ಉತ್ತರ ಕೊಲ್ಲಿಯಲ್ಲಿ ಅಮೆರಿಕದ ತೈಲ ಟ್ಯಾಂಕರ್ ಮೇಲೆ ದಾಳಿ: IRGC ಹೇಳಿಕೆ
ಟೆಹ್ರಾನ್: ಉತ್ತರ ಕೊಲ್ಲಿಯಲ್ಲಿ ಗುರುವಾರ ಬೆಳಿಗ್ಗೆ ತನ್ನ ನೌಕಾಪಡೆಯು ಅಮೆರಿಕದ ಟ್ಯಾಂಕರ್ ಮೇಲೆ ದಾಳಿ ಮಾಡಿದೆ ಎಂದು ಇರಾನಿನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ IRGC ಹೇಳಿಕೊಂಡಿದೆ ಎಂದು ಇರಾನ್ ನ ತಸ್ನಿಮ್ ನ್ಯೂಸ್ ಏಜೆನ್ಸಿ ಉಲ್ಲೇಖಿಸಿ aljazeera.com ವರದಿ ಮಾಡಿದೆ. ಅಮೆರಿಕ, ಇಸ್ರೇಲ್ ಹಾಗೂ ಯುರೋಪಿಯನ್ ದೇಶಗಳನ್ನು ಬೆಂಬಲಿಸುವ ರಾಷ್ಟ್ರಗಳಿಗೆ ಸೇರಿದ ಮಿಲಿಟರಿ ಮತ್ತು ವಾಣಿಜ್ಯ ಹಡಗುಗಳನ್ನು ಹಾರ್ಮುಜ್ ಜಲಸಂಧಿಯ ಮೂಲಕ ಹಾದುಹೋಗಲು ಅನುಮತಿಸಲಾಗುವುದಿಲ್ಲ. ಅಂತಹ ಹಡಗುಗಳು ಗಮನಕ್ಕೆ ಬಂದರೆ ಅವುಗಳಿಗೆ ಖಂಡಿತವಾಗಿಯೂ ಹೊಡೆತ ಬೀಳುತ್ತದೆ ಎಂದು IRGC ಎಚ್ಚರಿಕೆ ನೀಡಿದೆ. “ಯುದ್ಧದ ಸಂದರ್ಭದಲ್ಲಿ ಅಂತರರಾಷ್ಟ್ರೀಯ ಕಾನೂನುಗಳು ಮತ್ತು ನಿರ್ಣಯಗಳ ಆಧಾರದ ಮೇಲೆ, ಇಸ್ಲಾಮಿಕ್ ಗಣರಾಜ್ಯ ಇರಾನ್ಗೆ ಹಾರ್ಮುಜ್ ಜಲಸಂಧಿಯ ಮೂಲಕ ಹಾದುಹೋಗುವ ಹಡಗುಗಳನ್ನು ನಿಯಂತ್ರಿಸುವ ಹಕ್ಕು ಇದೆ ಎಂದು ನಾವು ಈ ಹಿಂದೆಯೇ ತಿಳಿಸಿದ್ದೇವೆ,” ಎಂದು IRGC ಹೇಳಿದೆ. ಈ ಕುರಿತು ಇರಾನ್ ನ ತಸ್ನಿಮ್ ನ್ಯೂಸ್ ಏಜೆನ್ಸಿ ವರದಿ ಮಾಡಿದೆ.
ಮೀನುಗಾರ ಮಹಿಳೆಯರ ಸಮಸ್ಯೆ ಸರಕಾರದ ಗಮನಕ್ಕೆ: ಡಾ.ನಾಗಲಕ್ಷ್ಮಿ ಚೌಧರಿ
ಮಂಗಳೂರು ಸ್ಟೇಟ್ ಬ್ಯಾಂಕ್ ಮೀನು ಮಾರುಕಟ್ಟೆಗೆ ಭೇಟಿ, ಸಮಸ್ಯೆ ಆಲಿಕೆ
ಇರಾನ್ ಮುಂದೆ US ಸೋಲು ಖಚಿತ: ಚೀನಾದ ನಾಸ್ಟ್ರಾಡಾಮಸ್ ಭವಿಷ್ಯವಾಣಿ! ಯಾರೀ ಪ್ರೊಫೆಸರ್ Jiang Xueqin?
ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾಗಿದೆ. ದಾಳಿ - ಪ್ರತಿದಾಳಿ ಹೆಚ್ಚಾಗುತ್ತಿರುವಾಗಲೇ ಇರಾನ್ ವಿರುದ್ಧದ ಯುದ್ಧದಲ್ಲಿ ಯುನೈಟೆಡ್ ಸ್ಟೇಟ್ಸ್ ಸೋಲು ಅನುಭವಿಸುತ್ತದೆ ಎಂದು ಚೀನಾದ ಪ್ರೊಫೆಸರ್ ಜಿಯಾಂಗ್ ಭವಿಷ್ಯ ನುಡಿದಿದ್ದ ವಿಡಿಯೋ ವೈರಲ್ ಆಗಿದೆ. ಅಂದ್ಹಾಗೆ, 2024ರಲ್ಲೇ ಜಿಯಾಂಗ್ ಈ ಭವಿಷ್ಯವಾಣಿ ನುಡಿದಿದ್ದರು. ಅದೀಗ ನಿಜವಾಗುತ್ತಾ?
BENGALURU | ಜಿಲ್ಲಾಧಿಕಾರಿ ಕಚೇರಿಯಲ್ಲಿ ಕೇಕ್ ಪಾರ್ಟಿ: ಆರೋಪಿ ಶಿರಸ್ತೇದಾರ ವಿರುದ್ಧ ದೂರು
ಬೆಂಗಳೂರು, ಮಾ.5: ಬೆಂಗಳೂರು ನಗರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸರಕಾರಿ ಅಧಿಕಾರಿಯೊಬ್ಬರು ಜನ್ಮದಿನ ಆಚರಿಸಿಕೊಂಡಿರುವುದು ತಡವಾಗಿ ಬೆಳಕಿಗೆ ಬಂದಿದ್ದು, ಈ ಸಂಬಂಧ ರಾಷ್ಟ್ರೀಯ ಅಂಬೇಡ್ಕರ್ ಸೇನೆ ಕಂದಾಯ ಸಚಿವರಿಗೆ ದೂರು ಸಲ್ಲಿಸಿದೆ. ಶಿರಸ್ತೇದಾರ ಎಚ್.ಆರ್.ಅನಿಲ್ ಕುಮಾರ್ ಎಂಬವರು, ಸಹಪಾಠಿಗಳ ಜೊತೆ ಟೇಬಲ್ ಮೇಲೆ 10 ಕೇಕ್ ಗಳನ್ನು ಕತ್ತರಿಸಿ ಹುಟ್ಟುಹಬ್ಬ ಆಚರಿಸಿಕೊಂಡಿರುವ ಭಾವಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಸರಕಾರಿ ಕಚೇರಿಗಳಲ್ಲಿ ಸರಕಾರಿ ಸಿಬ್ಬಂದಿ ಮತ್ತು ಅಧಿಕಾರಿಗಳು ಜನ್ಮದಿನ ಆಚರಿಸಬಾರದು ಎಂಬ ನಿಯಮ ಇದೆ. ಆದರೆ, ಈ ನಿಯಮ ಉಲ್ಲಂಘಿಸಿ ಬೆಂಗಳೂರು ನಗರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಅಧಿಕಾರಿ ಹುಟ್ಟಹಬ್ಬ ಆಚರಿಸಿದ್ದರೂ ಕಂದಾಯ ಇಲಾಖೆ ಈವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಇತ್ತೀಚಿಗಷ್ಟೇ ಲೋಕೋಪಯೋಗಿ ಇಲಾಖೆಯಲ್ಲಿ ಜನ್ಮದಿನ ಆಚರಿಸಿಕೊಂಡಿದ್ದವರನ್ನು ಅಮಾನತುಗೊಳಿಸಿ ಸರಕಾರಿ ಆದೇಶ ಹೊರಡಿಸಿತ್ತು. ಶಿರಸ್ತೇದಾರ ತನ್ನ ಹುಟ್ಟುಹಬ್ಬ ಆಚರಣೆಗೆ ಕಚೇರಿ ಸ್ಥಳವನ್ನು ದುರುಪಯೋಗ ಪಡಿಸಿಕೊಂಡಿರುವುದನ್ನು ವಿರೋಧಿಸಿ ರಾಷ್ಟ್ರೀಯ ಅಂಬೇಡ್ಕರ್ ಸೇನೆ ಕಂದಾಯ ಸಚಿವರಿಗೆ ದೂರು ಸಲ್ಲಿಸಿ ತಕ್ಷಣ ಅಧಿಕಾರಿ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದೆ.
BENGALURU | ಜಿಲ್ಲಾಧಿಕಾರಿ ಕಚೇರಿಯಲ್ಲಿ ಕೇಕ್ ಪಾರ್ಟಿ: ಆರೋಪಿ ಶಿರಸ್ತೇದಾರ ವಿರುದ್ಧ ಎಫ್ಐಆರ್
ಬೆಂಗಳೂರು, ಮಾ.5: ಬೆಂಗಳೂರು ನಗರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸರಕಾರಿ ಅಧಿಕಾರಿಯೊಬ್ಬರು ಜನ್ಮದಿನ ಆಚರಿಸಿಕೊಂಡಿರುವುದು ತಡವಾಗಿ ಬೆಳಕಿಗೆ ಬಂದಿದ್ದು, ಈ ಸಂಬಂಧ ರಾಷ್ಟ್ರೀಯ ಅಂಬೇಡ್ಕರ್ ಸೇನೆ ಕಂದಾಯ ಸಚಿವರಿಗೆ ದೂರು ಸಲ್ಲಿಸಿದೆ. ಶಿರಸ್ತೇದಾರ ಎಚ್.ಆರ್.ಅನಿಲ್ ಕುಮಾರ್ ಎಂಬವರು, ಸಹಪಾಠಿಗಳ ಜೊತೆ ಟೇಬಲ್ ಮೇಲೆ 10 ಕೇಕ್ ಗಳನ್ನು ಕತ್ತರಿಸಿ ಹುಟ್ಟುಹಬ್ಬ ಆಚರಿಸಿಕೊಂಡಿರುವ ಭಾವಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಸರಕಾರಿ ಕಚೇರಿಗಳಲ್ಲಿ ಸರಕಾರಿ ಸಿಬ್ಬಂದಿ ಮತ್ತು ಅಧಿಕಾರಿಗಳು ಜನ್ಮದಿನ ಆಚರಿಸಬಾರದು ಎಂಬ ನಿಯಮ ಇದೆ. ಆದರೆ, ಈ ನಿಯಮ ಉಲ್ಲಂಘಿಸಿ ಬೆಂಗಳೂರು ನಗರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಅಧಿಕಾರಿ ಹುಟ್ಟಹಬ್ಬ ಆಚರಿಸಿದ್ದರೂ ಕಂದಾಯ ಇಲಾಖೆ ಈವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಇತ್ತೀಚಿಗಷ್ಟೇ ಲೋಕೋಪಯೋಗಿ ಇಲಾಖೆಯಲ್ಲಿ ಜನ್ಮದಿನ ಆಚರಿಸಿಕೊಂಡಿದ್ದವರನ್ನು ಅಮಾನತುಗೊಳಿಸಿ ಸರಕಾರಿ ಆದೇಶ ಹೊರಡಿಸಿತ್ತು. ಶಿರಸ್ತೇದಾರ ತನ್ನ ಹುಟ್ಟುಹಬ್ಬ ಆಚರಣೆಗೆ ಕಚೇರಿ ಸ್ಥಳವನ್ನು ದುರುಪಯೋಗ ಪಡಿಸಿಕೊಂಡಿರುವುದನ್ನು ವಿರೋಧಿಸಿ ರಾಷ್ಟ್ರೀಯ ಅಂಬೇಡ್ಕರ್ ಸೇನೆ ಕಂದಾಯ ಸಚಿವರಿಗೆ ದೂರು ಸಲ್ಲಿಸಿ ತಕ್ಷಣ ಅಧಿಕಾರಿ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದೆ.
Kalaburagi | ಹೋಳಿ ಹಬ್ಬದಲ್ಲಿ ಬುರ್ಖಾ ಧರಿಸಿ ಅವಹೇಳನ: ಐವರ ವಿರುದ್ಧ ಪ್ರಕರಣ ದಾಖಲು
ಕಲಬುರಗಿ: ಹೋಳಿ ಹಬ್ಬದ ಸಂದರ್ಭ ಬುರ್ಖಾ ಧರಿಸಿ ಕೋಮು ಭಾವನೆಗೆ ಧಕ್ಕೆ ತಂದಿರುವ ಆರೋಪದಲ್ಲಿ ಐವರು ವಿರುದ್ಧ ಪ್ರಕರಣ ದಾಖಲಾಗಿದೆ. ನಿಂಬರ್ಗಾ ಗ್ರಾಮದ ನಿವಾಸಿಗಳಾದ ಪ್ರಜ್ವಲ್ ಬೆಳಮಗಿ, ಶಾಂತಪ್ಪ ಮಠಪತಿ, ನಾಗರಾಜ್ ಗೋವಣಗೊಳ, ಅನಿಲ್ ನಾಡಗಡಿ ಮತ್ತು ಚನ್ನು ದುಗೊಂಡ ಎಂಬವರು ಸೇರಿದಂತೆ ಇತರರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ಕಲಬುರಗಿ ದಕ್ಷಿಣ ಮತ ಕ್ಷೇತ್ರದ ದಲಿತ ಸೇನೆಯ ಅಧ್ಯಕ್ಷ ಸಮೀರ್ ಅವಂಟಿ ನೀಡಿರುವ ದೂರಿನಂತೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ. ಇನ್ನು, ಕೋಮು ಸೌಹಾರ್ಧಕ್ಕೆ ಧಕ್ಕೆ ತಂದಿರುವ ಆರೋಪಿಗಳನ್ನು ಕೂಡಲೇ ಬಂಧಿಸಿ, ಅವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಸೇಡಂ: ಕಾಲು ಜಾರಿ ಬಿದ್ದು ಯುವಕ ನದಿಪಾಲು
ಸೇಡಂ: ಕಾಲು ಜಾರಿ ಬಿದ್ದು ಯುವಕನೋರ್ವ ನದಿಪಾಲಾಗಿರುವ ಘಟನೆ ತಾಲೂಕಿನ ಕಾಚೂರ ಸಮೀಪದ ಕಾಗಿಣಾ ನದಿಯಲ್ಲಿ ಬುಧವಾರ ಸಂಜೆ ನಡೆದಿದೆ. ಸೇಡಂ ಪಟ್ಟಣದ ಶಾಸ್ತ್ರಿ ನಗರದ ನಿವಾಸಿ ರೂಹಾನ್ (18) ಮೃತ ಯುವಕ ಎಂದು ಗುರುತಿಸಲಾಗಿದೆ. ಬುಧವಾರ ಮಧ್ಯಾಹ್ನ ಕಾಚೂರ ಕಾಗಿಣಾ ನದಿಯಲ್ಲಿ ಕಾಲು ಜಾರಿಬಿದ್ದು ನೀರುಪಾಲಾಗಿದ್ದಾನೆ. ಬಳಿಕ ಸ್ಥಳೀಯ ಪೊಲೀಸರು, ಅಗ್ನಿಶಾಮಕ ದಳದ ಸಿಬ್ಬಂದಿಯವರು ಶೋಧ ಕಾರ್ಯ ನಡೆಸಿದರು. ನಿರಂತರ ಶೋಧ ನಡೆಸಿದ ಬಳಿಕ ಸಂಜೆ ಯುವಕನ ಮೃತದೇಹ ಪತ್ತೆಯಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಈ ಕುರಿತು ಮಳಖೇಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇರಾನ್-ಅಮೆರಿಕಾ ಮಧ್ಯೆ ಉದ್ವಿಗ್ನತೆ ಹಚ್ಚಾಗುತ್ತಿದೆ. ಈ ನಡುವೆ ಅಮೆರಿಕಾ ʼಡೂಮ್ಸ್ಡೇʼ ಎಂದೇ ಕರೆಸಿಕೊಳ್ಳುವ ಅತ್ಯಂತ ಅಪಾಯಕಾರಿ ಪರಮಾಣು ಸಾಮರ್ಥ್ಯದ ಮಿನಿಟ್ಮ್ಯಾನ್ III ಖಂಡಾತರ ಬ್ಯಾಲಿಸ್ಟಿಕ್ ಕ್ಷಿಪಣಿ ಪರೀಕ್ಷೆ ನಡೆಸಿದೆ.ಈ ಪರೀಕ್ಷೆ ಪೂರ್ವ ನಿಯೋಜಿತವಾಗಿದ್ದು, ಇರಾನ್ ಯುದ್ದಕ್ಕೂ ಇದಕ್ಕೂ ಸಂಬಂಧವಿಲ್ಲ ಎಂದು ಹೇಳಿಕೊಂಡಿದೆ. ಆದಾಗ್ಯೂ, ಪರೀಕ್ಷೆಯ ಸಮಯ ಎಲ್ಲರ ಹುಬ್ಬೇರುವಂತೆ ಮಾಡಿದ್ದು, ಇದು ಇರಾನ್ ಅನ್ನು ಬೆದರಿಸಲು US ಮಾಡುತ್ತಿರುವ ಕಾರ್ಯತಂತ್ರದ ಭಾಗ ಎಂದು ವಿಶ್ಲೇಷಿಸಲಾಗುತ್ತಿದೆ. ಹಾಗಾದ್ರೆ, ಏನಿದು ʼಡೂಮ್ಸ್ಡೇʼ ಕ್ಷಿಪಣಿ? ಇದೆಷ್ಟು ಅಪಾಯಕಾರಿ ಎಂಬ ಮಾಹಿತಿ ಇಲ್ಲಿದೆ..
ಉಳ್ಳಾಲ | ಮಿಲ್ಲತ್ ನಗರದ ಯುವಕ ಕುವೈತ್ ನಲ್ಲಿ ಆತ್ಮಹತ್ಯೆ
ಉಳ್ಳಾಲ: ಉಳ್ಳಾಲದ ಯುವಕನೋರ್ವ ಕುವೈತ್ ನಲ್ಲಿ ಆತ್ಮಹತ್ಯೆಗೈದಿರುವುದಾಗಿ ವರದಿಯಾಗಿದೆ. ಉಳ್ಳಾಲ ಮಿಲ್ಲತ್ ನಗರ ನಿವಾಸಿ ಇಬ್ರಾಹೀಂ ಎಂಬವರ ಪುತ್ರ ಯಾಕೂಬ್ ನೌಫಲ್ ಇಬ್ರಾಹೀಂ(29) ಮೃತಪಟ್ಟ ಯುವಕ. ಕುವೈತ್ ನಲ್ಲಿ ಹೌಸ್ ಡ್ರೈವರ್ ಉದ್ಯೋಗದಲ್ಲಿದ್ದ ಯಾಕೂಬ್ ನೌಫಲ್ 2024ರಲ್ಲಿ ಊರಿಗೆ ಆಗಮಿಸಿದ್ದರು. ಬಳಿಕ ಅವರು ಕುವೈತ್ ಗೆ ತೆರಳಿ ಒಂದು ವರ್ಷ ಮೂರು ತಿಂಗಳು ಕಳೆದಿದ್ದು, ಮುಂಬರುವ ಬಕ್ರೀದ್ ಗೆ ಊರಿಗೆ ಬರುವ ಸಿದ್ಧತೆಯಲ್ಲಿದ್ದರು ಎಂದು. ಈ ಮಧ್ಯೆ ಬುಧವಾರ ಅವರ ಮೃತದೇಹ ಕುವೈತ್ ನಲ್ಲಿ ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. ವಿವಾಹಿತರಾಗಿರುವ ಯಾಕೂಬ್ ನೌಫಲ್ ರಿಗೆ ಯಾವುದೇ ಕೌಟುಂಬಿಕ ಸಮಸ್ಯೆ ಇರಲಿಲ್ಲ. ಆದರೆ ಮೂರು ತಿಂಗಳಿನಿಂದ ವೇತನ ಸಿಕ್ಕಿಲ್ಲ ಎಂದು ಅವರು ಇತ್ತೀಚೆಗೆ ಮನೆಮಂದಿಯೊಂದಿಗೆ ಅಳಲು ತೋಡಿಕೊಂಡಿದ್ದರು. ಅವರ ಆತ್ಮಹತ್ಯೆ ಗೆ ನಿಖರ ಕಾರಣ ತಿಳಿದುಬಂದಿಲ್ಲ ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಆತ್ಮಹತ್ಯೆಯ ಯೋಚನೆ ಬಂದಾಗ ಅದನ್ನು ನಿಗ್ರಹಿಸಲು ರಾಜ್ಯ ಸರಕಾರದ ಅರೋಗ್ಯ ಇಲಾಖೆಯ ಹೆಲ್ಪ್ ಲೈನ್ 104 ಸಹಾಯ ಮಾಡುತ್ತದೆ. ಅದರ ಜೊತೆಗೆ Tele-MANAS ನ 14416 ಅನ್ನೂ ಸಂಪರ್ಕಿಸಬಹುದು.
Karnataka School Fee: ಬರುವ ಶೈಕ್ಷಣಿಕ ವರ್ಷದಲ್ಲಿ (2026-27) ತಮ್ಮ ಮಕ್ಕಳನ್ನು ಖಾಸಗಿ ಶಾಲೆಗೆ ಸೇರಿಸಲು ಯೋಜಿಸುತ್ತಿರುವ ಪೋಷಕರಿಗೆ ಆರ್ಥಿಕ ಹೊರೆ ಹೆಚ್ಚಾಗುವ ಸಾಧ್ಯತೆ ಇದೆ. ಶಿಕ್ಷಕರ ವೇತನ ಪರಿಷ್ಕರಣೆ ಮತ್ತು ಶಾಲಾ ನಿರ್ವಹಣಾ ವೆಚ್ಚಗಳ ಏರಿಕೆಯ ಹಿನ್ನೆಲೆಯಲ್ಲಿ ಖಾಸಗಿ ಶಾಲೆಗಳ ಶುಲ್ಕದಲ್ಲಿ ಶೇಕಡ 8 ರಿಂದ 15ರಷ್ಟು ಹೆಚ್ಚಳವಾಗಲಿದೆ ಎಂದು ಖಾಸಗಿ ಶಾಲೆಗಳ ಸಂಘಗಳು ತಿಳಿಸಿವೆ.
ದೈಹಿಕ ಶಿಕ್ಷಣ ಶಾಲೆಯಿಂದ ಮಾಯವಾಗುತ್ತಿದೆಯೇ?
ರಾಜ್ಯ ಸರಕಾರ 2026-27ರಿಂದ ಮೌಲ್ಯಶಿಕ್ಷಣ ಎನ್ನುವ ಹೊಸ ವಿಷಯವನ್ನು ಶಾಲಾ ಪಠ್ಯದಲ್ಲಿ ಸೇರಿಸಲಿದೆ. ಆದರೆ, ದೈಹಿಕ ಶಿಕ್ಷಣವೇ ಕಾಣೆಯಾಗಿದ್ದು, ದೈಹಿಕ ಶಿಕ್ಷಣ ಏನಾಯಿತು? ಇನ್ನು ಮುಂದೆ ನಮ್ಮ ಪದನಾಮವೇನು ಆಗಲಿದೆ? ವೃಂದ ನೇಮಕಾತಿ ಬದಲಾಗುತ್ತದೆಯೇ? ಹೀಗೆ ಬದಲಾದರೆ ಮುಂದೆ ತರಬೇತಿ ಕಾಲೇಜಿನಲ್ಲಿಯೂ ಅದರ ಹೆಸರು ಬದಲಾಗುತ್ತದೆಯೇ? ಎಂದು ದೈಹಿಕ ಶಿಕ್ಷಣ ಶಿಕ್ಷಕರು ಚಿಂತಿತರಾಗಿದ್ದಾರೆ. ಈ ಸಂಬಂಧ ಸರಕಾರದಿಂದಾಗಲಿ ಇಲಾಖೆಯಿಂದಾಗಲಿ ಇನ್ನೂ ಸ್ಪಷ್ಟಮಾಹಿತಿ ಸಿಕ್ಕಿಲ್ಲ. ಒಂದು ಮೂಲದ ಪ್ರಕಾರ ದೈಹಿಕ ಶಿಕ್ಷಣದ ಹೆಸರನ್ನೇ ‘ಮೌಲ್ಯ ಶಿಕ್ಷಣ’ ಎಂದು ಬದಲಾಯಿಸಲಾಗಿದೆ. ಹಾಗಾದರೆ ಇದನ್ನು ಸರಕಾರಿ ಶಾಲೆಗಳಿಗೆ ಮಾತ್ರ ಸೀಮಿತಗೊಳಿಸಿ ಖಾಸಗಿ ಮತ್ತು ಅನುದಾನಿತ ಶಾಲೆಗಳಿಗೆ ಕಡಿತಗೊಳಿಸಿರುವುದು ಯಾಕಾಗಿ ಎಂದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಈ ಹಿಂದೆ ಇದ್ದ ವ್ಯವಸ್ಥೆಯಲ್ಲಿ 2008ರಿಂದ ಪ್ರೊ.ಎಲ್.ಆರ್.ವೈದ್ಯನಾಥನ್ ವರದಿಯಂತೆ 6ರಿಂದ 10ನೇ ತರಗತಿವರೆಗೆ ಸರಕಾರಿ, ಅನುದಾನಿತ, ಅನುದಾನರಹಿತ ಶಾಲಾ ಮಕ್ಕಳಿಗೂ ದೈಹಿಕ ಶಿಕ್ಷಣ 7ನೇ ಪಠ್ಯವಾಗಿ ಜಾರಿಗೊಳಿಸಿ ಮೌಲ್ಯ ಮಾಪನ ನಡೆಸಲಾಗುತ್ತಿತ್ತು. ದೈಹಿಕ ಶಿಕ್ಷಣ ಶಿಕ್ಷಕರು ಇತರ ವಿಷಯಗಳ ಶಿಕ್ಷಕರಿಗೆ ಸಮಾನರಾಗಿದ್ದಾರೆ, ಅವರಿಗೆ ಆಡಳಿತಾತ್ಮಕವಾಗಿ ಶಾಲೆಗಳಲ್ಲಿ ಮುಖ್ಯ ಶಿಕ್ಷಕರ ಹುದ್ದೆಯನ್ನು ನೀಡುವುದರಿಂದ ದೈಹಿಕ ಶಿಕ್ಷಣದ ವಿಷಯದಲ್ಲಿಯೂ ಕಾರ್ಯಕ್ಷಮತೆಯನ್ನು ಹೆಚ್ಚಿಸಿಕೊಂಡು ಕೆಲಸ ಮಾಡಲು ಮತ್ತು ಮಕ್ಕಳನ್ನು ಶಿಸ್ತಾಗಿ ಚಟುವಟಿಕೆಯಲ್ಲಿ ತೊಡಗಿಸಲು ಸಾಧ್ಯ, ಹೀಗಾಗಿ ಅವರ ವೃಂದ ನೇಮಕಾತಿ ನಿಯಮ ಬದಲಿಸಲು ಒತ್ತಾಯವೂ ಕೇಳಿಬಂದಿತು. ದೈಹಿಕ ಶಿಕ್ಷಣ ಶಿಕ್ಷಕರಿಗೆ ಮುಖ್ಯಶಿಕ್ಷಕರ ಹುದ್ದೆ ನೀಡುವುದರ ಬಗ್ಗೆ ಸಹಶಿಕ್ಷಕರ ವಿರೋಧವಿದೆ. ದೈಹಿಕ ಶಿಕ್ಷಣದ ಬದಲಿಗೆ ಬೇರೆ ಹೆಸರು ಬಂದರೂ ಸಮಸ್ಯೆ ಆಗಲ್ಲ, ದೈಹಿಕ ಶಿಕ್ಷಣವನ್ನು ಹಿಂದಿನಿಂದ ಹೇಗೆ ನೋಡುತ್ತಿದ್ದೇವೆಯೇ ಹಾಗೆಯೇ ನೋಡುವ ಜನರಿಗೆ ಬದಲಾದ ವಿದ್ಯಮಾನಗಳಿಗೆ ಒಪ್ಪಿಸುವುದು ಕಷ್ಟ ಎಂಬುದು ಕೆಲವು ಅಧಿಕಾರಿಗಳ ವಿಶ್ಲೇಷಣೆ ಆಗಿತ್ತು. ಈ ವಿಷಯವಾಗಿ ಪರ-ವಿರೋಧಗಳ ನಡುವೆ ಡಾ. ವಿಶಾಲ್ರವರು 2022ರಲ್ಲಿ ದೈಹಿಕ ಶಿಕ್ಷಣವನ್ನು ಪಾತಾಳಕ್ಕೆ ಇಳಿಸಿಹೋದರು. ಇದರಿಂದ ತೇಜೋವಧೆಗೆ ಒಳಗಾದ ದೈಹಿಕ ಶಿಕ್ಷಣ ಶಿಕ್ಷಕರು ಹತಾಶರಾದರು. ಮಕ್ಕಳ ಹಿಡಿತ ಕೈ ತಪ್ಪಿ ಶಾಲೆಗಳಲ್ಲಿ ಅಶಿಸ್ತು ತಾಂಡವವಾಡಿತು. ಮೌಲ್ಯ ಶಿಕ್ಷಣದ ಕೂಗು ಕೇಳಿಬಂದಿತು. ಈಗ ದೈಹಿಕ ಶಿಕ್ಷಣದ ಬಗ್ಗೆ ಹಲವು ಅನುಮಾನ ಕಾಡತೊಡಗಿದೆ. ದೈಹಿಕ ಶಿಕ್ಷಣವನ್ನು ಮೂಲೆಗುಂಪು ಮಾಡಿ ಕೆಲವು ಯೋಗಕೇಂದ್ರದಲ್ಲಿ ಯೋಗ ತರಬೇತಿ ಪಡೆದವರನ್ನು ನೇಮಿಸಲು ತೆರೆ ಮರೆಯಲ್ಲಿ ಕೆಲಸ ನಡೆಯುತ್ತಿದೆಯೇ? ಅಥವಾ ದೈಹಿಕ ಶಿಕ್ಷಣದ ಕತ್ತಿಗೆ ಕತ್ತರಿ ಇಟ್ಟು ಅವರನ್ನು ಮುಖ್ಯಶಿಕ್ಷಕರ ಹುದ್ದೆಯಿಂದ ವಂಚಿಸುವ ತಂತ್ರವೇ ಎಂಬುದು ದೈಹಿಕ ಶಿಕ್ಷಣ ವಲಯದಲ್ಲಿ ಕೇಳಿಬರುತ್ತಿದೆ. ಒಟ್ಟಿನಲ್ಲಿ ದೈಹಿಕ ಶಿಕ್ಷಣ ಹಾವು ಏಣಿ ಆಟಕ್ಕೆ ಒಳಗಾಗಿ ಈಗ ಅವಸಾನದತ್ತ ಸಾಗಲು ಸಿದ್ಧವಾಗಿದೆ ಎಂಬಂತೆ ತೋರುತ್ತಿದೆ. ದೈಹಿಕ ಶಿಕ್ಷಣಕ್ಕೆ ಸರಕಾರ ನ್ಯಾಯ ಕೊಡಿಸಬೇಕೆಂದಿದ್ದರೆ ಸರಕಾರಿ, ಅನುದಾನಿತ, ಅನುದಾನ ರಹಿತ ಶಾಲೆಗಳಿಗೂ ಮೌಲ್ಯಶಿಕ್ಷಣದಲ್ಲಿ ದೈಹಿಕ ಶಿಕ್ಷಣ ಸೇರಿಸಿ ಪಠ್ಯರಚಿಸಬಹುದಾಗಿತ್ತು. ದೈಹಿಕ ಶಿಕ್ಷಣ ಎಂಬುದು ನೈಸರ್ಗಿಕವಾಗಿ ದೈಹಿಕ ಚಲನಾಶಾಸ್ತ್ರದ ಮೇಲೆ ವಿವಿಧ ಚಟುವಟಿಕೆಗಳನ್ನು ಆಯೋಜಿಸಿ ಮಕ್ಕಳನ್ನು ರಂಜಿಸಿ ಹಾಜರಾತಿ, ಕಲಿಕೆಗೆ ಪೂರಕವಾಗಿ ಶಿಕ್ಷಣದಲ್ಲಿ ಸಂಯೋಜಿಸುವ ಒಂದು ಪಠ್ಯ ವಸ್ತು ಆಗಿದ್ದು ಅದು ಇತರ ಪಠ್ಯಗಳಂತೆ ಪ್ರಧಾನ ವಿಷಯವಾಗಲಿ. ಶಿಕ್ಷಣಕ್ಕೆ ಪೂರಕವಾಗಿರುವ ದೈಹಿಕ ಶಿಕ್ಷಣದ ಕತ್ತು ಹಿಸಕಲು ಸಾಧ್ಯವಿಲ್ಲ. ಅದಕ್ಕೊಂದು ಹೊಸರೂಪವನ್ನು ಸರಕಾರ ನೀಡಲಿ. (ಲೇಖಕರು: ರಾಜ್ಯ ದೈಹಿಕ ಶಿಕ್ಷಣ ಪಠ್ಯಪುಸ್ತಕ ರಚನಾ ಸಮಿತಿ ಸದಸ್ಯರು)
ಫ್ರಿಗೇಟ್ ಡೆನಾ ನೌಕೆ ಮುಳುಗಿಸುವ ಮೂಲಕ ಕ್ರೂರ ಕೃತ್ಯ ಎಸಗಿದ ಅಮೆರಿಕ ಪಶ್ಚಾತ್ತಾಪ ಪಡಬೇಕಾಗುತ್ತದೆ: ಇರಾನ್
ಟೆಹ್ರಾನ್ : ಇರಾನ್ ನೌಕಾಪಡೆಯ ನೌಕೆ ಫ್ರಿಗೇಟ್ ಡೆನಾವನ್ನು ಮುಳುಗಿಸುವ ಮೂಲಕ ಅಮೆರಿಕ ಸಮುದ್ರದಲ್ಲಿ ಕ್ರೂರ ಕೃತ್ಯ ಎಸಗಿದೆ. ಇದಕ್ಕಾಗಿ ಅಮೆರಿಕ ಪಶ್ಚಾತ್ತಾಪ ಪಡಬೇಕಾಗುತ್ತದೆ ಎಂದು ಇರಾನ್ನ ವಿದೇಶಾಂಗ ಸಚಿವ ಅಬ್ಬಾಸ್ ಅರಾಘ್ಚಿ ಹೇಳಿದ್ದಾರೆ. ಈ ಕುರಿತು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅಬ್ಬಾಸ್ ಅರಾಘ್ಚಿ, ಇರಾನ್ ಕರಾವಳಿಯಿಂದ 2,000 ಮೈಲು ದೂರದಲ್ಲಿ ಅಮೆರಿಕ ಸಮುದ್ರದಲ್ಲಿ ಈ ಕ್ರೂರ ಕೃತ್ಯ ಎಸಗಿದೆ ಎಂದು ಹೇಳಿದ್ದಾರೆ. “ಸುಮಾರು 130 ನಾವಿಕರನ್ನು ಹೊತ್ತಿದ್ದ ಫ್ರಿಗೇಟ್ ಡೆನಾಯನ್ನು ಯಾವುದೇ ಮುನ್ನೆಚ್ಚರಿಕೆ ಇಲ್ಲದೆ ಅಂತಾರಾಷ್ಟ್ರೀಯ ಜಲಪ್ರದೇಶದಲ್ಲಿ ಹೊಡೆದುರುಳಿಸಲಾಗಿದೆ. ಅಮೆರಿಕ ಈ ಕೃತ್ಯಕ್ಕೆ ಪಶ್ಚಾತ್ತಾಪ ಪಡಲಿದೆ, ನೆನಪಿರಲಿ” ಎಂದು ಅಬ್ಬಾಸ್ ಅರಾಘ್ಚಿ ಹೇಳಿದ್ದಾರೆ. The U.S. has perpetrated an atrocity at sea, 2,000 miles away from Iran's shores. Frigate Dena, a guest of India's Navy carrying almost 130 sailors, was struck in international waters without warning. Mark my words: The U.S. will come to bitterly regret precedent it has set. pic.twitter.com/cxYiI9BLUk — Seyed Abbas Araghchi (@araghchi) March 5, 2026
ಇರಾನ್ ಸರ್ವೋಚ್ಚ ನಾಯಕ ಆಯತುಲ್ಲಾ ಅಲಿ ಖಾಮಿನೈ ಹತ್ಯೆ ಖಂಡಿಸಿ ಅಂಜುಮನ್ ಕಮಿಟಿಯಿಂದ ಸಂತಾಪ
ರಾಯಚೂರು: ಇರಾನ್ ದೇಶದ ಸರ್ವೋಚ್ಚ ನಾಯಕ ಆಯತುಲ್ಲಾ ಅಲಿ ಖಾಮಿನೈ ಅವರ ಹತ್ಯೆಯನ್ನು ಖಂಡಿಸಿ ಅಂಜುಮನ್-ಎ-ಮುಸ್ಲಿಮೀನ್ ಲಿಂಗಸುಗೂರು ತಾಲೂಕು ಕಮಿಟಿಯ ವತಿಯಿಂದ ಗಡಿಯಾರ ಚೌಕ್ ಬಳಿ ಬುಧವಾರ ರಾತ್ರಿ ಸಂತಾಪ ಕಾರ್ಯಕ್ರಮ ನಡೆಯಿತು. ಈ ಸಂದರ್ಭ ಮುಖಾಂಡರಾದ ಕೆಎಫ್ಸಿ ಮೊಹಮ್ಮದ್, ಫೈಸಲ್ ಚಾವುಸ್, ಇಬ್ರಾಹಿಂ, ಅಬ್ದುಲ್ ವಾಹಿದ್, ಅಂಜುಮನ್ ಲಿಂಗಸೂಗೂರ ತಾಲೂಕು ಕಮಿಟಿಯ ಗೌರವ ಅಧ್ಯಕ್ಷರಾದ ಅನ್ಸಾರುದ್ದಿನ್, ಅಧ್ಯಕ್ಷ ಹುಸೇನ್ ಭಾಷಾ ಕೆ., ಪ್ರಧಾನ ಕಾರ್ಯದರ್ಶಿ ಅಮೀನ್ ಭಾಯಿ, ವಿವಿಧ ತಾಲೂಕು ಹಾಗೂ ಹೋಬಳಿ ಘಟಕದ ಪದಾಧಿಕಾರಿಗಳಾದ ಮಹ್ಮದ್ ರಸೂಲ್, ದಾದಾಪೀರ್ ಭಾಯಿ, ರಾಜಸಾಬ್, ರಫಿ ಸಂಪಂಗಿ, ಮೌಲಾ ಭಾಯಿ, ವಸಿಂ, ಹಝ್ರತ್, ಫಾರೂಕ್, ಖಾಸಿಂ ಉಪಸ್ಥಿತರಿದ್ದರು.
ದುಬೈನಲ್ಲಿ ಸಿಲುಕಿದ್ದ ಬಳ್ಳಾರಿಯ 27 ಪ್ರವಾಸಿಗರು ಇಂದು ಬೆಂಗಳೂರಿಗೆ ವಾಪಸ್
ಅಮೆರಿಕಾ -ಇರಾನ್ ನಡುವಿನ ಸಂಘರ್ಷದಿಂದ ಮಧ್ಯಪ್ರಾಚ್ಯ ದೇಶಗಳಲ್ಲಿ ಉದ್ವಿಗ್ನತೆ ಉಂಟಾಗಿದೆ. ಆತಂಕದ ವಾತಾವರಣ ನಿರ್ಮಾಣವಾಗಿದೆ. ಇದೀಗ ದುಬೈನಲ್ಲಿ ಸಿಲುಕಿದ್ದ ಬಳ್ಳಾರಿ, ಚಿತ್ರದುರ್ಗದ ಪ್ರವಾಸಿಗರು ನಾಲ್ಕು ದಿನದ ಬಳಿಕ ಇಂದು ಬೆಳಗ್ಗೆ ಬೆಂಗಳೂರಿಗೆ ಸುರಕ್ಷಿತವಾಗಿ ವಾಪಸಾಗಿದ್ದಾರೆ.
Gold Rate March 05: ಮಧ್ಯಪ್ರಾಚ್ಯದಲ್ಲಿ ಅಮೆರಿಕ, ಇಸ್ರೇಲ್ Vs ಇರಾನ್ ನಡುವೆ ತೀವ್ರ ಯುದ್ಧ ನಡೆಯುತ್ತಿದ್ದು, ದಿನದಿಂದ ದಿನಕ್ಕೆ ಪರಿಸ್ಥಿತಿ ಬಿಗಡಾಯಿಸುತ್ತಿದೆ. ಸಾಮಾನ್ಯವಾಗಿ ಭೌಗೋಳಿಕವಾಗಿ ಸಮಸ್ಯೆಗಳು ಎದುರಾದಾಗೆಲ್ಲವೂ ಚಿನ್ನ ಮತ್ತು ಬೆಳ್ಳಿ ಬೆಲೆಯು ಏಕಾಏಕಿ ಹೆಚ್ಚಳವಾಗುವುದು ಇದೆ. ಆದರೆ ಇದೀಗ ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ ಅಚ್ಚರಿಯ ಬೆಳವಣಿಗೆ ನಡೆದಿದೆ. ಚಿನ್ನ ಮತ್ತು ಬೆಳ್ಳಿ ಬೆಲೆಯು
ಸಿಬಿಐ ಹಿನ್ನೆಲೆ ಕೆದಕುತ್ತಾ ಹೋದರೆ ಆತಂಕದ ವಿಷಯಗಳು ಬಿಚ್ಚಿಕೊಳ್ಳುತ್ತವೆ. ಇಷ್ಟಾದರೂ ಜನರಿಗೆ ಸಿಬಿಐ ಮೇಲಿನ ನಂಬಿಕೆ ಕಡಿಮೆಯಾಗಿಲ್ಲ. ಈಗಲೂ ರಾಜ್ಯ ಪೊಲೀಸರ ಮೇಲೆ ಅಪನಂಬಿಕೆ ಹೊಂದಿರುವ ಜನ ಸೂಕ್ಷ್ಮ ಪ್ರಕರಣಗಳ ತನಿಖೆಯನ್ನು ಸಿಬಿಐಗೆ ಒಪ್ಪಿಸುವಂತೆ ಆಗ್ರಹಿಸುವುದು ಕಂಡುಬರುತ್ತದೆ. ಸಿಬಿಐ ತನಿಖೆ ನಡೆದರೆ ಸತ್ಯಾಸತ್ಯತೆ ಹೊರಬಂದು ನಿಜ ಆರೋಪಿಗಳಿಗೆ ಶಿಕ್ಷೆಯಾಗಬಹುದೆಂಬ ಸಣ್ಣ ಭರವಸೆ ಇದಕ್ಕೆ ಕಾರಣ. ಪೊಲೀಸರಿಗಿಂತ ಸಿಬಿಐನಲ್ಲಿ ಕೆಲಸ ಮಾಡುವ ಅಧಿಕಾರಿಗಳು ದಕ್ಷತೆ-ವೃತ್ತಿಪರತೆ ಹಾಗೂ ನೈಪುಣ್ಯ ವಿಷಯದಲ್ಲಿ ಮುಂದಿದ್ದಾರೆ ಎಂಬುದು ಅವರ ಭಾವನೆ. ಈ ನಂಬಿಕೆ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಕೇಂದ್ರ ಸರಕಾರ ಚಿಂತಿಸಬೇಕಿದೆ. ದಿಲ್ಲಿ ಮಾಜಿ ಮುಖ್ಯಮಂತ್ರಿ ಮತ್ತು ‘ಆಮ್ ಆದ್ಮಿ ಪಕ್ಷ’ದ (ಎಎಪಿ) ಮುಖಂಡ ಅರವಿಂದ ಕೇಜ್ರಿವಾಲ್ ಸೋತು, ಗೆದ್ದಿದ್ದಾರೆ. ವಿಧಾನಸಭೆ ಚುನಾವಣೆಯಲ್ಲಿ ಸೋತರೂ, ‘ಅಬಕಾರಿ ನೀತಿ ಹಗರಣ’ದ ಕಾನೂನು ಸಮರದಲ್ಲಿ ಗೆದ್ದು ಆರೋಪ ಮುಕ್ತರಾಗಿದ್ದಾರೆ. ಅಷ್ಟೇ ಅಲ್ಲ, ಭ್ರಷ್ಟಾಚಾರ ಆರೋಪಕ್ಕೆ ಒಳಗಾಗಿದ್ದವರೆಲ್ಲರೂ ನಿರಾಳರಾಗಿದ್ದಾರೆ. ತನಿಖಾಧಿಕಾರಿಗಳನ್ನು ದಿಲ್ಲಿ ‘ರೌಸ್ ಅವೆನ್ಯೂ ಕೋರ್ಟ್’ ಹಿಗ್ಗಾಮುಗ್ಗ ಜಾಡಿಸಿದೆ. ‘‘ಆರೋಪ ಸಾಬೀತುಪಡಿಸುವ ಯಾವುದೇ ಸಾಕ್ಷ್ಯಾಧಾರಗಳೂ ಇಲ್ಲದಿರುವುದರಿಂದ ಪ್ರಕರಣ ವಿಚಾರಣೆಗೆ ಯೋಗ್ಯವಲ್ಲ’’ ಎಂದು ಹೇಳಿದೆ. ಕೇಜ್ರಿವಾಲ್ ಹಾಗೂ ಅವರ ಸಹೊದ್ಯೋಗಿಗಳು ಆರೋಪ ಮುಕ್ತರಾಗಿ ಹೊರ ಬರುವ ನಿರೀಕ್ಷೆ ‘ಕೇಂದ್ರ ತನಿಖಾ ದಳ’ (ಸಿಬಿಐ) ಅಥವಾ ಅವರ ರಾಜಕೀಯ ವೈರಿಗಳಿಗೆ, ಅದರಲ್ಲೂ ಬಿಜೆಪಿ ನಾಯಕರಿಗೆ ಇರಲಿಲ್ಲ. ತನಿಖೆ ಕುರಿತು ಕೋರ್ಟ್ ಕಟುವಾಗಿ ಟೀಕಿಸಿರುವುದನ್ನು ಗಮನಿಸಿದರೆ, ಇದು ‘ರಾಜಕೀಯ ಪ್ರೇರಿತ ಪ್ರಕರಣ’ ಎಂದು ಹೇಳಬಹುದು. ಹಗರಣ ರಾಜಕೀಯವಾಗಿಯೂ ಸೂಕ್ಷ್ಮವಾಗಿರುವುದರಿಂದ ಕೆಳ ಹಂತದ ಕೋರ್ಟ್ ಬೇಕಾಬಿಟ್ಟಿ ವಿಚಾರಣೆ ನಡೆಸಿರುವುದಿಲ್ಲ. ಎಲ್ಲ ಅಂಶಗಳನ್ನು ಪರಿಶೀಲಿಸಿಯೇ ತೀರ್ಪು ನೀಡಿರುತ್ತದೆ. ಆರೋಪದಲ್ಲಿ ಕೂದಲೆಳೆಯ ಅನುಮಾನ (ಅಯೋಟಾ ಆಫ್ ಡೌಟ್) ಇದ್ದರೂ ಕೇಜ್ರಿವಾಲ್ ಕಾನೂನಿನ ಕುಣಿಕೆಯಿಂದ ತಪ್ಪಿಸಿಕೊಳ್ಳುವುದು ಕಷ್ಟವಿತ್ತು. ಈ ತೀರ್ಪಿನ ವಿರುದ್ಧ ಸಿಬಿಐ ಮೇಲ್ಮನವಿ ಸಲ್ಲಿಸುತ್ತಿದೆ. ಸಾಮಾನ್ಯವಾಗಿ ಮೇಲಿನ ಕೋರ್ಟ್ ಗಳು ಅಧೀನ ನ್ಯಾಯಾಲಯಗಳ ತೀರ್ಪನ್ನು ಬದಿಗೊತ್ತುವುದು ಅಪರೂಪ. ಅಪ್ಲಿಕೇಷನ್ ಆಫ್ ಫ್ಯಾಕ್ಟ್ಸ್, ಅಪ್ಲಿಕೇಷನ್ ಆಫ್ ಎವಿಡೆನ್ಸ್ ಅಥವಾ ಅಪ್ಲಿಕೇಷನ್ ಆಫ್ ಮೈಂಡ್ನಲ್ಲಿ ಲೋಪ ಅಥವಾ ಎರರ್ ಆಫ್ ಜಡ್ಜ್ ಮೆಂಟ್ ಇದ್ದರೆ ತದ್ವಿರುದ್ಧ ತೀರ್ಪು ಬರುತ್ತವೆ. ಅಧೀನ ನ್ಯಾಯಾಲಯ ಹಾಗೇನಾದರೂ ಮಾಡಿದ್ದರೆ ಮೇಲಿನ ಕೋರ್ಟ್ ಕಟುವಾದ ಆಕ್ಷೇಪ (ಸ್ಟ್ರಿಕ್ಚರ್ ಪಾಸ್ ಮಾಡುವ) ಎತ್ತುವ ಸಾಧ್ಯತೆಗಳಿರುತ್ತವೆ. ಇದರ ಬಗ್ಗೆಯೂ ಅಧೀನ ನ್ಯಾಯಾಲಯಗಳ ನ್ಯಾಯಾಧೀಶರಿಗೆ ಭಯವಿರುತ್ತದೆ. ಹೀಗಾಗಿ, ಸೂಕ್ಷ್ಮಾತಿಸೂಕ್ಷ್ಮ ಪ್ರಕರಣಗಳಲ್ಲಿ ತೀರ್ಪು ಕೊಡುವಾಗ ಎಚ್ಚರಿಕೆ ವಹಿಸುವುದುಂಟು. ದಿಲ್ಲಿ ಕೋರ್ಟ್ ತೀರ್ಪಿನಿಂದ ಸಿಬಿಐ ನಡೆ ಮತ್ತೊಮ್ಮೆ ಅನುಮಾನಕ್ಕೆ ಎಡೆಮಾಡಿದೆ. ಸಿಬಿಐ, ಈ.ಡಿ., ಐ.ಟಿ ಮತ್ತಿತರ ಸಂಸ್ಥೆಗಳ ಮೇಲಿನ ಅಪನಂಬಿಕೆ ಹೊಸದಲ್ಲ. ಅಧಿಕಾರದಲ್ಲಿರುವ ಪಕ್ಷ ತನ್ನ ಎದುರಾಳಿಗಳನ್ನು ಬಗ್ಗುಬಡಿಯಲು ಈ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತದೆ ಎಂಬ ಆರೋಪವೂ ನಿರಂತರವಾಗಿದೆ. ಇದಕ್ಕೆ ಆ ಪಕ್ಷ, ಈ ಪಕ್ಷ ಎಂದೇನಿಲ್ಲ. ಕೆಲವು ಪ್ರಮುಖ ಪ್ರಕರಣಗಳ ತನಿಖೆಯಲ್ಲಿ ಸಿಬಿಐ, ಈ.ಡಿ. ನಿಷ್ಪಕ್ಷವಾಗಿರದೆ ಕಳಂಕ ಹೊತ್ತಿವೆ. ವೃತ್ತಿಪರತೆ, ದಕ್ಷತೆ ಮೆರೆಯಬೇಕಿದ್ದ ಸಂಸ್ಥೆಗಳು ಸರಕಾರದ ಕೈಗೊಂಬೆಯಾಗಿ ಕುಣಿಯುತ್ತಿವೆ. ಸುಪ್ರೀಂ ಕೋರ್ಟ್, ‘ಸಿಬಿಐ ಪಂಜರದ ಗಿಳಿ. ಸ್ವತಂತ್ರವಲ್ಲ. ಪೊಲಿಟಿಕಲ್ ಬಾಸ್ಗಳ ಬಾಲಂಗೋಚಿ. ಅವರ ದನಿಯಲ್ಲೇ ಮಾತನಾಡುತ್ತದೆ’ ಎಂದು ಲೇವಡಿ ಮಾಡಿತ್ತು. ಕಲ್ಲಿದ್ದಲು, ಎರಡನೇ ತಲೆಮಾರಿನ ತರಂಗಾಂತರ ಹಗರಣದ ವಿಚಾರಣೆ ವೇಳೆ ಅಫೆಕ್ಸ್ ಕೋರ್ಟ್ ಈ ಅಭಿಪ್ರಾಯ ವ್ಯಕ್ತಪಡಿಸಿತ್ತು. ಆಗ ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರಕಾರ ಕೇಂದ್ರದಲ್ಲಿತ್ತು. ‘ಕಲ್ಲಿದ್ದಲು ಹಗರಣ’ದಲ್ಲಿ ಸುಪ್ರೀಂ ಕೋರ್ಟ್ಗೆ ಸಲ್ಲಿಸಿದ ಕರಡು ವರದಿಯನ್ನು ತಿದ್ದಿದ ಹಿನ್ನೆಲೆಯಲ್ಲಿ ಯುಪಿಎ- 2 ಸರಕಾರದ ಕಾನೂನು ಮಂತ್ರಿ ಅಶ್ವನಿ ಕುಮಾರ್ ರಾಜೀನಾಮೆ ಕೊಡಬೇಕಾಯಿತು. ಮನಮೋಹನ್ ಸಿಂಗ್ ಬಗ್ಗೆ ಯಾರು ಏನೇ ಟೀಕಿಸಿದರೂ, ‘ಮೌನಿ ಸಿಂಗ್’ ಎಂದು ಜರಿದರೂ ಇಂಥ ವಿಷಯಗಳಲ್ಲಿ ಸೂಕ್ಷ್ಮವಾಗಿದ್ದರು. ಈ ಸಂದರ್ಭ ಈಗ ಎದುರಾಗಿದ್ದರೆ ಕಾನೂನು ಸಚಿವರು ರಾಜೀನಾಮೆ ನೀಡುವುದಿರಲಿ, ಎನ್ಡಿಎ ಸರಕಾರದ ಮುಖಂಡರು ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ. ಇಕ್ಕಟ್ಟಿನಿಂದ ಪಾರಾಗಲು ದಾರಿ ಹುಡುಕುತ್ತಿದ್ದರು. ದಿಲ್ಲಿ ವಿಶೇಷ ಪೊಲೀಸ್ ಕಾಯ್ದೆ ಅಡಿ 1963ರಲ್ಲಿ ಕೇಂದ್ರ ತನಿಖಾ ದಳ (ಸಿಬಿಐ) ಸ್ಥಾಪನೆ ಆದರೂ ಅದಕ್ಕೆ ಮಹತ್ವ ಬಂದಿದ್ದು 1980- 90ರ ದಶಕದಲ್ಲಿ. ‘ಬೋಫೋರ್ಸ್ ಹೌವಿಟ್ಝರ್’ ಖರೀದಿ ವ್ಯವಹಾರದಲ್ಲಿ ಕಮಿಷನ್ ಪಡೆಯಲಾಗಿದೆ ಎಂಬ ಆರೋಪ ಕುರಿತಾದ ತನಿಖೆಯನ್ನು ಸಿಬಿಐ ನಡೆಸಿದ ಬಳಿಕ. ಭ್ರಷ್ಟಾಚಾರ ಆರೋಪದ ಮಸಿ ಆಗಿನ ರಾಜೀವ್ ಗಾಂಧಿ ಸರಕಾರಕ್ಕೆ ಮೆತ್ತಿಕೊಂಡಿತ್ತು. ಬಳಿಕ, ಒಂದರ ಹಿಂದೆ ಒಂದರಂತೆ ರಾಜಕಾರಣಿಗಳು ಭಾಗಿಯಾದ ಪ್ರಕರಣಗಳು ಹೊರ ಬಂದವು. ಇದು ರಾಜಕಾರಣದಲ್ಲಿ ಭ್ರಷ್ಟಾಚಾರ ಹೆಚ್ಚುತ್ತಿರುವುದಕ್ಕೆ ಸಾಕ್ಷಿಯಾಯಿತು. ಡಾ. ಸಿಂಗ್ ಸರಕಾರಕ್ಕೆ ಕಳಂಕ ಹಚ್ಚಿದ ಎರಡನೇ ತಲೆಮಾರಿನ ತರಂಗಾಂತರ ಮಾರಾಟ ಪ್ರಕ್ರಿಯೆ ಹಗರಣದಲ್ಲಿ ಸೂಕ್ತ ಸಾಕ್ಷ್ಯಾಧಾರಗಳಿಲ್ಲದ ಕಾರಣ ಆಗಿನ ದೂರ ಸಂಪರ್ಕ ಸಚಿವ ಎ. ರಾಜಾ, ಲೋಕಸಭೆ ಡಿಎಂಕೆ ಸದಸ್ಯೆ ಕನಿಮೋಳಿ ಸೇರಿದಂತೆ ಎಲ್ಲ 19 ಆರೋಪಿಗಳನ್ನು ಖುಲಾಸೆಗೊಳಿಸಲಾಯಿತು. ಕಲ್ಲಿದ್ದಲು ಹಗರಣದಲ್ಲಿ ಮಾತ್ರ ಮಾಜಿ ಕಲ್ಲಿದ್ದಲು ಕಾರ್ಯದರ್ಶಿ ಎಚ್.ಸಿ. ಗುಪ್ತಾ ಮತ್ತಿತರರಿಗೆ ಶಿಕ್ಷೆ ಆಯಿತು. ‘ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ’ಯಡಿ ಸಿಬಿಐ ತನಿಖೆ ನಡೆಸಿದ ಪ್ರಕರಣಗಳಲ್ಲಿ ಶಿಕ್ಷೆ ಪ್ರಮಾಣ ಶೇ. 65- 75ರಷ್ಟಿದೆ ಎಂದು ಹೇಳಿಕೊಂಡರೂ ಪ್ರಭಾವಿಗಳು- ಗಣ್ಯರು ಆರೋಪಿಗಳಾಗಿರುವ ಪ್ರಕರಣಗಳಲ್ಲಿ ಶಿಕ್ಷೆ ಪ್ರಮಾಣ ಅತೀ ಕಡಿಮೆ ಇದೆ. ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್ಎ) ಅಡಿಯಲ್ಲಿ ದಾಖಲಾದ ಪ್ರಕರಣಗಳ ತನಿಖೆಯನ್ನು ‘ಜಾರಿ ನಿರ್ದೇಶನಾಲಯ’ (ಈ.ಡಿ.) ನಡೆಸುತ್ತದೆ. ಆದಾಯ ತೆರಿಗೆ ಇಲಾಖೆ, ಸಿಬಿಐ ಮತ್ತಿತರ ತನಿಖಾ ಸಂಸ್ಥೆಗಳು ನಡೆಸಿದ ದಾಳಿ ವೇಳೆ ಅಕ್ರಮ ಹಣ ವರ್ಗಾವಣೆ ಆಗಿರುವುದು ಕಂಡುಬಂದರೆ ಈ.ಡಿ. ಜತೆ ಮಾಹಿತಿ ಹಂಚಿಕೊಳ್ಳುತ್ತವೆ. ಬಳಿಕ ಈ.ಡಿ. ಪ್ರವೇಶ ಮಾಡುತ್ತದೆ. ಈ.ಡಿ. ತನಿಖೆ ಮಾಡಿರುವ ಪ್ರಕರಣಗಳಲ್ಲಿ ಶಿಕ್ಷೆ ಪ್ರಮಾಣ ಶೇ. 94ಕ್ಕಿಂತಲೂ ಅಧಿಕ ಎಂದು ಹಣಕಾಸು ಖಾತೆ ರಾಜ್ಯ ಸಚಿವ ಪಂಕಜ್ ಚೌಧರಿ ಕಳೆದ ಡಿಸೆಂಬರ್ನಲ್ಲಿ ಲೋಕಸಭೆಗೆ ಹೇಳಿದ್ದಾರೆ. ಆದರೆ, ಸಿಬಿಐ, ಈ.ಡಿ. ಮತ್ತಿತರ ಸಂಸ್ಥೆಗಳ ತನಿಖಾ ಗುಣಮಟ್ಟದ ಬಗ್ಗೆ ಕೋರ್ಟ್ ಆಗಾಗ ಕಿವಿ ಹಿಂಡುತ್ತಲೇ ಇರುತ್ತದೆ. ಈ ಸಾಲಿಗೀಗ ಅಬಕಾರಿ ನೀತಿ ಪ್ರಕರಣ ಸೇರಿಕೊಂಡಿದೆ. ಕಳಪೆ ಗುಣಮಟ್ಟದ ತನಿಖೆಯೊಂದರಿಂದಲೇ ಸಿಬಿಐ ವಿಶ್ವಾಸಾರ್ಹತೆ ಕುಗ್ಗಿಲ್ಲ. ಇನ್ನು ಕೆಲವು ಕಾರಣಗಳಿವೆ. ಸಿಬಿಐ ನಿರ್ದೇಶಕರ ನೇಮಕವೂ ಆಗಾಗ ವಿವಾದಕ್ಕೆ ಒಳಗಾಗುತ್ತಿದೆ. ಪ್ರಧಾನಿ ನೇತೃತ್ವದ ಉನ್ನತ ಸಮಿತಿ ನಿರ್ದೇಶಕರನ್ನು ಆಯ್ಕೆ ಮಾಡುತ್ತದೆ. ಮುಖ್ಯ ನ್ಯಾಯಮೂರ್ತಿ ಮತ್ತು ಲೋಕಸಭೆ ವಿರೋಧ ಪಕ್ಷದ ನಾಯಕರೂ ಸಮಿತಿಯಲ್ಲಿರುತ್ತಾರೆ. 2025ರ ಮೇ 5ರಂದು ನಿರ್ದೇಶಕರ ಆಯ್ಕೆಗೆ ಸಮಿತಿ ಸಭೆ ಸೇರಿತ್ತು. ಉನ್ನತ ಹುದ್ದೆಗೆ ಕೆಲವು ಹೆಸರು ಶಿಫಾರಸಾಗಿತ್ತು. ಸಮಿತಿ ಒಮ್ಮತಕ್ಕೆ ಬರಲಾಗದ್ದರಿಂದ ಈಗಿನ ನಿರ್ದೇಶಕ, ಕರ್ನಾಟಕ ಕೇಡರ್ ಐಪಿಎಸ್ ಅಧಿಕಾರಿ ಪ್ರವೀಣ್ ಸೂದ್ ಅವರನ್ನೇ ಒಂದು ವರ್ಷ ಮುಂದುವರಿಸಲಾಗಿದೆ. ವಿವಾದ ಇದಲ್ಲ. ಈ ಹಿಂದೆಯೂ ಸಿಬಿಐ ನಿರ್ದೇಶಕರು ಹಾಗೂ ವಿಶೇಷ ನಿರ್ದೇಶಕರ ನೇಮಕ ದೊಡ್ಡ ವಿವಾದವಾಯಿತು. ಇದಾಗಿದ್ದು ಎನ್ಡಿಎ-1 ಸರಕಾರದಲ್ಲಿ. ಇಬ್ಬರು ಅಧಿಕಾರಿಗಳ ಕಿತ್ತಾಟ ಬೀದಿಗೆ ಬಂದಿತ್ತು. ಇದು ದೇಶದ ಉನ್ನತ ತನಿಖಾ ಸಂಸ್ಥೆಯ ವರ್ಚಸ್ಸಿಗೂ ವ್ಯಾಪಕ ಧಕ್ಕೆ ಮಾಡಿತು. 2017ರ ಫೆಬ್ರವರಿಯಲ್ಲಿ ಸಿಬಿಐ ನಿರ್ದೇಶಕರಾಗಿ ನೇಮಕವಾಗಿದ್ದ 1984ರ ಬ್ಯಾಚ್ ಅಧಿಕಾರಿಯೊಬ್ಬರು ತಮ್ಮದೇ ಬ್ಯಾಚ್ನ ಐಪಿಎಸ್ ಅಧಿಕಾರಿಯೊಬ್ಬರನ್ನು ವಿಶೇಷ ನಿರ್ದೇಶಕರಾಗಿ ನೇಮಿಸಿದ್ದನ್ನು ವಿರೋಧಿಸಿದ್ದರು. ಅವರ ವಿರುದ್ಧ ಹಲವು ಆರೋಪಗಳನ್ನು ಮಾಡಿದ್ದರು. ಈ ಕಿತ್ತಾಟ ಯಾವ ಹಂತ ತಲುಪಿತೆಂದರೆ, ಸಿಬಿಐ ತನ್ನದೇ ವಿಶೇಷ ನಿರ್ದೇಶಕರ ವಿರುದ್ಧ ಎರಡು ಕೋಟಿ ರೂ. ಲಂಚ ಸ್ವೀಕರಿಸಿದ ಆರೋಪದ ಮೇಲೆ ಎಫ್ಐಆರ್ ದಾಖಲಿಸಿತ್ತು. ಮಾಂಸದ ರಫ್ತುದಾರರಿಗೆ ಸಂಬಂಧಿಸಿದ ಪ್ರಕರಣದಿಂದ ಪಾರಾಗಲು ಉದ್ಯಮಿಯೊಬ್ಬರಿಂದ ಲಂಚ ಪಡೆದರೆಂಬ ಆರೋಪ ಪ್ರಕರಣ ಇದಾಗಿತ್ತು. ತಮ್ಮ ಸಹೋದ್ಯೋಗಿ ನಿರ್ದೇಶಕರ ಮೇಲೆ ವಿಶೇಷ ನಿರ್ದೇಶಕರೂ ಇಂತಹದೇ ಆರೋಪ ಮಾಡಿದ್ದರು. ಮಾಂಸದ ರಫ್ತುದಾರರು ಹವಾಲಾ ಹಗರಣಗಳಲ್ಲಿ ಭಾಗಿಯಾದ ಆರೋಪಕ್ಕೆ ಒಳಗಾಗಿದ್ದರು. ಅವರ ವಿರುದ್ಧ ಸಿಬಿಐ ತನಿಖೆಯೂ ನಡೆಯುತ್ತಿತ್ತು. ಬಳಿಕ ಸರಕಾರ ಇಬ್ಬರೂ ಅಧಿಕಾರಿಗಳನ್ನು ಕಡ್ಡಾಯ ರಜೆಯ ಮೇಲೆ ಕಳಿಸಿತ್ತು. ಆಮೇಲೆ ನಿರ್ದೇಶಕರನ್ನು ಸುಪ್ರೀಂ ಕೋರ್ಟ್ ಮರು ನೇಮಕ ಮಾಡಿತು. ಎರಡೇ ದಿನದಲ್ಲಿ ಹೊಸ ನಿರ್ದೇಶಕರನ್ನು ನೇಮಿಸಲಾಯಿತು. ಸಿಬಿಐ ತನಿಖೆ ನಡೆಸುತ್ತಿರುವ ಪ್ರಕರಣಗಳನ್ನು ಕುತೂಹಲದಿಂದ ಗಮನಿಸುತ್ತಿರುವ ಕೆಲವರಿಗೆ ಯುಪಿಎ ಸರಕಾರ-2 ಅವಧಿಯಲ್ಲಿ ಸಿಬಿಐ ನಿರ್ದೇಶಕರಾಗಿದ್ದ ಐಪಿಎಸ್ ಅಧಿಕಾರಿಯೊಬ್ಬರು ಮಾಂಸದ ವ್ಯಾಪಾರಿಯ ಹವಾಲ ವ್ಯವಹಾರದ ತನಿಖೆಯಲ್ಲಿ ಪ್ರಭಾವ ಬೀರಲು ಯತ್ನಿಸಿದ್ದು ನೆನಪಿರಬಹುದು. ಸಿಬಿಐ ಹಿನ್ನೆಲೆ ಕೆದಕುತ್ತಾ ಹೋದರೆ ಆತಂಕದ ವಿಷಯಗಳು ಬಿಚ್ಚಿಕೊಳ್ಳುತ್ತವೆ. ಇಷ್ಟಾದರೂ ಜನರಿಗೆ ಸಿಬಿಐ ಮೇಲಿನ ನಂಬಿಕೆ ಕಡಿಮೆಯಾಗಿಲ್ಲ. ಈಗಲೂ ರಾಜ್ಯ ಪೊಲೀಸರ ಮೇಲೆ ಅಪನಂಬಿಕೆ ಹೊಂದಿರುವ ಜನ ಸೂಕ್ಷ್ಮ ಪ್ರಕರಣಗಳ ತನಿಖೆಯನ್ನು ಸಿಬಿಐಗೆ ಒಪ್ಪಿಸುವಂತೆ ಆಗ್ರಹಿಸುವುದು ಕಂಡುಬರುತ್ತದೆ. ಸಿಬಿಐ ತನಿಖೆ ನಡೆದರೆ ಸತ್ಯಾಸತ್ಯತೆ ಹೊರಬಂದು ನಿಜ ಆರೋಪಿಗಳಿಗೆ ಶಿಕ್ಷೆಯಾಗಬಹುದೆಂಬ ಸಣ್ಣ ಭರವಸೆ ಇದಕ್ಕೆ ಕಾರಣ. ಪೊಲೀಸರಿಗಿಂತ ಸಿಬಿಐನಲ್ಲಿ ಕೆಲಸ ಮಾಡುವ ಅಧಿಕಾರಿಗಳು ದಕ್ಷತೆ-ವೃತ್ತಿಪರತೆ ಹಾಗೂ ನೈಪುಣ್ಯ ವಿಷಯದಲ್ಲಿ ಮುಂದಿದ್ದಾರೆ ಎಂಬುದು ಅವರ ಭಾವನೆ. ಈ ನಂಬಿಕೆ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಕೇಂದ್ರ ಸರಕಾರ ಚಿಂತಿಸಬೇಕಿದೆ. ರಾಜಕೀಯ ಪ್ರಭಾವಕ್ಕೆ ಒಳಗಾಗದೆ, ಮುಕ್ತ- ಪಾರದರ್ಶಕವಾಗಿ ಸಿಬಿಐ ಕೆಲಸ ಮಾಡಬೇಕಾದ ವಾತಾವರಣ ಸೃಷ್ಟಿಸಬೇಕಿದೆ. ಪ್ರತಿಷ್ಠಿತ ತನಿಖಾ ಸಂಸ್ಥೆ ಎಲ್ಲಿಯವರೆಗೂ ಸರಕಾರದ ಅಧೀನದಲ್ಲಿ ಇರುವುದೋ ಅಲ್ಲಿಯವರೆಗೆ ಪೊಲಿಟಿಕಲ್ ಮಾಸ್ಟರ್ಗಳ ದನಿಯಲ್ಲೇ ಮಾತನಾಡಲಿದೆ. ಅದಕ್ಕೆ ಸಂಪೂರ್ಣ ಸ್ವಾತಂತ್ರ್ಯ ಸಿಗುವವರೆಗೂ ಪಂಜರದ ಗಿಳಿಯಾಗಿಯೇ ಇರಲಿದೆ.
ರಾಜ್ಯಸಭಾ ಚುನಾವಣೆಗೆ ಸ್ಪರ್ಧೆ ದೃಢಪಡಿಸಿದ ಬಿಹಾರ ಸಿಎಂ ನಿತೀಶ್ ಕುಮಾರ್
ನೂತನ ಸಿಎಂ ಕುರಿತು ಹೆಚ್ಚಿದ ಕುತೂಹಲ
ಇರಾನ್-ಅಮೆರಿಕಾ ಸಂಘರ್ಷ ಸದ್ಯ ಮಧ್ಯಪ್ರಾಚ್ಯವನ್ನು ದಾಟಿ ಹಿಂದೂಮಹಾಸಾಗರಕ್ಕೂ ವ್ಯಾಪಿಸಿದ್ದು, ಭಾರತದಲ್ಲಿ ಸೌಹಾರ್ದಯುತ ಮಿಲಿಟಿರಿ ಕವಾಯತುಗಳನ್ನು ಮುಗಿಸಿಕೊಂಡು ಇರಾನ್ ನತ್ತ ಮರಳುತ್ತಿದ್ದ ಇರಾನ್ ನ ದೈತ್ಯ ಯುದ್ದನೌಕೆ ಐರಿಸ್ ದೆನಾವನ್ನು ಹಿಂದೂ ಮಹಾಸಾಗರದಲ್ಲಿ ಶ್ರೀಲಂಕಾ ಕರಾವಳಿ ಬಳಿಯಲ್ಲಿ ಅಮೆರಿಕಾದ ಯುದ್ದನೌಕೆಯಿಂದ ದಾಳಿ ಮಾಡಿ ಪತನಗೊಳಿಸಲಾಗಿದೆ. ಇದರಿಂದಾಗಿ ನೌಕೆಯಲ್ಲಿದ್ದ 87 ಮಂದಿ ಸಾವನ್ನಪ್ಪಿದ್ದು, ಈ ಘಟನೆ ಸದ್ಯ ಹಿಂದೂ ಮಹಾಸಾಗರದಲ್ಲಿ ಯುದ್ದವನ್ನು ಆರಂಭಿಸುವ ಆತಂಕಕ್ಕೆ ಕಾರಣವಾಗಿದೆ.
ಕರ್ನಾಟಕದ ಅಧಿಕೃತ ಭಾಷೆಯಾಗಲಿ ತುಳು: ಸರ್ಕಾರಕ್ಕೆ ಆಂಧ್ರ ಮಾದರಿಯ ಅಧ್ಯಯನ ವರದಿ ಸಲ್ಲಿಕೆ
ಬೆಂಗಳೂರು, ಮಾರ್ಚ್ 5: ತುಳು ಭಾಷೆಯನ್ನು ರಾಜ್ಯದ ಎರಡನೇ ಅಧಿಕೃತ ಭಾಷೆಯಾಗಿ ಘೋಷಿಸುವ ಕುರಿತ ಮಹತ್ವದ ಪ್ರಕ್ರಿಯೆಯಲ್ಲಿ ಹೊಸ ಬೆಳವಣಿಗೆ ನಡೆದಿದೆ. ಈ ಸಂಬಂಧ ಹೆಚ್ಚುವರಿ ಅಧಿಕೃತ ಭಾಷೆ ಘೋಷಣೆಗೆ ಸಂಬಂಧಿಸಿದ ಮಾನದಂಡಗಳನ್ನು ಅಧ್ಯಯನ ಮಾಡಲು ನೇಮಿಸಲಾದ ಸಮಿತಿಯು ತನ್ನ ಸಮಗ್ರ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ. ಆಂಧ್ರಪ್ರದೇಶದಲ್ಲಿ ಉರ್ದು ಭಾಷೆಯನ್ನು ಎರಡನೇ ಅಧಿಕೃತ ಭಾಷೆಯಾಗಿ ಘೋಷಿಸುವ ಸಂದರ್ಭದಲ್ಲಿ
ರಾಜ್ಯಸಭಾ ಚುನಾವಣೆ | ಅಭಿಷೇಕ್ ಮನು ಸಿಂಘ್ವಿ ಸಹಿತ 6 ಅಭ್ಯರ್ಥಿಗಳನ್ನು ಘೋಷಿಸಿದ ಕಾಂಗ್ರೆಸ್
ಹೊಸದಿಲ್ಲಿ: ಮುಂಬರುವ ರಾಜ್ಯಸಭಾ ಚುನಾವಣೆಗೆ ಕಾಂಗ್ರೆಸ್ ಗುರುವಾರ 6 ಅಭ್ಯರ್ಥಿಗಳ ಹೆಸರನ್ನು ಘೋಷಿಸಿದೆ. ತೆಲಂಗಾಣದಿಂದ ಅಭಿಷೇಕ್ ಮನು ಸಿಂಘ್ವಿ ಹಾಗೂ ವೆಮ್ ನರೇಂದ್ರ ರೆಡ್ಡಿ, ಛತ್ತೀಸಗಢದಿಂದ ಫೂಲವ್ ದೇವಿ ನೇಟಂ, ಹರ್ಯಾಣದಿಂದ ಕರಮ್ವೀರ್ ಸಿಂಗ್ ಬೌದ್ಧ್, ಹಿಮಾಚಲ ಪ್ರದೇಶದಿಂದ ಅನುರಾಗ್ ಶರ್ಮಾ, ತಮಿಳುನಾಡಿನಿಂದ ಎಂ.ಕ್ರಿಸ್ಟೊಫರ್ ತಿಲಕ್ ಅವರನ್ನು ಅಭ್ಯರ್ಥಿಗಳಾಗಿ ಕಾಂಗ್ರೆಸ್ ಕಣಕ್ಕಿಳಿಸಿದೆ. ಮಾರ್ಚ್ 16ರಂದು ರಾಜ್ಯಸಭಾ ಚುನಾವಣೆಗೆ ಮತದಾನ ನಡೆಯಲಿದೆ. ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರ ಆಪ್ತ ವೆಮ್ ನರೇಂದರ್ ರೆಡ್ಡಿ, ರಾಜ್ಯಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಪಕ್ಷದಿಂದ ನಾಮನಿರ್ದೇಶನಗೊಂಡಿದ್ದಕ್ಕಾಗಿ ಕಾಂಗ್ರೆಸ್ ಹೈಕಮಾಂಡ್ಗೆ ಕೃತಜ್ಞತೆ ಸಲ್ಲಿಸಿದ್ದಾರೆ.
ಹಾಸನ | ವೇಶ್ಯಾವಾಟಿಕೆ ಆರೋಪ: ಲಾಡ್ಜ್ ನಿಂದ ಮೂವರು ವಿದೇಶಿ ಮಹಿಳೆಯರ ರಕ್ಷಣೆ
ಓರ್ವ ಪೊಲೀಸ್ ವಶಕ್ಕೆ
2026-27 ನೇ ಸಾಲಿನ ರಾಜ್ಯ ಬಜೆಟ್ ಮಂಡನೆಗೆ ಕ್ಷಣಗಣನೆ ಆರಂಭವಾಗಿದೆ. ಶುಕ್ರವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಬಜೆಟ್ ಮಂಡಿಸಲು ಸಿದ್ಧತೆ ನಡೆಸಿದ್ದಾರೆ. ಸದ್ಯ ಈ ಬಾರಿಯ ಬಜೆಟ್ನಲ್ಲಿ ಜಿಲ್ಲೆಗೇನು ಸಿಗಲಿದೆ ಎಂಬುದು ಸದ್ಯದ ಕುತೂಹಲವಾಗಿದೆ.
ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಮಧ್ಯೆ Doomsday ಖಂಡಾಂತರ ಕ್ಷಿಪಣಿಯ ಪರೀಕ್ಷಾರ್ಥ ಉಡಾವಣೆ ನಡೆಸಿದ ಅಮೆರಿಕ
ವಾಷಿಂಗ್ಟನ್: ಮಧ್ಯಪ್ರಾಚ್ಯದಲ್ಲಿ ಯುದ್ಧ ಆರನೇ ದಿನಕ್ಕೆ ಪ್ರವೇಶಿಸಿದೆ. ಈ ಮಧ್ಯೆ ಅಮೆರಿಕ ಅಣ್ವಸ್ತ್ರ ಹೊತ್ತುಕೊಂಡು ಹೋಗುವ ಸಾಮರ್ಥ್ಯ ಹೊಂದಿರುವ ಮಿನಿಟ್ಮ್ಯಾನ್ III doomsday ಖಂಡಾಂತರ ಕ್ಷಿಪಣಿಯ ಪರೀಕ್ಷಾರ್ಥ ಉಡಾವಣೆಯನ್ನು ನಡೆಸಿದೆ. ಇದು ಹಿರೋಷಿಮಾದ ಮೇಲೆ ಬೀಳಿಸಿದ ಪರಮಾಣು ಬಾಂಬ್ಗಿಂತ 20 ಪಟ್ಟು ಹೆಚ್ಚು ಶಕ್ತಿಶಾಲಿ ಸಿಡಿತಲೆಗಳನ್ನು ಹೊತ್ತೊಯ್ಯಬಲ್ಲ ಸಾಮರ್ಥ್ಯ ಹೊಂದಿದೆ ಎಂದು ವರದಿಯಾಗಿದೆ. ಮಂಗಳವಾರ ರಾತ್ರಿ, ಅಮೆರಿಕದ ವಾಯುಪಡೆ ಗ್ಲೋಬಲ್ ಸ್ಟ್ರೈಕ್ ಕಮಾಂಡ್ ಕ್ಯಾಲಿಫೋರ್ನಿಯಾದ ವಾಂಡೆನ್ ಬರ್ಗ್ ಸ್ಪೇಸ್ ಫೋರ್ಸ್ ಬೇಸ್ ನಿಂದ ಶಸ್ತ್ರರಹಿತ Minuteman III ICBM ಅನ್ನು ಉಡಾವಣೆ ಮಾಡಿದೆ. ಯುಎಸ್ ಬಾಹ್ಯಾಕಾಶ ಪಡೆ ಪರೀಕ್ಷಾ ವಾಹನ GT-255 ಎಂದು ಗುರುತಿಸಿರುವ ಈ ಕ್ಷಿಪಣಿಯನ್ನು ದೀರ್ಘಕಾಲದ ನಿಯಮಿತ ಮೌಲ್ಯಮಾಪನದ ಭಾಗವಾಗಿ ಉಡಾವಣೆ ಮಾಡಲಾಗಿದೆ. ಪ್ರಸ್ತುತ ನಡೆಯುತ್ತಿರುವ ಸಂಘರ್ಷಕ್ಕೆ ಮತ್ತು ಇದಕ್ಕೆ ಸಂಬಂಧವಿಲ್ಲ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. ಆ ಕ್ಷಿಪಣಿ ಸಾವಿರಾರು ಮೈಲುಗಳಷ್ಟು ದೂರ ಯಶಸ್ವಿಯಾಗಿ ಸಂಚರಿಸಿ ಪಶ್ಚಿಮ-ಮಧ್ಯ ಪೆಸಿಫಿಕ್ ಮಹಾಸಾಗರದಲ್ಲಿರುವ ಮಾರ್ಷಲ್ ದ್ವೀಪಗಳ ಸಮೀಪದ ನಿಗದಿತ ಗುರಿಯನ್ನು ತಲುಪಿದೆ ಎಂದು ವರದಿಯಾಗಿದೆ.
ಕೆ.ಪಿ.ಎಸ್. ಮ್ಯಾಗ್ನೆಟ್ ಶಾಲೆ: ನೆಗಡಿಗೆ ಮೂಗು ಕತ್ತರಿಸಬೇಕೇ?
ರಾಜ್ಯದಲ್ಲಿ ಮುಂದಿನ ಶೈಕ್ಷಣಿಕ ವರ್ಷಗಳಲ್ಲಿ ಹೆಚ್ಚುಕಡಿಮೆ 40,000 ಕನ್ನಡ ಸರಕಾರಿ ಶಾಲೆಗಳು ಮುಚ್ಚಲಿವೆ. ಇದೇ ಜೂನ್ಗೆ ಅಂದರೆ ಮುಂಬರುವ ಮೂರ್ನಾಲ್ಕು ತಿಂಗಳಲ್ಲಿ ರಾಜ್ಯದಲ್ಲಿ 5,000ಕ್ಕೂ ಹೆಚ್ಚು ಸರಕಾರಿ ಶಾಲೆಗಳು ಶಾಶ್ವತವಾಗಿ ಸಮಾಧಿಯಾಗಲಿವೆ. ಬಡವರ ಮಕ್ಕಳು ಕಲಿಯುವ ಈ ಶಾಲೆಗಳನ್ನು ಮುಗಿಸಲು ಸ್ವತಃ ರಾಜ್ಯ ಸರಕಾರವೇ ಏಶ್ಯನ್ ಡೆವಲಪ್ ಮೆಂಟ್ ಬ್ಯಾಂಕ್ನಿಂದ 10,000 ಕೋಟಿ ರೂ.ಯ ‘ಸುಪಾರಿ’ ಪಡೆದಿದೆ. ಅದರಲ್ಲಿ ಈಗಾಗಲೇ 2,000 ಕೋಟಿ ರೂ. ಸರಕಾರದ ಕೈ ಸೇರಿದೆ. ಈ ಸುಪಾರಿ ಹಣಕ್ಕೆ ರಾಜ್ಯ ಸರಕಾರವು ‘ಅಭಿವೃದ್ಧಿಗಾಗಿ ಪಡೆಯುವ ಸಾಲ’ ‘ಗುಣಮಟ್ಟದ ಶಿಕ್ಷಣಕ್ಕಾಗಿ ಸಾಲ’ ಎಂಬ ಸಿಹಿಲೇಪಿತ ವಿಷದ ಮಾತ್ರೆಯನ್ನು ಜನರಿಗೆ ನುಂಗಿಸುತ್ತಿದೆ. ಇದೆಂಥ ತಣ್ಣನೆಯ ಕ್ರೌರ್ಯ!! ಈ ಕೊಲೆಗಡುಕ ಕೆಲಸವನ್ನು ಸಮರ್ಥಿಸಲು ಜನರಿಂದ ಆಯ್ಕೆಯಾಗಿ ಹೋದ ರಾಜ್ಯದ ಬಹುತೇಕ ಎಲ್ಲಾ ಪಕ್ಷಗಳ ಎಲ್ಲಾ ಶಾಸಕರು, ಸಂಸದರು ಮೂಕಪ್ರೇಕ್ಷಕರಾಗಿದ್ದಾರೆ. ಕೆಲವರು ಜಾಣ ಮೌನ ತಾಳಿದರೆ, ಇನ್ನು ಕೆಲ ಶಾಸಕ ಸಚಿವರುಗಳು ಈ ಸರಕಾರಿ ಶಾಲೆಗಳ ಮಾರಣ ಹೋಮ ಮಾಡಲು ಟೊಂಕಕಟ್ಟಿ ನಿಂತಿದ್ದಾರೆ. ಕಳೆದ ಬೆಳಗಾವಿ ಅಧಿವೇಶನದಲ್ಲಿ ಶಿಕ್ಷಣ ಸಚಿವ ಮಧು ಬಂಗಾರಪ್ಪನವರು ಶಾಸಕ ಚಿದಾನಂದ ಎಂ. ಗೌಡ ಇವರ ಪ್ರಶ್ನೆಗೆ ರೋಷಾವೇಷದಿಂದ ಉತ್ತರಿಸುತ್ತಾ ‘‘ನಮ್ಮ ರಕ್ತದಲ್ಲೇ ಕನ್ನಡವಿದೆ. ಯಾವುದೇ ಕಾರಣಕ್ಕೂ ಕನ್ನಡ ಶಾಲೆಯನ್ನು ಮುಚ್ಚುವುದಿಲ್ಲ’’ ಎಂದು ಹೇಳಿದರು. ಆದರೆ ಶಾಲೆಗಳ ವಿಲೀನದ ಹೆಸರಲ್ಲಿ ಶಾಲೆಗಳನ್ನು ಮುಚ್ಚುವ ಅಕ್ಟೋಬರ್ 15ರ ಇಲಾಖೆಯ ಆದೇಶವನ್ನು ಸರಕಾರ ಇದುವರೆಗೂ ಹಿಂಪಡೆದಿಲ್ಲ. ಯಾಕೆ ಹಿಂಪಡೆದಿಲ್ಲ? ಮತ್ತು ಯಾವ ಉದ್ದೇಶಕ್ಕಾಗಿ ಹಿಂಪಡೆದಿಲ್ಲ? ಹಿಂಪಡೆಯುವ ಬದಲು ಈ ಆದೇಶಕ್ಕನುಗುಣವಾಗಿಯೇ ಶಾಲೆಗಳ ಮುಚ್ಚುವ(ವಿಲೀನ) ಕೆಲಸ ಸದ್ದಿಲ್ಲದೇ ಮಾಡುವುದಾದರೂ ಯಾಕೆ? ಆಯಾ ಮ್ಯಾಗ್ನೆಟ್ ಶಾಲೆಗಳ ಸುತ್ತಮುತ್ತಲಿನ ಹಳ್ಳಿಗಳಲ್ಲಿನ ಶಿಕ್ಷಕರನ್ನು ಮ್ಯಾಗ್ನೆಟ್ ಶಾಲೆಗಳಿಗೆ ವರ್ಗಾಯಿಸುತ್ತಿರುವುದೇಕೆ? ಈ ಮ್ಯಾಗ್ನೆಟ್ ಶಾಲೆ ಯೋಜನೆ ಜಾರಿಯಾದರೆ ಒಂದು ಅಂದಾಜಿನಂತೆ 80,000ಕ್ಕೂ ಹೆಚ್ಚು ಶಿಕ್ಷಕ ಹುದ್ದೆಗಳೇ ನಾಶವಾಗಲಿವೆ. ಒಂದೆಡೆ ಶಿಕ್ಷಕರ ನೇಮಕಾತಿ ಮಾಡುತ್ತೇವೆ ಎನ್ನುತ್ತಾ ಇನ್ನೊಂದೆಡೆ ಶಿಕ್ಷಕ ಹುದ್ದೆಗಳನ್ನು ನಾಶಮಾಡುವುದು ಯಾವ ಸೀಮೆ ನ್ಯಾಯ? ಮುಂದುವರಿದು ಸರಕಾರವು ‘‘ಇಲ್ಲ, ಇಲ್ಲ ಆಯಾ ಹಳ್ಳಿಗಳಿಂದ ಮ್ಯಾಗ್ನೆಟ್ ಶಾಲೆಗಳಿಗೆ ಬಸ್ ಸೌಲಭ್ಯ ಒದಗಿಸುತ್ತೇವೆ. ವಿದ್ಯಾರ್ಥಿಗಳಿಗೆ ಯಾವುದೇ ತೊಂದರೆಯಾಗುವುದಿಲ್ಲ’’ ಎಂದು ಹೇಳುತ್ತಿದೆ. ಕಾಲೇಜುಗಳಿಗೆ ಹೋಗಲು ಪಟ್ಟಣ-ನಗರಗಳಿಗೇ ಬಸ್ ಸೌಲಭ್ಯವಿಲ್ಲದೆ ಕಾಲೇಜು ವಿದ್ಯಾರ್ಥಿಗಳು ಪರದಾಡುತ್ತಿರುವಾಗ ಇನ್ನು ಯಾವುದೋ ಮೂಲೆಯಲ್ಲಿರುವ ಅತಿಚಿಕ್ಕ ಹಳ್ಳಿಗಳಿಂದ/ತಾಂಡಾಗಳಿಂದ/ ಹಟ್ಟಿಗಳಿಂದ ತೋಟದ ವಸ್ತಿಗಳಿಂದ ಪಂಚಾಯತ್ ಮಟ್ಟಕ್ಕೆ ಮ್ಯಾಗ್ನೆಟ್ ಶಾಲಾ ಮಕ್ಕಳಿಗೆಂದೆ ಬಸ್ ಓಡಿಸುತ್ತಾರಂತೆ! ಈ ಕಾಗಕ್ಕ ಗುಬ್ಬಕ್ಕ ಕಥೆ ರಾಜ್ಯದ ಜನ ನಂಬಬೇಕಂತೆ! ಹೇಗಿದೆ ನೋಡಿ ನಮ್ಮ ಶಿಕ್ಷಣ ಸಚಿವರ ರಕ್ತದಲ್ಲಿನ ಕನ್ನಡ ಪ್ರೀತಿ!! ಸರಕಾರವು ಇನ್ನು ಮುಂದೆ ಕೆ.ಪಿ.ಎಸ್. (ಕರ್ನಾಟಕ ಪಬ್ಲಿಕ್ ಶಾಲೆ)ನಂತಹ ಕೆಲವು ಆಕರ್ಷಣೀಯ ಶಾಲೆಗಳನ್ನು ಮಾತ್ರ ಉಳಿಸಿಕೊಂಡು ಉಳಿದೆಲ್ಲ ಸರಕಾರಿ ಶಾಲೆಗಳನ್ನು ಮುಚ್ಚಿ ಬಡವರ, ದಲಿತರ, ಹಿಂದುಳಿದ ವರ್ಗದವರ ಮತ್ತು ಜನಸಾಮಾನ್ಯರ ಮಕ್ಕಳ ಶಿಕ್ಷಣದ ಹಕ್ಕನ್ನೇ ಕಿತ್ತುಕೊಳ್ಳುತ್ತದೆ. ಕೆ.ಪಿ.ಎಸ್. ಮ್ಯಾಗ್ನೆಟ್ ಶಾಲೆಗೆ ಆರ್ಥಿಕ ಸಂಪನ್ಮೂಲವನ್ನೂ ಆಯಾ ಎಸ್ಡಿಎಂಸಿಗಳೇ ನೋಡಿಕೊಳ್ಳಬೇಕಂತೆ. ಬೇಕಿದ್ದರೆ ಶಾಲಾ ಕಾಂಪೌಂಡ್ಗೆ ಹೊಂದಿ ವಾಣಿಜ್ಯಮಳಿಗೆಗಳನ್ನು ತೆರೆಯಬಹುದಂತೆ, ಕಾಂಪೌಂಡ್ನ ಗೋಡೆಗಳನ್ನು ಜಾಹೀರಾತುದಾರರಿಗೆ ಬಾಡಿಗೆ ನೀಡಬಹುದಂತೆ. ಇವೆಲ್ಲಾ ಯಾವುದರ ಲಕ್ಷಣಗಳೆಂದರೆ, ಕಾಲಕ್ರಮೇಣ ಈ ಪಬ್ಲಿಕ್ ಶಾಲೆಗಳನ್ನೂ ಪಿಪಿಪಿ ಹೆಸರಲ್ಲೋ ಅಥವಾ ಇನ್ನಾವುದೋ ಮತ್ತೊಂದು ಬೇರೆ ಆಕರ್ಷಣೀಯವಾದ ಹೆಸರಿನಲ್ಲಿ ಖಾಸಗಿ ಸಂಸ್ಥೆಗಳಿಗೆ ಅಥವಾ ಕಾರ್ಪೊರೇಟ್ ಮನೆತನಗಳಿಗೆ ಧಾರೆ ಎರೆದು ಶಿಕ್ಷಣದ ಜವಾಬ್ದಾರಿಯಿಂದ ಸರಕಾರ ಸಂಪೂರ್ಣ ಕೈ ತೊಳೆದುಕೊಳ್ಳುವುದರ ಮುನ್ಸೂಚನೆ. ಒಂದೆಡೆ ಸರಕಾರವು ಶಿಕ್ಷಣ ಹಕ್ಕು ಕಾಯ್ದೆಯಡಿ ಪ್ರತೀ 1.ಕಿ.ಮೀ. ಗೆ ಪ್ರಾಥಮಿಕ ಶಾಲೆ ಮತ್ತು ಪ್ರತೀ 3 ಕಿ.ಮೀ.ಗೆ ಹಿರಿಯ ಪ್ರಾಥಮಿಕ ಶಾಲೆಗಳಿರಬೇಕು ಎಂದು ಪ್ರತಿಪಾದಿಸುತ್ತದೆ. ಇನ್ನೊಂದೆಡೆ ಇದೇ ಸರಕಾರವು 5ರಿಂದ 7ಕಿ.ಮೀ. ವ್ಯಾಪ್ತಿಯಡಿ ಬರುವ ಶಾಲೆಗಳನ್ನು ವಿಲೀನಗೊಳಿಸುವ ಹೆಸರಲ್ಲಿ ಮುಚ್ಚಬೇಕು ಎಂದು ಸಾರುತ್ತದೆ. ಇದೆಂತಹ ಇಬ್ಬಂದಿತನ? ಇನ್ನೂ ವಿಶೇಷವೆಂದರೆ ಕಲ್ಯಾಣ ಕರ್ನಾಟಕದಲ್ಲಿ ‘ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ’ಯ ಅನುದಾನವನ್ನು ಚಿಕ್ಕ ಚಿಕ್ಕ ಹಳ್ಳಿಗಳಲ್ಲಿನ ಶಾಲೆಗಳನ್ನು ಬಲಪಡಿಸುವ ಬದಲು ಪಂಚಾಯತ್ಗೊಂದರಂತೆ ತಲೆಯೆತ್ತುವ ಮ್ಯಾಗ್ನೆಟ್ ಶಾಲೆಗಳಿಗೆ ಬಳಸುತ್ತಾರಂತೆ. ಅಂದರೆ ಕಲ್ಯಾಣ ಕರ್ನಾಟಕದ ಅಭಿವೃದ್ಧಿಯ ಹಣವನ್ನು ಬಳಸಿ, ಕಲ್ಯಾಣ ಕರ್ನಾಟಕದ ಸರಕಾರಿ ಶಾಲೆಗಳನ್ನೇ ಕೊಲ್ಲುವ ಕೆಲಸ! ಶಹಬ್ಬಾಷ್!! ರಾಜ್ಯದ ಯಾರೊಬ್ಬರೂ ಪಬ್ಲಿಕ್ ಶಾಲೆಗಳ ಆರಂಭಕ್ಕೆ ವಿರೋಧಿಸುತ್ತಿಲ್ಲ. ಬದಲಾಗಿ ಪಬ್ಲಿಕ್ ಶಾಲೆ ತೆರೆಯುವ ಹೆಸರಲ್ಲಿ ಇರುವ 40,000ಕ್ಕೂ ಹೆಚ್ಚು ಸರಕಾರಿ ಕನ್ನಡ ಶಾಲೆಗಳನ್ನು ಮುಚ್ಚುವುದನ್ನು ವಿರೋಧಿಸುತ್ತಿದ್ದಾರೆ. ಹಲವಾರು ಸರಕಾರಿ ಶಾಲೆಗಳಲ್ಲಿ ಮೂಲಭೂತ ಸೌಲಭ್ಯಗಳಿಲ್ಲ, ಗ್ರಂಥಾಲಯಗಳಿಲ್ಲ, ಕೆಲವೆಡೆ ಶಿಕ್ಷಕರ ಕೊರತೆ ಇದೆ, ಯೋಗ್ಯ ಕಟ್ಟಡಗಳಿಲ್ಲ, ಶೌಚಾಲಯಗಳಿಲ್ಲ, ಗುಣಮಟ್ಟದ ಶಿಕ್ಷಣಕ್ಕೆ ಸಮರ್ಪಕ ನೀತಿನಿಯಮಗಳಿಲ್ಲ, ರಾಜ್ಯದಲ್ಲೀಗ 7,000 ಏಕೋಪಾಧ್ಯಾಯ ಶಾಲೆಗಳಿವೆ. 59,000ಕ್ಕೂ ಹೆಚ್ಚು ಶಿಕ್ಷಕ ಹುದ್ದೆಗಳು ಖಾಲಿ ಇವೆ. ಇಷ್ಟೆಲ್ಲ ಸಮಸ್ಯೆಗಳಿರುವ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕುಸಿಯುವುದು ಸಹಜ. ಸಮಸ್ಯೆಗಳಿವೆ ಎಂದು ಶಾಲೆಗಳನ್ನೇ ಮುಚ್ಚುವುದೆಂದರೆ ನೆಗಡಿಯಾಗಿದೆ ಎಂದು ಮೂಗನ್ನೇ ಕತ್ತರಿಸಿದಂತಾಗುವುದಿಲ್ಲವೇ? ಸ್ಥಳೀಯ ಶಾಸಕರು ಈ ಉದ್ದೇಶಿತ ಕೆ.ಪಿ.ಎಸ್. ಶಾಲೆಗಳ ಎಸ್ಡಿಎಮ್ಸಿಯ ಅಧ್ಯಕ್ಷರಾಗುವುದರಿಂದ ನೇರ ರಾಜಕೀಯ ಹಸ್ತಕ್ಷೇಪಕ್ಕೆ ದಿಡ್ಡಿ ಬಾಗಿಲನ್ನೇ ತೆರೆದಂತಾಗುತ್ತದೆ. ಸಂವಿಧಾನದ ಅನುಚ್ಛೇದ 21ರ ಪ್ರಕಾರ ಶಿಕ್ಷಣ ಮಗುವಿನ ಮೂಲಭೂತ ಹಕ್ಕು. ಆದರೆ ಶಾಲೆಗಳೇ ಇಲ್ಲ ಎಂದ ಮೇಲೆ ಹಕ್ಕು ಇದ್ದಾದರೂ ಏನು ಪ್ರಯೋಜನ? ಬಡವರು ತಮ್ಮ ಮಕ್ಕಳನ್ನು ತಮ್ಮೂರಲ್ಲಿನ ಸರಕಾರಿ ಶಾಲೆಗೆ ಕಳುಹಿಸುವುದು ಕಷ್ಟವಾದರೂ ಸದ್ಯಕ್ಕೆ ಅಲ್ಪಸ್ವಲ್ಪ ಸಾಧ್ಯವಿದೆ. ಆದರೆ ಇನ್ನು ಸರಕಾರಿ ಶಾಲೆಗಳು ಮುಚ್ಚಿದರೆ ಈ ಬಡ ಕೂಲಿಕಾರರು ತಮ್ಮ ಮಕ್ಕಳನ್ನು ದೂರದ ಮ್ಯಾಗ್ನೆಟ್ ಶಾಲೆಗಳಿಗೆ ಕಳುಹಿಸುವ ಬದಲು ಜೊತೆಗೆ ಕೆಲಸಕ್ಕೆ ಕರೆದುಕೊಂಡು ಹೋಗುವುದು ಅನಿವಾರ್ಯವಾಗುತ್ತದೆ. ಪರೋಕ್ಷವಾಗಿ ಸರಕಾರವೇ ಬಾಲಕಾರ್ಮಿಕತನ ಹೆಚ್ಚು ಮಾಡಿದಂತಾಗುತ್ತದೆ, ಅಷ್ಟೇ ಅಲ್ಲ ಆ ಮಗುವಿನ ಶಿಕ್ಷಣದ ಹಕ್ಕನ್ನೇ ಕಿತ್ತುಕೊಂಡಂತಾಗುತ್ತದೆ. ಈಗಾಗಲೇ ಈ ಮ್ಯಾಗ್ನೆಟ್ ಶಾಲೆಗಳ ಪರಿಕಲ್ಪನೆ ಮುಂದುವರಿದ ಅಮೆರಿಕ ಮತ್ತು ಚೀನಾ ದೇಶಗಳಲ್ಲಷ್ಟೇ ಅಲ್ಲ ಸ್ವೀಡನ್, ಮೆಕ್ಸಿಕೋದಂತಹ ದೇಶಗಳಲ್ಲೂ ಸಂಪೂರ್ಣ ವಿಫಲವಾಗಿವೆ. ಇಂಥ ಹಳಸಿದ ಶೈಕ್ಷಣಿಕ ನೀತಿಗಳನ್ನು ಸರಕಾರ ನಮ್ಮ ರಾಜ್ಯದಲ್ಲಿ ಜಾರಿಗೊಳಿಸುವ ಉದ್ದೇಶವಾದರೂ ಏನು? ಮತ್ತು ಯಾರ ಹಿತಕ್ಕಾಗಿ ಈ ಡೊಂಬರಾಟ? ತಾವು ಈ ಬ್ಯಾಚ್ನ ವಿದ್ಯಾರ್ಥಿಗಳು, ತಾವು ಆ ಬ್ಯಾಚ್ನ ವಿದ್ಯಾರ್ಥಿಗಳು ಎಂದು ಹಲವಾರು ವರ್ಷಗಳ ನಂತರ ಗುರುವಂದನೆಯ ಹೆಸರಲ್ಲಿ ಆಯಾ ಶಾಲೆಗಳಲ್ಲಿ ಒಂದೆಡೆ ಸೇರುವ ಸಹಪಾಠಿಗಳಿದ್ದಾರೆ, ತುಂಬಾ ಸಂತೋಷ. ಹಾಗೆ ಸೇರಿ ತಿಂದುಂಡು ಹಳೆ ನೆನಪುಗಳನ್ನು ಕೆದಕಿ ‘ಸವಿ ಸವಿನೆನಪು’ ಎಂದು ಮೆಲುಕು ಹಾಕಿದರೆ ಸಾಕಾಗುವುದಿಲ್ಲ. ಬದಲಾಗಿ ನಮಗೆ ಅಕ್ಷರ ಮತ್ತು ಅನ್ನದ ತುತ್ತು ನೀಡಿದ ಈ ಶಾಲೆಗಳ ರಕ್ಷಣೆಗೆ ಮುಂದಾಗಬೇಕಿದೆ. ಎಷ್ಟೋ ಜನರು ಈ ಶಾಲೆಗಳಲ್ಲಿ ಕಲಿತು ದೊಡ್ಡ ಅಧಿಕಾರಿಗಳೋ, ಇಂಜಿನಿಯರೋ ಡಾಕ್ಟರೋ ಅಥವಾ ಮತ್ತಿನ್ನಾವುದೋ ದೊಡ್ಡ ದೊಡ್ಡ ಹುದ್ದೇಗೇರಿದ್ದಾರೆ. ಅವರೆಲ್ಲರೂ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ, ಈ ಶಾಲೆಗಳಿರದಿದ್ದರೆ ತಾವೆಲ್ಲಿ ಇರುತ್ತಿದ್ದರು ಎಂದು. ಆ ಚಿಕ್ಕ ಚಿಕ್ಕ ಶಾಲೆಗಳಲ್ಲಿ ಕಲಿತ ದೊಡ್ಡ ದೊಡ್ಡ ಪಾಠಗಳೇ ಇಂದು ಕೆಲವರನ್ನು ಬಾನೆತ್ತರಕ್ಕೇರಿಸಿವೆ. ಮತ್ತೆ ಕೆಲವರ ಬದುಕಿಗೆ ಊರುಗೋಲನ್ನೊದಗಿಸಿವೆ. ಒಟ್ಟಿನಲ್ಲಿ ನಮ್ಮ ಬದುಕನ್ನು ಕಟ್ಟಿಕೊಟ್ಟ ಈ ಜೀವಂತ ದೇವಾಲಯಗಳೀಗ ತಾವು ಬದುಕಲು ಸೆಣಸಾಡುತ್ತಿವೆ. ಮರಣಶಯ್ಯೆಯಲ್ಲಿ ನರಳುತ್ತಾ ಹಳೆ ವಿದ್ಯಾರ್ಥಿಗಳು, ಪೋಷಕರು, ನಾಗರಿಕರತ್ತ ಕಣ್ಣಲ್ಲೇ ಜೀವ ಹಿಡಿದು ನೋಡುತ್ತಿವೆ, ನಮ್ಮನ್ನು ಯಾರಾದರೂ ರಕ್ಷಿಸಬಹುದಾ? ಎಂದು. 200 ವರ್ಷ ದೇಶವಾಳಿದ ಪರಕೀಯ ಬ್ರಿಟಿಷರು ನಮ್ಮ ಹಳ್ಳಿ ಹಳ್ಳಿಗಳಲ್ಲಿ ಶಾಲೆಗಳನ್ನು ತೆರೆದರು. ಆದರೆ ಇಂದು ನಮ್ಮನ್ನಾಳುವ ನಮ್ಮ ಸರಕಾರಗಳೇ ನಮ್ಮ ಶಾಲೆಗಳನ್ನು ಮುಚ್ಚುತ್ತಿವೆ. ಇದೆಂಥ ವೈರುಧ್ಯ? ಈ ಶಾಲೆಗಳೆಂದರೆ ಕೇವಲ ಕಟ್ಟಡವಲ್ಲ ಅಥವಾ ಕೇವಲ ಆಗಸ್ಟ್ 15, ಜನವರಿ 26ರಂದು ಧ್ವಜಾರೋಹಣಮಾಡುವ ಸ್ಥಳಗಳೂ ಅಲ್ಲ. ನಮ್ಮ ದೇಶಕ್ಕೆ ಬೇಕಾದ ಅತ್ಯುತ್ತಮ ವ್ಯಕ್ತಿತ್ವಗಳನ್ನು ಬಿತ್ತಿಬೆಳೆಯುವ ತೋಟ. ಮಕ್ಕಳಲ್ಲಿ ಆದರ್ಶ, ಮೌಲ್ಯ, ದೇಶ ಭಕ್ತಿ, ಜೀವನಪ್ರೀತಿ, ಸಾಮೂಹಿಕ ಜೀವನ ಕಲಿಸುವ ಸಾಂಸ್ಕೃತಿಕ ಕೇಂದ್ರಗಳು, ಹಳ್ಳಿಗಳ ಜೀವನಾಡಿಗಳು! ಹಲವಾರು ಶಿಕ್ಷಕರು, ಶಿಕ್ಷಣ ಪ್ರೇಮಿಗಳು ತಮ್ಮ ಆಯುಷ್ಯವನ್ನೇ ಸವೆಸಿ ಮಕ್ಕಳ ಭವಿಷ್ಯ ಕೆತ್ತಿದ ಪವಿತ್ರ ಸ್ಥಳಗಳು! ಈ ಶಾಲೆಗಳನ್ನು ನಾವು ಇನ್ನಾದರೂ ಉಳಿಸಿಕೊಳ್ಳಬೇಕಿದೆ.
Gold Rate Fall: 1.50 ಲಕ್ಷದಿಂದ ಕೆಳಗಿಳಿದ ಆಭರಣ ಚಿನ್ನದ ಬೆಲೆ: ಬೆಳ್ಳಿ ಬೆಲೆ ತಟಸ್ಥ
ಚಿನ್ನಾಭರಣ ಪ್ರಿಯರಿಗೆ ಸಹಿಸುದ್ದಿ ಇಲ್ಲಿದೆ. ಚಿನ್ನ ಬೆಳ್ಳಿ ದರದಲ್ಲಿ ಇಳಿಕೆ ಕಂಡುಬಂದಿದೆ. ಅದರಲ್ಲೂ 22 ಕ್ಯಾರೆಟ್ ಬೆಲೆ ಒಂದುವರೇ ಲಕ್ಷದಿಂದ ಕೆಳಗಿಳಿದಿದೆ. ಆದರೆ ಅಮೆರಿಕಾ-ಇರಾನ್ ಸಂಘರ್ಷ ಹೀಗೆ ಮುಂದುವರಿದರೆ ಬೆಲೆಯಲ್ಲಿ ಮತ್ತೆ ಹೆಚ್ಚಳ ಆಗುವ ಸಾಧ್ಯತೆ ಇದೆ.
ಮಧ್ಯಪ್ರಾಚ್ಯ ಉದ್ವಿಗ್ನ - ಮನೆಯೊಳಗಿರಿ, ಬಾಲ್ಕನಿ ಹೊರಗೂ ಬರಬೇಡಿ: ಕತಾರ್ನಲ್ಲಿರುವ ಭಾರತೀಯರಿಗೆ ಮಹತ್ವದ ಸೂಚನೆ
ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆಯಿಂದಾಗಿ ಕತಾರ್ನಲ್ಲಿ ವಾಸಿಸುತ್ತಿರುವ ಭಾರತೀಯರಿಗೆ ಭಾರತೀಯ ರಾಯಭಾರಿ ಕಚೇರಿ ಸೇಫ್ಟಿ ಅಡ್ವೈಸರಿ ನೀಡಿದೆ. ತೀರಾ ಅವಶ್ಯಕ ಸಂದರ್ಭಗಳನ್ನು ಹೊರತುಪಡಿಸಿ ಮನೆಯಿಂದ ಹೊರಗೆ ಬಾರದಂತೆ, ಕಿಟಕಿ - ಬಾಲ್ಕನಿ ಬಳಿ ಇರದಂತೆ ಕತಾರ್ನಲ್ಲಿರುವ ಭಾರತೀಯ ನಾಗರಿಕರಿಗೆ ಇಂಡಿಯನ್ ಎಂಬೆಸ್ಸಿ ಸೂಚಿಸಿದೆ.
Raichuru | ವೇತನ ಕಡಿತ, ದೌರ್ಜನ್ಯದ ಆರೋಪ; ರಿಮ್ಸ್ ಹೊರಗುತ್ತಿಗೆ ನೌಕರರಿಂದ ಪ್ರತಿಭಟನೆ
ರಾಯಚೂರು: ಗುತ್ತಿಗೆ ಸಂಸ್ಥೆಯು ವೇತನ ಕಡಿತಗೊಳಿಸಿ ಪಿಎಫ್, ಎಸ್ ಐ ಹಣವನ್ನು ಸರಿಯಾಗಿ ಜಮಾ ಮಾಡದೇ ಡಿ ಗ್ರೂಪ್ ನೌಕರರ ಮೇಲೆ ದೌರ್ಜನ್ಯ ಎಸಗಲಾಗುತ್ತಿದೆ ಎಂದು ಆರೋಪಿಸಿ ರಿಮ್ಸ್ ಆಸ್ಪತ್ರೆಯ ಹೊರಗುತ್ತಿಗೆ ನೌಕರರು ಗುರುವಾರ ಬೆಳಗ್ಗೆ ಕೆಲಸಕ್ಕೆ ಗೈರಾಗಿ ಆಸ್ಪತ್ರೆಯ ಆವರಣದ ಮುಂದೆ ಪ್ರತಿಭಟನೆ ನಡೆಸಿದರು. ಮೈಸೂರು ಮೂಲದ ಸ್ವಿಸ್ ಎಂಬ ಗುತ್ತಿಗೆ ಸಂಸ್ಥೆ ಡಿ ಗ್ರೂಪ್ ನೌಕರರಿಗೆ ಮಾನಸಿಕ ಹಿಂಸೆ ನೀಡುತ್ತಿದೆ, ಪ್ರತೀ ತಿಂಗಳು ವೇತನ ಪಾವತಿಸದೆ, ಮೂರ್ನಾಲ್ಕು ತಿಂಗಳಿಗೆ ವೇತನ ಜಮಾ ಮಾಡಲಾಗುತ್ತಿದೆ ಎಂದು ದೂರಿದರು. ಎರಡು ತಿಂಗಳ ವೇತನ ಬಾಕಿ ಇಟ್ಟು ಇತ್ತೀಚೆಗೆ ವೇತನ ಪಾವತಿ ಮಾಡಿದ್ದು ಅನೇಕರಿಗೆ 3-5 ಸಾವಿರ ರೂ. ವರೆಗೆ ವೇತನ ಕಡಿತಗೊಳಿಸಿದ್ದಾರೆ. ಈ ಬಗ್ಗೆ ವಿಚಾರಿಸಿದರೆ ಸಮವಸ್ತ್ರ ಬದಲಾವಣೆಗೆ ಕಡಿತಗೊಳಿಸಿದ್ದೇವೆ'' ಎಂಬ ಉಡಾಫೆಯ ಉತ್ತರ ನೀಡುತ್ತಿದ್ದಾರೆ. ಗುತ್ತಿಗೆ ನೌಕರರಿಗೆ ಅತ್ಯಂತ ಕಡಿಮೆ ವೇತನ ಪಾವತಿ ಮಾಡಲಾಗುತ್ತಿದ್ದು, ಅದರಲ್ಲೂ ಸಮವಸ್ತ್ರದ ಹೆಸರಿನಲ್ಲಿ ಐದು ಸಾವಿರ ರೂ. ಕಡಿತಗೊಳಿಸಿದರೆ ಕುಟುಂಬ ನಿರ್ವಹಣೆ ಮಾಡುವುದಾದರು ಹೇಗೆ ಎಂದು ಏಜೆನ್ಸಿಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ರಾಯಚೂರು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ( ರಿಮ್ಸ್) ಬೋಧಕ ಆಸ್ಪತ್ರೆ ಹಾಗೂ ಮೆಡಿಕಲ್ ಕಾಲೇಜಿನಲ್ಲಿ ಕೆಲಸ ಮಾಡಲು ಸಿಬ್ಬಂದಿಯ ಕೊರತೆ ಇದೆ. ಮೂವರ ಕೆಲಸ ಒಬ್ಬರೇ ಮಾಡಬೇಕಿದೆ, ಗುತ್ತಿಗೆ ಸಂಸ್ಥೆಯವರು ಗೌರವಯುತವಾಗಿ ನಡೆದುಕೊಳ್ಳದೇ ಮಾನಸಿಕ ಹಿಂಸೆ ನೀಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಪ್ರತಿಭಟನೆಯಲ್ಲಿ ಹೊರಗುತ್ತಿಗೆ ನೌಕರರಾದ ಆನಂದ, ಪ್ರಶಾಂತ, ರಮೇಶ, ಸಂದೀಪ್, ನರೇಶ, ಮಲ್ಲಿಕಾರ್ಜುನ, ವಿನೋದ, ಅನುರಾಧಾ, ಸುನೀತಾ, ಪುಷ್ಪಾ, ಈರಮ್ಮ, ಶ್ರೀನಿವಾಸ, ಅಮರಮ್ಮ, ವಿಶ್ವನಾಥ, ನವೀನ ಕುಮಾರ್ ಉಪಸ್ಥಿತರಿದ್ದರು.
ಇರಾನ್ ಮೇಲೆ ದಾಳಿಗೆ ಅಮೆರಿಕಾದಿಂದ ಭಾರತದ ನೌಕಾನೆಲೆ ಬಳಕೆ? US ಮಾಜಿ ಸೇನಾಧಿಕಾರಿ ಹೇಳಿಕೆ ಶುದ್ಧ ಸುಳ್ಳು ಎಂದ MEA
ಇರಾನ್-ಅಮೆರಿಕಾ ಮಧ್ಯೆ ಸಂಘರ್ಷ ತಾರಕಕ್ಕೇರಿದೆ. ಈ ಮಧ್ಯೆ ಈ ಯುದ್ದ ಹಿಂದೂಮಹಾಸಾಗರಕ್ಕೂ ವ್ಯಾಪಿಸಿದ್ದು, ಇರಾನ್ ಮೇಲಿನ ದಾಳಿಗಳಿಗೆ ಭಾರತ ತನ್ನ ನೌಕಾನೆಲೆಗಳನ್ನು ಅಮೆರಿಕಾಗೆ ಬಳಸಲು ಅನುವು ಮಾಡಿಕೊಡುವ ಮೂಲಕ ಯುದ್ದದಲ್ಲಿ US ಪರ ವಹಿಸಿದೆ ಎಂದು USನ ಮಾಜಿ ಸೇನಾ ಕರ್ನಲ್ ಒಬ್ಬರು ನೀಡಿದ್ದ ಹೇಳಿಕೆಗಳು ಭಾರಿ ಚರ್ಚೆಗೆ ಗ್ರಾಸವಾಗಿತ್ತು. ಸದ್ಯ ಇದಕ್ಕೆ ಭಾರತದ ವಿದೇಶಾಂಗ ಸಚಿವಾಲಯ ಪ್ರತಿಕ್ರಿಯೆ ನೀಡಿದ್ದು, ಆಧಾರರಹಿತ ಹಾಗೂ ಸುಳ್ಳು ಎಂದು ಸ್ಪಷ್ಟಪಡಿಸಿದೆ. ಈ ಕುರಿತ ವರದಿ ಇಲ್ಲಿದೆ..
ದೇಶದ ಸಾಂಸ್ಕೃತಿಕ ಬೆಳವಣಿಗೆಯನ್ನು ತಡೆಗಟ್ಟುವ ಯಾವುದೇ ವಿಚಾರವನ್ನು ನ್ಯಾಯಾಂಗವು ಸ್ವಇಚ್ಛೆಯಿಂದ ಗಮನಿಸಿ ಎನ್ಸಿಇಆರ್ಟಿಯ ವಿಷಯದಲ್ಲಿ ಈಗ ಕೈಗೊಂಡಷ್ಟೇ ವೇಗದಲ್ಲಿ ಸೂಕ್ತ ಕ್ರಮವನ್ನು ಕೈಗೊಳ್ಳಬಹುದು. ನ್ಯಾಯಾಂಗವು ಹೀಗೆ ಮಾಡುತ್ತಿದೆಯೇ? ಇಲ್ಲ. ಮಾಡಬಹುದಾದ ಅನೇಕ ಕೆಲಸಗಳನ್ನು ತಾಂತ್ರಿಕ ನೆಪಗಳನ್ನೊಡ್ಡಿ ನಿರ್ವಹಿಸದ ಉದಾಹರಣೆಗಳಿವೆ. ಬೆನ್ನಿಗೆ ಬಿದ್ದರೆ ಮಾತ್ರ ತಲೆಗೆ ಬುದ್ಧಿ ಎಂಬ ಹಾಗಾಗಿದೆ. ಇದು ಬಹುದೊಡ್ಡ ಸಾಂವಿಧಾನಿಕ ವೈಫಲ್ಯ. ತನ್ನ ಮನೆಗೆ ಬೆಂಕಿಹಚ್ಚಲು ಹೊರಟಾಗ ತೆಗೆದುಕೊಳ್ಳುವ ಜಾಗ್ರತೆಯನ್ನು ಇತರ ಸಂದರ್ಭಗಳಲ್ಲೂ ತೆಗೆದುಕೊಂಡರೆ ದೇಶದ ಅನೇಕ ಸಮಸ್ಯೆಗಳು ಪರಿಹಾರವಾಗುವುದರಲ್ಲಿ ಸಂಶಯವಿಲ್ಲ. ಮೊನ್ನೆಮೊನ್ನೆ ಸರ್ವೋಚ್ಚ ನ್ಯಾಯಾಲಯವು ಪ್ರೌಢಶಾಲೆಗಳ 8ನೇ ತರಗತಿಯ ಸಮಾಜ ವಿಜ್ಞಾನ ಪಠ್ಯದ ಸಮಾಜದಲ್ಲಿ ನ್ಯಾಯಾಂಗದ ಪಾತ್ರ ಎಂಬ ಅಧ್ಯಾಯದಲ್ಲಿ ‘ನ್ಯಾಯಾಂಗದಲ್ಲಿ ಭ್ರಷ್ಟಾಚಾರ’ ಎಂಬ ವಿಭಾಗವನ್ನು ರಾಷ್ಟ್ರೀಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಪರಿಷತ್ತು ((National Council of Educational Research and Training) ಅಥವಾ ಸಂಕ್ಷಿಪ್ತವಾಗಿ ಎನ್ಸಿಇಆರ್ಟಿ (NCERT) ಎಂಬ ರಾಷ್ಟ್ರೀಯ ಸಂಸ್ಥೆಯು ಸೇರಿಸಿದ್ದರ ವಿರುದ್ಧ ಕೆಂಡಾಮಂಡಲವಾಯಿತು. ಸ್ವತಃ ಪ್ರಕರಣವನ್ನು ದಾಖಲಿಸಿಕೊಂಡು ಆ ಪಾಠವನ್ನು ನಿಷೇಧಿಸಿ ಅದನ್ನು ಸೇರಿಸಿದ್ದರ ಮತ್ತು ಸೇರಿಸಿದವರ ಕುರಿತು ತನಿಖೆಗೆ ಆದೇಶಿಸಿತು. ತಕ್ಷಣವೇ ಎನ್ಸಿಇಆರ್ಟಿ ಈಗಾಗಲೇ ವಿತರಣೆ ಯಾದ ಪುಸ್ತಕಗಳನ್ನು ಮರಳಿ ಪಡೆಯಲು ಕ್ರಮಕೈಗೊಂಡದ್ದು ಮಾತ್ರವಲ್ಲ, ಆ ಪಾಠವನ್ನು ಒಳಗೊಂಡ ಪಠ್ಯಕ್ರಮವನ್ನೇ ವಾಪಸ್ ಪಡೆಯಿತು. ಇದರ ಬೇರುಗಳು ಪ್ರಧಾನಿಯವರೆಗೂ ಇಳಿದಿರಬಹುದು. ಕಾದು ನೋಡಬೇಕು. ಸರ್ವೋಚ್ಚ ನ್ಯಾಯಾಲಯಕ್ಕೆ ಸಿಟ್ಟು ಬಂದದ್ದು ಸಹಜವೇ. ಒಂದು ಸಾಂವಿಧಾನಿಕ ವ್ಯವಸ್ಥೆಯನ್ನು ನೇತ್ಯಾತ್ಮಕವಾಗಿಯೇ ಹೆಸರಿಸಿ ಮಕ್ಕಳಿಗೆ ಹೇಳಿಕೊಟ್ಟರೆ-ಬೇಡ, ಓದಲು ಅವಕಾಶಕೊಟ್ಟರೆ ಏನಾಗಬೇಡ? ಪ್ರೌಢಶಾಲೆಯ ಅಂದರೆ ಹದಿಹರೆಯದ ಮಕ್ಕಳು ಒದ್ದೆಗೋಡೆಯ ಹಾಗೆ. ಏನನ್ನು ಎಸೆದರೂ ಅದು ಭದ್ರವಾಗಿ ಅಂಟಿಕೊಳ್ಳುತ್ತದೆ. ನ್ಯಾಯಾಂಗ ಎಂಬ ಪಾಠ ಅಥವಾ ನ್ಯಾಯಾಂಗದ ಒಳಿತು-ಕೆಡುಕುಗಳು ಮುಂತಾದ ವಿಚಾರಗಳು ಪಠ್ಯದಲ್ಲಿ ಸೇರುವುದು ಸಹಜ. ಸಮಾಜ ಗೌರವಿಸುವ ವ್ಯಕ್ತಿ ಇಲ್ಲವೇ ಸಂಸ್ಥೆಯನ್ನು ಕೇಡಿನಂತೆ ಕಾಣಲು ಪ್ರೇರೇಪಿಸುವ ಯಾವುದೇ ಚಿಂತನೆಯೂ ಕೇಡೇ ಆಗಿರುತ್ತದೆ. ಇರಲಿ; ಇದರ ಕುರಿತು ಕೆಲವು ನೋಟಗಳನ್ನು ಹರಿಸೋಣ: ಭಾರತದ ಸಾಧು ಸನ್ಯಾಸಿಯೊಬ್ಬರು ಅಮೆರಿಕಕ್ಕೆ ಪ್ರವಾಸ ಹೋದ ಕತೆಯಂತೆ ಇದು. ವಿಮಾನದಿಂದ ಇಳಿದಾಗ ಪತ್ರಕರ್ತರು ಅವರನ್ನು ಮುತ್ತಿಕೊಂಡರು. ಒಬ್ಬ ಪತ್ರಕರ್ತ ಕೇಳಿದ: ‘‘ಅಮೆರಿಕದ ನೈಟ್ ಕ್ಲಬ್ಗಳ ಕುರಿತು ತಮ್ಮ ಅಭಿಪ್ರಾಯವೇನು?’’ ನಮ್ಮ ಈ ಸನ್ಯಾಸಿಗಳು ವಿಚಲಿತರಾಗಿ ‘‘ಇಲ್ಲಿ ನೈಟ್ ಕ್ಲಬ್ಗಳಿವೆಯೇ?’’ ಎಂದು ಕೇಳಿದರು. ಮರುದಿನ ಪತ್ರಿಕೆಗಳಲ್ಲಿ ‘‘ಭಾರತದ ಸನ್ಯಾಸಿಗಳು ಅಮೆರಿಕದ ವಿಮಾನ ನಿಲ್ದಾಣದಲ್ಲಿ ಇಳಿದಾಕ್ಷಣ ಇಲ್ಲಿ ನೈಟ್ ಕ್ಲಬ್ಗಳಿವೆಯೇ? ಎಂದು ವಿಚಾರಿಸಿದರು’’ ಎಂದು ಪ್ರಕಟವಾಗಿತ್ತಂತೆ. ಪ್ರಶ್ನೆಯೇ ಋಣಾತ್ಮಕವಾಗಿರುವಾಗ ಯಾವ ಉತ್ತರವೂ ಅದನ್ನು ಪುಷ್ಟೀಕರಿಸುವಂತಿರುತ್ತದೆ. ಇಷ್ಟಕ್ಕೂ ಎನ್ಸಿಇಆರ್ಟಿ ಎಂಬ ಈ ಸಂಸ್ಥೆಯ ಉದ್ದೇಶದ ಬಗ್ಗೆ ಸಂಶಯ ಸಹಜವಾಗಿಯೇ ಹುಟ್ಟುತ್ತದೆ. ಭಾರತ ವಿಶ್ವಗುರುವಾಗಿದೆಯೆಂದು ನಾವೆಷ್ಟೇ ಎದೆ-ಬೆನ್ನು (ಇನ್ನು ಲಭ್ಯವಾಗುವ ಇತರ ದೈಹಿಕ ಭಾಗಗಳು) ಎಷ್ಟೇ ತಟ್ಟಿಕೊಂಡರೂ ಇಲ್ಲಿ ಎಲ್ಲೆಡೆ ಇರುವಂತೆ ಭ್ರಷ್ಟಾಚಾರ ವ್ಯಾಪಕವಾಗಿದೆ ಮತ್ತು ಭಾರತ ಇದರಿಂದ ಮುಕ್ತವಾಗಲು ಸಾಧ್ಯವಿಲ್ಲದ ವಾತಾವರಣದಲ್ಲಿ ನಾವಿದ್ದೇವೆಂಬ ಸತ್ಯವನ್ನು ಮರೆಮಾಚೆವು. ರಾಜಕಾರಣವಂತೂ ಹಂದಿಗಳೂ ಸಹಿಸಲಾಗದಷ್ಟು ಗಬ್ಬೆದ್ದಿದೆ. ಪ್ರಸ್ತುತ ಸರಕಾರ ತಾನಷ್ಟೇ ಸರಿಯಿದ್ದೇನೆಂಬ ಭ್ರಮೆಯ ಭಾವನೆಯನ್ನು ಜನರಲ್ಲಿ ಹುಟ್ಟಿಸಲು ಪ್ರಯತ್ನಿಸುತ್ತಿದೆ. ಸಂವಿಧಾನವನ್ನು ತಿರುಚುವ ಯತ್ನವು ಅನುದಿನ ನಡೆಯುತ್ತಿದೆ. ಹೆಸರು ಬದಲಾವಣೆಗಳು ಹೆಸರಿಗಷ್ಟೇ ಸೀಮಿತವಾಗಿಲ್ಲ. ಅವು ದೇಶದ ಜಾತ್ಯತೀತ ಲಕ್ಷಣಗಳನ್ನು ಅಳಿಸುವ ಯತ್ನಗಳೇ. ಬಹಳಷ್ಟು ಯೋಜನೆಗಳು ಈಗ ಈ ರೀತಿಯ ವಾಮಾಚಾರದ ಮೂಲಕ ನಡೆಯುತ್ತಿವೆ. ಒಕ್ಕೂಟ ಸರಕಾರದ ನಡವಳಿಕೆಗಳನ್ನು ಗಮನಿಸಿದರೆ ಅದು ಯಾವ ಬಗೆಯ ಪ್ರತಿರೋಧಗಳನ್ನೂ ಸಹಿಸಲು ಸಿದ್ಧವಿಲ್ಲ. ಎಲ್ಲವನ್ನೂ ತನ್ನ ಊಳಿಗದ ತನಿಖಾ ಸಂಸ್ಥೆಯ ಮೂಲಕ ಸದೆಬಡಿಯುವ ತಂತ್ರಗಳನ್ನು ಹುಡುಕುತ್ತಿದೆ. ಅಗತ್ಯವಿರುವ ಎಲ್ಲ ವಿಚಾರಗಳ ಸದ್ದಡಗಿಸಿ ತಮ್ಮ ಗುಪ್ತ ಸೂಚಿಯನ್ನು ಅಳವಡಿಸುವ ತಂತ್ರ ನ್ಯಾಯಾಂಗದ ಮಟ್ಟಿಗಂತೂ ವಿಫಲವಾಯಿತು. ಆದರೆ ಹುತ್ತವ ಬಡಿದರೂ ಹಾವು ಸಾಯಲಿಲ್ಲ ಎಂಬ ಸಮಸ್ಯೆ ಹಾಗೇ ಉಳಿದಿದೆ. ಇದನ್ನು ಅರ್ಥಮಾಡಿಕೊಳ್ಳಬೇಕಾದರೆ ಈ ಎನ್ಸಿಇಆರ್ಟಿ ಎಂಬ ಮತ್ತು ಅಂತಹ ಸಂಸ್ಥೆಗಳ ಕೈವಾಡಗಳನ್ನು ಪರಿಶೀಲಿಸಬೇಕು. ಭಾವನೆಗಳು ಮಾತ್ರವಲ್ಲ, ವಿಚಾರಗಳೂ ವೈಯಕ್ತಿಕವೇ. ಅವನ್ನು ತನ್ನ ಸುತ್ತಲಿನ ಸಮಾಜಕ್ಕೆ, ಹೊರ ಜಗತ್ತಿಗೆ ಅನ್ವಯಿಸುವುದು ಮನುಷ್ಯನ ಜಾಣತನ. ತನಗಾದ ಅನ್ಯಾಯವನ್ನು ಲೋಕಕ್ಕಾದ ಅನ್ಯಾಯವೆಂದು ಮನುಷ್ಯ ತಿಳಿಯುತ್ತಾನೆ. ಹಾಗೆಂದು ಪರರಿಗಾದ, ಅಗುವ ತೊಂದರೆಗಳನ್ನು ತನಗೆ ಅನ್ವಯಿಸಿ ಕಾರ್ಯ ಪ್ರವೃತ್ತರಾಗುವ ಮನುಷ್ಯರು ಬಹಳ ಅಪರೂಪ. ಉಳಿದದ್ದೆಲ್ಲ ತೋರಿಕೆಯ ಅಥವಾ ಗೋಚರವಾಗದ ಮಾರುವೇಷ. ಈ ದೇಶದಲ್ಲಿ ರಾಷ್ಟ್ರೀಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಪರಿಷತ್ತು (National Council of Educational Research and Training) ಅಥವಾ ಸಂಕ್ಷಿಪ್ತವಾಗಿ ಎನ್ಸಿಇಆರ್ಟಿ (NCERT) ಎಂದು ಕರೆಯಲ್ಪಡುವ ಒಕ್ಕೂಟ ಸರಕಾರವು 1961ರಲ್ಲಿ ಸ್ಥಾಪಿಸಿದ ಮತ್ತು ಅದರ ಆಡಳಿತಕ್ಕೆ ಒಳಪಡುವ ‘ಸ್ವಾಯತ್ತ’ ಸಂಸ್ಥೆಯೊಂದಿದೆ. ಇದು ತನ್ನ ಹೆಸರೇ ಸೂಚಿಸುವಂತೆ ಶಿಕ್ಷಣಕ್ಕೆ ಸಂಬಂಧ ಪಟ್ಟ ಪಠ್ಯಗಳನ್ನು ತಯಾರಿಸುವುದು ಅಥವಾ ಸೂಚಿಸುವುದು, ಹಾಗೂ ಶಿಕ್ಷಣಕ್ಕೆ ಬೇಕಾದ ಅಧ್ಯಯನ, ತರಬೇತಿ ಮುಂತಾದವುಗಳನ್ನು ಜೋಡಿಸುವ ಅಥವಾ ಜೋಡಿಸಬೇಕಾದ ಸಂಸ್ಥೆ. ಒಟ್ಟಾರೆ ಹೇಳುವುದಾದರೆ ಇದು ರಾಷ್ಟ್ರೀಯ ಶಿಕ್ಷಣ ನೀತಿಯನ್ನು ರೂಪಿಸುವ ಮತ್ತು ಆ ಮೂಲಕ ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸುವ ಮಹತ್ವದ ಹೊಣೆಯನ್ನು ಹೊತ್ತ ಮತ್ತು ಹೊರಬೇಕಾದ ಸಂಸ್ಥೆ. ಯಾವುದೇ ಆಡಳಿತವು ತನ್ನದೇ ಆದ ರಾಜಕೀಯ ಉದ್ದೇಶಗಳನ್ನು ಹೊಂದಿರುತ್ತದೆ. ತತ್ವ-ಸಿದ್ಧಾಂತಗಳ ಹೆಸರಿನಲ್ಲಿ ಹುಟ್ಟಿಕೊಂಡು ಬಳಿಕ ತನ್ನ ಅಧಿಕಾರ ರಾಜಕೀಯಕ್ಕೆ ನೆರವಾಗುವ ವಿಚಾರಗಳನ್ನು ಪ್ರಚುರಪಡಿಸುವ, ಪ್ರಚಾರ-ಪ್ರಸಾರ ಮಾಡುವ ಹಾದಿಯಲ್ಲೇ ಈ ನೀತಿಯು ವಿಕಾಸಗೊಳ್ಳುತ್ತದೆ. ಇದನ್ನು ಮೀರಿ ಸಾಂವಿಧಾನಿಕ ಬದ್ಧತೆಯಿಂದ ಮೊದಲ ಕೆಲವು ದಶಕಗಳಲ್ಲಿ ಸ್ವತಂತ್ರ ಭಾರತದ ಸ್ವಾಯತ್ತ ಸಂಸ್ಥೆಗಳು ಕಾರ್ಯನಿರ್ವಹಿಸಿದವಾದರೂ ಆನಂತರ ಅವು ಶಿವನೆದುರು ನಿಂತ (ಕುಳಿತ?) ನಂದಿಯ ಹಾಗೆ ಪ್ರಭುಸಂಹಿತೆಗೆ ಒಳಗಾದವು. ಬುದ್ಧಿವಂತರು, ಗಣ್ಯರು, ಜ್ಞಾನಿಗಳು ಎನಿಸಿಕೊಂಡವರು ಕೂಡಿ ಚರ್ಚಿಸಿ ಕೈಗೊಂಡ ನಿಲುವು ದೇಶಕ್ಕೆ ಹಿತ ತಂದವೆಂದೇನೂ ಇಲ್ಲ. ಪುಸ್ತಕದ ಬದನೆಕಾಯಿ ಮಡಿಕೆಯಲ್ಲಿ ಬೇಯದು ಎಂಬಂತೆ ಅವರೂ ಸಾಕಷ್ಟು ಹುಂಬತನದ ನಿರ್ಧಾರವನ್ನು ಮಾಡಿದ ಉದಾಹರಣೆಗಳಿವೆ. ಇದಕ್ಕೆ ಮುಖ್ಯವಾದ ಕಾರಣವೆಂದರೆ ಅಜ್ಜನೆಟ್ಟಾಲಕ್ಕೆ ನೇತುಕೊಳ್ಳಬಾರದೆಂಬ ಮತ್ತು ಪರಂಪರೆಯನ್ನು ಉದ್ಧರಿಸುವ ಮಾರ್ಗವೆಂದರೆ ಪ್ರಯೋಗಕ್ಕೆ ಒಳಪಡುವುದು ಮತ್ತು ಒಳಪಡಿಸುವುದು ಎಂಬ ನಂಬಿಕೆ. ಆದರೆ ಎಲ್ಲ ಸಂಪ್ರದಾಯ/ಪರಂಪರೆಯೂ ಬದಲಾವಣೆಗೆ ಒಳಪಡಬೇಕಾದ್ದಿಲ್ಲ ಎಂಬ ನೀತಿಯನ್ನು ಅನುಸರಿಸುವುದಕ್ಕೆ ನಮ್ಮ ಸ್ವಘೋಷಿತ (ಸೋ ಕಾಲ್ಡ್) ಪಂಡಿತರು ಒಪ್ಪುವುದಿಲ್ಲ. ತಾವು ಅಲ್ಲಿರುವುದಕ್ಕೆ ಮತ್ತು ತಮ್ಮ ಅಸ್ತಿತ್ವವನ್ನು ಪ್ರದರ್ಶಿಸುವುದಕ್ಕಾದರೂ ಕೆಲವೊಂದು ಬದಲಾವಣೆಯನ್ನು ತರಬೇಕೆಂಬುದು ಈ ನಂದೀಶ್ವರರ ನಂಬಿಕೆ. ಇದು ರಾಷ್ಟ್ರಮಟ್ಟಕ್ಕೆ ಸೀಮಿತವಾಗಿಲ್ಲ. ರಾಜ್ಯಮಟ್ಟದಲ್ಲೂ ಈ ಪ್ರಹಸನ ಯಥೇಚ್ಛವಾಗಿ ನಡೆಯುತ್ತಿದೆ. ಅದನ್ನು ಬರೆಯಹೊರಟರೆ ಈ ಅಂಕಣ ಸಾಲದು. ಇಂತಹ ವಹಿವಾಟುಗಳು ಈ ದೇಶದ ಲಾಕ್ಷಣಿಕ ಸೋಂಕು. ರಾಜಕಾರಣವನ್ನು ಹೊರತುಪಡಿಸಿದರೆ ನಮ್ಮ ಸಾರ್ವಜನಿಕ ಹಣ ಅತೀ ಹೆಚ್ಚು ಲೂಟಿಯಾಗುತ್ತಿರುವುದು ಈ ಬುದ್ಧಿವಂತರ, ವಿದ್ವಾಂಸರ ಪ್ರಪಂಚದಲ್ಲಿ. ಈ ಯೋಚನೆ-ಯೋಜನೆಗೆ ಪ್ರಯೋಗ ಪ್ರಾಣಿ (ಗಿನಿಪಿಗ್)ಗಳು ಬೇರೆ ಯಾರೂ ಅಲ್ಲ, ನಮ್ಮ ಪ್ರಜೆಗಳು. ಅದರಲ್ಲೂ ಈ ಪ್ರಯೋಗದ ದುರಂತಮಯ ಬಲಿಪಶುಗಳು ಎಳೆಹರೆಯದ, ಜಗತ್ತನ್ನು ವಿಸ್ಮಯಕಣ್ಣುಗಳಿಂದ ನೋಡುವ, ಗ್ರಹಿಸುವ, ಎಳೆಯರು. ಪದವಿಯ ವರೆಗಿನ ಶಿಕ್ಷಣವನ್ನು 10+2, 11+1, ಹೀಗೆಲ್ಲ ಕಾಲಮಿತಿಯ ಲೆಕ್ಕಾಚಾರವನ್ನು ಹೇರಿ ಈಗ 5+3+3+4 ಎಂಬ ಹೊಸ ಪಾತಳಿಯನ್ನು ನಿರ್ಧರಿಸಲಾಗಿದೆ. ಇವನ್ನೆಲ್ಲ ಗಮನಿಸಿದರೆ ಹಿಂದೊಮ್ಮೆ ಡಾ. ಶಿವರಾಮ ಕಾರಂತರು ಟೀಕಿಸಿದಂತೆ 15-3 ಯಾಕೆ ಕೂಡದು ಎಂದು ಪ್ರಶ್ನಿಸಬೇಕಾಗುತ್ತದೆ! 2020ರಲ್ಲಿ ರಾಷ್ಟ್ರೀಯ ನೀತಿ ಪ್ರಕಟವಾಯಿತು. ಇದರಲ್ಲಿ ನೀತಿ ಎಷ್ಟು, ಅನೀತಿ ಎಷ್ಟು ಎಂಬುದು ಸಾರ್ವಜನಿಕ ಚರ್ಚೆಯ ವಸ್ತು. ಸಂಘ ಪರಿವಾರವು ತನ್ನೆಲ್ಲ ಕಾರ್ಯಸೂಚಿಗಳನ್ನು ಮೋದಿ ಸರಕಾರದ ಮೂಲಕ ನಿರ್ವಹಿಸುತ್ತಿದೆ. ಈಗಂತೂ ಮತೀಯತೆಯ ಕಾರ್ಯಸೂಚಿಯನ್ನು ಎಲ್ಲಿ ಸಾಧ್ಯವೋ ಅಲ್ಲಿ ಸೇರಿಸಲಾಗುತ್ತಿದೆ. ‘‘Nagpur Communal Ecosystem for Rewriting of Textbooks--which is the real NCERT'’ ಎಂಬ ಟೀಕೆ ಬಂದಿದೆ. ಮನುಸ್ಮತಿಯನ್ನು ಪಠ್ಯವಾಗಿ ಸೇರಿಸಿದ ಉದಾಹರಣೆಗಳಿವೆ. ವಿಶ್ವವಿದ್ಯಾನಿಲಯಗಳ ಮುಖಂಡರಾಗಿ ನೇರ ಮತೀಯ ರಾಜಕೀಯದ ನಿಷ್ಠರನ್ನು ತುಂಬಿಸಲಾಗುತ್ತಿದೆ. ಇದಕ್ಕೆ ನೀಡುವ ಸಮರ್ಥನೆಯೆಂದರೆ ಒಂದೊಮ್ಮೆ- ಪ್ರಾಯಃ ನೆಹರೂ ಕಾಲದಲ್ಲಿ- ಎಲ್ಲ ಪಠ್ಯಗಳಲ್ಲಿ ಸಮಾಜವಾದಿ ಸಿದ್ಧಾಂತಗಳನ್ನು ಹೇರಲಾಗಿದೆ ಮತ್ತು ಎಡಪಂಥೀಯರೇ ಅಲ್ಲಿ ಅಂದರೆ ವಿಶ್ವವಿದ್ಯಾನಿಲಯಗಳಲ್ಲಿ, ಯುಜಿಸಿ ಮುಂತಾದ ಶಿಕ್ಷಣ ಸಂಬಂಧಿ ಸಂಸ್ಥೆಗಳಲ್ಲಿ ತುಂಬಿಹೋಗಿದ್ದರು ಎಂಬ ಆರೋಪ. ಸ್ವಲ್ಪ ಮಟ್ಟಿಗೆ ಇದೂ ಸತ್ಯವೇ. ಆದರೆ ಕಾಯಿಲೆಯನ್ನು ಗುಣಮಾಡುವ ಬದಲು ಇನ್ನೊಂದು ಅದಕ್ಕಿಂತ ಗಂಭೀರ ಕಾಯಿಲೆಗೆ ಅವಕಾಶಮಾಡಿಕೊಟ್ಟರೆ ಸಮಾಜವೆಂಬ ರೋಗಿಯ ಪಾಡು ಏನಾಗಬೇಡ? ಈಗ ಆಗಿರುವುದು ಅದೇ. ನ್ಯಾಯಾಂಗವು ಪೂರ್ಣ ಸರಿಯಿರಲಿಕ್ಕಿಲ್ಲ. ಅದು ಸಾಧ್ಯವೂ ಅಲ್ಲ.ಏನಿದ್ದರೂ ಅದು ನಾವು ಬದುಕಿ ಬಾಳುವ ಸಮಾಜದ, ಈ ನೆಲದ ಸಂಸ್ಕೃತಿಯ ಭಾಗವಾಗಿರುವುದರಿಂದ ಇಲ್ಲಿನ ಸಿಹಿಕಹಿಗಳು ಅಲ್ಲೂ ಇರುತ್ತವೆ. ಉದಾಹರಣೆಗೆ ಎನ್ಸಿಇಆರ್ಟಿಯ ಅಕ್ರಮಗಳಲ್ಲಿ ಇದೇ ಮೊದಲಲ್ಲ. ಮನುಸ್ಮತಿಯ ಸೇರ್ಪಡೆ, ಮೊಗಲ್ ಇತಿಹಾಸದ ಬೇರ್ಪಡೆ ಮುಂತಾದವು ಇಡೀ ದೇಶವನ್ನು ತಲ್ಲಣಗೊಳಿಸಿದಾಗಲೂ ಸರ್ವೋಚ್ಚ ನ್ಯಾಯಾಲಯ ಕಣ್ಣುಮುಚ್ಚಿ ಕುಳಿತಿತ್ತು. ಎನ್ಸಿಇಆರ್ಟಿ ನ್ಯಾಯಾಂಗದ ಬಗ್ಗೆ ಪ್ರಸ್ತಾಪಿಸದಿದ್ದರೆ, ಅದರ ಗೋಜಿಗೆ ನ್ಯಾಯಾಂಗವು ಹೋಗುತ್ತಿರಲಿಲ್ಲ. ಇಷ್ಟು ವೇಗವಾಗಿ ಕ್ರಮಕೈಗೊಂಡ ಇತಿಹಾಸ ಸ್ವತಂತ್ರ ಭಾರತದಲ್ಲಿ ಇಲ್ಲ. ಸರಕಾರ ಮಾಡಿದ ಇತರ ಅನೇಕ ಅಕ್ರಮಗಳನ್ನು ಗಮನಿಸುವ ಇರಾದೆಯು ಸರ್ವೋಚ್ಚ ನ್ಯಾಯಾಲಯಕ್ಕಿದ್ದರೆ ಈಗಲೂ ತಡವಾಗಿಲ್ಲ. ದೇಶದ ಸಾಂಸ್ಕೃತಿಕ ಬೆಳವಣಿಗೆಯನ್ನು ತಡೆಗಟ್ಟುವ ಯಾವುದೇ ವಿಚಾರವನ್ನು ನ್ಯಾಯಾಂಗವು ಸ್ವಇಚ್ಛೆಯಿಂದ ಗಮನಿಸಿ ಇಷ್ಟೇ ವೇಗದಲ್ಲಿ ಸೂಕ್ತ ಕ್ರಮವನ್ನು ಕೈಗೊಳ್ಳಬಹುದು. ನ್ಯಾಯಾಂಗವು ಹೀಗೆ ಮಾಡುತ್ತಿದೆಯೇ? ಇಲ್ಲ. ಮಾಡಬಹುದಾದ ಅನೇಕ ಕೆಲಸಗಳನ್ನು ತಾಂತ್ರಿಕ ನೆಪಗಳನ್ನೊಡ್ಡಿ ನಿರ್ವಹಿಸದ ಉದಾಹರಣೆಗಳಿವೆ. ಬೆನ್ನಿಗೆ ಬಿದ್ದರೆ ಮಾತ್ರ ತಲೆಗೆ ಬುದ್ಧಿ ಎಂಬ ಹಾಗಾಗಿದೆ. ಇದು ಬಹುದೊಡ್ಡ ಸಾಂವಿಧಾನಿಕ ವೈಫಲ್ಯ. ತನ್ನ ಮನೆಗೆ ಬೆಂಕಿಹಚ್ಚಲು ಹೊರಟಾಗ ತೆಗೆದುಕೊಳ್ಳುವ ಜಾಗ್ರತೆಯನ್ನು ಇತರ ಸಂದರ್ಭಗಳಲ್ಲೂ ತೆಗೆದುಕೊಂಡರೆ ದೇಶದ ಅನೇಕ ಸಮಸ್ಯೆಗಳು ಪರಿಹಾರವಾಗುವುದರಲ್ಲಿ ಸಂಶಯವಿಲ್ಲ. ನ್ಯಾಯಾಂಗವು ತನ್ನ ಸಾಂವಿಧಾನಿಕ ಹೊಣೆಯನ್ನು ನಿರ್ವಹಿಸಲು ವಿಫಲವಾದಲ್ಲಿ ಅದಕ್ಕೆ ಸರಿಯಾದ ಕ್ರಮಗಳನ್ನು ಸರಕಾರ ಕೈಗೊಳ್ಳಬಹುದು. ಆದರೆ ಸರಕಾರವು ಸಂವಿಧಾನದ ಚೌಕಟ್ಟಿನಲ್ಲೇ ಈ ಕ್ರಮಗಳನ್ನು ಕೈಗೊಳ್ಳಬೇಕೇ ಹೊರತು ತನ್ನ ರಾಜಕಾರಣದ ಆಕಾಂಕ್ಷೆಗಳನ್ನು ಈಡೇರಿಸುವ, ತನ್ನ ಅನುಕೂಲಕ್ಕಾಗಿ ಇತರರ ತೋಳು ತಿರುಚುವ ಇಲ್ಲವೇ ಅಕ್ರಮಗಳ ಮೂಲಕವಲ್ಲ. ನ್ಯಾಯಮೂರ್ತಿಗಳ ಪದಚ್ಯುತಿಯ ಕ್ರಮಕ್ಕೆ ಎಷ್ಟು ಸಂಸದರು ನಿರ್ಭೀತಿಯಿಂದ ನಿಷ್ಪಕ್ಷತೆಯಿಂದ ಭಾಗವಹಿಸುತ್ತಾರೆ? ಅಲ್ಲಿ ನಡೆಯುವುದು ಅಕ್ರಮ ರಾಜಕೀಯವೇ ಹೊರತು ದೇಶಹಿತದ, ನ್ಯಾಯಹಿತದ, ಸಂವಿಧಾನಹಿತದ ಕ್ರಮವಲ್ಲ. ಕ್ರಿಮಿನಲ್ ಪ್ರಕರಣಗಳ ಆರೋಪಿಗಳೇ ಹೆಚ್ಚಿರುವ ಸಂಸತ್ ಅಥವಾ ಶಾಸನಸಭೆಗಳಲ್ಲಿ ಎಂತಹ ನ್ಯಾಯ ನಡೆಯಬಹುದು? ನ್ಯಾಯಾಂಗದ ಕುರಿತ ಟೀಕೆಯನ್ನು ತನ್ನ ಅನುಕೂಲಕ್ಕೆ ತಕ್ಕಂತೆ ಸರಕಾರವು ತಿರುಚುತ್ತಿದೆ. ಇದು ಹಿಂದಿನ ಉಪರಾಷ್ಟ್ರಪತಿ ಜಗದೀಪ್ ಧನ್ಕರ್ ಇದ್ದಾಗಲೇ ನಡೆಯುತ್ತಿತ್ತು. ಚುನಾವಣಾ ಆಯೋಗದ ಆಯ್ಕೆಯಲ್ಲಿ ದೇಶದ ಮುಖ್ಯ ನ್ಯಾಯಮೂರ್ತಿಗಳ ಭಾಗವಹಿಸುವಿಕೆಯನ್ನು ಶಾಸನದ ಮೂಲಕ ಮೊದಲ ಬಾರಿಗೆ ನಿರಾಕರಿಸಲಾಯಿತು. ಈಗಿನ ಸ್ಥಿತಿಯಲ್ಲಿ ಸರಕಾರವು ತನಗೆ ಬೇಕಾದವರನ್ನೇ ಅಲ್ಲಿ ಪ್ರತಿಷ್ಠಾಪಿಸಲು ಸಾಧ್ಯವಾಗಿದೆ. ಇದರ ಪರಿಣಾಮವನ್ನು ದೇಶವು ಈಗಾಗಲೇ ಕಾಣುತ್ತಿದೆ. ತಮಗಾಗದ ನ್ಯಾಯಮೂರ್ತಿಗಳಿಗೆ ಪದೋನ್ನತಿಯನ್ನು ನಿರಾಕರಿಸುವ ಅಥವಾ ಅವರ ಆಯ್ಕೆಯನ್ನು ಅವರ ನಿವೃತ್ತಿಯವರೆಗೂ ವಿಳಂಬಿಸುವ ನೀತಿಯನ್ನು ಸರಕಾರ ವಹಿಸಿದೆ. ಇಂತಹ ಪರಿಸ್ಥಿತಿಯಲ್ಲಿ ಎನ್ಸಿಇಆರ್ಟಿ ಒಂದು ವೇಳೆ ನ್ಯಾಯಾಂಗದ ಕುರಿತ ಅಸಮಾಧಾನವಿದ್ದರೆ ಮತ್ತು ಅದನ್ನು ಶಿಕ್ಷಣದ ಭಾಗವಾಗಿಸಬೇಕಾದರೆ ನಿಷ್ಪಕ್ಷವಾಗಿ ಪ್ರದರ್ಶಿಸಬೇಕು. ಪ್ರಾಯಃ ಭಾರತದಲ್ಲಿ ಭ್ರಷ್ಟಾಚಾರ ಎಂಬ ದೊಡ್ಡ ಕ್ಯಾನ್ವಾಸನ್ನು ರಚಿಸಿಕೊಂಡು ಅದರಲ್ಲಿ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಹೀಗೆ ಸಂವಿಧಾನದ ಮೂರು ಮೂಲೆಗಳಲ್ಲಿ ಭ್ರಷ್ಟಾಚಾರ ಎಂಬ ಪಠ್ಯಕ್ರಮವನ್ನು ಸೇರಿಸಬಹುದು. ಇಂದಿನ ಪರಿಸ್ಥಿತಿಯಲ್ಲಿ ಇವಿಷ್ಟೇ ಸಾಲದು: ಮಾಧ್ಯಮದಲ್ಲಿ, ಉದ್ದಿಮೆಯಲ್ಲಿ, ಕಲೆ-ಸಾಹಿತ್ಯದಲ್ಲಿ, ಮತ-ಧರ್ಮಗಳಲ್ಲಿ, ಕೊನೆಗೆ ಕ್ರೀಡೆಯಲ್ಲೂ- ಹೀಗೆ ಇತರ ಅನೇಕ ಕ್ಷೇತ್ರಗಳನ್ನೂ ಬೆಟ್ಟು ಮಾಡಿ ತೋರಿಸಬಹುದು; ಆಗ ನ್ಯಾಯಾಂಗದ ಕುರಿತೂ ಕ್ಷ-ಕಿರಣವನ್ನು ಬೀರಬಹುದು. ದೇಶದ ಎಲ್ಲ ಕ್ಷೇತ್ರಗಳಲ್ಲೂ ಭ್ರಷ್ಟಾಚಾರವು ತಾಂಡವವಾಡಬೇಕಾದರೆ ನ್ಯಾಯಾಂಗವನ್ನು ಮಾತ್ರ ಆರೋಪಿಸುವುದು ಒಟ್ಟಾರೆ ನ್ಯಾಯಾಂಗ ವ್ಯವಸ್ಥೆಯನ್ನೇ ಬುಡಮೇಲುಮಾಡುವ ಅಥವಾ ರಾಜಕಾರಣಕ್ಕೆ, ಅಧಿಕಾರಶಾಹಿಗೆ ಅನುಕೂಲವಾಗುವಂತಹ ತ್ರಿಶಂಕು ನರಕವನ್ನು ಸೃಷ್ಟಿಸುವ ಸರ್ಕಸ್ಸಾಗಬಹುದು. ಇದು ವಿದ್ಯಾರ್ಥಿಗಳಿಗೆ ಮಾತ್ರವಲ್ಲ, ಒಟ್ಟು ಸಮಾಜಕ್ಕೇ ಅಂಟುವ ಕ್ಯಾನ್ಸರ್ ಆಗುವ ಆತಂಕವನ್ನು ತರಬಹುದು. ಶಾಸಕಾಂಗ ಮತ್ತು ಕಾರ್ಯಾಂಗ ಈ ಕೆಲಸವನ್ನು ಮಾಡುತ್ತದೆಂಬ ಸೂಚನೆಗಳಿಲ್ಲ. ಇದನ್ನು ತಡೆಗಟ್ಟುವ ಕರ್ತವ್ಯ ಎನ್ಸಿಇಆರ್ಟಿ ಮತ್ತು ಅಂತಹ ಸಂಸ್ಥೆಗಳಿಗಿದೆೆ; ನ್ಯಾಯಾಂಗಕ್ಕೂ ಇದೆ; ಇವೆರಡೂ ವಿಫಲವಾದರೆ ಈ ಹಕ್ಕು, ಕರ್ತವ್ಯ ಜನರಿಗಿದೆ.
ಲೋಕಾಯುಕ್ತ ಇತ್ತೀಚೆಗೆ ಕಾರ್ಯಾಚರಣೆ ನಡೆಸಿ, ಭ್ರಷ್ಟರನ್ನು ರೆಡ್ ಹ್ಯಾಂಡ್ ಆಗಿ ಹಿಡಿರುವ ಘಟನೆಗಳು ನಡೆದಿವೆ, ಇದೀಗ ಮತ್ತೆ ಆದಾಯ ಮೀರಿದ ಆಸ್ತಿ ಗಳಿಕೆಯ ದೂರು ಬಂದ ಹಿನ್ನೆಲೆ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಇರುವ 10 ಅಧಿಕಾರಿಗಳ ಮನೆ-ಕಚೇರಿ ಮೇಲೆ ದಾಖಿ ಮಾಡಿ ಶೋಧ ನಡೆಸಲಾಗುತ್ತಿದೆ.
ಪುತ್ತೂರು: ಪೆರ್ಲಂಪಾಡಿಯ ಮರ್ಹೂಂ ಇಬ್ರಾಹೀಂ ಹಾಜಿಯವರ ಪತ್ನಿ ಬೀಫಾತಿಮಾ ಹಜ್ಜುಮ್ಮ (85) ಗುರುವಾರ ಬೆಳಗ್ಗೆ ಕಾಸರಗೋಡಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಮೃತರು ಐವರು ಪುತ್ರರು, ಓರ್ವ ಪುತ್ರಿ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ದಾನಿಯೂ ಆಗಿದ್ದ ಬೀಫಾತಿಮಾ ಹಜ್ಜುಮ್ಮ ಅವರ ದಫನ ಕಾರ್ಯವು ಬಂದ್ಯೋಡು ಸಮೀಪದ ಮೀಪ್ರಿ ಜುಮಾ ಮಸೀದಿಯ ಆವರಣದಲ್ಲಿ ಗುರುವಾರ ಅಸರ್ ನಮಾಝ್ ಬಳಿಕ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಕಾವೂರು: ನಗರದ ಪಚ್ಚನಾಡಿ ಎಸ್ಟಿಪಿ ಬಳಿ ಒಳಚರಂಡಿ ಕಾಮಗಾರಿ ಹಾಗೂ ಉನ್ನತೀಕರಣ ಯೋಜನೆ, ಸುರತ್ಕಲ್ ಮತ್ತು ದಕ್ಷಿಣ ಕ್ಷೇತ್ರದ ಎಸ್ಟಿಪಿ ಮೇಲ್ದರ್ಜೆ ಕಾಮಗಾರಿಗಳ ವೀಕ್ಷಣೆಗೆ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಬುಧವಾರ ಭೇಟಿ ನೀಡಿದ ಸಂದರ್ಭದಲ್ಲಿ ಸ್ಥಳೀಯ ಶಾಸಕನಾದ ನನಗೆ ಆಹ್ವಾನ ನೀಡಿಲ್ಲ ಎಂದು ಶಾಸಕ ಡಾ. ಭರತ್ ಶೆಟ್ಟಿ ಆರೋಪಿಸಿದ್ದಾರೆ. ಕೇಂದ್ರ ಸರಕಾರದ ಸ್ವಚ್ಛ ಭಾರತ್ ಯೋಜನೆ ಹಾಗೂ ಎನ್ಜಿಟಿ ಅನುದಾನದಡಿ ಸುಮಾರು 40 ಕೋಟಿ ರೂ. ಅನುದಾನ ಲಭಿಸಿದೆ. ರಾಜ್ಯ ಸರಕಾರದ ಪಾತ್ರ ಕೇವಲ ಅನುಷ್ಠಾನಕ್ಕೆ ಸೀಮಿತವಾಗಿದೆ. ಒಳಚರಂಡಿ ಯೋಜನೆಗೆ ಸಂಬಂಧಿಸಿದಂತೆ ತಮ್ಮ ಪ್ರಥಮ ಅವಧಿಯಲ್ಲೇ ಪತ್ರ ಬರೆದು ಅನುದಾನ ತರಲು ಕ್ರಮ ವಹಿಸಲಾಗಿತ್ತು ಎಂದು ಅವರು ತಿಳಿಸಿದ್ದಾರೆ. ಉಸ್ತುವಾರಿ ಸಚಿವರಾಗಿರುವ ದಿನೇಶ್ ಗುಂಡೂರಾವ್ ಜಿಲ್ಲೆಗೆ ಬರುವುದೇ ಅಪರೂಪ. ಅದರ ನಡುವೆಯೂ ಸರಕಾರದ ಸಭೆ ಹಾಗೂ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಅದನ್ನು ಪಕ್ಷದ ಕಾರ್ಯಕ್ರಮದಂತೆ ಬಿಂಬಿಸಿ ತೆರಳುತ್ತಾರೆ. ಪಚ್ಚನಾಡಿಯ ಕಾರ್ಯಕ್ರಮ ಸ್ಥಳೀಯ ಶಾಸಕನಾದ ತಮ್ಮ ಉಪಸ್ಥಿತಿಯಲ್ಲಿ ನಡೆಯಬೇಕಾಗಿತ್ತು. ಆದರೆ ಸ್ಥಳೀಯ ಕಾಂಗ್ರೆಸ್ ನಾಯಕರ ಕುಮ್ಮಕ್ಕಿನಿಂದ ಅಧಿಕಾರಿಗಳು ಕೂಡ ಯಾವುದೇ ಮಾಹಿತಿ ನೀಡಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಜಿಲ್ಲೆಯಲ್ಲಿ ಬಿಜೆಪಿ ಶಾಸಕರ ಪ್ರಾಬಲ್ಯ ಹಾಗೂ ಅವರ ಉತ್ತಮ ಕೆಲಸಗಳನ್ನು ಕಾಂಗ್ರೆಸ್ ಗೆ ಸಹಿಸಿಕೊಳ್ಳಲಾಗುತ್ತಿಲ್ಲ. ಈ ಯೋಜನೆಯನ್ನು ತಮ್ಮದೇ ಸಾಧನೆ ಎಂಬಂತೆ ಕ್ರೆಡಿಟ್ ಪಡೆಯಲು ಕಾಂಗ್ರೆಸ್ ಹವಣಿಸುತ್ತಿದೆ ಎಂದು ಅವರು ವ್ಯಂಗ್ಯವಾಡಿದ್ದಾರೆ. ಈ ಬಗ್ಗೆ ಸಂಬಂಧಪಟ್ಟವರ ವಿರುದ್ಧ ಹಕ್ಕುಚ್ಯುತಿ ಮಂಡಿಸುವುದಾಗಿ ಶಾಸಕ ಡಾ. ಭರತ್ ಶೆಟ್ಟಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಬೇಕಿದೆ ಅನುದಾನ ; ರಾಜ್ಯ ಬಜೆಟ್ ಮೇಲಿದೆ ಭಾರೀ ನಿರೀಕ್ಷೆ!
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ನೀರಿನ ಜಪ ನಡೆಯುತ್ತಿದೆ. ವ್ಯಾಲಿ ಯೋಜನೆಗಳಡಿ ಅರೆಬರೆ ಸಂಸ್ಕರಿತ ನೀರು ಕೆರೆಗಳನ್ನು ಸೇರಿಕೊಳ್ಳುತ್ತಿದೆ. ಆದರೆ ಇದರಿಂದ ಲಾಭಕ್ಕಿಂತ ನಷ್ಟವೇ ಹೆಚ್ಚು ಎನ್ನುವಂತಿದೆ. ಹೀಗಾಗಿ 3ನೇ ಹಂತದ ಶುದ್ಧೀಕರಣಕ್ಕೆ ರಾಜ್ಯ ಸರಕಾರ ಮನಸ್ಸು ಮಾಡಬೇಕಿದೆ. ಇನ್ನು ಜಿಲ್ಲೆಗೆ 2027ಕ್ಕೆ ಎತ್ತಿನಹೊಳೆ ನೀರು ಹರಿಯುತ್ತೆ ಎಂದು ರಾಜ್ಯ ಸರಕಾರ ಹೇಳುತ್ತಿದೆ, ಆದರೆ ಹೇಳಿದಂತೆ ಅನುಷ್ಠಾನಕ್ಕೆ ಬರುತ್ತಾ ಎನ್ನುವುದೇ ಈಗ ಪ್ರಶ್ನೆ.
Petrol - Diesel: ಪೆಟ್ರೋಲ್ - ಡೀಸೆಲ್ ಖರೀದಿಗೆ ಮುಗಿ ಬಿದ್ದ ಜನ ವಿಡಿಯೋ ವೈರಲ್: ಕೇಂದ್ರ ಸರ್ಕಾರ ಹೇಳಿದ್ದೇನು
Petrol - Diesel: ಅಮೆರಿಕ, ಇಸ್ರೇಲ್ ಹಾಗೂ ಇರಾನ್ ದೇಶಗಳ ನಡುವೆ ನಡೆಯುತ್ತಿರುವ ಯುದ್ಧವು ದಿನದಿಂದ ದಿನಕ್ಕೆ ತೀವ್ರ ಸ್ವರೂಪವನ್ನು ಪಡೆದುಕೊಂಡಿದ್ದು. ಇರಾನ್ನಲ್ಲಿ ಮಾರಣಹೋಮವೇ ನಡೆದಿದೆ. ಇರಾನ್ನಲ್ಲಿ ಮಾತ್ರವಲ್ಲದೇ ಇಸ್ರೇಲ್ ಹಾಗೂ ಗಲ್ಫ್ ರಾಷ್ಟ್ರಗಳಲ್ಲೂ ಸೈನಿಕರು, ಜನ ಸಾವನ್ನಪ್ಪಿದ್ದಾರೆ. ಯುದ್ಧದ ತೀವ್ರತೆಯು ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದ್ದು, ಈ ನಡುವೆ ಭಾರತದಲ್ಲಿ ಪೆಟ್ರೋಲ್ - ಡೀಸೆಲ್ ಸಂಗ್ರಹ ಹಾಗೂ
ಅಂತರ್ಜಲ ವೃದ್ಧಿಗೆ ಜಲಮಂಡಳಿ ಕ್ರಮ: ಬೆಂಗಳೂರಿನ ಕೆರೆಗಳಿಗೂ ಸಂಸ್ಕರಿಸಿದ ನೀರು!
ಬೇಸಿಗೆ ಆರಂಭವಾಗಿದೆ. ಮುಂಬರುವ ದಿನಗಳಲ್ಲಿ ಎದುರಾಗಬಹುದಾದ ನೀರಿನ ಸಮಸ್ಯೆ ಪರಿಹರಿಸಲು ಜಲಮಂಡಳಿ ಪ್ಲಾನ್ ಮಾಡಿದೆ. ಅಂತರ್ಜಲ ಮಟ್ಟ ಕುಸಿಯದಂತೆ ನೋಡಿಕೊಳ್ಳಲು, ಬರಿದಾಗುತ್ತಿರುವ ಕೆರೆಗಳಿಗೆ ಸಂಸ್ಕರಿಸಿದ ನೀರು ತುಂಬಿಸಲು ಜಲಮಂಡಳಿ ನಿರ್ಧರಿಸಿದೆ.
ಕೇಂದ್ರ ಮಾರ್ಗಸೂಚಿ ಜಾರಿಗೆ ರಾಜ್ಯ ಸರಕಾರ ಚಿಂತನೆ ; ಆಶಾ ಕಾರ್ಯಕರ್ತೆಯರಿಗೆ ಉದ್ಯೋಗ ನಷ್ಟ ಭೀತಿ
ಉದ್ಯೋಗ ಕಳೆದುಕೊಳ್ಳುವ ಆಶಾ ಕಾರ್ಯಕರ್ತೆಯರನ್ನು ಆರೋಗ್ಯ ಇಲಾಖೆಯಲ್ಲಿ ಡಿ ದರ್ಜೆಯ ನೌಕರರನ್ನಾಗಿ ಮುಂದುವರಿಸಲು ನಿರ್ಧರಿಸಲಾಗಿದೆ ಎನ್ನಲಾಗಿದೆ. ಆದರೆ ಜುಜುಬಿ ಗೌರವಧನಕ್ಕೆ ದುಡಿಯುವ ಕಾರ್ಯಕರ್ತೆಯರು ಇಲಾಖೆಯ ಡಿ ಗ್ರೂಪ್ ಹುದ್ದೆಗಾಗಿ ಇತರ ತಾಲೂಕು, ಜಿಲ್ಲಾಕೇಂದ್ರಕ್ಕೆ ಹೋಗಬೇಕಾದ ಅನಿವಾರ್ಯತೆಗೆ ತುತ್ತಾಗಿದ್ದಾರೆ.
ಕಚ್ಚಾತೈಲ ಪೂರೈಕೆಯಲ್ಲಿ ವ್ಯತ್ಯಾಸ , ಬೆಲೆ ಏರಿಕೆ ಪರಿಣಾಮಗಳು ಅಷ್ಟೇ ಅಲ್ಲದೆ, ಮಧ್ಯಪ್ರಾಚ್ಯ ಸಂಘರ್ಷದಲ್ಲಿ ಆಭರತೀಯ ಹಡಗುಗಳು, ನಾವಿಕರೂ ಸಿಲುಕಿಕೊಂಡಿದ್ದಾರೆ. ಓಮನ್ ಬಂದರಿನ ಮೇಲಾದ ದಾಳಿಯಲ್ಲಿ ಮೂವರು ಭಾರತೀಯ ನಾವಿಕರು ಮೃತಪಟ್ಟಿದ್ದಾರೆ.
ಕರ್ನಾಟಕ ರಾಜ್ಯದ ಹಾಲಿ ಬಜೆಟ್ ಸ್ಥಿತಿ: ಸಾಲ ಮಾಡಿಯಾದ್ರೂ ತುಪ್ಪ ತಿನ್ನು
ವಿತ್ತೀಯ ಹೊಣೆಗಾರಿಕೆಯ ಅಧಿನಿಯಮದ ಮಾನದಂಡದ ಅನುಸಾರವೇ ರಾಜ್ಯ ಸರ್ಕಾಲ ಸಾಲ ಮಾಡುತ್ತ ಬಂದಿದೆ. ಈ ಪೈಕಿ ರಾಜ್ಯದ ಒಟ್ಟು ಹೊಣೆಗಾರಿಕೆ ಜಿಎಸ್ಡಿಪಿಯ ಶೇ.25ರಷ್ಟನ್ನು ಮೀರಬಾರದು ಎನ್ನುವುದೊಂದು ಪ್ರಮುಖ ಮಾನದಂಡ. 2025-26ರ ಬಜೆಟ್ನಂತೆ ಈ ಪ್ರಮಾಣ ಶೇ.24.91ಕ್ಕೆ ತಲುಪಿದೆ. ಇದನ್ನು 2026-27ರಲ್ಲಿ ಶೇ.24.46ಕ್ಕೆ ಇಳಿಸಲು ಉದ್ದೇಶಿಸಲಾಗಿದೆ. ಹಾಗೆಯೇ 2028-29ರಲ್ಲಿ ಪ್ರಮಾಣವನ್ನು ಶೇ.23.60ಕ್ಕೆ ತಗ್ಗಿಸುವ ಗುರಿಯಿದೆ. ಇದರಿಂದಾಗಿ ಆರ್ಥಿಕ ಶಿಸ್ತು ಮೂಡುವುದರ ಜತೆಗೆ ಆಸ್ತಿ ಸೃಜನೆಗೆ ಪೂರಕವಾದ ಬಂಡವಾಳ ವೆಚ್ಚಕ್ಕೆ ಅವಕಾಶವಾಗಲಿದೆ ಎಂಬ ನಿರೀಕ್ಷೆ ಇರಿಸಿಕೊಳ್ಳಲಾಗಿದೆ.
ಇಂದು ನೇಪಾಳ ಚುನಾವಣೆ: ಯುವ ನೇತಾರನ ವಿರುದ್ಧ ಕಣಕ್ಕಿಳಿದ ಕೆ.ಪಿ.ಶರ್ಮಾ ಓಲಿ!
ಕಠ್ಮಂಡು: ರಾಜಕೀಯ ವಿಪ್ಲವಗಳಿಗೆ ಸಾಕ್ಷಿಯಾದ ಪುಟ್ಟ ಹಿಮಾಲಯನ್ ದೇಶದಲ್ಲಿ ಗುರುವಾರ ಸಾರ್ವತ್ರಿಕ ಚುನಾವಣೆ ನಡೆಯಲಿದ್ದು, ನೇಪಾಳ ರಾಜಕೀಯದಲ್ಲಿ 50 ವರ್ಷಗಳಿಂದ ಪಳಗಿದ ಕೆ.ಪಿ.ಶರ್ಮಾ ಓಲಿ ಅವರು ಯುವನೇತಾರ 35 ವರ್ಷದ ಬಾಲೆನ್ ಅವರ ಸವಾಲು ಎದುರಿಸುತ್ತಿದ್ದಾರೆ. ಕಠ್ಮಂಡು ಮತ್ತು ಇತರ ಹಲವು ನಗರಗಳಲ್ಲಿ ಓಲಿ ಸರ್ಕಾರ ಪದಚ್ಯುತಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಹಲವು ಮಂದಿ genZ ಮತದಾರರು 35 ವರ್ಷ ವಯಸ್ಸಿನ ಬಾಲೆನ್ ಅವರನ್ನು ಮುನ್ನಲೆಗೆ ತಂದಿದ್ದರು. ಆದರೆ ಇದು ನೇಪಾಳದ ಸಾಂಪ್ರದಾಯಿಕ ನಾಯಕತ್ವಕ್ಕೆ ಅಸಹನೀಯವಾಗಿತ್ತು. ಆದಾಗ್ಯೂ ಓಲಿ ನೇಪಾಳ ರಾಜಕೀಯ ವ್ಯವಸ್ಥೆಯಲ್ಲಿ ಮುಂಚೂಣಿ ನಾಯಕರಾಗಿಯೇ ಮುಂದುವರಿದಿದ್ದಾರೆ. ಹಲವು ವರ್ಷಗಳ ರಾಜಕೀಯ ಪ್ರಕ್ಷುಬ್ಧತೆಯ ಬಳಿಕವೂ ಓಲಿ ತಮ್ಮ ಸಾಂಪ್ರದಾಯಿಕ ಝಾಪಾ-5 ಕ್ಷೇತ್ರದಲ್ಲಿ ಮತದಾರರ ನಿಷ್ಠೆ ಉಳಿಸಿಕೊಂಡಿದ್ದಾರೆ. ಓಲಿಯವರ ರಾಜಕೀಯ ಬದುಕು ರೂಪಿಸಿದ ಝಾಪಾ-5 ಕ್ಷೇತ್ರ ಭಾರತದ ಗಡಿಗೆ ಹೊಂದಿಕೊಂಡಿದೆ. ಈ ಬಾರಿ ನೇರ ಕದನದಲ್ಲಿ ಬಲೇನ್ ಹಿರಿಯ ಮುತ್ಸದ್ಧಿಗೆ ಸವಾಲೊಡ್ಡಿದ್ದು, ಕುತೂಹಲಕ್ಕೆ ಕಾರಣವಾಗಿದೆ. 1952ರಲ್ಲಿ ಜನಿಸಿದ ಓಲಿ ನೇಪಾಳದ ಪಂಚಾಯತ್ ಯುಗದಲ್ಲೇ ರಾಜಕೀಯ ಪ್ರವೇಶಿಸಿದ್ದರು. 1970ರಲ್ಲಿ ಹದಿಹರೆಯದ ಕಮ್ಯುನಿಸ್ಟ್ ಹೋರಾಟಗಾರನಾಗಿ ಪಕ್ಷರಹಿತ ವ್ಯವಸ್ಥೆಯನ್ನು ಮತ್ತು ರಾಜಪ್ರಭುತ್ವವನ್ನು ವಿರೋಧಿಸಿದ್ದರು. 1973ರ ಅಕ್ಟೋಬರ್ ನಲ್ಲಿ ಝಾಪಾ ದಂಗೆ ಮತ್ತು ರಾಜಪ್ರಭುತ್ವ ವಿರೋಧಿ ಹೋರಾಟದ ಆರೋಪದಲ್ಲಿ ಬಂಧಿಸಲ್ಪಟ್ಟು 14 ವರ್ಷ ಕಾಲ ಜೈಲಿನಲ್ಲಿ ಕಳೆದಿದ್ದರು. ದಶಕಗಳ ಬಳಿಕ ಯಾವ ರಾಜಪ್ರಭುತ್ವದ ವಿರುದ್ಧ ಓಲಿ ಹೋರಾಡಿದ್ದರೋ ಅದೇ ವ್ಯವಸ್ಥೆಯ ಪ್ರಬಲ ನಾಯಕನಾಗಿ ಹೊರಹೊಮ್ಮಿದರು. 2024ರಲ್ಲಿ ಮತ್ತೆ ದೇಶದ ಚುಕ್ಕಾಣಿ ಹಿಡಿದ ಓಲಿ ನೇತೃತ್ವದ ಸಮ್ಮಿಶ್ರ ಸರ್ಕಾರ ಕಳೆದ ಸೆಪ್ಟೆಂಬರ್ ನಲ್ಲಿ ನಡೆದ genZ ಹೋರಾಟದ ಬಳಿತ ಪತನಗೊಂಡಿತ್ತು. ರಾಜೀನಾಮೆ ಬಳಿಕ ಅವರ ರಾಜಕೀಯ ವೃತ್ತಿ ಕೊನೆಗೊಂಡಿತು ಎಂದೇ ಹಲವರು ಭಾಗವಹಿಸಿದ್ದರು. ಆದರೆ ಓಲಿ ಮತ್ತೆ ಝಾಪಾ-5 ಕ್ಷೇತ್ರದಿಂದ ಚುನಾವಣಾ ಕದನಕ್ಕೆ ಧುಮುಕಿ, ಐದು ದಶಕಗಳ ಅನುಭವವನ್ನು ಒರೆಗೆ ಹಚ್ಚಿದ್ದಾರೆ.
Bihar CM: ಭಾರತದ ರಾಜಕೀಯದಲ್ಲಿ ಮಹತ್ವದ ಬೆಳವಣಿಗೆ ಆಗಿದೆ. ಜೆಡಿಯು ನಾಯಕ, ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ರಾಜ್ಯಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸುವುದಕ್ಕೆ ಮುಂದಾಗಿದ್ದಾರೆ. ಕೇಂದ್ರ ಬಿಜೆಪಿ ಸರ್ಕಾರದ ಮೈತ್ರಿ ಪಕ್ಷ (ಎನ್ಡಿಎ ಮೈತ್ರಿಕೂಟ) ಜೆಡಿಯು ಪಕ್ಷದ ಈ ನಡೆಯು ಹಲವು ಅಚ್ಚರಿಗಳಿಗೆ ಕಾರಣವಾಗಿದೆ. ದಾಖಲೆಯ ಹತ್ತನೇ ಬಾರಿಗೆ ಬಿಹಾರ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ನಾಲ್ಕು
Maharashtra | ಕಿರಿಯ ವಿದ್ಯಾರ್ಥಿಗಳಿಗೆ ಲೈಂಗಿಕ ಕಿರುಕುಳ: 10ನೇ ತರಗತಿಯ 8 ವಿದ್ಯಾರ್ಥಿಗಳ ವಿರುದ್ಧ ಪ್ರಕರಣ ದಾಖಲು
ನಾಸಿಕ್: ಜಿಲ್ಲೆಯ ಸರ್ಕಾರಿ ಹಾಸ್ಟೆಲ್ ನಲ್ಲಿ ಕಿರಿಯ ವಿದ್ಯಾರ್ಥಿಗಳ ಜತೆ ಅಸಹಜ ಲೈಂಗಿಕತೆಯಲ್ಲಿ ತೊಡಗಿ ಕಿರುಕುಳ ನೀಡುತ್ತಿದ್ದ ಆರೋಪದಲ್ಲಿ 10ನೇ ತರಗತಿಯ ಎಂಟು ವಿದ್ಯಾರ್ಥಿಗಳ ವಿರುದ್ಧ ಲೈಂಗಿಕ ಅಪರಾಧಗಳಿಂದ ಮಕ್ಕಳಿಗೆ ರಕ್ಷಣೆ ಕಾಯ್ದೆ (ಪೋಕ್ಸೋ) ಕಾಯ್ದೆಯ ವಿವಿಧ ಸೆಕ್ಷನ್ ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಮಂಗಳವಾರ ವಿದ್ಯಾರ್ಥಿಗಳ ವಿರುದ್ಧ ಪ್ರಕರಣ ದಾಖಲಾಗಿದ್ದು, ಪೊಲೀಸ್ ಅಧೀಕ್ಷಕ ಬಾಳಾಸಾಹೇಬ್ ಪಾಟೀಲ್ ಹಾಸ್ಟೆಲ್ ಗೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದರು. ಹತ್ತನೇ ತರಗತಿ ವಿದ್ಯಾರ್ಥಿಗಳು ಕಿರಿಯ ವಿದ್ಯಾರ್ಥಿಗಳಿಗೆ ರ್ಯಾಗಿಂಗ್ ಮಾಡಿ ಅಸಹಜ ಲೈಂಗಿಕತೆಯಲ್ಲಿ ತೊಡಗುವಂತೆ ಬಲವಂತಪಡಿಸುತ್ತಿದ್ದರು. ಸಂತ್ರಸ್ತ ವಿದ್ಯಾರ್ಥಿಗಳ ಹೇಳಿಕೆ ಅನ್ವಯ ಕಳೆದ ಆರೇಳು ತಿಂಗಳಿನಿಂದ ಈ ಕಿರುಕುಳ ಮುಂದುವರಿದಿತ್ತು. ಫೆ. 22ರಂದು ವಿದ್ಯಾರ್ಥಿಗಳು ಈ ವಿಚಾರವನ್ನು ಹಾಸ್ಟೆಲ್ ಅಧೀಕ್ಷಕರ ಗಮನಕ್ಕೂ ತಂದಿದ್ದರು ಎಂದು ಎಸ್ಪಿ ವಿವರಿಸಿದ್ದಾರೆ. ಅಧೀಕ್ಷಕರು ಹತ್ತನೇ ತರಗತಿಯ ಎಂಟು ವಿದ್ಯಾರ್ಥಿಗಳ ಪೋಷಕರನ್ನು ಸಂಪರ್ಕಿಸಿ ಅವರನ್ನು ಮನೆಗೆ ಕರೆದೊಯ್ಯುವಂತೆ ಸೂಚಿಸಿದ್ದರು. ಸಂತ್ರಸ್ತರ ಪೋಷಕರನ್ನೂ ಕರೆಸಿದ್ದರು. ಒಬ್ಬ ವಿದ್ಯಾರ್ಥಿಯ ಹೇಳಿಕೆಯನ್ನು ಆಧರಿಸಿ 10ನೇ ತರಗತಿ ವಿದ್ಯಾರ್ಥಿಗಳ ಮೇಲೆ ಮಂಗಳವಾರ ಪ್ರಕರಣ ದಾಖಲಿಸಲಾಗಿದೆ ಎಂದು ಹೇಳಿದರು. ಹಿರಿಯ ವಿದ್ಯಾರ್ಥಿಗಳನ್ನು ವಶಕ್ಕೆ ಪಡೆಯುವ ಪ್ರಕ್ರಿಯೆಯನ್ನು ಪೊಲೀಸರು ಆರಂಭಿಸಿದ್ದಾರೆ. ಅವರನ್ನು ಬಾಲನ್ಯಾಯ ಮಂಡಳಿಯ ಮುಂದೆ ಅಗತ್ಯ ಕಾನೂನು ಕ್ರಮಕ್ಕಾಗಿ ಹಾಜರುಪಡಿಸಲಾಗುವುದು. ಘಟನೆ ಬಗ್ಗೆ ಮಾಹಿತಿ ನೀಡಿದ ಬಳಿಕವೂ ಪೊಲೀಸರಿಗೆ ದೂರು ನೀಡದ ಹಿನ್ನೆಲೆಯಲ್ಲಿ ಹಾಸ್ಟೆಲ್ ಅಧೀಕ್ಷಕರು ಸೇರಿದಂತೆ ಮೂವರು ಸಿಬ್ಬಂದಿ ವಿರುದ್ಧವೂ ಪ್ರಕರಣ ದಾಖಲಾಗಿದೆ.
ಕೆಎಸ್ಐಸಿ ಕಾರ್ಖಾನೆ ಮೇಲ್ದರ್ಜೆಗೇರಿಸುವ ಕನಸಿಗೆ ಪೆಟ್ಟು
ಕೆಎಸ್ಐಸಿ ಆವರಣದಲ್ಲಿ ಕ್ರೀಡಾಂಗಣ ನಿರ್ಮಾಣ ಮಾಡುವ ಸರಕಾರದ ನಿರ್ಧಾರದಿಂದ ಕಾರ್ಖಾನೆ ಮೇಲ್ದರ್ಜೆಗೇರಿಸುವ ನಿಗಮದ ಯೋಜನೆಗೆ ಹೊಡೆತ ಬಿದ್ದಿದೆ. ಒಂದು ವೇಳೆ ಕ್ರೀಡಾಂಗಣ ನಿರ್ಮಾಣವಾದರೆ ಕಾರ್ಖಾನೆ ಸುಪರ್ದಿಯಲ್ಲಿ ಕೇವಲ 8 ಎಕರೆ ಮಾತ್ರ ಉಳಿಯಲಿದೆ. ಇದು ಕಾರ್ಖಾನೆ ಮೇಲ್ದರ್ಜೆಗೇರಿಸಿ ವಿಸ್ತರಿಸುವ ಯೋಜನೆಗೆ ತೊಡಕಾಗಲಿದೆ.
ಇಂಗ್ಲೆಂಡ್ ವಿರುದ್ಧದ ಪಂದ್ಯಕ್ಕೆ ಮುನ್ನ ಭಾರತದ ದೌರ್ಬಲ್ಯ ಬಗ್ಗೆ ಉಲ್ಲೇಖಿಸಿದ ಮಾಜಿ ಕೀಪರ್
ಹೊಸದಿಲ್ಲಿ: ಐಸಿಸಿ ಟಿ20 ವಿಶ್ವಕಪ್ ಪಂದ್ಯದ ಸೆಮಿಫೈನಲ್ ನಲ್ಲಿ ಭಾರತ ಗುರುವಾರ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಇಂಗ್ಲೆಂಡ್ ವಿರುದ್ಧ ಸೆಣೆಸಲಿದ್ದು, ಈ ಮಹತ್ವದ ಪಂದ್ಯಕ್ಕೆ ಮುನ್ನ ಭಾರತ ತಂಡದ ಮಾಜಿ ವಿಕೆಟ್ ಕೀಪರ್ ಪಾರ್ಥಿವ್ ಪಟೇಲ್ ಭಾರತೀಯ ತಂಡದ ದೌರ್ಬಲ್ಯವನ್ನು ಪ್ರಸ್ತಾವಿಸಿ ಎಚ್ಚರಿಕೆಯ ಗಂಟೆ ಬಾರಿಸಿದ್ದಾರೆ. ಅಂತಿಮ ನಾಲ್ಕರ ಘಟ್ಟಕ್ಕೆ ಲಗ್ಗೆ ಹಾಕುವ ನಿಟ್ಟಿನಲ್ಲಿ ಉತ್ತಮ ಪ್ರದರ್ಶನ ನೀಡುತ್ತಾ ಬಂದಿದ್ದರೂ, ಭಾರತದ ದೊಡ್ಡ ದೌರ್ಬಲ್ಯವೆಂದರೆ ಕಳಪೆ ಫೀಲ್ಡಿಂಗ್. ಸೂರ್ಯಕುಮಾರ್ ಯಾದವ್ ನೇತೃತ್ವದ ತಂಡ ಟೂರ್ನಿಯಲ್ಲಿ ಇದುವರೆಗೆ 13 ಕ್ಯಾಚ್ ಗಳನ್ನು ಕೈಚೆಲ್ಲಿದೆ. ಭಾರತ ತಂಡದ ಕ್ಯಾಚಿಂಗ್ ಸಾಮರ್ಥ್ಯ ಶೇಕಡ 72.7ಕ್ಕೆ ಕುಸಿದಿರುವುದು ಆತಂಕಕ್ಕೆ ಕಾರಣ. ಇದಕ್ಕೆ ತದ್ವಿರುದ್ಧವಾಗಿ ಕಳಪೆ ಫೀಲ್ಡಿಂಗ್ನಿಂದಾಗಿ ಟೀಕೆಗಳಿಗೆ ಗುರಿಯಾಗಿರುವ ಪಾಕಿಸ್ತಾನದ ಕ್ಯಾಚಿಂಗ್ ಕ್ಷಮತೆ ಶೇಕಡ 83.3ರಷ್ಟಿದೆ. ಆತಂಕದ ಅಂಶವೆಂದರೆ ಫೀಲ್ಡಿಂಗ್; ಈಡನ್ ಗಾರ್ಡನ್ಸ್ ಪಂದ್ಯದಲ್ಲಿ ಭಾರತದ ಫೀಲ್ಡಿಂಗ್ ಮಾತ್ರವಲ್ಲ; ಕಳೆದ ಒಂದೂವರೆ ವರ್ಷದಿಂದ ಈ ಸಮಸ್ಯೆ ಇದೆ. ನಾವು ಸಾಕಷ್ಟು ಕ್ಯಾಚ್ ಗಳನ್ನು ಕೈಚೆಲ್ಲುತ್ತಿದ್ದೇವೆ. ಈ ವಿಚಾರದಲ್ಲಿ ಭಾರತ ಸುಧಾರಿಸಲೇಬೇಕು ಎಂದು ಪಾರ್ಥಿವ್ ಪಟೇಲ್ ಜಿಯೊ ಹಾಟ್ಸ್ಟಾರ್ನಲ್ಲಿ ಹೇಳಿದ್ದಾರೆ. ಈಡನ್ ಗಾರ್ಡನ್ ನಲ್ಲಿ 190ಕ್ಕೂ ಹೆಚ್ಚು ರನ್ ಗಳನ್ನು ಬೆನ್ನಟ್ಟಿ ಜಯ ಸಾಧಿಸಿರುವುದು ಅದ್ಭುತ ವಿಜಯ. ಅದು ಆತ್ಮವಿಶ್ವಾಸವನ್ನೂ ವೃದ್ಧಿಸಿದೆ. ಟಾಸ್ ಗೆದ್ದ ಭಾರತ, ಇಬ್ಬನಿ ಬೀಳುತ್ತದೆ ಎಂದು ಭಾವಿಸಿ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಆಟ ಮುಗಿದಾಗ ಇಬ್ಬನಿ ಇರಲೇ ಇಲ್ಲ. ಆದರೆ ಪರಿಸ್ಥಿತಿ ಸ್ವಲ್ಪ ಸುಧಾರಿಸಿತು. ಈ ನಾಕೌಟ್ ನಲ್ಲಿ 190ಕ್ಕಿಂತ ಹೆಚ್ಚು ರನ್ ಬೆನ್ನಟ್ಟಲು ಆಟಗಾರರು ಅದ್ಭುತ ಪ್ರದರ್ಶನ ನೀಡಬೇಕು. ಸಂಜು ಸ್ಯಾಮ್ಸನ್ ಅದನ್ನು ಸಾಧಿಸಿದರು ಎಂದು ಪಾರ್ಥಿವ್ ಬಣ್ಣಿಸಿದ್ದಾರೆ.
Karnataka Weather: ಬೆಂಗಳೂರು ಸೇರಿದಂತೆ ಕರ್ನಾಟಕದಾದ್ಯಂತ ಬಹುತೇಕ ಒಣಹವೆ ಮುಂದುವರಿದಿದೆ. ಕರ್ನಾಟಕದ ವಿವಿಧ ಭಾಗಗಳಲ್ಲಿ ಗರಿಷ್ಠ ತಾಪಮಾನ ಪ್ರಮಾಣವು ಅಲ್ಪ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ಮನ್ನಾರ್ ಕೊಲ್ಲಿ ಮತ್ತು ನೆರೆಹೊರೆಗಳ ಮೇಲೆ ಸರಾಸರಿ ಸಮುದ್ರ ಮಟ್ಟದಿಂದ 0.9 ಕಿ.ಮೀ ಎತ್ತರದಲ್ಲಿ ಚಂಡಮಾರುತದ ಪ್ರಸರಣ ಮುಂದುವರೆದಿದೆ. ಉತ್ತರ - ದಕ್ಷಿಣ ತಗ್ಗು/ ಗಾಳಿಯ ಸುಳಿ ಈಗ ಮನ್ನಾರ್ ಕೊಲ್ಲಿ ಮತ್ತು
ದ್ವೇಷಕ್ಕೆ ದ್ವೇಷ ಸಾಧಿಸಿದವರ ನಡುವೆ ಏರ್ಪಡುವುದು ಯುದ್ಧ ಎಂದವರಾರು? ಆ ಕಂದಮ್ಮಗಳಿಗೆ ಯುದ್ಧವೆಂದರೆ ಏನೆಂಬುದೇ ತಿಳಿದಿಲ್ಲ, ಗಡಿರೇಖೆ, ರಾಜಕೀಯ ಇವ್ಯಾವುದನ್ನೂ ಬಲ್ಲವರಲ್ಲ. ಆದರೂ, ಇರಾನಿನ ಮಿನಾಬ್ ನಗರದ ಶಾಲೆಯ ಮೇಲೆ ಯುದ್ಧದಾಹಿಗಳು ಬಾಂಬು ಉದುರಿಸಿ ಪೌರುಷ ಮೆರೆದಿರುವುದು ಅನಾಗರಿಕತೆಯಲ್ಲದೆ ಮತ್ತೇನು?
ಚಿಕ್ಕಮಗಳೂರು ; ಪ್ರವಾಸೋದ್ಯಮ ತಾಣಗಳಲ್ಲಿ ಬರ, ವಹಿವಾಟು ಕುಸಿತ
ಚಿಕ್ಕಮಗಳೂರು ಜಿಲ್ಲೆಯ ಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳಾದ ಶೃಂಗೇರಿ, ಹೊರನಾಡು, ಕಳಸ, ಹರಿಹರಪುರ ಮಠ, ಕಲ್ಲತ್ತಿಗಿರಿ ಮುಂತಾದ ಸ್ಥಳಗಳಿಗೆ ಬರುವ ಪ್ರವಾಸಿಗರ ಸಂಖ್ಯೆಯಲ್ಲಿಯೂ ಇಳಿಮುಖವಾಗಿದೆ. ಮಕ್ಕಳ ವಿದ್ಯಾಭ್ಯಾಸ, ಪರೀಕ್ಷೆಗಳು ಇರುವುದರ ಪರಿಣಾಮ ಪ್ರವಾಸಿಗರ ಅಭಾವ ಸೃಷ್ಟಿಯಾಗಿದೆ ಎನ್ನಲಾಗುತ್ತಿದೆ.
ಕರ್ನಾಟಕದ ಕರಾವಳಿಗಳಿಗೆ ಪ್ರವಾಸೋದ್ಯಮ ಅಭಿವೃದ್ಧಿಗೆ ಅನುಮತಿ ಕೊಟ್ಟರೂ, ಕಠಿಣ ನಿಯಮಗಳಿಂದ ಕೈಗೆ ಬಂದ ತುತ್ತು ಬಾಯಿಗೆ ಬರದಂತೆ ಆಗಿದೆ. ನಿರ್ದಿಷ್ಟ ಜಾಗದಲ್ಲಿ ರೆಸಾರ್ಟ್, ಹೋಟೆಲ್, ವಾಟರ್ ಸ್ಪೋರ್ಟ್ಸ್ ಆರಂಭಿಸಬೇಕೆಂಬ ನಿಯಮಗಳಿಂದಾಗಿ ಉದ್ಯಮಿಗಳಿಗೆ ಜಾಗ ಹುಡುಕುವುದೇ ಕಷ್ಟವಾಗಿದೆ.
ಮೂರು ಕ್ರೂಸ್ ಕ್ಷಿಪಣಿಗಳನ್ನು ತಡೆದು ನಾಶಪಡಿಸಿದ ಸೌದಿ ಅರೇಬಿಯಾ
ರಿಯಾದ್: ಅಲ್-ಖಾರ್ಜ್ ನಗರದ ಹೊರವಲಯದಲ್ಲಿ ಉಡಾಯಿಸಲಾದ ಮೂರು ಕ್ರೂಸ್ ಕ್ಷಿಪಣಿಗಳನ್ನು ಸೌದಿ ಅರೇಬಿಯಾದ ವಾಯು ರಕ್ಷಣಾ ವ್ಯವಸ್ಥೆ ತಡೆದು ನಾಶಪಡಿಸಿದೆ ಎಂದು ದೇಶದ ರಕ್ಷಣಾ ಸಚಿವಾಲಯ ತಿಳಿಸಿದೆ ಎಂದು Aljazeera ವರದಿ ಮಾಡಿದೆ. ಕ್ಷಿಪಣಿಗಳು ದೇಶದ ವಾಯುಪ್ರದೇಶದತ್ತ ಬರುತ್ತಿರುವುದನ್ನು ಪತ್ತೆಹಚ್ಚಿದ ನಂತರ ಅವನ್ನು ಮಧ್ಯದಲ್ಲೇ ತಡೆದು ಧ್ವಂಸಗೊಳಿಸಲಾಗಿದೆ ಎಂದು ಸಚಿವಾಲಯ ಹೇಳಿದೆ.
ಬೇಲೂರು-ಚಿಕ್ಕಮಗಳೂರು ನಡುವೆ ರೈಲುಮಾರ್ಗದ ಶೇ.70ರಷ್ಟು ಕಾಮಗಾರಿ ಪೂರ್ಣ : ಡಿಸೆಂಬರ್ಗೆ ಸೇವೆ ನಿರೀಕ್ಷೆ
ಮಲೆನಾಡು-ಬಯಲು ಸೀಮೆ ಹಾಗೂ ಕರಾವಳಿಗೆ ಸುಲಭ ಸಂಪರ್ಕ ಸಾಧಿಸಲು ಸಾಧ್ಯವಾಗುವ ಬೇಲೂರು-ಚಿಕ್ಕಮಗಳೂರು ನಡುವಿನ ರೈಲುಮಾರ್ಗ ಇನ್ನು ಕೆಲವೇ ತಿಂಗಳಲ್ಲಿ ಕಾರ್ಯಾರಂಭಗೊಳ್ಳಲಿದೆ. ಪ್ರಮುಖ ಪ್ರವಾಸಿ ಸ್ಥಳ ಬೇಲೂರಿಗೆ ರೈಲು ಸಂಪರ್ಕದ ಜೊತೆಗೆ, ಮಂಗಳೂರು ಕೂಡಾ ಸಂಪರ್ಕಿಸಲು ಈ ರೈಲು ಮಾರ್ಗ ಪ್ರಮುಖವಾಗಿದೆ.
ಇರಾನ್ ವಿರುದ್ಧ ಮಿಲಿಟರಿ ಕ್ರಮ: ಕಾಂಗ್ರೆಸ್ ಅನುಮೋದನೆ ಕಡ್ಡಾಯಗೊಳಿಸುವ ನಿರ್ಣಯ ತಡೆಹಿಡಿದ ಯುಎಸ್ ಸೆನೆಟ್
ವಾಷಿಂಗ್ಟನ್, ಮಾ.5: ಇರಾನ್ ವಿರುದ್ಧ ಮಿಲಿಟರಿ ಕ್ರಮ ಕೈಗೊಳ್ಳುವ ಮೊದಲು ಕಾಂಗ್ರೆಸ್ ನ ಸ್ಪಷ್ಟ ಅನುಮೋದನೆ ಕಡ್ಡಾಯವಾಗಬೇಕು ಎಂದು ಸೂಚಿಸಿದ್ದ ನಿರ್ಣಯವನ್ನು ಅಮೆರಿಕದ ಸೆನೆಟ್ ತಡೆಹಿಡಿದಿದೆ ಎಂದು Aljazeera ವರದಿ ಮಾಡಿದೆ. ಅಮೆರಿಕದ ಸಶಸ್ತ್ರ ಪಡೆಗಳನ್ನು ಇರಾನ್ ವಿರುದ್ಧದ ಯುದ್ಧ ಕಾರ್ಯಾಚರಣೆಗಳಲ್ಲಿ ಬಳಸುವ ಅಧಿಕಾರವನ್ನು ಅಧ್ಯಕ್ಷರಿಂದ ನಿಯಂತ್ರಿಸಿ ಕಾಂಗ್ರೆಸ್ ನ ಮೇಲ್ವಿಚಾರಣೆಯಡಿ ತರಲು ಈ ನಿರ್ಣಯವನ್ನು ಮಂಡಿಸಲಾಗಿತ್ತು. ಆದರೆ ಸೆನೆಟ್ ನಲ್ಲಿ ನಡೆದ ಮತದಾನದಲ್ಲಿ ಇದಕ್ಕೆ ಅಗತ್ಯ ಬೆಂಬಲ ದೊರಕಲಿಲ್ಲ. ಮತದಾನದಲ್ಲಿ ರಿಪಬ್ಲಿಕನ್ ಪಕ್ಷದ ಸೆನೆಟರ್ ಗಳು ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ 47–53 ಮತಗಳ ಅಂತರದಲ್ಲಿ ನಿರ್ಣಯ ತಿರಸ್ಕೃತವಾಯಿತು. ಮತದಾನ ಬಹುತೇಕವಾಗಿ ಪಕ್ಷಗಳ ರಾಜಕೀಯ ನಿಲುವಿಗೆ ಅನುಗುಣವಾಗಿಯೇ ನಡೆಯಿತು. ಈ ಪ್ರಸ್ತಾವನೆಯ ಪ್ರಕಾರ, ಕಾಂಗ್ರೆಸ್ ಅನುಮೋದನೆ ನೀಡದ ಹೊರತು ಇರಾನ್ ವಿರುದ್ಧ ನಡೆಯುವ ಮಿಲಿಟರಿ ಕಾರ್ಯಾಚರಣೆಗಳಿಂದ ಅಮೆರಿಕದ ಪಡೆಗಳನ್ನು ಹಿಂತೆಗೆದುಕೊಳ್ಳುವಂತೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ನಿರ್ದೇಶಿಸುವ ವಿಧಾನವೂ ಸೇರಿಸಲಾಗಿತ್ತು. ಅಧ್ಯಕ್ಷರ ಮಿಲಿಟರಿ ಅಧಿಕಾರವನ್ನು ನಿಯಂತ್ರಿಸುವ ಉದ್ದೇಶದಿಂದ ಈ ಕ್ರಮವನ್ನು ಮುಂದಿರಿಸಲಾಗಿತ್ತು. ಆದರೆ ಸೆನೆಟ್ ನಲ್ಲಿ ನಿರ್ಣಯ ಅಂಗೀಕಾರವಾಗದ ಹಿನ್ನೆಲೆಯಲ್ಲಿ ಅದು ಜಾರಿಗೆ ಬರಲಿಲ್ಲ. ಇದರಿಂದ ಇರಾನ್ ಕುರಿತ ಮಿಲಿಟರಿ ಕ್ರಮಗಳ ವಿಷಯದಲ್ಲಿ ಅಧ್ಯಕ್ಷರಿಗೆ ಇರುವ ಅಧಿಕಾರ ಯಥಾಸ್ಥಿತಿಯಲ್ಲೇ ಮುಂದುವರಿದಂತಾಗಿದೆ. [4:24 am, 5/3/2026] Vb_irshad Venoor: Breaking
ಇರಾನ್ ದಾಳಿ | ಅಮೆರಿಕದ ಹೇಳಿಕೆಗೆ ಸ್ಪೇನ್ ತಿರುಗೇಟು
ಮಿಲಿಟರಿ ನೆಲೆಗಳ ಬಳಕೆಗೆ ಅನುಮತಿ ಇಲ್ಲ, ನಿಲುವಿನಲ್ಲಿ ಒಂದೇ ಒಂದು ಅಲ್ಪವಿರಾಮವೂ ಬದಲಾಗಿಲ್ಲ ಎಂದ ಮ್ಯಾಡ್ರಿಡ್
ವಾಷಿಂಗ್ಟನ್, ಮಾ.5: ಇರಾನ್ ವಿರುದ್ಧ ಅಮೆರಿಕ ಕೈಗೊಂಡ ಮಿಲಿಟರಿ ಕ್ರಮದ ಕುರಿತು ನಡೆದ ಪತ್ರಿಕಾಗೋಷ್ಠಿಯಲ್ಲಿ CNN ಪತ್ರಕರ್ತ ಹಾಗೂ ಕನ್ನಡದ ಖ್ಯಾತ ಕವಿ ಗೋಪಾಲಕೃಷ್ಣ ಅಡಿಗರ ಮೊಮ್ಮಗ ಮನು ರಾಜು, ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ ಅವರನ್ನು ಪ್ರಶ್ನಿಸಿ ಗಮನ ಸೆಳೆದಿದ್ದಾರೆ. ಈ ಪ್ರಶ್ನೋತ್ತರ ವಿನಿಮಯ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ವಾಷಿಂಗ್ಟನ್ ಡಿಸಿಯಲ್ಲಿ ಈ ವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರುಬಿಯೊ, ಇಸ್ರೇಲ್ ಇರಾನ್ ಮೇಲೆ ತನ್ನದೇ ಆದ ದಾಳಿಯನ್ನು ಯೋಜಿಸುತ್ತಿದೆ ಮತ್ತು ನಂತರ ಟೆಹ್ರಾನ್ ಅಮೆರಿಕದ ಪಡೆಗಳ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳಬಹುದು ಎಂದು ಅಮೆರಿಕದ ನಾಯಕರು ಅಂದಾಜಿಸಿದ್ದರಿಂದ ಅಮೆರಿಕ ಇರಾನ್ ವಿರುದ್ಧ ದಾಳಿಗಳನ್ನು ಆರಂಭಿಸಿತು ಎಂದು ಹೇಳಿದ್ದಾರೆ. ಹೆಚ್ಚಿನ ಸಾವುನೋವುಗಳನ್ನು ತಡೆಯಲು ಮುನ್ನೆಚ್ಚರಿಕೆಯ ಕ್ರಮವಾಗಿ ಅಮೆರಿಕ ಮೊದಲು ದಾಳಿ ಮಾಡಿತು ಎಂದು ಅವರು ವಿವರಿಸಿದರು. ಅಮೆರಿಕದ ಪಡೆಗಳನ್ನು ರಕ್ಷಿಸುವ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ರುಬಿಯೊ ತಿಳಿಸಿದ್ದಾರೆ. ಪತ್ರಿಕಾಗೋಷ್ಠಿಯ ವೇಳೆ ಮನು ರಾಜು, ರುಬಿಯೊ ಅವರ ಹಿಂದಿನ ಹೇಳಿಕೆಯನ್ನು ಉಲ್ಲೇಖಿಸಿ, ಇಸ್ರೇಲ್ ನ ಯೋಜಿತ ದಾಳಿ ಇದ್ದಾಗ ಅಮೆರಿಕ ಯಾವ ಕಾರಣಕ್ಕೆ ಅದೇ ಸಮಯದಲ್ಲಿ ಕ್ರಮ ಕೈಗೊಂಡಿತು ಎಂದು ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ರುಬಿಯೊ, ‘ಸ್ಪಷ್ಟೀಕರಣ ನೀಡಲು ಏನೂ ಇಲ್ಲ’ ಎಂದು ಹೇಳಿ, ಒಂದು ಹಂತದಲ್ಲಿ ರಾಜು ಅವರಿಗೆ ‘ಇದು ನನ್ನ ಪತ್ರಿಕಾಗೋಷ್ಠಿ’ ಎಂದು ಉತ್ತರಿಸಿದರು. ರುಬಿಯೊ ಅವರ ಹಿಂದಿನ ಹೇಳಿಕೆಗಳು ಅಮೆರಿಕದ ಕ್ರಮಗಳು ಇಸ್ರೇಲ್ನ ಯೋಜನೆಗಳಿಗೆ ಸಂಬಂಧಿಸಿದ್ದೇ ಎಂಬ ಅನುಮಾನವನ್ನು ಮೂಡಿಸಿರುವ ಹಿನ್ನೆಲೆಯಲ್ಲಿ ಈ ಪ್ರಶ್ನೋತ್ತರ ಪ್ರಾಮುಖ್ಯತೆ ಪಡೆದುಕೊಂಡಿದೆ. ಅಮೆರಿಕ ಇರಾನ್ ಮೇಲೆ ದಾಳಿ ನಡೆಸಲು ಕಾರಣವೇನು ಮತ್ತು ಇತರ ಮಿತ್ರ ರಾಷ್ಟ್ರಗಳು ಮಿಲಿಟರಿ ಕಾರ್ಯಾಚರಣೆಯ ಸಮಯದ ಮೇಲೆ ಪ್ರಭಾವ ಬೀರಿದೆಯೇ ಎಂಬ ಪ್ರಶ್ನೆಗಳು ಇದರಿಂದ ಉದ್ಭವಿಸಿವೆ. ನಂತರ ರುಬಿಯೊ ತಮ್ಮ ಹಿಂದಿನ ಹೇಳಿಕೆಗಳನ್ನು ಸ್ಪಷ್ಟಪಡಿಸಲು ಪ್ರಯತ್ನಿಸಿದರು. ಅಮೆರಿಕಕ್ಕೆ ಇಸ್ರೇಲ್ ನ ಯೋಜನೆಗಳ ಬಗ್ಗೆ ಮಾಹಿತಿ ಇದ್ದರೂ ಇರಾನ್ ಮೇಲೆ ದಾಳಿ ಮಾಡುವ ಅಂತಿಮ ನಿರ್ಧಾರವನ್ನು ಅಮೆರಿಕದ ಅಧ್ಯಕ್ಷರೇ ತೆಗೆದುಕೊಂಡಿದ್ದಾರೆ ಮತ್ತು ಅದು ಯಾವ ಪರಿಸ್ಥಿತಿಯಲ್ಲಾದರೂ ಜಾರಿಗೆ ಬರುತ್ತಿತ್ತು ಎಂದು ಅವರು ಹೇಳಿದರು. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೂಡ ಇಸ್ರೇಲ್ ಅಮೆರಿಕದ ಕ್ರಮಗಳನ್ನು ನಿರ್ದೇಶಿಸಿದೆ ಎಂಬ ಆರೋಪವನ್ನು ತಳ್ಳಿಹಾಕಿದ್ದಾರೆ. ಇರಾನ್ನಿಂದ ಉಂಟಾದ ಭದ್ರತಾ ಬೆದರಿಕೆಯನ್ನು ಅಂದಾಜಿಸಿದ ಆಧಾರದ ಮೇಲೆ ಅಮೆರಿಕ ಸ್ವತಂತ್ರವಾಗಿ ಈ ನಿರ್ಧಾರ ಕೈಗೊಂಡಿದೆ ಎಂದು ಅವರು ತಿಳಿಸಿದ್ದಾರೆ. ಅಮೆರಿಕ ವಿದೇಶಾಂಗ ಕಾರ್ಯದರ್ಶಿಯನ್ನು ಪ್ರಶ್ನಿಸಿದ ಪತ್ರಕರ್ತ ಮನು ರಾಜು ಯಾರು? ಮನು ರಾಜು ಅಮೆರಿಕದ ಪ್ರಮುಖ ರಾಜಕೀಯ ಪತ್ರಕರ್ತರಲ್ಲಿ ಒಬ್ಬರು. ಪೊಲಿಟಿಕೊ ಹಾಗೂ ಇತರ ರಾಷ್ಟ್ರೀಯ ಸುದ್ದಿ ಸಂಸ್ಥೆಗಳಲ್ಲಿ ವರದಿ ಮಾಡಿದ ನಂತರ ಅವರು 2015ರಲ್ಲಿ CNN ಗೆ ಸೇರಿದರು. ಪ್ರಸ್ತುತ ಅವರು CNN ನ ಮುಖ್ಯ ಕಾಂಗ್ರೆಷನಲ್ ವರದಿಗಾರರಾಗಿದ್ದು, ಕ್ಯಾಪಿಟಲ್ ಹಿಲ್ ಹಾಗೂ ಅಮೆರಿಕದ ರಾಷ್ಟ್ರೀಯ ರಾಜಕೀಯವನ್ನು ವರದಿ ಮಾಡುತ್ತಿದ್ದಾರೆ. ಜೊತೆಗೆ CNN ನ ರವಿವಾರದ ರಾಜಕೀಯ ಕಾರ್ಯಕ್ರಮ ‘ಇನ್ಸೈಡ್ ಪಾಲಿಟಿಕ್ಸ್ ವಿತ್ ಮನು ರಾಜು’ ಕಾರ್ಯಕ್ರಮವನ್ನು ಸಹ ನಿರೂಪಿಸುತ್ತಿದ್ದಾರೆ. ವಾಷಿಂಗ್ಟನ್ನಲ್ಲಿ ಅನುಭವಿ ವರದಿಗಾರರಾಗಿರುವ ರಾಜು, CNN ಗೆ ಸೇರುವ ಮೊದಲು ಏಳು ವರ್ಷಗಳ ಕಾಲ ಪೊಲಿಟಿಕೊದಲ್ಲಿ ಹಿರಿಯ ಕ್ಯಾಪಿಟಲ್ ಹಿಲ್ ವರದಿಗಾರರಾಗಿದ್ದರು. ಅದಕ್ಕೂ ಮುನ್ನ ‘ದಿ ಹಿಲ್’, ‘ಕಾಂಗ್ರೆಷನಲ್ ಕ್ವಾರ್ಟರ್ಲಿ’ ಮತ್ತು ‘ಇನ್ಸೈಡ್ ವಾಷಿಂಗ್ಟನ್ ಪಬ್ಲಿಷರ್ಸ್’ ಸೇರಿದಂತೆ ಹಲವು ಸಂಸ್ಥೆಗಳಲ್ಲಿ ವರದಿಗಾರರಾಗಿ ಕಾರ್ಯನಿರ್ವಹಿಸಿದ್ದಾರೆ. ಟಿವಿ ಹಾಗೂ ರೇಡಿಯೊ ರಾಜಕೀಯ ಚರ್ಚಾ ಕಾರ್ಯಕ್ರಮಗಳಲ್ಲಿ ಅವರು ಆಗಾಗ್ಗೆ ಅತಿಥಿಯಾಗಿ ಭಾಗವಹಿಸುತ್ತಾರೆ. ವಾಷಿಂಗ್ಟನ್ ರಾಜಕೀಯದ ಪ್ರಮುಖ ಘಟನೆಗಳು ಮತ್ತು ಚುನಾವಣಾ ಪ್ರಚಾರಗಳ ವರದಿಗಾಗಿ ಮನು ರಾಜು ಹಲವು ಪತ್ರಿಕೋದ್ಯಮ ಪ್ರಶಸ್ತಿಗಳನ್ನು ಪಡೆದಿದ್ದಾರೆ. 2022ರಲ್ಲಿ ಜನವರಿ 6ರಂದು ಅಮೆರಿಕದ ಕ್ಯಾಪಿಟಲ್ ಕಟ್ಟಡದ ಮೇಲೆ ನಡೆದ ದಾಳಿಯ ವರದಿಗಾಗಿ ರೇಡಿಯೋ ಮತ್ತು ಟೆಲಿವಿಷನ್ ಕರೆಸ್ಪಾಂಡೆಂಟ್ಸ್ ಅಸೋಸಿಯೇಷನ್ ನೀಡುವ ಡೇವಿಡ್ ಬ್ಲೂಮ್ ಪ್ರಶಸ್ತಿಯನ್ನು ಪಡೆದ ತಂಡದ ಭಾಗವಾಗಿದ್ದರು. ಅದೇ ವರ್ಷ ಮಿಲ್ವಾಕೀ ಪ್ರೆಸ್ ಕ್ಲಬ್ ಅವರು ಪತ್ರಿಕೋದ್ಯಮ ಕ್ಷೇತ್ರಕ್ಕೆ ನೀಡಿದ ಕೊಡುಗೆಗಾಗಿ ‘ಸೇಕ್ರೆಡ್ ಕ್ಯಾಟ್’ ಪ್ರಶಸ್ತಿಯಿಂದ ಗೌರವಿಸಿತು. ಇದಕ್ಕೂ ಮೊದಲು 2012ರಲ್ಲಿ ಅಮೆರಿಕದ ಸಾಲದ ಮಿತಿ ಬಿಕ್ಕಟ್ಟಿನ ವರದಿಗಾಗಿ ವೈಟ್ ಹೌಸ್ ಕರೆಸ್ಪಾಂಡೆಂಟ್ಸ್ ಅಸೋಸಿಯೇಷನ್ ನೀಡುವ ಮೆರಿಮನ್ ಸ್ಮಿತ್ ಪ್ರಶಸ್ತಿಯನ್ನು ಪಡೆದ ತಂಡದಲ್ಲೂ ಅವರು ಇದ್ದರು. 2015ರಲ್ಲಿ ಮಧ್ಯಂತರ ಚುನಾವಣಾ ವರದಿಗಾಗಿ ಡಿ.ಸಿ.ಯ ಸೊಸೈಟಿ ಆಫ್ ಪ್ರೊಫೆಷನಲ್ ಜರ್ನಲಿಸ್ಟ್ಸ್ ನೀಡುವ ಪ್ರಥಮ ಬಹುಮಾನ ಹಾಗೂ ಸೆನೆಟರ್ ಎಲಿಜಬೆತ್ ವಾರೆನ್ ಕುರಿತ ಫೀಚರ್ ವರದಿಗಾಗಿ ಫೋಲಿಯೊ: ಎಡ್ಡಿ ಪ್ರಶಸ್ತಿಯನ್ನೂ ಪಡೆದಿದ್ದಾರೆ. 2017ರಲ್ಲಿ ಅತ್ಯುತ್ತಮ ಕಾಂಗ್ರೆಸ್ ವರದಿಗಾಗಿ ನೀಡುವ ಜೋನ್ ಶೋರೆನ್ಸ್ಟೈನ್ ಬರೋನ್ ಪ್ರಶಸ್ತಿಯನ್ನೂ ಅವರು ಪಡೆದಿದ್ದಾರೆ. ರಾಜಕಾರಣಿಗಳು ಸಾರ್ವಜನಿಕವಾಗಿ ಹೇಳದ ವಿಷಯಗಳನ್ನು ಪತ್ತೆಹಚ್ಚುವ ಸಾಮರ್ಥ್ಯ ಹೊಂದಿರುವ ವರದಿಗಾರನಾಗಿ ರಾಜು ಹೆಸರು ಮಾಡಿದ್ದಾರೆ. ರಾಜಕಾರಣಿಗಳನ್ನು ತೀಕ್ಷ್ಣವಾಗಿ ಹಾಗೂ ಕೌಶಲ್ಯಪೂರ್ಣವಾಗಿ ಪ್ರಶ್ನಿಸುವುದರಲ್ಲಿ ಅವರು ಪ್ರಸಿದ್ಧರಾಗಿದ್ದಾರೆ. ಮನು ರಾಜು ಅವರು ಇಲಿನಾಯ್ಸ್ನಲ್ಲಿ ಜನಿಸಿದ್ದು, ಅವರ ಪೋಷಕರು 1970ರ ದಶಕದಲ್ಲಿ ಕರ್ನಾಟಕದಿಂದ ಅಮೆರಿಕಕ್ಕೆ ವಲಸೆ ಬಂದವರು. ಅವರ ತಂದೆ ವೈದ್ಯರಾಗಿದ್ದರು. ರಾಜು ಅವರು ಪ್ರಸಿದ್ಧ ಕನ್ನಡ ಕವಿ ಗೋಪಾಲಕೃಷ್ಣ ಅಡಿಗ ಮೊಮ್ಮಗ. ವಿಸ್ಕಾನ್ಸಿನ್–ಮ್ಯಾಡಿಸನ್ ವಿಶ್ವವಿದ್ಯಾಲಯದಲ್ಲಿ ವಿದ್ಯಾಭ್ಯಾಸ ಮಾಡುವಾಗ ಅಲ್ಲಿನ ವಿದ್ಯಾರ್ಥಿ ಪತ್ರಿಕೆ ‘ದಿ ಬ್ಯಾಡ್ಜರ್ ಹೆರಾಲ್ಡ್’ನಲ್ಲಿ ಕೆಲಸ ಮಾಡುವ ಮೂಲಕ ರಾಜು ಪತ್ರಿಕೋದ್ಯಮ ಕ್ಷೇತ್ರಕ್ಕೆ ಕಾಲಿಟ್ಟರು. ಚಿಕಾಗೊ ಪ್ರದೇಶದಲ್ಲಿ ಬೆಳೆದ ಅವರು ಅಲ್ಲಿನ ಕ್ರೀಡಾ ತಂಡಗಳ ಅಭಿಮಾನಿಯಾಗಿಯೂ ಪರಿಚಿತರಾಗಿದ್ದಾರೆ. RAJU: Your quote is, 'We knew there was going to be an Israeli action. We know that would precipitate an attack--' MARCO RUBIO: The-- you asked-- I was asked a very specific question, so you guys can misrepresent but I was asked a very specific question yesterday. The bottom… pic.twitter.com/2sPoX4H0oj — Aaron Rupar (@atrupar) March 3, 2026
Andhra Pradesh | ಚಿತ್ತೂರು ಬಳಿ ಭೀಕರ ರಸ್ತೆ ಅಪಘಾತ; ಬೆಂಗಳೂರಿನ ಐವರು ಮೃತ್ಯು
ಪಲಮನೇರು : ಕಾರೊಂದು ನಿಂತಿದ್ದ ಟ್ರಕ್ಗೆ ಢಿಕ್ಕಿ ಹೊಡೆದ ಪರಿಣಾಮ ಬೆಂಗಳೂರಿನ ಒಂದೇ ಕುಟುಂಬದ ಐವರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯಲ್ಲಿ ನಡೆದಿರುವುದಾಗಿ ವರದಿಯಾಗಿದೆ. ಬೆಂಗಳೂರಿನಿಂದ ತಿರುಪತಿಗೆ ಪ್ರಯಾಣಿಸುತ್ತಿದ್ದ ಕಾರು ರಸ್ತೆಬದಿ ನಿಂತಿದ್ದ ಟ್ರಕ್ಗೆ ಢಿಕ್ಕಿ ಹೊಡೆದಿದೆ ಎನ್ನಲಾಗಿದೆ. ಘಟನೆಯಲ್ಲಿ ಮೂವರು ಮಹಿಳೆಯರು ಸೇರಿದಂತೆ ಐವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ವಾಣಿಜ್ಯ, ಕೈಗಾರಿಕಾ ಬಳಕೆದಾರರಿಗೆ ಕರೆಂಟ್ ಶಾಕ್!
ಬೆಂಗಳೂರು, ಮಾ.4: ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗವು 2025-26ರ ಹಣಕಾಸು ವರ್ಷಕ್ಕೆ ವಿದ್ಯುತ್ ಸುಂಕಗಳನ್ನು ಪರಿಷ್ಕರಿಸಿದೆ. ಆದರೆ, ಈ ಹಿಂದೆ ಯಾವುದೇ ಹೆಚ್ಚಳವನ್ನು ವಿಧಿಸಲಾಗುವುದಿಲ್ಲ ಎಂದು ಭರವಸೆ ನೀಡಿದ ಹೊರತಾಗಿಯೂ ವಾಣಿಜ್ಯ ಮತ್ತು ಕೈಗಾರಿಕಾ ಗ್ರಾಹಕರಿಗೆ ದರಗಳನ್ನು ಎಪ್ರಿಲ್ 2025ರಿಂದಲೇ ಅನ್ವಯವಾಗುವಂತೆ ಹೆಚ್ಚಿಸಲಾಗಿದ್ದು, ಆಯೋಗದ ಈ ನಡೆಯು ವ್ಯಾಪಾರ ವಲಯದ ಆಕ್ರೋಶಕ್ಕೆ ಕಾರಣವಾಗಿದೆ. ವಾಣಿಜ್ಯ ಮತ್ತು ಕೈಗಾರಿಕಾ ಬಳಕೆದಾರರಿಗೆ ಸುಂಕ ಹೆಚ್ಚಳ: ಆಯೋಗವು ವಾಣಿಜ್ಯ ವಿಭಾಗಗಳಾದ ಎಲ್ ಟಿ-3ಎ ಮತ್ತು ಎಚ್ ಟಿ-2ಬಿ ಮತ್ತು ಕೈಗಾರಿಕಾ ವಿಭಾಗಗಳಾದ ಎಲ್ ಟಿ-5 ಮತ್ತು ಎಚ್ ಟಿ-2ಎ ಗಳಿಗೆ ಹೆಚ್ಚಿನ ಇಂಧನ ಮತ್ತು ಬೇಡಿಕೆ ಶುಲ್ಕಗಳನ್ನು ಅನುಮೋದಿಸಿದೆ. ಇವು ಅಂಗಡಿಗಳು, ಉತ್ಪಾದನಾ ಘಟಕಗಳು, ಎಂಎಸ್ಎಂಇಗಳು, ಐಟಿ ಮತ್ತು ಟೆಕ್ ಪಾರ್ಕ್ ಗಳು, ಥಿಯೇಟರ್ಗಳು, ಹೋಟೆಲ್ಗಳು ಮತ್ತು ಇತರ ವಾಣಿಜ್ಯ ಸಂಸ್ಥೆಗಳಿಗೆ ಅನ್ವಯಿಸುತ್ತವೆ.
ಯುಜಿಸಿಇಟಿ : ಶುಲ್ಕ ಪಾವತಿಗೆ ಮಾ.7 ಕೊನೆ ದಿನ
ಬೆಂಗಳೂರು : ಎಂಜಿನಿಯರಿಂಗ್ ಸೇರಿದಂತೆ ಇತರ ವೃತ್ತಿಪರ ಕೋರ್ಸ್ಗಳ ಪ್ರವೇಶಕ್ಕೆ ಅರ್ಜಿ ಸಲ್ಲಿಸಿರುವ ಹಾಗೂ ನೋಂದಣಿ ಮಾಡಿಕೊಂಡಿರುವ ಅಭ್ಯರ್ಥಿಗಳಿಗೆ ಶುಲ್ಕ ಪಾವತಿಸಲು ಮಾ.7ರವರೆಗೆ ದಿನಾಂಕ ವಿಸ್ತರಿಸಲಾಗಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಆಡಳಿತಾಧಿಕಾರಿ ಇಸ್ಲಾವುದ್ದೀನ್ ಗದ್ಯಾಳ ತಿಳಿಸಿದ್ದಾರೆ. ಬುಧವಾರ ಪ್ರಕಟನೆ ಹೊರಡಿಸಿರುವ ಅವರು, ಇದುವರೆಗೆ ಒಟ್ಟು 3.47 ಲಕ್ಷ ಅಭ್ಯರ್ಥಿಗಳು ನೋಂದಣಿ ಮಾಡಿಕೊಂಡಿದ್ದು, ಈ ಪೈಕಿ 3.36 ಲಕ್ಷ ಮಂದಿ ನಿಗದಿತ ಶುಲ್ಕ ಪಾವತಿ ಮಾಡಿದ್ದಾರೆ. ಇನ್ನೂ 9 ಸಾವಿರ ಮಂದಿ ಶುಲ್ಕ ಪಾವತಿಸಬೇಕಿದ್ದು, ಅವರಿಗೆ ಅನುಕೂಲ ಆಗಲೆಂದು ದಿನಾಂಕ ವಿಸ್ತರಿಸಲಾಗಿದೆ ಎಂದು ಅವರು ವಿವರಿಸಿದ್ದಾರೆ. ನೇಮಕಾತಿ: ಅಂಕಪಟ್ಟಿ ಪ್ರಕಟ ಕಲ್ಯಾಣ ಕರ್ನಾಟಕ ವೃಂದದ ವಿವಿಧ ಹುದ್ದೆಗಳಿಗೆ ಫೆ.21 ಮತ್ತು 22ರಂದು ಸ್ಪರ್ಧಾತ್ಮಕ ಪರೀಕ್ಷೆ ನಡೆದಿದ್ದು, ಅವುಗಳ ಅಂತಿಮ ಕೀ ಉತ್ತರ ಹಾಗೂ ಅಭ್ಯರ್ಥಿಗಳು ಗಳಿಸಿದ ಅಂಕಗಳ ತಾತ್ಕಾಲಿಕ ಪಟ್ಟಿ ಯನ್ನು ವೆಬ್ ಸೈಟ್ ನಲ್ಲಿ ಪ್ರಕಟಿಸಲಾಗಿದೆ ಎಂದು ಗದ್ಯಾಳ ಅವರು ತಿಳಿಸಿದ್ದಾರೆ. ಅಂಕ ಪಟ್ಟಿಗೆ ಆಕ್ಷೇಪಣೆಗಳು ಇದ್ದಲ್ಲಿ ಮಾ.6ರಂದು ಬೆಳಿಗ್ಗೆ 11ಗಂಟೆ ಒಳಗೆ ಆನ್ ಲೈನ್ ಮೂಲಕ ಸಲ್ಲಿಸಬೇಕು ಎಂದೂ ಅವರು ವಿವರಿಸಿದ್ದಾರೆ.
ಒಂದನೇ ತರಗತಿ ಪ್ರವೇಶಕ್ಕೆ 6 ವರ್ಷ ಕಡ್ಡಾಯ; ಪುನರ್ ಪರಿಶೀಲನೆ ಮಾಡಲು ಒತ್ತಾಯ
ಬೆಂಗಳೂರು : ಸರಕಾರ ಒಂದನೇ ತರಗತಿ ಪ್ರವೇಶಕ್ಕೆ ದಾಖಲಾತಿ ಪಡೆಯುವ ಮಗು ವಯಸ್ಸು ಕಡ್ಡಾಯವಾಗಿ 6 ವರ್ಷ ಪೂರ್ಣಗೊಂಡಿರಬೇಕು ಎಂದು ನಿಯಮವನ್ನು ಜಾರಿಗೆ ತಂದಿದ್ದು, ಈ ನಿಯಮವನ್ನು ಪುನರ್ ಪರಿಶೀಲನೆ ಮಾಡಬೇಕು ಎಂದು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಶಶಿಧರ್ ಕೋಸಂಬೆ ಒತ್ತಾಯಿಸಿದ್ದಾರೆ. ಈ ಸಂಬಂಧ ಶಿಕ್ಷಣ ಇಲಾಖೆಗೆ ಪತ್ರ ಬರೆದಿರುವ ಅವರು, ಒಂದನೇ ತರಗತಿಯ ದಾಖಲಾತಿಯಲ್ಲಿ ಯಾವುದೇ ಮಗು ತನ್ನ ಶೈಕ್ಷಣಿಕ ಹಕ್ಕಿನಿಂದ ವಂಚಿತರಾಗದಂತೆ ಮಾರ್ಗೋಪಾಯಗಳನ್ನು ತಂದು ಸಮದೂಗಿಸಲು ಕ್ರಮವಾಗಬೇಕು ಎಂದು ಹೇಳಿದ್ದಾರೆ. ಹಿಂದಿನ ಶೈಕ್ಷಣಿಕ ವರ್ಷದಲ್ಲೂ ಸಾಕಷ್ಟು ಪೋಷಕರು ಈ ಬಗ್ಗೆ ತಮ್ಮ ಆಕ್ಷೇಪ ವ್ಯಕ್ತಪಡಿಸಿದ್ದಲ್ಲದೆ, ಮಕ್ಕಳು ಈ ನಿಯಮದಿಂದ ಹಿಂದಿನ ತರಗತಿಯಲ್ಲಿಯೇ ಉಳಿಯಬೇಕಾದ ಪರಿಸ್ಥಿತಿ ಎದುರಾಗಿದೆ ಎಂಬುದಾಗಿ ಆಯೋಗದ ಗಮನಕ್ಕೆ ತಂದಿದ್ದರು. ಇದಕ್ಕೆ ಸಂಬಂಧಿಸಿದಂತೆ ಆಯೋಗವು ಈ ಹಿಂದೆಯೂ ಶಿಕ್ಷಣ ಇಲಾಖೆಗೆ ಪತ್ರ ಬರೆದು ಈ ವಯೋಮಿತಿಯನ್ನು ಪುನರ್ ಪರಿಶೀಲಿಸುವಂತೆ ಅಥವಾ ನಿಯಮದಲ್ಲಿ ಸಡಿಲಿಕೆ ನೀಡುವಂತೆ ಮಾರ್ಗೋಪಾಯಗಳನ್ನು ತಿಳಿಸಲು ಕೋರಲಾಗಿತ್ತು ಎಂದು ಅವರು ತಿಳಿಸಿದ್ದಾರೆ. ಈಗಲೂ ಶಿಕ್ಷಣ ಇಲಾಖೆಯಿಂದ ಕಡ್ಡಾಯವಾಗಿ 6 ವರ್ಷಗಳು ಪೂರ್ಣಗೊಂಡ ಮಕ್ಕಳನ್ನು ಮಾತ್ರ ಜೂನ್/ಜುಲೈನಲ್ಲಿ ಒಂದನೇ ತರಗತಿಗೆ ಪ್ರವೇಶ ಪಡೆಯಲಾಗುವುದು ಎಂಬ ನಿಯಮ ಜಾರಿಗೆ ತರಲಾಗಿದೆ. ಇದರಿಂದ ಮತ್ತೊಮ್ಮೆ ಪೋಷಕರು ಆತಂಕಕ್ಕೆ ಒಳಗಾಗಿದ್ದು, ಇಲಾಖೆಯು ಈ ಬಗ್ಗೆ ಮತ್ತೊಮ್ಮೆ ಪರಿಶೀಲನೆಗೆ ಒಳಪಡಿಸಿ, ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಅವರು ಮನವಿ ಮಾಡಿದ್ದಾರೆ.
ಖಾಮಿನೈ ಹತ್ಯೆ ಖಂಡಿಸಿ ಬೆಂಗಳೂರಿನಲ್ಲಿ ಪ್ರತಿಭಟನೆ ವಿಚಾರ: ಪ್ರಕರಣ ದಾಖಲು ಮಾಡಿದ್ದೇವೆ : ಜಿ.ಪರಮೇಶ್ವರ್
ಬೆಂಗಳೂರು : ಇರಾನ್ನ ಸರ್ವೋಚ್ಚ ನಾಯಕ ಆಯತುಲ್ಲಾ ಅಲಿ ಖಾಮಿನೈ ಅವರ ಹತ್ಯೆ ಖಂಡಿಸಿ ಶಿಯಾ ಮುಸ್ಲಿಮರು ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಿದ ಹಿನ್ನೆಲೆ ಪ್ರಕರಣ ದಾಖಲು ಮಾಡಲಾಗಿದ್ದು, ಪೊಲೀಸರು ಕ್ರಮ ಜರುಗಿಸಲಿದ್ದಾರೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ. ಬುಧವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಂದು ವರ್ಗದ ಜನರು ಆಯತುಲ್ಲಾ ಅಲಿ ಖಾಮಿನೈ ಅವರನ್ನು ಗುರುಗಳಾಗಿ ಭಾವಿಸಿದ್ದಾರೆ. ಅವರು ತೀರಿಕೊಂಡಾಗ ಸ್ವಾಭಾವಿಕವಾಗಿ ಅವರಿಗೆ ನೋವು ಆಗಿರಬಹುದು. ಅದನ್ನು ಪ್ರದರ್ಶಿಸಬಹುದು. ಆದರೆ ನಮ್ಮ ದೇಶದ ಕಾನೂನಿನ ಒಳಗಡೆ ಆಗಬೇಕು. ಅವರಿಗೆ ಅನುಮತಿ ಕೊಟ್ಟಿರಲಿಲ್ಲ. ಆದರೂ, ನಿಮಯ ಉಲ್ಲಂಘಿಸಿ ಪ್ರತಿಭಟನೆ ನಡೆಸಿರುವ ಹಿನ್ನೆಲೆ ಆಯಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ ಎಂದರು. ಬೆಂಗಳೂರಿನಲ್ಲಿ ಫ್ರೀಡಂ ಪಾರ್ಕ್ ಮೈದಾನ ಹೊರತುಪಡಿಸಿ ಬೇರೆ ಎಲ್ಲಿಯೂ ಪ್ರತಿಭಟನೆ ನಡೆಸಬಾರದೆಂದು ಹೈಕೋರ್ಟಿನ ಆದೇಶವೇ ಇದೆ. ಹೀಗಾಗಿ, ನಿಯಮ ಉಲ್ಲಂಘನೆ ಆರೋಪದಡಿ ಪ್ರಕರಣ ದಾಖಲು ಮಾಡಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಳ್ಳುತ್ತಾರೆ. ಅಲ್ಲದೆ, ಕೋರ್ಟ್ ಆದೇಶವನ್ನು ಎಲ್ಲರೂ ಗೌರವಿಸಬೇಕು ಎಂದು ಅವರು ಉಲ್ಲೇಖಿಸಿದರು.
ಇಬ್ಬರು ಪಿಯುಸಿ ವಿದ್ಯಾರ್ಥಿನಿಯರು ನಾಪತ್ತೆ: ಪತ್ತೆಗಾಗಿ ಪೊಲೀಸರಿಗೆ ಒಂದು ವಾರದ ಗಡುವು ನೀಡಿದ ಹೈಕೋರ್ಟ್
ಬೆಂಗಳೂರು : ತಿಂಗಳ ಹಿಂದೆ ನಾಪತ್ತೆಯಾದ ಇಬ್ಬರು ಪಿಯುಸಿ ವಿದ್ಯಾರ್ಥಿನಿಯರು ಈವರೆಗೂ ಪತ್ತೆಯಾಗದ ಹಿನ್ನೆಲೆ, ಕುಟುಂಬಸ್ಥರು ಹೈಕೋರ್ಟ್ನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದು, ಪತ್ತೆಗಾಗಿ ನ್ಯಾಯಾಲಯ ವಿದ್ಯಾರಣ್ಯಪುರ ಠಾಣಾ ಪೊಲೀಸರಿಗೆ ಒಂದು ವಾರದ ಗಡುವು ನೀಡಿರುವುದಾಗಿ ವರದಿಯಾಗಿದೆ. ವಿದ್ಯಾರಣ್ಯಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಜನವರಿ 31ರಂದು ಘಟನೆ ನಡೆದಿದ್ದು, ದ್ವಿತೀಯ ಪಿಯುಸಿ ಹಾಗೂ ಪ್ರಥಮ ಪಿಯುಸಿ ವಿದ್ಯಾರ್ಥಿನಿಯರು ನಾಪತ್ತೆಯಾಗಿದ್ದಾರೆ. ಪರೀಕ್ಷೆಯ ಬಗ್ಗೆ ಭಯ ಹೊಂದಿದ್ದ ವಿದ್ಯಾರ್ಥಿನಿ ಸ್ನೇಹಿತರ ಬಳಿ ಹೇಳಿಕೊಂಡಿದ್ದಳು ಎನ್ನಲಾಗಿದೆ. ಅದೇ ಭಯದಿಂದಲೇ ತನ್ನ ಜೂನಿಯರ್ ಸ್ನೇಹಿತೆಯನ್ನು ಕರೆದುಕೊಂಡು ಮನೆ ಬಿಟ್ಟು ತೆರಳಿರುವ ಶಂಕೆ ವ್ಯಕ್ತವಾಗಿದೆ. ಜನವರಿ 31ರಂದು ಎಂದಿನಂತೆ ಕಾಲೇಜಿಗೆ ತೆರಳಿದ್ದ ವಿದ್ಯಾರ್ಥಿನಿಯರು ಮನೆಗೆ ಮರಳಿಲ್ಲ. ಇಬ್ಬರು ವಿದ್ಯಾರ್ಥಿನಿಯರು ತಮ್ಮ ಮೊಬೈಲ್ ಫೋನ್ಗಳನ್ನು ಮನೆಯಲ್ಲೇ ಬಿಟ್ಟು ಹೋಗಿದ್ದು, ಎಟಿಎಂ ಕಾರ್ಡ್ ಸೇರಿದಂತೆ ಯಾವುದೇ ಹಣ ಕೊಂಡೊಯ್ದಿಲ್ಲ. ಕೇವಲ ಆಧಾರ್ ಕಾರ್ಡ್ ಹಾಗೂ ಕಾಲೇಜು ಬ್ಯಾಗ್ ಮಾತ್ರ ಕೊಂಡೊಯ್ದಿದ್ದು, ಉಚಿತ ಬಸ್ ಪ್ರಯಾಣದ ಸೌಲಭ್ಯ ಬಳಸಿಕೊಂಡಿರಬಹುದು ಎನ್ನಲಾಗಿದೆ. ವಿದ್ಯಾರ್ಥಿನಿಯರು ಪತ್ತೆಯಾಗದಿರುವ ಹಿನ್ನೆಲೆಯಲ್ಲಿ ಕುಟುಂಬಸ್ಥರು ಹೈಕೋರ್ಟ್ನಲ್ಲಿ ಹೇಬಿಯಸ್ ಕಾರ್ಪಸ್(ರಿಟ್) ಅರ್ಜಿ ಸಲ್ಲಿಸಿದ್ದು, ಪತ್ತೆಗಾಗಿ ನ್ಯಾಯಾಲಯ ಪೊಲೀಸರಿಗೆ ಒಂದು ವಾರದ ಗಡುವು ನೀಡಿದೆ ಎಂದು ತಿಳಿದುಬಂದಿದೆ.
ವಿಬಿ-ಜಿ-ರಾಮ್ಜಿ ಕಾಯ್ದೆ ವಿರುದ್ಧ ಕಾನೂನು ಹೋರಾಟ : ಬಿ.ಆರ್.ಪಾಟೀಲ್
ಬೆಂಗಳೂರು : ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಕೋಟ್ಯಂತರ ಗ್ರಾಮೀಣ ಕುಟುಂಬಗಳಿಗೆ ನೆರವಾಗಿದೆ. ಕೇಂದ್ರ ಇದೀಗ ಅದನ್ನು ಬದಲಿಸಿ ಹೊಸ ಕಾಯ್ದೆ ಜಾರಿಗೆ ಮುಂದಾಗಿರುವುದು ಆತಂಕಕಾರಿ ಬೆಳವಣಿಗೆ. ಇದರ ವಿರುದ್ದ ಕಾನೂನು ಹೋರಾಟ ನಡೆಸಲಾಗುವುದು ಎಂದು ರಾಜ್ಯ ನೀತಿ ಮತ್ತು ಯೋಜನಾ ಆಯೋಗದ ಉಪಾಧ್ಯಕ್ಷ ಬಿ.ಆರ್.ಪಾಟೀಲ್ ತಿಳಿಸಿದ್ದಾರೆ. ಬುಧವಾರ ನಗರದ ಗಾಂಧಿ ಭವನದಲ್ಲಿ ನಡೆದ ಮನರೇಗಾ ವರ್ಸಸ್ ಜಿ ರಾಮ್ ಜಿ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಬದಲಾವಣೆ: ಸಾಧಕ-ಭಾದಕಗಳು ಎಂಬ ವಿಷಯದ ಕುರಿತು ಒಂದು ದಿನದ ವಿಚಾರ ಸಂಕಿರಣ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಹಿಂದಿನ ವ್ಯವಸ್ಥೆಯಲ್ಲಿ ಬೇಡಿಕೆ ಆಧಾರಿತ ಯೋಜನೆ ಇತ್ತು. ಗ್ರಾಮ ಮಟ್ಟದಲ್ಲೇ ರಸ್ತೆ, ಶೌಚಾಲಯ ಸೇರಿದಂತೆ ಅಗತ್ಯ ಕಾಮಗಾರಿಗಳ ನಿರ್ಧಾರವಾಗುತ್ತಿತ್ತು. ಈಗ ಆ ಅಧಿಕಾರವನ್ನು ಕೇಂದ್ರೀಕರಿಸಲಾಗುತ್ತಿದೆ ಎಂದರು. ಕೇಂದ್ರ ಸರಕಾರದ ಉದ್ಯೋಗ ಖಾತೆ ಸಂಬಂಧಿತ ತಿದ್ದುಪಡಿ ಕಾಯ್ದೆ ವಿರುದ್ಧ ಗದಗ್ ತಾಲೂಕಿನಲ್ಲಿ ನಡೆದ ಗೋಷ್ಠಿಯಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಈ ಕಾಯ್ದೆ ವಿಕೇಂದ್ರೀಕರಣ ವ್ಯವಸ್ಥೆಗೆ ವಿರುದ್ಧವಾಗಿದ್ದು, ಬಡವರ ಹಿತಾಸಕ್ತಿಗೆ ಧಕ್ಕೆ ಉಂಟುಮಾಡುತ್ತದೆ ಎನ್ನಲಾಗುತ್ತಿದೆ. ಉದ್ಯೋಗ ಖಾತೆಯಲ್ಲಿ ಭ್ರಷ್ಟಾ ಚಾರ ಇದೆ ಎಂಬ ಕಾರಣ ನೀಡಿ, ಕಾಯ್ದೆ ಬದಲಾವಣೆ ಮಾಡಿ ಎಂದು ಎಲ್ಲರೂ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಭ್ರಷ್ಟಾಚಾರ ಇದ್ದರೆ ಅದನ್ನು ಸರಿಪಡಿಸುವುದು ಸರಕಾರದ ಕರ್ತವ್ಯ. ಅದಕ್ಕಾಗಿ ಬಡವರ ಹೊಟ್ಟೆ ಮೇಲೆ ಹೊಡೆಯುವಂತ ಕ್ರಮ ಯಾಕೆ? ಎಂದು ಅವರು ಪ್ರಶ್ನಿಸಿದರು. ರಾಜ್ಯ ಸರಕಾರ ಈಗಾಗಲೇ ಆರ್ಥಿಕ ಸಂಕಷ್ಟದಲ್ಲಿದ್ದು, ಶೇ.40 ಪಾಲು ಭರಿಸುವ ಸಾಮರ್ಥ್ಯ ಇಲ್ಲದಂತಾಗಿದೆ. ಇನ್ನೂ ಕೇಂದ್ರ ಸರಕಾರದಿಂದ ಅಂತಿಮ ಅಧಿಸೂಚನೆ ಹಾಗೂ ನಿಯಮಾವಳಿ ಹೊರಬಂದಿಲ್ಲ. ನಿಯಮಾವಳಿ ಪ್ರಕಟವಾದ ಬಳಿಕ ಸ್ಪಷ್ಟ ಚಿತ್ರಣ ದೊರೆಯಲಿದೆ. 73 ಮತ್ತು 74ನೇ ಸಂವಿಧಾನ ತಿದ್ದುಪಡಿಗಳ ಅಡಿಯಲ್ಲಿ ಗ್ರಾಮ ಸ್ವರಾಜ್ಯದ ಆಶಯವನ್ನು ಹಿಂಪಡೆಯುವ ಪ್ರಯತ್ನ ನಡೆಯುತ್ತಿದೆ ಎಂದು ಬಿ.ಆರ್.ಪಾಟೀಲ್ ತಿಳಿಸಿದರು. ಮನರೇಗಾ ಯೋಜನೆ ಫಲಾನುಭವಿ ಮೋಕ್ಷಮ್ಮ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಉದ್ಯೋಗದ ಅಭಾವ, ಅಸ್ಥಿರ ಮಳೆ ಹಾಗೂ ಬೆಳೆ ನಷ್ಟದಿಂದ ಸಂಕಷ್ಟದಲ್ಲಿದ್ದ ಸಾವಿರಾರು ಕುಟುಂಬಗಳಿಗೆ 2005ರಲ್ಲಿ ಜಾರಿಯಾದ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಕಾಯ್ದೆ (ಉದ್ಯೋಗ ಖಾತ್ರಿ) ಹೊಸ ಆಶಾಕಿರಣವಾಗಿ ಪರಿಣಮಿಸಿತು. ಆರಂಭಿಕ ದಿನಗಳಲ್ಲಿ ಯೋಜನೆ ಬಗ್ಗೆ ಅರಿವು ಕಡಿಮೆಯಿದ್ದರೂ, ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಸಂಘಟನೆಗಳ ಪ್ರಯತ್ನದಿಂದ ಜನರಲ್ಲಿ ಜಾಗೃತಿ ಮೂಡಿಸಲಾಯಿತು ಎಂದು ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ರಾಜ್ಯ ನೀತಿ ಮತ್ತು ಯೋಜನಾ ಆಯೋಗದ ಪ್ರಧಾನ ಕಾರ್ಯದರ್ಶಿ ಚೌಧರಿ, ಆಯೋಗದ ಸದಸ್ಯ ಡಾ.ನಿರಾಂಜನಾರಾಧ್ಯ ಸೇರಿದಂತೆ ಹಲವರು ಭಾಗವಹಿಸಿದ್ದರು.
ಛಲವಾದಿ ನಾರಾಯಣಸ್ವಾಮಿ ಅವರು ಸ್ವಾಭಿಮಾನ ಅಡವಿಟ್ಟು ಬಿಜೆಪಿಯಲ್ಲಿ ಬದುಕುತಿದ್ದಾರೆ : ರಮೇಶ್ಬಾಬು
ಬೆಂಗಳೂರು : ತಲೆ ಮೇಲೆ ಚಡ್ಡಿ ಹೊತ್ತು ಸ್ವಾಭಿಮಾನವನ್ನು ಅಡವಿಟ್ಟು ಬಿಜೆಪಿಯಲ್ಲಿ ಬದುಕುತ್ತಿರುವ ಛಲವಾದಿ ನಾರಾಯಣಸ್ವಾಮಿ ಕಾಂಗ್ರೆಸ್ ಸರಕಾರದ ಬಜೆಟ್ಗೆ ಪುಸ್ತಕಕ್ಕೆ ಬೆಂಕಿ ಇಡುವುದಾಗಿ ಹೇಳುವುದರ ಮೂಲಕ ಮತ್ತೊಮ್ಮೆ ಚಡ್ಡಿ ಹೊರುವ ಸಂಸ್ಕೃತಿಗೆ ಮುಂದಾಗಿದ್ದಾರೆ ಎಂದು ವಿಧಾನಪರಿಷತ್ ಸದಸ್ಯ ರಮೇಶ್ಬಾಬು ತಿಳಿಸಿದ್ದಾರೆ. ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಜಾಭತ್ವದ ವ್ಯವಸ್ಥೆಯಲ್ಲಿ ವಿಧಾನಮಂಡಲದ ವಿರೋಧ ಪಕ್ಷದ ನಾಯಕರಿಗೆ ಸಂವಿಧಾನದ ಅಡಿಯಲ್ಲಿ ವಿಶೇಷ ಸ್ಥಾನಮಾನಗಳನ್ನು ನೀಡಲಾಗಿದೆ. ಕರ್ನಾಟಕ ವಿಧಾನಮಂಡಲದ ಇಬ್ಬರೂ ವಿರೋಧ ಪಕ್ಷದ ನಾಯಕರು ಅತ್ಯಂತ ವೈಫಲ್ಯದ ನಾಯಕರಾಗಿದ್ದು, ರಾಜ್ಯದ ಸಮಸ್ಯೆಗಳು ಮತ್ತು ಆಡಳಿತದ ಮೇಲೆ ಬೆಳಕು ಚೆಲ್ಲುವ ಬದಲು ಪದೇ ಪದೇ ತಮ್ಮ ವೈಫಲ್ಯಗಳನ್ನು ಸಾಬೀತು ಪಡಿಸಿಕೊಳ್ಳುತ್ತಿದ್ದಾರೆ ಎಂದು ತಿಳಿಸಿದರು. ವಿಧಾನ ಪರಿಷತ್ನ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಜ.28ರಂದು ಸದನದಲ್ಲಿ ನಿಯಮಾವಳಿ ಪುಸ್ತಕ ಹರಿಯುವುದರ ಮೂಲಕ ಇತಿಹಾಸ ಬರೆದಿರುತ್ತಾರೆ. ಈಗ ಬಜೆಟ್ ಪುಸ್ತಕಕ್ಕೆ ಬೆಂಕಿ ಇಡುವುದಾಗಿ ಹೇಳುವುದರ ಮೂಲಕ ತಮ್ಮ ಬಟ್ಟೆಗೆ ತಾವೇ ಮಸಿ ಬಳಿದುಕೊಂಡಿರುತ್ತಾರೆ ಎಂದು ಟೀಕಿಸಿದರು. ಛಲವಾದಿ ನಾರಾಯಣಸ್ವಾಮಿ ಅವರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ಟೀಕೆ ಮಾಡುವ ಮೂಲಕ ತಮ್ಮ ರಾಜಕೀಯ ಅಸ್ತಿತ್ವವನ್ನು ಉಳಿಸಿಕೊಂಡಿದ್ದಾರೆ. ಕೇಂದ್ರ ಬಿಜೆಪಿ ಸರಕಾರವು ತನ್ನ ಒಟ್ಟಾರೆ ಬಜೆಟ್ನಲ್ಲಿ ಶೇ.10ರಷ್ಟು ಹಣ ಕೂಡ ದೇಶದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ನೀಡಿರುವುದಿಲ್ಲ. ದಲಿತ ವಿರೋಧಿ ನೀತಿಯನ್ನು ತನ್ನ ಆಡಳಿತದ ಉದ್ದಗಲಕ್ಕೂ ಸಾರುತ್ತಿರುವ ಕೇಂದ್ರ ಬಿಜೆಪಿ ಸರಕಾರವನ್ನಾಗಲಿ ಅಥವಾ ಮೀಸಲಾತಿ ವಿರೋಧಿ ನೀತಿಯನ್ನು ಉಸಿರಾಗಿಸಿಕೊಂಡಿರುವ ಸಂಘ ಪರಿವಾರವನ್ನಾಗಲಿ ಪ್ರಶ್ನೆ ಮಾಡುವ ತಾಕತ್ತು, ಧೈರ್ಯ ಅಥವಾ ನೈತಿಕತೆಯನ್ನು ಹೊಂದಿರದ ಛಲವಾದಿ ನಾರಾಯಣಸ್ವಾಮಿ ಅವರು, ಧರ್ಮದ ಹೆಸರಿನಲ್ಲಿ ಬೆಂಕಿ ಇಡುವ ಬಿಜೆಪಿ ಪ್ರವೃತ್ತಿಯ ಮುಂದುವರಿದ ಭಾಗವಾಗಿ ರಾಜ್ಯ ಕಾಂಗ್ರೆಸ್ ಸರಕಾರದ ಬಜೆಟ್ ಪ್ರತಿಗೆ ಬೆಂಕಿ ಇಡುವ ಮಾತನಾಡಿರುತ್ತಾರೆ ಎಂದು ಹೇಳಿದರು. ದೇಶದಲ್ಲಿ ಎಸ್ಸಿಪಿ ಮತ್ತು ಟಿಎಸ್ಪಿ ಯೋಜನೆಯನ್ನು ಕರ್ನಾಟಕದಲ್ಲಿ ಜಾರಿಗೊಳಿಸಿದ ಸಿದ್ದರಾಮಯ್ಯ ಅವರ ಕಾಂಗ್ರೆಸ್ ಸರಕಾರವನ್ನು ಅನುಕರಣೆ ಮಾಡಲು ವಿಫಲವಾಗಿರುವ ಕೇಂದ್ರ ಬಿಜೆಪಿ ಸರಕಾರ ಮತ್ತು ಇತರೆ ರಾಜ್ಯಗಳ ಬಿಜೆಪಿ ಸರಕಾರಗಳನ್ನು ಪ್ರಶ್ನಿಸಲು ತಾಕತ್ತಿಲ್ಲದ ಛಲವಾದಿ ನಾರಾಯಣಸ್ವಾಮಿ ಇಂತಹ ಹೇಳಿಕೆಗಳ ಮೂಲಕ ವಿಧಾನ ಪರಿಷತ್ನ ವಿರೋಧ ಪಕ್ಷದ ನಾಯಕ ಸ್ಥಾನಕ್ಕೆ ಪದೇ ಪದೇ ಮಸಿ ಬಳೆಯುತ್ತಿದ್ದಾರೆ. ಬಹುಶಃ ಬಿಜೆಪಿ ಮತ್ತು ಸಂಘ ಪರಿವಾರಕ್ಕೆ ಇದಕ್ಕಿಂತ ಹೆಚ್ಚು ಭಟ್ಟಂಗಿತನ ಪ್ರದರ್ಶನ ಮಾಡಲು ಇವರಿಗೆ ಸಾಧ್ಯವಿಲ್ಲ ಎಂದರು. ಸದನದಲ್ಲಿ ನಿಯಮಾವಳಿ ಪುಸ್ತಕ ಹರಿಯುವುದು, ಸಾರ್ವಜನಿಕವಾಗಿ ಬಜೆಟ್ ಪುಸ್ತಕಕ್ಕೆ ಬೆಂಕಿ ಇಡುವುದು ಛಲವಾದಿ ನಾರಾಯಣಸ್ವಾಮಿ ಅವರು ಬಿಜೆಪಿ ಮತ್ತು ಸಂಘ ಪರಿವಾರದಿಂದ ಕಲಿತ ಸಂಸ್ಕೃ ತಿಯಾಗಿದೆ. ಇವರಿಗೆ ದಲಿತರ ಬಗ್ಗೆ ಬದ್ಧತೆ ಇದ್ದರೆ ಕೇಂದ್ರ ಬಿಜೆಪಿ ಸರಕಾರದ ಬಜೆಟ್ನಲ್ಲಿ ದೇಶದ ದಲಿತ ಸಮುದಾಯಕ್ಕೆ ನೀಡಿರುವ ಅನುದಾನಗಳ ಕುರಿತು ಧ್ವನಿಯೆತ್ತಲಿ ಎಂದು ತಿಳಿಸಿದರು. ಪ್ರಚಾರಕ್ಕಾಗಿ ಚಡ್ಡಿ ಹೊರುವ, ಪುಸ್ತಕ ಹರಿಯುವ, ಬೆಂಕಿ ಇಡುವ ನಡತೆಯಿಂದ ಮುಕ್ತವಾಗಿ ವಿರೋಧ ಪಕ್ಷದ ನಾಯಕನ ಸ್ಥಾನದ ಘನತೆಗೆ ಅನುಗುಣವಾಗಿ ನಡೆದುಕೊಳ್ಳಲಿ ಎಂದು ಒತ್ತಾಯಿಸದರು.
ಒಳಮೀಸಲಾತಿ ಅನುಷ್ಠಾನಕ್ಕಾಗಿ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿದ ದಲಿತ ಸಚಿವರ ನಿಯೋಗ
ಬೆಂಗಳೂರು : ನೇಮಕಾತಿಯಲ್ಲಿ ಒಳ ಮೀಸಲಾತಿ ಅನುಷ್ಠಾನ ಮಾಡುವ ಕುರಿತು, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಆಹಾರ ಸಚಿವ ಕೆ.ಎಚ್.ಮುನಿಯಪ್ಪ ಹಾಗೂ ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ ನೇತೃತ್ವದಲ್ಲಿ ದಲಿತ ಸಮುದಾಯದ ಶಾಸಕರು, ಮಾಜಿ ಸಚಿವರು ಹಾಗೂ ಮಾಜಿ ಸಂಸದರು ಭೇಟಿ ಮಾಡಿ, ಚರ್ಚಿಸಿದ್ದಾರೆ. ಒಮ್ಮತದ ಅಭಿಪ್ರಾಯದ ಮೂಲಕ ಮೀಸಲಾತಿ ಹಂಚಿಕೆ ಮಾಡಿಕೊಳ್ಳಬೇಕು. ಪರಿಶಿಷ್ಟ ಜಾತಿಯ ನೂರೊಂದು ಸಮುಯದಾಯಗಳಿಗೂ ನ್ಯಾಯಯುತವಾಗಿ ಮೀಸಲಾತಿ ಹಂಚಿಕೆ ಮಾಡಿಕೊಳ್ಳುವ ಕುರಿತು ಮುಖ್ಯಮಂತ್ರಿಗಳ ಗಮನಕ್ಕೆ ತರುತ್ತೇನೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಸಚಿವರಾದ ಆರ್.ಬಿ.ತಿಮ್ಮಾಪುರ, ಮಾಜಿ ಸಚಿವ ಎಚ್.ಆಂಜನೇಯ, ಚಂದ್ರಪ್ಪ, ಎಲ್.ಹನುಮಂತಯ್ಯ, ಶಾಸಕ ಶ್ರೀನಿವಾಸ್, ಧರ್ಮಸೇನ್, ಮಂಜುನಾಥ್ ಮತ್ತಿತರರು ಉಪಸ್ಥಿತರಿದ್ದರು.
ನೀಟ್ ಲೀ ಎಐ | ನೀಟ್, ಸಿಇಟಿ ವಿದ್ಯಾರ್ಥಿಗಳಿಗೆ ಅತ್ಯುತ್ತಮ ಅಪ್ಲಿಕೇಶನ್; ಶಿವಮೊಗ್ಗದ ಇಂಜಿನಿಯರ್ ನಾಫಿ ಸಾಧನೆ
ಬೆಂಗಳೂರು : ಶಿವಮೊಗ್ಗದ ಯುವ ಸಾಫ್ಟ್ ವೇರ್ ಇಂಜಿನಿಯರ್ ನಾಫಿ ಅವರು ಅಭಿವೃದ್ಧಿಪಡಿಸಿದ ‘ನೀಟ್ ಲೀ ಎಐ’ ಎಂಬ ಆಧುನಿಕ ಶೈಕ್ಷಣಿಕ ಅಪ್ಲಿಕೇಶನ್ ಇದೀಗ ನೀಟ್, ಜೆಇಇ ಮತ್ತು ಸಿಇಟಿಂತಹ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಸಿದ್ಧತೆ ನಡೆಸುತ್ತಿರುವ ವಿದ್ಯಾರ್ಥಿಗಳಿಗೆ ಅತ್ಯುತ್ತಮ ನೆರವಾಗುತ್ತಿದೆ. ಇಂಟರ್ನೆಟ್ ಜಗತ್ತಿನಲ್ಲಿ ಇಂತಹ ಅನೇಕ ಅಪ್ಲಿಕೇಶನ್ಗಳು ಲಭ್ಯವಿದ್ದರೂ, ‘ನೀಟ್ ಲೀ ಎಐ’ ತನ್ನ ಸರಳ ಬಳಕೆ, ಸ್ಪಷ್ಟ ಮಾರ್ಗದರ್ಶನ ಹಾಗೂ ಪರಿಣಾಮಕಾರಿ ಅಧ್ಯಯನ ವಿಧಾನಗಳಿಂದ ವಿಶೇಷ ಗಮನ ಸೆಳೆಯುತ್ತಿದೆ. ಈ ಅಪ್ಲಿಕೇಶನ್ನಲ್ಲಿ ಕೃತಕ ಬುದ್ಧಿಮತ್ತೆ ತಂತ್ರಜ್ಞಾನವನ್ನು ಬಳಸಿಕೊಂಡು ವಿದ್ಯಾರ್ಥಿಗಳಿಗೆ ವೈಯಕ್ತಿಕ ಅಧ್ಯಯನ ಮಾರ್ಗದರ್ಶನ, ಅಭ್ಯಾಸ ಪ್ರಶ್ನೆಗಳು, ಮಾಕ್ ಟೆಸ್ಟ್ ಗಳು ಹಾಗೂ ತಕ್ಷಣದ ಫಲಿತಾಂಶ ವಿಶ್ಲೇಷಣೆ ನೀಡಲಾಗುತ್ತದೆ. ವಿದ್ಯಾರ್ಥಿಗಳ ಸಾಧನೆ ಮತ್ತು ದುರ್ಬಲ ವಿಷಯಗಳನ್ನು ವಿಶ್ಲೇಷಿಸಿ ಅವರಿಗೆ ಸೂಕ್ತ ಅಧ್ಯಯನ ಯೋಜನೆಯನ್ನು ನೀಡುವುದು ಇದರ ಮುಖ್ಯ ವೈಶಿಷ್ಟ್ಯವಾಗಿದೆ. ಇಂಜಿನಿಯರ್ ನಾಫಿ ಅವರ ಪ್ರಕಾರ, ದುಬಾರಿ ಕೋಚಿಂಗ್ ಕೇಂದ್ರಗಳಿಗೆ ತೆರಳಲು ಸಾಧ್ಯವಾಗದ ವಿದ್ಯಾರ್ಥಿಗಳನ್ನು ಗಮನದಲ್ಲಿಟ್ಟುಕೊಂಡೇ ಈ ಅಪ್ಲಿಕೇಶನ್ ರೂಪಿಸಲಾಗಿದೆ. ಗ್ರಾಮೀಣ ಹಾಗೂ ಹಿಂದುಳಿದ ಪ್ರದೇಶಗಳ ವಿದ್ಯಾರ್ಥಿಗಳಿಗೆ ಇದು ವಿಶೇಷವಾಗಿ ಉಪಯುಕ್ತವಾಗಿದೆ. ಈ ವೇದಿಕೆ ವಿದ್ಯಾರ್ಥಿಗಳ ಸಮಯ ಬಳಕೆ, ಪ್ರಶ್ನೆಗಳ ಉತ್ತರಿಸುವ ಸಾಮಥ್ರ್ಯ ಮತ್ತು ವಿಷಯವಾರು ದುರ್ಬಲತೆಗಳನ್ನು ವಿಶ್ಲೇಷಿಸಿ ಉತ್ತಮ ತಂತ್ರವನ್ನು ಸೂಚಿಸುತ್ತದೆ ಎಂದು ತಿಳಿಸಿದ್ದಾರೆ. ನೀಟ್ ಲೀ ಎಐಯ ಪ್ರಮುಖ ವೈಶಿಷ್ಟ್ಯಗಳಲ್ಲಿ ಮಾಕ್ ಟೆಸ್ಟ್, ಅಭ್ಯಾಸ ಪ್ರಶ್ನೆಗಳು, ತಕ್ಷಣದ ರ್ಯಾಂಕ್ ಅಂದಾಜು, ದಿನನಿತ್ಯದ ಅಧ್ಯಯನ ಗುರಿ ಮತ್ತು ವಿವರವಾದ ಪ್ರಗತಿ ವರದಿ ಸೇರಿವೆ. ಪ್ರತಿಯೊಂದು ಪರೀಕ್ಷೆಯ ನಂತರ ವಿದ್ಯಾರ್ಥಿಗಳಿಗೆ ಸಂಪೂರ್ಣ ವಿಶ್ಲೇಷಣಾ ವರದಿ ನೀಡಲಾಗುತ್ತದೆ. ಜೊತೆಗೆ ಎಐ ಆಧಾರಿತ ಡೌಟ್ ಕ್ಲಿಯರಿಂಗ್ ವ್ಯವಸ್ಥೆಯ ಮೂಲಕ ವಿದಾ-್ಯರ್ಥಿಗಳು ತಮ್ಮ ಸಂದೇಹಗಳನ್ನು ದಾಖಲಿಸಿ ತಕ್ಷಣ ಉತ್ತರ ಪಡೆಯಬಹುದು ಎಂದು ನಾಫಿ ಹೇಳಿದ್ದಾರೆ. ಅನೇಕ ವಿದ್ಯಾರ್ಥಿಗಳು ಈ ಅಪ್ಲಿಕೇಶನ್ ಬಳಸಿ ಉತ್ತಮ ಅನುಭವ ಹೊಂದಿರುವುದಾಗಿ ತಿಳಿಸಿದ್ದಾರೆ. ಮುಂದಿನ ದಿನಗಳಲ್ಲಿ ಲೈವ್ ಆನ್ಲೈನ್ ತರಗತಿಗಳು, ವಿಡಿಯೋ ಉಪನ್ಯಾಸಗಳು ಮತ್ತು ಪೋಷಕರಿಗಾಗಿ ಪ್ರಗತಿ ಟ್ರ್ಯಾಕಿಂಗ್ ವ್ಯವಸ್ಥೆಯನ್ನು ಸೇರಿಸುವ ಯೋಜನೆ ಇದೆ. ಇತರೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನೂ ಈ ವೇದಿಕೆಯಲ್ಲಿ ಸೇರಿಸುವ ಉದ್ದೇಶವಿದೆ ಎಂದು ನಾಫಿ ತಿಳಿಸಿದ್ದಾರೆ. ಈ ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಹಾಗೂ ಬಳಸಲು ಮೊದಲು ಲಾಗಿನ್ ಮಾಡಬೇಕು. ಹೆಚ್ಚಿನ ಮಾಹಿತಿಗಾಗಿ ವಿದ್ಯಾರ್ಥಿಗಳು ವೆಬ್ಸೈಟ್ neetlyai.in ಗೆ ಭೇಟಿ ನೀಡಬಹುದು ಎಂದು ನಾಫಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Kalaburagi | ನೋಟಿಸ್ ನೀಡದೆ ಕಾಮಗಾರಿ ಆರೋಪ : ರೈಲ್ವೆ ಅಧಿಕಾರಿಗಳ ವಿರುದ್ಧ ಎಫ್ಐಆರ್
ಕಲಬುರಗಿ: ನೋಟಿಸ್ ನೀಡದೆ ಹೊಲಗಳಲ್ಲಿ ರೈಲ್ವೆ ಇಲಾಖೆಯ ಕಾಮಗಾರಿ ನಡೆಸಿದ ಆರೋಪದ ಮೇರೆಗೆ ಮೂವರು ರೈಲ್ವೆ ಅಧಿಕಾರಿಗಳು ಸೇರಿದಂತೆ ಇತರರ ವಿರುದ್ಧ ವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನೈಋತ್ಯ ರೈಲ್ವೆ ಕನ್ಸ್ಟ್ರಕ್ಷನ್ ವಿಭಾಗದ ಸಹಾಯಕ ಮುಖ್ಯ ಎಂಜಿನಿಯರ್ ರಾಮಾಶ್ರಯ ಝಾ ಸತ್ಯೇಂದ್ರ ಝಾ (51), ಬಿಹಾರ ರಾಜ್ಯದ ಪಟ್ನಾ ನಿವಾಸಿಯಾಗಿರುವ ಸೀನಿಯರ್ ಸೆಕ್ಷನ್ ಇಂಜಿನಿಯರ್ ಹಿಮಾಂಶುಕುಮಾರ್ ಮೌಜಿ ಮಾಲಕರ (40), ಮತ್ತೊಬ್ಬ ಸೀನಿಯರ್ ಸೆಕ್ಷನ್ ಇಂಜಿನಿಯರ್ ಜಗ್ಗು ಮಾಹಂತಿ (49) ಸೇರಿದಂತೆ ಇತರರ ವಿರುದ್ಧ ಪ್ರಕರಣ ದಾಖಲಾಗಿದೆ. ವಾಡಿ ಠಾಣೆ ವ್ಯಾಪ್ತಿಯ ಹಲಕರ್ಟಿ ಗ್ರಾಮದ ಸರ್ವೇ ನಂ. 283ರಲ್ಲಿ ಖಾಜಮ್ಮ ಮುಹಮ್ಮದ್ ಅಲಿಸಾಬ್ ಅವರ ಹೊಲದಲ್ಲಿ ನೋಟಿಸ್ ನೀಡದೆ ಗದಗ ರೈಲ್ವೆ ಹಳಿ ಕಾಮಗಾರಿ ನಡೆಸಲಾಗುತ್ತಿತ್ತು ಎನ್ನಲಾಗಿದೆ. ಸುತ್ತಮುತ್ತಲಿನ ಜಮೀನಿನ ಮಾಲಕರು ಪರಿಹಾರ ಹಣ ದೊರಕಿಲ್ಲವೆಂದು ಆರೋಪಿಸಿದ್ದಾರೆ. ಅತಿಕ್ರಮ ಪ್ರವೇಶ ಮಾಡಿ ಕಾಮಗಾರಿ ಮಾಡಲು ಯತ್ನಿಸಿದ್ದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ವಾಡಿ ನಿವಾಸಿ ಮಲ್ಲಯ್ಯ ಹಣಮಯ್ಯ ಗುತ್ತೇದಾರ್ ನೀಡಿದ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ ಎಂದು ತಿಳಿದುಬಂದಿದೆ.
ಬೆಂಗಳೂರು : ಮಾದಕವಸ್ತು ಸಂಗ್ರಹ ಹಾಗೂ ಮಾರಾಟ ಪ್ರಕರಣದಲ್ಲಿ ಬಂಧನಕ್ಕೀಡಾಗಿದ್ದ ಇಬ್ಬರು ನೈಜೀರಿಯಾ ಪ್ರಜೆಗಳನ್ನು ಬಿಡುಗಡೆಗೊಳಿಸಿರುವ ಹೈಕೋರ್ಟ್, ಅಧಿಕೃತ ದಾಖಲೆಗಳಿಲ್ಲದೆ ಕಳೆದೊಂದು ದಶಕದಿಂದ ಭಾರತದಲ್ಲಿ ನೆಲೆಸಿರುವ ಅರ್ಜಿದಾರ ವಿದೇಶಿಗರನ್ನು ಬಿಡುಗಡೆಗೊಂಡ ನಂತರ ದೇಶದಿಂದ ಗಡಿಪಾರು ಮಾಡಲು ವಿದೇಶಿಯರ ಪ್ರಾದೇಶಿಕ ನೋಂದಣಿ ಕಚೇರಿಗೆ (ಎಫ್ಆರ್ಆರ್ಒ) ಹಸ್ತಾಂತರಿಸಬೇಕು ಎಂದು ಆದೇಶಿಸಿದೆ. ಅಕ್ರಮವಾಗಿ ಬಂಧನದಲ್ಲಿರಿಸಲಾಗಿರುವ ನಮ್ಮನ್ನು ಬಿಡುಗಡೆ ಮಾಡಲು ಪೊಲೀಸರಿಗೆ ನಿರ್ದೇಶಿಸಬೇಕು ಎಂದು ಕೋರಿ ನೈಜಿರಿಯಾ ಪ್ರಜೆಗಳಾದ (ಸದ್ಯ ಕೋಗಿಲು ಲೇ ಔಟ್ ವಿಳಾಸ ಹೊಂದಿರುವ) ಇಮೆಕಾ ಜೇಮ್ಸ್ ಐವೊಬಾ ಹಾಗೂ ವುಡೆರಿಕ್ ಫಿಡೆಲಿಸ್ ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿ ವಿಚಾರಣೆ ಪೂರ್ಣಗೊಳಿಸಿ ಕಾಯ್ದಿರಿಸಿದ್ದ ತೀರ್ಪನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಬುಧವಾರ ಪ್ರಕಟಿಸಿದ್ದು, ಅರ್ಜಿಯನ್ನು ಭಾಗಶಃ ಪುರಸ್ಕರಿಸಿದೆ. ಮುಕ್ತ ನ್ಯಾಯಾಲಯದಲ್ಲಿ ತೀರ್ಪಿನ ಸಾರಾಂಶ ಓದಿದ ನ್ಯಾಯಪೀಠ, ಅರ್ಜಿದಾರರಿಗೆ ನೀಡಲಾದ ಬಂಧನದ ಕಾರಣಗಳು ದೋಷಪೂರಿತವಾಗಿರುವುದರಿಂದ ಹಾಗೂ ಬಂಧನದ ಕಾರಣಗಳಿಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಆದೇಶದ ಉಲ್ಲಂಘನೆಯಾಗಿರುವುದರಿಂದ ಅರ್ಜಿದಾರರು ಬಿಡುಗಡೆ ಹೊಂದಲು ಅರ್ಹರಾಗಿದ್ದಾರೆ. ಅರ್ಜಿದಾರರು ಬಿಡುಗಡೆಯಾದ ತಕ್ಷಣ, ಯಾವುದೇ ಅಧಿಕೃತ ದಾಖಲೆಗಳಿಲ್ಲದೆ 10 ವರ್ಷಗಳಿಗೂ ಹೆಚ್ಚು ಕಾಲ ದೇಶದಲ್ಲಿ ಅಕ್ರಮವಾಗಿ ನೆಲೆಸಿರುವ ಕಾರಣಕ್ಕಾಗಿ, ಅವರ ವಿರುದ್ಧದ ಕಾನೂನು ಪ್ರಕ್ರಿಯೆ ಹಿಂಪಡೆಯುವುದಕ್ಕೆ ಹಾಗೂ ಗಡೀಪಾರು ಮಾಡುವುದಕ್ಕೆ ಸಂಬಂಧಿಸಿದ ಪ್ರಮಾಣಿತ ಕಾರ್ಯಾಚರಣೆ ವಿಧಾನದ (ಎಸ್ಒಪಿ) ಪ್ರಕಾರ ಮುಂದಿನ ಕ್ರಮ ಕೈಗೊಳ್ಳಲು ಅವರನ್ನು ಸಂಬಂಧಪಟ್ಟ ವ್ಯಾಪ್ತಿಯ ಎಫ್ಆರ್ಆರ್ಒಗೆ ಹಸ್ತಾಂತರಿಸಬೇಕು ಎಂದು ಆದೇಶಿಸಿದೆ. ಇದೇ ವೇಳೆ, ಎಸ್ಒಪಿಯಲ್ಲಿ ತಿಳಿಸಿರುವಂತೆ ರಾಜ್ಯ ಮಟ್ಟದ ಸ್ಕ್ರೀನಿಂಗ್ ಸಮಿತಿ ಮತ್ತು ಜಿಲ್ಲಾ ಮಟ್ಟದ ಸ್ಕ್ರೀನಿಂಗ್ ಸಮಿತಿಯನ್ನು ರಚಿಸಬೇಕು ಹಾಗೂ ಸಮಿತಿ ರಚನೆಯ ಕುರಿತು ಈ ಆದೇಶದ ಪ್ರತಿ ಸ್ವೀಕರಿಸಿದ ದಿನಾಂಕದಿಂದ ನಾಲ್ಕು ತಿಂಗಳೊಳಗೆ ನ್ಯಾಯಾಲಯಕ್ಕೆ ವರದಿ ಸಲ್ಲಿಸಬೇಕು ಎಂದು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶಿಸಿದೆ. ವಿಸ್ತೃತ ತೀರ್ಪಿನ ಪ್ರತಿ ಇನ್ನಷ್ಟೇ ಲಭ್ಯವಾಗಬೇಕಿದೆ. ನಾಗರಿಕ ಕೇಂದ್ರಿತವಲ್ಲ: ಭಾರತದ ಸಂವಿಧಾನದ ವಿಧಿ 22(1)ರ ಪ್ರಕಾರ, ಬಂಧಿಸಲ್ಪಟ್ಟ ಪ್ರತಿಯೊಬ್ಬ ವ್ಯಕ್ತಿಗೂ ಆತನ ಬಂಧನಕ್ಕೆ ಕಾರಣಗಳನ್ನು ತಿಳಿಸುವುದು ಕಡ್ಡಾಯವಾಗಿದೆ. ಬಂಧನದ ಕಾರಣಗಳನ್ನು ತಿಳಿಸಬೇಕೆನ್ನುವುದು ಒಂದು ಕಡ್ಡಾಯವಾದ ಸಾಂವಿಧಾನಿಕ ರಕ್ಷಣೆಯಾಗಿದೆಯೇ ಹೊರತು ಅದು ಔಪಚಾರಿಕ ಕಾರ್ಯವಿಧಾನವಷ್ಟೇ ಅಲ್ಲ. 22ನೇ ವಿಧಿಯು ಕೇವಲ ನಾಗರಿಕ ಕೇಂದ್ರಿತವಲ್ಲದೆ, ವ್ಯಕ್ತಿ ಕೇಂದ್ರಿತವಾಗಿದೆ. ಈ ಹಿನ್ನೆಲೆಯಲ್ಲಿ ಅದರ ಅಡಿ ದೊರೆತಿರುವ ಸಾಂವಿಧಾನಿಕ ರಕ್ಷಣೆಯು ಭಾರತದ ಭೂಪ್ರದೇಶದಲ್ಲಿರುವ ವಿದೇಶಿಗರಿಗೂ ಸೇರಿದಂತೆ ದೇಶದ ಎಲ್ಲ ಪ್ರಜೆಗಳಿಗೂ ಅನ್ವಯಿಸುತ್ತದೆ ಎಂದು ಹೈಕೋರ್ಟ್ ಆದೇಶದಲ್ಲಿ ಅಭಿಪ್ರಾಯಪಟ್ಟಿದೆ. ಬಂಧನದ ಕಾರಣಗಳನ್ನು ತಿಳಿಸಲು ಕಾನೂನು ಯಾವುದೇ ಕಟ್ಟುನಿಟ್ಟಾದ ಸ್ವರೂಪವನ್ನು ನಿಗದಿಪಡಿಸಿಲ್ಲ. ಬಂಧಿತ ವ್ಯಕ್ತಿಗೆ ಆತನ ಬಂಧನದ ಆಧಾರದ ಬಗ್ಗೆ ಅರಿವು ಮೂಡಿಸಿದರೆ, ಅದು ಕಾನೂನಿನ ಗಮನಾರ್ಹ ಪಾಲನೆಯೆಂದು ಪರಿಗಣಿಸಲ್ಪಡುತ್ತದೆ. ಇಂತಹ ಪ್ರಕರಣಗಳಲ್ಲಿ ನ್ಯಾಯಾಂಗ ವಿಮರ್ಶೆಯು ಬಂಧನದ ಕಾರಣಗಳನ್ನು ತಿಳಿಸಲಾಗಿದೆಯೇ ಅಥವಾ ಇಲ್ಲವೇ ಎಂಬುದಕ್ಕಷ್ಟೇ ಸೀಮಿತವಾಗಿರುತ್ತದೆಯೇ ಹೊರತು ಆ ಕಾರಣಗಳು ಸಮರ್ಪಕವಾಗಿವೆಯೇ ಅಥವಾ ಸರಿಯಾಗಿವೆಯೇ ಎಂಬ ಬಗ್ಗೆ ಅಲ್ಲ ಎಂದು ನ್ಯಾಯಾಲಯ ಹೇಳಿದೆ. ಉದ್ದೇಶಪೂರ್ವಕ ಕೃತ್ಯ: ತೀರ್ಪು ಪ್ರಕಟಿಸಿದ ಬಳಿಕ ನ್ಯಾಯಾಲಯದಲ್ಲಿ ಹಾಜರಿದ್ದ ಉಪ ಸಾಲಿಸಿಟರ್ ಜನರಲ್ ಎಚ್. ಶಾಂತಿಭೂಷಣ್ ಅವರು, ಬಹುಶಃ ಎಸ್ಒಪಿಗೆ ಸಂಬಂಧಿಸಿದಂತೆ ದೇಶದಲ್ಲೇ ಮೊದಲ ತೀರ್ಪು ಇದಾಗಿದೆ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಇಂಥ ಜನರು ಒಂದಿಲ್ಲೊಂದು ಅಪರಾಧ ಪ್ರಕರಣಗಳಲ್ಲಿ ಉದ್ದೇಶಪೂರ್ವಕವಾಗಿಯೇ ಸಿಲುಕಿಕೊಳ್ಳುತ್ತಾರೆ. ಆನಂತರ ಪ್ರಕರಣದ ವಿಚಾರಣೆ ಬಾಕಿ ಇದೆ ಎಂಬ ನೆಪದಲ್ಲಿ ಅವಧಿ ಮೀರಿ ಇಲ್ಲಿಯೇ ಉಳಿದುಕೊಳ್ಳಲು ಯತ್ನಿಸುತ್ತಾರೆ. ಇದಕ್ಕೆ ಎಸ್ಒಪಿಯೇ ಸರಿಯಾಗಿದೆ ಎಂದು ಮೌಖಿಕವಾಗಿ ಹೇಳಿತು. ಪ್ರಕರಣದ ಹಿನ್ನೆಲೆ: ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಆರೋಪದಲ್ಲಿ ಅರ್ಜಿದಾರರನ್ನು 2024ರ ಮೇ 12ರಂದು ನಗರದ ಸಂಪಿಗೆಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದರು. ಈ ವೇಳೆ, ಆರೋಪಿಗಳಿಂದ 400 ಗ್ರಾಂ ಎಂಡಿಎಂಎ ವಶಪಡಿಸಿಕೊಳ್ಳಲಾಗಿತ್ತು. ಈ ಸಂಬಂಧ ಅವರ ವಿರುದ್ಧ ಎನ್ಡಿಪಿಎಸ್ ಕಾಯ್ದೆ ಹಾಗೂ ವಿದೇಶಿಯರ ಕಾಯ್ದೆ ಅಡಿ ಪ್ರಕರಣ ದಾಖಲಿಸಲಾಗಿತ್ತು. ಪ್ರಕರಣವು ಬೆಂಗಳೂರಿನ ಎನ್ಡಿಪಿಎಸ್ ವಿಶೇಷ ನ್ಯಾಯಾಲಯದಲ್ಲಿ ವಿಚಾರಣಾ ಹಂತದಲ್ಲಿತ್ತು. ಇದರಿಂದ ಅರ್ಜಿದಾರರು ತಮ್ಮ ಬಂಧನವನ್ನು ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಈ ಹಿಂದೆ ಅರ್ಜಿ ವಿಚಾರಣೆ ನಡೆಸಿದ್ದ ಹೈಕೋರ್ಟ್, ಅಧಿಕೃತ ವೀಸಾ ಹಾಗೂ ಪಾಸ್ಪೋರ್ಟ್ ಇಲ್ಲದೆ ಅಕ್ರಮವಾಗಿ ನೆಲೆಸಿರುವ ವಿದೇಶಿಯರಿಂದ ದೇಶದ ಭದ್ರತೆಗೆ ಅಪಾಯ ಎಂದು ಆತಂಕ ವ್ಯಕ್ತಪಡಿಸಿತ್ತು. ಜತೆಗೆ, ಎಫ್ಆರ್ಆರ್ಒ ನಲ್ಲಿ ನೋಂದಣಿ ಮಾಡಿಸದೆ ಬೆಂಗಳೂರು ಮಹಾನಗರದಲ್ಲಿ ಸಾಕಷ್ಟು ವಿದೇಶಿ ಪ್ರಜೆಗಳು ಠಿಕಾಣಿ ಹೂಡಿದ್ದಾರೆ ಎಂದರೆ ಹೇಗೆ? ಇಂಥದನ್ನು ನಿಭಾಯಿಸುವಲ್ಲಿ ರಾಜ್ಯ ಸರ್ಕಾರ ಕರ್ತವ್ಯ ಲೋಪ ಎಸಗಿದಂತಲ್ಲವೇ ಎಂದು ಪ್ರಶ್ನಿಸಿತ್ತಲ್ಲದೆ, ಮಾನ್ಯತೆ ಹೊಂದಿರುವ ವೀಸಾ ಇಲ್ಲದೆ, ಎಫ್ಆರ್ಆರ್ಒ ಕಚೇರಿಯಲ್ಲಿ ನೋಂದಣಿ ಮಾಡಿಸದೆ ನಗರದಲ್ಲಿ ಅವಧಿ ಮೀರಿ ವಾಸಿಸುತ್ತಿರುವ ವಿದೇಶಿ ಪ್ರಜೆಗಳನ್ನು ಪತ್ತೆಹಚ್ಚಲು ಕೈಗೊಂಡಿರುವ ಕ್ರಮಗಳ ಕುರಿತಂತೆ ರಾಜ್ಯ ಸರ್ಕಾರದಿಂದ ವಿವರಣೆ ಕೇಳಿತ್ತು.
Middle East Conflict- ಟ್ರಂಪ್ ಹತ್ಯೆಗೆ ಸಂಚು ನಡೆಸಿದ್ದಕ್ಕೆ ಇರಾನ್ಗೆ ಶಾಸ್ತಿ: ಅಮೆರಿಕದಿಂದ ಈಗ ಹೊಸ ವರಸೆ!
ಇರಾನ್ ಪರಮಾಣು ಅಸ್ತ್ರ ಹೊಂದುವುದನ್ನು ವಿರೋಧಿಸಿ ಅದರ ಮೇಲೆ ದಾಳಿ ನಡೆಸಲಾಗುತ್ತಿದೆ ಎಂದು ಈವರೆಗೂ ಹೇಳಿಕೊಂಡು ಬಂದಿದ್ದ ಅಮೆರಿಕ ಇದೀಗ ತನ್ನ ವರಸೆ ಬದಲಿಸಿದೆ. ಡೊನಾಲ್ಡ್ ಟ್ರಂಪ್ ಹತ್ಯೆಗೆ ಇರಾನ್ ಸಂಚು ರೂಪಿಸಿದ್ದೇ ಟೆಹ್ರಾನ್ ಮೇಲಿನ ದಾಳಿಗೆ ಪ್ರಮುಖ ಕಾರಣ ಎಂದು ಸಮರ್ಥಿಸಿಕೊಂಡಿದೆ. ಇದೇವೇಳೆ ಸ್ಪಷ್ಟ ಯೋಜನೆಯಿಲ್ಲದ ಈ ಯುದ್ಧಕ್ಕೆ ಬೆಂಬಲ ನೀಡುವುದಿಲ್ಲ ಎಂದು ಬ್ರಿಟನ್ ಪ್ರಧಾನಿ ಕೀರ್ ಸ್ಟಾರ್ಮರ್ ಹೇಳಿರುವುದು ಅಮೆರಿಕಕ್ಕೆ ದೊಡ್ಡ ಹಿನ್ನಡೆಯಾಗಿದೆ. ಜೊತೆಗೆ ದಕ್ಷಿಣ ಇರಾನ್ನ ಶಾಲೆಯ ಮೇಲೆ ನಡೆದ ದಾಳಿಯಲ್ಲಿ 168 ವಿದ್ಯಾರ್ಥಿನಿಯರು ಸಾವನ್ನಪ್ಪಿರುವುದನ್ನು ವಿಶ್ವಸಂಸ್ಥೆ ಖಂಡಿಸಿದೆ.
ಬ್ರಿಟನ್ ಬಳಿಕ ಅಮೆರಿಕಗೆ ಕೈಕೊಟ್ಟ ಸ್ಪೇನ್, ಕುತೂಹಲ ಕೆರಳಿಸಿದ ಸ್ಪೇನ್ ನಡೆ | Operation Roaring Lion
ಇರಾನ್ ಮತ್ತು ಅಮೆರಿಕ ಯುದ್ಧದ ವಿಚಾರದಲ್ಲಿ ಎಲ್ಲಾ ಕಡೆಯೂ ಸಾಲು ಸಾಲು ಚರ್ಚೆಗಳು ಈಗ ನಡೆಯುತ್ತಾ ಇವೆ. ಈ ಯುದ್ಧವನ್ನು ಬೆಂಬಲಿಸುವ ದೇಶಗಳ ಜೊತೆಗೆ, ಯುದ್ಧ ಬೇಡವಾಗಿತ್ತು ಎಂಬ ಅಭಿಪ್ರಾಯ ವ್ಯಕ್ತಪಡಿಸುತ್ತಿರುವ ದೇಶಗಳು ಕೂಡ ಹೆಚ್ಚಾಗಿವೆ. ಅದರಲ್ಲೂ ಅಮೆರಿಕ ನಂಬಿರುವ &ಅಮೆರಿಕದ ಜೊತೆಗೆ ಶತಮಾನಗಳಿಂದ ಸ್ನೇಹ ಉಳಿಸಿಕೊಂಡು ಬಂದಿರುವ ಯುರೋಪ್ ದೇಶಗಳಲ್ಲೇ ಇದೀಗ ಭಿನ್ನರಾಗ ಶುರುವಾಗಿದೆ.
ಪೂಂಚ್ನಲ್ಲಿ ಭಯೋತ್ಪಾದಕರ ಒಳನುಸುಳುವ ಯತ್ನ ವಿಫಲಗೊಳಿಸಿದ ಸೇನೆ
ಶ್ರೀನಗರ, ಮಾ. 4: ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯ ಭಿಂಬೆರ್ ಗಾಲಿ ಪ್ರದೇಶದಲ್ಲಿ ಭಯೋತ್ಪಾದಕರ ಒಳನುಸುಳುವ ಪ್ರಯತ್ನವೊಂದನ್ನು ಸೈನಿಕರು ವಿಫಲಗೊಳಿಸಿದ್ದಾರೆ ಎಂದು ಸೇನೆ ಬುಧವಾರ ತಿಳಿಸಿದೆ. ‘‘ವಿಶ್ವಾಸಾರ್ಹ ಬೇಹುಗಾರಿಕಾ ಮಾಹಿತಿಗಳನ್ನು ಆಧರಿಸಿ ನಿರಂತರ ಕಣ್ಗಾವಲನ್ನು ಇರಿಸಿದ ಬಳಿಕ, ಭಿಂಬೆರ್ ಗಾಲಿ ಪ್ರದೇಶದಲ್ಲಿ ಬುಧವಾರ ಮುಂಜಾನೆ ಭಯೋತ್ಪಾದಕರ ಚಲನವಲನವನ್ನು ಪತ್ತೆಹಚ್ಚಲಾಯಿತು’’ ಎಂದು ಜಮ್ಮುವಿನಲ್ಲಿ ನೆಲೆ ಹೊಂದಿರುವ ಭಾರತೀಯ ಸೇನೆಯ ವೈಟ್ ನೈಟ್ ಕಾರ್ಪ್ಸ್ ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ತಿಳಿಸಿದೆ. ಆಗ ಕಾರ್ಪ್ಸ್ನ ಸೈನಿಕರು ನಿರ್ಣಾಯಕವಾಗಿ ಪ್ರತಿಕ್ರಿಯಿಸಿದರು ಹಾಗೂ ತಮ್ಮ ಶ್ರೇಷ್ಠ ಯುದ್ಧಕೌಶಲವನ್ನು ಪ್ರದರ್ಶಿಸಿ ಅವರನ್ನು ಹಿಮ್ಮೆಟ್ಟಿಸಿದರು ಎಂದು ಸಂದೇಶ ತಿಳಿಸಿದೆ. ‘‘ಸಂಘಟಿತ ಭೂ ಕಾರ್ಯಾಚರಣೆಯ ಮೂಲಕ ಶತ್ರುವಿನ ಪಿತೂರಿಯನ್ನು ಪರಿಣಾಮಕಾರಿಯಾಗಿ ವಿಫಲಗೊಳಿಸಲಾಯಿತು’’ ಎಂದು ಸೇನೆ ತಿಳಿಸಿದೆ.
ಇರಾನ್ ಯುದ್ಧಕ್ಕೆ ಶೀಘ್ರದಲ್ಲೇ ಬ್ರೇಕ್ ಹಾಕಲು ಜಾಗತಿಕ ಮಟ್ಟದಲ್ಲಿ ಶುರುವಾಯ್ತು ಒತ್ತಡ | Operation Roaring Lion
ಆಧುನಿಕ ಕಾಲದಲ್ಲಿ ಯುದ್ಧಗಳನ್ನು ಮಾಡಬಾರದು, ಶಾಂತಿಯುತ ಮಾರ್ಗವೇ ಪರಿಹಾರ ಎಂದು ಭಾರತ ಪದೇ ಪದೇ ಪ್ರತಿಪಾದನೆ ಮಾಡುತ್ತಾ ಬರುತ್ತಿದೆ. ಅದರಲ್ಲೂ ರಷ್ಯಾ ಮತ್ತು ಉಕ್ರೇನ್ ಮಧ್ಯೆ ಯುದ್ಧ ಶುರುವಾದ ಸಮಯದಲ್ಲಿ ಭಾರತದ ಪ್ರಧಾನಿ ಮೋದಿ ಅವರು ಹೇಳಿದ್ದ ಮಾತುಗಳು ಇಡೀ ಜಗತ್ತಿಗೆ ಮಾದರಿ ಆಗಿದ್ದವು. ನೇರವಾಗಿ ರಷ್ಯಾಗೆ ಕೂಡ ಭಾರತ ಇದೇ ಮಾತನ್ನು ಹೇಳಿ, ಉಕ್ರೇನ್ನ ವಿರುದ್ಧ
ಕಾಕುಬಾಳ | ಅಕ್ರಮ ಪಡಿತರ ಅಕ್ಕಿ ಜಪ್ತಿ
ವಿಜಯನಗರ, ಮಾ. 4: ತಾಲೂಕಿನ ಕಾಕುಬಾಳ ಗ್ರಾಮದ ಜೋಳದ ರಸ್ತೆ ಕರಿಯಮ್ಮನ ಗುಡಿ ಸಮೀಪ ಮನೆಯೊಂದರ ಮುಂದೆ ಅಕ್ರಮವಾಗಿ ಸಂಗ್ರಹಿಸಿಡಲಾಗಿದ್ದ ಪಡಿತರ ಅಕ್ಕಿಯನ್ನು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿ ಜಪ್ತಿ ಮಾಡಿದ್ದಾರೆ. ಯಾವುದೇ ಪರವಾನಗಿ ಇಲ್ಲದೆ ಅನಾಧಿಕೃತವಾಗಿ ಸಂಗ್ರಹಿಸಿಟ್ಟಿದ್ದ ಸುಮಾರು 2.10 ಲಕ್ಷ ರೂ. ಮೌಲ್ಯದ 60.80 ಕ್ವಿಂಟಲ್ ಪಡಿತರ ಅಕ್ಕಿಯನ್ನು ಜಪ್ತಿ ಮಾಡಲಾಗಿದೆ. ಈ ಕುರಿತು ಹೊಸಪೇಟೆ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಪಡಿತರ ಅಕ್ಕಿಯ ಅಕ್ರಮ ದಾಸ್ತಾನು ಮತ್ತು ಸಾಗಣೆ ಕಂಡುಬಂದಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು. ಸಾರ್ವಜನಿಕರು ಇಂತಹ ಕಾನೂನುಬಾಹಿರ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಬೇಕು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶಕ ರಿಯಾಜ್ ತಿಳಿಸಿದ್ದಾರೆ.
Chikkamagaluru | ಬಾಬಾ ಬುಡಾನ್ ದರ್ಗಾದಲ್ಲಿ ಉರೂಸ್ಗೆ ಚಾಲನೆ
ಶಾಖಾದ್ರಿ ನೇತೃತ್ವದಲ್ಲಿ ಆಚರಣೆಗೆ ಅವಕಾಶ ನೀಡದಿದ್ದಕ್ಕೆ ಅಸಮಾಧಾನ
ರಾಯಚೂರು | ಮಾ.5ರಿಂದ ನವೋದಯ ಶಿಕ್ಷಣ ಸಂಸ್ಥೆಯಿಂದ ರಿಗೆಲ್-26 ವಾರ್ಷಿಕೋತ್ಸವ
ರಾಯಚೂರು: ನಗರದ ನವೋದಯ ಶಿಕ್ಷಣ ಸಂಸ್ಥೆಯಿಂದ ಮಾ.5ರಿಂದ 7ರ ವರೆಗೆ ರಿಗೆಲ್-26 ವಾರ್ಷಿಕೋತ್ಸವ ಹಾಗೂ ಇಫೋರಿಯಾ ಸಾಂಸ್ಕೃತಿಕ ಉತ್ಸವ ಆಯೋಜಿಸಲಾಗಿದೆ ಎಂದು ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಎಸ್.ಆರ್.ರೆಡ್ಡಿ ಹೇಳಿದರು. ಬುಧವಾರ ನವೋದಯ ಶಿಕ್ಷಣ ಸಂಸ್ಥೆಯ ಗ್ರಂಥಾಲಯ ಸಭಾಂಗಣದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾ.5ರ ಸಂಜೆ 6.30ಕ್ಕೆ ರಿಗೆಲ್ ಕಾರ್ಯಕ್ರಮವು ಕ್ಯಾಂಪಸ್ನ ಫುಡ್ ಕೋರ್ಟ್ ಬಳಿಯ ಬಯಲು ಮೈದಾನದಲ್ಲಿ ನಡೆಯಲಿದ್ದು, ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಡಾ.ಎಂ.ಹನುಮಂತಪ್ಪ ಅವರು ಉದ್ಘಾಟಿಸಲಿದ್ದಾರೆ. ಮಾ.6ರ ಬೆಳಿಗ್ಗೆ 10 ಗಂಟೆಗೆ ಸಂಸ್ಥೆಯ ಮುಖ್ಯ ಸಭಾಂಗಣದಲ್ಲಿ ವೈದ್ಯಕೀಯ, ದಂತ ಹಾಗೂ ಫಿಸಿಯೋಥೆರಪಿಸ್ಟ್ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಕಾರ್ಯಕ್ರಮ ನಡೆಯಲಿದ್ದು, ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ಸಂಸ್ಥೆಯ ಕುಲಪತಿ ಡಾ.ಭಗವಾನ್.ಬಿ.ಸಿ ಆಗಮಿಸಲಿದ್ದಾರೆ. ಸಂಜೆ 6ಕ್ಕೆ ಎಫೋರಿಯಾ ಸಾಂಸ್ಕೃತಿಕ ಉತ್ಸವ ನಡೆಯಲಿದ್ದು, ಮಹಾನಗರ ಪಾಲಿಕೆ ಆಯುಕ್ತ ಜುಬಿನ್ ಮಹೋಪಾತ್ರ ಆಗಮಿಸಲಿದ್ದಾರೆ ಎಂದು ಹೇಳಿದರು. ಮಾ.7ರಂದು 10.45ಕ್ಕೆ ಫಾರ್ಮರ್ಸಿ, ನರ್ಸಿಂಗ್, ಅಲೈಡ್ ವೈದ್ಯಕೀಯ ವಿಜ್ಞಾನಗಳ ಶಿಕ್ಷಣ ಹಾಗೂ ತಂತ್ರಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ಪದವಿಯನ್ನು ಧಾರವಾಡ ಭಾರತೀಯ ತಂತ್ರಜ್ಞಾನ ಸಂಸ್ಥೆ(ಐಐಟಿ)ಯ ನಿರ್ದೇಶಕ ಪ್ರೊ.ವೆಂಕಪ್ಪಯ್ಯ.ಆರ್.ದೇಸಾಯಿ ಅವರು ಪ್ರದಾನ ಮಾಡಲಿದ್ದಾರೆ. ಸಂಜೆ 7 ಗಂಟೆಗೆ ಬೆಂಗಳೂರಿನ ಸೆಹೆರ್ ಬ್ಯಾಂಡ್ ವತಿಯಿಂದ ಸಂಗೀತ ಸಂಜೆ ಕಾರ್ಯಕ್ರಮ ಜರುಗಲಿದೆ ಎಂದರು. ಈ ಸಂದರ್ಭದಲ್ಲಿ ಸಂಸ್ಥೆಯ ಪ್ರಮುಖರು, ಕಾಲೇಜಿನ ಭೋದಕ, ಬೋದಕೇತರ ಸಿಬ್ಬಂದಿ ಉಪಸ್ಥಿತರಿದ್ದರು.
ಇರಾನ್ ನ ಸರ್ವೋಚ್ಚ ನಾಯಕ ಆಯತುಲ್ಲಾ ಅಲಿ ಖಾಮಿನೈ ಹತ್ಯೆ; ಭಾರತದ ಮೌನವೇಕೆ?
ಭಾರತದ ಮೌನದ ಹಿಂದಿನ ಐದು ಭೌಗೋಳಿಕ ರಾಜಕೀಯ ಅಂಶಗಳು
ರಷ್ಯಾ ಮತ್ತು ಉಕ್ರೇನ್ ಬಡಿದಾಟ, ಇರಾನ್ ತಲೆನೋವಿನ ಜೊತೆ ಮತ್ತೊಂದು ಸಂಕಷ್ಟ | Ukraine And Russia
ಇರಾನ್ ವಿರುದ್ಧ ಅಮೆರಿಕ ಹಾಗೂ ಇಸ್ರೇಲ್ ದಾಳಿ ಮಾಡುತ್ತಿರುವ ಸಮಯದಲ್ಲಿ ಮಧ್ಯಪ್ರಾಚ್ಯದಲ್ಲಿ ಸೂಕ್ಷ್ಮ ವಾತಾವರಣ ನಿರ್ಮಾಣ ಆಗಿದೆ. ಇನ್ನೊಂದು ಕಡೆ ರಷ್ಯಾ ಮತ್ತು ಉಕ್ರೇನ್ ಬಡಿದಾಟ ಈಗ ಯುರೋಪ್ ದೇಶಗಳ ನಿದ್ದೆ ಹಾರಿ ಹೋಗುವಂತೆ ಮಾಡಿದೆ. ಇಂತಹ ವಾತಾವರಣದಲ್ಲಿ ಈಗ ದಿಢೀರ್ ಅಂತಾ ಉಕ್ರೇನ್ ವಿರುದ್ಧ ರಷ್ಯಾ ಭಾರಿ ಗಂಭೀರ ಆರೋಪ ಮಾಡಿದೆ. ಉಕ್ರೇನ್ ನೌಕಾಪಡೆ ಡ್ರೋನ್ಗಳು
Chikkamagaluru | ಇರಾನ್ನಲ್ಲಿ ನಾಪತ್ತೆಯಾಗಿದ್ದ ಕೊಪ್ಪ ಮೂಲದ ಯುವಕ ಪತ್ತೆ
ಚಿಕ್ಕಮಗಳೂರು, ಫೆ.4: ಇರಾನ್ ದೇಶದ ಮರ್ಚಂಟ್ ನೇವಿಯಲ್ಲಿ ತರಬೇತಿಗೆ ತೆರಳಿದ್ದ ಜಿಲ್ಲೆಯ ವಿದ್ಯಾರ್ಥಿ ನಿಶ್ಚಿತ್ ಸುರಕ್ಷಿತವಾಗಿದ್ದಾನೆ ಎಂದು ತಿಳಿದುಬಂದಿದೆ. ಇರಾನ್ ಯುದ್ಧ ಆರಂಭಗೊಂಡ ಬಳಿಕ ಆತ ಸಂಪರ್ಕಕ್ಕೆ ಸಿಗದೆ ನಾಪತ್ತೆಯಾಗಿದ್ದ ಹಿನ್ನೆಲೆಯಲ್ಲಿ ಆತನ ಪೋಷಕರು ಆತಂಕಕ್ಕೊಳಗಾಗಿ ಸರಕಾರದ ನೆರವು ಕೋರಿದ್ದರು. ಈ ವಿಚಾರವನ್ನು ಮಾಧ್ಯಮಗಳ ಮೂಲಕ ತಿಳಿದು ವಿದ್ಯಾರ್ಥಿಯ ಪತ್ತೆಗೆ ಕಾರ್ಯ ಪ್ರವೃತ್ತರಾದ ಅನಿವಾಸಿ ಭಾರತೀಯ ಸಮಿತಿಯ ಮಾಜಿ ಉಪಾಧ್ಯಕ್ಷೆ ಡಾ.ಆರತಿ ಕೃಷ್ಣ ಅವರು ಇರಾನ್ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಸಂಪರ್ಕಿಸಿದ್ದು, ವಿದ್ಯಾರ್ಥಿ ಸುರಕ್ಷಿತವಾಗಿರುವುದನ್ನು ಖಚಿತ ಪಡಿಸಿದ್ದಾರೆ. ಜಿಲ್ಲೆಯ ಕೊಪ್ಪ ತಾಲೂಕಿನ ಗಡಿಕಲ್ಲು ಗ್ರಾಮದ ನಿವಾಸಿ ಮಹೇಶ್ ಎಂಬವರ ಮಗ ನಿಶ್ಚಿತ್ ಇರಾನ್ನಲ್ಲಿ ನಾಪತ್ತೆಯಾಗಿದ್ದ ಯುವಕನಾಗಿದ್ದು, ಈತ ಕಳೆದ 5 ತಿಂಗಳ ಹಿಂದೆ ಇರಾನ್ನ ಮರ್ಚಂಟ್ ನೇವಿಯಲ್ಲಿ 5 ತಿಂಗಳ ತರಬೇತಿಗೆ ತೆರಳಿದ್ದ. ಸದ್ಯ ಇಸ್ರೇಲ್, ಅಮೆರಿಕ ಹಾಗೂ ಇರಾನ್ ನಡುವೆ ಯುದ್ಧ ಆರಂಭಗೊಂಡಿದ್ದು, ಯುದ್ಧ ಆರಂಭಕ್ಕೂ ಮುನ್ನ ಪೋಷಕರ ಸಂಪರ್ಕದಲ್ಲಿದ್ದ ನಿಶ್ಚಿತ್ ಯುದ್ಧ ಆರಂಭವಾದ ಬಳಿಕ ಪೋಷಕರ ಸಂಪರ್ಕಕ್ಕೆ ಬಂದಿರಲಿಲ್ಲ. ಈ ಹಿನ್ನೆಲೆಯಲ್ಲಿ ಕೊಪ್ಪದಲ್ಲಿರುವ ಆತನ ಪೋಷಕರು ತೀವ್ರ ಆತಂಕಕ್ಕೊಳಗಾಗಿದ್ದರು. ಅಲ್ಲದೆ ಜಿಲ್ಲಾಡಳಿತ, ರಾಜ್ಯ ಸರಕಾರ ಹಾಗೂ ಕೇಂದ್ರ ಸರಕಾರ ನಿಶ್ಚಿತ್ನನ್ನು ಶೀಘ್ರ ಪತ್ತೆ ಹಚ್ಚಿ ಸ್ವದೇಶಕ್ಕೆ ಕರೆ ತರಬೇಕು ಎಂದು ಮನವಿ ಮಾಡಿದ್ದರು. ಸದ್ಯ ನಿಶ್ಚಿತ್ ಇರಾನ್ನಲ್ಲಿ ಸುರಕ್ಷಿತವಾಗಿದ್ದಾನೆಂಬ ಖಚಿತ ಮಾಹಿತಿ ಲಭ್ಯವಾಗಿದ್ದು, ಈ ವಿಚಾರ ತಿಳಿದ ನಿಶ್ಷಿತ್ ಪೋಷಕರು ನಿಟ್ಟುಸಿರುವ ಬಿಟ್ಟಿದ್ದಾರೆ.
ಅಮೆರಿಕ ನೌಕಾಪಡೆ ತನ್ನ ಬಂದರು ಬಳಸುತ್ತಿದೆ ಎಂಬ ಆರೋಪ ತಳ್ಳಿಹಾಕಿದ ಭಾರತ
ಹೊಸದಿಲ್ಲಿ, ಮಾ.4: ಇರಾನ್ ವಿರುದ್ಧ ನಡೆಯುತ್ತಿರುವ ಯುದ್ಧದ ನಡುವೆ ಅಮೆರಿಕ ನೌಕಾಪಡೆ ತನ್ನ ಹಡಗುಗಳಿಗೆ ಭಾರತೀಯ ಬಂದರುಗಳನ್ನು ಬಳಸಲು ಅವಕಾಶ ನೀಡಲಾಗಿದೆ ಎಂಬ ಆರೋಪವನ್ನು ಭಾರತ ತಳ್ಳಿಹಾಕಿದೆ ಎಂದು Aljazeera ವರದಿ ಮಾಡಿದೆ. ಈ ಕುರಿತು ಸ್ಪಷ್ಟನೆ ನೀಡಿರುವ ವಿದೇಶಾಂಗ ವ್ಯವಹಾರಗಳ ಸಚಿವಾಲಯ, ಅಮೆರಿಕ ಮೂಲದ ಚಾನೆಲ್ ‘ಒನ್ ಅಮೆರಿಕಾ ನ್ಯೂಸ್ ನೆಟ್ವರ್ಕ್’ (ಒಎಎನ್) ನಲ್ಲಿ ಪ್ರಸಾರವಾಗಿರುವ ವರದಿ ಸಂಪೂರ್ಣವಾಗಿ ಸುಳ್ಳು ಹಾಗೂ ಆಧಾರರಹಿತ ಎಂದು ಹೇಳಿದೆ. ಸಂಘರ್ಷದ ಮಧ್ಯೆ ಅಮೆರಿಕದ ನೌಕಾ ಹಡಗುಗಳು ಭಾರತೀಯ ಬಂದರುಗಳನ್ನು ಬಳಸುತ್ತಿರಬಹುದು ಎಂದು ಒಎಎನ್ ವರದಿಯಲ್ಲಿ ಹೇಳಲಾಗಿತ್ತು. ‘ಭಾರತದ ಬಂದರುಗಳನ್ನು ಅಮೆರಿಕ ನೌಕಾಪಡೆ ಬಳಸುತ್ತಿದೆ’ ಎಂಬ ಅಮೆರಿಕ ಮೂಲದ ಚಾನೆಲ್ ಒಎಎನ್ ನಲ್ಲಿ ಮಾಡಲಾಗುತ್ತಿರುವ ಹಕ್ಕುಗಳು ಸುಳ್ಳು. ಇಂತಹ ಆಧಾರರಹಿತ ಹಾಗೂ ಕಟ್ಟುಕಥೆಗಳಂತಿರುವ ಆರೋಪಗಳ ಬಗ್ಗೆ ಎಚ್ಚರಿಕೆಯಿಂದಿರಬೇಕು ಎಂದು ವಿದೇಶಾಂಗ ಸಚಿವಾಲಯ ಹೇಳಿದೆ. ಭಾರತ ಆಯೋಜಿಸಿದ್ದ ಮಿಲಿಟರಿ ಕವಾಯತು ಮುಗಿಸಿ ಹೊರಡುವ ವೇಳೆ ಶ್ರೀಲಂಕಾ ಸಮೀಪ ಇರಾನಿನ ಯುದ್ಧನೌಕೆಯ ಮೇಲೆ ಅಮೆರಿಕದ ಜಲಾಂತರ್ಗಾಮಿ ದಾಳಿ ನಡೆದಿರುವ ಕುರಿತು ಹೆಚ್ಚುತ್ತಿರುವ ಪರಿಶೀಲನೆಯ ನಡುವೆಯೇ ಭಾರತದಿಂದ ಈ ಸ್ಪಷ್ಟನೆ ನೀಡಲಾಗಿದೆ.
ಸಮಸ್ತ ಪಬ್ಲಿಕ್ ಪರೀಕ್ಷೆ: 99% ವಿದ್ಯಾರ್ಥಿಗಳು ಉತ್ತೀರ್ಣ
ಮುಂದೆ ಪಬ್ಲಿಕ್ ಪರೀಕ್ಷೆ ತರಗತಿಗಳಲ್ಲಿ ಬದಲಾವಣೆ
ಇರಾನ್ ಮೇಲೆ ಅಮೆರಿಕ-ಇಸ್ರೇಲ್ ಜಂಟಿ ದಾಳಿ | ಭಾರತದ ಮೌನ ಅರ್ಥವಾಗುತ್ತಿಲ್ಲ: ಮೆಹಬೂಬಾ ಮುಫ್ತಿ
ಶ್ರೀನಗರ, ಮಾ. 4: ಇರಾನ್ ವಿರುದ್ಧ ಅಮೆರಿಕ-ಇಸ್ರೇಲ್ ನಡೆಸುತ್ತಿರುವ ಆಕ್ರಮಣಕ್ಕೆ ಸಂಬಂಧಿಸಿ ಭಾರತದ ಮೌನ ತನಗೆ ಅರ್ಥವಾಗುತ್ತಿಲ್ಲ ಎಂದು ಪಿಡಿಪಿ ಪಕ್ಷದ ಅಧ್ಯಕ್ಷೆ ಮೆಹಬೂಬಾ ಮುಫ್ತಿ ಬುಧವಾರ ಹೇಳಿದ್ದಾರೆ. ಪರಮಾಣು ಪರೀಕ್ಷೆಗಳನ್ನು ನಡೆಸಿರುವುದಕ್ಕಾಗಿ ಭಾರತದ ವಿರುದ್ಧ ನಿರ್ಬಂಧಗಳು ಹೇರಲ್ಪಟ್ಟಾಗ, ಅದರ ಪರವಾಗಿ ನಿಂತದ್ದು ಇರಾನ್ ಮಾತ್ರ ಎಂದು ಅವರು ಹೇಳಿದ್ದಾರೆ. ‘‘ನಮ್ಮದು ಪ್ರಜಾಸತ್ತಾತ್ಮಕ ದೇಶವೇ ಎಂಬ ಅನುಮಾನ ಉಂಟಾಗುತ್ತಿದೆ. ಇರಾನ್ ಮೇಲಿನ ದಾಳಿಯನ್ನು ನಮ್ಮ ದೇಶದ ನಾಯಕತ್ವ ಖಂಡಿಸಿಲ್ಲ ಅಥವಾ ಇರಾನ್ ಜನತೆಗೆ ಸಂತಾಪವನ್ನೂ ವ್ಯಕ್ತಪಡಿಸಿಲ್ಲ. ಜಮ್ಮು ಮತ್ತು ಕಾಶ್ಮೀರದ ನಾಯಕತ್ವವೂ ಇದನ್ನು ಮಾಡಿಲ್ಲ’’ ಎಂದು ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಮುಖ್ಯಮಂತ್ರಿ ಹೇಳಿದರು. ಹಿಂದೆ, ಭಾರತವು ಇರಾನ್ನೊಂದಿಗೆ ಅತ್ಯಂತ ಗಾಢ ಸಂಬಂಧವನ್ನು ಹೊಂದಿತ್ತು ಎಂದು ಅವರು ನುಡಿದರು. ‘‘ಕಾಶ್ಮೀರ ವಿಷಯದಲ್ಲಿ, ಇರಾನನ್ನು ಹೊರತುಪಡಿಸಿ ಪ್ರತಿಯೊಂದು ಮುಸ್ಲಿಮ್ ದೇಶ ಪಾಕಿಸ್ತಾನಕ್ಕೆ ಬೆಂಬಲ ನೀಡುತ್ತಿತ್ತು. ಆದರೆ, ಇರಾನ್ ಭಾರತದ ಪರವಾಗಿ ನಿಂತಿತ್ತು. ಭಾರತದ ವಿರುದ್ಧ ನಿರ್ಬಂಧಗಳು ಹೇರಲ್ಪಟ್ಟಾಗ ನಮಗೆ ತೈಲ ನೀಡಿದ ಏಕೈಕ ದೇಶ ಇರಾನ್ ಆಗಿತ್ತು. ಅವರು ಮೊದಲು ಹಣವನ್ನೂ ತೆಗೆದುಕೊಳ್ಳಲಿಲ್ಲ, ನಂತರ ಹಣ ತೆಗೆದುಕೊಂಡರು. ಆದರೆ, ದುರದೃಷ್ಟವಶಾತ್, ಈ ದೇಶದ ನಾಯಕತ್ವವು ಇರಾನ್ ದೇಶದ ಮೇಲಿನ ಆಕ್ರಮಣವನ್ನು ಖಂಡಿಸಲಿಲ್ಲ, ಇರಾನ್ ಜನತೆಗೆ ಸಾಂತ್ವನವನ್ನೂ ಹೇಳಲಿಲ್ಲ’’ ಎಂದು ಮೆಹಬೂಬಾ ಹೇಳಿದರು.
ಬಿಹಾರ | ಶೌಚ ಗುಂಡಿ ಶುಚಿಗೊಳಿಸುತ್ತಿದ್ದಾಗ ವಿಷಾನಿಲ ಸೇವಿಸಿ ಒಂದೇ ಕುಟುಂಬದ ನಾಲ್ವರು ಮೃತ್ಯು
ಪಾಟ್ನಾ, ಮಾ. 4: ಬಿಹಾರದ ಸೀತಾಮಡಿ ಜಿಲ್ಲೆಯಲ್ಲಿ ಮನೆಯ ಶೌಚಗುಂಡಿಯನ್ನು ಸ್ವಚ್ಛಗೊಳಿಸುತ್ತಿದ್ದ ವೇಳೆ ವಿಷ ಗಾಳಿಯನ್ನು ಸೇವಿಸಿ ಒಂದೇ ಕುಟುಂಬದ ನಾಲ್ವರು ಮೃತಪಟ್ಟಿದ್ದಾರೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ. ಘಟನೆಯು ಸೀತಾಮಡಿ ಜಿಲ್ಲೆಯ ಕುರ್ಹರ್ ಗ್ರಾಮದಲ್ಲಿ ಮಂಗಳವಾರ ಸಂಜೆ ಸಂಭವಿಸಿದೆ. ಮೃತರನ್ನು ರಾಜೀವ್ ಸಾಹ್ನಿ, ಕೃಷ್ಣ ಕುಮಾರ್, ರವೀಂದ್ರ ಸಾಹ್ನಿ ಮತ್ತು ವಿನಯ ಸಾಹ್ನಿ ಎಂಬುದಾಗಿ ಗುರುತಿಸಲಾಗಿದೆ. ‘‘ಶೌಚಗುಂಡಿಯಿಂದ ಹೊರಸೂಸಿದ ವಿಷಾನಿಲವನ್ನು ಸೇವಿಸಿ ಅವರು ಪ್ರಜ್ಞೆ ಕಳೆದುಕೊಂಡರು ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಸ್ಥಳೀಯರು ಅವರನ್ನು ಗುಂಡಿಯಿಂದ ಹೊರಗೆಳೆದು ಆಸ್ಪತ್ರೆಗೆ ಕರೆದೊಯ್ದರು. ಎಲ್ಲಾ ನಾಲ್ವರು ಮೃತಪಟ್ಟಿದ್ದಾರೆ ಎಂಬುದಾಗಿ ಆಸ್ಪತ್ರೆಯಲ್ಲಿ ವೈದ್ಯರು ಘೋಷಿಸಿದರು’’ ಎಂದು ಬೋಖ್ರ ಪೊಲೀಸ್ ಠಾಣೆಯ ಉಸ್ತುವಾರಿ ಅಧಿಕಾರಿ ಸುರೇಂದ್ರ ಕುಮಾರ್ ಪಿಟಿಐಗೆ ತಿಳಿಸಿದರು.
ಟಿ20 ವಿಶ್ವಕಪ್ ಸೋಲಿನ ಬಳಿಕ ಕಠಿಣ ನಿರ್ಧಾರ ತಳೆದ ಪಾಕ್: ಬಾಂಗ್ಲಾ ಸರಣಿಗೆ ಬಾಬರ್ ಆಝಂ ಸೇರಿ ಐವರಿಗೆ ಕೊಕ್!
ಒಂದು ಮಹತ್ವದ ಟೂರ್ನಿ ಬಳಿಕ ಪಾಕಿಸ್ತಾನ ತಂಡದಲ್ಲಿ ಆಮೂಲಾಗ್ರ ಬದಲಾವಣೆಗಳಾಗುವುದೇನೂ ಹೊಸತಲ್ಲ. ಇದೀಗ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನ ತಂಡದ ಕಳಪೆ ಪ್ರದರ್ಶನದ ಬಳಿಕ ನಿರೀಕ್ಷೆಯಂತೆ ಹಲವು ಆಟಗಾರರಿಗೆ ವಿರುದ್ಧ ಪಾಕ್ ಕ್ರಿಕೆಟ್ ಮಂಡಳಿ(PCB) ಬರೆ ಎಳೆದಿದೆ. ಮಾಜಿ ನಾಯಕ ಬಾಬರ್ ಆಝಂ ಸೇರಿದಂತೆ ಒಟ್ಟು ಐವರನ್ನು ಮುಂಬರುವ ಬಾಂಗ್ಲಾದೇಶ ವಿರುದ್ಧ ಏಕದಿನ ಸರಣಿಯಿಂದ ಹೊರಗಟ್ಟಿದೆ. ಆರಂಭಿಕ ಆಟಗಾರ ಸೈಯಮ್ ಅಯೂಬ್, ಆಲ್ರೌಂಡರ್ ಗಳಾದ ಶಡಬ್ ಖಾನ್, ಮೊಹಮ್ಮದ್ ನವಾಝ್, ವೇಗದ ಬೌಲರ್ ಗಳಾದ ನಸೀಮ್ ಶಾ ತಂಡದಿಂದ ಕೈಬಿಡಲಾಗಿರುವ ಇತರ ನಾಲ್ವರು ಆಟಗಾರರು. ಬಾಂಗ್ಲಾದೇಶದ ಡಾಕಾದಲ್ಲಿ ಮಾರ್ಚ್ 11, 13 ಮತ್ತು 15ರಂದು ಮೂರು ಏರದಿನ ಪಂದ್ಯಗಳನ್ನು ಆಡಲಿದೆ. ಅವರು ಈ ತಂಡದ ನಾಯಕರಾಗಿದ್ದಾರೆ. , ಹ್ಯಾರಿಸ್ ರೌಫ್ ಮತ್ತು ಸಲ್ಮಾನ್ ಅಲಿ ಆಘಾ ತಂಡದಲ್ಲಿರುವ ಇತರ ಮೂವರು ಹಿರಿಯ ಆಟಗಾರರಾಗಿದ್ದಾರೆ. ಬಾಬರ್ ಆಝಮ್ ಗೆ ಕೊಕ್ ನೀಡಲಾಗಿದೆಯೇ ಅಥವಾ ವಿಶ್ರಾಂತಿ ನೀಡಲಾಗಿದೆಯೇ ಎಂಬ ಬಗ್ಗೆ ಇನ್ನೂ ಪಿಸಿಬಿ ಖಚಿತಪಡಿಸಿಲ್ಲ. ಇದೀಗ ಬಹುತೇಕ ಹೊಸಬರಿಗೆ ಅವಕಾಶ ನೀಡುವುದು ಪಾಕಿಸ್ತಾನ ತಂಡದ ಪುನರ್ ನಿರ್ಮಾಣ ಮತ್ತು ಭವಿಷ್ಯದ ದೃಷ್ಟಿಯಿಂದ ಈ ಕಠಿಣ ನಿರ್ಧಾರ ಅನಿವಾರ್ಯ ಎಂದು ಪಿಸಿಬಿ ತಿಳಿಸಿದೆ. ಇನ್ನು ಸರಣಿಗೆ ಈವರೆಗೂ ಅಂತಾರಾಷ್ಟ್ರೀಯ ಏಕದಿನ ಪಂದ್ಯವನ್ನು ಆಡದ ಆರು ಮಂದಿಗೆ ಅವಕಾಶ ನೀಡಲಾಗಿದೆ. ಅಬ್ದುಲ್ ಸಮದ್, ಮಾಝ್ ಸದಾಕತ್, ಮೊಹಮ್ಮದ್ ಗಾಝಿ ಗೋರಿ, ಸಾದ್ ಮಸೂದ್, ಸಾಹಿಬ್ ಝಾದಾ ಫರ್ಹಾನ್ ಮತ್ತು ಶಾಮಿಲ್ ಹುಸೇನ್ ಅವರನ್ನು ಹೊಸದಾಗಿ ಆಯ್ಕೆ ಮಾಡಿದೆ. ಈ ಆರು ಆಟಗಾರರಲ್ಲಿ ಸಮದ್, ಸದಾಕತ್, ಮಸೂದ್ ಮತ್ತು ಹುಸೇನ್ ಇತ್ತೀಚೆಗೆ ಅಬುಧಾಬಿಯಲ್ಲಿ ಇಂಗ್ಲೆಂಡ್ ಲಯನ್ಸ್ ವಿರುದ್ಧ ಆಡಿದ ಪಾಕಿಸ್ತಾನ್ ಶಾಹೀನ್ಸ್ ತಂಡದ ಭಾಗವಾಗಿದ್ದರು.ಟಿ20 ವಿಶ್ವಕಪ್ ಸೆಮಿಫೈನಲ್ಗೆ ಅರ್ಹತೆ ಪಡೆಯಲು ವಿಫಲವಾದ ನಂತರ ವಿಧಿಸಿದೆ ಎಂದು ವರದಿಯಾಗಿತ್ತು. ಆಟಗಾರರನ್ನು ಈವರೆಗೂ ಬಹಳ ಚೆನ್ನಾಗಿ ನಡೆಸಿಕೊಂಡಿದ್ದೇವೆ. ಇನ್ನು ಮುಂದೆ ಏನಿದ್ದರೂ ಉತ್ತಮ ಪ್ರದರ್ಶನ ನೀಡಿದಲ್ಲಿ ಮಾತ್ರ ಉತ್ತಮ ಸಂಭಾವನೆ ಪಡೆಯುತ್ತಾರೆ ಎಂದು ಪಿಸಿಬಿ ಖಡಕ್ ಆಗಿ ಹೇಳಿದೆ. ಪಾಕಿಸ್ತಾನ ತಂಡ ಶಾಹೀನ್ ಶಾ ಅಫ್ರಿದಿ (ನಾಯಕ), ಅಬ್ದುಲ್ ಸಮದ್, ಅಬ್ರಾರ್ ಅಹ್ಮದ್, ಫಹೀಮ್ ಅಶ್ರಫ್, ಫೈಸಲ್ ಅಕ್ರಮ್, ಹ್ಯಾರಿಸ್ ರೌಫ್, ಹುಸೇನ್ ತಲಾತ್, ಮಾಜ್ ಸದಾಕತ್, ಮೊಹಮ್ಮದ್ ರಿಜ್ವಾನ್ (ವಿಕೆಟ್ ಕೀಪರ್), ಮೊಹಮ್ಮದ್ ವಾಸಿಂ ಜೂನಿಯರ್, ಮುಹಮ್ಮದ್ ಘಾಜಿ ಘೋರಿ (ವಿಕೆಟ್ ಕೀಪರ್), ಸಾದ್ ಮಸೂದ್, ಸಾಹಿಬ್ಜಾದಾ ಫರ್ಹಾನ್, ಸಲ್ಮಾನ್ ಅಲಿ ಆಘಾ ಮತ್ತು ಶಮಿಲ್ ಹುಸೇನ್.
ಹಾರ್ಮುಜ್ ಜಲಸಂಧಿಯ ಮೂಲಕ ಚೀನಾದ ಹಡಗುಗಳಿಗೆ ಮಾತ್ರ ಅವಕಾಶ: ಇರಾನ್
ಟೆಹ್ರಾನ್, ಮಾ.4: ಮಧ್ಯಪ್ರಾಚ್ಯ ಯುದ್ದ ಪ್ರಾರಂಭಗೊಂಡಂದಿನಿಂದ ಇರಾನ್ ವಿಷಯದಲ್ಲಿ ಚೀನಾವು ತಳೆದಿರುವ ನಿಲುವಿಗೆ ಕೃತಜ್ಞತೆಯ ಅಭಿವ್ಯಕ್ತಿಯಾಗಿ ಹಾರ್ಮುಜ್ ಜಲಸಂಧಿಯ ಮೂಲಕ ಚೀನಾದ ಹಡಗುಗಳಿಗೆ ಮಾತ್ರ ಹಾದುಹೋಗಲು ಅವಕಾಶ ನೀಡುವುದಾಗಿ ಇರಾನ್ ಹೇಳಿದೆ ಎಂದು ಮೂಲಗಳು ಹೇಳಿವೆ. ಹಾರ್ಮುಜ್ ಜಲಸಂಧಿಯು ಯುಎಇ, ಖತರ್ನಂತಹ ದೇಶಗಳಿಗೆ ಮುಕ್ತ ಸಮುದ್ರಕ್ಕೆ ಪ್ರವೇಶವನ್ನು ಒದಗಿಸುತ್ತದೆ. ಜಾಗತಿಕ ತೈಲ ಪೂರೈಕೆಯ ಸುಮಾರು 20%ದಷ್ಟು ಈ ಜಲಸಂಧಿಯ ಮೂಲಕವಾಗಿ ಭಾರತ, ಚೀನಾದಂತಹ ಏಶ್ಯದ ಮಾರುಕಟ್ಟೆಗೆ ಮುಂದುವರಿಯುತ್ತದೆ. ಇರಾನ್ ಈ ಮಾರ್ಗವನ್ನು ನಿರ್ಬಂಧಿಸುವುದರೊಂದಿಗೆ ಜಾಗತಿಕ ಪೂರೈಕೆ ಸರಪಳಿಯಲ್ಲಿ ಭಾರೀ ಅಡಚಣೆಯನ್ನು ನಿರೀಕ್ಷಿಸಲಾಗಿದೆ.
ಶತ್ರುಗಳ ಮಿತ್ರರನ್ನೂ ಶತ್ರುಗಳೆಂದೇ ಪರಿಗಣಿಸಲಾಗುವುದು: ಇರಾನ್
ಟೆಹ್ರಾನ್, ಮಾ.4: ಇರಾನ್ ರಾಷ್ಟ್ರವನ್ನು ಗುರಿಯಾಗಿಸಿಕೊಂಡಿರುವ ಅಮೆರಿಕ-ಇಸ್ರೇಲ್ ವೈಮಾನಿಕ ದಾಳಿಯ ಅಭಿಯಾನವನ್ನು ಬೆಂಬಲಿಸಿ ಹೇಳಿಕೆ ನೀಡುವವರ ವಿರುದ್ದ ಕಠಿಣ ಕ್ರಮ ಕೈಗೊಳ್ಳುವುದಾಗಿ ಇರಾನ್ನ ನ್ಯಾಯಾಂಗ ಮುಖ್ಯಸ್ಥರು ಬುಧವಾರ ಎಚ್ಚರಿಕೆ ನೀಡಿದ್ದಾರೆ. ಶತ್ರುಗಳೊಂದಿಗೆ ಯಾವುದೇ ರೀತಿಯಲ್ಲಿ ಸಹಕರಿಸುವವರನ್ನು ಶತ್ರು ಎಂದು ಪರಿಗಣಿಸಲಾಗುವುದು. ಅಮೆರಿಕ ಮತ್ತು ಇಸ್ರೇಲ್ ಆಡಳಿತದ ಇಚ್ಚೆಗೆ ಅನುಗುಣವಾಗಿ ವರ್ತಿಸುವವರು ಶತ್ರುಗಳ ಪರವಾಗಿರುತ್ತಾರೆ. ಇವರ ಜೊತೆ ಇಸ್ಲಾಮಿಕ್ ತತ್ವಗಳು ಮತ್ತು ಯುದ್ದದ ಸಮಯಕ್ಕೆ ಅನುಗುಣವಾಗಿ ವ್ಯವಹರಿಸಲಾಗುವುದು' ಎಂದು ಅವರು ಹೇಳಿದ್ದಾರೆ.
ಅಫಜಲಪುರ | ಭೀಮಾ ನದಿ ಸೇತುವೆ ಕೆಳಗೆ ವ್ಯಕ್ತಿಯ ಮೃತದೇಹ ಪತ್ತೆ
ಅಫಜಲಪುರ: ತಾಲೂಕಿನ ಘತ್ತರಗಾ ಗ್ರಾಮದ ಸಮೀಪದ ಭೀಮಾ ನದಿ ಸೇತುವೆ ಕೆಳಭಾಗದಲ್ಲಿ ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆಯಾಗಿರುವ ಘಟನೆ ಬುಧವಾರ ಸಂಜೆ ಬೆಳಕಿಗೆ ಬಂದಿದೆ. ನದಿ ತೀರದಲ್ಲಿ ಮೃತದೇಹ ತೇಲಿಬರುತ್ತಿರುವುದನ್ನು ಗಮನಿಸಿದ ಸ್ಥಳೀಯರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಸ್ಥಳಕ್ಕೆ ಆಗಮಿಸಿದ ಪೊಲೀಸರು ಮೃತದೇಹವನ್ನು ಮೇಲಕ್ಕೆತ್ತಿ ಪರಿಶೀಲನೆ ನಡೆಸಿದ್ದಾರೆ. ಮೃತ ವ್ಯಕ್ತಿಯನ್ನು ಪ್ರಾಥಮಿಕ ಮಾಹಿತಿಯಂತೆ ರಘುನಾಥ ಬಾಳರಾಮ ಪಾಟೀಲ್ (ಅಂದಾಜು ವಯಸ್ಸು 50 ವರ್ಷ) ಎಂದು ಗುರುತಿಸಲಾಗಿದೆ. ಮಹಾರಾಷ್ಟ್ರ ರಾಜ್ಯದ ಜಲಗಾಂವ ಜಿಲ್ಲೆಯ ಅಮ್ಮಣ್ಣಿ ತಾಲೂಕಿನ ಪಾತೊಂಡ್ ಗ್ರಾಮದ ನಿವಾಸಿಯಾಗಿರುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ. ಘಟನೆಗೆ ಸಂಬಂಧಿಸಿದಂತೆ ಅಫಜಲಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮರಣದ ನಿಖರ ಕಾರಣ ತಿಳಿಯಲು ತನಿಖೆ ಮುಂದುವರಿದಿದೆ.
ವಾಟ್ಸ್ಆ್ಯಪ್ ಸಂಭಾಷಣೆಯ ಆಧಾರದಲ್ಲಿ ವಿಚ್ಛೇದನೆ ನೀಡಲು ಸಾಧ್ಯವಿಲ್ಲ : ಬಾಂಬೆ ಹೈಕೋರ್ಟ್
ಮುಂಬೈ, ಮಾ. 4: ಸಂಗಾತಿಗೆ ತನ್ನನ್ನು ಸಮರ್ಥಿಸುವ ಅವಕಾಶವನ್ನು ನೀಡದೆ, ಕೇವಲ ವಾಟ್ಸ್ಆ್ಯಪ್ ಸಂಭಾಷಣೆಯ ಆಧಾರದಲ್ಲಿ, ಕ್ರೌರ್ಯ ನಡೆದಿದೆ ಎಂಬ ನೆಲೆಯಲ್ಲಿ ಓರ್ವ ವ್ಯಕ್ತಿಗೆ ವಿವಾಹ ವಿಚ್ಛೇದನೆ ನೀಡಲು ಸಾಧ್ಯವಿಲ್ಲ ಎಂದು ಬಾಂಬೆ ಹೈಕೋರ್ಟ್ ಹೇಳಿದೆ. ತನ್ನ ಮೇಲೆ ಕ್ರೌರ್ಯ ನಡೆದಿದೆ ಎಂದು ಆರೋಪಿಸಿ ವ್ಯಕ್ತಿಯೊಬ್ಬರು ಪತ್ನಿಯಿಂದ ವಿಚ್ಛೇದನೆ ಕೋರಿ ಸಲ್ಲಿಸಿರುವ ಅರ್ಜಿಯನ್ನು ಪುರಸ್ಕರಿಸಿ ನಾಶಿಕ್ ಜಿಲ್ಲಾ ಕುಟುಂಬ ನ್ಯಾಯಾಲಯ ನೀಡಿದ ಆದೇಶವೊಂದನ್ನು ನ್ಯಾಯಮೂರ್ತಿಗಳಾದ ಭಾರತಿ ಡಾಂಗ್ರೆ ಮತ್ತು ಮಂಜೂಶಾ ದೇಶಪಾಂಡೆ ಅವರನ್ನೊಳಗೊಂಡ ಬಾಂಬೆ ಹೈಕೋರ್ಟ್ನ ನ್ಯಾಯಪೀಠವೊಂದು ಕಳೆದ ವಾರ ರದ್ದುಪಡಿಸಿದೆ. ಕುಟುಂಬ ನ್ಯಾಯಾಲಯದ ಆದೇಶವನ್ನು ಹೈಕೋರ್ಟ್ನಲ್ಲಿ ಪ್ರಶ್ನಿಸಿರುವ ಮಹಿಳೆಯು, ಆ ಆದೇಶವನ್ನು ಏಕಪಕ್ಷೀಯವಾಗಿ ಹಾಗೂ ನನ್ನ ವಾದವನ್ನು ಮಂಡಿಸಲು ಅವಕಾಶ ನೀಡದೆ ಹೊರಡಿಸಲಾಗಿದೆ ಎಂದು ಆರೋಪಿಸಿದ್ದಾರೆ. ಕುಟುಂಬ ನ್ಯಾಯಾಲಯವು, ವ್ಯಕ್ತಿ ಸಲ್ಲಿಸಿದ ವಾಟ್ಸ್ಆ್ಯಪ್ ಸಂಭಾಷಣೆಯ ಆಧಾರದಲ್ಲಿ 2025 ಮೇ ತಿಂಗಳಲ್ಲಿ ವಿಚ್ಛೇದನೆ ನೀಡಿ ಆದೇಶ ಹೊರಡಿಸಿತ್ತು. ಆ ವಾಟ್ಸ್ಆ್ಯಪ್ ಸಂಭಾಷಣೆಯಲ್ಲಿ, ಪತ್ನಿಯು ಪ್ರತ್ಯೇಕವಾಗಿ ಬದುಕುವುದಕ್ಕಾಗಿ ತಮ್ಮ ವಾಸ್ತವ್ಯವನ್ನು ನಾಶಿಕ್ನಿಂದ ಪುಣೆಗೆ ವರ್ಗಾಯಿಸಬೇಕು ಎಂಬುದಾಗಿ ಗಂಡನನ್ನು ಒತ್ತಾಯಿಸುತ್ತಾರೆ ಹಾಗೂ ತನ್ನ ಅತ್ತೆ ಮತ್ತು ನಾದಿನಿಯ ವಿರುದ್ಧ ಅವಮಾನಕರವಾಗಿ ಮಾತನಾಡುತ್ತಾರೆ. ವಾಟ್ಸ್ಆ್ಯಪ್ ಸಂಭಾಷಣೆಯಲ್ಲಿ, ಹೆಂಡತಿಯು ಒತ್ತಡ ತಂತ್ರಗಳನ್ನು ಬಳಸಿದ್ದಾರೆ, ಭಾವನಾತ್ಮಕ ಬ್ಲ್ಯಾಕ್ಮೇಲ್ ಮಾಡಿದ್ದಾರೆ ಎಂಬುದಾಗಿ ಕುಟುಂಬ ನ್ಯಾಯಾಲಯ ಹೇಳಿತ್ತು ಹಾಗೂ ಗಂಡನ ವಿರುದ್ಧ ಕ್ರೌರ್ಯ ಮೆರೆಯಲಾಗಿದೆ ಎಂದು ಅಭಿಪ್ರಾಯಪಟ್ಟಿತ್ತು. ಹಾಗಾಗಿ, ವಿಚ್ಛೇದನೆ ಪಡೆಯಲು ಗಂಡ ಅರ್ಹರಾಗಿದ್ದಾರೆ ಎಂದು ಹೇಳಿತ್ತು. ತನ್ನ ವಿರುದ್ಧ ಗಂಡ ಸಲ್ಲಿಸಿರುವ ಪುರಾವೆಯನ್ನು ಪ್ರಶ್ನಿಸಲು ಹೆಂಡತಿಗೆ ಅವಕಾಶ ನೀಡಲಾಗಿಲ್ಲ ಎಂದು ಹೈಕೋರ್ಟ್ ಹೇಳಿದೆ. ‘‘ಕೇವಲ ವಾಟ್ಸ್ಆ್ಯಪ್ ಸಂಭಾಷಣೆಯ ಆಧಾರದಲ್ಲಿ ವಿಚ್ಛೇದನೆ ಆದೇಶ ನೀಡುವಂತಿಲ್ಲ. ಯಾಕೆಂದರೆ ಅದು ಪುರಾವೆಯ ಮೂಲಕ ಸಾಬೀತಾಗುವುದಿಲ್ಲ’’ ಎಂದು ಹೈಕೋರ್ಟ್ ಹೇಳಿದೆ.
ಆಳಂದ | ಹೋಳಿ ಹಬ್ಬದ ರಂಗಿನ ಸಂಭ್ರಮ
ಆಳಂದ : ವಸಂತ ಋತುವಿನ ಆಗಮನದ ಸಂಕೇತವಾಗಿರುವ ಹೋಳಿ ಹಬ್ಬವನ್ನು ಆಳಂದ ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಗ್ರಾಮೀಣ ಭಾಗಗಳಲ್ಲಿ ಭಕ್ತಿಭಾವ ಮತ್ತು ಉತ್ಸಾಹಭರಿತವಾಗಿ ಆಚರಿಸಲಾಯಿತು. ಬೆಳಿಗ್ಗೆಯಿಂದಲೇ ಮಹಿಳೆಯರು, ಮಕ್ಕಳು ಹಾಗೂ ಯುವಕರು ಪರಸ್ಪರ ಬಣ್ಣ ಎರಚಿಕೊಂಡು ಸಂಭ್ರಮದಲ್ಲಿ ತೇಲಿದರು. ಪಟ್ಟಣದ ಹನುಮಾನ ದೇವಸ್ಥಾನ ಪರಿಸರದಲ್ಲಿ ಯುವಕರ ಉತ್ಸಾಹ ಹೆಚ್ಚಾಗಿ ಕಂಡುಬಂದಿತು. ಸಿನಿಮಾ ಹಾಡುಗಳಿಗೆ ಹೆಜ್ಜೆ ಹಾಕುತ್ತ ಪರಸ್ಪರ ಬಣ್ಣ ಎರಚಿಕೊಂಡು ನೃತ್ಯ ಮಾಡಿದ ದೃಶ್ಯ ಜನರ ಗಮನ ಸೆಳೆಯಿತು. ಡಿಜೆ ಸದ್ದಿನ ಮಧ್ಯೆ “ಹೋಳಿ ಹೈ” ಎನ್ನುವ ಕೂಗು ಮೊಳಗಿದಂತೆ ವಾತಾವರಣ ಹರ್ಷೋದ್ಗಾರಗಳಿಂದ ಮೊಳಗಿತು. ಬಾಳೆನಕೇರಿ, ಹತ್ತಾರನಗಲ್ಲಿ, ಶರಣನಗರ, ನಾಯಕನಗರ, ಚಕ್ರಕಟ್ಟಾ, ಸುಲ್ತಾನಪೂರ ಬಡಾವಣೆ ಹಾಗೂ ಮಟಕಿ ರಸ್ತೆಗಳಲ್ಲೂ ರಂಗು-ರಂಗಿನ ಬಣ್ಣದಾಟ ಜೋರಾಗಿ ನಡೆಯಿತು. ಮಕ್ಕಳು ನೀರಿನ ಬಲೂನುಗಳು ಹಾಗೂ ಗುಲಾಲ್ಗಳನ್ನು ಬಳಸಿ ದಿನವಿಡೀ ಸಂಭ್ರಮಿಸಿದರು. ಗ್ರಾಮೀಣ ಭಾಗಗಳಲ್ಲೂ ಹಬ್ಬದ ಕಳೆ ಮಿಂಚಿತು. ಮನೆಮನೆಗೆ ಭೇಟಿ ನೀಡಿ ಪರಸ್ಪರ ಬಣ್ಣ ಹಚ್ಚಿಕೊಳ್ಳುವುದು, ಹಿರಿಯರಿಗೆ ಗೌರವ ಸಲ್ಲಿಸುವುದು ಹಾಗೂ ಸಿಹಿತಿಂಡಿಗಳನ್ನು ಹಂಚಿಕೊಳ್ಳುವ ಸಂಪ್ರದಾಯಗಳು ಪಾಲಿಸಲ್ಪಟ್ಟವು. ತಾಂಡಾಗಳಲ್ಲಿ ಮಹಿಳೆಯರು ಪರಂಪರೆಯ ಹಾಡುಗಳನ್ನು ಹಾಡಿ ಹಬ್ಬಕ್ಕೆ ವಿಶೇಷ ಮೆರಗು ನೀಡಿದರು. ಕಾನೂನು ಸುವ್ಯವಸ್ಥೆ ಕಾಪಾಡಲು ಪೊಲೀಸ್ ಇಲಾಖೆ ಮುನ್ನೆಚ್ಚರಿಕಾ ಕ್ರಮ ಕೈಗೊಂಡಿದ್ದು, ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ನಿಗಾ ವಹಿಸಲಾಗಿದೆ ಎಂದು ಪಿಐ ಶರಣಬಸಪ್ಪ ಕೊಡ್ಲಾ ತಿಳಿಸಿದ್ದಾರೆ. ಒಟ್ಟಾರೆ ಆಳಂದ ಪಟ್ಟಣ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಹೋಳಿ ಹಬ್ಬವು ಸೌಹಾರ್ದತೆ, ಸಹೋದರತ್ವ ಮತ್ತು ಸಂಭ್ರಮದ ಸಂಕೇತವಾಗಿ ರಂಗಿನ ನೆನಪುಗಳನ್ನು ಮೂಡಿಸಿತು.
ಹರೇಕಳ ಆಲಡ್ಕ ಜಮಾಅತಿನ ಎರಡು ಮದ್ರಸಕ್ಕೆ ಶೇ.100 ಫಲಿತಾಂಶ
ಕೊಣಾಜೆ, ಮಾ.4: ಇಸ್ಲಾಮಿಕ್ ಎಜುಕೇಷನಲ್ ಬೋರ್ಡ್ ನಡೆಸಿದ 2025-26ನೇ ಸಾಲಿನ 5,7,10,12 ತರಗತಿಗಳ ಪಬ್ಲಿಕ್ ಪರೀಕ್ಷೆಯಲ್ಲಿ ಉಳ್ಳಾಲ ತಾಲೂಕಿನ ಹರೇಕಳ ಗ್ರಾಮದ ಬದ್ರಿಯಾ ಜುಮಾ ಮಸೀದಿ ಅಧೀನದ ಹಿದಾಯತುಲ್ ಇಸ್ಲಾಂ ಆಲಡ್ಕ ಮತ್ತು ತೋಕರಬೆಟ್ಟು ಮದ್ರಸವು ಶೇ. 100 ಫಲಿತಾಂಶ ದಾಖಲಿಸಿದೆ. ಆಲಡ್ಕ ಮದ್ರಸದ 5ನೇ ತರಗತಿಯ ಎಂಟು ವಿದ್ಯಾರ್ಥಿಗಳು, 7ನೇ ತರಗತಿಯ ಐವರು ವಿದ್ಯಾರ್ಥಿಗಳು, ಮತ್ತು 10ನೇ ತರಗತಿಯ ಏಳು ಮಂದಿ ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ನಲ್ಲಿ ಉತ್ತೀರ್ಣರಾಗಿರುತ್ತಾರೆ. 10ನೇ ತರಗತಿಯಲ್ಲಿ ಮೂವರು ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ತೋಕರಬೆಟ್ಟು ಮದ್ರಸದ 12ನೇ ತರಗತಿಯಲ್ಲಿ ಒಬ್ಬರು ವಿದ್ಯಾರ್ಥಿನಿ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾಳೆ ಎಂದು ಮಸೀದಿಯ ಆಡಳಿತ ಮಂಡಳಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ತಮಿಳುನಾಡು | ಕಾಂಗ್ರೆಸ್ಗೆ 29 ವಿಧಾನಸಭಾ, 2 ರಾಜ್ಯಸಭಾ ಸ್ಥಾನಗಳನ್ನು ನೀಡಲು ಮುಂದಾದ ಡಿಎಂಕೆ : ವರದಿ
ಚೆನ್ನೈ, ಮಾ. 4: ರಾಜಿ ಸೂತ್ರದ ಭಾಗವಾಗಿ, ಮುಂಬರುವ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಕಾಂಗ್ರೆಸ್ಗೆ 29 ಸ್ಥಾನಗಳು ಮತ್ತು ಎರಡು ರಾಜ್ಯಸಭಾ ಸ್ಥಾನಗಳನ್ನು ನೀಡಲು ಅದರ ಮಿತ್ರಪಕ್ಷ ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಮುಂದಾಗಿದೆ. ಡಿಎಂಕೆ ಮತ್ತು ಕಾಂಗ್ರೆಸ್ ನಡುವಿನ ಸ್ಥಾನ ಹಂಚಿಕೆ ಬಿಕ್ಕಟ್ಟನ್ನು ನಿವಾರಿಸುವ ಉದ್ದೇಶದಿಂದ ಹಿರಿಯ ಕಾಂಗ್ರೆಸ್ ನಾಯಕ ಪಿ. ಚಿದಂಬರಂ ಮತ್ತು ಕೆ. ಸೆಲ್ವಪೆರುಂತಗೈ ತಮಿಳುನಾಡು ಮುಖ್ಯಮಂತ್ರಿ ಎಮ್.ಕೆ. ಸ್ಟಾಲಿನ್ರನ್ನು ಭೇಟಿಯಾದರು. ಸ್ಥಾನ ಹಂಚಿಕೆಯನ್ನು ಅಂತಿಮಗೊಳಿಸುವ ನಿಟ್ಟಿನಲ್ಲಿ ಮಾತುಕತೆಗಳು ನಡೆದವು. ತನಗೆ 34 ಸ್ಥಾನಗಳು ಬೇಕೆಂದು ಕಾಂಗ್ರೆಸ್ ಬೇಡಿಕೆ ಇಟ್ಟಿತ್ತು. ಈ ಸ್ಥಾನಗಳಲ್ಲಿ ತಳಮಟ್ಟದಲ್ಲಿ ತನ್ನ ಉಪಸ್ಥಿತಿ ಇದೆ ಹಾಗೂ ಇಲ್ಲಿ ಹಿಂದಿನ ಚುನಾವಣೆಗಳಲ್ಲಿ ತನ್ನ ನಿರ್ವಹಣೆ ಚೆನ್ನಾಗಿದೆ ಎಂಬುದಾಗಿ ಅದು ವಾದಿಸಿದೆ. ಆದರೆ, ಈ ಬೇಡಿಕೆಯನ್ನು ತಿರಸ್ಕರಿಸಿದ ಡಿಎಮ್ಕೆ 29 ವಿಧಾನಸಭಾ ಸ್ಥಾನಗಳು ಮತ್ತು ಎರಡು ರಾಜ್ಯಸಭಾ ಸ್ಥಾನಗಳನ್ನು ನೀಡಲು ಮುಂದಾಗಿದೆ. ಅಂತಿಮ ಸ್ಥಾನ ಹಂಚಿಕೆಯ ಘೋಷಣೆ ಆಗಿಲ್ಲವಾದರೂ, ಮಾತುಕತೆಗಳು ರಚನಾತ್ಮಕವಾಗಿತ್ತು ಎಂಬುದಾಗಿ ನಾಯಕರು ಬಣ್ಣಿಸಿದ್ದಾರೆ. ಮೈತ್ರಿಕೂಟವು ಸದೃಢವಾಗಿದೆ ಹಾಗೂ ಪರಸ್ಪರ ಸಮ್ಮತಾರ್ಹ ಪರಿಹಾರವೊಂದಕ್ಕೆ ಶೀಘ್ರವೇ ಬರಲಾಗುವುದು ಎಂದು ಅವರು ಹೇಳಿದ್ದಾರೆ. ತಮಿಳುನಾಡು ವಿಧಾನಸಭೆಯ 234 ಸ್ಥಾನಗಳ ಪೈಕಿ, ಹಾಲಿ ವಿಧಾನಸಭೆಯಲ್ಲಿ ಆಡಳಿತಾರೂಢ ಡಿಎಂಕೆ 133 ಮತ್ತು ಕಾಂಗ್ರೆಸ್ 17 ಸ್ಥಾನಗಳನ್ನು ಹೊಂದಿವೆ.
ಕಲಬುರಗಿ | ಮರಣೋತ್ತರ ದೇಹ-ಅಂಗಾಂಗ ನಾಶ ಮಾಡದೇ ದಾನ ಮಾಡಿ: ಡಾ.ಶಿವಾನಂದ ಹೂಗಾರ
ಟೆಂಗಳಿ ಗ್ರಾಮದಲ್ಲಿ ದೇಹಾಂಗದಾನ ಜಾಗೃತಿ ಕಾರ್ಯಕ್ರಮ
ವಾಡಿ | ಭಾಷೆ ಸಂಸ್ಕೃತಿ ಮೀರಿದ ಭಾವೈಕ್ಯತೆಯ ಹಬ್ಬ ಹೋಳಿ
ವಾಡಿ: ಬಹು ಭಾಷೆ ಮೀರಿದ ಬಹು ಸಂಸ್ಕೃತಿಗಳ ಪಟ್ಟಣವಾದ ವಾಡಿಯಲ್ಲಿ ಬುಧವಾರ ಬೆಳಿಗ್ಗೆಯಿಮದಲೇ ಭಾವೈಕ್ಯದ ಹೋಳಿ ಹಬ್ಬ ಅದ್ದೂರಿಯಾಗಿ ಆಚರಿಸಿದರು. ಪುರುಷರು, ಮಹಿಳೆಯರು, ಮಕ್ಕಳು ಸೇರಿದಂತೆ ವಯಸ್ಸಿನ ಹಂಗು ಮೀರಿ ಎಲ್ಲರೂ ಪಟ್ಟಣದ ಬಹುಪಾಲು ಬೀದಿಗಳಲ್ಲಿ, ವೃತ್ತಗಳಲ್ಲಿ, ಮೈದಾನಗಳಲ್ಲಿ ಪರಸ್ಪರ ರಂಗು ರಂಗಿನ ಬಣ್ಣ ಎರಚುತ್ತ ಸಡಗರದಿಂದ ಬಣ್ಣದೋಕುಳಿ ಆಡಿದರು. ಸಪ್ತವರ್ಣಗಳ ಬಣ್ಣಗಳನ್ನು ಮುಖ ಮೈಗೆ ಹಚ್ಚಿ, ಗಾಳಿಯಲ್ಲಿ ತೂರಿ, ನೀರಿನಲ್ಲಿ ಕಲಿಸಿ ಸುರಿದು ಖುಷಿಪಟ್ಟರು. ಬೆಳಿಗ್ಗೆ 6ರಿಂದಲೇ ಆರಂಭವಾದ ಬಣ್ಣದಾಟ ಮಧ್ಯಾಹ್ನದವರೆಗೂ ಬಣ್ಣಗಳಲ್ಲಿ ಮಿಂದೆದ್ದರು.
ಮಂಗಳೂರು: ಎಸ್ಐಆರ್ ಕುರಿತಂತೆ ಮ್ಯಾಪಿಂಗ್ ಕಾರ್ಯಕ್ಕೆ ಸಹಕರಿಸಲು ಮನವಿ
ಮಂಗಳೂರು: ಕೇಂದ್ರ ಚುನಾವಣಾ ಆಯೋಗವು ರಾಜ್ಯದಲ್ಲಿ ವಿಶೇಷ ಸಮಗ್ರ ಪರಿಷ್ಕರಣೆ (SIR) ಘೋಷಣೆಯನ್ನು ಶೀಘ್ರದಲ್ಲೇ ನಿರೀಕ್ಷಿಸಲಾಗಿರುವುದರಿಂದ ಪೂರ್ವಭಾವಿ ಚಟುವಟಿಕೆಯಾದ ಮ್ಯಾಪಿಂಗ್ ಕಾರ್ಯ ಪ್ರಗತಿಯಲ್ಲಿದೆ. 2002ರ ಮತದಾರರ ಪಟ್ಟಿಗೆ ಸಂಬಂಧಿಸಿದ ಕೆಲವು ವಿವರಗಳನ್ನು ಆಯಾ ವ್ಯಾಪ್ತಿಗೆ ಸಂಬಂಧಿಸಿದ ಬೂತ್ಮಟ್ಟದ ಅಧಿಕಾರಿ (BLO)ಗೆ ಮಾಹಿತಿ ನೀಡಿ ಮ್ಯಾಪಿಂಗ್ ಮಾಡಿಕೊಳ್ಳಲು ತಿಳಿಸಿದೆ. ಅದರಂತೆ ಮ್ಯಾಪಿಂಗ್ (MAPPING) ಅಂದರೆ 2002ರ ಮತದಾರರ ಪಟ್ಟಿಯನ್ನು 2025ರ ಮತದಾರರ ಪಟ್ಟಿಗೆ ಜೋಡನೆ ಮಾಡುವುದು. PROGENY (ಸಂತತಿ) ಮ್ಯಾಪಿಂಗ್ ಅಂದರೆ 2002ರ ಮತದಾರರ ಪಟ್ಟಿಯಲ್ಲಿ ಮತದಾರರ ಹೆಸರು ನೋಂದಣಿಯಾಗದಿದ್ದಲ್ಲಿ ಅವರ ತಂದೆ/ತಾಯಿ/ಅಜ್ಜ/ ಅಜ್ಜಿಯವರ ಭಾಗ ಸಂಖ್ಯೆ ಹಾಗೂ ಕ್ರಮಸಂಖ್ಯೆಯೊಂದಿಗೆ ಜೋಡನೆ ಮಾಡಿಕೊಳ್ಳಬೇಕು. 2002ರ ಮತದಾರರಾಗಿದ್ದಲ್ಲಿ ನೀವು 2002 ರಲ್ಲಿ ವಾಸವಿದ್ದ ವಿಧಾನಸಭಾ ಕ್ಷೇತ್ರ ಹೆಸರು / ಸಂಖ್ಯೆ, ಭಾಗ ಸಂಖ್ಯೆ ಹಾಗೂ ಕ್ರಮ ಸಂಖ್ಯೆಯನ್ನು ತಮ್ಮ ವ್ಯಾಪ್ತಿಯ ಬೂತ್ಮಟ್ಟದ ಅಧಿಕಾರಿಗೆ ಮತದಾರರು ಮಾಹಿತಿ ನೀಡಬೇಕು. ಒಂದು ವೇಳೆ ನೀವು 2002ರಲ್ಲಿ ಮತದಾರರಾಗಿಲ್ಲದಿದ್ದಲ್ಲಿ, ನಿಮ್ಮ ತಂದೆ / ತಾಯಿ / ಅಜ್ಜ / ಅಜ್ಜಿಯವರು ವಾಸವಿದ್ದ ವಿಧಾನಸಭಾ ಕ್ಷೇತ್ರದ ಹೆಸರು/ಸಂಖ್ಯೆ,ಭಾಗ ಸಂಖ್ಯೆ ಹಾಗೂ ಕ್ರಮಸಂಖ್ಯೆಯನ್ನು ತಮ್ಮ ವ್ಯಾಪ್ತಿಯ ಬೂತ್ಮಟ್ಟದ ಅಧಿಕಾರಿಗೆ ಮತದಾರರು ಮಾಹಿತಿ ನೀಡಬೇಕು. ಮ್ಯಾಪಿಂಗ್ ಆಗದಿದ್ದಲ್ಲಿ ವಿಶೆಷ ಸಮಗ್ರ ಪರಿಷ್ಕರಣೆ ಸಮಯದಲ್ಲಿ ಮತದಾರರ ನೋಂದಣಾಧಿಕಾರಿ ಕಚೇರಿಯಿಂದ ಮ್ಯಾಪಿಂಗ್ ಆಗದಿರುವ ಮತದಾರರಿಗೆ ನೋಟಿಸ್ ನೀಡಲಾಗುತ್ತದೆ. ನೋಟಿಸ್ ನೀಡಿದ ನಂತರ ಜನ್ಮದಿನಾಂಕಕ್ಕೆ ಸಂಬಂಧಪಟ್ಟ ದಾಖಲೆಗಳು ಮತ್ತು ವಾಸಸ್ಥಳಕ್ಕೆ ಸಂಬಂಧಪಟ್ಟ ದಾಖಲೆಗಳನ್ನು ಕಡ್ಡಾಯವಾಗಿ ಸಲ್ಲಿಸಬೇಕಾಗಿರು ತ್ತದೆ. ವಿಶೆಷ ಸಮಗ್ರ ಪರಿಷ್ಕರಣೆ ಸಮಯದಲ್ಲಿ ದಾಖಲೆಗಳನ್ನು ಸಲ್ಲಿಸದಿದ್ದಲ್ಲಿ ಅಂತಹವರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಕೈಬಿಡಲಾಗುವುದು. 2002ರ ಮತದಾರರ ಪಟ್ಟಿಯಲ್ಲಿ ಹೆಸರುಗಳನ್ನು https://ceo.karnataka.gov.in/search/en ಅಥವಾ https://voters.eci.gov.in/searchInSIR/S2UA4DPDF-JK4QWODSE ಹುಡುಕಬಹುದು. ತಮ್ಮ ವ್ಯಾಪ್ತಿಯ ಬೂತ್ ಮಟ್ಟದ ಅಧಿಕಾರಿಯ ದೂ.ಸಂ: ಪಡೆಯಲು https://electoralsearch.eci.gov.in/ uesfmempmlkypo ಲಿಂಕ್ ಮೂಲಕ ಹುಡುಕಬಹುದು. ತಮ್ಮ ವ್ಯಾಪ್ತಿಗೆ ಸಂಬಂಧಿಸಿದ ಬೂತ್ಮಟ್ಟದ ಅಧಿಕಾರಿ ಕರೆ ಸ್ವೀಕರಿಸದ್ದಿದಲ್ಲಿ https://voters.eci.gov.in/home/bookACallRequest ಲಿಂಕ್ ಮೂಲಕ ಕರೆಯನ್ನು ಬುಕ್ ಮಾಡಬಹುದು ಎಂದು ಮಂಗಳೂರು ತಹಶೀಲ್ದಾರರ ಪ್ರಕಟನೆ ತಿಳಿಸಿದೆ.
ಕಲಬುರಗಿ | ಮಾ.5 ರಂದು ಮತದಾರರ ಪಟ್ಟಿ ಮ್ಯಾಪಿಂಗ್ ಅಭಿಯಾನ: ಬಿ.ಫೌಝಿಯಾ ತರನ್ನುಮ್
ಕಲಬುರಗಿ : ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆಯ ಪೂರ್ವಸಿದ್ಧತಾ ಭಾಗವಾಗಿ 2022ರ ಮತದಾರರ ಪಟ್ಟಿಯನ್ನು 2025ರ ಪಟ್ಟಿಗೆ ಮ್ಯಾಪಿಂಗ್ ಮಾಡುವ ಕುರಿತು ಮಾರ್ಚ್ 5ರಂದು ಬೆಳಿಗ್ಗೆ 8ರಿಂದ ಸಂಜೆ 6ರವರೆಗೆ ವಿಶೇಷ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಬಿ. ಫೌಝಿಯಾ ತರನ್ನುಮ್ ತಿಳಿಸಿದ್ದಾರೆ. ಭಾರತ ಚುನಾವಣಾ ಆಯೋಗ ರಾಜ್ಯದಲ್ಲಿ ಎಪ್ರಿಲ್ 2026ರಲ್ಲಿ ವಿಶೇಷ ತೀವ್ರ ಮತದಾರರ ಪರಿಷ್ಕರಣೆ ನಡೆಸಲು ಉದ್ದೇಶಿಸಿದ್ದು, ರಾಜ್ಯ ಮುಖ್ಯ ಚುನಾವಣಾಧಿಕಾರಿಗಳ ನಿರ್ದೇಶನದಂತೆ ಜಿಲ್ಲೆಯ ಒಟ್ಟು 9 ವಿಧಾನಸಭಾ ಮತಕ್ಷೇತ್ರಗಳಲ್ಲಿ ಪೂರ್ವಸಿದ್ಧತಾ ಕಾರ್ಯ ನಡೆಯುತ್ತಿದೆ. ಇದಲ್ಲದೆ 35-ಜೇವರ್ಗಿ, 43-ಕಲಬುರಗಿ ಗ್ರಾಮೀಣ, 44-ಗುಲಬರ್ಗಾ ದಕ್ಷಿಣ ಹಾಗೂ 45-ಗುಲಬರ್ಗಾ ಉತ್ತರ ವಿಧಾನಸಭಾ ಮತಕ್ಷೇತ್ರಗಳಲ್ಲಿ ಮ್ಯಾಪಿಂಗ್ ಪ್ರಗತಿ ಕಡಿಮೆ ಇರುವುದರಿಂದ ವಿಶೇಷ ಅಭಿಯಾನ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ. ಮೇಲ್ಕಂಡ ಎಲ್ಲಾ ಮತಗಟ್ಟೆಗಳಲ್ಲಿ ಬಿ.ಎಲ್.ಓ.ಗಳು ಮ್ಯಾಪಿಂಗ್ ಕಾರ್ಯ ನಡೆಸಲಿದ್ದು, ಸಾಮಾನ್ಯ ವರ್ಗ, ವಿಶೇಷ ವರ್ಗ, ಗಣ್ಯರು, ರಾಜಕೀಯ ವ್ಯಕ್ತಿಗಳು, ಸರ್ಕಾರಿ ಹಾಗೂ ಖಾಸಗಿ ನೌಕರರು, ಅಸಂಘಟಿತ ಮತ್ತು ಸಂಘಟಿತ ವಲಯದ ಕಾರ್ಮಿಕರು, ಶಾಲಾ-ಕಾಲೇಜು ನೌಕರರು, ಹಿರಿಯ ನಾಗರಿಕರು ಹಾಗೂ ವೃತ್ತಿಪರರು ಸೇರಿದಂತೆ ಎಲ್ಲ ಮತದಾರರು ತಮ್ಮ ಹೆಸರುಗಳು ಕೈಬಿಟ್ಟು ಹೋಗದಂತೆ ಪರಿಶೀಲಿಸಿ ಅಭಿಯಾನದಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿಗಳು ಮನವಿ ಮಾಡಿದ್ದಾರೆ.

30 C