂಗಸರು, ಮಕ್ಕಳು ಪೊಲೀಸ್ ಠಾಣೆ ಬಳಿ ನೆರೆದಿದ್ದಾರಂತೆ. ಇಂದು ಅವರನ್ನು ಬಿಡುಗಡೆ ಮಾಡದಿದ್ದರೆ ಇಲ್ಲಿಂದಲೇ ಒಬ್ಬ ವಕೀಲರನ್ನು ಕಳಿಸುತ್ತೇನೆ. ಸಂಬಂಧಪಟ್ಟ ಎಸ್.ಪಿ.ಯವರೊಂದಿಗೆ ಮಾತನಾಡುತ್ತೇನೆ ಎಂದು ತಿಳಿಸಿದೆ. ಡುಂಗ್ರಿ ಗರಾಸಿಯ ಸಮುದಾಯದ ಹೆಸರು ಹಿಂದೆ ಅಪರಾಧಿ ಬುಡಕಟ್ಟುಗಳ ಪಟ್ಟಿಯಲ್ಲಿತ್ತು. ನಂತರ ಅಪರಾಧಿ ಬುಡಕಟ್ಟು ಎಂದು ಕರೆಯಲಾಗುವ ಇತರ ಬುಡಕಟ್ಟು ಸಮುದಾಯಗಳೊಂದಿಗೆ ಅವರನ್ನೂ ವಿಮುಕ್ತಗೊಳಿಸಲಾಯಿತು. ಆದರೂ ಅಪರಾಧಿ ಬುಡಕಟ್ಟು ಎಂಬ ಕಳಂಕ ಹೊತ್ತ ಕಾರಣ ಇವರು ವಾಸಿಸುವ ಸ್ಥಳದ ಸುತ್ತ ಎಲ್ಲೇ ಅಪರಾಧ ನಡೆದರೂ ಪೊಲೀಸರು ಇವರನ್ನು ಕೊಂಡೊಯ್ದು ಹಿಂಸಿಸುತ್ತಾರೆ. ಇವರು ವಾಸಿಸುವ ಗುಂಡ್ಲುಪೇಟೆ ಬಳಿಯ ಡುಂಗ್ರಿ ಗರಾಸಿಯ ಕಾಲನಿ, ಹುಣಸೂರು ಬಳಿಯ ಪಕ್ಷಿರಾಜಪುರಕ್ಕೆ ಖುದ್ದು ಭೆೇಟಿ ನೀಡಿ ಇವರ ಬದುಕುಗಳನ್ನು ಹತ್ತಿರದಿಂದ ಕಂಡಿದ್ದೇನೆ. ಇತರ ಅಲೆಮಾರಿ ಸಮುದಾಯಗಳೊಂದಿಗೆ ಇವರ ಸಮಸ್ಯೆಗಳನ್ನೂ ಮೈಸೂರು ಜಿಲ್ಲಾಧಿಕಾರಿಗಳೊಂದಿಗೆ ನಡೆದ ಸಾರ್ವಜನಿಕ ವಿಚಾರಣೆಯಲ್ಲಿ ಸೇರಿಸಿ ನಮ್ಮ ‘ಅಲೆಮಾರಿ ಬುಡಕಟ್ಟು ಮಹಾಸಭಾ’ ಜಿಲ್ಲಾಧಿಕಾರಿಗಳ ಗಮನ ಸೆಳೆದಿದೆ. ಒಂದಷ್ಟು ಸಮಸ್ಯೆಗಳಿಗೆ ಪರಿಹಾರ ಸಿಕ್ಕಿದ್ದರೂ, ಇವರಲ್ಲಿ ಅನೇಕರಿಗೆ ರೇಷನ್ ಕಾರ್ಡ್ ಇಲ್ಲ, ಆಧಾರ್ ಕಾರ್ಡ್ ಕೂಡ ಇಲ್ಲ! ಇವೆರಡೂ ಇಲ್ಲವೆಂದ ಮೇಲೆ ಈ ಸಮುದಾಯಕ್ಕೆ ಸರಕಾರದ ಗ್ಯಾರಂಟಿಗಳು ಹೇಗೆ ಸಿಗಲು ಸಾಧ್ಯ? ಈ ವಿಷಯದಲ್ಲಿ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಲು ದಿನಾಂಕ ಕೇಳಿ ಕಾಯುತ್ತಿದ್ದೇವೆ. ಸರಕಾರ ಎಂಬುದಕ್ಕೆ ಕನಿಷ್ಠ ಕಣ್ಣಿದ್ದಿದ್ದರೂ ಇಂತಹ ಸಮುದಾಯಗಳು ಕನಿಷ್ಠ ಸಹನೀಯ ಬದುಕನ್ನಾದರೂ ಬದುಕುತ್ತಿದ್ದವು..
ಭಯೋತ್ಪಾದಕರ ಕುತಂತ್ರ ಎಂದಿಗೂ ಗೆಲ್ಲದು : ಪಹಲ್ಗಾಮ್ ಸಂತ್ರಸ್ತರಿಗೆ ಪ್ರಧಾನಿ ಮೋದಿ ನಮನ
2025 ರ ಏಪ್ರಿಲ್ 22 ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ನಲ್ಲಿ ನಡೆದ ಭೀಕರ ಭಯೋತ್ಪಾದನಾ ದಾಳಿಯಲ್ಲಿ ಪ್ರಾಣ ಕಳೆದುಕೊಂಡ 26 ಅಮಾಯಕರಿಗೆ ಪ್ರಧಾನಿ ಮೋದಿ ಶ್ರದ್ಧಾಂಜಲಿ ಸಲ್ಲಿಸಿದರು. ಯಾವುದೇ ರೀತಿಯ ಭಯೋತ್ಪಾದನೆಗೆ ಭಾರತ ಎಂದಿಗೂ ತಲೆಬಾಗುವುದಿಲ್ಲ ಎಂದು ಮೋದಿ ದೃಢವಾಗಿ ಸಾರಿದ್ದಾರೆ.
Gold Rate Fall: ಅಮೆರಿಕ- ಇರಾನ್ ಮಾತುಕತೆ ಅನಿಶ್ಚಿತತೆ: ಮತ್ತೆ ಇಳಿದ ಚಿನ್ನದ ದರ- ಬೆಳ್ಳಿ ಬೆಲೆ ತಟಸ್ಥ
ಚಿನ್ನ ಬೆಳ್ಳಿ ದರದ ಇಳಿಕೆ ಮತ್ತೆ ಮುಮದುವರಿದಿದೆ. ಜಾಗತಿಕ ಅನಿಶ್ಚಿತತೆ, ಅಮೆರಿಕ-ಿರಾನ್ ಒಪ್ಪಂದ ಮಾತುಕತೆಗಳು ನಡೆಯದಿರುವ ಹಿನ್ನೆಲೆ ಮಾರುಕಟ್ಟೆ ಮೇಲೆ ಪ್ರಭಾವ ಬೀರುತ್ತಿದ್ದು, ತೈಲ ಬೆಲೆ ಏರಿಕೆ ಆಗುತ್ತಿದೆ.
ಡಿಎಂಕೆ ನಾಗಾಲೋಟ, ಅಣ್ಣಾ ಡಿಎಂಕೆ ಕುಂಟುಕುದುರೆ; 2026 ರ ಚುನಾವಣೆ ದ್ರಾವಿಡ ನೆಲದಲ್ಲಿ ಹೊಸ ಮನ್ವಂತರಕ್ಕೆ ನಾಂದಿ?
ಡಿಎಂಕೆ-ಅಣ್ಣಾ ಡಿಎಂಕೆಯ 5 ದಶಕದ ವೈರತ್ವದ ರಾಜಕಾರಣ ಈಗ ಹೊಸ ತಿರುವಿಗೆ ಬಂದಂತಿದೆ. ಅಣ್ಣಾ ಡಿಎಂಕೆಯ ಸಮರ್ಥ ನಾಯಕತ್ವದ ಕೊರತೆಯ ಲಾಭ ಪಡೆಯಲು ಬಿಜೆಪಿ ಹವಣಿಸುತ್ತಿದೆ. ಕಾಂಗ್ರೆಸ್ ಮಾತ್ರ ಡಿಎಂಕೆ ನೇತೃತ್ವದಲ್ಲೇ ತಣ್ಣಗೆ ಹೆಜ್ಜೆ ಹಾಕುತ್ತಿದೆ. 2026ರ ಈ ಚುನಾವಣೆ ದ್ರಾವಿಡ ನೆಲದಲ್ಲಿಹೊಸ ಮನ್ವಂತರಕ್ಕೆ ಕಾರಣವಾಗುವ ಸಾಧ್ಯತೆ ಇದೆ.
ಮಂಗಳೂರು: ಭಾರಿ ಗಾಳಿ-ಮಳೆಗೆ ಮುರಿದು ಬಿದ್ದ ಮರದ ಗೆಲ್ಲು; ಮನೆ, ವಾಹನಗಳಿಗೆ ಹಾನಿ
ಮಂಗಳೂರು, ಎ.22: ಬುಧವಾರ ಮುಂಜಾನೆ ಸುಮಾರು 3.30ರ ವೇಳೆಗೆ ಸುರಿದ ಭಾರಿ ಮಳೆ ಹಾಗೂ ಬೀಸಿದ ಬಿರುಗಾಳಿಯಿಂದ ನಗರದ ಚಮ್ಮಾರ ಗಲ್ಲಿಯ ಬಸವನಗುಡಿಯ ಅಶ್ವತ್ಥ ಕಟ್ಟೆಯಲ್ಲಿದ್ದ ಬೃಹತ್ ಅಶ್ವತ್ಥ ಮರದ ಗೆಲ್ಲು ಮುರಿದು ಬಿದ್ದ ಪರಿಣಾಮ ಎರಡು ಮನೆಗಳು ಹಾಗೂ ಮೂರು ದ್ವಿಚಕ್ರ ವಾಹನಗಳಿಗೆ ಹಾನಿಯಾಗಿದೆ. ಬಿದ್ದ ಮರದ ಗೆಲ್ಲಿನ ಅಡಿಯಲ್ಲಿ ಸಿಲುಕಿದ್ದ ಎರಡು ದ್ವಿಚಕ್ರ ವಾಹನಗಳು ಸಂಪೂರ್ಣ ನಜ್ಜುಗುಜ್ಜಾಗಿವೆ. ಇದೇ ವೇಳೆ ಮರದ ಗೆಲ್ಲು ಬಿದ್ದ ಪರಿಣಾಮ ಎರಡು ಮನೆಗಳಿಗೆ ಭಾಗಶಃ ಹಾನಿಯಾಗಿದ್ದು, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ತಿಳಿದುಬಂದಿದೆ. ಘಟನೆಯ ಹಿನ್ನೆಲೆಯಲ್ಲಿ ರಸ್ತೆ ಸಂಚಾರವನ್ನು ತಾತ್ಕಾಲಿಕವಾಗಿ ಬಂದ್ ಮಾಡಲಾಗಿದ್ದು, ಸಂಬಂಧಪಟ್ಟ ಅಧಿಕಾರಿಗಳಿಗೆ ಹಾಗೂ ಪೊಲೀಸರಿಗೆ ಮಾಹಿತಿ ನೀಡಲಾಗಿದೆ.
ಪ್ರಧಾನಿಯನ್ನು ಉಗ್ರರಿಗೆ ಹೋಲಿಸಿದ ಖರ್ಗೆ : ಇನ್ನೂ ರಿಸಲ್ಟ್ ಬಂದಿಲ್ಲ, ಆಗಲೇ ಸೋಲಿನ ಹತಾಶೆ - ಪ್ರಲ್ಹಾದ ಜೋಶಿ
Kharge Vs PM Modi : ದೇಶದ ಪ್ರಧಾನಿಯನ್ನು ಟೆರರಿಸ್ಟ್ ಎಂದು ಕರೆಯುವುದು ಕೇವಲ ಒಬ್ಬ ವ್ಯಕ್ತಿಯ ನಿಂದನೆ ಅದು ಇಡೀ ದೇಶದ, ದೇಶವಾಸಿಗಳ, ಪ್ರಜಾಪ್ರಭುತ್ವದ, ಸಂವಿಧಾನದ ನಿಂದನೆ. ಪಂಚ ರಾಜ್ಯ ಚುನಾವಣೆಯಲ್ಲಿ ಸೋಲುವ ಭೀತಿಯಿಂದ ಇಂತಹ ಹತಾಶೆಯ ಹೇಳಿಕೆ ಕಾಂಗ್ರೆಸ್ ನಾಯಕರಿಂದ ಬರುತ್ತಿದೆ. ಹಿರಿಯರಾದ ಮಲ್ಲಿಕಾರ್ಜುನ ಖರ್ಗೆಯವರಿಂದ ಇಂತಹ ಮಾತು ನಿರೀಕ್ಷಿಸಿರಲಿಲ್ಲ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೊಶಿ ಹೇಳಿದ್ದಾರೆ.
ಇರಾನ್ ನ ಹರ್ಮುಜ್ ಜಲಸಂಧಿ ದಿಗ್ಬಂಧನ ಹಾಕಿರುವ ನಡುವೆಯೇ, ಇರಾನ್ನನ್ನು ಹೊಗಳಿ, ಮಾತುಕತೆಗೆ ಬನ್ನಿ, ಉತ್ತಮ ಒಪ್ಪಂದ ಆಗುವವರೆಗೂ ಕದನ ವಿರಾಮ ಇರಲಿದೆ ಎಂದು ಡೊನಾಲ್ಡ್ ಟ್ರಂಪ್ ಘೋಷಿಸಿದದಾರೆ.
ಪ್ರವಾಸೋದ್ಯಮ ತಾಣಗಳಲ್ಲಿ ಪ್ರವಾಸಿಗರಿಗಿಲ್ಲ ವಿಮೆ ರಕ್ಷಣಾ ಕವಚ; ಸರಕಾರದ ಯೋಜನೆ ಕೆಲ ಪ್ರದೇಶಕ್ಕೆ ಸೀಮಿತ
ಕರ್ನಾಟಕದ ಅರಣ್ಯ ವಲಯಗಳಲ್ಲಿ ಪ್ರವಾಸಿಗರ ಸುರಕ್ಷತೆಗಾಗಿ ಜಾರಿಗೆ ತಂದಿರುವ ಅಪಘಾತ ವಿಮೆ ಯೋಜನೆಯು ಸದ್ಯಕ್ಕೆ ಆಯ್ದ ಪ್ರದೇಶಗಳಿಗೆ ಮಾತ್ರ ಸೀಮಿತವಾಗಿದೆ. ರಾಜ್ಯದ ಪ್ರಮುಖ ಹುಲಿ ಸಂರಕ್ಷಿತ ಪ್ರದೇಶಗಳಾದ ಬಂಡೀಪುರ ಮತ್ತು ನಾಗರಹೊಳೆಗಳಲ್ಲಿ ಈ ವಿಮಾ ಸೌಲಭ್ಯ ಯಶಸ್ವಿಯಾಗಿ ಜಾರಿಯಲ್ಲಿದೆ. ಈ ಯೋಜನೆ ರಾಜ್ಯಾದ್ಯಂತ ಏಕರೂಪವಾಗಿ ಅನುಷ್ಠಾನಗೊಂಡಿಲ್ಲ ಎಂಬುದು ಗಮನಾರ್ಹ. ಉತ್ತರ ಕರ್ನಾಟಕದ ಭಾಗಗಳಲ್ಲಿ, ವಿಶೇಷವಾಗಿ ಬೆಳಗಾವಿ ಜಿಲ್ಲೆಯ ಪರಿಸರ ಪ್ರವಾಸೋದ್ಯಮ ಕೇಂದ್ರಗಳಲ್ಲಿ ಇನ್ನೂ ಈ ಯೋಜನೆ ಕುಂಟುತ್ತಾ ಸಾಗಿದೆ.
ಸೋತವರು ಷರತ್ತು ವಿಧಿಸಲು ಸಾಧ್ಯವಿಲ್ಲ; ಕದನ ವಿರಾಮ ವಿಸ್ತರಣೆ ತಿರಸ್ಕರಿಸಿದ ಇರಾನ್
ವಾಷಿಂಗ್ಟನ್: ಪಾಕಿಸ್ತಾನದ ಮನವಿಯನ್ನು ಪರಿಗಣಿಸಿ, ಇರಾನ್ ವಿರುದ್ಧದ ಕದನ ವಿರಾಮವನ್ನು ವಿಸ್ತರಿಸಿರುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ. ಹಿಂದಿನ ಕದನ ವಿರಾಮದ ಅವಧಿ ಮುಕ್ತಾಯವಾಗುವ ಕೆಲವೇ ಗಂಟೆಗಳ ಮೊದಲು ಇರಾನ್ ಮೇಲಿನ ಯೋಜಿತ ದಾಳಿಯನ್ನು ವಿಳಂಬಿಸುವ ಘೋಷಣೆ ಹೊರಬಿದ್ದಿದೆ. ಇದಾಗ್ಯೂ, ಇರಾನ್ ಸರ್ಕಾರದ ಮೇಲೆ ವಾಗ್ದಾಳಿ ನಡೆಸಿದ ಟ್ರಂಪ್, ಇರಾನಿಂದ ಏಕೀಕೃತ ಪ್ರಸ್ತಾವನೆ ಬರುವವರೆಗೆ ಇರಾನ್ ಬಂದರುಗಳ ಮೇಲೆ ಅಮೆರಿಕ ವಿಧಿಸಿರುವ ದಿಗ್ಬಂಧನ ಮುಂದುವರಿಯಲಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಇರಾನ್ ಸರ್ಕಾರ ಗಂಭೀರವಾಗಿ ಘಾಸಿಗೊಂಡಿದೆ. ಇದು ಅನಿರೀಕ್ಷಿತವೇನೂ ಅಲ್ಲ; ಫೀಲ್ಡ್ ಮಾರ್ಷಲ್ ಅಸೀಂ ಮುನೀರ್ ಹಾಗೂ ಪಾಕಿಸ್ತಾನದ ಪ್ರಧಾನಿ ಶೆಹಬಾಝ್ ಷರೀಫ್ ಅವರ ಮನವಿಯ ಮೇರೆಗೆ ಇರಾನ್ ಮುಖಂಡರು ಸಮಗ್ರ ಪ್ರಸ್ತಾವನೆಯೊಂದಿಗೆ ಮುಂದೆ ಬರುವವರೆಗೆ ಆ ದೇಶದ ಮೇಲಿನ ದಾಳಿಯನ್ನು ತಾತ್ಕಾಲಿಕವಾಗಿ ತಡೆಹಿಡಿಯಲಾಗಿದೆ, ಎಂದು ಟ್ರಂಪ್ ಟ್ರುತ್ ಸೋಶಿಯಲ್ ಪೋಸ್ಟ್ನಲ್ಲಿ ಹೇಳಿದ್ದಾರೆ. ಆದರೆ ಟ್ರಂಪ್ ಹೇಳಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಇರಾನ್, ಸೋತವರು ಷರತ್ತು ವಿಧಿಸಲು ಸಾಧ್ಯವಿಲ್ಲ; ಟ್ರಂಪ್ ಘೋಷಿಸಿರುವ ಕದನ ವಿರಾಮ ವಿಸ್ತರಣೆ ಇರಾನ್ ಪಾಲಿಗೆ ಅರ್ಥಹೀನ ಎಂದು ಹೇಳಿದೆ. ಇರಾನ್ ಸಂಸತ್ತಿನ ಸ್ಪೀಕರ್ ಅವರ ಸಲಹೆಗಾರ ಮಹ್ದಿ ಮುಹಮ್ಮದಿ ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಕದನ ವಿರಾಮ ವಿಸ್ತರಣೆ ನಮಗೆ ಅರ್ಥಹೀನ. ಸೋಲು ಅನುಭವಿಸಿದವರು ಷರತ್ತುಗಳನ್ನು ವಿಧಿಸಲು ಸಾಧ್ಯವಿಲ್ಲ. ಯುದ್ಧ ಮುಂದುವರಿಸುವುದು ಬಾಂಬ್ ದಾಳಿ ನಡೆಸುವುದಕ್ಕಿಂತ ಭಿನ್ನವೇನೂ ಅಲ್ಲ. ನಮ್ಮ ಸೇನೆ ಸೂಕ್ತ ಪ್ರತಿಕ್ರಿಯೆ ನೀಡಲಿದೆ. ಟ್ರಂಪ್ ಘೋಷಿಸಿರುವ ಕದನ ವಿರಾಮ ವಿಸ್ತರಣೆ ಅಚ್ಚರಿಯ ದಾಳಿಗೆ ನಡೆಸುತ್ತಿರುವ ಸಿದ್ಧತೆ. ಇದೀಗ ಮುಂದಿನ ಉಪಕ್ರಮ ಆರಂಭಿಸುವ ಸರದಿ ಇರಾನ್ ದೇಶದ್ದು, ಎಂದು ಅವರು ಎಕ್ಸ್ ಪೋಸ್ಟ್ನಲ್ಲಿ ತಿಳಿಸಿದ್ದಾರೆ.
ಕದನ ವಿರಾಮ ವಿಸ್ತರಣೆ; ಇರಾನ್ ವಿರುದ್ಧ ದಿಗ್ಬಂಧನ ಮುಂದುವರಿಸಲು ಮಿಲಿಟರಿಗೆ ಟ್ರಂಪ್ ಆದೇಶ
ವಾಷಿಂಗ್ಟನ್: ಮಧ್ಯಪ್ರಾಚ್ಯದಲ್ಲಿನ ಉದ್ವಿಗ್ನ ಪರಿಸ್ಥಿತಿಯ ನಡುವೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಕದನ ವಿರಾಮವನ್ನು ವಿಸ್ತರಿಸುವುದಾಗಿ ಘೋಷಿಸಿದ್ದಾರೆ. ಜೊತೆಗೆ, ಇರಾನ್ ಮೇಲೆ ದಿಗ್ಬಂಧನವನ್ನು ಮುಂದುವರಿಸಲು ಅವರು ಮಿಲಿಟರಿಗೆ ನಿರ್ದೇಶನ ನೀಡಿದ್ದಾರೆ. ಟ್ರುತ್ ಸೋಶಿಯಲ್ ನಲ್ಲಿ ನೀಡಿದ ಹೇಳಿಕೆಯಲ್ಲಿ ಅವರು, “ಇರಾನ್ ಸರ್ಕಾರವು ಗಂಭೀರವಾಗಿ ದುರ್ಬಲಗೊಂಡಿದೆ ಎಂಬ ಅಂಶವನ್ನು ಪರಿಗಣಿಸಿ, ಪಾಕಿಸ್ತಾನದ ಫೀಲ್ಡ್ ಮಾರ್ಷಲ್ ಅಸಿಮ್ ಮುನೀರ್ ಹಾಗೂ ಪ್ರಧಾನಿ ಶಹಬಾಝ್ ಶರೀಫ್ ಅವರ ಕೋರಿಕೆಯ ಮೇರೆಗೆ, ಅವರ ನಾಯಕರು ಮತ್ತು ಪ್ರತಿನಿಧಿಗಳು ಸಂಯುಕ್ತ ಪ್ರಸ್ತಾಪವನ್ನು ಮಂಡಿಸುವವರೆಗೆ ಇರಾನ್ ಮೇಲಿನ ದಾಳಿಯನ್ನು ತಾತ್ಕಾಲಿಕವಾಗಿ ತಡೆಹಿಡಿಯುವಂತೆ ನಮಗೆ ವಿನಂತಿಸಲಾಗಿದೆ,” ಎಂದು ತಿಳಿಸಿದ್ದಾರೆ. “ದಿಗ್ಬಂಧನ ಮುಂದುವರಿಸಲು ಮಿಲಿಟರಿಗೆ ಸೂಚಿಸಿದ್ದೇನೆ. ಪ್ರಸ್ತಾವನೆ ಸಲ್ಲಿಕೆಯಾಗುವವರೆಗೆ ಹಾಗೂ ಮಾತುಕತೆಗಳು ಮುಗಿಯುವವರೆಗೆ ಕದನ ವಿರಾಮ ವಿಸ್ತರಿಸಲಾಗುತ್ತದೆ,” ಎಂದು ಅವರು ಹೇಳಿದ್ದಾರೆ. “ನನ್ನ ಹಾಗೂ ಫೀಲ್ಡ್ ಮಾರ್ಷಲ್ ಅಸಿಮ್ ಮುನೀರ್ ಪರವಾಗಿ, ಕದನ ವಿರಾಮ ವಿಸ್ತರಣೆಗಾಗಿ ಸಲ್ಲಿಸಿದ ನಮ್ಮ ವಿನಂತಿಯನ್ನು ಸ್ವೀಕರಿಸಿದಕ್ಕಾಗಿ ಅಮೆರಿಕ ಅಧ್ಯಕ್ಷ ಟ್ರಂಪ್ ಅವರಿಗೆ ಧನ್ಯವಾದಗಳು,” ಎಂದು ಶಹಬಾಜ್ ಶರೀಫ್ ಹೇಳಿದ್ದಾರೆ. “ಇದರಿಂದ ರಾಜತಾಂತ್ರಿಕ ಪ್ರಯತ್ನಗಳು ಮುಂದುವರಿಯಲು ಅವಕಾಶ ಸಿಗಲಿದೆ,” ಎಂದು ಅವರು ತಿಳಿಸಿದ್ದಾರೆ. “ಸಂಘರ್ಷಕ್ಕೆ ಶಾಶ್ವತ ಅಂತ್ಯ ಕಂಡುಕೊಳ್ಳಲು ಇಸ್ಲಾಮಾಬಾದ್ ನಲ್ಲಿ ನಿಗದಿಯಾಗಿರುವ ಎರಡನೇ ಸುತ್ತಿನ ಮಾತುಕತೆಯಲ್ಲಿ ಎರಡೂ ದೇಶಗಳಿಗೆ ಕದನ ವಿರಾಮವನ್ನು ಪಾಲಿಸುವುದನ್ನು ಮುಂದುವರಿಸುತ್ತವೆ. ಸಮಗ್ರ ‘ಶಾಂತಿ ಒಪ್ಪಂದ’ ಸಾಧಿಸಲು ಸಾಧ್ಯವಾಗುತ್ತದೆ ಎಂಬ ವಿಶ್ವಾಸವಿದೆ,” ಎಂದು ಅವರು ಹೇಳಿದ್ದಾರೆ.
Karnataka Weather: ಮುಂದಿನ ಐದು ದಿನ ಕರ್ನಾಟಕದ 20 ಜಿಲ್ಲೆಗಳಲ್ಲಿ ಮಳೆ, ವಾಡಿಕೆಗಿಂತ 3 ಡಿಗ್ರಿ ಹೆಚ್ಚಲಿದೆ ತಾಪಮಾನ
ರಾಜ್ಯದ ಕರಾವಳಿ ಮತ್ತು ಒಳನಾಡಿನ ಹಲವು ಜಿಲ್ಲೆಗಳಲ್ಲಿ ಇಂದು ಮತ್ತು ನಾಳೆವರೆಗೆ ಹಗುರದಿಂದ ಕೂಡಿದ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕರಾವಳಿ ಭಾಗದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಹಗುರವಾದ ಮಳೆ ಅಥವಾ ಗುಡುಗು ಸಹಿತ ಮಳೆಯಾಗುವ ನಿರೀಕ್ಷೆಯಿದೆ. ಉತ್ತರ ಒಳನಾಡಿನ ಬೆಳಗಾವಿ, ಧಾರವಾಡ, ಗದಗ, ಹಾವೇರಿ, ರಾಯಚೂರು,
ಮಧ್ಯಪ್ರಾಷ್ಯ ಯುದ್ಧದಿಂದ ರಫ್ತು ನಿಂತಿದೆ. ದೇಶದಲ್ಲೂ ಗ್ಯಾಸ್ ಸಮಸ್ಯೆಯಿಂದ ಹೋಟೆಲ್ ಉದ್ಯಮದಲ್ಲಿ ಮೆನುಗಳು ಕಡಿತಗೊಂಡಿವೆ. ಇದರಿಂದಾಗಿ ಈರುಳ್ಳಿ ಬೆಳ್ಳುಳ್ಳಿ ಬೆಳೆಗಳು ಪಾತಾಳಕ್ಕೆ ಕುಸಿಯುತ್ತಿವೆ.
ಬೆಂಗಳೂರಲ್ಲಿ ಸೈಟ್ಗಾಗಿ ಮದ್ಯಮವರ್ಗದವರ ಚಿತ್ತ ಬಿಬಿಸಿಯತ್ತ: ಪಿಆರ್ಆರ್ ಅನುಷ್ಠಾನದಿಂದ ಸೂರು ಸಿಗುವ ಭರವಸೆ
ಪಿಆರ್ಆರ್ ರಸ್ತೆ 1 ಕ್ಕೆ ಹೊಮದಿಕೊಂಡಂತೆ 5 ಬಡಾವಣೆಗಳು ಹಾಗೂ ಪಿಆರ್ಆರ್ ರಸ್ತೆ 2 ಕ್ಕೆ ಹೊಂದಿಕೊಂಡಂತೆ ನಿರ್ಮಾಣ ಆಗಲಿರುವ 6 ಬಡಾವಣೆಗಳು, ಸಾಮಾನ್ಯ ಜನರ ನಿವೇಶನದ ಕನಸನ್ನು ನನಸು ಮಾಡುವ ನಿರೀಕ್ಷೆ ಇದೆ. ಆದ್ರೆ ಭೂಮಾಲೀಕರ ವಿವಾದಗಳಿಂದ ಹೈಕೋರ್ಟ್ನಲ್ಲಿ ಪ್ರಕರಣಗಳಿದ್ದು, ಯೋಜನೆ ಬೇಗ ಅನುಷ್ಠಾನವಾಗಲು ಜನ ಕಾಯುವಂತಾಗಿದೆ.
ಹುಲಿಕಲ್ ಘಾಟ್ನಲ್ಲಿ ಮತ್ತೆ ಸಂಕಷ್ಟ: ಗುಡ್ಡ ಕುಸಿತ, ಸಂಚಾರ ನಿಷೇಧ, ಚಂಡಿಕಾಂಬ ದೇವಸ್ಥಾನ ದರ್ಶನಕ್ಕೂ ತೊಂದರೆ
ಮಲೆನಾಡಿಂದ ಕುಂದಾಪುರಕ್ಕೆ ಸಂಪರ್ಕಿಸುತ್ತಿದ್ದ ಹುಲಿಕಲ್ ಘಾಟ್ ಹೆದ್ದಾರಿ ಪದೇ ಪದೇ ಸ್ಥಗಿತಗೊಳ್ಳುತ್ತಿದ್ದು, ಕುಂದಾಪುರ ಭಾಗದ ಜನರಿಗೆ ಸಮಸ್ಯೆಯಾಗಿದೆ. ಅಲ್ಲದೆ ಹೊಸಂಗಡಿ ಪೇಟೆಯ ವ್ಯವಹಾರಕ್ಕೆ ಗ್ರಹಣ ಹಿಡಿದಂತಾಗಿದೆ. ಬೆಂಗಳೂರು-ಶಿವಮೊಗ್ಗ-ಕುಂದಾಪುರ ಬಸ್ಗಳೂ ಬೇರೆ ಮಾರ್ಗದಲ್ಲಿ ಸಂಚರಿಸುತ್ತಿವೆ.
ಆಳ್ವಾಸ್ ಪತ್ರಿಕೋದ್ಯಮ ಹಿರಿಯ ವಿದ್ಯಾರ್ಥಿಗಳ ಸಂಘ ಅಸ್ತಿತ್ವಕ್ಕೆ; ಪ್ರಥಮ ಅಧ್ಯಕ್ಷರಾಗಿ ಪ್ರಕಾಶ್ ಡಿ.ರಾಂಪುರ್
ಮೂಡುಬಿದಿರೆ: ಆಳ್ವಾಸ್ ಸ್ವಾಯತ್ತ ಕಾಲೇಜಿನ ದಶಮಾನ ಸಂಭ್ರಮದಲ್ಲಿರುವ ಸ್ನಾತಕೋತ್ತರ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಹಿರಿಯ ವಿದ್ಯಾರ್ಥಿಗಳ ಸಮಾವೇಶ ಕಾಲೇಜಿನಲ್ಲಿ ನಡೆಯಿತು. ಆಳ್ವಾಸ್ ಸ್ನಾತಕೋತ್ತರ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ಹಿರಿಯ ವಿದ್ಯಾರ್ಥಿಗಳ ಸಂಘವನ್ನು ರಚಿಸಲಾಗಿದ್ದು, ಸುದ್ದಿವಾಹಿನಿಯ ಹಿರಿಯ ವರದಿಗಾರ ಪ್ರಕಾಶ್ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದರು. ನಾಡಿನ ಪ್ರಮುಖ ಪತ್ರಿಕೆ, ಟಿವಿ, ನವಮಾಧ್ಯಮ, ಶಿಕ್ಷಣ ಮತ್ತಿತರ ಸಂಸ್ಥೆಗಳಲ್ಲಿ ವೃತ್ತಿ ನಿರ್ವಹಿಸುತ್ತಿರುವ ಹಿರಿಯ ವಿದ್ಯಾರ್ಥಿಗಳು ಪದಾಧಿಕಾರಿಗಳಾದರು. ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ, ಯಾವುದೇ ಕ್ಷೇತ್ರದ ಬೆಳವಣಿಗೆಯ ದೃಷ್ಟಿಯಿಂದ ಹಿರಿಯ ಹಾಗೂ ಪ್ರಸ್ತುತ ವಿದ್ಯಾರ್ಥಿಗಳ ಸಂಪರ್ಕವು ಅತೀ ಅವಶ್ಯ. ಪ್ರಸ್ತುತ ಪತ್ರಿಕೋದ್ಯಮದ ಅವಶ್ಯಕತೆ ಸಮಾಜಕ್ಕೆ ಹೆಚ್ಚಿದೆ. ವೃತಿ ಸ್ವರೂಪ ಬದಲಾಗಿದ್ದು, ಸಮರ್ಥ ಅಭ್ಯರ್ಥಿಗಳಿಗೆ ಬೇಡಿಕೆ ಹೆಚ್ಚಿದೆ ಎಂದರು. ಕಾಲೇಜಿನ ಪ್ರಾಂಶುಪಾಲ ಡಾ. ಕುರಿಯನ್ ಸಮಾವೇಶ ಉದ್ಘಾಟಿಸಿದರು. ವಿಭಾಗದ ಮುಖ್ಯಸ್ಥ ಪ್ರಸಾದ್ ಶೆಟ್ಟಿ, ಪ್ರಾಧ್ಯಾಪಕರಾದ ಡಾ. ಶ್ರೀನಿವಾಸ ಹೊಡೆಯಾಲ, ಹರ್ಷವರ್ಧನ ಪಿ. ಆರ್., ಸುಶ್ಮಿತಾ ಜೆ. ದೀಕ್ಷಿತಾ, ಅಕ್ಷಯ್ ಕುಮಾರ್, ಹನ್ನಾ ಫಾತಿಮಾ, ರಕ್ಷಾ ಉಪಸೈಇತರಿದ್ದರು. ಪ್ರೇರಣಾ ಕಾರ್ಯಕ್ರಮ ವನ್ನು ನಿರೂಪಿಸಿ, ಮಿಯಾ ಕೆನಡಿ ವಂದಿಸಿದರು. ಪಧಾಧಿಕಾರಿಗಳು: ಪ್ರಕಾಶ್ (ಅಧ್ಯಕ್ಷ ), ಅಕ್ಷಯ್ ಕುಮಾರ್ (ಕಾರ್ಯದರ್ಶಿ), ಶಿಧರ್, ಯೇಜಾಸ್, ಅಕ್ಷಯ್ ರೈ (ಉಪಾಧ್ಯಕ್ಷರು), ದೀಪ, ವೀರೇಶ್ (ಕೋಶಾಧಿಕಾರಿ) ಕೀರ್ತನ ಶೆಟ್ಟಿ (ಜಂಟಿ ಕಾರ್ಯದರ್ಶಿ), ರಕ್ಷಿತಾ, ಸಂಪ್ರೀಯ, ಸುಶ್ಮಿತಾ, ನಿಶಾನ್, ನರೇಂದ್ರ, ಅಶ್ವಿನಿ ಜೈನ, ರಮ್ಯಾ, ಜಾಫರ್, ಸುಮಲತಾ, ಪ್ರಮೋದ್, ಇಂಚರ, ಸಿಧಾರ್ಥ, ಇಂದೂಧರ್, ವೆನಿಷಾ, ಉಮರ್ ಫಾರೂಕ್, ಆನಂದ, ಮಾಧವಿ, ವೈಶಾಕ್, ಗೌತಮಿ, ವಿನೀತ್ (ಕಾರ್ಯಕಾರಿ ಸಮಿತಿ ಸದಸ್ಯರು), ಡಾ. ಮೌಲ್ಯ ಬಿ., ಪ್ರಸಾದ್ ಶೆಟ್ಟಿ (ಪ್ರಾಧ್ಯಾಪಕ ಸಂಚಾಲಕರು).
ಕಾಂಗ್ರೆಸ್ನಿಂದ ಮಹಿಳೆಯರ ಸಮಾನ ಹಕ್ಕಿನ ಅವಕಾಶ ತಪ್ಪಿದೆ: ಸಂಸದ ಕೋಟ ಶ್ರೀನಿವಾಸ ಪೂಜಾರಿ ಟೀಕೆ
ಉಡುಪಿ: ಕೇಂದ್ರ ಸರಕಾರ ಲೋಕಸಭೆಯಲ್ಲಿ ಮಂಡಿಸಿದ ನಾರಿ ಶಕ್ತಿ ಮಸೂದೆ ಮಹಿಳೆಯರಿಗೆ ನ್ಯಾಯಯುತ ಪ್ರಾತಿನಿಧ್ಯ ನೀಡುವ ಮಹತ್ವದ ಮಸೂದೆಯಾಗಿದ್ದು, ರಾಜಕೀಯ ಕಾರಣಕ್ಕಾಗಿ ಕಾಂಗ್ರೆಸ್ ಸಹಿತ ವಿರೋಧಪಕ್ಷಗಳು ವಿರೋಧಿಸಿದ ಕಾರಣದಿಂದ ಸರ್ವಾನುಮತದಿಂದ ಅಂಗೀಕರಿಸುವ ನಿರೀಕ್ಷೆ ಹುಸಿಯಾಗಿದೆ. ಇದರಿಂದ ಮಹಿಳೆಯರಿಗೆ ಸಮಾನ ಹಕ್ಕು ನೀಡುವ ಅವಕಾಶ ತಪ್ಪಿಹೋಗಿದೆ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಟೀಕಿಸಿದ್ದಾರೆ. ಉಡುಪಿ ಜಿಲ್ಲಾ ಬಿಜೆಪಿ ಕಚೇರಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ವಾಸ್ತವಿಕ ಸ್ಥಿತಿಯನ್ನು ಅರಿತುಕೊಳ್ಳದೆ ವಿರೋಧಿಸುತ್ತಿದೆ. ಈ ಬಾರಿಯ ಜನಗಣತಿಯನ್ನು ಪರಿಗಣಿಸಿದರೆ ಮಹಿಳಾ ಮೀಸಲಾತಿ 2034ರಲ್ಲಿ ಜಾರಿಯಾಗುವ ಸಂಭವವಿದೆ. ಹೀಗಾಗಿ 2011ರ ಜನಗಣತಿ ಪರಿಗಣಿಸಲಾಗಿದೆ. ಪ್ರಸ್ತುತ ದೇಶದಲ್ಲಿ 1973ರಲ್ಲಿ ಜಾರಿಗೆ ಬಂದಿರುವ ಲೋಕಸಭಾ ಸ್ಥಾನಗಳಿದ್ದು, ಅಂದಿನ ಜನಸಂಖ್ಯೆ 55 ಕೋಟಿಯಾಗಿತ್ತು. ಪ್ರಸ್ತುತ ಇದಕ್ಕಿಂತ ಮೂರು ಪಟ್ಟು ಜನಸಂಖ್ಯೆ ಹೆಚ್ಚಾಗಿದ್ದು, ಲೋಕಸಭಾ ಸ್ಥಾನಗಳಲ್ಲಿ ಹೆಚ್ಚಳ ಅನಿವಾರ್ಯವಾಗಿದೆ ಎಂದರು. ಮಸೂದೆ ಜಾರಿಗೆ ಚುನಾವಣೆಯೊಂದಿಗೆ ಯಾವುದೇ ಸಂಬಂಧ ಇಲ್ಲ. ಮುಂದಿನ ದಿನಗಳಲ್ಲಿ ಈ ಮಸೂದೆ ಜಾರಿಗೆ ಬರಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು. ಸುದ್ದಿಗೋಷ್ಠಿಯಲ್ಲಿ ಮಹಿಳಾ ಮೋರ್ಚಾ ರಾಜ್ಯ ಕಾರ್ಯದರ್ಶಿ ಶ್ಯಾಮಲಾ ಕುಂದರ್, ಜಿಪಂ ಮಾಜಿ ಸದಸ್ಯರಾದ ಶಿಲ್ಪಾ ಸುವರ್ಣ, ಗೀತಾಂಜಲಿ ಸುವರ್ಣ, ಪ್ರಮುಖರಾದ ವೀಣಾ ಶೆಟ್ಟಿ, ಸಂಧ್ಯಾ ರಮೇಶ್, ಪ್ರಿಯದರ್ಶಿನಿ, ಅನಿತಾ ಉಪಸ್ಥಿತರಿದ್ದರು.
ಮಣಿಪಾಲ | ಬಸ್ ನಿಲ್ದಾಣಕ್ಕೆ ಕಾರು ಢಿಕ್ಕಿ: ಓರ್ವ ಮೃತ್ಯು
ಮಣಿಪಾಲ: ಕಾರೊಂದು ಬಸ್ ನಿಲ್ದಾಣಕ್ಕೆ ಡಿಕ್ಕಿ ಹೊಡೆದ ಪರಿಣಾಮ ಓರ್ವ ಮೃತಪಟ್ಟು, ಇನ್ನೋರ್ವ ತೀವ್ರವಾಗಿ ಗಾಯಗೊಂಡ ಘಟನೆ ಮಣಿಪಾಲ ಟೈಗರ್ ಸರ್ಕಲ್ ಬಳಿ ಎ.20ರಂದು ತಡರಾತ್ರಿ ವೇಳೆ ನಡೆದಿದೆ. ಮೃತರನ್ನು ಕಾರ್ತಿಕೇಯ್ ಶರ್ಮಾ(21) ಎಂದು ಗುರುತಿಸಲಾಗಿದೆ. ಕಾರಿನಲ್ಲಿದ್ದ ಹೆರ್ಶ್ ಹಾರ್ಡಿಂಗ್ ಎಂಬವರು ತೀವ್ರವಾಗಿ ಗಾಯಗೊಂಡು ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಣಿಪಾಲ ಈಶ್ವರ ನಗರದಿಂದ ಸಿಂಡಿಕೇಟ್ ಸರ್ಕಲ್ ಕಡೆಗೆ ಅತೀವೇಗದಿಂದ ಚಲಾಯಿಸಿಕೊಂಡು ಬಂದ ಕಾರು, ಮಣಿಪಾಲ ಬಸ್ ನಿಲ್ದಾಣಕ್ಕೆ ಡಿಕ್ಕಿ ಹೊಡೆಯಿತ್ತೆನ್ನಲಾಗಿದೆ. ಇದರಿಂದ ಕಾರು ರಸ್ತೆಗೆ ಬಿದ್ದು ಚಾಲಕ ಕಾರ್ತಿಕೇಯ್ ಶರ್ಮಾ ಸ್ಥಳದಲ್ಲಿಯೇ ಮೃತಪಟ್ಟರು ಎಂದು ತಿಳಿದುಬಂದಿದೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಯುವಕಾಂಗ್ರೆಸ್ನಿಂದ 'ಕಿಸಾನ್ ನ್ಯಾಯ ಸತ್ಯಾಗ್ರಹ'
ಬೆಂಗಳೂರು : ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಸಮಿತಿ ರಾಜ್ಯಾಧ್ಯಕ್ಷ ಎಚ್.ಎಸ್.ಮಂಜುನಾಥ್ ಗೌಡ ನೇತೃತ್ವದಲ್ಲಿ ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ 'ಕಿಸಾನ್ ನ್ಯಾಯ ಸತ್ಯಾಗ್ರಹ' ನಡೆಯಿತು. ಧರಣಿಯನ್ನು ರಾಷ್ಟ್ರೀಯ ಅಧ್ಯಕ್ಷ ಉದಯ್ ಭಾನು ಚಿಬ್ ಅವರ ಮುಂದಾಳತ್ವದಲ್ಲಿ ಆಯೋಜಿಸಲಾಗಿತ್ತು. ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಅಧ್ಯಕ್ಷ ವಿ.ಎಸ್.ಆರಾಧ್ಯ ಅವರು ಧರಣಿಯಲ್ಲಿ ಉಪಸ್ಥಿತರಿದ್ದು ಯುವ ಕಾಂಗ್ರೆಸ್ ಕಾರ್ಯಕರ್ತರಿಗೆ ಬೆಂಬಲ ಸೂಚಿಸಿದರು. ಕೇಂದ್ರ ಸರಕಾರದ ರೈತ ವಿರೋಧಿ ಅಮೆರಿಕ ವ್ಯಾಪಾರ ಒಪ್ಪಂದವನ್ನು ರದ್ದುಗೊಳಿಸಬೇಕು ಮತ್ತು ರೈತರಿಗೆ ಕನಿಷ್ಠ ಬೆಂಬಲ ಬೆಲೆ ಖಾತ್ರಿಪಡಿಸಬೇಕು ಎಂದು ಯುವ ಕಾಂಗ್ರೆಸ್ ಕಾರ್ಯಕರ್ತರು ಆಗ್ರಹಿಸಿದರು. ಧರಣಿಯಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಬಾಹುಬಲಿ, ಯುವ ಕಾಂಗ್ರೆಸ್ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಪಾಲ್ಗೊಂಡಿದ್ದರು.
ದಲಿತರ ಉದ್ದಾರಕ್ಕೆ ದುಡಿದ ಏಕೈಕ ನಾಯಕ ಬಿ.ಬಸವಲಿಂಗಪ್ಪ : ಸಭಾಪತಿ ಬಸವರಾಜ ಹೊರಟ್ಟಿ
ಬೆಂಗಳೂರು : ರಾಜ್ಯದ ದಲಿತ ಸಮುದಾಯದ ಉದ್ದಾರಕ್ಕಾಗಿ ಯಾರಾದರೂ ಪ್ರಾಮಾಣಿಕವಾಗಿ ದುಡಿದ ನಾಯಕ ಎಂದರೆ ಅದು ಕ್ರಾಂತಿಕಾರಿ ಸಮಾಜ ಸುಧಾರಕ, ಮಾಜಿ ಸಚಿವ ಬಿ.ಬಸವಲಿಂಗಪ್ಪ ಅವರು ಮಾತ್ರ ಎಂದು ವಿಧಾನ ಪರಿಷತ್ತಿನ ಸಭಾಪತಿ ಬಸವರಾಜ ಹೊರಟ್ಟಿ ಬಣ್ಣಿಸಿದ್ದಾರೆ. ಮಂಗಳವಾರ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ‘ಬಸವಲಿಂಗಪ್ಪ ಜನ ಶತಮಾನೋತ್ಸವ ಸಮಿತಿ’, ಬಸವಲಿಂಗಪ್ಪ ಅಭಿವೃದ್ಧಿ ಅಧ್ಯಯನ ಸಂಸ್ಥೆ’ ಜಂಟಿಯಾಗಿ ಆಯೋಜಿಸಿದ್ದ ಬಿ.ಬಸವಲಿಂಗಪ್ಪ ಜನ್ಮ ಶತಮಾನೋತ್ಸವ ಸಮಾರಂಭವನ್ನುದ್ದೇಶಿಸಿ ಮಾತನಾಡಿದ ಅವರು, ಡಾ.ಅಂಬೇಡ್ಕರ್ ಅವರ ತತ್ವಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಕರ್ನಾಟಕದಲ್ಲಿ ಶೋಷಿತ ಸಮುದಾಯಕ್ಕೆ ಸ್ವಾಭಿಮಾನದ ಬದುಕು ಕಲ್ಪಿಸಿಕೊಡಲು ನಿರಂತರವಾಗಿ ಶ್ರಮಿಸಿದ ಏಕೈಕ ನಾಯಕ ಬಿ.ಬಸವಲಿಂಗಪ್ಪ ಮಾತ್ರವೇ ಎಂದರು. ಈಗ ಶಾಸನ ಸಭೆಗೆ ಬರುವ ಅನೇಕ ಪ್ರತಿನಿಧಿಗಳಿಗೆ ಬಸವಲಿಂಗಪ್ಪ ಅವರ ವ್ಯಕ್ತಿತ್ವ, ಹೋರಾಟದ ಹಾದಿಯೇ ಗೊತ್ತಿಲ್ಲ. ಅನೇಕರನ್ನು ನಾನು ಪ್ರಶ್ನೆ ಮಾಡಿದರೂ, ಮಾಹಿತಿಯೇ ಇಲ್ಲದಂತೆ ಹೇಳುತ್ತಾರೆ. ಆದರೆ, ರಾಜಕೀಯಕ್ಕೆ ಬರುವ ಹೊಸಬರು ಮೊದಲು ಗ್ರಂಥಾಲಯಗಳಿಗೆ ತೆರಳಿ ಬಸವಲಿಂಗಪ್ಪ ಅವರ ಬಗ್ಗೆ ತಿಳಿವಳಿಕೆ ಹೊಂದಬೇಕು. ಜತೆಗೆ, ಅವರ ಸಾಧನೆಯನ್ನು ನೆನೆಯುವ ಕೆಲಸ ಆಗಬೇಕು ಎಂದು ಅವರು ನುಡಿದರು. ಮಾಜಿ ಸ್ಪೀಕರ್ ಕೆ.ಆರ್.ರಮೇಶ್ ಕುಮಾರ್ ಮಾತನಾಡಿ, ಪೌರಾಡಳಿತ ಸಚಿವರಾಗಿದ್ದ ಬಸವಲಿಂಗಪ್ಪ ಅವರು ಮಲಹೊರುವ ಪದ್ಧತಿಯನ್ನು ನಿಷೇಧಿಸುವ ಕ್ರಾಂತಿಕಾರಕ ಕಾರ್ಯವನ್ನು ಮಾಡಿದ್ದಾರೆ. ಭೂ ಸುಧಾರಣೆ, ಭೂ ರಹಿತರಿಗೆ ಭೂಮಿ ಹಂಚಿಕೆ, ಪರಿಷ್ಟರ ಭೂಮಿ ರದ್ದತಿ ಕಾನೂನು, ಜೀತಮುಕ್ತಿ ಕಾನೂನು ಸೇರಿದಂತೆ ಅನೇಕ ಜನಪರ ಕಾರ್ಯಗಳನ್ನು ಮಾಡಿದ್ದಾರೆ. ದಲಿತರಲ್ಲಿ ವೈಚಾರಿಕತೆ ಮೂಡಿಸುವಲ್ಲಿ ಸಾಕಷ್ಟು ಶ್ರಮಿಸಿದ್ದಾರೆ. ಅವರ ಮಾರ್ಗದಲ್ಲಿ ದಲಿತರು ಮಾತ್ರವಲ್ಲದ ಎಲ್ಲ ವರ್ಗದವರು ಸಾಗಬೇಕಾಗಿದೆಯೆಂದು ಕರೆ ನೀಡಿದರು. ಹಿರಿಯ ಸಾಹಿತಿ ಅಗ್ರಹಾರ ಕೃಷ್ಣಮೂರ್ತಿ ಮಾತನಾಡಿ, ಕನ್ನಡ ಸಾಹಿತ್ಯದಲ್ಲಿರುವುದೆಲ್ಲವೂ ಬೂಸಾ ಸಾಹಿತ್ಯ ಎಂಬ ಹೇಳಿಕೆಯ ಮೂಲಕ, ಸಾಹಿತ್ಯ ಲೋಕದಲ್ಲಿ ಶೋಷಿತರ ಕಡೆಗಣನೆ ಹಾಗೂ ರಾಜಕೀಯವನ್ನು ನೇರವಾಗಿ ವಿರೋಧಿಸಿದರು. ವೈಚಾರಿಕ ಕಿಡಿ ಹೊತ್ತಿಸಿದ ತಮ್ಮ ಹೇಳಿಕೆಯಿಂದಾಗಿ, ಸಚಿವ ಸ್ಥಾನ ಕಳೆದುಕೊಂಡ ಅವರು, ಬಳಿಕ ದಲಿತ ಚಳವಳಿಯನ್ನು ಕಟ್ಟುವಲ್ಲಿ ತೊಡಗಿಸಿಕೊಂಡರು. ಅವರ ಹೋರಾಟದಿಂದಾಗಿ, ನೂರಾರು ಯುವಕರು ದಲಿತ ಚಳವಳಿಗೆ ಧುಮುಕಿದರು ಎಂದು ಸ್ಮರಿಸಿದರು. ದಲಿತ ಮುಖಂಡ ಮಾವಳ್ಳಿ ಶಂಕರ್ ಮಾತನಾಡಿ, ಸಂವಿಧಾನ ಶಿಲ್ಫಿ ಡಾ.ಅಂಬೇಡ್ಕರ್ ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಡೆದ ಅವರು, 70ರ ದಶಕದಲ್ಲಿ ಭದ್ರಾವತಿಯಲ್ಲಿ ಮೊಳಕೆಯೊಡೆದ ದಲಿತ ಸಂಘರ್ಷ ಸಮಿತಿಯನ್ನು ರಾಜ್ಯದ ಮೂಲೆ ಮೂಲೆಗಳಿಗೆ ತಲುಪಿಸುವ ಕೆಲಸ ಮಾಡಿದರು. ಆ ಮೂಲಕ, ದಲಿತರ ದೌರ್ಜನ್ಯದ ವಿರುದ್ಧ ಎಲ್ಲಾ ಕಡೆಯಿಂದಲೂ ದನಿ ಮೊಳಗಲು ಕಾರಣರಾದರು ಎಂದು ಹೇಳಿದರು. ಇದಕ್ಕೂ ಮೊದಲು ಪ್ರಾಸ್ತಾವಿಕ ಮಾತುಗಳನ್ನಾಡಿದ ವಿಧಾನ ಪರಿಷತ್ತಿನ ಸದಸ್ಯ ಎಫ್.ಎಚ್.ಜಕ್ಕಪ್ಪನವರ್, ಮಾಜಿ ಸಚಿವ ಬಿ.ಬಸವಲಿಂಗಪ್ಪ ಅವರ ಹೋರಾಟ, ಜೀವನದ ಹಾದಿ ಸೇರಿದಂತೆ ಅವರ ವೈಚಾರಿಕತೆ ಮತ್ತಷ್ಟು ಹಬ್ಬಲು ರಾಜ್ಯ ಸರಕಾರ ಬಸವಲಿಂಗಪ್ಪ ಅಭಿವೃದ್ಧಿ ಅಧ್ಯಯನ ಸಂಸ್ಥೆಗೆ ಅನುದಾನ ನೀಡಬೇಕು. ಜತೆಗೆ, ಬಸವಲಿಂಗಪ್ಪ ಪ್ರತಿಮೆ ಸ್ಥಾಪನೆಗೆ ಮುಂದಾಗಬೇಕು ಎಂದು ಒತ್ತಾಯಿಸಿದರು. ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ್, ಬಿ.ಬಸವಲಿಂಗಪ್ಪ ಅವರು ಈ ರಾಜ್ಯ ಕಂಡ ನೇರ-ನಿಷ್ಟುರ ನಡೆಯ ಪ್ರಾಮಾಣಿಕ ರಾಜಕಾರಣಿಯಾಗಿದ್ದರು. ರಾಜ್ಯಕ್ಕೆ ಅವರ ಕೊಡುಗೆ ಸ್ಮರಣೀಯವಾದದ್ದು. ಸದಾ ಸಾಮಾಜಿಕ ಪರಿವರ್ತನೆಯನ್ನು ಬಯಸಿದ್ದ ಅವರು, ಒಬ್ಬ ಶಾಸಕ ಮತ್ತು ಮಂತ್ರಿ ಹೇಗಿರಬೇಕೆಂದು ತೋರಿಸಿದ್ದರು ಎಂದು ಸ್ಮರಿಸಿದರು. ಕಾರ್ಯಕ್ರಮದಲ್ಲಿ ಬೂಸಾ ಚಳವಳಿ ಸೇನಾನಿಗಳಾದ ಅಗ್ರಹಾರ ಕೃಷ್ಣಮೂರ್ತಿ, ಕಲ್ಲೂರು ಮೇಘರಾಜ, ಕರೀಗೌಡ ಬೀಚನಹಳ್ಳಿ, ಗಂಗಣ್ಣಾ ಕೆಂಚೇನಹಳ್ಳಿ ಅವರನ್ನು ಸನ್ಮಾನಿಸಲಾಯಿತು. ಪರಿಷತ್ತಿನ ಸದಸ್ಯ ಎಂ.ಆರ್.ಸೀತಾರಾಮ್, ಮಾಜಿ ಸಂಸದ ಡಾ.ಎಲ್.ಹನುಮಂತಯ್ಯ ಸೇರಿದಂತೆ ಪ್ರಮುಖರಿದ್ದರು.
ಅಭಿಷೇಕ್ ಶರ್ಮಾ ಸ್ಫೋಟಕ ಶತಕ, ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಎಸ್ಆರ್ಎಚ್ ಭರ್ಜರಿ ಗೆಲುವು
SRH VS DC IPL 2026: ಹೈದರಾಬಾದ್ನ ರಾಜೀವ್ ಗಾಂಧಿ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ಮಂಗಳವಾರ (ಏಪ್ರಿಲ್ 21) ರಾತ್ರಿ ನಡೆದ ಐಪಿಎಲ್ ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ ತಂಡವು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 47 ರನ್ಗಳ ಭರ್ಜರಿ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ ಎಸ್ಆರ್ಎಚ್ ಅಂಕಪಟ್ಟಿಯಲ್ಲಿ 8 ಪಾಯಿಂಟ್ಸ್ ಪಡೆದು ಮೂರನೇ ಸ್ಥಾನಕ್ಕೆ ಏರಿದೆ.
Udupi | ಪ್ರವಾಸಕ್ಕೆ ಮಲ್ಪೆಗೆ ಬಂದಿದ್ದ ವ್ಯಕ್ತಿ ರೂಮಿನಲ್ಲಿ ಮಲಗಿದ್ದಲ್ಲಿಯೇ ಮೃತ್ಯು
ಮಲ್ಪೆ: ಪ್ರವಾಸಕ್ಕೆ ಮಲ್ಪೆಗೆ ಬಂದಿದ್ದ ವ್ಯಕ್ತಿಯೊಬ್ಬರು ರೂಮಿನಲ್ಲಿ ಮಲಗಿದ್ದಲ್ಲಿಯೇ ಮೃತಪಟ್ಟ ಬಗ್ಗೆ ವರದಿಯಾಗಿದೆ. ಮೃತರನ್ನು ಬೆಂಗಳೂರು ಆನೇಕಲ್ ನಿವಾಸಿ ಧನಂಜಯ್ ಕೆ.ಎನ್.(37) ಎಂದು ಗುರುತಿಸಲಾಗಿದೆ. ಇವರು ಸುಮಾರು 4 ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು ಎನ್ನಲಾಗಿದೆ. ಎ.19ರಂದು ಸಂಜೆ ಸ್ನೇಹಿತರೊಂದಿಗೆ ಮಲ್ಪೆಗೆ ಪ್ರವಾಸಕ್ಕೆ ಬಂದು ರೂಮಿನಲ್ಲಿ ಮಲಗಿದ್ದರು. ಎ.20ರಂದು ಮಧ್ಯಾಹ್ನ ಮಲಗಿದ್ದ ಇವರು ತೀವ್ರವಾಗಿ ಅಸ್ವಸ್ಥಗೊಂಡು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಂಗಳೂರು : ಐಷಾರಾಮಿ ಲ್ಯಾಂಬೊರ್ಗಿನಿ ಹುರಕಾನ್ ಕಾರ್ಗೆ ನಕಲಿ ಫ್ಯಾನ್ಸಿ ನಂಬರ್ ಪ್ಲೇಟ್ ಅಳವಡಿಸಿದ ಆರೋಪದಲ್ಲಿ ದಾಖಲಾಗಿರುವ ಪ್ರಕರಣದಲ್ಲಿ ಮುತ್ತಪ್ಪ ರೈ ಪುತ್ರ ರಿಕ್ಕಿ ರೈ ವಿರುದ್ದ ಆತುರದ ಕ್ರಮಕೈಗೊಳ್ಳದಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶಿಸಿದೆ. ಬೆಂಗಳೂರಿನ ಕಬ್ಬನ್ ಪಾರ್ಕ್ ಠಾಣೆಯಲ್ಲಿ ದಾಖಲಾಗಿರುವ ದೂರು ಮತ್ತು ಎಫ್ಐಆರ್ ರದ್ದು ಕೋರಿ ರಿಕ್ಕಿ ರೈ ಸಲ್ಲಿಸಿದ್ದ ಅರ್ಜಿಯನ್ನು ಇತ್ತೀಚೆಗೆ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಮಧ್ಯಂತರ ಆದೇಶ ಮಾಡಿದೆ. ವಿಚಾರಣೆ ವೇಳೆ ವಾದ ಮಂಡಿಸಿದ ಅರ್ಜಿದಾರರ ಪರ ಹಿರಿಯ ವಕೀಲೆ ಲಕ್ಷ್ಮೀ ಐಯಂಗಾರ್, ಸಾರಿಗೆ ಪ್ರಾಧಿಕಾರ ಫ್ಯಾನ್ಸಿ ನಂಬರ್ ನೀಡಿರುವುದು ಮತ್ತು ಅದಕ್ಕೆ ರಿಕ್ಕಿ ಹಣ ಪಾವತಿಸಿರುವುದಕ್ಕೆ ಸಂಬಂಧಿಸಿದಂತೆ ದಾಖಲೆ ಇದೆ. ಆದ್ದರಿಂದ, ನಕಲಿ ಫ್ಯಾನ್ಸಿ ನಂಬರ್ ಪ್ಲೇಟ್ ಹಾಕಲಾಗಿದೆ ಎಂಬ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಫ್ಯಾನ್ಸಿ ನಂಬರ್ಗೆ ಅರ್ಜಿದಾರರು 4 ಲಕ್ಷ ರೂ. ಪಾವತಿಸಿದ್ದಾರೆ. ಅರ್ಜಿದಾರರಿಗೆ ಅನ್ವಯಿಸಿರುವ ಸೆಕ್ಷನ್ಗಳು ಊರ್ಜಿತವಾಗದು ಎಂದರು. ಮುಂದುವರಿದು, ರಸ್ತೆಯಲ್ಲಿ ಲ್ಯಾಂಬೊರ್ಗಿನಿ ಸದ್ದು ಮಾಡಿ ಹೋಗುತ್ತಿರುವಾಗ ಕಿರಿಕಿರಿಗೆ ಒಳಗಾದ ವ್ಯಕ್ತಿಯೊಬ್ಬರು ವಿಡಿಯೊ ರೆಕಾರ್ಡ್ ಮಾಡಿದ್ದಾರೆ. ಮೋಟಾರು ವಾಹನ (ಎಂವಿ) ಕಾಯ್ದೆ ಅಡಿ ಪ್ರಕರಣ ದಾಖಲಿಸಲಾಗಿದ್ದು, ನ್ಯಾಯಾಲಯಕ್ಕೆ ಹೋಗಿ ಅವರು ದಂಡ ಕಟ್ಟಲಿದ್ದಾರೆ. ಹೀಗಿರುವಾಗ, ಎರಡನೇ ಎಫ್ಐಆರ್ ದಾಖಲಿಸುವ ಅವಶ್ಯಕತೆ ಏನಿತ್ತು ಎಂದು ಆಕ್ಷೇಪಿಸಿದರು. ರಾಜ್ಯ ಹೆಚ್ಚುವರಿ ಸರ್ಕಾರಿ ಅಭಿಯೋಜಕ ಬಿ.ಎನ್. ಜಗದೀಶ್ ವಾದ ಮಂಡಿಸಿ, ಪ್ರಶ್ನಾರ್ಹ ಫ್ಯಾನ್ಸಿ ನಂಬರ್ ಅನ್ನು ಅರ್ಜಿದಾರರು ಖರೀದಿಸಿರುವ ವಾಹನಕ್ಕೆ ಅಧಿಕೃತವಾಗಿ ಹಂಚಿಕೆ ಮಾಡಲಾಗಿಲ್ಲ. ದೆಹಲಿಯಲ್ಲಿ ವಾಹನ ಖರೀದಿಸಿದ ಬಳಿಕ ಪುನಃ ನೋಂದಣಿ ಪ್ರಕ್ರಿಯೆಯನ್ನು ರಿಕ್ಕಿ ಬೆಂಗಳೂರಿನಲ್ಲಿ ಮಾಡಿಲ್ಲ. ಇಂಥ ನಂಬರ್ ಪ್ಲೇಟ್ಗಳ ಬಳಕೆಯು ವಂಚನೆ ಮತ್ತು ದಾಖಲೆ ತಿರುಚಿದ ಆರೋಪದ ಪ್ರಕರಣವಾಗುತ್ತದೆ ಎಂದರು. ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ, ಅರ್ಜಿದಾರರು ತನಿಖೆಗೆ ಸಹಕರಿಸಬೇಕು ಎಂಬ ಷರತ್ತಿಗೆ ಒಳಪಟ್ಟು ತನಿಖೆಯ ನೆಪದಲ್ಲಿ ಪೊಲೀಸರು ಅವರ ವಿರುದ್ಧ ಆತುರದ ಕ್ರಮಕೈಗೊಳ್ಳಬಾರದು ಎಂದು ಆದೇಶಿಸಿತಲ್ಲದೆ, ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿಗೊಳಿಸಿ, ತನಿಖಾ ದಾಖಲೆಗಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸುವಂತೆ ನಿರ್ದೇಶಿಸಿ, ವಿಚಾರಣೆ ಮುಂದೂಡಿತು.
ಪಿಡಿಒ ಕ್ಷೆೇಮಾಭಿವೃದ್ಧಿ ಸಂಘದ ನೂತನ ಅಧ್ಯಕ್ಷರಾಗಿ ದಿಲೀಪ್ ಕುಮಾರ್ ಆಯ್ಕೆ
ಬೆಂಗಳೂರು : ಕರ್ನಾಟಕ ರಾಜ್ಯ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ಮುಂದಿನ ಮೂರು ವರ್ಷಗಳ ಅವಧಿಯ ಪದಾಧಿಕಾರಿಗಳ ಆಯ್ಕೆಗೆ ನಡೆದ ಚುನಾವಣೆಯಲ್ಲಿ ಸಂಘದ ನೂತನ ಅಧ್ಯಕ್ಷರಾಗಿ ದಿಲೀಪ್ ಕುಮಾರ್ ಬಿ.ಎಂ. ಅವರು ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ರಿಯಾಝ್ ಕೆ. ಖಲೇಬ(ಸಾಮಾನ್ಯ) ಮತ್ತು ದೀಪಾ ಎನ್.(ಮಹಿಳಾ ಮೀಸಲು), ಸಾಮಾನ್ಯ ವಿಭಾಗದ ಉಪ ವಿಭಾಗವಾರು ಉಪಾಧ್ಯಕ್ಷರಾಗಿ ಅಂಜಿನಪ್ಪ ಆರ್.(ಬೆಂಗಳೂರು), ಚೇತನ್ ಎಚ್.ಎಂ.(ಮೈಸೂರು), ಬಸವರಾಜ ಎನ್.(ಕಲಬುರಗಿ), ಸಿದ್ಧಾರ್ಥ ಗೋಕೆ(ಬೆಳಗಾವಿ), ಮಹಿಳಾ ಮೀಸಲು ಕ್ಷೇತ್ರದ ಉಪ ವಿಭಾಗವಾರು ಉಪಾಧ್ಯಕ್ಷರಾಗಿ ಅನುಪಮಾ ಎಂ.(ಕಲಬುರಗಿ), ಕಾತ್ಯಾಯಿನಿ ಎಂ.ಕೆ.(ಬೆಂಗಳೂರು), ವಸಂತ ಎನ್.(ಮೈಸೂರು) ಮತ್ತು ಶಿವಲೀಲಾ ಅಂಗಡಿ (ಬೆಳಗಾವಿ) ಆಯ್ಕೆಯಾಗಿದ್ದಾರೆ. ಸಂಘದ ನಿಕಟಪೂರ್ವ ಅಧ್ಯಕ್ಷ ರಾಜು ವಾರದ, ಬೋರಯ್ಯ, ಉಪಾಧ್ಯಕ್ಷ ಖೂಬಾ ಸಿಂಗ್, ವಿವಿಧ ಜಿಲ್ಲಾ ಘಟಕಗಳ ಅಧ್ಯಕ್ಷರು, ರಾಜ್ಯ ಪರಿಷತ್ ಸದಸ್ಯರು ಮತ್ತು ಖಜಾಂಚಿಗಳು ಚುನಾವಣಾ ಪ್ರಕ್ರಿಯೆಯಲ್ಲಿ ಸಹಕರಿಸಿದರು. ಚುನಾವಣಾಧಿಕಾರಿಯಾಗಿ ರಘು ಆರ್. ಕಾರ್ಯನಿರ್ವಹಿಸಿದರು ಎಂದು ಪ್ರಕಟಣೆತಿಳಿಸಿದೆ.
ಮುಸ್ಲಿಮರ ಮೇಲೆ ಹಗೆ ಸಾಧನೆ ಆರೋಪ ಸುಳ್ಳು: ಡಿ.ಕೆ.ಶಿವಕುಮಾರ್
ಬೆಂಗಳೂರು : ‘ರಾಜ್ಯದಲ್ಲಿನ ಮುಸ್ಲಿಮ್ ಸಮುದಾಯದ ಮುಖಂಡರು ಹೈಕಮಾಂಡ್ ನಾಯಕರಿಗೆ ಪತ್ರ ಬರೆದು ‘ಸಮುದಾಯದ ಮೇಲೆ ಹಗೆ ಸಾಧಿಸಲಾಗುತ್ತಿದೆ’ ಎಂಬ ಆರೋಪದಲ್ಲಿ ಯಾವುದೇ ಹುರುಳಿಲ್ಲ. ಹಗೆ ಸಾಧಿಸಲಾಗುತ್ತಿದೆ ಎಂಬುದೆಲ್ಲ ಸುಳ್ಳು. ಯಾರೂ ಹಗೆ ಸಾಧಿಸುತ್ತಿಲ್ಲ. ಪಕ್ಷವು ಶಿಸ್ತು ಪಾಲನೆಗೆ ಆದ್ಯತೆ ನೀಡುತ್ತಿದೆ. ಎಲ್ಲರೂ ಶಿಸ್ತು ಅಳವಡಿಸಿಕೊಳ್ಳಬೇಕು’ ಎಂದು ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಿಸಿಎಂ ಡಿ.ಕೆ.ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ. ಮಂಗಳವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಬೇಸಿಗೆ ಹಿನ್ನೆಲೆಯಲ್ಲಿ ಬೆಂಗಳೂರು ನಗರದಲ್ಲಿ ನೀರಿನ ಸಮಸ್ಯೆ ನಿರ್ವಹಣೆ ವಿಚಾರವಾಗಿ ಈಗಾಗಲೇ ಬಿಡಬ್ಲ್ಯೂಎಸ್ಎಸ್ಬಿ ಅಧಿಕಾರಿಗಳ ಜತೆ ಚರ್ಚೆ ನಡೆಸಲಾಗಿದೆ. ಅಂತರ್ಜಲ ಹೆಚ್ಚಳದ ಬಗ್ಗೆ ಮಾತನಾಡಿದ್ದು, ಏನೇ ಸಮಸ್ಯೆ ಬಂದರೂ ನಾವು ಅದನ್ನು ಸಮರ್ಥವಾಗಿ ನಿಭಾಯಿಸುತ್ತೇವೆ ಎಂದು ಪ್ರಶ್ನೆಯೊಂದಕ್ಕೆ ಉತ್ತರ ನೀಡಿದರು.
ಸರಕಾರಿ ಆಸ್ಪತ್ರೆಯನ್ನು ಖಾಸಗಿಯವರಿಗೆ ನೀಡುವುದಾದರೆ ಆರೋಗ್ಯ ಇಲಾಖೆ ಯಾಕೆ: ಮುನೀರ್ ಕಾಟಿಪಳ್ಳ ಪ್ರಶ್ನೆ
ಮೂಡುಬಿದಿರೆ: ಸರಕಾರಿ ಆಸ್ಪತ್ರೆಯನ್ನು ಖಾಸಗಿ ಮೆಡಿಕಲ್ ಕಾಲೇಜಿಗಳಿಗೆ ಕೊಟ್ಟ ಬಳಿಕ ಸರಕಾರಿ ಆಸ್ಪತ್ರೆಯಲ್ಲಿ ಖಾಸಗಿ ಆಸ್ಪತ್ರೆಯಂತಹ ವ್ಯವಸ್ಥೆ ಸಿಗುತ್ತಿದೆ ಎಂದು ಸರಕಾರ ಹೇಳುತ್ತದೆ. ಸರಕಾರಿ ಆಸ್ಪತ್ರೆಯಲ್ಲಿ ಸುವ್ಯವಸ್ಥೆ ಮಾಡಲು ಸಾಧ್ಯವಾಗದೆ, ಖಾಸಗಿಯವರಿಗೆ ಕೊಡುವುದಾದರೆ ಆರೋಗ್ಯ ಇಲಾಖೆ ಯಾಕೆ, ಅದಕ್ಕೊಂದು ಸಚಿವರು ಇರುವುದು ಯಾಕೆ ಎಂದು ಸಿಪಿಐಎಂ ಪಕ್ಷದ ಜಿಲ್ಲಾ ಕಾರ್ಯದರ್ಶಿ ಮುನೀರ್ ಕಾಟಿಪಳ್ಳ ಪ್ರಶ್ನಿಸಿದ್ದಾರೆ. ಅವರು ಸುಸಜ್ಜಿತ ಸರ್ಕಾರಿ ಆಸ್ಪತ್ರೆ ಸ್ಥಾಪಿಸಬೇಕು ಮತ್ತು ಖಾಸಗಿ ಆಸ್ಪತ್ರೆಗಳೊಂದಿಗಿನ ಒಪ್ಪಂದವನ್ನು ರದ್ದುಪಡಿಸಬೇಕು ಎಂಬ ಪ್ರಮುಖ ಬೇಡಿಕೆಗಳೊಂದಿಗೆ ಭಾರತ ಕಮ್ಯುನಿಸ್ಟ್ ಪಕ್ಷ (ಸಿಪಿಐಎಂ) ನೇತೃತ್ವದಲ್ಲಿ ಮಂಗಳವಾರ ತಾಲೂಕು ಆಡಳಿತ ಸೌಧದ ಮುಂಭಾಗ ನಡೆಸಿದ ಬೃಹತ್ ಸಾಮೂಹಿಕ ಧರಣಿ ಸತ್ಯಾಗ್ರಹದಲ್ಲಿ ಅತಿಥಿಯಾಗಿ ಭಾಗವಹಿಸಿ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡುತ್ತಿದ್ದರು. ಮೂಡುಬಿದಿರೆ ತಾಲೂಕು ಎಂದು ಘೋಷಣೆಯಾಗಿ ಐದು ವರ್ಷಗಳು ಕಳೆದಿದ್ದರೂ, ಸುಸಜ್ಜಿತ ಸರ್ಕಾರಿ ಆಸ್ಪತ್ರೆಯ ಕೊರತೆ ಎದ್ದು ಕಾಣುತ್ತಿದೆ. ತಾಲೂಕು ಕೇಂದ್ರಕ್ಕೆ ಅಗತ್ಯವಿರುವ ಎಲ್ಲ ಸೌಲಭ್ಯಗಳು ಜನರಿಗೆ ಸಿಗಬೇಕಾದರೆ ಆರೋಗ್ಯ ಸೇವೆಯೂ ಅಷ್ಟೇ ಮುಖ್ಯವಾಗಿದೆ. ಈ ನಿಟ್ಟಿನಲ್ಲಿ ಸರ್ಕಾರ ಕೂಡಲೇ ಗಮನಹರಿಸಿ ತಾಲೂಕು ಮಟ್ಟದ ಆಸ್ಪತ್ರೆಯನ್ನು ಮಂಜೂರು ಮಾಡಬೇಕು. ಖಾಸಗಿಯವರಿಗೆ ಸರ್ಕಾರಿ ಆಸ್ಪತ್ರೆಯ ಜವಾಬ್ದಾರಿ ಕೊಡುವುದನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದರು. ಸ್ಥಳೀಯರು, ಮಹಿಳೆಯರು ಹಾಗೂ ವಿವಿಧ ಸಂಘಟನೆಗಳ ಪ್ರತಿನಿಧಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿ, ತಾಲೂಕಿನಲ್ಲಿ ಸಮರ್ಪಕ ವೈದ್ಯಕೀಯ ಸೌಲಭ್ಯಗಳ ಕೊರತೆಯಿಂದ ಜನರು ಎದುರಿಸುತ್ತಿರುವ ಸಂಕಷ್ಟವನ್ನು ಒತ್ತಿ ಹೇಳಿದರು. ಸಿಪಿಐ(ಎಂ) ಮುಖಂಡ ಯಾದವ ಶೆಟ್ಟಿ ಮಾತನಾಡಿ, ಮೂಡುಬಿದಿರೆ ತಾಲೂಕಾಗಿದ್ದರೂ ಜನರಿಗೆ ಮೂಲಭೂತ ಆರೋಗ್ಯ ಸೇವೆಗಳೇ ದೊರೆಯುತ್ತಿಲ್ಲ. ಸರ್ಕಾರ ತಕ್ಷಣ ಕ್ರಮ ಕೈಗೊಂಡು ಮುಂದಿನ ಬಜೆಟ್ನಲ್ಲಿ ಸಂಪೂರ್ಣ ಸೌಲಭ್ಯಗಳೊಂದಿಗೆ ಸರ್ಕಾರಿ ಆಸ್ಪತ್ರೆ ಘೋಷಿಸಬೇಕು ಎಂದು ಒತ್ತಾಯಿಸಿದರು. ಧರಣಿಯಲ್ಲಿ ತಾಲೂಕು ಸಮಿತಿ ಕಾರ್ಯದರ್ಶಿ ರಮಣಿ, ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯ ವಸಂತ ಆಚಾರಿ, ಸದಸ್ಯೆ ರಾಧಾ ಹಾಗೂ ಸಮಿತಿ ಸದಸ್ಯರಾದ ಗಿರಿಜಾ, ಶಂಕರ, ಲಕ್ಷ್ಮೀ, ಆದಿವಾಸಿ ಬುಡಕಟ್ಟು ಸಮುದಾಯದ ಅಧ್ಯಕ್ಷ ಕರಿಯ, ಮುಖಂಡ ಕೃಷ್ಣಪ್ಪ ಕೊಣಾಜೆ, ವಿವಿಧ ವಿಭಾಗಗಳ ಮುಖಂಡರು, ಕಾರ್ಯಕರ್ತರು ಭಾಗವಹಿಸಿದ್ದರು. ಧರಣಿಗೂ ಮುನ್ನ ಹಳೆ ಪೊಲೀಸ್ ಠಾಣೆ ಬಳಿಯಿಂದ ಮಿನಿ ವಿಧಾನ ಸೌಧದವರೆಗೆ ನಡೆದ ಮೆರವಣಿಗೆಯಲ್ಲಿ ನೂರಾರು ಮಂದಿ ಭಾಗವಹಿಸಿ ಘೋಷಣೆಗಳನ್ನು ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
LPG Gas: ಎಲ್ಪಿಜಿ ಕೊರತೆ ನೀಗಿಸಲು ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ; ಗ್ರಾಹಕರಿಗೆ ಸಿಗ್ತು ಭರ್ಜರಿ ಗುಡ್ ನ್ಯೂಸ್
PNG Gas: ಪಶ್ಚಿಮ ಏಷ್ಯಾದಲ್ಲಿನ ಭೌಗೋಳಿಕ ರಾಜಕೀಯ ಬಿಕ್ಕಟ್ಟಿನಿಂದಾಗಿ ಎಲ್ಪಿಜಿ ಪೂರೈಕೆಯಲ್ಲಿ ಉಂಟಾಗಿರುವ ವ್ಯತ್ಯಯವನ್ನು ಸರಿದೂಗಿಸಲು ಕೇಂದ್ರ ಸರ್ಕಾರವು ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ಭಾರತವು ಪೈಪ್ ಲೈನ್ ಮೂಲಕ ನೈಸರ್ಗಿಕ ಅನಿಲ (ಪಿಎನ್ಜಿ) ಪೂರೈಕೆ ವ್ಯವಸ್ಥೆಗೆ ಹೆಚ್ಚಿನ ವೇಗ ನೀಡಿದೆ. ಮಾರ್ಚ್ ತಿಂಗಳಿನಿಂದ ಈವರೆಗೆ 5.01 ಲಕ್ಷಕ್ಕೂ ಹೆಚ್ಚು ಮನೆಗಳಿಗೆ ಗ್ಯಾಸ್ ಸಂಪರ್ಕ ಕಲ್ಪಿಸಲಾಗಿದೆ. 5.68 ಲಕ್ಷಕ್ಕೂ
Hanur | ಕೆಸರಿನಲ್ಲಿ ಸಿಲುಕಿಕೊಂಡ ಆನೆ: ಸ್ಥಿತಿ ಗಂಭೀರ
ಹನೂರು, : ನೀರು ಕುಡಿಯಲು ಬಂದು ಕೆಸರಿನಲ್ಲಿ ಸಿಲುಕಿಕೊಂಡಿದ್ದ ಕಾಡಾನೆಗಳ ಪೈಕಿ ಒಂದು ಹೆಣ್ಣಾನೆ ಗಂಭೀರ ಸ್ಥಿತಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಎರಡು ದಿನಗಳಿಂದ ಚಿಕಿತ್ಸೆಗೆ ಸ್ಪಂದಿಸದೆ ನಿತ್ರಾಣಗೊಂಡಿದೆ. ಮಲೆ ಮಹದೇಶ್ವರ ವನ್ಯಜೀವಿಧಾಮ ಬಫರ್ ವಲಯದ ಉಡುತೊರೆ ಹಳ್ಳ ಜಲಾಶಯಕ್ಕೆ ಶನಿವಾರ ಸಂಜೆ ನಾಲ್ಕು ಕಾಡಾನೆಗಳು ಎಂದಿನಂತೆ ನೀರು ಕುಡಿಯಲು ಬಂದಿದ್ದವು. ಈ ವೇಳೆ ಅವುಗಳಲ್ಲಿ ಮೂರು ಆನೆಗಳು ಕೆಸರಿನಲ್ಲಿ ಸಿಲುಕಿಕೊಂಡಿದ್ದವು. ಮಾಹಿತಿ ತಿಳಿದ ತಕ್ಷಣ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿ, ಅಗ್ನಿಶಾಮಕ ದಳ ಹಾಗೂ ಅರಣ್ಯ ಸಿಬ್ಬಂದಿಗಳ ಸಹಕಾರದೊಂದಿಗೆ ರಕ್ಷಣಾ ಕಾರ್ಯಾಚರಣೆ ಕೈಗೊಂಡರು. ಸಿಲುಕಿಕೊಂಡಿದ್ದ ಮೂರು ಆನೆಗಳ ಪೈಕಿ ಎರಡು ಆನೆಗಳು ಚೇತರಿಸಿಕೊಂಡು ಕಾಡಿನತ್ತ ಮರಳಿವೆ. ಆದರೆ ಇನ್ನೊಂದು ಹೆಣ್ಣಾನೆ ತೀವ್ರವಾಗಿ ಅಸ್ವಸ್ಥಗೊಂಡಿದ್ದು, ನಾಗರಹೊಳೆ ಅರಣ್ಯ ಪ್ರದೇಶದ ಪಶುವೈದ್ಯಾಧಿಕಾರಿ ಡಾ. ರಮೇಶ್ ಅವರಿಂದ ನಿರಂತರ ಚಿಕಿತ್ಸೆ ನೀಡಲಾಗುತ್ತಿದೆ. ಸಾಕಾನೆ ‘ಮಹೇಂದ್ರ’ನ ಸಹಾಯದಿಂದ ಆನೆಯನ್ನು ಮೇಲೆಳಿಸಲು ಸಿಬ್ಬಂದಿಗಳು ಪ್ರಯತ್ನಿಸುತ್ತಿದ್ದಾರೆ.ಆನೆಗೆ ಇಷ್ಟವಾದ ಕಬ್ಬು, ಕಲ್ಲಂಗಡಿ ಸೇರಿದಂತೆ ವಿವಿಧ ಆಹಾರಗಳನ್ನು ಒದಗಿಸಲಾಗಿದ್ದರೂ, ಅದು ಸ್ಪಂದಿಸದೇ ಇರುವುದರಿಂದ ಆತಂಕ ಹೆಚ್ಚಾಗಿದೆ. ಬಿಸಿಲಿನ ತಾಪಮಾನ ಹೆಚ್ಚಿರುವ ಹಿನ್ನೆಲೆಯಲ್ಲಿ ಆನೆಗೆ ತೊಂದರೆಯಾಗದಂತೆ ಶಾಮಿಯಾನ ಹಾಕಿ ನೆರಳಿನ ವ್ಯವಸ್ಥೆಯನ್ನೂ ಮಾಡಲಾಗಿದೆ.ಅರಣ್ಯ ಇಲಾಖೆಯ ವಲಯ ಅರಣ್ಯಾಧಿಕಾರಿ ಜಿತೇಂದ್ರ, ಉಪವಲಯ ಅರಣ್ಯಾಧಿಕಾರಿಗಳಾದ ವಿನಾಯಕ, ದಿನೇಶ್ ಸೇರಿದಂತೆ ಅರಣ್ಯ ರಕ್ಷಕರು ಹಾಗೂ ಸಿಬ್ಬಂದಿಗಳು ಸ್ಥಳದಲ್ಲೇ ತಂಗಿ ಆನೆಯನ್ನು ರಕ್ಷಿಸಲು ನಿರಂತರ ಪ್ರಯತ್ನ ಮುಂದುವರಿಸಿದ್ದಾರೆ.
ಎ.24ಕ್ಕೆ ‘ದೇವದಾಸ ನ ಲೀಲಾ’ ತುಳು ಚಿತ್ರ ಬಿಡುಗಡೆ
ಉಡುಪಿ: ತೇಜೇಶ್ ಪೂಜಾರಿ ಅವರ ನಿರ್ದೇಶನದ ಎರಡನೇ ತುಳು ಚಲನಚಿತ್ರ ‘ದೇವದಾಸ್ ನ ಲೀಲಾ’ ಇದೇ ಎ.24ರಂದು ತುಳು ನಾಡಿನಾದ್ಯಂತ ಚಿತ್ರಮಂದಿರ ಹಾಗೂ ಮಾಲ್ಗಳಲ್ಲಿ ಬಿಡುಗಡೆಗೊಳ್ಳಲಿದೆ ಎಂದು ಚಿತ್ರದ ನಾಯಕ ನಟ ಎಲ್ಟನ್ ಜೆಫ್ ತಿಳಿಸಿದ್ದಾರೆ. ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಚಿತ್ರದಲ್ಲಿ ತೆಲಿಕೆದ ಬೊಳ್ಳಿ ದೇವದಾಸ್ ಕಾಪಿಕಾಡ್, ಅರವಿಂದ ಬೋಳಾರ್, ನವೀನ್ ಡಿ. ಪಡೀಲ್ ಅಭಿನಯಿಸಿದ್ದಾರೆ. ಅದ್ವಿತಿ ಶೆಟ್ಟಿ ಚಿತ್ರದ ನಾಯಕಿ. ಅಲ್ಲದೇ ಅನೂಪ್ ಸಾಗರ್, ಅನುಷಾ ರಾಜ್, ವಿನಾಯಕ್ ಜಪ್ಪು, ಶೈಲಶ್ರಿ ಮುಲ್ಕಿ, ರಾಧೇಶ್ ಶೆಣೈ, ತಿಮ್ಮಪ್ಪ ಕುಲಾಲ್ ಅಭಿನಯಿಸಿದ್ದಾರೆ ಎಂದರು. ಜಯಂತಿ ಪ್ರೊಡೆಕ್ಷನ್ ಪುಣೆ, ಡಿ.ಎಸ್.ಎಂಟರ್ಟೈನ್ಮೆಂಟ್, ಅಪ್ಸರಾ ಎಂಟರ್ಟೈನ್ಮೆಂಟ್ಸ್ನ ಸಹಭಾಗಿತ್ವದಲ್ಲಿ ತೇಜೇಶ್ ಪೂಜಾರಿ, ದೀಪಕ್ ಸಿಂಗ್ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಚಿತ್ರದ ಛಾಯಾಗ್ರಾಹಕರಾಗಿ ಸಂತೋಷ್ ಆಚಾರ್ಯ ಗುಂಪಲಾಂಜ್, ಸಂಕಲನಕಾರರಾಗಿ ಗಣೇಶ್ ನಿರ್ಚಲ್, ಸಂಗೀತ ನಿರ್ದೇಶಕರಾಗಿ ಸಾಯಿಷ್ ಭಾರದ್ವಾಜ್ ಹಾಗೂ ಪ್ಯಾಟ್ಸನ್ ಪಿರೇರಾ ಕಾರ್ಯನಿರ್ವಹಿಸಿದ್ದಾರೆ ಎಂದರು. ಚಿತ್ರಕ್ಕೆ ಮಂಗಳೂರು, ಮುಡಿಪು, ಬಜ್ವೆ ಹಾಗೂ ಬೆಂಗಳೂರಿನಲ್ಲಿ ಒಟ್ಟು 35 ದಿನಗಳ ಕಾಲ ಚಿತ್ರೀಕರಣ ನಡೆಸಲಾಗಿದೆ. ಮೊದಲ ಬಾರಿ ಶಾನ್ ಅವರು ತುಳುವಿನಲ್ಲಿ ಹಾಡು ಹಾಡಿದ್ದಾರೆ. ಇದೇ ಎ.24ಕ್ಕೆ ‘ದೇವ್ದಾಸ್ ನ ಲೀಲಾ’ ಜಿಲ್ಲೆಯ ಚಿತ್ರ ಮಂದಿರಗಳಲ್ಲಿ ಬಿಡುಗಡೆಗೊಳ್ಳಲಿದೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ನಿರ್ಮಾಪಕರಾದ ತೇಜೇಶ್ ಪೂಜಾರಿ, ದೀಪಕ್ ಸಿಂಗ್, ಅದ್ವಿತಿ ಶೆಟ್ಟಿ ಉಪಸ್ಥಿತರಿದ್ದರು.
Mysuru | ಕಬ್ಬಿನ ಹೆಚ್ಚುವರಿ ಹಣ ನೀಡುವಂತೆ ಒತ್ತಾಯಿಸಿ ಜಿಲ್ಲಾಧಿಕಾರಿ ಕಚೇರಿಗೆ ರೈತರಿಂದ ಮುತ್ತಿಗೆ
ಮೈಸೂರು : ರಾಜ್ಯ ಸರಕಾರ ನಿಗದಿ ಮಾಡಿರುವ ಕಬ್ಬು ಹೆಚ್ಚುವರಿ ಹಣವನ್ನು ರೈತರಿಗೆ ನೀಡಿಲ್ಲ ಎಂದು ಆರೋಪಿಸಿ ರೈತ ಮುಖಂಡರು ಮೈಸೂರು ಜಿಲ್ಲಾಧಿಕಾರಿ ಕಚೇರಿಗೆ ಮಂಗಳವಾರ ಮುತ್ತಿಗೆ ಹಾಕಿ ಪ್ರತಿಭಟನೆಗೆ ಯತ್ನಿಸಿದ್ದು ಪೊಲೀಸರು ತಡೆಯೊಡ್ಡಿದ್ದಾರೆ. ರಾಜ್ಯ ಸರಕಾರ ನಿಗದಿ ಮಾಡಿರುವ ಹೆಚ್ಚುವರಿ ಹಣ ನೂರು ರೂಪಾಯಿ ಕಬ್ಬು ಬೆಳೆಗಾರರಿಗೆ ಪಾವತಿ ಮಾಡಿಲ್ಲ ಎಂದು ಆರೋಪಿಸಿ ನೂರಾರು ರೈತರು ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ ರೈತರು ಒಳನುಗ್ಗಲು ಯತ್ನಿಸಿದಾಗ ಪೊಲೀಸರು ತಡೆದರು. ರೈತರು ಪೊಲೀಸರ ನಡುವೆ ತಳ್ಳಾಟ ನೂಕಾಟ ನಡೆಯಿತು. ನಂತರ ರೈತರು ಧರಣಿ ಮುಂದುವರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ರಾಜ್ಯ ಕಬ್ಬು ಬೆಳೆಗಾರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತ ಕುಮಾರ್ ಮಾತನಾಡಿದರು. ಚಳವಳಿಯಲ್ಲಿ ಅತ್ತಹಳ್ಳಿ ದೇವರಾಜ್, ಬರಡನಪುರ ನಾಗರಾಜ್, ಕಿರಗಸೂರು ಶಂಕರ್, ಮೂಕಳ್ಳಿ ಮಹದೇವಸ್ವಾಮಿ, ಪಟೇಲ್ ಶಿವಮೂರ್ತಿ, ಉಡಿಗಾಲ ರೇವಣ್ಣ, ಸೋಮಶೇಖರ್, ಮಾರ್ಬಳ್ಳಿ ನೀಲಕಂಠಪ್ಪ, ವರಕೋಡು ನಾಗೇಶ್, ಲಕ್ಷ್ಮೀಪುರ ವೆಂಕಟೇಶ್,, ಕುರುಬೂರು ಸಿದ್ದೇಶ್, ದೇವನೂರು ವಿಜಯೇಂದ್ರ, ಮಹದೇವಸ್ವಾಮಿ, ಕೆಂಡಗಣ್ಣಪ್ಪ, ನಾಗೇಶ್, ಕುರುಬೂರು ಪ್ರದೀಪ್, ಪ್ರಸಾದ್ ನಾಯಕ, ಗೌರಿಶಂಕರ್, ಗುರುಸ್ವಾಮಿ, ಅಂಬಳೆ ಮಂಜುನಾಥ್, ಪರಶಿವಮೂರ್ತಿ, ಸಾತಗಳ್ಳಿ ಬಸವರಾಜ, ಸುಂದರಪ್ಪ, ಸತೀಶ್, ದೇವನೂರು ಮಹಾದೇವಪ್ಪ, ರಂಗರಾಜು, ಕೆಂಡಗಣಸ್ವಾಮಿ, ಶಿವಸ್ವಾಮಿ, ರವಿಕುಮಾರ್, ನಂಜುಂಡಸ್ವಾಮಿ, ನಾಗೇಂದ್ರ, ಕಮಲಮ್ಮ ಮತ್ತಿತರ ರೈತರು ಭಾಗವಹಿಸಿದ್ದರು.
ಎ.25 ರಂದು ಮಲ್ಪೆಯಲ್ಲಿ ಆಳ್ವಾಸ್ ಕಾಲೇಜಿನಿಂದ ‘ಆಳ್ವಾಸ್ ರೀಚ್’
ಉಡುಪಿ: ಮೂಡಬಿದರೆಯ ಆಳ್ವಾಸ್ ಕಾಲೇಜಿನ ಸಮಾಜ ಕಾರ್ಯ ವಿಭಾಗವು, ಮಲ್ಪೆಯ ಟೀಮ್ ಈಶ್ವರ ಮಲ್ಪೆ ತಂಡದ ಸಹಯೋಗ ಹಾಗೂ ಸಮಾಜಕಾರ್ಯ ವಿಭಾಗದ ಹಳೆವಿದ್ಯಾರ್ಥಿ ಸಂಘದ ಸಹಕಾರದೊಂದಿಗೆ ಇದೇ ಎ.25ರಂದು ಶನಿವಾರ ಮಲ್ಪೆ ಕಡಲಕಿನಾರೆಯಲ್ಲಿ ‘ಆಳ್ವಾಸ್ ರೀಚ್-2026’ ಎಂಬ ರಾಷ್ಟ್ರೀಯ ಸಮಾವೇಶವನ್ನು ಆಯೋಜಿಸಿದೆ ಎಂದು ಸಮಾವೇಶದ ಸಂಯೋಜಕ ಸಮಾಜಕಾರ್ಯ ವಿಭಾಗದ ಪ್ರಾದ್ಯಾಪಕ ಕೃಷ್ಣಮೂರ್ತಿ ಬಿ. ತಿಳಿಸಿದ್ದಾರೆ. ಉಡುಪಿ ಪ್ರೆಸ್ಕ್ಲಬ್ನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ‘ಸೋಶಿಯಲ್ ವರ್ಕ್ ಫಾರ್ ಅಡ್ರೆಸಿಂಗ್ ಯೂತ್ ಎಟ್ ರಸ್ಕ್’ (ಅಪಾಯದಲ್ಲಿರುವ ಯುವಜನತೆಯ ಸಮಸ್ಯೆಗೆ ಸ್ಪಂಧಿಸುವಲ್ಲಿ ಸಮಾಜಕಾರ್ಯ) ಘೋಷವಾಕ್ಯದೊಂದಿಗೆ ಈ ಸಮಾವೇಶ ನಡೆಯಲಿದೆ ಎಂದರು. ಈ ಸಮಾವೇಶಕ್ಕೆ ಪೂರ್ವಭಾವಿಯಾಗಿ ಸಮಾಜಕಾರ್ಯ ವಿಭಾಗ ತನ್ನ ಬೆಳ್ಳಿಹಬ್ಬ ವರ್ಷಾಚರಣೆಯ ಪ್ರಯುಕ್ತ ಟೀಮ್ ಈಶ್ವರ್ ಮಲ್ಪೆ ತಂಡ ಮುಖ್ಯಸ್ಥರಾದ ಈಶ್ವರ ಮಲ್ಪೆ ಅವರನ್ನು ತನ್ನ ಬ್ರಾಂಡ್ ಅಂಬಾಸಿಡರ್ ಆಗಿ ನಿಯೋಜಿಸಿದೆ. ಎ.25ರಂದು ಬೆಳಗ್ಗೆ ರಾಜ್ಯದ ವಿವಿಧ ಪದವಿ ಕಾಲೇಜುಗಳ ವಿದ್ಯಾರ್ಥಿಗಳಿಗಾಗಿ ವಿವಿಧ ಸ್ಪರ್ಧೆಗಳು, ವಿಚಾರಗೋಷ್ಠಿ, ಜಾಗೃತಿ ಜಾಥಾ, ಸಾಧಕರಿಗೆ ಸನ್ಮಾನ ಹಾಗೂ ಸಾಂಸ್ಕೃತಿಕ ವೈವಿಧ್ಯ ಕಾರ್ಯಕ್ರಮಗಳನ್ನು ಆಯೋಜಿಸಿದೆ ಎಂದರು. ಸಮಾವೇಶದ ಉದ್ಘಾಟನೆ ಎ.25ರಂದು ಬೆಳಗ್ಗೆ 10:30ಕ್ಕೆ ಮಲ್ಪೆಯ ಸರಕಾರಿ ಪದವಿ ಪೂರ್ವ ಕಾಲೇಜಿನ ಸಭಾಂಗಣದಲ್ಲಿ ನಡೆಯಲಿದೆ. ಸಮಾರಂಭದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಕುರಿಯನ್, ಆಡಳಿತಾಧಿಕಾರಿ ಬಾಲಕೃಷ್ಣ ಶೆಟ್ಟಿ, ಈಶ್ವರ ಮಲ್ಪೆ ಹಾಗೂ ಇತರ ಗಣ್ಯರು ಉಪಸ್ಥಿತರಿರುವರು ಎಂದು ವಿವರಿಸಿದರು. ಬಳಿಕ ವಿವಿಧ ವಿಷಯಾಧಾರಿತ ವಿವಿಧ ಸ್ಪರ್ಧೆಗಳು ಕಾಲೇಜು ವಿದ್ಯಾರ್ಥಿ ಗಳಿಗಾಗಿ ನಡೆಯಲಿವೆ. ಸಂಜೆ 4:00ಗಂಟೆಗೆ ಜಾಗೃತಿ ಜಾಥಾ ಮಲ್ಪೆ ಜೂನಿಯರ್ ಕಾಲೇಜಿನಿಂದ ಮಲ್ಪೆ ಕಿನಾರೆಯ ಗಾಂಧಿ ಪ್ರತಿಮೆಯವರೆಗೆ ನಡೆಯಲಿದೆ. 5ಗಂಟೆಗೆ ಕಲಾವತಿ ದಯಾನಂದ ತಂಡದಿಂದ ಸುಗಮ ಸಂಗೀತ ಕಾರ್ಯಕ್ರಮವಿರುತ್ತದೆ ಎಂದರು. ಸಂಜೆ 6:30ರಿಂದ ಸಮಾರೋಪ ಸಮಾರಂಭ ಮಲ್ಪೆ ಕಡಲ ಕಿನಾರೆಯಲ್ಲಿ ನಡೆಯಲಿದೆ. ಇದರಲ್ಲಿ ನೂತನ ಅಂಬುಲೆನ್ಸ್ ವಾಹನವನ್ನು ಈಶ್ವರ ಮಲ್ಪೆ ತಂಡಕ್ಕೆ ಹಸ್ತಾಂತರ, ಸನ್ಮಾನ, ಸಮಾರೋಪ ನಂತರ ಗೋಳಿಯಂಗಡಿಯ ಕಲಾಶ್ರಿ ನಾಟ್ಯಾಲಯದಿಂದ ಸಾಂಸ್ಕೃತಿಕ ವೈವಿಧ್ಯ ನಡೆಯಲಿದೆ ಎಂದು ಕೃಷ್ಣಮೂತಿ ತಿಳಿಸಿದರು. ಸಮಾರೋಪ ಸಮಾರಂಭವು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಡಳಿತ ಟ್ರಸ್ಟಿ ವಿವೇಕ್ ಆಳ್ವ ಅಧ್ಯಕ್ಷತೆಯಲ್ಲಿ ನಡೆಯಲಿದೆ.ಇದರಲ್ಲಿ ಶಾಸಕ ಯಶಪಾಲ್ ಸುವರ್ಣ, ಉದ್ಯಮಿಗಳಾದ ಆನಂದ ಸಿ.ಕುಂದರ್, ಪ್ರಸಾದ್ರಾಜ್ ಕಾಂಚನ್, ರಘುಪತಿ ಭಟ್, ಸಾಮಾಜಿಕ ಕಾರ್ಯಕರ್ತ ಕೃಷ್ಣಮೂರ್ತಿ ಆಚಾರ್ ಹಾಗೂ ಇತರರು ಭಾಗವಹಿಸಲಿದ್ದಾರೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಆಳ್ವಾಸ್ ಕಾಲೇಜಿನ ಸಮಾಜಕಾರ್ಯ ವಿಭಾಗದ ಮುಖ್ಯಸ್ಥೆ ಡಾ.ಮಧುಮಾಲಾ ಕೆ., ಈಶ್ವರ ಮಲ್ಪೆ ಉಪಸ್ಥಿತರಿದ್ದರು.
ಬೆಂಗಳೂರಿನಲ್ಲಿ ‘ದಿ ಸ್ಟ್ಯಾಂಡರ್ಡ್'ನ ಹೊಸ ಜಾಗತಿಕ ಸಾಮರ್ಥ್ಯ ಕೇಂದ್ರ ಉದ್ಘಾಟನೆ
ರಾಜ್ಯದಲ್ಲಿನ ಉದ್ಯಮ ಸ್ನೇಹಿ ವ್ಯವಸ್ಥೆಯ ಸಾಮರ್ಥ್ಯಕ್ಕೆ ಇನ್ನೊಂದು ನಿದರ್ಶನ : ಪ್ರಿಯಾಂಕ್ ಖರ್ಗೆ
ಹೈದರಾಬಾದ್ ನಲ್ಲಿ ಅಭಿಷೇಕ್ ಶರ್ಮಾ ಒನ್ ಮ್ಯಾನ್ ಶೋ; ಅತ್ಯದ್ಭುತ ಇನ್ನಿಂಗ್ಸ್ ಗೆ ಕಂಗೆಟ್ಟ ಡೆಲ್ಲಿ ಕ್ಯಾಪಿಟಲ್ಸ್
ಅಭಿಷೇಕ್ ಶರ್ಮಾ ಅವರ ಅಜೇಯ ಶತಕ ಮತ್ತು ಇಶಾನ್ ಮಾಲಿಂಗ ಅವರ ಮಾರಕ ಬೌಲಿಂಗ್ ಸಹಾಯದಿಂದ ಸನ್ ರೈಸರ್ಸ್ ತಂಡ ನಿರಂತರ ಮೂರನೇ ಜಯ ದಾಖಲಿಸಿದೆ. ಬ್ಯಾಟರ್ ಗಳ ಮೇಲಾಟ ಕಂಡ ಪಂದ್ಯದಲ್ಲಿ ಇಶಾನ್ ಕಿಶನ್ ಬಳಗ ಅಕ್ಷರ್ ಪಟೇಲ್ ನೇತೃತ್ವದ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 47 ರನ್ ಗಳ ಭರ್ಜರಿ ಜಯ ದಾಖಲಿಸಿತು. ಈ ಗೆಲುವಿನೊಂದಿಗೆ ಸನ್ ರೈರರ್ಸ್ ಪಡೆ ಆಢಿದ 7 ಪಂದ್ಯಗಳಿಂದ 4 ಪಂದ್ಯ ಗೆದ್ದು 8 ಅಂಕಗಳನ್ನು ಕಲೆ ಹಾಕಿದ್ದು, ಯಲ್ಲಿ 3ನೇ ಸ್ಥಾನಕ್ಕೇರಿದೆ. ಹೈದರಾಬಾದ್ ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಏಪ್ರಿಲ್ 21ರ ಸೋಮವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಸನ್ ರೈಸರ್ಸ್ ಹೈದರಾಬಾದ್ ತಂಡ ನಿಗದಿತ 20 ಓವರ್ ಗಳಲ್ಲಿ 2 ವಿಕೆಟ್ ನಷ್ಟಕ್ಕೆ 242 ರನ್ ಗಳ ಬೃಹತ್ ಮೊತ್ತವನ್ನು ಪೇರಿಸಿತು. ಇದಕ್ಕೆ ಉತ್ತರವಾಗಿ ಸನ್ ರೈಸರ್ಸ್ ತಂಡ ಅಷ್ಟೇ ಓವರ್ ಗಳಲ್ಲಿ 9 ವಿಕೆಟ್ ಕಳೆದುಕೊಂಡು 195 ರನ್ ಗಳಿಸಲಷ್ಟೇ ಶಕ್ತವಾಯಿತು. ()
ಲೇಖಕಿ ವೈದೇಹಿಗೆ ‘ಕರ್ತೃತ್ವ ಸಮಗ್ರ ಸಮ್ಮಾನ್’ ಪ್ರಶಸ್ತಿ
ಉಡುಪಿ: ಸೂಕ್ಷ್ಮ ಸಂವೇದನೆಯ ಲೇಖಕರಿಗೆ ಕೋಲ್ಕತ್ತಾದ ಭಾರತೀಯ ಭಾಷಾ ಪರಿಷತ್ ನೀಡುವ ಪ್ರತಿಷ್ಠಿತ ‘ಕರ್ತೃತ್ವ ಸಮಗ್ರ ಸಮ್ಮಾನ್’ ಪ್ರಶಸ್ತಿಗೆ ಕನ್ನಡದ ಹಿರಿಯ ಲೇಖಕಿ ಹಾಗೂ ಸಾಹಿತಿ ವೈದೇಹಿ ಭಾಜನರಾಗಿದ್ದಾರೆ. ಪ್ರಶಸ್ತಿಯು ಒಂದು ಲಕ್ಷ ರೂ. ಗೌರವ ಧನದೊಂದಿಗೆ ಪದಕವನ್ನು ಒಳಗೊಂಡಿದೆ. ಪ್ರಶಸ್ತಿಯನ್ನು ಇದೇ ಮೇ ಒಂದರಂದು ಪ್ರಸಿದ್ಧ ಬಂಗಾಳಿ ಲೇಖಕ ರಾಮ್ಕುಮಾರ್ ಮುಖೋಪಾಧ್ಯಾಯ ಪ್ರದಾನ ಮಾಡಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
ಕ್ರಿಮಿನಲ್ ಪ್ರಕರಣ ಇರುವ ಕುಲಪತಿಯೊಂದಿಗೆ ವೇದಿಕೆ ಹಂಚಿಕೊಳ್ಳಬಾರದು: ಉಪರಾಷ್ಟ್ರಪತಿಗೆ ಬಿ.ಆರ್.ಪಾಟೀಲ್ ಆಗ್ರಹ
ಕಲಬುರಗಿ: ಕ್ರಿಮಿನಲ್ ಪ್ರಕರಣ ಇರುವ ಹಿನ್ನೆಲೆಯಲ್ಲಿ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಬಟ್ಟು ಸತ್ಯನಾರಾಯಣ ಅವರ ಜೊತೆ ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ ಅವರು ವೇದಿಕೆ ಹಂಚಿಕೊಳ್ಳಬಾರದು ಎಂದು ರಾಜ್ಯ ನೀತಿ ಮತ್ತು ಯೋಜನಾ ಆಯೋಗದ ಉಪಾಧ್ಯಕ್ಷ ಹಾಗೂ ಆಳಂದ ಶಾಸಕ ಬಿ.ಆರ್. ಪಾಟೀಲ್ ಆಗ್ರಹಿಸಿದ್ದಾರೆ. ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರೊ. ಬಟ್ಟು ಸತ್ಯನಾರಾಯಣ ವಿರುದ್ಧ ನರೋಣಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ದೋಷಾರೋಪಣಾ ಪಟ್ಟಿ ಸಹ ಸಲ್ಲಿಕೆಯಾಗಿದೆ. ಪ್ರಕರಣ ವಿಚಾರಣೆಯ ಹಂತದಲ್ಲಿರುವುದರಿಂದ ಇಂತಹ ವ್ಯಕ್ತಿಯೊಂದಿಗೆ ಉಪರಾಷ್ಟ್ರಪತಿಗಳು ವೇದಿಕೆ ಹಂಚಿಕೊಂಡರೆ ತಪ್ಪು ಸಂದೇಶ ಹೋಗಲಿದೆ ಎಂದು ಹೇಳಿದರು. ಸಿಯುಕೆ (ಕೇಂದ್ರೀಯ ವಿಶ್ವವಿದ್ಯಾಲಯ)ದಲ್ಲಿ ಸಿಬ್ಬಂದಿ, ಉಪನ್ಯಾಸಕರು ಹಾಗೂ ಪಿಆರ್ಒ ಸೇರಿದಂತೆ ವಿವಿಧ ಹುದ್ದೆಗಳ ನೇಮಕಾತಿಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪಗಳಿವೆ. ಮೆರಿಟ್ ಮತ್ತು ನಿಯಮಗಳನ್ನು ಪಾಲಿಸದೇ ನೇಮಕಾತಿ ನಡೆದಿದೆ. ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ನೇಮಕಾತಿ ಕುರಿತು ವರದಿ ನೀಡಲು ಸೂಚಿಸಿದ್ದರೂ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಅವರು ಆರೋಪಿಸಿದರು. ನೇಮಕಾತಿಯಲ್ಲಿ ಸಂವಿಧಾನದ 371(ಜೆ) ವಿಧಿಯನ್ನು ಪಾಲಿಸದೇ ಕನ್ನಡಿಗರು, ವಿಶೇಷವಾಗಿ ಕಲ್ಯಾಣ ಕರ್ನಾಟಕದವರಿಗೆ ಅವಕಾಶ ನೀಡಲಾಗುತ್ತಿಲ್ಲ. ಈ ಬಗ್ಗೆ ಹಲವಾರು ಬಾರಿ ಗಮನ ಸೆಳೆದರೂ ವಿಶ್ವವಿದ್ಯಾಲಯ ತನ್ನ ನಡೆ ಬದಲಿಸಿಕೊಳ್ಳದೇ ಅನ್ಯಾಯ ಮುಂದುವರಿಸಿದೆ ಎಂದು ಬಿ.ಆರ್. ಪಾಟೀಲ್ ಅಸಮಾಧಾನ ವ್ಯಕ್ತಪಡಿಸಿದರು. ಶಿಷ್ಟಾಚಾರ ಉಲ್ಲಂಘನೆ ಆರೋಪ : ಬುಧವಾರ ನಡೆಯಲಿರುವ ಸಿಯುಕೆ ಘಟಿಕೋತ್ಸವದ ಆಹ್ವಾನ ಪತ್ರಿಕೆಯಲ್ಲಿ ಶಿಷ್ಟಾಚಾರ ಉಲ್ಲಂಘನೆಯಾಗಿದೆ. ಬೀದರ್ ಸಂಸದ ಸಾಗರ ಖಂಡ್ರೆ, ಸ್ಥಳೀಯ ಶಾಸಕ ಹಾಗೂ ರಾಜ್ಯಸಭಾ ಸದಸ್ಯ ಮಲ್ಲಿಕಾರ್ಜುನ ಖರ್ಗೆ ಅವರ ಹೆಸರುಗಳನ್ನು ಸೇರಿಸದೇ, ನಿಯಮಗಳಿಗೆ ವಿರುದ್ಧವಾಗಿ ಆಹ್ವಾನ ಪತ್ರಿಕೆ ಮುದ್ರಿಸಲಾಗಿದೆ ಎಂದು ಅವರು ಖಂಡಿಸಿದರು.
ಅಬ್ದುಲ್ ಜಬ್ಬಾರ್, ನಸೀರ್ ಅಹ್ಮದ್ ವಿರುದ್ಧ ಕ್ರಮ; ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಹೇಳಿದ್ದೇನು?
ದಾವಣಗೆರೆ : ಒಂದು ಪಕ್ಷದಲ್ಲಿ ಒಂದು ಸಿದ್ಧಾಂತ, ನೈತಿಕತೆ ಇರುತ್ತದೆ. ಪಕ್ಷ ಒಂದು ನಿರ್ಧಾರ ತೆಗೆದುಕೊಂಡರೆ ಅದಕ್ಕೆ ಒಂದು ಕಾರಣವಿರುತ್ತದೆ ಎಂದು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ತಿಳಿಸಿದ್ದಾರೆ. ಮಂಗಳವಾರ ಸುದ್ದಿಗೋಷ್ಠಿಯಲ್ಲಿ, ಪರಿಷತ್ ಸದಸ್ಯ ಅಬ್ದುಲ್ ಜಬ್ಬಾರ್ ಮತ್ತು ಮುಖ್ಯಮಂತ್ರಿ ಕಾರ್ಯದರ್ಶಿ ನಸೀರ್ ಅಹ್ಮದ್ ವಿರುದ್ಧದ ಪಕ್ಷದ ಕ್ರಮಕ್ಕೆ ಅವರು ಪ್ರತಿಕ್ರಿಯೆ ನೀಡಿದರು. ಕೆಪಿಸಿಸಿ, ಎಐಸಿಸಿ ಮಟ್ಟದಲ್ಲಿ ಎಲ್ಲ ರೀತಿಯ ಪ್ರತಿಕ್ರಿಯೆ ತೆಗೆದುಕೊಂಡು, ಚುನಾವಣೆಯಲ್ಲಿ ಯಾರು ಯಾವ ರೀತಿ ಕೆಲಸ ಮಾಡಿದ್ದಾರೆ, ಇಷ್ಟು ವರ್ಷ ಏನೇನಾಗಿದೆ ಎಂದು ಕೂಲಂಕಷವಾಗಿ ಪರಿಶೀಲಿಸಿ ಒಂದು ನಿರ್ಧಾರ ತೆಗೆದುಕೊಳ್ಳುತ್ತಿದ್ದಾರೆ. ಆದ್ದರಿಂದ ಕಾಂಗ್ರೆಸ್ ಒಂದು ಶಿಸ್ತುಬದ್ಧವಾದ ಪಕ್ಷ ಅಂತ ಎಲ್ಲರಿಗೂ ಈಗ ಗೊತ್ತಾಗುತ್ತದೆ ಎಂದರು. ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ ಅವರನ್ನು ಗೆಲ್ಲಿಸಿ ಎಂದು ಶಾಮನೂರು ಶಿವಶಂಕರಪ್ಪ ಹೇಳಿದ್ದರು, ಆದರೆ ಪಕ್ಷ ಅವರ ವಿರುದ್ಧ ಕ್ರಮ ತೆಗೆದುಕೊಳ್ಳಲಿಲ್ಲ, ನಾವು ಟಿಕೆಟ್ ಕೇಳಿದ್ದಕ್ಕೆ ಕ್ರಮ ಏಕೆ ಎಂದು ಮುಸ್ಲಿಮ್ ನಾಯಕರು ಪ್ರಶ್ನಿಸಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ಪ್ರಭಾ, ‘ಶಾಮನೂರು ಶಿವಶಂಕರಪ್ಪ ಅವರು ಶಿವಮೊಗ್ಗದಲ್ಲಿ ನಡೆದ ಅಖಿಲ ಭಾರತ ಮಹಾಸಭಾ ಸಭೆಯಲ್ಲಿ ಪಾಲ್ಗೊಂಡಿದ್ದರು. ಬಿ.ವೈ.ರಾಘವೇಂದ್ರ ಅವರು ಉಪಸ್ಥಿತರಿದ್ದರು. ರಾಘವೇಂದ್ರ ಅವರು ಒಳ್ಳೆಯ ಕೆಲಸ ಮಾಡಿದ್ದಾರೆ ಎಂದು ಅಷ್ಟೇ ಹೇಳಿದ್ದಾರೆ. ಅಪ್ಪಾಜಿಯವರು ಅಥವಾ ನಾನು ಮಾತನಾಡಿರುವುದಿರಬಹುದು. ಎಲ್ಲವನ್ನೂ ಪರಿಶೀಲಿಸಿ ಒಂದು ನಿರ್ಧಾರ ತೆಗೆದುಕೊಳ್ಳುತ್ತಾರೆ’ ಎಂದು ತಿಳಿಸಿದರು. ಸಮರ್ಥ್ ಗೆಲುವು ನಿಶ್ಚಿತ : ನಮಗೆ ಏನೂ ಒತ್ತಡ ಇಲ್ಲ. ಜನರು ಯಾವತ್ತೂ ಕಾಂಗ್ರೆಸ್ ಪಕ್ಷದ ಪರವಾಗಿದ್ದಾರೆ. ಒಳ್ಳೆಯ ಬಹುಮತದಿಂದ ಸಮರ್ಥ್ ಗೆಲ್ಲುತ್ತಾರೆ. ಮೇ 4ರಂದು ಗೊತ್ತಾಗಲಿದ್ದು, ಸಮರ್ಥ್ ಗೆದ್ದೇ ಗೆಲ್ಲುತ್ತಾರೆ ಅಂತ ನಮಗೆ ಸಂಪೂರ್ಣ ವಿಶ್ವಾಸವಿದೆ ಎಂದು ಸಂಸದೆ ಪ್ರಭಾ ತಿಳಿಸಿದರು.
ಬಸವಣ್ಣ ಸಾಮಾಜಿಕ ಕ್ರಾಂತಿಯ ಹರಿಕಾರರು: ನಿಂಗಣ್ಣ ಹುಳಗೋಳಕರ್
ಹೊಸಪೇಟೆ | ಬಿ ಖಾತವನ್ನು ಏ ಖಾತಾ ಮಾಡಲು ವಿಳಂಬ: ಜಿಲ್ಲಾ ಪ್ರಜಾ ಜಾಗೃತಿ ವೇದಿಕೆಯಿಂದ ಮನವಿ
ಹೊಸಪೇಟೆ : ನಗರದಲ್ಲಿ ವಿಜಯನಗರ ಜಿಲ್ಲಾ ಪ್ರಜಾ ಜಾಗೃತಿ ವೇದಿಕೆ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿ, ಅದನ್ನು ಮುಖ್ಯಮಂತ್ರಿ, ಕಂದಾಯ ಸಚಿವರು ಹಾಗೂ ನಗರಾಭಿವೃದ್ಧಿ ಸಚಿವರಿಗೆ ರವಾನಿಸಲು ಒತ್ತಾಯಿಸಲಾಯಿತು. ಕರ್ನಾಟಕ ರಾಜ್ಯದ ನಗರ ಪ್ರದೇಶಗಳಲ್ಲಿನ ನಿವೇಶನಗಳಿಗೆ ಒಂದು ಬಾರಿ ದುಪ್ಪಟ್ಟು ತೆರಿಗೆ ಪಾವತಿಸಿಕೊಂಡು ಈಗಾಗಲೇ ಫಾರ್ಮ್ ನಂ.3 (ಬಿ ಖಾತ) ನೀಡಿರುವುದು ತಿಳಿದ ಸಂಗತಿಯಾಗಿದೆ. ಇತ್ತೀಚೆಗೆ ರಾಜ್ಯ ಸರ್ಕಾರ ಬಿ ಖಾತವನ್ನು ಏ ಖಾತಾ ಮಾಡಿಕೊಡುವ ಕುರಿತು ಮಹತ್ವದ ಆದೇಶ ಹೊರಡಿಸಿತ್ತು. ಆದರೆ, ನಗರದಲ್ಲಿ ಈ ಆದೇಶ ಸಮರ್ಪಕವಾಗಿ ಜಾರಿಯಾಗಿಲ್ಲ ಎಂದು ವೇದಿಕೆ ಆರೋಪಿಸಿದೆ. ಹೊಸಪೇಟೆ ಶಾಸಕ ಗವಿಯಪ್ಪ ಹಾಗೂ ನಗರಸಭೆ ಆಯುಕ್ತರು ಈ ಯೋಜನೆಗೆ ಚಾಲನೆ ನೀಡಿದರೂ, ಮೂರು-ನಾಲ್ಕು ತಿಂಗಳು ಕಳೆದರೂ ಬಿ ಖಾತವನ್ನು ಏ ಖಾತಾ ಮಾಡುವ ಪ್ರಕ್ರಿಯೆ ಆರಂಭವಾಗಿಲ್ಲ. ಮೇಲಾಗಿ, ಸಾರ್ವಜನಿಕರಿಂದ ಅನಗತ್ಯ ದಾಖಲೆಗಳನ್ನು ಕೇಳಿ ತೊಂದರೆ ನೀಡಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಹೊರಡಿಸಿದ ಆದೇಶದ ಪ್ರಕಾರ, ಪ್ರಸ್ತುತ ಇರುವ ಫಾರ್ಮ್ ನಂ.3 ಅನ್ನು ಆಸ್ತಿ ತೆರಿಗೆ ಪಾವತಿ ಮಾಡಿದ ಕೂಡಲೇ ನವೀಕರಿಸಿ, ನಿವೇಶನದಾರರ ಮೊಬೈಲ್ಗೆ ಕಳುಹಿಸುವ ವ್ಯವಸ್ಥೆ ಇರಬೇಕು. ಜೊತೆಗೆ, ಹಾರ್ಡ್ ಕಾಪಿಯನ್ನು ಪೋಸ್ಟ್ ಮೂಲಕ ಮನೆ ವಿಳಾಸಕ್ಕೆ ತಲುಪಿಸುವ ವ್ಯವಸ್ಥೆಯನ್ನು ಕೂಡ ತಕ್ಷಣ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು. ಆದ್ದರಿಂದ, ಬಿ ಖಾತ ಹೊಂದಿರುವ ಎಲ್ಲಾ ನಿವೇಶನದಾರರಿಗೆ ತಕ್ಷಣವೇ ಏ ಖಾತಾದ ಫಾರ್ಮ್ ನಂ.3 ನೀಡಬೇಕು. ಇಲ್ಲದಿದ್ದರೆ, ಒಂದು ವಾರದೊಳಗೆ ಕ್ರಮ ಕೈಗೊಳ್ಳದಿದ್ದಲ್ಲಿ ಉಗ್ರ ಹೋರಾಟಕ್ಕೆ ಮುಂದಾಗುವುದಾಗಿ ವೇದಿಕೆ ಎಚ್ಚರಿಸಿದೆ. ಈ ಸಂದರ್ಭದಲ್ಲಿ ವೇದಿಕೆಯ ಅಧ್ಯಕ್ಷ ಯು.ಆಂಜನೇಯಲು, ಕಾರ್ಯದರ್ಶಿಗಳಾದ ಯಮುನೇಶ್, ಉಮಾಮಹೇಶ್ವರ, ಎಸ್.ಎಂ.ಬಾಷಾ, ನಾಗಲಿಂಗಪ್ಪ, ಶಂಕ್ರಪ್ಪ, ಪಂಪಣ್ಣ, ರಾಮಲಿ, ನಜೀರ್ ಅಹ್ಮದ್, ಲಕ್ಷ್ಮಣ, ರಾಜಶೇಖರ್, ನೀಲಕಂಠಪ್ಪ, ಪ್ರಶಾಂತ್, ಎಸ್. ತಿಪ್ಪೇಸ್ವಾಮಿ, ಹಳ್ಳೂರ, ಸಂಘಟನಾ ಕಾರ್ಯದರ್ಶಿ ಎ.ಎಂ. ಬಸವರಾಜ್, ಕೆ.ಎಂ.ಕೊಟ್ರಯ್ಯ ಸೇರಿದಂತೆ ಹಲವರು ಉಪಸ್ಥಿತರಿದ್ದರು.
Kotturu | ಅದ್ದೂರಿಯಾಗಿ ಜರುಗಿದ ಮರಳುಸಿದ್ದೇಶ್ವರ ಮಹಾ ರಥೋತ್ಸವ
ಕೊಟ್ಟೂರು : ಭಾವೈಕ್ಯತೆ, ಸಹಿಷ್ಣುತೆ ಮತ್ತು ಸೌಹಾರ್ದವನ್ನು ಸಾರುವ ಉಜ್ಜಯನಿ ಸ್ವಾಮಿಯ ಮಹಾ ರಥೋತ್ಸವ ಎ. 21ರಂದು ಸಂಜೆ 5 ಗಂಟೆಯ ನಂತರ ಲಕ್ಷಾಂತರ ಭಕ್ತರ ಭಾಗವಹಿಸುವಿಕೆಯಲ್ಲಿ ವೈಭವದಿಂದ ನೆರವೇರಿತು. 50ಕ್ಕೂ ಹೆಚ್ಚು ಅಡಿ ಎತ್ತರದ ವರ್ಣರಂಜಿತ ಭವ್ಯ ರಥೋತ್ಸವಕ್ಕೆ ವಿವಿಧ ಕಲಾ ಮೇಳಗಳು ಮತ್ತಷ್ಟು ಕಳೆ ತಂದವು. ನಾಡಿನೆಲ್ಲೆಡೆಯಿಂದ ಭಕ್ತರು ಪಾದಯಾತ್ರೆ ಹಾಗೂ ವಾಹನಗಳ ಮೂಲಕ ಉಜ್ಜಯನಿ ಗ್ರಾಮಕ್ಕೆ ಆಗಮಿಸುತ್ತಿದ್ದಾರೆ. ರಥೋತ್ಸವದ ಎರಡನೇ ದಿನವಾದ ಎ.22ರಂದು ಶಿಖರ ತೈಲಾಭಿಷೇಕ ಕಾರ್ಯಕ್ರಮ ನಡೆಯಲಿದೆ. ಭಕ್ತರ ಸೌಕರ್ಯಕ್ಕಾಗಿ ಪೀಠದಿಂದ ಹೈಸ್ಕೂಲ್ ಮೈದಾನದಲ್ಲಿ 25ಕ್ಕೂ ಹೆಚ್ಚು ಪ್ರಸಾದ ಕೌಂಟರ್ಗಳನ್ನು ತೆರೆಯಲಾಗಿದ್ದು, ಸಾವಿರಾರು ಜನರಿಗೆ ನಿರಂತರ ಅನ್ನದಾನ ವ್ಯವಸ್ಥೆ ಕಲ್ಪಿಸಲಾಗಿದೆ. ಮಹಾರಥೋತ್ಸವದ ಹಿನ್ನೆಲೆ ಭಾರೀ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದ್ದು, ಇಬ್ಬರು ಡಿವೈಎಸ್ಪಿ, 10 ಸಿಪಿಐ, 20 ಪಿಎಸ್ಐ, 300ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ಹಾಗೂ 200ಕ್ಕೂ ಹೆಚ್ಚು ಹೋಂಗಾರ್ಡ್ಸ್ ನಿಯೋಜಿಸಲಾಗಿದೆ ಎಂದು ತಿಳಿದುಬಂದಿದೆ. ಉಜ್ಜಯನಿ ಸದ್ಧರ್ಮ ಪೀಠದ ಜಗದ್ಗುರು ಸಿದ್ದಲಿಂಗ ರಾಜದೇಶೀಕೇಂದ್ರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಜಾತ್ರೆಯು ಧಾರ್ಮಿಕ ಹಾಗೂ ಸಾಮಾಜಿಕ ಮೌಲ್ಯಗಳನ್ನು ಬಲಪಡಿಸುವ ಉದ್ದೇಶದಿಂದ ಆಯೋಜಿಸಲಾಗುತ್ತಿದ್ದು, ಲಕ್ಷಾಂತರ ಭಕ್ತರ ಆಗಮನಕ್ಕೆ ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ ಎಂದರು. ಪ್ರಸಾದ ಸೇವನೆ ಮಂಗಳವಾರ ಬೆಳಗ್ಗೆ 9 ಗಂಟೆಯಿಂದ ಆರಂಭಗೊಂಡಿದ್ದು, ಬೂಂದಿ ಲಾಡು, ರೊಟ್ಟಿ, ವಿವಿಧ ಪಲ್ಯಗಳು ಮತ್ತು ಚಟ್ನಿಗಳ ವ್ಯವಸ್ಥೆ ಮಾಡಲಾಗಿದೆ. ಹರಪನಹಳ್ಳಿ ಭಕ್ತರು 1 ಟನ್ ಬೂಂದಿ ಲಾಡುಗಳನ್ನು ಪೀಠಕ್ಕೆ ಸಮರ್ಪಿಸಿದ್ದು, 25 ಸಾವಿರಕ್ಕೂ ಹೆಚ್ಚು ರೊಟ್ಟೆಗಳನ್ನು ಗ್ರಾಮೀಣ ಮಹಿಳೆಯರು ಸಿದ್ಧಗೊಳಿಸಿ ಅರ್ಪಿಸಿದ್ದಾರೆ.
Chikkamagaluru | ಕಾರ್ಮಿಕ ಬಬಿನ್ ನಾಪತ್ತೆ ಪ್ರಕರಣ; ಕೊಲೆ ಮಾಡಿ ಸಾಕ್ಷ್ಯನಾಶ ಆರೋಪ: ತನಿಖೆಗೆ ಒತ್ತಾಯ
ಚಿಕ್ಕಮಗಳೂರು : ಕೊಲೆ ಮಾಡಿ ಸಾಕ್ಷ್ಯನಾಶ ಮಾಡಲು ಯತ್ನಿಸಿದ ಪ್ರಕರಣ ಬೆಳಕಿಗೆ ಬಂದಿದ್ದು, ಈ ಸಂಬಂಧ ನರಸಿಂಹರಾಜಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಾರ್ಟಿನ್ ಎಂಬವರು ನೀಡಿದ ದೂರಿನನ್ವಯ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಬಬಿನ್ ಎಂಬಾತ 15 ವರ್ಷಗಳ ಹಿಂದೆ ತನ್ನ ತಂದೆ ತಾಯಿಯೊಂದಿಗೆ ಕೇರಳದಿಂದ ಬಂದು ಸಿಂಸೆಯಲ್ಲಿ ವಾಸವಾಗಿದ್ದ. ರಬ್ಬರ್ ಟ್ಯಾಪಿಂಗ್ ಮತ್ತು ಪೈಂಟಿಂಗ್ ಕೆಲಸ ಮಾಡಿಕೊಂಡಿದ್ದನು. ಬಬಿನ್ ಮದ್ಯವ್ಯಸನಿಯಾಗಿದ್ದು, ಮಾರ್ಟಿನ್ ಅವರಿಗೆ ಪರಿಚಯವಿರುವ ಅರಳಿಕೊಪ್ಪ ಗ್ರಾಮದ ಎಲ್ದೋ ಅವರೊಂದಿಗೆ ತೋಟದಲ್ಲಿ ಕೆಲಸ ಮಾಡಿಕೊಂಡು ಅಲ್ಲಿಯೇ ವಾಸವಿದ್ದ. ಎಲ್ದೋ ಸಹ ಮದ್ಯವ್ಯಸನಿಯಾಗಿದ್ದು, ಅವರ ತೋಟದ ಮನೆಯಲ್ಲಿ ವಾಸವಿದ್ದು, ಒಂದು ತಿಂಗಳ ಹಿಂದೆ ಮಾ.5ರಂದು ಬಬಿನ್ ಕಣ್ಮರೆಯಾಗಿದ್ದ. ಸಂಬಂಧಿಕರು ಕೇರಳಕ್ಕೆ ತೆರಳಿರಬಹುದು ಎಂದು ಭಾವಿಸಿದ್ದರು. ಬಬಿನ್ ತಂದೆ ದೇವಸಿಕುಟ್ಟಿ ಒಂದು ವಾರದ ಹಿಂದೆ ಮಾರ್ಟಿನ್ಗೆ ದೂರವಾಣಿ ಕರೆ ಮಾಡಿ ಬಬಿನ್ ದೂರವಾಣಿ ಕರೆ ಮಾಡುತ್ತಿಲ್ಲ, ಊರಿಗೂ ಬಂದಿಲ್ಲ. ಎಲ್ಲಿದ್ದಾನೆಂದು ವಿಚಾರ ಮಾಡಿ ತಿಳಿಸುವಂತೆ ಕೇಳಿದ್ದಾರೆ. ಬಬಿನ್ ಕಣ್ಮರೆಯಾಗಿದ್ದರಿಂದ ಮಾರ್ಟಿನ್ ಬಬಿನ್ ವಾಸವಿದ್ದ ಎಲ್ದೋ ಅವರ ಮನೆಗೆ ತೆರಳಿದ್ದ ಸಂದರ್ಭದಲ್ಲಿ ಎಲ್ದೋ ಮನೆಯಲ್ಲಿರುವುದಿಲ್ಲ. ಅವರ ತಂದೆ ಅವರಚ್ಚನ್ ಅವರನ್ನು ಭೇಟಿ ಮಾಡಿ ಎಲ್ದೋ ಬಗ್ಗೆ ವಿಚಾರ ಮಾಡಿದಾಗ ಒಂದು ತಿಂಗಳ ಹಿಂದೆ ಎಲ್ದೋ ಅವರನ್ನು ಬೆಂಗಳೂರಿನಲ್ಲಿರುವ ಮದ್ಯವ್ಯಸನ ಮುಕ್ತ ಕೇಂದ್ರಕ್ಕೆ ಪರಿಚಯಸ್ಥರೊಬ್ಬರು ಕಳಿಸಿದ್ದಾರೆಂದು ತಿಳಿಸಿದ್ದಾರೆ. ಎಲ್ದೋ ತೋಟದಲ್ಲಿ ಕೆಲಸ ಮಾಡುತ್ತಿದ್ದ ಬಬಿನ್ ಬಗ್ಗೆ ವಿಚಾರಿಸಿದಾಗ ತಮಗೆ ತಿಳಿದಿಲ್ಲವೆಂದು ತಿಳಿಸಿದ್ದಾರೆ. ಎಲ್ದೋ ಮದ್ಯವಸನ ಮುಕ್ತ ಕೇಂದ್ರ ಹೋಗಿರುವ ಸಮಯ ಮತ್ತು ಬಬಿನ್ ಕಾಣೆಯಾದ ಸಮಯ ಒಂದೇ ಆಗಿದ್ದರಿಂದ ಅನುಮಾನಗೊಂಡ ಮಾರ್ಟಿನ್, ಬಿನು, ಗ್ರಾಮಸ್ಥರಾದ ರಾಜೇಶ್, ವಿಲ್ಸನ್, ಶಿಬು, ವಿಜೇಶ್, ರಾಫೆಲ್ ಹಾಗೂ ಬೇಬಿ ಅವರು ಸೇರಿ ಎಲ್ದೋ ತೋಟದಲ್ಲಿ ಹುಡುಕುತ್ತಿದ್ದಾಗ ಬಬಿನ್ ಧರಿಸಿದ್ದ ಜರ್ಕಿನ್ ಎಲ್ದೋ ಅವರ ಮನೆ ಪಕ್ಕದಲ್ಲಿ ಸಿಕ್ಕಿದೆ. ತೋಟದ ಅಲ್ಲಲ್ಲಿ ಮೂಳೆಗಳು ಬಿದ್ದಿರುವುದು ಕಂಡು ಬಂದಿದೆ. ತೋಟದಲ್ಲಿ ಒಂದು ಗುಂಡಿ ಕಾಣಿಸಿದ್ದು ಅಲ್ಲಿ ಮನುಷ್ಯನ ತಲೆಬುರುಡೆ, ಮೂಳೆ, ಕೊಲೆ ಮಾಡಿ ಸುಟ್ಟು ಹಾಕಿರುವುದು ಕಂಡು ಬಂದಿದೆ. ಗುಂಡಿಯ ಸುತ್ತ ರಬ್ಬರ್ ಗಿಡಗಳು ಕಾಫಿಗಿಡಗಳ ಎಲೆಗಳು ಸುಟ್ಟು ಹೋಗಿರುವುದು ಕಂಡು ಬಂದಿದೆ. ವ್ಯಕ್ತಿಯನ್ನು ಕೊಲೆ ಮಾಡಿ ಸುಟ್ಟು ಹಾಕಿ ಸಾಕ್ಷ್ಯನಾಶ ಪಡಿಸಲು ಅದರ ಮೇಲೆ ತೆಂಗಿನ ಗರಿಗಳನ್ನು ಹಾಕಿರುವುದು ಕಂಡು ಬಂದಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಎಲ್ದೋ ಅವರ ಜತೆ ಕೆಲಸ ಮಾಡುತ್ತಿದ್ದ ಬಬಿನ್ ಒಂದೂವರೆ ತಿಂಗಳಿಂದ ಕಾಣೆಯಾಗಿದ್ದು, ಎಲ್ದೋ ಅವರು ಮದ್ಯ ವ್ಯಸನ ಮುಕ್ತ ಕೇಂದ್ರಕ್ಕೆ ತೆರಳಿದ್ದು ಬಬಿನ್ನನ್ನು ಯಾರೋ ಸಾಯಿಸಿ ಸಾಕ್ಷ್ಯನಾಶ ಮಾಡಿರುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಸೂಕ್ತ ತನಿಖೆ ನಡೆಸುವಂತೆ ಮಾರ್ಟಿನ್ ದೂರಿನಲ್ಲಿ ತಿಳಿಸಿದ್ದಾರೆ.
Devadurga | ದೇವರಗುಡ್ಡದಲ್ಲಿ ಸಿಡಿಲಿಗೆ ಹತ್ತಿ-ಹುಲ್ಲಿನ ಬಣವೆ ಬೆಂಕಿಗಾಹುತಿ
ದೇವದುರ್ಗ: ತಾಲ್ಲೂಕಿನ ದೇವರಗುಡ್ಡ ಗ್ರಾಮದಲ್ಲಿ ಮಂಗಳವಾರ ಸಂಜೆ ಗುಡುಗು-ಸಿಡಿಲಿನ ಅಬ್ಬರ ನಡುವೆ ಸಿಡಿಲು ಬಡಿದು ಹತ್ತಿ ಹಾಗೂ ಹುಲ್ಲಿನ ಬಣವೆ ಬೆಂಕಿಗಾಹುತಿಯಾದ ಘಟನೆ ನಡೆದಿದೆ. ಮುದುಕಪ್ಪ ಗೌಡ ಹಾಗೂ ಶಿವರಾಜಪ್ಪ ಗೌಡ ಅವರ ಮನೆಯ ಮುಂದೆ ಸಂಗ್ರಹಿಸಿದ್ದ ಹತ್ತಿ ಮತ್ತು ಹುಲ್ಲಿನ ಬಣವೆಗೆ ರಾತ್ರಿ ಸುಮಾರು 8 ಗಂಟೆಯ ವೇಳೆ ಸಿಡಿಲು ಬಡಿದು ಬೆಂಕಿ ಹೊತ್ತಿಕೊಂಡಿದ್ದು, ಉರಿಯುತ್ತಿರುವ ದೃಶ್ಯವನ್ನು ಗ್ರಾಮಸ್ಥರು ತಮ್ಮ ಮೊಬೈಲ್ಗಳಲ್ಲಿ ಸೆರೆ ಹಿಡಿದಿದ್ದಾರೆ. ಘಟನೆ ತಿಳಿದ ತಕ್ಷಣ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ನಂದಿಸಿ, ಸಂಭವಿಸಬಹುದಾದ ದೊಡ್ಡ ಅನಾಹುತವನ್ನು ತಪ್ಪಿಸಿದ್ದಾರೆ ಎಂದು ತಿಳಿದುಬಂದಿದೆ. ಸುಡುಬಿಸಿಲಿನಿಂದ ತತ್ತರಿಸಿದ್ದ ತಾಲ್ಲೂಕಿನ ಜನರು, ಆಕಸ್ಮಿಕವಾಗಿ ಸುರಿದ ಗುಡುಗು-ಮಳೆಯ ದೃಶ್ಯ ಕಂಡು ದಂಗಾಗಿದ್ದಾರೆ. ಮಳೆಯ ಪರಿಣಾಮವಾಗಿ ಬಿಸಿಲಿನ ತಾಪ ಕಡಿಮೆಯಾಗಿ ಜನರಿಗೆ ತುಸು ತಂಪಿನ ಅನುಭವ ದೊರೆತಿದೆ.
ಮುಸ್ಲಿಮರ ಕಡೆಗಣನೆ: ಕಾಂಗ್ರೆಸ್ ವಿರುದ್ಧ ಸುನ್ನಿ ಸಮನ್ವಯ ಸಮಿತಿ ಅಸಮಾಧಾನ
ಮಡಿಕೇರಿ : ಜಾತ್ಯತೀತ ನೆಲೆಗಟ್ಟಿನಲ್ಲಿ ಉತ್ತಮ ಸಮಾಜ ಸ್ಥಾಪಿಸಬೇಕೆನ್ನುವ ಉದ್ದೇಶದಿಂದ 2023ರ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದ ಮುಸ್ಲಿಮರು ಒಗ್ಗಟ್ಟಿನಿಂದ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿದ ಪರಿಣಾಮ ಅದು ಭರ್ಜರಿ ಬಹುಮತದಿಂದ ಅಧಿಕಾರಕ್ಕೆ ಬಂತು. ಆದರೆ, ಅಧಿಕಾರಕ್ಕೆ ಬಂದ ನಂತರ ಕಾಂಗ್ರೆಸ್ ಸರಕಾರ ಮುಸ್ಲಿಮರ ದಮನಕ್ಕೆ ಮುಂದಾಗಿದೆ ಎಂದು ಸುನ್ನಿ ಸಮನ್ವಯ ಸಮಿತಿಯ ಕೊಡಗು ಜಿಲ್ಲಾ ಘಟಕ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸುನ್ನಿ ಸಮನ್ವಯ ಸಮಿತಿಯ ಜಿಲ್ಲಾ ಮಾಧ್ಯಮ ಪ್ರತಿನಿಧಿ ಸಿ.ಎಂ.ಅಬ್ದುಲ್ ಹಮೀದ್ ಮೌಲವಿ, ಕಾಂಗ್ರೆಸ್ ಪಕ್ಷ ಇತ್ತೀಚಿನ ದಿನಗಳಲ್ಲಿ ಮುಸ್ಲಿಮರನ್ನು ಕಡೆಗಣಿಸುತ್ತಿದ್ದು, ಈ ಬೆಳವಣಿಗೆ ಅತ್ಯಂತ ನೋವನ್ನುಂಟು ಮಾಡಿದೆ ಎಂದರು. ಕಾಂಗ್ರೆಸ್ ಪಕ್ಷವು ಕರ್ನಾಟಕದ ಮುಸ್ಲಿಮ್ ಸಮುದಾಯ ಮತ್ತು ಅದರ ನಾಯಕರೊಂದಿಗೆ ನಡೆದುಕೊಳ್ಳುತ್ತಿರುವ ರೀತಿಯನ್ನು ಕೊಡಗು ಜಿಲ್ಲೆಯ ಪ್ರಮುಖ ಮುಸ್ಲಿಮ್ ಸಂಘಟನೆಗಳಾದ ಎಸ್ಕೆಎಸ್ಸೆಸ್ಸೆಫ್, ಎಸ್ಸೆಸ್ಸೆಫ್, ಮುಸ್ಲಿಮ್ ಸಂಘ ಸಂಸ್ಥೆಗಳು ಹಾಗೂ ಒಕ್ಕೂಟಗಳು ತೀವ್ರವಾಗಿ ಖಂಡಿಸುತ್ತವೆ ಎಂದು ತಿಳಿಸಿದರು. ಕೊಡಗಿನಲ್ಲೂ ಪ್ರಾತಿನಿಧ್ಯ ನೀಡಿ: ಕೊಡಗು ಜಿಲ್ಲೆಯ ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷ ಗೆಲುವು ಸಾಧಿಸಲು ಮುಸಲ್ಮಾನರು ನಿರ್ಣಾಯಕ ಪಾತ್ರ ವಹಿಸಿದ್ದಾರೆ. ಶೇ.95ರಷ್ಟು ಮುಸ್ಲಿಮ್ ಮತಗಳು ಕಾಂಗ್ರೆಸ್ ಪಾಲಾಗಿದೆ. ಜಿಲ್ಲೆಯ ಇಬ್ಬರು ಶಾಸಕರು ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ. ಆದರೆ, ಪಕ್ಷದ ಗೆಲುವಿಗಾಗಿ ಶ್ರಮಿಸಿದ ಮುಸ್ಲಿಮ್ ಮುಖಂಡರಿಗೆ ಯಾವುದೇ ಅಧಿಕಾರ ನೀಡದೆ ಕಡೆಗಣಿಸಲಾಗಿದೆ. ನಮ್ಮ ಬೇಡಿಕೆಗಳ ಬಗ್ಗೆ ಶಾಸಕರು ಹಾಗೂ ಮುಖ್ಯಮಂತ್ರಿ ಗಮನ ಸೆಳೆಯಲಾಗಿದೆ. ಮುಂದಿನ ದಿನಗಳಲ್ಲಿ ಮುಸ್ಲಿಮರಿಗೆ ಅಧಿಕಾರ ನೀಡುತ್ತಾರೆ ಎನ್ನುವ ವಿಶ್ವಾಸವಿದೆ ಎಂದು ಹಮೀದ್ ಮೌಲವಿ ಹೇಳಿದರು. ಸುನ್ನಿ ಸಮನ್ವಯ ಸಮಿತಿಯ ಜಿಲ್ಲಾ ಕಾರ್ಯದರ್ಶಿ ಎಂ.ವೈ.ಅಬ್ದುಲ್ ಹಫೀಳ್ ಸಅದಿ ಮಾತನಾಡಿ, ಕಾಂಗ್ರೆಸ್ ನಡೆಯನ್ನು ರಾಜ್ಯವ್ಯಾಪಿ ಉಲಮಾಗಳು ಒಗ್ಗಟ್ಟಿನಿಂದ ವಿರೋಧಿಸಿದ್ದಾರೆ. ನಮ್ಮ ಸಂಘಟನೆಗಳು ಯಾವುದೇ ರಾಜಕೀಯ ಪಕ್ಷಗಳ ಪರವಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ಮುಂದಿನ ದಿನಗಳಲ್ಲಿ ಕಾಂಗ್ರೆಸ್ ತನ್ನ ತಪ್ಪನ್ನು ತಿದ್ದಿಕೊಳ್ಳದಿದ್ದಲ್ಲಿ ಮುಸ್ಲಿಮರು ಪರ್ಯಾಯ ವ್ಯವಸ್ಥೆಯನ್ನು ಕಂಡುಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಸುದ್ದಿಗೋಷ್ಠಿಯಲ್ಲಿ ಸಮಿತಿಯ ಕಾರ್ಯದರ್ಶಿ ವೈ.ಎಂ.ಉಮ್ಮರ್ ಫೈಝಿ, ಸದಸ್ಯರಾದ ಎನ್.ಎನ್.ಇಕ್ಬಾಲ್ ಮೌಲವಿ, ಅಬ್ದುಲ್ ಹಮೀದ್ ಮದನಿ ಹಾಗೂ ಮಡಿಕೇರಿಯ ಮಕ್ಕಾ ಮಸೀದಿಯ ಮೌಲಾನಾ ಅಬ್ದುಲ್ ಹಕೀಂ ಉಪಸ್ಥಿತರಿದ್ದರು.
ದಿಲ್ಲಿ| ಗ್ರೆನೇಡ್ ದಾಳಿ, ಹತ್ಯೆಗೆ ಸಂಚು: ಇಬ್ಬರು ಆರೋಪಿಗಳ ಬಂಧನ
ಹೊಸದಿಲ್ಲಿ, ಎ. 21: ಪಾಕಿಸ್ತಾನದ ಮೂಲದ ಭೂಗತ ಪಾತಕಿ ಹಾಗೂ ಐಎಸ್ಐ ಪರ ಕೆಲಸ ಮಾಡುತ್ತಿರುವ ಶಹಝಾದ್ ಭಟ್ಟಿ ಆಣತಿಯಂತೆ ಕಾರ್ಯ ನಿರ್ವಹಿಸುತ್ತಿದ್ದ ಇಬ್ಬರನ್ನು ದಿಲ್ಲಿ ಪೊಲೀಸ್ನ ವಿಶೇಷ ಘಟಕ ಬಂಧಿಸಿದೆ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ. ಇದರೊಂದಿಗೆ ದಿಲ್ಲಿ-ಎನ್ಸಿಆರ್ ವಲಯದಲ್ಲಿ ಗುಂಡಿನ ದಾಳಿ, ಗ್ರೆನೇಡ್ ದಾಳಿ ಮತ್ತು ನಿರ್ದಿಷ್ಟ ವ್ಯಕ್ತಿಗಳನ್ನು ಗುರಿಯಾಗಿರಿಸಿ ಹತ್ಯೆಗೈಯುವ ಕ್ರಿಮಿನಲ್ ಪಿತೂರಿಯನ್ನು ಪೊಲೀಸರು ಬಯಲಿಗೆಳೆದಿದ್ದಾರೆ. ಬಂಧಿತ ಆರೋಪಿಗಳನ್ನು ರಾಜ್ವೀರ್ (21) ಹಾಗೂ ವಿವೇಕ್ ಬಂಜಾರ (19) ಎಂದು ಗುರುತಿಸಲಾಗಿದೆ. ಇಬ್ಬರೂ ಮಧ್ಯಪ್ರದೇಶದ ಗ್ವಾಲಿಯರ್ನ ನಿವಾಸಿಗಳು. ‘‘ಇವರ ಬಂಧನ ದಿಲ್ಲಿ ಹಾಗೂ ಸಮೀಪದ ಪ್ರದೇಶಗಳಲ್ಲಿ ದಾಳಿಯ ಯೋಜನೆಯನ್ನು ವಿಫಲಗೊಳಿಸಿದೆ. ಈ ಬಂಧನಗಳಿಂದ ಭಟ್ಟಿ ರೂಪಿಸಿದ್ದ ಅತಿ ದೊಡ್ಡ ಸಂಚು ಬಹಿರಂಗಗೊಂಡಿದೆ. ಭಟ್ಟಿ ಐಎಸ್ಐಗೆ ಸಂಪರ್ಕ ಹೊಂದಿರುವವರೊಂದಿಗೆ ಸೇರಿ ಸಾಮಾಜಿಕ ಜಾಲತಾಣಗಳ ಮೂಲಕ ಯುವಕರನ್ನು ನೇಮಕ ಮಾಡಿಕೊಳ್ಳುತ್ತಿದ್ದ. ಅವರನ್ನು ದಿಲ್ಲಿ-ಎನ್ಸಿಆರ್ನಲ್ಲಿ ಹಿಂಸಾಚಾರದ ಕೃತ್ಯಗಳಿಗೆ ಬಳಸಿಕೊಳ್ಳುತ್ತಿದ್ದ’’ ಎಂದು ಪೊಲೀಸ್ ಉಪ ಆಯುಕ್ತ (ವಿಶೇಷ ಘಟಕ) ಪ್ರವೀಣ್ ಕುಮಾರ್ ತ್ರಿಪಾಠಿ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಈ ಪ್ರದೇಶದಲ್ಲಿ ಗ್ರೆನೇಡ್ ದಾಳಿ ಮತ್ತು ಹತ್ಯೆಗಳನ್ನು ನಡೆಸುವ ಬಗ್ಗೆ ಮಾಹಿತಿ ಬಂದ ನಂತರ ಮಾರ್ಚ್ 31ರಂದು ಪ್ರಕರಣ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ತ್ರಿಶೂರ್| ಪಟಾಕಿ ತಯಾರಿಕಾ ಘಟಕದಲ್ಲಿ ಭೀಕರ ಸ್ಫೋಟ: ಮೃತರ ಸಂಖ್ಯೆ 13ಕ್ಕೆ ಏರಿಕೆ, ಐವರಿಗೆ ಗಂಭೀರ ಗಾಯ
ತ್ರಿಶೂರ್, ಎ.21: ಕೇರಳದ ತ್ರಿಶೂರ್ ಜಿಲ್ಲೆಯ ಮುಂಡತಿಕೋಡ್ನಲ್ಲಿ ಪಟಾಕಿ ತಯಾರಿಕಾ ಕಟ್ಟಡವೊಂದರಲ್ಲಿ ಮಂಗಳವಾರ ಸಂಭವಿಸಿದ ಸ್ಫೋಟದಲ್ಲಿ 13 ಮಂದಿ ಮೃತಪಟ್ಟಿದ್ದಾರೆ ಹಾಗೂ ಐವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಸ್ಫೋಟದ ಸಂದರ್ಭದಲ್ಲಿ ಕಾರ್ಖಾನೆಯಲ್ಲಿ ಸುಮಾರು 70 ಮಂದಿ ಇದ್ದರೆಂದು ಹೇಳಲಾಗಿದೆ. ಅವರೆಲ್ಲರಿಗೂ ಸುಟ್ಟ ಗಾಯಗಳಾಗಿದ್ದು, ಹಲವರ ಪರಿಸ್ಥಿತಿ ಗಂಭೀರವಾಗಿದೆ. ತಿರುವಂಬಾಡಿ ದೇವಸ್ಥಾನದಲ್ಲಿ ಕೆಲವೇ ದಿನಗಳಲ್ಲಿ ನಡೆಯಬೇಕಾಗಿದ್ದ ಉತ್ಸವಕ್ಕಾಗಿ ಪಟಾಕಿಗಳನ್ನು ತಯಾರಿಸುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ. ದೇವಸ್ಥಾನದಲ್ಲಿ ‘ತ್ರಿಶೂರ್ ಪೂರಂ’ ಎಂಬ ಹೆಸರಿನ ಜಾತ್ರೆ ಎಪ್ರಿಲ್ 26ರಂದು ನಡೆಯಲಿದೆ. ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗಳಿಗೆ ಸೇರಿಸಲಾಗಿದೆ. ಸ್ಫೋಟವು ಅಪರಾಹ್ನ ಸುಮಾರು 3:30ಕ್ಕೆ ಸಂಭವಿಸಿತು ಹಾಗೂ ದಟ್ಟ ಹೊಗೆ ಆ ಪ್ರದೇಶವನ್ನು ಆವರಿಸಿತು. ಅಲ್ಲಿ ಬಳಿಕ ಹಲವು ಸಣ್ಣ ಸ್ಫೋಟಗಳ ಸದ್ದು ಕೇಳಿತು. ಇದರಿಂದ ರಕ್ಷಣಾ ಕಾರ್ಯಾಚರಣೆಗೆ ಅಡಚಣೆಯಾಯಿತು. ಮೃತಪಟ್ಟವರ ಸಮೀಪದ ಬಂಧುಗಳಿಗೆ ತಲಾ 2 ಲಕ್ಷ ರೂ. ಪರಿಹಾರವನ್ನು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದಾರೆ. ಗಾಯಾಳುಗಳು ತಲಾ 50,000 ರೂ. ಪರಿಹಾರ ಸ್ವೀಕರಿಸಲಿದ್ದಾರೆ. ಗಾಯಗೊಂಡವರಿಗೆ ಎಲ್ಲಾ ಅಗತ್ಯ ವೈದ್ಯಕೀಯ ನೆರವನ್ನು ಒದಗಿಸುವಂತೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಗಂಭೀರ ಸುಟ್ಟ ಗಾಯಗಳಿಗೊಳಗಾದವರ ಚಿಕಿತ್ಸೆಗೆ ಅಗತ್ಯವಿದ್ದರೆ ರಾಜ್ಯದ ಹೊರಗಿನ ಪರಿಣತ ವೈದ್ಯರ ಸೇವೆಗಳನ್ನು ಬಳಸಿಕೊಳ್ಳಬೇಕು ಎಂಬ ಸೂಚನೆಯನ್ನು ಅವರು ರಾಜ್ಯದ ಮುಖ್ಯ ಕಾರ್ಯದರ್ಶಿಗೆ ನೀಡಿದ್ದಾರೆ. ಮೃತರ ಕುಟುಂಬಗಳಿಗೆ ಸಂತಾಪವನ್ನು ವ್ಯಕ್ತಪಡಿಸಿದ್ದಾರೆ. ಭತ್ತದ ಗದ್ದೆಗಳಲ್ಲಿ ಪಟಾಕಿ ತಯಾರಿಕೆ: ಭತ್ತದ ಗದ್ದೆಗಳ ನಡುವಿನ ಸ್ಥಳವೊಂದರಲ್ಲಿ ನಿರ್ಮಿಸಲಾಗಿರುವ ಹಲವು ತಾತ್ಕಾಲಿಕ ಶೆಡ್ಗಳಲ್ಲಿ ದೇವಸ್ಥಾನಕ್ಕಾಗಿ ಪಟಾಕಿಗಳನ್ನು ತಯಾರಿಸಲಾಗುತ್ತಿತ್ತು. ಸ್ಫೋಟ ಸಂಭವಿಸಿದ ಕಟ್ಟಡದಲ್ಲಿ ಸುಮಾರು 2,000 ಕೆಜಿ ಸ್ಫೋಟಕ ವಸ್ತುಗಳನ್ನು ದಾಸ್ತಾನಿಡಲಾಗಿತ್ತು ಎನ್ನಲಾಗಿದೆ. ಬೃಹತ್ ಸ್ಫೋಟದ ಬಳಿಕ, ಸಣ್ಣ ಸ್ಫೋಟಗಳು ಆಗಾಗ ನಡೆದಿವೆ ಹಾಗೂ ಇದರಿಂದಾಗಿ ಗಾಯಾಳುಗಳನ್ನು ರಕ್ಷಿಸುವ ಕಾರ್ಯಾಚರಣೆಗೆ ಅಡ್ಡಿಯಾಯಿತು ಎಂದು ವಡಕಂಚೇರಿ ಮುನ್ಸಿಪಾಲಿಟಿ ಅಧ್ಯಕ್ಷ ಪಿ.ಎನ್. ಸುರೇಂದ್ರನ್ ತಿಳಿಸಿದರು. ‘‘ಶೆಡ್ನಲ್ಲಿ ಎಷ್ಟು ಮಂದಿ ಇದ್ದರು ಮತ್ತು ಎಷ್ಟು ಮಂದಿ ಗಾಯಗೊಂಡಿದ್ದಾರೆ ಎನ್ನುವ ಬಗ್ಗೆ ಇನ್ನೂ ಸ್ಪಷ್ಟತೆ ಇಲ್ಲ. ತೀವ್ರ ಬಿಸಿಲು ಈ ಘಟನೆಗೆ ಒಂದು ಕಾರಣ ಆಗಿರಬಹುದು ಎಂದು ಭಾವಿಸಲಾಗಿದೆ’’ ಎಂದು ಅವರು ಹೇಳಿದರು. ಸ್ಫೋಟದ ಸದ್ದು ಹಲವು ಕಿಲೋಮೀಟರ್ ದೂರದಲ್ಲೂ ಕೇಳಿಸಿದೆ ಎಂದು ಹೇಳಿದ ಅವರು, ಸಮೀಪದ ಹಲವು ಮನೆಗಳಿಗೆ ಹಾನಿಯಾಗಿದೆ ಎಂದರು.
ಪಹಲ್ಗಾಮ್ ಭಯೋತ್ಪಾದಕ ದಾಳಿ: ವರ್ಷ ಕಳೆದರೂ ಮಾಸದ ನೋವು
ಹೊಸದಿಲ್ಲಿ,ಎ.21: 2025ರ ಎಪ್ರಿಲ್ 22ರಂದು ದಕ್ಷಿಣ ಕಾಶ್ಮೀರದ ಪಹಲ್ಗಾಮ್ನ ಬೈಸರನ್ ಹುಲ್ಲುಗಾವಲಿನಲ್ಲಿ ನಡೆದಿದ್ದ ಭಯೋತ್ಪಾದಕರ ಗುಂಡಿನ ದಾಳಿಯಲ್ಲಿ 25 ಪ್ರವಾಸಿಗರು ಮತ್ತು ಓರ್ವ ಸ್ಥಳೀಯ ಕುದುರೆ ಸವಾರ ಸೇರಿದಂತೆ 26 ಜನರು ಮೃತಪಟ್ಟಿದ್ದರು. ಬುಧವಾರ ಈ ದುರಂತಕ್ಕೆ ಒಂದು ವರ್ಷ ತುಂಬುತ್ತಿದ್ದು, ಸಂತ್ರಸ್ತ ಕುಟುಂಬಗಳು ಇಂದಿಗೂ ಆಘಾತ ಮತ್ತು ಆರ್ಥಿಕ ಸಂಕಷ್ಟದೊಂದಿಗೆ ಬದುಕು ಸಾಗಿಸುತ್ತಿವೆ. ಭಾರತೀಯ ವಾಯುಪಡೆಯಲ್ಲಿ (ಐಎಎಫ್) ಕಾರ್ಪೊರಲ್ ಆಗಿದ್ದ ತಾಗೆ ಹೈಲ್ಯಾಂಗ್ ಅವರ ಕುಟುಂಬವು ಬುಧವಾರ ಅವರ ಸ್ಮಾರಕದ ಉದ್ಘಾಟನೆಗೆ ಸಜ್ಜಾಗುತ್ತಿದೆ. 30ರ ಹರೆಯದ ಹೈಲ್ಯಾಂಗ್ ಭಯೋತ್ಪಾದಕ ದಾಳಿಯಲ್ಲಿ ಮೃತಪಟ್ಟವರಲ್ಲಿ ಓರ್ವರಾಗಿದ್ದಾರೆ. ಅವರ ನೆನಪಿನಲ್ಲಿ ಕುಟುಂಬವು ಅರುಣಾಚಲ ಪ್ರದೇಶದ ಲೋವರ್ ಸುಬನ್ಸಿರಿ ಜಿಲ್ಲೆಯ ತಮ್ಮ ಗ್ರಾಮ ತಜಂಗ್ನಲ್ಲಿ ಕಂಚಿನ ಪುತ್ಥಳಿಯನ್ನೊಳಗೊಂಡ ಸ್ಮಾರಕವನ್ನು ನಿರ್ಮಿಸಿದೆ. 2017ರಲ್ಲಿ ಐಎಎಫ್ ಸೇರಿದ್ದ ಹೈಲ್ಯಾಂಗ್ ಶ್ರೀನಗರ ವಾಯುನೆಲೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ದಾಳಿಗೆ ಕೇವಲ ನಾಲ್ಕು ತಿಂಗಳು ಮೊದಲು ಮದುವೆಯಾಗಿದ್ದ ಅವರು ಅಸ್ಸಾಮಿನ ದಿಬ್ರುಗಡದಲ್ಲಿ ಹೊಸ ಹುದ್ದೆಯನ್ನು ವಹಿಸಿಕೊಳ್ಳುವ ಮುನ್ನ ರಜೆಯಲ್ಲಿ ಪತ್ನಿಯೊಂದಿಗೆ ಪಹಲ್ಗಾಮ್ನಲ್ಲಿದ್ದರು. ‘ತನ್ನ ಪ್ರೀತಿಪಾತ್ರನನ್ನು ಕಳೆದುಕೊಂಡಿರುವ ಕುಟುಂಬದ ನೋವು ಇನ್ನೂ ಮಾಸಿಲ್ಲ. ನಮ್ಮ ತಾಯಿ ಇನ್ನೂ ಆಘಾತದಿಂದ ಚೇತರಿಸಿಕೊಂಡಿಲ್ಲ. ಅವರ ಮನಸ್ಸಿಗೆ ಆಗಿರುವ ಗಾಯಗಳು ಈಗಲೂ ಹಸಿಯಾಗಿವೆ ’ಎಂದು ಹೈಲ್ಯಾಂಗ್ ಸೋದರ ತಾಗೆ ತಾಕಾ ಸುದ್ದಿಸಂಸ್ಥೆಗೆ ತಿಳಿಸಿದರು. ಅತ್ತ ಪುಣೆಯ ಜಗದಾಳೆ ಕುಟುಂಬದ್ದೂ ಇದೇ ಸ್ಥಿತಿ. ವ್ಯಾಪಾರಿ ವೃತ್ತಿಯ ಸಂತೋಷ ಜಗದಾಳೆ (50) ತನ್ನ ಪತ್ನಿ ಮತ್ತು ಪುತ್ರಿಯೊಂದಿಗೆ ಪಹಲ್ಗಾಮ್ಗೆ ತೆರಳಿದ್ದಾಗ ಭಯೋತ್ಪಾದಕರ ಗುಂಡಿಗೆ ಬಲಿಯಾಗಿದ್ದರು. ಖಾಸಗಿ ಕಂಪೆನಿಯಲ್ಲಿ ಎಚ್ಆರ್ ವಿಭಾಗದಲ್ಲಿ ಕೆಲಸದಲ್ಲಿದ್ದ ಪುತ್ರಿ ಅಸಾವರಿ(27) ಆಘಾತಕ್ಕೊಳಗಾಗಿದ್ದ ತಾಯಿಯನ್ನು ನೋಡಿಕೊಳ್ಳಲು ಉದ್ಯೋಗವನ್ನೂ ತೊರೆದಿದ್ದರು. ‘ನಾವು ನಿದ್ರೆಯಿಲ್ಲದ ರಾತ್ರಿಗಳನ್ನು ಕಳೆದಿದ್ದೇವೆ. ನಮ್ಮ ಕಣ್ಣೆದುರೇ ನಡೆದಿದ್ದ ಆ ಘಟನೆ ನಮ್ಮ ಮನಸ್ಸಿನಲ್ಲಿ ಈಗಲೂ ಅಚ್ಚಳಿಯದೆ ಉಳಿದುಕೊಂಡಿದೆ. ಇದು ನಮ್ಮ ಬದುಕಿನ ಅತ್ಯಂತ ಕಠಿಣ ವರ್ಷವಾಗಿತ್ತು’ ಎಂದು ಅಸಾವರಿ ತಿಳಿಸಿದರು. ಅಸಾವರಿಗೆ ಸರಕಾರಿ ಕೆಲಸದ ಭರವಸೆ ಸಿಕ್ಕಿತ್ತಾದರೂ ಅದನ್ನು ಪಡೆಯಲು ಅವರು ಸಾಕಷ್ಟು ಹೋರಾಟವನ್ನು ಮಾಡಬೇಕಾಯಿತು. ಪ್ರಸ್ತುತ ಅವರು ಪುಣೆ ಮಹಾನಗರ ಪಾಲಿಕೆಯಲ್ಲಿ ಆಡಳಿತಾಧಿಕಾರಿಯಾಗಿ ನೇಮಕಗೊಂಡಿದ್ದು, ತರಬೇತಿ ಪಡೆಯುತ್ತಿದ್ದಾರೆ. ಕಾಶ್ಮೀರದಲ್ಲಿ ಬಿಗಿಭದ್ರತೆ ಪಹಲ್ಗಾಮ್ ದಾಳಿಗೆ ಒಂದು ವರ್ಷ ತುಂಬುತ್ತಿರುವ ಹಿನ್ನೆಲೆಯಲ್ಲಿ ಕಾಶ್ಮೀರದ ಪ್ರವಾಸಿ ತಾಣಗಳಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ. ಲಷ್ಕರೆ ತೈಬಾದ ಭಯೋತ್ಪಾದಕರ ದಾಳಿಯ ಬಳಿಕ ಎಲ್ಲಾ ಪ್ರವಾಸಿ ತಾಣಗಳಲ್ಲಿ ಬಿಗಿ ಪೋಲಿಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಹೊಸ ಸುರಕ್ಷತಾ ಕ್ರಮಗಳನ್ನೂ ಕೈಗೊಳ್ಳಲಾಗಿದೆ. ಪ್ರವಾಸಿಗರಿಗೆ ಸೇವೆ ಒದಗಿಸುವ ಕುದುರೆ ಸವಾರರು ಮತ್ತು ವ್ಯಾಪಾರಿಗಳಿಗಾಗಿ ಕ್ಯೂಆರ್ ಕೋಡ್ ಆಧಾರಿತ ಗುರುತು ಚೀಟಿ ವ್ಯವಸ್ಥೆಯನ್ನು ಜಾರಿಗೊಳಿಸಲಾಗಿದೆ. ಕ್ಯೂಆರ್ ಕೋಡ್ಗಳು ಅವರ ಹೆಸರು, ವಿಳಾಸ, ಮೊಬೈಲ್ ಸಂಖ್ಯೆ, ಆಧಾರ್ ಮಾಹಿತಿ, ನೋಂದಣಿ ವಿವರಗಳು ಮತ್ತು ಪೋಲಿಸ್ ಪರಿಶೀಲನೆ ಸ್ಥಿತಿಗತಿಯಂತಹ ವಿವರಗಳನ್ನು ಒಳಗೊಂಡಿರುತ್ತವೆ. ಇವುಗಳನ್ನು ಪ್ರವಾಸಿಗರು ತಮ್ಮ ಮೊಬೈಲ್ ಫೋನ್ಗಳಲ್ಲಿ ಪರಿಶೀಲಿಸಬಹುದು.
ಗಾಂಧಿನಗರ: ‘ಲವ್ ಜಿಹಾದ್’ ಪ್ರಕರಣದಲ್ಲಿ ಸಿಲುಕಿಸುವುದಾಗಿ ಬೆದರಿಕೆ ಹಾಕಿ ಹಣ ಸುಲಿಗೆ ಮಾಡಿದ ಆರೋಪದ ಮೇಲೆ ಗುಜರಾತ್ ಭ್ರಷ್ಟಾಚಾರ ನಿಗ್ರಹ ದಳ (ACB) ಒಬ್ಬ ಪೊಲೀಸ್ ಇನ್ಸ್ಪೆಕ್ಟರ್ ವಿರುದ್ಧ ಪ್ರಕರಣ ದಾಖಲಿಸಿದೆ. ಲಂಚದ ಹಣ ಸ್ವೀಕರಿಸುತ್ತಿದ್ದ ವೇಳೆ ಅವರ ಸಹಾಯಕ, ಮಧ್ಯವರ್ತಿಯನ್ನು ಬಂಧಿಸಲಾಗಿದೆ. ವಡೋದರಾ ಗ್ರಾಮೀಣದ ಪದ್ರಾ ಪೊಲೀಸ್ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಇನ್ಸ್ಪೆಕ್ಟರ್ ವಿ.ಎ. ಚರಣ್ ಹಾಗೂ ಸಹಾಯಕ ಸಾಜಿದ್ ಅಲಿ ಗುಲಾಮ್ರಸುಲ್ ಸೈಯ್ಯದ್ ಆರೋಪಿಗಳಾಗಿದ್ದಾರೆ ಎಂದು ACB ಮೂಲಗಳು ತಿಳಿಸಿವೆ. ಲಿವ್-ಇನ್ ಸಂಬಂಧದಲ್ಲಿದ್ದ ದಂಪತಿಯ ನಡುವೆ ಉಂಟಾದ ಕಲಹದ ಬಳಿಕ ಪ್ರಕರಣ ಆರಂಭವಾಗಿದೆ. ಮಹಿಳೆ 112 ಸಹಾಯವಾಣಿಗೆ ಕರೆ ಮಾಡಿದ ಹಿನ್ನೆಲೆಯಲ್ಲಿ ಇಬ್ಬರನ್ನೂ ಠಾಣೆಗೆ ಕರೆತರಲಾಗಿತ್ತು. ಮಹಿಳೆಯ ದೂರಿನ ಮೇರೆಗೆ ವ್ಯಕ್ತಿಯನ್ನು ಮುನ್ನೆಚ್ಚರಿಕಾ ಕ್ರಮವಾಗಿ 24 ಗಂಟೆಗಳ ಕಾಲ ವಶದಲ್ಲಿರಿಸಲಾಗಿತ್ತು. ನಂತರ ದಂಪತಿ ರಾಜಿ ಮಾಡಿಕೊಂಡಿದ್ದು, ವ್ಯಕ್ತಿಯನ್ನು ಬಿಡುಗಡೆ ಮಾಡಲು ಮಹಿಳೆ ಪೊಲೀಸರಿಗೆ ತಿಳಿಸಿದ್ದರು. ಈ ವೇಳೆ ಇನ್ಸ್ಪೆಕ್ಟರ್ ಚರಣ್, ‘ಲವ್ ಜಿಹಾದ್’ ಪ್ರಕರಣ ದಾಖಲಿಸುವುದಾಗಿ ಬೆದರಿಸಿ 6 ಲಕ್ಷ ರೂ. ನೀಡುವಂತೆ ಬೇಡಿಕೆ ಇಟ್ಟಿದ್ದರು ಎಂದು ACB ಹೇಳಿದೆ. ಹಣ ಒದಗಿಸಲು ಸಾಧ್ಯವಿಲ್ಲವೆಂದು ವ್ಯಕ್ತಿ ತಿಳಿಸಿದ ನಂತರ, ಮಧ್ಯವರ್ತಿಯಾಗಿ ಸಾಜಿದ್ ಅಲಿ ಸೈಯ್ಯದ್ ಮೂಲಕ ಮಾತುಕತೆ ನಡೆಸಿ ಬೇಡಿಕೆಯನ್ನು 2 ಲಕ್ಷ ರೂ ಇಳಿಸಲಾಗಿದೆ. ಎಪ್ರಿಲ್ 12ರಿಂದ 15ರವರೆಗೆ ಆರೋಪಿಗಳು ಹಣ ನೀಡುವಂತೆ ನಿರಂತರ ಒತ್ತಡ ಹಾಕಿದ್ದರು ಎಂದು ತಿಳಿದುಬಂದಿದೆ. ಬಂಧನದಿಂದ ಬಿಡುಗಡೆಯಾದ ಬಳಿಕ ವ್ಯಕ್ತಿ ತನ್ನ ಸಂಗಾತಿಯೊಂದಿಗೆ ಮನೆಗೆ ಮರಳಿದ್ದು, ಹಣ ಒದಗಿಸಲು ಚಿನ್ನಾಭರಣಗಳನ್ನು ಅಡಮಾನ ಇಡುವ ಯೋಚನೆ ಮಾಡಿಕೊಂಡಿದ್ದರು. ನಂತರ ACBಯನ್ನು ಸಂಪರ್ಕಿಸಿದ್ದರು ಎನ್ನಲಾಗಿದೆ. ಬಿಡುಗಡೆಯಾದ ವ್ಯಕ್ತಿ ನೀಡಿದ ದೂರು ಆಧರಿಸಿ ಎಪ್ರಿಲ್ 16ರಂದು ವಡೋದರಾದ ಅಕ್ಷರ್ ಚೌಕ್ ನಲ್ಲಿ ACB ಕಾರ್ಯಾಚರಣೆ ನಡೆಸಿದೆ. ಈ ವೇಳೆ 2 ಲಕ್ಷ ರೂ. ಲಂಚದ ಹಣ ಸ್ವೀಕರಿಸುತ್ತಿದ್ದ ವೇಳೆ ಸೈಯ್ಯದ್ ಅವರನ್ನು ರೆಡ್ ಹ್ಯಾಂಡ್ ಆಗಿ ಬಂಧಿಸಿದೆ. ಬಂಧಿಸಲಾದ ಅಧಿಕಾರಿಯ ಮೊಬೈಲ್ ಫೋನ್ ವಶಪಡಿಸಿಕೊಂಡಿದ್ದು, ಅದರಲ್ಲಿ ಇನ್ಸ್ಪೆಕ್ಟರ್ ಚರಣ್ ಜೊತೆಗಿನ ಸಂಭಾಷಣೆಯ ಧ್ವನಿಮುದ್ರಣಗಳು ಲಭ್ಯವಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪ್ರಾಥಮಿಕ ತನಿಖೆಯ ಆಧಾರದ ಮೇಲೆ ಇಬ್ಬರ ವಿರುದ್ಧ ಪ್ರಕರಣ ದಾಖಲಾಗಿದ್ದು, ಸೈಯ್ಯದ್ ಬಂಧನಕ್ಕೊಳಗಾಗಿದ್ದಾರೆ. ಇನ್ಸ್ಪೆಕ್ಟರ್ ಚರಣ್ ಪರಾರಿಯಾಗಿದ್ದು, ಪತ್ತೆಗೆ ಶೋಧ ಕಾರ್ಯಾಚರಣೆ ಮುಂದುವರೆದಿದೆ.
ಮಂಗಳೂರಿನಲ್ಲಿ ಹೈಕೋರ್ಟ್ ಪೀಠ ಸ್ಥಾಪಿಸಲು ಹೈಕೋರ್ಟ್ ಮುಖ್ಯ ನ್ಯಾಯಾಧೀಶರಿಗೆ ಸ್ಪೀಕರ್ ಯು.ಟಿ.ಖಾದರ್ ಪತ್ರ
ಮಂಗಳೂರು: ಮಂಗಳೂರಿನಲ್ಲಿ ಹೈಕೋರ್ಟ್ ಪೀಠ ಸ್ಥಾಪಿಸಬೇಕು ಎಂದು ರಾಜ್ಯ ಹೈಕೋರ್ಟ್ ಮುಖ್ಯ ನ್ಯಾಯಾಧೀಶರಿಗೆ ಸ್ಪೀಕರ್ ಯು.ಟಿ. ಖಾದರ್ ಪತ್ರಬರೆದಿದ್ದಾರೆ. ಮಂಗಳೂರಿನಲ್ಲಿ ಹೈಕೋರ್ಟ್ ಪೀಠ ಸ್ಥಾಪಿಸಬೇಕು ಎಂಬುದು ಹಲವು ವರ್ಷಗಳ ಬೇಡಿಕೆಯಾಗಿದೆ. ಮಂಗಳೂರು ವಕೀಲರ ಸಂಘ, ಜನಪ್ರತಿನಿಧಿಗಳು ಈ ನಿಟ್ಟಿನಲ್ಲಿ ಹಲವು ಬಾರಿ ಮನವಿ ಸಲ್ಲಿಸಿದ್ದಾರೆ. ರಾಜ್ಯ ಹೈಕೋರ್ಟ್ನ ಪೀಠವನ್ನು ಮಂಗಳೂರಿನಲ್ಲಿ ಸ್ಥಾಪಿಸಿದರೆ ದ.ಕ., ಉಡುಪಿ, ಚಿಕ್ಕಮಗಳೂರು, ಶಿವಮೊಗ್ಗ, ಕೊಡಗು ಜಿಲ್ಲೆಯ ಜನರಿಗೆ ಅನುಕೂಲವಾಗಲಿದೆ. ಈ ಜಿಲ್ಲೆಗಳಲ್ಲಿ ಹೆಚ್ಚಿನ ಸಂಖ್ಯೆಯಿದ್ದು, ವೈದ್ಯಕೀಯ, ಆರೋಗ್ಯ, ಶಿಕ್ಷಣ, ಬ್ಯಾಂಕಿಂಗ್, ಕೈಗಾರಿಕಾ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿದೆ. ನಾನಾ ಪ್ರಕರಣಗಳಿಗೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿರುವ ಹೈಕೋರ್ಟ್ಗೆ ಹೋಗಿ ಬರುತ್ತಿದ್ದಾರೆ. ಇದರಿಂದ ಆರ್ಥಿಕ ಹೊರೆ ಮಾತ್ರವಲ್ಲದೆ ಜನಸಾಮಾನ್ಯರಿಗೆ ಸಂಕಷ್ಟವೂ ಆಗುತ್ತಿದೆ. ಹಾಗಾಗಿ ಮಂಗಳೂರಿನಲ್ಲಿ ಹೈಕೋರ್ಟ್ ಪೀಠ ಸ್ಥಾಪಿಸಲು ಮುಂದಾಗಬೇಕು ಎಂದು ಸ್ಪೀಕರ್ ಖಾದರ್ ತನ್ನ ಪತ್ರದಲ್ಲಿ ತಿಳಿಸಿದ್ದಾರೆ.
ರಶ್ಯಾಗೆ ಅಮೆರಿಕ ತಂಡದ ಭೇಟಿಯು ಉಕ್ರೇನ್ಗೆ ಮಾಡಿರುವ ಅವಮಾನ: ಝೆಲೆನ್ಸ್ಕಿ ಆಕ್ರೋಶ
ಕೀವ್, ಎ.21: ಅಮೆರಿಕದ ಉನ್ನತ ಪ್ರತಿನಿಧಿಗಳಾದ ಸ್ಟೀವ್ ವಿಟ್ಕಾಫ್ ಮತ್ತು ಜರೆಡ್ ಕುಷ್ನರ್ ರಷ್ಯಕ್ಕೆ ಹಲವು ಭಾರಿ ಭೇಟಿ ನೀಡಿದ್ದರೂ ಉಕ್ರೇನ್ಗೆ ಒಂದು ಬಾರಿಯೂ ಅಧಿಕೃತ ಭೇಟಿ ನೀಡದಿರುವುದು ಉಕ್ರೇನ್ಗೆ ಮಾಡಿರುವ ಘೋರ ಅವಮಾನವಾಗಿದೆ ಎಂದು ಉಕ್ರೇನ್ ಅಧ್ಯಕ್ಷ ವೊಲೊದಿಮಿರ್ ಝೆಲೆನ್ಸ್ಕಿ ಮಂಗಳವಾರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಷ್ಯ-ಉಕ್ರೇನ್ ಯುದ್ಧ ಕೊನೆಗೊಳಿಸುವ ಬಗ್ಗೆ ತ್ರಿಪಕ್ಷೀಯ ಮಾತುಕತೆಯ(ಅಮೆರಿಕ, ರಷ್ಯ ಮತ್ತು ಉಕ್ರೇನ್) ಚೌಕಟ್ಟಿನ ಬಗ್ಗೆ ಚರ್ಚಿಸಲು ವಿಟ್ಕಾಫ್ ಮತ್ತು ಕುಷ್ನರ್ ಡಿಸೆಂಬರ್ ಮತ್ತು ಜನವರಿಯಲ್ಲಿ ಮಾಸ್ಕೋಗೆ ಭೇಟಿ ನೀಡಿದ್ದರು. ಆ ಬಳಿಕ ವಿಟ್ಕಾಫ್ ಸುಮಾರು 8 ಬಾರಿ ಮಾಸ್ಕೋಗೆ ಭೇಟಿ ನೀಡಿದ್ದಾರೆ. ಆದರೆ ಒಮ್ಮೆಯೂ ಉಕ್ರೇನ್ಗೆ ಭೇಟಿ ನೀಡದಿರುವುದು ತಪ್ಪು ಸಂದೇಶವನ್ನು ರವಾನಿಸುತ್ತದೆ. ಉಕ್ರೇನ್ ಒಳಗೊಳ್ಳದ ಕದನ ವಿರಾಮ ಮಾತುಕತೆಯಲ್ಲಿ ಅರ್ಥವಿಲ್ಲ ಎಂದು ಝೆಲೆನ್ಸ್ಕಿ ಅಸಮಾಧಾನ ವ್ಯಕ್ತಪಡಿಸಿರುವುದಾಗಿ ವರದಿಯಾಗಿದೆ.
ವಿಶ್ವಾಸಮತ ಪರೀಕ್ಷೆಯಲ್ಲಿ ಗೆದ್ದ ನ್ಯೂಝಿಲ್ಯಾಂಡ್ ಪ್ರಧಾನಿ ಕ್ರಿಸ್ಟೋಫರ್ ಲುಕ್ಸನ್
ವೆಲಿಂಗ್ಟನ್, ಎ.21: ತನ್ನ ನಾಯಕತ್ವದ ಬಗ್ಗೆ ಪಕ್ಷದ ಸಂಸದರು ವಿಶ್ವಾಸ ವ್ಯಕ್ತಪಡಿಸಿ ಬೆಂಬಲಿಸಿರುವುದರಿಂದ ತಾನು ವಿಶ್ವಾಸಮತ ಪರೀಕ್ಷೆಯಲ್ಲಿ ಗೆದ್ದಿರುವುದಾಗಿ ನ್ಯೂಝಿಲ್ಯಾಂಡ್ ಪ್ರಧಾನಿ ಕ್ರಿಸ್ಟೋಫರ್ ಲುಕ್ಸನ್ ಮಂಗಳವಾರ ಹೇಳಿದ್ದಾರೆ. ಲುಕ್ಸನ್ ಮತ್ತು ಅವರ ಪಕ್ಷ `ನ್ಯಾಷನಲ್ ಪಾರ್ಟಿ'ಯ ಜನಪ್ರಿಯತೆ ಕುಸಿದಿದೆ. ನ್ಯಾಷನಲ್ ಪಕ್ಷದ ಬೆಂಬಲ 30%ಕ್ಕೆ ಕುಸಿದಿದೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಲುಕ್ಸನ್, ಪಕ್ಷದ ಸಂಸದರು ತನ್ನನ್ನು ಬಹುಮತದಿಂದ ಬೆಂಬಲಿಸುತ್ತಾರೆಯೇ ಎಂಬುದನ್ನು ನಿರ್ಧರಿಸಲು ವಿಶ್ವಾಸಮತ ನಿರ್ಣಯ ಮಂಡಿಸಿದ್ದರು. ನಾನು ನನ್ನ ನಾಯಕತ್ವದಲ್ಲಿ ಔಪಚಾರಿಕ ವಿಶ್ವಾಸದ ನಿರ್ಣಯವನ್ನು ಮಂಡಿಸಿದೆ ಮತ್ತು ಆ ನಿರ್ಣಯವನ್ನು ಅಂಗೀಕರಿಸಲಾಗಿದೆ. ಪಕ್ಷದ ಸದಸ್ಯರು ನನ್ನ ನಾಯಕತ್ವದಲ್ಲಿ ಸ್ಪಷ್ಟವಾಗಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ ಎಂದು ಲುಕ್ಸನ್ ಸುದ್ದಿಗೋಷ್ಟಿಯಲ್ಲಿ ಹೇಳಿದ್ದಾರೆ.
Bengaluru | ಬಿಎಂಟಿಸಿ ಬಸ್ ಢಿಕ್ಕಿ ಹೊಡೆದು ದ್ವಿಚಕ್ರ ವಾಹನ ಸವಾರ ಮೃತ್ಯು
ಬೆಂಗಳೂರು : ಬಿಎಂಟಿಸಿ ಬಸ್ ಢಿಕ್ಕಿ ಹೊಡೆದು ದ್ವಿಚಕ್ರ ವಾಹನ ಸವಾರ ಮೃತಪಟ್ಟಿರುವ ಘಟನೆ ನಗರದ ಚಿಕ್ಕಬಾಣವಾರ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮಂಗಳವಾರ ನಡೆದಿದೆ. ಬಸವೇಶ್ವರ ನಗರದ ನಾಗರಾಜು(61) ಮೃತಪಟ್ಟ ಸವಾರ ಎಂದು ಗುರುತಿಸಲಾಗಿದೆ. ಈತ ನಂದಿನಿ ಮಿಲ್ಕ್ ಪಾರ್ಲರ್ ನಡೆಸುತ್ತಿದ್ದ. ಮಂಗಳವಾರ ಬೆಳಗ್ಗೆ 10.15ರ ಸುಮಾರಿಗೆ ದ್ವಿಚಕ್ರ ವಾಹನದಲ್ಲಿ ನಾಗರಾಜು ಕನ್ನಮಂಗಲದಲ್ಲಿರುವ ತನ್ನ ಮಗಳ ಮನೆಗೆ ಹೋಗುತ್ತಿದ್ದರು. ಈ ವೇಳೆ, ನೆಲಮಂಗಲದಿಂದ ಯಲಹಂಕಕ್ಕೆ ಹೋಗುತ್ತಿದ್ದ ಬಿಎಂಟಿಸಿ ಬಸ್ ಮಧುರೆ ರಸ್ತೆಯ ಬೆನಕ ಕಲ್ಯಾಣ ಮಂಟಪದ ಬಳಿ ದ್ವಿಚಕ್ರ ವಾಹನಕ್ಕೆ ಢಿಕ್ಕಿ ಹೊಡೆದ ಪರಿಣಾಮ ನಾಗರಾಜು ಗಂಭೀರ ಗಾಯಗೊಂಡಿದ್ದಾರೆ. ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಾಗ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಈ ಬಗ್ಗೆ ಮಾಹಿತಿ ತಿಳಿದು ಚಿಕ್ಕಬಾಣವಾರ ಸಂಚಾರಿ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ, ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿರುವುದಾಗಿ ತಿಳಿಸಿದ್ದಾರೆ.
Mangaluru | ಕಾರಿನಲ್ಲಿ ಪ್ರಯಾಣಿಸುವಾಗ ಸೈಡ್ ಕೊಡುವ ವಿಚಾರದಲ್ಲಿ ಹಲ್ಲೆ: ಆರೋಪಿಗಳಿಗೆ ಜೈಲು ಶಿಕ್ಷೆ
ಮಂಗಳೂರು: ಕಾರಿನಲ್ಲಿ ಪ್ರಯಾಣಿಸುವಾಗ ಸೈಡ್ ಕೊಡುವ ವಿಚಾರದಲ್ಲಿ ವ್ಯಕ್ತಿಯೊಬ್ಬರ ಮೇಲೆ ತಂಡವೊಂದು ಹಲ್ಲೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಎಫ್ಟಿಎಸ್ಸಿ-1 ತ್ವರಿತಗತಿ ನ್ಯಾಯಾಲಯವು ಆರೋಪಿಗಳಿಗೆ 3 ವರ್ಷ ಕಠಿಣ ಶಿಕ್ಷೆ ಮತ್ತು 1.34 ಲಕ್ಷ ರೂ. ದಂಡ ವಿಧಿಸಿ ತೀರ್ಪು ನೀಡಿದೆ. ಬಂಟ್ವಾಳ ಕಾವಳಪಡೂರು ನಿವಾಸಿ ದಿನೇಶ್ ಶೆಟ್ಟಿ (27), ಅರ್ಕುಳ ನಿವಾಸಿ ಧನ್ರಾಜ್ ಪೂಜಾರಿ ಯಾನೆ ವಳಚ್ಚಿಲ್ ಧನು (22), ಎಡಪದವು ನಿವಾಸಿ ನವೀನ್ (21), ಕಾರ್ಸ್ಟ್ರೀಟ್ ನಿವಾಸಿ ಪ್ರಜ್ವಲ್ ಪೂಜಾರಿ (20), ತಡಂಬೈಲ್ ನಿವಾಸಿ ವಸಂತ್ ಬಾಳ (53) ಶಿಕ್ಷೆಗೊಳಗಾದ ಆರೋಪಿಗಳಾಗಿದ್ದಾರೆ. ಆರೋಪಿ ವಸಂತ ಬಾಳ ಎಂಬಾತ ಕಿಶನ್ ರಾವ್ರನ್ನು ಕೊಲೆ ಮಾಡುವ ಉದ್ದೇಶದಿಂದ ತನ್ನ ಕಾರನ್ನು ಉಳಿದ ಆರೋಪಿಗಳಿಗೆ ನೀಡಿದ್ದ. ಅದರಂತೆ ಅ.22ರಂದು ಆರೋಪಿಗಳು ಮಾರಕಾಯುಧದೊಂದಿಗೆ ಹೊರಟು ಕಾರಿನಲ್ಲಿ ಕುಳಾಯಿ ಹೊಸಬೆಟ್ಟು ಗ್ರಾಮದ ವಿನಾಯಕ ಮೊಸಾಯಿಕ ರಸ್ತೆಯಲ್ಲಿ ಕಾದು ಕುಳಿತ್ತಿದ್ದರು. ಕಿಶನ್ ರಾವ್ ಸ್ಕೂಟರ್ನಲ್ಲಿ ತೆರಳುತ್ತಿದ್ದಾಗ ದಿನೇಶ್ ಶೆಟ್ಟಿ ಕಾರನ್ನು ಕಿಶನ್ ಮುಂದಿನಿಂದ ಚಲಾಯಿಸಿಕೊಂಡು ಬಂದು ಅಡ್ಡಗಟ್ಟಿ ಢಿಕ್ಕಿಪಡಿಸಿದ್ದ. ಬಳಿಕ ಕಿಶನ್ ರಾವ್ಗೆ ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಿದ್ದರು ಎಂದು ಆರೋಪಿಸಲಾಗಿತ್ತು. ಈ ಕೃತ್ಯಕ್ಕೆ ಎರಡು 2 ದಿನ ಮುಂಚಿತವಾಗಿ ದಿನೇಶ್, ವಸಂತ್ ಹಾಗೂ ಕಿಶನ್ ರಾವ್ ನಡುವೆ ಕಾರಿನಲ್ಲಿ ಸೈಡ್ ಕೊಡುವ ವಿಚಾರದಲ್ಲಿ ಗಲಾಟೆ ನಡೆದಿದ್ದು, ಆ ದ್ವೇಷದಿಂದ 5ನೇ ಆರೋಪಿ ವಸಂತ್ ಬಾಳ ಉಳಿದ ನಾಲ್ವರು ಆರೋಪಿಗಳ ಮೂಲಕ ಕೃತ್ಯವೆಸಗಿದ್ದ ಎಂದು ಆರೋಪಿಸಲಾಗಿತ್ತು. ಈ ಬಗ್ಗೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಎಫ್ಟಿಎಸ್ಸಿ-1 ತ್ವರಿತಗತಿ ನ್ಯಾಯಾಲಯದ ನ್ಯಾಯಾಧೀಶ ಮೋಹನ ಜೆ.ಎಸ್. ವಿಚಾರಣೆ ನಡೆಸಿ ತೀರ್ಪು ನೀಡಿದ್ದಾರೆ. ಸರಕಾರಿ ಅಭಿಯೋಜಕ ಹರಿಶ್ಚಂದ್ರ ಉದ್ಯಾವರ್ ಮತ್ತು ಕೆ. ಬದರಿನಾಥ ನಾಯರಿ ವಾದ ಮಂಡಿಸಿದ್ದರು.
Belagavi | ವಿದ್ಯುತ್ ಅವಘಡ: ಇಬ್ಬರು ಕಾರ್ಮಿಕರು ಮೃತ್ಯು
ಬೆಳಗಾವಿ : ಸವದತ್ತಿ ತಾಲೂಕಿನ ನವೀಲುತೀರ್ಥ ಜಲಾಶಯ ಸಮೀಪದ ಗೊರವನಕೊಳ್ಳ–ವಟ್ನಾಳ ಹದ್ದಿಯಲ್ಲಿ ಎಂ-ಸ್ಯಾಂಡ್ ಗಣಿಗಾರಿಕೆ ವೇಳೆ ಸಂಭವಿಸಿದ ವಿದ್ಯುತ್ ಅವಘಡದಲ್ಲಿ ಇಬ್ಬರು ಕಾರ್ಮಿಕರು ಮಂಗಳವಾರ ಮೃತಪಟ್ಟಿದ್ದಾರೆ. ಮೃತರನ್ನು ಜಾರ್ಖಂಡ್ ರಾಜ್ಯದ ಹಜಾರಿಭಾಗ ಜಿಲ್ಲೆಯ ಪಂಟುರಕಿಯ ನಿವಾಸಿಗಳಾದ ಹಿಟಾಚಿ ಆಪರೇಟರ್ ರವಿಕುಮಾರಸಿಂಗ್ ದುಪಾಲಸಿಂಗ್ ಸಿಂಗ್ (18) ಹಾಗೂ ಸಹಾಯಕ ಸುಭಾಕುಮಾರ ರೂಪನಸಿಂಗ್ (18) ಎಂದು ಗುರುತಿಸಲಾಗಿದೆ. 11 ಕೆವಿ ವಿದ್ಯುತ್ ಸಂಪರ್ಕದ ಸಮೀಪ ಹಿಟಾಚಿ ಯಂತ್ರದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಯಂತ್ರದ ಬಕೆಟ್ ಹೈಟೆನ್ಷನ್ ತಂತಿಗೆ ತಗುಲಿದ ಪರಿಣಾಮ ವಿದ್ಯುತ್ ಹರಿದು ಅವಘಡ ಸಂಭವಿಸಿದೆ ಎಂದು ತಿಳಿದುಬಂದಿದೆ. ವಿದ್ಯುತ್ ತಗುಲುತ್ತಿದ್ದಂತೆಯೇ ಪ್ರಾಣ ಉಳಿಸಿಕೊಳ್ಳಲು ಇಬ್ಬರು ಹಿಟಾಚಿಯಿಂದ ಕೆಳಗೆ ಜಿಗಿದಾಗ ಹತ್ತಿರದಲ್ಲಿದ್ದ ನೀರಿನ ಗುಂಡಿಯಲ್ಲಿ ಬಿದ್ದಿದ್ದಾರೆ. ಆದರೆ ನೀರಿನಲ್ಲೂ ವಿದ್ಯುತ್ ಹರಿದ ಪರಿಣಾಮ ಇಬ್ಬರೂ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಈ ಕುರಿತು ಸವದತ್ತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.
ಕ್ಷೇತ್ರ ಪುನರ್ವಿಂಗಡಣೆಗೆ ಇರುವ ಸಂವಿಧಾನ ತಿದ್ದುಪಡಿ ಮಸೂದೆಗೆ ಸೋಲು; ಮೋದಿ ಸರ್ಕಾರ ಇದರಿಂದ ಏನೇನು ಕಳೆದುಕೊಂಡಿತು?
ಮುಂದಿನ ಸುತ್ತಿನ ಕ್ಷೇತ್ರ ಪುನರ್ವಿಂಗಡಣೆಗೆ ಹೊಸ ನಿಯಮಗಳನ್ನು ಪಡೆಯಲು ಮತ್ತು ಲೋಕಸಭಾ ಸ್ಥಾನಗಳನ್ನು 850 ಸ್ಥಾನಗಳಿಗೆ ಹೆಚ್ಚಿಸುವ ಮೂಲಕ ಪ್ರಮುಖ ಬದಲಾವಣೆಗಳನ್ನು ಮಾಡಲು ಸಂವಿಧಾನ ತಿದ್ದುಪಡಿ ಮಸೂದೆಗಳಿಗೆ ಲೋಕಸಭೆಯಲ್ಲಿ ಸೋಲಾಗಿದೆ. ಈ ಸೋಲಿನಿಂದ ನರೇಂದ್ರ ಮೋದಿ ಸರ್ಕಾರಕ್ಕೆ ಮುಖಭಂಗವಾಗಿದ್ದು, ಇದು ಮಹತ್ವದ ರಾಜಕೀಯ ಫಲಿತಾಂಶಗಳನ್ನು ಹೊಂದಿದೆ ಎಂದು The Wire ವರದಿ ಮಾಡಿದೆ. ►ಲೋಕಸಭೆಯಲ್ಲಿ ಮಸೂದೆಗೆ ಸೋಲು ಬಿಜೆಪಿಗೆ ಹೊಡೆತ 2014ರಲ್ಲಿ ದಿಲ್ಲಿಯಲ್ಲಿ 282 ಸ್ಥಾನಗಳೊಂದಿಗೆ ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದ ಲೋಕಸಭೆಯಲ್ಲಿನ ಬಿಜೆಪಿಗೆ ಯೋಚಿಸಲಾಗದ ಸೋಲು ಮಹತ್ವದ್ದಾಗಿದೆ. ರಾಜ್ಯಸಭೆಯು ಸರ್ಕಾರಕ್ಕೆ ಪ್ರತಿರೋಧದ ತಾಣವಾಗಿದೆ. 2015 ಮಾರ್ಚ್ ನಲ್ಲಿ, ವಿರೋಧ ಪಕ್ಷವು ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯಕ್ಕೆ ತಿದ್ದುಪಡಿಯನ್ನು ಯಶಸ್ವಿಯಾಗಿ ಅಂಗೀಕರಿಸಿತು, ಇದು ಆಡಳಿತ ಪಕ್ಷಕ್ಕೆ ಅಪರೂಪದ ಕಾರ್ಯವಿಧಾನದ ಹಿನ್ನಡೆಯನ್ನು ಸೂಚಿಸುತ್ತದೆ. ಪರಿಶೀಲನೆಯಿಂದ ತಪ್ಪಿಸಿಕೊಳ್ಳಲು ಬಿಜೆಪಿ ಮಸೂದೆಗಳನ್ನು 'Money Bill' ಎಂದು ಕರೆಯಲು ಪ್ರಾರಂಭಿಸಿತು. 2002ರ ನಂತರ ಈ ಶತಮಾನದಲ್ಲಿ ಎರಡನೇ ಬಾರಿಗೆ ಮಾತ್ರ, ಈ ರೀತಿಯ ಸರ್ಕಾರದ ಮಸೂದೆಗೆ ಸೋಲಾಗಿದೆ. ►ಮೋದಿ ಸರ್ಕಾರದ ಪ್ರಭಾವಕ್ಕೆ ಹೊಡೆತ ಮೋದಿ ಸರ್ಕಾರವು ನ್ಯಾಯಾಲಯದಲ್ಲಿ ಮತ್ತು ಇತರೆಡೆಗಳಲ್ಲಿ ವಾದಿಸಲು ಇಷ್ಟಪಡುತ್ತದೆ. ಆದರೆ ನ್ಯಾಯಾಂಗದ ಮೂಲಕ ಸಂವಿಧಾನದ ಮೂಲಭೂತ ಅಂಶಗಳನ್ನು ಪುನರ್ರಚಿಸಲು ಪ್ರಯತ್ನಿಸುತ್ತದೆ; ಸಂಸತ್ತು ಮಾತ್ರ 'ಜನರ ಇಚ್ಛೆ'ಯನ್ನು ಪ್ರತಿನಿಧಿಸುತ್ತದೆ ಎಂದು ಹೇಳುತ್ತದೆ. ಅದನ್ನು 'ಸಾಂವಿಧಾನಿಕ ಮೌಲ್ಯಗಳ'ಲ್ಲ, ಸರ್ವೋಚ್ಚವೆಂದು ಪರಿಗಣಿಸಬೇಕು. ಇದು ಅದರ ಲೋಕಸಭಾ ಸಂಖ್ಯಾಬಲದ ಆಧಾರದ ಮೇಲೆ ನಿಂತಿದೆ. 2024ರ ಚುನಾವಣೆಯ ನಂತರ ಬಿಜೆಪಿ ಸ್ಪಷ್ಟ ಬಹುಮತವನ್ನು ಕಳೆದುಕೊಂಡಿತು. ಮೋದಿ ಅವರು ಅಜೇಯ ನಾಯಕ ಎಂಬ ತಮ್ಮ ಇಮೇಜ್ ಅನ್ನು ಪುನಃಸ್ಥಾಪಿಸಲು ಪ್ರಯತ್ನಿಸಿದ್ದಾರೆ. ಅವರು ಅದೇ ತಂಡವನ್ನು (ಸಂಪುಟ) ಇಟ್ಟುಕೊಳ್ಳುವ ಮೂಲಕ ಮತ್ತು ತಮ್ಮ ಅಧಿಕಾರದ ಮೇಲೆ ನಿಯಂತ್ರಣ ಮತ್ತು ಸಮತೋಲನಗಳಾಗಿ ಕಾರ್ಯನಿರ್ವಹಿಸಬೇಕಾದ ಸರ್ಕಾರಿ ಸಂಸ್ಥೆಗಳ ಮೇಲೆ ತಮ್ಮ ನಿಯಂತ್ರಣವನ್ನು ಬಲಪಡಿಸುವ ಮೂಲಕ ಇದನ್ನು ಮಾಡಿದರು. ಕಳೆದ ವಾರದ ಬೆಳವಣಿಗೆಗಳು ಮೋದಿ ಸರ್ಕಾರದ ಎಚ್ಚರಿಕೆಯಿಂದ ಬೆಳೆಸಿದ ಪ್ರಭಾವಕ್ಕೆ ಹೊಡೆತ ನೀಡಿವೆ. ►ವಿರೋಧ ಪಕ್ಷಗಳೂ ಮುಖ್ಯ ಬಿಜೆಪಿ ಕೇವಲ 240 ಸ್ಥಾನಗಳನ್ನು ಹೊಂದಿದ್ದರೂ ವಿರೋಧ ಪಕ್ಷಗಳು ಮುಖ್ಯವಲ್ಲ ಎಂಬ ನಂಬಿಕೆ ಇತ್ತು. ಸ್ಪಷ್ಟವಾಗಿ ಪಕ್ಷಪಾತದ ಸ್ಪೀಕರ್ ಮೂಲಕ ಅಥವಾ ವಿವಿಧ ಪಕ್ಷಗಳೊಂದಿಗೆ ಪ್ರತ್ಯೇಕವಾಗಿ ಮಾತನಾಡುವ ಮೂಲಕ ಮತ್ತು ಯಾವುದೇ ಸರ್ವಪಕ್ಷ ಸಭೆಗಳನ್ನು ನಡೆಸದೆ ವಿರೋಧ ಪಕ್ಷಗಳನ್ನು 'ನಿರ್ವಹಿಸಬಹುದು' ಎಂಬ ಕಲ್ಪನೆಯೂ ಇಲ್ಲಿ ಮುರಿದುಹೋಯಿತು. ಏಕೆಂದರೆ ಪ್ರಸ್ತಾವಿತ ಲೋಕಸಭೆಯ ಆತುರದ ವಿಸ್ತರಣೆಯಿಂದ ಲಾಭ ಪಡೆಯುವ ಸಾಧ್ಯತೆ ಇರುವ ಹಿಂದಿ ಭಾಷೆಯ ಪ್ರದೇಶದ ಪಕ್ಷಗಳು ಸೇರಿದಂತೆ ವಿರೋಧ ಪಕ್ಷಗಳು ತಮ್ಮ ನಿಲುವನ್ನು ಉಳಿಸಿಕೊಂಡವು. ►ಅಮಿತ್ ಶಾ ಅವರ ಚಾಣಕ್ಯಗಿರಿ ಇದು ಅಮಿತ್ ಶಾ ಅವರ ರೇಟಿಂಗ್ ಗಳನ್ನು ಕಡಿಮೆ ಮಾಡಿತು. ಶಾ ಅವರ ನಡೆಗಳು ಸಾಮಾನ್ಯವಾಗಿ ಲೋಕಸಭೆಯನ್ನು ಗೊಂದಲಗೊಳಿಸುವಲ್ಲಿ ಯಶಸ್ವಿಯಾಗಿವೆ. ಮೊದಲು 2019 ಆಗಸ್ಟ್ 5ರಂದು 'ರಾಷ್ಟ್ರೀಯ ಭದ್ರತೆ'ಯ ನೆಪದಲ್ಲಿ ಯಾವುದೇ ಚರ್ಚೆಯಿಲ್ಲದೆ, ಮಾಹಿತಿಯಿಲ್ಲದೆ ರಾಜ್ಯವನ್ನು ವಿಭಜಿಸಿ ಅದನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ಪರಿವರ್ತಿಸಲು ಸಾಧ್ಯವಾಯಿತು. ಲೋಕಸಭೆಯಲ್ಲಿ ಅಲ್ಪಸಂಖ್ಯಾತ ಸ್ಥಾನಕ್ಕೆ ಕುಸಿದ ನಂತರ, ಸರ್ಕಾರವು 'ಭ್ರಷ್ಟಾಚಾರ' ಆರೋಪದ ಆಧಾರದ ಮೇಲೆ ಮುಖ್ಯಮಂತ್ರಿಗಳನ್ನು ಪದಚ್ಯುತಗೊಳಿಸಲು ಮತ್ತು ಬಂಧಿಸಲು ಅನುವು ಮಾಡಿಕೊಡುವ ಮಸೂದೆಯನ್ನು ತರಲು ಮತ್ತೆ ಪ್ರಯತ್ನಿಸಿತು. ಆದರೆ ಆ ಪ್ರಯತ್ನವು ಯಶಸ್ವಿಯಾಗಲಿಲ್ಲ. ಮಸೂದೆಯನ್ನು ಸಮಿತಿಗೆ ಕಳುಹಿಸಲಾಯಿತು. ಈ ಬಾರಿ, ಮಸೂದೆಯನ್ನು ಸೋಲಿಸಲಾಯಿತು. ►ಭಾರತದ ಇಬ್ಬರು ಅತ್ಯಂತ ಶಕ್ತಿಶಾಲಿ ನಾಯಕರ ವೈಯಕ್ತಿಕ ರಾಜಕೀಯ ವಿಶ್ವಾಸಾರ್ಹತೆಗೆ ಪೆಟ್ಟು ನರೇಂದ್ರ ಮೋದಿ ಮತ್ತು ಅಮಿತ್ ಶಾ ಇಬ್ಬರೂ ರಾಜ್ಯಗಳ ಹಿತಾಸಕ್ತಿಗಳಿಗೆ ಧಕ್ಕೆ ತರುವುದಿಲ್ಲ ಎಂದು ಸದನಕ್ಕೆ ಭರವಸೆ ನೀಡಿದ್ದರು. ಆದರೆ ಆ ಮಾತುಗಳಿಗೆ ಯಾವುದೇ ಮಹತ್ವವಿರಲಿಲ್ಲ. ಬಿಜೆಪಿ ತನ್ನ ಗುರಿಯನ್ನು ತಲುಪದಿರುವ ಕಾರಣ ಮೋದಿ ಮತ್ತೆ 30 ನಿಮಿಷಗಳ 'ಭಾಷಣ'ದಲ್ಲಿ 59 ಬಾರಿ ಕಾಂಗ್ರೆಸ್ ಪಕ್ಷವನ್ನು ಉಲ್ಲೇಖಿಸಿದ್ದರು. ►ನಿಯಮಗಳು ಮತ್ತು ಕಾರ್ಯವಿಧಾನಗಳನ್ನು ತಿರುಚುವುದು ಯಾವಾಗಲೂ ಸಾಧ್ಯವಿಲ್ಲ ಬಿಜೆಪಿ ತನ್ನ ಇಚ್ಛೆಯಂತೆ ಸಂಸದೀಯ ಕಾರ್ಯವಿಧಾನದಲ್ಲಿ ಹಸ್ತಕ್ಷೇಪ ಮಾಡಬಹುದು ಮತ್ತು ತಪ್ಪಿಸಿಕೊಳ್ಳಬಹುದು ಎಂಬ ದೃಢನಿಶ್ಚಯವು ಭಗ್ನಗೊಂಡಿತು. ಸಂಸತ್ತನ್ನು ಕಾರ್ಯಾಂಗದ ವಿಸ್ತರಣೆಗೆ ಇಳಿಸುವ ಪ್ರಯತ್ನ ಸ್ಪಷ್ಟವಾಗಿದೆ. 2019ರಿಂದ ಲೋಕಸಭೆಯಲ್ಲಿ ಯಾವುದೇ ಉಪ ಸ್ಪೀಕರ್ ಇಲ್ಲ, ಇದು ಭಾರತೀಯ ಇತಿಹಾಸದಲ್ಲಿ ಮೊದಲನೆಯದು. 2020ರಲ್ಲಿ ಮೂರು ಕೃಷಿ ಮಸೂದೆಗಳ ಸಂದರ್ಭದಲ್ಲಿ ಏನಾಯಿತು ಎಂಬುದನ್ನು ನೋಡಿದರೆ ಸಂಸದೀಯ ಕಾರ್ಯವಿಧಾನಗಳು ಮತ್ತು ಮಾನದಂಡಗಳ ಉಲ್ಲಂಘನೆ ಸ್ಪಷ್ಟವಾಗುತ್ತದೆ. ಇತ್ತೀಚೆಗೆ, ಸರ್ಕಾರವು ನಿಯಮ 116 ಅನ್ನು ಬಿಟ್ಟು CAPF (ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳು) ಮಸೂದೆಗಳನ್ನು ತ್ವರಿತವಾಗಿ ಜಾರಿಗೆ ತರಲು ಪ್ರಯತ್ನಿಸಿತು. ಈ ನಿಯಮಕ್ಕೆ ಸಾಮಾನ್ಯವಾಗಿ ಅಧ್ಯಯನ ಮತ್ತು ಚರ್ಚೆಗೆ ಸಮಯ ಬೇಕಾಗುತ್ತದೆ. ಆದರೆ, ಸದನದಲ್ಲಿನ ವಿರೋಧ ಪಕ್ಷಗಳು ಒಟ್ಟಾಗಿ ನಿಂತು ಅದನ್ನು ಮಾಡಲು ನಿರಾಕರಿಸಿದ್ದರಿಂದ ಅವರಿಗೆ ಈ ಶಾರ್ಟ್ ಕಟ್ ತೆಗೆದುಕೊಳ್ಳಲು ಸಾಧ್ಯವಾಗಲಿಲ್ಲ. ►ಸೈದ್ಧಾಂತಿಕ ಹಿನ್ನಡೆ ಈ ಪ್ರಕ್ರಿಯೆಯ ಉದ್ದೇಶ ಬಿಜೆಪಿಗೆ ಸ್ಥಾನಗಳ ತ್ವರಿತ ವಿಸ್ತರಣೆಯನ್ನು ಉಡುಗೊರೆಯಾಗಿ ನೀಡುವುದು ಮತ್ತು ಇತರ ಪ್ರದೇಶಗಳಿಗೆ ಅದು ಹೇಗೆ ಹಾನಿ ಮಾಡುತ್ತದೆ ಎಂಬುದರ ಕುರಿತು ಚರ್ಚಿಸದೆ ತನ್ನ ರಾಜಕೀಯ ಪ್ರಾಬಲ್ಯವನ್ನು ಸ್ಥಾಪಿಸುವುದಾಗಿತ್ತು. ಆದರೆ 'ಮಹಿಳಾ ಮೀಸಲಾತಿ ತ್ವರಿತಗೊಳಿಸುವಿಕೆ' ಎಂಬ ಹೆಡ್ಡಿಂಗ್ ಸಹಾಯ ಮಾಡಲಿಲ್ಲ. ಇತರ ಪ್ರದೇಶಗಳಿಗೆ ಹಾನಿ ಮಾಡಲು ಬಯಸಿದ್ದಕ್ಕಾಗಿ ಬಿಜೆಪಿಯನ್ನು ಹೊರಗಿಡಲಾಯಿತು. ಭಾರತೀಯ ರಾಜಕೀಯವನ್ನು ವ್ಯವಸ್ಥಿತವಾಗಿ ಪುನರ್ರಚಿಸುವುದು, ಹಿಂದಿ, ಹಿಂದೂ, ಹಿಂದೂಸ್ತಾನ್ ವಿಷಯಗಳ ಯೋಜನೆಯಡಿಯಲ್ಲಿ ತನ್ನ ಆಡಳಿತವನ್ನು ಶಾಶ್ವತಗೊಳಿಸುವುದು ಮತ್ತು ಅಸಮಾಧಾನಗಳನ್ನು ವ್ಯಕ್ತಪಡಿಸುವುದನ್ನು ತಡೆಯಲು ಅದರ ಬಗ್ಗೆ ಯಾವುದೇ ಚರ್ಚೆಯಿಲ್ಲದೆ ಒಳಗೊಂಡ ಭವಿಷ್ಯದ ನೀಲನಕ್ಷೆಯು ಗಂಭೀರ ಹಿನ್ನಡೆಯನ್ನು ಅನುಭವಿಸಿತು. ಇದು ಕೇವಲ ತಂತ್ರವಾಗಿ ಮಾತ್ರವಲ್ಲದೆ ರಾಜ್ಯಗಳನ್ನು ಕುಗ್ಗಿಸುವ ದೊಡ್ಡ ಗುರಿಯನ್ನು ಪೂರೈಸಲು ಉದ್ದೇಶಿಸಲಾಗಿತ್ತು. ಅದು ಸಾಧ್ಯವಾಗಿಲ್ಲ. ►ಪ್ರದೇಶ ಮತ್ತು ಭಾಷೆ ಜಾತಿಯನ್ನು ಒಳಗೊಳ್ಳಲು ಬಿಜೆಪಿಯ ಹೋರಾಟಗಳ ಹೊರತಾಗಿಯೂ, ಧರ್ಮ ಮತ್ತು ಜಾತಿಯು ಸ್ಪರ್ಧಾತ್ಮಕ ವಿಷಯಗಳಾಗಿ ಉಳಿದಿವೆ. ಭಾಷೆ, ಪ್ರದೇಶ ಮತ್ತು ವೈವಿಧ್ಯತೆಯ ಬಗ್ಗೆ ಮೂರನೇ ವಿಷಯವು ಈ ಚರ್ಚೆಯ ಮೂಲಕ ಹೊತ್ತಿಕೊಂಡಿರಬಹುದು. ಇದು ಬಿಜೆಪಿ ಹೊಸ ಪ್ರದೇಶಗಳನ್ನು ಗೆಲ್ಲಲು ಹೆಣಗಾಡುತ್ತಿರುವಾಗ ಭವಿಷ್ಯದ ಎಲ್ಲಾ ಚರ್ಚೆಗಳಲ್ಲಿ ಕಾಣಿಸುವ ಸಾಮರ್ಥ್ಯವನ್ನು ಹೊಂದಿದೆ. ವಿರೋಧಾಭಾಸವೆಂದರೆ 2014 ಮತ್ತು 2023ರ ನಡುವೆ ಗೋವುಗಳಿಗೆ ಪ್ರಾಧಾನ್ಯತೆ ನೀಡುವ ರಾಜ್ಯಗಳ ಮೇಲೆ ಹಿಡಿತ ಸಾಧಿಸಿದ್ದರೂ, 2024ರಲ್ಲಿ ಉತ್ತರ ಪ್ರದೇಶ, ರಾಜಸ್ಥಾನ, ಹಿಮಾಚಲ ಪ್ರದೇಶ ಮತ್ತು ಪಂಜಾಬ್ನಲ್ಲಿ ಬಿಜೆಪಿ ಗಂಭೀರ ಹಿನ್ನಡೆ ಅನುಭವಿಸಿತು. 1950ರ ದಶಕದ ಭಾಷಾ ಆಧಾರಿತ ಸಂಘರ್ಷಗಳು ಪ್ರಾಚೀನ ಇತಿಹಾಸದಂತೆ ಕಾಣಿಸಬಹುದು, ಆದರೆ ಆ ಆಳವಾದ ಸಾಮಾಜಿಕ ವಿಭಜನೆಗಳನ್ನು ಆಧುನಿಕ ರಾಜಕೀಯವು ಉದ್ದೇಶಪೂರ್ವಕವಾಗಿ ಪ್ರಚೋದಿಸಿದರೆ ಅಥವಾ ಬಳಸಿಕೊಳ್ಳುತ್ತಿದ್ದರೆ ಅವು ಸುಲಭವಾಗಿ ಮತ್ತೆ ಕಾಣಿಸಿಕೊಳ್ಳಬಹುದು. ►ನಿರೂಪಣೆಯನ್ನು ನಿಯಂತ್ರಿಸಲು/ಪ್ರಾಬಲ್ಯ ಸಾಧಿಸಲು ಅಸಮರ್ಥತೆ 'ನಿರೂಪಣಾ ಯುದ್ಧ' ಮೂಲಕ ಬಿಜೆಪಿ ಯಾವಾಗಲೂ ಗೆಲ್ಲುವ ಬಗ್ಗೆ ತೃಪ್ತಿ ಹೊಂದಿದೆ ಎಂದು ತೋರುತ್ತದೆ, ಆದರೆ ಬಿಜೆಪಿಯ ಏಕೈಕ ಮಹಿಳಾ ಮುಖ್ಯಮಂತ್ರಿ ರೇಖಾ ಗುಪ್ತಾ ಸೇರಿದಂತೆ ಬಿಜೆಪಿ ಮಹಿಳಾ ಕಾರ್ಯಕರ್ತರನ್ನು ರಾಹುಲ್ ಗಾಂಧಿಯವರ ಮನೆಗೆ ಕಳುಹಿಸುವುದು ಸರಿಯಾದ ನಿರ್ಧಾರವಾಗಿರಲಿಲ್ಲ. ಆನ್ಲೈನ್ ಮೀಮ್ಸ್, ಖಿ-ಖಿ ಜೋಕ್ಗಳು ಮತ್ತು ಕಾರ್ಟೂನ್ ಗಳನ್ನು ನಿಗ್ರಹಿಸಲು, ವಿಶ್ವಗುರು ಮತ್ತು ಇತರ ವಿದೇಶಾಂಗ ನೀತಿ ದುಸ್ಸಾಹಸಗಳಿಗಾಗಿ ಮೋದಿಯವರನ್ನು ವೈಯಕ್ತಿಕವಾಗಿ ಅಪಹಾಸ್ಯ ಮಾಡುವುದನ್ನು ಎದುರಿಸಲು ಬಿಜೆಪಿ ತೀವ್ರ ಪ್ರಯತ್ನಗಳನ್ನು ಮಾಡಬೇಕಾಗಿದೆಯೆಂಬಂತೆ, ಈ ಬಾರಿಯೂ ನಿರೂಪಣಾ ಆಟವನ್ನು ಹೇಗಾದರೂ ಆಡಲು ಬಿಜೆಪಿ ಮತ್ತೆ ಕಠಿಣ ಕ್ರಮಗಳನ್ನು ಆಶ್ರಯಿಸಬಹುದು. ಶನಿವಾರ ರಾತ್ರಿ ಮೋದಿ ಮಾತನಾಡುತ್ತಿದ್ದಾಗ ವಿಡಿಯೊಗೆ ಬಂದ ಲೈವ್ ಕಮೆಂಟ್ ಗಳು ಎನ್ ಡಿ ಎ ಗೆ ದೊಡ್ಡ ಎಚ್ಚರಿಕೆಯಾಗಬೇಕು. 2024ಕ್ಕಿಂತ ಮೊದಲು ಅದು ಮಹಿಳಾ ಮೀಸಲಾತಿಯನ್ನು ಏಕೆ ಜಾರಿಗೆ ತರಲಿಲ್ಲ? ಅದು ಕಡಿಮೆ ಮಹಿಳಾ ಸಂಸದರನ್ನು ಹೊಂದಿರುವ ಪಕ್ಷ ಏಕೆ? ಪ್ರಧಾನಿ ಮತ್ತು ಗೃಹ ಸಚಿವರು ಸಂಸತ್ತಿನಲ್ಲಿ ಹೇಳಿದ್ದು ಮಸೂದೆಗಳ ಪಠ್ಯಕ್ಕೆ ಏಕೆ ಹೊಂದಿಕೆಯಾಗಲಿಲ್ಲ? ಹೀಗೆ ಬಿಜೆಪಿಗೆ ಉತ್ತರಿಸಲು ಸಾಧ್ಯವಾಗದ ಕೆಲವು ಮೂಲಭೂತ ಪ್ರಶ್ನೆಗಳು ಇನ್ನೂ ಇವೆ. ಟಿವಿ ಮತ್ತು ಹೆಚ್ಚಿನ ಪತ್ರಿಕೆಗಳೆರಡರಲ್ಲೂ ತನ್ನ ಹಿಡಿತದ ಹೊರತಾಗಿಯೂ, ಈ ಪ್ರಶ್ನೆಗಳನ್ನು ಮೌನಗೊಳಿಸಲು ಬಿಜೆಪಿಗೆ ಸಾಧ್ಯವಾಗಿಲ್ಲ.
ಮಡಗಾಂವ್ ಬಳಿ ಓವರ್ಬ್ರಿಡ್ಜ್ ಕಾಮಗಾರಿ: ಕೆಲವು ರೈಲುಗಳ ಸಂಚಾರ ವೇಳೆಯಲ್ಲಿ ವ್ಯತ್ಯಯ
ಉಡುಪಿ: ಮಡಗಾಂವ್ನ ರಾವನ್ಫಾಂಡದಲ್ಲಿ ರಸ್ತೆಗೆ ಓವರ್ ಬ್ರಿಡ್ಜ್ ನಿರ್ಮಾಣಕ್ಕಾಗಿ ಗಿರ್ಡರ್ ಕಾಮಗಾರಿ ಎ.21ರಿಂದ 24ರವರೆಗೆ ನಡೆಯಲಿರುವ ಹಿನ್ನೆಲೆಯಲ್ಲಿ ಕೊಂಕಣ ರೈಲು ಮಾರ್ಗದಲ್ಲಿ ಸಂಚರಿಸುವ ಹಲವು ರೈಲುಗಳ ವೇಳಾಪಟ್ಟಿಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಕೊಂಕಣ ರೈಲ್ವೆ ಪ್ರಕಟಣೆ ತಿಳಿಸಿದೆ. ಲೋಕಮಾನ್ಯ ತಿಲಕ್ ಹಾಗೂ ಮಂಗಳೂರು ಸೆಂಟ್ರಲ್ ನಡುವೆ ಸಂಚರಿಸುವ ಎಕ್ಸ್ಪ್ರೆಸ್ ರೈಲಿನ ಸಂಚಾರವನ್ನು ಎ.22ರಂದು ಮಡಗಾಂವ್ ಜಂಕ್ಷನ್ ನಿಲ್ದಾಣದಲ್ಲಿ ಸುಮಾರು 20ನಿಮಿಷ ತಡೆ ಹಿಡಿಯಲಾಗುವುದು. ಇಂದೋರ್ ಹಾಗೂ ತಿರುವನಂತಪುರಂ ನಡುವೆ ಸಂಚರಿಸುವ ಎಕ್ಸ್ಪ್ರೆಸ್ ರೈಲಿನ ಸಂಚಾರವನ್ನು ಎ.22ರಂದು ಮಡಗಾಂವ್ ಜಂಕ್ಷನ್ನಲ್ಲಿ 35 ನಿಮಿಷ ತಡೆಹಿಡಿಯಲಾಗುವುದು. ಎರ್ನಾಕುಲಂ ಜಂಕ್ಷನ್- ಓಖಾ ಎಕ್ಸ್ಪ್ರೆಸ್ ರೈಲಿನ ಎ.23ರ ಸಂಚಾರ ವನ್ನು ಬಾಲಿ ನಿಲ್ದಾಣದಲ್ಲಿ 20 ನಿಮಿಷ ವಿಳಂಬಿಸಲಾಗುವುದು ಎಂದು ಕೊಂಕಣ ರೈಲ್ವೆ ಪ್ರಕಟಣೆ ತಿಳಿಸಿದೆ.
ಬೆದರಿಕೆಯ ನೆರಳಿನಲ್ಲಿ ಮಾತುಕತೆಗೆ ಒಪ್ಪುವುದಿಲ್ಲ, ಯಾವುದೇ ಪರಿಸ್ಥಿತಿ ಎದುರಿಸಲು ಸಿದ್ಧ: ಇರಾನ್
ಟೆಹರಾನ್, ಎ.21: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇರಾನ್ನ ಮೇಲೆ ಒತ್ತಡ ಹೇರಲು ಪ್ರಯತ್ನಿಸುತ್ತಿದ್ದಾರೆ ಎಂದು ಇರಾನ್ ಸಂಸತ್ತಿನ ಸ್ಪೀಕರ್ ಮುಹಮ್ಮದ್ ಬಾಘೆರ್ ಘಾಲಿಬಾಫ್ ಆರೋಪಿಸಿದ್ದು, ಬೆದರಿಕೆಯ ನೆರಳಿನಡಿ ಮಾತುಕತೆ ನಡೆಯುವುದಾದರೆ ಇರಾನ್ ಯಾವುದೇ ಪರಿಸ್ಥಿತಿ ಎದುರಿಸಲೂ ಸಿದ್ಧವಾಗಿದೆ ಎಂದು ಘೋಷಿಸಿದ್ದಾರೆ. ಎರಡು ವಾರಗಳ ತಾತ್ಕಾಲಿಕ ಕದನ ವಿರಾಮ ಬುಧವಾರ (ಎಪ್ರಿಲ್ 22) ಕೊನೆಗೊಳ್ಳುವುದಕ್ಕೂ ಮುನ್ನ ಅಮೆರಿಕ-ಇರಾನ್ ನಡುವಿನ ಎರಡನೇ ಸುತ್ತಿನ ಸಂಭಾವ್ಯ ಮಾತುಕತೆಯ ಕುರಿತ ಅನಿಶ್ಚಿತತೆ ಹೆಚ್ಚಿರುವ ನಡುವೆಯೇ ಇರಾನ್ ನಾಯಕರ ಈ ಹೇಳಿಕೆ ಹೊರಬಿದ್ದಿದೆ. ದಿಗ್ಬಂಧನ, ಕದನ ವಿರಾಮದ ಉಲ್ಲಂಘನೆಯ ಮೂಲಕ ಟ್ರಂಪ್ ಮಾತುಕತೆಯ ಮೇಜನ್ನು ತಮ್ಮತ್ತ ತಿರುಗಿಸಲು ಪ್ರಯತ್ನಿಸುತ್ತಿದ್ದಾರೆ. ಬೆದರಿಕೆಯ ಮೂಲಕ ತಮ್ಮ ಇಚ್ಛೆಯನ್ನು ಸಾಧಿಸಬಹುದು ಎಂಬ ಕನಸು ಕಾಣುತ್ತಿದ್ದಾರೆ. ಆದರೆ ಬೆದರಿಕೆಯ ನೆರಳಿನಡಿಯ ಮಾತುಕತೆಯನ್ನು ನಾವು ಒಪ್ಪುವುದಿಲ್ಲ ಮತ್ತು ಎರಡು ವಾರಗಳ ತಾತ್ಕಾಲಿಕ ಕದನ ವಿರಾಮದ ಅವಧಿಯಲ್ಲಿ ನಾವು ನಮ್ಮ ಹೊಸ ಕಾರ್ಡ್ಗಳನ್ನು ಯುದ್ಧರಂಗದಲ್ಲಿ ಬಹಿರಂಗಪಡಿಸಲು ಸಿದ್ಧತೆ ನಡೆಸಿದ್ದೇವೆ ಎಂದು ಘಾಲಿಬಾಫ್ `ಎಕ್ಸ್'ನಲ್ಲಿ ಎಚ್ಚರಿಕೆ ನೀಡಿದ್ದಾರೆ.
ಅಸ್ಸಾಂ| 2018ರ ಗುಂಪು ಹತ್ಯೆ ಪ್ರಕರಣ: 20 ಆರೋಪಿಗಳನ್ನು ದೋಷಿಗಳೆಂದು ಘೋಷಿಸಿದ ನ್ಯಾಯಾಲಯ
ಗುವಾಹಟಿ,ಎ.21: 2018ರಲ್ಲಿ ಇಬ್ಬರು ವ್ಯಕ್ತಿಗಳನ್ನು ಥಳಿಸಿ ಹತ್ಯೆಗೈದಿದ್ದ ಪ್ರಕರಣದಲ್ಲಿ 20 ಆರೋಪಿಗಳನ್ನು ದೋಷಿಗಳು ಎಂದು ಸೋಮವಾರ ಘೋಷಿಸಿರುವ ಅಸ್ಸಾಂನ ವಿಶೇಷ ನ್ಯಾಯಾಲಯವು ಇತರ 25 ಜನರನ್ನು ಖುಲಾಸೆಗೊಳಿಸಿದೆ ಎಂದು ಸುದ್ದಿಸಂಸ್ಥೆಯು ವರದಿ ಮಾಡಿದೆ. ಗುಂಪು ಅವರನ್ನು ಮಕ್ಕಳ ಅಪಹರಣಕಾರರು ಎಂದು ಆರೋಪಿಸಿ ಹತ್ಯೆ ಮಾಡಿತ್ತು. ಅಪರಾಧಿಗಳಿಗೆ ನ್ಯಾಯಾಲಯವು ಶುಕ್ರವಾರ ಶಿಕ್ಷೆಯನ್ನು ಪ್ರಕಟಿಸಲಿದೆ. ಜೂನ್ 2018ರಲ್ಲಿ ಈ ಘಟನೆ ನಡೆದಿತ್ತು. ಕರ್ಬಿ ಆಂಗ್ಲಾಂಗ್ನಲ್ಲಿಯ ಕಾಂಗ್ತಿಲಾಂಗ್ಸೊ ಜಲಪಾತಕ್ಕೆ ತೆರಳಿದ್ದಗುವಾಹಟಿ ನಿವಾಸಿಗಳಾಗಿದ್ದ ನೀಲೋತ್ಪಲ ದಾಸ್ (29) ಮತ್ತು ಅಭಿಜೀತ್ ನಾಥ್ (30) ಅವರು ಅಲ್ಲಿಂದ ಮರಳುತ್ತಿರುವಾಗ ಪಂಜುರಿ ಎಂಬಲ್ಲಿ ಗ್ರಾಮಸ್ಥರ ಗುಂಪೊಂದು ಅವರ ಕಾರನ್ನು ತಡೆದು,ಇಬ್ಬರನ್ನೂ ಹೊರಗೆಳೆದು ಥಳಿಸಿ ಕೊಂದಿತ್ತು. ಆ ಸಮಯದಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗಿದ್ದ ವೀಡಿಯೊದಲ್ಲಿ ದಾಸ್ ಮತ್ತು ನಾಥ್ ತಾವು ಮಕ್ಕಳ ಅಪಹರಣಕಾರರಲ್ಲ,ಕರ್ಬಿ ಆಂಗ್ಲಾಂಗ್ಗೆ ಭೇಟಿ ನೀಡಿದ್ದೆವು ಎಂದು ಗುಂಪಿಗೆ ಹೇಳುತ್ತಿರುವುದು ಕೇಳಿಸಿತ್ತು. ಸಾಮಾಜಿಕ ಮಾಧ್ಯಮಗಳಲ್ಲಿ ಮಕ್ಕಳ ಅಪಹರಣದ ಕುರಿತು ವದಂತಿಗಳ ನಡುವೆಯೇ ಈ ದುರಂತ ಸಂಭವಿಸಿತ್ತು. ಸೋಮವಾರ ತೀರ್ಪು ಪ್ರಕಟಿಸಿದ ನಾಗಾಂವ್ ಜಿಲ್ಲಾ ಸೆಷನ್ಸ್ ನ್ಯಾಯಾಧೀಶ ಡಿ.ಜೆ.ಮಹಂತ ಅವರು 45 ಆರೋಪಿಗಳ ಪೈಕಿ 20 ಜನರನ್ನು ದೋಷಿಗಳೆಂದು ಎತ್ತಿ ಹಿಡಿದಿದ್ದಾರೆ. ಖುಲಾಸೆಗೊಂಡಿರುವ 24 ಆರೋಪಿಗಳನ್ನು ಜೈಲಿನಿಂದ ಬಿಡುಗಡೆಗೊಳಿಸುವಂತೆ ಆದೇಶಿಸಿದ್ದಾರೆ. ಅವರ ವಿರುದ್ಧ ಪ್ರಕರಣವನ್ನು ಸಾಬೀತುಗೊಳಿಸುವಲ್ಲಿ ಪ್ರಾಸಿಕ್ಯೂಷನ್ ವಿಫಲಗೊಂಡಿದೆ ಎಂದು ಅವರು ತೀರ್ಪಿನಲ್ಲಿ ಹೇಳಿದ್ದಾರೆ. ಘಟನೆ ನಡೆದಿದ್ದ ಸಂದರ್ಭದಲ್ಲಿ ಒಟ್ಟು 48 ಜನರನ್ನು ಬಂಧಿಸಲಾಗಿತ್ತು. ಈ ಪೈಕಿ ಮೂವರು ಅಪ್ರಾಪ್ತ ವಯಸ್ಕರಾಗಿದ್ದು,ಅವರನ್ನು ಬಾಲಾಪರಾಧಿಗಳ ಗೃಹಕ್ಕೆ ರವಾನಿಸಲಾಗಿತ್ತು.
ದೇಶದ ಆಧ್ಯಾತ್ಮ ಲೋಕಕ್ಕೆ ಹೊಸ ಚೈತನ್ಯ ನೀಡಿದ ಶಂಕರಾಚಾರ್ಯರು: ಡಾ.ಜಯಶಂಕರ ಕಂಗಣ್ಣಾರು
ಉಡುಪಿ: ಭಾರತದ ಆಧ್ಯಾತ್ಮ ಲೋಕಕ್ಕೆ ಹೊಸ ಚೈತನ್ಯ ನೀಡಿದ ಆದಿಗುರು ಶ್ರೀ ಶಂಕರಾಚಾರ್ಯರು ಭಾರತದ ಆಧ್ಯಾತ್ಮಿಕ ಪರಂಪರೆಯಲ್ಲಿ ಉನ್ನತ ಸ್ಥಾನ ಪಡೆದಿದ್ದಾರೆ ಎಂದು ಅದಮಾರು ಪೂರ್ಣಪ್ರಜ್ಞ ಪದವಿ ಪೂರ್ವ ಕಾಲೇಜಿನ ಸಂಸ್ಕೃತ ಉಪನ್ಯಾಸಕ ಡಾ.ಜಯಶಂಕರ ಕಂಗಣ್ಣಾರು ಹೇಳಿದ್ದಾರೆ. ಮಣಿಪಾಲದ ಜಿಲ್ಲಾಧಿಕಾರಿ ಕಛೇರಿಯ ಕೋರ್ಟ್ ಹಾಲ್ನಲ್ಲಿ ಮಂಗಳವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವುಗಳ ಸಂಯುಕ್ತ ಆಶ್ರಯದಲ್ಲಿ ನಡೆದ ಶ್ರೀ ಶಂಕರಾಚಾರ್ಯ ಜಯಂತಿ ಕಾರ್ಯಕ್ರಮದಲ್ಲಿ ಶಂಕರಾಚಾರ್ಯರ ಕುರಿತು ವಿಶೇಷ ಉಪನ್ಯಾಸ ನೀಡಿ ಮಾತನಾಡುತಿದ್ದರು. ಕೇರಳದ ಕಾಲಡಿಯಲ್ಲಿ ಜನಿಸಿದ ಶಂಕರರು, ವೇದ, ಉಪನಿಷತ್ತು, ಪುರಾಣ ಅಧ್ಯಯನಗಳನ್ನು ತಮ್ಮ ಚಿಕ್ಕ ವಯಸ್ಸಿನಲ್ಲಿಯೇ ಮೈಗೂಡಿಸಿ ಕೊಂಡಿದ್ದರು. ತಮ್ಮ ಅತ್ಯಲ್ಪ ಜೀತಾವಧಿಯಲ್ಲಿ ಹಲವಾರು ಗ್ರಂಥರಚನೆ ಮಾಡಿ ಸಾಹಿತ್ಯಲೋಕಕ್ಕೆ ಅಸಾಧಾರಣ ಕೊಡುಗೆ ನೀಡಿದ್ದಾರೆ. ಅದ್ವೈತ ಮತವನ್ನು ಬೋಧಿಸುವುದರೊಂದಿಗೆ ಆಗ ಪ್ರಚಲಿತದಲ್ಲಿದ್ದ ಎಲ್ಲ ಮತ ಗಳಿಗೂ ಮಾರ್ಗದರ್ಶಕರಾಗಿದ್ದ ಮಹಾನ್ ತತ್ವಜ್ಞಾನಿಗಳಾಗಿದ್ದರು. ಉಪನಿಷತ್, ಬ್ರಹ್ಮಸೂತ್ರ ಮತ್ತು ಭಗವದ್ಗೀತೆಗೂ ಅವರು ಭಾಷ್ಯ ಬರೆದಿದ್ದರು ಎಂದರು. ಕಾರ್ಯಕ್ರಮವನ್ನು ದೀಪ ಬೆಳಗಿಸಿ, ಶಂಕರಾಚಾರ್ಯರ ಭಾವಚಿತ್ರಕ್ಕೆ ಪುಷ್ಪಾಂಜಲಿ ಸಲ್ಲಿಸಿ ಮಾತನಾಡಿದ ಉಡುಪಿ ಚಿಕ್ಕಮಗಳೂರು ಲೋಕಸಭಾ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ, ಸನಾತನ ಧರ್ಮ ನಶಿಸಿ ಹೋಗುತ್ತಿರುವ ಸಂದರ್ಭದಲ್ಲಿ ದೇಶದೆಲ್ಲೆಡೆ ಕಾಲ್ನಡಿಗೆಯಲ್ಲಿ ಸಂಚರಿಸಿ, ಅದ್ವೈತ ಸಿದ್ಧಾಂತದ ಸಾರವನ್ನು ಜಗತ್ತಿಗೆ ಸಾರಿದವರು ಶಂಕರಾಚಾರ್ಯರು. ಅವರ ಆದರ್ಶ, ಚಿಂತನೆ ಹಾಗೂ ವಿವೇಚನೆಗಳು ಮನುಕುಲದ ಒಳಿತಿಗೆ ದಾರಿದೀಪವಾಗಿದೆ ಎಂದರು. ಹಿಂದೂ ಧರ್ಮದ ಅವನತಿಯ ಕಾಲದಲ್ಲಿ ಸನಾತನ ಧರ್ಮ ಹಾಗೂ ಸಂಸ್ಕೃತಿ ಉಳಿಸುವ ನಿಟ್ಟಿನಲ್ಲಿ ದೇಶದೆಲ್ಲೆಡೆ ಕಾಲ್ನಡಿಗೆಯಲ್ಲಿ ಸಂಚರಿಸಿ, ಹಿಂದೂ ಧರ್ಮದ ಆದರ್ಶ, ಆಚಾರ, ವಿಚಾರಗಳನ್ನು ಪಸರಿಸುತ್ತಾ, ಉತ್ತರದ ಬದರಿ, ದಕ್ಷಿಣದ ಶೃಂಗೇರಿ ಶಾರದಾ ಪೀಠ, ಪೂರ್ವದ ಪುರಿ, ಪಶ್ಚಿಮದ ದ್ವಾರಕಾ ಪೀಠ ಈ ನಾಲ್ಕು ಕಡೆ ಶಕ್ತಿಪೀಠಗಳನ್ನು ಸ್ಥಾಪಿಸಿದ್ದಾರೆ. ಶಂಕರಾಚಾರ್ಯರೆಂಬ ಜ್ಞಾನದ ಗಣಿ ಕೇವಲ 32 ವರ್ಷಗಳ ಕಾಲ ಬದುಕಿದ್ದರೂ ಸಹ, ತಮ್ಮ ಜೀತಾವಧಿಯಲ್ಲಿ ಶ್ರೇಷ್ಠ ಸಾಧನೆ ಮಾಡಿದ್ದಾರೆ ಎಂದರು. ಮಂಗಳೂರು ಕರಾವಳಿ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಎಂ.ಎ ಗಫೂರ್ ಮಾತನಾಡಿ, ಸಮಾಜದಲ್ಲಿ ಸಾಮರಸ್ಯದಿಂದ ಜೀವನ ನಡೆಸುವುದರೊಂದಿಗೆ ಸನ್ಮಾರ್ಗದಲ್ಲಿ ನಡೆಯಲು ಹಲವಾರು ಮಹನೀಯರು ಮಾರ್ಗ ತೋರಿದ್ದು, ಅವರುಗಳ ಜಯಂತಿಯನ್ನು ಸರಕಾರದ ವತಿಯಿಂದ ಆಚರಿಸಲಾಗುತ್ತಿದೆ. ಇಂತಹ ಆಚರಣೆಗಳು ಸಂಸ್ಕೃತಿ, ಪರಂಪರೆ, ಆಚಾರ-ವಿಚಾರ, ವೇದ- ಉಪನಿಷತ್ತುಗಳನ್ನು ಉಳಿಸಲು ಸಹಕಾರಿಯಾಗಲಿವೆ ಎಂದರು. ಕಾರ್ಯಕ್ರಮದಲ್ಲಿ ಉಡುಪಿ ನಗರಾಭಿವೃಧ್ದಿ ಪ್ರಾಧಿಕಾರದ ಅಧ್ಯಕ್ಷ ದಿನಕರ ಹೇರೂರು, ಎಎಸ್ಪಿ ಸುಧಾಕರ್ ನಾಯಕ್, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಸುಬ್ರಹ್ಮಣ್ಯ, ವಿವಿಧ ಜಿಲ್ಲಾ ಮಟ್ಟದ ಅಧಿಕಾರಿಗಳು, ಹಾಗೂ ಇತರರು ಉಪಸ್ಥಿತರಿದ್ದರು. ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಪೂರ್ಣಿಮಾ ಅತಿಥಿಗಳನ್ನು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರೆ, ಉಡುಪಿ ಶಂಕರಾಚಾರ್ಯ ಸಮಿತಿ ಸದಸ್ಯ ವಿಶ್ವನಾಥ ಶಾನುಭಾಗ್ ವಂದಿಸಿದರು.
ಕಬ್ಬಡ್ಡಿ ಪಂದ್ಯದ ವೇಳೆ ಬೆಟ್ಟಿಂಗ್: ಗೃಹ ಸಚಿವ ಪರಮೇಶ್ವರ್, ತುಮಕೂರು DC ವಿರುದ್ಧ FIR ದಾಖಲಿಸಲು ಕೋರ್ಟ್ ಆದೇಶ!
ತುಮಕೂರಿನ ಕಬಡ್ಡಿ ಪಂದ್ಯಾವಳಿಯಲ್ಲಿ ₹500 ಬೆಟ್ಟಿಂಗ್ ಕಟ್ಟಿದ ಆರೋಪದ ಮೇಲೆ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಮತ್ತು ತುಮಕೂರು ಜಿಲ್ಲಾಧಿಕಾರಿ ಶುಭಾ ಕಲ್ಯಾಣ್ ವಿರುದ್ಧ ಎಫ್ಐಆರ್ ದಾಖಲಿಸಿ ತನಿಖೆ ನಡೆಸುವಂತೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಆದೇಶಿಸಿದೆ. ಸಾಮಾಜಿಕ ಕಾರ್ಯಕರ್ತ ಎಚ್.ಆರ್. ನಾಗಭೂಷಣ್ ದೂರಿನ ಮೇರೆಗೆ ಈ ಆದೇಶ ನೀಡಲಾಗಿದ್ದು, ಇದು ಅಧಿಕೃತ ಕರ್ತವ್ಯವಲ್ಲದ ಕಾರಣ ಸರ್ಕಾರದ ಪೂರ್ವಾನುಮತಿ ಅಗತ್ಯವಿಲ್ಲ ಎಂದು ಕೋರ್ಟ್ ಸ್ಪಷ್ಟಪಡಿಸಿದೆ.
Udupi | ಎ.22ರಿಂದ ಸಾಗರ ಕವಚ ಅಣಕು ಕಾರ್ಯಾಚರಣೆ
ಉಡುಪಿ: 2026ನೇ ಸಾಲಿನ ಸಾಗರ ಕವಚ ಅಣುಕು ಕಾರ್ಯಾಚರಣೆಯ ಮೊದಲ ಆವೃತ್ತಿ ಎ.22ರ 6:00 ಗಂಟೆಯಿಂದ ಎ.23ರ ಸಂಜೆ 6:00 ಗಂಟೆಯವರೆಗೆ ನಡೆಯಲಿದೆ. ಈ ಕಾರ್ಯಾಚರಣೆಯನ್ನು ಭಾರತೀಯ ತಟ ರಕ್ಷಣಾ ಪಡೆ (ಇಂಡಿಯನ್ ಕೋಸ್ಟ್ ಗಾರ್ಡ್) ನಡೆಸಲಿದೆ. ಇದರಲ್ಲಿ ಪಾಲುದಾರರಾದ ಕರಾವಳಿ ಕಾವಲು ಪೊಲೀಸ್, ಇಂಡಿಯನ್ ನೇವಿ, ಕಸ್ಟಮ್ಸ್, ಸಿ.ಐ.ಎಸ್.ಎಫ್. ಮೀನುಗಾರಿಕೆ ಇಲಾ̧ಖೆ ಬಂದರು ಇಲಾಖೆ, ಜಿಲ್ಲಾ ಪೊಲೀಸ್ ಇಲಾಖೆಯು ಭಾಗವಹಿಸಲಿವೆ. ಈ ಕಾರ್ಯಾಚರಣೆಯ ಭಾಗವಾಗಿ ವಿಧ್ವಂಸಕ ಕೃತ್ಯದ ಆಣುಕು ಪ್ರದರ್ಶನ ನಡೆಸಲು, ಪ್ರಯತ್ನಿಸುವ ಹಾಗೂ ಅದನ್ನು ತಡೆಗಟ್ಟುವಲ್ಲ ಕರಾವಳಿ ತೀರದ ಸಾರ್ವಜನಿಕರು ಹಾಗೂ ಮೀನುಗಾರರು ಎಲ್ಲಾ ಇಲಾಖೆಗಳೊಂದಿಗೆ ಸಹಕರಿಸುವಂತೆ ಕೋರಲಾಗಿದೆ. ಕಾರ್ಯಾಚರಣೆಯು ಕರ್ನಾಟಕ ಕರಾವಳಿ ತೀರ ಪ್ರದೇಶದ ರಕ್ಷಣಾ ವ್ಯವಸ್ಥೆಯನ್ನು ಇನ್ನಷ್ಟು ಸದೃಡಗೊಳಿಸಲು ಸಹಕಾರಿಯಾಗಿದ್ದು ಸಾರ್ವಜನಿಕರು ಆತಂಕಕ್ಕೆ ಒಳಗಾಗದಂತೆ ಕೋರಲಾಗಿದೆ. ಈ ಕಾರ್ಯಾಚರಣೆಯಲ್ಲಿ ಇಂಡಿಯನ್ ಕೋಸ್ಟ ಗಾರ್ಡ್ ಮತ್ತು ಕರಾವಳಿ ಕಾವಲು ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳು ನಿರಂತರವಾಗಿ 36 ಗಂಟೆಗಳ ಕಾಲ ಗಸ್ತು ಕಾರ್ಯಾಚರಣೆಯನ್ನು ಬೋಟುಗಳ ಮೂಲಕ ಕರ್ನಾಟಕ ಕರಾವಳಿ ತೀರದ ಉದ್ದಕ್ಕೂ ನಿರ್ವಹಿಸಲಿದ್ದು ಈ ಬಗ್ಗೆ ವಿವರವನ್ನು ಕರಾವಳಿ ತೀರದ ಸಾರ್ವಜನಿಕರ ಹಾಗೂ ಮೀನುಗಾರರ ಗಮನಕ್ಕೆ ತರಲಾಗಿದೆ. ಜಿಲ್ಲಾ ಪೊಲೀಸ್ ಇಲಾಖೆ ಮತ್ತು ಇತರೆ ಇಲಾಖೆಗಳು ಕೂಡ ಸೂಕ್ತ ಬಂದೋಬಸ್ತ್ ವ್ಯವಸ್ಥೆಯನ್ನು ನಿರ್ವಹಿಸಲಿರುವರು. ಎಂದು ಮಲ್ಪೆ ಕರಾವಳಿ ಕಾವಲು ಪೊಲೀಸ್ನ ಪೊಲೀಸ್ ಅಧೀಕ್ಷಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಮೋದಿ ಭಾಷಣದ ವಿರುದ್ಧ ಹಕ್ಕುಚ್ಯುತಿ ನೋಟಿಸ್ ಸಲ್ಲಿಸಿದ ಕಾಂಗ್ರೆಸ್
ಹೊಸದಿಲ್ಲಿ,ಎ. 21: ಕಾಂಗ್ರೆಸ್ ಸಂಸದ ಕೆ.ಸಿ. ವೇಣುಗೋಪಾಲ್ ಮಂಗಳವಾರ ಲೋಕಸಭಾ ಸ್ಪೀಕರ್ ಓಂ ಬಿರ್ಲಾರಿಗೆ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಹಕ್ಕುಚ್ಯುತಿ ನೋಟಿಸ್ ಸಲ್ಲಿಸಿದರು. ಕಳೆದ ವಾರ ದೇಶವನ್ನುದ್ದೇಶಿಸಿ ಟೆಲಿವಿಶನ್ನಲ್ಲಿ ಮಾಡಿದ ಭಾಷಣದಲ್ಲಿ, ಲೋಕಸಭಾ ಸದಸ್ಯರ ಮೇಲೆ ಸುಳ್ಳು ಅಪವಾದಗಳನ್ನು ಹಾಕುವ ಮೂಲಕ ಅವರ ಸಂಸದೀಯ ಹಕ್ಕಿಗೆ ಮೋದಿ ಚ್ಯುತಿ ತಂದಿದ್ದಾರೆ ಎಂದು ವೇಣುಗೋಪಾಲ್ ಆರೋಪಿಸಿದರು. ‘‘ಲೋಕಸಭೆಯ ಕಲಾಪಗಳ ವಿಧಾನ ಮತ್ತು ನಿರ್ವಹಣೆ ನಿಯಮಗಳ 222ನೇ ನಿಯಮದ ಅಡಿಯಲ್ಲಿ ನಾನು ಈ ಮೂಲಕ ಭಾರತದ ಪ್ರಧಾನಿ ವಿರುದ್ಧ ಹಕ್ಕುಚ್ಯುತಿ ನೋಟಿಸ್ ನೀಡುತ್ತೇನೆ. ಎಪ್ರಿಲ್ 18ರಂದು ಟೆಲಿವಿಶನ್ನಲ್ಲಿ ದೇಶವನ್ನುದ್ದೇಶಿಸಿ ಮಾಡಿದ ಭಾಷಣದಲ್ಲಿ ಅವರು ಲೋಕಸಭಾ ಸದಸ್ಯರ ಮೇಲೆ ಸುಳ್ಳು ಅಪವಾದಗಳನ್ನು ಹೊರಿಸಿದ್ದಾರೆ’’ ಎಂದು ತನ್ನ ಪತ್ರದಲ್ಲಿ ವೇಣುಗೋಪಾಲ್ ಹೇಳಿದ್ದಾರೆ. ದೇಶವನ್ನುದ್ದೇಶಿಸಿ ಮಾಡುವ ಭಾಷಣ ಎಂಬುದಾಗಿ ಬಣ್ಣಿಸಲ್ಪಟ್ಟಿರುವ 29 ನಿಮಿಷಗಳ ಭಾಷಣದಲ್ಲಿ, ಕ್ಷೇತ್ರ ಪುನರ್ವಿಂಗಡಣೆ ಕೋರುವ ಸಂವಿಧಾನ ತಿದ್ದುಪಡಿ ಮಸೂದೆಯನ್ನು ಸೋಲಿಸಿರುವುದಕ್ಕಾಗಿ ಪ್ರಧಾನಿಯವರು ಪ್ರತಿಪಕ್ಷಗಳ ವಿರುದ್ಧ ಹರಿಹಾಯ್ದಿದ್ದಾರೆ ಹಾಗೂ ಪ್ರತಿಪಕ್ಷ ಸದಸ್ಯರ ಮತದಾನ ಮಾದರಿಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎಂದು ಕಾಂಗ್ರೆಸ್ ನಾಯಕ ಆರೋಪಿಸಿದ್ದಾರೆ.
ಮಹಿಳಾ ಮೀಸಲಾತಿಯಲ್ಲಿ ಒಬಿಸಿ, ಮುಸ್ಲಿಮರಿಗೆ ಮೀಸಲಾತಿ ಕೋರಿ ಖಾಸಗಿ ಮಸೂದೆ ಮಂಡನೆ: ಎಸ್ಪಿ ಸಂಸದ ಧರ್ಮೇಂದ್ರ ಯಾದವ್
ಹೊಸದಿಲ್ಲಿ, ಎ. 21: ಮಹಿಳಾ ಮೀಸಲಾತಿ ಕೋಟದೊಳಗೆ ಇತರ ಹಿಂದುಳಿದ ವರ್ಗಗಳು (ಒಬಿಸಿ) ಮತ್ತು ಮುಸ್ಲಿಂ ಮಹಿಳೆಯರಿಗೆ ಪ್ರತ್ಯೇಕ ಮೀಸಲಾತಿಯನ್ನು ಕೋರುವ ಖಾಸಗಿ ಮಸೂದೆಯನ್ನು ಸಮಾಜವಾದಿ ಪಕ್ಷವು ಸಂಸತ್ನಲ್ಲಿ ಮಂಡಿಸುವುದಾಗಿ ಅಝಮ್ಗಢ ಸಂಸದ ಧರ್ಮೇಂದ್ರ ಯಾದವ್ ಸೋಮವಾರ ಹೇಳಿದ್ದಾರೆ. 2023ರಲ್ಲಿ ಸಂಸತ್ನಲ್ಲಿ ಅಂಗೀಕರಿಸಲ್ಪಟ್ಟಿರುವ ಹಾಲಿ ಕಾನೂನು ಒಬಿಸಿ ಮತ್ತು ಮುಸ್ಲಿಮ್ ಮಹಿಳೆಯರಿಗೆ ಪ್ರಾತಿನಿಧ್ಯ ನೀಡುವ ಬಗ್ಗೆ ಸ್ಪಷ್ಟವಾಗಿ ಏನೂ ಹೇಳುವುದಿಲ್ಲ ಎಂದು ಪಕ್ಷದ ಮುಖ್ಯ ಸಚೇತಕರೂ ಆಗಿರುವ ಯಾದವ್ ಹೇಳಿದರು. ‘‘ಇದು ಕಾನೂನಿನ ಅತಿ ದೊಡ್ಡ ವೈಫಲ್ಯ’’ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ‘‘ಒಬಿಸಿ ಮತ್ತು ಮುಸ್ಲಿಮ್ ಮಹಿಳೆಯರ ಪಾಲ್ಗೊಳ್ಳೂವಿಕೆಗೆ ಸಂಬಂಧಿಸಿ ಮಹಿಳಾ ಮೀಸಲಾತಿ ಕಾನೂನಿನಲ್ಲಿ ಸ್ಪಷ್ಟತೆಯಿಲ್ಲ. ಇದು ಅತ್ಯಂತ ದೊಡ್ಡ ಲೋಪ. ಇದನ್ನು ಸರಿಪಡಿಸುವುದಕ್ಕಾಗಿ, ಸಂಸತ್ನಲ್ಲಿ ಖಾಸಗಿ ಮಸೂದೆಯೊಂದನ್ನು ಮಂಡಿಸಲು ಸಮಾಜವಾದಿ ಪಕ್ಷವು ಸಿದ್ಧತೆ ನಡೆಸಿಕೊಳ್ಳುತ್ತಿದೆ’’ ಎಂದು ಧರ್ಮೇಂದ್ರ ಯಾದವ್ ಹೇಳಿರುವುದಾಗಿ ಪಿಟಿಐ ವರದಿ ಮಾಡಿದೆ. ಆಡಳಿತ ಪಕ್ಷದವರಾಗಿರಲಿ ಪ್ರತಿಪಕ್ಷದವರಾಗಿರಲಿ, ಸಚಿವ ಸ್ಥಾನ ಹೊಂದಿರದ ಯಾವುದೇ ಸಂಸದ ಖಾಸಗಿ ಮಸೂದೆಯನ್ನು ಮಂಡಿಸಬಹುದಾಗಿದೆ. 2023ರಲ್ಲಿ ಅಂಗೀಕಾರಗೊಂಡಿರುವ ಮಹಿಳಾ ಮೀಸಲಾತಿ ಕಾನೂನಿನ ಜಾರಿಯನ್ನು ವಿಳಂಬಿಸುತ್ತಿರುವುದಕ್ಕಾಗಿ ಧರ್ಮೇಂದ್ರ ಯಾದವ್ ಬಿಜೆಪಿ ನೇತೃತ್ವದ ಕೇಂದ್ರ ಸರಕಾರವನ್ನು ಟೀಕಿಸಿದರು.
ತಮಿಳುನಾಡಿಗೆ ವಂಚಿಸುವವರಿಗೆ ನಾನು ‘ಅಪಾಯಕಾರಿ’: ಎಂ.ಕೆ.ಸ್ಟಾಲಿನ್
ಚೆನ್ನೈ,ಎ.21: ತಮಿಳುನಾಡಿಗೆ ವಿಶ್ವಾಸದ್ರೋಹ ಮಾಡಲು ಅಥವಾ ಅದರ ಅಭಿವೃದ್ಧಿಗೆ ಅಡ್ಡಿಪಡಿಸಲು ಪ್ರಯತ್ನಿಸುವ ಯಾರಿಗೇ ಆದರೂ ತಾನು ‘‘ಅಪಾಯಕಾರಿ’’ಯೇ ಆಗಿರುತ್ತೇನೆ ಎಂದು ರಾಜ್ಯದ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಮಂಗಳವಾರ ಹೇಳಿದ್ದಾರೆ. ಕೇಂದ್ರ ಸರಕಾರವು ಪ್ರಗತಿ ಸಾಧಿಸಿರುವ ರಾಜ್ಯಗಳನ್ನು ಕ್ಷೇತ್ರ ಮರುವಿಂಗಡಣೆ ಮೂಲಕ ಶಿಕ್ಷಿಸಲು ಹೊರಟಿದೆ ಎಂದು ಅವರು ಆರೋಪಿಸಿದರು. ತಾನು ‘‘ಕಲೈನಾರ್ (ಕರುಣಾನಿಧಿ)ಗಿಂತಲೂ ಹೆಚ್ಚು ಅಪಾಯಕಾರಿ’’ ಎಂಬುದಾಗಿ 2021ರ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಕೇಳಿಬಂದ ಟೀಕೆಯನ್ನು ಉಲ್ಲೇಖಿಸುವ ವೀಡಿಯೊವೊಂದನ್ನು ಸ್ಟಾಲಿನ್ ಸಾಮಾಜಿಕ ಮಾಧ್ಯಮ ‘ಎಕ್ಸ್’ನಲ್ಲಿ ಹಂಚಿಕೊಂಡಿದ್ದಾರೆ. ಹೋಲಿಕೆಗೆ ಪ್ರತಿಕ್ರಿಯಿಸಿದ ಸ್ಟಾಲಿನ್, ಎಂ. ಕರುಣಾನಿಧಿಯವರ ಎತ್ತರಕ್ಕೆ ನಾನು ಏರಲು ಸಾಧ್ಯವಿಲ್ಲ ಎಂದರು. ‘2021ರ ವಿಧಾನಸಭಾ ಚುನಾವಣೆಯ ಅವಧಿಯಲ್ಲಿ, ‘ಸ್ಟಾಲಿನ್ ಕಲೈನಾರ್ಗಿಂತಲೂ ಹೆಚ್ಚು ಅಪಾಯಕಾರಿ’ ಎಂಬುದಾಗಿ ಜನರು ಹೇಳಿದರು. ನನ್ನನ್ನು ಅವರೊಂದಿಗೆ ಯಾವತ್ತೂ ಹೋಲಿಸಲು ಸಾಧ್ಯವಿಲ್ಲ. ನಾನು ಅವರನ್ನು ತಂದೆ ಎಂಬುದಾಗಿ ಕರೆದಿರುವುದಕ್ಕಿಂತ ಹೆಚ್ಚಾಗಿ ನಾಯಕ ಎಂಬುದಾಗಿ ಸಂಬೋಧಿಸಿದ್ದೇನೆ. ತಮಿಳುನಾಡಿಗೆ ವಂಚಿಸಲು ಮತ್ತು ಅದರ ಬೆಳವಣಿಗೆಗೆ ಅಡ್ಡಹಾಕಲು ಬಯಸುವ ಎಲ್ಲರಿಗೂ ನಾನು ಅಪಾಯಕಾರಿಯೇ’’ ಎಂದು ಹೇಳಿದ್ದಾರೆ.

32 C