Yedrami | ಲಾರಿ-ಬೈಕ್ ಢಿಕ್ಕಿ: ಯುವಕ ಸ್ಥಳದಲ್ಲೇ ಮೃತ್ಯು
ಯಡ್ರಾಮಿ: ಲಾರಿ ಹಾಗೂ ಬೈಕ್ ನಡುವೆ ಸಂಭವಿಸಿದ ಅಪಘಾತದಲ್ಲಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ತಾಲೂಕಿನ ಮಾಗಣಗೇರಿ ಕ್ರಾಸ್ ಸಮೀಪ ನಡೆದಿದೆ. ಮೃತರನ್ನು ಸಿಂದಗಿ ತಾಲೂಕಿನ ಬ್ರಹ್ಮದೇವನಮಡು ಗ್ರಾಮದ ನಿವಾಸಿ ರುದ್ರಲಿಂಗ ರಂಗಾಪೂರ (23) ಎಂದು ಗುರುತಿಸಲಾಗಿದೆ. ಸಿಂದಗಿ ತಾಲೂಕಿನ ಗೋಲಗೇರಿಯಿಂದ ಯಡ್ರಾಮಿ ತಾಲೂಕಿನ ಬಿರಾಳ ಗ್ರಾಮದತ್ತ ಸ್ನೇಹಿತನ ಮನೆಗೆ ತೆರಳುತ್ತಿದ್ದ ವೇಳೆ, ಮಾಗಣಗೇರಿ ಕ್ರಾಸ್ ಬಳಿ ವಾಹನವೊಂದನ್ನು ಓವರ್ಟೇಕ್ ಮಾಡಲು ಯತ್ನಿಸಿದಾಗ, ಶಾಹಪುರದಿಂದ ಸಿಂದಗಿಯತ್ತ ಸಾಗುತ್ತಿದ್ದ ಲಾರಿಗೆ ಢಿಕ್ಕಿ ಹೊಡೆದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ ಎಂದು ತಿಳಿದು ಬಂದಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಯಡ್ರಾಮಿ ಸರ್ಕಾರಿ ಸಮುದಾಯ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಘಟನೆ ಯಡ್ರಾಮಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
Kalaburagi | ಎ.17ರಂದು ಬಸವ ಜಯಂತಿ ಅಂಗವಾಗಿ ರಸಪ್ರಶ್ನೆ ಸ್ಪರ್ಧೆ
ಕಲಬುರಗಿ: ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತು ಜಿಲ್ಲಾ ಘಟಕ ಮತ್ತು ಬಸವಾಭಿಮಾನಿಗಳ ಬಳಗ ಬಸವ ಸಮಿತಿ ಸಂಯುಕ್ತಾಶ್ರಯದಲ್ಲಿ 893ನೇ ಬಸವ ಜಯಂತ್ಯೋತ್ಸವದ ಅಂಗವಾಗಿ ವಚನ ಸಾಹಿತ್ಯಾಧಾರಿತ ಜಿಲ್ಲಾಮಟ್ಟದ ರಸಪ್ರಶ್ನೆ ಸ್ಪರ್ಧೆಯನ್ನು ಎ.17ರಂದು ಬೆಳಿಗ್ಗೆ 9 ಗಂಟೆಗೆ ಜಯನಗರದ ಅನುಭವ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಘಟಕದ ಅಧ್ಯಕ್ಷ ರವೀಂದ್ರ ಶಾಬಾದಿ ಹಾಗೂ ಸಂಯೋಜಕ ಚಂದ್ರಶೇಖರ ಪಾಟೀಲ ಬಿರಾಳ ತಿಳಿಸಿದ್ದಾರೆ. ಈ ರಸಪ್ರಶ್ನೆ ಸ್ಪರ್ಧೆ ಎರಡು ಹಂತಗಳಲ್ಲಿ ನಡೆಯಲಿದೆ. ಮೊದಲ ಹಂತದಲ್ಲಿ 50 ಅಂಕಗಳ ಬಹು ಆಯ್ಕೆಯ ಆನ್ಲೈನ್ ಲಿಖಿತ ಪರೀಕ್ಷೆ ನಡೆಯಲಿದ್ದು, ಇಬ್ಬರ ತಂಡಗಳು ಸೇರಿ ಒಂದೇ ಮೊಬೈಲ್ ಮೂಲಕ ಪರೀಕ್ಷೆ ಬರೆಯಬೇಕು. ಸ್ಪರ್ಧಾಳುಗಳು ತಮ್ಮದೇ ಇಂಟರ್ನೆಟ್ ಸಂಪರ್ಕ ಇರುವ ಸ್ಮಾರ್ಟ್ಫೋನ್ ತರಬೇಕು ಎಂದು ತಿಳಿಸಲಾಗಿದೆ. ಮೊದಲ ಹಂತದಲ್ಲಿ ಗರಿಷ್ಠ ಅಂಕ ಪಡೆದ 10 ತಂಡಗಳನ್ನು ಆಯ್ಕೆ ಮಾಡಿ, ಎರಡನೇ ಹಂತದಲ್ಲಿ 9 ಸುತ್ತುಗಳ ಮೌಖಿಕ ರಸಪ್ರಶ್ನೆ ನಡೆಸಲಾಗುತ್ತದೆ. ಬಸವಾದಿ ಶರಣರ ಜೀವನ, ವ್ಯಕ್ತಿತ್ವ ಮತ್ತು ಸಂದೇಶಗಳ ಕುರಿತು ಪ್ರಶ್ನೆಗಳು ಕೇಳಲಾಗುತ್ತವೆ. ಸ್ಪರ್ಧೆಯಲ್ಲಿ ಭಾಗವಹಿಸುವವರು 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿರಬೇಕು. ಶಾಲೆ ಅಥವಾ ಸಂಸ್ಥೆಗಳ ಮೂಲಕ ಭಾಗವಹಿಸುವವರು ಮುಖ್ಯಸ್ಥರಿಂದ ದೃಢೀಕರಣ ಪತ್ರ ತರಬೇಕು. ಇತರರು ವಯಸ್ಸಿನ ದೃಢೀಕರಣ ದಾಖಲೆ ಸಲ್ಲಿಸಬೇಕು. ಈ ಸ್ಪರ್ಧೆಗೆ ಯಾವುದೇ ಪ್ರವೇಶ ಶುಲ್ಕವಿಲ್ಲ. ಏಪ್ರಿಲ್ 16ರಂದು ಸಂಜೆ 5.30ರೊಳಗೆ ನೋಂದಣಿ ಮಾಡಿಸಬೇಕು. ಸ್ಪರ್ಧಾಳುಗಳು ಏಪ್ರಿಲ್ 17ರಂದು ಬೆಳಿಗ್ಗೆ 8.30ಕ್ಕೆ ಸ್ಪರ್ಧೆ ನಡೆಯುವ ಸ್ಥಳದಲ್ಲಿ ಹಾಜರಿರಬೇಕು ಎಂದು ಆಯೋಜಕರು ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಡಿ.ಎನ್. ಪಾಟೀಲ-8105954155, ಚಂದ್ರಶೇಖರ ಪಾಟೀಲ-9448435567, ನಾಗೇಂದ್ರ ನಾಗೂರ-9900342876, ಸಂತೋಷ ಹೂಗಾರ-9972608310 ಇವರನ್ನು ಸಂಪರ್ಕಿಸಬಹುದು ಎಂದು ಹೇಳಿದರು. ಡಾ. ಶಿವರಂಜನ ಸತ್ಯಂಪೇಟೆ, ಡಾ.ಡಿ.ಎನ್.ಪಾಟೀಲ, ನಾಗಣ್ಣ ಶಾಬಾದಿ ನಾಗರಾಜ ಪಾಟೀಲ ಹುಳಗೇರಿ, ಬಸವರಾಜ ಧೂಳಾಗುಂಡಿ ಸುದ್ದಿಗೋಷ್ಠಿಯಲ್ಲಿದ್ದರು.
Tirupati: ತಿರುಪತಿ ಭಕ್ತರ ಗಮನಕ್ಕೆ: ಜುಲೈ ತಿಂಗಳ ದರ್ಶನ, ಸೇವಾ ಟಿಕೆಟ್ಗಳ ವೇಳಾಪಟ್ಟಿ ಬಿಡುಗಡೆ
ತಿರುಪತಿ ತಿರುಮಲ ಶ್ರೀವೆಂಕಟೇಶ್ವರ ಸ್ವಾಮಿಯ ದರ್ಶನ ಪಡೆಯಲು ಬಯಸುವ ಭಕ್ತರಿಗಾಗಿ ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ಜುಲೈ ತಿಂಗಳ ದರ್ಶನ ಮತ್ತು ವಿವಿಧ ಸೇವಾ ಟಿಕೆಟ್ಗಳ ಆನ್ಲೈನ್ ಬಿಡುಗಡೆಯ ದಿನಾಂಕಗಳನ್ನು ಘೋಷಿಸಿದೆ. ಭಕ್ತರು ತಮ್ಮ ಪ್ರಯಾಣವನ್ನು ವ್ಯವಸ್ಥಿತವಾಗಿ ಯೋಜಿಸಲು ಅನುಕೂಲವಾಗುವಂತೆ ಈ ವೇಳಾಪಟ್ಟಿಯನ್ನು ಹಂತ ಹಂತವಾಗಿ ಬಿಡುಗಡೆ ಮಾಡಲಾಗುತ್ತಿದೆ. ಟಿಕೆಟ್ ಬುಕಿಂಗ್ ಪ್ರಕ್ರಿಯೆ ಆರಂಭ ಜುಲೈ ತಿಂಗಳ
ದ್ವಿತೀಯ ಪಿಯುಸಿ ಫಲಿತಾಂಶ : ವಾಫಿಯಾಗೆ ಶೇ.87.5 ಅಂಕ
ಮಂಗಳೂರು : ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಗೊಂಡಿದ್ದು, ಕಲ್ಲಡ್ಕದ ಅನುಗ್ರಹ ಮಹಿಳಾ ಕಾಲೇಜಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ ವಾಫಿಯಾ 525 (ಶೇ.87.5) ಅಂಕ ಗಳಿಸಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. ಇವರು ವಿಟ್ಲ ಕಡಂಬು ನಿವಾಸಿ ಅಬ್ದುಲ್ ಬಶೀರ್ ಹಾಗೂ ಮುಂತಾಝ್ ದಂಪತಿಯ ಪುತ್ರಿ.
ಚುನಾವಣೆ ಒತ್ತಡಕ್ಕೆ ಮಣಿಯಬೇಡಿ, ಮತದಾರರ ಹಕ್ಕು ಕಾಪಾಡಿ: ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್ ಸೂಚನೆ
ಹೊಸದಿಲ್ಲಿ: ಪಶ್ಚಿಮ ಬಂಗಾಳದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್ಐಆರ್) ಕುರಿತು ಸುಪ್ರೀಂ ಕೋರ್ಟ್ ಕಳವಳ ವ್ಯಕ್ತಪಡಿಸಿದ್ದು, ಚುನಾವಣೆಗಳ ಒತ್ತಡದಿಂದ ಪ್ರಕ್ರಿಯೆಯನ್ನು ವಿಕೃತಗೊಳಿಸಬಾರದು ಎಂದು ಎಚ್ಚರಿಸಿದೆ. ಮತದಾರರು ಮತದಾರರ ಪಟ್ಟಿಯಲ್ಲಿ ಉಳಿಯುವ ಹಕ್ಕು ಹೊಂದಿದ್ದಾರೆ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ. ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಹಾಗೂ ನ್ಯಾಯಮೂರ್ತಿ ಜೋಯ್ಮಲ್ಯ ಬಾಗ್ಚಿ ಅವರನ್ನೊಳಗೊಂಡ ಪೀಠವು, ಮತದಾರರ ಪಟ್ಟಿಯಿಂದ ಹೆಸರು ಕೈಬಿಡಲಾದವರ ಮೇಲ್ಮನವಿಗಳ ವಿಚಾರಣೆಯ ನಡುವೆ ಸಲ್ಲಿಸಲಾದ ರಿಟ್ ಅರ್ಜಿಯನ್ನು ವಿಚಾರಣೆ ನಡೆಸಿತು. ಅರ್ಜಿದಾರರು, ಮತದಾರರ ಪಟ್ಟಿಯನ್ನು ಅಂತಿಮಗೊಳಿಸಲು ನಿಗದಿಪಡಿಸಿರುವ ಕಟ್-ಆಫ್ ದಿನಾಂಕವನ್ನು ವಿಸ್ತರಿಸಬೇಕು ಎಂದು ಕೋರಿದ್ದಾರೆ. ತಮ್ಮ ಮೇಲ್ಮನವಿಗಳು ಅನುಕೂಲಕರವಾಗಿ ತೀರ್ಮಾನವಾದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಮತ ಚಲಾಯಿಸಲು ಅವಕಾಶ ನೀಡಬೇಕು ಎಂಬದು ಅವರು ವಾದಿಸಿದರು. ಭಾರತೀಯ ಚುನಾವಣಾ ಆಯೋಗ (ಇಸಿಐ) ಎಪ್ರಿಲ್ 9ರಿಂದ ಮತದಾರರ ಪಟ್ಟಿಯನ್ನು ಸ್ಥಗಿತಗೊಳಿಸಿರುವುದಾಗಿ ತಿಳಿಸಿದೆ. ವಿಚಾರಣೆ ವೇಳೆ ಪೀಠ, “ಮತದಾರರ ಪಟ್ಟಿಯಲ್ಲಿ ಉಳಿಯುವುದು ಕೇವಲ ಕಾನೂನು ಹಕ್ಕು ಮಾತ್ರವಲ್ಲ, ಭಾವನಾತ್ಮಕ ಹಕ್ಕು ಕೂಡ. ಅದನ್ನು ಕಾಪಾಡುವುದು ಅಗತ್ಯ. ಚುನಾವಣೆಗಳ ಆತುರದಿಂದ ನಾವು ಕುರುಡರಾಗಲು ಸಾಧ್ಯವಿಲ್ಲ,” ಎಂದು ಹೇಳಿತು. ಆರಂಭದಲ್ಲಿ ನ್ಯಾಯಾಲಯ ಮಧ್ಯಪ್ರವೇಶಿಸಲು ಹಿಂಜರಿದರೂ, ಬಾಕಿ ಮೇಲ್ಮನವಿಗಳನ್ನು ನ್ಯಾಯಮಂಡಳಿಗಳು ತೀರ್ಮಾನಿಸಲು ಅವಕಾಶ ನೀಡಬೇಕು ಎಂದು ಸೂಚಿಸಿತು. ಆದರೆ ಅರ್ಜಿದಾರರ ಪರ ವಕೀಲರು, ಅಗತ್ಯ ದಾಖಲೆಗಳನ್ನು ಸಲ್ಲಿಸುವಲ್ಲಿ ಚುನಾವಣಾ ಆಯೋಗ ಸಹಕರಿಸುತ್ತಿಲ್ಲ ಎಂದು ಆರೋಪಿಸಿದರು. ಈ ಸಂದರ್ಭದಲ್ಲಿ ನ್ಯಾಯಮೂರ್ತಿ ಬಾಗ್ಚಿ, “ಮತದಾರರ ಸಮಸ್ಯೆಗಳನ್ನು ಸರಿಯಾಗಿ ಪರಿಶೀಲಿಸಲು ಬಲವಾದ ಮೇಲ್ಮನವಿ ವ್ಯವಸ್ಥೆ ಅಗತ್ಯ,” ಎಂದು ಹೇಳಿದರು. ಪೀಠವು ಪಶ್ಚಿಮ ಬಂಗಾಳದ ಎಸ್ಐಆರ್ ಪ್ರಕ್ರಿಯೆಯಲ್ಲಿ ಕೆಲವು ವಿಚಲನಗಳಿರುವುದನ್ನೂ ಗಮನಿಸಿದೆ. “ತಾರ್ಕಿಕ ವ್ಯತ್ಯಾಸ” ಎಂಬ ಹೊಸ ವರ್ಗವನ್ನು ಪರಿಚಯಿಸಿರುವುದನ್ನು ಉಲ್ಲೇಖಿಸಿದೆ. “2002ರ ಮತದಾರರನ್ನು ದಾಖಲೆಗಳಿಲ್ಲದೆ ಉಳಿಸುವುದಾಗಿ ನೀವು ಹಿಂದಿನ ಪ್ರಕರಣದಲ್ಲಿ ಹೇಳಿದ್ದೀರಿ. ಆದರೆ ಇಲ್ಲಿ ಅದನ್ನು ಹೇಗೆ ನೋಡಲಾಗಿದೆ?” ಎಂದು ಪೀಠವು ಚುನಾವಣಾ ಆಯೋಗವನ್ನು ಪ್ರಶ್ನಿಸಿತು. ದಾಖಲೆಗಳ ಪರಿಶೀಲನೆ ವೇಳೆ ದೋಷಗಳ ಸಾಧ್ಯತೆ ಇರುವುದನ್ನೂ ನ್ಯಾಯಾಲಯ ಒಪ್ಪಿಕೊಂಡಿದೆ. “ದಿನಕ್ಕೆ ಸಾವಿರ ದಾಖಲೆಗಳನ್ನು ಪರಿಶೀಲಿಸಿದರೆ ತಪ್ಪುಗಳ ಸಂಭವ ಸಹಜ. ಅದಕ್ಕಾಗಿ ದೃಢವಾದ ಮೇಲ್ಮನವಿ ವ್ಯವಸ್ಥೆ ಅಗತ್ಯ,” ಎಂದು ನ್ಯಾಯಮೂರ್ತಿ ಬಾಗ್ಚಿ ಹೇಳಿದರು. ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಗಳು ಎಪ್ರಿಲ್ 23 ಮತ್ತು 29ರಂದು ನಡೆಯಲಿದ್ದು, ಮೇ 4ರಂದು ಮತ ಎಣಿಕೆ ನಡೆಯಲಿದೆ.
ಹರಿಹರ ಪಂಚಮಸಾಲಿ ಪೀಠದಿಂದ ವಚನಾನಂದ ಸ್ವಾಮೀಜಿ ಉಚ್ಚಾಟನೆ ಮಾಡಲು ಟ್ರಸ್ಟಿಗಳು ನಿರ್ಣಯ ಕೈಗೊಂಡಿದ್ದಾರೆ. ಟ್ರಸ್ಟಿಗಳ ಈ ನಿರ್ಧಾರಕ್ಕೆ ಭಕ್ತರಿಂದ ವಿರೋಧ ವ್ಯಕ್ತವಾಗಿದೆ. ಧರ್ಮದರ್ಶಿಗಳಿಗೆ ಚಪ್ಪಲಿ ಪ್ರದರ್ಶಿಸಿ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.
ಅನಗತ್ಯ ಹೇಳಿಕೆ ನೀಡಿದರೆ ಶಿಸ್ತುಕ್ರಮ; ಶಾಸಕರಿಗೆ ಡಿ.ಕೆ.ಶಿವಕುಮಾರ್ ಎಚ್ಚರಿಕೆ
25 ಜನ ಶಾಸಕರು ದಿಲ್ಲಿಗೆ ತೆರಳಿರುವ ಬಗ್ಗೆ ಡಿಸಿಎಂ ಹೇಳಿದ್ದೇನು?
ಸೈಕಲ್ ರ್ಯಾಲಿ ವೇಳೆ ಅಭಿಮಾನಿ ಎಸೆದ ಹೂಮಾಲೆ ಕಂಡು ಬಾಂಬ್ ಅಂತಾ ಹೆದರಿ ಜೀಪ್ ಹತ್ತಿದ ದಳಪತಿ ವಿಜಯ್
ತಮಿಳುನಾಡು ವಿಧಾನಸಭೆ ಚುನಾವಣೆಯ ಹಿನ್ನಲೆಯಲ್ಲಿ TVK ಪಕ್ಷದ ಪ್ರಚಾರದ ಭರಾಟೆ ಜೋರಾಗಿ ಸಾಗುತ್ತಿದೆ. ಇದರ ಭಾಗಿವಾಗಿಯೇ ಇತ್ತೀಚೆಗೆ ಕನ್ಯಾಕುಮಾರಿಯಲ್ಲಿ ನಡೆದ ಪ್ರಚಾರದ ವೇಳೆ ವಿಜಯ್ ಸೈಕಲ್ ರೈಡ್ ಮಾಡುವ ಮೂಲಕ ಮತಬೇಟೆಗೆ ಮುಂದಾಗಿದ್ದು, ಈ ಸಮಯದಲ್ಲಿ ಅಭಿಮಾನಿಯೊರ್ವ ಅವರತ್ತ ಹೂಮಾಲೆಯನ್ನು ಎಸೆದಿದ್ದು, ಇದನ್ನು ಕಂಡು ಗಾಬರಿಯಾಗಿ ಪ್ರಚಾರದ ಕಾರಿನತ್ತ ಓಡಿದ್ದಾರೆ. ಸದ್ಯ ಈ ವಿಡಿಯೋ ನೋಡಿದ ನೆಟ್ಟಿಗರು ಬಾಂಬ್ ಎಂದು ಭಾವಿಸಿ ಓಡಿರಬಹುದು ಎಂದು ಚರ್ಚೆ ನಡೆಸುತ್ತಿದ್ದಾರೆ. ಈ ಕುರಿತು ಮಾಹಿತಿ ಇಲ್ಲಿದೆ..
ಮಂಗಳೂರು: ಪಿಯುಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ದಿಶಾಗೆ ಮಲಬಾರ್ ಗೋಲ್ಡ್ನಿಂದ ಸನ್ಮಾನ
ಮಂಗಳೂರು: ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ ಮಂಗಳೂರು ವತಿಯಿಂದ ಪಿಯುಸಿಯಲ್ಲಿ ರಾಜ್ಯಕ್ಕೆ ಪ್ರಥಮ ರ್ಯಾಂಕ್ ಪಡೆದ ದಿಶಾ ಮೂಡಬಿದ್ರಿ ಅವರನ್ನು ಸನ್ಮಾನಿಸಲಾಯಿತು. ಮಲಬಾರ್ ಗೋಲ್ಡ್ ಮಂಗಳೂರು ಇದರ ಗ್ರಾಹಕರಾದ ಗಂಗಾಧರ ಪೂಜಾರಿ ಮತ್ತು ರಶ್ಮಿ ಜಿ. ಪೂಜಾರಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ಮಾತನಾಡಿದ ದಿಶಾ, “ನನಗೆ ತುಂಬಾ ಖುಷಿಯಾಗಿದೆ” ಎಂದು ತಿಳಿಸಿ, ತನ್ನ ಸಾಧನೆಗೆ ಶ್ರಮಿಸಿದ ಎಲ್ಲರಿಗೂ ಧನ್ಯವಾದಗಳನ್ನು ಸಲ್ಲಿಸಿದರು. ದಿಶಾಳ ತಾಯಿ ವೀಣಾ ಅವರು ಮಾತನಾಡಿ, ಮಲಬಾರ್ ಗೋಲ್ಡ್ಗೆ ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸಿದರು. ಅದೇ ರೀತಿ ಆಳ್ವಾಸ್ ಕಾಲೇಜಿನ ಚೇರ್ಮನ್ ಮೋಹನ್ ಆಳ್ವ ಅವರ ಪ್ರೋತ್ಸಾಹ ಮತ್ತು ಮಾರ್ಗದರ್ಶನವನ್ನು ಶ್ಲಾಘಿಸಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಗಂಗಾಧರ ಪೂಜಾರಿ ಅವರು, “ ದಿಶಾ 600/600 ಅಂಕಗಳನ್ನು ಪಡೆದು ನಮ್ಮ ಜಿಲ್ಲೆಗೆ ಹೆಮ್ಮೆ ತಂದುಕೊಟ್ಟಿದ್ದಾರೆ. ಅವರ ಮುಂದಿನ ಭವಿಷ್ಯ ಉಜ್ವಲವಾಗಲಿ” ಎಂದು ಹಾರೈಸಿದರು. ಸ್ಟೋರ್ ಹೆಡ್ ಹಫೀಜ್ ರಹ್ಮಾನ್ ಮಾತನಾಡಿ, ಸಾಧನೆಗೆ ಯಾವುದೂ ಅಡ್ಡಿಯಾಗುವುದಿಲ್ಲ. ದಿಶಾ ಅವರ ಸಾಧನೆ ಎಲ್ಲ ವಿದ್ಯಾರ್ಥಿಗಳಿಗೆ ಮಾದರಿಯಾಗಲಿ ಎಂದು ಶುಭ ಹಾರೈಸಿದರು. ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ ಮಂಗಳೂರು ಸ್ಟೋರ್ ಹೆಡ್ ಹಫೀಜ್ ರಹ್ಮಾನ್, ಬ್ರಾಂಚ್ ಮ್ಯಾನೇಜರ್ ರಘುರಾಮ್ ಸಿ.ಎಸ್., ಮಾರ್ಕೆಟಿಂಗ್ ಮ್ಯಾನೇಜರ್ ಶೇಖ್ ಫರ್ಹಾನ್, ಸೇಲ್ಸ್ ಮ್ಯಾನೇಜರ್ ಗಿರೀಶ್ ಶೆಟ್ಟಿ, ಸಮೀರ್ (ಡೆಪ್ಯೂಟಿ ಸೇಲ್ಸ್ ಮ್ಯಾನೇಜರ್) ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ದೇಶದಾದ್ಯಂತ 43 ಲಕ್ಷ ವಿದ್ಯಾರ್ಥಿಗಳು ಎದುರುನೋಡುತ್ತಿರುವ ಸಿಬಿಎಸ್ಇ ಪರೀಕ್ಷೆಯ 10 ಹಾಗೂ 12 ನೇ ತರಗತಿ ಫಲಿತಾಂಶ ಶೀಘ್ರ ಘೋಷಣೆಯಾಗಲಿದೆ.
ಸರ್ವಾಧಿಕಾರಿ ದೇಶಗಳಲ್ಲಿ ಎನೆಲ್ಲಾ ನಡೆಯುತ್ತವೆ? ಸರ್ವಾಧಿಕಾರಿ ಮತ್ತು ಆತನ ಕುಟುಂಬದ ಅತಿರೇಕಗಳು ಏನೆಲ್ಲಾ ಅವಾಂತರಗಳನ್ನು ಸೃಷ್ಟಿಸುತ್ತವೆ ಎಂಬುದಕ್ಕೆ ಉಡಗಾಂಡಾದ ಸರ್ವಾಧಿಕಾರಿ ಯೊವೆರಿ ಮುಸೆವೇನಿ ಪುತ್ರ ಮತ್ತು ಉಗಾಂಡಾದ ಸೇನಾ ಮುಖ್ಯಸ್ಥ ಮೊಹುಜಿ ಕೈನೆರುಗಾಬಾ ಟರ್ಕಿಗೆ ಹಾಕಿರುವ ಬೆದರಿಕೆಯೇ ಸಾಕ್ಷಿ. ಟರ್ಕಿಗೆ ಒಂದು ಬಿಲಿಯನ್ ಡಾಲರ್ ಹಣ ಕೊಡುವಂತೆ ಮನವಿ ಮಾಡಿರುವ ಮೊಹುಜಿ, ಆ ದೇಶದ ಸುಂದರ ಮಹಿಳೆಯೊಂದಿಗೆ ಮದುವೆ ಮಾಡಿಸುವಂತೆಯೂ ಬೇಡಿಕೆ ಇಟ್ಟಿದ್ದಾರೆ. ಒಂದು ವೇಳೆ ಬೇಡಿಕೆ ಈಡೇರದಿದ್ದರೆ ಟರ್ಕಿ ರಾಯಭಾರ ಕಚೇರಿ ಬಂದ್ ಮಾಡಿಸುವುದಾಗಿ ಬೆದರಿಕೆಯೂ ಹಾಕಿದ್ದಾರೆ.
ಇದು ಸಂಪುಟ ವಿಸ್ತರಣೆಯ ಸಮಯವಲ್ಲ - ಮಂತ್ರಿಗಿರಿಗಾಗಿ ದೆಹಲಿ ಹೋದವರ ಮೇಲೆ ಡಿಕೆಶಿ ಅಸಮಾಧಾನ
Siddaramaiah Government Cabinet Expansion : ಸಚಿವ ಆಕಾಂಕ್ಷಿ ಶಾಸಕರು ನವದೆಹಲಿಗೆ ಭೇಟಿ ನೀಡುತ್ತಿರುವ ಬಗ್ಗೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಪ್ರತಿಕ್ರಿಯಿಸಿದ್ದಾರೆ. ಸಚಿವ ಸ್ಥಾನದ ಆಕಾಂಕ್ಷಿಗಳು ದೆಹಲಿಗೆ ಹೋಗಿರುವುದರಲ್ಲಿ ತಪ್ಪಿಲ್ಲ, ಆದರೆ ಇದು ಸಂಪುಟ ವಿಸ್ತರಣೆಯ ಸಮಯವಲ್ಲ ಎಂದು ಡಿಕೆಶಿ ಅಭಿಪ್ರಾಯ ಪಟ್ಟಿದ್ದಾರೆ. ಶಾಸಕರು ನವದೆಹಲಿಗೆ ಭೇಟಿ ನೀಡುವುದರಲ್ಲಿ ಯಾವುದೇ ತಪ್ಪಿಲ್ಲ. ಸಂಪುಟ ಪುನರ್ ರಚನೆ ಕಾರ್ಯ ಬಾಕಿಯಿದೆ ಎಂದು ಸಿಎಂ ಕೂಡಾ ಹೇಳಿದ್ದರು.
ಹೆಂಡತಿ ಕಂಡು ಬೊಗಳಿದ ಸಾಕು ನಾಯಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಪತಿ! ಬೆಂಗಳೂರಿನಲ್ಲಿ ಘಟನೆ; ವಿಡಿಯೋ ವೈರಲ್
ಹೆಂಡತಿಯನ್ನು ಕಂಡು ಸಾಕು ನಾಯಿಯೊಂದು ಬೊಗಳಿತು ಎಂಬ ಕಾರಣಕ್ಕೆ ಪತಿ ಅದರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ನಡೆದಿದೆ. ಬೆಂಗಳೂರಿನ ಮದನಾಯಕನಹಳ್ಳಿ ಅಂಜನಪ್ಪ ಅವರ ಸ್ಕೂಬಿ ಶ್ವಾನದ ಮೇಲೆ ಗೋಪಿ ಎಂಬಾತ ರಾಕ್ಷಸನಂತೆ ದಾಳಿ ಮಾಡಿದ್ದಾನೆ. ಸದ್ಯ ಈ ಘಟನೆಯ ವಿಡಿಯೋ ವೈರಲ್ ಆಗಿದ್ದು, ಪೊಲೀಸ್ ಪ್ರಕರಣ ದಾಖಲಾಗಿದೆ. ಆರೋಪಿ ನಾಪತ್ತೆಯಾಗಿದ್ದಾನೆ.
ವಯಸ್ಸಾದ ಮಹಿಳೆಯರಿಗಾಗಿ ವಿಶೇಷ ಪ್ಯಾಡ್!
ಕೆಎಂಸಿ ಮಂಗಳೂರು ವೈದ್ಯ ತಂಡದ ‘ಅಬ್ಸಾರ್ಬೆಂಟ್ ಪ್ಯಾಡ್ಸ್’ಗೆ ಪೇಟೆಂಟ್
ಪಿಯುಸಿ ಫಲಿತಾಂಶ : ಆಯಿಶಾ ನೀಮಾಗೆ 568 ಅಂಕಗಳು
ಮುಲ್ಕಿ: ಇಲ್ಲಿನ ಐಕಳದ ಪೊಂಪೈ ಪಿಯು ಕಾಲೇಜಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ ಆಯಿಶಾ ನೀಮಾ ಅವರು 2025-26ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ 568 ಅಂಕಗಳು (ಶೇ. 94.67) ಪಡೆದು ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಮುಲ್ಕಿ ತಾಲೂಕಿನ ಹಳೆಯಂಗಡಿ ಗ್ರಾಮದ ಬೊಳ್ಳೂರು ನಿವಾಸಿಗಳಾದ ಯೂಸುಫ್ ಪದ್ಮನೂರು ಮತ್ತು ಜೈನಾಬ್ ದಂಪತಿಯ ಪುತ್ರಿ.
Railway Food: ರೈಲು ಪ್ರಯಾಣಿಕರ ಬಳಿ ಬರುತ್ತೆ ಆಹಾರ: ರೈಲ್ವೆ ಇಲಾಖೆಗೆ ಕಂಪನಿಗಳ ಸಾಥ್
ಬೆಂಗಳೂರು: ದೂರದೂರಿಗೆ ರೈಲಿನಲ್ಲಿ ಪ್ರಯಾಣಿಸುವಾಗ ಜನರಿಗೆ ಗುಣಮಟ್ಟದ ಊಟ-ತಿಂಡಿಯದ್ದೆ ಸಮಸ್ಯೆ ಆಗಿರುತ್ತದೆ. ರೈಲ್ವೆ ನಿಲ್ದಾಣಗಳಲ್ಲಿ ಇಳಿದು ತರಾತುರಿಯಲ್ಲಿ ಆಹಾರ ಖರೀದಿಸುವ ಆತಂಕವನ್ನು ದೂರ ಮಾಡಲು, ಭಾರತದ ಪ್ರಮುಖ AI-ಆಧಾರಿತ ರೈಲು ಟಿಕೆಟ್ ಬುಕಿಂಗ್ ಪ್ಲಾಟ್ಫಾರ್ಮ್ಗಳಾದ 'ಇಕ್ಸಿಗೋ' ಮತ್ತು 'ಕನ್ಫರ್ಮ್ ಟಿಕೆಟ್', ಜನಪ್ರಿಯ ಫುಡ್ ಡೆಲಿವರಿ ಸಂಸ್ಥೆ 'ಸ್ವಿಗ್ಗಿ' ಜೊತೆ ಮಹತ್ವದ ಒಪ್ಪಂದ ಮಾಡಿಕೊಂಡಿವೆ. ಈ ಮೂಲಕ 'ಫುಡ್
ಇಸ್ಲಾಮಾಬಾದ್ ನಲ್ಲಿ ಅಮೆರಿಕಾ-ಇರಾನ್ ಸಂಧಾನ ವಿಫಲಗೊಳಿಸಿದ ಪಂಚ ಪಟ್ಟು: ಏನವು 5 ಕಾರಣಗಳು?
ಇಸ್ಲಾಮಾಬಾದ್ ನಲ್ಲಿ ಅಮೆರಿಕಾ ಹಾಗೂ ಇರಾನ್ ನಡುವೆ ಸಂಧಾನ ಮಾತುಕತೆಗಳು ನಡೆದಿದ್ದು, ಪರಮಾಣು ಯೋಜನೆ, ಹೊರ್ಮುಜ್ ಸೇರಿದಂತೆ 5 ಅಂಶಗಳಲ್ಲಿ ಉಭಯದೇಶಗಳು ಹೊಂದಿದ್ದ ಪಟ್ಟು ಇದೀಗ ಶಾಂತಿ ಮಾತುಕತೆಗಳ ವಿಫಲವಾಗುವಂತೆ ಮಾಡಿದೆ. ಹಾಗಾದ್ರೆ ಈ ಅಮೆರಿಕಾ-ಇರಾನ್ ನಡುವಿನ ಯುದ್ಧಕ್ಕೆ ಶಾಶ್ವತ ಅಂತ್ಯ ಹಾಡಲು ಅಡ್ಡಿಯಾದ ಈ 5 ಅಂಶಗಳೇನು ಎಂಬುದರ ಕುರಿತು ಮಾಹಿತಿ ಇಲ್ಲಿದೆ..
ಬೆಂಗಳೂರಿನ ಹೆಬ್ಬಾಳ ಮತ್ತು ಅಮಾನಿಕೆರೆ ಹೆಬ್ಬಾಳ ಗ್ರಾಮಗಳಲ್ಲಿ 2002 - 2004 ರ ನಡುವೆ ಕೆಐಎಡಿಯು 55 ಎಕರೆ ಜಮೀನು ವಶಪಡಿಸಿಕೊಂಡಿತ್ತು. ಇದನ್ನ ಅಸ್ತಿತ್ವದಲ್ಲೇ ಇಲ್ಲದ ಲೇಕ್ವೀವ್ ಟೂರಿಸಂ ಕಾರ್ಪೊರೇಶನ್ಗೆ ನೀಡಿತ್ತು. ಸದ್ಯ ಅಧಿಕಾರಿಗಳು ಮತ್ತು ಸಂಸ್ಥೆಯ ನಿರ್ದೇಶಕರ ವಿರುದ್ಧ ಕರ್ನಾಟಕ ಹೈಕೋರ್ಟ್ ಸಿಬಿಐ ತನಿಖೆಗೆ ಆದೇಶಿಸಿದೆ.
ನೋಯ್ಡಾದಲ್ಲಿ ವೇತನ ಹೆಚ್ಚಳಕ್ಕೆ ಆಗ್ರಹಿಸಿ ಕಾರ್ಮಿಕರ ಹಿಂಸಾತ್ಮಕ ಪ್ರತಿಭಟನೆ; ಉದ್ರಿಕ್ತರಿಂದ ವಾಹನಗಳಿಗೆ ಬೆಂಕಿ!
ವೇತನ ಹೆಚ್ಚಳ ಮತ್ತು ಇತರ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಉತ್ತರ ಪ್ರದೇಶದ ನೋಯ್ಡಾದಲ್ಲಿ ನಡೆದ ಕಾರ್ಮಿಕರ ಪ್ರತಿಭಟನೆ ಹಿಂಸೆಗೆ ತಿರುಗಿದೆ. ಉದ್ರಿಕ್ತ ಕಾರ್ಮಿಕರ ಗುಂಪು ವಾಹನಗಳಿಗೆ ಬೆಂಕಿ ಹಚ್ಚಿದ್ದು, ಕಾರ್ಖಾನೆಯಲ್ಲೂ ಭಾರೀ ದಾಂಧಲೆ ನಡೆಸಿದೆ. ಸುದ್ದಿ ತಿಳಿಯುತ್ತಿದ್ದಂತೇ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು, ಕಾರ್ಮಿಕರನ್ನು ಚದುರಿಸಲು ಲಾಠಿ ಪ್ರಹಾರ ನಡೆಸಿದ್ದಾರೆ. ವೇತನ ಹೆಚ್ಚಿಸಲು ಕಾರ್ಖಾನೆಯ ಆಡಳಿತ ಮಂಡಳಿ ನಿರಾಕರಿಸಿದ್ದೇ ಹಿಂಸಾತ್ಮಕ ಪ್ರತಿಭಟನೆಗೆ ಕಾರಣ ಎಂದು ಹೇಳಲಾಗುತ್ತಿದೆ. ಈ ಕುರಿತು ಇಲ್ಲಿದೆ ಹೆಚ್ಚಿನ ಮಾಹಿತಿ.
ಜಿಮ್ನಲ್ಲಿ ಪರಿಚಯವಾಗಿದ್ದ ವಿವಾಹಿತ ಮಹಿಳೆಯ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆಗೆ ಶರಣಾದ ಬಾಡಿಬಿಲ್ಡರ್
ಜಿಮ್ ನಲ್ಲಿ ಪರಿಚಯವಾಗಿದ್ದ ವಿಹಾಹಿತ ಮಹಿಳೆಯ ಕಿರುಕುಳಕ್ಕೆ ಬೇಸತ್ತು ಜಿಮ್ ಟ್ರೈನರ್ ನೇಣಿಗೆ ಕೊರಳೊಡ್ಡಿರುವ ಘಟನೆ ನೆಲಮಂಗಲದಲ್ಲಿ ನಡೆದಿದೆ. ದಿಲೀಪ್ ಎಂಬ ಜಿಮ್ ಟ್ರೈನರ್ ಗೆ ಜಿಮ್ ಗೆ ಬರುತ್ತಿದ್ದ ಮಹಿಳೆಯೊಬ್ಬರೊಂದಿಗೆ ಪರಿಚಯವಾಗಿ ಆ ಪರಿಚಯ ಸಂಬಂಧವಾಗಿ ತಿರುಗಿದ್ದು, ಅದು ಪೊಲೀಸ್ ಠಾಣೆ ಮೇಟ್ಟಿಲೇರುವ ಮೂಲಕ ಅಂತ್ಯಗೊಂಡಿತ್ತು. ಆದಾಗ್ಯೂ, ಆ ಮಹಿಳೆ ಆತನ ಬೆನ್ನುಬಿಡದೆ ಆತನ ಹೆಸರಿನಲ್ಲಿದ್ದ ಮನೆಯನ್ನು ಆಕೆಯ ಮಗನ ಹೆಸರಿಗೆ ಬರೆಯವಂತೆ ಕಿರುಕುಳ ನೀಡಿದ್ದು, ಇದಕ್ಕೆ ಬೇಸತ್ತ ಜಿಮ್ ಟ್ರೈನರ್ ದಿಲೀಪ್ ಆಕೆಗೆ ವಿಡಿಯೋ ಕಾಲ್ ಮಾಡಿದ್ದು, ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
Nashik MNC Case : ವೈಯಕ್ತಿಕ ಬದುಕಿನಲ್ಲಿ ಮೋಸಕ್ಕೊಳಕ್ಕಾಗಿ ಲವ್ ಜಿಹಾದ್ ಗೆ ಯತ್ನಿಸಿದ ಆರೋಪ ಇತ್ತೀಚೆಗೆ ಹುಬ್ಬಳ್ಳಿಯಲ್ಲಿ 2 ಪ್ರಕರಣಗಳು ನಡೆದಿದ್ದವು. ಇದರ ಬೆನ್ನಲ್ಲೇ, ಉದ್ಯೋಗದ ಜಾಗದಲ್ಲಿಯೂ ಬಲವಂತದ ಮತಾಂತರಕ್ಕೆ ಯತ್ನ ನಡೆಯುತ್ತಿದೆ ಎಂದರೆ, ನೀವು ನಂಬಲೇ ಬೇಕು. ಅದೂ ಕೂಡಾ 4 ವರ್ಷಗಳ ಕಾಲ ಬಹುರಾಷ್ಟ್ರೀಯ ಕಂಪನಿಯೊಂದರಲ್ಲಿ ನಿರಂತರವಾಗಿ ಕಿರುಕುಳ ನಡೆದಿರುವ ಆರೋಪಕ್ಕೆ ಸಂಬಂಧಿಸಿದಂತೆ 7 ಮಂದಿಯನ್ನು ಬಂಧಿಸಲಾಗಿದೆ.
ಟೆಲ್ ಅವೀವ್: ಇಸ್ರೇಲ್ನ ಗುಪ್ತಚರ ಸಂಸ್ಥೆ ಮೊಸಾದ್ನ ಮುಂದಿನ ಮುಖ್ಯಸ್ಥರಾಗಿ ಮೇಜರ್–ಜನರಲ್ ರೋಮನ್ ಗೋಫ್ಮನ್ ಅವರ ನೇಮಕಕ್ಕೆ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅನುಮೋದನೆ ನೀಡಿದ್ದಾರೆ ಎಂದು aljazeera.com ವರದಿ ಮಾಡಿದೆ. ಈ ಕುರಿತು ‘ಎಕ್ಸ್’ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ ಹೇಳಿಕೆಯಲ್ಲಿ, ಪರಿಶೀಲನಾ ಸಮಿತಿಯ ಅನುಮೋದನೆಯ ನಂತರ ನೇಮಕಾತಿಗೆ ಸಹಿ ಹಾಕಲಾಗಿದೆ ಎಂದು ಅವರು ತಿಳಿಸಿದ್ದಾರೆ. ಯುದ್ಧದ ಸಂದರ್ಭದಲ್ಲಿ “ದಿಟ್ಟ ಹಾಗೂ ಸೃಜನಶೀಲ ಚಿಂತನೆ” ಪ್ರದರ್ಶಿಸಿದ “ಅತ್ಯುತ್ತಮ ಅಧಿಕಾರಿ” ಎಂದು ಗೋಫ್ಮನ್ ಅವರನ್ನು ಅವರು ಶ್ಲಾಘಿಸಿದ್ದಾರೆ. ತೀವ್ರ ಬಲಪಂಥೀಯ ರಾಷ್ಟ್ರೀಯ ಭದ್ರತಾ ಸಚಿವ ಇಟಮಾರ್ ಬೆನ್-ಗ್ವಿರ್ ಕೂಡ ಗೋಫ್ಮನ್ ಅವರನ್ನು ಪ್ರಶಂಸಿಸಿದ್ದಾರೆ. ಅವರನ್ನು “ತೀಕ್ಷ್ಣ” ಮತ್ತು “ಹೆಚ್ಚು ಸಕ್ರಿಯ” ಅಧಿಕಾರಿಯಾಗಿ ಎಂದು ಪ್ರಶಂಸಿಸಿರುವ ಅವರು, ಗಾಝಾದ ಯುದ್ಧದ ಮಧ್ಯೆ ನಿರ್ಧಾರ ಕೈಗೊಳ್ಳುವ ವೇದಿಕೆಗಳಲ್ಲಿ ಗೋಫ್ಮನ್ “ವೃತ್ತಿಪರತೆ” ಪ್ರದರ್ಶಿಸಿದ್ದಾರೆ ಎಂದು ಹೇಳಿದ್ದಾರೆ. ಬೆಲಾರಸ್ ಮೂಲದ ಗೋಫ್ಮನ್, ಈ ಹಿಂದೆ ನೆತನ್ಯಾಹು ಅವರ ಮಿಲಿಟರಿ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು. ಅಲ್ಲದೆ, ಗಾಝಾ ಪಟ್ಟಿಗೆ ಸಂಬಂಧಿಸಿದ ನಾಗರಿಕ ವ್ಯವಹಾರಗಳನ್ನು ನೋಡಿಕೊಳ್ಳುವ ಇಸ್ರೇಲ್ ಸಂಸ್ಥೆ ‘COGAT’ನ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿದ್ದರು. ಗಾಝಾಕ್ಕೆ ನೆರವು ಸಾಗಾಟದ ಮೇಲ್ವಿಚಾರಣೆ ಮತ್ತು ದಿಗ್ಬಂಧನ ವ್ಯವಸ್ಥೆಯಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು. ಇದಲ್ಲದೆ, ಗಾಝಾ ಮಾನವೀಯ ಪ್ರತಿಷ್ಠಾನ ಸ್ಥಾಪನೆಗೂ ಗೋಫ್ಮನ್ ಪ್ರಮುಖ ಪಾತ್ರವಹಿಸಿದ್ದರು. ಆ ಪ್ರತಿಷ್ಠಾನದ ಕಾರ್ಯಚಟುವಟಿಕೆಗಳ ನಡುವೆ ಸಹಾಯಕ್ಕಾಗಿ ಬಂದ ಸಾವಿರಾರು ಫೆಲೆಸ್ತೀನಿನ ಜನರು ಮೃತಪಟ್ಟಿದ್ದರು.
ಏಪ್ರಿಲ್ 13ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ
Petrol, Diesel Price: ಶಕ್ತಿಯ ಮೂಲಗಳು ಎನಿಸಿಕೊಂಡಿರುವ ಪೆಟ್ರೋಲ್ ಮತ್ತು ಡೀಸೆಲ್ ಇಂಧನ ಅತ್ಯವಶ್ಯಕವಾಗಿ ಬೇಕಾಗುವ ಸಂಪನ್ಮೂಲಗಳಾಗಿವೆ. ಹಾಗಾದ್ರೆ, ಬೆಂಗಳೂರು ಸೇರಿದಂತೆ ಕರ್ನಾಟಕದ ಇತರ ಜಿಲ್ಲೆಗಳಲ್ಲಿ ಇಂದು (ಏಪ್ರಿಲ್ 13) ಲೀಟರ್ ಪೆಟ್ರೋಲ್, ಡೀಸೆಲ್ ಬೆಲೆ ಎಷ್ಟಿದೆ ಎಂದು ಇಲ್ಲಿ ತಿಳಿಯಿರಿ. ಇತ್ತೀಚಿನ ದಿನಗಳಲ್ಲಿ ಎಲೆಕ್ಟ್ರಿಕ್ ವಾಹನಗಳು ಹೆಚ್ಚಾಗುತ್ತಿವೆ. ಹಾಗಂತ ಇಂಧನದ ಬೇಡಿಕೆ ಏನು ಕಡಿಮೆ ಆಗಿಲ್ಲ.
Noida Protest: ಹಿಂಸಾಚಾರಕ್ಕೆ ತಿರುಗಿದ ನೋಯ್ಡಾ ಕಾರ್ಮಿಕರ ಪ್ರತಿಭಟನೆ; ವಾಹನಗಳಿಗೆ ಬೆಂಕಿ, ಕಲ್ಲು ತೂರಾಟ
ಉತ್ತರ ಪ್ರದೇಶ: ವೇತನ ಹೆಚ್ಚಳಕ್ಕೆ ಆಗ್ರಹಿಸಿ ನೋಯ್ಡಾದ ಫೇಸ್-2 ವ್ಯಾಪ್ತಿಯ ಹೋಸಿಯರಿ ಕಾಂಪ್ಲೆಕ್ಸ್ನಲ್ಲಿ ಇಂದು (ಸೋಮವಾರ) ಕಾರ್ಮಿಕರು ನಡೆಸುತ್ತಿದ್ದ ಪ್ರತಿಭಟನೆಯು ಭೀಕರ ಹಿಂಸಾಚಾರಕ್ಕೆ ತಿರುಗಿದೆ. ಆಕ್ರೋಶಗೊಂಡ ಪ್ರತಿಭಟನಾಕಾರರು ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ಹಾನಿ ಮಾಡಿದ್ದಲ್ಲದೆ, ವಾಹನಗಳ ಮೇಲೆ ಕಲ್ಲು ತೂರಾಟ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಿಂಸಾಚಾರಕ್ಕೆ ಕಾರಣವೇನು? ಇಲ್ಲಿನ ಹೋಸಿಯರಿ ಕಾಂಪ್ಲೆಕ್ಸ್ ಭಾಗದ ವಿವಿಧ ಕಾರ್ಖಾನೆಗಳಲ್ಲಿ ಕೆಲಸ ಮಾಡುವ
Divorce: WhatsApp, Instagram ಬಳಕೆ ಹೆಚ್ಚಳ ಸೇರಿ ಭಾರತದಲ್ಲಿ ವಿಚ್ಛೇದನಕ್ಕೆ 10 ಪ್ರಮುಖ ಕಾರಣಗಳು
Divorce: ಮೊದಲೆಲ್ಲ ಅಲ್ಲೊಂದು ಇಲ್ಲೊಂದು ಎನ್ನುವಂತೆ ನಡೆಯುತ್ತಿದ್ದ ಡಿವೋರ್ಸ್ಗಳು ಇದೀಗ ಸರ್ವೇ ಸಾಮಾನ್ಯ ಎನ್ನುವಂತೆ ಆಗಿದೆ. ದೇಶದಲ್ಲಿ ಡಿವೋರ್ಸ್ ಪ್ರಕರಣಗಳ ಸಂಖ್ಯೆಯು ವರ್ಷದಿಂದ ವರ್ಷಕ್ಕೆ ಹೆಚ್ಚಳವಾಗುತ್ತಲ್ಲೇ ಇದೆ. ದೇಶದಲ್ಲಿ ಡಿವೋರ್ಸ್ ಪ್ರಕರಣ ಹೆಚ್ಚಾಗುವುದಕ್ಕೆ ಸೋಷಿಯಲ್ ಮೀಡಿಯಾ ಬಳಕೆಯೂ ಒಂದು ಪ್ರಮುಖ ಕಾರಣವಾಗುತ್ತಿದೆ ಎಂದರೆ ನಂಬುವಿರಾ. ಹೌದು ದೇಶದಲ್ಲಿ ಯುವ ಜನತೆ ಸೋಷಿಯಲ್ ಮೀಡಿಯಾ ಬಳಕೆ ಮಾಡುತ್ತಿರುವುದು ಸಹ
ತಿರುಪತಿ ಶ್ರೀ ವೆಂಕಟೇಶ್ವರ ಪ್ರಾಣದಾನ ಟ್ರಸ್ಟ್ಗೆ ಕೋಟಿ ರೂ. ದೇಣಿಗೆ ನೀಡಿದ ಹೈದರಾಬಾದ್ ಮೂಲದ ಉದ್ಯಮಿ
ತಿರುಮಲ ತಿರುಪತಿ ದೇವಸ್ಥಾನದ ಸಾಮಾಜಿಕ ಸೇವಾ ಕಾರ್ಯಗಳಿಗೆ ಭಕ್ತರಿಂದ ದೊಡ್ಡ ಮಟ್ಟದ ಬೆಂಬಲ ವ್ಯಕ್ತವಾಗುತ್ತಿದೆ. ಅಪಾರ ಪ್ರಮಾಣದ ದೇಣಿಗೆ ಹರಿದು ಬರುತ್ತಿದೆ. ಹೈದರಾಬಾದ್ ಮೂಲದ ಉದ್ಯಮಿ ಅಲ್ಲೂರಿ ವರ್ಮಾ ಅವರು ಟಿಟಿಡಿಯ 'ಶ್ರೀ ವೆಂಕಟೇಶ್ವರ ಪ್ರಾಣದಾನ ಟ್ರಸ್ಟ್'ಗೆ 1 ಕೋಟಿ ರೂಪಾಯಿಗೂ ಅಧಿಕ ಮೊತ್ತವನ್ನು ದೇಣಿಗೆಯಾಗಿ ನೀಡಿದ್ದಾರೆ.
ಇರಾನ್ ಬಂದರುಗಳಿಗೆ ಅಮೆರಿಕದಿಂದ ದಿಗ್ಬಂಧನ; ಹಾರ್ಮುಝ್ ಜಲಸಂಧಿಯಲ್ಲಿ ತೀವ್ರ ಉದ್ವಿಗ್ನತೆ
ವಾಶಿಂಗ್ಟನ್: ಇರಾನ್ ನೊಂದಿಗೆ ನಡೆದ ಮಾತುಕತೆಗಳು ಯಾವುದೇ ಪ್ರಗತಿಯಿಲ್ಲದೆ ಹಿನ್ನಡೆಯಾದ ಹಿನ್ನೆಲೆಯಲ್ಲಿ, ಇರಾನಿನ ಬಂದರುಗಳಿಗೆ ಸಾಗುವ ಸಮುದ್ರ ಮಾರ್ಗಗಳನ್ನು ನಿರ್ಬಂಧಿಸಲು ಅಮೆರಿಕ ತೀರ್ಮಾನಿಸಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರವಿವಾರ ಈ ಕುರಿತು ಘೋಷಣೆ ಮಾಡಿದ್ದು, ಹಾರ್ಮುಝ್ ಜಲಸಂಧಿ ಪ್ರದೇಶದಲ್ಲಿ ಉದ್ವಿಗ್ನತೆ ಮತ್ತಷ್ಟು ತೀವ್ರಗೊಂಡಿದೆ. ಅಮೆರಿಕದ ನೌಕಾಪಡೆಯು ಇರಾನಿನ ಬಂದರುಗಳಿಗೆ ಪ್ರವೇಶಿಸುವ ಅಥವಾ ಅಲ್ಲಿಂದ ನಿರ್ಗಮಿಸುವ ಎಲ್ಲಾ ಹಡಗುಗಳನ್ನು ಗುರಿಯಾಗಿಸಿಕೊಂಡು ಸೋಮವಾರ ಬೆಳಿಗ್ಗೆ 10 ಗಂಟೆಯಿಂದ (ಭಾರತೀಯ ಕಾಲಮಾನ ಸಂಜೆ 7.30) ದಿಗ್ಬಂಧನ ಜಾರಿಗೆ ತರಲಿದೆ ಎಂದು ಯುಎಸ್ ಸೆಂಟ್ರಲ್ ಕಮಾಂಡ್ (ಸೆಂಟ್ಕಾಮ್) ತಿಳಿಸಿದೆ. ಅರೇಬಿಯನ್ ಕೊಲ್ಲಿ ಮತ್ತು ಒಮಾನ್ ಕೊಲ್ಲಿಯ ಕರಾವಳಿ ಪ್ರದೇಶಗಳನ್ನು ಒಳಗೊಂಡಂತೆ ಇರಾನಿನ ಬಂದರುಗಳು ಹಾಗೂ ಕರಾವಳಿ ಭಾಗಗಳನ್ನು ಬಳಸುವ “ಎಲ್ಲಾ ರಾಷ್ಟ್ರಗಳ ಹಡಗುಗಳ ವಿರುದ್ಧ” ಈ ಕ್ರಮವನ್ನು ನಿಷ್ಪಕ್ಷಪಾತವಾಗಿ ಜಾರಿಗೊಳಿಸಲಾಗುವುದು ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. ಆದರೂ, ಜಾಗತಿಕ ಹಡಗು ಮಾರ್ಗಗಳನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸುವುದನ್ನು ತಪ್ಪಿಸಲು ಅಮೆರಿಕ ಕ್ರಮಬದ್ಧ ವಿಧಾನವನ್ನು ಅನುಸರಿಸಿದೆ. ಇರಾನ್ಗೆ ಸಂಬಂಧಿಸದ ಬಂದರುಗಳಿಗೆ ಸಾಗುವ ಹಡಗುಗಳ ಸಂಚಾರಕ್ಕೆ ಯಾವುದೇ ನಿರ್ಬಂಧ ಇರದು ಎಂದು ಸೆಂಟ್ಕಾಮ್ ಸ್ಪಷ್ಟಪಡಿಸಿದೆ. ಇದರಿಂದ ಜಾಗತಿಕ ವಾಣಿಜ್ಯ ಮತ್ತು ಸಾಗಾಣಿಕೆಗೆ ಅಡ್ಡಿಯಾಗದಂತೆ ನೋಡಿಕೊಳ್ಳಲಾಗುತ್ತದೆ. ಟ್ರಂಪ್ ಕಠಿಣ ಎಚ್ಚರಿಕೆ ಸಾಮಾಜಿಕ ಜಾಲತಾಣಗಳಲ್ಲಿ ಟ್ರಂಪ್ ಕಠಿಣ ಎಚ್ಚರಿಕೆ ನೀಡಿದರು. ಇರಾನ್ ವಿಧಿಸುತ್ತಿದೆ ಎನ್ನಲಾದ ‘ಅಕ್ರಮ ಸುಂಕ’ ಪಾವತಿಸುವ ಹಡಗುಗಳನ್ನು ತಡೆಯಲು ನೌಕಾಪಡೆಗೆ ಸೂಚಿಸಲಾಗಿದೆ ಎಂದು ಹೇಳಿದರು. “ಇರಾನ್ಗೆ ಸುಂಕ ಪಾವತಿಸುವ ಯಾವುದೇ ಹಡಗನ್ನೂ ಅಂತರರಾಷ್ಟ್ರೀಯ ನೀರಿನಲ್ಲಿ ತಡೆದು ನಿಷೇಧಿಸಲು ಸೂಚಿಸಿದ್ದೇನೆ. ಇಂತಹ ಹಡಗುಗಳಿಗೆ ಸಮುದ್ರದಲ್ಲಿ ಸುರಕ್ಷಿತ ಮಾರ್ಗವಿರುವುದಿಲ್ಲ,” ಎಂದು ಟ್ರಂಪ್ ಹೇಳಿದ್ದಾರೆ. ಅಮೆರಿಕ ಅಥವಾ ವಾಣಿಜ್ಯ ಹಡಗುಗಳನ್ನು ಗುರಿಯಾಗಿಸುವ ಇರಾನಿನ ಯಾವುದೇ ಕ್ರಮಗಳಿಗೆ ಭಾರಿ ಪ್ರತೀಕಾರ ನೀಡಲಾಗುವುದು ಎಂದು ಅವರು ಎಚ್ಚರಿಸಿದರು. “ನಮ್ಮ ಮೇಲೆ ಅಥವಾ ಶಾಂತಿಯುತ ಹಡಗುಗಳ ಮೇಲೆ ದಾಳಿ ನಡೆದರೆ ಕಠಿಣವಾಗಿ ಪ್ರತಿಕ್ರಿಯಿಸಲಾಗುತ್ತದೆ,” ಎಂದರು. ಇದೇ ವೇಳೆ, ಜಗತ್ತಿನ ಪ್ರಮುಖ ತೈಲ ಸಾಗಣೆ ಮಾರ್ಗಗಳಲ್ಲಿ ಒಂದಾದ ಹಾರ್ಮುಝ್ ಜಲಸಂಧಿಯಲ್ಲಿ ಇರಾನ್ ಸ್ಥಾಪಿಸಿದೆ ಎಂದು ಹೇಳಲಾಗಿರುವ ಸ್ಫೋಟಕ ಸಾಧನಗಳನ್ನು ತೆರವುಗೊಳಿಸಲು ಅಮೆರಿಕ ಪಡೆಗಳು ಕಾರ್ಯಾರಂಭ ಮಾಡಲಿವೆ ಎಂದು ಟ್ರಂಪ್ ತಿಳಿಸಿದ್ದಾರೆ. ಈ ಜಲಸಂಧಿಯ ಮೂಲಕ ಜಾಗತಿಕ ಇಂಧನ ಪೂರೈಕೆಯ ಸುಮಾರು 20 ಶೇಕಡಾ ಸಾಗುತ್ತದೆ. ಇರಾನ್ ತಿರುಗೇಟು ಅಮೆರಿಕದ ಕ್ರಮಕ್ಕೆ ಇರಾನ್ ತಕ್ಷಣ ಪ್ರತಿಕ್ರಿಯಿಸಿದೆ. ಹಾರ್ಮುಝ್ ಜಲಸಂಧಿ ಪ್ರದೇಶದಲ್ಲಿ ವಿದೇಶಿ ಸೈನಿಕರ ಹಾಜರಾತಿಯನ್ನು ದುರ್ಬಲ ಕದನ ವಿರಾಮದ ಉಲ್ಲಂಘನೆ ಎಂದು ಪರಿಗಣಿಸಲಾಗುತ್ತದೆ ಎಂದು ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಎಚ್ಚರಿಸಿದೆ. ಇರಾನ್ ಸಂಸತ್ ಸ್ಪೀಕರ್ ಮೊಹಮ್ಮದ್ ಬಕರ್ ಖಲೀಬಾಫ್ ಟ್ರಂಪ್ ಅವರ ಹೇಳಿಕೆಗಳನ್ನು ತಳ್ಳಿ ಹಾಕಿ, ಟೆಹ್ರಾನ್ ಮೇಲೆ ಒತ್ತಡದ ಮೂಲಕ ಯಾವುದೇ ರಿಯಾಯಿತಿಗಳನ್ನು ಪಡೆಯಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ. “ನೀವು ಹೋರಾಟಕ್ಕೆ ಬಂದರೆ ನಾವು ಹೋರಾಟಕ್ಕೆ ಸಿದ್ಧ. ಮಾತುಕತೆಗೆ ಬಂದರೆ ಅದಕ್ಕೂ ಸಿದ್ಧ,” ಎಂದು ಅವರು ಹೇಳಿದರು. ಅಮೆರಿಕದ ಕ್ರಮವು ಜಾಗತಿಕ ಇಂಧನ ಮಾರುಕಟ್ಟೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಖಲೀಬಾಫ್ ಎಚ್ಚರಿಸಿದ್ದಾರೆ. ಶ್ವೇತಭವನದ ಬಳಿಯ ಪೆಟ್ರೋಲ್ ಬೆಲೆಗಳ ಚಿತ್ರ ಹಂಚಿಕೊಂಡ ಅವರು, ಅಮೆರಿಕದ ಜನರು ಶೀಘ್ರದಲ್ಲೇ ಇಂದಿನ ಬೆಲೆಗಳನ್ನು ‘ಮಿಸ್’ ಮಾಡುವ ಪರಿಸ್ಥಿತಿ ಬರಬಹುದು ಎಂದು ವ್ಯಂಗ್ಯವಾಡಿದ್ದಾರೆ.
Koppala | ತೆರೆದ ಗುಂಡಿಯಲ್ಲಿ ಇಬ್ಬರ ಮೃತದೇಹ ಪತ್ತೆ; ಬೇರೆಡೆ ಹತ್ಯೆಗೈದು ಎಸೆದಿರುವ ಶಂಕೆ
ಕುಕನೂರು : ಪಟ್ಟಣದಿಂದ ಭಾನಾಪುರಕ್ಕೆ ಹೋಗುವ ರಸ್ತೆಯ ಮಧ್ಯೆ ಮಸಬಹಂಚಿನಾಳ ಗ್ರಾಮದ ಸಮೀಪ ರಾಷ್ಟ್ರೀಯ ಹೆದ್ದಾರಿ 367ರ ಪಕ್ಕದ ಪೈಪ್ಲೈನ್ ಬಳಿಯ ತೆರೆದ ಗುಂಡಿಯಲ್ಲಿ ಇಬ್ಬರ ಮೃತದೇಹ ಪತ್ತೆಯಾಗಿದ್ದು, ಕೊಲೆ ಶಂಕೆ ವ್ಯಕ್ತವಾಗಿದೆ. ಸೋಮವಾರ ಬೆಳಿಗ್ಗೆ ವಾಯುವಿಹಾರಕ್ಕೆ ತೆರಳಿದ್ದ ಕೆಲವರು ಗುಂಡಿಯಿಂದ ದುರ್ವಾಸನೆ ಬರುತ್ತಿರುವುದನ್ನು ಗಮನಿಸಿ ಪರಿಶೀಲನೆ ನಡೆಸಿದಾಗ ಕೊಳೆತ ಸ್ಥಿತಿಯಲ್ಲಿದ್ದ ಮೃತದೇಹಗಳು ಕಂಡುಬಂದಿವೆ. ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಕುಕನೂರು ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮೃತರನ್ನು ರುದ್ರೇಶ್ (23) ಹಾಗೂ ರವಿ (32) ಎಂದು ಗುರುತಿಸಲಾಗಿದ್ದು, ಇಬ್ಬರೂ ಕುಕನೂರು ನಿವಾಸಿಗಳಾಗಿದ್ದಾರೆ. ಮೃತದೇಹಗಳ ಮೇಲೆ ಗಾಯಗಳ ಗುರುತುಗಳು ಕಂಡುಬಂದಿದ್ದು, ಕೊಲೆ ಮಾಡಿ ಬೇರೆಡೆದಿಂದ ತಂದು ಇಲ್ಲಿ ಎಸೆದಿರುವ ಸಾಧ್ಯತೆ ಇದೆ ಎಂದು ಸ್ಥಳೀಯರು ಶಂಕೆ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಕುಕನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಪ್ರಕ್ರಿಯೆ ನಡೆದಿದೆ.
ಸುಮ್ನೆ ಬಾಲ್ ಕೊಡೋ ಮಾರಾಯ.. ನಾ ಕೊಡಕಿಲ್ಲ ಏನ್ ಮಾಡ್ತೀರಾ? ಟಿಮ್ ಡೇವಿಡ್-ಅಂಪೈರ್ ಫನ್ನಿ ವಿಡಿಯೋ ಭಾರೀ ವೈರಲ್
RCB Vs MI IPL 2026: ವಾಂಖೆಡೆ ಕ್ರೀಡಾಂಗಣದಲ್ಲಿ ಭಾನುವಾರ (ಏಪ್ರಿಲ್ 12) ನಡೆದ ಐಪಿಎಲ್ 2026ರ 20ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಮುಖಾಮುಖಿಯಾದವು. ಆರ್ಸಿಬಿ ಟಾಸ್ ಸೋತು ಮೊದಲು ಬ್ಯಾಟ್ಗಿಳಿದಿದ್ದು, ಈ ವೇಳೆ ಟಿಮ್ ಡೇವಿಡ್ ಹಾಗೂ ಅಂಪೈರ್ ನಡುವೆ ಬಾಲ್ ಬದಲಾವಣೆ ಕುರಿತು ಸಣ್ಣ ತಮಾಷೆ ನಡೆಯಿತು.
ಪೋಪ್ ಲಿಯೋರನ್ನು ಟೀಕಿಸಿ ತನ್ನದೇ ಯೇಸು ರೂಪದ AI ಚಿತ್ರ ಹಂಚಿಕೊಂಡ ಟ್ರಂಪ್!
ವಾಶಿಂಗ್ಟನ್: ಪೋಪ್ ಲಿಯೋ XIV ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಹೇಳಿಕೆಗಳ ನಡುವೆಯೇ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತನ್ನನ್ನು ಯೇಸು ಕ್ರಿಸ್ತನಂತೆ ತೋರಿಸುವ AI ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಹೊಸ ವಿವಾದಕ್ಕೆ ಕಾರಣವಾಗಿದೆ. ಟ್ರಂಪ್ ತಮ್ಮ ‘ಟ್ರೂತ್ ಸೋಶಿಯಲ್’ ವೇದಿಕೆಯಲ್ಲಿ ಹಂಚಿಕೊಂಡ ಈ ಚಿತ್ರದಲ್ಲಿ, ಅವರು ಯೇಸುವಿನ ರೂಪದಲ್ಲಿ ಕಾಣಿಸಿಕೊಂಡಿದ್ದಾರೆ. ಪೋಪ್ ಲಿಯೋ XIV ಅವರೊಂದಿಗೆ ಹೆಚ್ಚುತ್ತಿರುವ ಮಾತಿನ ಸಮರದ ನಡುವೆ ಈ ಪೋಸ್ಟ್ ಗಮನ ಸೆಳೆದಿದೆ. ಇದಕ್ಕೂ ಮೊದಲು ಟ್ರಂಪ್, ಪೋಪ್ ಅವರನ್ನು “ಅಪರಾಧದ ಮೇಲೆ ದುರ್ಬಲ” ಹಾಗೂ “ವಿದೇಶಾಂಗ ನೀತಿಯಲ್ಲಿ ಭಯಾನಕ” ಎಂದು ಟೀಕಿಸಿದ್ದರು. ವಲಸೆ ಸಮಸ್ಯೆ ಮತ್ತು ಇರಾನ್ ಸಂಘರ್ಷದ ವಿಷಯದಲ್ಲಿ ಇಬ್ಬರ ನಡುವೆ ಉದ್ವಿಗ್ನತೆ ಹೆಚ್ಚಾಗಿದೆ. ಪೋಪ್ ಶಾಂತಿ ಮತ್ತು ಸಂಯಮಕ್ಕೆ ಕರೆ ನೀಡಿದರೆ, ಟ್ರಂಪ್ ಕಠಿಣ ನಿಲುವು ವ್ಯಕ್ತಪಡಿಸಿದ್ದಾರೆ. ತಮ್ಮ ದೀರ್ಘ ಪೋಸ್ಟ್ ನಲ್ಲಿ ಟ್ರಂಪ್, ಪೋಪ್ ಅವರು “ ಎಡಪಂಥೀಯರೊಂದಿಗೆ ಹೊಂದಾಣಿಕೆ ಮಾಡಿಕೊಂಡಿದ್ದಾರೆ” ಎಂದು ಆರೋಪಿಸಿದ್ದಾರೆ. ಪರಮಾಣು ನೀತಿ, ವೆನೆಝುವೆಲಾದಲ್ಲಿ ಅಮೆರಿಕದ ಹಸ್ತಕ್ಷೇಪ ಸೇರಿದಂತೆ ಹಲವು ವಿಚಾರಗಳಲ್ಲಿ ಪೋಪ್ ಅವರ ನಿಲುವುಗಳನ್ನು ಅವರು ಟೀಕಿಸಿದ್ದಾರೆ. ಪೋಪ್ ಆಯ್ಕೆ ಪ್ರಕ್ರಿಯೆಯನ್ನೂ ಪ್ರಶ್ನಿಸಿರುವ ಟ್ರಂಪ್, ಅದು ರಾಜಕೀಯ ಪ್ರೇರಿತವಾಗಿದೆ ಎಂದು ಹೇಳಿದ್ದಾರೆ. “ನಾನು ಶ್ವೇತಭವನದಲ್ಲಿ ಇರಲಿಲ್ಲದಿದ್ದರೆ, ಲಿಯೋ ವ್ಯಾಟಿಕನ್ನಲ್ಲಿ ಇರಲಿಲ್ಲ” ಎಂದು ಹೇಳಿದ ಅವರು, “ಅವರು ಅಮೆರಿಕನ್ ಆಗಿದ್ದರಿಂದಲೇ ಪೋಪ್ ಆಗಿದ್ದಾರೆ” ಎಂಬ ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದಾರೆ. ವೈಯಕ್ತಿಕವಾಗಿ ಟೀಕಿಸಿದ ಟ್ರಂಪ್, ಪೋಪ್ ಅವರ ಸಹೋದರನನ್ನು ಮೆಚ್ಚಿಕೊಂಡು, ಅವರನ್ನು ತಮ್ಮ “MAGA” ಚಳುವಳಿಯ ಬೆಂಬಲಿಗರೆಂದು ಹೇಳಿದ್ದಾರೆ.
'ಮೀಫ್ ಯೆನೆಪೋಯ' ಪಿಯುಸಿ ವಿದ್ಯಾರ್ಥಿಗಳ ಅತ್ಯುತ್ತಮ ಸಾಧನೆ
ಮಂಗಳೂರು : ಮೀಫ್ ಮೂಲಕ ಯೆನೆಪೋಯ ವಿದ್ಯಾಸಂಸ್ಥೆಯಲ್ಲಿ ಉಚಿತ ಸೀಟು ಪಡೆದ ವಿದ್ಯಾರ್ಥಿಗಳು ಈ ಬಾರಿಯ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆ ಮಾಡಿದ್ದಾರೆ. ಯೆನೆಪೋಯ ವಿದ್ಯಾಸಂಸ್ಥೆಯು 2024-25ನೇ ಸಾಲಿನಲ್ಲಿ ಮೀಫ್ ಸಂಸ್ಥೆಗೆ ನೀಡಿದ್ದ 51 ಉಚಿತ ಸೀಟುಗಳ ಪೈಕಿ 29 ವಿದ್ಯಾರ್ಥಿಗಳು ಶೇ. 95 ರಿಂದ 99ರಷ್ಟು ಅಂಕ ಗಳಿಸಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಕಳೆದ ಮೂರು ವರ್ಷಗಳಲ್ಲಿ ಯೆನೆಪೋಯ ಸಂಸ್ಥೆಯು ಒಟ್ಟು 201 ಉಚಿತ ಸೀಟುಗಳನ್ನು ಒದಗಿಸುವ ಮೂಲಕ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಸಹಕರಿಸಿದೆ. ಈ ಬಗ್ಗೆ ಹರ್ಷ ವ್ಯಕ್ತಪಡಿಸಿರುವ ಮೀಫ್ ಅಧ್ಯಕ್ಷ ಮೂಸಬ್ಬ ಬ್ಯಾರಿ ಅವರು, ಯೆನೆಪೋಯ ಸಂಸ್ಥೆಯ ಈ ಸಹಕಾರ ನಮಗೆ ಹೆಮ್ಮೆಯ ವಿಚಾರ. ಈ ಬಾರಿ ಇನ್ನೂ ಹೆಚ್ಚಿನ ಶಿಕ್ಷಣ ಸಂಸ್ಥೆಗಳು ಉಚಿತ ಸೀಟುಗಳನ್ನು ನೀಡಲು ಮುಂದೆ ಬಂದಿವೆ, ಎಂದು ತಿಳಿಸಿದ್ದಾರೆ. ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಹಾಗೂ ಸಹಕರಿಸಿದ ಯೆನೆಪೋಯ ವಿದ್ಯಾಸಂಸ್ಥೆಗೆ ಮೀಫ್ ಅಭಿನಂದನೆ ಸಲ್ಲಿಸಿದೆ.
ಗ್ರೀಕ್ ಪುರಾಣ: ಎರಡು ಸ್ತ್ರೀ ಮುಖಗಳು
ಯೂಂಗ್ ಗ್ರಹಿಕೆಯ ಹಿನ್ನೆಲೆಯಲ್ಲಿ ನೋಡಿದರೆ, ಗ್ರೀಕ್ ಸಂಸ್ಕೃತಿಯ ನಿಯೋಬಿ, ಪಂಡೋರ ಅಥವಾ ಭಾರತದ ಯಯಾತಿ, ಸತಿ ಸಾವಿತ್ರಿ ಥರದ ಪುರಾಣಗಳು, ದಂತಕತೆಗಳು ಹುಟ್ಟುವುದು ಸಮುದಾಯದ ಅಪ್ರಜ್ಞೆಯಿಂದ. ಅಂದರೆ, ಮೇಲೆ ಕೊಟ್ಟಿರುವ ಹೆಣ್ಣನ್ನು ಕುರಿತ ಎರಡೂ ಕತೆಗಳು ಗ್ರೀಕ್ ಜನಮಾನಸದ ಅಪ್ರಜ್ಞೆಯಿಂದ ಹುಟ್ಟಿವೆ. ಗ್ರೀಕ್ ಸಮುದಾಯದ ಅಪ್ರಜ್ಞೆ ಇಂಥ ನೂರಾರು ಪುರಾಣಕತೆಗಳನ್ನು ಸೃಷ್ಟಿಸಿದೆ. ಈ ಕತೆಗಳಲ್ಲಿ ಪುರುಷ ಪೂರ್ವಾಗ್ರಹಗಳೂ ದಂಡಿಯಾಗಿವೆ. ಸ್ತ್ರೀಪಾತ್ರಗಳನ್ನು ಕುರಿತ ಪುರಾಣ ಕತೆಗಳು ಆಯಾ ಸಂಸ್ಕೃತಿಗಳು ಹೆಣ್ಣನ್ನು ನೋಡುವ ಆದಿಮ ಬಗೆಯನ್ನು ಸೂಚಿಸುತ್ತಿರುತ್ತವೆ. ಗ್ರೀಕ್ ಸಂಸ್ಕೃತಿಯ ಇಂಥ ‘ಹೆಣ್ಣುಪುರಾಣ’ಗಳಲ್ಲಿ ‘ಪಂಡೋರಾಳ ಪೆಟ್ಟಿಗೆ’ ಹಾಗೂ ನಿಯೋಬಿಯ ಕಡು ದುಃಖ ನನ್ನನ್ನು ಆಗಾಗ ಕೆಣಕುತ್ತಿರುತ್ತವೆ. ಈ ಕತೆಗಳಿರುವ ಕೆ. ಎಂ. ಸೀತಾರಾಮಯ್ಯನವರ ‘ಗ್ರೀಕ್ ಮಿಥಕಗಳು’ ಎಂಬ ಹಳೆಯ ಪುಸ್ತಕವನ್ನು ಹೊಸ ಪುಸ್ತಕವೊಂದನ್ನು ಬರಸೆಳೆಯುವಂತೆ ರೋಮಾಂಚನದಿಂದ ಕೈಗೆತ್ತಿಕೊಂಡೆ; ಪುಸ್ತಕದ ಹಾಳೆಗಳು ಕಿತ್ತುಕೊಂಡು ಹೊರ ಬಂದಿದ್ದರೂ, ಅವು ತಂತಮ್ಮ ಜಾಗದಲ್ಲೇ ಇದ್ದವು. ಹೆಣ್ಣನ್ನು ಕುರಿತ ಈ ಎರಡು ಗ್ರೀಕ್ ಕತೆಗಳಲ್ಲಿ ಯಾವುದು ಮೊದಲು ಬಂತು, ಯಾವುದು ನಂತರ ಬಂತು ಎಂದು ಹೇಳುವುದು ಕಷ್ಟ. ಮೊದಲಿಗೆ, ಪಂಡೋರ ಕತೆಯ ಸಾರ: ಸ್ಯೂಸ್ ದೇವ ಗ್ರೀಕ್ ದೇವತೆಗಳ ಚಕ್ರವರ್ತಿ. ಈ ದೇವಲೋಕದಲ್ಲಿದ್ದ ಗ್ರೀಕ್ ದೇವತೆ ಪ್ರಮೀಥಿಯಸ್ ಸ್ವತಂತ್ರ ಮನಸ್ಸಿನ ಒಬ್ಬ ಭಿನ್ನಮತೀಯ. ಭೂಲೋಕದ ಮನುಷ್ಯರ ಪರ ಯೋಚಿಸುವವನು; ಮಾನವಜೀವಿಗಳಿಗೆ ಇಂಬಾಗಿ ನಿಲ್ಲುವ ಬುದ್ಧಿಜೀವಿ. ಈ ಕಾರಣಕ್ಕೇ ಸ್ಯೂಸ್ಗೆ ಪ್ರಮೀಥಿಯಸನನ್ನು ಕಂಡರೆ ಕೋಪ. ಭೂಮಿಯಲ್ಲಿರುವ ಮನುಷ್ಯರು ತಾನು ಹೇಳಿದ್ದು ಕೇಳಿಕೊಂಡಿರಬೇಕು, ತನಗೆ ತಗ್ಗಿ ಬಗ್ಗಿ ನಡೆಯಬೇಕು ಎಂಬುದು ಸ್ಯೂಸನ ಠೇಂಕಾರ. ಆದರೆ ಪ್ರಮೀಥಿಯಸ್ ಸ್ಯೂಸನ ಆಜ್ಞೆ ಮೀರಿ, ದೇವತೆಗಳ ಕಣ್ಣು ತಪ್ಪಿಸಿ, ಬೆಂಕಿಯನ್ನು ಬಳ್ಳಿಯ ಕಾಂಡದಲ್ಲಿಟ್ಟುಕೊಂಡು ತಂದು ಮಾನವರಿಗೆ ಸಹಾಯ ಮಾಡಿದ. ಬೆಂಕಿಯಿಂದ ಮಾನವಜೀವಿಗಳ ಏಳಿಗೆ ಶುರುವಾಯಿತು. ಎಂಥ ಕಷ್ಟ ಎದುರಿಸಿಯಾದರೂ ಮಾನವರಿಗೆ ನೆರವಾದ ಪ್ರಮೀಥಿಯಸನಿಂದ ಕಾರ್ಲ್ ಮಾರ್ಕ್ಸ್ ಕೂಡ ಪ್ರೇರಣೆ ಪಡೆದಿದ್ದ. ಪ್ರಮೀಥಿಯಸನ ಈ ಮಾನವಪ್ರೇಮ ಕಂಡು ಸ್ಯೂಸನ ಕೋಪ ನೆತ್ತಿಗೇರಿತು. ಪ್ರಮೀಥಿಯಸನ ಸೊಕ್ಕು ಮುರಿಯಬೇಕೆಂದು ತೀರ್ಮಾನಿಸಿ, ದೇವಲೋಕದ ಶಿಲ್ಪಿ ಹೆಫಿಸ್ಟಸ್ನನ್ನು ಕರೆದು ಒಂದು ಸುಂದರವಾದ ಹೆಣ್ಣಿನ ಮೂರ್ತಿಯನ್ನು ಮಾಡಲು ಹೇಳಿದ. ಸೌಂದರ್ಯ ದೇವತೆ ಆಫ್ರೋದಿತಿ ಆ ಮೂರ್ತಿಗೆ ಅದ್ಭುತ ಸೌಂದರ್ಯ ಕೊಟ್ಟಳು. ಉಳಿದ ದೇವತೆಗಳು ವಂಚನೆ, ಕಪಟ, ಸುಳ್ಳು ಮುಂತಾದ ಕೆಟ್ಟಗುಣಗಳನ್ನು ಈ ಹೆಣ್ಣಿಗೆ ಕೊಟ್ಟರು. ಹೀಗೆ ಮೈದಾಳಿದ ಸುಂದರಿಯ ಹೆಸರು ಪಂಡೋರ. ಸ್ಯೂಸ್ ಪಂಡೋರಳಿಗೆ ಒಂದು ಅಪೂರ್ವ ಪೆಟ್ಟಿಗೆ ಕೊಟ್ಟ. ಅದರಲ್ಲಿ ಏನಿದೆ ಎಂಬುದು ರಹಸ್ಯವಾಗಿತ್ತು. ಆಮೇಲೆ ಸ್ಯೂಸ್ ಈ ಸುಂದರಿ ಪಂಡೋರಳನ್ನು ಪ್ರಮೀಥಿಯಸ್ನ ಸೋದರಮಾವ ಎಮಿಪಿಥಿಯಸ್ಗೆ ಕಾಣಿಕೆಯಾಗಿ ಕೊಟ್ಟ. ಎಪಿಮಿಥಿಯಸ್ ಪಂಡೋರಳನ್ನು ಕಂಡು ಮೋಹಗೊಂಡ. ಜಾಣ ಪ್ರಮೀಥಿಯಸ್ ಮಾತ್ರ ಇದರಲ್ಲೇನೋ ಮೋಸವಿದೆ ಎಂದು ಮಾವನನ್ನು ಎಚ್ಚರಿಸಿ, ಆಕೆಯನ್ನು ಹಿಂದಕ್ಕೆ ಕಳಿಸುವಂತೆ ನೋಡಿಕೊಂಡ. ಸ್ಯೂಸನಿಗೆ ಕೋಪ ಬಂತು. ತನ್ನನ್ನೇ ಪ್ರಶ್ನಿಸುವ ಪ್ರಮೀಥಿಯಸನ ಹುಟ್ಟಡಗಿಸಬೇಕೆಂದು ಮತ್ತೆ ತೀರ್ಮಾನಿಸಿದ. ಪ್ರಮೀಥಿಯಸ್ ತನ್ನ ಮಗಳು ಅಥೀನಿಯನ್ನು ಕದ್ದೊಯ್ದಲು ಬಂದಿದ್ದ ಎಂಬ ಸುಳ್ಳು ಗುಲ್ಲೆಬ್ಬಿಸಿ, ಅವನನ್ನು ಬಂಧಿಸಿ ಸರಪಳಿಯಿಂದ ಕೋಡುಗಲ್ಲಿಗೆ ಕಟ್ಟಿ ಹಾಕಿಸಿದ. ಇದಾದ ಮೇಲೆ ಸ್ಯೂಸ್ ಪಂಡೋರಳನ್ನು ಮತ್ತೆ ಎಮಿಪಿಥಿಯಸ್ ಮನೆಗೆ ಕಳಿಸಿದ. ಆತ ಅವಳ ಬಗೆಗಿನ ಮೋಹ, ಸ್ಯೂಸ್ ಭಯ ಎರಡೂ ಸೇರಿ ಪಂಡೋರಳನ್ನು ಮದುವೆಯಾದ. ಒಂದು ದಿನ ಪಂಡೋರ ಕುತೂಹಲದಿಂದ ಸ್ಯೂಸ್ ತನಗೆ ಕೊಟ್ಟಿದ್ದ ಅಪೂರ್ವ ಪೆಟ್ಟಿಗೆಯನ್ನು ತೆರೆದೇ ಬಿಟ್ಟಳು. ಪೆಟ್ಟಿಗೆಯೊಳಗಿಂದ ರೋಗ, ದ್ವೇಷ, ಮುಪ್ಪು, ಅಸೂಯೆ ಮುಂತಾದ ಎಲ್ಲ ಬಗೆಯ ಕೇಡುಗಳೂ ಹೊರಬಿದ್ದವು. ಅಂದಿನಿಂದ ಲೋಕದ ಕಷ್ಟ ಕೋಟಲೆಗಳು ಶುರುವಾದವು. ಇದು ಈ ಕತೆಯ ಸಾರ. ಈ ಕತೆಯ ಮತ್ತೊಂದು ರೂಪದ ಪ್ರಕಾರ, ಈ ಪೆಟ್ಟಿಗೆ ಮೊದಲೇ ಎಮಿಪಿಥಿಯಸ್ ಮನೆಯಲ್ಲಿತ್ತು. ಜಗತ್ತಿನಲ್ಲಿ ಮಾನವರಿಗೆ ಕಷ್ಟ ಕೊಡುವ ದುಷ್ಟ ಕೀಟಗಳನ್ನೆಲ್ಲ ಪ್ರಮೀಥಿಯಸ್ ಆ ಪೆಟ್ಟಿಗೆಯಲ್ಲಿ ಹಿಡಿದಿಟ್ಟು, ಮಾನವರನ್ನು ಕಷ್ಟಕೋಟಲೆಗಳಿಂದ ಪಾರು ಮಾಡಲೆತ್ನಿಸಿದ್ದ. ಆ ಪೆಟ್ಟಿಗೆಯನ್ನು ಪ್ರೊಮಿಥ್ಯೂಸ್ ಮನೆಯಲ್ಲಿ ತಂದಿಟ್ಟಿದ್ದ. ಈ ಪೆಟ್ಟಿಗೆಯನ್ನು ತೆರೆಯಬೇಡವೆಂದು ಹೇಳಿದ್ದರೂ ಪಂಡೋರ ಕುತೂಹಲ ತಡೆಯಲಾರದೆ ತೆರೆದೇಬಿಟ್ಟಳು. ತಕ್ಷಣ ಕಷ್ಟಕೀಟಗಳೆಲ್ಲ ಹೊರ ಬಂದು ಲೋಕದ ಮನುಷ್ಯರನ್ನು ಕಚ್ಚಿದವು. ಅಂದಿನಿಂದ ಮಾನವರ ಸಂಕಷ್ಟಗಳು ಶುರುವಾದವು. ಕೊನೆಗೆ ಒಂದು ಬಿಳಿ ಕೀಟ ಮಾತ್ರ ಪೆಟ್ಟಿಗೆಯಲ್ಲಿ ಹಾಗೇ ಉಳಿಯಿತು. ಅದು ಆಸೆ, ನಂಬಿಕೆ, ಭರವಸೆಗಳ ಕೀಟ. ಈ ಬಿಳಿ ಕೀಟ ಮನುಷ್ಯರಿಗೆ ಎಷ್ಟೇ ಕಷ್ಟ ಬಂದರೂ ಮುಂದೆ ಒಳ್ಳೆಯ ಕಾಲ ಬರುತ್ತದೆ ಎಂಬುದನ್ನು ಸೂಚಿಸುತ್ತದಂತೆ. ಮುಂದೆ ಈ ಪಂಡೋರ ಕತೆ ಲೋಕದ ಕಷ್ಟಗಳಿಗೆಲ್ಲ ಹೆಣ್ಣೇ ಮೂಲ ಕಾರಣ ಎಂದು ಮೂಗು ಮುರಿಯುವವರ ಕೈ ಬಾಯಿಗೆ ಸಿಕ್ಕು ಅಗ್ಗವಾಯಿತು. ಇವತ್ತಿಗೂ ಯಾರಾದರೂ ಒಂದರ ಮೇಲೊಂದರಂತೆ ಕಷ್ಟಕ್ಕೆ ಸಿಕ್ಕಿ ಹಾಕಿಕೊಂಡರೆ ‘ಪಂಡೋರಾ ಬಾಕ್ಸ್ ತೆರೆದಂತಾಯಿತು’ ಎಂಬ ರೂಪಕ ಪಶ್ಚಿಮದಲ್ಲಿ ಪರಿಚಿತವಿದೆ. ಆದರೆ ಪಂಡೋರಳನ್ನು ಸ್ವತಃ ಸ್ಯೂಸ್ ದೇವ ಹಾಗೂ ದೇವತೆಗಳು ಮೋಸದಿಂದ ಬಳಸಿಕೊಂಡರು ಎಂಬ ಕತೆ ಮಾತ್ರ ಹಿನ್ನೆಲೆಗೆ ಸರಿದುಬಿಟ್ಟಿದೆ. ಪಂಡೋರಾ ಕತೆಯನ್ನು ಸೃಷ್ಟಿಸಿದ ಗ್ರೀಕ್ ಸಂಸ್ಕೃತಿಯಲ್ಲೇ ಹೆಣ್ಣಿನ ಎಣೆಯಿಲ್ಲದ, ಕೊನೆಯಿಲ್ಲದ ದುಃಖವನ್ನು ಬಿಂಬಿಸುವ ನಿಯೋಬಿಯ ಕತೆಯೂ ಸೃಷ್ಟಿಯಾಗಿದೆ: ನಿಯೋಬಿ ಥೀಬ್ಸ್ ರಾಜ್ಯದ ದೊರೆ ಆಂಫಿಯೋನ್ನ ಹೆಂಡತಿ. ಏಳು ಗಂಡು, ಏಳು ಹೆಣ್ಣು ಮಕ್ಕಳನ್ನು ಹಡೆದು ಅತಿ ಹೆಮ್ಮೆಯಿಂದ ಬದುಕುತ್ತಿದ್ದಳು. ‘ಸ್ಯೂಸ್ ದೇವನ ಪ್ರೇಯಸಿ ಲೀಟೋಗೆ ಇಬ್ಬರೇ ಇಬ್ಬರು ಮಕ್ಕಳು; ನನಗೆ ಹದಿನಾಲ್ಕು ಮಕ್ಕಳು’ ಎಂದು ಅವಳಿಗೆ ಹೆಮ್ಮೆ! ‘ಆ ಎರಡು ಮಕ್ಕಳಿರೋ ಲೀಟೋಗೇಕೆ ಪೂಜೆ? ನನಗೆ ಪೂಜೆ ಮಾಡಿ’ ಎಂದು ಕೂಡ ಹೇಳಿಬಿಟ್ಟಳು. ಇದರಿಂದ ಅವಮಾನಗೊಂಡ ಲೀಟೋ ತನ್ನ ಮಕ್ಕಳಾದ ಅಪೊಲೋ, ಆರ್ಟೆಮಿಸರಿಗೆ ಈ ಬಗ್ಗೆ ದೂರಿ ಅಲವತ್ತುಕೊಂಡಳು. ಸರಿ, ತಾಯಿಗೆ ಮರ್ಯಾದೆ ತಂದುಕೊಡಲು ಹೊರಟ ಈ ಹುಂಬ ಮಕ್ಕಳು ನಿಯೋಬಿಯ ಏಳು ಗಂಡು ಮಕ್ಕಳನ್ನೂ ಒಂದೇ ದಿನ ಕೊಂದುಬಿಟ್ಟರು. ತನ್ನ ಏಳೂ ಗಂಡುಮಕ್ಕಳು ಒಟ್ಟಿಗೇ ಸತ್ತದ್ದನ್ನು ಕೇಳಿ ದಿಗ್ಭ್ರಮೆಗೊಂಡ ಅಪ್ಪ ಆಂಫಿಯೋನ್ ಕತ್ತಿಯಿಂದ ಇರಿದುಕೊಂಡು ಸತ್ತ. ನಿಯೋಬಿ ತನ್ನ ಏಳು ಹೆಣ್ಣು ಮಕ್ಕಳ ಜೊತೆಗೂಡಿ, ಪತಿ ಹಾಗೂ ಗಂಡುಮಕ್ಕಳ ಶವ ಸಂಸ್ಕಾರ ಮಾಡುತ್ತಿದ್ದಾಗ ಆರ್ಟಿಮಿಸ್ ಅವಳ ಏಳು ಹೆಣ್ಣುಮಕ್ಕಳನ್ನೂ ಬಾಣದಿಂದ ಕೊಂದ. ಈ ಕತೆಯ ಕೊನೆಯನ್ನು ಸೀತಾರಾಮಯ್ಯ ಹೀಗೆ ಬಣ್ಣಿಸುತ್ತಾರೆ: ‘ದುಃಖ ತಡೆಯಲಾರದೆ ನಿಯೋಬಿ ಶಿಲಾಮೂರ್ತಿಯಂತೆ ಮೌನವಾಗಿ, ಹೆಣಗಳ ರಾಶಿಯ ಮುಂದೆ ಮೂಕರೋದನ ಮಾಡುತ್ತ ನಿಂತಿದ್ದಳು... ಹೆಣಗಳ ಸಂಸ್ಕಾರವಾಗದಂತೆ ಸ್ಯೂಸ್ ತಡೆದ. ತನ್ನ ಬದುಕಿನಲ್ಲಿ ಉಂಟಾದ ಈ ಭೀಕರ ಶೂನ್ಯಕ್ಕೆ ಹೆದರಿ ನಿಯೋಬಿ ಸಿಫೈಲಸ್ ಬೆಟ್ಟಕ್ಕೆ ಓಡಿ ಹೋದಳು. ಸ್ಯೂಸ್ ಕೊನೆಗೆ ಅವಳನ್ನೊಂದು ಶಿಲಾಮೂರ್ತಿಯಾಗಿ ಮಾಡಿದ. ಶಿಲಾಮೂರ್ತಿಯಾದ ಮೇಲೂ ಅವಳ ಕಣ್ಣಿಂದ ಧಾರಾಕಾರವಾಗಿ ಕಂಬನಿ ಇಳಿದು ಅವಳ ಕೆನ್ನೆಗಳ ಮೇಲೆ ಹರಿಯುತ್ತಿತ್ತು ಎಂದು ಆ ದಾರಿಯಲ್ಲಿ ಹೋಗುತ್ತಿದ್ದ ಪ್ರಯಾಣಿಕರು ಹೇಳುತ್ತಿದ್ದರು.’ ಎಷ್ಟೋ ವರ್ಷಗಳ ಕೆಳಗೆ ಈ ನಿಯೋಬಿಯ ಕತೆ ಓದಿದಾಗಿನಿಂದಲೂ ನಿಯೋಬಿ ನನಗೆ ಎಂದೂ ಮುಗಿಯದ ದುಃಖವುಳ್ಳ ಈ ಲೋಕದ ಹೆಣ್ಣುಗಳ ಪ್ರತಿನಿಧಿಯಂತೆಯೇ ಕಂಡಿದ್ದಾಳೆ. ಹೆಣ್ಣಿನ ದುಃಖಕ್ಕೆ ಕೊನೆಯೆಂಬುದೇ ಇಲ್ಲ ಎಂಬುದನ್ನೇ ಈ ಕತೆ ನನಗೆ ಮತ್ತೆ ಮತ್ತೆ ಹೇಳುತ್ತಿರುತ್ತದೆ. ನಾನು ಸುತ್ತಮುತ್ತ ಕಾಣುವ ಸ್ತ್ರೀಯರ ಬದುಕೂ ಇದನ್ನೇ ಮನವರಿಕೆ ಮಾಡಿಕೊಡುತ್ತಿರುತ್ತದೆ. ಮಾನವರಲ್ಲಿ ಪ್ರಜ್ಞೆಯ ಸ್ತರ-ಅಪ್ರಜ್ಞೆಯ ಸ್ತರ ಎರಡೂ ಇರುತ್ತವೆ; ಕನಸುಗಳು ಅಪ್ರಜ್ಞೆಯ ಸ್ತರದಿಂದ ಹುಟ್ಟುತ್ತವೆ ಎಂದು ಮನೋವಿಜ್ಞಾನಿ ಸಿಗ್ಮಂಡ್ ಫ್ರಾಯ್ಡ್ ತೋರಿಸಿದ್ದ. ಫ್ರಾಯ್ಡ್ನಿಂದ ಕವಲಾದ ಅವನ ಶಿಷ್ಯ ಕಾರ್ಲ್ ಯೂಂಗ್ ಸಂಸ್ಕೃತಿಗಳಿಗೂ, ಸಮುದಾಯಗಳಿಗೂ ಅಪ್ರಜ್ಞೆಯ ಸ್ತರ ಇರುತ್ತದೆ; ಮಿಥ್ಗಳು, ಪುರಾಣಗಳು ಸಮುದಾಯದ ಅಪ್ರಜ್ಞೆಯಿಂದ ಸೃಷ್ಟಿಯಾಗುತ್ತವೆ ಎಂದು ವಾದಿಸಿದ. ಯೂಂಗ್ ಗ್ರಹಿಕೆಯ ಹಿನ್ನೆಲೆಯಲ್ಲಿ ನೋಡಿದರೆ, ಗ್ರೀಕ್ ಸಂಸ್ಕೃತಿಯ ನಿಯೋಬಿ, ಪಂಡೋರ ಅಥವಾ ಭಾರತದ ಯಯಾತಿ, ಸತಿ ಸಾವಿತ್ರಿ ಥರದ ಪುರಾಣಗಳು, ದಂತಕತೆಗಳು ಹುಟ್ಟುವುದು ಸಮುದಾಯದ ಅಪ್ರಜ್ಞೆಯಿಂದ. ಅಂದರೆ, ಮೇಲೆ ಕೊಟ್ಟಿರುವ ಹೆಣ್ಣನ್ನು ಕುರಿತ ಎರಡೂ ಕತೆಗಳು ಗ್ರೀಕ್ ಜನಮಾನಸದ ಅಪ್ರಜ್ಞೆಯಿಂದ ಹುಟ್ಟಿವೆ. ಗ್ರೀಕ್ ಸಮುದಾಯದ ಅಪ್ರಜ್ಞೆ ಇಂಥ ನೂರಾರು ಪುರಾಣಕತೆಗಳನ್ನು ಸೃಷ್ಟಿಸಿದೆ. ಈ ಕತೆಗಳಲ್ಲಿ ಪುರುಷ ಪೂರ್ವಾಗ್ರಹಗಳೂ ದಂಡಿಯಾಗಿವೆ. ಆದರೂ ಯಾವುದೇ ಒಳ್ಳೆಯ ಕತೆಯ ಹಾಗೆ ಮಿಥ್ ಕೂಡ ಹಲವು ಸ್ತರಗಳ ಸತ್ಯವನ್ನು ಉಸುರುತ್ತಲೇ ಇರುತ್ತದೆ. ಕೊನೆಗೆ ಶಿಲೆಯಾದರೂ ಕಣ್ಣೀರು ಸುರಿಸುವ ನಿಯೋಬಿಯ ಕತೆ ಲೋಕದ ಸ್ತ್ರೀ ಸಂಕುಲದ ದುಃಖವನ್ನು ಪ್ರತಿನಿಧಿಸುವುದು ಹೀಗೆ. ಆದರೆ ಪಂಡೋರ ಪೆಟ್ಟಿಗೆಯ ಕತೆ ಸ್ತ್ರೀ ಸಂಕುಲದ ಬಗ್ಗೆ ಪುರುಷ ಸಮುದಾಯದ ಪ್ರಜ್ಞೆ-ಅಪ್ರಜ್ಞೆ ಎರಡೂ ಸ್ತರಗಳಲ್ಲಿರುವ ನಿರಂತರ ಅನುಮಾನವನ್ನೇ ಸೂಚಿಸುವಂತಿದೆ ಎನ್ನಿಸುತ್ತದೆ.
ಮಧ್ಯಪ್ರಾಚ್ಯದಲ್ಲಿ ಸಂಗರ್ಷ ಮತ್ತಷ್ಟು ಉದ್ವಿಗ್ನತೆ ಉಲ್ಬಣಗೊಳ್ಳುತ್ತಿರುವ ಬೆನ್ನಲ್ಲೇ, ಇರಾನ್ ಗೆ ಚೀನಾ ಮಿಲಿಟರಿ ಬೆಂಬಲ ನೀಡುತ್ತಿದೆ ಎಂಬ ವರದಿಗಳ ಕುರಿತು ಟ್ರಂಪ್ ಪ್ರತಿಕ್ರಿಯೆ ನೀಡಿದ್ದು, ಚೀನಾ ಈ ಕೃತ್ಯ ಮಾಡಿದರೆ, ಅವರ ಮೇಲೆ ಶೇ.50ರಷ್ಟು ಸುಂಕ ವಿಧಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಚೀನಾದ ರಾಯಭಾರ ಕಚೇರಿ ಚೀನಾ ಎಂದಿಗೂ ಯುದ್ಧದಲ್ಲಿರುವ ದೇಶಗಳಿಗೆ ಶಸ್ತ್ರಗಳನ್ನು ಒದಗಿಸಿಲ್ಲ ಎಂದು ತಿಳಿಸಿದ್ದಾರೆ. ಈ ಕುರಿತ ಮಾಹಿತಿ ನೀಡಿದೆ.
ಕೇಂದ್ರ ಸಚಿವರಾದ ಬಳಿಕ ಮೊದಲ ಬಾರಿಗೆ ವಿಧಾನಸೌಧಕ್ಕೆ ಎಚ್.ಡಿ ಕುಮಾರಸ್ವಾಮಿ ಭೇಟಿ ನೀಡಿದರು. ಮಂಡ್ಯದ ಕೈಗಾರಿಕಾ ಅಭಿವೃದ್ಧಿ: ಮಂಡ್ಯ ಜಿಲ್ಲೆಯಲ್ಲಿ ಹೊಸ ಕೈಗಾರಿಕೆಗಳ ಸ್ಥಾಪನೆ ಹಾಗೂ ರಾಜ್ಯದ ಕೈಗಾರಿಕಾ ಪ್ರಗತಿಯ ಕುರಿತು ಚರ್ಚಿಸಲು ರಾಜ್ಯ ಕೈಗಾರಿಕಾ ಸಚಿವರೊಂದಿಗೆ ಮಹತ್ವದ ಸಭೆ ನಡೆಸಿದರು.
ಪೈವಳಿಕೆ : ಎ.15 ರಂದು ಪಯ್ಯಕ್ಕಿ ಉಸ್ತಾದ್ ಅಕಾಡೆಮಿ ಪ್ರವೇಶ ಪರೀಕ್ಷೆ
ಉಪ್ಪಳ: ಇಲ್ಲಿನ ಪೈವಳಿಕೆ ಪಯ್ಯಕ್ಕಿ ಉಸ್ತಾದ್ ಇಸ್ಲಾಮಿಕ್ ಅಕಾಡೆಮಿಯ ಅಧೀನದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅನ್ಸಾರಿಯ ಆರ್ಟ್ಸ್ ಮತ್ತು ದಅವಾ ಕಾಲೇಜಿನಲ್ಲಿ 2026-27ನೇ ಸಾಲಿನ ಪ್ರವೇಶಾತಿ ಪ್ರಕ್ರಿಯೆ ಆರಂಭಗೊಂಡಿದೆ. ಧಾರ್ಮಿಕ ಮತ್ತು ಲೌಕಿಕ ಶಿಕ್ಷಣ ಒಂದೇ ಸೂರಿನಡಿ ನೀಡುವ 10 ವರ್ಷಗಳ 'ಅನ್ಸಾರಿ' ದಅವಾ ಕೋರ್ಸ್ ಗೆ ದಾಖಲಾತಿ ಆರಂಭಗೊಂಡಿದೆ. ಪ್ರವೇಶ ಪರೀಕ್ಷೆಯು ಇದೇ ಬರುವ ಎಪ್ರಿಲ್ 15ರಂದು ಬುಧವಾರ ಬೆಳಗ್ಗೆ 9.30ಕ್ಕೆ ಪೈವಳಿಕೆ ಅಕಾಡೆಮಿ ಕ್ಯಾಂಪಸ್ ನಲ್ಲಿ ನಡೆಯಲಿದೆ ಎಂದು ಸಂಸ್ಥೆಯ ಮುಖ್ಯಸ್ಥರಾದ ಅಬ್ದುಲ್ ಮಜೀದ್ ದಾರಿಮಿ ತಿಳಿಸಿದ್ದಾರೆ. ಮದರಸಾ 5ನೇ ತರಗತಿ ಹಾಗೂ ಶಾಲೆ 7ನೇ ತರಗತಿಯನ್ನು ಪೂರ್ಣಗೊಳಿಸಿದ ವಿದ್ಯಾರ್ಥಿಗಳು 'ಅನ್ಸಾರಿ' ಕೋರ್ಸ್ ಗೆ ಅರ್ಜಿ ಸಲ್ಲಿಸಬಹುದು. ಅರ್ಜಿದಾರರು 2003 ಜೂನ್ 1ರ ನಂತರ ಜನಿಸಿದವರಾಗಿರಬೇಕು. ಇದರ ಜೊತೆಗೆ, ಪವಿತ್ರ ಕುರ್ಆನ್ ಕಂಠಪಾಠ ಮಾಡಲು ಆಸಕ್ತಿ ಹೊಂದಿರುವ ವಿದ್ಯಾರ್ಥಿಗಳಿಗಾಗಿ ಹಿಫ್ಝ್ ಕೋರ್ಸ್ ಗೆ ಪ್ರವೇಶ ಪರೀಕ್ಷೆಯೂ ಅದೇ ದಿನ (ಎ.15) ನಡೆಯಲಿದೆ. ಮದರಸಾ ಮತ್ತು ಶಾಲೆಯಲ್ಲಿ 4ನೇ ತರಗತಿ ಪಾಸಾದ, 10 ವರ್ಷಕ್ಕಿಂತ ಕಡಿಮೆ ವಯಸ್ಸಿನ ವಿದ್ಯಾರ್ಥಿಗಳು ಮೂರು ವರ್ಷಗಳ ಹಿಫ್ಝ್ ಕೋರ್ಸ್ ಗೆ ಅರ್ಜಿ ಸಲ್ಲಿಸಬಹುದು. ಅನ್ಸಾರಿ ದಅವಾ ಕೋರ್ಸ್ ಗೆ ಅರ್ಹ ವಿದ್ಯಾರ್ಥಿಗಳಿಗೆ ಲ್ಯಾಟರಲ್ ಎಂಟ್ರಿ ಪರೀಕ್ಷೆಯ ಮೂಲಕ ಪ್ರವೇಶಕ್ಕೆ ಅವಕಾಶವಿದೆ. ಈ ಸಂಸ್ಥೆಯು ಪೈವಳಿಕೆ ಸಮೀಪದ ಬಾಯಿಕಟ್ಟೆ ಎಂಬಲ್ಲಿ ವಿಶಾಲವಾದ ಸುಸಜ್ಜಿತ ಕ್ಯಾಂಪಸ್ ಅನ್ನು ಹೊಂದಿದ್ದು, ಪ್ರವೇಶ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ ವಿದ್ಯಾರ್ಥಿಗಳಿಗೆ ಹತ್ತು ವರ್ಷಗಳ ಉಚಿತ ಶಿಕ್ಷಣ ಹಾಗೂ ವಸತಿ ಸೌಲಭ್ಯ ದೊರೆಯಲಿದೆ. ಹೆಚ್ಚಿನ ಮಾಹಿತಿಗಾಗಿ ಮತ್ತು ಅರ್ಜಿ ಫಾರ್ಮ್ಗಾಗಿ 8892805058 ಸಂಖ್ಯೆಯನ್ನು ಸಂಪರ್ಕಿಸಬಹುದು ಎಂದು ಸಂಸ್ಥೆ ತಿಳಿಸಿದೆ.
ಮಧ್ಯಪ್ರಾಚ್ಯದಲ್ಲಿ ಶಾಂತಿ ಸ್ಥಾಪನೆಯ ಪ್ರಯತ್ನದ ಭಾಗವಾಗಿ ಪಾಕಿಸ್ತಾನ ರಾಜಧಾನಿ ಇಸ್ಲಾಮಾಬಾದ್ನಲ್ಲಿ ಅಮೆರಿಕ ಮತ್ತು ಇರಾನ್ ನಡುವೆ ನಡೆದ ಮಾತುಕತೆ ವಿಫಲವಾಗಿದೆ. ಉಭಯ ಪಕ್ಷಗಳು ಒಮ್ಮತದ ನಿರ್ಣಯಕ್ಕೆ ಬರುವಲ್ಲಿ ವಿಫಲವಾಗಿದ್ದೇ ಮಾತುಕತೆ ವೈಫಲ್ಯಕ್ಕೆ ಕಾರಣ ಎಂದು ಹೇಳಲಾಗುತ್ತಿದೆ. ಆದರೆ ಮಾತುಕತೆ ಸಮಯದಲ್ಲಿ ಅಮೆರಿಕ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಅವರಿಗೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಮಾಡಿದ ದೂರವಾಣಿ ಕರೆಯೇ, ಮಾತುಕತೆ ಮುರಿದು ಬೀಳಲು ನೈಜ ಕಾರಣ ಎಂಬ ಸಂಗತಿ ಇದೀಗ ಬಯಲಾಗಿದೆ.
Hardik vs Krunal Pandya: ವಾಂಖೆಡೆಯಲ್ಲಿ ಏಪ್ರಿಲ್ 12ರಂದು ನಡೆದ ಮುಂಬೈ ಇಂಡಿಯನ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಿನ ಐಪಿಎಲ್ ಪಂದ್ಯವು ಕೇವಲ ಕ್ರಿಕೆಟ್ ಆಟವಾಗಿ ಉಳಿಯಲಿಲ್ಲ. ಬದಲಾಗಿ ಪಾಂಡ್ಯ ಸಹೋದರರ ನಡುವಿನ ಶೀತಲ ಸಮರದ ವೇದಿಕೆಯಾಗಿ ಬದಲಾಯಿತು. ಟಾಸ್ ಗೆದ್ದ ಮುಂಬೈ ಇಂಡಿಯನಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಬೌಲಿಂಗ್ ಆಯ್ಕೆ ಮಾಡಿಕೊಂಡರು. ಅದರಂತೆಯೇ
ಮತ್ತೆ ಅಲ್ಪ ಮಟ್ಟಿಗೆ ಕುಸಿದ ಚಿನ್ನದ ಬೆಲೆ
ಪ್ರಸ್ತುತ ಸಂಘರ್ಷ ಎಷ್ಟು ದೀರ್ಘ ಕಾಲ ಇರುತ್ತದೆ ಎನ್ನುವುದರ ಮೇಲೆ ಚಿನ್ನದ ಬೆಲೆಗಳ ಸ್ಥಿರತೆ ಅವಲಂಬಿಸಿವೆ. ಫೆಬ್ರವರಿ ಅಂತ್ಯದಿಂದ ಚಿನ್ನದ ಮೌಲ್ಯ ಸುಮಾರು ಶೇ 10ರಷ್ಟು ಕುಸಿದಿದೆ. ಹೂಡಿಕೆದಾರರು ಚಿನ್ನಕ್ಕೆ ಹೋಲಿಸಿದರೆ ಅಮೆರಿಕನ್ ಡಾಲರ್ ಮೇಲೆ ಹೂಡಿಕೆ ಸುರಕ್ಷಿತವೆಂದು ಭಾವಿಸುತ್ತಿರುವ ಕಾರಣ ಕುಸಿತ ಕಂಡುಬಂದಿದೆ. 2026ರ ಆರಂಭದಲ್ಲಿ ತೈಲ ಬೆಲೆ ಸ್ಥಿರವಾಗಿರುವ ನಿರೀಕ್ಷೆಯಲ್ಲಿ ಚಿನ್ನದ ಮೇಲೆ ವಿಪರೀತ ಹೂಡಿಕೆಯಾಗಿ ಬೆಲೆಗಳು ಏರಿದ್ದವು. ಇದೀಗ ಬೆಳವಣಿಗೆ ವಿರುದ್ಧ ದಿಕ್ಕಿಗೆ ತಿರುಗಿವೆ. ಅಮೆರಿಕ ಮತ್ತು ಇರಾನ್ ನಡುವೆ ಸಂಧಾನವಾಗದೆ ಇದ್ದರೆ ತೈಲ ಬೆಲೆಗಳು ಬ್ಯಾರೆಲ್ಗೆ 110 ಡಾಲರ್ ಗೆ ಏರಬಹುದು. ಪ್ರಸ್ತುತ ಸಂಘರ್ಷ ಎಷ್ಟು ದೀರ್ಘ ಕಾಲ ಇರುತ್ತದೆ ಎನ್ನುವುದರ ಮೇಲೆ ಚಿನ್ನದ ಬೆಲೆಗಳ ಸ್ಥಿರತೆ ಅವಲಂಬಿಸಿವೆ. ಇಂದಿನ ಚಿನ್ನದ ದರ ಹೇಗಿದೆ? ಎಪ್ರಿಲ್ 13ರಂದು ಸೋಮವಾರ ಬೆಂಗಳೂರಿನ ಮಾರುಕಟ್ಟೆಗಳಲ್ಲಿ 24 ಕ್ಯಾರೆಟ್ ಶುದ್ಧ ಚಿನ್ನದ ಬೆಲೆ ಶುಕ್ರವಾರ ಸಂಜೆಯ ಬೆಲೆಗೆ ಹೋಲಿಸಿದರೆ ಪ್ರತಿ ಗ್ರಾಂಗೆ 38 ರೂ. ಕುಸಿತ ಕಂಡು ಹತ್ತು ಗ್ರಾಂ ಬೆಲೆ 1,52,460 ರೂ. ಗೆ ಬಂದು ನಿಂತಿದೆ. ಆಭರಣ ಚಿನ್ನವಾದ 22 ಕ್ಯಾರೆಟ್ ಬೆಲೆಯು ಪ್ರತಿ ಗ್ರಾಂಗೆ 35 ರೂ. ಕುಸಿದು ಹತ್ತು ಗ್ರಾಂಗೆ 1,39,750 ರೂ. ಗೆ ತಲುಪಿದೆ. 18 ಕ್ಯಾರೆಟ್ ಚಿನ್ನವು ಪ್ರತಿ ಗ್ರಾಂಗೆ 29 ರೂ. ಕುಸಿದು ಹತ್ತು ಗ್ರಾಂಗೆ 1,14,340 ರೂ. ಗೆ ತಲುಪಿದೆ. ಮಂಗಳೂರಿನಲ್ಲಿ ಚಿನ್ನದ ದರವೆಷ್ಟಿದೆ? ಎಪ್ರಿಲ್ 13ರಂದು ಸೋಮವಾರ ಬೆಳಗಿನ 11 ಗಂಟೆಯ ವಹಿವಾಟಿನಲ್ಲಿ ಮಂಗಳೂರಿನಲ್ಲಿ ಚಿನ್ನದ ಬೆಲೆ ಮತ್ತೆ ಅಲ್ಪಮಟ್ಟಿಗೆ ಕುಸಿದಿದೆ. ಒಂದು ಗ್ರಾಂ 24 ಕ್ಯಾರೆಟ್ ಚಿನ್ನದ ದರ 15,246 (-38) ರೂ. ನಷ್ಟಿದೆ. ಒಂದು ಗ್ರಾಂ 22 ಕ್ಯಾರೆಟ್ ಚಿನ್ನದ 13,975 (-35) ರೂ. ಮತ್ತು ಒಂದು ಗ್ರಾಂ 18 ಕ್ಯಾರೆಟ್ ಚಿನ್ನದ ದರ 11,434 (-29) ರೂ. ಬೆಲೆಗೆ ತಲುಪಿದೆ. ಬೆಳ್ಳಿಯ ದರದಲ್ಲಿ ಸ್ಥಿರತೆ ಮಾರ್ಚ್ ಆರಂಭದಲ್ಲಿ ಹೆಚ್ಚು ಏರಿಳಿತ ಕಾಣದೆ ಸ್ಥಿರವಾಗಿದ್ದ ಬೆಳ್ಳಿಯ ದರ, ಮಾರ್ಚ್ 09ರ ನಂತರ ಸ್ವಲ್ಪ ಕುಸಿತದ ಹಾದಿಯಲ್ಲಿತ್ತು. ಏಪ್ರಿಲ್ ಆರಂಭದಲ್ಲಿ 2,50,000 ರೂ. ಗೆ ಬಂದು ತಲುಪಿದ ನಂತರ ಕಳೆದ ವಾರಾಂತ್ಯದಲ್ಲಿ ಪ್ರತಿ ಕೆಜಿಗೆ 2,60,000 ರೂ.ಗೆ ಸ್ಥಿರವಾಗಿ ನಿಂತಿತ್ತು. ಇದೀಗ ಭಾನುವಾರ ಪ್ರತಿ ಗ್ರಾಂಗೆ 5 ರೂ. ಕುಸಿದಿರುವ ಬೆಳ್ಳಿಯ ಬೆಲೆ ಪ್ರತಿ ಕೆಜಿಗೆ 2,55,000 ರೂ.ಗೆ ತಲುಪಿದೆ. ವಿವಿಧ ನಗರಗಳಲ್ಲಿ 1 ಗ್ರಾಮ್ ಚಿನ್ನದ ದರ (ಬೆಳಗಿನ ವಹಿವಾಟು) ಹೇಗಿದೆ? ದಿಲ್ಲಿ: 24 ಕ್ಯಾರೆಟ್ ಚಿನ್ನದ ದರ 15,261 (-38) ರೂ., 22 ಕ್ಯಾರೆಟ್ ಚಿನ್ನದ ದರ 13,990 (-35) ರೂ. ಮುಂಬೈ: 24 ಕ್ಯಾರೆಟ್ ಚಿನ್ನದ ದರ 15,246 (-38) ರೂ., 22 ಕ್ಯಾರೆಟ್ ಚಿನ್ನದ ದರ 13,975 (-35) ರೂ. ಅಹಮದಾಬಾದ್: 24 ಕ್ಯಾರೆಟ್ ಚಿನ್ನದ ದರ 15,251 (-38) ರೂ., 22 ಕ್ಯಾರೆಟ್ ಚಿನ್ನದ ದರ 13,980 (-35) ರೂ. ಚೆನ್ನೈ: 24 ಕ್ಯಾರೆಟ್ ಚಿನ್ನದ ದರ 15,338 (-44) ರೂ., 22 ಕ್ಯಾರೆಟ್ ಚಿನ್ನದ ದರ 14,060 (-40) ರೂ. ಕೋಲ್ಕತ್ತಾ: 24 ಕ್ಯಾರೆಟ್ ಚಿನ್ನದ ದರ 15,246 (-38) ರೂ., 22 ಕ್ಯಾರೆಟ್ ಚಿನ್ನದ ದರ 13,975 (-35) ರೂ. ಹೈದರಾಬಾದ್: 24 ಕ್ಯಾರೆಟ್ ಚಿನ್ನದ ದರ 15,246 (-38) ರೂ., 22 ಕ್ಯಾರೆಟ್ ಚಿನ್ನದ ದರ 13,975 (-35) ರೂ. ಜೈಪುರ: 24 ಕ್ಯಾರೆಟ್ ಚಿನ್ನದ ದರ 15,261 (-38) ರೂ., 22 ಕ್ಯಾರೆಟ್ ಚಿನ್ನದ ದರ 13,990 (-35) ರೂ. ಚಂಡೀಗಢ: 24 ಕ್ಯಾರೆಟ್ ಚಿನ್ನದ ದರ 15,261 (-38) ರೂ., 22 ಕ್ಯಾರೆಟ್ ಚಿನ್ನದ ದರ 13,990 (-35) ರೂ. ಲಕ್ನೊ: 24 ಕ್ಯಾರೆಟ್ ಚಿನ್ನದ ದರ 15,261 (-38) ರೂ., 22 ಕ್ಯಾರೆಟ್ ಚಿನ್ನದ ದರ 13,990 (-35) ರೂ.
ಉಪಚುನಾವಣೆ ಮುಗಿದ ಬೆನ್ನಲ್ಲೇ ವಿಜಯೇಂದ್ರಗೆ ಬಿಜೆಪಿ ವರಿಷ್ಠರ ಸಂದೇಶ: ಕೊಟ್ಟ ಸೂಚನೆ ಏನು?
BJP High Command appreciation to BY Vijayendra : ಉಪಚುನಾವಣೆಯನ್ನು ಯಾವುದೇ ಗೊಂದಲವಿಲ್ಲದೇ ಒಗ್ಗಟ್ಟಾಗಿ ಎದುರಿಸಿದ್ದಕ್ಕಾಗಿ, ಬಿಜೆಪಿ ಹೈಕಮಾಂಡ್, ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರಿಗೆ ಶಹಬ್ಬಾಸ್’ಗಿರಿ ನೀಡಿದ್ದಾರೆಂದು ವರದಿಯಾಗಿದೆ. ಆಡಳಿತ ಪಕ್ಷಗಳ ಹುಳುಕನ್ನು ಜನಸಾಮಾನ್ಯರ ಮುಂದೆ ಇಡಲು, ಇನ್ನೂ ಅಗ್ರೆಸ್ಸೀವ್ ಆಗಿ ಕೆಲಸ ಮಾಡಲು ವರಿಷ್ಠರು ಸಂದೇಶ ರವಾನಿಸಿದ್ದಾರೆ.
ಶಿಕ್ಷಣೋದ್ಯಮಕ್ಕೆ ಶಿಕ್ಷಣಾರ್ಥಿಗಳೇ ಸರಕುಗಳು
ಶ್ರೆಕ್ಷಣಿಕ ಪ್ರಗತಿಯಲ್ಲಿ ಬೌದ್ಧಿಕ ಔನ್ನತ್ಯಕ್ಕಿಂತಲೂ ಮಿಗಿಲಾಗಿ ಕಾಣುವುದು, ಔದ್ಯಮಿಕ ಅಭಿವೃದ್ಧಿಯ ಮಾದರಿಗಳು. ಸರಕಾರಗಳು ತಮ್ಮ ಸಾಂವಿಧಾನಿಕ ಜವಾಬ್ದಾರಿ ಮತ್ತು ಸಾಮಾಜಿಕ ನೈತಿಕತೆಯನ್ನು ಮರೆತು, ಶಿಕ್ಷಣವನ್ನು ಖಾಸಗೀಕರಣಗೊಳಿಸುವ-ಕಾರ್ಪೊರೇಟೀಕರಣ ಗೊಳಿಸುವ ನೀತಿಗಳನ್ನು ಅಳವಡಿಸುತ್ತಿವೆ. ಇಲ್ಲಿ ಬಲಿಯಾಗುತ್ತಿರುವುದು ಸರಕಾರಿ ಶಾಲೆಗಳು ಮತ್ತು ಇದನ್ನೇ ಅವಲಂಬಿಸುವ ತಳಸಮುದಾಯದ, ಕೆಳಮಧ್ಯಮ ವರ್ಗದ, ಬಡ ಜನತೆ. ಈ Marketisation (ಉದ್ಯಮ ಅಥವಾ ಸೇವಾ ವಲಯಗಳನ್ನು ಮಾರುಕಟ್ಟೆ ಶಕ್ತಿಗಳಿಗೆ ಒಪ್ಪಿಸುವ ಪ್ರಕ್ರಿಯೆ) ಈಗ ಉನ್ನತ ವಿಶ್ವವಿದ್ಯಾನಿಲಯಗಳಿಂದ ಗ್ರಾಮೀಣ ಪ್ರಾಥಮಿಕ ಶಾಲೆಗಳವರೆಗೂ ವ್ಯಾಪಿಸಿದೆ. ಕರ್ನಾಟಕದ So called ಸಮಾಜವಾದಿ-ಸಂವಿಧಾನ ಪ್ರಿಯ ಕಾಂಗ್ರೆಸ್ ಸರಕಾರ ಜಾರಿಗೊಳಿಸಿರುವ 40 ಸಾವಿರ ಸರಕಾರಿ ಶಾಲೆಗಳನ್ನು ಮುಚ್ಚುವ ಕೆಪಿಎಸ್ ಮಾಗ್ನೆಟ್ ಶಾಲೆಗಳ ನೀತಿ ಇದರ ಒಂದು ನೇರ ನಿದರ್ಶನ. ಯಾವುದೇ ಉದ್ಯಮವಾದರೂ ಅಲ್ಲಿ ಪ್ರಧಾನವಾಗಿ ಲಾಭ ಗಳಿಕೆ, ಮಾರುಕಟ್ಟೆ ವಿಸ್ತರಣೆ ಮತ್ತು ತನ್ನ ವ್ಯಾಪ್ತಿಗೊಳಪಡುವ ವಸ್ತು-ಸೇವೆಗಳ ಸರಕೀಕರಣ ಸಾಮಾನ್ಯ ಲಕ್ಷಣಗಳಾಗುತ್ತವೆ. ಔದ್ಯಮಿಕ ನೆಲೆಯಲ್ಲಿ ಇದನ್ನು ಅಲ್ಲಗಳೆಯಲಾಗುವುದಿಲ್ಲ. ಆದರೆ ಸಾಮಾಜಿಕ ಸಂವೇದನೆ, ಜನಪರ ಕಾಳಜಿ, ಅಭಿವೃದ್ಧಿಯ ಮಾನವೀಯ ಮಾರ್ಗ ಹಾಗೂ ವರ್ತಮಾನ-ಭವಿಷ್ಯದ ಪೀಳಿಗೆಯ ಸುಭದ್ರ ಬದುಕು, ಈ ಮೌಲ್ಯಗಳೇ ಅಡಿಪಾಯವಾಗಿರುವ ‘ಶಿಕ್ಷಣ’ ಒಂದು ಸರಕಾಗಿ, ‘ಶೈಕ್ಷಣಿಕ ವ್ಯವಸ್ಥೆ’ ಔದ್ಯಮೀಕರಣಕ್ಕೊಳಗಾದಾಗ, ಇದರ ಭಾಗಿದಾರರಾದ (Stakeholders) ಶಿಕ್ಷಣಾರ್ಥಿಗಳೂ ವಿನಿಮಯದ ಸರಕುಗಳಾಗಿಬಿಡುತ್ತಾರೆ. ಶಿಕ್ಷಣಾರ್ಥಿಗಳ ಸರಕೀಕರಣ ಈ ಸರಕೀಕರಣ ಮತ್ತು ಮಾರುಕಟ್ಟೆಯ ಒಂದು ವಾಣಿಜ್ಯ ಆಯಾಮವನ್ನು ರಾಜ್ಯ ಪಠ್ಯಕ್ರಮದ ಮತ್ತು ಸಿಬಿಎಸ್ಇ ಪಠ್ಯಕ್ರಮದ ದ್ವಿತೀಯ ಪಿಯು ಫಲಿತಾಂಶಗಳ ನಂತರದಲ್ಲಿ ಕಾಣಬಹುದು. ಮಕ್ಕಳು ಶಿಕ್ಷಣ ಪಡೆಯುವುದು ಜ್ಞಾನಾರ್ಜನೆಗೋ, ಉದ್ಯೋಗ ಪಡೆಯುವುದಕ್ಕೋ ಎಂಬ ಪ್ರಶ್ನೆಯನ್ನು ಬದಿಗಿಟ್ಟು ನೋಡಿದಾಗ, ಈ ಮಕ್ಕಳ ಉತ್ತೀರ್ಣ/ಅನುತ್ತೀರ್ಣ ವರ್ಗೀಕರಣ, ಈಗಾಗಲೇ ಬೇರೂರಿರುವ ಸಾಮಾಜಿಕ ವರ್ಗೀಕರಣವನ್ನು ಅಥವಾ ಪ್ರತ್ಯೇಕೀಕರಣವನ್ನು ಶೈಕ್ಷಣಿಕವಾಗಿ ಬಲಪಡಿಸುವಂತೆ ಕಾಣುತ್ತದೆ. ಒಂದು ವರ್ಗದ, ಸಾಮಾನ್ಯವಾಗಿ ಮೇಲ್ವರ್ಗ ಅಥವಾ ಮೇಲ್ ಮಧ್ಯಮ ವರ್ಗದ ಮಕ್ಕಳಿಗಷ್ಟೇ ನಿಲುಕುವ ಶಿಕ್ಷಣ ಸಂಸ್ಥೆಗಳು ಸೃಷ್ಟಿಸುವ ನಿರೂಪಣೆಗಳು (Narratives), ಶಿಕ್ಷಣ ಎನ್ನುವುದನ್ನು ಜ್ಞಾನ ಸಂಪಾದನೆಯ ಆವರಣಗಳಿಂದ, ಶ್ರೇಣೀಕರಣದ ಏಣಿಗಳಿರುವ ಸಂತೆಗೆ ರವಾನಿಸುತ್ತವೆ. ಖಾಸಗಿ, ಕಾರ್ಪೊರೇಟ್ ಶಾಲೆಗಳು ತಮ್ಮ ದೃಷ್ಟಿಕೋನದಲ್ಲಿ ಅತ್ಯಂತ ಸಂಕುಚಿತವಾಗಿದ್ದರೂ ‘ಇಂಟರ್ನ್ಯಾಷನಲ್’ ಎಂಬ ಹೆಸರನ್ನು ಹೊತ್ತಿರುವುದು ಸಾಮಾನ್ಯ ಲಕ್ಷಣ. ಇಲ್ಲಿ ಮೌಲಿಕವಾಗಿ ಅಂತರ್ರಾಷ್ಟ್ರೀಯತೆಯ ಲವಲೇಶವೂ ಸಹ ಇರುವುದಿಲ್ಲ ಆದರೆ ಈ ಆಕರ್ಷಕ ಬೋರ್ಡುಗಳು ಸಿರಿವಂತರನ್ನು, ಮಧ್ಯಮವರ್ಗಗಳನ್ನು ಆಕರ್ಷಿಸುತ್ತವೆ. ಹತ್ತನೇ ತರಗತಿಯಿಂದ ಉತ್ತಮ ಅಂಕ ಗಳಿಸಿದ ಶಿಕ್ಷಣಾರ್ಥಿಗಳನ್ನು ಆಕರ್ಷಿಸಲು ಈ ಸಂಸ್ಥೆಗಳು ಸಕಲಕಲಾವಲ್ಲಭರನ್ನು ಸೃಷ್ಟಿಸುವ ಬೌದ್ಧಿಕ ಕೇಂದ್ರಗಳಂತೆ ಪತ್ರಿಕೆಗಳಲ್ಲಿ ಪೂರ್ಣಪುಟದ ಜಾಹೀರಾತುಗಳನ್ನು ನೀಡುತ್ತವೆ. ವಿದ್ಯುನ್ಮಾನ ವಾಹಿನಿಗಳು, ಮನೆಮನೆಗೆ ಹಂಚುವ ಕರಪತ್ರಗಳು ಈ ಮಾರುಕಟ್ಟೆ ಪ್ರಕ್ರಿಯೆಗೆ ಮತ್ತೊಂದು ಸೇತುವೆಯಾಗಿ ಕಾರ್ಯನಿರ್ವಹಿಸುತ್ತವೆ. ಡಿಜಿಟಲ್ ಯುಗದ ‘ಅಂಕ ಸಾಮ್ರಾಟರು’ ಉತ್ಪಾದನೆಯಾಗುವುದು ಈ ಶೈಕ್ಷಣಿಕ ಕಾರ್ಖಾನೆಗಳಲ್ಲಿ. ಜ್ಞಾನ ಸಂಪತ್ತಿನ, ಬೌದ್ಧಿಕ ಉನ್ನತಿಯ ಮಿದುಳುಗಳು ಪಿಯು ಪ್ರವೇಶದ ಸಂದರ್ಭದಲ್ಲಿ ಕಚ್ಚಾವಸ್ತುಗಳಾದರೆ, ಎರಡು ವರ್ಷಗಳ ವ್ಯಾಸಂಗದ ನಂತರ ಉತ್ತೀರ್ಣವಾಗುವಾಗ, ಅತ್ಯುತ್ತಮ-ಉನ್ನತ ಶ್ರೇಣಿ ಮೊದಲಾದ ಗುಣವಿಶೇಷಣಗಳನ್ನು ಹೊತ್ತ ಉತ್ಪನ್ನಗಳಾಗಿ ಹೊರಬರುತ್ತವೆ. ಈ ಉತ್ಪನ್ನಗಳ ಚಹರೆಗಳನ್ನು ಪ್ರತಿಯೊಂದು ಕಾಲೇಜಿನ ಮುಂದೆ ಬೃಹತ್ ಜಾಹೀರಾತು ಫಲಕಗಳಲ್ಲಿ ಕಾಣಬಹುದು. ಮುದ್ರಣ ಮಾಧ್ಯಮದಲ್ಲಿ ಪ್ರಾದೇಶಿಕ-ರಾಜ್ಯ ಮಟ್ಟದ ಪತ್ರಿಕೆಗಳಿಗೆ ಈ ಜಾಹೀರಾತುಗಳು ಔದ್ಯಮಿಕ ವ್ಯವಹಾರದ ಲಾಭದಾಯಕ ಮಾರ್ಗಗಳಾಗಿ ಕಾಣುತ್ತವೆ. ಈ ಫಲಕಗಳಲ್ಲಿ ಕಾಣುವ ಚಹರೆಗಳು ಸಹಜವಾಗಿ ಪೋಷಕರನ್ನು ಸಂತೃಪ್ತಿಪಡಿಸುತ್ತದೆ. ತಮ್ಮ ಮಗ ಅಥವಾ ಮಗಳು ಸಾಧಕರ ಪಟ್ಟಿಯಲ್ಲಿದ್ದಾರೆ ಎಂಬ ಹೆಮ್ಮೆ ಇದ್ದೇ ಇರುತ್ತದೆ. ಇದೇನೂ ತಪ್ಪಲ್ಲ. ಏಕೆಂದರೆ ತಮ್ಮ ದುಡಿಮೆಯ ಹಣವನ್ನು ಮಕ್ಕಳ ಶಿಕ್ಷಣ-ಟ್ಯೂಷನ್ಗಳಲ್ಲಿ ಹೂಡಿರುತ್ತಾರೆ. ಮಕ್ಕಳ ಅಭ್ಯುದಯ ಪೋಷಕರನ್ನು ತೃಪ್ತಿಪಡಿಸುವುದು ಸ್ವಾಭಾವಿಕ. ಸಾಂಸ್ಥಿಕ ಮಾರುಕಟ್ಟೆಯಲ್ಲಿ ಶಿಕ್ಷಣ ಆದರೆ ಪೋಷಕರಿಗೆ ಕ್ಷಣಿಕ ಆನಂದ ನೀಡುವ ಈ ಮಕ್ಕಳ ಚಹರೆಗಳು ಶಿಕ್ಷಣೋದ್ಯಮದ ಸಂಸ್ಥೆಗಳ ದೃಷ್ಟಿಯಿಂದ ನೋಡಿದಾಗ ಮುಂದಿನ ಶೈಕ್ಷಣಿಕ ವರ್ಷದ ಹೊಸ ಕಚ್ಚಾವಸ್ತುಗಳನ್ನು ಬಾಚಿಕೊಳ್ಳುವ ಸರಕುಗಳಾಗಿಬಿಡುತ್ತವೆ. ಈ ಕೆಲವೇ ಮಕ್ಕಳ ಉತ್ತಮ ಅಂಕಗಳನ್ನೇ ‘ಶೈಕ್ಷಣಿಕ ಸಾಧನೆ’ ಎಂದು ಬಿಂಬಿಸುವ ಮೂಲಕ, ಈ ಸಾಧನೆಗೆ ಕಾರಣಗಳನ್ನು ಸಾಂಸ್ಥಿಕ ಪರಿಕರಗಳು, ಉಪಕರಣಗಳು, ಸೌಲಭ್ಯಗಳು ಮತ್ತು ಪರಿಸರದಲ್ಲಿ ಗುರುತಿಸಲಾಗುತ್ತದೆ. ‘‘ನಮ್ಮ ಕಾಲೇಜಿನಲ್ಲಿ ವ್ಯಾಸಂಗ ಮಾಡಿದರೆ ನಿಮ್ಮ ಮಕ್ಕಳೂ,,,,,,,,’’ಎಂಬ ಸಾಲುಗಳು ಅನೇಕ ಪೋಷಕರನ್ನು ಸಾಲದ ಸುಳಿಗೆ ಸಿಲುಕಿಸುವುದನ್ನೂ ಕಾಣಬಹುದು. ಇಲ್ಲಿ ಪೋಷಕರಿಗೆ ಮಕ್ಕಳ ‘ಭವಿಷ್ಯ’ ಮುಖ್ಯವಾಗುತ್ತದೆ. ಹಾಗಾಗಿ ಮುಗಿಬಿದ್ದು ಪ್ರವೇಶ ಗಿಟ್ಟಿಸುತ್ತಾರೆ. ಆದರೆ ಶಿಕ್ಷಣೋದ್ಯಮಗಳಿಗೆ ಉತ್ತಮ ಫಲಿತಾಂಶ ಮತ್ತು ಹೆಚ್ಚಿನ ಸಂಖ್ಯೆಯ ‘ಅಂಕ ಸಾಮ್ರಾಟರ’ ಶೇಕಡಾವಾರು ಅಂಕಗಳು, ತಮ್ಮ ಮಾರುಕಟ್ಟೆಯನ್ನು ವಿಸ್ತರಿಸುವ ಸೇತುವೆಗಳಾಗುತ್ತವೆ. ಬಾಹ್ಯ ಸಮಾಜದಲ್ಲೂ ಸಹ ಜಾತಿವಾರು ಸಂಘಟನೆಗಳು, ಸಾಮಾಜಿಕ ಸಂಸ್ಥೆಗಳು ಈ ಅಂಕ ಸಾಮ್ರಾಟರನ್ನು ಸನ್ಮಾನಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತವೆ. ಕಾಲೇಜುಗಳಲ್ಲೂ ಸಹ ಈ ಉನ್ನತ ಅಂಕ ಗಳಿಸಿದವರನ್ನು ಸನ್ಮಾನಿಸುವುದು ಸಹಜ ಪ್ರಕ್ರಿಯೆಯೇ ಆಗಿದೆ. ಆರಂಭದಲ್ಲಿ ಉಲ್ಲೇಖಿಸಿದ ಕೆ.ಆರ್.ಸುಮತಿ ಅವರ ಸಾಲುಗಳನ್ನು ಈ ವಾತಾವರಣದ ನಡುವೆ ನಿಂತು ಮರು ಆಲೋಚನೆಗೊಳಪಡಿಸಬೇಕಿದೆ. ಉತ್ತಮ ಅಂಕಗಳಿಸಿದವರನ್ನು ‘ಪ್ರತಿಭಾವಂತರು’ ಎಂದು ಸಾಮಾನ್ಯೀಕರಿಸುವುದೇ ‘ಪ್ರತಿಭೆ’ ಎಂಬ ಔನ್ನತ್ಯವನ್ನು ಸಂಕುಚಿತಗೊಳಿಸಿದಂತಾಗುತ್ತದೆ. ಹತ್ತನೇ ತರಗತಿಯಲ್ಲಿ ಉತ್ತಮ ಫಲಿತಾಂಶ ಪಡೆಯುವುದು ಶಾಲೆಗಳ ಗುಣಮಟ್ಟವನ್ನು ಅಳೆಯುವ ಮಾನದಂಡವಾಗಿರುವುದರಿಂದ, ಮೈಸೂರಿನಲ್ಲೇ ಕೆಲವು ಹೈಸ್ಕೂಲುಗಳಲ್ಲಿ 9ನೇ ತರಗತಿಯಲ್ಲಿ ಉತ್ತಮ ಅಂಕ ಗಳಿಸದ ಮಕ್ಕಳನ್ನು ಬಲವಂತದಿಂದ ಹೊರದೂಡುವ ಪ್ರವೃತ್ತಿ ಹೆಚ್ಚಾಗುತ್ತಿದೆ. ಈ ಮಕ್ಕಳಿಗೆ ಭಿನ್ನ ಕಾರಣಗಳನ್ನು ನೀಡಿ, ಬೇರೆ ಶಾಲೆಗಳಿಗೆ ಹೋಗುವಂತೆ ಒತ್ತಾಯಿಸಲಾಗುತ್ತಿದೆ. ಹತ್ತನೇ ತರಗತಿಯಲ್ಲಿ ಕಡಿಮೆ ಅಂಕ ಗಳಿಸಿದವರಿಗೆ, ಅದೇ ಶಾಲೆಯಲ್ಲೇ ಪಿಯುಸಿ ಪ್ರವೇಶ ನಿರಾಕರಿಸಲಾಗುತ್ತದೆ ಅಥವಾ ಹೆಚ್ಚಿನ ಡೊನೇಷನ್ ಕೊಡುವಂತೆ ಒತ್ತಾಯಿಸಲಾಗುತ್ತದೆ. ಇಂತಹ ಪ್ರಕರಣಗಳು ಸಾರ್ವಜನಿಕವಾಗಿ ವರದಿಯಾಗುತ್ತಿಲ್ಲ ಏಕೆಂದರೆ ಬಾಧಿತ ವಿದ್ಯಾರ್ಥಿಗಳು, ಪೋಷಕರು ಬಹಿರಂಗವಾಗಿ ಮಾತನಾಡಲು ಹಿಂಜರಿಯುತ್ತಾರೆ. ಈ ವಿದ್ಯಮಾನ ಚಾಲ್ತಿಯಲ್ಲಿರುವುದು ಸ್ಥಳೀಯ-ರಾಜ್ಯಮಟ್ಟದ ಜನಪ್ರತಿನಿಧಿಗಳ ಅರಿವಿಗೆ ಬಾರದಿರುವುದಿಲ್ಲ. ಆದರೆ ನೆಲ ನೋಡಿ ನಡೆಯುವುದನ್ನೇ ಮರೆತಿರುವ ರಾಜಕಾರಣಿಗಳಿಗೆ ಇದೊಂದು ಗಂಭೀರ ಸಮಸ್ಯೆ ಎಂದು ಭಾಸವಾಗುವುದೇ ಇಲ್ಲ. ಅಂಕ-ಶ್ರೇಣಿ ಮತ್ತು ಮಾನ್ಯತೆ ಬೃಹತ್ ಜಾಹೀರಾತು ಫಲಕಗಳು, ಪೂರ್ಣಪುಟದ ಪತ್ರಿಕಾ ಜಾಹೀರಾತುಗಳು ಮತ್ತು ವಿದ್ಯುನ್ಮಾನ ವಾಹಿನಿಗಳ ಪ್ರಚಾರಗಳು ಉತ್ತಮ ಅಂಕಗಳಿಸಿದವರನ್ನು ಉತ್ತೇಜಿಸುವುದು ಸಹಜ. ಇದರಲ್ಲಿ ತಪ್ಪೇನೂ ಇಲ್ಲ. ಮಕ್ಕಳು ಕಷ್ಟಪಟ್ಟು ವ್ಯಾಸಂಗ ಮಾಡಿರುತ್ತಾರೆ, ಹಗಲಿರುಳೂ ಶ್ರಮ ವಹಿಸಿರುತ್ತಾರೆ, ತಮ್ಮ ಕೌಟುಂಬಿಕ ಆರ್ಥಿಕತೆಯನ್ನೂ ಸಹಿಸಿಕೊಂಡು ಪೋಷಕರನ್ನು ತೃಪ್ತಿಪಡಿಸುವ ಸಾಧನೆ ಮಾಡಿರುತ್ತಾರೆ. ಇಂತಹ ಮಕ್ಕಳನ್ನು ಅಭಿನಂದಿಸುವುದು ಒಂದು ಹಂತದವರೆಗೆ ಸ್ವಾಗತಾರ್ಹ. ಆದರೆ ಈ ‘ಅಂಕ ಸಾಮ್ರಾಟರನ್ನು , ಸುಮತಿ ಅವರು ಹೇಳಿದಂತೆ ‘ಹೊಗಳಿ ಹೊನ್ನ ಶೂಲಕ್ಕೇರಿಸುವ’ ಪ್ರಕ್ರಿಯೆಯಲ್ಲಿ ಅನುತ್ತೀರ್ಣರಾದ ಮತ್ತು ಕಡಿಮೆ ಅಂಕ ಗಳಿಸಿರುವ ಶಿಕ್ಷಣಾರ್ಥಿಗಳ ಅವಗಣನೆ ನೈತಿಕವಾಗಿ ಒಪ್ಪುವಂತಹುದಲ್ಲ. ಶಾಲೆ ಅಥವಾ ಕಾಲೇಜು ಎಷ್ಟೇ ಉತ್ತಮ ಗುಣಮಟ್ಟದ್ದಾದರೂ, ಶಿಕ್ಷಣಾರ್ಥಿಗಳ ಅಂಕಗಳಿಕೆ ವೈಯಕ್ತಿಕ ಸಾಮಾಜಿಕ-ಆರ್ಥಿಕ ನೆಲೆ ಮತ್ತು ಬುದ್ಧಿಮತ್ತೆಯನ್ನು ಅವಲಂಬಿಸಿರುತ್ತದೆ. ಪರೀಕ್ಷೆಗಳಲ್ಲಿ ಅನುತ್ತೀರ್ಣರಾಗಲು ಹಲವು ಕಾರಣಗಳಿರುತ್ತವೆ. ಹೀಗೆ ಫೇಲಾದವರನ್ನು ದಡ್ಡರೆಂದಾಗಲೀ, ಕಡಿಮೆ ಪ್ರತಿಭೆ ಎಂದಾಗಲೀ ಪರಿಗಣಿಸಲಾಗುವುದಿಲ್ಲ. ಶಿಕ್ಷಣೋದ್ಯಮಗಳು ಪಿಯು ಫಲಿತಾಂಶಗಳು ಹೊರಬಂದ ಕೂಡಲೇ ಏರ್ಪಡಿಸುವ ‘ಶೈಕ್ಷಣಿಕ ಸಂತೆಗಳು’ ಈ ಅಭಾಗ್ಯರಲ್ಲಿ ಕೀಳರಿಮೆಯನ್ನು ಸೃಷ್ಟಿಸುವಂತಿರಕೂಡದು. ‘ಸಾಧಕ ಪ್ರತಿಭೆಗಳ’ ಸಂಭ್ರಮಾಚರಣೆಗಳು ಈ ಆವರಣದಿಂದ ಹೊರಗುಳಿಯುವ ಮಕ್ಕಳಲ್ಲಿ ಜಿಗುಪ್ಸೆ ಉಂಟುಮಾಡಕೂಡದು. ಈ ಜಿಗುಪ್ಸೆಯೇ ಹಲವಾರು ಮಕ್ಕಳನ್ನು ಖಿನ್ನತೆಗೆ ದೂಡಿ, ಆತ್ಮಹತ್ಯೆಗೂ ಪ್ರೇರೇಪಿಸುತ್ತದೆ. ಇಂತಹ ಪ್ರಕರಣಗಳು ವರದಿಯಾಗುತ್ತಲೇ ಇರುತ್ತವೆ. ಅನುತ್ತೀರ್ಣರಾಗುವುದು ಒಂದು ಹೆಜ್ಜೆಯ ಹಿನ್ನಡೆಯೇ ಹೊರತು, ಬದುಕಿನ ಅಂತ್ಯವಲ್ಲ ಎನ್ನುವುದನ್ನು ಇಂತಹ ಮಕ್ಕಳಿಗೆ ಮನದಟ್ಟು ಮಾಡಬೇಕಾಗುತ್ತದೆ. ಜಾಗತೀಕರಣದ ಮಾರುಕಟ್ಟೆ ಆರ್ಥಿಕತೆ ಸೃಷ್ಟಿಸಿರುವ ‘ಅಂಕಸಾಮ್ರಾಟರ’ ಸಂಸ್ಕೃತಿ ಸಾಮಾಜಿಕವಾಗಿ ಇಂತಹ ವ್ಯತ್ಯಯಗಳನ್ನೂ ಉಂಟುಮಾಡುತ್ತಿದೆ. ಫಲಿತಾಂಶ ಬಂದ ಕೂಡಲೇ ಯಾವ ಶಿಕ್ಷಣ ಸಂಸ್ಥೆಯೂ ಸಹ ಅನುತ್ತೀರ್ಣರಾದ ಮಕ್ಕಳಿಗೆ ಸಾಂತ್ವನ ಹೇಳುವ, ಅವರಲ್ಲಿ ಆತ್ಮಸ್ಥೈರ್ಯವನ್ನು ಹೆಚ್ಚಿಸುವ, ಮರು ಉತ್ತೇಜಿಸುವ ಜಾಹೀರಾತುಗಳನ್ನು ನೀಡುವುದಿಲ್ಲ. ಸಂಘಟನೆಗಳು, ಸಂಸ್ಥೆಗಳು ನಡೆಸುವ ‘ಪ್ರತಿಭಾ ಸನ್ಮಾನ’ ಕಾರ್ಯಕ್ರಮಗಳಲ್ಲಿ ಈ ಮಕ್ಕಳಿಗೆ ಪ್ರವೇಶಿಸುವುದೂ ಕಷ್ಟವಾಗುತ್ತದೆ. ಈ ಅನುತ್ತೀರ್ಣರಾದ ಮಕ್ಕಳಲ್ಲಿ ಇರಬಹುದಾದ ಪಠ್ಯೇತರ ಪ್ರತಿಭೆ ಮತ್ತು ಕೌಶಲವನ್ನು ಗುರುತಿಸಿ, ಅಂಕ ಸಾಮ್ರಾಟರ ಜೊತೆಯಲ್ಲಿ ಅಂತಹ ಕೆಲವು ವಿದ್ಯಾರ್ಥಿಗಳನ್ನೂ ವೇದಿಕೆಯ ಮೇಲೆ ಕೂರಿಸಿದರೆ ಎಷ್ಟು ಚೆಂದ ಅಲ್ಲವೇ ?
ಕೂರ್ಗ್ ವಿಲೇಜ್ ಪ್ರವಾಸಿಗರಿಗೆ ಮುಕ್ತ ; ರಾಜಾಸೀಟ್ನಲ್ಲಿ ಯುಪಿಐ ಪಾವತಿ ಆರಂಭ
ಕೊಡಗಿನ ಪ್ರವಾಸಿ ತಾಣಗಳ ಅಭಿವೃದ್ಧಿಗೆ ಮುಂದಾಗಿರುವ ತೋಟಗಾರಿಕಾ ಇಲಾಖೆಯು ಸ್ಥಗಿತಗೊಂಡಿದ್ದ 'ಕೂರ್ಗ್ ವಿಲೇಜ್' ಅನ್ನು ಸಾರ್ವಜನಿಕರ ಪ್ರವೇಶಕ್ಕೆ ಮತ್ತೆ ಮುಕ್ತಗೊಳಿಸಿದೆ. ಇದರೊಂದಿಗೆ ರಾಜಾಸೀಟ್ನಲ್ಲಿ ಪ್ರವಾಸಿಗರಿಗೆ ಅನುಕೂಲವಾಗುವಂತೆ ಡಿಜಿಟಲ್ ಕ್ರಾಂತಿಗೆ ನಾಂದಿ ಹಾಡಿದ್ದು, ಪ್ರವೇಶ ಶುಲ್ಕ ಪಾವತಿಸಲು ಯುಪಿಐ ವ್ಯವಸ್ಥೆಯನ್ನು ಜಾರಿಗೆ ತಂದಿದೆ.
428 ಸರಕಾರಿ ಸ್ವತ್ತುಗಳನ್ನು ಗುತ್ತಿಗೆಗೆ ನೀಡಿದ ಗ್ರೇಟರ್ ಬೆಂಗಳೂರು ಪ್ರಾಧಿಕಾರ
ಗುತ್ತಿಗೆ ಪಡೆದ ಜಾಗದಲ್ಲಿಯೇ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಕಚೇರಿಗಳ ನಿರ್ಮಾಣ
ನೋಯ್ಡಾ | ಹಿಂಸಾಚಾರಕ್ಕೆ ತಿರುಗಿದ ಕಾರ್ಮಿಕರ ಪ್ರತಿಭಟನೆ: ವಾಹನಗಳು, ಆಸ್ತಿಪಾಸ್ತಿಗಳಿಗೆ ಹಾನಿ
ಘಟನಾ ಸ್ಥಳದಲ್ಲಿ ಪೊಲೀಸರ ನಿಯೋಜನೆ
ಶಿಕಾರಿಪುರ: ಬೈಕ್ ಸವಾರನನ್ನು ರಕ್ಷಿಸಲು ಹೋಗಿ ಬಸ್ ಪಲ್ಟಿ; ಹಲವರಿಗೆ ಗಾಯ
ಶಿವಮೊಗ್ಗ: ಬೈಕ್ ಸವಾರನನ್ನು ರಕ್ಷಿಸಲು ಹೋಗಿ ಖಾಸಗಿ ಬಸ್ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದು ರಸ್ತೆ ಮಧ್ಯೆ ಉರುಳಿ ಬಿದ್ದ ಘಟನೆ ಶಿಕಾರಿಪುರ ಪಟ್ಟಣದ ಕುಮದ್ವತಿ ಕಾಲೇಜು ಮುಂಭಾಗದಲ್ಲಿ ಸೋಮವಾರ ಬೆಳಿಗ್ಗೆ ನಡೆದಿದೆ. ಶಿವಮೊಗ್ಗದಿಂದ ಶಿಕಾರಿಪುರಕ್ಕೆ ತೆರಳುತ್ತಿದ್ದ ಖಾಸಗಿ ಬಸ್, ಕಾಲೇಜು ಮುಂಭಾಗದ ಹಂಪ್ ಬಳಿ ತಲುಪಿದಾಗ ಈ ಅನಾಹುತ ಸಂಭವಿಸಿದೆ. ಅಪಘಾತದಲ್ಲಿ ಬಸ್ಸಿನಲ್ಲಿದ್ದ ಹಲವು ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಬಸ್ಸಿನ ಮುಂದೆ ಹೋಗುತ್ತಿದ್ದ ಬೈಕ್ ಸವಾರನು ಹಂಪ್ ತಪ್ಪಿಸಲು ಹಠಾತ್ತಾಗಿ ಬೈಕನ್ನು ಬಲಕ್ಕೆ ತಿರುಗಿಸಿದ್ದಾನೆ. ಈ ವೇಳೆ ಬೈಕ್ಗೆ ಢಿಕ್ಕಿ ಹೊಡೆಯುವುದನ್ನು ತಪ್ಪಿಸಲು ಬಸ್ ಚಾಲಕ ಎಡಕ್ಕೆ ತಿರುಗಿಸಿದ್ದಾನೆ. ಆದರೆ, ಅದೇ ಕ್ಷಣದಲ್ಲಿ ಬೈಕ್ ಸವಾರ ಮತ್ತೆ ಎಡಕ್ಕೆ ಬಂದ ಕಾರಣ, ಆತನನ್ನು ಉಳಿಸಲು ಚಾಲಕ ಅನಿವಾರ್ಯವಾಗಿ ಬಸ್ಸನ್ನು ಮತ್ತೆ ಬಲಕ್ಕೆ ಸರಿಸಿದ್ದಾನೆ ಎನ್ನಲಾಗಿದೆ. ಈ ಭರದಲ್ಲಿ ನಿಯಂತ್ರಣ ತಪ್ಪಿದ ಬಸ್ ರಸ್ತೆ ಬದಿಯ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದು ಪಲ್ಟಿಯಾಗಿದೆ. ಘಟನೆಯಲ್ಲಿ ಬಸ್ಸಿನಲ್ಲಿದ್ದ ಪ್ರಯಾಣಿಕರಿಗೆ ಗಾಯವಾಗಿದೆ. ಸ್ಥಳೀಯರು ಹಾಗೂ ದಾರಿಯಲ್ಲಿ ಸಾಗುತ್ತಿದ್ದ ಇತರೆ ವಾಹನ ಸವಾರರು ತಕ್ಷಣ ಗಾಯಾಳುಗಳನ್ನು ರಕ್ಷಿಸಿದ್ದಾರೆ. ಅವರನ್ನು ಶಿಕಾರಿಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಸ್ಥಳಕ್ಕೆ ಶಿಕಾರಿಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ನೈಜೀರಿಯಾದಲ್ಲಿ ಬೊಕೊ ಹರಾಮ್ ಜಿಹಾದಿಗಳ ಮೇಲೆ ನಡೆಸಿದ ವೈಮಾನಿಕ ದಾಳಿಯಲ್ಲಿ 100ಕ್ಕೂ ಅಧಿಕ ನಾಗರಿಕರು ಬಲಿ
ನೈಜೀರಿಯಾದ ಯೋಬೆ ರಾಜ್ಯದಲ್ಲಿ ಬೊಕೊ ಹರಾಮ್ ಜಿಹಾದಿ ಗುಂಪನ್ನು ಗುರಿಯಾಗಸಿ ಆ ದೇಶದ ವಾಯುಪಡೆ ಜನನಿಬಿಡ ಮಾರುಕಟ್ಟೆ ಮೇಲೆ ದಾಳಿ ನಡೆಸಿದ್ದು, ಈ ಘಟನೆಯಲ್ಲಿ 100ಕ್ಕೂ ಅಧಿಕ ಜನ ಸಾವನ್ನಪ್ಪಿದರೆ, ಹತ್ತಾರು ಜನ ಗಾಯಗೊಂಡಿರುವುದಾಗಿ ವರದಿಯಾಗಿದೆ. ಇನ್ನು, ಈ ಘಟನೆ ಕುರಿತು ಗುಪ್ತಚರ ಮೂಲಗಳನ್ನು ಆಧರಿಸಿದ ದಾಳಿ ನಡೆಸಲಾಗಿದ್ದು, ಅಮಾಯಕರ ಜೀವ ಬಲಿಯಾಗಿದೆ. ಈ ಕುರಿತ ವರದಿ ಇಲ್ಲಿದೆ..
ಉಚಿತ ಪಠ್ಯಪುಸ್ತಕ ಯೋಜನೆ: ಪಿಯು ವಿದ್ಯಾರ್ಥಿಗಳಿಗೂ ವಿಸ್ತರಣೆ
ಬೆಂಗಳೂರು: ಇದುವರೆಗೆ 10ನೇ ತರಗತಿಯವರೆಗೆ ಮಾತ್ರ ಸೀಮಿತವಾಗಿದ್ದ ಉಚಿತ ಪಠ್ಯಪುಸ್ತಕ ವಿತರಣೆ ಯೋಜನೆಯನ್ನು 2026-27ನೇ ಶೈಕ್ಷಣಿಕ ಸಾಲಿನಿಂದ ಪದವಿ ಪೂರ್ವ (ಪಿಯು) ಕಾಲೇಜುಗಳ ವಿದ್ಯಾರ್ಥಿಗಳಿಗೂ ವಿಸ್ತರಿಸಲಾಗಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ತಿಳಿಸಿದೆ. ಈ ಕುರಿತು ಇಲಾಖೆ ತನ್ನ ಅಧಿಕೃತ ‘ಎಕ್ಸ್’ (X) ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು, ಇನ್ನು ಮುಂದೆ ರಾಜ್ಯದ ಎಲ್ಲಾ ಸರ್ಕಾರಿ ಪಿಯು ಕಾಲೇಜುಗಳ ವಿದ್ಯಾರ್ಥಿಗಳು ಉಚಿತವಾಗಿ ಪಠ್ಯಪುಸ್ತಕಗಳನ್ನು ಪಡೆಯಲಿದ್ದಾರೆ ಎಂದು ತಿಳಿಸಿದೆ. ಈ ಯೋಜನೆಯ ವಿಸ್ತರಣೆಯಿಂದ ವಿಶೇಷವಾಗಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಇಲಾಖೆ ಅಭಿಪ್ರಾಯಪಟ್ಟಿದೆ. ಇದುವರೆಗೆ 10ನೇ ತರಗತಿಯವರೆಗೆ ಮಾತ್ರ ಇದ್ದ ಉಚಿತ ಪಠ್ಯಪುಸ್ತಕ ವಿತರಣೆ ಯೋಜನೆಯನ್ನು 2026-27ನೇ ಸಾಲಿನಿಂದ ಪದವಿ ಪೂರ್ವ (ಪಿಯು) ಕಾಲೇಜಿನ ವಿದ್ಯಾರ್ಥಿಗಳಿಗೂ ವಿಸ್ತರಿಸಲಾಗಿದೆ. ಇನ್ನು ಮುಂದೆ ಎಲ್ಲಾ ಸರ್ಕಾರಿ ಪಿಯು ಕಾಲೇಜುಗಳ ವಿದ್ಯಾರ್ಥಿಗಳು ತಮ್ಮ ಪಠ್ಯಪುಸ್ತಕಗಳನ್ನು ಉಚಿತವಾಗಿ ಪಡೆಯಲಿದ್ದಾರೆ. ಇದರಿಂದ ಗ್ರಾಮೀಣ ಭಾಗದ… pic.twitter.com/0XdEf0zW5k — School Education & Literacy Department Karnataka (@ShalaShikshana) April 13, 2026
ವಿಟ್ಲ: ಕೋಳಿ ಅಂಕದ ಅಡ್ಡೆಗೆ ಪೋಲಿಸ್ ದಾಳಿ; ನಾಲ್ವರ ಬಂಧನ
ವಿಟ್ಲ: ಬಂಟ್ವಾಳ ತಾಲೂಕಿನ ವಿಟ್ಲಕಸಬ ಗ್ರಾಮದ ಮಾಡ ಎಂಬಲ್ಲಿ ನಡೆಯುತ್ತಿದ್ದ ಕೋಳಿ ಅಂಕದ ಅಡ್ಡೆಗೆ ವಿಟ್ಲ ಪೊಲೀಸರು ದಾಳಿ ನಡೆಸಿದ್ದಾರೆ. ಕಾರ್ಯಾಚರಣೆಯ ವೇಳೆ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದ್ದು, ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಇಬ್ಬರು ಪರಾರಿಯಾಗಿದ್ದಾರೆ. ಅಕ್ರಮವಾಗಿ ಹಣವನ್ನು ಪಣವಾಗಿಟ್ಟು ಕೋಳಿ ಅಂಕ ಜೂಜಾಟ ನಡೆಯುತ್ತಿರುವ ಬಗ್ಗೆ ಲಭಿಸಿದ ಖಚಿತ ಮಾಹಿತಿಯ ಮೇರೆಗೆ ವಿಟ್ಲ ಪೊಲೀಸ್ ಉಪನಿರೀಕ್ಷಕರಾದ ರಾಮಕೃಷ್ಣ ಮತ್ತು ಸಿಬ್ಬಂದಿಯ ತಂಡ ಎ.12 ರವಿವಾರ ಸಂಜೆ ದಾಳಿ ನಡೆಸಿದೆ. ಪೊಲೀಸರು ಸ್ಥಳಕ್ಕೆ ತಲುಪಿದಾಗ ಸುಮಾರು 20 ರಿಂದ 25 ಜನರ ಗುಂಪು ಸೇರಿ ಕೋಳಿ ಅಂಕದಲ್ಲಿ ತೊಡಗಿರುವುದು ಕಂಡುಬಂದಿದ್ದು, ಪೊಲೀಸರನ್ನು ಕಂಡ ಕೂಡಲೇ ಜೂಜುಕೋರರು ಓಡಿ ತಪ್ಪಿಸಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ವಿಟ್ಲಕಸಬ ನಿವಾಸಿಗಳಾದ ಚಂದ್ರಶೇಖರ (43), ಇಬ್ರಾಹಿಂ (65), ಹೊನ್ನಪ್ಪ (46) ಮತ್ತು ವಿಟ್ಲಪಡ್ನೂರು ನಿವಾಸಿ ಚಂದ್ರಹಾಸ (32) ಎಂಬ ನಾಲ್ವರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆದರೆ, ಉಳಿದ ಆರೋಪಿಗಳನ್ನು ಹಿಡಿಯಲು ಪೊಲೀಸರು ಮುಂದಾದಾಗ ಬಾಬಣ್ಣ ಮತ್ತು ಹೊನ್ನಪ್ಪ ಹರಿಜನ ಎಂಬವರು ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿ, ಬೆದರಿಕೆ ಹಾಕಿ ಸ್ಥಳದಿಂದ ಪರಾರಿಯಾಗಿದ್ದಾರೆ. ಕಾರ್ಯಾಚರಣೆಯ ವೇಳೆ ಜೂಜಾಟಕ್ಕೆ ಬಳಸಿದ್ದ 3 ಕೋಳಿಗಳು, 1000 ರೂ. ನಗದು ಹಾಗೂ ಇತರೆ ಪರಿಕರಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಸಂಪಾದಕೀಯ | ತನ್ನ ಪುತ್ರನಿಗೆ ವಿದೇಶದಲ್ಲಿ ವ್ಯಾಸಂಗ; ಕಂಡವರ ಮಕ್ಕಳ ಕೈಗೆ ಲಾಠಿ, ತ್ರಿಶೂಲ!
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಶಿವಮೊಗ್ಗ : 6 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ
ಶಿವಮೊಗ್ಗ: ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ 6 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯೊಬ್ಬನನ್ನು ಜಯನಗರ ಠಾಣೆಯ ಪೊಲೀಸರು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಶಿವಮೊಗ್ಗದ ವೆಂಕಟೇಶ್ ನಗರ ನಿವಾಸಿಯಾಗಿರುವ ಜಾನ್ ಭರತ್ (30) ಬಂಧಿತ ಆರೋಪಿ. ಈತನ ವಿರುದ್ಧ 2019 ರಲ್ಲಿ ಜಯನಗರ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 399 ಹಾಗೂ 402 ರ ಅಡಿಯಲ್ಲಿ ಅಪರಾಧ ಪ್ರಕರಣ ದಾಖಲಾಗಿತ್ತು. ಆದರೆ, ಆರೋಪಿ ನ್ಯಾಯಾಲಯದ ವಿಚಾರಣಾ ಪ್ರಕ್ರಿಯೆಗಳಿಗೆ ಹಾಜರಾಗದೆ ಕಳೆದ 6 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಎನ್ನಲಾಗಿದೆ. ಈ ಹಿನ್ನೆಲೆ, ಶಿವಮೊಗ್ಗದ 1ನೇ ಹೆಚ್ಚುವರಿ ಸಿವಿಲ್ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯ ಆರೋಪಿಯ ವಿರುದ್ಧ ದಸ್ತಗಿರಿ ವಾರೆಂಟ್ ಹೊರಡಿಸಿತ್ತು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಜಯನಗರ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ರವಿಪಾಟೀಲ್ ಅವರ ನೇತೃತ್ವದಲ್ಲಿ, ಪಿಎಸ್ಐ ಕೋಮಲಾ, ಮುಖ್ಯ ಪೇದೆ ಚಂದ್ರು ಮತ್ತು ಪೊಲೀಸ್ ಪೇದೆ ಗಣೇಶ್ ಅವರನ್ನು ಒಳಗೊಂಡ ತಂಡವು ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಪತ್ತೆಮಾಡಿದೆ. ಬಂಧಿತನನ್ನು ಮಾ.11 ರಂದು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ನ್ಯಾಯಾಂಗ ಬಂಧನಕ್ಕೆ ಆದೇಶ ನೀಡಿದೆ.
ಸೌದಿ ಅರೇಬಿಯಾದಲ್ಲಿ ಪಾಕಿಸ್ತಾನಿ ಸೇನಾಪಡೆ ನಿಯೋಜನೆ: ಮಿತ್ರ ರಾಷ್ಟ್ರಕ್ಕೆ 13,000 ಸೈನಿಕರು, ಯುದ್ಧ ವಿಮಾನಗಳ ರವಾನೆ
ಜಾಗತಿಕ ರಾಜಕೀಯ ವಿದ್ಯಮಾನಗಳ ಹಿನ್ನೆಲೆಯಲ್ಲಿ ಪಾಕಿಸ್ತಾನ ಮತ್ತು ಸೌದಿ ಅರೇಬಿಯಾ ನಡುವಿನ ರಕ್ಷಣಾ ಸಂಬಂಧ ಮತ್ತಷ್ಟು ಗಟ್ಟಿಯಾಗಿದ್ದು, ಪಾಕಿಸ್ತಾನವು ತನ್ನ 13,000 ಸೈನಿಕರು ಹಾಗೂ ಅತ್ಯಾಧುನಿಕ ಯುದ್ಧ ವಿಮಾನಗಳನ್ನು ಸೌದಿ ಅರೇಬಿಯಾಕ್ಕೆ ರವಾನಿಸಿದೆ. ಕಳೆದ ವರ್ಷ ಉಭಯ ದೇಶಗಳ ನಡುವೆ ಏರ್ಪಟ್ಟಿದ್ದ ರಕ್ಷಣಾ ಒಪ್ಪಂದದ ಭಾಗವಾಗಿ ಈ ಕ್ರಮ ಕೈಗೊಳ್ಳಲಾಗಿದೆ. ಪಾಕಿಸ್ತಾನವು ಸುಮಾರು 13,000 ಸೈನಿಕರು ಮತ್ತು
ಶಿವಮೊಗ್ಗ: ದೇವಸ್ಥಾನದ ಕಟ್ಟೆಗೆ ಢಿಕ್ಕಿ ಹೊಡೆದು ಕಾರು ಪಲ್ಟಿ
ಶಿವಮೊಗ್ಗ: ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ದೇವಸ್ಥಾನದ ಕಟ್ಟೆಗೆ ಢಿಕ್ಕಿ ಹೊಡೆದು ಪಲ್ಟಿಯಾದ ಘಟನೆ ನಗರದ ದುರ್ಗಿಗುಡಿ ಚೌಡೇಶ್ವರಿ ದೇವಸ್ಥಾನದ ಬಳಿ ನಡೆದಿದೆ. ಕಾರು ಚಲಾಯಿಸುತ್ತಿದ್ದ ವ್ಯಕ್ತಿ ಮೊಬೈಲ್ ಫೋನಿನಲ್ಲಿ ಮಾತನಾಡುತ್ತಿದ್ದ ಎನ್ನಲಾಗಿದೆ. ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಅಥವಾ ಗಾಯಗಳಾಗಿಲ್ಲ ಎಂದು ತಿಳಿದುಬಂದಿದೆ. ಘಟನೆಯನ್ನು ಗಮನಿಸಿದ ಸ್ಥಳೀಯರು ತಕ್ಷಣವೇ ನೆರವಿಗೆ ಧಾವಿಸಿ, ಉರುಳಿಬಿದ್ದ ಕಾರನ್ನು ಮೇಲಕ್ಕೆತ್ತಿ ಒಳಗಿದ್ದ ಚಾಲಕನನ್ನು ಸುರಕ್ಷಿತವಾಗಿ ಹೊರತೆಗೆದಿದ್ದಾರೆ. ಪಶ್ಚಿಮ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
Gold Price Drop: ವಾರದ ಮೊದಲ ದಿನವೇ ಚಿನ್ನ-ಬೆಳ್ಳಿ ದರ ಭರ್ಜರಿ ಕುಸಿತ, ಇಂದಿನ ದರಪಟ್ಟಿ
Gold Price Today Latest Update:ಚಿನ್ನದ ಬೆಲೆಯಲ್ಲಿ ಅಸ್ಥಿರತೆ, ನಿರಂತರ ಏರಿಳಿತ ಮುಂದುವರಿದಿದೆ. ವಾರಾಂತ್ಯದಲ್ಲಿ ಏರಿಕೆ ಕಂಡಿದ್ದ ಚಿನ್ನಾಭರಣಗಳ ಬೆಲೆಯು ಇದೀಗ ಮತ್ತೆ ತಕ್ಕಮಟ್ಟಿನ ಇಳಿಕೆ ಕಂಡಿದೆ. ದೇಶದಲ್ಲಿ ದರ ಇಳಿಕೆ ಆಗುತ್ತಿದ್ದಂತೆ ಹೆಚ್ಚಾಗಿದ್ದ ಬೇಡಿಕೆ ಇತ್ತೀಚಿನ ಹೆಚ್ಚಳದಿಂದ ಕೊಂಚ ಕಡಿಮೆ ಆಗಿತ್ತು. ಇದೀಗ ಬೆಲೆಯಲ್ಲಿ ಮತ್ತೆ ಇಳಿಕೆ ಆಗಿದ್ದು, ಗ್ರಾಹಕರಿಗೆ ಚಿನ್ನ ಖರೀದಿಗೆ ಸೂಕ್ತ ಸಮಯ
ಕಾಂಗ್ರೆಸ್ ಮುಸ್ಲಿಂ ನಾಯಕರ 'ಮಹಾ ಸಂಘರ್ಷ': ಇದು ಸಮುದಾಯದ ಹಿತಕ್ಕೋ ಅಥವಾ ವೈಯಕ್ತಿಕ ವರ್ಚಸ್ಸಿಗೋ?
ದಾವಣಗೆರೆ ಉಪಚುನಾವಣೆಯ ಬೆನ್ನಲ್ಲೇ ರಾಜ್ಯ ಕಾಂಗ್ರೆಸ್ನ ಮುಸ್ಲಿಂ ನಾಯಕರಲ್ಲಿ ಭುಗಿಲೆದ್ದಿರುವ ಅಸಮಾಧಾನವು ಈಗ ತೀವ್ರ ಸಂಘರ್ಷದ ರೂಪ ಪಡೆದುಕೊಂಡಿದೆ. ಈ ಆಂತರಿಕ ಭಿನ್ನಮತದ ಮೊದಲ ಪರಿಣಾಮವಾಗಿ ಅಬ್ದುಲ್ ಜಬ್ಬಾರ್ ಅವರು ಕೆಪಿಸಿಸಿ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಸ್ಥಾನಕ್ಕೆ ಈಗಾಗಲೇ ರಾಜೀನಾಮೆ ನೀಡಿದ್ದು, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್ ಕೂಡ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವ ಹಾದಿಯಲ್ಲಿದ್ದಾರೆ ಎನ್ನಲಾಗುತ್ತಿದೆ.
ಶಿವಮೊಗ್ಗ: ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಯುವಕನ ಮೃತದೇಹ ಪತ್ತೆ
ಶಿವಮೊಗ್ಗ: ರಸ್ತೆ ಬದಿಯಲ್ಲಿರುವ ಮರವೊಂದಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಯುವಕನೊಬ್ಬನ ಮೃತದೇಹ ಪತ್ತೆಯಾದ ಘಟನೆ ನಗರದ ಪಾರ್ಕ್ ಬಡಾವಣೆಯಲ್ಲಿ ನಡೆದಿದೆ. ಮೃತ ಯುವಕನನ್ನು ಹರಮಘಟ್ಟ ಮೂಲದ ದೇವರಾಜ್ (34) ಎಂದು ಗುರುತಿಸಲಾಗಿದೆ. ಮಥುರಾ ಪ್ಯಾರಡೈಸ್ ರಸ್ತೆಯ ಪಕ್ಕದಲ್ಲಿರುವ ಮರದ ಕೊಂಬೆಯೊಂದಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಯುವಕನ ಮೃತದೇಹ ಕಂಡು ಬಂದಿದೆ. ಮರದ ಎಲೆಗಳು ದಟ್ಟವಾಗಿದ್ದರಿಂದ ವಿಷಯ ತಡವಾಗಿ ಬೆಳಕಿಗೆ ಬಂದಿದೆ. ಫುಟ್ಪಾತ್ ಮೇಲೆ ತೆರಳುತ್ತಿದ್ದವರು ಶವ ನೇತಾಡುತ್ತಿರುವುದನ್ನು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಎಂದು ತಿಳಿದು ಬಂದಿದೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಮೃತದೇಹವನ್ನು ಕೆಳಕ್ಕೆ ಇಳಿಸಿ ಪರಿಶೀಲನೆ ನಡೆಸಿದ್ದು, ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ. ಪರಿಶೀಲನೆ ವೇಳೆ ಯುವಕ ಬರೆದಿದ್ದಾನೆನ್ನಲಾದ ಡೆತ್ ನೋಟ್ ಪತ್ತೆಯಾಗಿದೆ. ಜಯನಗರ ಪೊಲೀಸ್ ಠಾಣೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
Monalisa: ಕುಂಭಮೇಳ ವೈರಲ್ ಸುಂದರಿ ಮೊನಾಲಿಸಾ ದಂಪತಿಗೆ ಬಿಗ್ ರಿಲೀಫ್: ಬಂಧನಕ್ಕೆ ತಡೆ ನೀಡಿದ ಕೇರಳ ಹೈಕೋರ್ಟ್
ಕುಂಭಮೇಳದ ಫೋಟೋಗಳ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಮೂಡಿಸಿದ್ದ ಮೊನಾಲಿಸಾ ಭೋಸ್ಲೆ ಮತ್ತು ಆಕೆಯ ಪತಿ ಫರ್ಮಾನ್ ಖಾನ್ ಅವರಿಗೆ ಕೇರಳ ಹೈಕೋರ್ಟ್ ಬಿಗ್ ರಿಲೀಫ್ ನೀಡಿದೆ. ಮಧ್ಯಪ್ರದೇಶದಲ್ಲಿ ದಾಖಲಾಗಿದ್ದ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ದಂಪತಿಯನ್ನು ಮೇ 20ರವರೆಗೆ ಬಂಧಿಸದಂತೆ ನ್ಯಾಯಮೂರ್ತಿ ಕೌಸರ್ ಎಡಪ್ಪಗತ್ ಅವರಿದ್ದ ಪೀಠವು ಮಧ್ಯಂತರ ತಡೆ ನೀಡಿ ಆದೇಶಿಸಿದೆ. ಈ ಜೋಡಿಯು ಮಲಯಾಳಂ
Rarest of the Rare : ಸಾತಂಕುಳಂ ಕಸ್ಟೋಡಿಯಲ್ ಡೆತ್ - ತಲೆತಗ್ಗಿಸಿದ ಮಾನವೀಯತೆಗೆ, ಕೊನೆಗೂ ಸಿಕ್ಕ ನ್ಯಾಯ
Thoothukudi Lockup death : ಇಡೀ ದೇಶವೇ ಬೆಚ್ಚಿಬೀಳಿಸಿದ್ದ ಸಾತಂಕುಳಂ ಲಾಕಪ್’ಡೆತ್ ಪ್ರಕರಣಕ್ಕೆ ಸಂಬಂಧಿಸಿದಂತೆ, ಮಧುರೈ ಹೈಕೋರ್ಟ್ ಐತಿಹಾಸಿಕ ತೀರ್ಪನ್ನು ನೀಡಿದೆ. ಇಡೀ ಮಾನವ ಕುಲವೇ ತಲೆತಗ್ಗಿಸುವಂತಹ, ರಕ್ಷಕರೇ ಭಕ್ಷಕರಾದಂತಹ ಆ ವಿದ್ಯಮಾನಕ್ಕೆ ನ್ಯಾಯಾಲಯ ನೀಡಿದ ತೀರ್ಪಿಗೆ ದೇಶಾದ್ಯಂತ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ. ಏನಿದು ತೂತುಕುಡಿ ಜಿಲ್ಲೆಯಲ್ಲಿರುವ ಸಾತಂಕುಳಂ ಪೊಲೀಸ್ ಠಾಣೆಯಲ್ಲಿ ನಡೆದ ವಿದ್ಯಮಾನ. ಅದರ ಸಂಪೂರ್ಣ ಮಾಹಿತಿಯನ್ನು ಲೇಖನದಲ್ಲಿ ವಿವರಿಸುವ ಪ್ರಯತ್ನವನ್ನು ಮಾಡಲಾಗಿದೆ.
ಯುದ್ಧ ವಿರೋಧಿ ಹೇಳಿಕೆ ಬಳಿಕ ಪೋಪ್ ಲಿಯೋ ವಿರುದ್ಧ ಟ್ರಂಪ್ ಆಕ್ರೋಶ
“ನಾನು ಶ್ವೇತಭವನದಲ್ಲಿ ಇರದಿದ್ದರೆ, ಲಿಯೋ ವ್ಯಾಟಿಕನ್ ನಲ್ಲಿ ಇರುತ್ತಿರಲಿಲ್ಲ”
ಸಂಘ ಪರಿವಾರದವರು ಮುಸಲ್ಮಾನರನ್ನು ಮುಖ್ಯ ವಾಹಿನಿಯಲ್ಲಿ ಬೆರೆಯದಂತೆ ಪ್ರತ್ಯೇಕಿಸಲು ರೂಪಿಸಿದ ಹಲವಾರು ಮಸಲತ್ತುಗಳಲ್ಲಿ ‘ಲವ್ ಜಿಹಾದ್’ ಎಂಬ ಪದ ಸೃಷ್ಟಿಯೂ ಒಂದು. ಯಾವುದೇ ಪುರಾವೆಗಳಿಲ್ಲದೇ ಸಮಾಜದಲ್ಲಿ ವ್ಯಾಪಕವಾಗಿ ಇದನ್ನು ಹರಡಲಾಗುತ್ತಿದೆ. ಮುಸ್ಲಿಮ್ ಯುವಕ ಹಾಗೂ ಹಿಂದೂ ಯುವತಿ ಪರಸ್ಪರ ಇಷ್ಟಪಟ್ಟು ಮದುವೆಯಾಗಲು ತೀರ್ಮಾನಿಸಿದರೆ ತಮಗೆ ಸಂಬಂಧಪಡದ ಈ ವಿಷಯದಲ್ಲಿ ತಲೆ ಹಾಕುವ ಕೋಮುವಾದಿಗಳು ಇಲ್ಲದ ವಿವಾದವನ್ನು ಹುಟ್ಟು ಹಾಕುತ್ತಾರೆ. ಬಾಬಾ ಸಾಹೇಬರ ನೇತೃತ್ವದಲ್ಲಿ ರೂಪುಗೊಂಡ ಭಾರತದ ಸಂವಿಧಾನ ಜನರಿಗೆ ಅವರ ಇಷ್ಟದಂತೆ ಬದುಕುವ ಸ್ವಾತಂತ್ರ್ಯವನ್ನು ನೀಡಿದೆ. ತೊಂಭತ್ತರ ದಶಕದವರೆಗೆ ಈ ಸ್ವಾತಂತ್ರ್ಯ ಅಬಾಧಿತವಾಗಿತ್ತು. ಆದರೆ 1992ರ ಡಿಸೆಂಬರ್ 6 ನಂತರ ಈ ದೇಶದ ರಾಜಕೀಯದ ದಿಕ್ಕು ಬದಲಾಯಿತು. ಯಾರು ಯಾವ ಬಟ್ಟೆ ತೊಡಬೇಕು, ಯಾರು ಯಾವ ಆಹಾರವನ್ನು ತಿನ್ನಬೇಕು, ಯಾರು ಯಾರನ್ನು ಮದುವೆಯಾಗಬೇಕು ಎಂಬುದನ್ನು ತೀರ್ಮಾನಿಸಲು ದೊಣ್ಣೆ ನಾಯಕರು ಹುಟ್ಟಿಕೊಂಡಿದ್ದಾರೆ. ಪರಸ್ಪರ ಪ್ರೀತಿಸುವ ಯುವ ಜೋಡಿಗಳಿಗೆ ‘ಲವ್ ಜಿಹಾದ್’ ಹೆಸರಿನಲ್ಲಿ ಕಿರಿ ಕಿರಿ ಮಾಡುವ ಘಟನೆಗಳನ್ನು ನೋಡಿದಾಗ ಹನ್ನೆರಡನೇ ಶತಮಾನದ ಆ ದಿನಗಳು ಕಣ್ಣಮುಂದೆ ಬರುತ್ತವೆ. ಆಗ ಬಸವಣ್ಣನವರು ಮಧುವರಸನ ಮಗಳು ಮತ್ತು ಹರಳಯ್ಯನ ಮಗನ ಮದುವೆ ಮಾಡಿಸಲು ಹೊರಟಾಗ ಕಲ್ಯಾಣದಲ್ಲಿ ಅಲ್ಲೋಲ ಕಲ್ಲೋಲ ಉಂಟಾಯಿತು. ಶ್ರೇಣೀಕೃತ ಜಾತಿ ವ್ಯವಸ್ಥೆಗೆ ಬಿದ್ದ ಏಟಿನಿಂದ ತತ್ತರಿಸಿದ ಮನುವಾದಿಗಳು ರಕ್ತಪಾತವನ್ನು ಮಾಡಿದರು. ಬಸವಣ್ಣನವರನ್ನು ಬಿಜ್ಜಳನ ಮೂಲಕ ಗಡಿಪಾರು ಮಾಡಿಸಲಾಯಿತು. ಆಗ ಶರಣರಿಗೆ ಚಿತ್ರಹಿಂಸೆ ನೀಡಿದ ಶಕ್ತಿಗಳು ಈಗ ಹೊಸ ವೇಷ ಹಾಕಿಕೊಂಡು ಮತ್ತೆ ಬಂದಿವೆ. ಇಡೀ ದೇಶ ಒಪ್ಪಿಕೊಂಡ ಸಂವಿಧಾನ ಮತ್ತು ಕಾನೂನಿಗಿಂತ ತಮ್ಮ ನಂಬಿಕೆ ಶ್ರೇಷ್ಠ ಎಂಬ ವಾದ ಈಗ ಯಾವುದೇ ಸಂಘಟನೆ ಮತ್ತು ಸಿದ್ಧಾಂತಗಳಿಗೆ ಮಾತ್ರ ಸೀಮಿತವಾಗಿ ಉಳಿದಿಲ್ಲ. ಸಂವಿಧಾನದ ಅಡಿಯಲ್ಲಿ ಚುನಾಯಿತವಾಗಿರುವ ಸರಕಾರಗಳೇ ಯಾವ ಹಿಂಜರಿಕೆಯಿಲ್ಲದೆ ನ್ಯಾಯಾಲಯಗಳಲ್ಲೇ ತಮ್ಮ ವಿತಂಡವಾದವನ್ನು ಮಂಡಿಸುತ್ತಿವೆ. ಉದಾಹರಣೆಗೆ ಕೇರಳದ ಶಬರಿಮಲೆ ದೇವಾಲಯಕ್ಕೆ ಋತುಮತಿ ವಯಸ್ಸಿನ ಮಹಿಳೆಯರು ಪ್ರವೇಶಿಸುವುದನ್ನು ನಿರ್ಬಂಧಿಸುವ ಕ್ರಮಕ್ಕೆ ಬೆಂಬಲವನ್ನು ನೀಡಿರುವ ಕೇಂದ್ರ ಸರಕಾರ ಇದು ನ್ಯಾಯಾಂಗದ ಪರಿಶೀಲನೆ ವ್ಯಾಪ್ತಿಗೆ ಬರುವುದಿಲ್ಲ ಎಂದು ಹೇಳಿದೆ. ಕೇಂದ್ರದ ಪರವಾಗಿ ಸುಪ್ರೀಂ ಕೋರ್ಟ್ ನಲ್ಲಿ ಹಾಜರಾದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ 10ರಿಂದ 50 ವರ್ಷದೊಳಗಿನ ಮಹಿಳೆಯರು ಶಬರಿಮಲೆ ಅಯ್ಯಪ್ಪ ಮಂದಿರವನ್ನು ಪ್ರವೇಶಿಸುವುದಕ್ಕೆ ವಿಧಿಸಲಾಗಿದ್ದ ನಿಷೇಧವನ್ನು ತೆರವುಗೊಳಿಸಿ 2018ರಲ್ಲಿ ಸುಪ್ರೀಂ ಕೋರ್ಟ್ ನೀಡಿದ್ದ ತೀರ್ಪು ತಪ್ಪಾಗಿದ್ದು ಅದನ್ನು ಪುನರ್ ಪರಿಶೀಲಿಸುವ ಅಗತ್ಯವಿದೆ ಎಂದು ಸಂವಿಧಾನ ಪೀಠದ ಮುಂದೆ ವಾದಿಸಿದ್ದಾರೆ. ಆದರೆ ತುಷಾರ್ ಮೆಹ್ತಾ ವಾದವನ್ನು ಒಪ್ಪದ ಒಂಭತ್ತು ನ್ಯಾಯಮೂರ್ತಿಗಳ ಸಂವಿಧಾನ ಪೀಠ ಯಾವುದೇ ಧಾರ್ಮಿಕ ಆಚರಣೆಯು ಮೂಢನಂಬಿಕೆಯೋ ಅಲ್ಲವೋ ಎಂಬುದನ್ನು ನಿರ್ಧರಿಸುವ ಹಕ್ಕು ಮತ್ತು ನ್ಯಾಯ ವ್ಯಾಪ್ತಿ ನ್ಯಾಯಾಲಯಕ್ಕಿದೆ ಎಂದು ಹೇಳಿದೆ. ಮೇಲಿನದು ದೇವಾಲಯ ಪ್ರವೇಶಕ್ಕೆ ಸಂಬಂಧಿಸಿದ ವಿಷಯ. ಇನ್ನು ಪರಸ್ಪರ ಇಷ್ಟಪಡುವ ಮದುವೆಗಳನ್ನು ಕಂಡರೆ ಮನುವಾದಿಗಳಿಗೆ ಆಗುವುದಿಲ್ಲ. ಅಂತರ್ಜಾತಿಯ ಮತ್ತು ಅಂತರ್ಧರ್ಮೀಯ ವಿವಾಹಗಳನ್ನು ವಿರೋಧಿಸುವ ಇವರು ‘ಲವ್ ಜಿಹಾದ್’ ಎಂಬ ಹೊಸ ಪದವನ್ನು ಸೃಷ್ಟಿಸಿದ್ದಾರೆ. ಹಿಂದೂ-ಮುಸ್ಲಿಮ್ ಯುವಕ, ಯುವತಿಯರು ಪರಸ್ಪರ ಒಪ್ಪಿ ಮದವೆಯಾಗಲೂ ಇವರ ಆಕ್ಷೇಪವಿದೆ. ಅದಕ್ಕಾಗಿ ನಾಗಪುರದ ಆರೆಸ್ಸೆಸ್ ಕೇಂದ್ರದಲ್ಲಿ ‘ಲವ್ ಜಿಹಾದ್’ ಎಂಬ ಪದವನ್ನು ಹುಟ್ಟು ಹಾಕಿ ಅದನ್ನು ಭಾರತೀಯರ ಮೇಲೆ ಹೇರುತ್ತಿದ್ದಾರೆ. ಇದಷ್ಟೇ ಅಲ್ಲದೇ ಬಿಜೆಪಿ ಸರಕಾರಗಳಿರುವ ಕೆಲವು ರಾಜ್ಯಗಳಲ್ಲಿ ಕಾನೂನಿನ ಮೂಲಕ ಇಂಥ ಮದುವೆಗಳನ್ನು ನಿರ್ಬಂಧಿಸಲು ಹೊರಟಿವೆ. ಗುಜರಾತ್ನಲ್ಲಿರುವ ಬಿಜೆಪಿ ಸರಕಾರ ವಿವಾಹಗಳ ನೋಂದಣಿಗೆ ಪೋಷಕರ ಒಪ್ಪಿಗೆಯನ್ನು ಕಡ್ಡಾಯಗೊಳಿಸುವ ಕಾನೂನನ್ನು ತರಲು ಹೊರಟಿದೆ. ಇದು ಸಂವಿಧಾನಕ್ಕೆ ವಿರೋಧವಾದ ಪ್ರಸ್ತಾವ ಎಂದು ಗೊತ್ತಿದ್ದರೂ ಇದನ್ನು ತಂದು ಸಂಘರ್ಷ ಸ್ಥಿತಿಯನ್ನು ನಿರ್ಮಿಸಲು ಅದು ಹೊರಟಿದೆ. ಇದು ಸ್ವಾಯತ್ತತೆ ಮತ್ತು ಗೋಪ್ಯತೆಯ ಹಕ್ಕುಗಳನ್ನು ಉಲ್ಲಂಘಿಸುವ ಅಂಶಗಳನ್ನೂ ಒಳಗೊಂಡಿದೆ. ಗುಜರಾತ್ನ ಉಪ ಮುಖ್ಯಮಂತ್ರಿ ಹರ್ಷ ಸಂಘವಿ ಈ ಕುರಿತು ಸ್ಪಷ್ಟೀಕರಣ ನೀಡಿ ರಾಜ್ಯದ ಅಮಾಯಕ ಹೆಣ್ಣು ಮಕ್ಕಳನ್ನು ಸಮಾಜ ವಿರೋಧಿ ಶಕ್ತಿಗಳು ತಮ್ಮ ಬಲೆಗೆ ಕೆಡವಿಕೊಂಡು ಮೋಸ ಮಾಡುವುದನ್ನು ತಡೆಯುವ ಉದ್ದೇಶದಿಂದ ಗುಜರಾತ್ ವಿವಾಹ ನೋಂದಣಿಗಳ ಕಾಯ್ದೆ-2000ಕ್ಕೆ ತಿದ್ದುಪಡಿ ತರಲು ಉದ್ದೇಶಿಸಿರುವುದಾಗಿ ಹೇಳಿದ್ದಾರೆ. ಇದಕ್ಕೆ ಕೆಲವೆಡೆ ವಿರೋಧ ಬಂದ ನಂತರ ಪ್ರೇಮ ವಿವಾಹಗಳಿಗೆ ಸರಕಾರದ ವಿರೋಧವಿಲ್ಲ ಎಂದು ಸಮಜಾಯಿಷಿ ನೀಡಿರುವ ಸಚಿವ ಹರ್ಷ ಸಂಘವಿ ಸನಾತನ ಧರ್ಮದ ರಕ್ಷಣೆ ಹಾಗೂ ಹೆಣ್ಣು ಮಕ್ಕಳ ಘನತೆಯನ್ನು ರಕ್ಷಿಸುವುದಾಗಿ ಸ್ಪಷ್ಟೀಕರಣ ನೀಡಿದ್ದಾರೆ. ಆದರೆ ಗುಜರಾತ್ನ ಈ ಮಂತ್ರಿಯ ಮಾತಿನ ಹಿಂದೆ ಕೋಮುವಾದಿ ಸಂಘಟನೆಗಳು ನಿರಂತರವಾಗಿ ಪ್ರಚಾರ ನಡೆಸಿರುವ ‘ಲವ್ ಜಿಹಾದ್’ ಪ್ರಭಾವ ಇರುವುದನ್ನು ತಳ್ಳಿ ಹಾಕಲು ಆಗುವುದಿಲ್ಲ. ಗುಜರಾತ್ ಸರಕಾರದ ಈ ಪ್ರಸ್ತಾವ ಕಾನೂನಿನ ಸ್ವರೂಪವನ್ನು ಪಡೆದಾಗ ವಧು-ವರರು ತಾವು ವಿವಾಹವಾಗುವ ವಿಷಯವನ್ನು ಪೋಷಕರಿಗೆ ತಿಳಿಸಿದ್ದೇವೆ ಎಂದು ಘೋಷಿಸಬೇಕಾಗುತ್ತದೆ ಹಾಗೂ ಪೋಷಕರ ಗುರುತಿನ ವಿವರಗಳನ್ನು ಒದಗಿಸಬೇಕಾಗುತ್ತದೆ. ಇದು ಮಹಿಳೆಯರ ಸ್ವಂತ ವ್ಯಕ್ತಿತ್ವ ಹಾಗೂ ಯೋಚನಾ ಕ್ರಮಕ್ಕೆ ಚ್ಯುತಿ ತಂದಂತಾಗುತ್ತದೆ. ಸಂವಿಧಾನದ ಪ್ರಕಾರ ಹಾಗೂ ನ್ಯಾಯಾಲಯಗಳು ನೀಡಿರುವ ಹಲವಾರು ತೀರ್ಪುಗಳ ಪ್ರಕಾರ ‘ಇಬ್ಬರು ವಯಸ್ಕರು ಮದುವೆಯಾಗಲು ಯಾರ ಒಪ್ಪಿಗೆಯ ಅಗತ್ಯವೂ ಇಲ್ಲ. ಇದು ಅವರಿಬ್ಬರ ಮೂಲಭೂತ ಹಕ್ಕು. ಈ ಮೂಲಭೂತ ಹಕ್ಕನ್ನು ಸಂವಿಧಾನದ 21ನೇ ವಿಧಿ ಒದಗಿಸಿದೆ. ಶಫೀನ್ ಜಹಾನ್ ವರ್ಸಸ್ ಅಶೋಕನ್ (2018), ಲತಾ ಸಿಂಗ್ ವರ್ಸಸ್ ಉತ್ತರ ಪ್ರದೇಶ (2002), ಲಕ್ಷ್ಮೀಬಾಯಿ ಚಂದರಗಿ ವರ್ಸಸ್ ಕರ್ನಾಟಕ (2021) ಪ್ರಕರಣಗಳಲ್ಲಿ’ ಬಾಹ್ಯ ಹಸ್ತಕ್ಷೇಪವಿಲ್ಲದೆ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯವನ್ನು ಜೀವಿಸುವ ಹಕ್ಕು ನೀಡುತ್ತದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಹಲವಾರು ಪ್ರಕರಣಗಳಲ್ಲಿ ಹೈಕೋರ್ಟ್ಗಳು ಕೂಡ ಇಂಥದೇ ಅಭಿಪ್ರಾಯವನ್ನು ವ್ಯಕ್ತಪಡಿಸಿವೆ. ವಿಶೇಷ ವಿವಾಹ ಕಾಯ್ದೆಯಡಿಯಲ್ಲಿ ಮೂವತ್ತು ದಿನಗಳ ನೋಟಿಸ್ನ ಅಗತ್ಯವನ್ನು ನ್ಯಾಯಾಲಯಗಳು ರದ್ದುಗೊಳಿಸಿವೆ. ವಿವಾಹವಾಗುವ ತೀರ್ಮಾನಕ್ಕೂ ಜಾತಿ, ಧರ್ಮ ಅಥವಾ ಪೋಷಕರ ಒಪ್ಪಿಗೆಗೆ ಸಂಬಂಧವನ್ನು ಕಲ್ಪಿಸುವುದು ಸರಿಯಲ್ಲ. ಯಾರೇ ಆಗಲಿ ಪರಸ್ಪರ ಇಷ್ಟಪಟ್ಟು ವಿವಾಹವಾಗುವ ವಯಸ್ಕ ಜೋಡಿಯ ಮದುವೆಯಾಗುವ ಹಕ್ಕನ್ನು ರಕ್ಷಿಸುವುದು ರಾಜ್ಯ ಸರಕಾರಗಳ ಕರ್ತವ್ಯವಾಗಿದೆ. ಯಾವುದೇ ರಾಜ್ಯ ಸರಕಾರ ಇಂಥ ಹೊಣೆಗಾರಿಕೆಯನ್ನು ನಿರ್ವಹಿಸುವ ಬದಲಾಗಿ ಮದುವೆಗೆ ಸಾಮಾಜಿಕ ಕಣ್ಗಾವಲು ವಿಧಿಸುವ ಹಾಗೂ ಹೆಣ್ಣು-ಗಂಡಿನ ವಿವಾಹದ ತೀರ್ಮಾನದ ಮೇಲೆ ಕುಟುಂಬ ಹಾಗೂ ಸರಕಾರದ ನಿಯಂತ್ರಣವನ್ನು ಹೇರುವ ಗುಜರಾತ್ನ ಬಿಜೆಪಿ ಸರಕಾರದ ಕ್ರಮ ಸರಿಯಾದುದಲ್ಲ. ಸಂಘ ಪರಿವಾರದವರು ಮುಸಲ್ಮಾನರನ್ನು ಮುಖ್ಯ ವಾಹಿನಿಯಲ್ಲಿ ಬೆರೆಯದಂತೆ ಪ್ರತ್ಯೇಕಿಸಲು ರೂಪಿಸಿದ ಹಲವಾರು ಮಸಲತ್ತುಗಳಲ್ಲಿ ‘ಲವ್ ಜಿಹಾದ್’ ಎಂಬ ಪದ ಸೃಷ್ಟಿಯೂ ಒಂದು. ಯಾವುದೇ ಪುರಾವೆಗಳಿಲ್ಲದೇ ಸಮಾಜದಲ್ಲಿ ವ್ಯಾಪಕವಾಗಿ ಇದನ್ನು ಹರಡಲಾಗುತ್ತಿದೆ. ಮುಸ್ಲಿಮ್ ಯುವಕ ಹಾಗೂ ಹಿಂದೂ ಯುವತಿ ಪರಸ್ಪರ ಇಷ್ಟಪಟ್ಟು ಮದುವೆಯಾಗಲು ತೀರ್ಮಾನಿಸಿದರೆ ತಮಗೆ ಸಂಬಂಧಪಡದ ಈ ವಿಷಯದಲ್ಲಿ ತಲೆ ಹಾಕುವ ಕೋಮುವಾದಿಗಳು ಇಲ್ಲದ ವಿವಾದವನ್ನು ಹುಟ್ಟು ಹಾಕುತ್ತಾರೆ. ಇತ್ತೀಚೆಗೆ ಹುಬ್ಬಳ್ಳಿಯಲ್ಲಿ ಇಂಥದೇ ಪ್ರಸಂಗದಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಬಿಜೆಪಿ ಶಾಸಕ ಅರವಿಂದ ಬೆಲ್ಲದ ಮತ್ತು ಚಕ್ರವರ್ತಿ ಸೂಲಿಬೆಲೆ ಮೊದಲಾದವರು ಯುವತಿಯ ಮನೆಗೆ ಹೋಗಿ ವಿವಾದವನ್ನು ಸೃಷ್ಟಿಸಲು ಯತ್ನಿಸಿದರು. ಮುಸಲ್ಮಾನರನ್ನು ರಾಕ್ಷಸರಂತೆ ಬಿಂಬಿಸಲು ಹಾಗೂ ಕೋಮು ಆಧಾರದಲ್ಲಿ ಧ್ರುವೀಕರಣ ಉಂಟು ಮಾಡಲು ಯತ್ನಿಸಿದರು. ಇಂಥದೇ ಅಪಪ್ರಚಾರವನ್ನು ಕೇರಳದ ವಿಧಾನಸಭಾ ಚುನಾವಣೆ ಸಂದರ್ಭದಲ್ಲೂ ನಡೆಸಿದರು. ವಾಸ್ತವವಾಗಿ ಸಂಘ ಪರಿವಾರದ ನಾಯಕರಾದ ಮುರಳಿ ಮನೋಹರ ಜೋಶಿ, ಅಶೋಕ ಸಿಂಘಾಲ್, ಎಲ್.ಕೆ.ಅಡ್ವಾಣಿಯವರು ತಮ್ಮ ಪುತ್ರಿಯರನ್ನು ಮುಸ್ಲಿಮ್ ಯುವಕರೊಂದಿಗೆ ಮದುವೆ ಮಾಡಿ ಕೊಟ್ಟಿದ್ದಾರೆ. ಅಲ್ಲಿ ಭಕ್ತರು ‘ಲವ್ ಜಿಹಾದ್’ ಪದ ಪ್ರಯೋಗ ಮಾಡುವುದಿಲ್ಲ. ಯುವಕರು ತಮ್ಮ ಇಷ್ಟದ ಜೀವನ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳಲು ಈ ದೊಣ್ಣೆ ನಾಯಕರ ಸಮ್ಮತಿ ಪಡೆಯಬೇಕಾಗಿ ಬಂದಿದೆ. ಯುವತಿಯ ತಾಯಿ ತಂದೆ ಒಪ್ಪಿದರೆ ಸಾಲದು ಈ ದೊಣ್ಣೆ ನಾಯಕರನ್ನು ಓಲೈಸಬೇಕಾಗುತ್ತದೆ. ಮುಸಲ್ಮಾನರನ್ನು ರಾಕ್ಷಸರಂತೆ ಬಿಂಬಿಸಲಾಗುತ್ತಿದೆ. ಗುಜರಾತ್ ಮಾತ್ರವಲ್ಲ ಬಿಜೆಪಿ ಸರಕಾರವಿರುವ ಉತ್ತರಪ್ರದೇಶ, ಮಧ್ಯಪ್ರದೇಶ ಹಾಗೂ ಉತ್ತರಾಖಂಡದಲ್ಲಿ ಅದೇ ಮಾದರಿಯ ಕಾನೂನಿಗೆ ತಿದ್ದುಪಡಿ ಮಾಡಿ ಅಂಗೀಕರಿಸಲಾಗಿದೆ. ವಿಷಾದದ ಸಂಗತಿ ಆಂದರೆ ಜಾತ್ಯತೀತ ಎಂದು ಹೇಳಿಕೊಳ್ಳುವ ಗುಜರಾತ್ನ ಕಾಂಗ್ರೆಸ್ ನಾಯಕರು ಬಿಜೆಪಿ ಸರಕಾರದ ಪ್ರಸ್ತವವನ್ನು ಬೆಂಬಲಿಸಿದ್ದಾರೆ. ಸ್ವಾತಂತ್ರ್ಯ ಬಂದು ಎಪ್ಪತ್ತೈದಕ್ಕಿಂತ ಹೆಚ್ಚು ವರ್ಷಗಳ ಕಾಲಾವಧಿಯಲ್ಲಿ ಹಲವಾರು ಕ್ಷೇತ್ರಗಳಲ್ಲಿ ಭಾರತದ ಸಾಧನೆ ಗಮನಾರ್ಹವಾಗಿದೆ. ಆದರೆ ಇನ್ನೂ ಸಮುದಾಯಗಳಿಗೆ ಸ್ವಾತಂತ್ರ್ಯದ ಬೆಳಕು ಬಂದಿಲ್ಲ. ಇಂಥ ಸನ್ನಿವೇಶದಲ್ಲಿ ಹೊಸ ಭಾರತವನ್ನು ಕಟ್ಟುವ ಹೊಣೆ ಹೊರಬೇಕಾದ ಯುವಜನರು ಸಾರ್ವಜನಿಕ ಹಾಗೂ ವೈಯಕ್ತಿಕ ಜೀವನಕ್ಕೆ ಸಂಬಂಧಿಸಿದಂತೆ ತಮ್ಮದೇ ಆದ ಕನಸುಗಳನ್ನು ಕಟ್ಟಿಕೊಂಡಿದ್ದಾರೆ. ಆ ಕನಸು ಭಗ್ನಗೊಳ್ಳದಂತೆ ನಾವು ಎಚ್ಚರ ವಹಿಸಬೇಕಾಗಿದೆ. ಈ ಬಹುತ್ವ ಭಾರತದಲ್ಲಿ ಜಾತಿಯೊಳಗೆ ಮದುವೆ ಮಾಡಿಕೊಂಡಂತೆ ಜಾತಿ ಮತ್ತು ಮತಗಳನ್ನು ಆಚೆಗಿಟ್ಟು ವಿವಾಹವಾಗಿರುವ ಲಕ್ಷಾಂತರ ಜನರಿದ್ದಾರೆ.ಮನುವಾದಿಗಳು ಮತ್ತು ಕೋಮುವಾದಿಗಳು ತಾವು ಬಿದ್ದಿರುವ ಹಾಳು ಬಾವಿಗೆ ಈ ತರುಣರನ್ನು ಎಳೆದುಕೊಳ್ಳದೇ ಅವರ ಪಾಡಿಗೆ ಅವರನ್ನು ಬದುಕಲು ಬಿಡಬೇಕು.
ಚಿನ್ನ ಬೆಳ್ಳಿ ದರದಲ್ಲಿ ಇಂದು ಅಲ್ಪ ಕುಸಿತ ಕಂಡಿದೆ. ಇರಾನ್-ಅಮೆರಿಕ ನಡುವೆ ಮುರಿದುಬಿದ್ದ ಕದನ ವಿರಾಮ ಸಂಧಾನ ಸಭೆಯಿಮದಾಗಿ ತೈಲ ಬೆಲೆಯು ಮಾರುಕಟ್ಟೆ ಮೇಲೆ ಪ್ರಭಾವ ಬಿದ್ದಿದ್ದು ಚಿನ್ನ ಬೆಳ್ಳಿ ಬೆಲೆ ಇಳಿಕೆಯಾಗಿದೆ.
ಝಮೀರ್ ತಪ್ಪೇನು, ಯಾರು ಮುಸ್ಲಿಮರ ನಾಯಕ?
ಮಳೆ ನಿಂತರೂ ಹನಿ ನಿಲ್ಲಲ್ಲ ಎನ್ನುವಂತೆ ದಾವಣಗೆರೆ ಉಪಚುನಾವಣೆಯ ಮತದಾನ ಮುಗಿದಿದ್ದರೂ ಕಾಂಗ್ರೆಸ್ ಪಕ್ಷದಲ್ಲಿ ಕಂಪನ ನಿಂತಿಲ್ಲ. ಕಾಂಗ್ರೆಸ್ ಅಭ್ಯರ್ಥಿ ಸೋಲಿಗೆ ಪಕ್ಷದ ಮುಸ್ಲಿಮ್ ನಾಯಕರೇ ಷಡ್ಯಂತ್ರ ರೂಪಿಸಿದ್ದರೆಂಬ ಆರೋಪ ಕೇಳಿಬರುತ್ತಿದೆ. ಷಡ್ಯಂತ್ರದ ಆರೋಪ ಮಾಡಿರುವವರು ಯಾರ ಹೆಸರನ್ನೂ ಹೇಳಿಲ್ಲ. ಆದರೂ ಆರೋಪ ಇರುವುದು ಸಚಿವ ಝಮೀರ್ ಅಹ್ಮದ್ ಖಾನ್, ವಿಧಾನ ಪರಿಷತ್ ಸದಸ್ಯರಾದ ನಸೀರ್ ಅಹ್ಮದ್ ಮತ್ತು ಅಬ್ದುಲ್ ಜಬ್ಬಾರ್ ಮೇಲೆ ಎನ್ನುವುದು ಎಲ್ಲರಿಗೂ ಗೊತ್ತು. ಇದೇ ಆರೋಪ ಕೆಪಿಸಿಸಿಯ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಸ್ಥಾನಕ್ಕೆ ಅಬ್ದುಲ್ ಜಬ್ಬಾರ್ ರಾಜೀನಾಮೆ ನೀಡುವಂತೆ ಮಾಡಿದೆ. ನಸೀರ್ ಅಹ್ಮದ್ ಅವರಿಗೆ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಸೂಚಿಸಲಾಗಿದೆ ಎನ್ನುವ ಮಾಹಿತಿ ಇದೆ. ಉಳಿದವರು ಝಮೀರ್ ಅಹ್ಮದ್ ಖಾನ್. ಝಮೀರ್ ವಿಷಯದಲ್ಲಿ ಕೂಡ ಕಾಂಗ್ರೆಸ್ ಕಠಿಣ ಕ್ರಮ ತೆಗೆದುಕೊಳ್ಳುತ್ತಾ? ಅಂದರೆ ಸಚಿವ ಸಂಪುಟ ಪುನರ್ ರಚನೆ ವೇಳೆ ಝಮೀರ್ ಅವರನ್ನು ಕೈಬಿಡಲಾಗುತ್ತಾ ಎನ್ನುವ ಬಗ್ಗೆ ಚರ್ಚೆಯಾಗುತ್ತಿದೆ. ಝಮೀರ್ಮೇಲೆ ಪಕ್ಷವಿರೋಧಿ ಚಟುವಟಿಕೆ ನಡೆಸಿದ್ದಾರೆ, ಬಂಡಾಯ ಅಭ್ಯರ್ಥಿ ಸಾದಿಕ್ ಪೈಲ್ವಾನ್ ಅವರನ್ನು ಕಣಕ್ಕಿಳಿಸಿದ್ದೇ ಝಮೀರ್, ಪಕ್ಷ ಸೂಚನೆ ನೀಡಿದರೂ ಸಾದಿಕ್ ಪೈಲ್ವಾನ್ ಮನವೊಲಿಸಿ ನಾಮಪತ್ರ ವಾಪಸ್ ತೆಗೆಸಲಿಲ್ಲ, ಝಮೀರ್ ಮನಸ್ಸು ಮಾಡಿದ್ದರೆ ಇನ್ನು ಕೆಲವು ಸ್ವತಂತ್ರ ಅಭ್ಯರ್ಥಿಗಳಿಂದ ನಾಮಪತ್ರ ವಾಪಸ್ ತೆಗೆಸಬಹುದಿತ್ತು, ಇದಾದ ಮೇಲೆ ಕಾಂಗ್ರೆಸ್ ಅಭ್ಯರ್ಥಿಯನ್ನು ಸೋಲಿಸಬೇಕೆಂದು ಎಸ್ಡಿಪಿಐ ಮತ್ತು ಕೆಲವು ಪಕ್ಷೇತರ ಅಭ್ಯರ್ಥಿಗಳಿಗೆ ಹಣ ನೀಡಿದ್ದಾರೆ, ದಾವಣಗೆರೆಗೆ ನೆಪಮಾತ್ರಕ್ಕೆ ಮಾತ್ರ ಪ್ರಚಾರಕ್ಕೆ ಬಂದು ಹೋದರು ಎನ್ನುವ ಆರೋಪಗಳನ್ನು ಮಾಡಲಾಗುತ್ತಿದೆ. ಈ ಪೈಕಿ ‘ತಾವು ನಾಮಪತ್ರ ಸಲ್ಲಿಸಲು ಮತ್ತು ವಾಪಸ್ ಪಡೆಯದಿರಲು ಝಮೀರ್ ಕಾರಣ’ ಎಂದು ಸಾದಿಕ್ ಪೈಲ್ವಾನ್, ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಎದುರು ಹೇಳಿದ್ದಾರಂತೆ. ಇದೊಂದನ್ನು ಬಿಟ್ಟು ಉಳಿದ ಯಾವ ಆರೋಪಗಳಿಗೂ ಆಧಾರ ಇಲ್ಲ. ಇದೊಂದೇ ಆಧಾರದ ಮೇಲೆ ಕ್ರಮ ಕೈಗೊಳ್ಳುವುದಿದ್ದರೆ, ಕಾಂಗ್ರೆಸ್ ಅಷ್ಟು ಕಠಿಣ ಕ್ರಮ ಕೈಗೊಳ್ಳುವ ಪಕ್ಷವಾಗಿದ್ದರೆ, ಮುಸ್ಲಿಮ್ ಸಮುದಾಯದ ಮೇಲೆ ಆ ಪಕ್ಷಕ್ಕೆ ಕಾಳಜಿ ಇದ್ದರೆ ಮೊದಲು ಕ್ರಮ ಜರುಗಿಸಬೇಕಿರುವುದು ಸಿದ್ದರಾಮಯ್ಯ ಮೇಲೆ. 2012ರ ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ನ ಮುಸ್ಲಿಮ್ ನಾಯಕ ಇಕ್ಬಾಲ್ ಅಹ್ಮದ್ ಸರಡಗಿ ಜೆಡಿಎಸ್ ಬೆಂಬಲಿತ ಬೈರತಿ ಸುರೇಶ್ ಎದುರು ಸೋಲಲು ಸಿದ್ದರಾಮಯ್ಯ ಕಾರಣ. ಹಾಗಂತಾ ವಿಎಸ್ ಸುದರ್ಶನ್ ಸಮಿತಿ ವರದಿ ಕೊಟ್ಟಿತ್ತು. ಆಗ ಏನೂ ಕ್ರಮ ಕೈಗೊಂಡಿರಲಿಲ್ಲ. ಇರಲಿ, ಹಿಂದೆ ಶಾಮನೂರು ಶಿವಶಂಕರಪ್ಪ ಬಹಿರಂಗವಾಗಿಯೇ ಬಿಜೆಪಿಯ ಬಿ.ವೈ. ರಾಘವೇಂದ್ರ ಗೆಲ್ಲಲಿ ಎಂದು ಹೇಳಿದ್ದರು. ಆಗ ಕಾಂಗ್ರೆಸ್ ಶಾಮನೂರು ಶಿವಶಂಕರಪ್ಪ ವಿರುದ್ಧ ಕ್ರಮ ಕೈಗೊಂಡಿತ್ತಾ? ಅಷ್ಟೇಯಲ್ಲ, ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಹೇಳಿದ್ದ ಜಾತಿಗಣತಿಯನ್ನು ಶಾಮನೂರು ಶಿವಶಂಕರಪ್ಪ ವಿರೋಧಿಸಿದ್ದರು. ಆಗ ಕ್ರಮ ಕೈಗೊಂಡಿತ್ತಾ? ಅವರ ಮೇಲೆ ಕ್ರಮ ಕೈಗೊಂಡಿಲ್ಲ ಎಂದರೆ ಅಲ್ಪಸಂಖ್ಯಾತ ನಾಯಕರ ಮೇಲೆ ಹೇಗೆ ಕ್ರಮ ಕೈಗೊಳ್ಳಲು ಸಾಧ್ಯ? ಆ ನೈತಿಕತೆ ಕಾಂಗ್ರೆಸ್ಗೆ ಇದೆಯಾ? ಪಕ್ಷವಿರೋಧಿ ಚಟುವಟಿಕೆ ವಿಷಯಕ್ಕೆ ಬರುವುದಾದರೆ ಚುನಾವಣೆ ವೇಳೆ ನಸೀರ್ ಅಹ್ಮದ್ ಮತ್ತು ಅಬ್ದುಲ್ ಜಬ್ಬಾರ್ ಅವರಂತೆ ಝಮೀರ್ ಮನೆಯಲ್ಲಿ ಕೂತಿರಲಿಲ್ಲ. ಕೇರಳದಲ್ಲಿ ಪಕ್ಷದ ಪರ ಪ್ರಚಾರ ಮಾಡುತ್ತಿದ್ದರು. ಕಾಂಗ್ರೆಸ್ಗೆ ಕೇರಳ ಚುನಾವಣೆ ಹಲವು ಕಾರಣಗಳಿಗೆ ಮಹತ್ವದ್ದಾಗಿತ್ತು. ಕೇರಳದ ವಯನಾಡು ಲೋಕಸಭಾ ಕ್ಷೇತ್ರದಿಂದ ಹಿಂದೆ ರಾಹುಲ್ ಗಾಂಧಿ ಸಂಸದರಾಗಿದ್ದರು, ಈಗ ಪ್ರಿಯಾಂಕಾ ಗಾಂಧಿ ಸಂಸದೆ. ಗಾಂಧಿ ಕುಟುಂಬಕ್ಕೆ ಇತ್ತೀಚಿನ ವರ್ಷಗಳಲ್ಲಿ ರಾಜಕೀಯವಾಗಿ ದೊಡ್ಡ ಶಕ್ತಿ ನೀಡಿದ ರಾಜ್ಯ ಕೇರಳ. 2024ರ ಲೋಕಸಭಾ ಚುನಾವಣೆಯಲ್ಲಿ ಕೇರಳದ ಒಟ್ಟು 20 ಸ್ಥಾನಗಳ ಪೈಕಿ ಕಾಂಗ್ರೆಸ್ ನೇತೃತ್ವದ ಯುಡಿಎಫ್ 18 ಸ್ಥಾನ ಗೆದ್ದಿತ್ತು. ಆ ಪೈಕಿ ಕಾಂಗ್ರೆಸ್ 16 ಕಡೆ ಸ್ಪರ್ಧೆ ಮಾಡಿ 14ರಲ್ಲಿ ಗೆದ್ದಿತ್ತು. ಈ ಭದ್ರಕೋಟೆಯನ್ನು ಉಳಿಸಿಕೊಳ್ಳುವುದು ಭವಿಷ್ಯದ ದೃಷ್ಟಿಯಿಂದಲೂ ಮುಖ್ಯವಾಗಿದೆ. ಅದಕ್ಕೂ ಮಿಗಿಲಾಗಿ ಮತ್ತೊಂದು ರಾಜ್ಯವನ್ನು ಗೆದ್ದು ಕಾಂಗ್ರೆಸ್ ಚೇತರಿಸಿಕೊಳ್ಳಬೇಕಾಗಿದೆ. ಕೇರಳ ಗೆದ್ದರೆ, ತಮಿಳುನಾಡು ಮತ್ತು ಪುದುಚೆರಿಯಲ್ಲಿ ಡಿಎಂಕೆ-ಕಾಂಗ್ರೆಸ್ ಮೈತ್ರಿಕೂಟವೂ ಗೆದ್ದರೆ ಇಡೀ ದಕ್ಷಿಣದಲ್ಲಿ ಕಾಂಗ್ರೆಸ್ ಪ್ರಾಬಲ್ಯ ಎದ್ದುಕಾಣುತ್ತದೆ. ಈ ಎಲ್ಲಾ ಹಿನ್ನೆಲೆಯಲ್ಲಿ ಝಮೀರ್ ಕೇರಳಕ್ಕೆ ಹೋಗಿ ಪ್ರಚಾರ ಮಾಡಿದ್ದು ಪಕ್ಷವಿರೋಧಿ ಚಟುವಟಿಕೆಯೇ? ಯಾರು, ಎಲ್ಲಿ ಪ್ರಚಾರ ಮಾಡಬೇಕು ಎಂದು ನಿರ್ಧರಿಸುವ ಹಕ್ಕು ಪಕ್ಷಕ್ಕೆ ಇದ್ದೇ ಇರುತ್ತದೆ. ದಾವಣಗೆರೆಗೆ ಹೋಗಿ ಪ್ರಚಾರ ಮಾಡುವಂತೆ ಝಮೀರ್ಗೆ ಪಕ್ಷದ ಅಧ್ಯಕ್ಷರಾಗಿ ಡಿಕೆ ಶಿವಕುಮಾರ್ ಸೂಚನೆ ನೀಡಬೇಕಾಗಿತ್ತು. ಸಂಪುಟ ಸಹುದ್ಯೋಗಿಗಳು ಎಲ್ಲಿಗೆ ಹೋಗಬೇಕು? ಏನು ಮಾಡಬೇಕು ಎಂದು ನಿರ್ದೇಶಿಸುವ ಹಕ್ಕು ಮುಖ್ಯಮಂತ್ರಿಗೆ ಇರುತ್ತದೆ. ಸಿದ್ದರಾಮಯ್ಯ ಕೂಡ ಕಟ್ಟಪ್ಪಣೆ ಹೊರಡಿಸಬಹುದಿತ್ತು. ಸಾದಿಕ್ ಪೈಲ್ವಾನ್ ಅವರಿಂದ ನಾಮಪತ್ರ ವಾಪಸ್ ತೆಗಿಸಲು ಝಮೀರ್ ನಕಾರ ಮಾಡಿದಾಗಲೇ ಖುದ್ದು ಹಾಜರಾಗಿ ಸಮಜಾಯಿಷಿ ನೀಡುವಂತೆ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಸೂಚಿಸಬಹುದಿತ್ತು. ಇಷ್ಟಕ್ಕೂ ಝಮೀರ್ ತಾನಾಗಿ ಕೇರಳಕ್ಕೆ ಹೋಗಿರಲಿಲ್ಲ. ಅವರನ್ನು ಅಲ್ಲಿಗೆ ನಿಯೋಜಿಸಿದ್ದು ಹೈಕಮಾಂಡ್. ಅದೂ ಸ್ಟಾರ್ ಪ್ರಚಾರಕ ಎನ್ನುವ ಪಟ್ಟ ಕಟ್ಟಿ. ಹಾಗಿದ್ದ ಮೇಲೆ ಹೈಕಮಾಂಡ್ ಸೂಚನೆ ಪಾಲಿಸಿದ್ದು ಪಕ್ಷವಿರೋಧಿ ಚಟುವಟಿಕೆಯೆ? ಈಗ ಹೇಳಿ ಝಮೀರ್ ವಿರುದ್ಧ ಕ್ರಮ ಕೈಗೊಳ್ಳಲು ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ಗೆ ಸಾಧ್ಯವಾಗುತ್ತಾ? ರಾಜಕಾರಣಿಗಳಿಗೆ ಪಾಠ ಏನು? ರಾಜಕಾರಣಿಯೊಬ್ಬ ಬೆಳೆಯಲು, ಬಹುದಿನಗಳ ಕಾಲ ರಾಜಕಾರಣದಲ್ಲಿ ಉಳಿಯಲು ಭೂಮಿ ಮತ್ತು ಬಾನು ಎರಡೂ ಮುಖ್ಯ. ಭೂಮಿ ಎಂದರೆ ಜನ-ಸಮುದಾಯ-ಕ್ಷೇತ್ರ. ಬಾನು ಎಂದರೆ ಅವರವರ ಪಕ್ಷದ ಸಂಪರ್ಕಜಾಲ. ಝಮೀರ್ ಜನ-ಸಮುದಾಯದ ಮಧ್ಯೆ ಇರುವ ಮತ್ತು ಹೈಕಮಾಂಡ್ ಮಟ್ಟದಲ್ಲೂ ಗಟ್ಟಿಯಾಗುತ್ತಿರುವ ನಾಯಕ. ನಾಳೆ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಕಡೆಯಿಂದ ಕಿರಿಕಿರಿಯಾದರೆ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಮತ್ತು ಕೆ.ಸಿ. ವೇಣುಗೋಪಾಲ್ ಬಳಿ ಹೋಗುತ್ತಾರೆ. ಅಬ್ದುಲ್ ಜಬ್ಬಾರ್ ಮತ್ತು ನಸೀರ್ ಅಹ್ಮದ್ ಏನು ಮಾಡಬೇಕು? ನಾಯಕರ ಸುತ್ತ ಗಿರಕಿ ಹೊಡೆಯುವವರು ಎಂದೂ ನಾಯಕನಾಗಲಾರ ಎನ್ನುವುದಕ್ಕೆ ಇದು ನಿದರ್ಶನ. ಯಾರು ಮುಸ್ಲಿಮರ ನಾಯಕ? ಜಾಫರ್ ಷರೀಫ್ ಬಗೆಗೂ ಹಲವು ತಕರಾರುಗಳಿದ್ದವಾದರೂ ಅವರ ನಂತರ ರಾಜ್ಯದಲ್ಲಿ ಮುಸ್ಲಿಮ್ ನಾಯಕತ್ವ ಮುಸುಕಾಯಿತು ಎನ್ನುವುದು ನಿರ್ವಿವಾದ. ಹಿಜಾಬ್, ಆಝಾನ್, ಹಲಾಲ್ ಕಟ್ ಮತ್ತಿತರ ವಿಷಯಗಳಲ್ಲಿ ಮುಸ್ಲಿಮರ ಮೇಲೆ ಪಟ್ಟಭದ್ರರು ಮುಗಿಬಿದ್ದಾಗ ಇದ್ದುದರಲ್ಲಿ ದನಿ ಎತ್ತುತ್ತಿದ್ದರೆನ್ನುವ ಕಾರಣಕ್ಕೆ ಝಮೀರ್ ಬಗ್ಗೆ ಸಮುದಾಯದಲ್ಲಿ ನಿರೀಕ್ಷೆ ಮೂಡಿತ್ತು. ನಡುವೆ ಕೆಲವೊಂದು ವಿಷಯದಲ್ಲಿ ಝಮೀರ್ ಮಾಡುತ್ತಿದ್ದ ಅತಿರೇಕಗಳಿಂದ ಸಮುದಾಯ ಮುಜುಗರವನ್ನೂ ಅನುಭವಿಸುತ್ತಿತ್ತು. ಅವರು ಮಾಗಿದರೆ, ಪಕ್ವವಾದರೆ ಪಕ್ಷಕ್ಕೂ ಮತ್ತು ಸಮುದಾಯಕ್ಕೂ ಒಳ್ಳೆಯದು. ಇವೆಲ್ಲದರ ನಡುವೆ ದಾವಣಗೆರೆ ಟಿಕೆಟ್ ವಿಷಯದಲ್ಲಿ ಮುಸ್ಲಿಮ್ ಧರ್ಮಗುರುಗಳು ರಂಗಪ್ರವೇಶ ಮಾಡಿದ್ದು ಕುತೂಹಲಕಾರಿಯಾದ ಸಂಗತಿ. ಸಾಮಾನ್ಯವಾಗಿ ಮುಸ್ಲಿಮ್ ಧರ್ಮಗುರುಗಳು ಟಿಕೆಟ್ ವಿಷಯದಲ್ಲಿ ತಲೆ ಹಾಕುವುದಿಲ್ಲ. ಯಾರ ಪರವಾಗಿಯಾದರೂ ಹೇಳಬೇಕು ಎನಿಸಿದರೆ ಅದನ್ನು ಹೇಳುತ್ತಿದ್ದರೇ ಹೊರತು ಟಿಕೆಟ್ ಕೊಡಲೇಬೇಕು ಎಂದು ಪಟ್ಟು ಹಿಡಿಯುವುದಿಲ್ಲ. ಇತ್ತೀಚೆಗೆ ಅವರು ಮಧ್ಯಪ್ರವೇಶ ಮಾಡಿದ್ದು ಕಳೆದ ವಿಧಾನಸಭಾ ಚುನಾವಣೆ ವೇಳೆ. ಬೆಂಗಳೂರಿನ ಪುಲಕೇಶಿ ನಗರದ ಟಿಕೆಟ್ ವಿಷಯದಲ್ಲಿ. ಆಗಲೂ ಹೇಳಿದ್ದರಷ್ಟೇ. ಅವರ ಮಾತಿನಂತೆ ಪುಲಕೇಶಿ ನಗರದಲ್ಲಿ ಅಖಂಡ ಶ್ರೀನಿವಾಸ ಮೂರ್ತಿಗೆ ಕಾಂಗ್ರೆಸ್ ಟಿಕೆಟ್ ಕೊಟ್ಟಿರಲಿಲ್ಲ. ಆಗ ಧರ್ಮಗುರುಗಳ ಮಾತು ಕೇಳಿದ್ದ ಕಾಂಗ್ರೆಸ್ ಈಗ ದಾವಣಗೆರೆ ವಿಷಯದಲ್ಲಿ ವ್ಯತಿರಿಕ್ತ ನಿರ್ಧಾರ ಕೈಗೊಂಡಿದೆ. ಕಾಂಗ್ರೆಸ್ ನಿರ್ಧಾರದಿಂದ ಧರ್ಮಗುರುಗಳಿಗೆ ಸಮಸ್ಯೆಯಾದಂತೆ ಕಾಣುತ್ತಿಲ್ಲ. ಅವರು ಹೇಳಿದರು, ಬಿಟ್ಹಾಕಿದರು. ಸಮಸ್ಯೆಯಾಗಿರುವುದು ಮುಸ್ಲಿಮ್ ನಾಯಕರಿಗೆ. ಅವರೀಗ ತಮ್ಮ ವಿರುದ್ಧ ಕೇಳಿಬರುತ್ತಿರುವ ಆರೋಪಗಳ ಬಾಣಗಳಿಂದ ರಕ್ಷಣೆ ಪಡೆಯಲು ಧರ್ಮಗುರುಗಳು ಹೇಳಿದರು ಎನ್ನುವ ಗುರಾಣಿಯನ್ನು ಬಳಸುತ್ತಿದ್ದಾರೆ. 2028ಕ್ಕೆ ಸಮರ್ಥ್ಗೆ ಟಿಕೆಟ್ ಇಲ್ವಾ? ಎಸ್.ಎಸ್. ಮಲ್ಲಿಕಾರ್ಜುನ್ ‘ಈಗ ನನ್ನ ತಂದೆಯ ಕ್ಷೇತ್ರದಲ್ಲಿ ಮಗನಿಗೆ ಟಿಕೆಟ್ ಕೊಡಿ, 2028ಕ್ಕೆ ಯಾರಿಗಾದರೂ ಅವಕಾಶ ನೀಡಿ’ ಎಂದು ಹೇಳಿದ್ದಾರಂತೆ. ಹಾಗಂತಾ ಮೊನ್ನೆಯ ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ನಾಯಕರು ಹೊಸ ವಿಚಾರವೊಂದು ಹೊರಹಾಕಿದ್ದಾರೆ. ಹಾಗಿದ್ದರೆ ಈಗ ಗೆದ್ದರೂ ಸಮರ್ಥ್ 2028ಕ್ಕೆ ಕ್ಷೇತ್ರವನ್ನು ಬಿಟ್ಟುಕೊಡಬೇಕು. ಆದರೆ ರಾಜಕಾರಣದಲ್ಲಿ ಹಾಗಾಗುತ್ತಾ ಎನ್ನುವುದೇ ಪ್ರಶ್ನೆ. ದಾವಣಗೆರೆ ವಿಷಯದಲ್ಲಿ ಎಲ್ಲರೂ ಮತ್ತೊಂದು ವಿಷಯವನ್ನು ಮರೆಯುತ್ತಿದ್ದಾರೆ ಎನಿಸುತ್ತಿದೆ. ಸತ್ತವರ ಕುಟುಂಬಕ್ಕೆ ಟಿಕೆಟ್ ಕೊಡುವುದು ವಾಡಿಕೆ, ಸತ್ಸಂಪ್ರದಾಯ ಎಂದು ಹೇಳುತ್ತಿದ್ದಾರೆ. ಬಾಗಲಕೋಟೆಯಲ್ಲಿ ಮೇಟಿ ಕುಟುಂಬಕ್ಕೆ ಟಿಕೆಟ್ ಕೊಟ್ಟಿದ್ದರಿಂದ ದಾವಣಗೆರೆಯಲ್ಲಿ ಶಾಮನೂರು ಶಿವಶಂಕರಪ್ಪ ಕುಟುಂಬಕ್ಕೆ ಕೊಟ್ಟದ್ದು ನ್ಯಾಯ ಎನ್ನುತ್ತಿದ್ದಾರೆ. ಆದರೆ ಬಾಗಲಕೋಟೆಯಲ್ಲಿ ಮೇಟಿ ಕುಟುಂಬದ ಮತ್ತೊಬ್ಬ ಪ್ರತಿನಿಧಿ ಅಧಿಕಾರದಲ್ಲಿ ಇಲ್ಲ. ದಾವಣಗೆರೆಯಲ್ಲಿ ಶಿವಶಂಕರಪ್ಪ ಮಗ ಮಂತ್ರಿ, ಸೊಸೆ ಸಂಸದೆ. ಅದರಿಂದ ಅನ್ಯಾಯ, ಸತ್ಸಂಪ್ರದಾಯ ಎನ್ನುವ ವಿಷಯಗಳೇ ಉದ್ಭವಿಸಬಾರದಿತ್ತು. ಆಫ್ ದಿ ರೆಕಾರ್ಡ್! ಸೋತಾಗ ಸಂಚಲನವಾಗುವುದು ಸಹಜ. ದಾವಣಗೆರೆ ವಿಷಯದಲ್ಲಿ ಕಾಂಗ್ರೆಸ್ ಸೋಲುವ ಮುನ್ನವೇ ಆತಂಕಕ್ಕೀಡಾಗಿರುವುದರಿಂದ ಆ ಪಕ್ಷ ಸೊಲಬಹುದೇನೋ ಎನ್ನುವ ಅನುಮಾನ ಬರುತ್ತಿದೆ. ಚುನಾವಣೆ ಮುಗಿಯುತ್ತಿದ್ದಂತೆ ಮುಸ್ಲಿಮ್ ನಾಯಕರ ಬಾಯಿಂದ ಬರುತ್ತಿರುವ ಮಾತುಗಳು ಅನುಮಾನವನ್ನು ಜಾಸ್ತಿ ಮಾಡುತ್ತಿವೆ.
ಅಮೆರಿಕಾ-ಇರಾನ್ ನಡುವೆ ಮಾತುಕತೆಗಳು ವಿಫಲವಾದ ಬೆನ್ನಲ್ಲೇ, ಹೊರ್ಮುಜ್ ಮೇಲೆ ನಿಯಂತ್ರಣ ಸಾಧಿಸಲು ಟ್ರಂಪ್ ಹಾತೊರೆಯುತ್ತಿದ್ದು, ಜಲಸಂಧಿಯಲ್ಲಿ US ನೌಕಾಪಡೆಗಳು ದಿಗ್ಬಂಧನ ವಿಧಿಸಲಿವೆ ಎಂದು ಘೋಷಿಸಿದ್ದಾರೆ. ಜಲಸಂಧಿಯಲ್ಲಿ ಸಂಚರಿಸುವ ಎಲ್ಲಾ ಹಡಗುಗಳ ತಪಾಸಣೆ ನಡೆಸಲಿದ್ದು, ಇರಾನ್ ಅಕ್ರಮವಾಗಿ ಟೋಲ್ ಕಟ್ಟುವ ಎಲ್ಲಾ ಹಡಗುಗಳನ್ನು ನಿರ್ಬಂಧಿಸಲಾಗುತ್ತದೆ, ಅಲ್ಲದೆ, ಇಲ್ಲಿರುವ ಸೀ ಮೈನ್ ಗಳನ್ನು ತೆರವುಗೊಳಿಸಲಾಗುತ್ತದೆ ಎಂದು ತಿಳಿಸಿದ್ದಾರೆ. ಇದಾದ ಬಳಿಕ ಅಮೆರಿಕಾದ ಸೆಂಟ್ರಲ್ ಕಮಾಂಡ್ ಹೇಳಿಕೆ ನೀಡಿದ್ದು, ಏ.13 ರಂದು ಗಂಟೆ ET ಸಮಯದಿಂದ ಹೊರ್ಮುಜ್ ಮೇಲೆ US ಪಡೆಗಳ ನಿಯಂತ್ರಣ ಸಾಧಿಸಲಿದೆ ಎಂದು ತಿಳಿಸಿದೆ. ಈ ಕುರಿತ ಮಾಹಿತಿ ಇಲ್ಲಿದೆ..
Karnataka Congress Conflict : ದಾವಣಗೆರೆ ಮತ್ತು ಬಾಗಲಕೋಟೆ ಉಪಚುನಾವಣೆ ಮತದಾನ ಮುಗಿದಿದೆ, ಆದರೆ, ಕಾಂಗ್ರೆಸ್ಸಿನಲ್ಲಿ ಆಂತರಿಕ ಸಮಸ್ಯೆಗಳು ಹೆಚ್ಚಾಗುತ್ತಿವೆ. ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ವಿರುದ್ದ ಕೈ ಪಾರ್ಟಿಯ ಅಲ್ಪಸಂಖ್ಯಾತ ಸಮುದಾಯದ ನಾಯಕರು ಗರಂ ಆಗಿದ್ದಾರೆ. ಉಪಚುನಾವಣೆಯ ಫಲಿತಾಂಶ ಹೊರಬೀಳುವ ಮುನ್ನವೇ, ಕಾಂಗ್ರೆಸ್ಸಿನ ಆಂತರಿಕ ಭಿನ್ನಮತ ಹೊಸಹೊಸ ಆಯಾಮಕ್ಕೆ ತಿರುಗುತ್ತಿದೆ.
ಗಾಲ್ಫ್ ಅಸೋಸಿಯೇಷನ್ ಸಂಸ್ಥೆಗೆ ನೀಡಲಾಗಿರುವ ಜಮೀನಿನ ಸರ್ವೇಗೆ ಕಂದಾಯ ಇಲಾಖೆ ನಿರ್ಧಾರ
PC: kga.in ಬೆಂಗಳೂರು : ಕರ್ನಾಟಕ ಗಾಲ್ಫ್ ಅಸೋಸಿಯೇಷನ್ ಸಂಸ್ಥೆಗೆ ನೀಡಲಾಗಿರುವ ಜಮೀನಿನ ಸರ್ವೇ ನಡೆಸಲು ಕಂದಾಯ ಇಲಾಖೆಯು ಮುಂದಾಗಿದೆ. ಹಾಗೆಯೇ ಗಾಲ್ಫ್ ಅಸೋಸಿಯೇಷನ್ ಸಂಸ್ಥೆಯ ಆದಾಯವನ್ನೂ ಸಹ ಲೆಕ್ಕ ಪರಿಶೋಧಕರಿಂದ ಪರಿಶೀಲಿಸಲು ಕ್ರಮವಹಿಸಿದೆ. ಈ ಸಂಸ್ಥೆಯ ಆಡಳಿತ ಮಂಡಳಿಗೆ ಕಂದಾಯ ಇಲಾಖೆಯ ಸರಕಾರದ ಪ್ರಧಾನ ಕಾರ್ಯದರ್ಶಿ ಅಥವಾ ಸರಕಾರದ ಹಿರಿಯ ಐಎಎಸ್ ಅಧಿಕಾರಿಗಳನ್ನು ನೇಮಕ ಪ್ರಕ್ರಿಯೆಗಳಿಗೆ ಮುಂದಾಗಿದ್ದ ಕಂದಾಯ ಇಲಾಖೆಯು ಇದೀಗ ಈ ಸಂಸ್ಥೆಯು ಹೊಂದಿರುವ ಜಮೀನಿನ ಸರ್ವೇ ನಡೆಸುವ ಸಂಬಂಧ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಪೂರ್ವ ವಲಯದ ಮುಖ್ಯ ಆಯುಕ್ತರಿಗೆ ಪತ್ರ ಬರೆದಿದೆ. ಗಾಲ್ಫ್ ಅಸೋಸಿಯೇಷನ್ನನ ಆಡಳಿತವನ್ನು ನಿಯಂತ್ರಿಸಲು ಸಿದ್ಧತೆ ನಡೆಸಿರುವ ಸರಕಾರವು, ಇದಕ್ಕಾಗಿ ನಿಯಮಗಳಲ್ಲಿ ಬದಲಾವಣೆ ತರಲು ಹೊರಟಿರುವ ನಡುವೆಯೇ ಜಮೀನಿನ ಸರ್ವೇ ನಡೆಸಲು ಮುಂದಾಗಿರುವುದು ಮುನ್ನೆಲೆಗೆ ಬಂದಿದೆ. ಸರಕಾರಿ ಭೂಮಿ ಮಂಜೂರಾತಿ, ಗುತ್ತಿಗೆ, ಒತ್ತುವರಿಗಳ ತೆರವುಗೊಳಿಸುವಿಕೆ ಹಾಗೂ ಅಕ್ರಮ ಹಿಡುವಳಿಗಳನ್ನು ಸಕ್ರಮಗೊಳಿಸುವ ಸಂಬಂಧ 2026ರ ಎಪ್ರಿಲ್ 7ರಂದು ನಡೆದ ಸಾರ್ವಜನಿಕ ಲೆಕ್ಕ ಪತ್ರ ಸಮಿತಿಗೆ ಕಂದಾಯ ಇಲಾಖೆಯು ನೀಡಿರುವ ವಿವರಣೆಯಲ್ಲಿ ಈ ಮಾಹಿತಿ ಇದೆ. ಕಂದಾಯ ಇಲಾಖೆಯು ಸಾರ್ವಜನಿಕ ಲೆಕ್ಕಪತ್ರ ಸಮಿತಿಗೆ ನೀಡಿರುವ ವಿವರಣೆಯ ಪ್ರತಿಯು ‘the-file.in’ಗೆ ಲಭ್ಯವಾಗಿದೆ. ಇದೇ ಸಂಸ್ಥೆಗೆ ಸಂಬಂಧಿಸಿದಂತೆ 2023ರ ಮಾರ್ಚ್ 7, 2026ರ ಫೆ.10ರಂದು ಅರಗ ಜ್ಞಾನೇಂದ್ರ ಅವರ ಅಧ್ಯಕ್ಷತೆಯಲ್ಲಿ ಸಭೆ ಸೇರಿದ್ದ ಸಾರ್ವಜನಿಕ ಲೆಕ್ಕಪತ್ರ ಸಮಿತಿಯಲ್ಲಿ ಚರ್ಚೆ ನಡೆಸಿತ್ತು. ಗಾಲ್ಫ್ ಅಸೋಸಿಯೇಷನ್ಗೆ ನೀಡಿರುವ ಭೂಮಿಯ ಮೇಲ್ವಿಚಾರಣೆ, ಷರತ್ತುಗಳ ಅನುಸರಣೆಯಾಗಿದೆಯೇ ಇಲ್ಲವೇ, ಮೇಲ್ವಿಚಾರಣೆ ಮಾಡದ ಕಾರಣ ಆಗಿರುವ ಪರಿಣಾಮಗಳು, ಭೂಮಿಯ ಬಳಕೆಯನ್ನು ಖಚಿತಪಡಿಸಿಕೊಳ್ಳಲು ಜಂಟಿ ಭೌತಿಕ ಪರಿವೀಕ್ಷಣೆ ಮಾಡುವುದು, ಗುತ್ತಿಗೆ ಬಾಡಿಗೆ ಪಾವತಿಗಾಗಿ ತಗಾದೆ ಸೃಷ್ಟಿಸದೇ ಇರುವ ವಿಷಯಗಳ ಕುರಿತು ಸಾರ್ವಜನಿಕ ಲೆಕ್ಕಪತ್ರಗಳ ಸಮಿತಿಯಲ್ಲಿ ಚರ್ಚಿಸಿರುವುದು ತಿಳಿದು ಬಂದಿದೆ. 2026ರ ಎಪ್ರಿಲ್ 7ರಂದು ನಡೆದ ಸಭೆಯಲ್ಲಿ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೈಗೊಂಡಿರುವ ಇತ್ತೀಚಿನ ಮಾಹಿತಿಯನ್ನು ಸಭೆಗೆ ಒದಗಿಸಿರುವುದು ಗೊತ್ತಾಗಿದೆ. ಗಾಲ್ಪ್ ಅಸೋಸಿಯೇಷನ್ ಬಳಸುತ್ತಿರುವ ಜಮೀನು, ಸರಕಾರದ ಸ್ವಾಮ್ಯಕ್ಕೆ ಒಳಪಟ್ಟಿರುವ ಕಾರಣ ಆಡಳಿತ ವಿಷಯದಲ್ಲಿಯೂ ನಿರ್ಣಯ ಕೈಗೊಳ್ಳುವ ಅಧಿಕಾರವೂ ಸರಕಾರಕ್ಕಿದೆ ಎಂದು ಪ್ರತಿಪಾದಿಸುತ್ತಿದೆ. ಈ ಸಂಬಂಧ ಕಂದಾಯ ಸಚಿವ ಕೃಷ್ಣಬೈರೇಗೌಡ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಅಧಿಕಾರಿಗಳು ಸಮಾಲೋಚಿಸಿದ್ದರು. ಕರ್ನಾಟಕ ಗಾಲ್ಫ್ ಅಸೋಸಿಯೇಷನ್ ಆಡಳಿತವನ್ನು ನಿಯಂತ್ರಿಸಲು ಹೊರಟಿರುವ ಸರಕಾರವು, ಹಲವು ಸಮರ್ಥನೀಯ ಅಂಶಗಳನ್ನು ಪಟ್ಟಿ ಮಾಡಿತ್ತು. 1980ರಲ್ಲಿ ಸರಕಾರ ಹೊರಡಿಸಿದ್ದ ಆದೇಶ, 1986ರಲ್ಲಿ ಕರ್ನಾಟಕ ಗಾಲ್ಫ್ ಅಸೋಸಿಯೇಷನ್ ಮತ್ತು ನಿಗಮದ ನಡುವೆ ಆಗಿರುವ ಒಪ್ಪಂದವನ್ನು ಮುನ್ನೆಲೆಗೆ ತಂದಿತ್ತು. ಇದರ ಪ್ರಕಾರ ಗಾಲ್ಫ್ ಅಸೋಸಿಯೇಷನ್ನನ ಆಡಳಿತವನ್ನು ನಿಯಂತ್ರಿಸುವ ಕುರಿತು ಗೌರ್ನಿಂಗ್ ಕೌನ್ಸಿಲ್ ರಚಿಸಲು ಸರಕಾರಕ್ಕೆ ಬೇಡಿಕೆ ಸಲ್ಲಿಸಬೇಕು ಎಂದು ಕಂದಾಯ ಇಲಾಖೆಯು ಪ್ರಸ್ತಾವವನ್ನೂ ಸಿದ್ಧಪಡಿಸಿತ್ತು. ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ದಿ ನಿಗಮದ ಮಾಲಕತ್ವಕ್ಕೆ ಒಳಪಟ್ಟಿರುವ ಕರ್ನಾಟಕ ಗಾಲ್ಫ್ ಅಸೋಸಿಯೇಷನ್ ಸಂಸ್ಥೆಗೆ ಗುತ್ತಿಗೆ ನೀಡಿರುವ ಜಮೀನಿನ ಸರ್ವೇ ನಡೆಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಕಂದಾಯ ಇಲಾಖೆಯು ನಿರ್ದೇಶನ ನೀಡಿದೆ. ಹಾಗೆಯೇ ಈ ಸಂಸ್ಥೆಯ ಆದಾಯವನ್ನು ಲೆಕ್ಕ ಪರಿಶೋಧಕರಿಂದ ಪರಿಶೀಲಿಸಿ ವರದಿ ಸಲ್ಲಿಸಲು ಸಂಘಗಳ ಜಿಲ್ಲಾ ನೋಂದಣಾಧಿಕಾರಿಗಳಿಗೆ 2026ರ ಫೆ.6ರಂದು ಪತ್ರವನ್ನು ಬರೆದಿದೆ. ಅಲ್ಲದೇ 2026ರ ಎಪ್ರಿಲ್ 2ರಂದೂ ಸಹ ಈ ಇಲಾಖೆಗಳಿಗೆ ನೆನಪೋಲೆಗಳನ್ನೂ ಬರೆಯಲಾಗಿದೆ ಎಂದು ಕಂದಾಯ ಇಲಾಖೆಯು ಸಾರ್ವಜನಿಕ ಲೆಕ್ಕ ಪತ್ರ ಸಮಿತಿಗೆ ಪತ್ರದಲ್ಲಿ ವಿವರಿಸಿರುವುದು ತಿಳಿದು ಬಂದಿದೆ.
ರಾಜ್ಯದಲ್ಲಿ ಮಹಿಳೆಯರಿಗೆ ಅನುಕೂಲವಾಗಲೆಂದು ರೂಪಿಸಿರುವ ಶಕ್ತಿಯೋಜನೆಯನ್ನು ದುರುಪಯೋಗಪಡಿಸಿಕೊಂಡ 5 ಜನ ಕಂಡಕ್ಟರ್ ಗಳು ಪುರುಷ ಪ್ರಯಾಣಿಕರಿಗೂ ಸಹ ಟಿಕೆಟ್ ನೀಡಿದ್ದಾರೆ. ಅಷ್ಟೇ ಅಲ್ಲದೆ, ಬಸ್ ಗಳಲ್ಲಿರುವ ನಿಗಮದ ಕ್ಯೂಆರ್ ಕೋಡ್ ಗಳನ್ನು ತೆಗೆದು ತಮ್ಮ ವೈಯಕ್ತಿಕ ಖಾತೆಯ ಕ್ಯೂಆರ್ ಮೂಲಕ ಟಿಕೆಟ್ ಹಣ ಪಡೆಯುವುದು ಸೇರಿದಂತೆ ಕನ್ನಡ ಬಾರದ ಪುರುಷ ಪ್ರಯಾಣಿಕರನ್ನು ಗುರಿಯಾಗಿಸಿಕೊಂಡು ಉಚಿತ ಟಿಕೆಟ್ ನೀಡಿ ಹಣ ಪಡೆದು ಕಳ್ಳಾಟವಾಡಿರುವುದು ಬಯಲಾಗಿದೆ. ಇದು ಅಧಿಕಾರಿಗಳ ತಪಾಸಣೆಯಲ್ಲಿ ಗೊತ್ತಾಗಿದ್ದು, ಈ ಹಿನ್ನಲೆಯಲ್ಲಿ ಐವರು ಕಂಡಕ್ಟರ್ ಗಳನ್ನು ಅಮಾನತುಗೊಳಿಸಿ ಹೆಚ್ಚಿನ ತನಿಖೆಗೆ ಮುಂದಾಗಿದ್ದಾರೆ.
ತನ್ನ ಪುತ್ರನಿಗೆ ವಿದೇಶದಲ್ಲಿ ವ್ಯಾಸಂಗ; ಕಂಡವರ ಮಕ್ಕಳ ಕೈಗೆ ಲಾಠಿ, ತ್ರಿಶೂಲ!
‘ಕಂಡವರ ಮಕ್ಕಳನ್ನು ಬಾವಿಗಿಳಿಸಿ ಆಳ ನೋಡುವ’ ರಾಜಕಾರಣಿಗಳು, ತಮ್ಮ ಮಕ್ಕಳ ವಿಷಯ ಬಂದಾಗ ಹೇಗೆ ಜಾಗರೂಕರಾಗುತ್ತಾರೆ ಎನ್ನುವುದಕ್ಕೆ ಉತ್ತರ ಕನ್ನಡದ ಮಾಜಿ ಸಂಸದ ಅನಂತಕುಮಾರ್ ಹೆಗಡೆ ಅತ್ಯುತ್ತಮ ಉದಾಹರಣೆಯಾಗಿ ನಮ್ಮ ಮುಂದಿದ್ದಾರೆ. ಕೋಮು ದ್ವೇಷಗಳನ್ನು ಹರಡುವ ಭಾಷಣಗಳಿಗಾಗಿಯೇ ಕುಖ್ಯಾತರಾಗಿದ್ದ ಈ ಮಾಜಿ ಸಂಸದರು ತಮ್ಮ ಅವಧಿಯಲ್ಲಿ ಮಾಡಿದ ಅತಿ ದೊಡ್ಡ ಸಾಧನೆಯೆಂದರೆ, ಕೋಮುಗಲಭೆಗಳ ಕಿಡಿ ಹಚ್ಚಿ ನೂರಾರು ಅಮಾಯಕ ಹಿಂದೂ ಯುವಕರ ಬದುಕನ್ನು ಸರ್ವ ನಾಶ ಮಾಡಿರುವುದು. ಇವರ ಮಾತುಗಳಿಂದ ಪ್ರಚೋದಿತರಾಗಿ ಹಿಂದುತ್ವವನ್ನು ತಲೆಗೇರಿಸಿಕೊಂಡ ಹಲವು ಯುವಕರು ಬೀದಿಯಲ್ಲಿ ದೊಂಬಿ ನಡೆಸಿ ಮೈತುಂಬಾ ಕೇಸುಗಳನ್ನು ಜಡಿದುಕೊಂಡು ತಮ್ಮ ಭವಿಷ್ಯವನ್ನು ತಾವೇ ಕೊಂದು ಕೊಂಡಿದ್ದಾರೆ. ಹೀಗಿರುವ ಹೊತ್ತಿಗೆ ಇದೇ ಮಾಜಿ ಸಂಸದರು ಇತ್ತೀಚೆಗೆ ಹೈಕೋರ್ಟ್ಗೆ ಮನವಿಯೊಂದನ್ನು ಮಾಡಿದ್ದು, ‘‘ವಿದೇಶದಲ್ಲಿ ವ್ಯಾಸಂಗ ಮಾಡುತ್ತಿರುವ ನನ್ನ ಪುತ್ರ ಅಶುತೋಷ್ ಹೆಗಡೆಯ ವಿರುದ್ಧ ಬೆಂಗಳೂರಿನ ದಾಬಸ್ ಪೇಟೆ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣವನ್ನು ರದ್ದುಗೊಳಿಸಬೇಕು. ಇಲ್ಲದೇ ಇದ್ದರೆ ವಿದೇಶದಲ್ಲಿ ವ್ಯಾಸಂಗ ಮಾಡುತ್ತಿರುವ ಆತನ ಶೈಕ್ಷಣಿಕ ಭವಿಷ್ಯಕ್ಕೆ ಧಕ್ಕೆಯಾಗುತ್ತದೆ’’ ಎಂದು ಕೇಳಿಕೊಂಡಿದ್ದಾರೆ. ಅನಂತಕುಮಾರ್ ಹೆಗಡೆಯ ಪುತ್ರನ ಮೇಲೆ ‘ಹಿಂದುತ್ವಕ್ಕಾಗಿ ನಡೆಸಿದ ಹೋರಾಟ’ಕ್ಕಾಗಿ ದಾಖಲಾದ ಪ್ರಕರಣವಲ್ಲ. ವೇಗವಾಗಿ ಕಾರು ಚಲಾಯಿಸಿ ಇನ್ನೊಂದು ಕಾರಿಗೆ ಢಿಕ್ಕಿ ಹೊಡೆದು, ಅದರ ಚಾಲಕನ ಮೇಲೆ ಗಂಭೀರವಾಗಿ ಹಲ್ಲೆ ನಡೆಸಿದ ಆರೋಪ ಆತನ ಮೇಲಿದೆ. ವಿದೇಶದಲ್ಲಿ ಉನ್ನತ ಶಿಕ್ಷಣ ಪಡೆಯುತ್ತಿದ್ದ ಮಾಜಿ ಸಂಸದ ಅನಂತಕುಮಾರ್ ಹೆಗಡೆಯ ಪುತ್ರ ಅಶುತೋಶ್ ಇತ್ತೀಚೆಗೆ ಊರಿಗೆ ಬಂದಿದ್ದು, ಯಲ್ಲಾಪುರಕ್ಕೆ ತೆರಳುತ್ತಿದ್ದಾಗ ಈತನ ಕಾರು ಇನ್ನೊಂದು ಕಾರಿಗೆ ಢಿಕ್ಕಿ ಹೊಡೆದಿದೆ. ಈ ಸಂದರ್ಭದಲ್ಲಿ ಮಾಜಿ ಸಂಸದನ ಪುತ್ರ ಎನ್ನುವ ದುರಹಂಕಾರದಲ್ಲಿ ಅಶುತೋಶ್ ಇನ್ನೊಂದು ಕಾರಿನ ಚಾಲಕನ ಮೇಲೆ ಗಂಭೀರವಾಗಿ ಹಲ್ಲೆ ನಡೆಸಿದ್ದಾನೆ. ಈ ಸಂದರ್ಭದಲ್ಲಿ ಅನಂತಕುಮಾರ್ ಹೆಗಡೆ ಕೂಡ ಸ್ಥಳದಲ್ಲಿ ಉಪಸ್ಥಿತರಿದ್ದರು ಎಂದು ವರದಿಗಳು ಹೇಳುತ್ತವೆ. ಅನಂತಕುಮಾರ್ ಹೆಗಡೆಯ ಭದ್ರತಾ ಸಿಬ್ಬಂದಿಯೂ ಈ ಹಲ್ಲೆ, ದಾಂಧಲೆಗಳಲ್ಲಿ ಜೊತೆಗೂಡಿದ್ದಾನೆ ಎಂದು ಆರೋಪಿಸಲಾಗಿದೆ. ಎರಡೂ ಕಡೆಯವರೂ ಪರಸ್ಪರ ದೂರು ದಾಖಲಿಸಿದ್ದಾರೆ. ‘ಅಶುತೋಷ್ ಮೇಲೆ ಪ್ರಕರಣ ದಾಖಲಾಗಿರುವುದರಿಂದಾಗಿ ವಿದೇಶಕ್ಕೆ ತೆರಳಲು ತೊಂದರೆಯಾಗಿದೆ. ಇದು ಆತನ ಶೈಕ್ಷಣಿಕ ಬದುಕಿನ ಮೇಲೆ ಪರಿಣಾಮ ಬೀರುತ್ತದೆ. ಈ ಹಿನ್ನೆಲೆಯಲ್ಲಿ, ಆತನನ್ನು ಪ್ರಕರಣದಿಂದ ಕೈ ಬಿಡಬೇಕು’ ಎಂದು ಈಗ ಅನಂತಕುಮಾರ್ ಹೆಗಡೆ ಹೈಕೋರ್ಟ್ಗೆ ಮನವಿ ಮಾಡಿದ್ದಾರೆ. ಮಾಜಿ ಸಂಸದ ಅನಂತಕುಮಾರ್ ಹೆಗಡೆಯ ಈ ನಡೆ ಉತ್ತರ ಕನ್ನಡ ಜಿಲ್ಲೆಯ ಯುವಕರಲ್ಲಿ ಸಾವಿರ ಪ್ರಶ್ನೆಗಳನ್ನು ಹುಟ್ಟಿಸಿದೆ. ಕಂಡವರ ಮಕ್ಕಳಿಗೆಲ್ಲ ಹಿಂದುತ್ವಕ್ಕಾಗಿ ಕತ್ತಿ ಹಿಡಿಯಿರಿ, ತ್ರಿಶೂಲ ಹಿಡಿಯಿರಿ ಎಂದು ಕರೆ ನೀಡಿದ್ದ ಅನಂತ ಕುಮಾರ್ ಹೆಗಡೆ, ತನ್ನ ಪುತ್ರನ ಕೈಗೆ ತ್ರಿಶೂಲ, ಕತ್ತಿಯನ್ನು ಯಾಕೆ ನೀಡಿಲ್ಲ? ತನ್ನ ಪುತ್ರನಿಗೆ ಹಿಂದುತ್ವ ರಕ್ಷಣೆಯ ಯಾವುದೇ ಹೊಣೆಗಾರಿಕೆಯನ್ನೂ ನೀಡದೆ ವಿದೇಶಕ್ಕೆ ಕಳುಹಿಸಿ ಉನ್ನತ ಶಿಕ್ಷಣವನ್ನು ಯಾಕೆ ಕೊಡಿಸುತ್ತಿದ್ದಾರೆ ಎನ್ನುವ ಪ್ರಶ್ನೆಯನ್ನು ಅವರು ಕೇಳುತ್ತಿದ್ದಾರೆ. ತಮ್ಮ ಭಾಷಣಗಳಲ್ಲೆಲ್ಲ ‘ಹಿಂದೂಸ್ಥಾನ’ ‘ಸ್ವದೇಶ’ ‘ವಿಶ್ವಗುರು’ ಎಂದು ಅಣಿಮುತ್ತುಗಳನ್ನು ಉದುರಿಸುವ ಇದೇ ಅನಂತಕುಮಾರ್ ಹೆಗಡೆಗೆ ತನ್ನ ಮಗನಿಗೆ ಉನ್ನತ ಶಿಕ್ಷಣವನ್ನು ಕೊಡಿಸಲು ಭಾರತದೊಳಗೆ ಒಂದೇ ಒಂದು ವಿಶ್ವವಿದ್ಯಾನಿಲಯ ಅಥವಾ ಕಾಲೇಜು ಯಾಕೆ ಕಾಣಿಸಲಿಲ್ಲ? ಈಗಾಗಲೇ ಆರೆಸ್ಸೆಸ್ ಸಂಘಟನೆಗಳು ಕಟ್ಟಿ ನಿಲ್ಲಿಸಿರುವ ನೂರಾರು ಗುರುಕುಲ ಶಿಕ್ಷಣ ಸಂಸ್ಥೆಗಳು ಭಾರತದಲ್ಲಿರುವಾಗಲೂ ಅನಂತಕುಮಾರ್ ಹೆಗಡೆಗೆ ಮಗ ವಿದೇಶದಲ್ಲೇ ವ್ಯಾಸಂಗ ಮಾಡಬೇಕು ಎನ್ನುವ ಇಚ್ಛೆ ಯಾಕೆ? ಎಂದು ಆರೆಸ್ಸೆಸ್ನ ಲಾಠಿಯನ್ನು ನಂಬಿ ಮೋಸ ಹೋದ ಉತ್ತರ ಕನ್ನಡದ ನೂರಾರು ಶೂದ್ರ ಹುಡುಗರು ಕೇಳುತ್ತಿದ್ದಾರೆ. ವೇಗವಾಗಿ ಕಾರು ಚಲಾಯಿಸಿ ಇನ್ನೊಂದು ವಾಹನಕ್ಕೆ ಗುದ್ದಿ, ಅಮಾಯಕರ ಮೇಲೆ ಹಲ್ಲೆ ನಡೆಸಿದ ಪ್ರಕರಣದಲ್ಲಿ ಸಿಲುಕಿಕೊಂಡ ತನ್ನ ಮಗನ ಭವಿಷ್ಯದ ಬಗ್ಗೆ ಚಿಂತಿತರಾಗಿರುವ ಅನಂತಕುಮಾರ್ ಹೆಗಡೆಯವರು, ತಮ್ಮ ಭಾಷಣದಿಂದ ಪ್ರಚೋದಿತರಾಗಿ ಲಾಠಿ, ತ್ರಿಶೂಲ ಹಿಡಿದು ಗಲಭೆ ನಡೆಸಿ ಪ್ರಕರಣ ದಾಖಲಿಸಿಕೊಂಡ ಯುವಕರ ಪರವಾಗಿ ನ್ಯಾಯಾಲಯದಲ್ಲಿ ಯಾಕೆ ಈವರೆಗೆ ಒಂದೇ ಒಂದು ಮನವಿಯನ್ನೂ ಸಲ್ಲಿಸಲಿಲ್ಲ? ಎನ್ನುವ ಪ್ರಶ್ನೆಗೂ ಅನಂದಕುಮಾರ್ ಹೆಗಡೆ ಉತ್ತರಿಸುವ ಸ್ಥಿತಿಯಲ್ಲಿಲ್ಲ. ಇಂತಹ ಪ್ರಶ್ನೆಗಳು ಕೇವಲ ಅನಂತಕುಮಾರ್ ಹೆಗಡೆಯವರಿಗಷ್ಟೇ ಸಂಬಂಧಿಸಿ ದ್ದಲ್ಲ. 2024ರಿಂದ 2026 ಮಾರ್ಚ್ ತಿಂಗಳವರೆಗೆ ಒಟ್ಟು 70 ಕೋಮುಗಲಭೆ ಪ್ರಕರಣಗಳು ಕರ್ನಾಟಕದಲ್ಲಿ ಸಂಭವಿಸಿವೆ. ಮಂಡ್ಯ ಜಿಲ್ಲೆಯೊಂದರಲ್ಲೇ ಈ ಅವಧಿಯಲ್ಲಿ 34 ಪ್ರಕರಣಗಳು ನಡೆದಿವೆ ಎಂದು ಗೃಹ ಸಚಿವರು ವಿಧಾನಪರಿಷತ್ಗೆ ಮಾಹಿತಿ ನೀಡಿದ್ದರು. ಕರಾವಳಿ ಕರ್ನಾಟಕದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ 2024ರಲ್ಲಿ ಸುಮಾರು 48-50 ಕೋಮು ಸಂಘರ್ಷಗಳು ವರದಿಯಾಗಿವೆ. ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ 2024ರಲ್ಲಿ ನಡೆದ ಗಲಭೆಗೆ ಸಂಬಂಧಿಸಿದಂತೆ 123 ಮಂದಿಯ ಮೇಲೆ ಪ್ರಕರಣ ದಾಖಲಾಗಿದ್ದರೆ, ಮದ್ದೂರಿನಲ್ಲಿ 2025ರಲ್ಲಿ ನಡೆದ ಘಟನೆಗಳಿಗೆ ಸಂಭವಿಸಿದಂತೆ 88 ಆರೋಪಿಗಳ ಮೇಲೆ ಪ್ರಕರಣ ದಾಖಲಾಗಿವೆ. ಯಾವುದೇ ಕೋಮುಗಲಭೆಗಳು ಸಂಭವಿಸಿದ ಕೆಲವೇ ದಿನಗಳಲ್ಲಿ ಮಾಧ್ಯಮಗಳು ಮರೆತು ಬಿಡುತ್ತವೆ. ನಾಶ, ನಷ್ಟ ಅನುಭವಿಸಿದವರು ಮತ್ತು ಗಲಭೆಗೆ ಸಂಬಂಧಿಸಿ ಪೊಲೀಸರಿಂದ ಬಂಧಿಸಲ್ಪಟ್ಟವರ ಬದುಕು ಚೇತರಿಸಿಕೊಳ್ಳಲು ಹಲವು ವರ್ಷಗಳೇ ಬೇಕಾಗುತ್ತವೆ. ಯಾವುದೋ ರಾಜಕಾರಣಿಯ ಭಾಷಣಗಳಿಗೆ ಬಲಿ ಬಿದ್ದು ಕೋಮುಗಲಭೆಗಳಲ್ಲಿ ಭಾಗಿಯಾಗಿ ಕೇಸುಗಳನ್ನು ಮೈಮೇಲೆ ಎಳೆದುಕೊಂಡ ನೂರಾರು ಯುವಕರು ಈಗಲೂ ಪೊಲೀಸ್ ಠಾಣೆ, ನ್ಯಾಯಾಲಯ ಎಂದು ಅಲೆದಾಡುತ್ತಿದ್ದಾರೆ. ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾದ ಕಾರಣ ಶಿಕ್ಷಣವನ್ನು ಅರ್ಧದಲ್ಲೇ ತೊರೆದ, ಸರಕಾರಿ ನೌಕರಿಗೆ ಸೇರಲು ಸಾಧ್ಯವೇ ಇಲ್ಲ ಎನ್ನುವಂತಹ ಸನ್ನಿವೇಶನವನ್ನು ಸೃಷ್ಟಿಸಿಕೊಂಡ ಯುವಕರಿದ್ದಾರೆ. ಕೆಲವರು ಶಾಶ್ವತ ‘ರೌಡಿಶೀಟರ್’ ಹಣೆಪಟ್ಟಿಯನ್ನು ಧರಿಸಿಕೊಂಡು ಕ್ರಿಮಿನಲ್ಗಳಾಗಿ ಓಡಾಡುತ್ತಿದ್ದಾರೆ. ಇವರನ್ನು ಇಂತಹ ಸ್ಥಿತಿಗೆ ತಳ್ಳಿದ ರಾಜಕಾರಣಿಗಳ ಮಕ್ಕಳು ವಿದೇಶಗಳಲ್ಲಿ ಉನ್ನತ ವ್ಯಾಸಂಗ ಮಾಡುತ್ತಿದ್ದಾರೆ. ಉನ್ನತ ವ್ಯಾಸಂಗಕ್ಕೆ ಅಡ್ಡಿಯಾಗುವುದರಿಂದ ತನ್ನ ಮಗನ ಮೇಲಿರುವ ಪ್ರಕರಣವನ್ನು ರದ್ದುಗೊಳಿಸಬೇಕು ಎಂದು ನ್ಯಾಯಾಲಯಕ್ಕೆ ಮನವಿ ಮಾಡಿರುವ ಅನಂತಕುಮಾರ್ ಆತ್ಮವಿಮರ್ಶೆ ಮಾಡಿಕೊಳ್ಳುವ ಸಮಯ ಇದು. ಹಿಂದುತ್ವದ ಅಮಲನ್ನು ಹಂಚಿ, ತಮ್ಮ ಮಕ್ಕಳ ಶಿಕ್ಷಣವನ್ನು, ಅವರ ಭವಿಷ್ಯವನ್ನು ಯಾಕೆ ಸರ್ವ ನಾಶ ಮಾಡಿದಿರಿ ಎಂದು ಹಿಡಿಶಾಪ ಹಾಕಿ ಕೇಳುತ್ತಿರುವ ನೂರಾರು ಪೋಷಕರು ಉತ್ತರ ಕನ್ನಡ ಜಿಲ್ಲೆಯಲ್ಲೇ ಇದ್ದಾರೆ. ಅವರ ಪ್ರಶ್ನೆಗಳಿಗೆ ಉತ್ತರಿಸುವ ನೈತಿಕ ಶಕ್ತಿ ಅನಂತಕುಮಾರ್ ಹೆಗಡೆಯ ಬಳಿ ಇದೆಯೆ?
PUC Revaluation: ಸ್ಕ್ಯಾನ್ ಪ್ರತಿ ಪಡೆದವರ ಉತ್ತರ ಪತ್ರಿಕೆ ಮರುಮೌಲ್ಯಮಾಪನ; ಶುಲ್ಕ, ಪ್ರಮುಖ ದಿನಾಂಕಗಳು
ಬೆಂಗಳೂರು: ಕರ್ನಾಟಕ ದ್ವೀತಿಯ ಪಿಯುಸಿ ಫಲಿತಾಂಶದ ನಂತರದ ಮರು ಮೌಲ್ಯಮಾಪನ, ಅರ್ಜಿ ಸಲ್ಲಿಕೆ, ಶುಲ್ಕ ಪಾವತಿ ಪ್ರಕ್ರಿಯೆಗಳು ಆರಂಭವಾಗಿವೆ. 2026ರಲ್ಲಿ ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಗಣನೀಯ ಸಾಧನೆ ದಾಖಲಾಗಿದೆ. ಶೇ.86ರಷ್ಟು ಫಲಿತಾಂಶ ಬಂದಿದ್ದು, ಇದು ಕಳೆದ ವರ್ಷಕ್ಕಿಂತ ಶೇ.13ರಷ್ಟು ಅಧಿಕವಾಗಿದೆ. ಯಾರೆಲ್ಲ ಅನುತ್ತೀರ್ಣರಾಗಿದ್ದಾರೋ ಅಥವಾ ಮರು ಮೌಲ್ಯಮಾಪನ ಬಯಸಿದ್ದಾರೋ ಅವರೆಲ್ಲ ಈ ಕೆಳಗೆ ನೀಡಿರುವ ಪ್ರಮುಖ ದಿನಾಂಕ
ದ್ವಿತೀಯ ಪಿಯುಸಿ ಫಲಿತಾಂಶ ಹಲವು ಆಶ್ಚರ್ಯದ ಅಂಕಿಅಂಶಗಳನ್ನು ಒಳಗೊಂಡಿದ್ದು, ಕನ್ನಡಕ್ಕಿಂತ ಹಿಂದಿ ಭಾಷೆಯಲ್ಲೆ ಹೆಚ್ಚು ಮಂದಿ ಉತ್ತೀರ್ಣರಾಗಿದ್ದಾರೆ. ಅಲ್ಲದೆ ಕನ್ನಡ ಓದಿದಷ್ಟೇ ವಿದ್ಯಾರ್ಥಿಗಳು ಹಿಂದಿ ವಿಷಯವನ್ನೂ ಓದಿದ್ದಾರೆ. ಹಲವರು ಸಂಸ್ಕೃತವನ್ನೂ ಆಯ್ಕೆ ಮಾಡಿಕೊಂಡಿದ್ದಾರೆ. ಇಂಗ್ಲೀಷ್ ಮಾಧ್ಯಮದ ವಿದ್ಯಾರ್ಥಿಗಳ ಸಂಖ್ಯೆ ಕನ್ನಡಕ್ಕಿಂತ ಮೂರು ಪಟ್ಟು ಹೆಚ್ಚಾಗಿದೆ.
ಚಿಕ್ಕಮಗಳೂರು : ಪ್ರವಾಸಿಗರಿಗೆ ಸುರಕ್ಷತೆ ಮರೀಚಿಕೆ, ತಾಣಗಳಲ್ಲಿ ಸಿಸಿ ಕ್ಯಾಮೆರಾ, ಭದ್ರತೆ, ಸುರಕ್ಷತಾ ಫಲಕಗಳಿಲ್ಲ!
ಚಿಕ್ಕಮಗಳೂರು ಜಿಲ್ಲೆಯ ಗಿರಿಶ್ರೇಣಿ ಹಾಗೂ ಜಲಪಾತಗಳಂತಹ ಪ್ರಮುಖ ಪ್ರವಾಸಿ ತಾಣಗಳಲ್ಲಿ ಅಗತ್ಯ ಸುರಕ್ಷತಾ ಕ್ರಮಗಳ ಕೊರತೆಯು ಪ್ರವಾಸಿಗರ ಪಾಲಿಗೆ ಮೃತ್ಯುಪಾಶವಾಗಿ ಪರಿಣಮಿಸುತ್ತಿದೆ. ಮುಳ್ಳಯ್ಯನಗಿರಿ, ಮಾಣಿಕ್ಯಧಾರಾ ಮತ್ತು ಗಾಳಿಕೆರೆಯಂತಹ ಆಕರ್ಷಣೀಯ ಪ್ರದೇಶಗಳಿಗೆ ವಾರಾಂತ್ಯದಲ್ಲಿ ಸಾವಿರಾರು ಜನ ಲಗ್ಗೆ ಇಡುತ್ತಾರೆಯಾದರೂ, ಅಲ್ಲಿನ ಕಡಿದಾದ ಹಾದಿ ಮತ್ತು ಅಪಾಯಕಾರಿ ಪಾಯಿಂಟ್ಗಳಲ್ಲಿ ಕನಿಷ್ಠ ರಕ್ಷಣಾ ಬೇಲಿ ಅಥವಾ ಎಚ್ಚರಿಕೆ ಫಲಕಗಳಿಲ್ಲದಿರುವುದು ಆತಂಕಕಾರಿ ಸಂಗತಿಯಾಗಿದೆ.
ಫಲಿಸದ ಬೂಮ್ರಾ ಮ್ಯಾಜಿಕ್: ವಿಕೆಟ್ ಬರ ಎದುರಿಸುತ್ತಿರುವ ಖ್ಯಾತ ಬೌಲರ್!
ಹೊಸದಿಲ್ಲಿ: ಪವರ್ ಪ್ಲೇನಲ್ಲಿ ರ್ಯಾಕರ್ಗಳ ಮೂಲಕ ಬ್ಯಾಟ್ಸ್ಮನ್ ಗಳನ್ನು ಕಂಗೆಡಿಸುವ ಮಧ್ಯಮವೇಗಿ ಜಸ್ಪ್ರೀತ್ ಬೂಮ್ರಾ ಪ್ರಸಕ್ತ ಐಪಿಎಲ್ ನಲ್ಲಿ ಐದು ಪಂದ್ಯಗಳಲ್ಲಿ ಯಾವುದೇ ವಿಕೆಟ್ ಗಳಿಸದೇ ಅನಪೇಕ್ಷಿತ ದಾಖಲೆ ನಿರ್ಮಿಸಿದ್ದಾರೆ. ಮುಂಬೈ ಇಂಡಿಯನ್ಸ್ ತಂಡದ ಪರ ಅಪರೂಪಕ್ಕೆ ಎಂಬಂತೆ ವಿಕೆಟ್ ಬರ ಅನುಭವಿಸುತ್ತಿದ್ದಾರೆ. 2014ರ ಐಪಿಎಲ್ ಸರಣಿಯಲ್ಲಿ ಬೂಮ್ರಾ ಸತತ ನಾಲ್ಕು ಪಂದ್ಯಗಳಲ್ಲಿ ಯಾವುದೇ ವಿಕೆಟ್ ಗಳಿಸಿರಲಿಲ್ಲ. ಆದರೆ ಪ್ರಸಕ್ತ ಋತುವಿನಲ್ಲಿ ಇದು ಸತತ ಐದು ಪಂದ್ಯಗಳಿಗೆ ವಿಸ್ತರಿಸಿದೆ. 2025ರ ಐಪಿಎಲ್ ಋತುವಿನಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ 4 ಓವರ್ ಗಳಲ್ಲಿ 40 ರನ್ ನೀಡಿ ಯಾವುದೇ ವಿಕೆಟ್ ಪಡೆದಿರಲಿಲ್ಲ. ಬಳಿಕ ಪ್ರಸಕ್ತ ಸರಣಿಯಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ 4 ಓವರ್ ಗಳಲ್ಲಿ 35 ರನ್ ಬಿಟ್ಟುಕೊಟ್ಟಿದ್ದ ಬೂಮ್ರಾ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ 4 ಓವರ್ ಗಳಲ್ಲಿ ಕೇವಲ 21 ರನ್ ನೀಡಿದ್ದರೂ, ವಿಕೆಟ್ ಗಳಿಸಿರಲಿಲ್ಲ. ರಾಜಸ್ಥಾನ ರಾಯಲ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಪಂದ್ಯಗಳಲ್ಲಿ ಬೂಮ್ರಾ ಕ್ರಮವಾಗಿ 32 ಹಾಗೂ 35 ರನ್ ನೀಡಿದ್ದರು. ಪ್ರಸಕ್ತ ಐಪಿಎಲ್ ನಲ್ಲಿ ಬೂಮ್ರಾ 90 ಎಸೆತಗಳಲ್ಲಿ 123 ರನ್ ನೀಡಿದ್ದು, ಯಾವುದೇ ವಿಕೆಟ್ ಪಡೆದಿಲ್ಲ. ಎಕಾನಮಿ ದರ 8.20 ಆಗಿದ್ದು, ಇದರಿಂದ ಬೂಮ್ರಾಗೆ ಇದ್ದ ಸ್ಟ್ರೈಕ್ ಬೌಲರ್ ಎಂಬ ಬಿರುದಿಗೆ ಧಕ್ಕೆ ಉಂಟಾದಂತಾಗಿದೆ. ಆರ್ಸಿಬಿ ವಿರುದ್ಧ ರವಿವಾರ ನಡೆದ ಪಂದ್ಯದಲ್ಲಿ ಬೂಮ್ರಾ ದಾಳಿಯ ಮುಂಚೂಣಿಯಲ್ಲಿ ಇರುತ್ತಾರೆ ಎಂಬ ನಿರೀಕ್ಷೆ ಇತ್ತು. ಆದರೆ ಆರ್ಸಿಬಿ ಬ್ಯಾಟ್ಸ್ಮನ್ ಗಳು ಪ್ರಾಬಲ್ಯ ಮೆರೆದರು. 4 ವಿಕೆಟ್ ನಷ್ಟಕ್ಕೆ 240 ರನ್ ಗಳ ಬೃಹತ್ ಮೊತ್ತವನ್ನು ಆರ್ಸಿಬಿ ಕಲೆಹಾಕಿತು. ಇದಕ್ಕೆ ಉತ್ತರವಾಗಿ ಮುಂಬೈ ಇಂಡಿಯನ್ಸ್ 222 ರನ್ ಗಳನ್ನು ಗಳಿಸಿ ಸೋಲೊಪ್ಪಿಕೊಂಡರು. ಆದಾಗ್ಯೂ ಐಪಿಎಲ್ ನಲ್ಲಿ 149 ಪಂದ್ಯಗಳಲ್ಲಿ 183 ವಿಕೆಟ್ ಗಳಿಸಿದ ದಾಖಲೆಯನ್ನು ಬೂಮ್ರಾ ಹೊಂದಿದ್ದಾರೆ.
ಬಿಹಾರದಲ್ಲಿ ಬಿಜೆಪಿ ಸರ್ಕಾರ ರಚನೆ ಕಸರತ್ತು ಶುರು; ಶಿವರಾಜ್ ಸಿಂಗ್ ವೀಕ್ಷಕ
ಹೊಸದಿಲ್ಲಿ: ರಾಜ್ಯಸಭೆ ಸದಸ್ಯರಾಗಿ ಆಯ್ಕೆಯಾಗಿರುವ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಈ ತಿಂಗಳ 14ರಂದು ಪದತ್ಯಾಗ ಮಾಡುವ ಸುಳಿವು ನೀಡಿದ ಬೆನ್ನಲ್ಲೇ ಬಿಜೆಪಿ ನೇತೃತ್ವದ ಸರ್ಕಾರ ರಚನೆಗೆ ಕಸರತ್ತು ಆರಂಭವಾಗಿದೆ. ಕೇಂದ್ರ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರನ್ನು ಪಕ್ಷದ ಕೇಂದ್ರೀಯ ವೀಕ್ಷಕರಾಗಿ ನೇಮಕ ಮಾಡಲಾಗಿದ್ದು, ಶಾಸಕಾಂಗ ಪಕ್ಷದ ಹೊಸ ನಾಯಕನ ಆಯ್ಕೆಯ ನೇತೃತ್ವ ವಹಿಸಲಿದ್ದಾರೆ. ಸಮರ್ಥ ಚೌಧರಿ ಸಿಎಂ ಹುದ್ದೆಯ ರೇಸ್ ನ ಮುಂಚೂಣಿಯಲ್ಲಿದ್ದಾರೆ. ಬಿಜೆಪಿ ಶಾಸಕರು ತಮ್ಮ ನೂತನ ನಾಯಕನನ್ನು ಏಪ್ರಿಲ್ 14ರಂದು ಆಯ್ಕೆ ಮಾಡಲಿದ್ದು, ಅಂದು ಪಾಟ್ನಾಗೆ ಭೇಟಿ ನೀಡುವುದಾಗಿ ಚೌಹಾಣ್ ಹೇಳಿದ್ದಾರೆ. ಬಿಜೆಪಿಯ ಶಾಸಕಾಂಗ ಪಕ್ಷದ ನೂತನ ನಾಯಕನನ್ನು ಎನ್ ಡಿಎ ಶಾಸಕಾಂಗ ಪಕ್ಷದ ನಾಯಕನಾಗಿ ಆಯ್ಕೆ ಮಾಡಲಾಗುತ್ತದೆ ಹಾಗೂ ಅವರು ನಿತೀಶ್ ಕುಮಾರ್ ಅವರ ಉತ್ತರಾಧಿಕಾರಿಯಾಗಲಿದ್ದಾರೆ. ಏಪ್ರಿಲ್ 15ರಂದು ನೂತನ ಸರ್ಕಾರದ ಪ್ರಮಾಣವಚನ ಸ್ವೀಕಾರ ಸಮಾರಂಭ ನಡೆಯುವ ಸಾಧ್ಯತೆ ಇದ್ದು, ಕೆಲ ಸದಸ್ಯರೊಂದಿಗೆ ನೂತನ ಸರ್ಕಾರ ಅಸ್ತಿತ್ವಕ್ಕೆ ಬರಲಿದೆ. ನಿತೀಶ್ ಅವರ ಪುತ್ರ ನಿಶಾಂತ್ ಅವರನ್ನು ಜೆಡಿಯು ಉಪಮುಖ್ಯಮಂತ್ರಿ ಹುದ್ದೆಗೆ ಸೂಚಿಸುವ ಸಾಧ್ಯತೆ ದಟ್ಟವಾಗಿದೆ. ಈ ಮೂಲಕ ಜೆಡಿಯು ಪಕ್ಷದ ಸಂಸ್ಥಾಪಕರ ರಾಜಕೀಯ ಪರಂಪರೆಯನ್ನು ಮುಂದುವರಿಸುವ ಮೂಲಕ ಕಾರ್ಯಕರ್ತರಲ್ಲಿ ಉತ್ಸಾಹ ತುಂಬಲಿದ್ದಾರೆ ಎಂದು ಪಕ್ಷದ ಮೂಲಗಳು ಹೇಳಿವೆ.
Karnataka Weather: ಕಲಬುರಗಿಯಲ್ಲಿ 41ಡಿಸೆ ತಾಪಮಾನ, ಉಷ್ಣಅಲೆ ಎಚ್ಚರಿಕೆ, ಕೆಲವೆಡೆ ಮಳೆ ಸಾಧ್ಯತೆ
ಬೆಂಗಳೂರು: ನಿರಂತರವಾಗಿ ಬದಲಾಗುತ್ತಿರುವ ಹವಾಮಾನ ಬದಲಾವಣೆ ಕಾರಣಗಳಿಂದ ಕರ್ನಾಟಕದಲ್ಲಿ ಬೇಸಿಗೆಯಲ್ಲೂ ನಿತ್ಯ ಒಂದಿಲ್ಲೊಂದು ಕಡೆಗಳಲ್ಲಿ ಮಳೆ ಆಗುತ್ತಿದೆ. ಸಮುದ್ರ ಮೇಲ್ಮೈನಲ್ಲಿನ ಟ್ರಫ್, ಸುಳಿಗಾಳಿಯಿಂದ ಪೂರ್ವ ಮುಂಗಾರು ಮಳೆ ಚುರುಕಾಗಿದೆ. ಕರಾವಳಿ, ಮಲೆನಾಡು ಹಾಗೂ ಒಳನಾಡಿನ ವಿವಿಧ ಜಿಲ್ಲೆಗಳ ಕೆಲವು ಪ್ರತ್ಯೇಕ ಪ್ರದೇಶಗಲ್ಲಿ ಗುಡುಗು ಸಹಿತ ಮಳೆ ಮುಂದಿನ ಮೂರು ದಿನ ಮುಂದುವರಿಯಲಿದೆ. ವಿವಿಧ ಜಿಲ್ಲೆಗಳಲ್ಲಿ ಗರಿಷ್ಠ ತಾಪಮಾನ
ಬೆಂಗಳೂರು : ಬತ್ತಿದ ಹೊಸಕೆರೆ ಹಳ್ಳಿ ಕೆರೆ, ಟ್ಯಾಂಕರ್ ನಲ್ಲಿ ನೀರು ಪೂರೈಕೆ
ಬೇಸಿಗೆಯ ತಾಪ ಏರುತ್ತಿದ್ದಂತೆ ಹೊಸಕೆರೆಹಳ್ಳಿ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ತೀವ್ರ ನೀರಿನ ಅಭಾವ ಸೃಷ್ಟಿಯಾಗಿದೆ. ಈ ಭಾಗದ ಪ್ರಮುಖ ಜಲಮೂಲವಾದ ಹೊಸಕೆರೆಹಳ್ಳಿ ಕೆರೆಯಲ್ಲಿ ಹೂಳು ತುಂಬಿಕೊಂಡಿರುವುದರಿಂದ ಅಂತರ್ಜಲ ಮಟ್ಟ ಕುಸಿದು, ಕಳೆದ ಕೆಲವು ವರ್ಷಗಳಿಂದ ಬೇಸಿಗೆಯಲ್ಲಿ ಕೊಳವೆಬಾವಿಗಳು ಸಂಪೂರ್ಣವಾಗಿ ಬತ್ತಿ ಹೋಗುತ್ತಿವೆ. ಶ್ರೀನಿವಾಸನಗರ, ಕೃಷ್ಣಪ್ಪ ಬಡಾವಣೆ ಸೇರಿದಂತೆ ಅಕ್ಕಪಕ್ಕದ ಬಡಾವಣೆಗಳ ನಿವಾಸಿಗಳಿಗೆ ಜಲಮಂಡಳಿಯಿಂದ ಪೂರೈಕೆಯಾಗುವ ನೀರಿನ ಪ್ರಮಾಣವೂ ಕಡಿಮೆಯಾಗಿದೆ.
ವಕ್ಫ್ ಆಸ್ತಿ ಕಬಳಿಕೆ ಮಾದರಿಯಲ್ಲೆ, ದೇವಾಲಯಗಳ ಜಾಗ ಒತ್ತುವರಿ: ದೇವರ ಆಸ್ತಿ ರಕ್ಷಣೆಯೆ ಸವಾಲು!
ದೇವಾಲಯಗಳ ಆಸ್ತಿ ರಕ್ಷಣೆಗೆ ಭೂ ವರಾಹ ಯೋಜನೆಯಿದೆ. ಆದರೆ ಎಲ್ಲಾ ಜಿಲ್ಲೆಗಳಿಗೆ ಇದರ ಅನುಕೂಲ ಇನ್ನೂ ತಲುಪಿಲ್ಲ. ದೇವಾಲಯಗಳ ಹೆಸರಿಗೆ ಖಾತೆ ಆಗದ ಕಾರಣ ಒತ್ತುವರಿಗಳು ಮುಂದುವರಿದಿದೆ.
ದಾವಣಗೆರೆ ಉಪಚುನಾವಣೆಯಲ್ಲಿ ಯಾರೇ ಗೆದ್ದರೂ, ಸೋತರೂ ಇತಿಹಾಸ: ಪಕ್ಷಗಳ ಮೇಲೆ ಪರಿಣಾಮ ಬೀರುವ 5 ಅಂಶಗಳು
ದಾವಣಗೆರೆ ದಕ್ಷಿಣ ವಿಧಾನಸಭೆ ಕ್ಷೇತ್ರದ ಮತದಾನ ಮುಗಿದು ಪಕ್ಷದ ನಾಯಕರು, ಕಾರ್ಯಕರ್ತರು ಸೋಲು ಗೆಲುವಿನ ಲೆಕ್ಕಾಚಾರ ಹಾಕುತ್ತಿದ್ದಾರೆ. ಈ ಚರ್ಚೆ ದೆಹಲಿವರೆಗೂ ತಲುಪಿದೆ. ಬಿಜೆಪಿ ಪಾಳಯದಲ್ಲಿ ಗೆಲುವಿನ ವಿಶ್ವಾಸ ಕಾಣುತ್ತಿದ್ದಾರೆ. ಕಾಂಗ್ರೆಸ್ ನಲ್ಲಿ ಅಲ್ಪಸಂಖ್ಯಾತ ಮುಖಂಡರ ರಾಜೀನಾಮೆ ಮುಂದುವರಿದಿದೆ.
Hassan | ನಾಲ್ಕನೇ ದಿನಕ್ಕೆ ಕಾಲಿಟ್ಟ ರೈತ ಸಂಘದ ಧರಣಿ; ಸ್ಥಳದಲ್ಲೇ ಊಟ ಮಾಡಿದ ರೈತರು
ಹಾಸನ : ಆಶ್ರಯ ಯೋಜನೆಯಡಿ ಹಕ್ಕುಪತ್ರ ಹೊಂದಿರುವ ಮನೆಗಳನ್ನು ಹಾನಿಗೊಳಿಸಿದ್ದು, ಸೂಕ್ತ ಪರಿಹಾರ ಹಾಗೂ ಪುನರ್ವಸತಿ ಒದಗಿಸುವಂತೆ ಆಗ್ರಹಿಸಿ, ದನಕರುಗಳಿಗೆ ಮೇವು ನೀಡಿ, ಸ್ಥಳದಲ್ಲಿ ಅಡುಗೆ ಸಿದ್ಧಪಡಿಸಿ ಒಟ್ಟಿಗೆ ಊಟ ಸೇವಿಸಿದರು. ರೈತ ಸಂಘದ ಹೋರಾಟ ನಾಲ್ಕನೇ ದಿನ ರವಿವಾರ ಡಿಸಿ ಕಚೇರಿ ಆವರಣದಲ್ಲಿ ಮುಂದುವರಿದಿದೆ. ರೈತ ಸಂಘದ ಜಿಲ್ಲಾಧ್ಯಕ್ಷ ಬಾಬು ಮಾತನಾಡಿ, ಹಾಸನ ಜಿಲ್ಲೆಯ ಅರಕಲಗೂಡು ತಾಲೂಕು ಎಬಿಎಂ ಹಳ್ಳಿಯ ನಿವಾಸಿಗಳಿಗೆ 1991-92ರಲ್ಲಿ ತಹಶೀಲ್ದಾರ್ ಅವರಿಂದ ಆಶ್ರಯ ಯೋಜನೆ (37/91-92) ಅಡಿಯಲ್ಲಿ ಕಾನೂನು ಬದ್ಧವಾಗಿ ನಿವೇಶನ ಹಂಚಿಕೆ ಮಾಡಲಾಗಿತ್ತು ಎಂದು ವಿವರಿಸಿದರು. ಆ ನಿವೇಶನಗಳಲ್ಲಿ ಮನೆಗಳನ್ನು ನಿರ್ಮಿಸಿಕೊಂಡು ದಶಕಗಳಿಂದ ವಾಸವಾಗಿದ್ದೇವೆ ಎಂದು ತಿಳಿಸಿದರು. ಆದರೆ ಇತ್ತೀಚೆಗೆ ಸ್ಥಳೀಯ ಜನಪ್ರತಿನಿಧಿಗಳ ಒತ್ತಡದ ಮೇರೆಗೆ ಯಾವುದೇ ಪೂರ್ವ ನೋಟಿಸ್ ನೀಡದೆ ಹಾಗೂ ಕಾನೂನು ಪ್ರಕ್ರಿಯೆ ಅನುಸರಿಸದೆ ಮನೆಗಳಿಗೆ ಹಾನಿ ಮಾಡಲಾಗಿದೆ ಎಂದು ಗಂಭೀರ ಆರೋಪ ಮಾಡಿದರು. ಕೆಲ ಮನೆಗಳ ಗೋಡೆಗಳನ್ನು ಕೆಡವಲಾಗಿದ್ದು, ಕೆಲವು ಮನೆಗಳನ್ನು ತೆರವುಗೊಳಿಸಲು ಯತ್ನಿಸಲಾಗಿದೆ. ಇದರಿಂದ ಕುಟುಂಬಗಳು ಆತಂಕದ ವಾತಾವರಣದಲ್ಲಿ ದಿನ ಕಳೆಯುವಂತಾಗಿದೆ ಎಂದರು. ತಾಲೂಕು ಆಡಳಿತವು ಪ್ರಭಾವಿ ವ್ಯಕ್ತಿಗಳ ಒತ್ತಡಕ್ಕೆ ಮಣಿದು ಹಕ್ಕುಪತ್ರದಾರರ ಮೇಲೆ ಅನ್ಯಾಯ ಮಾಡುತ್ತಿದೆ. ಅತಿಕ್ರಮಣಕಾರರ ವಿರುದ್ಧ ಕ್ರಮ ಕೈಗೊಳ್ಳದೇ, ಅವರಿಗೆ ಸಹಕಾರ ನೀಡುತ್ತಿರುವುದು ಅಸಂವಿಧಾನಿಕ ನಡೆ ಎಂದು ಕಿಡಿಕಾರಿದರು. ಜಾಗದ ಸರಿಯಾದ ಅಳತೆ ಹಾಗೂ ಗುರುತುಪಡಿಸುವ ಕೆಲಸ ಮಾಡದೇ, ನಿಜವಾದ ಹಕ್ಕುದಾರರನ್ನು ತೊಂದರೆಗೊಳಿಸಲಾಗುತ್ತಿದೆ ಎಂದು ಆರೋಪಿಸಿದರು. ಧರಣಿೆಯಲ್ಲಿ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಮುಹಮ್ಮದ್ ಸಾದಿಕ್, ಮುಖಂಡರಾದ ಪವಿತ್ರಾ, ಅದರ ಅಕ್ಮಲ್ ಪಾಷಾ, ವಿಠಲ್, ಹಲವಾರು ರೈತರು ಹಾಗೂ ಮಹಿಳೆಯರು ಭಾಗವಹಿಸಿದ್ದರು. ರೈತ ಸಂಘದ ಬೇಡಿಕೆಗಳು ► ಮನೆಗಳ ಧ್ವಂಸ ಕಾರ್ಯವನ್ನು ತಕ್ಷಣ ನಿಲ್ಲಿಸಲು ಆದೇಶ ನೀಡಬೇಕು ► ಈಗಾಗಲೇ ಹಾನಿಗೊಳಿಸಿದ ಮನೆಗಳಿಗೆ ಸಮರ್ಪಕ ಪರಿಹಾರ ನೀಡಬೇಕು ► ತಪ್ಪಿತಸ್ಥ ಅಧಿಕಾರಿಗಳು ಮತ್ತು ಸಂಬಂಧಪಟ್ಟವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ► ಹಕ್ಕುಪತ್ರದ ಆಧಾರದ ಮೇಲೆ ವಾಸಸ್ಥಳವನ್ನು ರಕ್ಷಣೆ ಮಾಡಬೇಕು ► ಯಾವುದೇ ಸಾರ್ವಜನಿಕ ಯೋಜನೆಗಾಗಿ ಜಾಗ ಬೇಕಾದಲ್ಲಿ ಕಾನೂನುಬದ್ಧ ಪರಿಹಾರ ಹಾಗೂ ಪುನರ್ವಸತಿ ಒದಗಿಸಬೇಕು ಎಂದು ಆಗ್ರಹಿಸಿದರು.
ಲಿಂಗತ್ವ ಅಲ್ಪಸಂಖ್ಯಾತರ ಹಕ್ಕುಗಳ ರಕ್ಷಣೆ ತಿದ್ದುಪಡಿ ಮಸೂದೆ ಹಿಂಪಡೆಯಲು ಆಗ್ರಹಿಸಿ ಹೋರಾಟ
ಬೆಂಗಳೂರು : ಕೇಂದ್ರ ಸರಕಾರವು ಸಂಸತ್ನಲ್ಲಿ ಮಂಡಿಸಿರುವ ಲಿಂಗತ್ವ ಅಲ್ಪಸಂಖ್ಯಾತರ (ಟ್ರಾನ್ಸ್ಜೆಂಡರ್) ಹಕ್ಕುಗಳ ರಕ್ಷಣೆ ತಿದ್ದುಪಡಿ ಮಸೂದೆಯನ್ನು ಹಿಂಪಡೆಯಬೇಕು ಹಾಗೂ ಸಮಾನತೆ ಕಾಪಾಡಿ ಮಾನವ ಹಕ್ಕುಗಳನ್ನು ಗೌರವಿಸುವ ನೂತನ ಕಾಯ್ದೆ ಜಾರಿಗೊಳಿಸಬೇಕು ಎಂದು ಆಗ್ರಹಿಸಿ ರಾಜ್ಯ ಲಿಂಗತ್ವ ಮತ್ತು ಲೈಂಗಿಕತೆ ಅಲ್ಪಸಂಖ್ಯಾತರ ಒಕ್ಕೂಟ ಶನಿವಾರ ಫ್ರೀಡಂ ಪಾರ್ಕ್ನಲ್ಲಿ ಬೃಹತ್ ಹೋರಾಟವನ್ನು ನಡೆಸಿದೆ. ಲಿಂಗತ್ವ ಅಲ್ಪಸಂಖ್ಯಾತ ಪ್ರತಿನಿಧಿ ಮಲ್ಲುಕುಂಬಾರ ಮಾತನಾಡಿ, ಸಮುದಾಯದ ಪ್ರತಿನಿಧಿಗಳೊಂದಿಗೆ ಯಾವುದೇ ಚರ್ಚೆ ಇಲ್ಲದೇ ಸರ್ವಾಧಿಕಾರಿ ಧೋರಣೆ ಮೂಲಕ ಕೇಂದ್ರ ಸರಕಾರ ತಿದ್ದುಪಡಿ ಕಾಯ್ದೆ ಜಾರಿಗೊಳಿಸಲು ಮುಂದಾಗಿದೆ. ಇದು ಲಿಂಗತ್ವ ಅಲ್ಪಸಂಖ್ಯಾತರ ರಕ್ಷಣೆ ಬದಲಾಗಿ ಸಂವಿಧಾನಾತ್ಮಕವಾದ ಖಾಸಗಿ ಹಕ್ಕುಗಳನ್ನು ಉಲ್ಲಂಘಿಸುವ ವಿರೋಧಿ ಕಾಯ್ದೆ ಎಂದು ಹೋರಾಟಗಾರರು ಬೇಸರ ವ್ಯಕ್ತಪಡಿಸಿದರು. ದೇಶದ ಸಂವಿಧಾನದ ಪೀಠಿಕೆಯಲ್ಲಿ ಲಿಂಗತ್ವ ಆಧಾರಿತ ಪದ ಬಳಕೆಯಾಗಿಲ್ಲ. ಬದಲಾಗಿ ಸಮಾನತೆ ಹಕ್ಕನ್ನು ಪ್ರತಿಪಾದಿಸಲಾಗಿದೆ. ಆದರೆ, ಕೇಂದ್ರ ಸರಕಾರ ಲಿಂಗತ್ವ ಅಲ್ಪಸಂಖ್ಯಾತರ ರಕ್ಷಣೆ ಹೆಸರಿನಲ್ಲಿ ಜಾರಿಗೊಳಿಸಲು ಮುಂದಾಗಿರುವ ತಿದ್ದುಪಡಿ ಕಾಯ್ದೆಯಲ್ಲಿ ಸಂಪೂರ್ಣ ವ್ಯಕ್ತಿಯ ಗೌರವ, ಖಾಸಗಿ ಹಕ್ಕುಗಳ ಉಲ್ಲಂಘನೆಯಾಗಲಿದೆ. ಸಮುದಾಯಕ್ಕೆ ಉದ್ಯೋಗ, ಶಿಕ್ಷಣ, ಆರೋಗ್ಯ, ಭದ್ರತೆ ಜೊತೆಗೆ ಸಮಾನತೆಯನ್ನು ಕಾಪಾಡುವ ಹೊಸ ಕಾಯ್ದೆಯನ್ನು ರೂಪಿಸಬೇಕು ಎಂದು ಅವರು ಆಗ್ರಹಿಸಿದರು. ಲಿಂಗತ್ವ ಅಲ್ಪಸಂಖ್ಯಾತರು 25 ವರ್ಷಗಳಿಂದಲೂ ತಮ್ಮ ಹಕ್ಕುಗಳಿಗಾಗಿ ಹೋರಾಟ ನಡೆಸುತ್ತಿದ್ದಾರೆ. ಆದರೆ, ಆಡಳಿತ ನಡೆಸುವ ಸರಕಾರಗಳು ಈಡೇರಿಸುವಲ್ಲಿ ವಿಫಲವಾಗಿವೆ. 2019 ಕಾಯ್ದೆಯನ್ನು ಪೂರ್ವಭಾವಿ ಚರ್ಚೆಗಳಿಲ್ಲದೇ ಜಾರಿಗೊಳಿಸಲು ಮುಂದಾಗಿರುವುದು ಸರಿಯಲ್ಲ ಎಂದು ಮಲ್ಲು ಕುಂಬಾರ ಆಕ್ರೋಶ ವ್ಯಕ್ತಪಡಿಸಿದರು. ಹೋರಾಟದಲ್ಲಿ ಲಿಂಗತ್ವ ಅಲ್ಪಸಂಖ್ಯಾತರಾದ ಹೋರಾಟಗಾರರಾದ ವೈಶಾಲಿ, ರಿಯಾನ್ ರಾಜು, ಆಯಾನ್ ಸೈಯದ್, ದಿಲ್ ಫರಾಜ್, ಆಶಮ್ಮ ಮಾಲಕ್, ಜ್ಯೋತಿ, ಕರ್ನಾಟಕ ಜನಶಕ್ತಿಯ ನೂರ್ ಶ್ರೀಧರ್, ಚಿಂತಕ ಶಿವಸುಂದರ್, ನಟ ಚೇತನ್ ಸೇರಿದಂತೆ ಹಲವರು ಭಾಗವಹಿಸಿದ್ದರು.
ಹೋಮಿಯೋಪತಿ ಚಿಕಿತ್ಸಾ ಪದ್ಧತಿಯಲ್ಲಿ ಸಂಶೋಧನೆ ಅಗತ್ಯ: ದಿನೇಶ್ ಗುಂಡೂರಾವ್
ಬೆಂಗಳೂರು : ಹೋಮಿಯೋಪತಿಯಲ್ಲಿ ಇನ್ನೂ ಹೆಚ್ಚಿನ ಸಂಶೋಧನೆ, ಪ್ರಯೋಗ ನಡೆಯಬೇಕಿದೆ. ಎಲ್ಲರೂ ಸೇರಿ ಆ ಕುರಿತು ಸಹ ಯೋಚನೆ ಮತ್ತು ಯೋಜನೆ ಮಾಡಬೇಕಾದ ಅವಶ್ಯಕತೆ ಇದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅಭಿಪ್ರಾಯಪಟ್ಟಿದ್ದಾರೆ. ರವಿವಾರ ನಗರದಲ್ಲಿರುವ ಐಐಎಸ್ಸಿಯ ಎವಿ ರವಣ ರಾವ್ ಸಭಾಂಗಣದಲ್ಲಿ ಕರ್ನಾಟಕ ಹೋಮಿಯೋಪಥಿಕ್ ಅಸೋಸಿಯೇಷನ್ ವತಿಯಿಂದ ಹಮ್ಮಿಕೊಂಡಿದ್ದ ವಿಶ್ವ ಹೋಮಿಯೋಪತಿ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಹೋಮಿಯೋಪತಿ ಕುರಿತು ಜನರಲ್ಲಿ ನಂಬಿಕೆ ಮೂಡುವುದು ಮುಖ್ಯ. ಹಾಗಾದಾಗ ಮಾತ್ರ ಸರಕಾರ ಇನ್ನೂ ಹೆಚ್ಚಿನ ಕಾರ್ಯಯೋಜನೆ ಮಾಡಲು ಸಾಧ್ಯ ಎಂದರು. ಕಾರ್ಯಕ್ರಮದಲ್ಲಿ ಡಾ.ಲಕ್ಷ್ಮೀಕಾಂತ ನಂದಾ, ಆಯುಷ್ ಆಯುಕ್ತ ಡಾ.ಸುನಿಲ್ ಪನ್ವರ್, ಕರ್ನಾಟಕ ಹೋಮಿಯೋಪತಿ ಅಸೋಸಿಯೇಷನ್ನ ಪದಾಧಿಕಾರಿಗಳು, ವಿದ್ಯಾರ್ಥಿಗಳು ಭಾಗವಹಿಸಿದ್ದರು. ಹೋಮಿಯೋಪತಿಗೆ 200 ವರ್ಷಗಳ ಇತಿಹಾಸವಿದೆ. ಇದು ಒಂದು ವೈಜ್ಞಾನಿಕ ವೈದ್ಯಕೀಯ ಪದ್ದತಿ. ಇದು ಸುಲಭವಾದ ಚಿಕಿತ್ಸಾ ಪದ್ಧತಿ ಮತ್ತು ದೇಹವನ್ನು ಬಲಿಷ್ಠಗೊಳಿಸುವ ಒಂದು ವಿಧಾನವಾಗಿದೆ. ಸರಕಾರದ ವತಿಯಿಂದ ಸುಮಾರು 60-70 ಡಿಸ್ಪೆನ್ಸರಿ ಇದೆ. ಬೋರ್ಡ್ ಚುನಾವಣೆ ಸಮಸ್ಯೆ ಸೇರಿದಂತೆ ಹಲವಾರು ಸಮಸ್ಯೆಗಳ ಬಗ್ಗೆ ಮನವಿ ನೀಡಿದ್ದೀರಿ. ಸರಕಾರ ಮುಕ್ತ ಮಾತುಕತೆಗೆ ಸಿದ್ದವಿದೆ. ಕೆಲವೇ ದಿನಗಳಲ್ಲಿ ಹೋಮಿಯೋಪತಿ ಮೆಡಿಕಲ್ ಕಾಲೇಜ್ ನಿರ್ಮಾಣವೂ ಸೇರಿದಂತೆ ನಿಮ್ಮ ಸಮಸ್ಯೆಗಳ ಕುರಿತು ವಿಸ್ತೃತವಾಗಿ ಚರ್ಚೆ ನಡೆಸಿ, ಎಲ್ಲವನ್ನು ಬಗೆಹರಿಸೋಣ. -ದಿನೇಶ್ ಗುಂಡೂರಾವ್, ಆರೋಗ್ಯ ಸಚಿವ
‘ಇಸ್ರೋ’ ಸಂಸ್ಥೆಯಿಂದ ಮಹೋನ್ನತ ಸಾಧನೆೆ : ಶುಭಾಂಶು ಶುಕ್ಲಾ
ಬೆಂಗಳೂರು : ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತ ಮೊದಲ ಬಾರಿಗೆ ಆರ್ಯಭಟ ಉಪಗ್ರಹ ಉಡಾವಣೆ ಮಾಡಿದ್ದರಿಂದ ಇಲ್ಲಿಯವರೆಗೆ ಇಸ್ರೋ ಸಂಸ್ಥೆ ಮಹೋನ್ನತ ಸಾಧನೆಯನ್ನ ಮಾಡಿದೆ ಎಂದು ಇಸ್ರೋ ಸಂಸ್ಥೆ ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ಹೇಳಿದ್ದಾರೆ. ರವಿವಾರ ನಗರದ ಜಿಪಿಒ ಮೇಘದೂತ್ ಸಭಾಂಗಣದಲ್ಲಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ನೇತೃತ್ವದ ಭಾರತದ ಮಾನವ ಸಹಿತ ಬಾಹ್ಯಾಕಾಶ ಕಾರ್ಯಕ್ರಮ ಗಮನಾರ್ಹ ಪ್ರಗತಿಯನ್ನು ಆಚರಿಸಲು ಭಾರತೀಯ ಅಂಚೆ ಇಲಾಖೆ, ಕರ್ನಾಟಕ ಅಂಚೆ ವೃತ್ತ ವತಿಯಿಂದ ಹಮ್ಮಿಕೊಂಡಿದ್ದ ಎರಡು ಸ್ಮರಣಾರ್ಥ ಅಂಚೆ ಚೀಟಿಗಳ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. 18 ದಿನಗಳವರೆಗೆ ಅಂತರ್ರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಲ್ಲಿ ಕೆಲಸ ಮಾಡಿದ್ದು ನನ್ನ ಜೀವನದಲ್ಲಿ ಮರೆಯಲಾಗದ ಅನುಭವವಾಗಿದೆ. ಇದರ ಭಾಗವಾಗಿದ್ದಕ್ಕೆ ನನಗೆ ಬಹಳಷ್ಟು ಹೆಮ್ಮೆ ಇದೆ. ಮುಂಬರುವ ದಿನಗಳಲ್ಲಿ ಭಾರತೀಯ ಗಗನಯಾತ್ರಿಗಳು ಹಾಗೂ ನಮ್ಮದೇ ಆದ ಉಡಾವಣಾ ವಾಹನಗಳನ್ನ ಕಕ್ಷೆಗೆ ಕಳಿಸುವ ವಿಶ್ವಾಸವಿದೆ. ಇಸ್ರೋ ಕಾರ್ಯಗಳಿಗೆ ಗೌರವವಾಗಿ ಇಂದು ಭಾರತೀಯ ಅಂಚೆ ಇಲಾಖೆ ಅಂಚೆ ಚೀಟಿ ಹಾಗೂ ಸ್ಮರಣಿಕೆಗಳನ್ನ ಬಿಡುಗಡೆ ಮಾಡಿರುವುದಕ್ಕೆ ಧನ್ಯವಾದಗಳನ್ನ ತಿಳಿಸುತ್ತೇನೆ ಎಂದು ಶುಭಾಂಶು ಶುಕ್ಲಾ ತಿಳಿಸಿದರು. ಇಸ್ರೋ ಅಧ್ಯಕ್ಷ ಡಾ.ವಿ.ನಾರಾಯಣ್ ಮಾತನಾಡಿ, ಆರಂಭದಲ್ಲಿ ಇಸ್ರೋ ಸೈಕಲ್ನಲ್ಲಿ ಕಾರೆಟ್ ಇಟ್ಟುಕೊಂಡು ಕಕ್ಷೆಗೆ ಉಪಗ್ರಹವನ್ನ ಉಡಾವಣೆ ಮಾಡಿತ್ತು. ಇಂದು ಕಕ್ಷೆಯಲ್ಲಿ ನಮ್ಮದೇ ಆದ(ಭಾರತ) ಬಾಹ್ಯಾಕಾಶ ಸ್ಪೇಸ್ ಸೆಂಟರ್ ಮಾಡುವತ್ತ ಸಾಗುತ್ತಿದ್ದೇವೆ. ಇಂದು ಉಪಗ್ರಹಗಳ ನೆರವಿನಿಂದ ಮೊಬೈಲ್ ಸಿಗ್ನಲ್, ಇಂಟರ್ನೆಟ್ ಸೇರಿದಂತೆ ಎಲ್ಲ ತಂತ್ರಜ್ಞಾನಗಳಲ್ಲಿ ಮಹೋನ್ನತ ಸಾಧನೆಯನ್ನ ಮಾಡಿದ್ದೇವೆ. ಇದಕ್ಕೆಲ್ಲ ಉಪಗ್ರಹಗಳೇ ಕಾರಣ ಎಂದರು.ಕಾರ್ಯಕ್ರಮದಲ್ಲಿ ಕರ್ನಾಟಕ ಅಂಚೆ ವೃತ್ತದ ಮುಖ್ಯ ಪೋಸ್ಟ್ ಮಾಸ್ಟರ್ ಜನರಲ್ ಕೆ.ಪ್ರಕಾಶ್, ಅಂಚೆ ಸೇವೆಗಳ ನಿರ್ದೇಶಕ ಸಂದೇಶ ಮಹಾದೇವಪ್ಪ, ಹಲವರು ಭಾಗವಹಿಸಿದ್ದರು.
IPL 2026 |ಸಾಲ್ಟ್, ಪಾಟಿದಾರ್, ಕೊಹ್ಲಿ ಅರ್ಧಶತಕ; ಮುಂಬೈ ವಿರುದ್ಧ RCBಗೆ ಜಯ
ಮುಂಬೈ, ಎ.12: ಫಿಲ್ ಸಾಲ್ಟ್ (78 ರನ್, 36 ಎಸೆತ, 6 ಬೌಂಡರಿ, 6 ಸಿಕ್ಸರ್), ರಜತ್ ಪಾಟಿದಾರ್ (53 ರನ್, 20 ಎಸೆತ, 4 ಬೌಂಡರಿ, 5 ಸಿಕ್ಸರ್) ಹಾಗೂ ವಿರಾಟ್ ಕೊಹ್ಲಿ (50 ರನ್, 38 ಎಸೆತ, 5 ಬೌಂಡರಿ, 1 ಸಿಕ್ಸರ್) ಅವರ ಅರ್ಧಶತಕಗಳ ಕೊಡುಗೆ ಮತ್ತು ಬೌಲರ್ಗಳ ಶಿಸ್ತುಬದ್ಧ ದಾಳಿಯ ನೆರವಿನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಆತಿಥೇಯ ಮುಂಬೈ ಇಂಡಿಯನ್ಸ್ ತಂಡವನ್ನು 18 ರನ್ ಅಂತರದಿಂದ ಮಣಿಸಿದೆ. ವಾಂಖೆಡೆ ಸ್ಟೇಡಿಯಂನಲ್ಲಿ ರವಿವಾರ ನಡೆದ 20ನೇ ಐಪಿಎಲ್ ಪಂದ್ಯದಲ್ಲಿ ಟಾಸ್ ಗೆದ್ದ ಮುಂಬೈ ತಂಡದ ನಾಯಕ ಹಾರ್ದಿಕ್ ಪಾಂಡ್ಯ, RCB ತಂಡವನ್ನು ಬ್ಯಾಟಿಂಗ್ ಗೆ ಆಹ್ವಾನಿಸಿದರು. ಬ್ಯಾಟಿಂಗ್ ಪಿಚ್ನ ಲಾಭ ಪಡೆದ RCB ತಂಡವು ನಿಗದಿತ 20 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 240 ರನ್ ಗಳಿಸಿತು. ಗೆಲ್ಲಲು ಕಠಿಣ ಗುರಿ ಬೆನ್ನಟ್ಟಿದ ಮುಂಬೈ ತಂಡವು ನಿಗದಿತ 20 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 222 ರನ್ ಗಳಿಸಿತು. ಶೆರ್ಫಾನ್ ರುದರ್ಫೋರ್ಡ್ (ಔಟಾಗದೆ 71, 31 ಎಸೆತ, 1 ಬೌಂಡರಿ, 9 ಸಿಕ್ಸರ್) ಸರ್ವಾಧಿಕ ಸ್ಕೋರ್ ಗಳಿಸಿದರು. ಮೊದಲ ವಿಕೆಟ್ಗೆ 57 ರನ್ ಗಳಿಸಿದಾಗ ರೋಹಿತ್ ಶರ್ಮಾ (19 ರನ್) ಗಾಯಗೊಂಡು ನಿವೃತ್ತಿಯಾದರು. ಓಪನರ್ ರಿಕೆಲ್ಟನ್ (37 ರನ್, 22 ಎಸೆತ) ಹಾಗೂ ತಿಲಕ್ ವರ್ಮಾ (1 ರನ್) ಸ್ಪಿನ್ನರ್ ಸುಯಶ್ ಶರ್ಮಾ ಬೌಲಿಂಗ್ಗೆ ವಿಕೆಟ್ ಒಪ್ಪಿಸಿದರು. ಮಾಜಿ ನಾಯಕ ಸೂರ್ಯಕುಮಾರ್ (33 ರನ್, 22 ಎಸೆತ) ದೊಡ್ಡ ಮೊತ್ತ ಗಳಿಸಲಿಲ್ಲ. ನಾಯಕ ಹಾರ್ದಿಕ್ ಪಾಂಡ್ಯ (40 ರನ್, 22 ಎಸೆತ) ಅವರನ್ನು ಜೇಕಬ್ ಡಫಿ ಪೆವಿಲಿಯನ್ ಗೆ ಕಳುಹಿಸಿದರು. RCB ಪರ ಸುಯಶ್ ಶರ್ಮಾ ಯಶಸ್ವಿ ಪ್ರದರ್ಶನ ನೀಡಿದರು. ರಾಸಿಖ್ ಸಲಾಂ (1-23), ಕೃನಾಲ್ ಪಾಂಡ್ಯ (1-26) ಹಾಗೂ ಡಫಿ (1-58) ತಲಾ ಒಂದು ವಿಕೆಟ್ ಪಡೆದರು. ಕೊಹ್ಲಿ ಮಹತ್ವದ ಮೈಲಿಗಲ್ಲು: ಇದಕ್ಕೂ ಮೊದಲು ಸಾಲ್ಟ್ ಹಾಗೂ ಕೊಹ್ಲಿ 10.5 ಓವರ್ ಗಳಲ್ಲಿ 120 ರನ್ ಜೊತೆಯಾಟ ನಡೆಸಿ ಭದ್ರ ಬುನಾದಿ ಹಾಕಿದರು. ಐಪಿಎಲ್ ಇತಿಹಾಸದಲ್ಲಿ RCB ಪರ ಮೊದಲ ವಿಕೆಟ್ ಗೆ ಎರಡನೇ ಗರಿಷ್ಠ ಜೊತೆಯಾಟ ಇದಾಗಿದೆ. ಟಿ-20 ಕ್ರಿಕೆಟ್ ನಲ್ಲಿ 47ನೇ ಬಾರಿ ಶತಕದ ಜೊತೆಯಾಟದಲ್ಲಿ ಭಾಗಿಯಾದ ಕೊಹ್ಲಿ ಮತ್ತೊಂದು ಮಹತ್ವದ ಮೈಲಿಗಲ್ಲು ತಲುಪಿದರು. ಟಿ-20 ಕ್ರಿಕೆಟ್ ನಲ್ಲಿ ಈ ಸಾಧನೆಗೈದ ಮೊದಲ ಆಟಗಾರರಾಗಿದ್ದಾರೆ. ಪಾಕಿಸ್ತಾನದ ಬಾಬರ್ ಆಝಮ್ (46), ಕ್ರಿಸ್ ಗೇಲ್ (46), ಡೇವಿಡ್ ವಾರ್ನರ್ (45) ಹಾಗೂ ಎಫ್ ಡು ಪ್ಲೆಸಿಸ್ (40) ಅವರ ದಾಖಲೆಗಳನ್ನು ಮುರಿದರು. ಕೊಹ್ಲಿ ಅವರು ಐಪಿಎಲ್ ಇತಿಹಾಸದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ 1,000ಕ್ಕೂ ಅಧಿಕ ರನ್ ಗಳಿಸಿದ ಮೊದಲ ಬ್ಯಾಟರ್ ಎನಿಸಿಕೊಂಡರು. ಟಿಮ್ ಡೇವಿಡ್ (ಔಟಾಗದೆ 34, 16 ಎಸೆತ, 2 ಬೌಂಡರಿ, 3 ಸಿಕ್ಸರ್) RCB ಇನ್ನಿಂಗ್ಸ್ಗೆ ಅಂತಿಮ ಸ್ಪರ್ಶ ನೀಡಿದರು. 25 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಸಾಲ್ಟ್ ಅವರು ಕೊಹ್ಲಿ ಜೊತೆ ಕೇವಲ 52 ಎಸೆತಗಳಲ್ಲಿ 100 ರನ್ ಜೊತೆಯಾಟ ನಡೆಸಿದರು. RCB ಪರ ಗರಿಷ್ಠ ಸ್ಕೋರ್ ಗಳಿಸಿದ ಸಾಲ್ಟ್ ಅವರ ಇನ್ನಿಂಗ್ಸ್ ಗೆ ಶಾರ್ದುಲ್ ಠಾಕೂರ್ ತೆರೆ ಎಳೆದರು. ಎರಡನೇ ವಿಕೆಟ್ ಗೆ 65 ರನ್ ಸೇರಿಸಿದ ಕೊಹ್ಲಿ ಹಾಗೂ ನಾಯಕ ಪಾಟಿದಾರ್ ತಂಡದ ಮೊತ್ತವನ್ನು ಹೆಚ್ಚಿಸಿದರು. ಕೊಹ್ಲಿ 38 ಎಸೆತಗಳಲ್ಲಿ ಅರ್ಧಶತಕ ಗಳಿಸಿದ ತಕ್ಷಣವೇ ಹಾರ್ದಿಕ್ ಪಾಂಡ್ಯಗೆ ವಿಕೆಟ್ ಒಪ್ಪಿಸಿದರು. ಕೇವಲ 17 ಎಸೆತಗಳಲ್ಲಿ 4 ಬೌಂಡರಿ, 5 ಸಿಕ್ಸರ್ಗಳ ಸಹಾಯದಿಂದ ಅರ್ಧಶತಕ ಪೂರೈಸಿದ ಪಾಟಿದಾರ್ ಅವರ ಅಬ್ಬರಕ್ಕೆ ಸ್ಪಿನ್ನರ್ ಸ್ಯಾಂಟ್ನರ್ ತೆರೆ ಎಳೆದರು. ವಿಕೆಟ್ಕೀಪರ್ ಜಿತೇಶ್ ಶರ್ಮಾ (10 ರನ್) ಹೆಚ್ಚು ಹೊತ್ತು ಕ್ರೀಸ್ನಲ್ಲಿ ಉಳಿಯಲಿಲ್ಲ. ಮುಂಬೈ ತಂಡದ ಪರವಾಗಿ ಶಾರ್ದುಲ್ ಠಾಕೂರ್ (1-32), ಹಾರ್ದಿಕ್ ಪಾಂಡ್ಯ (1-39), ಸ್ಯಾಂಟ್ನರ್ (1-43) ಹಾಗೂ ಟ್ರೆಂಟ್ ಬೌಲ್ಟ್ (1-50) ತಲಾ ಒಂದು ವಿಕೆಟ್ ಪಡೆದರು. ಮುಂಬೈ ತಂಡವು ಎರಡು ಬದಲಾವಣೆಗಳನ್ನು ಮಾಡಿದ್ದು, ಮಿಚೆಲ್ ಸ್ಯಾಂಟ್ನರ್ ಹಾಗೂ ಮಯಾಂಕ್ ಮರ್ಕಂಡೆ ಅವರನ್ನು ಘಝನ್ಫರ್ ಮತ್ತು ದೀಪಕ್ ಚಹಾರ್ ಬದಲಿಗೆ ಆಡಿಸಿತು. RCB ನಾಯಕ ರಜತ್ ಪಾಟಿದಾರ್ ಅವರು ಆಸ್ಟ್ರೇಲಿಯಾದ ವೇಗಿ ಹೇಝಲ್ವುಡ್ ಬದಲಿಗೆ ಜೇಕಬ್ ಡಫಿ ಅವರನ್ನು ಆಡಿಸಿದರು. ಸಂಕ್ಷಿಪ್ತ ಸ್ಕೋರ್: RCB: 20 ಓವರ್ಗಳಲ್ಲಿ 240/4 (ಫಿಲ್ ಸಾಲ್ಟ್ 78, ರಜತ್ ಪಾಟಿದಾರ್ 53, ವಿರಾಟ್ ಕೊಹ್ಲಿ 50, ಡೇವಿಡ್ ಔಟಾಗದೆ 34, ಶಾರ್ದುಲ್ 1-32) ಮುಂಬೈ ಇಂಡಿಯನ್ಸ್: 20 ಓವರ್ಗಳಲ್ಲಿ 222/5 (ರುದರ್ಫೋರ್ಡ್ ಔಟಾಗದೆ 71, ರಿಕೆಲ್ಟನ್ 37, ಸೂರ್ಯಕುಮಾರ್ 33, ಹಾರ್ದಿಕ್ ಪಾಂಡ್ಯ 40, ಸುಯಶ್ ಶರ್ಮಾ 2-47, ಕೃನಾಲ್ ಪಾಂಡ್ಯ 1-26)
IPL 2026- ಫಿಲ್ ಸಾಲ್ಟ್ ಆರ್ಭಟಕ್ಕೆ ವಿರಾಟ್ ಸಾಥ್! MIಗೆ ವಾಂಖೆಡೆಯಲ್ಲಿ ಸೋಲಿನ ರುಚಿ ತೋರಿಸಿದ RCB
ಮೊದಲ ಬಾರಿ ಸೀಸನ್ ನಲ್ಲಿ ಸ್ಫೋಟಕ ಅರ್ಧಶತಕ ಬಾರಿಸಿದ ಫಿಲ್ ಸಾಲ್ಟ್. ಅನಾರೋಗ್ಯದ ನಡುವೆಯೂ ಅರ್ಧಶತಕ ಬಾರಿಸಿದ ವಿರಾಟ್ ಕೊಹ್ಲಿ! ಐಪಿಎಲ್ ನ ಅತಿ ವೇಗದ ಅರ್ಧಶತಕ ತಪ್ಪಿದರೂ ಶರವೇಗದ ಶತಕ ಹೊಡೆದ ನಾಯಕ ರಜತ್ ಪಾಟೀದಾರ್. ನಿರ್ಣಾಯಕ ಹಂತದಲ್ಲಿ 2 ವಿಕೆಟ್ ಕಿತ್ತ ಸುಯೇಶ್ ಶರ್ಮಾ- ಇದು ಮುಂಬೈ ಇಂಡಿಯನ್ಸ್ ವಿರುದ್ಧ ಆರ್ ಸಿಬಿ ಸೆಣೆಸಾಟದ ಝಲಕ್. ಹೀಗೆ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಸರ್ವಾಂಗೀಣ ಪ್ರದರ್ಶನ ನೀಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಹಾರ್ದಿಕ್ ಪಾಂಡ್ಯ ಬಳಗವನ್ನು 18 ರನ್ ಗಳಿಂದ ಪರಾಭವಗೊಳಿಸಿತು. ಈ ಮೂಲಕ ಆಡಿದ 4 ಪಂದ್ಯಗಳಲ್ಲಿ 3 ಪಂದ್ಯ ಗೆದ್ದು 6 ಅಂಕಗಳನ್ನು ಕಲೆ ಹಾಕಿದ ರಜತ್ ಪಾಟೀದಾರ್ ಬಳಗ ಯಲ್ಲಿ 3ನೇ ಸ್ಥಾನದಲ್ಲಿ ಮುಂದುವರಿದಿದೆ. ಇದೇವೇಳೆ ಮುಂಬೈ ಇಂಡಿಯನ್ಸ್ ತಂಡ ಆಡಿದ 4 ಪಂದ್ಯಗಳಲ್ಲಿ ಕೇವಲ 1 ಗೆಲುವು ಸಾಧಿಸಿರುವುದರಿಂದ 2 ಅಂಕಗಳೊಂದಿಗೆ 8ನೇ ಸ್ಥಾನದಲ್ಲಿದೆ. ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ನಿಗದಿತ 20 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 240 ರನ್ ಪೇರಿಸಿತು. ಇದಕ್ಕುತ್ತರವಾಗಿ ಮುಂಬೈ ಇಂಡಿಯನ್ಸ್ ಅಷ್ಟೇ ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 222 ರನ್ ಗಳನ್ನಷ್ಟೇ ಪೇರಿಸಲು ಶಕ್ತವಾಯಿತು. ()
ಹಾರ್ಮುಝ್ ಜಲಸಂಧಿ ವಾಣಿಜ್ಯ ಹಡಗುಗಳಿಗೆ ಮುಕ್ತ; ಮಿಲಿಟರಿ ಹಡಗು ಬಂದರೆ ‘ಕಠಿಣ ಕ್ರಮ’: IRGC ಎಚ್ಚರಿಕೆ
ಟೆಹರಾನ್, ಎ.12: ಇರಾನ್ ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಹಾರ್ಮುಝ್ ಜಲಸಂಧಿಯು ಅಂತರರಾಷ್ಟ್ರೀಯ ಕಾನೂನಿನ ಪ್ರಕಾರ ವಾಣಿಜ್ಯ ಹಡಗುಗಳ ಸಾಗಣೆಗೆ ಮುಕ್ತವಾಗಿದೆ ಎಂದು ತಿಳಿಸಿದೆ ಎಂದು Aljazeera ವರದಿ ಮಾಡಿದೆ. ರವಿವಾರ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ, ಜಲಸಂಧಿಯನ್ನು ಬಳಸುವ ವಾಣಿಜ್ಯ ಹಡಗುಗಳಿಗೆ ಯಾವುದೇ ಅಡ್ಡಿಯಿಲ್ಲ ಎಂದು ಸ್ಪಷ್ಟಪಡಿಸಿದೆ. ಆದರೆ, ಜಲಸಂಧಿಯತ್ತ ಸಮೀಪಿಸುವ ಮಿಲಿಟರಿ ಹಡಗುಗಳು ಕದನ ವಿರಾಮವನ್ನು ಉಲ್ಲಂಘಿಸಿದಂತೆ ಪರಿಗಣಿಸಲಾಗುತ್ತದೆ ಎಂದು IRGC ಎಚ್ಚರಿಸಿದೆ. ಇಂತಹ ಹಡಗುಗಳ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ.
ಬೆಂಗಳೂರು : ಉಪಚುನಾವಣೆಯಲ್ಲಿ ನಾವು ಬಿಜೆಪಿ ಸೋಲಿಸಲು ಹೋದರೆ ನಮ್ಮಲ್ಲಿನ ಕೆಲವರು ಡಬಲ್ ಗೇಮ್ ಆಡಿ, ನಮ್ಮ ಅಭ್ಯರ್ಥಿಯನ್ನೇ ಸೋಲಿಸಲು ಯತ್ನಿಸಿದರು ಎಂದು ಶಿವಾಜಿನಗರ ಶಾಸಕ ರಿಝ್ವಾನ್ ಅರ್ಷದ್ ಅಸಮಾಧಾನ ಹೊರಹಾಕಿದ್ದಾರೆ. ರವಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘ವೋಟ್ಗಳನ್ನು ವಿಭಜಿಸಿ ಬಿಜೆಪಿ ಗೆಲ್ಲಿಸಬೇಕೆಂದು ಯಾರು ಪ್ರಯತ್ನಪಟ್ಟರು ಎಂಬುದು ಗೊತ್ತಿದೆ. ಅವರ ಪ್ರಯತ್ನ ಫಲ ನೀಡಿಲ್ಲʼ ಎಂದು ಹೇಳಿದರು. ಕೆಲವರು ನಾನೇ ಹೆಚ್ಚು, ನಾನು ಇಲ್ಲದಿದ್ದರೆ ಮುಸ್ಲಿಂ ಸಮುದಾಯಕ್ಕೆ ಮತ್ತೊಬ್ಬ ನಾಯಕ ಇಲ್ಲ ಎಂಬ ಭಾವನೆಯಲ್ಲಿದ್ದಾರೆ. ಅಲ್ಪಸಂಖ್ಯಾತರ ಚಾಂಪಿಯನ್ ಎನಿಸಿಕೊಂಡವರು ಜಬ್ಬಾರ್ ಅವರಿಗೆ ಟಿಕೆಟ್ ನೀಡಬೇಕೆಂದು ಪಟ್ಟು ಹಿಡಿದರು. ಮುಖ್ಯಮಂತ್ರಿಯ ಮುಂದೆಯೂ ಅದೇ ಒಬ್ಬ ನಾಯಕ, ಕೊಟ್ಟರೆ ಜಬ್ಬಾರ್ಗೆ ಕೊಡಿ ಎಂದರು. ಜಬ್ಬಾರ್ ಬಿಟ್ಟರೆ ಬೇರೆ ಮುಸ್ಲಿಂ ಆಕಾಂಕ್ಷಿಗಳು ಇರಲಿಲ್ಲವೇ? ಎಂದು ಅವರು ಪ್ರಶ್ನಿಸಿದರು. ʼಅಬ್ದುಲ್ ಜಬ್ಬಾರ್ ಅವರಿಗೆ ಟಿಕೆಟ್ ಪಟ್ಟು ಹಿಡಿದಿದ್ದು ಯಾರು’ ಎಂಬ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ಅದು ಯಾರು ಎಂಬುದನ್ನು ನೀವೇ ತಿಳಿದುಕೊಳ್ಳಿ. ಉಪಚುನಾವಣೆ ವೇಳೆ ದಾವಣಗೆರೆ ದಕ್ಷಿಣ ಕ್ಷೇತ್ರದ ಪ್ರಚಾರಕ್ಕೆ ಬಾರದವರು ಮೂವರಲ್ಲಿ ಒಬ್ಬರ ಮೇಲೆ ಕ್ರಮ ಆಗಿದೆ. ಇನ್ನಿಬ್ಬರು ಇದ್ದಾರಲ್ಲ, ಅದರಲ್ಲಿ ಒಬ್ಬರು ಜಬ್ಬಾರ್ಗೆ ಟಿಕೆಟ್ ಕೊಡಿಸಬೇಕೆಂದು ಪಟ್ಟು ಹಿಡಿದಿದ್ದರು’ ಎಂದು ಪರೋಕ್ಷವಾಗಿ ಝಮೀರ್ ವಿರುದ್ಧ ಆರೋಪಿಸಿದರು.
Raichur | ನವ ಉದಾರೀಕರಣವೇ ಅಭಿವೃದ್ಧಿ ಎಂದು ಕೇಂದ್ರ ಸರಕಾರ ಅಸಮಾನತೆ ಪೋಷಿಸುತ್ತಿದೆ : ಶ್ರೀಪಾದ್ ಭಟ್
ರಾಯಚೂರು: ಬಡವರ ಹಾಗೂ ಶ್ರೀಮಂತರ ನಡುವಿನ ಅಂತರ ಹೆಚ್ಚುತ್ತಿದ್ದು, ಕೇಂದ್ರ ಸರ್ಕಾರದ ನವಉದಾರೀಕರಣ ನೀತಿಗಳು ಅಸಮಾನತೆಯನ್ನು ಮತ್ತಷ್ಟು ಹೆಚ್ಚಿಸುತ್ತಿವೆ ಎಂದು ಬೆಂಗಳೂರಿನ ಶಿಕ್ಷಣ ತಜ್ಞ ಬಿ. ಶ್ರೀಪಾದ ಭಟ್ ಅಭಿಪ್ರಾಯಪಟ್ಟರು. ನಗರದ ಪಂಡಿತ್ ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ‘ಸಮುದಾಯ ರಾಯಚೂರು’ ಸಾಂಸ್ಕೃತಿಕ ಸಂಘಟನೆಯಿಂದ ಆಯೋಜಿಸಿದ್ದ ‘ರಾಜಕೀಯ ಆರ್ಥಿಕತೆ ಮತ್ತು ಉದ್ಯೋಗ ನೀತಿ’ ಕುರಿತ ಉಪನ್ಯಾಸದಲ್ಲಿ ಅವರು ಮಾತನಾಡಿದರು. ಸಂಪತ್ತಿನ ಒಡೆತನ ಹಾಗೂ ಹಂಚಿಕೆ ಕೆಲವೇ ಮಂದಿಯ ಕೈಯಲ್ಲಿ ಕೇಂದ್ರೀಕೃತವಾಗುತ್ತಿರುವುದು ಆತಂಕಕಾರಿ. ಒಕ್ಕೂಟ ವ್ಯವಸ್ಥೆಯ ಮೇಲೆ ಕೇಂದ್ರದ ಹಿಡಿತ ಹೆಚ್ಚಾಗುತ್ತಿರುವುದರಿಂದ ಸಾಮಾನ್ಯ ಜನರ ಬದುಕು ದುಸ್ತರವಾಗುತ್ತಿದೆ ಎಂದು ಹೇಳಿದರು. ಇಂದಿನ ಪರಿಸ್ಥಿತಿಯಲ್ಲಿ ಕೆಲವೇ ಉದ್ಯಮಿಗಳ ಕೈಯಲ್ಲಿ ದೇಶದ ಸಂಪತ್ತು ಕ್ರೋಢೀಕೃತವಾಗುತ್ತಿದೆ. ರಾಜಕೀಯ ಆರ್ಥಿಕತೆಯ ಭಾಗವಾಗಿ ಜನರಲ್ಲಿ ಭ್ರಮೆ ಸೃಷ್ಟಿಸಿ ಅಭಿವೃದ್ಧಿಯ ಹೆಸರಿನಲ್ಲಿ ನೀತಿಗಳನ್ನು ಜಾರಿಗೊಳಿಸಲಾಗುತ್ತಿದೆ ಎಂದು ಅವರು ಟೀಕಿಸಿದರು. ರಾಜಕೀಯ ಪಕ್ಷಗಳ ಕುರಿತು ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷವು ಬಿಜೆಪಿಯನ್ನು ಆರ್ಥಿಕ ಹಾಗೂ ಸೈದ್ದಾಂತಿಕವಾಗಿ ಎದುರಿಸುವ ಶಕ್ತಿಯನ್ನು ಕಳೆದುಕೊಂಡಿದೆ ಎಂದು ಅಭಿಪ್ರಾಯಪಟ್ಟರು. ಇದೇ ವೇಳೆ ಗ್ಯಾರಂಟಿ ಯೋಜನೆಗಳ ಕುರಿತು ಮಾತನಾಡಿ, ಕರ್ನಾಟಕದಲ್ಲಿ ವಿರೋಧಿಸುವ ಬಿಜೆಪಿ ಪಶ್ಚಿಮ ಬಂಗಾಳದಲ್ಲಿ ಗ್ಯಾರಂಟಿಗಳನ್ನು ಘೋಷಿಸಿರುವುದು ರಾಜಕೀಯ ವಿರೋಧಾಭಾಸ ಎಂದು ಹೇಳಿದರು. ಕಾರ್ಯಕ್ರಮ ಉದ್ಘಾಟಿಸಿದ ಶಿಕ್ಷಣ ಇಲಾಖೆಯ ನಿವೃತ್ತ ಉಪನಿರ್ದೇಶಕಿ ಆರ್. ಇಂದಿರಾ ಅವರು ನಿರುದ್ಯೋಗ ಸಮಸ್ಯೆಯಿಂದ ಯುವಕರ ಬದುಕು ಸಂಕಷ್ಟಕರವಾಗುತ್ತಿದೆ. ಜನರ ಬದುಕು ಹಸನಗೊಳಿಸುವ ಯೋಜನೆಗಳನ್ನು ರೂಪಿಸಬೇಕಾಗಿದೆ ಎಂದು ಹೇಳಿದರು. ಕರ್ನಾಟಕ ರಾಜ್ಯ ರೈತ ಸಂಘದ ಗೌರವಾಧ್ಯಕ್ಷ ಚಾಮರಸ ಮಾಲಿ ಪಾಟೀಲ ಮಾತನಾಡಿ, ಕೃಷಿ ಕ್ಷೇತ್ರವನ್ನು ಸರ್ಕಾರಗಳು ಕಡೆಗಣಿಸುತ್ತಿರುವುದರಿಂದ ರೈತರು ಕೃಷಿಯಿಂದ ದೂರವಾಗುತ್ತಿದ್ದಾರೆ. ರೈತರ ಪರ ಕಾಯ್ದೆಗಳನ್ನು ಜಾರಿಗೆ ತಂದು ಕೃಷಿ ಕ್ಷೇತ್ರವನ್ನು ಉಳಿಸಬೇಕು ಎಂದು ಒತ್ತಾಯಿಸಿದರು. ಕಲಬುರಗಿಯ ಸಂಸ್ಕೃತಿ ಚಿಂತಕ ಆರ್ ಕೆ ಹುಡಗಿ, ಜನ ಸಂಗ್ರಾಮ ಪರಿಷತ್ ಅಧ್ಯಕ್ಷ,ಹಿರಿಯ ಹೋರಾಟಗಾರ ರಾಘವೇಂದ್ರ ಕುಷ್ಠಗಿ,ಮಹರ್ಷಿ ವಾಲ್ಮೀಕಿ ವಿವಿಯ ಸಿಂಡಿಕೇಟ್ ಸದಸ್ಯ ಜೀಶಾನ್ ಅಖಿಲ್ ಸಿದ್ದೀಖಿ, ಸಮುದಾಯ ರಾಯಚೂರು ಸಂಸ್ಕೃತಿಕ ಸಂಘಟನೆಯ ಗೌರವಾಧ್ಯಕ್ಷ ಶರಣು ಮಾಲಿ ಪಾಟೀಲ್, ವಿ.ಎನ್ ಅಕ್ಕಿ, ಸಿಐಟಿಯು ಜಿಲ್ಲಾ ಅಧ್ಯಕ್ಷೆ ಹೆಚ್ ಪದ್ಮಾ, ಎಸ್ ಮಾರೆಪ್ಪ ವಕೀಲ ಮತ್ತಿತರರು ಇದ್ದರು
Koppal | ಯುವಕನ ಮೊಬೈಲ್ ನಲ್ಲಿ ಅಶ್ಲೀಲ ವಿಡಿಯೋಗಳು ಪತ್ತೆ ಆರೋಪ : ದೂರು, ಪ್ರತಿ ದೂರು ದಾಖಲು
ಕೊಪ್ಪಳ: ಮೊಬೈಲ್ನಲ್ಲಿ ವಿವಿಧ ಯುವತಿಯರ ಅಶ್ಲೀಲ ಫೋಟೊ ಮತ್ತು ವಿಡಿಯೋಗಳನ್ನು ಸಂಗ್ರಹಿಸಿದ್ದಾನೆ ಎಂಬ ಆರೋಪದ ಮೇಲೆ ಮುಸ್ತಪಾ ಖಾದ್ರಿ ಎಂಬ ಯುವಕನ ವಿರುದ್ಧ ಕೊಪ್ಪಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವಿಶ್ವ ಹಿಂದೂ ಪರಿಷತ್ ಜಿಲ್ಲಾ ಅಧ್ಯಕ್ಷ ಡಾ. ಸಂಗಮೇಶ ಹಿರೇಮಠ ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಾಗಿದ್ದು, ಜಿಲ್ಲಾಸ್ಪತ್ರೆ ಆವರಣದಲ್ಲಿ ಯುವಕ ವಿದ್ಯಾರ್ಥಿನಿಯೊಂದಿಗೆ ಅಸಭ್ಯವಾಗಿ ವರ್ತಿಸುತ್ತಿದ್ದಾನೆ ಎಂಬ ಮಾಹಿತಿ ಮೇರೆಗೆ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದಾಗ, ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದೇವೆ ಎಂದು ಹೇಳಿಕೊಂಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಈ ವೇಳೆ ಯುವಕನ ಬಳಿಯಿದ್ದ ಮೊಬೈಲ್ ಪರಿಶೀಲಿಸಿದಾಗ ಸಾವಿರಾರು ಫೋಟೊಗಳು ಹಾಗೂ ವಿಡಿಯೋಗಳು ಪತ್ತೆಯಾಗಿದ್ದು, ಅವುಗಳಲ್ಲಿ ವಿವಿಧ ಯುವತಿಯರ ಅಶ್ಲೀಲ ಚಿತ್ರಗಳು ಮತ್ತು ವಿಡಿಯೋಗಳು ಇರುವುದಾಗಿ ಆರೋಪಿಸಲಾಗಿದೆ. ಸುಮಾರು 16 ಯುವತಿಯರ ಅಶ್ಲೀಲ ಚಿತ್ರಗಳನ್ನು ಸಂಗ್ರಹಿಸಿದ್ದಾನೆ ಎಂದು ದೂರಿನಲ್ಲಿ ಹೇಳಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ಆಗ್ರಹಿಸಲಾಗಿದೆ. ಪ್ರತಿ ದೂರು ನೀಡಿದ ಯುವತಿ : ಇನ್ನೊಂದೆಡೆ, ಈ ಘಟನೆಗೆ ಸಂಬಂಧಿಸಿ ಯುವತಿ ಕೂಡ ಪ್ರತ್ಯೇಕ ದೂರು ನೀಡಿದ್ದು, ನಾನು ಮತ್ತು ನಾನು ಪ್ರೀತಿಸುವ ಯುವಕ ಮುಸ್ತಾಫ ಆಸ್ಪತ್ರೆ ಆವರಣದಲ್ಲಿ ಇದ್ದಾಗ 8-10 ಜನರ ಗುಂಪು ಹಲ್ಲೆ ನಡೆಸಿ ಜೀವ ಬೆದರಿಕೆ ಒಡ್ಡಿ ಮೊಬೈಲ್ ಕಸಿದುಕೊಂಡು ಹೋಗಿದ್ದಾರೆ ಎಂದು ದೂರು ನೀಡಿದ್ದಾಳೆ. ಈ ಕುರಿತು ಕೊಪ್ಪಳ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ರಾಯಲ್ ಚಾಲೆಂಜರ್ಸ್ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಅವರು ಜ್ವರದ ಮಧ್ಯೆಯೂ ಮುಂಬೈ ಇಂಡಿಯನ್ಸ್ ವಿರುದ್ಧ ಪಂದ್ಯವನ್ನಾಡಿದರಾ? ಕ್ರಿಕೆಟ್ ವೀಕ್ಷಕ ವಿವರಣೆಕಾರ ರವಿ ಶಾಸ್ತ್ರಿ ಅವರ ಹೇಳಿಕೆಯ ಬಳಿಕ ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆ ನಡೆದಿದೆ. ಮುಂಬೈ ಇಂಡಿಯನ್ಸ್ ತಂಡದ ಬ್ಯಾಟಿಂಗ್ ವೇಳೆ ಅವರು ಪೆವಿಲಿಯನ್ ನಲ್ಲಿ ವಿಶ್ರಾಂತಿ ಪಡೆದಿರುವುದು ಈ ಹೇಳಿಕೆಗೆ ಪೂರಕವಾಗಿದೆ. ಅವರ ಮುಖ ಲಕ್ಷಣ ಸಹ ಅವರ ಆರೋಗ್ಯ ಸರಿ ಇಲ್ಲ ಎಂಬುದಕ್ಕೆ ಸಾಕ್ಷಿಯಂತಿದ್ದವು. ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಏಪ್ರಿಲ್ 12ರ ಭಾನುವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ರಾಯಲ್ ಚಾಲೆಂಜರ್ಸ್ ತಂಡ ನಿಗದಿತ 20 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 240 ರನ್ ಪೇರಿಸಿತು. ಆರಂಭಿಕನಾಗಿ ಕಣಕ್ಕಿಳಿದ ವಿರಾಟ್ ಕೊಹ್ಲಿ ಅವರು ಸೊಗಸಾದ ಅರ್ಧಶತಕ ಬಾರಿಸಿದರು. ಕೇವಲ 38 ಎಸೆತಗಳಲ್ಲಿ 5 ಬೌಂಡರಿ ಮತ್ತು 1 ಸಿಕ್ಸರ್ ಗಳನ್ನು ಒಳಗೊಂಡ 50 ರನ್ ಗಳಿಸಿ ಔಟಾದರು. ()ಪಂದ್ಯ ನಡೆಯುತ್ತಿದ್ದ ವೇಳೆ ವೀಕ್ಷಕ ವಿವರಣೆಕಾರರಾಗಿದ್ದ ರವಿಶಾಸ್ತ್ರಿ ಅವರು ಕಳೆದ ಪಂದ್ಯದಿಂದ ವಿರಾಟ್ ಕೊಹ್ಲಿಗೆ ಸ್ವಲ್ಪ ಜ್ವರವಿದೆ.. ಆದರೂ ಅವರು ಇನ್ನೂ ಆಟವಾಡುತ್ತಿದ್ದಾರೆ. ಅದಕ್ಕಾಗಿಯೇ ಅವರು ಇಂದು ಚೆಂಡನ್ನು ಬಯಸಿದ ರೀತಿಯಲ್ಲಿ ಸಮಯಕ್ಕೆ ತಕ್ಕಂತೆ ಹೊಡೆಯಲು ಸಾಧ್ಯವಾಗಲಿಲ್ಲ. ಹೊರತು ಬೇರೇನೂ ಸಮಸ್ಯೆಯಾಗಲಿಲ್ಲ. ಹೆಚ್ಚಿನ ಬಾರಿ ಅವರಿಗೆ ಕನೆಕ್ಟ್ ಮಾಡಲು ಕಷ್ಟವಾಯಿತ ಎಂದಿದ್ದಾರೆ. ಅವರ ಈ ಹೇಳಿಕೆ ಇದೀಗ ಚರ್ಚೆಗೆ ಆಸ್ಪದವಾಗಿದೆ. ವಿರಾಟ್ ಕೊಹ್ಲಿ ಅವರು ಔಟಾದ ಬಳಿಕ ಡಗೌಟ್ ಕಡೆಗೆ ತೆರಳು ವೇಳೆ ಬೌಂಡರಿ ಬಳಿ ಸಿಟ್ಟಿನಿಂದ ತಮ್ಮ ಹೆಲ್ಮೆಟ್ ಮತ್ತು ಗ್ಲೌಸ್ ಗಳನ್ನು ಎಸೆದ ಪ್ರಸಂಗ ಎಲ್ಲರಿಗೂ ಅಚ್ಚರಿ ತಂದಿತ್ತು. ಆ ಬಳಿಕ ಅವರು ಆರ್ ಸಿಬಿ ಫೀಲ್ಡಿಂಗ್ ನಡೆಸುತ್ತಿದ್ದ ವೇಳೆ ಮೈದಾನಕ್ಕೆ ಇಳಿಯಲಿಲ್ಲ. ಪೆವಿಲಿಯನ್ ನಲ್ಲೇ ಕುಳಿತು ಪಂದ್ಯವನ್ನು ವೀಕ್ಷಿಸುತ್ತಿದ್ದರು. ಅಷ್ಟೊಂದು ಅನಾರೋಗ್ಯದ ಮಧ್ಯೆಯೂ ಅವರು ಅರ್ಧಶತಕ ಹೊಡೆದಿರುವುದಕ್ಕೆ ಒಂದೆಡೆ ಪ್ರಶಂಸೆ ವ್ಯಕ್ತವಾಗಿದ್ದರೆ, ಮತ್ತೊಂದೆಡೆ ಅವರು ಅಷ್ಟೊಂದು ಅನಾರೋಗ್ಯ ಪೀಡಿತರಾಗಿದ್ದರೂ ತಂಡದ ಮ್ಯಾನೇಜ್ ಮೆಂಟ್ ಅವರನ್ನು ಆಡಿಸಿದ್ದು ಯಾಕೆ ಎಂಬ ಪ್ರಶ್ನೆಯೂ ಉದ್ಭವವಾಗಿದೆ.
ಮಹಿಳೆಯ ಚಿನ್ನದ ಸರ ನಾಪತ್ತೆ: ಪ್ರಕರಣ ದಾಖಲು
ಮಂಗಳೂರು, ಎ.12: ಉಪ್ಪಿನಂಗಡಿಗೆ ಮದುವೆ ಕಾರ್ಯಕ್ರಮಕ್ಕೆ ಹೋಗಿದ್ದ ಮಹಿಳೆಯೊಬ್ಬರ 91.679 ಗ್ರಾಂ ತೂಕದ ಚಿನ್ನದ ಸರ ನಾಪತ್ತೆಯಾದ ಘಟನೆ ವರದಿಯಾಗಿದೆ. ಉಳ್ಳಾಲದ ಮಿಲ್ಲತ್ ನಗರದ ಅಹ್ಮದ್ ಬಾವಾ ಎಂಬವರ ಪತ್ನಿ ನಫಿಸಾ ಇನ್ಶಾ ಅವರು ಎ.5ರಂದು ಉಪ್ಪಿಂಗಡಿಯ ಎಚ್ಎಂ ಆಡಿಟೋರಿಯಂನಲ್ಲಿ ನಡೆದ ಮದುವೆ ಕಾರ್ಯಕ್ರಮಕ್ಕೆ ಹೋಗಿ ವಾಪಸಾಗುತ್ತಿದ್ದ ವೇಳೆ ಅವರ ಕುತ್ತಿಗೆಯಲ್ಲಿದ್ದ ಚಿನ್ನದ ಸರ ಕಳೆದು ಹೋಗಿರುವುದಾಗಿ ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಲಾಗಿದೆ. ಎ.7ರಂದು ನೀಡಿದ ದೂರಿನಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
T20ಯಲ್ಲಿ ಬಾಬರ್ ಅಝಂ ದಾಖಲೆ ಮುರಿದ ವಿರಾಟ್ ಕೊಹ್ಲಿ! ಏನದು ದಾಖಲೆ?
ಮುಂಬೈ: ಇಲ್ಲಿನ ವಾಂಖೆಡೆ ಕ್ರೀಡಾಂಗಣದಲ್ಲಿ ಮುಂಬೈ ಇಂಡಿಯನ್ಸ್ ತಂಡದ ವಿರುದ್ಧ ನಡೆಯುತ್ತಿರುವ ಪಂದ್ಯದಲ್ಲಿ ಬ್ಯಾಟನ್ನು ಅಕ್ಷರಶಃ ಗನ್ ಆಗಿಸಿಕೊಂಡ ವಿರಾಟ್ ಕೊಹ್ಲಿ–ಫಿಲ್ ಸಾಲ್ಟ್ ಜೋಡಿ ಮೊದಲ ವಿಕೆಟ್ ಗೆ ಬರೋಬ್ಬರಿ 120 ರನ್ ಗಳನ್ನು ಕಲೆಹಾಕಿತು. ಈ ಶತಕದ ಜೊತೆಯಾಟದ ಮೂಲಕ ವಿರಾಟ್ ಕೊಹ್ಲಿ T20 ಕ್ರಿಕೆಟ್ ಮಾದರಿಯಲ್ಲಿ ಮತ್ತೊಂದು ದಾಖಲೆ ಬರೆದರು. T20 ಕ್ರಿಕೆಟ್ ನಲ್ಲಿ ಇದುವರೆಗೆ ಪಾಕಿಸ್ತಾನದ ಸ್ಫೋಟಕ ಬ್ಯಾಟರ್ ಬಾಬರ್ ಅಝಂ 46 ಬಾರಿ ಶತಕದ ಜೊತೆಯಾಟಗಳಲ್ಲಿ ಭಾಗಿಯಾದ ದಾಖಲೆ ಹೊಂದಿದ್ದರು. ನಂತರದ ಸ್ಥಾನದಲ್ಲಿ ಕ್ರಿಸ್ ಗೇಲ್ (46), ಡೇವಿಡ್ ವಾರ್ನರ್ (45) ಹಾಗೂ ಫಾಫ್ ಡು ಪ್ಲೆಸಿಸ್ (40) ಇದ್ದಾರೆ. ಇಂದು ಕ್ರೀಸಿಗೆ ಬಂದ ತಕ್ಷಣವೇ ಮುಂಬೈ ಬೌಲರ್ಗಳನ್ನು ಮೂಲೆಮೂಲೆಗೂ ಅಟ್ಟಾಡಿದ ವಿರಾಟ್ ಕೊಹ್ಲಿ (50) ಹಾಗೂ ಫಿಲ್ ಸಾಲ್ಟ್ (78) ಜೋಡಿ ಮೊದಲ ವಿಕೆಟ್ ಗೆ ಮಹತ್ವದ 120 ರನ್ ಗಳ ಜೊತೆಯಾಟವಾಡಿತು. ಈ ಜೊತೆಯಾಟದೊಂದಿಗೆ T20 ಕ್ರಿಕೆಟ್ ನಲ್ಲಿ 47 ಬಾರಿ ಶತಕದ ಜೊತೆಯಾಟದಲ್ಲಿ ಭಾಗಿಯಾದ ದಾಖಲೆ ವಿರಾಟ್ ಕೊಹ್ಲಿ ಪಾಲಾಯಿತು.
ಎ.14ರಂದು ಕೊನೆಯ ಸಚಿವ ಸಂಪುಟ ಸಭೆ ನಡೆಸಲಿರುವ ನಿತೀಶ್ ಕುಮಾರ್; ಅಂದೇ ರಾಜೀನಾಮೆ ಸಾಧ್ಯತೆ
ಪಾಟ್ನಾ: ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಎಪ್ರಿಲ್ 14ರಂದು ಕೊನೆಯ ಸಚಿವ ಸಂಪುಟ ಸಭೆಯ ಅಧ್ಯಕ್ಷತೆ ವಹಿಸಲಿದ್ದು, ಅಂದೇ ತಮ್ಮ ಹುದ್ದೆಗೆ ರಾಜೀನಾಮೆ ನೀಡುವ ಸಾಧ್ಯತೆ ಇದೆ ಎಂದು ವರದಿಯಾಗಿದೆ. ವಿಧಾನಸಭೆಯ ಮುಖ್ಯ ಕಾರ್ಯಾಲಯದಲ್ಲಿ ಬೆಳಗ್ಗೆ 11 ಗಂಟೆಗೆ ಈ ಸಚಿವ ಸಂಪುಟ ಸಭೆ ನಿಗದಿಯಾಗಿದೆ. 53 ದಿನಗಳ ಬಳಿಕ ನಡೆಯುತ್ತಿರುವ ಈ ಸಚಿವ ಸಂಪುಟ ಸಭೆಯಲ್ಲಿ ರಾಜ್ಯದ ಅಭಿವೃದ್ಧಿಗೆ ಸಂಬಂಧಿಸಿದಂತೆ ಹಲವು ಮಹತ್ವದ ನಿರ್ಧಾರಗಳನ್ನು ಕೈಗೊಳ್ಳುವ ನಿರೀಕ್ಷೆ ಇದೆ. ಸಚಿವ ಸಂಪುಟ ಸಭೆಯ ಬಳಿಕ ಲೋಕ್ ಭವನಕ್ಕೆ ತೆರಳಲಿರುವ ನಿತೀಶ್ ಕುಮಾರ್, ತಮ್ಮ ರಾಜೀನಾಮೆ ಪತ್ರವನ್ನು ರಾಜ್ಯಪಾಲ ಸೈಯದ್ ಅಟಾ ಹುಸೈನ್ ಅವರಿಗೆ ಹಸ್ತಾಂತರಿಸಲಿದ್ದಾರೆ. ಈ ನಡುವೆ, ಬಿಹಾರದ ಬಿಜೆಪಿ ಶಾಸಕಾಂಗ ಪಕ್ಷದ ನಾಯಕನ ಆಯ್ಕೆಗಾಗಿ ನಡೆಯಲಿರುವ ಚುನಾವಣೆಗೆ ಹಿರಿಯ ನಾಯಕ ಹಾಗೂ ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರನ್ನು ಕೇಂದ್ರ ಚುನಾವಣಾ ವೀಕ್ಷಕರಾಗಿ ನೇಮಿಸಲಾಗಿದೆ. ರವಿವಾರ ಪಕ್ಷದ ಸಂಸದೀಯ ಮಂಡಳಿಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಬಿಹಾರದಲ್ಲಿ ಬಿಜೆಪಿ ಮುಖ್ಯಮಂತ್ರಿಯ ನಾಯಕತ್ವದಲ್ಲಿ ನೂತನ ಸರ್ಕಾರ ರಚನೆಯಾಗಲಿರುವ ಹಿನ್ನೆಲೆ ಬಿರುಸಿನ ರಾಜಕೀಯ ಚಟುವಟಿಕೆಗಳು ನಡೆಯುತ್ತಿರುವ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.
ದಕ್ಷಿಣ ಲೆಬನಾನ್ ಮೇಲೆ ಇಸ್ರೇಲ್ ದಾಳಿ: ತಂದೆಯ ಅಂತ್ಯಕ್ರಿಯೆಯ ವೇಳೆ ಮಗು ಮೃತ್ಯು
ಬೈರೂತ್, ಎ.12: ಕಳೆದ ವಾರ ಇಸ್ರೇಲ್ ನಡೆಸಿದ ದಾಳಿಯಲ್ಲಿ ಮೃತಪಟ್ಟಿದ್ದ ತನ್ನ ತಂದೆಯ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದ ಎರಡು ವರ್ಷದ ಮಗುವೊಂದು ಇತ್ತೀಚಿನ ಇಸ್ರೇಲ್ ದಾಳಿಯಲ್ಲಿ ಮೃತಪಟ್ಟಿರುವ ಘಟನೆ ದಕ್ಷಿಣ ಲೆಬನಾನ್ನಲ್ಲಿ ನಡೆದಿದೆ. ಮೃತ ಮಗುವನ್ನು ತಲೀನ್ ಎಂದು ಗುರುತಿಸಲಾಗಿದೆ. ಕಳೆದ ವಾರ ದಕ್ಷಿಣ ಲೆಬನಾನ್ ನಲ್ಲಿರುವ ತನ್ನ ನಿವಾಸದ ಮೇಲೆ ಇಸ್ರೇಲ್ ನಡೆಸಿದ್ದ ದಾಳಿಯಲ್ಲಿ ಆಕೆಯ ತಂದೆ ಮೃತಪಟ್ಟಿದ್ದರು. ಅವರ ಅಂತ್ಯಕ್ರಿಯೆಯ ಸಂದರ್ಭದಲ್ಲಿ ಮತ್ತೆ ನಡೆದ ಇಸ್ರೇಲ್ ದಾಳಿಯಲ್ಲಿ ಎರಡು ವರ್ಷದ ತಲೀನ್ ಹಾಗೂ ಆಕೆಯ ಇನ್ನಿತರ ಸಂಬಂಧಿಕರು ಮೃತಪಟ್ಟಿದ್ದಾರೆ. ಇರಾನ್ ಮತ್ತು ಅಮೆರಿಕ ನಡುವೆ ಕದನ ವಿರಾಮ ಏರ್ಪಟ್ಟ ಮೊದಲ ದಿನವಾದ ಬುಧವಾರ ಸ್ರಿಫಾ ಗ್ರಾಮದಲ್ಲಿನ ತಲೀನ್ ಕುಟುಂಬದ ನಿವಾಸದ ಮೇಲೆ ಇಸ್ರೇಲ್ ದಾಳಿ ನಡೆಸಿತ್ತು. ಈ ಕದನ ವಿರಾಮ ತಮಗೂ ಅನ್ವಯವಾಗುತ್ತದೆ ಎಂದು ಲೆಬನಾನ್ ಭಾವಿಸಿತ್ತು. ಆದರೆ, ಇಸ್ರೇಲ್ ನಡೆಸಿದ ದಾಳಿಯಲ್ಲಿ ಲೆಬನಾನ್ನಾದ್ಯಂತ ಮತ್ತೆ 350ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದು, ಈ ಪೈಕಿ ತಲೀನ್ ಕುಟುಂಬದಲ್ಲೂ ಇನ್ನೂ ನಾಲ್ವರು ಮೃತಪಟ್ಟಿದ್ದಾರೆ. ಈ ದಾಳಿಯಲ್ಲಿ ತಲೀನ್ನ ಸಹೋದರಿಯಾದ ಏಳು ವರ್ಷದ ಅಲೈನ್ ಸಯೀದ್ ಸ್ವಲ್ಪದರಲ್ಲಿ ಪಾರಾಗಿದ್ದು, ಗಂಭೀರವಾಗಿ ಗಾಯಗೊಂಡಿದ್ದಾಳೆ. “ಅವರು ಇದು ಕದನ ವಿರಾಮ ಎಂದು ಹೇಳಿದರು. ಎಲ್ಲರಂತೆ ನಾವೂ ಕೂಡ ಗ್ರಾಮಕ್ಕೆ ತೆರಳಿದೆವು. ನಾವು ಪ್ರಾರ್ಥನೆ ಮಾಡಲು ಕ್ಯಾಸ್ಕೆಟ್ ಗೆ ತೆರಳಿದೆವು, ಮನೆಯತ್ತ ಹೆಜ್ಜೆ ಹಾಕಿದೆವು. ದಿಢೀರನೆ ನಮ್ಮ ತಲೆಯ ಮೇಲೆಯೇ ಚಂಡಮಾರುತವೊಂದು ಅಪ್ಪಳಿಸಿದಂತಾಯಿತು” ಎಂದು ಈ ದಾಳಿಯಲ್ಲಿ ಬದುಕುಳಿದ ತಲೀನ್ ನ ತಾತ ನಾಸರ್ ಸಯೀದ್ ಹೇಳಿದ್ದಾರೆ. “ಮಾನವ ಹಕ್ಕುಗಳು ಎಲ್ಲಿವೆ? ಇಸ್ರೇಲ್ನಲ್ಲಿ ಒಂದು ಮಗು ಗಾಯಗೊಂಡರೆ ಇಡೀ ಜಗತ್ತೇ ಎದ್ದು ನಿಲ್ಲುತ್ತದೆ. ನಾವೂ ಜನರಲ್ಲವೆ? ನಾವೂ ಮನುಷ್ಯರಲ್ಲವೆ? ನಾವು ಕೂಡ ಅವರಂತೆಯೇ!” ಎಂದು ನಾಸರ್ ಸಯೀದ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರವಿವಾರ ದಕ್ಷಿಣ ಬಂದರು ನಗರವಾದ ಟೈರ್ನಿಂದ ಹಸಿರು ಬಟ್ಟೆಯಲ್ಲಿ ಸುತ್ತಿದ್ದ ಮೃತದೇಹಗಳನ್ನು ಸಂಗ್ರಹಿಸಲು ಅವರು ತಮ್ಮ ಸಂಬಂಧಿಕರ ಜೊತೆಗೂಡಿದ್ದರು. ಈ ಮೃತದೇಹಗಳ ಪೈಕಿ ಉಳಿದವರಿಗಿಂತ ಪುಟ್ಟ ಗಾತ್ರದಲ್ಲಿದ್ದ ಅವರ ಮೊಮ್ಮಗಳು ತಲೀನ್ ನ ಮೃತದೇಹವೂ ಇತ್ತು. ಆಕೆಗೆ ಇನ್ನೂ ಎರಡು ವರ್ಷ ಕೂಡ ಆಗಿರಲಿಲ್ಲವೆನ್ನಲಾಗಿದೆ. ಹಿಝ್ಬುಲ್ಲಾ ಹಾಗೂ ಇಸ್ರೇಲ್ ನಡುವೆ ಕೊನೆಯದಾಗಿ ನಡೆದಿದ್ದ 2024ರ ಯುದ್ಧದ ಸಂದರ್ಭದಲ್ಲಿ ತಲೀನ್ ಜನಿಸಿದ್ದಳು. “ಆಕೆ ಯುದ್ಧದ ವೇಳೆ ಜನಿಸಿದಳು, ಯುದ್ಧದ ವೇಳೆಯೇ ಮೃತಪಟ್ಟಳು” ಎಂದು ತಲೀನ್ ನ ತಾಯಿ ಘಿನ್ವಾರ ತಂದೆ ಮುಹಮ್ಮದ್ ನಝ್ಝಲ್ ಹೇಳಿದ್ದಾರೆ. ತಲೀನ್ನ ಈ ಅಕಾಲಿಕ ಮೃತ್ಯುವಿನ ಆಘಾತದಿಂದ ಆಕೆಯ ತಾಯಿ ಫಿನ್ವಾ ಇನ್ನೂ ಚೇತರಿಸಿಕೊಂಡಿಲ್ಲ.
ವಿಟ್ಲ: ಮಗುವಿನ ಕುತ್ತಿಗೆಯಲ್ಲಿದ್ದ ಚಿನ್ನದ ಸರ ಕಸಿದು ಪರಾರಿಯಾದ ಬೈಕ್ ಸವಾರ
ವಿಟ್ಲ: ಮನೆಯ ಪರಿಸರದಲ್ಲಿ ಆಟವಾಡುತ್ತಿದ್ದ ಮಗುವಿನ ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ಬೈಕಿನಲ್ಲಿ ಬಂದ ಅಪರಿಚಿತನೋರ್ವ ಕಸಿದು ಪರಾರಿಯಾದ ಘಟನೆ ವಿಟ್ಲ ಪಡ್ನೂರು ಗ್ರಾಮದ ಕೋಡಪದವು ಮದಕ ಎಂಬಲ್ಲಿ ನಡೆದಿದೆ. ಘಟನೆಯ ವಿವರ: ಕೋಡಪದವು ಮದಕದ ನಿವಾಸಿಯೊಬ್ಬರ ಮಗು ಮನೆಯ ಮುಂಭಾಗ ಆಟವಾಡುತ್ತಿದ್ದಾಗ, ಕೆಟಿಎಂ (KTM) ಬೈಕಿನಲ್ಲಿ ಬಂದ ವ್ಯಕ್ತಿಯೋರ್ವ ಮಗುವಿನ ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದಾನೆ. ಈ ಕೃತ್ಯದ ದೃಶ್ಯವು ಸಮೀಪದ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಬೈಕಿನಲ್ಲಿ ಸವಾರನು ಹೆಲ್ಮೆಟ್ ಧರಿಸಿ ವೇಗವಾಗಿ ಚಲಿಸುತ್ತಿರುವುದು ಸಿಸಿಟಿವಿ ದೃಶ್ಯಾವಳಿಯಲ್ಲಿ ಕಂಡುಬಂದಿದೆ. ವಿಟ್ಲ ಪೊಲೀಸರು ತಕ್ಷಣವೇ ಕಾರ್ಯಪ್ರವೃತ್ತರಾಗಿ, ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಆರೋಪಿಯನ್ನು ಪತ್ತೆ ಹಚ್ಚಬೇಕು. ಈ ಭಾಗದಲ್ಲಿ ಗಸ್ತು ಹೆಚ್ಚಿಸಿ, ಜನಸಾಮಾನ್ಯರು ಭಯರಹಿತವಾಗಿ ಜೀವನ ನಡೆಸಲು ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

36 C