ಚಿಂಚೋಳಿ | ಶೆಡ್ ನ ಬೀಗ ಮುರಿದು 15 ಕುರಿ, 1 ಆಡು ಕಳ್ಳತನ : ಪ್ರಕರಣ ದಾಖಲು
ಚಿಂಚೋಳಿ: ತಾಲೂಕಿನ ಕರ್ಚಖೇಡ ಗ್ರಾಮದಲ್ಲಿ ತಡರಾತ್ರಿ ಕಳ್ಳರು ರೈತನೊಬ್ಬರ ಶೆಡ್ ನ ಬೀಗ ಮುರಿದು ಸುಮಾರು 1.30 ಲಕ್ಷ ರೂ. ಮೌಲ್ಯದ ಕುರಿ ಮತ್ತು ಆಡುಗಳನ್ನು ಕಳವು ಮಾಡಿರುವ ಘಟನೆ ನಡೆದಿದೆ. ಕರ್ಚಖೇಡ ಗ್ರಾಮದ ನಿವಾಸಿ ಬೀರಪ್ಪ ಫಾಲಪ್ಪ ಪೂಜಾರಿ ಎಂಬುವವರಿಗೆ ಸೇರಿದ ಕುರಿ ಶೇಡ್ನಲ್ಲಿ ಈ ಕಳ್ಳತನ ನಡೆದಿದೆ. ಬೀರಪ್ಪ ಅವರು ತಮ್ಮ ಶೇಡ್ನಲ್ಲಿ ಒಟ್ಟು 21 ಕುರಿ ಹಾಗೂ 7 ಆಡುಗಳನ್ನು ಸಾಕಿದ್ದರು. ಫೆ.14ರ ಶನಿವಾರ ಮುಂಜಾನೆ ಸುಮಾರು 5 ಗಂಟೆಗೆ ಬೀರಪ್ಪ ಅವರು ಎದ್ದು ಶೇಡ್ನ ಬಾಗಿಲು ತೆರೆಯಲು ಹೋದಾಗ, ಹೊರಗಿನಿಂದ ಯಾರೋ ಲಾಕ್ ಮಾಡಿರುವುದು ಕಂಡುಬಂದಿದೆ. ಗಾಬರಿಗೊಂಡ ಅವರು ಹಿತ್ತಲ ಬಾಗಿಲಿನಿಂದ ಹೊರಬಂದು ನೋಡಿದಾಗ, ಕಳ್ಳರು ಶೇಡ್ನ ಕೀಲಿ ಮುರಿದು ಒಳನುಗ್ಗಿರುವುದು ಬೆಳಕಿಗೆ ಬಂದಿದೆ. ಶೇಡ್ನಲ್ಲಿದ್ದ 15 ಉಣ್ಣೆ ಕುರಿಗಳು ಹಾಗೂ 1 ಆಡು ನಾಪತ್ತೆಯಾಗಿದ್ದು, ಕಳ್ಳರು ಕಳವು ಮಾಡಿಕೊಂಡು ಪರಾರಿಯಾಗಿದ್ದಾರೆ. ಕಳುವಾದ ಕುರಿ ಮತ್ತು ಆಡಿನ ಒಟ್ಟು ಮೌಲ್ಯ ಅಂದಾಜು 1,30,000 ರೂಪಾಯಿಗಳು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಈ ಕುರಿತು ಸುಲೇಪೇಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೋಮುವಾದ ಕ್ಯಾನ್ಸರ್ ಇದ್ದಂತೆ, ಸಾಂಸ್ಕೃತಿಕ ರಾಜಕಾರಣವೇ ಪರಿಹಾರ : ದಿನೇಶ್ ಅಮೀನ್ ಮಟ್ಟು
► ಹಿಂದೂ ಸಮಾಜೋತ್ಸವದ ಮೂಲ ಉದ್ದೇಶ ಹಿಂದೂ ಧರ್ಮದ ಸುಧಾರಣೆ ಆಗಬೇಕೇ ಹೊರತು ಮುಸ್ಲಿಮರ ವಿರುದ್ಧ ಎತ್ತಿಕಟ್ಟುವ ವಿಷಯವಾಗಬಾರದು► ‘ಕರಾವಳಿಯ ರಕ್ತ-ಕಣ್ಣೀರು’ ಪುಸ್ತಕ ಬಿಡುಗಡೆ ಕಾರ್ಯಕ್ರಮ
ಸೋಮಾರಿತನ ಎಂದುಕೊಳ್ಳುವುದು ಬಳಲಿಕೆಯ ಲಕ್ಷಣವಾಗಿರಬಹುದು!
ಸೋಮಾರಿತನ ಎನ್ನುವುದು ಶಕ್ತಿ ಇದ್ದರೂ ಪ್ರೇರಣೆಯ ಕೊರತೆ ಎದುರಿಸುವುದು. ಭಾವನಾತ್ಮಕ ಬಳಲಿಕೆ ಎಂದರೆ ಕಾರ್ಯ ನಿರ್ವಹಿಸಲು ಬಯಸಿದರೂ ಮಾನಸಿಕವಾಗಿ, ಭಾವನಾತ್ಮಕವಾಗಿ ಅಥವಾ ದೈಹಿಕವಾಗಿ ದಣಿದಿರುವುದು. ಗಡಿಬಿಡಿಯ ಜೀವನದಲ್ಲಿ ವಿಶ್ರಾಂತಿ ಪಡೆಯುವುದು ಎಂದರೆ ಸೋಮಾರಿತನ ಎಂದು ಪರಿಗಣಿಸಲಾಗುತ್ತದೆ. ಅನೇಕ ಮಂದಿ ವಿಶ್ರಾಂತಿ ತೆಗೆದುಕೊಂಡಾಗ ಭಾರೀ ಅಪರಾಧ ಪ್ರಜ್ಞೆ ಹೊಂದಿರುತ್ತಾರೆ. ಇನ್ನಷ್ಟು ಕೆಲಸ ಮಾಡಬಹುದಾಗಿತ್ತು, ಸೋಮಾರಿತನ ಮಾಡಿದೆ ಎನ್ನುವ ಭಾವನೆ ಇರುತ್ತದೆ. ಆದರೆ ಆಕಾಶ್ ಹೆಲ್ತ್ಕೇರ್ನ ಮನಶ್ಶಾಸ್ತ್ರ ಸಲಹೆಗಾರರಾದ ಡಾ. ಪವಿತ್ರ ಶಂಕರ್ ಅವರ ಪ್ರಕಾರ, ಹೀಗೆ ವಿಶ್ರಾಂತಿಯ ಬಯಕೆ ಪ್ರೇರಣೆಯ ಕೊರತೆಯಲ್ಲ; ಬದಲಾಗಿ ಭಾವನಾತ್ಮಕ ಸುಸ್ತಿನ ಅನುಭವವಾಗಿರಬಹುದು. ಸೋಮಾರಿತನ ಎನ್ನುವುದು ಶಕ್ತಿ ಇದ್ದರೂ ಪ್ರೇರಣೆಯ ಕೊರತೆ ಎದುರಿಸುವುದು ಆಗಿರುತ್ತದೆ. ಭಾವನಾತ್ಮಕ ಬಳಲಿಕೆ ಎಂದರೆ ಕಾರ್ಯ ನಿರ್ವಹಿಸಲು ಬಯಸುವುದು, ಆದರೆ ಮಾನಸಿಕವಾಗಿ, ಭಾವನಾತ್ಮಕವಾಗಿ ಅಥವಾ ದೈಹಿಕವಾಗಿ ದಣಿದಿರುವುದು. ವ್ಯತ್ಯಾಸವು ಉದ್ದೇಶದಲ್ಲಿರುತ್ತದೆ. ಕೆಲಸ ಮಾಡಲು ಬಯಸುತ್ತೀರಿ, ಆದರೆ ಪ್ರಾರಂಭಿಸುವ ಮೊದಲೇ ದಣಿದಿದ್ದರೆ ಅದು ಸೋಮಾರಿತನವಲ್ಲ; ಸುಸ್ತಾಗಿ ಮುದುಡುವುದು ಎಂದು ಪವಿತ್ರಾ ಶಂಕರ್ ಹೇಳುತ್ತಾರೆ. ಸೋಮಾರಿತನ ಮತ್ತು ಸುಸ್ತಾಗುವುದರ ನಡುವಿನ ವ್ಯತ್ಯಾಸ “ವಿಶ್ರಾಂತಿ ತೆಗೆದುಕೊಂಡ ಬಳಿಕವೂ ನಿಮ್ಮಲ್ಲಿ ನವಚೈತನ್ಯ ಮೂಡದೆ ಇದ್ದರೆ, ಸಣ್ಣ ಕೆಲಸ ಮಾಡಲೂ ಸುಸ್ತಾದರೆ ಮತ್ತು ಅಪರಾಧಿ ಭಾವ ಕಾಡಿದರೆ, ಅದು ಸೋಮಾರಿತನವಲ್ಲ; ಬದಲಾಗಿ ಬಳಲಿ ಬೆಂದಿರುವುದು,” ಎನ್ನುತ್ತಾರೆ ವೈದ್ಯರು. ವಿಶ್ರಾಂತಿಯ ನಂತರವೂ ಭಾವನಾತ್ಮಕ ಬಳಲಿಕೆ ಆವರಿಸಿದಲ್ಲಿ ಜನರು ಆತಂಕಕ್ಕೆ ಒಳಗಾಗುತ್ತಾರೆ. ವಿರಾಮದ ಅಗತ್ಯವಿದೆಯೇ ಎಂದು ಸ್ವಯಂ ವಿಮರ್ಶೆ ಮಾಡಿಕೊಳ್ಳುತ್ತಾರೆ. ಹೀಗೆ ತಪ್ಪು ಅರ್ಥ ಮಾಡಿಕೊಳ್ಳುವುದು ಮತ್ತಷ್ಟು ಹತಾಶೆಗೆ ಕಾರಣವಾಗುತ್ತದೆ. ವೈದ್ಯರ ಪ್ರಕಾರ, “ಜನರು ಸ್ವಯಂ ತಾವೇ ಸೋಮಾರಿ ಎಂದು ಟೀಕಿಸಿಕೊಂಡರೆ, ತಮ್ಮ ದೇಹ ಮತ್ತು ಮನಸ್ಸಿಗೆ ನಿಜವಾಗಿ ಏನು ಅಗತ್ಯವಿದೆ ಎನ್ನುವುದನ್ನು ಕೇಳುವುದನ್ನು ನಿಲ್ಲಿಸುತ್ತಾರೆ.” ಬಳಲಿಕೆಯ ಚಿಹ್ನೆಗಳು ಸೋಮಾರಿತನವಲ್ಲ ಸ್ವತಃ ಸೋಮಾರಿಯಾಗುತ್ತಿದ್ದೇವೆ ಎಂದು ಹೇಳುವ ಅನೇಕ ರೋಗಿಗಳಲ್ಲಿ ಕಂಡುಬರುವ ನಿರಂತರ ಆಯಾಸ, ಕಡಿಮೆ ಏಕಾಗ್ರತೆ, ಭಾವನಾತ್ಮಕ ಮರಗಟ್ಟುವಿಕೆ ಅಥವಾ ಕಿರಿಕಿರಿ, ಆತಂಕದ ಹೊರತಾಗಿಯೂ ವಿಳಂಬವಾಗುವುದು ಮತ್ತು ಒಮ್ಮೆ ಆನಂದಿಸಿದ ಚಟುವಟಿಕೆಗಳಲ್ಲಿ ತೃಪ್ತಿ ಸಿಗದೆ ಇರುವುದು ಮೊದಲಾದ ಐದು ಸಾಮಾನ್ಯ ಚಿಹ್ನೆಗಳು ಸೋಮಾರಿತನವಲ್ಲ. ಜನರು ವಿಶ್ರಾಂತಿಯನ್ನು ಹೇಗೆ ವ್ಯಾಖ್ಯಾನಿಸುತ್ತಾರೆ ಎನ್ನುವುದರಲ್ಲಿ ಬಳಲಿಕೆಯನ್ನು ಗುರುತಿಸಬಹುದು. ಜನರು ವಿಶ್ರಾಂತಿ ತೆಗೆದುಕೊಂಡ ತಕ್ಷಣ ತಪ್ಪಿತಸ್ಥ ಭಾವನೆ ಹೊಂದಿರುತ್ತಾರೆ. ಆಗಾಗ್ಗೆ ಬಳಲಿಕೆಯ ಲಕ್ಷಣಗಳನ್ನು ತಮ್ಮ ವೈಯಕ್ತಿಕ ವೈಫಲ್ಯ ಎಂದು ನೋಡುತ್ತಾರೆ. ಬಳಲಿಕೆಯಿಂದ ಆತ್ಮವಿಶ್ವಾಸ ನಷ್ಟ ಬಳಲಿಕೆ ಅಥವಾ ಭಾವನಾತ್ಮಕ ಸುಸ್ತು ಎದುರಾದಾಗ ಶಕ್ತಿಗುಂದುವುದು ಮಾತ್ರವಲ್ಲ, ಜನರ ಸ್ವಯಂ ದೃಷ್ಟಿಕೋನವೂ ಬದಲಾಗುತ್ತದೆ. ಕಾಲಕ್ರಮೇಣ ಬಳಲಿಕೆ ಅವರ ಉತ್ಪಾದಕತೆಯ ಮೇಲೂ ಪರಿಣಾಮ ಬೀರುತ್ತದೆ. ಗಮನ ಕೇಂದ್ರೀಕರಿಸಲು ಸಾಧ್ಯವಾಗುವುದಿಲ್ಲ ಮತ್ತು ಪ್ರೇರಣೆ ಕಡಿಮೆಯಾಗುತ್ತದೆ. ನಿರ್ಧಾರ ಕೈಗೊಳ್ಳುವುದು ನಿಧಾನವಾಗುತ್ತದೆ ಅಥವಾ ತಪ್ಪಿಸಲು ಆರಂಭಿಸುತ್ತಾರೆ. ಭಾವನಾತ್ಮಕ ವೆಚ್ಚ ಇನ್ನಷ್ಟು ಭಾರವಾಗಬಹುದು. “ಪದೇಪದೆ ಕಷ್ಟಪಡಬೇಕಾಗಿ ಬಂದಾಗ ಆತ್ಮವಿಶ್ವಾಸ ಮರೆಯಾಗುತ್ತದೆ. ಜನರು ತಾವು ಅಸಮರ್ಥರು ಅಥವಾ ಸೋಮಾರಿಗಳು ಎಂಬ ನಂಬಿಕೆಯನ್ನು ಆಂತರಿಕವಾಗಿ ಬೆಳೆಸಿಕೊಳ್ಳಲು ಪ್ರಾರಂಭಿಸುತ್ತಾರೆ. ಹೀಗಾಗಿ ಭಾವನಾತ್ಮಕ ಯಾತನೆ ಇನ್ನಷ್ಟು ಹದಗೆಡುತ್ತದೆ ಮತ್ತು ಬಳಲಿಕೆ ಹೆಚ್ಚಾಗುತ್ತದೆ,” ಎನ್ನುತ್ತಾರೆ ಪವಿತ್ರಾ ಶಂಕರ್. ಅಪರಾಧಿ ಭಾವವಿಲ್ಲದ ಚೇತರಿಕೆ ವೈದ್ಯರು ಹೇಳುವ ಪ್ರಕಾರ, ಚೇತರಿಕೆಗೆ ಮೊದಲು ತಮ್ಮ ಸ್ಥಿತಿಯನ್ನು ಅರ್ಥಮಾಡಿಕೊಳ್ಳುವ ಅಗತ್ಯವಿದೆ. “ಬಳಲಿಕೆ ಎನ್ನುವುದು ಆರೋಗ್ಯದ ಸಮಸ್ಯೆಯೇ ವಿನಾ ದೌರ್ಬಲ್ಯವಲ್ಲ” ಎಂದು ಅರ್ಥಮಾಡಿಕೊಳ್ಳಬೇಕು. ಮೂಲ ವಿಚಾರಗಳತ್ತ ಗಮನಹರಿಸುವುದು ದೊಡ್ಡ ಬದಲಾವಣೆಗೆ ಕಾರಣವಾಗುತ್ತದೆ. ವಿಶ್ರಾಂತಿಗೆ ಆದ್ಯತೆ ನೀಡಿ. ಸಣ್ಣ ಗುರಿಗಳನ್ನು ಇಟ್ಟುಕೊಳ್ಳಿ. ಅನಗತ್ಯ ಬೇಡಿಕೆಗಳನ್ನು ಅಲಕ್ಷಿಸಿ. ಸ್ವಯಂ ಟೀಕೆಯ ಬದಲಾಗಿ ಸ್ವತಃ ಅನುಭೂತಿ ಬೆಳೆಸಿಕೊಳ್ಳಿ. ನಿಧಾನಗತಿಯಲ್ಲಿ ಸಾಗುವುದು ಅಗತ್ಯ ಮತ್ತು ಸ್ವಾರ್ಥವಲ್ಲ ಎಂಬುದನ್ನು ಅರ್ಥಮಾಡಿಕೊಳ್ಳುವುದೇ ಚೇತರಿಕೆಯ ಕಡೆಗೆ ಮೊದಲ ಹೆಜ್ಜೆಯಾಗಿರುತ್ತದೆ.
ಸೇಡಂ | ಬೀಜನಳ್ಳಿ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ: ಶಾಸಕ ಬಸವರಾಜ ಮತ್ತಿಮಡು
ಸೇಡಂ: ತಾಲೂಕಿನ ಬೀಜನಳ್ಳಿ ಗ್ರಾಮದ ಶರಣೆ ಕಲ್ಯಾಣಮ್ಮ - ಹರಳಯ್ಯಾ ದಂಪತಿಗಳು ಬಸವಣ್ಣನವರಿಗೆ ಚೆಮ್ಮಾವುಗೆಯ ಅರ್ಪಿಸಿದ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಗ್ರಾಮೀಣ ಮತಕ್ಷೇತ್ರದ ಶಾಸಕ ಬಸವರಾಜ ಮತ್ತಿಮಡು ಹೇಳಿದರು. ತಾಲೂಕಿನ ಬಿಜನ್ನಳ್ಳಿ ಗ್ರಾಮದಲ್ಲಿ ಕಲ್ಯಾಣ ಕರ್ನಾಟಕ ಪ್ರತಿಷ್ಠಾನದ ವತಿಯಿಂದ ಆಯೋಜಿಸಿದ್ದ ಕಲ್ಯಾಣ ನಡಿಗೆ ಮತ್ತು ಹರಳಯ್ಯಾ ಜ್ಯೋತಿಯಾತ್ರೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಶರಣ ತತ್ವ ಇಡೀ ವಿಶ್ವಕ್ಕೆ ಮಾದರಿಯಾಗಿದೆ. ಈ ತತ್ವವನ್ನು ಎಲ್ಲರಿಗೂ ತಲುಪಿಸುವುದು ನಮ್ಮ ಆದ್ಯ ಕರ್ತವ್ಯವಾಗಿದೆ ಎಂದರು. ಕಲ್ಯಾಣ ಕರ್ನಾಟಕ ಪ್ರತಿಷ್ಠಾನದ ಅಧ್ಯಕ್ಷ ಬಸವಕುಮಾರ ಪಾಟೀಲ ಮಾತನಾಡಿ, ಶರಣರು ನಮಗಾಗಿ ಮಾಡಿದ ತ್ಯಾಗ-ಬಲಿದಾನ ಸ್ಮರಣೆ ಮಾಡಿಕೊಳ್ಳುವ ಕಾರ್ಯಕ್ರಮ ಇದಾಗಿದೆ. ಅವರ ಸಂದೇಶಗಳನ್ನು ಮನೆ-ಮನೆಗೆ, ಮನ-ಮನಕ್ಕೆ ತಲುಪಿಸುವುದು ಇಂದಿನ ನಾಗರಿಕ ಸಮಾಜದ ಆದ್ಯ ಕರ್ತವ್ಯವಾಗಿದೆ ಎಂದು ಹೇಳಿದರು. ಸಾನಿಧ್ಯ ವಹಿಸಿದ್ದ ಶ್ರೀ ಶಂಕರಲಿಂಗ ಸ್ವಾಮೀಜಿ ಧುಮ್ಮನಸೂರ್, ಪರಮ ಪೂಜ್ಯ ಬಸವಪ್ರಭು ಸ್ವಾಮಿಜಿ ಮಾತನಾಡಿದರು. ಸಮಾರಂಭದಲ್ಲಿ ಕಾಡಾದ ಮಾಜಿ ಅಧ್ಯಕ್ಷ ಮಾಹಾಂತಪ್ಪ ಸಂಗಾವಿ, ಅಪ್ಪಾರಾವ್ ಅಕೋಣೆ, ಕಾಶಿರಾಯ ನಂದೂರಕರ್, ಸಂಗಮೇಶ ಜವಾದಿ, ರಾಜು ಕೋಟೆ, ರವೀಂದ್ರ ಶಾಬಾದಿ,ವೀರಣ್ಣಾ ಕೊಲರಳ್ಳಿ, ಶಂಕ್ರಪ್ಪ ಪಾಟೀಲ, ನಳಿನಿ ಮಾಹಾಗಾಂವಕರ್, ಸೋಮಶೇಖರ ಮಾಲಿ ಪಾಟೀಲ್, ಶಾಂತಲಿಂಗ ಪಾಟೀಲ ಕೊಳಕೂರ್, ಪಂಡಿತ ಬಾಳೊರೆ, ಭಗವಂತರಾವ ಪಾಟೀಲ, ರಮೇಶ ಸಲಗರ್, ವೈಜಿನಾಥ ಸಜ್ಜನಶೆಟ್ಟಿ , ಕರಬಸಪ್ಪ ಕಟಗಿ, ಭೀಮಶಾ ಹಜ್ಜರಗಿ, ಬಾಬುರಾವ್ ಪಾಟೀಲ ಚಿತ್ತಕೊಟಾ, ಶ್ರವಣಕುಮಾರ ಹಮ್ಮಿಲಪೂರಕರ್ ಸೇರಿದಂತೆ ಚಿಟಗುಪ್ಪಾ, ಕೊಡಂಬಲ, ಕಲಬುರಗಿ, ಬೀದರ, ಬೆಳಗಾವಿ , ಚಿತ್ರದುರ್ಗ, ಬಳ್ಳಾರಿ ಜಿಲ್ಲೆಯ ಹಾಗೂ ತೆಲಂಗಾಣ ಮೂಲದ ಬಸವಾಭಿಮಾನಿಗಳು ಹಾಜರಿದ್ದರು.
Kalaburagi | ಸೋಲಾಪುರ ರೈಲ್ವೆ ವಿಭಾಗದ ಸಿಬ್ಬಂದಿಗಳಿಗೆ ಪ್ರಶಸ್ತಿ ಪ್ರದಾನ, ದಕ್ಷತಾ ಕವಚ ವಿತರಣೆ
ಕಲಬುರಗಿ: ಮಧ್ಯ ರೈಲ್ವೆಯ ಸೋಲಾಪುರ ವಿಭಾಗದಲ್ಲಿ 70ನೇ ರೈಲ್ವೆ ವಾರೋತ್ಸವವನ್ನು ಸೋಲಾಪುರದಲ್ಲಿ ಸಂಭ್ರಮದಿಂದ ಆಚರಿಸಲಾಯಿತು. ಕಾರ್ಯಕ್ರಮದ ಅಂಗವಾಗಿ ವಿಭಾಗದ 30 ಮಂದಿ ರೈಲ್ವೆ ಸಿಬ್ಬಂದಿಗೆ ವೈಯಕ್ತಿಕ ಪ್ರಶಸ್ತಿಗಳು ಹಾಗೂ 9 ಡೆಪೊಗಳಿಗೆ ದಕ್ಷತಾ ಕವಚಗಳನ್ನು ವಿತರಿಸಲಾಯಿತು. ಸೋಲಾಪುರದ ಸಿದ್ಧೇಶ್ವರ ರೈಲ್ವೆ ಅಧಿಕಾರಿಗಳ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ವಿಭಾಗೀಯ ರೈಲ್ವೆ ವ್ಯವಸ್ಥಾಪಕರಾದ ಡಾ. ಸುಜೀತ್ ಮಿಶ್ರ ಅವರು ಪ್ರಶಸ್ತಿಗಳನ್ನು ಪ್ರದಾನ ಮಾಡಿದರು. ಸೇವಾ ನಿಷ್ಠೆ, ಕಾರ್ಯಕ್ಷಮತೆ ಹಾಗೂ ಶ್ರೇಷ್ಠ ಕಾರ್ಯಾಚರಣೆಯನ್ನು ಗುರುತಿಸಿ ವಿವಿಧ ವಿಭಾಗಗಳ ಸಿಬ್ಬಂದಿಯನ್ನು ಸನ್ಮಾನಿಸಲಾಯಿತು. ಪ್ರಶಸ್ತಿ ಪಡೆದವರಲ್ಲಿ ಅಮಿತ್ ಕುಮಾರ್, ಸ್ಟೇಷನ್ ಮಾಸ್ಟರ್ ಯೋಗೇಶ್ ಕುಮಾರ್, ಸಿವಿಲ್ ಇಂಜಿನಿಯರಿಂಗ್ ವಿಭಾಗದ ಶಹಾಬಾದ್ ಹಿರಿಯ ತಂತ್ರಜ್ಞ (ಮೇಸನ್) ಫುಲಚಂದ್ ಲಕ್ಷ್ಮಣ್, ರವಿಕುಮಾರ್ ರಾಜಪಾಲ್ ಸಿಂಗ್, ರಾಹುಲ್ ಕೃಷ್ಣ ಶಿಂಧೆ, ಬಾಲಾಜಿ ಬಾಬರ್, ಲಕ್ಷ್ಮಣ್ ಸಾರಂಗಧರ್ ರಾಂಡಿವೆ, ವಿಕಾಸ್ ಮಹಾದೇವ್ ರಾಥೋಡ್, ಓಂ ಪ್ರಕಾಶ್ ಬಿಜಾರ್ನಿಯಾ, ರಾಜ್ ಕುಮಾರ್ ಪ್ರಸಾದ್ ಸೇರಿದ್ದಾರೆ. ವಾಣಿಜ್ಯ ವಿಭಾಗದ ಕಾಳೆ ಆನಂದ್ ಮಹದೇವ್, ರೈಲು ಟಿಕೆಟ್ ಇನ್ಸ್ಪೆಕ್ಟರ್ ಮೊಬಿನ್ ಐ ಶೇಖ್, ಮೆಕ್ಯಾನಿಕಲ್ ಸಿ & ಡಬ್ಲ್ಯೂ (ಕಾರೇಜ್ & ವ್ಯಾಗನ್) ವಿಭಾಗದ ವಾಡಿಯ ಮಲ್ಲಿಕಾರ್ಜುನ್ ಹುಂಚಪ್ಪ, ಚಿಂತಾಮಣಿ ಮೋಗೇ, ಎಲೆಕ್ಟ್ರಿಕಲ್ (ಜನರಲ್) ವಿಭಾಗದ ಮಲ್ಲಪ್ಪ ಅಚ್ಚಿಗಾರ್, ಎಲೆಕ್ಟ್ರಿಕಲ್ ಟಿಆರ್ಡಿ ವಿಭಾಗದ ಎಸ್.ಎಚ್. ಮುಲಮಣಿ, ಆರ್.ಡಿ. ಕುಲಕರ್ಣಿ, ಪ್ರಮೋದ್ ನರತ್ವಾಡೇಕರ್, ಎಂಡೆಲ್ಲಾ ಮಹೇಶ್ ಬಾಬು ಹಾಗೂ ಮೆಡಿಕಲ್ ವಿಭಾಗದ ಶಿವೇಂದ್ರ ಪ್ರತಾಪ್ ಸಿಂಗ್ ಅವರಿಗೆ ಪ್ರಶಸ್ತಿ ನೀಡಲಾಯಿತು. ಆಪರೇಟಿಂಗ್ ವಿಭಾಗದಲ್ಲಿ ಠಾಕೂರ್ ಮುಕೇಶ್ ಕುಮಾರ್, ಸುನಿಲ್ ಕುಮಾರ್ ಸುಮನ್, ಅನಿಕೇತ್ ಸಿಂಗ್, ದೀನ್ ಬಂಧು, ಸಮಾಧಾನ ಭರತ್ ಕೋಲಿ, ಸೆಕ್ಯುರಿಟಿ ವಿಭಾಗದ ರಿತೇಶ್ ಕುಂಭಾರ್, ಸಿಗ್ನಲ್ ಮತ್ತು ಟೆಲಿಕಮ್ಯುನಿಕೇಷನ್ಸ್ ವಿಭಾಗದ ರಶೀದ್ ಹಮೀದ್ ಶೇಖ್, ಸುಹಾಸ್ ಮನೆ, ಸೇಫ್ಟಿ ವಿಭಾಗದ ದುರ್ಗಾಚರಣ್ ನಾಗ್ಲೆ ಹಾಗೂ ಸ್ಟೋರ್ಸ್ ವಿಭಾಗದ ಅಶ್ವಿನಿ ರಾನಾ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಕಾರ್ಯಾಚರಣೆಯ ದಕ್ಷತೆ, ನಿರ್ವಹಣೆ ಹಾಗೂ ಸೇವಾ ವಿತರಣೆಯಲ್ಲಿ ಶ್ರೇಷ್ಠತೆ ತೋರಿದ ವಿವಿಧ ಡೆಪೊಗಳಿಗೆ ದಕ್ಷತಾ ಕವಚ ನೀಡಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಎಡಿಆರ್ಎಂ ಅಂಶುಮಲಿ ಕುಮಾರ್, CRWW ಪದಾಧಿಕಾರಿಗಳು, ವಿವಿಧ ಶಾಖೆಗಳ ಅಧಿಕಾರಿಗಳು, ರೈಲು ಸಂಘಟನೆಗಳ ಪ್ರತಿನಿಧಿಗಳು ಹಾಗೂ ರೈಲ್ವೆ ಸಿಬ್ಬಂದಿ ಉಪಸ್ಥಿತರಿದ್ದರು.
Kalaburagi | ಶಿವನೆಂದರೆ ಸೃಷ್ಟಿಗೆ ಕಾರಣವಾದ ಚೈತನ್ಯ: ಶಿವರಂಜನ ಸತ್ಯಂಪೇಟೆ
ಕಲಬುರಗಿ : ಪುರಾಣಗಳಲ್ಲಿ ಉಲ್ಲೇಖವಾಗಿರುವ ಶಿವನಿಗೂ ಶರಣರ ವಚನಗಳಲ್ಲಿ ಬಳಕೆಯಾಗಿರುವ ಶಿವನಿಗೂ ಸಾಕಷ್ಟು ಗೊಂದಲಗಳಿವೆ. ಆದರೆ ಶಿವ ಎಂಬುದು ಕೇವಲ ವ್ಯಕ್ತಿಯಲ್ಲ, ಒಂದು ತತ್ವ ಎಂದು ಪತ್ರಕರ್ತ, ಲೇಖಕ ಡಾ. ಶಿವರಂಜನ ಸತ್ಯಂಪೇಟೆ ಅಭಿಪ್ರಾಯಪಟ್ಟರು. ನಗರದ ಫಿಲ್ಟರ್ ಬೆಡ್ ಪ್ರದೇಶದ ಮಹಾಂತಜ್ಯೋತಿ ಪ್ರತಿಷ್ಠಾನದ ವತಿಯಿಂದ ಶಿವರಾತ್ರಿ ನಿಮಿತ್ತ ಭಾನುವಾರ ಆಯೋಜಿಸಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ‘ಶರಣರ ದೃಷ್ಟಿಯಲ್ಲಿ ಶಿವ’ ವಿಷಯ ಕುರಿತು ಅವರು ಮಾತನಾಡಿದರು. ಶಿವ ಎಂದರೆ ಮಂಗಳಕರವಾದದ್ದು, ಶುಭಕರವಾದದ್ದು ಎಂದು ವಚನಕಾರರು ವಿವರಿಸಿದ್ದಾರೆ ಎಂದು ಹೇಳಿದರು. ಜಾನಪದರ ದೃಷ್ಟಿಯಲ್ಲಿ ಶಿವ ವಿಷಯ ಕುರಿತು ವಿಮರ್ಶಕ, ಲೇಖಕ ಡಾ.ಶ್ರೀಶೈಲ ನಾಗರಾಳ ಮಾತನಾಡಿ, ಶಿವ-ಪಾರ್ವತಿಯ ಪಾತ್ರಗಳು ಆಕಾಶ ಮತ್ತು ಭೂಮಿಯ ತತ್ವವನ್ನು ಪ್ರತಿನಿಧಿಸುತ್ತವೆ. ಶಿವ ಸಗುಣಿ ಎಂಬುದನ್ನು ಜಾನಪದ ಪರಂಪರೆ ತಿಳಿಸಿಕೊಡುತ್ತದೆ ಎಂದರು. ವಿಜ್ಞಾನದ ದೃಷ್ಟಿಯಲ್ಲಿ ಶಿವ ವಿಷಯ ಕುರಿತು ಡಾ. ವಿಜಯಶ್ರೀ ಹಿರೇಮಠ ಮಾತನಾಡಿದರು. ಪುಸ್ತಕೋದ್ಯಮಿ ಬಸವರಾಜ ಕೊನೇಕ್ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಪತ್ರಕರ್ತ ಶಂಕರ ಕೋಡ್ಲಾ ಕಾರ್ಯಕ್ರಮಕ್ಕೆ ನೇತೃತ್ವ ವಹಿಸಿದ್ದರು. ಸಮಾಜ ಸೇವಕ ಎ.ಎಸ್. ಭದ್ರಶೆಟ್ಟಿ, ಸಾಹಿತಿ ಡಾ. ಗವಿಸಿದ್ದಪ್ಪ ಪಾಟೀಲ, ಪ್ರೀತಿ ಅಕ್ಕೋಣೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪ್ರತಿಷ್ಠಾನದ ಅಧ್ಯಕ್ಷ ಪ್ರೊ. ಶಿವರಾಜ ಪಾಟೀಲ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಡಿವಾಳಯ್ಯ ಕೊರಳ್ಳಿ ಪ್ರಾರ್ಥನೆಗೀತೆ ಹಾಡಿದರು. ಉಮಾಕಾಂತ ಪಾಟೀಲ ವಂದಿಸಿದರು.
ಬಾಂಗ್ಲಾದೇಶ ಪ್ರಮಾಣ ವಚನ ಸಮಾರಂಭ, ಪ್ರಧಾನಿ ಮೋದಿ ಅವರಿಗೆ ವಿಶೇಷ ಆಹ್ವಾನ | Bangladesh Election
ಬಾಂಗ್ಲಾದೇಶದ ಜನರು ಅಳೆದು &ತೂಗಿ ಇದೀಗ ಹೊಸ ಜನಪ್ರತಿನಿಧಿಗಳ ಆಯ್ಕೆ ಮಾಡಿದ್ದು, ಅತ್ತ ಪಾಪಿ ಪಾಕಿಸ್ತಾನದ ಕುತಂತ್ರಕ್ಕೆ ತಕ್ಕ ಉತ್ತರ ಕೊಟ್ಟಿದ್ದಾರೆ. ಬಾಂಗ್ಲಾದೇಶ ಕ್ರಾಂತಿಯ ನಂತರ 2 ವರ್ಷ ಹಂಗಾಮಿ ಸರ್ಕಾರ ಅಡಿಯಲ್ಲಿ, ಕೋಮು ಗಲಭೆ ಸೇರಿದಂತೆ ಅಶಾಂತಿ ಸೃಷ್ಟಿಸುವ ವಾತಾವರಣದಲ್ಲಿ ನಲುಗಿತ್ತು ಬಾಂಗ್ಲಾದೇಶ. ಆದರೆ ಇದೀಗ ಬಾಂಗ್ಲಾದೇಶದಲ್ಲಿ ಹೊಸ ಮನ್ವಂತರವು ಆರಂಭ ಆಗಿದ್ದು, ಬಾಂಗ್ಲಾದೇಶ
ಬ್ಯಾರಿ ಲೇಖನ ಸ್ಪರ್ಧೆ: ಫೆ.16ರಂದು ಫಲಿತಾಂಶ ಪ್ರಕಟ
ಮಂಗಳೂರು: ಬ್ಯಾರಿ ಭಾಷೆಯಲ್ಲಿ ಪ್ರಕಟವಾಗುತ್ತಿರುವ ಮಾಸಿಕ 'ಬ್ಯಾರಿವಾರ್ತೆ' ತನ್ನ ದಶಮಾನೋತ್ಸವ ಸಂಭ್ರಮದಲ್ಲಿ ಆಯೋಜಿಸಿದ್ದ 'ಬ್ಯಾರಿ ಲೇಖನ ಸ್ಪರ್ಧೆ - 2026'ರ ಫಲಿತಾಂಶವನ್ನು ಫೆ.16ರಂದು ರಾತ್ರಿ 8.30ಕ್ಕೆ ಪ್ರಕಟಿಸಲಾಗುವುದು. ಈ ಸ್ಪರ್ಧೆಗೆ ರಾಜ್ಯದ ವಿವಿಧ ಜಿಲ್ಲೆಗಳ ಸಹಿತ ವಿದೇಶಗಳಿಂದಲೂ 149 ಲೇಖನಗಳು ಬಂದಿವೆ. ಈ ಸ್ಪರ್ಧೆಯ ಫಲಿತಾಂಶವನ್ನು ವಿಡಿಯೊ ಮೂಲಕ 'Bearyinfo' ಯೂಟ್ಯೂಬ್ ಚಾನೆಲ್ನಲ್ಲಿ ಸೋಮವಾರ ರಾತ್ರಿ 8.30ಕ್ಕೆ ಪ್ರಸಾರ ಮಾಡಲಾಗುವುದು. ಬ್ಯಾರಿ ವಾರ್ತೆಯ ಹತ್ತು ವರ್ಷದ ಸಾಧನೆಯ ಈ ವಿಡಿಯೊವನ್ನು ಹೆಚ್ಚಿನ ಸಂಖ್ಯೆಯಲ್ಲಿ ವೀಕ್ಷಿಸಬೇಕು, ವಿಜೇತರನ್ನು ಅಭಿನಂದಿಸಬೇಕು ಮತ್ತು ಬ್ಯಾರಿವಾರ್ತೆಯ ಜೊತೆಗೆ ಕೈಜೋಡಿಸಬೇಕು ಎಂದು ಸಂಪಾದಕ ಬಶೀರ್ ಬೈಕಂಪಾಡಿ ವಿನಂತಿಸಿದ್ದಾರೆ.
ಬೆಂಗಳೂರು: ರಾಜ್ಯದಲ್ಲಿ ಪ್ರತಿ ವರ್ಷದಂತೆ ಈ ವರ್ಷವು ಹಿಂಗಾರು ಹಂಗಾಮಿನ ಬೆಳೆಗಳಲ್ಲಿ ಪ್ರಮುಖವಾಗಿರುವ ಜೋಳವನ್ನು (Jowar) ಉತ್ತಮ ಪ್ರಮಾಣದಲ್ಲಿ ಬೆಳೆಯಲಾಗಿದೆ. ಉತ್ತರ ಕರ್ನಾಟಕ ಮತ್ತು ಕಲ್ಯಾಣ ಕರ್ನಾಟಕದ ಭಾಗದಲ್ಲಿ ಈ ಬೆಳೆ ಹೆಚ್ಚು ಬೆಳೆಯಲಾಗುತ್ತದೆ. ಇದೀಗ ಶಿವರಾತ್ರಿ ಹೊತ್ತಿಗೆ ಜೋಳ ಕಟಾವಿಗೆ ಬಂದಿದೆ. ತಡವಾಗಿ ಬಿತ್ತನೆ ಮಾಡಿದ ರೈತರು ಈ ತಿಂಗಳಾಂತ್ಯದಲ್ಲಿ ಕಟಾವು ಮಾಡಲಿದ್ದಾರೆ. ಈ ಬಾರಿ
Saudi Arabia | ಸಾಹಿಲ್ ಝಹೀರ್ ಗೆ ಇಂಡೋ ಅರಬ್ ಸೋಶಿಯಲ್ ಐಕನ್ ಪ್ರಶಸ್ತಿ
ಅಲ್ ಖೋಬರ್ (ಸೌದಿ ಅರೇಬಿಯ): ಸೌದಿ ಅರೇಬಿಯದ ಅಲ್ ಖೋಬರ್ ನಲ್ಲಿ ನಡೆದ ಅಂತರರಾಷ್ಟ್ರೀಯ ಸಮಾವೇಶದಲ್ಲಿ ಅಂತರರಾಷ್ಟ್ರೀಯ ನಿರೂಪಕ ಸಾಹಿಲ್ ಝಹೀರ್ ಅವರಿಗೆ ‘ಇಂಡೋ ಅರಬ್ ಸೋಶಿಯಲ್ ಐಕನ್ ಪ್ರಶಸ್ತಿ’ ಪ್ರದಾನ ಮಾಡಿ ಗೌರವಿಸಲಾಯಿತು. ಇದೇ ಸಂದರ್ಭದಲ್ಲಿ SIBEC–SYPA ಇಂಟರ್ನ್ಯಾಷನಲ್ ಬಿಸಿನೆಸ್ & ಎಂಟರ್ಪ್ರೆನರ್ಸ್ ಚೇಂಬರ್ ನ ಸೌದಿ ಅರೇಬಿಯ ಚಾಪ್ಟರ್ ಅನ್ನು ಅಧಿಕೃತವಾಗಿ ಉದ್ಘಾಟಿಸಲಾಯಿತು. SIBEC ಜಾಗತಿಕ ಉದ್ಯಮ ಮತ್ತು ಆರ್ಥಿಕ ಸಹಕಾರ ವೇದಿಕೆಯಾಗಿದ್ದು, ಉದ್ಯಮಿಗಳು, ಹೂಡಿಕೆದಾರರು ಮತ್ತು ವೃತ್ತಿಪರರನ್ನು ಒಂದೇ ವೇದಿಕೆಯಡಿ ಒಗ್ಗೂಡಿಸುವ ಕಾರ್ಯನಿರ್ವಹಿಸುತ್ತದೆ. ಸೌದಿ ಅರೇಬಿಯ ಚಾಪ್ಟರ್ ನ ಉದ್ಘಾಟನಾ ಕಾರ್ಯಕ್ರಮವನ್ನು ಎನರ್ಫ್ಯಾಕ್ ಸೊಲ್ಯೂಷನ್ಸ್ ಸಂಸ್ಥೆಯ ಸಹಯೋಗದಲ್ಲಿ ಆಯೋಜಿಸಲಾಯಿತು. ನಿರೂಪಕ ಹಾಗೂ ಈವೆಂಟ್ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸುತ್ತಿರುವ ಸಾಹಿಲ್ ಝಹೀರ್, ಈ ಹಿಂದೆ ‘ನಮ್ಮ ಟಿವಿ’ಯಲ್ಲಿ VJ ಆಗಿ ಮತ್ತು ರೇಡಿಯೋ ಮಿರ್ಚಿ 98.3 ಎಫ್ಎಂನಲ್ಲಿ ಆರ್ಜೆ ಆಗಿ ಸೇವೆ ಸಲ್ಲಿಸಿದ್ದಾರೆ. ಹಲವು ವರ್ಷಗಳಿಂದ ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಕಾರ್ಯಕ್ರಮಗಳು, ಕಾರ್ಪೊರೇಟ್ ಸಮಾರಂಭಗಳು ಮತ್ತು ಪ್ರಶಸ್ತಿ ಪ್ರದಾನ ವೇದಿಕೆಗಳಲ್ಲಿ ಅವರು ನಿರೂಪಕರಾಗಿ ಕೆಲಸ ಮಾಡಿದ್ದಾರೆ. ಸೋನು ನಿಗಮ್, ಉದಿತ್ ನಾರಾಯಣ್ ಮತ್ತು ಶ್ರೇಯಾ ಘೋಷಾಲ್ ಮುಂತಾದ ಖ್ಯಾತ ಗಾಯಕರೊಂದಿಗೆ ವೇದಿಕೆಯನ್ನು ಹಂಚಿಕೊಂಡಿ ದ್ದಾರೆ. ಟಿ–10 ಮತ್ತು ಟಿ–20 ಸ್ವರೂಪಗಳ ಜೊತೆಗೆ ಐಪಿಎಲ್ ಸಂಬಂಧಿತ ಕಾರ್ಯಕ್ರಮಗಳನ್ನು ಒಳಗೊಂಡ ಕ್ರಿಕೆಟ್ ಪಂದ್ಯಾವಳಿಗಳಲ್ಲಿಯೂ ಅವರು ನಿರೂಪಕರಾಗಿ ಕಾಣಿಸಿಕೊಂಡಿದ್ದಾರೆ. ಇತ್ತೀಚೆಗೆ ಅಲ್ ಖೋಬರ್ ನಲ್ಲಿ ನಡೆದ ‘Festival of Cricket – Women’s Edition’ ಕಾರ್ಯಕ್ರಮವನ್ನು ಅವರು ನಿರೂಪಿಸಿದ್ದು, ಇದನ್ನು ಸೌದಿ ಅರೇಬಿಯದಲ್ಲಿ ಮಹಿಳೆಯರಿಗಾಗಿ ಆಯೋಜಿಸಲಾದ ಮೊದಲ ಕ್ರಿಕೆಟ್ ಹಬ್ಬ. ಭಾರತೀಯ ಮತ್ತು ಅರಬ್ ಪ್ರೇಕ್ಷಕರನ್ನು ಸಂಪರ್ಕಿಸುವ ಅಂತರರಾಷ್ಟ್ರೀಯ ಕಾರ್ಯಕ್ರಮಗಳಲ್ಲಿ ನೀಡಿದ ಕೊಡುಗೆಗಳು ಹಾಗೂ ನಿರೂಪಕರಾಗಿ ತೋರಿದ ಸಾಧನೆಯನ್ನು ಪರಿಗಣಿಸಿ ಸಾಹಿಲ್ ಝಹೀರ್ ಅವರಿಗೆ ಈ ಪ್ರಶಸ್ತಿಯನ್ನು ನೀಡಲಾಗಿದೆ.
ಕೊಲಂಬೊದಲ್ಲೂ ಹ್ಯಾಂಡ್ ಶೇಕ್ ಮಾಡದ ಸೂರ್ಯಕುಮಾರ್ ಯಾದವ್! ಬಿಸಿಸಿಐ ಎಕ್ಸ್ ಪೋಸ್ಟ್ ನಲ್ಲೂ ಇಲ್ಲ ಸಲ್ಮಾನ್ ಆಘಾ!
ಕೊಲಂಬೊ ಪಂದ್ಯದಲ್ಲಾದರೂ ಭಾರತ ತಂಡದ ನಾಯಕ ಸೂರ್ಯಕುಮಾರ್ ಯಾದವ್ ಅವರು ಪಾಕಿಸ್ತಾನದ ನಾಯಕ ಸಲ್ಮಾನ್ ಅಲಿ ಆಘಾ ಅವರ ಜೊತೆಗೆ ಹ್ಯಾಂಡ್ ಶೇಕ್ ಮಾಡಬಹುದೆಂಬ ನಿರೀಕ್ಷೆ ಇದೀಗ ಸುಳ್ಳಾಗಿದೆ. ಟಾಸ್ ಗೆ ಮೈದಾನಕ್ಕೆ ಆಗಮಿಸಿದ ವೇಳೆ ಇತ್ತಂಡಗಳ ನಾಯಕರು ಪರಸ್ಪರ ಮುಖವನ್ನೂ ನೋಡಲಿಲ್ಲ. ಪಂದ್ಯಕ್ಕೂ ಪೂರ್ವಭಾವಿಯಾಗಿ ನಡೆದ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಪ್ರಶ್ನಿಸಿದ್ದಾಗ ಸೂರ್ಯಕುಮಾರ್ ಯಾದವ್ ಅವರು `' ಎಂದು ಹೇಳಿ ಎಲ್ಲರನ್ನೂ ಕುತೂಹಲಕ್ಕೀಡುಮಾಡಿದ್ದರು. ಆದರೆ ಟಾಸ್ ವೇಳೆ ಮಾತ್ರ ಅಕ್ಕಪಕ್ಕ ನಿಂತರೂ ಪಾಕಿಸ್ತಾನ ತಂಡದ ನಾಯಕನ ಮುಖವನ್ನೂ ನೋಡಲಿಲ್ಲ. ಸೂರ್ಯಕುಮಾರ್ ಯಾದವ್ ಅವರ ನಾಣ್ಯ ಚಿಮ್ಮಿಸಿದರು. ಟಾಸ್ ಗೆದ್ದ ಪಾಕಿಸ್ತಾನ ತಂಡದ ನಾಯಕ ಸಲ್ಮಾನ್ ಆಘಾ ಅವರು ಫೀಲ್ಡಿಂಗ್ ಆಯ್ದುಕೊಂಡರು. ಬಳಿಕ ಕ್ರೀಡಾ ನಿರೂಪಕರ ಜೊತೆ ಸಂವಾದದ ಬಳಿಕ ಇಬ್ಬರೂ ತಮ್ಮ ಪಾಡಿಗೆ ಪೆವಿಲಿಯನ್ ನತ್ತ ಹೆಜ್ಜೆ ಹಾಕಿದರು. ಹೀಗಾಗಿ ಪುಲ್ವಾಮ ದಾಳಿಗೆ ಪ್ರತೀಕಾರವಾಗಿ ಏಷ್ಯಾ ಕಪ್ ನಲ್ಲಿ ಭಾರತ ತಂಡ ಪ್ರಾರಂಭಿಸಿದ್ದ ನೋ ಹ್ಯಾಂಡ್ ಶೇಕ್ ಅಭಿಯಾನ ಇದೀಗ ಐಸಿಸಿ 2026 ಪಂದ್ಯಾವಳಿಯಲ್ಲೂ ಮುಂದುವರಿದಿದೆ. X ಪೋಸ್ಟ್ ನಲ್ಲಿ ಕೇವಲ SKY ಪೋಟೋ ಸಾಮಾನ್ಯ ಎಕ್ಸ್ ಪೋಸ್ಟ್ ನಲ್ಲಿ ಇತ್ತಂಡಗಳ ನಾಯಕರ ಫೋಟೋಗಳನ್ನೂ ಹಾಕುವುದೂ ರೂಢಿ. ಆದರೆ ಟಾಸ್ ವೇಳೆ ಕೇವಲ ಸೂರ್ಯಕುಮಾರ್ ಯಾದವ್ ಅವರ ಫೋಟೋವನ್ನು ಮಾತ್ರ ಬಿಸಿಸಿಐ ಪೋಸ್ಟ್ ಮಾಡಿದೆ. ಈ ಹಿಂದೆ ಏಷ್ಯಾ ಕಪ್ ನಲ್ಲೂ ಬಿಸಿಸಿಐ ಕೇವಲ ಭಾರತ ಆಟಗಾರರ ಫೋಟೋಗಳನ್ನು ಪೋಸ್ಟ್ ಮಾಡಿತ್ತು. ಪ್ರತೀಕಾರವಾಗಿ ಪಾಕಿಸ್ತಾನ ಸಹ ಅದೇ ರೀತಿ ತನ್ನ ಎಕ್ಸ್ ಖಾತೆಯಲ್ಲಿ ಭಾರತದ ಆಟಗಾರರ ಫೋಟೋಗಳನ್ನು ಹಾಕಿರಲಿಲ್ಲ. ಈ ನಡೆಯೂ ಚರ್ಚೆಗೆ ಕಾರಣವಾಗಿತ್ತು.ಕೊಲಂಬೊದ ಪ್ರೇಮದಾಸ ಕ್ರೀಡಾಂಗಣದಲ್ಲಿ ಟಾಸ್ ಗೆದ್ದ ಪಾಕಿಸ್ತಾನ ತಂಡದ ನಾಯಕ ಸಲ್ಮಾನ್ ಅಲಿ ಆಘಾ ಅವರು ಫೀಲ್ಡಿಂಗ್ ಆಯ್ದುಕೊಂಡರು. ಪಾಕಿಸ್ತಾನ ಈ ಹಿಂದೆ ಅಮೆರಿಕ ವಿರುದ್ಧ ಗೆದ್ದ ತಂಡವನ್ನೇ ಉಳಿಸಿಕೊಂಡಿದೆ. ಯಾವುದೇ ಬದಲಾವಣೆ ಮಾಡಿಕೊಂಡಿಲ್ಲ. ಭಾರತ ತಂಡ ಎರಡು ಬದಲಾವಣೆಗಳನ್ನು ಮಾಡಿಕೊಂಡಿದೆ. ಸತತ ವೈಫಲ್ಯ ಅನುಭವಿಸುತ್ತಿರುವ ವಿಕೆಟ್ ಕೀಪರ್ ಬ್ಯಾಟರ್ ಸಂಜು ಸ್ಯಾಮ್ಸನ್ ಮತ್ತು ಮಧ್ಯಮ ವೇಗಿ ಅರ್ಶದೀಪ್ ಸಿಂಗ್ ಅವರ ಬದಲಿಗೆ ಅನಾರೋಗ್ಯದಿಂದ ಚೇತರಿಸಿಕೊಂಡಿರುವ ಅವರು ಪ್ಲೇಯಿಂಗ್ ಇಲೆವೆನ್ ಗೆ ಆಯ್ಕೆಯಾಗಿದ್ದಾರೆ. ಭಾರತ ತಂಡ ನಿಧಾನಗತಿಯ ಪಿಚ್ ನಲ್ಲಿ ಮಿಸ್ಟರಿ ಸ್ಪಿನ್ನರ್ ಜೊತೆ ಕುಲ್ದೀಪ್ ಯಾದವ್ ಅವರು ಪರಿಣಾಮಕಾರಿಯಾಗಬಲ್ಲರು ಎಂಬ ಲೆಕ್ಕಾಚಾರ ಹಾಕಿ ಈ ನಿರ್ಧಾರಕ್ಕೆ ಬಂದಿದೆ. ಭಾರತ ಪ್ಲೇಯಿಂಗ್ ಇಲೆವೆನ್ ಸೂರ್ಯಕುಮಾರ್ ಯಾದವ್ (ನಾಯಕ), ಇಶಾನ್ ಕಿಶನ್ (ವಿಕೆಟ್ ಕೀಪರ್), ಅಭಿಷೇಕ್ ಶರ್ಮಾ, ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ರಿಂಕು ಸಿಂಗ್, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ವರುಣ್ ಚಕ್ರವರ್ತಿ, ಜಸ್ಪ್ರೀತ್ ಬುಮ್ರಾ. ಪಾಕಿಸ್ತಾನ ಪ್ಲೇಯಿಂಗ್ ಇಲೆವೆನ್ ಸಲ್ಮಾನ್ ಅಘಾ (ನಾಯಕ), ಸಾಹಿಬ್ಜಾದಾ ಫರ್ಹಾನ್, ಸೈಮ್ ಅಯೂಬ್, ಬಾಬರ್ ಅಜಮ್, ಶಾದಾಬ್ ಖಾನ್, ಉಸ್ಮಾನ್ ಖಾನ್ (ವಿಕೆಟ್ ಕೀಪರ್), ಮೊಹಮ್ಮದ್ ನವಾಜ್, ಫಹೀಮ್ ಅಶ್ರಫ್, ಶಾಹೀನ್ ಶಾ ಅಫ್ರಿದಿ, ಉಸ್ಮಾನ್ ತಾರಿಕ್, ಅಬ್ರಾರ್ ಅಹ್ಮದ್.
ʼಮಾರ್ಯಾದೆ ಇದ್ದರೆ ವಿಧಾನಸಭೆಯನ್ನು ವಿಸರ್ಜಿಸಿ ಚುನಾವಣೆಗೆ ಹೋಗಬೇಕು ʼ : ರಾಜ್ಯ ಸರಕಾರದ ವಿರುದ್ಧ ಆರ್.ಅಶೋಕ್ ಆಕ್ರೋಶ
ಬೆಂಗಳೂರು : ‘ರಾಜ್ಯದ ಆಡಳಿತಾರೂಢ ಕಾಂಗ್ರೆಸ್ ಪಕ್ಷದ ನೇತೃತ್ವದ ಸರಕಾರಕ್ಕೆ ಕಿಂಚಿತ್ತಾದರೂ ನಾಚಿಕೆ, ಮಾನ-ಮರ್ಯಾದೆ ಇದ್ದರೆ ಈ ಕೂಡಲೇ ವಿಧಾನಸಭೆಯನ್ನು ವಿಸರ್ಜನೆ ಮಾಡಿ ಚುನಾವಣೆಗೆ ಹೋಗಬೇಕು’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಇಂದಿಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರವಿವಾರ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಹಾಕಿರುವ ಅವರು, ‘ಸರಕಾರಿ ವೈದ್ಯಾಧಿಕಾರಿಗಳು ಹಾಗೂ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆಯ ನೌಕರರು ತಾವು ಕೈಗೊಳ್ಳಲಿರುವ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಸಂಬಂಧಿಸಿದಂತೆ ರಾಜ್ಯ ಸರಕಾರಕ್ಕೆ ಬರೆದಿರುವ ಪತ್ರದಲ್ಲಿ ಸರಕಾರ ಔಷಧಿ ಪೂರೈಕೆಯಲ್ಲಿ ವಿಫಲವಾಗಿರುವ ಬಗ್ಗೆ ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ’ ಎಂದು ಉಲ್ಲೇಖಿಸಿದ್ದಾರೆ. ‘ಸಿಎಂ ಸಿದ್ದರಾಮಯ್ಯನವರೇ, ಸರಕಾರಿ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಔಷಧಿ ಸಿಗುತ್ತಿಲ್ಲ ಎಂದು ವಿಪಕ್ಷಗಳು ಟೀಕೆ ಮಾಡಿದರೆ ಎಲ್ಲವೂ ಸರಿ ಇದೆ ಎಂದು ತಿಪ್ಪೆ ಸಾರಿಸುವ ಮಾತಾಡುತ್ತೀರಿ. ಮಾಧ್ಯಮಗಳು ವರದಿ ಮಾಡಿದರೂ ಕ್ಯಾರೆ ಎನ್ನುವುದಿಲ್ಲ’ ಎಂದು ಅವರು ಟೀಕಿಸಿದ್ದಾರೆ. ‘ಆದರೆ, ದಿನನಿತ್ಯ ರೋಗಿಗಳಿಗೆ ಆರೋಗ್ಯ ಸೇವೆ ನೀಡುವ, ಆಸ್ಪತ್ರೆಗಳ ನಿರ್ವಹಣೆ ಮಾಡುವ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆಗಳ ಅಧಿಕಾರಿಗಳು ಮತ್ತು ನೌಕರರು ಸ್ವತಃ ತಾವೇ ಲಿಖಿತ ರೂಪದಲ್ಲಿ ಔಷಧಿ ಪೂರೈಕೆಯಲ್ಲಿ ಆಗುತ್ತಿರುವ ವ್ಯತ್ಯಯದ ಬಗ್ಗೆ ಬಹಿರಂಗ ಮಾಡಿದ್ದಾರಲ್ಲ ಸ್ವಾಮಿ, ಈಗ ಏನು ಹೇಳುತ್ತೀರಿ?’ ಎಂದು ಅಶೋಕ್ ಪ್ರಶ್ನಿಸಿದ್ದಾರೆ. ‘ಇನ್ನು ನಿಮ್ಮ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ದಿನೇಶ್ ಗುಂಡೂರಾವ್ ಅವರಂತೂ ಆರೋಗ್ಯ ಇಲಾಖೆಯನ್ನೇ ಸಂಪೂರ್ಣವಾಗಿ ಅನಾರೋಗ್ಯ ಪೀಡಿತಗೊಳಿಸಿದ್ದಾರೆ’ ಎಂದು ಅಶೋಕ್ ವಾಗ್ದಾಳಿ ನಡೆಸಿದ್ದಾರೆ.
T20 ವಿಶ್ವಕಪ್ | ಭಾರತ - ಪಾಕ್ ಮುಖಾಮುಖಿ ವೇಳೆ ಮತ್ತೊಮ್ಮೆ ಹಸ್ತಲಾಘವ ಮಾಡದ ಸೂರ್ಯಕುಮಾರ್-ಸಲ್ಮಾನ್ ಅಲಿ
ಕೊಲೊಂಬೊ : T20 ವಿಶ್ವಕಪ್ ಪಂದ್ಯದಲ್ಲಿ ರವಿವಾರ ಟಾಸ್ ವೇಳೆ ಭಾರತ ತಂಡದ ನಾಯಕ ಸೂರ್ಯಕುಮಾರ್ ಹಾಗೂ ಪಾಕಿಸ್ತಾನ ತಂಡದ ನಾಯಕ ಸಲ್ಮಾನ್ ಅಲಿ ಅವರು ಮತ್ತೊಮ್ಮೆ ಪರಸ್ಪರ ಕೈ ಕುಲುಕಲಿಲ್ಲ. ಭಾರತದ ವಿರುದ್ಧ ಟಾಸ್ ಗೆದ್ದ ಪಾಕಿಸ್ತಾನ ಫೀಲ್ಡಿಂಗ್ ಆಯ್ಕೆ ಮಾಡಿದೆ.
ಬೈರತಿ ಬಸವರಾಜು ಕುಟುಂಬದೊಂದಿಗೆ ಪಕ್ಷ ಇರಲಿದೆ : ವಿಜಯೇಂದ್ರ
ಬೆಂಗಳೂರು : ರೌಡಿಶೀಟರ್ ಬಿಕ್ಲು ಶಿವು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಬೈರತಿ ಬಸವರಾಜು ಅವರನ್ನು ಪೊಲೀಸರು ಬಂಧಿಸಿದ ಹಿನ್ನೆಲೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಬೈರತಿ ಬಸವರಾಜು ನಿವಾಸಕ್ಕೆ ತೆರಳಿ ಕುಟುಂಬಸ್ಥರು ಹಾಗೂ ಪಕ್ಷದ ಕಾರ್ಯಕರ್ತರಿಗೆ ಧೈರ್ಯ ಹೇಳಿದರು. ರವಿವಾರ ಬೆಳಗ್ಗೆ ವಿಜಯೇಂದ್ರ ನೇತೃತ್ವದಲ್ಲಿ ಚಿತ್ರದುರ್ಗ ಸಂಸದ ಗೋವಿಂದ ಎಂ.ಕಾರಜೋಳ, ಮಾಜಿ ಶಾಸಕರಾದ ವರ್ತೂರು ಪ್ರಕಾಶ್, ಪ್ರೀತಂ ಗೌಡ ಸೇರಿದಂತೆ ಪಕ್ಷದ ಇನ್ನಿತರ ಮುಖಂಡರು, ಬೈರತಿ ಬಸವರಾಜು ನಿವಾಸಕ್ಕೆ ತೆರಳಿ, ಕುಟುಂಬದ ಸದಸ್ಯರಿಗೆ ಧೈರ್ಯ ತುಂಬಿದರು. ಬಳಿಕ ಮಾತನಾಡಿದ ವಿಜಯೇಂದ್ರ, ‘ರಾಜಕೀಯ ಷಡ್ಯಂತ್ರ ಹೇಗೆಲ್ಲಾ ನಡೆಯುತ್ತದೆ ಎಂದು ಗೊತ್ತಿದೆ. ನನ್ನ ಮೇಲೆ, ನಮ್ಮ ತಂದೆ ಯಡಿಯೂರಪ್ಪರ ಮೇಲೆ 30-40 ಕೇಸ್ ಹಾಕಿದ್ದರೂ, ನಾವು ಎದುರಿಸಿದ್ದೇವೆ. ಬೈರತಿ ಬಸವರಾಜ್ ಕುಟುಂಬದ ಜತೆ ನಾವು ಇದ್ದೇವೆ. ಪಕ್ಷವೂ ಅವರೊಂದಿಗಿದೆ’ ಎಂದು ನುಡಿದರು. ಈ ಪ್ರಕರಣ ಸಂಬಂಧ ಕಾನೂನು ತಂಡದ ಜತೆಗೆ ಸಂಪರ್ಕ ಮಾಡುತ್ತೇವೆ. ಬೈರತಿ ಬಸವರಾಜ್, ಯಡಿಯೂರಪ್ಪ ಸರಕಾರ ಬರುವ ವೇಳೆ ಧೈರ್ಯ ಮಾಡಿ ರಾಜೀನಾಮೆ ನೀಡಿದವರು. ಅವರು ವಿಧಾನಸೌಧಕ್ಕೆ ಓಡೋಡಿ ಬಂದಿದ್ದನ್ನು ಜನತೆ ಮರೆಯುವುದಿಲ್ಲ. ಪಕ್ಷದ ಕಾರ್ಯಕರ್ತರು ಆತಂಕಪಡುವ ಅಗತ್ಯವಿಲ್ಲ. ನಾವು ನಿಮ್ಮ ಜತೆಗಿದ್ದೇವೆ ಎಂದು ಅವರು ಅಭಯ ನೀಡಿದರು. ಬಿಎಸ್ವೈ ಅವರು ಸಿಎಂ ಆಗುವ ವೇಳೆ ಬೈರತಿ ಬಸವರಾಜ್ ತೋರಿದ ಧೈರ್ಯವನ್ನು ನಾವು ತೋರಲು ಸಾಧ್ಯವಿಲ್ಲ. ಯಡಿಯೂರಪ್ಪರ ಮೇಲೆ ಅವರಿಗಿದ್ದ ವಿಶ್ವಾಸಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಇದೊಂದು ಪರೀಕ್ಷೆಯ ಕಾಲ, ಯಾರೂ ತಾಳ್ಮೆ ಕಳೆದುಕೊಳ್ಳುವುದು ಬೇಡ. ನಮ್ಮಲ್ಲಿ ಉತ್ತಮ ಕಾನೂನು ತಜ್ಞರು ಇದ್ದಾರೆ. ಕಾನೂನು ಪ್ರಕ್ರಿಯೆ ಸ್ವಲ್ಪ ಸಮಯ ಹಿಡಿಯಲಿದೆ, ಎಲ್ಲರ ಸಹಕಾರ ಬೇಕು ಎಂದು ಅವರು ಮನವಿ ಮಾಡಿದರು.
ಗೋಕರ್ಣದಲ್ಲಿ ಆತ್ಮಲಿಂಗ ದರ್ಶನ ಪಡೆದು ಕೆಲ ನಿಮಿಷಗಳಲ್ಲಿಯೇ ಕೊನೆಯುಸಿರೆಳೆದ ಭಕ್ತ! ಶಿವರಾತ್ರಿ ದಿನವೇ ಘಟನೆ
ಶಿವರಾತ್ರಿ ದಿನ ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದ ಮಹಾಬಲೇಶ್ವರ ದೇವಸ್ಥಾನದಲ್ಲಿ ಆತ್ಮಲಿಂಗ ದರ್ಶನ ಪಡೆದ ಕೆಲ ಸಮಯದಲ್ಲಿಯೇ ಭಕ್ತರೊಬ್ಬರು ಮೃತಪಟ್ಟಿದ್ದಾರೆ. ಗೋವಾದ ರತ್ನಾಕರ ಮೃತ ವ್ಯಕ್ತಿ. ಹೃದಯಾಘಾತದಿಂದ ಸಾವಿಗೀಡಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಹಲವು ವರ್ಷಗಳಿಂದ ಹೃದ್ರೋಗ ಚಿಕಿತ್ಸೆ ಪಡೆಯುತ್ತಿದ್ದರು ಎಂದು ಮೂಲಗಳು ತಿಳಿಸಿವೆ.
ಮೇಕೆದಾಟು : ಕರ್ನಾಟಕದಿಂದ ಪರಿಷ್ಕೃತ ಡಿಪಿಆರ್ ಸಲ್ಲಿಕೆ ; ಶೀಘ್ರದಲ್ಲೇ ಸಿಹಿಸುದ್ದಿ ಸಿಗುವ ನಿರೀಕ್ಷೆ
ಮಹತ್ವಾಕಾಂಕ್ಷಿ ಮೇಕೆದಾಟು ಅಣೆಕಟ್ಟು ನಿರ್ಮಾಣದ ಸ್ಥಳವನ್ನು ಡಿಪಿಆರ್ನಲ್ಲಿ ರಾಜ್ಯ ಜಲಸಂಪನ್ಮೂಲ ಇಲಾಖೆ ಗುರುತಿಸಿದ್ದು, ಕಾವೇರಿ- ಅರ್ಕಾವತಿ ನದಿ ಸಂಗಮವಾಗುವ ಸಂಗಮ ಪ್ರದೇಶದಿಂದ 2 ಕಿಮೀ. ದೂರದಲ್ಲಿ ಮೇಕೆದಾಟಿಗೂ ಮೊದಲು ಅಣೆಕಟ್ಟು ಕಟ್ಟಲು ರಾಜ್ಯ ಉದ್ದೇಶಿಸಿದೆ. 99 ಮೀಟರ್ ಎತ್ತರಕ್ಕೆ ಈ ಸಮತೋಲನ ಅಣೆಕಟ್ಟು ನಿರ್ಮಾಣ ಮಾಡಲು ಡಿಪಿಆರ್ನಲ್ಲಿಉಲ್ಲೇಖಿಸಿದ್ದು, 67.17 ಟಿಎಂಸಿ ನೀರು ಸಂಗ್ರಹಣೆಯ ಸಾಮರ್ಥವನ್ನು ಈ ಡ್ಯಾಂ ಹೊಂದಲಿದೆ.
Raichur | ರಾಷ್ಟ್ರ ಧ್ವಜ, ಭಗವದ್ಗೀತೆಗೆ ಅಪಮಾನ ಆರೋಪ : ಇಬ್ಬರು ಪೊಲೀಸರ ವಶಕ್ಕೆ
ರಾಯಚೂರು : ರಾಷ್ಟ್ರಧ್ವಜ ಮತ್ತು ಭಗವದ್ಗೀತೆಯನ್ನು ಕಾಲಿನಿಂದ ತುಳಿದಿರುವ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಆರೋಪದ ಮೇರೆಗೆ ಮಾರ್ಕೆಟ್ ಯಾರ್ಡ್ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ. ವಶಕ್ಕೆ ಪಡೆದವರನ್ನು ಎಲ್.ಬಿ.ಎಸ್.ನಗರದ ನಿವಾಸಿಗಳಾದ ನವಾಝ್ ಮತ್ತು ಸೋಹೆಲ್ ಎಂದು ಗುರುತಿಸಲಾಗಿದೆ. ರಾಷ್ಟ್ರಧ್ವಜ ಹಾಗೂ ಭಗವದ್ಗೀತೆಗೆ ಚಪ್ಪಲಿಯಿಂದ ತುಳಿದಿರುವ ಚಿತ್ರವನ್ನು ವಾಟ್ಸಾಪ್ ಸ್ಟೇಟಸ್ನಲ್ಲಿ ಹಂಚಿಕೊಂಡಿದ್ದಾರೆ ಎಂದು ಕಾರ್ತಿಕ್ ರೆಡ್ಡಿ ಎಂಬವರು ದೂರು ನೀಡಿದ್ದರು. ಇಬ್ಬರನ್ನೂ ಠಾಣೆಗೆ ಕರೆಸಿ ಮಾರ್ಕೆಟ್ ಯಾರ್ಡ್ ಪೊಲೀಸ್ ಠಾಣೆಯಲ್ಲಿ ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
Maha Shivaratri: ಮಹಾಶಿವರಾತ್ರಿ ಜಾಗರಣೆಯು ಸಮಾಧಿ ಸ್ಥಿತಿ ತಲುಪಲು ಸಹಕಾರಿ: ಶ್ರೀ ಮಧುಸೂದನ್ ಸಾಯಿ
ಚಿಕ್ಕಬಳ್ಳಾಪುರ: ಜಿಲ್ಲೆಯ ಚಿಕ್ಕಬಳ್ಳಾಪುರ ತಾಲೂಕಿನ ಮುದ್ದೇನಹಳ್ಳಿಯ ಶ್ರೀ ಸತ್ಯಸಾಯಿ ಗ್ರಾಮದಲ್ಲಿ ಮಾಘಮಾಸದ ಪವಿತ್ರ ಮಹಾಶಿವರಾತ್ರಿ ಹಬ್ಬವನ್ನು ಭಕ್ತಿಭಾವ, ಆತ್ಮಾವಲೋಕನ ಹಾಗೂ ಆಧ್ಯಾತ್ಮಿಕ ಚಿಂತನೆಯ ವಾತಾವರಣದಲ್ಲಿ ಆಚರಿಸಲಾಯಿತು. ಬೆಳಗ್ಗೆಯಿಂದಲೇ ವಿದ್ಯಾರ್ಥಿಗಳು, ಶಿಕ್ಷಕರು, ಸಿಬ್ಬಂದಿ ಹಾಗೂ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಲಿಂಗಾಭಿಷೇಕ, ರುದ್ರಪಾರಾಯಣ, ಮಂತ್ರಜಪ, ಭಜನೆ ಮತ್ತು ಧ್ಯಾನ ಕಾರ್ಯಕ್ರಮಗಳಲ್ಲಿ ಭಾಗವಹಿಸಿದರು. ಕಾರ್ಯಕ್ರಮದಲ್ಲಿ ‘ಒನ್ ವರ್ಲ್ಡ್ ಒನ್ ಫ್ಯಾಮಿಲಿ'
ಅಫಜಲಪುರ | ಫೆ.20 ರಂದು ಅಸ್ಪೃಶ್ಯತಾ ನಿರ್ಮೂಲನಾ ವಿಚಾರಗೋಷ್ಠಿ
ಅಫಜಲಪುರ : ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಕಲಬುರಗಿ ಹಾಗೂ ಸಾಮ್ರಾಟ್ ಅಶೋಕ ಚಾರಿಟೇಬಲ್ ಟ್ರಸ್ಟ್, ಮಲ್ಲಾಬಾದ್ ಇವರ ಸಂಯುಕ್ತ ಆಶ್ರಯದಲ್ಲಿ 2025-26ನೇ ಸಾಲಿನ ಅಸ್ಪೃಶ್ಯತಾ ನಿರ್ಮೂಲನಾ ವಿಚಾರಗೋಷ್ಠಿ ಕಾರ್ಯಕ್ರಮವು ಫೆ.20ರಂದು ಪಟ್ಟಣದ ತಹಶೀಲ್ ಕಚೇರಿ ಎದುರುಗಡೆ ಇರುವ ಗುರುಭವನದಲ್ಲಿ ನಡೆಯಲಿದೆ ಎಂದು ಟ್ರಸ್ಟ್ ಅಧ್ಯಕ್ಷ ಯಲ್ಲಪ್ಪ ದೊಡ್ಡಮನಿ ಹೇಳಿದ್ದಾರೆ. ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಕಾರ್ಯಕ್ರಮವನ್ನು ಶಾಸಕ ಎಂ.ವೈ.ಪಾಟೀಲ ಉದ್ಘಾಟಿಸಲಿದ್ದು, ಫೋಟೋ ಪೂಜೆಯನ್ನು ಮಾಜಿ ಸಚಿವ ಮಾಲಿಕಯ್ಯ ವಿ.ಗುತ್ತೇದಾರ, ಸಂವಿಧಾನ ಪ್ರಸ್ತಾವನೆ ಬಿಡುಗಡೆಯನ್ನು ಬಿಜೆಪಿ ಮುಖಂಡ ನಿತೀನ್ ವಿ.ಗುತ್ತೇದಾರ ನಡೆಸಲಿದ್ದು, ಕೆಕೆಆರ್ಟಿಸಿ ಅಧ್ಯಕ್ಷ ಅರಣಕುಮಾರ ಎಂ.ಪಾಟೀಲ ಇದರಲಿದ್ದಾರೆ ಎಂದರು. ಮುಖ್ಯ ಅತಿಥಿಗಳಾಗಿ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕಿ ಪ್ರೀತಿ ದೊಡ್ಡಮನಿ, ತಹಶೀಲ್ದಾರ್ ಹಾಗೂ ತಾಲೂಕು ದಂಡಾಧಿಕಾರಿ ಸಂಜುಕುಮಾರ ದಾಸರ್, ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ವೀರಣ್ಣ ಕೌಲಗಿ, ತಾ.ಸ.ಕ.ಇ. ಸಹಾಯಕ ನಿರ್ದೇಶಕರು ಅಶೋಕ ನಾಯಕ್, ಕ್ಷೇತ್ರ ಶಿಕ್ಷಣಾಧಿಕಾರಿ ಇರ್ಪಣ್ಣ ಗುಡಮಿ, ಪುರಸಭೆ ಮುಖ್ಯಾಧಿಕಾರಿ ಫಕ್ರೋದ್ದೀನ್, ಸಿ.ಪಿ.ಐ. ಚನ್ನಯ್ಯ ಹಿರೇಮಠ, ಪಿ.ಎಸ್.ಐ. ಸೋಮಲಿಂಗ ಒಡೆಯರ್, ಕೋಲಿ ಕಬ್ಬಲಿ ಎಸ್.ಟಿ. ಹೋರಾಟ ಸಮಿತಿ ರಾಜ್ಯಾಧ್ಯಕ್ಷ ಲಚ್ಚಪ್ಪ ಜಮಾದಾರ, ಸಮಾಜ ಸೇವಕ ಜೆ.ಎಂ. ಕೊರಬು ಹಾಗೂ ಯುವ ಮುಖಂಡ ರವಿ ಶೆಟ್ಟಿ ಭಾಗವಹಿಸಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Hampi | ಯುವಕವಿಗಳು ಜನಬದುಕಿನ ಧ್ವನಿಯಾಗಲಿ: ಹಿರಿಯ ಸಾಹಿತಿ ಎ.ಎಂ.ಮದರಿ
ವಿಜಯನಗರ : ನವಕಾಲದ ಯುವ ಕವಿಗಳು ಜನಸಾಮಾನ್ಯರ ಬದುಕು-ಬವಣೆಗಳಿಗೆ ಧ್ವನಿಯಾಗಬೇಕು. ಸಾಹಿತ್ಯ ಪರಂಪರೆಯಲ್ಲಿ ದಾಖಲಾಗದ ಬೀದಿಯ ಕೂಲಿ ಕಾರ್ಮಿಕರ ಜೀವನವನ್ನು ಕವಿತೆಗಳಲ್ಲಿ ವ್ಯಕ್ತಪಡಿಸಿ ಅವರ ಕಥೆಗಳನ್ನು ಹೇಳಬೇಕು ಎಂದು ಹಿರಿಯ ಸಾಹಿತಿ ಎ.ಎಂ.ಮದರಿ ಹೇಳಿದರು. ಹಂಪಿ ಉತ್ಸವದ ಅಂಗವಾಗಿ ವಿರೂಪಾಕ್ಷೇಶ್ವರ ವೇದಿಕೆಯಲ್ಲಿ ಭಾನುವಾರ ನಡೆದ ಯುವಕವಿಗೋಷ್ಠಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕವಿತೆ ಹಾಗೂ ಕಾವ್ಯರಚನೆಗೆ ಅರ್ಥಗರ್ಭಿತ ಭಾಷೆ, ಶೈಲಿ ಮತ್ತು ಆಕೃತಿ ಅತ್ಯಂತ ಮುಖ್ಯ. ಹಳೆಗನ್ನಡ, ವಚನ ಸಾಹಿತ್ಯ, ತತ್ವಪದ, ಜಾನಪದ, ದಾಸವಾಣಿ ಹಾಗೂ ನವೋದಯ ಸಾಹಿತ್ಯ ಯುವ ಕವಿಗಳಿಗೆ ದಿಕ್ಕು ತೋರಿಸುವಂತಿವೆ. ಕೇವಲ ತಾಂತ್ರಿಕ ಪದಗಳು, ಪ್ರತಿಮೆ-ಪ್ರತೀಕಗಳ ಬಳಕೆಯಿಂದ ಸಾಹಿತ್ಯವಾಗುವುದಿಲ್ಲ. ಸಾಮಾನ್ಯ ಜನರ ಬದುಕಿನ ನೋವು-ನಲಿವುಗಳನ್ನು ಒಳಗೊಂಡ ವಾಸ್ತವದ ಹಾದಿಯೇ ನಿಜವಾದ ಸಾಹಿತ್ಯ. ಕವಿತೆ ಮನಸ್ಸಿನ ಭಾರ ಇಳಿಸುವ, ಮಾನಸಿಕ ಸ್ವಾಸ್ಥ್ಯ ಕಾಪಾಡುವ ಮಾರ್ಗವೂ ಹೌದು ಎಂದು ಅವರು ಅಭಿಪ್ರಾಯಪಟ್ಟರು. ಭಟ್ಟಂಗಿತನ ಬೇಡ, ಸ್ವಾಭಿಮಾನ ಇರಲಿ : ಕವಿ, ಕಲಾವಿದ, ಸಾಹಿತಿಗಳು ಅಧಿಕಾರಸ್ಥರನ್ನು ಓಲೈಸುವ ಭಟ್ಟಂಗಿಗಳಾಗಬಾರದು. ತಪ್ಪುಗಳನ್ನು ಪ್ರಶ್ನಿಸುವ ನೈತಿಕ ಧೈರ್ಯ ಹೊಂದಬೇಕು. ಪದಗಳ ಸ್ತುತಿಗೀತೆ ಬರೆದು ಕ್ಲೇಶ ಉಂಟುಮಾಡುವ ಬದಲು, ಜೀವನದ ಅನುಭವಗಳಿಗೆ ಪದಗಳ ರೂಪ ನೀಡಬೇಕು. ಇಂದಿನ ಕೆಲವು ಯುವ ಕವಿತೆಗಳು ಜನರ ಬದುಕನ್ನು ಚಿತ್ರಿಸುವ ಬದಲು ಅವರ ಬದುಕನ್ನು ಅಂತ್ಯಗೊಳಿಸುವಂತೆ ಭಾಸವಾಗುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರು. ಯುವಕವಿಗೋಷ್ಠಿಯಲ್ಲಿ 38 ಯುವ ಸಾಹಿತಿಗಳು ಸ್ವರಚಿತ ಕವನಗಳನ್ನು ವಾಚಿಸಿದರು. ವಿಜಯನಗರ ಸಾಮ್ರಾಜ್ಯದ ಐತಿಹ್ಯ, ಪ್ರಸ್ತುತ ರಾಜಕೀಯ, ಧರ್ಮ ಸಂಘರ್ಷ, ತಂದೆಯ ಪ್ರೀತಿ, ಹೆಣ್ಣು ಮಗು ಹಾಗೂ ಸ್ತ್ರೀ ಸಂವೇದನೆ ಕುರಿತ ಕವಿತೆಗಳು ಸಹೃದಯರ ಮೆಚ್ಚುಗೆ ಪಡೆದವು. ‘ಮುಗಿಲ ಹಕ್ಕಿ’ ಎಂಬ ಕಾವ್ಯನಾಮದೊಂದಿಗೆ ಮೈಲಾರಪ್ಪ ಬೂದಿಹಾಳ ‘ಬಟ್ಟೆ ಮತ್ತು ಧರ್ಮ’ ಕವಿತೆ ವಾಚಿಸಿ, ಬಣ್ಣದ ಬಟ್ಟೆಗಳಿಗೂ ಧರ್ಮದ ಲೇಪನವಾದ ಸಮಾಜದ ವೈಷಮ್ಯವನ್ನು ಚಿತ್ರಿಸಿದರು. ನೇಕಾರನ ಹಸಿದ ಬದುಕಿನ ಮೂಲಕ ಧರ್ಮದ ದಂಗಲ್ ಬಿಟ್ಟು ಒಂದಾಗಿ ಬಾಳೋಣ ಎಂಬ ಸಂದೇಶ ನೀಡಿದರು. ಬರಹಗಾರ ಹಾಗೂ ವಕೀಲ ಅಯ್ಯಣ್ಣ ನಾಯಕ ಪಾಮನಕಲ್ಲೂರು ‘ಚುನಾವಣೆ ಬಂತಣ್ಣಾ’ ಕವನದಲ್ಲಿ ಚುನಾವಣಾ ಆಮಿಷಗಳ ವಿರುದ್ಧ ಜಾಗೃತಿ ಮೂಡಿಸಿದರು. ಮತದಾನದ ಮಹತ್ವ ಹಾಗೂ ಭ್ರಷ್ಟ ರಾಜಕಾರಣಿಗಳ ವಿರುದ್ಧ ಎಚ್ಚರಿಕೆಯ ಸಂದೇಶ ನೀಡಿದರು. ವಿದ್ಯಾರ್ಥಿನಿ ಬಿ.ಎಂ. ಪ್ರಿಯಾಂಕ ‘ಯಾರಿಗೆ ಬಂತು ಸ್ವಾತಂತ್ರ್ಯ?’ ಎಂಬ ಪ್ರಶ್ನಾತ್ಮಕ ಧ್ವನಿಯಲ್ಲಿ ಕವಿತೆ ವಾಚಿಸಿ, ಜಾತಿ-ಧರ್ಮ, ರೈತರ ಸಂಕಷ್ಟ, ಹೆಣ್ಣುಮಕ್ಕಳ ಮೇಲಿನ ದೌರ್ಜನ್ಯಗಳ ವಿರುದ್ಧ ಗುಡುಗಿದರು. ಅವರ ಕವಿತೆ ದಲಿತ ಕವಿ ಸಿದ್ದಲಿಂಗಯ್ಯ ಅವರ ‘ಯಾರಿಗೆ ಬಂತು, ಎಲ್ಲಿಗೆ ಬಂತು ಸ್ವಾತಂತ್ರ್ಯ’ ಕವನವನ್ನು ನೆನಪಿಸಿತು. ಶೇಖ್ ಮುಹಮ್ಮದ್ ಷಾಜಿ ‘ಇದೊಮ್ಮೆ ನಾನು ಹೆಣ್ಣಲ್ಲ, ಸುಮ್ನನಿರಿ’ ಕವನದಲ್ಲಿ ಹೆಣ್ಣು ಭ್ರೂಣ ಹತ್ಯೆ, ಲೈಂಗಿಕ ದೌರ್ಜನ್ಯಗಳ ಸೂಕ್ಷ್ಮ ವಿಚಾರಗಳನ್ನು ಸ್ಪರ್ಶಿಸಿದರು. ಕೊನೆಯ ಸಾಲು ಸಮಾಜದ ವಿರುದ್ಧ ಹೋರಾಡಿ ಸೋತ ಹೆಣ್ಣಿನ ಆರ್ತನಾದದಂತೆ ಮೂಡಿಬಂತು. ಡಾ. ಅನಸೂಯ ವೈ.ಟಿ ಅವರ ‘ಸೂಳೆ’ ಕವನ ವೇಶ್ಯಾವೃತ್ತಿಯ ವಿವಿಧ ಆಯಾಮಗಳನ್ನು ಬಿಚ್ಚಿಟ್ಟಿತು. 12ನೇ ಶತಮಾನದಲ್ಲಿ ಬಸವಣ್ಣ ಅವರು ಸೂಳೆ ಸಂಕವ್ವೆಯನ್ನು ಶಿವಶರಣೆಯಾಗಿಸಿದ ಪರಿಯನ್ನು ಉಲ್ಲೇಖಿಸಲಾಯಿತು. ಹಂಪಿ ವಿಶ್ವವಿದ್ಯಾಲಯದ ಸಂಶೋಧನಾ ವಿದ್ಯಾರ್ಥಿನಿ ಶ್ವೇತಾ ಬಾಳಿ ‘ಬಡಿಸುವಳು ಬರಿದಾಗದಂತೆ!’ ಕವನದಲ್ಲಿ ಹೆಣ್ಣಿನ ತ್ಯಾಗ ಮತ್ತು ದೇಹ-ಮನಸ್ಸಿನ ಹಸಿವಿನ ಅಂತರಂಗವನ್ನು ಚಿತ್ರಿಸಿದರು. ರೇಣುಕಾ ಹೆಳವರ್ ‘ಲಿವಿಂಗ್ ಟುಗೆದರ್’ ಕುರಿತ ಕವಿತೆಯಲ್ಲಿ ನವಯುಗದ ಸಹಜೀವನ ಪದ್ಧತಿಯ ಪರಿಣಾಮಗಳನ್ನು ವಿಶ್ಲೇಷಿಸಿ, ಭಾರತೀಯ ಪರಂಪರೆಯ ಪವಿತ್ರ ಪ್ರೇಮದ ಆದರ್ಶಗಳನ್ನು ಸಾರಿದರು. ಹಂಪಿ ಕನ್ನಡ ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಡಾ. ಕೆ. ರವೀಂದ್ರನಾಥ ಕವಿಗೋಷ್ಠಿಗೆ ಅಧ್ಯಕ್ಷತೆ ವಹಿಸಿದ್ದರು. ಕೂಡ್ಲಗಿ ತಹಶೀಲ್ದಾರ್ ನೇತ್ರಾವತಿ, ಸಾಹಿತಿ ಡಾ. ಚನ್ನಬಸಪ್ಪ ಚಿಲ್ಕರಾಗಿ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಬೋರೇಗೌಡ, ಉಪನ್ಯಾಸಕ ಎಂ.ಆರ್. ವಾಗೀಶ ಹಾಗೂ ಕನ್ನಡ ಸಾಹಿತ್ಯ ಪರಿಷತ್ ನಿಶ್ಚಿ ರುದ್ರಪ್ಪ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಯುವಕವಿಗಳ ಕವಿತೆಗಳು ಇತಿಹಾಸ, ಪರಂಪರೆ ಹಾಗೂ ಸಮಕಾಲೀನ ಸಮಾಜದ ಮಧ್ಯೆ ಸಂವಾದ ರೂಪಿಸಿ ಹಂಪಿ ಉತ್ಸವಕ್ಕೆ ಸಾಹಿತ್ಯದ ಹೊಸ ಮೆರುಗು ತಂದವು.
ಸುರತ್ಕಲ್ ವಿಷನ್ ಕಮಿಟಿ: ವಾರ್ಷಿಕ ಸಭೆ
ಮಂಗಳೂರು: ಸುರತ್ಕಲ್ ವಿಷನ್ ಕಮಿಟಿ (SVC) ಇದರ ವಾರ್ಷಿಕ ಸಭೆಯು ಜುಬೈಲ್ನಲ್ಲಿ ಶುಕ್ರವಾರ ನಡೆಯಿತು. ಕಿರಾಅತ್ ಮೂಲಕ ಸಭೆಯನ್ನು ಪ್ರಾರಂಭಿಸಲಾಯಿತು. ಉಪಾಧ್ಯಕ್ಷರಾದ ಮುಸ್ತಫ ಸುರತ್ಕಲ್ ಪ್ರಾಸ್ತವಿಕವಾಗಿ ಮಾತನಾಡಿದರು. ಸಂಸ್ಥೆಯ ಅಡ್ವೈಸರ್ ಅಝೀಝ್ ಜಿದ್ದಾ ಮಾತನಾಡಿ ಸಂಸ್ಥೆಯ ಬೆಳವಣೆಗೆಗೆ ಉತ್ತಮ ಸಲಹೆ ಸೂಚನೆಗಳನ್ನು ನೀಡಿದರು. ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಶಮೀರ್ ತಡಂಬೈಲ್ ವಾರ್ಷಿಕ ವರದಿ ಮಂಡಿಸಿದರು. ಜೊತೆ ಕಾರ್ಯದರ್ಶಿ ಮುಹಮ್ಮದ್ ಆಲಿ ಇಡ್ಯಾ ಲೆಕ್ಕ ಮಂಡನೆ ಮಂಡಿಸಿದರು. ಅಧ್ಯಕ್ಷರಾದ ಅನ್ಸಾಫ್ ಆಲಿ ಮಾತನಾಡಿ ಸುರತ್ಕಲ್ ಜಮಾತಿನ ಅಭಿವೃದ್ದಿಯ ದೃಷ್ಚಿಕೋನವನ್ನಿಟ್ಟುಕೊಂಡು ಹಮ್ಮಿಕೊಂಡಿರುವ ಮುಂದಿನ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು ಹಾಗೂ ಕಳೆದ ಅವಧಿಯಲ್ಲಿ ಸಂಸ್ಥೆಯು ಮಾಡಿದ ಸಮುದಾಯಿಕ ಸೇವೆ ಹಾಗೂ ಇನ್ನಿತರ ಕೆಲಸ ಕಾರ್ಯಗಳಿಗಾಗಿ ಶ್ರಮವಹಿಸಿದ ಕೋರ್ ಕಮಿತಿ ಸದಸ್ಯರನ್ನು ಅಭಿನಂದಿಸಿದರು. ನಂತರ svc ಸಂಸ್ಥೆಯ ವಾರ್ಷಿಕ ವರದಿ ಹಾಗೂ ಮುಂದಿನ ಯೋಜನೆಗಳ ಬಗ್ಗೆ ಚರ್ಚೆ ನಡೆಸಲಾಯಿತು. ಸಂಸ್ಥೆಯ ಪ್ರಸ್ತುತ ಯೋಜನೆಯಾದಂತಹ ಸುರತ್ಕಲ್ ಜಮಾತಿನ ವಿಧವೆ/ನಿರ್ಗತಿಕರಿಗೆ ವಸತಿ ಕಲ್ಪಿಸುವ ಯೋಜನೆಯಡಿ ಯಲ್ಲಿ ಸುರತ್ಕಲ್ ಆಸುಪಾಸಿನಲ್ಲಿ ಜಾಗ ಖರೀದಿ ಮಾಡುವ ಬಗ್ಗೆ ಸುದೀರ್ಘ ಚರ್ಚೆ ನಡೆಸಲಾಯಿತು. ಕೋಶಾಧಿಕಾರಿ ತೌಫೀಕ್ ಇಡ್ಯಾ ಕಾರ್ಯಕ್ರಮ ನಿರೂಪಿಸಿದರು.
KSRTC Price Hike: ನಾಳೆಯಿಂದಲೇ ಕೆಎಸ್ಆರ್ಟಿಸಿ ಬಸ್ಗಳಲ್ಲಿ ಲಗೇಜ್ ದರ ಹೆಚ್ಚಳ, ಪರಿಷ್ಕೃತ ದರಪಟ್ಟಿ ಇಲ್ಲಿದೆ
ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು (KSRTC) ಲಗೇಜ್ ದರ ಹೆಚ್ಚಿಸುವ ಮೂಲಕ ಪ್ರಯಾಣಿಕರಿಗೆ ಶಾಕ್ ನೀಡಿದೆ. ಪ್ರಯಾಣಿಕರಿಲ್ಲದೆ ಸಾಗಿಸುವ ಲಗೇಜ್ಗಳಿಗೆ ನೂತನ ಪರಿಷ್ಕೃತ ದರವು ನಾಳೆಯಿಂದಲೇ (ಫೆಬ್ರವರಿ 16) ಜಾರಿಯಾಗಲಿದೆ. ಈ ಕುರಿತು ಕೆಎಸ್ಆರ್ಟಿಸಿ ವ್ಯವಸ್ಥಾಪಕ ನಿರ್ದೇಶಕ ಅಕ್ರಂ ಪಾಷ ಅಧಿಕೃತ ಆದೇಶ ಹೊರಡಿಸಿದ್ದಾರೆ. ಡೀಸೆಲ್ ಬೆಲೆ ಏರಿಕೆ, ಸಿಬ್ಬಂದಿ ವೇತನ, ನಿರ್ವಹಣಾ ವೆಚ್ಚ
Mahashivratri 2026: ಫೆಬ್ರವರಿ 15ರಂದು ಭಾನುವಾರ ಮಾಘ ಮಾಸದ ಕೃಷ್ಣ ಪಕ್ಷದ ಚತುದರ್ಶಿಯಂದು ದೇಶದ ವಿವಿಧೆಡೆ ಮಹಾಶಿವರಾತ್ರಿ ಆಚರಣೆ ನಡೆಯುತ್ತಿದೆ. ಅದರಲ್ಲೂ ವಿಶೇಷವಾಗಿ ಕರ್ನಾಟಕದಲ್ಲಿ ಈ ಮಹಾಶಿವರಾತ್ರಿಯನ್ನು ಅತ್ಯಂತ ಶ್ರದ್ಧಾ ಭಕ್ತಿಯಿಂದ, ಅರ್ಥಪೂರ್ಣವಾಗಿ ಆಚರಿಸಲಾಗುತ್ತದೆ. ಈ ಸಂಬಂಧ ಬೆಂಗಳೂರು ಸೇರಿದಂತೆ ನಾಡಿನೆಲ್ಲಡೆ ಶಿವ, ಶಿವ ಪಾರ್ವತಿ, ಈಶ್ವರನ ದೇವಾಲಯಗಳು ಆಚರಣೆಗೆ ಸಜ್ಜಾಗಿವೆ. ಶಿವರಾತ್ರಿ ಪ್ರಯುಕ್ತ ದೇಗುಲಗಳು ವಿದ್ಯುತ್
Kasaragod | ಸೋಷಿಯಲ್ ಮೀಡಿಯಾ ಇನ್ಫ್ಲ್ಯುಯೆನ್ಸರ್ ʼಚಿನ್ನು ಪಾಪುʼ ಆಪ್ತ ಸ್ನೇಹಿತನೂ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ
ಕಾಸರಗೋಡು, ಫೆ. 15: ಸಾಮಾಜಿಕ ಮಾಧ್ಯಮ ಪ್ರಭಾವಿ ಚಿನ್ನು ಪಾಪು ಎಂದು ಜನಪ್ರಿಯರಾಗಿದ್ದ ರೇಷ್ಮಾ ಕೆ ಅವರ ಸಾವಿನ ಕೆಲವೇ ದಿನಗಳ ಬಳಿಕ ಅವರ ಆಪ್ತ ಸ್ನೇಹಿತ ಸಂದೇಶ್ ಕೆ. ಕಾಸರಗೋಡಿನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ರವಿವಾರ ಬೆಳಕಿಗೆ ಬಂದಿದೆ. ಮನ್ನಿಪಾಡಿಯಲ್ಲಿರುವ ತಮ್ಮ ನಿವಾಸದ ಕೋಣೆಯಲ್ಲಿ ಸಂದೇಶ್ ಕೆ. ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ತಕ್ಷಣ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಅದಾಗಲೇ ಅವರು ಮೃತಪಟ್ಟಿದ್ದರು ಎಂದು ಕಾಸರಗೋಡು ಪೊಲೀಸ್ ಠಾಣೆಯ ಅಧಿಕಾರಿಗಳು ತಿಳಿಸಿದ್ದಾರೆ. ಪೊಲೀಸರ ಪ್ರಕಾರ, ಸಂದೇಶ್ ಅವರು ಸಾಮಾಜಿಕ ಮಾಧ್ಯಮ ಪ್ರಭಾವಿ, Instagram ನಲ್ಲಿ ಎರಡು ಲಕ್ಷಕ್ಕೂ ಅಧಿಕ ಫಾಲೋವರ್ಸ್ ಹೊಂದಿರುವ ಚಿನ್ನು ಪಾಪು ಎಂದೇ ಪರಿಚಿತರಾಗಿದ್ದ ರೇಷ್ಮಾ ಕೆ ಅವರ ಆಪ್ತ ಸ್ನೇಹಿತರಾಗಿ ದ್ದರು. ಫೆ. 9ರಂದು ರೇಷ್ಮಾ ಕಾಸರಗೋಡು ಸಮೀಪದ ಕುಡ್ಲುವಿನ ಆಝಾದ್ ರಸ್ತೆಯಲ್ಲಿರುವ ಬಾಡಿಗೆ ಮನೆಯಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಆ ಸಂದರ್ಭದಲ್ಲಿ ಪೊಲೀಸರು ಆತ್ಮಹತ್ಯೆ ಎಂದು ಶಂಕಿಸಿ ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು. ರೇಷ್ಮಾ ಸಾವಿನ ತನಿಖೆಯ ಭಾಗವಾಗಿ ಸಂದೇಶ್ ಅವರ ಹೇಳಿಕೆಯನ್ನು ಪೊಲೀಸರು ದಾಖಲಿಸಿಕೊಂಡಿದ್ದರು ಎಂದು ತಿಳಿದು ಬಂದಿದೆ. ರೇಷ್ಮಾ ಸಾವಿನ ನಂತರ ಸಂದೇಶ್ ಮಾನಸಿಕವಾಗಿ ತೀವ್ರ ನೊಂದಿದ್ದರು ಎಂಬ ಮಾಹಿತಿ ಕೂಡ ಲಭ್ಯವಾಗಿದೆ. ರವಿವಾರ ಮಧ್ಯಾಹ್ನ ನಡೆದ ಈ ಘಟನೆ ಸಂಬಂಧ ಅಸ್ವಾಭಾವಿಕ ಸಾವು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಮರಣೋತ್ತರ ಪರೀಕ್ಷೆಯ ಬಳಿಕ ಶವವನ್ನು ಸಂಬಂಧಿಕರಿಗೆ ಹಸ್ತಾಂತರಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ತನ್ನ ಕುಟುಂಬ, ಮಗಳ ವಿಚಾರವಾಗಿಯೂ ಎಪ್ಸ್ಟೀನ್ ನೊಂದಿಗೆ ಸಲಹೆ ಕೇಳುತ್ತಿದ್ದ ಸುಲೈಮ್!
ಚಾರ್ಧಾಮ್ ಯಾತ್ರಿಕರೇ ಗಮನಿಸಿ, ಕೇದಾರನಾಥ ದೇವಾಲಯ ಏ. 22 ರಿಂದ ಓಪನ್
ಚಾರ್ಧಾಮ್ ಯಾತ್ರಿಕರು ಗಮನಿಸಬೇಕಾದ ಸುದ್ದಿ ಇದು. ಕೇದಾರನಾಥ ದೇವಾಲಯವು ಏಪ್ರಿಲ್ 22 ರಂದು ಭಕ್ತರಿಗೆ ಮತ್ತೆ ತೆರೆಯಲಿದೆ. ಈ ಬಗ್ಗೆ ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಸ್ಪಷ್ಟನೆ ನೀಡಿದ್ದಾರೆ. ಪಂಚಾಂಗ ಓದುವಿಕೆಯ ಮೂಲಕ ಧಾರ್ಮಿಕ ವಿದ್ವಾಂಸರು ಮತ್ತು ಪುರೋಹಿತರು ದಿನಾಂಕ ಘೋಷಿಸಿದರು.
ಇಂದು (ಫೆ.15) Hampi ಉತ್ಸವ ಸಮಾರೋಪ ಸಮಾರಂಭ
ವಿಜಯನಗರ/ಹಂಪಿ: ಐತಿಹಾಸಿಕ ಹಂಪಿ ಉತ್ಸವದ ಸಮಾರೋಪ ದಿನವಾದ ಇಂದು (ಭಾನುವಾರ) ಮೂರನೇ ದಿನದ ಅಂಗವಾಗಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಭರದಿಂದ ನಡೆಯಲಿದ್ದು, ಸಾವಿರಾರು ಜನರು ಭಾಗವಹಿಸುವ ನಿರೀಕ್ಷೆ ಇದೆ. ಉತ್ಸವದ ಕೊನೆಯ ದಿನವಾಗಿರುವುದರಿಂದ ಹಂಪಿ ಪ್ರದೇಶದಲ್ಲಿ ಭಾರಿ ಜನಸಂದಣಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಇಂದು ಒಟ್ಟು ಆರು ವೇದಿಕೆಗಳಲ್ಲಿ ವಿವಿಧ ಕಲಾ ತಂಡಗಳಿಂದ ಸಂಗೀತ, ನೃತ್ಯ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ದಿನಪೂರ್ತಿ ನಡೆಯುವ ಈ ಕಾರ್ಯಕ್ರಮಗಳು ಪ್ರವಾಸಿಗರು ಮತ್ತು ಸಾರ್ವಜನಿಕರಿಗೆ ಮನರಂಜನೆಯ ರಸದೌತಣ ನೀಡಲಿವೆ. ಸಮಾರೋಪ ಸಮಾರಂಭದ ಬಳಿಕ ಸ್ಯಾಂಡಲ್ವುಡ್ ನಟ-ನಟಿಯರು ಜನರನ್ನು ರಂಜಿಸಲಿದ್ದಾರೆ. ವಿಶೇಷವಾಗಿ ಡಾಲಿ ಧನಂಜಯ್, ನಟ ಧ್ರುವ ಸರ್ಜಾ ಹಾಗೂ ನಟಿ ರಚಿತಾ ರಾಮ್ ಭಾಗವಹಿಸಲಿದ್ದು, ಅಭಿಮಾನಿಗಳಲ್ಲಿ ಉತ್ಸಾಹ ಹೆಚ್ಚಾಗಿದೆ. ಇದಲ್ಲದೆ ಪ್ರಸಿದ್ಧ ಗಾಯಕ ರಘು ದೀಕ್ಷಿತ್, ಗಾಯಕಿ ಮಂಗಲಿ, ಸಂಗೀತ ನಿರ್ದೇಶಕ ಮಣಿಕಾಂತ್ ಖದ್ರಿ ಹಾಗೂ ವಾಸುಕಿ ವೈಭವ್ ತಂಡಗಳಿಂದ ಭರ್ಜರಿ ಸಂಗೀತ ಕಾರ್ಯಕ್ರಮಗಳು ನಡೆಯಲಿವೆ. ಸಮಾರೋಪ ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಝಮೀರ್ ಅಹ್ಮದ್ ಖಾನ್, ಪ್ರವಾಸೋದ್ಯಮ ಸಚಿವ ಎಚ್ ಕೆ ಪಾಟೀಲ್ ಹಾಗೂ ಸಚಿವ ಶಿವರಾಜ್ ತಂಗಡಗಿ ಭಾಗವಹಿಸಲಿದ್ದಾರೆ. ಭಾನುವಾರವಾಗಿರುವ ಹಿನ್ನೆಲೆ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಹಾಗೂ ಪ್ರವಾಸಿಗರು ಹಂಪಿಗೆ ಆಗಮಿಸುವ ನಿರೀಕ್ಷೆಯಿದ್ದು, ಜಿಲ್ಲಾಡಳಿತ ಅಗತ್ಯ ಭದ್ರತಾ ಮತ್ತು ಸಾರಿಗೆ ವ್ಯವಸ್ಥೆಗಳನ್ನು ಕೈಗೊಂಡಿದೆ. ಹಂಪಿ ಉತ್ಸವದ ಸಮಾರೋಪ ದಿನ ಸಂಸ್ಕೃತಿ, ಸಂಗೀತ ಮತ್ತು ಮನರಂಜನೆಯ ಮಹೋತ್ಸವವಾಗಿ ನಡೆಯಲಿದೆ.
ಅಮೆರಿಕ ಜೊತೆಗೆ ಕೊನೆಗೂ ಸಂಧಾನಕ್ಕೆ ಸಿದ್ಧವಾದ ಇರಾನ್, ಯುದ್ಧ ಭೀತಿ ನಡುವೆ ಗುಡ್ ನ್ಯೂಸ್ | US Military
ಅಮೆರಿಕ ಯಾವುದೇ ಕ್ಷಣದಲ್ಲಿ ತನ್ನ ಸೇನೆಗೆ ಆದೇಶ ನೀಡಬಹುದು, ಅಮೆರಿಕ ಬಳಿ ಇರುವ ಎಲ್ಲಾ ಪ್ರಬಲ ಮತ್ತು ವಿನಾಶಕಾರಿ ಕ್ಷಿಪಣಿಗಳು ನೇರವಾಗಿ ಇರಾನ್ಗೆ ನುಗ್ಗಬಹುದು. ಇಂತಹ ವಾತಾವರಣ ನಿರ್ಮಾಣ ಆಗಿರುವ ಸಮಯದಲ್ಲಿ ಮಧ್ಯಪ್ರಾಚ್ಯದ ಶ್ರೀಮಂತ ದೇಶಗಳು ನೆಮ್ಮದಿಯಾಗಿ ನಿದ್ದೆಯನ್ನ ಕೂಡ ಮಾಡಲು ಆಗುತ್ತಿಲ್ಲ. ಇನ್ನು ಜನರು ಕೂಡ ಚಿಂತೆಯಲ್ಲಿ ದಿನದೂಡುತ್ತಾ ಇದ್ದು, ಇರಾನ್ನ ಪ್ರಜೆಗಳು ಪಲಾಯನ ಮಾಡುವ
ಮಂಗಳೂರು: ಅಂತರ್ರಾಷ್ಟ್ರೀಯ ಓರಲ್, ಮ್ಯಾಕ್ಸಿಲೊಫೇಶಿಯಲ್ ಶಸ್ತ್ರಚಿಕಿತ್ಸಕರ ದಿನಾಚರಣೆ
ಮಂಗಳೂರು, ಫೆ.15: ಯೆನೆಪೋಯ (ಪರಿಗಣಿತ ವಿವಿ) ಘಟಕವಾಗಿರುವ ಯೆನೆಪೋಯ ದಂತ ಕಾಲೇಜಿನ ಓರಲ್ ಆಂಡ್ ಮ್ಯಾಕ್ಸಿಲೊಫೇಶಿಯಲ್ ಸರ್ಜರಿ ವಿಭಾಗದ ಆಶ್ರಯದಲ್ಲಿ ಅಂತರ್ರಾಷ್ಟ್ರೀಯ ಓರಲ್ (ಮೌಖಿಕ) ಮತ್ತು ಮ್ಯಾಕ್ಸಿಲೊಫೇಶಿಯಲ್ ಶಸ್ತ್ರಚಿಕಿತ್ಸಕರ ದಿನವನ್ನು ಶುಕ್ರವಾರ ಕಾಲೇಜಿನಲ್ಲಿ ಆಚರಿಸಲಾಯಿತು. ಯೆನೆಪೋಯ ವಿವಿ ಪ್ರೊ.ವೈಸ್ ಚಾನ್ಸೆಲರ್ ಮತ್ತು ಖ್ಯಾತ ಮ್ಯಾಕ್ಸಿಲೊಫೇಶಿಯಲ್ ಶಸ್ತ್ರಚಿಕಿತ್ಸಕ ಪ್ರೊ.ಡಾ. ಬಿ.ಎಚ್.ಶ್ರೀಪತಿ ರಾವ್ ಅವರು ಗೌರವ ಅತಿಥಿಯಾಗಿ ಮತ್ತು ರಿಜಿಸ್ಟ್ರಾರ್ ಡಾ. ಅಶ್ವಿನಿ ದತ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು ಹಿರಿಯ ಮ್ಯಾಕ್ಸಿಲೊಫೇಶಿಯಲ್ ಸರ್ಜನ್ ಮತ್ತು ಶಿಕ್ಷಣ ತಜ್ಞ ಪ್ರೊ. ಡಾ. ಬಿ. ರಾಜೇಂದ್ರ ಪ್ರಸಾದ್ರನ್ನು ಈ ಕ್ಷೇತ್ರಕ್ಕೆ ನೀಡಿದ ಅಮೂಲ್ಯ ಕೊಡುಗೆಗಾಗಿ ಸನ್ಮಾನಿಸಲಾಯಿತು. ಪ್ರಾಂಶುಪಾಲ ಡಾ. ಲಕ್ಷ್ಮೀ ಕಾಂತ್ ಛತ್ರ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ದಂತವೈದ್ಯಶಾಸ್ತ್ರ ವಿಭಾಗದ ಡೀನ್ ಡಾ. ಶ್ಯಾಮ್ ಎಸ್. ಭಟ್ , ಉಪ-ಪ್ರಾಂಶುಪಾಲ ಡಾ. ಎಂ. ಹಸನ್ ಸರ್ಫರಾಜ್ , ಡಾ. ವರ್ಷಾ ಉಪಾಧ್ಯಾಯ ವಿಭಾಗಗಳ ಮುಖ್ಯಸ್ಥರು ಮತ್ತು ಅಧ್ಯಾಪಕರು ಉಪಸ್ಥಿತರಿದ್ದರು. ಮೌಖಿಕ ಮತ್ತು ಮ್ಯಾಕ್ಸಿಲೊಫೇಶಿಯಲ್ ಶಸ್ತ್ರಚಿಕಿತ್ಸೆಯ ವಿಕಸನಗೊಳ್ಳುತ್ತಿರುವ ವ್ಯಾಪ್ತಿ, ಶಸ್ತ್ರಚಿಕಿತ್ಸಾ ತಂತ್ರಗಳಲ್ಲಿನ ನಾವೀನ್ಯತೆಗಳು ಮತ್ತು ನೈತಿಕ, ರೋಗಿ-ಕೇಂದ್ರಿತ ಮತ್ತು ಅಂತರಶಿಸ್ತೀಯ ಸಹಯೋಗದ ಆರೈಕೆಯ ಮಹತ್ವವನ್ನು ತಿಳಿಸಿದರು. ಇತ್ತೀಚೆಗೆ ನಿಧನರಾದ ದಿವಂಗತ ಮ್ಯಾಕ್ಸಿಲೊಫೇಶಿಯಲ್ ಶಸ್ತ್ರಚಿಕಿತ್ಸಕ ಡಾ.ಸೆಂತಿಲ್ ಮುರುಗನ್ ಅವರಿಗೆ ಸಂತಾಪ ಸೂಚಿಸಲಾಯಿತು. ವಿಭಾಗದ ಮುಖ್ಯಸ್ಥರು ಮತ್ತು ಸಂಘಟನಾ ಅಧ್ಯಕ್ಷ ಡಾ. ಜಗದೀಶ್ ಚಂದ್ರ ಸ್ವಾಗತಿಸಿದರು. ಸಂಘಟನಾ ಕಾರ್ಯದರ್ಶಿ ಡಾ. ಜಾಯ್ಸ್ ಸಿಕ್ವೇರಾ ಅತಿಥಿಗಳನ್ನು ಪರಿಚಯಿಸಿದರು. ಡಾ. ಅಕ್ಷತಾ ಕಣಿಯೂರ್ ವಂದಿಸಿದರು.
T20 World Cup- 26 ಕ್ಯಾಚ್, 7 ಸ್ಟಂಪ್! ಧೋನಿ, ಎಬಿಡಿ ಹೆಸರಲ್ಲಿದ್ದ ಹಳೇ ವಿಶ್ವದಾಖಲೆ ಮುರಿದ ಕ್ವಿಂಟನ್ ಡಿ ಕಾಕ್!
Quinton De Kock World Record- ನ್ಯೂಜಿಲೆಂಡ್ ವಿರುದ್ಧ ಪಂದ್ಯದಲ್ಲಿ 20 ರನ್ ಗಳ ಉಪಯುಕ್ತ ಕೊಡುಗೆ ನೀಡಿದ್ದ ದಕ್ಷಿಣ ಆಫ್ರಿಕಾದ ವಿಕೆಟ್ ಕೀಪರ್ ಬ್ಯಾಟರ್ ಕ್ವಿಂಟನ್ ಡಿ ಕಾಕ್ ಅವರು ಹೊಸ ವಿಶ್ವದಾಖಲೆ ಬರೆದಿದ್ದಾರೆ. ಈವರೆಗೂ ಟಿ10 ವಿಶ್ವಕಪ್ ನಲ್ಲಿ ವಿಕೆಟ್ ಹಿಂದುಗಡೆ ಅತಿ ಹೆಚ್ಚು ಬಲಿ ಪಡೆದ ವಿಶ್ವದಾಖಲೆ ಮಹೇಂದ್ರ ಸಿಂಗ್ ಧೋನಿ ಮತ್ತು ಎಬಿ ಡಿವಿಲಿಯರ್ಸ್ ಹೆಸರಲ್ಲಿತ್ತು. ಅದನ್ನು ಕ್ವಿಂಟನ್ ಡಿ ಕಾಕ್ ಅವರು ತಮ್ಮ ಹೆಸರಿಗೆ ವರ್ಗಾಯಿಸಿಕೊಂಡಿದ್ದಾರೆ.
ಸೂರಲ್ಪಾಡಿ ಅಲ್ಖೈರ್ ಶಾಲೆ: ವಿದ್ಯಾರ್ಥಿ ಪೋಷಕರಿಗೆ ಸನ್ಮಾನ
ಸೂರಲ್ಪಾಡಿ: ಅಲ್ಖೈರ್ ಇಸ್ಲಾಮಿಕ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಿಕ್ಷಕ-ರಕ್ಷಕರ ಸಭೆ ಮತ್ತು ವಿದ್ಯಾರ್ಥಿ ಪೋಷ ಕರ ಸನ್ಮಾನ ಹಾಗೂ ಹೊಸ ಕಟ್ಟಡ ಯೋಜನೆ ಬ್ಯಾನರ್ ಅನಾವರಣ ಕಾರ್ಯಕ್ರಮವು ಶನಿವಾರ ನಡೆಯಿತು. ಕಳೆದ ಶೈಕ್ಷಣಿಕ ವರ್ಷದಲ್ಲಿ ಶೇ.100 ಅಂಕ ಗಳಿಸಿದ 4ನೇ ತರಗತಿಯ ಲುತೈಫಾ ಹಾಗೂ 6ನೇ ತರಗತಿಯ ಸುಹೈಬ್ಳ ಹೆತ್ತವರಾದ ಸುಮಯ್ಯ ಮತ್ತು ಸುಲೈಮಾನ್), ಐಷಾಳ ಹೆತ್ತವರಾದ ರುಬಿಯಾ ಮತ್ತು ಇಮ್ರಾನ್ ಅಲಿ) ಹಾಗೂ ಫಾತಿಮಾ ಶಿಫಾಳ ಹೆತ್ತವರಾದ ನಸೀಮಾ ಮತ್ತು ಹಮೀದ್) ಅವರನ್ನು ಶಾಲೆಯ ವತಿಯಿಂದ 5,000 ರೂ.ನಗದು ಬಹುಮಾನ, ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು. ಶಾಲೆಯ ಅಭಿವೃದ್ಧಿಯ ಭಾಗವಾಗಿ ನಿರ್ಮಾಣಗೊಳ್ಳಲಿರುವ ಹೊಸ ಕಟ್ಟಡದ ಬ್ಯಾನರನ್ನು ಶಿಕ್ಷಕರು ಬಿಡುಗಡೆಗೊಳಿಸಿದರು. ಸದರ್ ಉಸ್ತಾದ್ ಇಲ್ಯಾಸ್ ನಿಝಾಮಿ, ಮುಖ್ಯ ಶಿಕ್ಷಕಿ ಕಲಂದರ್ ಬೀವಿ, ಶಿವಾನಿ, ಮಾಧವಿ ಪ್ರೇರಣಾದಾಯಕ ಸಂದೇಶಗಳನ್ನು ನೀಡಿದರು. ಶಿಕ್ಷಕಿ ಪ್ರೀತಿ ಸ್ವಾಗತಿಸಿದರು. ಫರ್ಝಾನ ಕಾರ್ಯಕ್ರಮ ನಿರೂಪಿಸಿದರು. ಜ್ಞಾನೇಶ್ವರಿ ವಂದಿಸಿದರು.
ಕೆಪಿಎಲ್ ಸೀಸನ್ 2| ಶೈನಿಂಗ್ ಮಂಗಳೂರು ಕುವೈತ್ ತಂಡಕ್ಕೆ ಚಾಂಪಿಯನ್ ಟ್ರೋಫಿ
ಕುವೈತ್, ಫೆ.15: ಕರ್ನಾಟಕ ಪ್ರೀಮಿಯರ್ ಲೀಗ್ (ಕೆಪಿಎಲ್) ಸೀಸನ್ 2ರಲ್ಲಿ ಶೈನಿಂಗ್ ಮಂಗಳೂರು ಕುವೈತ್ ತಂಡವು ಚಾಂಪಿಯನ್ ಟ್ರೋಫಿಯನ್ನು ಗೆದ್ದಿವೆ. ಎರಡು ವಾರಗಳ ಕಾಲ ನಡೆದ ಈ ಸ್ಪರ್ಧೆಯಲ್ಲಿ ಕರ್ನಾಟಕದ ಏಳು ತಂಡಗಳು ಭಾಗವಹಿಸಿತ್ತು. ಮೊದಲ ಸೆಮಿಫೈನಲ್ನಲ್ಲಿ ಎಂಕೆಸಿಸಿ ತಂಡವು ಬ್ಲ್ಯಾಕ್ ಪ್ಯಾಂಥರ್ ವಿರುದ್ಧ ಭರ್ಜರಿ ಪ್ರದರ್ಶನ ನೀಡಿತು. ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ಎಂಕೆಸಿಸಿ ತಂಡವು ಬ್ಲ್ಯಾಕ್ ಪ್ಯಾಂಥರ್ ತಂಡವನ್ನು ಐದು ಓವರ್ ಗಳಲ್ಲಿ ಆರು ವಿಕೆಟ್ಗೆ 28 ರನ್ಗಳಿಗೆ ನಿಯಂತ್ರಿಸಿತು. ಸುಲಭವಾಗಿ ಗುರಿ ಬೆನ್ನಟ್ಟಿಕೊಂಡ ಎಂಕೆಸಿಸಿ ಎಂಟು ವಿಕೆಟ್ಗಳಿಂದ ಜಯ ಸಾಧಿಸಿತು. ಹುಸೈನ್ ಶೇಖ್ಗೆ ಪಂದ್ಯ ಶ್ರೇಷ್ಠ ಪ್ರಶಸ್ತಿ ಲಭಿಸಿತು. ಎರಡನೇ ಸೆಮಿಫೈನಲ್ನಲ್ಲಿ ಶೈನಿಂಗ್ ಮಂಗಳೂರು ತಂಡವು ಆಯನ್ಸ್ ಓರಿಯಂಟಲ್ 11 ತಂಡವನ್ನು ಎದುರಿ ಸಿತು. ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ಶೈನಿಂಗ್ ಮಂಗಳೂರು ತಂಡವು ಎದುರಾಳಿ ತಂಡವನ್ನು ಐದು ಓವರ್ಗಳಲ್ಲಿ ಐದು ವಿಕೆಟ್ಗೆ 38 ರನ್ಗಳಿಗೆ ಸೀಮಿತಗೊಳಿಸಿತು. ನಂತರ ಶೈನಿಂಗ್ ಮಂಗಳೂರು ತಂಡವು ಏಳು ವಿಕೆಟ್ಗಳಿಂದ ಜಯ ಸಾಧಿಸಿತು. ರಿಫಾಝ್ ಮಲಿಕ್ 9 ಬಾಲ್ಗಳಲ್ಲಿ 17 ರನ್ ಗಳಿಸಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು. ಫೈನಲ್ ಪಂದ್ಯದಲ್ಲಿ ಎಂಕೆಸಿಸಿ ತಂಡವು ಐದು ಓವರ್ಗಳಲ್ಲಿ ಮೂರು ವಿಕೆಟ್ ನಷ್ಟಕ್ಕೆ 51 ರನ್ ಗಳಿಸಿತು. ಶೈನಿಂಗ್ ಮಂಗಳೂರು ತಂಡವು ಗುರಿಯನ್ನು ಬೆನ್ನಟ್ಟಿ ಎಂಟು ವಿಕೆಟ್ಗಳಿಂದ ಜಯ ಸಾಧಿಸಿ ಚಾಂಪಿಯನ್ ಪಟ್ಟ ವನ್ನು ತನ್ನದಾಗಿಸಿಕೊಂಡಿತು. ಮುಸ್ತಫಾ ಕಲ್ಲಡ್ಕ ಅವರಿಗೆ ಪಂದ್ಯಶ್ರೇಷ್ಠ ಪ್ರಶಸ್ತಿ ನೀಡಲಯಿತು. ಮೆಲ್ರಿಕ್ ಡಿಸೋಜ ಉತ್ತಮ ಪ್ರದರ್ಶನಕ್ಕಾಗಿ ಸೀರೀಸ್ ಶ್ರೇಷ್ಠ ಆಟಗಾರ ಹಾಗೂ ಶ್ರೇಷ್ಠ ಬ್ಯಾಟ್ಸ್ಮನ್ ಪ್ರಶಸ್ತಿ ಗಳನ್ನು ಪಡೆದರು. ಬ್ಲ್ಯಾಕ್ ಪ್ಯಾಂಥರ್ ತಂಡದ ರಾಕೇಶ್ ಕುಮಾರ್ಗೆ ಶ್ರೇಷ್ಠ ಬೌಲರ್ ಪ್ರಶಸ್ತಿ ದೊರಕಿತು. ಸಿದ್ದೀಕ್ ರಂತಡ್ಕ ಅವರಿಗೆ ಶ್ರೇಷ್ಠ ಫೀಲ್ಡರ್ ಪ್ರಶಸ್ತಿ ಲಭಿಸಿತು. ಫಿರೋಝ್ ಜೆಪ್ಪುಅವರಿಗೆ ಶ್ರೇಷ್ಠ ವಿಕೆಟ್ ಕೀಪರ್ ಪ್ರಶಸ್ತಿ ನೀಡಲಾಯಿತು. ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಉದ್ಯಮಿಗಳಾದ ಸೌಧನ್ ಶೆಟ್ಟಿ, ಸತೀಶ್, ಹುಸೈನ್ ಬಾವಾ, ನವೀನ್ ವಿಲಿಯಂ ಶರೀಫ್ ವಾಮಂಜೂರು, ಇಬ್ರಾಹಿಂ ಮೂಳೂರು, ಲತೀಫ್ ವಾಮಂಜೂರು, ಶೈನಿಂಗ್ ಮಂಗಳೂರು ತಂಡದ ವ್ಯವಸ್ಥಾಪಕ ತಮೀಮ್ ಮೂಸ ಉಳ್ಳಾಲ್, ಮುನೀರ್ ಉಚ್ಚಿಲ, ಸುನಿಲ್ ಡಿಸೋಜ, ಈಶ್ವರ್ ಮೂಲ್ಯ ಭಾಗವಹಿಸಿದ್ದರು. ತುಳುವ ಬ್ರದರ್ಸ್ ಕುವೈತ್ ಆಯೋಜಿಸಿದ ಈ ಟೂರ್ನಮೆಂಟ್ಗೆ ಮಂಗಳೂರು ಮೂಲದ ನರೇಶ್, ರವಿ ಪೂಜಾರಿ, ಸೌರಭ್ ಶೆಟ್ಟಿ ಸಹಕಾರ ನೀಡಿದ್ದರು. ಕ್ಲಿಂಟನ್ ವಂದಿಸಿದರು.
ಮಂಗಳೂ| ಉದ್ಯಮಿ ರೊನಾಲ್ಡ್ ಕೊಲಾಸೊ ದಂಪತಿಗೆ ಸನ್ಮಾನ
ಮಂಗಳೂರು, ಫೆ.15: ಲವಕುಶ ಜೋಡುಕರೆ ಕಂಬಳ ಸಮಿತಿ ನರಿಂಗಾನ ಇದರ ವತಿಯಿಂದ ಅನಿವಾಸಿ ಉದ್ಯಮಿ, ಕೊಡುಗೈ ದಾನಿ ಡಾ. ರೊನಾಲ್ಡ್ ಕೊಲಾಸೊ ಮತ್ತವರ ಪತ್ನಿ ಜೀನ್ ಕೊಲಾಸೊ ಅವರನ್ನು ರವಿವಾರ ರಾಜ್ಯ ವಿಧಾನಸಭೆಯ ಸ್ಪೀಕರ್ ಯು.ಟಿ. ಖಾದರ್ರ ಸ್ವಗೃಹದಲ್ಲಿ ಸನ್ಮಾನಿಸಲಾಯಿತು. ಈ ಸಂದರ್ಭ ಲವಕುಶ ಜೋಡುಕರೆ ಕಂಬಳ ಸಮಿತಿ ನರಿಂಗಾನ ಇದರ ಗೌರವಾಧ್ಯಕ್ಷ ಹಾಗೂ ಸ್ಪೀಕರ್ ಯು.ಟಿ. ಖಾದರ್, ರಾಜ್ಯ ಅಲೈಡ್ ಆ್ಯಂಡ್ ಹೆಲ್ತ್ ಕೌನ್ಸಿಲ್ನ ಅಧ್ಯಕ್ಷ ಯು.ಟಿ.ಇಫ್ತಿಕಾರ್ ಅಲಿ, ಶಾಸಕ ಐವನ್ ಡಿಸೋಜ, ಸಮಿತಿಯ ಕಾರ್ಯಾಧ್ಯಕ್ಷ ಪ್ರಶಾಂತ ಕಾಜವ, ಕಾರ್ಯದರ್ಶಿ ಜಲೀಲ್ ಮೋಂಟುಗೋಳಿ, ಮುರಳೀಧರ ಮೋರ್ಲ, ಮ್ಯಾಕ್ಸಿಂ ಡಿಸೋಜ ಮತ್ತಿತರರು ಉಪಸ್ಥಿತರಿದ್ದರು.
ಆರೆಸ್ಸೆಸ್ ಹಿಂದೆ ಹಣ ಅಕ್ರಮ ವರ್ಗಾವಣೆ ದಂಧೆ, ನೋಂದಣಿ ಆಗುವರೆಗೂ ಬಿಡುವುದೇ ಇಲ್ಲ : ಪ್ರಿಯಾಂಕ್ ಖರ್ಗೆ
‘ಕರಾವಳಿಯ ರಕ್ತ-ಕಣ್ಣೀರು’ ಪುಸ್ತಕ ಬಿಡುಗಡೆ ಕಾರ್ಯಕ್ರಮ
ಚಿಟ್ಟಿಬೆಟ್ಟು ಕೊರಗ ಸಮುದಾಯಕ್ಕೆ 8 ಮನೆಗಳ ಹಸ್ತಾಂತರ
ಕೋಟ: ಕೋಟತಟ್ಟು ಗ್ರಾ.ಪಂ. ಹಾಗೂ ದಾನಿಗಳಿಂದ ಕೊರಗ ಕುಟುಂಬಗಳಿಗೆ ಕೋಟತಟ್ಟು ಚಿಟ್ಟಿಬೆಟ್ಟಿನ ನಿರ್ಮಿಸಲಾದ ಎಂಟು ಗೃಹಗಳ ಲೋಕಾರ್ಪಣಾ ಸಮಾರಂಭ ’ಆಸರೆ’ ಕಾರ್ಯಕ್ರಮ ಶನಿವಾರ ನಡೆಯಿತು. ಉಡುಪಿ ಪುತ್ತಿಗೆ ಮಠಾಧೀಶ ಶ್ರೀಸುಗುಣೇಂದ್ರ ತೀರ್ಥ ಸ್ವಾಮೀಜಿ ಮಾತನಾಡಿ, ದುರ್ಬಲ ಸಮಾಜದ ಏಳಿಗೆಗಾಗಿ ಶ್ರಮಿಸುವ ಕಾರ್ಯ ಭಗವಂತನಿಗೆ ಸಲ್ಲಿಸುವ ಭಕ್ತಿಯಷ್ಟೆ ಶ್ರೇಷ್ಠವಾದದ್ದು. ಕುಲ ಕಸುಬು ಮಾಡಿ ಜೀವನ ಸಾಗಿಸುವ ಪರಂಪರೆಯ ಮುಗ್ಧ ಜೀವಗಳಿಗೆ ಆಸರೆ ನೀಡಿರುವುದು ಕೋಟತಟ್ಟು ಪಂಚಾಯತ್ ಅತೀ ಶ್ರೇಷ್ಠವಾದ ಕಾಯಕ ಮಾಡಿದೆ ಎಂದರು. ಮಠದ ವತಿಯಿಂದ ಐದು ಲಕ್ಷ ರೂಗಳ ದೇಣಿಗೆಯನ್ನು ಸ್ವಾಮೀಜಿ ಘೋಷಿಸಿದರು. ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿದರು. ನಟ, ನಿರ್ದೇಶಕ ರಿಷಬ್ ಶೆಟ್ಟಿ ಮನೆಯನ್ನು ವಿಕ್ಷೀಸಿ ಕೋಟತಟ್ಟು ಗ್ರಾಪಂ ಕಾರ್ಯವನ್ನು ಶ್ಲಾಘಿಸಿದರು. ದಾನಿಗಳನ್ನು ಸಭೆಯಲ್ಲಿ ಗೌರವಿಸಲಾಯಿತು. ಅಧ್ಯಕ್ಷತೆಯನ್ನು ಕುಂದಾಪುರ ಶಾಸಕ ಎ.ಕಿರಣ್ ಕುರ್ಮಾ ಕೊಡ್ಗಿ ವಹಿಸಿದ್ದರು. ಸಮಾಜಸೇವಕ ಎಚ್.ಎಸ್.ಶೆಟ್ಟಿ, ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ ಪ್ರವರ್ತಕ ನಾಡೋಜ ಡಾ.ಜಿ ಶಂಕರ್, ಕರಾವಳಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಂ.ಎ.ಗಫೂರ್, ಉದ್ಯಮಿಗಳಾದ ಮಾರಣಕಟ್ಟೆ ಕೃಷ್ಣಮೂರ್ತಿ ಮಂಜರು, ಸಂಪತ್ ಕುಮಾರ್ ಶೆಟ್ಟಿ, ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ್ ಸಿ.ಕುಂದರ್, ಮನೋವೈದ್ಯ ಡಾ.ಪ್ರಕಾಶ್ ತೋಳಾರ್, ಐಟಿಡಿಪಿ ಇಲಾಖೆಯ ಮ್ಯಾನೇಜರ್ ವಿಶ್ವನಾಥ್ ಶೆಟ್ಟಿ, ಕೋಟತಟ್ಟು ಗ್ರಾಪಂ ಉಪಾಧ್ಯಕ್ಷೆ ಸರಸ್ವತಿ ಪೂಜಾರಿ, ಕೊರಗ ಸಮುದಾಯದ ಮುಖಂಡ ಗಣೇಶ್ ಕುಂಭಾಶಿ, ಕೋಟತಟ್ಟು ಗ್ರಾಪಂ ಸದಸ್ಯರು ಉಪಸ್ಥಿತರಿದ್ದರು. ಪಂಚಾಯತ್ ಅಧ್ಯಕ್ಷ ಸತೀಶ್ ಕುಂದರ್ ಸ್ವಾಗತಿಸಿದರು. ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ರವೀಂದ್ರ ರಾವ್ ಕಾರ್ಯಕ್ರಮ ನಿರೂಪಿಸಿದರು.
ಯಕ್ಷಗಾನ ಕಲಾವಿದ ಜಯರಾಮ ಶೆಟ್ಟಿಗೆ ಪುಂಡಲೀಕ ಹಾಲಂಬಿ ಪ್ರಶಸ್ತಿ ಪ್ರದಾನ
ಕುಂದಾಪುರ: ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಜಿ.ಸರೋಜಮ್ಮ ಪ್ರಾಯೋಜಿತ ಪುಂಡಲೀಕ ಹಾಲಂಬಿ ದತ್ತಿ ಕಾರ್ಯಕ್ರಮದಡಿ ಯಕ್ಷಗಾನ ಕಲಾವಿದ ಹಳ್ಳಾಡಿ ಜಯರಾಮ ಶೆಟ್ಟರಿಗೆ ಪುಂಡಲೀಕ ಹಾಲಂಬಿ ಪ್ರಶಸ್ತಿ ಪ್ರದಾನ ಸಮಾರಂಭ ಶನಿವಾರ ಕುಂದಾಪುರದ ಪ.ಪೂ. ಕಾಲೇಜಿನ ಕಲಾಮಂದಿರದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಕುಂದಾಪುರ ಶಾಸಕ ಎ.ಕಿರಣ್ ಕುಮಾರ್ ಕೊಡ್ಗಿ ಮಾತನಾಡಿ, ಹಾಲಂಬಿಯವರು ಸಾಹಿತ್ಯ ಪರಿಷತ್ಗೆ ಅಪಾರವಾದ ಕೊಡುಗೆ ನೀಡಿದ್ದಾರೆ. ಹಳ್ಳಾಡಿ ಜಯರಾಮ ಶೆಟ್ಟರು ಉತ್ತಮ ಹಾಸ್ಯ ಕಲಾ ವಿದ. ಅವರಿಗೆ ಈ ಪ್ರಶಸ್ತಿ ನೀಡುವ ಮೂಲಕ ಇದರ ಮೌಲ್ಯ ಇನ್ನಷ್ಟು ಹೆಚ್ಚಾಗಿದೆ. ಪಡೆದವರ ಗೌರವವೂ ಹೆಚ್ಚಾಗಿದೆ ಎಂದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ತಲ್ಲೂರು ಶಿವರಾಮ ಶೆಟ್ಟಿ ಪ್ರಶಸ್ತಿ ಪ್ರದಾನ ಮಾಡಿದರು. ಪ್ರಶಸ್ತಿ ಸ್ವೀಕರಿಸಿದ ಹಳ್ಳಾಡಿ ಜಯರಾಮ ಶೆಟ್ಟಿ ಮಾತನಾಡಿ, 40 ಪೈಸೆಗೆ ಯಕ್ಷರಂಗದಲ್ಲಿ ದುಡಿಮೆ ಆರಂಭಿಸಿದ ನನಗೆ, ಈಗ ಈ ಪ್ರಶಸ್ತಿ ರೂಪದಲ್ಲಿ 25 ಸಾವಿರ ರೂ. ಒಂದೇ ದಿನದಲ್ಲಿ ಪಡೆಯುವ ಮಟ್ಟಿಗೆ ಬೆಳೆಸಿರುವುದು ಪ್ರೇಕ್ಷಕರು. ಈ ಗೌರವ ಎಲ್ಲವೂ ಪ್ರೇಕ್ಷರಿಗೆ ಸಲ್ಲಬೇಕಾದುದು. 18 ತಿಂಗಳು ಕಾಲಿನ ಅನಾರೋಗ್ಯದಿಂದ ಮನೆಯ ಲ್ಲಿದ್ದೆ. ವೈದ್ಯರ ಪರಿಶ್ರಮ, ಯಕ್ಷಾಭಿ ಮಾನಿಗಳ ಸಹಾಯದಿಂದ ಮತ್ತೆ ರಂಗಕ್ಕೆ ಬರುವಂತಾಗಿದೆ. ಒಳ್ಳೆಯ ಕಲಾವಿದ ಅನ್ನುವ ಬಿರುದು ಪ್ರೇಕ್ಷಕರು ಕೊಟ್ಟ ಬಿರುದು ಎಂದರು. ಕಸಾಪ ಕುಂದಾಪುರ ತಾಲೂಕು ಘಟಕದ ಅಧ್ಯಕ್ಷ ಡಾ.ಉಮೇಶ್ ಪುತ್ರನ್ ಆಶಯ ನುಡಿಗಳನ್ನಾಡಿದರು. ಕಸಾಪ ಸ್ಥಾಪಕಾಧ್ಯಕ್ಷ ಎ.ಎಸ್.ಎನ್. ಹೆಬ್ಬಾರ್ ಅಭಿನಂದನಾ ನುಡಿಗಳನ್ನಾಡಿದರು. ದತ್ತಿ ನಿಧಿ ದಾನಿ ಜಿ.ಸರೋಜಮ್ಮ ಪುಂಡಲೀಕ ಹಾಲಂಬಿ, ಸಾಂಸ್ಕೃತಿಕ ಚಿಂತಕ ಕೆ.ಸೀತಾರಾಮ ನಕ್ಕತ್ತಾಯ, ಕುಂದಾಪುರ ಸರಕಾರಿ ಪ.ಪೂ. ಕಾಲೇಜಿನ ಪ್ರಾಂಶುಪಾಲ ಜಿ. ರಾಮಕೃಷ್ಣ ಮತ್ತಿತರರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಲೇಖಕ ಜಯಪ್ರಕಾಶ್ ಪುತ್ತೂರು ರಚಿಸಿದ ವ್ಯಕ್ತಿತ್ವ ವಿಕಸನ ವಿಚಾರಧಾರೆ ಪುಸ್ತಕ ಬಿಡುಗಡೆ ಗೊಂಡಿತು. ಕಸಾಪ ಜಿಲ್ಲಾ ಗೌರವ ಕಾರ್ಯದರ್ಶಿ ಸುಬ್ರಹ್ಮಣ್ಯ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಕಳ ಕಸಾಪ ಅಧ್ಯಕ್ಷ ಕೊಂಡಳ್ಳಿ ಪ್ರಭಾಕರ ಶೆಟ್ಟಿ ಪರಿಚಯಿಸಿದರು. ಮನೋಹರ ಪಿ. ಸ್ವಾಗತಿಸಿ, ಮಂಜುನಾಥ ಕೆ.ಎಸ್. ವಂದಿಸಿದರು. ದಿನಕರ ಆರ್. ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
ಅಫಜಲಪುರ | ಸಂತ ಶ್ರೀ ಸೇವಾಲಾಲ ಮಹಾರಾಜರ ತತ್ವವನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ: ಅರುಣಕುಮಾರ ಪಾಟೀಲ
ಅಫಜಲಪುರ: ಸಂತ ಶ್ರೀ ಸೇವಾಲಾಲ ಮಹಾರಾಜರ ತತ್ವ ಸಿದ್ಧಾಂತಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಬದುಕು ಅರ್ಥಪೂರ್ಣವಾಗಲಿದೆ ಎಂದು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷ ಅರುಣಕುಮಾರ ಪಾಟೀಲ ಹೇಳಿದರು. ಪಟ್ಟಣದ ತಹಶೀಲ್ ಕಚೇರಿಯಲ್ಲಿ ರವಿವಾರ ತಾಲೂಕು ಆಡಳಿತ ವತಿಯಿಂದ ಆಯೋಜಿಸಲಾದ ಸಂತ ಶ್ರೀ ಸೇವಾಲಾಲ ಜಯಂತೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಬಂಜಾರಾ ಸಮುದಾಯದವರು ಇನ್ನು ಹೆಚ್ಚಿನ ಸಂಖ್ಯೆಯಲ್ಲಿ ಶಿಕ್ಷಣವಂತರಾಗಿ ಸಮಾಜದ ಮುಖ್ಯವಾಹಿನಿಗೆ ಬರಬೇಕು. ಸರ್ಕಾರ ಜಾರಿಗೆ ತಂದಿರುವ ವಿವಿಧ ಕಲ್ಯಾಣ ಯೋಜನೆಗಳು, ಸ್ವಯಂ ಉದ್ಯೋಗ ಯೋಜನೆಗಳಂತಹ ಸೌಲಭ್ಯಗಳನ್ನು ಸಮರ್ಪಕವಾಗಿ ಸದ್ಭಳಕೆ ಮಾಡಿಕೊಂಡು ಆರ್ಥಿಕವಾಗಿ ಸಬಲರಾಗಬೇಕು ಎಂದು ತಿಳಿಸಿದರು. ಸಮುದಾಯದ ಒಗ್ಗಟ್ಟು ಮತ್ತು ಶಿಸ್ತುಬದ್ಧ ಸಂಘಟನೆ ಸಮಾಜದ ಪ್ರಗತಿಗೆ ಮುಖ್ಯ ಆಧಾರವಾಗಿದ್ದು, ಯುವಕರು ದುಷ್ಪ್ರವೃತ್ತಿಗಳಿಂದ ದೂರವಿದ್ದು ಗುರಿ ಸಾಧನೆಗೆ ಶ್ರಮಿಸಬೇಕು ಎಂದು ಕರೆ ನೀಡಿದರು. ತಹಶೀಲ್ದಾರ್ ಸಂಜೀವಕುಮಾರ ದಾಸರ ಮಾತನಾಡಿ, ಸಂತ ಶ್ರೀ ಸೇವಾಲಾಲ ಮಹಾರಾಜರ ಆದರ್ಶಗಳನ್ನು ನಮ್ಮ ದೈನಂದಿನ ಜೀವನದಲ್ಲಿ ಅಳವಡಿಸಿಕೊಂಡು ಸಾಮಾಜಿಕ ನ್ಯಾಯ, ಸಹಬಾಳ್ವೆ ಹಾಗೂ ಸರ್ವರ ಕಲ್ಯಾಣಕ್ಕಾಗಿ ಶ್ರಮಿಸುವ ಸಂಕಲ್ಪವನ್ನು ನಾವು ಎಲ್ಲರೂ ಕೈಗೊಳ್ಳೋಣ ಎಂದರು. ಶ್ರೀ ನವ ಶಕ್ತಿ ಪುಣ್ಯಾಶ್ರಮ ಶಕ್ತಿಪೀಠ ಚೌಡಾಪೂರದ ಶ್ರೀ ಮುರಾಹರಿ ಮಹಾರಾಜರು, ಲಾಡ ಚಿಂಚೋಳಿ ಶ್ರೀ ಸುನೀಲ ಮಹಾರಾಜರು ಹಾಗೂ ಶ್ರೀ ಶಂಕರ ಪೂಜಾರಿ ಸಾನಿಧ್ಯ ವಹಿಸಿ ಆಶೀರ್ವಾಚನ ನೀಡಿದರು. ಕಾರ್ಯಕ್ರಮದಲ್ಲಿ ಬಂಜಾರಾ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಅಪ್ಪು.ಬಿ.ರಾಠೋಡ, ಬಂಜಾರಾ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷರಾದ ನಾಥರಾಮ.ಎಲ್.ರಾಠೋಡ, ಜಿಲ್ಲಾ ಉಪಾಧ್ಯಕ್ಷ ರಾಕೇಶ ಟಿ.ರಾಠೋಡ, ಶಂಕರ ದಾಮುಲು ರಾಠೋಡ, ಸುಭಾಷ, ಸಿ. ರಾಠೋಡ, ತಾರು.ಎಚ್.ಜಾಧವ, ಶ್ರೀಧರ.ಡಿ. ರಾಠೋಡ, ವಿನೋದ ಎಂ.ರಾಠೋಡ, ಪ್ರೀತಮ್ ರಾಠೋಡ, ಮೇಘು.ಆರ್.ಚವ್ಹಾಣ, ವಿನೋದ ಚವ್ಹಾಣ, ವಿಜಯಕುಮಾರ ಎಂ.ರಾಠೋಡ, ಸುನೀಲ ರಾಠೋಡ, ರಾಜಕುಮಾರ ಪವಾರ, ಉಪನ್ಯಾಸಕ ಸುರೇಶ ಎಸ್.ರಾಠೋಡ, ರಾಜಕುಮಾರ ಚವ್ಹಾಣ, ಕವಿತಾ ರಾಠೋಡ, ಕಸಾಪ ಅಧ್ಯಕ್ಷ ಪ್ರಭಾವತಿ ಮೇತ್ರೆ, ರಾಘವೇಂದ್ರ ರಾಠೋಡ, ಪುನ್ನು .ಡಿ. ಪವಾರ, ಕೇಶು ಆರ್.ಜಾಧವ್, ಶಿಕ್ಷಕರಾದ ಲಕ್ಷ್ಮಣ ಎಲ್.ಪವಾರ, ಪ್ರಮೋದ ಎಂ.ಜಾಧವ, ಕೃಷ್ಣಾ ಜಗನು ರಾಠೋಡ, ಸಮಾಜ ಕಲ್ಯಾಣ ಇಲಾಖೆ ಅಶೋಕ ನಾಯಕ ಸೇರಿದಂತೆ ಬಂಜಾರಾ ಸಮುದಾಯದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು, ಭಜನ ಮಂಡಳಿ ಸದಸ್ಯರು, ಹಿರಿಯರು, ಮಹಿಳೆಯರು ಹಾಗೂ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
ರಮಝಾನ್ ಆತ್ಮಶುದ್ಧಿ, ಆತ್ಮ ಪರಿಶೀಲನೆಯ ತಿಂಗಳು: ಅಮೀನುಲ್ ಹಸನ್
ಉಡುಪಿ, ಫೆ.15: ರಮಝಾನ್ ಆತ್ಮಶುದ್ಧಿ ಹಾಗೂ ಆತ್ಮಪರಿಶೀಲನೆಯ ತಿಂಗಳು. ಇಂದಿನ ಡಿಜಿಟಲ್ ಯುಗದಲ್ಲಿ ನಮ್ಮ ಮೊಬೈಲ್ ಅಥವಾ ಕಂಪ್ಯೂಟರ್ಗಳಿಗೆ ಸಾರ್ಫ್ಟ್ವೇ ಅಪ್ಡೇಟ್ ಅಗತ್ಯವಿರುವಂತೆ, ನಮ್ಮ ಜೀವನಕ್ಕೂ ಆಧ್ಯಾತ್ಮಿಕ ಅಪ್ಡೇಟ್ ಅಗತ್ಯ. ಆ ಅಪ್ಡೇಟ್ ಆಗುವ ಪವಿತ್ರ ಕಾಲವೇ ರಮಝಾನ್ ಎಂದು ಜಮಾಅತೆ ಇಸ್ಲಾಮೀ ಹಿಂದ್ ಉಪಾಧ್ಯಕ್ಷ ಎಸ್.ಅಮೀನುಲ್ ಹಸನ್ ಹೇಳಿದ್ದಾರೆ. ಜಮಾಅತೆ ಇಸ್ಲಾಮೀ ಹಿಂದ್ ಉಡುಪಿ ಜಿಲ್ಲೆಯ ವತಿಯಿಂದ ಇಂದು ಉಡುಪಿ ಜಾಮೀಯ ಮಸೀದಿಯಲ್ಲಿ ಆಯೋಜಿ ಸಲಾದ ರಮಝಾನ್ಗೆ ಸ್ವಾಗತ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡುತಿದ್ದರು. ರಮಝಾನ್ ಕೇವಲ ಉಪವಾಸದ ಆಚರಣೆಯಷ್ಟೇ ಅಲ್ಲ, ಅದು ವ್ಯಕ್ತಿತ್ವ ಪರಿವರ್ತನೆಗೆ ದಾರಿ ತೋರಿಸುವ ತಿಂಗಳು ಆಗಿದೆ. ಅಪ್ಡೇಟ್ ಮಾತ್ರವಲ್ಲ, ರಮಝಾನ್ ಅಪ್ ಗ್ರೇಡ್ ಆಗುವ ತಿಂಗಳು ಕೂಡ ಹೌದು. ನಮ್ಮ ಈಮಾನ್, ನೈತಿಕತೆ ಮತ್ತು ವರ್ತನೆಯಲ್ಲಿ ಉನ್ನತಿ ಬರಬೇಕು ಎಂದು ಅವರು ಅಭಿಪ್ರಾಯಪಟ್ಟರು. ಸಮಾಜದ ಹಿತದೃಷ್ಟಿಯಿಂದ ಬಡವರು, ಅನಾಥರು ಮತ್ತು ಅಗತ್ಯವಿರು ವವರ ಕಡೆ ಹೆಚ್ಚಿನ ಕಾಳಜಿ ವಹಿಸುವುದು ರಮಝಾನ್ನ ಪ್ರಮುಖ ಪಾಠವಾಗಿದೆ. ಮಾನವೀಯತೆ, ಸಹೋದರತ್ವ ಹಾಗೂ ಸಹಾನುಭೂತಿ ಬೆಳೆಸುವ ಮೂಲಕ ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆ ತರಲು ಎಲ್ಲರೂ ಮುಂದಾಗಬೇಕು ಎಂದು ಅವರು ತಿಳಿಸಿದರು. ಯುವಜನತೆ ಸಮಯವನ್ನು ಸದುಪಯೋಗಪಡಿಸಿಕೊಂಡು ಜ್ಞಾನಾರ್ಜನೆ ಮತ್ತು ಸಮಾಜ ಸೇವೆಯಲ್ಲಿ ತೊಡಗಿಸಿ ಕೊಳ್ಳಬೇಕು. ಸಾಮಾಜಿಕ ಜಾಲತಾಣಗಳಲ್ಲಿ ಸಮಯ ವ್ಯರ್ಥ ಮಾಡುವ ಬದಲು ಆತ್ಮವಿಕಾಸದತ್ತ ಗಮನ ಹರಿಸಬೇಕು ಎಂದು ಅವರು ಸಲಹೆ ನೀಡಿದರು. ಮಲ್ಪೆ ಅಬೂಬಕ್ಕರ್ ಸಿದ್ದೀಕ್ ಮಸೀದಿಯ ಮೌಲಾನ ಇಮ್ರಾನುಲ್ಲಾ ಖಾನ್ ಮನ್ಸೂರಿ ಪ್ರಾಸ್ತಾವಿಕವಾಗಿ ಮಾತನಾ ಡಿದರು. ಉಡುಪಿ ಜಾಮಿಯ ಮಸೀದಿಯ ಮೌಲಾನ ಯೂನಸ್ ಕುರಾನ್ ಪಠಿಸಿ ಅನುವಾದಿಸಿದರು, ಜಮಾಅತೆ ಇಸ್ಲಾಮೀ ಹಿಂದ್ ಉಡುಪಿ ಘಟಕದ ಅಧ್ಯಕ್ಷ ನಿಸಾರ್ ಅಹಮದ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಜಮಾಅತೆ ಇಸ್ಲಾಮೀ ಹಿಂದ್ ಕಾಪು ಘಟಕದ ಅಧ್ಯಕ್ಷ ಅನ್ವರ್ ಅಲಿ ವಂದಿಸಿದರು.
ವಿದೇಶದಿಂದ ಭಾರತಕ್ಕೆ ಚಿನ್ನ ತರಲು ಒಳ್ಳೆ ಅವಕಾಶವನ್ನು ಕೇಂದ್ರ ಸರ್ಕಾರ ಮಾಡಿಕೊಟ್ಟಿದೆ. ಬ್ಯಾಗೇಜ್ ನೀತಿಯಲ್ಲಿ ಮಹತ್ವದ ಬದಲಾವಣೆಯನ್ನು ಮಾಡಿದ್ದು, ಮೌಲ್ಯ ಮಿತಿಯನ್ನು ತೆಗೆದು ಹಾಕಲಾಗಿದೆ. ಈ ಮೂಲಕ ಮಹಿಳೆಯರು 40 ಗ್ರಾಂ, ಪುರುಷರು 20 ಗ್ರಾಂ ಚಿನ್ನವನ್ನು ತೆಗೆದುಕೊಂಡು ಬರಬಹುದು. ಈ ಬಗ್ಗೆ ಹೆಚ್ಚಿನ ವಿವರ ಇಲ್ಲಿದೆ.
ಬಿಕ್ಲು ಶಿವ ಹತ್ಯೆ ಪ್ರಕರಣ : ಬಿಜೆಪಿ ಶಾಸಕ ಬೈರತಿ ಬಸವರಾಜ್ ಫೆ.21ರವರೆಗೆ ಸಿಐಡಿ ವಶಕ್ಕೆ
ಬೆಂಗಳೂರು : ರೌಡಿಶೀಟರ್ ಬಿಕ್ಲು ಶಿವ ಹತ್ಯೆ ಪ್ರಕರಣದ 5ನೇ ಆರೋಪಿಯಾಗಿರುವ ಬಿಜೆಪಿ ಶಾಸಕ ಬೈರತಿ ಬಸವರಾಜ್ ಅವರನ್ನು 7 ದಿನಗಳ ಕಾಲ ಸಿಐಡಿ ವಶಕ್ಕೆ ನೀಡಿ ಬೆಂಗಳೂರಿನ 42ನೇ ಎಸಿಜೆಎಂ ನ್ಯಾಯಾಲಯದ ನ್ಯಾಯಾಧೀಶರು ರವಿವಾರ ಆದೇಶಿಸಿದ್ದಾರೆ. ಬೆಂಗಳೂರಿನ ಕೋರಮಂಗಲದಲ್ಲಿರುವ 42ನೇ ಎಸಿಜೆಎಂ ನ್ಯಾಯಾಲಯದ ನ್ಯಾಯಾಧೀಶರ ನಿವಾಸಕ್ಕೆ ರವಿವಾರ ಶಾಸಕ ಬೈರತಿ ಬಸವರಾಜ್ ಅವರನ್ನು ಹಾಜರುಪಡಿಸಲಾಗಿತ್ತು. ಈ ವೇಳೆ ಪ್ರಕರಣದ ತನಿಖಾಧಿಕಾರಿ ಡಿವೈಎಸ್ಪಿ ಗೌತಮ್ ಅವರು ಶಾಸಕರ ವೈದ್ಯಕೀಯ ತಪಾಸಣೆ ವರದಿಯನ್ನು ನ್ಯಾಯಾಧೀಶರ ಮುಂದೆ ಸಲ್ಲಿಸಿದರು. ವರದಿ ಪರಿಶೀಲಿಸಿ ವಿಚಾರಣೆ ನಡೆಸಿದ ನ್ಯಾಯಾಧೀಶರು, ಬೈರತಿ ಬಸವರಾಜ್ ಅವರನ್ನು ಫೆ.15ರಿಂದ ಫೆ.21ರವರೆಗೆ ಸಿಐಡಿ ವಶಕ್ಕೆ ನೀಡಿ ಆದೇಶ ಹೊರಡಿಸಿದ್ದಾರೆ. ಜುಲೈ 15ರಂದು ಬೆಂಗಳೂರಿನ ಹಲಸೂರು ಕೆರೆಯ ಸಮೀಪದ ಮನೆಯೊಂದರ ಎದುರು ರಾತ್ರಿ ರೌಡಿಶೀಟರ್ ಬಿಕ್ಲು ಶಿವ ಯಾನೆ ಶಿವಪ್ರಕಾಶ್ ಕೊಲೆ ನಡೆದಿತ್ತು. ಕಾರಿನಲ್ಲಿ ಬಂದಿದ್ದ 8-9 ಜನ ಆರೋಪಿಗಳು ಶಿವಪ್ರಕಾಶ್ನನ್ನು ಮಾರಕಾಸ್ತ್ರಗಳಿಂದ ಹೊಡೆದು ಹತ್ಯೆ ಮಾಡಿ ಸ್ಥಳದಿಂದ ಪರಾರಿಯಾಗಿದ್ದರು. ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ಕೊಲೆ ನಡೆದಿದೆ ಎಂದು ಆರೋಪಿಸಿ ಬಿಕ್ಲು ಶಿವನ ತಾಯಿ ವಿಜಯಲಕ್ಷ್ಮಿ ನೀಡಿದ ದೂರಿನ ಮೇರೆಗೆ ಜಗದೀಶ್, ಕಿರಣ್, ವಿಮಲ್, ಅನಿಲ್ ಮತ್ತು ಶಾಸಕ ಬೈರತಿ ಬಸವರಾಜ್, ಇತರರ ವಿರುದ್ಧ ಭಾರತೀನಗರ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿತ್ತು.
ವಿವಿಧ ಪೌಷ್ಟಿಕ ಯೋಜನೆಗಳನ್ನು ಜಾರಿಗೆ ತಂದರೂ ಇಳಿಕೆಯಾಗಿಲ್ಲ ಅಪೌಷ್ಟಿಕ ಮಕ್ಕಳ ಸಂಖ್ಯೆ
ಮಕ್ಕಳ ಅಪೌಷ್ಟಿಕತೆಯನ್ನು ಹೋಗಲಾಡಿಸಿ, ಉತ್ತಮ ಆರೋಗ್ಯ ನೀಡುವ ನಿಟ್ಟಿನಲ್ಲಿ ಸರ್ಕಾರ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಆದರೆ ಇವುಗಳು ಸರಿಯಾಗಿ ಫಲಾನುಭವಿಗಳಿಗೆ ಸಿಗದೇ, ಮಕ್ಕಳಲ್ಲಿ ಅಪೌಷ್ಟಿಕತೆ ಹೆಚ್ಚಾಗುತ್ತಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ತವರು ಜಿಲ್ಲೆ ಬೆಳಗಾವಿಯಲ್ಲೇ ಹೆಚ್ಚು ಮಕ್ಕಳು ಅಪೌಷ್ಟಿಕತೆಯಿಂದ ನರಳುತ್ತಿದ್ದಾರೆ.
ಹೊಸ ಬ್ರಿಡ್ಜ್ಗಳ ನಿರ್ಮಾಣಕ್ಕೆ ಬಜೆಟ್ನಲ್ಲಿ ಆದ್ಯತೆ : ಸತೀಶ್ ಜಾರಕಿಹೊಳಿ
ಸಿಂಧನೂರು : ರಾಜ್ಯದಲ್ಲಿ ದೊಡ್ಡ ಪ್ರಮಾಣದ ಹೊಸ ಬ್ರಿಡ್ಜ್ ಗಳ ನಿರ್ಮಾಣಕ್ಕೆ ಬಜೆಟ್ ನಲ್ಲಿ ಆದ್ಯತೆ ನೀಡಲಾಗುವುದು. ಕಳೆದ ಬಾರಿ ನೀಡಿದಂತೆ ಈ ಬಾರಿ ಪಿಡಬ್ಲ್ಯೂಡಿ ಇಲಾಖೆಗೆ 2 ಸಾವಿರ ಕೋಟಿ ರೂ. ಅನುದಾನ ನೀಡಲು ಸಿಎಂಗೆ ಮನವಿ ಮಾಡಲಾಗಿದೆ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು. ರವಿವಾರ ನಗರದ ಸರ್ಕ್ಯೂಟ್ ಹೌಸ್ ಬಳಿ ಇರುವ ಹೆಲಿಪ್ಯಾಡ್ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರತಿವರ್ಷದಂತೆ ಈ ವರ್ಷವೂ ಹಲವು ಕಾರ್ಯಕ್ರಮಗಳನ್ನು ಇಲಾಖೆಯಿಂದ ಹಮ್ಮಿಕೊಳ್ಳಲಾಗಿದೆ. ಕರ್ನಾಟಕದಲ್ಲಿ ಹೊಸ ಬ್ರಿಡ್ಜ್ ಗಳನ್ನು ಮಾಡಲಾಗಿಲ್ಲ. ಈ ಬಾರಿ ಹೊಸ ಬ್ರಿಡ್ಜ್ ಗಳ ನಿರ್ಮಾಣಕ್ಕೆ ಅನುದಾನ ನೀಡುವಂತೆ ಸಿಎಂಗೆ ಮನವಿ ಮಾಡಲಾಗಿದ್ದು, ಉಳಿದಂತ ಕಾಮಗಾರಿಗಳನ್ನು ಮಳೆಗಾಲದ ನಂತರ ಕೈಗೆತ್ತಿಕೊಳ್ಳಲಾಗುವುದು ಎಂದರು. ರಾಯಚೂರು ಸಿಂಧನೂರು ಹೈವೆ ಕಾಮಗಾರಿ ನಡೆದಿದೆ. ಶೀಘ್ರಗತಿಯಲ್ಲಿ ಕಾಮಗಾರಿ ನಡೆಸುವಂತೆ ಗುತ್ತೇದಾರರಿಗೆ ಸೂಚಿಸಲಾಗಿದೆ ಎಂದರು. ಸಿಎಂ ಬದಲಾವಣೆ ಆದಾಗ ನೋಡೋಣ. ಪ್ರಸ್ತುತ ರಾಜ್ಯದಲ್ಲಿ ನಡೆದಿರುವ ಸಿಎಂ ಬದಲಾವಣೆ ಚರ್ಚೆ ಅನಾವಶ್ಯಕ ಸತೀಶ್ ಜಾರಕಿಹೊಳಿ, ಸಚಿವ
ಉಳ್ಳಾಲ ತಾಲೂಕು ಮಟ್ಟದ ಉಲಮಾ, ಉಮರಾ ಸಂಗಮ, ಜಮಾಅತ್ ಪ್ರತಿನಿಧಿಗಳಿಗೆ ಮಾಹಿತಿ ಕಾರ್ಯಾಗಾರ
ಕೊಣಾಜೆ: ನಮ್ಮ ಕಾರ್ಯಗಳು ನಿಯಮ ಬದ್ಧವಾಗಿರಬೇಕು. ಉಲಮಾ-ಉಮರಾ ಸಂಗಮದಲ್ಲಿ ನಿಯಮಗಳ ಪಾಲನೆ ಆಗಬೇಕು. ಸಮುದಾಯದ ಅಭಿವೃದ್ಧಿಗೆ ಪೂರಕವಾಗಿ ಇರಬೇಕು ಎಂದು ವಕ್ಫ್ ಬೋರ್ಡ್ ಸದಸ್ಯ ಸೈಯದ್ ಅಶ್ರಫ್ ತಂಙಳ್ ಆದೂರು ಹೇಳಿದ್ದಾರೆ. ಅವರು ಜಮೀಯ್ಯತುಲ್ ಫಲಾಹ್ ಉಳ್ಳಾಲ ತಾಲೂಕು ಘಟಕ, ದ.ಕ. ಜಿಲ್ಲಾ ವಕ್ಫ್ ಸಲಹಾ ಸಮಿತಿ, ದ.ಕ.ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಹಾಗೂ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ಇವುಗಳ ಸಂಯುಕ್ತ ಆಶ್ರಯದಲ್ಲಿ ಖಿದ್ಮತುಲ್ ಇಸ್ಲಾಮ್ ಅಸೋಸಿಯೇಶನ್ ಕೋಡಿಜಾಲ್, ಖಿದ್ಮತುಲ್ ಇಸ್ಲಾಮ್ ಬದ್ರ್ ಕಮಿಟಿ ನಡುಪದವು, ಜಮೀಯತ್ತುಲಬಾ ಫ್ರೆಂಡ್ಸ್ ಅಸೋಸಿಯೇಶನ್ ಪಜೀರ್ ಇವುಗಳ ಸಹಯೋಗದಲ್ಲಿ ಕಂಬಳಪದವು ಖಾಸಗಿ ಸಭಾಂಗಣದಲ್ಲಿ ನಡೆದ ಉಳ್ಳಾಲ ತಾಲೂಕು ಮಟ್ಟದ ಉಲಮಾ,ಉಮರಾ ಸಂಗಮ ಮತ್ತು ಜಮಾಅತ್ ಪ್ರತಿನಿಧಿಗಳ ಮಾಹಿತಿ ಕಾರ್ಯಾಗಾರದಲ್ಲಿ ದುಆ ಆಶೀರ್ವಚನ ನೀಡಿ ಮಾತನಾಡಿದರು. ವಿಧಾನಸಭೆಯ ಸ್ಪೀಕರ್ ಯು.ಟಿ. ಖಾದರ್ ಮಾತನಾಡಿ, ಜಮಾಅತ್ ಮೂಲಕ ಸಮುದಾಯದ ಅಭಿವೃದ್ಧಿಗೆ ಇರುವ ಯೋಜನೆ ಬಗ್ಗೆ ಮಾಹಿತಿ ನೀಡುವ ಕೆಲಸ ಆಗಬೇಕು. ಪ್ರತಿ ಮಹಲ್ ಗಳಲ್ಲಿ ವಿವಿಧ ಪದವಿ ಪಡೆದ ವಿದ್ಯಾರ್ಥಿಗಳನ್ನು ಗುರುತಿಸುವ ಜೊತೆಗೆ ಆರ್ಥಿಕವಾಗಿ ಸಂಕಷ್ಟದಲ್ಲಿ ಸಿಲುಕಿರುವ ವಿದ್ಯಾರ್ಥಿಗಳಿಗೆ ಸ್ಪಂದಿಸುವ ಕೆಲಸ ಆಗಬೇಕು ಎಂದರು. ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಇಬ್ರಾಹೀಂ ಕೋಡಿಜಾಲ್ ಮಾತನಾಡಿ, ಉಲಮಾ-ಉಮರಾ ಕಾರ್ಯಕ್ರಮದ ಅಗತ್ಯದ ಬಗ್ಗೆ ವಿವರಿಸಿದರು. ಲಿಮ್ರಾ ಎಜ್ಯು ಗ್ರೂಪ್ ಅಧ್ಯಕ್ಷ ಶೇಖ್ ಮುಹಮ್ಮದ್ ಇರ್ಫಾನಿ ನಶೆಮುಕ್ತ ಸಮಾಜ ನಿರ್ಮಾಣದ ಬಗ್ಗೆ ಮಾಹಿತಿ ನೀಡಿದರು. ನ್ಯಾಯವಾದಿ ಸರ್ಫರಾಝ್ ವಕ್ಫ್ ಆಸ್ತಿಗಳ ಕಾಯ್ದೆ, ದಾಖಲೆಗಳ ಬಗ್ಗೆ ಮಾಹಿತಿ ನೀಡಿದರು. ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅಧಿಕಾರಿ ಜಿತೇಂದ್ರ ಕೋಟ್ಯಾನ್ ಇಲಾಖೆಯ ವತಿಯಿಂದ ಸಿಗುವ ಯೋಜನೆ ಗಳ ಬಗ್ಗೆ ಮಾಹಿತಿ ನೀಡಿದರು. ಅಲ್ಪಸಂಖ್ಯಾತರ ನಿಗಮದ ಜಿಲ್ಲಾ ವ್ಯವಸ್ಥಾಪಕ ಯಶೋಧರ ಅಭಿವೃದ್ಧಿ ನಿಗಮದಿಂದ ಸಿಗುವ ಸವಲತ್ತುಗಳ ಬಗ್ಗೆ ಮಾಹಿತಿ ನೀಡಿದರು. ಜಿಲ್ಲಾ ಸ್ವಚ್ಛತಾ ರಾಯಭಾರಿ ಶೀನ ಶೆಟ್ಟಿ ಕಸ ಮುಕ್ತ ಸಮಾಜ ಹಾಗೂ ಕಸ ಬೆಳವಣಿಗೆಯಿಂದ ಆಗುವ ದುಷ್ಪರಿಣಾಮ ಗಳ ಬಗ್ಗೆ ಮಾಹಿತಿ ನೀಡಿದರು. ವಕ್ಫ್ ಅಧಿಕಾರಿ ಅನ್ವರ್ ಮುಸ್ತಫ ವಕ್ಫ್ ನಿಂದ ಮಹಲ್ ಗಳ ಉಸ್ತಾದರಿಗೆ ಸಿಗುವ ಸವಲತ್ತುಗಳ ಬಗ್ಗೆ ಮಾಹಿತಿ ನೀಡಿದರು. ಜಮೀಯ್ಯತುಲ್ ಫಲಾಹ್ ಉಡುಪಿ, ದ.ಕ. ಜಿಲ್ಲಾ ಅಧ್ಯಕ್ಷ ಅಶ್ಫಾಕ್ ಅಹ್ಮದ್ ಮಾತನಾಡಿದರು. ಜಮೀಯ್ಯತುಲ್ ಫಲಾಹ್ ಉಳ್ಳಾಲ ತಾಲೂಕು ಅಧ್ಯಕ್ಷ ಅಬ್ದುಲ್ ರಹ್ಮಾನ್ ಕೋಡಿಜಾಲ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಉದ್ಯಮಿ ಹಮೀದ್ ಎಚ್.ಎನ್., ಹಾಜಿ ಮುಹಮ್ಮದ್ ಶಾಫಿ, ಮಹಮ್ಮದ್ ಫಯಾಝ್, ಇಬ್ರಾಹೀಂ ನಡುಪದವು, ಹಾಜಿ ಎನ್.ಎಸ್.ನಾಸಿರ್ ನಡುಪದವು, ಅಶ್ರಫ್ ಅಹ್ಮದ್, ಜಲೀಲ್ ಮೋಂಟುಗೋಳಿ, ನ್ಯಾಯವಾದಿ ಶೇಖ್ ಇಸಾಕ್ ಮತ್ತಿತರರು ಉಪಸ್ಥಿತರಿದ್ದರು. ಅಬ್ದುಲ್ ನಾಸಿರ್ ಕೆ.ಕೆ. ಸ್ವಾಗತಿಸಿದರು. ಸಿ.ಎಂ.ಶರೀಫ್ ಪಟ್ಟೋರಿ ಕಾರ್ಯಕ್ರಮ ನಿರೂಪಿಸಿದರು. ಎ.ಕೆ.ರಹ್ಮಾನ್ ಕೋಡಿಜಾಲ್ ವಂದಿಸಿದರು.
ಯುನೈಟೆಡ್ ಅರಬ್ ಎಮಿರೇಟ್ಸ್ನಲ್ಲಿ ಬೆಳಕಿಗೆ ಬಂದ ಅತಿದೊಡ್ಡ ಹಣ ವರ್ಗಾವಣೆ ಪ್ರಕರಣಗಳಲ್ಲಿ ಒಂದು ಎಂದು ಪರಿಗಣಿಸಲ್ಪಟ್ಟಿರುವ ‘ಅಬು ಸಬಾ ಪ್ರಕರಣ’ದಲ್ಲಿ ಭಾರತೀಯ ಮೂಲದ ಉದ್ಯಮಿ ಬಲ್ವಿಂದರ್ ಸಿಂಗ್ ಸಾಹ್ನಿ ವಿರುದ್ಧ ದುಬೈ ಕ್ಯಾಸೇಶನ್ ನ್ಯಾಯಾಲಯ(Dubai Court of Cassation) ಅಂತಿಮ ತೀರ್ಪು ಪ್ರಕಟಿಸಿದೆ. ಬಲ್ವಿಂದರ್ ಸಿಂಗ್ ಸಾಹ್ನಿ ಸೇರಿದಂತೆ 33 ಆರೋಪಿಗಳ ವಿರುದ್ಧ ನಡೆದ ವಿಚಾರಣೆಯಲ್ಲಿ, ಜಂಟಿಯಾಗಿ ವಿಧಿಸಲಾಗಿದ್ದ 150 ಮಿಲಿಯನ್ ದಿರ್ಹಮ್ (ಸುಮಾರು ₹358 ಕೋಟಿ) ದಂಡವನ್ನು ರದ್ದುಪಡಿಸಿ, ಅಪರಾಧದಿಂದ ಗಳಿಸಿದ ಹಣವನ್ನು ಮುಟ್ಟುಗೋಲು ಹಾಕಿಕೊಳ್ಳುವಂತೆ ನ್ಯಾಯಾಲಯ ಆದೇಶಿಸಿದೆ. ಆದರೆ ಐದು ವರ್ಷಗಳ ಜೈಲು ಶಿಕ್ಷೆ, 5 ಲಕ್ಷ ದಿರ್ಹಮ್ (ಸುಮಾರು ₹1.13 ಕೋಟಿ) ದಂಡ ಹಾಗೂ ಶಿಕ್ಷೆ ಪೂರ್ಣಗೊಂಡ ಬಳಿಕ ಯುಎಇಯಿಂದ ಗಡೀಪಾರು ಮಾಡುವ ಆದೇಶವನ್ನು ಮುಂದುವರಿಸಿದೆ. ನ್ಯಾಯಾಲಯದ ದಾಖಲೆಗಳ ಪ್ರಕಾರ, ಪ್ರಕರಣವು ದುಬೈ ಪೊಲೀಸರಿಗೆ ಸಲ್ಲಿಸಲಾದ ವರದಿಗಳಿಂದ ಆರಂಭಗೊಂಡಿದ್ದು, 2024ರ ಡಿಸೆಂಬರ್ 18ರಂದು ಪಬ್ಲಿಕ್ ಪ್ರಾಸಿಕ್ಯೂಷನ್ ಗೆ ಹಸ್ತಾಂತರಿಸಲಾಯಿತು. ಮೊದಲ ವಿಚಾರಣೆ 2024ರ ಜನವರಿ 9ರಂದು ಆರಂಭವಾಗಿತ್ತು. ತನಿಖೆ ವೇಳೆ ಯುಎಇಯ ಒಳಗೆ ಹಾಗೂ ಹೊರಗೆ ಕಾರ್ಯನಿರ್ವಹಿಸುತ್ತಿದ್ದ ಸಂಘಟಿತ ಹಣ ವರ್ಗಾವಣೆ ಜಾಲವು ಬೆಳಕಿಗೆ ಬಂತು. ಕೆಲ ಆರೋಪಿಗಳನ್ನು ನ್ಯಾಯಾಲಯದ ಸಮ್ಮುಖದಲ್ಲಿ ವಿಚಾರಣೆ ನಡೆಸಲಾಗಿದ್ದು, ಇತರರಿಗೆ ಗೈರುಹಾಜರಿಯಲ್ಲಿ ಶಿಕ್ಷೆ ವಿಧಿಸಲಾಗಿದೆ. ►ಸಂಘಟಿತ ಕ್ರಿಮಿನಲ್ ಜಾಲ ತೀರ್ಪಿನ ಪ್ರಕಾರ, ಆರೋಪಿಗಳು ಯುರೋಪಿನ ಅಪರಾಧ ಜಾಲಗಳ ಸಹಕಾರದೊಂದಿಗೆ ಸ್ಥಳೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಂಘಟಿತ ಕ್ರಿಮಿನಲ್ ಗುಂಪನ್ನು ರಚಿಸಿದ್ದರು. ಮಾದಕವಸ್ತು ಕಳ್ಳಸಾಗಣೆ ಹಾಗೂ ತೆರಿಗೆ ವಂಚನೆ ಸೇರಿದಂತೆ ಪೂರ್ವ ಅಪರಾಧಗಳಿಂದ ಬಂದ ಅಕ್ರಮ ಆದಾಯವನ್ನು ಬಿಟ್ಕಾಯಿನ್ ಸೇರಿದಂತೆ ಡಿಜಿಟಲ್ ವೇದಿಕೆಗಳ ಮೂಲಕ ವರ್ಗಾಯಿಸಲಾಗುತ್ತಿತ್ತು. ಶೆಲ್ ಕಂಪೆನಿಗಳು, ಡಿಜಿಟಲ್ ವ್ಯಾಲೆಟ್ ಗಳು ಹಾಗೂ ಅನುಮಾನಾಸ್ಪದ ಹಣಕಾಸು ವ್ಯವಹಾರಗಳ ಮೂಲಕ ಹಣ ಚಲಾವಣೆ ನಡೆದಿರುವುದು ತನಿಖೆಯಲ್ಲಿ ದೃಢಪಟ್ಟಿದೆ. ಅಬುಧಾಬಿಯ ರಾಜ್ಯ ಭದ್ರತಾ ಸಂಸ್ಥೆಯ ತನಿಖೆಯ ಪ್ರಕಾರ, ಈ ಜಾಲದಲ್ಲಿ ಪಾಕಿಸ್ತಾನ, ಭಾರತ, ಯುನೈಟೆಡ್ ಕಿಂಗ್ಡಮ್, ಇರಾಕ್, ಜೋರ್ಡಾನ್, ಫೆಲೆಸ್ತೀನ್ ಹಾಗೂ ನೆದರ್ಲ್ಯಾಂಡ್ಸ್ ಸೇರಿದಂತೆ ವಿವಿಧ ದೇಶಗಳ ವ್ಯಕ್ತಿಗಳು ಭಾಗಿಯಾಗಿದ್ದರು. ಯುಕೆ ಮೂಲದ ಮಾದಕವಸ್ತು ಕಳ್ಳಸಾಗಣೆ ಜಾಲದ ಹಣವನ್ನು ಸಾಹ್ನಿ ನಿಯಂತ್ರಣದಲ್ಲಿದ್ದ ಡಿಜಿಟಲ್ ವ್ಯಾಲೆಟ್ ಗಳಿಗೆ ವರ್ಗಾಯಿಸಲಾಗುತ್ತಿತ್ತು. ಬಳಿಕ ಇತರ ಆರೋಪಿಗಳು ಆ ಹಣವನ್ನು ನಗದು ರೂಪಕ್ಕೆ ಪರಿವರ್ತಿಸಿ ದುಬೈನ ಐಷಾರಾಮಿ ಹೋಟೆಲ್ ಗಳಲ್ಲಿನ ಬಾಡಿಗೆ ಅಪಾರ್ಟ್ಮೆಂಟ್ಗಳಿಗೆ ತಲುಪಿಸುತ್ತಿದ್ದರು. ಸುಮಾರು ನಾಲ್ಕು ಶೇಕಡಾ ಕಮಿಷನ್ ಕಡಿತಗೊಳಿಸಿದ ನಂತರ ಉಳಿದ ಮೊತ್ತವನ್ನು ಸಾಹ್ನಿ ಕಂಪೆನಿಗಳ ಖಾತೆಗಳಿಗೆ ಜಮಾ ಮಾಡಲಾಗುತ್ತಿತ್ತು ಎಂದು ತನಿಖೆ ತಿಳಿಸಿದೆ. ►ಅಕ್ರಮ ಹಣದ ಪ್ರಮಾಣವೆಷ್ಟು? ಪ್ರಾಸಿಕ್ಯೂಟರ್ಗಳ ವಾದದ ಪ್ರಕಾರ, ಈ ಜಾಲದ ಮೂಲಕ 180 ಮಿಲಿಯನ್ ದಿರ್ಹಮ್ (ಸುಮಾರು ₹429 ಕೋಟಿ) ಹಣವನ್ನು ಅಕ್ರಮವಾಗಿ ವರ್ಗಾಯಿಸಲಾಗಿದೆ. ಆದರೆ ಮೇಲ್ಮನವಿ ಹಾಗೂ ಅಂತಿಮ ತೀರ್ಪಿನಲ್ಲಿ 150 ಮಿಲಿಯನ್ ದಿರ್ಹಮ್ (ಸುಮಾರು ₹358 ಕೋಟಿ) ಮೊತ್ತವನ್ನು ನ್ಯಾಯಾಲಯ ದೃಢಪಡಿಸಿದೆ. ತನಿಖೆಯಲ್ಲಿ ಒಬ್ಬ ಮಹಿಳಾ ಆರೋಪಿಯ ಬಳಿ 7.4 ಮಿಲಿಯನ್ ದಿರ್ಹಮ್ (ಸುಮಾರು ₹17.5 ಕೋಟಿ) ಮೌಲ್ಯದ ಆಸ್ತಿಗಳು ಹಾಗೂ ವಾಹನಗಳು ಪತ್ತೆಯಾಗಿದ್ದು, ಅವು ಅಪರಾಧ ಚಟುವಟಿಕೆಯಲ್ಲಿ ಬಳಸಲಾಗುತ್ತಿತ್ತು ಎಂದು ಬಹಿರಂಗವಾಯಿತು. ►ಆರಂಭಿಕ ತೀರ್ಪು ಮತ್ತು ಶಿಕ್ಷೆಗಳು ದುಬೈ ಕ್ರಿಮಿನಲ್ ನ್ಯಾಯಾಲಯ ಆರಂಭದಲ್ಲಿ ಸಾಹ್ನಿಗೆ ಐದು ವರ್ಷಗಳ ಜೈಲು ಶಿಕ್ಷೆ, 5 ಲಕ್ಷ ದಿರ್ಹಮ್ (ಸುಮಾರು ₹1.13 ಕೋಟಿ) ದಂಡ, 150 ಮಿಲಿಯನ್ ದಿರ್ಹಮ್ (ಸುಮಾರು ₹358 ಕೋಟಿ) ವಶಪಡಿಸಿಕೊಳ್ಳುವ ಆದೇಶ ಹಾಗೂ ಶಿಕ್ಷೆ ನಂತರ ಗಡೀಪಾರು ಮಾಡುವ ತೀರ್ಪು ನೀಡಿತ್ತು. ಗೈರುಹಾಜರಿಯಲ್ಲಿ ವಿಚಾರಣೆಗೆ ಒಳಗಾದ 11 ಮಂದಿಗೆ ಐದು ವರ್ಷಗಳ ಜೈಲು ಶಿಕ್ಷೆ ಮತ್ತು ತಲಾ 5 ಲಕ್ಷ ದಿರ್ಹಮ್ (ಸುಮಾರು ₹1.13 ಕೋಟಿ) ದಂಡ ವಿಧಿಸಲಾಯಿತು. ಇತರ 10 ಮಂದಿಗೆ ತಲಾ ಒಂದು ವರ್ಷ ಜೈಲು ಶಿಕ್ಷೆ ಹಾಗೂ 2 ಲಕ್ಷ ದಿರ್ಹಮ್ (ಸುಮಾರು ₹45 ಲಕ್ಷ) ದಂಡ ವಿಧಿಸಲಾಯಿತು. ಮೂರು ಕಂಪೆನಿಗಳಿಗೆ ತಲಾ 5 ಮಿಲಿಯನ್ ದಿರ್ಹಮ್ (ಸುಮಾರು ₹11.3 ಕೋಟಿ) ದಂಡ ವಿಧಿಸಿ, ಎಲೆಕ್ಟ್ರಾನಿಕ್ ಸಾಧನಗಳು ಮತ್ತು ಮೊಬೈಲ್ಗಳನ್ನು ವಶಪಡಿಸಿಕೊಳ್ಳಲಾಯಿತು. ►ಮೇಲ್ಮನವಿಗಳು ತಿರಸ್ಕೃತ ಹಲವಾರು ಪ್ರತಿವಾದಿಗಳು ಕಾನೂನುಬಾಹಿರ ಬಂಧನ, ಶೋಧ, ಪ್ರಮಾಣೀಕೃತ ಭಾಷಾಂತರಕರ ಅನುಪಸ್ಥಿತಿ ಹಾಗೂ ಬಲವಂತದ ತಪ್ಪೊಪ್ಪಿಗೆಗಳ ಆರೋಪಗಳನ್ನು ಉಲ್ಲೇಖಿಸಿ ಮೇಲ್ಮನವಿ ಸಲ್ಲಿಸಿದ್ದರು. ಕೆಲವರು ಪ್ರಕರಣವು ಹಣ ವರ್ಗಾವಣೆಯಲ್ಲ, ಪರವಾನಗಿ ಪಡೆಯದ ಕ್ರಿಪ್ಟೋಕರೆನ್ಸಿ ವ್ಯಾಪಾರಕ್ಕೆ ಸಂಬಂಧಿಸಿದೆ ಎಂದು ವಾದಿಸಿದರು. ಆದರೆ ಮೇಲ್ಮನವಿ ನ್ಯಾಯಾಲಯಗಳು ಈ ವಾದಗಳನ್ನು ತಿರಸ್ಕರಿಸಿ ಸಂಘಟಿತ ಹಣ ವರ್ಗಾವಣೆಯ ಅಂಶಗಳು ಸಾಬೀತಾಗಿವೆ ಎಂದವು. ಅಂತಿಮವಾಗಿ ಕ್ಯಾಸೇಶನ್ ನ್ಯಾಯಾಲಯ 150 ಮಿಲಿಯನ್ ದಿರ್ಹಮ್ (ಸುಮಾರು ₹358 ಕೋಟಿ) ದಂಡವನ್ನು ರದ್ದುಪಡಿಸಿ, ಅಪರಾಧದಲ್ಲಿ ಗಳಿಸಿದ ಆದಾಯವನ್ನು ಮುಟ್ಟುಗೋಲು ಹಾಕಿಕೊಳ್ಳುವ ಮೂಲಕ ಬದಲಾಯಿಸಿತು ಹಾಗೂ ಉಳಿದ ಶಿಕ್ಷೆಗಳನ್ನು ಎತ್ತಿಹಿಡಿದಿತು. ►ಐಷಾರಾಮಿ ಜೀವನಶೈಲಿಯ ಅಬೂ ಸಬಾ 53 ವರ್ಷದ ಬಲ್ವಿಂದರ್ ಸಿಂಗ್ ಸಾಹ್ನಿ ಯುಎಇ, ಯುನೈಟೆಡ್ ಸ್ಟೇಟ್ಸ್ ಹಾಗೂ ಭಾರತದಲ್ಲಿ ಬ್ರಂಚ್ ಗಳನ್ನು ಹೊಂದಿರುವ ರಿಯಲ್ ಎಸ್ಟೇಟ್ ಕಂಪೆನಿಯ ಮಾಲೀಕರಾಗಿದ್ದಾರೆ. ‘ಅಬು ಸಬಾ’ ಹೆಸರಿನಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಐಷಾರಾಮಿ ಕಾರುಗಳ ಸಂಗ್ರಹ, ದುಬಾರಿ ಖರೀದಿಗಳು ಹಾಗೂ ವೈಭವಯುತ ಜೀವನಶೈಲಿಯಿಂದ ಪ್ರಸಿದ್ಧರಾಗಿದ್ದರು. ದುಬೈನ ಜುಮೈರಾ ವಿಲೇಜ್ ಸರ್ಕಲ್ನ ‘ಬುರ್ಜ್ ಸಬಾ’, ದುಬೈ ಸ್ಪೋರ್ಟ್ಸ್ ಸಿಟಿಯ ‘ಕಸ್ರ್ ಸಬಾ’, ಬಿಸಿನೆಸ್ ಬೇ ಹಾಗೂ ಸಬಾ ದುಬೈ ಸ್ಕೈಲೈನ್ ಪ್ರದೇಶಗಳಲ್ಲಿ ವಾಣಿಜ್ಯ ಹಾಗೂ ವಸತಿ ಆಸ್ತಿಗಳನ್ನು ಹೊಂದಿದ್ದಾರೆಂದು ವರದಿಗಳು ಸೂಚಿಸುತ್ತವೆ. 2016ರಲ್ಲಿ ಸಾರ್ವಜನಿಕ ಹರಾಜಿನಲ್ಲಿ ಏಕ ಅಂಕಿಯ ‘5’ ಸಂಖ್ಯೆಯ ವಿಶಿಷ್ಟ ವಾಹನ ನೋಂದಣಿ ಫಲಕವನ್ನು 33 ಮಿಲಿಯನ್ ದಿರ್ಹಮ್ (ಸುಮಾರು ₹60 ಕೋಟಿ)ಗೆ ಖರೀದಿಸಿದ್ದೂ ಭಾರೀ ಸುದ್ದಿಯಾಗಿತ್ತು. ಐಷಾರಾಮಿ ಕಾರುಗಳ ದೃಶ್ಯಗಳು ಹಾಗೂ ದುಬಾರಿ ಖರೀದಿಗಳ ಚಿತ್ರಣಗಳನ್ನು ಅವರು ಇನ್ಸ್ಟಾಗ್ರಾಮ್ನಲ್ಲಿ ಆಗಾಗ್ಗೆ ಹಂಚಿಕೊಳ್ಳುತ್ತಿದ್ದರು. View this post on Instagram A post shared by SORTD DUBAI (@sortd.dubai)
Vaibhav Suryavanshi 10th Exam- ಅತಿಯಾದ ಕ್ರಿಕೆಟ್ ನಿಂದಾಗಿ ವೈಭವ್ ಸೂರ್ಯವಂಶಿಗೆ ತರಗತಿಗೆ ಹಾಜರಾಗಲು ಸಾಧ್ಯವಾಗಿಲ್ಲ. ಇದೀಗ ಇಡೀ ವರ್ಷ ಕಲಿಯುವ 10ನೇ ತರಗತಿ ವರ್ಷದ ಸಿಲೆಬಸ್ಸನ್ನು ಒಮ್ಮೆಲೇ ವ್ಯಾಸಂಗ ಮಾಡಿ ಪರೀಕ್ಷೆ ಬರೆಯುವುದು ಕಷ್ಟ ಸಾಧ್ಯ. ಹೀಗಾಗಿ ವೈಭವ್ ಸೂರ್ಯವಂಶಿ ಅವರು ಈ ವರ್ಷ ಪರೀಕ್ಷೆ ಬರೆಯದಿರಲು ನಿರ್ಧರಿಸಿದ್ದಾರೆ. ಅವರ ತಂದೆ ಸಂಜೀವ್ ಸೂರ್ಯವಂಶಿ ಶಾಲೆಯ ಆಡಳಿತದ ಜೊತೆ ಮಾತುಕತೆ ನಡೆಸಿದ್ದು ಒಪ್ಪಿಗೆ ದೊರೆತಿದೆ. ಹೀಗಾಗಿ 14ರ ಬಾಲಕ ಸದ್ಯಕ್ಕೆ ನಿರಾಳವಾಗಿದ್ದಾರೆ.
Kollegala | ಗುಂಡಾಲ್ ಜಲಾಶಯದಲ್ಲಿ ಹುಲಿ ಕಳೇಬರ ಪತ್ತೆ
ಚಾಮರಾಜನಗರ : ಜಿಲ್ಲೆಯ ಕೊಳ್ಳೇಗಾಲ ಸಮೀಪ ಇರುವ ಬಿಳಿಗಿರಿರಂಗನಾಥ ಹುಲಿ ಸಂರಕ್ಷಿತ ಪ್ರದೇಶಕ್ಕೆ ಹೊಂದಿಕೊಂಡಿರುವ ಗುಂಡಾಲ್ ಜಲಾಶಯದಲ್ಲಿ ಹುಲಿಯ ಕಳೇಬರ ಪತ್ತೆಯಾಗಿದೆ. ಜಲಾಶಯದಲ್ಲಿ ಹುಲಿಯ ಕಳೇಬರ ಪತ್ತೆಯಾಗಿದ್ದು, ಹುಲಿ ಸಹಜವಾಗಿ ಸಾವನ್ನಪ್ಪಿದೆಯೇ ಅಥವಾ ಕಳ್ಳ ಬೇಟೆಗಾರರು ಹತ್ಯೆ ಮಾಡಿದ್ದಾರೆಯೇ ಎಂದು ಶಂಕೆ ಮೂಡಿದೆ. ಹುಲಿಯ ಮರಣೋತ್ತರ ಪರೀಕ್ಷೆ ಮತ್ತು ವಿಧಿ ವಿಜ್ಞಾನದ ಪ್ರಯೋಗಾಲಯದಿಂದ ವರದಿ ಬಂದ ಬಳಿಕವೇ ಹುಲಿ ಸಾವಿಗೆ ನಿಖರ ಕಾರಣ ತಿಳಿಯಲಿದೆ.
ಮಹಾಶಿವರಾತ್ರಿ: ಭಟ್ಕಳದಿಂದ ಮುರುಡೇಶ್ವರಕ್ಕೆ ತಹಶೀಲ್ದಾರರ ಪಾದಯಾತ್ರೆ
ಭಟ್ಕಳ: ಮಹಾಶಿವರಾತ್ರಿ ಪ್ರಯುಕ್ತ ತಾಲೂಕಿನ ವಿವಿಧ ಭಾಗಗಳಿಂದ ಸಾವಿರಾರು ಶಿವಭಕ್ತರು ವಿಶ್ವಪ್ರಸಿದ್ಧ ಮುರುಡೇಶ್ವರ ದೇವಸ್ಥಾನಕ್ಕೆ ಬರಿಗಾಲಿನಲ್ಲಿ ಸುಮಾರು 18 ಕಿಲೋಮೀಟರ್ ಪಾದಯಾತ್ರೆ ನಡೆಸಿದರು. ನಸುಕಿನ ಜಾವದಿಂದಲೇ ‘ಓಂ ನಮಃ ಶಿವಾಯ’ಘೋಷಣೆಗಳೊಂದಿಗೆ ಭಕ್ತರು ಮುರುಡೇಶ್ವರದತ್ತ ಹೆಜ್ಜೆ ಹಾಕಿದರು. ತಹಶೀಲ್ದಾರ ನಾಗೇಂದ್ರ ಕೋಳ ಶೆಟ್ಟಿಯವರು ಕಂದಾಯ ಇಲಾಖೆ ಸಿಬ್ಬಂದಿಯೊಂದಿಗೆ ಬೆಳಗಿನ ಜಾವ ನಾಲ್ಕು ಗಂಟೆ ಸುಮಾರಿಗೆ ಭಟ್ಕಳದಿಂದ ಪಾದಯಾತ್ರೆ ಆರಂಭಿಸಿದರು. ಸುಮಾರು ಏಳು ಗಂಟೆ ವೇಳೆಗೆ ದೇವಸ್ಥಾನಕ್ಕೆ ತಲುಪಿ ದೇವರ ದರ್ಶನ ಪಡೆದರು. ಈ ಕುರಿತು ಮಾತನಾಡಿದ ತಹಶೀಲ್ದಾರ್, ಶಿವರಾತ್ರಿ ಪ್ರಯುಕ್ತ ಮೊದಲ ಬಾರಿಗೆ ಸಿಬ್ಬಂದಿಯೊಂದಿಗೆ ಪಾದಯಾತ್ರೆ ನಡೆಸಿ ದರ್ಶನ ಪಡೆದಿದ್ದೇನೆ. ಮಹಾ ಮುರುಡೇಶ್ವರನು ಎಲ್ಲಾ ಭಕ್ತರಿಗೆ ಆಯುಷ್ಯ ಹಾಗೂ ಆರೋಗ್ಯ ಕರುಣಿಸಲಿ ಎಂದು ಪ್ರಾರ್ಥಿಸಿರುವುದಾಗಿ ಹೇಳಿದರು. ಇನ್ನೊಂದೆಡೆ, ಲೋಕ ಕಲ್ಯಾಣಾರ್ಥಸತತ 16ನೇ ವರ್ಷ ರಂಜನ್ ಗ್ಯಾಸ್ ಏಜೆನ್ಸಿಯ ಆಶ್ರಯದಲ್ಲಿ ಪಾದಯಾತ್ರೆ ನಡೆಯಿತು. ರಂಜನ್ ಇಂಡೇನ್ ಏಜೆನ್ಸಿಯ ಮಾಲಕರಾದ ಶಿವಾನಿ ಶಾಂತಾರಾಮ, ಶಾಂತಾರಾಮ ಭಟ್ಕಳ, ಕಿರಣ ಚಂದಾವರ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.
ಜಿಎಸ್ಟಿ ಮತ್ತು ಸೆಸ್ | ಬೊಮ್ಮಾಯಿಯವರ ಭಂಡ ಬಡಾಯಿಗಳು ಮತ್ತು ಭೈರೇಗೌಡರ ನಾಜೂಕಿನ ಅರ್ಧ ಸತ್ಯಗಳು
ನಿನ್ನೆ ಪತ್ರಿಕೆಯೊಂದರಲ್ಲಿ ಮೋದಿ ಸರಕಾರದ ತೆರಿಗೆ ನೀತಿಯಿಂದ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯದ ಬಗ್ಗೆ ಬಿಜೆಪಿಯ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಹಾಲಿ ಕಾಂಗ್ರೆಸ್ ಸರಕಾರದ ಕ್ಯಾಬಿನೆಟ್ ಮಂತ್ರಿಗಳಾದ ಕೃಷ್ಣ ಭೈರೇಗೌಡರು ತಮ್ಮ ತಮ್ಮ ಪಕ್ಷದ ನೀತಿಗನುಸಾರವಾದ ವಾದಗಳನ್ನು ಮಂಡಿಸಿದ್ದಾರೆ. ಬೊಮ್ಮಾಯಿಯವರ ವಾದಗಳಲ್ಲಿ ಬಿಜೆಪಿ ಬ್ರಾಂಡಿನ ಅತ್ಯಂತ ಬೇಜವಾಬ್ದಾರಿಯುತ ಸುಳ್ಳು ಬಡಾಯಿಗಳು, ಕರ್ನಾಟಕ ದ್ರೋಹಿ ವಾದಗಳು ಮತ್ತು ಅವರ ಕಾಲದಲ್ಲೂ ಆಗಿರಲಿಲ್ಲವೇ ಎಂಬ ಭಂಡ ಸಮರ್ಥನೆಗಳು ಮಾತ್ರ ಇದ್ದವು. ಕೃಷ್ಣಭೈರೇಗೌಡರ ವಾದದಲ್ಲಿ ಅರ್ಧ ಸತ್ಯಗಳಿದ್ದರೆ ಉಳಿದರ್ಧ ಉತ್ಪ್ರೇಕ್ಷೆಗಳು ಮತ್ತು ತಮ್ಮ ಪಕ್ಷದ ತಪ್ಪುಗಳನ್ನು ಮರೆಮಾಚುವಂತ ನಾಜೂಕು ವಾದಗಳಿದ್ದವು. ಹೀಗಾಗಿ ಕರ್ನಾಟಕ ಪರತೆಯೆಂದರೆ ಬಿಜೆಪಿ ಪರತೆಯೋ , ಕಾಂಗ್ರೆಸ್ ಪರತೆಯೋ ಆಗುವ ಅಗತ್ಯವಿಲ್ಲ. ಬಿಜೆಪಿಯ ಕರ್ನಾಟಕ ದ್ರೋಹವನ್ನು ಖಂಡಿಸುವ ಮತ್ತು ಕಾಂಗ್ರೆಸ್ಸಿನ ಅರ್ಧಸತ್ಯಗಳನ್ನು, ಸರಕಾರಿ ಉತ್ಪ್ರೇಕ್ಷೆಗಳನ್ನು ದಾಟಿ ಅರ್ಥಮಾಡಿಕೊಳ್ಳುವ ಧೋರಣೆಗಳು ಮಾತ್ರ ನಿಜವಾದ ಕರ್ನಾಟಕ ಪರತೆಯಾಗುತ್ತದೆ. ಅವುಗಳನ್ನು ಪರಿಶೀಲಿಸುವ ಮೊದಲು ಒಂದಂತೂ ಅಪ್ಪಟ ವಾಸ್ತವ. ಈ ಜಿಎಸ್ಟಿ ಮತ್ತು ಸೆಸ್ ನೀತಿಯಿಂದ ಮತ್ತು ಮೋದಿ ಸರಕಾರದ ಕಾರ್ಪೊರೇಟ್ ಪರ ಮತ್ತು ಕರ್ನಾಟಕ ವಿರೋಧಿ ನೀತಿಗಳಿಂದ ಕರ್ನಾಟಕಕ್ಕೇ ಅನ್ಯಾಯವಾಗುತ್ತಿವೆ ಎಂಬುದರಲ್ಲಿ ಎರಡು ಮಾತಿಲ್ಲ. ಒಂದು ಕಡೆ ಬೊಮ್ಮಾಯಿಯವರು ಭಂಡ ಬಿಜೆಪಿಗೆ ತಕ್ಕಂತೆ ಆ ವಾಸ್ತವವನ್ನು ಒಪ್ಪಿಕೊಳ್ಳಲೇ ತಯಾರಿಲ್ಲ. ಮತ್ತೊಂದು ಕಡೆ ಕೃಷ್ಣಭೈರೇಗೌಡರು ಕಾಂಗ್ರೆಸ್ ಪಕ್ಷದ ಕಾರ್ಪೊರೇಟ್ ಪರ ನೀತಿಗಳ ಭಾಗವಾಗಿಯೇ ಜಿಎಸ್ಟಿ ಜಾರಿಗೆ ಸೆಸ್ ನೀತಿಗೆ ತಾವೇ ಅಡಿಪಾಯ ಹಾಕಿದ ಸತ್ಯವನ್ನು ಮರೆಮಾಚುತ್ತಾರೆ. ಮತ್ತು ಕೇಂದ್ರದ ತಾರತಮ್ಯ ನೀತಿಗಳನ್ನು ತಮ್ಮ ಸರಕಾರದ ಎಲ್ಲಾ ದೌರ್ಬಲ್ಯಗಳನ್ನು ಮತ್ತು ವೈಫಲ್ಯಗಳನ್ನು ಮುಚ್ಚಿಕೊಳ್ಳಲು ನಾಜೂಕಾಗಿ ಬಳಸಿಕೊಳ್ಳುತ್ತಾರೆ. ಬೊಮ್ಮಾಯಿಯವರ ಭಂಡ ಬಡಾಯಿ: 1.ಜಿಎಸ್ಟಿ ಎಂಬುದೇ ಜನಸಾಮಾನ್ಯರ ಮೇಲಿನ ತೆರಿಗೆ ಹೊರೆಯಾದ ಪ್ರತ್ಯಕ್ಷ ತೆರಿಗೆಯನ್ನು ಹೆಚ್ಚಿಸುವ ನವಉದಾರವಾದಿ ತೆರಿಗೆ ಪದ್ಧತಿ. ಅದನ್ನು ಜಾರಿ ಮಾಡಲು ಕಾಂಗ್ರೆಸ್ ವಿಫಲ ಪ್ರಯತ್ನ ಮಾಡಿದರೂ ಅದನ್ನು ತೀವ್ರವಾಗಿ ಮತ್ತು ಉಗ್ರವಾಗಿ ಜಾರಿಗೆ ತಂದದ್ದೇ ಮೋದಿ ನೇತೃತ್ವದ ಬಿಜೆಪಿ ಸರಕಾರ. ಹೀಗಾಗಿ ಇಂದಿನ ಕರ್ನಾಟಕದ ಬವಣೆಗೆ ನೇರ ಕಾರಣ ಬಿಜೆಪಿ. ಬೊಮ್ಮಯಿಯವರ ಲೇಖನದಲ್ಲಿ ಈ ವಾಸ್ತವದ ಲವ ಲೇಶವೂ ಇಲ್ಲಾ.. 2.ಮೋದಿ ಸರಕಾರದ ಅವಧಿಯಲ್ಲಿ ಕರ್ನಾಟಕದ ತೆರಿಗೆ ಪಾಲು ಶೇ. 4.71ರಿಂದ 3.65 ಕ್ಕೆ ಇಳಿದಿದ್ದೇಕೆ? ಅದನ್ನು ಸರಿ ಮಾಡುವಲ್ಲಿ ಕೇಂದ್ರದ ಮೇಲೆ ಒತ್ತಡ ತರದೇ ಕರ್ನಾಟಕದ ಬಿಜೆಪಿ ಸಂಸದರು ಮೋದಿ ಮುಂದೆ ಏಕೆ ಬಾಯಿ ಮುಚ್ಚಿ ಕೂತು ಕರ್ನಾಟಕ ದ್ರೋಹಿ ನಿಲುವನ್ನು ತಾಳಿದರು? ಎಂಬುದಕ್ಕೆ ಬೊಮ್ಮಾಯಿ ವಾದದಲ್ಲಿ ಉತ್ತರವಿಲ್ಲ 3.ರಾಜ್ಯಗಳ ಸರಾಸರಿ ತೆರಿಗೆ ಆದಾಯದ ವಾರ್ಷಿಕ ಶೇ. 14 ರಷ್ಟು ಹೆಚ್ಚುತ್ತದೆ ಎಂದು ಪರಿಗಣಿಸಲಾಗುತ್ತದೆ. ಒಂದು ವೇಳೆ ಜಿಎಸ್ಟಿ ವ್ಯವಸ್ಥೆಯಿಂದ ವಾರ್ಷಿಕ ಶೇ. 14 ಕ್ಕಿಂತ ತೆರಿಗೆ ಆದಾಯ ಹೆಚ್ಚಳ ವಾಗದಿದ್ದಲ್ಲಿ , ಉಂಟಾಗುವ ಕೊರತೆಯನ್ನು ಮುಂದಿನ ಐದು ವರ್ಷಗಳ ಕಾಲ ಅಂದರೆ 2022 ರ ತನಕ ಭರಿಸುವುದಾಗಿ ಜಿಎಸ್ಟಿ ಕಾಯಿದೆಯ ಭರವಸೆ ಇತ್ತು. ಆದರೆ 2020 ರಲ್ಲಿ ಕೋವಿಡ್ ದಾಳಿಯಾದ ಮೇಲೆ ಎಲ್ಲಾ ರಾಜ್ಯಗಳ ಆರ್ಥಿಕ ಪ್ರಗತಿ ನಕಾರಾತ್ಮಕವಾಗಿದೆ ಮತ್ತು ಕೋವಿಡ್ ಪೂರ್ವ ಪರಿಸ್ಥಿತಿ ತಲುಪಲು ಇನ್ನೂ ಕೆಲ ವರ್ಷಗಳು ಬೇಕು. ಹಾಗಿರುವಾಗ 2022 ರ ಗಡುವನ್ನು ಇನ್ನೂ ಕೆಲ ವರ್ಷಗಳ ಕಾಲ ಮೋದಿ ಸರಕಾರ ಏಕೆ ವಿಸ್ತರಿಸುತ್ತಿಲ್ಲ, ತಾನು ಮುಖ್ಯಮಂತ್ರಿಯಾಗಿದ್ದಾಗಲೂ ಇದೆ ಬೇಡಿಕೆ ಇಟ್ಟಿದ್ದಲ್ಲವೇ ಎಂಬ ಪ್ರಶ್ನೆಗೆ ಬೊಮ್ಮಾಯಿ ಬಡಾಯಿಯಲ್ಲಿ ಉತ್ತರವಿಲ್ಲ. 4.ಸೆಸ್ ವ್ಯವಸ್ಥೆ ಕಾಂಗ್ರೆಸ್ ಕಾಲದಲ್ಲಿ ಜಾರಿಯಾದರೂ ಅದಕ್ಕೆ ಸಂವಿಧಾನ ತಿದ್ದುಪಡಿ ಮಾಡಿ ಕೋಟೆ ಕಟ್ಟಿದ್ದು ವಾಜಪೇಯಿ ಸರಕಾರ ಎಂಬುದನ್ನು ಬೊಮ್ಮಾಯಿ ಮರೆಮಾಚುತ್ತಿದ್ದಾರೆ. ಅಷ್ಟು ಮಾತ್ರವಲ್ಲ, ಕಳೆದ ಐದು ವರ್ಷಗಳಲ್ಲಿ ಕೇಂದ್ರ ತೆರಿಗೆಯಲ್ಲಿ ರಾಜ್ಯದ ಜೊತೆಗೆ ಹಂಚಿಕೊಳ್ಳದ ಸೆಸ್ ಮತ್ತು ಸರ್ಚಾರ್ಜ್ ಗಳ ಪಾಲು ಶೇ. 8ರಿಂದ ಶೇ. 28ಕ್ಕೆ ಮುಟ್ಟಿರುವುದು ರಾಜ್ಯಕ್ಕೆ ಬಗೆಯುತ್ತಿರುವ ದ್ರೋಹವಲ್ಲವೇ ಎಂಬುದಕ್ಕೆ ಬೊಮ್ಮಾಯಿ ಬಾಯಿ ಬೀಗ ಹಾಕಿದೆ. 5.ಕೇಂದ್ರದಿಂದ ರಾಜ್ಯಕ್ಕೆ ಕೇಂದ್ರ ಯೋಜನೆಗಳಿಗೆ ಅನುದಾನದ ರೂಪದಲ್ಲಿ ವರ್ಗಾವಣೆಯಾಗುವ ಮೊತ್ತದಲ್ಲಿ ಕರ್ನಾಟಕ್ಕೆ ವಿಶೇಷ ಅನ್ಯಾಯವಾಗುತ್ತಿರುವ ಬಗ್ಗೆ ಬೊಮ್ಮಾಯಿ ಮೌನ. ಮತ್ತು ಅದರಲ್ಲಿ ರಾಜ್ಯಗಳ ಮಾಡಬೇಕಾದ ವೆಚ್ಚದ ಪಾಲು ಹೆಚ್ಚುತ್ತಾ ಅದರ ಮೇಲಿನ ನಿಯಂತ್ರಣದಲ್ಲಿ ಮಾತ್ರ ಕೇಂದ್ರದ ಪಾತ್ರ ಹೆಚ್ಚುತ್ತಿರುವ ಫೆಡರಲ್ ವಿರೋಧಿ, ಕರ್ನಾಟಕ ದ್ರೋಹಿ ಮೋದಿ ನೀತಿಗಳ ಬಗ್ಗೆಯೂ ಬೊಮ್ಮಾಯಿಯವರದ್ದು His Master Voice...ಅಥವಾ ಕುತಂತ್ರಿ ಮೌನ ಅನುಸರಿಸಿದೆ. 6.ಗ್ಯಾರಂಟಿಗಳ ಮೇಲೆ ಗೂಬೆ ಕೂರಿಸುವ ಮನುವಾದ : ಒಂದು ಜವಾಬ್ದಾರಿಯುತವಾದ ವಿರೋಧ ಪಕ್ಷವಾಗಿ ಆಳುವ ಕಾಂಗ್ರೆಸ್ಸನ್ನು ಸಕಾರಣವಾಗಿ ತರಾಟೆಗೆ ತೆಗೆದುಕೊಳ್ಳಲು ಸಾಕಷ್ಟು ಕಾರಣಗಳಿವೆ. ಆದರೆ ಅದರಲ್ಲಿ ಐದು ಗ್ಯಾರಂಟಿಗಳು ಸೇರುವುದಿಲ್ಲ. ಗ್ಯಾರಂಟಿಗಳು ಜನೋಪಯೋಗಿ ಕಲ್ಯಾಣ ಕಾರ್ಯಕ್ರಮಗಳಾಗಿದ್ದು ದಣಿದಿದ್ದ ಕರ್ನಾಟಕದ ಜನರಿಗೆ ಸ್ವಲ್ಪ ಉಸಿರು ನೀಡಿದೆ. ಆದರೆ ಅದಕ್ಕೆ ಸಂಪನ್ಮೂಲ ಒದಗಿಸಿಕೊಳ್ಳುವಲ್ಲಿ ಕಾಂಗ್ರೆಸ್ ಸರಕಾರ ಅನುಸರಿಸುತ್ತಿರುವ ಮಾರ್ಗ ಇತ್ಯಾದಿಗಳು ಪ್ರಶ್ನಾರ್ಹ ಮತ್ತು ಖಂಡನಾರ್ಹ . ಆದರೆ ಬೊಮ್ಮಾಯಿಯವರು ತಮ್ಮ ಲೇಖನದ ಪ್ರಧಾನ ವಾದವನ್ನು ಪರೋಕ್ಷವಾಗಿ ಬಡವರ ಕಲ್ಯಾಣ ಯೋಜನೆಯಾದ ಗ್ಯಾರಂಟಿಯನ್ನು ಖಂಡಿಸಲೆಂದೇ ಬಳಸಿಕೊಂಡಿದ್ದಾರೆ. ಅವರ ಪ್ರಕಾರ ಕಾಂಗ್ರೆಸ್ ಸರಕಾರದ ಪ್ರಧಾನ ವೈಫಲ್ಯವೇ ಗ್ಯಾರಂಟಿ ಎಂಬಂತೆ ಅವರ ವಾದವಿದೆ. ಇದೂ ಕೂಡ ಬಿಜೆಪಿ ಮತ್ತು ಬೊಮ್ಮಾಯಿಯವರ ಅಂತರ್ಗತ ಜನದ್ರೋಹಿ ಮನುವಾದಿ ಧೋರಣೆಗಳ ಪ್ರತೀಕವಾಗಿದೆ. ಹೀಗಾಗಿ ನಿನ್ನೆಯ ಪ್ರತಿಕೆಯಲ್ಲಿ ಬೊಮ್ಮಾಯಿಯ ವಾದ ಭಂಡತನದಿಂದಲೂ ಕೂಡಿದೆ. ಕರ್ನಾಟಕ ದ್ರೋಹಿಯೋ ಆಗಿದೆ. ಕೃಷ್ಣಭೈರೇಗೌಡರ ನಾಜೂಕು ವಾದಗಳು ಮತ್ತು ಅರ್ಧ ಸತ್ಯಗಳು 1. ಕಾಂಗ್ರೆಸ್ ಸರಕಾರದ ವೈಫಲ್ಯಗಳನ್ನು ಮುಚ್ಚಿಕ್ಕೊಳ್ಳಲು ಉತ್ಪ್ರೇಕ್ಷೆಗಳು: ಕಾಂಗ್ರೆಸ್ಸಿನ ಭೈರೇಗೌಡರ ವಾದಗಳಲ್ಲಿ ಇರುವ ಅರ್ಧ ಸತ್ಯವು ಉಳಿದ ಅರ್ಧ ಸುಳ್ಳನು ಸಮರ್ಥಿಸಿಕೊಳ್ಳಲೆಂದೇ ಮಂಡಿಸಲಾಗಿದೆ. ಉದಾಹರಣೆಗೆ ಭೈರೇಗೌಡರು ಜಿಎಸ್ಟಿ ಪರಿಹಾರ ಯೋಜನೆ ಹಿಂತೆಗೆದುಕೊಂಡ ಮೇಲೆ ಕರ್ನಾಟಕದ ಬಜೆಟ್ಟಿನಲ್ಲಿ ಶೇ. 25 ರಷ್ಟು ಕೊರತೆಯಾಗಿದೆ ಎಂದು ಬರೆಯುತ್ತಾರೆ. ಆದರೆ ಇದು ಉತ್ಪ್ರೇಕ್ಷೆ. ಜಿಎಸ್ಟಿ ಪರಿಹಾರವು ಒಂದು ರಾಜ್ಯದ ಸರಾಸರಿ ತೆರಿಗೆ ಸಂಗ್ರಹದ ಏರಿಕೆಯಲ್ಲಿ ಬೀಳುವ ಕೊರತೆಯನ್ನು ಮಾತ್ರ ತುಂಬುತ್ತದೆ. ಜಿಎಸ್ಟಿ ಮಂಡಳಿಯು ರಾಜ್ಯಗಳ ಸರಾಸರೀ ವಾರ್ಷಿಕ ತೆರಿಗೆ ಏರಿಕೆ ದರವನ್ನು ಶೇ. 14 ಎಂದು ನಿಗದಿ ಮಾಡಿದೆ. ಅಂದರೆ ಈ ವರ್ಷ ಒಂದು ರಾಜ್ಯದ ತೆರಿಗೆ ಸಂಗ್ರಹಣೆ 1,00, 000 ಕೋಟಿ ಯಾಗಿದ್ದರೆ, ಮುಂದಿನ ವರ್ಷ ಅದು 1.14, 000 ಯಾಗುತ್ತದೆಂದು ಮಂಡಳಿಯ ಅಂದಾಜು. ಕರ್ನಾಟಕ ರಾಜ್ಯದ ತೆರಿಗೆ ಸಂಗ್ರಹಣೆ ಅದರ ಬದಲಿಗೆ 1,12,000 ಕೋಟಿ ಮಾತ್ರ ಆದರೆ , ಅಂದಾಜಿಗಿಂತ ಕಡಿಮೆಯಾದ 2000 ಕೋಟಿ ಪರಿಹಾರವನ್ನು ಮಾತ್ರ ಮಂಡಳಿ ಕೊಡಬೇಕು. 14, 000 ಕೋಟಿಯನ್ನಲ್ಲ. ಮೋದಿ ಸರಕಾರ ಅದನ್ನು ಕೊಡದೆ ಸತಾಯಿಸುತ್ತಿದೆ ಎಂಬುದು ನಿಜ. ಆದರ ವಿರುದ್ಧ ಹೋರಾಡಬೇಕೆನ್ನುವುದೂ ನಿಜ. ಹಾಗೆಯೇ ಕಳೆದ ವರ್ಷ ಕರ್ನಾಟಕ ಸರಕಾರದ ಬಜೆಟ್ಟು 4,09,000 ಕೋಟಿ. ಅದರಲ್ಲಿ ಜಿಎಸ್ಟಿ ಅನುದಾನ ಕೊರತೆ, ಹಣಕಾಸು ಆಯೋಗದ ತಾರತಮ್ಯದಿಂದ ಆದ ವಾರ್ಷಿಕ ಕೊರತೆ, ಇನ್ನಿತ್ಯಾದಿಗಳೆಲ್ಲಾ ಸೇರಿ ಕರ್ನಾಟಕಕ್ಕೇ 25,000 ಕೋಟಿ ಅನ್ಯಾಯವಾಗಿರುವುದು ವಾಸ್ತವ. ಈ ಅನ್ಯಾಯದ ವಿರುದ್ಧವೂ ಹೊರಾಡಬೇಕೆನ್ನುವುದು ನಿಜ. ಆದರೆ ಕೇಂದ್ರ ಮಾಡಿರುವ ಅನ್ಯಾಯದ ಮೊತ್ತ ಕರ್ನಾಟಕದ ಬಜೆಟ್ಟಿನ ಶೇ. 6.1 ರಷ್ಟು ಮಾತ್ರ. ಉಳಿದ ಶೇ. 94 ರಷ್ಟು ಬಜೆಟ್ಟಿನ ಆದ್ಯತೆ , ವೈಫಲ್ಯ, ಅನುಷ್ಠಾನ ಕೊರತೆ, ನೀತಿಗಳಲ್ಲಿನ ಜನವಿರೋಧಿತನ ಇವೆಲ್ಲಕ್ಕೂ ಕಾಂಗ್ರೆಸ್ ಸರಕಾರ ತನ್ನೊಳಗೆ ನೋಡಿಕೊಳ್ಳಬೇಕು. ಭೈರೇಗೌಡರು ತಮ್ಮ ಲೇಖನದಲ್ಲಿ ಕೊರತೆಯಾದ ಮೊತ್ತವನ್ನು ಹಿಗ್ಗಿಸಿ ತೋರಿಸುವ ಮೂಲಕ ತಮ್ಮ ಸರಕಾರದ ಎಲ್ಲಾ ವೈಫಲ್ಯಗಳಿಗೂ ಕೇಂದ್ರ್ರ ಮಾಡುತ್ತಿರುವ ತಾರತಮ್ಯದಿಂದ ಉಂಟಾಗಿರುವ ಕೊರತೆಯೇ ಕಾರಣ ಎಂಬ ತಪ್ಪು ಅಭಿಪ್ರಾಯ ಮೂಡಿಸುತ್ತಿದ್ದಾರೆ. 2. ಗ್ಯಾರಂಟಿಗಳೆ ಸಾಧನೆ ಮತ್ತು ಗ್ಯಾರಂಟಿಗಳೆ ವೈಫಲ್ಯ : ಗ್ಯಾರಂಟಿಗಳು ಸ್ವಾಗತಾರ್ಹ ಕಲ್ಯಾಣ ಕಾರ್ಯಕ್ರಮ. ಆದರೆ ಅದಕ್ಕೆ ಕಾಂಗ್ರೆಸ್ ಸರಕಾರ ಹಣಕಾಸು ನಿಭಾಯಿಸುತ್ತಿರುವ ರೀತಿ ಕಲ್ಯಾಣದ ಉದ್ದೇಶವನ್ನೇ ವಿಫಲಗೊಳಿಸುತ್ತಿದೆ. ಕಾಂಗ್ರೆಸ್ ಸರಕಾರವು ಅಧಿಕಾರಕ್ಕೆ ಬಂದಾಗ ತನ್ನ ಐದು ಗ್ಯಾರಂಟಿಗಳಿಗೆ ಬೇಕಾದ ಸಂಪನ್ಮೂಲವನ್ನು ಆಡಳಿತದಲ್ಲಿ ದಕ್ಷತೆ, ಭ್ರಷ್ಟಾಚಾರ ನಿಗ್ರಹ ಮತ್ತು ಅಭಿವೃದ್ಧಿಗಳ ಮೂಲಕ ಒದಗಿಸಿಕೊಳ್ಳುವುದಾಗಿ ಘೋಷಿಸಿತ್ತು. ಆದರೆ ಈ ಮೂರರಲ್ಲೂ ಸಿದ್ದು ಸರಕಾರ ಘೋರವಾಗಿ ವಿಫಲವಾಗಿದೆ. ಎಲ್ಲಕ್ಕಿಂತ ಮುಖ್ಯವಾಗಿ ಒಂದು ಕಲ್ಯಾಣ ಸರಕಾರ ಉಳ್ಳವರ ಮೇಲೆ ತೆರಿಗೆ ಹೆಚ್ಚಿಸಿ ಇಲ್ಲದವರಿಗೆ ನೀಡಬೇಕು. ಆದರೆ ಕಾಂಗ್ರೆಸ್ ಸರಕಾರದ ಅಭಿವೃದ್ಧಿ ಮಾದರಿಯೂ ಬಿಜೆಪಿ ಅಭಿವೃದ್ಧಿ ಮಾದರಿಯಂತೆ ಕಾರ್ಪೊರೇಟ್ ಗಳಿಗೆ ರಿಯಾಯತಿ-ವಿನಾಯತಿ-ಸಬ್ಸಿಡಿ ನೀತಿ ಕೊಟ್ಟು ಓಲೈಸುವ ಮಾದರಿಯೇ ಆಗಿದೆ. ಹೀಗಾಗಿ ಅಭಿವೃದ್ಧಿಯಾದಷ್ಟೂ ತೆರಿಗೆ ಹೆಚ್ಚಳವಾಗುವುದಿರಲಿ ಕಡಿಮೆಯಾಗುತ್ತಾ ಹೋಗುತ್ತಿದೆ. ಹೀಗಾಗಿ ಗ್ಯಾರಂಟಿಗಳಿಗೆ ಬೇಕಾದ ಹಣಕಾಸನ್ನು ಇತರ ಕಲ್ಯಾಣ ಕಾರ್ಯಕ್ರಗಳಿಗೆ ನಿಧಿ ಕೊರತೆ, SCSP-TSP ನಿಧಿಯ ದುರ್ಬಳಕೆ ಇತ್ಯಾದಿಗಳ ಮೂಲಕ ರೂಢಿಸಿಕೊಳ್ಳುತ್ತಾ ಅನ್ಯಾಯ ಮಾಡುತ್ತಿದೆ. ಇದರ ಬಗ್ಗೆ ಭೈರೇಗೌಡರ ಲೇಖನ ಮೌನ! ಗ್ಯಾರಂಟಿಗಳು ಈಗಾಗಲೇ ಇರುವ ಕಲ್ಯಾಣ ಯೋಜನೆಗಳ ಜೊತೆಗೆ ಸಿಗುವ ಮತ್ತೊಂದು ಸೌಲಭ್ಯವಾಗಬೇಕಿತ್ತು. ಈಗ ಅವುಗಳ ಬದಲಿಗೆ ಸಿಗುವ ಯೋಜನೆಯಾಗುತ್ತಿದೆ. ಈ ಗ್ಯಾರಂಟಿ ಯೋಜನೆಗಳಿಗೆ ಬಿಜೆಪಿಯ ಮನುವಾದಿ ವಿರೋಧವನ್ನು ವಿರೋಧಿಸಬೇಕು. ಹಾಗೆಯೇ ಒಂದು ಕೈಯಲ್ಲಿ ಕೊಟ್ಟು ಮತ್ತೊಂದು ಕೈಯಲ್ಲಿ ಕಿತ್ತುಕೊಳ್ಳುವ ಕಾಂಗ್ರೆಸ್ಸಿನ ಅವಕಾಶವಾದಿ ಜನವಿರೋಧಿ ನೀತಿಯನ್ನು ಕೂಡ ವಿರೋಧಿಸಲೇ ಬೇಕಲ್ಲವೇ? 3.ಜಿಎಸ್ಟಿ ವಂಚನೆಯ ಮೂಲ : ಈ ಅನ್ಯಾಯದ ಮೂಲ ಕಾಂಗ್ರೆಸ್ ಕೂಡ ಒಪ್ಪಿಕೊಂಡು ಜಿಎಸ್ಟಿ ಜಾರಿಯಾದ ರೀತಿಯಲ್ಲೇ ಇದೆ. ಭೈರೇಗೌಡರು ಮತ್ತು ಕಾಂಗ್ರೆಸ್ ಹೇಳದೆ ಹೋಗುತ್ತಿರುವ ಮಾತೆಂದರೆ ಅತ್ಯಂತ ಪ್ರತಿಗಾಮಿ ತೆರಿಗೆ ಪದ್ಧತಿಯಾದ ಈ ಜಿಎಸ್ಟಿ ತೆರಿಗೆ ವ್ಯವಸ್ಥೆಯ ತಾಯಿ ಸ್ವಯಂ ಕಾಂಗ್ರೆಸ್ಸೇ. ಆದರೆ 2014 ರಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ತೆರಿಗೆಯ ಭಾರವನ್ನು ಶ್ರೀಮಂತರಿಗಿಂತ ಜಾಸ್ತಿ ಬಡವರ ಮೇಲೆ ವರ್ಗಾಯಿಸುವ ಜಿಎಸ್ಟಿ ವ್ಯವಸ್ಥೆಗೆ ಸಂವಿಧಾನ ತಿದ್ದುಪಡಿ ಮಾಡಬೇಕಿತ್ತು. ಇದಕ್ಕೆ ಇತರ ಪಕ್ಷಗಳ ಮನ ಒಲಿಸಲು ಆಗಿನ ಹಣಕಾಸು ಮಂತ್ರಿ ಅರುಣ್ ಜೈಟ್ಲಿ ಐದು ವರ್ಷಗಳ ಕಾಲ ಖೋತಾ ಪರಿಹಾರ ಯೋಜನೆ ಮುಂದಿಟ್ಟರು. ಅದಕ್ಕಾಗಿ ಮತ್ತೆ ಜನರ ಮೇಲೆ ವಿಶೇಷ ಸೆಸ್ ಹೆರುವ ಪ್ರಸ್ತಾಪವೂ ಅದರಲ್ಲಿ ಅಡಕವಾಗಿತ್ತು!. ಈ ಅನ್ಯಾಯವನ್ನು ಕಾಂಗ್ರೆಸ್ ಒಪ್ಪಿಕೊಂಡ ಮೇಲೆ ಜಿಎಸ್ಟಿ ಜಾರಿಯಾಗಿದ್ದು. ಹಾಗೆಯೇ ಜಿಎಸ್ಟಿ ನಿರ್ವಹಿಸಲು ಎಲ್ಲಾ ರಾಜ್ಯಗಳ ಪ್ರಾತಿನಿಧ್ಯವಿರುವ ಆದರೆ ಕೇಂದ್ರ ಸರಕಾರಕ್ಕೆ ಸದಾ ಬಹುಮತವಿರುವಂತ ಫೆಡರಲ್ ವಿರೋಧಿ ಜಿಎಸ್ಟಿ ನಿರ್ವಹಣಾ ಮಂಡಳಿಗೂ ಆಗಿನ ಪ್ರಮುಖ ಪಕ್ಷದ ಕಾಂಗ್ರೆಸ್ ಒಪ್ಪಿಗೆ ಕೊಟ್ಟ ಮೇಲೆ ಅದು ಜಾರಿಯಾದದ್ದು. ಕಾರ್ಪೊರೇಟ್ ಗಳ ತೆರಿಗೆ ಭಾರ ಇಳಿಸಿ, ಜನಸಾಮಾನ್ಯರ ತೆರಿಗೆ ಭಾರ ಹೆಚ್ಚಿಸುವ ಈ ನವ ಉದಾರವಾದಿ ಜಿಎಸ್ಟಿ ತೆರಿಗೆ ನೀತಿ ಪರ ಎಂದು ಸಾಬೀತುಪಡಿಸಿಕೊಳ್ಳಲು ಎಲ್ಲಾ ವಿರೋಧ ಪಕ್ಷಗಳೂ ಪೈಪೋಟಿಯಲ್ಲಿ ಈ ಜನದ್ರೋಹಿ ಸಂವಿಧಾನ ತಿದ್ದುಪಡಿಗೆ ಒಪ್ಪಿಗೆ ನೀಡಿದ್ದವು. ಈ ಜನದ್ರೋಹಕ್ಕೆ ನೇತೃತ್ವ ವಹಿಸಿದ್ದು ಬಿಜೆಪಿ. ಕಾಂಗ್ರೆಸ್ ಈ ಅನ್ಯಾಯವನ್ನು ಒಪ್ಪಿಕೊಂಡಿದ್ದು ಏಕೆ? ಒಪ್ಪಿಕೊಂಡ ನಂತರ ಈಗ ಐದು ವರ್ಷಗಳ ನಂತರ ಪರಿಹಾರ ರದ್ದು ಮಾಡುತ್ತಿದ್ದಾರೆ ಎಂದು ದೂರುತ್ತಿರುವುದು ಬೇಜವಾಬ್ದಾರಿಯಾಗುವುದಿಲ್ಲವೇ? 4.ಸೆಸ್ ಸುಲಿಗೆ- ಕಾಂಗ್ರೆಸ್ ಹೇಳದ್ದು : ಮೋದಿ ಸರಕಾರ ಕೇಂದ್ರದ ತೆರಿಗೆಯಲ್ಲಿ ಶೇ. 28 ರಷ್ಟು ಭಾಗವನ್ನು ಸೆಸ್ ಮತ್ತು ಸರ್ಚಾರ್ಜ್ ರೂಪದಲ್ಲಿ ಸುಲಿಯುತ್ತಿರುವುದರಿಂದ ಕೇಂದ್ರದ ತೆರಿಗೆಯಲ್ಲಿ ರಾಜ್ಯಗಳ ಪಾಲು ಕಡಿಮೆಯಾಗುತ್ತಿದೆ ಎಂಬ ಭೈರೇಗೌಡರ ಮತ್ತು ಕಾಂಗ್ರೆಸ್ಸಿನ ವಾದ ಅಕ್ಷರಶಃ ಸತ್ಯ. ಆದರೆ ಈ ಸತ್ಯಕ್ಕೆ ಮತ್ತೊಂದು ಮುಖವೂ ಇದೆ. 1970ರ ದಶಕದಲ್ಲಿ ಸೆಸ್ ಮತ್ತು ಸರ್ಚಾರ್ಜ್ ವ್ಯವಸ್ಥೆ ಪ್ರಾರಂಭವಾಗುವ ಮುನ್ನ ಕೇಂದ್ರದ ಆದಾಯ ತೆರಿಗೆಯನ್ನು ರಾಜ್ಯಗಳ ಜೊತೆಗೆ ಹಂಚಿಕೊಳ್ಳಬೇಕಾದ ಸಂಪನ್ಮೂಲಗಳಲ್ಲಿ ಸೇರಿಸುತ್ತಿರಲಿಲ್ಲ. 2000 ದಲ್ಲಿ ಬಿಜೆಪಿಯ ವಾಜಪೇಯಿ ನೇತೃತ್ವದ ಸರಕಾರ ತಂದ ಸಂವಿಧಾನ ತಿದ್ದುಪಡಿಯಲ್ಲಿ ಆದಾಯ ತೆರಿಗೆಯನ್ನು- Divisible pool- ರಾಜ್ಯಗಳ ಜೊತೆ ಹಂಚಿಕೊಳ್ಳುವ ಸಂಪನ್ಮೂಲಗಳಲ್ಲಿ ಸೇರಿಸಿ , ಸೆಸ್ ಮತ್ತು ಸರ್ಚಾರ್ಜ್ ನ್ನು ಹೊರಗಿಟ್ಟಿತು. ಈ ತಿದ್ದುಪಡಿಯನ್ನು ಕಾಂಗ್ರೆಸ್ ಮತ್ತು ಇತರ ವಿರೋಧ ಪಕ್ಷಗಳೂ ಅನುಮೋದಿಸಿದವು. ದೇಶದ ಒಟ್ಟಾರೆ ವೆಚ್ಚದ ಹೊಣೆಗಾರಿಕೆಯಲ್ಲಿ ರಾಜ್ಯಗಳ ಪಾಲು ಶೇ . 67 ರಷ್ಟಿದ್ದರೇ ತೆರಿಗೆ ಆದಾಯದ ಪಾಲು ಮಾತ್ರ ಶೇ. 33. ಹೀಗಿರುವಾಗ ರಾಜ್ಯಗಳ ಕಾಲು ಕತ್ತರಿಸುವಂತ ಬಿಜೆಪಿ ಮಾಡಿದ ತಿದ್ದುಪಡಿಗೆ ಕಾಂಗ್ರೆಸ್ ಒಪ್ಪಿಗೆ ಕೊಟ್ಟಿದ್ದೇಕೆ? ಅಷ್ಟು ಮಾತ್ರವಲ್ಲ. ಕೇಂದ್ರದಲ್ಲಿ 2004-214 ರ ತನಕ ಅಧಿಕಾರದಲ್ಲಿದ್ದ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರ ಈ ಫೆಡರಲ್ ವಿರೋಧಿ ಸಂವಿಧಾನ ತಿದ್ದುಪಡಿಗೆ ಬದಲಾವಣೆಗಳನ್ನು ತರಲಿಲ್ಲ. ಬದಲಿಗೆ ತಾನೂ ಕೂಡ ಶೇ. 10-15 ರಷ್ಟು ತೆರಿಗೆ ಸಂಪನ್ಮೂಲಗಳನ್ನು ಸೆಸ್ ಅಡಿ ಸಂಗ್ರಹಿಸುತ್ತಾ ಅಷ್ಟ್ರರಮಟ್ಟಿಗೆ ರಾಜ್ಯಗಳ ಪಾಲನ್ನು ಖೋತಾ ಮಾಡಿತ್ತು. ಅದನ್ನೇ ಬಿಜೆಪಿ ಅತಿರೇಕಕ್ಕೆ ತೆಗೆದುಕೊಂಡು ಹೋಗಿ ಶೇ. 28 ರಷ್ಟು ಸೆಸ್ ಸಂಗ್ರಹಿಸುತ್ತಿದೆ. ಆದ್ದರಿಂದ ಕರ್ನಾಟಕದ ಹಾಗೂ ಇತರ ರಾಜ್ಯಗಳಿಗೂ ಮೋದಿ ಕಾಲದಲ್ಲಿ ಅಪರಿಮಿತ ಅನ್ಯಾಯ ಹಾಗೂ ವಂಚನೆ ನಡೆಯುತ್ತಿರುವುದು ನಿಜವಾದರೂ , ಕಾಂಗ್ರೆಸ್ ಗೂ ಇತರ ವಿರೋಧ ಪಕ್ಷಗಳಿಗೂ ಕರ್ನಾಟಕದ ಜನರು ಕ್ಲೀನ್ ಚಿಟ್ ಕೊಡಲಾಗದು. ಹೀಗಾಗಿ ಮೋದಿ ಸರಕಾರ ನಡೆಸುತ್ತಿರುವ ಕರ್ನಾಟಕ ದರೋಡೆ ನಿಲ್ಲಬೇಕೆಂದರೆ ಕರ್ನಾಟಕದ ಜನತೆ ಮೋದಿ ಸರಕಾರದ ತಾರತಮ್ಯಗಳ ವಿರುದ್ಧ ಹೋರಾಡುತ್ತಲೇ ಕಾಂಗ್ರೆಸ್ಸಿನ ನೀತಿಗಳನ್ನೂ ಖಂಡಿಸಬೇಕು. ಜನರ ಮೇಲಿನ ತೆರಿಗೆ ಶೋಷಣೆ ಮತ್ತು ರಾಜ್ಯಗಳಿಗಾಗುವ ಅನ್ಯಾಯ ಗಳನ್ನೂ ನಿಲ್ಲಿಸಲು ಈ ಕೆಳಗಿನ ಜನಾಗ್ರಹಗಳನ್ನು ಸ್ವತಂತ್ರವಾಗಿ ಮುಂದಿಡಬೇಕು: ಶೇ. 67 ರಷ್ಟು ವೆಚ್ಚ ಗಳ ಜವಾಬ್ದಾರಿ ಹೊಂದಿರುವ ರಾಜ್ಯಗಳಿಗೆ ಶೇ. 67 ರಷ್ಟು ತೆರಿಗೆ ಪಾಲು ಸಿಗಬೇಕು. ಸೆಸ್ ಹಾಕುವ ಅಧಿಕಾರ ರಾಜ್ಯ ಸರಕಾರಗಳಿಗೂ ನೀಡುವಂತೆ ಕಾನೂನು ತಿದ್ದುಪಡಿ ಮಾಡಬೇಕು. ಕೇವಲ ಐಷಾರಾಮಿ ಹಾಗೂ ವಿಲಾಸಿ ಸರಕು ಮತ್ತು ಸೇವೆಗಳಮೇಲೆ ಮಾತ್ರ ಸೆಸ್ ಹಾಕುವಂತೆ ಕಾನೂನು ತಿದ್ದುಪಡಿ ತರಬೇಕು. ಪೆಟ್ರೋಲ್ ಮತ್ತು ಡೀಸೆಲ್ ನಂಥ ಬೆಲೆ ಹಣದುಬ್ಬರ ಕಾರಕ ಸರಕುಗಳ ಮೇಲೆ ಸೆಸ್ ಮತ್ತು ಸರ್ ಚಾರ್ಜ್ ನಿಲ್ಲಿಸಬೇಕು. ರಾಜ್ಯಗಳಿಗೂ ಕೂಡ ಕಾರ್ಪೊರೇಟ್ ತೆರಿಗೆ ವಿಧಿಸುವ ಅಧಿಕಾರ ಒದಗಬೇಕು.ಕೇಂದ್ರದ ದಿವಿಸಬಲ್ ಪೂಲ್ ನ ರಾಜ್ಯವಾರು ತೆರಿಗೆ ಹಂಚಿಕೆಯ ಸೂತ್ರವನ್ನು ಕೇಂದ್ರದ ಕ್ಯಾಬಿನೆಟ್ ತೀರ್ಮಾನ ಮಾಡದೆ ರಾಜ್ಯ ಸರಕಾರಗಳ ಸಮಾಲೋಚನೆಯೊಂದಿಗೆ ನಿಗದಿಯಾಗಬೇಕು. ಜಿಎಸ್ಟಿ ವ್ಯವಸ್ಥೆ ಮಾರ್ಪಾಡಾಗಬೇಕು. ದೇಶದ ಒಟ್ಟಾರೆ ತೆರಿಗೆ ಆದಾಯದಲ್ಲಿ ಜಿಎಸ್ಟಿ ಪಾಲು ಕಡಿಮೆಯಾಗುತ್ತಾ ಅತಿ ಶ್ರೀಮಂತ, ಶ್ರೀಮಂತ , ಮೇಲ್ಮಧ್ಯಮವರ್ಗಗಳ ಮೇಲೆ ವಿಧಿಸುವ ತೆರಿಗೆ ಆದಾಯಗಳು ಹೆಚ್ಚಾಗಬೇಕು. -ಶಿವಸುಂದರ್
ಕಾಶಿಯಾತ್ರೆ ಸಹಾಯಧನ ಮಾದರಿಯಲ್ಲಿಯೇ ವೈಷ್ಣೋದೇವಿ ಯಾತ್ರೆಗೂ ಸಹಾಯಧನ ನೀಡಲು ರಾಜ್ಯ ಸರ್ಕಾರ ಮುಂದಾಗಿದೆ. ಈ ಬಗ್ಗೆ ಯೋಜನೆ ರೂಪಿಸಿ ಮುಜರಾಯಿ ಇಲಾಖೆಯು ಸರ್ಕಾರಕ್ಕೆ ಸಲ್ಲಿಕೆ ಮಾಡಿದೆ. ಅಗತ್ಯ ದಾಖಲೆಗಳನ್ನು ಸಲ್ಲಿಕೆ ಮಾಡಿದರೆ 5 ಸಾವಿರ ರೂ ನೆರವು ಸಿಗಲಿದೆ. ಏನೆಲ್ಲಾ ದಾಖಲೆ ಬೇಕು? ನಿಯಮಗಳೇನು? ವಿವರ ಇಲ್ಲಿದೆ.
Haryana | ಮನೆಗೆ ಫೋನ್ ಕರೆ ಮಾಡುವ ಅವಕಾಶ ಕಡಿತ; ಫರಿದಾಬಾದ್ ಜೈಲಿನಲ್ಲಿ ಕೈದಿಗಳಿಂದ ಉಪವಾಸ
ಫರಿದಾಬಾದ್, ಫೆ. 15: ವಾರಕ್ಕೊಮ್ಮೆ ಮನೆಗೆ ಫೋನ್ ಕರೆ ಮಾಡಲು ನೀಡಲಾಗುತ್ತಿದ್ದ ಅವಕಾಶವನ್ನು ಕಡಿತಗೊಳಿಸಿರುವುದನ್ನು ವಿರೋಧಿಸಿ ಇಲ್ಲಿನ ನೀಮ್ಕಾ ಕೇಂದ್ರ ಕಾರಾಗೃಹದಲ್ಲಿ 40ಕ್ಕೂ ಹೆಚ್ಚು ಕೈದಿಗಳು ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ ಎಂದು ತಿಳಿದುಬಂದಿದೆ. ಪ್ರತಿಭಟನಾ ನಿರತರಿಗೆ ಜೈಲು ಅಧಿಕಾರಿಗಳು ನಿಂದಿಸುತ್ತಿದ್ದಾರೆ ಹಾಗೂ ಶಿಕ್ಷೆಯ ಬೆದರಿಕೆ ಹಾಕುತ್ತಿದ್ದಾರೆ ಎಂದು ಕೈದಿಗಳು ಆರೋಪಿಸಿದ್ದಾರೆ. ಶನಿವಾರ ಆನ್ಲೈನ್ನಲ್ಲಿ ಹರಿದಾಡಿದ ಟಿಪ್ಪಣಿಯೊಂದರಲ್ಲಿ ಕೈದಿಗಳು ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದು, ಈ ಹಿಂದೆ ವಾರಕ್ಕೆ ಮೂರು ದಿನ ಮನೆಗೆ ಫೋನ್ ಕರೆ ಮಾಡಲು ಅವಕಾಶವಿದ್ದರೆ, ಅದನ್ನು ಇತ್ತೀಚೆಗೆ ಎರಡು ದಿನಗಳಿಗೆ ಇಳಿಸಲಾಗಿದೆ ಎಂದು ತಿಳಿಸಿದ್ದಾರೆ. ಬದಲಾವಣೆಯ ಕಾರಣ ವಿಚಾರಿಸಲು ಮುಂದಾದ ಕೆಲ ಕೈದಿಗಳೊಂದಿಗೆ ಅಧಿಕಾರಿಗಳು ಕಟ್ಟದಾಗಿ ವರ್ತನೆ ತೋರಿದ್ದಾರೆ ಎಂಬ ದೂರು ಟಿಪ್ಪಣಿಯಲ್ಲಿ ಉಲ್ಲೇಖವಾಗಿದೆ. ಜೈಲು ಆಡಳಿತದ ವಿರುದ್ಧ ಧ್ವನಿ ಎತ್ತಿದರೆ ಹೊರಗೆ ಬಿಡುವುದಿಲ್ಲ ಹಾಗೂ ಬ್ಯಾರಕ್ಗಳಿಗೆ ಮಾತ್ರ ಸೀಮಿತಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ ಎಂದು ಕೈದಿಗಳು ಆರೋಪಿಸಿದ್ದಾರೆ. “ನಮ್ಮೊಂದಿಗೆ ಅಸಭ್ಯವಾಗಿ ವರ್ತಿಸಿ ಜೀವ ಬೆದರಿಕೆ ಹಾಕಲಾಗಿದೆ. ನಮಗೆ ಏನಾದರೂ ಅನಾಹುತವಾದರೆ ಜೈಲು ಆಡಳಿತವೇ ಹೊಣೆ. ಸಿಸಿಟಿವಿ ಕ್ಯಾಮೆರಾ ಆಫ್ ಮಾಡಿದ ನಂತರ ಹಲ್ಲೆ ಮಾಡುವುದಾಗಿ ಬೆದರಿಕೆ ಹಾಕಲಾಗಿದೆ” ಎಂದು ಟಿಪ್ಪಣಿಯಲ್ಲಿ ಹೇಳಲಾಗಿದೆ.
IND VS PAK : 'ನೋ ಹ್ಯಾಂಡ್ ಶೇಕ್' ಮೂರ್ಖತನ! ಯೋಗ್ಯವಲ್ಲ; ಸರಿಯಾಗಿ ಆಟವಾಡಿ OR ಆಟವಾಡಲೇಬೇಡಿ: ಸಂಜಯ್ ಮಂಜ್ರೇಕರ್
ಪಾಕಿಸ್ತಾನ ತಂಡದ ವಿರುದ್ಧ ಭಾರತ ತಂಡ ಕೈಗೊಂಡಿರುವ ನೋ ಹ್ಯಾಂಡ್ ಶೇಕ್ ಅಭಿಯಾನವನ್ನು ಭಾರತ ತಂಡದ ಹಿರಿಯ ಆಟಗಾರ ಸಂಜತ್ ಮಂಜ್ರೇಕರ್ ಟೀಕಿಸಿದ್ದಾರೆ. ಇದೊಂದು ಸಿಲ್ಲಿ ಕೆಲಸ ಎಂದಿದ್ದಾರೆ. ಆಟ ಆಡುವುದಾದರೆ ಸರಿಯಾಗಿ ಆಡಿ ಇಲ್ಲ ಬೇಡ ಎಂದು ಮಂಜ್ರೇಕರ್ ಟ್ವೀಟ್ ಮಾಡಿದ್ದಾರೆ. ಸದ್ಯ ಈ ಹೇಳಿಕೆ ಭಾರೀ ವೈರಲ್ ಆಗಿದೆ.
ತಾರಿಕ್ ರೆಹಮಾನ್ ಪ್ರಮಾಣವಚನಕ್ಕೆ ನರೇಂದ್ರ ಮೋದಿ ಅವರಿಗೆ ಆಹ್ವಾನ; ಭಾರತದ ʻನೆರೆಹೊರೆ ಮೊದಲುʼ ನೀತಿ ಅನುಕರಣೆ
ಬಾಂಗ್ಲಾದೇಶ ರಾಷ್ಟ್ರೀಯ ಚುನಾವಣೆಯಲ್ಲಿ ಭರ್ಜರಿ ಜಯಭೇರಿ ಬಾರಿಸಿರುವ ಬಾಂಗ್ಲಾದೇಶ ನ್ಯಾಷನಲಿಸ್ಟ್ ಪಾರ್ಟಿ (ಬಿಎನ್ಪಿ), ಸರ್ಕಾರ ರಚನೆಗೆ ಸಿದ್ಧತೆಗಳನ್ನು ಭರದಿಂದ ಆರಂಭಿಸಿದೆ. ಪಕ್ಷದ ಮುಖ್ಯಸ್ಥ ತಾರಿಕ್ ರೆಹಮಾನ್ ಅವರು ಫೆ.17(ಮಂಗಳವಾರ) ಬಾಂಗ್ಲಾದೇಶದ ನೂತನ ಪ್ರಧಾನಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ವಿಶೇಷ ಎಂಬಂತೆ, ತಾರಿಕ್ ರೆಹಮಾನ್ ಅವರ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಆಹ್ವಾನ ನೀಡಲಾಗಿದೆ. ಈ ನಡೆ ಭಾರತದೊಂದಿಗಿನ ದ್ವಿಪಕ್ಷೀಯ ಸಂಬಂಧ ಸುಧಾರಣೆಗೆ ಬಾಂಗ್ಲಾದೇಶದ ಮೊದಲ ನಡೆ ಎಂದು ವಿಶ್ಲೇಷಿಸಲಾಗಿದೆ.
Mandya | ಕೆಮಿಕಲ್ ಟ್ಯಾಂಕ್ ಸ್ಫೋಟ; ಇಬ್ಬರು ಮೃತ್ಯು, ನಾಲ್ವರಿಗೆ ಗಾಯ
ಮಂಡ್ಯ : ತಾಲೂಕಿನ ಬಸರಾಳು ಹೋಬಳಿಯ ಕಾರೇಕಟ್ಟೆ ಗ್ರಾಮದ ಬಳಿ ಇರುವ ಕೆಮಿಕಲ್ ಕಾರ್ಖಾನೆಯಲ್ಲಿ ಕೆಮಿಕಲ್ ಟ್ಯಾಂಕ್ ಸ್ಪೋಟಗೊಂಡು ಬಿಹಾರ ಮೂಲದ ಇಬ್ಬರು ಕಾರ್ಮಿಕರು ಸ್ಥಳದಲ್ಲಿ ಸಾವನಪ್ಪಿದ್ದು, ಇತರೆ ನಾಲ್ವರು ಕಾರ್ಮಿಕರು ಗಂಭೀರವಾಗಿ ಗಾಯಗೊಂಡಿರುವ ಘಟನೆ ರವಿವಾರ ಬೆಳಗ್ಗೆ ನಡೆದಿದೆ. ಬಿಹಾರ ಮೂಲದ ಕಲೂತ್ಖಾನ್ (27) ಮತ್ತು ಅಶೋಕ್ (26) ಮೃತ ಕಾರ್ಮಿಕರು. ಟ್ಯಾಂಕ್ ಸ್ಫೋಟಗೊಂಡ ತೀವ್ರತೆಗೆ ಇಬ್ಬರು ಕಾರ್ಮಿಕರ ದೇಹಗಳು ಛಿದ್ರಛಿದ್ರವಾಗಿವೆ. ಗಂಭೀರವಾಗಿ ಗಾಯಗೊಂಡಿರುವ ಖಾಸಿಂ, ರವಿ, ಮಹಾಂತೇಶ್, ರಾಜೀವ್ಕುಮಾರ್ ಅವರನ್ನು ಮಂಡ್ಯದ ಮಿಮ್ಸ್ ಜಿಲ್ಲಾ ಆಸ್ಪತ್ರೆಗೆ ಸೇರಿಸಲಾಗಿದೆ. ಸುತ್ತಮುತ್ತಲ ಗ್ರಾಮಸ್ಥರ ತೀವ್ರ ವಿರೋಧ ಹಿನ್ನೆಲೆಯಲ್ಲಿ ಕಾರ್ಖಾನೆಯನ್ನು ಬೇರೆಡೆಗೆ ಸ್ಥಳಾಂತರ ಮಾಡುವ ವೇಳೆ ಈ ಸ್ಫೋಟಗೊಂಡಿದೆ ಎಂದು ತಿಳಿದು ಬಂದಿದೆ. ಇದೇ ಕಾರ್ಖಾನೆಯಿಂದ 2022ರಲ್ಲಿ ವಿಷಾನಿಲ ಸೋರಿಕೆಯಾಗಿ ನೂರಾರು ಎಕರೆ ಬೆಳೆ ಹಾನಿಯಾಗಿತ್ತು ಮತ್ತು ಎರಡು ನಾಯಿಗಳು ಮೃತಪಟ್ಟಿದ್ದವು. ಬಳಿಕ ಕಾರ್ಖಾನೆ ಆರಂಭಕ್ಕೆ ತೀವ್ರ ವಿರೋಧ ವ್ಯಕ್ತವಾಗಿತ್ತು. ಹಾನಿಯಾದ ಬೆಳೆಗೆ ಮಂಡ್ಯ ಜಿಲ್ಲಾಡಳಿತ ಕಾರ್ಖಾನೆಯವರಿಂದ ಪರಿಹಾರ ಕೊಡಿಸಿತ್ತು. ಈವರೆಗೆ ಕಾರ್ಖಾನೆ ಅಧಿಕೃತವಾಗಿ ಆರಂಭವೇ ಆಗಿರಲಿಲ್ಲ. ಹೀಗಾಗಿ ಕಾರ್ಖಾನೆಯನ್ನು ಬೇರೆ ಕಡೆಗೆ ಸ್ಥಳಾಂತರ ಮಾಡಲು ಮಾಲಕರು ಮುಂದಾಗಿದ್ದರು ಎನ್ನಲಾಗಿದೆ.
ಪಾಕಿಸ್ತಾನ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಮರ್ಯಾದಿ ತೆಗೆದ ಜರ್ಮನಿ... Pakistan Military
ಪಾಕಿಸ್ತಾನ ಮಾನ &ಮರ್ಯಾದಿ ಬಿಟ್ಟು ಪದೇ ಪದೇ ಜಾಗತಿಕ ಮಟ್ಟದಲ್ಲಿ ನಗೆಪಾಟಲಿಗೆ ಗುರಿಯಾಗಿ ಜೋಕರ್ ರೀತಿ ಆಗಿ ಹೋಗಿದೆ. ಇದಕ್ಕೆ ತಕ್ಕಂತೆ ಪಾಕ್ನ ರಾಜಕೀಯ ನಾಯಕರು ಹಾಗೂ ಸೇನೆಯ ಮುಖ್ಯಸ್ಥರು ಕೂಡ ಮತ್ತೆ ಮತ್ತೆ ಜೋಕರ್ ರೀತಿಯೇ ಆಡುತ್ತಾರೆ. ಹೀಗಿದ್ದಾಗ ಪಾಪಿ ಪಾಕಿಸ್ತಾನಕ್ಕೆ, ಕೈಯಲ್ಲಿ ಕಾಸು ಇಲ್ಲದೇ ಇದ್ದರೂ ಭಿಕ್ಷೆ ಬೇಡಿ ಉಗ್ರರನ್ನು ಸಾಕುವ ಹಠ.
ಕಲಬುರಗಿ | ಸಂಘ ಪರಿವಾರದಿಂದ ಕೋಟೆಯಲ್ಲಿ ಪೂಜೆಗೆ ಯತ್ನ: ದಿವ್ಯಾ ಹಾಗರಗಿ ಸಹಿತ ಹಲವರು ಪೊಲೀಸ್ ವಶಕ್ಕೆ
ಕಲಬುರಗಿ: ಅನುಮತಿ ಪಡೆಯದೆ ಕಲಬುರಗಿ ಕೋಟೆಯೊಳಗೆ ಪ್ರವೇಶಿಸಿ ಪೂಜೆಗೆ ಯತ್ನಿಸಿದ ಆರೋಪದಲ್ಲಿ ಪಿಎಸ್ಸೈ ನೇಮಕಾತಿ ಅಕ್ರಮದ ಪ್ರಮುಖ ಆರೋಪಿ ದಿವ್ಯಾ ಹಾಗರಗಿ ಸೇರಿದಂತೆ ಹಲವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮಹಾಶಿವರಾತ್ರಿ ಹಬ್ಬದ ಹಿನ್ನೆಲೆಯಲ್ಲಿ ರವಿವಾರ ದಿವ್ಯಾ ಹಾಗರಗಿ ಸೇರಿದಂತೆ ಹಿಂದುತ್ವ ಸಂಘಟನೆಗಳ ಕಾರ್ಯಕರ್ತರು ಪೂಜೆ ನೆರವೇರಿಸುವ ನೆಪದಲ್ಲಿ ಕೋಟೆಯೊಳಗೆ ಪ್ರವೇಶಿಸಲು ಯತ್ನಿಸಿದ್ದಾರೆ. ಈ ವೇಳೆಯಲ್ಲಿ ಎಸಿಪಿ ಶಿವನಗೌಡ ಪಾಟೀಲ್ ನೇತೃತ್ವದಲ್ಲಿ ಪೊಲೀಸರು, ಅವರನ್ನು ತಡೆದು ಅನುಮತಿ ಪಡೆಯದೆ ಕೋಟೆಯೊಳಗೆ ಪೂಜೆ ಮತ್ತಿತ್ತರ ಕಾರ್ಯಗಳು ನೆರವೇರಿಸುವಂತಿಲ್ಲ. ಕಾನೂನು ಪ್ರಕಾರ ಅನುಮತಿ ಪಡೆದರೆ ಮಾತ್ರ ಅವಕಾಶ ಕೊಡಲಾಗುತ್ತಿದೆ ಎಂದು ಹೇಳಿದ್ದಾರೆ. ಕೋಟೆಯೊಳಗೆ ದೇವಸ್ಥಾನದ ಪೂಜೆಗೆ ಪುರಾತತ್ವ ಇಲಾಖೆ ಅನುಮತಿ ಕೊಡಬೇಕು, ಆದರೆ ಇಲಾಖೆ ಸಾರ್ವಜನಿಕರಿಗೂ ಅನುಮತಿ ನೀಡದಿರುವುದು ಖಂಡಿಸಿ, ಸಂಘ ಪರಿವಾರದ ಹಲವು ಕಾರ್ಯಕರ್ತರು ಕೋಟೆ ಮುಂಭಾಗದಲ್ಲಿ ಪ್ರತಿಭಟನೆ ನಡೆಸುತ್ತಿದ್ದರು. ಕಾನೂನು ಸುವ್ಯವಸ್ಥೆ ಕಾಪಾಡುವ ಹಿನ್ನೆಲೆಯಲ್ಲಿ ಪೊಲೀಸರು ದಿವ್ಯಾ ಹಾಗರಗಿ, ಶಶಿಕುಮಾರ್ ಶೆಟ್ಟಿ, ಪ್ರಶಾಂತ್ ಜಾಧವ, ಪವನ್ ಪೂಜಾರಿ, ಸಾಗರ್ ರಾಠೋಡ್, ಅಣ್ಣಾರಾವ್ ಪಾಟೀಲ್ ಸೇರಿದಂತೆ ಹಲವು ಪ್ರತಿಭಟನಾಕಾರನ್ನು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ.
ಲೋಕಸಭೆಯಲ್ಲಿ ಸ್ಪೀಕರ್ ಓಂ ಬಿರ್ಲಾ ಪದಚ್ಯುತಿ ನಿರ್ಣಯದ ಕುರಿತು ಮಾ. 9ರಂದು ಚರ್ಚೆ: ಸಚಿವ ಕಿರಣ್ ರಿಜಿಜು
ಹೊಸದಿಲ್ಲಿ, ಫೆ. 15: ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ ಅವರನ್ನು ಪದಚ್ಯುತಗೊಳಿಸುವಂತೆ ವಿರೋಧ ಪಕ್ಷಗಳು ಮಂಡಿಸಿರುವ ಅವಿಶ್ವಾಸ ನಿರ್ಣಯದ ಕುರಿತು ಮಾರ್ಚ್ 9ರಂದು ಲೋಕಸಭೆಯಲ್ಲಿ ಚರ್ಚೆ ನಡೆಯಲಿದ್ದು, ಚರ್ಚೆಯ ಬಳಿಕ ನಿರ್ಣಯದ ಮೇಲೆ ಮತದಾನ ಕೈಗೊಳ್ಳಲಾಗುವುದು ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ತಿಳಿಸಿದ್ದಾರೆ. “ಮಾರ್ಚ್ 9ರಂದು ಲೋಕಸಭೆಯಲ್ಲಿ ಸ್ಪೀಕರ್ ವಿರುದ್ಧ ಮಂಡಿಸಲಾದ ಅವಿಶ್ವಾಸ ನಿರ್ಣಯವನ್ನು ಕೈಗೆತ್ತಿಕೊಳ್ಳಲಾಗುವುದು. ಮೊದಲ ದಿನವೇ ಚರ್ಚೆ ನಡೆಸಿ ನಂತರ ಮತದಾನ ನಡೆಯಲಿದೆ” ಎಂದು ಅವರು ಪಿಟಿಐಗೆ ಮಾಹಿತಿ ನೀಡಿದರು. ಸಂಸತ್ತಿನ ಬಜೆಟ್ ಅಧಿವೇಶನದ ಎರಡನೇ ಹಂತವು ಮಾರ್ಚ್ 9ರಿಂದ ಏಪ್ರಿಲ್ 2ರವರೆಗೆ ನಡೆಯಲಿದ್ದು, ಈ ಅವಧಿಯಲ್ಲಿ ಹಲವಾರು ‘ಪ್ರಮುಖ’ ಶಾಸನಗಳು ಹಾಗೂ ‘ನಿರ್ಣಾಯಕ’ ಮಸೂದೆಗಳನ್ನು ಚರ್ಚೆ ಮತ್ತು ಅಂಗೀಕಾರಕ್ಕಾಗಿ ಮಂಡಿಸಲಾಗುವುದು ಎಂದು ಸಚಿವರು ತಿಳಿಸಿದ್ದಾರೆ. ಬಜೆಟ್ ಅಧಿವೇಶನದ ಮೊದಲ ಹಂತವು ಜನವರಿ 29ರಂದು ಆರಂಭವಾಗಿ ಫೆಬ್ರವರಿ 12ರಂದು ಮುಕ್ತಾಯಗೊಂಡಿತು. ಈ ಅವಧಿಯಲ್ಲಿ ಭಾರತ–ಅಮೆರಿಕಾ ವ್ಯಾಪಾರ ಒಪ್ಪಂದ ಹಾಗೂ ಸೇನೆಯ ಮಾಜಿ ಮುಖ್ಯಸ್ಥ ಎಂ.ಎಂ. ನರವಣೆ ಅವರ ಇನ್ನೂ ಪ್ರಕಟವಾಗದ ಆತ್ಮಚರಿತ್ರೆಯಲ್ಲಿನ ವಿವಾದಾತ್ಮಕ ಹೇಳಿಕೆಗಳು ಸೇರಿದಂತೆ ವಿವಿಧ ವಿಷಯಗಳ ಕುರಿತು ಪ್ರತಿಪಕ್ಷಗಳು ಸರಕಾರವನ್ನು ಗುರಿಯಾಗಿಸಿಕೊಂಡ ಪರಿಣಾಮ ಸದನದ ಕಲಾಪಕ್ಕೆ ಅಡ್ಡಿಯಾಯಿತು. ಕಾಂಗ್ರೆಸ್ ನೇತೃತ್ವದ ವಿರೋಧ ಪಕ್ಷವು ಫೆಬ್ರವರಿ 10ರಂದು ಸ್ಪೀಕರ್ ವಿರುದ್ಧ ಅವಿಶ್ವಾಸ ನಿರ್ಣಯವನ್ನು ಮಂಡಿಸಿದ್ದು, ಅವರ ನಡವಳಿಕೆ ‘ಪಕ್ಷಪಾತಪೂರ್ಣ’ವಾಗಿದೆ ಎಂದು ಆರೋಪಿಸಿದೆ.
ರೈತರಿಗೆ ಗುಡ್ನ್ಯೂಸ್! 22 ಸಾವಿರ ರೈತರಿಗೆ ಪಿಎಂ ಕಿಸಾನ್ ಹಣ ಪಾವತಿ
ತಾಂತ್ರಿಕ ಕಾರಣಗಳಿಂದ ಪಿಎಂ-ಕಿಸಾನ್ ಯೋಜನೆಯ ಹಣ ರೈತರಿಗೆ ಬಾಕಿ ಉಳಿದಿತ್ತು. ಕೂಡಲೇ ಹಣ ಬಿಡುಗಡೆ ಮಾಡುವಂತೆ ಕೃಷಿ ಸಚಿವ ಚಲುವರಾಯಸ್ವಾಮಿ ಕೇಂದ್ರಕ್ಕೆ ಮನವಿ ಮಾಡಿದ್ದರು. ಸಚಿವರ ಮನವಿಗೆ ಕೇಂದ್ರ ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಹಣ ಬಿಡುಗಡೆ ಮಾಡಿದೆ.
ʼಆತಂಕ ಬೇಡ, ಒಕ್ಕಲೆಬ್ಬಿಸುವ ಪ್ರಶ್ನೆಯೇ ಇಲ್ಲʼ : ಯಡಮನೆ ಭಾಗದ ರೈತರಿಗೆ ಸಚಿವ ಮಧುಬಂಗಾರಪ್ಪ ಅಭಯ
ಶಿವಮೊಗ್ಗ : ʼಸಾಗರ ತಾಲ್ಲೂಕಿನ ಕರೂರು ಹೋಬಳಿಯ ಯಡಮನೆ ಗ್ರಾಮದ ರೈತ ಕುಟುಂಬಗಳಿಗೆ ಅರಣ್ಯ ಇಲಾಖೆ ನೊಟೀಸ್ ನೀಡಿರುವ ವಿಚಾರ ನನ್ನ ಗಮನಕ್ಕೆ ಬಂದ ತಕ್ಷಣವೇ ಸೂಕ್ತ ಕ್ರಮಕ್ಕೆ ಅರಣ್ಯ ಇಲಾಖೆಗೆ ಸೂಚನೆ ನೀಡಿದ್ದೇನೆ. ಹೀಗಾಗಿ ಆತಂಕ ಬೇಡʼ ಎಂದು ಜಿಲ್ಲಾ ಉಸ್ತುವಾರಿಯೂ ಆದ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಸಚಿವ ಮಧುಬಂಗಾರಪ್ಪ ಹೇಳಿದ್ದಾರೆ. ಈ ಸಂಬಂಧ ಪ್ರಕಟನೆ ನೀಡಿರುವ ಅವರು, ಈ ನೊಟೀಸ್ಗಳು 2012-13ರ ಬಿಜೆಪಿ ಸರಕಾರದ ಅವಧಿಯಲ್ಲಿ ಕೈಗೊಂಡ ತೀರ್ಮಾನಗಳು. ಹಳೆಯ ಆದೇಶದ ಅನ್ವಯ ಈಗ ಜಾರಿಯಾಗುತ್ತಿರುವುದು ಸ್ಪಷ್ಟವಾಗಿದೆ ಎಂದು ತಿಳಿಸಿದ್ದಾರೆ. ಸರಕಾರಕ್ಕೆ ರೈತರನ್ನು ಒಕ್ಕಲೆಬ್ಬಿಸುವ ಯಾವುದೇ ಉದ್ದೇಶವನ್ನು ಹೊಂದಿಲ್ಲ. ಈಗಾಗಲೇ ನಾನು ಅರಣ್ಯ ಇಲಾಖೆಯ ಉನ್ನತ ಅಧಿಕಾರಿಗಳೊಂದಿಗೆ ನೇರವಾಗಿ ಮಾತನಾಡಿದ್ದು, ಯಾವುದೇ ಕಾರಣಕ್ಕೂ ರೈತರನ್ನು ಬಲವಂತವಾಗಿ ತೆರವುಗೊಳಿಸದಂತೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದೇನೆ. ಅರಣ್ಯ ಹಕ್ಕು ಕಾಯ್ದೆಯಡಿ ಅವರು ಅರ್ಜಿ ಸಲ್ಲಿಸಿದ್ದರೂ ಸೂಕ್ತ ದಾಖಲಾತಿಗಳು ಇಲ್ಲದ ಕಾರಣ ಇವರ ಅರ್ಜಿಗಳು ಇನ್ನೂ ಊರ್ಜಿತವಾಗಿಲ್ಲ. ಈ ಕುರಿತು ಸಂಬಂಧಪಟ್ಟ ಸಮಿತಿಗಳು ಮೇಲ್ಮನವಿ ಸಲ್ಲಿಸುವ ಅಗತ್ಯವಿದೆ. ಸಂಬಂಧಪಟ್ಟ ಸಮಿತಿಗಳ ಮೂಲಕ ಈ ಅರ್ಜಿಗಳ ಮರುಪರಿಶೀಲನೆ ಮತ್ತು ಮೇಲ್ಮನವಿ ಸಲ್ಲಿಕೆಗೆ ಅಗತ್ಯ ಕ್ರಮ ವಹಿಸಲಾಗುವುದು ಎಂದರು. ನಮ್ಮ ಸರಕಾರವು ರೈತರ ಮತ್ತು ಸಂತ್ರಸ್ತರ ಹಿತ ಕಾಯಲು ಸಂಪೂರ್ಣವಾಗಿ ಬದ್ಧವಾಗಿದ್ದು, ಯಡಮನೆ ಗ್ರಾಮದ ಜನರು ಯಾವುದೇ ಆತಂಕಕ್ಕೆ ಒಳಗಾಗಬಾರದು ಎಂದು ತಿಳಿಸಿದ್ದಾರೆ.
Maharashtra | ಮುಂಬೈ ಮೆಟ್ರೋ ಪಿಲ್ಲರ್ ಕುಸಿತ: ಐವರ ಬಂಧನ, ಗುತ್ತಿಗೆದಾರರಿಗೆ 5 ಕೋಟಿ ರೂ. ದಂಡ
ಮುಂಬೈ,ಫೆ.15: ಇಲ್ಲಿನ ಮುಲುಂಡ್ ಪ್ರದೇಶದಲ್ಲಿ ನಿರ್ಮಾಣ ಹಂತದಲ್ಲಿದ್ದ ಮೆಟ್ರೋ ಮಾರ್ಗ–4ರ ಸೇತುವೆಯ ಪ್ಯಾರಪೆಟ್ ಭಾಗ ಕುಸಿದು ಸಂಭವಿಸಿದ ದುರಂತದಲ್ಲಿ ಒಬ್ಬರು ಮೃತಪಟ್ಟು ಮೂವರು ಗಾಯಗೊಂಡ ಘಟನೆಗೆ ಸಂಬಂಧಿಸಿ ಮುಂಬೈ ಮೆಟ್ರೋಪಾಲಿಟನ್ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ (MMRDA)ವು ಗುತ್ತಿಗೆದಾರ ಸಂಸ್ಥೆ ರಿಲಯನ್ಸ್ ಇನ್ಫ್ರಾಸ್ಟ್ರಕ್ಚರ್–ಆಸ್ಟಾಲ್ಡಿ (RAJV) ಹಾಗೂ ಅದರ ಉಪಗುತ್ತಿಗೆದಾರ ಮಿಲನ್ ರೋಡ್ ಬಿಲ್ಡ್ಟೆಕ್ LLP ವಿರುದ್ಧ ಪ್ರಕರಣ ದಾಖಲಿಸಿ ಐವರನ್ನು ಬಂಧಿಸಲಾಗಿದೆ. ಜೊತೆಗೆ RAJVಗೆ 5 ಕೋಟಿ ದಂಡ ವಿಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಯೋಜನೆಯ ಸಾಮಾನ್ಯ ಸಲಹೆಗಾರರ ಒಕ್ಕೂಟವಾದ ಡಿಬಿ ಎಂಜಿನಿಯರಿಂಗ್ & ಕನ್ಸಲ್ಟಿಂಗ್, ಹಿಲ್ ಇಂಟರ್ನ್ಯಾಷನಲ್ ಇಂಕ್ ಹಾಗೂ ಲೂಯಿಸ್ ಬರ್ಗರ್ ಕನ್ಸಲ್ಟಿಂಗ್ ಪ್ರೈವೇಟ್ ಲಿಮಿಟೆಡ್ (DB ಹಿಲ್ LBG) ಮೇಲೂ 1 ಕೋಟಿ ದಂಡ ವಿಧಿಸಲಾಗಿದೆ ಎಂದು MMRDA ಪ್ರಕಟಣೆಯಲ್ಲಿ ತಿಳಿಸಿದೆ. ಶನಿವಾರ ಮಧ್ಯಾಹ್ನ ಸುಮಾರು 12.15ರ ವೇಳೆಗೆ ಎಲ್ಬಿಎಸ್ ರಸ್ತೆಯಲ್ಲಿರುವ ಜಾನ್ಸನ್ & ಜಾನ್ಸನ್ ಕಾರ್ಖಾನೆ ಸಮೀಪ ದುರಂತ ಸಂಭವಿಸಿದೆ. ನಿರ್ಮಾಣ ಹಂತದಲ್ಲಿದ್ದ ಸೇತುವೆಯ ಪ್ಯಾರಪೆಟ್ ಭಾಗ ಹಾದುಹೋಗುತ್ತಿದ್ದ ಆಟೋರಿಕ್ಷಾ ಹಾಗೂ ಸ್ಕೋಡಾ ಕಾರಿನ ಮೇಲೆ ಕುಸಿದು ಬಿದ್ದ ಪರಿಣಾಮ ರಿಕ್ಷಾ ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ. ಮೆಟ್ರೋ ಲೈನ್–4 ದಕ್ಷಿಣ–ಮಧ್ಯ ಮುಂಬೈನ ವಡಾಲಾವನ್ನು ನೆರೆಯ ಥಾಣೆಯೊಂದಿಗೆ ಸಂಪರ್ಕಿಸುವ ಪ್ರಮುಖ ಮಾರ್ಗವಾಗಿದ್ದು, ಕಾರಿಡಾರ್ನ ಗಮನಾರ್ಹ ಭಾಗ ಎಲ್ಬಿಎಸ್ ರಸ್ತೆಯ ಮೇಲೆಯೇ ಹಾದು ಹೋಗುತ್ತದೆ. ಘಟನೆಯ ಬಳಿಕ ನಿರ್ಮಾಣ ಕಾಮಗಾರಿಗಳ ಭದ್ರತೆ ಕುರಿತು ಕಳವಳ ವ್ಯಕ್ತವಾಗಿದೆ. ಆಟೋರಿಕ್ಷಾದ ಹಿಂಭಾಗದಲ್ಲಿ ಕುಳಿತಿದ್ದ ರಾಮಧಾನಿ ಯಾದವ್ (46) ಅವರು ಘಟನೆಯಲ್ಲಿ ಮೃತಪಟ್ಟಿದ್ದಾರೆ. ಚಾಲಕ ರಾಜ್ಕುಮಾರ್ ಯಾದವ್ (45) ಗಂಭೀರವಾಗಿ ಗಾಯಗೊಂಡು ಮುಲುಂಡ್ನ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ರಿಕ್ಷಾದಲ್ಲಿದ್ದ ಮತ್ತೊಬ್ಬ ಪ್ರಯಾಣಿಕ ಮಹೇಂದ್ರ ಪ್ರತಾಪ್ ಯಾದವ್ (52) ಹಾಗೂ ಸ್ಕೋಡಾ ಕಾರಿನ ಚಾಲಕಿ ದೀಪಾ ರುಹಿಯಾ (40) ಗಾಯಗೊಂಡಿದ್ದು, ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Gold Price February 15: ಚಿನ್ನ ಪ್ರಿಯರಿಗೆ ವಾರಾಂತ್ಯದ ಚಿನ್ನದ ಬೆಲೆಯು ನಿರಾಳತೆ ನೀಡಿದೆ. ಚಿನ್ನ ಮತ್ತು ಬೆಳ್ಳಿ ಬೆಲೆಯು ವಾರಾಂತ್ಯದಲ್ಲಿ ಯಥಾಸ್ಥಿತಿ ಮುಂದುವರಿದಿದೆ. ಚಿನ್ನದ ಬೆಲೆಯು ಕಳೆದ ಕೆಲವು ದಿನಗಳಿಂದ ಭಾರೀ ಏರಿಳಿತ ಕಾಣುತ್ತಿದೆ. ಭಾನುವಾರದಂದು ಚಿನ್ನದ ಬೆಲೆಯಲ್ಲಿ ಮಹತ್ವದ ಬದಲಾವಣೆ ಆಗಿಲ್ಲ. ಫೆಬ್ರವರಿ 15ರಂದು ಚಿನ್ನ ಮತ್ತು ಬೆಳ್ಳಿಯ ಬೆಲೆ ಎಷ್ಟಿದೆ ಎನ್ನುವ ನಿಖರವಾದ
ಕರಾವಳಿಯ ರಕ್ತ ಕಣ್ಣೀರು ಪುಸ್ತಕ ಅನಾವರಣ: ಕೋಮುವಾದದ ವಿರುದ್ಧ ಕಡಲ ಕಿನಾರೆಯ ಧ್ವನಿ ಗಟ್ಟಿ
ಕರಾವಳಿ ಭಾಗದ ಕೋಮುದ್ವೇಷದ ಜ್ವಾಲೆಯನ್ನು ನಂದಿಸುವ ಪ್ರಯತ್ನದ ಭಾಗವಾಗಿ, ವಿಜಯ ಕರ್ನಾಟಕ ಡಿಜಿಟಲ್ ವಿಭಾಗದ ವರದಿಗಾರ ಇರ್ಷಾದ್ ಉಪ್ಪಿನಂಗಡಿ ಬರೆದ ಕರಾವಳಿಯ ರಕ್ತ ಕಣ್ಣೀರು-ಮತೀಯ ದ್ವೇಷದ ಬೆಂಕಿಯಲ್ಲಿ ನಲುಗಿದ ಬದುಕುಗಳು ಪುಸ್ತಕ ಬಿಡುಗಡೆಗೊಂಡಿದೆ. ಸಚಿವ ಪ್ರಿಯಾಂಕ್ ಖರ್ಗೆ ಪುಸ್ತಕವನ್ನು ಬಿಡುಗಡೆ ಮಾಡಿದರು. ಹಿರಿಯ ಪತ್ರಕರ್ತ ದಿನೇಶದ್ ಅಮಿನ್ ಮಟ್ಟು, ಬಹುಭಾಷಾ ನಟ ಕಿಶೋರ್ ಸೇರಿದಂತೆ ಹಲವು ಗಣ್ಯರು ಸಮಾರಂಭದಲ್ಲಿ ಭಾಗವಹಿಸಿದ್ದರು. ಕಾರ್ಯಕ್ರಮವು ಎಲ್ಲ ರೀತಿಯ ಕೋಮುವಾದದ ವಿರುದ್ಧ ಹೋರಾಟವನ್ನು ಬಲಪಡಿಸಲು ಕರೆ ನೀಡಿತು.
ಅಮೆರಿಕದಲ್ಲಿ ಓದುತ್ತಿದ್ದ ಕರ್ನಾಟಕ ಮೂಲದ ವಿದ್ಯಾರ್ಥಿ ದಿಢೀರ್ ಸಾವು, ತೀವ್ರಗೊಂಡ ಆತಂಕ... Saketh Srinivasaiah
ಭಾರತ ಮತ್ತು ಅಮೆರಿಕ ನಡುವೆ ಮೊದಲಿನಿಂದ ಕೂಡ ಸ್ನೇಹ &ಬಾಂಧವ್ಯ ಚನ್ನಾಗಿಯೇ ಇದೆ. ಈ ರೀತಿ ಇದ್ದರೂ ಭಾರತೀಯರಿಗೆ ಅಮೆರಿಕದ ನೆಲದಲ್ಲಿ ಸೂಕ್ತ ಭದ್ರತೆ ಇಲ್ಲ ಎಂಬ ಆರೋಪಗಳ ನಡುವೆ, ಪದೇ ಪದೇ ಭಾರತ ಮೂಲದ ವಿದ್ಯಾರ್ಥಿಗಳು ಹಾಗೂ ಪ್ರಜೆಗಳ ಮೇಲೆ ದಾಳಿ ಆಗುತ್ತಲೇ ಇದೆ. ಈ ರೀತಿ ಭಾರತ ಮೂಲದ ವಿದ್ಯಾರ್ಥಿ, ಅದರಲ್ಲೂ ಕನ್ನಡ
West Bengal| ಕತ್ವಾ-ಅಝೀಮ್ಗಂಜ್ ಪ್ರಯಾಣಿಕ ರೈಲಿನಲ್ಲಿ ಅಗ್ನಿ ಅವಘಡ
ಕೊಲ್ಕತ್ತಾ: ಪಶ್ಚಿಮ ಬಂಗಾಳದ ಪುರ್ಬಾ ಬರ್ಧಮಾನ್ ಜಿಲ್ಲೆಯ ಕಟ್ವಾ ರೈಲು ನಿಲ್ದಾಣದಲ್ಲಿ ರವಿವಾರ ಮುಂಜಾನೆ ಖಾಲಿ ಪ್ಯಾಸೆಂಜರ್ ರೈಲಿನ ಬೋಗಿಗೆ ಬೆಂಕಿ ಹೊತ್ತಿಕೊಂಡಿದೆ ಎಂದು ಪೂರ್ವ ರೈಲ್ವೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಕಟ್ವಾ ರೈಲು ನಿಲ್ದಾಣದಲ್ಲಿ ಎರಡನೇ ಪ್ಲಾಟ್ಫಾರ್ಮ್ನಲ್ಲಿ ನಿಂತಿದ್ದ ಕತ್ವಾ-ಅಝೀಮ್ಗಂಜ್ ಪ್ಯಾಸೆಂಜರ್ ರೈಲಿನ ಒಂದು ಬೋಗಿಯಲ್ಲಿ ರವಿವಾರ ಬೆಳಗಿನ ಜಾವ 4.30ರ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದೆ. ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ. ಬೆಂಕಿ ಹರಡುವುದನ್ನು ತಡೆಯಲು ರೈಲ್ವೆ ಸಿಬ್ಬಂದಿ ತಕ್ಷಣವೇ ಬೋಗಿಯನ್ನು ಬೇರ್ಪಡಿಸಿದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ರೈಲಿನ ಬೋಗಿಗೆ ಬೆಂಕಿ ಹೊತ್ತಿಕೊಂಡಿರುವುದನ್ನು ನಿಲ್ದಾಣದಲ್ಲಿದ್ದ ಪ್ರಯಾಣಿಕರು ತಕ್ಷಣ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಅಗ್ನಿ ಅನಾಹುತಕ್ಕೆ ಕಾರಣಗಳ ಬಗ್ಗೆ ಪೊಲೀಸರು ತನಿಖೆಯನ್ನು ನಡೆಸುತ್ತಿದ್ದಾರೆ.
IND Vs PAK Match: ಕೊಲೊಂಬೊದಲ್ಲಿ ಭಾರತ-ಪಾಕಿಸ್ತಾನ ಟಿ20 ವಿಶ್ವಕಪ್ ಗುಂಪು ಹಂತದ ಹೈವೋಲ್ಟೇಜ್ ಪಂದ್ಯದಲ್ಲಿ ಇಂದು (ಫೆಬ್ರವರಿ 15) ಮುಖಾಮುಖಿಯಾಗಲಿವೆ. ಈ ಪಂದ್ಯ ವೀಕ್ಷಣೆ ಮಾಡಲು ಇಡೀ ಜಗತ್ತೇ ಕಾತರದಿಂದ ಕಾಯುತ್ತಿದೆ. ಇನ್ನೂ ಈ ಮ್ಯಾಚ್ ಆರಂಭಕ್ಕೂ ಮುನ್ನವೇ ಟೀಂ ಇಂಡಿಯಾ ಪ್ಲೇಯಿಂಗ್ 11ನಲ್ಲಿ ಮಹತ್ವದ ಬದಲಾವಣೆ ಮಾಡಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಹಾಗಾದ್ರೆ, ಯಾರೆಲ್ಲ
ವ್ಯಾಲಂಟೈನ್ಸ್ ಡೇ ಮರುದಿನ ಪ್ರೇಮಿಗಳಿಗೆ ಕಿವಿ ಮಾತು!
ಅನುಭವಿಗಳು ಹೇಳುವುದುಂಟು ನಿಮ್ಮನ್ನು ಪ್ರೀತಿಸುವವರನ್ನು ನೀವು ಪ್ರೀತಿಸಿ, ಮತ್ತೊಬ್ಬರನ್ನು ಪ್ರೀತಿಸುವವರು ನೀವು ಗಣನೆಗೆ ತೆಗೆದು ಕೊಳ್ಳುವುದು ಬೇಡ ಎಂದು. ಅದು ಸತ್ಯದ ಮಾತು. ನಮ್ಮನ್ನು ಪ್ರೀತಿಸುವವರನ್ನು ನಾವು ಪ್ರೀತಿಸಿದರೆ ಸುಂದರವೇ ಆದರೆ ಆ ಪ್ರೀತಿ ಹಣದಿಂದ ಹುಟ್ಟಬಾರದು ಗುಣ ನೋಡಿ ಹುಟ್ಟುವಂತಿರಬೇಕು. ಕಪಟ ಅದರಲ್ಲಿ ತುಂಬಿರಬಾರದು ಪರಸ್ವರ ಅರ್ಥ ಮಾಡುವ ಗುಣ ಹೊಂದಿರಬೇಕು.
KOLKATA - S I R ಪ್ರಕ್ರಿಯೆ | ‘ತಾರ್ಕಿಕ ವ್ಯತ್ಯಾಸ’ ವರ್ಗದಲ್ಲಿ ಮುಸ್ಲಿಂ ಮತದಾರರ ಪಾಲು ಅಧಿಕ; ಅಧ್ಯಯನ ವರದಿ
ಕೋಲ್ಕತ್ತಾ, ಫೆ.15: ಚುನಾವಣಾ ಆಯೋಗ (EC) ಕೈಗೊಂಡ ವಿಶೇಷ ತೀವ್ರ ಪರಿಷ್ಕರಣೆ (S I R) ಪ್ರಕ್ರಿಯೆಗೆ ಸಂಬಂಧಿಸಿದ ಅಧ್ಯಯನವೊಂದು ದಕ್ಷಿಣ ಕೋಲ್ಕತ್ತಾದ ರಾಜಕೀಯವಾಗಿ ಮಹತ್ವದ ಎರಡು ವಿಧಾನಸಭಾ ಕ್ಷೇತ್ರಗಳಲ್ಲಿ “ತಾರ್ಕಿಕ ವ್ಯತ್ಯಾಸ”ದಡಿ ಗುರುತಿಸಲಾದ ಮತದಾರರಲ್ಲಿ ಮುಸ್ಲಿಂ ಸಮುದಾಯದ ಪಾಲು ಅಸಮಾನವಾಗಿ ಹೆಚ್ಚಾಗಿದೆ ಎಂದು ತಿಳಿಸಿದೆ. ಈ ಅಂಕಿಅಂಶಗಳು S I R ಪ್ರಕ್ರಿಯೆಯ ನಿಷ್ಪಕ್ಷಪಾತತೆಯ ಕುರಿತ ಚರ್ಚೆಗೆ ಹೊಸ ಆಯಾಮ ನೀಡಿವೆ. ಸಬರ್ ಸಂಸ್ಥೆ ನಡೆಸಿದ ಸಂಶೋಧನೆಯ ಪ್ರಕಾರ, ನಗರದ ಸಾಂಪ್ರದಾಯಿಕ ವಾಣಿಜ್ಯ ಹಾಗೂ ರಾಜಕೀಯ ಕೇಂದ್ರದ ಸುತ್ತಲಿನ ಮಧ್ಯ–ದಕ್ಷಿಣ ಭಾಗದಲ್ಲಿರುವ ಭೋವಾನಿಪೋರ್ ವಿಧಾನಸಭಾ ಕ್ಷೇತ್ರದಲ್ಲಿ “ತಾರ್ಕಿಕ ವ್ಯತ್ಯಾಸ” ಹೊಂದಿದ ಮತದಾರ ಪೈಕಿ ಮುಸ್ಲಿಮರು ಸುಮಾರು ಶೇ.52 ಇದ್ದಾರೆ. ದಕ್ಷಿಣ ಕೋಲ್ಕತ್ತಾದ ಪಕ್ಕದ ಉನ್ನತ ವಸತಿ ಪ್ರದೇಶವಾದ ಬ್ಯಾಲಿಗುಂಜ್ ಕ್ಷೇತ್ರದಲ್ಲಿ ಈ ಪ್ರಮಾಣವು ಶೇ.78 ಏರಿದೆ. ಭೋವಾನಿಪೋರ್ ಕ್ಷೇತ್ರದಲ್ಲಿ “ತಾರ್ಕಿಕ ವ್ಯತ್ಯಾಸ” ವರ್ಗದಡಿ ಗುರುತಿಸಲಾದ 15,145 ಮತದಾರರಲ್ಲಿ 7,846 ಮಂದಿ ಮುಸ್ಲಿಮರು ಎಂದು ಅಧ್ಯಯನ ಹೇಳಿದೆ. ಬ್ಯಾಲಿಗುಂಜ್ ಕ್ಷೇತ್ರದಲ್ಲಿ ಇದೇ ವರ್ಗದ 30,008 ಮತದಾರರಲ್ಲಿ 23,256 ಮಂದಿ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದವರು ಎಂದು ವರದಿ ಉಲ್ಲೇಖಿಸಿದೆ. ಇತರ ವರ್ಗಗಳ ಅಳಿಸುವಿಕೆ ಅಥವಾ ತಿದ್ದುಪಡಿ ಅಂಕಿಅಂಶಗಳೊಂದಿಗೆ ಹೋಲಿಸಿದಾಗ ಈ ವ್ಯತ್ಯಾಸ ಸ್ಪಷ್ಟವಾಗಿ ಗೋಚರಿಸುತ್ತದೆ. ಅಧ್ಯಯನದಲ್ಲಿ ಭಾಗವಹಿಸಿದ್ದ ಅಶಿನ್ ಚಕ್ರವರ್ತಿ, ಸುಪ್ತಿಕ್ ಹಾಲ್ದರ್ ಹಾಗೂ ಸಬೀರ್ ಅಹಮದ್ ಅವರ ಪ್ರಕಾರ, ಭೋವಾನಿಪೋರ್ ಕ್ಷೇತ್ರದಲ್ಲಿ ‘ಗೈರು , ಸ್ಥಳಾಂತರ ಅಥವಾ ಮೃತಪಟ್ಟಿರುವ/ನಕಲು’ (SSD) ವರ್ಗದಡಿ ಗುರುತಿಸಲಾದ ಮತದಾರರಲ್ಲಿ ಮುಸ್ಲಿಮರ ಪಾಲು ಕೇವಲ ಶೇ.22.7 ಮತ್ತು ಮ್ಯಾಪ್ ಮಾಡದ ಮತದಾರ ಪೈಕಿ ಸುಮಾರು ಶೇ.26 ಮಾತ್ರ. ಇದು 2011ರ ಜನಗಣತಿ ಪ್ರಕಾರ ಕ್ಷೇತ್ರದ ಸುಮಾರು ಶೇ.20 ಮುಸ್ಲಿಂ ಜನಸಂಖ್ಯೆಯೊಂದಿಗೆ ಹೊಂದಿಕೆಯಾಗುತ್ತದೆ. ಆದರೆ ‘ತಾರ್ಕಿಕ ವ್ಯತ್ಯಾಸ’ ವರ್ಗದಲ್ಲಿ ಈ ಪ್ರಮಾಣ ಶೇ.52ಕ್ಕೆ ಏರಿರುವುದು ಗಮನಾರ್ಹ ಎಂದು ತಿಳಿಸಿದ್ದಾರೆ. ಬ್ಯಾಲಿಗುಂಜ್ ಕ್ಷೇತ್ರದಲ್ಲಿಯೂ ಇದೇ ರೀತಿಯ ಮಾದರಿ ಕಂಡುಬಂದಿದ್ದು, ಅಲ್ಲಿ ಮುಸ್ಲಿಮರು SSD ಮತದಾರರಲ್ಲಿ ಸುಮಾರು ಶೇ.44 ಮತ್ತು ಮ್ಯಾಪ್ ಮಾಡದ ಮತದಾರರಲ್ಲಿ ಶೇ.42 ಮಂದಿ ಇದ್ದಾರೆ. ಇದು ಕ್ಷೇತ್ರದ ಅಂದಾಜು ಶೇ.50 ಜನಸಂಖ್ಯೆ ಪಾಲಿನೊಂದಿಗೆ ಹೋಲಿಕೆಯಾಗುತ್ತದೆ ಎಂದು ಅಧ್ಯಯನ ಸೂಚಿಸಿದೆ. ಇದಕ್ಕೆ ಪ್ರತಿಕ್ರಿಯಿಸಿದ ಚುನಾವಣಾ ಆಯೋಗದ ಅಧಿಕಾರಿಗಳು ಪಕ್ಷಪಾತದ ಆರೋಪಗಳನ್ನು ತಳ್ಳಿ ಹಾಕಿದ್ದು, ಮತದಾರರ ಪಟ್ಟಿಯಲ್ಲಿ ಧರ್ಮದ ವಿವರಗಳನ್ನು ದಾಖಲಿಸುವುದಿಲ್ಲ ಹಾಗೂ ಧರ್ಮವಾರು ಅಂಕಿಅಂಶಗಳನ್ನು ಸಂಗ್ರಹಿಸುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ರಾಜಕೀಯ ವಲಯದಲ್ಲಿ ಈ ವರದಿಗೆ ತೀವ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ರಾಜಕೀಯ ವಿಶ್ಲೇಷಕ ಉದಯನ್ ಬಂಡೋಪಾಧ್ಯಾಯ ಅವರು SIR ಪ್ರಕ್ರಿಯೆಯಲ್ಲಿ ಬಳಸಲಾದ ಕೃತಕ ಬುದ್ಧಿಮತ್ತೆ ಆಧಾರಿತ ವ್ಯವಸ್ಥೆಯನ್ನು ಅಲ್ಪಸಂಖ್ಯಾತ ಮತದಾರರಿಗೆ, ವಿಶೇಷವಾಗಿ ಮಹಿಳೆಯರಿಗೆ ಕಿರುಕುಳ ನೀಡುವ ಉದ್ದೇಶದಿಂದ ವಿನ್ಯಾಸಗೊಳಿಸಲಾಗಿದೆ ಎಂದು ಆರೋಪಿಸಿದ್ದಾರೆ. ಟಿಎಂಸಿ ವಕ್ತಾರ ಕುನಾಲ್ ಘೋಷ್ ಅವರು ಬಿಜೆಪಿ ಮುಸ್ಲಿಂ ಬಹುಸಂಖ್ಯಾತ ಪ್ರದೇಶಗಳನ್ನು ಗುರಿಯಾಗಿಸಿಕೊಂಡು ಮತದಾರರ ಪಟ್ಟಿ ಪರಿಷ್ಕರಣೆ ನಡೆಸುತ್ತಿದೆ ಎಂದು ಟೀಕಿಸಿದ್ದಾರೆ. ಈ ಅಧ್ಯಯನದ ಕಂಡುಬಂದ ಅಂಶಗಳು ಕೋಲ್ಕತ್ತಾದ S I R ಪ್ರಕ್ರಿಯೆಗೆ ಹೊಸ ವಿವಾದದ ಪದರವನ್ನು ಸೇರಿಸಿದ್ದು, ಸಾಫ್ಟ್ ವೇರ್ ಆಧಾರಿತ “ತಾರ್ಕಿಕ ವ್ಯತ್ಯಾಸ” ಶೋಧಕದ ಕುರಿತು ಸ್ವತಂತ್ರ ಆಡಿಟ್ ನಡೆಸಬೇಕೆಂಬ ಬೇಡಿಕೆಗಳು ಹೆಚ್ಚುತ್ತಿವೆ. ಯಾವುದೇ ಸಮುದಾಯದ ಮೇಲೆ ಅಸಮಾನ ಪರಿಣಾಮ ಬೀರುವಂತಾಗದಂತೆ ಪರಿಷ್ಕರಣೆ ಕ್ರಮಗಳನ್ನು ಪಾರದರ್ಶಕಗೊಳಿಸುವ ಅಗತ್ಯವಿದೆ ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ.
ಲಜ್ಜೆಗೆಟ್ಟವು; ಮ್ಯೂನಿಚ್ನಲ್ಲಿ ಐಡಿ ಕಾರ್ಡ್ ಇಲ್ಲದ ಅಸಿಮ್ ಮುನೀರ್ ತಡೆದ ಭದ್ರತಾ ಸಿಬ್ಬಂದಿ! ವಿಡಿಯೋ ವೈರಲ್
ಪಾಕಿಸ್ತಾನದ ರಕ್ಷಣಾ ಪಡೆಗಳ ಮುಖ್ಯಸ್ಥ, ಭೂಸೇನಾಧ್ಯಕ್ಷ, ಫೀಲ್ಡ್ ಮಾರ್ಷಲ್, 4 ಸ್ಟಾರ್ ಜನರಲ್ ಹೀಗೆ ನಾನಾ ಗೌರವ(?)ದ ಹುದ್ದೆ ಹೊಂದಿರುವ ಅಸಿಮ್ ಮುನೀರ್, ಮನೆಯಲ್ಲಿ ಮಾತ್ರ ಹುಲಿ ಬೀದಿಗೆ ಬಂದರೆ ಆತ ಅಕ್ಷರಶಃ ಇಲಿ. ಇಡೀ ಪಾಕಿಸ್ತಾನವನ್ನು ಕಂಟ್ರೋಲ್ ಮಾಡುತ್ತಿರುವ ಬಗ್ಗೆ ಬಡಾಯಿ ಕೊಚ್ಚಿಕೊಳ್ಳುವ ಅಸಿ ಮ್ ಮುನೀರ್, ಅಸಲಿಗೆ ವಿದೇಶಿಯರಿಗೆ ಯಾರೆಂದೇ ಗೊತ್ತಿಲ್ಲ. ಇದಕ್ಕೆ ಜರ್ಮನಿ ರಾಜಧಾನಿ ಮ್ಯೂನಿಚ್ನಲ್ಲಿ ನಡೆದ ಭದ್ರತಾ ಸಮ್ಮೇಳನ ಸಾಕ್ಷಿ. ಏನಾಗಿದೆ? ಇಲ್ಲಿದೆ ಮಾಹಿತಿ.
ಪರೀಕ್ಷೆ ಸಮಯ ಬಂದಾಗ ಮಕ್ಕಳ ಕೈಯಲ್ಲಿ ಪುಸ್ತಕವೇನೋ ಇರುತ್ತದೆ. ಆದರೆ ಅವರ ಮನಸ್ಸಿನಲ್ಲಿ ಇರುವುದು ಪೋಷಕರ ಮತ್ತು ಶಿಕ್ಷಕರ ನಿರೀಕ್ಷೆ, ಅವರ ಭಯ ಮತ್ತು ಒತ್ತಡ. ಪೋಷಕರು ಮತ್ತು ಶಿಕ್ಷಕರಿಬ್ಬರೂ ಒಂದು ವಿಷಯದ ಬಗ್ಗೆ ಗಮನಿಸಬೇಕು. ವಾಸ್ತವವಾಗಿ ಪರೀಕ್ಷೆ ಎಂಬುದು ಮಕ್ಕಳ ಭವಿಷ್ಯವನ್ನು ನಿರ್ಧರಿಸುವುದಿಲ್ಲ. ಆದರೆ ಪೋಷಕರ ಮತ್ತು ಶಿಕ್ಷಕರ ಧೋರಣೆ ಮಕ್ಕಳ ಭವಿಷ್ಯವನ್ನು ರೂಪಿಸುತ್ತದೆ. ಅದರಲ್ಲಿಯೂ ಪೋಷಕರು ಮೊದಲು ಗಮನಿಸಬೇಕಾದುದು ಅವರ ಮಕ್ಕಳ ಮನಸ್ಸು. ಪರೀಕ್ಷೆಯ ಸಮಯದಲ್ಲಿ ಮಕ್ಕಳ ಮೆದುಳು ಓದುವುದಕ್ಕಿಂತ ಹೆಚ್ಚು ಫೇಲ್ ಆದರೆ?, ಅಪ್ಪ-ಅಮ್ಮ ಏನು ಹೇಳುತ್ತಾರೆ? ಅನ್ನೋದರಲ್ಲಿ ತೊಡಗಿರುತ್ತದೆ. ಪೋಷಕರು ತಮ್ಮಲ್ಲಿ ತಾವು ಕೇಳಿಕೊಳ್ಳಬೇಕಾದ ಪ್ರಶ್ನೆಯೇನೆಂದರೆ, ‘‘ನಾನು ನನ್ನ ಮಗುವಿನ ಮನಸ್ಸಿಗೆ ಶಾಂತಿ ಕೊಡ್ತಿದ್ದೀನಾ? ಅಥವಾ ನನ್ನ ಆತಂಕವನ್ನು ಅವನ ಮೇಲೆ ಹಾಕ್ತಿದ್ದೀನಾ?’’ ಪರೀಕ್ಷೆಗೆ ಸಿದ್ಧವಾಗುತ್ತಿರುವಂತಹ ವಿದ್ಯಾರ್ಥಿಗಳಿಗೆ ಆಗ ಬೇಕಾಗಿರುವುದು ಭಾವನಾತ್ಮಕ ಬೆಂಬಲ, ಅದು ಪೋಷಕರ ಮಾತಿನಲ್ಲಿ ಮತ್ತು ಮೌನದಲ್ಲಿಯೂ ಕೂಡಾ. ಪೋಷಕರ ಒಂದು ಮಾತು ಮಗುವಿನ ಆತ್ಮವಿಶ್ವಾಸವನ್ನು ಕಟ್ಟಬಹುದು ಅಥವಾ ಸಂಪೂರ್ಣ ಕುಸಿಯಿಸಬಹುದು. ‘‘ಇಷ್ಟೇನಾ ಓದಿರೋದು?’’ ಅಥವಾ ‘‘ಇಷ್ಟೇ ಇಷ್ಟು ಓದಿದ್ದೀಯಾ? ಇವತ್ತು ಕೂಡ ಫೋನ್ ಹಿಡಿದಿದ್ದೀಯಾ?’’ ಎನ್ನುವ ಬದಲಿಗೆ, ‘‘ನಿನ್ನ ಶ್ರಮ ನನಗೆ ಕಾಣ್ತಿದೆ. ನೀನು ಪ್ರಯತ್ನ ಮಾಡ್ತಿದ್ದೀಯಲ್ಲ, ಅದೇ ಸಾಕು’’ ಎನ್ನುವ ಮಾತುಗಳು ಅವರಲ್ಲಿ ಪ್ರೇರಕ ಶಕ್ತಿಯಾಗಿ ಕೆಲಸ ಮಾಡುತ್ತದೆ. ಕೆಲವೊಮ್ಮೆ ಉಪದೇಶಕ್ಕಿಂತ ಒಂದು ಮೌನದ ಅಪ್ಪುಗೆ ಹೆಚ್ಚು ಮಾನಸಿಕ ಮತ್ತು ಭಾವನಾತ್ಮಕ ಅಗತ್ಯವಾಗಿರುತ್ತದೆ. ಮಕ್ಕಳು ಪರೀಕ್ಷೆಗೆ ತಯಾರಾಗುವ ಸಮಯದಲ್ಲಿ ಒತ್ತಡ ಮತ್ತು ಆತಂಕ ಹೆಚ್ಚಾದರೆ ಅವರ ನಕಾರಾತ್ಮಕ ಭಾವನೆಗಳನ್ನು ಸರಿಪಡಿಸುವ ಹೊಣೆ ಪೋಷಕರದೇ ಆಗಿರುತ್ತದೆ. ಆಗ ಮಕ್ಕಳು ಅಳಬಹುದು, ಕೋಪ ತೋರಿಸಬಹುದು, ಮಾತಾಡದೇ ಇರಬಹುದು. ಅದು ಹಠವಾಗಿರುವುದಿಲ್ಲ. ಬದಲಿಗೆ ಅದು ಒತ್ತಡದ ಲಕ್ಷಣವಾಗಿರುತ್ತದೆ. ಅಂತಹ ಸಮಯದಲ್ಲಿ ಪೋಷಕರು ಮಕ್ಕಳಲ್ಲಿ ಸಾವಧಾನವಾಗಿ ಕೇಳಬೇಕು. ‘‘ನಿನಗೆ ಓದೋದು ಕಷ್ಟವಾಗ್ತಿದೆಯಾ ಅಥವಾ ಮನಸ್ಸು ಭಾರವಾಗಿದೆಯಾ?’’ ಈ ಪ್ರಶ್ನೆ ಮಗುವಿಗೆ ನಾನು ಒಂಟಿ ಅಲ್ಲ ಎನ್ನುವ ಭರವಸೆ ಕೊಡುತ್ತದೆ. ನಿಜ ಹೇಳಬೇಕೆಂದರೆ ಪೋಷಕರು ತಮ್ಮ ಭಾಷೆಯ ಬಗ್ಗೆ ಹೆಚ್ಚು ಮುತುವರ್ಜಿ ವಹಿಸಬೇಕು. ಏಕೆಂದರೆ, ಮಕ್ಕಳು ನಮ್ಮ ಮಾತನ್ನಲ್ಲ, ನಮ್ಮ ಧ್ವನಿಯನ್ನು ಹೆಚ್ಚು ನೆನಪಿಟ್ಟುಕೊಳ್ಳುತ್ತಾರೆ. ನಮ್ಮದು ಶಾಂತ ಧ್ವನಿಯಾಗಿದ್ದರೆ ಅದು ಮಕ್ಕಳಿಗೆ ಸುರಕ್ಷಿತ ಮನಸ್ಸನ್ನು ಹೊಂದಲು ನೆರವಾಗುತ್ತದೆ. ಅದೇ ನಮ್ಮದು ಕಟು ಧ್ವನಿ ಆದರೆ ನಮ್ಮಿಂದ ಮುಚ್ಚಿಕೊಳ್ಳುವ ಮನಸ್ಸು ಅವರದಾಗುತ್ತದೆ. ಪರೀಕ್ಷೆ ಸಮಯದಲ್ಲಿ ಮನೆಯೇ ಪರೀಕ್ಷಾ ಕೇಂದ್ರದಂತೆ ಆಗಬಾರದು. ಮನೆ ಎಂಬುದು ಅವರ ವಿಶ್ರಾಂತಿಯ ಮತ್ತು ಭರವಸೆಯ ಆಧಾರದ ಸ್ಥಳ ಆಗಬೇಕು. ನಮ್ಮ ಮಗುವಿನ ಜೀವನದಲ್ಲಿ ಈ ಪರೀಕ್ಷೆ ಒಂದು ಪುಟ ಮಾತ್ರ. ಆದರೆ ಈ ಸಮಯದಲ್ಲಿ ನಾವು ತೋರಿಸುವ ಪ್ರೀತಿ, ಸಹನೆ ಮತ್ತು ನಂಬಿಕೆ ಮಗುವಿನ ಜೀವನಪೂರ್ತಿ ಉಳಿಯುವ ಅಧ್ಯಾಯವಾಗುತ್ತದೆ. ಮಗುವಿಗೆ ಬೇಕಾಗಿರುವುದು ಶಾಲೆ ಕೊಡುವ ಅಂಕವಲ್ಲ. ತನ್ನ ಜೀವಕ್ಕೆ ಮತ್ತು ಜೀವನಕ್ಕೆ ಪೋಷಕರು ಕೊಡುವ ಮೌಲ್ಯ. ಪೋಷಕರ ಧೋರಣೆ ಮಗುವಿಗೆ ಚೈತನ್ಯವನ್ನು ನೀಡುವುದು. ಪರೀಕ್ಷೆಗೆ ನೀನು ಹೋಗುತ್ತೀಯ. ಆದರೆ ಪರೀಕ್ಷೆ ನಿನ್ನನ್ನು ಅಳೆಯಲು ಬಂದಿಲ್ಲ ಎನ್ನುವಂತಿರಬೇಕು. ಮೊದಲು ಮಗುವಿನ ಮನಸ್ಸನ್ನು ಸಿದ್ಧಪಡಿಸುವುದು ಮುಖ್ಯ. ಮಗುವು ಎಲ್ಲವನ್ನೂ ನೆನಪಿಟ್ಟುಕೊಳ್ಳಬೇಕು ಅಂತಿಲ್ಲ. ಅದು ಓದಿದ್ದಷ್ಟು ಶಾಂತವಾಗಿ ಬರೆಯಬೇಕು - ಅಷ್ಟೇ. ಮಗುವಿನ ಮನಸ್ಸಿಗೆ ಹಿತವಾದ ವಾತಾವರಣವನ್ನು ಸೃಷ್ಟಿಸಿದರೆ, ಆ ಮೂಲಕ ಮಗುವು ಭಾವನಾತ್ಮಕವಾಗಿ ಒತ್ತಡಕ್ಕೆ ಒಳಗಾಗದಿದ್ದರೆ ಅಂತಹ ವಿಶ್ರಾಂತಿ ಸ್ಥಿತಿಯಲ್ಲಿ ಹೆಚ್ಚು ಗ್ರಹಿಸಲು ಸಾಧ್ಯವಾಗುತ್ತದೆ. ಫಲಿತಾಂಶದ ಬಗ್ಗೆ ಭಯ ಇಲ್ಲದಿರಲು ಕೂಡಾ ಸಾಧ್ಯವಾಗುತ್ತದೆ. ಎಷ್ಟೋ ಜನ ಪೋಷಕರು ‘‘ಈ ಪರೀಕ್ಷೆ ನಿನ್ನ ಟರ್ನಿಂಗ್ ಪಾಯಿಂಟ್’’ ಎಂದು ಹೆದರಿಸುತ್ತಾರೆ. ಒಂದು ವರ್ಷ ವ್ಯರ್ಥವಾದರೆ ಎಂದು ಹೆದರುತ್ತಾರೆ. ಮಗುವಿನ ಜೀವ ಮತ್ತು ಜೀವನಕ್ಕಿಂತ ಯಾವ ಒಂದು ವರ್ಷವೂ ಅಥವಾ ಟರ್ನಿಂಗ್ ಪಾಯಿಂಟ್ ಏನೂ ಮುಖ್ಯವಲ್ಲ. ಮತ್ತೊಂದು ವಿದ್ಯಾರ್ಥಿಯೊಂದಿಗೆ ಹೋಲಿಕೆ ಮತ್ತು ಸ್ಪರ್ಧೆ ಖಂಡಿತ ಉತ್ತಮ ಮನಸ್ಥಿತಿಯನ್ನು ಹೊಂದಲು ಬಿಡುವುದಿಲ್ಲ. ವೆಚ್ಚ ಮಾಡಿರುವ ಹಣ ವ್ಯರ್ಥವಾಗಬಾರದು, ತಮ್ಮ ಪ್ರತಿಷ್ಠೆ ಮತ್ತು ಗೌರವಕ್ಕೆ ಧಕ್ಕೆ ಬರಬಾರದು ಎಂಬೆಲ್ಲಾ ಆಲೋಚನೆಗಳು ಮಕ್ಕಳ ಸಕಾರಾತ್ಮಕ ಮನಸ್ಸಿಗೆ ಸಮಸ್ಯೆಯಾಗಿಯೇ ಕಾಡುತ್ತದೆ. ಪರೀಕ್ಷೆಯ ಫಲಿತಾಂಶವೇನೇ ಆದರೂ ನಮಗೆ ನೀನು ಮತ್ತು ನಿನ್ನ ಸುರಕ್ಷತೆಯೇ ಮುಖ್ಯ ಎಂಬ ಪೋಷಕರ ಧೋರಣೆ ಮಗುವಿನ ಮಾನಸಿಕ ಶಕ್ತಿಯಾಗುತ್ತದೆ.
ಏರ್ ಇಂಡಿಯಾ ವಿಮಾನ ದುರಂತ| ಇಟಾಲಿಯನ್ ಪತ್ರಿಕೆಯ ವರದಿ ನಿರಾಕರಿಸಿದ ವಿಮಾನಯಾನ ಸಚಿವ ಮುರಳೀಧರ್ ಮೊಹೋಲ್
ಸಾಂಗ್ಲಿ: ಅಹ್ಮದಾಬಾದ್ನಲ್ಲಿ ನಡೆದ ಏರ್ ಇಂಡಿಯಾ ವಿಮಾನ ದುರಂತದ ಕುರಿತ ವಿದೇಶಿ ಮಾಧ್ಯಮ ವರದಿಯನ್ನು ನಾಗರಿಕ ವಿಮಾನಯಾನ ರಾಜ್ಯ ಸಚಿವ ಮುರಳೀಧರ್ ಮೊಹೋಲ್ ತಳ್ಳಿ ಹಾಕಿದ್ದು, ಈ ಕುರಿತು ತನಿಖೆ ನಡೆಯುತ್ತಿದೆ ಎಂದು ಹೇಳಿದ್ದಾರೆ. ಅಹ್ಮದಾಬಾದ್ನಿಂದ ಲಂಡನ್ಗೆ ಹೊರಟಿದ್ದ ಏರ್ ಇಂಡಿಯಾ ವಿಮಾನ AI–171 2025ರ ಜೂನ್ 12ರಂದು ಟೇಕ್ಆಫ್ ಆದ ಕೆಲವೇ ಕ್ಷಣಗಳಲ್ಲಿ ಅಪಘಾತಕ್ಕೀಡಾದ ಪ್ರಕರಣಕ್ಕೆ ಸಂಬಂಧಿಸಿದಂತೆ, ಪೈಲಟ್ ಗಳಲ್ಲಿ ಒಬ್ಬರು ಉದ್ದೇಶಪೂರ್ವಕವಾಗಿ ವಿಮಾನದ ಇಂಧನ ಸ್ವಿಚ್ ಗಳನ್ನು ಆಫ್ ಮಾಡಿರುವ ಸಾಧ್ಯತೆ ಇದೆ ಎಂದು ಅಂತಿಮ ತನಿಖಾ ವರದಿಯಲ್ಲಿ ತಜ್ಞರು ಉಲ್ಲೇಖಿಸುವ ಸಾಧ್ಯತೆಯಿದೆ ಎಂದು ಇಟಾಲಿಯನ್ ದಿನಪತ್ರಿಕೆ ಕೊರಿಯೆರ್ ಡೆಲ್ಲಾ ಸೆರಾ ಪಾಶ್ಚಾತ್ಯ ವಿಮಾನಯಾನ ಮೂಲಗಳನ್ನು ಉಲ್ಲೇಖಿಸಿ ವರದಿ ಮಾಡಿತ್ತು. ಈ ಕುರಿತು ಪ್ರತಿಕ್ರಿಯಿಸಿದ ಸಚಿವ ಮುರಳೀಧರ್ ಮೊಹೋಲ್, ನಮ್ಮ ತನಿಖಾ ಸಂಸ್ಥೆಗಳು ಈ ವಿಷಯವನ್ನು ತನಿಖೆ ಮಾಡುತ್ತಿವೆ ಎಂದು ನಾನು ನಿಮಗೆಲ್ಲರಿಗೂ ತಿಳಿಸಲು ಬಯಸುತ್ತೇನೆ. ನಾವು ನಮ್ಮದೇ ಆದ ಸಂಸ್ಥೆಗಳಲ್ಲಿ ನಂಬಿಕೆ ಇಡಬೇಕೇ ಅಥವಾ ಹೊರಗಿನವರ ಮೇಲೆ ನಂಬಿಕೆ ಇಡಬೇಕೇ? ಅಂತಿಮ ವರದಿಯನ್ನು ಅಂತಿಮಗೊಳಿಸಿದ ನಂತರವೇ ಅದರ ಬಗ್ಗೆ ಪ್ರತಿಕ್ರಿಯಿಸುವುದು ಸಮರ್ಥನೀಯವಾಗಿರುತ್ತದೆ ಎಂದು ಹೇಳಿದರು. ಭಾರತದ ಅತ್ಯಂತ ಭೀಕರ ವಿಮಾನ ಅಪಘಾತಗಳಲ್ಲಿ ಒಂದಾದ ಏರ್ ಇಂಡಿಯಾದ ಬೋಯಿಂಗ್ 787-8 ವಿಮಾನ ದುರಂತವು ಜೂನ್ 12, 2025ರಂದು ನಡೆದಿತ್ತು. ಲಂಡನ್ ಗೆ ಹಾರಾಟ ನಡೆಸುತ್ತಿದ್ದ ಅಹಮದಾಬಾದ್ನಿಂದ ಟೇಕ್ ಆಫ್ ಆದ ಕೆಲವೇ ಕ್ಷಣದಲ್ಲಿ ವಿಮಾನ ಪತನವಾಗಿತ್ತು. ಘಟನೆಯಲ್ಲಿ 241 ಪ್ರಯಾಣಿಕರು ಸೇರಿದಂತೆ ಒಟ್ಟು 260 ಜನರು ಮೃತಪಟ್ಟಿದ್ದರು.
KALABURAGI | ಈಜಲು ಹೋಗಿ ನದಿಪಾಲಾದ ಯುವಕ; ಶೋಧ ಕಾರ್ಯ
ಕಲಬುರಗಿ: ಈಜಲು ಹೋದ ಯುವಕನೋರ್ವ ನೀರುಪಾಲಾಗಿ ನಾಪತ್ತೆಯಾಗಿರುವ ಘಟನೆ ಸೇಡಂ ತಾಲೂಕಿನ ಬೀರನಹಳ್ಳಿ ಗ್ರಾಮದ ಕಾಗಿಣಾ ನದಿಯಲ್ಲಿ ಶನಿವಾರ ಸಂಜೆ ನಡೆದಿದೆ. ಆಳಂದ ತಾಲೂಕಿನ ಬೆಳಮಗಿ ಗ್ರಾಮದ ಶಿವಪ್ರಕಾಶ್(26) ನಾಪತ್ತೆಯಾಗಿರುವ ಯುವಕ. ಇವರು ಶನಿವಾರ ಸಂಜೆ ಈಜಲೆಂದು ನದಿಗೆ ಇಳಿದವರು ಮುಳುಗಿ ನಾಪತ್ತೆಯಾಗಿದ್ದಾರೆ. ಅಗ್ನಿಶಾಮಕದ ದಳದ ಸಿಬ್ಬಂದಿ ಹಾಗೂ ಪೊಲೀಸರು ಶಿವಪ್ರಕಾಶ್ ರಿಗಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ. ಈ ಬಗ್ಗೆ ಮಳಖೇಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಾಗರ ಸೀಮೆಯ ಭಾಗ ಲಾಗಾಯ್ತಿನಿಂದಲೂ ಆಧುನಿಕ ರಂಗಭೂಮಿಯ ಪ್ರಯೋಗಶಾಲೆ. ಹೆಗ್ಗೋಡಿನ ನೀನಾಸಂ, ಕಿನ್ನರ ಮೇಳಗಳು, ಸಾಗರದ ಉದಯ ಕಲಾವಿದರ ಹಿರಿಯ ತಲೆಮಾರಿನ ಪರಂಪರೆ ಅಲ್ಲಿದೆ. ಅವುಗಳ ಮಧ್ಯೆಯೇ ಹುಟ್ಟಿಕೊಂಡ ‘ಸ್ಪಂದನ’ ಹವ್ಯಾಸಿ ರಂಗ ತಂಡ ಕೂಡ ವಿಭಿನ್ನವಾದ ರಂಗ ಚಟುವಟಿಕೆಗಳನ್ನು ನಡೆಸುತ್ತ, ಸುಮಾರು ಕಾಲು ಶತಮಾನ ಕಂಡಿದೆ. ಕೃಷಿಕರು, ವಿದ್ಯಾರ್ಥಿಗಳು, ವ್ಯಾಪಾರಿಗಳು, ಅಧ್ಯಾಪಕರು ಹೀಗೆ ಬೇರೆ ಬೇರೆ ಹಿನ್ನೆಲೆಯ ರಂಗಾಸಕ್ತರನ್ನೊಳಗೊಂಡ ತಂಡ ಇದುವರೆಗೂ ರಂಗಕ್ಕೆ ತಂದ ನಾಟಕಗಳು ಅರವತ್ತೇಳಕ್ಕೂ ಹೆಚ್ಚು. ಈ ತಂಡದ ಹೊಸ ನಾಟಕ ‘ಪ್ರಾಣ ಪದ್ಮಿನಿ’ ಸುಮಾರು ಹದಿನೈದನೆಯ ಶತಮಾನದ ಕಾಲಮಾನದಲ್ಲಿ ಪೀಸಾದಲ್ಲಿ ನಡೆದ ಯದ್ಧದ ಹಿನ್ನೆಲೆಯಲ್ಲಿ ಕವಿ ಮಾರಿಸ್ ಮ್ಯಾಟರ್ ಲಿಂಕ್, ‘ಮೊನ್ನ ವನ್ನ’ ನಾಟಕ ರಚಿಸಿದ. ಕಮಾಂಡರ್ ಗಿಡೋನ ಪೀಸಾದ ಕೋಟೆಯ ಮೇಲೆ ದಾಳಿ ನಡೆದಿದೆ. ಶತ್ರು ಸೇನೆ ಕೋಟೆಯೊಡೆದು ಒಳಗೆ ಪ್ರವೇಶಿಸುವುದನ್ನು ತಡೆಯಬೇಕೆಂದರೆ ಕಮಾಂಡರ್ನ ಹೆಂಡತಿ ‘ಮೊನ್ನ ವನ್ನ’ ಒಂದು ರಾತ್ರಿ, ತೊಟ್ಟ ನಿಲುವಂಗಿಯ ಮೇಲೆ ಶತ್ರುಪಾಳಯಕ್ಕೆ ಹೋಗಬೇಕು. ಇಂಥದೊಂದು ಎಳೆಯನ್ನಿಟ್ಟುಕೊಂಡು, ಎಸ್.ಜಿ. ಶಾಸ್ತ್ರಿಯವರ ಅನುವಾದದ ಆಧಾರದ ಮೇಲೆ, ಮಂಜುನಾಥ ಎಲ್. ಬಡಿಗೇರ್ ಈ ನಾಟಕ ಬರೆದಿದ್ದಾರೆ. ಈ ನಾಟಕ ಅಪ್ಪಟ ಕನ್ನಡ ನೆಲದ್ದೇ ಎನ್ನುವಷ್ಟು ತಾಜಾ ಆಗಿದೆ. ಇಂಥ ರೂಪಾಂತರಕ್ಕಾಗಿ ಅವರು ಒಂದು ಐತಿಹಾಸಿಕ ಸಂದರ್ಭದ ಮೊರೆ ಹೋಗಿದ್ದಾರೆ. ಅದು ಮೊಗಲರು ವಿಜಯನಗರದ ಮೇಲೆ ನಡೆಸಿದ ದಾಳಿಯ ಸಂದರ್ಭ. ಅವರೇ ಹೇಳಿಕೊಳ್ಳುವ ಹಾಗೆ ಇದು ಇತಿಹಾಸದ ಸತ್ಯ ಘಟನೆಯಲ್ಲ. ರಾಜ, ರಾಣಿ, ಘಟನೆಗಳನ್ನು ನಾಟಕದ ಸಂದರ್ಭಕ್ಕೆ ಹೊಂದಿಕೊಳ್ಳುವುದರಿಂದ ಮಾತ್ರ ಬಳಸಿಕೊಳ್ಳಲಾಗಿದೆ. ಅಲ್ಲಾವುದ್ದೀನ್ನ ಸೇನಾಪತಿ ಅಜ್ಮಲ್ ಖಾನ್, ವಿಜಯನಗರದ ರಾಮರಾಯನ ಕೋಟೆಯ ಮೇಲೆ ದಾಳಿ ಮಾಡಿದ್ದಾನೆ. ವಾರದಿಂದಲೂ ಕೋಟೆಯಾಚೆ ಡೇರೆ ಹಾಕಿ ತಂಗಿದ್ದಾನೆ. ಇತ್ತ ನಿರಂತರ ಯುದ್ಧದಿಂದ ರಾಮರಾಯನ ರಾಜ್ಯ ಬರಿದಾಗಿಹೋಗಿದೆ. ಯುದ್ಧ ಸಾಮಗ್ರಿಗಳಿಲ್ಲ. ಆಹಾರವಿಲ್ಲ. ಜನ ಉಪವಾಸ ನರಳುತ್ತಿದ್ದಾರೆ. ಸೈನಿಕರು ಯುದ್ಧಮಾಡುವ ಸ್ಥಿತಿಯಲ್ಲಿಲ್ಲ. ರಾಜ್ಯದ ತುಂಬ ಹಾಹಾಕಾರ. ಇಂಥ ದುರಂತದ ಸ್ಥಿತಿಯಿಂದ ವಿಜಯನಗರವನ್ನು ಸ್ವತಃ ಅಜ್ಮಲ್ ಖಾನ್ ಮಾತ್ರ ಪಾರುಮಾಡಬಲ್ಲ. ಆತ ಮೊಗಲರನ್ನೇ ಎದುರು ಹಾಕಿಕೊಂಡು ವಿಜಯನಗರವನ್ನೂ ಪ್ರಜೆಗಳನ್ನೂ ಉಳಿಸಬಲ್ಲ. ಆದರೆ ಅದಕ್ಕೆ ಆತನ ಷರತ್ತೊಂದಿದೆ. ರಾಮರಾಯರ ಹೆಂಡತಿ ಪದ್ಮಿನಿ ಒಂದು ರಾತ್ರಿ ಉಟ್ಟ ಬಟ್ಟೆಯಲ್ಲೇ ಅಜ್ಮಲ್ ಖಾನ್ನಲ್ಲಿಗೆ ಬರಬೇಕು’. ರಾಜ್ಯದ ಪ್ರಜೆಗಳ ‘ಪ್ರಾಣ’ ಉಳಿಸಲು ‘ಪದ್ಮಿನಿ’ ಅಜ್ಮಲ್ ಖಾನ್ನಲ್ಲಿ ಹೋಗಲು ಸಿದ್ಧಳಾಗುತ್ತಾಳೆ. ಮುಂದಿನ ಭಾಗದಲ್ಲಿ ನಾಟಕ ಥಟ್ಟನೆ ತಿರುವು ಪಡೆದುಬಿಡುತ್ತದೆ. ನಾಟಕ, ಯುದ್ಧದ ಸಂದರ್ಭದಲ್ಲಿ ರಾಜ್ಯದ ಪ್ರಜೆಗಳು ಪಡುವ ಸಂಕಟ, ನೋವುಗಳು, ಯುದ್ಧದ ಘೋರ ಪರಿಣಾಮಗಳ ಮೇಲೆ ಬೆಳಕು ಚೆಲ್ಲಿದರೆ, ಅಜ್ಮಲ್ ಖಾನ್ನ ಷರತ್ತಿನ ನಂತರದ ಘಟನಾವಳಿಗಳು, ರಾಜಧರ್ಮದ ಕುರಿತಂತೆ, ‘ಮಾನವೋ: ಪ್ರಾಣವೋ’ ಎನ್ನುವ ಸಂಗತಿಗಳ ನಡುವಿನ ಸಂಘರ್ಷದ ವಸ್ತುವಾಗುತ್ತದೆ. ಪ್ರಜೆಗಳ ಪ್ರಾಣ ಉಳಿಸಲು ತಾನೇ ಬಲಿಯಾಗಹೊರಟ ಪದ್ಮಿನಿ ಒಂದು ಹಂತದಲ್ಲಿ ರಾಮರಾಯನ ತಿರಸ್ಕಾರಕ್ಕೂ ಒಳಗಾಗಬೇಕಾಗುತ್ತದೆ. ಆದರೆ ರಾಜಕೀಯ, ಯುದ್ಧ, ಹಿಂಸೆ ಇವುಗಳನ್ನೆಲ್ಲ ಮೀರಿದ ಒಳ ಹರಿವೊಂದಿದೆ. ಅದು ಪ್ರೀತಿ. ಚಿಗುರು ಯೌವನದ ಪ್ರೀತಿ. ಅನಂತರಾಮ, ಪದ್ಮಿನಿಯರ ಪ್ರೀತಿ. ಅದೆಷ್ಟೋ ಕಾಲದಿಂದ ಈ ಪ್ರೀತಿಗಾಗಿ ಹಾತೊರೆಯುತ್ತಿದ್ದ, ಈಗ ಅಜ್ಮಲ್ ಖಾನ್ ಆಗಿರುವ ಅನಂತರಾಮ ಪ್ರೀತಿಗಾಗಿ ಎಂಥ ತ್ಯಾಗಕ್ಕೂ ಸಿದ್ಧನಾಗುತ್ತಾನೆ. ಪದ್ಮಿನಿಯೇ ಆತನ ‘ಪ್ರಾಣ’. ಹಾಗೇ ಪದ್ಮಿನಿಯೂ ಆತನಿಗಾಗಿ ಎಲ್ಲರನ್ನೂ ಎದುರು ಹಾಕಿಕೊಳ್ಳಲು ಸಿದ್ಧ. ಧರ್ಮವನ್ನೂ ಮೀರಿದ ಅವ್ಯಾಜ ಪ್ರೀತಿಯ ದರ್ಶನ ಮಾಡಿಸುತ್ತದೆ ಈ ನಾಟಕ. ಆಶಯವನ್ನೂ, ನಿರೂಪಣೆಯನ್ನೂ ಹೊತ್ತ ಮೇಳ ಗೀತೆಗಳು, ದೃಶ್ಯ ನಿರ್ಮಿತಿಗಳನ್ನು ನಿರ್ದೇಶಕ ಮಂಜುನಾಥ್ ಎಲ್. ಬಡಿಗೇರ್ ಹದವಾಗಿ ಪೋಣಿಸುತ್ತ ಹೋಗುತ್ತಾರೆ. ಕುತೂಹಲಭರಿತವಾದ ನಾಟಕವೊಂದನ್ನು ಕಟ್ಟುತ್ತ ಹೋಗುತ್ತಾರೆ. ಹವ್ಯಾಸಿಗಳಿಗೆ ಹೊಂದುವಂತೆ ನಿಧಾನ ಗತಿಯಲ್ಲಿ ಕಥೆ ಹೇಳುತ್ತ ಹೋಗುವ ಶೈಲಿಯಿದು. ತೀರಾ ಕ್ಲಿಷ್ಟವಾದ ರಂಗಚಲನೆಗಳಿಲ್ಲ. ಆದರೆ ಕಥನ ಮಾತ್ರ ನೇರ, ಸರಳ, ಸ್ಪಷ್ಟ.ಹಾಗಾಗಿಯೇ ನಾಟಕ ಆರಾಮಾಗಿ ನೋಡಿಸಿಕೊಂಡು ಹೋಗುತ್ತದೆ. ನಾಟಕದುದ್ದಕ್ಕೂ ಅಲ್ಲಲ್ಲಿ ಸುಂದರವಾದ ದೃಶ್ಯ ನಿರ್ಮಿತಿಗಳಿವೆ. ಸರಳವಾದ ರಂಗ ಸಜ್ಜಿಕೆ. ಸಮ ಪಾತಳಿ. ಸಾಕಷ್ಟು ರಂಗ ಚಲನೆಯ ಅವಕಾಶ. ಇಂಥದೊಂದು ರಂಗ ಸಜ್ಜಿಕೆಯ ಮೇಲೆ ನಾಟಕ ಬಿಚ್ಚಿಕೊಳ್ಳುತ್ತದೆ. ನಟರೆಲ್ಲ ಇಂಥ ಅವಕಾಶವನ್ನು ಚೆನ್ನಾಗಿಯೇ ಬಳಸಿಕೊಂಡಿದ್ದಾರೆ. ಅಜ್ಮಲ್ ಖಾನ್ನ ಟೆಂಟ್ನ ವಿನ್ಯಾಸ ಚಂದವಿದೆ. ಟೆಂಟ್ನ ಚಿಕ್ಕ ಅವಕಾಶದಲ್ಲೇ ನಾಟಕದ ಮುಖ್ಯ ತಿರುವುಗಳೂ ಘರ್ಷಣೆಗಳೂ ನಡೆಯುತ್ತದೆ. ನಿರ್ದೇಶಕ ಮಂಜುನಾಥ್ ಇಲ್ಲಿಯ ಘಟನೆಗಳನ್ನು ಪ್ರಭಾವಶಾಲಿಯಾಗಿ ಕಟ್ಟಿಕೊಡುತ್ತಾರೆ. ನಟ ನಟಿಯರಿಗೆ ನಾಟಕದ ಯಶಸ್ಸಿನ ಬಹುಪಾಲು ಸಲ್ಲುತ್ತದೆ. ಸಮಾಜದ ಬೇರೆ ಬೇರೆ ಕಡೆಗಳಿಂದ ಬಂದ ಇವರು ಸುಮಾರು ನಲವತ್ತೈದು ದಿನ ನಾಟಕದ ಸಿದ್ಧತೆಯಲ್ಲಿ ತೊಡಗಿಸಿಕೊಳ್ಳುವುದೆಂದರೆ ಸುಲಭವಲ್ಲ. ಅದಮ್ಯ ರಂಗಪ್ರೀತಿಯೊಂದೇ ಇದಕ್ಕೆ ಕಾರಣ. ಮತ್ತು ಅವರ ಕಲಿಕೆಯನ್ನು ಅಷ್ಟೇ ಪ್ರಭಾವಶಾಲಿಯಾಗಿ ರಂಗದ ಮೇಲೆ ತೆರೆದಿಡುತ್ತಾರೆ. ಅಭಿನಯ, ಮಾತುಗಳಲ್ಲಿ ಕಸಬುದಾರಿಕೆಯಿದೆ. ಮುಖ್ಯವಾಗಿ, ಯಾವುದೇ ರೆಪರ್ಟರಿಯ ನಟರಿಗೆ ಕಡಿಮೆಯಿಲ್ಲದಂತೆ ತಮ್ಮ ಅಭಿನಯ ಕೌಶಲವನ್ನು ಪ್ರದರ್ಶಿಸಿದ್ದಾರೆ. ವಿವೇಕ ನಾಯಕ, ಮಹಾಲಕ್ಷ್ಮಿ ಎಸ್., ನಂದಿನಿ ಎನ್., ಶಿವಕುಮಾರ ಉಳವಿ, ಭೂಮಿ, ಕಾರ್ತಿಕ್ ಕೆ., ವಿನಾಯಕ ಡಿ., ದೀಪಕ್ ಡೋಂಗ್ರೆ, ನಿಖಿಲ್ ಎನ್., ಪವನ ಎಸ್. ಮುಖ್ಯಪಾತ್ರಗಳಲ್ಲಿದ್ದಾರೆ. ಸಂಜೀವ್ ಕುಮಾರ್, ಪ್ರತಿಭಾ, ಅಶುತೋಶ್, ಕೀರ್ತಿರಾಜ್ ಮೇಳದಲ್ಲಿದ್ದಾರೆ. ಭಾರ್ಗವ ಹೆಗ್ಗೋಡು, ಅರುಣ ಕುಮಾರ್, ಅಕ್ಷರ ಇಂದ್ರರ ಸಂಗೀತದ ಟೀಮ್ ರಂಗಪ್ರಯೋಗವನ್ನು ಕಳೆಗಟ್ಟಿಸಿದೆ. ಚಕ್ಕಡಿ ಗಾಡಿಗಳು ವಿಜಯನಗರವನ್ನು ಪ್ರವೇಶಿಸುವ ದೃಶ್ಯವನ್ನಂತೂ ಬರಿಯ ಸಂಗೀತ ವಾದ್ಯಗಳಲ್ಲೇ ಕಣ್ಣಿಗೆ ಕಟ್ಟುವಂತೆ ಕಟ್ಟಿಕೊಡುತ್ತಾರೆ. ಹಿರಿಯ ಕಲಾವಿದ ಗುರುಮೂರ್ತಿ ವರದಾಮೂಲರ ವಸ್ತ್ರವಿನ್ಯಾಸ. ಪ್ರವೇಶದಲ್ಲಿ ವಿಜಯನಗರದ ಸ್ಥಿತಿಯನ್ನು ಸಂಕೇತಿಸುವಂತೆ ಕಪ್ಪು ಉಡುಗೆಯಲ್ಲಿ ಬರುವ ಪದ್ಮಿನಿಗೆ ಎರಡನೆಯ ಭಾಗದಲ್ಲಿ ಶುಭ್ರವಾದ ಪ್ರೀತಿಯನ್ನು ಸಂಕೇತಿಸುವಂತೆ ಅಚ್ಚ ಬಿಳಿಯ ಉಡುಗೆ ತೊಡಿಸಿರುವುದು ಗಮನಾರ್ಹವಾಗಿದೆ. ಜೀವನ್ ಕುಮಾರ್ ಹೆಗ್ಗೋಡು ಬೆಳಕಿನ ವಿನ್ಯಾಸ ಮಾಡಿದ್ದಾರೆ. ಪದ್ಮಿನಿ, ಅನಂತರಾಮರ ದೃಶ್ಯದಲ್ಲಿ ಬೆಳಕಿನ ವಿನ್ಯಾಸ ಚಂದವಾಗಿದೆ. ಪ್ರತಿಭಾ ಎಂ.ವಿ. ಸಂಯೋಜನೆಯ ಹೊಣೆ ಹೊತ್ತಿದ್ದಾರೆ. ನಾಟಕದ ಕೊನೆಯ ದೃಶ್ಯದಲ್ಲಿ ಇನ್ನಷ್ಟು ಸ್ಪಷ್ಟತೆ ಬೇಕಿತ್ತೇನೋ ಎನಿಸದಿರದು. ಕೊನೆಯಲ್ಲಿ ಪದ್ಮಿನಿ ಮತ್ತೆ ಮತ್ತೆ ಹೇಳುತ್ತಾಳೆ. ಆಕೆಗೆ ಹೇಳುವುದು ಅನಿವಾರ್ಯವಾಗಿದೆ ಕೂಡ. ‘‘ಆತ ನನ್ನ ಮೈ ಮುಟ್ಟಿಲ್ಲ’’ ಮೂವತ್ತು ಸಾವಿರ ಪ್ರಜೆಗಳ ಪ್ರಾಣ ಉಳಿಸಿದ ಮೇಲೂ ಪದ್ಮಿನಿಗೆ ತನ್ನ ಸ್ತ್ರೀತ್ವದ ಪುರಾವೆ ಕೊಡಬೇಕಾಗಿದೆ.
‘ಲಲಿತ ಮಂಟಪ’ದಲ್ಲಿ 20 ಮಂದಿ ಬೇರೆ ಬೇರೆ ನೃತ್ಯ ಪ್ರಕಾರಗಳಲ್ಲಿ ಸಾಧನೆ ಮಾಡಿದ ಪ್ರತಿಭಾವಂತರೊಡನೆ ಕೋಡಿಬೆಟ್ಟು ರಾಜಲಕ್ಷ್ಮಿಯವರು ಮಾಡಿದ ಮಾತುಕತೆಯ ಸಾರಾಂಶವಿದೆ. ಇವರಲ್ಲಿ 13 ಮಂದಿ ಮಹಿಳೆಯರು ಇದ್ದು, ಅವರಲ್ಲಿ ಇಬ್ಬರು ಮಹಿಳೆಯರು ದ.ಕ. ಜಿಲ್ಲೆಯವರು. ಏಳು ಮಂದಿ ಪುರುಷ ಕಲಾವಿದರಲ್ಲಿ ಇಬ್ಬರು ದ.ಕ. ಜಿಲ್ಲೆಯವರಾಗಿದ್ದಾರೆ. ರಾಜಲಕ್ಷ್ಮಿಯವರು ಮಯೂರ ಮಾಸ ಪತ್ರಿಕೆಯಲ್ಲಿ ಪ್ರಕಟಿಸಿದ ಈ ಸಂದರ್ಶನಗಳು ಲಲಿತ ಮಂಟಪದಲ್ಲಿ ಒಂದು ಗುಚ್ಛವಾಗಿ ಅಹರ್ನಿಶಿ ಪ್ರಕಾಶನದಿಂದ ಪ್ರಕಟಿತಗೊಂಡದ್ದು ಕಲಾಪ್ರೇಮಿಗಳಿಗೆ ರಸದೌತಣವನ್ನೇ ನೀಡಿದೆ. ಮಾನವ ಹೃದಯದಲ್ಲಿರುವ ಒಳ್ಳೆಯ ಗುಣಗಳನ್ನು ಬಹಿರಂಗಗೊಳಿಸುವವನೇ ಕಲಾವಿದ. ಅದರಲ್ಲೂ ನೃತ್ಯವು ಜೀವನದ ಪ್ರತಿಬಿಂಬವಾಗಿರದೆ ಜೀವನವೇ ಆಗಿದೆ. ಅದು ಹೃದಯವನ್ನರಳಿಸುವ ಅಮೋಘ ಕಲೆಯಾಗಿದೆ. ಈ ಲಲಿತ ಮಂಟಪದಲ್ಲಿ ಭಾರತದ ನೃತ್ಯ ಪ್ರಕಾರಗಳಲ್ಲಿ ಮುಖ್ಯವಾದುವುಗಳಲ್ಲಿ ಮತ್ತು ಅದರಲ್ಲಿ ಲೋಕ ವಿಖ್ಯಾತರಾದ ಕೆಲವರೊಂದಿಗೆ ನಡೆಸಿದ ಮಾತುಕತೆಯು ಆಪ್ತವಾಗಿಯೂ ಹೃದಯ ಸ್ಪರ್ಶಿಯೂ ಆಗಿದೆ. ಲಲಿತ ಕಲೆಯು ಯಾವುದೇ ಆಗಿದ್ದರೂ ಅದು ಸಾಧಕರ ಸೊತ್ತು. ಕಲೆಯು ಜೀವನದ ಶೃಂಗಾರ ಮತ್ತು ಸಂಸ್ಕೃತಿಯ ಬಂಗಾರ ಎಂಬ ಮಾತಿದೆ. ಕಲೆಗೂ ಸಂಸ್ಕಾರಕ್ಕೂ ಜೀವ ಭಾವ ಸಂಬಂಧವಿದೆ ಎಂಬುದನ್ನು ಈ ಮಂಟಪದೊಳಗಿನ ಎಲ್ಲಾ ಕಲಾವಿದ/ಕಲಾವಿದೆಯರೂ ಶ್ರುತಪಡಿಸಿದ್ದಾರೆ. ಕಲೆಯು ಯಾವ ಬಹುಮಾನವನ್ನೂ ಬಯಸುವುದಿಲ್ಲ. ಅದು ರಸಿಕರಿಂದ ಎರಡು ಹನಿ ಆನಂದಾಶ್ರುವನ್ನು ಮಾತ್ರ ಬಯಸುತ್ತದೆ. ಅಂತಹ ಸಾಧನೆಯನ್ನು ಮಾಡಬೇಕಾದರೆ ಆಕೆ/ಆತ ತನ್ನ ಇಡೀ ಜೀವನವನ್ನೇ ಕಲೆಗಾಗಿ ಮುಡಿಪಾಗಿಡಬೇಕು. ಆ ಸಾಧನೆಯ ದಾರಿ ಸುಗಮವಾಗಿ ಇರುವುದಿಲ್ಲ. ಹೆಜ್ಜೆ ಹೆಜ್ಜೆಗೂ ಸವಾಲುಗಳು, ನಿಂದೆ, ಅವಮಾನಗಳು ಕಾದು ನಿಂತಿರುತ್ತವೆ. ಸ್ಪಷ್ಟವಾದ ಗುರಿ ಮತ್ತು ದೃಢವಾದ ಮನಸ್ಸು ಇದ್ದವರು ಮಾತ್ರ ಸಾಧನೆಯ ಹಾದಿಯಲ್ಲಿ ಮೇಲೇರುತ್ತಾರೆ ಎಂಬುದಕ್ಕೆ ಈ ಮಂಟಪದ ಸಾಧಕ/ಸಾಧಕಿಯರು ಸಾಕ್ಷಿಯಾಗಿದ್ದಾರೆ. ಒಡಿಸ್ಸಿ ನೃತ್ಯ ಕಲಾವಿದ ರಾಮ್ಲಿ ಇಬ್ರಾಹೀಂ ಧರ್ಮ ಭ್ರಷ್ಟನೆಂದು ಕರೆಸಿಕೊಂಡಿದ್ದರೂ, ಕಲಾವಿದರ ಪಾಲಿಗೆ ದೇವ ತತ್ವಗಳು ಅಂತರಂಗದಲ್ಲೇ ಇರುತ್ತವೆ ಎನ್ನುತ್ತಾರೆ. ಅವರು ಮಲೇಶ್ಯದಲ್ಲಿ ‘ಸೂತ್ರ ಫೌಂಡೇಶನ್’ ಅನ್ನು ಸ್ಥಾಪಿಸಿ ಒಡಿಸ್ಸಿ ನೃತ್ಯಕ್ಕೆ ಜಾಗತಿಕ ವೇದಿಕೆಯನ್ನು ನಿರ್ಮಿಸಿದ್ದಾರೆ. ಭರತನಾಟ್ಯ ಕಲಾವಿದೆ ನರ್ತಕಿ ನಟರಾಜ್ ಟ್ರಾನ್ಸ್ಜೆಂಡರ್ ಆಗಿದ್ದುಕೊಂಡು ಪಟ್ಟ ಪಾಡುಗಳು, ಹಿಂಸೆ, ಅವಮಾನಗಳು, ಗುರುವನ್ನರಸಿ ನಡೆದ ಹಾದಿಯಲ್ಲಿ ಎದುರಾದ ಅಗ್ನಿದಿವ್ಯಗಳ ಕತೆಗಳನ್ನು ಕೇಳಿದಾಗ ನಮ್ಮ ಕಣ್ಣುಗಳು ತೇವಗೊಳ್ಳುತ್ತವೆ. ಈಗ ತಂಜಾವೂರು ಶೈಲಿಯ ‘ನಾಯಕಿ ಭಾವ’ ಪರಂಪರೆಯ ನೃತ್ಯಪಟುವೆಂದು ಖ್ಯಾತಿ ಗಳಿಸಿದ್ದಾರೆ. ಎರಡು ಶತಮಾನಗಳ ಹಿಂದೆ ದೇವಸ್ಥಾನದ ರಂಗ ಮಂಟಪದಲ್ಲಿ ರಾಜರ ಆಸ್ಥಾನಗಳಲ್ಲಿ, ಶ್ರೀಮಂತರ ಖಯಾಲಿಗಾಗಿ ಮಾತ್ರ ಪ್ರದರ್ಶನಗೊಳ್ಳುತ್ತಿದ್ದ ನೃತ್ಯವು ಇಂದು ಸಾರ್ವಜನಿಕ ಮನ್ನಣೆಯನ್ನುಗಳಿಸುವಂತಾಗಲು ರುಕ್ಮಿಣಿ ಅರುಂಡೇಲ್ ಅವರಂತಹ ಸಾಧಕರ ಪರಿಶ್ರಮವು ಗಮನಾರ್ಹವಾಗಿದೆ. ದೇವದಾಸಿಯರ ಸೊತ್ತಾಗಿದ್ದ ಈ ಕಲೆಯನ್ನು ಪರಿಷ್ಕರಿಸಿ ಭರತನಾಟ್ಯವೆಂಬ ಹೆಸರಿನಿಂದ ಜಾಗತಿಕ ಮನ್ನಣೆ ಪಡೆಯಲು ಹಲವಾರು ಪ್ರತಿಭಾವಂತರು ಕಾರಣೀಭೂತರಾಗಿದ್ದಾರೆ. ಮೋಹಿನಿಯಾಟ್ಟಂ ಕಲಾವಿದೆ ನಿರ್ಮಲಾ ಪಣಿಕ್ಕರ್ ಅವರಲ್ಲೊಬ್ಬರು ಪ್ರಾಚೀನ ಕಾಲದ ದೇವಸ್ಥಾನಗಳಲ್ಲಿ ಪ್ರಸ್ತುತಿ ಪಡಿಸುತ್ತಿದ್ದ ನೃತ್ಯ ಪ್ರಕಾರವನ್ನು ಪರಿಷ್ಕರಿಸಿ ಹೊಸ ರೂಪವನ್ನು ನೀಡಿ ವೇದಿಕೆಯಲ್ಲಿ ಪ್ರದರ್ಶಿಸಿದರು. ಹಿಂದಿನ ಕಾಲದ ನೃತ್ಯದಲ್ಲಿದ್ದ ಕೆಲವು ಕೀಳು ಮಟ್ಟದ ನೃತ್ಯವನ್ನು ತ್ಯಜಿಸಿ ಕೇರಳದ ಜಾನಪದ ಮತ್ತು ಆಚರಣಾತ್ಮಕ ಸಂಪ್ರದಾಯಗಳ ಜೊತೆಗೆ ಸಂಪರ್ಕವನ್ನು ಕಲ್ಪಿಸಿದರು. ದೇಸಿ ಶೈಲಿಯ ನೃತ್ಯವನ್ನು ಪ್ರಸ್ತುತಿ ಪಡಿಸಿದ್ದರಿಂದ ಇಂದು ‘ಮೋಹಿನಿಯಾಟ್ಟಂ’ ಜನ ಸಾಮಾನ್ಯರನ್ನೂ ತಲುಪುವಂತಾಗಿದೆ. ರಮಾ ವೈದ್ಯನಾಥನ್ ಕೂಡಾ ಭರತನಾಟ್ಯದ ಗುರುವಾಗಿ ಪ್ರಸಿದ್ಧ್ದರು, ಆಧ್ಯಾತ್ಮಿಕ ಸಾಧನೆಗೆ ನೃತ್ಯವು ಪೂರಕವಾಗಿದೆ ವಿಸ್ತಾರವಾದ ಸಾಹಿತ್ಯ ಜ್ಞಾನವೂ ಅವಶ್ಯಕವೆಂದು ಅವರು ನಂಬಿದ್ದಾರೆ. ಕ್ಷಮಾರಾವ್ ಡಾ.ಶಿವರಾಮ ಕಾರಂತರ ಮಗಳು ಒಡಿಸ್ಸಿ ನೃತ್ಯ ಕಲಾವಿದೆಯಾಗಿ ಖ್ಯಾತಿ ಪಡೆದವರು. ಸಾಹಿತ್ಯಕಲೆ, ಚಿತ್ರಕಲೆ ಮತ್ತು ನೃತ್ಯ ಈ ಮೂರು ಕಲೆಗಳ ಒಡನಾಟದಿಂದ ಬೆಳೆದು ಬಂದ ಇವರ ಸಾಧನೆ ವಿಶಿಷ್ಟವಾದುದು. ತನ್ನ ಗೆಜ್ಜೆಗಳ ಹೆಜ್ಜೆ ಗುರುತುಗಳನ್ನು ಲೇಖಕಿಯೊಂದಿಗೆ ಆಪ್ತವಾಗಿ ದಾಖಲಿಸಿದಾರೆ. ದಕ್ಷಿಣ ಕನ್ನಡದ ವಿಶಿಷ್ಟ ಕಲೆಯಾದ ಯಕ್ಷಗಾನ ಕಲಾವಿದ ಸೂರಿಕುಮೇರು ಗೋವಿಂದ ಭಟ್ ಅವರೊಂದಿಗಿನ ಮಾತುಕತೆಯಲ್ಲಿ ಕಲಾವಿದ ರೂಪುಗೊಳ್ಳಲು ಕಾರಣಗಳನ್ನು ಪ್ರಾಮಾಣಿಕವಾಗಿ ಹಂಚಿಕೊಂಡಿದ್ದಾರೆ. ‘ಹಸಿವು ಕಲೆಯನ್ನು ಅರಸಿತು. ಕಲೆಯು ತನಗೆ ಬದುಕು ಕೊಟ್ಟಿತು’. ಈ ಪಯಣದಲ್ಲಿ ಮುಳ್ಳು ಕಂಠಿಗಳು, ಕಂದಕಗಳು, ಏರು ತಗ್ಗುಗಳನ್ನು ದಾಟಿಬಂದ ಅನುಭವಗಳು ಕಲೆಯನ ಕಲಾವಿದನನ್ನೂ ಗೌರವಿಸುವಂತೆ ಮಾಡುತ್ತವೆೆ. ದ.ಕ. ಜಿಲ್ಲೆಯ ಯಕ್ಷಗಾನದ ತಾಳ ಮದ್ದಳೆಯ ಇನ್ನೋರ್ವ ಕಲಾವಿದ ಡಾ.ಪ್ರಭಾಕರ ಜೋಶಿಯವರೂ ಲೇಖಕಿಯೊಂದಿಗೆ ಲಲಿತ ಮಂಟಪದಲ್ಲಿ ಕುಳಿತು ಮಾತನಾಡಿದ್ದಾರೆ. ತಾಳಮದ್ದಳೆಯ ಕಲಾವಿದರಲ್ಲಿ ‘ಸ್ಟಾರ್ ವ್ಯಾಲ್ಯೂ’ ತಂದು ಕೊಟ್ಟ ಕೆಲವರಲ್ಲಿ ಡಾ.ಪ್ರಭಾಕರ ಜೋಶಿಯವರೂ ಒಬ್ಬರು ವಸುಂಧರಾ ದೊರೆಸ್ವಾಮಿಯವರೂ ದ.ಕ. ಜಿಲ್ಲೆಯವರೇ ಆಗಿದ್ದು ಪಂದನಲ್ಲೂರು ಶೈಲಿಯಲ್ಲಿ ಭರತ ನಾಟ್ಯವನ್ನು ಕಲಿತು ‘ವಸುಂಧರಾ ಬಾನಿ’ ಎಂಬ ಹೊಸ ಶೈಲಿಯನ್ನೇ ಪ್ರಾರಂಭಿಸಿದ ಪ್ರತಿಭಾವಂತೆ. ಕೇರಳದ ಕಲಾ ಮಂಡಲಂನಲ್ಲಿ ನೃತ್ಯ ಕಲಿತು ಭರತನಾಟ್ಯ, ಮೋಹಿನಿಯಾಟ್ಟಂ, ಕೂಚುಪುಡಿ, ಕಥಕಳಿ, ದೇವದಾಸಿಯರಿಂದ ದೇವಾಲಯ ನೃತ್ಯಗಳಲ್ಲಿ ಪರಿಣತಿ ಪಡೆದ ಏಕೈಕ ಕಲಾ ವಿದೆ ಉಷಾ ದಾತಾರ್ ಕನ್ನಡತಿ ಎಂಬುದು ಅಭಿಮಾನದ ವಿಷಯವಾಗಿದೆ. ನೃತ್ಯದಲ್ಲಿ ಅಭಿನಯ ಕಲೆೆಯು ಭಾಷೆಗಿಂತಲೂ ಸ್ಪಷ್ಟವಾಗಿ ಅರ್ಥವಾಗಿರಬೇಕೆಂದು ನಂಬಿದವರು ಮತ್ತು ಅದನ್ನು ಪ್ರಸ್ತುತಪಡಿಸಿದ ಪ್ರತಿಭಾವಂತೆ. ಕಥಕ್ ನೃತ್ಯ ಕಲಾವಿದೆ ಕುಮುದಿನಿ ಲಾಖಿಯಾ ಅವರು ‘ಕದಂಬ ಸೆಂಟರ್ ಫಾರ್ ಡಾನ್ಸ್ ಆಂಡ್ ಮ್ಯೂಸಿಕ್’ ಎಂಬ ಸಂಸ್ಥೆಯನ್ನು ಸ್ಥಾಪಿಸಿ ಸಾವಿರಾರು ನೃತ್ಯ ಪಟುಗಳನ್ನು ತರಬೇತುಗೊಳಿಸುತ್ತಿದ್ದಾರೆ.ಮೂರ್ತವನ್ನು ಅಭಿವ್ಯಕ್ತಿಸುವ ಒಂದು ಪ್ರಯತ್ನವಾಗಿ ‘ಧಬ್ಕರ್’ ನೃತ್ಯ ಕಲಾವಿದೆಯಾಗಿ ಒಂದು ವಿಶಿಷ್ಟ ಶ್ಯೆಲಿಯನ್ನು ಸೃಷ್ಟಿಸಿದ್ದಾರೆ.ನೃತ್ಯ ಪ್ರಕಾರಗಳೆಲ್ಲವೂ ಸಗುಣ ಭಕ್ತಿ ಪರಂಪರೆಯನ್ನೇ ನೆಚ್ಚಿಕೊಂಡವುಗಳಾಗಿವೆ.ಮಂಜರಿಯವರು ನಿರ್ಗುಣ ಭಕ್ತಿ ಪರಂಪರೆಯನ್ನು ನೃತ್ಯದ ಮೂಲಕ ಮುನ್ನೆಲೆಗೆ ತರಲು ಶ್ರಮಿಸಿದರು. ರಾಜನರ್ತಕಿಯರ ಬಗ್ಗೆ ಸಂಶೋಧನೆ ಅಧ್ಯಯನಗಳಲ್ಲಿ ನಿರತರಾಗಿದ್ದುಕೊಂಡು ಕಲಾವಿದನು ಗೆರೆಗಳನ್ನು ಮೀರಿ ನಡೆಯುವುನ್ನು ಕಲಿಯಬೇಕು ಎಂದು ಆಡಿ, ಮಾಡಿ ತೋರಿಸಿದವರು. ಒಡಿಸ್ಸಿ ಮತ್ತು ಭರತನಾಟ್ಯ ಕಲಾವಿದೆಯಾಗಿ ಸೋನಾಲ್ ಮಾನ್ಸಿಂಗ್ ಅವರು ಪ್ರಸಿದ್ಧರು. ಜಯಲಕ್ಷ್ಮೀ ಆಳ್ವ, ಯು.ಎಸ್. ಕೃಷ್ಣರಾವ್-ಚಂದ್ರ ಭಾಗಾದೇವಿ ಮುಂತಾದ ಕನ್ನಡ ನಾಡಿನ ಹೆಸರಾಂತ ನೃತ್ಯ ಗುರುಗಳ ಶಿಷ್ಯೆಯಾಗಿ ಅವರು ಏರಿದ ಎತ್ತರ ಗಮನಾರ್ಹವಾಗಿದೆ. ಕೂಚುಪುಡಿ ನೃತ್ಯ ಕಲಾವಿದ ದಂಪತಿಯ ಸಾಧನೆಯ ಹಿಂದಿನ ದಾರಿ ಸುಗಮವಾಗಿರಲಿಲ್ಲ. ನೃತ್ಯಕ್ಕಾಗಿಯೇ ಈ ದಂಪತಿ ಮನೆಬಿಟ್ಟು ಓಡಿಹೋದ ಕತೆಗೆ ನಾವು ಬೆರಗಾಗುತ್ತೇವೆ.‘‘ಅವಳು ಪ್ರಕೃತಿ, ನಾನು ಪುರುಷ, ನಾಟ್ಯ ನಮ್ಮ ಗುರು’’ ಎಂದು ನಂಬಿ ಬಾಳಿದ ಕಲಾವಿದರಿವರು. ಮಣಿಪುರಿ ನೃತ್ಯದಲ್ಲಿ ಝವೇರಿ ಸೋದರಿಯರು ಪ್ರಸಿದ್ಧರು. ಅವರಲ್ಲಿ ದರ್ಶನಾ ಝವೇರಿ ಲಲಿತ ಮಂಟಪದಲ್ಲಿ ಲೇಖಕಿಯೊಂದಿಗೆ ಮಾತನಾಡುತ್ತಾ ದೇವಸ್ಥಾನದ ಅಂಗಣದಿಂದ ಜಗತ್ತೆಂಬ ವೇದಿಕೆಗೆ ಸಾಗಿ ಬಂದ ನೆನಪುಗಳನ್ನು ಹೇಳುತ್ತಾ ಹೋದಂತೆಲ್ಲಾ ಕಲಾವಿದೆಯು ನೃತ್ಯಕ್ಕಾಗಿ ಇಡೀ ಬದುಕನ್ನೇ ಅರ್ಪಿಸಿದ ಕತೆ ನಮ್ಮ ಮನಸ್ಸನ್ನು ತಟ್ಟುತ್ತದೆ. ಕಥಕಳಿ ಕಲಾವಿದ ಸದನಂ ಪಿ.ವಿ.ಬಾಲಕೃಷ್ಣನ್ ಅವರು ಅಳಿವಿನಂಚಿನಲ್ಲಿದ್ದ ಈ ಕಲೆಯನ್ನು ಉಳಿಸಿ ಬೆಳೆಸಲು ಪಟ್ಟ ಶ್ರಮವನ್ನು ಲೇಖಕಿಯೊಂದಿಗೆ ಹೇಳಿಕೊಂಡಿದ್ದಾರೆ.ಅದೇ ರೀತಿ ಕಟ್ಟೈಕೂತ್ತು ಕಲಾವಿದ ಪಿ.ರಾಜಗೋಪಾಲ್ ಅವರು ತಮಿಳುನಾಡಿನ ಈ ಜನಪದ ಕಲೆಯನ್ನು ಉಳಿಸಲು ತನ್ನೂ ಜೀವನವನ್ನೇ ಅರ್ಪಿಸಿಕೊಂಡಿದ್ದಾರೆ. ‘ಕಟ್ಟೈಕೂತ್ತು ಸಂಗಮ್’ ಎಂಬ ಗುರುಕುಲವನ್ನು ಸ್ಥಾಪಿಸಿ ಆಸಕ್ತರಿಗೆ ತರಬೇತಿ ನೀಡುತ್ತಿದ್ದಾರೆ. ಅವರ ಬಾಳ ಸಂಗಾತಿ ನೆದರ್ಲ್ಯಾಂಡಿನ ಹೆನ್ನೆ ಡಿಬ್ರೂಯಿನ್ ಅವರೂ ಕೂಡಾ ಕಲಾ ಪ್ರಸಾರದ ಕಾರ್ಯದಲ್ಲಿ ಕೈ ಜೋಡಿಸುತ್ತಿದ್ದಾರೆ. ಸತ್ರಿಯಾ ನೃತ್ಯವನ್ನು ಜಾಗತಿಕ ವೇದಿಕೆಗೆ ಒಯ್ಯುವುದಕ್ಕೆ ಶ್ರಮಿಸಿದ ಸತ್ರಿಯಾ ಗುರು ಬಾಯನಾಚಾರ್ಯ ಘನಕಾಂತ ಬೋರಾ ಮುಕ್ತಿಯಾರ್ ಅವರ ಸಾಧನೆ ಪಡೆದ ಸಿದ್ಧಿಯ ಕಥಾನಕವೂ ಹೃದಯಂಗಮಯವಾಗಿದೆ. ವಿಲಾಸಿನಿ ನಾಟ್ಯ ಕಲಾವಿದೆಯೆಂದೇ ಪ್ರಸಿದ್ಧರಾದ ಅನುಪಮಾ ಕೈಲಾಶ್ ಅವರು ನೃತ್ಯಕ್ಕೆ ಸಾಹಿತ್ಯವೇ ಅಂತರ್ಜಲವೆಂದು ದೃಢವಾಗಿ ನಂಬಿದವರು ಭರತನಾಟ್ಯ, ಕೂಚುಪುಡಿ ನೃತ್ಯ ಪ್ರಕಾರದಲ್ಲೂ ಪರಿಣತಿ ಪಡೆದ ಅವರದು ಸಂಶೋಧನೆ ಮತ್ತು ಅಧ್ಯಯನದ ಮೂಲಕ ತನ್ನ ಪ್ರತಿಭೆಗೆ ಪ್ರಕಾಶವನ್ನು ನೀಡಿದವರು. ಭರತನಾಟ್ಯ ಕಲಾವಿದೆಯಾಗಿ ಪ್ರಸಿದ್ಧಿ ಪಡೆದಿರುವ ಇಟಲಿಯ ಲ್ಯುಕ್ರಿಸಿಯಾ ಮ್ಯಾನಿಸ್ಕಾಟಿ ಅವರ ಶ್ರದ್ಧೆ ಮತ್ತು ಪರಿಶ್ರಮವು ಕಲಾವಿದರೆಲ್ಲರಿಗೂ ಮಾದರಿಯಾಗಿದೆ. ಭಾರತೀಯ ಸಂಸ್ಕೃತಿ ಮತ್ತು ಸಾಹಿತ್ಯದ ಅಧ್ಯಯನದಿಂದಾಗಿ ಇಡೀ ಜೀವನವನ್ನೇ ಈ ಕಲೆಗಾಗಿ ಅರ್ಪಿಸಿಕೊಂಡಿದ್ದಾರೆ. ‘ಕಲಾವಿದ ಹಾಲು ಹಿಂಡಿದರೆ ವಿಮರ್ಶಕ ಅದರಿಂದ ಬೆಣ್ಣೆ ಕಡೆಯುವುದೋ ತುಪ್ಪ ಕಾಸುವುದೋ ಕೆಲಸ ಮಾಡುತ್ತಾನೆ’ ಎಂಬ ಮಾತಿದೆ ಈ ಕೆಲಸವನ್ನು ನಿಷ್ಠೆಯಿಂದ ಮಾಡುತ್ತಾ ಬಂದಿರುವ ಕಲಾವಿಮರ್ಶಕ ಅಶೀಷ್ ಮೋಹನ್ ಖೋಕರ್ ಅವರೊಂದಿಗೂ ಲೇಖಕಿ ಮಾತುಕತೆ ನಡೆಸಿದ್ದಾರೆ. ‘ಅಟೆಂಡ್ಯಾನ್ಸ್’ ಎಂಬ ವಾರ್ಷಿಕ ಪತ್ರಿಕೆ ಸಂಪಾದಕರಾಗಿ 24 ವರ್ಷಗಳಿಂದ ಕೆಲಸ ಮಾಡಿದ್ದಾರೆ. ಭಾರತದಲ್ಲಿ ನೃತ್ಯದ ಸ್ಥಿತಿ-ಗತಿಗಳ ಬಗ್ಗೆ ನಿಖರವಾದ ಮಾಹಿತಿಯನ್ನು ಸಂಗ್ರಹಿಸಿ, ಕೆಟ್ಟ ಕಲಾವಿದ ನಾಣ್ಯಗಳನ್ನು ಪರೀಕ್ಷಿಸಿ ಚಲಾವಣೆಗೆ ಬಿಡುವವರು ಮತ್ತು ಕಲೆಗಳಿಗೆ ಒಂದು ಸಂವಿಧಾನವನ್ನು ನೀಡುವ ಕೆಲಸವನ್ನು ಖೋಕರ್ ಅವರು ಮಾಡುತ್ತಿದ್ದಾರೆ. ಲಲಿತ ಮಂಟಪದಲ್ಲಿ ಸಂವಾದ ಮಾಡಿದ ಅಷ್ಟೂ ಮಂದಿ ಕಲಾವಿದರ ನೃತ್ಯ ಪ್ರಕಾರಗಳು ನಮಗೆ ಅಪರಿಚಿತ. ಅವರನ್ನು ಸಂದರ್ಶನ ಮಾಡುವಾಗ ಈ ಕಲಾ ಪ್ರಕಾರಗಳ ಬಗ್ಗೆ ಅಧ್ಯಯನ ಮಾಡಿ, ಕಲಾವಿದರ ನಾಡಿ ಮಿಡಿತವನ್ನು ಆಲಿಸಿ, ಅವರು ಹೃದಯದಾಳದಿಂದ ಮಾತನಾಡುವಂತೆ ಮಾಡಿದ ಲೇಖಕಿ ಕೋಡಿಬೆಟ್ಟು ರಾಜಲಕ್ಷ್ಮಿಯವರಿಗೆ ಕಲಾಪ್ರೇಮಿಗಳು ನಮನಗಳನ್ನು ಸಲ್ಲಿಸುತ್ತಾರೆ. ಆ ಪ್ರತಿಭಾವಂತರೊಂದಿಗೆ ಮಾಡಿದ ಸಂವಾದವೇ ಅವರ ಆತ್ಮಚರಿತ್ರೆ. ಇದು ಅವರ ಬಗ್ಗೆ ನಾವು ಇನ್ನಷ್ಟು ಅರಿಯುವಂತೆ ಪ್ರೇರೇಪಿಸುತ್ತದೆ. ಈ ಸಾಹಿತ್ಯ ಕೃತಿಯ ಯಶಸ್ಸು ಇಂತಹ ಪ್ರತಿಭಾವಂತರ ಮುಖಾಮುಖಿಯಿಂದಾಗಿಯೇ ಮನಸೆಳೆಯುತ್ತದೆ. ಕೃತಿಗಾಗಿ: ಅಹರ್ನಿಶಿ ಪ್ರಕಾಶನ, ಜ್ಞಾನವಿಹಾರ ಬಡಾವಣೆ, ಕಂಟ್ರಿ ಕ್ಲಬ್ ಎದುರು, ವಿದ್ಯಾನಗರ, ಶಿವಮೊಗ್ಗ-577203. ಮೊ:9449174662, 8861100584. ಬೆಲೆ: ರೂ. 270
ಮಾಧವ್ ಗಾಡ್ಗೀಳ್ ಮತ್ತು ಆಂಡ್ರೆ ಬೆಟೈಲ್ ಇಬ್ಬರೂ ದೇಶಭಕ್ತರಾಗಿದ್ದರೂ, ಭಾರತದ ಮೇಲಿನ ತಮ್ಮ ಪ್ರೀತಿಯನ್ನು ಪ್ರದರ್ಶಕ ರೀತಿಯಲ್ಲಿ ತೋರಿಸಲು ಎಂದಿಗೂ ಪ್ರಯತ್ನಿಸಲಿಲ್ಲ. ಅವರು ಹೇಗೆ ಬದುಕಿದರು ಮತ್ತು ಹೇಗೆ ವರ್ತಿಸಿದರು ಎಂಬುದರಲ್ಲಿ, ಎಲ್ಲಾ ವಿದ್ಯಾರ್ಥಿಗಳು ಮತ್ತು ಸಹೋದ್ಯೋಗಿಗಳನ್ನು ಅವರ ಜಾತಿ, ವರ್ಗ, ಲಿಂಗ ಅಥವಾ ಧರ್ಮವನ್ನು ಲೆಕ್ಕಿಸದೆ ಸಮಾನವಾಗಿ ನಡೆಸಿಕೊಳ್ಳುವ ಮೂಲಕ, ಭಾರತೀಯ ಬೌದ್ಧಿಕ ಜೀವನಕ್ಕೆ ಸ್ಥಿರವಾಗಿ ಕೊಡುಗೆ ನೀಡುವುದನ್ನು ಮುಂದುವರಿಸುವ ಮೂಲಕ ಅದನ್ನು ವ್ಯಕ್ತಪಡಿಸಿದರು. ಧಾರ್ಮಿಕ ಅಥವಾ ಆಧ್ಯಾತ್ಮಿಕ ಬೋಧನೆಯನ್ನು ಬಯಸುವವರಿಗೆ ಒಬ್ಬ ಗುರುವಿನ ಅಗತ್ಯವಿರಬಹುದು. ಅವರಿಗೆ ಸರಿಯಾದುದೆಂದು ಕಾಣುವ ಮಾರ್ಗವನ್ನು ಗುರು ತೋರಿಸುತ್ತಾನೆ ಮತ್ತು ನಡೆಸುತ್ತಾನೆ. ಗುರುವನ್ನು ಸೂಚ್ಯವಾಗಿ ಮತ್ತು ಕುರುಡಾಗಿ ಅನುಸರಿಸಲು ಶಿಷ್ಯನಿಗೆ ಹೇಳಲಾಗುತ್ತದೆ. ಆದರೂ, ವಿದ್ವಾಂಸರಾಗಲು ಬಯಸುವವರು ಗುರುವನ್ನು ಹುಡುಕುವುದು ಸೂಕ್ತವಲ್ಲ. ಒಬ್ಬ ವ್ಯಕ್ತಿಯು ಮನಸ್ಸಿನ ಸ್ವಾತಂತ್ರ್ಯವನ್ನು ಹೊಂದಲು, ಬೇರೆಯವರ ಒತ್ತಾಯದ ಮೇರೆಗೆ ಆಗಿರದೆ ಸ್ವಂತ ಬೌದ್ಧಿಕ ಹಿತಾಸಕ್ತಿಗಳಿಗೆ ಅನುಗುಣವಾಗಿ ಸಿದ್ಧಾಂತಗಳು ಮತ್ತು ವಿಧಾನಗಳನ್ನು ಅಳವಡಿಸಿಕೊಳ್ಳಲು ಅಥವಾ ತ್ಯಜಿಸಲು, ಅವರು ಹೆಚ್ಚು ಶಕ್ತಿಶಾಲಿಯಾಗಿದ್ದರೂ ಅಥವಾ (ವಿಶೇಷವಾಗಿ) ಹೆಚ್ಚು ಪ್ರಸಿದ್ಧರಾಗಿದ್ದರೂ, ವಿಮರ್ಶಾತ್ಮಕ ವಿಚಾರಣೆ ಮತ್ತು ಮೂಲ ಸಂಶೋಧನೆಯು ಅಗತ್ಯವಿರುತ್ತದೆ. ದುರಂತವೆಂದರೆ, ಆಧ್ಯಾತ್ಮಿಕ ಹುಡುಕಾಟ ಮತ್ತು ಪಾಂಡಿತ್ಯಪೂರ್ಣ ಅನ್ವೇಷಣೆಯ ನಡುವಿನ ಈ ಪ್ರಮುಖ ವ್ಯತ್ಯಾಸವು ಭಾರತದಲ್ಲಿ ಹೆಚ್ಚಾಗಿ ಮರೆತುಹೋಗಿದೆ. ನಮ್ಮ ದೇಶದ ಶೈಕ್ಷಣಿಕ ಸಂಸ್ಕೃತಿಯು ನಿರಾಶಾದಾಯಕವಾಗಿ ಊಳಿಗಮಾನ್ಯವಾಗಿದೆ. ವಯಸ್ಸಾದವರು ಮತ್ತು ಉನ್ನತ ಸ್ಥಾನಮಾನ ಹೊಂದಿರುವವರು ಗುರುಗಳಾಗಿ ಕಾರ್ಯನಿರ್ವಹಿಸಲು ಬಾಧ್ಯತೆ ಹೊಂದಿರುವುದಾಗಿ ಭಾವಿಸುತ್ತಾರೆ. ವಿಧೇಯತೆಯನ್ನು ಬಯಸುತ್ತಾರೆ ಮತ್ತು ಪ್ರತಿಯಾಗಿ ಗೌರವವನ್ನು ಪಡೆಯುತ್ತಾರೆ. ಈ ಬೌದ್ಧಿಕ ಊಳಿಗಮಾನ್ಯತೆಯು ವಿಜ್ಞಾನಗಳು ಮತ್ತು ಮಾನವಿಕಗಳಲ್ಲಿ ಮತ್ತು ನಂತರ, ಎಲ್ಲಾ ಸೈದ್ಧಾಂತಿಕ ಛಾಯೆಗಳಲ್ಲಿ ಅಸ್ತಿತ್ವದಲ್ಲಿದೆ. ಸೈದ್ಧಾಂತಿಕವಾಗಿ ಮಾರ್ಕ್ಸ್ವಾದವು ಸಾಮಾಜಿಕ ಶ್ರೇಣಿ ವ್ಯವಸ್ಥೆಗಳಿಗೆ ವಿರುದ್ಧವಾಗಿದೆ. ಆದರೆ ಪ್ರಾಯೋಗಿಕವಾಗಿ ಕೋಲ್ಕತಾದ ಮಾರ್ಕ್ಸ್ವಾದಿ ಪ್ರಾಧ್ಯಾಪಕರು ವಾರಣಾಸಿಯ ಸಂಪ್ರದಾಯವಾದಿ ಹಿಂದೂ ದೃಷ್ಟಿಕೋನದ ಪ್ರಾಧ್ಯಾಪಕರಿಗಿಂತ ತಮ್ಮ ಕಿರಿಯ ಸಹೋದ್ಯೋಗಿಗಳ ಕಡೆಗೆ ಕಡಿಮೆ ಶ್ರೇಣೀಕೃತವಾದವರೇನೂ ಆಗಿರಲಿಲ್ಲ. ಯುವ ವಿದ್ವಾಂಸರು ಒಂದೇ ಗುರುವಿನ ಹುಡುಕಾಟದಲ್ಲಿ ಇರಬಾರದು. ಆದರೆ ಅವರು ಪ್ರಾರಂಭಿಸುವಾಗ ತಮಗಿಂತ ಹಿರಿಯ ವಿದ್ವಾಂಸರೊಂದಿಗೆ ಸಂವಹನ ನಡೆಸುವುದರಿಂದ ಇನ್ನೂ ಪ್ರಯೋಜನ ಪಡೆಯಬಹುದು. ಈ ಹೆಚ್ಚು ಅನುಭವಿ ಕೈಗಳು ಆರಂಭಿಕ ಸಂಶೋಧಕರಿಗೆ ಸುಳಿವುಗಳು, ದೃಷ್ಟಿಕೋನಗಳು ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ವಿಮರ್ಶಾತ್ಮಕ ಪ್ರತಿಕ್ರಿಯೆಯನ್ನು ಒದಗಿಸಬಹುದು. ಅವರು ಮಾರ್ಗದರ್ಶಕರು, ಸಲಹೆಗಾರರು, (ತಾತ್ಕಾಲಿಕವಾಗಿ) ಸಲಹೆಗಾರರೂ ಆಗಿರಬಹುದು, ಆದರೆ ಗುರುಗಳಾಗಲು ಸಾಧ್ಯವಿಲ್ಲ. ತಮ್ಮ ಹಿರಿಯರು ಏನು ಹೇಳುತ್ತಾರೆಂದು ಗಮನವಿಟ್ಟು ಕೇಳುವಾಗ, ಅಂತಿಮವಾಗಿ ಯಾವ ನಿರ್ದಿಷ್ಟ ಸಂಶೋಧನಾ ಸಮಸ್ಯೆಯೊಂದಿಗೆ ಮತ್ತು ಯಾವ ನಿರ್ದಿಷ್ಟ ರೀತಿಯಲ್ಲಿ ತೊಡಗಿಸಿಕೊಳ್ಳಬೇಕೆಂದು ನಿರ್ಧರಿಸುವುದು ವೈಯಕ್ತಿಕವಾಗಿ ವಿದ್ವಾಂಸರಿಗೆ ಬಿಟ್ಟದ್ದು. ಬೌದ್ಧಿಕ ಅಭ್ಯಾಸದ ಕುರಿತಾದ ಈ ಪ್ರತಿಬಿಂಬಗಳು ನಾನು ಚಿಕ್ಕವನಿದ್ದಾಗ ನನ್ನ ಮೇಲೆ ಹೆಚ್ಚು ಪ್ರಭಾವ ಬೀರಿದ ಇಬ್ಬರು ಹಿರಿಯ ವಿದ್ವಾಂಸರ ಸಾವುಗಳಿಂದ ಪ್ರೇರೇಪಿಸಲ್ಪಟ್ಟಿವೆ. ಒಬ್ಬರು ಜನವರಿ 7ರಂದು ಪುಣೆಯಲ್ಲಿ ನಿಧನರಾದ ಎಂಭತ್ತಮೂರು ವರ್ಷದ ಪರಿಸರಶಾಸ್ತ್ರಜ್ಞ ಮಾಧವ ಗಾಡ್ಗೀಳ್. ಮತ್ತೊಬ್ಬರು ಫೆಬ್ರವರಿ 3ರಂದು ದಿಲ್ಲಿಯಲ್ಲಿ ನಿಧನರಾದ ತೊಂಭತ್ತೊಂದು ವರ್ಷದ ಸಮಾಜಶಾಸ್ತ್ರಜ್ಞ ಆಂಡ್ರೆ ಬೆಟೈಲ್. ನಾನು ಮೊದಲು ಗಾಡ್ಗೀಳ್ ಅವರನ್ನು ಭೇಟಿಯಾದದ್ದು 1982ರಲ್ಲಿ. ಆಗ ನನಗೆ ಇಪ್ಪತ್ತನಾಲ್ಕು ವರ್ಷ, ಅವರಿಗೆ ನಲವತ್ತು ವರ್ಷ. ನಾನು ಮೊದಲು ಬೆಟೈಲ್ ಅವರನ್ನು 1988ರಲ್ಲಿ ಭೇಟಿಯಾದೆ. ಆಗ ನನಗೆ ಮೂವತ್ತು ವರ್ಷ ತುಂಬಿತ್ತು ಮತ್ತು ಅವರು ಐವತ್ತರ ಮಧ್ಯದಲ್ಲಿದ್ದರು. ನಮ್ಮ ವಯಸ್ಸಿನ ವ್ಯತ್ಯಾಸವಿದ್ದರೂ, ನಾನು ತಕ್ಷಣವೇ ಇಬ್ಬರೊಂದಿಗೂ ಸ್ನೇಹ ಬೆಳೆಸಿಕೊಂಡೆ. ಇದು ಬಹುತೇಕ ಅವರ ಮರಣದವರೆಗೂ ಮುಂದುವರಿಯಿತು. ನಾವು ಸಾಂದರ್ಭಿಕವಾಗಿ ನಮ್ಮ ಕುಟುಂಬಗಳ ಬಗ್ಗೆ ಮಾತನಾಡುತ್ತಿದ್ದೆವು. ಆದರೆ ಪ್ರಾಧ್ಯಾಪಕರಾದ ಗಾಡ್ಗೀಳ್ ಮತ್ತು ಬೆಟೈಲ್ ಅವರೊಂದಿಗಿನ ನನ್ನ ಮಾತುಕತೆಗಳ ಹೆಚ್ಚಿನ ಭಾಗಗಳು ಸಮಾಜ, ರಾಜಕೀಯ, ಸಂಸ್ಕೃತಿ, ಇತಿಹಾಸ, ಪರಿಸರ ವಿಜ್ಞಾನ, ಭಾರತ ಮತ್ತು ಪ್ರಪಂಚದ ಬಗ್ಗೆ ಇದ್ದವು. ಮೊದಲ ನೋಟದಲ್ಲೇ, ಮಾಧವ್ ಗಾಡ್ಗೀಳ್ ಮತ್ತು ಆಂಡ್ರೆ ಬೆಟೈಲ್ ಅವರನ್ನು ಪ್ರತ್ಯೇಕಿಸುವ ಬಹಳಷ್ಟು ವಿಷಯಗಳಿವೆ. ಗಾಡ್ಗೀಳ್ ಒಬ್ಬ ವಿಜ್ಞಾನಿ, ಆದರೆ ಬೆಟೈಲ್ ವಿಜ್ಞಾನಿಯಲ್ಲ. ಗಾಡ್ಗೀಳ್ ಇಂಗ್ಲಿಷ್ ಕಲಿಯುವ ಮೊದಲೇ ಪುಣೆಯಲ್ಲಿ ಮರಾಠಿ ಮಾತನಾಡುತ್ತಾ ಬೆಳೆದರು. ಬೆಟೈಲ್ ಅವರ ತಂದೆ ಫ್ರೆಂಚ್ ಆಗಿದ್ದರೂ, ಅವರು ತಮ್ಮ ತಾಯಿಯ ಕುಟುಂಬದ ಕಡೆಯವರಾದ ಬಂಗಾಳಿಯೊಂದಿಗೆ ಹೆಚ್ಚು ಗುರುತಿಸಿಕೊಂಡರು. ಅವರು ಚಂದನಗೋರಿನಲ್ಲಿ ಬೆಳೆದರು ಮತ್ತು ಹೆಚ್ಚಾಗಿ ಕಲ್ಕತ್ತಾದಲ್ಲಿ ಶಿಕ್ಷಣ ಪಡೆದರು. ಶಾಲೆ ಮತ್ತು ಕಾಲೇಜಿನಲ್ಲಿ ಇಂಗ್ಲಿಷ್ ಮತ್ತು ಸ್ನೇಹಿತರೊಂದಿಗೆ ಬೀದಿಯಲ್ಲಿ ಬಂಗಾಳಿ ಮಾತನಾಡುತ್ತಿದ್ದರು. ಬೆಟೈಲ್ ತಮ್ಮ ಡಾಕ್ಟರೇಟ್ ಪದವಿಯನ್ನು ಭಾರತದಲ್ಲಿ ಪಡೆದರು. ಆದರೆ ಗಾಡ್ಗೀಳ್ ಅಮೆರಿಕದಲ್ಲಿ ಪಡೆದರು. ಗಾಡ್ಗೀಳ್ ತಮ್ಮ ವೃತ್ತಿಜೀವನದ ಬಹುಭಾಗವನ್ನು ಬೆಂಗಳೂರಿನಲ್ಲಿ ಕಳೆದರು. ಆದರೆ ಬೆಟೈಲ್ ದಿಲ್ಲಿಯಲ್ಲಿ ಇದ್ದರು. ಅಂತಿಮವಾಗಿ, ಗಾಡ್ಗೀಳ್ ಮತ್ತು ಬೆಟೈಲ್ ಎಂದಿಗೂ ಭೇಟಿಯಾಗಲಿಲ್ಲ ಮತ್ತು ಅವರಿಬ್ಬರೂ ಈ ಬರಹಗಾರನ ಮೂಲಕ ಹೆಚ್ಚಾಗಿ ಪರಸ್ಪರ ತಿಳಿದಿದ್ದರು. ಅವರ ವೃತ್ತಿಜೀವನವನ್ನು ನೋಡಿದಾಗ, ನಾನು ಗಮನಾರ್ಹ ಹೋಲಿಕೆಗಳನ್ನು ಕಾಣಬಹುದು ಎಂದು ಭಾವಿಸುತ್ತೇನೆ. ಅವರ ಬೌದ್ಧಿಕ ದೃಷ್ಟಿಕೋನ ಮತ್ತು ವಿದ್ವತ್ಪೂರ್ಣ ಅಭ್ಯಾಸದ ವಿಷಯದಲ್ಲಿ, ಮಾಧವ್ ಗಾಡ್ಗೀಳ್ ಮತ್ತು ಆಂಡ್ರೆ ಬೆಟೈಲ್ ಅವರನ್ನು ಒಟ್ಟಿಗೆ ತಂದ ಹತ್ತು ವೈಶಿಷ್ಟ್ಯಗಳನ್ನು ನಾನು ಗುರುತಿಸುತ್ತೇನೆ. ಮೊದಲನೆಯದಾಗಿ, ಇಬ್ಬರೂ ಪಾಂಡಿತ್ಯದ ವಿಧಾನದಲ್ಲಿ ನಿಜವಾಗಿಯೂ ಅಂತರ್ ಶಿಸ್ತಿನವರಾಗಿದ್ದರು. ಬೆಟೈಲ್ ಒಬ್ಬ ಸಮಾಜಶಾಸ್ತ್ರಜ್ಞರಾಗಿದ್ದು, ಇತಿಹಾಸಕಾರರು, ಅರ್ಥಶಾಸ್ತ್ರಜ್ಞರು ಮತ್ತು ಕಾನೂನು ವಿದ್ವಾಂಸರೊಂದಿಗೆ ಸಂವಹನ ನಡೆಸಿದರು. ಗಾಡ್ಗೀಳ್ ಒಬ್ಬ ಪರಿಸರಶಾಸ್ತ್ರಜ್ಞರಾಗಿದ್ದು, ಮಾನವಶಾಸ್ತ್ರಜ್ಞರು ಮತ್ತು ಇತಿಹಾಸಕಾರರೊಂದಿಗೆ ಸಹಯೋಗದ ಸಂಶೋಧನೆ ನಡೆಸಲು ವಿಜ್ಞಾನ/ಮಾನವಿಕ ವಿಭಾಗವನ್ನು ತಲುಪಿದರು. ಎರಡನೆಯದಾಗಿ, ಅವರ ಕೆಲಸದಲ್ಲಿ ಇಬ್ಬರೂ ಸಿದ್ಧಾಂತ ಮತ್ತು ಪ್ರಾಯೋಗಿಕ ಸಂಶೋಧನೆಯನ್ನು ಒಟ್ಟುಗೂಡಿಸಿದರು. ಕುತೂಹಲಕಾರಿಯಾಗಿ, ಬೆಟೈಲ್ ಜನಾಂಗಶಾಸ್ತ್ರಜ್ಞರಾಗಿ ತರಬೇತಿ ಪಡೆದರು. ಆದರೆ ನಂತರ ತುಲನಾತ್ಮಕ ಸಮಾಜಶಾಸ್ತ್ರದತ್ತ ತಿರುಗಿದರು. ಆದರೆ ಗಾಡ್ಗೀಳ್ ಪ್ರಕೃತಿಯೊಂದಿಗೆ ಮಾನವ ಸಂವಹನದ ವೈವಿಧ್ಯದ ಕುರಿತು ಕ್ಷೇತ್ರ ಅಧ್ಯಯನಗಳನ್ನು ನಡೆಸುವ ಮೊದಲು ಪರಿಸರ ವಿಜ್ಞಾನದಲ್ಲಿ ಹೆಚ್ಚು ಸೈದ್ಧಾಂತಿಕ ವಿಧಾನವನ್ನು ಪ್ರಾರಂಭಿಸಿದರು. ಮೂರನೆಯದಾಗಿ, ಇಬ್ಬರೂ ಬೋಧನೆ ಮತ್ತು ಸಂಸ್ಥೆ ನಿರ್ಮಾಣಕ್ಕೆ ಆಳವಾದ ಬದ್ಧತೆಯನ್ನು ಹೊಂದಿದ್ದರು. ಪ್ರತಿಯೊಬ್ಬರೂ ಮೂವತ್ತು ವರ್ಷಗಳಿಗೂ ಹೆಚ್ಚು ಕಾಲ ಒಂದೇ ಸಂಸ್ಥೆಯಲ್ಲಿ ಕಳೆದರು. ಬೆಟೈಲ್ ದಿಲ್ಲಿ ವಿಶ್ವವಿದ್ಯಾನಿಲಯದೊಂದಿಗೆ (ಮತ್ತು ನಿರ್ದಿಷ್ಟವಾಗಿ ಅದರ ಸಮಾಜಶಾಸ್ತ್ರ ವಿಭಾಗದೊಂದಿಗೆ) ನಿಕಟವಾಗಿ ಗುರುತಿಸಿಕೊಂಡರು. ಗಾಡ್ಗೀಳ್ ಭಾರತೀಯ ವಿಜ್ಞಾನ ಸಂಸ್ಥೆಯೊಂದಿಗೆ (ಮತ್ತು ನಿರ್ದಿಷ್ಟವಾಗಿ ಅದರ ಪರಿಸರ ವಿಜ್ಞಾನ ಕೇಂದ್ರದೊಂದಿಗೆ) ಸ್ಪಷ್ಟ ಬಾಂಧವ್ಯವನ್ನು ಹೊಂದಿದ್ದರು. ನಾಲ್ಕನೆಯದಾಗಿ, ಅಕಾಡಮಿಯನ್ನು ಮೀರಿದ ವಿಶಾಲ ಸಾರ್ವಜನಿಕರೊಂದಿಗೆ ಸಕ್ರಿಯವಾಗಿ ತೊಡಗಿಸಿಕೊಂಡರು. ಇಬ್ಬರೂ ಬೌದ್ಧಿಕ ಪ್ರವೃತ್ತಿಗಳನ್ನು ಹೊಂದಿಸುವ ಶೈಕ್ಷಣಿಕ ಪುಸ್ತಕಗಳು ಮತ್ತು ಸಂಶೋಧನಾ ಪ್ರಬಂಧಗಳನ್ನು ಪ್ರಕಟಿಸಿದರು. ಆದರೆ ಇಬ್ಬರೂ ಪತ್ರಿಕೆಗಳಿಗೆ ಆಗಾಗ ಬರೆದರು. ತಮ್ಮ ಸಹ ನಾಗರಿಕರಿಗೆ ತಮ್ಮ ಪಾಂಡಿತ್ಯದ ಫಲಗಳು ಸಿಗುವಂತೆ ಮಾಡಿದರು. ಆದರೂ, ಗಮನಾರ್ಹವಾಗಿ ಅವರು ತಮ್ಮನ್ನು ಹೋರಾಟಗಾರ ಅಥವಾ ಚಿಂತಕ ಎಂದು ಭಾವಿಸಲಿಲ್ಲ. ಅವರು ತಮ್ಮ ಸಾರ್ವಜನಿಕ ತೊಡಗಿಸಿಕೊಳ್ಳುವಿಕೆಯನ್ನು ತಾವು ಸಂಶೋಧನೆ ಮಾಡಿದ ಕ್ಷೇತ್ರಗಳಿಗೆ ಸೀಮಿತಗೊಳಿಸಿದರು. ಐದನೆಯದಾಗಿ, ಇಬ್ಬರೂ ತಮ್ಮ ವೃತ್ತಿಜೀವನದ ಆರಂಭದಲ್ಲಿ ತಮ್ಮ ಸ್ಥಳೀಯ ಪ್ರಾಂತದ ಹೊರಗೆ ಸ್ಥಳಾಂತರಗೊಳ್ಳುವ ಮೂಲಕ ತಮ್ಮ ಬೌದ್ಧಿಕ ಪ್ರಪಂಚಗಳನ್ನು ವಿಸ್ತರಿಸಿಕೊಂಡರು. ಬೆಟೈಲ್ ಕಲ್ಕತ್ತಾದಲ್ಲಿ ಅಲ್ಲ, ದಿಲ್ಲಿಯಲ್ಲಿ ಮತ್ತು ಗಾಡ್ಗೀಳ್ ಪುಣೆಯಲ್ಲಿ ಅಲ್ಲ, ಬೆಂಗಳೂರಿನಲ್ಲಿ ಕೆಲಸ ಮಾಡಿದ ಕಾರಣ, ಅವರು ತಮ್ಮ ಜೀವನವನ್ನು ಹೆಚ್ಚಾಗಿ ತಮ್ಮ ರಾಜ್ಯದಲ್ಲಿ ಕಳೆಯುವ ಭಾರತೀಯ ಬುದ್ಧಿಜೀವಿಗಳಿಗಿಂತ ವಿಶಾಲವಾದ ದೃಷ್ಟಿಕೋನವನ್ನು ಹೊಂದಿದ್ದರು. ಬೆಟೈಲ್ ಅವರ ಅತ್ಯಂತ ತೀವ್ರವಾದ ಕ್ಷೇತ್ರಕಾರ್ಯವು ತಮಿಳುನಾಡಿನಲ್ಲಿ ನಡೆಯಿತು ಮತ್ತು ಗಾಡ್ಗೀಳ್ ಅವರ ಕ್ಷೇತ್ರಕಾರ್ಯವು ಕರ್ನಾಟಕ ಮತ್ತು ಕೇರಳದಲ್ಲಿ ನಡೆಯಿತು. ಆದರೂ, ಇಬ್ಬರೂ ತಮ್ಮ ಸ್ಥಳೀಯ ನೆಲಗೊಂದಿಗಿನ ಸಂಪರ್ಕವನ್ನು ಕಳೆದುಕೊಳ್ಳಲಿಲ್ಲ. ಗಾಡ್ಗೀಳ್ ಮರಾಠಿ ಪತ್ರಿಕೆಗಾಗಿ ಬರೆದರು ಮತ್ತು ತಮ್ಮ ಕೊನೆಯ ವರ್ಷಗಳನ್ನು ತಮ್ಮ ಊರಿನಲ್ಲಿ ಕಳೆದರು. ಆದರೆ ಬೆಟೈಲ್ ತಮ್ಮ ಶಿಕ್ಷಕ ನಿರ್ಮಲ್ ಕುಮಾರ್ ಬೋಸ್ ಅವರ ಕ್ಲಾಸಿಕ್ ಬಂಗಾಳಿ ಪಠ್ಯವನ್ನು ಇಂಗ್ಲಿಷ್ಗೆ ಅನುವಾದಿಸಿದರು. ಜೊತೆಗೆ ಪತ್ರಿಕೆಗಾಗಿ ಕೆಲವು ಲೇಖನಗಳನ್ನು ಬರೆದರು. ಆರನೆಯದಾಗಿ, ಇಬ್ಬರೂ ಭಾರತದ ಹೊರಗಿನ ಪ್ರಪಂಚದಲ್ಲಿ ಕುತೂಹಲ ಹೊಂದಿದ್ದರು. ಎಲ್ಲಾ ರಾಷ್ಟ್ರೀಯತೆಗಳ ವಿದ್ವಾಂಸರೊಂದಿಗೆ ತೊಡಗಿಸಿಕೊಳ್ಳಲು ಮತ್ತು ಅವರ ಕೃತಿಗಳನ್ನು ಹತ್ತಿರದಿಂದ ಓದಲು ಉತ್ಸುಕರಾಗಿದ್ದರು. ಹೀಗೆ ಅವರು ಸ್ಪಷ್ಟವಾಗಿ ಪ್ಯಾನ್-ಇಂಡಿಯನ್ ಮತ್ತು ಅವರ ಬೌದ್ಧಿಕ ಹಿತಾಸಕ್ತಿಗಳಲ್ಲಿ ಸಮರ್ಥವಾಗಿ ಅಂತರ್ರಾಷ್ಟ್ರೀಯವಾದಿಗಳಾಗಿದ್ದರು. ಏಳನೆಯದಾಗಿ, ಮಾನಸಿಕ ಸಂಕುಚಿತತೆ ಇಲ್ಲದೆ ಇರುವಾಗಲೂ, ಇಬ್ಬರೂ ಭಾರತದಲ್ಲಿ ವಾಸಿಸಲು ಮತ್ತು ಕೆಲಸ ಮಾಡಲು ಮತ್ತು ಅದರ ಬೌದ್ಧಿಕ ಜೀವನಕ್ಕೆ ಕೊಡುಗೆ ನೀಡಲು ಬಯಸಿದರು. ಗಾಡ್ಗೀಳ್ ತಮ್ಮ ತಾಯ್ನಾಡಿಗೆ ಮರಳಲು ಹಾರ್ವರ್ಡ್ ವಿಶ್ವವಿದ್ಯಾನಿಲಯದಲ್ಲಿನ ಕೆಲಸವನ್ನು ತೊರೆದರು. ಬೆಟೈಲ್ ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯ ಮತ್ತು ಕ್ಯಾಲಿಫೋರ್ನಿಯಾ ವಿಶ್ವವಿದ್ಯಾನಿಲಯದಲ್ಲಿ ಪ್ರಾಧ್ಯಾಪಕ ಹುದ್ದೆಗಳ ಕೊಡುಗೆಗಳನ್ನು ನಿರಾಕರಿಸಿ, ದಿಲ್ಲಿಯಲ್ಲಿಯೇ ಉಳಿಯುವುದನ್ನು ಆಯ್ಕೆ ಮಾಡಿಕೊಂಡರು. ಎಂಟನೆಯದಾಗಿ, ಇಬ್ಬರೂ ದೇಶಭಕ್ತರಾಗಿ ದ್ದರೂ, ಭಾರತದ ಮೇಲಿನ ತಮ್ಮ ಪ್ರೀತಿಯನ್ನು ಪ್ರದರ್ಶಕ ರೀತಿಯಲ್ಲಿ ತೋರಿಸಲು ಎಂದಿಗೂ ಪ್ರಯತ್ನಿಸಲಿಲ್ಲ. ಅವರು ಹೇಗೆ ಬದುಕಿದರು ಮತ್ತು ಹೇಗೆ ವರ್ತಿಸಿದರು ಎಂಬುದರಲ್ಲಿ, ಎಲ್ಲಾ ವಿದ್ಯಾರ್ಥಿಗಳು ಮತ್ತು ಸಹೋದ್ಯೋಗಿಗಳನ್ನು ಅವರ ಜಾತಿ, ವರ್ಗ, ಲಿಂಗ ಅಥವಾ ಧರ್ಮವನ್ನು ಲೆಕ್ಕಿಸದೆ ಸಮಾನವಾಗಿ ನಡೆಸಿಕೊಳ್ಳುವ ಮೂಲಕ, ಭಾರತೀಯ ಬೌದ್ಧಿಕ ಜೀವನಕ್ಕೆ ಸ್ಥಿರವಾಗಿ ಕೊಡುಗೆ ನೀಡುವುದನ್ನು ಮುಂದುವರಿಸುವ ಮೂಲಕ ಅದನ್ನು ವ್ಯಕ್ತಪಡಿಸಿದರು. ಒಂಭತ್ತನೆಯದಾಗಿ, ಅವರ ದೇಶಪ್ರೇಮವು ತಮ್ಮ ದೇಶವು ಮಾಡಿದ ಅಥವಾ ನಿಂತಿರುವ ಎಲ್ಲದರ ಬಗ್ಗೆ ಕುರುಡು, ಅವಿಚಾರದ ಭಕ್ತಿಯನ್ನು ಒಳಗೊಂಡಿರಲಿಲ್ಲ. ತಮ್ಮ (ಅಥವಾ ಅವರ) ರಾಜ್ಯ ಅಥವಾ ಸರಕಾರವು ತಮ್ಮ ಸಹ ನಾಗರಿಕರ ವಿರುದ್ಧ ಅಪರಾಧಗಳನ್ನು ಮಾಡಿದರೆ ನಾಚಿಕೆಪಡಲು ಅಸಮರ್ಥನಾದ ಯಾರೂ ನಿಜವಾದ ರಾಷ್ಟ್ರೀಯವಾದಿಯಾಗಲು ಸಾಧ್ಯವಿಲ್ಲ ಎಂಬ ಐರಿಶ್ ವಿದ್ವಾಂಸ ಬೆನೆಡಿಕ್ಟ್ ಆಂಡರ್ಸನ್ ಅವರ ಹೇಳಿಕೆಯನ್ನು ಇಬ್ಬರೂ ಒಪ್ಪುತ್ತಿದ್ದರು. ಭಾರತೀಯ ಸಮಾಜದಲ್ಲಿ ವ್ಯಾಪಕವಾದ ಅಸಮಾನತೆಗಳ ಬಗ್ಗೆ ಬೆಟೈಲ್ ಮತ್ತು ಗಾಡ್ಗೀಳ್ ಇಬ್ಬರೂ ನಾಚಿಕೆಪಡುತ್ತಿದ್ದರು ಮತ್ತು ಅವರ ಶೈಕ್ಷಣಿಕ ಮತ್ತು ಜನಪ್ರಿಯ ಬರವಣಿಗೆಯಲ್ಲಿ ಅವುಗಳತ್ತ ಗಮನ ಸೆಳೆಯಲು ಪ್ರಯತ್ನಿಸಿದರು. ಕೊನೆಗೆ, ಅವರ ಅನೇಕ ಸಹ ಪ್ರಾಧ್ಯಾಪಕರಿಗಿಂತ ಭಿನ್ನವಾಗಿ, ಬೆಟೈಲ್ ಅಥವಾ ಗಾಡ್ಗೀಳ್ ಗುರುಗಳಾಗಲು ಬಯಸಲಿಲ್ಲ. ಅವರ ಸುತ್ತಲೂ ಆರಾಧಿಸುವ ಚೇಲಾಗಳ ವಲಯವಿತ್ತು. ಹಿರಿಯ ವಿದ್ವಾಂಸರು ತಮ್ಮ ಬುದ್ಧಿವಂತಿಕೆ ಮತ್ತು ಅನುಭವದ ಪ್ರಯೋಜನವನ್ನು ಒದಗಿಸಬಹುದಾದರೂ, ಕಿರಿಯ ವಿದ್ವಾಂಸರಲ್ಲಿ ಸಾಮಾನ್ಯವಾಗಿ ಕಂಡುಬರುವ ಉತ್ಸಾಹ ಮತ್ತು ಬೌದ್ಧಿಕ ಅಪಾಯವನ್ನೆಳೆದುಕೊಳ್ಳುವಿಕೆಯಿಂದ ಅವರು ಏನನ್ನಾದರೂ ಪಡೆಯಬಹುದು ಎಂದು ಇಬ್ಬರೂ ಅರ್ಥಮಾಡಿಕೊಂಡರು. ಇದು ಅವರ ಉದಾರವಾದದ ಒಂದು ಭಾಗವಾಗಿತ್ತು. ರಾಜಕೀಯ ಮತ್ತು ಬೌದ್ಧಿಕ ಪರಿಭಾಷೆಯಲ್ಲಿ ಅವರು ಕಠಿಣ ಅಥವಾ ಸಿದ್ಧಾಂತವಾದಿಯಾಗಿರಲಿಲ್ಲ. ಯಾವುದೇ ನಿರ್ದಿಷ್ಟ ಸಿದ್ಧಾಂತಕ್ಕೆ ಬದ್ಧರಾಗಿರಲಿಲ್ಲ ಮತ್ತು ಭಾರತ ಮತ್ತು ಪ್ರಪಂಚವನ್ನು ಅರ್ಥಮಾಡಿಕೊಳ್ಳಲು ಮುಕ್ತ ಮನಸ್ಸಿನ ವಿಧಾನವನ್ನು ಅನುಸರಿಸುತ್ತಿದ್ದರು. ಗುರುಕುಲ ಅಥವಾ ಪಕ್ಷದ ಶಾಲೆಯಲ್ಲಿ, ಹೊಸಬ ಅಥವಾ ಹೊಸದಾಗಿ ನೇಮಕಗೊಂಡವರಿಗೆ ಸೂಚನೆ ನೀಡಲಾಗುತ್ತದೆ, ಆದೇಶಿಸಲಾಗುತ್ತದೆ, ಮಾತನಾಡಲಾಗುತ್ತದೆ, ಒಂದು ಪದದಲ್ಲಿ, ಉಪದೇಶಿಸಲಾಗುತ್ತದೆ. ಮತ್ತೊಂದೆಡೆ, ವಿದ್ವತ್ಪೂರ್ಣ ಸಂಶೋಧನೆಯು ಪರಸ್ಪರ ಕಲಿಕೆಯ ಮೂಲಕ, ವಿಭಿನ್ನ ವಿಭಾಗಗಳ ಜನರ ನಡುವಿನ ವಿನಿಮಯ ಮತ್ತು ಸಂವಾದದ ಮೂಲಕ, ಸೈದ್ಧಾಂತಿಕ ದೃಷ್ಟಿಕೋನಗಳು, ಸಂಶೋಧನಾ ಶೈಲಿಗಳು, ಸಾಮಾಜಿಕ ಹಿನ್ನೆಲೆಗಳು, ರಾಷ್ಟ್ರೀಯ ಸಂಬಂಧಗಳು ಮತ್ತು - ಮುಖ್ಯವಾಗಿ, ತಲೆಮಾರುಗಳ ಮೂಲಕ ಮುಂದುವರಿಯುತ್ತದೆ. ನಾನು ಈ ಪಾಠಗಳನ್ನು ಮೊದಲು ಮಾಧವ್ ಗಾಡ್ಗೀಳ್ ಮತ್ತು ಆಂಡ್ರೆ ಬೆಟೈಲ್ ಅವರಿಂದ ಕಲಿತಿದ್ದೇನೆ ಮತ್ತು ಇತ್ತೀಚಿನ ವರ್ಷಗಳಲ್ಲಿ ಅವುಗಳನ್ನು ಪದೇ ಪದೇ ನಾನು ಒತ್ತಿ ಹೇಳಿದ್ದೇನೆ. ಏಕೆಂದರೆ ಮಾರ್ಗದರ್ಶನವನ್ನು ಹುಡುಕಿಕೊಂಡು ಬಂದು ಕೊನೆಯಲ್ಲಿ ಸ್ವತಃ ಅನೇಕ ವಿಷಯಗಳನ್ನು ಕಲಿಸುವ ಕಿರಿಯ ವಿದ್ವಾಂಸರು ಮತ್ತು ಬರಹಗಾರರಿಂದ ನಾನು ತುಂಬಾ ಪ್ರಯೋಜನ ಪಡೆದಿದ್ದೇನೆ.
ಭಾರತ ಮತ್ತು ಬಾಂಗ್ಲಾ ಸಂಬಂಧ ಸುಧಾರಣೆ, ತಾರಿಕ್ ರೆಹಮಾನ್ ಸರ್ಕಾರದ ಮೇಲೆ ನಿರೀಕ್ಷೆಯ ಭಾರ... Bangladesh Election
ಬಾಂಗ್ಲಾದೇಶಕ್ಕೆ ಒಂದು ರೀತಿ ಭಾರತ ತಂದೆ ಇದ್ದಂತೆ, ಏಕೆಂದರೆ ಪಾಕಿಸ್ತಾನದ ಹಿಡಿತಕ್ಕೆ ಸಿಲುಕಿದ್ದ ಬಾಂಗ್ಲಾದೇಶ ಎಂಬ ಪುಟಾಣಿ ಪ್ರದೇಶವನ್ನ ಸ್ವತಂತ್ರ ದೇಶವಾಗಿ ರೂಪುಗೊಳ್ಳಲು ಸಹಾಯ ಮಾಡಿದ್ದೇ ಭಾರತ. ಆದರೆ ಭಾರತ ಮಾಡಿದ್ದ ಈ ಸಹಾಯ ಮರೆತು ಕಳೆದ 2 ವರ್ಷಗಳಿಂದ ಬಾಂಗ್ಲಾದೇಶದಲ್ಲಿ ಅಸ್ತಿತ್ವದಲ್ಲಿದ್ದ ಹಂಗಾಮಿ ಸರ್ಕಾರ, ಪದೇ ಪದೇ ಕಿರಿಕ್ ತೆಗೆಯುತ್ತಿತ್ತು. ಭಾರತ ಕೂಡ ಇದನ್ನೆಲ್ಲಾ ಸೂಕ್ತವಾಗಿ
ಈ ದೇಶದಲ್ಲಿ ಜ್ಞಾನಪೀಠಗಳಿವೆ, ವ್ಯಾಸಪೀಠ ದಾಸಪೀಠಗಳಿವೆ, ಪೀಠಾಧಿಪತಿಗಳಿದ್ದಾರೆ, ಪೀಠಾಧ್ಯಕ್ಷರಿದ್ದಾರೆ. ಆದರೆ ಈ ನೆಲದ ನಿಜವಾದ ಜ್ಞಾನಪೀಠವೆಂದರೆ-ರೈತನ ಹೊಲ, ತೋಟ. ಅಲ್ಲಿ ಪಾಠ ಪುಸ್ತಕಗಳಿಲ್ಲ; ಆದರೆ ಬದುಕನ್ನು ಉಳಿಸುವ ಅನ್ನ ದಾರಿಯ ಅನಂತ ದಾರಿಗಳಿವೆ. ಅಲ್ಲಿ ಉಪನ್ಯಾಸಗಳಿಲ್ಲ; ಆದರೆ ಅನುಭವದ ಶಿಷ್ಯತ್ವವಿದೆ. ಅಲ್ಲಿ ಪ್ರಮಾಣಪತ್ರಗಳಿಲ್ಲ; ಆದರೆ ಬದುಕಿನ ಸತ್ಯವಿದೆ. ಈ ನೆಲದ ಜ್ಞಾನಪರಂಪರೆಯ ನಿಜವಾದ ವಾಸುದಾರರು ರೈತರೇ. ಆದರೆ ಅವರ ಬದುಕು ಭಾಗಶಃ ಪ್ರಭಾವ, ಪ್ರಶಸ್ತಿ, ಹಣದ ಬಲೆಯ ಹಿಂದೆ ಬಿದ್ದಿಲ್ಲ. ಹಕ್ಕು ಸ್ಥಾಪನೆಯ ಹೋರಾಟವೂ ಬಲವಾಗಿ ನಡೆದಿಲ್ಲ. ಮನೆ ತೋಟ ಹೊಲ ಗದ್ದೆ ಜಗಲಿ...ಇವಷ್ಟೇ ಬಹುಪಾಲು ಕೃಷಿಕರ ವಿಶ್ವ. ತಮ್ಮ ಬದುವಿನ ಬೇರಿನಾಚೆ ಮಾತಾಡಲು ಕೂಡ ಸಂಕೋಚಪಡುವ ಈ ಮಣ್ಣಿನ ಮಕ್ಕಳು ಪ್ರತಿಷ್ಠೆಯ ವೇದಿಕೆಗಳಲ್ಲೂ, ಪ್ರಭೆಯ ಬೆಳಕಿನಲ್ಲೂ ಕಾಣಿಸಿಕೊಳ್ಳದ ಮೌನ ಯೋಧರು. ಅಂಥ ಕಡಿಮೆ ಗುರುತು, ಕಡಿಮೆ ಪ್ರಶಸ್ತಿ, ಕಡಿಮೆ ಸನ್ಮಾನ ಪಡೆದ ರೈತರಿಗೆ ಒಂದು ಲೋಕಮಾನ್ಯ ಗೌರವ ನೀಡಬೇಕೆಂಬ ಕನಸಿನಿಂದಲೇ ಇದೀಗ ರೈತಪೀಠ ಎಂಬ ಪ್ರಶಸ್ತಿಯೊಂದು ಹುಟ್ಟಿದೆ. ಅದರ ಬೀಜ ಬಿತ್ತಿದವರು ಮೂಡುಬಿದಿರೆಯ ಡಾ. ರಾಮಕೃಷ್ಣ ಆಚಾರ್. ಸೊನ್ನೆಯಿಂದ ಏರಿ ಉದ್ಯಮದ ಶಿಖರವನ್ನೇರಿದರೂ, ಆ ಏರಿಕೆಯ ಅಹಂಕಾರ ಅವರನ್ನು ಎಂದೂ ನೆಲದಿಂದ ದೂರ ಮಾಡಲಿಲ್ಲ; ಬದಲಾಗಿ ಮತ್ತೆ ಮಣ್ಣಿನ ಬಳಿಗೆ ಕರೆತಂದಿತು. ಕಾರ್ಕಳದ ಮುನಿಯಾಲಿನ ಸಂಜೀವಿನಿ ಗೋಧಾಮ ಅವರ ಆ ಮರಳುವಿಕೆಯ ಜೀವಂತ ಸಾಕ್ಷಿ-ಇಂದು ಅದು ರೈತರಿಗೆ ಮಾದರಿ ಕೃಷಿ ಪಾಠಶಾಲೆ. ಸಂಜೀವಿನಿಗೆ ಕಾಲಿಟ್ಟ ಕ್ಷಣದಿಂದಲೇ ಅದು ಕೇವಲ ತೋಟವಲ್ಲ, ಸಮಗ್ರ ಕೃಷಿಯ ಹಸಿರು ವಿಶ್ವವಿದ್ಯಾನಿಲಯ ಎಂಬ ಅನುಭವ ಉಂಟಾಗುತ್ತದೆ. ಅಲ್ಲಿ ಗಿಡಮರ, ಗೋವು, ಹಕ್ಕಿ, ಮೀನು, ಮನುಷ್ಯ...ಹೀಗೆ ಎಲ್ಲವೂ ಒಂದೇ ಉಸಿರಿನಲ್ಲಿ ಬದುಕುತ್ತವೆ. ನೀರಿನ ಜಾಣ ಬಳಕೆ, ಮಣ್ಣಿನ ಸಂರಕ್ಷಣೆ, ಪುಂಗನೂರು ಹಸು ಸೇರಿ ಗೋವಿನ ಮೌಲ್ಯ-ಇವೆಲ್ಲ ಬದುಕಿನ ಪಾಠಗಳಾಗಿ ಹರಿಯುತ್ತವೆ. ಖಂಡಿತ ಇಲ್ಲಿ ಕೃಷಿ ಉದ್ಯಮವಲ್ಲ; ಅದು ಸಂಸ್ಕೃತಿ, ಸಹಜ ಸಹವಾಸ. ಇಲ್ಲಿಗೆ ಬರುವ ರೈತರು ಮಣ್ಣಿನ ಜೊತೆ ಬದುಕುವುದನ್ನು ಮರುಕಲಿಯುತ್ತಾರೆ. ‘ಈ ದೇಶದ ಕೃಷಿ ಸೋಲುತ್ತಿಲ್ಲ; ನಾವು ಕೃಷಿಯಿಂದ ದೂರ ಸರಿಯುತ್ತಿದ್ದೇವೆ’ ಎಂಬ ಸತ್ಯ ಇಲ್ಲಿ ನಗ್ನವಾಗುತ್ತದೆ. ‘ರೈತಪೀಠ-ಈ ನೆಲದ ಜ್ಞಾನಪೀಠ’ಎಂಬ ನನ್ನ ಹೊಸ ಕೃತಿಯೂ ಇದೇ ತೋಟದ ಹಸಿರು ವಿನ್ಯಾಸ, ಆಶಯ ಎಲ್ಲವನ್ನು ಇಟ್ಟುಕೊಂಡು ಬರೆಯಲಾದ ಯಶೋಗಾಥೆ. ಇದೇ ಫೆಬ್ರವರಿ 20ರಂದು ಸಂಜೀವಿನಿ ವನಾವರಣದಲ್ಲಿ ನಡೆಯುವ ರೈತಪೀಠ ಪ್ರಶಸ್ತಿ ಪ್ರದಾನ ಸಮಾರಂಭದಲ್ಲೇ ಈ ಕೃತಿಯು ಬಿಡುಗಡೆಗೊಳ್ಳಲಿದೆ. ಕೊಲ್ಲಾಪುರ -ಮಹಾರಾಷ್ಟ್ರದ ಸಿದ್ದಗಿರಿ ಮಠದ ಕಾಡಸಿದ್ದೇಶ್ವರ ಸ್ವಾಮೀಜಿ ನಿಮಗೆ ಗೊತ್ತಲ್ಲ? ಆ ಅಸಾಧಾರಣ ಮಣ್ಣು ಮತ್ತು ಪಶು ಪ್ರೇಮಿ ಈ ಕೃತಿಯನ್ನು ಬಿಡುಗಡೆ ಮಾಡಲಿದ್ದಾರೆ. ಇಂದು ನಾಗರಿಕ ಜಗತ್ತಿನಿಂದ ದೂರದ ಹಳ್ಳಿಗಳಲ್ಲಿ ಸಾವಿರಾರು ಎಕರೆ ಭೂಮಿ ಖರೀದಿಸಿ, ಹಸಿರು ಹಚ್ಚುವ, ಜೊತೆಗೆ ಸುದ್ದಿಯಿಲ್ಲದೆ ಬಂದು ಇಳಿದು ಹೋಗಲು ಹೆಲಿಪ್ಯಾಡ್ ನಿರ್ಮಿಸಿಕೊಂಡ ಉದ್ಯಮಿಗಳನ್ನು ನಾನು ನೋಡಿದ್ದೇನೆ. ನಗರದಲ್ಲಿ ಉದ್ಯಮಕ್ಕೆ ಮಾತ್ರ ಭವಿಷ್ಯವಿದೆ, ಜೀವ ಜೀವನಕ್ಕೆ ನೆಮ್ಮದಿಯ ಉಸಿರಿಲ್ಲ ಎಂದು ಕಾಂಕ್ರಿಟ್ ಕಾಡಿನಿಂದ ಹೊರಬಂದು, ಫಾರ್ಮ್ ಹೌಸ್ ಕಟ್ಟಿಕೊಂಡು, ವಾರಾಂತ್ಯದ ಹವ್ಯಾಸಕ್ಕೆ ಕೃಷಿ ಮಾಡಿಸುವುದನ್ನೇ ಸಾಧನೆ ಎಂದು ಕರೆಯುವ ದಿನಗಳಲ್ಲಿ, ರಾಮಕೃಷ್ಣ ಆಚಾರ್ ಅವರಂತೆ ಸೂಕ್ಷ್ಮವಾಗಿ ಮಣ್ಣಿಗೆ ಮರಳುವುದು, ಕೈ ಕಾಲಿಗೆ ಕೆಸರು ಮಾಡಿಕೊಳ್ಳುವುದು ಸುಲಭದ ಕೆಲಸವಲ್ಲ. ಕೃಷಿ ನೆಲ ಸಂಬಂಧಿ ಭತ್ತ, ನೀರು, ಇತ್ಯಾದಿಗಳ ಸಂಸ್ಕರಣ ಯಂತ್ರ -ಉತ್ಪಾದನಾ ಘಟಕಗಳನ್ನು ಕಟ್ಟಿಕೊಂಡ ಆಚಾರ್ ಅವರು ಮತ್ತೆ ನೆಲಕ್ಕೆ ಬಂದಿರುವುದು-ಅವರೊಳಗಿನ ಸಮೃದ್ಧ, ಸಹಜ, ಸುಸ್ಥಿರ ನೆಲದ ಗುಣದಿಂದಲೇ ಎಂಬುವುದು ಖಚಿತವಾದ ಮೇಲೆಯೇ ನಾನು ಕಾಗದದ ಮೇಲೆ ಪೆನ್ನಿಟ್ಟೆ. ‘ಕರ್ನಾಟಕ ಕೃಷಿ ಕಥನ ಮಾಲಿಕೆ’ಯಲ್ಲಿ ಉದ್ಯಮಿಗಳ, ಶ್ರೀಮಂತರ, ಭೂಮಿಗೆ ದುಡ್ಡು ಸುರಿದು ಆಕಾರ ಬದಲಾಯಿಸುವ ‘ನಾಗರಿಕ ರೈತ’ರ ಬಗ್ಗೆ ಬರೆಯಬಾರದು ಎಂಬ ನನ್ನ ನಿರ್ಧಾರವನ್ನು ಬದಲಾಯಿಸಿಕೊಂಡೆ. ರೈತಪೀಠ ಪ್ರಶಸ್ತಿಯ ಅರ್ಥವೂ ಇದೇ. ಅದು ಬರೀ ಒಂದು ಪದಕವಲ್ಲ. ಒಂದು ಸನ್ಮಾನವಲ್ಲ. ಅದು ಪೀಳಿಗೆಯಿಂದ ಪೀಳಿಗೆಗೆ ಹರಿದು ಬಂದ ಕೃಷಿ ಜ್ಞಾನಕ್ಕೆ ಸಲ್ಲಿಸುವ ಗೌರವ. ಅನಾಮಿಕರಾಗಿ ಮೌನವಾಗಿ ದುಡಿಯುವ ಕೈಗಳಿಗೆ ಸಲ್ಲಿಸುವ ಕೃತಜ್ಞತೆ. ಬೆಳಗಿನ ಜಾವ ಹೊಲಕ್ಕೆ ಇಳಿಯುವ ಕಾಲುಗಳಿಗೆ ಸಲ್ಲಿಸುವ ವಂದನೆ. ಇಲ್ಲಿ ಒಂದು ಲಕ್ಷದ ನಗದು ಇದೆ, ಶಾಶ್ವತ ಫಲಕ ಇದೆ. ಮುಂದಿನ ವರ್ಷದಿಂದ ದೇಶ ವ್ಯಾಪಿ ಐದು ಜನರನ್ನು ಗುರುತಿಸಿ ಇದೇ ಮೊತ್ತ, ಮಾನ ಸಲ್ಲಿಸುವ ಉದ್ದೇಶವಿದೆ. ಈ ದೇಶದಲ್ಲಿ ಜ್ಞಾನಪೀಠಗಳಿವೆ, ವ್ಯಾಸಪೀಠ ದಾಸಪೀಠಗಳಿವೆ, ಪೀಠಾಧಿಪತಿಗಳಿದ್ದಾರೆ, ಪೀಠಾಧ್ಯಕ್ಷರಿದ್ದಾರೆ. ಆದರೆ ಈ ನೆಲದ ನಿಜವಾದ ಜ್ಞಾನಪೀಠವೆಂದರೆ-ರೈತನ ಹೊಲ, ತೋಟ. ಅಲ್ಲಿ ಪಾಠ ಪುಸ್ತಕಗಳಿಲ್ಲ; ಆದರೆ ಬದುಕನ್ನು ಉಳಿಸುವ ಅನ್ನ ದಾರಿಯ ಅನಂತ ದಾರಿಗಳಿವೆ. ಅಲ್ಲಿ ಉಪನ್ಯಾಸಗಳಿಲ್ಲ; ಆದರೆ ಅನುಭವದ ಶಿಷ್ಯತ್ವವಿದೆ. ಅಲ್ಲಿ ಪ್ರಮಾಣಪತ್ರಗಳಿಲ್ಲ; ಆದರೆ ಬದುಕಿನ ಸತ್ಯವಿದೆ. ಅಂಥ ಜ್ಞಾನಪೀಠಕ್ಕೆ ಗೌರವ ಸಲ್ಲಿಸುವ ಒಂದು ಸಣ್ಣ ಪ್ರಯತ್ನವೇ ರೈತಪೀಠ. ಅಲ್ಲಿ ಪ್ರಶಸ್ತಿಗಿಂತ ದೊಡ್ಡ ಸಂಕಲ್ಪವಿದೆ. ರೈತನನ್ನು ಮತ್ತೆ ಸಮಾಜದ ಮಧ್ಯಕ್ಕೆ ತರುವ ಪ್ರಯತ್ನವಿದೆ. ಅವನ ಕೈಗೆ ಮರಳಿ ಗೌರವ ನೀಡುವ, ಅವನ ಜ್ಞಾನವನ್ನು ರಾಷ್ಟ್ರದ ಸಂಪತ್ತಾಗಿ ಗುರುತಿಸುವ ಹಂಬಲವಿದೆ. ಸಂಜೀವಿನಿ ಗೋಧಾಮ ಆ ದಾರಿಯ ಮೊದಲ ಹೆಜ್ಜೆ. ರೈತಪೀಠ ಅದರ ಮೊದಲ ಘೋಷಣೆ. ಈ ನೆಲದ ಜ್ಞಾನಪರಂಪರೆಯನ್ನು ನಾವು ಉಳಿಸಿಕೊಳ್ಳಬೇಕಾದರೆ, ರೈತನನ್ನು ಉಳಿಸಿಕೊಳ್ಳಬೇಕು. ರೈತನನ್ನು ಉಳಿಸಿಕೊಳ್ಳಬೇಕಾದರೆ, ಅವನ ಜ್ಞಾನಕ್ಕೆ ಗೌರವ ನೀಡಬೇಕು. ರೈತನನ್ನು ಈ ದೇಶದಲ್ಲಿ ಕಿಂಗ್ ಮಾಡಲು ಹೊರಟ ರಾಮಕೃಷ್ಣರ ಹಿಂದೆ ನಿಲ್ಲಬೇಕೆಂಬ ಕಾರಣಕ್ಕಾಗಿಯೇ ರೈತಪೀಠ ಪುಸ್ತಕವನ್ನು ರಚಿಸಿದ್ದೇನೆ. ಮೂಲತಃ ರಾಮಕೃಷ್ಣರು ಕುಂದಾಪುರದ ಗಂಗೊಳ್ಳಿಯ ಒಬ್ಬ ಸಾಮಾನ್ಯ ಬಡಗಿಯ ಮಗ. ಐದನೇ ತರಗತಿಯಲ್ಲೇ ಶಾಲೆ ಬಿಟ್ಟು ಕುಲುಮೆಯ ಕಠಿಣ ದುಡಿಮೆ. ತಿಂಗಳಿಗೆ ಮೂವತ್ತು ರೂಪಾಯಿ. ಬೆಂಕಿಯೆದುರು ಕಾಯುತ್ತ, ಸುತ್ತಿಗೆಯ ಬಡಿತದ ನಡುವೆ ಕಳೆಯುವ ಬಾಲ್ಯ. ಆ ದುಡಿಮೆಯ ಬೆವರಿನಿಂದಲೇ ಹುಟ್ಟಿದ ಸ್ವಾಭಿಮಾನ ಮುಂದೆ ಅವರನ್ನು ಮೂಡುಬಿದಿರೆಯ ಕಾಳಿಕಾಂಬ ಫ್ಯಾಬ್ರಿಕೇಷನ್ ಎಂಬ ಜಾಗತಿಕ ಸಂಸ್ಥೆಯ ಸ್ಥಾಪಕರನ್ನಾಗಿ ಮಾಡಿತು. ಇವತ್ತು ಅವರ ಎಸ್.ಕೆ.ಎಫ್. ಹೆಸರಿನ ಭತ್ತ, ಕುಡಿನೀರು ಮತ್ತು ಕೊಳಚೆ ನೀರು ಸಂಸ್ಕರಣ ಯಂತ್ರಗಳು ಪ್ರಪಂಚದ ಇಪ್ಪತ್ತೈದು ದೇಶಗಳಿಗೆ ರಫ್ತಾಗುತ್ತಿವೆ. ಸಾವಿರಾರು ಕಾರ್ಮಿಕರಿಗೆ ಬದುಕು ಕೊಟ್ಟಿವೆ. ಕೋಟ್ಯಂತರ ರೈತರ ಬದುಕು- ಬೆಳೆಗೆ ಆ ಯಂತ್ರಗಳು ಕೈಜೋಡಿಸುತ್ತಿವೆ. ಇಷ್ಟಾದರೂ ಅವರ ಒಳಗಿನ ರೈತ ಸತ್ತಿಲ್ಲ. ಉದ್ಯಮದ ಮಧ್ಯೆ ಅವರು ಕಂಡದ್ದು, ನಮ್ಮ ದೇಶದ ರೈತನು ದಿನೇ ದಿನೇ ಕೀಳರಿಮೆಯ ಬದುಕಿಗೆ ಜಾರುತ್ತಿರುವ ದೃಶ್ಯ. ಸಾಲದ ಬಲೆ, ಹವಾಮಾನ ವೈಫಲ್ಯ, ಬೆಲೆ ಕುಸಿತ, ಅವಮಾನ, ಆತ್ಮಹತ್ಯೆಗಳು. ಇದನ್ನೆಲ್ಲ ಹತ್ತಿರದಿಂದ ಕಂಡವರೇ ಆಚಾರ್. ಕೃಷಿಕೇಂದ್ರಿತ ಜಗತ್ತಿನ 32 ದೇಶಗಳನ್ನು ಸುತ್ತಿದಾಗ ಅವರು ಕಂಡದ್ದು: ಅಲ್ಲೆಲ್ಲ ರೈತ ರಾಜ. ಅವನದ್ದು ಗೌರವ, ಮಾನ್ಯತೆ, ಸುಸ್ಥಿರ ಬದುಕು. ಅಲ್ಲಿ ಕೃಷಿಗೆ ಸರಕಾರದ ಸಂಪೂರ್ಣ ಬೆಂಬಲವಿದೆ. ಅನ್ನದ ಕೆಲಸವೇ ಸಮಾಜದ ಶ್ರೇಷ್ಠ ಕೆಲಸ. ನಮ್ಮ ದೇಶದಲ್ಲೂ ರೈತ ರಾಜನಾಗಬೇಕು ಎಂಬ ಆಕಾಂಕ್ಷೆಯೇ ಅವರೊಳಗಿನ ರೈತಪೀಠದ ಬೀಜ. ರೈತಪೀಠ ಅಂದರೆ ಕೇವಲ ಪ್ರಶಸ್ತಿ ಅಲ್ಲ. ಅದು ಒಂದು ಸಾಂಸ್ಕೃತಿಕ ಘೋಷಣೆ. ಅನ್ನವೇ ಜೀವನದ ಮೂಲ ಎಂದು ಸಮಾಜಕ್ಕೆ ನೆನಪಿಸುವ ಪ್ರತಿಜ್ಞೆ. ಕೃಷಿಯ ಘನತೆಯನ್ನು ಮರಳಿ ಸ್ಥಾಪಿಸುವ ಸಂಕಲ್ಪ. ಮುನಿಯಾಲಿನ ಸಂಜೀವಿನಿ ಗೋ-ಧಾಮದಲ್ಲಿ ಬರೀ ಸಾಕು ಪ್ರಾಣಿಗಳಷ್ಟೇ ಅಲ್ಲ, ರಂಬುಟಾನ್, ಮ್ಯಾಂಗೋಸ್ಟೀನ್, ಅಡಿಕೆ, ತೆಂಗು, ಕಾಳುಮೆಣಸು, ಹಲಸು, ಮಾವು, ಪಪ್ಪಾಯಿ, ತರಕಾರಿ-ಏಕಬೆಳೆ ಅಲ್ಲ, ಬಹುಬೆಳೆ. ಮಧ್ಯೆ ಮಧ್ಯೆ ಅಂತರಬೆಳೆ. ಹಸುವಿನ ಗೊಬ್ಬರ, ಗಂಜಳ, ಜೀವಾಮೃತ ಇವೆಲ್ಲವನ್ನು ಸರಳವಾಗಿ ಮಣ್ಣಿಗೆ ಮರಳಿಸಿ ಜೀವ ಕೊಡುವ ವ್ಯವಸ್ಥೆಯಿದೆ. ನಾಗಬನವನ್ನು ಕಾಂಕ್ರಿಟ್ ಮಾಡದೆ, ಕಾಡಿನಂತೆ ಉಳಿಸಿಕೊಂಡು, ಮಿಯಾವಾಕಿ ಮಾದರಿಯ ಹಸಿರು ಕಾಡನ್ನು ಬೆಳೆಸಿ, ಪರಿಸರದ ಸಮತೋಲನಕ್ಕೆ ಕೈಜೋಡಿಸಿರುವ ಅಪರೂಪದ ಪ್ರಯತ್ನವಿದೆ. ‘‘ನನ್ನ ತೋಟಕ್ಕೆ ಬಂದ ಮಗು, ಕೃಷಿಕನಾಗಬೇಕು ಅನ್ನುವ ಕನಸಿನಿಂದಲೇ ಹೊರಹೋಗಬೇಕು’’ ಎನ್ನುವುದು ಆಚಾರ್ ಅವರ ಆಶಯ. ಇಲ್ಲಿ ಮಕ್ಕಳು ಹಸು ಮುದ್ದಿಸಬಹುದು, ಹಾಲು ಕರೆಯಬಹುದು, ಬೀಜ ಬಿತ್ತಬಹುದು, ಮಣ್ಣಲ್ಲಿ ಕೈ ಹಾಕಬಹುದು, ಮೀನುಗಳ ಜೊತೆ ಆಟವಾಡಬಹುದು. ಕೃಷಿಯನ್ನು ಪುಸ್ತಕದಲ್ಲಿ ಅಲ್ಲ, ಬದುಕಿನಲ್ಲಿ ಕಲಿಯುವ ವ್ಯವಸ್ಥೆಯಿದು. ಇವತ್ತು ಹಳ್ಳಿಯಿಂದ ನಗರಕ್ಕೆ ಓಡುತ್ತಿರುವ ಹೊಸ ತಲೆಮಾರಿಗೆ ಸಂಜೀವಿನಿ ಗೋ-ಧಾಮ ಒಂದು ಮೌನದ ಕರೆ: ಸುಖ ಕೇವಲ ದುಡ್ಡಿನಲ್ಲಿ ಇಲ್ಲ. ನೆಲದ ಜೊತೆ ಬದುಕುವುದರಲ್ಲೇ ನಿಜವಾದ ನೆಮ್ಮದಿ. ರೈತಪೀಠ ಆ ಕರೆಯ ಅಧಿಕೃತ ಘೋಷಣೆ. ಒಂದು ಕಾಲದಲ್ಲಿ ಅಕ್ಕಿಯ ಗಿರಣಿಗಳೆಂದರೆ ನಮ್ಮಲ್ಲಿ ಮೂಡುಬಿದಿರೆ-ಹೆಬ್ರಿ -ಕಾರ್ಕಳದ ಹೆಸರು ಕೇಳಿಬರುತ್ತಿತ್ತು. ಹಳ್ಳಿಗಳಲ್ಲೇ ಚಿಕ್ಕ ಚಿಕ್ಕ ಯಂತ್ರಗಳು, ದಿನಕ್ಕೆ ಒಂದೆರಡು ಟನ್ ಭತ್ತ ಸಂಸ್ಕರಿಸುವ ಸ್ವಾವಲಂಬಿ ಘಟಕಗಳು ಇದ್ದವು. ಇವತ್ತು ಅವೆಲ್ಲ ಅಟ್ಟಕ್ಕೆ ಸೇರಿವೆ. ಮಾಲ್ಗಳಲ್ಲಿ ಹೊಳೆಯುವ ಪ್ಯಾಕೆಟ್ಗಳಲ್ಲಿರುವ ಬಿಳಿ ಬಿಳಿ ಅಕ್ಕಿಯ ಮೂಟೆಗಳೇ ನಮ್ಮ ಆಹಾರ ಸಂಸ್ಕೃತಿಯ ಪ್ರತಿನಿಧಿಗಳಾಗಿವೆ. ಆಚಾರ್ ಅವರು ಹೇಳುವ ಮಾತು ಸರಳ : ಜನರಿಗೆ ಇವತ್ತು ಪೌಷ್ಟಿಕಾಂಶಕ್ಕಿಂತ ಬಣ್ಣ ಬೇಕು, ಸಹಜತೆಗಿಂತ ಹೊಳಪು ಬೇಕು. ತುಪ್ಪ ಹಳದಿ ಇರಬೇಕು, ಅನ್ನ ಬಿಳಿಯಾಗಿರಬೇಕು, ಕೇಸರಿಬಾತ್ ಕೇಸರಿಯಾಗಿರಬೇಕು. ರುಚಿಯ ಹಿಂದೆ ಓಡುತ್ತಾ ನಾವು ಆಹಾರದ ಆತ್ಮವನ್ನೇ ಕಳೆದುಕೊಳ್ಳುತ್ತಿದ್ದೇವೆ. ಈ ಸತ್ಯ ಅವರಿಗೆ ಕೈಗೆ ಸಿಕ್ಕದ್ದಲ್ಲ; ಅಕ್ಕಿಯಂತ್ರಗಳ ನಡುವೆ ಬೆಳೆದ, ಕಾರ್ಮಿಕನಾಗಿ ದುಡಿದ ಅನುಭವದಿಂದ ಹುಟ್ಟಿದ್ದು,.ಅದೇ ಅರಿವಿನಿಂದಾಗಿ ಅವರ ಒಳಗಡೆಯಿಂದ ಒಂದು ಸುಂದರವಾದ ಹಸಿರು ವನಾವರಣ ಹುಟ್ಟಿಕೊಂಡಿದೆ. ಇದರ ಒಳಗಡೆಯಿಂದಲೇ ‘ರೈತಪೀಠ’ ಪ್ರಶಸ್ತಿಯ ಕಲ್ಪನೆ ಹುಟ್ಟಿದೆ. ಕೃಷಿ ಎಂದರೆ ಹಳೆಯದು, ಲಾಭವಿಲ್ಲದ್ದು ಎಂಬ ಭ್ರಮೆಗೆ ಸವಾಲು ಹಾಕಲು, ನೆಲವನ್ನು ನಂಬಿದ ಕೃಷಿಕರನ್ನು ಗೌರವಿಸಲು, ಯುವಕರಿಗೆ ದಾರಿ ತೋರಿಸಲು ಈ ಪ್ರಶಸ್ತಿ. ಇದು ಕೇವಲ ನಗದು ಬಹುಮಾನವಲ್ಲ; ಕೃಷಿಗೆ ಮರಳಿ ಘನತೆ ತರುವ ಒಂದು ಸಾಂಸ್ಕೃತಿಕ ಪ್ರಯತ್ನ. ರೈತಪೀಠ ಅನ್ನುವುದು ವಿಶ್ವವಿದ್ಯಾನಿಲಯಗಳಲ್ಲಿರುವ ಪೀಠಗಳಂತೆಯೇ - ಆದರೆ ಇಲ್ಲಿ ಅಧ್ಯಯನದ ವಿಷಯ ಪುಸ್ತಕವಲ್ಲ, ಮಣ್ಣು. ರಾಮಕೃಷ್ಣ ಆಚಾರ್ ಅವರಿಗೆ ಕೃಷಿ ಒಂದು ಹವ್ಯಾಸ. ಆದರೆ ಅದು ಲಘುವಾದ ಹವ್ಯಾಸವಲ್ಲ; ಅದು ಬದುಕಿನ ಅರ್ಥ ಹುಡುಕುವ ಪ್ರಯತ್ನ. ಉದ್ಯಮ, ಮಾರುಕಟ್ಟೆ, ಬಂಡವಾಳ - ಇವೆಲ್ಲದರ ನಡುವೆ ಸಿಕ್ಕ ನೆಮ್ಮದಿಯ ದ್ವೀಪವೇ ಸಂಜೀವಿನಿ ವನ. ಇಲ್ಲಿ ಅವರು ಗಿಡಗಳೊಂದಿಗೆ ಮಾತನಾಡುತ್ತಾರೆ, ಹಸುಗಳ ಕಣ್ಣಲ್ಲಿ ತಾವು ಬದುಕಿನ ಸತ್ಯವನ್ನು ಹುಡುಕುತ್ತಾರೆ. ಕಾರ್ಖಾನೆಯ ಶಬ್ದದಿಂದ ದೂರ, ಹಕ್ಕಿಗಳ ಕಲರವದ ನಡುವೆ ತಮ್ಮನ್ನು ತಾವು ಕಂಡುಕೊಳ್ಳುತ್ತಾರೆ. ರೈತಪೀಠ ಪ್ರಶಸ್ತಿ ಅವರ ಈ ಆತ್ಮಯಾನದ ಸಾಮಾಜಿಕ ವಿಸ್ತರಣೆ. ‘‘ನನ್ನದು ನನ್ನ ಕುಟುಂಬ, ನನ್ನ ಮಕ್ಕಳು ಎನ್ನುವ ವೃತ್ತದಿಂದ ಹೊರಬಂದು, ಸಮಾಜದ ನೆಲೆಯನ್ನು ನಂಬಬೇಕು’’ ಎನ್ನುವ ಅವರ ತತ್ವದ ಪ್ರತಿಫಲ. ರತನ್ ಟಾಟಾ ಉದಾಹರಣೆಯಂತೆ -ವ್ಯಕ್ತಿ ಹೋದರೂ ವ್ಯವಸ್ಥೆ ಉಳಿಯಬೇಕು. ಅದಕ್ಕಾಗಿಯೇ ಅವರು ಕಟ್ಟುತ್ತಿರುವುದು ಕೇವಲ ತೋಟವಲ್ಲ, ಒಂದು ಚಿಂತನೆ. ಇವತ್ತು ಹಳ್ಳಿಗಳು ವೃದ್ಧಾಶ್ರಮಗಳಾಗುತ್ತಿವೆಯೆಂಬ ಆತಂಕದ ನಡುವೆ, ರಾಮಕೃಷ್ಣ ಆಚಾರ್ ಅವರ ಸಂಜೀವಿನಿ ವನ ಒಂದು ಭರವಸೆಯ ಹಸಿರು ಕಿರಣ. ನೆಲವನ್ನು ನಂಬಿದರೆ ಬದುಕು ಕೈ ಬಿಡುವುದಿಲ್ಲ ಎಂಬುದಕ್ಕೆ ಅದು ಜೀವಂತ ಸಾಕ್ಷಿ. ರೈತಪೀಠ ಆ ಭರವಸೆಗೆ ಕೊಟ್ಟ ಗೌರವ.
HASSAN | ಯುವತಿಯ ನಿಗೂಡ ನಾಪತ್ತೆ ಪ್ರಕರಣ ಸುಖಾಂತ್ಯ: ಪ್ರಿಯಕರನೊಂದಿಗೆ ಪತ್ತೆ
ಹಾಸನ: ಯುವತಿಯೊಬ್ಬಳು ವಿವಾಹ ಸಮಾರಂಭಕ್ಕೆಂದು ಹೊರಟವಳು ಬೇಲೂರು ತಾಲೂಕಿನ ಕಲ್ಕೆರೆ ಕೆರೆಯ ಬಳಿ ನಿಗೂಢವಾಗಿ ನಾಪತ್ತೆಯಾಗಿ ಆತಂಕ ಮೂಡಿಸಿದ್ದ ಪ್ರಕರಣ ಸುಖಾಂತ್ಯಗೊಂಡಿದ್ದು, ಆಕೆ ಕುಣಿಗಲ್ ನಲ್ಲಿ ತನ್ನ ಪ್ರಿಯಕರನೊಂದಿಗೆ ಇರುವುದನ್ನು ಪೊಲೀಸರು ಪತ್ತೆಹಚ್ಚಿದ್ದಾರೆ. ಕುಣಿಗಲ್ ತಾಲೂಕಿನ ಯಲಿಯೂರಿನ ಪ್ರಿಯಾಂಕಾ(29) ನಾಪತ್ತೆಯಾಗಿದ್ದವರು. ಇವರನ್ನು ಬಿಹಾರ ಮೂಲದ ಡೇವಿಡ್ ಎಂಬವರ ಜೊತೆ ಕುಣಿಗಲ್ ನ ಲಾಡ್ಜ್ ಒಂದರಲ್ಲಿ ಪೊಲೀಸರು ಪತ್ತೆಹಚ್ಚಿ ನಾಪತ್ತೆ ಪ್ರಕರಣಕ್ಕೆ ತೆರೆ ಎಳೆದಿದ್ದಾರೆ. ಘಟನೆ ವಿವರ: ಚಿಕ್ಕಮಗಳೂರಿನಲ್ಲಿ ನಡೆಯುವ ಮದುವೆ ಕಾರ್ಯಕ್ರಮಕ್ಕೆಂದು ಮನೆಯಲ್ಲಿ ಹೇಳಿ ಹೊರಟಿದ್ದ ಪ್ರಿಯಾಂಕಾ ಫೆ.12ರಂದು ರಾತ್ರಿ 8 ಗಂಟೆ ಸುಮಾರಿಗೆ ಬೇಲೂರು ಬಸ್ ನಿಲ್ದಾಣದಿಂದ ನಾಪತ್ತೆಯಾಗಿದ್ದರು. ಈ ಬಗ್ಗೆ ಕುಟುಂಬಸ್ಥರು ಪೊಲೀಸ್ ದೂರು ನೀಡಿದ್ದರು. ಫೆ.14ರಂದು ಬೆಳಗ್ಗೆ ಕಲ್ಕೆರೆ ಕೆರೆಯ ತೀರದಲ್ಲಿ ಪ್ರಿಯಾಂಕಾರಿಗೆ ಸೇರಿದ ಉಡುಪುಗಳು ಮತ್ತು ಕೆಲವು ವೈಯಕ್ತಿಕ ವಸ್ತುಗಳು ಪತ್ತೆಯಾಗಿದ್ದವು. ಇದರಿಂದಾಗಿ ಆತಂಕ ಸೃಷ್ಟಿಯಾಗಿತ್ತು. ಪ್ರಿಯಾಂಕಾ ಸುಮಾರು 20 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಧರಿಸಿದ್ದ ಹಿನ್ನೆಲೆಯಲ್ಲಿ ಆಕೆಯನ್ನು ಕೊಲೆ ಮಾಡಿ ಕೆರೆಗೆ ಎಸೆದಿರುವ ಶಂಕೆ ವ್ಯಕ್ತವಾಗಿತ್ತು. ಈ ಮಧ್ಯೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಬೇಲೂರು ಪೊಲೀಸರು ವಿಶೇಷ ತಂಡ ರಚಿಸಿ ತನಿಖೆ ಚುರುಕುಗೊಳಿಸಿದರು. ಮೊಬೈಲ್ ಲೊಕೇಶನ್ ಹಾಗೂ ಇತರ ತಾಂತ್ರಿಕ ಮಾಹಿತಿಗಳನ್ನು ಆಧರಿಸಿ ಹುಡುಕಾಟ ನಡೆಸಿ ಪ್ರಿಯಾಂಕಾರನ್ನು ಕುಣಿಗಲ್ ನಲ್ಲಿ ಪ್ರಿಯಕರನೊಂದಿಗೆ ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.
ಯುವಜನರಲ್ಲಿ ತಂತ್ರಜ್ಞಾನದೊಂದಿಗೆ ಸಾಹಿತ್ಯಾಸಕ್ತಿ ಹೆಚ್ಚಾಗಲಿ
ಫೆ.16 ಮತ್ತು 17ರಂದು ಎರಡು ದಿನಗಳ ಕಾಲ ಕಲಬುರಗಿಯಲ್ಲಿ ನಡೆಯಲಿರುವ 22ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿರುವ ಸಾಹಿತಿ ಮತ್ತು ಸಂಶೋಧಕರಾದ ಮುಡುಬಿ ಗುಂಡೇರಾವ್ ಅವರೊಂದಿಗೆ ವಾರ್ತಾ ಭಾರತಿ ಪತ್ರಿಕೆಯ ಕಿರು ಸಂದರ್ಶನ. ವಾ.ಭಾ: 22ನೇ ಜಿಲ್ಲಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಏನು ಹೇಳಲು ಬಯಸುವಿರಿ? ಉ: ಕಳೆದ 40 ವರ್ಷಗಳ ಕಾಲ ನಾನು ಸೇಡಂ ತಾಲೂಕಿನ ಹಳ್ಳಿ ಹಳ್ಳಿಗಳಲ್ಲಿ ದಣಿವಿಲ್ಲದೆ ಸುತ್ತಾಡಿ ಅನಾಥವಾಗಿ, ಜನತೆಯ ಅಲಕ್ಷಕ್ಕೆ ಒಳಗಾಗಿದ್ದ ಅನೇಕ ಶಾಸನ, ಸ್ಮಾರಕ, ದೇವಾಲಯಗಳ ಮಹತ್ವ ಮತ್ತು ರಕ್ಷಣೆಯ ಬಗ್ಗೆ ಸಂಶೋಧನಾತ್ಮಕ ಲೇಖನಗಳನ್ನು ಮತ್ತು ಕೃತಿಗಳನ್ನು ಪ್ರಕಟಿಸಿ ಸಮುದಾಯದಲ್ಲಿ ಜಾಗೃತಿ ಮೂಡಿಸಿದ್ದೇನೆ. ಸರಕಾರದ ಗಮನ ಸೆಳೆದ ಅದೆಷ್ಟೋ ಐತಿಹಾಸಿಕ ಸ್ಮಾರಕಗಳು ಇಂದು ಜಿರ್ಣೋದ್ದಾರಗೊಂಡಿವೆ. ಈ ನನ್ನ ಸಾಧನೆಗಳನ್ನು ಕಲಬುರಗಿ ಕಸಾಪ ಗುರುತಿಸಿ 22ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆ ಮಾಡಿದೆ. ಇದರಿಂದ ಸಮಸ್ತ ಕನ್ನಡ ಅಭಿಮಾನಿಗಳು ಮತ್ತು ಸಾಹಿತಿಗಳಿಗೆ ಋಣಿಯಾಗಿದ್ದೇನೆ. ವಾ.ಭಾ: ಕನ್ನಡ ಸಾಹಿತ್ಯ ಸಮ್ಮೇಳನ ಏಕೆ ಅಗತ್ಯ ಮತ್ತು ಉದ್ದೇಶವೇನು.? ಉ: ಸಾಹಿತ್ಯ ಎಂಬುದು ಚಿಲುಮೆ. ಇದು ಕೇವಲ ಅಕ್ಷರ ಜಾತ್ರೆ ಮಾತ್ರವಲ್ಲ. ಸಾಹಿತ್ಯದ ಮೂಲಕ ಸಮಾಜದ ಅಂಧಕಾರವನ್ನು ಪ್ರತಿರೋಧಿಸಿ ಕಟ್ಟಕಡೆ ವ್ಯಕ್ತಿ, ಸಮುದಾಯವನ್ನು ಪ್ರತಿನಿಧಿಸಿ ಸಮಾಜದಲ್ಲಿ ಸೂಕ್ತ ಸ್ಥಾನಮಾನವನ್ನು ಪಡೆಯುವಂತಾಗಲು ಹಂಬಲಿಸುವ ಲೋಕವಾಗಿದೆ. ಈ ದಿಶೆಯಲ್ಲಿ ಸಾಹಿತ್ಯ ಲೋಕವನ್ನು ಶ್ರೀಮಂತಗೊಳಿಸುವ ಉತ್ಸವದ ಜಾತ್ರೆ. ಈ ಜಾತ್ರೆಯಲ್ಲಿ ಸಾಹಿತಿಗಳು, ಕವಿಗಳು ಮತ್ತು ಕನ್ನಡಪ್ರೇಮಿಗಳು ಕನ್ನಡದ ತೆರನ್ನು ಎಳೆಯುತ್ತೇವೆ. ನಾಡಿನ ಹೆಸರಾಂತ ಸಾಹಿತಿಗಳ ಬರವಣಿಗೆಯ ಪುಸ್ತಕಗಳು, ಕವಿಗೋಷ್ಠಿ, ವಿಚಾರಗೋಷ್ಠಿ, ವಿಮರ್ಶೆ, ಗೀತೆ ಸೇರಿದಂತೆ ವಿವಿಧತೆಯ ವೈಭವವನ್ನು ಕೊಂಡಾಡುವ ದಿನವಾಗಿದೆ. ಪ್ರಮುಖವಾಗಿ ಯುವಜನರಲ್ಲಿ ಸಾಹಿತ್ಯಾಸಕ್ತಿ ಮೂಡಿಸುವುದು ಕಾಲದ ಅಗತ್ಯ ಕನ್ನಡ ಸಾಹಿತ್ಯ ಸಮ್ಮೇಳನಗಳು ಕೇವಲ ಕಾರ್ಯಕ್ರಮಗಳಲ್ಲ, ಅವು ಭಾಷೆ, ಸಂಸ್ಕೃತಿ ಮತ್ತು ಚಿಂತನೆಗಳ ಜಾತ್ರೆ. ವಾ.ಭಾ: ಕನ್ನಡ ಭಾಷೆ ಬಗ್ಗೆ ಸರಕಾರಗಳ ನಿಲುವುಗಳ ಬಗ್ಗೆ ನಿಮ್ಮ ಅನಿಸಿಕೆ? ಉ: ಸರಕಾರವೇ ಎಲ್ಲವನ್ನೂ ಮಾಡಬೇಕು ಎನ್ನುವುದಿಲ್ಲ. ಸಾಮಾನ್ಯ ಕನ್ನಡಪ್ರೇಮಿಗಳ ಮೂಲಕ ಕನ್ನಡವನ್ನು ಉಳಿಸಿ ಬೆಳೆಸುವ ಕೆಲಸ ಆಗಬೇಕು. ಕನ್ನಡವೇ ನಮ್ಮ ಜಾತಿ, ಕನ್ನಡವೇ ನಮ್ಮ ಕುಲ ಎಂಬ ಭಾವನೆ ಶೈಕ್ಷಣಿಕ ಸಂಸ್ಥೆಗಳಲ್ಲಿ ಬರಬೇಕು. ಈ ದಿಕ್ಕಿನಲ್ಲಿ ನಾವು ಕಾಯಕ ಮಾಡಿದ್ದಾಗ ಕನ್ನಡ ಭಾಷೆ ಮತ್ತಷ್ಟು ಉತ್ತುಂಗಕ್ಕೆ ಕೊಂಡೊಯ್ಯಬಹುದು. ಸರಕಾರಗಳು, ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರ ಮಾತುಗಳನ್ನು ಕೇಳಬೇಕು. ಸಾಹಿತ್ಯ ವೇದಿಕೆಗಳಲ್ಲಿ ಮಂಡಿಸುವ ಹಕ್ಕೊತ್ತಾಯಗಳು ಜನಪ್ರತಿನಿಧಿಗಳು ಗಂಭೀರವಾಗಿ ಪರಿಗಣಿಸಿ ಸರಕಾರದ ಮುಂದಿಟ್ಟು ಮುಂದಿನ ಸಮ್ಮೇಳನದವರೆಗೆ ಕನಿಷ್ಠ ಬೇಡಿಕೆಗಳು ಈಡೇರಿಸುವಂತಾಗಬೇಕು. ವಾ.ಭಾ: ವಿದ್ಯಾರ್ಥಿಗಳಿಗೆ, ಯುವಜನರಿಗೆ ನಿಮ್ಮ ಸಂದೇಶವೇನು? ಉ: ಇಂದಿನ ಕಾಲದ ಯುವಜನರು ತಂತ್ರಜ್ಞಾನಕ್ಕೆ ಹೆಚ್ಚು ಒಲವು ತೋರಿಸುತ್ತಿರುವುದು ಸಹಜ. ಆದರೆ ಸಾಹಿತ್ಯದಿಂದ ದೂರವಾಗುವ ಪ್ರವೃತ್ತಿ ಸಮಾಜದ ಸಾಂಸ್ಕೃತಿಕ ಆರೋಗ್ಯಕ್ಕೆ ಹಾನಿಕಾರಕ. ಸಾಹಿತ್ಯವು ಕೇವಲ ಮನರಂಜನೆಗೆ ಸೀಮಿತವಲ್ಲ. ಅದು ಚಿಂತನೆಗೆ ದಾರಿ ತೋರಿಸುವ ಶಕ್ತಿ ಹೊಂದಿದೆ. ನಮಗೆ ತಂತ್ರಜ್ಞಾನ ಎಷ್ಟು ಮುಖ್ಯವೋ ಸಾಹಿತ್ಯವು ಅಷ್ಟೇ ಮುಖ್ಯ. ಸಾಹಿತ್ಯಕ್ಕೆ ಕತ್ತಲ್ಲಲ್ಲಿ ಬೆಳಕು ಚಿಮ್ಮಿಸುವ ಶಕ್ತಿ ಇದೆ ಎಂಬುದು ನಮ್ಮ ಯುವಪೀಳಿಗೆಗೆ ಮನವರಿಕೆ ಮಾಡಿಸುವುದು ಅಗತ್ಯವಾಗಿದೆ. ಶೈಕ್ಷಣಿಕ ಸಂಸ್ಥೆಗಳು ಮತ್ತು ಪೋಷಕರು ಮಕ್ಕಳಿಗೆ ಸಾಹಿತ್ಯ ವಾತಾವರಣ ಕಲ್ಪಿಸಬೇಕು. ಯುವ ಸಾಹಿತಿಗಳು ಮತ್ತು ಕವಿಗಳು ಕೇವಲ ಕವಿಗೋಷ್ಠಿಗಾಗಿ ತಮ್ಮ ಕವಿತೆಗಳನ್ನು ಬರೆಯುವುದಕ್ಕೆ ಸೀಮಿತವಾಗಬಾರದು. ಸ್ಥಳೀಯ ಸಾಹಿತಿಗಳ ಬರವಣಿಗೆ, ಕವಿತೆ, ವಿಚಾರಗಳನ್ನು ಓದಬೇಕು. ನಮ್ಮಲ್ಲಿ ಯುವಜನರಿಗಾಗಿ ಕವಿಗೋಷ್ಠಿಗಳು ಮತ್ತು ಸಾಹಿತ್ಯ ಸ್ಪರ್ಧಾತ್ಮಕ ಚಟುವಟಿಕೆಗಳಲ್ಲಿ ಭಾಗವಹಿಸುವಿಕೆ ಇರಬೇಕು. ಯುವ ಸಾಹಿತಿಗಳು ಪ್ರೇಮಕಾವ್ಯಗಳಲ್ಲೇ ಸೀಮಿತವಾಗದೇ, ಸಮಾಜದ ಅಸಮಾನತೆ, ಶೋಷಣೆ ಮತ್ತು ಬಡತನದಂತಹ ವಿಷಯಗಳನ್ನು ಸಾಹಿತ್ಯದ ಮೂಲಕ ಪ್ರಸ್ತಾಪಿಸಬೇಕು. ಇದೇ ಸಾಹಿತ್ಯದ ನಿಜವಾದ ಹೊಣೆಗಾರಿಕೆಯಾಗಿದೆ. ವಾ.ಭಾ: ವಾರ್ತಾ ಭಾರತಿ ಪತ್ರಿಕೆ ಮೂಲಕ ಓದುಗರಿಗೆ ಏನು ಹೇಳಲು ಇಷ್ಟಪಡುವಿರಿ? ಉ: ಗ್ರಾಮೀಣ, ತಾಲೂಕು ಮತ್ತು ನಗರಕ್ಕೆ ಮಾತ್ರ ಪ್ರತಿಭೆಗಳು ಸೀಮಿತವಾಗದೇ, ಪರಿಷತ್ ಮೂಲಕ ಅಖಿಲ ಭಾರತೀಯ ಮಟ್ಟದಲ್ಲೂ ಗುರುತಿಸಿಕೊಳ್ಳುವಂತೆ ಆಗಬೇಕು. ಕನ್ನಡಕ್ಕಾಗಿ ಮತ್ತು ಕನ್ನಡದ ಬೆಳವಣಿಗೆಗಾಗಿ ಕೆಲಸ ಮಾಡುವವರೊಂದಿಗೆ ಸಾಹಿತ್ಯ ಬಳಗ ಸದಾ ಜೊತೆಗಿರುತ್ತದೆ ಎಂದು ಹೇಳಲು ಇಷ್ಟಪಡುತ್ತೇನೆ.
ಪಾಕಿಸ್ತಾನದ ಡ್ರೋನ್ನಿಂದ ಕೆಳಹಾಕಿದ 40 ಕೋಟಿ ರೂ. ಮೌಲ್ಯದ ಮಾದಕವಸ್ತು ವಶ
ಜಮ್ಮು: ಇಲ್ಲಿನ ಆರ್ ಎಸ್ ಪುರ ಅಂತರರಾಷ್ಟ್ರೀಯ ಗಡಿಯ ಬಳಿ ಪಾಕಿಸ್ತಾನಿ ಡ್ರೋನ್ ನಿಂದ ಕೆಳಕ್ಕೆ ಹಾಕಿದ್ದೆನ್ನಲಾದ 40 ಕೋಟಿ ರೂಪಾಯಿ ಮೌಲ್ಯದ ಮಾದಕ ವಸ್ತುಗಳನ್ನು ಜಮ್ಮು ಮತ್ತು ಕಾಶ್ಮೀರ ಪೊಲೀಸರು ಹಾಗೂ ಗಡಿಭದ್ರತಾ ಪಡೆ ಯೋಧರು ವಶಪಡಿಸಿಕೊಂಡಿದ್ದಾರೆ. ಗಡಿಯಾಚೆಗಿನಿಂದ ಡ್ರೋನ್ ಮೂಲಕ ಕೆಲ ವಸ್ತುಗಳನ್ನು ಕೆಳಹಾಕಲಾಗುತ್ತಿದೆ ಎಂಬ ಮಾಹಿತಿಯ ಆಧಾರದಲ್ಲಿ BSFನ 165ನೇ ಬೆಟಾಲಿಯನ್ ಮತ್ತು ಜಮ್ಮು & ಕಾಶ್ಮೀರ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿದರು. ಶೋಧ ಕಾರ್ಯಚರಣೆ ವೇಳೆ ನಯೀ ಬಸ್ತಿ ಕೊರಠಾಣಾ ಗ್ರಾಮದಿಂದ ಮಾದಕವಸ್ತುಗಳ ಪೊಟ್ಟಣ ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಈ ನಿಷೇಧಿತ ವಸ್ತುಗಳನ್ನು ಹಳದಿ ಬಣ್ಣದ ಪಾಲಿಥಿನ್ ಪ್ಯಾಕೆಟ್ ಗಳಲ್ಲಿ ಸುತ್ತಲಾಗಿತ್ತು. ಶುಕ್ರವಾರ ತಡರಾತ್ರಿ ಈ ಭಾಗದಲ್ಲಿ ಸಂಶಯಾಸ್ಪದ ಡ್ರೋನ್ ಚಲನೆಯ ಮಾಹಿತಿ ಸ್ಥಳೀಯ ಪೊಲೀಸರಿಗೆ ಲಭ್ಯವಾಗಿತ್ತು ಎಂದು ವಿವರಿಸಿದ್ದಾರೆ. ಈ ಮಾದಕವಸ್ತು ವಿರೋಧಿ ಕಾರ್ಯಾಚರಣೆಯನ್ನು ಭದ್ರತಾ ಮೂಲಗಳು ದೊಡ್ಡ ಸಾಧನೆ ಎಂದು ಬಣ್ಣಿಸಿವೆ. ಕಥೂವಾಟದಲ್ಲಿ ಪಾಕಿಸ್ತಾನಿ ಡ್ರೋನ್ ಗಳು ಗಡಿ ಪ್ರದೇಶದಲ್ಲಿ ಸುರಿಸಿದ ಹೆರಾಯಿನ್ ಕಳ್ಳತನ ಮಾಡುತ್ತಿದ್ದ ಆರೋಪದಲ್ಲಿ ಇಬ್ಬರನ್ನು ಬಂಧಿಸಿದ ಘಟನೆಯ ಬೆನ್ನಲ್ಲೇ ಈ ಘಟನೆ ಬೆಳಕಿಗೆ ಬಂದಿದೆ. ಮುಂದಿನ ತನಿಖೆ ನಡೆಯುತ್ತಿದ್ದು, ನಿಖರವಾದ ಮೂಲಕ ಹಾಗೂ ಇದು ಎಲ್ಲಿಗೆ ಸೇರಬೇಕಾಗಿತ್ತು ಎನ್ನುವ ಬಗ್ಗೆ ಪರಿಶೀಲಿಸಲಾಗುತ್ತಿದೆ. ಪೊಲೀಸರು ಹಿಮ್ಮುಖ ಹಾಗೂ ಮುಮ್ಮುಖ ಚಲನೆಯ ಮಾಹಿತಿ ಕಲೆ ಹಾಕುತ್ತಿದ್ದಾರೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.
ಚಂದ್ರ ಮೊದಲು: ಬಾಹ್ಯಾಕಾಶದಲ್ಲಿ ಎಲಾನ್ ಮಸ್ಕ್ ಸ್ಮಾರ್ಟ್ ಹೆಜ್ಜೆ
ಕಳೆದ ವಾರಾಂತ್ಯದಲ್ಲಿ, ಎಲಾನ್ ಮಸ್ಕ್ ತನ್ನ ಸಂಸ್ಥೆ ಸ್ಪೇಸ್ಎಕ್ಸ್ ಮೊದಲಿಗೆ ಚಂದ್ರನ ಮೇಲೆ ನಗರವೊಂದನ್ನು ನಿರ್ಮಿಸುವತ್ತ ಗಮನ ಹರಿಸುತ್ತಿದೆ ಎನ್ನುವ ಮೂಲಕ ಎಲ್ಲರನ್ನೂ ಚಕಿತಗೊಳಿಸಿದರು. ಬಹುಶಃ ಇದು ಎಲಾನ್ ಮಸ್ಕ್ ಇಂದಿನ ತನಕ ಕೈಗೊಂಡಿರಬಹುದಾದ ಅತ್ಯಂತ ಬುದ್ಧಿವಂತಿಕೆಯ ನಿರ್ಧಾರವಾಗಿರಬಹುದು! ಎಲಾನ್ ಮಸ್ಕ್ ತಾನು ಸಾಗುವುದಕ್ಕಿಂತಲೂ ಉತ್ತಮವಾದ ಹಾದಿ ಕಂಡಾಗ ತನ್ನ ಮನಸ್ಸು ಬದಲಾಯಿಸಿ, ಆ ಉತ್ತಮವಾದ ಹಾದಿಯನ್ನು ಆಯ್ಕೆ ಮಾಡಿಕೊಳ್ಳುವಂತಹ ವ್ಯಕ್ತಿ ಎನ್ನುವುದು ಎಲ್ಲರಿಗೂ ತಿಳಿದಿರುವ ವಿಚಾರ. ಈ ಬಾರಿ, ಮಂಗಳ ಗ್ರಹ ಅನ್ವೇಷಣೆಗೂ ಮುನ್ನ ಚಂದ್ರನತ್ತ ಸಾಗುವ ಮಸ್ಕ್ ನಿರ್ಧಾರ ಅನಿರೀಕ್ಷಿತ ಅಥವಾ ಅಸಹಜವೇನಲ್ಲ. ಹಾಗೆ ನೋಡಿದರೆ, ಇದು ಒಂದು ರೀತಿಯಲ್ಲಿ ತಾರ್ಕಿಕವಾದ ನಿರ್ಧಾರವೂ ಹೌದು. ಕಳೆದ ಇಪ್ಪತ್ತಕ್ಕೂ ಹೆಚ್ಚು ವರ್ಷಗಳಿಂದ, ಎಲಾನ್ ಮಸ್ಕ್ ಅವರು ಮಂಗಳ ಗ್ರಹ ಮಾನವ ಜನಾಂಗದ ಅಂತಿಮ ನೆಲೆ ಎಂದು ಹೇಳುತ್ತಲೇ ಬಂದಿದ್ದಾರೆ. ಒಂದಲ್ಲ ಒಂದು ದಿನ ಮಾನವರು ಮಂಗಳ ಗ್ರಹದಲ್ಲಿ ವಾಸಿಸುವಂತೆ ಮಾಡುವುದು ಅವರ ಉದ್ದೇಶವಾಗಿದ್ದು, ಇದಕ್ಕಾಗಿ 2002ರಲ್ಲಿ ಅವರು ಸ್ಪೇಸ್ಎಕ್ಸ್ ಸಂಸ್ಥೆಯನ್ನು ಆರಂಭಿಸಿದ್ದರು. ಆದರೆ, ಕಳೆದ ವರ್ಷ ಮಸ್ಕ್ ಮಂಗಳ ಗ್ರಹ ಒಂದು ‘ಗಮನ ಬೇರೆಡೆ ಸೆಳೆಯುವ ವಿಚಾರ’ ಎಂದಿದ್ದರು. ಆ ಬಳಿಕ, ಏನೋ ಬದಲಾವಣೆಗಳು ನಡೆದವು. ಕಳೆದ ವಾರಾಂತ್ಯದಲ್ಲಿ, ಎಲಾನ್ ಮಸ್ಕ್ ತನ್ನ ಸಂಸ್ಥೆ ಸ್ಪೇಸ್ಎಕ್ಸ್ ಮೊದಲಿಗೆ ಚಂದ್ರನ ಮೇಲೆ ನಗರವೊಂದನ್ನು ನಿರ್ಮಿಸುವತ್ತ ಗಮನ ಹರಿಸುತ್ತಿದೆ ಎನ್ನುವ ಮೂಲಕ ಎಲ್ಲರನ್ನೂ ಚಕಿತಗೊಳಿಸಿದರು. ಬಹುಶಃ ಇದು ಎಲಾನ್ ಮಸ್ಕ್ ಇಂದಿನ ತನಕ ಕೈಗೊಂಡಿರಬಹುದಾದ ಅತ್ಯಂತ ಬುದ್ಧಿವಂತಿಕೆಯ ನಿರ್ಧಾರವಾಗಿರಬಹುದು! ಮಸ್ಕ್ ನಿರ್ಧಾರ ಯಾಕೆ ಮಹತ್ವದ್ದು ಎಂದು ಗಮನಿಸೋಣ. ಮಂಗಳ ಗ್ರಹ ಮತ್ತು ಚಂದ್ರ ಎರಡೂ ಪ್ರಯಾಣದ ಅವಧಿ ಮತ್ತು ಪ್ರಯಾಣದ ಸಂಖ್ಯೆಗಳಲ್ಲಿ ಅತ್ಯಂತ ಭಿನ್ನವಾಗಿವೆ. ಮಂಗಳ ಗ್ರಹಕ್ಕೆ ಪ್ರಯಾಣ ಬೆಳೆಸಬೇಕೆಂದರೆ, ಆಗ ಮಂಗಳ ಮತ್ತು ಭೂಮಿ ಒಂದೇ ನೇರದಲ್ಲಿ ಇರಬೇಕು. ಇಂತಹ ಸಾಧ್ಯತೆ ಕೇವಲ 26 ತಿಂಗಳುಗಳಿಗೆ ಒಮ್ಮೆ ಮಾತ್ರ ಘಟಿಸುತ್ತದೆ. ಇನ್ನು ಭೂಮಿಯಿಂದ ಮಂಗಳ ಗ್ರಹವನ್ನು ತಲುಪಲು ಅಂದಾಜು ಆರು ತಿಂಗಳು ಪ್ರಯಾಣ ಬೆಳೆಸಬೇಕಾಗುತ್ತದೆ. ಆದರೆ, ಚಂದ್ರ ಭೂಮಿಯಿಂದ ಕೇವಲ ಎರಡು ದಿನಗಳ ಪ್ರಯಾಣದ ದೂರದಲ್ಲಿದ್ದು, ಪ್ರತೀ ಹತ್ತು ದಿನಗಳಿಗೊಮ್ಮೆ ಚಂದ್ರನತ್ತ ಉಡಾವಣೆ ನಡೆಸಬಹುದು. ಆದ್ದರಿಂದ, ಚಂದ್ರನ ಮೇಲೆ ನಮ್ಮ ಪರೀಕ್ಷೆಗಳು, ಪ್ರಯೋಗಗಳನ್ನು ನಡೆಸುತ್ತಾ, ನಾವು ತಂತ್ರಜ್ಞಾನವನ್ನು ಬಹಳ ವೇಗವಾಗಿ ಸುಧಾರಿಸಬಹುದು. ಇದು ಒಂದು ರೀತಿ ದೊಡ್ಡ ಕ್ರೀಡಾಂಗಣದಲ್ಲಿ ಮುಖ್ಯ ಪಂದ್ಯಾವಳಿಯಲ್ಲಿ ಆಡುವ ಮುನ್ನ ಸ್ಥಳೀಯ ಮೈದಾನದಲ್ಲಿ ಅಭ್ಯಾಸ ನಡೆಸಿದಂತಿರಲಿದೆ. ಮುಂದಿನ ಹತ್ತು ವರ್ಷಗಳಿಗೂ ಕಡಿಮೆ ಅವಧಿಯಲ್ಲಿ ಚಂದ್ರನ ಮೇಲೆ ಸ್ವತಃ ಬೆಳೆಯಬಲ್ಲ ನಗರವನ್ನು ಕಟ್ಟಲು ಸಾಧ್ಯ ಎಂದು ಎಲಾನ್ ಮಸ್ಕ್ ಹೇಳಿದ್ದಾರೆ. ಆದರೆ, ಮಂಗಳ ಗ್ರಹಕ್ಕೆ ತೆರಳಲು ಹೆಚ್ಚಿನ ಸಮಯ ಬೇಕಾಗುವುದರಿಂದ, ಅಲ್ಲಿ ನಿರ್ಮಾಣ ಕಾರ್ಯಕ್ಕೆ ಇಪ್ಪತ್ತು ವರ್ಷಕ್ಕೂ ಹೆಚ್ಚಿನ ಅವಧಿ ಬೇಕಾಗುತ್ತದೆ. ಚಂದ್ರನ ಮೇಲೆಯೇ ಹೆಚ್ಚು ಮಹತ್ವದ್ದನ್ನು ಸಾಧಿಸಲು ಸಾಧ್ಯವಿರುವಾಗ, ಅಷ್ಟೊಂದು ಸುದೀರ್ಘ ಕಾಲ ಕಾಯುವ ಅಗತ್ಯವೇನು? ಇದೊಂದು ಸರಳ ಪರಿಹಾರವುಳ್ಳ ವಿಚಾರ. ವಿಚಾರಗಳು ನಿಜಕ್ಕೂ ಆಸಕ್ತಿಕರವಾಗುತ್ತಾ ಹೋಗುವುದು ಇಲ್ಲಿಂದ. ಎಲಾನ್ ಮಸ್ಕ್ ಕೇವಲ ನೆಲೆಗಳು, ವಸಾಹತುಗಳನ್ನು ನಿರ್ಮಿಸಲು ಆಲೋಚಿಸುತ್ತಿಲ್ಲ. ಬದಲಿಗೆ, ಅವರು ಕಾರ್ಖಾನೆಗಳ ನಿರ್ಮಾಣವನ್ನೂ ಆಲೋಚಿಸುತ್ತಿದ್ದಾರೆ. ಸ್ಪೇಸ್ಎಕ್ಸ್ ಸಂಸ್ಥೆ ಚಂದ್ರನ ಮೇಲೆ ಉತ್ಪಾದನಾ ಘಟಕಗಳನ್ನು ಸ್ಥಾಪಿಸುವ ಯೋಚನೆ ಹೊಂದಿದೆ. ಈ ಕಾರ್ಖಾನೆಗಳು ಚಂದ್ರನ ಮೇಲಿರುವ ಮಣ್ಣು ಮತ್ತು ಖನಿಜಗಳಂತಹ ಸಂಪನ್ಮೂಲಗಳನ್ನು ಬಳಸಿಕೊಂಡು, ಉಪಗ್ರಹಗಳನ್ನು ನಿರ್ಮಿಸಲಿದೆ. ಬಳಿಕ, ಎಲೆಕ್ಟ್ರೋಮ್ಯಾಗ್ನೆಟಿಕ್ ಮಾಸ್ ಡ್ರೈವರ್ ಎನ್ನುವ ತಂತ್ರಜ್ಞಾನವನ್ನು ಬಳಸಿಕೊಂಡು, ಈ ಉಪಗ್ರಹಗಳನ್ನು ಬಾಹ್ಯಾಕಾಶದ ಆಳಕ್ಕೆ ಉಡಾವಣೆಗೊಳಿಸಲಿದೆ. ಏನು ಈ ಎಲೆಕ್ಟ್ರೋಮ್ಯಾಗ್ನೆಟಿಕ್ ಮಾಸ್ ಡ್ರೈವರ್? ಇದನ್ನು ಒಂದು ಬೃಹತ್ ಇಲೆಕ್ಟ್ರಿಕ್ ರೈಲ್ ಗನ್ ಅಥವಾ ವಸ್ತುಗಳನ್ನು ಬಾಹ್ಯಾಕಾಶಕ್ಕೆ ದೂರಕ್ಕೆ ಉಡಾವಣೆಗೊಳಿಸಲು ಕಾಂತೀಯ ಶಕ್ತಿಯನ್ನು ಬಳಸುವ ಶಕ್ತಿಶಾಲಿ ಕವಣೆ ಯಂತ್ರ ಎಂದುಕೊಳ್ಳಬಹುದು. ಇದಕ್ಕಾಗಿ ದುಬಾರಿಯಾದ ರಾಕೆಟ್ ಇಂಧನದ ಅಗತ್ಯವಿಲ್ಲ. ಗುರುತ್ವಾಕರ್ಷಣೆ ಅತ್ಯಂತ ಕಡಿಮೆಯಿರುವ ಮತ್ತು ದಪ್ಪನೆಯ ವಾತಾವರಣವನ್ನು ಹೊಂದಿರದ ಚಂದ್ರನ ಮೇಲೆ ಈ ವಿಧಾನ ಅತ್ಯಂತ ಪರಿಣಾಮಕಾರಿ ಎನಿಸಲಿದೆ. ಚಂದ್ರನ ಮೇಲೆ ಏನನ್ನಾದರೂ ನಿರ್ಮಿಸಿ, ಅದನ್ನು ಗ್ಯಾಲನ್ಗಟ್ಟಲೆ ರಾಕೆಟ್ ಇಂಧನವನ್ನು ಉರಿಸದೆ, ಕೇವಲ ವಿದ್ಯುತ್ ಶಕ್ತಿ ಮತ್ತು ಅಯಸ್ಕಾಂತಗಳನ್ನು ಬಳಸಿಕೊಂಡು ಬಾಹ್ಯಾಕಾಶಕ್ಕೆ ಉಡಾವಣೆಗೊಳಿಸುವುದನ್ನು ಒಮ್ಮೆ ಕಲ್ಪಿಸಿಕೊಳ್ಳಿ. ಈ ಸಾಧ್ಯತೆ ಬಾಹ್ಯಾಕಾಶ ಅನ್ವೇಷಣೆಯನ್ನೇ ಬದಲಾಯಿಸಬಲ್ಲದು. ಇಲ್ಲಿನ ನಿಜವಾದ ಕನಸು ‘ಕರ್ಡಾಶೆವ್ ಸ್ಕೇಲ್’ ಎನ್ನುವುದು. ಇದು ಒಂದು ನಾಗರಿಕತೆ ಎಷ್ಟರಮಟ್ಟಿಗೆ ಆಧುನಿಕವಾಗಿದೆ ಎನ್ನುವುದನ್ನು ಅದು ಎಷ್ಟರಮಟ್ಟಿಗೆ ಇಂಧನ ನಿಯಂತ್ರಣ ನಡೆಸಬಲ್ಲದು ಎನ್ನುವುದರ ಆಧಾರದಲ್ಲಿ ಅಳೆಯುತ್ತದೆ. ಇದನ್ನು ಸರಳವಾಗಿ ತಿಳಿಯೋಣ. ಒಂದನೇ ಹಂತದ ನಾಗರಿಕತೆ ಎಂದರೆ, ಸಂಪೂರ್ಣ ಗ್ರಹದಲ್ಲಿರುವ ಎಲ್ಲ ಇಂಧನವನ್ನು ಬಳಸಬಲ್ಲ ಮತ್ತು ನಿಯಂತ್ರಿಸಬಲ್ಲ ನಾಗರಿಕತೆ. ಆದರೆ, ಸದ್ಯದ ಮಟ್ಟಿಗೆ ಭೂಮಿ ಒಂದನೇ ಹಂತದ ಆಸುಪಾಸಿಗೂ ತಲುಪಿಲ್ಲ. ನಾವು ಈಗ ಭೂಮಿ ಉತ್ಪಾದಿಸುವ ಎಲ್ಲ ಇಂಧನವನ್ನು ಬಳಸಲೂ ಸಾಧ್ಯವಿಲ್ಲ. ಆದರೆ, ಎಲಾನ್ ಮಸ್ಕ್ ಯೋಜನೆ ಕಾರ್ಯರೂಪಕ್ಕೆ ಬಂದರೆ, ಆಗ ನಾವು ಕ್ರಮೇಣ ಸೂರ್ಯನಿಂದ ಬರುವ ಶಕ್ತಿಯ ದೊಡ್ಡ ಪ್ರಮಾಣದ ಪಾಲನ್ನು ನಿಯಂತ್ರಿಸಲು ಸಾಧ್ಯವಾಗಲಿದೆ. ಅಂದರೆ, ನಾವು ಸಂಪೂರ್ಣ ಜಗತ್ತಿಗೇ ಬೆಳಕು ನೀಡುವ ಸಾಮರ್ಥ್ಯವಿರುವ ಉಪಗ್ರಹಗಳ ಕುರಿತು ಮಾತನಾಡುತ್ತಿದ್ದೇವೆ. ಇದು ಕೇವಲ ವೈಜ್ಞಾನಿಕ ಕಥೆ-ಕಾದಂಬರಿಗೆ ಸೀಮಿತವಾದ ವಿಚಾರವಾಗಿ ಉಳಿದಿಲ್ಲ. ಒಂದಷ್ಟು ಜನರು ಎಲಾನ್ ಮಸ್ಕ್ ಈಗ ಅವಾಸ್ತವಿಕ ಮತ್ತು ಅತಿಯಾದ ಮಹತ್ವಾಕಾಂಕ್ಷೆಯ ಕನಸುಗಳನ್ನು ಕಾಣುತ್ತಿದ್ದಾರೆ ಎಂದು ಭಾವಿಸಬಹುದು. ಆದರೆ, ಮಸ್ಕ್ ಅವರ ಚಂದ್ರನತ್ತ ಮೊದಲು ಎನ್ನುವ ಕಾರ್ಯತಂತ್ರ ನಿಜಕ್ಕೂ ಹೆಚ್ಚು ಪ್ರಾಯೋಗಿಕವಾಗಿದೆ. ಮಸ್ಕ್ ಈಗ ಬಹುದೊಡ್ಡ ಗುರಿಗಳನ್ನು ಹಲವು ಸಣ್ಣದಾದ, ಸಾಧಿಸಬಹುದಾದ ಹೆಜ್ಜೆಗಳಾಗಿ ಮಾರ್ಪಡಿಸುತ್ತಿದ್ದಾರೆ. ಮೊದಲು ಚಂದ್ರನ ಮೇಲೆ ನಿರ್ಮಾಣ ಕಾರ್ಯ ನಡೆಸಿ, ತಂತ್ರಜ್ಞಾನ ಕಾರ್ಯಾಚರಿಸುತ್ತದೆ ಎನ್ನುವುದನ್ನು ಸಾಬೀತುಪಡಿಸಿ, ಬಳಿಕ ಮಂಗಳ ಗ್ರಹದತ್ತ ಸಾಗಬಹುದು. ನೈಜ ಜಗತ್ತಿನಲ್ಲಿ ನೈಜ ಯೋಜನೆಗಳು ಹೀಗೆಯೇ ಕಾರ್ಯರೂಪಕ್ಕೆ ಬರುತ್ತವೆ. ಆದರೆ, ಇಲ್ಲಿ ಇನ್ನೂ ಹಲವಾರು ಸವಾಲುಗಳಿವೆ. ಸ್ಪೇಸ್ಎಕ್ಸ್ ಸಂಸ್ಥೆಯ ಸ್ಟಾರ್ಶಿಪ್ ಎನ್ನುವ ಬೃಹತ್ ರಾಕೆಟ್ ಈಗಾಗಲೇ ಹಲವಾರು ಪರೀಕ್ಷಾ ಹಾರಾಟಗಳನ್ನು ಪೂರ್ಣಗೊಳಿಸಿದ್ದು, ಕಕ್ಷೀಯ ವೇಗವನ್ನು (ಆರ್ಬಿಟಲ್ ವೆಲೋಸಿಟಿ) ಸಾಧಿಸಿದೆ. ಇದು ನಿಜಕ್ಕೂ ಭಾರೀ ಸಾಧನೆಯೇ ಸರಿ. ಆದರೆ, ರಾಕೆಟ್ ಇಂದಿಗೂ ಪೂರ್ಣ ಯಶಸ್ಸನ್ನು ಸಾಧಿಸಿಲ್ಲ. ಅದು ಇನ್ನೂ ಮರು ಬಳಕೆ ಮಾಡಬಹುದಾದ ಪ್ರಯಾಣವನ್ನು, ಅಂದರೆ, ರಾಕೆಟ್ ಪರಿಪೂರ್ಣ ಪರಿಸ್ಥಿತಿಯಲ್ಲಿ ಭೂಮಿಗೆ ಮರಳಿ, ತಕ್ಷಣವೇ ಮರುಬಳಕೆಗೆ ಸಿದ್ಧವಾಗುವುದನ್ನು ಸಾಬೀತುಪಡಿಸಿಲ್ಲ. ಸ್ಟಾರ್ಶಿಪ್ಗೆ ಬಾಹ್ಯಾಕಾಶದಲ್ಲಿ ಇಂಧನ ಮರುಪೂರಣ ನಡೆಸಬೇಕಿದ್ದು, ಇದಕ್ಕಾಗಿ ಹಲವಾರು ಉಡಾವಣಾ ಪ್ರಯತ್ನಗಳನ್ನು ನಡೆಸಬೇಕಾಗುತ್ತದೆ. ಇದು ಸಂಕೀರ್ಣವಾದ ಮತ್ತು ಅಪಾಯಕಾರಿಯಾದ ಕಾರ್ಯ. ನಾಸಾ ಬಳಿ ಇದೇ ರೀತಿಯ ಒಪ್ಪಂದಗಳಿಗೆ ಬ್ಲೂ ಒರಿಜಿನ್ನಂತಹ ಹಲವಾರು ಕಂಪೆನಿಗಳೂ ಸ್ಪರ್ಧಿಸುತ್ತಿದ್ದು, ಇಲ್ಲಿ ಸಾಕಷ್ಟು ಒತ್ತಡವೂ ಸೃಷ್ಟಿಯಾಗಿದೆ. ನನ್ನ ಅಭಿಪ್ರಾಯ ಏನೆಂದರೆ, ಚಂದ್ರನ ಕಡೆಗೆ ಮೊದಲು ಗಮನ ಹರಿಸುವ ಎಲಾನ್ ಮಸ್ಕ್ ನಿರ್ಧಾರ ಮಂಗಳನ ಮೇಲಿನ ಆದ್ಯತೆಯನ್ನು ಕೈಬಿಡುವುದು ಎಂದರ್ಥವಲ್ಲ. ಬದಲಿಗೆ, ಯೋಜನೆಗಳ ಕುರಿತು ಸ್ಮಾರ್ಟ್ ಆಗಿ ಆಲೋಚಿಸುವುದಾಗಿದೆ. ಚಂದ್ರನ ಯೋಜನೆಯ ಜೊತೆಗೆ, ಐದರಿಂದ ಆರು ವರ್ಷಗಳಲ್ಲಿ ಮಂಗಳ ಗ್ರಹದಲ್ಲೂ ಕಾರ್ಯಾಚರಣೆ ಆರಂಭಗೊಳ್ಳಲಿದೆ ಎಂದು ಮಸ್ಕ್ ಹೇಳಿದ್ದಾರೆ. ಮಾನವ ಸಹಿತ ಮಂಗಳ ಯೋಜನೆ 2031ರಲ್ಲಿ ನಡೆಯುವ ನಿರೀಕ್ಷೆಗಳಿವೆ. ಮಂಗಳ ಗ್ರಹದ ಅನ್ವೇಷಣೆಯನ್ನು ಕೈಬಿಡಲಾಗಿಲ್ಲ. ಆದರೆ, ಈಗ ಮೊದಲ ಆದ್ಯತೆಯ ಸ್ಥಾನಕ್ಕೆ ಚಂದ್ರಾನ್ವೇಷಣೆ ಬಂದಿದೆ. ನೀವು ಒಂದು ಬಲುದೂರದ ನಗರಕ್ಕೆ ತೆರಳುವ ಯೋಜನೆ ಹಾಕಿಕೊಂಡಿದ್ದರೆ, ಅದಕ್ಕೆ ಸಿದ್ಧಗೊಳ್ಳಲು ನೀವು ಮೊದಲು ಸ್ವಲ್ಪ ಸನಿಹದ ನಗರಕ್ಕೆ ವರ್ಗಾವಣೆಗೊಳ್ಳಬಹುದು. ನೀವು ಒಂದು ಬಾರಿ ಅಲ್ಲಿಗೆ ಹೊಂದಿಕೊಳ್ಳಲು ಸಾಧ್ಯವಾದರೆ, ಇನ್ನಷ್ಟು ದೂರದ ನಗರಕ್ಕೆ ತೆರಳುವುದು ನಿಮಗೆ ಸುಲಭವಾಗಲಿದೆ. ಎಲಾನ್ ಮಸ್ಕ್ ಈಗ ಬಾಹ್ಯಾಕಾಶ ಅನ್ವೇಷಣೆಯಲ್ಲಿ ಇದನ್ನೇ ನಡೆಸುತ್ತಿದ್ದಾರೆ. ಮಸ್ಕ್ ನಿರ್ಧಾರ ಅವರ ಆಲೋಚನೆಯಲ್ಲಿರುವ ಪ್ರೌಢಿಮೆಯನ್ನು ಪ್ರದರ್ಶಿಸಿದೆ. ಜಗತ್ತಿನ ಅತ್ಯಂತ ಶ್ರೀಮಂತ ವ್ಯಕ್ತಿಯೂ ಸರಿಯಾದ ಮಾರ್ಗ ಕಂಡಾಗ ತನ್ನ ಮನಸ್ಸು ಬದಲಿಸಬಹುದು ಎನ್ನುವುದನ್ನು ಇದು ಸಾಬೀತುಪಡಿಸಿದೆ. ಬಾಹ್ಯಾಕಾಶದಲ್ಲಿ ಮಾನವ ಜನಾಂಗದ ಕನಸು ಕಾಣುವ ನಮಗೆಲ್ಲರಿಗೂ, ಈ ಚಂದ್ರ ಅನ್ವೇಷಣೆ ಮೊದಲು ಎನ್ನುವ ವಿಧಾನ ನಾವು ಕಾಯುತ್ತಿದ್ದ ಎಲ್ಲಕ್ಕೂ ಬಾಗಿಲು ತೆರೆಯುವ ಕೀಲಿಕೈ ಆಗಬಹುದು!
NELAMANGALA | ಕಾರು-ಬಸ್ ನಡುವೆ ಭೀಕರ ರಸ್ತೆ ಅಪಘಾತ: ಐವರು ಯುವಕರು ಮೃತ್ಯು
ಬೆಂಗಳೂರು ಗ್ರಾಮಾಂತರ: ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ ಹಾರಿ ಎದುರಿನಿಂದ ಬರುತ್ತಿದ್ದ ಕೆಎಸ್ಸಾರ್ಟಿಸಿ ಬಸ್ಸಿಗೆ ಢಿಕ್ಕಿ ಹೊಡೆದ ಪರಿಣಾಮ ಐವರು ಯುವಕರು ಮೃತಪಟ್ಟ ಘಟನೆ ನೆಲಮಂಗಲದ ಜಿಂದಾಲ್ ನಲ್ಲಿ ಶನಿವಾರ ಮಧ್ಯರಾತ್ರಿ ನಡೆದಿದೆ. ಅಪಘಾತದ ತೀವ್ರತೆಗೆ ಕಾರಿನಲ್ಲಿದ್ದ ನಾಲ್ವರು ಸ್ಥಳದಲ್ಲಿ ಮೃತಪಟ್ಟಿದ್ದರೆ, ಓರ್ವ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾನೆ ಎಂದು ತಿಳಿದುಬಂದಿದೆ. ಮೃತರಲ್ಲಿ ಲಿಖಿತ್, ಹರ್ಷಿತ್ ಗುರುತು ಪತ್ತೆಯಾಗಿದ್ದು, ಇನ್ನುಳಿದ ಮೂವರು ಯುವಕರ ಗುರುತು ಪತ್ತೆಯಾಗಿಲ್ಲ. ಐವರು ಸ್ನೇಹಿತರಿದ್ದ ಕಾರು ಕಳೆದ ರಾತ್ರಿ 12 ಗಂಟೆ ಸುಮಾರಿಗೆ ತುಮಕೂರು ಕಡೆಯಿಂದ ಬೆಂಗಳೂರಿನತ್ತ ಬರುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ. ತುಮಕೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಜಿಂದಾಲ್ ಬಳಿಯ ಫ್ಲೈ ಓವರ್ ಮೇಲೆ ಚಾಲಕನ ನಿಯಂತ್ರಣ ತಪ್ಪಿದ ಕಾರು ಡಿವೈಡರ್ ಗೆ ಢಿಕ್ಕಿ ಹೊಡೆದಿದೆ. ಅತೀ ವೇಗದಲ್ಲಿದ್ದ ಕಾರು ಡಿವೈಡರ್ ಅನ್ನು ಹಾರಿ ಬೆಂಗಳೂರಿನಿಂದ ಹುಬ್ಬಳಿಗೆ ತೆರಳುತ್ತಿದ್ದ ಕೆಎಸ್ಸಾರ್ಟಿಸಿ ಬಸ್ಸಿಗೆ ಢಿಕ್ಕಿ ಹೊಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಅಪಘಾತದ ತೀವ್ರತೆಗೆ ಕಾರಿನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ. ಬಸ್ಸಿನ ಮುಂಭಾಗವೂ ಜಖಂ ಆಗಿದ್ದು, ಅದರಲ್ಲಿದ್ದ 43 ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ. ಮೃತ ಪೈಕಿ ದೊಡ್ಡಬಳ್ಳಾಪುರ ಮೂಲದವರಾಗಿರುವ ಹರ್ಷಿತ್, ರಾಜಾನುಕುಂಟೆ ಬಳಿಯ ಸಾಯಿ ಕಾಲೇಜು ವಿದ್ಯಾರ್ಥಿಯಾಗಿದ್ದ ಎಂದು ತಿಳಿದುಬಂದಿದೆ. ಘಟನಾ ಸ್ಥಳಕ್ಕೆ ಮಾದನಾಯಕನಹಳ್ಳಿ ಠಾಣೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ಎಂ ಸತ್ಯವರ ಗ್ರಾಮದ ಬಳಿ ಶುಕ್ರವಾರ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಏಳು ಮಂದಿ ಸಾವನ್ನಪ್ಪಿದ್ದರು. ಆ ದುರ್ಘಟನೆಯ ಆಘಾತ ಮಾಸುವ ಮುನ್ನವೇ ಮತ್ತೊಂದು ಅಪಘಾತ ಸಂಭವಿಸಿದೆ.
ಕೃಷ್ಣ ನೀರು ಗಡಿ ದಾಟಿಸಲು ಬೇಕಿದೆ ಸಹಕಾರ ; ಆಂಧ್ರ ಸಿಎಂಗೆ ಮನವಿ
ವ್ಯಾಲಿ ಯೋಜನೆಗಳಿಂದ ಹರಿಯುತ್ತಿರುವ ನೀರಿನಿಂದ ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜನ ನಾನಾ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಎತ್ತಿನಹೊಳೆ ಯೋಜನೆಯಡಿ ನೀರು ಹರಿಯುವ ಬಗ್ಗೆಯೇ ಹಲವು ಅನುಮಾನಗಳೂ ಇವೆ. ಹೀಗಾಗಿ ಗಡಿಯ ಅನತಿ ದೂರದಲ್ಲಿ ಹರಿಯುತ್ತಿರುವ ಕೃಷ್ಣ ನದಿ ನೀರನ್ನು ತರಲು ಗಂಭೀರ ಪ್ರಯತ್ನ ನಡೆಸಬೇಕಿದೆ. ಇದಕ್ಕಾಗಿ ಮೂರು ಜಿಲ್ಲೆಗಳಲ್ಲಿ ಹೋರಾಟವನ್ನು ತೀವ್ರಗೊಳಿಸಲು ಜಲಾಗ್ರಹ ಜಂಟಿ ಕ್ರಿಯಾಸಮಿತಿ ರೂಪುಗೊಂಡಿದೆ. ಇದರ ಬೆನ್ನಲ್ಲೇ ಆಂಧ್ರ ಸಿಎಂಗೂ ಮನವಿ ಸಲ್ಲಿಸಲಾಗಿದೆ.
ಸಾಕೇತ್ ಶ್ರೀನಿವಾಸಯ್ಯ; ಕ್ಯಾಲಿಫೋರ್ನಿಯಾದಲ್ಲಿ ಕಾಣೆಯಾದ 6 ದಿನಗಳ ಬಳಿಕ ಪತ್ತೆಯಾದ ಕರ್ನಾಟಕದ ಹುಡುಗ!
ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ಕಳೆದ ಆರು ದಿನಗಳಿಂದ ನಾಪತ್ತೆಯಾಗಿದ್ದ ಕರ್ನಾಟಕ ಮೂಲದ 22 ವರ್ಷದ ವಿದ್ಯಾರ್ಥಿ ಸಾಕೇತ್ ಶ್ರೀನಿವಾಸಯ್ಯ, ನಿಗೂಢವಾಗಿ ಸಾವನ್ನಪ್ಪಿದ್ದಾರೆ. ಸಾಕೇತ್ ಶ್ರೀನಿವಾಸಯ್ಯ ಅವರ ಸಾವನ್ನು ದೃಢಪಡಿಸಿರುವ ಸ್ಯಾನ್ ಫ್ರಾನ್ಸಿಸ್ಕೋದಲ್ಲಿರುವ ಭಾರತೀಯ ರಾಯಭಾರ ಕಚೇರಿ, ಕಳೆದ ಫೆ.9ರಂದು ನಾಪತ್ತೆಯಾಗಿದ್ದ ಭಾರತೀಯ ವಿದ್ಯಾರ್ಥಿ ಸಾಕೇತ್ ಶ್ರೀನಿವಾಸಯ್ಯ ಅವರ ಶವವನ್ನು ಪೊಲೀಸರು ಪತ್ತೆ ಮಾಡಿದ್ದಾರೆ ಎಂದು ತಿಳಿಸಿದೆ. ಸ್ಥಳೀಯ ಪೊಲೀಸರು ಕಳೆದ ಆರು ದಿನಗಳಿಂದ ಸಾಕೇತ್ ಅವರಿಗಾಗಿ ಶೋಧಕಾರ್ಯ ನಡೆಸುತ್ತಿದ್ದರು. ಇಲ್ಲಿದೆ ಮಾಹಿತಿ.
Chikkamagaluru | ಭದ್ರಾ ನದಿಯಲ್ಲಿ ಈಜಲು ತೆರಳಿದ್ದ ಇಬ್ಬರು ಯುವಕರು ನೀರುಪಾಲು
ಚಿಕ್ಕಮಗಳೂರು: ಭದ್ರಾ ನದಿಯಲ್ಲಿ ಈಜಲು ತೆರಳಿದ್ದ ಇಬ್ಬರು ಯುವಕರು ನೀರು ಪಾಲಾದ ಘಟನೆ ಕಳಸ ತಾಲೂಕಿನ ಬಾಳೆಹೊಳೆ ಸಮೀಪ ಸಂಭವಿಸಿದೆ. ನೀರು ಪಾಲಾದ ಯುವಕರನ್ನು ಅಭಿಷೇಕ್ (27) ಹಾಗೂ ಯೋಗೀಶ್ (17) ಎಂದು ಗುರುತಿಸಲಾಗಿದೆ. ಇವರು ಮೂಲತಃ ಕೊಡಗು ಜಿಲ್ಲೆಯವರಾಗಿದ್ದಾರೆ ಎಂದು ತಿಳಿದು ಬಂದಿದೆ. ಅಭಿಷೇಕ್ ತನ್ನ ಅಕ್ಕನ ಮನೆಗೆ ಬಂದಿದ್ದ ವೇಳೆ ಸ್ನೇಹಿತರೊಂದಿಗೆ ಭದ್ರಾ ನದಿಗೆ ಈಜಲು ತೆರಳಿದ್ದಾನೆ. ಮೃತ ಅಭಿಷೇಕ್ ಅವರ ಅಕ್ಕ ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ. ಘಟನೆ ತಿಳಿಯುತ್ತಿದ್ದಂತೆ ಕಳಸ ಪೊಲೀಸರು ಸ್ಥಳಕ್ಕೆ ಧಾವಿಸಿ ಅಗ್ನಿಶಾಮಕ ಸಿಬ್ಬಂದಿ ಹಾಗೂ ಸ್ಥಳೀಯರ ಸಹಾಯದಿಂದ ಮೃತದೇಹಗಳಿಗಾಗಿ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಈ ಸಂಬಂಧ ಕಳಸ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ನಡೆಯುತ್ತಿದೆ.
ಶೌಚಾಲಯದಲ್ಲಿ ಲಿಪ್ಸ್ಟಿಕ್ ನಿಂದ ಬರೆದ ಬಾಂಬ್ ಬೆದರಿಕೆ ಪತ್ತೆ: ತುರ್ತಾಗಿ ಇಳಿದ ಇಂಡಿಗೊ ವಿಮಾನ
ಕೊಲ್ಕತ್ತಾ: ಅಸ್ಸಾಂನ ದಿಬ್ರೂಗಢದಿಂದ ಕೊಲ್ಕತ್ತಾದ ನೇತಾಜಿ ಸುಭಾಸ್ಚಂದ್ರ ಬೋಸ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೊರಟಿದ್ದ ಇಂಡಿಗೊ ವಿಮಾನದ ಶೌಚಾಲಯದಲ್ಲಿ, ಲಿಪ್ಸ್ಟಿಕ್ ನಿಂದ ಬರೆದ ಬಾಂಬ್ ಬೆದರಿಕೆ ಪತ್ತೆಯಾದ ಹಿನ್ನೆಲೆಯಲ್ಲಿ ಶನಿವಾರ ಸಂಜೆ ವಿಮಾನ ತುರ್ತಾಗಿ ಇಳಿದ ಘಟನೆ ವರದಿಯಾಗಿದೆ. ಇಂಡಿಗೊ ವಿಮಾನ 6ಇ6894(ಎ-320), ಶನಿವಾರ ರಾತ್ರಿ ಬಾಂಬ್ ಬೆದರಿಕೆ ಪತ್ತೆಯಾದ ಬೆನ್ನಲ್ಲೇ 7.37ಕ್ಕೆ ತುರ್ತಾಗಿ ಸುರಕ್ಷಿತವಾಗಿ ಇಳಿದಿದೆ. ಭದ್ರತಾ ಶಿಷ್ಟಾಚಾರದಂತೆ ವಿಮಾನವನ್ನು ದೂರದಲ್ಲಿರುವ ಪ್ರತ್ಯೇಕ ಬೇ(bay) ಗೆ ಕಳುಹಿಸಲಾಗಿದ್ದು, ಎಲ್ಲ ಪ್ರಯಾಣಿಕರನ್ನು ಸುರಕ್ಷಿತವಾಗಿ ವಿಮಾನದಿಂದ ಇಳಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಇದಕ್ಕೂ ಮುನ್ನ ಶನಿವಾರ ಬೆಳಿಗ್ಗೆ ಕೊಲ್ಕತ್ತಾದ ನೇತಾಜಿ ಸುಭಾಸ್ಚಂದ್ರ ಬೋಸ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಶಿಲ್ಲಾಂಗ್ಗೆ ತೆರಳಬೇಕಿದ್ದ ಇಂಡಿಗೊ ವಿಮಾನದ ಶೌಚಾಲಯದಲ್ಲಿ ಬಾಂಬ್ ಬೆದರಿಕೆ ಪತ್ರ ಪತ್ತೆಯಾಗಿದ್ದು, ಒಂದೇ ದಿನ ಎರಡು ಬಾಂಬ್ ಬೆದರಿಕೆ ಪತ್ರಗಳು ಪತ್ತೆಯಾದಂತಾಗಿವೆ. ಈ ಪತ್ರ ಪತ್ತೆಯಾದ ಬೆನ್ನಲ್ಲೇ ಪ್ರಯಾಣಿಕರನ್ನು ಇಳಿಸಿ ವಿಮಾನವನ್ನು ಭದ್ರತಾ ತಪಾಸಣೆಗಾಗಿ ಐಸೋಲೇಶನ್ ಬೇ ಪ್ರದೇಶಕ್ಕೆ ವಿಮಾನವನ್ನು ಕಳುಹಿಸಲಾಯಿತು. ಬೆಳಿಗ್ಗೆ 9.15ಕ್ಕೆ ಹೊರಡಲು ಅನುವಾಗಿದ್ದ ಕೊಲ್ಕತ್ತಾ-ಶಿಲ್ಲಾಂಗ್ ಇಂಡಿಗೊ 6ಇ3074 ವಿಮಾನದಲ್ಲಿ ಬಾಂಬ್ ಬೆದರಿಕೆ ಪತ್ರ ಪತ್ತೆಯಾಗಿದೆ. ತಕ್ಷಣ ವಿಮಾನವನ್ನು ಐಸೊಲೇಶನ್ ಬೇ ಪ್ರದೇಶಕ್ಕೆ ಕಳುಹಿಸಲಾಗಿದ್ದು, ವಿಮಾನ ಏರುವ ಸಂದರ್ಭದಲ್ಲಿ ವಿಮಾನ ಸಿಬ್ಬಂದಿಗೆ, ವಿಮಾನದಲ್ಲಿ ಬಾಂಬ್ ಇದೆ ಎಂಬ ಪತ್ರ ಲಭ್ಯವಾಗಿದೆ. ತಕ್ಷಣ ಪ್ರಯಾಣಿಕರನ್ನು ಕೆಳಕ್ಕೆ ಇಳಿಸಲಾಗಿದೆ. ತಪಾಸಣೆ ಕಾರ್ಯಾ ಮುಂದುವರಿದಿದೆ ಎಂದು ವಿಮಾನ ನಿಲ್ದಾಣ ನಿರ್ದೇಶಕರು ಹೇಳಿದ್ದಾರೆ.
ಎಐ ಜಗತ್ತಿನಲ್ಲಿ ಹೊಸ ಸೋಷಿಯಲ್ ಮೀಡಿಯಾ: Moltbook ಹೊಸದು, ಅದರ ಹಳೇ ಆವೃತ್ತಿ ಗೊತ್ತಾ: ರಾಜಾರಾಂ ತಲ್ಲೂರು ಬರಹ
New AI: ಎಐ ಜಗತ್ತಿನಲ್ಲಿ ಹೊಸ ಸೋಷಿಯಲ್ ಮೀಡಿಯಾ: Moltbook ಹೊಸದು, ಅದರ ಹಳೇ ಆವೃತ್ತಿ ಗೊತ್ತಾ ಹಿರಿಯ ಪತ್ರಕರ್ತ ರಾಜಾರಾಂ ತಲ್ಲೂರು ಅವರ ಬರಹ ಇಲ್ಲಿದೆ. Moltbook ಎಂಬುದು ಇತ್ತೀಚೆಗೆ (ಜನವರಿ 2026) ಆರಂಭಗೊಂಡಿರುವ ಒಂದು ಸೋಷಿಯಲ್ ಮೀಡಿಯಾ. ಅದರ ವಿಶೇಷ ಎಂದರೆ, AI ಆಧರಿತ chatbotಗಳೇ ಅಲ್ಲಿ ಪೋಸ್ಟ್ ಮಾಡುವುದು, ಚರ್ಚೆ ಮಾಡುವುದು. ಅದು
ಭಾರತ ವಿರುದ್ಧದ ಪಂದ್ಯಕ್ಕೆ ಮುನ್ನ ಪಾಕ್ ಡಗೌಟ್ನಲ್ಲಿ ಹಾವು ಪತ್ತೆ!
ಕೊಲಂಬೊ: ಏಷ್ಯಾದ ಎರಡು ಬಲಾಢ್ಯ ತಂಡಗಳ ನಡುವೆ ಟಿ20 ವಿಶ್ವಕಪ್ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಕೊಲಂಬೊ ಪ್ರೇಮದಾಸ ಸ್ಟೇಡಿಯಂನಲ್ಲಿ ನಡೆಯಲಿರುವ ಪಂದ್ಯವನ್ನು ಇಡೀ ವಿಶ್ವ ಎದುರು ನೋಡುತ್ತಿದೆ. ಸೂಪರ್ 8 ಸ್ಥಾನ ಖಾತರಿಪಡಿಸಿಕೊಳ್ಳಲು ಉಭಯ ದೇಶಗಳಿಗೆ ಇದು ಮಹತ್ವದ ಪಂದ್ಯವಾಗಿದೆ. ಏತನ್ಮಧ್ಯೆ ಪಾಕಿಸ್ತಾನ ಅಟಗಾರರ ಡಗೌಟ್ನಲ್ಲಿ ಶುಕ್ರವಾರ ಸಂಜೆ ಹಾವು ಕಾಣಿಸಿಕೊಂಡು ಕೆಲ ಕಾಲ ಆತಂಕದ ವಾತಾರವಣ ನಿರ್ಮಾಣವಾಗಿತ್ತು. ಸಲ್ಮನ್ ಅಘಾ ನೇತೃತ್ವದ ತಂಡ ತರಬೇತಿಗಾಗಿ ಆಗಮಿಸುವುದಕ್ಕೆ ಸ್ವಲ್ಪ ಮೊದಲು ಹಾವು ಕಾಣಿಸಿಕೊಂಡಿದ್ದು, ಘಟನೆಯ ವಿಡಿಯೊ ಜಾಲತಾಣಗಳಲ್ಲಿ ವೈರಲ್ ಆಗಿದೆ. ಪಾಕಿಸ್ತಾನ ತಂಡ ಬದ್ಧ ಪ್ರತಿಸ್ಪರ್ಧಿ ಭಾರತದ ವಿರುದ್ಧ ಇಬ್ಬರು ಸ್ಪಿನ್ನರ್ ಗಳು ಹಾಗೂ ಇಬ್ಬರು ವೇಗದ ಬೌಲರ್ ಗಳು ಸೇರಿ ನಾಲ್ಕು ಮಂದಿ ಸ್ಪೆಷಲಿಸ್ಟ್ ಬೌಲರ್ ಗಳೊಂದಿಗೆ ಕಣಕ್ಕೆ ಇಳಿಯಲಿದೆ. ಸ್ಪಿನ್ನರ್ ಗಳಾದ ಅಬ್ರರ್ ಅಹ್ಮದ್ ಹಾಗೂ ಉಸ್ಮಾನ್ ತಾರಿಕ್, ವೇಗದ ಬೌಲರ್ ಗಳಾದ ಶಹೀನ್ ಶಾ ಅಫ್ರೀದಿ ಹಾಗೂ ಸಲ್ಮಾನ್ ಮಿರ್ಝಾ ಅವರಿಗೆ ಆಡುವ 11ರಲ್ಲಿ ಸ್ಥಾನ ಕಲ್ಪಿಸಲು ಮುಖ್ಯ ಕೋಚ್ ಮೈಕ್ ಹ್ಯಾಸನ್ ಮತ್ತು ನಾಯಕ ಅಘಾ ನಿರ್ಧರಿಸಿದ್ದಾರೆ ಎಂದು ಆಪ್ತ ಮೂಲಗಳು ಹೇಳಿವೆ. ಇದಕ್ಕಾಗಿ ಶಾಬದ್ ಖಾನ್, ಮೊಹ್ಮದ್ ನವಾಝ್ ಹಾಗೂ ಫಹೀಮ್ ಅಶ್ರಫ್ ಈ ಮೂವರು ಆಲ್ರೌಂಡರ್ ಗಳ ಪೈಕಿ ಒಬ್ಬರನ್ನು ಕೈಬಿಡಲಿದೆ. ಸಯೀಮ್ ಅಯೂಬ್, ಶಹಬ್ಝಾದಾ ಫರ್ಹಾನ್, ಸಲ್ಮನ್ ಅಲಿ ಅಘಾ, ಬಾಬರ್ ಅಝಾಂ ಮತ್ತು ಉಸ್ಮಾನ್ ಖಾನ್ ಅಗ್ರ ಐವರು ಬ್ಯಾಟ್ಸ್ ಮನ್ ಗಳಾಗಿರುತ್ತಾರೆ. ಆರು ಹಾಗೂ ಏಳನೇ ಕ್ರಮಾಂಕದ ಆಟಗಾರರನ್ನು ಇನ್ನೂ ಅಂತಿಮಪಡಿಸಬೇಕಿದ್ದು, ನಾಲ್ವರು ಬೌಲರ್ ಗಳು ಕೆಳ ಕ್ರಮಾಂಕದಲ್ಲಿರುತ್ತಾರೆ ಎಂದು ತಿಳಿದು ಬಂದಿದೆ.
ಕಾವೇರಿ ನೀರಿಗೆ ಹೆಚ್ಚಿದ ಆಗ್ರಹ; ಎತ್ತಿನಹೊಳೆ ನೀರಿಗಾಗಿ ಎದುರು ನೋಡುತ್ತಿದ್ದಾರೆ ಜನ
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ, ದೇವನಹಳ್ಳಿ, ಹೊಸಕೋಟೆ, ನೆಲಮಂಗಲದಲ್ಲಿ ಯಾವುದೇ ನದಿ ಮೂಲಗಳಿಲ್ಲ. ಅರ್ಕಾವತಿ ಪಾತ್ರದ ಕೆರೆಗಳು ಇಲ್ಲಿ ಕಾಣಬಹುದಾಗಿದೆ. ಇದರಿಂದ ಕುಡಿಯುವ ನೀರಿಗೆ ಸಾಕಷ್ಟ ಸಮಸ್ಯೆ ಎದುರಾಗುತ್ತದೆ. ಈ ಬಾರಿ ರಾಜ್ಯ ಬಜೆಟ್ನಲ್ಲಾದರೂ ಜಿಲ್ಲೆಯ ನೀರಿನ ಸಮಸ್ಯೆಗೆ ಪರಿಹಾರಕ್ಕೆ ಆದ್ಯತೆ ನೀಡಲಿದೆಯೇ ಎಂಬ ನಿರೀಕ್ಷೆಯಲ್ಲಿ ಜನಸಾಮಾನ್ಯರು ಇದ್ದಾರೆ.
ತಾರೀಕುರ್ರಹ್ಮಾನ್ ಪ್ರಮಾಣವಚನ: ಪ್ರಧಾನಿ ಮೋದಿಗೆ ಆಹ್ವಾನ
ಢಾಕಾ: ಬಾಂಗ್ಲಾದೇಶದ ಪ್ರಧಾನಿಯಾಗಿ ಬಾಂಗ್ಲಾದೇಶ ನ್ಯಾಷನಲಿಸ್ಟ್ ಪಾರ್ಟಿ ಮುಖಂಡ ತಾರಿಕ್ ರಹ್ಮಾನ್ ಫೆ.17ರಂದು ಪ್ರಮಾಣವಚನ ಸ್ವೀಕರಿಸಲಿದ್ದು, ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಭಾರತದ ಪ್ರಧಾನಿ ನರೇಂದ್ರ ಮೋದಿ ಹಾಗೂ ಇತರ ಪ್ರಾದೇಶಿಕ ಮುಖಂಡರನ್ನು ಆಹ್ವಾನಿಸಲಾಗುತ್ತಿದೆ ಎಂದು ಉನ್ನತ ಮೂಲಗಳು ತಿಳಿಸಿವೆ. ಈ ಪ್ರದೇಶದ ಇತರ ದೇಶಗಳ ಮುಖಂಡರನ್ನು ನೂತನ ಸರ್ಕಾರದ ಉದ್ಘಾಟನೆಗೆ ಆಹ್ವಾನಿಸಲಾಗುತ್ತಿದೆ ಎಂದು ತಾರಿಕ್ ಹೇಳಿಕೆ ನೀಡಿದ ಬೆನ್ನಲ್ಲೇ, ಶನಿವಾರ ತಡರಾತ್ರಿ ಭಾರತಕ್ಕೆ ಈ ಆಮಂತ್ರಣವನ್ನು ನೀಡಲಾಗಿದೆ ಎಂದು ತಿಳಿದುಬಂದಿದೆ. ಆದರೆ ಫೆ.17ರಂದು ಫ್ರಾನ್ಸ್ ಅಧ್ಯಕ್ಷ ಇಮ್ಯಾನ್ಯುಯೆಲ್ ಮ್ಯಾಕ್ರೋನ್ ಜತೆ ಮುಂಬೈನಲ್ಲಿ ದ್ವಿಪಕ್ಷೀಯ ಮಾತುಕತೆ ನಿಗದಿಯಾಗಿರುವ ಹಿನ್ನೆಲೆಯಲ್ಲಿ ಮೋದಿ ಢಾಕಾಗೆ ತೆರಳುವ ಸಾಧ್ಯತೆ ಇಲ್ಲ ಎಂದು ಹೇಳಲಾಗಿದೆ. ಮುಂದಿನ ವಾರ ಭಾರತದಲ್ಲಿ ನಡೆಯುವ ಎಐ ಪರಿಣಾಮ ಕುರಿತ ಶೃಂಗಸಭೆಗಾಗಿ ಫ್ರಾನ್ ಅಧ್ಯಕ್ಷರು ಆಗಮಿಸುತ್ತಿದ್ದು, ಮುಂಬೈನಿಂದ ಭಾರತ ಪ್ರವಾಸ ಆರಂಭಿಸಲಿದ್ದಾರೆ. ಆದರೆ ತಾರಿಕ್ ರಹ್ಮಾನ್ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಭಾರತದ ಪ್ರತಿನಿಧಿತ್ವ ಇರುತ್ತದೆ ಎನ್ನಲಾಗಿದ್ದು, ಉಪರಾಷ್ಟ್ರಪತಿ ಅಥವಾ ವಿದೇಶಾಂಗ ವ್ಯವಹಾರಗಳ ಖಾತೆ ಸಚಿವರು ಭಾಗವಹಿಸಲಿದ್ದಾರೆ ಎಂದು ಮೂಲಗಳು ಹೇಳಿವೆ. ಉಭಯ ದೇಶಗಳ ನಡುವಿನ ಸಂಬಂಧ ಹದಗೆಟ್ಟಿರುವುದನ್ನು ಸರಿಪಡಿಸಲು ಭಾರತ ಆದ್ಯತೆ ನೀಡಲಿದ್ದರೂ, ಬಾಂಗ್ಲಾದೇಶ ವಿಚಾರದಲ್ಲಿ ಧಾವಂತದ ನಿರ್ಧಾರ ತೆಗೆದುಕೊಳ್ಳುವುದಿಲ್ಲ ಎಂದು ಬೆಳವಣಿಗೆಯ ಮಾಹಿತಿ ಇರುವ ಉನ್ನತ ಅಧಿಕಾರಿಗಳು ವಿವರಿಸಿದ್ದಾರೆ.
Condoms Winter Olympics: ಚಳಿಗಾಲದ ಒಲಿಂಪಿಕ್ಸ್ 2026: ಮಿಲನ್ನಲ್ಲಿ 3 ದಿನದಲ್ಲಿ 10,000 ಕಾಂಡೋಮ್ ಖಾಲಿ
Condoms Winter Olympics: ಇಟಲಿಯ ಮಿಲನ್ನಲ್ಲಿ ಚಳಿಗಾಲದ ಒಲಿಂಪಿಕ್ಸ್ ನಡೆಯುತ್ತಿದ್ದು, ಚಳಿಗಾಲದ ಒಲಿಂಪಿಕ್ಸ್ನಲ್ಲಿ ಹೊಸ ಹಾಗೂ ವಿಚಿತ್ರವಾದ ಸಮಸ್ಯೆಯೊಂದು ಎದುರಾಗಿದ್ದು, ಇದು ಜನರ ಗಮನ ಸೆಳೆಯುತ್ತಿದೆ. ಒಲಿಂಪಿಕ್ಸ್ನಲ್ಲಿ ಪ್ರತಿ ಬಾರಿಯೂ ಈ ವಿಷಯಕ್ಕೆ ಸಮಸ್ಯೆ ಅಥವಾ ಹೆಚ್ಚು ಚರ್ಚೆ ಆಗುವುದು ಇದೆ. 2026ರ ಚಳಿಗಾಲದ ಒಲಿಂಪಿಕ್ಸ್ನಲ್ಲಿ 92 ದೇಶಗಳಿಂದ 2,800ಕ್ಕೂ ಹೆಚ್ಚು ಕ್ರೀಡಾಪಟುಗಳು 116 ಸ್ಪರ್ಧೆಗಳಲ್ಲಿ ಸ್ಪರ್ಧಿಸುತ್ತಿದ್ದಾರೆ.

26 C