ಅಮರಾವತಿ (ಮಹಾರಾಷ್ಟ್ರ): ಇತ್ತೀಚೆಗೆ ಮುಕ್ತಾಯಗೊಂಡ ಅಮರಾವತಿ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಬಿಜೆಪಿಯ ಮಾಜಿ ಸಂಸದೆ ನವನೀತ್ ರಾಣಾ ಪಕ್ಷದ ವಿರುದ್ಧ ಪ್ರಚಾರ ಮಾಡಿದ್ದಾರೆ ಎಂದು ಬಿಜೆಪಿಯ 22 ಅಭ್ಯರ್ಥಿಗಳು ಆರೋಪಿಸಿದ್ದು, ಅವರನ್ನು ಪಕ್ಷದಿಂದ ಉಚ್ಚಾಟಿಸುವಂತೆ ಆಗ್ರಹಿಸಿ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರಿಗೆ ಪತ್ರ ಬರೆದಿದ್ದಾರೆ. ದೂರು ನೀಡಿರುವ 22 ಅಭ್ಯರ್ಥಿಗಳ ಪೈಕಿ 20 ಅಭ್ಯರ್ಥಿಗಳು ಜನವರಿ 15ರಂದು ನಡೆದ ಚುನಾವಣೆಯಲ್ಲಿ ಪರಾಭವಗೊಂಡಿದ್ದರೆ, ಇಬ್ಬರು ಮಾತ್ರ ಜಯಶೀಲರಾಗಿದ್ದಾರೆ. ಬಿಜೆಪಿಯ ಅಭ್ಯರ್ಥಿಗಳನ್ನು ಡಮ್ಮಿಗಳು ಎಂದು ಮಾಜಿ ಸಂಸದೆ ನವನೀತ್ ರಾಣಾ ಆಕ್ರಮಣಕಾರಿ ಪ್ರಚಾರ ಮಾಡಿದ್ದು, ತಮ್ಮ ಪತಿ ರವಿ ರಾಣಾರ ಯುವ ಸ್ವಾಭಿಮಾನ್ ಪಕ್ಷದಿಂದ ಸ್ಪರ್ಧಿಸಿದ್ದ ಅಭ್ಯರ್ಥಿಗಳೇ ನೈಜ ಬಿಜೆಪಿ ಅಭ್ಯರ್ಥಿಗಳು ಎಂದು ಪ್ರಚಾರ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಯುವುದಕ್ಕೂ ಮುನ್ನ, ಬಿಜೆಪಿ ಹಾಗೂ ಶಾಸಕ ರವಿ ರಾಣಾರ ಯುವ ಸ್ವಾಭಿಮಾನ್ ಪಕ್ಷದ ನಡುವಿನ ಮೈತ್ರಿ ಮುರಿದು ಬಿದ್ದಿತ್ತು. ಹೀಗಿದ್ದೂ, ನವನೀತ್ ರಾಣಾ ಪಕ್ಷದ ಪರವಾಗಿ ಪ್ರಚಾರ ನಡೆಸಲಿದ್ದಾರೆ ಎಂದು ಬಿಜೆಪಿಯ ಸ್ಥಳೀಯ ನಾಯಕರೊಬ್ಬರು ಹೇಳಿಕೆ ನೀಡಿದ್ದರು. 85 ಸದಸ್ಯ ಬಲದ ಅಮರಾವತಿ ನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ 25 ಸ್ಥಾನಗಳು, ಕಾಂಗ್ರೆಸ್ ಹಾಗೂ ಯುವ ಸ್ವಾಭಿಮಾನ್ ಪಕ್ಷ ತಲಾ 15 ಸ್ಥಾನಗಳು, ಎಐಎಂಐಎಂ 12 ಸ್ಥಾನಗಳು, ಎನ್ಸಿಪಿ 11 ಸ್ಥಾನಗಳು, ಶಿವಸೇನೆ ಮತ್ತು ಬಿಎಸ್ಪಿ ತಲಾ 3 ಸ್ಥಾನಗಳು, ಶಿವಸೇನೆ (ಉದ್ಧವ್ ಬಣ) 2 ಸ್ಥಾನಗಳು ಹಾಗೂ ವಂಚಿತ್ ಬಹುಜನ್ ಅಘಾಡಿ ಪಕ್ಷ ಒಂದು ಸ್ಥಾನದಲ್ಲಿ ಗೆಲುವು ಸಾಧಿಸಿವೆ. ಈ ಹಿಂದಿನ ಚುನಾವಣೆಯಲ್ಲಿ ಬಿಜೆಪಿ 85 ಸ್ಥಾನಗಳು ಹಾಗೂ ಯುವ ಸ್ವಾಭಿಮಾನ್ ಪಕ್ಷ ಮೂರು ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು. ಆದರೆ, ಈ ಬಾರಿಯ ಚುನಾವಣೆಯಲ್ಲಿ ಪರಾಭವಗೊಂಡು ಮನನೊಂದಿರುವ ಬಿಜೆಪಿಯ 20 ಅಭ್ಯರ್ಥಿಗಳು ಹಾಗೂ ಇಬ್ಬರು ವಿಜೇತ ಅಭ್ಯರ್ಥಿಗಳು ಶನಿವಾರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರಿಗೆ ಪತ್ರ ಬರೆದಿದ್ದು, ಈ ನಷ್ಟ ಜನರಿಂದ ಆಗಿರುವುದಲ್ಲ, ಬದಲಿಗೆ ನವನೀತ್ ರಾಣಾರಿಂದ ಆಗಿರುವುದು ಎಂದು ಆರೋಪಿಸಿದ್ದಾರೆ.
ಶಿಕ್ಷಣದಿಂದ ವ್ಯಕ್ತಿತ್ವವನ್ನು ಹಾಗೂ ಮನುಷ್ಯತ್ವವನ್ನು ರೂಪಿಸಿಕೊಳ್ಳಲು ಸಾಧ್ಯ : ಸಿಎಂ ಸಿದ್ದರಾಮಯ್ಯ
ಮೈಸೂರು : ಶಿಕ್ಷಣದಿಂದ ವ್ಯಕ್ತಿತ್ವವನ್ನು ಹಾಗೂ ಮನುಷ್ಯತ್ವವನ್ನು ರೂಪಿಸಿಕೊಳ್ಳಲು ಸಾಧ್ಯ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಜಗದ್ಗುರು ಶ್ರೀ ಶಿವರಾತ್ರಿಶ್ವರ ಶಿವಯೋಗೀಗಳವರ ಸುತ್ತೂರು ಜಾತ್ರಾ ಮಹೋತ್ಸವ ಅಂಗವಾಗಿ ಆಯೋಜಿಸಿದ್ದ ಕೃಷಿ ವಿಚಾರ ಸಂಕಿರಣದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು. ಸುತ್ತೂರು ಜಾತ್ರಾ ಮಹೋತ್ಸವ ಅನೇಕ ವರ್ಷಗಳಿಂದ ನಡೆದುಕೊಂಡು ಬರುತ್ತಿದೆ. ಒಂದು ಸಾವಿರ ವರ್ಷಗಳಿಗೂ ಹೆಚ್ಚು ಇತಿಹಾಸವಿರುವ ಸುತ್ತೂರು ಮಠ ಶಿಕ್ಷಣಕ್ಕೆ ಮೊದಲಿನಿಂದಲೂ ಹೆಚ್ಚು ಒತ್ತು ಕೊಡುತ್ತಾ ಬಂದಿದೆ. ಧಾರ್ಮಿಕವಾಗಿ ತೊಡಗಿಸಿಕೊಂಡಿರುವ ಜೊತೆಗೆ ಜ್ಞಾನ ಮತ್ತು ಅನ್ನದಾಸೋಹಕ್ಕೆ ಮಹತ್ವ ನೀಡಿದೆ. ಶಿಕ್ಷಣದಿಂದ ಮಾತ್ರ ಸ್ವಾಭಿಮಾನ ಬರಲು ಸಾಧ್ಯವಾಗುವುದರಿಂದ ಶಿಕ್ಷಣವೇ ಬಹಳ ಮುಖ್ಯ. ನೂರಕ್ಕೆ ಶೇ.75% ಜನ ಶಿಕ್ಷಣ ಸಂಸ್ಕೃತಿಯಿಂದ ವಂಚಿತರಾಗಿದ್ದರು. ಅದನ್ನು ಮನಗಂಡ ಮಠ ಗ್ರಾಮೀಣ ಪ್ರದೇಶದಲ್ಲಿ ಶಿಕ್ಷಣ ಸಂಸ್ಥೆಗಳನ್ನು ತೆರೆದಿದೆ ಎಂದರು. ದಯೆಯೇ ಧರ್ಮದ ಮೂಲವಯ್ಯ, ದಯೆಯಿಲ್ಲದ ಧರ್ಮ ಯಾವುದಯ್ಯ ಎಂದು ಬಸವಣ್ಣ ಧರ್ಮದ ಕುರಿತು ವ್ಯಾಖ್ಯಾನ ಮಾಡಿದ್ದಾರೆ. ಎಲ್ಲ ಧರ್ಮಕ್ಕಿಂತ ಮಾನವ ಧರ್ಮ ಮೇಲು ಎಂದು ಅರ್ಥ ಮಾಡಿಕೊಳ್ಳಬೇಕು. ನಾವೆಲ್ಲರೂ ಮೂಲತಃ ಮನುಷ್ಯರು. ಯಾವುದೇ ಧರ್ಮವಿದ್ದರೂ ಮನುಷ್ಯರು ಪರಸ್ಪರ ಪ್ರೀತಿಸಬೇಕು ಎಂದು ಹೇಳುತ್ತದೆಯೇ ವಿನ: ದ್ವೇಷ ಮಾಡಿ ಎಂದು ಹೇಳಿಕೊಡುವುದಿಲ್ಲ. ಇದೇ ಸಮಾಜಕ್ಕೆ ನಾವು ಕೊಡುವ ಕೊಡುಗೆ ಎಂದರು.
ಒಲಿಂಪಿಕ್ಸ್ ನ ಅಸಾಮಾನ್ಯ ಸಾಧಕ, ಸ್ಪ್ರಿಂಟರ್ ಉಸೇನ್ ಬೋಲ್ಟ್ ಇದೀಗ ಕ್ರಿಕೆಟ್ ಮೈದಾನದಲ್ಲಿ ಕಾಣಿಸಿಕೊಳ್ಳಲು ಉತ್ಸುಕರಾಗಿದ್ದಾರೆ. ಒಂದು ವೇಳೆ ತನ್ನನ್ನು ಕೇಳಿಕೊಂಡರೆ 2028ರ ಲಾಸ್ ಏಂಜಲೀಸ್ ಒಲಿಂಪಿಕ್ಸ್ನಲ್ಲಿ ಜಮೈಕಾದ ಪರವಾಗಿ ಕಣಕ್ಕಿಳಿಯಲು ಸಿದ್ಧ ಎಂದು ವಿಶ್ವದ ಮಾಜಿ ಶ್ರೇಷ್ಠ ಸ್ಪ್ರಿಂಟರ್ ತಿಳಿಸಿದ್ದಾರೆ. 128 ವರ್ಷಗಳ ಬಳಿಕ ಒಲಿಂಪಿಕ್ಸ್ನಲ್ಲಿ ಕ್ರಿಕೆಟ್ ಕಾಣಿಸಿಕೊಳ್ಳುತ್ತಿದೆ. ಅದರಲ್ಲಿ ಓಟದ ದಂತಕತೆ ಕಾಣಿಸಿಕೊಂಡರೆ ಅದು ಕ್ರಿಕೆಟ್ ಗೆ ಸಿಗಲಿರುವ ಅತ್ಯಂತ ದೊಡ್ಡ ಉತ್ತೇಜನವಾಗಲಿದೆ ಎಂಬುದು ಕ್ರಿಕೆಟ್ ಪಂಡಿತರ ಅಭಿಪ್ರಾಯವಾಗಲಿದೆ.
'ಬಡವರ ಮಕ್ಕಳು ಬೆಳೆಯಬೇಕು ಟ್ರಂಪ್ ಕಾರ್ಡ್' ರಾಜ್ ಬಿ ಶೆಟ್ಟಿ ಹೇಳಿಕೆಗೆ ಡಾಲಿ ಧನಂಜಯ ಖಡಕ್ ಪ್ರತಿಕ್ರಿಯೆ
ನಟ ರಾಜ್ ಬಿ ಶೆಟ್ಟಿ ಅವರ ಹೇಳಿಕೆಗೆ ನಟ ಡಾಲಿ ಧನಂಜಯ ಖಡಕ್ ಪ್ರತಿಕ್ರಿಯೆ ನೀಡಿದ್ದಾರೆ. ಬಡವರ ಮಕ್ಕಳು ಬೆಳೆಯಬೇಕು ಎಂಬುದು ಟ್ರಂಪ್ ಕಾರ್ಡ್ ಅಲ್ಲ, ಅದು ದೊಡ್ಡ ಆಶಯ ಎಂದು ಧನಂಜಯ ಹೇಳಿದ್ದಾರೆ. ಈ ಹೇಳಿಕೆ ಸಮಾಜಕ್ಕೆ ಒಳ್ಳೆಯ ಚರ್ಚೆಯನ್ನು ಉಂಟು ಮಾಡಿದೆ. ಎಲ್ಲರಿಗೂ ಸಮಾನ ಅವಕಾಶ ಇರಲಿ ಎಂಬುದು ಇದರ ಸರಳ ಅರ್ಥ. ಪ್ರತಿಭೆ ಇರುವವರಿಗೆಲ್ಲಾ ಅವಕಾಶ ಸಿಗುವುದಿಲ್ಲ ಎಂದೂ ಅವರು ಅಭಿಪ್ರಾಯಪಟ್ಟಿದ್ದಾರೆ.
Bidar | ಗಾಳಿಪಟ ಹಾರಿಸಲು ಹೋಗಿ ಕಟ್ಟಡದ ಮೇಲಿಂದ ಬಿದ್ದು ಯುವಕ ಮೃತ್ಯು
ಬೀದರ್ : ಗಾಳಿಪಟ ಹಾರಿಸಲು ಹೋಗಿ ಕಟ್ಟಡದ ಮೇಲಿಂದ ಬಿದ್ದು ಯುವಕನೊಬ್ಬ ಮೃತಪಟ್ಟಿರುವ ಘಟನೆ ಹುಮನಾಬಾದ್ ನಗರದ ವಾಂಜರಿ ಬಡಾವಣೆಯಲ್ಲಿ ಶನಿವಾರ ಸಾಯಂಕಾಲ ನಡೆದಿದೆ. ಶಶಿಕುಮಾರ್ (19) ಮೃತಪಟ್ಟ ಯುವಕನಾಗಿದ್ದಾನೆ. ಶಶಿಕುಮಾರ್ ಗೆಳೆಯರೊಂದಿಗೆ ಗಾಳಿಪಟ ಹಾರಿಸಲು ಹೋಗಿದ್ದನು. ಗಾಳಿಪಟ ಹಿಡಿಯಲು ಹೋದಾಗ ಆಯತಪ್ಪಿ ಕಟ್ಟಡದ ಮೇಲಿಂದ ಬಿದ್ದು ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ. ಈ ಘಟನೆಗೆ ಸಂಬಂಧಿಸಿದಂತೆ ಹುಮನಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ತಿಳಿದು ಬಂದಿದೆ.
ನಮ್ಮನ್ನು ಪ್ರಶ್ನಿಸಲು ಬಿಜೆಪಿಗೆ ಯಾವುದೇ ನೈತಿಕತೆ ಇಲ್ಲ: ಸಿಎಂ ಸಿದ್ದರಾಮಯ್ಯ
ಮೈಸೂರು : ಬಿಜೆಪಿ ಅಧಿಕಾರದಲ್ಲಿದ್ದಾಗ ಯಾವ ಪ್ರಕರಣವನ್ನೂ ಸಿಬಿಐ ತನಿಖೆಗೆ ಒಪ್ಪಿಸಿರಲಿಲ್ಲ. ನಮ್ಮನ್ನು ಪ್ರಶ್ನೆ ಮಾಡಲು ಅವರಿಗೆ ಯಾವ ನೈತಿಕತೆಯೂ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು. ಅವರು ಇಂದು ಮೈಸೂರಿನ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು. ಅವರು ಅಧಿಕಾರದಲ್ಲಿದ್ದಾಗ ಯಾವುದಾದರೂ ಒಂದು ಪ್ರಕರಣವನ್ನಾದರೂ ಕೊಟ್ಟಿದ್ದರೆ, ನಮ್ಮನ್ನು ಕೇಳಬಹುದು. ನಾವು ಅಧಿಕಾರದಲ್ಲಿದ್ದಾಗ ಸುಮಾರು ಏಳೆಂಟು ಪ್ರಕರಣಗಳನ್ನು ಸಿಬಿಐಗೆ ವಹಿಸಿದ್ದೆವು ಎಂದರು. ಬಳ್ಳಾರಿ ಪ್ರಕರಣದ ಬಗ್ಗೆ ಬಿಜೆಪಿ ಜನಾಂದೋಲನ ಮಾಡುತ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ವಿರೋಧಪಕ್ಷದಲ್ಲಿರುವಾಗ ಯಾವ ಆಂದೋಲನ, ಪ್ರತಿಭಟನೆಗಳನ್ನು ಮಾಡುತ್ತಾರೆ ಎನ್ನುವುದು ಅವರ ಪಕ್ಷಕ್ಕೆ ಸೇರಿದ ವಿಚಾರ. ಅದಕ್ಕೆ ನಾವು ಉತ್ತರ ಕೊಡುತ್ತೇವೆ ಎಂದರು. ಬಿಜೆಪಿಯವರಿಗೆ ಸಂಸ್ಕೃತಿ ಇಲ್ಲ: ಶ್ರೀರಾಮುಲು, ಜನಾರ್ಧನ ರೆಡ್ಡಿಯವರು ಕಾಂಗ್ರೆಸ್ ನಾಯಕರನ್ನು ಏಕವಚನದಲ್ಲಿ ವಾಗ್ದಾಳಿ ಮಾಡಿರುವ ಬಗ್ಗೆ ಮಾತನಾಡಿ, ಬಿಜೆಪಿಯವರಿಗೆ ಸಂಸ್ಕೃತಿ ಇಲ್ಲ ಎನ್ನುವುದೂ ಸ್ಪಷ್ಟವಾಗಿ ಗೊತ್ತಾಗುತ್ತದೆ. ಜನಾರ್ಧನ ರೆಡ್ಡಿಗೆ ಬಳ್ಳಾರಿಗೆ ಬರಬಾರದೆಂದು ಏಕೆ ಹೇಳಿದ್ದರು? ರಿಪಬ್ಲಿಕ್ ಆಫ್ ಬಳ್ಳಾರಿ ಎಂದು ವರ್ತಿಸಿದವರು ಯಾರು? ಲೋಕಾಯುಕ್ತರಾಗಿದ್ದಾಗ ನ್ಯಾಯಮೂರ್ತಿ ಸಂತೋಷ್ ಹೆಗಡೆ ಅವರು ವರದಿ ಕೊಟ್ಟಿದ್ದಾರೆ ಎಂದರು. ಅಧಿವೇಶನ ಆಯೋಜಿಸಿರುವುದು ರಾಜಕೀಯ ದುರ್ಬಳಕೆ ಎಂದು ಬಿಜೆಪಿ ಹೇಳಿಕೆ ನೀಡಿರುವ ಬಗ್ಗೆ ಮಾತನಾಡಿ, ಹೊಸ ವರ್ಷದಲ್ಲಿ ಜಂಟಿ ಅಧಿವೇಶನ ಕಡ್ಡಾಯವಾಗಿ ಕರೆಯಬೇಕೆಂದು ಸಂವಿಧಾನ ಸ್ಪಷ್ಟವಾಗಿ ಹೇಳಿದೆ.ಅದಕ್ಕಾಗಿ ಕರೆದಿದ್ದೇವೆ. MNREGA ಮೂಲಕ ಉದ್ಯೋಗ ಖಾತ್ರಿ, ಶಿಕ್ಷಣ, ಮಾಹಿತಿ ಹಕ್ಕು ಆಹಾರ ಭದ್ರತೆ ತಂದದ್ದು ಯುಪಿಎ ಸರಕಾರ. ಅದನ್ನು ಹಾಳು ಮಾಡಲು ಹೊರಟಿರುವುದನ್ನು ಖಂಡಿಸಲು ವಿಶೇಷ ಅಧಿವೇಶನ ಕರೆಯಲಾಗಿದೆ ಎಂದರು. ಲೋಕಾಯುಕ್ತ ದಾಳಿ: ಕಾನೂನಿನ ಕ್ರಮಕ್ಕೆ ನಾವು ಅಡ್ಡಿಬರುವುದಿಲ್ಲ: ಅಬಕಾರಿ ಡಿಸಿ ಮೇಲೆ ಲೋಕಾಯುಕ್ತ ದಾಳಿಯಾಗಿರುವ ಬಗ್ಗೆ ಹಾಗೂ ಅಬಕಾರಿ ಸಚಿವರ ಹೆಸರು ಪ್ರಸ್ತಾಪವಾಗಿರುವ ಬಗ್ಗೆ ಮಾತಾಡಿ, ಈ ಬಗ್ಗೆ ಕಾನೂನಿನ ಕ್ರಮಕ್ಕೆ ನಾವು ಅಡ್ಡಿಬರುವುದಿಲ್ಲ. 40% ಕಮಿಷನ್ ಪಡೆಯುತ್ತಾರೆ ಎಂದು ಗುತ್ತಿಗೆದಾರ ಸಂಘದ ಅಧ್ಯಕ್ಷರಾಗಿದ್ದ ಕೆಂಪಣ್ಣ ಆರೋಪ ಮಾಡಿದ್ದರಲ್ಲ ಎಂದರು.
Udupi : ʼನಿರ್ದಿಗಂತ ಮಕ್ಕಳ ನಾಟಕೋತ್ಸವʼಕ್ಕೆ ಚಾಲನೆ
ಉಡುಪಿ : ನಿರ್ದಿಗಂತ ವತಿಯಿಂದ ಉಡುಪಿಯ ಯಕ್ಷಗಾನ ಕಲಾರಂಗದ ಐವೈಸಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿರುವ ಮಕ್ಕಳ ನಾಟಕೋತ್ಸವಕ್ಕೆ ರವಿವಾರ ಬೆಳಿಗ್ಗೆ ಚಾಲನೆ ನೀಡಲಾಯಿತು. ಬಿಂದು ರಕ್ಷಿದಿ ಅವರ ನಿರ್ದೇಶನದ ಆರೂರು ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಮಕ್ಕಳಿಂದ ‘ಮೃಗ ಮತ್ತು ಸುಂದರಿ’ ನಾಟಕ ಪ್ರದರ್ಶನಗೊಂಡಿತು. ಅಪರಾಹ್ನ ವರದರಾಜ್ ಬಿರ್ತಿ ರಚಿಸಿ, ರೋಹಿತ್ ಎಸ್.ಬೈಕಾಡಿ ನಿರ್ದೇಶಿಸಿದ ಕೊಕ್ಕರ್ಣೆಯ ಕರ್ನಾಟಕ ಪಬ್ಲಿಕ್ ಸ್ಕೂಲ್ ನ ಮಕ್ಕಳಿಂದ ವಿಜ್ಞಾನ ನಾಟಕ ‘ಕ್ಯೂರಿಯಸ್’ ನಾಟಕ ಪ್ರದರ್ಶನ ಗೊಂಡಿತು. ನಿರ್ದಿಗಂತದ ಸ್ಥಾಪಕರಲ್ಲೊಬ್ಬರಾದ ರಂಗಕರ್ಮಿ ಹಾಗೂ ಖ್ಯಾತ ಚಿತ್ರನಟ ಪ್ರಕಾಶ್ ರಾಜ್ ಮೊದಲಾದವರು ಉಪಸ್ಥಿತರಿದ್ದರು.
IMD Weather Forecast: ಜನವರಿ 24ರವರೆಗೆ ಈ ಭಾಗಗಳಲ್ಲಿ ಭಾರೀ ಮಳೆ, ಚಳಿ-ತಾಪಾಮಾನ ಮುನ್ಸೂಚನೆ
ನವದೆಹಲಿ: ಬದಲಾದ ಹವಾಮಾನ ವೈಪರೀತ್ಯಗಳ ಪ್ರಭಾವದಿಂದಾಗಿ ಈ ಬೇಸಿಗೆ ಕಾಲದಲ್ಲೂ ಪ್ರತ್ಯೇಕ ಸ್ಥಳಗಳಲ್ಲಿ ಮುಂದಿನ ವಾರ ಭಾರೀ ಮಳೆ ನಿರೀಕ್ಷೆ ಇದೆ. ಅಲ್ಲಲ್ಲಿ ಹಿಮಪಾತವಾಗುವ ಮುನ್ಸೂಚನೆ ನೀಡಿರುವ ಹವಾಮಾನ ಇಲಾಖೆಯು ಜನವರಿ 24ರವರೆಗಿನ ದೇಶದ ಬಹುತೇಕ ರಾಜ್ಯಗಳಲ್ಲಿ ಗರಿಷ್ಠ ತಾಪಮಾನ ಹೆಚ್ಚಳ, ಒಂದಷ್ಟು ಕಡೆಗಳಲ್ಲಿ ದಟ್ಟ ಮಂಜು, ಚಳಿ ವಾತಾವರಣ ನಿರ್ಮಾಣವಾಗಲಿದೆ ಎಂದು ಹವಾಮಾನ ಮುನ್ಸೂಚನಾ ವರದಿ
Gold: ಚಿನ್ನದ ನಿಧಿ ಸಿಕ್ಕ ಲಕ್ಕುಂಡಿ ಗ್ರಾಮದಲ್ಲಿ ಮತ್ತೊಂದು ಅಚ್ಚರಿ, ಗ್ರಾಮ ಸ್ಥಳಾಂತರ ಗ್ಯಾರಂಟಿ?
ಚಿನ್ನ ಮತ್ತು ನಿಧಿ ಬಗ್ಗೆ ಕನ್ನಡಿಗರು ಇದೀಗ ಹೆಚ್ಚು ಚರ್ಚೆ ಮಾಡುತ್ತಿದ್ದಾರೆ. ಇದಕ್ಕೆ ಕಾರಣವಾಗಿದ್ದೇ ಗದಗ ಜಿಲ್ಲೆಯ ಐತಿಹಾಸಿಕ ಲಕ್ಕುಂಡಿ ಗ್ರಾಮ, ಲಕ್ಕುಂಡಿ ಗ್ರಾಮದಲ್ಲಿ ಚಿನ್ನದ ನಿಧಿ ಸಿಕ್ಕ ನಂತರ ಸಾಲು ಸಾಲು ಅಚ್ಚರಿ ನಡೆಯುತ್ತಿದೆ. ಜನವರಿ 10 ಶನಿವಾರ ಲಕ್ಕುಂಡಿಯಲ್ಲಿ ಪ್ರಾಚೀನ ಆಭರಣಗಳು ಪತ್ತೆಯಾಗಿ ಭಾರಿ ಗಮನ ಸೆಳೆದಿತ್ತು. ಗಂಗವ್ವ ಬಸವರಾಜ ರಿತ್ತಿ ಎನ್ನುವವರು ಮನೆ
ಬೆಂಗಳೂರು ಬಿಸಿನೆಸ್ ಕಾರಿಡಾರ್ ಭೂಸ್ವಾಧೀನ: ಹೊಸ ಪರಿಹಾರ ಪ್ಯಾಕೇಜ್ಗೆ ಬಿಡಿಎ ಮುಂದು; ಪ್ರತಿ ಎಕರೆಗೆ 16 ಕೋಟಿ ರೂ.!
ಬೆಂಗಳೂರು ಬಿಸಿನೆಸ್ ಕಾರಿಡಾರ್ಗೆ ಭೂ ಪರಿಹಾರದಲ್ಲಿ ಹೊಸ ಸಮಸ್ಯೆ ಎದುರಾಗಿದ್ದು, ಹಳೆಯ ಆದೇಶಗಳು ಈಗಿನ ಭೂಮಿಯ ಬೆಲೆ ಏರಿಕೆಯೊಂದಿಗೆ ಹೊಂದಿಕೆಯಾಗುತ್ತಿಲ್ಲ. ಬಿಡಿಎ ಪ್ರತಿ ಎಕರೆಗೆ 16 ಕೋಟಿ ರೂ.ವರೆಗೆ ಮಾತುಕತೆ ಮೂಲಕ ಪರಿಹಾರ ನೀಡಲು ಮುಂದಾಗಿದ್ದು, ರೈತರಿಗೆ ನಗದು, ನಿವೇಶನ ಸೇರಿದಂತೆ ಐದು ಆಯ್ಕೆಗಳನ್ನು ನೀಡಲಾಗಿದೆ.
ಭಾರತ ನನ್ನ ತವರು ಮತ್ತು ಸ್ಪೂರ್ತಿ: ತಮ್ಮ ಹೇಳಿಕೆಗಳ ವಿವಾದಕ್ಕೆ ರೆಹಮಾನ್ ಸ್ಪಷ್ಟನೆ
ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ ತಮ್ಮ ಹೇಳಿಕೆಗಳ ಕುರಿತು ಎದ್ದಿದ್ದ ಟೀಕೆಗಳಿಗೆ ಸ್ಪಷ್ಟನೆ ನೀಡಿದ್ದಾರೆ. ಭಾರತ ತಮ್ಮ ತವರು ಮತ್ತು ಸ್ಫೂರ್ತಿ ಎಂದು ಹೇಳಿದ್ದಾರೆ. ಸಂಗೀತದ ಮೂಲಕ ಭಾರತದ ಸಂಸ್ಕೃತಿಯನ್ನು ಬೆಸೆಯಲು, ಆಚರಿಸಲು ಮತ್ತು ಗೌರವಿಸಲು ತಮ್ಮ ಉದ್ದೇಶ ಎಂದು ತಿಳಿಸಿದ್ದಾರೆ. ತಮ್ಮ ಕಲಾತ್ಮಕ ಯೋಜನೆಗಳ ಮೂಲಕ ಭಾರತದ ವೈವಿಧ್ಯತೆಯನ್ನು ಆಚರಿಸುವುದಾಗಿ ಹೇಳಿದ್ದಾರೆ. ದೇಶಕ್ಕೆ ಕೃತಜ್ಞತೆ ಸಲ್ಲಿಸಿ, ಸಂಗೀತದ ಮೂಲಕ ಭಾರತದ ಘನತೆಯನ್ನು ಗೌರವಿಸುವುದಾಗಿ ಪುನರುಚ್ಚರಿಸಿದ್ದಾರೆ.
ನೋಯ್ಡಾದ ಮಂಜಿನಿಂದ ದುರಂತ; ʻನನ್ನನ್ನು ಬದುಕಿಸಿʼ ಎಂದು ಅಪ್ಪನಿಗೆ ಕರೆ ಮಾಡಿ ಪ್ರಾಣ ಬಿಟ್ಟ ಟೆಕ್ಕಿ
ನೋಯ್ಡಾದಿಂದ ತನ್ನ ಮನೆಗೆ ಹೊಟ್ಟಿದ್ದ ಟೆಕ್ಕಿಯೊಬ್ಬರು ದಾರಿಯಲ್ಲಿ ದಟ್ಟ ಮಂಜು ಇದ್ದ ಕಾರಣ, ರಸ್ತೆ ಕಾಣದೆ ಆಳವಾದ ಹೊಂಡವೊಂದಕ್ಕೆ ಬಿದ್ದ ಘಟನೆ ನೋಯ್ಡಾದಲ್ಲಿ ನಡೆದಿದೆ. ಕಾರು ಹೊಂಡಕ್ಕೆ ಬೀಳುತ್ತಲೇ ಕಷ್ಟ ಪಟ್ಟು ಹೊರಬಂದ ಟೆಕ್ಕಿ ತಮ್ಮ ಪಾಕೆಟ್ನಲ್ಲಿದ್ದ ಮೊಬೈಲ್ ತೆಗೆದು ತಂದೆಗೆ ಕರೆಮಾಡಿ ತನ್ನನ್ನು ಬದುಕಿಸಿಕೊಳ್ಳುವಂತೆ ಹೇಳಿದ್ದಾರೆ. ಭದ್ರತಾ ತಂಡವು ಸ್ಥಳಕ್ಕೆ ಬಂದು ಅವರನ್ನು ರಕ್ಷಿಸಿ, ಆಸ್ಪತ್ರೆಗೆ ಕರೆತರುವ ಮಾರ್ಗಮಧ್ಯೆಯೇ ಮೃತಪಟ್ಟಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ.ತೀವ್ರ ಚಳಿ ಮತ್ತು ಸೌಲಭ್ಯಗಳ ಕೊರತೆಯಿಂದ ಪೊಲೀಸರು ಹಾಗೂ ರಕ್ಷಣಾ ತಂಡಗಳು ಸಕಾಲಕ್ಕೆ ಅವರನ್ನು ರಕ್ಷಿಸಲು ವಿಫಲವಾದವು.
Ind Vs NZ 3rd ODI- ಅರ್ಶದೀಪ್ ಸಿಂಗ್ ಗಾಗಿ ಪ್ರಸಿದ್ಧ ಕೃಷ್ಣಗೆ ಬರೆ!: ಇಂದೋರ್ ಪಂದ್ಯಕ್ಕೆ ಕನ್ನಡಿಗನೇ ಬಾಹರ್!
ನ್ಯೂಜಿಲೆಂಡ್ ವಿರುದ್ಧ ಮೊದಲೆರಡು ಏಕದಿನ ಪಂದ್ಯಗಳಿಗೆ ಬೆಂಚು ಕಾಯಿಸಿದ್ದ ಭಾರತದ ನುರಿತ ಎಡಗೈ ಬೌಲರ್ ಅರ್ಶದೀಪ್ ಸಿಂಗ್ ಅವರಿಗೆ ಇದೀಗ ಟೀಂ ಇಂಡಿಯಾ ಪ್ಲೇಯಿಂಗ್ ಇಲೆವೆನ್ ನಲ್ಲಿ ಅವಕಾಶ ಸಿಕ್ಕಿದೆ. ಆದರೆ ಅದಕ್ಕಾಗಿ ಕರ್ನಾಟಕದ ಪ್ರತಿಭಾನ್ವಿತ ಬೌಲರ್ ಪ್ರಸಿದ್ಧ ಕೃಷ್ಣ ಅವರನ್ನು ಕಣದಿಂದ ಹೊರಗಿಡಲಾಗಿದೆ. ಇಂದೋರ್ ನಲ್ಲಿ ನಡೆಯುತ್ತಿರುವ ದಲ್ಲಿ ಟಾಸ್ ಗೆದ್ದ ನಾಯಕ ಶುಭಮನ್ ಗಿಲ್ ಅವರು ಫೀಲ್ಡಿಂಗ್ ಆಯ್ದುಕೊಂಡಿದ್ದಾರೆ. ಭಾರತ ತಂಡದಲ್ಲಿ ಪ್ರಸಿದ್ಧ ಕೃಷ್ಣ ಅವರ ಬದಲಿಗೆ ಅರ್ಶದೀಪ್ ಸಿಂಗ್ ಅವರು ಪ್ಲೇಯಿಂಗ್ ಇಲೆವೆನ್ ನಲ್ಲಿ ಕಾಣಿಸಿಕೊಂಡಿದ್ದು ನ್ಯೂಜಿಲೆಂಡ್ ತಂಡದಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ. ವಡೋದರಾದಲ್ಲಿ ನಡೆದ ಮೊದಲನೇ ಏಕದಿನ ಪಂದ್ಯವನ್ನು ಜಯಿಸಿದ್ದ ಭಾರತ ತಂಡ, ರಾಜಕೋಟ್ ನಲ್ಲ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಹೀನಾಯ ಪರಾಭವ ಅನುಭವಿಸಿತ್ತು. ಭಾರತ ಗಳಿಸಿದ್ದ 284 ರನ್ ಗಳನ್ನು ಉಳಿಸಿಕೊಳ್ಳುವಲ್ಲಿ ಭಾರತದ ಬೌಲರ್ ಗಳು ಯಶಸ್ವಿಯಾಗಿರಿಲ್ಲ. ಪ್ರಸಿದ್ಧ್ ಕೃಷ್ಣ ಅವರು ತಾವು ಮಾಡಿದ 9 ಓವರ್ ಗಳಲ್ಲಿ 49 ರನ್ಗಳನ್ನು ಬಿಟ್ಟುಕೊಟ್ಟಿದ್ದರು. ಹರ್ಷಿತ್ ರಾಣಾ, ನಿತೀಶ್ ಕುಮಾರ್ ರೆಡ್ಡಿ, ರವೀಂದ್ರ ಜಡೇಜಾ ಮತ್ತು ಕುಲದೀಪ್ ಯಾದವ್ ಅವರೆಲ್ಲಾ ಪ್ರಸಿದ್ಧ್ ಅವರಿಗಿಂತ ಹೆಚ್ಚು ರನ್ ಗಳನ್ನು ಎದುರಾಳಿ ತಂಡಕ್ಕೆ ಧಾರೆ ಎರೆದಿದ್ದರೂ ಬರೆ ಬಿದ್ದಿರುವುದು ಮಾತ್ರ ಪ್ರಸಿದ್ಧ್ ಅವರಿಗೆ ಎಂಬುದು ಅಚ್ಚರಿಯ ಸಂಗತಿಯಾಗಿದೆ. ಟಾಸ್ ಬಳಿಕ ಮಾತನಾಡಿದ ಟೀಂ ಇಂಡಿಯಾ ನಾಯಕ ಶುಬ್ಮನ್ ಗಿಲ್, ಹೆಚ್ಚಿನ ಇಬ್ಬನಿ ಹೆಚ್ಚಿರುವ ಸಾಧ್ಯತೆಗಳಿಲ್ಲ. ಆದರೂ ನಾವು ಮೊದಲು ಬೌಲಿಂಗ್ ಮಾಡಲು ಬಯಸುತ್ತೇವೆ ಮತ್ತು ನಾವು ಬೆನ್ನಟ್ಟಬಹುದಾದ ಸ್ಕೋರ್ ಗೆ ಎದುರಾಳಿ ತಂಡವನ್ನು ನಿಯಂತ್ರಿಸಲು ಬಯಸುತ್ತೇವೆ. ರಾಜ್ ಕೋಟ್ ನಲ್ಲಿ ನಡೆದ ಪಂದ್ಯದಲ್ಲಿ ಇನ್ನಿಂಗ್ಸ್ ಮಧ್ಯದ ಓವರ್ ಗಳಲ್ಲಿ ನಾವು ಎಡವಿದೆವು. ಇದೀಗ ನಾವು ಈ ನಿಟ್ಟಿನಲ್ಲಿ ಸುಧಾರಸಿಕೊಳ್ಳಬೇಕಿದೆ. ಈ ಪಂದ್ಯದಲ್ಲಿ ಒಂದು ಬದಲಾವಣೆ ಮಾಡಿಕೊಳ್ಳಲಾಗಿದೆ. ಪ್ರಸಿದ್ಧ್ ಕೃಷ್ಣ ಅವರ ಬದಲಿಗೆ ಅರ್ಶ್ದೀಪ್ ಸಿಂಗ್ ಅವರು ತಂಡಕ್ಕೆ ಮರಳಿದ್ದಾರೆ ಎಂದು ತಿಳಿಸಿದ್ದಾರೆ. ಇನ್ನು ನ್ಯೂಜಿಲೆಂಡ್ ತಂಡದ ನಾಯಕ ಮೈಕೆಲ್ ಬ್ರೇಸ್ವೆಲ್ ಮಾತನಾಡಿ, ಭಾರತದಲ್ಲಿ ನಮ್ಮ ಮೊದಲ ಏಕದಿನ ಸರಣಿಯನ್ನು ಗೆಲ್ಲಲು ಇದು ನಮಗೆ ಉತ್ತಮ ಅವಕಾಶ. ಇದೊಂದು ರೋಮಾಂಚಕಾರಿ ಪಂದ್ಯವಾಗಬಹುದೆಂದು ಅಂದುಕೊಳ್ಳುತ್ತೇನೆ ನಮ್ಮ ತಂಡದಲ್ಲಿ ಯಾವುದೇ ಬದಲಾವಣೆಗಳಿಲ್ಲ ಎಂದು ಹೇಳಿದ್ದಾರೆ. ಭಾರತ ತಂಡ ಶುಭಮನ್ ಗಿಲ್ (ನಾಯಕ), ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ನಿತೀಶ್ ಕುಮಾರ್ ರೆಡ್ಡಿ, ರವೀಂದ್ರ ಜಡೇಜಾ, ಹರ್ಷಿತ್ ರಾಣಾ, ಕುಲ್ದೀಪ್ ಯಾದವ್, ಅರ್ಶ್ದೀಪ್ ಸಿಂಗ್, ಮೊಹಮ್ಮದ್ ಸಿರಾಜ್. ನ್ಯೂಜಿಲೆಂಡ್ ಮೈಕೆಲ್ ಬ್ರೇಸ್ವೆಲ್ (ನಾಯಕ), ಡೆವೊನ್ ಕಾನ್ವೇ, ಹೆನ್ರಿ ನಿಕೋಲ್ಸ್, ವಿಲ್ ಯಂಗ್, ಡ್ಯಾರಿಲ್ ಮಿಚೆಲ್, ಮಿಚೆಲ್ ಹೇ (ವಿಕೆಟ್ ಕೀಪರ್), ಗ್ಲೆನ್ ಫಿಲಿಪ್ಸ್, ಕ್ರಿಸ್ಟಿಯನ್ ಕ್ಲಾರ್ಕ್, ಯ, ಕೈಲ್ ಜೇಮಿಸನ್, ಜ್ಯಾಕ್ ಫೌಲ್ಕ್ಸ್, ಜೇಡೆನ್ ಲೆನಾಕ್ಸ್.
Gold-Silver Price: ಬೆಳ್ಳಿ ದರ ಬರೋಬ್ಬರಿ ₹38,000 ಏರಿಕೆ, ಚಿನ್ನದ ಬೆಲೆ ಹೆಚ್ಚಾಗಿದ್ದೆಷ್ಟು? ಇಲ್ಲಿದೆ ಡಿಟೇಲ್ಸ್
ಬೆಂಗಳೂರು: ಜಾಗತಿಕವಾಗಿ ರಾಜಕೀಯ, ಆರ್ಥಿಕ ನೀತಿಗಳ ಕಾರಣದಿಂದಾಗಿ ಚಿನ್ನ-ಬೆಳ್ಳಿ ದರವು ನಿರಂತರವಾಗಿ ದುಬಾರಿ ಆಗುತ್ತಿದೆ. ಬೆಳ್ಳಿ ದರವಂತೂ ಬರೋಬ್ಬರಿ 38,000 ಸಾವಿರ ರೂಪಾಯಿ ಹೆಚ್ಚಾಗಿದೆ. ಕಡಿಮೆ ಅವಧಿಯಲ್ಲಿ ಚಿನ್ನದ ದರ ಏರಿಕೆ ಪ್ರಮಾಣಕ್ಕಿಂತಲೂ ಅಧಿಕವಾಗಿ ಬೆಳ್ಳಿಯು ತನ್ನ ಮೌಲ್ಯ ಹೆಚ್ಚಿಸಿಕೊಂಡಿದೆ. ಇಂದು ಭಾನುವಾರ (ಜನವರಿ 18) ರಂದು ಚಿನ್ನ-ಬೆಳ್ಳಿ ದರವು ಸ್ಥಿರವಾಗಿದೆ. ಮುಂದಿನ ದಿನಗಳಲ್ಲಿ ಈ ಲೋಹಗಳ
Assam| 6,957 ಕೋಟಿ ರೂ. ವೆಚ್ಚದ ಕಾಝಿರಂಗ ಕಾರಿಡಾರ್ಗೆ ಪ್ರಧಾನಿ ಮೋದಿ ಶಂಕುಸ್ಥಾಪನೆ
ಎರಡು ಅಮೃತ್ ಭಾರತ್ ರೈಲುಗಳಿಗೆ ಹಸಿರು ನಿಶಾನೆ
ಬೆಂಗಳೂರು: ಜನಾರ್ದನ ರೆಡ್ಡಿ ನಿವಾಸಕ್ಕೆ ಕಾಂಗ್ರೆಸ್ ಕಾರ್ಯಕರ್ತರಿಂದ ಮುತ್ತಿಗೆ ಯತ್ನ
ಪ್ರತಿಭಟನಾಕಾರರು ಪೊಲೀಸ್ ವಶಕ್ಕೆ
‘ಪರಿಶಿಷ್ಟ ಜಾತಿ’ ಪದ ಬಂದದ್ದು ಹೇಗೆ?
‘ಪರಿಶಿಷ್ಟ ಜಾತಿಗಳು’ ಅಥವಾ ‘ಎಸ್ಸಿ’ಗಳು ಎಂಬ ಈ ಪದ ಸಾಂವಿಧಾನಿಕವಾಗಿ ಬಾಬಾಸಾಹೇಬ್ ಅಂಬೇಡ್ಕರ್ರವರು ಸಂಶೋಧಿಸಿದ ಪದ. ಆ ಪದವನ್ನು 1935ರಲ್ಲಿ ಭಾರತ ಸರಕಾರದ ಕಾಯ್ದೆಯಲ್ಲಿ ಸೇರಿಸಿದ ನಂತರ ಡಾ.ಅಂಬೇಡ್ಕರರು ‘ಪರಿಶಿಷ್ಟ ಜಾತಿಗಳ ಒಕ್ಕೂಟ’ (ಷೆಡ್ಯೂಲ್ಡ್ ಕಾಸ್ಟ್ ಫೆಡರೇಷನ್) ಎಂಬ ರಾಜಕೀಯ ಪಕ್ಷವನ್ನೇ ಸ್ಥಾಪಿಸಿದರು! ಈ ನಿಟ್ಟಿನಲ್ಲಿ ಪರಿಶಿಷ್ಟ ಜಾತಿಗಳು ಈ ಪದದ ಇತಿಹಾಸ ತುಂಬಾ ವಿಶಿಷ್ಟವಾಗಿದೆ. ಜಾತ್ಯತೀತ, ಧರ್ಮಾತೀತ ಹಿನ್ನೆಲೆಯಲ್ಲಿ ಸಂಶೋಧಿಸಲ್ಪಟ್ಟ ಆ ಪದ ಸ್ಪಷ್ಟವಾಗಿ ಸಮಾನತೆಯ ಆಶಯ ಹೊಂದಿತ್ತು. ಪರಿಶಿಷ್ಟ ಜಾತಿ ಈ ಪದ ಸದ್ಯ ಅಸ್ಪಶ್ಯತೆ ಎಂಬ ಸಾಮಾಜಿಕ ಸಮಸ್ಯೆಯಿಂದ ನೊಂದ ಸಮುದಾಯಗಳನ್ನು ಗುರುತಿಸಲು ಭಾರತದ ಸಂವಿಧಾನ ಅಳವಡಿಸಿಕೊಂಡಿರುವ ಪದ. ಸಂವಿಧಾನದ ಅನುಚ್ಛೇದ 330, 338 ಮತ್ತು 341 ರಲ್ಲಿ ಈ ಪದವನ್ನು ಬಳಸಲಾಗಿದೆ. ಅಲ್ಲಿ ಸಂಬಂಧಿತ ಜಾತಿಗಳಿಗೆ ರಾಜಕೀಯ ಸ್ಥಾನ ಮೀಸಲಾತಿ, ರಾಷ್ಟ್ರೀಯ ಆಯೋಗ ಮತ್ತು ನಿರ್ದಿಷ್ಟ ಜಾತಿಗಳನ್ನು ಪಟ್ಟಿ ಮಾಡಲು ಬಳಸಿಕೊಳ್ಳಲಾಗಿದೆ. ಒಟ್ಟಾರೆ ಅಸ್ಪಶ್ಯತೆಯಿಂದ ನೊಂದ ಜಾತಿಗಳಿಗೆ ಈ ಪದದ ಮೂಲಕ ಸಾಂವಿಧಾನಿಕ ಅಧಿಕೃತ ಮಾನ್ಯತೆ ಸಿಕ್ಕಿದೆ. ‘ಪರಿಶಿಷ್ಟ ಜಾತಿ’ (‘ಷೆಡ್ಯೂಲ್ಡ್ ಕಾಸ್ಟ್’) ಈ ಪದ ಹುಟ್ಟಿದ ಬಗೆ ಹೇಗೆ? ಎಂಬುದು ಇಲ್ಲಿ ಸ್ವಾರಸ್ಯಕರ. ಪರಿಶಿಷ್ಟ ಜಾತಿ ಈ ಪದ ಹುಟ್ಟಿದ್ದು 1932ರ ಮೂರನೇ ದುಂಡುಮೇಜಿನ ಸಮ್ಮೇಳನದ ಸಂದರ್ಭದಲ್ಲಿ ದೂರದ ಲಂಡನ್ನಲ್ಲಿ. ‘ಷೆಡ್ಯೂಲ್’ ಎಂದರೆ ಬ್ರಿಟಿಷ್ ಇಂಗ್ಲಿಷ್ ಪ್ರಕಾರ ‘ಕಾನೂನಿನ ಮೂಲಕ ರಕ್ಷಣೆಗಾಗಿ ನಿರ್ದಿಷ್ಟ ವಿಷಯವನ್ನು ಪಟ್ಟಿಮಾಡುವುದು’ ಎಂದಾಗಿದೆ. ಇದೊಂದು ಜಾತ್ಯತೀತ, ಧರ್ಮಾತೀತ ಪದವಾಗಿದೆ. ಅಂದರೆ ಯಾವುದೇ ಧರ್ಮಕ್ಕೂ, ಜಾತಿಗೂ ಈ ಪದ ಲಿಂಕ್ ಹೊಂದುವುದಿಲ್ಲ. ಈ ನಿಟ್ಟಿನಲ್ಲಿ ‘ಷೆಡ್ಯೂಲ್ಡ್ ಕಾಸ್ಟ್’ ಅಥವಾ ‘ಪರಿಶಿಷ್ಟ ಜಾತಿಗಳು’ ಎಂಬ ಈ ಪಟ್ಟಿಯ ಅಡಿಯಲ್ಲಿ ಅಸ್ಪಶ್ಯತೆ ಅನುಭವಿಸುತ್ತಿದ್ದ ಜಾತಿಗಳನ್ನು ಪಟ್ಟಿಮಾಡಲಾಯಿತು. ಆ ಮೂಲಕ ಪರಿಶಿಷ್ಟ ಜಾತಿ ಅಥವಾ ಎಸ್ಸಿ ಎಂಬ ಪದ ಬಳಕೆಗೆ ಬಂದಿತು. ಅಂದಹಾಗೆ ಡಾ. ಅಂಬೇಡ್ಕರ್ರವರು ಈ ಪದವನ್ನು ಸಲಹೆ ಮಾಡಿದ್ದರೆ? ಆರಂಭದಲ್ಲಿ ಮಾಡಿರಲಿಲ್ಲ. 1932ರ ಮೂರನೇ ದುಂಡುಮೇಜಿನ ಸಭೆಯಲ್ಲಿ ಭಾಗವಹಿಸಿದ್ದ ಡಾ.ಅಂಬೇಡ್ಕರ್ ಮತ್ತು ಆರ್.ಶ್ರೀನಿವಾಸನ್ರವರುಗಳು ಸಲಹೆ ನೀಡಿದ್ದು ‘ನಾನ್ ಕಾಸ್ಟ್ ಹಿಂದೂಸ್’ (ಜಾತಿರಹಿತ ಹಿಂದೂಗಳು) ಮತ್ತು ಪ್ರೊಟೆಸ್ಟೆಂಟ್ ಹಿಂದೂಸ್ (ಪ್ರತಿರೋಧಿ ಹಿಂದೂಗಳು) ಎಂದು. ಡಾ.ಅಂಬೇಡ್ಕರ್ರವರು ಸಲಹೆ ನೀಡಿದ್ದ ಮತ್ತೊಂದು ಪದ ‘ಹೊರಗಿನ ಜಾತಿಗಳು’ (exterior castes) ಎಂಬುದು. ಆದರೆ ಈ ಪದಗಳನ್ನು ಡಾ. ಅಂಬೇಡ್ಕರ್ರವರೇ ಹೇಳುವಂತೆ ಮೇಲ್ಜಾತಿ ಹಿಂದೂಗಳು ದುಂಡುಮೇಜಿನ ಸಭೆಯಲ್ಲಿ ಒಪ್ಪಲಿಲ್ಲ. ಪರಿಣಾಮವಾಗಿ ಡಾ.ಅಂಬೇಡ್ಕರ್ ಮತ್ತು ಆರ್.ಶ್ರೀನಿವಾಸನ್ ರವರುಗಳು ನೀಡಿದ ಮತ್ತೊಂದು ಸಲಹೆಯಂತೆ ದುಂಡುಮೇಜಿನ ಸಭೆ ‘ಪರಿಶಿಷ್ಟ ಜಾತಿಗಳು’ ಅಥವಾ ‘ಷೆಡ್ಯೂಲ್ಡ್ ಕಾಸ್ಟ್’ ಎಂಬ ಈ ಪದವನ್ನು ಸ್ವೀಕರಿಸಿತು. ಅಂದಹಾಗೆ ಪರಿಶಿಷ್ಟ ಜಾತಿಗಳು ಎಂಬ ಈ ಪದಕ್ಕೆ ಪರ್ಯಾಯವಾಗಿ ಹಿಂದೂಗಳ ಸಲಹೆ ಏನಾಗಿತ್ತು ಎಂಬ ಪ್ರಶ್ನೆಯು ಇಲ್ಲಿ ಮೂಡುತ್ತದೆ. ಈ ಹಿನ್ನೆಲೆಯಲ್ಲಿ 1933ರ ಫೆಬ್ರವರಿ ತಿಂಗಳಲ್ಲಿ 7 ಜನ ಪಂಡಿತರು ಗಾಂಧೀಜಿಯವರ ಸಂಪಾದಕತ್ವದ ‘ಹರಿಜನ’ ಪತ್ರಿಕೆಯಲ್ಲಿ ಅಸ್ಪಶ್ಯತೆಗೂ, ಧರ್ಮಶಾಸ್ತ್ರಕ್ಕೂ ಸಂಬಂಧವಿದೆ ಎಂದು ಪ್ರಸ್ತಾಪಿಸಿ 3 ಬಗೆಯ ಅಸ್ಪಶ್ಯತೆಯನ್ನು ಆ ಪಂಡಿತ ವರ್ಗ ಗುರುತಿಸಿತ್ತು. (Part Apart by Ashok Gopal, Pp.480) 1.ಶೂದ್ರ ಮತ್ತು ಬ್ರಾಹ್ಮಣ ಮಹಿಳೆಯರ ಸಂಯೋಗದಿಂದ ಜನಿಸಿದ ಸಂತತಿಗೆ ಸೇರಿದ ಜನರು. 2.ಶಾಸ್ತ್ರಗಳು ನಿಷೇಧಿಸಿರುವ ಐದು ಪ್ರಕಾರದ ಪಾಪಗಳನ್ನು ಅಥವಾ ಪದ್ಧತಿಗಳನ್ನು ಆಚರಿಸುವ ವ್ಯಕ್ತಿಗಳು. 3.ಮಲಿನ ಸ್ಥಿತಿಯಲ್ಲಿರುವ ವ್ಯಕ್ತಿಗಳು. ಹೀಗೆ ಬರೆಯುತ್ತಾ ಪಂಡಿತರು ‘ಈಗ ಮೂರನೇ ಬಗೆಯ ಅಸ್ಪಶ್ಯತೆ ಮಾತ್ರ ಭಾರತದಾದ್ಯಂತ ಇದೆ. ತಮ್ಮ ಕೆಲಸದ ಸಮಯದಲ್ಲಿ ತಮ್ಮ ಕೆಲಸದ ಕಾರಣಕ್ಕಾಗಿ ಮಲಿನಗೊಳ್ಳುವ ಇವರನ್ನು ಸ್ನಾನ ಮಾಡಿಸಿ ಬಟ್ಟೆ ಬದಲಿಸಿದರೆ ಅಸ್ಪಶ್ಯತೆ ಹೋಗುತ್ತದೆ. ಆದ್ದರಿಂದ ಅವರಿಗಾಗಿ ಪ್ರತ್ಯೇಕ ಜಾತಿ ಪಟ್ಟಿ ತಯಾರಿಸುವ ಅಗತ್ಯವಿಲ್ಲ’ ಎಂದು ಪ್ರತಿಪಾದಿಸುತ್ತಾರೆ! ಆದರೆ ಪಂಡಿತರ ಈ ವಾದ ಬಿದ್ದುಹೋಯಿತು ಎಂಬುದು ಅದು ಬೇರೆಯದೇ ಮಾತು. ಈ ಸಂದರ್ಭದಲ್ಲಿ ಮತ್ತೊಂದು ಪ್ರಶ್ನೆ ಮೂಡುತ್ತದೆ. ಅದೆಂದರೆ 1932ರ ಪರಿಶಿಷ್ಟ ಜಾತಿಗಳು ಎಂಬ ಈ ಪದ ಬಳಕೆಗೂ ಮುನ್ನ ಯಾವ ಪದ ಬಳಕೆಯಲ್ಲಿತ್ತು ಎಂಬುದು. ಉತ್ತರ: ‘ಡಿಪ್ರೆಸ್ಡ್ ಕ್ಲಾಸಸ್’ ಅಥವಾ ‘ಡಿಸಿ’ಗಳು. ಸ್ವತಃ ಡಾ.ಅಂಬೇಡ್ಕರರು ಆರಂಭದಿಂದಲೂ ತಮ್ಮ ಚಳವಳಿಯನ್ನು ನಡೆಸಿಕೊಂಡು ಬಂದದ್ದೇ ‘ಡಿಪ್ರೆಸ್ಡ್ ಕ್ಲಾಸಸ್’ ಅಥವಾ ‘ಶೋಷಿತ ವರ್ಗಗಳು’ ಎಂಬ ಪದ ಬಳಕೆ ಮೂಲಕ. (‘ಡಿಪ್ರೆಸ್ಡ್ ಕ್ಲಾಸಸ್’ ಅಥವಾ ‘ಡಿಸಿ’ ಪದ ಬಳಕೆ ಈಚಿನವರೆಗೂ ಅಲ್ಲಲ್ಲಿ ಅಸ್ತಿತ್ವದಲ್ಲಿತ್ತು. ಉದಾಹರಣೆಗೆ 1990ಕ್ಕೂ ಮುಂಚೆ ಜಿಲ್ಲಾ ಕೇಂದ್ರಗಳಲ್ಲಿ ಇದ್ದ ಪರಿಶಿಷ್ಟ ಜಾತಿಗಳ ವಿದ್ಯಾರ್ಥಿನಿಲಯಗಳನ್ನು ‘ಡಿಸಿ ಹಾಸ್ಟೆಲ್’ ಎಂದೇ ಕರೆಯುತ್ತಿದ್ದರು!) ಹೀಗಿರುವಾಗ ತಾವೇ ಬಳಸುತ್ತಿದ್ದ ‘ಡಿಪ್ರೆಸ್ಡ್ ಕ್ಲಾಸಸ್’ ಎಂಬ ಈ ಪದವನ್ನು ಡಾ.ಅಂಬೇಡ್ಕರ್ರವರು ದುಂಡುಮೇಜಿನ ಸಭೆಗಳ ಚರ್ಚೆಯ ಸಂದರ್ಭದಲ್ಲಿ ಯಾಕೆ ಮುಂದುವರಿಸಲಿಲ್ಲ?. ಉತ್ತರ: ‘ಡಿಪ್ರೆಸ್ಡ್ ಕ್ಲಾಸಸ್’ ಅಥವಾ ‘ಶೋಷಿತ ವರ್ಗಗಳು’ ಅಥವಾ ‘ದಮನಿತ ವರ್ಗಗಳು’ ಎಂಬ ಈ ಪದ ಕೀಳು ಅಥವಾ ಅಸಹಾಯಕ ಎಂಬ ಅರ್ಥವನ್ನು ಸೃಷ್ಟಿಸುತ್ತದೆ ಎಂಬುದಾಗಿತ್ತು. ಹಾಗೆಯೇ 1932ರ ಆ ಕಾಲದಲ್ಲಿ ಅನೇಕ ಪ್ರಾಂತಗಳಲ್ಲಿ ಅಸ್ಪಶ್ಯತೆ ಅನುಭವಿಸುತ್ತಿದ್ದರೂ ಸಂಬಂಧಿತ ಅನೇಕ ಅಸ್ಪಶ್ಯ ಸಮುದಾಯಗಳು ಸಾಕಷ್ಟು ಸುಶಿಕ್ಷಿತ ಮತ್ತು ಸುಸ್ಥಿತಿಯಲ್ಲಿದ್ದುದ್ದನ್ನು ಡಾ.ಅಂಬೇಡ್ಕರರು ಗಮನಿಸಿದ್ದರು. ಈ ಹಿನ್ನೆಲೆಯಲ್ಲಿ ಇಂತಹ ಸಮುದಾಯಗಳನ್ನು ದಮನಿತ ಸಮುದಾಯಗಳು ಅಥವಾ ಡಿಪ್ರೆಸ್ಡ್ ಕ್ಲಾಸಸ್ ಎಂದು ಸಾರ್ವತ್ರಿಕಗೊಳಿಸುವುದು ಎಷ್ಟು ಸರಿ ಎಂಬ ಚರ್ಚೆ ಕೂಡ ಆ ಸಂದರ್ಭದಲ್ಲಿ ಮುನ್ನೆಲೆಗೆ ಬಂದಿತು. ಜೊತೆಗೆ ಅಂತಹ ಸಮುದಾಯಗಳು ಪ್ರಜ್ಞಾವಂತಿಕೆಯನ್ನು ಪಡೆಯುತ್ತಿರುವುದು ಅಲ್ಲದೆ ಭಾರತೀಯ ಸಮಾಜದಲ್ಲಿ ಗೌರವಯುತ ಸ್ಥಾನವನ್ನು ಪಡೆಯಲು ಆ ಕಾಲದಲ್ಲೇ ಆ ನಿಟ್ಟಿನ ಪ್ರಯತ್ನ ಪಡುತ್ತಿದ್ದದ್ದು ಕೂಡ ಡಾ.ಅಂಬೇಡ್ಕರರ ಗಮನಕ್ಕೆ ಬಂದಿತ್ತು. ಆ ಕಾರಣ ಅವರು ಡಿಪ್ರೆಸ್ಡ್ ಕ್ಲಾಸಸ್ ಪದವನ್ನು ತಿರಸ್ಕರಿಸಿದರು. ಮುಂದುವರಿದು ಸ್ವಾತಂತ್ರ್ಯಾನಂತರದ ಕಾಲಕ್ಕೆ ಪರಿಶಿಷ್ಟ ಜಾತಿಗಳು ಪದಕ್ಕೆ ಪರ್ಯಾಯವಾಗಿ ಚಳವಳಿಗಳ ಉಗಮದ ದೃಷ್ಟಿಯಿಂದ ಅಲ್ಲಲ್ಲಿ ‘ದಲಿತ’ ಪದ ಕೂಡ ಬಳಕೆಗೆ ಬಂದಿತು. ಬಾಬಾಸಾಹೇಬ್ ಅಂಬೇಡ್ಕರರ ನಿಧನದ ನಂತರ ಬಳಕೆಗೆ ಬಂದ ಅದು ವಿಶೇಷವಾಗಿ ಮಹಾರಾಷ್ಟ್ರದಲ್ಲಿ ದಲಿತ ಪ್ಯಾಂಥರ್ಸ್ ಮೂಲಕ ದೇಶದ್ಯಾಂತ ಚಾಲ್ತಿಗೆ ಬಂದಿತು. ಈಗಲೂ ವ್ಯಾಪಕವಾಗಿ ಅದೇ ಹೆಸರಿನಲ್ಲಿ ಚಳವಳಿಗಳು ನಡೆದಿವೆ. ಆದರೆ ‘ದಲಿತ’ ಎಂದರೆ ದಮನಿತ, ತುಳಿತಕ್ಕೊಳಗಾದವರು ಎಂಬ ಅರ್ಥ ಬರುವುದರಿಂದ ದಲಿತ ಪದಕ್ಕೂ ಡಿಪ್ರೆಸ್ಡ್ ಕ್ಲಾಸಸ್ ಪದಕ್ಕೆ ಒದಗಿದ ಗತಿಯೇ ಬರುವ ಸಂಭವವಿದೆ. ಈಚಿನ ದಿನಗಳಲ್ಲಿ ಬೌದ್ಧಧರ್ಮದೆಡೆ ಸಂಬಂಧಿತ ಮಾಜಿ ಅಸ್ಪಶ್ಯ ಸಮುದಾಯಗಳು ವ್ಯಾಪಕವಾಗಿ ಚಲಿಸುತ್ತಿರುವುದು ಕೂಡ ‘ದಲಿತ’ ಪದ ಸೈಡ್ಲೈನ್ಗೆ ಸರಿಯಲು ಮತ್ತೊಂದು ಕಾರಣವಾಗಿದೆ. ಈ ನಡುವೆ ಕೆಲವು ರಾಜಕೀಯ ಪಕ್ಷಗಳ ಕಾರಣಕ್ಕೆ ‘ಬಹುಜನ’ ಪದ ಬಳಕೆ ಅಲ್ಲಲ್ಲಿ ಅಸ್ತಿತ್ವಕ್ಕೆ ಬರುತ್ತಿದೆ. ಹಾಗಿದ್ದರೆ ಪರಿಶಿಷ್ಟ ಜಾತಿಗಳು ಎಂಬ ಈ ಪರಿಕಲ್ಪನೆಗೆ ಜಾತಿವಾದಿಗಳು ಯಾವ ಅಪಾಯವನ್ನು ಮಾಡುತ್ತಿಲ್ಲವೆ ಎನ್ನುವುದಾದರೆ, ಯಾವ ಅಸ್ಪಶ್ಯತೆ ಕಾರಣಕ್ಕೆ ಪರಿಶಿಷ್ಟ ಜಾತಿಗಳು ಎಂಬ ಪದ ಬಂತೋ ಅದನ್ನೇ ಬುಡಮೇಲುಗೊಳಿಸುವ ನಿಟ್ಟಿನಲ್ಲಿ ಆ ಪಟ್ಟಿಗೆ ಸ್ಪಶ್ಯ ಜಾತಿಗಳನ್ನು ಸೇರಿಸಿ ಪರಿಶಿಷ್ಟ ಜಾತಿಗಳು ಎಂಬ ಆ ಪದದ ಉದ್ದೇಶವನ್ನೇ ಹಾಳುಮಾಡಲಾಗುತ್ತಿದೆ, ವಿಶೇಷವಾಗಿ ಮೀಸಲಾತಿ ನೀತಿಯನ್ನು ಅಸ್ಥಿರಗೊಳಿಸುವ ನಿಟ್ಟಿನಲ್ಲಿ. ಒಟ್ಟಾರೆ ‘ಪರಿಶಿಷ್ಟ ಜಾತಿಗಳು’ ಅಥವಾ ‘ಎಸ್ಸಿ’ಗಳು ಎಂಬ ಈ ಪದ ಸಾಂವಿಧಾನಿಕವಾಗಿ ಬಾಬಾಸಾಹೇಬ್ ಅಂಬೇಡ್ಕರ್ರವರು ಸಂಶೋಧಿಸಿದ ಪದ. ಆ ಪದವನ್ನು 1935ರಲ್ಲಿ ಭಾರತ ಸರಕಾರದ ಕಾಯ್ದೆಯಲ್ಲಿ ಸೇರಿಸಿದ ನಂತರ ಡಾ.ಅಂಬೇಡ್ಕರರು ‘ಪರಿಶಿಷ್ಟ ಜಾತಿಗಳ ಒಕ್ಕೂಟ’ (ಷೆಡ್ಯೂಲ್ಡ್ ಕಾಸ್ಟ್ ಫೆಡರೇಷನ್) ಎಂಬ ರಾಜಕೀಯ ಪಕ್ಷವನ್ನೇ ಸ್ಥಾಪಿಸಿದರು! ಈ ನಿಟ್ಟಿನಲ್ಲಿ ಪರಿಶಿಷ್ಟ ಜಾತಿಗಳು ಈ ಪದದ ಇತಿಹಾಸ ತುಂಬಾ ವಿಶಿಷ್ಟವಾಗಿದೆ. ಜಾತ್ಯತೀತ, ಧರ್ಮಾತೀತ ಹಿನ್ನೆಲೆಯಲ್ಲಿ ಸಂಶೋಧಿಸಲ್ಪಟ್ಟ ಆ ಪದ ಸ್ಪಷ್ಟವಾಗಿ ಸಮಾನತೆಯ ಆಶಯ ಹೊಂದಿತ್ತು.
ಹೆದ್ದಾರಿಯ ವೇಗದಲ್ಲಿ ಮೌನವಾದ ಊರುಗಳು!
ರಾಷ್ಟ್ರೀಯ ಹೆದ್ದಾರಿ ಇಲ್ಲಿ ಕೇವಲ ಭೌಗೋಳಿಕ ಸೀಳುವಿಕೆಯನ್ನು ಮಾಡಿಲ್ಲ; ಬೌದ್ಧಿಕ ಸ್ಮತಿಯನ್ನೂ, ಭಾವನಾತ್ಮಕ ಸಂಬಂಧವನ್ನೂ, ಆರ್ಥಿಕ ಬದುಕನ್ನೂ ಒಂದೇ ವೇಳೆ ಕತ್ತರಿಸಿದೆ. ಅಭಿವೃದ್ಧಿಯ ಹೆಸರಿನಲ್ಲಿ ನಾವು ದೂರವನ್ನು ಕಡಿಮೆ ಮಾಡಿದ್ದೇವೆ, ಆದರೆ ನೆನಪುಗಳ ನಡುವಿನ ಸೇತುವೆಯನ್ನು ಕಳೆದುಕೊಂಡಿದ್ದೇವೆ. ಫ್ಲೈಓವರ್ ಮೇಲೆ ನಿಂತು ನೋಡಿದರೆ ದೇಶ ಮುಂದಕ್ಕೆ ಹೋಗುತ್ತಿರುವಂತೆ ಕಾಣುತ್ತದೆ; ಅದರ ಕೆಳಗಡೆ ಇರುವ ಹಳ್ಳಿಗಳ ಹಳ್ಳಿತನವನ್ನು ಉಳಿಸಿಕೊಳ್ಳಲು ಸಾಧ್ಯವೇ ಇಲ್ಲ. ದಿನೇ ದಿನೇ ಕೆಳಗೆ ನಿಧಾನವಾಗಿ ಮರೆತು ಹೋಗುತ್ತಿರುವ ಊರುಗಳ ಕಥೆ ಯಾರಿಗೂ ಕಾಣಿಸದೇ ಹೋಗುತ್ತಿದೆ. ಒಂದು ಕೃಷಿ ಪ್ರಧಾನ ಹಳ್ಳಿಯನ್ನು ಸೀಳಿ ಸಾಗುವ ರಾಷ್ಟ್ರೀಯ ಹೆದ್ದಾರಿ ಆ ಕ್ಷಣದಿಂದಲೇ ಭೌಗೋಳಿಕವಾಗಿಯಷ್ಟೇ ಅಲ್ಲ, ಮಾನಸಿಕವಾಗಿಯೂ ಆ ಊರನ್ನು ಇಬ್ಭಾಗ ಮಾಡುತ್ತದೆ. ನಕ್ಷೆಯಲ್ಲಿ ಮಾತ್ರ ಅದು ಕಣ್ಣಿಗೆ ಕಾಣಿಸುವ ನೇರವಾದ ಸರಳ ಗೀರು. ಆದರೆ ಅಲ್ಲಿ ಬದುಕುವ ನೆಲದವರ ಬದುಕಿನಲ್ಲಿ ಅದು ತಿರುವು, ತಲ್ಲಣ, ತುಂಡಾಗುವ ನೆನಪು. ನಿನ್ನೆಯವರೆಗೆ ಮನೆಯ ಬಾಗಿಲಿನಿಂದ ನೇರವಾಗಿ ಕಾಲಿಟ್ಟರೆ ತಲುಪುತ್ತಿದ್ದ ಹೊಲ, ಪಂಚಾಯಿತಿ ಕಟ್ಟೆ, ಗೂಡಂಗಡಿ, ಗಡಂಗು, ಮೀನಿನ ಅಂಗಡಿ, ಪ್ರೈಮರಿ ಶಾಲೆ ಎಲ್ಲವೂ ಇಂದು ಹೆದ್ದಾರಿಯ ಆ ಬದಿಯದು! ಬೆಳಗಿನ ಜಾವ ಹಸುವನ್ನು ಬಿಟ್ಟುಕೊಂಡು, ಬೀಜದ ಮೂಟೆ ಹೆಗಲಿಗೇರಿಸಿಕೊಂಡು ನಡೆದು ಹೋಗುತ್ತಿದ್ದ ದಾರಿ ಇದ್ದಕ್ಕಿದ್ದಂತೆ ಕತ್ತರಿಸಿಬಿಟ್ಟಿದೆ. ಅಂಡರ್ ಪಾಸ್ ಇಲ್ಲ, ಸರ್ವಿಸ್ ರೋಡ್ ಬಹುದೂರ. ಪರಿಣಾಮವಾಗಿ ರೈತನು ತನ್ನದೇ ಹೊಲಕ್ಕೆ ಹೋಗಲು ಮೈಲುಗಟ್ಟಲೆ ಸುತ್ತು ಹೊಡೆಯಬೇಕು. ಆ ಸುತ್ತು ಬರೀ ಕೇವಲ ದೈಹಿಕ ದೂರವಲ್ಲ; ಯಾರದೋ ಹಸು ಪೈರು ಮೇಯುತ್ತಿದ್ದರೂ ಅದನ್ನು ಓಡಿಸಲಾರದ ಸ್ಥಿತಿ. ಸಮಯದ ನಷ್ಟ, ಶ್ರಮದ ನಷ್ಟ, ಹಣದ ನಷ್ಟ. ಒಂದು ದಿನಕ್ಕೆ ಒಂದು ಗಂಟೆ ಹೆಚ್ಚಾಗಿ ನಡೆದು ಹೋಗುವುದು ಎಂದರೆ ಆ ಹೊಲಕ್ಕೆ ಕೊಡುವ ಗಮನ ಸಹಜವಾಗಿಯೇ ಕಡಿಮೆಯಾಗುತ್ತದೆ. ನೀರಾವರಿಯ ಸಮಯ ತಪ್ಪುತ್ತದೆ, ಬೆಳೆ ನೋಡಿಕೊಳ್ಳುವ ನಿಕಟತೆ ಕಡಿಮೆಯಾಗುತ್ತದೆ. ಇದರಿಂದ ಉತ್ಪಾದನೆ ಕುಸಿಯುತ್ತದೆ. ಕುಸಿತದ ಜೊತೆ ಸಾಲದ ನೆರಳು ದಟ್ಟವಾಗುತ್ತದೆ. ಆರ್ಥಿಕ ನಷ್ಟಕ್ಕಿಂತ ಆಳವಾದದ್ದು ಭಾವನಾತ್ಮಕ ನಷ್ಟ. ‘ನನ್ನ ಹೊಲ’ ಎಂಬ ತಲೆತಲಾಂತರದ ಸಂಬಂಧದ ನಡುವೆಯೇ ದುತ್ತನೆ ಹೆದ್ದಾರಿ ನಿಂತುಬಿಡುತ್ತದೆ. ಗದ್ದೆಯ ಆ ಬದಿಯಲ್ಲಿ ನಿಂತು ನೋಡಿದಾಗ ಎದುರಿಗೇ ಕಾಣುವ ಮನೆಯ ಬಾಗಿಲು ಈಗ ತಲುಪಲಾರದಷ್ಟು ದೂರವಾಗುತ್ತದೆ. ಹೊಲದಲ್ಲಿ ದುಡಿದು ಬೆವರು ಸುರಿಸಿದ ರೈತನಿಗೆ ಹೆದ್ದಾರಿಯ ಗದ್ದಲದ ನಡುವೆ ತನ್ನ ನೆಲದ ಧ್ವನಿ ಕೇಳಿಸದೇ ಹೋಗುತ್ತದೆ. ಹಳ್ಳಿಯೊಳಗಿನ ಸಹಜ ಪಿಸುಮಾತು, ಹರಟೆ, ಜೋಗುಳ, ಆಚರಣೆ, ಭೇಟಿ.... ಎಲ್ಲದಕ್ಕೂ ಆ ಹೆದ್ದಾರಿಯ ಅತಿವೇಗ ಹೊಂದಿಕೆಯಾಗುವುದಿಲ್ಲ. ರಾಷ್ಟ್ರೀಯ ಹೆದ್ದಾರಿ ರೈತರಲ್ಲಿ ಮತ್ತೊಂದು ತಲ್ಲಣವನ್ನು ಹುಟ್ಟಿಸುತ್ತದೆ: ಭದ್ರತೆಯ ಭೀತಿ. ರಸ್ತೆ ದಾಟುವಾಗ ಹಸು, ಕುರಿ, ಕೋಳಿ, ಆಡು, ಮನುಷ್ಯ-ಎಲ್ಲರಿಗೂ ಅಪಾಯವೇ. ಅಲ್ಲಿಯ ಒಂದು ಅಪಘಾತ ಕೇವಲ ಒಂದು ಜೀವವನ್ನಷ್ಟೇ ಕಸಿದುಕೊಳ್ಳುವುದಲ್ಲ; ಒಂದು ಕುಟುಂಬದ ಆರ್ಥಿಕ ನೆಲೆಯನ್ನು ಕಿತ್ತುಹಾಕುತ್ತದೆ. ಪರಿಹಾರದ ಕಾಗದಗಳು ಬರುವಷ್ಟರಲ್ಲಿ ಬದುಕುಳಿದವರ ಬಾಳು ಬಚ್ಚಿಹೋಗುತ್ತದೆ. ಹಳ್ಳಿಗುಂಟ ಸಾಗುವ ಹೆದ್ದಾರಿಯ ನಡುನಡುವೆ ಇರುವ ಫ್ಲೈಓವರ್ ದಾರಿಯನ್ನು ನೇರಗೊಳಿಸುತ್ತದೆ, ಪ್ರಯಾಣಿಕರನ್ನು ಎತ್ತರಕ್ಕೆ ಏರಿಸುತ್ತದೆ. ಯಾವುದೂ ಅಡ್ಡವಿಲ್ಲವೆಂದು ವಾಹನಗಳ ವೇಗ ತೀವ್ರಗೊಳ್ಳುತ್ತದೆ. ಮೇಲಿನಿಂದ ನೋಡಿದರೆ ಕೆಳಗಿನ ಊರು ಕೇವಲ ಒಂದು ನೆರಳು ಮಾತ್ರ. ಮೊನ್ನೆ ಮೊನ್ನೆ ನೋಡಿಕೊಂಡು ಹೋದ ಹಳ್ಳಿಗಳು ಈಗ ಗಮನಕ್ಕೇ ಬಾರದ ದೃಶ್ಯ. ಫ್ಲೈಓವರ್ ಮೇಲೆ ಚಲಿಸುವ ವಾಹನಗಳಿಗೆ ಕೆಳಗಿನ ಊರಿನ ಹೆಸರು ಗೊತ್ತಿಲ್ಲ, ಅದರ ಇತಿಹಾಸ ಗೊತ್ತಿಲ್ಲ, ಅಲ್ಲಿ ಇರುವ ದೇವರ ಗುಡಿ, ತೇರು, ಬಾವಿ, ಚರ್ಚ್, ಮಸೀದಿ, ದೈವದ ಕಟ್ಟೆ, ಭಜನಾ ಮಂದಿರ, ಜಾತ್ರೆ-ಯಾವುದಕ್ಕೂ ನೋಟವಿಲ್ಲ. ಹೀಗೆ ಹಳ್ಳಿ ಅಲ್ಲಿ ಕೇವಲ ಪಾಸ್ ಆಗುವ ಸ್ಥಳವಾಗುತ್ತದೆ; ತಲುಪಬೇಕಾದ ಊರು ಆಗುವುದಿಲ್ಲ. ಇಲ್ಲಿಯೇ ಸಾಂಸ್ಕೃತಿಕ ಕೊರತೆ ಹುಟ್ಟುತ್ತದೆ. ಹಿಂದೆ ರಸ್ತೆ ಮೇಲೆ ಹಾದುಹೋಗುವವನು ಗಾಡಿ ನಿಲ್ಲಿಸಿ ಆಗಾಗ ಇಲ್ಲಿ ಚಹಾ ಕುಡಿಯುತ್ತಿದ್ದ, ಮಾತಾಡುತ್ತಿದ್ದ, ಹಳ್ಳಿಯ ಹೆಸರು ನೆನಪಿಟ್ಟುಕೊಳ್ಳುತ್ತಿದ್ದ. ಇಂದು ವೇಗವೇ ಅಲ್ಲಿ ಮೌಲ್ಯ. ವೇಗದ ಸಮಾಜದಲ್ಲಿ ಹಳ್ಳಿಯ ಕಥೆಗೆ ಜಾಗವೇ ಇರುವುದಿಲ್ಲ. ಇದರಿಂದ ಹಳ್ಳಿ ತನ್ನ ಗುರುತನ್ನು ನಿಧಾನವಾಗಿ ಕಳೆದುಕೊಳ್ಳುತ್ತದೆ. ಯುವಕರಂತೂ ಅದೇ ಹೆದ್ದಾರಿಯಲ್ಲಿ ನಿಂತ ಬೆಂಗಳೂರು ಕಡೆಗಿನ ಬಸ್ಸು ಹತ್ತುತ್ತಾರೆ; ಉಳಿದವರು ಹೆದ್ದಾರಿಯ ಶಬ್ದದ ನಡುವೆ ಮೌನವಾಗುತ್ತಾರೆ. ಅಭಿವೃದ್ಧಿ ಬೇಕು, ರಸ್ತೆ ಬೇಕು ಅದರಲ್ಲಿ ಸಂದೇಹವೇ ಇಲ್ಲ. ಆದರೆ ಆ ಪ್ರಗತಿ ಹಳ್ಳಿಯ ಜೊತೆ ಮಾತನಾಡಿಕೊಂಡು ಹೊಂದಿಕೊಂಡು ಸಹಿಸಿಕೊಂಡು ಪಳಗಿಸಿಕೊಂಡು ಆಗಿದ್ದರೆ ಎಷ್ಟು ಚೆನ್ನಾಗಿತ್ತು. ವಶಪಡಿಸಿಕೊಂಡು ಉಳಿದ ಅರ್ಧ ಹೊಲಕ್ಕೆ ರೈತನಿಗೇ ದಾರಿ ಉಳಿಸಬೇಕಿತ್ತು. ಇಲ್ಲವಾದರೆ ಹೆದ್ದಾರಿ ದೇಶವನ್ನು ಜೋಡಿಸುವ ಬದಲು, ಹಳ್ಳಿಯ ಬದುಕನ್ನು ತುಂಡುಮಾಡುವ ಗೀರುವಷ್ಟೇ ಆಗುತ್ತದೆ. ರಾಷ್ಟ್ರೀಯ ಹೆದ್ದಾರಿ ಒಂದು ಊರನ್ನು ಸೀಳಿ ಹೋದಾಗ ಆಗುವ ನಷ್ಟವನ್ನು ಅಂಕಿ-ಅಂಶಗಳಲ್ಲಿ ಹೇಳಬಹುದು. ಆದರೆ ಅದರ ನಿಜವಾದ ತೂಕ ಅರ್ಥವಾಗುವುದು ದೃಷ್ಟಾಂತಗಳ ಮೂಲಕವೇ. ಕರಾವಳಿ ಕಲ್ಲಡ್ಕದ ಲಕ್ಷ್ಮಿ ಕೆ.ಟಿ. ಹೋಟೆಲ್ ಅದಕ್ಕೆ ಸರಿಯಾದ ಉದಾಹರಣೆ. ಒಂದು ಕಾಲ ಇತ್ತು. ಬೆಂಗಳೂರು-ಮೈಸೂರು ಹಾದಿಯಲ್ಲಿ ಹೋಗುವವರಿಗೆಲ್ಲ ಕಲ್ಲಡ್ಕ ತಲುಪುವ ಮುನ್ನವೇ ಮನಸ್ಸಿನಲ್ಲಿ ಒಂದು ರುಚಿ ಎದ್ದುಕೊಳ್ಳುತ್ತಿತ್ತು. ‘‘ಇನ್ನೂ ಸ್ವಲ್ಪ ಮುಂದೆ ಕೆ.ಟಿ. ಇದೆ’’ ಅನ್ನುವ ವಾಕ್ಯವೇ ಪ್ರಯಾಣದ ಭಾಗವಾಗಿತ್ತು. ಗಾಡಿ ನಿಧಾನವಾಗುತ್ತಿತ್ತು, ಬದಿಗೆ ನಿಲ್ಲುತ್ತಿತ್ತು. ಚಹಾದ ಕಪ್ ಕೈಗೆ ಬರುವಷ್ಟರಲ್ಲಿ ಪಕ್ಕದ ಮೇಜಿನವರ ಜೊತೆ ಮಾತು ಶುರುವಾಗುತ್ತಿತ್ತು. ಕೆ.ಟಿ.ಯ ಸ್ವಾದ ಕೇವಲ ಹೊಟ್ಟೆ ತುಂಬುವ ಆಹಾರವಲ್ಲ; ಅದು ಒಂದು ರೀತಿ ಆ ಊರಿನ ಸ್ವಭಾವ, ಆತಿಥ್ಯ, ನೆನಪು. ಬರೀ ಕಲ್ಲಡ್ಕದ ಚಹಾ ಒಂದೇ ಅಲ್ಲ. ಅದು ಯಾವುದೋ ಊರಿನ ತಟ್ಟೆ ಇಡ್ಲಿ ಇರಬಹುದು. ನೀರು ದೋಸೆ ಇರಬಹುದು, ಕೋರಿ ರೊಟ್ಟಿ ಇರಬಹುದು. ಕಡ್ಲೆ ಬಜಿಲ್ ಇರಬಹುದು. ಒಂದು ಹೋಟೆಲ್, ಅಲ್ಲಿಯ ತಿಂಡಿ-ಅದು ಬರೀ ಹೋಟೆಲ್ ಗುರುತಲ್ಲ. ಒಂದು ಊರಿನ ಅಸ್ಮಿತೆಯೂ ಕೂಡ. ಫ್ಲೈಓವರ್ ಎದ್ದು ನಿಂತಮೇಲೆ ವಾಹನಗಳ ವೇಗ ಹೆಚ್ಚಾಯಿತು. ಹಳೆ ತಲೆಮಾರಿನವರು ಇನ್ನೂ ಕೆಲವೊಮ್ಮೆ ಕೆಳಗಿಳಿದು ಕೆ.ಟಿ.ಗೆ, ತಟ್ಟೆ ಇಡ್ಲಿಗೆ, ನೀರು ದೋಸೆಗೆ ಹೋಗುತ್ತಾರೆ; ಅವರ ನೆನಪು ಇನ್ನೂ ಹಸಿರಾಗಿದೆ. ಆದರೆ ಹೊಸ ತಲೆಮಾರು? ಅವರು ಫ್ಲೈಓವರ್ ಮೇಲೆ ಸಾಗುತ್ತಾರೆ. ಕೆಳಗಿರುವ ಕೆ.ಟಿ. ಅವರಿಗೆ ಕಣ್ಣಿಗೆ ಬೀಳುವುದೇ ಇಲ್ಲ. ಸ್ವಾದ, ಸುವಾಸನೆ ಮೇಲಕ್ಕೆ ಏರುವುದಿಲ್ಲ. ನೆನಪು ಹುಟ್ಟುವ ಅವಕಾಶವೇ ಸಿಗುವುದಿಲ್ಲ. ಹೀಗಾಗಿ ರುಚಿ ನಿಧಾನವಾಗಿ ನೆನಪಿನಿಂದ ಹೊರಹೋಗುತ್ತದೆ. ಇದು ಕೇವಲ ಒಂದು ಹೋಟೆಲಿನ ನಷ್ಟವಲ್ಲ; ಒಂದು ಸಾಂಸ್ಕೃತಿಕ ಸಂಬಂಧದ ಕಳೆವು. ಇದೇ ಕಥೆ ನಮ್ಮ ಚಹಾದ ಅಂಗಡಿಗಳದ್ದು, ಬೊಂಡದ ಅಂಗಡಿಗಳದ್ದು, ಬೀಡದ ಅಂಗಡಿಗಳದ್ದು. ರಸ್ತೆಯ ಪಕ್ಕದಲ್ಲಿ ನಿಂತು ಪ್ರಯಾಣಿಕರ ಜೊತೆ ಬದುಕುತ್ತಿದ್ದ ಅಂಗಡಿಗಳು ಇಂದು ಹೆದ್ದಾರಿಯ ಮಧ್ಯೆ ಸಿಕ್ಕಿಹಾಕಿಕೊಂಡಿವೆ. ಸಿಕ್ಕಿಹಾಕಿಕೊಳ್ಳುವುದು ಅಂದರೆ ಕೇವಲ ವ್ಯಾಪಾರ ಕಡಿಮೆಯಾಗುವುದು ಅಲ್ಲ; ಅವರ ಅಸ್ತಿತ್ವವೇ ಪ್ರಶ್ನೆಯಾಗುವುದು. ಮಂಗಳೂರು ಕಡೆ ಚಲಿಸುವಾಗ ಕಲ್ಲಡ್ಕ, ಮೆಲ್ಕಾರು, ಪಾಣೆಮಂಗಳೂರು-ಒಂದು ಕಾಲದಲ್ಲಿ ನಮ್ಮ ಪ್ರಯಾಣದ ಗುರುತುಗಳು. ಹೆಸರು ಕೇಳಿದರೆ ಮುಖ ನೆನಪಾಗುತ್ತಿತ್ತು, ಮುಖ ನೆನಪಾದರೆ ರುಚಿ, ಮಾತು, ಜನ ನೆನಪಾಗುತ್ತಿದ್ದರು. ಗಾಡಿ ನಿಲ್ಲಿಸಿ ಚಹಾ ಕುಡಿದು, ಎರಡು ಮಾತು ಆಡಿಕೊಂಡು ಮುಂದೆ ಹೋಗುವುದು ಒಂದು ಸಂಸ್ಕೃತಿ. ಇಂದು ಕೇವಲ ಆರು ತಿಂಗಳಲ್ಲಿ ನಾವು ಆ ಊರುಗಳನ್ನು ಮರೆತುಬಿಟ್ಟಿದ್ದೇವೆ ಎಂದರೆ, ಅವುಗಳನ್ನು ನೋಡದೇ ಫ್ಲೈಓವರ್ ಮೇಲೆ ಸಾಗುವ ಹೊಸ ತಲೆಮಾರು ಆ ಊರುಗಳನ್ನು ನೆನಪಿಟ್ಟುಕೊಳ್ಳುವುದಾದರೂ ಹೇಗೆ? ಊರು ನೆನಪಾಗಲು ಅದು ಕಣ್ಣಿಗೆ ಬೀಳಬೇಕು, ಕಾಲಿಗೆ ತಟ್ಟಬೇಕು, ನಾಲಿಗೆಗೆ ರುಚಿ ಕೊಡಬೇಕು, ಮನಸ್ಸಿಗೆ ಮಾತು ಕೊಡಬೇಕು. ವೇಗದ ರಸ್ತೆಯಲ್ಲಿ ಈ ಎಲ್ಲದಕ್ಕೂ ಈಗ ಸಮಯವೇ ಇಲ್ಲ. ಹೀಗಾಗಿ ರಾಷ್ಟ್ರೀಯ ಹೆದ್ದಾರಿ ಇಲ್ಲಿ ಕೇವಲ ಭೌಗೋಳಿಕ ಸೀಳುವಿಕೆಯನ್ನು ಮಾಡಿಲ್ಲ; ಬೌದ್ಧಿಕ ಸ್ಮತಿಯನ್ನೂ, ಭಾವನಾತ್ಮಕ ಸಂಬಂಧವನ್ನೂ, ಆರ್ಥಿಕ ಬದುಕನ್ನೂ ಒಂದೇ ವೇಳೆ ಕತ್ತರಿಸಿದೆ. ಅಭಿವೃದ್ಧಿಯ ಹೆಸರಿನಲ್ಲಿ ನಾವು ದೂರವನ್ನು ಕಡಿಮೆ ಮಾಡಿದ್ದೇವೆ, ಆದರೆ ನೆನಪುಗಳ ನಡುವಿನ ಸೇತುವೆಯನ್ನು ಕಳೆದುಕೊಂಡಿದ್ದೇವೆ. ಫ್ಲೈಓವರ್ ಮೇಲೆ ನಿಂತು ನೋಡಿದರೆ ದೇಶ ಮುಂದಕ್ಕೆ ಹೋಗುತ್ತಿರುವಂತೆ ಕಾಣುತ್ತದೆ; ಅದರ ಕೆಳಗಡೆ ಇರುವ ಹಳ್ಳಿಗಳ ಹಳ್ಳಿತನವನ್ನು ಉಳಿಸಿಕೊಳ್ಳಲು ಸಾಧ್ಯವೇ ಇಲ್ಲ. ದಿನೇ ದಿನೇ ಕೆಳಗೆ ನಿಧಾನವಾಗಿ ಮರೆತು ಹೋಗುತ್ತಿರುವ ಊರುಗಳ ಕಥೆ ಯಾರಿಗೂ ಕಾಣಿಸದೇ ಹೋಗುತ್ತಿದೆ. ನದಿ ಹೊಳೆಗಳಿಗೆ ಸೇತುವೆಗಳೇ ಇಲ್ಲದ ಹಳ್ಳಿಗಳು ನಾಗರಿಕ ಜಗತ್ತಿನಿಂದ ಸಂಪೂರ್ಣವಾಗಿ ದೂರವಿದ್ದವು ಎಂದು ಹೇಳಲು ಸಾಧ್ಯವಿಲ್ಲ. ಅಲ್ಲಿ ಮಣ್ಣಿನ ರಸ್ತೆ ಇತ್ತು. ಆ ರಸ್ತೆ ರೈತನ ಉತ್ಪನ್ನಗಳನ್ನು ಮಾರುಕಟ್ಟೆಯ ಕಡೆಗೆ ಕರೆದೊಯ್ಯುವಷ್ಟು ಸಾಮರ್ಥ್ಯ ಹೊಂದಿತ್ತು. ಹಳ್ಳಿಯೊಳಗಿನ ಬದುಕನ್ನು ಒಂದೇ ದಾರಿಯಲ್ಲಿ ಕಟ್ಟಿಹಾಕುವ ಕೆಲಸ ಅದೇ ಮಣ್ಣು ರಸ್ತೆ ಮಾಡುತ್ತಿತ್ತು. ಮನುಷ್ಯನ ನಡಿಗೆಯ ವೇಗದಲ್ಲಿ ಸಾಗುವ ರಸ್ತೆ ಅದು. ಅಲ್ಲಿ ಬಿಸಿಲ ಬೇಗೆಯೂ ಇತ್ತು, ಮಳೆಯೂ ಇತ್ತು, ಆದರೆ ರಸ್ತೆ ಗ್ರಾಮದ ಬದುಕಿಗೆ ವಿರುದ್ಧವಾಗಿರಲಿಲ್ಲ. ಇವತ್ತು ಹಳ್ಳಿಗಳ ಮಧ್ಯೆ ಬರುವ ರಾಷ್ಟ್ರೀಯ ಹೆದ್ದಾರಿಗಳ ಸ್ವಭಾವ ಬೇರೆ. ಅವು ಸಂಪರ್ಕ ಕಲ್ಪಿಸುವುದಕ್ಕಿಂತ ಹೆಚ್ಚು ವಿಭಜನೆ ಮಾಡುತ್ತವೆ. ಒಂದು ಕಡೆ ರೈತನ ಹೊಲ-ಗದ್ದೆ-ತೋಟ, ಇನ್ನೊಂದು ಕಡೆ ಅವನ ಮನೆ. ಮಧ್ಯೆ ಅಗಲವಾದ ರಸ್ತೆ. ರೈತ ತನ್ನ ಹೊಲಕ್ಕೆ ಹೋಗುವುದಕ್ಕೂ ಈಗ ದಾರಿ ಕೇಳಿಕೊಳ್ಳಬೇಕಾದ ಸ್ಥಿತಿ. ರಸ್ತೆ ಹಳ್ಳಿಗೆ ಬಂದಿಲ್ಲ, ಹಳ್ಳಿಯನ್ನೇ ಕತ್ತರಿಸಿಕೊಂಡು ಹೋಗಿದೆ ಎನ್ನಿಸುವುದು ಅಲ್ಲಿ ಬದುಕುತ್ತಿರುವವರಿಗೆ ಮಾತ್ರ ಗೊತ್ತು. ಅಭಿವೃದ್ಧಿಯ ಹೆಸರಿನಲ್ಲಿ ಮನುಷ್ಯನ ನಡಿಗೆಯ ವೇಗವನ್ನು ಮೀರಿಸುವ ಹೆದ್ದಾರಿಗಳನ್ನು ನಿರ್ಮಿಸುವಾಗ, ಆ ನೆಲದ ಮೂಲ ಸಂಸ್ಕೃತಿ, ಅದರ ನೆನಪುಗಳು, ಅದರ ಬದುಕಿನ ಸಹಜ ಲಯಕ್ಕೆ ಏನಾಗುತ್ತದೆ ಎಂಬ ಪ್ರಶ್ನೆ ನಮಗೆ ತೊಂದರೆ ಕೊಡದೇ ಹೋಗುವುದು ಆತಂಕದ ಸಂಗತಿ. ವೇಗವೇ ಅಭಿವೃದ್ಧಿ ಎಂಬ ಭ್ರಮೆಯಲ್ಲಿ ನಾವು ಬದುಕಿನ ಅರ್ಥವನ್ನೇ ಕಳೆದುಕೊಳ್ಳುತ್ತಿದ್ದೇವೆ ಎಂಬುದನ್ನು ಒಮ್ಮೆ ನಿಲ್ಲಿಸಿ ಯೋಚಿಸಬೇಕಾಗಿದೆ. ರಸ್ತೆ ಅಗಲ ಮಾಡುವ ಸಂದರ್ಭದಲ್ಲಿ ನೂರಾರು ವರ್ಷಗಳ ಹಿಂದೆ ಎರಡೂ ಬದಿಗಳಲ್ಲಿ ನೆಟ್ಟ ಆಲ, ಅರಳಿ, ಮಾವು, ತೇಗ ಮುಂತಾದ ಮರಗಳನ್ನು ಉರುಳಿಸುವುದಕ್ಕೂ, ಕನಿಷ್ಠ ಒಂದು ಬದಿಯ ಮರವನ್ನು ಉಳಿಸಿಕೊಂಡು ರಸ್ತೆ ವಿಸ್ತರಿಸುವುದಕ್ಕೂ ದೊಡ್ಡ ವ್ಯತ್ಯಾಸವಿದೆ. ಆ ವ್ಯತ್ಯಾಸವನ್ನು ಅಳತೆಯ ಯಂತ್ರಗಳು ಹೇಳಲಾರವು. ಅದರಡಿಯಲ್ಲಿ ಬದುಕಿರುವವರು ಮಾತ್ರ ಅರ್ಥಮಾಡಿಕೊಳ್ಳಬಲ್ಲರು. ಆ ಮರಗಳು ಕೇವಲ ನೆರಳು ಕೊಡುವ ವಸ್ತುಗಳಲ್ಲ. ಅವು ವಾತಾವರಣವನ್ನು ಶುದ್ಧಗೊಳಿಸುವ ಜೀವಂತ ವ್ಯವಸ್ಥೆ. ಸಾವಿರಾರು ಪಕ್ಷಿ-ಪ್ರಾಣಿಗಳಿಗೆ ಆಹಾರ ನೀಡಿದ ಮೂಲ. ಅದಕ್ಕಿಂತ ಮುಖ್ಯವಾಗಿ, ಅವು ಮನುಷ್ಯನ ನೆನಪಿನ ತಾಣಗಳು. ನಮ್ಮ ಹಿರಿಯರು ಆ ಮರಗಳ ಅಡಿಯಲ್ಲಿ ನಡೆದು ಹೋಗುವಾಗ ಪಿಸುಮಾತಿನಲ್ಲಿ ಹೇಳಿದ ಕಥೆಗಳು, ಅದೇ ನೆರಳಲ್ಲಿ ಮಲಗಿ ಕಂಡ ಕನಸುಗಳು, ಗಂಟು ಬಿಚ್ಚಿ ತಿಂಡಿ ತಿಂದ ಕ್ಷಣಗಳು ಎಲ್ಲವೂ ಅವುಗಳ ಭಾಗವೇ. ಯಕ್ಷಗಾನದ, ರಂಗಭೂಮಿಯ ಪೆಟ್ಟಿಗೆಗಳು ಅಲ್ಲಿ ಇಳಿದಿವೆ. ಊರ ಮದುಮಗ-ಮದುಮಗಳ ದಿಬ್ಬಣ ಬಿಸಿಲಿನ ಬೇಗೆ ತಡೆಯಲಾರದೆ ಅದೇ ಮರದ ಅಡಿಯಲ್ಲಿ ತಂಗಿವೆ. ಅರವಟ್ಟಿಗೆಯ ನೀರು ಕುಡಿದು, ಬಿದ್ದ ಮಾವನ್ನು ಒರಸಿ ತಿಂದ ಎಷ್ಟೋ ಮಂದಿ ಬದುಕಿನ ಸಣ್ಣ ಸಣ್ಣ ಸಂತೋಷಗಳನ್ನು ಅಲ್ಲಿ ಕಂಡಿದ್ದಾರೆ. ಆ ಮರಗಳು ರಸ್ತೆಗಿಂತ ದೊಡ್ಡ ಸಾಮಾಜಿಕ ಸ್ಥಳಗಳು. ಇವತ್ತು ರಸ್ತೆ ಇದೆ. ಅಗಲವೂ ಇದೆ. ವೇಗವೂ ಇದೆ. ಆದರೆ ಆ ಮರಗಳ ಜಾಗದಲ್ಲಿ ಮೌನ ಮಾತ್ರ ಉಳಿದಿದೆ. ರಸ್ತೆ ಗಮ್ಯವಲ್ಲ, ರಸ್ತೆ ಒಂದು ಸಾಧನ ಮಾತ್ರ. ಆ ಸಾಧನವೇ ಗಮ್ಯವಾಗಿ ಬಿಟ್ಟರೆ ಅಭಿವೃದ್ಧಿ ಎಂಬ ಪದ ತನ್ನ ಅರ್ಥವನ್ನು ಕಳೆದುಕೊಳ್ಳುತ್ತದೆ. ಹಳ್ಳಿಗಳನ್ನು ಜೋಡಿಸುವ ರಸ್ತೆ ನಮಗೆ ಬೇಕು. ಆದರೆ ಬದುಕು, ನೆನಪು, ಸಂಸ್ಕೃತಿಯನ್ನು ಕತ್ತರಿಸುವ ಹೆದ್ದಾರಿ ಬೇಡ.
ಫಲಿತಾಂಶ ಸುಧಾರಣೆಗಾಗಿ ಪ್ರಶ್ನೆಪತ್ರಿಕೆ ಸೋರಿಕೆಯ ಅಕ್ರಮ ಮಾರ್ಗ ಸರಿಯೇ?
ಕಲಿಕೆಯ ದೃಢತೆಯ ಮಾಪನಕ್ಕೆ ಪರೀಕ್ಷೆ ಎಂಬ ಮಾನದಂಡ ಉಂಟು. ವಿಷಯ ಗ್ರಹಿಕೆ, ಅರ್ಥೈಸುವಿಕೆ ಮತ್ತು ಅಭಿವ್ಯಕ್ತಿಯ ಸ್ಕೇಲ್ಗಳಿಗೆ ಪ್ರಶ್ನೆಪತ್ರಿಕೆ ಎಂಬ ಟೂಲಿದೆ. ಆ ಮುಖಾಂತರ ಕಲಿಕಾ ಸಾಮರ್ಥ್ಯಗಳ ಮೂಲಕ ಸಾಧಿಸಿಕೊಳ್ಳುವ ವಿಧಾನವೊಂದು ರೂಢಿಯಲ್ಲಿದೆ. ಈ ಪ್ರಶ್ನೆಪತ್ರಿಕೆ ಅತ್ಯಂತ ನಿರ್ಣಾಯಕ. ಇದು ಕಲಿಕಾ ಹಂತಗಳಲ್ಲಿ ಮುಖ್ಯವಾದ ರೋಲ್ ವಹಿಸುತ್ತದೆ. ಪ್ರಶ್ನೆಪತ್ರಿಕೆಯ ಸೋರಿಕೆ ಎಂಬ ಈ ರೂಲ್ ಮತ್ತು ರೋಲ್ಗಳನ್ನು ಬ್ರೇಕ್ ಮಾಡಿದ ಪ್ರಕರಣಗಳು ಮತ್ತೆ ಮತ್ತೆ ಬೆಳಕಿಗೆ ಬರುತ್ತವೆ. ಇದು ಪ್ರಶ್ನೆ ಪತ್ರಿಕೆ ಸೋರಿಕೆಗಿಂತ ನಮ್ಮ ವ್ಯಕ್ತಿತ್ವದ ಮತ್ತು ನಂಬಿಕೆಯ ಸೋರಿಕೆ ಪ್ರಶ್ನೆ. ಈಗ ಪರೀಕ್ಷಾ ಕಾಲ. ಜನವರಿ, ಫೆಬ್ರವರಿ ಮತ್ತು ಮಾರ್ಚ್ ತಿಂಗಳುಗಳಲ್ಲಿ ಒಂದಲ್ಲ ಒಂದು ರೀತಿಯ, ಹಂತದ ಪರೀಕ್ಷೆಗಳನ್ನು ನಡೆಸಲಾಗುತ್ತದೆ. ಪೂರ್ವ ಸಿದ್ಧತಾ ಪರೀಕ್ಷೆಗಳಾಗಿರಲಿ ಅಥವಾ ವಾರ್ಷಿಕ ಪರೀಕ್ಷೆಗಳಾಗಿರಲಿ ನಡೆಸುವುದೇ ಬಹುದೊಡ್ಡ ಚಾಲೆಂಜ್ ಆಗುತ್ತಿದೆ. ಯಾವುದೋ ಒಂದು ಮೂಲೆಯಲ್ಲಿ ಯಾವುದೋ ಒಬ್ಬ ವ್ಯಕ್ತಿಯಿಂದ ಪ್ರಶ್ನೆಪತ್ರಿಕೆ ಸೋರಿಕೆ ಆಗುತ್ತಿರುವುದು ತಲೆನೋವು ತಂದಿಡುತ್ತಿದೆ. ಇದೇನು ಹೊಸದಾದ ವಿಷಯವೇನಲ್ಲ. ಈಗಾಗಲೇ ಸಾಕಷ್ಟು ಬಾರಿ ಇಂತಹ ಪ್ರಕರಣಗಳು ಸುದ್ದಿ ಮಾಡಿ ಸದ್ದು ಮಾಡಿವೆ. ನಿಯಂತ್ರಣ ಮತ್ತು ಕಡಿವಾಣಕ್ಕೆ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಅಳವಡಿಸಿ, ಸುಧಾರಿತ ಕ್ರಮಗಳನ್ನು ಅನುಷ್ಠಾನಗೊಳಿಸಿದಾಗಲೂ ಪ್ರಶ್ನೆಪತ್ರಿಕೆ ಸೋರಿಕೆಯ ಭೂತ ಶಿಕ್ಷಣ ಇಲಾಖೆಯನ್ನು ಕಾಡುತ್ತಿದೆ. ಅನೇಕ ಸಾರಿ ಕಠಿಣ ಕ್ರಮಗಳನ್ನು ಕೈಗೊಂಡಿದೆ. ಇತ್ತೀಚೆಗೆ ಪೂರ್ವ ಸಿದ್ಧತಾ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆ ಕುರಿತಾಗಿ ಆರು ಜನ ಶಿಕ್ಷಕರನ್ನು ಬಂಧಿಸಲಾಗಿದೆ. ಇಲಾಖೆ ಇದನ್ನು ಗಂಭೀರವಾಗಿ ತೆಗೆದುಕೊಂಡಿರುವುದು ಒಳ್ಳೆಯ ಬೆಳವಣಿಗೆ. ಆದರೆ ಅದು ಪ್ರಯೋಜನ ಆಗಬೇಕಾದರೆ, ಒಂದು ಪ್ರಶ್ನೆಪತ್ರಿಕೆ ರಾಜ್ಯದ ಎಲ್ಲಾ ಮಕ್ಕಳ ಭವಿಷ್ಯವನ್ನು ನಿರ್ಧರಿಸುವಂತಹದ್ದು. ಕೇವಲ ಒಂದು ಶಾಲೆಯ ಮಕ್ಕಳಿಗಷ್ಟೇ ಸೀಮಿತವಾದದ್ದಲ್ಲ ಎಂಬ ಅರಿವು ಮತ್ತು ನೈತಿಕತೆ ಬಹಳ ಮುಖ್ಯವಾಗುತ್ತದೆ. ಇದು ಅರ್ಥವಾಗದೆ ಹೋದರೆ ಈ ಸೋಲು ಎಲ್ಲಾ ಕ್ರಮಗಳನ್ನು ತಲೆಕೆಳಗು ಮಾಡಿ ಬಿಡಬಹುದು. ಬೇಲಿಯೇ ಎದ್ದು ಹೊಲ ಮೇಯಬಾರದು ಎಂದು ಹೇಳಿಕೊಡುವವರು ಬೇಲಿಗಳಾಗಬೇಕೇ ವಿನಃ ಹೊಲವನ್ನು ಭಕ್ಷಿಸಿದರೆ ಹೇಗೆ? ಎಂಬ ಪ್ರಶ್ನೆ ಈಗ ಎಲ್ಲರನ್ನೂ ಕಾಡುವಂತೆ ಮಾಡುತ್ತಿದೆ. ಇಲಾಖೆ ಫಲಿತಾಂಶವನ್ನು ನಿರೀಕ್ಷಿಸುವುದು ಸಹಜ. ಕಲಿಕೆಯಲ್ಲಿ ತೊಡಗಿಸಿಕೊಳ್ಳಬೇಕೇ ವಿನಃ ಹೀಗೆ ಅಡ್ಡದಾರಿಗಳಲ್ಲಿ ನಡೆಯುವುದಲ್ಲ! ಒತ್ತಡಕ್ಕೆ ಸಿಲುಕಿ ಕೆಟ್ಟ ಪರಂಪರೆಗಳನ್ನು ಹುಟ್ಟು ಹಾಕುವುದು ಶ್ರೇಯಸ್ಕರವಲ್ಲ. ಜ್ಞಾನ ಕೇಂದ್ರಗಳಾದ ಶಾಲೆಗಳಲ್ಲಿ ಹಾಗೂ ಶಿಕ್ಷಣ ವಲಯದಲ್ಲಿ ಪ್ರಶ್ನೆಪತ್ರಿಕೆ ಸೋರಿಕೆಯಾಗುತ್ತಿರುವುದು ಅದರಲ್ಲೂ ಶಿಕ್ಷಕರಿಂದ ಆಗುತ್ತಿರುವುದು ಮತ್ತಷ್ಟು ಕಳವಳಕಾರಿಯಾದದ್ದು. ಗಂಭೀರವಾದ ಸಮಸ್ಯೆಯಾಗಿ ಚರ್ಚೆಗೊಳಗಾಗುತ್ತಿದೆ. ಈ ನಡೆ ಚಿಂತೆಗೆ ಹಚ್ಚುತ್ತಿದೆ. ಪರೀಕ್ಷೆ ವ್ಯವಸ್ಥೆಯ ಬೇರನ್ನು ಅಲಗಾಡಿಸುತ್ತಿದೆ. ಪ್ರತಿಭಾವಂತ ವಿದ್ಯಾರ್ಥಿ ಸಮುದಾಯದ ಆತ್ಮವಿಶ್ವಾಸಕ್ಕೆ ಆಘಾತದ ಪೆಟ್ಟು ನೀಡುತ್ತಿದೆ. ಯಾರೋ ಒಬ್ಬರು ಮಾಡುವುದರಿಂದ ಎಲ್ಲರಿಗೂ ತೊಂದರೆಯಾಗುತ್ತಿದೆ. ಜ್ಞಾನ ಮತ್ತು ನೈತಿಕತೆ ಎರಡು ಒಟ್ಟಾಗಿರಬೇಕು. ಅವು ಎರಡು ಬೇರೆ ಬೇರೆಯಾದರೆ ಇಂತಹ ಎಡರು ತೊಡರುಗಳನ್ನು ಎದುರಿಸಬೇಕಾಗುತ್ತದೆ. ಸೋರಿಕೆ ಎಂಬುದು ಸ್ವಾರ್ಥ ಮತ್ತು ದ್ರೋಹದ ಕೆಲಸ. ಫಲಿತಾಂಶಕ್ಕಾಗಿ ಅಕ್ರಮ ಮಾರ್ಗಗಳನ್ನು ಹಿಡಿದು ನಡೆಯುವುದು ಸರಿಯಾದದ್ದಲ್ಲ. ಮಕ್ಕಳನ್ನು ದಾರಿ ತಪ್ಪಿಸಬಾರದು. ಫಲಿತಾಂಶ ಸುಧಾರಣೆಗಾಗಿ ಇಲಾಖೆ ಹತ್ತಾರು ಉಪಕ್ರಮಗಳನ್ನು ಜಾರಿಗೆ ತಂದಿದೆ. ವಿಶೇಷ ತರಗತಿ, ಪರಿಹಾರ ಬೋಧನೆ, ದತ್ತು ಯೋಜನೆ, ಫೋನ್-ಇನ್ ಕಾರ್ಯಕ್ರಮ, ಅವೇಕಿಂಗ್ ಕಾಲ್, ಗುಂಪು ಅಧ್ಯಯನ, ರಸಪ್ರಶ್ನೆ, ಪೋಷಕರ ಸಭೆ, ಪ್ರಗತಿ ಪರಿಶೀಲನೆ ಹೀಗೆ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಅದೆಷ್ಟೋ ಶಿಕ್ಷಕರು ಅನೇಕ ಸಮಸ್ಯೆಗಳನ್ನು ಬದಿಗಿರಿಸಿಕೊಂಡು ಮಕ್ಕಳ ಉನ್ನತಿಗಾಗಿ ಶ್ರಮಿಸುತ್ತಾರೆ. ನಿರಂತರವಾಗಿ ದುಡಿಯುತ್ತಾರೆ. ಅವರ ಬೆವರಿಗೆ ಒಂದು ಬೆಲೆ ಇದೆ. ಮಕ್ಕಳ ಪರಿಶ್ರಮವೂ ಇದೆ. ಹೀಗಿರುವಾಗ ಸೋರಿಕೆ ಎಂಬುದು ಹೊಳೆಯಲ್ಲಿ ಹುಣಸೆಹಣ್ಣು ತೊಳೆದಂತಾಗುತ್ತದೆ! ಒಬ್ಬ ಶಿಕ್ಷಕನ ಪರಿಶ್ರಮವನ್ನು ಇನ್ನೊಬ್ಬ ಶಿಕ್ಷಕ ಮಾತ್ರ ಅರ್ಥ ಮಾಡಿಕೊಳ್ಳಬಲ್ಲ. ಒಂದೇ ವರ್ಗದ ಕಲಿಕಾ ಸ್ವರೂಪವುಳ್ಳ ಮಕ್ಕಳಿಲ್ಲ. ಕೌಟುಂಬಿಕ ಪರಿಸರ ಮತ್ತು ಸಾಮಾಜಿಕ ಸ್ಥಿತಿ ಭಿನ್ನ-ಭಿನ್ನವಾದವು. ಇವರಲ್ಲಿ ಕಲಿಕೆಯನ್ನು ಊರ್ಜಿತಗೊಳಿಸುವ ಪ್ರಕ್ರಿಯೇನು ಹೇಳಿದಷ್ಟು ಸುಲಭವಲ್ಲ. ಸಮನ್ವಯ ಸಾಧಿಸುವ ಪ್ರಯತ್ನದ ಹಿಂದೆ ಶಿಕ್ಷಕರ ಪಾತ್ರ ಹಿರಿದು. ವಿದ್ಯಾರ್ಥಿಗಳು ತಮ್ಮ ಭವಿಷ್ಯಕ್ಕಾಗಿ ಹಲವಾರು ಕನಸುಗಳನ್ನು ಹೊತ್ತು ಸಾಗುತ್ತಿರುವ ಅವರ ಉತ್ಸಾಹಗಳ ಮೇಲೆ ಇಂತಹ ಘಟನೆಗಳು ಅವರ ಕಲಿಕಾ ಭಂಗಕ್ಕೆ ದೊಡ್ಡ ಪೆಟ್ಟು ನೀಡಿದಂತಾಗುತ್ತದೆ. ಹಗಲು ರಾತ್ರಿ ಎನ್ನದೆ ಪೋಷಕರ ಮತ್ತು ಶಿಕ್ಷಕರ ಒತ್ತಾಸೆಗಳನ್ನು ಅರಗಿಸಿಕೊಂಡು ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳ ಶ್ರಮವನ್ನು ಗೌರವಿಸಬೇಕು. ಅವರ ಪ್ರಾಮಾಣಿಕ ಓದನ್ನು ಸಮ್ಮತಿಸಬೇಕು.
ಮುಚ್ಚುವ ಹಂತದಲ್ಲಿದ್ದ ಶಾಲೆಗಳಿಗೆ ಮಕ್ಕಳನ್ನು ಸೇರಿಸಿ ಕನ್ನಡ ಪ್ರೇಮ ಮೆರೆದ ಮುಸ್ಲಿಂ ಕುಟುಂಬಗಳು
ಹರಪನಹಳ್ಳಿ ತಾಲೂಕಿನ ರಾಮನಗರ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ದಾಖಲಾತಿ ಹೆಚ್ಚಳದಲ್ಲಿ ಸತತ ಎರಡನೇ ಬಾರಿಗೆ ಜಿಲ್ಲೆಯಲ್ಲಿ 2ನೇ ಸ್ಥಾನ ಪಡೆದುಕೊಂಡಿದೆ. ಗುಣಮಟ್ಟದ ಶಿಕ್ಷಣ, ಆಧುನಿಕ ಸೌಲಭ್ಯಗಳು ಮತ್ತು ಗ್ರಾಮಸ್ಥರ ಸಹಭಾಗಿತ್ವದಿಂದ ಖಾಸಗಿ ಶಾಲೆಗಳೊಂದಿಗೆ ಸ್ಪರ್ಧಿಸಿ ಈ ಸಾಧನೆ ಮಾಡಿದೆ.
ಸುಳ್ಯ: ಕಮಲುದ್ದೀನ್ ಕುದ್ರೋಳಿ ನಿಧನ
ಸುಳ್ಯ: ಸುಳ್ಯ ಗಾಂಧಿನಗರ ನಾವೂರು ನಿವಾಸಿ, ಕಮಲುದ್ದೀನ್ ಕುದ್ರೋಳಿ ಜನತಾ (52) ಅಲ್ಪಕಾಲದ ಅಸೌಖ್ಯದಿಂದ ಜ.18ರಂದು ಮುಂಜಾನೆ 4 ಗಂಟೆ ಸುಮಾರಿಗೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಮೂಲತಃ ಮಂಗಳೂರು ಕುದ್ರೋಳಿಯವರಾಗಿದ್ದ ಇವರು ಕಳೆದ 30 ವರ್ಷಗಳಿಂದ ಸುಳ್ಯದಲ್ಲಿ ನೆಲೆಸಿದ್ದರು. ಸುಳ್ಯ ಜನತಾ ಸ್ಟೋರ್ ನ ರಿಝ್ವಾನ್ ಅವರ ಮಾವ (ತಾಯಿಯ ಸಹೋದರ) ನಾಗಿರುವ ಕಮಲುದ್ದೀನ್, ಜನತಾ ಸ್ಟೋರ್ ನ ವ್ಯವಹಾರ ನೋಡಿಕೊಳ್ಳುತ್ತಿದ್ದರು. ಮೃತರು ಪತ್ನಿ, ಮೂವರು ಪುತ್ರಿಯರು, ಓರ್ವ ಪುತ್ರ ಸಹಿತ ಅಪಾರ ಬಂಧುಬಳಗವನ್ನು ಅಗಲಿದ್ದಾರೆ. ಮೃತರ ಅಂತ್ಯಸಂಸ್ಕಾರವು ಇಂದು(ಜ.18) ಸಂಜೆ 4 ಗಂಟೆಗೆ ಮಂಗಳೂರು ಕುದ್ರೋಳಿಯ ಮಸೀದಿ ವಠಾರದಲ್ಲಿ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಭಾರತದ ಮುಂದಿನ ಪ್ರಧಾನಿ ಯಾರು? ಪ್ರಧಾನಿ ಪಟ್ಟಕ್ಕೆ ಅಮಿತ್ ಶಾ &ಯೋಗಿ ಅವರ ಹೆಸರು ಇಲ್ಲವಂತೆ! Next Prime Minister
ಭಾರತ ಪ್ರಪಂಚದ ಶಕ್ತಿಶಾಲಿ ರಾಷ್ಟ್ರವಾಗಿ ಬೆಳೆಯುತ್ತಿದ್ದು, ವಿಶ್ವಗುರು ಎಂಬ ಸ್ಥಾನ ಪಡೆಯಲು ಕೆಲವೇ ಹೆಜ್ಜೆ ದೂರದಲ್ಲಿದೆ. ಸೈನಿಕವಾಗಿ, ಆರ್ಥಿಕವಾಗಿ ಭಾರತ ಬಲಿಷ್ಠವಾಗಿ ಬೆಳೆದಿದ್ದು, ಭಾರತವನ್ನು ಈಗ ಯಾರು ಕೂಡ ಮುಟ್ಟಲು ಆಗಲ್ಲ. ಅಮೆರಿಕ ಮತ್ತು ಚೀನಾ ದೇಶಗಳಿಗೂ ಸೆಡ್ಡು ಹೊಡೆದು ಭಾರತ ಈಗ ಅಭಿವೃದ್ಧಿಯ ಕಡೆಗೆ ದಾಪುಗಾಲು ಹಾಕುತ್ತಿದೆ. ಹಾಗಾದರೆ ಭಾರತದ ಮುಂದಿನ ಪ್ರಧಾನಿ ಯಾರು? ಖ್ಯಾತ
ಸಂವಿಧಾನ ರಚಿಸಿದ್ದು ಅಂಬೇಡ್ಕರ್ ಅಲ್ಲವೇ?
ರಚನಾ ಸಭೆಯ ನಿರ್ದೇಶನದ ಮೇಲೆ ವಿದೇಶದ ಕಾನೂನುಗಳನ್ನು ಹೆಕ್ಕಿತಂದು, ಇಲ್ಲಿನ ಕಾನೂನು ಪರಿಭಾಷೆಗೆ ಒಳಪಡಿಸಿ, ಸಂಗ್ರಹಿಸಿ ಕೊಟ್ಟ ಮಾತ್ರಕ್ಕೇ ಬಿ.ಎನ್. ರಾವ್ ಅವರನ್ನು ಭಾರತದ ಸಂವಿಧಾನ ಶಿಲ್ಪಿ ಎನ್ನುವುದಾದರೆ, ಬರ್ಮಾ ದೇಶಕ್ಕೂ ಇದೇ ಕೆಲಸ ಮಾಡಿಕೊಟ್ಟ ಅವರನ್ನು ಬರ್ಮಾದ ಸಂವಿಧಾನ ಶಿಲ್ಪಿ ಎಂದೂ ಕರೆಯಬೇಕಲ್ಲವೇ? ಭಾರತದ ರಚನಾ ಸಭೆಯ ನಿರ್ದೇಶನದಂತೆ ಕಾರ್ಯನಿರ್ವಹಿಸಿದ ನಂತರ, ಸಂವಿಧಾನ ರಚನಾ ಕಲಾಪದಿಂದ ಅವರು ಸಂಪೂರ್ಣ ದೂರ ಉಳಿದರು ಎಂಬುದಕ್ಕೆ ಅದೇ ಅವಧಿಯಲ್ಲಿ ಅವರು ಬರ್ಮಾ ಸಂವಿಧಾನ ರಚನೆ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದೇ ಸಾಕ್ಷಿ. ರಾವ್ ಅವರು ಭಾರತದ ಸಂವಿಧಾನ ರಚನೆಯಲ್ಲಿ ಅಷ್ಟು ಆಳವಾಗಿ, ಗಂಭೀರವಾಗಿ ತಲ್ಲೀನರಾಗಿದ್ದೇ ಆಗಿದ್ದಲ್ಲಿ, ಅದರ ಕಾರ್ಯ ಮುಗಿಯುವುದಕ್ಕೂ ಮೊದಲೇ ಮತ್ತೊಂದು ದೇಶದ ಸಂವಿಧಾನ ರಚನೆಯಲ್ಲಿ ಹೇಗೆ ಭಾಗವಹಿಸುತ್ತಿದ್ದರು? ಭಾಗ - 1 ಸಂವಿಧಾನ ಮತ್ತು ಅಂಬೇಡ್ಕರ್, ಭಾರತದ ಮನುವಾದಿಗಳ ಪಾಲಿಗೆ ಇವತ್ತಿಗೂ ಜೀರ್ಣಿಸಿಕೊಳ್ಳಲು ಆಗದಿರುವ ಎರಡು ಹೆಸರುಗಳಿವು. ಹಾಗಾಗಿ ಆಗಾಗ ಇವೆರಡರ ಮೇಲೆ ದಾಳಿಗಳನ್ನು ನಡೆಸುತ್ತಾ ಬರುತ್ತಿದ್ದಾರೆ. ಅಂಬೇಡ್ಕರ್ರನ್ನು ಬ್ರಿಟಿಷರ ಗುಲಾಮ ಎಂದು ಲೇವಡಿ ಮಾಡಿದರು; ಅವರು ರಚಿಸಿದ ಸಂವಿಧಾನದಲ್ಲಿ ನಮ್ಮ ಭಾರತೀಯತೆಯೇ ಇಲ್ಲವೆಂದು ಸಂಪಾದಕೀಯ ಬರೆದರು. ತಮ್ಮ ಕೇಡನ್ನೆಲ್ಲ ಅಂಬೇಡ್ಕರ್ ಪ್ರತಿಮೆಗಳ ಮೇಲೆ ತೀರಿಸಿಕೊಂಡರು. ಅಂಬೇಡ್ಕರ್ ರಚಿಸಿದ ಸಂವಿಧಾನವನ್ನು ಬದಲಿಸುವುದೇ ನಮ್ಮ ಪರಮಗುರಿಯೆಂದು ಘೋಷಿಸಿದರು. ಈಗ, ಸಂವಿಧಾನವನ್ನು ರಚಿಸಿದ್ದು ಅಂಬೇಡ್ಕರ್ ಅಲ್ಲವೇ ಅಲ್ಲ ಎನ್ನುವ ಕುತರ್ಕವನ್ನು ಮುನ್ನೆಲೆಗೆ ತರುತ್ತಿದ್ದಾರೆ. ಅದಕ್ಕಾಗಿ ಬಿ.ಎನ್. ರಾವ್ ಎಂಬ ಹೆಸರನ್ನು ಬಳಸಿಕೊಳ್ಳುತ್ತಿದ್ದಾರೆ. ನಿಜವಾದ ಸಂವಿಧಾನ ಶಿಲ್ಪಿ ಬೆನಗಲ್ ನರಸಿಂಗರಾವ್ ಅವರೇ ಹೊರತು ಅಂಬೇಡ್ಕರ್ ಅಲ್ಲ ಎಂದು ಪುಕಾರೆಬ್ಬಿಸುತ್ತಿದ್ದಾರೆ. ಇದು ಸತ್ಯವೇ? ಯಾರು ಈ ಬಿ.ಎನ್. ರಾವ್? ಸಂವಿಧಾನ ರಚನೆಯಲ್ಲಿ ಅವರ ಪಾತ್ರವೇನು? ಭಾರತದ ಸಂವಿಧಾನ ನಿಜಕ್ಕೂ ರಚನೆಯಾದದ್ದು ಹೇಗೆ? ನೂರಾರು ಜನರ ಕೊಡುಗೆಗಳಲ್ಲಿ ರೂಪುಗೊಂಡರೂ ಅಂಬೇಡ್ಕರ್ ಅವರನ್ನೇ ಯಾಕೆ ನಾವು ಸಂವಿಧಾನಶಿಲ್ಪಿ ಎಂದು ಆದರಿಸುತ್ತೇವೆ? ಈ ಪ್ರಶ್ನೆಗಳು ನಮಗೆ ಇತಿಹಾಸವನ್ನು ವಸ್ತುನಿಷ್ಠವಾಗಿ ತೆರೆದಿಡುತ್ತಾ ಸಾಗುತ್ತವೆ. ಮೊದಲಿಗೆ, ಭಾರತದ ಸಂವಿಧಾನ ರಚನೆಯಾದದ್ದು ಹೇಗೆ? ಅನ್ನೋದನ್ನು ನೋಡೋಣ. ಬಹುಶಃ ಈ ಉತ್ತರದಲ್ಲಿ, ಉಳಿದೆಲ್ಲ ಪ್ರಶ್ನೆಗಳಿಗೆ ಉತ್ತರಗಳು ಅನಾವರಣಗೊಳ್ಳುತ್ತವೆ. ಬಾಹ್ಯಶಕ್ತಿಗಳ ಹಸ್ತಕ್ಷೇಪವಿಲ್ಲದೆ ಭಾರತ ತನ್ನದೇ ಆದ ಸ್ವತಂತ್ರ ಸಂವಿಧಾನವನ್ನು ರಚಿಸಿಕೊಳ್ಳಬೇಕು ಎಂಬ ಪರಿಕಲ್ಪನೆಯನ್ನು ಮೊದಲ ಬಾರಿ ಪ್ರಸ್ತಾಪಿಸಿದ್ದು ಕಮ್ಯುನಿಸ್ಟ್ ನಾಯಕರಾಗಿದ್ದ ಎಂ.ಎನ್. ರಾಯ್, 1934ರಲ್ಲಿ. ಮರುವರ್ಷವೇ ಕಾಂಗ್ರೆಸ್ ಪಕ್ಷ ಅದನ್ನು ತನ್ನ ಅಧಿಕೃತ ಒತ್ತಾಯವಾಗಿ ಬ್ರಿಟಿಷರ ಮುಂದಿಡುತ್ತದೆ. 1938ರಲ್ಲಿ ನೆಹರೂ ಅವರು, ‘‘ವಯಸ್ಕ ಮತದಾರರಿಂದ ಚುನಾಯಿತವಾದ ಅಸೆಂಬ್ಲಿಯ ಮೂಲಕ ಭಾರತವು ತನ್ನ ಸ್ವಂತ ಸಂವಿಧಾನ ರಚಿಸಿಕೊಳ್ಳಲು ಅವಕಾಶ ನೀಡಬೇಕು. ಇದರಲ್ಲಿ ಬಾಹ್ಯಶಕ್ತಿಗಳ ಹಸ್ತಕ್ಷೇಪವಿರಬಾರದು’’ ಎಂದು ಘೋಷಿಸುತ್ತಾರೆ. ಆರಂಭದಲ್ಲಿ ಇದಕ್ಕೆ ಬ್ರಿಟಿಷರು ಒಪ್ಪುವುದಿಲ್ಲವಾದರೂ ಎರಡನೇ ವಿಶ್ವಯುದ್ಧದಲ್ಲಿ ಆರ್ಥಿಕವಾಗಿ ಹೈರಾಣಾದ ಇಂಗ್ಲೆಂಡ್ ಆಧಿಪತ್ಯಕ್ಕೆ ಒಪ್ಪದೆ ದಾರಿ ಉಳಿಯುವುದಿಲ್ಲ. ಸಮ್ಮತಿಸುತ್ತದೆ. 1946ರಲ್ಲಿ ಭಾರತಕ್ಕೆ ಬಂದ ಕ್ಯಾಬಿನೆಟ್ ಮಿಷನ್ನ ಮುಖ್ಯ ಉದ್ದೇಶವೇ ಸಂವಿಧಾನ ರಚನಾ ಸಭೆಗೆ ಪೂರಕ ವಾತಾವರಣ ಸೃಷ್ಟಿಸುವುದು. 1946ರ ಜುಲೈ-ಆಗಸ್ಟ್ನಲ್ಲಿ ನಡೆದ ಪ್ರಾಂತೀಯ ಚುನಾವಣೆಗಳ ಆಧಾರದಲ್ಲಿ ಸಂವಿಧಾನ ರಚನಾ ಸಭೆಯು ಅನುಷ್ಠಾನಕ್ಕೆ ಬರುತ್ತದೆ ಮತ್ತು ಡಿಸೆಂಬರ್ 9, 1946ರಲ್ಲಿ ಮೊತ್ತಮೊದಲ ಬಾರಿಗೆ ಸಭೆ ಸೇರುತ್ತದೆ. ಸಭೆಯ ಅತ್ಯಂತ ಹಿರಿಯ ಸದಸ್ಯರಾಗಿದ್ದ ಡಾ. ಸಚ್ಚಿದಾನಂದ ಸಿನ್ಹಾ ಅವರು ಹಂಗಾಮಿ ಅಧ್ಯಕ್ಷರಾಗಿ ಆಯ್ಕೆಯಾಗುತ್ತಾರಾದರೂ, ನಂತರ ಡಾ. ಬಾಬು ರಾಜೇಂದ್ರ ಪ್ರಸಾದ್ ಅವರು ಪೂರ್ಣಾವಧಿ ಅಧ್ಯಕ್ಷರಾಗಿ ನೇಮಕಗೊಳ್ಳುತ್ತಾರೆ. ಅಂದರೆ ಇವತ್ತಿನ ಪಾರ್ಲಿಮೆಂಟ್ ಮತ್ತು ಅದಕ್ಕೊಬ್ಬರು ಸ್ಪೀಕರ್ ನಿಗದಿಯಾದಂತೆ. ನಿಜವಾದ ಸವಾಲು ಎದುರಾಗುವುದು ಈಗ. ಬ್ರಿಟಿಷರ ಹಸ್ತಕ್ಷೇಪವಿಲ್ಲದೆ ಸಂವಿಧಾನವನ್ನು ರಚಿಸಿಕೊಳ್ಳುವುದು ಹೇಗೆ? ಆಗ ನಮ್ಮ ರಾಷ್ಟ್ರೀಯ ನಾಯಕರು ಇಡೀ ಪ್ರಕ್ರಿಯೆಯನ್ನು 6 ಹಂತಗಳಾಗಿ ವಿಂಗಡಿಸಿಕೊಳ್ಳುತ್ತಾರೆ. ಮೊದಲನೆಯ ಹಂತ: ಶಿಫಾರಸು ವರದಿ ಸಲ್ಲಿಕೆ ವಿವಿಧ ದೇಶಗಳಲ್ಲಿನ ಆಡಳಿತ ಚೌಕಟ್ಟುಗಳ ಅಧ್ಯಯನದ ನಂತರ ಭಾರತದಲ್ಲಿ ಸರಕಾರದ ಸ್ವರೂಪ ಹೇಗಿರಬೇಕು, ಮೂಲಭೂತ ಹಕ್ಕುಗಳ ವ್ಯಾಪ್ತಿ ಏನು ಎಂಬಂತಹ ಸಂಗತಿಗಳನ್ನು ಶಿಫಾರಸು ಮಾಡಲು ಪ್ರತ್ಯೇಕ ಸಮಿತಿಗಳನ್ನು ರಚಿಸಲಾಯಿತು. ನೆಹರೂ, ಸರ್ದಾರ್ ಪಟೇಲ್ ಮೊದಲಾದವರು ಈ ಸಮಿತಿಗಳ ಅಧ್ಯಕ್ಷರಾಗಿದ್ದರು. ಎರಡನೆಯ ಹಂತ: ಸಭೆಯಲ್ಲಿ ಚರ್ಚೆ ಈ ಶಿಫಾರಸುಗಳನ್ನು ಆಧರಿಸಿ, ರಚನಾ ಸಭೆಯಲ್ಲಿ ಚರ್ಚೆ ನಡೆದು, ನಮ್ಮ ದೇಶದ ಸಂವಿಧಾನದ ಮೂಲ-ಅಡಿಪಾಯ ಹೇಗಿರಬೇಕು ಎನ್ನುವುದನ್ನು ಅಂಗೀಕರಿಸಲಾಗುತ್ತದೆ. ಮೂರನೆಯ ಹಂತ: ತಾಂತ್ರಿಕ ನಿರೂಪಣೆ ಸಂವಿಧಾನ ರಚನಾ ಸಭೆ ನಿರ್ಧರಿಸಿದ ಅಡಿಪಾಯದ ಆಧಾರದ ಮೇಲೆ ವಿವಿಧ ದೇಶಗಳ ಮತ್ತು ಜಾಗತಿಕ ನ್ಯಾಯವ್ಯವಸ್ಥೆಯ ಚೌಕಟ್ಟಿಗೆ ಒಳಪಟ್ಟಂತೆ ಕಾನೂನು ಅವಕಾಶಗಳನ್ನು ಹೆಕ್ಕಿತಂದು, ಭಾರತದ ಈ ಆಶಯಗಳಿಗೆ ಕಾನೂನು ಪರಿಭಾಷೆಯ ಚೌಕಟ್ಟು ನೀಡಲಾಗುತ್ತದೆ. ನಾಲ್ಕನೆಯ ಹಂತ: ಪರಾಮರ್ಶೆ ಭಾರತದ ಆಶಯಗಳಿಗೆ ಪೂರಕವಾಗಿ ಹೆಕ್ಕಿತಂದು ನಿರೂಪಿಸಲಾದ ಕಾನೂನು ಪರಿಭಾಷೆಗಳನ್ನು ಅಧ್ಯಯನ ಮಾಡಿ, ಭಾರತದ ಸಾಮಾಜಿಕ, ರಾಜಕೀಯ ಅಗತ್ಯಕ್ಕೆ ತಕ್ಕಂತೆ ಆ ಪರಿಭಾಷೆಗಳನ್ನು ತಿದ್ದುಪಡಿಯ ಮೂಲಕ ಮರುರೂಪಿಸುವುದು ಮತ್ತು ಅದನ್ನು ರಚನಾ ಸಭೆಯಲ್ಲಿ ಚರ್ಚಿಸಿ, ಆ ನಿಯಮಗಳ ಅಗತ್ಯಗಳನ್ನು ಸದಸ್ಯರಿಗೆ ಮನವರಿಕೆ ಮಾಡಿಕೊಡುವುದು. ಚರ್ಚೆಯ ನಂತರ ಅಗತ್ಯವಿದ್ದರೆ ಸೂಕ್ಷ್ಮ ಮರುನಿರೂಪಣೆಗೆ ಒಳಪಡಿಸುವುದು. ಐದನೆಯ ಹಂತ: ಸಾರ್ವಜನಿಕ ಆಕ್ಷೇಪಗಳ ಸ್ವೀಕಾರ ಸಾರ್ವಜನಿಕ ಪತ್ರಿಕಾ ಪ್ರಕಟಣೆಗಳ ಮೂಲಕ ಅನುಮೋದಿತ ಕರಡು ಪ್ರತಿಯನ್ನು ಜನರ ಅವಗಾಹನೆಗೆ ಮುಕ್ತವಾಗಿಸಿ, ಆಕ್ಷೇಪಗಳನ್ನು ಸ್ವೀಕರಿಸುವುದು. ಆರನೆಯ ಹಂತ: ಅಂತಿಮ ಪ್ರಸ್ತುತಿ - ಸಾರ್ವಜನಿಕ ಅವಗಾಹನೆಗಳನ್ನೂ ಪರಿಗಣಿಸಿ, ಸೂಕ್ತ ಮಾರ್ಪಾಟುಗಳೊಂದಿಗೆ ಅಂತಿಮ ಕರಡು ಪ್ರತಿಯನ್ನು ಅನುಮೋದಿಸುವುದು. ಈ ಆರೂ ಪ್ರಕ್ರಿಯೆಯಲ್ಲಿ ಸಂವಿಧಾನ ರಚನಾ ಸಭೆಯ ಚುನಾಯಿತ ಮತ್ತು ನಾಮನಿರ್ದೇಶಿತ ಸದಸ್ಯರುಗಳು ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಭಾಗವಹಿಸಿದ್ದರು. ವಿವಿಧ ಸಮಿತಿಗಳ ಮುಖ್ಯಸ್ಥರಾಗಿ, ಸದಸ್ಯರಾಗಿ, ಪರಾಮರ್ಶನ ಮಾರ್ಗದರ್ಶಕರಾಗಿ ಹಾಗೂ ಸಭೆಯಲ್ಲಿ ನಡೆದ ನಿಷ್ಕರ್ಷ ಚರ್ಚೆಯಲ್ಲಿ ಭಾಗಿಯಾಗುವ ಮೂಲಕ ಅವರೆಲ್ಲ ಪಾಲ್ಗೊಳ್ಳುತ್ತಾರೆ. ಇಂತಹ ಸುಮಾರು 8 ಪ್ರಧಾನ ಸಮಿತಿ ಹಾಗೂ 14 ಉಪಸಮಿತಿಗಳನ್ನು ರಚಿಸಲಾಗಿತ್ತು. ಈ ಸಮಿತಿಗಳು ಮತ್ತು ರಚನಾ ಸಭೆಯ ಕಾರ್ಯಕಲಾಪಗಳನ್ನು ಸುಗಮಗೊಳಿಸಲು ಹಾಗೂ ಸಹಕರಿಸಲು Constituent Assembly Secretariat (CAS) ಎಂಬ ವಿಶೇಷ ಅಧಿಕಾರಿಗಳ ಸಚಿವಾಲಯವನ್ನು ಬ್ರಿಟಿಷ್ ವೈಸ್ರಾಯ್ ಲಾರ್ಡ್ ವೇವೆಲ್ ಸ್ಥಾಪಿಸಿದ್ದರು. ಬ್ರಿಟಿಷ್ ಸರಕಾರದ ಉನ್ನತ ಸಿವಿಲ್ ಸರ್ವಿಸ್ ಹುದ್ದೆಯಲ್ಲಿ ಕೆಲಸ ಮಾಡುತ್ತಿದ್ದ ಅಧಿಕಾರಿಗಳನ್ನು ಇಲ್ಲಿಗೆ ನಿಯುಕ್ತಿ ಮಾಡಲಾಯಿತು. ಅಂತಹುದೇ ಒಂದು ಹೊಣೆಹೊತ್ತು ಲಾರ್ಡ್ ವೇವಲ್ರಿಂದ ನೇಮಕವಾದವರು ಬಿ.ಎನ್. ರಾವ್. ಅವರೊಬ್ಬರು ಮಾತ್ರವಲ್ಲದೆ, ಎಸ್.ಎನ್. ಮುಖರ್ಜಿ, ಎಚ್.ವಿ.ಆರ್ ಅಯ್ಯಂಗಾರ್, ಕೆ.ವಿ. ಪದ್ಮನಾಭನ್, ಪಿ ಎಸ್ ಸುಬ್ರಮಣಿಯನ್, ಎ.ಎ. ಅಬಿದಿ, ಬ್ರಿಜ್ಭೂಷಣ್ ತರಹದ ಹಿರಿಯ ಸೆಕ್ರೆಟರೇಟ್ ಅಧಿಕಾರಿಗಳಿಗೆ ಇಂತಹ ಹೊಣೆಯನ್ನು ಹೊರಿಸಲಾಗಿತ್ತು. ಅವರೆಲ್ಲರ ಪೈಕಿ ಬಿ.ಎನ್. ರಾವ್ ಅವರಿಗೆ ಇದ್ದ ಜವಾಬ್ದಾರಿಯೆಂದರೆ, ಭಾರತದ ಉದ್ದೇಶಿತ ಸಂವಿಧಾನ ಮೂಲ-ಅಡಿಪಾಯಕ್ಕೆ ಅನುಗುಣವಾಗುವಂತೆ ವಿದೇಶಿ ಸಂವಿಧಾನಗಳ ಕಾನೂನು ಅವಕಾಶಗಳನ್ನು ಹೆಕ್ಕಿತಂದು, ಅವುಗಳನ್ನು ಒಂದುಕಡೆ ಸಂಗ್ರಹಿಸಿ ಕರಡು ರಚನಾ ಸಮಿತಿಯ ಮುಂದಿಡುವುದು. ಅವುಗಳ ಪೈಕಿ ಯಾವುದು ಉಪಯುಕ್ತ, ಯಾವುದು ಅನಗತ್ಯ ಅಥವಾ ಯಾವುದನ್ನು ಭಾರತದ ಅಗತ್ಯಕ್ಕೆ ತಕ್ಕಂತೆ ಹೇಗೆಲ್ಲಾ ತಿದ್ದುಪಡಿ ಮಾಡಿ ಮರುರೂಪಿಸಿಕೊಳ್ಳಬೇಕು, ಯಾವುದನ್ನು ವಿಸ್ತರಿಸಿ ಅಳವಡಿಸಬೇಕು ಎಂಬುದನ್ನು ನಿರ್ಧರಿಸುವುದು ಕರಡು ರಚನಾ ಸಮಿತಿಯ ಹೊಣೆ. ಈ ಕರಡು ರಚನಾ ಸಮಿತಿಗೆ ಅಧ್ಯಕ್ಷರಾಗಿದ್ದವರು ಅಂಬೇಡ್ಕರ್. ಅಂದರೆ, ಈ ಆರು ಪ್ರಕ್ರಿಯೆಗಳ ಪೈಕಿ ಬಿ.ಎನ್. ರಾವ್ ಪಾತ್ರ ಸೀಮಿತಗೊಳ್ಳುವುದು ಮೂರನೇ ಹಂತವಾದ ಕಾನೂನಾತ್ಮಕ ತಾಂತ್ರಿಕ ನಿರೂಪಣೆಗೆ ಮಾತ್ರ. ಒಂದು ಮತ್ತು ಎರಡನೇ ಹಂತದಲ್ಲಿ ಅವರಿಗೆ ಯಾವುದೇ ಪಾತ್ರವಿರಲಿಲ್ಲ. ಮೂರನೇ ಹಂತದಿಂದಾಚೆಗೆ ಅವರಿಗೆ ಸಂವಿಧಾನ ರಚನಾ ಸಭೆಯ ಚರ್ಚೆಯಲ್ಲಿ ಭಾಗವಹಿಸಲೂ ಅವಕಾಶವಿರಲಿಲ್ಲ, ಚರ್ಚೆಯನ್ನು ಆಧರಿಸಿ ಕಾನೂನುಗಳನ್ನು ಮರುನಿರೂಪಿಸುವ ಕಾರ್ಯದಲ್ಲೂ ಅವಕಾಶವಿರಲಿಲ್ಲ. Constituent Assembly Secretariat (CAS)ನ ಭಾಗವಾಗಿ ಬೇರೆಲ್ಲ ಹಿರಿಯ ಅಧಿಕಾರಿಗಳು ತಮ್ಮ ಕೆಲಸವನ್ನು ಹೇಗೆ ನಿಭಾಯಿಸಿದರೋ, ಬಿ.ಎನ್. ರಾವ್ ಕೂಡಾ ಹಾಗೇ ನಿಭಾಯಿಸಿದರು. ಬ್ರಿಟಿಷರು Government of India Act 1935 ಅನ್ನು ರೂಪಿಸಿ, ಅನುಷ್ಠಾನಕ್ಕೆ ತರುವಲ್ಲಿ ಬಿ.ಎನ್. ರಾವ್ ಅವರ ಕಾನೂನು ಅನುಭವವನ್ನು ಪರಿಗಣಿಸಿ ಮತ್ತು 1946ರ ಆರಂಭದಲ್ಲಿ ಅವರು ಬರೆದಿದ್ದ ‘‘Outline of a New Constitution’ ಎಂಬ ಪ್ರಬಂಧದಿಂದ ಪ್ರಭಾವಿತರಾಗಿ ಲಾರ್ಡ್ ವೇವಲ್ ಅವರನ್ನು ನೇಮಕ ಮಾಡಿದ್ದ. ಬೇರೆಲ್ಲ ಅಧಿಕಾರಿಗಳಿಗಿಂತ ಬಿ.ಎನ್. ರಾವ್ ಭಿನ್ನವಾಗುವುದು ಕೇವಲ ಒಂದು ಕಾರಣಕ್ಕೆ ಮಾತ್ರ. ಏನೆಂದರೆ, ತಮ್ಮ ಈ ಕಾಯಕವನ್ನು ಅವರು ಸರಕಾರದಿಂದ ವೇತನ ಪಡೆಯದೆ ದೇಶದ ಸೇವೆಯ ಭಾಗವೆಂದು ಮಾಡುತ್ತಿದ್ದೇನೆ ಎಂದಿದ್ದರು. ಇಂಗ್ಲೆಂಡ್ನಲ್ಲಿ ಅಧ್ಯಯನ ಮಾಡಿ ಬಂದಿದ್ದ ರಾವ್ ಅವರಿಗೆ ಜಸ್ಟೀಸ್ ಫೆಲಿಕ್ಸ್ ಫ್ರಾಂಕ್ಫರ್ಟರ್ (ಅಮೆರಿಕ), ಜಸ್ಟೀಸ್ ಲರ್ನಡ್ ಹ್ಯಾಂಡ್, ಸರ್ ಸಿಸಿಲ್ ಕಾರ್ (ಇಂಗ್ಲೆಂಡ್) ತರಹದ ವಿದೇಶಿ ಕಾನೂನು ಕಾನೂನು ತಜ್ಞರ ಜೊತೆ ನಿಕಟ ಸಂಪರ್ಕವಿತ್ತು. ಅದರಿಂದಾಗಿ ವಿದೇಶಿ ಸಂವಿಧಾನಗಳ ಕಾನೂನು ಅವಕಾಶಗಳನ್ನು ಸಂಗ್ರಹಿಸಲು ಅನುಕೂಲವಾಗಲಿದೆ ಎಂಬ ದೃಷ್ಟಿಯಿಂದ ಅವರನ್ನು ಆ ಕೆಲಸಕ್ಕೆ ನೇಮಕ ಮಾಡಲಾಗಿತ್ತು. ಕೇವಲ ಭಾರತ ಮಾತ್ರವಲ್ಲ, ಬರ್ಮಾ (ಇಂದಿನ ಮ್ಯಾನ್ಮಾರ್) ದೇಶದ ಸಂವಿಧಾನ ರಚನೆಯಲ್ಲೂ ಬಿ.ಎನ್. ರಾವ್ ಇಂತಹದ್ದೇ ಪಾತ್ರ ನಿಭಾಯಿಸಿದ್ದರು. ಆಧುನಿಕ ಬರ್ಮಾ ನಿರ್ಮಾತೃ ಎಂದು ಕರೆಯಲಾಗುವ ಬೋಗ್ಯೋಕೆ ಆಂಗ್ ಸಾನ್ ಅವರ ಕೋರಿಕೆಯ ಮೇಲೆ ಅಲ್ಲಿನ ಸಂವಿಧಾನ ರಚನಾ ಸಲಹೆಕಾರನಾದ ಚಾನ್ ಹ್ಟೂನ್ ಅವರ ಜೊತೆಗೂಡಿ ವಿವಿಧ ದೇಶಗಳ ಸಂವಿಧಾನಗಳಿಂದ ಬರ್ಮಾಕ್ಕೆ ಬೇಕಾದ ಅಗತ್ಯ ಕಾನೂನು ಅವಕಾಶಗಳನ್ನು ಹೆಕ್ಕಿ ತೆಗೆದುಕೊಟ್ಟಿದ್ದರು. ಆ ಕಾನೂನು ಅವಕಾಶಗಳನ್ನು ಆಧಾರವಾಗಿಟ್ಟುಕೊಂಡು ಬರ್ಮಾ ರಚನಾ ಸಭೆ ವಿಸ್ತೃತ ಚರ್ಚೆ ನಡೆಸಿ ತನ್ನ ಸಂವಿಧಾನ ರಚಿಸಿಕೊಂಡು ಸೆಪ್ಟಂಬರ್ 24, 1947ರಲ್ಲಿ ಅಂಗೀಕರಿಸಿಕೊಂಡಿತು. ರಚನಾ ಸಭೆಯ ನಿರ್ದೇಶನದ ಮೇಲೆ ವಿದೇಶದ ಕಾನೂನುಗಳನ್ನು ಹೆಕ್ಕಿತಂದು, ಇಲ್ಲಿನ ಕಾನೂನು ಪರಿಭಾಷೆಗೆ ಒಳಪಡಿಸಿ, ಸಂಗ್ರಹಿಸಿ ಕೊಟ್ಟ ಮಾತ್ರಕ್ಕೇ ಬಿ.ಎನ್. ರಾವ್ ಅವರನ್ನು ಭಾರತದ ಸಂವಿಧಾನ ಶಿಲ್ಪಿ ಎನ್ನುವುದಾದರೆ, ಬರ್ಮಾ ದೇಶಕ್ಕೂ ಇದೇ ಕೆಲಸ ಮಾಡಿಕೊಟ್ಟ ಅವರನ್ನು ಬರ್ಮಾದ ಸಂವಿಧಾನ ಶಿಲ್ಪಿ ಎಂದೂ ಕರೆಯಬೇಕಲ್ಲವೇ? ಭಾರತದ ರಚನಾ ಸಭೆಯ ನಿರ್ದೇಶನದಂತೆ ಕಾರ್ಯನಿರ್ವಹಿಸಿದ ನಂತರ, ಸಂವಿಧಾನ ರಚನಾ ಕಲಾಪದಿಂದ ಅವರು ಸಂಪೂರ್ಣ ದೂರ ಉಳಿದರು ಎಂಬುದಕ್ಕೆ ಅದೇ ಅವಧಿಯಲ್ಲಿ ಅವರು ಬರ್ಮಾ ಸಂವಿಧಾನ ರಚನೆ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದೇ ಸಾಕ್ಷಿ. ರಾವ್ ಅವರು ಭಾರತದ ಸಂವಿಧಾನ ರಚನೆಯಲ್ಲಿ ಅಷ್ಟು ಆಳವಾಗಿ, ಗಂಭೀರವಾಗಿ ತಲ್ಲೀನರಾಗಿದ್ದೇ ಆಗಿದ್ದಲ್ಲಿ, ಅದರ ಕಾರ್ಯ ಮುಗಿಯುವುದಕ್ಕೂ ಮೊದಲೇ ಮತ್ತೊಂದು ದೇಶದ ಸಂವಿಧಾನ ರಚನೆಯಲ್ಲಿ ಹೇಗೆ ಭಾಗವಹಿಸುತ್ತಿದ್ದರು? ಆಂಗ್ಲರ ಕೋರಿಕೆಯ ಮೇರೆಗೆ ಅವರೊಬ್ಬ Professional legal expert ಆಗಿ ಕೆಲಸ ಮಾಡುತ್ತಿದ್ದರೇ ಹೊರತು, ಒಂದು ದೇಶದ ಸಂವಿಧಾನವನ್ನು ರಚಿಸಲು ಬೇಕಾಗುವ ಸಮಾಜಶಾಸ್ತ್ರೀಯ ಅಧ್ಯಯನ, ರಾಜಕೀಯ ಬದ್ಧತೆ ಅವರಿಗಿರಲಿಲ್ಲ ಅಥವಾ ಅವರಿಗೆ ಬೇಕಾಗಿರಲಿಲ್ಲ ಎಂಬುದು ಇಲ್ಲಿ ಸಾಬೀತಾಗುತ್ತದೆ.
Maharashtra| ಮಾಲೇಗಾಂವ್ನಲ್ಲಿ ʼಇಸ್ಲಾಂ ಪಕ್ಷʼಕ್ಕೆ ಮೇಯರ್ ಪಟ್ಟ ಸಾಧ್ಯತೆ
ಮುಂಬೈ: ಮಹಾರಾಷ್ಟ್ರದಾದ್ಯಂತ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿಯ ಅಲೆ ಅಪ್ಪಳಿಸಿದ್ದರೂ, ಮುಸ್ಲಿಂ ಬಾಹುಳ್ಯದ ನಾಶಿಕ್ ಜಿಲ್ಲೆಯ ಮಾಲೇಗಾಂವ್ ನಗರ ಪಾಲಿಕೆಯಲ್ಲಿ ಇಸ್ಲಾಂ ಪಕ್ಷ ಎಂದೇ ಜನಪ್ರಿಯವಾಗಿರುವ ಇಂಡಿಯನ್ ಸೆಕ್ಯುಲರ್ ಲಾರ್ಜೆಸ್ಟ್ ಅಸೆಂಬ್ಲಿ ಆಫ್ ಮಹಾರಾಷ್ಟ್ರ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದು, ಇಸ್ಲಾಂ ಪಕ್ಷದ ಅಭ್ಯರ್ಥಿಯು ಮೇಯರ್ ಆಗುವ ಸಾಧ್ಯತೆ ಇದೆ ಎಂದು deccanherald.com ವರದಿ ಮಾಡಿದೆ. 84 ಸದಸ್ಯ ಬಲದ ಮಾಲೇಗಾಂವ್ ನಗರ ಪಾಲಿಕೆಯಲ್ಲಿ ಇಸ್ಲಾಂ ಪಕ್ಷದ 35 ಕಾರ್ಪೊರೇಟರ್ ಗಳು ಚುನಾಯಿತರಾಗಿದ್ದು, ಅಸದುದ್ದೀನ್ ಉವೈಸಿ ನೇತೃತ್ವದ ಎಐಎಂಐಎಂ ಪಕ್ಷ 21 ವಾರ್ಡ್ ಗಳಲ್ಲಿ ಗೆಲುವು ಸಾಧಿಸಿದೆ. ಉಳಿದಂತೆ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ 18, ಸಮಾಜವಾದಿ ಪಕ್ಷ 5, ಕಾಂಗ್ರೆಸ್ 3 ವಾರ್ಡ್ ಗಳಲ್ಲಿ ಗೆಲುವು ಸಾಧಿಸಿದ್ದು, ಬಿಜೆಪಿ ಕೇವಲ ಎರಡು ವಾರ್ಡ್ ಗಳಲ್ಲಿ ಮಾತ್ರ ಗೆಲುವು ಸಾಧಿಸಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಇಸ್ಲಾಂ ಪಕ್ಷದ ಮುಖ್ಯಸ್ಥ ಶೇಖ್ ಆಸಿಫ್ ಶೇಖ್ ರಶೀದ್, “ಇದು ಸಂಪ್ರದಾಯ ಮತ್ತು ಜನರು ನೀಡಿರುವ ತೀರ್ಪಿನ ವಿಷಯವಾಗಿದೆ. ನಗರದ ಜನತೆ ನಮಗೆ ದೊಡ್ಡ ಜನಮತವನ್ನು ನೀಡಿದ್ದಾರೆ. ನಾವು 15 ಸ್ಥಾನಗಳಿಂದ ಮುಂದಿದ್ದು, ಜಾತ್ಯತೀತ ರಂಗಕ್ಕಿಂತ 20 ಸ್ಥಾನಗಳಲ್ಲಿ ಮುಂದಿದ್ದೇವೆ” ಎಂದು ಹೇಳಿದ್ದಾರೆ. “ನಾವು ಅತಿ ದೊಡ್ಡ ಪಕ್ಷವಾಗಿರುವುದರಿಂದ, ನಮ್ಮ ಪಕ್ಷಕ್ಕೆ ಮೇಯರ್ ಸ್ಥಾನ ಬೇಕು ಎಂದು ನಾನು ಪ್ರಾಮಾಣಿಕವಾಗಿ ಬಯಸುತ್ತೇನೆ. ಆದರೆ, ನಗರದ ಅಭಿವೃದ್ಧಿ, ಪ್ರಗತಿ ಹಾಗೂ ಏಕತೆಗಾಗಿ ಅಗತ್ಯ ಬಿದ್ದರೆ, ಒಟ್ಟಾಗಿ ಕುಳಿತು ಸಂಧಾನ ಮಾಡಿಕೊಳ್ಳಲು ಸಿದ್ಧರಿದ್ದೇವೆ. ಮಾತುಕತೆಗೆ ಬಾಗಿಲು ತೆರೆದಿದ್ದು, ಸಮಾನ ಮನಸ್ಕ ಪಕ್ಷಗಳು ಹಾಗೂ ಜನರು ನಮ್ಮ ಮೇಯರ್ ಆಕಾಂಕ್ಷೆಯನ್ನು ಬೆಂಬಲಿಸುತ್ತಾರೆ ಎಂದು ಭಾವಿಸಿದ್ದೇನೆ ಎಂದು ಆಶಾವಾದ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ ಸರ್ಕಾರದ 1000 ದಿನ ಪೂರೈಕೆ ಸಾಧನಾ ಸಮಾವೇಶ; ಫೆ. 13 ಕ್ಕೆ ಬೃಹತ್ ಸಮಾವೇಶ
ರಾಜ್ಯ ಕಾಂಗ್ರೆಸ್ ಸರ್ಕಾರದ 1000 ದಿನಗಳ ಸಾಧನೆ ಹಿನ್ನೆಲೆಯಲ್ಲಿ ಹಾವೇರಿಯಲ್ಲಿ ಫೆ.13ರಂದು ಬೃಹತ್ ಸಮಾವೇಶ ನಡೆಯಲಿದೆ. ಈ ಸಮಾವೇಶದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಬಡ ಕುಟುಂಬಗಳಿಗೆ ಭೂಮಿ ಹಕ್ಕುಪತ್ರ ವಿತರಿಸಲಾಗುವುದು. ದಶಕಗಳಿಂದ ಸರಕಾರಿ ಜಾಗದಲ್ಲಿ ವಾಸವಾಗಿರುವವರಿಗೆ ನಿವೇಶನ ಮಾಲೀಕತ್ವ ನೀಡುವ 'ಭೂ ಗ್ಯಾರಂಟಿ'ಯಡಿ ಈ ಕ್ರಮ ಕೈಗೊಳ್ಳಲಾಗಿದೆ.
ಗಾಳಿಪಟ ಚಿಹ್ನೆಯಡಿ ಉವೈಸಿಯ 'ಮಹಾ' ಉದಯ
ಜಲಾಶಯಗಳಲ್ಲಿ ನೀರಿನ ಪ್ರಮಾಣ ಕುಸಿತ ; ಬೇಸಿಗೆಯಲ್ಲಿ ಜೀವಜಲ ಭಾರ?
ಬೇಸಿಗೆಗೂ ಮುನ್ನವೇ ಬೆಳಗಾವಿ ಜಿಲ್ಲೆಯ ಜಲಮೂಲಗಳಲ್ಲಿ ನೀರಿನ ಪ್ರಮಾಣ ಗಣನೀಯವಾಗಿ ಕುಸಿದಿದೆ. ಹಿಡಕಲ್, ರಕ್ಕಸಕೊಪ್ಪ ಮತ್ತು ಮಲಪ್ರಭಾ ಜಲಾಶಯಗಳಲ್ಲಿ ನೀರಿನ ಮಟ್ಟ ಕಳೆದ ವರ್ಷಕ್ಕಿಂತ ಕಡಿಮೆಯಾಗಿದ್ದು, ನಗರ ಹಾಗೂ ಗ್ರಾಮೀಣ ಪ್ರದೇಶಗಳಿಗೆ ಕುಡಿಯುವ ನೀರಿನ ಪೂರೈಕೆ ಸವಾಲಾಗುವ ಲಕ್ಷಣ ಗೋಚರಿಸುತ್ತಿದೆ. ಜೆಜೆಎಂ ಯೋಜನೆ ಪೂರ್ಣಗೊಳ್ಳದಿರುವುದು ಪರಿಸ್ಥಿತಿಯನ್ನು ಮತ್ತಷ್ಟು ಬಿಗಡಾಯಿಸಿದೆ.
ಮಕ್ಕಳ ಕಳ್ಳಸಾಗಣೆಯಾದ ಕಡೆ ಹಾಜರ್; ಸಾವಿರಾರು ಮಕ್ಕಳ ಕಾಪಾಡಿದ ಈ ಲೇಡಿ ಸಿಂಗಂ ಸಿಕ್ತು ರೈಲ್ವೆ ಇಲಾಖೆಯ ಅವಾರ್ಡ್!
ರೈಲ್ವೆ ನಿಲ್ದಾಣಗಳಲ್ಲಿ ಕಳೆದುಹೋದ, ಅಪಹರಣಕ್ಕೊಳಗಾದ ಅಥವಾ ಕಳ್ಳಸಾಗಣೆಯ ಜಾಲಕ್ಕೆ ಸಿಲುಕಿದ್ದ 1,500ಕ್ಕೂ ಹೆಚ್ಚು ಮಕ್ಕಳನ್ನು ರಕ್ಷಿಸಿರುವ ರೈಲ್ವೆ ರಕ್ಷಣಾ ಪಡೆಯ ಇನ್ಸ್ಪೆಕ್ಟರ್ ಚಂದನಾ ಸಿನ್ಹಾ ಅವರಿಗೆ ಭಾರತೀಯ ರೈಲ್ವೆಯ ಅತ್ಯುನ್ನತ ಸೇವಾ ಪ್ರಶಸ್ತಿಯಾದ 'ರೈಲು ಸೇವಾ ಪುರಸ್ಕಾರ' ನೀಡಿ ಗೌರವಿಸಿದೆ. ಚಂದನಾ ಅವರು ಪೊಲೀಸ್ ಆಗಿದ್ದೇಗೆ. ಮಕ್ಕಳನ್ನು ರಕ್ಷಿಸಿದ್ದೇಗೆ ಎನ್ನುವ ಬಗ್ಗೆ ಮಾಹಿತಿ ಈ ಲೇಖನದಲ್ಲಿ ಇದೆ.
ವಾಷಿಂಗ್ಟನ್: ಗ್ರೀನ್ ಲ್ಯಾಂಡ್ ಅನ್ನು ಅಮೆರಿಕ ವಶಕ್ಕೆ ಪಡೆಯುವ ಯೋಜನೆಯನ್ನು ಯೂರೋಪ್ ದೇಶಗಳು ವಿರೋಧಿಸುತ್ತಿರುವ ಕಾರಣಕ್ಕೆ ಅವುಗಳ ಮೇಲೆ ಶೇ. 10ರಷ್ಟು ಸುಂಕ ವಿಧಿಸಲಾಗುವುದು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ. ಫೆಬ್ರವರಿ 1ರಿಂದ ಡೆನ್ಮಾರ್ಕ್, ಬ್ರಿಟನ್, ಫ್ರಾನ್ಸ್ ಹಾಗೂ ಇನ್ನಿತರ ಯೂರೋಪ್ ದೇಶಗಳ ಮೇಲೆ ಅಮೆರಿಕದ ಸುಂಕ ಜಾರಿಗೆ ಬರಲಿದೆ. ಈ ಕುರಿತು ಟ್ರೂತ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿರುವ ಡೊನಾಲ್ಡ್ ಟ್ರಂಪ್, ಅಮೆರಿಕವು ಗ್ರೀನ್ ಲ್ಯಾಂಡ್ ಅನ್ನು ಸಂಪೂರ್ಣವಾಗಿ ಹಾಗೂ ಒಟ್ಟು ಮೊತ್ತಕ್ಕೆ ಖರೀದಿಸುವ ವ್ಯವಹಾರವು ಅಂತಿಮಗೊಳ್ಳದಿದ್ದರೆ, ಜೂನ್ ಒಂದರಿಂದ ಈ ಸುಂಕ ಶೇ. 25ಕ್ಕೆ ಏರಿಕೆಯಾಗಲಿದೆ ಎಂದು ಬೆದರಿಕೆ ಹಾಕಿದ್ದಾರೆ. ಗ್ರೀನ್ ಲ್ಯಾಂಡ್ ಯೋಜನೆಗೆ ಬೆಂಬಲಿಸದ ದೇಶಗಳ ವಿರುದ್ಧ ಸುಂಕ ಹೇರಲಾಗುವುದು ಎಂದು ಡೊನಾಲ್ಡ್ ಟ್ರಂಪ್ ಎಚ್ಚರಿಕೆ ನೀಡಿದ್ದ ಬೆನ್ನಿಗೇ ಈ ನಿರ್ಧಾರ ಹೊರಬಿದ್ದಿದೆ.
ದಿಲ್ಲಿಯಲ್ಲಿ ಆವರಿಸಿದ ದಟ್ಟ ಮಂಜು: ವಿಮಾನ, ರೈಲುಗಳ ಸೇವೆಯಲ್ಲಿ ವಿಳಂಬ
ಹೊಸ ದಿಲ್ಲಿ: ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ ರವಿವಾರ ದಟ್ಟ ಮಂಜು ಆವರಿಸಿದ್ದು, ಗೋಚರತೆಯ ಪ್ರಮಾಣಕ್ಕೆ ಶೂನ್ಯಕ್ಕೆ ಕುಸಿದಿದೆ. ಈ ಪ್ರಾಂತ್ಯದಾದ್ಯಂತ ತೀವ್ರ ಶೀತ ವಾತಾವರಣವಿದ್ದು, ಹಲವಾರು ವಿಮಾನಗಳು ಹಾಗೂ ರೈಲುಗಳ ಸೇವೆ ವಿಳಂಬಗೊಂಡಿವೆ. ರಾಷ್ಟ್ರ ರಾಜಧಾನಿಯಲ್ಲಿನ ವಾಯು ಮಾಲಿನ್ಯ ಗಂಭೀರ ಸ್ವರೂಪಕ್ಕೆ ತಲುಪಿರುವುದರಿಂದ, ಈ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿದೆ. ರವಿವಾರ ಬೆಳಗ್ಗೆ 7 ಗಂಟೆಯ ವೇಳೆಗೆ ದಿಲ್ಲಿಯ ವಾಯು ಗುಣಮಟ್ಟ ಸೂಚ್ಯಂಕ 439 ತಲುಪಿತ್ತು. ವಾಯು ಮಾಲಿನ್ಯ ಹದಗೆಟ್ಟಿರುವ ಹಿನ್ನೆಲೆಯಲ್ಲಿ ಶನಿವಾರ GRAP-IV ಮಾನದಂಡಗಳಡಿ ಅತ್ಯಂತ ಕಟ್ಟುನಿಟ್ಟಿನ ವಾಯು ಮಾಲಿನ್ಯ ತಡೆ ಕ್ರಮಗಳನ್ನು ಜಾರಿಗೊಳಿಸಲಾಗಿದೆ. ದಟ್ಟ ಮಂಜಿನ ಕಾರಣಕ್ಕೆ ಏರ್ ಇಂಡಿಯಾ ಹಾಗೂ ಇಂಡಿಗೋ ವಿಮಾನಗಳು ಸೇರಿದಂತೆ ಹಲವಾರು ವಿಮಾನಯಾನ ಸಂಸ್ಥೆಗಳು ಪ್ರಯಾಣ ಸಲಹಾಸೂಚಿಯನ್ನು ಬಿಡುಗಡೆ ಮಾಡಿವೆ. ವಿಮಾನಗಳ ಹಾರಾಟ ವಿಳಂಬವಾಗುವ ನಿರೀಕ್ಷೆಯಿದ್ದು, ಪ್ರಯಾಣಿಕರು ತಮ್ಮ ವಿಮಾನಗಳ ಸ್ಥಿತಿಗತಿಯನ್ನು ಪರಿಶೀಲಿಸಿಕೊಳ್ಳಬೇಕು ಎಂದು ತಿಳಿಸಿದೆ.
MANGALURU | ವಿದ್ಯಾರ್ಥಿಗಳಿಗೆ ಎಂಡಿಎಂಎ ಮಾದಕ ವಸ್ತು ಮಾರಾಟ: ಆರೋಪಿಯ ಬಂಧನ
ಮಂಗಳೂರು, ಜ.18: ವಿದ್ಯಾರ್ಥಿಗಳಿಗೆ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಆರೋಪದಲ್ಲಿ ಯುವಕನೋರ್ವನನ್ನು ಕದ್ರಿ (ಮಂಗಳೂರು ಪೂರ್ವ ಠಾಣೆ) ಠಾಣಾ ಪೊಲೀಸರು ಶನಿವಾರ ಬಂಧಿಸಿದ್ದಾರೆ. ಕೇರಳದ ಎರ್ನಾಕುಂ ಜಿಲ್ಲೆಯ ಮುತೊಲಪುರಂ ನಿವಾಸಿ ಜೂಡ್ ಮಾಥ್ಯೂ (20) ಬಂಧಿತ ಆರೋಪಿ. ಆತನಿಂದ 5.20 ಗ್ರಾಂ ತೂಕದ MDMA ಮಾದಕ ವಸ್ತು, ಕೃತ್ಯಕ್ಕೆ ಬಳಸಿದ ಬೈಕ್ ಸಮೇತ ಒಟ್ಟು 70,000 ರೂ. ಮೌಲ್ಯದ ಸೊತ್ತುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪದವು ಗ್ರಾಮದ ಕೈಲಾಸ ಕಾಲನಿ ಹತ್ತಿರ ಶ್ರೀ ದುರ್ಗಾ ಪರಮೇಶ್ವರಿ ಭಜನಾ ಮಂದಿರದ ಬಳಿ ಯುವಕನೋರ್ವ ಮಾದಕ ವಸ್ತು ಮಾರಾಟ ಮಾಡುತ್ತಿರುವ ಬಗ್ಗೆ ದೊರೆತ ಖಚಿತ ಮಾಹಿತಿಯನ್ನು ಆಧರಿಸಿ ಕದ್ರಿ ಪೊಲೀಸರು ಈ ಕಾರ್ಯಾಚರಣೆ ನಡೆಸಿದ್ದಾರೆ.
ಉಡುಪಿ: ಉಡುಪಿ ಶ್ರೀ ಕೃಷ್ಣಮಠದ ಪರ್ಯಾಯ ಕಾರ್ಯಕ್ರಮ ಅಧ್ಧೂರಿಯಾಗಿ ನೆರವೇರಿತು. ಶೀರೂರು ಮಠಾಧೀಶರಾದ ವೇದವರ್ಧನ ತೀರ್ಥ ಸ್ವಾಮೀಜಿ ಅವರು ಭಾನುವಾರ ಬೆಳಗಿನ ಜಾವ ಶುಭ ಮುಹೂರ್ತದಲ್ಲಿ ಸರ್ವ ಪೀಠಾರೋಹಣ ಮಾಡಿದರು. ಪ್ರಥಮ ಪರ್ಯಾಯ ಆರಂಭಿಸಿದರು. ಪರ್ಯಾಯ ಅಧಿಕಾರ ಹಸ್ತಾಂತರ ಬಳಿಕ ನಗರದಲ್ಲಿ ಬೆಳಗ್ಗೆ ಜೋಡುಕಟ್ಟೆಯಿಂದ ಮಠದವರೆಗೆ ಭವ್ಯ ಮೆರವಣಿಗೆ ನಡೆಯಿತು. ಪುತ್ತಿಗೆ ಮಠಾಧೀಶ ಸುಗುಣೇಂದ್ರ ತೀರ್ಥ ಶ್ರೀಪಾದರು
Udupi Paryaya : ಶೀರೂರು ಶ್ರೀಗಳ ಪರ್ಯಾಯ ವೈಭವ - ಸರ್ವಜ್ಞ ಪೀಠಾರೋಹಣದ ವೇಳೆ ಕಂಡ ಅದ್ಭುತ ದೃಶ್ಯ!
Shiroor Seer Udupi Paryaya : ಎರಡು ವರ್ಷಕ್ಕೊಮ್ಮೆ ನಡೆಯುವ ಕೃಷ್ಣ ನಗರಿ ಉಡುಪಿಯ ಪರ್ಯಾಯ ಮಹೋತ್ಸವ - 2026ರ ಪ್ರಮುಖ ಭಾಗವಾದ, ಸರ್ವಜ್ಞ ಪೀಠವನ್ನೇರುವ ಧಾರ್ಮಿಕ ಸಂಪ್ರದಾಯ ಕೃಷ್ಣಮಠದಲ್ಲಿ ಸಂಪನ್ನಗೊಂಡಿದೆ. ಅಧಿಕಾರ ಹಸ್ತಾಂತರದ ಭಾಗವಾಗಿ, ಅಕ್ಷಯ ಸಟ್ಟುಗ ಮತ್ತು ಮಠದ ಕೀಲಿಕೈಯನ್ನು ಪುತ್ತಿಗೆ ಮಠದ ಶ್ರೀಗಳು, ಶೀರೂರು ವೇದವರ್ಥನ ತೀರ್ಥ ಶ್ರೀಗಳಿಗೆ ಹಸ್ತಾಂತರಿಸಿದ್ದಾರೆ. ಮಠದ ಆವರಣದ ರಾಜಾಂಗಣದಲ್ಲಿ ವೈಭವದ ಪರ್ಯಾಯ ದರ್ಬಾರ್ ನಡೆದಿದೆ.
ಐಸಿಸ್ ನೆಲೆಗಳನ್ನು ಗುರಿಯಾಗಿಸಿಕೊಂಡು ಸಿರಿಯಾ ಮೇಲೆ ಮತ್ತೆ ದಾಳಿ ನಡೆಸಿದ ಅಮೆರಿಕ
ವಾಷಿಂಗ್ಟನ್: ಸಿರಿಯಾದ ಐಸಿಸ್ ನೆಲೆಗಳನ್ನು ಗುರಿಯಾಗಿಸಿಕೊಂಡು ಅಮೆರಿಕಾ ಶುಕ್ರವಾರ ಮೂರನೇ ಪ್ರತೀಕಾರದ ದಾಳಿ ನಡೆಸಿದೆ. ವಾಯವ್ಯ ಸಿರಿಯಾದ ಮೇಲೆ ನಡೆದ ವಾಯುದಾಳಿಯಲ್ಲಿ ಅಲ್ಖೈದಾ ಜತೆ ಸಂಪರ್ಕ ಹೊಂದಿದ್ದ ಬಿಲಾಲ್ ಹಸನ್ ಅಲ್ ಜಸೀಮ್ ಎಂಬಾತನನ್ನು ಹತ್ಯೆ ಮಾಡಲಾಗಿದೆ ಎಂದು ಅಮೆರಿಕದ ಸೆಂಟ್ರಲ್ ಕಮಾಂಡ್ ಹೇಳಿದೆ. ಬಿಲಾಲ್ ಹಸನ್ ಅಲ್ ಜಸೀಮ್ ಡಿಸೆಂಬರ್ 13ರಂದು ನಡೆದ ಇಬ್ಬರು ಅಮೆರಿಕದ ಸೈನಿಕರು ಮತ್ತು ಒಬ್ಬ ನಾಗರಿಕನ ಹತ್ಯೆ ನಡೆಸಿದ ಸಂಘಟನೆ ಜತೆ ಸಂಬಂಧ ಹೊಂದಿದ್ದ ಎಂದು ಅಮೆರಿಕ ಹೇಳಿಕೊಂಡಿದೆ. ಮೂವರು ಅಮೆರಿಕನ್ನರನ್ನು ಹತ್ಯೆ ಮಾಡಿದ ಭಯೋತ್ಪಾದಕನ ಹತ್ಯೆ ನಮ್ಮ ಪಡೆಗಳ ಮೇಲೆ ದಾಳಿ ನಡೆಸುವವರ ಬಗೆಗಿನ ನಮ್ಮ ನಿಲುವನ್ನು ಬಿಂಬಿಸುತ್ತದೆ ಎಂದು ಸೆಂಟ್ರಲ್ ಕಮಾಂಡ್ನ ಕಮಾಂಡರ್ ಅಡ್ಮಿರಲ್ ಬ್ರಾಡ್ ಕೂಪರ್ ಹೇಳಿಕೆ ನೀಡಿದ್ದಾರೆ. ಅಮೆರಿಕನ್ ನಾಗರಿಕರು ಮತ್ತು ಯುದ್ಧಯೋಧರನ್ನು ಹತ್ಯೆ ಮಾಡುವವರಿಗೆ ಯಾವುದೇ ಸುರಕ್ಷಿತ ಜಾಗ ಇಲ್ಲ. ಎಲ್ಲಿದ್ದರೂ ನಾವು ಹುಡುಕುತ್ತೇವೆ ಎಂದು ಹೇಳಿದ್ದಾರೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ನೀಡಿದ ಆದೇಶದ ಅಂಗವಾಗಿ ಈ ಕಾರ್ಯಾಚರಣೆ ನಡೆದಿದೆ ಎಂದು ಹೇಳಲಾಗಿದೆ.
RCB-IPL 2026: ಮಿಂಚಲಿದೆ ಆರ್ಸಿಬಿ ಜತೆ ನಂದಿನಿ ಬ್ರ್ಯಾಂಡ್, ಪ್ರಾಯೋಜಕತ್ವದ ಟೆಂಡರ್ ಆಹ್ವಾನ
ನವದೆಹಲಿ: ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಕ್ರಿಕೆಟ್ ಟೀಂ ಅಭಿಮಾನಿಗಳಲ್ಲಿ ಸೃಷ್ಟಿಸಿದ ಕ್ರೇಜ್ ಅಷ್ಟಿಷ್ಟಲ್ಲ. ಅದು ಈಗಾಗಲೇ ಪ್ರತಿ ಐಪಿಎಲ್ ಹಾಗೂ ಇತ್ತೀಚೆಗೆ ಆರ್ಸಿಬಿ ಕಪ್ ಗೆದ್ದಾಗ ನಾವೆಲ್ಲ ನೋಡಿದ್ದೇವೆ. ಇದೀಗ ಆರ್ಸಿಬಿ ಎರಡು ಪ್ರಮುಖ ಹಾಲಿನ ಒಕ್ಕೂಟಗಳ ಮಧ್ಯ ಪೈಪೋಟಿ ಉಂಟಾಗುವಂತೆ ಮಾಡಿದೆ. ಅಂದರೆ ಹಿಂದಿನ ಬಾರಿ ಅಮೂಲ್ ನಂತೆ (Amul) 2026ರ ಐಪಿಎಲ್ (IPL
ಗ್ರೀನ್ಲ್ಯಾಂಡ್ ಮೇಲೆ ಅಮೆರಿಕ ನಿಯಂತ್ರಣಕ್ಕೆ ವಿರೋಧ; 8 ಯುರೋಪ್ ರಾಷ್ಟ್ರಗಳ ಮೇಲೆ ಟ್ರಂಪ್ ಪ್ರತಿಸುಂಕ ಪ್ರಹಾರ
ಗ್ರೀನ್ಲ್ಯಾಂಡ್ ದ್ವೀಪದ ಮೇಲೆ ಅಮೆರಿಕ ನಿಯಂತ್ರಣಕ್ಕೆ ವಿರೋಧಿಸಿದ ಹಿನ್ನೆಲೆ ಯುರೋಪ್ನ ಎಂಟು ರಾಷ್ಟ್ರಗಳ ವಿರುದ್ಧ ಅಮೆರಿಕ ಅಧ್ಯಕ್ಷ ಟ್ರಂಪ್ ಸುಂಕಾಸ್ತ್ರ ಪ್ರಯೋಗ ಮಾಡಿದ್ದಾರೆ. ಬ್ರಿಟನ್, ಸ್ವೀಡನ್, ಫ್ರಾನ್ಸ್, ಜರ್ಮನಿ, ನೆದರ್ಲೆಂಡ್, ಡೆನ್ಮಾರ್ಕ್, ಫಿನ್ಲೆಂಡ್ ಮೇಲೆ ಶೇ.10ರಷ್ಟು ಸುಂಕ ವಿಧಿಸಿದ್ದು, ಮುಂದಿನ ದಿನಗಳಲ್ಲಿ ಜೂನ್.1 ರಿಂದ ಶೇ. 25 ಕ್ಕೆ ಏರಿಕೆ ಮಾಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಕೋಪನ್ ಹ್ಯಾಗನ್ನಲ್ಲಿ ಜನರು ಪ್ರತಿಭಟನೆ ನಡೆಸಿದರು.
ಎಣ್ಣೆ ಮಾರಾಟ ಬಂದ್, ಈ 3 ದಿನಗಳ ಕಾಲ ಬಾರ್ &ಎಂಆರ್ಪಿ ಬಂದ್... Dry Days And Holidays
ಎಣ್ಣೆ ಅಂದ್ರೆ ಲಿಕ್ಕರ್ ಮಾರಾಟದ ಮೂಲಕ ಸರ್ಕಾರಗಳು ಸಾವಿರಾರು ಕೋಟಿ ರೂಪಾಯಿ ಆದಾಯ ಗಳಿಸಿ ಲಾಭ ಮಾಡುತ್ತವೆ. ಹಾಗೇ ದಿನದಿಂದ ದಿನಕ್ಕೆ, ಎಣ್ಣೆ ಹೊಡೆಯುವವರ ಸಂಖ್ಯೆ ಕೂಡ ಭಾರಿ ದೊಡ್ಡ ಪ್ರಮಾಣದಲ್ಲಿ ಏರಿಕೆ ಆಗುತ್ತಲೇ ಇದೆ. ಮದ್ಯ ಮಾರಾಟ ಮಾಡುವ ಕಂಪನಿಗಳು ಈ ಮೂಲಕ ಭರ್ಜರಿ ಲಾಭ ಕೂಡ ಮಾಡುತ್ತಿದ್ದಾರೆ. ಅಕಸ್ಮಾತ್ ಒಂದು ದಿನ ಬಾರ್ ಅಥವಾ
ಯಾದಗಿರಿ: 16,133 ವಿದ್ಯಾರ್ಥಿಗಳ ಜನನ ಪ್ರಮಾಣ ಪತ್ರಕ್ಕಾಗಿ ಕೋರ್ಟ್ಗೆ ಮೊರೆ
ಯಾದಗಿರಿ ಜಿಲ್ಲೆಯಲ್ಲಿ 16,133 ವಿದ್ಯಾರ್ಥಿಗಳಿಗೆ ಜನನ ಪ್ರಮಾಣ ಪತ್ರದ ಕೊರತೆ ಎದುರಾಗಿದೆ. ಆಧಾರ್ ಮತ್ತು ಅಪಾರ್ ಐಡಿ ನೋಂದಣಿಗೆ ಇದು ಅಡ್ಡಿಯಾಗಿದೆ. ಈ ಸಮಸ್ಯೆಯನ್ನು ಬಗೆಹರಿಸಲು ಶಾಲಾ ಶಿಕ್ಷಣ ಇಲಾಖೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಮೊರೆ ಹೋಗಿದೆ. ಲೋಕ ಅದಾಲತ್ ಮೂಲಕ ಪ್ರಮಾಣ ಪತ್ರಗಳನ್ನು ಒದಗಿಸಲು ಕ್ರಮ ಕೈಗೊಳ್ಳಲಾಗಿದೆ. ಸುರಪುರ, ಶಹಾಪುರ ಮತ್ತು ಯಾದಗಿರಿ ತಾಲೂಕುಗಳಲ್ಲಿ ಈ ಸಮಸ್ಯೆ ಹೆಚ್ಚಾಗಿ ಕಂಡುಬಂದಿದೆ.
ಮೆಕ್ಕೆಜೋಳ ಬೆಳೆದರೂ ಸಿಗಲಿಲ್ಲ ಬೆಂಬಲ: ಬೆಳೆಗಾರ ಕಂಗಾಲ
ಚಿಕ್ಕಬಳ್ಳಾಪುರ ಜಿಲ್ಲೆಯ ಮೆಕ್ಕೆಜೋಳ ಬೆಳೆಗಾರರು ಕನಿಷ್ಠ ಬೆಂಬಲ ಬೆಲೆಗಾಗಿ ಪರದಾಡುತ್ತಿದ್ದಾರೆ. ಮಾರುಕಟ್ಟೆಯಲ್ಲಿ ಬೆಲೆ ಕುಸಿದಿದ್ದು, ರೈತರು ಹಾಕಿದ ಬಂಡವಾಳವೂ ವಾಪಸ್ ಬಾರದ ಸ್ಥಿತಿ ಇದೆ. ಸರ್ಕಾರ ಘೋಷಿಸಿದ ಬೆಂಬಲ ಬೆಲೆ ಪಡೆಯಲು ಷರತ್ತುಗಳು ಅಡ್ಡಿಯಾಗಿದ್ದು, ರೈತರು ಆಕ್ರೋಶಗೊಂಡಿದ್ದಾರೆ. ಖರೀದಿ ಕೇಂದ್ರಗಳೂ ಹೆಸರಿಗಷ್ಟೇ ತೆರೆದಿದ್ದು, ರೈತರು ದಿಕ್ಕುತೋಚದೆ ಪರದಾಡುತ್ತಿದ್ದಾರೆ.
ದಿಲ್ಲಿ ಗಣರಾಜ್ಯೋತ್ಸವ: ಚಾಮರಾಜನಗರ ಜಿಲ್ಲೆಯ ರೈತ ಮಹಿಳೆ ವರ್ಷಾಗೆ ಆಹ್ವಾನ
ಚಾಮರಾಜನಗರ, ಜ.17: ಜಿಲ್ಲೆಯ ರೈತ ಮಹಿಳೆ ವರ್ಷಾ ಅವರು ಜ.26ರಂದು ದಿಲ್ಲಿಯಲ್ಲಿ ನಡೆಯಲಿರುವ ಗಣರಾಜ್ಯೋತ್ಸವ ದಿನಾಚರಣೆಯಲ್ಲಿ ಪಾಲ್ಗೊಳ್ಳಲು ಆಹ್ವಾನ ಪಡೆದಿದ್ದಾರೆ. ಚಾಮರಾಜನಗರ ತಾಲೂಕಿನ ಉಮ್ಮತ್ತೂರು ಗ್ರಾಮದಲ್ಲಿ ಬಾಳೆ ದಿಂಡಿನಿಂದ ಉತ್ಪನ್ನ ತಯಾರಿಸುತ್ತಿರುವ ವರ್ಷಾ ಜಿಲ್ಲೆಯ ಹಿರಿಮೆಯನ್ನು ಹೆಚ್ಚಿಸಿದ್ದಾರೆ. ರಾಜ್ಯದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವವರಿಗೆ ಈ ಅವಕಾಶ ದೊರೆತಿದೆ. ಕೃಷಿ ವಲಯದಿಂದ ವರ್ಷಾ ಆಯ್ಕೆಯಾಗಿದ್ದು, ಪತಿ ಶ್ರೀಕಂಠ ಅವರೊಂದಿಗೆ ಜ.25ರಂದು ದಿಲ್ಲಿಗೆ ಹೋಗಲು ತಯಾರಿ ನಡೆಸಿದ್ದಾರೆ. ಎಂಟೆಕ್ ಪದವೀಧರೆಯಾಗಿರುವ ವರ್ಷಾ ‘ಆಕೃತಿ ಇಕೋ ಫ್ರೆಂಡ್ಲಿ ಎಂಟರ್ಪ್ರೈಸಸ್’ ಸಂಸ್ಥೆ ಸ್ಥಾಪಿಸಿದ್ದಾರೆ. ಇದಕ್ಕೆ ಸಾಫ್ಟ್ವೇರ್ ಉದ್ಯೋಗಿಯಾಗಿರುವ ಪತಿ ಶ್ರೀಕಂಠ ಸಾಥ್ ನೀಡಿದ್ದಾರೆ. ಕೋವಿಡ್ 2ನೇ ಅಲೆಯ ಲಾಕ್ಡೌನ್ನಿಂದ ಉದ್ಯಮಗಳು ನಲುಗಿದ್ದ ಸಂದರ್ಭದಲ್ಲಿ ವರ್ಷಾ ಅವರ ಸಂಸ್ಥೆ ಆರಂಭಗೊಂಡಿತು ಎನ್ನುವುದು ಮತ್ತೊಂದು ವಿಶೇಷ. ಪ್ರಸ್ತುತ ಇವರ ಬಳಿ ಹಲವರು ಉದ್ಯೋಗ ಮಾಡುತ್ತಿದ್ದಾರೆ. ವರ್ಷಾ ಅವರ ಸಾಧನೆಗೆ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಸಂಸ್ಥೆಗಳಿಂದ ಪ್ರಶಸ್ತಿ ಲಭಿಸಿದೆ. ವರ್ಷಾ ತಮ್ಮ ಜಮೀನಿನಲ್ಲಿ ಬಾಳೆ, ಮಾವು, ಅರಿಶಿಣ ಬೆಳೆದಿದ್ದಾರೆ. ಬಾಳೆ ದಿಂಡಿನ ನಾರಿನಿಂದ ಬ್ಯಾಗ್, ಬಾಕ್ಸ್, ಪೂಜೆ ಬ್ಯಾಗ್, ಪರ್ಸ್, ಲ್ಯಾಪ್ಟಾಪ್ ಬ್ಯಾಗ್, ಯೋಗ ಮ್ಯಾಟ್, ಕಪ್ ಮತ್ತು ಇನ್ನಿತರ ಕರಕುಶಲ ವಸ್ತುಗಳನ್ನು ತಯಾರು ಮಾಡುತ್ತಿದ್ದಾರೆ. ಬಾಳೆಯ ನಾರು ತೆಗೆದಾಗ ಬರುವ ರಸವನ್ನು ಶೇಖರಣೆ ಮಾಡಿ ಇದರಲ್ಲಿ ಪೊಟ್ಯಾಷಿಯಂ ದ್ರವರೂಪದ ಗೊಬ್ಬರವನ್ನು ತಮ್ಮ ಜಮೀನಿಗೆ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಆಕಾಶವಾಣಿಯಲ್ಲಿ 2023ರ ನ.26ರಂದು ಪ್ರಸಾರಗೊಂಡ ಮನ್ ಕಿ ಬಾತ್ 107ನೇ ಆವೃತ್ತಿಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ವರ್ಷಾ ಬಗ್ಗೆ ಪ್ರಸ್ತಾಪಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಮನ್ ಕಿ ಬಾತ್ ಹಲವರಿಗೆ ಪ್ರೇರಣೆಯಾಗಿದೆ. ವರ್ಷಾ ಅವರು ಬಾಳೆ ದಿಂಡಿನಿಂದ ಜೈವಿಕ ಗೊಬ್ಬರ ತಯಾರಿಸಲು ಆರಂಭಿಸಿದರು. ಪ್ರಕೃತಿ ಬಗ್ಗೆ ಪ್ರೀತಿ ಇರುವ ವರ್ಷಾ ಅವರ ಈ ಕೆಲಸ ಇತರರಿಗೆ ಉದ್ಯೋಗ ನೀಡಿದೆ ಎಂದು ಶ್ಲಾಘಿಸಿದ್ದರು. ದೇಶದ ರಾಜಧಾನಿ ದಿಲ್ಲಿಯಲ್ಲಿ ನಡೆಯುವ ಗಣರಾಜ್ಯೋತ್ಸವದಲ್ಲಿ ಜಿಲ್ಲೆಯವರಿಗೆ ಭಾಗವಹಿಸುವ ಅವಕಾಶ ಒದಗಿ ಬರುತ್ತಲೇ ಇದೆ. ಪ್ರಧಾನ ಮಂತ್ರಿ ಬೀದಿಬದಿ ವ್ಯಾಪಾರಿಗಳ ಆತ್ಮನಿರ್ಭರ ನಿಧಿ(ಪಿಎಂ ಸ್ವನಿಧಿ) ಯೋಜನೆಯಲ್ಲಿ ಕಿರು ಸಾಲ ಸೌಲಭ್ಯ ಪಡೆದು ನಿಗದಿತ ಅವಧಿಯಲ್ಲಿ ಮರು ಪಾವತಿ ಮಾಡುತ್ತಿದ್ದ ನಗರದ ಗುಂಡ್ಲುಪೇಟೆ ರಸ್ತೆಯ ಬೀದಿಬದಿಯ ಟೀ ಅಂಗಡಿ ವ್ಯಾಪಾರಿ ಸಮೀವುಲ್ಲಾ 2024ರಲ್ಲಿ ದಿಲ್ಲಿಯಲ್ಲಿ ನಡೆದಿದ್ದ ಗಣರಾಜ್ಯೋತ್ಸವದಲ್ಲಿ ಪಾಲ್ಗೊಳ್ಳಲು ಅವಕಾಶ ಪಡೆದಿದ್ದರು. ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ವಡ್ಡಗೆರೆಯಲ್ಲಿ ಮಾದರಿ ಕೃಷಿ ಮಾಡುತ್ತಿರುವ ಚಿನ್ನಸ್ವಾಮಿ ಮತ್ತು ಪತ್ನಿ ಗಿರಿಕನ್ಯೆ ಅವರಿಗೆ 2025ರಲ್ಲಿ ಆಹ್ವಾನ ಸಿಕ್ಕಿತ್ತು. ಈ ವರ್ಷ ವರ್ಷಾ ಅವರಿಗೆ ಅವಕಾಶ ದೊರೆತಿದೆ. ಹೊಸದಿಲ್ಲಿಯಲ್ಲಿ ನಡೆಯುವ ಗಣರಾಜ್ಯೋತ್ಸವ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಅವಕಾಶ ಸಿಕ್ಕಿರುವುದಕ್ಕೆ ತುಂಬಾ ಸಂತೋಷವಾಗುತ್ತಿದೆ. ದೇಶದ ಬೇರೆ ಬೇರೆ ಕಡೆಗಳಿಂದ ವಿವಿಧ ಕ್ಷೇತ್ರಗಳ ಸಾಧಕರು ಗಣರಾಜ್ಯೋತ್ಸವದಲ್ಲಿ ಪಾಲ್ಗೊಳ್ಳಲಿದ್ದಾರೆ. ಅವರ ಬಗ್ಗೆ ತಿಳಿದುಕೊಳ್ಳುವ ಮತ್ತು ಕಲಿತುಕೊಳ್ಳುವುದಕ್ಕೂ ಅವಕಾಶ ಸಿಗುತ್ತಿರುವುದು ಸಂತಸ ತಂದಿದೆ. -ವರ್ಷಾ, ರೈತ ಮಹಿಳೆ
New Railway Line: ಕೇರಳ ಚುನಾವಣೆ ಹೊತ್ತಲ್ಲಿ ನೀಲಂಬೂರು-ನಂಜನಗೂಡು ರೈಲು ಯೋಜನೆ ಮುನ್ನೆಲೆಗೆ
ನವದೆಹಲಿ: ಕೇಂದ್ರ ರೈಲ್ವೆ ಇಲಾಖೆ ವ್ಯಾಪ್ತಿಯಲ್ಲಿ ದೇಶದಾದ್ಯಂತ ಹೊಸ ರೈಲು ಯೋಜನೆಗಳು, ರೈಲ್ವೆ ಮೂಲ ಸೌಕರ್ಯ ಅಭಿವೃದ್ಧಿಗೊಳ್ಳುತ್ತಿವೆ. ಇದೀಗ ಕರ್ನಾಟಕ ಹಾಗೂ ನೆರೆಯ ಕೇರಳ ರಾಜ್ಯ ಸಂಪರ್ಕಿಸುವ ಉದ್ದೇಶಿತ ರೈಲು ಯೋಜನೆಗೆ ವೇಗ ಸಿಗುವ ಮುನ್ಸೂಚನೆ ಸಿಕ್ಕಿದೆ. ಈ ಸಂಬಂಧ ಕೇಂದ್ರ ರೈಲ್ವೆ ಖಾತೆ ಸಚಿವ ಅಶ್ವಿನಿ ವೈಷ್ಣವ್ ಅವರು ಮಾಹಿತಿ ಹಂಚಿಕೊಂಡಿದ್ದಾರೆ. ಕೇರಳ ವಿಧಾನಸಭಾ ಚುನಾವಣೆ
ಪೌರಾಯುಕ್ತೆಗೆ ಧಮ್ಕಿ ಹಾಕಿದ ಪ್ರಕರಣ ಸಂಬಂಧಿಸಿದಂತೆ ಕಾಂಗ್ರೆಸ್ ಮುಖಂಡ ರಾಜೀವ್ಗೌಡ ನಿರೀಕ್ಷಣಾ ಹಾಗೂ ಮಧ್ಯಂತರ ಜಾಮೀನು ಕೋರಿ ಚಿಂತಾಮಣಿಯ ಜೆಎಂಎಫ್ಸಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಕೋರ್ಟ್ ಜ.22ಕ್ಕೆ ವಿಚಾರಣೆಯನ್ನು ಮುಂದೂಡಿದೆ. ಧಮ್ಕಿ ಹಾಕಿದ ವಿಷಯ ಬೆಳಕಿಗೆ ಬರುತ್ತಿದ್ದಂತೆ ವಿಡಿಯೊ ಮೂಲಕ ಕ್ಷಮೆ ಕೇಳಿರುವ ರಾಜೀವ್ಗೌಡ ವಿರುದ್ಧ ಎರಡು ಪ್ರಕರಣಗಳು ದಾಖಲಾಗಿವೆ. ಸದ್ಯ ಪೊಲೀಸರು ಅವರ ಹುಡುಕಾಟ ನಡೆಸುತ್ತಿದ್ದಾರೆ.
1,500 ಮಕ್ಕಳನ್ನು ರಕ್ಷಿಸಿದ ಯುಪಿ ಆರ್ಪಿಎಫ್ ಅಧಿಕಾರಿಗೆ ರೈಲ್ವೆ ಅತ್ಯುನ್ನತ ಗೌರವ
ಮೀರಠ್ : ಕಳೆದು ಹೋಗುವ, ಕಳ್ಳಸಾಗಾಣಿಕೆದಾರರ ಬಲೆಗೆ ಬೀಳುವ, ಉದ್ಯೋಗದ ಆಮಿಷಕ್ಕೆ ಬಲೆ ಬಿದ್ದ ಹಾಗೂ ಮನೆ ಬಿಟ್ಟು ಓಡಿಬರುವ ಮಕ್ಕಳು ಹೀಗೆ ಪ್ರತಿವಾರ ರೈಲು ನಿಲ್ದಾಣಗಳಲ್ಲಿ ಹಲವು ಮಕ್ಕಳು ಕಾಣೆಯಾಗುತ್ತಾರೆ. ಕಳೆದ ಮೂರು ವರ್ಷಗಳಲ್ಲಿ ರೈಲ್ವೆ ಸುರಕ್ಷಾ ಪಡೆಯ ಇನ್ಸ್ಪೆಕ್ಟರ್ ಚಂದನಾ ಸಿನ್ಹಾ ಉತ್ತರ ಪ್ರದೇಶದ ರೈಲ್ವೆ ಜಾಲದಲ್ಲಿ ಇಂಥ 1,500ಕ್ಕೂ ಹೆಚ್ಚು ಮಕ್ಕಳನ್ನು ರಕ್ಷಿಸಿ, ರೈಲ್ವೆಯ ಅತ್ಯುನ್ನತ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಇವರ ನೇತೃತ್ವದ ತಂಡ 2024ರಲ್ಲೇ 494 ಮಕ್ಕಳನ್ನು ರಕ್ಷಿಸಿದ್ದು, ಇವರಲ್ಲಿ ಬಾಲಕಾರ್ಮಿಕರಾಗಲು ಕಳ್ಳಸಾಗಾಣಿಕೆದಾರರ ಜಾಲಕ್ಕೆ ಬಿದ್ದ 41 ಮಕ್ಕಳೂ ಸೇರಿದ್ದಾರೆ. ಈ ಪೈಕಿ 152 ಮಕ್ಕಳನ್ನು ಇವರು ಸ್ವತಃ ರಕ್ಷಿಸಿದ್ದಾರೆ. ಈ ಸಾಧನೆಗಾಗಿ ಇವರಿಗೆ ಭಾರತೀಯ ರೈಲ್ವೆ ನಿಡುವ ಅತಿ ವಿಶಿಷ್ಟ ರೈಲು ಸೇವಾ ಪುರಸ್ಕಾರವನ್ನು ಜ.9ರಂದು ದೆಹಲಿಯಲ್ಲಿ ನಡೆದ ಸಮಾರಂಭದಲ್ಲಿ ಪ್ರದಾನ ಮಾಡಲಾಯಿತು. ಲಕ್ನೋ ರೈಲು ನಿಲ್ದಾಣದ 3ನೇ ಪ್ಲಾಟ್ಫಾರಂನಲ್ಲಿ ಒಂದು ಮಗು ಒಬ್ಬಂಟಿಯಾಗಿ ಇದೆ ಎಂಬ ಮಾಹಿತಿ ಬಂದ ಹಿನ್ನೆಲೆಯಲ್ಲಿ ಪ್ರಶಸ್ತಿ ಸ್ವೀಕರಿಸಿದ ತಕ್ಷಣವೇ ಕರ್ತವ್ಯಕ್ಕೆ ಹಾಜರಾದರು. ಅಧಿಕಾರಿಯ ಕ್ರಮವನ್ನು ಮಾತ್ರವಲ್ಲದೇ ಎಲ್ಲ ಪ್ಲಾಟ್ಫಾರಂ ಹಾಗೂ ಮಕ್ಕಳು ಕಳೆದುಹೋಗುವ ಸ್ಥಳಗಳಲ್ಲಿ ಸದ್ದುಗದ್ದಲವಿಲ್ಲದೇ ರಕ್ಷಿಸುವ ಜಾಲವನ್ನು ಅಭಿವೃದ್ಧಿಪಡಿಸಿರುವುದನ್ನು ಗುರುತಿಸಲಾಗಿದೆ. ಲಕ್ನೋದ ಚಾರ್ಭಾಗ್ನಿಂದ ಇವರು ತಮ್ಮ ಕಾರ್ಯಾಚರಣೆ ಆರಂಭಿಸಿದ್ದರು. ಒಂದು ಕಾಣೆಯಾದ ಮಗು ಮತ್ತು ಒಂದು ಸಂಶಯಾಸ್ಪದ ಪ್ರಯಾಣಿಕನಿಂದ ಇವರ ಯಶೋಗಾಥೆ ಆರಂಭವಾಗಿದ್ದು, ಬಳಿಕ ರಕ್ಷಣಾ ಜಾಲ ವ್ಯವಸ್ಥಿತವಾಗಿ ಬೆಳೆದಿದೆ. ಅಧಿಕಾರಿಗಳಿಗೆ ಪ್ಲಾಟ್ಫಾರಂ ಚಲನವಲನಗಳ ಬಗ್ಗೆ ನಿಗಾ ಇಡುವ ತರಬೇತಿ, ಮಾಹಿತಿದಾರರ ಜಾಲ, ಎನ್ಜಿಓ ಪಾಲುದಾರಿಕೆ ಬೆಳೆಸಿರುವುದು ಹೀಗೆ ರಕ್ಷಣಾ ಜಾಲವನ್ನು ಅತಿ ವಿಶಿಷ್ಟವಾಗಿ ಅಭಿವೃದ್ಧಿಪಡಿಸಿದರು ಎಂದು ತಿಳಿದು ಬಂದಿದೆ. ನವದೆಹಲಿ ರೈಲು ನಿಲ್ದಾಣಕ್ಕೆ 2022ರಲ್ಲಿ ನಿಯೋಜಿತರಾದ ಬಳಿಕ ಈ ಪ್ರಯತ್ನ ಮತ್ತಷ್ಟು ತೀಕ್ಷ್ಣವಾಯಿತು. ಛಾತ್ಪೂಜಾ ಗದ್ದಲದಲ್ಲಿ ಕಳೆದುಹೋದ ಮಹಿಳೆ ಮತ್ತು ಮೂರು ವರ್ಷದ ಮಗನನ್ನು ಪತ್ತೆ ಮಾಡಿದರು. ಬಳಿಕ 2024ರಲ್ಲಿ ಅವರನ್ನು ರೈಲ್ವೆ ಇಲಾಖೆಯ ಮಕ್ಕಳ ರಕ್ಷಣಾ ಉಪಕ್ರಮದ ಮುಖ್ಯಸ್ಥರನ್ನಾಗಿ ನೇಮಿಸಲಾಯಿತು. ಬಿಹಾರದಿಂದ ಪಂಜಾಬ್, ಹರ್ಯಾಣ ಹೀಗೆ ದೇಶದ ಉದ್ದಗಲಕ್ಕೂ ಕಳ್ಳಸಾಗಾಣಿಕೆದಾರರ ಜಾಲವನ್ನು ಬೇಧಿಸಿ ಹಲವು ಮಕ್ಕಳನ್ನು ಇವರ ಘಟಕ ರಕ್ಷಿಸಿದೆ.
ಅಪರೂಪದ ಅನುವಂಶಿಕ ಅಸ್ವಸ್ಥತೆ ಬಗ್ಗೆ ಜಾಗೃತಿ ಮೂಡಿಸುತ್ತಿರುವ ಇಂಡೋನೇಷ್ಯಾದ ಮನುರುಂಗ್ ಮನೆತನ
'ಹಲ್ಲಿ ಕುಟುಂಬ' ಎಂಬ ಕಳಂಕದಿಂದ ಜಾಗೃತಿಯವರೆಗೆ
ಮರಣ ಪೂರ್ವ ಹೇಳಿಕೆಗಳು ನಿಖರ, ಸಂಕ್ಷಿಪ್ತ, ಪ್ರಶ್ನೋತ್ತರ ರೂಪದಲ್ಲಿದ್ದು, ವಿಶ್ವಾಸಾರ್ಹವಾಗಿರಬೇಕು ಎಂದು ಹೈಕೋರ್ಟ್ ಆದೇಶಿಸಿದೆ. ಮಹಿಳೆಯೊಬ್ಬರಿಗೆ ಬೆಂಕಿ ಹಚ್ಚಿ ಸುಟ್ಟು ಹಾಕಿದ ಆರೋಪದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಆರೋಪಿಯನ್ನು ಖುಲಾಸೆಗೊಳಿಸಲಾಗಿದೆ. ಮರಣ ಪೂರ್ವ ಹೇಳಿಕೆ ಎರಡು ಪುಟಗಳಿದ್ದು, ವಿಶ್ವಾಸಾರ್ಹವಾಗಿಲ್ಲ ಎಂದು ನ್ಯಾಯಪೀಠ ತಿಳಿಸಿದೆ. ಮೃತರ ಹೇಳಿಕೆ ನೀಡಲು ಮಾನಸಿಕ, ದೈಹಿಕವಾಗಿ ಸಮರ್ಥರಿದ್ದರೇ ಎಂಬುದು ಸಂದೇಹ. ಮರಣಪೂರ್ವ ಹೇಳಿಕೆಯೊಂದನ್ನೇ ಅಧರಿಸಿ ಶಿಕ್ಷೆ ವಿಧಿಸಲು ಸಾಧ್ಯವಿಲ್ಲ ಎಂದು ಸುಪ್ರೀಂಕೋರ್ಟ್ ಆದೇಶಿಸಿದೆ.
ವಿಮಾನಯಾನ ಸೇವೆ ವ್ಯತ್ಯಯ | ಇಂಡಿಗೋ ಸಂಸ್ಥೆಗೆ 22 ಕೋಟಿ ರೂ. ದಂಡ !
ಹೊಸದಿಲ್ಲಿ: ಕಳೆದ ತಿಂಗಳು ವಿಮಾನಯಾನ ಸೇವೆಯಲ್ಲಿ ಆಗಿರುವ ಭಾರಿ ವ್ಯತ್ಯಯಕ್ಕೆ ಸಂಬಂಧಿಸಿದಂತೆ ನಾಗರಿಕ ವಿಮಾನಯಾನಗಳ ಮಹಾನಿರ್ದೇಶನಾಲಯ, ಇಂಡಿಗೋ ವಿಮಾನಯಾನ ಸಂಸ್ಥೆಗೆ 22.2 ಕೋಟಿ ರೂಪಾಯಿ ದಂಡ ವಿಧಿಸಿದೆ. ಹೆಚ್ಚುವರಿಯಾಗಿ, ವಿಮಾನ ಸುರಕ್ಷತೆಯನ್ನು ವಿಸ್ಕೃತಗೊಳಿಸುವುದು ಹಾಗೂ ಪೈಲಟ್ ಹಾಗೂ ಸಿಬ್ಬಂದಿಯ ಕರ್ತವ್ಯಗಳಿಗೆ ಸಂಬಂಧಿಸಿದ ನಿಯಮಗಳ ಅನುಷ್ಠಾನದ ಷರತ್ತಿಗಾಗಿ 50 ಕೋಟಿ ರೂಪಾಯಿಗಳ ಬ್ಯಾಂಕ್ ಗ್ಯಾರೆಂಟಿ ನೀಡಬೇಕಾಗುತ್ತದೆ. ನಿಯಮಗಳ ಅನುಷ್ಠಾನದ ಬಳಿಕ ಈ ಹಣ ಬಿಡುಗಡೆ ಮಾಡಲಾಗುತ್ತದೆ. ಸಂಸ್ಥೆಯ ಸಿಇಓ ಮತ್ತು ಸಿಓಓ ಸೇರಿದಂತೆ ಏರ್ ಲೈನ್ಸ್ ನ ಹಿರಿಯ ಅಧಿಕಾರಿಗಳಿಗೆ ನಿಯಂತ್ರಕ ಸಂಸ್ಥೆ ಎಚ್ಚರಿಕೆ ನೀಡಿದೆ. ಕಾರ್ಯಾಚರಣೆ ನಿಯಂತ್ರಣ ಕೇಂದ್ರದ ಹಿರಿಯ ಉಪಾಧ್ಯಕ್ಷರನ್ನು ಹುದ್ದೆಯಿಂದ ಕಿತ್ತುಹಾಕುವಂತೆಯೂ ಸೂಚಿಸಲಾಗಿದೆ. ಕಾರ್ಯಾಚರಣೆ ನಿಯಂತ್ರಣ ಕೇಂದ್ರದ ಹಿರಿಯ ಉಪಾಧ್ಯಕ್ಷರನ್ನು ಆ ಹುದ್ದೆಯಿಂದ ಕಿತ್ತುಹಾಕುವ ಜತೆಗೆ ಭವಿಷ್ಯದಲ್ಲಿ ಯಾವುದೇ ಹೊಣೆಗಾರಿಕೆಯ ಹುದ್ದೆ ನೀಡಬಾರದು. ಲೋಪವನ್ನು ಪತ್ತೆ ಮಾಡಲು ಮತ್ತು ಡಿಜಿಸಿಎ ನಿಯಮಾವಳಿಯ ಅಡಿಯಲ್ಲಿ ವ್ಯವಸ್ಥಿತ ಸುಧಾರಣೆಗಳನ್ನು ಜಾರಿಗೊಳಿಸುವ ಸಂಬಂಧ ಆಂತರಿಕ ತನಿಖೆ ನಡೆಸುವಂತೆ ವಿಮಾನಯಾನ ಸಚಿವಾಲಯ ಆದೇಶ ನೀಡಿದೆ ಎಂದು ತಿಳಿದು ಬಂದಿದೆ. ಕಳೆದ ತಿಂಗಳು ಇಂಡಿಗೋ ವಿಮಾನಗಳ ವೇಳಾಪಟ್ಟಿಯಲ್ಲಿ ಭಾರಿ ವ್ಯತ್ಯಯವಾದ ಹಿನ್ನೆಲೆಯಲ್ಲಿ ರಚಿಸಲಾಗಿದ್ದ ನಾಲ್ವರು ಸದಸ್ಯರ ಸಮಿತಿ ನೀಡಿದ ವರದಿಯನ್ನು ಶನಿವಾರ ರಾತ್ರಿ ನಿಯಂತ್ರಕ ಸಂಸ್ಥೆ ಬಿಡುಗಡೆ ಮಾಡಿದೆ.
ಇತಿಹಾಸದ ಪ್ರೇಮಿಗಳಿಗೆ ರಾಜ್ಯ ಪುರಾತತ್ವ ಇಲಾಖೆಯು ಸಿಹಿಸುದ್ದಿಯೊಂದನ್ನು ಕೊಟ್ಟಿದೆ. ಶಿಲಾಯುಗದ ಬಗ್ಗೆ ಹೆಚ್ಚು ಹುಡುಕಾಟ ನಡೆಸಿ ಹೆಣಗಾಡುವ ಬದಲಿಗೆ ಒಂದು ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡುವ ಮೂಲಕ ಮಾಹಿತಿ ಪಡೆದುಕೊಳ್ಳುವ ರೀತಿ ವ್ಯವಸ್ಥೆಯನ್ನು ಜಾರಿ ಮಾಡಿದೆ. ಆ ಮೂಲಕ ಕರ್ನಾಟಕದ 200ಕ್ಕೂ ಹೆಚ್ಚು ಪ್ರಾಚೀನ ಐತಿಹಾಸಿಕ ತಾಣಗಳ ಸಮಗ್ರ ಮಾಹಿತಿ ಈಗ ಸುಲಭವಾಗಿ ದೊರಕಲಿದೆ. ಈ ತಾಣಗಳ ವಿವರಗಳನ್ನು ಕನ್ನಡ ಮತ್ತು ಇಂಗ್ಲಿಷ್ನಲ್ಲಿ ಡಿಜಿಟಲ್ ಹಾಗೂ ಪುಸ್ತಕ ರೂಪದಲ್ಲಿ ಇರಲಿದೆ.
ಜಿಲ್ಲಾ ಕೇಂದ್ರವಾಗುವ ಅರ್ಹತೆಯಿದ್ದರೂ ಸಾರಿಗೆ ಕೊರತೆ ಅನುಭವಿಸುತ್ತಿರುವ ಇಂಡಿ
ವಿಜಯಪುರ: ಇಂಡಿ ನಗರವಾಗಿ ಮೇಲ್ದರ್ಜೆಗೇರಿದೆ, ಜಿಲ್ಲಾ ಕೇಂದ್ರವಾಗುವ ಎಲ್ಲ ಸೌಲಭ್ಯಗಳನ್ನು ಹೊಂದುವ ಮೂಲಕ ಜಿಲ್ಲಾ ಕೇಂದ್ರ ರಚನೆಯ ಕೂಗು ಇಂಡಿಯಲ್ಲಿ ಪ್ರಬಲಗೊಂಡಿದೆ. ಆದರೆ, ನಗರ ಸಾರಿಗೆ ಕೊರತೆ ವ್ಯಾಪಕವಾಗಿದ್ದು ಈ ಕೊರತೆ ನೀಗಿದರೆ ಇಂಡಿ ಜನತೆಗೆ ಅನುಕೂಲವಾಗಲಿದೆ. ವಿವಿಧ ಅಭಿವೃದ್ಧಿ ಕಾಮಗಾರಿಗಳ ಫಲವಾಗಿ ಇಂಡಿಯಲ್ಲಿ ನೆಲೆಸುವವರ ಸಂಖ್ಯೆ ಹೆಚ್ಚುತ್ತಿದೆ. ಇಂಡಿ ನಗರದಲ್ಲಿಯೇ 50 ಸಾವಿರ ಕ್ಕೂ ಅಧಿಕ ಜನಸಂಖ್ಯೆ ಇದೆ. ಆದರೆ ನಗರ ಸಾರಿಗೆ ವ್ಯವಸ್ಥೆ ಅತ್ಯಂತ ಹೀನಾಯ ಸ್ಥಿತಿಯಲ್ಲಿದ್ದು ಕೇವಲ ಎರಡು ಬಸ್ಗಳು ಮಾತ್ರ ಸಂಚರಿಸುತ್ತಿವೆ. ನಗರ ವ್ಯಾಪ್ತಿಯೂ ಬೆಳೆಯುತ್ತಿರುವುದರಿಂದ ಒಂದು ಪ್ರದೇಶದಿಂದ ಇನ್ನೊಂದು ಪ್ರದಶಕ್ಕೆ ಸಂಚರಿಸಲು ಇಂಡಿ ಜನತೆ ಹೈರಾಣಾಗುವಂತಾಗಿದೆ. ಇನ್ನೊಂದೆಡೆ ಖಾಸಗಿ ವಾಹನಗಳ ಮೇಲೆ ಅವಲಂಬಿತರಾಗುತ್ತಿರುವುದು ಅವರ ಜೇಬಿಗೆ ಹೊರೆ ಬೀಳುವಂತೆ ಮಾಡಿದೆ. ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ ಪಾಟೀಲ ಅವರು ಕೂಡಾ ಜಿಲ್ಲೆಗೆ ಇನ್ನೂ ಹೆಚ್ಚಿಗೆ ಬಸ್ ಬೇಕು ಎಂದು ಪತ್ರ ಬರೆದು ಮುಖ್ಯಮಂತ್ರಿಗಳ ಗಮನ ಸೆಳೆದಿದ್ದಾರೆ. ಈಗಾಗಲೇ ಶಾಸಕ ಯಶವಂತರಾಯಗೌಡ ಪಾಟೀಲ ಅವರು ನಗರ ಪ್ರದೇಶದಲ್ಲಿನ ಸಾರ್ವಜನಿಕರಿಗೆ ಸಾರಿಗೆ ಅನುಕೂಲ ಕಲ್ಪಿಸಬೇಕು ಎಂಬ ಚಿಂತನೆಯಿಂದ ನಗರ ಸಾರಿಗೆ ಪ್ರಾರಂಭಿಸಿ ಈಗ 9 ತಿಂಗಳು ಕಳೆಯುತ್ತಿದೆ. ನಗರ ಸಾರಿಗೆ ಸೇವೆಯು ಪ್ರಾರಂಭವಾದ ದಿನದಿಂದಲೇ ಜನರಿಂದ ಉತ್ತಮ ಪ್ರತಿಕ್ರಿಯೆ ಪಡೆಯುತ್ತಿದೆ. ನಗರ ಸಾರಿಗೆ ಬಸ್ಗಳ ಸಂಚಾರ ಶುರುವಾದ ಬಳಿಕ ಖಾಸಗಿ ವಾಹನಗಳಿಗೆ ಸ್ವಲ್ಪಮಟ್ಟಿಗೆ ಕಡಿವಾಣ ಬಿದ್ದಿದೆ. ನಗರ ಸಾರಿಗೆ ಬಸ್ಗಳು ಆರಂಭವಾದ ಬಳಿಕ ಸಾರ್ವಜನಿಕರು ಖಾಸಗಿ ವಾಹನಗಳತ್ತ ಮುಖ ಮಾಡುವುದು ಕಡಿಮೆಯಾಗಿದ್ದು, ನಗರ ಸಾರಿಗೆ ಬಸ್ಸಿನ ದಾರಿ ಕಾಯುತ್ತಿದ್ದಾರೆ. ಪ್ರತಿ ದಿನ ಮೂರು ಮಾರ್ಗಗಳಲ್ಲಿ ನಗರ ಸಾರಿಗೆ ಬಸ್ ಓಡಿಸಲಾಗುತ್ತಿದೆ. ನಗರ ಸಾರಿಗೆ ಜನಪ್ರಿಯತೆ ಹೆಚ್ಚಾದಂತೆ ಹೆಚ್ಚಿನ ಸಾರಿಗೆ ಬಸ್ ಗಳ ಬೇಡಿಕೆಯೂ ಹೆಚ್ಚಾಗಿದೆ. ನಗರ ಬಸ್ ನಿಲ್ದಾಣದಿಂದ ಸರಕಾರಿ ವಿಜಯಪುರ ರಸ್ತೆಯ ಆಸ್ಪತ್ರೆ, ಕೆಇಬಿ, ಚರ್ಚ್, ಆದರ್ಶ ಶಾಲೆ, ವಾಟರ್ ಟ್ಯಾಂಕ್ (ಸೇವಾಲಾಲ್ ವೃತ್ತ), ಸಿಂದಗಿ ರಸ್ತೆಯ ಶ್ರೀ ಶಾಂತೇಶ್ವರ ಮಂಗಲ ಕಾರ್ಯಾಲಯ, ವೀರ ಭಾರತಿ ಶಾಲೆ, ಧನಶೆಟ್ಟಿ ತಾಂಡಾ, ಸಾಲೋಟಗಿ ಹಾಗೂ ರೈಲು ನಿಲ್ದಾಣ ಮಾರ್ಗಗಳಲ್ಲಿ ಸಾರಿಗೆ ಬಸ್ಗಳು ಸಂಚರಿಸುತ್ತಿದ್ದು, ಪ್ರತಿ 20 ನಿಮಿಷಕ್ಕೊಮ್ಮೆಯಾದರೂ ಈ ಮಾರ್ಗದಲ್ಲಿ ಬಸ್ ಓಡಿಸಬೇಕೆನ್ನುವುದು ಇಲ್ಲಿನ ನಗರ ನಿವಾಸಿಗಳ ಬೇಡಿಕೆಯಾಗಿದೆ. ಈಗಾಗಲೇ ಓಡುತ್ತಿರುವ ನಗರ ಸಾರಿಗೆಯನ್ನು ಮಹಿಳೆಯರು, ವಿದ್ಯಾರ್ಥಿಗಳು, ವೃದ್ಧರು, ಯುವಕರು ಸೇರಿದಂತೆ ಸಾಮಾನ್ಯ ಸಾರ್ವಜನಿಕರು ಈ ಹೆಚ್ಚು ಪ್ರಮಾಣದಲ್ಲಿ ಬಳಸಿಕೊಳ್ಳುತ್ತಿದ್ದಾರೆ. ‘ಹೆಚ್ಚಿನ ಪ್ರಯಾಣಿಕರು ಈ ಸೌಲಭ್ಯವನ್ನು ಬಳಸಿಕೊಳ್ಳುವುದಕ್ಕಾಗಿ ನಗರ ಸಾರಿಗೆ ಬಸ್ ಸಂಚಾರ ಮಾರ್ಗಗಳ ಜೊತೆಗೆ ಬಸ್ಸುಗಳ ಸಂಖ್ಯೆಯನ್ನು ಕೂಡಾ ಹೆಚ್ಚಿಸಬೇಕಾಗಿದೆ. ದಿನದಿಂದ ದಿನಕ್ಕೆ ಪ್ರಯಾಣಿಕರ ಸಂಖ್ಯೆ ಹೆಚ್ಚಾಗುತ್ತಿದೆ. ಪ್ರತಿ ಕಿ.ಮೀ.ಗೆ ಸಾರಿಗೆ ಸಂಚಾರಕ್ಕೆ 50 ರೂಗಳ ವೆಚ್ಚವಾಗುತ್ತಿದೆ. ಸರಾಸರಿ ನೋಡಿದರೆ ನಗರ ಸಾರಿಗೆ ಓಡಾಟದಿಂದ ಕಿಮೀಗೆ 40 ರೂ.ಗಳು ದೊರೆಯುತ್ತಿದೆ. ಆದರೂ, ನಗರ ಸಾರಿಗೆಯಿಂದ ಸಂಸ್ಥೆಗೆ ಹಾನಿಯಿಲ್ಲ. ಮೂರು ನಗರ ಸಾರಿಗೆ ಬಸ್ ಓಡಾಟಕ್ಕೂ ಕಿಮೀ ಗಳಿಕೆಗೂ ಹೊಂದಾಣಿಕೆ ಇದೆ. ಶಾಸಕರು ಇನ್ನೂ ಮೂರು ಬಸ್ ಗಳ ಬೇಡಿಕೆ ಇಟ್ಟಿದ್ದಾರೆ. ಅವು ಸಧ್ಯದಲ್ಲಿ ಬರಲಿವೆ ಎಂದು ಹೆಸರು ಹೇಳಲಿಚ್ಛಿಸದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಎಪ್ರಿಲ್ ತಿಂಗಳಲ್ಲಿ ಇಂಡಿಯಲ್ಲಿ ನಗರ ಸಾರಿಗೆ ಪ್ರಾರಂಭಿಸಲಾಯಿತು. ಅಂದಿನಿಂದ ಇಂದಿನವರೆಗೆ ಪ್ರಯಾಣಿಕರ ಕೊರತೆ, ಆರ್ಥಿಕ ನಷ್ಟದಿಂದ ನಗರ ಸಾರಿಗೆ ಸ್ಥಗತ ಆಗಿರುವುದಿಲ್ಲ. ಜನಸ್ಪಂದನೆ ಉತ್ತಮವಾಗಿರುವುದರಿಂದ, ಸಾರ್ವಜನಿಕರು ನಗರ ಸಾರಿಗೆಯ ನಿರಂತರತೆ ಕಾಪಾಡುವತ್ತ ಆಶಾವಾದಿ ದೃಷ್ಟಿಯಿಂದ ನೋಡುತ್ತಿದ್ದಾರೆ. ಇಲ್ಲಿಗೆ ನಗರ ಸಾರಿಗೆ ವ್ಯವಸ್ಥೆಯಾಗಬೇಕೆಂದು ಹೋರಾಟ ಮಾಡಲಾಗಿತ್ತು. ಶಾಸಕರು ನಗರ ಸಾರಿಗೆ ಓಡಾಟಕ್ಕೆ ಕ್ರಮ ಕೈಗೊಂಡಿದ್ದಾರೆ. ನಗರದಲ್ಲಿ 3-4 ಕೂತು ಪ್ರಯಾಣಿಸುವ ಆಟೋಗಳಲ್ಲಿ ಪ್ರಯಾಣ ಮಾಡಲು ಒಬ್ಬನಿಗೆ ಕನಿಷ್ಠ 50ರೂ. ಪಾವತಿಸಬೇಕು. ತುಸು ದೂರದ ಪ್ರಯಾಣಕ್ಕೆ 100 ರೂ. ತನಕೂ ತೆರಬೇಕಾಗುತ್ತದೆ. ಸರ್ವೀಸ್ ಓಡುವ ಅಟೋ-ಪಿಯಾಜೋಗಳಿಗೆ ತಲಾ 20 ರೂ. ನಂತೆ ನೀಡಬೇಕು. ಅದರೆ ನಗರ ಸಾರಿಗೆ ಆರಂಭವಾದ ಬಳಿಕ ಈ ವೆಚ್ಚವು 6 ರಿಂದ 10 ರೂ.ಗಳಿಗೆ ಇಳಿಕೆಯಾಗಿದೆ. ಹಾಗಾಗಿ, ನಗರದ 23 ವಾರ್ಡುಗಳಿಗೂ ನಗರ ಸಾರಿಗೆ ಸಂಚಾರ ವಿಸ್ತರಣೆ ಆದರೆ, ಸಾರ್ವಜನಿಕ ಸಾರಿಗೆ ಸೇವೆಯ ಲಾಭ ಇನ್ನಷ್ಟು ಸಾರ್ವಜನಿಕರನ್ನು ತಲುಪುತ್ತದೆ. ಇದರಿಂದ ಸಾರಿಗೆ ಸಂಸ್ಥೆಗೂ ಲಾಭವಾಗಲಿದೆ. ನಗರದ ಸುತ್ತ ವರ್ತುಲ ಸಂಚಾರ ಪ್ರಾರಂಭಿಸಿ ವಿದ್ಯಾರ್ಥಿಗಳಿಗೆ, ಕಾರ್ಮಿಕರಿಗೆ, ಎಪಿಎಂಸಿ ಮಾರುಕಟ್ಟೆ, ರೇವಪ್ಪನ ಮಡ್ಡಿ, ಇಂಗಳಗಿ ತಾಂಡಾದವರೆಗಿನ ಮಾರ್ಗಗಳಲ್ಲಿ ಬಸ್ ಸಂಚಾರ ಅತ್ಯಗತ್ಯವಾಗಿದೆ. ಇದರಿಂದ ಇಲ್ಲಿನ ಜನರಿಗೆ ಬಹಳ ಅನುಕೂಲವಾಗಲಿದೆ ಎಂದು ಹೇಳುತ್ತಾರೆ ಇಂಡಿ ನಿವಾಸಿ ಚವಡಪ್ಪಾ ಜನ್ನಾ. ನಗರ ಸಾರಿಗೆ ಬಸ್ಸಿನಿಂದ ಶಾಲೆ, ಕಾಲೇಜಿಗೆ ಹೋಗಲು ಅನುಕೂಲವಾಗಿದೆ. ನಗರ ಸಾರಿಗೆ ಬಸ್ ಇಲ್ಲದಿದ್ದಾಗ ಬಸ್ಸಿಗಾಗಿ ಕಾಯುತ್ತಾ ನಿಲ್ಲಬೇಕಾಗುತಿತ್ತು. ಕಾಲೇಜು ಅವಧಿ ಮುಗಿದ ಮೇಲೆ ಹೋಗಬೇಕಾಗಿತ್ತು. ಸಧ್ಯ ನಗರ ಸಾರಿಗೆಯಿಂದ ಅನುಕೂಲವಾಗಿದೆ. -ಸಿದ್ದಾರ್ಥ, ವಿದ್ಯಾರ್ಥಿ ನಗರ ವ್ಯಾಪ್ತಿಯಲ್ಲಿ ಎರಡು ನಗರ ಸಾರಿಗೆ ಬಸ್ ಗಳು ಓಡಾಡುತ್ತಿವೆ. ಇದರಿಂದ ಶಾಲೆ,ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳಿಗೆ ಅನುಕೂಲವಾಗಿದೆ.ಪ್ರಯಾಣಿಕರಿಂದ ನಗರ ಸಾರಿಗೆ ಬಸ್ ಗಳ ಬೇಡಿಕೆ ಇದೆ. ಹೊಸ ಬಸ್ ಗಳು ಬಂದ ಮೆಲೆ ನಗರ ಸಾರಿಗೆ ಹೆಚ್ಚಿನ ಬಸ್ ಓಡಿಸಲಾಗುತ್ತದೆ. -ರೇವಣಸಿದ್ದಪ್ಪ ಖೈನೂರ ಘಟಕ ವ್ಯವಸ್ಥಾಪಕರು, ಇಂಡಿ ಇಂಡಿ ನಗರಕ್ಕೆ ಜಿಲ್ಲಾ ಸ್ಥಾನಮಾನ ದೊರಕಿಸಿಕೊಡಬೇಕು. ಜಿಲ್ಲೆಯಲ್ಲಿನ ಎಲ್ಲಾ ಸೌಲಭ್ಯಗಳು ಇಂಡಿಯಲ್ಲಿ ದೊರೆಯಬೇಕು ಎಂಬ ಉದ್ದೇಶದಿಂದ ಮಿನಿ ವಿಧಾನಸೌಧ, ಸೇರಿದಂತೆ ಹಲವು ಸೌಲಭ್ಯಗಳ ಜತೆಗೆ ನಗರ ಸಾರಿಗೆ ಸೇವೆ ನಗರ ವಾಸಿಗಳಿಗೆ ದೊರಕಿಸಿ ಕೊಡುವ ಉದ್ದೇಶದಿಂದ ನಗರ ಸಾರಿಗೆ ಬಸ್ ಓಡಾಟಕ್ಕೆ ಚಾಲನೆ ನೀಡಲಾಗಿದೆ. ಸಾರ್ವಜನಿಕರಿಂದ ಹೆಚ್ಚಿನ ಬೇಡಿಕೆ ಇರುವುದರಿಂದ ಬಸ್ ಗಳ ಸಂಖ್ಯೆ ಹೆಚ್ಚಿಗೆ ಮಾಡಲು ಅಧಿಕಾರಿಗಳಿಗೆ ತಿಳಿಸಲಾಗುತ್ತದೆ. -ಯಶವಂತರಾಯಗೌಡ ಪಾಟೀಲ ಶಾಸಕರು, ಇಂಡಿ
ಕಲಬುರಗಿ | ಕಾಚಾಪೂರ ಮಾದರಿ ಶಾಲೆಯ ಮಕ್ಕಳಿಗೆ ಬಯಲೇ ವಿದ್ಯಾಲಯ
ಕಲಬುರಗಿ ಜಿಲ್ಲೆಯ ಕಾಚಾಪೂರ ಗ್ರಾಮದ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕೊಠಡಿಗಳ ಕೊರತೆಯಿಂದ ಮಕ್ಕಳು ಬಯಲಲ್ಲೇ ಕುಳಿತು ಪಾಠ ಕೇಳಬೇಕಾದ ಸಂದರ್ಭ ಬಂದೊದಗಿದೆ. ಶಾಲೆಯಲ್ಲಿ 1 ರಿಂದ 8ನೇ ತರಗತಿವರೆಗೂ ಒಟ್ಟು 296 ವಿದ್ಯಾರ್ಥಿಗಳು ಇದ್ದಾರೆ. ಒಂದು ಕೊಠಡಿಯಲ್ಲಿ 50-60 ವಿದ್ಯಾರ್ಥಿಗಳು ಕುಳಿತು ಪಾಠ ಕೇಳಬೇಕಾದ ದುಃಸ್ಥಿತಿ ಇದೆ. ಒಂದೇ ಕೊಠಡಿಯಲ್ಲಿ ಎರಡೆರಡು ತರಗತಿಯ ವಿದ್ಯಾರ್ಥಿಗಳಿಗೆ ಪಾಠ ಬೋಧನೆ ಮಾಡಲಾಗುತ್ತಿದ್ದು ಮಕ್ಕಳು ಕಿರಿಕಿರಿ ಅನುಭವಿಸುತ್ತಿದ್ದಾರೆ. ಶಿಕ್ಷಕರು ಮಾಡಿದ ಪಾಠವನ್ನು ಮಕ್ಕಳು ಮನನ ಮಾಡಿಕೊಳ್ಳಲು ಸಮಸ್ಯೆ ಎದುರಿಸುತ್ತಿದ್ದಾರೆ. 6 ಕೊಠಡಿ ಶಿಥಿಲ: ಶಾಲೆಯಲ್ಲಿ ಒಟ್ಟು 9 ಕೊಠಡಿಗಳಿವೆ. ಆದರೆ 6 ಕೊಠಡಿಗಳು ಶಿಥಿಲಗೊಂಡಿವೆ. ಇವುಗಳನ್ನು 6 ತಿಂಗಳುಗಳಿಂದ ಮುಚ್ಚಲಾಗಿದೆೆ. ಮಕ್ಕಳ ಸಂಖ್ಯೆಗೆ ಅನುಗುಣವಾಗಿ 8-12 ಕೊಠಡಿಗಳ ಅವಶ್ಯಕತೆ ಇದೆ. ಆದರೆ, ವಿದ್ಯಾರ್ಥಿಗಳು ಶಾಲಾ ಆವರಣದಲ್ಲಿ ಗಾಳಿ, ಬಿಸಿಲು, ಧೂಳು ಲೆಕ್ಕಿಸದೆ ಗಿಡದ ನೆರಳಿನಲ್ಲಿ ಕುಳಿತು ಪಾಠ ಕೇಳುವಂತಾಗಿದೆ. ಶಿಕ್ಷಕರ ಕೊರತೆ : ಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಪ್ರತಿ ವರ್ಷ ಹೆಚ್ಚಾಗುತ್ತಿದ್ದು, ವಿದ್ಯಾರ್ಥಿಗಳ ಸಂಖ್ಯೆಗನುಗುಣವಾಗಿ ಶಿಕ್ಷಕರ ಕೊರತೆ ಇದೆ. ಅತಿಥಿ ಶಿಕ್ಷಕರೇ ಮಕ್ಕಳಿಗೆ ಬೋಧನೆ ಮಾಡುತ್ತಿದ್ದಾರೆ. ಶಿಕ್ಷಣ ಇಲಾಖೆಮಕ್ಕಳ ಸಂಖ್ಯೆಗನುಗುಣವಾಗಿ ಕೊಠಡಿ ನಿರ್ಮಿಸುವುದರ ಜತೆಗೆ ಶಿಕ್ಷಕರನ್ನು ನಿಯೋಜಿಸಬೇಕು ಎನ್ನುವುದು ಶಿಕ್ಷಣ ಪ್ರೇಮಿಗಳ ಒತ್ತಾಯ. ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಕೊಠಡಿಗಳು ಇಲ್ಲ. ಹೀಗಾಗಿ ಮಕ್ಕಳಿಗೆ ಗಿಡದ ನೆರಳಲ್ಲಿ ಬೋಧನೆ ಮಾಡಲಾಗುತ್ತಿದೆ. ಹೊಸ ಕೊಠಡಿಗಳನ್ನು ನಿರ್ಮಿಸುವಂತೆ ಶಾಲೆಯ ವತಿಯಿಂದ ಶಾಸಕರಿಗೆ ಮನವಿ ಮಾಡಿದ್ದೇವೆ. <ಪ್ರೇಮ ಸಿಂಗ್ ಚವ್ಹಾಣ ಮುಖ್ಯಶಿಕ್ಷಕ, ಕಾಚಾಪೂರ ಮಕ್ಕಳು ಬಿಸಿಲು, ಮಳೆ, ಚಳಿಯೆನ್ನದೆ ಬಯಲಲ್ಲೇ ಪಾಠ ಕೇಳುತ್ತಿದ್ದಾರೆ. ಕಲಿಕೆಗೆ ಎಲ್ಲಕ್ಕಿಂತ ಮುಖ್ಯವಾಗಿ ಇರಬೇಕಾಗಿರುವುದು ಉತ್ತಮ ಪರಿಸರ. ಆದರೆ ಈ ಶಾಲೆಯ ಮಕ್ಕಳಿಗೆ ಕನಿಷ್ಠ ಸೌಕರ್ಯವಾದ ಕೊಠಡಿಯೂ ಇಲ್ಲ. ಇದರಿಂದಾಗಿ ಮಕ್ಕಳು ಏಕಾಗ್ರತೆಯಿಂದ ಕಲಿಯಲು ಆಗುವುದಿಲ್ಲ. ಕಲಿಕೆಗೆ ಉತ್ತಮ ವಾತಾವರಣ ಕಲ್ಪಿಸಲು ಆದಷ್ಟು ಬೇಗ ಸರಕಾರ ಕೊಠಡಿ ಸೌಕರ್ಯ ಒದಗಿಸಬೇಕು. <ನಿಂಗಪ್ಪ, ಕಾಚಾಪೂರ, ಗ್ರಾಮಸ್ಥ
ಹೆಸರಿಗಷ್ಟೇ ಸೀಮಿತ, ನೈಜ ‘ಕಲ್ಯಾಣ ಕರ್ನಾಟಕ’ ಯಾವಾಗ?
‘ಕರ್ನಾಟಕದಲ್ಲಿ ಎರಡು ಕರ್ನಾಟಕಗಳಿವೆ. ಒಂದು ಸಮೃದ್ಧ ಕರ್ನಾಟಕ, ಇನ್ನೊಂದು ಹಿಂದುಳಿದಿರುವ ಕರ್ನಾಟಕ’ ಎಂದು 15ನೇ ಹಣಕಾಸು ಆಯೋಗದ ಅಧ್ಯಕ್ಷ ಎನ್.ಕೆ.ಸಿಂಗ್ ಹೇಳಿರುವುದು ರಾಜ್ಯದಲ್ಲಿ ಪ್ರಾದೇಶಿಕ ಅಸಮತೋಲನೆ ಜ್ವಲಂತವಾಗಿದೆ ಎನ್ನುವುದಕ್ಕೆ ತಾಜಾ ಉದಾಹರಣೆಯಾಗಿದೆ. ಅದಕ್ಕಾಗಿ ಡಾ.ನಂಜುಂಡಪ್ಪ ವರದಿ ಶಿಫಾರಸಿನಂತೆ ಕಲ್ಯಾಣದ ಅಭಿವೃದ್ಧಿಗೆ ಹೆಚ್ಚು ಆದ್ಯತೆ ನೀಡುವ ಕೆಲಸವನ್ನು ಸರಕಾರ ಮಾಡಬೇಕಿದೆ. ಕಲ್ಯಾಣ ಕರ್ನಾಟಕ ರಾಜ್ಯದ ಇತರೆ ಭಾಗಗಳಂತೆ ಯಾವುದೇ ಕ್ಷೇತ್ರದಲ್ಲೂ ಅಭಿವೃದ್ಧಿಯಾಗುತ್ತಿಲ್ಲ. ಆರೋಗ್ಯ, ಶಿಕ್ಷಣ, ಕೈಗಾರಿಕೆಗಳು, ಮೌಲಸೌಕರ್ಯಗಳಿಂದ ವಂಚಿತವಾಗಿದ್ದು, ಇನ್ನೂ ಸಹ ಸಮಾನ ಮತ್ತು ಸರ್ವಾಂಗೀಣ ಅಭಿವೃದ್ಧಿ’ ಕನಸಿನ ಬೆನ್ನೇರಿ ಹೊರಟಿದೆ. ಸಂವಿಧಾನದ ವಿಧಿ 371ಜೆ ಅಡಿ ಪ್ರಕಾರ ವಿಶೇಷ ಸ್ಥಾನಮಾನ ಸಿಕ್ಕು ದಶಕ ಕಳೆದರೂ ಇಲ್ಲಿನ ಜನರ ಬದುಕಿನ ಗುಣಮಟ್ಟದಲ್ಲಿ ಸುಧಾರಣೆಯಾಗುವ ಮುನ್ಸೂಚನೆ ಸಿಗುತ್ತಿಲ್ಲ. ಕಲ್ಯಾಣ ಕರ್ನಾಟಕದ ಐತಿಹಾಸಿಕತೆ : ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ, ಬಲಿದಾನದ ಫಲವಾಗಿ ದೇಶಕ್ಕೆ 1947 ಅಗಸ್ಟ್ 15ರಂದು ಸ್ವಾತಂತ್ರ್ಯ ಸಿಕ್ಕರೆ ಹೈದರಾಬಾದ್ ಪ್ರಾಂತ್ಯಕ್ಕೆ ಒಂದು ವರ್ಷ ತಡವಾಗಿ, ಅಂದರೆ 1948 ಸೆಪ್ಟೆಂಬರ್ 17ರಂದು ಸ್ವಾತಂತ್ರ್ಯ ದೊರೆಯಿತು. ಅದರಂತೆ ಕಲ್ಯಾಣ ಕರ್ನಾಟಕ ವಿಮೋಚನೆಗೂ ಸಾಕಷ್ಟು ರಕ್ತಸಿಕ್ತವಾದ ಇತಿಹಾಸವಿದೆ. 1947 ಆಗಸ್ಟ್ 15ರಂದು ಭಾರತ ದೇಶ ಸ್ವತಂತ್ರವಾಯಿತು. ದೇಶದ ಹಲವು ರಾಜರು ಭಾರತದ ಒಕ್ಕೂಟಕ್ಕೆ ತಮ್ಮ ರಾಜ್ಯವನ್ನು ಸೇರಿಸಿದರು. ಆದರೆ ಹೈದರಾಬಾದ್ ಪ್ರಾಂತ್ಯದ ರಾಜ ನಿಜಾಮ, ಒಕ್ಕೂಟಕ್ಕೆ ಸೇರಲು ಒಪ್ಪದೆ ಸ್ವತಂತ್ರ ಆಡಳಿತ ನಡೆಸುವುದಾಗಿ ಘೋಷಿಸಿಕೊಂಡಿದ್ದ. ಇದರಿಂದಾಗಿ ಹೈದರಾಬಾದ್ ಕರ್ನಾಟಕದ ಕಲಬುರಗಿ, ಬೀದರ್, ಯಾದಗಿರಿ, ರಾಯಚೂರು ಮತ್ತು ಕೊಪ್ಪಳ ಜಿಲ್ಲೆಗಳು ಸ್ವತಂತ್ರವಾಗಲಿಲ್ಲ. ನಿಜಾಮರ ನಿರ್ಧಾರ ಹೈದರಾಬಾದ್ ಪ್ರಾಂತ್ಯದ ಜನರನ್ನು ರೊಚ್ಚಿಗೆಬ್ಬಿಸಿತು. ಭಾರತದ ಒಕ್ಕೂಟಕ್ಕೆ ಸೇರಿಸಲು ಈ ಭಾಗದಲ್ಲಿ ಮತ್ತೊಂದು ಸ್ವಾತಂತ್ರ ಚಳುವಳಿ ನಡೆಯಿತು. ಅಲ್ಲಿಯೂ ಸಾಕಷ್ಟು ಜೀವಗಳು ಬಲಿಯಾದವು. ದೇಶೀಯ ಆಳರಸ ಹೈದರಾಬಾದ್ ನಿಜಾಮನಿಂದ 1948ರ ಸೆ.17ರಂದು ವಿಮೋಚನೆ ಪಡೆದ ಕನ್ನಡದ ಪ್ರದೇಶಗಳನ್ನು ‘ಹೈದರಾಬಾದ್ ಕರ್ನಾಟಕ’ ಎಂಬ ಹೆಸರಿನಿಂದ ಕರೆಯಲಾಗುತ್ತಿತ್ತು. ಈ ಪರಕೀಯ ಹೆಸರು ವಚನಕಲ್ಯಾಣ ನೆಲದ ಭಾವಪ್ರಜ್ಞೆಗೆ ಉಚಿತ ಎನಿಸುತ್ತಿರಲಿಲ್ಲ. ಹಾಗಾಗಿ, 2019ರ ‘ಹೈದರಾಬಾದ್ ಕರ್ನಾಟಕದ ವಿಮೋಚನಾ ದಿನ’ದ ಸಂದರ್ಭದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು, ‘ಕಲ್ಯಾಣ ಕರ್ನಾಟಕ’ ಎಂದು ಮರು ನಾಮಕರಣ ಮಾಡಿದರು. ಆದರೆ ಅಂದು ಹೆಸರು ಬದಲಾವಣೆ ಆಯ್ತೇ ಹೊರತು ಜನರ ಸ್ಥಿತಿಗತಿಯಲ್ಲಿ ಯಾವ ಕಲ್ಯಾಣವೂ ಆಗಲಿಲ್ಲ. ಹಿಂದುಳಿದ ‘ಹೈದರಾಬಾದ್ ಕರ್ನಾಟಕ’ದ ಹೆಸರನ್ನು ‘ಕಲ್ಯಾಣ ಕರ್ನಾಟಕ’ವೆಂದು ನಾಮಕರಣ ಮಾಡಿ ವರ್ಷಗಳೇ ಗತಿಸಿದರೂ ಜನಕಲ್ಯಾಣ, ನಿಜಕಲ್ಯಾಣ ಆಗಲಿಲ್ಲ ಎನ್ನುವ ಬಗ್ಗೆ ಜನಾಕ್ರೋಶವಿದೆ. 2019ರಲ್ಲಿ ಕಲ್ಯಾಣ ಕರ್ನಾಟಕವೆಂದು ಹೆಸರು ಬದಲಿಸಲಾಯಿತು. ಆದರೆ ಅದು ಹೆಸರಿಗಷ್ಟೇ ಕಲ್ಯಾಣವಾಗಿದೆ. ಇದಕ್ಕೆ ರಾಜ್ಯ ಸರಕಾರವೇ ಪ್ರತಿ ವರ್ಷ ಪ್ರಕಟಿಸುವ ಆರ್ಥಿಕ ಸಮೀಕ್ಷೆ, ಕೇಂದ್ರ ಸರಕಾರದ ಆರೋಗ್ಯ ಸಮೀಕ್ಷೆಗಳೇ ನಿದರ್ಶನ. ರಾಜ್ಯದ ಬೆಂಗಳೂರು ವಿಭಾಗಕ್ಕೆ ಹೋಲಿಸಿದರೆ ತಲಾ ಆದಾಯ, ಮಾನವ ಅಭಿವೃದ್ಧಿ ಸೂಚ್ಯಂಕ, ಶಿಕ್ಷಣದಲ್ಲಿ ಕಲ್ಯಾಣ ಕರ್ನಾಟಕದ ಜಿಲ್ಲೆಗಳೇ ಯಾವಾಗಲೂ ಕೊನೇ ಸ್ಥಾನದಲ್ಲಿರುತ್ತವೆ. ಹಿಂದುಳಿದ ಭಾಗದ ಅಭಿವೃದ್ಧಿಗಾಗಿ ಸಂವಿಧಾನದ 371ಜೆ ತಿದ್ದುಪಡಿ ಜಾರಿಗೊಳಿಸಲಾಗಿದೆ. ಆದರೆ ಇದು ಅನುಷ್ಠಾನಕ್ಕೆ ಬಂದು ಒಂದು ದಶಕ ಗತಿಸಿದರೂ ಜನರ ಜೀವನ ಸುಧಾರಿಸಿಲ್ಲ ಎನ್ನುವುದು ನಾಚಿಕೆಗೇಡಿನ ಸಂಗತಿ ಎನ್ನುತ್ತಾರೆ ಆರ್ಥಿಕ ತಜ್ಞರು. ಉತ್ತರ ಕರ್ನಾಟಕದ ಜ್ವಲಂತ ಸಮಸ್ಯೆಗಳ ಬಗ್ಗೆ ಚರ್ಚಿಸಲು ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ವರ್ಷಕ್ಕೊಮ್ಮೆ ನಡೆಯುವ ಅಧಿವೇಶನವೂ ಹೆಸರಿಗಷ್ಟೇ. ಯಾವುದೇ ಅಭಿವೃದ್ಧಿ ಇಲ್ಲದಂತಾಗಿದೆ. ರಾಜಕೀಯ ಕೆಸರೆರಚಾಟಕ್ಕೆ ಸದನ ಬಲಿಯಾಗಿ ಕೊನೇ ದಿನದಲ್ಲಿ ಕಾಟಾಚಾರಕ್ಕೆ ಎನ್ನುವಂತೆ ಉತ್ತರ ಕರ್ನಾಟಕ ಭಾಗದ ಚರ್ಚೆಯಾಗುತ್ತಿರುವ ಬಗ್ಗೆಯೂ ಜನರು ಭ್ರಮನಿರಸನಗೊಂಡಿದ್ದಾರೆ. ಕಲ್ಯಾಣದ ಜನರ ನಿರೀಕ್ಷೆ ಸಾಕಾರಗೊಳಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಕಲಬುರಗಿಯಲ್ಲಿ ಸಚಿವ ಸಂಪುಟ ಸಭೆ ನಡೆದಿದೆ. ಇದರಲ್ಲಿ ಕೈಗೊಂಡ ನಿರ್ಣಯಗಳು ಜಾರಿಯಾದರೆ ಜನರ ಆಕ್ರೋಶ ಸ್ವಲ್ಪ ಮಟ್ಟಿಗಾದರೂ ತಣಿಸಲು ಸಾಧ್ಯ. ಇಲ್ಲದಿದ್ದರೆ ಸರಕಾರದ ಮೇಲಿನ ಭರವಸೆಯೇ ಉಡುಗಿ ಹೋಗುತ್ತದೆ. ಕಲ್ಯಾಣದ ಜನರ ಬದುಕು ಬದಲಿಸಲು ಬೃಹತ್ ಕೈಗಾರಿಕೆ ಸ್ಥಾಪನೆಯಾಗಬೇಕು. ದುಡಿಯುವ ಕೈಗಳಿಗೆ ಕೆಲಸ ನೀಡಿದರೆ ನಿರುದ್ಯೋಗ ನಿವಾರಣೆಯಾಗಿ ತಲಾ ಆದಾಯವೂ ಹೆಚ್ಚಾಗುತ್ತದೆ. 5 ದಶಕಗಳಿಂದಲೂ ನನೆಗುದಿಗೆ ಬಿದ್ದಿರುವ ನೀರಾವರಿ ಯೋಜನೆಗಳು ಸಾಕಾರಗೊಳ್ಳಬೇಕು ಎನ್ನುವ ಆಗ್ರಹ ರೈತಾಪಿ ಜನರದ್ದು. ಕಲ್ಯಾಣದ ಪ್ರಮುಖ ಬೇಡಿಕೆಗಳು : ಕಲ್ಯಾಣ ಕರ್ನಾಟಕ ಭಾಗದಲ್ಲಿ ಹಲವು ವರ್ಷಗಳಿಂದ ಖಾಲಿ ಇರುವ 17 ಸಾವಿರ ಹುದ್ದೆಗಳನ್ನು ಭರ್ತಿ ಮಾಡಬೇಕು. ಈ ಬಗ್ಗೆ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಕಲಬುರಗಿಯಲ್ಲಿ ನಡೆದ ಎರಡು ಸಂಪುಟ ಸಭೆಗಳಲ್ಲೂ ನಿರ್ಧಾರ ಆಗಿದ್ದರೂ ನಿರೀಕ್ಷಿತ ಹುದ್ದೆ ಭರ್ತಿ ಆಗಿಲ್ಲ. ಕಲ್ಯಾಣಕ್ಕೆ ಪ್ರತ್ಯೇಕ ಸಚಿವಾಲಯ ಆರಂಭಿಸುವುದಾಗಿ ಸಂಪುಟ ಸಭೆಯಲ್ಲಿ ಕೈಗೊಂಡ ನಿರ್ಧಾರ ಜಾರಿಯಾಗಬೇಕು. ಕಲ್ಯಾಣಕ್ಕೆ ಪ್ರತ್ಯೇಕ ಕೈಗಾರಿಕಾ ನೀತಿ ಜಾರಿಗೊಳಿಸಬೇಕು. ಕಲಬುರಗಿಯ ಬಹುದಿನಗಳ ಬೇಡಿಕೆಯಾದ ಬೈಪಾಸ್ ರಸ್ತೆ ನಿರ್ಮಿಸಬೇಕಿದೆ. ಬಿಳಿಯಾನೆಯಾಗಿರುವ ತೊಗರಿ ಮಂಡಳಿಗೆ ಅನುದಾನ ನೀಡಿ ಶಕ್ತಿ ತುಂಬಬೇಕಿದೆ. ತೊಗರಿ ಬೆಳೆಗಾರರ ಹಿತ ಕಾಪಾಡಬೇಕಿದೆ. 371ಜೆ ಅಡಿ ಶಿಕ್ಷಣ, ಉದ್ಯೋಗ ಮತ್ತು ಭಡ್ತಿಯಲ್ಲಿ ಆಗುತ್ತಿರುವ ಅನ್ಯಾಯ ಸರಿಪಡಿಸಬೇಕು. ಕಲ್ಯಾಣದ ಭಾಗ ಶೈಕ್ಷಣಿವಾಗಿ ತೀರಾ ಹಿಂದುಳಿದಿದ್ದು, ಇಲ್ಲಿ ಖಾಲಿ ಇರುವ ಸುಮಾರು 20ಸಾವಿರ ಶಿಕ್ಷಕರ ಹುದ್ದೆ ಭರ್ತಿ ಆಗಬೇಕಿದೆ. ಯಾದಗಿರಿಯಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸಬೇಕು. ಮೂಲಸೌಕರ್ಯ ವೃದ್ಧಿಯಾಗಬೇಕು. ಬೀದರ್ನಲ್ಲಿ ಜಿಲ್ಲಾ ಕಚೇರಿಗಳ ಸಂಕೀರ್ಣ ನಿರ್ಮಿಸಬೇಕಿದೆ. ಕೈಗಾರಿಕೆಗಳು ಬೇಕು. ಪ್ರವಾಸೋದ್ಯಮಕ್ಕೆ ಉತ್ತೇಜನವೂ ಸಿಗಬೇಕಿದೆ. ವಿಜಯನಗರ ಜಿಲ್ಲೆಯ ಬೇಡಿಕೆ : ಸರಕಾರಿ ಮೆಡಿಕಲ್ ಕಾಲೇಜು ಸ್ಥಾಪನೆಯಾಗಬೇಕು. ಪ್ರವಾಸೋದ್ಯಮದ ಬೆಳವಣಿಗೆಗೆ ಮೂಲಸೌಕರ್ಯ ಅಭಿವೃದ್ಧಿಯಾಗಬೇಕು, ವಿಮಾನ ನಿಲ್ದಾಣದ ಕನಸು ಸಾಕಾರವಾಗಬೇಕು. ಸಕ್ಕರೆ ಕಾರ್ಖಾನೆ ಸ್ಥಾಪಿತವಾಗಬೇಕು. ಕನ್ನಡ ವಿಶ್ವವಿದ್ಯಾಲಯಕ್ಕೆ ಅನುದಾನ ಬರಬೇಕಿದೆ. ರಾಯಚೂರು ಜಿಲ್ಲೆಯ ಬೇಡಿಕೆ : ರಾಯಚೂರು ವಿಶ್ವವಿದ್ಯಾಲಯಕ್ಕೆ ಅನುದಾನ, ವಿಮಾನ ನಿಲ್ದಾಣ ಕಾಮಗಾರಿ ತ್ವರಿತವಾಗಿ ಪ್ರಾರಂಭ, ಜಿಲ್ಲಾಡಳಿತ ಭವನ ನಿರ್ಮಾಣಕ್ಕೆ ಅನುದಾನ, ಒಪೆಕ್ ಆಸ್ಪತ್ರೆ ಉನ್ನತೀಕರಣ, ಮಕ್ಕಳ ಅಸ್ಪತ್ರೆ ನಿರ್ಮಾಣ, ಮನೆ ಮನೆಗೆ ನೀರು ತಲುಪಿಸಲು ಟಿಎಲ್ಬಿಸಿ ಸಮತೋಲನ ಜಲಾಶಯ ನಿರ್ಮಾಣ ಮಾಡಬೇಕು. ಕೊಪ್ಪಳಕ್ಕೆ ಜಿಲ್ಲೆಯ ಬೇಡಿಕೆ : ಕೊಪ್ಪಳ ವಿಶ್ವವಿದ್ಯಾಲಯಕ್ಕೆ ಅನುದಾನ ನೀಡಿ ಅಭಿವೃದ್ಧಿಪಡಿಸಬೇಕು. ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಸರಿಯಾದ ನಿರ್ವಹಣೆ ಆಗಬೇಕು. ತುಂಗಭದ್ರಾ ಜಲಾಶಯದ ಉಳಿವಿಗೆ ಪರ್ಯಾಯವಾಗಿ ನವಲಿ ಸಮಾನಾಂತರ ಜಲಾಶಯ ನಿರ್ಮಾಣ, ಕೊಪ್ಪಳದಲ್ಲಿ ವಿಮಾನ ನಿಲ್ದಾಣ ನಿರ್ಮಾಣ ಆಗಬೇಕು. ಬಳ್ಳಾರಿ ಜಿಲ್ಲೆಯ ಬೇಡಿಕೆ : ಜೀನ್ಸ್ ಅಪೆರಲ್ ಪಾರ್ಕ್ ಸ್ಥಾಪನೆ ಹಾಗೂ ರೈತರ ತೀವ್ರ ವಿರೋಧದ ನಡುವೆ ಬಳ್ಳಾರಿ ತಾಲೂಕಿನ ಚಾಗನೂರು- ಸಿರವಾರ ಬಳಿ 987 ಎಕರೆ ಭೂಮಿಯಲ್ಲಿ ವಿಮಾನ ನಿಲ್ದಾಣ ನಿರ್ಮಾಣ ಕಾರ್ಯ ನನೆಗುದಿಗೆ ಬಿದ್ದಿದೆ. ಬಳ್ಳಾರಿಯಲ್ಲಿ ಯಥೇಚ್ಛವಾಗಿ ಸಿಗುವ ಅದಿರನ್ನು ಮೂಲವಾಗಿಟ್ಟುಕೊಂಡು ಸ್ಟೀಲ್ ಹಬ್ ಮಾಡುವ ಕನಸು ಕೈಗೂಡಿಲ್ಲ. ಮೆಣಸಿನ ಕಾಯಿ, ಹಣ್ಣುಗಳ ಅಭಿವೃದ್ಧಿ ಮಂಡಳಿ ಬೇಡಿಕೆ ಸಾಕಾರವಾಗಬೇಕು. ಅಭಿವೃದ್ಧಿಯಲ್ಲಿನ ಸವಾಲುಗಳು : ಅನುದಾನ ಬಳಕೆಯಲ್ಲಿ ಲೋಪಗಳು, ಕಾಮಗಾರಿಗಳ ಪ್ರಗತಿಯಲ್ಲಿ ನಿಧಾನಗತಿ, ಶಾಸಕರ ನಿರಾಸಕ್ತಿ ಮತ್ತು ಸಿಬ್ಬಂದಿ ಕೊರತೆಯಿಂದಾಗಿ ಅಭಿವೃದ್ಧಿ ನಿರೀಕ್ಷಿತ ಮಟ್ಟದಲ್ಲಿ ಆಗಿಲ್ಲ. ಕಲ್ಯಾಣ ಕರ್ನಾಟಕ ಅಭಿವೃದ್ಧಿ ಕನಸಾಗಿಯೇ ಉಳಿದಿದೆ ಎಂದು ಕೆಲವು ಮೂಲಗಳು ಹೇಳಿವೆ. ಅಭಿವೃದ್ಧಿಯ ವಿಭಿನ್ನ ದೃಷ್ಟಿಕೋನ : ಒಂದು ಕಡೆ, ಸರಕಾರ ಕಲ್ಯಾಣ ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ಬದ್ಧವಾಗಿದೆ ಎಂದು ಹೇಳುತ್ತದೆ. ಇನ್ನೊಂದೆಡೆ, ಅಭಿವೃದ್ಧಿಯು ತೀರಾ ನಿಧಾನವಾಗಿದೆ ಮತ್ತು ಜನರ ನಿರೀಕ್ಷ್ನೆ ಈಡೇರಿಸಿಲ್ಲ ಎಂಬ ಟೀಕೆಗಳು ಕೇಳಿಬಂದಿವೆ. ರಾಷ್ಟ್ರೀಯ ಪಕ್ಷಗಳ ಮೇಲುಗೈ, ಇಬ್ಬರು ಮುಖ್ಯಮಂತ್ರಿಗಳನ್ನು ಕಂಡ ಕಲ್ಯಾಣ ಕರ್ನಾಟಕ, ಅಭಿವೃದ್ಧಿ ವಿಚರದಲ್ಲಿ ಮಾತ್ರ ಇನ್ನೂ ಹಾಗೇ ಉಳಿದಿದೆ. ರಸ್ತೆಗಳಿಲ್ಲದೆ, ಶಾಲೆಗಳಲ್ಲಿ ಶಿಕ್ಷಕರಿಲ್ಲದೆ, ಉದ್ಯೋಗಗಳಿಲ್ಲದೆ ಕಲ್ಯಾಣ ಕರ್ನಾಟಕ ಹೆಸರಿಗಷ್ಟೇ ಕಲ್ಯಾಣಕ್ಕೆ ಸೀಮಿತವಾಗಿದೆ. ಕಲ್ಯಾಣ ಕರ್ನಾಟಕ ಭಾಗ ಅಭಿವೃದ್ಧಿಯಾಗದ ಹೊರತು ಸಂಪೂರ್ಣ ರಾಜ್ಯದ ಅಭಿವೃದ್ಧಿ ಅಸಾಧ್ಯ. ಇಲ್ಲಿನ ಜನರ ತಲಾದಾಯವನ್ನು ಹೆಚ್ಚಿಸುವುದರ ಜೊತೆಗೆ ಶಿಕ್ಷಣ, ಆರೋಗ್ಯ, ಉದ್ಯೋಗ, ಮೂಲಸೌಕರ್ಯ ಸುಧಾರಣೆ ಸೇರಿದಂತೆ ಸರ್ವಾಂಗೀಣ ಅಭಿವೃದ್ಧಿಯಾಗಬೇಕು.
Karnataka Weather: ಗರಿಷ್ಠ ತಾಪಮಾನದಲ್ಲಿ ಏರಿಕೆ, ರಾಜ್ಯಾದ್ಯಂತ ಒಣಹವೆ ಮುನ್ಸೂಚನೆ
ಬೆಂಗಳೂರು: ಕರ್ನಾಟಕದಲ್ಲಿ ಈವರೆಗೆ ದಾಖಲಾಗಿದ್ದ ಚಳಿ ನಿಧಾನವಾಗಿ ಕಡಿಮೆ ಆಗುತ್ತಿದೆ ಎನ್ನುವಾಗಲೇ ರಾಜಧಾನಿ ಬೆಂಗಳೂರು ಸೇರಿ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಮತ್ತೆ ಚಳಿ ಹೆಚ್ಚಾಗಿದೆ. ಮುಂದಿನ ಮೂರು ದಿನ ಇದ ರೀತಿ ವಾತಾವರಣ ಕಂಡ ಬರಲಿದೆ. ಕೆಲವು ಜಿಲ್ಲೆಗಳಲ್ಲಿ ಮಂಜು ಕವಿಯಲಿದೆ. ಉಳಿದಂತೆ ರಾಜ್ಯಾದ್ಯಂತ ಗರಿಷ್ಠ ತಾಪಮಾನದಲ್ಲಿ ಏರಿಕೆ ಆಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ
ಮೈಸೂರು | ಮಹಿಳಾ ಅಧಿಕಾರಿಗೆ ಕೊಲೆ ಬೆದರಿಕೆ : ಪ್ರಕರಣ ದಾಖಲು
ಮೈಸೂರು : ಸರಕಾರದ ಸ್ವಾಧೀನಕ್ಕೆ ಪಡೆಯಬೇಕಾದ ಜಮೀನು ಪರಿಶೀಲನೆಗೆ ತೆರಳಿದ ಗ್ರಾಮ ಆಡಳಿತ ಮಹಿಳಾ ಅಧಿಕಾರಿ ಹಾಗೂ ಗ್ರಾಮ ಸಹಾಯಕನಿಗೆ ಕೊಲೆ ಬೆದರಿಕೆ ಹಾಕಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಘಟನೆ ವರುಣಾ ಹೋಬಳಿ ಗುಡಮಾದನಹಳ್ಳಿ ಗ್ರಾಮದಲ್ಲಿ ನಡೆದಿರುವುದು ತಡವಾಗಿ ವರದಿಯಾಗಿದೆ. ಕೊಲೆ ಬೆದರಿಕೆ ಹಾಕಿ ನಿಂದಿಸಿದ ವ್ಯಕ್ತಿ ವಿರುದ್ಧ ಮಹಿಳಾ ಅಧಿಕಾರಿ, ರಕ್ಷಣೆ ಕೋರಿ ಮೈಸೂರು ದಕ್ಷಿಣ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಗ್ರಾಮ ಆಡಳಿತಾಧಿಕಾರಿ ಬಂಡೀಪಾಳ್ಯ ವೃತ್ತದ ಜಿ.ಭವ್ಯ ಹಾಗೂ ಗ್ರಾಮ ಸಹಾಯಕ ನವೀನ್ ಕುಮಾರ್ ಎಂಬವರ ಮೇಲೆ ವರುಣಾ ಹೋಬಳಿ ಗುಡಮಾದನಹಳ್ಳಿ ಗ್ರಾಮದ ನಿವಾಸಿ ಜಿ.ಎಂ. ಪುಟ್ಟಸ್ವಾಮಿ ಬೆದರಿಕೆ ಹಾಕಿದ ಆರೋಪಿ. ಧಮ್ಕಿ ಹಾಕಿ ಕೊಲೆ ಬೆದರಿಕೆ ಹಾಕಿದ ದೃಶ್ಯಗನ್ನ್ನು ಮೊಬೈಲ್ನಲ್ಲಿ ಚಿತ್ರೀಕರಿಸಲಾಗಿದೆ. ಈ ವೇಳೆ ಆರೋಪಿ ಪುಟ್ಟಸ್ವಾಮಿ ಬಲವಂತವಾಗಿ ಮೊಬೈಲ್ ಕಿತ್ತುಕೊಂಡು ವೀಡಿಯೊ ಡಿಲೀಟ್ ಮಾಡಿದರು ಎನ್ನಲಾಗಿದೆ. ವರುಣಾ ಹೋಬಳಿಯ ಗುಡಮಾ ದನಹಳ್ಳಿಯಲ್ಲಿ ‘‘ ನಿಮ್ಹಾನ್ಸ್ ’’ ಮಾದರಿ ಆಸ್ಪತ್ರೆ ನಿರ್ಮಿಸಲು ಸರ್ವೇ ನಂ.8 ರಲ್ಲಿ 5 ಎಕರೆ 05 ಗುಂಟೆ, ಸರ್ವೇ ನಂ.60 ರಲ್ಲಿ 6 ಎಕರೆ 10 ಗುಂಟೆ ಹಾಗೂ ಸರ್ವೇ ನಂ.68 ರಲ್ಲಿ 8 ಎಕರೆ 25 ಗುಂಟೆ ಸೇರಿ ಒಟ್ಟು 20 ಎಕರೆ ಜಾಗ ಮೀಸಲಿಡಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕನಸಿನ ಯೋಜನೆ ಇದಾಗಿದೆ. ತಮ್ಮ ಸ್ವಕ್ಷೇತ್ರದಲ್ಲಿ ಆಸ್ಪತ್ರೆ ನಿರ್ಮಾಣಕ್ಕೆ ಸಿದ್ದರಾಮಯ್ಯ ಆಸಕ್ತಿ ತೋರಿದ ಹಿನ್ನೆಲೆಯಲಿ ಜಾಗ ಗುರುತಿಸಿ ಸ್ವಾಧೀನ ಪ್ರಕ್ರಿಯೆ ಆರಂಭಿಸುವಂತೆ ಆದೇಶವಾಗಿದೆ. ಗುಡಮಾದನಹಳ್ಳಿಯಲ್ಲಿ ಗುರುತಿಸಲಾದ ಜಮೀನು ಪರಿಶೀಲನೆಗೆ ಮಹಿಳಾ ಅಧಿಕಾರಿ ಜಿ.ಭವ್ಯಾ ಹಾಗೂ ನವೀನ್ ಕುಮಾರ್ ತೆರಳಿದ್ದರು. ಈ ವೇಳೆ ಸದರಿ ಜಮೀನಿನಲ್ಲಿ ಅನಧಿಕೃತವಾಗಿ ಅಡಿಕೆ ತೋಟ ನಿರ್ಮಿಸಿಕೊಂಡಿದ್ದ ಪುಟ್ಟಸ್ವಾಮಿ ದಿಢೀರ್ ಪ್ರತ್ಯಕ್ಷವಾಗಿ ಯಾರನ್ನು ಕೇಳಿ ನಿಮ್ಹಾನ್ಸ್ ಆಸ್ಪತ್ರೆಗೆ ಜಮೀನು ಮಂಜೂರು ಮಾಡಿದ್ದೀರಿ? ಎಂದು ಬೆದರಿಕೆ ಹಾಕಿ ನಿಂದಿಸಿದ್ದಾರೆ. ಪುಟ್ಟಸ್ವಾಮಿಯ ದೌರ್ಜನ್ಯ ಮೊಬೈಲ್ನಲ್ಲಿ ಚಿತ್ರೀಕರಿಸುತ್ತಿದ್ದ ಗ್ರಾಮ ಸಹಾಯಕ ನವೀನ್ ಕುಮಾರ್ ಗೂ ಕೊಲೆ ಬೆದರಿಕೆ ಹಾಕಿ ಮೊಬೈಲ್ ಕಿತ್ತುಕೊಂಡು ವೀಡಿಯೊ ಡಿಲೀಟ್ ಮಾಡಿಸಿರುವ ಆರೋಪ ಕೇಳಿ ಬಂದಿದೆ. ಸರಕಾರಿ ಕೆಲಸವನ್ನ ನಿರ್ಭಯವಾಗಿ ನಿರ್ವಹಿಸಲು ಮಹಿಳಾ ಸಿಬ್ಬಂದಿಯಾದ ನನಗೆ ಭಯದ ವಾತಾವರಣ ಉಂಟು ಮಾಡಿರುವ ಪುಟ್ಟಸ್ವಾಮಿ ವಿರುದ್ದ ಕಾನೂನು ರೀತಿ ಕ್ರಮ ಕೈಗೊಳ್ಳುವಂತೆ ಭವ್ಯಾ ಪ್ರಕರಣ ದಾಖಲಿಸಿ ತಮಗೆ ರಕ್ಷಣೆ ನೀಡುವಂತೆ ಮನವಿ ಮಾಡಿದ್ದಾರೆ.
ನೀರಿಗಾಗಿ 2ನೇ ಸ್ವಾತಂತ್ರ್ಯ ಸಂಗ್ರಾಮ ಖಚಿತ : ನ್ಯಾ.ವಿ.ಗೋಪಾಲಗೌಡ
ʼಜಲಾಗ್ರಹʼ ಸಮಾವೇಶ
ಮಂಗ, ಹಕ್ಕಿ ಹಿಕ್ಕೆ, ಕಳಪೆ ಗುಣಮಟ್ಟದ ಗಾಳಿ: ಇಂಡಿಯಾ ಓಪನ್ ಬ್ಯಾಡ್ಮಿಂಟನ್ ಟೂರ್ನಿಯನ್ನು ಆವರಿಸಿದ ವಿವಾದಗಳು
ಹಕ್ಕಿ ಹಿಕ್ಕೆ, ಮಂಗಗಳ ಕಾಟ, ಜೊತೆಗೆ ದಿಲ್ಲಿಯ ಕಳಪೆ ಗುಣಮಟ್ಟದ ಗಾಳಿ… ಭಾರತದ ಪ್ರಮುಖ ಬ್ಯಾಡ್ಮಿಂಟನ್ ಟೂರ್ನಿಯಾದ BWF ಇಂಡಿಯಾ ಓಪನ್ ಸೂಪರ್ 750 ಅನ್ನು ಆವರಿಸಿಕೊಂಡಿರುವ ಅವ್ಯವಸ್ಥೆಗಳು ಮತ್ತು ವಿವಾದಗಳು ಒಂದೆರಡಲ್ಲ. ಹೊಸದಿಲ್ಲಿಯ ಇಂದಿರಾ ಗಾಂಧಿ ಒಳಾಂಗಣ ಕ್ರೀಡಾಂಗಣದಲ್ಲಿ ಎದುರಾದ ಈ ಸಮಸ್ಯೆಗಳನ್ನು ಉಲ್ಲೇಖಿಸಿ, ಒಬ್ಬ ಅಗ್ರ ಶ್ರೇಯಾಂಕಿತ ಆಟಗಾರ ಟೂರ್ನಿಯಿಂದ ಹಿಂದೆ ಸರಿದಿದ್ದಾರೆ. ಟೂರ್ನಿಯಲ್ಲಿ ಭಾಗವಹಿಸಿದ ಇನ್ನೂ ಹಲವರು ಇಲ್ಲಿ ಸ್ವಚ್ಛತೆ ಇಲ್ಲವೆಂದು ಟೀಕಿಸಿದ್ದಾರೆ. ಹವಾಮಾನ ಮತ್ತು ಮಾಲಿನ್ಯದಂತಹ ಅಂಶಗಳು ತಮ್ಮ ನಿಯಂತ್ರಣದಲ್ಲಿಲ್ಲವೆಂದು ಸೂಚಿಸಿರುವ ಬ್ಯಾಡ್ಮಿಂಟನ್ ಅಸೋಸಿಯೇಷನ್ ಆಫ್ ಇಂಡಿಯಾ (ಬಿಎಐ), ಈ ಟೀಕೆಗಳಿಗೆ ಸಮರ್ಥನೆ ನೀಡಿದೆ. ಪ್ರತಿಕ್ರಿಯೆಗಳನ್ನು ಗಮನಿಸಿದ ಬ್ಯಾಡ್ಮಿಂಟನ್ ವಿಶ್ವ ಒಕ್ಕೂಟ (ಬಿಡಬ್ಲ್ಯೂಎಫ್) ಕೂಡ ಹೇಳಿಕೆ ನೀಡಿದ್ದು, ಇಂದಿರಾ ಗಾಂಧಿ ಕ್ರೀಡಾಂಗಣವು ಆಟದ ಕ್ಷೇತ್ರದ ಅವಶ್ಯಕತೆಗಳನ್ನು ಪೂರೈಸುತ್ತದೆ ಎಂದು ಪುನರುಚ್ಚರಿಸಿದೆ. ಆದರೆ ಸ್ವಚ್ಛತೆ ಮತ್ತು ನೈರ್ಮಲ್ಯ ಸಂಬಂಧಿತ ಸಮಸ್ಯೆಗಳಿರುವುದನ್ನು ಒಪ್ಪಿಕೊಂಡಿದೆ. ಆಗಸ್ಟ್ನಲ್ಲಿ ಇಲ್ಲಿ ನಡೆಯಲಿರುವ ವಿಶ್ವ ಚಾಂಪಿಯನ್ಶಿಪ್ನಲ್ಲಿ ಅಂತಹ ಸಮಸ್ಯೆಗಳು ಇರಲಾರವು ಎಂದು ಎರಡೂ ಫೆಡರೇಷನ್ಗಳು ಸ್ಪಷ್ಟಪಡಿಸಿವೆ. ಅಂಗಣ ಸ್ವಚ್ಛವಾಗಿಲ್ಲ “ಇದು ಇತರ ಅಂಗಣಗಳಿಗಿಂತ ಉತ್ತಮವಾಗಿರುತ್ತದೆ ಎಂದು ನಾನು ನಿಜವಾಗಿಯೂ ಆಶಿಸಿದ್ದೆ. ಆದರೆ ಇದು ತುಂಬಾ ಕೊಳಕು. ಇದು ಆಟಗಾರರ ಆರೋಗ್ಯಕ್ಕೆ ತೊಂದರೆಯೊಡ್ಡಬಹುದು,” ಎಂದು ವಿಶ್ವದ 20ನೇ ಶ್ರೇಯಾಂಕದ ಡ್ಯಾನಿಶ್ ಆಟಗಾರ್ತಿ ಮಿಯಾ ಬ್ಲಿಚ್ಫೆಲ್ಡ್ ಹೇಳಿದ್ದಾರೆ. ಅಂಗಣದ ರಚನೆ ಬಗ್ಗೆ ತಕರಾರು ಇಲ್ಲದಿದ್ದರೂ, ಈ ವರ್ಷದ ಪಂದ್ಯಾವಳಿಯಲ್ಲಿ ಆಟಗಾರರ ಆರೋಗ್ಯ ಸ್ಥಿತಿಗಳ ಬಗ್ಗೆ ಅವರು ಕಳವಳ ವ್ಯಕ್ತಪಡಿಸಿದ್ದಾರೆ. ಆದರೆ ಬ್ಲಿಚ್ಫೆಲ್ಡ್ ರ ದೂರುಗಳು ಅವರ ವೈಯಕ್ತಿಕ ಅನುಭವ ಮತ್ತು ಆರೋಗ್ಯದ ಸಂವೇದನಶೀಲತೆಯಿಂದ ಉಂಟಾಗಿರುವುದೆಂದು ಬಿಎಐ ತಿಳಿಸಿದೆ. ಈ ವರ್ಷದ ಇಂಡಿಯಾ ಓಪನ್ನಲ್ಲಿ ಮಾಡಲಾದ ವ್ಯವಸ್ಥೆಗಳನ್ನು ಅನೇಕ ಆಟಗಾರರು ಮೆಚ್ಚಿದ್ದಾರೆ ಎಂದು ಸಂಸ್ಥೆ ಹೇಳಿದೆ. ಮಿಯಾ ಅವರ ಹೇಳಿಕೆಗಳು ಸಾಮಾನ್ಯ ಆಟದ ಪರಿಸ್ಥಿತಿಗಳು ಮತ್ತು ವೈಯಕ್ತಿಕ ಆರೋಗ್ಯ ಸೂಕ್ಷ್ಮತೆಗಳಿಗೆ ಸಂಬಂಧಿಸಿದವು; ನಿರ್ದಿಷ್ಟವಾಗಿ ಮುಖ್ಯ ಆಟದ ಮೈದಾನದ ಕುರಿತು ಅಲ್ಲ. ಅವರು ಉಲ್ಲೇಖಿಸಿದ್ದದ್ದು ಅಭ್ಯಾಸಕ್ಕೆ ಬಳಸುವ ಕೆಡಿ ಜಾಧವ್ ಕ್ರೀಡಾಂಗಣವಾಗಿದ್ದು, ಮುಖ್ಯ ಪಂದ್ಯ ನಡೆಯುವ ಅಂಗಣವಲ್ಲ ಎಂಬುದನ್ನು ಗಮನಿಸಬೇಕು. “ಧೂಳು ಮತ್ತು ಪರಿಸರದಲ್ಲಿನ ಇತರ ಅಂಶಗಳಿಗೆ ಹೆಚ್ಚು ಸಂವೇದನಶೀಲರಾಗಿರುವ ಆಟಗಾರ್ತಿಯಾಗಿ, ಪರಿಸ್ಥಿತಿಗಳು ಕೆಲವೊಮ್ಮೆ ಅವರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತವೆ. ಮುಖ್ಯ ಆಟದ ಮೈದಾನವನ್ನು ಸ್ವಚ್ಛವಾಗಿ, ಕೊಳಕು ಮತ್ತು ಪಾರಿವಾಳ ಮುಕ್ತವಾಗಿ ಇರಿಸಲಾಗಿದೆ. ಹಲವಾರು ಆಟಗಾರರು ಸ್ಥಳದ ಪರಿಸ್ಥಿತಿಗಳ ಬಗ್ಗೆ ತೃಪ್ತಿ ವ್ಯಕ್ತಪಡಿಸಿದ್ದಾರೆ,” ಎಂದು ಬಿಎಐ ಕಾರ್ಯದರ್ಶಿ ಸಂಜಯ್ ಮಿಶ್ರಾ ಹೇಳಿದ್ದಾರೆ. ಅಂಗಣದಲ್ಲಿ ತಾಪಮಾನ ನಿಯಂತ್ರಣ ಅಂಗಣಗಳಲ್ಲಿನ ತಾಪಮಾನ ಕುರಿತೂ ಆಟಗಾರರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. “ಇಲ್ಲಿನ ವಾತಾವರಣ ತುಂಬಾ ತಂಪಾಗಿದೆ. ಇದರಿಂದ ಅಭ್ಯಾಸಕ್ಕೆ ಅಡ್ಡಿಯಾಗಿದೆ. ಬಹು ಪದರದ ರಕ್ಷಣಾತ್ಮಕ ಉಡುಪು ಧರಿಸಬೇಕಾಯಿತು. ಅದು ಸೂಕ್ತವಲ್ಲ,” ಎಂದು ಬ್ಲಿಚ್ಫೆಲ್ಡ್ ಹೇಳಿದ್ದಾರೆ. ಆಟಗಾರರಿಗೆ ಅಂಗಣಗಳಲ್ಲಿ ಹೀಟರ್ ಅಗತ್ಯವಿದೆ ಎಂದು ಥೈಲ್ಯಾಂಡ್ ನ ಆಟಗಾರ್ತಿ ರಾಟ್ಚಾನೋಕ್ ಇಂಟಾನಾನ್ ಹೇಳಿದ್ದಾರೆ. “ನನಗೆ ಸ್ವಲ್ಪ ಚಳಿ ಅನಿಸಿತು. ಅಲ್ಲಿ ಬೆಚ್ಚಗಾಗಲು ಕಷ್ಟವಾಯಿತು,” ಎಂದು ಕೆನಡಾದ ಆಟಗಾರ್ತಿ ಮಿಚೆಲ್ ಲಿ ಹೇಳಿದ್ದಾರೆ. “ಹೌದು, ದಿಲ್ಲಿಯಲ್ಲಿ ಚಳಿ ಇದೆ. ಆದ್ದರಿಂದ ನಾವು ವಾತಾವರಣ ಬಿಸಿಯಾಗಿಸುವ ಸಾಧನಗಳನ್ನು ಒದಗಿಸಿದ್ದೇವೆ. ಬಹುತೇಕ ಆಟಗಾರರು ಇದನ್ನು ಮೆಚ್ಚಿದ್ದಾರೆ. ಒಬ್ಬ ಆಟಗಾರ್ತಿಯ ಪ್ರತಿಕ್ರಿಯೆಯನ್ನೇ ಆಧಾರವಾಗಿಸಿಕೊಳ್ಳಬಾರದು,” ಎಂದು ಮಿಶ್ರಾ ಹೇಳಿದ್ದಾರೆ. ಆದರೆ ಚಳಿ ಕುರಿತು ದೂರು ನೀಡಿರುವುದು ಒಬ್ಬ ಆಟಗಾರ್ತಿ ಮಾತ್ರ ಅಲ್ಲ. ಮಂಗಗಳ ಕಾಟ ಟೂರ್ನಿಯನ್ನು ವರದಿ ಮಾಡಲು ದಿಲ್ಲಿಗೆ ತೆರಳಿದ್ದ ಛಾಯಾಗ್ರಾಹಕಿ ಅಜ್ಲಿನ್ನಾ ದೇವಿ, ಬುಧವಾರ ಮೊದಲ ಸುತ್ತಿನ ಪಂದ್ಯಗಳ ವೇಳೆ ಮುಖ್ಯ ಕ್ರೀಡಾಂಗಣದ ಸ್ಟ್ಯಾಂಡ್ ಗಳಲ್ಲಿ ಮಂಗವೊಂದು ಕಾಣಿಸಿಕೊಂಡಿರುವ ಕುರಿತು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಸ್ಟೋರಿ ಪೋಸ್ಟ್ ಮಾಡಿದ್ದಾರೆ. ತರಬೇತಿ ಸ್ಥಳವಾದ ಕೆಡಿ ಜಾಧವ್ ಹಾಲ್ ಗೆ ಮಂಗವೊಂದು ಪ್ರವೇಶಿಸಿದ ಬಗ್ಗೆ, ಕೊರಿಯಾದ ಡಬಲ್ಸ್ ಆಟಗಾರ್ತಿ ಕಾಂಗ್ ಮಿನ್ಹ್ಯುಕ್ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿ, “ಪ್ರಾಣಿಗಳಿಗೆ ಉಚಿತ ಪ್ರವೇಶ ನೀಡಲಾಗಿದೆಯೇ?” ಎಂದು ಪ್ರಶ್ನಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿದ ಮಿಶ್ರಾ, “ಬಿಎಐ ಮತ್ತು ಸ್ಥಳದ ಸಿಬ್ಬಂದಿ ಕಳೆದ 20 ದಿನಗಳಿಂದ ನಿರಂತರವಾಗಿ ಕ್ರೀಡಾಂಗಣದಲ್ಲಿ ಕೆಲಸ ಮಾಡುತ್ತಿದ್ದಾರೆ. ಇಂತಹ ಘಟನೆ ಕಂಡುಬಂದಿರುವುದು ಇದೇ ಮೊದಲು. ಒಂದು ಬಾಗಿಲು ಸರಿಯಾಗಿ ಮುಚ್ಚಿರಲಿಲ್ಲ. ಈಗ ಎಲ್ಲಾ ಬಾಗಿಲುಗಳು ಸರಿಯಾಗಿ ಮುಚ್ಚಿರುವುದನ್ನು ಖಚಿತಪಡಿಸಲಾಗುತ್ತಿದೆ. ಕ್ರೀಡಾಂಗಣದ ಸುತ್ತಲೂ ಕಾಡು ಪ್ರದೇಶಗಳಿವೆ. ಇದು ಪರಿಸರದ ಭಾಗ. ಸುರಕ್ಷಿತ ಮತ್ತು ನಿಯಂತ್ರಿತ ಆಟದ ವಾತಾವರಣ ಕಾಪಾಡಿಕೊಳ್ಳಲು ಅಧಿಕಾರಿಗಳೊಂದಿಗೆ ನಿಕಟವಾಗಿ ಕೆಲಸ ಮುಂದುವರಿಸುತ್ತೇವೆ,” ಎಂದಿದ್ದಾರೆ. ಹೊಸದಿಲ್ಲಿಯ ವಾಯು ಮಾಲಿನ್ಯ ದಿಲ್ಲಿಯ ವಾಯು ಗುಣಮಟ್ಟ ಸೂಚ್ಯಂಕವು ಒಂದು ತಿಂಗಳ ಹಿಂದಿನಷ್ಟು ಆತಂಕಕಾರಿಯಾಗಿಲ್ಲದಿದ್ದರೂ, ಇನ್ನೂ ಹಾನಿಕಾರಕ ಮತ್ತು ಅಪಾಯಕಾರಿ ಮಟ್ಟದ ಮಧ್ಯದಲ್ಲೇ ಇದೆ. “ಇಲ್ಲಿನ ಗಾಳಿ ಕಳಪೆಯಾಗಿದೆ. ಇದು ಬ್ಯಾಡ್ಮಿಂಟನ್ ಪಂದ್ಯಾವಳಿಯನ್ನು ಆಯೋಜಿಸಲು ಸೂಕ್ತ ಸ್ಥಳ ಎಂದು ನಾನು ಭಾವಿಸುವುದಿಲ್ಲ,” ಎಂದು ಡೆನ್ಮಾರ್ಕ್ನ ಪುರುಷರ ಸಿಂಗಲ್ಸ್ ಆಟಗಾರ ಆಂಡರ್ಸ್ ಆಂಟನ್ಸನ್ ದಿಲ್ಲಿಗೆ ಬರಲು ನಿರಾಕರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಪಂದ್ಯದಿಂದ ಹಿಂದೆ ಸರಿದ ಕಾರಣಕ್ಕೆ ಬ್ಯಾಡ್ಮಿಂಟನ್ ವಿಶ್ವ ಒಕ್ಕೂಟವು ಅವರಿಗೆ 5,000 ಡಾಲರ್ ದಂಡ ವಿಧಿಸಿದೆ. ಅಂಗಣದಲ್ಲಿ ಹಕ್ಕಿ ಹಿಕ್ಕೆ ಅಭ್ಯಾಸ ಅಂಗಣಗಳಲ್ಲಿ ಹಕ್ಕಿ ಹಿಕ್ಕೆಗಳಿವೆ ಎಂದು ಬ್ಲಿಚ್ಫೆಲ್ಡ್ ಹೇಳಿದಾಗ ಮಿಶ್ರಾ ಅದನ್ನು ನಿರಾಕರಿಸಿದ್ದರು. ಆದರೆ ಎರಡು ದಿನಗಳ ಬಳಿಕ, ಪಂದ್ಯ ನಡೆಯುತ್ತಿರುವಾಗ ಹಕ್ಕಿ ಹಿಕ್ಕೆಯಿಂದಾಗಿ ಎಚ್.ಎಸ್. ಪ್ರಣಯ್ ಮತ್ತು ಲೋ ಕಿಯನ್ ಯೂ ನಡುವಿನ ಎರಡನೇ ಸುತ್ತಿನ ಪಂದ್ಯವನ್ನು ಎರಡು ಬಾರಿ ನಿಲ್ಲಿಸಬೇಕಾಯಿತು. ಆಟಗಾರರ ಪ್ರತಿಕ್ರಿಯೆ “2016–17ರ ಋತುವಿನಲ್ಲಿ ದೀಪಗಳು ಆರಿದ್ದರಿಂದ ನಾನು ಡೆನ್ಮಾರ್ಕ್ನಲ್ಲಿ ನನ್ನ ಪಂದ್ಯಕ್ಕಾಗಿ ಒಂದು ಗಂಟೆ ಕಾಯಬೇಕಾಯಿತು. ಪ್ರಣಯ್ ಒಂದು ದಿನ ಒಂದು ಪಂದ್ಯ, ಮರುದಿನ ಮತ್ತೊಂದು ಪಂದ್ಯ ಆಡಿದ್ದೇನೆ ಎಂದು ಹೇಳಿದರು. ಇಂತಹ ಸಂಗತಿಗಳು ಆಗಾಗ ನಡೆಯುತ್ತವೆ. ಯಾವುದೇ ದೇಶವೂ ಉದ್ದೇಶಪೂರ್ವಕವಾಗಿ ಇಂಥದ್ದನ್ನು ಮಾಡುವುದಿಲ್ಲ. ಎಲ್ಲರೂ ಅತ್ಯುತ್ತಮ ವ್ಯವಸ್ಥೆ ನೀಡಲು ಬಯಸುತ್ತಾರೆ,” ಎಂದು ಭಾರತದ ಆಟಗಾರ ಶ್ರೀಕಾಂತ್ ಕಿದಂಬಿ ಪ್ರತಿಕ್ರಿಯಿಸಿದ್ದಾರೆ. ಬ್ಯಾಡ್ಮಿಂಟನ್ ವಿಶ್ವ ಒಕ್ಕೂಟದ ಪ್ರತಿಕ್ರಿಯೆ ಯೋನೆಕ್ಸ್–ಸನ್ರೈಸ್ ಇಂಡಿಯಾ ಓಪನ್ 2026ರ ಸಮಯದಲ್ಲಿ, ದಿಲ್ಲಿಯ ಇಂದಿರಾ ಗಾಂಧಿ ಕ್ರೀಡಾಂಗಣದಲ್ಲಿ ಇರುವ ಪರಿಸ್ಥಿತಿಗಳನ್ನು ಪರಿಶೀಲಿಸಲು ಬ್ಯಾಡ್ಮಿಂಟನ್ ವಿಶ್ವ ಒಕ್ಕೂಟವು ಆಟಗಾರರು ಮತ್ತು ತಂಡಗಳೊಂದಿಗೆ ನಿರಂತರ ಸಂಪರ್ಕದಲ್ಲಿದೆ ಎಂದು ಹೇಳಿದೆ. “ಸಕಾರಾತ್ಮಕ ಮತ್ತು ರಚನಾತ್ಮಕ ಪ್ರತಿಕ್ರಿಯೆಗಳು ಈ ಪಂದ್ಯಾವಳಿ ಮತ್ತು ಭವಿಷ್ಯದ ಚಾಂಪಿಯನ್ಶಿಪ್ಗಳಿಗೆ ಸಾಧ್ಯವಾದಷ್ಟು ಉತ್ತಮ ವಾತಾವರಣ ರೂಪಿಸಲು ಸಹಕಾರಿಯಾಗುತ್ತವೆ. ಆಟಗಾರರು ಹಂಚಿಕೊಂಡ ದೂರುಗಳು ಮತ್ತು ನಂತರದ ಮಾಧ್ಯಮ ವರದಿಗಳನ್ನು ನಾವು ಅಂಗೀಕರಿಸುತ್ತೇವೆ. ಆದರೆ ಸ್ಥಳದೊಳಗಿನ ಗಾಳಿಯ ಗುಣಮಟ್ಟ ಮತ್ತು ತಾಪಮಾನದ ಮೇಲೆ ಪರಿಣಾಮ ಬೀರುವ ಶೀತ ಹವಾಮಾನದಂತಹ ಕಾಲೋಚಿತ ಅಂಶಗಳನ್ನು ಸಂಪೂರ್ಣವಾಗಿ ನಿಯಂತ್ರಿಸಲು ಸಾಧ್ಯವಿಲ್ಲ,” ಎಂದು ಹೇಳಿಕೆಯಲ್ಲಿ ತಿಳಿಸಿದೆ. ಸಾಮಾನ್ಯ ಸ್ವಚ್ಛತೆ, ನೈರ್ಮಲ್ಯ ಮತ್ತು ಪ್ರಾಣಿಗಳ ನಿಯಂತ್ರಣ ಸೇರಿದಂತೆ ಕೆಲವು ಕ್ಷೇತ್ರಗಳಿಗೆ ಇನ್ನಷ್ಟು ಗಮನ ಅಗತ್ಯವಿದ್ದರೂ, ಭಾರತೀಯ ಬ್ಯಾಡ್ಮಿಂಟನ್ ಅಸೋಸಿಯೇಷನ್ ಈ ಕಾಳಜಿಗಳಿಗೆ ತ್ವರಿತವಾಗಿ ಸ್ಪಂದಿಸಿದೆ ಎಂದು ಬಿಡಬ್ಲ್ಯೂಎಫ್ ಹೇಳಿದೆ. ಆಟದ ಅಂಗಣ, ನೆಲಹಾಸು, ಜಿಮ್ನಾಷಿಯಂ ಮತ್ತು ವೈದ್ಯಕೀಯ ಸೌಲಭ್ಯಗಳು ಉತ್ತಮವಾಗಿವೆ ಎಂಬುದನ್ನು ಆಟಗಾರರು ಗಮನಿಸಿದ್ದಾರೆ ಎಂದಿದೆ. ಇಂದಿರಾ ಗಾಂಧಿ ಕ್ರೀಡಾ ಸಂಕೀರ್ಣವು ಕ್ರೀಡಾಪಟುಗಳು ಮತ್ತು ಅಧಿಕಾರಿಗಳಿಗೆ ಹೆಚ್ಚಿನ ಸ್ಥಳಾವಕಾಶ ಒದಗಿಸುತ್ತದೆ. ವಿಶ್ವ ಚಾಂಪಿಯನ್ಶಿಪ್ಗಳನ್ನು ಆಯೋಜಿಸಲು ಅಗತ್ಯವಿರುವ ಆಟದ ಮೈದಾನದ ಮಾನದಂಡಗಳನ್ನು ಇದು ಪೂರೈಸುತ್ತದೆ. ಇಲ್ಲಿ ಭಾಗವಹಿಸುವವರಿಗೆ ಸುರಕ್ಷಿತ ಮತ್ತು ಉನ್ನತ ಗುಣಮಟ್ಟದ ವಾತಾವರಣವನ್ನು ಖಚಿತಪಡಿಸುವುದೇ ನಮ್ಮ ಆದ್ಯತೆ. ಇದು ಎಲ್ಲಾ ಪಾಲುದಾರರ ನಿರೀಕ್ಷೆಗಳನ್ನು ಪೂರೈಸುತ್ತದೆ ಎಂಬ ವಿಶ್ವಾಸ ನಮಗಿದೆ ಎಂದು ಬಿಡಬ್ಲ್ಯೂಎಫ್ ತಿಳಿಸಿದೆ.
ಕೊಡಗಿನ ವಿಶಿಷ್ಟ ಭೂ ದಾಖಲೆ ವ್ಯವಸ್ಥೆ ಜಮ್ಮಾ ಬಾಣೆ: ಕರ್ನಾಟಕ ಸರಕಾರ ಭೂಕಂದಾಯ ಕಾನೂನು ತಿದ್ದುಪಡಿ ಮಾಡಿದ್ದೇಕೆ?
ಸ್ಥಳೀಯ ಕೊಡವ ಸಮುದಾಯಕ್ಕೆ ನೆಲೆಯಾಗಿರುವ ಸುಂದರ ಕೊಡಗು ಪ್ರದೇಶದಲ್ಲಿ ಹಳೆಯ ಭೂ ದಾಖಲೆಗಳ ವ್ಯವಸ್ಥೆಯನ್ನು ಆಧುನೀಕರಿಸುವ ಉದ್ದೇಶದಿಂದ ಕರ್ನಾಟಕ ಸರಕಾರ ತನ್ನ ಭೂ ಕಂದಾಯ ಕಾನೂನನ್ನು ತಿದ್ದುಪಡಿ ಮಾಡಿದೆ. ಕೊಡಗಿನಲ್ಲಿ ಇರುವ ವಿಶಿಷ್ಟವಾದ ಜಮ್ಮಾ ಬಾಣೆ ಭೂ ಹಿಡುವಳಿಗಳಿಗೆ ಸಂಬಂಧಿಸಿದ ಭೂ ದಾಖಲೆಗಳನ್ನು ಆಧುನೀಕರಿಸುವುದೇ ಈ ತಿದ್ದುಪಡಿಯ ಗುರಿಯಾಗಿದೆ. ಈ ಪ್ರದೇಶದಲ್ಲಿ ಬ್ರಿಟಿಷ್ ಹಾಗೂ ಕೊಡವ ರಾಜರ ಕಾಲದಿಂದ ಕುಟುಂಬಗಳು ತಲೆಮಾರುಗಳಿಂದ ಭೂ ಅನುದಾನಗಳನ್ನು ಹೊಂದಿವೆ. ಆದರೆ ದಾಖಲೆಗಳು ಹೊಸ ಪೀಳಿಗೆಗೆ ವರ್ಗಾವಣೆಗೊಂಡರೂ ಮೂಲ ಅನುದಾನಿತರ (ಪಟ್ಟೇದಾರರ) ಹೆಸರುಗಳೇ ಮುಂದುವರಿದಿವೆ. ಅಧಿಕೃತವಾಗಿ ಗುರುತಿಸಲ್ಪಟ್ಟ ಭೂ ಮಾಲೀಕತ್ವ ದಾಖಲೆಗಳ ಕೊರತೆಯಿಂದ ಪ್ರಸ್ತುತ ಮಾಲೀಕರಿಗೆ ಭೂಮಿಯನ್ನು ಖರೀದಿ–ಮಾರಾಟ ಮಾಡುವುದು ಅಥವಾ ಬ್ಯಾಂಕ್ ಸಾಲ ಪಡೆಯುವುದು ಕಷ್ಟಕರವಾಗಿದೆ. ಜಮ್ಮಾ ಬಾಣೆ ಭೂಮಿ ಎಂದರೇನು? ಕೊಡಗಿನ ವಿಶಿಷ್ಟ ಭೂ ದಾಖಲೆ ವ್ಯವಸ್ಥೆಯಿಂದ ಉಂಟಾಗುವ ಸಮಸ್ಯೆಗಳನ್ನು ಪರಿಹರಿಸಲು ಕಾನೂನು ತಿದ್ದುಪಡಿ ಮಾಡಿದ್ದೇಕೆ? ಇಲ್ಲಿದೆ ಮಾಹಿತಿ. ಜಮ್ಮಾ ಬಾಣೆ ಭೂಮಿ ಅಂದರೆ ಏನು? ಜಮ್ಮಾ ಬಾಣೆ ಹಿಡುವಳಿ ಕೊಡಗು ಜಿಲ್ಲೆಯಲ್ಲಿ ಪ್ರಚಲಿತದಲ್ಲಿರುವ ವಿಶಿಷ್ಟ ಭೂ ಹಿಡುವಳಿ ರೂಪವಾಗಿದ್ದು, ಇದು ರಾಜ್ಯದ ಇತರ ಭೂ ಹಿಡುವಳಿ ವರ್ಗಗಳಿಗಿಂತ ಭಿನ್ನವಾಗಿದೆ. ‘ಜಮ್ಮಾ’ ಎಂದರೆ ಆನುವಂಶಿಕ ಎಂಬ ಅರ್ಥವಿದೆ. ಈ ಜಮ್ಮಾ ಭೂಮಿಯನ್ನು ಕೊಡಗಿನ ಹಿಂದಿನ ರಾಜರು ಹಾಗೂ ಬ್ರಿಟಿಷರು 1600ರಿಂದ 1800ರ ನಡುವೆ ಸ್ಥಳೀಯ ಸಮುದಾಯಗಳಿಗೆ ಸೈನಿಕ ಸೇವೆಗೆ ಪ್ರತಿಫಲವಾಗಿ ನೀಡಿದ್ದರು. ಜಮ್ಮಾ ಭೂಮಿಗಳು ಭತ್ತದ ಕೃಷಿಗೆ ಬಳಸಲಾಗುತ್ತಿದ್ದ ಜೌಗು ಪ್ರದೇಶಗಳು ಮತ್ತು ಅರಣ್ಯದಿಂದ ಕೂಡಿದ ಎತ್ತರದ ಪ್ರದೇಶಗಳನ್ನು ಒಳಗೊಂಡಿದ್ದವು. ಈ ಪ್ರದೇಶಗಳು ನಂತರ ಕೊಡಗಿನ ಪ್ರಸಿದ್ಧ ಕಾಫಿ ಎಸ್ಟೇಟ್ಗಳಾಗಿ ರೂಪಾಂತರಗೊಂಡಿವೆ. ಜಮ್ಮಾ ಬಾಣೆ ಭೂ ಮಾಲೀಕತ್ವವನ್ನು ಮೂಲ ಪಟ್ಟೇದಾರರ ಹೆಸರಿನಲ್ಲಿ ನೋಂದಾಯಿಸಲಾಗಿದ್ದು, ತಲೆಮಾರುಗಳಿಂದ ಹೊಸ ಮಾಲೀಕರ ಹೆಸರುಗಳನ್ನು ಪಟ್ಟೇದಾರರ ಹೆಸರಿನ ಜೊತೆಗೆ ಸೇರಿಸಲಾಗುತ್ತಿತ್ತು. ಆದರೆ ಹೊಸ ಮಾಲೀಕರನ್ನು ತೋರಿಸಲು ಭೂ ಮಾಲೀಕತ್ವದ ಹೆಸರನ್ನೇ ಬದಲಾಯಿಸುವ ಪದ್ಧತಿ ಇರಲಿಲ್ಲ. ಕರ್ನಾಟಕ ಭೂ ಕಂದಾಯ ಕಾಯ್ದೆ, 1964 ಜಾರಿಗೆ ಬರುವವರೆಗೆ ಕೊಡಗು ಪ್ರದೇಶದಲ್ಲಿ ಭೂ ಮಾಲೀಕತ್ವವನ್ನು ನಿಯಂತ್ರಿಸಲು ಕೊಡಗು ಭೂ ಕಂದಾಯ ಮತ್ತು ನಿಯಂತ್ರಣ ಕಾಯ್ದೆ, 1899 ಜಾರಿಯಲ್ಲಿತ್ತು. 1964ರ ಕರ್ನಾಟಕ ಭೂ ಕಂದಾಯ ಕಾಯ್ದೆಯಲ್ಲಿ ಈ ನಿಬಂಧನೆಗಳು ಇಲ್ಲದಿದ್ದರೂ, 1899ರ ಕಾಯ್ದೆಯ ಕೆಲವು ಅಂಶಗಳನ್ನು ಕೊಡಗಿನಲ್ಲಿ ಮುಂದುವರಿಸಲಾಯಿತು. ಕರ್ನಾಟಕ ವಿಧಾನಸಭೆಯ ಚರ್ಚೆಯ ಸಂದರ್ಭದಲ್ಲಿ ವಿರಾಜಪೇಟೆಯ ಕಾಂಗ್ರೆಸ್ ಶಾಸಕ ಎ.ಎಸ್. ಪೊನ್ನಣ್ಣ ಅವರು, “ಕುಟುಂಬದ ಮುಖ್ಯಸ್ಥರ (ಪಟ್ಟೇದಾರರ) ಹೆಸರು ಮರಣದ ನಂತರವೂ, 40–50 ವರ್ಷಗಳಲ್ಲಿ ಮಾಲೀಕರು ಬದಲಾಗಿದ್ದರೂ ಸಹ ಭೂ ದಾಖಲೆಗಳಲ್ಲಿ ಮುಂದುವರಿದಿದೆ. ಇದನ್ನು ಸಂಪ್ರದಾಯದಂತೆ ಅನುಸರಿಸಲಾಗಿದೆ. ಕರ್ನಾಟಕ ಭೂ ಕಂದಾಯ ಕಾಯ್ದೆಯಲ್ಲಿ ಸ್ಪಷ್ಟ ನಿಬಂಧನೆಗಳಿಲ್ಲದಿದ್ದರೂ ಇದು ಮುಂದುವರಿದಿದೆ” ಎಂದು ಹೇಳಿದ್ದಾರೆ. 1993ರಲ್ಲಿ ಕರ್ನಾಟಕ ಹೈಕೋರ್ಟ್ನ ಪೂರ್ಣ ಪೀಠವು ‘ಚೆಕ್ಕೇರ ಪೂವಯ್ಯ ವಿರುದ್ಧ ಕರ್ನಾಟಕ ರಾಜ್ಯ’ ಪ್ರಕರಣದಲ್ಲಿ ಕೊಡಗಿನ ಜಮ್ಮಾ ಬಾಣೆ ಭೂಮಿಯ ಮೇಲಿನ ಮಾಲೀಕತ್ವ ಹಕ್ಕುಗಳನ್ನು ಗುರುತಿಸಿತು. 2024ರಲ್ಲಿ ಕರ್ನಾಟಕ ಹೈಕೋರ್ಟ್ 2011ರ ಕರ್ನಾಟಕ ಭೂ ಕಂದಾಯ (ಮೂರನೇ ತಿದ್ದುಪಡಿ) ಕಾಯ್ದೆಯನ್ನು ಎತ್ತಿಹಿಡಿದಿದ್ದು, ಇದರಿಂದ ಕೊಡವ ಕುಟುಂಬಗಳಿಗೆ ಜಮ್ಮಾ ಬಾಣೆ ಭೂಮಿಯ ಮೇಲೆ ಸಂಪೂರ್ಣ ಮಾಲೀಕತ್ವ ಹಕ್ಕು ದೊರಕಿದೆ. 2011ರ ತಿದ್ದುಪಡಿಯ ಮೂಲಕ ಈ ಹಿಂದೆ ಸರಕಾರಕ್ಕೆ ಸೇರಿದ್ದ ಹಾಗೂ ಸರಕಾರವೇ ಮಾಲೀಕರಾಗಿದ್ದ ಭೂಮಿಯ ಸಂಪೂರ್ಣ ಮಾಲೀಕತ್ವವನ್ನು ಕೊಡವ ಕುಟುಂಬಗಳಿಗೆ ನೀಡಲಾಗಿದೆ. ಇದರಲ್ಲಿ ಕುಟುಂಬದ ಎಲ್ಲಾ ಸದಸ್ಯರೂ ಸೇರಿದ್ದಾರೆ ಎಂದು ಕರ್ನಾಟಕ ಹೈಕೋರ್ಟ್ ಸ್ಪಷ್ಟಪಡಿಸಿದೆ. ಕರ್ನಾಟಕ ಭೂ ಕಂದಾಯ (ಎರಡನೇ ತಿದ್ದುಪಡಿ) ಮಸೂದೆ-2025 ಐತಿಹಾಸಿಕವಾಗಿ ಈ ಭೂಮಿಯನ್ನು ಅವಿಭಕ್ತ ಕುಟುಂಬಗಳ ಸದಸ್ಯರು ಸಂಪ್ರದಾಯಿಕ ಹಕ್ಕುಗಳ ಆಧಾರದ ಮೇಲೆ ತಮ್ಮ ಹಿಡಿತದಲ್ಲಿಟ್ಟುಕೊಂಡಿದ್ದರು. ಆದರೆ ಹಕ್ಕುಗಳ ದಾಖಲೆಗಳಲ್ಲಿ ಸ್ಪಷ್ಟ ನಮೂದುಗಳ ಕೊರತೆಯಿತ್ತು. ಕಾಲಾನಂತರದಲ್ಲಿ ಜಮ್ಮಾ ಬಾಣೆ ಹಿಡುವಳಿಗಳ ಮಾಲೀಕತ್ವ, ಆನುವಂಶಿಕತೆ, ಬದುಕುಳಿದವರು ಮತ್ತು ಪರಭಾರೆಗಳ ನಿಖರ ದಾಖಲೆ ನಿರ್ವಹಣೆಯಲ್ಲಿ ಸಮಸ್ಯೆಗಳು ಎದುರಾದವು ಎಂದು 2025ರ ಆಗಸ್ಟ್ನಲ್ಲಿ ನಡೆದ ಕರ್ನಾಟಕ ವಿಧಾನಸಭೆಯ ಮಳೆಗಾಲ ಅಧಿವೇಶನದಲ್ಲಿ ಮಂಡಿಸಲಾದ ಮಸೂದೆಯ ಕರಡಿನಲ್ಲಿ ಹೇಳಲಾಗಿದೆ. ನಿರ್ದಿಷ್ಟವಾಗಿ, ಕರ್ನಾಟಕ ಭೂ ಕಂದಾಯ ಕಾಯ್ದೆ, 1964ರಲ್ಲಿ ಇಂತಹ ಹಿಡುವಳಿಗಳಲ್ಲಿರುವ ಅವಿಭಕ್ತ ಕುಟುಂಬ ಸದಸ್ಯರ ಹಕ್ಕುಗಳನ್ನು ದಾಖಲಿಸಲು ಸ್ಪಷ್ಟ ನಿಬಂಧನೆಗಳ ಕೊರತೆಯಿಂದ ರೂಪಾಂತರ, ನೋಂದಣಿ, ಉತ್ತರಾಧಿಕಾರ ಮತ್ತು ಕಂದಾಯ ದಾಖಲೆಗಳ ನಿರ್ವಹಣೆಯಲ್ಲಿ ತೊಂದರೆಗಳು ಉಂಟಾಗಿವೆ. ಇದರಿಂದ ಜಮ್ಮಾ ಬಾಣೆ ಭೂಮಿಗಳ ಉತ್ತರಾಧಿಕಾರ, ಪರಭಾರೆ ಹಾಗೂ ಸವಲತ್ತುಗಳಿಗೆ ಸಂಬಂಧಿಸಿದ ಅನೇಕ ವಿವಾದಗಳು ಉದ್ಭವಿಸಿವೆ. ಕೊಡಗು ಜಿಲ್ಲೆಯ ಜಮ್ಮಾ ಬಾಣೆ ಹಿಡುವಳಿಯ ವಿಶಿಷ್ಟ ಸ್ವರೂಪಕ್ಕೆ ಶಾಸನಬದ್ಧ ಮಾನ್ಯತೆ ನೀಡುವುದು ಹಾಗೂ ಅವಿಭಕ್ತ ಕುಟುಂಬದ ಎಲ್ಲಾ ಸದಸ್ಯರ ಹಕ್ಕುಗಳನ್ನು ರೂಪಾಂತರ ಮತ್ತು ಕಂದಾಯ ದಾಖಲೆಗಳಲ್ಲಿ ಸರಿಯಾಗಿ ದಾಖಲಿಸಲಾಗುತ್ತಿದೆ ಎಂಬುದನ್ನು ಖಚಿತಪಡಿಸಿಕೊಳ್ಳುವುದು ಅಗತ್ಯವೆಂದು ಮಸೂದೆ ಹೇಳುತ್ತದೆ. ರಾಜ್ಯ ಶಾಸಕಾಂಗದ ಉಪಸಮಿತಿಯ ಶಿಫಾರಸುಗಳನ್ನು ಸೇರಿಸಿ ಕಳೆದ ತಿಂಗಳು ಅಂಗೀಕರಿಸಲಾದ ಮಸೂದೆಯ ಮಾರ್ಪಡಿತ ಆವೃತ್ತಿಯಲ್ಲಿ, ಕೊಡಗು ಜಿಲ್ಲೆಯ ಭೂ ದಾಖಲೆಗಳಲ್ಲಿ ಮಾಡಲಾಗಿದ್ದ ಕೆಲವು ಬದಲಾವಣೆಗಳು ಕರ್ನಾಟಕ ಭೂ ಕಂದಾಯ ಕಾಯ್ದೆ, 1964ಕ್ಕೆ ಅನುಗುಣವಾಗಿಲ್ಲವೆಂದು ಉಲ್ಲೇಖಿಸಲಾಗಿದೆ. 14.09.2000ರ ಸುತ್ತೋಲೆಯ ಆಧಾರದಲ್ಲಿ ಭೂ ದಾಖಲೆಗಳಿಗೆ ಮಾಡಲಾದ ಬದಲಾವಣೆಗಳು, ಹಕ್ಕುಗಳ ದಾಖಲೆ (RTC)ಯಲ್ಲಿನ ನಮೂದುಗಳನ್ನು ಒಳಗೊಂಡಂತೆ ಭೂ ದಾಖಲೆಗಳ ವರ್ಗೀಕರಣ ಮತ್ತು ನಿರ್ವಹಣೆಯಲ್ಲಿ ಸಮಸ್ಯೆಗಳಿಗೆ ಕಾರಣವಾಗಿವೆ ಎಂದು ಮಸೂದೆಯಲ್ಲಿ ಹೇಳಲಾಗಿದೆ. ಇವು ಕಾನೂನುಬದ್ಧವಾಗಿ ಸಮರ್ಥನೀಯವಲ್ಲ ಹಾಗೂ ಕಾಯ್ದೆಯಡಿಯಲ್ಲಿ ನಿಗದಿಪಡಿಸಿದ ಕಾರ್ಯವಿಧಾನಕ್ಕೆ ಅನುಗುಣವಾಗಿಲ್ಲ. ಭೂಮಿ ಯೋಜನೆಯಡಿಯಲ್ಲಿ ಭೂ ದಾಖಲೆಗಳ ಡಿಜಿಟಲೀಕರಣ ಮತ್ತು ಪ್ರಮಾಣೀಕರಣ ನಡೆಯುತ್ತಿರುವ ಹಿನ್ನೆಲೆಯಲ್ಲಿ ಹಾಗೂ ಕಂದಾಯ ದಾಖಲೆಗಳ ನಿರ್ವಹಣೆಯಲ್ಲಿ ನಿಖರತೆ, ಏಕರೂಪತೆ ಮತ್ತು ಕಾನೂನುಬದ್ಧತೆಯ ಅಗತ್ಯವನ್ನು ಒತ್ತಿ ಹೇಳುವ ನ್ಯಾಯಾಂಗ ತೀರ್ಪುಗಳ ಬೆಳಕಿನಲ್ಲಿ, ಕಾನೂನಿನ ಸರಿಯಾದ ಪ್ರಕ್ರಿಯೆ ಅನುಸರಿಸಿ ಇಂತಹ ಕೊರತೆಗಳನ್ನು ಸರಿಪಡಿಸಲು ಕೊಡಗು ಜಿಲ್ಲೆಯ ತಹಶೀಲ್ದಾರ್ಗಳಿಗೆ ಅಧಿಕಾರ ನೀಡುವುದು ಅಗತ್ಯವಾಗಿದೆ ಎಂದು ಮಸೂದೆ ಸ್ಪಷ್ಟಪಡಿಸುತ್ತದೆ. ಹೊಸ ತಿದ್ದುಪಡಿಯಲ್ಲೇನಿದೆ? ಹೊಸ ತಿದ್ದುಪಡಿಯ ಮೂಲಕ ಕೊಡಗಿನ ತಹಶೀಲ್ದಾರ್ಗಳಿಗೆ (ಕಂದಾಯ ಇಲಾಖೆಯ ಸಹಾಯಕ ಆಯುಕ್ತರು) ಕರ್ನಾಟಕ ಭೂ ಕಂದಾಯ ಕಾಯ್ದೆ, 1964ರ ಪ್ರಕಾರ ಭೂ ದಾಖಲೆಗಳಲ್ಲಿ ಅಗತ್ಯ ತಿದ್ದುಪಡಿಗಳನ್ನು ಮಾಡಲು ಅಧಿಕಾರ ನೀಡಲಾಗಿದೆ. “ಭೂಮಿಯ ಹಿಡುವಳಿದಾರರು, ನಿವಾಸಿಗಳು, ಮಾಲೀಕರು, ಅಡಮಾನದಾರರು, ಭೂಮಾಲೀಕರು ಅಥವಾ ಬಾಡಿಗೆದಾರರು ಅಥವಾ ಬಾಡಿಗೆ ಅಥವಾ ಆದಾಯದ ನಿಯೋಜಿತ ವ್ಯಕ್ತಿಗಳ ಹೆಸರುಗಳನ್ನು” ಒಳಗೊಂಡ ಹಕ್ಕುಗಳ ದಾಖಲೆಗಳನ್ನು ತಿದ್ದುಪಡಿ ಮಾಡುವ ಅಧಿಕಾರ ಇದರಲ್ಲಿ ಸೇರಿದೆ. ಈ ತಿದ್ದುಪಡಿ ಕೊಡಗು ಜಿಲ್ಲೆಯ ಭೂ ದಾಖಲೆಗಳನ್ನು ಕಾನೂನು ವ್ಯಾಪ್ತಿಗೆ ತಂದು, ರಾಜ್ಯದ ಉಳಿದ ಭಾಗಗಳೊಂದಿಗೆ ಏಕರೂಪತೆಯನ್ನು ಖಚಿತಪಡಿಸುತ್ತದೆ ಎಂದು ಕಾನೂನು ಹೇಳುತ್ತದೆ. ರಾಜ್ಯ ವಿಧಾನಸಭೆಯ ಚರ್ಚೆಯ ವೇಳೆ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು, ಭೂ ದಾಖಲೆಗಳನ್ನು ಆಧುನೀಕರಿಸುವ ಮೊದಲು ಹಾಗೂ ಮಾಲೀಕರಿಗೆ ಭೂ ಹಕ್ಕುಗಳನ್ನು ನೀಡುವ ಮುನ್ನ ಆಕ್ಷೇಪಣೆಗಳನ್ನು ಪರಿಹರಿಸಲು ಸ್ಥಳೀಯ ತಹಶೀಲ್ದಾರ್ ಗಳು ಅದಾಲತ್ ಗಳನ್ನು ನಡೆಸಲಿದ್ದಾರೆ ಎಂದು ತಿಳಿಸಿದ್ದಾರೆ. ಮಸೂದೆಯ ಪ್ರಾರಂಭಿಕ ಕರಡು, ಜಮ್ಮಾ ಬಾಣೆ ಹಿಡುವಳಿಗಳ ರೂಪಾಂತರ ನೋಂದಣಿಯಲ್ಲಿ ಅವಿಭಕ್ತ ಕುಟುಂಬ ಸದಸ್ಯರ ವಿವರಗಳನ್ನು ಸೇರಿಸುವುದು, ಹಕ್ಕುಗಳ ಸ್ವಾಧೀನ ವರದಿ ಮಾಡುವುದು, ಭೂ ದಾಖಲೆಗಳಲ್ಲಿ ಹಕ್ಕುಗಳ ನೋಂದಣಿ, ವಂಶಾವಳಿ, ಬದುಕುಳಿದಿರುವಿಕೆ, ಆನುವಂಶಿಕತೆ ಹಾಗೂ ಸವಲತ್ತುಗಳಿಗೆ ಸಂಬಂಧಿಸಿದ ಮಾಹಿತಿಯನ್ನು ದಾಖಲಿಸುವ ಉದ್ದೇಶದಿಂದ ಕರ್ನಾಟಕ ಭೂ ಕಂದಾಯ ಕಾಯ್ದೆ, 1964ರ ಸೆಕ್ಷನ್ಗಳು 127, 128, 129 ಮತ್ತು 130 ತಿದ್ದುಪಡಿ ಮಾಡುವುದನ್ನು ಉದ್ದೇಶಿಸಿತ್ತು. ಆದರೆ ಅಂತಿಮವಾಗಿ ಜಾರಿಗೆ ಬಂದ ಮಸೂದೆಯಲ್ಲಿ ಸೆಕ್ಷನ್ 127ಕ್ಕೆ ಉಪವಿಭಾಗವನ್ನು ಸೇರಿಸುವ ಮೂಲಕ ಮಾತ್ರ ತಿದ್ದುಪಡಿ ಮಾಡಲಾಗಿದೆ. ಉಪವಿಭಾಗ (4)ರ ಪ್ರಕಾರ, ಇತರ ಯಾವುದೇ ನಿಯಮಗಳಿರಲಿ, ತಹಶೀಲ್ದಾರ್ ಈಗ ಅಧಿಕೃತ ಭೂ ದಾಖಲೆಗಳಲ್ಲಿ ಇರುವ ಹಳೆಯ ಅಥವಾ ತಪ್ಪಾದ ನಮೂದುಗಳನ್ನು ಅಳಿಸಲು ಅಥವಾ ಸರಿಪಡಿಸಲು ಅಧಿಕಾರ ಹೊಂದಿರುತ್ತಾರೆ. ಇದಕ್ಕಾಗಿ ನ್ಯಾಯಾಲಯದ ಆದೇಶಕ್ಕಾಗಿ ಕಾಯಬೇಕಾಗಿಲ್ಲ. ಕುಟುಂಬ ಅರ್ಜಿ ಸಲ್ಲಿಸಿದರೂ ಅಥವಾ ತಹಶೀಲ್ದಾರ್ ಸ್ವತಃ ದೋಷವನ್ನು ಗಮನಿಸಿದರೂ ತಿದ್ದುಪಡಿ ಮಾಡಬಹುದು. ಹಿಂದೆ ಅನೇಕ ಕುಟುಂಬಗಳ ಹೆಸರುಗಳನ್ನು ‘ಮಾಲೀಕತ್ವ’ ವಿಭಾಗದಿಂದ (ಹಳೆಯ ನೋಂದಣಿಗಳ ಕಾಲಂ 3) ‘ಬಾಡಿಗೆದಾರರು’ ಅಥವಾ ‘ವಿಶೇಷ ವರ್ಗಗಳು’ (ಕಾಲಂ 9 ಮತ್ತು 12)ಗೆ ಸ್ಥಳಾಂತರಿಸಲಾಗಿತ್ತು. ಇದರಿಂದ ಸರ್ಕಾರವೇ ಭೂಮಿಯ ಮಾಲೀಕ, ಕುಟುಂಬಗಳು ಬಳಕೆದಾರರು ಮಾತ್ರ ಎಂಬ ಭಾವನೆ ಉಂಟಾಗಿತ್ತು. ಹೊಸ ಕಾನೂನು ತಹಶೀಲ್ದಾರ್ಗೆ ಆ ಹೆಸರುಗಳನ್ನು ‘ಮಾಲೀಕತ್ವ’ ವಿಭಾಗಕ್ಕೆ ಮರುಸ್ಥಾಪಿಸಲು ಸೂಚಿಸುತ್ತದೆ. ಇದರಿಂದ ಕೊಡವ ಕುಟುಂಬಗಳೇ ಭೂಮಿಯ ಸಂಪೂರ್ಣ ಮಾಲೀಕರು, ಸರ್ಕಾರವಲ್ಲ ಎಂಬುದನ್ನು ಸ್ಪಷ್ಟಪಡಿಸಲಾಗುತ್ತದೆ.
ದೇಶದಲ್ಲಿ ಜಾತಿ ತಾರತಮ್ಯ ನಿವಾರಣೆ ಕಾಯ್ದೆ ಇಂದಿನ ಅಗತ್ಯ: ರಾಹುಲ್ ಗಾಂಧಿ
ಹೊಸದಿಲ್ಲಿ, ಜ. 17: ಶಿಕ್ಷಣ ಸಂಸ್ಥೆಗಳ ಕ್ಯಾಂಪಸ್ಗಳಲ್ಲಿ ದಲಿತ ಯುವ ಸಮುದಾಯಗಳ ವಾಸ್ತವ ಪರಿಸ್ಥಿತಿ ಬದಲಾಗಿಲ್ಲ. ಆದ್ದರಿಂದ ದೇಶಕ್ಕೆ ಜಾತಿ ತಾರತಮ್ಯ ನಿವಾರಣೆ ಕಾಯ್ದೆಯ ಅಗತ್ಯವಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಶನಿವಾರ ಹೇಳಿದ್ದಾರೆ. ಹೈದರಾಬಾದ್ ವಿಶ್ವವಿದ್ಯಾನಿಲಯದ 26 ವರ್ಷದ ದಲಿತ ವಿದ್ಯಾರ್ಥಿಯಾಗಿದ್ದ ರೋಹಿತ್ ವೇಮುಲ ಕಿರುಕುಳದ ಹಿನ್ನೆಲೆಯಲ್ಲಿ 2016 ಜನವರಿ 17ರಂದು ಆತ್ಮಹತ್ಯೆಗೆ ಶರಣಾಗಿದ್ದರು. ರೋಹಿತ್ ವೇಮುಲ ಅವರ 10ನೇ ವರ್ಷದ ಸ್ಮರಣೆ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿ ಅವರು ‘ಎಕ್ಸ್’ನಲ್ಲಿ ಈ ಪೋಸ್ಟ್ ಮಾಡಿದ್ದಾರೆ. ಪೋಸ್ಟ್ನಲ್ಲಿ ಅವರು, ‘‘ರೋಹಿತ್ ವೇಮುಲ ನಿಧನರಾಗಿ ಇಂದಿಗೆ 10 ವರ್ಷಗಳು ಆಗಿವೆ. ಆದರೆ, ರೋಹಿತ್ ಅವರ ಪ್ರಶ್ನೆಗಳು ಇಂದಿಗೂ ನಮ್ಮ ಹೃದಯದಲ್ಲಿ ಪ್ರತಿಧ್ವನಿಸುತ್ತಿವೆ. ಈ ದೇಶದಲ್ಲಿ ಎಲ್ಲರಿಗೂ ಕನಸು ಕಾಣುವ ಸಮಾನ ಹಕ್ಕು ಇದೆಯೇ ? ರೋಹಿತ್ ಅವರು ಕಲಿಯಲು ಬಯಸಿದರು, ಅವರು ಬರೆಯಲು ಬಯಸಿದರು. ಅವರು ಈ ದೇಶವನ್ನು ಉತ್ತಮಗೊಳಿಸಲು ವಿಜ್ಞಾನ, ಸಮಾಜ ಹಾಗೂ ಮಾನವತೆಯನ್ನು ಅರ್ಥ ಮಾಡಿಕೊಳ್ಳಲು ಬಯಸಿದರು. ಆದರೆ, ಈ ವ್ಯವಸ್ಥೆ ದಲಿತರ ಅಭಿವೃದ್ಧಿಯನ್ನು ಸಹಿಸುವುದಿಲ್ಲ’’ ಎಂದು ಅವರು ಹೇಳಿದರು. ‘‘ಇಂದು ಏನಾಗಿದೆ ? ದಲಿತ ಯುವಜನರ ವಾಸ್ತವ ಸ್ಥಿತಿ ಬದಲಾಗಿದೆಯೇ ? ಕ್ಯಾಂಪಸ್ನಲ್ಲಿ ಅದೇ ನಿಂದನೆ, ಹಾಸ್ಟೆಲ್ಗಳಲ್ಲಿ ಅದೇ ಪ್ರತ್ಯೇಕತೆ, ತರಗತಿ ಕೊಠಡಿಯಲ್ಲಿ ಅದೇ ಕೀಳರಿಮೆ, ಅದೇ ಹಿಂಸೆ, ಕೆಲವೊಮ್ಮೆ ಅಂತದ್ದೇ ಸಾವು. ಈ ದೇಶದಲ್ಲಿ ಜಾತಿಯೇ ಅತಿ ದೊಡ್ಡ ಪ್ರವೇಶ ಪತ್ರವಾಗಿರುವುದು ಇದಕ್ಕೆ ಕಾರಣ’’ ಎಂದು ಅವರು ಹೇಳಿದ್ದಾರೆ. ಆದ್ದರಿಂದ ರೋಹಿತ್ ವೇಮುಲ ಕಾಯ್ದೆ ಕೇವಲ ಘೋಷಣೆ ಅಲ್ಲ, ಅದು ಇಂದಿನ ಅಗತ್ಯ ಎಂದು ರಾಹುಲ್ ಗಾಂಧಿ ತಿಳಿಸಿದ್ದಾರೆ.
16 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಸೋಷಿಯಲ್ ಮೀಡಿಯಾ ಬಳಸುವುದನ್ನು ನಿಷೇಧಿಸಿದ ನಂತರ, ಸಾಮಾಜಿಕ ಮಾಧ್ಯಮ ಕಂಪೆನಿಗಳು ಆಸ್ಟ್ರೇಲಿಯಾದಲ್ಲಿ ಮಕ್ಕಳಿಗೆ ಸೇರಿದ ಸುಮಾರು 4.7 ಮಿಲಿಯನ್ ಖಾತೆಗಳಿಗೆ ಪ್ರವೇಶವನ್ನು ರದ್ದುಗೊಳಿಸಿವೆ. ತಂತ್ರಜ್ಞಾನ ಬಳಕೆ, ಗೌಪ್ಯತೆ, ಮಕ್ಕಳ ಸುರಕ್ಷತೆ ಮತ್ತು ಮಾನಸಿಕ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ 16 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ಸಾಮಾಜಿಕ ಮಾಧ್ಯಮ ನಿಷೇಧ ಮಾಡುವ ಈ ಕಾನೂನು ಆಸ್ಟ್ರೇಲಿಯಾದಲ್ಲಿ ಚರ್ಚೆಗಳನ್ನು ಹುಟ್ಟುಹಾಕಿತ್ತು. ಆಸ್ಟ್ರೇಲಿಯಾದ ಕಾನೂನಿನಡಿಯಲ್ಲಿ, ಫೇಸ್ಬುಕ್, ಇನ್ಸ್ಟಾಗ್ರಾಮ್, ಕಿಕ್, ರೆಡ್ಡಿಟ್, ಸ್ನ್ಯಾಪ್ಚಾಟ್, ಥ್ರೆಡ್ಸ್, ಟಿಕ್ಟಾಕ್, ಎಕ್ಸ್, ಯೂಟ್ಯೂಬ್ ಮತ್ತು ಟ್ವಿಚ್ 16 ವರ್ಷಕ್ಕಿಂತ ಕಡಿಮೆ ವಯಸ್ಸಿನ ಆಸ್ಟ್ರೇಲಿಯಾದ ಮಕ್ಕಳ ಖಾತೆಗಳನ್ನು ತೆಗೆದುಹಾಕಲು ಸಮಂಜಸವಾದ ಕ್ರಮಗಳನ್ನು ತೆಗೆದುಕೊಳ್ಳದಿದ್ದರೆ 49.5 ಮಿಲಿಯನ್ ಆಸ್ಟ್ರೇಲಿಯನ್ ಡಾಲರ್ಗಳವರೆಗೆ ($33.2 ಮಿಲಿಯನ್) ದಂಡವನ್ನು ಎದುರಿಸಬೇಕಾಗುತ್ತದೆ. ಆದಾಗ್ಯೂ ವಾಟ್ಸಾಪ್ ಮತ್ತು ಫೇಸ್ಬುಕ್ ಮೆಸೆಂಜರ್ನಂತಹ ಸಂದೇಶ ಸೇವೆಗಳಿಗೆ ವಿನಾಯಿತಿ ನೀಡಲಾಗಿದೆ. 16 ವರ್ಷದೊಳಗಿನವರಿಗೆ ಆಸ್ಟ್ರೇಲಿಯಾ ಸಾಮಾಜಿಕ ಮಾಧ್ಯಮವನ್ನು ನಿಷೇಧಿಸಿದ್ದೇಕೆ? ಆಸ್ಟ್ರೇಲಿಯಾದ ಸಾಮಾಜಿಕ ಮಾಧ್ಯಮ ನಿಷೇಧವು ಡಿಸೆಂಬರ್ 10, 2025 ರಂದು ಜಾರಿಗೆ ಬಂತು. ಐಡಿ ದಾಖಲೆಗಳು, ಮುಖ ಸ್ಕ್ಯಾನ್ ಮಾಡಿ ವಯಸ್ಸು ಅಂದಾಜು ಮಾಡುವ ತಂತ್ರಜ್ಞಾನ ಅಥವಾ ಖಾತೆ ರಚನೆ ದಿನಾಂಕಗಳಂತಹ ಅಸ್ತಿತ್ವದಲ್ಲಿರುವ ಖಾತೆ ಡೇಟಾವನ್ನು ವಿಶ್ಲೇಷಿಸುವ ಮೂಲಕ ಪ್ಲಾಟ್ಫಾರ್ಮ್ಗಳು ಬಳಕೆದಾರರ ವಯಸ್ಸನ್ನು ಪರಿಶೀಲಿಸುತ್ತವೆ. ಇದು 16 ವರ್ಷದೊಳಗಿನ ಎಲ್ಲಾ ಬಳಕೆದಾರರು ಟಿಕ್ಟಾಕ್, ಸ್ನ್ಯಾಪ್ಚಾಟ್, ಯೂಟ್ಯೂಬ್, ರೆಡ್ಡಿಟ್, ಇನ್ಸ್ಟಾಗ್ರಾಮ್, ಫೇಸ್ಬುಕ್, ಕಿಕ್, ಟ್ವಿಚ್, ಥ್ರೆಡ್ಸ್ ಮತ್ತು ಎಕ್ಸ್ ಸೇರಿದಂತೆ ಪ್ರಮುಖ ಪ್ಲಾಟ್ಫಾರ್ಮ್ಗಳಲ್ಲಿ ಖಾತೆಗಳನ್ನು ಹೊಂದುವುದನ್ನು ನಿರ್ಬಂಧಿಸಿತು. ವರ್ಷಗಳಿಂದಲೂ ಸ್ವಯಂಪ್ರೇರಿತ ಸುರಕ್ಷತಾ ಬದ್ಧತೆಗಳ ಹೊರತಾಗಿಯೂ, ಸಾಮಾಜಿಕ ಮಾಧ್ಯಮ ವೇದಿಕೆಗಳು ಮಕ್ಕಳನ್ನು ರಕ್ಷಿಸುವಲ್ಲಿ ವಿಫಲವಾಗಿವೆ ಎಂದು ಆಸ್ಟ್ರೇಲಿಯಾ ಸರಕಾರ ಹೇಳಿದೆ. ಹದಿಹರೆಯದವರಲ್ಲಿ ಹೆಚ್ಚುತ್ತಿರುವ ಆತಂಕ, ಖಿನ್ನತೆ, ನಿದ್ರಾಹೀನತೆಗೆ ಸಾಮಾಜಿಕ ಮಾಧ್ಯಮದ ಭಾರೀ ಬಳಕೆ ಕಾರಣವಾಗಿದೆ ಎಂದು ಇಲ್ಲಿನ ಶಾಸಕರು ಹೇಳಿದ್ದಾರೆ. 16 ವರ್ಷದೊಳಗಿನವರಿಗೆ ಸಾಮಾಜಿಕ ಮಾಧ್ಯಮ ನಿಷೇಧ ಜಾರಿಗೆ ಬಂದ ದಿನದಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಆಸ್ಟ್ರೇಲಿಯಾದ ಪ್ರಧಾನ ಮಂತ್ರಿ ಆಂಥೋನಿ ಅಲ್ಬನೀಸ್ ಇದು ಕುಟುಂಬಗಳಿಗೆ ಹೆಮ್ಮೆಯ ದಿನ. ನೀತಿ ನಿರೂಪಕರು ಸಾಂಪ್ರದಾಯಿಕ ಸುರಕ್ಷತಾ ಕ್ರಮಗಳನ್ನು ಮೀರಿದ ಆನ್ಲೈನ್ ಹಾನಿಗಳನ್ನು ತಡೆಯಬಹುದು ಎಂಬುದಕ್ಕೆ ಈ ಕಾನೂನು ಸಾಕ್ಷಿ.ಇದು ದೊಡ್ಡ ಮಟ್ಟದಲ್ಲಿ ವ್ಯತ್ಯಾಸವನ್ನುಂಟು ಮಾಡುತ್ತದೆ. ಇದು ನಮ್ಮ ರಾಷ್ಟ್ರ ಎದುರಿಸಿದ ಅತಿದೊಡ್ಡ ಸಾಮಾಜಿಕ ಮತ್ತು ಸಾಂಸ್ಕೃತಿಕ ಬದಲಾವಣೆಗಳಲ್ಲಿ ಒಂದಾಗಿದೆ. ಇದು ಪ್ರಪಂಚದಾದ್ಯಂತ ಪ್ರತಿಧ್ವನಿಸುತ್ತಲೇ ಇರುವ ಸುಧಾರಣೆಯಾಗಿದೆ ಎಂದಿದ್ದಾರೆ. 4.7 ಮಿಲಿಯನ್ ಖಾತೆ ರದ್ದು ಸುಮಾರು 2.5 ಮಿಲಿಯನ್ ಆಸ್ಟ್ರೇಲಿಯನ್ನರು 8 ರಿಂದ 15 ವರ್ಷದೊಳಗಿನವರು. ಅಂದಾಜಿನ ಪ್ರಕಾರ 8 ರಿಂದ 12 ವರ್ಷ ವಯಸ್ಸಿನವರಲ್ಲಿ 84% ಜನರು ಸಾಮಾಜಿಕ ಮಾಧ್ಯಮ ಖಾತೆಗಳನ್ನು ಹೊಂದಿದ್ದಾರೆ. 10 ಪ್ಲಾಟ್ಫಾರ್ಮ್ಗಳಲ್ಲಿ ಎಷ್ಟು ಖಾತೆಗಳನ್ನು ರದ್ದು ಮಾಡಲಾಗಿದೆ ಎಂಬುದು ತಿಳಿದಿಲ್ಲ. ಆದರೆ 4.7 ಮಿಲಿಯನ್ ಖಾತೆಗಳನ್ನು ನಿಷ್ಕ್ರಿಯಗೊಳಿಸಲಾಗಿದೆ ಅಥವಾ ನಿರ್ಬಂಧಿಸಲಾಗಿದೆ. ಸಾಮಾಜಿಕ ಮಾಧ್ಯಮ ಕಂಪನಿಗಳು ನಮ್ಮ ಮಕ್ಕಳನ್ನು ಪ್ರವೇಶಿಸುವುದನ್ನು ನಾವು ತಡೆಯುತ್ತಿದ್ದೇವೆ ಎಂದು ದೇಶದ ಇ-ಸೇಫ್ಟಿ ಆಯುಕ್ತೆ ಜೂಲಿ ಇನ್ಮನ್ ಗ್ರಾಂಟ್ ಹೇಳಿದ್ದಾರೆ. ನಿಷೇಧಕ್ಕೊಳಗಾದ 10 ದೊಡ್ಡ ಕಂಪೆನಿಗಳು ಖಾತೆ ರದ್ದು ಮಾಡಿದ ಅಂಕಿಅಂಶಗಳನ್ನು ನಿಯಮಿತವಾಗಿ ಆಸ್ಟ್ರೇಲಿಯಾದ ನಿಯಂತ್ರಕಕ್ಕೆ ವರದಿ ಮಾಡಿವೆ. ಸಾಮಾಜಿಕ ಮಾಧ್ಯಮ ಕಂಪೆನಿಗಳು ನಿಷೇಧವನ್ನು ಜಾರಿಗೊಳಿಸುವುದರಿಂದ ಮಕ್ಕಳು ಹೊಸ ಖಾತೆಗಳನ್ನು ರಚಿಸುವುದನ್ನು ತಡೆಯಲಾಗುತ್ತದೆ. ಮೆಟಾ 5,50,000 ಖಾತೆಗಳನ್ನು ತೆಗೆದುಹಾಕಿದೆ. ಆದಾಗ್ಯೂ ಆಸ್ಟ್ರೇಲಿಯಾದ ಅಧಿಕಾರಿಗಳು ಯಾವ ಸೋಷಿಯಲ್ ಮೀಡಿಯಾ ಎಷ್ಟು ಖಾತೆ ರದ್ದು ಮಾಡಿದೆ ಎಂಬ ಅಂಕಿಅಂಶಗಳನ್ನು ಬಹಿರಂಗಪಡಿಸಿಲ್ಲ. ಆದರೆ ಫೇಸ್ಬುಕ್, ಇನ್ಸ್ಟಾಗ್ರಾಮ್ ಮತ್ತು ಥ್ರೆಡ್ಗಳನ್ನು ಹೊಂದಿರುವ ಮೆಟಾ, ನಿಷೇಧ ಜಾರಿಗೆ ಬಂದ ಮರುದಿನದ ವೇಳೆಗೆ 16 ವರ್ಷದೊಳಗಿನ ಬಳಕೆದಾರರಿಗೆ ಸೇರಿದ ಸುಮಾರು 5,50,000 ಖಾತೆಗಳನ್ನು ತೆಗೆದುಹಾಕಿದೆ ಎಂದು ಹೇಳಿದೆ. ಅಂಕಿಅಂಶಗಳನ್ನು ಬಹಿರಂಗಪಡಿಸುವ ಬ್ಲಾಗ್ ಪೋಸ್ಟ್ನಲ್ಲಿ, ಮೆಟಾ ನಿಷೇಧವನ್ನು ಟೀಕಿಸಿದ್ದು ನಿಷೇಧ ಅನ್ವಯಿಸದ ಸಣ್ಣ ವೇದಿಕೆಗಳು ಸುರಕ್ಷತೆಗೆ ಆದ್ಯತೆ ನೀಡದಿರಬಹುದು ಎಂದು ಹೇಳಿದೆ. ಕಾನೂನು ಅನುಷ್ಠಾನ ಸುಗಮ ಆಸ್ಟ್ರೇಲಿಯಾದಲ್ಲಿ 16 ವರ್ಷಗಳಿಗಿಂತ ಕೆಳಗಿನ ಮಕ್ಕಳಿಗೆ ಸಾಮಾಜಿಕ ಮಾಧ್ಯಮ ನಿಷೇಧಿಸುವ ಕಾನೂನು ಅನುಷ್ಠಾನ ಸುಗಮವಾಗಿತ್ತು. ಸಾರ್ವಜನಿಕ ಶಿಕ್ಷಣ ಅಭಿಯಾನಗಳು ಮತ್ತು ಮಕ್ಕಳ ವಯಸ್ಸನ್ನು ಪರಿಶೀಲಿಸುವ ತಂತ್ರಜ್ಞಾನಗಳು ಹೊಸ ಅವಶ್ಯಕತೆಗಳನ್ನು ಪೂರೈಸುವಲ್ಲಿ ಸಹಾಯ ಮಾಡಿದೆ. ಇ-ಸೇಫ್ಟಿಯ ನಿಯಂತ್ರಕ ಮಾರ್ಗದರ್ಶನ ಮತ್ತು ವೇದಿಕೆಗಳೊಂದಿಗೆ ತೊಡಗಿಸಿಕೊಳ್ಳುವುದು ಈಗಾಗಲೇ ಗಮನಾರ್ಹ ಫಲಿತಾಂಶಗಳನ್ನು ನೀಡುತ್ತಿದೆ ಎಂಬುದು ಸ್ಪಷ್ಟವಾಗಿದೆ. ಆದಾಗ್ಯೂ, ಕೆಲವು ಅಪ್ರಾಪ್ತ ವಯಸ್ಸಿನ ಮಕ್ಕಳು ವಿವಿಧ ಮಾರ್ಗಗಳನ್ನು ಬಳಸಿ ಸೋಷಿಯಲ್ ಮೀಡಿಯಾಕ್ಕೆ ಪ್ರವೇಶಿಸುವ ಸಾಧ್ಯತೆ ಕೂಡಾ ಇದೆ. ನಾವು ಈ ರೀತಿಯ ಪ್ರವೃತ್ತಿಗಳ ಮೇಲ್ವಿಚಾರಣೆ ಮಾಡುವುದನ್ನು ಮುಂದುವರಿಸುತ್ತೇವೆ ಎಂದಿದ್ದಾರೆ ಇ-ಸೇಫ್ಟಿ ಆಯುಕ್ತೆ. ವಿಶ್ವದ ಕೆಲವು ದೊಡ್ಡ ತಂತ್ರಜ್ಞಾನ ಕಂಪೆನಿಗಳ ವಿರೋಧದ ಹೊರತಾಗಿಯೂ ಸರಕಾರ ಈ ಐತಿಹಾಸಿಕ ಕಾನೂನನ್ನು ಯಶಸ್ವಿಯಾಗಿ ಜಾರಿಗೊಳಿಸಿದೆ ಎಂಬುದನ್ನು ಈ ಮೈಲಿಗಲ್ಲು ತೋರಿಸುತ್ತದೆ ಎಂದು ಹೇಳಿದ್ದಾರೆ ಸಂವಹನ ಸಚಿವೆ ಅನಿಕಾ ವೆಲ್ಸ್. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದನ್ನು ಮಾಡಲು ಸಾಧ್ಯವಿಲ್ಲ ಎಂದು ಹೇಳಿದ ಪ್ರತಿಯೊಬ್ಬರನ್ನು ನಾವು ಕಡೆಗಣಿಸಿದ್ದೇವೆ. ಈಗ ಆಸ್ಟ್ರೇಲಿಯಾದ ಪೋಷಕರು ತಮ್ಮ ಮಕ್ಕಳು ತಮ್ಮ ಬಾಲ್ಯವನ್ನು ಮರಳಿ ಪಡೆಯಬಹುದು ಎಂಬ ವಿಶ್ವಾಸ ಹೊಂದಬಹುದು ಎಂದಿದ್ದಾರೆ. ಟೀಕೆ ಮತ್ತು ನಿರಂತರ ಸವಾಲುಗಳು ಕಾನೂನನ್ನು ಪೋಷಕರು ಮತ್ತು ಮಕ್ಕಳ ಸುರಕ್ಷತೆಗಾಗಿ ಹೋರಾಟ ಮಾಡುವವರು ವ್ಯಾಪಕವಾಗಿ ಪ್ರಶಂಸಿಸಿದ್ದಾರೆ. ಆದರೆ ಆನ್ಲೈನ್ ಗೌಪ್ಯತೆ ಗುಂಪುಗಳು ಮತ್ತು ಕೆಲವು ಯುವ ಸಂಘಟನೆಗಳು ಟೀಕಿಸಿವೆ. ಆನ್ಲೈನ್ ಸ್ಥಳಗಳು ದುರ್ಬಲ ಮಕ್ಕಳಿಗೆ ಅಥವಾ ದೂರದ ಪ್ರದೇಶಗಳಲ್ಲಿ ವಾಸಿಸುವವರಿಗೆ ಬೆಂಬಲವನ್ನು ಒದಗಿಸಬಹುದು ಎಂದು ಇವರು ವಾದಿಸುತ್ತಾರೆ. ಪೋಷಕರು ಅಥವಾ ಹಿರಿಯ ಸಹೋದರರ ಸಹಾಯದಿಂದ ಕೆಲವು ಹದಿಹರೆಯದವರು ವಯಸ್ಸಿನ ಪರಿಶೀಲನಾ ಮಾರ್ಗಗಳನ್ನು ಬೈಪಾಸ್ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಕೂಡಾ ವರದಿಯಾಗಿದೆ. ನಿಷೇಧ ಜಾರಿಗೆ ಬಂದಾಗ ಪರ್ಯಾಯ ಅಪ್ಲಿಕೇಶನ್ಗಳ ಡೌನ್ಲೋಡ್ಗಳಲ್ಲಿ ತಾತ್ಕಾಲಿಕ ಏರಿಕೆ ಕಂಡುಬಂದಿದೆ ಎಂದು ಜೂಲಿ ಇನ್ಮನ್ ಗ್ರಾಂಟ್ ಸಮ್ಮತಿಸಿದ್ದು, ಬಳಕೆಯಲ್ಲಿ ಯಾವುದೇ ನಿರಂತರ ಹೆಚ್ಚಳವಿಲ್ಲ ಎಂದಿದ್ದಾರೆ. ಮಾರ್ಚ್ನಲ್ಲಿ ಇ-ಸೇಫ್ಟಿ ಆಫೀಸ್ ವಿಶ್ವದ ಪ್ರಮುಖ AI ಕಂಪ್ಯಾನಿಯನ್ ಮತ್ತು ಚಾಟ್ಬಾಟ್ ನಿರ್ಬಂಧಗಳನ್ನು ಪರಿಚಯಿಸಲು ಯೋಜಿಸಿದೆ. ಆದರೆ ಹೆಚ್ಚಿನ ವಿವರಗಳನ್ನು ಅವರು ಬಹಿರಂಗಪಡಿಸಿಲ್ಲ. ಆಸ್ಟ್ರೇಲಿಯಾ ಮಾರ್ಗ ಅನುಸರಿಸಿದ ದೇಶಗಳು ತಂತ್ರಜ್ಞಾನ ಬಳಕೆ, ಗೌಪ್ಯತೆ, ಮಕ್ಕಳ ಸುರಕ್ಷತೆ ಮತ್ತು ಮಾನಸಿಕ ಆರೋಗ್ಯದ ಕುರಿತು ಆಸ್ಟ್ರೇಲಿಯಾದಲ್ಲಿ ಈ ಕಾನೂನು ತೀವ್ರ ಚರ್ಚೆಯನ್ನು ಹುಟ್ಟುಹಾಕುವುದರ ಜತೆಗೆ ಇದೇ ರೀತಿಯ ನಿರ್ಬಂಧಗಳ ಬಗ್ಗೆ ಇತರ ದೇಶಗಳೂ ಆಸಕ್ತಿ ತೋರಿಸಿವೆ. ಉದಾಹರಣೆಗೆ, ಡೆನ್ಮಾರ್ಕ್ ಕಳೆದ ನವೆಂಬರ್ನಲ್ಲಿ 15 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಮಾಧ್ಯಮವನ್ನು ನಿಷೇಧಿಸುವ ಯೋಜನೆಯನ್ನು ಘೋಷಿಸಿತು. 16 ವರ್ಷದೊಳಗಿನ ಮಕ್ಕಳು 2026 ರಿಂದ ಸಾಮಾಜಿಕ ಮಾಧ್ಯಮ ಖಾತೆಗಳಿಗೆ ಸೈನ್ ಅಪ್ ಮಾಡುವುದನ್ನು ನಿರ್ಬಂಧಿಸುವ ಯೋಜನೆಯನ್ನು ಮಲೇಷ್ಯಾ ಘೋಷಿಸಿತ್ತು. ಡಿಸೆಂಬರ್ನಲ್ಲಿ, ಮದ್ರಾಸ್ ಹೈಕೋರ್ಟ್ ಕೇಂದ್ರ ಸರಕಾರ ಆಸ್ಟ್ರೇಲಿಯಾದ ಚೌಕಟ್ಟಿಗೆ ಹೋಲುವ ಕಾನೂನನ್ನು ತರುವ ಸಾಧ್ಯತೆಯನ್ನು ಅನ್ವೇಷಿಸಬಹುದು ಎಂದು ಹೇಳಿತ್ತು.
ಮಿನಿಯಾಪೊಲೀಸ್ನಲ್ಲಿ ಫೆಡರಲ್ ಅಧಿಕಾರಿಗಳು ಪ್ರತಿಭಟನಾಕಾರರನ್ನು ಬಂಧಿಸುವಂತಿಲ್ಲ: ಕೋರ್ಟ್ ತೀರ್ಪು
ನ್ಯೂಯಾರ್ಕ್, ಜ.17: ಮಿನಿಯಾಪೊಲೀಸ್ನಲ್ಲಿ ಅಮೆರಿಕಾದ ವಲಸೆ ಜಾರಿ ಕಾರ್ಯಾಚರಣೆಯಲ್ಲಿ ಭಾಗವಹಿಸುತ್ತಿರುವ ಫೆಡರಲ್ ಅಧಿಕಾರಿಗಳು ಶಾಂತಿಯುತ ಪ್ರತಿಭಟನಾಕಾರರನ್ನು ಬಂಧಿಸಲು ಅಥವಾ ಅಶ್ರುವಾಯು ಪ್ರಯೋಗಿಸಲು ಸಾಧ್ಯವಿಲ್ಲ ಎಂದು ಮಿನ್ನೆಸೊಟಾದ ನ್ಯಾಯಾಧೀಶರು ಶುಕ್ರವಾರ ತೀರ್ಪು ನೀಡಿದ್ದಾರೆ. ಡಿಸೆಂಬರ್ನಲ್ಲಿ ಮಿನ್ನೆಸೋಟಾದ ಆರು ಕಾರ್ಯಕರ್ತರ ವಿರುದ್ಧ ದಾಖಲಾದ ಪ್ರಕರಣಕ್ಕೆ ಸಂಬಂಧಿಸಿ ನ್ಯಾಯಾಲಯ ಈ ತೀರ್ಪು ನೀಡಿದೆ. ಮಿನಿಯಾಪೊಲೀಸ್ ಮತ್ತು ಸೈಂಟ್ ಪಾಲ್ ಪ್ರದೇಶದಲ್ಲಿ ವಲಸೆ ಮತ್ತು ಸುಂಕ ಜಾರಿ ಇಲಾಖೆ ಹಾಗೂ ಗಸ್ತು ಅಧಿಕಾರಿಗಳ ಚಟುವಟಿಕೆಗಳ ಮೇಲೆ ನಿಗಾ ವಹಿಸಿದ್ದಕ್ಕಾಗಿ ಹಲವರ ವಿರುದ್ದ ಪ್ರಕರಣ ದಾಖಲಾಗಿದೆ. ಅವಳಿ ನಗರಗಳಲ್ಲಿ ಅಧಿಕಾರಿಗಳ ಕಾರ್ಯಾಚರಣೆಗೆ ಅಡ್ಡಿಪಡಿಸಿದ ಆರೋಪದಲ್ಲಿ ಹಲವರನ್ನು ಬಂಧಿಸಿ ಬಳಿಕ ಬಿಡುಗಡೆಗೊಳಿಸಲಾಗಿದೆ. ನಗರಗಳ ನಿವಾಸಿಗಳ ಸಾಂವಿಧಾನಿಕ ಹಕ್ಕುಗಳನ್ನು ಸರಕಾರಿ ಅಧಿಕಾರಿಗಳು ಉಲ್ಲಂಘಿಸುತ್ತಿದ್ದಾರೆ ಎಂದು ಕಾರ್ಯಕರ್ತರು ನ್ಯಾಯಾಲಯದಲ್ಲಿ ವಾದಿಸಿದ್ದರು. ತೀರ್ಪಿನ ಬಗ್ಗೆ ಪ್ರತಿಕ್ರಿಯಿಸಿರುವ ಅಮೆರಿಕಾದ ರಾಷ್ಟ್ರೀಯ ಭದ್ರತಾ ಸಂಸ್ಥೆಯ ಸಹಾಯಕ ಕಾರ್ಯದರ್ಶಿ ಟ್ರಿಸಿಯಾ ಮ್ಯಾಕ್ಲಾಘ್ಲಿನ್ `ತಮ್ಮ ಏಜೆನ್ಸಿ ಕಾನೂನಿನ ನಿಯಮಗಳನ್ನು ಎತ್ತಿಹಿಡಿಯಲು ಮತ್ತು ನಮ್ಮ ಅಧಿಕಾರಿಗಳು ಹಾಗೂ ಸಾರ್ವಜನಿಕರನ್ನು ಅಪಾಯಕಾರಿ ಗಲಭೆಕೋರರಿಂದ ರಕ್ಷಿಸಲು ಸೂಕ್ತ ಮತ್ತು ಸಾಂವಿಧಾನಿಕ ಕ್ರಮಗಳನ್ನು ಕೈಗೊಳ್ಳುತ್ತದೆ' ಎಂದಿದ್ದಾರೆ.
ಇಎಂಐ ಕಟ್ಟಲು 100ಕ್ಕೂ ಹೆಚ್ಚು ಮಂದಿಗೆ ಹನಿಟ್ರ್ಯಾಪ್ ಮಾಡಿ ಸುಲಿಗೆ: ದಂಪತಿ ಬಂಧನ
ಸುಮಾರು 100ಕ್ಕೂ ಹೆಚ್ಚು ಜನರನ್ನು ಹನಿಟ್ರ್ಯಾಪ್ಗೆ ಒಳಪಡಿಸಿ, ಅವರ ಖಾಸಗಿ ಕ್ಷಣಗಳ ವೀಡಿಯೊ ಚಿತ್ರೀಕರಣ ಮಾಡಿ ಹಣ ವಸೂಲಿ ಮಾಡುತ್ತಿದ್ದ ಕರೀಂನಗರದ ದಂಪತಿಯನ್ನು ತೆಲಂಗಾಣ ಪೊಲೀಸರು ಬಂಧಿಸಿದ್ದಾರೆ. ಈ ಘಟನೆ ಜನವರಿ 14ರಂದು ಬೆಳಕಿಗೆ ಬಂದಿದ್ದು, ಆರ್ಥಿಕ ಸಂಕಷ್ಟದಿಂದ ಇಎಂಐ ಪಾವತಿ ಮಾಡಲು ಈ ದಂಧೆಗೆ ಇಳಿದಿದ್ದಾಗಿ ತಿಳಿದುಬಂದಿದೆ. ಕರೀಂನಗರ ಗ್ರಾಮೀಣ ಪೊಲೀಸ್ ಇಲಾಖೆ ನೀಡಿರುವ ಮಾಹಿತಿಯಂತೆ
ವಿದ್ಯುತ್ ಇಲ್ಲದೆ ನರಳುತ್ತಿರುವ ಉಕ್ರೇನ್ ಸಹಾಯಕ್ಕೆ ನಿಂತ ಯುರೋಪ್ ದೇಶಗಳು
ಉಕ್ರೇನ್ ವಿರುದ್ಧ ರಷ್ಯಾ ಸೇನೆ ಭೀಕರವಾಗಿ ದಾಳಿ ನಡೆಸುತ್ತಿರುವ ಕಾರಣಕ್ಕೆ ನೂರಾರು ಸಮಸ್ಯೆಗಳ ಸುಳಿಗೆ ಸಿಲುಕಿ ನಲುಗಿದೆ ಆ ದೇಶ. ಪ್ರಮುಖವಾಗಿ ವಿದ್ಯುತ್ ಹಾಗೂ ತೈಲ ಸರಬರಾಜು ವ್ಯವಸ್ಥೆಯೇ ಹಾಳಾಗಿ ಹೋಗಿದೆ. ಇದರ ಪರಿಣಾಮ ಉಕ್ರೇನ್ ನಾಗರಿಕರು ವಿದ್ಯುತ್ ಇಲ್ಲದೆ ಚಳಿಯಲ್ಲಿ ಪರದಾಡುವ ಸನ್ನಿವೇಶ ನಿರ್ಮಾಣ ಆಗಿತ್ತು. ತೀವ್ರ ಚಳಿ ನಡುವೆ ಬೆಚ್ಚಗೆ ಇರಲು ಕರೆಂಟ್ ಇಲ್ಲದೆ,
ಮಚಾದೊ ಅವರಿಂದ ನೊಬೆಲ್ ಪ್ರಶಸ್ತಿ ಸ್ವೀಕರಿಸಿದ್ದನ್ನು ಸಮರ್ಥಿಸಿಕೊಂಡ ಟ್ರಂಪ್
ವಾಷಿಂಗ್ಟನ್, ಜ.17: ವೆನೆಝುವೆಲಾದ ವಿರೋಧ ಪಕ್ಷದ ನಾಯಕಿಯ ನೊಬೆಲ್ ಶಾಂತಿ ಪ್ರಶಸ್ತಿಯನ್ನು ಸ್ವೀಕರಿಸಿದ್ದೇನೆ ಎಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಮರ್ಥಿಸಿಕೊಂಡಿದ್ದಾರೆ. 8 ಜಾಗತಿಕ ಯುದ್ದಗಳನ್ನು ಕೊನೆಗೊಳಿಸುವಲ್ಲಿ ನಿರ್ವಹಿಸಿರುವ ಪಾತ್ರವನ್ನು ಗುರುತಿಸಿ ಈ ಪ್ರಶಸ್ತಿಯನ್ನು ನೀಡಲಾಗಿದ್ದು ಇದು ಪ್ರಾಮಾಣಿಕ ನಿರ್ಧಾರವಾಗಿದೆ. ಅವರು ಪ್ರಶಸ್ತಿಯನ್ನು ನನಗೆ ಒಪ್ಪಿಸುವುದಾಗಿ ಹೇಳಿದರು. ಇದು ಉತ್ತಮ ನಿರ್ಧಾರವೆಂದು ನಾನು ಭಾವಿಸಿದೆ ಎಂದು ಶ್ವೇತಭವನದಲ್ಲಿ ಸುದ್ದಿಗಾರರ ಪ್ರಶ್ನೆಗೆ ಟ್ರಂಪ್ ಉತ್ತರಿಸಿದರು. `ನೀವು ಎಂಟು ಯುದ್ದಗಳನ್ನು ಕೊನೆಗೊಳಿಸಿದ್ದೀರಿ. ಆದ್ದರಿಂದ ನಿಮಗಿಂತ ಹೆಚ್ಚು ಯಾರೂ ಈ ಪ್ರಶಸ್ತಿಗೆ ಅರ್ಹರಲ್ಲ' ಎಂದು ಮಚಾದೊ ಹೇಳಿದ್ದರು. ಒಂದು ವರ್ಷದಲ್ಲಿ ನಾವು 8 ಯುದ್ದಗಳನ್ನು ತಪ್ಪಿಸಿದ್ದೇನೆ. ಭಾರತ-ಪಾಕಿಸ್ತಾನದ ಸಂಘರ್ಷವನ್ನು ಕೊನೆಗೊಳಿಸಿರುವುದಕ್ಕೆ ಪಾಕ್ ಪ್ರಧಾನಿ ಶಹಬಾಝ್ ಷರೀಫ್ ವೈಯಕ್ತಿಕವಾಗಿ ಕೃತಜ್ಞತೆ ಸಲ್ಲಿಸಿದ್ದರು ಎಂದು ಟ್ರಂಪ್ ಪ್ರತಿಪಾದಿಸಿದ್ದಾರೆ. ಈ ಮಧ್ಯೆ, ಮಚಾದೊ ಅವರಿಂದ ಟ್ರಂಪ್ ನೊಬೆಲ್ ಶಾಂತಿ ಪ್ರಶಸ್ತಿ ಸ್ವೀಕರಿಸಿರುವುದನ್ನು ನಾರ್ವೆಯ ನಾಯಕರು, ನೊಬೆಲ್ ಪ್ರತಿಷ್ಠಾನದ ಅಧಿಕಾರಿಗಳು ತೀವ್ರವಾಗಿ ಖಂಡಿಸಿದ್ದಾರೆ. ಪ್ರಶಸ್ತಿಯನ್ನು ಟ್ರಂಪ್ ಸ್ವೀಕರಿಸಿರುವುದು `ಇತರ ಜನರ ಸಾಧನೆಗಳ ಶ್ರೇಯವನ್ನು ತನ್ನದಾಗಿಸಿಕೊಳ್ಳುವ ಸ್ವಭಾವವನ್ನು ತೋರಿಸಿದೆ' ಎಂದು ನಾರ್ವೆಯ ಸಂಸದ ಟ್ರಿಗ್ವೆ ವೆಡುಮ್ ಟೀಕಿಸಿದ್ದಾರೆ.
ಕೆಎಫ್ಡಿ ನಿಯಂತ್ರಣಕ್ಕೆ ಡೆಪಾ ತೈಲ ಖರೀದಿಸಲು ಅನುಮೋದನೆ
ಬೆಂಗಳೂರು : ಕ್ಯಾಸನೂರ್ ಕಾಡಿನ ರೋಗ(ಕೆಎಫ್ಡಿ) ನಿಯಂತ್ರಣಕ್ಕೆ ಶೇ.25ರಷ್ಟು ಹೆಚ್ಚುವರಿ ಡೆಪಾ ತೈಲದ ಬಾಟಲಿಗಳನ್ನು ಖರೀದಿ ಮಾಡಲು ರಾಜ್ಯ ಸರಕಾರವು ಆಡಳಿತಾತ್ಮಕ ಅನುಮೋದನೆ ನೀಡಿದೆ. 2024-25ನೇ ಸಾಲಿನಲ್ಲಿ ಸರಿಸುಮಾರು 7,84,004 ಡೆಪಾ ಬಾಟಲಿಗಳು ಸರಬರಾಜಾಗಿದ್ದು, ಈವರೆಗೆ 5,05,282 ಬಾಟಲಿಗಳು ವಿತರಣೆಯಾಗಿರುತ್ತದೆ. ಈಗ ಡೆಪಾ ತೈಲದ 2,78,722 ಬಾಟಲಿಗಳು ಲಭ್ಯವಿದ್ದು, ಈ ದಾಸ್ತಾನು ಫೆಬ್ರವರಿ ಎರಡನೇ ವಾರದವರೆಗೆ ಮಾತ್ರ ವಿತರಿಸಬಹುದಾಗಿದೆ. ಮಾರ್ಚ್ನಿಂದ ಜೂನ್ವರೆಗೆ 5,74,874 ಡೆಪಾ ತೈಲದ ಬಾಟಲಿ ಅವಶ್ಯಕತೆ ಇದ್ದು, ಅದನ್ನು ಖರೀದಿ ಮಾಡಲು ಅನುಮೋದನೆ ನೀಡಲಾಗಿದೆ. ರಾಜ್ಯದ ಕೆಲ ಜಿಲ್ಲೆಗಳಲ್ಲಿ ಕ್ಯಾಸನೂರ್ ಕಾಡಿನ ರೋಗ ಋತುವು ಪ್ರಾರಂಭವಾಗಿದ್ದು, ಸೋಂಕನ್ನು ತಡೆಗಟ್ಟಲು ಯಾವುದೇ ಲಸಿಕೆ ಲಭ್ಯವಿಲ್ಲ. ದುರ್ಬಲ ಜನಸಂಖ್ಯೆ, ಅರಣ್ಯ ಕೆಲಸಗಾರರು ಮತ್ತು ಮುಂಚೂಣಿ ಸಿಬ್ಬಂದಿಗಳಲ್ಲಿ ಸೋಂಕಿನ ಅಪಾಯವನ್ನು ಕಡಿಮೆ ಮಾಡಲು ಡೆಪಾ ತೈಲ ಮಾತ್ರ ಪರಿಣಾಮಕಾರಿ ತಡೆಗಟ್ಟುವ ಕ್ರಮವಾಗಿದೆ ಎಂದು ಸರಕಾರ ಹೇಳಿದೆ.
ಅಂಗಾಂಗ ಕಸಿ ಆಸ್ಪತ್ರೆಯಲ್ಲಿ ಶೇ.70ರಷ್ಟು ರಿಯಾಯಿತಿ : ಡಾ.ಶರಣಪ್ರಕಾಶ ಪಾಟೀಲ್
ಬೆಂಗಳೂರು : ಕರ್ನಾಟಕದಲ್ಲಿ ದೇಶದ ಪ್ರಪ್ರಥಮ ಮಾನವ ಬಹು ಅಂಗಾಂಗ ಕಸಿ ಆಸ್ಪತ್ರೆ ನಿರ್ಮಾಣಕ್ಕೆ ಅಝೀಂ ಪ್ರೇಜಿ ಪ್ರತಿಷ್ಠಾನ ಜತೆ ಒಡಂಬಡಿಕೆ ಮಾಡಿಕೊಳ್ಳಲಾಗಿದ್ದು, ಮುಂದಿನ ದಿನಗಳಲ್ಲಿ ಶೇ.70ರಷ್ಟು ರಿಯಾಯಿತಿಯಲ್ಲಿ ಸೇವೆ ದೊರೆಯಲಿದೆ ಎಂದು ವೈದ್ಯಕೀಯ ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಸಚಿವ ಡಾ.ಶರಣಪ್ರಕಾಶ ಪಾಟೀಲ್ ಹೇಳಿದ್ದಾರೆ. ಶನಿವಾರ ವಿಧಾನಸೌಧದ ಬ್ಯಾಂಕ್ವೆಟ್ ಸಭಾಂಗಣದಲ್ಲಿ ವೈದ್ಯಕೀಯ ಶಿಕ್ಷಣ ಇಲಾಖೆ ವತಿಯಿಂದ ಸಾವಿರ ಹಾಸಿಗೆಗಳ ಚಾರಿಟೇಬಲ್ ಸೂಪರ್ ಸ್ಪೇಷಾಲಿಟಿ ಹಾಗೂ ಮಾನವ ಬಹು ಅಂಗಾಂಗ ಕಸಿ ಆಸ್ಪತ್ರೆ ನಿರ್ಮಾಣ ಮತ್ತು ನಿರ್ವಹಣೆ ಕುರಿತು ಅಝೀಂ ಪ್ರೇಜಿ ಪ್ರತಿಷ್ಠಾನ ನಡುವೆ ಒಡಂಬಡಿಕೆಗೆ ಸಹಿ ಹಾಕಿದ ನಂತರ ‘ಅಂಗಾಂಗ ದಾನ ಮಹಾದಾನ’ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು. ದೇಶದಲ್ಲಿಯೇ ಮೊದಲ ಬಾರಿಗೆ ಕರ್ನಾಟಕದಲ್ಲಿ ಮಾನವ ಬಹು ಅಂಗಾಂಗ ಕಸಿ ಆಸ್ಪತ್ರೆ ನಿರ್ಮಾಣ ಆಗುತ್ತಿರುವುದು ಸಂತಸ ತಂದಿದೆ. ಕೆಲ ವರದಿಗಳ ಪ್ರಕಾರ 5 ಸಾವಿರ ರೋಗಿಗಳು ಕಿಡ್ನಿ ಕಸಿ ಚಿಕಿತ್ಸೆಗಾಗಿ ಕಾಯುತ್ತಿದ್ದಾರೆ. ಇನ್ನುಳಿದ ಹಲವು ರೋಗಿಗಳಿಗೆ ಬಹು ಅಂಗಾಂಗ ಕಸಿ ಚಿಕಿತ್ಸೆ ಬೇಕಾಗಿದೆ. ಇಂತಹ ಸಂದರ್ಭದಲ್ಲಿ ಮಾನವ ಬಹು ಅಂಗಾಂಗ ಕಸಿ ಆಸ್ಪತ್ರೆ ನಿರ್ಮಾಣ ಮತ್ತು ನಿರ್ವಹಣೆಗೆ ಅಝೀಂ ಪ್ರೇಮ್ ಜಿ ಪ್ರತಿಷ್ಠಾನ ಮುಂದಾಗಿದ್ದು, ಮುಂದಿನ ದಿನಗಳಲ್ಲಿ ಶೇ.70ರಷ್ಟು ರಿಯಾಯಿತಿಯಲ್ಲಿ ಸೇವೆ ದೊರೆಯಲಿದೆ ಎಂದು ತಿಳಿಸಿದರು. ಈ ಆಸ್ಪತ್ರೆಯನ್ನು 1000 ಹಾಸಿಗೆಗಳ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯನ್ನಾಗಿ ಅಭಿವೃದ್ಧಿಪಡಿಸಲಾಗುತ್ತಿದ್ದು ಈ ಮೂಲಕ ದುರ್ಬಲ ವರ್ಗಗಳು ಮತ್ತು ಸೂಕ್ತ ಸೇವೆಗಳಿಂದ ವಂಚಿತರಾದ ಜನರಿಗೆ ಉತ್ತಮ ಗುಣಮಟ್ಟದ ಆರೈಕೆಯನ್ನು ಒದಗಿಸುವ ಉದ್ದೇಶವನ್ನು ಹೊಂದಿದೆ. ಒಟ್ಟಾರೆ ಶೇ.75 ರಷ್ಟು ಹಾಸಿಗೆಗಳನ್ನು ರೋಗಿಗಳಿಗೆ ಉಚಿತವಾಗಿ ಒದಗಿಸುವ ಗುರಿ ಹೊಂದಲಾಗಿದ್ದು, ಉಳಿದ ಹಾಸಿಗೆಗಳಿಗೆ ತೃತೀಯ ಹಂತದ ಆರೈಕೆ ಒದಗಿಸುವ ಸರಕಾರಿ ಆಸ್ಪತ್ರೆಗಳ ದರಕ್ಕೆ ಸರಿಸಮಾನವಾದ ದರವನ್ನು ವಿಧಿಸಲಾಗುತ್ತದೆ ಎಂದು ಹೇಳಿದರು. ಈ ಆಸ್ಪತ್ರೆಯು ವಿವಿಧ ಸ್ಪೆಷಾಲಿಟಿಗಳನ್ನು ಒದಗಿಸಲಿದ್ದು, ಅಂಗಾಂಗ ಕಸಿಗೆ ವಿಶೇಷ ಒತ್ತನ್ನು ನೀಡಲಾಗುತ್ತದೆ. ಅಲ್ಲದೆ ಇದು ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನೆಗೆ ತನ್ನ ಕೊಡುಗೆಯನ್ನು ನೀಡಲಿದೆ. ಈ ಉಪಕ್ರಮವು, ಅತ್ಯಾಧುನಿಕ ತೃತೀಯ ಹಂತದ ಆರೈಕೆಯ ಲಭ್ಯತೆಯನ್ನು ವಿಸ್ತರಿಸುವ ಮೂಲಕ ನಗರದ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ಬಲಪಡಿಸುವ ಮತ್ತು ಅದಕ್ಕೆ ಪೂರಕವಾಗಿ ಕೊಡುಗೆ ನೀಡುವ ಉದ್ದೇಶವನ್ನು ಹೊಂದಿದೆ ಎಂದೂ ಅವರು ಉಲ್ಲೇಖಿಸಿದರು.
ಜಾರ್ಖಂಡ್ನಲ್ಲಿ ವಲಸೆ ಕಾರ್ಮಿಕನ ಹತ್ಯೆ: ಮುರ್ಷಿದಾಬಾದ್ನಲ್ಲಿ ಮತ್ತೆ ಪ್ರತಿಭಟನೆ
ಕೋಲ್ಕತಾ, ಜ. 17: ಜಾರ್ಖಂಡ್ನಲ್ಲಿ ಪಶ್ಚಿಮಬಂಗಾಳದ ವಲಸೆ ಕಾರ್ಮಿಕನ ಹತ್ಯೆಯ ಹಿನ್ನೆಲೆಯಲ್ಲಿ ಪಶ್ಚಿಮಬಂಗಾಳದ ಮುರ್ಷಿದಾಬಾದ್ ಜಿಲ್ಲೆಯಲ್ಲಿ ಜನರು ಶನಿವಾರ ಮತ್ತೆ ಸಮೀಪದ ರೈಲು ಹಳಿ ಹಾಗೂ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ತಡೆದು ಪ್ರತಿಭಟನೆ ನಡೆಸಿದರು. ಬಾಂಗ್ಲಾದೇಶಿ ಪ್ರಜೆಗಳೆಂದು ಆರೋಪಿಸಿ ಪಶ್ಚಿಮಬಂಗಾಳದ ವಲಸೆ ಕಾರ್ಮಿಕರ ಮೇಲೆ ಇತ್ತೀಚೆಗೆ ಹೆಚ್ಚುತ್ತಿರುವ ಹಲ್ಲೆಯನ್ನು ಖಂಡಿಸಿ ನಡೆಯುತ್ತಿರುವ ಸರಣಿ ಪ್ರತಿಭಟನೆಯ ಭಾಗವಾಗಿ ಈ ಪ್ರತಿಭಟನೆ ನಡೆದಿದೆ. ಹಿಂಸಾಚಾರ ಸಂಭವಿಸುವ ಸಾಧ್ಯತೆ ಹಿನ್ನೆಲೆಯಲ್ಲಿ ಶನಿವಾರ ಮುರ್ಷಿದಾಬಾದ್ನ ಬೆಲಡಂಗಾ ಪ್ರದೇಶದಲ್ಲಿ ಬಿಗಿ ಭದ್ರತೆ ಏರ್ಪಡಿಸಲಾಗಿತ್ತು. ಬೆಲಡಂಗಾ ನಿವಾಸಿ 35 ವರ್ಷದ ಅಲ್ಲಾವುದ್ದೀನ್ ಶೇಖ್ ಅವರು ಕಳೆದ ಐದು ವರ್ಷಗಳಿಂದ ಜಾರ್ಖಂಡ್ನ ಪಲಾಮು ಜಿಲ್ಲೆಯ ಬಿಶ್ರಾಮಪುರ ಪ್ರದೇಶದಲ್ಲಿ ವ್ಯಾಪಾರಿಯಾಗಿ ಕೆಲಸ ಮಾಡುತ್ತಿದ್ದರು. ವಲಸೆ ಕಾರ್ಮಿಕರಾಗಿದ್ದ ಅವರಿಗೆ ಮೂರು ವರ್ಷದ ಮಗಳಿದ್ದಳು. ರಜೆಯಲ್ಲಿದ್ದ ಶೇಖ್ ಅವರು ಕೆಲವು ದಿನಗಳ ಹಿಂದೆ ಕೆಲಸಕ್ಕೆ ಹಿಂದಿರುಗಿದ್ದರು. ಕೆಲಸಕ್ಕೆ ಮರಳಿದ ಕೆಲವೇ ದಿನಗಳಲ್ಲಿ ಅವರನ್ನು ಬಾಂಗ್ಲಾದೇಶದ ಪ್ರಜೆ ಎಂದು ಶಂಕಿಸಿ ಹತ್ಯೆಗೈಯಲಾಗಿದೆ. ಅಲಾವುದ್ದೀನ್ ಅವರ ಸಾವಿನ ಸುದ್ದಿ ಮುರ್ಷಿದಾಬಾದ್ಗೆ ತಲುಪಿದ ಬಳಿಕ ಸುಜಾಪುರ-ಮಹೇಶ್ಪುರ ಪ್ರದೇಶದ ನಿವಾಸಿಗಳು ಬೆಲಡಂಗಾ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿರುವ ಮಹೇಶಪುರದಲ್ಲಿರುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಶುಕ್ರವಾರ ಬೆಳಗ್ಗೆ ಸುಮಾರು 8 ಗಂಟೆಗೆ ವಾಹನ ಸಂಚಾರಕ್ಕೆ ತಡೆ ಒಡ್ಡಿ ಪ್ರತಿಭಟನೆ ನಡೆಸಿದ್ದರು. ರಾಷ್ಟ್ರೀಯ ಹೆದ್ದಾರಿ 12ರ ಜೊತೆಗೆ ಮಹೇಶಪುರದ ರೈಲ್ವೆ ಲೈನ್ನಲ್ಲಿ ರೈಲು ಹಳಿಗಳಲ್ಲಿ ಮರದ ದಿಮ್ಮಿಗಳನ್ನು ಇರಿಸಿ ರೈಲು ಸಂಚಾರಕ್ಕೆ ತಡೆ ಒಡ್ಡಿದ್ದರು. ಇದರಿಂದ ಲಾಲಗೋಲಾದಿಂದ ರಾನಾಘಾಟ್ಗೆ ಸಂಚರಿಸುತ್ತಿದ್ದ ಲೋಕಲ್ ರೈಲನ್ನು ಮಾರ್ಗ ಮಧ್ಯದಲ್ಲೇ ನಿಲ್ಲಿಸಲಾಗಿತ್ತು. ಇತರ ರೈಲುಗಳನ್ನು ಸಂತರಾಗಾಚಿ ಹಾಗೂ ಬೆರಹಾಮಪುರ ರೈಲು ನಿಲ್ದಾಣಗಳಲ್ಲಿ ನಿಲ್ಲಿಸಲಾಗಿತ್ತು. ಸಿಯಾಲ್ದಹದಿಂದ ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ರೈಲುಗಳು ಬೆಲಡಂಗ ರೈಲು ನಿಲ್ದಾಣಕ್ಕೆ ಮಾತ್ರ ತಲುಪಲು ಸಾಧ್ಯವಾಗಿತ್ತು. ಕೃಷ್ಣನಗರ-ಲಾಲ ಗೋಲ ಲೈನ್ನಲ್ಲಿ ರೈಲುಗಳ ಸಂಚಾರವನ್ನು ನಿಲ್ಲಿಸಲಾಗಿತ್ತು. ಶನಿವಾರ ಬಿದಿರು ದೊಣ್ಣೆಗಳೊಂದಿಗೆ ದಾಂಧಲೆ ನಡೆಸಿದ ಪ್ರತಿಭಟನಕಾರರು ರಸ್ತೆ ಬದಿಯ ಬ್ಯಾನರ್ ಹಾಗೂ ಫ್ಲೆಕ್ಸ್ಗಳನ್ನು ಕಿತ್ತು ಹಾಕಿದರು. ಹತ್ತಿರದ ಬರುವಾ ಕ್ರಾಸಿಂಗ್ನಲ್ಲಿ ಕೂಡ ಸಂಚಾರಕ್ಕೆ ತಡೆ ಒಡ್ಡಿದರು. ರೈಲ್ವೇ ಗೇಟ್ನ ಸಮೀಪ ಇದ್ದ ಹಲವು ಅಂಗಡಿಗಳಿಗೆ ಹಾನಿ ಉಂಟು ಮಾಡಿದರು.
ಕೊಳೆಗೇರಿ ಅಭಿವೃದ್ಧಿ ಮಂಡಳಿಯಿಂದ 42,345 ಮನೆಗಳ ಹಂಚಿಕೆ : ಝಮೀರ್ ಅಹ್ಮದ್ ಖಾನ್
ಹುಬ್ಬಳ್ಳಿ : ಕೊಳೆಗೇರಿ ಅಭಿವೃದ್ಧಿ ಮಂಡಳಿ ವತಿಯಿಂದ ಜ.24ರಂದು 42,345 ಬಡ ಕುಟುಂಬಗಳಿಗೆ ಮನೆಗಳ ಹಂಚಿಕೆ ಮಾಡಲಾಗುವುದು ಎಂದು ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಬಿ.ಝೆಡ್. ಝಮೀರ್ ಅಹ್ಮದ್ ಖಾನ್ ಹೇಳಿದ್ದಾರೆ. ಹುಬ್ಬಳ್ಳಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜ.24ರಂದು ಬೆಳಗ್ಗೆ 11ಕ್ಕೆ ಹುಬ್ಬಳ್ಳಿಯ ಮಂಟೂರ್ ರಸ್ತೆಯಲ್ಲಿ ಫಲಾನುಭವಿಗಳಿಗೆ ಮನೆ ಹಂಚಿಕೆ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದೆ. ಕಾರ್ಯಕ್ರಮದಲ್ಲಿ ಸುಮಾರು 2 ಲಕ್ಷಕ್ಕೂ ಅಧಿಕ ಜನರು ಪಾಲ್ಗೊಳ್ಳುವ ನಿರೀಕ್ಷೆಯಿದೆ. ರಾಜ್ಯಸಭೆ ಪ್ರತಿ ಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೇರಿದಂತೆ ಸಚಿವರು, ಶಾಸಕರು, ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು. ಈ ಯೋಜನೆಯಲ್ಲಿ ಒಟ್ಟು 1,80,253 ಮನೆಗಳ ನಿರ್ಮಾಣ ಆಗುತ್ತಿದೆ. ರಾಜ್ಯ ಸರಕಾರ ತಲಾ 4 ಲಕ್ಷ ರೂ. ಕೊಡುತ್ತಿದ್ದು, ಜೊತೆಗೆ ಕೇಂದ್ರ ಮತ್ತು ರಾಜ್ಯ ಸರಕಾರದ ಸಬ್ಸಿಡಿ ಸಿಗಲಿದೆ. ಫಲಾನುಭವಿಗಳು ಕೇವಲ ಒಂದು ಲಕ್ಷ ರೂ. ಪಾವತಿಸಬೇಕು. ವೀಡಿಯೊ ಕಾನ್ಫರೆನ್ಸ್ ಮೂಲಕ ಕೊಳೆಗೇರಿ ವಾಸಿಗಳಿಗೆ 20,363 ಹಕ್ಕುಪತ್ರ ನೀಡಲಾಗುವುದು ಎಂದರು. ಕರ್ನಾಟಕ ಕೊಳೆಗೇರಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಪ್ರಸಾದ ಅಬ್ಬಯ್ಯ ಮಾತನಾಡಿ, ಕೊಳೆಗೇರಿ ಅಭಿವೃದ್ಧಿ ಮಂಡಳಿಯಿಂದ ಬಡವರಿಗೆ ಸೂರು ಕಲ್ಪಿಸುವ ದೂರದೃಷ್ಟಿಯೊಂದಿಗೆ ಮನೆಗಳನ್ನು ನಿರ್ಮಿಸಿ, ವಿತರಣೆ ಮಾಡಲಾಗುತ್ತಿದೆ. ಆಸ್ಪತ್ರೆ, ಗ್ರಂಥಾಲಯ ಹಾಗೂ ಸಮುದಾಯ ಭವನವನ್ನು ಸಹ ಇದು ಒಳಗೊಂಡಿರಲಿದೆ. ಈಗಾಗಲೇ 860 ಮನೆಗಳನ್ನು ಆಶ್ರಯ ಯೋಜನೆಯಡಿಯಲ್ಲಿ ನಿರ್ಮಾಣ ಮಾಡಲಾಗಿದೆ. ಪಂಚ ಗ್ಯಾರಂಟಿ ಯೋಜನೆಗಳಿಂದ ರಾಜ್ಯ ಅಭಿವೃದ್ಧಿ ಹೊಂದುತ್ತಿದೆ ಎಂದು ಅವರು ಹೇಳಿದರು. ಸುದ್ದಿಗೋಷ್ಠಿಯಲ್ಲಿ ವಿಧಾನ ಪರಿಷತ್ ಸದಸ್ಯ ಅಬ್ದುಲ್ ಜಬ್ಬಾರ್, ಮಾಜಿ ಸಂಸದ ಐ.ಜಿ.ಸನದಿ, ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಮಾಜಿ ಅಧ್ಯಕ್ಷ ಸದಾನಂದ ಡಂಗನವರ, ಮುಖಂಡರಾದ ಅನ್ವರ್ ಬಾಷಾ, ದೀಪಕ್ ಚಿಂಚೋರೆ, ಅಲ್ತಾಫ್ ಹಳ್ಳೂರ್, ಅನಿಲಕುಮಾರ ಪಾಟೀಲ್ ಇತರರು ಉಪಸ್ಥಿತರಿದ್ದರು. ಈಗಾಗಲೇ ಮೊದಲ ಹಂತದಲ್ಲಿ 36,789 ಮನೆಗಳನ್ನು ವಿತರಿಸಲಾಗಿದೆ. ಎರಡನೇ ಹಂತದಲ್ಲಿ 42,345 ಮನೆಗಳನ್ನು ಹಂಚಿಕೆ ಮಾಡಲಾಗುತ್ತಿದೆ. ಮೂರನೇ ಹಂತದಲ್ಲಿ ಸುಮಾರು 30 ಸಾವಿರ ಮನೆಗಳನ್ನು ಹಂಚಿಕೆ ಮಾಡುವ ಗುರಿ ಹೊಂದಲಾಗಿದೆ. ಮೂರನೇ ಹಂತದ ಮನೆಗಳನ್ನು ಎಪ್ರಿಲ್, ಮೇ ತಿಂಗಳಲ್ಲಿ ವಿತರಿಸಲಾಗುವುದು. ಈಗ ನೀಡುತ್ತಿರುವ ಮನೆಗಳ ಪೈಕಿ ಹುಬ್ಬಳ್ಳಿಯಲ್ಲಿ 1,008 ಸೇರಿ ಧಾರವಾಡ ಜಿಲ್ಲೆಯಲ್ಲಿ 2,767 ಮನೆ ಹಂಚಿಕೆ ಮಾಡಲಾಗುತ್ತಿದೆ. -ಸಚಿವ ಝಮೀರ್ ಅಹ್ಮದ್ ಖಾನ್
80.90 ಕೋಟಿ ರೂ. ಮೌಲ್ಯದ ಸರಕಾರಿ ಜಮೀನು ಒತ್ತುವರಿ ತೆರವು : ಜಿಲ್ಲಾಧಿಕಾರಿ ಜಿ.ಜಗದೀಶ್
ಬೆಂಗಳೂರು : ಬೆಂಗಳೂರು ನಗರ ಜಿಲ್ಲಾ ವ್ಯಾಪ್ತಿಯಲ್ಲಿ ಒತ್ತುವರಿಯಾಗಿರುವ 80.90 ಕೋಟಿ ರೂ. ಅಂದಾಜು ಮೌಲ್ಯದ ಒಟ್ಟು 16 ಎಕರೆ 0.23 ಗುಂಟೆ ಸರಕಾರಿ ಜಮೀನನ್ನು ಬೆಂಗಳೂರು ನಗರ ಜಿಲ್ಲಾಧಿಕಾರಿ ಜಿ.ಜಗದೀಶ್ ಅವರ ನೇತೃತ್ವದಲ್ಲಿ ತೆರವುಗೊಳಿಸಿ ಸರಕಾರದ ವಶಕ್ಕೆ ಪಡೆಯಲಾಯಿತು. ಶನಿವಾರ ಬೆಂಗಳೂರು ನಗರ ಜಿಲ್ಲೆಯಾದ್ಯಂತ ವಿವಿಧ ತಾಲೂಕುಗಳ ತಹಶೀಲ್ದಾರ್ ಗಳು ತಮ್ಮ ವ್ಯಾಪ್ತಿಯಲ್ಲಿ ಅಕ್ರಮವಾಗಿ ಒತ್ತುವರಿಯಾಗಿದ್ದ ಸ್ಮಶಾನ, ಗುಂಡುತೋಪು, ಡ್ರೈನೇಜ್, ರಾಜಕಾಲುವೆ, ಸರಕಾರಿ, ಗೋಮಾಳ, ಸರಕಾರಿ ಕೆರೆ, ಸರಕಾರಿ ಗೋಮಾಳ ಮತ್ತು ಹಿಡುವಳಿ ಸರ್ವೆ ನಂಬರ್ ಜಾಗಗಳಿಗೆ ಭೇಟಿ ನೀಡಿ ತೆರವು ಕಾರ್ಯಾಚರಣೆ ಕೈಗೊಂಡರು. ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಜಗದೀಶ್ ಕೆ.ನಾಯಕ್, ಜಿಲ್ಲಾಧಿಕಾರಿಗಳ ಕಚೇರಿಯ ಕಚೇರಿ ಸಹಾಯಕರು, ತಾಲೂಕಿನ ತಹಶೀಲ್ದಾರ್ಗಳು ಉಪಸ್ಥಿತರಿದ್ದರು.
ಲಕ್ಕುಂಡಿಯಲ್ಲಿ ಉತ್ಖನನದ ವೇಳೆ ಪಾಣಿಬಟ್ಟಲು ಪತ್ತೆ, 2ನೇ ದಿನವೇ ಪತ್ತೆಯಾದ ಪ್ರಾಚ್ಯಾವಶೇಷ
ಗದಗ ಜಿಲ್ಲೆಯ ಐತಿಹಾಸಿಕ ಲಕ್ಕುಂಡಿ ಗ್ರಾಮದಲ್ಲಿ ಉತ್ಖನನದ ಎರಡನೇ ದಿನ ಶಿವಲಿಂಗದ ಪಾಣಿಬಟ್ಟಲು ಮಾದರಿಯ ಪ್ರಾಚ್ಯಾವಶೇಷ ಪತ್ತೆಯಾಗಿದೆ. ಕೋಟೆ ವೀರಭದ್ರೇಶ್ವರ ದೇವಸ್ಥಾನದ ಆವರಣದಲ್ಲಿ ನಡೆಯುತ್ತಿರುವ ಉತ್ಖನನವು ಸ್ಥಳೀಯರಲ್ಲಿ ಕುತೂಹಲ ಮೂಡಿಸಿದೆ. ಈ ಉತ್ಖನನವು 1121ರ ಶಿಲಾಶಾಸನ ಮತ್ತು 'ಅಚ್ಚಪ್ಪನ ಬಯಲು' ಎಂಬ ಐತಿಹಾಸಿಕ ಹಿನ್ನೆಲೆಯನ್ನು ಹೊಂದಿದೆ.
ನಾಳೆ(ಜ.18) ನ್ಯೂಝಿಲ್ಯಾಂಡ್ ವಿರುದ್ಧದ ಕೊನೆಯ ಏಕದಿನ | ಭಾರತದ ಚಿತ್ತ ಸರಣಿ ಗೆಲುವಿನತ್ತ
ಇಂದೋರ್, ಜ. 17: ಭಾರತ ಮತ್ತು ಪ್ರವಾಸಿ ನ್ಯೂಝಿಲ್ಯಾಂಡ್ ಕ್ರಿಕೆಟ್ ತಂಡಗಳ ನಡುವಿನ ಏಕದಿನ ಸರಣಿ ನಿರ್ಣಾಯಕ ಮೂರನೇ ಹಾಗೂ ಕೊನೆಯ ಪಂದ್ಯವು ಇಂದೋರ್ನ ಹೋಳ್ಕರ್ ಸ್ಟೇಡಿಯಮ್ನಲ್ಲಿ ರವಿವಾರ ನಡೆಯಲಿದೆ. ಸರಣಿಯು ಈಗ 1-1ರಲ್ಲಿ ಸಮಬಲಗೊಂಡಿದ್ದು, ನಾಳಿನ ಪಂದ್ಯವು ನಿರ್ಣಾಯಕವಾಗಿದೆ. ಸರಣಿಯ ಮೊದಲ ಪಂದ್ಯವನ್ನು ಗೆದ್ದಿರುವ ಭಾರತ ಎರಡನೇ ಪಂದ್ಯವನ್ನು ಕಳೆದುಕೊಂಡಿದೆ. ಈಗ ನಿರ್ಣಾಯಕ ಮೂರನೇ ಪಂದ್ಯವನ್ನು ಗೆದ್ದು ಸರಣಿಯನ್ನು ಕೈವಶಪಡಿಸಿಕೊಳ್ಳುವತ್ತ ಅಡಿ ಇಟ್ಟಿದೆ. ಪಂದ್ಯದ ಫಲಿತಾಂಶವು ಹಿರಿಯ ಆಟಗಾರರಾದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿಯ ನಿರ್ವಹಣೆಯನ್ನು ಅವಲಂಬಿಸಿದೆ. ನ್ಯೂಝಿಲ್ಯಾಂಡ್ ಹಿಂದೆ ಭಾರತದಲ್ಲಿ ಟೆಸ್ ಸರಣಿಯೊಂದನ್ನು ಗೆಲ್ಲುವ ಸನಿಹಕ್ಕೂ ಬಂದಿರಲಿಲ್ಲ. ಆದರೆ, ಅದು ಕಳೆದ ವರ್ಷ ಭಾರತದ ವಿರುದ್ಧದ ಟೆಸ್ಟ್ ಸರಣಿಯನ್ನು ಭಾರತದಲ್ಲೇ ಕ್ಲೀನ್ಸ್ವೀಪ್ ಮಾಡಿತ್ತು. ಅಂಥದೇ ಅದ್ಭುತವನ್ನು ಏಕದಿನದ ಸರಣಿಯಲ್ಲಿ ಪುನರಾವರ್ತಿಸುವುದನ್ನು ಅದು ಎದುರು ನೋಡುತ್ತಿದೆ. ಭಾರತದಲ್ಲಿ ನಡೆದ ಏಕದಿನ ಸರಣಿಯಲ್ಲಿ ಆ ತಂಡವನ್ನು ಸೋಲಿಸಲು ನ್ಯೂಝಿಲ್ಯಾಂಡ್ಗೆ ಈವರೆಗೆ ಸಾಧ್ಯವಾಗಿಲ್ಲ. ವಾಸ್ತವವಾಗಿ, ದ್ವಿಪಕ್ಷೀಯ ಸರಣಿಯಾಗಲಿ, ಇತರ ಯಾವುದೇ ಪಂದ್ಯಾವಳಿಯಾಗಲಿ ಭಾರತದಲ್ಲಿ ನಡೆದ ಏಕದಿನ ಸರಣಿಯೊಂದನ್ನು ಗೆಲ್ಲಲು ನ್ಯೂಝಿಲ್ಯಾಂಡ್ಗೆ ಈವರೆಗೆ ಸಾಧ್ಯವಾಗಿಲ್ಲ. ಭಾರತದ ಮಟ್ಟಿಗೆ, ಅರ್ಶದೀಪ್ ಸಿಂಗ್ರನ್ನು ತಂಡದಿಂದ ಹೊರಗಿಟ್ಟಿರುವ ಬಗ್ಗೆ ದೊಡ್ಡ ಚರ್ಚೆ ನಡೆಯುತ್ತಿದೆ. ಇದು ಏಕದಿನ ಸರಣಿಯ ನಿರ್ಣಾಯಕ ಪಂದ್ಯವಾಗಿರುವುದರಿಂದ ಹಾಗೂ ಆ ಬಳಿಕ ಐದು ಪಂದ್ಯಗಳ ಟಿ20 ಸರಣಿ ನಡೆಯಲಿರುವುದರಿಂದ ಈ ಹಂತದಲ್ಲಿ ಅರ್ಶದೀಪ್ರನ್ನು ಒಳಗೆ ತರಲು ಭಾರತೀಯ ಏಕದಿನ ತಂಡದಿಂದ ಯಾರನ್ನಾದರೂ ಕೈಬಿಡುವ ಸಾಧ್ಯತೆ ಕಡಿಮೆ. ಹೋಳ್ಕರ್ ಸ್ಟೇಡಿಯಮ್ನ ಬೌಂಡರಿಗಳು ಚಿಕ್ಕದಾಗಿರುವುದರಿಂದ ಭಾರತವು ನಿತೀಶ್ ಕುಮರ್ ರೆಡ್ಡಿಯನ್ನೇ ಕಣಕ್ಕೆ ಇಳಿಸುವ ಸಾಧ್ಯತೆಯಿದೆ. ಅವರ ಬದಲಿಗೆ ಆಯುಶ್ ಬದೋನಿಯನ್ನು ತರುವ ಸಾಧ್ಯತೆ ಕಡಿಮೆಯಾಗಿದೆ. ತಂಡಗಳು ಭಾರತ: ಶುಭಮನ್ ಗಿಲ್ (ನಾಯಕ), ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಕೆ.ಎಲ್. ರಾಹುಲ್ (ವಿಕೆಟ್ಕೀಪರ್), ಶ್ರೇಯಸ್ ಅಯ್ಯರ್ (ಉಪನಾಯಕ), ರವೀಂದ್ರ ಜಡೇಜ, ಮುಹಮ್ಮದ್ ಸಿರಾಜ್, ಹರ್ಷಿತ್ ರಾಣಾ, ಪ್ರಸಿದ್ಧ ಕೃಷ್ಣ, ಕುಲದೀಪ್ ಯಾದವ್, ನಿತೀಶ್ಕುಮಾರ್ ರೆಡ್ಡಿ. ನ್ಯೂಝಿಲ್ಯಾಂಡ್: ಮೈಕೆಲ್ ಬ್ರೇಸ್ವೆಲ್ (ನಾಯಕ), ಆದಿ ಅಶೋಕ್, ಕ್ರಿಸ್ಟಿಯನ್ ಕ್ಲಾರ್ಕ್, ಜೋಶ್ ಕ್ಲಾರ್ಕ್ಸನ್, ಡೇವನ್ ಕಾನ್ವೇ (ವಿಕೆಟ್ಕೀಪರ್), ಝ್ಯಾಕ್ ಫೋಕ್ಸ್, ಮಿಚ್ ಹೇ (ವಿಕೆಟ್ಕೀಪರ್), ಕೈಲ್ ಜೇಮೀಸನ್, ನಿಕ್ ಕೆಲ್ಲಿ, ಜೇಡನ್ ಲೆನೋಕ್ಸ್, ಡ್ಯಾರಿಲ್ ಮಿಚೆಲ್, ಹೆನ್ರಿ ನಿಕೋಲ್ಸ್, ಗ್ಲೆನ್ ಫಿಲಿಪ್ಸ್, ಮೈಕೆಲ್ ರೇ, ವಿಲ್ ಯಂಗ್.
Bihar | ರಸ್ತೆ ಅಪಘಾತದಲ್ಲಿ ಮೃತಪಟ್ಟ ಬಾಲಕ: ಪಿಕಪ್ ವ್ಯಾನ್ನಿಂದ ಮೀನು ಹೊತ್ತೊಯ್ದ ದಾರಿಹೋಕರು!
ಪಾಟ್ನಾ: ಮೀನು ಸಾಗಾಟ ನಡೆಸುತ್ತಿದ್ದ ಪಿಕಪ್ ವ್ಯಾನ್ವೊಂದು ಢಿಕ್ಕಿ ಹೊಡೆದ ಪರಿಣಾಮ ಅಪ್ರಾಪ್ತ ಬಾಲಕನೊಬ್ಬ ರಸ್ತೆಯಲ್ಲೇ ಮೃತಪಟ್ಟಿದ್ದು, ಈ ವೇಳೆ ರಸ್ತೆಯಲ್ಲೇ ಮೃತದೇಹ ಬಿದ್ದಿದ್ದರೂ ಪಿಕಪ್ ವ್ಯಾನ್ನಲ್ಲಿದ್ದ ಮೀನುಗಳನ್ನು ದಾರಿಹೋಕರು ಹೊತ್ತೊಯ್ದ ಘಟನೆ ಪಾಟ್ನಾದ ಪುಪ್ರಿ ಪೊಲೀಸ್ ಠಾಣೆ ವ್ಯಾಪ್ತಿಯ ಝಾಝಿಹಾಟ್ ಗ್ರಾಮದಲ್ಲಿ ನಡೆದಿದೆ. 17 ವರ್ಷದ ರಿತೇಶ್ ಕುಮಾರ್ ಬೆಳಗ್ಗಿನ ಕೋಚಿಂಗ್ ತರಗತಿಗೆ ತೆರಳುತ್ತಿದ್ದ ವೇಳೆ ವೇಗವಾಗಿ ಬಂದ ಪಿಕಪ್ ವ್ಯಾನ್ ಒಂದು ಢಿಕ್ಕಿ ಹೊಡೆದಿದೆ. ಘಟನೆಯಲ್ಲಿ ರಿತೇಶ್ ಕುಮಾರ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ. ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಮೃತ ಬಾಲಕನ ಕುಟುಂಬಸ್ಥರು ದುಃಖದ ಮಡುವಿನಲ್ಲಿ ಮುಳುಗಿದರೆ, ಅನತಿ ದೂರದಲ್ಲಿ ಇದಕ್ಕೆ ವ್ಯತಿರಿಕ್ತವಾದ ದೃಶ್ಯಗಳು ಕಂಡು ಬಂದಿವೆ. ಅಪಘಾತದ ವೇಳೆ ಪಿಕಪ್ ವ್ಯಾನ್ ನಿಂದ ಮೀನುಗಳು ರಸ್ತೆಯೆಲ್ಲ ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ. ಈ ವೇಳೆ ಗಾಯಗೊಂಡಿದ್ದ ವಿದ್ಯಾರ್ಥಿಗೆ ಸಹಾಯ ಮಾಡುವ, ಆ್ಯಂಬುಲೆನ್ಸ್ ಕರೆಸುವ ಅಥವಾ ಪೊಲೀಸರಿಗೆ ಮಾಹಿತಿ ನೀಡುವ ಬದಲು, ಸ್ಥಳದಲ್ಲಿ ನೆರೆದಿದ್ದವರು ಮೀನನ್ನು ಹೊತ್ತೊಯ್ಯಲು ಪ್ರಾರಂಭಿಸಿದ್ದಾರೆ. ರಿತೇಶ್ ಮೃತದೇಹವು ರಸ್ತೆಯ ಮೇಲೆ ಬಿದ್ದಿದ್ದರೂ, ದಾರಿಹೋಕರು ಮೀನುಗಳನ್ನು ಗೋಣಿಚೀಲಗಳಲ್ಲಿ ತುಂಬಿಕೊಂಡು ಸ್ಥಳದಿಂದ ಪರಾರಿಯಾಗುತ್ತಿರುವ ದೃಶ್ಯಗಳು ಕಂಡು ಬಂದಿವೆ. ಅಪಘಾತದ ಸುದ್ದಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ ಪುಪ್ರಿ ಪೊಲೀಸ್ ಠಾಣೆಯ ಸಿಬ್ಬಂದಿಗಳು ಜನರನ್ನು ಸ್ಥಳದಿಂದ ಚದುರಿಸಿ, ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ. ಬಳಿಕ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ರವಾನಿಸಿದ್ದಾರೆ. “ಅಪಘಾತ ಸಂಭವಿಸಿದಾಗ ಸಂತ್ರಸ್ತ ಬಾಲಕನು ಕೋಚಿಂಗ್ ತರಗತಿಗೆ ಹಾಜರಾಗಲು ತೆರಳುತ್ತಿದ್ದ. ಅಪಘಾತದಲ್ಲಿ ಭಾಗಿಯಾದ ಪಿಕಪ್ ವ್ಯಾನ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಆದರೆ ಸ್ಥಳದಿಂದ ಪರಾರಿಯಾಗುವಲ್ಲಿ ವ್ಯಾನ್ ಚಾಲಕ ಯಶಸ್ವಿಯಾಗಿದ್ದಾನೆ. ಮುಂದಿನ ಕಾನೂನು ಕ್ರಮ ಕೈಗೊಳ್ಳಲು ಆತನಿಗಾಗಿ ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆ” ಎಂದು ಪುಪ್ರಿ ಪೊಲೀಸ್ ಠಾಣೆಯ ಠಾಣಾಧಿಕಾರಿ ರಾಮಶಂಕರ್ ಕುಮಾರ್ ತಿಳಿಸಿದ್ದಾರೆ. एक बार फ़िर इंसानियत हुई शर्मसार डे//ड बॉडी सामने सड़क पर पड़ी रही मछली उठाते रहे स्थानाय लोग दर असल पुपरी में सड़क हादसा हुआ बोलेरो पिकअप पर मछली लोड था धक्का लगने से साइकल सवार की मौत होगई लेकिन लोग मछली पकड़ते रहे pic.twitter.com/46pfAdDcDQ — Sitamarhi Times (@SitamarhiTimes) January 16, 2026
ಕಲಬುರಗಿ | ಎಸಿಪಿ ಶಿವನಗೌಡ ಸೇರಿದಂತೆ 10 ಜನರಿಗೆ ಬೆಸ್ಟ್ ಪೊಲೀಸ್ ಪ್ರಶಸ್ತಿ
ಜ.20 ರಂದು ಪ್ರಶಸ್ತಿ ಪ್ರದಾನ ಸಮಾರಂಭ
ಇ-ಆಫೀಸ್ ಬಳಕೆಯಲ್ಲಿ ರಾಜ್ಯದಲ್ಲಿಯೇ ಕಲಬುರಗಿ ನಂಬರ್ ವನ್ : ಸಚಿವ ಪ್ರಿಯಾಂಕ್ ಖರ್ಗೆ
ಕಲಬುರಗಿ, ಜ.17: ಸರ್ಕಾರಿ ಕಚೇರಿಗಳಲ್ಲಿ ಕಡತಗಳ ತ್ವರಿತ ವಿಲೇವಾರಿಯಲ್ಲಿ ತಂತ್ರಜ್ಞಾನವನ್ನು ಸಮರ್ಪಕ ಬಳಕೆ ಮಾಡಿಕೊಂಡ ಪರಿಣಾಮ ಇ-ಆಫೀಸ್ಬಳಕೆಯಲ್ಲಿ ಕಲಬುರಗಿ ಜಿಲ್ಲಾ ಪಂಚಾಯತ್ ಇಡೀ ರಾಜ್ಯದಲ್ಲಿಯೇ ನಂಬರ್-1 ಸ್ಥಾನ ಪಡೆದುಕೊಂಡಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ. 2025ನೇ ವರ್ಷದಲ್ಲಿ ಕಲಬುರಗಿ ಜಿಲ್ಲೆಯಲ್ಲಿ 2,938 ಇ-ಕಡತ ಸೃಷ್ಟಿಸಿ 54,381 ಕಡತ ವಿಲೇವಾರಿ ಮಾಡಲಾಗಿದೆ. ಸಾರ್ವಜನಿಕರಿಂದ ಸ್ವೀಕೃತ 13,664 ಪತ್ರಗಳನ್ನು ಇ-ರಸೀದಿಯಡಿ ಸೃಷ್ಟಿಸಿ 3,52,221 ಇ-ರಸೀದಿ ವಿಲೇವಾರಿ ಮಾಡಲಾಗಿದೆ ಎಂದರು. ಸರ್ಕಾರಿ ಕಚೇರಿಗಳು ಜನಸ್ನೇಹಿಯಾಗಬೇಕು. ಸಾರ್ವಜನಿಕರು ತಮ್ಮ ಕೆಲಸಕ್ಕೆ ಸರ್ಕಾರಿ ಕಚೇರಿಗಳಿಗೆ ಅನಗತ್ಯ ವರ್ಷಗಟ್ಟಲೆ ಅಲೆದಾಡುವುದನ್ನು ತಪ್ಪಿಸಲೆಂದು ಇ-ಆಫೀಸ್ ಅನುಷ್ಠಾನದ ಮೂಲಕ ಅಧಿಕಾರಿ-ಸಿಬ್ಬಂದಿಗೆ ಕಾಲಮಿತಿಲ್ಲಿಯೇ ಕಡತ ವಿಲೇವಾರಿ ಮಾಡಲು ನೀಡಿದ ಹೊಣೆಗಾರಿಕೆ ಫಲ ಇದಾಗಿದೆ ಎಂದರು. ಟಾಪ್ 10ನಲ್ಲಿ ಕಲ್ಯಾಣದ ನಾಲ್ಕು ಜಿಲ್ಲೆ : ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಇ-ಕಡತ ಬಳಕೆಯಲ್ಲಿ ಟಾಪ್-10 ಜಿಲ್ಲೆಗಳಲ್ಲಿ ಡಿ ಕಲಬುರಗಿ ಮೊದಲನೇ ಸ್ಥಾನದಲ್ಲಿದೆ. 2,339 ಇ-ಕಡತ ಸೃಜಿಸಿ ಐದನೇ ಸ್ಥಾನದಲ್ಲಿ ಬೀದರ್, 1,955 ಇ-ಕಡತ ಸೃಜಿಸಿ ಎಂಟನೇ ಸ್ಥಾನದಲ್ಲಿ ಯಾದಗಿರಿ, 1,924 ಇ-ಕಡತ ಸೃಷ್ಟಿಸುವುದರೊಂದಿಗೆ ಒಂಬತ್ತನೇ ಸ್ಥಾನದಲ್ಲಿ ಕೊಪ್ಪಳ ಜಿಲ್ಲಾ ಪಂಚಾಯತ್ ಇದೆ. ಗ್ರಾಮೀಣ ಭಾಗದಲ್ಲಿ ಆಡಳಿತ ವೇಗ ಪಡೆದುಕೊಂಡಿರುವುದಕ್ಕೆ ಇದು ಹಿಡಿದ ಕನ್ನಡಿಯಾಗಿದೆ. ಸುಗಮ ಅಡಳಿತಕ್ಕೆ ಕಲಬುರಗಿ ಜಿಲ್ಲೆ ಮಾದರಿಯಾಗಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ. ಗಮನ ಸೆಳೆದ ಆಳಂದ-ಅಫಜಲಪೂರ ತಾಲೂಕು ಪಂಚಾಯತ್ : ತಾಲೂಕು ಪಂಚಾಯತ್ವಾರು ಇ-ಆಫೀಸ್ ಬಳಕೆಯಲ್ಲಿಯೂ ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕು ಪಂಚಾಯತ್ 1,508 ಇ-ಕಡತ ಸೃಜಿಸಿ 3,089 ಇ-ಕಡತ ವಿಲೇವಾರಿ ಮಾಡಿ ಅಗ್ರ ಸ್ಥಾನ ಪಡೆದುಕೊಂಡರೆ, ಜಿಲ್ಲೆಯ ಆಳಂದ ತಾಲೂಕು ಪಂಚಾಯತ್ 1,127 ಇ-ಕಡತ ಸೃಜಿಸಿ 3,560 ಕಡತ ವಿಲೇವಾರಿ ಮತ್ತು 526 ಇ-ರಸೀದಿ ಸೃಷ್ಟಿಸಿ 2,022 ಇ-ರಸೀದಿ ವಿಲೇವಾರಿಯೊಂದಿಗೆ ರಾಜ್ಯದಲ್ಲಿಯೇ ದ್ವಿತೀಯ ಸ್ಥಾನ ಪಡೆದುಕೊಂಡಿದೆ. ಅದೇ ರೀತಿ ಅಫಜಲಪುರ ತಾಲೂಕು ಪಂಚಾಯತ್ 668 ಇ-ಕಡತ ಸೃಜಿಸಿ 3,189 ಕಡತ ವಿಲೇವಾರಿ ಮಾಡಿ ಏಳನೇ ಸ್ಥಾನ ಹಾಗೂ ಕಲಬುರಗಿ ತಾಲೂಕು ಪಂಚಾಯತ್ 564 ಇ-ಕಡತ ಸೃಜಿಸಿ 1,527 ಕಡತ ವಿಲೇವಾರಿ ಮಾಡಿ ಒಂಭತ್ತನೇ ಸ್ಥಾನ ಕಾಯ್ದುಕೊಂಡಿದೆ. ಈ ಮೂಲಕ ತಾಲೂಕಾವಾರು ಟಾಪ್ ಟೆನ್ ನಲ್ಲಿ ಕಲಬುರಗಿ ಜಿಲ್ಲೆಯ ಮೂರು ತಾಲೂಕುಗಳು ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿವೆ.
Indonesia | 11 ಮಂದಿಯನ್ನು ಹೊತ್ತೊಯ್ಯುತ್ತಿದ್ದ ವಿಮಾನ ನಾಪತ್ತೆ
ಜಕಾರ್ತಾ: ಶನಿವಾರ 11 ಮಂದಿ ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಪ್ರಾಂತೀಯ ಪ್ರಯಾಣಿಕರ ವಿಮಾನವೊಂದು ಗುಡ್ಡಗಾಡು ಪ್ರದೇಶವಾದ ದಕ್ಷಿಣ ಸುಲವೇಸಿಯನ್ನು ಸಮೀಪಿಸುವ ವೇಳೆ ವಾಯು ನಿಯಂತ್ರಣ ಕೊಠಡಿಯೊಂದಿಗೆ ಸಂಪರ್ಕ ಕಳೆದುಕೊಂಡಿದೆ. ವಿಮಾನದ ಪತ್ತೆಗಾಗಿ ವ್ಯಾಪಕ ರಕ್ಷಣಾ ಮತ್ತು ಶೋಧ ಕಾರ್ಯಾಚರಣೆಗೆ ಚಾಲನೆ ನೀಡಲಾಗಿದೆ ಎಂದು ಇಂಡೋನೇಶ್ಯಾ ಪ್ರಾಧಿಕಾರಗಳು ತಿಳಿಸಿವೆ. ಇಂಡೋನೇಶ್ಯಾ ಏರ್ ಟ್ರಾನ್ಸ್ಪೋರ್ಟ್ ಕಾರ್ಯಾಚರಿಸುತ್ತಿದ್ದ ಟರ್ಬೊಪ್ರಾಪ್ ಎಟಿಆರ್ 42-500 ವಿಮಾನವು ಯೋಗ್ಯಕರ್ತದಿಂದ ದಕ್ಷಿಣ ಸುಲವೇಸಿಯ ರಾಜಧಾನಿಯತ್ತ ಪ್ರಯಾಣಿಸುತ್ತಿದ್ದಾಗ ರಡಾರ್ ಸಂಪರ್ಕ ಕಡಿದುಕೊಂಡಿತು ಎಂದು ಸಾರಿಗೆ ಸಚಿವಾಲಯದ ವಕ್ತಾರೆ ಎಂಡಾಹ್ ಪುರ್ನಾಮ ಸಾರಿ ತಿಳಿಸಿದ್ದಾರೆ. ಮಧ್ಯಾಹ್ನ 1.17ರ ವೇಳೆಗೆ ಈ ವಿಮಾನವು ಬುಲುಸರೌಂಗ್ ರಾಷ್ಟ್ರೀಯ ಉದ್ಯಾನವನದ ಸಮೀಪದ ಗುಡ್ಡಗಾಡು ಪ್ರದೇಶವಾದ ಮಾರೋಸ್ ಜಿಲ್ಲೆಯ ಲಿಯಾಂಗ್-ಲಿಯಾಂಗ್ ಪ್ರದೇಶದ ಮೇಲೆ ಕೊನೆಯದಾಗಿ ಕಾಣಿಸಿಕೊಂಡಿತ್ತು ಎಂದು ಅವರು ಹೇಳಿದ್ದಾರೆ. “ವಾಯುಪಡೆ ಹೆಲಿಕಾಪ್ಟರ್ಗಳು, ಡ್ರೋನ್ಗಳು ಹಾಗೂ ಭೂಪಡೆಗಳ ನೆರವಿನಿಂದ ವಿವಿಧ ಶೋಧ ಮತ್ತು ರಕ್ಷಣಾ ತಂಡಗಳನ್ನು ನಿಯೋಜಿಸಲಾಗಿದೆ. ತನ್ನ ದಿಕ್ಕಿನ ಗುರಿಯನ್ನು ಸರಿಪಡಿಸುವಂತೆ ವಾಯು ನಿಯಂತ್ರಣ ಕೊಠಡಿಗೆ ಕೊನೆಯ ನಿರ್ದೇಶನಗಳನ್ನು ನೀಡಿದ ಬಳಿಕ ವಿಮಾನದ ರೇಡಿಯೊ ಸಂಪರ್ಕ ಕಡಿದುಹೋಯಿತು. ಈ ಹಿನ್ನೆಲೆಯಲ್ಲಿ ವಾಯು ನಿಯಂತ್ರಕರು ತುರ್ತು ಪರಿಸ್ಥಿತಿಯನ್ನು ಘೋಷಿಸಿದ್ದಾರೆ” ಎಂದು ಅವರು ತಿಳಿಸಿದ್ದಾರೆ.
Iran: ಇರಾನ್ ಪ್ರತಿಭಟನೆಗಳಿಗೆ ಇಸ್ರೇಲ್ ಮತ್ತು ಅಮೆರಿಕ ಕಾರಣ ಎಂದು ಆರೋಪಿಸಿದ ಖಮೇನಿ
ಇರಾನ್ ಮತ್ತು ಅಮೆರಿಕ ನಡುವೆ ಜಟಾಪಟಿ ಜೋರಾಗಿದೆ, ಇದರ ಜೊತೆಗೆ ಇಸ್ರೇಲ್ ವಿರುದ್ಧ ಕೂಡ ಇರಾನ್ ಕಾಲು ಕೆರೆದುಕೊಂಡು ಜಗಳಕ್ಕೆ ಹೋಗಲು ಸಜ್ಜಾದಂತೆ ಕಾಣುತ್ತಿದೆ. ಇದರ ಮೊದಲ ಭಾಗ ಎನ್ನುವಂತೆ ಇರಾನ್ ನೆಲದಲ್ಲಿ ನಡೆಯುತ್ತಿರುವ ಪ್ರತಿಭಟನೆಗಳಿಗೆ ಇಸ್ರೇಲ್ &ಅಮೆರಿಕ ಕಾರಣ ಎಂದು ಇರಾನ್ ಸರ್ವಾಧಿಕಾರಿ ಖಮೇನಿ ಆರೋಪ ಮಾಡಿರುವುದು ಕಿಚ್ಚು ಹೊತ್ತಿಸಿದೆ. ಈಗಾಗಲೇ ಇರಾನ್ನ ಹಿಂಸಾಚಾರ
ಕೋರ್ಟ್ ಆದೇಶದ ಉದ್ದೇಶಪೂರ್ವಕ ಉಲ್ಲಂಘನೆ; ವಿಠಲ ಗೌಡಗೆ 30 ದಿನ ಸಿವಿಲ್ ಕಾರಾಗೃಹ ಶಿಕ್ಷೆ
ಬೆಂಗಳೂರು : ನ್ಯಾಯಾಲಯದ ಆದೇಶಗಳನ್ನು ಉದ್ದೇಶಪೂರ್ವಕವಾಗಿ ಹಾಗೂ ಪದೇ ಪದೆ ಉಲ್ಲಂಘಿಸಿದ ಕಾರಣಕ್ಕೆ ಸೌಜನ್ಯಾ ಮಾವ ವಿಠಲ ಗೌಡ ಅವರಿಗೆ 30 ದಿನಗಳ ಸಿವಿಲ್ ಕಾರಾಗೃಹ ಶಿಕ್ಷೆ ವಿಧಿಸಿ ಬೆಂಗಳೂರು ನಗರ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ ಶನಿವಾರ ಆದೇಶಿಸಿದೆ. ಶ್ರೀ ಕ್ಷೇತ್ರ ಧರ್ಮಸ್ಥಳ, ಅದರ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತ್ತವರ ಕುಟುಂಬ ಸದಸ್ಯರು ಹಾಗೂ ಧರ್ಮಸ್ಥಳಕ್ಕೆ ಸಂಬಂಧಿಸಿದ ಸಂಸ್ಥೆಗಳ ಕುರಿತು ಯಾವುದೇ ರೀತಿಯ ಅವಹೇಳನಕಾರಿ ಹೇಳಿಕೆಗಳನ್ನು ನೀಡಬಾರದು ಅಥವಾ ಪ್ರಕಟಿಸಬಾರದು ಎಂದು ಈ ಹಿಂದೆ ನ್ಯಾಯಾಲಯ ಪ್ರತಿಬಂಧಕಾದೇಶ ವಿಧಿಸಿತ್ತು. ನ್ಯಾಯಾಲಯದ ಆದೇಶವನ್ನು ವಿಠಲ ಗೌಡ ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿ ಧರ್ಮಸ್ಥಳ ಕ್ಷೇತ್ರದ ಪರವಾಗಿ ಶೀನಪ್ಪ ಅವರು ದೂರು ನೀಡಿದ್ದರು. ಶನಿವಾರ ವಿಚಾರಣೆ ವೇಳೆ ನ್ಯಾಯಾಲಯದ ಪ್ರತಿಬಂಧಕಾದೇಶವಿದ್ದರೂ ವಿಠಲ ಗೌಡ ಅವರು ಅದನ್ನು ಉಲ್ಲಂಘಿಸಿ, ಮತ್ತೆ ಮತ್ತೆ ಧರ್ಮಸ್ಥಳದ ವಿರುದ್ಧ ಹೇಳಿಕೆಗಳನ್ನು ನೀಡಿರುವುದು ನ್ಯಾಯಾಲಯದ ಗಮನಕ್ಕೆ ಬಂದಿತ್ತು. ನ್ಯಾಯಾಲಯದ ಆದೇಶಗಳ ಬಗ್ಗೆ ಸಂಪೂರ್ಣ ಅರಿವಿದ್ದರೂ, ಸೌಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರ ಕುಟುಂಬ ಹಾಗೂ ಸಂಸ್ಥೆಗಳ ವಿರುದ್ಧ ಆರೋಪಿತರು ಹೇಳಿಕೆಗಳನ್ನು ನೀಡಿರುವುದು ನ್ಯಾಯಾಲಯಕ್ಕೆ ತೋರಿದ ಅಗೌರವ ಹಾಗೂ ಉದ್ದೇಶಪೂರ್ವಕ ಅವಿಧೇಯತೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ದಾಖಲೆಗಳ ಪರಿಶೀಲನೆಯ ನಂತರ, ಆರೋಪಿತರು ನೀಡಿದ ಹೇಳಿಕೆಗಳು ಸುಳ್ಳು, ಆಧಾರರಹಿತ ಮತ್ತು ಯಾವುದೇ ತಾತ್ವಿಕ ಮೌಲ್ಯರಹಿತವಾಗಿವೆ. ನ್ಯಾಯಾಲಯದ ಘನತೆ ಮತ್ತು ಆದೇಶಗಳ ಪ್ರಾಮಾಣಿಕತೆಯನ್ನು ಕಾಪಾಡಲು ಕಠಿಣ ಕ್ರಮ ಅಗತ್ಯವೆಂದು ಅಭಿಪ್ರಾಯಪಟ್ಟಿರುವ ನ್ಯಾಯಾಲಯ, ಆರೋಪಿತ ವಿಠಲ ಗೌಡ ಅವರಿಗೆ 30 ದಿನಗಳ ಸಿವಿಲ್ ಕಾರಾಗೃಹ ಶಿಕ್ಷೆ ವಿಧಿಸಿ ಆದೇಶಿಸಿದೆ. ಪ್ರಕರಣದ ವಿಚಾರಣೆಯಲ್ಲಿ ನ್ಯಾಯಾಲಯದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಪರವಾಗಿ ಹಿರಿಯ ವಕೀಲರಾದ ಎಸ್. ರಾಜಶೇಖರ್ ಹಿಲಿಯಾರು ವಾದ ಮಂಡಿಸಿದ್ದರು.
ಬೀದರ್ | ಸಕಲ ಸರಕಾರಿ ಗೌರವಗಳೊಂದಿಗೆ ಡಾ.ಭೀಮಣ್ಣ ಖಂಡ್ರೆ ಅಂತ್ಯಕ್ರಿಯೆ
ಬೀದರ್: ಕಲ್ಯಾಣ ಕರ್ನಾಟಕದ ಧೀಮಂತ ನಾಯಕ, ಶತಾಯುಷಿ ಹಾಗೂ ಹಿರಿಯ ಮುತ್ಸದ್ದಿ ರಾಜಕಾರಣಿ ಡಾ.ಭೀಮಣ್ಣ ಖಂಡ್ರೆ (102) ಅವರ ಅಂತ್ಯಕ್ರಿಯೆಯನ್ನು ಸಕಲ ಸರ್ಕಾರಿ ಗೌರವಗಳೊಂದಿಗೆ ಭಾಲ್ಕಿಯ ಶಾಂತಿ ಧಾಮದಲ್ಲಿ ಶನಿವಾರ ನೆರವೇರಿಸಲಾಯಿತು. ಲಿಂಗಾಯತ ಧರ್ಮದ ವಿಧಿವಿಧಾನಗಳಂತೆ ಚಿಕಲಚಂದಾ ರಸ್ತೆಯಲ್ಲಿರುವ ಅವರ ಪತ್ನಿ ಲಕ್ಷ್ಮಿಬಾಯಿ ಅವರ ಸಮಾಧಿ ಸ್ಥಳದ ಸನಿಹದಲ್ಲೇ ಅಂತ್ಯ ಸಂಸ್ಕಾರ ನಡೆಸಲಾಯಿತು. ಶನಿವಾರ ಬೆಳಿಗ್ಗೆಯಿಂದಲೇ ಭಾಲ್ಕಿಯ ಅವರ ಸ್ವಗೃಹದಲ್ಲಿ ಪಾರ್ಥಿವ ಶರೀರವನ್ನು ಸಾರ್ವಜನಿಕ ದರ್ಶನಕ್ಕೆ ಇಡಲಾಗಿತ್ತು. ಜಿಲ್ಲೆ ಹಾಗೂ ನೆರೆಯ ರಾಜ್ಯಗಳಿಂದ ಆಗಮಿಸಿದ್ದ ಸಾವಿರಾರು ಅಭಿಮಾನಿಗಳು, ಕಾರ್ಯಕರ್ತರು ತಮ್ಮ ಪ್ರೀತಿಯ ನಾಯಕನ ಕೊನೆಯ ದರ್ಶನ ಪಡೆದರು. ಸಂಜೆ 4 ಗಂಟೆಗೆ ಶಾಸ್ತ್ರೋಕ್ತವಾಗಿ ಪೂಜೆ ಸಲ್ಲಿಸಿ ಅಂತಿಮ ಯಾತ್ರೆ ಆರಂಭಿಸಲಾಯಿತು. ಡಾ. ಭೀಮಣ್ಣ ಖಂಡ್ರೆ ಅವರ ಮೃತದೇಹವನ್ನು ನಗರದ ಪ್ರಮುಖ ರಸ್ತೆಗಳು, ಬಸವೇಶ್ವರ ವೃತ್ತ, ಗಾಂಧಿ ವೃತ್ತ ಹಾಗೂ ಅಂಬೇಡ್ಕರ್ ವೃತ್ತದ ಮೂಲಕ ಶಾಂತಿ ಧಾಮದವರೆಗೆ ಮೆರವಣಿಗೆಯಲ್ಲಿ ಕೊಂಡೊಯ್ಯಲಾಯಿತು. ಈ ವೇಳೆ ಅಭಿಮಾನಿಗಳು ನೆಚ್ಚಿನ ನಾಯಕನ ಪರವಾಗಿ ಜೈ ಘೋಷಗಳನ್ನು ಕೂಗಿದರು. ಶಾಂತಿ ಧಾಮಕ್ಕೆ ಪಾರ್ಥಿವ ಶರೀರ ತಲುಪುತ್ತಿದ್ದಂತೆಯೇ ಪೊಲೀಸರು ಕುಶಾಲತೋಪು ಹಾರಿಸಿ ಗೌರವ ಸಲ್ಲಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಮಾಜಿ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ, ಬಿ.ವೈ. ವಿಜಯೇಂದ್ರ, ಸಚಿವರಾದ ರಹೀಮ್ ಖಾನ್, ಶರಣಬಸಪ್ಪ ದರ್ಶನಾಪುರ ಸೇರಿದಂತೆ ವಿವಿಧ ಪಕ್ಷಗಳ ಮುಖಂಡರು, ನೂರಾರು ಮಠಾಧೀಶರು ಹಾಗೂ ಗಣ್ಯರು ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದರು. ನಾಡಿನ ಹಿರಿಯ ನಾಯಕರು, ಹೈದರಾಬಾದ್ ಕರ್ನಾಟಕ ವಿಮೋಚನೆ ಹೋರಾಟಗಾರ ಮಾಜಿ ಸಚಿವ ಭೀಮಣ್ಣ ಖಂಡ್ರೆ ನಿಧನದ ಸುದ್ದಿ ತಿಳಿದು ದುಃಖವಾಯಿತು. ಅಗಲಿದ ಹಿರಿಯ ಜೀವಕ್ಕೆ ಭಗವಂತ ಚಿರಶಾಂತಿ ಕರುಣಿಸಲಿ -ಆರ್.ಅಶೋಕ್, ಪ್ರತಿಪಕ್ಷ ನಾಯಕ ರಾಜಕಾರಣಿ ಭೀಮಣ್ಣ ಖಂಡ್ರೆ ಅಗಲಿಕೆಯಿಂದ ನಾಡಿಗೆ ತುಂಬಲಾರದ ನಷ್ಟವಾಗಿದೆ. ರಾಜಕಾರಣಿಗಳು ಸರಳವಾಗಿರಬೇಕು. ಸರಳತೆಯೇ ರಾಜಕಾರಣಿಗಳ ಕೈ ಹಿಡಿಯುತ್ತೆ ಎಂದು ಅವರು ಹೇಳಿದ್ದರು. ಅವರಿಂದ ನಾನು ಸರಳತೆ ಕಲಿತಿದ್ದೇನೆ. ಭೀಮಣ್ಣ ಖಂಡ್ರೆ ಅವರ ದಾರಿಯಲ್ಲೇ ನಾವೆಲ್ಲ ನಡೆಯುತ್ತಿದ್ದೇವೆ. -ಪ್ರಿಯಾಂಕ್ ಖರ್ಗೆ, ಸಚಿವ ಹಿರಿಯ ನಾಯಕ ಭೀಮಣ್ಣ ಖಂಡ್ರೆ ಸಮಾಜಕ್ಕೆ ಸಾಕಷ್ಟು ಕೊಡುಗೆ ಕೊಟ್ಟಿದ್ದಾರೆ. ನಮ್ಮ ತಂದೆ ಹಾಗು ಭೀಮಣ್ಣ ಖಂಡ್ರೆ ಬಹಳ ಆತ್ಮೀಯ ಸ್ನೇಹಿತರು. ಹಿರಿಯ ಜೀವಿಯನ್ನ ಕಳೆದುಕೊಂಡು ನಾವೆಲ್ಲ ಬಡವಾಗಿದ್ದೇವೆ. -ಎಂ.ಬಿ.ಪಾಟೀಲ್, ಸಚಿವ ಲೋಕನಾಯಕ ಭೀಮಣ್ಣ ಖಂಡ್ರೆ ನಿಧನದಿಂದ ರಾಜ್ಯ ಒಬ್ಬ ಸಮಾಜಮುಖಿ ಮಾರ್ಗದರ್ಶಕ ನೇತಾರರನ್ನು ಕಳೆದುಕೊಂಡಿದೆ. ರಾಜಕೀಯ ರಂಗದ ಒಂದು ಸುದೀರ್ಘ ಕೊಂಡಿ ಕಳಚಿದಂತಾಗಿದೆ. ಉತ್ತರ ಕರ್ನಾಟಕದ ಶೈಕ್ಷಣಿಕ ಮತ್ತು ಸಹಕಾರ ಕ್ಷೇತ್ರಗಳಲ್ಲಿ ಅಪಾರ ಕೊಡುಗೆ ನೀಡಿದ್ದರು. -ವಿಜಯೇಂದ್ರ, ಬಿಜೆಪಿ ರಾಜ್ಯಾಧ್ಯಕ್ಷ
ಉರಿಯೂತ ವಿರೋಧಿ ಆಹಾರ ಕ್ರಮದಿಂದ 18 ಕೆಜಿ ತೂಕ ಇಳಿಸಿದ ನಟ ಆಮೀರ್ ಖಾನ್!
ಉರಿಯೂತ ವಿರೋಧಿ ಆಹಾರವೆಂದರೆ ನಿರ್ದಿಷ್ಟ ಆಹಾರವನ್ನು ಸೇವಿಸುವುದಲ್ಲ. ಬದಲಾಗಿ ಉರಿಯೂತ ತರುವಂತಹ ಅಲ್ಟ್ರಾ ಸಂಸ್ಕರಿತ ಆಹಾರಗಳನ್ನು ಸೇವಿಸದೆ ಇರುವುದು. ಅಮೀರ್ ಖಾನ್ ತೂಕ ಇಳಿಸಿ ಸುದ್ದಿಯಲ್ಲಿದ್ದಾರೆ. ಇತ್ತೀಚೆಗೆ ಅವರು ಮಾಧ್ಯಮಗಳಿಗೆ ನೀಡಿದ ಸಂದರ್ಶನದಲ್ಲಿ, 18 ಕಿಲೋಗ್ರಾಂ ತೂಕ ಇಳಿಸಿದ್ದಾಗಿ ಹೇಳಿದ್ದಾರೆ. ಅವರ ಉರಿಯೂತ ವಿರೋಧಿ (anti-inflammatory) ಆಹಾರ ಕ್ರಮವೇ ತೂಕ ಇಳಿಕೆಗೆ ಮುಖ್ಯ ಕಾರಣವಾಗಿದೆ. ಪದೇಪದೇ ಬರುವ ತಲೆನೋವಿಗೆ ಪರಿಹಾರವಾಗಿ ಈ ಆಹಾರ ಕ್ರಮವನ್ನು ಅವರು ಅಳವಡಿಸಿಕೊಂಡಿದ್ದರು. ಈ ಆಹಾರ ಕ್ರಮದಿಂದ ತಲೆನೋವಿನ ಸಮಸ್ಯೆಯೂ ಪರಿಹಾರವಾಗಿದೆ ಮತ್ತು ಅನಗತ್ಯ ತೂಕವೂ ಇಳಿದಿದೆ. ಏನಿದು ಉರಿಯೂತ ವಿರೋಧಿ ಆಹಾರ ಕ್ರಮ? ಉರಿಯೂತ ವಿರೋಧಿ ಆಹಾರವೆಂದರೆ ನಿರ್ದಿಷ್ಟ ಆಹಾರವನ್ನು ಸೇವಿಸುವುದಲ್ಲ. ಬದಲಾಗಿ ಉರಿಯೂತ ಉಂಟುಮಾಡುವ ಅಲ್ಟ್ರಾ ಸಂಸ್ಕರಿತ ಆಹಾರಗಳನ್ನು ಸೇವಿಸದೆ ಇರುವುದು. ಅಂದರೆ ಪ್ಯಾಕೆಟ್ ಆಗಿ ಬರುವ ಬ್ರೆಡ್, ಸೆರೆಲ್ ಮತ್ತು ಪಾಸ್ತಾಗಳಂತಹ ವಸ್ತುಗಳನ್ನು ತೊರೆಯುವುದು. ಮುಖ್ಯವಾಗಿ ಸ್ವೀಟ್ನರ್ಗಳು (ಸಕ್ಕರೆ ಅಂಶ) ಸೇರಿಸಿರುವ ಯಾವುದೇ ಆಹಾರವನ್ನು ಬಿಟ್ಟುಬಿಡಬೇಕು ಎಂದು ಹಾರ್ವರ್ಡ್ ಆರೋಗ್ಯ ಅಧ್ಯಯನ ಹೇಳುತ್ತದೆ. ಉರಿಯೂತ ವಿರೋಧಿ ಆಹಾರ ಕ್ರಮ ಹೇಗೆ ಕೆಲಸ ಮಾಡುತ್ತದೆ? ತಜ್ಞರ ಪ್ರಕಾರ, ಉರಿಯೂತ ವಿರೋಧಿ ಆಹಾರ ಕ್ರಮ ದೇಹದಲ್ಲಿರುವ ದೀರ್ಘಕಾಲದ ಉರಿಯೂತವನ್ನು ಶಮನಗೊಳಿಸುತ್ತದೆ. ಇದರಲ್ಲಿ ಹಣ್ಣುಗಳು ಮತ್ತು ತರಕಾರಿಗಳು, ಇಡೀ ಧಾನ್ಯಗಳು, ಲೀನ್ ಪ್ರೊಟೀನ್ (ಕಡಿಮೆ ಕೊಬ್ಬುಳ್ಳ ಆಹಾರಗಳು) ಹಾಗೂ ಆರೋಗ್ಯಕರ ಕೊಬ್ಬುಗಳು (ಒಮೆಗಾ–3) ಸೇರಿರುತ್ತವೆ. ಸಂಸ್ಕರಿತ ಆಹಾರಗಳು, ಸಕ್ಕರೆ, ರಿಫೈನ್ಡ್ ಕೊಬ್ಬುಗಳು ಮತ್ತು ಅನಾರೋಗ್ಯಕರ ಕೊಬ್ಬುಗಳನ್ನು ಇದರಲ್ಲಿ ಸೇವಿಸುವಂತಿಲ್ಲ. ಸಂಧಿವಾತ ಹಾಗೂ ಹೃದಯ ರೋಗಗಳ ನಿಯಂತ್ರಣಕ್ಕೆ ಅನುಸರಿಸುವ ಮೆಡಿಟರೇನಿಯನ್ ಆಹಾರ ಕ್ರಮದಂತೆಯೇ ಇದು ಇರುತ್ತದೆ. ಉರಿಯೂತ ವಿರೋಧಿ ಆಹಾರ ಕ್ರಮ ಮತ್ತು ತೂಕ ಇಳಿಕೆ ಉರಿಯೂತದಿಂದ ಚಯಾಪಚಯ ಕ್ರಿಯೆ ಕುಂಠಿತವಾಗಬಹುದು. ಇದರಿಂದ ಮುಖ್ಯವಾಗಿ ಹೊಟ್ಟೆ ಸುತ್ತಲೂ ಕೊಬ್ಬು ಸಂಗ್ರಹವಾಗುತ್ತದೆ. ಉರಿಯೂತ ಕಡಿಮೆಯಾದಾಗ ಇನ್ಸುಲಿನ್ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ ಮತ್ತು ದೇಹದಲ್ಲಿನ ಕೊಬ್ಬು ಪರಿಣಾಮಕಾರಿಯಾಗಿ ಕರಗುತ್ತದೆ. ಆಹಾರದಲ್ಲಿ ಪೌಷ್ಠಿಕಾಂಶಗಳು ಸಮೃದ್ಧವಾಗಿರುವುದರಿಂದ ಅತಿಯಾಗಿ ತಿನ್ನುವ ಅಗತ್ಯವಿರುವುದಿಲ್ಲ. ನಿರಂತರವಾಗಿ ಆಹಾರ ಕ್ರಮವನ್ನು ನಿಯಂತ್ರಣದಲ್ಲಿ ಇಟ್ಟುಕೊಂಡರೆ ಕಾಲಕ್ರಮೇಣ ಉತ್ತಮ ಫಲಿತಾಂಶ ದೊರೆಯುತ್ತದೆ. ಮೈಗ್ರೇನ್ ಕಡಿಮೆ ಮಾಡಲು ಹೇಗೆ ಸಹಕಾರಿಯಾಗುತ್ತದೆ? ಮೈಗ್ರೇನ್ ನೋವಿಗೆ ಸಾಮಾನ್ಯ ಪ್ರಚೋದಕವಾಗಿರುವ ದೇಹ ಮತ್ತು ಮೆದುಳಿನ ಉರಿಯೂತವನ್ನು ಈ ಆಹಾರ ಕ್ರಮ ಶಮನಗೊಳಿಸುತ್ತದೆ. ಒಮೆಗಾ–3 ಕೊಬ್ಬುಗಳು (ವಾಲ್ನಟ್, ಫ್ಲ್ಯಾಕ್ಸ್, ಮೀನು) ಮತ್ತು ಆಂಟಿ ಆಕ್ಸಿಡೆಂಟ್ಗಳು ಸಿಜಿಆರ್ಪಿ (Calcitonin Gene-Related Peptide) ಮತ್ತು ನರಮಂಡಲದ ಉರಿಯೂತವನ್ನು ಕಡಿಮೆಗೊಳಿಸುತ್ತವೆ. ಉರಿಯೂತ ವಿರೋಧಿ ಆಹಾರ ಕ್ರಮದಲ್ಲಿ ಪ್ರೊಟೀನ್, ಫೈಬರ್ ಮತ್ತು ಆರೋಗ್ಯಕರ ಕೊಬ್ಬುಗಳ ಪ್ರಮಾಣ ಹೆಚ್ಚಿರುತ್ತದೆ. ಇದು ರಕ್ತದಲ್ಲಿನ ಗ್ಲುಕೋಸ್ ಮಟ್ಟವನ್ನು ಸ್ಥಿರವಾಗಿಡುತ್ತದೆ ಮತ್ತು ಮೈಗ್ರೇನ್ ಹೆಚ್ಚಾಗುವುದನ್ನು ತಡೆಯುತ್ತದೆ. ಉರಿಯೂತ ವಿರೋಧಿ ಆಹಾರ ಕರುಳಿಗೆ ಹೇಗೆ ಸಹಕಾರಿ? ಹಣ್ಣುಗಳು, ತರಕಾರಿಗಳು, ಕಡಲೆಗಳು, ಬೀಜಗಳು, ಇಡೀ ಧಾನ್ಯಗಳು ಮತ್ತು ಕೊಬ್ಬುಳ್ಳ ಮೀನುಗಳು ಉರಿಯೂತ ಕಡಿಮೆ ಮಾಡುವ ಆಂಟಿ ಆಕ್ಸಿಡೆಂಟ್ಗಳು ಹಾಗೂ ಒಮೆಗಾ–3 ಕೊಬ್ಬುಗಳನ್ನು ಒದಗಿಸುತ್ತವೆ. ಇವು ಉರಿಯೂತವನ್ನು ಕಡಿಮೆ ಮಾಡಿ ಆರೋಗ್ಯಕರ ರಕ್ತನಾಳಗಳಿಗೆ ಬೆಂಬಲ ನೀಡುತ್ತವೆ. ಇದರ ಪರಿಣಾಮವಾಗಿ ಮೆದುಳಿಗೆ ರಕ್ತ ಹರಿವಿನಲ್ಲಿ ಸುಧಾರಣೆ ಕಂಡುಬರುತ್ತದೆ ಮತ್ತು ನರದ ಉರಿ ಕಡಿಮೆಯಾಗುತ್ತದೆ. ಸಂಸ್ಕರಿತ ಆಹಾರ, ಸಕ್ಕರೆ, ಕರಿದ ವಸ್ತುಗಳು, ಮದ್ಯಪಾನ ಹಾಗೂ ಕೃತಕ ಅಡಿಟಿವ್ಗಳ ಸೇವನೆಯನ್ನು ಕಡಿಮೆ ಮಾಡಿದರೆ ಉರಿಯೂತ ಶಮನಗೊಳ್ಳುತ್ತದೆ. ಸಾಕಷ್ಟು ನೀರು ಕುಡಿಯುವುದು ಮತ್ತು ನಿಯಮಿತವಾಗಿ ಸಮತೋಲಿತ ಆಹಾರ ಸೇವಿಸುವುದರಿಂದ ರಕ್ತದಲ್ಲಿನ ಸಕ್ಕರೆ ಪ್ರಮಾಣ ಸ್ಥಿರವಾಗಿರುತ್ತದೆ. ಇದರಿಂದ ಮೈಗ್ರೇನ್ ಶಮನಕ್ಕೆ ಸಹಕಾರಿಯಾಗುತ್ತದೆ. ಉರಿಯೂತ ವಿರೋಧಿ ಆಹಾರ ಕ್ರಮ ಯಾವುದೇ ಆಹಾರ ಕ್ರಮವನ್ನು ಆರೋಗ್ಯ ತಜ್ಞರ ಸಲಹೆಯೊಂದಿಗೆ ಆರಂಭಿಸುವುದು ಸೂಕ್ತ. ಇಲ್ಲಿ ಕೆಲವು ಉರಿಯೂತ ವಿರೋಧಿ ಆಹಾರದ ವಿವರಗಳಿವೆ.
ಭಟ್ಕಳ: ಎಸ್ಐಆರ್ ಮತ್ತು ಮತದಾರ ನಕ್ಷೆಕರಣ ಕುರಿತು ಜಾಗೃತಿ ಸಮ್ಮೇಳನ
ಭಟ್ಕಳ: ಭಟ್ಕಳ ಮುಸ್ಲಿಂ ಯೂತ್ ಫೆಡರೇಶನ್ ವತಿಯಿಂದ ನವಾಯತ್ ಕಾಲನಿಯಲ್ಲಿ ಎಸ್ಐಆರ್ (Special Intensive Revision) ಹಾಗೂ ಮತದಾರ ನಕ್ಷೆಕರಣ ಕುರಿತ ಜಾಗೃತಿ ಸಮ್ಮೇಳನ ಆಯೋಜಿಸಲಾಯಿತು. ಈ ಸಂದರ್ಭ ದಾಖಲೆ ಸಂಗ್ರಹ, ಪರಿಶೀಲನಾ ಪ್ರಕ್ರಿಯೆಗಳಿಗೆ ಸಾರ್ವಜನಿಕರಿಗೆ ನೆರವಾಗುವ ಉದ್ದೇಶದಿಂದ, ತಂಝೀಮ್ ಮೇಲ್ವಿಚಾರಣೆಯಡಿ ಸಹಾಯವಾಣಿ ಕೇಂದ್ರಗಳನ್ನು ಸ್ಥಾಪಿಸಲಾಗುವುದು ಎಂದು ಪ್ರಕಟಿಸಲಾಯಿತು. ಸಮ್ಮೇಳನವನ್ನು ಉದ್ದೇಶಿಸಿ ಮಾತನಾಡಿದ ಫೆಡರೇಶನ್ ಪ್ರಧಾನ ಕಾರ್ಯದರ್ಶಿ ಮುಬಾಶಿರ್ ಹುಸೇನ್ ಹಲ್ಲಾರೆ, ಮುರ್ಡೇಶ್ವರ ಮತ್ತು ಮಾಂಕಿ ಸೇರಿದಂತೆ ವಿವಿಧ ಕ್ರೀಡಾ ಕೇಂದ್ರಗಳ ಸಂಯೋಜಕರು ಹಾಗೂ ಭಾಗವಹಿಸಿದ್ದವ ರಿಗೆ ಎಸ್ಐಆರ್ ಪ್ರಕ್ರಿಯೆಯ ಕುರಿತು ಮಾಹಿತಿ ನೀಡಿದರು. ನೋಟು ಅಮಾನ್ಯೀಕರಣ, ಸಿಎಎ–ಎನ್ಆರ್ಸಿ ಹಾಗೂ ಸಮಾನ ನಾಗರಿಕ ಸಂಹಿತೆ (ಯುಸಿಸಿ) ಕುರಿತ ಚರ್ಚೆಗಳ ನಂತರ ಇದೀಗ ಎಸ್ಐಆರ್ ಮೂಲಕ ಮತದಾರರ ಪಟ್ಟಿಯಲ್ಲಿ ಹೆಸರುಗಳನ್ನು ಅಳಿಸುವ ಪ್ರಯತ್ನಗಳು ನಡೆಯುತ್ತಿರುವ ಕುರಿತು ಅವರು ಎಚ್ಚರಿಸಿದರು. ಯುವ ನಾಗರಿಕರು ತಮ್ಮ ದಾಖಲೆಗಳನ್ನು ಸರಿಯಾಗಿ ಸಿದ್ಧಪಡಿಸಿಕೊಂಡು, ತಕ್ಷಣವೇ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರಿನ ಪರಿಶೀಲನೆ ಮಾಡಿಕೊಳ್ಳಬೇಕು ಎಂದು ಅವರು ಮನವಿ ಮಾಡಿದರು. ಎಸ್ಐಆರ್ ಪರಿಶೀಲನೆಗೆ ಪ್ರಸ್ತುತ ಆಧಾರ್ ಕಾರ್ಡ್, ರೇಷನ್ ಕಾರ್ಡ್ ಹಾಗೂ ಮತದಾರರ ಗುರುತಿನ ಚೀಟಿಗಳನ್ನು ಮಾನ್ಯ ದಾಖಲೆಗಳಾಗಿ ಪರಿಗಣಿಸಲಾಗುವುದಿಲ್ಲ ಎಂಬುದನ್ನೂ ಅವರು ಸ್ಪಷ್ಟಪಡಿಸಿದರು. ಇದೇ ರೀತಿಯ ಜಾಗೃತಿ ಕಾರ್ಯಕ್ರಮಗಳನ್ನು ಮುಂದಿನ ದಿನಗಳಲ್ಲಿ ಮುರ್ಡೇಶ್ವರ ಮತ್ತು ಮಾಂಕಿಯಲ್ಲೂ ಆಯೋಜಿಸಲಾಗುವುದು ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಮಾತನಾಡಿದ ಯುವ ವಕೀಲ ಹಾಗೂ ಫೆಡರೇಶನ್ ಉಪಾಧ್ಯಕ್ಷ ಇಮ್ರಾನ್ ಲಂಕಾ, ಎಸ್ಐಆರ್ನ ಕಾನೂನಾತ್ಮಕ ಅಂಶಗಳು, ಸಾರ್ವಜನಿಕರಲ್ಲಿ ಉಂಟಾಗಿರುವ ಗೊಂದಲಗಳು ಹಾಗೂ ಮತದಾರ ಪರಿಶೀಲನೆ ವೇಳೆ ಎದುರಾಗುವ ಸಾಮಾನ್ಯ ಸಮಸ್ಯೆಗಳ ಕುರಿತು ವಿವರಿಸಿದರು. ಸಮಯಕ್ಕೆ ಸರಿಯಾಗಿ ದಾಖಲೆ ಸಂಬಂಧಿತ ಸಮಸ್ಯೆಗಳನ್ನು ಬಗೆಹರಿಸದಿದ್ದರೆ ನಿಜವಾದ ಮತದಾರರ ಹೆಸರುಗಳೂ ಮತದಾರರ ಪಟ್ಟಿಯಿಂದ ಕೈ ತಪ್ಪುವ ಸಾಧ್ಯತೆ ಇದೆ ಎಂದು ಅವರು ಎಚ್ಚರಿಸಿದರು. ಕಾರ್ಯಕ್ರಮವು ಮೌಲವಿ ಸಯ್ಯದ್ ಸಾಲಿಕ್ ಬರ್ಮಾವರ್ ನದ್ವಿ ಅವರ ಪವಿತ್ರ ಕುರ್ಆನ್ ಪಠಣದೊಂದಿಗೆ ಆರಂಭ ಗೊಂಡು, ಫೆಡರೇಶನ್ ಅಧ್ಯಕ್ಷ ಮೌಲಾನಾ ವಾಸಿಯುಲ್ಲಾ ಡಿಎಫ್ ಅವರ ಧನ್ಯವಾದ ಸಮರ್ಪಣೆಯೊಂದಿಗೆ ಮುಕ್ತಾಯವಾಯಿತು. ವಕೀಲ ಅಫಾಕ್ ಕೋಲಾ, ಸಾಮಾಜಿಕ ಸಮಿತಿ ಕಾರ್ಯದರ್ಶಿ ಜಹೀರ್ ಶೇಖ್ ಸೇರಿದಂತೆ ಫೆಡರೇಶನ್ನ ಇತರ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಮಧ್ಯಪ್ರದೇಶ | 16 ವರ್ಷದ ಬಾಲಕನಿಗೆ ಹಲ್ಲೆ ನಡೆಸಿ ಬೆತ್ತಲೆ ಮೆರವಣಿಗೆ
ಭೋಪಾಲ್ ಜ. 17: ಮೂರು ತಿಂಗಳ ಹಿಂದೆ ಬಾಲಕಿಯೊಂದಿಗೆ ಪರಾರಿಯಾಗಿದ್ದ ಕಾರಣ 16 ವರ್ಷದ ಬಾಲಕನಿಗೆ ಹಲ್ಲೆ ನಡೆಸಿ ಮುಖಕ್ಕೆ ಮಸಿ ಬಳಿದ ಹಾಗೂ ಸುಮಾರು 1.5 ಕಿ.ಮೀ. ಬೆತ್ತಲೆ ಮೆರವಣಿಗೆ ನಡೆಸಿದ ಘಟನೆ ಮದ್ಯಪ್ರದೇಶದ ಉಜ್ಜೈನ್ಯಲ್ಲಿ ಗುರುವಾರ ನಡೆದಿದೆ ಎಂದು ಹೇಳಲಾಗಿದೆ. ಘಟನೆಯ ವೀಡಿಯೊ ವೈರಲ್ ಆದ ಬಳಿಕ ಪೊಲೀಸರು ಭಾರತೀಯ ನ್ಯಾಯ ಸಂಹಿತೆಯ ಸಂಬಂಧಿತ ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ ಹಾಗೂ ನಾಲ್ವರು ಆರೋಪಿಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಮೂರು ತಿಂಗಳ ಹಿಂದೆ ಬಾಲಕನೊಂದಿಗೆ ಪರಾರಿಯಾದ ಬಾಲಕಿಯ ಕುಟುಂಬದ ಸದಸ್ಯರು ಬಾಲಕನಿಗೆ ಉಜ್ಜೈನಿಯ ಪನ್ವಾಸ ಪ್ರದೇಶದಲ್ಲಿ ಹಲ್ಲೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ನಾವಿಬ್ಬರು ಮೂರು ತಿಂಗಳ ಹಿಂದೆ ಪರಾರಿಯಾಗಿದ್ದೆವು. ಎರಡು ವಾರಗಳ ಹಿಂದೆ ಹಿಂದಿರುಗಿದ್ದೆವು. ತನ್ನನ್ನು ಒಂದು ತಿಂಗಳು ಕಾಲ ಜೈಲಿಗೆ ಕಳುಹಿಸಲಾಗಿತ್ತು. ಬಾಲಕಿಯನ್ನು ಸುಧಾರಣಾ ಕೇಂದ್ರಕ್ಕೆ ಕಳುಹಿಸಲಾಗಿತ್ತು ಎಂದು ಬಾಲಕ ಹೇಳಿದ್ದಾನೆ. ‘‘ಅನಂತರ ಬಾಲಕಿಯ ಸಂಬಂಧಿಕರು ನನ್ನನ್ನು ಗಮನಿಸಿದರು ಹಾಗೂ ಬಲವಂತವಾಗಿ ವಾಹನದಲ್ಲಿ ಕರೆದುಕೊಂಡು ಹೋದರು. ಕೊಠಡಿ ಒಳಗೆ ಗಂಟೆಗಳ ಕಾಲ ಕೂಡಿ ಹಾಕಿದರು. ಅಲ್ಲಿ ನಿರ್ದಯವಾಗಿ ಥಳಿಸಿದರು. ಬೆತ್ತಲೆ ಮಾಡಿದರು. ಮುಖಕ್ಕೆ ಮಸಿ ಬಳಿದರು. ಸುಮಾರು 1.5 ಕಿ.ಮೀ. ಮೆರವಣಿಗೆ ಮಾಡಿದರು. ಪೊಲೀಸರಿಗೆ ಅನಂತರ ಈ ಬಗ್ಗೆ ತಿಳಿಯಿತು. ಆರೋಪಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಅವರು ಭರವಸೆ ನೀಡಿದ್ದಾರೆ’’ ಎಂದು ಬಾಲಕ ಹೇಳಿದ್ದಾನೆ. ಬಾಲಕ ಶುಕ್ರವಾರ ತನ್ನ ಅಂಗವಿಕಲ ತಾಯಿಯೊಂದಿಗೆ ಉಜ್ಜೈನಿಯ ಜಿಲ್ಲಾ ಪೊಲೀಸ್ ಕಂಟ್ರೋಲ್ ರೂಮ್ ಅನ್ನು ಸಂಪರ್ಕಿಸಿದ್ದಾನೆ. ಅಲ್ಲದೆ ಆರೋಪಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಆಗ್ರಹಿಸಿದ್ದಾನೆ. ‘‘ಘಟನೆಗೆ ಸಂಬಂಧಿಸಿ ಭಾರತೀಯ ನ್ಯಾಯ ಸಂಹಿತೆಯ ಸಂಬಂಧಿತ ಸೆಕ್ಷನ್ಗಳ ಅಡಿಯಲ್ಲಿ ಪನ್ವಾಸ ಪೊಲೀಸ್ ಠಾಣೆಯಲ್ಲಿ ಗುರುವಾರ ಪ್ರಕರಣ ದಾಖಲಿಸಲಾಗಿದೆ. ನಾಲ್ವರು ಆರೋಪಿಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ’’ ಎಂದು ಹೆಚ್ಚುವರಿ ಎಸ್ಪಿ (ಉಜ್ಜೈನಿ) ಅಲೋಕ್ ಶರ್ಮಾ ತಿಳಿಸಿದ್ದಾರೆ.
ಇಂಡಿಗೋಗೆ ₹22 ಕೋಟಿ ದಂಡ, ₹50 ಕೋಟಿ ಬ್ಯಾಂಕ್ ಗ್ಯಾರಂಟಿ ನೀಡಲು ಕೇಂದ್ರ ಸರ್ಕಾರ ಸೂಚನೆ
2025ರ ಡಿಸೆಂಬರ್ನಲ್ಲಿ ಇಂಡಿಗೋ ವಿಮಾನಗಳ ಹಾರಾಟದಲ್ಲಿ ಉಂಟಾದ ಭಾರೀ ವ್ಯತ್ಯಯವನ್ನು ಗಂಭೀರವಾಗಿ ಪರಿಗಣಿಸಿರುವ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (ಡಿಜಿಸಿಎ), ವಿಮಾನಯಾನ ಸಂಸ್ಥೆಗೆ 22.20 ಕೋಟಿ ರೂಪಾಯಿಗಳ ದಂಡ ವಿಧಿಸಿದೆ. ತನಿಖೆಯಲ್ಲಿ ಇಂಡಿಗೋ ಸಂಸ್ಥೆಯ ಯೋಜನೆ ಮತ್ತು ಕಾರ್ಯಾಚರಣೆಯಲ್ಲಿ ಗಂಭೀರ ಲೋಪಗಳು ಕಂಡುಬಂದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಸಿಇಒ ಸೇರಿದಂತೆ ಉನ್ನತ ಆಡಳಿತ ಮಂಡಳಿಯ ಸದಸ್ಯರ ವಿರುದ್ಧ ಕಠಿಣ ಕ್ರಮಕ್ಕೆ ಸೂಚಿಸಲಾಗಿದ್ದು, ಭವಿಷ್ಯದಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ತಡೆಯಲು 50 ಕೋಟಿ ರೂ.ಗಳ ಬ್ಯಾಂಕ್ ಗ್ಯಾರಂಟಿ ನೀಡುವಂತೆ ಆದೇಶಿಸಲಾಗಿದೆ.
ಇಂದೋರ್ಗೆ ರಾಹುಲ್ ಗಾಂಧಿ ಭೇಟಿ: ಕಲುಷಿತ ನೀರು ಕುಡಿದು ಮೃತರ ಕುಟುಂಬಸ್ಥರ ಜೊತೆ ಮಾತುಕತೆ
ಇಂದೋರ್, ಜ. 17: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಶನಿವಾರ ಇಂದೋರ್ಗೆ ಆಗಮಿಸಿದರು ಹಾಗೂ ಕಲುಷಿತ ನೀರು ಕುಡಿದು ವಾಂತಿ, ಅತಿಸಾರ ಬಾಧಿಸಿ ಪ್ರಾಣ ಕಳೆದುಕೊಂಡವರ ಕುಟುಂಬಗಳ ಸದಸ್ಯರು ಹಾಗೂ ಅಸ್ವಸ್ಥರಾಗಿ ಚಿಕಿತ್ಸೆ ಪಡೆಯುತ್ತಿರುವವರನ್ನು ಭೇಟಿಯಾದರು. ಇಂದೋರ್ನ ಬಾಂಬೆ ಆಸ್ಪತ್ರೆಗೆ ತೆರಳಿದ ರಾಹುಲ್ ಗಾಂಧಿ ಕಲುಷಿತ ನೀರು ಕುಡಿದು ವಾಂತಿ ಹಾಗೂ ಅತಿಸಾರ ಬಾಧಿಸಿ ಚಿಕಿತ್ಸೆ ಪಡೆಯುತ್ತಿರುವವರು ಹಾಗೂ ಅವರ ಕುಟುಂಬಗಳ ಸದಸ್ಯರನ್ನು ಭೇಟಿಯಾದರು. ಸಂತ್ರಸ್ತ ಕುಟುಂಬಗಳಿಗೆ ಬೆಂಬಲವಾಗಿ ನಿಲ್ಲುವ ಹಾಗೂ ತಳಮಟ್ಟದ ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳುವ ಉದ್ದೇಶವನ್ನು ರಾಹುಲ್ ಗಾಂಧಿ ಅವರ ಈ ಭೇಟಿ ಹೊಂದಿತ್ತು. ಭಗೀರಥಪುರಕ್ಕೆ ಭೇಟಿ ನೀಡಿದ ರಾಹುಲ್ ಗಾಂಧಿ, ಕಲುಷಿತ ನೀರು ಕುಡಿದು ಮೃತಪಟ್ಟವರ ಕುಟುಂಬಗಳ ಸದಸ್ಯರಿಗೆ ಸಾಂತ್ವನ ಹೇಳಿದರು. ಮಧ್ಯಪ್ರದೇಶದ ಕಾಂಗ್ರೆಸ್ ಅಧ್ಯಕ್ಷ ಪಟ್ವಾರಿ, ನಿಂದನೆ ಹಾಗೂ ಪ್ರತಿ ನಿಂದನೆಯ ರಾಜಕೀಯದಲ್ಲಿ ತೊಡಗಿರುವುದಕ್ಕಾಗಿ ರಾಜ್ಯದಲ್ಲಿರುವ ಬಿಜೆಪಿ ಸರಕಾರವನ್ನು ತರಾಟೆಗೆ ತೆಗದುಕೊಂಡರು. ಮಧ್ಯಪ್ರದೇಶವನ್ನು 20 ವರ್ಷಗಳಿಗೂ ಹೆಚ್ಚು ಕಾಲ ಆಳಿದ ಬಿಜೆಪಿಗೆ ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡವರ ನೋವನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಾಗಿಲ್ಲ. ಆದರೆ, ರಾಹುಲ್ ಗಾಂಧಿ ಅವರಿಗೆ ಸಂತ್ರಸ್ತರ ನೋವನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಾಗಿದೆ ಎಂದು ಅವರು ತಿಳಿಸಿದರು. ಪ್ರಧಾನಿ ನರೇಂದ್ರ ಮೋದಿ ಅವರ ನವ ಭಾರತದಲ್ಲಿ ಜನರಿಗೆ ಕುಡಿಯುವ ನೀರನ್ನು ಪೂರೈಸಲು ಕೂಡ ಸಾಧ್ಯವಾಗುತ್ತಿಲ್ಲ. ಆದುದರಿಂದ ಈ ಬಗ್ಗೆ ದೇಶಾದ್ಯಂತ ಧ್ವನಿ ಎತ್ತಬೇಕು ಎಂದು ಪಟ್ವಾರಿ ಹೇಳಿದರು.
ಮಹಾರಾಷ್ಟ್ರ ನಗರ ಪಾಲಿಕೆ ಚುನಾವಣೆಗಳಲ್ಲಿ ಹೈದರಾಬಾದ್ ಮೂಲದ ಎಐಎಂಐಎಂ ತೋರಿದ ಅದ್ಭುತ ಪ್ರದರ್ಶನ, ರಾಷ್ಟ್ರ ರಾಜಕಾರಣದ ಗಮನ ಸೆಳೆದಿದೆ. ಈಗಾಗಲೇ ಬಿಹಾರದಲ್ಲಿ ತನ್ನ ಅಸ್ತಿತ್ವವನ್ನು ಸಾಬೀತುಪಡಿಸಿರುವ ಪಕ್ಷ, ಅಸಾದುದ್ದೀನ್ ಓವೈಸಿ ನೇತೃತ್ವದಲ್ಲಿ ದೇಶಾದ್ಯಂತ ಹಂತ ಹಂತವಾಗಿ ವಿಸ್ತರಿಸುತ್ತಿದೆ. ಮಹಾರಾಷ್ಟ್ರ ದಿಗ್ವಿಜಯದಿಂದ ಸಂತುಷ್ಟರಾಗಿರುವ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ, ಭಾರತವನ್ನು ಮತ್ತಷ್ಟು ಸದೃಢ ಮಾಡಲು ಮುಸ್ಲಿಂ ನಾಯಕತ್ವ ಬೆಳೆಸುವ ಗುರಿಯೊಂದಿಗೆ ಕೆಲಸ ಮಾಡುವುದಾಗಿ ಘೋಷಿಸಿದ್ದಾರೆ. ಈ ಕುರಿತು ಇಲ್ಲಿದೆ ಸಂಪೂರ್ಣ ಮಾಹಿತಿ.
ಬೆಂಗಳೂರು ಸೈಬರ್ ಕ್ರೈಂ ಅಡ್ಡೆಯಾಗಲು ಬಿಡಬಾರದು : ಡಾ.ಜಿ.ಪರಮೇಶ್ವರ್
ಬೆಂಗಳೂರು : ಬೆಂಗಳೂರು ನಗರವನ್ನು ಇಡೀ ವಿಶ್ವವೇ ಗಮನಿಸುತ್ತಿದೆ. ಬೆಂಗಳೂರು ನಗರ ಸೈಬರ್ ಕ್ರೈಂ ಅಡ್ಡೆಯಾಗುವುದಕ್ಕೆ ಆಸ್ಪದ ನೀಡಬಾರದು ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ. ಶನಿವಾರ ನಗರದ ಪೊಲೀಸ್ ಪ್ರಧಾನ ಕಚೇರಿಯಲ್ಲಿ ನಡೆದ ಹಿರಿಯ ಪೊಲೀಸ್ ಅಧಿಕಾರಿಗಳ ಸಮಾವೇಶದಲ್ಲಿ ಪಾಲ್ಗೊಂಡು, ಪ್ರಗತಿ ಪರಿಶೀಲನೆ ನಡೆಸಿ ಅಧಿಕಾರಿಗಳನ್ನು ಉದ್ದೇಶಿಸಿ ಅವರು ಮಾತನಾಡಿದರು. ಇತ್ತೀಚೆಗಿನ ಕೆಲವು ಸೈಬರ್ ಕ್ರೈಂ ಪ್ರಕರಣಗಳಲ್ಲಿ ಪ್ರಶಂಸನೀಯವಾಗಿ ಕೆಲಸ ಮಾಡಲಾಗಿದೆ. ಪೊಲೀಸ್ ಇಲಾಖೆಯು ತಾಂತ್ರಿಕವಾಗಿ ಮತ್ತಷ್ಟು ಬಲಪಡಿಸಬೇಕಿದೆ. ಈ ನಿಟ್ಟಿನಲ್ಲಿ ಸರಕಾರವು ಎಲ್ಲ ರೀತಿಯ ಸಹಕಾರವನ್ನು ನೀಡಲಿದೆ ಎಂದು ಪರಮೇಶ್ವರ್ ಹೇಳಿದರು. ಡ್ರಗ್ಸ್ ದಂಧೆ ಮತ್ತು ಸೈಬರ್ ಅಪರಾಧಗಳನ್ನು ಮಟ್ಟ ಹಾಕಲು ಪರಿಣಾಮಕಾರಿಯಾಗಿ ಕೆಲಸ ಮಾಡಬೇಕಿದೆ. ಪೊಲೀಸರ ನಿರಂತರ ಕಾರ್ಯಾಚರಣೆ ನಡುವೆಯೂ ರಾಜ್ಯದಲ್ಲಿ ಡ್ರಗ್ಸ್ ಚಟುವಟಿಕೆಗಳು ಯಥೇಚ್ಛವಾಗಿ ನಡೆಯುತ್ತಿರುವ ಬಗ್ಗೆ ವರದಿಯಾಗುತ್ತಿದೆ. ಅಲ್ಲದೇ, ಸೈಬರ್ ಕ್ರೈಂ ಹಾವಳಿಯು ಹೆಚ್ಚಾಗುತ್ತಿದೆ ಎಂದು ಪರಮೇಶ್ವರ್ ಅಸಮಾಧಾನ ವ್ಯಕ್ತಪಡಿಸಿದರು. ಸೈಬರ್ ಕ್ರೈಂ ಹಾವಳಿ ಮತ್ರು ಡ್ರಗ್ಸ್ ದಂಧೆಯನ್ನು ಸಂಪೂರ್ಣವಾಗಿ ಮಟ್ಟ ಹಾಕುವ ಉದ್ದೇಶದಿಂದ ದೇಶದಲ್ಲೇ ಮೊದಲ ಬಾರಿಗೆ ಪ್ರತ್ಯೇಕ ವಿಭಾಗಗಳನ್ನು ಸ್ಥಾಪಿಸಲಾಗಿದೆ. ಈ ವಿಚಾರದಲ್ಲಿ ಸರಕಾರದ ನಿರೀಕ್ಷೆಯ ಮಟ್ಟಕ್ಕೆ ಕೆಲಸ ಮಾಡುತ್ತಿಲ್ಲ. ಇದನ್ನು ನಿರ್ಲಕ್ಷಿಸದೇ ಪರಿಣಾಮಕಾರಿಯಾಗಿ ಕೆಲಸ ಮಾಡಬೇಕು ಎಂದು ಪರಮೇಶ್ವರ್ ತಿಳಿಸಿದರು. ಮಹಿಳೆಯರು ಮತ್ತು ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳ ತನಿಖೆಯನ್ನು ನಿರ್ಲಕ್ಷ್ಯಿಸಲಾಗುತ್ತಿದೆ. ಪ್ರಕರಣದ ತಪ್ಪಿತಸ್ಥರನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದರೆ ಸಾಲುವುದಿಲ್ಲ. ತಪ್ಪಿತಸ್ಥರು ಶಿಕ್ಷೆಯಿಂದ ಪಾರಾಗುತ್ತಿದ್ದಾರೆ. ನೊಂದವರಿಗೆ ನ್ಯಾಯ ಕಲ್ಪಿಸುವ ನಿಟ್ಟಿನಲ್ಲಿ ಕೆಲಸ ಆಗಬೇಕು ಎಂದು ಪರಮೇಶ್ವರ್ ಹೇಳಿದರು. ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಮುಖ್ಯಮಂತ್ರಿ ಅವರ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್, ಸರಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಪೊಲೀಸ್ ಮಹಾ ನಿರ್ದೇಶಕ ಡಾ.ಎಂ.ಎ.ಸಲೀಂ, ಒಳಾಡಳಿತ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ತುಷಾರ್ ಗಿರಿನಾಥ್, ಮುಖ್ಯಮಂತ್ರಿ ಅವರ ಕಾರ್ಯದರ್ಶಿ ಬಿ.ಬಿ.ಕಾವೇರಿ ಮತ್ತಿತರರು ಉಪಸ್ಥಿತರಿದ್ದರು.
ಚತ್ತೀಸ್ಗಢ | ಭದ್ರತಾ ಪಡೆಗಳ ಗುಂಡಿನ ದಾಳಿಗೆ ಇಬ್ಬರು ಶಂಕಿತ ನಕ್ಸಲರು ಮೃತ್ಯು
ಬಿಜಾಪುರ, ಜ. 17: ಚತ್ತೀಸ್ಗಢದ ಬಿಜಾಪುರ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ಹಾಗೂ ಶಂಕಿತ ನಕ್ಸಲೀಯರ ನಡುವೆ ಶನಿವಾರ ನಡೆದ ಗುಂಡಿನ ಕಾಳಗದಲ್ಲಿ ದಿಲೀಪ್ ಬೆಡ್ಜಾ ಸೇರಿದಂತೆ ಇಬ್ಬರು ಶಂಕಿತ ಮಾವೋವಾದಿಗಳು ಮೃತಪಟ್ಟಿದ್ದಾರೆ. ಭದ್ರತಾ ಪಡೆಗಳ ಜಂಟಿ ತಂಡ ಜಿಲ್ಲೆಯ ವಾಯುವ್ಯ ಪ್ರದೇಶದ ಅರಣ್ಯದಲ್ಲಿ ನಕ್ಸಲ್ ನಿಗ್ರಹ ಕಾರ್ಯಾಚರಣೆ ನಡೆಸಿದ ಸಂದರ್ಭ ಶನಿವಾರ ಬೆಳಗ್ಗೆ ಗುಂಡಿನ ಕಾಳಗ ನಡೆದಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. ಈ ಪ್ರದೇಶದಲ್ಲಿ ವಿಭಾಗೀಯ ಸಮಿತಿ ಸದಸ್ಯ ಬೆಡ್ಜಾ ಉಪಸ್ಥಿತಿಯ ಕುರಿತ ಮಾಹಿತಿಯ ಆಧಾರದಲ್ಲಿ ಆರಂಭಿಸಲಾದ ಕಾರ್ಯಾಚರಣೆಯಲ್ಲಿ ವಿಶೇಷ ಕಾರ್ಯ ಪಡೆ ಹಾಗೂ ಡಿಸ್ಟ್ರಿಕ್ಟ್ ರಿಸರ್ವ್ ಗಾರ್ಡ್ (ಎರಡೂ ಚತ್ತೀಸ್ಗಢ ಪೊಲೀಸ್ನ ಘಟಕ) ಹಾಗೂ ಕೋಬ್ರಾ (ಕಮಾಂಡೊ ಬೆಟಾಲಿಯನ್ ಫಾರ್ ರೆಸಲ್ಯೂಟ್ ಆ್ಯಕ್ಷನ್-ಸಿಆರ್ಪಿಎಫ್ನ ಘಟಕ) ಕ್ಕೆ ಸೇರಿದ ಸಿಬ್ಬಂದಿ ಪಾಲ್ಗೊಂಡರು. ಗುಂಡಿನ ಕಾಳಗದಲ್ಲಿ ಮೃತಪಟ್ಟ ಇನ್ನೋರ್ವನ ಗುರುತು ಇದುವರೆಗೆ ಪತ್ತೆಯಾಗಿಲ್ಲ ಎಂದು ಅವರು ತಿಳಿಸಿದ್ದಾರೆ. ‘‘ಘಟನಾ ಸ್ಥಳದಲ್ಲಿ ಇದುವರೆಗೆ ಇಬ್ಬರು ನಕ್ಸಲೀಯರ ಮೃತದೇಹಗಳು ಹಾಗೂ ಎ.ಕೆ. 47 ರೈಫಲ್ಗಳು ಪತ್ತೆಯಾಗಿವೆ. ಶೋಧ ಕಾರ್ಯಾಚರಣೆ ಮುಂದುವರಿದಿದೆ’’ ಎಂದು ಅವರು ತಿಳಿಸಿದ್ದಾರೆ. ಮಾವೋವಾದಿಗಳ ರಾಷ್ಟ್ರೀಯ ಉದ್ಯಾನವನ ಪ್ರದೇಶ ಸಮಿತಿಯಲ್ಲಿ ಬೆಡ್ಜಾ ಸಕ್ರಿಯನಾಗಿದ್ದ. ಈತ ಹಲವು ದಾಳಿಗಳಲ್ಲಿ ಭಾಗಿಯಾಗಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್ ಆಯೋಜನೆಗೆ ಸರಕಾರ ಅನುಮತಿ
ಬೆಂಗಳೂರು : ಕಾಲ್ತುಳಿತ ದುರಂತದ ಹಿನ್ನೆಲೆಯಲ್ಲಿ ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸ್ಥಗಿತಗೊಂಡಿದ್ದ ಅಂತರರಾಷ್ಟ್ರೀಯ ಕ್ರಿಕೆಟ್ ಮತ್ತು ಐಪಿಎಲ್ ಪಂದ್ಯಗಳನ್ನು ಪುನಃ ಆಯೋಜಿಸಲು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಗೆ (ಕೆಎಸ್ಸಿಎ), ರಾಜ್ಯ ಗೃಹ ಇಲಾಖೆ ಅಧಿಕೃತವಾಗಿ ಅನುಮತಿ ನೀಡಿದೆ. ನ್ಯಾಯಮೂರ್ತಿ ಮೈಕಲ್ ಡಿ.ಕುನ್ಹಾ ಅವರ ವರದಿಯಲ್ಲಿನ ಅಂಶಗಳನ್ನು ಜಾರಿಗೊಳಿಸಿ ಪಂದ್ಯಗಳನ್ನು ನಡೆಸಲು ಒಪ್ಪಿಗೆ ನೀಡಲಾಗಿದೆ. ಸರಕಾರ, ಸಂಬಂಧಿತ ಅಧಿಕಾರಿಗಳು ನಿಗದಿಪಡಿಸಿರುವ ನಿರ್ದಿಷ್ಟ ಷರತ್ತುಗಳು, ನಿಯಮಗಳನ್ನು ಪಾಲಿಸುವ ಷರತ್ತಿನೊಂದಿಗೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ರಿಕೆಟ್ ಪಂದ್ಯಾವಳಿಗಳನ್ನು ಆಯೋಜಿಸಲು ಅನುಮತಿ ನೀಡಲಾಗಿದೆ. ಶನಿವಾರ ಈ ಕುರಿತು ಪ್ರಕಟನೆ ಹೊರಡಿಸಿರುವ ಕೆಎಸ್ಸಿಎ ವಕ್ತಾರ ವಿನಯ್ ಮೃತ್ಯುಂಜಯ, ಸರಕಾರದ ಗೃಹ ಇಲಾಖೆಯು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಂದ್ಯಗಳನ್ನು ನಡೆಸಲು ಅನುಮತಿ ನೀಡಿರುವುದು ನಮಗೆ ಸಂತೋಷ ತಂದಿದೆ ಎಂದು ತಿಳಿಸಿದ್ದಾರೆ. ಸರಕಾರ ನೇಮಿಸಿದ್ದ ಕಾರ್ಯಪಡೆಯು ಕ್ರೀಡಾಂಗಣದ ಭದ್ರತಾ ಕ್ರಮಗಳನ್ನು ಪರಿಶೀಲಿಸಿ ವರದಿ ನೀಡಿದ ನಂತರ ಈ ಅನುಮತಿ ದೊರೆತಿದೆ. 2025ರಲ್ಲಿ ಜೂನ್ 4 ರಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ತಂಡವು 18 ವರ್ಷಗಳ ನಂತರ ಐಪಿಎಲ್ ಟ್ರೋಫಿ ಗೆದ್ದಿತ್ತು. ಈ ವೇಳೆ ನಡೆದ ವಿಜಯೋತ್ಸವದ ಮೆರವಣಿಗೆಯಲ್ಲಿ ಉಂಟಾದ ನೂಕುನುಗ್ಗಲು ಮತ್ತು ಕಾಲ್ತುಳಿತದಿಂದಾಗಿ 11 ಮಂದಿ ಅಭಿಮಾನಿಗಳು ಪ್ರಾಣ ಕಳೆದುಕೊಂಡಿದ್ದರು. ಈ ಘಟನೆಯ ನಂತರ ಭದ್ರತಾ ಕಾರಣಗಳಿಗಾಗಿ ಕ್ರೀಡಾಂಗಣದಲ್ಲಿ ಯಾವುದೇ ಪ್ರಮುಖ ಪಂದ್ಯಗಳನ್ನು ಆಯೋಜಿಸಲು ಪೊಲೀಸರು ಅನುಮತಿ ನಿರಾಕರಿಸಿದ್ದರು. ಈ ನಿಷೇಧದಿಂದಾಗಿ ವಿಜಯ್ ಹಜಾರೆ ಟ್ರೋಫಿಯ ಫೈನಲ್ ಸೇರಿದಂತೆ ಹಲವು ಪಂದ್ಯಗಳನ್ನು ದೇವನಹಳ್ಳಿಯ ಬಿಸಿಸಿಐ ಸೆಂಟರ್ ಆಫ್ ಎಕ್ಸಲೆನ್ಸ್ಗೆ ಸ್ಥಳಾಂತರಿಸಲಾಗಿತ್ತು. ಅಷ್ಟೇ ಅಲ್ಲದೆ, ಮಹಿಳಾ ವಿಶ್ವಕಪ್ ಮತ್ತು ಮುಂಬರುವ ಪುರುಷರ ಟಿ20 ವಿಶ್ವಕಪ್ ಪಂದ್ಯಗಳ ಆತಿಥ್ಯವನ್ನೂ ಬೆಂಗಳೂರು ಕಳೆದುಕೊಂಡಿತ್ತು.
ರಾಜ್ಯದಲ್ಲಿ 1.53 ಲಕ್ಷ ಕೋಟಿ ರೂ.ಹೊಸ ಹೂಡಿಕೆ ಆಕರ್ಷಣೆ : ಎಂ.ಬಿ.ಪಾಟೀಲ್
ಬೆಂಗಳೂರು : ಹಿಂದಿನ ವಾರ್ಷಿಕ ಸಾಲಿನ ಫೆಬ್ರವರಿಯಲ್ಲಿ ಜಾಗತಿಕ ಹೂಡಿಕೆದಾರರ ಸಮಾವೇಶ ನಡೆಸಿದ ನಂತರದ 11 ತಿಂಗಳ ಅವಧಿಯಲ್ಲಿ ರಾಜ್ಯವು 1.53 ಲಕ್ಷ ಕೋಟಿ ರೂ.ಗಳಷ್ಟು ಹೊಸ ಹೂಡಿಕೆಯ ಹಲವು ಕೈಗಾರಿಕಾ ಯೋಜನೆಗಳನ್ನು ಆಕರ್ಷಿಸಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ತಿಳಿಸಿದ್ದಾರೆ. ರಾಜ್ಯ ಸರಕಾರದ ಉನ್ನತ ಮಟ್ಟದ ನಿಯೋಗದೊಂದಿಗೆ ದಾವೋಸ್ ಆರ್ಥಿಕ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ತೆರಳುವ ಮುನ್ನ ಈ ಬಗ್ಗೆ ವಿವರ ನೀಡಿರುವ ಅವರು, ರಾಜ್ಯಕ್ಕೆ ಹೂಡಿಕೆಯನ್ನು ಆಕರ್ಷಿಸುವ ಪ್ರಯತ್ನಗಳು ನಿರಂತರವಾಗಿ ಸಾಗಿದ್ದು, ಅದು ಕೇವಲ ಹೂಡಿಕೆದಾರರ ಸಮಾವೇಶಕ್ಕೆ ಮಾತ್ರ ಸೀಮಿತವಾಗಿಲ್ಲ. ತಯಾರಿಕೆ, ಮರುಬಳಕೆ ಇಂಧನ, ಡೇಟಾ ಕೇಂದ್ರಗಳು ಮತ್ತು ಜಾಗತಿಕ ಸಾಮರ್ಥ್ಯ ಕೇಂದ್ರಗಳ (ಜಿಸಿಸಿ) ಸ್ಥಾಪನೆಯ ಈ ವಲಯಗಳಲ್ಲಿ ಹಲವು ಅಗ್ರಗಣ್ಯ ಉದ್ಯಮ ಸಂಸ್ಥೆಗಳು ಈ ಹೂಡಿಕೆ ಮಾಡಲು ಆಸಕ್ತಿ ತೋರಿಸಿವೆ ಎಂದು ಹೇಳಿದ್ದಾರೆ. 11 ತಿಂಗಳಲ್ಲಿ ಆಕರ್ಷಿಸಿರುವ ಹೊಸ ಬಂಡವಾಳದಲ್ಲಿ ತಯಾರಿಕೆ ವಲಯದಲ್ಲಿ 66,293 ಕೋಟಿ ರೂ., ಪವನ ಮತ್ತು ಸೌರ ವಿದ್ಯುತ್ ಉತ್ಪಾದನೆಗೆ 20,913 ಕೋಟಿ ರೂ., ಜಿಸಿಸಿ ಕೇಂದ್ರಗಳ ಸ್ಥಾಪನೆಗೆ 12,500 ಕೋಟಿ ರೂ. ಮತ್ತು ಡೇಟಾ ಸೆಂಟರ್ಗಳ ಸ್ಥಾಪನೆಗೆ 6,350 ಕೋಟಿ ರೂಪಾಯಿ ಹೂಡಿಕೆ ಆಗಲಿದೆ ಎಂದು ಅವರು ಮಾಹಿತಿ ನೀಡಿದ್ದಾರೆ. ಟೊಯೋಟಾ ಕಂಪನಿ ಜಿಗಣಿಯ ತನ್ನ ಘಟಕದಲ್ಲಿ ಗ್ಯಾಸೊಲಿನ್ ಮತ್ತು ಹೈಬ್ರಿಡ್ ಇಂಜಿನ್ಗಳ ತಯಾರಿಕೆಗೆ 1,330 ಕೋಟಿ ರೂ. ಕ್ಯೂಪೈಎಐ ಕಂಪೆನಿಯು ಬೆಂಗಳೂರಿನಲ್ಲಿ ತನ್ನ ಕ್ವಾಂಟಂ ಉತ್ಕೃಷ್ಟತಾ ಕೇಂದ್ರ ಸ್ಥಾಪನೆಗೆ 1,136 ಕೋಟಿ ರೂ. ಎಟಿ&ಎಸ್ ಕಂಪೆನಿಯು ಎಲೆಕ್ಟ್ರಾನಿಕ್ ಬಿಡಿಭಾಗಗಳ ತಯಾರಿಕೆಗೆ ನಂಜನಗೂಡಿನಲ್ಲಿ 2,850 ಕೋಟಿ ರೂ. ವಿಪ್ರೋ ಹೈಡ್ರಾಲಿಕ್ಸ್ ಕಂಪೆನಿಯು ಎಲೆಕ್ಟ್ರಾನಿಕ್ಸ್ ಮತ್ತು ಪಿಸಿಬಿ ವಲಯಕ್ಕೆ ಬೇಕಾದ ತಾಮ್ರದ ಲ್ಯಾಮಿನೇಟ್ ತಯಾರಿಕೆಗೆ 499 ಕೋಟಿ ರೂ. ಝೆನ್-ಫೋಲ್ಡ್ ಬಯೋಸೈನ್ಸಸ್ ಲಿಮಿಟೆಡ್ ಔಷಧ ವಿಜ್ಞಾನ ಕ್ಷೇತ್ರಕ್ಕೆ ಬೇಕಾಗುವ ಕಿಣ್ವಗಳ ತಯಾರಿಕೆಗೆ 490 ಕೋಟಿ ರೂ. ಹೂಡಿಕೆ ಮಾಡುತ್ತಿವೆ ಎಂದು ಅವರು ಅಂಕಿ-ಅಂಶ ಸಹಿತ ವಿವರಿಸಿದ್ದಾರೆ. ಉಳಿದಂತೆ ಜೆಜೆಜಿ ಏರೋಸ್ಪೇಸ್ ವಿಮಾನಗಳ ಬಿಡಿಭಾಗಗಳ ತಯಾರಿಕೆಗೆ ದೊಡ್ಡಬಳ್ಳಾಪುರದ ಆದಿನಾರಾಯಣ ಹೊಸಹಳ್ಳಿಯಲ್ಲಿ 470 ಕೋಟಿ ರೂ. ಯಸಾಕಾವ ಇದೇ ಕೈಗಾರಿಕಾ ಪ್ರದೇಶದಲ್ಲಿ ವಿದ್ಯುನ್ಮಾನ ಉತ್ಪನ್ನಗಳ ತಯಾರಿಕಾ ಘಟಕ ಸ್ಥಾಪನೆಗೆ 330 ಕೋಟಿ ರೂ. ಐನಾಕ್ಸ್ ವಿಂಡ್ ಕೊಪ್ಪಳ ಜಿಲ್ಲೆಯ ಕುಷ್ಟಗಿಯಲ್ಲಿ ವಿಂಡ್ ಟರ್ಬೈನ್ ತಯಾರಿಕಾ ಘಟಕ ಸ್ಥಾಪನೆಗೆ 305 ಕೋಟಿ ರೂ., 4,000 ಕೋಟಿ ರೂ. ಡೇಟಾ ಸಮುದ್ರ ಕಂಪನಿಗೆ ಮಂಗಳೂರು, ಹುಬ್ಬಳ್ಳಿ-ಧಾರವಾಡ ಮತ್ತು ಮೈಸೂರಿನಲ್ಲಿ 1,350 ಕೋಟಿ ರೂ. ಹಳದಿರಾಮ್ಸ್ ಸಮೂಹವು ತುಮಕೂರಿನ ವಸಂತ ನರಸಾಪುರದಲ್ಲಿ ತನ್ನ ಕುರುಕಲು ತಿಂಡಿ ಘಟಕ ಸ್ಥಾಪನೆಗೆ 444 ಕೋಟಿ ರೂ. ಬಂಡವಾಳ ಹೂಡಿಕೆ ಮಾಡಿವೆ ಎಂದು ಸಚಿವರು ತಿಳಿಸಿದ್ದಾರೆ.
ತಣ್ಣೀರುವಾಬಿ ಬೀಚ್ನಲ್ಲಿ ಗಾಳಿಪಟಗಳ ಚಿತ್ತಾರ: ದೇಶ ವಿದೇಶದ ದೈತ್ಯಗಾತ್ರ- ಬಣ್ಣ- ವಿನ್ಯಾಸಗಳ ಸಂಗಮ
ಮಂಗಳೂರು, ಜ.17: ಕಣ್ಣು ಹಾಯಿಸಿದಷ್ಟುದ್ದಕ್ಕೂ ನೀಲ ಬಣ್ಣದ ಕಡಲ ಅಲೆಗಳು ಒಂದೆಡೆಯಾದರೆ, ನೀಲ ಆಗಸ ದಲ್ಲಿ ಬಣ್ಣಬಣ್ಣದ, ವಿವಿಧ ನಮೂನೆಯ ಚುಕ್ಕಿಯಾಕಾರದಿಂದ ಹಿಡಿದು ದೈತ್ಯಗಾತ್ರದ ಗಾಳಿಪಟಗಳ ಚಿತ್ತಾರ. ಮೀನು, ಬೆಕ್ಕು, ಆನೆ, ಚಿಟ್ಟೆ, ಮೊಸಳೆ, ಹೂ, ಮಿಕ್ಕಿ, ಏಲಿಯನ್ ... ಹೀಗೆ ವಿವಿಧ ಬಗೆಯ ವಿವಿಧ ವಿನ್ಯಾಸ ಬಣ್ಣಗಳ ಸಂಗಮದ ಗಾಳಿಪಟಗಳು. ಇನ್ನು ಕಡಲ ಕಿನಾರೆಯ ಮರಳಿನ ಮೇಲೆ ಭಾರೀ ಗಾತ್ರದ ಗಾಳಿಪಟಗಳ ಸೂತ್ರವನ್ನು ಸಮತೂಗಿಸಿಕೊಂಡು ತಮ್ಮ ಕೌಶಲ್ಯವನ್ನು ಪ್ರದರ್ಶಿಸುವ ಅಂತಾರಾಷ್ಟ್ರೀಯ ಗಾಳಿಪಟಗಾರರು ಹಾಗೂ ಅವರಿಗೆ ಪ್ರೋತ್ಸಾಹ ನೀಡುವ ಸಾವಿರಾರು ಸಂಖ್ಯೆಯ ಗಾಳಿಪಟ ಪ್ರೇಮಿಗಳು, ಪ್ರೇಕ್ಷಕರು. ಇದು ಮಂಗಳೂರಿನ ತಣ್ಣೀರುಬಾವಿಯ ಬ್ಲೂಬೇ ಬೀಚ್ನಲ್ಲಿ ಕರಾವಳಿ ಉತ್ಸವದ ಅಂಗವಾಗಿ ಆಯೋಜಿಸಲಾಗಿ ರುವ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವದದ ಮೊದಲ ದಿನವಾದ ಶನಿವಾರ ಕಂಡು ಬಂದ ದೃಶ್ಯ. ಟೀಮ್ ಮಂಗಳೂರು ತಂಡದಿಂದ ಎರಡು ದಿನಗಳ ಕಾಲ ನಡೆಯುತ್ತಿರುವ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವ ದಲ್ಲಿ 15 ದೇಶಗಳ 30 ಮಂದಿ ಅಂತಾರಾಷ್ಟ್ರೀಯ ಗಾಳಿಪಟಗಾರರ ಜತೆಗೆ 62 ನುರಿತ ಗಾಳಿಪಟ ಹಾರಾಟ ಗಾರರು ತಮ್ಮ ವೈವಿಧ್ಯಮಯ ಗಾಳಿಪಟಗಳನ್ನು ಪ್ರದರ್ಶಿಸುತ್ತಿದ್ದಾರೆ. ಸಾಂಪ್ರದಾಯಿಕ, ಏರೋಫಾಯಿಲ್, ಇನ್ಪ್ಲೇಟಬಲ್ ಹಾಗೂ ಕ್ಲಾಡ್ ಲೈನ್ ಸ್ಪೋರ್ಟ್ ಗಾಳಿಪಟಗಳ ಜತೆಗೆ ಸ್ಥಳೀಯ ಸಾಂಪ್ರದಾಯಿಕ ಗಾಳಿಪಟಗಳು ಉತ್ಸವದಲ್ಲಿ ನೋಡುಗರನ್ನು ಆಕರ್ಷಿಸುತ್ತಿವೆ. ಉತ್ಸವ ಮುಂದುವರಿಸಲು ಪ್ರೇರಣೆ: ಯು.ಟಿ.ಖಾದರ್ ಗಾಳಿಪಟ ಹಾರಿಸುವ ಮೂಲಕ ಎರಡು ದಿನಗಳ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವಕ್ಕೆ ಚಾಲನೆ ನೀಡಿದ ವಿಧಾನಸಭೆ ಸ್ಪೀಕರ್ ಯು.ಟಿ.ಖಾದರ್ ಮಾತನಾಡಿ, ಕರಾವಳಿ ಉತ್ಸವಕ್ಕೆ ಮುಖ್ಯಮಂತ್ರಿ ಸಿದ್ಧರಾಮಯ್ಯ 2 ಕೋಟಿ ರೂ. ಅನುದಾನ ಒದಗಿಸಿದ್ದು ಅತ್ಯಂತ ಯಶಸ್ವಿಯಾಗಿ ವಿವಿಧ ಕಾರ್ಯಕ್ರಮಗಳು ನಡೆಯುತ್ತಿವೆ. ದೇಶ ವಿದೇಶಗಳಿಂದ ಪ್ರವಾಸಿಗರು, ಸಾರ್ವಜನಿಕರು ಆಗಮಿಸುತ್ತಿದ್ದಾರೆ. ಇಂತಹ ಉತ್ಸವ ಮುಂದೆಯೂ ಯೋಜಿಸಲು ಪ್ರೇರಣೆ ದೊರಕಿದೆ ಎಂದರು. ವಿಧಾನ ಪರಿಷತ್ ಶಾಸಕ ಐವನ್ ಡಿಸೋಜಾ, ಜಿಲ್ಲಾಧಿಕಾರಿ ದರ್ಶನ್ ಎಚ್.ವಿ., ಜಿ.ಪಂ. ಸಿಇಒ ವಿನಾಯಕ ನರ್ವಾಡೆ ಹಾಗೂ ಇತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು. ‘ಮಂಗಳೂರಿನಲ್ಲಿ ಇದೇ ಮೊದಲ ಬಾರಿಗೆ ಗಾಳಿಪಟ ಉತ್ಸವದಲ್ಲಿ ಪತ್ನಿ ಜತೆ ಭಾಗವಹಿಸುತ್ತಿದ್ದೇನೆ. ಹೈದರಾ ಬಾದ್ನಿಂದ ಇಂದು ಬೆಳಗ್ಗೆ ತಣ್ಣೀರುಬಾವಿಗೆ ಆಗಮಿಸಿದ್ದು, ಇಲ್ಲಿನ ಜನರಿಂದ ಉತ್ತಮ ಸ್ಪಂದನೆ ದೊರಕಿದೆ. ತುಂಬಾ ಸ್ನೇಹಮಯಿ ಜನರು. ಸೆಲ್ಪಿ ಕ್ಲಿಕ್ಕಿಸಿಕೊಳ್ಳುತ್ತಾರೆ, ಮಾತನಾಡಿಸುತ್ತಾರೆ. ನಾನು ಇಲ್ಲಿ ಸುರಕ್ಷಿತವಾಗಿರುವ ಭಾವನೆ ಬಂದಿದೆ’ ಎಂದು ಇಟಲಿಯ ಅಂತಾರಾಷ್ಟ್ರೀಯ ಗಾಳಿಪಟಗಾರ ಆ್ಯಂಡ್ರಿಯಾ ಹೇಳಿದರು. ಪತ್ನಿ ಸಬ್ರೀನಾ ಜತೆಗೆ 24 ಬೃಹತ್ ಗಾಳಿಪಟಗಳೊಂದಿಗೆ ಉತ್ಸವಕ್ಕೆ ಆಗಮಿಸಿರುವ ಆ್ಯಂಡ್ರಿಯಾ ಅವರ ಜೆಲ್ಲಿ ಫಿಶ್, ಏಲಿಯನ್, ಫಿಸ್ ಸ್ಕೆಲಿಟನ್, ಹೂವಿನ ದೈತ್ಯಾಕಾರದ ಗಾಳಿಪಟಗಳು 5 ಮೀಟರ್ನಿಂದ 25 ಮೀಟರ್ ಉದ್ದವನ್ನು ಹೊಂದಿವೆ. ಇಸ್ತಾನಿಯಾದ ಜಾನ ಸೂಮ್ ಅವರದ್ದು ಮಂಗಳೂರಿಗೆ ಇದು 2ನೇ ಭೇಟಿಯಂತೆ. ಸುಮಾರು 14 ಗಾಳಿಪಟ ಗಳೊಂದಿಗೆ ಇಬ್ಬರ ತಂಡ ಮಂಗಳೂರಿಗೆ ಆಗಮಿಸಿರುವುದಾಗಿ ಹೇಳುವ ಜಾನ ಸೂಮ್ಗೆ ಇಲ್ಲಿನ ಬಿಸಿಲಿನ ವಾತಾವರಣ ಖುಷಿ ನೀಡಿದೆಯಂತೆ. ‘ನಮ್ಮಲ್ಲಿ ಮೈನಸ್ 20 ಡಿಗ್ರಿ ಹವಾಮಾನ. ಎಲ್ಲೆಲ್ಲೂ ಹಿಮತುಂಬಿರುತ್ತದೆ. ಆದರೆ ಇಲ್ಲಿಯ ಬೀಚ್ನ ವಾತಾವರಣ ಹಿತವಾಗಿದೆ. ಗಾಳಿಪಟ ಹಾರಾಟಕ್ಕೂ ಸೂಕ್ತ ಪ್ರದೇಶ. ಭಾರತದ ಮೀನಿನ ಆಹಾರ ತನಗೆ ಇಷ್ಟ ಎನ್ನುತ್ತಾರೆ’ ಜಾನ ಸೂಮ್.
ಖಂಡ್ರೆ ಕುಟುಂಬ ಕಾಂಗ್ರೆಸ್ ಪಕ್ಷದ ದೊಡ್ಡ ಆಸ್ತಿ : ಡಿಸಿಎಂ ಡಿ.ಕೆ. ಶಿವಕುಮಾರ್
ಬೀದರ್ : ಭೀಮಣ್ಣ ಖಂಡ್ರೆ ಅವರು ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಹಾಗೂ ವೀರಶೈವ ಸಮಾಜದ ಅಧ್ಯಕ್ಷರಾಗಿ ಕೆಲಸ ಮಾಡಿ ಇಡೀ ರಾಜ್ಯದಲ್ಲಿ ಸಂಘಟನೆ ಮಾಡಿದ್ದಾರೆ. ಈ ಕುಟುಂಬ ಕಾಂಗ್ರೆಸ್ ಪಕ್ಷದ ದೊಡ್ಡ ಆಸ್ತಿ. ಈ ಕುಟುಂಬ ಕಾಂಗ್ರೆಸ್ ಪಕ್ಷಕ್ಕೆ ನಿಷ್ಠೆಯಿಂದ ಕೆಲಸ ಮಾಡಿದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ತಿಳಿಸಿದರು. ಭೀಮಣ್ಣ ಖಂಡ್ರೆ ಅವರ ಅಂತಿಮ ಸಂಸ್ಕಾರದಲ್ಲಿ ಭಾಗವಹಿಸಿ ನಮನ ಸಲ್ಲಿಸಿದ ಬಳಿಕ ಶಿವಕುಮಾರ್ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು. ಬದುಕಿನಲ್ಲಿ ದೊಡ್ಡ ಸಾಧನೆ ಮಾಡಿದ ದೊಡ್ಡ ಶಕ್ತಿಗೆ ನಮನ ಸಲ್ಲಿಸಲು ನಾವು ಬಂದಿದ್ದೇವೆ. 1989ರಿಂದ ಭೀಮಣ್ಣ ಖಂಡ್ರೆ ಅವರ ಜೊತೆಗೆ ವಿಧಾನಸಭೆಯಲ್ಲಿ ಒಟ್ಟಿಗೆ ಕೆಲಸ ಮಾಡುವ ಭಾಗ್ಯ ನನಗೆ ಸಿಕ್ಕಿತ್ತು. ಅವರನ್ನು ಸಚಿವರನ್ನಾಗಿ ನೋಡಿದ್ದೇನೆ. ಅವರ ಮಗ ವಿಜಯ್ ಕುಮಾರ್ ಖಂಡ್ರೆ ಅವರ ಜೊತೆಗೂ ಶಾಸಕನಾಗಿ ಕೆಲಸ ಮಾಡಿದ್ದೇನೆ. ಈಶ್ವರ್ ಖಂಡ್ರೆ ಅವರ ಜೊತೆ ಶಾಸಕನಾಗಿ, ಮಂತ್ರಿಯಾಗಿ ಕೆಲಸ ಮಾಡಿದ್ದೇನೆ. ಅವರು ನನ್ನ ಜೊತೆ ಪಕ್ಷದ ಕಾರ್ಯಾಧ್ಯಕ್ಷರಾಗಿ ಕೆಲಸ ಮಾಡಿದ್ದಾರೆ. ಅವರ ಮೊಮ್ಮಗ ಸಾಗರ್ ಖಂಡ್ರೆ ಅವರು ಸಂಸದರಾಗಿ ನಮ್ಮೊಂದಿಗೆ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು. ವಿದ್ಯಾ ಕ್ಷೇತ್ರ ಸೇರಿದಂತೆ ಬೀದರ್ ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಒಂದು ಮಗು ಹುಟ್ಟಿದಾಗ ಆ ಮಗು ಅಳುತ್ತದೆ, ಸಮಾಜ ಖುಷಿ ಪಡುತ್ತದೆ. ಅದೇ ವ್ಯಕ್ತಿ ಲಿಂಗೈಕ್ಯರಾದಾಗ ಅವರ ಸಾಧನೆ ಸ್ಮರಿಸಿ ಸಮಾಜ ದುಃಖಪಡುತ್ತದೆ. ಈ ಕಾರಣಕ್ಕೆ ನಾನು ದೆಹಲಿಯಲ್ಲಿದ್ದರೂ, ಸಿಎಂ ಬೆಂಗಳೂರಿನಲ್ಲಿ ಇದ್ದರೂ ನಮ್ಮ ಕೆಲಸಗಳನ್ನು ಬದಿಗೊತ್ತಿ ಅಂತಿಮ ನಮನ ಸಲ್ಲಿಸಲು ಬಂದಿದ್ದೇವೆ ಎಂದರು. ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರು ಬರಲು ಬಹಳ ಪ್ರಯತ್ನಪಟ್ಟರು. ಆದರೆ ಬೇರೆ ರಾಜ್ಯಗಳ ಚುನಾವಣೆ ಸಂಬಂಧ ಸರಣಿ ಸಭೆಗಳಿರುವ ಕಾರಣ ಬರಲು ಆಗಲಿಲ್ಲ. ನಾವು ಪಕ್ಷ ಹಾಗೂ ಸರ್ಕಾರದ ಪರವಾಗಿ ಬಂದಿದ್ದೇವೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಈ ಅಗಲಿಕೆಯ ನೋವು ಭರಿಸುವ ಶಕ್ತಿಯನ್ನು ಭಗವಂತ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ ಎಂದು ತಿಳಿಸಿದರು.
ಫೆ.4ರಿಂದ ಸಸಿಹಿತ್ಲು ಶ್ರೀ ಸಾರಂತಾಯ ಗರೋಡಿ ಉಳ್ಳಾಯ ದೈವಸ್ಥಾನದ ಪುನರ್ ಪ್ರತಿಷ್ಠೆ ಬ್ರಹ್ಮಕಲಶೋತ್ಸವ, ನೇಮೋತ್ಸವ
ಸುರತ್ಕಲ್: ಮುಲ್ಕಿ ತಾಲೂಕಿನ ಸಸಿಹಿತ್ಲು ಶ್ರೀ ಸಾರಂತಾಯ ಗರೋಡಿ ಉಳ್ಳಾಯ ದೈವಸ್ಥಾನದಲ್ಲಿ ಶ್ರೀ ಉಳ್ಳಾಯ ಮತ್ತು ಪರಿವಾರ ದೈವಗಳ ಪುನರ್ ಪ್ರತಿಷ್ಠೆ, ಬ್ರಹ್ಮಕಲಶೋತ್ಸವ ಮತ್ತು ನೇಮೋತ್ಸವ ಸಮಾರಂಭ 2026 ನೇ ಫೆ.4 ರಿಂದ10ರ ವರೆಗೆ ನಡೆಯಲಿದೆ ಎಂದು ಕ್ಷೇತ್ರದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರಾದ ಸಿ.ಬಿ.ಕರ್ಕೇರ ಅವರು ನಗರದ ಪ್ರೆಸ್ ಕ್ಲಬ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ. ಇದು ಇತಿಹಾಸ ಪುರುಷರಾದ ಕಾಂತಾಬಾರೆ ಬೂದಾಬಾರೆಯರು ರಾತ್ರಿ ಬೆಳಗಾಗುವುದರೊಳಗೆ ಕೈಯಾರೆ ನಿರ್ಮಿ ಸಿದ ಈ ಕ್ಷೇತ್ರವಾಗಿದೆ. ಸುಮಾರು 3.5 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಇಲ್ಲಿನ ಜೀರ್ಣೋದ್ಧಾರ ಕಾರ್ಯ ನಡೆಯುತ್ತಿದ್ದು ಎಲ್ಲಾ ಕಾಮಗಾರಿಗಳೂ ಬಹುತೇಕ ಪೂರ್ಣಗೊಂಡಿದೆ. ಬಾರೆಯರು ಬರಿಗೈಯಲ್ಲಿ ತೋಡಿದ್ದರೆಂದು ಪ್ರತೀತಿ ಹೊಂದಿದ್ದ ಬಾವಿಯ ನವೀಕರಣ, ಅಂಗಣಕ್ಕೆ ಇಂಟರ್ಲಾಕ್ ವ್ಯವಸ್ಥೆ, ಆವರಣಗೋಡೆ, ಪಡುದಿಕ್ಕಿನಲ್ಲಿ ನೂತನ ಪ್ರವೇಶದ್ವಾರ ನಿರ್ಮಾಣದ ಕಾರ್ಯ ನಡೆಯುತ್ತಿದೆ ಎಂದು ವಿವರಿಸಿದರು. ಫೆ.4 ರಿಂದ ಋತ್ವಿಜರ ಉಪಸ್ಥಿತಿಯಲ್ಲಿ ಸರ್ವ ವೈದಿಕ ವಿಧಿವಿಧಾನಗಳು, ನಿತ್ಯ ಭಜನೆ, ಅನ್ನಸಂತರ್ಪಣೆ, ಸಂಜೆ ಗಣ್ಯರ, ದಾನಿಗಳ ಸಮ್ಮುಖದಲ್ಲಿ ಸಭಾ ಕಾರ್ಯಕ್ರಮಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ತುಳು ನಾಟಕ, ನೃತ್ಯ ಸೇರಿದಂತೆ ವೈವಿಧ್ಯಮಯ ಕಾರ್ಯಕ್ರಮಗಳು ನಡೆಯಲಿವೆ. ಫೆ.8 ರಂದು ಪುನರ್ ಪ್ರತಿಷ್ಠೆ, ಬ್ರಹ್ಮಕಲಶೋತ್ಸವ, ಫೆ.9 ರಂದು ನೇಮೋತ್ಸವ ನಡೆಯಲಿದೆ ಎಂದು ಅವರು ತಿಳಿಸಿದರು. ಬ್ರಹ್ಮಕಲಶೋತ್ಸವದ ಯಶಸ್ಸಿಗಾಗಿ ವಿವಿಧ ಉಪಸಮಿತಿಗಳನ್ನು ರಚಿಸಲಾಗಿದ್ದು ಪ್ರತಿ ಸಮಿತಿಗಳು ಅತ್ಯಂತ ಸಕ್ರಿಯವಾಗಿ ಸಿದ್ಧತೆಗಳನ್ನು ಮಾಡುತ್ತಿದ್ದು ಈ ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸುತ್ತಿವೆ ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಕ್ಷೇತ್ರದ ಜೀರ್ಣೋದ್ಧಾರ ಸಮಿತಿ ಕಾರ್ಯಾಧ್ಯಕ್ಷ ಪರಮಾನಂದ ಸಾಲ್ಯಾನ್, ಕೋಶಾಧಿಕಾರಿ ಶ್ರೀಧರ ವಿ. ಸುವರ್ಣ, ಆಡಳಿತ ಸಮಿತಿ ಅಧ್ಯಕ್ಷ ಜಗನ್ನಾಥ ಆರ್. ಕೋಟ್ಯಾನ್, ಉಲಾಧ್ಯಕ್ಷ ಅನಿಲ್ ಪೂಜಾರಿ, ಮುಂಬೈ ಸಮಿತಿ ಅಧ್ಯಕ್ಷ ಸತೀಶ್ ಎಸ್. ಕೋಟ್ಯಾನ್, ಪ್ರಧಾನ ಕಾರ್ಯದರ್ಶಿ ದಿನೇಶ್ ಸಿ. ಸಾಲ್ಯಾನ್, ಸಂಚಾಲಕ ಪದ್ಮನಾಭ ಸಸಿಹಿತ್ಲು, ಮಾಧ್ಯಮ ಸಂಚಾಲಕ ಯಶೋಧರ ಕೋಟ್ಯಾನ್, ಪ್ರಮೋದ್ ಕೋಟ್ಯಾನ್ , ಜಗದೀಸ ಅಂಚನ್ ಮೊದಲಾದವರು ಉಪಸ್ಥಿತರಿದ್ದರು.
ದೇವದುರ್ಗ | ಗುಣಮಟ್ಟದ ಶಿಕ್ಷಣಕ್ಕಾಗಿ ಪ್ರಾಮಾಣಿಕ ಸೇವೆ ಮಾಡುವೆ : ಶಾಸಕಿ ಕರೆಮ್ಮ ಜಿ.ನಾಯಕ್
ದೇವದುರ್ಗ: ಮಕ್ಕಳ ಭವಿಷ್ಯ ರೂಪಿಸಲು ಹಗಲಿರುಳು ಶ್ರಮಿಸುವ ಶಿಕ್ಷಕರಿಗೆ ಗೌರವ ಸಲ್ಲಿಸುತ್ತಿರುವುದು ಅತ್ಯಂತ ಸಂತಸದ ವಿಷಯ. ನಾನು ಸದಾ ನಿಮ್ಮೊಡನೆ ಸಹೋದರಿಯಂತೆ ನಿಂತು, ಶಿಕ್ಷಕರ ಕಷ್ಟ-ಸುಖಗಳಿಗೆ ಬೆನ್ನೆಲುಬಾಗಿ ಬೆಂಬಲ ನೀಡಲಿದ್ದೇನೆ ಎಂದು ಶಾಸಕಿ ಕರೆಮ್ಮ ಜಿ.ನಾಯಕ್ ಭರವಸೆ ನೀಡಿದರು. ಪಟ್ಟಣದ ಶ್ರೀಗಡ್ಡೆಗೂಳಿ ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿದ್ದ 'ತಾಲೂಕು ಗುರು ನಮನ' ಹಾಗೂ 'ಉತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ' ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. ತಮ್ಮ ವೈಯಕ್ತಿಕ ಜೀವನದ ಹಾದಿಯನ್ನು ಮೆಲುಕು ಹಾಕಿದ ಶಾಸಕರು, ನನಗೆ ನಿಜವಾಗಿಯೂ ಶಾಸಕಿಗಿಂತಲೂ ಶಿಕ್ಷಕಿಯಾಗುವ ದೊಡ್ಡ ಆಸೆ ಇತ್ತು. ಆದರೆ, ಬಾಲ್ಯದಲ್ಲೇ ವಿವಾಹವಾದ ಕಾರಣ ವಿದ್ಯಾಭ್ಯಾಸ ಮುಂದುವರಿಸಲು ಸಾಧ್ಯವಾಗಲಿಲ್ಲ. ಇಂದು ರಾಜಕೀಯವಾಗಿ ಜನಸೇವೆ ಮಾಡುವ ಅವಕಾಶ ಸಿಕ್ಕಿದೆ. ತಾಲೂಕಿನ ಶಾಲೆಗಳಲ್ಲಿರುವ ಶಿಕ್ಷಕರ ಕೊರತೆಯ ಬಗ್ಗೆ ಈಗಾಗಲೇ ಸರ್ಕಾರದ ಗಮನ ಸೆಳೆದಿದ್ದು, ಶೀಘ್ರವೇ ಸಮಸ್ಯೆ ಬಗೆಹರಿಸುವ ವಿಶ್ವಾಸವಿದೆ ಎಂದರು. ಅಲ್ಲದೆ, ಬಾಲ್ಯವಿವಾಹ ಮತ್ತು ಬಾಲಕಾರ್ಮಿಕ ಪದ್ಧತಿಯಂತಹ ಸಾಮಾಜಿಕ ಪಿಡುಗುಗಳ ನಿರ್ಮೂಲನೆಗೆ ಶಿಕ್ಷಕರು ಶ್ರಮಿಸಬೇಕು ಎಂದು ಕರೆ ನೀಡಿದರು. ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರು ಮಾತನಾಡಿ, ಸಾರ್ವಜನಿಕರು ಸಮುದಾಯ ಭವನ, ಗುಡಿ-ಗುಂಡಾರಗಳಿಗೆ ಅನುದಾನ ಕೇಳುವ ಬದಲು, ಶಾಲೆಗಳಿಗೆ ಮೂಲಸೌಲಭ್ಯ ಹಾಗೂ ಶಿಕ್ಷಕರನ್ನು ಕೇಳಿದ್ದರೆ ಇಂದು ಕಲ್ಯಾಣ ಕರ್ನಾಟಕ ಶಿಕ್ಷಣದಲ್ಲಿ ಹಿಂದುಳಿಯುತ್ತಿರಲಿಲ್ಲ. ಸರ್ಕಾರವು ಬಡ ಮಕ್ಕಳಿಗೆ 'ವಿದ್ಯಾ ಕಿಟ್' ನೀಡುವ ಮೂಲಕ ಪ್ರೋತ್ಸಾಹಿಸಬೇಕು. ಬಡ ಮಕ್ಕಳು ಗುಣಮಟ್ಟದ ಶಿಕ್ಷಣ ಪಡೆದು ಸಮಾಜದಲ್ಲಿ ಉನ್ನತ ಸ್ಥಾನಕ್ಕೇರಿದಾಗ ಮಾತ್ರ ಶಿಕ್ಷಕರಿಗೆ ನೀಡುವ ಪ್ರಶಸ್ತಿಗೆ ನೈಜ ಬೆಲೆ ಸಿಗುತ್ತದೆ ಎಂದು ಅಭಿಪ್ರಾಯಪಟ್ಟರು. ಕಾರ್ಯಕ್ರಮದಲ್ಲಿ ತಹಶೀಲ್ದಾರ್ ನಾಗಮ್ಮ ಕಟ್ಟಿಮನಿ, ಕ್ಷೇತ್ರ ಶಿಕ್ಷಣಾಧಿಕಾರಿ ಮಲ್ಲಿಕಾರ್ಜುನ, ಪುರಸಭೆ ಮುಖ್ಯಾಧಿಕಾರಿ ಹಂಪಯ್ಯ, ಪ್ರಮುಖರಾದ ಬಸನಗೌಡ ದೇಸಾಯಿ, ಆದನಗೌಡ ಬುಂಕಲದೊಡ್ಡಿ ಸೇರಿದಂತೆ ಶಿಕ್ಷಣ ಇಲಾಖೆಯ ಅಧಿಕಾರಿಗಳು ಹಾಗೂ ಶಿಕ್ಷಕರು ಉಪಸ್ಥಿತರಿದ್ದರು.
ಶೀರೂರು ಪರ್ಯಾಯಕ್ಕೆ ಮಟ್ಟುಗುಳ್ಳ ಹೊರೆಕಾಣಿಕೆ
ಉಡುಪಿ, ಜ.17: ಶೀರೂರು ಮಠಾಧೀಶ ಶ್ರೀ ವೇದವರ್ಧನ ತೀರ್ಥರ ಪ್ರಥಮ ಪರ್ಯಾಯಕ್ಕೆ ಮಟ್ಟು ಭಾಗದ ಶ್ರೀಕೃಷ್ಣ ಭಕ್ತರು ಶನಿವಾರ ಮಟ್ಟುಗುಳ್ಳ ಹೊರೆಕಾಣಿಕೆ ಸಮರ್ಪಿಸಿದರು. ನಗರದ ಸಂಸ್ಕೃತ ಕಾಲೇಜಿನ ಮುಂಭಾಗದಲ್ಲಿ ಸಂಚಾಲಕ ಬೈಕಾಡಿ ಸುಪ್ರಸಾದ್ ಶೆಟ್ಟಿ ಮಟ್ಟು ಭಾಗದ ಭಕ್ತರನ್ನು ಸ್ವಾಗತಿಸಿದರು. ಬಳಿಕ ಗುಳ್ಳ ತುಂಬಿದ ಬುಟ್ಟಿಯನ್ನು ಹೊತ್ತು ಭಕ್ತರು ಸಾಲಾಗಿ ಮೆರವಣಿಗೆ ಮೂಲಕ ರಥಬೀದಿಗೆ ಬಂದು ಬಳಿಕ ಹೊರೆಕಾಣಿಕೆ ಮಂಟಪ ತಲುಪಿದರು. ಶ್ರೀಕೃಷ್ಣ ಮಠ ಮತ್ತು ಮಟ್ಟುಗುಳ್ಳಕ್ಕೆ ವಿಶೇಷ ಸಂಬಂಧವಿದೆ. ವಾದಿರಾಜ ಸ್ವಾಮಿಗಳು ಅನುಗ್ರಹಿಸಿ ನೀಡಿದ ಬೀಜ ದಿಂದ ಹುಟ್ಟಿಕೊಂಡ ಗುಳ್ಳ ಇಂದು ದೇಶದಲ್ಲೇ ಜಿಐ ಪೇಟೆಂಟ್ ಪಡೆದ ಮೊದಲ ತರಕಾರಿ ಎಂಬ ಖ್ಯಾತಿ ಪಡೆದಿದೆ. ಜೊತೆಗೆ ಕೃಷ್ಣ ಮಠದ ನಿತ್ಯ ಬಳಕೆಯ ತರಕಾರಿಗಳಲ್ಲಿ ಗುಳ್ಳ ತರಕಾರಿಗೆ ವಿಶೇಷ ಸ್ಥಾನವಿದೆ. ಹೊರೆಕಾಣಿಕೆ ಸಮರ್ಪಣೆಯಲ್ಲಿ ಮಟ್ಟು ಭಾಗದ ಭಕ್ತರು, ಡಾ.ಟಿ.ಎಸ್. ರಾವ್, ಪ್ರದೀಪ್ ರಾವ್, ವಿಷ್ಣು ಪಾಡೀಗಾರ್, ಸುನಿಲ್ ಬಂಗೇರ, ಸರಸ್ವತಿ ಬಂಗೇರ, ಮಟ್ಟಿ ಲಕ್ಷ್ಮೀ ನಾರಾಯಣ ರಾವ್, ಶ್ರೀಕಾಂತ್ ಉಪಾಧ್ಯಾಯ, ಸಂದೀಪ್ ಮಂಜ, ನರೇಶ್ ಪಾಲನ್, ಸದಾನಂದ ಸುವರ್ಣ, ಜಯ ಪೂಜಾರಿ, ಎಂ. ಲಕ್ಷ್ಮಣ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

27 C