ಗುರುಮಠಕಲ್: ಪರಿಶಿಷ್ಟ ಜಾತಿಯ ಚರ್ಮ ಕುಶಲ ಕರ್ಮಿ ಗಳಿಗೆ G+2 ಮಾದರಿಯ 72 ವಸತಿ ಮತ್ತು ಕಾರ್ಯಾಗಾರ ನಿರ್ಮಾಣ ಯೋಜನೆಯ ಶಂಕುಸ್ಥಾಪನಾ ಸಮಾರಂಭದಲ್ಲಿ ಗುರುಮಠಕಲ್ ಕ್ಷೇತ್ರದ ಶಾಸಕ ನಾಗನಗೌಡ ಕಂದಕೂರ ಮಾತನಾಡಿದರು. The post ಶಾಸಕರಿಂದ ಶಂಕುಸ್ಥಾಪನೆ: appeared first on Sanjevani .
ಅಜ್ಮೀರ್ ದರ್ಗಾ ಸಮೀಕ್ಷೆಗೆ ಹಿಂದೂ ಸಂಘಟನೆಗಳ ಒತ್ತಾಯ
ಜೈಪುರ ಮೇ 27: ರಾಜಸ್ಥಾನದ ಅಜ್ಮೀರ್ ನಲ್ಲಿರುವ ಸೂಫಿ ಸಂತ ಮೊಯಿನುದ್ದೀನ್ ಚಿಶ್ತಿ ಅವರ ಸಮಾಧಿಯು(ದರ್ಗಾ) ಒಂದು ಕಾಲದಲ್ಲಿ ಹಿಂದೂ ದೇವಾಲಯವಾಗಿತ್ತು. ಹಾಗಾಗಿ ಭಾರತೀಯ ಪುರಾತ್ವತ್ವ ಸರ್ವೇಕ್ಷಣಾ ಇಲಾಖೆ(ಎಎಸ್ಐ)ಯು ದರ್ಗಾ ಆವರಣವನ್ನು ಸರ್ವೆ ಮಾಡಬೇಕು ಎಂದು ಹಿಂದೂ ಸಂಘಟನೆಯೊಂದು ಒತ್ತಾಯಿಸಿದೆ. ಕಾಶಿಯ ಜ್ಞಾನವಾಪಿ ಮಸೀದಿ, ಮಥುರಾದ ಶಾಹೀ ಈದ್ಗಾ ಮಸೀದಿಯ ನಂತರ ಇದೀಗ ರಾಜಸ್ಥಾನದ ಅಜ್ಮೀರ್ ದರ್ಗಾದ
ಮೇ 27ರಂದು ಭಾರತದಲ್ಲಿ ಪೆಟ್ರೋಲ್-ಡೀಸೆಲ್ ದರವನ್ನು ತಿಳಿಯಿರಿ
ನವದೆಹಲಿ, ಮೇ 27: ದೇಶದಲ್ಲಿ ಪ್ರತಿದಿನ ಇಂಧನ ದರ ಪರಿಷ್ಕರಣೆ ಮಾಡಲು ಆರಂಭಿಸಿದ್ದ ಸರ್ಕಾರಿ ತೈಲ ಕಂಪನಿಗಳು, ಕಳೆದ ಮೂರು ದಿನಗಳಿಂದ ಪೆಟ್ರೋಲ್-ಡೀಸೆಲ್ ದರದಲ್ಲಿ ಯಥಾಸ್ಥಿತಿ ಕಾಯ್ದುಕೊಂಡಿವೆ. ಮೇ 27ರಂದು ಪೆಟ್ರೋಲ್, ಡೀಸೆಲ್ ದರದಲ್ಲಿ ಯಾವುದೇ ಏರಿಳಿತ ಕಂಡುಬಂದಿಲ್ಲ. ಭಾರತದಲ್ಲಿ ನಾಲ್ಕೂವರೆ ತಿಂಗಳ ನಂತರದಲ್ಲಿ ಮೊದಲ ಬಾರಿಗೆ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ಪರಿಷ್ಕರಣೆ ಮಾಡಲಾಗಿತ್ತು. ದೇಶದಲ್ಲಿ
Breaking: ದಾವೋಸ್ ಪ್ರವಾಸ ಮುಗಿಸಿ ಬೆಂಗಳೂರಿಗೆ ಬಂದ ಸಿಎಂ ಬೊಮ್ಮಾಯಿ
ಬೆಂಗಳೂರು, ಮೇ 27: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಆರು ದಿನಗಳ ದಾವೋಸ್ ಪ್ರವಾಸ ಮುಗಿಸಿ ಶುಕ್ರವಾರ ಬೆಳಗ್ಗೆ ಬೆಂಗಳೂರಿಗೆ ವಾಪಸ್ಸಾಗಿದ್ದಾರೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಬಸವರಾಜ ಬೊಮ್ಮಾಯಿ ಅವರನ್ನು ಇಂಧನ ಸಚಿವ ವಿ. ಸುನೀಲ್ ಕುಮಾರ್ ಹಾಗೂ ಗುಪ್ತಚರ ಇಲಾಖೆ ಎಡಿಜಿಪಿ ದಯಾನಂದ ಅವರು ಸ್ವಾಗತ ಮಾಡಿದರು. ಮೇ 22ರಂದು ಸಿಎಂ ಬೊಮ್ಮಾಯಿ
ತಮಿಳು ಶಾಶ್ವತ, ಜಾಗತಿಕ ಸಂಸ್ಕೃತಿ: ನರೇಂದ್ರ ಮೋದಿ
ಚೆನ್ನೈ, ಮೇ 27: ಇತ್ತೀಚಿನ ತಿಂಗಳುಗಳಲ್ಲಿ ಹಿಂದಿ ಹೇರಿಕೆ ಕುರಿತು ತೀವ್ರ ಚರ್ಚೆಯ ನಡುವೆ ಪ್ರಧಾನಿ ನರೇಂದ್ರ ಮೋದಿ ಗುರುವಾರ ತಮಿಳು ಭಾಷೆ ಶಾಶ್ವತ ಮತ್ತು ತಮಿಳು ಸಂಸ್ಕೃತಿ ಜಾಗತಿಕವಾಗಿದೆ ಎಂದು ಹೇಳಿದ್ದಾರೆ. ಚೆನ್ನೈನ ಜವಾಹರಲಾಲ್ ನೆಹರು ಸ್ಟೇಡಿಯಂನಲ್ಲಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ತಮಿಳುನಾಡು ರಾಜ್ಯಕ್ಕೆ ಬರುವುದು ನನಗೆ ಯಾವಾಗಲೂ ವಿಶೇಷವಾಗಿದೆ. ಈ ಭೂಮಿ
IPL 2022: ಆರ್ಸಿಬಿಗೆ ಈ ಯುವ ಬ್ಯಾಟ್ಸ್ಮನ್ನ ಭೀತಿಯಿದೆ ಎಂದ ವೀರೇಂದ್ರ ಸೆಹ್ವಾಗ್!
ಅಹಮದಾಬಾದ್ನ ನರೇಂದ್ರ ಮೋದಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆಯುವ 2022ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ಕಾದಾಟ ನಡೆಸಲಿವೆ. ಅಂದಹಾಗೆ ಈ ಪಂದ್ಯದಲ್ಲಿ ಆರ್ಸಿಬಿ ವಿರುದ್ಧ ದೇವದತ್ ಪಡಿಕ್ಕಲ್ ಉತ್ತಮ ಬ್ಯಾಟಿಂಗ್ ಪ್ರದರ್ಶನ ತೋರಬಹುದೆಂದು ವೀರೇಂದ್ರ ಸೆಹ್ವಾಗ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇಪಿಎಫ್ಒ ಸದಸ್ಯತ್ವ ಹೆಚ್ಚಳ, ಹೊಸ ಉದ್ಯೋಗಿಗಳ ಸಂಖ್ಯೆ 59% ವೃದ್ಧಿ
ಉದ್ಯೋಗಿಗಳ ಭವಿಷ್ಯ ನಿಧಿ ಸಂಘಟನೆ ಅಂಕಿ-ಅಂಶಗಳ ಪ್ರಕಾರ ಹಣಕಾಸು ವರ್ಷ 2021-22ರಲ್ಲಿ ನಿವ್ವಳ ಹೊಸ ಉದ್ಯೋಗಗಳ ಸೇರ್ಪಡೆ ಪ್ರಮಾಣ ಶೇ. 58.7ರಷ್ಟು ವೃದ್ಧಿಯಾಗಿದೆ. ಆದರೆ ಇನ್ನೂ ಕೋವಿಡ್ ಪೂರ್ವ ಮಟ್ಟವನ್ನು ಮುಟ್ಟಿಲ್ಲ.
Breaking; ದೆಹಲಿ ಸಫ್ಧರ್ ಜಂಗ್ ಆಸ್ಪತ್ರೆಯಲ್ಲಿ ಅಗ್ನಿ ಆಕಸ್ಮಿಕ
ನವದೆಹಲಿ, ಮೇ 27; ನವದೆಹಲಿಯ ಸಫ್ಧರ್ ಜಂಗ್ ಆಸ್ಪತ್ರೆಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಮಾಹಿತಿ ತಿಳಿಯುತ್ತಿದ್ದಂತೆ ಅಗ್ನಿ ಶಾಮಕ ದಳದ ವಾಹನಗಳು ಸ್ಥಳಕ್ಕೆ ಧಾವಿಸಿವೆ. ಶುಕ್ರವಾರ ಸಫ್ಧರ್ ಜಂಗ್ ಆಸ್ಪತ್ರೆಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಈ ಕುರಿತು ಅಗ್ನಿ ಶಾಮಕ ದಳಕ್ಕೆ ತಕ್ಷಣ ಮಾಹಿತಿ ನೀಡಲಾಗಿದೆ. 5ಕ್ಕೂ ಹೆಚ್ಚು ಅಗ್ನಿ ಶಾಮಕ ದಳದ ವಾಹನಗಳು ಬೆಂಕಿ ನಂದಿಸಲು ಆಗಮಿಸಿವೆ. ಸಫ್ಧರ್
ಕರ್ನಾಟಕದಲ್ಲಿ ಕಡಿಮೆ ಬೆಳೆ: ಮಾವಿಗೆ ಬಂಪರ್ ಬೆಲೆ
ಬೆಂಗಳೂರು, ಮೇ 27: ಅಕಾಲಿಕ ಮಳೆ, ಅತ್ಯಧಿಕ ತಾಪಮಾನ ಸೇರಿದಂತೆ ಹಲವು ಕಾರಣಗಳಿಂದ ರಾಜ್ಯದಲ್ಲಿ ಈ ಬಾರಿ ಮಾವಿನ ಫಸಲು ಕಡಿಮೆಯಾಗಿದ್ದು, ಬೆಲೆ ಗಗನಕ್ಕೇರಿದೆ. ಈ ಬಾರಿ ಮಾವಿನ ಹಣ್ಣಿನ ಸಿಹಿ ಸವಿಯಬೇಕೆಂದಿದ್ದರೆ ನೀವು ದುಬಾರಿ ಬೆಲೆ ತೆರಲೇಬೇಕಿದೆ. ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರಾಟ ಮಂಡಳಿ ಅಧ್ಯಕ್ಷ ಕೆ. ವಿ. ರಾಜು ಪ್ರಕಾರ ಎಲ್ಲಾ
ಮದ್ಯಪ್ರಿಯರಿಗೆ ಮೋಜಿನ ಸುದ್ದಿ; ಕಡಿಮೆ ರೇಟಲ್ಲಿ ಎಣ್ಣೆ ಬೇಕಾ, ಈ ರಾಜ್ಯಕ್ಕೆ ಬನ್ನಿ!
ಭೋಪಾಲ್, ಮೇ 27: ಭಾರತದಲ್ಲಿ ಪೆಟ್ರೋಲ್ ದರ ಕಡಿಮೆ ಆಯ್ತು, ಡೀಸೆಲ್ ದರ ಕಡಿಮೆ ಆಯ್ತು, ಗ್ಯಾಸ್ ಸಿಲಿಂಡರ್ ಮೇಲೆ ಸಬ್ಸಿಡಿ ಸಿಕ್ತು, ಕಬ್ಬಿಣ ಮತ್ತು ಸ್ಟೀಲ್ ಮೇಲಿನ ತೆರಿಗೆಯನ್ನೂ ಕಟ್ ಮಾಡಲಾಯಿತು. ಕೇಂದ್ರ ಸರ್ಕಾರ ಅಬಕಾರಿ ಸುಂಕವನ್ನು ಕಡಿತಗೊಳಿಸುವ ನಿಟ್ಟಿನಲ್ಲಿ ಕ್ರಮ ತೆಗೆದುಕೊಂಡರೆ, ಇಲ್ಲೊಂದು ರಾಜ್ಯವು ಮದ್ಯಪ್ರಿಯರಿಗೆ ಸಂತಸ ನೀಡುವಂತಾ ನಿರ್ಧಾರವನ್ನು ಜಾರಿಗೊಳಿಸಿದೆ. ಕೇಂದ್ರ ಸರ್ಕಾರವು
ವಿವಿಧ ರಾಜ್ಯದಲ್ಲಿ ಎಎಪಿ ಕಾರ್ಯತಂತ್ರ: ಬಿಜೆಪಿ ಪ್ರತಿ ತಂತ್ರ!
ನವದೆಹಲಿ ಮೇ 27: ಪಂಜಾಬ್ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಗೆಲುವಿನ ನಂತರ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷ ತನ್ನ ಗಮನವನ್ನು ಮುಂಬರುವ ಗುಜರಾತ್ ಮತ್ತು ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣೆಯತ್ತ ನೆಟ್ಟಿದೆ. ಇದೇ ವೇಳೆ ಮುಂದಿನ ವರ್ಷ ನಡೆಯುವ ಕರ್ನಾಟಕ, ಮಧ್ಯಪ್ರದೇಶ ಮತ್ತು ರಾಜಸ್ಥಾನ ವಿಧಾನಸಭೆ ಚುನಾವಣೆಗಳಿಗೂ ಆಮ್ ಆದ್ಮಿ ಪಕ್ಷ ಸಜ್ಜಾಗುತ್ತಿದೆ. ಕೇರಳದಲ್ಲಿ
ಬೈಕ್, ಕಾರುಗಳ ವಾಹನ ವಿಮಾ ಪ್ರೀಮಿಯಂ ಹೆಚ್ಚಳ: ಕೇಂದ್ರ ಸರ್ಕಾರದಿಂದ ಶಾಕ್ !
ಬೆಂಗಳೂರು, ಮೇ 27: ಪೆಟ್ರೋಲ್ - ಡೀಸೆಲ್ ದರ ಏರಿಕೆಯಿಂದ ಕಂಗ್ಗೆಟ್ಟಿರುವ ವಾಹನ ಮಾಲೀಕರಿಗೆ ಕೇಂದ್ರ ಸರ್ಕಾರ ಮತ್ತೊಂದು ಶಾಕ್ ನೀಡಿದೆ. ಮೂರನೇ ವ್ಯಕ್ತಿಯ ಮೋಟಾರು ವಾಹನ ವಿಮೆ ಪ್ರೀಮಿಯಂ ದರವನ್ನು ಜೂನ್ 01, 2022 ರಿಂದ ಜಾರಿಗೆ ಬರುವಂತೆ ಹೆಚ್ಚಳ ಮಾಡುವ ಪ್ರಸ್ತಾಪಕ್ಕೆ ಕೇಂದ್ರ ಸರ್ಕಾರ ಗುರುವಾರ ಅಂತಿಮ ಮುದ್ರೆ ಒತ್ತಿದೆ. 2022 ಜೂ. 1
ಒಂಟಿ ಕಾಲಲ್ಲಿ ಒಂದು ಕಿ.ಮೀ ನಡೆದು ಶಾಲೆಗೆ ಹೋಗುತ್ತಿದ್ದ ಬಾಲಕಿಗೆ ಸೋನು ಸೂದ್ ಸಹಾಯ
ಕೋವಿಡ್ ಸಮಯದಲ್ಲಿ ಸಾವಿರಾರು ಕಾರ್ಮಿಕರಿಗೆ ಸಹಾಯ ಮಾಡಿ 'ಮಸೀಯಾ' (ದೇವರು) ಎನಿಸಿಕೊಂಡಿದ್ದ ನಟ ಸೋನು ಸೂದ್ ತಮ್ಮ ಸಹಾಯ ಹಸ್ತವನ್ನು ಹಿಂತೆಗೆದುಕೊಂಡಿಲ್ಲ. ಕೋವಿಡ್ ಆರಂಭವಾದಾಗಿನಿಂದಲೂ ಸತತವಾಗಿ ಸಮಾಜ ಸೇವೆಯಲ್ಲಿ ತೊಡಗಿರುವ ಸೋನು ಸೂದ್ ತಮ್ಮ ಗಮನಕ್ಕೆ ಬರುವ ಅಥವಾ ಸಹಾಯ ಅರಸಿ ಬರುವ ವ್ಯಕ್ತಿಗಳಿಗೆ ಕೈಲಾದ ಸಹಾಯ ಮಾಡುತ್ತಲೇ ಬಂದಿದ್ದಾರೆ. ಇದೀಗ ಬಿಹಾರದ ಬಾಲಕಿಯೊಬ್ಬರಿಗೆ ಸೋನು ಸೂದ್
ಹಣದುಬ್ಬರ ನಿಯಂತ್ರಣಕ್ಕೆ ಪೆಟ್ರೋಲ್-ಡೀಸೆಲ್ ದರ ಇಳಿಸಿದರೆ ಸಾಕಾ?
ನವದೆಹಲಿ, ಮೇ 27: ಕೇಂದ್ರ ಸರ್ಕಾರವು ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಕಡಿತಗೊಳಿಸಿರುವುದರಿಂದ ಭಾರತದಲ್ಲಿ ಹಣದುಬ್ಬರ ನಿಯಂತ್ರಿಣ ಸಾಧ್ಯವಾಗಲಿದೆ ಎಂಬ ಕುರಿತು ವಿಶ್ಲೇಷಣೆ ನಡೆಸಲಾಗುತ್ತಿದೆ. ಭಾರತದಲ್ಲಿ ನಾಲ್ಕೂವರೆ ತಿಂಗಳ ನಂತರದಲ್ಲಿ ಮೊದಲ ಬಾರಿಗೆ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ಪರಿಷ್ಕರಣೆ ಮಾಡಲಾಗಿತ್ತು. ಕಳೆದ ಮೇ 21ರ ಶನಿವಾರ ಪೆಟ್ರೋಲ್ ಮೇಲೆ 8 ರೂಪಾಯಿ, ಡೀಸೆಲ್
ಮಂಗಳೂರು: ಬ್ಯಾರಿ ಭವನ ಜಾಗ ಮತ್ತೆ ಎತ್ತಂಗಡಿ, ಬಿಜೆಪಿ ವಿರೋಧಕ್ಕೆ ಬಗ್ಗಿದ ಅಕಾಡೆಮಿ, ಮಂಜನಾಡಿ ಬಳಿ ಹೊಸ ಸ್ಥಳ
ಬ್ಯಾರಿ ಭವನ ನಿರ್ಮಾಣಕ್ಕೆ ಕಳೆದ ವರ್ಷ ವಿರೋಧ ವ್ಯಕ್ತವಾಗಿತ್ತು. ಧರ್ಮಗುರುಗಳ ಸಮ್ಮುಖದಲ್ಲಿ ಶಿಲಾನ್ಯಾಸ ನಡೆದಿತ್ತು. ತಾನು ಬಿಜೆಪಿಯಾದ ಕಾರಣ ವಿರೋಧ ಬರಲಾರದೆಂದು ಭಾವಿಸಿ, ರಹೀಂ ಉಚ್ಚಿಲ್ ಫೆಬ್ರವರಿಯಲ್ಲಿ ಶಿಲಾನ್ಯಾಸ ಏರ್ಪಡಿಸಿದ್ದರು.
ದೇಶದ ಪ್ರಮುಖ ನಗರಗಳಲ್ಲಿ ಶುಕ್ರವಾರ ಪೆಟ್ರೋಲ್-ಡೀಸೆಲ್ ಬೆಲೆ ಹೇಗಿದೆ? ಇಲ್ಲಿದೆ ವಿವರ
ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ತೆರಿಗೆ ಮೂಲಕ ಕೇಂದ್ರ ಹಾಗೂ ರಾಜ್ಯ ಸರಕಾರಗಳ ಬೊಕ್ಕಸಗಳಿಗೆ ಲಕ್ಷಾಂತರ ಕೋಟಿ ರೂಪಾಯಿಗಳು ಹರಿದು ಬರುತ್ತಿವೆ. ಇದೇ ಪ್ರಮುಖ ಆದಾಯದ ಮೂಲವಾಗಿಯೂ ಪರಿವರ್ತನೆಯಾಗಿದೆ. ಆದರೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯಿಂದ ಗ್ರಾಹಕರ ಜೇಬಿಗೆ ಬೀಳೋ ಬರೆ ಮಾತ್ರ ತಪ್ಪೋದಿಲ್ಲ. ದೇಶದ ಪ್ರಮುಖ ನಗರಗಳಲ್ಲಿನ ಪೆಟ್ರೋಲ್ ಮತ್ತು ಡೀಸೆಲ್ನ ದೈನಂದಿನ ಬೆಲೆ ವಿವರ ಇಲ್ಲಿದೆ.
ಏಕಾಏಕಿ ಪೆಟ್ರೋಲ್-ಡೀಸೆಲ್ ದರ ಇಳಿಕೆ, ಬಂಕ್ ಮಾಲೀಕರಿಗೆ ಕೋಟ್ಯಂತರ ರೂ. ನಷ್ಟ
ಕಳೆದ ಶನಿವಾರ ಕೇಂದ್ರ ಸರಕಾರ ಏಕಾಏಕಿ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಕಡಿತಗೊಳಿಸಿದ್ದರಿಂದ, ದೊಡ್ಡ ಪ್ರಮಾಣದ ತೈಲ ಸಂಗ್ರಹ ಹೊಂದಿದ್ದ ಬಂಕ್ ಮಾಲೀಕರು ಭಾರೀ ನಷ್ಟಕ್ಕೆ ಗುರಿಯಾಗಿದ್ದಾರೆ.
‘ನಟನೆ ನನ್ನ ಜೀವ, ಉಸಿರು’: ಪುಟ್ಟಕ್ಕನ ಮಕ್ಕಳು ಧಾರಾವಾಹಿಯ ಕಂಠಿ ಪಾತ್ರಧಾರಿ ಧನುಷ್ ಸಂದರ್ಶನ
‘ಪುಟ್ಟಕ್ಕನ ಮಕ್ಕಳು’ (Puttakkana Makkalu) ಪ್ರಸ್ತುತ ಕಿರುತೆರೆಯ ಜನಪ್ರಿಯ ಧಾರಾವಾಹಿಗಳಲ್ಲೊಂದು. ಇದರಲ್ಲಿ ಅಪಾರ ಮೆಚ್ಚುಗೆ ಪಡೆದು ಯಶಸ್ವಿಯಾಗಿದ್ದು ಅಂದರೆ ಕಂಠಿ (Kanti) ಪಾತ್ರ. ಕಂಠಿಯಾಗಿ ನಟಿಸುವ ಮೂಲಕ ಅಭಿಮಾನಿಗಳ ಹೃದಯ ಗೆದ್ದಿರುವ ಯುವ ಪ್ರತಿಭೆ ಧನುಷ್ ಎನ್.ಎಸ್ ಅವರ ಸಂದರ್ಶನ ಇಲ್ಲಿದೆ.
ನಿಮ್ಮ ಪ್ರೀತಿಪಾತ್ರರಿಗೆ ಚಿನ್ನ ಖರೀದಿಸುವ ಮುನ್ನ ಪ್ರಮುಖ ನಗರಗಳಲ್ಲಿ ಗೋಲ್ಡ್ದರ ಹೇಗಿದೆ? ಇಲ್ಲಿದೆ ವಿವರ
Gold Price in Bengaluru: ದೇಶದ ಚಿನ್ನದ ಮತ್ತು ಬೆಳ್ಳಿ ಬೆಲೆಯಲ್ಲಿ ಏರಿಳಿತದ ಹಾವು ಏಣಿ ಆಟ ಮುಂದುವರೆದಿದೆ. ಆಯಾಯ ರಾಜ್ಯಗಳಲ್ಲಿ ಅಲ್ಲಿನ ಬೇಡಿಕೆಗೆ ತಕ್ಕಂತೆ ಹಳದಿಲೋಹದ ಬೆಲೆಯಲ್ಲಿ ವ್ಯತ್ಯಾಸವಿದೆ. ದೇಶದ ಪ್ರಮುಖ ನಗರಗಳ ಇಂದಿನ ಚಿನ್ನ ಮತ್ತು ಬೆಳ್ಳಿ ಬೆಲೆ ವಿವರ ಇಲ್ಲಿದೆ.
ಆಳಂದ ಗಲಭೆಯ ಮಾಸ್ಟರ್ಮೈಂಡ್ ಅನ್ಸಾರಿ ಗಡೀಪಾರು
ಫರ್ದೋಸ್ ಖಾನ್ಗೆ ನಗರದ ಕೇಂದ್ರ ಕಾರಾಗೃಹದಿಂದ ಬೆಳಗಾವಿಯ ಕೇಂದ್ರ ಕಾರಾಗೃಹಕ್ಕೆ ಗಡಿ ಪಾರು ಮಾಡಲಾಗಿದ್ದು, ಮುಂದಿನ ಒಂದು ವರ್ಷ ಜೈಲಿನಲ್ಲಿ ಕಾಲ ಕಳೆಯಬೇಕಾಗಿದೆ. ಜಿಲ್ಲೆಗೆ ಆಗಮನ ಕಷ್ಟ ಸಾಧ್ಯ ಎನ್ನುವಂತಾಗಿದೆ.
ವೈದ್ಯರು ಲಾಡ್ಜ್ನಲ್ಲಿ ಉಳಿದುಕೊಂಡಿದ್ದಾಗ ಹನಿಟ್ರ್ಯಾಪ್: 50 ಲಕ್ಷ ವಂಚಿಸಿದ ಮೂವರ ಬಂಧನ
ಆರೋಪಿ ನಾಗರಾಜ್ ಹಣ ವಾಪಸ್ ಕೊಡುವುದಾಗಿ 2022ರ ಜನವರಿಯಲ್ಲಿ ವೈದ್ಯರನ್ನು ಬೆಂಗಳೂರಿಗೆ ಕರೆಸಿಕೊಂಡಿದ್ದ. ಮಧು ಎಂಬುವನ ಮೂಲಕ ಮೆಜೆಸ್ಟಿಕ್ನ ಯು.ಟಿ. ಲಾಡ್ಜ್ನಲ್ಲಿ ರೂಂ ಕಾಯ್ದಿಸಿದ್ದ ನಾಗರಾಜ್, ವೈದ್ಯರನ್ನು ಅಲ್ಲೇ ಉಳಿಸಿದ್ದ. ತಾನು ಮತ್ತೊಂದು ಕೊಠಡಿಯಲ್ಲಿ ತಂಗಿದ್ದ. ಅಂದು ತಡರಾತ್ರಿ 3 ಗಂಟೆಗೆ ರೂಂ ಬಾಗಿಲು ಬಡಿಯುವ ಶಬ್ದ ಕೇಳಿದ ವೈದ್ಯರು, ಬಾಗಿಲು ತೆರೆದ ಕೂಡಲೇ ಇಬ್ಬರು ಯುವತಿಯರು ಒಳಗೆ ನುಗ್ಗಿ ವೈದ್ಯರು ಮಲಗಿದ್ದ ಮಂಚದ ಮೇಲೆ ಮಲಗುತ್ತಾರೆ. ಮುಂದೇನಾಯ್ತು ಅನ್ನೋದನ್ನು ತಿಳಿಯಲು ಈ ಸುದ್ದಿ ಓದಿರಿ.
ಅತ್ಯಾಚಾರ ಪ್ರಕರಣ: ಇಂದು ನಟ ವಿಜಯ್ಬಾಬು ಜಾಮೀನು ಅರ್ಜಿ ವಿಚಾರಣೆ
ತಿರುವನಂತಪುರಂ, ಮೇ 27; ಯುವತಿ ಮೇಳೆ ಲೈಂಗಿಕ ದೌರ್ಜನ್ಯ ಮತ್ತು ಹಲ್ಲೆ ಆರೋಪದಲ್ಲಿ ನಟ, ನಿರ್ಮಾಪಕ ವಿಜಯ್ ಬಾಬು ಮೇಲೆ ಪ್ರಕರಣ ದಾಖಲಾಗಿದೆ. ನಟ ಸಲ್ಲಿಕೆ ಮಾಡಿರುವ ನಿರೀಕ್ಷಣಾ ಜಾಮೀನು ಅರ್ಜಿಯ ವಿಚಾರಣೆ ಶುಕ್ರವಾರ ಕೇರಳ ಹೈಕೋರ್ಟ್ನಲ್ಲಿ ನಡೆಯಲಿದೆ. ಗುರುವಾರ ನಿರೀಕ್ಷಣಾ ಜಾಮೀನು ಅರ್ಜಿಯ ವಿಚಾರಣೆ ಕೈಗೆತ್ತಿಕೊಂಡಿದ್ದ ಕೇರಳ ಹೈಕೋರ್ಟ್ ವಿಚಾರಣೆಯನ್ನು ಶುಕ್ರವಾರಕ್ಕೆ ಮುಂದೂಡಿತ್ತು. ಗುರುವಾರದ ವಿಚಾರಣೆ
ವಿಡಿಯೋ; ಕಾರವಾರದಲ್ಲಿ ಯೋಗ ಮಾಡಿದ ರಾಜನಾಥ್ ಸಿಂಗ್
ಕಾರವಾರ, ಮೇ 27; ಎರಡು ದಿನಗಳ ಕಾರವಾರ ಪ್ರವಾಸದಲ್ಲಿರುವ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಯೋಗಾಭ್ಯಾಸ ಮಾಡಿದರು. ಗುರುವಾರ ಕಾರವಾರ ನೌಕಾನೆಲೆಗೆ ಆಗಮಿಸಿದ ಸಚಿವರಿಗೆ ಆತ್ಮೀಯ ಸ್ವಾಗತ ಕೋರಲಾಯಿತು. ಶುಕ್ರವಾರ ಮುಂಜಾನೆ ಕಾರವಾರದ ನೌಕಾನೆಲೆ ಸಿಬ್ಬಂದಿಯ ಜೊತೆ ರಾಜನಾಥ್ ಸಿಂಗ್ ಯೋಗ ಮಾಡಿದರು. ಜೂನ್ನಲ್ಲಿ ನಡೆಯುವ ವಿಶ್ವಯೋಗ ದಿನಾಚರಣೆ ಭಾಗವಾಗಿ ಈ ಯೋಗ ತಾಲೀಮು ನಡೆಯಿತು.
ಶ್ರವಣಬೆಳಗೊಳ-ಕುಶಾಲನಗರ ರೈಲು ಮಾರ್ಗ ಸಮೀಕ್ಷೆಗೆ ಒಪ್ಪಿಗೆ
ಹಾಸನ, ಮೇ 27; ರೈಲ್ವೆ ಇಲಾಖೆ ರಾಜ್ಯದಲ್ಲಿ ಮತ್ತೊಂದು ಹೊಸ ರೈಲು ಯೋಜನೆ ಪ್ರಾರಂಭಿಸಲು ಹೆಜ್ಜೆ ಇಟ್ಟಿದೆ. ಶ್ರವಣಬೆಳಗೊಳ-ಕುಶಾಲನಗರ ನಡುವಿನ ಹೊಸ ರೈಲು ಮಾರ್ಗದ ಸಮೀಕ್ಷೆ ನಡೆಸುವಂತೆ ಸೂಚನೆ ನೀಡಿದೆ. ಹುಬ್ಬಳ್ಳಿಯ ನೈಋತ್ಯ ರೈಲ್ವೆ ಪ್ರಧಾನ ಕಚೇರಿಗೆ ಈ ಕುರಿತು ಸೂಚನೆ ನೀಡಲಾಗಿದೆ. ಶ್ರವಣಬೆಳಗೊಳ-ಹೊಳೆನರಸೀಪುರ-ಕೊಣನೂರು-ಕುಶಾಲನಗರ ರೈಲು ಯೋಜನೆಗೆ ಸಮೀಕ್ಷೆ ನಡೆಸಲು ನಿರ್ದೇಶನ ಕೊಟ್ಟಿದೆ. ಪ್ರಯಾಣಿಕರ ಗಮನಕ್ಕೆ; ಕೆಂಪೇಗೌಡ
ಪುತ್ತೂರು: ಸರಕಾರಿ ಮಹಿಳಾ ಕಾಲೇಜಿಗೆ ಗಗನ ಕುಸುಮವಾದ ಜಾಗ!
ಪುತ್ತೂರು-ಉಪ್ಪಿನಂಗಡಿ ರಸ್ತೆಯಲ್ಲಿ ಬರುವ ಕೇಪುಳು ಸಮೀಪದ ಆನೆಮಜಲು ಎಂಬಲ್ಲಿ ಸರಕಾರಿ ಪ್ರಥಮದರ್ಜೆ ಮಹಿಳಾ ಕಾಲೇಜು ನಿರ್ಮಾಣಕ್ಕಾಗಿ 5 ವರ್ಷಗಳ ಹಿಂದೆ 4.72 ಜಾಗ ಮಂಜೂರಾಗಿತ್ತು. ಡಿಪಿಆರ್ ಮಾಡಲಾಯಿತು.
ಪ್ರವಾಹ ಪೀಡಿತ ಅಸ್ಸಾಂಗೆ 324 ಕೋಟಿ ರೂ. ಬಿಡುಗಡೆ
ನವದೆಹಲಿ ಮೇ 27: ಪ್ರವಾಹ ಪೀಡಿತ ಅಸ್ಸಾಂಗೆ ರಾಜ್ಯ ವಿಪತ್ತು ಪರಿಹಾರ ನಿಧಿಯಿಂದ ಮುಂಗಡವಾಗಿ 324 ಕೋಟಿ ರೂ.ಗಳನ್ನು ಕೇಂದ್ರ ಸರಕಾರ ಬಿಡುಗಡೆ ಮಾಡಿದೆ. 2022ರ ಮೊದಲ ಅವಧಿಯಲ್ಲಿ ಅಸ್ಸಾಂ ರಾಜ್ಯದ ಹಲವೆಡೆ ಪ್ರವಾಹ ಮತ್ತು ಭೂಕುಸಿತದಿಂದ ಉಂಟಾದ ಹಾನಿಯನ್ನು ಗಮನದಲ್ಲಿಟ್ಟುಕೊಂಡು ಮತ್ತು ಗೃಹ ಸಚಿವಾಲಯದಿಂದ ಪಡೆದ ಶಿಫಾರಸು ಮೇರೆಗೆ ರಾಜ್ಯ ಸರಕಾರಕ್ಕೆ ಮುಂಗಡವಾಗಿ ಹಣವನ್ನು ಬಿಡುಗಡೆ
ಕರ್ನಾಟಕ; ಮೇ 31ರಂದು ಪೆಟ್ರೋಲ್ ಬಂಕ್ ಮಾಲೀಕರ ಮುಷ್ಕರ
ಬೆಂಗಳೂರು, ಮೇ 27; ಕರ್ನಾಟಕದಲ್ಲಿ ಪೆಟ್ರೋಲ್ ಬಂಕ್ ಮಾಲೀಕರು ಮೇ 31ರಂದು ತೈಲ ಖರೀದಿ ನಿಲ್ಲಿಸುವ ಮೂಲಕ ಪ್ರತಿಭಟನೆ ನಡೆಸಲಿದ್ದಾರೆ. ಆದ್ದರಿಂದ ಸೋಮವಾರ ವಾಹನ ಸವಾರರಿಗೆ ಪೆಟ್ರೋಲ್, ಡೀಸೆಲ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗುವ ನಿರೀಕ್ಷೆ ಇದೆ. ಅಖಿಲ ಕರ್ನಾಟಕ ಪೆಟ್ರೋಲಿಯಂ ವ್ಯಾಪಾರಿಗಳ ಒಕ್ಕೂಟ ಈ ಕುರಿತು ಪತ್ರಿಕಾ ಪ್ರಕಟಣೆ ಮೂಲಕ ಮಾಹಿತಿ ನೀಡಿದೆ. ಅವಶ್ಯಕತೆಗೆ ಅನುಗುಣವಾಗಿ ತೈಲ
Breaking; ಜಮ್ಮು &ಕಾಶ್ಮೀರದಲ್ಲಿ 3 ದಿನದಲ್ಲಿ 10 ಉಗ್ರರ ಹತ್ಯೆ
ಶ್ರೀನಗರ, ಮೇ 27; ಜಮ್ಮು ಮತ್ತು ಕಾಶ್ಮೀರದಲ್ಲಿ ಗುರುವಾರ ರಾತ್ರಿ ನಡೆದ ಎನ್ಕೌಂಟರ್ನಲ್ಲಿ ಲಷ್ಕರ್ ಎ ತೋಯ್ಬಾ ಸಂಘಟನೆಯ ಇಬ್ಬರು ಉಗ್ರರನ್ನು ಹತ್ಯೆ ಮಾಡಲಾಗಿದೆ. ಕಳೆದ 3 ದಿನಗಳಲ್ಲಿ 10 ಉಗ್ರರನ್ನು ಭದ್ರತಾ ಪಡೆಗಳು ಕೊಂದು ಹಾಕಿವೆ. ಗುರುವಾರ ರಾತ್ರಿ ಶ್ರೀನಗರದ ಸೌರ್ ಪ್ರದೇಶ ಮತ್ತಯ ಅವಂತಿಪುರ್ನಲ್ಲಿ ಎರಡು ಪ್ರತ್ಯೇಕ ಎನ್ಕೌಂಟರ್ ನಡೆಸಿದೆ. ಉಗ್ರರು ಅಡಗಿರುವ ಖಚಿತ
ರಾಮನಗರ ವಿಶೇಷ; ರಾಜ್ಯದಲ್ಲಿ ಸದ್ದು ಮಾಡುತ್ತಿದೆ ರಾಮನಗರ ರಾಜಕೀಯ!
ರಾಮನಗರ, ಮೇ 27; ರಾಜ್ಯ ರಾಜಕಾರಣದಲ್ಲಿ ರಾಮನಗರ ಜಿಲ್ಲೆ ಇತ್ತೀಚೆಗೆ ಸದಾ ಸುದ್ದಿಯಾಗುತ್ತದೆ. ಘಟಾನುಘಟಿ ನಾಯಕರು ಜಿಲ್ಲೆಯನ್ನು ಪ್ರತಿನಿಧಿಸುತ್ತಿರುವುದರಿಂದ ಇವರ ಪ್ರತಿ ಹೇಳಿಕೆಗಳು ರಾಜಕೀಯವಾಗಿ ಮಹತ್ವ ಪಡೆದುಕೊಳ್ಳುವುದರೊಂದಿಗೆ ಜನ ಇತ್ತ ಆಸಕ್ತಿಯ ನೋಟ ಬೀರುವಂತೆ ಮಾಡುತ್ತಿದೆ. ಒಂದೆಡೆ ಕಾಂಗ್ರೆಸ್ ಪಕ್ಷವನ್ನು ಬಲಪಡಿಸುವ ಮೂಲಕ ರಾಮನಗರ ಜಿಲ್ಲೆಯ ಪಾರುಪತ್ಯ ಸಾಧಿಸಬೇಕೆಂದು ಹೊರಟಿರುವ ಡಿಕೆ ಬ್ರದರ್ಸ್ಗೆ ತಮ್ಮ ಪಕ್ಷದೊಳಗೆ ಅಸಮಾಧಾನದ
ಉತ್ತರ ಪ್ರದೇಶದ ಮಥುರಾದಲ್ಲಿರುವ ಶ್ರೀ ಕೃಷ್ಣ ಜನ್ಮಸ್ಥಾನ ದೇವಸ್ಥಾನ ಮತ್ತು ಶಾಹಿ ಈದ್ಗಾ ರಚನೆಗೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ಹೊಸ ಅರ್ಜಿಯನ್ನು ಸಲ್ಲಿಸಲಾಗಿದೆ. ವಿವಾದಿತ ಶಾಹೀ ಈದ್ಗಾ ರಚನೆಯು ಕೇಶವದೇವ ದೇಗುಲದ ಗರ್ಭಗುಡಿಯಾಗಿರುವುದರಿಂದ ಬೆಳಿಗ್ಗೆ 4:30 ಗಂಟೆಗೆ ಲೌಡ್ಸ್ಪೀಕರ್ ನಲ್ಲಿ ಆಜಾನ್ ಕೂಗುವುದನ್ನ ನಿಷೇಧಿಸಬೇಕು ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ. ಇದರೊಂದಿಗೆ ಈದ್ಗಾ ಸೇರಿದಂತೆ 13.37 ಎಕರೆ ಭೂಮಿಗೆ ಹಕ್ಕುಪತ್ರ ನೀಡಿದ ಜನ್ಮಸ್ಥಾನ ಟ್ರಸ್ಟ್, ಅದಕ್ಕೆ ಸಂಬಂಧಿಸಿದ ದಾಖಲೆಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿದೆ. The alleged Idgah is Keshav Dev… The post ಜ್ಞಾನವಾಪಿ ಬಳಿಕ ಮುಸಲ್ಮಾನರಿಗೆ ಮತ್ತೊಂದು ಖಡಕ್ ಶಾಕ್ ಕೊಟ್ಟ ನ್ಯಾಯಾಲಯ, ಈಗ ಮಥುರಾದ ಶಾಹೀ ಈದ್ಗಾದ 13.37 ಎಕರೆ ಜಾಗವೂ ಹಿಂದುಗಳದ್ದೇ… ಸಾಕ್ಷಿ ಸಮೇತ ಮುಸಲ್ಮಾನರಿಗೆ ಮರ್ಮಾಘಾತ ಕೊಟ್ಟ ಹಿಂದುಗಳು appeared first on EXIT NEWS .
ಕದಂಬ ನೌಕಾನೆಲೆ ಸಿಬ್ಬಂದಿ ಜೊತೆ ರಕ್ಷಣಾ ಸಚಿವ ರಾಜನಾಥ್ ಆತ್ಮೀಯ ಮಾತುಕತೆ
ಕಾರವಾರ, ಮೇ 26: ದೇಶದ ಸ್ವಾಭಿಮಾನ ರಕ್ಷಿಸುವಲ್ಲಿ ಸೈನಿಕರ ಪಾತ್ರ ದೊಡ್ಡದಾಗಿದ್ದು, ಈ ಕೊಡುಗೆಯಿಂದ ದೇಶವು ಪ್ರಬಲ ರಾಷ್ಟ್ರವಾಗಿ ಹೊರ ಹೊಮ್ಮುತ್ತಿದೆ ಎಂದು ದೇಶದ ರಕ್ಷಣಾ ಸಚಿವ ರಾಜನಾಥ ಸಿಂಗ್ ಹೇಳಿದರು. ಕಾರವಾರದ ಐಎನ್ಎಸ್ ಕದಂಬ ನೌಕಾನೆಲೆಗೆ ಎರಡು ದಿನಗಳ ಭೇಟಿಗೆ ಗುರುವಾರ ಆಗಮಿಸಿರುವ ಅವರ ನೌಕಾನೆಲೆ ಸಿಬ್ಬಂದಿ ಹಾಗೂ ಕುಟುಂಬದ ಜೊತೆ ಮಾತನಾಡಿದರು. ''ದೇಶಕ್ಕಾಗಿ ತ್ಯಾಗ
ದುಷ್ಕರ್ಮಿಗಳ ದಾಳಿಯಿಂದ ಕಾಂಗೋ ಸೇನೆಯನ್ನು ರಕ್ಷಿಸಿದ ಭಾರತೀಯ ಸೈನಿಕರು
ಕಿನ್ಶಾಸ, ಕಾಂಗೊ, ಮೇ 26: ಆಫ್ರಿಕಾ ನಾಡಿನಲ್ಲಿ ಭಾರತೀಯ ಸೈನಿಕರು ತಮ್ಮ ಶೌರ್ಯ ಪ್ರದರ್ಶನ ಮಾಡಿದ್ದಾರೆ. ಕಾಂಗೋ ದೇಶದ ಸೇನೆಯ ಮೇಲೆ ಸಶಸ್ತ್ರಧಾರಿಗಳ ಗುಂಪೊಂದು ನಡೆಸಿದ ದಾಳಿಯನ್ನು ಭಾರತೀಯ ಸೈನಿಕರು ವಿಫಲಗೊಳಿಸಿದ್ದಾರೆ. ಮೇ 22ರಂದು ನಡೆದಿರುವ ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ವಿಶ್ವಸಂಸ್ಥೆಯ ಶಾಂತಿಪಾಲನಾ ಪಡೆಗಳ ಭಾಗವಾಗಿ ಭಾರತೀಯ ಸೈನಿಕರು ಕಾಂಗೋ ನಾಡಿನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಕಾಂಗೋದಲ್ಲಿ
ಐಪಿಎಲ್ನಲ್ಲಿ ಕೈರೊನ್ ಪೊಲಾರ್ಡ್ ಭವಿಷ್ಯ ಅಂತ್ಯಗೊಂಡಿದೆ: ಆಕಾಶ್ ಚೋಪ್ರಾ!
ಹದಿನೈದನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಸಾಲು ಸಾಲು ವೈಫಲ್ಯ ಕಂಡ ಸ್ಟಾರ್ ಆಟಗಾರರ ಪೈಕಿ ಐದು ಬಾರಿಯ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್ ತಂಡದ ಆಲ್ರೌಂಡರ್ ಕೈರೊನ್ ಪೊಲಾರ್ಡ್ ಕೂಡ ಒಬ್ಬರು. ಇದೇ ಕಾರಣಕ್ಕೆ ಐಪಿಎಲ್ 2023 ಟೂರ್ನಿಗು ಮೊದಲೇ ಮುಂಬೈ ಇಂಡಿಯನ್ಸ್ ತಂಡ ತನ್ನ ಸ್ಟಾರ್ ಆಟಗಾರನನ್ನು ಬಿಡುಗಡೆ ಮಾಡಲಿದೆ ಎಂದು ಭಾರತ ಟೆಸ್ಟ್ ತಂಡದ ಮಾಜಿ ಆಟಗಾರ ಆಕಾಶ್ ಚೋಪ್ರಾ ಭವಿಷ್ಯ ನುಡಿದಿದ್ದಾರೆ. ಐಪಿಎಲ್ 2022 ಟೂರ್ನಿ ಸಲುವಾಗಿ ಮುಂಬೈ ತಂಡ 6 ಕೋಟಿ ರೂ. ನೀಡಿ ಪೊಲಾರ್ಡ್ ಅವರನ್ನು ಉಳಿಸಿಕೊಂಡಿತ್ತು.
ಬೆಂಗಳೂರಿನಲ್ಲಿ ನೀರುಪಾಲಾದ ಮೂವರು ಯುಕರು: ಅಗ್ನಿಶಾಮಕ ಸಿಬ್ಬಂದಿಯಿಂದ ಶೋಧ
ಬೆಂಗಳೂರು, ಮೇ 26 : ಬೆಂಗಳೂರಿನಲ್ಲಿ ಮೂವರು ಯುವಕರು ಈಜಲು ಹೋಗಿ ನೀರಿನಲ್ಲಿ ಮುಳುಗಿ ಮೃತಪಟ್ಟ ದುರ್ಘಟನೆ ಕೊತ್ತನೂರು ಪೊಲೀಸ್ ಠಾಣಾ ವ್ಯಾಪ್ತಿಯ ದೊಡ್ಡ ಗುಬ್ಬಿ ಕೆರೆಯಲ್ಲಿ ನಡೆದಿದೆ. ಸಾರಾಯಿಪಾಳ್ಯದಿಂದ ಮೇ 26ರ ಮಧ್ಯಾಹ್ನ ದೊಡ್ಡ ಗುಬ್ಬಿ ಕೆರೆಗೆ ಆಗಮಿಸಿದ್ದ ಐದು ಮಂದಿ ಯುವಕರಲ್ಲಿ ಇಮ್ರಾನ್ ಪಾಷಾ, ಮುಬಾರಕ್, ಶಾಹೀದ್ ಎಂಬುವರು ನೀರಿನಲ್ಲಿ ಮುಳುಗಿದ್ದಾರೆ. ಇವರ ಮೃತದೇಹ
ಬುರ್ಕಿನಾ ಫಾಸೊ ದೇಶದಲ್ಲಿ ಭೀಕರ ದಾಳಿ: 50ಕ್ಕೂ ಹೆಚ್ಚು ಮಂದಿ ಸಾವು
ನವದೆಹಲಿ, ಮೇ 26: ಆಫ್ರಿಕಾ ಖಂಡದ ಪಶ್ಚಿಮ ಭಾಗದಲ್ಲಿರುವ ಬುರ್ಕಿನಾ ಫಾಸೊ (Burkina Faso) ದೇಶದಲ್ಲಿ ನಡೆದ ಸಶಸ್ತ್ರ ದಾಳಿಯೊಂದರಲ್ಲಿ 50ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ ಘೋರ ಘಟನೆ ವರದಿಯಾಗಿದೆ. ಬುರ್ಕಿನಾ ಫಾಸೊ ದೇಶದ ಪೂರ್ವಭಾಗದಲ್ಲಿರುವ ಮಡ್ಜೋರಿ ಎಂಬಲ್ಲಿ ಮೇ 25ರಂದು ಘಟನೆ ನಡೆದಿದೆ ಎಂದು ಆ ಪ್ರದೇಶದ ಗವರ್ನರ್ ಹೂಬರ್ಟ್ ಯಮಿಯೋಗೊ ಇಂದು ಗುರುವಾರ ಮಾಹಿತಿ
ಪತಿಯನ್ನೇ ಕೊಲೆ ಮಾಡಿದ ಆರೋಪದ ಮಹಿಳೆಗೆ ಜಾಮೀನು ಮಂಜೂರು ಮಾಡಿದ ಹೈಕೋರ್ಟ್
ಬೆಂಗಳೂರು ಮೇ 26: ಮರಣದಂಡನೆ ಅಥವಾ ಜೀವಾವಧಿ ಶಿಕ್ಷೆ ವಿಧಿಸಬಹುದಾದ ಅಪರಾಧ ಕೃತ್ಯದಲ್ಲಿ ಭಾಗಿಯಾಗಿದ್ದಾರೆ ಎಂಬ ಕಾರಣಕ್ಕೆ ಸದಾ ಜಾಮೀನು ನಿರಾಕರಿಸಬೇಕೆಂಬ ಕಾನೂನಿಲ್ಲ ಎಂದು ಹೈಕೋರ್ಟ್ ಆದೇಶಿಸಿದೆ. ಅಲ್ಲದೆ, ಗಂಭೀರ ಅಪರಾಧ ಕೃತ್ಯವೆಸಗಿದ ಹಿನ್ನೆಲೆ ಹೊಂದದವರ ವಿರುದ್ಧದ ಪ್ರಕರಣಗಳನ್ನು ಭಿನ್ನವಾಗಿ ಪರಿಗಣಿಸಬೇಕಾಗುತ್ತದೆ ಎಂದೂ ಅಭಿಪ್ರಾಯಪಟ್ಟಿದೆ. ಜೊತೆಗೆ ಪತಿಯನ್ನೇ ಕೊಲೆ ಮಾಡಿದ ಆರೋಪ ಎದುರಿಸುತ್ತಿರುವ ಮಹಿಳೆಗೆ ಷರತ್ತುಬದ್ಧ ಜಾಮೀನು
ಚಾರ್ಧಾಮ್ ಯಾತ್ರೆ: ಬಿಪಿ, ಹೃದ್ರೋಗಿಗಳು ಪ್ರಯಾಣ ಮಾಡುವಾಗ ನೆನಪಿನಲ್ಲಿಡಿ
ಕೇದರನಾಥ್ ಮೇ 26: ಚಾರ್ಧಾಮ್ ಯಾತ್ರೆಗೆ ತೆರಳುತ್ತಿದ್ದ 60ಕ್ಕೂ ಹೆಚ್ಚು ಯಾತ್ರಾರ್ಥಿಗಳು ಇಲ್ಲಿಯವರೆಗೆ ಸಾವನ್ನಪ್ಪಿದ್ದಾರೆ. ಇವರಲ್ಲಿ 66% ಜನರು ಮಧುಮೇಹ ಮತ್ತು ಅಧಿಕ ರಕ್ತದೊತ್ತಡ ರೋಗಿಗಳಾಗಿದ್ದಾರೆ. ಕೇದಾರನಾಥ ಯಾತ್ರೆಯಲ್ಲಿ ಅತಿ ಹೆಚ್ಚು ಸಾವುಗಳು ಈವರೆಗೆ ದಾಖಲಾಗಿವೆ. ಗಮನಾರ್ಹವಾಗಿ, ಉತ್ತರಾಖಂಡದಲ್ಲಿ ಕೊರೊನಾ ಸಾಂಕ್ರಾಮಿಕ ರೋಗದಿಂದಾಗಿ, ಕಳೆದ ಎರಡು ವರ್ಷಗಳಿಂದ ಚಾರ್ಧಾಮ್ ಯಾತ್ರೆಯನ್ನು ಸ್ಥಗಿತಗೊಳಿಸಲಾಗಿತ್ತು. ಈ ವರ್ಷ ಮೇ 6ರಿಂದ
Yasin Malik: ದೇಶದ್ರೋಹದ ಅಪರಾಧ ಎಸಗಿದ್ದ ಯಾಸಿನ್ ಮಲಿಕ್ ಜೀವಾವಧಿ ಜೈಲು ಶಿಕ್ಷೆಗೆ ಗುರಿಯಾಗಿದ್ದಾನೆ. ಆತನಿಗೆ ಕಠಿಣ ಶಿಕ್ಷೆಯನ್ನು ನೀಡಿಸುವಲ್ಲಿ ಸಾಕ್ಷಿಗಳು ಪ್ರಮುಖ ಪಾತ್ರವಹಿಸಿವೆ. ಆದರೆ, ಆ ಸಾಕ್ಷಿಗಳನ್ನು ಕಾಪಾಡಿಕೊಳ್ಳಲು ಎನ್ಐಎ ಬಹಳ ನಾಜೂಕಿನ ತಂತ್ರ ಅನುಸರಿಸಿತ್ತು, ಸಾಕ್ಷ್ಯಗಳ ಸುರಕ್ಷತೆಗಾಗಿ ಜ್ಯಾಕ್, ಜಾನ್, ಗಾಲ್ಫ್ ಮತ್ತು ಆಲ್ಫಾ ಎಂಬ ಕೋಡ್ ನೇಮ್ಗಳನ್ನು ಎನ್ಐಎ ಬಳಸಿತ್ತು.
ಬೆಂಗಳೂರು: ಸಹಕಾರ ನಗರದಲ್ಲಿ ಮೇ 28ರಂದು ಉದ್ಯೋಗ ಮೇಳ
ಬೆಂಗಳೂರು ಮೇ 26: ಬೆಂಗಳೂರು ಉತ್ತರ ಜಿಲ್ಲಾ ಕಾಂಗ್ರೆಸ್ ಹಾಗೂ ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದ ಶಾಸಕರಾದ ಕೃಷ್ಣ ಭೈರೇಗೌಡ ಅವರ ಸ್ವಯಂ ಸೇವಕರ ತಂಡದ ವತಿಯಿಂದ ಶನಿವಾರ ಮೇ 28 ರಂದು ಬೃಹತ್ ಉದ್ಯೋಗ ಮೇಳ ಆಯೋಜಿಸಲಾಗಿದೆ. ಎಸ್ಎಸ್ಎಲ್ಸಿ, ಐಟಿಐ, ಇಂಜಿನಿಯರಿಂಗ್ ಸೇರಿದಂತೆ ಯಾವುದೇ ಪದವಿಧರರು ಕೂಡಾ ಈ ಮೇಳದಲ್ಲಿ ಭಾಗವಹಿಸಿ ಉದ್ಯೋಗಾವಕಾಶಗಳ ಸದುಪಯೋಗ ಪಡೆದುಕೊಳ್ಳಬಹುದಾಗಿದೆ. ಸಹಕಾರ
ಇನ್ನೆರಡು ದಿನದಲ್ಲಿ ಕೀ ಉತ್ತರ ಬಿಡುಗಡೆ
ಬೆಂಗಳೂರು, ಮೇ 26: ಶಿಕ್ಷಕ ನೇಮಕಾತಿಯ ಸಿಇಟಿ ಪರೀಕ್ಷೆಗಳು ಮುಗಿದಿದೆ. ಶಿಕ್ಷಣ ಇಲಾಖೆ ಇರಡು ಮೂರು ದಿನಗಳಲ್ಲಿ ಕೀ ಉತ್ತರವನ್ನು ಬಿಡುಗಡೆ ಮಾಡಲಿದೆ. 15,000 ಶಿಕ್ಷಕರು ಅಧಿಕೃತವಾಗಿ ಕೀ ಉತ್ತರಗಳು ಪ್ರಕಟವಾದ ನಂತರ ತಮ್ಮ ಓಎಂಆರ್ ಕಾಪಿಗಳನ್ನು ಪರಿಶೀಲಿಸಿಕೊಂಡು ತಾವೂ ಸರ್ಕಾರಿ ಶಿಕ್ಷಕರಾಗಬಹುದೇ ಎಂಬುದನ್ನು ತಾಳೆಹಾಕಬಹುದು. ಶಿಕ್ಷಕರ ಹುದ್ದೆ ನೇಮಕಾತಿ 2022ರ ಪರೀಕ್ಷೆಯು ಮೇ21 ಮತ್ತು ಮೇ22
ರೋಹಿತ್ ಚಕ್ರತೀರ್ಥ ವಿರುದ್ದ ದೂರು: ಸಮಾಜಘಾತಕರನ್ನು ಬಂಧಿಸುವಂತೆ ಮನವಿ
ಬೆಂಗಳೂರು, ಮೇ 26: ಕರ್ನಾಟಕ ಪಠ್ಯಪುಸ್ತಕ ವಿವಾದದ ಕೇಂದ್ರ ಬಿಂದು ರೋಹಿತ್ ಚಕ್ರತೀರ್ಥ. ಪಠ್ಯಪುಸ್ತಕ ಪರಿಷ್ಕರಣೆಯಲ್ಲಿ ಹಲವರು ಗೊಂದಲಗಳು ಉಂಟಾಗಿದ್ದು, ಸಾಹಿತಿಗಳ ಆಕ್ರೋಶಕ್ಕೂ ಗುರಿಯಾಗಿದೆ. ಇನ್ನು ರೋಹಿತ್ ಚಕ್ರತೀರ್ಥ ಕುವೆಂಪು ಮತ್ತು ನಾಡಗೀತೆಗೆ ಅವಮಾನಿಸಿದ್ದ ಎಂಬುದರ ಬಗ್ಗೆಯೂ ಆಕ್ರೋಶ ವ್ಯಕ್ತವಾಗಿದೆ. ಇದೇ ಸಂದರ್ಭದಲ್ಲಿ ಪಠ್ಯಪುಸ್ತಕ ಮರು ಪರಿಷ್ಕರಣಾ ಸಮಿತಿ ಅಧ್ಯಕ್ಷ ರೋಹಿತ್ ಚಕ್ರತೀರ್ಥ ಹಾಗೂ ಲಕ್ಷ್ಮಣ ಅಕಾಶೆ
ಶ್ರೀಲಂಕಾದಿಂದ ಕೇರಳಕ್ಕೆ ಮುಂಗಾರು ಪ್ರವೇಶ - ಐಎಂಡಿ
ನವದೆಹಲಿ ಮೇ 26: ನಾಳೆ ಶುಕ್ರವಾರ ಕೇರಳಕ್ಕೆ ಮುಂಗಾರು ಮಳೆ ಕಾಲಿಡಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ಮೇ 27ರಂದು ಶ್ರೀಲಂಕಾದಿಂದ ಕೇರಳಕ್ಕೆ ಮುಂಗಾರು ಮಳೆ ಪ್ರವೇಶ ಪಡೆಯಲಿದೆ. ಆರು ದಿನಗಳ ವಿರಾಮದ ನಂತರ ನೈಋತ್ಯ ಮಾನ್ಸೂನ್ ಗುರುವಾರ ದಕ್ಷಿಣ ಶ್ರೀಲಂಕಾವನ್ನು ಆವರಿಸಿ ಕೇರಳದ ಕಡೆಗೆ ಬರಲಾರಂಭಿಸಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಮುಂದಿನ 48
ಉತ್ಸವಾಂಭ ದೇವಾಲಯದಲ್ಲಿ ಸಾಮೂಹಿಕ ವಿವಾಹ ಮಹೋತ್ಸವ
ಹರಪನಹಳ್ಳಿ.ಮೇ.೨೬: ತಾಲೂಕಿನ ಉಚ್ಚಂಗಿದುರ್ಗದ ಬೆಟ್ಟದ ಮೇಲಿರುವ ಉತ್ಸವಾಂಭ ದೇವಾಲಯದಲ್ಲಿ ಧಾರ್ಮಿಕ ದತ್ತಿ ಇಲಾಖೆ ವತಿಯಿಂದ ಸಾಮೂಹಿಕ ವಿವಾಹ ಕಾರ್ಯಕ್ರಮ ಜರುಗಿತು.ಧಾರ್ಮಿಕ ದತ್ತಿ ಇಲಾಖೆಯ ಕಾರ್ಯನಿರ್ವಾಹಕ ಅಧಿಕಾರಿ ಎಚ್.ಮಲ್ಲಪ್ಪ ಮಾತನಾಡಿ ರಾಜ್ಯವ್ಯಾಪಿ ಧಾರ್ಮಿಕ ದತ್ತಿ ಇಲಾಖೆ ವತಿಯಿಂದ ಆಯ್ದ 205 ದೇವಸ್ಥಾನಗಳಲ್ಲಿ ಹುಂಡಿ ಹಣದ ಸದ್ಬಳಕೆಗಾಗಿ ರಾಜ್ಯ ಸರ್ಕಾರ ಸರಳ ಸಾಮೂಹಿಕ ವಿವಾಹ ಆಯೋಜಿಸಿದೆ ಎಂದು ಹೇಳಿದರು.ಇಂತಹ ವಿವಾಹಗಳಿಂದ ಬಡ ಕುಟುಂಬಗಳಿಗೆ ವರದಾನವಾಗಲಿದೆ ಎಂದ ಅವರು ಒಂದು ಜೋಡಿಗೆ 40 ಸಾವಿರ ಮೌಲ್ಯದ ಎರಡು ಬಂಗಾರದ ಗುಂಡು,ಒAದು ತಾಳಿ, […] The post ಉತ್ಸವಾಂಭ ದೇವಾಲಯದಲ್ಲಿ ಸಾಮೂಹಿಕ ವಿವಾಹ ಮಹೋತ್ಸವ appeared first on Sanjevani .
12 ಲಕ್ಷ ರೂಪಾಯಿ ಖರ್ಚು ಮಾಡಿ 'ನಾನು ಮನುಷ್ಯ ಅಲ್ಲ ನಾಯಿ' ಎಂದ ಜಪಾನಿ
ಪ್ರಾಣಿಯಂತೆ ಕಾಣಬೇಕೆಂದುಕೊಂಡಿದ್ದ ಜಪಾನಿನ ಟೊಕೊ ಎಂಬ ವ್ಯಕ್ತಿ ತನ್ನ ಕನಸನ್ನು ನನಸು ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾನೆ. ಜೆಪ್ಪೆಟ್ ಎಂಬ ವೃತ್ತಿಪರ ಏಜೆನ್ಸಿಯಿಂದ ನಾಯಿಯ ತಳಿಯಾದ ಕೋಲಿ ಆಗಿ ತನ್ನನ್ನು ತಾನು ಮಾರ್ಪಡಿಸಿಕೊಳ್ಳಲು ಬೇಕಾದ ವೇಷಭೂಷಣಕ್ಕಾಗಿ ಟೊಕೊ ಪ್ರಯತ್ನಿಸಿದ್ದಾರೆ. ಜೊತೆಗೆ ಅವರು ಕೋಲಿ (ನಾಯಿಯ ತಳಿ)ಯಂತೆ ವೇಷಭೂಷಣ ತಯಾರಿಸಲು ಅಂದಾಜು 12 ಲಕ್ಷ ರೂಪಾಯಿ ಖರ್ಚು ಮಾಡಿದ್ದಾರೆ. ವಿಡಿಯೋ: ತನ್ನ
Fact check: 'ಕ್ಯಾನ್ಸಲ್' ಬಟನ್ ಒತ್ತಿದರೆ ಎಟಿಎಂ ಪಿನ್ ರಕ್ಷಿಸಬಹುದಾ?
ಸ್ವಯಂಚಾಲಿತ ಟೆಲ್ಲರ್ ಮೆಷಿನ್ನಲ್ಲಿ (ಎಟಿಎಂ) ನೀವು 'ರದ್ದು' ಬಟನ್ ಅನ್ನು ಎರಡು ಬಾರಿ ಒತ್ತಿದರೆ ನಿಮ್ಮ ಪಿನ್ ಸಂಖ್ಯೆಯನ್ನು ಯಾರಾದರೂ ಕದಿಯುವುದನ್ನು ತಡೆಯಬಹುದು ಎಂದು ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಹೆಸರಿನಲ್ಲಿ ಫೋಟೋವನ್ನು ಹಂಚಿಕೊಳ್ಳಲಾಗಿದೆ. ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ವಾಟ್ಸಾಪ್, ಫೇಸ್ಬುಕ್ ಮತ್ತು ಟ್ವಿಟರ್ನಲ್ಲಿ ಹಂಚಿಕೊಳ್ಳಲಾದ ಫೋಟೋದಲ್ಲಿನ ಸಂದೇಶವನ್ನು ಆರ್ಬಿಐನಿಂದ ನೀಡಿದ
ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ದತ್ತಿ ಉಪನ್ಯಾಸ ಕಾರ್ಯಕ್ರಮ
ಹಿರಿಯೂರು.ಮೇ.26-ಇಲ್ಲಿನ ರಾಷ್ಟ್ರೀಯ ಆಕಾಡೆಮಿ ಶಾಲೆಯಲ್ಲಿ ಸಾಹಿತಿಗಳಾದ ಅಜ್ಜಂಪುರ ಜಿ ಸೂರಿ ಯವರ ಬದುಕು ಮತ್ತು ಬರಹ ಕುರಿತು ದತ್ತಿ ಉಪನ್ಯಾಸ ಕಾರ್ಯಕ್ರಮ ಹಮ್ಮಿಕೊಂಡಿದ್ದರು, ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲೆಯ ಮುಖ್ಯ ಶಿಕ್ಷಕಿ ಶ್ರೀಮತಿ ಮಹೇಶ್ವರಿ ವಹಿಸಿಕೊಂಡಿದ್ದರು. ರಾಷ್ಟ್ರೀಯ ಅಕಾಡೆಮಿಯ ಆಡಳಿತಾಧಿಕಾರಿತ್ರಿಮೂರ್ತಿಯವರು ಕಾರ್ಯಕ್ರಮದ ಉದ್ಘಾಟನೆಯನ್ನು ಮಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಮಾತೃಭಾಷೆ ಮಹತ್ವ ಮತ್ತು ಪುಸ್ತಕಗಳನ್ನು ಓದಿ ಜ್ಞಾನ ಸಂಪಾದಿಸಿಕೊಳ್ಳಿ ಎಂದು ಕಿವಿ ಮಾತು ಹೇಳಿದರು.ಉಪನ್ಯಾಸ ನೀಡಿದ ಜಿ.ಸೂರಿ ಶ್ರೀನಿವಾಸ್ರವರು, ಅಜ್ಜಂಪುರ ಜಿ.ಸೂರಿಯವರ ಬದುಕು ಮತ್ತು ಬರಹಗಳ […] The post ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ದತ್ತಿ ಉಪನ್ಯಾಸ ಕಾರ್ಯಕ್ರಮ appeared first on Sanjevani .
ಬಿಎಸ್ವೈ, ಬಿಎಲ್ ಸಂತೋಷ್ ನಡುವೆ ಗುಂಪುಗಾರಿಕೆಯಿಲ್ಲ: ಎಂಟಿಬಿ ನಾಗರಾಜ್
ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಸಿನೀಯರ್ ಲೀಡರ್. ಅವರು ಒಳ್ಳೆ ಶಾಸಕರು. ಸಂಘಟನಾ ಚತುರರು. ಕೇಂದ್ರ ಸಚಿವರಾಗಿ ಕೆಲಸ ಮಾಡಿದ್ದಾರೆ. ಅವರಿಗೆ ಸಂಪುಟದಲ್ಲಿ ಅವಕಾಶ ಸಿಗಬೇಕಿತ್ತು ಎಂದು ಎಂಟಿಬಿ ನಾಗರಾಜ್ ತಿಳಿಸಿದರು.
ಮೇ.೨೯ ಕ್ಕೆ ಕೆಂಪು ಕಾಂಡದ ಹೂ ಕೃತಿ ಲೋಕಾರ್ಪಣೆ
ದಾವಣಗೆರೆ.ಮೇ.೨೬; ಕಾರ್ಮಿಕರ ಕ್ಷೇತ್ರದಲ್ಲಿ ಗಮನಾರ್ಹ ಹೋರಾಟ ಮಾಡಿದ ಹೆಚ್.ಕೆ. ರಾಮಚಂದ್ರಪ್ಪ ಅವರ ಸಂಸ್ಕರಣ ಗ್ರಂಥ ಕೆಂಪು ಕಾಂಡದ ಹೂ ಲೋಕಾರ್ಪಣೆ ಕಾರ್ಯಕ್ರಮ ಮೇ 29ರ ಬೆಳಿಗ್ಗೆ 11ಕ್ಕೆ ನಗರದ ಹದಡಿ ರಸ್ತೆಯಲ್ಲಿನ ಶ್ರೀಶಾಮನೂರು ಶಿವಶಂಕರಪ್ಪ ಪಾರ್ವತಮ್ಮ ಸಮುದಾಯ ಭವನದಲ್ಲಿ ನಡೆಯಲಿದೆ ಎಂದು ಹಿರಿಯ ಪತ್ರಕರ್ತ, ಸಾಹಿತಿ ಬಿ.ಎನ್.ಮಲ್ಲೇಶ್ ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಾಪುಗುರು ಅವರ ಸಂಪಾದಕತ್ವದಲ್ಲಿ ಈ ಗ್ರಂಥ ರಚನೆ ಆಗಿದೆ. ಕಾರ್ಯಕ್ರಮದ ಸಾನಿಧ್ಯವನ್ನು ರಾಜನಹಳ್ಳಿಯ ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ ವಹಿಸಲಿದ್ದಾರೆ. ಮಾನವ ಬಂಧುತ್ವ ವೇದಿಕೆಯ ಮುಖಂಡ, […] The post ಮೇ.೨೯ ಕ್ಕೆ ಕೆಂಪು ಕಾಂಡದ ಹೂ ಕೃತಿ ಲೋಕಾರ್ಪಣೆ appeared first on Sanjevani .
ಆರ್ಸಿಬಿ ತಂಡದ ಈ ಆಟಗಾರನಿಗೆ 14-15 ಕೋಟಿ ರೂ. ಕೊಡಬೇಕು ಎಂದ ವೀರೇಂದ್ರ ಸೆಹ್ವಾಗ್!
ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಸತತ ಮೂರು ಬಾರಿ ನಾಕ್ಔಟ್ ಹಂತಕ್ಕೆ ಕಾಲಿಟ್ಟಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ, ಐಪಿಎಲ್ 2022 ಟೂರ್ನಿಯಲ್ಲಿ ಕ್ವಾಲಿಫೈಯರ್-2 ಪಂದ್ಯಕ್ಕೆ ಅರ್ಹತೆ ಪಡೆಯುವ ಮೂಲಕ ಚೊಚ್ಚಲ ಟ್ರೋಫಿ ಗೆಲುವನ್ನು ಎದುರು ನೋಡುತ್ತಿದೆ. ಅದರಲ್ಲೂ ಲಖನೌ ಸೂಪರ್ ಜಯಂಟ್ಸ್ ವಿರುದ್ಧದ ಪಂದ್ಯದಲ್ಲಿ ಭರ್ಜರಿ ಜಯ ದಾಖಲಿಸಿದ ಆರ್ಸಿಬಿ ಆತ್ಮವಿಶ್ವಾಸದ ಅಲೆಯಲ್ಲಿದ್ದು, ಮುಂದಿನ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧವೂ ಗೆಲುವಿನ ಲೆಕ್ಕಾಚಾರ ಹಾಕಿಕೊಂಡಿದೆ. ಈ ಬಗ್ಗೆ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಮಾತನಾಡಿದ್ದು, ಆರ್ಸಿಬಿ ಬೌಲರ್ನ ಗುಣಗಾನ ಮಾಡಿದ್ದಾರೆ.
ಶಿವಮೊಗ್ಗ : ಕೋರ್ಟ್ ಗೆ ಆಗಮಿಸಿದ ಹಾವು!
ಶಿವಮೊಗ್ಗ, ಮೇ 26: ಶಿವಮೊಗ್ಗ ನಗರದ ನ್ಯಾಯಾಲಯದಲ್ಲಿ ಗುರುವಾರ ಬೆಳಿಗ್ಗೆ ಹಾವೊಂದು ಕಾಣಿಸಿಕೊಂಡು ಕೆಲ ಸಮಯ ಆತಂಕ ಸೃಷ್ಟಿಸಿತ್ತು.ನ್ಯಾಯಾಲಯ ಕಟ್ಟಡ ಸಂಕೀರ್ಣದ ಪ್ರಧಾನ ವ್ಯವಹಾರ ನ್ಯಾಯಾಧೀಶರ ಕೊಠಡಿಯಲ್ಲಿ ಹಾವು ಕಾಣಿಸಿಕೊಂಡಿತ್ತು. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಉರಗ ಸಂರಕ್ಷಕ ಸ್ನೇಕ್ ಕಿರಣ್ ಅವರು ಸುರಕ್ಷಿತವಾಗಿ ಹಾವನ್ನು ಸಂರಕ್ಷಿಸಿದ್ದಾರೆ.ಕೋರ್ಟ್ ಆವರಣದಲ್ಲಿ ಕಾಣಿಸಿಕೊಂಡಿದ್ದ ತೋಳದ ಹಾವಾಗಿದೆ. ಸುರಕ್ಷಿತವಾಗಿ ಹಾವನ್ನು ಸಂರಕ್ಷಿಸಲಾಗಿದೆ’ ಎಂದು ಸ್ನೇಕ್ ಕಿರಣ್ ಮಾಹಿತಿ ನೀಡಿದ್ದಾರೆ The post ಶಿವಮೊಗ್ಗ : ಕೋರ್ಟ್ ಗೆ ಆಗಮಿಸಿದ ಹಾವು! appeared first on Sanjevani .
ಬೆಲೆ ಏರಿಕೆ ತಡೆಗೆ ಒತ್ತಾಯಿಸಿ ಪ್ರತಿಭಟನೆ
ದಾವಣಗೆರೆ, ಮೇ. ೨೬: ಬೆಲೆ ಏರಿಕೆ ತಡೆ ಮತ್ತು ನಿರುದ್ಯೋಗ ನಿವಾರಣೆ ಮಾಡಲು, ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿ ಭಾರತ ಕಮ್ಯುನಿಸ್ಟ್ ಪಕ್ಷ ಮತ್ತು ಭಾರತ ಕಮ್ಯೂನಿಸ್ಟ್ ಪಕ್ಷ (ಎಂ) ದಾವಣಗೆರೆ ಜಿಲ್ಲಾ ಮಂಡಳಿಗಳು ನಗರದಲ್ಲಿ ಪ್ರತಿಭಟನೆ ನಡೆಸಿ, ತಮ್ಮ ಬೇಡಿಕೆಯನ್ನು ಪೂರೈಸುವಂತೆ ಉಪವಿಭಾಗಾಧಿಕಾರಿಗಳ ಮೂಲಕ ಮಾನ್ಯ ಪ್ರಧಾನಂತ್ರಿಗಳಿಗೆ ಸಲ್ಲಿಸಿದರುನಗರದ ಜಯದೇವ ವೃತ್ತದಲ್ಲಿ ಜಮಾವಣೆಗೊಂಡ ಪ್ರತಿಭಟನಾಕಾರರು ನಂತರ ಮಾತನಾಡಿ, ದೇಶದ ದಿನೇ ದಿನೇ ಅಗತ್ಯ ವಸ್ತುಗಳ ಬೆಲೆಗಳು ಗಗನಕ್ಕೇರುತ್ತಿದ್ದು, ಇದರಿಂದ ದುಡಿಯುವ ವರ್ಗದ ಜನರು ಕೊಳ್ಳುವ ಶಕ್ತಿ ಕಳೆದುಕೊಂಡು […] The post ಬೆಲೆ ಏರಿಕೆ ತಡೆಗೆ ಒತ್ತಾಯಿಸಿ ಪ್ರತಿಭಟನೆ appeared first on Sanjevani .
Wheelchair Romeo Review: 'ವ್ಹೀಲ್ಚೇರ್' ಮೇಲೆಯೇ ನವಿರಾದ ಭಾವನೆಗಳ ಜೊತೆಗೆ ನಗಿಸುತ್ತ ಸಾಗುವ 'ರೋಮಿಯೋ'
ಎಮೋಷನಲ್ ಕಥೆಯನ್ನು ಪಂಚಿಂಗ್ ಡೈಲಾಗ್ಗಳ ಸಹಾಯದಿಂದ, ಕಲಾವಿದರ ಉತ್ತಮ ಕಾಮಿಡಿ ಟೈಮಿಂಗ್ನಿಂದ ಹ್ಯೂಮರಸ್ ಆಗಿ ತೆರೆಮೇಲೆ ತಂದಿದ್ದಾರೆ ನಿರ್ದೇಶಕ ನಟರಾಜ್. ಆ ಮೂಲಕ ತಮ್ಮ ಮೊದಲ ಯತ್ನದಲ್ಲೇ ಭಾಗಶಃ ಗೆಲುವು ಸಾಧಿಸಿದ್ದಾರೆ ನಟರಾಜ್.
ಶಿವಾಜಿ ಮಹಾರಾಜರು ಅಫ್ಜಲ್ ಖಾನ್ನ್ನ ಹೇಗೆ ಸಂಹರಿಸಿದ್ದರು ಎಂಬುದರ ಕುರಿತು ಈ ಕಥೆಯನ್ನು ಇತಿಹಾಸದ ಪುಸ್ತಕಗಳಲ್ಲಿ ಆಗಾಗ್ಗೆ ನಾವು ಓದುತ್ತಲೇ ಇರುತ್ತೇವೆ. ಈ ಘಟನೆ ನವೆಂಬರ್ 10, 1659 ರಂದು ನಡೆದಿತ್ತು. ಛತ್ರಪತಿ ಶಿವಾಜಿ ಮಹಾರಾಜರ ವಿಜಯ ಪತಾಕೆ ಜೋರಾಗಿ ಬೀಸುತ್ತಿದ್ದ ಕಾಲವದು. ಅಂತಹ ಪರಿಸ್ಥಿತಿಯಲ್ಲಿ, ಮೊಘಲ್ ಆಕ್ರಮಣಕಾರನು ಶಿವಾಜಿಯನ್ನು ಎದುರೆಗೆ ಬಂದು ಸೋಲಿಸಲು ಸಾಧ್ಯವಾಗದಿದ್ದಾಗ, ಬಿಜಾಪುರದ ದೊರೆ ಅಫ್ಜಲ್ ಖಾನ್ನ ಮೂಲಕ ಮೋಸದಿಂದ ಕೊ-ಲ್ಲಲು ಯೋಜನೆ ರೂಪಿಸಿದ್ದನು. ಅಫ್ಜಲ್ ಖಾನ್ ಶಿವಾಜಿ ಮಹಾರಾಜರನ್ನು ಮಹಾರಾಷ್ಟ್ರದ ಮಹಾಬಲೇಶ್ವರದ… The post ಶಿವಾಜಿ ಮಹಾರಾಜರು ಸಂಹರಿಸಿದ್ದ ಅಫ್ಜಲ್ ಖಾನ್ ಸಮಾಧಿಯನ್ನ ಅತ್ಯಂತ ಗೌರವದಿಂದ ರಕ್ಷಿಸಲಿದೆ ಶಿವಸೇನೆ: ಸುಪ್ರೀಂಕೋರ್ಟ್ ನಲ್ಲೂ ಅಫ್ಜಲ್ ಖಾನ್ ಪರ ಅಖಾಡಕ್ಕಿಳಿದ ಸರ್ಕಾರ appeared first on EXIT NEWS .
ಬಿಜೆಪಿಗೆ ಪರ್ಯಾಯ ರಾಜಕೀಯ ಶಕ್ತಿ, ವಿಜಯದಶಮಿಗೆ ನಿರ್ಧಾರ: ಎಚ್ಡಿಕೆ, ಕೆಸಿಎಆರ್
ದೇಶದ ಆರ್ಥಿಕ ವ್ಯವಸ್ಥೆ ಹದಗೆಟ್ಟಿದೆ. ಯುವಶಕ್ತಿ ಇದ್ದರೂ, ದೇಶದಲ್ಲಿ ಹಲವು ಸಂಪನ್ಮೂಲಗಳಿದ್ದರೂ ಇವತ್ತಿಗೂ ಹಲವು ಸಮಸ್ಯೆಗಳ ಬಗ್ಗೆ ಚರ್ಚೆ, ಪರಿಹಾರ ಇಲ್ಲ. ದೇಶದಲ್ಲಿ ರೈತರು, ದಲಿತರು, ಆದಿವಾಸಿಗಳು ಕಷ್ಟದಲ್ಲಿ ಇದ್ದಾರೆ.
ಸಚಿವಾಲಯ ನೌಕರರಿಂದ ಮೇ 27ಕ್ಕೆ ಬಂದ್ಗೆ ಕರೆ: ಸರ್ಕಾರದ ಖಡಕ್ ಎಚ್ಚರಿಕೆ
ಬೆಂಗಳೂರು , ಮೇ 26: ರಾಜ್ಯ ಸರ್ಕಾರ ತಮ್ಮ ಹಲವು ಬೇಡಿಕೆಗಳನ್ನು ಈಡೇರಿಸದಿರುವುದನ್ನು ಖಂಡಿಸಿ ಕರ್ನಾಟಕ ಸರ್ಕಾರ ಸಚಿವಾಲಯದ ನೌಕರರ ಸಂಘವು ಮೇ 27(ಶುಕ್ರವಾರ) ಸಚಿವಾಲಯದ ಬಂದ್ಗೆ ಕರೆಯನ್ನು ನೀಡಿದೆ. ಮತ್ತೊಂದೆಡೆ ನೌಕರರು ಬಂದ್ ಕರೆಯನ್ನು ಸರ್ಕಾರ ಗಂಭಿರವಾಗಿ ತೆಗೆದುಕೊಂಡಿದ್ದು, ಎಲ್ಲಾ ಅಧಿಕಾರಿಗಳು/ ಸಿಬ್ಬಂದಿ ಕಡ್ಡಾಯವಾಗಿ ಕಚೇರಿಗೆ ಹಾಜರಾಗತಕ್ಕದ್ದು ಎಂದು ಸುತ್ತೋಲೆ ಹೊರಡಿಸಿದೆ. ಸಚಿವಾಲಯ ನೌಕರರ ಸಂಘದ
ರೈತನ ಮಗಳಾಗಿದ್ದರೂ ಭರ್ಜರಿ ಚಿನ್ನದ ಭೇಟೆಯಾಡಿದ ಚಿನ್ನದ ಹುಡುಗಿ
ಬಾಗಲಕೋಟೆ, ಮೇ 26: ಸಾಧನೆ ಮಾಡುವ ಗುರಿ ಇದ್ರೆ, ಸಾಧಿಸುವ ಛಲ ಇದ್ದರೆ ಯಾವುದೇ ಕಾರ್ಯವನ್ನು ಸಾಧಿಸಿ ತೋರಿಸಬಹುದು. ಅದಕ್ಕೆ ಸಾಕ್ಷಿಯಾಗಿ ಆ ವಿದ್ಯಾರ್ಥಿನಿ ಸಾಧಿಸಿ ತೋರಿಸಿದ್ದಾಳೆ. ಓರ್ವ ರೈತನ ಮಗಳು ಅದ್ಭುತ ಸಾಧನೆ ಮಾಡಿ ಸಾಧನೆ ಶಿಖರ ಏರಿದ್ದಾಳೆ. ರೈತನ ಮಗಳಾಗಿದ್ದರೂ ಭರ್ಜರಿ ಚಿನ್ನದ ಭೇಟೆಯಾಡಿ ಚಿನ್ನದ ಹುಡುಗಿ ಎಂಬ ಕೀರ್ತಿಗೆ ಪಾತ್ರಳಾಗಿದ್ದಾಳೆ. ಅಷ್ಟಕ್ಕೂ ಆ
ತುಂಡು ಜಮೀನಿಗಾಗಿ ಜಗಳ, ಭಾವಮೈದನನ್ನು ಕೊಂದು ಆತ್ಮಹತ್ಯೆ ಮಾಡಿಕೊಂಡ ಭಾವ
ಬಾಗಲಕೋಟೆ, ಮೇ 26: ತುಂಡು ಜಮೀನಿಗಾಗಿ ವ್ಯಕ್ತಿಯೊಬ್ಬ ತನ್ನ ಬಾವಮೈದುನನ್ನು ಕಲ್ಲಿನಿಂದ ಹೊಡೆದು ಕೊಂದು, ನಂತರ ತಾನೂ ವಿಷದುಕುಡಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬಾಗಲಕೋಟೆ ತಾಲ್ಲೂಕಿನ ಶಿರೂರು ಗ್ರಾಮದಲ್ಲಿ ನಡೆದಿದೆ. ಕೇವಲ ಒಂದು ಪಂಪ್ ಶೆಟ್, ಆರೇಳು ತೆಂಗಿನ ಗಿಡಗಳು ಇದ್ದ ವ್ಯಾಪ್ತಿಯ ಜಾಗಕ್ಕಾಗಿ ರಮೇಶ್ ಅಂಗಡಿ ಎಂಬಾತ ತನ್ನ ಪತ್ನಿಯ ತಮ್ಮ ಸಂಗಪ್ಪ ಕೋಟಿ(38) ಜೊತೆ
ಇಂದಿರಾ ಕ್ಯಾಂಟೀನ್ಗೆ ಆಹಾರ ಪೂರೈಸಲು ಇಸ್ಕಾನ್ ಷರತ್ತು! ಮೂರು ಹೊತ್ತಿನ ಊಟಕ್ಕೆ 78 ರೂ.ಗೆ ಬೇಡಿಕೆ
ಬಿಬಿಎಂಪಿ ವ್ಯಾಪ್ತಿಯಲ್ಲಿ ಇರುವ ಇಂದಿರಾ ಕ್ಯಾಂಟೀನ್ಗಳಲ್ಲಿ ಮೂರು ಹೊತ್ತಿನ ಊಟ ಪೂರೈಸಲು ಇಸ್ಕಾನ್ ಸಂಸ್ಥೆ 78 ರೂ. ಬೇಡಿಕೆ ಇಟ್ಟಿದೆ. ಈ ಬಗ್ಗೆ ಸರ್ಕಾರ ಅಂತಿಮ ತೀರ್ಮಾನ ತೆಗೆದುಕೊಳ್ಳಲಿದೆ ಎಂದು ಹಣಕಾಸು ವಿಭಾಗದ ವಿಶೇಷ ಆಯುಕ್ತೆ ತುಳಸಿ ಮದ್ದಿನೇನಿ ತಿಳಿಸಿದ್ದಾರೆ. ಇಂದಿರಾ ಕ್ಯಾಂಟೀನ್ಗಳು ಉದ್ಯಮವಲ್ಲ. ಇವುಗಳನ್ನು ನಿರ್ವಹಣೆ ಮಾಡಲು ಸಾಮಾಜಿಕ ಕಳಕಳಿ ಬೇಕು ಎಂದು ಅವರು ಹೇಳಿದ್ದಾರೆ.
ವಾಟರ್ ಟ್ಯಾಂಕರ್ ಹರಿದು ಬಾಲಕ ಸಾವು
ಬೆಂಗಳೂರು, ಮೇ.26- ವಾಟರ್ ಟ್ಯಾಂಕರ್ ವಾಹನ ಹರಿದ ಪರಿಣಾಮ ಮೂರು ವರ್ಷದ ಬಾಲಕ ಸಾವನ್ನಪ್ಪಿರುವ ದುರ್ಘಟನೆ ಹೆಚ್ ಎಸ್ ಆರ್ ಲೇಔಟ್ ನ ಸರ್ಜಾಪುರ ರಸ್ತೆಯಲ್ಲಿ ನಡೆದಿದೆ.ಸರ್ಜಾಪುರ ರಸ್ತೆಯ ಸೆರಿನಿಟಿ ಲೇಔಟ್ ನ ಶ್ವೇತ ರೆಸಿಡೆನ್ಸಿ ಅಪಾರ್ಟ್ ಮೆಂಟ್ ನ ಪ್ರತಿಷ್ಟ್ ಮೃತಪಟ್ಟವರು.ನೇಪಾಳ ಮೂಲದ ಜಯಂತಿ-ಕೀಮ್ ರಾಜ್ ದಂಪತಿ ಕಳೆದ ಐದಾರು ವರ್ಷಗಳಿಂದ ನಗರದಲ್ಲಿ ವಾಸವಾಗಿದ್ದಾರೆ. ಕೀಮ್ ರಾಜ್ ಸೆಕ್ಯೂರಿಟಿ ಕೆಲಸ ಮಾಡಿಕೊಂಡಿದ್ದರು. ಪಕ್ಕದ ಅಪಾರ್ಟ್ ಮೆಂಟ್ ಮನೆಯವರು ಟ್ಯಾಂಕರ್ನಲ್ಲಿ ನೀರು ತರಿಸಿಕೊಂಡಿದ್ದರು. ನೀರನ್ನು ಅನ್ಲೋಡ್ ಮಾಡಿ […] The post ವಾಟರ್ ಟ್ಯಾಂಕರ್ ಹರಿದು ಬಾಲಕ ಸಾವು appeared first on Sanjevani .
ನಾಳೆ ಬೀದರ್ ಜಿಲ್ಲೆಯಲ್ಲಿ ಸಚಿವ ಆರ್.ಅಶೋಕ್ ಗ್ರಾಮ ವಾಸ್ತವ್ಯ
ಬೆಂಗಳೂರು, ಮೇ.26- ಬೀದರ್ ಜಿಲ್ಲೆ ಔರಾದ್ ತಾಲ್ಲೂಕಿನ ವಡೇಗಾವ್ (ದೇಶಮುಖ್)ನಲ್ಲಿ ನಾಳೆಯಿಂದ ಎರಡು ದಿನಗಳ ಕಾಲ ಕಂದಾಯ ಸಚಿವ ಆರ್. ಅಶೋಕ್ ಗ್ರಾಮ ವಾಸ್ತವ್ಯ ಮಾಡಲಿದ್ದಾರೆ.ಜನರ ಬಳಿಗೆ ಸರ್ಕಾರವೇ ಬಂದು ಸಮಸ್ಯೆ ಆಲಿಸಬೇಕು ಎನ್ನುವುದು “ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ” ಕಾರ್ಯಕ್ರಮದ ಮುಖ್ಯ ಉದ್ದೇಶ. ಕಂದಾಯ ಸಚಿವ ಆರ್ ಅಶೋಕ್ ಅವರೇ ಇದರ ನೇತೃತ್ವವಹಿಸಿ ಈ ಕಾರ್ಯಕ್ರಮವನ್ನು ಮುನ್ನೆಡೆಸುತ್ತಿದ್ದಾರೆ. ಇದು ಆರ್ ಅಶೋಕ್ ಅವರ ಕನಸಿನ ಯೋಜನೆಗಳಲ್ಲಿ ಒಂದು. ಈ ಬಾರಿ ಬೀದರ್ ಜಿಲ್ಲೆಯ ಔರಾದ್ ನ […] The post ನಾಳೆ ಬೀದರ್ ಜಿಲ್ಲೆಯಲ್ಲಿ ಸಚಿವ ಆರ್.ಅಶೋಕ್ ಗ್ರಾಮ ವಾಸ್ತವ್ಯ appeared first on Sanjevani .
ತಮಿಳು ಅಧಿಕೃತ ಭಾಷೆ ಎಂದು ಘೋಷಿಸಿ, ಮೋದಿಗೆ ಸ್ಟಾಲಿನ್ ಆಗ್ರಹ
ಚೆನ್ನೈ, ಮೇ 26: ತಮಿಳುನಾಡು ಪ್ರವಾಸದಲ್ಲಿರುವ ಪ್ರಧಾನಿ ಮೋದಿ ಅವರಿದ್ದ ವೇದಿಕೆಯಲ್ಲಿ ಮಾತನಾಡಿದ ತಮಿಳುನಾಡಿನ ಮುಖ್ಯಮಂತ್ರಿ ಎಂಕೆ ಸ್ಟಾಲಿನ್, ಹಿಂದಿಯಂತೆ ತಮಿಳು ಅಧಿಕೃತ ಭಾಷೆಯಾಗಿ ಘೋಷಿಸಿ ಎಂದು ಆಗ್ರಹಿಸಿದರು. ಪ್ರಧಾನಿ ಮೋದಿ ತಮ್ಮ ಭಾಷಣದಲ್ಲಿ ತಮಿಳು ಭಾಷೆಯನ್ನು ಹಾಡಿ ಹೊಗಳಿದರು. ಇದಲ್ಲದೆ, ಮೆಡಿಕಲ್ ವೃತ್ತಿಪರ ಕೋರ್ಸ್ ಪ್ರವೇಶಕ್ಕಾಗಿ ನಡೆಸಲಾಗುವ NEET ಪರೀಕ್ಷೆಯಿಂದ ತಮಿಳುನಾಡನ್ನು ಹೊರಗಿಡುವಂತೆ ಕೋರಿದರು. ಇತ್ತೀಚೆಗೆ
ರೌಡಿಗಳಿಗೆ ಗಡಿಪಾರು: ಎಸಿಪಿ ದೀಪನ್ ಎಂ.ಎನ್. ಎಚ್ಚರಿಕೆ
ಕಲಬುರಗಿ.ಮೇ.26:ರೌಡಿಶೀಟರ್ಗಳು ಅಪರಾಧ ಚಟುವಟಿಕೆಯಲ್ಲಿ ಭಾಗಿಯಾಗಿದ್ದು ಕಂಡು ಬಂದಲ್ಲಿ ಅವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಿ ಗಡಿಪಾರು ಆದೇಶಕ್ಕೆ ಶಿಫಾರಸ್ಸು ಮಾಡಲಾಗುವುದು ಎಂದು ನಗರದ ಉತ್ತರ ವಿಭಾಗದ ಎಸಿಪಿ ದೀಪನ್ ಎಮ್.ಎನ್. ಅವರು ಎಚ್ಚರಿಕೆ ನೀಡಿದರು.ನಗರದ ಎಸಿಪಿ ಉತ್ತರ ವಿಭಾಗದ ಕಛೇರಿಯಲ್ಲಿ ನಡೆದ ರೌಡಿ ಪರೇಡ್ನಲ್ಲಿ ಅವರು ರೌಡಿಶೀಟರ್ಗಳಿಗೆ ಈ ಖಡಕ್ಕಾದ ಎಚ್ಚರಿಕೆಯನ್ನು ನೀಡಿದರು. ಠಾಣಾ ವ್ಯಾಪ್ತಿಯಲ್ಲಿ ಯಾವುದೇ ಅಪರಾಧ ಚಟುವಟಿಕೆಯಲ್ಲಿ ತೊಡಗದಂತೆ ಮತ್ತು ಬಡ್ಡಿ ವ್ಯವಹಾರ, ಲ್ಯಾಂಡ್ ಮಾಫಿಯಾ, ಹಪ್ತಾ ವಸೂಲಿ ಮಾಡದಂತೆ ರೌಡಿಗಳಿಗೆ ಎಚ್ಚರಿಕೆ […] The post ರೌಡಿಗಳಿಗೆ ಗಡಿಪಾರು: ಎಸಿಪಿ ದೀಪನ್ ಎಂ.ಎನ್. ಎಚ್ಚರಿಕೆ appeared first on Sanjevani .
ಸಿಎಂ ಇಬ್ರಾಹಿಂ ಇದ್ದ ಪಕ್ಷ ಅಧಿಕಾರಕ್ಕೆ, ಜೆಡಿಎಸ್ ಆಡಳಿತ ಬಂದ್ರೆ ನದಿಗಳ ಸಮಸ್ಯೆಗೆ ಬ್ರೇಕ್: ಎಚ್ಡಿ ರೇವಣ್ಣ
ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಕೊಟ್ಟ ಮಾತಿನಂತೆ ರೈತರ ಸಾಲ ಮನ್ನಾ ಮಾಡಿದ್ದಾರೆ. ರಾಜ್ಯದ ನೆಲ, ಜಲದ ವಿಚಾರದಲ್ಲಿ ಹೋರಾಟ ಮಾಡಿದವರು ದೇವೇಗೌಡರು. ಕೃಷ್ಣಾ ನದಿ ನೀರನ್ನು ರೈತರಿಗೆ ತಲುಪಿಸಿದರು.
ವೇಶ್ಯಾವಾಟಿಕೆ ಕಾನೂನುಬದ್ಧವಾಗಿದೆ ಎಂದು ದೇಶದ ಅತ್ಯುನ್ನತ ನ್ಯಾಯಾಲಯ ಮಹತ್ವದ ತೀರ್ಪು ನೀಡಿದೆ. ಪೊಲೀಸರು ಅವರ ಕೆಲಸದಲ್ಲಿ ಹಸ್ತಕ್ಷೇಪ ಮಾಡುವಂತಿಲ್ಲ ಅಥವಾ ಕ್ರಿಮಿನಲ್ ಆ್ಯಕ್ಷನ್ ಕೈಗೊಳ್ಳುವಂತಿಲ್ಲ ಎಂದು ಸುಪ್ರೀಂಕೋರ್ಟ್ ಹೇಳಿದೆ. ಈ ಪ್ರಕರಣದ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಪೀಠವು ವೇಶ್ಯಾವಾಟಿಕೆ ಕೆಲಸವೂ ಒಂದು ವೃತ್ತಿಯಾಗಿದ್ದು, ಈ ಕೆಲಸದಲ್ಲಿ ತೊಡಗಿರುವ ಮಹಿಳೆಯರು ಕಾನೂನಿನಡಿಯಲ್ಲಿ ಘನತೆ ಮತ್ತು ಸಮಾನ ರಕ್ಷಣೆಗೆ ಅರ್ಹರು ಎಂದು ಹೇಳಿದೆ. ಲೈವ್ ಲಾ (Live Law) ವರದಿಯ ಪ್ರಕಾರ, ನ್ಯಾಯಮೂರ್ತಿ ಎಲ್ ನಾಗೇಶ್ವರ ರಾವ್ ನೇತೃತ್ವದ… The post “ಪೋಲಿಸರು ಏನೂ ಮಾಡೋ ಹಾಗಿಲ್ಲ, ಕ್ರಿಮಿನಲ್ ಆ್ಯಕ್ಷನ್ ಕೂಡ ಇಲ್ಲ, ವೇಶ್ಯಾವಾಟಿಕೆ ಲೀಗಲ್, ಅವರನ್ನ ಯಾರೂ….”: ವೇಶ್ಯಾವೃತ್ತಿಗೆ 6 ನಿಯಮ ಜಾರಿ ಮಾಡಿದ ಸುಪ್ರೀಂಕೋರ್ಟ್ appeared first on EXIT NEWS .
ತಮಿಳುನಾಡಿನಲ್ಲಿ 31,500 ಸಾವಿರ ಕೋಟಿ ವೆಚ್ಚದ ಅಭಿವೃದ್ಧಿ ಯೋಜನೆಗಳಿಗೆ ಪ್ರಧಾನಿ ಮೋದಿ ಶಿಲಾನ್ಯಾಸ
ಚೆನ್ನೈ, ಮೇ 26: ಪ್ರಧಾನಿ ನರೇಂದ್ರ ಮೋದಿ ಗುರುವಾರ ಚೆನ್ನೈನ ಜವಾಹರಲಾಲ್ ನೆಹರು ಕ್ರೀಡಾಂಗಣದಲ್ಲಿ ಬೆಂಗಳೂರು-ಚೆನ್ನೈ ಎಕ್ಸ್ಪ್ರೆಸ್ ವೇ ಸೇರಿದಂತೆ ವಿವಿಧ 31,500 ಕೋಟಿ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದರು. ಚೆನ್ನೈಗೆ ಭೇಟಿ ನೀಡಿದ ಪ್ರಧಾನಿ ಮೋದಿಯವರನ್ನು ತಮಿಳುನಾಡು ರಾಜ್ಯಪಾಲ ಆರ್.ಎನ್. ರವಿ ಸ್ವಾಗತಿಸಿದರು. ಡಿಎಂಕೆ ನಾಯಕ ಮತ್ತು ಸಚಿವರಾದ ದೊರೈಮುರುಗನ್ ಮತ್ತು ಕೆ.ಪೊನ್ಮುಡಿ
ತಮಿಳು ಅಧಿಕೃತ ಭಾಷೆಗೆ ವೇದಿಕೆಯಲ್ಲೇ ಮೋದಿಗೆ ಸ್ಟಾಲಿನ್ ಆಗ್ರಹ
ಚೆನ್ನೈ, ಮೇ.26- ಕೇಂದ್ರ ಸರ್ಕಾರಿ ಕಚೇರಿಗಳು ಮತ್ತು ಮದ್ರಾಸ್ ಹೈಕೋರ್ಟ್ನಲ್ಲಿ ತಮಿಳು ಭಾಷೆಯನ್ನು ಅಧಿಕೃತ ಭಾಷೆಯಾಗಿ ಘೋಷಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಉಪಸ್ಥಿತರಿದ್ದ ಸಮಾರಂಭದಲ್ಲಿಯೇ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ಆಗ್ರಹಿಸಿದ್ದಾರೆ.ಪ್ರಧಾನಿ ನರೇಂದ್ರ ಮೋದಿ ರಾಜ್ಯಪಾಲ ಆರ್ ಎನ್ ರವಿ, ಕೇಂದ್ರ ಸಚಿವ ಎಲ್ ಮುರುಗನ್ ಮತ್ತು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಅವರ ಸಮ್ಮುಖದಲ್ಲಿ 2,960 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ 5 ಯೋಜನೆಗಳನ್ನುಇಂದು ಲೋಕಾರ್ಪಣೆ ಮಾಡಿದರು.ಚೆನ್ನೈಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಸ್ವಾಗತಿಸಿ […] The post ತಮಿಳು ಅಧಿಕೃತ ಭಾಷೆಗೆ ವೇದಿಕೆಯಲ್ಲೇ ಮೋದಿಗೆ ಸ್ಟಾಲಿನ್ ಆಗ್ರಹ appeared first on Sanjevani .
ಆಳಂದ್ ದರ್ಗಾ ಗಲಾಟೆ ರೂವಾರಿ ಫೀರ್ದೋಸ್ ಖಾನ್ ಗಡಿಪಾರಿಗೆ ಆದೇಶ
ಕಲಬುರಗಿ.ಮೇ.26: ಜಿಲ್ಲೆಯ ಆಳಂದ್ ಪಟ್ಟಣದ ಲಾಡ್ಲೆ ಮಶಾಕ್ ದರ್ಗಾದ ಒಳಗಿನ ಅಪವಿತ್ರಗೊಂಡ ಶಿವಲಿಂಗ ಸ್ವಚ್ಛತೆ ಹಾಗೂ ಪೂಜೆ ವೇಳೆ ಕೋಮು ಗಲಭೆ ಸೃಷ್ಟಿಸಿ ಕಲ್ಲು ತೂರಾಟ ನಡೆದ ಪ್ರಕರಣದ ರೂವಾರಿ ಪುರಸಭೆಯ ಸದಸ್ಯ ಫೀರ್ದೋಸ್ ಖಾನ್ ಅನ್ಸಾರಿಯನ್ನು ಜಿಲ್ಲಾಡಳಿತ ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಿ ಗಡಿಪಾರು ಮಾಡಿದೆ.ಮೊಹ್ಮದ್ ಫಿರ್ದೋಸ್ ಆರೀಫ್ ಅನ್ಸಾರಿ ತಂದೆ ಹಫಿಜೊದ್ದೀನ್ ಅನ್ಸಾರಿ (42) ವಿರುದ್ಧ ಕಲಂ 03ರಡಿ ಕರ್ನಾಟಕ ಕಳ್ಳಭಟ್ಟಿ ಸರಾಯಿ ವ್ಯವಹಾರ, ಔಷಧಾಪರಾಧ, ಜೂಜುಕೋರ, ಗೂಂಡಾ ಅನೈತಿಕ ವ್ಯವಹಾರಗಳ ಅಪರಾಧ, ಕೊಳಚೆ […] The post ಆಳಂದ್ ದರ್ಗಾ ಗಲಾಟೆ ರೂವಾರಿ ಫೀರ್ದೋಸ್ ಖಾನ್ ಗಡಿಪಾರಿಗೆ ಆದೇಶ appeared first on Sanjevani .
ತಮ್ಮ ದೇಶದ ಸೈನಿಕರನ್ನು ಭೇಟಿಯಾದ ರಷ್ಯಾ ಅಧ್ಯಕ್ಷ ಪುಟಿನ್
ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಗಾಯಗೊಂಡ ರಷ್ಯಾದ ಸೈನಿಕರನ್ನು ಭೇಟಿ ಮಾಡಿದ್ದು ಅದರ ವಿಡಿಯೊವನ್ನು ಟ್ವಿಟರ್ನಲ್ಲಿ ಪೋಸ್ಟ್ ಮಾಡಲಾಗಿದೆ. ವಿಡಿಯೋದಲ್ಲಿ ಪುಟಿನ್ ತಮ್ಮ ಸೈನಿಕರ ಕೈ ಕುಲುಕುತ್ತಿರುವುದನ್ನು ಕಾಣಬಹುದು. ಉಕ್ರೇನ್ನಲ್ಲಿ ಹೋರಾಡುತ್ತಿರುವ ಸೈನಿಕರನ್ನು ಪುಟಿನ್ ಅವರು ಮೊದಲ ಬಾರಿಗೆ ಭೇಟಿ ಮಾಡಿದ್ದಾರೆ. ಈ ಸೈನಿಕರನ್ನು ಭೇಟಿಯಾದಾಗ ರಷ್ಯಾದ ಅಧ್ಯಕ್ಷರು ಬಿಳಿ ಲ್ಯಾಬ್ ಕೋಟ್ ಧರಿಸಿರುವುದನ್ನು ಕಾಣಬಹುದು. ಉಕ್ರೇನ್ನಲ್ಲಿ
ನಾನು ತಪ್ಪು ಮಾಡಿಲ್ಲ; ನ್ಯಾಯಾಲಯದ ಮೇಲೆ ಸಂಪೂರ್ಣ ವಿಶ್ವಾಸವಿದೆ: ಡಿ.ಕೆ. ಶಿವಕುಮಾರ್
ಬೆಂಗಳೂರು, ಮೇ 26: ಅಕ್ರಮ ಆಸ್ತಿ ಸಂಪಾದನೆ ಪ್ರಕರಣದಲ್ಲಿ ನಾನು ಯಾವುದೇ ತಪ್ಪು ಮಾಡಿಲ್ಲ. ಇದೊಂದು ರಾಜಕೀಯ ಷಡ್ಯಂತ್ರ. ಜಾರಿ ನಿರ್ದೇಶನಾಲಯ ನನ್ನ ವಿರುದ್ಧ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದೆ ಎಂಬ ಮಾಹಿತಿ ಮಾಧ್ಯಮಗಳ ಮೂಲಕ ತಿಳಿದಿದೆ. ಇದು ನನಗೆ ಹಾಗೂ ನ್ಯಾಯಾಲಯಕ್ಕೆ ಸಂಬಂಧಿಸಿದ ವಿಚಾರವಾಗಿದ್ದು, ನನಗೆ ನ್ಯಾಯಾಲಯದ ಮೇಲೆ ಸಂಪೂರ್ಣ ವಿಶ್ವಾಸವಿದೆ' ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.
ಜ್ಞಾನವಾಪಿ ಪ್ರಕರಣ: 'ಶಿವಲಿಂಗ' ಬಗ್ಗೆ ಪ್ರಶ್ನಿಸಿದ ಮುಸ್ಲಿಂ ಅರ್ಜಿದಾರರು
ವಾರಣಾಸಿ ಮೇ 26: ಕಳೆದ ಕೆಲವು ವಾರಗಳಿಂದ ಸಾಕಷ್ಟು ವಿವಾದವನ್ನು ಹುಟ್ಟುಹಾಕಿರುವ ಜ್ಞಾನವಾಪಿ ಮಸೀದಿ ಪ್ರಕರಣವನ್ನು ವಾರಣಾಸಿ ನ್ಯಾಯಾಲಯವು ಇಂದು ವಿಚಾರಣೆ ನಡೆಸಿತು. ಇಲ್ಲಿ ಮುಸ್ಲಿಂ ಅರ್ಜಿದಾರರು ಮಸೀದಿಯ ವಿವಾದದ ಬಗ್ಗೆ ಹಿಂದೂ ಕಡೆಯಿಂದ ಮಾಡಿದ ವಾದಗಳನ್ನು ಪ್ರಶ್ನಿಸಿದ್ದಾರೆ. ಗುರುವಾರ ಮುಸ್ಲಿಂ ಅರ್ಜಿದಾರರು ಜ್ಞಾನವಾಪಿ ವಿವಾದ ಪ್ರಕರಣದಲ್ಲಿ ಹಿಂದೂ ಕಡೆಯ ಮನವಿಯನ್ನು ಪ್ರಶ್ನಿಸಿದರು. ಸಮೀಕ್ಷಾ ವರದಿಯನ್ನು ಸಲ್ಲಿಸಿದ
ಗುಂಡ್ಲುಪೇಟೆಯಲ್ಲಿ ಸಿಲಿಂಡರ್ ಸ್ಫೋಟ; ಒಬ್ಬನ ಸಾವು
ಚಾಮರಾಜನಗರ, ಮೇ 26: ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಸಿಲಿಂಡರ್ ಸ್ಫೋಟಗೊಂಡ ಯುವಕನೋರ್ವ ಸುಟ್ಟು ಕರಕಲಾಗಿರುವ ಗುಂಡ್ಲುಪೇಟೆ ಘಟನೆ ತಾಲೂಕಿನ ಮಳವಳ್ಳಿ ಗ್ರಾಮದಲ್ಲಿ ಬುಧವಾರ ತಡರಾತ್ರಿ ನಡೆದಿದೆ. ಪ್ರತಿಫಲಾಪೇಕ್ಷೆಯಿಲ್ಲದೆ ನೂರಾರು ಹೆರಿಗೆ ಮಾಡಿಸಿದ್ದ ಅಜ್ಜಿಗೆ ಗ್ರಾಮಸ್ಥರಿಂದ ಸನ್ಮಾನ ಮಳವಳ್ಳಿ ಗ್ರಾಮದ ಸ್ವಾಮಿ(28) ಮೃತ ದುರ್ದೈವಿ. ಬುಧವಾರ ರಾತ್ರಿ ಕುಡಿದು ಮನೆಯಲ್ಲಿ ಮಲಗಿದ್ದ ವೇಳೆ ಶಾರ್ಟ್ ಸರ್ಕ್ಯೂಟ್ ಉಂಟಾಗಿ
ಉಡುಪಿಯಲ್ಲಿ ಮತ್ತೊಂದು ಲವ್ ಜಿಹಾದ್ ಬೆಳಕಿಗೆ!
ಮಂಗಳೂರು, ಮೇ 26: ಹಿಜಾಬ್ ವಿವಾದದಿಂದಾಗಿ ಅಂತರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡಿದ್ದ ಉಡುಪಿಯಲ್ಲಿ ಈಗ ಲವ್ ಜಿಹಾದ್ ಸದ್ದು ಕೇಳಿ ಬರುತ್ತಿದೆ. ಕುಂದಾಪುರ ಸಮೀಪದ ಹುಡುಗಿಯೋರ್ವಳು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದು, ಆತ್ಮಹತ್ಯೆಗೆ ಲವ್, ಸೆಕ್ಸ್ ಜಿಹಾದ್ ಕಾರಣ ಅಂತ ಹಿಂದೂ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ. ಸುಂದರ ಬದುಕಿನ ಕನಸು ಕಂಡ ಸಾಮಾನ್ಯ ಕುಟುಂಬದ ಹುಡುಗಿ ಹೆಸರು
ಮತ್ತೊಂದು ಜೆಎನ್ಯು ಮಾಡಲೊರಟಿದ್ದಾರೆ: ಮಂಗಳೂರಿನಲ್ಲಿ ಮತ್ತೆ ಹಿಜಾಬ್ ವಿವಾದ
ಮಂಗಳೂರು, ಮೇ 26: ರಾಜ್ಯದಲ್ಲಿ ಹಿಜಾಬ್ ವಿಚಾರ ನಿಲ್ಲುವ ಲಕ್ಷಣಗಳು ಕಾಣುತ್ತಿಲ್ಲ. ಕೋರ್ಟ್ ಮೆಟ್ಟಿಲೇರಿದ ನಂತರ ತಣ್ಣಗಾಗಿದೆ ಎನ್ನವುಷ್ಟರಲ್ಲಿ ಮಂಗಳೂರಿನಲ್ಲಿ ಮತ್ತೆ ಹಿಜಾಬ್ ವಿವಾದ ಆರಂಭವಾಗಿದೆ. ಹಂಪನಕಟ್ಟೆಯಲ್ಲಿರುವ ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ ಹಿಜಾಬ್ ನಿಯಮ ಅನುಷ್ಠಾನ ಆಗಿಲ್ಲ. ಎರಡು ತಿಂಗಳಿನಿಂದ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಕಾಲೇಜಿಗೆ ಬರುತ್ತಿದ್ದಾರೆ ಎಂದು ಹೇಳಿ ಗುರುವಾರ ಹಿಂದೂ ವಿದ್ಯಾರ್ಥಿಗಳು ಪ್ರತಿಭಟನೆ ಮಾಡಿದ್ದಾರೆ. ಕಾಲೇಜನ್ನು
ಬಿಜೆಪಿ ಅಧ್ಯಕ್ಷ ನಡ್ಡಾ ಅವರ ಸಭೆಯಲ್ಲಿ 2024ರಲ್ಲಿ 1955ಕ್ಕಿಂತ ಮೊದಲು ಹುಟ್ಟಿದ ನಾಯಕರಿಗೆ ಟಿಕೆಟ್ ನೀಡದಿರಲು ಒಪ್ಪಿಗೆ ನೀಡಲಾಯಿತು. ನವದೆಹಲಿ: 2024ರಲ್ಲಿ ನಡೆಯಲಿರುವ ಲೋಕಸಭೆ ಚುನಾವಣೆಗೆ ಭಾರತೀಯ ಜನತಾ ಪಕ್ಷ ಈಗಾಗಲೇ ರಣತಂತ್ರ ರೂಪಿಸಿದ್ದು, ಈ ಸಂಚಿಕೆಯಲ್ಲಿ ಬುಧವಾರ ತಡರಾತ್ರಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರ ನಿವಾಸದಲ್ಲಿ ಸಭೆ ನಡೆದಿದೆ. ಸಂಪುಟದ ಕೆಲವು ಸಚಿವರು, ರಾಜ್ಯ ಉಸ್ತುವಾರಿ ಹಾಗೂ ಪಕ್ಷದ ಹಿರಿಯ ಸಂಸದರು ಇದರಲ್ಲಿ ಭಾಗವಹಿಸಿದ್ದರು. ಮೂಲಗಳ ಪ್ರಕಾರ, ಈಗ ಪ್ರತಿಯೊಬ್ಬ ಸಂಸದರಿಗೆ 100… The post ಪಕ್ಷದಲ್ಲಿ ಬದಲಾಯ್ತು ನಿಯಮ: 2024 ರ ಚುನಾವಣೆಯಲ್ಲಿ ಪ್ರಧಾನಿ ಮೋದಿ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಗೆ ಸಿಗಲ್ಲ ಲೋಕಸಭಾ ಟಿಕೆಟ್? ಯೋಗಿ ಮುಂದಿನ ಪ್ರಧಾನಿ ಅಭ್ಯರ್ಥಿ? appeared first on EXIT NEWS .
ನಾಡಗೀತೆಗೆ ಅಪಮಾನ ರೋಹಿತ್ ಚಕ್ರತೀರ್ಥ ವಿರುದ್ಧ ಕಮೀಷನರ್ ಗೆ ದೂರು
ಬೆಂಗಳೂರು, ಮೇ.26- ರಾಷ್ಟ್ರಕವಿ ಕುವೆಂಪು ಅವರ ಬಗ್ಗೆ ಅವಹೇಳನ ಮಾಡಲಾಗಿದೆ ಹಾಗೂ ನಾಡಗೀತೆಗೆ ಅಪಮಾನ ಮಾಡಲಾಗಿದೆ ಎಂದು ಆರೋಪಿಸಿ ಪಠ್ಯಪುಸ್ತಕ ಸಮಿತಿ ಅಧ್ಯಕ್ಷ ರೋಹಿತ್ ಚಕ್ರತೀರ್ಥ ವಿರುದ್ಧ ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಲಾಗಿದೆ.ರೋಹಿತ್ ಚಕ್ರತೀರ್ಥ ಹಾಗೂ ಲಕ್ಷ್ಮಣ ಅಕಾಶೆ ಕಾರ್ಕಳ ವಿರುದ್ಧ ವಕೀಲ ಎ.ಪಿ.ರಂಗನಾಥ್, ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿಗೆ ದೂರು ನೀಡಿದ್ದಾರೆ. ಜೊತೆಗೆ ಪುನೀತ್ ಕೆರೆಹಳ್ಳಿ ವಿರುದ್ಧ ರೌಡಿಪಟ್ಟಿ ತೆರೆಯಬೇಕು ಎಂದು ಒತ್ತಾಯಿಸಿದ್ದಾರೆ.ರಾಷ್ಟ್ರಕವಿ ಕುವೆಂಪು ಅವರ ಬಗ್ಗೆ ಅವಹೇಳನಕಾರಿಯಾಗಿ ಬರೆದು ಸಾಮಾಜಿಕ ಜಾಲಾತಾಣದಲ್ಲಿ ಹಾಕಲಾಗಿತ್ತು. […] The post ನಾಡಗೀತೆಗೆ ಅಪಮಾನ ರೋಹಿತ್ ಚಕ್ರತೀರ್ಥ ವಿರುದ್ಧ ಕಮೀಷನರ್ ಗೆ ದೂರು appeared first on Sanjevani .
ಜೂ.1 ರಂದು “ಸ್ಪಂದನಾ ಕಲಬುರಗಿ” : ವಿವಿಧ ಕುಂದು-ಕೊರತೆಗಳಿಗೆ ಪರಿಹಾರ: ಜಿಲ್ಲಾಧಿಕಾರಿ ಯಶವಂತ ವಿ. ಗುರುಕರ್
ಕಲಬುರಗಿ.ಮೇ.26:ಜಿಲ್ಲೆಯ ಸಾರ್ವಜನಿಕರ ವಿವಿಧ ಕುಂದು-ಕೊರತೆಗಳನ್ನು ಆಲಿಸಿ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಜೂನ್ 1 ರಂದು ಕಲಬುರಗಿ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ “ಸ್ಪಂದನಾ ಕಲಬುರಗಿ” ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಎಂದು ಜಿಲ್ಲಾಧಿಕಾರಿ ಯಶವಂತ ವಿ. ಗುರುಕರ್ ಅವರು ತಿಳಿಸಿದರು.ಗುರುವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಕರೆದಿದ್ದ “ಸ್ಪಂದನಾ ಕಲಬುರಗಿ” ಕಾರ್ಯಕ್ರಮ ಕುರಿತ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು.ಅಂದು ಜಿಲ್ಲಾ ಮಟ್ಟದ ಎಲ್ಲಾ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಹಾಜರಿರಬೇಕು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಕಲಬುರಗಿ ನಗರ ಉಪ ಪೊಲೀಸ್ ಆಯುಕ್ತರೂ ಸಹ ಹಾಜರಿರಲಿದ್ದು, […] The post ಜೂ.1 ರಂದು “ಸ್ಪಂದನಾ ಕಲಬುರಗಿ” : ವಿವಿಧ ಕುಂದು-ಕೊರತೆಗಳಿಗೆ ಪರಿಹಾರ: ಜಿಲ್ಲಾಧಿಕಾರಿ ಯಶವಂತ ವಿ. ಗುರುಕರ್ appeared first on Sanjevani .
ದೇಶದ ವ್ಯವಸ್ಥೆ ಶೀಘ್ರ ಬದಲಾವಣೆ: ತೆಲಂಗಾಣ ಸಿಎಂ ಭವಿಷ್ಯ
ಬೆಂಗಳೂರು, ಮೇ.26- ದೇಶದ ವ್ಯವಸ್ಥೆ ಬಹಳ ಶೀಘ್ರ ದೇಶದಲ್ಲಿ ಬದಲಾವಣೆಯಾಗಲಿದೆ ಎಂದು ತೆಲಂಗಾಣ ಮುಖ್ಯಮಂತ್ರಿ ಕೆ.ಸಿ. ಚಂದ್ರಶೇಖರ ರಾವ್ ಭವಿಷ್ಯ ನುಡಿದಿದ್ದಾರೆ.ಕರ್ನಾಟಕದ ರಾಜಕೀಯ ಕೂಡ ನಮಗೆ ಗೊತ್ತಿದೆ. ಕರ್ನಾಟಕದಲ್ಲಿ ಸಾರ್ವತ್ರಿಕ ವಿಧಾನಸಭೆ ಚುನಾವಣೆ ಬರುತ್ತಿದೆ. ಕುಮಾರಸ್ಚಾಮಿ ಸಿಎಂ ಆಗಿದ್ದವರು, ಭಾರತ ಬದಲಿಸುವ ಕೆಲಸ ಆಗಲಿದೆ. ಆ ನಿಟ್ಟಿನಲ್ಲಿ ನಾವು ಪ್ರಯತ್ಮ ನಡೆಸುತ್ತಿದ್ದೇವೆ ಎಂದು ತಿಳಿಸಿದರು.ದೇಶದಲ್ಲಿ ಬಿಜೆಪಿಗೆ ಪರ್ಯಾಯವಾಗಿ ತೃತೀಯ ರಂಗ ರಚಿಸುವ ಸಂಬಂಧ ಇಂದು ಬೆಂಗಳೂರಿನಲ್ಲಿ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರೊಂದಿಗೆ ಚಂದ್ರಶೇಖರ ರಾವ್ ಸುದೀರ್ಘ ಸಮಾಲೋಚನೆ ನಡೆಸಿದರು.ಬಳಿಕ […] The post ದೇಶದ ವ್ಯವಸ್ಥೆ ಶೀಘ್ರ ಬದಲಾವಣೆ: ತೆಲಂಗಾಣ ಸಿಎಂ ಭವಿಷ್ಯ appeared first on Sanjevani .
ಬಿಜೆಪಿ ಸರಕಾರ 9 ತಿಂಗಳು ಆಯಸ್ಸು, ಕುಮಾರಣ್ಣ ಸಿಎಂ ಆಗುತ್ತಾರೆ: ಸಿಎಂ ಇಬ್ರಾಹಿಂ ಭವಿಷ್ಯ
ಮೈಸೂರು, ಮೇ 26 : ಇನ್ನು ಕೇವಲ 9 ತಿಂಗಳಲ್ಲಿ ಆಡಳಿರೂಢ ಬಿಜೆಪಿ ಸರಕಾರ ಬೀಳಲಿದ್ದು, ಮತ್ತೆ ಜೆಡಿಎಸ್ ಅಧಿಕಾರ ಬರುತ್ತದೆ ಎಂದು ಪಕ್ಷದ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಭವಿಷ್ಯ ನುಡಿದಿದ್ದಾರೆ. ಮೈಸೂರಿನಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಇಬ್ರಾಹಿಂ, ಬಿಜೆಪಿ ಸರಕಾರಕ್ಕೆ ಇನ್ನು ಕೇವಲ 9 ತಿಂಗಳಷ್ಟೇ ಆಯಸ್ಸು. ನಂತರ ಜೆಡಿಎಸ್ ಅಧಿಕಾರಕ್ಕೆ ಬರುತ್ತದೆ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗುತ್ತಾರೆ
ಡಾ. ಅಪ್ಪಾಜಿ ಅವರ ಸಲಹೆಯಿಂದ ಸಿದ್ದಪಡಿಸಿದ ಬ್ರೇಡ್ಗೆ ಪೇಟೆಂಟ್: ಡಾ. ಬಿಡವೆ
ಕಲಬುರಗಿ,ಮೇ.26:ಪರಮ ಪೂಜ್ಯ ಡಾ. ಶರಣಬಸವಪ್ಪ ಅಪ್ಪಾ ಅವರ ಸಲಹೆ ಮತ್ತು ಮಾರ್ಗದರ್ಶನದ ಮೂಲಕ ಸಿದ್ದಪಡಿಸಿದ ಆರೋಗ್ಯಕರ ಬ್ರೇಡಗೆ ಪೇಟೆಂಟ್ ಬಂದಿದೆ. ಈ ಬ್ರೇಡ್ ಅತೀ ಬೇಡಿಕೆಯನ್ನು ಗಳಿಸಿಕೊಂಡಿದೆ. ಇದು ನಮ್ಮ ಸಂಸ್ಥೆಯ ಇತಿಹಾಸದಲ್ಲಿಯೇ ಮೊದಲ ಪೇಟೆಂಟ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದು ಶರಣಬಸವ ವಿಶ್ವವಿದ್ಯಾಲಯದ ಕುಲಸಚಿವ ಡಾ. ಅನಿಲಕುಮಾರ ಜಿ. ಬಿಡವೆ ಶ್ಲಾಘಿಸಿದರು. ನಗರದ ದೊಡ್ಡಪ್ಪ ಅಪ್ಪ ಸಭಾಮಂಟಪದಲ್ಲಿ ಶರಣಬಸವ ವಿಶ್ವವಿದ್ಯಾಲಯ ಕೆಎಸ್ಸಿಎಸ್ಟಿ ಐಪಿ ಸೆಲ್ ಮತ್ತು ಇಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಬಾಲಕ ಬಾಲಕಿಯರ ವಿಭಾಗ ಹಾಗೂ […] The post ಡಾ. ಅಪ್ಪಾಜಿ ಅವರ ಸಲಹೆಯಿಂದ ಸಿದ್ದಪಡಿಸಿದ ಬ್ರೇಡ್ಗೆ ಪೇಟೆಂಟ್: ಡಾ. ಬಿಡವೆ appeared first on Sanjevani .
ಸಹಾರಾ ಗ್ರೂಪ್ ಕಂಪನಿಗಳ ವಿರುದ್ಧ ತನಿಖೆ: ಹೈಕೋರ್ಟ್ ತಡೆಯಾಜ್ಞೆ ರದ್ದುಗೊಳಿಸಿದ ಸುಪ್ರೀಂ
ನವದೆಹಲಿ, ಮೇ 26: ಸಹಾರ ಗ್ರೂಪ್ಗೆ ಸಂಬಂಧಿಸಿದ ಒಂಬತ್ತು ಕಂಪನಿಗಳ ತನಿಖೆಗೆ ತಡೆ ನೀಡಿದ್ದ ದೆಹಲಿ ಹೈಕೋರ್ಟ್ನ ಆದೇಶವನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದೆ. ಬೀಸೋ ದೊಣ್ಣೆಯಿಂದ ತಪ್ಪಿಸಿಕೊಂಡಿದ್ದ ಸಹಾರ ಗ್ರೂಪ್ಗೆ ಮತ್ತೆ ಪೀಕಲಾಟ ಶುರುವಾಗಿದೆ. ಸಹಾರ ಗ್ರೂಪ್ನ ಕಂಪನಿಗಳು ನಡೆಸಿರುವ ಅಕ್ರಮ ವಹಿವಾಟಿನ ಪ್ರಕರಣ ಇದಾಗಿದೆ. ಗಂಭೀರ ವಂಚನೆ ತನಿಖಾ ಕಚೇರಿ (SFIO- Serious Fraud Investigation
ವೇಶ್ಯಾವಾಟಿಕೆ ಕಾನೂನುಬದ್ದ: ಸುಪ್ರೀಂ ಮಹತ್ವದ ಆದೇಶ
ನವದೆಹಲಿ, ಮೇ.26- ವೇಶ್ತಾವಾಟಿಕೆ ಕಾನೂನು ಬದ್ಧವಾಗಿದ್ದು, ಈ ವಿಚಾರದಲ್ಲಿ ಪೊಲೀಸರು ಮಧ್ಯ ಪ್ರವೇಶಿಸುವಂತಿಲ್ಲ ಅಥವಾ ಕ್ರಿಮಿನಲ್ ಕ್ರಮ ಕೈಗೊಳ್ಳಬಾರದು ಸುಪ್ರೀಂಕೋರ್ಟ್ ಇಂದು ಮಹತ್ವದ ಆದೇಶ ನೀಡಿದೆ.ವೇಶ್ಯಾವಾಟಿಕೆಯು ಒಂದು ವೃತ್ತಿಯಾಗಿದೆ ಮತ್ತು ಲೈಂಗಿಕ ಕಾರ್ಯಕರ್ತೆಯರು ಕಾನೂನಿನಡಿಯಲ್ಲಿ ಘನತೆ ಮತ್ತು ಸಮಾನ ರಕ್ಷಣೆಗೆ ಅರ್ಹರು ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ.ಸುಪ್ರೀಂಕೋರ್ಟ್ ನ ನ್ಯಾಯಮೂರ್ತಿ ಎಲ್ ನಾಗೇಶ್ವರ ರಾವ್ ನೇತೃತ್ವದ ತ್ರಿಸದಸ್ಯ ಪೀಠ ಲೈಂಗಿಕ ಕಾರ್ಯಕರ್ತರ ಹಕ್ಕುಗಳನ್ನು ಕಾಪಾಡಲು ಆರು ನಿರ್ದೇಶನಗಳನ್ನು ನೀಡಿದೆ.ಚಲೈಂಗಿಕ ಕಾರ್ಯಕರ್ತರು ಕಾನೂನಿನ ರಕ್ಷಣೆಗೆ ಸಮಾನವಾಗಿ ಅರ್ಹರಾಗಿರುತ್ತಾರೆ. ಕ್ರಿಮಿನಲ್ […] The post ವೇಶ್ಯಾವಾಟಿಕೆ ಕಾನೂನುಬದ್ದ: ಸುಪ್ರೀಂ ಮಹತ್ವದ ಆದೇಶ appeared first on Sanjevani .
ಬಳ್ಳಾರಿ: 300 ಕ್ಕೂ ಹೆಚ್ಚು ಮಾವು ತಳಿಗಳ ಪ್ರದರ್ಶನ, ಮಾರಾಟ ಮೇಳ
ಬಳ್ಳಾರಿ,ಮೇ 26: ತೋಟಗಾರಿಕೆ ಇಲಾಖೆಯಿಂದ ಆಜಾದಿ ಕಾ ಅಮೃತ ಮಹೋತ್ಸವದ ಅಂಗವಾಗಿ ಕಿಸಾನ್ ಭಾಗಿದಾರಿ ಪ್ರಾಥಮಿಕ ಹಮಾರಿ ಕ್ಯಾಂಪೈನ್ ಆಶಯದಂತೆ ತೋಟಗಾರಿಕೆ ಇಲಾಖೆ ಹಾಗೂ ಹಾಪ್ ಕಾಮ್ಸ್ ಸಹಯೋಗದಲ್ಲಿ ಮೇ 30ರಿಂದ ಜೂನ್1ವರೆಗೆ ತಾಲೂಕು ಕಚೇರಿ ಆವರಣದಲ್ಲಿ ಮಾವು ಮೇಳ-2022 ಪ್ರದರ್ಶನ ಮತ್ತು ಮಾರಾಟ ಮಳಿಗೆಗಳಿಗೆ ಅವಕಾಶ ಕಲ್ಪಿಸಲಾಗಿದೆ ಎಂದು ತೋಟಗಾರಿಕೆ ಉಪನಿರ್ದೇಶಕರಾದ ಎಸ್.ಪಿ ಭೋಗಿ ಪ್ರಕಟಣೆಯಲ್ಲಿ
ಇಂದಿರಾ ಕ್ಯಾಂಟೀನ್ಗಳಲ್ಲಿ ಇನ್ನು ಮುಂದೆ ಇಸ್ಕಾನ್ ಊಟ: ಬೆಲೆ ದುಬಾರಿ ಸಾಧ್ಯತೆ
ಬೆಂಗಳೂರು, ಮೇ26: ಸಿದ್ದರಾಮಯ್ಯ ಸರ್ಕಾರದಲ್ಲಿ ಪ್ರಾರಂಭವಾಗಿದ್ದ ಇಂದಿರಾ ಕ್ಯಾಂಟೀನ್ ಯೋಜನೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಸೊರಗುತ್ತಿತ್ತು. ಇಂದಿರಾಕ್ಯಾಂಟೀನ್ ನಲ್ಲಿನ ಊಟದ ಸೌಲಭ್ಯ ಸರಿಯಾಗಿಲ್ಲ ಎಂಬ ಆರೋಪಗಳು ಕೇಳಿಬಂದಿದ್ದವು. ಇದರಿಂದಾಗಿ ಬಿಬಿಎಂಪಿ ಪಾಲಿಕೆ ವ್ಯಾಪ್ತಿಯಲ್ಲಿರುವ ಕ್ಯಾಂಟೀನ್ಗಳಿಗೆ ಇಸ್ಕಾನ್ ಊಟವನ್ನು ತರಿಸಲು ಸಿದ್ದವಾಗಿದೆ. ಇನ್ನು ಮುಂದೆ ಇಂದಿರಾ ಕ್ಯಾಂಟೀನ್ ನಲ್ಲಿ ಇಸ್ಕಾನ್ ಊಟ ಲಭ್ಯವಾಗಲಿದೆ. ಈ ಕುರಿತಂತೆ ಮಾಹಿತಿ ನೀಡಿದ
ಕಲಬುರಗಿ,ಮೇ.26:ಅಫಜಲಪೂರ ತಾಲೂಕಿನ ಅರ್ಜುಣಗಿ ಗ್ರಾಮದಲ್ಲಿ ಪ್ರತಿ ವರ್ಷ ನಡೆಯುವ ಶ್ರೀ ಮಾತಾ ಚೌಡೇಶ್ವರಿ ಜಾತ್ರಾಮಹೋತ್ಸವವನ್ನು ಮೂರು ದಿವಸಗಳ ಪರ್ಯಂತ ವಿಜ್ರಂಭಣೆಯಿಂದ ಜರಗುವುದು.ದಿನಾಂಕ 29.05.2022ರಂದು ರವಿವಾರ ಸಂಜೆ .05.00ಗಂಟೆಗೆ ಪೂಜಾರಿಯವರ ಮನೆಯಿಂದ ಗ್ರಾಮದ ಪ್ರಮುಖ ಬೀದಿಗಳ ಮುಖಾಂತರ ಶ್ರೀ ಮಾತಾ ಚೌಡೇಶ್ವರಿ ದೇವಾಲಯ ವರೆಗೂ ಸಕಲ ವಾಧ್ಯ ಮೇಳದೊಂದಿಗೆ ಪಲ್ಲಕ್ಕಿ ಮೆರವಣಿಗೆ ನಂತರ ಅಂದೇ ರಾತ್ರಿ ಸುಮಾರು 12 ಘಂಟೆಗೆ ಸಕಲ ವಾದ್ಯ ಮೇಳದೊಂದಿಗೆ ಜೈಕಾರ ಮಧ್ಯೆ ಬೆಳ್ಳಿ ಬಾಳ ಬಟ್ಟಲು ಕಾರ್ಯಕ್ರಮ ಅದ್ದೂರಿಯಿಂದ ಜರುಗುವುದು .ದಿನಾಂಕ 30.05.2022ರಂದು […] The post ಶ್ರೀ ಚೌಡೇಶ್ವರಿ ಜಾತ್ರಾ ಮಹೋತ್ಸವ appeared first on Sanjevani .
ಪ್ರತಿವರ್ಷಮೇ26ರಂದು,ರಾಷ್ಟ್ರೀಯಪೇಪರ್ಏರ್ಪ್ಲೇನ್ದಿನವನ್ನಾಗಿ ಆಚರಿಸಲಾಗುವುದು.ಸಾವಿರಾರುವರ್ಷಗಳಿಂದಇರುವಸರಳಏರೋನಾಟಿಕಲ್ಆಟಿಕೆಯನ್ನುಗೌರವಿಸುತ್ತದೆ. ರಾಷ್ಟ್ರೀಯಪೇಪರ್ಏರ್ಪ್ಲೇನ್ದಿನ ಮಜಾದ ಜೊತೆಗೆ ಸಂತೋಷ ನೀಡಲಿದೆ. ಈಅಗ್ಗದ,ಆರೋಗ್ಯಕರಮತ್ತುಉತ್ತೇಜಕರೀತಿಯಮನರಂಜನೆಯುಬಹಳಷ್ಟುಸಂತೋಷವನ್ನುತರುತ್ತದೆ. ಕಾಗದದವಿಮಾನಗಳಬಳಕೆಯುಚೀನಾದಲ್ಲಿ2,000ವರ್ಷಗಳಹಿಂದೆಹುಟ್ಟಿಕೊಂಡಿತುಎಂದುಹಲವರುನಂಬುತ್ತಾರೆ.ಆಧುನಿಕಕಾಗದದವಿಮಾನಗಳರಚನೆಯಆರಂಭಿಕದಿನಾಂಕವನ್ನು1909ಎಂದುಹೇಳಲಾಗಿದೆ. ಅತಿದೊಡ್ಡಕಾಗದದವಿಮಾನವು59.74ಅಡಿಗಳರೆಕ್ಕೆಗಳನ್ನುಹೊಂದಿತ್ತು.ಜರ್ಮನಿಯವಿದ್ಯಾರ್ಥಿಗಳುಮತ್ತುಉದ್ಯೋಗಿಗಳುಇದನ್ನು28ಸೆಪ್ಟೆಂಬರ್2013ರಂದುರಚಿಸಿದರು.ಜೋಅಯೂಬ್ಅವರುಫೆಬ್ರವರಿ2012ರಲ್ಲಿಕಾಗದದವಿಮಾನದಿಂದಅತಿಹೆಚ್ಚುದೂರವನ್ನುಹಾರಿಸಿದರು.ಅವರವಿಮಾನವು226ಅಡಿ, 10ಇಂಚುಗಳಷ್ಟುಹಾರಿತು.ದೀರ್ಘಾವಧಿಯಕಾಗದದವಿಮಾನವು29.2ಸೆಕೆಂಡುಗಳನ್ನುಹಾರಿಸಿತು. ನೀವುವಿಮಾನವನ್ನುಮುಂದಕ್ಕೆಎಸೆದಾಗ,ಇದನ್ನುಥ್ರಸ್ಟ್ಎಂದುಕರೆಯಲಾಗುತ್ತದೆ. ಲಿಫ್ಟ್ಎನ್ನುವುದುರೆಕ್ಕೆಗಳಮೇಲೆಕಾರ್ಯನಿರ್ವಹಿಸುವಒಂದುಶಕ್ತಿಯಾಗಿದೆಮತ್ತುವಿಮಾನವುಮೇಲಕ್ಕೆಚಲಿಸಲುಸಹಾಯಮಾಡುತ್ತದೆ.ದೊಡ್ಡರೆಕ್ಕೆಗಳುಲಿಫ್ಟ್ಅನ್ನುಹೆಚ್ಚಿಸುತ್ತವೆ.ಗುರುತ್ವಾಕರ್ಷಣೆಯುವಿಮಾನವನ್ನುಕೆಳಕ್ಕೆಎಳೆಯುತ್ತದೆ.ಸರಿಯಾದವಸ್ತುಗಳುಹಗುರವಾದವಿಮಾನವನ್ನುರಚಿಸುತ್ತವೆ,ಅದುಹೆಚ್ಚುಕಾಲಉಳಿಯುತ್ತದೆ.ವಿಮಾನದಬಾಲವುಎಳೆತವನ್ನುಉಂಟುಮಾಡುತ್ತದೆ.ಇದುಒತ್ತಡಕ್ಕೆವಿರುದ್ಧವಾಗಿದೆಮತ್ತುಇದುವಿಮಾನವನ್ನುನಿಧಾನಗೊಳಿಸುತ್ತದೆ The post ಪೇಪರ್ಏರ್ಪ್ಲೇನ್ದಿನ appeared first on Sanjevani .
ಕಲಬುರಗಿ,ಮೇ.26: ಗುಲಬರ್ಗಾ ವಿಶ್ವವಿದ್ಯಾಲಯದ ವ್ಯಾಪ್ತಿಯ ಬೀದರ ನಗರದ ಸನ್ ಸಾಫ್ಟ್ ಪದವಿ ಮಹಾವಿದ್ಯಾಲಯದಲ್ಲಿ ಮೇ 25 (ಬುಧವಾರ) ರಂದು ಜರುಗಿದ ಪದವಿ ಪರೀಕ್ಷೆಯಲ್ಲಿ ಕಿರಿಯ ಮೇಲ್ವಿಚಾರಕರು, ಕಾಲೇಜು ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಸಾಮೂಹಿಕ ನಕಲಿನಲ್ಲಿ ಭಾಗಿಯಾಗಿರುವ ಬಗ್ಗೆ ವಿಶ್ವವಿದ್ಯಾಲಯದ ಕುಲಪತಿಗಳು ವರದಿ ಮಾಡಿರುವ ಹಿನ್ನೆಲೆಯಲ್ಲಿ ಸದರಿ ಪರೀಕ್ಷಾ ಕೇಂದ್ರವನ್ನು ರದ್ದುಗೊಳಿಸಲಾಗಿದೆ ಎಂದು ವಿಶ್ವವಿದ್ಯಾಲಯದ ಕುಲಸಚಿವ(ಮೌಲ್ಯಮಾಪನ) ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಸನ್ ಸಾಫ್ಟ್ ಪದವಿ ಮಹಾವಿದ್ಯಾಲಯದಲ್ಲಿ ಪರೀಕ್ಷೆ ಬರೆಯುತ್ತಿದ್ದ ಎಲ್ಲಾ ವಿದ್ಯಾರ್ಥಿಗಳು ಮುಂದಿನ ಪರೀಕ್ಷೆಗಳನ್ನು ಬೀದರಿನ ಬಿ.ವಿ.ಬಿ ಪದವಿ […] The post ಕಾಲೇಜು ಸಿಬ್ಬಂದಿ ಮತ್ತು ವಿದ್ಯಾರ್ಥಿಗಳಿಂದ ಸಾಮೂಹಿಕ ನಕಲು:ಬೀದರ ಸನ್ ಸಾಫ್ಟ್ ಪದವಿ ಮಹಾವಿದ್ಯಾಲಯ ಪರೀಕ್ಷಾ ಕೇಂದ್ರ ರದ್ದು appeared first on Sanjevani .
ವಿಡಿಯೋ: 'ಬಂತು ಬಂತು ಟ್ರೈನ್ ಬಂತು' ಖುಷಿಯಲ್ಲಿ ನೃತ್ಯ ಮಾಡಿದ ಪ್ರಯಾಣಿಕರು
ಭೋಪಾಲ್ ಮೇ 26: ಬುಧವಾರ ತಡರಾತ್ರಿ ಮಧ್ಯಪ್ರದೇಶದ ರತ್ಲಾಮ್ ರೈಲು ನಿಲ್ದಾಣದಲ್ಲಿ ಕುತೂಹಲಕಾರಿ ದೃಶ್ಯ ಕಂಡುಬಂದಿದೆ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋದಲ್ಲಿ ರೈಲ್ವೇ ನಿಲ್ದಾಣದಲ್ಲಿ ಹಲವಾರು ಪ್ರಯಾಣಿಕರು ಗರ್ಭಾ ಡ್ಯಾನ್ಸ್ ಮಾಡುತ್ತಿರುವ ದೃಶ್ಯ ಕಂಡು ಬಂದಿದೆ. ರಾತ್ರಿ ರೈಲ್ವೇ ನಿಲ್ದಾಣದ ಪ್ಲಾಟ್ಫಾರಂ ನಂ.5ರಲ್ಲಿ ಹತ್ತಾರು ಜನರ ಈ ಸ್ವಯಂಪ್ರೇರಿತ ಪ್ರದರ್ಶನಕ್ಕೆ ಕಾರಣವೇನೆಂದರೆ ರೈಲು ಸಮಯಕ್ಕಿಂತ 20 ನಿಮಿಷ
ರಾಷ್ಟ್ರ ರಾಜಕಾರಣದಲ್ಲಿ ಭಾರಿ ಬದಲಾವಣೆ: ಕೆಸಿಆರ್ ಕೊಟ್ಟ ಮುನ್ಸೂಚನೆ ಏನು?
ಬೆಂಗಳೂರು: ಶೀಘ್ರದಲ್ಲೇ ರಾಷ್ಟ್ರ ರಾಜಕಾರಣದಲ್ಲಿ ಬದಲಾವಣೆ ಆಗಲಿದೆ ಎಂದು ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರನ್ನು ಭೇಟಿಯಾದ ನಂತರ ಕೆಲವೇ ತಿಂಗಳಲ್ಲಿ ದೊಡ್ಡ ಸುದ್ದಿ ನೀಡುವುದಾಗಿ ತಿಳಿಸಿದ್ದಾರೆ. ಮಾಜಿ ಪ್ರಧಾನಿಯನ್ನು ಭೇಟಿಯಾದ ನಂತರ ಮಾತನಾಡಿದ ಅವರು ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು, ಭಾಷಣ ಮಾಡುವುದನ್ನು ಮತ್ತು ಸುಳ್ಳು ಭರವಸೆ ನೀಡುವುದನ್ನು
ಸನ್ನಡತೆ ಆಧಾರದ ಮೇಲೆ 11 ಜನ ಬಂದಿಗಳು ಬಿಡುಗಡೆ
ಕಲಬುರಗಿ,ಮೇ.26:ವಿವಿಧ ಅಪರಾಧ ಪ್ರಕರಣಗಳಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿ ಕಲಬುರಗಿ ಕಾರಾಗೃಹದಲ್ಲಿ 14 ವರ್ಷಗಳ ಕಾಲ ಶಿಕ್ಷೆ ಅನುಭವಿಸಿದ 10 ಜನ ಪುರುಷ ಹಾಗೂ ಓರ್ವ ಮಹಿಳಾ ಬಂದಿ ಸೇರಿದಂತೆ ಒಟ್ಟು 11 ಜನ ಬಂದಿಗಳನ್ನು ಸನ್ನಡತೆ ಆಧಾರದ ಮೇಲೆ ಗುರುವಾರ ಬಿಡುಗಡೆ ಮಾಡಲಾಯಿತು.ಕಲಬುರಗಿ ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕ ಪಿ.ಎಸ್. ರಮೇಶ ಅವರು ಬಂದಿಗಳಿಗೆ ಬಿಡುಗಡೆ ಪತ್ರ ನೀಡಿ ಶುಭ ಕೋರಿದರು.ಬಿಡುಗಡೆಗೊಂಡ ಬಂದಿಗಳ ವಿವರ ಇಂತಿದೆ. ಶ್ರೀಮಂತ ತಂದೆ ಭೀಮಶ್ಯಾ ನಾಯ್ಕೋಡಿ, ವಿಠ್ಠಲ್ ತಂದೆ ಶಿವರಾಯ ನಾಟೀಕಾರ, […] The post ಸನ್ನಡತೆ ಆಧಾರದ ಮೇಲೆ 11 ಜನ ಬಂದಿಗಳು ಬಿಡುಗಡೆ appeared first on Sanjevani .
ಮಾಡಿದವನ ಪಾಪ, ನನ್ನ ಬಾಯಲ್ಲಿ ಹೇಳಿಸಬೇಡಿ: ಡಿಕೆ ಶಿವಕುಮಾರ್ಗೆ ಕೆಎಸ್ ಈಶ್ವರಪ್ಪ ಟಾಂಗ್
ಡಿಕೆ ಶಿವಕುಮಾರ್ ವಿರುದ್ಧ ಇಡಿ ಚಾರ್ಜ್ಶೀಟ್ ಸಲ್ಲಿಕೆಯಾಗಿರುವ ಬಗ್ಗೆ ಮಾಜಿ ಸಚಿವ ಕೆಎಸ್ ಈಶ್ವರಪ್ಪ ಪ್ರತಿಕ್ರಿಯಿಸಿದ್ದು, ಈ ಬಗ್ಗೆ ನನಗೆ ಗೊತ್ತಿಲ್ಲ. ಮಾಡಿದವನ ಪಾಪ, ಆಡಿದವನ ಬಾಯಲ್ಲಿಯಂತೆ. ನನ್ನ ಬಾಯಲ್ಲಿ ಏಕೆ ಆಡಿಸುತ್ತೀರಿ. ಡಿಕೆಶಿನೋ ಇನ್ನೊಬ್ಬರ ಬಗ್ಗೆ ನನಗೆ ಗೊತ್ತಿಲ್ಲ, ಆದರೆ, ತಪ್ಪು ಮಾಡಿದವರಿಗೆ ಶಿಕ್ಷೆ ಆಗಬೇಕು ಎಂದು ಹೇಳಿದರು.