SENSEX
NIFTY
GOLD
USD/INR

Weather

15    C
... ...View News by News Source

ರಸ್ತೆ ಬದಿ ಬಿದ್ದಿದ್ದ ಆಭರಣದ ಬ್ಯಾಗನ್ನು ಪೊಲೀಸರಿಗೆ ಒಪ್ಪಿಸಿದ್ದ ಚೆನ್ನೈ ಪೌರಕಾರ್ಮಿಕಳನ್ನು ಮನೆಗೆ ಕರೆದಿದ್ದೇಕೆ ‘ಲಲಿತಾ ಜ್ಯುವೆಲರ್ಸ್’ ಮಾಲೀಕ?

ಚೆನ್ನೈ ಮಹಾನಗರ ಪಾಲಿಕೆಯ ಪೌರಕಾರ್ಮಿಕ ಪದ್ಮಾ ಅವರು 45 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳಿದ್ದ ಬ್ಯಾಗನ್ನು ಪೊಲೀಸರಿಗೆ ಒಪ್ಪಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ. ಈ ಕಾರ್ಯವನ್ನು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಮತ್ತು ಲಲಿತಾ ಜ್ಯುವೆಲರ್ಸ್ ಮಾಲೀಕ ಎಂ. ಕಿರಣ್ ಕುಮಾರ್ ಅವರು ಶ್ಲಾಘಿಸಿ ಸನ್ಮಾನಿಸಿದ್ದಾರೆ. ರಸ್ತೆ ಸ್ವಚ್ಛಗೊಳಿಸುವಾಗ ಸಿಕ್ಕ ಬ್ಯಾಗ್ ಅನ್ನು ಪದ್ಮಾ ಅವರು ತಡಮಾಡದೆ ಪೊಲೀಸರಿಗೆ ನೀಡಿದ್ದರು. ಪೊಲೀಸರು ಪರಿಶೀಲಿಸಿ, ಮಾಲೀಕ ರಮೇಶ್ ಅವರಿಗೆ ಆಭರಣವನ್ನು ಹಿಂದಿರುಗಿಸಿದ್ದಾರೆ.

ವಿಜಯ ಕರ್ನಾಟಕ 17 Jan 2026 2:17 am

ಬೆಂಗಳೂರು ತಿಪ್ಪಗೊಂಡನಹಳ್ಳಿ ಜಲಾಶಯಕ್ಕೆ ಟ್ರಿಪ್ ಹೋಗೋವವರಿಗೆ ಕಠಿಣ ನಿಯಮಗಳು ಜಾರಿ

ಅರ್ಕಾವತಿ ನದಿಯಲ್ಲಿ ವಿಷಕಾರಿ ನೊರೆ ಕಾಣಿಸಿಕೊಂಡ ಸುಮಾರು ಒಂದೂವರೆ ವರ್ಷದ ಬಳಿಕ, ತಿಪ್ಪಗೊಂಡನಹಳ್ಳಿ ಜಲಾಶಯ (TGR) ಜಲಾನಯನ ಪ್ರದೇಶವನ್ನು ರಕ್ಷಿಸಲು ಸರ್ಕಾರ ಕಟ್ಟುನಿಟ್ಟಿನ ನಿರ್ಬಂಧಗಳನ್ನು ಜಾರಿಗೊಳಿಸಿದೆ. ಗಣಿಗಾರಿಕೆ, ಕಲ್ಲು ಒಡೆಯುವಿಕೆ ನಿಷೇಧ, ಕೃಷಿಯೇತರ ಚಟುವಟಿಕೆಗಳ ನಿರ್ಬಂಧ ಮತ್ತು ಮಳೆನೀರು ಕೊಯ್ಲು ಕಡ್ಡಾಯಗೊಳಿಸಲಾಗಿದೆ. ಜಲಾನಯನ ಪ್ರದೇಶವನ್ನು ನಾಲ್ಕು ವಲಯಗಳಾಗಿ ವಿಂಗಡಿಸಿ, ವಿಭಿನ್ನ ನಿರ್ಬಂಧಗಳನ್ನು ವಿಧಿಸಲಾಗಿದೆ.

ವಿಜಯ ಕರ್ನಾಟಕ 17 Jan 2026 12:46 am

Hassan | ಮಹಿಳೆ ಸಾವಿಗೆ ಕಾರಣವಾಗಿದ್ದ ಕಾಡಾನೆ ಸೆರೆ

ಹಾಸನ : ಸಕಲೇಶಪುರ ತಾಲೂಕಿನ ಮೂಗಲಿ ಗ್ರಾಮದಲ್ಲಿ ಮಹಿಳೆ ಶೋಭಾ ಅವರ ಸಾವಿಗೆ ಕಾರಣವಾಗಿದ್ದ ಕಾಡಾನೆಯನ್ನು ಅರಣ್ಯ ಇಲಾಖೆಯ ಇಟಿಎಫ್ (ಎಲಿಫೆಂಟ್ ಟಾಸ್ಕ್ ಫೋರ್ಸ್) ಸಿಬ್ಬಂದಿ ಯಶಸ್ವಿಯಾಗಿ ಸೆರೆ ಹಿಡಿದಿದ್ದಾರೆ. ಬೆಳಗ್ಗೆಯಿಂದಲೇ ಕಾರ್ಯಾಚರಣೆಯಲ್ಲಿ ತೊಡಗಿದ್ದ ಅರಣ್ಯ ಇಲಾಖೆ ಇಟಿಎಫ್ ಸಿಬ್ಬಂದಿ, ಡ್ರೋನ್ ಸಹಾಯದಿಂದ ಕಾಡಾನೆಯ ಚಲನವಲನ ಪತ್ತೆಹಚ್ಚಿ ಸೆರೆಹಿಡಿಯಲು ಮುಂದಾದರು. ಇಟಿಎಫ್ ಸಿಬ್ಬಂದಿಯೊಂದಿಗೆ ಮಾವುತರು ಹಾಗೂ ಕಾವಾಡಿಗರ ಸಹಕಾರದಿಂದ ಶೋಧ ಕಾರ್ಯ ನಡೆಸಲಾಗಿತ್ತು. ಈ ವೇಳೆ ಕಾಡಾನೆ ಬೇಲೂರು ತಾಲೂಕಿನ ಚಂದಾಪುರ-ಬೆಳ್ಳಾವರ ಗ್ರಾಮದ ಸಮೀಪದ ಅರಣ್ಯ ಪ್ರದೇಶದಲ್ಲಿ ಕಾಣಿಸಿಕೊಂಡಿದೆ. ಕಾಡಾನೆಯನ್ನು ಸೆರೆ ಹಿಡಿಯುವ ಸಲುವಾಗಿ ಲಾರಿಯಲ್ಲಿ ಕುಮ್ಮಿ ಸಾಕಾನೆಗಳನ್ನು ಕರೆತರಲಾಗಿದ್ದು, ಧನಂಜಯ, ಸುಗ್ರೀವ, ಶ್ರೀರಾಮ, ಲಕ್ಷ್ಮ್ಮಣ ಹಾಗೂ ಅಯ್ಯಪ್ಪ ಎಂಬ ಐದು ಸಾಕಾನೆಗಳು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದವು. ಬಂಧನ ಕಾರ್ಯಾಚರಣೆ ವೇಳೆ ಪಶುವೈದ್ಯರಾದ ಡಾ. ರಮೇಶ್ ಅವರು ಕಾಡಾನೆಗೆ ಅರಿವಳಿಕೆ ಚುಚ್ಚುಮದ್ದು ನೀಡಿದ್ದಾರೆ. ಅರಿವಳಿಕೆ ನೀಡಿದ ನಂತರವೂ ಕಾಡಾನೆ ಸುಮಾರು ಎರಡು ಗಂಟೆಗಳ ಕಾಲ ನಿತ್ರಾಣಗೊಳ್ಳದೆ ಓಡಾಡಿದ್ದು, ಬಳಿಕ ಅರಣ್ಯ ಇಲಾಖೆ ಸಿಬ್ಬಂದಿ ನೀರು ಹಾಕಿ ಆರೈಕೆ ಮಾಡಿದ್ದಾರೆ. ನಂತರ ತಜ್ಞರು ಕಾಡಾನೆಗೆ ಹಗ್ಗ ಕಟ್ಟಿ ರಿವರ್ಸಲ್ ಇಂಜೆಕ್ಷನ್ ನೀಡಲು ಸಿದ್ಧತೆ ಮಾಡಿಕೊಂಡಿದ್ದು, ಐದು ಸಾಕಾನೆಗಳ ಸಹಾಯದಿಂದ ಕಾಡಾನೆಯನ್ನು ಸ್ಥಳಾಂತರಿಸುವ ಕಾರ್ಯಕ್ಕೆ ಸಿದ್ಧರಾಗಿದ್ದಾರೆ. ಘಟನಾ ಸ್ಥಳದಲ್ಲೇ ಅರಣ್ಯ ಇಲಾಖೆಯ ಡಿಎಫ್‌ಒ ಸೌರಭ್ ಕುಮಾರ್ ಸಹಿತ ಹಿರಿಯ ಅಧಿಕಾರಿಗಳು ಮೊಕ್ಕಾಂ ಹೂಡಿ ಕಾರ್ಯಾಚರಣೆಯ ಮೇಲ್ವಿಚಾರಣೆ ನಡೆಸುತ್ತಿದ್ದಾರೆ.

ವಾರ್ತಾ ಭಾರತಿ 17 Jan 2026 12:29 am

ಮುಖ್ಯಮಂತ್ರಿ ಬದಲಾವಣೆ ವಿಚಾರ | ಯಾವ ಕ್ರಾಂತಿಯೂ ಇಲ್ಲ, ಭ್ರಾಂತಿಯೂ ಇಲ್ಲ: ಝಮೀರ್ ಅಹ್ಮದ್ ಖಾನ್

ಧಾರವಾಡ  : ರಾಜ್ಯದಲ್ಲಿ ಸಿಎಂ ಬದಲಾವಣೆ ವಿಚಾರದಲ್ಲಿ ಸಾಕಷ್ಟು ಊಹಾಪೋಹ ಚರ್ಚೆಗಳು ನಡೆಯುತ್ತಿದ್ದು, ನಮ್ಮಲ್ಲಿ ಯಾವ ಕ್ರಾಂತಿಯೂ ಇಲ್ಲ, ಭ್ರಾಂತಿಯೂ ಇಲ್ಲ ಎಂದು ವಸತಿ ಸಚಿವ ಝಮೀರ್ ಅಹ್ಮದ್ ಖಾನ್ ಸ್ಪಷ್ಟಪಡಿಸಿದ್ದಾರೆ. ಶುಕ್ರವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನವೆಂಬರ್‌ನಲ್ಲಿ ಕ್ರಾಂತಿ ಆಗುತ್ತದೆ ಎಂದು ಬಿಜೆಪಿಯವರು ಹೇಳಿದ್ದರು. ನವೆಂಬರ್ ಆದ ಮೇಲೆ ಬಿಜೆಪಿಯವರಿಗೆ ವಾಂತಿ, ಬೇಧಿ ಆರಂಭ ಆಗುತ್ತದೆ ಎಂದು ನಾನು ಹೇಳಿದ್ದೆ. ಈಗ ಅದೇ ರೀತಿ ಆಗಿದೆ ಎಂದು ವ್ಯಂಗ್ಯವಾಡಿದರು. ನವೆಂಬರ್ ಮುಗಿದಿದೆ. ಸಂಕ್ರಾಂತಿಯೂ ಮುಗಿದಿದೆ. ಮುಂದೆ ಯುಗಾದಿ ಆರಂಭ ಆಗಿ ಮುಗಿದು ಹೋಗುತ್ತದೆ. ನಮ್ಮಲ್ಲಿ ಸಿಎಂ ಸ್ಥಾನ ಸದ್ಯಕ್ಕೆ ಖಾಲಿ ಇಲ್ಲ. ಅವರ ಬದಲಾವಣೆ ನಮ್ಮಿಂದ ಸಾಧ್ಯ ಇಲ್ಲ. ಬದಲಾವಣೆ ಮಾಡುವುದು ಪಕ್ಷದ ಹೈಕಮಾಂಡ್‌ನಿಂದ ಮಾತ್ರ ಸಾಧ್ಯ. ನಮ್ಮ ಹೈಕಮಾಂಡ್ ಏನು ನಿರ್ಧಾರ ತೆಗೆದುಕೊಳ್ಳುತ್ತದೆಯೋ ಅದಕ್ಕೆ ನಾವು ಬದ್ಧ ಎಂದರು. ರನ್ ವೇನಲ್ಲಿ ರಾಹುಲ್ ಗಾಂಧಿ ಜೊತೆ ಸಿಎಂ, ಡಿಸಿಎಂ ಮಾತನಾಡಿದ್ದು ಸಹಜ. ಮುಖಂಡರು ಬಂದಾಗ ಅವರನ್ನು ಬರ ಮಾಡಿ ವಾಪಸ್ ಕಳುಹಿಸಿಕೊಡುವುದು ನಮ್ಮ ಪದ್ಧತಿ. ಅಲ್ಲಿ ಸಿಎಂ ಅಷ್ಟೇ ಅಲ್ಲದೆ ಡಿಕೆಶಿ, ಜಾರ್ಜ್, ಮಹದೇವಪ್ಪ ಸೇರಿದಂತೆ ಹಲವರು ಇದ್ದರು ಎಂದರು. ಬಿಜೆಪಿಯಲ್ಲಿ ಸಿಎಂ ಬದಲಾವಣೆ ಮಾಡುವ ಪದ್ಧತಿ ಇದೆ. 2008ರಿಂದ 2013ರವರೆಗೆ ಮೂರು ಜನ ಸಿಎಂಗಳನ್ನು ಅವರು ಬದಲಾವಣೆ ಮಾಡಿದ್ದರು. ಬಿಜೆಪಿಗೆ ಇಲ್ಲಿಯವರೆಗೂ ಬಹುಮತ ಬಂದಿಲ್ಲ. ಅವರು ಆಪರೇಶನ್ ಕಮಲ ಮಾಡಿಯೇ ಅಧಿಕಾರಕ್ಕೆ ಬಂದಿದ್ದಾರೆ. ಅವರಲ್ಲಿಯೇ ಸಿಎಂ ಬದಲಾವಣೆ ಮಾಡುವ ಪದ್ಧತಿ ಇದೆ ಎಂದು ತಿರುಗೇಟು ನೀಡಿದರು. ಡಿಕೆಶಿ ದಿಲ್ಲಿಗೆ ಹೋದ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಝಮೀರ್ ಅಹ್ಮದ್, ಡಿಸಿಎಂಗೆ ಕೊಟ್ಟಿರುವುದು ದೊಡ್ಡ ಇಲಾಖೆ. ಇದಕ್ಕೆ ಸಂಬಂಧಿಸಿದ ಸಭೆಗಳನ್ನು ಮಾಡಲು ಅವರು ಹೋಗಿರುತ್ತಾರೆ. ರಾಜ್ಯದಿಂದ ದಿಲ್ಲಿಗೆ ಹೋದಾಗ ನಮ್ಮ ನಾಯಕರನ್ನು ನಾವು ಭೇಟಿ ಮಾಡುವ ಪದ್ಧತಿ ಇದೆ. ನಾನೂ ಹೋದಾಗ ನಮ್ಮ ನಾಯಕರ ಭೇಟಿಗೆ ಸಮಯಾವಕಾಶ ಕೇಳುತ್ತೇನೆ. ಅದಕ್ಕೆ ಬೇರೆ ಅರ್ಥ ಕಲ್ಪಿಸುವುದು ಬೇಡ ಎಂದು ನುಡಿದರು.

ವಾರ್ತಾ ಭಾರತಿ 17 Jan 2026 12:25 am

ರಾಯಚೂರು ಉತ್ಸವ ಸಿದ್ಧತೆಗೆ ಜಿಲ್ಲಾಧಿಕಾರಿಗಳ ಸೂಚನೆ : ಜ.31ರಿಂದ 2 ದಿನಗಳ ಕಾಲ 'ಮಕ್ಕಳ ಉತ್ಸವ'

ಪರಿಷ್ಕೃತ ದಿನಾಂಕದಂತೆ ಜಿಲ್ಲಾ ಉತ್ಸವ ಯಶಸ್ವಿಗೊಳಿಸಿ : ಡಿಸಿ ನಿತೀಶ್ ಕೆ.

ವಾರ್ತಾ ಭಾರತಿ 17 Jan 2026 12:20 am

ಠಾಕ್ರೆ ಕುಟುಂಬದ ಸೊಸೆ ಸ್ಮಿತಾ ಠಾಕ್ರೆ ಡಿವೋರ್ಸ್‌ ಆದ್ರೂ ಗಂಡನ ಮನೆಯಲ್ಲೇ ವಾಸ, ಇದರ ಹಿಂದಿದೆ ನೋವಿನ ಕಥೆ

BMC Election 2026 Results: ಬೃಹನ್‌ ಮುಂಬೈ ಮಹಾನಗರ ಪಾಲಿಕೆ (ಬಿಎಂಸಿ) ಚುನಾವಣಾ ಫಲಿತಾಂಶಗಳು ರಾಜಕೀಯವಾಗಿ ಭಾರಿ ಚರ್ಚೆಗೆ ಕಾರಣವಾಗಿರುವ ಈ ಸಮಯದಲ್ಲಿ, ಠಾಕ್ರೆ ಕುಟುಂಬಕ್ಕೆ ಸಂಬಂಧಿಸಿದ ಒಂದು ಅಪರೂಪದ ಹಾಗೂ ಭಾವುಕ ಸಂಗತಿ ಮತ್ತೆ ಬೆಳಕಿಗೆ ಬಂದಿದೆ. ವಿಚ್ಛೇದನವಾದರೂ ‘ಮಾತೋಶ್ರೀ'ಯಲ್ಲೇ ವಾಸಿಸುತ್ತಿರುವ ಠಾಕ್ರೆ ಕುಟುಂಬದ ಸೊಸೆ ಸ್ಮಿತಾ ಠಾಕ್ರೆ (Smita Thackeray) ಅವರ ಜೀವನ ಕಥೆಯು

ಒನ್ ಇ೦ಡಿಯ 16 Jan 2026 11:57 pm

ಚಳಿಯಲ್ಲಿ ನಡುಗುತ್ತಿರುವ ಉಕ್ರೇನ್ ಜನರು, ರಷ್ಯಾ ದಾಳಿಯಿಂದ ಕೈಕೊಟ್ಟಿರುವ ವಿದ್ಯುತ್ ಹಾಗೂ ಮೂಲಸೌಕರ್ಯ ವ್ಯವಸ್ಥೆ

ಉಕ್ರೇನ್ ಯಾವುದೇ ಕಾರಣಕ್ಕೂ ಮತ್ತೊಮ್ಮೆ ಯುದ್ಧ ಅನ್ನೋ ಮಾತನ್ನು ಹೇಳಿರಬಾರದು, ಅದೇ ರೀತಿ ದೊಡ್ಡದಾಗಿ ದಾಳಿ ಮಾಡುತ್ತಿದೆ ರಷ್ಯಾ. ಇಷ್ಟಾದರೂ ಉಕ್ರೇನ್ ಮಾತ್ರ ರಷ್ಯಾ ಎದುರು ಮಾತುಕತೆಗೆ ಸಿದ್ಧವಾಗುತ್ತಿಲ್ಲ, ಶಾಂತಿ ಮಾತುಕತೆಗೆ ಖುದ್ದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರಯತ್ನವನ್ನು ಪಡುತ್ತಿದ್ದರೂ ಅದು ಯಶಸ್ಸು ಕಾಣುತ್ತಿಲ್ಲ. ಇದರ ಪರಿಣಾಮ ರಷ್ಯಾ ಸೇನೆಯಿಂದ ಘೋರ ದಾಳಿ, ಹಿಂಸಾತ್ಮಕ ಕ್ರಮಗಳು

ಒನ್ ಇ೦ಡಿಯ 16 Jan 2026 11:51 pm

ಮಾಜಿ ಸಚಿವ ಡಾ.ಭೀಮಣ್ಣ ಖಂಡ್ರೆ ನಿಧನ

ಬೀದರ್ : ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಮಾಜಿ ಸಚಿವ ಡಾ.ಭೀಮಣ್ಣ ಖಂಡ್ರೆ (102) ಅವರು ವಯೋಸಹಜ ಅನಾರೋಗ್ಯದಿಂದ ಸ್ವಗೃಹದಲ್ಲಿ ನಿಧನ ಹೊಂದಿದ್ದಾರೆ. ಡಾ.ಭೀಮಣ್ಣ ಖಂಡ್ರೆ ಅವರು ಸುಮಾರು ದಿನಗಳಿಂದ ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದರು. ಒಂದು ವಾರದಿಂದ ಉಸಿರಾಟದ ತೊಂದರೆ ಹಾಗೂ ರಕ್ತದೋತ್ತಡದಲ್ಲಿ ಏರುಪೇರಾಗುತ್ತಿದ್ದ ಕಾರಣದಿಂದ ನಗರದ ಖಾಸಗಿ ಆಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆ ಪಡೆಯುತ್ತಿದ್ದ ಅವರು, ಕೆಲ ದಿನಗಳ ಹಿಂದೆ ಅವರನ್ನು ಮನೆಗೆ ಕರೆದುಕೊಂಡು ಹೋಗಲಾಗಿತ್ತು. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಸದಸ್ಯರಾಗಿದ್ದ ಅವರು 1992 ರಿಂದ 1994ರ ವರೆಗೆ ಕರ್ನಾಟಕ ಸರ್ಕಾರದಲ್ಲಿ ಸಾರಿಗೆ ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು. ಡಾ.ಭೀಮಣ್ಣ ಖಂಡ್ರೆ ಅವರ ಮಗನಾದ ಈಶ್ವರ್ ಖಂಡ್ರೆ ಅವರು ಪ್ರಸ್ತುತ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಹಾಗೂ ಬೀದರ್ ಜಿಲ್ಲಾ ಉಸ್ತುವಾರಿ ಸಚಿವರಾಗಿ ಕಾರ್ಯ ನಿರ್ವಹಿಸುತ್ತಿದ್ದರೆ, ಅವರ ಮೊಮ್ಮಗ ಸಾಗರ್ ಖಂಡ್ರೆ ಅವರು ಬೀದರ್ ಜಿಲ್ಲೆಯ ಸಂಸದರಾಗಿದ್ದಾರೆ.

ವಾರ್ತಾ ಭಾರತಿ 16 Jan 2026 11:47 pm

Iran: ಯುದ್ಧಕ್ಕೆ ಸಿದ್ಧವಾಗುತ್ತಿದೆಯಾ ದೊಡ್ಡಣ್ಣ ಅಮೆರಿಕ? ಮಧ್ಯಪ್ರಾಚ್ಯದ ಕಡೆಗೆ ಬೃಹತ್ ಯುದ್ಧ ಹಡಗು ರವಾನೆ

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇರಾನ್‌ಗೆ ವಾರ್ನಿಂಗ್ ಕೊಟ್ಟು ಸೇನಾ ಕಾರ್ಯಾಚರಣೆಯ ಸಾಧ್ಯತೆ ಬಗ್ಗೆ ಕೆಲವು ದಿನಗಳ ಹಿಂದಷ್ಟೇ ಎಚ್ಚರಿಸಿದ್ದರು. ಆದರೆ ನಿನ್ನೆಯಷ್ಟೇ ಮತ್ತೊಂದು ಸ್ಪಷ್ಟನೆ ನೀಡಿ ಈಗ ಅಂತಹ ಕ್ರಮದ ಬಗ್ಗೆ ಚಿಂತಿಸಿಲ್ಲ ಎಂದಿದ್ದು ಇರಾನ್ ಜನರನ್ನು ಒಂದಷ್ಟು ನಿರಾಳರಾಗುವ ರೀತಿ ಮಾಡಿತ್ತು. ಆದರೆ ಹೀಗೆ ಅಮೆರಿಕ ಅಧ್ಯಕ್ಷ ಟ್ರಂಪ್ ಸೇನಾ ಕಾರ್ಯಾಚರಣೆ ಇಲ್ಲ

ಒನ್ ಇ೦ಡಿಯ 16 Jan 2026 11:40 pm

ಯಾದಗಿರಿ | ಹಾಡಹಗಲೇ ಕಾರಿನಲ್ಲಿಟ್ಟಿದ್ದ ಹಣ-ಚಿನ್ನಾಭರಣ ಕಳವು : ಪ್ರಕರಣ ದಾಖಲು

ಯಾದಗಿರಿ: ನಗರದ ರೈಲ್ವೆ ಸ್ಟೇಷನ್ ಸಮೀಪ ಹಾಡಹಗಲೇ ಕಾರಿನಲ್ಲಿ ಇಟ್ಟಿದ್ದ 15.5 ಲಕ್ಷ ರೂ. ನಗದು ಹಾಗೂ 35 ಗ್ರಾಂ ಚಿನ್ನಾಭರಣವನ್ನು ಕಳ್ಳರು ದೋಚಿ ಪರಾರಿಯಾದ ಘಟನೆ ಗುರುವಾರ ನಡೆದಿದೆ. ಯಾದಗಿರಿ: ನಗರದ ರೈಲ್ವೆ ನಿಲ್ದಾಣದ ಸಮೀಪದ ಮುಖ್ಯರಸ್ತೆಯಲ್ಲಿ ಗುರುವಾರ ಮಧ್ಯಾಹ್ನ ಹಾಡಹಗಲೇ ದುಷ್ಕರ್ಮಿಗಳು ಕಾರಿನಲ್ಲಿದ್ದ 15.5 ಲಕ್ಷ ರೂ. ನಗದು ಹಾಗೂ 35 ಗ್ರಾಂ ಚಿನ್ನಾಭರಣವನ್ನು ಕಳವು ಮಾಡಿ ಪರಾರಿಯಾಗಿದ್ದಾರೆ. ಯಾದಗಿರಿ ತಾಲೂಕಿನ ಬಳಿಚಕ್ರ ಗ್ರಾಮದ ನಿವಾಸಿ ಶರಣಪ್ಪ ಎಂಬುವವರಿಗೆ ಸೇರಿದ ನಗದು ಮತ್ತು ಆಭರಣ ಇದಾಗಿದ್ದು, ಆಸ್ತಿ ನೋಂದಣಿ ಕಾರ್ಯಕ್ಕಾಗಿ ಹಣದೊಂದಿಗೆ ಅವರು ಕುಟುಂಬಸ್ಥರೊಡನೆ ನಗರಕ್ಕೆ ಆಗಮಿಸಿದ್ದರು. ಶರಣಪ್ಪ ಅವರು ರೈಲ್ವೆ ನಿಲ್ದಾಣದ ಸಮೀಪವಿರುವ ಜ್ಯೂಸ್ ಅಂಗಡಿಯೊಂದರ ಬಳಿ ತಮ್ಮ ಕಾರನ್ನು ನಿಲ್ಲಿಸಿ ಹೊರಬಂದಿದ್ದರು. ಇದೇ ಸಮಯಕ್ಕೆ ಹೊಂಚು ಹಾಕುತ್ತಿದ್ದ ಬೈಕ್‌ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಕುಟುಂಬಸ್ಥರ ಗಮನವನ್ನು ಬೇರೆಡೆ ಸೆಳೆದು ಕಾರಿನಲ್ಲಿದ್ದ ಹಣದ ಬ್ಯಾಗ್ ಹಾಗೂ ಚಿನ್ನಾಭರಣವನ್ನು ದೋಚಿ ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ. ಆಸ್ತಿ ಖರೀದಿಗಾಗಿ ತಂದಿದ್ದ ಹಣ ಹಾಗೂ ಬಂಗಾರ ಕಳೆದುಕೊಂಡ ಶರಣಪ್ಪ ಹಾಗೂ ಕುಟುಂಬಸ್ಥರು ಕಂಗಾಲಾಗಿದ್ದಾರೆ. ಮಾಹಿತಿ ಪಡೆದ ಯಾದಗಿರಿ ನಗರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಈ ಸಂಬಂಧ ಯಾದಗಿರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಳ್ಳರ ಪತ್ತೆಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ವಾರ್ತಾ ಭಾರತಿ 16 Jan 2026 11:40 pm

ಅಲಂಗಾರು ನಾಗವರ್ಮ ಶೆಟ್ಟಿ

ಮೂಡುಬಿದಿರೆ: ಅಲಂಗಾರು ನಿವಾಸಿ, ವರ್ಮಾ ಸ್ಟೋರ್ ಮಾಲಕ ನಾಗವರ್ಮ ಶೆಟ್ಟಿ (90) ಶುಕ್ರವಾರ ಸಂಜೆ ಸ್ವಗೃಹದಲ್ಲಿ ನಿಧನರಾಗಿದ್ದಾರೆ. ಮೃತರು ಪತ್ನಿ ಹಾಗೂ ಅಪಾರ ಬಂಧುಬಳಗವನ್ನು ಅಗಲಿದ್ದಾರೆ. ಮೃತರ ಅಂತ್ಯ ಸಂಸ್ಕಾರವು ಶನಿವಾರ ಬೆಳಗ್ಗೆ 8 ಗಂಟೆಯ ಸುಮಾರಿಗೆ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ವಾರ್ತಾ ಭಾರತಿ 16 Jan 2026 11:31 pm

ರಾಜ್ಯದ ಎಲ್ಲ ಶಾಲೆಗಳಲ್ಲಿ ‘ವಾಟರ್‌ ಬೆಲ್‌’ ವ್ಯವಸ್ಥೆ ಕಡ್ಡಾಯ, ಹೊಸ ಸುತ್ತೋಲೆಯ ಪ್ರಮುಖ ಅಂಶಗಳು

ಮಕ್ಕಳಲ್ಲಿ ನೀರು ಕುಡಿಯುವ ಮಹತ್ವದ ಬಗ್ಗೆ ಅಗತ್ಯ ಜಾಗೃತಿಯ ಕೊರತೆ ಇರುವ ಹಿನ್ನೆಲೆ, ವಿದ್ಯಾರ್ಥಿಗಳಲ್ಲಿ ನಿಯಮಿತವಾಗಿ ನೀರು ಕುಡಿಯುವ ಅಭ್ಯಾಸ ಬೆಳೆಸುವ ಉದ್ದೇಶದೊಂದಿಗೆ ರಾಜ್ಯದ ಎಲ್ಲ ಶಾಲೆಗಳಲ್ಲಿ ‘ವಾಟರ್‌ ಬೆಲ್‌' (ನೀರಿನ ಗಂಟೆ) ವ್ಯವಸ್ಥೆ ಜಾರಿಗೆ ತರಲು ಪಿಎಂ-ಪೋಷಣ್‌ ಯೋಜನೆಯ ನಿರ್ದೇಶಕರು ಸೂಚಿಸಿದ್ದಾರೆ. ಈ ಸಂಬಂಧ ಜನವರಿ 14ರಂದು ಸುತ್ತೋಲೆ ಹೊರಡಿಸಲಾಗಿದೆ. ರಾಜ್ಯದಲ್ಲಿ ಎಲ್‌ಕೆಜಿಯಿಂದ 10ನೇ ತರಗತಿವರೆಗಿನ

ಒನ್ ಇ೦ಡಿಯ 16 Jan 2026 11:22 pm

ಕಲಬುರಗಿ | ವಿವೇಕಾನಂದರ ಆದರ್ಶಗಳು ಜನಾಂಗಕ್ಕೆ ಮಾದರಿ : ಡಾ.ಬಸವರಾಜ ಪಾಟೀಲ

ಕಲಬುರಗಿ : ಸ್ವಾಮಿ ವಿವೇಕಾನಂದರ ಆದರ್ಶ ಬೋಧನೆಗಳು ಎಂದೆಂದಿಗೂ ಪ್ರಸ್ತುತವಾಗಿದ್ದು, ಅವರ ವಿಚಾರಗಳನ್ನು ಅಳವಡಿಸಿಕೊಂಡು ಉತ್ತಮವಾಗಿರುವ ಸಮಾಜ ನಿರ್ಮಾಣ ಮಾಡಬೇಕೆಂದು ರಾಜ್ಯಸಭಾ ಮಾಜಿ ಸದಸ್ಯ ಡಾ.ಬಸವರಾಜ ಪಾಟೀಲ ಸೇಡಂ ಕರೆ ನೀಡಿದರು. ನಗರದ ಮಹಾಂತ ಜ್ಯೋತಿ ಪ್ರತಿಷ್ಠಾನ ಟ್ರಸ್ಟ್ ಏರ್ಪಡಿಸಿದ್ದ ಸ್ವಾಮಿ ವಿವೇಕಾನಂದ ಜಯಂತಿ ಮತ್ತು ಹಸಿವು ಮುಕ್ತ ಕಲಬುರಗಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸ್ವಾಮಿ ವಿವೇಕಾನಂದರ ವಿಚಾರಗಳು, ಬೋಧನೆಗಳು ಮತ್ತು ಅವರ ಭಾಷಣಗಳು ಇಂದಿನ ಯುವಜನರಿಗೆ ಸಮೃದ್ಧ ಭಾರತ ನಿರ್ಮಾಣಕ್ಕೆ ಸಹಕಾರಿಯಾಗಲಿದೆ. ಅಲ್ಲದೇ ಹಸಿವು ಮುಕ್ತ ಕಾರ್ಯಕ್ರಮ ಆಯೋಜನೆ ಪುಣ್ಯದ ಕೆಲಸ ಎಂದರು. ಅಪ್ಪಾರಾವ ಅಕ್ಕೋಣಿ ಮಾತನಾಡಿದರು. ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸುರೇಶ್ ಕಲಶೆಟ್ಟಿ ಜಿಲ್ಲಾ, ವಿಜಯಕುಮಾರ್ ಬಿರಾದಾರ, ಬಸವರಾಜ ಎಸ್ ಎಂ, ರಾಷ್ಟ್ರೀಯ ಭ್ರಷ್ಟಾಚಾರ ನಿರ್ಮೂಲನೆ ಸಂಸ್ಥೆ, ಪಾಂಡುರಂಗ ಕುಲಕರ್ಣಿ, ಎಎಸ್ ಐ, ಜಗದೀಪ, ಶಾಮರಾವ್ ಪಾಟೀಲ್, ಪ್ರಶಾಂತ್ ತಡಕಲೆ , ಶಾಂತಾ ವಾಲಿ, ಮಂಜುಳಾ ಡೊಳ್ಳೆ ಮತ್ತು ಪ್ರೀತಿ ಅಕ್ಕೋಣಿ ಯವರಿಗೆ ವಿವೇಕ ರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು. ಡಾ.ಎ.ಎಸ್ ಭದ್ರಶೆಟ್ಟಿ, ಡಾ.ಸಿದ್ದರಾಮಪ್ಪ ಮಾಲಿ ಪಾಟೀಲ್ ಧಂಗಾಪುರ, ಡಾ. ಸುಭಾಷ್ ಕಮಲಾಪುರೆ, ರಾಜು ಕಾಕಡೆ, ಮಹಾದೇವಿ ಪಾಟೀಲ್ ಆಲಗೂಡ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಪ್ರತಿಷ್ಠಾನದ ಅಧ್ಯಕ್ಷ ಪ್ರೊ. ಶಿವರಾಜ್ ಪಾಟೀಲ್ ಅವರು ನಿರೂಪಿಸಿದರು. ಪ್ರೀತಿ ಅಕ್ಕೋಣಿ ವಂದಿಸಿದರು. ಆಶ್ರಯ ಕಾಲೋನಿಯ 40ಕ್ಕೂ ಹೆಚ್ಚು ಕುಟುಂಬಗಳಿಗೆ ಅನ್ನ ಸಂತರ್ಪಣೆ ಮಾಡಲಾಯಿತು.

ವಾರ್ತಾ ಭಾರತಿ 16 Jan 2026 11:21 pm

Kalaburagi | ಜೇವರ್ಗಿ ತಹಶೀಲ್ದಾರ್ ವಿರುದ್ಧ ಹಣದ ಬೇಡಿಕೆ ಆರೋಪ: ಸಿಬ್ಬಂದಿಯಿಂದ ದೂರು

ಕಲಬುರಗಿ : ಜೇವರ್ಗಿ ತಹಶೀಲ್ದಾರ್ ಮಲ್ಲಣ್ಣ ಅವರು ತಮ್ಮ ಸಿಬ್ಬಂದಿಯ ಬಳಿ ಹಣಕ್ಕೆ ಬೇಡಿಕೆ ಇಟ್ಟು ಕಿರುಕುಳ ನೀಡಿದ್ದಾರೆ ಎಂಬ ಆರೋಪ ಕೇಳಿಬಂದಿದ್ದು, ಈ ಕುರಿತಾದ ತಹಶೀಲ್ದಾರ್ ಅವರ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ನನ್ನ ಹೆಸರಿನಲ್ಲಿ ನೀವು ಹಣ ಸಂಪಾದಿಸುತ್ತಿದ್ದೀರಿ, ಹಾಗಾಗಿ ನನಗೂ ಹಣ ನೀಡಬೇಕು ಎಂದು ತಹಶೀಲ್ದಾರ್ ಮಲ್ಲಣ್ಣ ಅವರು ಕಂದಾಯ ನಿರೀಕ್ಷಕರಿಗೆ  ಬೆದರಿಕೆ ಹಾಕಿದ್ದಾರೆ ಎಂದು ದೂರಲಾಗಿದೆ. ತಹಶೀಲ್ದಾರ್ ಅವರ ನಿರಂತರ ಕಿರುಕುಳಕ್ಕೆ ಬೇಸತ್ತ ಸಿಬ್ಬಂದಿ, ನನಗೆ ಹಣ ನೀಡಲು ಸಾಧ್ಯವಿಲ್ಲ, ನನಗೆ ಕಂದಾಯ ನಿರೀಕ್ಷಕ ಜವಾಬ್ದಾರಿಯೇ ಬೇಡ, ನನ್ನನ್ನು ಕಚೇರಿ ಕೆಲಸಕ್ಕೆ ನಿಯೋಜಿಸಿ ಎಂದು ಹೇಳಿದ್ದಾರೆ ಎಂದು ವರದಿಯಾಗಿದೆ. ಈ ಕುರಿತು ಸಂತ್ರಸ್ತ ಸಿಬ್ಬಂದಿ ಮೇಲಾಧಿಕಾರಿಗಳಿಗೆ ದೂರು ನೀಡಿದ್ದಾರೆ. ತಹಶೀಲ್ದಾರ್ ಸ್ಪಷ್ಟನೆ : ಈ ಆರೋಪವನ್ನು ತಳ್ಳಿಹಾಕಿರುವ ತಹಶೀಲ್ದಾರ್ ಮಲ್ಲಣ್ಣ, ತಿಂಗಳ ಹಿಂದೆ ಕನ್ನಡ ಭವನದಲ್ಲಿ ನಡೆದಿದ್ದ ಕಾರ್ಯಕ್ರಮ ಅಸ್ತವ್ಯಸ್ತಗೊಂಡಿತ್ತು. ಆ ವಿಷಯವಾಗಿ ನಾನು ಸಿಬ್ಬಂದಿಯೊಂದಿಗೆ ಸಭೆಯಲ್ಲಿ ಚರ್ಚಿಸಿದ್ದೇನೆಯೇ ಹೊರತು, ಯಾರಿಗೂ ಹಣಕ್ಕಾಗಿ ಡಿಮ್ಯಾಂಡ್ ಮಾಡಿಲ್ಲ. ಈ ಹಿಂದೆ ಕೆಲಸ ಮಾಡಿದ್ದ ತಹಶೀಲ್ದಾರ್‌ ಅವರಿಗೂ ದೂರುದಾರ ಸಿಬ್ಬಂದಿ ಬ್ಲ್ಯಾಕ್‌ಮೇಲ್ ಮಾಡಿದ್ದನು. ಈಗ ಅದೇ ರೀತಿ ನನ್ನನ್ನೂ ಬ್ಲ್ಯಾಕ್‌ಮೇಲ್ ಮಾಡಲು ಪ್ರಯತ್ನಿಸುತ್ತಿದ್ದಾನೆ ಎಂದು ಸ್ಪಷ್ಟನೆ ನೀಡಿದ್ದಾರೆ.

ವಾರ್ತಾ ಭಾರತಿ 16 Jan 2026 11:15 pm

ಅರುಣಾಚಲ ಪ್ರದೇಶದ ಸೇಲಾ ಸರೋವರದಲ್ಲಿ ಸಿಲುಕಿದ ಪ್ರವಾಸಿಗ - ಬಚಾವ್ ಮಾಡಲು ಹೋದ ಸಹಚರ ಸಾವು

ಅರುಣಾಚಲ ಪ್ರದೇಶದ ಸೇಲಾ ಸರೋವರದಲ್ಲಿ ದುರಂತ ಸಂಭವಿಸಿದೆ. ಕೇರಳದ ಪ್ರವಾಸಿಗನೊಬ್ಬ ಹೆಪ್ಪುಗಟ್ಟಿದ ಮಂಜಿನ ಮೇಲೆ ಕಾಲಿಟ್ಟು ಕೆಳಗೆ ಬಿದ್ದಿದ್ದಾನೆ. ಆತನನ್ನು ರಕ್ಷಿಸಲು ಹೋದ ಇಬ್ಬರು ಪ್ರವಾಸಿಗರಲ್ಲಿ ಒಬ್ಬ ಮೃತಪಟ್ಟಿದ್ದಾನೆ. ಇನ್ನೊಬ್ಬ ಪ್ರವಾಸಿಗ ನಾಪತ್ತೆಯಾಗಿದ್ದಾನೆ. ಅಧಿಕಾರಿಗಳು ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಮೃತದೇಹ ಹೊರತೆಗೆಯಲಾಗಿದೆ. ನಾಪತ್ತೆಯಾದವರ ಹುಡುಕಾಟ ಮುಂದುವರಿದಿದೆ.

ವಿಜಯ ಕರ್ನಾಟಕ 16 Jan 2026 11:03 pm

Bengaluru | ಮಹಿಳೆಗೆ ಲೈಂಗಿಕ ಕಿರುಕುಳ ಪ್ರಕರಣ: ಆರೋಪಿಯ ಬಂಧನ

ಬೆಂಗಳೂರು : ಪತಿ ಮಾರಾಟ ಮಾಡಿದ್ದ ಶಾಲೆಯನ್ನು ಮರಳಿ ಕೊಡಿಸುವುದಾಗಿ ನಂಬಿಸಿ ಮಹಿಳೆಯೊಬ್ಬರಿಂದ 16 ಲಕ್ಷ ರೂ. ಹಣ ಪಡೆದು, ಲೈಂಗಿಕ ಕಿರುಕುಳ ನೀಡಿ ಜಾತಿ ನಿಂದನೆ ಮಾಡಿದ ಆರೋಪದಡಿ ಎನ್‍ಜಿಒಯೊಂದರ ಸಿಇಒನನ್ನು ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯ(ಡಿಸಿಆರ್‌ಇ)ದ ಪೊಲೀಸರು ಬಂಧಿಸಿದ್ದಾರೆ. 43 ವರ್ಷದ ಸಂತ್ರಸ್ತ ಮಹಿಳೆ ನೀಡಿದ ದೂರನ್ನು ಆಧರಿಸಿ ಮೊಹಮ್ಮದ್ ಹನೀಫ್ ಎಂಬಾತನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಬಿಟಿಎಂ ಲೇಔಟ್ ನಿವಾಸಿಯಾಗಿರುವ ಸಂತ್ರಸ್ತ ಮಹಿಳೆಯು ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ವಿಚ್ಛೇದನ ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಈ ದಂಪತಿ ಅನೋನ್ಯವಾಗಿದ್ದಾಗ ಖಾಸಗಿ ಆಂಗ್ಲ ಮಾಧ್ಯಮ ಶಾಲೆ ಆರಂಭಿಸಿದ್ದರು. ಇಬ್ಬರ ನಡುವೆ ವೈಮನಸ್ಸು ಮೂಡಿದ್ದರಿಂದ ಪತ್ನಿಗೆ ತಿಳಿಯದೆ ಪತಿ ಶಾಲೆಯನ್ನು ಬೇರೆಯವರಿಗೆ ಮಾರಾಟ ಮಾಡಿದ್ದ ಎನ್ನಲಾಗಿದೆ. ಈ ವಿಷಯ ತಿಳಿದು ಆತಂಕಕ್ಕೊಳಗಾಗಿದ್ದ ಮಹಿಳೆಗೆ ಪರಿಚಯಸ್ಥರ ಮೂಲಕ ಮೊಹಮ್ಮದ್ ಹನೀಫ್ ಎಂಬಾತನ ಸಂಪರ್ಕವಾಗಿತ್ತು. ತಾನು ಎನ್‍ಜಿಒ ಸಿಇಒ ಹಾಗೂ ಖಾಸಗಿ ಮಾಧ್ಯಮವೊಂದರ ಎಂ.ಡಿ. ಎಂದು ಆತ ಮಹಿಳೆಯನ್ನು ನಂಬಿಸಿದ್ದ. ಪೊಲೀಸ್ ಅಧಿಕಾರಿಗಳ ಮೂಲಕ ಮಾತನಾಡಿ ಶಾಲೆಯನ್ನು ಮರಳಿ ಕೊಡಿಸುವುದಾಗಿ ಭರವಸೆ ನೀಡಿದ್ದ ಹನೀಫ್, ಈ ಕೆಲಸಕ್ಕಾಗಿ ಹಂತ ಹಂತವಾಗಿ ಒಟ್ಟು 16 ಲಕ್ಷ ರೂ. ಹಣ ಪಡೆದಿದ್ದ ಎಂದು ದೂರಿನಲ್ಲಿ ಮಹಿಳೆ ತಿಳಿಸಿದ್ದಾರೆ. ಶಾಲೆ ವಾಪಸ್ ಕೊಡಿಸುವ ಬಗ್ಗೆ ಪ್ರಸ್ತಾಪಿಸಿದಾಗ ಆರೋಪಿಯು ನನಗೆ ಗೊತ್ತಿರುವ ಕೇರಳ ಮೂಲದ ಜ್ಯೋತಿಷಿಯೊಬ್ಬರ ಪರಿಚಯವಿದೆ. ಅವರಿಂದ ಕೆಲ ಪೂಜೆಗಳನ್ನು ಮಾಡಿಸಿದರೆ ಒಳ್ಳೆಯದಾಗಲಿದೆ ಎಂದು ಹೇಳಿದ್ದ. ಅದರಂತೆ ನನ್ನನ್ನು ಜ್ಯೋತಿಷಿಯ ಮನೆಗೆ ಕರೆದೊಯ್ಯುತ್ತಿದ್ದ. ಪ್ರತಿ ಬಾರಿ ಅಲ್ಲಿಗೆ ಹೋದಾಗ ಟೀಯಲ್ಲಿ ಮದ್ದು ಬೆರೆಸಿ ಕೊಡುತ್ತಿದ್ದ. ನಾನು ಅರೆಪ್ರಜ್ಞಾವಸ್ಥೆಯಲ್ಲಿದ್ದಾಗ ಲೈಂಗಿಕವಾಗಿ ಮಾತನಾಡಿ ಅಸಭ್ಯವಾಗಿ ವರ್ತಿಸುತ್ತಿದ್ದ ಎಂದು ಮಹಿಳೆ ದೂರಿನಲ್ಲಿ ಆರೋಪಿಸಿದ್ದಾರೆ. ಇದಾದ ಎರಡು ವರ್ಷಗಳ ಬಳಿಕ ಆರೋಪಿಯು ತನ್ನ ಕಚೇರಿಯನ್ನು ನಾಯಂಡಹಳ್ಳಿಗೆ ವರ್ಗಾಯಿಸಿದ್ದ. ಅಲ್ಲಿಗೆ ಹೋದಾಗ ಆರೋಪಿ ನನ್ನ ಇಚ್ಚೆಗೆ ವಿರುದ್ಧವಾಗಿ ಮೈ ಮುಟ್ಟಿ ಕಿರುಕುಳ ನೀಡಿದ್ದ. ಇದನ್ನ ಪ್ರಶ್ನಿಸಿದಾಗ ನನ್ನನ್ನ ಮದುವೆಯಾಗು ಎಲ್ಲವೂ ಸರಿಯಾಗಲಿದೆ ಎಂದು ಒತ್ತಾಯಿಸಿದ್ದ. ಈತನ ದೈಹಿಕ ಹಾಗೂ ಮಾನಸಿಕ ಕಿರುಕುಳ ದಿನೇ ದಿನೇ ಹೆಚ್ಚಾಗಿತ್ತು. ಈ ಬಗ್ಗೆ ಪ್ರಶ್ನಿಸಿದಾಗ ಅವಾಚ್ಯ ಶಬ್ಧಗಳಿಂದ ಬೈದು ಜಾತಿ ನಿಂದನೆ ಮಾಡಿದ್ದ ಎಂದು ಸಂತ್ರಸ್ತ ಮಹಿಳೆಯು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಈ ಸಂಬಂಧ ಸಂತ್ರಸ್ತ ಮಹಿಳೆ ಮೊದಲು ಬ್ಯಾಟರಾಯಪುರ ಠಾಣಾ ಪೊಲೀಸರಿಗೆ ದೂರು ನೀಡಿದ್ದರು. ಈ ಪ್ರಕರಣದಲ್ಲಿ ಜಾತಿ ನಿಂದನೆಯ ಅಂಶಗಳಿದ್ದ ಕಾರಣ ತನಿಖೆಯನ್ನು ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯಕ್ಕೆ ವರ್ಗಾಯಿಸಲಾಗಿತ್ತು. ಈ ಬಗ್ಗೆ ತನಿಖೆ ಕೈಗೆತ್ತಿಕೊಂಡ ಅಧಿಕಾರಿಗಳು ವಿಚಾರಣೆ ನಡೆಸಿ ಆರೋಪಿಯನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ.

ವಾರ್ತಾ ಭಾರತಿ 16 Jan 2026 10:58 pm

ಇರಾನ್‌ ಬಿಕ್ಕಟ್ಟು ಪರಿಹಾರಕ್ಕಾಗಿ ಮಧ್ಯಸ್ಥಿಕೆ ಬಾಗಿಲು ತೆರೆದ ವ್ಲಾಡಿಮಿರ್‌ ಪುಟಿನ್;‌ ಇಸ್ರೇಲ್‌ ಜೊತೆಗೂ ಪ್ರತ್ಯೇಕ ಚರ್ಚೆ!

ಇರಾನ್‌ ಬಿಕ್ಕಟ್ಟಿಗೆ ಅಮೆರಿಕ ಮಿಲಿಟರಿ ಪರಿಹಾರ ಹುಡುಕುತ್ತಿದ್ದರೆ, ರಷ್ಯಾ ರಾಜತಾಂತ್ರಿಕ ಮಾತುಕತೆಯ ಮಾರ್ಗವನ್ನು ಶೋಧಿಸುತ್ತಿದೆ. ಅದರಂತೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಅವರು ಇಸ್ರೇಲ್‌ ಪ್ರಧಾನಿ ಮತ್ತು ಇರಾ ಅಧ್ಯಕ್ಷರೊಂದಿಗೆ ಪ್ರತ್ಯೇಕವಾಗಿ ದೂರವಾಣಿಯಲ್ಲಿ ಮಾತನಾಡಿದ್ದು, ಇರಾನ್‌ ಬಿಕ್ಕಟ್ಟಿಗೆ ಪರಿಹಾರ ಕಂಡುಕೊಳ್ಳಲು ರಷ್ಯಾ ಮಧ್ಯಸ್ಥಿಕೆವಹಿಸಲು ಸಿದ್ಧ ಎಂಬ ಸಂದೇಶ ರವಾನಿಸಿದ್ದಾರೆ. ಅಧ್ಯಕ್ಷ ಪುಟಿನ್‌ ಇಸ್ರೇಲ್‌ ಮತ್ತು ಇರಾನ್‌ ಉನ್ನತ ನಾಯಕತ್ವದೊಂದಿಗೆ ಏನೆಲ್ಲಾ ಮಾತುಕತೆ ನಡೆಸಿದ್ದಾರೆ? ಈ ಕುರಿತು ಇಲ್ಲಿದೆ ಸಂಪೂರ್ಣ ಮಾಹಿತಿ.

ವಿಜಯ ಕರ್ನಾಟಕ 16 Jan 2026 10:55 pm

ಜ.17-18: ತಣ್ಣೀರುಬಾವಿ ಬ್ಲೂ ಪ್ಲ್ಯಾಗ್ ಬೀಚ್ ಕಾರ್ಯಕ್ರಮ; ಮಂಗಳೂರು ನಗರ ಪೊಲೀಸ್‌ನಿಂದ ಸಂಚಾರಿ ಸೂಚನೆ

ಮಂಗಳೂರು, ಜ.17: ಕರಾವಳಿ ಉತ್ಸವದ ಪ್ರಯುಕ್ತ ತಣ್ಣೀರುಬಾವಿ ಬ್ಲೂಪ್ಲ್ಯಾಗ್ ಬೀಚ್‌ನಲ್ಲಿ ಜ.17, 18ರಂದು ಅಂತಾರಾಷ್ಟ್ರೀಯ ಗಾಳಿಪಟ ಉತ್ಸವ ನಡೆಯಲಿದೆ. ಇದರಲ್ಲಿ ಗಣ್ಯರು ಮತ್ತು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲಿರುವುದರಿಂದ ಅಪರಾಹ್ನ 3ರ ಬಳಿಕ ಕೊಟ್ಟಾರ ಚೌಕಿ-ಪಣಂಬೂರು ರಾಷ್ಟ್ರೀಯ ಹೆದ್ದಾರಿ ಮತ್ತು ತಣ್ಣೀರುಬಾವಿ ರಸ್ತೆಯಲ್ಲಿ ಸಾರ್ವಜನಿಕ ವಾಹನಗಳ ಸಂಚಾರದಲ್ಲಿ ದಟ್ಟಣೆ ಉಂಟಾಗುವ ಸಾಧ್ಯತೆಗಳು ಇದೆ. ಈ ನಿಟ್ಟಿನಲ್ಲಿ ಮಂಗಳೂರು ನಗರ ಪೊಲೀಸ್ ಇಲಾಖೆಯು ಕೆಲವು ಸೂಚನೆಗಳನ್ನು ಹೊರಡಿಸಿದೆ. ಕಾರ್ಯಕ್ರಮ ನಡೆಯುವ ವೇಳೆ ಕುದುರೆಮುಖ ಜಂಕ್ಷನ್‌ನಿಂದ ತಣ್ಣೀರುಬಾವಿ ಬೀಚ್‌ವರೆಗಿನ ರಸ್ತೆಯ ಎರಡು ಬದಿಗಳಲ್ಲಿ ಯಾವುದೇ ವಾಹನಗಳನ್ನು ಪಾರ್ಕ್ ಮಾಡಬಾರದು. ಕಾರ್ಯಕ್ರಮಕ್ಕೆ ಬರುವ ಸಾರ್ವಜನಿಕರ ಅನುಕೂಲಕ್ಕೆ ಸುಲ್ತಾನ್ ಬತ್ತೇರಿಯಿಂದ ಫೇರಿಯನ್ನು ಅಥವಾ ಕೆಐಒಸಿಎಲ್‌ನಿಂದ ತಣ್ಣೀರುಬಾವಿಗೆ ಉಚಿತ ಸರಕಾರಿ ಬಸ್ಸಿನ ವ್ಯವಸ್ಥೆಯನ್ನು ಮಾಡಲಾಗಿದೆ. ನಿಗದಿಪಡಿಸಿರುವ ಪಾರ್ಕಿಂಗ್ ಸ್ಥಳಗಳು 1. ದೋಸ್ತ್ ಗ್ರೌಂಡ್ 2. ಕಟ್ಟೆ ಗ್ರೌಂಡ್ ಪಾರ್ಕಿಂಗ್ ಸ್ಥಳ 3. ತಣ್ಣೀರುಬಾವಿ ಮಸೀದಿ ಎದುರು ಪಾರ್ಕಿಂಗ್ ಸ್ಥಳ 4. ರಫ್ತಾರ್ ಪಾರ್ಕಿಂಗ್ 5. ತಣ್ಣೀರುಬಾವಿ ಬೀಚ್ ಪಾರ್ಕಿಂಗ್ 6. ಡೆಲ್ಟಾ ಮೈದಾನ ಪಾರ್ಕಿಂಗ್ 7. ಫಿಝಾ ಕ್ರಿಕೆಟ್ ಗ್ರೌಂಡ್ (ಹೊಟೇಲ್ ನಿತ್ಯಾಧರ ಮುಂಭಾಗದ ಪಾರ್ಕಿಂಗ್ ಮೈದಾನ) 8. ಎ.ಜೆ. ಶೆಟ್ಟಿ ಗ್ರೌಂಡ್ *ಪಣಂಬೂರು ಬೀಚ್ ಕಾರ್ಯಕ್ರಮ ಜ.17, 18ರಂದು ಪಣಂಬೂರು ಬೀಚ್‌ನಲ್ಲಿ ಮ್ಯೂಸಿಕ್ ಫೆಸ್ಟಿವಲ್, ತಾಯ್ಕಡಂ ಬ್ರಿಡ್ಜ್ ಕಾನ್ಸ್‌ರ್ಟ್, ಜಾವೇದ್ ಅಲಿ ನೈಟ್, ಮರಳು ಶಿಲ್ಪಕಲೆ ಸಾಂಸ್ಕ್ರತಿಕ ಕಾರ್ಯಕ್ರಮಗಳು ನಡೆಯಲಿದೆ. ಎರಡೂ ದಿನ ಅಪರಾಹ್ನ 3 ಗಂಟೆಯ ನಂತರ ಕೂಳೂರು-ಪಣಂಬೂರು ಬೈಕಂಪಾಡಿ ರಾ.ಹೆ. ಮತ್ತು ಪಣಂಬೂರು ಬೀಚ್ ರಸ್ತೆಯಲ್ಲಿ ಸಾರ್ವಜನಿಕ ವಾಹನಗಳ ಸಂಚಾರದಲ್ಲಿ ದಟ್ಟಣೆ ಉಂಟಾಗುವ ಸಾಧ್ಯತೆಗಳು ಇದೆ. ಹಾಗಾಗಿ ಕುದುರೆಮುಖ ಜಂಕ್ಷನ್‌ನಿಂದ ಪಣಂಬೂರು ಜಂಕ್ಷನ್‌ವರೆಗೆ ಮತ್ತು ಡಿಕ್ಸಿ ಕ್ರಾಸ್‌ನಿಂದ ಪಣಂಬೂರು ಬೀಚ್‌ವರೆಗಿನ ರಸ್ತೆಯ ಎರಡು ಬದಿಗಳಲ್ಲಿ ಯಾವುದೇ ವಾಹನಗಳನ್ನು ಪಾರ್ಕ್ ಮಾಡುವಂತಿಲ್ಲ. ನಿಗದಿ ಪಡಿಸಿರುವ ಪಾರ್ಕಿಂಗ್ ಸ್ಥಳಗಳು: 1. ಕೆ.ಕೆ ಗೇಟ್ ಟ್ರಕ್ ಯಾರ್ಡ್ ಪಾರ್ಕಿಂಗ್ 2. ಪಣಂಬೂರು ಬೀಚ್ ಪಾರ್ಕಿಂಗ್ *ವಿಶೇಷ ಸೂಚನೆ ಕಾರ್ಯಕ್ರಮಗಳಿಗೆ ಬರುವ ಸಾರ್ವಜನಿಕರು ವಾಹನಗಳನ್ನು ನಿಗದಿಪಡಿಸಿದ ಸ್ಥಳಗಳಲ್ಲಿ ಮಾತ್ರ ನಿಲ್ಲಿಸಬೇಕು. ಕಾರ್ಯಕ್ರಮದ ಮಾರ್ಗದಲ್ಲಿ ವಾಹನ ನಿಲುಗಡೆಯ ಸೂಚನಾ ಫಲಕದ ಪ್ಲಾಕ್ಸ್‌ಗಳನ್ನು ಅಳವಡಿಸಿದ್ದು, ಮಾರ್ಗ ಸೂಚಿಯನ್ನು ಅನುಸರಿಸಬೇಕು ಎಂದು ಪೊಲೀಸ್ ಆಯುಕ್ತರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ವಾರ್ತಾ ಭಾರತಿ 16 Jan 2026 10:53 pm

ಗಾಯಾಳು ತಿಲಕ್ ನಾಯ್ಡು-ವಾಶಿಂಗ್ಟನ್ ಸುಂದರ್ ಗೆ ಬದಲಿ ಆಟಗಾರರ ಘೋಷಣೆ: ಭಾರತ ಟಿ20 ತಂಡಕ್ಕೆ 2 ಅಚ್ಚರಿಯ ಸೇರ್ಪಡೆ!

India Vs New Zealand T20i Series-ಗಾಯಾಳುಗಳ ಸಮಸ್ಯೆಯಿಂದಾಗಿ ಇದೀಗ ಬಿಸಿಸಿಐ ಯು ನ್ಯೂಜಿಲೆಂಡ್ ವಿರುದ್ಧ ಟಿ20 ಸರಣಿಗೆ ಪರಿಷ್ಕೃತ ತಂಡವನ್ನು ಘೋಷಿಸಿದೆ. ವಾಶಿಂಗ್ಟನ್ ಸುಂದರ್ ಮತ್ತು ತಿಲಕ್ ವರ್ಮಾ ಅವರ ಬದಲಿಗೆ ಕ್ರಮವಾಗಿ ರವಿ ಬಿಷ್ಣೋಯಿ ಮತ್ತು ಶ್ರೇಯಸ್ ಅಯ್ಯರ್ ಅವರನ್ನು ಸೇರ್ಪಡೆಗೊಳಿಸಲಾಗಿದೆ. ಇವರಲ್ಲಿ ಶ್ರೇಯಸ್ ಅಯ್ಯರ್ ಅವರು ಮೊದಲ ಮೂರು ಟಿ20 ಪಂದ್ಯಗಳಿಗೆ ಆಯ್ಕೆ ಆಗಿದ್ದು ತಿಲಕ್ ವರ್ಮಾ ಅವರ ಚೇತರಿಕೆಯನ್ನು ಪರಿಗಣಿಸಿ ಮುಂದಿನ ನಿರ್ಧಾರ ಮಾಡಲಾಗುವುದು ಎಂದು ಬಿಸಿಸಿಐ ತಿಳಿಸಿದೆ.

ವಿಜಯ ಕರ್ನಾಟಕ 16 Jan 2026 10:53 pm

Bengaluru | ಹುಡುಗರಂತೆ ವೇಷ ಧರಿಸಿ ಮನೆಗಳ್ಳತನ ಮಾಡುತ್ತಿದ್ದ ಇಬ್ಬರು ಯುವತಿಯರ ಬಂಧನ

ಬೆಂಗಳೂರು : ಹುಡುಗರಂತೆ ವೇಷ ಧರಿಸಿಕೊಂಡು ಮನೆಗಳ್ಳತನ ಮಾಡುತ್ತಿದ್ದ ಇಬ್ಬರು ಯುವತಿಯರನ್ನು ಇಲ್ಲಿನ ಸಂಪಿಗೆಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರಿನ ಟ್ಯಾನರಿ ರಸ್ತೆಯ ನಿವಾಸಿಗಳಾದ ಶಾಲು(27) ಮತ್ತು ನೀಲು(29) ಬಂಧಿತ ಯುವತಿಯರು ಎಂದು ಗುರುತಿಸಲಾಗಿದೆ. ಈ ಇಬ್ಬರು ಹುಡುಗರ ರೀತಿ ಪ್ಯಾಂಟ್, ಶರ್ಟ್, ಟೋಪಿ ಹಾಕಿಕೊಂಡು ಹಗಲು ವೇಳೆಯಲ್ಲೆ ದ್ವಿಚಕ್ರ ವಾಹನದಲ್ಲಿ ಸುತ್ತಾಡುತ್ತಾ ನಿರ್ಜನ ಪ್ರದೇಶದ ಸುತ್ತಮುತ್ತ ಬೀಗ ಹಾಕಿರುವ ಮನೆಗಳನ್ನು ಗುರುತಿಸಿ ಕಳ್ಳತನ ಮಾಡುತ್ತಿದ್ದರು. ಜ.13 ರಂದು ಸಂಪಿಗೆಹಳ್ಳಿಯ ನಿವಾಸಿ ಸಂಗಮೇಶ್ ಎಂಬುವವರ ಮನೆಯಲ್ಲಿ ಕಳ್ಳತನ ನಡೆದಿರುವ ಬಗ್ಗೆ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಆರಂಭಿಸಿ ಘಟನಾ ಸ್ಥಳದ ಸುತ್ತಮುತ್ತಲಿನ ರಸ್ತೆಗಳಲ್ಲಿರುವ ಸಿಸಿ ಕ್ಯಾಮೆರಾಗಳನ್ನು ಪರಿಶೀಲಿಸಿದಾಗ ಇಬ್ಬರು ಹುಡುಗರು ನಡೆದುಕೊಂಡು ಹೋಗುತ್ತಿರುವುದು ಕಂಡು ಬಂದಿದೆ. ಸಿಸಿ ಕ್ಯಾಮೆರಾ ದೃಶ್ಯಾವಳಿಗಳನ್ನು ಆಧರಿಸಿ ಪೊಲೀಸರು ತನಿಖೆ ಚುರುಕುಗೊಳಿಸಿ ಇಬ್ಬರು ಆರೋಪಿಗಳನ್ನು ಬಂಧಿಸಿದಾಗಲೇ ಅವರು ಹುಡುಗರಲ್ಲ, ಹುಡುಗಿಯರು ಎಂಬುದು ಗೊತ್ತಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಗಳು ಹುಡುಗರ ವೇಷ ಧರಿಸಿಕೊಂಡು ಕಳ್ಳತನ ಮಾಡಿರುವುದು ವಿಚಾರಣೆಯಿಂದ ತಿಳಿದು ಬಂದಿದ್ದು, ಇಬ್ಬರು ಯುವತಿಯರನ್ನು ಮತ್ತಷ್ಟು ವಿಚಾರಣೆಗೆ ಒಳಪಡಿಸಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.

ವಾರ್ತಾ ಭಾರತಿ 16 Jan 2026 10:51 pm

ಶಿಕ್ಷಣ ಸಂಸ್ಥೆಗಳಲ್ಲಿ ಹಾಸುಹೊಕ್ಕಾಗಿರುವ ಜಾತಿ ತಾರತಮ್ಯ: ಸಾಂಸ್ಥಿಕ ಕೊಲೆಗೆ ಕಾರಣವಾಗುವುದು ಏನೇನು?

ರೋಹಿತ್ ವೇಮುಲ ಸಾಂಸ್ಥಿಕ ಹತ್ಯೆಯಾಗಿ 10 ವರ್ಷಗಳು!

ವಾರ್ತಾ ಭಾರತಿ 16 Jan 2026 10:47 pm

ಕಣಚೂರು ವೈದ್ಯಕೀಯ ಕಾಲೇಜು: ಪ್ರಶಸ್ತಿ ಪ್ರದಾನ ಸಮಾರಂಭ, ಪ್ಲೆಕ್ಸಸ್ - 2006 ಕಾರ್ಯಕ್ರಮ

ಕೊಣಾಜೆ: ವೈದ್ಯರು ಕೇವಲ ಬಿಳಿ ಕೋಟ್ ಧರಿಸಿದ ವೃತ್ತಿಪರರು ಮಾತ್ರವಲ್ಲ. ಅವರು ನಿಜ ಜೀವನದ ಹೀರೋ ಗಳು. ಜೀವ ರಕ್ಷಿಸುವ ಅವರ ಸೇವೆ ಅತ್ಯಂತ ಸಮರ್ಪಣೆಯ ಫಲವಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಮುಖ್ಯ ಕಾರ್ಯದರ್ಶಿಗಳು ಮೊಹಮ್ಮದ್‌ ಮೊಹ್ಸಿನ್‌ ಐಎಎಸ್‌ ಅಭಿಪ್ರಾಯಪಟ್ಟರು. ಅವರು ಕಣಚೂರು ವೈದ್ಯಕೀಯ ಕಾಲೇಜು ಕ್ಯಾಂಪಸ್ ನ ಕಾನ್ಫರೆನ್ಸ್ ಡ್ರೋಮ್ ನಲ್ಲಿ ನಡೆದ ದಶಕದ ಪ್ರಶಸ್ತಿ ಪ್ರದಾನ ಸಮಾರಂಭ ಮತ್ತು ವಾರ್ಷಿಕ ದಿನಾಚರಣೆಯ ಪ್ಲೆಕ್ಸಸ್ -2006 ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಕೇವಲ ಪದವಿ ಅಂಕಗಳು ಮಾತ್ರ ಉತ್ತಮ ವೈದ್ಯರನ್ನು ನಿರ್ಧರಿಸುವುದಿಲ್ಲ. ಚಿಕಿತ್ಸಾ ಕೌಶಲ್ಯ, ಪ್ರಾಯೋಗಿಕ ಅನುಭವ ಮತ್ತು ಸಂವಹನ ಕೌಶಲ್ಯಗಳು ಅತ್ಯಂತ ಮುಖ್ಯ. ರೋಗಿಗಳೊಂದಿಗೆ ಸರಿಯಾದ ಸಂವಹನ ನಡೆಯು ವುದೇ ಉತ್ತಮ ಚಿಕಿತ್ಸೆಗೆ ನೆಲೆ. ವೈದ್ಯಕೀಯ ವೃತ್ತಿಯಲ್ಲಿ ನೈತಿಕತೆ ಬಹುಮುಖ್ಯ ಎಂದರು. ಅಲೈಡ್‌ ಹೆಲ್ತ್‌ ಕೇರ್‌ ಕೌನ್ಸಿಲ್‌ನ ಅಧ್ಯಕ್ಷ ಪ್ರೊ. ಯು.ಟಿ.ಇಫ್ತಿಕಾರ್‌ ಆಲಿ ಫರೀದ್ ಮಾತನಾಡಿ, ಆರೋಗ್ಯ ಸೇವಾ ಕ್ಷೇತ್ರದಲ್ಲಿ ದೇಹಭಾಷೆ ಮತ್ತು ವೃತ್ತಿಪರ ಮನೋಭಾವ ಅತ್ಯಂತ ಮುಖ್ಯ. ಮಾತು ಮಾತ್ರವಲ್ಲ, ನಮ್ಮ ನಡೆ-ನುಡಿ, ರೋಗಿಯೊಂದಿಗೆ ನಡೆಸುವ ವರ್ತನೆ ಅವರ ವಿಶ್ವಾಸವನ್ನು ಗೆಲ್ಲುತ್ತದೆ. ವೈದ್ಯಕೀಯ ವೃತ್ತಿಯಲ್ಲಿ ಗೌರವವು ಪದವಿ ಅಥವಾ ಹುದ್ದೆಯಿಂದ ಅಲ್ಲ, ನಮ್ಮ ಕಾರ್ಯಕ್ಷಮತೆ ಮತ್ತು ಸೇವೆಯಿಂದಲೇ ದೊರೆಯುತ್ತದೆ ಎಂದರು. ಈ ಸಂದರ್ಭ ಕಣಚೂರು ಇಸ್ಲಾಮಿಕ್‌ ಎಜ್ಯುಕೇಷನ್‌ ಟ್ರಸ್ಟ್‌ ನ ಚೇರ್‌ ಮೆನ್‌ ಯು.ಕಣಚೂರು ಮೋನು ಅಧ್ಯಕ್ಷತೆ ವಹಿಸಿದ್ದರು.‌ ಕಣಚೂರು ಸಂಸ್ಥೆಯ ಗೌರವ ಸಲಹೆಗಾರರಾದ ಡಾ.ಮೊಹಮ್ಮದ್‌ ಇಸ್ಮಾಯಿಲ್‌ ಹೆಜಮಾಡಿ, ಡಾ.ಎಂ. ವೆಂಕಟ್ರಾಯ ಪ್ರಭು, ವೈದ್ಯಕೀಯ ಅಧೀಕ್ಷಕ ಡಾ.ಅಂಜನ್‌, ಆಡಳಿತಾಧಿಕಾರಿ ಡಾ.ರೋಹನ್‌ ಮೋನಿಸ್‌, ಕಣಚೂರು ಆರೋಗ್ಯ ವಿಜ್ಞಾನ ಸಂಸ್ಥೆಯ ನಿರ್ದೇಶಕ ಅಬ್ದುಲ್‌ ರೆಹಮಾನ್‌ ಸ್ವಾಗತಿಸಿದರು. ವೈದ್ಯಕೀಯ ಕಾಲೇಜು ಡೀನ್‌ ಡಾ. ಶಹನವಾಝ್‌ ಮಾಣಿಪ್ಪಾಡಿ ವಾರ್ಷಿಕ ವರದಿ ವಾಚಿಸಿದರು. ಡಾ ದೀಪಿಕಾ ಕಾಮತ್‌ ವಂದಿಸಿದರು.

ವಾರ್ತಾ ಭಾರತಿ 16 Jan 2026 10:37 pm

ಸ್ಕೂಟರ್ ಸವಾರೆ ಮೃತ್ಯು: ಆರೋಪಿ ಲಾರಿ ಚಾಲಕನಿಗೆ ಶಿಕ್ಷೆ

ಮಂಗಳೂರು, ಜ.16: ಅಪಘಾತದಲ್ಲಿ ಸ್ಕೂಟರ್ ಸವಾರೆಯ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಲಾರಿ ಚಾಲಕ ಎಂ.ಡಿ. ಸತೀಶ್ ಎಂಬಾತನಿಗೆ ಜೆಎಂಎಫ್‌ಸಿ 8ನೇ ನ್ಯಾಯಾಲಯ 1 ವರ್ಷದ ಸಾದಾ ಜೈಲು ಶಿಕ್ಷೆ ಹಾಗೂ 21 ಸಾವಿರ ರೂ. ದಂಡ ವಿಧಿಸಿದೆ. 2019ರ ನ.27ರಂದು ಮಧ್ಯಾಹ್ನ 11:50ರ ವೇಳೆಗೆ ಪ್ರಿಯಾ ವೈ. ಸುವರ್ಣ ಎಂಬಾಕೆ ಕೆಪಿಟಿಯಿಂದ ಕೊಟ್ಟಾರ ಚೌಕಿ ಕಡೆಗೆ ಸ್ಕೂಟರ್ ಚಲಾಯಿಸಿಕೊಂಡು ಹೋಗುತ್ತಿದ್ದಾಗ ಕುಂಟಿಕಾನ ಬಳಿ ಲಾರಿ ಢಿಕ್ಕಿ ಹೊಡೆದಿತ್ತು. ಇದರಿಂದ ಸ್ಕೂಟರ್ ಸವಾರೆ ಮೃತಪಟ್ಟಿದ್ದರು. ಈ ಬಗ್ಗೆ ಅಂದಿನ ಪಶ್ಚಿಮ ಸಂಚಾರ ಠಾಣೆಯ ಪೊಲೀಸ್ ನಿರೀಕ್ಷಕ ಅಮಾನುಲ್ಲಾ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿಸಲ್ಲಿಸಿದ್ದರು. ವಾದ ಪ್ರತಿವಾದ ಆಲಿಸಿದ ನ್ಯಾಯಾಧೀಶ ಫವಾಝ್ ಪಿ.ಎ. ಆರೋಪಿಗೆ ಶಿಕ್ಷೆ ವಿಧಿಸಿದ್ದಾರೆ. ಸರಕಾರದ ಪರವಾಗಿ ಸಹಾಯಕ ಸರಕಾರಿ ಅಭಿಯೋಜಕರಾದ ಗೀತಾ ರೈ ಮತ್ತು ಆರೋನ್ ಡಿಸೋಜ ವಿಟ್ಲ ವಾದಿಸಿದ್ದರು.

ವಾರ್ತಾ ಭಾರತಿ 16 Jan 2026 10:33 pm

ಯಾದಗಿರಿ | ವಿಚಾರಣೆ ನೆಪದಲ್ಲಿ ಪೊಲೀಸರಿಂದ ಬ್ಲಡ್ ಕ್ಯಾನ್ಸರ್ ರೋಗಿಗೆ ಹಲ್ಲೆ; ಕುಟುಂಬಸ್ಥರಿಂದ ಗಂಭೀರ ಆರೋಪ

ಖಾಲಿ ಪೇಪರ್ ನಲ್ಲಿ ಸಹಿ ಮಾಡುವಂತೆ ಪೊಲೀಸರಿಂದ ಒತ್ತಡ: ಸಂತ್ರಸ್ತನ ಪತ್ನಿ ಆರೋಪ

ವಾರ್ತಾ ಭಾರತಿ 16 Jan 2026 10:31 pm

ಉಡುಪಿ: ಜ.17ರಂದು ಆಸ್ಕರ್ ಫೆರ್ನಾಂಡೀಸ್ ಅಭಿಮಾನಿ ಬಳಗದಿಂದ ವೈವಿಧ್ಯಮಯ ಕಾರ್ಯಕ್ರಮ

ಉಡುಪಿ, ಜ.16: ಶೀರೂರು ಪರ್ಯಾಯ ಪ್ರಯುಕ್ತ ಆಸ್ಕರ್ ಫೆರ್ನಾಂಡೀಸ್ ಅಭಿಮಾನಿ ಬಳಗ ನಾಳೆ ಜ.17ರಂದು ಬ್ರಹ್ಮಗಿರಿಯಲ್ಲಿರುವ ಕಾಂಗ್ರೆಸ್ ಭವನದ ಎದುರು ವೈವಿಧ್ಯಮಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ ಎಂದು ಬಳಗದ ಅಧ್ಯಕ್ಷ, ಕಾಂಗ್ರೆಸ್ ಮುಖಂಡ ಯತೀಶ್ ಕರ್ಕೇರ ತಿಳಿಸಿದ್ದಾರೆ. ಇಂದಿಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಳಗ್ಗೆ 9 ಗಂಟೆಯಿಂದ ಅಪರಾಹ್ನ 3ರವರೆಗೆ ಜಿಲ್ಲೆಯ ವಿವಿದೆಡೆಗಳಿಂದ ಬರುವ ತಂಡದಿಂದ ಕುಣಿತ ಭಜನೆ ನಡೆಯಲಿದೆ. ಮೂರು ಗಂಟೆಗೆ ರಾಜ್ಯಮಟ್ಟದ ಭಕ್ತಿ ಪ್ರಧಾನ ನೃತ್ಯ ಸ್ಪರ್ಧೆ ನಡೆಯಲಿದೆ ಎಂದು ಅವರು ಹೇಳಿದರು. ಕಾರ್ಯಕ್ರಮಕ್ಕೆ ಬೆಳಗ್ಗೆ 9ಗಂಟೆಗೆ ಕಾಂಗ್ರೆಸ್ ನಾಯಕರೂ ಉದ್ಯಮಿಗಳೂ ಆದ ಪ್ರಸಾದ್‌ರಾಜ್ ಕಾಂಚನ್ ಹಾಗೂ ಸೂರ್ಯಪ್ರಕಾಶ್ ಅವರು ಚಾಲನೆ ನೀಡಲಿದ್ದಾರೆ ಎಂದ ಅವರು ಅಪರಾಹ್ನ 3:00ಗಂಟೆಗೆ ಸ್ಪರ್ಧೆಯನ್ನು ಜಿಲ್ಲಾ ಉಸ್ತುವಾರಿ ಸಚಿವರು ಉದ್ಘಾಟಿಸುವರು. ಸಂಜೆ 7ಗಂಟೆಗೆ ಬಹುಮಾನ ವಿತರಣೆ ನಡೆಯಲಿದೆ ಎಂದರು. ಬಳಿಕ 7:30ರಿಂದ ಜಿಲ್ಲೆಯ ಪ್ರಸಿದ್ಧ ಮೆಕ್ಕೆಕಟ್ಟೆ ಮೇಳದಿಂದ ಯಕ್ಷಗಾನ ‘ದೇವಿ ಮಹಾತ್ಮೆ’ ಪ್ರದರ್ಶನ ನಡೆಯಲಿದೆ ಎಂದೂ ಯತೀಶ್ ಕರ್ಕೆರ ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಹಿರಿಯ ಕಾಂಗ್ರೆಸ್ ನಾಯಕ ಮುರಳಿ ಶೆಟ್ಟಿ, ಪ್ರಖ್ಯಾತ್ ಶೆಟ್ಟಿ, ಕೃಷ್ಣ ಶೆಟ್ಟಿ ಬಜಗೋಳಿ, ಅಕ್ಷತ ಪೈ, ಸುಧಾಕರ್, ಸೂರಜ್ ಕಲ್ಮಾಡಿ ಉಪಸ್ಥಿತರಿದ್ದರು.

ವಾರ್ತಾ ಭಾರತಿ 16 Jan 2026 10:31 pm

ಶೀರೂರು ಪರ್ಯಾಯಕ್ಕೆ ಸಜ್ಜುಗೊಂಡಿದೆ ಕೃಷ್ಣ ನಗರಿ ಉಡುಪಿ

ಉಡುಪಿ, ಜ.16: ಶೀರೂರು ಮಠಾಧೀಶರಾದ ಶ್ರೀವೇದವರ್ಧನ ತೀರ್ಥ ಶ್ರೀಪಾದರ ಪ್ರಥಮ ಪರ್ಯಾಯ ಮಹೋತ್ಸವಕ್ಕೆ ಎಲ್ಲಾ ಸಿದ್ಧತೆಗಳು ಬಹುತೇಕ ಪೂರ್ಣಗೊಂಡಿದ್ದು, ಉಡುಪಿ ಜನತೆಯ ಸಹಕಾರದಿಂದ ಅತ್ಯಂತ ವ್ಯವಸ್ಥಿತ ಹಾಗೂ ವೈಭವಯುತವಾಗಿ ಪ್ರತಿ ಎರಡು ವರ್ಷಗಳಿಗೊಮ್ಮೆ ಬರುವ ಪರ್ಯಾಯವನ್ನು ನಡೆಸಲು ಶ್ರೀಕೃಷ್ಣನ ನಗರಿ ಉಡುಪಿ ಸಜ್ಜು ಗೊಂಡಿದೆ ಎಂದು ಪರ್ಯಾಯ ಸ್ವಾಗತ ಸಮಿತಿ ಅಧ್ಯಕ್ಷ, ಶಾಸಕ ಯಶಪಾಲ್ ಸುವರ್ಣ ತಿಳಿಸಿದ್ದಾರೆ. ಸುಮಾರು 2 ಲಕ್ಷ್ಮಕ್ಕೂ ಅಧಿಕ ಭಕ್ತರು ಪರ್ಯಾಯ ಮಹೋತ್ಸವದಲ್ಲಿ ಭಾಗಿಯಾಗುವ ನಿರೀಕ್ಷೆ ಇದ್ದು, ಇದಕ್ಕಾಗಿ ಶನಿವಾರ ರಾತ್ರಿ ಕೂಡಾ ಮೂರು ಕಡೆಗಳಲ್ಲಿ ಅನ್ನ ಸಂತರ್ಪಣೆಗೆ ವ್ಯವಸ್ಥೆ ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ. 5 ಮಂದಿ ಸಾಧಕರಿಗೆ ಪ್ರಶಸ್ತಿ: ಜ.18ರ ಮುಂಜಾನೆ 6 ಗಂಟೆ ಅಲಂಕೃತಗೊಂಡ ರಾಜಾಂಗಣದಲ್ಲಿ ನಡೆಯುವ ಪರ್ಯಾಯ ದರ್ಬಾರ್ ಕಾರ್ಯಕ್ರಮದಲ್ಲಿ ನಾಡಿನ ವಿವಿಧ ಕ್ಷೇತ್ರಗಳ ಸಾಧಕ ಗಣ್ಯರಿಗೆ ಶೀರೂರು ಶ್ರೀಪಾದರು ಶ್ರೀಕೃಷ್ಣಾನುಗ್ರಹ ಪ್ರಶಸ್ತಿ ನೀಡಿ ಗೌರವಿಸಲಿದ್ದಾರೆ. ಶನಿವಾರ ಸಂಜೆ 4:30ಕ್ಕೆ ನಿರ್ಗಮನ ಶ್ರೀಗಳಾದ ಪುತ್ತಿಗೆ ಮಠದ ಶ್ರೀಸುಗುಣೇಂದ್ರತೀರ್ಥರಿಗೆ ಅಭಿನಂದನಾ ಕಾರ್ಯಕ್ರಮ ನಡೆಯಲಿದೆ. ಶೀರೂರು ಪರ್ಯಾಯ ಸ್ವಾಗತ ಸಮಿತಿಯ ವತಿಯಿಂದ ತಮ್ಮ ಚತುರ್ಥ ಪರ್ಯಾಯ ಮಹೋತ್ಸವವನ್ನು ಯಶಸ್ವಿಯಾಗಿ ಪೂರೈಸಿದ ಪರ್ಯಾಯ ಶ್ರೀಗಳಿಗೆ ಹಾಗೂ ಕಿರಿಯ ಯತಿಗಳಾದ ಶ್ರೀಸುಶ್ರೀಂದ್ರ ತೀರ್ಥರಿಗೆ ರಥಬೀದಿಯ ಪೂರ್ಣ ಪ್ರಜ್ಞಾ ವೇದಿಕೆಯಲ್ಲಿ ಸನ್ಮಾನಿಸಿ ಗೌರವಿಸಲಾಗುವುದು ಎಂದು ಯಶಪಾಲ್ ತಿಳಿಸಿದ್ದಾರೆ. ಶೀರೂರು ಪರ್ಯಾಯದ ಕಾರ್ಯಕ್ರಮಗಳ ವಿವರ: ಜ.18ರ ಪ್ರಾತಃ ಕಾಲ 1:15ಕ್ಕೆ ಕಾಪು ಸಮೀಪದ ದಂಡ ತೀರ್ಥದಲ್ಲಿ ಶೀರೂರು ಶ್ರೀಗಳಿಂದ ಪವಿತ್ರ ಸ್ನಾನ. 2:00 ಗಂಟೆಗೆ ಜೋಡುಕಟ್ಟೆಯಿಂದ ವೈಭವದ ಪರ್ಯಾಯ ಮೆರವಣಿಗೆ ಪ್ರಾರಂಭ. ಬೆಳಗ್ಗೆ 5:15ಕ್ಕೆ ಕನಕನ ಕಿಂಡಿಯಲ್ಲಿ ಶ್ರೀಕೃಷ್ಣ ದರ್ಶನ. ಬೆಳಗ್ಗೆ 5:45ಕ್ಕೆ ಶೀರೂರು ಶ್ರೀಗಳಿಂದ ಸರ್ವಜ್ಞ ಪೀಠಾರೋಹಣ, 5:55ಕ್ಕೆ ಬಡಗುಮಳಿಗೆಯ ಅರಳು ಗದ್ದುಗೆಯಲ್ಲಿ ‘ಸಾಂಪ್ರದಾಯಿಕ ದರ್ಬಾರ್ ಹಾಗೂ ಅಷ್ಟ ಮಠಾಧೀಶರಿಗೆ ಮಾಲಿಕೆ ಮಂಗಳಾರತಿ. ಬೆಳಗ್ಗೆ 6:15ಕ್ಕೆ ರಾಜಾಂಗಣದಲ್ಲಿ ಪರ್ಯಾಯ ದರ್ಬಾರ್ ಕಾರ್ಯಕ್ರಮ ಆಮಂತ್ರಿತ ಅಷ್ಟಮಠಾಧೀಶರಿಂದ ಹಾಗೂ ಪರ್ಯಾಯ ಪೀಠಾಧೀಶರಿಂದ ಅನುಗ್ರಹ ಸಂದೇಶ. 10:30ಕ್ಕೆ ಶೀರೂರು ಶ್ರೀಗಳಿಂದ ಮಹಾಪೂಜೆ. ಪರ್ಯಾಯ ಮೆರವಣಿಗೆ: ಮುಂಜಾನೆ 2:00 ಗಂಟೆಗೆ ವೈಭವದ ಪರ್ಯಾಯ ಮೆರವಣಿಗೆ ಪ್ರಾರಂಭಗೊಳ್ಳಲಿದೆ. ಉಡುಪಿ ಜೋಡುಕಟ್ಟೆ ಯಿಂದ ಶ್ರೀಕೃಷ್ಣಮಠದವರೆಗೆ ಸುಮಾರು 85 ಕ್ಕೂ ಅಧಿಕ ವಿವಿಧ ರಾಜ್ಯಗಳ ಕಲಾ ತಂಡಗಳು, ವೈವಿಧ್ಯಮಯ ಆಕರ್ಷಕ ಸ್ತಬ್ಧ ಚಿತ್ರಗಳನ್ನೊಳಗೊಂಡ ವೈಭವದ ಪರ್ಯಾಯ ಮೆರವಣಿಗೆ ಸಾಗಿ ಬರಲಿದೆ. ಜ.17ರ ರಾತ್ರಿ 40 ಸಾವಿರ ಮಂದಿಗೆ ಭೋಜನ ವ್ಯವಸ್ಥೆ ಮಾಡಲಾಗಿದೆ. ರಾತ್ರಿ 7:30ರಿಂದ ವಿಶೇಷ ಅನ್ನ ಸಂತರ್ಪಣೆಯು ನಗರಸಭಾ ಕಚೇರಿ ಬಳಿಯ ಶ್ರೀನಿತ್ಯಾನಂದ ಸ್ವಾಮಿ ಮಂದಿರ, ಕೃಷ್ಣ ಮಠದ ಪಾರ್ಕಿಂಗ್ ಪ್ರದೇಶ. ಭಾಗವಹಿಸುವ ಗಣ್ಯರು: ಪರ್ಯಾಯ ಮೆರವಣಿಗೆ ಹಾಗೂ ಪರ್ಯಾಯ ದರ್ಬಾರ್‌ಗಳಲ್ಲಿ ಉಡುಪಿ ಶ್ರೀಕೃಷ್ಣ ಮಠದ ಅಷ್ಟ ಮಠಗಳಸ ಮಠಾಧೀಶರೊಂದಿಗೆ ನಾಡಿನ ಹಲವು ಮಂದಿ ಗಣ್ಯರು ಭಾಗವಹಿಸಲಿದ್ದಾರೆ. ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ, ಮೈಸೂರಿನ ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್, ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ, ಕರ್ನಾಟಕ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಗೃಹ ಸಚಿವ ಡಾ.ಜಿ.ಪರಮೇಶ್ವರ್, ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಆರ್. ಹೆಬ್ಬಾಳ್ಳರ್, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಸಂಸದ ಕೋಟ ಶ್ರೀನಿವಾಸ ಪೂಜಾರಿ, ಶಾಸಕರು, ಜಿಲ್ಲಾದಿಕಾರಿ ಹಾಗೂ ಇತರರು ಭಾಗವಹಿಸಲಿದ್ದಾರೆ.

ವಾರ್ತಾ ಭಾರತಿ 16 Jan 2026 10:28 pm

ಸಾಮಾಜಿಕ ಜಾಲತಾಣ X ಮತ್ತೆ ಡೌನ್‌: ಭಾರತ ಸೇರಿ ಹಲವು ದೇಶಗಳಲ್ಲಿ ಬಳಕೆದಾರರಿಗೆ ಅಡಚಣೆ

ಭಾರತ ಸೇರಿದಂತೆ ಜಗತ್ತಿನ ಹಲವು ದೇಶಗಳ ಬಳಕೆದಾರರು ಶುಕ್ರವಾರ ಸಂಜೆ ಸಾಮಾಜಿಕ ಜಾಲತಾಣ ಎಕ್ಸ್‌ (ಟ್ವಿಟರ್) ಪ್ರವೇಶಿಸಲು ತೀವ್ರ ತೊಂದರೆ ಅನುಭವಿಸಿರುವುದು ವರದಿಯಾಗಿದೆ. ಟೈಮ್‌ಲೈನ್ ಲೋಡ್ ಆಗದಿರುವುದು, ಪೋಸ್ಟ್‌ ಮಾಡುವಲ್ಲಿ ಸಮಸ್ಯೆ ಹಾಗೂ ವೆಬ್‌ಸೈಟ್‌ ಸಂಪೂರ್ಣವಾಗಿ ತೆರೆಯದಿರುವುದು ಸೇರಿದಂತೆ ಹಲವು ದೋಷಗಳು ಕಂಡುಬಂದಿವೆ. ಇದು ಈ ವಾರದಲ್ಲೇ ಎಕ್ಸ್‌ ಎದುರಿಸುತ್ತಿರುವ ಎರಡನೇ ಜಾಗತಿಕ ವ್ಯತ್ಯಯವಾಗಿದ್ದು (ಔಟೇಜ್) ಬಳಕೆದಾರರಲ್ಲಿ

ಒನ್ ಇ೦ಡಿಯ 16 Jan 2026 10:24 pm

ರಾಮನಗರ ವೈದ್ಯ ಕಾಲೇಜು ಆವರಣದಲ್ಲೇ 650 ಹಾಸಿಗೆಗಳ ಆಸ್ಪತ್ರೆ ನಿರ್ಮಿಸಿ: ಡಾ. ಸಿಎನ್‌ ಮಂಜುನಾಥ್ ಪಟ್ಟು; ಕಾರಣವೇನು?

ರಾಮನಗರದಲ್ಲಿ ನಿರ್ಮಾಣ ಹಂತದಲ್ಲಿರುವ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ವೈದ್ಯಕೀಯ ಕಾಲೇಜು ಆವರಣದಲ್ಲೇ 650 ಹಾಸಿಗೆಗಳ ಆಸ್ಪತ್ರೆ ನಿರ್ಮಿಸುವಂತೆ ಸಂಸದ ಡಾ.ಸಿ.ಎನ್. ಮಂಜುನಾಥ್ ಒತ್ತಾಯಿಸಿದ್ದಾರೆ. ಆಸ್ಪತ್ರೆ ಇಲ್ಲದಿದ್ದರೆ ವೈದ್ಯಕೀಯ ಕಾಲೇಜಿನ ಉದ್ದೇಶ ಈಡೇರುವುದಿಲ್ಲ ಎಂದು ಅವರು ಸಚಿವರು ಹಾಗೂ ಕುಲಪತಿಗಳಿಗೆ ಮನವಿ ಸಲ್ಲಿಸಿದ್ದಾರೆ.

ವಿಜಯ ಕರ್ನಾಟಕ 16 Jan 2026 10:23 pm

ಭೋಪಾಲ್‌ ಸಾಹಿತ್ಯ ಹಾಗೂ ಕಲಾ ಉತ್ಸವಕ್ಕೆ ಸಂಘ ಪರಿವಾರದ ವಿರೋಧ; ಬಾಬರ್ ಕುರಿತ ಪುಸ್ತಕದ ಚರ್ಚೆ ರದ್ದು

ಭೋಪಾಲ, ಜ. 16: ಭೋಪಾಲ್‌ ಸಾಹಿತ್ಯ ಹಾಗೂ ಕಲಾ ಉತ್ಸವದಲ್ಲಿ ನಡೆಯಲಿದ್ದ ‘ಬಾಬರ್: ದಿ ಕ್ವೆಸ್ಟ್ ಫಾರ್ ಹಿಂದೂಸ್ತಾನ್’ ಪುಸ್ತಕದ ಕುರಿತ ಚರ್ಚೆಯನ್ನು ಪ್ರತಿಭಟನೆಯ ಭೀತಿಯಿಂದ ರದ್ದುಗೊಳಿಸಲಾಯಿತು. ಚರ್ಚೆಯನ್ನು ರದ್ದುಗೊಳಿಸುವ ನಿರ್ಧಾರವನ್ನು ಟೀಕಿಸಿ ಪುಸ್ತಕದ ಲೇಖಕ ಆಭಾಸ ಮಾಲದಹಿಯಾರ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ. ‘‘ಜನವರಿ 10ರಂದು ನನ್ನ ಇತ್ತೀಚಿನ ಪುಸ್ತಕ ಬಾಬರ್: ದಿ ಕ್ವೆಸ್ಟ್ ಫಾರ್ ಹಿಂದೂಸ್ತಾನ್ ಕುರಿತು ಮಾತನಾಡಲು ಆಹ್ವಾನಿಸಲಾಗಿತ್ತು. ಇದು ಬಾಬರ್ ಕುರಿತ ಜೀವನ ಚರಿತ್ರೆಯ ಎರಡನೇ ಸಂಪುಟವಾಗಿದೆ. ಮೊದಲ ಸಂಪುಟ ಬಾಬರ್’’ ಎಂದು ಅವರು ಹೇಳಿದ್ದಾರೆ. ‘‘ಮೋದಿ ಎಗೈನ್: (ವೈ ಮೋದಿ ಈಸ್ ರೈಟ್ ಫಾರ್ ಇಂಡಿಯಾ) ಆ್ಯನ್ ಎಕ್ಸ್ ಕಮ್ಯೂನಿಸ್ಟ್ಸ್ ಮೆನಿಫೆಸ್ಟೊ’’ (2019) ಪುಸ್ತಕವನ್ನು ಕೂಡ ಬರೆದ, ಮೋದಿಯ ಬೆಂಬಲಿಗನಾಗಿ ಬದಲಾದ ಮಾರ್ಕ್ಸಿಸ್ಟ್ ಆಭಾಸ ಮಾಲದಹಿಯಾರ್, ನನ್ನ ನಿಗದಿತ ಅಧಿವೇಶನ ಮುಂದುವರಿಸಲು ಅನುಮತಿ ನೀಡಲು ಸಾಧ್ಯವಿಲ್ಲ ಎಂದು ಸಂಘಟಕರು ತಿಳಿಸಿದರು ಎಂದು ಹೇಳಿದ್ದಾರೆ. ಪತ್ರಿಕೆಯೊಂದರಲ್ಲಿ ಪ್ರಕಟವಾದ ದಾರಿ ತಪ್ಪಿಸುವ ಹಾಗೂ ಮಾನಹಾನಿಕರ ವರದಿಯಿಂದ ಪ್ರಚೋದನೆಗೊಂಡು ಸಂಘ ಪರಿವಾರದ ಆಕ್ಷೇಪಣೆ ಹಾಗೂ ಪ್ರಸ್ತಾವಿತ ಪ್ರತಿಭಟನೆ ಇದಕ್ಕೆ ಕಾರಣ. ಸಾಹಿತ್ಯ ಉತ್ಸವದಲ್ಲಿ ಬಾಬರ್ ಕುರಿತ ಅಧಿವೇಶನದಲ್ಲಿ ಬಾಬರ್‌ನನ್ನು ವೈಭವೀಕರಿಸುವ ಉದ್ದೇಶವನ್ನು ಹೊಂದಲಾಗಿದೆ ಎಂದು ಪತ್ರಿಕೆಯ ವರದಿ ತಪ್ಪಾಗಿ ಪ್ರತಿಪಾದಿಸಿತ್ತು ಎಂದು ಸಂಘಟಕರು ತನಗೆ ಮಾಹಿತಿ ನೀಡಿದರು ಎಂದು ಅವರು ಹೇಳಿದ್ದಾರೆ. ವಿಪರ್ಯಾಸವೆಂದರೆ, ಬಾಬರ್ ಅವರ ಚಿತ್ರಣದ ಕುರಿತ ಮಾರ್ಕ್ಸ್‌ವಾದಿ ವಿರೂಪಗಳನ್ನು ಪ್ರಶ್ನಿಸುವ ಉದ್ದೇಶದಿಂದ ಈ ಅಧಿವೇಶನ ಏರ್ಪಡಿಸಲಾಗಿತ್ತು. ಆದರೆ, ಬಾಬರ್‌ನನ್ನು ವೈಭವಿಕರಿಸಲಾಗುತ್ತಿದೆ ಎಂದು ಆರೋಪಿಸಲಾಗಿದೆ. ಸತ್ಯ ಇದಕ್ಕೆ ವಿರುದ್ಧವಾಗಿದೆ ಎಂದು ಅವರು ಹೇಳಿದ್ದಾರೆ. ಈ ಘಟನೆ ಕುರಿತಂತೆ ಆಭಾಸ ಮಾಲದಹಿಯಾರ್ ಮಧ್ಯಪ್ರದೇಶದ ಸಂಸ್ಕೃತಿ ಹಾಗೂ ಪ್ರವಾಸೋದ್ಯಮ ಸಚಿವ ಧರ್ಮೇಂದ್ರ ಸಿಂಗ್ ಲೋಧಿ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ವಾರ್ತಾ ಭಾರತಿ 16 Jan 2026 10:20 pm

ಅಕ್ರಮ ಮರಳು ಗಣಿಗಾರಿಕೆ| ಮಧ್ಯಪ್ರದೇಶ, ಮಹಾರಾಷ್ಟ್ರಗಳಲ್ಲಿ ಈಡಿ ದಾಳಿ

ಹೊಸದಿಲ್ಲಿ,ಜ.16: ಅಕ್ರಮ ಮರಳು ಗಣಿಗಾರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವು ಶುಕ್ರವಾರ ಮಧ್ಯಪ್ರದೇಶದ ಭೋಪಾಲ್‌, ಹೋಶಂಗಾಬಾದ್ ಮತ್ತು ಬೇತುಲ್ ಹಾಗೂ ಮಹಾರಾಷ್ಟ್ರದ ನಾಗ್ಪುರ ಮತ್ತು ಭಂಡಾರಾ ಜಿಲ್ಲೆಗಳಲ್ಲಿಯ 16 ಸ್ಥಳಗಳಲ್ಲಿ ಶೋಧ ಕಾರ್ಯಾಚರಣೆಗಳನ್ನು ನಡೆಸಿದೆ. ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ ಈ ದಾಳಿಗಳನ್ನು ನಡೆಸಲಾಗಿದೆ. ನಾಗ್ಪುರದ ಸದರ್ ಮತ್ತು ಅಂಬಾಝರಿ ಪೋಲಿಸ್ ಠಾಣೆಗಳಲ್ಲಿ ನರೇಂದ್ರ ಪಿಂಪ್ಲೆ, ಅಮೋಲ್ ಅಲಿಯಾಸ್ ಗುಡ್ಡು ಖೋರ್ಗಡೆ ಮತ್ತು ಇತರರ ವಿರುದ್ಧ ದಾಖಲಾಗಿರುವ ಪ್ರಕರಣಗಳ ಆಧಾರದಲ್ಲಿ ಈಡಿ ತನಿಖೆಯನ್ನು ಕೈಗೊಂಡಿದೆ. ಈಡಿ ಪ್ರಕಾರ ಆರೋಪಿಗಳು ಅಕ್ರಮ ಮರಳು ದಂಧೆಗೆ ನಕಲಿ ವಿದ್ಯುನ್ಮಾನ ಸಾಗಾಟ ಪರವಾನಿಗೆಗಳನ್ನು (ಇಟಿಪಿಗಳು) ಬಳಸುತ್ತಿದ್ದರು. ನಾಗಪುರ ಸುತ್ತುಮುತ್ತಲಿನ ಮರಳು ಪ್ರದೇಶಗಳನ್ನು ಮುಚ್ಚಲಾಗಿದ್ದರೂ ಮರಳು ಮಾಫಿಯಾವು ಸಾಗಾಣಿಕೆದಾರರು ಮತ್ತು ಇತರೊಂದಿಗೆ ಶಾಮೀಲಾಗಿ ಅಕ್ರಮ ಗಣಿಗಾರಿಕೆಯನ್ನು ಮುಂದುವರಿಸಿತ್ತು ಎನ್ನುವುದನ್ನು ಈಡಿ ತನಿಖೆಯು ಬಯಲಿಗೆಳೆದಿದೆ. ದಂಧೆಕೋರರು ಮಧ್ಯಪ್ರದೇಶದಿಂದ ನಕಲಿ ರಾಯಲ್ಟಿ ಪಾವತಿ ದಾಖಲೆಗಳನ್ನು ಪಡೆದುಕೊಂಡು ಅಕ್ರಮ ಮರಳನ್ನು ಮಹಾರಾಷ್ಟ್ರದಲ್ಲಿ ಮಾರಾಟ ಮಾಡಲು ಅವುಗಳನ್ನು ಬಳಸುತ್ತಿದ್ದರು ಎಂದು ಆರೋಪಿಸಲಾಗಿದೆ. ತನಿಖೆಯು ಮಧ್ಯಪ್ರದೇಶದಲ್ಲಿ ಕಾನೂನುಬದ್ಧವಾಗಿ ಗುತ್ತಿಗೆಗೆ ಪಡೆದುಕೊಂಡಿರುವ ಮರಳು ದಿಬ್ಬಗಳ ಹೆಸರಿನಲ್ಲಿ ನಕಲಿ ಇಟಿಪಿಗಳನ್ನು ತಯಾರಿಸುತ್ತಿದ್ದ ರಾಹುಲ್ ಖನ್ನಾ ಮತ್ತು ಬಾಬು ಅಗರವಾಲ್ ನೇತೃತ್ವದ ಮಾಫಿಯಾವನ್ನು ಭೇದಿಸಿದೆ ಎಂದು ಈಡಿ ತಿಳಿಸಿದೆ. ಈ ನಕಲಿ ಇಟಿಪಿಗಳನ್ನು ನಾಗಪುರದಲ್ಲಿಯ ಮರಳು ಮಾಫಿಯಾ ದಂಧೆಕೋರರಿಗೆ ಪ್ರತಿ ಪರವಾನಿಗೆಗೆ 6,000 ರೂ.ಗಳಿಂದ 10,000 ರೂ.ವರೆಗಿನ ಮೊತ್ತಕ್ಕೆ ಮಾರಾಟ ಮಾಡಲಾಗುತ್ತಿತ್ತು ಎಂದು ತನಿಖಾ ಸಂಸ್ಥೆಯು ಹೇಳಿದೆ.

ವಾರ್ತಾ ಭಾರತಿ 16 Jan 2026 10:20 pm

ನರೇಗಾ ಹಿಂದಿನಂತೆ ಮರುಜಾರಿಗೆ ಆಗ್ರಹಿಸಿ ಕಾಂಗ್ರೆಸ್ ನಿಂದ ಜಿಲ್ಲೆಯಾದ್ಯಂತ ಪ್ರತಿಭಟನೆ: ಐವನ್ ಡಿಸೋಜ

ಮಂಗಳೂರು: ರಾಜ್ಯ ಸರಕಾರದ ಜೊತೆ ಯಾವುದೇ ಸಮಾಲೋಚನೆ ನಡೆಸದೆ ನರೇಗಾ ಯೋಜನೆಯನ್ನು ಬದಲಾಯಿಸಿ ನೂತನ ಹೆಸರಿನ ಯೋಜನೆ ಮಾಡಲು ಹೊರಟಿರುವುದು ಸರಿಯಲ್ಲ, ರಾಜ್ಯದಲ್ಲಿ ನರೇಗಾ ಯಾಥ ಸ್ಥಿತಿ ಯಲ್ಲಿ ಉಳಿಸಲು ಒತ್ತಾಯಿಸಿ ಜಿಲ್ಲೆಯಾದ್ಯಂತ ಪ್ರತಿಭಟನೆ ನಡೆಸಲಾ ಗುವುದು.ಜ.21ರಂದು ನಗರದ ಪುರಭವನದ ಮುಂಭಾಗದ ಗಾಂಧಿ ಪ್ರತಿಮೆಯ ಎದುರು ಉಪವಾಸ ಸತ್ಯಾಗ್ರಹ ನಡೆಸಲಾಗುವುದು ಎಂದು ವಿಧಾನ ಪರಿಷತ್ ಸದಸ್ಯ ಮತ್ತು ಕೆಪಿಸಿಸಿ ಉಪಾಧ್ಯಕ್ಷ ಐವನ್ ಡಿ ಸೋಜ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ. ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯ ಹೆಸರು ಬದಲಾವಣೆಯ ಜೊತೆ ರಾಜ್ಯ ಸರಕಾರ ಯೋಜನೆಯ ಶೇ40ರಷ್ಟು ಅನುದಾನ ನೀಡಬೇಕೆಂದು ನೀತಿ ಜಾರಿ ಮಾಡಲಾಗಿದೆ.ಈ ಬಗ್ಗೆ ರಾಜ್ಯ ಸರಕಾರದ ಬಳಿ ಯಾವುದೇ ಸಮಾಲೋಚನೆ ನಡೆಸದೆ ಏಕ ಪಕ್ಷೀಯವಾಗಿ ತೀರ್ಮಾನಿ ಸಲಾಗಿದೆ.ಇದುವರೆಗೆ ಸುಮಾರು ಆರು ರಾಜ್ಯಗಳು ಬದಲಾಯಿಸಲಾದ ಉದ್ಯೋಗ ಖಾತ್ರಿ ಯೋಜನೆಗೆ ರಾಜ್ಯದ ಪಾಲು ಶೇ 40ಭಾಗ ನೀಡಲು ವಿರೋಧಿಸಿದೆ.ಈ ಹಿಂದೆ ಪ್ರತಿ ಗ್ರಾಮ ಪಂಚಾಯತ್ ಈ ಯೋಜನೆ ಯಿಂದ ಒಂದರಿಂದ ಒಂದೂವರೆ ಕೋಟಿ ವಾಋಷಿಕ ಅನುದಾನ ಪಡೆಯುತ್ತಿತ್ತು. 36 ಕೋಟಿ ಮಾನವ ದಿನಗಳ ಉದ್ಯೋಗ ನೀಡಲಾಗು ತ್ತಿರುವ ಈ ಯೋಜನೆಯ ಮೂಲಕ 26ಪರಿಶಿಷ್ಟ ಜಾತಿ,10ಲಕ್ಷ ಪರಿಶಿಷ್ಟ ಪಂಗಡದ ಕುಟುಂಬ ಗಳಿಗೆ ಉದ್ಯೋಗ ದೊರೆಯುತ್ತಿತ್ತು, 16ಲಕ್ಷ ರೂಪಾಯಿ ಮೌಲ್ಯದ ಆಸ್ತಿ ಸೃಷ್ಟಿ ಮಾಡಲಾಗು ತ್ತಿರುವ ಯೋಜನೆ. ಇದೀಗ ಕೇಂದ್ರ ಸರಕಾರ ಜನರ ಉದ್ಯೋಗದ ಹಕ್ಕನ್ನು ಕಸಿದು ಕೊಳ್ಳಲು ಹೊರಟಿದೆ ಎಂದು ಐವನ್ ಡಿ ಸೋಜ ತಿಳಿಸಿದ್ದಾರೆ. ಕೇಂದ್ರ ಸರಕಾರ ಈ ಹಿಂದೆ ಬಜೆಟ್ ನಲ್ಲಿ ಈ ಯೋಜನೆಗೆ ಅನುದಾನ ಕಡಿತಗೊಳಿಸಿತ್ತು. ಇದೀಗ ಯೋಜನೆಯನ್ನು ಸಂಪೂರ್ಣ ವಾಗಿ ಬದಲಾಯಿಸಿ ಬಡವರ ಮೇಲೆ ಬರೆ ಎಳೆದಿದೆ.ರಾಜ್ಯ ಸರಕಾರ ಈ ಬಗ್ಗೆ ವಿಶೇಷ ಅಧಿವೇಶನ ಕರೆದು ಈ ಬಗ್ಗೆ ಚರ್ಚೆ ನಡೆಸಲಿದೆ.ಸುಳ್ಯದಿಂದ ಮೂಲ್ಕಿಯವರೆಗೆ ಕೇಂದ್ರ ಸರಕಾರದ ಈ ಕ್ರಮದ ವಿರುದ್ಧ ಕಾಂಗ್ರೆಸ್ ಫೆ.9ರಿಂದ 12ರವರೆಗೆ ಪಾದಯಾತ್ರೆ ನಡೆಸಿ ಮನರೇಗಾ ಹಿಂದಿನಂತೆ ಯಥಾ ಸ್ಥಿತಿ ಜಾರಿಗೆ ಆಗ್ರಹಿಸಲಾಗುವುದು ಎಂದು ಐವನ್ ಡಿ ಸೋಜ ತಿಳಿಸಿದ್ದಾರೆ. ಇದು ಬಡವರ ಅನ್ನ ಕಸಿಯುವ ಮತ್ತು ಜನರ ಉದ್ಯೋಗ ದ ಹಕ್ಕನ್ನು ಕಸಿದುಕೊಳ್ಳು ವ ಮತ್ತು ನರೇಗಾ ಯೋಜನೆಯನ್ನು ದುರ್ಬಲಗೊಳಿಸಿ ಸ್ಥಗಿತಗೊಳಿಸುವ ಹುನ್ನಾರವಾಗಿದೆ ಎಂದು ಐವನ್ ಟೀಕಿಸಿದರು. ಮಹಾತ್ಮಾ ಗಾಂಧಿ ಯವರ ಹೆಸರನ್ನು ಬಿಟ್ಟು ನರೇಗಾ ಯೋಜನೆಯನ್ನು ಮಾಡಿರುವುದಕ್ಕೆ ಕಾಂಗ್ರೆಸ್ ವಿರೋಧ ಮಾಡುತ್ತಿದೆ ಎಂದು ಬಿಜೆಪಿ ಮುಖಂಡರು ಆರೋಪ ಮಾಡುತ್ತಿದ್ದಾರೆ.ಆದರೆ ಯೋಜನೆಯ ಸ್ವರೂಪ ಬದಲು ಮಾಡಿ ಅನುದಾನವನ್ನು ಕಡಿತಗೊಳಿಸಿರುವುದನ್ನು ಕಾಂಗ್ರೆಸ್ ವಿರೋಧಿಸುತ್ತಿದೆ.ರಾಜ್ಯ ಸರಕಾರ ಶೇ 40 ಅನುದಾನದ ನೀಡಲು ಏಕಪಕ್ಷೀಯ ನಿರ್ಧಾರ ಮಾಡಿರುವ ನಿರ್ಧಾರವನ್ನು ಕಾಂಗ್ರೆಸ್ ವಿರೋಧಿ ಸುತ್ತದೆ ಎಂದು ಐವನ್ ತಿಳಿಸಿದ್ದಾರೆ. ಇದೇ ಸಂದರ್ಭದಲ್ಲಿಮುಖ್ಯ ಮಂತ್ರಿ ಪರಿಹಾರ ನಿಧಿಯಿಂದ ಅನಾರೋಗ್ಯ ದಿಂದ ಬಳಲುತ್ತಿರುವ ನಾರಾಯಣ ಕುಲಶೇಖರ, ನಿಶ್ಚಲ್ ಮಂಗಳೂರು, ಅಬ್ದುಲ್ ಖಾದರ್,ಇಬ್ರಾಹಿಂ ಸಜಿಪನಡು,ಉಸ್ಮಾನ್ ಮೂಡುಬಿದಿರೆ, ಅಬೂಬಕ್ಕರ್ ಅಬ್ದುಲ್ ರಜಾಕ್ ಕದ್ರೊಳಿ,ಲಾರೆನ್ಸ ಲೊಬೋ, ಅಹಮದ್ ಬಾವ ಅಡ್ಡೂರು ಇವರಿಗೆ 4.44ಲಕ್ಷ ರೂಪಾಯಿ ಪರಿಹಾರದ ಆದೇಶ ವಿತರಣೆ ಮಾಡಲಾಯಿತು. ಸುದ್ದಿ ಗೋಷ್ಠಿಯಲ್ಲಿ ರಾಜ್ಯ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಗಟ್ಟಿ, ಮನಪಾ ಮಾಜಿ ಮೇಯರ್ ಶಶಿಧರ ಹೆಗ್ಡೆ,ಅಶ್ರಫ್ ಕೆ, ಮಾಜಿ ಮನಪಾ ಸದಸ್ಯ ನಾಗೇಂದ್ರ, ಅಪ್ಪಿ ,ಭಾಸ್ಕರ್, ಕಾಂಗ್ರೆಸ್ ಪದಾಧಿಕಾರಿಗಳಾದ ಸತೀಶ್ ಪೆಂಗಲ್ , ಜೇನ್ಸ್, ವಿಧ್ಯಾ,ಸತೀಶ್ ಪೆಂಗಲ್ ಮೊದಲಾದವರು ಉಪಸ್ಥಿತರಿದ್ದರು.

ವಾರ್ತಾ ಭಾರತಿ 16 Jan 2026 10:12 pm

ಗಾಝಾ ಶಾಂತಿ ಮಂಡಳಿ ರಚನೆ: ಟ್ರಂಪ್ ಘೋಷಣೆ

ವಾಷಿಂಗ್ಟನ್, ಜ.16: ಗಾಝಾ ಸಂಘರ್ಷವನ್ನು ಕೊನೆಗೊಳಿಸಲು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ 20 ಅಂಶದ ಯೋಜನೆಯ ಎರಡನೇ ಹಂತವನ್ನು ಪ್ರಾರಂಭಿಸುವುದಾಗಿ ಅಮೆರಿಕಾ ಅಧ್ಯಕ್ಷರ ವಿಶೇಷ ರಾಯಭಾರಿ ಸ್ಟೀವ್ ವಿಟ್ಕಾಫ್ ಘೋಷಿಸಿದ್ದಾರೆ. ಗಾಝಾ ಶಾಂತಿ ಮಂಡಳಿಯ ರಚನೆಯನ್ನು ಟ್ರಂಪ್ ಘೋಷಿಸಿದ್ದು ಅದರ ಸದಸ್ಯರನ್ನು ಶೀಘ್ರವೇ ಹೆಸರಿಸುವುದಾಗಿ ಹೇಳಿದ್ದಾರೆ. ಎರಡನೇ ಹಂತವು `ನಿರಸ್ತ್ರೀಕರಣ, ತಾಂತ್ರಿಕ ಆಡಳಿತ ಮತ್ತು ಗಾಝಾದ ಪುನರ್ನಿರ್ಮಾಣ'ವನ್ನು ಒಳಗೊಂಡಿದೆ. `ಎರಡನೇ ಹಂತವು ಗಾಝಾದ ಆಡಳಿತಕ್ಕಾಗಿ ರಾಷ್ಟ್ರೀಯ ಸಮಿತಿಯ ರಚನೆಯನ್ನು ಹೊಂದಿದೆ. ಇದು ಪರಿವರ್ತನೆಯ ಅವಧಿಯಲ್ಲಿ ಆಡಳಿತವನ್ನು ಮೇಲ್ವಿಚಾರಣೆ ಮಾಡುತ್ತದೆ. ಹಮಾಸ್ ತನ್ನ ಬಾಧ್ಯತೆಗಳನ್ನು ಸಂಪೂರ್ಣವಾಗಿ ಪಾಲಿಸಬೇಕೆಂದು ಅಮೆರಿಕಾ ನಿರೀಕ್ಷಿಸುತ್ತದೆ. ಇದಕ್ಕೆ ವಿಫಲವಾದರೆ ಗಂಭೀರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ' ಎಂದು ವಿಟ್ಕಾಫ್ `ಎಕ್ಸ್'ನಲ್ಲಿ ಪೋಸ್ಟ್ ಮಾಡಿದ್ದಾರೆ.

ವಾರ್ತಾ ಭಾರತಿ 16 Jan 2026 10:09 pm

ಪಟೀಲ ಉಮರಬ್ಬ ಹಾಜಿ

ಬಂಟ್ವಾಳ,ಜ.16: ಕಡೇಶಿವಾಲಯ ಗ್ರಾಮದ ಪಟೀಲ ಉಮರಬ್ಬ ಹಾಜಿ (96) ಶುಕ್ರವಾರ ಮುಂಜಾನೆ ತನ್ನ ಮನೆಯಲ್ಲಿ ನಿಧನರಾದರು. ಮೃತರು 5 ಹೆಣ್ಣು, 3 ಗಂಡು ಮಕ್ಕಳು ಮತ್ತು ಅಪಾರ ಬಂಧುಬಳಗವನ್ನು ಅಗಲಿದ್ದಾರೆ. ಶುಕ್ರವಾರ ಸಂಜೆ ಸ್ಥಳೀಯ ಬದ್ರಿಯಾ ಮಸ್ಜಿದ್‌ನ ಕಬರಸ್ಥಾನದಲ್ಲಿ ದಫನ ಕಾರ್ಯನೆರವೇರಿಸಲಾಯಿತು ಎಂದು ಕುಟಂಬದ ಮೂಲಗಳು ತಿಳಿಸಿದೆ.

ವಾರ್ತಾ ಭಾರತಿ 16 Jan 2026 10:08 pm

ದಕ್ಷಿಣ ಕೊರಿಯಾ ಮಾಜಿ ಅಧ್ಯಕ್ಷ ಯೂನ್‍ ಸುಕ್ ಯಿಯೋಲ್‍ಗೆ 5 ವರ್ಷ ಜೈಲುಶಿಕ್ಷೆ

ಸಿಯೋಲ್, ಜ.16: ದೇಶದಲ್ಲಿ ಮಿಲಿಟರಿ ಕಾನೂನು ಜಾರಿಗೊಳಿಸಿರುವುದಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ದಕ್ಷಿಣ ಕೊರಿಯಾದ ನ್ಯಾಯಾಲಯ ಶುಕ್ರವಾರ ಮಾಜಿ ಅಧ್ಯಕ್ಷ ಯೂನ್ ಸುಕ್ ಯಿಯೋಲ್‍ಗೆ ಐದು ವರ್ಷಗಳ ಜೈಲುಶಿಕ್ಷೆ ವಿಧಿಸಿರುವುದಾಗಿ ವರದಿಯಾಗಿದೆ. 2024ರ ಡಿಸೆಂಬರ್‌ನಲ್ಲಿ ಮಿಲಿಟರಿ ಕಾನೂನು ಜಾರಿಗೊಳಿಸುವ ಆದೇಶ ಸೇರಿದಂತೆ ಯೂನ್ ವಿರುದ್ದ ದಾಖಲಾಗಿರುವ 8 ಪ್ರಕರಣಗಳಲ್ಲಿ ಮೊದಲ ತೀರ್ಪು ಇದಾಗಿದೆ. ಮಿಲಿಟರಿ ಕಾನೂನು ಜಾರಿಗೊಳಿಸುವ ಆದೇಶದ ಮೂಲಕ ದಂಗೆಯ ನೇತೃತ್ವ ವಹಿಸಿದ್ದಾರೆ ಎಂಬ ಪ್ರಮುಖ ಆರೋಪವನ್ನೂ ಯೂನ್ ಎದುರಿಸುತ್ತಿದ್ದು ಆರೋಪ ಸಾಬೀತಾದರೆ ಮರಣದಂಡನೆ ವಿಧಿಸಲು ಅವಕಾಶವಿರುತ್ತದೆ.

ವಾರ್ತಾ ಭಾರತಿ 16 Jan 2026 10:07 pm

ಪೆಟ್ರೋಲಿಯಂ ಸಂಸ್ಥೆಗಳ ಮಾಲಕರಿಗೆ ಸುಳ್ಳು ಕರೆ : ಜಾಗೃತರಾಗಿರಲು ಸೂಚನೆ

ಮಂಗಳೂರು,ಜ.16: ಪೆಟ್ರೋಲಿಯಂ ಸಂಸ್ಥೆಗಳ ನೋಂದಣಿ/ನವೀಕರಣ(ಲೈಸೆನ್ಸ್)ಗೆ ಸಂಬಂಧಿಸಿದಂತೆ ಶಿವರಾಜ್ ಎಂಬ ಹೆಸರಿನ ವ್ಯಕ್ತಿ (ದೂ.ಸಂ :8150816922) ನಾನು ಕಾರ್ಮಿಕ ಇಲಾಖೆ ಇನ್‌ಸ್ಪೆಕ್ಟರ್ ಎಂದು ಹೇಳಿಕೊಂಡು 11,700 ರೂ.ಫೋನ್ ಪೇ ಮಾಡಿ ಎಂದು ಕರೆ ಮಾಡಿದ್ದಲ್ಲದೆ ಇಲ್ಲದಿದ್ದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗು ವುದೆಂದು ಪೆಟ್ರೋಲಿಯಂ ಸಂಸ್ಥೆಗಳ ಮಾಲಕರಿಗೆ ಬೆದರಿಕೆ ಹಾಕಿರುವ ಬಗ್ಗೆ ವರದಿಯಾಗಿದೆ. ದ.ಕ.ಜಿಲ್ಲೆಯ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಅಂಗಡಿ ಮತ್ತು ವಾಣಿಜ್ಯ ಸಂಸ್ಥೆ ಹಾಗೂ ಪ್ರಮುಖವಾಗಿ ಪೆಟ್ರೋಲಿಯಂ ಸಂಸ್ಥೆಗಳ ಮಾಲಕರು ಇಂತಹ ಕರೆಗಳು ಬಂದರೆ ಪ್ರತಿಕ್ರಿಯೆ ನೀಡಬಾರದು ಮತ್ತು ಸುಳ್ಳು ಕರೆಗಳಿಗೆ ಮೋಸ ಹೋಗಬಾರದು ಎಂದು ಕಾರ್ಮಿಕ ಇಲಾಖೆಯ ಅಧಿಕಾರಿಗಳು ಸೂಚಿಸಿದ್ದಾರೆ. ಈ ಕರೆಯನ್ನು ನಂಬಿ ಯಾವುದೇ ಆರ್ಥಿಕ ನಷ್ಟ ಉಂಟಾದರೆ ಇಲಾಖೆಯನ್ನು ದೂಷಿಸಬಾರದು. ಇಂತಹ ಕರೆ ಬಂದಲ್ಲಿ ಸೂಕ್ತ ದಾಖಲೆಯೊಂದಿಗೆ ಪೊಲೀಸ್ ಠಾಣೆಗೆ ದೂರು ನೀಡುವಂತೆ ತಿಳಿಸಿದ್ದಾರೆ.

ವಾರ್ತಾ ಭಾರತಿ 16 Jan 2026 10:05 pm

ಹೊಸದಿಲ್ಲಿ| ಅಕ್ರಮ ಶಸ್ತ್ರಾಸ್ತ್ರ ತಯಾರಿಕೆ, ವಿತರಣೆ ಜಾಲ ಪತ್ತೆ: ಐವರ ಬಂಧನ

ಹೊಸದಿಲ್ಲಿ, ಜ.16: ದಿಲ್ಲಿ-ರಾಷ್ಟ್ರ ರಾಜಧಾನಿ ವಲಯ, ಉತ್ತರಪ್ರದೇಶ ಮತ್ತು ಹರ್ಯಾಣದಲ್ಲಿ ಸಕ್ರಿಯರಾಗಿರುವ ಗ್ಯಾಂಗ್‌ಸ್ಟರ್‌ಗಳು ಮತ್ತು ಭಯಾನಕ ಕ್ರಿಮಿನಲ್‌ಗಳಿಗೆ ಅಕ್ರಮ ಶಸ್ತ್ರಾಸ್ತ್ರಗಳನ್ನು ಪೂರೈಸುತ್ತಿತ್ತು ಎನ್ನಲಾದ ಅಕ್ರಮ ಶಸ್ತ್ರಾಸ್ತ್ರ ತಯಾರಿಕೆ ಮತ್ತು ಪೂರೈಕೆ ಜಾಲವೊಂದನ್ನು ಪೊಲೀಸರು ಪತ್ತೆಹಚ್ಚಿದ್ದಾರೆ. ಅಪರಾಧಗಳನ್ನು ಎಸಗಿರುವ ಆರೋಪ ಎದುರಿಸುತ್ತಿರುವ ಐವರು ಕ್ರಿಮಿನಲ್‌ಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ಶುಕ್ರವಾರ ತಿಳಿಸಿದರು. ಗಣರಾಜ್ಯೋತ್ಸವ ದಿನಾಚರಣೆಗೆ ಮುನ್ನ, ಅಕ್ರಮ ಶಸ್ತ್ರಾಸ್ತ್ರಗಳ ಪೂರೈಕೆಯನ್ನು ಹತ್ತಿಕ್ಕುವುದಕ್ಕಾಗಿ ನಡೆಸಲಾದ ವಿಶೇಷ ಅಭಿಯಾನದ ಭಾಗವಾಗಿ ಈ ಕಾರ್ಯಾಚರಣೆ ನಡೆಸಲಾಗಿದೆ. ಬಂಧಿತರಿಂದ 20 ಆಧುನಿಕ ಪಿಸ್ತೂಲ್‌ಗಳು, 12 ಸಜೀವ ಕಾರ್ಟ್ರಿಜ್‌ಗಳು ಹಾಗೂ ಶಸ್ತ್ರಾಸ್ತ್ರಗಳ ತಯಾರಿಕೆಗೆ ಬಳಸಲಾಗುವ ಭಾರೀ ಪ್ರಮಾಣದ ಯಂತ್ರಗಳು ಮತ್ತು ಕಚ್ಚಾ ಸಾಮಗ್ರಿಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದರು. ಜನವರಿ 4ರಂದು ಪೊಲೀಸರು ಕಪಶೇರ ಪ್ರದೇಶದಲ್ಲಿ ಕಾರ್ಯಾಚರಣೆ ನಡೆಸಿ ದಿಲ್ಲಿಯ ಪಾಲಮ್ ನಿವಾಸಿ ಭರತ್ ಯಾನೆ ಭರು ಎಂಬಾತನನ್ನು ವಶಕ್ಕೆ ಪಡೆದರು. ಅವನಿಂದ ಒಂದು ದೇಶಿ ನಿರ್ಮಿತ ಪಿಸ್ತೂಲ್ ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಯಿತು ಎಂದು ಪೊಲೀಸರು ತಿಳಿಸಿದರು.

ವಾರ್ತಾ ಭಾರತಿ 16 Jan 2026 10:05 pm

ಬಿಬಿಎಲ್ ನಲ್ಲಿ ಪಾಕ್ ಆಟಗಾರರಿಗೆ ನಿರಂತರ ಮುಜುಗರ; ಮೊಹಮ್ಮದ್ ರಿಝ್ವಾನ್ ಬಳಿಕ ಈಗ ಬಾಬರ್ ಆಝಂ ಸರದಿ!

Babar Azam Embarrassing Moment- ಬಿಗ್ ಬ್ಯಾಷ್ ಲೀಗ್‌ನಲ್ಲಿ ಪಾಕಿಸ್ತಾನದ ಆಟಗಾರರಿಗೆ ನಿರಂತರ ಮುಜುಗರದ ಪ್ರಸಂಗಗಳು ಎದುರಾಗುತ್ತಿವೆ. ಮೊಹಮ್ಮದ್ ರಿಝ್ವಾನ್ ಅವರು ರಿಟೈರ್ಡ್ ಔಟ್ ಆಗಿ ಸುದ್ದಿಯಾಗಿದ್ದರೆ, ಬಾಬರ್ ಆಝಂ ಅವರು ಒಂದೇ ಪಂದ್ಯದಲ್ಲಿ 3 ಭಿನ್ನ ತಮಾಷೆಯ ಘಟನೆಗಳಿಂದಾಗಿ ನಗೆಪಾಟಲಿಗೀಡಾಗಿದ್ದಾರೆ. ಶುಕ್ರವಾರ ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ನಡೆದ ಸಿಡ್ನಿ ಸಿಕ್ಸರ್ ಮತ್ತು ಸಿಡ್ನಿ ಥಂಡರ್ ನಡುವಿನ ಪಂದ್ಯದ ಈ ಘಟನೆಗಳ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು ಟೀಕೆ ವ್ಯಕ್ತವಾಗಿದೆ.

ವಿಜಯ ಕರ್ನಾಟಕ 16 Jan 2026 10:04 pm

ಜಾರ್ಖಂಡ್| ಈಡಿ ಕಚೇರಿ ಮೇಲೆ ಪೊಲೀಸ್ ದಾಳಿ ಪ್ರಕರಣ: ತನಿಖೆಗೆ ಹೈಕೋರ್ಟ್ ತಡೆ

ರಾಂಚಿ, ಜ. 16: ಗುರುವಾರ ಜಾರ್ಖಂಡ್ ಪೊಲೀಸರು ರಾಂಚಿಯಲ್ಲಿರುವ ಜಾರಿ ನಿರ್ದೇಶನಾಲಯ (ಈಡಿ)ದ ವಲಯ ಕಚೇರಿಗೆ ದಾಳಿ ನಡೆಸಿ ದಾಳಿಯ ಬಿಸಿಯನ್ನು ಅದಕ್ಕೂ ಮುಟ್ಟಿಸಿದರು. ಹಲ್ಲೆ ಆರೋಪಕ್ಕೆ ಸಂಬಂಧಿಸಿದ ಪ್ರಕರಣವೊಂದರ ತನಿಖೆಗಾಗಿ ಪೊಲೀಸರು ಈಡಿ ಕಚೇರಿಯಿಂದ ಸಿಸಿಟಿವಿ ದೃಶ್ಯಗಳನ್ನು ಸಂಗ್ರಹಿಸಿದರು ಎಂದು ಪಿಟಿಐ ವರದಿ ಮಾಡಿದೆ. ಜಾರ್ಖಂಡ್ ಪೊಲೀಸರ ದಾಳಿಯನ್ನು ಪ್ರಶ್ನಿಸಿ ಜಾರಿ ನಿರ್ದೇಶನಾಲಯವು ಜಾರ್ಖಂಡ್ ಹೈಕೋರ್ಟ್ ಮೆಟ್ಟಿಲೇರಿತು. ಹೈಕೋರ್ಟ್ ಈ ಪ್ರಕರಣದ ತನಿಖೆಗೆ ತಡೆಯಾಜ್ಞೆ ನೀಡಿತು. ಜಾರ್ಖಂಡ್ ಸರಕಾರದ ಉದ್ಯೋಗಿ ಸಂತೋಷ್ ಕುಮಾರ್ ಎಂಬವರು ಜನವರಿ 12ರಂದು ಸಲ್ಲಿಸಿದ ದೂರಿನ ಆಧಾರದಲ್ಲಿ ಈಡಿ ವಿರುದ್ಧ ಮೊಕದ್ದಮೆ ದಾಖಲಾಗಿತ್ತು. ನೀರು ಪೂರೈಕೆಯಲ್ಲಿ ನಡೆದಿದೆ ಎನ್ನಲಾದ ಹಗರಣದ ಬಗ್ಗೆ ನಡೆಸಲಾದ ತನಿಖೆಯ ವೇಳೆ ಈಡಿ ಅಧಿಕಾರಿಗಳು ತನಗೆ ಹಲ್ಲೆ ನಡೆಸಿದ್ದಾರೆ ಎಂಬುದಾಗಿ ಅವರು ತನ್ನ ದೂರಿನಲ್ಲಿ ಆರೋಪಿಸಿದ್ದರು. ಹಲ್ಲೆ ಆರೋಪದ ಹಿನ್ನೆಲೆಯಲ್ಲಿ ಜಾರ್ಖಂಡ್ ರಾಜ್ಯ ಪೊಲೀಸ್ ಅಧಿಕಾರಿಗಳು ಈಡಿ ಕಚೇರಿಯಲ್ಲಿ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದರು ಎಂದು ರಾಂಚಿ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು. ಇತ್ತೀಚೆಗೆ ಈಡಿ ಅಧಿಕಾರಿಗಳು ಮತ್ತು ಪಶ್ಚಿಮ ಬಂಗಾಳ ಪೊಲೀಸರ ನಡುವಿನ ಘರ್ಷಣೆಯ ಬಳಿಕ ಈ ಬೆಳವಣಿಗೆ ನಡೆದಿರುವುದು ಗಮನಾರ್ಹವಾಗಿದೆ. ಪಶ್ಚಿಮ ಬಂಗಾಳದ ಆಡಳಿತಾರೂಢ ಪಕ್ಷ ತೃಣಮೂಲ ಕಾಂಗ್ರೆಸ್ (ಟಿಎಮ್‌ಸಿ)ನ ಚುನಾವಣಾ ತಂತ್ರಗಾರಿಕೆ ಸಂಸ್ಥೆ ಐ-ಪ್ಯಾಕ್‌ನ ಪ್ರಧಾನ ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್‌ರ ನಿವಾಸದಲ್ಲಿ ಈಡಿ ದಾಳಿ ನಡೆಸಿತ್ತು. ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಬಲವಂತವಾಗಿ ನಿವಾಸವನ್ನು ಪ್ರವೇಶಿಸಿ ತೃಣಮೂಲ ಕಾಂಗ್ರೆಸ್ ಪಕ್ಷದ ಚುನಾವಣೆಗೆ ಸಂಬಂಧಿಸಿದ ದತ್ತಾಂಶಗಳನ್ನು ಕದ್ದಿದ್ದಾರೆ ಎಂಬುದಾಗಿ ಪಶ್ಚಿಮ ಬಂಗಾಳ ಸರಕಾರ ಆರೋಪಿಸಿತ್ತು. ಜಾರ್ಖಂಡ್ ಹೈಕೋರ್ಟ್ ಶುಕ್ರವಾರ, ಹಲ್ಲೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದ ವಿರುದ್ಧದ ಪೊಲೀಸ್ ತನಿಖೆಗೆ ತಡೆಯಾಜ್ಞೆ ನೀಡಿತು ಹಾಗೂ ಯಾವುದೇ ಭದ್ರತಾ ಲೋಪವಾದರೆ ರಾಂಚಿಯ ಹಿರಿಯ ಪೊಲೀಸ್ ಸೂಪರಿಂಟೆಂಡೆಂಟ್ ರಾಕೇಶ್ ರಂಜನ್‌ರನ್ನು ಜವಾಬ್ದಾರರನ್ನಾಗಿಸಲಾಗುವುದು ಎಂದು ಹೇಳಿದೆ. ಈಡಿ ಕಚೇರಿ ಮತ್ತು ಅದರ ಅಧಿಕಾರಿಗಳಿಗೆ ಭದ್ರತೆ ನೀಡಲು ಸಿಆರ್‌ಪಿಎಫ್, ಬಿಎಸ್‌ಎಫ್ ಅಥವಾ ಯಾವುದಾದರೂ ಕೆಂದ್ರೀಯ ಅರೆಸೈನಿಕ ಪಡೆಗಳನ್ನು ನಿಯೋಜಿಸುವಂತೆ ನ್ಯಾಯಮೂರ್ತಿ ಸಂಜಯ್ ಕುಮಾರ್ ದ್ವಿಡೆ ಅವರ ಪೀಠವು ಕೇಂದ್ರ ಗೃಹ ಕಾರ್ಯದರ್ಶಿಗೆ ಆದೇಶ ನೀಡಿತು. ಸಂತೋಷ್ ನಡೆಸಿದ್ದಾರೆನ್ನಲಾದ 23 ಕೋಟಿ ರೂಪಾಯಿ ಹಗರಣದ ಬಗ್ಗೆ ಈಡಿ ತನಿಖೆ ನಡೆಸುತ್ತಿತ್ತು ಎಂದು ಅದರ ವಕೀಲರು ನ್ಯಾಯಾಲಯಕ್ಕೆ ತಿಳಿಸಿದರು. ಈ ವಿಷಯದಲ್ಲಿ ಈಡಿ ಈಗಾಗಲೇ 9 ಕೋಟಿ ರೂ. ವಶಪಡಿಸಿಕೊಂಡಿದೆ ಎಂದು ಹೇಳಿತು.

ವಾರ್ತಾ ಭಾರತಿ 16 Jan 2026 10:00 pm

ಬೆಂಗಳೂರಿನಲ್ಲಿ ಆರು ಪಿ.ಜಿ.ಗಳಿಗೆ ಬೀಗ ಹಾಕಿದ ಅಧಿಕಾರಿಗಳು

ಬೆಂಗಳೂರು : ಬೆಂಗಳೂರು ಕೇಂದ್ರ ನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಶುಚಿತ್ವ ಇಲ್ಲದ ಆರು ಪಿ.ಜಿ.ಗಳಿಗೆ (ಪೇಯಿಂಗ್ ಗೆಸ್ಟ್) ಬೀಗ ಮುದ್ರೆ ಹಾಕಲಾಗಿದ್ದು, ನ್ಯೂನ್ಯತೆಗಳಿರುವ ಪಿ.ಜಿ.ಗಳಿಂದ 1.96 ಲಕ್ಷ ರೂ. ದಂಡ ಸಂಗ್ರಹಿಸಲಾಗಿದೆ ಎಂದು ಬೆಂಗಳೂರು ಕೇಂದ್ರ ನಗರ ಪಾಲಿಕೆಯ ಆಯುಕ್ತರಾದ ರಾಜೇಂದ್ರ ಚೋಳನ್ ತಿಳಿಸಿದ್ದಾರೆ. ಶುಕ್ರವಾರ ಪ್ರಕಟನೆ ಹೊರಡಿಸಿರುವ ಅವರು, 204 ಪೇಯಿಂಗ್ ಗೆಸ್ಟ್ ವಸತಿಗೃಹ ಉದ್ದಿಮೆಗಳನ್ನು ಆರೋಗ್ಯಾಧಿಕಾರಿಯಾದ ಡಾ. ಶಿವಕುಮಾರ್ ರವರ ನೇತೃತ್ವದಲ್ಲಿ ಚಿಕ್ಕಪೇಟೆ ಮತ್ತು ಶಿವಾಜಿನಗರ ಆರೋಗ್ಯ ವೈದ್ಯಾಧಿಕಾರಿಗಳ ಉಪಸ್ಥಿತಿಯಲ್ಲಿ ತಪಾಸಣೆ ನಡೆಸಲಾಗಿದೆ. ಪಿ.ಜಿ.ಗಳಲ್ಲಿ ಶುದ್ಧ ಕುಡಿಯುವ ನೀರು, ಶುಚಿತ್ವ, ಅಡುಗೆ ಕೋಣೆ ನೈರ್ಮಲ್ಯ, ಸುರಕ್ಷತೆ, ಉತ್ತಮ ಶೌಚಾಲಯ ವ್ಯವಸ್ಥೆ, ಅಗ್ನಿಶಾಮಕ ಸಾಧನಗಳು ಹಾಗೂ ಸಿ.ಸಿ.ಟಿ.ವಿ ಕ್ಯಾಮರಾ ಅಳವಡಿಕೆ ಮತ್ತು ಆಹಾರ ಸುರಕ್ಷತಾ ಪ್ರಮಾಣ ಪತ್ರ ಇತ್ಯಾದಿ ಮೂಲಭೂತ ಸೌಕರ್ಯಗಳು ಇರುವ ಬಗ್ಗೆ ತಪಾಸಣೆ ನಡೆಸಲಾಗಿದೆ ಎಂದಿದ್ದಾರೆ. ನ್ಯೂನ್ಯತೆಗಳಿರುವ ಪಿ.ಜಿ ಮಾಲಕರಿಗೆ ತಿಳುವಳಿಕೆ ಪತ್ರಗಳನ್ನು ಜಾರಿ ಮಾಡಲಾಗಿದ್ದು, ಉದ್ದಿಮೆದಾರರು ಏಳು ದಿನಗಳ ಒಳಗಾಗಿ ನ್ಯೂನ್ಯತೆಗಳನ್ನು ಸರಿಪಡಿಸಿಕೊಂಡು, ಕಾರ್ಯನಿರ್ವಹಣೆ ಮಾಡಬೇಕು ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

ವಾರ್ತಾ ಭಾರತಿ 16 Jan 2026 9:59 pm

ಯೆಮನ್ ಪ್ರಧಾನಿ ಸಾಲಿಂ ಸಾಲಿಹ್ ಬಿನ್‌ ಬ್ರೈಕ್‌ ರಾಜೀನಾಮೆ

ಸನಾ, ಜ.16: ಯೆಮನ್ ಪ್ರಧಾನಿ ಸಾಲಿಂ ಸಾಲಿಹ್ ಬಿನ್‌ ಬ್ರೈಕ್‌ ತನ್ನ ಸರಕಾರದ ರಾಜೀನಾಮೆಯನ್ನು ಸಲ್ಲಿಸಿದ್ದು ವಿದೇಶಾಂಗ ಸಚಿವರನ್ನು ನೂತನ ಪ್ರಧಾನಿಯಾಗಿ ನೇಮಿಸಿರುವುದಾಗಿ ವರದಿಯಾಗಿದೆ. ಸೌದಿ ಅರೆಬಿಯಾ ಬೆಂಬಲಿತ ` ಅಧ್ಯಕ್ಷೀಯ ನಾಯಕತ್ವ ಮಂಡಳಿ'ಯ ಮುಖ್ಯಸ್ಥರನ್ನು ಭೇಟಿಮಾಡಿದ ಸಾಲಿಂ ಸಾಲಿಹ್ ಬಿನ್‌ ಬ್ರೈಕ್‌ ಸರಕಾರದ ರಾಜೀನಾಮೆ ಸಲ್ಲಿಸಿದ್ದು ಹೊಸ ಸರಕಾರ ರಚನೆಗೆ ಅವಕಾಶ ಮಾಡಿಕೊಟ್ಟಿದ್ದಾರೆ. ವಿದೇಶಾಂಗ ಸಚಿವ ಡಾ. ಶಾಯ ಮುಹ್ಸಿನ್ ಝಿಂದಾನಿ ಅವರನ್ನು ನೂತನ ಪ್ರಧಾನಿಯಾಗಿ ನೇಮಿಸಲಾಗಿದ್ದು ಸರಕಾರ ರಚಿಸುವ ಕಾರ್ಯವನ್ನು ವಹಿಸಲಾಗಿದೆ' ಎಂದು ವರದಿ ತಿಳಿಸಿದೆ.

ವಾರ್ತಾ ಭಾರತಿ 16 Jan 2026 9:58 pm

ಮಂಗಳೂರು: ಬೀಜ ಮಸೂದೆ, ವಿದ್ಯುತ್ ಮಸೂದೆ ವಿರೋಧಿಸಿ ಪ್ರತಿಭಟನೆ

ಮಂಗಳೂರು : ಬೀಜ ಮಸೂದೆ, ವಿದ್ಯುತ್ ಮಸೂದೆ ಹಾಗೂ ಉದ್ಯೋಗ ಖಾತ್ರಿ ಯೋಜನೆಯ ತಿದ್ದುಪಡಿಯನ್ನು ವಿರೋಧಿಸಿ ದೇಶಾದ್ಯಂತ ರೈತ ಕಾರ್ಮಿಕರ ಸಖ್ಯತೆಯಲ್ಲಿ ಪ್ರತಿರೋಧ ದಿನಾಚರಣೆ ನಡೆಸಬೇಕೆಂದು ಕರೆ ನೀಡಿರುವ ಹಿನ್ನೆಲೆಯಲ್ಲಿ ಕೇಂದ್ರ ಕಾರ್ಮಿಕ ಸಂಘಟನೆಗಳು ಹಾಗೂ ರೈತ ಸಂಘಟನೆಗಳ ಜಂಟಿ ನೇತೃತ್ವದಲ್ಲಿ ನಗರದ ಕ್ಲಾಕ್ ಟವರ್ ಬಳಿ ಶುಕ್ರವಾರ ಪ್ರತಿಭಟನಾ ಸಭೆ ನಡೆಯಿತು. ಪ್ರತಿಭಟನಾ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ನಾಯಕ ಕೆ. ಯಾದವ ಶೆಟ್ಟಿ ಕೇಂದ್ರ ಸರಕಾರ ಜಾರಿಗೊಳಿಸಲು ಹೊರಟ ಮಸೂದೆಗಳು ಮತ್ತು ಉದ್ಯೋಗ ಖಾತ್ರಿ ಯೋಜನೆಯ ತಿದ್ದುಪಡಿಗಳು ಯೋಜನೆಯ ಉದ್ದೇಶಗಳನ್ನೇ ಬುಡಮೇಲುಗೊಳಿಸಿದೆ. ಕಾರ್ಪೊರೇಟ್ ಸಂಸ್ಥೆಗಳ ಹಿತಾಸಕ್ತಿಗಳನ್ನೇ ಮುಖ್ಯವಾಗಿಟ್ಟುಕೊಂಡು ದೇಶ ಹಾಗೂ ರೈತಾಪಿ ಜನತೆಯ ಹಿತಾಸಕ್ತಿಗಳನ್ನು ಸಂಪೂರ್ಣವಾಗಿ ಬಲಿ ಕೊಟ್ಟಿದೆ. ಇವುಗಳ ವಿರುದ್ಧ ದೇಶದ ಜನರು ಹೋರಾಡದಿದ್ದರೆ ಅಪಾಯ ಕಾದಿದೆ ಎಂದರು. ಎಐಟಿಯುಸಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸೀತಾರಾಮ ಬೇರಿಂಜ ಮಾತನಾಡಿ ಈಗಾಗಲೇ ಹಲವು ಬೀಜ ಕಂಪೆನಿಗಳು ನೀಡಿದ ಕಳಪೆ ಗುಣಮಟ್ಟದ ಬೀಜದಿಂದ ನಷ್ಟ ಅನುಭವಿಸಿದ್ದ ರೈತರಿಗೆ ಇಲ್ಲಿಯವರೆಗೂ ಯಾವುದೇ ರೀತಿಯ ಬೆಳೆನಷ್ಟ ಪರಿಹಾರಗಳು ಸಿಕ್ಕಿಲ್ಲ. ಬೀಜ ಮಸೂದೆಯಲ್ಲಿ ಮುಂದೆಯೂ ಅದಕ್ಕೆ ಅವಕಾಶವಿಲ್ಲವಾಗಿದೆ. ಒಟ್ಟಿನಲ್ಲಿ ರೈತರ ಹಿತಾಸಕ್ತಿಗಳನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಸಿಐಟಿಯು ಜಿಲ್ಲಾಧ್ಯಕ್ಷ ಬಿ.ಎಂ. ಭಟ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ಮಾತನಾಡಿದರು. ಪ್ರತಿಭಟನೆಯಲ್ಲಿ ಪ್ರಮುಖರಾದ ಬಿ. ಶೇಖರ್ ಬಂಟ್ವಾಳ, ವಿ.ಕುಕ್ಯಾನ್, ಎಚ್.ವಿ. ರಾವ್, ಸುರೇಶ್ ಕುಮಾರ್ ಬಂಟ್ವಾಳ, ಗೀತಾ ಸುವರ್ಣ ಬಜಾಲ್, ಸಂಜೀವಿ ಹಳೆಯಂಗಡಿ, ಮೀನಾಕ್ಷಿ ಬಜಪೆ, ಕೃಷ್ಣಪ್ಪವಾಮಂಜೂರು, ಸುಧಾಕರ ಕಲ್ಲೂರು, ಜೆ. ಬಾಲಕೃಷ್ಣ ಶೆಟ್ಟಿ, ಸುಕುಮಾರ್ ತೊಕ್ಕೋಟು, ವಸಂತ ಆಚಾರಿ, ಯೋಗೀಶ್ ಜಪ್ಪಿನಮೊಗರು, ಪದ್ಮಾವತಿ ಶೆಟ್ಟಿ, ಸುಂದರ ಕುಂಪಲ, ರವಿಚಂದ್ರ ಕೊಂಚಾಡಿ, ಬಿ.ಕೆ. ಇಮ್ತಿಯಾಝ್, ವಸಂತಿ ಕುಪ್ಪೆಪದವು, ಲೋಲಾಕ್ಷಿ ಬಂಟ್ವಾಳ, ಈಶ್ವರಿ ಬೆಳ್ತಂಗಡಿ, ಜಯಂತಿ ಶೆಟ್ಟಿ, ಜಯಲಕ್ಷ್ಮಿ ಪ್ರಮೋದಿನಿ, ಕೃಷ್ಣಪ್ಪ ಸಾಲ್ಯಾನ್, ಸದಾಶಿವದಾಸ್, ಶೇಖರ್ ಕುಂದರ್, ಬಿ.ಎನ್. ದೇವಾಡಿಗ, ರಮೇಶ್ ಉಳ್ಳಾಲ ಮತ್ತಿತರರು ಪಾಲ್ಗೊಂಡಿದ್ದರು.

ವಾರ್ತಾ ಭಾರತಿ 16 Jan 2026 9:55 pm

ಸುಳ್ಳು ಪ್ರಕರಣ ದಾಖಲು: 54 ದಿನಗಳನ್ನು ಜೈಲಲ್ಲಿ ಕಳೆದ ಯುವಕ

►ಪೊಲೀಸ್ ಜೀಪ್ ತಳ್ಳಲು ನಿರಾಕರಿಸಿದ್ದೇ ಅಪರಾಧವಾಯಿತು! ► ಪೊಲೀಸರ ದ್ವೇಷಕ್ಕೆ ಬಲಿಯಾದ ಅಮಾಯಕನ ಬದುಕು ► ತಾಜುದ್ದೀನ್‌ಗೆ ಕೊನೆಗೂ ನ್ಯಾಯಾಲಯದಲ್ಲಿ ಗೆಲುವು

ವಾರ್ತಾ ಭಾರತಿ 16 Jan 2026 9:54 pm

ಥ್ಯಾಂಕ್ಯೂ ಮಹಾರಾಷ್ಟ್ರ; ಪಾಲಿಕೆ ಚುನಾವಣಾ ಗೆಲುವಿಗೆ ನರೇಂದ್ರ ಮೋದಿ ಸಂತಸ, ಹಿಂದುತ್ವ ಗೆದ್ದಿದೆ ಎಂದ ದೇವೇಂದ್ರ ಫಡ್ನವೀಸ್‌

ದೇಶದ ಅತ್ಯಂತ ಶ್ರೀಮಂತ ಮಹಾನಗರ ಪಾಲಿಕೆಯಾದ ಬೃಹನ್ಮುಂಬೈ ಮಹಾನಗರ ಪಾಲಿಕೆ (ಬಿಎಂಸಿ) ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಇತಿಹಾಸ ಸೃಷ್ಟಿಸಿದೆ. ಮಹಾರಾಷ್ಟ್ರದ ಸ್ಥಳೀಯ ಸಂಸ್ಥೆ ಮಹಾಯುತಿ ಮೈತ್ರಿಕೂಟ ಭರ್ಜರಿ ಜಯ ಸಾಧಿಸಿದ್ದು, ಠಾಕ್ರೆ ಸಹೋದರರು, ಕಾಂಗ್ರೆಸ್‌ ಮತ್ತು ಎನ್‌ಸಿಪಿ ಪಕ್ಷಗಳಿಗೆ ತೀವ್ರ ಹಿನ್ನೆಡೆಯುಂಟಾಗಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಬಿಎಂಸಿ ಚುನಾವಣಾ ಗೆಲುವಿಗೆ ಸಂತಸ ವ್ಯಕ್ತಪಡಿಸಿ, ತಮ್ಮ ಅಧಿಕೃತ ಎಕ್ಸ್‌ ಅಕೌಂಟ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ. ಎನ್‌ಡಿಎ ಕಾರ್ಯಕರ್ತರಿಗೆ ಅವರು ಧನ್ಯವಾದ ಅರ್ಪಿಸಿದ್ದಾರೆ. ಇಲ್ಲಿದೆ ಮಾಹಿತಿ.

ವಿಜಯ ಕರ್ನಾಟಕ 16 Jan 2026 9:52 pm

ಉಡುಪಿ: ಸ್ನೇಹಿತ ಹೆಸರಿನಲ್ಲಿ ಕರೆ ಮಾಡಿ ಲಕ್ಷಾಂತರ ರೂ. ಆನ್‌ಲೈನ್ ವಂಚನೆ; ಪ್ರಕರಣ ದಾಖಲು

ಉಡುಪಿ, ಜ.16: ಸ್ನೇಹಿತ ಹೆಸರು ಹೇಳಿಕೊಂಡು ಕರೆ ಮಾಡಿದ ಅಪರಿಚಿತ ವ್ಯಕ್ತಿಯೊಬ್ಬರಿಗೆ ಒಂದು ಲಕ್ಷ ರೂ. ಆನ್‌ಲೈನ್ ವಂಚನೆ ಎಸಗಿರುವ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಜ.15ರಂದು ಅಪರಿಚಿತ ವ್ಯಕ್ತಿಯು ತಾನು ಸಂದೀಪ್ ಎಂದು ಹೇಳಿ ಕುಂಜಿಬೆಟ್ಟು ನಿವಾಸಿ ಅಶೋಕ್ ಎಂಬವರಿಗೆ ಕರೆ ಮಾಡಿದ್ದನು. ಅಶೋಕ್, ಈ ಹಿಂದೆ ತನ್ನ ಜೊತೆ ಕೆಲಸ ಮಾಡಿದ್ದ ವ್ಯಕ್ತಿಯ ಹೆಸರು ಕೂಡ ಸಂದೀಪ್ ಆಗಿರುವುದರಿಂದ ಆತನೇ ಇರಬಹುದೆಂದು ಮಾತನಾಡಿದರು. ಆತ ‘ನನ್ನ ಅಣ್ಣನನ್ನು ಹೃದಯ ಸಂಬಂಧಿ ಖಾಯಿಲೆ ಯಿಂದ ಬೆಂಗಳೂರಿನ ಆಸ್ಪತ್ರೆಯಲ್ಲಿ ದಾಖಲು ಮಾಡಿದ್ದು, ಸ್ಟಂಟ್ ಖರೀದಿಸಲು ನಾನು ಮೆಡಿಕಲ್ ಶಾಪ್‌ಗೆ ಬಂದಿದ್ದೇನೆ. ನನ್ನ ಗೂಗಲ್ ಪೇ ಕಾರ್ಯನಿರ್ವಹಿಸದೇ ಇರುವುದ ರಿಂದ ವೈದ್ಯರಿಗೆ ಹಣವನ್ನು ಕಳುಹಿಸಲು ಆಗುತ್ತಿಲ್ಲ. ನಿಮಗೆ ನಾನು 50,000ರೂ. ಕಳುಹಿಸಿದ್ದೇನೆ ಎಂದು ಹೇಳಿದನು. ಅಶೋಕ್, ಮೊಬೈಲ್ ಪರಿಶೀಲಿಸಿದಾಗ 50,000ರೂ. ಖಾತೆಗೆ ವರ್ಗಾವಣೆ ಆಗಿರುವ ಸಂದೇಶ ಬಂದಿತ್ತು. ಅಶೋಕ್, ತಮಗೆ 50,000 ರೂ. ಹಣ ಬಂದಿದೆ ಎಂದು ತಿಳಿದು ಆ ಮೊತ್ತವನ್ನು ಅವರ ಹೆಂಡತಿ ಮೊಬೈಲ್‌ನಿಂದ ಗೂಗಲ್ ಪೇ ಮೂಲಕ ವಾಪಸ್ಸು ಕಳುಹಿಸಿದರು. ಫೋನಿನಲ್ಲಿ ಮಾತನಾಡುತ್ತಿರುವಾಗಲೇ ಅದೇ ಸಮಯದಲ್ಲಿ ಆತನು ನಾನು ಇನ್ನೊಮ್ಮೆ 50,000ರೂ. ಕಳುಹಿಸಿರುವುದಾಗಿ ಹೇಳಿದ್ದು, ಅಶೋಕ್ ಚೆಕ್ ಮಾಡಿದಾಗ 50,000ರೂ. ಬಂದಿರುವ ಬಗ್ಗೆ ಮತ್ತೆ ಸಂದೇಶ ಬಂದಿತ್ತು. ಇದನ್ನು ನಂಬಿದ ಅಶೋಕ್ ಮತ್ತೆ ತನ್ನ ಹೆಂಡತಿ ಗೂಗಲ್ ಪೇಯಿಂದ ಹಣ ಕಳುಹಿಸಿದರು. ಬಳಿಕ ಅಶೋಕ್ ಬ್ಯಾಂಕ್ ಬ್ಯಾಲೆನ್ಸ್ ಚೆಕ್ ಮಾಡಿದಾಗ ಅವರಿಗೆ ಯಾವುದೇ ಹಣ ಜಮೆ ಆಗದಿರುವುದು ಕಂಡುಬಂದಿದೆ. ಬಳಿಕ ಸ್ನೇಹಿತ ಸಂದೀಪ್‌ಗೆ ಕರೆ ಮಾಡಿ ವಿಚಾರಿಸಿದಾಗ ನಾನುಕರೆ ಮಾಡಿಲ್ಲ ಎಂದು ಹೇಳಿದರು. ಯಾರೋ ಅಪರಿಚಿತ ಸ್ನೇಹಿತ ಎಂದು ಸುಳ್ಳು ಹೇಳಿಕೊಂಡು ಅಶೋಕ್ ಅವರಿಗೆ ಆನ್‌ಲೈನ್‌ನಲ್ಲಿ ವಂಚನೆ ಮಾಡಿರುವುದಾಗಿ ದೂರಲಾಗಿದೆ.

ವಾರ್ತಾ ಭಾರತಿ 16 Jan 2026 9:52 pm

ಟಿ-20 ಕ್ರಿಕೆಟ್‌ನಲ್ಲಿ ಗರಿಷ್ಠ ಶತಕಗಳು: ವಿರಾಟ್ ಕೊಹ್ಲಿ ದಾಖಲೆ ಮುರಿದ ವಾರ್ನರ್

ಸಿಡ್ನಿ, ಜ.16: ಟಿ-20 ಕ್ರಿಕೆಟ್‌ನೊಂದಿಗೆ ಡೇವಿಡ್ ವಾರ್ನರ್ ಪ್ರೀತಿಯ ಸಂಬಂಧ ಮುಂದುವರಿದಿದೆ. ಬಿಗ್‌ಬ್ಯಾಶ್ ಲೀಗ್‌ನಲ್ಲಿ ಮತ್ತೊಮ್ಮೆ ಉತ್ತಮ ಪ್ರದರ್ಶನ ನೀಡಿ ಗಮನ ಸೆಳೆದಿದ್ದಾರೆ. ಸಿಡ್ನಿ ಥಂಡರ್ ಹಾಗೂ ಸಿಡ್ನಿ ಸಿಕ್ಸರ್ ತಂಡಗಳ ನಡುವಿನ 2025-26ರ ಬಿಬಿಎಲ್‌ನ 37ನೇ ಪಂದ್ಯದಲ್ಲಿ ವಾರ್ನರ್ 65 ಎಸೆತಗಳಲ್ಲಿ ಔಟಾಗದೆ 110 ರನ್ ಗಳಿಸಿ ಥಂಡರ್ ತಂಡವು 20 ಓವರ್‌ಗಳಲ್ಲಿ 6 ವಿಕೆಟ್‌ಗಳ ನಷ್ಟಕ್ಕೆ 189 ರನ್ ಗಳಿಸುವಲ್ಲಿ ನೆರವಾಗಿದ್ದಾರೆ. ಒಂದೆಡೆ ವಿಕೆಟ್ ಉರುಳುತ್ತಿದ್ದರೆ, ಇನ್ನೊಂದೆಡೆ ವಾರ್ನರ್ ಅವರು ಇನಿಂಗ್ಸ್ ಕಟ್ಟುತ್ತಾ ಸಾಗಿದರು. ಏಕಾಂಗಿ ಹೋರಾಟ ನೀಡಿದ ವಾರ್ನರ್ ಟಿ-20 ಕ್ರಿಕೆಟ್‌ನಲ್ಲಿ ತಾನೇಕೆ ಓರ್ವ ವಿದ್ವಂಸಕ ಶೈಲಿಯ ಬ್ಯಾಟರ್ ಎನ್ನುವುದನ್ನು ತೋರಿಸಿಕೊಟ್ಟಿದ್ದಾರೆ. ಈ ಇನಿಂಗ್ಸ್‌ನ ಮೂಲಕ ವಾರ್ನರ್ ಅವರು ಅತ್ಯಂತ ಹೆಚ್ಚು ಟಿ-20 ಶತಕಗಳನ್ನು ಸಿಡಿಸಿರುವ ಸಾರ್ವಕಾಲಿಕ ಶ್ರೇಷ್ಠ ಆಟಗಾರರ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ ಅವರನ್ನು ಹಿಂದಿಕ್ಕಿದ್ದಾರೆ. ವಾರ್ನರ್ ಇದೀಗ 10ನೇ ಟಿ-20 ಶತಕವನ್ನು ಬಾರಿಸಿದರು. ಈ ಮೂಲಕ 9 ಶತಕಗಳನ್ನು ಗಳಿಸಿರುವ ಕೊಹ್ಲಿ ಅವರನ್ನು ಹಿಂದಿಕ್ಕಿದ್ದಾರೆ. ಕ್ರಿಸ್ ಗೇಲ್(22)ಹಾಗೂ ಬಾಬರ್ ಆಝಂ(11)ನಂತರ ಮೂರನೇ ಸ್ಥಾನದಲ್ಲಿದ್ದಾರೆ. ಮಿಚೆಲ್ ಸ್ಟಾರ್ಕ್ ಅವರು 11 ವರ್ಷಗಳ ನಂತರ ಮೊದಲ ಬಾರಿ ಬಿಬಿಎಲ್‌ನಲ್ಲಿ ಕಾಣಿಸಿಕೊಂಡರು. ಸ್ಟಾರ್ಕ್ ನಾಲ್ಕು ಓವರ್‌ಗಳಲ್ಲಿ 31 ರನ್ ನೀಡಿ 1 ವಿಕೆಟನ್ನು ಪಡೆದರು. ಸಿಕ್ಸರ್ ತಂಡದ ಪರ ಸ್ಯಾಮ್ ಕರನ್ 28 ರನ್‌ಗೆ ಮೂರು ವಿಕೆಟ್‌ಗಳನ್ನು ಕಬಳಿಸಿದರು. ಥಂಡರ್ ತಂಡವನ್ನು 200ರೊಳಗೆ ಕಟ್ಟಿಹಾಕಿದರು. ವಾರ್ನರ್ ತನ್ನ ಶತಕದ ಮೂಲಕ ಬಿಬಿಎಲ್ ಇತಿಹಾಸದಲ್ಲಿ ತನ್ನ ಸ್ಥಾನ ಭದ್ರಪಡಿಸಿಕೊಂಡರು. ಇದೀಗ ಅವರು ಮೂರು ಬಿಬಿಎಲ್ ಶತಕಗಳನ್ನು ಗಳಿಸಿದ್ದಾರೆ. ಬೆನ್ ಮೆಕ್‌ಡೆರ್ಮೊಟ್ ಹಾಗೂ ಸ್ಟೀವನ್ ಸ್ಮಿತ್‌ರೊಂದಿಗೆ ಸ್ಥಾನ ಹಂಚಿಕೊಂಡಿದ್ದಾರೆ. 2025-26ರ ಋತುವಿನಲ್ಲಿ ವಾರ್ನರ್ ಗಳಿಸಿದ 8ನೇ ವೈಯಕ್ತಿಕ ಶತಕ ಇದಾಗಿದೆ. ಒಂದೇ ಆವೃತ್ತಿಯ ಪಂದ್ಯಾವಳಿಯಲ್ಲಿ ಆಟಗಾರನೊಬ್ಬನ ಶ್ರೇಷ್ಠ ಸಾಧನೆ ಇದಾಗಿದೆ. ಕೊಹ್ಲಿ ಅವರು 414 ಟಿ-20 ಪಂದ್ಯಗಳಲ್ಲಿ 41.92ರ ಸರಾಸರಿಯಲ್ಲಿ, 134.67ರ ಸ್ಟ್ರೈಕ್‌ರೇಟ್‌ನಲ್ಲಿ 9 ಶತಕಗಳು ಹಾಗೂ 105 ಅರ್ಧಶತಕಗಳ ಸಹಿತ ಒಟ್ಟು 13,543 ರನ್ ಗಳಿಸಿದ್ದಾರೆ. ವಾರ್ನರ್ ಅವರು 431 ಟಿ-20 ಪಂದ್ಯಗಳಲ್ಲಿ 140.45ರ ಸ್ಟ್ರೈಕ್‌ರೇಟ್‌ನಲ್ಲಿ 10 ಶತಕಗಳು ಹಾಗೂ 115 ಅರ್ಧಶತಕಗಳ ಸಹಿತ ಒಟ್ಟು 13,918 ರನ್ ಕಲೆ ಹಾಕಿದ್ದಾರೆ.

ವಾರ್ತಾ ಭಾರತಿ 16 Jan 2026 9:50 pm

ಫೆ.5ರಿಂದ 'ಎಡೆದೊರೆ ನಾಡು' ಸಂಭ್ರಮ : ಸಚಿವ ಡಾ.ಶರಣಪ್ರಕಾಶ್‌ ಪಾಟೀಲ್‌ರಿಂದ ಹೊಸ ದಿನಾಂಕ ಘೋಷಣೆ

ರಾಯಚೂರು: ಜಿಲ್ಲೆಯ ಐತಿಹಾಸಿಕ ಕಲೆ, ಸಾಹಿತ್ಯ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಬಿಂಬಿಸುವ ‘ಎಡೆದೊರೆ ನಾಡು ರಾಯಚೂರು ಜಿಲ್ಲಾ ಉತ್ಸವ-2026’ರ ದಿನಾಂಕವನ್ನು ಅನಿವಾರ್ಯ ಕಾರಣಗಳಿಂದಾಗಿ ಒಂದು ವಾರ ಮುಂದೂಡಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣಪ್ರಕಾಶ್‌ ಪಾಟೀಲ್‌ ತಿಳಿಸಿದ್ದಾರೆ. ಜ.16ರಂದು ರಾಯಚೂರು ಪ್ರವಾಸದಲ್ಲಿದ್ದ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಶರಣಪ್ರಕಾಶ್‌ ಪಾಟೀಲ್‌ ಅವರು ಮಾವಿನಕೆರೆ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗಿಯಾಗಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ರಾಯಚೂರು ಜಿಲ್ಲಾ ಉತ್ಸವವನ್ನು ಜ.29, 30 ಹಾಗೂ 31ರಂದು ನಡೆಸಬೇಕು ಎಂದು ನಿರ್ಧರಿಸಿ ಸಿದ್ಧತೆ ಮಾಡಲಾಗುತ್ತಿತ್ತು. ಆದರೆ, ಜ.22ರಿಂದ ವಿಧಾನ ಮಂಡಲ ಅಧಿವೇಶನ ನಡೆಸಬೇಕು ಎನ್ನುವ ಸಚಿವ ಸಂಪುಟದ ನಿರ್ಣಯಕ್ಕೆ ರಾಜ್ಯಪಾಲರು ಅಂಗೀಕರಿಸಿದ್ದರಿಂದಾಗಿ ಕರ್ನಾಟಕ ವಿಧಾನ ಮಂಡಲ ಕಲಾಪವು ತುರ್ತಾಗಿ ನಿಗದಿಯಾದ ಹಿನ್ನೆಲೆಯಲ್ಲಿ ಎಲ್ಲ ಸಚಿವರು ಮತ್ತು ಶಾಸಕರು ಕಲಾಪದಲ್ಲಿ ಭಾಗಿಯಾಗುತ್ತಿರುವ ಹಿನ್ನೆಲೆಯಲ್ಲಿ ಉತ್ಸವವನ್ನು ಮುಂದಿನ ತಿಂಗಳು ಫೆ.5ರಿಂದ ಮೂರು ದಿನಗಳ ಕಾಲ ನಡೆಸಲಾಗುವುದು ಎಂದು ಸಚಿವರು ಹೊಸ ದಿನಾಂಕ ಪ್ರಕಟಿಸಿದರು. ಉತ್ಸವವನ್ನು ಫೆ.6ರಿಂದ ಮೂರು ದಿನಗಳ ಕಾಲ ನಡೆಸಲು ಯೋಜಿಸಲಾಗಿತ್ತಾದರೂ ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ರಾಜನಹಳ್ಳಿಯಲ್ಲಿ ಫೆ.8ರಿಂದ ವಾಲ್ಮೀಕಿ ಜಾತ್ರೋತ್ಸವ ಆಯೋಜನೆಯಾಗಿದ್ದರಿಂದಾಗಿ ಫೆ.6ರ ಬದಲಾಗಿ ಫೆ.5ರಿಂದ ಮೂರು ದಿನಗಳು ಫೆ.5, 6 ಮತ್ತು 7ರಂ ದು ಉತ್ಸವ ನಡೆಸಲಾಗುವುದು ಎಂದು ಸಚಿವರು ಸ್ಪಷ್ಟಪಡಿಸಿದರು. ಈ ಸಂದರ್ಭದಲ್ಲಿ ಸಚಿವರಾದ ಎನ್.ಎಸ್.ಬೋಸರಾಜು, ಶಾಸಕರಾದ ಡಾ.ಎಸ್.ಶಿವರಾಜ ಪಾಟೀಲ, ಬಸನಗೌಡ ದದ್ದಲ್, ಹಂಪಯ್ಯ ನಾಯಕ, ಎ.ವಸಂತಕುಮಾರ ಹಾಗೂ ಇನ್ನೀತರ ಗಣ್ಯ ಮಹನಿಯರು ಮತ್ತು ಜಿಲ್ಲಾಧಿಕಾರಿಗಳಾದ ನಿತೀಶ್ ಕೆ., ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಈಶ್ವರ ಕುಮಾರ ಕಾಂದೂ, ಮಹಾನಗರ ಪಾಲಿಕೆಯ ಆಯುಕ್ತರಾದ ಜುಬಿನ್ ಮೊಹಪಾತ್ರ ಹಾಗೂ ಇತರರು ಇದ್ದರು.

ವಾರ್ತಾ ಭಾರತಿ 16 Jan 2026 9:50 pm

ಹಾಸ್ಟೆಲ್‌ನಿಂದ ವಿದ್ಯಾರ್ಥಿ ನಾಪತ್ತೆ

ಉಡುಪಿ, ಜ.16: 76 ಬಡಗುಬೆಟ್ಟು ಗ್ರಾಮದ ಕುಕ್ಕಿಕಟ್ಟೆಯಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿಲಯದ ವಿದ್ಯಾರ್ಥಿಯೊಬ್ಬ ನಾಪತ್ತೆಯಾಗಿರುವ ಬಗ್ಗೆ ವರದಿಯಾಗಿದೆ. ನಾಪತ್ತೆಯಾದ ವಿದ್ಯಾರ್ಥಿಯನ್ನು ಚಿತ್ರದುರ್ಗ ಮೂಲದ ದರ್ಶನ್ ಎಸ್ (23) ಎಂದು ಗುರುತಿಸಲಾಗಿದೆ. ಈತ ಜ.12ರಂದು ರಾತ್ರಿ ಯಾರಿಗೂ ಹೇಳದೆ ಹಾಸ್ಟೆಲ್‌ನಿಂದ ಹೋದವನು ಮನೆಗೂ ಹೋಗದೆ ನಾಪತ್ತೆಯಾಗಿ ದ್ದಾನೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಾರ್ತಾ ಭಾರತಿ 16 Jan 2026 9:48 pm

ಪತ್ನಿಗೆ ದ್ವೇಷ ಭಾವನೆ ಇಲ್ಲ; ದೂರವಿದ್ರೆ ತೊರೆದಿದ್ದಾರೆಂದಲ್ಲ! ವಿಚ್ಛೇದನ ಕೇಸ್‌: ಕರ್ನಾಟಕ ಹೈಕೋರ್ಟ್‌ ಮಹತ್ವದ ತೀರ್ಪು

ಪತಿಯನ್ನು ತೊರೆದು ದೂರ ವಾಸಿಸುತ್ತಿದ್ದರೂ, ದ್ವೇಷ ಭಾವನೆ ಇಲ್ಲದ ಪತ್ನಿಯನ್ನು ವಿಚ್ಛೇದನ ನೀಡಲು ಹೈಕೋರ್ಟ್ ನಿರಾಕರಿಸಿದೆ. ಪತ್ನಿ ತನ್ನನ್ನು ತೊರೆದಿದ್ದಾರೆಂದು ಸಾಬೀತುಪಡಿಸಲು ಪತಿ ನೀಡಿದ ಸಾಕ್ಷ್ಯಾಧಾರಗಳು ಸಾಲದು ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಮಗುವಿನ ಜೀವನಾಂಶದ ಆದೇಶ ಮತ್ತು ತವರು ಮನೆಗೆ ತೆರಳಿದ ವಿಚಾರಗಳು ಪತ್ನಿ ತೊರೆದಿದ್ದಾರೆಂಬುದನ್ನು ಸಾಬೀತುಪಡಿಸುವುದಿಲ್ಲ ಎಂದು ಪೀಠ ಹೇಳಿದೆ.

ವಿಜಯ ಕರ್ನಾಟಕ 16 Jan 2026 9:44 pm

ಪರ್ಯಾಯ ಮಹೋತ್ಸವ: ಪರಿಷ್ಕೃತ ಮಾರ್ಗ ಬದಲಾವಣೆ ಅಧಿಸೂಚನೆ

ಉಡುಪಿ: ಉಡುಪಿ ಶ್ರೀಕೃಷ್ಣ ಮಠದ ಪರ್ಯಾಯ ಮಹೋತ್ಸವದ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಸುಗಮ ಸಂಚಾರ ವ್ಯವಸ್ಥೆ ಯನ್ನು ಕಲ್ಪಿಸುವ ದೃಷ್ಟಿಯಿಂದ ಈಗಾಗಲೇ ಉಡುಪಿ ನಗರ ವ್ಯಾಪ್ತಿಯಲ್ಲಿ ವಾಹನ ಸಂಚಾರ ನಿಷೇಧ, ಬದಲಿ ಮಾರ್ಗ ಮತ್ತು ಪಾರ್ಕಿಂಗ್ ನಿಷೇಧ ಕುರಿತು ಅಧಿಸೂಚನೆ ಹೊರಡಿಸಲಾಗಿದೆ. ಕಾರ್ಕಳ-ಮಣಿಪಾಲ ಕಡೆಯಿಂದ ಉಡುಪಿ ನಗರಕ್ಕೆ ಬರುವ ವಾಹನ ಗಳಿಗೆ ಈ ಕೆಳಕಂಡ ಮಾರ್ಗದಲ್ಲಿ ಸಂಚರಿ ಸುವ ಬಗ್ಗೆ ಪರಿಷ್ಕರಿಸಿ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಅಧಿಸೂಚನೆ ಹೊರಡಿಸಿದ್ದಾರೆ. ಕಾರ್ಕಳ-ಮಣಿಪಾಲ ಕಡೆಯಿಂದ ಉಡುಪಿ ನಗರಕ್ಕೆ ಬರುವ ವಾಹನಗಳು: ಜ.17ರ ಸಂಜೆ 7 ಗಂಟೆಯ ತನಕ ಕಾರ್ಕಳ, ಮಣಿಪಾಲಕ್ಕೆ ಹೋಗಿ ಬರುವ ವಾಹನಗಳು ನೇರವಾಗಿ ಕಲ್ಸಂಕ ಮಾರ್ಗವಾಗಿ ಉಡುಪಿ ಸಿಟಿ, ಸರ್ವಿಸ್ ಬಸ್ ನಿಲ್ದಾಣಕ್ಕೆ ಪ್ರವೇಶಿಸಬೇಕು. ಉಡುಪಿ ನಗರಕ್ಕೆ ಸಂಜೆ 7ರಿಂದ ಮರುದಿನ ಬೆಳಗ್ಗೆ 7ರವರೆಗೆ ಎಲ್ಲಾ ವಾಹನಗಳು ಪ್ರವೇಶಿಸುವುದನ್ನು ನಿಷೇಧಿಸಲಾಗಿದೆ. ಸಂಜೆ 7 ಗಂಟೆಯಿಂದ ಬೆಳಗ್ಗೆ 7 ಗಂಟೆಯ ತನಕ ಮಣಿಪಾಲ ಸಿಂಡಿಕೇಟ್ ಸರ್ಕಲ್‌ನಿಂದ ಲಕ್ಷ್ಮೀಂದ್ರ ನಗರ, ಸಗ್ರಿ ನೊಳೆ ರಸ್ತೆಯಿಂದಾಗಿ ಪೆರಂಪಳ್ಳಿ ಭಾರತೀಯ ಆಹಾರ ನಿಗಮದ ಮುಂಭಾಗದಿಂದ ಅಂಬಾಗಿಲು ಜಂಕ್ಷನ್ ಮೂಲಕ ರಾ.ಹೆ.66ನ್ನು ಸಂಪರ್ಕಿಸಿ, ಅಂಬಾಗಿಲು, ನಿಟ್ಟೂರು ಮಾರ್ಗವಾಗಿ ಕರಾವಳಿ ಜಂಕ್ಷನ್‌ಗೆ ಆಗಮಿಸಬೇಕು. ಕರಾವಳಿ ಜಂಕ್ಷನ್ ಅಂತಿಮ ನಿಲುಗಡೆಯಾಗಿದ್ದು, ಅಲ್ಲಿಂದಲೇ ಪ್ರಯಾಣಿ ಕರನ್ನು ಕರೆದುಕೊಂಡು ವಾಪಾಸು ನಿಟ್ಟೂರು, ಅಂಬಾಗಿಲು, ಪೆರಂಪಳ್ಳಿ ಮಾರ್ಗವಾಗಿ ಪೆರಂಪಳ್ಳಿ ಭಾರತೀಯ ಆಹಾರ ನಿಗಮದ ಮುಂಭಾಗದಿಂದ ಸಗ್ರಿನೊಳೆ, ಲಕ್ಷ್ಮೀಂದ್ರ ನಗರ, ಸಿಂಡಿಕೇಟ್ ಸರ್ಕಲ್ ಮೂಲಕ ಮಣಿಪಾಲ, ಕಾರ್ಕಳ ಕಡೆಗೆ ಹೋಗಬೇಕು. ಈ ಮಾರ್ಗವನ್ನು ಹೊರತುಪಡಿಸಿ ಉಳಿದ ಮಾರ್ಗಗಳ ವಾಹನ ಸಂಚಾರ ನಿಷೇಧ ಬದಲಿ ಮಾರ್ಗ ಹಾಗೂ ಪಾರ್ಕಿಂಗ್ ನಿಷೇದದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ಜಿಲ್ಲಾಧಿಕಾರಿಗಳ ಪ್ರಕಟಣೆ ತಿಳಿಸಿದೆ. ಪರ್ಯಾಯ ಮಹೋತ್ಸವ: ಮದ್ಯ ಮಾರಾಟ ನಿಷೇಧ  ಉಡುಪಿ ಶ್ರೀಕೃಷ್ಣ ಮಠದಲ್ಲಿ ಶಿರೂರು ಮಠದ ಶ್ರೀ ವೇದವರ್ಧನ ತೀರ್ಥರ ಪರ್ಯಾಯೋತ್ಸವದ ಪ್ರಯುಕ್ತ ಕಾನೂನು ಸುವ್ಯವಸ್ಥೆ ಮತ್ತು ಸಾರ್ವಜನಿಕ ಶಾಂತಿ ಕಾಪಾಡುವ ದೃಷ್ಟಿಯಿಂದ ಕರ್ನಾಟಕ ಅಬಕಾರಿ (ಭಾರತೀಯ ಮತ್ತು ದೇಶೀಯ ಮದ್ಯ ಮಾರಾಟ) ನಿಯಮಗಳಡಿ ನೀಡಿರುವ ಮದ್ಯ ಮಾರಾಟದ ಸನ್ನದುಗಳನ್ನು ಹೊಂದಿರುವ ಅಂಗಡಿಗಳನ್ನು ಕರ್ನಾಟಕ ಅಬಕಾರಿ ಕಾಯ್ದೆಯಡಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಮದ್ಯ ಮಾರಾಟ ನಿಷೇಧಿಸಿ ಆದೇಶ ಹೊರಡಿಸಲಾಗಿದೆ. ಉಡುಪಿ ನಗರಸಭಾ ವ್ಯಾಪ್ತಿಯಲ್ಲಿ ಹಾಗೂ ಪಂಚಾಯತ್ ವ್ಯಾಪ್ತಿಯ ಗ್ರಾಮಗಳಾದ ಉದ್ಯಾವರ, ಕೊರಂಗ್ರಪಾಡಿ, ಅಲೆವೂರು, ಹಿರೇಬೆಟ್ಟು, ಅಂಬಲಪಾಡಿ, ಕುತ್ಪಾಡಿ, ಕಡೆಕಾರು, ಕಿದಿಯೂರು, ಮೂಡುತೋನ್ಸೆ ಹಾಗೂ ಪಡು ತೋನ್ಸೆ ಗ್ರಾಮ ವ್ಯಾಪ್ತಿಯಲ್ಲಿ ಜನವರಿ 17ರ ಬೆಳಗ್ಗೆ 10 ರಿಂದ ಜ.18ರ ಸಂಜೆ 6 ಗಂಟೆಯವರೆಗೆ ಮದ್ಯ ಮಾರಾಟದ ಸನ್ನದುಗಳನ್ನು ಹೊಂದಿರುವ ಬಾರ್,ರೆಸ್ಟೋರೆಂಟ್ ಮತ್ತು ವೈನ್‌ಶಾಪ್‌ಗಳಮದ್ಯ ಮಾರಾಟ ವನ್ನು ನಿಷೇಧಿಸಿ, ಅಬಕಾರಿ ಸನ್ನದುಗಳನ್ನು ಮುಚ್ಚಲು ಆದೇಶಿಸಲಾಗಿದೆ. ಮೇಲ್ಕಂಡ ಪ್ರದೇಶಗಳ ವ್ಯಾಪ್ತಿಯಲ್ಲಿ ಈ ಅವಧಿಯನ್ನು ಒಣದಿನ ಎಂದು ಘೋಷಿಸಿ, ಮದ್ಯ ಮಾರಾಟ ನಿಷೇಧಿಸಿ, ಜಿಲ್ಲಾ ದಂಡಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ ಆದೇಶ ಹೊರಡಿಸಿದ್ದಾರೆ.

ವಾರ್ತಾ ಭಾರತಿ 16 Jan 2026 9:40 pm

Vijayapura | ಕಬ್ಬಿನ ಹೊಲಕ್ಕೆ ಆಕಸ್ಮಿಕ ಬೆಂಕಿ; ಆರಿಸಲು ಹೋದ ರೈತ ಸಜೀವ ದಹನ

ವಿಜಯಪುರ : ಕಬ್ಬಿನ ಹೊಲಕ್ಕೆ ಆಕಸ್ಮಿಕ ಬೆಂಕಿ ತಗುಲಿದ್ದನ್ನು ಆರಿಸಲು ಹೋಗಿ ರೈತರೊಬ್ಬರು ಮೃತಪಟ್ಟಿರುವ ಘಟನೆ ಶುಕ್ರವಾರ ಸಿಂದಗಿ ತಾಲೂಕಿನ ಬನಹಟ್ಟಿ ಪಿ.ಎ ಗ್ರಾಮದಲ್ಲಿ ನಡೆದಿದೆ. ಮಲ್ಲನಗೌಡ ಸೋಮನಗೌಡ ಬಿರಾದಾರ (67) ಮೃತ ರೈತ ಎಂದು ತಿಳಿದು ಬಂದಿದೆ. ಬನಹಟ್ಟಿ ಪಿ.ಎ ಗ್ರಾಮದ 4 ಎಕರೆ ಕಬ್ಬಿಗೆ ಶುಕ್ರವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ಆಕಸ್ಮಿಕ ಬೆಂಕಿ ತಗುಲಿದೆ. ತೋಟದಲ್ಲಿ ಒಬ್ಬನೇ ಇದ್ದಿದ್ದರಿಂದ ಬೆಂಕಿ ನಂದಿಸುವ ಅವಸರದಲ್ಲಿ ಬೆಂಕಿ ಹತ್ತಿಕೊಂಡು ಮೃತಪಟ್ಟಿದ್ದಾರೆ ಎನ್ನಲಾಗಿದ್ದು, ದೇವರ ಹಿಪ್ಪರಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ವಾರ್ತಾ ಭಾರತಿ 16 Jan 2026 9:36 pm

ಜ.17ರಂದು ಉಡುಪಿ ರೈಲು ನಿಲ್ದಾಣದಲ್ಲಿ ತುರ್ತು ಕಾಮಗಾರಿ: ಕೆಲ ರೈಲುಗಳ ಸಂಚಾರ ವ್ಯತ್ಯಯ

ಉಡುಪಿ, ಜ.16: ಕೊಂಕಣ ರೈಲು ಮಾರ್ಗದ ಉಡುಪಿ ರೈಲು ನಿಲ್ದಾಣದಲ್ಲಿ ಜ.17 ಶನಿವಾರದಂದು ಕೆಲವು ತುರ್ತು ಕಾಮಗಾರಿಗಳು ನಡೆಯಲಿರುವುದರಿಂದ ಕೆಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯ ಕಂಡು ಬರಲಿದೆ ಎಂದು ಕೊಂಕಣ ರೈಲ್ವೆ ಪ್ರಕಟಣೆ ತಿಳಿಸಿದೆ. ರೈಲು ನಂ.16335 ಗಾಂಧಿಧಾಮ- ನಾಗರಕೊಯಿಲ್ ಎಕ್ಸ್‌ಪ್ರೆಸ್ ರೈಲಿನ ಸಂಚಾರವನ್ನು ಮಡಗಾಂವ್ ಜಂಕ್ಷನ್ ಹಾಗೂ ಉಡುಪಿ ನಡುವೆ 40 ನಿಮಿಷಗಳ ಕಾಲ ತಡೆಹಿಡಿಯಲಾಗುವುದು. ಅದೇ ರೀತಿ ರೈಲು ನಂ.22653 ತಿರುವನಂತಪುರ ಸೆಂಟ್ರಲ್ ಹಾಗೂ ಎಚ್.ನಿಝಾಮುದ್ದೀನ್ ಎಕ್ಸ್‌ಪ್ರೆಸ್ ರೈಲಿನ ಸಂಚಾರವನ್ನು ಸುರತ್ಕಲ್ ಹಾಗೂ ಉಡುಪಿ ನಡುವೆ 20 ನಿಮಿಷ ತಡೆ ಹಿಡಿಯಲಾಗುವುದು ಎಂದು ಪ್ರಕಟಣೆ ತಿಳಿಸಿದೆ. ಸಂಚಾರ ವಿಸ್ತರಣೆ: ಈ ಮಾರ್ಗದಲ್ಲಿ ಸಂಚರಿಸುವ ರೈಲು ನಂ.02197 ಜಬಲಪುರ ಜಂಕ್ಷನ್- ಕೊಯಮತ್ತೂರು ಜಂಕ್ಷನ್ ಸಾಪ್ತಾಹಿಕ ವಿಶೇಷ ರೈಲಿನ ಸಂಚಾರವನ್ನು ಮಾ.6ರಿಂದ ಮುಂದಿನ ಡಿ.30ರವರೆಗೆ ವಿಸ್ತರಿಸಲಾ ಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ವಾರ್ತಾ ಭಾರತಿ 16 Jan 2026 9:36 pm

UMEED ವಕ್ಫ್ ಪೋರ್ಟಲ್‌ನಲ್ಲಿ ದೋಷಗಳಿವೆ ಎಂದು ಆರೋಪಿಸಿ ಸಲ್ಲಿಸಿದ ಅರ್ಜಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್

ಸಂಬಂಧಿತ ಪ್ರಾಧಿಕಾರಗಳನ್ನು ಸಂಪರ್ಕಿಸಲು ಮುಕ್ತ ಅವಕಾಶ ನೀಡಿದ ನ್ಯಾಯಾಲಯ

ವಾರ್ತಾ ಭಾರತಿ 16 Jan 2026 9:33 pm

ಜು.17ರಂದು ಜಿಲ್ಲಾ ಉಸ್ತುವಾರಿ ಸಚಿವರು ಉಡುಪಿಗೆ ಭೇಟಿ

ಉಡುಪಿ, ಜ.16: ಜ.17 ಮತ್ತು 18ರಂದು ನಡೆಯುವ ಶೀರೂರು ಪರ್ಯಾಯ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಜಿಲ್ಲಾ ಉಸ್ತುವಾರಿ ಸಚಿವರೂ, ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಸಚಿವೆ ಲಕ್ಷ್ಮೀ ಆರ್.ಹೆಬ್ಬಾಳ್ಕರ್ ಶನಿವಾರ ಉಡುಪಿಗೆ ಆಗಮಿಸಲಿದ್ದು ಎರಡು ದಿನಗಳ ಕಾಲ ನಗರದಲ್ಲಿ ಹಲವು ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. ಶನಿವಾರ ಬೆಳಗ್ಗೆ 9:55ಕ್ಕೆ ಬೆಂಗಳೂರಿನಿಂದ ಹೊರಟು 10:55ಕ್ಕೆ ಬಜಪೆ ವಿಮಾನ ನಿಲ್ದಾಣದಲ್ಲಿ ಬಂದಿಳಿಯುವ ಸಚಿವೆ, 12:30ಕ್ಕೆ ಉಡುಪಿಗೆ ಆಗಮಿ ಸಲಿದ್ದಾರೆ. ಅಪರಾಹ್ನ 3:00ಕ್ಕೆ ಬ್ರಹ್ಮಗಿರಿಯ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಆಸ್ಕರ್ ಫೆರ್ನಾಂಡೀಸ್ ಅಭಿಮಾನಿ ಬಳಗದ ವತಿಯಿಂದ ನಡೆಯುವ ಕಾರ್ಯಕ್ರಮದಲ್ಲಿ ಭಾಗವಹಿಸುವರು. ಬಳಿಕ ಸಂಜೆ 7:00ಗಂಟೆಗೆ ಮದರ್ ಆಫ್ ಸಾರೋಸ್ ಚರ್ಚ್ ಆವರಣದಲ್ಲಿ ನಡೆಯುವ ದೇಹದಾರ್ಢ್ಯ ಸ್ಪರ್ಧಾ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಉಡುಪಿಯಲ್ಲಿ ವಾಸ್ತವ ಮಾಡುವರು. ಜ.18ರ ರವಿವಾರ ಮುಂಜಾನೆ 5:30ಕ್ಕೆ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಶೀರೂರು ಪರ್ಯಾಯದ ಪ್ರಯುಕ್ತ ನಡೆಯುವ ಪರ್ಯಾಯ ದರ್ಬಾರ್ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು. ಅಪರಾಹ್ನ 12:00ಗಂಟೆಗೆ ಉಡುಪಿ ಕಡೆಕಾರು ಗ್ರಾಪಂನ ನೂತನ ಕಚೇರಿ ಹಾಗೂ ಅಂಗನವಾಡಿ ಕಟ್ಟಡ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿ ಸಿದ ಬಳಿಕ ಸಂಜೆ 4 ಗಂಟೆಗೆ ಮಂಗಳೂರು ವಿಮಾನ ನಿಲ್ದಾಣಕ್ಕೆ ತೆರಳುವರು.

ವಾರ್ತಾ ಭಾರತಿ 16 Jan 2026 9:33 pm

ರಾಷ್ಟ್ರೀಯ ಹೆದ್ದಾರಿ ಕಾಮಗಾರಿ: ಸಂಸದರಿಂದ ಪರಿಶೀಲನೆ

ಬ್ರಹ್ಮಾವರ, ಜ.16: ಇಲ್ಲಿನ ಮಹೇಶ್ ಆಸ್ಪತ್ರೆ ಎದುರಿನ ರಾಷ್ಟ್ರೀಯ ಹೆದ್ದಾರಿ-66ರಲ್ಲಿ ಸ್ಥಳೀಯ ಜನತೆಯ ಆಗ್ರಹದ ಮೇರೆಗೆ ನಡೆಯುತ್ತಿರುವ ಸರ್ವಿಸ್ ರಸ್ತೆಯ ಕಾಮಗಾರಿ ಪ್ರದೇಶಕ್ಕೆ ಇಂದು ಭೇಟಿ ನೀಡಿದ ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಕಾಮಗಾರಿಯ ಗುಣಮಟ್ಟದ ಪರಿಶೀಲನೆ ನಡೆಸಿದರು. ಸದ್ಯ ಇಲ್ಲಿ ಕಳೆದ ಕೆಲವು ದಿನಗಳಿಂದ ಮಹೇಶ್ ಆಸ್ಪತ್ರೆ ಎದುರಿನಿಂದ ಎಸ್‌ಎಂಎಸ್ ಪದವಿ ಪೂರ್ವಕಾಲೇಜು ಎದುರಿನವರೆಗೆ ಹೆದ್ದಾರಿಯ ಎರಡು ಬದಿಗಳಲ್ಲೂ ರಸ್ತೆ ಅಗಲೀಕರಣದೊಂದಿಗೆ ಸರ್ವಿಸ್ ರಸ್ತೆಯ ನಿರ್ಮಾಣ ಕಾರ್ಯ ನಡೆಯುತ್ತಿದೆ. ರಸ್ತೆಯ ಕಾಂಕ್ರೀಟಿಕರಣ ಕಳೆದ ಕೆಲವು ದಿನಗಳಿಂದ ನಡೆಯುತ್ತಿದೆ. ಕೋಟದಿಂದ ಉಡುಪಿಗೆ ತೆರಳುವ ಮಾರ್ಗದಲ್ಲಿ ಇಂದು ಬೆಳಗ್ಗೆ ಕಾಮಗಾರಿ ಸ್ಥಳಕ್ಕೆ ಆಗಮಿಸಿದ ಸಂಸದ ಕೋಟ ಶ್ರೀನಿವಾಸ ಪೂಜಾರಿ ಕಾಮಗಾರಿಯ ಸ್ಥಿತಿಗತಿಗಳನ್ನು ಪರಿಶೀಲಿಸಿದರು. ಈ ಸಂದರ್ಭದಲ್ಲಿ ಕಾಮಗಾರಿಗಳ ಗುಣಮಟ್ಟ, ಸಾರ್ವಜನಿಕರ ಸಂಚಾರಕ್ಕೆ ಉಂಟಾಗುವ ಅಡಚಣೆಗಳು ಹಾಗೂ ಸುರಕ್ಷತಾ ಕ್ರಮಗಳ ಕುರಿತು ಎನ್.ಎಚ್ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು. ಸ್ಥಳೀಯವಾಗಿ ನಾಗರಿಕರಿಗೆ ಯಾವುದೇ ತೊಂದರೆ ಆಗದಂತೆ ಹಾಗೂ ಕಾಮಗಾರಿಗಳು ಸಮಯಕ್ಕೆ ಸರಿಯಾಗಿ ಪೂರ್ಣಗೊಳ್ಳಲು ಅಗತ್ಯ ಕ್ರಮ ಕೈಗೊಳ್ಳುವಂತೆ ಅವರು ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಸೂಚನೆ ಗಳನ್ನು ನೀಡಿದರು. ಈ ಸಂದರ್ಭದಲ್ಲಿ ಸಂಸದರೊಂದಿಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು, ವಾರಂಬಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ನಿತ್ಯಾನಂದ ಬಿ.ಆರ್ ಹಾಗೂ ಪಂಚಾಯತ್ ಸದಸ್ಯರು, ಸ್ಥಳೀಯರು ಉಪಸ್ಥಿತರಿದ್ದರು.

ವಾರ್ತಾ ಭಾರತಿ 16 Jan 2026 9:29 pm

ಡಾಲರ್ ಎದುರು ಸಾರ್ವಕಾಲಿಕ ಕುಸಿತ ಕಂಡ ರೂಪಾಯಿ: ಪ್ರತಿ ಡಾಲರ್‌ಗೆ 90.84ರೂ.!

ಮುಂಬೈ: ಡಾಲರ್ ಎದುರು ರೂಪಾಯಿ ಮೌಲ್ಯ ಮತ್ತೊಮ್ಮೆ ಸಾರ್ವಕಾಲಿಕ ಪತನಗೊಂಡಿದ್ದು, ಪ್ರತಿ ಡಾಲರ್ ಗೆ 90.84 ರೂ.ಗೆ ತಲುಪಿದೆ. ಏರುತ್ತಿರುವ ಕಚ್ಚಾ ತೈಲ ಬೆಲೆ ಹಾಗೂ ವಿದೇಶಿ ಹೂಡಿಕೆಯ ನಿರಂತರ ಹೊರಹರಿವು ಇದಕ್ಕೆ ಕಾರಣ ಎನ್ನಲಾಗಿದೆ. ದೇಶೀಯ ಹೂಡಿಕೆದಾರರು ಡಾಲರ್ ಖರೀದಿಯನ್ನು ಮುಂದುವರಿಸಿದರೂ, ಜಾಗತಿಕ ಆರ್ಥಿಕತೆಯ ಚಂಚಲತೆ, ಹಾಗೂ ದೃಢ ಅಮೆರಿಕ ಡಾಲರ್ ಮೌಲ್ಯದ ಕಾರಣಕ್ಕೆ ಹೂಡಿಕೆದಾರರು ವಿದೇಶಿ ಸಾಂಸ್ಥಿಕ ಹೂಡಿಕೆಯನ್ನು ಹಿಂಪಡೆದಿದ್ದರಿಂದ, ರೂಪಾಯಿ ಮೌಲ್ಯ ಕುಸಿತ ಕಂಡಿದೆ ಎಂದು ವಿದೇಶಿ ವಿನಿಮಯ ವ್ಯಾಪಾರಸ್ಥರು ಅಭಿಪ್ರಾಯ ಪಟ್ಟಿದ್ದಾರೆ. ವಿದೇಶಿ ವಿನಿಮಯದ ಅಂತರ್ ಬ್ಯಾಂಕ್ ನಲ್ಲಿ ಇಂದು ರೂಪಾಯಿ ಪ್ರತಿ ಡಾಲರ್ ಎದುರು 90.37 ಮೌಲ್ಯದೊಂದಿಗೆ ಪ್ರಾರಂಭಗೊಂಡಿತು. ಮಧ್ಯಾವಧಿಯ ವೇಳೆಗೆ ಪ್ರತಿ ಡಾಲರ್ ಎದುರು 90.89 ರೂ.ಗೆ ಕುಸಿದ ರೂಪಾಯಿ ಮೌಲ್ಯ, ದಿನದಾಂತ್ಯದ ವೇಳೆಗೆ ತಾತ್ಕಾಲಿಕವಾಗಿ 90.84 ರೂಪಾಯಿಗೆ ಇಳಿಕೆಯಾಯಿತು. ಆ ಮೂಲಕ, ಬುಧವಾರದ ವಹಿವಾಟಿಗೆ ಹೋಲಿಸಿದರೆ, ಇಂದು ಮತ್ತೆ 50 ಪೈಸೆಯಷ್ಟು ನಷ್ಟ ಅನುಭವಿಸಿತು.

ವಾರ್ತಾ ಭಾರತಿ 16 Jan 2026 9:26 pm

ಮಕ್ಕಳಿಗೆ ನೀರು ಕುಡಿಯುವಂತೆ ಜ್ಞಾಪಿಸಲು ಶಾಲೆಗಳಲ್ಲಿ ‘ನೀರಿನ ಗಂಟೆ’

ಬೆಂಗಳೂರು : ರಾಜ್ಯದ ಎಲ್ಲ ಸರಕಾರಿ, ಅನುದಾನಿತ ಹಾಗೂ ಖಾಸಗಿ ಶಾಲೆಗಳಲ್ಲಿ ಮಕ್ಕಳಿಗೆ ನೀರು ಕುಡಿಯುವಂತೆ ಜ್ಞಾಪಿಸಲು ‘ನೀರಿನ ಗಂಟೆ’ಯನ್ನು ಬಾರಿಸಬೇಕು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ. ಶಾಲೆಗಳಲ್ಲಿ ಮಕ್ಕಳಿಗೆ ನೀರು ಕುಡಿಯಬೇಕೆಂಬ ಅರಿವು ಅಷ್ಟಾಗಿ ಇರುವುದಿಲ್ಲ. ಮಕ್ಕಳ ಬೆಳವಣಿಗೆಗೆ ಮತ್ತು ಆರೋಗ್ಯಕ್ಕೆ ನೀರು ಅತ್ಯವಶ್ಯಕವಾಗಿರುತ್ತದೆ. ಜೊತೆಗೆ ದೇಹದ ಉಷ್ಣತೆಯನ್ನು ನಿಯಂತ್ರಿಸುವುದರ ಜೊತೆಗೆ ಆಹಾರವನ್ನು ಜೀರ್ಣಿಸಿಕೊಳ್ಳಲು ಸಹಾಯ ಮಾಡುತ್ತದೆ. ಹೀಗಾಗಿ ರಾಜ್ಯದಲ್ಲಿರುವ ಎಲ್.ಕೆ.ಜಿ, ಯು.ಕೆ.ಜಿ ಒಳಗೊಂಡಂತೆ ಸರಕಾರಿ, ಅನುದಾನಿತ ಮತ್ತು ಅನುದಾನ ರಹಿತ ಶಾಲೆಗಳಲ್ಲಿ ಮಕ್ಕಳಿಗೆ ಆಗಾಗ ನೀರು ಕುಡಿಯುವಂತೆ ಜ್ಞಾಪಿಸಲು ‘ನೀರಿನ ಗಂಟೆ’ ನಿಯಮವನ್ನು ಅನುಷ್ಠಾನಗೊಳಿಸಬೇಕು ಎಂದು ಸೂಚನೆ ನೀಡಿದೆ. 2022ರಲ್ಲೇ ನಿಯಮ ಜಾರಿಗೆ ಬಂದಿದ್ದರೂ ಸರಿಯಾಗಿ ಪಾಲನೆಯಾಗದ ಹಿನ್ನೆಲೆ ವಾಟರ್‌ ಬೆಲ್ ನಿಯಮ ಜಾರಿಗೆ ಕ್ರಮ ಕೈಗೊಳ್ಳುವಂತೆ ಶಾಲಾ ಶಿಕ್ಷಣ ಇಲಾಖೆಗೆ ರಾಜ್ಯ ಮಕ್ಕಳ ಹಕ್ಕುಗಳ ಆಯೋಗದ ಅಧ್ಯಕ್ಷರು ಪತ್ರ ಬರೆದಿದ್ದರು. ಈ ಹಿನ್ನೆಲೆ ಶಾಲೆಗಳ ಮಕ್ಕಳಿಗೆ ‘ನೀರಿನ ಗಂಟೆ’ ನಿಯಮ ಜಾರಿ ಗೊಳಿಸುವಂತೆ ಮತ್ತೊಮ್ಮೆ ಸೂಚನೆ ನೀಡಲಾಗಿದೆ.

ವಾರ್ತಾ ಭಾರತಿ 16 Jan 2026 9:25 pm

ಕನ್ನಡದ ವಾತಾವರಣ ನಿರ್ಮಾಣ ಅವಶ್ಯಕ ಹಾಗೂ ಅನಿವಾರ್ಯ : ಸಿಎಂ ಸಿದ್ದರಾಮಯ್ಯ

‘ಬೆಂಗಳೂರು ಹಬ್ಬ-2026’ಕ್ಕೆ ಚಾಲನೆ

ವಾರ್ತಾ ಭಾರತಿ 16 Jan 2026 9:18 pm

ಮಂಗಳೂರು| ಮಾದಕ ವಸ್ತು ವಿರುದ್ಧ ಪೊಲೀಸರಿಂದ ಕಾರ್ಯಾಚರಣೆ: ಕಾಲೇಜು ವಿದ್ಯಾರ್ಥಿಗಳ‌ ತಪಾಸಣೆ

ಕೊಣಾಜೆ: ಮಾದಕ ವಸ್ತು ಮುಕ್ತ ಮಂಗಳೂರು ಮತ್ತು ಮಾದಕ ವಸ್ತು ಮುಕ್ತ ಶೈಕ್ಷಣಿಕ ಕ್ಯಾಂಪಸ್‌ಗಳ ನಿರ್ಮಾಣದ ಉದ್ದೇಶದಿಂದ ಪೊಲೀಸರು ಮಾದಕ ವಸ್ತು ವಿರುದ್ಧ ಅಭಿಯಾನವನ್ನು ಆರಂಭಿಸಿದ್ದು, ಈ ಹಿನ್ನೆಲೆಯಲ್ಲಿ ಶುಕ್ರವಾರ ಉಳ್ಳಾಲ,‌ ಕೊಣಾಜೆ ವ್ಯಾಪ್ತಿಯ ಹಲವು ಕಾಲೇಜಿನ ವಿದ್ಯಾರ್ಥಿಗಳನ್ನು ಪರಿಶೀಲಿಸಿ ಮಾದಕ ವಸ್ತು ಪರೀಕ್ಷೆ ನಡೆಸಿದರು. ವಿವಿಧ ಕಾಲೇಜುಗಳಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳ ಕಾಲೇಜು ಬಸ್‌ಗಳನ್ನು ನಿಲ್ಲಿಸಿ ವಿದ್ಯಾರ್ಥಿಗಳನ್ನು ಪರೀಕ್ಷಿಸುವ ಮೂಲಕ ಕಾರ್ಯಾಚರಣೆಯನ್ನು ನಡೆಸಲಾಯಿತು. ಕೊಣಾಜೆ, ಉಳ್ಳಾಲ ಠಾಣೆ ವ್ಯಾಪ್ತಿಯ ನಿಟ್ಟೆ ವಿಶ್ವವಿದ್ಯಾಲಯ (ಕೆ.ಎಸ್. ಹೆಗ್ಡೆ), ಕಣಚೂರು ಸಂಸ್ಥೆ, ಪಿ.ಎ. ಕಾಲೇಜು, ಸೇಂಟ್ ಅಲೋಶಿಯಸ್ ಕಾಲೇಜು ಮತ್ತು ಎಕ್ಕೂರಿನ ಮೀನುಗಾರಿಕಾ ಕಾಲೇಜಿನ ವಿದ್ಯಾರ್ಥಿಗಳನ್ನು ಪರೀಕ್ಷಿಸಲಾಯಿತು. ಖಾಸಗಿ ಬಸ್‌ಗಳು ಮತ್ತು ಕಾಲೇಜು ಬಸ್‌ ಗಳಲ್ಲಿ ಹೋಗುವ ವಿದ್ಯಾರ್ಥಿಗಳನ್ನು ಪರೀಕ್ಷೆ‌ ಮಾಡಲಾಯಿತು. ಇದುವರೆಗೆ ಒಟ್ಟು 103 ಪರೀಕ್ಷೆಗಳು ಪೂರ್ಣಗೊಂಡಿವೆ, ಅವುಗಳಲ್ಲಿ 101 ನಕಾರಾತ್ಮಕವಾಗಿವೆ. ಪ್ರಸ್ತುತ ಹತ್ತು ಪರೀಕ್ಷೆಗಳು ಪ್ರಗತಿಯಲ್ಲಿವೆ, ಒಬ್ಬ ವಿದ್ಯಾರ್ಥಿ ಮಾತ್ರ ಪರೀಕ್ಷಾ ಪ್ರಕ್ರಿಯೆಯಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದು, ಕಾರ್ಯ ವಿಧಾನದ ಪ್ರಕಾರ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ. ಇತರ ಎಲ್ಲಾ ವಿದ್ಯಾರ್ಥಿಗಳ ಮೇಲೆ‌ ನಡೆಸಿದ ಪರೀಕ್ಷೆಯಲ್ಲಿ ನಕಾರಾತ್ಮಕ ಫಲಿತಾಂಶ ಬಂದಿತ್ತು . ಒಟ್ಟಾರೆಯಾಗಿ ಪೊಲೀಸ್, ನಾಗರಿಕ ಆಡಳಿತ,‌ ಮಾಧ್ಯಮ, ಶಿಕ್ಷಣ ಸಂಸ್ಥೆಗಳು ಮತ್ತು ನಾಗರಿಕ ಸಮಾಜದ ನಿರಂತರ ಪ್ರಯತ್ನಗಳಿಂದ ಮಾದಕ ವಸ್ತು ವಿರುದ್ಧದ ಅಭಿಯಾನದಲ್ಲಿ ಸಕಾರಾತ್ಮಕ ಬೆಳವಣಿಗೆಗಳು ಕಾಣುತ್ತಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ವಾರ್ತಾ ಭಾರತಿ 16 Jan 2026 9:15 pm

ಅಫ್ಘಾನಿಸ್ತಾನದಲ್ಲಿ ನಿಧಾನವಾಗಿ ಜನಪ್ರಿಯಗೊಳ್ಳುತ್ತಿರುವ ಭಾರತೀಯ ಔಷಧಿಗಳು - ಭಾರತದ ಸಹವಾಸದಿಂದ ಆಫ್ಘನ್ನರಿಗಾದ ಪ್ರಯೋಜನ

ಅಫ್ಘಾನಿಸ್ತಾನದಲ್ಲಿ ಭಾರತೀಯ ಔಷಧಿಗಳ ಬಳಕೆ ಹೆಚ್ಚುತ್ತಿದೆ. ಪಾಕಿಸ್ತಾನಿ ಔಷಧಿಗಳ ಬದಲಿಗೆ ಭಾರತೀಯ ಔಷಧಿಗಳು ಜನಪ್ರಿಯತೆ ಗಳಿಸುತ್ತಿವೆ. ಗಡಿ ಸಂಘರ್ಷದ ಬಳಿಕ ಪಾಕಿಸ್ತಾನಿ ಔಷಧಿಗಳ ಗುಣಮಟ್ಟ ಕುಸಿದಿದೆ. ಭಾರತವು ಅಫ್ಘಾನಿಸ್ತಾನಕ್ಕೆ ವೈದ್ಯಕೀಯ ನೆರವು ನೀಡುತ್ತಿದೆ. ಇದರಿಂದ ಭಾರತೀಯ ಔಷಧ ರಫ್ತು ಗಣನೀಯವಾಗಿ ಹೆಚ್ಚಾಗಿದೆ. ಇದು ಅಫ್ಘಾನಿಸ್ತಾನದ ಮಾರುಕಟ್ಟೆಯಲ್ಲಿ ಭಾರತಕ್ಕೆ ಹೊಸ ಅವಕಾಶಗಳನ್ನು ತೆರೆದಿದೆ.

ವಿಜಯ ಕರ್ನಾಟಕ 16 Jan 2026 9:06 pm

ಶಿವಮೊಗ್ಗ ಜಿಲ್ಲೆಗೆ ಶೀಘ್ರ ಸಿಗಲಿರುವ 10 ಪ್ರಮುಖ ಯೋಜನೆಗಳ ಮಾಹಿತಿ ಹಂಚಿಕೊಂಡ ಸಂಸದ ಬಿವೈ ರಾಘವೇಂದ್ರ; ಯಾವೆಲ್ಲಾ?

ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ ಅವರು ಜಿಲ್ಲೆಯ ಅಭಿವೃದ್ಧಿಗೆ ಮಂಜೂರಾಗಿರುವ 10 ಪ್ರಮುಖ ಯೋಜನೆಗಳ ವಿವರಗಳನ್ನು ಹಂಚಿಕೊಂಡಿದ್ದಾರೆ. ರೈಲ್ವೆ ಮತ್ತು ರಾಷ್ಟ್ರೀಯ ಹೆದ್ದಾರಿ ಯೋಜನೆಗಳಿಗೆ ಭೂ ಸ್ವಾಧೀನ ಪ್ರಕ್ರಿಯೆ ತ್ವರಿತಗೊಳಿಸುವಂತೆ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದು, ಹಲವು ಯೋಜನೆಗಳು ಶೀಘ್ರದಲ್ಲೇ ಪೂರ್ಣಗೊಳ್ಳುವ ನಿರೀಕ್ಷೆಯಿದೆ.

ವಿಜಯ ಕರ್ನಾಟಕ 16 Jan 2026 9:05 pm

ಬ್ರಿಟನ್‌ ಸಂಸತ್ತಿನಲ್ಲಿ ಬಾಂಗ್ಲಾದೇಶದಲ್ಲಿ ಹಿಂದೂಗಳ ಹತ್ಯೆ ಖಂಡಿಸಿದ ಬಾಬ್‌ ಬ್ಲ್ಯಾಕ್‌ಮನ್‌; ಜಾಗತಿಕ ಧ್ವನಿ ಗಟ್ಟಿಗೊಳಿಸುವಂತೆ ಕರೆ

ನೆರೆಯ ಬಾಂಗ್ಲಾದೇಶದಲ್ಲಿ ಭಾರತ ವಿರೋಧಿ ಪ್ರತಿಭಟನೆಗಳ ನೆಪದಲ್ಲಿ ಹಿಂದೂ ಅಲ್ಪಸಂಖ್ಯಾತರ ಮಾರಣಹೋಮ ನಡೆಯುತ್ತಿದ್ದು, ಅಲ್ಲಿನ ಭೀಕರ ಪರಿಸ್ಥಿತಿ ಬಗ್ಗೆ ಯುಕೆ ಸಂಸದ ಬಾಬ್‌ ಬ್ಲ್ಯಾಕ್‌ಮನ್‌ ಅವರು ಬ್ರಿಟನ್‌ ಸಂಸತ್ತಿನಲ್ಲಿ ಸುದೀರ್ಘವಾಗಿ ಮಾತನಾಡಿದ್ದಾರೆ. ಬಾಂಗ್ಲಾದೇಶದ ಹಿಂದೂಗಳ ಪರವಾಗಿ ಅಂತಾರಾಷ್ಟ್ರೀಯ ಧ್ವನಿಯನ್ನು ಗಟ್ಟಿಗೊಳಿಸುವಂತೆ ಕರೆ ನೀಡಿರುವ ಬ್ಲ್ಯಾಕ್‌ಮನ್‌, ಈ ವಿಚಾರವಾಗಿ ಬ್ರಿಟನ್‌ ಸರ್ಕಾರ ಕೈಗೊಂಡಿರುವ ಕ್ರಮ ವಿವರಿಸುವಂತೆ ಒತ್ತಾಯಿಸಿದ್ದಾರೆ. ಬ್ರಿಟನ್‌ ಸಂಸತ್ತಿನಲ್ಲಿ ಬಬ್‌ ಬ್ಲ್ಯಾಕ್‌ಮನ್‌ ಅವರ ಭಾಷಣ ಜಾಗತಿಕ ಮಟ್ಟದಲ್ಲಿ ಚರ್ಚೆ ಆಗುತ್ತಿದೆ.

ವಿಜಯ ಕರ್ನಾಟಕ 16 Jan 2026 8:56 pm

ಚಿತ್ತಾಪುರ | ಜ.21ರಂದು ಅಂಬಿಗರ ಚೌಡಯ್ಯ ಜಯಂತಿ ಆಚರಣೆ

ಸರಕಾರದ ಶಿಷ್ಟಾಚಾರದಂತೆ ಅಂಬಿಗರ ಚೌಡಯ್ಯ ಜಯಂತಿ ಯಶಸ್ವಿಗೊಳಿಸಿ: ಭೀಮಣ್ಣ ಸಾಲಿ

ವಾರ್ತಾ ಭಾರತಿ 16 Jan 2026 8:45 pm

ವಾಹನಗಳಲ್ಲಿ ಅಕ್ರಮ ಲೈಟ್ ಬಳಕೆ ವಿರುದ್ಧ ಕ್ರಮ: ನಾಲ್ಕು ವರ್ಷಗಳಲ್ಲಿ ಪ್ರಕರಣಗಳು 22 ಪಟ್ಟು ಹೆಚ್ಚಳ

ಬೆಂಗಳೂರು ನಗರ ಟ್ರಾಫಿಕ್ ಪೊಲೀಸರು (ಬಿಟಿಪಿ) ಸಾರ್ವಜನಿಕ ಹಾಗೂ ಖಾಸಗಿ ವಾಹನಗಳಲ್ಲಿ ಅನಧಿಕೃತ ಎಲ್‌ಇಡಿ ಬಾರ್‌ಗಳು, ಅತಿಪ್ರಖರ ಹೆಡ್‌ಲೈಟ್‌ ಗಳು ಮತ್ತು ಕೆಂಪು–ನೀಲಿ ಸ್ಟ್ರೋಬ್ ಲೈಟ್‌ಗಳ ಬಳಕೆಯನ್ನು ಪತ್ತೆಹಚ್ಚಲು ವಿಶೇಷ ಕಾರ್ಯಾಚರಣೆ ನಡೆಸಿದ್ದಾರೆ. ಈ ಕ್ರಮಗಳ ಹೊರತಾಗಿಯೂ ಅನಧಿಕೃತ ವಾಹನ ದೀಪಗಳ ಬಳಕೆಯ ಪ್ರಕರಣಗಳು ಹೆಚ್ಚುತ್ತಲೇ ಇವೆ. ವಾಹನಗಳಲ್ಲಿ ಅಕ್ರಮ ಲೈಟ್ ಬಳಕೆ ವಿರುದ್ಧ ಬಿಟಿಪಿ ಜನವರಿ 7ರಿಂದ ಆರಂಭಿಸಿದ ವಿಶೇಷ ಕಾರ್ಯಾಚರಣೆಯಲ್ಲಿ, ನಿಯಮ ಉಲ್ಲಂಘಿಸಿದ ಸಾವಿರಕ್ಕೂ ಹೆಚ್ಚು ವಾಹನ ಸವಾರರ ವಿರುದ್ಧ ಪ್ರಕರಣಗಳು ದಾಖಲಾಗಿವೆ. SUVಗಳಿಂದ ಹಿಡಿದು ಆಟೋರಿಕ್ಷಾಗಳವರೆಗೆ, ಅನುಮತಿಸಲಾದ ವ್ಯಾಟೇಜ್ ಮೀರಿದ ಅಥವಾ ಸೂಚಿಸಲಾದ ಬೆಳಕನ್ನು ಪಾಲಿಸದ ವಾಹನಗಳ ಮೇಲೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ. ಬಿಟಿಪಿ ದತ್ತಾಂಶವು ಖಾಸಗಿ ವಾಹನಗಳಲ್ಲಿ ಫ್ಲ್ಯಾಶ್ ಲೈಟ್ ಬಳಕೆಯ ಪ್ರವೃತ್ತಿ ಹೆಚ್ಚುತ್ತಿರುವುದನ್ನು ತೋರಿಸುತ್ತದೆ. ಕೆಂಪು, ನೀಲಿ ಅಥವಾ ಹಳದಿ ಬಣ್ಣದ ದೀಪಗಳು ರಸ್ತೆಗಳಲ್ಲಿ ಗೊಂದಲ ಉಂಟುಮಾಡುತ್ತಿದ್ದು, ವಿಶೇಷವಾಗಿ ರಾತ್ರಿ ಸಮಯದಲ್ಲಿ ವಾಹನ ಚಾಲನೆಗೆ ಗಂಭೀರ ಅಪಾಯವನ್ನು ತಂದೊಡ್ಡುತ್ತವೆ. ಅಧಿಕೃತ ಮಾಹಿತಿಯ ಪ್ರಕಾರ, ಪಶ್ಚಿಮ ವಿಭಾಗದಲ್ಲಿ ಇಂತಹ ನಿಯಮ ಉಲ್ಲಂಘನೆ ಪ್ರಕರಣಗಳು ಹೆಚ್ಚು ದಾಖಲಾಗಿದ್ದು, ಇದು ನಗರದಾದ್ಯಂತ ದಾಖಲಾಗಿರುವ ಒಟ್ಟು ಪ್ರಕರಣಗಳ ಅರ್ಧಕ್ಕಿಂತ ಹೆಚ್ಚು ಪಾಲು ಹೊಂದಿದೆ. ಈ ವಿಭಾಗದಲ್ಲಿ ಒಟ್ಟು 5,969 ಪ್ರಕರಣಗಳು ದಾಖಲಾಗಿವೆ. 2020ರಲ್ಲಿ 1,354 ಪ್ರಕರಣಗಳು ದಾಖಲಾಗಿದ್ದರೆ, 2022ರಲ್ಲಿ ಅದು 467ಕ್ಕೆ ಇಳಿದಿತ್ತು. ಇದರಿಂದ ಆ ಅವಧಿಯಲ್ಲಿ ನಿಯಮ ಉಲ್ಲಂಘನೆಗಳಲ್ಲಿ ಸ್ವಲ್ಪ ಇಳಿಕೆ ಕಂಡುಬಂದಿತ್ತು. ಆದರೆ, ಇತ್ತೀಚಿನ ಕಾರ್ಯಾಚರಣೆಯಲ್ಲಿ ಬೆಂಗಳೂರು ನಗರ ಸಂಚಾರ ಪೊಲೀಸರು ಕೇವಲ ಏಳು ದಿನಗಳಲ್ಲಿ 2,263 ಪ್ರಕರಣಗಳನ್ನು ದಾಖಲಿಸಿದ್ದಾರೆ. 2022ರೊಂದಿಗೆ ಹೋಲಿಸಿದರೆ, 2026ರ ವೇಳೆಗೆ ಉಲ್ಲಂಘನೆ ಪ್ರಕರಣಗಳು 2,200 ಶೇಕಡಕ್ಕಿಂತ ಹೆಚ್ಚಾಗಿವೆ. ಅಂದರೆ, ನಾಲ್ಕು ವರ್ಷಗಳ ಹಿಂದಿನ ಹೋಲಿಕೆಯಲ್ಲಿ ಪ್ರಕರಣಗಳು ಸುಮಾರು 22 ಪಟ್ಟು ಹೆಚ್ಚಾಗಿವೆ. ಪ್ರತಿ ವರ್ಷ ವಿಶೇಷ ಕಾರ್ಯಾಚರಣೆ ನಡೆಸುತ್ತಿದ್ದರೂ, ಅನೇಕ ವಾಹನ ಚಾಲಕರು ತಮ್ಮ ವಾಹನಗಳನ್ನು ಪರಿಶೀಲಿಸಿದ ಅಥವಾ ದಂಡ ವಿಧಿಸಿದ ತಕ್ಷಣವೇ ಅಕ್ರಮ ದೀಪಗಳನ್ನು ಮರುಸ್ಥಾಪಿಸುತ್ತಾರೆ ಎಂದು ಹಿರಿಯ ಸಂಚಾರ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಸೂರ್ಯಾಸ್ತದ ನಂತರ ಅಥವಾ ರಾತ್ರಿ ವೇಳೆಯ ರಸ್ತೆ ಸಂಚಾರದಲ್ಲಿ ಅಪಾಯ ಉಂಟುಮಾಡುವ ಅನಧಿಕೃತ ಎಲ್‌ಇಡಿ ದೀಪಗಳು, ಕಣ್ಣು ಕೋರೈಸುವ ಹೆಡ್‌ಲೈಟ್‌ಗಳು ಹಾಗೂ ಬಣ್ಣದ ಫ್ಲ್ಯಾಶ್ ಲೈಟ್‌ ಗಳನ್ನು ಗುರಿಯಾಗಿಸಿಕೊಂಡು ಈ ಕ್ರಮ ಜರುಗಿಸಲಾಗಿದೆ. ವಾಹನಗಳಲ್ಲಿ ಇಂತಹ ಯಾವುದೇ ಮಾರ್ಪಾಡುಗಳು ಕೇಂದ್ರ ಮೋಟಾರ್ ವಾಹನ ನಿಯಮಗಳನ್ನು (CMVR) ಉಲ್ಲಂಘಿಸುತ್ತವೆ ಎಂದು RTO ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. AIS-130 (ಆಟೋಮೋಟಿವ್ ಇಂಡಸ್ಟ್ರಿ ಸ್ಟ್ಯಾಂಡರ್ಡ್) ಅಡಿಯಲ್ಲಿ, ಪ್ರಮಾಣಿತ ಬಿಳಿ LED ಹೆಡ್‌ಲೈಟ್‌ಗಳು 4 ರಿಂದ 12 ವ್ಯಾಟ್‌ಗಳ ನಡುವೆ ಕಾರ್ಯನಿರ್ವಹಿಸಬೇಕು ಹಾಗೂ ಸುಮಾರು 725 ಲ್ಯುಮೆನ್‌ಗಳ ಪ್ರಕಾಶವನ್ನು ಉತ್ಪಾದಿಸಬೇಕು. ಇದರಿಂದ ಸಮತೋಲನದ ಬೆಳಕು ದೊರಕುತ್ತದೆ. ಆದರೆ ಅನೇಕ ಅಕ್ರಮ ಲೈಟ್‌ಗಳು 50 ರಿಂದ 100 ವ್ಯಾಟ್‌ಗಳು ಅಥವಾ ಅದಕ್ಕಿಂತ ಹೆಚ್ಚಿನ ಸಾಮರ್ಥ್ಯ ಹೊಂದಿದ್ದು, ಅತಿದೀಪ್ತಿಯ ಬೆಳಕನ್ನು ಹೊರಸೂಸುತ್ತವೆ. ಇಂತಹ ಬೆಳಕು ರಸ್ತೆ ಸಂಚಾರಕ್ಕೆ ಅಪಾಯಕಾರಿಯಾಗಿದೆ. ಕಾನೂನು ಪ್ರಮಾಣಿತ ಬಿಳಿ ಅಥವಾ ಹಳದಿ ಹೆಡ್‌ಲೈಟ್‌ಗಳನ್ನು ಮಾತ್ರ ಅನುಮತಿಸುತ್ತದೆ. ಆದರೆ ಕೆಲವರು ನೀಲಿ, ಕೆಂಪು ಅಥವಾ ಬಹುಬಣ್ಣದ ಮಿನುಗುವ ದೀಪಗಳನ್ನು ಬಳಸುತ್ತಿದ್ದು, ಇವು ಖಾಸಗಿ ವಾಹನಗಳಿಗೆ ಸಂಪೂರ್ಣವಾಗಿ ನಿಷೇಧಿತವಾಗಿವೆ. 2025ರ ಸುಪ್ರೀಂಕೋರ್ಟ್ ಆದೇಶ ಅನಧಿಕೃತ ಕೆಂಪು–ನೀಲಿ ಸ್ಟ್ರೋಬ್ ಮಿನುಗುವ ದೀಪಗಳು ಹಾಗೂ ಅಕ್ರಮ ಹೂಟರ್‌ ಗಳ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸುವಂತೆ, ವಶಪಡಿಸಿಕೊಳ್ಳುವಿಕೆ, ಮಾರುಕಟ್ಟೆ ನಿಯಂತ್ರಣ ಕ್ರಮಗಳು ಮತ್ತು ದಂಡಗಳ ಮೂಲಕ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ 2025ರಲ್ಲಿ ಸುಪ್ರೀಂಕೋರ್ಟ್ ರಾಜ್ಯ ಸರ್ಕಾರಗಳಿಗೆ ನಿರ್ದೇಶಿಸಿತ್ತು. ವಾಹನಗಳ ಹೆಡ್‌ಲೈಟ್‌ ಗಳಿಗೆ ಗರಿಷ್ಠ ಅನುಮತಿಸಲಾದ ಪ್ರಕಾಶ ಮಟ್ಟ ಮತ್ತು ಕಿರಣದ ಕೋನಗಳನ್ನು ಸ್ಪಷ್ಟಪಡಿಸಿ, ಕಟ್ಟುನಿಟ್ಟಿನ ಅನುಸರಣೆಯನ್ನು ಖಚಿತಪಡಿಸಿಕೊಳ್ಳುವಂತೆ ರಸ್ತೆ ಸಾರಿಗೆ ಸಚಿವಾಲಯ, ರಾಜ್ಯ ಸಾರಿಗೆ ಇಲಾಖೆಗಳು ಹಾಗೂ ಸಂಚಾರ ಪೊಲೀಸ್ ಅಧಿಕಾರಿಗಳಿಗೆ ನ್ಯಾಯಾಲಯ ಸೂಚನೆ ನೀಡಿತ್ತು. ಮಿನುಗುವ ಬಿಳಿ ಎಲ್‌ಇಡಿ ಹೆಡ್‌ಲೈಟ್‌ ಗಳು, ಅನಧಿಕೃತ ಕೆಂಪು–ನೀಲಿ ಸ್ಟ್ರೋಬ್ ದೀಪಗಳು ಮತ್ತು ತುರ್ತು ಸೈರನ್‌ಗಳನ್ನು ಅನುಕರಿಸುವ ಹೂಟರ್‌ಗಳ ವ್ಯಾಪಕ ಬಳಕೆ ವಾಹನ ಚಾಲನೆಗೆ ಗಂಭೀರ ಅಪಾಯಗಳನ್ನುಂಟುಮಾಡುತ್ತದೆ. ಅಧಿಕೃತ ತುರ್ತು ವಾಹನಗಳಿಗೆ ಮಾತ್ರ ಮೀಸಲಾಗಿರುವ ಕೆಂಪು–ನೀಲಿ ಸ್ಟ್ರೋಬ್ ದೀಪಗಳು ಮಾರುಕಟ್ಟೆಯಲ್ಲಿ ಮುಕ್ತವಾಗಿ ಲಭ್ಯವಿರುವುದರಿಂದ, ಖಾಸಗಿ ವಾಹನಗಳಲ್ಲಿ ದುರುಪಯೋಗವಾಗುತ್ತಿದೆ. ಇಂತಹ ಬಳಕೆ ಪಾದಚಾರಿಗಳು ಮತ್ತು ರಸ್ತೆ ಬಳಕೆದಾರರಲ್ಲಿ ಭೀತಿ ಹಾಗೂ ಗೊಂದಲವನ್ನು ಉಂಟುಮಾಡುವುದರೊಂದಿಗೆ ಅಪಘಾತಗಳ ಸಾಧ್ಯತೆಯನ್ನು ಹೆಚ್ಚಿಸುತ್ತದೆ. ಅಲ್ಲದೆ, ಸೈರನ್ ತರಹದ ಹೂಟರ್‌ಗಳ ಅನಧಿಕೃತ ಬಳಕೆ ನಿಜವಾದ ತುರ್ತು ಸೇವೆಗಳ ಕಾರ್ಯಾಚರಣೆಗೆ ಅಡ್ಡಿಪಡಿಸುತ್ತದೆ ಎಂದು ನ್ಯಾಯಾಲಯ ತನ್ನ ಆದೇಶದಲ್ಲಿ ಉಲ್ಲೇಖಿಸಿತ್ತು. ಕಾನೂನು ಏನು ಅನುಮತಿಸುತ್ತದೆ, ಏನು ನಿಷೇಧಿಸುತ್ತದೆ? ಅಕ್ರಮ ಲೈಟ್ ಅಳವಡಿಕೆಗೆ ಸಂಬಂಧಿಸಿದಂತೆ ವಾಹನದಲ್ಲಿ ಮಾಡುವ ಯಾವುದೇ ಮಾರ್ಪಾಡುಗಳು ಕೇಂದ್ರ ಮೋಟಾರ್ ವಾಹನ ನಿಯಮಗಳ (CMVR) ಅಡಿಯಲ್ಲಿ ಕಾನೂನುಬಾಹಿರವಾಗಿವೆ ಎಂದು ಸಾರಿಗೆ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ವಿಶೇಷವಾಗಿ, ಆಟೋಮೋಟಿವ್ ಇಂಡಸ್ಟ್ರಿ ಸ್ಟ್ಯಾಂಡರ್ಡ್ AIS-130, ವಾಹನಗಳಲ್ಲಿ ಬಳಸುವ LED ಬೆಳಕಿನ ಮೂಲಗಳ ಅನುಮೋದನೆ ಮತ್ತು ಕಾರ್ಯಕ್ಷಮತೆಯನ್ನು ನಿಯಂತ್ರಿಸುತ್ತದೆ. AIS-130 ಮಾನದಂಡಗಳ ಪ್ರಕಾರ, ಪ್ರಮಾಣಿತ ಬಿಳಿ LED ಹೆಡ್‌ಲ್ಯಾಂಪ್ ಸಾಮಾನ್ಯವಾಗಿ 4 ರಿಂದ 12 ವ್ಯಾಟ್‌ಗಳ ನಡುವೆ ಕಾರ್ಯನಿರ್ವಹಿಸಬೇಕು ಮತ್ತು ಸುಮಾರು 725 ಲ್ಯುಮೆನ್‌ಗಳ ಬೆಳಕನ್ನು ನೀಡಬೇಕು. ಈ ಬೆಳಕು ಮುಂದೆ ಬರುತ್ತಿರುವ ವಾಹನಗಳಿಗೆ ಅಡ್ಡಿಯಾಗದೇ ಚಾಲಕನಿಗೆ ಅಗತ್ಯವಾದ ಗೋಚರತೆಯನ್ನು ಒದಗಿಸುತ್ತದೆ. ಆದರೆ ಅನೇಕ ಅಕ್ರಮ ದೀಪಗಳು 50 ರಿಂದ 100 ವ್ಯಾಟ್‌ಗಳು ಅಥವಾ ಅದಕ್ಕಿಂತ ಹೆಚ್ಚಿನ ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಲೇಸರ್‌ ನಂತಹ ಪರಿಣಾಮವನ್ನು ಸೃಷ್ಟಿಸುತ್ತವೆ. ಇದು ಇತರ ವಾಹನ ಚಾಲಕರ ದೃಷ್ಟಿಗೆ ತೀವ್ರ ಕಿರಿಕಿರಿ ಉಂಟುಮಾಡುತ್ತದೆ. ಖಾಸಗಿ ವಾಹನಗಳಿಗೆ ಪ್ರಮಾಣಿತ ಬಿಳಿ ಅಥವಾ ಹಳದಿ ಹೆಡ್‌ಲೈಟ್‌ಗಳನ್ನು ಮಾತ್ರ ಕಾನೂನು ಅನುಮತಿಸಿದ್ದು, ನೀಲಿ, ಕೆಂಪು ಅಥವಾ ಬಹುಬಣ್ಣದ ಮಿನುಗುವ ದೀಪಗಳನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. 12 ವ್ಯಾಟ್ ಬಳಸಬೇಕಾದ ಸ್ಥಳದಲ್ಲಿ 100 ವ್ಯಾಟ್ ದೀಪಗಳನ್ನು ಬಳಸುವುದರಿಂದ ವಾಹನಗಳ ಮುಖಾಮುಖಿ ಡಿಕ್ಕಿಗೆ ಕಾರಣವಾಗುವ ಸಾಧ್ಯತೆ ಇದೆ. “ನಿಮ್ಮ ವಾಹನದ ಅತಿಪ್ರಖರ ಬೆಳಕು ಇನ್ನೊಬ್ಬರ ಜೀವಕ್ಕೆ ಹಾನಿ ಉಂಟುಮಾಡಬಹುದು. ರಾತ್ರಿ ಸಮಯದಲ್ಲಿ ಕಡಿಮೆ ಲೈಟ್ ಬಳಸಿ” ಎಂದು ರಸ್ತೆ ಸಾರಿಗೆ ಇಲಾಖೆಯ ಹಿರಿಯ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ಸ್ಥಳದಲ್ಲೇ ಜಾರಿ ಆದೇಶ ನಿಯಮ ಉಲ್ಲಂಘನೆ ಪ್ರಕರಣಗಳನ್ನು ದಾಖಲಿಸುವುದು, ಸ್ಥಳದಲ್ಲೇ ಅನಧಿಕೃತ ಫಿಟ್ಟಿಂಗ್‌ ಗಳನ್ನು ತೆರವುಗೊಳಿಸುವುದು ಹಾಗೂ ವಾಹನಗಳಿಂದ ಅಕ್ರಮ ಎಲ್‌ಇಡಿ ಬಾರ್‌ಗಳು ಮತ್ತು ಫ್ಲ್ಯಾಶರ್‌ಗಳನ್ನು ಕೆಡವುವಂತೆ ಜಂಟಿ ಪೊಲೀಸ್ ಆಯುಕ್ತ (ಸಂಚಾರ) ಕಾರ್ತಿಕ್ ರೆಡ್ಡಿ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ. ದ್ವಿಚಕ್ರ ವಾಹನಗಳು, ಕಾರುಗಳು, ಆಟೋರಿಕ್ಷಾಗಳು ಹಾಗೂ ವಾಣಿಜ್ಯ ಪಿಕ್-ಅಪ್ ವಾಹನಗಳು ಸೇರಿದಂತೆ ಎಲ್ಲಾ ವರ್ಗಗಳ ವಾಹನಗಳಿಗೆ ಈ ಕ್ರಮ ಅನ್ವಯಿಸುತ್ತದೆ. ಪುನರಾವರ್ತಿತ ಅಪರಾಧಿಗಳು ಹೆಚ್ಚಿನ ದಂಡ ಹಾಗೂ ನಿರಂತರ ಮೇಲ್ವಿಚಾರಣೆಯನ್ನು ಎದುರಿಸಬೇಕಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.

ವಾರ್ತಾ ಭಾರತಿ 16 Jan 2026 8:41 pm

ಈ ಜಿಲ್ಲೆಗೆ ಹಾಕಿ ಕ್ರೀಡಾಂಗಣ, ವಿಶ್ವದರ್ಜೆಯ ಈಜುಕೊಳ: ಸಿಎಂ ಸಿದ್ದರಾಮಯ್ಯ

ತುಮಕೂರು: ಜಿಲ್ಲೆಯಲ್ಲಿ ಆಯೋಜಿಸಿದ್ದ ‘ಕರ್ನಾಟಕ ಕ್ರೀಡಾಕೂಟ-2025-26' ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ತುಮಕೂರು ಜಿಲ್ಲೆಯ ಕ್ರೀಡಾಕ್ಷೇತ್ರದ ಅಭಿವೃದ್ಧಿಗೆ ಹೆಚ್ಚಿನ ಅನುದಾನ ನೀಡಲಾಗುವುದು ಎಂದು ಘೋಷಿಸಿದರು. ಜಿಲ್ಲೆಯ ಯುವಜನತೆ ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡು ವಿಶ್ವಮಟ್ಟದ ಕ್ರೀಡಾಪಟುಗಳಾಗಿ ಹೊರಹೊಮ್ಮಬೇಕು ಎಂದು ಅವರು ಆಶಯ ವ್ಯಕ್ತಪಡಿಸಿದರು. ಕ್ರೀಡೆ ಜೀವನದಲ್ಲಿ ಶಿಸ್ತು, ಸಂಯಮ ಹಾಗೂ ಸಮಯಪ್ರಜ್ಞೆ ಬೆಳೆಸಲು ಸಹಕಾರಿಯಾಗುತ್ತದೆ ಎಂದು

ಒನ್ ಇ೦ಡಿಯ 16 Jan 2026 8:40 pm

ಅಲ್-ಫಲಾಹ್ ವಿಶ್ವವಿದ್ಯಾಲಯದ ಮುಖ್ಯಸ್ಥರ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸಿದ ED: 139 ಕೋಟಿ ರೂ. ಮೌಲ್ಯದ ಆಸ್ತಿ ಮುಟ್ಟುಗೋಲು

ಹೊಸದಿಲ್ಲಿ: ಫರಿದಾಬಾದ್‌ ನ ಅಲ್-ಫಲಾಹ್ ವಿಶ್ವವಿದ್ಯಾಲಯದ ಮುಖ್ಯಸ್ಥ ಜವಾದ್ ಅಹ್ಮದ್ ಸಿದ್ದಿಕಿ ಹಾಗೂ ಅವರ ಕುಟುಂಬದ ನಿಯಂತ್ರಣದಲ್ಲಿರುವ ಅಲ್-ಫಲಾಹ್ ಚಾರಿಟೇಬಲ್ ಟ್ರಸ್ಟ್ ವಿರುದ್ಧ ಜಾರಿ ನಿರ್ದೇಶನಾಲಯ (ED) ಹಣ ವರ್ಗಾವಣೆ ಪ್ರಕರಣದಲ್ಲಿ ಚಾರ್ಜ್‌ಶೀಟ್ ಸಲ್ಲಿಸಿದೆ. ದಿಲ್ಲಿಯ ಕೆಂಪು ಕೋಟೆ ಬಳಿ ಕಳೆದ ವರ್ಷ ನ.10ರಂದು ನಡೆದ ಭಯೋತ್ಪಾದಕ ದಾಳಿಗೆ ಸಂಬಂಧಿಸಿದ ಹಣಕಾಸು ತನಿಖೆಯ ಭಾಗವಾಗಿ ಈ ಕ್ರಮ ಕೈಗೊಳ್ಳಲಾಗಿದೆ. ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಅಡಿಯಲ್ಲಿ ಅಲ್-ಫಲಾಹ್ ವಿಶ್ವವಿದ್ಯಾಲಯದ ಕ್ಯಾಂಪಸ್‌ ನೊಳಗಿನ 54 ಎಕರೆ ಭೂಮಿ ಸೇರಿದಂತೆ ಒಟ್ಟು 139 ಕೋಟಿ ರೂ. ಮೌಲ್ಯದ ಆಸ್ತಿಯನ್ನು ED ಮುಟ್ಟುಗೋಲು ಹಾಕಿಕೊಂಡಿದೆ. ಶುಕ್ರವಾರ ಸಲ್ಲಿಸಲಾದ ಚಾರ್ಜ್‌ಶೀಟ್‌ನಲ್ಲಿ ಸಿದ್ದಿಕಿ ಹಾಗೂ ಅವರ ಕುಟುಂಬ ಸದಸ್ಯರು ವಿಶ್ವವಿದ್ಯಾಲಯದ ಕಾರ್ಯಾಚರಣೆಯಲ್ಲಿ ಆರ್ಥಿಕ ಅಕ್ರಮಗಳಲ್ಲಿ ತೊಡಗಿದ್ದ ಕುರಿತು ಸಾಕಷ್ಟು ಪುರಾವೆಗಳಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ED ನಡೆಸಿದ ತನಿಖೆಯ ಪ್ರಕಾರ, ಸಿದ್ದಿಕಿ ಕುಟುಂಬದ ನಿಯಂತ್ರಣದಲ್ಲಿರುವ ಸಂಸ್ಥೆಗಳು ವಿಶ್ವವಿದ್ಯಾಲಯದ ಹಾಸ್ಟೆಲ್ ಅಡುಗೆ ಹಾಗೂ ವಿಶ್ವವಿದ್ಯಾಲಯ–ಆಸ್ಪತ್ರೆ ಸಂಕೀರ್ಣದ ನಿರ್ಮಾಣ ಕಾಮಗಾರಿಗಳ ಒಪ್ಪಂದಗಳನ್ನು ಪಡೆದಿದ್ದವು. ಅಲ್ಲದೆ, ಅಲ್-ಫಲಾಹ್ ಚಾರಿಟೇಬಲ್ ಟ್ರಸ್ಟ್ ವಿಶ್ವವಿದ್ಯಾಲಯದ ನಿಧಿಗಳನ್ನು ಬಳಸಿಕೊಂಡು ಭೂಸ್ವಾಧೀನ ಮಾಡಿಕೊಂಡಿರುವುದೂ ಪತ್ತೆಯಾಗಿದೆ. ವಿಶ್ವವಿದ್ಯಾಲಯವು ತನ್ನ ಮಾನ್ಯತೆ ಕುರಿತು ಮೋಸದ ಹಾಗೂ ದಾರಿತಪ್ಪಿಸುವ ಹೇಳಿಕೆಗಳನ್ನು ನೀಡುವ ಮೂಲಕ ವಿದ್ಯಾರ್ಥಿಗಳು ಮತ್ತು ಪೋಷಕರನ್ನು ವಂಚಿಸಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ, ನವೆಂಬರ್ 18ರಂದು ಸಿದ್ದಿಕಿಯನ್ನು ಈಡಿ ಬಂಧಿಸಿತ್ತು. ಸುಳ್ಳು ಮಾನ್ಯತೆ ಹಕ್ಕುಗಳ ಮೂಲಕ ವಿಶ್ವವಿದ್ಯಾಲಯ ಮತ್ತು ಅದರ ನಿಯಂತ್ರಣ ಟ್ರಸ್ಟ್ ಕನಿಷ್ಠ 415.10 ಕೋಟಿ ಮೌಲ್ಯದ ಅಪರಾಧದ ಆದಾಯವನ್ನು ಗಳಿಸಿವೆ ಎಂದು ಈಡಿ ನ್ಯಾಯಾಲಯಕ್ಕೆ ತಿಳಿಸಿತ್ತು. ಈ ಪ್ರಕರಣವು ವೈಟ್-ಕಾಲರ್ ಭಯೋತ್ಪಾದನಾ ಜಾಲಕ್ಕೆ ಸಂಬಂಧಿಸಿದ ವಿಶಾಲ ತನಿಖೆಯ ಭಾಗವಾಗಿದ್ದು, ಇದುವರೆಗೆ ಮೂವರು ವೈದ್ಯರು ಸೇರಿದಂತೆ ಎರಡು ಡಜನ್‌ಗೂ ಹೆಚ್ಚು ಮಂದಿಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆ ಹಾಗೂ ಜಮ್ಮು–ಕಾಶ್ಮೀರ ಪೊಲೀಸರು ಬಂಧಿಸಿದ್ದಾರೆ. ಕಳೆದ ವರ್ಷ ನ.10ರಂದು ಅಲ್-ಫಲಾಹ್ ವೈದ್ಯಕೀಯ ಕಾಲೇಜಿನ ವೈದ್ಯ ಉಮರ್-ಉನ್-ನಬಿ, ಕೆಂಪು ಕೋಟೆಯ ಹೊರಭಾಗದಲ್ಲಿ ಆತ್ಮಹತ್ಯಾ ಕಾರು ಬಾಂಬ್ ದಾಳಿ ನಡೆಸಿದ್ದು, ಘಟನೆಯಲ್ಲಿ ಕನಿಷ್ಠ 11 ಮಂದಿ ಮೃತಪಟ್ಟಿದ್ದರು. ಈ ಸ್ಫೋಟದ ಭಯೋತ್ಪಾದನಾ ಆಯಾಮವನ್ನು ಪ್ರತ್ಯೇಕವಾಗಿ ತನಿಖೆ ನಡೆಸಲಾಗುತ್ತಿದೆ. ED ಮಾಹಿತಿ ಪ್ರಕಾರ, ಸಿದ್ದಿಕಿಯ ಪುತ್ರ ಅಫ್ಹಾಮ್ ಅಹ್ಮದ್ ಮತ್ತು ಪುತ್ರಿ ಅಫಿಯಾ ಸಿದ್ದಿಕಾ ಬ್ರಿಟಿಷ್ ಪ್ರಜೆಗಳಾಗಿರುವುದನ್ನು ಸೂಚಿಸುವ ಕೆಲವು ವಿದೇಶಿ ದಾಖಲೆಗಳು ಪತ್ತೆಯಾಗಿದ್ದು, ಅವರ ಪೌರತ್ವ ಸ್ಥಿತಿಯ ಪರಿಶೀಲನೆ ಮುಂದುವರಿದಿದೆ. ಫರಿದಾಬಾದ್‌ನ ಧೌಜ್ ಪ್ರದೇಶದಲ್ಲಿರುವ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಸಂಕೀರ್ಣದ ನಿರ್ಮಾಣ ಸೇರಿದಂತೆ ಹಲವು ಪ್ರಮುಖ ವಹಿವಾಟುಗಳಲ್ಲಿ ಸಂಬಂಧಿತ-ಪಕ್ಷ ನಿಧಿಗಳ ತಿರುವು ನಡೆದಿರುವುದು ತನಿಖೆಯಲ್ಲಿ ಬಹಿರಂಗವಾಗಿದೆ. ಈ ಕಾಮಗಾರಿಗಳನ್ನು ಸಿದ್ದಿಕಿಯ ಇಬ್ಬರು ಮಕ್ಕಳು ತಲಾ 49% ಪಾಲು ಹೊಂದಿರುವ ಹಾಗೂ ಉಳಿದ 2% ಪಾಲು ಒಬ್ಬ ಉದ್ಯೋಗಿಯದ್ದಾಗಿರುವ ಪಾಲುದಾರಿಕೆ ಸಂಸ್ಥೆ ನಿರ್ವಹಿಸುತ್ತಿದೆ ಎಂದು ಈಡಿ ಅಧಿಕಾರಿಗಳು ತಿಳಿಸಿದ್ದಾರೆ.

ವಾರ್ತಾ ಭಾರತಿ 16 Jan 2026 8:37 pm

ಆಸ್ಟ್ರೇಲಿಯನ್ ಓಪನ್‌ನಲ್ಲಿ ರೋಜರ್ ಫೆಡರರ್! 12ನೇ ರ್‍ಯಾಂಕ್ ಆಟಗಾರನಿಗೆ ಸೋಲುಣಿಸಿದ ಮಾಜಿ ಟೆನಿಸ್ ದೊರೆ

ಸ್ವಿಟ್ಜರ್ಲೆಂಡ್ ನ ಟೆನಿಸ್ ದಂತಕತೆ ರೋಜರ್ ಫೆಡರರ್ ಅವರು ಇದೀಗ ಆಸ್ಟ್ರೇಲಿಯನ್ ಓಪನ್ ಟೂರ್ನಿಯಲ್ಲಿ ಭಾಗವಹಿಸಿ ಅಭಿಮಾನಿಗಳನ್ನು ರಂಜಿಸಿದರು. 2022ರಲ್ಲಿ ನಿವೃತ್ತಿ ಪಡೆದ ಬಳಿಕ ಅವರು ಮೊದಲ ಬಾರಿ ಮೆಲ್ಬೋರ್ನ್ ಪಾರ್ಕ್‌ಗೆ ಮರಳಿದ್ದಾರೆ. ಇದೊಂದು ಪ್ರದರ್ಶನ ಪಂದ್ಯವಾಗಿತ್ತು ಎಂಬುದು ವಿಶೇಷ. ನಾರ್ವೆಯ ರೂಡ್ ವಿರುದ್ಧ ಆಡಿದ ಫೆಡರರ್ ಅವರು ತಮ್ಮ ಸಿಗ್ನೇಚರ್ ಶಾಟ್‌ಗಳ ಮೂಲಕ ಪ್ರೇಕ್ಷಕರನ್ನು ಆನಂದಿಸಿದ್ದಲ್ಲದೆ ಟೈಬ್ರೇಕರ್ ನಲ್ಲಿ ಪಂದ್ಯ ಗೆದ್ದರು. ಶನಿವಾರ ಸಹ ಅವರು ಮತ್ತೊಂದು ಪ್ರದರ್ಶನ ಪಂದ್ಯದಲ್ಲಿ ಆಡಲಿದ್ದಾರೆ.

ವಿಜಯ ಕರ್ನಾಟಕ 16 Jan 2026 8:37 pm

ಕಲಬುರಗಿ | 77ನೇ ಗಣರಾಜ್ಯೋತ್ಸವ ನಿಮಿತ್ತ ಪೂರ್ವಭಾವಿ ಸಭೆ

ಸಕಲ ಸಿದ್ಧತೆ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಫೌಝಿಯಾ ತರನ್ನುಮ್ ಸೂಚನೆ

ವಾರ್ತಾ ಭಾರತಿ 16 Jan 2026 8:35 pm

2 ನಾಟಿ ಕೋಳಿ ಕದ್ದು ಸಂಕ್ರಾಂತಿ ಬಾಡೂಟ ಮಾಡಿ ಒಂದೇ ದಿನಕ್ಕೆ ಸಿಕ್ಕಬಿದ್ದ ಕಳ್ಳರು; ಇದು ಚಿಕನ್ ಮಸಾಲೆ ಎಡವಟ್ಟು!

ಜಗಳೂರಿನಲ್ಲಿ ತವರು ಮನೆಯವರು ನೀಡಿದ್ದ ನಾಟಿ ಕೋಳಿಗಳನ್ನು ಕದ್ದೊಯ್ದ ಯುವಕರು, ಅದೇ ಮನೆಯ ಕಿರಾಣಿ ಅಂಗಡಿಗೆ ಬಂದು ಚಿಕನ್ ಮಸಾಲಾ ಖರೀದಿಸಿ ಸಿಕ್ಕಿಬಿದ್ದಿದ್ದಾರೆ. ಮಕರ ಸಂಕ್ರಾಂತಿ ಹಬ್ಬದಂದು ಕೋಳಿಗಳನ್ನು ಕದ್ದು, ಬಾಡೂಟ ಮಾಡಿ ಉಂಡು ಒಂದೇ ದಿನದಲ್ಲಿ ಪೊಲೀಸರ ಬಲೆಗೆ ಬಿದ್ದಿದ್ದಾರೆ.

ವಿಜಯ ಕರ್ನಾಟಕ 16 Jan 2026 8:31 pm

Maharashtra Civic Polls 2026 : ಓವೈಸಿ ಅಬ್ಬರಕ್ಕೆ ಕಾಂಗ್ರೆಸ್ ಕಂಗಾಲು, 5 ಪಾಲಿಕೆಗಳಲ್ಲಿ AIMIM ಮುಂದು

BMC Election 2026 : ಕಳೆದ ಲೋಕಸಭಾ ಮತ್ತು ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲೂ ಹಲವು ಕ್ಷೇತ್ರಗಳಲ್ಲಿ ಅಸಾದುದ್ದೀನ್ ಓವೈಸಿಯವರ ಪಾರ್ಟಿ, ಮಹಾವಿಕಾಸ್ ಆಘಾಡಿಗೆ ಏಟನ್ನು ನೀಡಿತ್ತು. ಈಗ, ರಾಜ್ಯದ ಪಾಲಿಕೆ ಚುನಾವಣೆಯಲ್ಲೂ ಎಐಎಂಐಎಂ, ಹಲವೆಡೆ ಉತ್ತಮ ಪ್ರದರ್ಶನವನ್ನು ನೀಡಿದೆ. ಆ ಮೂಲಕ, ತಮ್ಮ ಪಾರ್ಟಿಯನ್ನು ಬಿಜೆಪಿಯ ಬಿಟೀಂ ಎಂದ ಕರೆದ, ರಾಹುಲ್ ಗಾಂಧಿಗೆ ಸಂದೇಶವನ್ನು ಓವೈಸಿ ರವಾನಿಸಿದ್ದಾರೆ.

ವಿಜಯ ಕರ್ನಾಟಕ 16 Jan 2026 8:31 pm

ಜ.17: ಎಸ್‌ಐಆರ್ ಬಗ್ಗೆ ಮಾಹಿತಿ ಕಾರ್ಯಾಗಾರ

ಮಂಗಳೂರು, ಜ.16: ಸಮಾನ ಮನಸ್ಕ ಸಂಘಟನೆಗಳು ಎಸ್‌ಐಆರ್ ಬಗ್ಗೆ ಮಾಹಿತಿ ನೀಡುವ ಸಲುವಾಗಿ ನಗರದ ಬಲ್ಮಠದ ಸಹೋದಯ ಹಾಲ್‌ನಲ್ಲಿ ಜ.17ರಂದು ಬೆಳಗ್ಗೆ 10ಕ್ಕೆ ಕಾರ್ಯಾಗಾರ ಹಮ್ಮಿಕೊಂಡಿದೆ. ಮತದಾನ ದೇಶದ ಪ್ರತಿಯೊಬ್ಬ ನಾಗರಿಕನ ಹಕ್ಕಾಗಿದೆ. ಮತದಾನದ ಹಕ್ಕನ್ನು ದಾಖಲೆ ಕೊರತೆ ಮತ್ತಿತರ ಕಾರಣ ಗಳಿಗಾಗಿ ವ್ಯವಸ್ಥಿತವಾಗಿ ಕಸಿಯುತ್ತಿರುವುದು ಪ್ರಜಾಪ್ರಭುತ್ವ ಮತ್ತು ಸಂವಿಧಾನ ವಿರೋಧಿ ಕೃತ್ಯವಾಗಿದೆ. ಇದರಿಂದ ದಲಿತ, ಹಿಂದುಳಿದ, ಅಲ್ಪಸಂಖ್ಯಾತ ಹಾಗೂ ಆದಿವಾಸಿಗಳ ಸಹಿತ ಶೋಷಿತ ಸಮುದಾಯಗಳು ಸಂವಿಧಾನಬದ್ಧ ಹಕ್ಕನ್ನು ಕಳೆದುಕೊಳ್ಳಲಿವೆ. ಕೇಂದ್ರ ಸರಕಾರದ ಈ ಅಪಾಯಕಾರಿ ನಡೆಯ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಹಮ್ಮಿಕೊಳ್ಳಲಾದ ಕಾರ್ಯಾಗಾರದಲ್ಲಿ ಚಿಂತಕ ಶಿವಸುಂದರ್ ಹಾಗೂ ಹೈಕೋರ್ಟ್‌ನ ಹಿರಿಯ ನ್ಯಾಯವಾದಿ ಕ್ಲಿಪ್ಲನ್ ಡಿ. ರೊಝಾರಿಯೋ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.

ವಾರ್ತಾ ಭಾರತಿ 16 Jan 2026 8:29 pm

ಕಲಬುರಗಿ | ಸಿದ್ಧಬಸವೇಶ್ವರರ 71ನೇ ಜಾತ್ರಾಮಹೋತ್ಸವ

ಕಾಯಕ-ದಾಸೋಹಕ್ಕೆ ದ್ಯೋತಕ ಬಬಲಾದಿಮಠ: ಅಪ್ಪಾರಾವ ಅಕ್ಕೋಣಿ

ವಾರ್ತಾ ಭಾರತಿ 16 Jan 2026 8:27 pm

ಮೀಫ್‌ನಿಂದ ಉಚಿತ ಹೆಚ್ಚುವರಿ ನೀಟ್/ಸಿಇಟಿ ಸೀಟುಗಳು ಲಭ್ಯ

ಮಂಗಳೂರು, ಜ.16: ಮುಸ್ಲಿಂ ಶಿಕ್ಷಣ ಸಂಸ್ಥೆಗಳ ಒಕ್ಕೂಟ ಕೇಂದ್ರ ಕಚೇರಿ ಮಂಗಳೂರು ಇದರ ವತಿಯಿಂದ ಅಡ್ಯಾರ್‌ನಲ್ಲಿರುವ ಬರಕಾ ಇಂಟರ್‌ನ್ಯಾಷನಲ್ ಶಾಲೆ ಮತ್ತು ಕಾಲೇಜಿನ ಸಹಯೋಗದಲ್ಲಿ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗಾಗಿ ಉಚಿತ 45 ದಿವಸಗಳ ನೀಟ್/ಸಿಇಟಿ ಕ್ರ್ಯಾಶ್ ಕೋರ್ಸ್ ಏರ್ಪಡಿಸಲಾಗಿದೆ. ಈ ವಿದ್ಯಾಸಂಸ್ಥೆಯು ಉಚಿತ 25 ಸೀಟುಗಳ ಸೌಲಭ್ಯ ಒದಗಿಸುವುದರೊಂದಿಗೆ ಮೀಫ್‌ನಿಂದ ಉಚಿತ ಸೀಟುಗಳ ಸಂಖ್ಯೆಯು 200 ರಿಂದ 225ಕ್ಕೆ ಹೆಚ್ಚುವರಿಯಾಗಿದೆ. ವಿದ್ಯಾರ್ಥಿಯು ಪಿಯುಸಿ (ವಿಜ್ಞಾನ) ಸಿದ್ದತಾ ಪರೀಕ್ಷೆಯಲ್ಲಿ ಶೇ.80ಕ್ಕಿಂತ ಹೆಚ್ಚು ಅಂಕ ಗಳಿಸಿರಬೇಕು.ಮೀಫ್ ವಿದ್ಯಾ ಸಂಸ್ಥೆಯಲ್ಲಿ ಮತ್ತು ಸರಕಾರಿ ಪಿಯು ಕಾಲೇಜಿನಲ್ಲಿ ಕಲಿತ ವಿದ್ಯಾರ್ಥಿಗಳಿಗೆ ಆಯ್ಕೆಯಲ್ಲಿ ಪ್ರಥಮ ಪ್ರಾಶಸ್ತ್ಯ ನೀಡಲಾ ಗುವುದು. ತರಗತಿಯು ಮಾರ್ಚ್ 21ರಿಂದ ಆರಂಭಗೊಳ್ಳಲಿದೆ. ನಿಗದಿತ ನಮೂನೆಯಲ್ಲಿ ಅರ್ಜಿ ಸಲ್ಲಿಸಲು ಜನವರಿ 21 ಕೊನೆಯ ದಿನವಾಗಿದೆ. ಸೀಮಿತ ಸೀಟುಗಳು ಮಾತ್ರ ಲಭ್ಯವಿರುವುದರಿಂದ ಮೊದಲು ನೋಂದಾಯಿಸುವವರಿಗೆ ಆದ್ಯತೆ ನೀಡಲಾಗುವುದು. ನಿಗದಿತ ಅರ್ಜಿ ನಮೂನೆಗಾಗಿ ಸ್ಥಳೀಯ ಮೀಫ್ ವಿದ್ಯಾ ಸಂಸ್ಥೆಗಳ ಪ್ರಾಂಶುಪಾಲರನ್ನು ಅಥವಾ ಮೀಫ್ ಕಚೇರಿಯನ್ನು ಮತ್ತು ಹೆಚ್ಚಿನ ಮಾಹಿತಿಗಾಗಿ ಮೀಫ್ ಮೊ.ಸಂ: 8792115666ನ್ನು ಸಂಪರ್ಕಿಸ ಬಹುದು ಎಂದು ಕೇಂದ್ರ ಸಮಿತಿಯ ಅಧ್ಯಕ್ಷ ಮೂಸಬ್ಬ ಪಿ.ಬ್ಯಾರಿ ಜೋಕಟ್ಟೆ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ವಾರ್ತಾ ಭಾರತಿ 16 Jan 2026 8:23 pm

ಬಿಜೆಪಿ ಆಡಳಿತದ ರಾಜ್ಯಗಳಲ್ಲಿ ಬಂಗಾಳಿ ಮಾತನಾಡುವ ಕಾರಣಕ್ಕೆ ವಲಸೆ ಕಾರ್ಮಿಕರಿಗೆ ಕಿರುಕುಳ: ಮಮತಾ ಬ್ಯಾನರ್ಜಿ ಆರೋಪ

ಕೋಲ್ಕತಾ, ಜ. 16: ಬಿಜೆಪಿ ಆಡಳಿತದ ರಾಜ್ಯಗಳಲ್ಲಿ ಬಂಗಾಳಿ ಮಾತನಾಡುವ ಕಾರಣಕ್ಕೆ ವಲಸೆ ಕಾರ್ಮಿಕರಿಗೆ ಕಿರುಕುಳ ನೀಡಲಾಗುತ್ತಿದೆ ಎಂದು ಪಶ್ಚಿಮಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಶುಕ್ರವಾರ ಆರೋಪಿಸಿದ್ದಾರೆ. ಆಡಳಿತಾತ್ಮಕ ಕಾರ್ಯಕ್ರಮದಲ್ಲಿ ಭಾಗವಹಿಸಲು ಉತ್ತರ ಬಂಗಾಳಕ್ಕೆ ತೆರಳಿದ ಸಂದರ್ಭ ಮಾತನಾಡಿದ ಮಮತಾ ಬ್ಯಾನರ್ಜಿ, 2026ರ ವಿಧಾನ ಸಭೆ ಚುನಾವಣೆಯಲ್ಲಿ ಗೆಲ್ಲಲು ಸಾಧ್ಯವಿಲ್ಲ ಎಂಬುದು ಬಿಜೆಪಿಗೆ ಮನದಟ್ಟಾಗಿದೆ. ಆದುದರಿಂದ ಅದು ರಾಜ್ಯದಲ್ಲಿ ಗಲಭೆ ಪ್ರಚೋದಿಸಲು ಯೋಜಿಸುತ್ತಿದೆ ಎಂದಿದ್ದಾರೆ. ಪಶ್ಚಿಮಬಂಗಾಳದ ಹೊರಗೆ ವಲಸೆ ಕಾರ್ಮಿಕರ ಮೇಲಿನ ದಾಳಿಯ ಕುರಿತಂತೆ ಮುರ್ಶಿದಾಬಾದ್‌ನ ಬೆಲಡಾಂಗಾದಲ್ಲಿ ನಡೆದ ಪ್ರತಿಭಟನೆ ಉಲ್ಲೇಖಿಸಿದ ಮಮತಾ ಬ್ಯಾನರ್ಜಿ, ಅಲ್ಪ ಸಂಖ್ಯಾತ ಸಮುದಾಯದ ಆಕ್ರೋಶ ನ್ಯಾಯಬದ್ಧವಾಗಿತ್ತು. ವಲಸೆ ಕಾರ್ಮಿಕರ ಮೇಲೆ ಪದೇ ಪದೇ ದಾಳಿ ಘಟನೆಗಳು ಈ ಪ್ರತಿಭಟನೆಗೆ ಕಾರಣ ಎಂದಿದ್ದಾರೆ. ‘‘ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಮಾತ್ರ ಪಶ್ಚಿಮ ಬಂಗಾಳದ ವಲಸೆ ಕಾರ್ಮಿಕರ ಮೇಲೆ ಹಲ್ಲೆ ನಡೆಯುತ್ತಿದೆ. ನಾವು ಅವರ ಕುಟುಂಬಕ್ಕೆ ಬೆಂಬಲವಾಗಿ ನಿಲ್ಲುತ್ತೇವೆ’’ ಎಂದು ಅವರು ಪ್ರತಿಪಾದಿಸಿದ್ದಾರೆ. ಪಶ್ಚಿಮಬಂಗಾಳದ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್)ಯಲ್ಲಿ ಬದಲಾವಣೆ ಮಾಡಿರುವುದಕ್ಕೆ ಚುನಾವಣಾ ಆಯೋಗವನ್ನು ತರಾಟೆಗೆ ತೆಗೆದುಕೊಂಡ ಮಮತಾ ಬ್ಯಾನರ್ಜಿ, ಮತದಾರರ ಪಟ್ಟಿ ಪರಿಷ್ಕರಣೆಗೆ ಸಂಬಂಧಿಸಿದ ಆತಂಕದಿಂದ ಸುಮಾರು 100 ಮಂದಿ ಮೃತಪಟ್ಟಿದ್ದಾರೆ ಎಂದು ಹೇಳಿದ್ದಾರೆ. ‘‘ನಿಮ್ಮ ಸ್ಥಾನದ ಗೌರವ, ಪಾರದರ್ಶಕತೆಯನ್ನು ಕಾಪಾಡಿ, ಆ ಬಳಿಕ ಮಾತ್ರವೇ ಜನರು ನಿಮಗೆ ಗೌರವ ನೀಡುತ್ತಾರೆ’’ ಎಂದು ಮಮತಾ ಬ್ಯಾನರ್ಜಿ ಮುಖ್ಯ ಚುನಾವಣಾ ಆಯುಕ್ತರಿಗೆ ಕಿವಿಮಾತು ಹೇಳಿದ್ದಾರೆ.

ವಾರ್ತಾ ಭಾರತಿ 16 Jan 2026 8:20 pm

ಮುಕುಲ್ ರಾಯ್‌ರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಿದ ಕಲ್ಕತ್ತಾ ಹೈಕೋರ್ಟ್ ತೀರ್ಪಿಗೆ ಸುಪ್ರೀಂ ಕೋರ್ಟ್ ತಡೆ

ಬಿಜೆಪಿಯಿಂದ ತೃಣಮೂಲ ಕಾಂಗ್ರೆಸ್‌ಗೆ ಪಕ್ಷಾಂತರಗೊಂಡಿದ್ದ ಮುಕುಲ್ ರಾಯ್‌

ವಾರ್ತಾ ಭಾರತಿ 16 Jan 2026 8:20 pm

ಎಸ್‌ಐಆರ್| ಪಶ್ಚಿಮಬಂಗಾಳದಲ್ಲಿ ಮತ್ತೋರ್ವ ಬಿಎಲ್‌ಒ ಮೃತ್ಯು

ಮೃತಪಟ್ಟ ಬಿಎಲ್‌ಒಗಳ ಸಂಖ್ಯೆ 9ಕ್ಕೆ ಏರಿಕೆ

ವಾರ್ತಾ ಭಾರತಿ 16 Jan 2026 8:20 pm

ಜ.18ರಂದು ಮಾನ್ವಿಯಲ್ಲಿ 121 ಜೋಡಿಗಳ ಸಾಮೂಹಿಕ ವಿವಾಹ : ತಹಶೀಲ್ದಾರ್, ಅಧಿಕಾರಿಗಳಿಂದ ಸ್ಥಳ ಪರಿಶೀಲನೆ

ಮಾನ್ವಿ: ದಾರುಸ್ಸಲಾಮ್ ಫೌಂಡೇಶನ್ ವತಿಯಿಂದ ಮಾನ್ವಿ ಪಟ್ಟಣದ ಎಪಿಎಂಸಿ ಮೈದಾನದಲ್ಲಿ ಭಾನುವಾರ ಆಯೋಜಿಸಲಾಗಿರುವ ಮುಸ್ಲಿಂ ಸಮುದಾಯದ 121 ಜೋಡಿಗಳ ಬೃಹತ್ ಸಾಮೂಹಿಕ ವಿವಾಹ ಕಾರ್ಯಕ್ರಮದ ಸಿದ್ಧತೆಗಳನ್ನು ತಹಶೀಲ್ದಾರ್ ಭೀಮರಾಯ ರಾಮಸಮುದ್ರ ಹಾಗೂ ಅಧಿಕಾರಿಗಳ ತಂಡ ಪರಿಶೀಲಿಸಿತು. ಸ್ಪೀಕರ್ ಯು.ಟಿ.ಖಾದರ್, ಸಚಿವರಾದ ಸತೀಶ್ ಜಾರಕಿಹೊಳಿ, ಎನ್.ಎಸ್.ಬೋಸರಾಜು ಸೇರಿದಂತೆ ಹಲವು ಗಣ್ಯರು ಭಾಗವಹಿಸುತ್ತಿರುವ ಹಿನ್ನೆಲೆಯಲ್ಲಿ, ವೇದಿಕೆ ಹಾಗೂ ಪೆಂಡಾಲ್ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ನಿರ್ಮಿಸಲು ಅಧಿಕಾರಿಗಳು ಸೂಚಿಸಿದರು. ಸ್ಥಳ ಪರಿಶೀಲನೆಯ ನಂತರ ಮಾತನಾಡಿದ ತಹಶೀಲ್ದಾರ್ ಭೀಮರಾಯ ರಾಮಸಮುದ್ರ, 121 ಜೋಡಿಗಳ ವಿವಾಹ ನಡೆಯುತ್ತಿರುವುದರಿಂದ ತಾಲೂಕು ಆಡಳಿತದಿಂದ ಎಲ್ಲ ರೀತಿಯ ಸಹಕಾರ ನೀಡಲಾಗುತ್ತಿದೆ. ಮುಖ್ಯವಾಗಿ ಬಾಲ್ಯ ವಿವಾಹ ನಡೆಯದಂತೆ ತಡೆಯಲು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಲಾಗಿದ್ದು, ವಧು-ವರರ ದಾಖಲೆಗಳನ್ನು ಈಗಾಗಲೇ ಪರಿಶೀಲಿಸಲಾಗಿದೆ ಎಂದರು. ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ತಾಲೂಕು ಅಧಿಕಾರಿ ಭಾಗಯ್ಯ ನಾಯಕ ಮಾತನಾಡಿ, ಸಾಮೂಹಿಕ ವಿವಾಹವಾಗುವ ಪ್ರತಿ ಜೋಡಿಗೆ ಇಲಾಖೆಯಿಂದ 50 ಸಾವಿರ ರೂ. ಪ್ರೋತ್ಸಾಹ ಧನ ನೀಡಲಾಗುವುದು. ಅಲ್ಲದೆ, ಇಂತಹ ಉತ್ತಮ ಕಾರ್ಯಕ್ರಮ ಆಯೋಜಿಸಿರುವ ಸಂಸ್ಥೆಗೆ ಪ್ರತಿ ಜೋಡಿಗೆ 5 ಸಾವಿರ ರೂ.ಗಳಂತೆ ಧನಸಹಾಯ ನೀಡಲಾಗುವುದು ಎಂದು ಮಾಹಿತಿ ನೀಡಿದರು.  ಕಾರ್ಯಕ್ರಮದ ಆಯೋಜಕರು, ಫೌಂಡೇಶನ್ ಅಧ್ಯಕ್ಷ ಸೈಯದ್ ಅಕ್ಬರ್ ಪಾಷಾ ಹುಸೇನಿ ಮಾತನಾಡಿ, ಬಡ ಹಾಗೂ ಮಧ್ಯಮ ವರ್ಗದವರು ವಿವಾಹಕ್ಕಾಗಿ ವರ್ಷಗಟ್ಟಲೆ ದುಡಿದ ಹಣವನ್ನು ಒಂದೇ ದಿನದಲ್ಲಿ ಖರ್ಚು ಮಾಡಿ ಸಾಲದ ಸುಳಿಗೆ ಸಿಲುಕುತ್ತಿದ್ದಾರೆ. ಇದನ್ನು ತಪ್ಪಿಸಲು ಸಾಮೂಹಿಕ ವಿವಾಹಗಳು ಜಿಲ್ಲೆ ಹಾಗೂ ರಾಜ್ಯಕ್ಕೆ ವಿಸ್ತರಣೆಯಾಗಬೇಕು. ವಿವಾಹವಾಗುವ ಜೋಡಿಗಳಿಗೆ ಗೃಹೋಪಯೋಗಿ ವಸ್ತುಗಳಾದ ಪಲಂಗು, ಅಲ್ಮಾರಿ ಹಾಗೂ ಅಡುಗೆ ಸಾಮಗ್ರಿಗಳನ್ನು ಉಚಿತವಾಗಿ ನೀಡಲಾಗುತ್ತಿದೆ ಎಂದರು. ಈ ಸಂದರ್ಭದಲ್ಲಿ ಜೆಸ್ಕಾಂ ಎಇಇ ವೈದ್ಯನಾಥ್, ಕಾಂಗ್ರೆಸ್ ಮುಖಂಡರಾದ ಖಾಲಿದ್ ಗುರು, ಸಿರಾಜ್ ಪಾಷಾ, ಟಿಎಪಿಸಿಎಂಎಸ್ ಅಧ್ಯಕ್ಷ ತಿಮ್ಮಾರೆಡ್ಡಿ ಭೋಗಾವತಿ ಸೇರಿದಂತೆ ಹಲವು ಪ್ರಮುಖರು ಉಪಸ್ಥಿತರಿದ್ದರು.      

ವಾರ್ತಾ ಭಾರತಿ 16 Jan 2026 8:16 pm

ಬೆಂಗಳೂರಿನಲ್ಲಿ ತಲೆ ಎತ್ತಲಿದೆ ಹೊಸ 1,000 ಹಾಸಿಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ; ಉಚಿತ ಚಿಕಿತ್ಸೆ! ಎಲ್ಲಿ?

ಬೆಂಗಳೂರಿನಲ್ಲಿ ಅಜೀಂ ಪ್ರೇಮ್‌ಜಿ ಫೌಂಡೇಶನ್ 1,000 ಹಾಸಿಗೆಗಳ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಿಸಲಿದೆ. ಇದು ಉಚಿತವಾಗಿ ಸುಧಾರಿತ ಆರೋಗ್ಯ ಸೇವೆಗಳನ್ನು ಒದಗಿಸಲಿದೆ. ಐದು ವರ್ಷಗಳಲ್ಲಿ ಸಂಪೂರ್ಣವಾಗಿ ಕಾರ್ಯಾರಂಭಿಸುವ ನಿರೀಕ್ಷೆಯಿದೆ. ಈ ಆಸ್ಪತ್ರೆ ನಿರ್ಮಾಣಕ್ಕೆ ಸುಮಾರು 1,000 ಕೋಟಿ ರೂಪಾಯಿ ವೆಚ್ಚವಾಗಲಿದೆ. ಹೆಚ್ಚಿನ ಹಾಸಿಗೆಗಳು ರೋಗಿಗಳಿಗೆ ಉಚಿತವಾಗಿ ಲಭ್ಯವಾಗಲಿವೆ.

ವಿಜಯ ಕರ್ನಾಟಕ 16 Jan 2026 8:16 pm

ರಾಷ್ಟ್ರಮಟ್ಟದ ಖೇಲೋ ಇಂಡಿಯಾ ಕರಾಟೆ: ಮುಹಮ್ಮದ್ ರಯ್ಯಾನ್ ಪ್ರಥಮ

ಉಜಿರೆ, ಜ.16: ಹಾಸನ ಜಿಲ್ಲಾ ಕರಾಟೆ ಅಸೋಸಿಯೇಶನ್ ಮತ್ತು ಮೌಲೆ ಶೂಟೋಕಾನ್ ಕರಾಟೆ ಡೊ ಅಸೋಸಿಯೇಶನ್ ಇಂಡಿಯಾ ಸಹಯೋಗದೊಂದಿಗೆ ಹಾಸನದ ಎಂಸಿಇ ಕಾಲೇಜಿನಲ್ಲಿ ಇತ್ತೀಚೆಗೆ ನಡೆದ ಹಾಸನ್ ಓಪನ್ 5ನೇ ರಾಷ್ಟ್ರ ಮಟ್ಟದ ಖೇಲೋ ಇಂಡಿಯಾ ಕರಾಟೆ ಚಾಂಪಿಯನ್ ಶಿಪ್‌ನಲ್ಲಿ ಕರಾಟೆಯ ಕಟಾ ಮತ್ತು ಫೈಟಿಂಗ್ ವಿಭಾಗದಲ್ಲಿ ಉಜಿರೆಯ ಮಹಮ್ಮದ್ ರಯ್ಯಾನ್ ಚಿನ್ನದ ಪದಕ ಹಾಗು ಟ್ರೋಫಿಯೊಂದಿಗೆ ಪ್ರಥಮ ಸ್ಥಾನ ಪಡೆದಿದ್ದಾರೆ. ಉಜಿರೆಯ ಅನುಗ್ರಹ ಆಂಗ್ಲ ಮಾಧ್ಯಮ ಶಾಲೆಯ 7ನೇ ತರಗತಿ ವಿದ್ಯಾರ್ಥಿಯಾಗಿರುವ ರಯ್ಯಾನ್ ಅವರು ಉಜಿರೆಯ ಉದ್ಯಮಿ ಬಿ. ಎಚ್. ಇಬ್ರಾಹಿಂ ಮತ್ತು ನೂರ್‌ಜಹಾನ್ ದಂಪತಿಯ ಪುತ್ರ. ರಯ್ಯಾನ್‌ಗೆ ಶಿಹಾನ್ ಅಬ್ದುಲ್ ರಹಿಮಾನ್ ತರಬೇತಿ ನೀಡಿದ್ದರು.

ವಾರ್ತಾ ಭಾರತಿ 16 Jan 2026 8:13 pm

ಇನ್‌ಸ್ಟಾಗ್ರಾಮ್‌ನಲ್ಲಿ ರೀಲ್ಸ್ ಹಾಕಿದ ಆರೋಪ: ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲು

ಮಂಗಳೂರು, ಜ.16: ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಮ್‌ನಲ್ಲಿ ಸಾರ್ವಜನಿಕರಿಗೆ ಭಯ ಹುಟ್ಟಿಸುವ ರೀತಿಯಲ್ಲಿ ರೀಲ್ಸ್ ಪೋಸ್ಟ್ ಮಾಡಿದ ಖಾತೆದಾರ ಅರ್ಮಾನ್ ಹಸನ್ ಎಂಬಾತನ ವಿರುದ್ಧ ಪಾಂಡೇಶ್ವರ ಠಾಣೆಯಲ್ಲಿ ಸ್ವಯಂ ಪ್ರೇರಿತ ಪ್ರಕರಣ ದಾಖಲಾಗಿದೆ. ಠಾಣಾ ಸಿಬ್ಬಂದಿ ಮಂಜುನಾಥ ಜ.15ರಂದು ಠಾಣೆಯಲ್ಲಿ ಸಾಮಾಜಿಕ ಜಾಲತಾಣ ಪರಿಶೀಲಿಸುತ್ತಿರುವಾಗ ಇನ್‌ಸ್ಟಾಗ್ರಾಮ್‌ನಲ್ಲಿ ಖಾತೆ ಹೊಂದಿರುವ ಅರ್ಮಾನ್ ಹಸನ್ ಎಂಬಾತ ಕೈಯಲ್ಲಿ ತಲವಾರು ಮತ್ತು ಕೊಡಲಿ ಹಿಡಿದುಕೊಂಡು ಮ್ಯೂಸಿಕ್‌ಗೆ ರೀಲ್ಸ್ ಮಾಡಿ ಇನ್ ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದ. ಆ ಹಿನ್ನಲೆಯಲ್ಲಿ ಪ್ರಕರಣ ದಾಖಲಾಗಿದೆ.

ವಾರ್ತಾ ಭಾರತಿ 16 Jan 2026 8:09 pm

ಸ್ಕೂಟರ್ ಡೆಲಿವರಿ ಹೆಸರಿನಲ್ಲಿ 57 ಸಾವಿರ ರೂ. ಆನ್‌ಲೈನ್ ವಂಚನೆ; ಪ್ರಕರಣ ದಾಖಲು

ಉಡುಪಿ, ಜ.16: ಸ್ಕೂಟರ್ ಡೆಲಿವರಿ ಹೆಸರಿನಲ್ಲಿ ಯುವಕನೋರ್ವನಿಗೆ ಸಾವಿರಾರು ರೂ. ಆನ್‌ಲೈನ್ ವಂಚನೆ ಎಸಗಿರುವ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಿಟ್ಟೂರಿನ ಅಕ್ಕಸಾಲಿ ಶಶಿಧರ್(28) ಎಂಬವರು ಫೇಸ್‌ಬುಕ್‌ನಲ್ಲಿ ಮಾರ್ಕೆಟ್ ಪ್ಲೇಸ್ ಎಂಬ ಆಯ್ಕೆಯಲ್ಲಿ ವಿವಿಧ ಬಗೆಯ ಸ್ಕೂಟರ್ ಮತ್ತು ಬೈಕ್‌ಗಳ ಚಿತ್ರಗಳಿದ್ದು, ಅದರಲ್ಲಿ ಒಂದು ಸ್ಕೂಟರ್ ಚಿತ್ರದ ಮೇಲೆ ಕ್ಲಿಕ್ ಮಾಡಿದಾಗ ವಾಟ್ಸಪ್ ತೆರೆಯಿತು. ಅದರಲ್ಲಿ ಅಪರಿಚಿತ ವ್ಯಕ್ತಿಯು ತನ್ನ ಹೆಸರು ಪ್ರದೀಪ್ ಕುಮಾರ್ ಎಂಬುದಾಗಿ ಹೇಳಿಕೊಂಡು ಸ್ಕೂಟರ್ ವಿಚಾರದಲ್ಲಿ ಮಾತುಕತೆ ನಡೆಸಿದ್ದನು. ಅಕ್ಕಸಾಲಿ ಶಶಿಧರ್ ಖರೀದಿಸಿದ ಸ್ಕೂಟರ್‌ಗೆ ಸಂಬಂಧಪಟ್ಟ ದಾಖಲೆ ಸಿದ್ಧ ಪಡಿಸಲು 1950ರೂ. ಕಳುಹಿಸುವಂತೆ ಜ.6ರಂದು ಪ್ರದೀಪ್ ಕುಮಾರ್ ತಿಳಿಸಿದ್ದು, ಅದನ್ನು ನಂಬಿದ ಶಶಿಧರ್, ಗೂಗಲ್ ಪೇ ಮೂಲಕ ಹಣ ಪಾವತಿ ಮಾಡಿ ದ್ದರು. ಅನಂತರ ಪ್ರದೀಪ್ ಕುಮಾರ್, ಸ್ಕೂಟರ್ ಪಡೆಯಲು ಡೆಲಿವರಿ ಚಾರ್ಜ್, ಜಿಪಿಎಸ್ ಚಾರ್ಜ್ ಮತ್ತು ಇತರೇ ಚಾರ್ಜ್‌ನ್ನು ನೀಡಬೇಕೆಂದು ಹೇಳಿದಂತೆ ಶಶಿಧರ್ ಒಟ್ಟು 57,450ರೂ. ಹಣ ಪಾವತಿಸಿದ್ದರು. ಆದರೆ ಆರೋಪಿ ಈವರೆಗೂ ಯಾವುದೇ ಸ್ಕೂಟರ್ ಡೆಲಿವೆರಿ ಮಾಡದೇ, ಹಣ ವಾಪಸ್ಸು ಹಿಂತಿರುಗಿಸದೇ ಆನ್‌ಲೈನ್‌ನಲ್ಲಿ ಮೋಸ ಮಾಡಿರುವುದಾಗಿ ದೂರಲಾಗಿದೆ.

ವಾರ್ತಾ ಭಾರತಿ 16 Jan 2026 8:07 pm

ಎರಡು ವರ್ಷದಲ್ಲಿ ಹೆಬ್ಬಾಳ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಲೋಕಾರ್ಪಣೆ : ಬೈರತಿ ಸುರೇಶ್

ಬೆಂಗಳೂರು : ಹೆಬ್ಬಾಳ ವಿಧಾನಸಭೆ ಕ್ಷೇತ್ರದಲ್ಲಿ ಸರಕಾರಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಕಾಮಗಾರಿ ಸದ್ಯದಲ್ಲೆ ಆರಂಭವಾಗಲಿದ್ದು, ಎರಡು ವರ್ಷದೊಳಗೆ ನಾಗರಿಕರ ಸೇವೆಗೆ ಲಭ್ಯವಾಗಲಿದೆ ಎಂದು ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ತಿಳಿಸಿದ್ದಾರೆ. ಶುಕ್ರವಾರ ಹೆಬ್ಬಾಳದ ಗೋಪಾಲ ರಾಮ ನಾರಾಯಣ ಸರಕಾರಿ ಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಂಗನವಾಡಿ ಕೇಂದ್ರಗಳಿಗೆ ಶಾಲಾ ಪೂರ್ವ ಕಿಟ್, ಫಲಾನುಭವಿ ವಿಕಲಚೇತನರಿಗೆ ವ್ಹೀಲ್ ಚೇರ್ ಮತ್ತು ಸಾಧನ ಸಲಕರಣೆಗಳನ್ನು ವಿತರಣೆ ಮಾಡಿ ಅವರು ಮಾತನಾಡಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೆಬ್ಬಾಳ ಕ್ಷೇತ್ರದ ಜನರ ಅನುಕೂಲಕ್ಕೆ ಒಂದು ಸುಸಜ್ಜಿತ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ಮೊದಲ ಹಂತದಲ್ಲಿ 75 ಕೋಟಿ ರೂಪಾಯಿಗಳ ವಿಶೇಷ ಅನುದಾನವನ್ನು ಮಂಜೂರು ಮಾಡಿದ್ದು, ಸದ್ಯದಲ್ಲಿಯೆ ಈ ಆಸ್ಪತ್ರೆಯ ನಿರ್ಮಾಣ ಕಾಮಗಾರಿ ಆರಂಭವಾಗಲಿದೆ. ಮುಂದಿನ ಎರಡು ವರ್ಷದಲ್ಲಿ ಕಾಮಗಾರಿಯನ್ನು ಪೂರ್ಣಗೊಳಿಸಿ ಸಾರ್ವಜನಿಕರ ಸೇವೆಗೆ ಅನುವು ಮಾಡಿಕೊಡಲಾಗುತ್ತದೆ ಎಂದು ಅವರು ತಿಳಿಸಿದರು. ರಾಜ್ಯ ಕಾಂಗ್ರೆಸ್ ಸರಕಾರ ಪಂಚ ಗ್ಯಾರಂಟಿಗಳನ್ನು ಜಾರಿಗೆ ತರುವ ಮೂಲಕ ಹಿಂದುಳಿದವರು, ಬಡವರು, ಮಧ್ಯಮ ವರ್ಗದವರು ಮತ್ತು ಅಲ್ಪಸಂಖ್ಯಾತರ ಹಿತರಕ್ಷಣೆ ಮಾಡುತ್ತಿದೆ. ಇದಕ್ಕಾಗಿ ವಾರ್ಷಿಕ 60 ಸಾವಿರ ಕೋಟಿ ರೂಪಾಯಿಗಳನ್ನು ವೆಚ್ಚ ಮಾಡುತ್ತಿದೆ. ಈ ಹಣ ರಾಜ್ಯದ ಜನತೆಯ ತೆರಿಗೆ ಹಣವಾಗಿದ್ದು, ಇದನ್ನು ಆ ಜನರ ಶ್ರೇಯೋಭಿವೃದ್ಧಿಗಾಗಿಯೆ ಖರ್ಚು ಮಾಡಬೇಕು. ಹೀಗಾಗಿ ಯಾವುದೆ ನಿರ್ಲಕ್ಷ್ಯ ಮಾಡದೆ ಸರಕಾರದ ಯೋಜನೆಗಳನ್ನು ಜನರಿಗೆ ತಲುಪಿಸಬೇಕೆಂದು ಬೈರತಿ ಸುರೇಶ್ ಅಧಿಕಾರಿಗಳಿಗೆ ಕಿವಿಮಾತು ಹೇಳಿದರು. ನಮ್ಮ ಸರಕಾರ ಮಹಿಳೆಯರು ಮತ್ತು ಮಕ್ಕಳ ಕಲ್ಯಾಣಕ್ಕಾಗಿ ಹಲವು ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತಂದಿದ್ದು, ಶಿಕ್ಷಣಕ್ಕೆ ಒತ್ತು ನೀಡುತ್ತಿದೆ. ಯಾವುದೆ ಮಗುವೂ ಶಿಕ್ಷಣದಿಂದ ವಂಚಿತವಾಗಬಾರದು ಎಂಬ ಉದ್ದೇಶದಿಂದ ಸರಕಾರಿ ಶಾಲೆಗಳ ಬಲವರ್ಧನೆ ಮಾಡುತ್ತಿದೆ ಎಂದು ಅವರು ಹೇಳಿದರು. ಹೆಬ್ಬಾಳದ ಸೌಂದರ್ಯಕ್ಕೆ ಆದ್ಯತೆ: ಬೆಂಗಳೂರು ನಗರದಲ್ಲಿ ಹೆಬ್ಬಾಳ ಕ್ಷೇತ್ರ ವ್ಯಾಪ್ತಿಯಲ್ಲಿ ಚಿಕ್ಕದಾಗಿ ಚೊಕ್ಕದಾಗಿದೆ. ಇಲ್ಲಿನ ಉದ್ಯಾನಗಳು, ಕೆರೆಗಳು, ರಸ್ತೆಗಳನ್ನು ಅಭಿವೃದ್ಧಿ ಮಾಡಲಾಗಿದ್ದು, ಕ್ಷೇತ್ರವನ್ನು ಇನ್ನಷ್ಟು ಸುಂದರಗೊಳಿಸಲು ಯೋಜನೆಗಳನ್ನು ರೂಪಿಸಲಾಗುತ್ತಿದೆ ಎಂದು ಬೈರತಿ ಸುರೇಶ್ ತಿಳಿಸಿದರು.

ವಾರ್ತಾ ಭಾರತಿ 16 Jan 2026 8:07 pm

ಇರಾನ್‌ನಲ್ಲಿ ಮುಂದುವರಿದ ಪ್ರತಿಭಟನೆ|ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಿಂದ ತುರ್ತು ಸಭೆ

ದಾಳಿ ಮಾಡಿದರೆ ತಕ್ಕ ಉತ್ತರ: ಅಮೆರಿಕಾಗೆ ಇರಾನ್ ಎಚ್ಚರ

ವಾರ್ತಾ ಭಾರತಿ 16 Jan 2026 8:06 pm

ಹೇರೂರು ಚಿಕ್ತಾಡಿಯಲ್ಲಿ ಬೋನಿಗೆ ಬಿದ್ದ ಚಿರತೆ

ಬೈಂದೂರು, ಜ.16: ಹೇರೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕಳೆದ ಹಲವಾರು ದಿನಗಳಿಂದ ಕಾಣಿಸಿಕೊ ಳ್ಳುತ್ತಿದ್ದ ಚಿರತೆಯೊಂದು ಅರಣ್ಯ ಇಲಾಖೆ ಇಟ್ಟ ಬೋನಿನಲ್ಲಿ ಸೆರೆಯಾಗಿದೆ. ಹಲವು ದಿನಗಳಿಂದ ಪರಿಸರದಲ್ಲಿ ಕಾಣಿಸಿಕೊಂಡು ಜನರಲ್ಲಿ ಭೀತಿ ಹುಟ್ಟಿಸಿದ್ದ ಚಿರತೆಯನ್ನು ಸಾರ್ವಜನಿಕರ ದೂರಿನ ಹಿನ್ನೆಲೆಯಲ್ಲಿ ಸೆರೆಗಾಗಿ ಅರಣ್ಯ ಇಲಾಖೆ ಕಾರ್ಯಾಚರಣೆಗೆ ಮುಂದಾಗಿತ್ತು. ಅದರಂತೆ ಹೇರೂರು ಗ್ರಾಮದ ಚಿಕ್ತಾಡಿ ಎಂಬಲ್ಲಿರುವ ಖಾಸಗಿ ತೋಟದಲ್ಲಿ ಅರಣ್ಯ ಅಧಿಕಾರಿಗಳು ಗುರುವಾರ ಬೋನು ಇರಿಸಿದ್ದರು. ಶುಕ್ರವಾರ ಮುಂಜಾನೆ ಆಹಾರ ಅರಸಿ ಬಂದ ಮೂರು ವರ್ಷದ ಹೆಣ್ಣು ಚಿರತೆ ಬೋನಿನಲ್ಲಿ ಸೆರೆಯಾಗಿರುವುದು ಕಂಡುಬಂದಿದೆ. ಸ್ಥಳಕ್ಕೆ ಬೈಂದೂರು ವಲಯ ಅರಣ್ಯಾಧಿಕಾರಿ ಜ್ಯೋತಿ ಸಂದೇಶ್ ಕುಮಾರ್, ಉಪವಲಯ ಅರಣ್ಯಾ ಧಿಕಾರಿ ಕೆ.ಸದಾಶಿವ, ಗಸ್ತು ಅರಣ್ಯ ಪಾಲಕ ಶೃತಿ ಗೌಡ, ಅರಣ್ಯ ವೀಕ್ಷಕ ಸುರೇಶ್ ಗೌಡ ಸ್ಥಳಕ್ಕೆ ಭೇಟಿ ನೀಡಿದ್ದು ಸೆರೆ ಹಿಡಿದ ಚಿರತೆಯನ್ನು ಸುರಕ್ಷಿತವಾಗಿ ರಕ್ಷಿತಾರಣ್ಯಕ್ಕೆ ಬಿಡಲಾಗಿದೆ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ವಾರ್ತಾ ಭಾರತಿ 16 Jan 2026 8:04 pm

ಛತ್ತೀಸ್‌ಗಡ| 52 ಮಾವೋವಾದಿಗಳ ಶರಣಾಗತಿ

ಬಿಜಾಪುರ,ಜ.16: ಛತ್ತೀಸ್‌ಗಡದ ಬಿಜಾಪುರದಲ್ಲಿ 21 ಮಹಿಳೆಯರು ಸೇರಿದಂತೆ 52 ಮಾವೋವಾದಿಗಳು ಗುರುವಾರ ಭದ್ರತಾ ಪಡೆಗಳ ಮುಂದೆ ಶರಣಾಗಿದ್ದು, ಈ ಪೈಕಿ 49 ಜನರ ಮೇಲೆ ಒಟ್ಟು 1.4 ಕೋಟಿ ರೂ.ಗಳ ಬಹುಮಾನವನ್ನು ಘೋಷಿಸಲಾಗಿತ್ತು. ಎಲ್ಲರೂ ಮಾವೋವಾದಿ ದಕ್ಷಿಣ ಉಪ ವಲಯ ಘಟಕಕ್ಕೆ ಸೇರಿದವರಾಗಿದ್ದಾರೆ. ಬುಧವಾರ ನೆರೆಯ ಸುಕ್ಮಾ ಜಿಲ್ಲೆಯಲ್ಲಿ 29 ಮಾವೋವಾದಿಗಳು ಶರಣಾಗಿದ್ದರು. ಜ.7ರಂದು ಸುಕ್ಮಾದಲ್ಲಿ 26 ಮತ್ತು ಒಂದು ದಿನದ ಬಳಿಕ ದಂತೇವಾಡಾದಲ್ಲಿ 63 ಮಾವೋವಾದಿಗಳು ಶರಣಾಗಿದ್ದರು. ಎಲ್ಲ ಶರಣಾಗತ ಮಾವೋವಾದಿಗಳಿಗೆ ತಕ್ಷಣದ ನೆರವಾಗಿ ತಲಾ 50,000ರೂ.ಗಳನ್ನು ನೀಡಲಾಗುವುದು ಮತ್ತು ಪುನರ್ವಸತಿಯನ್ನು ಕಲ್ಪಿಸಲಾಗುವುದು ಎಂದು ಬಿಜಾಪುರ ಎಸ್‌ಪಿ ಜಿತೇಂದ್ರ ಕುಮಾರ್ ಅವರನ್ನು ಉಲ್ಲೇಖಿಸಿ ಸುದ್ದಿಸಂಸ್ಥೆಯು ವರದಿ ಮಾಡಿದೆ. 2014 ಮತ್ತು 2025ರ ಡಿ.1ರ ನಡುವೆ 1,800ಕ್ಕೂ ಅಧಿಕ ಮಾವೋವಾದಿಗಳನ್ನು ಹತ್ಯೆಮಾಡಲಾಗಿದ್ದು,16,000ಕ್ಕೂ ಅಧಿಕ ಜನರನ್ನು ಬಂಧಿಸಲಾಗಿದೆ. ಈ ಅವಧಿಯಲ್ಲಿ 9,580ಕ್ಕೂ ಹೆಚ್ಚು ಮಾವೋವಾದಿಗಳು ಶರಣಾಗಿದ್ದಾರೆ ಎಂದು ಕೇಂದ್ರ ಸರಕಾರವು ಡಿ.16ರಂದು ಸಂಸತ್ತಿನಲ್ಲಿ ತಿಳಿಸಿತ್ತು.

ವಾರ್ತಾ ಭಾರತಿ 16 Jan 2026 8:01 pm

ಗಂಗೊಳ್ಳಿ ಗ್ರಾಮೋತ್ಸವ-2026 ಕಾರ್ಯಕ್ರಮ ಉದ್ಘಾಟನೆ

ಕುಂದಾಪುರ, ಜ.16: ಜನರಿಗೆ ಸರಕಾರದ ಸೌಲಭ್ಯ ದೊರಕಿಸಿಕೊಡುವ ಉದ್ದೇಶದಿಂದ ಸರಕಾರದ ವಿವಿಧ ಇಲಾಖೆಗಳ ಸಹಯೋಗದೊಂದಿಗೆ ಗ್ರಾಮೋತ್ಸವ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಜನರು ಸರಕಾರದ ಯೋಜನೆಗಳ ಸದುಪಯೋಗ ಪಡೆದುಕೊಳ್ಳಬೇಕು ಹಾಗೂ ಯೋಜನೆಗಳ ಮಾಹಿತಿಯನ್ನು ಪಡೆದುಕೊಂಡು ಅರ್ಹ ಫಲಾನುಭವಿಗಳಿಗೆ ದೊರಕಿಸಿ ಕೊಡುವ ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಗ್ರಾಮದ ಜನರಿಗೆ ಸೇವೆ ನೀಡುವ ಈ ಕಾರ್ಯಕ್ರಮಕ್ಕೆ ಉತ್ತಮ ಸ್ಪಂದನೆ ದೊರೆಯುತ್ತಿದೆ ಎಂದು ಗಂಗೊಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಜಯಂತಿ ಖಾರ್ವಿ ಹೇಳಿದ್ದಾರೆ. ಗಂಗೊಳ್ಳಿ ಗ್ರಾಮ ಪಂಚಾಯತ್, ಆರೋಗ್ಯ ಇಲಾಖೆ, ಕೃಷಿ ಇಲಾಖೆ, ಅರಣ್ಯ ಇಲಾಖೆ, ಪಶು ಸಂಗೋಪನಾ ಇಲಾಖೆ, ತೋಟಗಾರಿಕೆ ಇಲಾಖೆ ಹಾಗೂ ಮಹಿಳಾ ಮತುತಿ ಮಕ್ಕಳ ಕಲ್ಯಾಣ ಇಲಾಖೆ ಮತ್ತು ಗಂಗೋತ್ರಿ ಸಂಜೀವಿನಿ ಗ್ರಾಮ ಮಟ್ಟದ ಒಕ್ಕೂಟ ಗಂಗೊಳ್ಳಿ ಸಹಭಾಗಿತ್ವದಲ್ಲಿ ಬೈಂದೂರು ಉತ್ಸವ-2026ರ ಅಂಗವಾಗಿ ಗಂಗೊಳ್ಳಿಯ ಶ್ರೀವೀರೇಶ್ವರ ದೇವಸ್ಥಾನದ ವಠಾರದಲ್ಲಿ ಶುಕ್ರವಾರ ನಡೆದ ಗಂಗೊಳ್ಳಿ ಗ್ರಾಮೋತ್ಸವ-2026 ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು. ಕಾರ್ಯಕ್ರಮವನ್ನು ಗಂಗೊಳ್ಳಿಯ ಶ್ರೀವೀರೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ಜಿ.ಲಕ್ಷ್ಮೀನಾರಾಯಣ ಭಟ್ ಉದ್ಘಾಟಿಸಿದರು. ನೋಡೆಲ್ ಅಧಿಕಾರಿ, ಮೀನುಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕಿ ಆಶಾ, ಗ್ರಾಪಂ ಉಪಾಧ್ಯಕ್ಷ ತಬ್ರೇಜ್, ತಾಪಂ ಮಾಜಿ ಸದಸ್ಯ ಸುರೇಂದ್ರ ಖಾರ್ವಿ, ಗ್ರಾಪಂ ಮಾಜಿ ಉಪಾಧ್ಯಕ್ಷೆ ಪ್ರೇಮಾ ಸಿ.ಪೂಜಾರಿ, ಬೈಂದೂರು ಉತ್ಸವ ಸಮಿತಿ ಸಂಚಾಲಕ ಗಣೇಶ ಗಾಣಿಗ, ಕಾರ್ಯದರ್ಶಿ ಅನಿತಾ ಆರ್.ಕೆ., ಗಂಗೋತ್ರಿ ಸಂಜೀವಿನಿ ಗ್ರಾಮ ಮಟ್ಟದ ಒಕ್ಕೂಟದ ಅಧ್ಯಕ್ಷೆ ಶೋಭಾ, ಗ್ರಾಪಂ ಕಾರ್ಯದರ್ಶಿ ಅನೂಪ್ ಶೇಟ್ ಉಪಸ್ಥಿತರಿದ್ದರು. ಇದೇ ಸಂದರ್ಭ ಅಂಗನವಾಡಿ ಕಾರ್ಯಕರ್ತೆ ಫಿಲೋಮಿನಾ ಫೆರ್ನಾಂಡಿಸ್ ಅವರನ್ನು ಸನ್ಮಾನಿಸಿ ಗೌರವಿಸಲಾ ಯಿತು. ಪಿಡಿಒ ರವಿ ಸ್ವಾಗತಿಸಿದರು. ಸುಂದರ ಜಿ. ಕಾರ್ಯಕ್ರಮ ನಿರ್ವಹಿಸಿದರು. ಗ್ರಾಪಂ ಸಿಬ್ಬಂದಿ ನಾರಾಯಣ ಶ್ಯಾನುಭಾಗ್ ವಂದಿಸಿದರು.

ವಾರ್ತಾ ಭಾರತಿ 16 Jan 2026 7:57 pm

ಅಕ್ರಮ ಹಣ ವರ್ಗಾವಣೆಯಲ್ಲಿ ಮೆಹುಲ್ ಚೋಕ್ಸಿ ಪುತ್ರ ಶಾಮೀಲು: ED ಆರೋಪ

ಹೊಸದಿಲ್ಲಿ,ಜ.16: ಬಹುಕೋಟಿ ಪಂಜಾಬ್ ನ್ಯಾಶನಲ್ ಬ್ಯಾಂಕ್ ವಂಚನೆ ಹಗರಣದಲ್ಲಿ ತಲೆಮರೆಸಿಕೊಂಡ ಆರೋಪಿ ಮೆಹುಲ್‌ಚೋಕ್ಸಿಯ ಪುತ್ರನಾದ ರೋಹ್ ಚೋಕ್ಸಿ ಅಕ್ರಮ ಹಣ ವರ್ಗಾವಣೆಯಲ್ಲಿ ಸಕ್ರಿಯವಾಗಿ ಶಾಮೀಲಾಗಿದ್ದಾನೆಂದು ಜಾರಿ ನಿರ್ದೇಶನಾಲಯ ಶುಕ್ರವಾರ ತಿಳಿಸಿದೆ. ದಿಲ್ಲಿಯಲ್ಲಿರುವ ಮೇಲ್ಮನವಿ ಟ್ರಿಬ್ಯೂನಲ್‌ಗೆ ಸಲ್ಲಿಸಿದ ಲಿಖಿತ ಹೇಳಿಕೆಯಲ್ಲಿ ಈ ವಿಷಯವನ್ನು ದೃಢಪಡಿಸಿದೆ. ಮೆಹುಲ್‌ಚೋಕ್ಸಿ ಹಲವಾರು ಕಾಗದಪತ್ರಗಳಲ್ಲಿ ಮಾತ್ರವೇ ಇರುವ ಹಲವಾರು ಬೋಗಸ್ ಕಂಪೆನಿಗಳ ನಿರ್ದೇಶಕರಾಗಿದ್ದು, ಯಾವುದೇ ಸ್ಫುಟವಾದ ಉದ್ಯಮ ಚಟುವಟಿಕೆಯಿಲ್ಲದೆ ಕಾಲ್ಪನಿಕ ಹಣಕಾಸು ವರ್ಗಾವಣೆಗಳನ್ನು ಸೃಷ್ಟಿಸಿದ್ದರು ಮತ್ತು ಅಕ್ರಮ ಆದಾಯವನ್ನು ಸಕ್ರಮಗೊಳಿಸುತ್ತಿದ್ದರು. ಹಣಕಾಸು ಅಕ್ರಮ ವರ್ಗಾವಣೆ ತಡೆ (ಪಿಎಂಎಲ್‌ಎ) ಕಾಯ್ದೆಯಡಿ ಸಿಬಿಐ ಅಥವಾ ಜಾರಿ ನಿರ್ದೇಶನಾಲಯವು ಈವರೆಗೆ ಸಲ್ಲಿಸಿದ ಯಾವುದೇ ಎಫ್‌ಐಆರ್ ಅಥವಾ ದೋಷಾರೋಪಪಟ್ಟಿಯಲ್ಲಿ ರೋಹನ್ ಚೋಕ್ಸಿಯ ಹೆಸರನ್ನು ಉಲ್ಲೇಖಿಸಿರಲಿಲ್ಲ. ರೋಹನ್ ಚೋಕ್ಸಿ ಲ್ಯೂಸ್ಟರ್ ಇಂಡಸ್ಟ್ರೀಸ್ ಪ್ರೈವೇಟ್ ಲಿಮಿಟೆಡ್‌ನಲ್ಲಿ ಪಾಲುದಾರಿಕೆಯನ್ನು ಹೊಂದಿದ್ದು, ಮೆಹುಲ್ ಚೋಕ್ಸಿ ಇದರ ನಿರ್ದೇಶಕರಾಗಿದ್ದಾರೆ. ವಿದೇಶಕ್ಕೆ ಹಣಕಾಸು ನಿಧಿಯನ್ನು ತಿರುಗಿಸಲು ಈ ಸಂಸ್ಥೆಯನ್ನು ಬಳಸಿಕೊಳ್ಳಲಾಗುತ್ತಿತ್ತು. ಏಶ್ಯನ್ ಡೈಮಂಡ್ ಹಾಗೂ ಜ್ಯುವೆಲ್ಲರಿ ಎಫ್‌ಝಡ್‌ಇನಿಂದ ಸಿಂಗಾಪುರ ಮೂಲದ ಮೆರ್ಲಿನ್ ಲಕ್ಸು ಗ್ರೂಪ್ ಪ್ರೈವೇಟ್ ಲಿಮಿಟೆಡ್‌ಗೆ 1,27,500 ಅಮೆರಿಕನ್ ಡಾಲರ್ ಅಕ್ರಮ ಹಣ (ಸುಮಾರು 81.6 ಲಕ್ಷ ರೂ.)ವನ್ನು ವರ್ಗಾಯಿಸಲಾಗಿತ್ತೆಂದು ಏಜೆನ್ಸಿ ತಿಳಿಸಿದೆ.

ವಾರ್ತಾ ಭಾರತಿ 16 Jan 2026 7:57 pm

ಸಂಕ್ರಾಂತಿಗೆ ಬಂದ ಅಳಿಯನಿಗೆ 290 ಬಗೆಯ ಭರ್ಜರಿ ಭೋಜನ: ವಿಶಿಷ್ಟ ಆಚರಣೆಯ ವಿಡಿಯೋ ವೈರಲ್‌

ಸಂಕ್ರಾಂತಿ ಅಂದ್ರೆ ಕೇವಲ ಎಳ್ಳು-ಬೆಲ್ಲದ ಹಬ್ಬವಲ್ಲ. ವಿವಿಧ ರಾಜ್ಯಗಳಲ್ಲಿ ವಿಶೇಷ ಹಾಗೂ ವಿಭಿನ್ನವಾಗಿ ಈ ಹಬ್ಬವನ್ನು ಆಚರಿಸುತ್ತಾರೆ. ಮಗಳ ಮದುವೆ ನಂತರ ಮೊದಲ ಸಂಕ್ರಾಂತಿಗೆ ಮನೆಗೆ ಅಳಿಯನಿಗೆ ಅತ್ತೆ-ಮಾವ ನೀಡಿರುವ ಸರ್‌ಪ್ರೈಸ್‌ ಈಗ ಎಲ್ಲೆಡೆ ಸುದ್ದಿಯಾಗುತ್ತಿದೆ. ಅಳಿಯನಿಗೆ ಒಂದಲ್ಲ, ಎರಡಲ್ಲ, ಬರೋಬ್ಬರಿ 290 ಬಗೆಯ ಭೋಜನ ಸಿದ್ಧಪಡಿಸಿ, ಉಣಬಡಿಸಿದ್ದಾರೆ. ಆಂಧ್ರಪ್ರದೇಶದ ನರಸೀಪಟ್ಟಣಂ ಈ ವರ್ಷದ ಸಂಕ್ರಾಂತಿ ಸಂಭ್ರಮವನ್ನು

ಒನ್ ಇ೦ಡಿಯ 16 Jan 2026 7:57 pm

ಹಿರಿಯ ಕಾರ್ಮಿಕ ನಾಯಕ ಚಂದ್ರಶೇಖರ್ ಭೋಸ್ ನಿಧನ

ಕೋಲ್ಕತಾ,ಜ.16: ಕಾರ್ಮಿಕ ಒಕ್ಕೂಟದ ಹಿರಿಯ ನಾಯಕ ಹಾಗೂ ಸಿಪಿಎಂನ ಹಿರಿಯ ಸದಸ್ಯ ಚಂದ್ರಶೇಖರ್ ಬೋಸ್ ಅವರು ಶುಕ್ರವಾರ ಮುಂಜಾನೆ ಬಿಧಾನ್ ನಗರದಲ್ಲಿರುವ ಸ್ವಗೃಹದಲ್ಲಿ ನಿಧನರಾಗಿದ್ದಾರೆಂದು ಪಕ್ಷದ ಮೂಲಗಳು ತಿಳಿಸಿವೆ. ಅವರಿಗೆ 103 ವರ್ಷ ವಯಸ್ಸಾಗಿತ್ತು. ವಿಮಾ ಉದ್ಯೋಗಿಗಳ ಚಳವಳಿಯ ಮುಂಚೂಣಿ ನಾಯಕರಾಗಿದ್ದ ಬೋಸ್ ಅವರು ಅಖಿಲ ಭಾರತ ವಿಮಾ ಉದ್ಯೋಗಿಗಳ ಸಂಘ (ಎಐಐಇಎ)ದ ಮಾಜಿ ಅಧ್ಯಕ್ಷ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದರು. ಅವರು ಸಿಪಿಎಂ ಪಕ್ಷದ ಅತ್ಯಂತ ಹಿರಿಯ ಸದಸ್ಯರೂ ಆಗಿದ್ದರು. ಅವರು ಪುತ್ರ, ಸೊಸೆ ಹಾಗೂ ಮೊಮ್ಮಗನನ್ನು ಅಗಲಿದ್ದಾರೆ. ಚಂದ್ರಶೇಖರ ಬೋಸ್ ಅವರ ನಿಧನಕ್ಕೆ ಎಡರಂಗದ ಅಧ್ಯಕ್ಷ ಬಿಮನ್ ಬೋಸ್ ಹಾಗೂ ಸಿಪಿಎಂ ರಾಜ್ಯ ಕಾರ್ಯದರ್ಶಿ ಮೊಹಮ್ಮದ್ ಸಲೀಂ, ಎಐಐಇಎ ಪ್ರಧಾನ ಕಾರ್ಯದರ್ಶಿ ಶ್ರೀಕಾಂತ್‌ ಮಿಶ್ರಾ ಕೂಡಾ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಕಲ್ಕತ್ತಾ ವಿಶ್ವವಿದ್ಯಾನಿಲಯದ ಪದವೀಧರನಾದ ಬೋಸ್ ಅವರು ಕಮ್ಯೂನಿಸ್ಟ್ ಚಳವಳಿಯಲ್ಲಿ ಸಕ್ರಿಯ ಪಾತ್ರ ವಹಿಸಿದ್ದರು. 1944ರಲ್ಲಿ ಬೋಸ್ ಅವರು ಹಿಂದೂಸ್ತಾನ್ ಇನ್ಶೂರೆನ್ಸ್ ಕಂಪೆನಿಗೆ ಸೇರ್ಪಡೆಗೊಂಡಿದ್ದು, ಅದೇ ವರ್ಷ ಅವಿಭಜಿತ ಕಮ್ಯೂನಿಸ್ಟ್ ಪಕ್ಷದಲ್ಲಿ ಸದಸ್ಯರಾಗಿ ಗುರುತಿಸಿಕೊಂಡಿದ್ದರು. ಅವರ ಜೀವಮಾನದುದ್ದಕ್ಕೂ ಪಕ್ಷದ ಸದಸ್ಯತ್ವವನ್ನು ಉಳಿಸಿಕೊಂಡಿದ್ದರು ಎಂದು ಪಕ್ಷದ ಮೂಲಗಳು ತಿಳಿಸಿವೆ. ವಿಮಾ ವಲಯದ ರಾಷ್ಟ್ರೀಕರಣದ ಬಳಿಕ ಬೋಸ್ ಅವರು ಅಖಿಲ ಭಾರತ ಮಟ್ಟದಲ್ಲಿ ವಿಮಾ ಉದ್ಯೋಗಿಗಳನ್ನು ಸಂಘಟಿಸುವಲ್ಲಿ ಸಕ್ರಿಯ ಪಾತ್ರ ವಹಿಸಿದ್ದರು. ಜೀವನದ ಕೊನೆಗಾಲದವರೆಗೂ ಬೋಸ್ ಅವರು ಕಮ್ಯೂನಿಸ್ಟ್ ಚಳವಳಿಯಲ್ಲಿ ಸಕ್ರಿಯ ಪಾತ್ರ ವಹಿಸಿದ್ದರು.

ವಾರ್ತಾ ಭಾರತಿ 16 Jan 2026 7:55 pm

ಬೀದರ್ | ಕಾರು-ಬೈಕ್ ನಡುವೆ ಢಿಕ್ಕಿ : ಸವಾರ ಮೃತ್ಯು

ಬೀದರ್ : ಕಾರು ಮತ್ತು ಬೈಕ್ ನಡುವೆ ಢಿಕ್ಕಿ ಸಂಭವಿಸಿ ಬೈಕ್ ಸವಾರ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಭಾಲ್ಕಿ ತಾಲೂಕಿನ ಖಾನಾಪುರ್ ಗ್ರಾಮದ ಹತ್ತಿರ ಶುಕ್ರವಾರ ನಡೆದಿದೆ. ಮೃತರನ್ನು ಹೊನ್ನಿಕೇರಿ ಗ್ರಾಮದ ನಿವಾಸಿ ಅತಿಷ್ ಎಂದು ಗುರುತಿಸಲಾಗಿದೆ. ಅತಿಷ್ ಅವರು ತಮ್ಮ ಪತ್ನಿಯ ತವರೂರಾದ ಸಿದ್ದೇಶ್ವರ ಗ್ರಾಮಕ್ಕೆ ಭೇಟಿ ನೀಡಿ ಮರಳಿ ಬರುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ಬೀದರ್ ಕಡೆಯಿಂದ ಭಾಲ್ಕಿ ಕಡೆಗೆ ಸಾಗುತ್ತಿದ್ದ ಕಾರು ಮತ್ತು ಅತಿಷ್ ಚಲಾಯಿಸುತ್ತಿದ್ದ ಬೈಕ್ ನಡುವೆ ಮುಖಾಮುಖಿ ಢಿಕ್ಕಿಯಾಗಿದೆ. ಪರಿಣಾಮವಾಗಿ ಬೈಕ್ ಸವಾರ ಅತಿಷ್ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಧನ್ನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದ್ದು, ಘಟನಾ ಸ್ಥಳಕ್ಕೆ ಪೊಲೀಸ್ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

ವಾರ್ತಾ ಭಾರತಿ 16 Jan 2026 7:54 pm