ಮೋದಿ-ಅಮಿತ್ ಶಾ ‘ಕೈಗೊಂಬೆ’ ಅಧ್ಯಕ್ಷ
ಇತ್ತೀಚೆಗಷ್ಟೇ ನಡೆದ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಆರ್ಜೆಡಿಯ ತೇಜಸ್ವಿ ಯಾದವ್ ಎಸೆಸೆಲ್ಸಿ ಪಾಸು ಮಾಡದ ಅನ್ಪಡ್ ಎಂದು ಬಿಜೆಪಿಯವರು ಮೂದಲಿಸಿದ್ದರು. ಈಗ ಮೋದಿ-ಅಮಿತ್ ಶಾ ಜೋಡಿ ಕೇವಲ ಪಿಯುಸಿ ಪಾಸಾದ ನಿತಿನ್ ನಬಿನ್ ಅವರನ್ನು ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಸ್ಥಾನದಲ್ಲಿ ಪ್ರತಿಷ್ಠಾಪಿಸಿದ್ದಾರೆ. ವಿದ್ಯಾವಂತರ ಪಕ್ಷವೆಂದೇ ಖ್ಯಾತಿ ಪಡೆದ ಬಿಜೆಪಿಗೆ ಕನಿಷ್ಠ ಪಕ್ಷ ಪದವಿ ಪೂರೈಸಿದ ರಾಷ್ಟ್ರೀಯ ಅಧ್ಯಕ್ಷ ದೊರೆಯಲಿಲ್ಲವಲ್ಲ! ಭಾರತೀಯ ಜನತಾ ಪಕ್ಷವನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಸಂಪೂರ್ಣವಾಗಿ ತಮ್ಮ ಹಿಡಿತಕ್ಕೆ ತೆಗೆದುಕೊಂಡಿದ್ದಾರೆ. ಆ ಪಕ್ಷದ ಹಿರಿಯ ನಾಯಕರು ಮತ್ತು ಸಂಘ ಪರಿವಾರದ ಮುಖಂಡರು ಮೋದಿ-ಅಮಿತ್ ಶಾ ಜೋಡಿಯ ನಿರ್ಧಾರಗಳನ್ನು ಮರು ಮಾತಿಲ್ಲದೆ ಒಪ್ಪಿಕೊಳ್ಳುವ ಹಂತ ತಲುಪಿದ್ದಾರೆ. ಕೆಲವು ಮಾಧ್ಯಮಗಳು ತಮ್ಮ ಸಮಾಧಾನಕ್ಕೆ ಸಂಘ ಪರಿವಾರದ ಪ್ರಾಮುಖ್ಯತೆ ಇದೆ ಎಂದು ರುಜುವಾತುಪಡಿಸಲು ಕತೆಗಳನ್ನು ಹೆಣೆಯುತ್ತಲೇ ಇರುತ್ತವೆ. ಸಂಘ ಪರಿವಾರದ ಮುಖಂಡರ ಅನುಮತಿಯಿಲ್ಲದೇ ಬಿಜೆಪಿಯಲ್ಲಿ ಹುಲ್ಲು ಕಡ್ಡಿಯೂ ಅಲುಗಾಡದು ಎಂಬ ಅಭಿಪ್ರಾಯಗಳನ್ನು ಮೂಡಿಸಲು ಪ್ರಯತ್ನಿಸುತ್ತಲೇ ಇರುತ್ತವೆ. ಭಾರತೀಯ ಜನತಾ ಪಕ್ಷವನ್ನು ಶಿಸ್ತಿನ ಪಕ್ಷವೆಂದು ಒಂದು ಕಾಲದಲ್ಲಿ ಅತಿಯಾಗಿ ಪ್ರಚಾರ ಮಾಡಲಾಯಿತು. ಅಷ್ಟು ಮಾತ್ರವಲ್ಲ ಸೈದ್ಧಾಂತಿಕ ನೆಲೆಯುಳ್ಳ ಪಕ್ಷವೆಂದು ನಂಬಲಾಗಿತ್ತು. ಆದರೆ ಈಗ ಅದು ಕೇವಲ ಚುಣಾವಣೆಗಳನ್ನು ಗೆಲ್ಲುವ ಯಂತ್ರವಾಗಿ ಬದಲಾಗಿದೆ. ಬಿಜೆಪಿಯನ್ನು ವಿರೋಧ ಪಕ್ಷಗಳು: ಭ್ರಷ್ಟರ ಕಳಂಕವನ್ನು ತೊಳೆಯವ ವಾಷಿಂಗ್ ಮಷಿನ್ ಎಂದೂ ಗೇಲಿ ಮಾಡುತ್ತಿರುತ್ತಾರೆ. ಕೋಮುವಾದಿ ಅಜೆಂಡಾವನ್ನು ಬಗಲಲ್ಲಿ ಇಟ್ಟುಕೊಂಡು ಅವಕಾಶವಾದಿ ರಾಜಕಾರಣ ಮಾಡುವಲ್ಲಿ ಈಗ ಬಿಜೆಪಿ ಮುಂಚೂಣಿಯಲ್ಲಿದೆ. ‘ಸಬ್ಕಾ ಸಾಥ್ ಸಬ್ಕಾ ವಿಕಾಸ್’ ಮತ್ತು ವಿಕಸಿತ ಭಾರತದ ಕನಸುಗಳನ್ನು ಯುವ ಜನರಲ್ಲಿ ಬಿತ್ತುತ್ತಲೇ ಭಾರತವನ್ನು ಕೋಮುವಾದಿ ಪ್ರಯೋಗಶಾಲೆಯನ್ನಾಗಿ ಮಾಡಿದ್ದಾರೆ. ಆಧುನಿಕ ಭಾರತದ ಭ್ರಮೆ ಬಿತ್ತುತ್ತಲೇ ದೇಶವನ್ನು ನೂರು ವರ್ಷಗಳಷ್ಟು ಹಿಂದಕ್ಕೆ ತಳ್ಳುತ್ತಿದ್ದಾರೆ. ಸದ್ಯ ಭಾರತ ಆಧುನಿಕ ಕಾಲದ ಒಂದೂ ಸಮಸ್ಯೆಯನ್ನು ಎದುರುಗೊಳ್ಳುತ್ತಿಲ್ಲ. ಬಡತನ, ನಿರುದ್ಯೋಗ ನಮ್ಮ ಕಾಲದ ಜ್ವಲಂತ ಸಮಸ್ಯೆಗಳಾಗಿದ್ದರೂ ಜಾತೀಯತೆ, ಕೋಮುವಾದ ನಿತ್ಯ ನರ್ತಿಸುವ ಭೂತವಾಗಿ ಪರಿಣಮಿಸಿವೆ. ಭಾರತೀಯ ಜನತಾ ಪಕ್ಷದ ಇತಿಹಾಸದಲ್ಲೇ ಅತಿ ಕಡಿಮೆ ವಿದ್ಯಾಭ್ಯಾಸ ಹೊಂದಿದ ರಾಷ್ಟ್ರೀಯ ಅಧ್ಯಕ್ಷನೆಂದರೆ ನಿತಿನ್ ನಬಿನ್ ಮಾತ್ರ. ಬಿಜೆಪಿಯವರು ‘ಅತಿ ಕಿರಿಯ’ ವಯಸ್ಸಿನ ರಾಷ್ಟ್ರೀಯ ಅಧ್ಯಕ್ಷ ಎಂದು ಪ್ರಚಾರ ಪಡೆಯುತ್ತಿದ್ದಾರೆ. ಇತ್ತೀಚೆಗಷ್ಟೇ ನಡೆದ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಆರ್ಜೆಡಿಯ ತೇಜಸ್ವಿ ಯಾದವ್ ಎಸೆಸೆಲ್ಸಿ ಪಾಸು ಮಾಡದ ಅನ್ಪಡ್ ಎಂದು ಮೂದಲಿಸಿದ್ದರು. ಈಗ ಮೋದಿ-ಅಮಿತ್ ಶಾ ಜೋಡಿ ಕೇವಲ ಪಿಯುಸಿ ಪಾಸಾದ ನಿತಿನ್ ನಬಿನ್ ಅವರನ್ನು ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಸ್ಥಾನದಲ್ಲಿ ಪ್ರತಿಷ್ಠಾಪಿಸಿದ್ದಾರೆ. ವಿದ್ಯಾವಂತರ ಪಕ್ಷವೆಂದೇ ಖ್ಯಾತಿ ಪಡೆದ ಬಿಜೆಪಿಗೆ ಕನಿಷ್ಠ ಪಕ್ಷ ಪದವಿ ಪೂರೈಸಿದ ರಾಷ್ಟ್ರೀಯ ಅಧ್ಯಕ್ಷ ದೊರೆಯಲಿಲ್ಲವಲ್ಲ! ಭಾರತೀಯ ಜನಸಂಘದ ಕಾಲದಿಂದಲೂ ಸಂಘ ಪರಿವಾರದ ತತ್ವ ಸಿದ್ಧಾಂತಗಳಿಗೆ ಅಲ್ಪ ಪ್ರಮಾಣದ ನಗರವಾಸಿ ವಿದ್ಯಾವಂತ ಮಧ್ಯಮ ವರ್ಗದವರು ಅಭಿಮಾನಿಗಳಾಗಿದ್ದರು. 1980ರಲ್ಲಿ ಭಾರತೀಯ ಜನತಾ ಪಕ್ಷ ಅಸ್ತಿತ್ವಕ್ಕೆ ಬಂದ ಮೇಲೂ ಹಲವು ವರ್ಷಗಳ ಕಾಲ ಅದು ನಗರ ಕೇಂದ್ರಿತ ಮಧ್ಯಮವರ್ಗದ ವಲಯದಲ್ಲಷ್ಟೇ ಜನಪ್ರಿಯವಾಗಿತ್ತು. ರಾಷ್ಟ್ರೀಯ ಸ್ವಯಂ ಸೇವಕ ಸಂಘವೇ ಬಿಜೆಪಿಯ ಮಾತೃ ಸಂಸ್ಥೆಯಾಗಿತ್ತು. ಭಾರತೀಯ ಜನತಾ ಪಕ್ಷದ ಮೊದಲ ರಾಷ್ಟ್ರೀಯ ಅಧ್ಯಕ್ಷ ಅಟಲ್ ಬಿಹಾರಿ ವಾಜಪೇಯಿಯವರು ಮೂಲತಃ ಸಂಘ ಪರಿವಾರದವರು. ಆರೆಸ್ಸೆಸ್ ತತ್ವ ಸಿದ್ಧಾಂತಗಳ ಹಾದಿಯಲ್ಲೇ ರಾಜಕೀಯ ಜೀವನ ರೂಪಿಸಿಕೊಂಡವರು. ಕವಿ ಮತ್ತು ಉದಾರವಾದಿ ರಾಜಕಾರಣಿಯಾಗಿದ್ದರಿಂದ ಪರ ಸಿದ್ಧಾಂತ ಸಹಿಷ್ಣು ಆಗಿದ್ದರು. ಸಂಕುಚಿತ ನೆಲೆಯಲ್ಲಿ ರಾಜಕೀಯ ಮಾಡುತ್ತಿರಲಿಲ್ಲ. ಅಧಿಕಾರಕ್ಕಾಗಿ ಅವಕಾಶವಾದಿ ರಾಜಕಾರಣ ಮಾಡುತ್ತಿರಲಿಲ್ಲ. ಅಟಲ್ ಬಿಹಾರಿ ವಾಜಪೇಯಿ ಸೇರಿದಂತೆ ಹಳೆಯ ಕಾಲದ ಬಿಜೆಪಿ ನಾಯಕರು ತಾವು ನಂಬಿದ ತತ್ವ ಸಿದ್ಧಾಂತಗಳ ಚೌಕಟ್ಟಿನಲ್ಲಿ ರಾಜಕಾರಣ ಮಾಡುತ್ತಿದ್ದರು. ಅಷ್ಟು ಮಾತ್ರವಲ್ಲ ಪ್ರಬುದ್ಧ ಮತ್ತು ಉದಾರವಾದಿಯಾಗಿ ನಡೆದುಕೊಳ್ಳುತ್ತಿದ್ದರು. ಎಲ್ಲಕ್ಕೂ ಮಿಗಿಲಾಗಿ ಅಟಲ್ ಬಿಹಾರಿ ವಾಜಪೇಯಿ, ಎಲ್. ಕೆ. ಅಡ್ವಾಣಿ, ಡಾ. ಮುರಳಿ ಮನೋಹರ್ ಜೋಶಿ ಪದವಿ ಪೂರೈಸಿದ ವಿದ್ಯಾವಂತರಾಗಿದ್ದರು. ಹೌದು ಅವರೂ ಕೋಮುವಾದಿ ರಾಜಕಾರಣದ ಭಾಗವಾಗಿದ್ದರು. ಅವರ ಶಕ್ತಿ ಮತ್ತು ದೌರ್ಬಲ್ಯಗಳು ಕಣ್ಣಿಗೆ ಢಾಳಾಗಿ ಗೋಚರಿಸುತ್ತಿದ್ದವು. ಹಳೆಯ ಕಾಲದ ಬಿಜೆಪಿ ನಾಯಕರು ಹಿಂದುತ್ವದ ಪ್ರತಿಪಾದಕರಾಗಿದ್ದರು. ಅಷ್ಟಾಗಿ ಜಾತಿ ಸಮೀಕರಣದ ಮೇಲೆ ನಂಬಿಕೆ ಇರಲಿಲ್ಲ. ಆದರೆ ನಿರಂತರ ಚುನಾವಣಾ ಸೋಲುಗಳಿಂದ ಜರ್ಜರಿತರಾದ ಅವರು ಮೊದಲು ಹಿಂದೂ-ಮುಸ್ಲಿಮ್ ಮತಗಳ ಧ್ರುವೀಕರಣಕ್ಕೆ ಯತ್ನಿಸಿದ್ದರು. ನಂತರ ಜಾತಿ ಸಮೀಕರಣ ರೂಪಿಸಲು ಮುಂದಾದರು. ಅಷ್ಟಾಗಿಯೂ ಪ್ರತೀ ಆಯ್ಕೆಗೂ ಸಂಘದ ಹಿನ್ನೆಲೆ ಕಡ್ಡಾಯವಾಗಿ ಪರಿಗಣಿಸುತ್ತಿದ್ದರು. ಬಿಜೆಪಿಯ ಮೊದಲ ರಾಷ್ಟ್ರೀಯ ಅಧ್ಯಕ್ಷ ಅಟಲ್ ಬಿಹಾರಿ ವಾಜಪೇಯಿಯವರು ಆರು ವರ್ಷಗಳ ಕಾಲ ಆ ಹುದ್ದೆಯಲ್ಲಿ ಇದ್ದರು. ತಮ್ಮ ಉತ್ತರಾಧಿಕಾರಿ ಆಯ್ಕೆಯಲ್ಲಿ ಸಂಘದ ಬದ್ಧತೆ ಮತ್ತು ಕ್ರಿಯಾಶೀಲತೆಯನ್ನು ಪ್ರಮುಖ ಮಾನದಂಡವನ್ನಾಗಿ ಪರಿಗಣಿಸಿದ್ದರು. ಅಟಲ್ ಬಿಹಾರಿ ವಾಜಪೇಯಿ ಅವರಿಗೆ ಸರಿಸಮವಾದ ಆರೆಸ್ಸೆಸ್ ಮೂಲದ ಎಲ್.ಕೆ. ಅಡ್ವಾಣಿಯವರನ್ನು ಬಿಜೆಪಿಯ ಎರಡನೇ ರಾಷ್ಟ್ರೀಯ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿತ್ತು. ಹಾಗೆ ನೋಡಿದರೆ ಬಿಜೆಪಿಗೆ ಅತಿ ಹೆಚ್ಚು ಕಾಲ ರಾಷ್ಟ್ರೀಯ ಅಧ್ಯಕ್ಷರಾಗಿ ಎಲ್.ಕೆ. ಅಡ್ವಾಣಿ ಕಾರ್ಯ ನಿರ್ವಹಿಸಿದ್ದರು. 1986ರಲ್ಲಿ ಬಿಜೆಪಿಯ ಎರಡನೇ ರಾಷ್ಟ್ರೀಯ ಅಧ್ಯಕ್ಷರಾಗಿ ಆಯ್ಕೆಯಾದ ಅಡ್ವಾಣಿಯವರು ಐದು ವರ್ಷಗಳ ಕಾಲ ಆ ಹುದ್ದೆಯಲ್ಲಿ ಇದ್ದರು. ಮೂರು ಅವಧಿಗೆ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷರಾಗಿದ್ದ ಎಲ್.ಕೆ. ಅಡ್ವಾಣಿಯವರು ಕೋಮು ರಾಜಕಾರಣದ ರಕ್ತಸಿಕ್ತ ಇತಿಹಾಸ ಸೃಷ್ಟಿಸಿದವರು. ಬಿಜೆಪಿ ಲೋಕಸಭಾ ಸದಸ್ಯರ ಹೆಚ್ಚಳಕ್ಕೆ, ಬಾಬರಿ ಮಸೀದಿ ಧ್ವಂಸಕ್ಕೆ ಮತ್ತು ಕೋಮು ದಳ್ಳುರಿಗೆ ಕಾರಣೀಭೂತರಾದ ಎಲ್.ಕೆ. ಅಡ್ವಾಣಿಯವರು ಖಳ ನಾಯಕ ಪಾತ್ರ ನಿಭಾಯಿಸಿದರೇ ಹೊರತು ಭಾರತದ ಪ್ರಧಾನಿ ಹುದ್ದೆ ಅಲಂಕರಿಸಲೇ ಇಲ್ಲ. ಅಟಲ್ ಬಿಹಾರಿ ವಾಜಪೇಯಿ ಅವರಿಗೆ ಉದಾರವಾದಿ, ಜಂಟಲ್ ಮ್ಯಾನ್ ಇಮೇಜ್ ಇದ್ದರೆ ಎಲ್.ಕೆ. ಅಡ್ವಾಣಿಗೆ ಬಾಬರಿ ಮಸೀದಿ ದ್ವಂಸದ ಖಳ ನಾಯಕನ ಕಳಂಕ ಅಂಟಿದೆ. ಮಹಾಭಾರತದ ಕರ್ಣನಂತೆ ಎಲ್.ಕೆ. ಅಡ್ವಾಣಿ ಒಂದು ದಿನ ಸಂಘ ಪರಿವಾರದ ಅವಕೃಪೆಗೂ ಒಳಗಾದವರು (ಜಿನ್ನಾ ಹೊಗಳಿದ್ದಕ್ಕೆ)ನಾಲ್ಕು ವರ್ಷಗಳ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷರಾಗಿದ್ದ ಡಾ. ಮುರಳಿ ಮನೋಹರ್ ಜೋಶಿ ವಾಜಪೇಯಿ, ಅಡ್ವಾಣಿಯವರ ಸಮ ಜೋಡಿ. ಭಾರತೀಯ ಜನತಾ ಪಕ್ಷ ಕಟ್ಟಿದ ಪ್ರಮುಖರಲ್ಲಿ ಒಬ್ಬರು. ಆರೆಸ್ಸೆಸ್ ಮೂಲದ ಡಾ. ಮುರಳಿ ಮನೋಹರ್ ಜೋಶಿ ಉತ್ತಮ ಶಿಕ್ಷಣ ಪಡೆದವರು. ಆದರೆ ಕಾಲಾಂತರದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಅವಕೃಪೆಗೆ ಒಳಗಾದವರು. ತಮ್ಮ ದುಡಿಮೆಗೆ ರಾಷ್ಟ್ರಪತಿ ಹುದ್ದೆ ನಿರೀಕ್ಷಿಸಿ ಹತಾಶರಾದವರು. ಆರೆಸ್ಸೆಸ್ ಮೂಲದ ಕುಶಾಭಾವು ಠಾಕ್ರೆ, ಬಂಗಾರು ಲಕ್ಷ್ಮಣ, ವೆಂಕಯ್ಯ ನಾಯ್ಡು ಒಂದೆರಡು ವರ್ಷಗಳ ಕಾಲ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಸ್ಥಾನ ಅಲಂಕರಿಸಿದವರು. ದಲಿತ ಸಮುದಾಯಕ್ಕೆ ಸೇರಿದ ಬಂಗಾರು ಲಕ್ಷ್ಮಣ ಲಂಚ ಪ್ರಕರಣದಲ್ಲಿ ತಲೆ ದಂಡ ತೆತ್ತವರು. ನರೇಂದ್ರ ಮೋದಿ ರಾಷ್ಟ್ರ ರಾಜಕಾರಣಕ್ಕೆ ಬರುವ ಮುಂಚೆ ಭಾರತೀಯ ಜನತಾ ಪಕ್ಷದ ಪ್ರಮುಖ ನಿರ್ಧಾರಗಳನ್ನು ತ್ರಿಮೂರ್ತಿಗಳಾದ ಅಟಲ್ ಬಿಹಾರಿ ವಾಜಪೇಯಿ, ಎಲ್.ಕೆ. ಅಡ್ವಾಣಿ, ಡಾ. ಮುರಳಿ ಮನೋಹರ್ ಜೋಶಿಯವರು ಕೈಗೊಳ್ಳುತ್ತಿದ್ದರು. ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಹುದ್ದೆಗೆ ಅಭ್ಯರ್ಥಿಯನ್ನು ಆಯ್ಕೆ ಮಾಡುವಾಗ ಸಂಘ ಮೂಲ, ಕ್ರಿಯಾಶೀಲತೆ ಮತ್ತು ಶೈಕ್ಷಣಿಕ ಹಿನ್ನೆಲೆಯನ್ನು ಪರಿಗಣಿಸುತ್ತಿದ್ದರು. ಅಡ್ವಾಣಿ ಹೊರತು ಪಡಿಸಿದರೆ ಹೆಚ್ಚು ಕಾಲ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಸ್ಥಾನದಲ್ಲಿದ್ದವರು ರಾಜನಾಥ್ ಸಿಂಗ್. ತ್ರಿಮೂರ್ತಿಗಳ ಪ್ರೀತಿಗೆ ಪಾತ್ರರಾಗಿದ್ದ ರಾಜನಾಥ್ ಸಿಂಗ್ ಸವ್ಯ ಸಾಚಿಯಂತೆ ಕಾರ್ಯ ನಿರ್ವಹಿಸಿದವರು. ಸಂಘದ ಹಿನ್ನೆಲೆ ಜೊತೆಗೆ ಪ್ರಬುದ್ಧ ರಾಜಕಾರಣಿ ಇಮೇಜ್ ಕಾಪಾಡಿಕೊಂಡವರು. ಬಿಜೆಪಿಯ ತ್ರಿಮೂರ್ತಿಗಳು ಅತ್ಯಂತ ಕ್ರಿಯಾಶೀಲರಾಗಿದ್ದ ಹತ್ತು ಹಲವು ಜನ ವಿದ್ಯಾವಂತ ಯುವ ನಾಯಕರನ್ನು ಬೆಳೆಸಿದ್ದರು. ಒಂದು ನೂರು ವರ್ಷಗಳ ಕಾಲ ಬಿಜೆಪಿಗೆ ನಾಯಕತ್ವದ ಕೊರತೆಯೇ ಆಗುತ್ತಿರಲಿಲ್ಲ. ಪ್ರಮೋದ್ ಮಹಾಜನ್, ಅರುಣ್ ಜೇಟ್ಲಿ, ಮನೋಹರ್ ಪಾರಿಕ್ಕರ್, ಎಚ್.ಎನ್. ಅನಂತಕುಮಾರ್, ನಿತಿನ್ ಗಡ್ಕರಿ, ಸುಷ್ಮಾ ಸ್ವರಾಜ್, ಯಡಿಯೂರಪ್ಪ, ಕಲ್ಯಾಣ ಸಿಂಗ್, ರಾಜನಾಥ್ ಸಿಂಗ್ ಮತ್ತು ನರೇಂದ್ರ ಮೋದಿ. ನರೇಂದ್ರ ಮೋದಿಯವರನ್ನು ಉಗ್ರ ಹಿಂದುತ್ವದ ಕಾರಣಕ್ಕೆ ಬೆಳೆಸಿದವರು ಎಲ್.ಕೆ. ಅಡ್ವಾಣಿಯವರೇ. ಎಲ್.ಕೆ. ಅಡ್ವಾಣಿಯವರಿಗೆ ಪ್ರಧಾನಿ ಹುದ್ದೆ ದಕ್ಕದಂತೆ ಮಾಡಿದ ನರೇಂದ್ರ ಮೋದಿಯವರು ತ್ರಿಮೂರ್ತಿಗಳು ಬೆಳೆಸಿದ ಬಿಜೆಪಿಯ ಕುಡಿಗಳನ್ನು ಅಲ್ಲಲ್ಲೇ ಚಿವುಟಿ ಹಾಕಿದರು. 2009ರಲ್ಲಿ ಬಿಜೆಪಿ ಎಲ್.ಕೆ. ಅಡ್ವಾಣಿಯವರನ್ನು ಪ್ರಧಾನ ಮಂತ್ರಿ ಅಭ್ಯರ್ಥಿ ಎಂದು ಬಿಂಬಿಸಿತ್ತು. ಆಗ ನರೇಂದ್ರ ಮೋದಿ ಗುಜರಾತ್ ಮುಖ್ಯಮಂತ್ರಿಯಾಗಿದ್ದರು. ಯಡಿಯೂರಪ್ಪ ಕರ್ನಾಟಕದಲ್ಲಿ ಮುಖ್ಯಮಂತ್ರಿ ಹುದ್ದೆಯಲ್ಲಿದ್ದರು. ಯಡಿಯೂರಪ್ಪ ಹರಸಾಹಸ ಮಾಡಿ ಕರ್ನಾಟಕದಿಂದ ಹತ್ತೊಂಭತ್ತು ಸಂಸದರನ್ನು ಕಳುಹಿಸಿಕೊಟ್ಟಿದ್ದರು. ನರೇಂದ್ರ ಮೋದಿ ತನ್ನ ಗುರು ಎಲ್. ಕೆ. ಅಡ್ವಾಣಿ ಪ್ರಧಾನಿ ಆಗಲೆಂದು ಕಿಂಚಿತ್ತೂ ಪ್ರಯತ್ನಿಸಲಿಲ್ಲ. ಆಗ ಗುಜರಾತ್ ರಾಜ್ಯದಿಂದ ಕೇವಲ ಹನ್ನೆರಡು ಸಂಸದರನ್ನು ಮೋದಿ ಕೊಡುಗೆಯಾಗಿ ನೀಡಿದ್ದರು. ಮೋದಿ ಪ್ರಧಾನಿಯಾದ ವರ್ಷದಿಂದ ಗುಜರಾತ್ನಲ್ಲಿ 26ಕ್ಕೆ 26 ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯವರೇ ಗೆಲ್ಲುತ್ತಾರೆ. ಹಾಗೆ ನೋಡಿದರೆ ನಿತಿನ್ ಗಡ್ಕರಿಯೇ ಬಿಜೆಪಿಯ ಕೊನೆಯ ಅಧ್ಯಕ್ಷರು: ತ್ರಿಮೂರ್ತಿಗಳು ಮತ್ತು ಸಂಘ ಪರಿವಾರದ ಮುಖಂಡರು ಸೇರಿ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷರನ್ನು ಆಯ್ಕೆ ಮಾಡಿದ್ದು. ನರೇಂದ್ರ ಮೋದಿ ಪ್ರಧಾನ ಮಂತ್ರಿ ಅಭ್ಯರ್ಥಿ ಎಂದು ಘೋಷಣೆಯಾದಾಗ ರಾಜನಾಥ್ ಸಿಂಗ್ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷರಾಗಿದ್ದರು. ಮೋದಿ ತಮ್ಮ ಅನುಕೂಲಕ್ಕೆ, ಸಂಘ ಪರಿವಾರದ ಮುಖಂಡರನ್ನು ಒಪ್ಪಿಸಿ ರಾಜನಾಥ್ ಸಿಂಗ್ ಅವರಿಗೆ ಆ ಹುದ್ದೆ ಕೊಡಿಸಿದ್ದರು. ನಂತರ ಬಿಜೆಪಿಗೆ ರಾಷ್ಟ್ರೀಯ ಅಧ್ಯಕ್ಷರಾಗಿ ಬಂದವರೆಲ್ಲ ಮೋದಿಯವರ ಆಜ್ಞಾ ಪಾಲಕರೇ. ನರೇಂದ್ರ ಮೋದಿಯವರ ಮೊದಲ ಅವಧಿಯ ಕೇಂದ್ರ ಸರಕಾರದಲ್ಲಿ ರಾಜನಾಥ್ ಸಿಂಗ್ ನಂಬರ್ ಟು ಸ್ಥಾನದಲ್ಲಿದ್ದರು. ಗೃಹಖಾತೆ ಅವರ ಹೆಗಲೇರಿತ್ತು. ಎರಡು ಮತ್ತು ಮೂರನೇ ಅವಧಿಯಲ್ಲಿ ರಾಜನಾಥ್ ಸಿಂಗ್ ಕೇಂದ್ರ ಸಂಪುಟದಲ್ಲಿ ಸಚಿವರಾಗಿದ್ದಾರೆ. ಆದರೆ ಅಮಿತ್ ಶಾ ಕೈ ಕೆಳಗೆ. ನಾಲ್ಕು ವರ್ಷಗಳ ಕಾಲ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷರಾಗಿದ್ದ ನಾಗಪುರದ ನಿತಿನ್ ಗಡ್ಕರಿ ಇಲ್ಲಿಯವರೆಗೆ ಮಂತ್ರಿಯಾಗಿ ಉಳಿದಿದ್ದೇ ಹೆಚ್ಚು. ಅತ್ಯುತ್ತಮ ಕೆಲಸಗಾರ ಎಂಬ ಹೆಗ್ಗಳಿಕೆ ಇದ್ದರೂ ಮೋದಿ ಯುಗದಲ್ಲಿ ಹೆಚ್ಚಿನ ಪ್ರಾಮುಖ್ಯತೆ ಇಲ್ಲ. ಸಂಘ ಪರಿವಾರದಲ್ಲಿ ಕ್ರಿಯಾಶೀಲರಾಗಿದ್ದವರೇ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷರಾಗುತ್ತಾರೆ ಎಂಬ ಪ್ರತೀತಿ ಅಳಿಸಿ ಹಾಕಿದ ಮೋದಿ-ಅಮಿತ್ ಶಾ ಜೋಡಿ ಅಕ್ಷರಶಃ ತಮಗೆ ಬೇಕಾದವರನ್ನು ಆ ಸ್ಥಾನದಲ್ಲಿ ಕೂರಿಸುತ್ತಿದ್ದಾರೆ. ಒಂದು ಬಾರಿ ಬಿಜೆಪಿ ಲೋಕಸಭಾ ಸದಸ್ಯರಾಗಿದ್ದ ಜಯಶ್ರೀ ಬ್ಯಾನರ್ಜಿ ಯಾರಿಗೂ ಗೊತ್ತಿಲ್ಲ. ಹಿಮಾಚಲ ಪ್ರದೇಶ ಮೂಲದ ಬಿಹಾರದ ಪಾಟ್ನಾದಲ್ಲಿ ಜನಿಸಿದ್ದ ಜಗನ್ನಾಥ್ ಪ್ರಕಾಶ್ ನಡ್ಡಾ 2014ಕ್ಕೂ ಮುಂಚೆ ಅಮಿತ್ ಶಾ ಸಹಾಯಕನಂತೆ ಕಾರ್ಯ ನಿರ್ವಹಿಸುತ್ತಿದ್ದರು. ಅಮಿತ್ ಶಾ ತೋರಿಕೆಗೆ ಸಂಘದ ಆಜ್ಞಾ ಪಾಲಕನ ಪೋಸು ಕೊಟ್ಟರೂ ಆತ ಮೋದಿಯವರಿಗೆ ಬೇಕಾಗಿದ್ದನ್ನೇ ಜಾರಿ ಮಾಡುತ್ತಿದ್ದರು. ಅಮಿತ್ ಶಾ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿದ್ದಾಗ ಜೆ.ಪಿ. ನಡ್ಡಾ, ರಾಮ ಮಾಧವ ಮುಂತಾದವರು ಕೈ ಚೀಲ ಹಿಡಿಯುವ ಹಿಂಬಾಲಕರು. ಈಗ ಆ ಹಿಂಬಾಲಕರಿಗೆ ಶುಕ್ರ ದೆಸೆ ಒದಗಿ ಬಂದಿದೆ. ಜೆ.ಪಿ. ನಡ್ಡಾ ಹೆಚ್ಚು ಓದಿದವರಾಗಿದ್ದರು. ಬ್ರಾಹ್ಮಣ ಎಂಬ ಬಿರುದಾವಳಿ ಇತ್ತು. ಆದರೆ ಆತ ಕೂಡ ಆರೆಸ್ಸೆಸ್ ಗರಡಿಯಲ್ಲಿ ಬೆಳೆದವರಲ್ಲ. ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತು ಸೇರಿದಂತೆ ಸಂಘ ಪರಿವಾರದ ಯಾವ ಸಂಘಟನೆಯಲ್ಲೂ ಕ್ರಿಯಾಶೀಲವಾಗಿ ತೊಡಗಿಸಿಕೊಂಡವರಲ್ಲ. ಜಯಶ್ರೀ ಬ್ಯಾನರ್ಜಿಯವರ ಅಳಿಯ ಎಂಬ ಕಾರಣಕ್ಕೆ (ಡಿಎನ್ಎ)ಹಿಮಾಚಲ ಪ್ರದೇಶ ವಿಧಾನಸಭಾ ಸದಸ್ಯರಾದರು, ಮಂತ್ರಿಯಾದರು. ಅಮಿತ್ ಶಾ ಕೈಗೊಂಬೆಯಾಗಿದ್ದಕ್ಕೆ ಮೊದಲು ನರೇಂದ್ರ ಮೋದಿ ಸಂಪುಟದಲ್ಲಿ ಆರೋಗ್ಯ ಮಂತ್ರಿಯಾದರು. ನಂತರ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿ ಅಮೋಘ ಗುಲಾಮಗಿರಿ ಮಾಡಿದರು. ಈಗ ಮತ್ತೆ ಮೋದಿ ಸಂಪುಟದಲ್ಲಿ ಆರೋಗ್ಯ ಮಂತ್ರಿ. ಕರ್ನಾಟಕದ ಡಾ. ಸಿ.ಎನ್. ಮಂಜುನಾಥ್ ಅವರಲ್ಲಿ ಇರುವ ತಜ್ಞತೆ ನಡ್ಡಾ ಅವರಲ್ಲಿ ಇಲ್ಲ. ಆದರೆ ಗುಲಾಮಗಿರಿ ರಕ್ಷಣಾ ಕವಚದಂತೆ ಅವರನ್ನು ಕಾಪಾಡುತ್ತಿದೆ. ಈಗ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷರಾಗಿ ಆಯ್ಕೆಯಾದ ನಿತಿನ್ ನಬಿನ್ ಪಿಯುಸಿ ಓದಿದ ಒಬ್ಬ ನಿಯತ್ತಿನ ಸೇವಕ ಅಷ್ಟೇ. ಆರೆಸ್ಸೆಸ್ ಅಂಗ ಸಂಸ್ಥೆಯ ಯಾವ ಸಂಘಟನೆಯಲ್ಲೂ ಕಾರ್ಯ ನಿರ್ವಹಿಸಿದ ಅನುಭವ ಇಲ್ಲ. ನಿತಿನ್ ನಬಿನ್ ತಂದೆ ನಬಿನ್ ಕಿಶೋರ್ ಪ್ರಸಾದ್ ಸಿನ್ಹಾ ಬಿಹಾರ ರಾಜ್ಯದ ಪಾಟ್ನಾ ಪಶ್ಚಿಮ ವಿಧಾನಸಭಾ ಕ್ಷೇತ್ರದಿಂದ ಮೂರು ಬಾರಿ ಬಿಜೆಪಿ ಟಿಕೆಟ್ ಮೇಲೆ ಗೆದ್ದು ಶಾಸಕರಾಗಿದ್ದರು. 2006ರಲ್ಲಿ ಹಠಾತ್ತನೇ ನಿಧನರಾದಾಗ ಡಿಎನ್ಎ ಕಾರಣಕ್ಕೆ ಅವರ ಪುತ್ರ ಇಪ್ಪತ್ತಾರು ವಯಸ್ಸಿನ ನಿತಿನ್ ನಬಿನ್ ಅಭ್ಯರ್ಥಿಯಾಗುತ್ತಾರೆ. ನಿರೀಕ್ಷೆಯಂತೆ ಅನುಕಂಪದ ಅಲೆಯಲ್ಲಿ ಭಾರೀ ಅಂತರದಲ್ಲಿ ಗೆಲುವು ಸಾಧಿಸುತ್ತಾರೆ. ಶಾಸಕನಾದ ಮೇಲೆ ಭಾರತೀಯ ಜನತಾ ಪಕ್ಷದ ಯುವ ಮೋರ್ಚಾದ ರಾಜ್ಯ ಅಧ್ಯಕ್ಷರಾಗುತ್ತಾರೆ. ನಂತರ ಭಾರತೀಯ ಜನತಾ ಪಕ್ಷದ ಯುವ ಮೋರ್ಚಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸುತ್ತಾರೆ. ನಿತಿನ್ ನಬಿನ್ ಹೆಗ್ಗಳಿಕೆಯೆಂದರೆ ಇಲ್ಲಿಯವರೆಗೆ ಚುನಾವಣಾ ರಾಜಕೀಯದಲ್ಲಿ ಸೋಲು ಅನುಭವಿಸಿಲ್ಲ. 2006ರ ಉಪಚುನಾವಣೆಯಲ್ಲಿ ಗೆದ್ದ ನಿತಿನ್ ನಬಿನ್ ಕ್ಷೇತ್ರ ಮರುವಿಂಗಡಣೆಯಾದ ಮೇಲೆ ಬಂಕಿಪುರ ವಿಧಾನಸಭಾ ಕ್ಷೇತ್ರದಿಂದ ಸತತ ನಾಲ್ಕು ಬಾರಿ ಗೆಲುವು ಸಾಧಿಸಿದ್ದಾರೆ. 2024ರಿಂದ 2025ರವರೆಗೆ ನಿತೀಶ್ ಕುಮಾರ್ ಸಚಿವ ಸಂಪುಟದಲ್ಲಿ ಕಾನೂನು ಸೇರಿದಂತೆ ಪ್ರಮುಖ ಖಾತೆಗಳ ಮಂತ್ರಿಯಾಗಿ ಕಾರ್ಯ ನಿರ್ವಹಿಸಿದ್ದಾರೆ. ನಿತಿನ್ ನಬಿನ್ ಚುನಾವಣಾ ರಾಜಕಾರಣದಲ್ಲಿ ನಿರಂತರ ಗೆಲುವು ಸಾಧಿಸಲು ಅಪ್ಪನ ಹೆಸರು ಮತ್ತು ಆತ ಹುಟ್ಟಿದ ಜಾತಿ ಬೆಂಬಲಕ್ಕೆ ನಿಂತಿ ರುತ್ತವೆ. ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಸ್ಥಾನಕ್ಕೆ ಬರಲು ಗುಲಾಮಿ ವ್ಯಕ್ತಿತ್ವ ಮತ್ತು ಆತ ಪ್ರತಿನಿಧಿಸುವ ಕಾಯಸ್ಥ ಜಾತಿಯೂ ಪ್ರಮುಖ ಪಾತ್ರ ವಹಿಸಿದೆ. ಕಾಯಸ್ಥ ಸಮುದಾಯದ ಜನಸಂಖ್ಯೆ ಹಲವು ಉತ್ತರದ ರಾಜ್ಯಗಳಲ್ಲಿ ಗಣನೀಯ ಪ್ರಮಾಣದಲ್ಲಿ ಇದೆ. ಉತ್ತರ ಪ್ರದೇಶ, ಬಿಹಾರ ಮತ್ತು ಪಶ್ಚಿಮ ಬಂಗಾಳದಲ್ಲಿ ಕಾಯಸ್ಥರು ಹೆಚ್ಚಿದ್ದಾರೆ. ಅಸ್ಸಾಂ, ಜಾರ್ಖಂಡ್, ಒಡಿಶಾ, ದಿಲ್ಲಿ, ಮಧ್ಯಪ್ರದೇಶ, ಉತ್ತರಾಖಂಡ, ರಾಜಸ್ಥಾನ, ಮಹಾರಾಷ್ಟ್ರ ರಾಜ್ಯದಲ್ಲೂ ಕಾಯಸ್ಥರ ಸಂಖ್ಯಾ ಬಾಹುಳ್ಯವಿದೆ. ಪಶ್ಚಿಮ ಬಂಗಾಳ, ಉತ್ತರ ಪ್ರದೇಶ ಚುನಾವಣೆಯನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ನಿತೀನ್ ನಬಿನ್ ಆಯ್ಕೆ ನಡೆದಿದೆ. ಯುವ ನಾಯಕತ್ವದ ಕೈಯಲ್ಲಿ ಬಿಜೆಪಿ ಎನ್ನುವುದು ಬೊಗಳೆ ಭಾಷಣ. ಈಗಲೂ ಬಿಜೆಪಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಕಪಿಮುಷ್ಟಿಯಲ್ಲಿದೆ. ತಮಗೆ ಬೇಕಾದವರಿಗೆ ಸಚಿವ ಸಂಪುಟದಲ್ಲಿ ಸ್ಥಾನ ನೀಡುತ್ತಾರೆ. ತಮಗೆ ನಿಯತ್ತು ತೋರಿದವರಿಗೆ ರಾಜ್ಯ ಅಧ್ಯಕ್ಷ ಸ್ಥಾನ, ಮುಖ್ಯಮಂತ್ರಿ ಹುದ್ದೆ ದಯಪಾಲಿಸುತ್ತಾರೆ. ಪಾಪ ಕರ್ನಾಟಕದ ಸಂತೋಷ್ ಜೀ ಈ ಜೀ ಹುಜೂರು ಸಂಸ್ಕೃತಿಯ ಭಾಗವಾದರಲ್ಲ. ಇಂಜಿನಿಯರಿಂಗ್ ಪದವೀಧರ. ಸಂಘದ ಗರಡಿಯಲ್ಲಿ ಬೆಳೆದ ಅಪಾರ ವಿದ್ವತ್ ಇರುವ ಬಿ.ಎಲ್. ಸಂತೋಷ್ ಪಿಯುಸಿ ಓದಿದ ನಿತಿನ್ ನಬಿನ್ ಕೈಯಲ್ಲಿ ಕೆಲಸ ಮಾಡುವ ಅನಿವಾರ್ಯತೆ ಸೃಷ್ಟಿಯಾಯಿತಲ್ಲ. ಸರ್ವಾಧಿಕಾರಿ ಹುಟ್ಟು ಪಡೆಯುವುದು ಇದೇ ಬಗೆಯಲ್ಲಿ.
ಮಣಿಪುರದಲ್ಲಿ ಭಯೋತ್ಪಾದಕರ ವಿರುದ್ಧ ಭಾರತೀಯ ಸೇನೆ ನಡೆಸಿದ ದಾಳಿಯಲ್ಲಿ ಭಾರೀ ಪ್ರಮಾಣದಲ್ಲಿ ಶಸ್ತ್ರಾಸ್ತ್ರಗಳು, ಮದ್ದುಗುಂಡುಗಳು ಮತ್ತು ನಗದನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಕಳೆದ ಕೆಲವು ವಾರಗಳಿಂದ ಸಾಮಾಜಿಕ ಮಾಧ್ಯಮಗಳಲ್ಲಿ ವೀಡಿಯೊ ವೈರಲ್ ಆಗಿದೆ. ಆದರೆ, ಮಣಿಪುರದಲ್ಲಿ ಭಾರತೀಯ ಸೇನೆ ಭಾರೀ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿದೆಯಾ? ವೈರಲ್ ವೀಡಿಯೊದ ಅಸಲಿಯತ್ತೇನು? ಜೂನ್ 10 ರಂದು @TIgerNS3 ಎಂಬ X ಬಳಕೆದಾರ ವೀಡಿಯೊವೊಂದನ್ನು ಪೋಸ್ಟ್ ಮಾಡಿ, ಸಶಸ್ತ್ರ ಪಡೆಗಳು ದಾಳಿ ನಡೆಸಿ ಮಣಿಪುರದ ವಿಮೋಚನಾ ವಿರೋಧಿ ಸಾಮಾಜಿಕ ಘಟಕಗಳಿಂದ ಭಾರಿ ಪ್ರಮಾಣದಲ್ಲಿ ನಗದು, ಬಂದೂಕುಗಳು, ಶಸ್ತ್ರಾಸ್ತ್ರಗಳು ಮತ್ತು ಯುದ್ಧಸಾಮಗ್ರಿಗಳ ದೊಡ್ಡ ದಾಸ್ತಾನುಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಬರೆದುಕೊಂಡಿದ್ದಾರೆ. ಇದಲ್ಲದೆ ಹ್ಯಾಶ್ಟ್ಯಾಗ್ನಲ್ಲಿ ಕುಕಿ ಭಯೋತ್ಪಾದಕರು ಎಂದು ಕೂಡ ಬರೆದಿದ್ದಾರೆ. ಸುಮಾರು ಒಂದು ತಿಂಗಳ ಹಿಂದೆ X ಬಳಕೆದಾರರಾಗಿರುವ ಜಿತೇಂದ್ರ ಪ್ರತಾಪ್ ಸಿಂಗ್(@jpsin1) ಇದೇ ರೀತಿಯ ಶೀರ್ಷಿಕೆಯೊಂದಿಗೆ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಮಣಿಪುರದಲ್ಲಿ, ಭಾರತೀಯ ಸೇನೆಯು ಭಯೋತ್ಪಾದಕರಿಂದ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳು ಮತ್ತು ಹಣವನ್ನು ವಶಪಡಿಸಿಕೊಂಡಿದೆ ಎಂದು ಹೇಳಿಕೊಂಡಿದ್ದಾರೆ. ಈಗ ಅದೇ ವೀಡಿಯೊ ಬಳಸಿಕೊಂಡು ಮಣಿಪುರದ ಮಸೀದಿಯಲ್ಲಿ ಸಿಕ್ಕ ಆಯುಧಗಳಿವು ಹಾಗೆ ಇದನ್ನು ಎಲ್ಲಾ ಹಿಂದೂ ಬಾಂಧವರಿಗೆ ಹಂಚಿಕೊಳ್ಳಿ ಎಂಬ ಒಕ್ಕಣೆಯೊಂದಿಗೆ ವಾಟ್ಸ್ ಆಪ್ ನಲ್ಲಿ ಶೇರ್ ಮಾಡಲಾಗುತ್ತಿದೆ. ಇದೇ ರೀತಿಯ ನಿರೂಪಣೆಯೊಂದಿಗೆ ಹಲವಾರು ಎಕ್ಸ್ ಬಳಕೆದಾರರು ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ವಾಸ್ತವವೇನು? ವೈರಲ್ ವೀಡಿಯೊದಲ್ಲಿದ್ದ ವ್ಯಕ್ತಿಗಳು ಧರಿಸಿದ್ದ ಯೂನಿಫಾರ್ಮ್ಗಳ ಮೇಲೆ BNRA ಲೋಗೋ ಇರುವುದನ್ನು ನಾವು ಗಮನಿಸಿದ್ದೇವೆ. BNRA ಎಂದರೆ ಬರ್ಮಾ ನ್ಯಾಷನಲ್ ರೆವಲ್ಯೂಷನರಿ ಆರ್ಮಿ (Burma National Revolutionary Army). ಇದು ಮ್ಯಾನ್ಮಾರ್ 2023ರ ಸೆಪ್ಟೆಂಬರ್ 9ರಂದು ಸ್ಥಾಪನೆಯಾದ ಹೊಸ ಸೇನಾ ಸಂಘಟನೆಯಾಗಿದೆ. ಆದ್ದರಿಂದ ಈ ವೈರಲ್ ವೀಡಿಯೊಗೂ ಭಾರತಕ್ಕೂ ಸಂಬಂಧವುವಿಲ್ಲ ಎಂದು altnews.in ನಡೆಸಿದ ಸತ್ಯಶೋಧನೆಯು ಬಹಿರಂಗಗೊಳಿಸಿದೆ. BNRAಯ ಅಧಿಕೃತ ಫೇಸ್ಬುಕ್ ಪುಟದಲ್ಲಿರುವ BNRA ಲೋಗೋ ಮತ್ತು ವಿಡಿಯೋದಲ್ಲಿನ ಸೈನಿಕರ ಯೂನಿಫಾರ್ಮ್ಗಳಲ್ಲಿದ್ದ ಲೋಗೊಗಳನ್ನು ಪರಿಶೀಲನೆ ನಡೆಸಿದಾಗ ಎರಡೂ ಹೋಲಿಕೆಯಾಗಿದೆ. ಈ ವೀಡಿಯೊದಲ್ಲಿ ಕಂಡು ಬಂದಿರುವುದು ಬರ್ಮಾ ನ್ಯಾಷನಲ್ ರೆವಲ್ಯೂಷನರಿ ಆರ್ಮಿಯೇ ಎಂಬುದನ್ನು ದೃಢಪಡಿಸುತ್ತದೆ. ಹೆಚ್ಚುವರಿಯಾಗಿ ವೀಡಿಯೊದ ಕೊನೆಯಲ್ಲಿ, ಮಧ್ಯದಲ್ಲಿ ಬಿಳಿ ವೃತ್ತವಿರುವ ನೀಲಿ, ಕೆಂಪು ಮತ್ತು ಹಸಿರು ಬಣ್ಣದ ಧ್ವಜ ಕಂಡು ಬಂದಿದೆ. ಅದರೊಳಗೆ ಕೆಲವು ಆಕೃತಿಯನ್ನು ರಚಿಸಲಾಗಿದೆ. ಈ ಕುರಿತು ಹೆಚ್ಚಿನ ಪರಿಶೀಲನೆ ನಡೆಸಿದಾಗ ಈ ಧ್ವಜವು ಚಿನ್ ರಾಷ್ಟ್ರೀಯ ರಕ್ಷಣಾ ಪಡೆ (CNDF)ಗೆ ಸೇರಿದೆ ಎನ್ನುವುದು ಬಹಿರಂಗವಾಗಿದೆ. ಇದು ಮ್ಯಾನ್ಮಾರ್ನ ಚಿನ್ ರಾಜ್ಯದಿಂದ ಕಾರ್ಯನಿರ್ವಹಿಸುವ ಬಂಡಾಯ ಗುಂಪು. ಚಿನ್ ಭಾರತದ ಮಣಿಪುರ ರಾಜ್ಯದೊಂದಿಗೆ ಗಡಿಗಳನ್ನು ಹಂಚಿಕೊಳ್ಳುತ್ತದೆ. ಈ ಕುರಿತು ಹೆಚ್ಚಿನ ಪರಿಶೀಲನೆ ನಡೆಸಿದಾಗ ಏಪ್ರಿಲ್ 24ರ ಫೇಸ್ಬುಕ್ ಪೋಸ್ಟ್ವೊಂದು ಗಮನಕ್ಕೆ ಬಂದಿದೆ. ಅದರಲ್ಲಿ ಶೀರ್ಷಿಕೆಯನ್ನು ಮಿಜೋ ಭಾಷೆಯಲ್ಲಿ ಬರೆಯಲಾಗಿದೆ ಮತ್ತು ಸಿಬಿ ಗುಂಪು ಮತ್ತು ಅವರ ಪೂರ್ವಜರು ಫಲಮ್ ಗ್ರಾಮದಲ್ಲಿ 268 ಜನರನ್ನು ಸೋಲಿಸಿದರು ಮತ್ತು ಶಸ್ತ್ರಾಸ್ತ್ರಗಳು ಮತ್ತು ಹಣವನ್ನು ವಶಪಡಿಸಿಕೊಂಡರು ಎಂದು ಬರೆದಿರುವುದು ಕಂಡು ಬಂದಿದೆ. ಈ ಕುರಿತು ಮತ್ತಷ್ಟು ಪರಿಶೀಲನೆ ನಡೆಸಿದಾಗ ಮ್ಯಾನ್ಮಾರ್ ಮೂಲದ ಮಾಧ್ಯಮ ಸಂಸ್ಥೆಯಾದ Khit Thit ಮೀಡಿಯಾದ ಏಪ್ರಿಲ್ 10 ರ ಫೇಸ್ಬುಕ್ ಪೋಸ್ಟ್ ದೊರೆತಿದೆ. ಅದರಲ್ಲಿ ಆ ಪೋಸ್ಟ್ನಲ್ಲಿ ವೈರಲ್ ಆಗಿರುವ ವೀಡಿಯೊವನ್ನು ಹಂಚಿಕೊಳ್ಳಲಾಗಿದೆ ಮತ್ತು ಬರ್ಮೀಸ್ ಭಾಷೆಯಲ್ಲಿ, ಫಲಂ ಪಟ್ಟಣಕ್ಕಾಗಿ ನಡೆದ ಯುದ್ಧದಲ್ಲಿ ಲಕ್ಷಾಂತರ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ. ಏಪ್ರಿಲ್ 9ರಂದು ಸಂಪೂರ್ಣ ಫಲಂ ಪಟ್ಟಣವನ್ನು ಅಂತಿಮ ದಾಳಿ ಮಾಡಿ ವಶಪಡಿಸಿಕೊಳ್ಳಲಾಗಿದೆ. ಚಿನ್ ನಿಯಿನೌಂಗ್ ಗುಂಪು( Chin Nyinaung group) ಮಿಲಿಟರಿ ಕೌನ್ಸಿಲ್ನಿಂದ ಸಾವಿರಾರು ಪ್ರಮಾಣದ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಂಡಿದೆ ಎಂದು ಬರೆಯಲಾಗಿದೆ. ಮ್ಯಾನ್ಮಾರ್ ಮೂಲದ ಹಲವಾರು ಇತರ ಸುದ್ದಿ ಸಂಸ್ಥೆಗಳು ಕೂಡ ಇದೇ ರೀತಿ ವರದಿ ಮಾಡಿವೆ. ಇದರಿಂದಾಗಿ ವೈರಲ್ ಕ್ಲಿಪ್ ಮ್ಯಾನ್ಮಾರ್ನದ್ದಾಗಿದೆ ಎಂಬುದು ಸ್ಪಷ್ಟವಾಗಿದೆ. ಇದಕ್ಕೂ ಮಣಿಪುರಕ್ಕೂ ಯಾವುದೇ ಸಂಬಂಧವಿಲ್ಲ ಎನ್ನುವುದು ಬಹಿರಂಗವಾಗಿದೆ.
India and European Union: ಭಾರತ ಮತ್ತು ಯುರೋಪ್ ನಡುವೆ ಮಹತ್ವದ ವ್ಯಾಪಾರ ಒಪ್ಪಂದ, ಅಂತಿಮ ಮಾತುಕತೆಗೆ ಕ್ಷಣಗಣನೆ
ಭಾರತ ಮತ್ತು ಯುರೋಪ್ ದೇಶಗಳ ನಡುವೆ ಗಟ್ಟಿಯಾದ ಸಂಬಂಧ ಇದ್ದು, ಅಮೆರಿಕ ಮೀರಿಸುವ ರೀತಿ ಎರಡೂ ಒಕ್ಕೂಟಗಳು ವ್ಯಾಪಾರ ಮತ್ತು ವಹಿವಾಟು ನಡೆಸುತ್ತವೆ. ಅದರಲ್ಲೂ ಪ್ರತಿವರ್ಷವೂ ಭಾರತ ಲಕ್ಷಾಂತರ ಕೋಟಿ ರೂಪಾಯಿ ಮೌಲ್ಯದ ವಸ್ತುಗಳನ್ನು ಯುರೋಪ್ ನೆಲಕ್ಕೆ ರಫ್ತು ಮಾಡಿ ಲಾಭ ಮಾಡುತ್ತಿದೆ. ಹಾಗೇ ಯುರೋಪ್ ಒಕ್ಕೂಟಕ್ಕೂ ಭಾರತದ ಜೊತೆಗಿನ ವ್ಯಾಪಾರ ಸಾಕಷ್ಟು ಲಾಭ ನೀಡುತ್ತಿದೆ. ಹೀಗಾಗಿ
House: ಕರ್ನಾಟಕದಲ್ಲಿ ಬಡವರಿಗೆ 42,345 ಮನೆಗಳ ಹಸ್ತಾಂತರ: ಯಾವ ವರ್ಗದವರಿಗೆ ಎಷ್ಟು ತಿಳಿಯಿರಿ
House: ಕರ್ನಾಟಕದಲ್ಲಿ ನಿರ್ಮಿಸಿದ 42,345 ಮನೆಗಳನ್ನು ಬಡವರಿಗೆ ಇಂದು (ಜನವರಿ 24) ಹಸ್ತಾಂತರ ಮಾಡಲಾಗುತ್ತದೆ. ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯಿಂದ ಮನೆಗಳ ಹಸ್ತಾಂತರ ಕಾರ್ಯಕ್ರಮ ಹುಬ್ಬಳ್ಳಿಯಲ್ಲಿ ನಡೆಯಲಿದೆ. ಹಾಗಾದ್ರೆ ಯಾವ ವರ್ಗದವರಿಗೆ ಎಷ್ಟು ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ. ಒಟ್ಟಿಗೆ ಇಷ್ಟು ಮನೆಗಳ ಹಸ್ತಾಂತರ ದೇಶದಲ್ಲೇ ಮೊದಲಾಗಿದೆ. ಹುಬ್ಬಳ್ಳಿಯಲ್ಲಿ
ರಾಜ್ಯಪಾಲರು Vs ಸರ್ಕಾರ : ಜ. 26ರ ಭಾಷಣಕ್ಕೂ ಸಿದ್ದರಾಮಯ್ಯ ಸರ್ಕಾರದ ಸ್ಕ್ರಿಪ್ಟ್ - ಮತ್ತೆ ಸಾಂವಿಧಾನಿಕ ಸಂಘರ್ಷ?
Governor Speech in Republic Day : ವಿಧಾನಮಂಡಲದ ಅಧಿವೇಶನದ ವೇಳೆ ನಡೆದ ವಿದ್ಯಮಾನ ಮತ್ತೊಮ್ಮೆ ಪುನರಾವರ್ತನೆ ಆಗುತ್ತಾ ಎನ್ನುವುದು ಕುತೂಹಲಕ್ಕೆ ಕಾರಣವಾಗಿದೆ. ಜನವರಿ 26 ಗಣರಾಜ್ಯೋತ್ಸವದ ದಿನದಂದೂ, ರಾಜ್ಯಪಾಲರು, ಸಾಮಾನ್ಯವಾಗಿ ಸರ್ಕಾರ ಸಿದ್ದಪಡಿಸಿ ಕೊಡುವ ಭಾಷಣವನ್ನೇ ಓದುವುದು ಹಿಂದಿನಿಂದಲೂ ನಡೆದುಕೊಂಡು ಬಂದ ಸಂಪ್ರದಾಯ.
Heavy Rain Alert: ತಮಿಳುನಾಡು ಸೇರಿದಂತೆ ಈ ರಾಜ್ಯಗಳಲ್ಲಿ ಇನ್ನೆರಡು ದಿನ ಭಾರೀ ಮಳೆ ಸಾಧ್ಯತೆ
ನವದೆಹಲಿ: ಜನವರಿ 26ರಿಂದ 28ರವರೆಗೆ ಉತ್ತರ ಪಶ್ಚಿಮ ಭಾರತವನ್ನು ಮತ್ತೊಂದು ತೀವ್ರ ವಾಯುಚಲನೆ ಪ್ರಭಾವಿಸುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಈ ವಾಯುಚಲನೆಯ ಪರಿಣಾಮವಾಗಿ ಜನವರಿ 27ರಂದು ಪಶ್ಚಿಮ ಹಿಮಾಲಯ ಪ್ರದೇಶಗಳಲ್ಲಿ ಕೆಲವೆಡೆ ಭಾರೀ ಮಳೆ ಹಾಗೂ ಹಿಮಪಾತ ಸಂಭವಿಸುವ ಸಾಧ್ಯತೆ ಇದೆ. ಈಗಾಗಲೇ ಜಮ್ಮು-ಕಾಶ್ಮೀರ-ಲಡಾಖ್ ಮತ್ತು ಹಿಮಾಚಲ ಪ್ರದೇಶಗಳ ಬಹುತೇಕ
ಬೆಳ್ಳಂದೂರು ಕೆರೆಯ ಬಫರ್ ಝೋನ್ ವ್ಯಾಪ್ತಿಯಲ್ಲಿ ಖಾಸಗಿ ವ್ಯಕ್ತಿಗಳು ಕಟ್ಟಡದ ತ್ಯಾಜ್ಯವನ್ನು ಕೆರೆಯ ಮಧ್ಯೆ ಸುರಿಯುತ್ತಿರುವುದನ್ನು ಕಂಡು ಸುತ್ತಮುತ್ತಲಿನ ನಿವಾಸಿಗಳು ಕಂಗಾಲಾಗಿದ್ದಾರೆ. ಒತ್ತುವರಿ ಬಗ್ಗೆ ದೂರು ನೀಡಿದರೂ ಸಹ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ. ಹೀಗಾಗಿ ಸಿದ್ದರಾಮಯ್ಯನವರಿಗೆ ಮನವಿ ಪತ್ರ ಕೊಡಲಾಗಿದೆ ಎಂದು ವಕೀಲರೊಬ್ಬರು ತಿಳಿಸಿದ್ದಾರೆ. ಒತ್ತುವರಿಯಿಂದ ಸಮಸ್ಯೆಯಾಗುತ್ತದೆ ಎಂದು ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮನರೇಗಾ ವಿಚಾರದಲ್ಲಿ ವಿಶೇಷ ಅಧಿವೇಶನ ಕರೆದು ಕೇಂದ್ರ ಸರ್ಕಾರಕ್ಕೆ ಠಕ್ಕರ್ ನೀಡಲು ಪ್ಲ್ಯಾನ್ ಮಾಡಿಕೊಂಡಿರುವ ಕಾಂಗ್ರೆಸ್ ಸರ್ಕಾರ ಇದೀಗ ಅಬಕಾರಿ ಇಲಾಖೆ ಸಚಿವ ಆರ್ ಬಿ ತಿಮ್ಮಾಪುರ ವಿರುದ್ಧದ ಹಗರಣ ಆರೋಪದಿಂದ ಕಂಗಾಲಾಗಿದೆ. ಸದನದಲ್ಲಿ ಈಗಾಗಲೇ ಈ ವಿಚಾರ ಪ್ರಸ್ತಾಪ ಮಾಡಿರುವ ಬಿಜೆಪಿ ಸಚಿವರ ತಲೆದಂಡಕ್ಕೆ ಒತ್ತಾಯ ಮಾಡಿದೆ. ಉಭಯ ಸದನದಲ್ಲಿ ನಿಲುವಳಿ ಸೂಚನೆ ನೀಡುವ ಮೂಲಕ ಈ ಪ್ರಕರಣವನ್ನು ದೊಡ್ಡ ಮಟ್ಟದಲ್ಲಿ ಬಿಂಬಿಸಲು ವಿಪಕ್ಷ ಸಜ್ಜಾಗಿದೆ. ಹೀಗಾಗಿ ಇದು ಸರ್ಕಾರಕ್ಕೆ ತಲೆವೋವಾಗಿ ಮಾರ್ಪಟ್ಟಿದೆ.
ಬೆಂಗಳೂರು–ಮಂಗಳೂರು ರಾಷ್ಟ್ರೀಯ ಹೆದ್ದಾರಿ ಕಾಮಗಾರಿ: ಮೇ ಒಳಗೆ ಸಂಚಾರ ಮುಕ್ತಗೊಳಿಸಲು ಸೂಚನೆ
ಹಾಸನ: ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ಹಾಸನ ವ್ಯಾಪ್ತಿಯಲ್ಲಿನ ನಡೆಯುತ್ತಿರುವ ಕಾಮಗಾರಿಗಳಿಂದ ಉಂಟಾಗಿರುವ ಸಮಸ್ಯೆಗಳ ಕುರಿತು ಸಚಿವ ಕೃಷ್ಣ ಬೈರೇಗೌಡ ಅವರ ಅಧ್ಯಕ್ಷತೆಯಲ್ಲಿ ಹಾಸನ ಸಂಸದ ಶ್ರೇಯಸ್ ಎಂ.ಪಟೇಲ್ ಅವರು ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಗುತ್ತಿಗೆದಾರರೊಂದಿಗೆ ಮಹತ್ವದ ಸಭೆ ನಡೆಸಿದರು. ಸಭೆಯಲ್ಲಿ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಗಳ ಬಗ್ಗೆ ಚರ್ಚಿಸಿ, ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ಸ್ಪಷ್ಟ ನಿರ್ದೇಶನ ನೀಡಲಾಯಿತು. ಸುಮಾರು
ಅಮೆರಿಕಾದಲ್ಲಿ H-1B ವೀಸಾಗಳ ದುರುಪಯೋಗದ ಕುರಿತು ಟೆಕ್ಸಾಸ್ ಮೂಲದ MAGA ಬೆಂಬಲಿತ ಪತ್ರಕರ್ತ ಬ್ಲೇಕ್ ಕ್ರೆಸೆಸ್ ಅವರ ಹೇಳಿಕೆಗಳು ಭಾರತೀಯ ವಿರೋಧಿ ಮತ್ತು ಹಿಂದೂ ವಿರೋಧಿ ಭಾವನೆಗಳನ್ನು ಕೆರಳಿಸಿವೆ. ವೀಸಾ ಕಾರ್ಯಕ್ರಮದ ದುರ್ಬಳಕೆಯ ಬಗ್ಗೆ ಸಾರ ಗೊಂಜಾಲೆಸ್ ಬಿಡುಗಡೆ ಮಾಡಿದ ವಿಡಿಯೋಗಳ ಬೆನ್ನಲ್ಲೇ ಕ್ರೆಸೆಸ್ ಅಮೆರಿಕಾದ ಟೆಕ್ಸಾಸ್ ನಲ್ಲಿ ಪ್ರತಿ ಮನೆಯನ್ನು ಭಾರತೀಯುರ ಆಕ್ರಮಿಸಿಕೊಂಡಿದ್ದಾರೆ. ಅವರ ಮನೆಗಳಲ್ಲಿ ರಾಕ್ಷಸ ರೀತಿ ಕಾಣುವ ಆನೆಯ ವಿಗ್ರಹವಿದೆ ಎಂದು ಹೇಳುವ ಮೂಲಕ ಈ ಜನಾಂಗೀಯ ನಿಂದನೆಯ ವಿವಾದ ಸೃಷ್ಟಿಸಿದ್ದು, ಈ ಹೇಳಿಕೆಗಳು ದ್ವೇಷಪೂರಿತವಾಗಿವೆ ಎಂದು ಭಾರತೀಯ ವಲಸಿಗರು ಕಿಡಿಕಾರುತ್ತಿದ್ದಾರೆ.
ಮಲೆ ಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆ, ದ್ವಿಚಕ್ರ ವಾಹನ ಸಂಚಾರ ನಿರ್ಬಂಧ ಮುಂದುವರಿಕೆ
ಮಲೆಮಹದೇಶ್ವರ ಬೆಟ್ಟದಲ್ಲಿ ಚಿರತೆ ಸೆರೆ ಸಿಕ್ಕಿದೆ. ಆದರೂ, ಪಾದಯಾತ್ರೆ ಮತ್ತು ದ್ವಿಚಕ್ರ ವಾಹನ ಸಂಚಾರದ ಮೇಲಿನ ನಿರ್ಬಂಧವನ್ನು ಜಿಲ್ಲಾಡಳಿತ ಮುಂದುವರಿಸಿದೆ. ಜನವರಿ 24ರವರೆಗೆ ಈ ನಿರ್ಬಂಧ ಜಾರಿಯಲ್ಲಿರುತ್ತದೆ. ಅರಣ್ಯಾಧಿಕಾರಿಗಳು ಡ್ರೋನ್ ಬಳಸಿ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಸಾರ್ವಜನಿಕರ ಸುರಕ್ಷತೆಗಾಗಿ ಈ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ. ಇನ್ನಷ್ಟು ಚಿರತೆಗಳ ಉಪಟಳದ ಬಗ್ಗೆ ಖಚಿತಪಡಿಸಿಕೊಳ್ಳಲು ಈ ಕಾರ್ಯಾಚರಣೆ ನಡೆಯುತ್ತಿದೆ.
IND Vs NZ : ಪಂದ್ಯ ಗೆಲ್ಲಲು ಕಾರಣನಾದ ಇಶಾನ್ ಕಿಶನ್ ಮೇಲೆಯೇ ನಾಯಕ 'SKY' ಗರಂ - ಕಾರಣ ಬಹಿರಂಗ
SKY Angry On Ishan Kishan : ಕಿವೀಸ್ ವಿರುದ್ದದ ಟಿ20 ಸರಣಿಯ ಎರಡನೇ ಪಂದ್ಯದಲ್ಲಿ ಭಾರತ ಭರ್ಜರಿ ಗೆಲುವನ್ನು ಸಾಧಿಸಿದೆ. ಫಾರಂನಲ್ಲಿ ಇಲ್ಲದೇ ಒದ್ದಾಡುತ್ತಿದ್ದ ನಾಯಕ ಸೂರ್ಯ ಕುಮಾರ್ ಯಾದವ್ ಭರ್ಜರಿ ಬ್ಯಾಟಿಂಗ್ ಅನ್ನು ಪ್ರದರ್ಶಿಸಿದ್ದಾರೆ. ಇನ್ನು, ಒನ್’ಡೌನ್ ನಲ್ಲಿ ಆಡಲು ಬಂದ ಇಶಾನ್ ಕಿಶನ್ ಭರ್ಜರಿ ಬ್ಯಾಟಿಂಗ್’ಅನ್ನು ಪ್ರದರ್ಶಿಸಿದರು. ಆದರೂ, ನಾಯಕ ಸ್ಕೈ, ಕಿಶಾನ್ ಮೇಲೆ ಗರಂ ಆದ ವಿದ್ಯಮಾನ ನಡೆದಿದೆ.
ಅದಾನಿ ಗ್ರೀನ್ ಎನರ್ಜಿ ದಾಖಲೆ ಸಾಧನೆ; 9 ತಿಂಗಳಲ್ಲಿ ಶೇ 37ರಷ್ಟು ಬೆಳವಣಿಗೆ
ಅಹಮದಾಬಾದ್: ಭಾರತದ ಅತಿದೊಡ್ಡ ಹಾಗೂ ವೇಗವಾಗಿ ಬೆಳೆಯುತ್ತಿರುವ ಶುದ್ಧ ನವೀಕರಿಸಬಹುದಾದ ಇಂಧನ ಸಂಸ್ಥೆಯಾದ ಅದಾನಿ ಗ್ರೀನ್ ಎನರ್ಜಿ ಲಿಮಿಟೆಡ್ (ಎಜಿಇಎಲ್) 2025 ಡಿಸೆಂಬರ್ 31ಕ್ಕೆ ಅಂತ್ಯಗೊಂಡ ಹಣಕಾಸು ಅವಧಿಯ (Q3 ಮತ್ತು 9M FY26) ಫಲಿತಾಂಶಗಳನ್ನು ಪ್ರಕಟಿಸಿದ್ದು, ವರ್ಷದಿಂದ ವರ್ಷಕ್ಕೆ ಶೇ 37ರಷ್ಟು ಬೆಳವಣಿಗೆ ದಾಖಲಿಸಿರುವುದಾಗಿ ಘೋಷಿಸಿದೆ. ಹಸಿರು ಇಂಧನ ಕ್ಷೇತ್ರದಲ್ಲಿ ಭಾರೀ ಗ್ರೀನ್ಫೀಲ್ಡ್ ಸಾಮರ್ಥ್ಯ ವೃದ್ಧಿ,
ಕಲಬುರಗಿಯಿಂದ ಚತುಷ್ಪಥವಿಲ್ಲ; ಬೆಂಗಳೂರು ಪ್ರಯಾಣ ಬಲು ಹೈರಾಣ
ಕಲಬುರಗಿಯಲ್ಲಿ ಚತುಷ್ಪಥ ಹೆದ್ದಾರಿಗಳಿಲ್ಲದಿರುವುದು ಜನರಲ್ಲಿ ಅಸಮಾಧಾನ ಮೂಡಿಸಿದೆ. ಇದರಿಂದ ಕೈಗಾರಿಕೆ ಮತ್ತು ಆರ್ಥಿಕ ಅಭಿವೃದ್ಧಿಗೆ ಹಿನ್ನಡೆಯಾಗುತ್ತಿದೆ. ಜೇವರ್ಗಿಯಿಂದ ಬಳ್ಳಾರಿ, ಹುಮನಾಬಾದ್ನಿಂದ ವಿಜಯಪುರ, ಕಲಬುರಗಿಯಿಂದ ಕೃಷ್ಣ ಹೆದ್ದಾರಿಗಳನ್ನು ಚತುಷ್ಪಥವನ್ನಾಗಿ ಅಭಿವೃದ್ಧಿಪಡಿಸಬೇಕೆಂಬುದು ಜನರ ಆಗ್ರಹವಾಗಿದೆ. ಇದು ಉತ್ತರ ಕರ್ನಾಟಕವನ್ನು ದಕ್ಷಿಣ ಕರ್ನಾಟಕಕ್ಕೆ ಸಂಪರ್ಕಿಸುತ್ತದೆ.
ಜನವರಿ 24ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ
Petrol, Diesel Price: ಪೆಟ್ರೋಲ್, ಡೀಸೆಲ್ ದರದಲ್ಲಿ ಜಾಸ್ತಿ ಅಲ್ಲದಿದ್ದರೂ, ಸ್ವಲ್ಪ ಪ್ರಮಾಣದಲ್ಲಾದರೂ, ಏರಿಳಿತ ಆಗುತ್ತಿರುತ್ತದೆ. ಹಾಗಾದರೆ, ಇಂದು (ಜನವರಿ 24) ಬೆಂಗಳೂರು ಸೇರಿದಂತೆ ರಾಜ್ಯದ ಉಳಿದ ಜಿಲ್ಲೆಗಳಲ್ಲಿ ಲೀಟರ್ ಪೆಟ್ರೋಲ್, ಡೀಸೆಲ್ ಬೆಲೆ ಎಷ್ಟಿದೆ ಎನ್ನುವ ಅಂಕಿಅಂಶಗಳನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ. ಶಕ್ತಿಯ ಮೂಲಗಳು ಎನಿಸಿಕೊಂಡಿರುವ ಪೆಟ್ರೋಲ್ ಮತ್ತು ಡೀಸೆಲ್ ಇಂಧನ ಅತ್ಯವಶ್ಯಕವಾಗಿ ಬೇಕಾಗುವ ಸಂಪನ್ಮೂಲಗಳಾಗಿವೆ.
ಚಾಮರಾಜನಗರ–ತಮಿಳುನಾಡು ಅಂತರರಾಜ್ಯ ಹೆದ್ದಾರಿಯಲ್ಲಿ ಜೋಡಿ ಚಿರತೆಗಳ ಸಂಚಾರ: ಜನರಲ್ಲಿ ಆತಂಕ
ಚಾಮರಾಜನಗರ: ಕರ್ನಾಟಕ–ತಮಿಳುನಾಡು ಸಂಪರ್ಕಿಸುವ ಚಾಮರಾಜನಗರ ಜಿಲ್ಲೆಯ ಲೊಕ್ಕನಹಳ್ಳಿ–ಒಡೆಯರಪಾಳ್ಯ ನಡುವಿನ ಅಂತರರಾಜ್ಯ ಹೆದ್ದಾರಿಯಲ್ಲಿ ಜೋಡಿ ಚಿರತೆಗಳು ಕಾಣಿಸಿಕೊಂಡಿದ್ದು, ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಕೊಳ್ಳೇಗಾಲ–ಲೊಕ್ಕನಹಳ್ಳಿ ಮಾರ್ಗವಾಗಿ ತಮಿಳುನಾಡಿಗೆ ತೆರಳುವ ಅಂತರರಾಜ್ಯ ಹೆದ್ದಾರಿಯ ಚಿಕ್ಕರಂಗಶೆಟ್ಟಿ ದೊಡ್ಡಿ ಸಮೀಪ ರಸ್ತೆ ಬದಿಯಲ್ಲಿ ಶುಕ್ರವಾರ ರಾತ್ರಿ ಸುಮಾರು 9.30ರ ವೇಳೆಗೆ ಜೋಡಿ ಚಿರತೆಗಳು ಕಾಣಿಸಿಕೊಂಡಿವೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಈ ಪ್ರದೇಶವು ಬಿಳಿಗಿರಿರಂಗನಾಥಸ್ವಾಮಿ ಹುಲಿ ಸಂರಕ್ಷಿತ ಅರಣ್ಯಕ್ಕೆ ಹೊಂದಿಕೊಂಡಿದ್ದು, ಇತ್ತೀಚಿನ ದಿನಗಳಲ್ಲಿ ಚಿರತೆಗಳ ಸಂಚಾರ ಹೆಚ್ಚಾಗಿದೆ. ವಿಶೇಷವಾಗಿ ಬೇಟೆಗಾಗಿ ರಸ್ತೆ ಬದಿಯಲ್ಲಿ ಹೊಂಚು ಹಾಕುತ್ತಿರುವ ಚಿರತೆಗಳಿಂದ ಸುತ್ತಮುತ್ತಲಿನ ಗ್ರಾಮಸ್ಥರು ಜೀವಭಯದಲ್ಲಿದ್ದು, ವಾಹನ ಸವಾರರು ಹಾಗೂ ಸಾರ್ವಜನಿಕರಲ್ಲಿ ಆತಂಕ ವಾತಾವರಣ ನಿರ್ಮಾಣವಾಗಿದೆ.
ಅತ್ತ ದರಿ (ಅಮೆರಿಕದ ತಾರಿಫ್); ಇತ್ತ ಪುಲಿ (ಚೀನಾ ಜೊತೆ ಟ್ರೇಡ್ ಡೆಫಿಸಿಟ್)
ಜಗತ್ತಿನ ಅತಿದೊಡ್ಡ ಆರ್ಥಿಕತೆಯಾದ ಅಮೆರಿಕ ಹುಚ್ಚಾಟದಲ್ಲಿ ತೊಡಗಿದ್ದರೆ, ಎರಡನೇ ದೊಡ್ಡ ಆರ್ಥಿಕತೆಯಾದ ಚೀನಾ ತನ್ನ ಆಂತರಿಕ ಆರ್ಥಿಕ ಸಮತೋಲನಕ್ಕೆ ಬೇರೆ ದೇಶಗಳಿಗೆ ರಫ್ತನ್ನು ಅವಲಂಬಿಸಿಕೊಂಡು ಕುಳಿತಿದೆ. ಈ ಎರಡೂ ಕಡೆಯ ಒತ್ತಡಗಳು ಭಾರತದ ಒಳಗೆ ಆರ್ಥಿಕ ಸಂಕಟಗಳಿಗೆ ಹಾದಿ ತೆರೆಯುತ್ತಿದ್ದು, ಭಾರತ ಸರಕಾರಕ್ಕೆ ಅತ್ತ ದರಿ ಇತ್ತ ಪುಲಿ ಎಂಬಂತಾಗಿದೆ. ಬೇರೆಲ್ಲ ಸದ್ದುಗಳನ್ನೂ ಮರೆಸುವಂತೆ ಸ್ವಪ್ರಶಂಸೆಯ ತಮಟೆ ಸದ್ದು ಬಾರಿಸುತ್ತಿರಬೇಕೆಂಬ ಗುತ್ತಿಗೆಯನ್ನು ಮಾಧ್ಯಮಗಳಿಗೆ ಕೊಟ್ಟಿರುವ ಭಾರತ ಸರಕಾರವನ್ನು ‘ವಿಶ್ವಗುರು’ ಎಂದು ಬಿಂಬಿಸುತ್ತಿರುವ ಮಾಧ್ಯಮಗಳು, ವಾಸ್ತವಕ್ಕೆ ಮುಖಾಮುಖಿ ಆಗದೇ ಹೋದರೆ, ಈಗಾಗಲೇ ಕೆಟ್ಟು ಕೆರ ಹಿಡಿದಿರುವ ಮಾಧ್ಯಮಗಳ ವಿಶ್ವಾಸಾರ್ಹತೆ ಸಾರ್ವಜನಿಕರ ಅಸಹನೆಗೆ ತುತ್ತಾಗುವ ದಿನಗಳು ದೂರ ಇಲ್ಲ ಎಂದು ಬಲವಾಗಿ ಅನ್ನಿಸತೊಡಗಿದೆ. ಸರಕಾರದ ಪರ ಮಾಧ್ಯಮಗಳ ವಕೀಲಿಕೆ ಯಾವ ಮಟ್ಟಿಗಿದೆ ಎಂದರೆ, ಅಮೆರಿಕದ ಮುನಿಸಿನ ಬೆನ್ನಲ್ಲೇ ಭಾರತ-ಚೀನಾಗಳ ಸಂಬಂಧ ಹೊಸದಾಗಿ ಚಿಗುರುತ್ತಿದೆ ಡ್ರಾಗನ್-ಆನೆ ಜೋಡಿಯಾಗಿವೆ ಎಂದೆಲ್ಲ ನೆರೇಟಿವ್ಗಳನ್ನು ಹೆಣೆಯಲಾಗುತ್ತಿದೆ. ಈ ಸನ್ನಿವೇಶವನ್ನು ಹೇಗೆ ನೋಡಬೇಕು? ಅಮೆರಿಕದ ದಂಡಸುಂಕ ವೈಧಾನಿಕ ಹುಚ್ಚಾಟದಲ್ಲಿ (method in madness) ತೊಡಗಿಕೊಂಡಿರುವ ಅಮೆರಿಕ ಅಧ್ಯಕ್ಷರು ಹೊರನೋಟಕ್ಕೆ ತೀರಾ ಅಸಡ್ಡಾಳ ಅನ್ನಿಸುವ ಹಲವು ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದು, ತನ್ನ ವಿದೇಶ ನೀತಿ, ಆರ್ಥಿಕ ನೀತಿಗಳಲ್ಲಿ ಆತ್ಮಘಾತಕ ಅನ್ನಿಸುವಷ್ಟು ವಿಪರೀತಕ್ಕೆ ತಲುಪಿದ್ದಾರೆ. ಮುಕ್ತ ಮಾರುಕಟ್ಟೆಯ ಪ್ರತಿಪಾದಕ ದೇಶವಾಗಿದ್ದೂ, ಎಲ್ಲ ಅಂತರ್ರಾಷ್ಟ್ರೀಯ ಒಪ್ಪಂದಗಳನ್ನು ಉಲ್ಲಂಘಿಸಿ, ಅಧ್ಯಕ್ಷ ಟ್ರಂಪ್ ಅವರ ಮರ್ಜಿಗೆ ತಕ್ಕಂತೆ, ಹಲವು ದೇಶಗಳ ಮೇಲೆ ವಿಧಿಸಲಾಗುತ್ತಿರುವ ಈ ಶಿಕ್ಷಾರೂಪದ ತಾರಿಫ್ಗಳು ಅಮೆರಿಕವು ಆಮದು ಮಾಡಿಕೊಳ್ಳುತ್ತಿರುವ ಸರಕಿನ ಮೇಲೆ ಮತ್ತು ಆ ಮೂಲಕ ಅಮೆರಿಕದ ಆರ್ಥಿಕತೆಯ ಮೇಲೆ ಪರಿಣಾಮ ಬೀರಿ, ಹಣದುಬ್ಬರ ಮತ್ತು ಆದಾಯ ಕುಸಿತಕ್ಕೆ ಕಾರಣ ಆಗಬಹುದು, ಸರಬರಾಜು ವ್ಯವಸ್ಥೆಯ ಮೇಲೆ ಆಘಾತ (supply shock) ಉಂಟಾಗಿ ಅಮೆರಿಕದ ರಿಸರ್ವ್ ಬ್ಯಾಂಕ್ (US Fedaral reserve) ಅಸಹಾಯಕವಾಗಬಹುದೆಂಬ ನಿರೀಕ್ಷೆ ಅರ್ಥಶಾಸ್ತ್ರಜ್ಞರ ವಲಯಗಳಲ್ಲಿತ್ತು. ಅಂತಹದೇನೂ ಗಂಭೀರವಾದುದು ಸಂಭವಿಸಿದಂತಿಲ್ಲ. ಈಗ ಅದಕ್ಕೆ ಕಾರಣಗಳನ್ನು ಹುಡುಕುವಲ್ಲಿ ಅಮೆರಿಕದ ಅರ್ಥಶಾಸ್ತ್ರಜ್ಞರು ವ್ಯಸ್ತರಿದ್ದಾರೆ. ಅಮೆರಿಕ ಆತ್ಮಘಾತಕ ತೀರ್ಮಾನಗಳನ್ನು ತೆಗೆದುಕೊಂಡೂ, ಅಲ್ಲಿ ಸಮಸ್ಯೆ ಆಗುತ್ತಿಲ್ಲ ಎಂದರೆ ಅದರ ಅರ್ಥ, ಅಮೆರಿಕ ಅಧ್ಯಕ್ಷರ ಹುಚ್ಚಾಟಗಳಲ್ಲಿ ಒಂದು ಸ್ಪಷ್ಟ ಯೋಚನೆ, ತಂತ್ರಗಾರಿಕೆ ಇದೆ ಎಂದೇ ಅಲ್ಲವೆ? ಅಧ್ಯಕ್ಷ ಟ್ರಂಪ್, ಎಣ್ಣೆಗಾಗಿ ವೆನೆಝುವೆಲಾ, ಎಣ್ಣೆ ಮತ್ತು ನೈಸರ್ಗಿಕ ಅನಿಲ ದಾಸ್ತಾನು ಇರುವ ಗ್ರೀನ್ಲ್ಯಾಂಡ್ ತನಗೆ ಬೇಕೇಬೇಕು ಎಂದು ವರಾತ ಹಿಡಿದು ಕುಳಿತಿದ್ದಾರೆ. ನೊಬೆಲ್ ಶಾಂತಿ ಪ್ರಶಸ್ತಿ ಪಡೆಯಲಾಗದಿದ್ದರೂ ಅದನ್ನು ಕಾಲಡಿಗೆ ತರಿಸಿಕೊಂಡಿದ್ದಾರೆ. ಹೊಸದೊಂದು ‘ಶಾಂತಿ ಮಂಡಳಿ’ಯ (board of peace) ಮೂಲಕ ಹೊಸ ವರ್ಲ್ಡ್ ಆರ್ಡರ್ ರೂಪಿಸುವ ಪ್ರಯತ್ನದಲ್ಲಿದ್ದಾರೆ. ರಶ್ಯದಿಂದ ತೈಲ ಖರೀದಿಸಿದ್ದಕ್ಕಾಗಿ ಭಾರತ ಸಹಿತ ಹಲವು ದೇಶಗಳಿಂದ ಅಮೆರಿಕಕ್ಕೆ ಬಂದಿಳಿಯುತ್ತಿರುವ ಆಮದಿನ ಮೇಲೆ ಮುಲಾಜೇ ಇಲ್ಲದೆ ದಂಡಸುಂಕ ವಿಧಿಸುತ್ತಿದ್ದಾರೆ. ಚೀನಾದ ಟ್ರೇಡ್ ಸರ್ಪ್ಲಸ್ ಚೀನಾದ ಸನ್ನಿವೇಶ ಬೇರೆಯದೇ ರೀತಿಯದು. ಜನವರಿ 14ರಂದು ಚೀನಾದ 2025ನೇ ಸಾಲಿನ ಆಮದು-ರಫ್ತಿನ ಅಧಿಕೃತ ಅಂಕಿಅಂಶಗಳನ್ನು ಅಲ್ಲಿನ ಸರಕಾರ ಬಿಡುಗಡೆ ಮಾಡಿದ್ದು, ಅವರ ಆಮದಿಗೆ ಹೋಲಿಸಿದರೆ, ರಫ್ತು 1.19 ಟ್ರಿಲಿಯನ್ ಅಮೆರಿಕನ್ ಡಾಲರ್ನಷ್ಟು (ಅಂದಾಜು 1,090 ಲಕ್ಷ ಕೋಟಿ ರೂ.ಗಳು) ಹೆಚ್ಚು ದಾಖಲಾಗಿದೆ (ಟ್ರೇಡ್ ಸರ್ಪ್ಲಸ್). ಇದು, ಅಮೆರಿಕದ ಕೈಯಲ್ಲಿದ್ದ ಉದಾರೀಕರಣ-ಜಾಗತೀಕರಣ ಪ್ರಕ್ರಿಯೆಯ ಜಾಗತಿಕ ನಾಯಕತ್ವವನ್ನು ಚೀನಾ ವಹಿಸಿಕೊಳ್ಳುತ್ತಿರುವುದರ ಸಂಕೇತ ಎಂದು ಹೊರನೋಟಕ್ಕೆ ಅನಿಸುತ್ತಿದೆಯಾದರೂ, ವಾಸ್ತವ ಬೇರೆಯೇ ಇದೆ. ಈ ಅತಿಯಾದ ಟ್ರೇಡ್ ಸರ್ಪ್ಲಸ್ ಕೂಡ ಅಸಮತೋಲನವೇ. ಯಾವುದೇ ಮಾರುಕಟ್ಟೆಯಲ್ಲಿ ಬೇಡಿಕೆಗಿಂತ ಸರಬರಾಜು ಹೆಚ್ಚಾಗತೊಡಗಿದಾಗ, ಏನಾಗುತ್ತದೆಯೋ ಅದು ಚೀನಾದಲ್ಲೂ ಆಗತೊಡಗಿದೆ. ಬೆಲೆ ಇಳಿತದ ಕಾರಣದಿಂದಾಗಿ ಅಲ್ಲಿ ನಿರುದ್ಯೋಗ, ರಿಯಲ್ ಎಸ್ಟೇಟ್ ಮಾರುಕಟ್ಟೆ ಕುಸಿತದಂತಹ ಬೆಳವಣಿಗೆಗಳು ಕಾಣಿಸತೊಡಗಿವೆಯಂತೆ. ಜನ ಹಣ ಖರ್ಚು ಮಾಡುವ, ಚಲಾವಣೆಗೆ ಬಿಡುವ ಬದಲು ಶೇಖರಿಸಿಟ್ಟುಕೊಂಡು ಅವಕಾಶಕ್ಕಾಗಿ ಕಾಯತೊಡಗಿದ್ದಾರೆ. ಈ ಎಲ್ಲ ಒತ್ತಡಗಳನ್ನು ನಿಭಾಯಿಸಲು ಚೀನಾವು ಅಡ್ಡಾದಿಡ್ಡಿ ಬೆಲೆಗೆ ತನ್ನ ಉತ್ಪಾದನೆಗಳನ್ನು ದೇಶದಿಂದ ಹೊರಗೆ ರಫ್ತು ಮಾಡತೊಡಗಿದೆ. ಐರೋಪ್ಯ ಸಮುದಾಯದ ದೇಶಗಳು, ಬ್ರಿಟನ್, ಜಪಾನ್, ಭಾರತ ಮಾತ್ರವಲ್ಲದೆ ಸಣ್ಣ ಮತ್ತು ಮಧ್ಯಮ ಆದಾಯದ ಹಲವು ದೇಶಗಳು ಚೀನೀ ಸರಕುಗಳ ಸುರಿದಾಣ (dumping ground) ಆಗತೊಡಗಿವೆ. ಹೀಗೆ ಸುರಿದಾಣ ಆದಾಗ, ಆ ದೇಶಗಳ ಸ್ಥಳೀಯ ಸಣ್ಣ-ಮಧ್ಯಮ ಗಾತ್ರದ ಉತ್ಪಾದಕ ಸಂಸ್ಥೆಗಳಿಗೆ ಚೀನೀ ಮಾಲಿನ ಜೊತೆ ದರದ ಸ್ಪರ್ಧೆ ಕಷ್ಟವಾಗಿ, ಅವರ ಕತ್ತು ಹಿಸುಕಿದಂತಾಗುತ್ತದೆ. ಬಹುತೇಕ ಎಲ್ಲ ದೇಶಗಳೂ ಈಗ ಈ ಬಗ್ಗೆ ಎಚ್ಚರಗೊಳ್ಳತೊಡಗಿವೆ. ಮೆಕ್ಸಿಕೊ ಚೀನಾದ ಆಮದುಗಳಿಗೆ ದಂಡಸುಂಕ ವಿಧಿಸಲಾರಂಭಿಸಿದೆ. ಫ್ರಾನ್ಸ್ ಅಧ್ಯಕ್ಷ ಇಮ್ಯಾನುಯಲ್ ಮ್ಯಾಕ್ರಾನ್, ಐರೋಪ್ಯ ಸಮುದಾಯದ ಅಧ್ಯಕ್ಷೆ ಅರ್ಸುಲಾ ವಾಂಡರ್ಲಿನ್ ಮತ್ತಿತರರು ಈ ಬಗ್ಗೆ ಚೀನಾ ಜೊತೆ ಜಾಗತಿಕ ವೇದಿಕೆಗಳಲ್ಲಿ ತಗಾದೆ ಎತ್ತತೊಡಗಿದ್ದಾರೆ. ಒಟ್ಟಿನಲ್ಲಿ ಜಗತ್ತಿನ ಅತಿದೊಡ್ಡ ಆರ್ಥಿಕತೆಯಾದ ಅಮೆರಿಕ, ಹುಚ್ಚಾಟದಲ್ಲಿ ತೊಡಗಿದ್ದರೆ, ಎರಡನೇ ದೊಡ್ಡ ಆರ್ಥಿಕತೆಯಾದ ಚೀನಾ ತನ್ನ ಆಂತರಿಕ ಆರ್ಥಿಕ ಸಮತೋಲನಕ್ಕೆ ಬೇರೆ ದೇಶಗಳಿಗೆ ರಫ್ತನ್ನು ಅವಲಂಬಿಸಿಕೊಂಡು ಕುಳಿತಿದೆ. ಈ ಎರಡೂ ಕಡೆಯ ಒತ್ತಡಗಳು ಭಾರತದ ಒಳಗೆ ಆರ್ಥಿಕ ಸಂಕಟಗಳಿಗೆ ಹಾದಿ ತೆರೆಯುತ್ತಿದ್ದು, ಭಾರತ ಸರಕಾರಕ್ಕೆ ಅತ್ತ ದರಿ ಇತ್ತ ಪುಲಿ ಎಂಬಂತಾಗಿದೆ. ಭಾರತದ್ದೇನು ಸನ್ನಿವೇಶ? ಭಾರತದ್ದು ಚೀನಾಕ್ಕೆ ಹೋಲಿಸಿದರೆ ತದ್ವಿರುದ್ಧ ಸ್ಥಿತಿ. ನಮ್ಮ 24-25ನೇ ಸಾಲಿನ (Apr-Oct) ಟ್ರೇಡ್ ಡೆಫಿಸಿಟ್ 5.86 ಲಕ್ಷ ಕೋಟಿ ರೂ. (ಅಂದಾಜು 63.97 ಬಿಲಿಯನ್ ಅಮೆರಿಕನ್ ಡಾಲರ್). ಅಂದರೆ, ನಮ್ಮ ಆಮದು ಪ್ರಮಾಣವು ರಫ್ತಿಗಿಂತ ಅಷ್ಟು ಹೆಚ್ಚು. ನಮ್ಮ ಈ ಟ್ರೇಡ್ ಡೆಫಿಸಿಟ್ನಲ್ಲಿ, ಶೇ. 99 ಭಾಗ ಚೀನಾದ್ದೇ ಹೊಂಡ. ಜಗತ್ತಿನ ಯಾವುದೇ ದೇಶಗಳಿಗೆ ಹೋಲಿಸಿದರೆ ಒಂದು ದೇಶದ ಜೊತೆ ಇನ್ನೊಂದು ದೇಶದ ಅತಿದೊಡ್ಡ ವಾಣಿಜ್ಯ ಕಂದರವಂತೆ ಇದು. ಭಾರತ ಇಂದಿಗೂ ಚೀನಾದಿಂದ ಸುಮಾರು 7,000 ಬಗೆಯ ಉತ್ಪನ್ನಗಳನ್ನು ಆಮದು ಮಾಡಿಕೊಳ್ಳುತ್ತಿದೆ. ಈ ಟ್ರೇಡ್ ಡೆಫಿಸಿಟ್ ಕಂದರ ವರ್ಷಂಪ್ರತಿ ಹಿಗ್ಗುತ್ತಿದ್ದು, 2023-24ಕ್ಕೆ ಹೋಲಿಸಿದರೆ ಶೇ. 10.1 ಹೆಚ್ಚಿದೆ ಎಂದು ಸರಕಾರವೇ ಸಂಸತ್ತಿನಲ್ಲಿ ಅಂಕಿಅಂಶಗಳನ್ನು ನೀಡಿದೆ (ಲೋಕಸಭೆಯ ಚುಕ್ಕೆರಹಿತ ಪ್ರಶ್ನೆ ಸಂಖ್ಯೆ 2537, ದಿನಾಂಕ 16/12/2025). ಈ ಟ್ರೇಡ್ ಡೆಫಿಸಿಟ್ ಕಂದರಕ್ಕೆ ಕಾರಣ, ನಾವು ಚೀನಾದಿಂದ ಆಮದು ಮಾಡಿಕೊಳ್ಳುತ್ತಿರುವ ವಾಹನ ಬಿಡಿಭಾಗಗಳು, ಔಷಧಿ ಕಚ್ಚಾ ಸಾಮಗ್ರಿಗಳು, ಇಲೆಕ್ಟ್ರಾನಿಕ್ ಬಿಡಿ ಭಾಗಗಳು, ಅಸೆಂಬ್ಲಿಗಳು, ಮೊಬೈಲ್ ಫೋನ್ ಭಾಗಗಳು, ಯಂತ್ರೋಪಕರಣಗಳು ಮತ್ತವುಗಳ ಬಿಡಿಭಾಗಗಳಂತಹ ಕಚ್ಚಾ ಸಾಮಗ್ರಿಗಳು, ಮಧ್ಯಂತರಿ ಸರಕುಗಳು ಮತ್ತು ಬಂಡವಾಳ ಸರಕುಗಳು. ಅವನ್ನು ಇಲ್ಲಿ ಮೌಲ್ಯ ವರ್ಧಿಸಿ, ಅಂತಿಮ ಉತ್ಪನ್ನಗಳನ್ನು ತಯಾರಿಸಿ ಮಾರಲಾಗುತ್ತಿದೆ ಎಂದು ಸಮರ್ಥಿಸಿಕೊಂಡಿರುವ ವಾಣಿಜ್ಯ ಖಾತೆಯ ರಾಜ್ಯಸಚಿವ ಜಿತಿನ್ ಪ್ರಸಾದ್ ಅವರು, ಈ ಆಮದು-ರಫ್ತು ಸಂತುಲನ ಸಾಧಿಸಲು ಅಂತರ್ ಸಚಿವಾಲಯ ಸಮಿತಿಯೊಂದನ್ನು (ಐಎಂಸಿ) ರಚಿಸಲಾಗಿದೆ ಎಂದೂ ಸಂಸತ್ತಿನಲ್ಲಿ ಹೇಳಿಕೊಂಡಿದ್ದಾರೆ. ಸರಕಾರ ಏನೇ ಸಮರ್ಥನೆಗೆ ಇಳಿದರೂ, ಇಲ್ಲಿ ಡಾಲರ್ ಎದುರು ಕುಸಿಯುತ್ತಿರುವ ರೂಪಾಯಿ ದರ ಇಲ್ಲಿನ ಸಣ್ಣಪುಟ್ಟ ಉದ್ಯಮಗಳ ಸಹಾಯಕ್ಕೆ ಬರುತ್ತಿಲ್ಲ. ಭಾರತದ ಇಲೆಕ್ಟ್ರಾನಿಕ್ಸ್, ಔಷಧಿ ಉತ್ಪಾದನೆಗಳು, ಯಂತ್ರೋಪಕರಣಗಳ ಉತ್ಪಾದಕರು ತಮ್ಮ ಸಂರಚನೆಯಲ್ಲೇ ಚೀನಾ ಮೇಲೆ ಅವಲಂಬಿತರು. ನಮ್ಮಲ್ಲಿ ಉತ್ಪಾದನೆ ಆಗಬೇಕೆಂದರೆ, ನಾವು ಚೀನಾದಿಂದ ಅಗತ್ಯ ಕಚ್ಚಾವಸ್ತುಗಳನ್ನು ಆಮದು ಮಾಡಿಕೊಳ್ಳುವುದು ಅನಿವಾರ್ಯ ಮತ್ತು ರೂಪಾಯಿ ದರವು ಡಾಲರ್ ಎದುರು ಕುಸಿಯುತ್ತಾ ಸಾಗಿದಂತೆಲ್ಲ, ಭಾರತ ಹೆಚ್ಚು ರೂಪಾಯಿಗಳನ್ನು ತೆತ್ತು ತನ್ನ ಆಮದು ಸರಕುಗಳನ್ನು ತರಿಸಿಕೊಳ್ಳಬೇಕಾಗುತ್ತದೆ. ದೇಶದ ಆಂತರಿಕ ಸನ್ನಿವೇಶ, ಜಾಗತಿಕ ಆರ್ಥಿಕ ಸನ್ನಿವೇಶಗಳ ಹಿನ್ನೆಲೆಯಲ್ಲಿ ಭಾರತದಲ್ಲೀಗ ಡಾಲರ್ ಬೆಲೆ 100ರೂ.ಗಳ ಸನಿಹಕ್ಕೆ ನಾಗಾಲೋಟದಿಂದ ಸಾಗುತ್ತಿದೆ. ಇದು ದೇಸೀ ಉದ್ಯಮಗಳಿಗೆ ನುಂಗಲಾರದ ತುತ್ತು. ರೂಪಾಯಿಯನ್ನು ಹಿಡಿತದಲ್ಲಿಟ್ಟುಕೊಳ್ಳುವ, ದೇಶದ ಹಿತಾಸಕ್ತಿಗಳನ್ನು ರಕ್ಷಿಸುವ ರಿಸರ್ವ್ ಬ್ಯಾಂಕಿನ ಪ್ರಯತ್ನಗಳೆಲ್ಲದರ ಹೊರತಾಗಿಯೂ ಡಾಲರ್ ಗಗನಕ್ಕೇರುತ್ತಿದೆ. ಚೀನಾದ ಟ್ರೇಡ್ ಡೆಫಿಸಿಟ್ ನಿಯಂತ್ರಿಸುವುದಕ್ಕೆ ಕಳೆದ ವರ್ಷದ ಇಕನಾಮಿಕ್ ಸರ್ವೇಯಲ್ಲಿ ದೇಶದ ಮುಖ್ಯ ಆರ್ಥಿಕ ಸಲಹೆಗಾರ ಅನಂತ್ ನಾಗೇಶ್ವರನ್ ಅವರು, ಚೀನಾಕ್ಕೆ ಭಾರತದಲ್ಲಿ ನೇರ ಹೂಡಿಕೆಗೆ ಅವಕಾಶ (FDI) ಮಾಡಿಕೊಡಬಹುದೆಂಬ ಸಲಹೆ ನೀಡಿದ್ದರು. ಆ ನಿಟ್ಟಿನಲ್ಲಿ ಯಾವುದೇ ಕ್ರಮವನ್ನು ಸರಕಾರ ಈ ತನಕ ತೆಗೆದುಕೊಂಡಂತಿಲ್ಲ. ಕಬ್ಬಿಣ, ಸೋಲಾರ್ ಪ್ಯಾನಲ್, ಕೆಲವು ರಾಸಾಯನಿಕಗಳಂತಹ ಪ್ರಬಲ ಲಾಬಿ ಇರುವ ಉದ್ಯಮವಲಯಗಳಲ್ಲಿ ಮಾತ್ರ ಭಾರತ ಸರಕಾರ ದೇಶದೊಳಗಿನ ಉದ್ಯಮಗಳ ಹಿತಾಸಕ್ತಿ ರಕ್ಷಿಸಲು ಮತ್ತು ಚೀನಾದ ಅತಿರಫ್ತನ್ನು ನಿಯಂತ್ರಿಸಲು ಡಂಪಿಂಗ್ ನಿರೋಧಕ ತೆರಿಗೆ ವಿಧಿಸಿ ಕೈತೊಳೆದುಕೊಂಡಿದೆ. ಉಳಿದಂತೆ ಭಾರತದ ಮಾರುಕಟ್ಟೆಯಲ್ಲಿ ಈವತ್ತಿಗೂ ಚೀನಾದ್ದೇ ಆಟ. ಅತ್ತ ಅಮೆರಿಕದ ತಾರಿಫ್ ಇತ್ತ ಚೀನಾದ ಅನಿವಾರ್ಯ ಅವಲಂಬನೆಗಳ ಕಾರಣದಿಂದಾಗಿ ಅಡಕತ್ತರಿಗೆ ಸಿಲುಕಿರುವ ಭಾರತ, ಅದರಿಂದ ಹೊರಬರಲು ಸನ್ನಿವೇಶವನ್ನು ಒಟ್ಟಂದದಲ್ಲಿ ಅರ್ಥೈಸಿಕೊಳ್ಳುವ ಮತ್ತು ಆರ್ಥಿಕ ಪರಿಣತರ ಸಹಾಯ ಪಡೆಯುವ ಬದಲು, ತನ್ನ ಡಿಯರ್ ಮೀಡಿಯಾಗಳ ಮೂಲಕ ‘ಸಬ್ ಚೆಂಗಾಸಿ’ ಎಂದು ತುತ್ತೂರಿ ಊದಿಸುತ್ತಿರುವುದು, ಬಹಳ ದುಬಾರಿ ತಮಾಷೆ ಆಗಿ ಪರಿಣಮಿಸಲಿದೆ.
ದೇಶದ ನಾಗರಿಕ ಪ್ರದೇಶಗಳಲ್ಲಿ 7ತಿಂಗಳಲ್ಲಿ 800 ಡ್ರೋನ್ ದಾಳಿ ಮಾಡಿದ ಪಾಕಿಸ್ತಾನ: ಭಾರತ ಕೊಟ್ಟ ಉತ್ತರ ಹೇಗಿತ್ತು?
ಪಾಕಿಸ್ತಾನವು ಭಾರತದ ವಿರುದ್ಧ ಡ್ರೋನ್ ದಾಳಿಗಳನ್ನು ಹೆಚ್ಚಿಸಿದೆ. ಕಳೆದ ವರ್ಷದ 'ಆಪರೇಷನ್ ಸಿಂದೂರ' ನಂತರ 800 ಡ್ರೋನ್ ಗಳನ್ನು ಪ್ರಯೋಗಿಸಲಾಗಿದೆ. ಭಾರತೀಯ ವಾಯು ರಕ್ಷಣಾ ವ್ಯವಸ್ಥೆ ಈ ದಾಳಿಗಳನ್ನು ವಿಫಲಗೊಳಿಸಿದೆ. ರಾಜಸ್ಥಾನ, ಪಂಜಾಬ್ ಗಡಿ ಮೂಲಕ ಪ್ರವೇಶಿಸಲು ಯತ್ನಿಸಿದ ಡ್ರೋನ್ ಗಳನ್ನು ಹೊಡೆದುರುಳಿಸಲಾಗಿದೆ. ಶಸ್ತ್ರಾಸ್ತ್ರ, ಮಾದಕ ದ್ರವ್ಯ ಸಾಗಾಟಕ್ಕೆ ಡ್ರೋನ್ ಗಳನ್ನು ಬಳಸಲಾಗಿದೆ. ಗಡಿ ಭದ್ರತೆಯನ್ನು ಹೆಚ್ಚಿಸಲಾಗಿದೆ.
ಅಫಜಲಪುರ: ಟ್ಯಾಂಕರ್–ಬಸ್ ಢಿಕ್ಕಿ: ಹಲವರಿಗೆ ಗಾಯ
ಕಲಬುರಗಿ: ಬಸ್ ಮತ್ತು ಟ್ಯಾಂಕರ್ ನಡುವೆ ಭೀಕರ ಅಪಘಾತ ಸಂಭವಿಸಿ, ಹಲವರಿಗೆ ಸಣ್ಣಪುಟ್ಟ ಗಾಯಗಳಾಗಿರುವ ಘಟನೆ ತಾಲ್ಲೂಕಿನ ಗೊಬ್ಬೂರ (ಬಿ)–ಚೌಡಾಪುರ ಮಧ್ಯೆ ಇರುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಶುಕ್ರವಾರ ಸಂಜೆ ನಡೆದಿದೆ. ಗಾಯಾಳುಗಳನ್ನು ತಕ್ಷಣವೇ ತುರ್ತು ಚಿಕಿತ್ಸೆಗಾಗಿ ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯ ಮಾಹಿತಿ ಪಡೆದ ದೇವಲ ಗಾಣಗಾಪುರ ಪೊಲೀಸ್ ಠಾಣೆಯ ಪಿಎಸ್ಐ ಸಂಗೀತಾ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪ್ರಾಥಮಿಕ ತನಿಖೆಯ ಪ್ರಕಾರ, ಟ್ಯಾಂಕರ್ ಚಾಲಕರ ಅಜಾಗರೂಕತೆಯಿಂದಲೇ ಅಪಘಾತ ಸಂಭವಿಸಿರುವುದು ತಿಳಿದುಬಂದಿದೆ. ಈ ಕುರಿತು ದೇವಲ ಗಾಣಗಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
SSLC: ಇನ್ಮುಂದೆ ಎಸ್ಎಸ್ಎಲ್ಸಿ ಟಾಪರ್ಗಳಿಗೆ ಲ್ಯಾಪ್ಟಾಪ್ ಬದಲು ₹50,000 ನಗದು
ಬೆಂಗಳೂರು: ರಾಜ್ಯದ ಎಸ್ಎಸ್ಎಲ್ಸಿ (SSLC) ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆಯನ್ನು ಪ್ರೋತ್ಸಾಹಿಸಲು ಸರ್ಕಾರ ನೀಡುತ್ತಿದ್ದ ಬಹುಮಾನದ ಸ್ವರೂಪದಲ್ಲಿ ಮಹತ್ವದ ಬದಲಾವಣೆಯಾಗಿದೆ. ಪ್ರತಿ ಜಿಲ್ಲೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿ ಮೊದಲ ಮೂರು ಸ್ಥಾನಗಳನ್ನು ಪಡೆಯುವ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಈ ಹಿಂದೆ ನೀಡಲಾಗುತ್ತಿದ್ದ ಲ್ಯಾಪ್ಟಾಪ್ ಬದಲಿಗೆ, ಈಗ ನೇರವಾಗಿ 50,000 ರೂಪಾಯಿಗಳ ನಗದು ಬಹುಮಾನವನ್ನು ನೀಡುವ ಸಂಬಂಧ ಶಿಕ್ಷಣ ಇಲಾಖೆ
ಈ ದೇಶದಲ್ಲಿ ರಸ್ತೆಗಳಿರುವುದೇ ಅಪಘಾತ ಸಂಭವಿಸುವುದಕ್ಕಾಗಿ ಎಂದು ನಾವು ನಂಬಿಕೊಂಡು ಬಂದಿದ್ದೇವೆ. ಸರಕಾರದ ಅಂಕಿಅಂಶಗಳ ಪ್ರಕಾರ ಈ ದೇಶದಲ್ಲಿ ಪ್ರತಿದಿನ 485 ಜನರು ರಸ್ತೆ ಅಪಘಾತದಿಂದ ಮೃತಪಡುತ್ತಾರೆ. ದಿನಾ ಸಾಯುವವರಿಗೆ ಅಳುವವರು ಯಾರು? ಎಂಬಂತೆ, ಇದರ ಹಿಂದಿರುವ ವ್ಯವಸ್ಥೆಯ ವೈಫಲ್ಯಗಳು ಚರ್ಚೆಯಾಗುವುದು ಅಪರೂಪ. ಹೀಗಿರುವ ಹೊತ್ತಿನಲ್ಲೇ ನೊಯ್ಡಾದಲ್ಲಿ ನಡೆದಿರುವ ಕಾರು ಅವಘಡವೊಂದು ದೇಶಾದ್ಯಂತ ಭಾರೀ ಚರ್ಚೆಗೊಳಗಾಗುತ್ತಿದೆ. ಘಟನೆ ನಡೆದಿರುವುದು ಉತ್ತರ ಪ್ರದೇಶದ ನೊಯ್ಡಾದಲ್ಲಿ. ಸಾಫ್ಟ್ವೇರ್ ಇಂಜಿನಿಯರ್ ಯುವರಾಜ್ ಮೆಹ್ತಾ ಎಂಬವರು ಗುರುಗ್ರಾಮ್ನಲ್ಲಿರುವ ತನ್ನ ಕಚೇರಿಯಿಂದ ನೊಯ್ಡಾದಲ್ಲಿರುವ ತಮ್ಮ ನಿವಾಸಕ್ಕೆ ತೆರಳುವ ಸಂದರ್ಭದಲ್ಲಿ ಕಾರು ನಿಯಂತ್ರಣ ತಪ್ಪಿ ರಸ್ತೆಯ ಪಕ್ಕದಲ್ಲಿರುವ ನೀರು ತುಂಬಿದ ಹೊಂಡಕ್ಕೆ ಬಿದ್ದಿದೆ. ಈ ಸಂದರ್ಭದಲ್ಲಿ ಯಾರಾದರೂ ನೆರವಿಗೆ ಬಂದಿದ್ದರೆ ಆ ಯುವಕ ಬದುಕುಳಿಯುವ ಸಾಧ್ಯತೆಗಳಿತ್ತು. ಕಾರು ನೀರಿನ ಆಳಕ್ಕಿಳಿಯುತ್ತಿದ್ದಂತೆಯೇ ಯುವಕ ಕಾರಿನ ಮೇಲೆ ಏರಿ ನಿಂತು ಸಹಾಯಕ್ಕಾಗಿ ಕೂಗಿದ್ದಾರೆೆ. ಮಧ್ಯೆ ತನ್ನ ತಂದೆಗೆ ಕರೆ ಮಾಡಿ ಸಹಾಯ ಮಾಡುವಂತೆ ಮನವಿ ಮಾಡಿದ್ದಾರೆೆ. ಮೆಹ್ತಾ ಅವರು ಸುಮಾರು ಒಂದೂವರೆ ಗಂಟೆಗೂ ಹೆಚ್ಚು ಕಾಲ ಸಹಾಯಕ್ಕಾಗಿ ಕೂಗುತ್ತಲೇ ಇದ್ದರು. ಈ ನಡುವೆ ಕಾರು ನಿಧಾನವಾಗಿ ನೀರಿನಲ್ಲಿ ಮುಳುಗಿತು.ಯುವಕನೂ ನೀರು ಪಾಲಾದ. ಅಪಘಾತ ಸಂಭವಿಸಿದ ಬಳಿಕ ಸುಮಾರು ಒಂದೂವರೆ ಗಂಟೆಗಳ ಕಾಲ ಯುವಕ ಸಹಾಯಕ್ಕಾಗಿ ಮೊರೆಯಿಟ್ಟಿದ್ದ. ಇಷ್ಟು ಸಮಯಾವಕಾಶವಿದ್ದರೂ ಆತನನ್ನು ರಕ್ಷಿಸಲು ನಮ್ಮ ವ್ಯವಸ್ಥೆ ಯಾಕೆ ವಿಫಲವಾಯಿತು ಎನ್ನುವುದು ಇದೀಗ ಚರ್ಚೆಯ ವಿಷಯವಾಗಿದೆ. ಕಾರು ಮುಳುಗುವವರೆಗೆ ಅಂದರೆ ಸುಮಾರು 90 ನಿಮಿಷಗಳ ಕಾಲ ಮೆಹ್ತಾ ಅವರು ಕಾರಿನ ಮೇಲೆಯೇ ಇದ್ದರು. ಸಹಾಯ ಯಾಚಿಸುತ್ತಿದ್ದರು. ವಿಪರ್ಯಾಸವೆಂದರೆ ಅದಾಗಲೇ ಅಲ್ಲಿ ಜನರು ನೆರೆದಿದ್ದರು. ಆದರೆ ಯಾರೂ ನೆರವಿಗೆ ಧಾವಿಸಲಿಲ್ಲ. ಹಲವರು ಘಟನೆಯನ್ನು ಮೊಬೈಲ್ನಲ್ಲಿ ಚಿತ್ರೀಕರಿಸುತ್ತಿದ್ದರು. ಸುಮಾರು 2:30ರ ಹೊತ್ತಿಗೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ, ರಾಜ್ಯ ವಿಪತ್ತು ನಿರ್ವಹಣಾ ಪಡೆ, ಅಗ್ನಿಶಾಮಕ ದಳ ಹಾಗೂ ಪೊಲೀಸರು ಆಗಮಿಸಿದರಾದರೂ ತಕ್ಷಣ ಕಾರ್ಯಾಚರಣೆ ನಡೆಸಲು ಹಿಂಜರಿದರು. ಆರುಗಂಟೆಗಳ ಬಳಿಕ ಯುವಕನ ಮೃತದೇಹವನ್ನು ಮೇಲೆತ್ತುವಲ್ಲಿ ತಂಡವು ಯಶಸ್ವಿಯಾಯಿತು. ಅಪಘಾತಕ್ಕೆ ದಟ್ಟ ಮಂಜು ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ. ಕಾರು ತಡೆ ಗೋಡೆಗೆ ಢಿಕ್ಕಿ ಹೊಡೆದು ಬಳಿಕ ನೀರಿನ ಹೊಂಡಕ್ಕೆ ಬಿದ್ದಿದೆ. ಇದನ್ನು ಅಪಘಾತ ಎಂದು ಕರೆಯಬಹುದು. ಆದರೆ ಆ ಬಳಿಕ ನಡೆದಿರುವುದು ಅಪಘಾತದ ಭಾಗವಾಗಿರಲಿಲ್ಲ. ಆತ ಮೃತಪಟ್ಟಿರುವುದು ಅವಘಡದಿಂದಲ್ಲ. ಬದಲಿಗೆ ವ್ಯವಸ್ಥೆಯ ಬೇಜವಾಬ್ದಾರಿ ಯಿಂದ. ಯಾವುದೋ ದಟ್ಟಾರಣ್ಯದ ಮಧ್ಯೆ ನಡೆದ ದುರಂತ ಇದಾಗಿರಲಿಲ್ಲ. ರಕ್ಷಣಾ ಕಾರ್ಯಾಚರಣೆಯು ತರಾತುರಿಯಲ್ಲಿ ನಡೆದಿದ್ದರೆ ಯುವಕನ ಪ್ರಾಣವನ್ನು ಉಳಿಸುವುದಕ್ಕೆ ಅವಕಾಶವಿತ್ತು. ಅವಘಡ ನಡೆದ ಸ್ಥಳಕ್ಕೆ ಆಗಮಿಸಿದ ರಕ್ಷಣಾ ಸಿಬ್ಬಂದಿ ಸುಮಾರು ಒಂದೂವರೆ ಗಂಟೆಯ ಕಾಲ ಮೀನಾಮೇಷ ಎಣಿಸುತ್ತಿದ್ದರು ಎಂದು ಸ್ಥಳೀಯರು ಆರೋಪಿಸಿದ್ದಾರೆ. ವಿಪರ್ಯಾಸವೆಂದರೆ, ಸೇರಿದ ಜನರು ಕೂಡ ಸಂತ್ರಸ್ತನ ನೆರವಿಗೆ ಮುಂದಾಗುವ ಬದಲು ಮೊಬೈಲ್ನಲ್ಲಿ ಚಿತ್ರೀಕರಣ ಮಾಡುತ್ತಿದ್ದರು. ನೆರೆದ ಮಂದಿಯಲ್ಲಿ ಒಂದಿಷ್ಟು ಮಾನವೀಯತೆ ಜೀವಂತವಾಗಿದ್ದಿದ್ದರೆ ಯುವಕನೂ ಇಂದು ಜೀವಂತವಾಗಿರುತ್ತಿದ್ದ. ದುರಂತ ಮಾಧ್ಯಮಗಳಲ್ಲಿ ಸುದ್ದಿಯಾಗುತ್ತಿದ್ದಂತೆಯೇ ಮೆಹ್ತಾರ ಕಾರು ಉರುಳಿ ಬಿದ್ದ ಆಳವಾದ ಹೊಂಡದ ಸ್ಥಳದ ಮಾಲಕತ್ವ ಹೊಂದಿದ್ದ ಎರಡು ಕಟ್ಟಡ ಸಂಸ್ಥೆಗಳ ವಿರುದ್ಧ ಎಫ್ಐಆರ್ ದಾಖಲಾಗಿದೆ. ತನಿಖೆಗೆ ಮೂವರು ಸದಸ್ಯರನ್ನು ಒಳಗೊಂಡ ಸಿಟ್ ತಂಡವನ್ನು ನೇಮಕ ಮಾಡಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ಮೂವರನ್ನು ಬಂಧಿಸಲಾಗಿದೆ. ಆದರೆ, ಸಂತ್ರಸ್ತನನ್ನು ಬದುಕಿಸಲು ಸಮಯಾವಕಾಶವಿದ್ದರೂ ಅದರಲ್ಲಿ ವಿಫಲರಾಗಿರುವ ರಕ್ಷಣಾ ದಳಗಳ ವಿರುದ್ಧ ಇನ್ನೂ ದೂರು ದಾಖಲಾಗಿಲ್ಲ. ಎಸ್ಡಿಆರ್ಎಫ್ ಸಿಬ್ಬಂದಿ ಸ್ಥಳಕ್ಕೆ ತಲುಪಿದಾಗ ಕಾರು ಇನ್ನೂ ಪೂರ್ಣವಾಗಿ ಹೊಂಡದಲ್ಲಿ ಮುಳುಗಿರಲಿಲ್ಲ. ಆದರೆ ಹೇಗೆ ರಕ್ಷಿಸುವುದು ಎನ್ನುವ ಗೊಂದಲದಲ್ಲೇ ಸಿಬ್ಬಂದಿ ಕಾಲ ಕಳೆದಿದ್ದರು. ಈ ಹೊತ್ತಿಗೆ ಅಲ್ಲಿಗೆ ಬಂದಿದ್ದ ಒಬ್ಬ ಗಿಗ್ ಏಜೆಂಟ್ ಸೊಂಟಕ್ಕೆ ಹಗ್ಗ ಕಟ್ಟಿ ನೀರಿಗಿಳಿಯಬೇಕಾಯಿತು. ‘ನೀರು ತುಂಬಾತಣ್ಣಗಿದೆ ಮಾತ್ರವಲ್ಲ, ಹೊಂಡದೊಳಗೆ ಕಟ್ಟಡ ನಿರ್ಮಾಣಕ್ಕೆ ಬಳಸಿದ ಕಬ್ಬಿಣದ ರಾಡ್ಗಳಿವೆ’ ಎಂಬ ಕಾರಣದಿಂದ ಸಿಬ್ಬಂದಿ ನೀರಿಗಿಳಿಯಲು ಹಿಂಜರಿದಿದ್ದರು. ಸಮಯಕ್ಕೆ ಸರಿಯಾಗಿ ಕಾರ್ಯಾಚರಣೆ ನಡೆದಿದ್ದರೆ ಸಂತ್ರಸ್ತ ಬದುಕಿ ಉಳಿಯುತ್ತಿದ್ದ ಎನ್ನುವುದು ಸ್ಥಳೀಯರ ಅಭಿಪ್ರಾಯ. ರಕ್ಷಣಾ ಕಾರ್ಯಕ್ಕೆ ಬೇಕಾಗಿರುವ ಯಾವುದೇ ಅತ್ಯಾಧುನಿಕ ಉಪಕರಣಗಳು ಸಿಬ್ಬಂದಿಯ ಬಳಿ ಇಲ್ಲದೇ ಇರುವುದು ಈ ಸಂದರ್ಭದಲ್ಲಿ ಬೆಳಕಿಗೆ ಬಂದಿದೆ. ಈಜು ಬರದೇ ಇರುವುದೂ ಅವರು ನೀರಿಗಿಳಿಯದೇ ಇರಲು ಇನ್ನೊಂದು ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಸಂತ್ರಸ್ತ ಸಾಫ್ಟ್ವೇರ್ ಇಂಜಿನಿಯರ್ ಆಗಿರುವುದರಿಂದ ಈ ದುರಂತ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಯಿತು. ಸಾಮಾನ್ಯ ಕೂಲಿಕಾರ್ಮಿಕನಾಗಿದ್ದರೆ ಆತನ ಕೂಗು ಆ ಹೊಂಡದೊಳಗೇ ಹೂತು ಹೋಗಿ ಬಿಡುತ್ತಿತ್ತು. ದುರಂತ ಸಂಭವಿಸಿದ ಬಳಿಕವಾದರೂ ಇಲ್ಲಿ ಹೊಂಡದ ಮಾಲಕರ ವಿರುದ್ಧ ದೂರು ದಾಖಲಾಗಿ ಅವರ ಬಂಧನವಾಯಿತು. ಅದೆಷ್ಟೋ ಅಕ್ರಮ ಕಲ್ಲು ಕೋರೆಯ ಗಣಿ ಹೊಂಡಗಳು ಮಳೆಗಾಲದಲ್ಲಿ ನೀರು ತುಂಬಿ ಪ್ರತಿ ವರ್ಷ ನೂರಾರು ಸಾವುಗಳಿಗೆ, ಅವಘಡಗಳಿಗೆ ಕಾರಣವಾಗುತ್ತವೆೆ. ಆದರೆ ಯಾರ ವಿರುದ್ಧವೂ ಪ್ರಕರಣ ದಾಖಲಾಗುವುದಿಲ್ಲ. ಆ ಹೊಂಡಗಳು ಮುಚ್ಚಲ್ಪಡುವುದೂ ಇಲ್ಲ. ಯಾಕೆಂದರೆ ಇಲ್ಲಿ ಅವಘಡಗಳು ಸುದ್ದಿಯಾಗಿ ಅದನ್ನು ಗಂಭೀರವಾಗಿ ತೆಗೆದುಕೊಳ್ಳಬೇಕಾದರೆ ಸಂತ್ರಸ್ತನ ಹಿನ್ನೆಲೆ, ಜಾತಿ, ವರ್ಗವೂ ಮುಖ್ಯವಾಗುತ್ತದೆ. ಕನಿಷ್ಠ ನೊಯ್ಡಾದ ದುರಂತ ಜನರ ಗಮನವನ್ನಾದರೂ ಸೆಳೆಯಿತಲ್ಲ, ದುರಂತ ಸಂಭವಿಸಿದ ಬಳಿಕವಾದರೂ ಅಪಾಯಕಾರಿ ಹೊಂಡವನ್ನು ತೆರೆದಿಟ್ಟವರ ಬಂಧನವಾಯಿತಲ್ಲ ಎಂದು ಜನರು ಸಮಾಧಾನ ಪಡಬೇಕಾಗಿದೆ. ಅಂತಹ ನೂರಾರು ಹೊಂಡಗಳು ರಸ್ತೆಯ ಪಕ್ಕದಲ್ಲೇ ಅಮಾಯಕರ ಜೀವಕ್ಕಾಗಿ ಬಾಯಿ ತೆರೆದು ಕಾಯುತ್ತಿವೆ. ಅವೆಲ್ಲ ಮುಚ್ಚಬೇಕಾದರೆ ಮತ್ತು ಆ ಹೊಂಡದ ಮಾಲಕರ ವಿರುದ್ಧ ಪ್ರಕರಣ ದಾಖಲಾಗಬೇಕಾದರೆ ಇನ್ನೆಷ್ಟು ಮಹ್ತಾಗಳು ಬಲಿಯಾಗಬೇಕು? ಎಂದು ಜನರು ಕೇಳುತ್ತಿದ್ದಾರೆ.
ರಾಜ್ಯದಲ್ಲಿ ಶೂನ್ಯ ಬಡ್ಡಿ ದರದ ಕೃಷಿ ಸಾಲಕ್ಕೆ ಬೇಡಿಕೆ ಹೆಚ್ಚಳ: 1 ವರ್ಷದಲ್ಲಿ ಬರೋಬ್ಬರಿ 23,673 ಕೋಟಿ ಸಾಲ ವಿತರಣೆ
ರಾಜ್ಯದಲ್ಲಿ ಶೂನ್ಯ ಬಡ್ಡಿ ದರದ ಕೃಷಿ ಸಾಲಕ್ಕೆ ಹೆಚ್ಚಿನ ಬೇಡಿಕೆ ಬಂದಿದೆ. ಕಳೆದ ಹಣಕಾಸು ವರ್ಷದಲ್ಲಿ ದಾಖಲೆ ಪ್ರಮಾಣದಲ್ಲಿ ಸಾಲ ವಿತರಿಸಲಾಗಿದೆ. 2024-25ನೇ ಸಾಲಿನಲ್ಲಿ 23,673 ಕೋಟಿ ರೂ. ಸಾಲವನ್ನು 26.36 ಲಕ್ಷ ರೈತರಿಗೆ ನೀಡಲಾಗಿದೆ. ಕೃಷಿ ಚಟುವಟಿಕೆಗಳಿಗೆ ಉತ್ತೇಜನ ನೀಡಲು ಈ ಯೋಜನೆ ಜಾರಿಯಲ್ಲಿದೆ. ರೈತರು ಇದರ ಸದುಪಯೋಗ ಪಡೆದುಕೊಳ್ಳುತ್ತಿದ್ದಾರೆ.
ಸಂಕಷ್ಟಿತ ಕರ್ನಾಟಕ ರೈತರಿಗೆ ಕೇಂದ್ರದಿಂದ ಶುಭಸುದ್ದಿ : 101340 MT ಧಾನ್ಯ MSPಯಲ್ಲಿ ಖರೀದಿಗೆ ಸೂಚನೆ
Channa MSP Purchase : ಕರ್ನಾಟಕದ ರೈತರ ಸಂಕಷ್ಟಕ್ಕೆ ಮತ್ತೆ ಕೇಂದ್ರ ಸರ್ಕಾರ ನಿಂತಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದ್ದಾರೆ. 1,01,340 ಕಡಲೆ ದ್ವಿದಳ ಧಾನ್ಯವನ್ನು ಖರೀದಿಸಲು ಕೇಂದ್ರ ಕೃಷಿ ಇಲಾಖೆ ಆದೇಶ ನೀಡಿದೆ. ನಮ್ಮ ಮನವಿಗೆ ಸ್ಪಂದಿಸಿದ ಕೇಂದ್ರ ಸರ್ಕಾರಕ್ಕೆ ಮತ್ತು ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್, ಜೋಶಿ ಧನ್ಯವಾದವನ್ನು ಹೇಳಿದ್ದಾರೆ.
ಚಾಮರಾಜನಗರ: ಜಿಲ್ಲಾಧಿಕಾರಿ ಶ್ರೀರೂಪ ಹೆಸರಿನಲ್ಲಿ ನಕಲಿ ಫೇಸ್ಬುಕ್ ಖಾತೆ; ಸಾರ್ವಜನಿಕರಿಗೆ ಎಚ್ಚರಿಕೆ
ನಕಲಿ ಖಾತೆಯಿಂದ ಆಮಿಷ; ಸಾರ್ವಜನಿಕರು ಎಚ್ಚರ ವಹಿಸುವಂತೆ ಮನವಿ
ಪಾಕಿಸ್ತಾನದಲ್ಲಿ ಮದುವೆ ಸಂಭ್ರಮದ ಮಧ್ಯೆ ಆತ್ಮಹತ್ಯಾ ಬಾಂಬ್ ದಾಳಿ; ಐವರು ಬಲಿ, 10 ಮಂದಿಗೆ ಗಾಯ
ಪಾಕಿಸ್ತಾನದ ಡೇರಾ ಇಸ್ಮಾಯಿಲ್ ಖಾನ್ ಜಿಲ್ಲೆಯಲ್ಲಿ ಶಾಂತಿ ಸಮಿತಿ ಮುಖ್ಯಸ್ಥರೊಬ್ಬರ ಮನೆಯಲ್ಲಿ ಮದುವೆಯ ಅದ್ದೂರಿ ಆಚರಣೆ ನಡೆಯುತ್ತಿತ್ತು. ಈ ಮಧ್ಯೆ ಆ ಗುಂಪಿನಲ್ಲೇ ಇದ್ದವನೊಬ್ಬನಿಂದ ಆತ್ಮಹತ್ಯಾ ದಾಳಿ ನಡೆದಿದೆ. ಸ್ಫೋಟದ ತೀವ್ರತೆ ಹೇಗಿತ್ತೆಂದರೆ, ಮನೆಯ ಮೇಲ್ಛಾವಣಿ, ಗೋಡೆ ಕುಸಿದು ಬಿದ್ದಿತ್ತು. ಹತ್ತು ಜನರು ಗಾಯಗೊಂಡಿದ್ದರೆ, ಐವರು ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ. ಘಟನೆ ವಿರುದ್ಧ ತೀವ್ರ ವಿರೋಧ ವ್ಯಕ್ತವಾಗಿದ್ದು, ಸದ್ಯ ತನಿಖೆಗೆ ಆದೇಶಿಸಲಾಗಿದೆ.
ತೆಲಂಗಾಣ | ಒಂದೇ ತಿಂಗಳಲ್ಲಿ 900 ಬೀದಿನಾಯಿಗಳ ಹತ್ಯೆ
ಸಾಮೂಹಿಕ ಹತ್ಯೆ ಆರೋಪ: ಜಗ್ತಿಯಾಲ್ ಜಿಲ್ಲೆಯಲ್ಲಿ 300ಕ್ಕೂ ಹೆಚ್ಚು ಶ್ವಾನಗಳ ಕಳೇಬರ ಪತ್ತೆ
Gold: ಚಿನ್ನದ ದರ ಏರಿಳಿತದ ನಡುವೆ ಸಂಕಷ್ಟಕ್ಕೆ ಸಿಲುಕಿದ ಸ್ಥಳೀಯ ಆಭರಣ ವ್ಯಾಪಾರಿಗಳು
ಚಿನ್ನದ ದರದಲ್ಲಿ ನಿರಂತರ ಏರಿಳಿತ ಮತ್ತು ದಾಖಲೆ ಮಟ್ಟದ ಬೆಲೆ ಏರಿಕೆಯಿಂದಾಗಿ ದೇಶದಾದ್ಯಂತ ಸಣ್ಣ ಹಾಗೂ ಕುಟುಂಬ ಆಧಾರಿತ ಸ್ಥಳೀಯ ಆಭರಣ ವ್ಯಾಪಾರಿಗಳು ತೀವ್ರ ನಗದು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ವರದಿಯಾಗಿದೆ. ದೊಡ್ಡ ಬ್ರಾಂಡೆಡ್ ಚೈನ್ ಜ್ಯುವೆಲ್ಲರಿ ಕಂಪನಿಗಳು ಈ ಪರಿಸ್ಥಿತಿಯನ್ನು ತಮ್ಮ ಲಾಭಕ್ಕೆ ಬಳಸಿಕೊಳ್ಳುತ್ತಿರುವ ಬೆಳವಣಿಗೆ ಕಂಡುಬಂದಿದೆ. ಭಾರತದ ಚಿನ್ನ ಮತ್ತು ಆಭರಣ ಉದ್ಯಮದ ಅತ್ಯಂತ
Vande Bharat Viral Video: ದೇಶದ ಬಹು ನಿರೀಕ್ಷಿತ ಎಕ್ಸ್ಪ್ರೆಸ್ ರೈಲುಗಳಲ್ಲಿ ಒಂದಾಗಿರುವ ವಂದೇ ಭಾರತ್ ಸ್ಲೀಪರ್ ರೈಲಿನ ಉದ್ಘಾಟನೆಯಾಗಿ ಕೇವಲ ಬೆರಳೆಣಿಕೆಯ ದಿನಗಳಾಗಿವೆ. ಇಷ್ಟರಲ್ಲೇ ಈ ರೈಲು ಯೋಜನೆಗೆ ಭಾರತೀಯರು ತಣ್ಣೀರು ಎರಚಿದ್ದಾರೆ. ಈಗ ವೈರಲ್ ಆಗಿರುವ ವಿಡಿಯೋವನ್ನು ನೋಡಿ ನಮ್ ದೇಶದ ಕಥೆ ಇಷ್ಟೆ... ಎನ್ನುವಂತಾಗಿದೆ. ಇಷ್ಟಕ್ಕೂ ವಂದೇ ಭಾರತ್ ಸ್ಲೀಪರ್ ಎಕ್ಸ್ಪ್ರೆಸ್ ರೈಲಿನಲ್ಲಿ
ಟಿ20 ವಿಶ್ವಕಪ್ ವಿವಾದ: ಬಾಂಗ್ಲಾ ಕ್ರಿಕೆಟ್ಗೆ ಆರ್ಥಿಕ ಸಂಕಷ್ಟ ಭೀತಿ
ಢಾಕಾ: ಬಾಂಗ್ಲಾದೇಶದ ಕ್ರಿಕೆಟ್ ಇತಿಹಾಸದಲ್ಲಿ ಮೊಟ್ಟಮೊದಲ ಟೆಸ್ಟ್ ಶತಕ ದಾಖಲಿಸಿದ ಸಾಧನೆಯ ಮೂಲಕ 25 ವರ್ಷಗಳ ಹಿಂದೆ ದೇಶದ ಮನೆಮಾತಾಗಿದ್ದ ಅಮಿನುಲ್ ಇಸ್ಲಾಂ ಬುಲ್ಬುಲ್, ತಮ್ಮ ಅಧಿಕಾರಾವಧಿಯಲ್ಲಿ ಮತ್ತೊಂದು ದಾಖಲೆ ನಿರ್ಮಾಣವಾಗುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ. ಆದರೆ ಅದು ಋಣಾತ್ಮಕ ಪರಿಣಾಮಗಳನ್ನು ಹೊಂದಿರಲಿದೆ ಎಂಬ ಸುಳಿವು ನೀಡಿದ್ದು, ಜಾಗತಿಕ ಮಟ್ಟದ ಟೂರ್ನಿಯಿಂದ ತಮ್ಮ ಅವಧಿಯಲ್ಲಿ ರಾಷ್ಟ್ರೀಯ ತಂಡ ಹೊರಗುಳಿಯುವ ಸಾಧ್ಯತೆ ನಿಚ್ಚಳವಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ. ರಾಷ್ಟ್ರದ ಘನತೆ ಹಾಗೂ ಭದ್ರತಾ ಆತಂಕಗಳ ಹಿನ್ನೆಲೆಯಲ್ಲಿ ಸರ್ಕಾರದ ಕ್ರೀಡಾ ಸಲಹೆಗಾರ ಆಸೀಪ್ ನಝ್ರುಲ್ ಅವರ ಬಿಗಿ ನಿಲುವಿನಿಂದಾಗಿ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಅವರು ಶುಕ್ರವಾರ ಹೇಳಿದ್ದಾರೆ. ಈ ಟೂರ್ನಿಯಲ್ಲಿ ಬಾಂಗ್ಲಾದೇಶ ಭಾಗವಹಿಸದೇ ಇದ್ದಲ್ಲಿ ಗಂಭೀರ ಹಣಕಾಸು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಇದರ ಪರಿಣಾಮ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ (ಬಿಸಿಬಿ), ಆಟಗಾರರು ಹಾಗೂ ಟೂರ್ನಿಯ ವಾಣಿಜ್ಯ ಸಂರಚನೆ ಮೇಲೆಯೂ ಬೀರುವ ಸಾಧ್ಯತೆ ಇದೆ. ಟೂರ್ನಿಯಲ್ಲಿ ಭಾಗವಹಿಸಿದರೆ ಬಾಂಗ್ಲಾದೇಶ ಸುಮಾರು 3 ಲಕ್ಷ ಡಾಲರ್ ಆದಾಯ ಗಳಿಸಲಿದೆ. 12 ಅಗ್ರ ತಂಡಗಳ ಪೈಕಿ ಒಂದಾಗಿ ಹೊರಹೊಮ್ಮಿದಲ್ಲಿ ಈ ಆದಾಯ 4.5 ಲಕ್ಷ ಡಾಲರ್ವರೆಗೆ ಏರಲಿದೆ. ಆದರೆ ಟೂರ್ನಿಯಿಂದ ಬಾಂಗ್ಲಾದೇಶ ಹಿಂದೆ ಸರಿದಲ್ಲಿ, ಐಸಿಸಿ ವಾರ್ಷಿಕವಾಗಿ ನೀಡುವ 27 ದಶಲಕ್ಷ ಡಾಲರ್ ಮೊತ್ತವನ್ನು ಕಳೆದುಕೊಳ್ಳಬೇಕಾಗುತ್ತದೆ. ಇದರೊಂದಿಗೆ ಪ್ರಸಾರ ಹಾಗೂ ಪ್ರಾಯೋಜಕತ್ವ ಆದಾಯಕ್ಕೂ ಭಾರೀ ಕತ್ತರಿ ಬೀಳಲಿದೆ. ಅಂದಾಜಿನ ಪ್ರಕಾರ, ಮಂಡಳಿಯ ವಾರ್ಷಿಕ ಆದಾಯದ ಶೇಕಡಾ 60ರಷ್ಟು ಪಾಲು ನಷ್ಟವಾಗುವ ಸಾಧ್ಯತೆ ಇದೆ. ಇದಕ್ಕೂ ಜೊತೆಗೆ, ಮುಂದಿನ ಆಗಸ್ಟ್–ಸೆಪ್ಟೆಂಬರ್ನಲ್ಲಿ ಭಾರತ ತಂಡದ ಬಾಂಗ್ಲಾದೇಶ ಪ್ರವಾಸವೂ ರದ್ದಾಗುವ ಸಾಧ್ಯತೆ ಇದೆ. ಈ ದ್ವಿಪಕ್ಷೀಯ ಸರಣಿಯ ಟೆಲಿವಿಷನ್ ಪ್ರಸಾರದ ಹಕ್ಕುಗಳ ಮೌಲ್ಯವು ಇತರ 10 ದ್ವಿಪಕ್ಷೀಯ ಸರಣಿಗಳ ಪ್ರಸಾರ ಹಕ್ಕಿನ ಮೌಲ್ಯಕ್ಕೆ ಸಮಾನವಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಫೆಬ್ರವರಿ 12ರಂದು ದೇಶದಲ್ಲಿ ಸಾರ್ವತ್ರಿಕ ಚುನಾವಣೆ ನಡೆಯಲಿದ್ದು, ಹೊಸ ಸರ್ಕಾರ ಅಧಿಕಾರಕ್ಕೆ ಬಂದಲ್ಲಿ ಆಸೀಪ್ ನಝ್ರುಲ್ ಅವರ ಪ್ರಭಾವ ಕಡಿಮೆಯಾಗುವ ಸಾಧ್ಯತೆ ಇದೆ. ಆದರೂ, ಬುಲ್ಬುಲ್ ಅವರ ಅವಧಿಯಲ್ಲಿ ಬಿಸಿಬಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿತು ಎಂಬ ಕಪ್ಪುಚುಕ್ಕೆ ಉಳಿಯಲಿದೆ. ಈ ಪರಿಸ್ಥಿತಿಯಲ್ಲಿ ಆಟಗಾರರೇ ಹೆಚ್ಚಿನ ನಷ್ಟ ಅನುಭವಿಸಲಿದ್ದು, ಜಾಗತಿಕ ಟೂರ್ನಿಯಲ್ಲಿ ಭಾಗವಹಿಸುವ ಅವಕಾಶವನ್ನೂ ಕಳೆದುಕೊಳ್ಳುವ ಆತಂಕ ಎದುರಾಗಿದೆ.
Karnataka weather: ರಾಜ್ಯದೆಲ್ಲೆಡೆ ಒಣ ಹವಾಮಾನ ಮುಂದುವರಿಕೆ: ದಾವಣಗೆರೆಯಲ್ಲಿ ಕನಿಷ್ಠ ತಾಪಮಾನ ದಾಖಲು
ಬೆಂಗಳೂರು: ರಾಜ್ಯದಾದ್ಯಂತ ಒಣಹವಾಮಾನ ಮುಂದುವರಿದಿದ್ದು, ದಾವಣಗೆರೆಯಲ್ಲಿ ಅತ್ಯಂತ ಕಡಿಮೆ ಕನಿಷ್ಠ ತಾಪಮಾನ 11.0 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ದಕ್ಷಿಣ ಒಳನಾಡು ಕರ್ನಾಟಕ ಹಾಗೂ ಸುತ್ತಮುತ್ತ 1.5 ಕಿ.ಮೀ ಎತ್ತರದಲ್ಲಿ ಮೇಲ್ಮೈ ಚಂಡಮಾರುತ ಪರಿಚಲನೆ ಸ್ಥಿತಿಯಲ್ಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಕರಾವಳಿ ಕರ್ನಾಟಕ ಮತ್ತು ದಕ್ಷಿಣ ಒಳನಾಡು ಕರ್ನಾಟಕದ ಕೆಲವು ಪ್ರದೇಶಗಳಲ್ಲಿ ಕನಿಷ್ಠ ತಾಪಮಾನ ಸಾಮಾನ್ಯಕ್ಕಿಂತ 1.6ರಿಂದ
ಜಯನಗರ ಟ್ರಾಫಿಕ್ ನಿವಾರಣೆಗೆ ಶೀಘ್ರವೇ ಮುಕ್ತಿ; ಹೊಸ ಪಾರ್ಕಿಂಗ್ ನೀತಿ ಸೇರಿ ಹಲವು ಅಭಿವೃದ್ಧಿ ಕಾಮಗಾರಿಗೆ ಪ್ಲ್ಯಾನ್
ಜಯನಗರದಲ್ಲಿ ಸಂಚಾರ ದಟ್ಟಣೆ ತಗ್ಗಿಸಲು ಮತ್ತು ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲು ಬೆಂಗಳೂರು ದಕ್ಷಿಣ ನಗರ ಪಾಲಿಕೆ ಮಹತ್ವದ ಸಭೆ ನಡೆಸಿತು. ಹೊಸ ಪಾರ್ಕಿಂಗ್ ನೀತಿ, ರಸ್ತೆ ಉಬ್ಬುಗಳು, ಲೇನ್ ಮಾರ್ಕಿಂಗ್, ಬಹುಮಹಡಿ ಪಾರ್ಕಿಂಗ್ ಸಂಕೀರ್ಣ ನಿರ್ಮಾಣ, ಬೀದಿ ವ್ಯಾಪಾರಿ ವಲಯ ಗುರುತಿಸುವಿಕೆ, ಬಸ್ ತಂಗುದಾಣ ಸ್ಥಳಾಂತರ ಮತ್ತು ಸ್ಕೈವಾಕ್ ನಿರ್ಮಾಣಕ್ಕೆ ನಿರ್ಧರಿಸಲಾಯಿತು. ರಾಷ್ಟ್ರೀಯ ಮತದಾರರ ದಿನಾಚರಣೆಯ ಅಂಗವಾಗಿ ಯುವ ಮತದಾರರಿಗೆ ಮತದಾನದ ಪ್ರತಿಜ್ಞಾ ವಿಧಿ ಬೋಧಿಸಿ, ಮತದಾರರ ಗುರುತಿನ ಚೀಟಿ ವಿತರಿಸಲಾಯಿತು.
ಕಿರಿಯ ಹಾಗೂ ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕರಿಗೂ ಸಿಗಲಿದೆ ಪ್ರಮೋಷನ್; ದಶಕಗಳ ಹಳೆಯ ನಿಯಮಗಳಿಗೆ ತಿದ್ದುಪಡಿ
ರಾಜ್ಯ ಸರಕಾರ ಶಿಕ್ಷಕರ ಬಡ್ತಿ ನಿಯಮಗಳಲ್ಲಿ ಮಹತ್ವದ ಬದಲಾವಣೆ ತರಲು ನಿರ್ಧರಿಸಿದೆ. ಇನ್ನು ಮುಂದೆ ಕಿರಿಯ ಹಾಗೂ ಹಿರಿಯ ಪ್ರಾಥಮಿಕ ಶಾಲೆಗಳ ಶಿಕ್ಷಕರಿಗೂ ಮುಖ್ಯ ಶಿಕ್ಷಕರ ಹುದ್ದೆಗೆ ಬಡ್ತಿ ಸಿಗಲಿದೆ. 12 ವರ್ಷಗಳ ಸೇವೆ ಕಡ್ಡಾಯವಾಗಿದ್ದು, ಹೊಸ ನಿಯಮಗಳು ಶೀಘ್ರದಲ್ಲೇ ಜಾರಿಗೆ ಬರಲಿವೆ. ಈ ಬಗ್ಗೆ ಸಾರ್ವಜನಿಕರಿಂದ ಆಕ್ಷೇಪಣೆಗಳನ್ನು ಆಹ್ವಾನಿಸಲಾಗಿದೆ.
ಜೈಲಿನಲ್ಲಿ VIP ಸೌಲಭ್ಯಕ್ಕೆ ಬ್ರೇಕ್; ʻಕೈದಿಗಳಿಗೆ ಮನೆಯೂಟ ನೀಡುವ ಸಂಬಂಧ ಮಾರ್ಗಸೂಚಿ ರೂಪಿಸಿʼ: ಹೈಕೋರ್ಟ್
ಕರ್ನಾಟಕದ ಜೈಲುಗಳಲ್ಲಿನ ಕೈದಿಗಳಿಗೆ ಮನೆಯ ಊಟ ಮತ್ತು ಇತರ ಅಗತ್ಯ ವಸ್ತುಗಳನ್ನು ನೀಡುವ ಬಗ್ಗೆ ಹೈಕೋರ್ಟ್ ಮಹತ್ವದ ಆದೇಶವೊಂದನ್ನು ಹೊರಡಿಸಿದೆ. ಪವಿತ್ರಾ ಗೌಡ ಮತ್ತು ಇತರ ಆರೋಪಿಗಳಿಗೆ ಮನೆಯ ಊಟ ನೀಡುವ ತಡೆಯಾಜ್ಞೆಯನ್ನು ವಿಸ್ತರಿಸಲಾಗಿದೆ. ಈ ವಿಚಾರಣೆ ಸಂಬಂಧ ಮತ್ತೊಂದು ಮಹತ್ವದ ಆದೇಶ ಹೊರಡಿಸಿದ್ದು, ಕೈದಿಗಳಿಗೆ ಮನೆಯೂಟ ನೀಡುವ ಬಗ್ಗೆ ಮಾರ್ಗಸೂಚಿ ರೂಪಿಸಲು ಇದು ಸೂಕ್ತ ಸಮಯ ಎಂದು ಹೇಳಿದೆ. ಯಾವ ಕೈದಿಗಳಿಗೆ ವಿಶೇಷ ಸೌಲಭ್ಯ ನೀಡಲಾಗುತ್ತಿದೆ ಎಂಬ ಮಾಹಿತಿ ನೀಡಲು ಸರ್ಕಾರಕ್ಕೆ ಸೂಚಿಸಲಾಗಿದೆ.
ʼಗೋ ಬ್ಯಾಕ್ ಗರ್ವನರ್ʼ ಅನ್ನೋದು ರಾಜಕೀಯ ನಾಟಕ: ಎಚ್.ಡಿ. ಕುಮಾರಸ್ವಾಮಿ
ಮಂಡ್ಯ: ರಾಜ್ಯಪಾಲರ ವಿರುದ್ಧ ಗೋ ಬ್ಯಾಕ್ ಗೋ ಬ್ಯಾಕ್ ಎನ್ನುತ್ತಿರುವ ರಾಜ್ಯ ಕಾಂಗ್ರೆಸ್ ಏನೂ ಸಾಧಿಸುವುದಿಲ್ಲ. ಗೋ ಬ್ಯಾಕ್ ಗವರ್ನರ್ ಅನ್ನೋದು ಕೇವಲ ರಾಜಕೀಯ ನಾಟಕ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಆರೋಪಿಸಿದ್ದಾರೆ. ಮೇಲುಕೋಟೆ ವಿಧಾನಸಭೆ ಕ್ಷೇತ್ರದ ಶಿವಳ್ಳಿ ಗ್ರಾಮದಲ್ಲಿ ಶುಕ್ರವಾರ ಮಾರಮ್ಮ ದೇವಿ ದೇವಾಲಯ ಉದ್ಘಾಟನೆ ನಂತರ ಮಾಧ್ಯಮಗಳ ಜತೆ ಮಾತನಾಡಿದ ಅವರು, ಎರಡೂ ಮುಕ್ಕಾಲು ವರ್ಷದಲ್ಲಿ ನಡೆಸಿರುವ ಅನ್ಯಾಯ, ಅಕ್ರಮಗಳನ್ನು ಮರೆಮಾಚಲು ವಿಬಿ-ಜಿ ರಾಮ್ ಜಿ ಯೋಜನೆಯ ಬಗ್ಗೆ ಕಾಂಗ್ರೆಸ್ ಸರಕಾರ ಅಪಪ್ರಚಾರ ಮಾಡುತ್ತಿದೆ ಎಂದು ದೂರಿದರು. ಸಂಘರ್ಷಗಳಿಂದ ಸಮಸ್ಯೆ ಬಗೆಹರಿವುದಿಲ್ಲ. ರಾಜ್ಯ ಸರಕಾರ ಕೇಂದ್ರದ ಜತೆ ವಿಶ್ವಾಸದಲ್ಲಿದ್ದು ಸಮಸ್ಯೆ ಬಗೆಹರಿಸಿಕೊಳ್ಳಬೇಕು. ರಾಜ್ಯದ ಸಮಸ್ಯೆಗಳ ಬಗ್ಗೆ ಸದನದಲ್ಲಿ ಚರ್ಚೆಗಳಾಗಬೇಕು. ಅದನ್ನು ಬಿಟ್ಟು ಕೇವಲ ಹೈಡ್ರಾಮಾ ನಡೆಸಿದರೆ ಏನೂ ಆಗುವುದಿಲ್ಲ ಎಂದು ಅವರು ಸಲಹೆ ನೀಡಿದರು. ಕರ್ನಾಟಕ ರಾಜ್ಯವೇ ನನ್ನ ರಾಜಕೀಯ ಪರಿಮಿತಿ. ಜನರು ಎಲ್ಲಿ ಅಪೇಕ್ಷೆ ಮಾಡುತ್ತಾರೆ ಅಲ್ಲಿಂದ ಸ್ಪರ್ಧೆ ಮಾಡುತ್ತೇನೆ. ನಮ್ಮ ಪಕ್ಷದಿಂದ ಬೇರೆ ಪಕ್ಷಕ್ಕೆ ಹೋದವರು ಜೆಡಿಎಸ್ ಕಥೆ ಮುಗಿಯಿತು ಎಂದರು. ಆದರೆ, ನಮ್ಮ ಪಕ್ಷ ಯಾವ ರೀತಿಯಲ್ಲಿ ಗಟ್ಟಿಯಾಗುತ್ತಿದೆ ಎನ್ನುವುದು ಅವರಿಗೆ ಗೊತ್ತಿಲ್ಲ. ನಮ್ಮ ಪಕ್ಷ ಮುಗಿಸಬೇಕು ಎನ್ನುವುದೇ ಅರಿಗೆ ಚಿಂತೆ ಎಂದು ಕುಮಾರಸ್ವಾಮಿ ಪ್ರತಿಕ್ರಿಯಿಸಿದರು. ಮಂಡ್ಯ ಜಿಲ್ಲೆಗೆ ಏನು ಮಾಡಬೇಕೆಂಬುದು ನನಗೆ ಗೊತ್ತಿದ್ದು, ಬೇರೆಯವರ ಸರ್ಟಿಫಿಕೇಟ್ ಬೇಕಿಲ್ಲ. ಮಂಡ್ಯದಲ್ಲಿ ಕೇಂದ್ರ ಸರಕಾರಿ ಸ್ವಾಮ್ಯದ ಆಟೋಮ್ಯಾಟಿವ್ ರಿಸರ್ಚ್ ಅಸೋಸಿಯೆಷನ್ ಆಫ್ ಇಂಡಿಯಾ ಸಂಸ್ಥೆ ಸ್ಥಾಪಿಸಲು ಜಾಗ ಕೊಡುವಂತೆ ನನ್ನ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದೇನೆ. ಇದರಲ್ಲಿ ಅನವಶ್ಯಕ ರಾಜಕೀಯ ಅಗತ್ಯ ಇಲ್ಲ. ಜಿಲ್ಲೆಯ ಅಭಿವೃದ್ಧಿ ಎಲ್ಲರ ಜವಾಬ್ದಾರಿ ಎಂದು ಅವರು ಹೇಳಿದರು. ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಸೇರಿದಂತೆ ಜೆಡಿಎಸ್ನ ಹಲವು ಮುಖಂಡರು ಉಪಸ್ಥಿತರಿದ್ದರು. “ಕಾಂಗ್ರೆಸ್ನ ಕೆಟ್ಟ ಆಡಳಿತವನ್ನು ಕಿತ್ತೊಗೆಯಲು ಜೆಡಿಎಸ್-ಬಿಜೆಪಿ ಒಟ್ಟಾಗಿ ಹೋರಾಟ ನಡೆಸುತ್ತವೆ. ಈ ಹಿನ್ನೆಲೆಯಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಜನರ ನಿರೀಕ್ಷೆಗೆ ತಕ್ಕಂತೆ ನಾವು ಮೈತ್ರಿ ಬಗ್ಗೆ ತೀರ್ಮಾನ ಮಾಡುತ್ತೇವೆ. ಸ್ಥಳೀಯ ಮಟ್ಟದಲ್ಲಿ ಪೈಪೋಟಿ ಇರುವುದು ಸಹಜ. ಎಲ್ಲಾ ಪಕ್ಷಗಳಲ್ಲಿ ಅದು ಇರುತ್ತದೆ. ಕಾರ್ಯಕರ್ತರು ಸ್ಥಾನಮಾನಕ್ಕಾಗಿ ಚರ್ಚೆ ಮಾಡುತ್ತಾರೆ. ಆ ಕುರಿತು ಅಂತಿಮವಾಗಿ ನಾವು ತೀರ್ಮಾನ ಮಾಡುತ್ತೇವೆ.” ಎಚ್.ಡಿ.ಕುಮಾರಸ್ವಾಮಿ, ಕೇಂದ್ರ ಸಚಿವ
Chikkamagaluru | ಕಾಫಿನಾಡಿನ ಯುವಕನನ್ನು ವರಿಸಿದ ಚೀನಾ ಯುವತಿ
ಚಿಕ್ಕಮಗಳೂರು: ಚೀನಾ ದೇಶದ ಯುವತಿ ಜೇಡ್ ಮತ್ತು ಕಾಫಿನಾಡಿನ ಯುವಕ ರೂಪಕ್ ಪರಸ್ಪರ ಇಷ್ಟಪಟ್ಟು ಶುಕ್ರವಾರ ಸಪ್ತಪದಿ ತುಳಿದರು. ದಂಪತಿಗೆ ಶಾಸಕ ಎಚ್.ಡಿ.ತಮ್ಮಯ್ಯ ಸೇರಿದಂತೆ ಗಣ್ಯರು ಹಾಗೂ ನೂರಾರು ಮಂದಿ ಶುಭಹಾರೈಸಿದರು. ಹಿರೇಗೌಜ ಗ್ರಾಮದ ಬಳಿ ಕಾಫಿ, ಅಡಿಕೆ, ತರಕಾರಿ ಕೃಷಿ ಮಾಡಿಕೊಂಡಿರುವ ಶ್ರೀನಿವಾಸ ಮತ್ತು ಕಸ್ತೂರಿ ದಂಪತಿ ಪುತ್ರ ಕೆ.ಎಸ್.ರೂಪಕ್ ಸುಮಾರು ಏಳೆಂಟು ವರ್ಷದ ಹಿಂದೆ ಅಧ್ಯಯನಕ್ಕಾಗಿ ಆಸ್ಟ್ರೇಲಿಯಾಕ್ಕೆ ತೆರಳಿದ್ದು, ಯುನಿರ್ವಸಿಟಿ ಆಫ್ ಕ್ವೀನ್ಸ್ ಲ್ಯಾಡ್ನಲ್ಲಿ ಎಂಬಿಎ ವ್ಯಾಸಂಗ ಮಾಡಿದವರು. ಚೀನಾ ದೇಶದ ಗಾಂಗ್ಜಾವ್ ಪಟ್ಟಣದ ಡಾ.ಜಿನ್ಚಾಂಗ್ ಲಯಾವ್ ಮತ್ತು ಡಾ.ಶಾಂಗ್ಕಿಯಾನ್ ವೈದ್ಯ ದಂಪತಿ ಪುತ್ರಿ ಲೂ ವು (ಜೇಡ್) ಸಹ ಆಸ್ಟ್ರೇಲಿಯಾದಲ್ಲಿ ಅಧ್ಯಯನಕ್ಕೆ ಬಂದಿದ್ದರು. ಇಬ್ಬರಿಗೂ ಪರಿಚಯವಾಗಿ ಪರಿಚಯ ಪ್ರೇಮವಾಗಿ ಪರಿವರ್ತನೆಗೊಂಡಿತು. ಶಿಕ್ಷಣದ ನಂತರ ರೂಪಕ್ ಆಸ್ಟ್ರೇಲಿಯಾದ ಮೂರನೇ ಅತಿದೊಡ್ಡ ನಗರವಾದ ಬ್ರೆಸ್ಬೈನ್ನಲ್ಲಿ ನೆಲೆಸಿ ಬ್ರೆಡ್ಸ್ ಗ್ರೂಫ್ ಫೈನಾಸ್ಷಿಯಲ್ ಕಂಟ್ರೋಲರ್ ಉದ್ಯೋಗ ನಿರ್ವಹಿಸುತ್ತಿದ್ದು, ಜೀಡ್ಕೂಡ ಲಿನೊವೋ ಕಂಪನಿಯ ಪಾಲುದಾರರಾಗಿ ಉದ್ಯೋಗ ನಿರತರಾಗಿದ್ದಾರೆ. ಇಬ್ಬರೂ ಕುಟುಂಬದ ಹಿರಿಯರು, ಬಂಧು-ಮಿತ್ರರ ಆಶೀರ್ವಾದ ಪಡೆದು ವಿವಾಹವಾಗಲು ತೀರ್ಮಾನಿಸಿದ್ದಾರೆ.
ಕೊಹ್ಲಿಯನ್ನು ಹಿಂದಿಕ್ಕಿ 2ನೇ ಸ್ಥಾನಕ್ಕೇರಿದ ಹಾರ್ದಿಕ್ ಪಾಂಡ್ಯ - ಏನಿದು ದಾಖಲೆ?
ಹಾರ್ದಿಕ್ ಪಾಂಡ್ಯ ನ್ಯೂಜಿಲೆಂಡ್ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ ಆಡುವ ಮೂಲಕ 126 ಪಂದ್ಯಗಳೊಂದಿಗೆ ವಿರಾಟ್ ಕೊಹ್ಲಿಯನ್ನು ಹಿಂದಿಕ್ಕಿ, ಟಿ20 ಅಂತರಾಷ್ಟ್ರೀಯ ಪಂದ್ಯಗಳಲ್ಲಿ ಭಾರತದ ಪರ ಅತಿ ಹೆಚ್ಚು ಪಂದ್ಯಗಳನ್ನು ಆಡಿದ ಎರಡನೇ ಆಟಗಾರ ಎನಿಸಿಕೊಂಡಿದ್ದಾರೆ. ಈ ಸಾಧನೆ ಅವರ ಬ್ಯಾಟಿಂಗ್ ಮತ್ತು ಬೌಲಿಂಗ್ನಲ್ಲಿನ ಸ್ಥಿರ ಪ್ರದರ್ಶನಕ್ಕೆ ಸಾಕ್ಷಿಯಾಗಿದೆ.
ಕೆ.ರಾಮಚಂದ್ರರಾವ್ ವಿರುದ್ಧ ಸೂಕ್ತ ತನಿಖೆಗೆ ಆಗ್ರಹ
ಕಲಬುರಗಿ: ಮಹಿಳೆಯರೊಂದಿಗೆ ಅಸಭ್ಯವಾಗಿ ವರ್ತಿಸಿ, ಅಧಿಕಾರ ದುರುಪಯೋಗ ಮಾಡಿಕೊಂಡಿರುವ ಆರೋಪದಡಿ ಡಿಜಿಪಿ ಕೆ.ರಾಮಚಂದ್ರರಾವ್ ವಿರುದ್ಧ ತಕ್ಷಣವೇ ಪ್ರಕರಣ ದಾಖಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಕಲಬುರಗಿ ಜಿಲ್ಲಾ ಜನವಾದಿ ಮಹಿಳಾ ಸಂಘಟನೆ ಆಗ್ರಹಿಸಿದೆ. ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಸಂಘಟನೆಯ ಜಿಲ್ಲಾಧ್ಯಕ್ಷೆ ಪದ್ಮಿನಿ ಕಿರಣಗಿ ಹಾಗೂ ಪ್ರಧಾನ ಕಾರ್ಯದರ್ಶಿ ಶಾಂತಾ ಸರಡಗಿ, ಕೆ.ರಾಮಚಂದ್ರರಾವ್ ಅವರು ತಮ್ಮ ಹುದ್ದೆಯ ಪ್ರಭಾವವನ್ನು ದುರುಪಯೋಗಪಡಿಸಿಕೊಂಡು ಸಂವಿಧಾನಾತ್ಮಕ ಮೌಲ್ಯಗಳನ್ನು ಧಿಕ್ಕರಿಸಿದ್ದು, ಪೊಲೀಸ್ ಇಲಾಖೆಗೆ ಕಳಂಕ ತಂದಿದ್ದಾರೆ ಎಂದು ಆರೋಪಿಸಿದ್ದಾರೆ. ಮಹಿಳೆಯರು ಹಾಗೂ ನಾಗರಿಕರಿಗೆ ರಕ್ಷಣೆ ನೀಡಿ ಸಾರ್ವಜನಿಕರಲ್ಲಿ ಭರವಸೆ ಮೂಡಿಸಬೇಕಾದ ಉನ್ನತ ಸ್ಥಾನದಲ್ಲಿರುವ ಅಧಿಕಾರಿಯೇ ಇಂತಹ ವರ್ತನೆ ತೋರಿರುವುದು ಅತ್ಯಂತ ಖಂಡನೀಯ ಎಂದು ಅವರು ಹೇಳಿದ್ದಾರೆ.
ದಾವೋಸ್ನಲ್ಲಿ ದೂರಸಂಪರ್ಕ, ಬಾಹ್ಯಾಕಾಶ, ಸೈಬರ್ ಸುರಕ್ಷತೆ ದೈತ್ಯ ಕಂಪೆನಿಗಳ ಜೊತೆ ಸಚಿವ ಎಂ.ಬಿ.ಪಾಟೀಲ್ ಚರ್ಚೆ
ಬೆಂಗಳೂರು: ದೂರಸಂಪರ್ಕ ತಂತ್ರಜ್ಞಾನ ಕ್ಷೇತ್ರದ ಜಾಗತಿಕ ದೈತ್ಯ ಸಂಸ್ಥೆಗಳಲ್ಲಿ ಒಂದಾಗಿರುವ ನೋಕಿಯಾ ಕಾರ್ಪೋರೇಷನ್ ಕರ್ನಾಟಕ ರಾಜ್ಯದಲ್ಲಿ ಜಾಗತಿಕ ಸಾಮಥ್ರ್ಯ ಕೇಂದ್ರ(ಜಿಸಿಸಿ)ಮತ್ತು ಸಂಶೋಧನಾ ಕೇಂದ್ರಗಳನ್ನು ಸ್ಥಾಪಿಸಲು ಒಲವು ವ್ಯಕ್ತಪಡಿಸಿದೆ ಎಂದು ಬೃಹತ್ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ತಿಳಿಸಿದ್ದಾರೆ. ಕರ್ನಾಟಕದ ಜೊತೆಗೆ 25 ವರ್ಷಗಳ ಸುದೀರ್ಘ ಸಹಯೋಗ ಹೊಂದಿರುವ, ಬೆಂಗಳೂರಿನಲ್ಲಿ ತನ್ನ ಜಾಗತಿಕ ಅತಿದೊಡ್ಡ ಸಂಶೋಧನಾ ಕೇಂದ್ರ ಹೊಂದಿರುವ ನೋಕಿಯಾ, 2ನೆ ಶ್ರೇಣಿಯ ನಗರಗಳೂ ಸೇರಿದಂತೆ ರಾಜ್ಯದಲ್ಲಿ ತನ್ನ ವಹಿವಾಟು ವಿಸ್ತರಣೆ ಸಂಬಂಧ ಮಾತುಕತೆ ನಡೆಸಿದೆ. ದಾವೋಸ್ನಲ್ಲಿ ನಡೆಯುತ್ತಿರುವ ವಿಶ್ವ ಆರ್ಥಿಕ ವೇದಿಕೆಯ ಸಮಾವೇಶದಲ್ಲಿ ನೋಕಿಯಾದ ಉನ್ನತಾಧಿಕಾರಿಗಳ ಜೊತೆ ನಡೆದ ಸಭೆಯಲ್ಲಿ ಕಂಪೆನಿಯ ಭವಿಷ್ಯದ ವಿಸ್ತರಣಾ ಉಪಕ್ರಮಗಳಿಗೆ ಸರಕಾರದ ಸಂಪೂರ್ಣ ಬೆಂಬಲ ನೀಡುವ ಭರವಸೆ ನೀಡಲಾಗಿದೆ’ ಎಂದು ಪಾಟೀಲ್ ತಿಳಿಸಿದರು. ಸುಸ್ಥಿರ ನಗರಾಭಿವೃದ್ಧಿಗೆ ಸಂಬಂಧಿಸಿದ ‘ಯೆಸ್ ಬೆಂಗಳೂರು’ ಉಪಕ್ರಮವು ಜಾಗತಿಕ ಮಾನ್ಯತೆ ಪಡೆದ ಸರಕಾರ ಹಾಗೂ ಉದ್ಯಮ ಸಹಯೋಗದ ವೇದಿಕೆಯನ್ನಾಗಿ ಅಭಿವೃದ್ಧಿಪಡಿಸುವ ವಿಶ್ವ ಆರ್ಥಿಕ ವೇದಿಕೆಯ ‘ಯೆಸ್- ಬಿಎಲ್ಆರ್ ಅಪ್ಲಿಂಕ್’ ಉಪಕ್ರಮಕ್ಕೆ ರಾಜ್ಯ ಸರಕಾರದ ಅಗತ್ಯ ಬೆಂಬಲ ನೀಡಲಿದೆ ಎಂದು ಅವರು ಭರವಸೆ ನೀಡಿದರು. ‘ವಿಶ್ವ ಆರ್ಥಿಕ ವೇದಿಕೆಯ ಅಪ್ಲಿಂಕ್ ಮುಖ್ಯಸ್ಥ ಜಾನ್ ಡುಟೊನ್ ಅವರ ಜೊತೆಗಿನ ಸಭೆಯಲ್ಲಿ ಇದನ್ನು ಪ್ರಮುಖವಾಗಿ ಚರ್ಚಿಸಲಾಗಿದೆ. ನಗರ ಕೇಂದ್ರೀತ ವಾಸ್ತವಿಕ ಸಮಸ್ಯೆಗಳಿಗೆ ಪರಿಹಾರ ಒದಗಿಸುವ ಹಾಗೂ ನಗರಾಭಿವೃದ್ಧಿಗೆ ಕೊಡುಗೆ ನೀಡುವ ನವೋದ್ಯಮಗಳಿಗೆ ಹಣಕಾಸು ನೆರವು, ಉತ್ತೇಜನ, ಪ್ರಾಯೋಗಿಕ ಅವಕಾಶಗಳನ್ನು ಒದಗಿಸುವ ವಿಶಿಷ್ಟ ಉಪಕ್ರಮ ಇದಾಗಿದೆ. ಈ ಉಪಕ್ರಮವನ್ನು ಮುಂದುವರೆಸಿಕೊಂಡು ಹೋಗುವುದಕ್ಕೆ ಕರ್ನಾಟಕ ಸರಕಾರ ನೀಡಿರುವ ಬೆಂಬಲವನ್ನು ಡಬ್ಲ್ಯುಇಎಫ್ ಅಪ್ಲಿಂಕ್ನ ನಿಯೋಗವು ಶ್ಲಾಘಿಸಿದೆ’ ಎಂದು ಅವರು ತಿಳಿಸಿದರು. ‘ಕ್ವಿನ್ ಸಿಟಿ’ ಯೋಜನೆಯ ಭಾಗವಾಗುವ ಹಾಗೂ ವಿಸ್ತರಣೆ ಸಾಧ್ಯತೆಗಳ ಬಗ್ಗೆ ಸೈಬರ್ ಸುರಕ್ಷತೆಯ ಜಾಗತಿಕ ಕಂಪೆನಿ ಕ್ಲೌಡ್ಫ್ಲೇರ್ನ ಜೊತೆಗಿನ ಸಭೆಯಲ್ಲಿ ಚರ್ಚಿಸಲಾಗಿದೆ. ಕಂಪೆನಿಯ ಭವಿಷ್ಯದ ವಿಸ್ತರಣಾ ಯೋಜನೆಗಳಿಗೆ ರಾಜ್ಯ ಸರಕಾರದ ಅಗತ್ಯ ನೆರವಿನ ಭರವಸೆ ನೀಡಲಾಗಿದೆ. ಅತ್ಯಾಧುನಿಕ ತಂತ್ರಜ್ಞಾನ ಆಕರ್ಷಿಸುವುದರಲ್ಲಿ ಕರ್ನಾಟಕವು ಜಾಗತಿಕವಾಗಿ ಅತ್ಯುತ್ತಮ ತಾಣವಾಗಿದೆಯೆಂದು ಕಂಪೆನಿಯ ಜಾಗತಿಕ ಕಾರ್ಯತಂತ್ರ ಮುಖ್ಯಸ್ಥ ಸ್ಟೆಫಾನಿ ಕೊಹೆನ್ ಅವರು ಗುಣಗಾನ ಮಾಡಿದ್ದಾರೆ’ ಎಂದು ಪಾಟೀಲ್ ತಿಳಿಸಿದರು. ಪಾಲುದಾರಿಕೆಗೆ ವಾಸ್ಟ್ ಸ್ಪೇಸ್ ಒಲವು: ಬಾಹ್ಯಾಕಾಶ ತಂತ್ರಜ್ಞಾನ, ಅತ್ಯಾಧುನಿಕ ತಯಾರಿಕೆ ಮತ್ತು ನಾವೀನ್ಯತೆ ಆಧಾರಿತ ಉಪಕ್ರಮಗಳಿಗೆ ಸಂಬಂಧಿಸಿದಂತೆ ಕರ್ನಾಟಕ ಸರಕಾರದ ಜೊತೆ ಪಾಲುದಾರಿಕೆ ಮಾಡಿಕೊಳ್ಳಲು ಅಮೆರಿಕದ ಬಾಹ್ಯಾಕಾಶ ತಂತ್ರಜ್ಞಾನ ಕಂಪೆನಿ ವಾಸ್ಟ್ ಸ್ಪೇಸ್ ಒಲವು ತೋರಿಸಿದೆ. ಯುಎಇ ಮೂಲದ ಬಹುರಾಷ್ಟ್ರೀಯ ಉದ್ಯಮ ಸಮೂಹವಾಗಿರುವ ಕ್ರೆಸೆಂಟ್ ಎಂಟರ್ ಪ್ರೈಸಿಸ್, ರಾಜ್ಯದ ಉದ್ದಿಮೆ ಹಾಗೂ ಕಂಪೆನಿಗಳಲ್ಲಿ ಹೂಡಿಕೆ ಮಾಡಲು ಆಸಕ್ತಿ ವ್ಯಕ್ತಪಡಿಸಿದೆ. ಒಪ್ಪಂದಕ್ಕೆ ಆಸಕ್ತಿ: ರಾಜ್ಯ ಸರಕಾರದ ಜೊತೆ ಪಾಲುದಾರಿಕೆಯ ಒಪ್ಪಂದ ಮಾಡಿಕೊಳ್ಳುವುದಕ್ಕೆ ಅಮೆರಿಕದ ವೈಮಾಂತರಿಕ್ಷ ಕಂಪೆನಿ ವೊಯೆಜರ್ ಟೆಕ್ನಾಲಜೀಸ್ ಕಂಪೆನಿ ತೀವ್ರ ಆಸಕ್ತಿ ವ್ಯಕ್ತಪಡಿಸಿದೆ. ಬಾಹ್ಯಾಕಾಶ ತಂತ್ರಜ್ಞಾನ ಮತ್ತು ಸಂಶೋಧನಾ ಉಪಕ್ರಮಗಳಿಗೆ ಸಂಬಂಧಿಸಿದಂತೆ ಇಸ್ರೋ ಜೊತೆ ಪಾಲುದಾರಿಕೆ ಮಾಡಿಕೊಳ್ಳುವುದಕ್ಕೂ ಮುಂದೆ ಬಂದಿದೆ. ಕಾರ್ಯನಿರ್ವಾಹಕ ಉಪಾಧ್ಯಕ್ಷ ಜಾನ್ಬೌಮ್ ಅವರ ಜೊತೆಗಿನ ಭೇಟಿಯಲ್ಲಿ, ರಾಜ್ಯದ ಬಯೊಫಾರ್ಮಾ ವಲಯದಲ್ಲಿ ಚಟುವಟಿಕೆ ವಿಸ್ತರಿಸುವ ಸಾಧ್ಯತೆಗಳನ್ನು ಚರ್ಚಿಸಲಾಗಿದೆ’ ಎಂದು ಪಾಟೀಲ್ ತಿಳಿಸಿದರು. ಜಾಗತಿಕ ಕ್ಲೌಡ್ ಕಂಪೆನಿಗಳನ್ನು ರಾಜ್ಯಕ್ಕೆ ಆಕರ್ಷಿಸಲು ಅಮೆಜಾನ್ ವೆಬ್ ಸರ್ವಿಸಸ್ ಜೊತೆ ಚರ್ಚೆ ಯುರೋಪ್ ಮುಕ್ತ ವ್ಯಾಪಾರ ಒಪ್ಪಂದದ(ಇಎಫ್ಟಿಎ) ಭಾಗವಾಗಿರುವ ಬಂಡವಾಳ ಹೂಡಿಕೆ ಬದ್ಧತೆಯಲ್ಲಿನ ಬಹುಪಾಲನ್ನು ಕರ್ನಾಟಕದಲ್ಲಿ ಹೂಡಿಕೆ ಮಾಡಲು ರಾಜ್ಯ ಸರಕಾರವು ಲಿಚೆಂಟೈನ್ ಪ್ರಧಾನಿಗೆ ಮನವಿ ಮಾಡಿಕೊಂಡಿದೆ. ಶುಕ್ರವಾರ ದಾವೋಸ್ನಲ್ಲಿ ನಡೆಯುತ್ತಿರುವ ವಿಶ್ವ ಆರ್ಥಿಕ ವೇದಿಕೆಯ ಸಮಾವೇಶದಲ್ಲಿ ಲಿಚೆಂಟೈನ್ ಪ್ರಧಾನಿ ಶ್ರೀಮತಿ ಬ್ರಿಗೆಟ್ ಹ್ಯಾಸ್ ಅವರನ್ನು ಭೇಟಿಯಾಗಿ ಆ ದೇಶದ ಕೈಗಾರಿಕಾ ಪರಿಣತಿ, ಕರ್ನಾಟಕದ ತಯಾರಿಕಾ ಹಾಗೂ ನಾವೀನ್ಯತಾ ಪರಿಸರದ ಸದ್ಬಳಕೆಗೆ ದ್ವಿಪಕ್ಷೀಯ ಬಾಂಧವ್ಯ ವೃದ್ಧಿಪಡಿಸಲು ಫಲಪ್ರದ ಚರ್ಚೆ ನಡೆಸಲಾಯಿತು. ವಾಣಿಜ್ಯ ಬಾಂಧವ್ಯ ಗಟ್ಟಿಗೊಳಿಸಲು ರಾಜ್ಯಕ್ಕೆ ಭೇಟಿ ನೀಬೇಕೆಂದು ಲಿಚೆಂಟೈನ್ ಪ್ರಧಾನಿಗೆ ಆಹ್ವಾನ ನೀಡಲಾಗಿದೆ’ ಎಂದು ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ತಿಳಿಸಿದರು. ‘ಜಾಗತಿಕ ಕ್ಲೌಡ್ ಮತ್ತು ಮೂಲಸೌಲಭ್ಯ ಕಂಪೆನಿಗಳನ್ನು ಅಧಿಕ ಸಂಖ್ಯೆಯಲ್ಲಿ ರಾಜ್ಯಕ್ಕೆ ಆಕರ್ಷಿಸಲು ವಿಶ್ವದ ಪ್ರಮುಖ ಕ್ಲೌಡ್ ಕಂಪ್ಯೂಟಿಂಗ್ ಮತ್ತು ಡಿಜಿಟಲ್ ಮೂಲಸೌಲಭ್ಯ ಕಂಪೆನಿ ಅಮೆಜಾನ್ ವೆಬ್ ಸರ್ವಿಸಸ್ನ(ಎಡಬ್ಲ್ಯುಎಸ್)ಉಪಾಧ್ಯಕ್ಷ ಮೈಕಲ್ ಪುಂಕೆ ಅವರ ಜೊತೆ ವಿವರವಾಗಿ ಚರ್ಚಿಸಲಾಗಿದೆ. ರಾಜ್ಯದಲ್ಲಿ ವಿಪುಲ ಪ್ರಮಾಣದಲ್ಲಿ ಲಭ್ಯ ಇರುವ ಕುಶಲ ತಂತ್ರಜ್ಞರು, ನವೋದ್ಯಮಗಳು ಮತ್ತು ಡಿಜಿಟಲ್ ಮೂಲ ಸೌಲಭ್ಯಗಳ ಬಗ್ಗೆ ಮೈಕಲ್ ಪುಂಕ್ ಅವರು ಅಪಾರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಜಾಗತಿಕ ಕ್ಲೌಡ್ ಮತ್ತು ಡೇಟಾ ಸೆಂಟರ್ ನಿರ್ವಹಿಸುವ ಕಂಪೆನಿಗಳ ಅಗತ್ಯಗಳನ್ನೆಲ್ಲ ಪೂರೈಸುವುದಾಗಿ ಸರಕಾರ ಭರವಸೆ ನೀಡಿದೆ’ ಎಂದು ಅವರು ನುಡಿದರು. ಕ್ಲೌಡ್ ಕಂಪ್ಯೂಟಿಂಗ್ ಕ್ಷೇತ್ರಕ್ಕೆ ಸಂಬಂಧಿಸಿದಂತೆ ರಾಜ್ಯದಲ್ಲಿ ಲಭ್ಯ ಇರುವ ಉತ್ತೇಜನೆಗಳು, ವಿದ್ಯುತ್ ಲಭ್ಯತೆ ಮತ್ತು ಬಳಕೆಗೆ ಸನ್ನದ್ಧಸ್ಥಿತಿಯಲ್ಲಿ ಇರುವ ಮೂಲಸೌಲಭ್ಯಗಳ ಬಗ್ಗೆ ಮಾಹಿತಿ ಹಂಚಿಕೊಳ್ಳಲಾಗಿದೆ. ರಾಜ್ಯದಲ್ಲಿನ ಉದ್ಯಮ ಸ್ನೇಹಿ ಪರಿಸರದ ಬಗ್ಗೆ ವಾಹನ ತಯಾರಿಕಾ ಕಂಪೆನಿ ವೋಲ್ವೊ ಸಂಪೂರ್ಣ ತೃಪ್ತಿ ವ್ಯಕ್ತಪಡಿಸಿದೆ. ತಯಾರಿಕೆ, ತಂತ್ರಜ್ಞಾನ ಮತ್ತು ಕುಶಲ ತಂತ್ರಜ್ಞರ ಲಭ್ಯತೆ ಬಳಸಿಕೊಂಡು ರಾಜ್ಯದಲ್ಲಿನ ವಾಹನ ತಯಾರಿಕೆ ಚಟುವಟಿಕೆಗಳನ್ನು ವಿಸ್ತರಿಸಲು ಆಹ್ವಾನ ನೀಡಲಾಗಿದೆ ಎಂದು ತಿಳಿಸಿದರು.
ರಾಷ್ಟ್ರೀಯ ಹಬ್ಬಗಳಲ್ಲಿ ಸಾರ್ವಜನಿಕರ ರಕ್ಷಣೆಗೆ ಅಗತ್ಯ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳುವಂತೆ ಸೂಚನೆ
ಬೆಂಗಳೂರು: ಸರಕಾರಿ ಕಾರ್ಯಕ್ರಮಗಳು ಸೇರಿದಂತೆ ರಾಷ್ಟ್ರೀಯ ಹಬ್ಬಗಳು ಹಾಗೂ ಶಾಲಾ/ ಕಾಲೇಜುಗಳ ಇತರೆ ಸಾಂಸ್ಕೃತಿಕ ಮತ್ತು ಆಡಳಿತಾತ್ಮಕ ಕಾರ್ಯಕ್ರಮಗಳನ್ನು ಆಯೋಜಿಸುವ ಸಂದರ್ಭಗಳಲ್ಲಿ ಅಪಘಾತಗಳು ಸಂಭವಿಸದಂತೆ ಮಕ್ಕಳ ಮತ್ತು ಸಾರ್ವಜನಿಕರ ರಕ್ಷಣೆಗೆ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಶಾಲಾ ಮತ್ತು ಸಾಕ್ಷರತಾ ಇಲಾಖೆಯು ಸುತ್ತೋಲೆಯನ್ನು ಹೊರಡಿಸಿದೆ. ಧ್ವಜಾರೋಹಣ ಮಾಡುವ ಸಂದರ್ಭದಲ್ಲಿ ಧ್ವಜಾರೋಹಣ ಕಂಬದ ಬಳಿ ವಿದ್ಯುತ್ ತಂತಿಗಳು ಹಾದುಹೋಗದಂತೆ ಮತ್ತು ಕಂಬವು ವಿದ್ಯುತ್ ತಂತಿಗಳನ್ನು ಸಂಪರ್ಕಿಸದಂತೆ ಮುನ್ನೆಚ್ಚರಿಕೆ ವಹಿಸಬೇಕು. ಧ್ವಜಾರೋಹಣ ಕಂಬಕ್ಕೆ ಧ್ವಜವನ್ನು ಏರಿಸುವ ಅಥವಾ ಇಳಿಸುವ ಕಾರ್ಯಗಳಿಗೆ ಮಕ್ಕಳನ್ನು ಬಳಸಿಕೊಳ್ಳಬಾರದು. ಧ್ವಜಾರೋಹಣಾ ಸಂದರ್ಭದಲ್ಲಿ ಅನಿರೀಕ್ಷಿತವಾಗಿ ಧ್ವಜ ಸಿಕ್ಕಿಕೊಂಡಲ್ಲಿ ಯಾವುದೇ ಕಾರಣಕ್ಕೂ ಮಕ್ಕಳನ್ನು ಧ್ವಜಕಂಬಕ್ಕೆ ಹತ್ತಿಸಬಾರದು. ಮಕ್ಕಳ ಕವಾಯತು, ಪಥ ಸಂಚಲನ, ಸಾಂಸ್ಕೃತಿಕ ಕಾರ್ಯಕ್ರಮದ ವೇದಿಕೆ, ಮಕ್ಕಳು ಕುಳಿತುಕೊಳ್ಳುವ ಸ್ಥಳಗಳು ಸುರಕ್ಷಿತವಾಗಿರುವ ಬಗ್ಗೆ ಕಾರ್ಯಕ್ರಮದ ಮೊದಲು ಹಾಗೂ ಆಗಿಂದಾಗ್ಗೆ ಪರಿಶೀಲಿಸಬೇಕು. ಮಕ್ಕಳಿಗೆ ನೀಡುವ ನೀರು, ಪಾನೀಯ, ಆಹಾರ ಪದಾರ್ಥಗಳ ಶುಚಿತ್ವದ ಬಗ್ಗೆ ಪರಿಶೀಲಿಸಬೇಕು. ಆಹಾರವನ್ನು ಮಕ್ಕಳಿಗೆ ವಿತರಿಸುವ ಪೂರ್ವದಲ್ಲಿ ಕಾರ್ಯಕ್ರಮ ಸಂಯೋಜಕರು ಪರಿಶೀಲಿಸಿ ಗುಣಮಟ್ಟವನ್ನು ಖಾತರಿಪಡಿಸಿಕೊಂಡ ನಂತರದಲ್ಲಿ ಮಕ್ಕಳಿಗೆ ವಿತರಿಸಬೇಕು ಎಂದು ತಿಳಿಸಿದೆ.
Kim Jong Un: ಟೆನ್ಷನ್ ಬಿಟ್ಟು ಸ್ಪಾ ಕಡೆ ಹೊರಟ ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್, ವಿಡಿಯೋ ವೈರಲ್
ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಅಷ್ಟು ಕ್ರೂರಿ, ಇಷ್ಟು ಕ್ರೂರಿ ಅಂತೆಲ್ಲಾ ಆಗಾಗ ಸುದ್ದಿಗಳು ಓಡಾಡುತ್ತಲೇ ಇರುತ್ತವೆ. ಅದರಲ್ಲೂ ಉತ್ತರ ಕೊರಿಯಾ ಅಧಿಕಾರಿಗಳಿಗೆ ಕಿಮ್ ಜಾಂಗ್ ಉನ್ ನೀಡುವ ಶಿಕ್ಷೆಗಳ ಬಗ್ಗೆ ಸಾಕಷ್ಟು ಚರ್ಚೆ ನಡೆದಿದೆ. ಅತ್ಯಂತ ಕ್ರೂರವಾಗಿ ಅಧಿಕಾರಿಗಳ ಕಥೆ ಮುಗಿಸಿದ ಹಿನ್ನೆಲೆ ಕೂಡ ಕಿಮ್ ಜಾಂಗ್ ಉನ್ ಆಡಳಿತಕ್ಕೆ ಇದೆ. ಹೀಗೆಲ್ಲಾ
ಹರಪನಹಳ್ಳಿ | ಶಾರ್ಟ್ ಸರ್ಕೂಟ್ನಿಂದ ಬೆಂಕಿ : 8 ಎಕರೆ ಮೆಕ್ಕೆಜೋಳ, 6 ಎಕರೆ ರಾಗಿ ಬಣವೆ ಸುಟ್ಟು ಭಸ್ಮ
ಹರಪನಹಳ್ಳಿ: ತಾಲೂಕಿನ ಸಮೀಪದ ಬಾಗಳಿ ಗ್ರಾಮದಲ್ಲಿ ಶುಕ್ರವಾರ ಮಧ್ಯಾಹ್ನ ಶಾರ್ಟ್ ಸರ್ಕೂಟ್ನಿಂದ ಉಂಟಾದ ಬೆಂಕಿ ಅವಘಡದಲ್ಲಿ 11 ಕೆವಿ ವಿದ್ಯುತ್ ತಂತಿ ಕಣಕ್ಕೆ ಬಿದ್ದು, ಪಕ್ಕದಲ್ಲಿದ್ದ ಮೆಕ್ಕೆಜೋಳದ ಗುಡ್ಡೆಗಳು ಹಾಗೂ ರಾಗಿ ತೆನೆಯ ಬಣವೆಗಳಿಗೆ ಬೆಂಕಿ ಹತ್ತಿ ಭಾರೀ ಹಾನಿ ಸಂಭವಿಸಿದೆ. ಈ ಅವಘಡದಲ್ಲಿ 8 ಎಕರೆ ಮೆಕ್ಕೆಜೋಳ ಮತ್ತು 6 ಎಕರೆ ರಾಗಿ ತೆನೆಯ ಬಣವೆಗಳು ಸಂಪೂರ್ಣವಾಗಿ ಸುಟ್ಟು ಕರಕಲಾಗಿವೆ. ಬೆಂಕಿ ನಂದಿಸಲು ಗ್ರಾಮಸ್ಥರು ಹರಸಾಹಸ ಪಟ್ಟರೂ, ಅಷ್ಟರಲ್ಲೇ ಕಣದಲ್ಲಿ ಇಟ್ಟಿದ್ದ ಎತ್ತಿನ ಬಂಡಿ ಸೇರಿದಂತೆ ಕೃಷಿ ಸಲಕರಣೆಗಳು ಸಹ ಸಂಪೂರ್ಣವಾಗಿ ಸುಟ್ಟು ನಾಶವಾಗಿವೆ. ಈ ಬೆಳೆಗಳು ಹುಲ್ಲುಮನಿ ಜಾತಪ್ಪ ಹಾಗೂ ಹುಲ್ಲುಮನಿ ನಾಗರಾಜ ಎಂಬ ಸಹೋದರ ರೈತರಿಗೆ ಸೇರಿದ್ದಾಗಿದ್ದು, ಬೆಂಕಿ ಅವಘಡದಿಂದ ಸುಮಾರು 13 ಲಕ್ಷ ರೂ. ಮೌಲ್ಯದ ಬೆಳೆ ಹಾಗೂ ಕೃಷಿ ಉಪಕರಣಗಳು ನಾಶವಾಗಿವೆ. ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸುವ ಕಾರ್ಯ ಕೈಗೊಂಡಿದ್ದಾರೆ. ಘಟನೆಯ ಬಗ್ಗೆ ಮಾತನಾಡಿದ ರೈತ ಹುಲ್ಲುಮನಿ ಜಾತಪ್ಪ, “ಸಾಲ ಮಾಡಿ ಬೆಳೆ ಬೆಳೆದಿದ್ದೆವು. ಈಗಾಗಲೇ ಅತಿವೃಷ್ಟಿಯಿಂದ ಕೆಲ ಬೆಳೆ ಹಾನಿಯಾಗಿತ್ತು. ಉಳಿದಿದ್ದ ಮೆಕ್ಕೆಜೋಳ ಮತ್ತು ರಾಗಿ ಬಣವೆಗಳ ಮೇಲೆ ಹಳೆಯ ವಿದ್ಯುತ್ ತಂತಿ ಬಿದ್ದು ಸಂಪೂರ್ಣವಾಗಿ ಸುಟ್ಟುಹೋಯಿತು. ಕೃಷಿ ಸಾಲ ತೀರಿಸುವುದು ಮತ್ತು ಕುಟುಂಬ ನಿರ್ವಹಣೆ ಬಗ್ಗೆ ತೀವ್ರ ಚಿಂತೆ ಎದುರಾಗಿದೆ. ಸಂಬಂಧಿಸಿದ ಇಲಾಖೆ ನಷ್ಟಕ್ಕೆ ತಕ್ಕಂತೆ ಸೂಕ್ತ ಪರಿಹಾರ ನೀಡಬೇಕು ಎಂದು ಮನವಿ ಮಾಡಿದ್ದಾರೆ. ಈ ಕುರಿತು ಹರಪನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟ್ರಂಪ್ ಅವರ ಶಾಂತಿ ಮಂಡಳಿ ಆಹ್ವಾನ ತಿರಸ್ಕರಿಸಿದ ಸ್ಪೇನ್: ವರದಿ
ಮ್ಯಾಡ್ರಿಡ್, ಜ.23: ಗಾಝಾ ಶಾಂತಿ ಮಂಡಳಿಗೆ ಸೇರ್ಪಡೆಗೊಳ್ಳುವಂತೆ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೀಡಿದ್ದ ಆಹ್ವಾನವನ್ನು ತಿರಸ್ಕರಿಸುವುದಾಗಿ ಸ್ಪೇನ್ ಶುಕ್ರವಾರ ಹೇಳಿದೆ. ಟ್ರಂಪ್ ಅವರ ಕ್ರಮವು ಸ್ಪೇನ್ ದೀರ್ಘಾವಧಿಯಿಂದ ಬದ್ಧವಾಗಿರುವ ಬಹುಪಕ್ಷೀಯತೆ ಹಾಗೂ ವಿಶ್ವಸಂಸ್ಥೆ ವ್ಯವಸ್ಥೆಗೆ ವಿರುದ್ಧವಾಗಿದೆ ಎಂದು ಸ್ಪೇನ್ನ ಪ್ರಧಾನಮಂತ್ರಿ ಪೆಡ್ರೋ ಸ್ಯಾಂಚೆಸ್ ಹೇಳಿದ್ದಾರೆ. ಇದರೊಂದಿಗೆ ಸ್ಪೇನ್, ಫ್ರಾನ್ಸ್, ಜರ್ಮನಿ, ನಾರ್ವೆ, ಸ್ವೀಡನ್, ಡೆನ್ಮಾರ್ಕ್, ಸ್ಲೊವೇನಿಯಾ, ಇಟಲಿ ಮತ್ತು ಬ್ರಿಟನ್ ಅಧಿಕೃತವಾಗಿ ಗಾಝಾ ಶಾಂತಿ ಮಂಡಳಿಯಿಂದ ಹೊರಗೇ ಉಳಿದಂತಾಗಿದೆ.
ಭಾರತ ಪ್ರವಾಸಕ್ಕೆ ನಿರಾಕರಿಸಿದ ಬಾಂಗ್ಲಾದೇಶ ವಿರುದ್ಧ ಕಠಿಣ ಕ್ರಮಕ್ಕೆ ಐಸಿಸಿ ಚಿಂತನೆ
ಹೊಸದಿಲ್ಲಿ, ಜ.23: ಮುಂಬರುವ 2026ರ ಆವೃತ್ತಿಯ ಐಸಿಸಿ ಪುರುಷರ ಟಿ-20 ವಿಶ್ವಕಪ್ ಟೂರ್ನಿಯಲ್ಲಿ ಭಾಗವಹಿಸಲು ಭಾರತಕ್ಕೆ ಪ್ರವಾಸ ಕೈಗೊಳ್ಳಲು ಬಾಂಗ್ಲಾದೇಶ ನಿರಾಕರಿಸಿದ ಹಿನ್ನೆಲೆಯಲ್ಲಿ ಅದರ ವಿರುದ್ಧ ಐಸಿಸಿ ಕಠಿಣ ಕ್ರಮ ಕೈಗೊಳ್ಳುವ ಬಗ್ಗೆ ಯೋಚಿಸುತ್ತಿದೆ ಎಂದು ಸುದ್ದಿಸಂಸ್ಥೆ ಎಎನ್ಐ ಶುಕ್ರವಾರ ವರದಿ ಮಾಡಿದೆ. ಐಸಿಸಿ ಅಧ್ಯಕ್ಷ ಜಯ್ ಶಾ ಪ್ರಸ್ತುತ ದುಬೈನಲ್ಲಿ ಇದ್ದು, ಈ ವಿಚಾರದ ಕುರಿತು ಅಲ್ಲಿ ಅಂತಿಮ ನಿರ್ಧಾರ ಕೈಗೊಳ್ಳುವ ನಿರೀಕ್ಷೆ ಇದೆ. ಭಾರತದಿಂದ ಶ್ರೀಲಂಕಾಕ್ಕೆ ಪಂದ್ಯಗಳನ್ನು ಸ್ಥಳಾಂತರಿಸಬೇಕೆಂಬ ಬಾಂಗ್ಲಾದೇಶ ಕ್ರಿಕೆಟ್ ತಂಡದ ಬೇಡಿಕೆಯನ್ನು ಐಸಿಸಿ ತಿರಸ್ಕರಿಸಿದ ಬಳಿಕ ಮುಂದಿನ ತಿಂಗಳು ನಡೆಯಲಿರುವ ಟಿ-20 ವಿಶ್ವಕಪ್ ಗೆ ತನ್ನ ರಾಷ್ಟ್ರೀಯ ತಂಡವನ್ನು ಭಾರತಕ್ಕೆ ಕಳುಹಿಸುವುದಿಲ್ಲ ಎಂದು ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ಗುರುವಾರ ಘೋಷಿಸಿದೆ. ಈ ಹಿನ್ನೆಲೆಯಲ್ಲಿ ಸ್ಕಾಟ್ಲ್ಯಾಂಡ್ ತಂಡವು ಪಂದ್ಯಾವಳಿಯಲ್ಲಿ ಬಾಂಗ್ಲಾದೇಶದ ಬದಲಿಗೆ ಆಡುವ ಸಾಧ್ಯತೆಯಿದೆ. ಭಾರತಕ್ಕೆ ಪ್ರಯಾಣಿಸಲು ಒಪ್ಪಿಕೊಳ್ಳಬೇಕು, ಇಲ್ಲದಿದ್ದರೆ ಬದಲಿ ತಂಡವನ್ನು ಆಡಿಸಲಾಗುವುದು ಎಂದು ಐಸಿಸಿ ಬುಧವಾರ ಬಾಂಗ್ಲಾದೇಶಕ್ಕೆ ಅಂತಿಮ ಎಚ್ಚರಿಕೆ ನೀಡಿತ್ತು. ಭಾರತದಲ್ಲಿ ಬಾಂಗ್ಲಾದೇಶ ಆಟಗಾರರು, ಅಧಿಕಾರಿಗಳು ಅಥವಾ ಅಭಿಮಾನಿಗಳ ಸುರಕ್ಷತೆಗೆ ಯಾವುದೇ ಬೆದರಿಕೆ ಇಲ್ಲ ಎಂದು ತಿಳಿಸಿರುವ ಐಸಿಸಿ, ಇದಕ್ಕೆ ಪ್ರತಿಕ್ರಿಯಿಸಲು ಗುರುವಾರದ ತನಕ ಬಾಂಗ್ಲಾದೇಶಕ್ಕೆ ಸಮಯ ನೀಡಿತ್ತು. “ನಮ್ಮ ಕ್ರಿಕೆಟಿಗರು ವಿಶ್ವಕಪ್ಗೆ ಅರ್ಹತೆ ಪಡೆಯಲು ಸಾಕಷ್ಟು ಶ್ರಮಿಸಿದ್ದಾರೆ. ಆದರೆ ಭಾರತದಲ್ಲಿ ಆಡುವ ಬಗ್ಗೆ ಭದ್ರತಾ ಅಪಾಯಗಳ ಕುರಿತು ನಮ್ಮ ಆತಂಕ ನಿವಾರಣೆಯಾಗಿಲ್ಲ. ನಮ್ಮ ಇಡೀ ತಂಡ, ಪತ್ರಕರ್ತರು ಹಾಗೂ ಪ್ರೇಕ್ಷಕರ ಸುರಕ್ಷತೆ ಕುರಿತು ನಮಗೆ ಸಂಪೂರ್ಣ ಭರವಸೆ ಇಲ್ಲ. ನಾವು ವಿಶ್ವಾಸವನ್ನು ಕಳೆದುಕೊಂಡಿಲ್ಲ; ನಮ್ಮ ತಂಡ ಸಿದ್ಧವಾಗಿದೆ,” ಎಂದು ಬಾಂಗ್ಲಾದೇಶದ ಕ್ರೀಡಾ ಸಲಹೆಗಾರ ಆಸಿಫ್ ನಝ್ರುಲ್ ಹೇಳಿದ್ದಾರೆ. 2026ರ ಟಿ-20 ವಿಶ್ವಕಪ್ನಲ್ಲಿ ಬಾಂಗ್ಲಾದೇಶದ ಪಂದ್ಯಗಳನ್ನು ಭಾರತದಿಂದ ಹೊರಗೆ ಸ್ಥಳಾಂತರಿಸುವಂತೆ ಕೋರಿ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ (ಬಿಸಿಬಿ) ಐಸಿಸಿಯ ಸ್ವತಂತ್ರ ವಿವಾದ ಪರಿಹಾರ ಸಮಿತಿ (ಡಿಆರ್ಸಿ)ಯನ್ನು ಸಂಪರ್ಕಿಸಿದೆ ಎಂದು ‘ದಿ ಡೈಲಿ ಸ್ಟಾರ್’ ವರದಿ ಮಾಡಿದೆ. ಡಿಆರ್ಸಿಯನ್ನು ಸಂಪರ್ಕಿಸುವ ಮೂಲಕ ಭಾರತದಲ್ಲಿ ವಿಶ್ವಕಪ್ ಪಂದ್ಯಗಳನ್ನು ಆಯೋಜಿಸುವ ಐಸಿಸಿ ನಿರ್ಧಾರಕ್ಕೆ ಸವಾಲೊಡ್ಡಲು ಬಿಸಿಬಿ ಯತ್ನಿಸುತ್ತಿದೆ. ತನ್ನ ಅಧಿಕಾರ ವ್ಯಾಪ್ತಿಗೆ ಇದು ಬಾರದ ಕಾರಣ ಬಿಸಿಬಿಯ ಕೋರಿಕೆಯನ್ನು ಡಿಆರ್ಸಿ ಆಲಿಸುವ ಸಾಧ್ಯತೆ ಕಡಿಮೆ ಎನ್ನಲಾಗಿದೆ. ಡಿಆರ್ಸಿ ನಮ್ಮ ವಿರುದ್ಧ ತೀರ್ಪು ನೀಡಿದರೆ, ಸ್ವಿಟ್ಸರ್ಲ್ಯಾಂಡ್ನಲ್ಲಿರುವ ಕ್ರೀಡಾ ಪಂಚಾಯಿತಿ ನ್ಯಾಯಾಲಯ (ಸಿಎಎಸ್) ಅನ್ನು ಸಂಪರ್ಕಿಸಲಾಗುವುದು ಎಂದು ಬಿಸಿಬಿ ಮೂಲಗಳು ಪಿಟಿಐಗೆ ತಿಳಿಸಿವೆ. ಬಿಸಿಬಿಯು ತನ್ನ ನಾಲ್ಕೂ ಗ್ರೂಪ್ ಪಂದ್ಯಗಳನ್ನು ಶ್ರೀಲಂಕಾದಲ್ಲಿ ಆಡಲು ಅನುಮತಿ ನೀಡುವಂತೆ ವಿನಂತಿಸಿದೆ. ಭಾರತ ಹಾಗೂ ಪಾಕಿಸ್ತಾನದ ನಡುವಿನ ಐಸಿಸಿ ಆಯೋಜಿತ ಪಂದ್ಯಗಳು ಹೈಬ್ರಿಡ್ ವ್ಯವಸ್ಥೆಯಲ್ಲಿ 2027ರ ತನಕ ತಟಸ್ಥ ತಾಣದಲ್ಲಿ ನಡೆಯಲಿವೆ.
ಮೆಡಿಟರೇನಿಯನ್ ಸಮುದ್ರದಲ್ಲಿ ರಶ್ಯದಿಂದ ಬರುತ್ತಿದ್ದ ತೈಲ ಟ್ಯಾಂಕರ್ ವಶಕ್ಕೆ ಪಡೆದ ಫ್ರಾನ್ಸ್ ನೌಕಾಪಡೆ
ಟ್ಯಾಂಕರ್ ವಶಕ್ಕೆ ಪಡೆದ ಫ್ರಾನ್ಸ್ ನೌಕಾಪಡೆ
ಚಾರ್ಮಾಡಿ ಘಾಟ್| ಸರಕು ಹೇರಿಕೊಂಡು ಹೋಗುತ್ತಿದ್ದ ಲಾರಿಯ ಪ್ಲೇಟ್ ಕಟ್; ಟ್ರಾಫಿಕ್ ಜಾಮ್
ಬೆಳ್ತಂಗಡಿ; ಚಾರ್ಮಾಡಿ ಘಾಟಿಯಲ್ಲಿ ಭಾರೀ ಪ್ರಮಾಣದಲ್ಲಿ ಸರಕು ಹೇರಿಕೊಂಡು ಬರುತ್ತಿದ್ದ ಲಾರಿಯೊಂದು ತಿರುವು ಪಡೆದುಕೊಳ್ಳಲು ಸಾಧ್ಯವಾಗದೆ ಪ್ಲೇಟ್ ಕಟ್ ಆಗಿ ರಸ್ತೆ ಮಧ್ಯೆ ಬಾಕಿಯಾಗಿ ಟ್ರಾಫಿಕ್ ಜಾಮ್ ಉಂಟಾದ ಘಟನೆ ಶುಕ್ರವಾರ ಸಂಜೆ ನಡೆದಿದ್ದು ರಾತ್ರಿವರೆಗೂ ಟ್ರಾಫಿಕ್ ಜಾಮ್ ಮುಂದುವರಿದಿದೆ. ಪ್ಲೇಟ್ ಕಟ್ ಆಗಿರುವ ಕಾರಣದಿಂದ ಲಾರಿ ರಸ್ತೆಯಲ್ಲೇ ನಿಂತ ಕಾರಣ ಘನ ವಾಹನ ಸಂಚಾರಕ್ಕೆ ಅಡ್ಡಿ ಉಂಟಾ ಯಿತು. ಲಘು ವಾಹನಗಳಿಗೆ ಸಂಚರಿಸುವಷ್ಟು ಜಾಗವಿದ್ದು ಬೇಕಾಬಿಟ್ಟಿಯಾಗಿ ವಾಹನಗಳನ್ನು ನುಗ್ಗಿಸಿದ ಕಾರಣ ಮತ್ತಷ್ಟು ಟ್ರಾಫಿಕ್ ಜಾಮ್ ಉಂಟಾಗಿ ವಾಹನಗಳು ಹಲವು ತಾಸು ಸಾಲುಗಟ್ಟಿ ನಿಲ್ಲಬೇಕಾಯಿತು. ಕೊಲೊಮೀಟರ್ ಗಟ್ಟಲೆ ಟ್ರಾಫಿಕ್ ಜಾಮ್ ಸೃಷ್ಟಿ ಯಾಯಿತು. ನಿರಂತರ ರಜೆ ಹಿನ್ನೆಲೆಯಲ್ಲಿ ಪ್ರವಾಸಿಗರ ಸಂಖ್ಯೆ ಶುಕ್ರವಾರವೇ ಹೆಚ್ಚಿದ್ದು ಘಾಟಿ ಭಾಗದಲ್ಲಿ ವಾಹನ ಸಂಚಾರ ದಟ್ಟಣೆಯು ಅಧಿಕಗೊಂಡಿದೆ.
ಚಾರ್ಮಾಡಿ ಘಾಟಿಯಲ್ಲಿ ಎರಡು ಲಾರಿಗಳು ಪಲ್ಟಿ: ರಾಷ್ಟ್ರೀಯ ಹೆದ್ದಾರಿ 173ರಲ್ಲಿ ಟ್ರಾಫಿಕ್ ಜಾಮ್
ವಾಹನ ಸವಾರರ ಪರದಾಟ
ʼಗಮ್ಮತ್ ಕಲಾವಿದರ್ ಯುಎಇʼ ವಾರ್ಷಿಕ ಸಭೆ: ನೂತನ ಪದಾಧಿಕಾರಿಗಳ ಆಯ್ಕೆ
ದುಬೈ: ಯುಎಇಯ ಪ್ರಸಿದ್ಧ ತುಳು ನಾಟಕ ತಂಡ ʼಗಮ್ಮತ್ ಕಲಾವಿದರ್ ಯುಎಇʼ 2011ರಲ್ಲಿ ಸ್ಥಾಪನೆಗೊಂಡು ತುಳು ರಂಗಭೂಮಿಯನ್ನು ಸಕ್ರಿಯವಾಗಿ ಮರಳುನಾಡಿನಲ್ಲಿ ಬೆಳೆಸಿಕೊಂಡು ಬರುತ್ತಿದ್ದು, ಗುಣಮಟ್ಟದ ನಾಟಕ ಪ್ರದರ್ಶನಗಳು, ಪರಿಪಕ್ವವಾದ ಅಭಿನಯಗಳ ಮೂಲಕ ಕೊಲ್ಲಿ ರಾಷ್ಟ್ರದಲ್ಲಿ ಮಾತ್ರವಲ್ಲದೆ ತಾಯ್ನಾಡಿನ ತುಳು ರಂಗಭೂಮಿಯಲ್ಲಿ ತನ್ನದೇ ಆದ ಗೌರವಾನ್ವಿತ ಸ್ಥಾನವನ್ನು ಗಳಿಸಿದೆ. ರಂಗಭೂಮಿಯ ಚಟುವಟಿಕೆಗಳಷ್ಟೇ ಅಲ್ಲದೆ, ಗಮ್ಮತ್ ಕಲಾವಿದರ್ ಯುಎಇ ಕಳೆದ ಒಂದು ದಶಕಕ್ಕಿಂತ ಹೆಚ್ಚು ಕಾಲ ಸ್ವದೇಶದಲ್ಲಿನ ವಿವಿಧ ಸಮಾಜಮುಖಿ ಕಾರ್ಯಗಳಿಗೆ ಸಹಾಯ ಹಸ್ತ ನೀಡುತ್ತಾ ಸಾಂಸ್ಕೃತಿಕ ಪ್ರಚಾರದ ಜೊತೆಗೆ ಅರ್ಥಪೂರ್ಣ ಸಾಮಾಜಿಕ ಸೇವೆಯನ್ನು ಸಮತೋಲನದಿಂದ ಮುಂದುವರೆಸುತ್ತಿರುವುದು ಗಮನಾರ್ಹ ಅಂಶ. ಗಮ್ಮತ್ ಕಲಾವಿದರ್ ಯುಎಇ ತಮ್ಮ ಮುಂದಿನ ಕಾರ್ಯಕ್ರಮಗಳು ಮತ್ತು ಯೋಜನೆಗಳಿಗೆ ಬಲ ತುಂಬುವ ಉದ್ದೇಶದಿಂದ, 2026–27 ಅವಧಿಯ ನೂತನ ಕಾರ್ಯಕಾರಿ ಸಮಿತಿಯನ್ನು ಜ.18ರಂದು ದುಬೈಯ ಬರ್ ದುಬೈಯಲ್ಲಿರುವ ಗ್ರ್ಯಾಂಡ್ ಎಕ್ಸೆಲ್ಸಿಯರ್ ಹೋಟೆಲ್ನ ಘಜಲ್ ರೆಸ್ಟೋರೆಂಟ್ನಲ್ಲಿ ನಡೆದ ವಾರ್ಷಿಕ ಸಭೆಯಲ್ಲಿ ರಚಿಸಲಾಯಿತು. ವಾರ್ಷಿಕ ಸಭೆಯು ಸಂಸ್ಥೆಯ ಗೌರವ ಪೋಷಕರು ಹಾಗೂ ಕನ್ನಡ ಚಿತ್ರ ನಿರ್ಮಾಪಕರಾದ ಹರೀಶ್ ಬಂಗೇರ ಹಾಗೂ ನಾಟಕ ನಿರ್ದೇಶಕ “ರಂಗಸಾರಥಿ”ವಿಶ್ವನಾಥ್ ಶೆಟ್ಟಿ ಅವರು ಮಾರ್ಗದರ್ಶನ ಜರುಗಿದ್ದು, ಸಭೆಯಲ್ಲಿ ಹಿರಿಯ ನಾಟಕ ಹಾಗೂ ಕಿರುಚಿತ್ರ ಕಲಾವಿದರಾದ ವಾಸು ಕುಮಾರ್ ಶೆಟ್ಟಿ ಅವರನ್ನು ಸರ್ವಾನುಮತದಿಂದ ಅಧ್ಯಕ್ಷರಾಗಿ ಆಯ್ಕೆ ಮಾಡಲಾಯಿತು. ನಾಟಕ ಹಾಗೂ ಯಕ್ಷಗಾನ ಕಲಾವಿದೆಯಾದ ಸಮಂತಾ ಗಿರೀಶ್ ಅವರನ್ನು ಕಾರ್ಯದರ್ಶಿಯಾಗಿ, ಹಾಗೂ ಅನುಭವೀ ರಂಗಕಲಾವಿದೆಯಾದ ಜೆನೆಟ್ ಸಿಕ್ವೇರಾ ಅವರನ್ನು ಕೋಶಾಧಿಕಾರಿಯಾಗಿ ಆಯ್ಕೆ ಮಾಡಲಾಯಿತು. ಹರೀಶ್ ಬಂಗೇರ ಅವರು ಪೋಷಕರಾಗಿ ಮುಂದುವರಿಯಲಿದ್ದು, ನಿರ್ದೇಶಕ “ರಂಗಸಾರಥಿ” ವಿಶ್ವನಾಥ್ ಶೆಟ್ಟಿ ಅವರು ತಂಡದ ಕಲಾತ್ಮಕ ಮಾರ್ಗದರ್ಶನವನ್ನು ಮುಂದುವರಿಸಲಿದ್ದಾರೆ. ನೂತನ ಅಧ್ಯಕ್ಷರಾದ ವಾಸು ಕುಮಾರ್ ಶೆಟ್ಟಿ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರು, ಮರಳುನಾಡಿನಲ್ಲಿ ತುಳು ರಂಗಭೂಮಿಯ ಬೆಳವಣಿಗೆ ಹಾಗೂ ತುಳು ಸಂಸ್ಕೃತಿಯ ಸಂರಕ್ಷಣೆಗೆ ಪೋಷಕರು , ತುಳು ರಂಗಭೂಮಿ ಅಭಿಮಾನಿಗಳು , ಸದಸ್ಯರು ಮತ್ತು ಹಿತೈಷಿಗಳು ತಮ್ಮ ಸಹಕಾರ ಮತ್ತು ಬೆಂಬಲವನ್ನು ಮುಂದುವರೆಸಬೇಕಾಗಿ ಮನವಿ ಮಾಡಿದ್ದಾರೆ.
ಕಲಬುರಗಿ | ವಿದ್ಯಾರ್ಥಿಗಳ ಉತ್ತೀರ್ಣಕ್ಕೆ ಮುಖ್ಯ ಶಿಕ್ಷಕರು ಶ್ರಮಿಸಿ : ಬಿ.ಫೌಝಿಯಾ ತರನ್ನುಮ್
ಎಸೆಸೆಲ್ಸಿ ಪರೀಕ್ಷಾ ಫಲಿತಾಂಶ ಸುಧಾರಣಾ ಕಾರ್ಯಾಗಾರ
ಡಾ. ಪ್ರಣವಾನಂದ ಶ್ರೀಗಳಿಗೆ ಕಲಬುರಗಿ ಈಡಿಗ, ಬಿಲ್ಲವರಿಂದ ಗೌರವ ಸನ್ಮಾನ
ಕಲಬುರಗಿ: ಈಡಿಗ, ಬಿಲ್ಲವ, ನಾಮಧಾರಿ ಸೇರಿದಂತೆ 26 ಪಂಗಡಗಳ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಐತಿಹಾಸಿಕ ಪಾದಯಾತ್ರೆ ಕೈಗೊಂಡಿರುವ ಡಾ. ಪ್ರಣವಾನಂದ ಶ್ರೀಗಳು ಗಂಗಾವತಿ ಪಟ್ಟಣಕ್ಕೆ ಆಗಮಿಸಿದ ಸಂದರ್ಭದಲ್ಲಿ ಕಲಬುರಗಿಯ ಈಡಿಗ ನಾಯಕರು ಭವ್ಯ ಸ್ವಾಗತ ಕೋರಿಸಿ ಗೌರವಪೂರ್ವಕವಾಗಿ ಸನ್ಮಾನಿಸಿದರು. ಚಿತ್ತಾಪುರದ ಕರದಾಳದಲ್ಲಿರುವ ಬ್ರಹ್ಮಶ್ರೀ ನಾರಾಯಣ ಗುರು ಶಕ್ತಿ ಪೀಠದಿಂದ ಜನವರಿ 6ರಂದು ಆರಂಭಗೊಂಡು ಬೆಂಗಳೂರಿನ ಫ್ರೀಡಂ ಪಾರ್ಕ್ ವರೆಗೆ ನಡೆಯುವ ಸುಮಾರು 700 ಕಿ.ಮೀ ದೂರದ ಪಾದಯಾತ್ರೆ, 16 ದಿನಗಳ ನಂತರ ಜನವರಿ 21ರಂದು ಗಂಗಾವತಿ ಪಟ್ಟಣ ತಲುಪಿತು. ಈ ಸಂದರ್ಭದಲ್ಲಿ ಕಲ್ಯಾಣ ಕರ್ನಾಟಕ ಆರ್ಯ ಈಡಿಗ ಹೋರಾಟ ಸಮಿತಿಯ ವತಿಯಿಂದ ಡಾ. ಪ್ರಣವಾನಂದ ಶ್ರೀಗಳನ್ನು ಗೌರವಿಸಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಹೋರಾಟ ಸಮಿತಿಯ ಅಧ್ಯಕ್ಷ ಸತೀಶ್ ವಿ. ಗುತ್ತೇದಾರ್, ಬ್ರಹ್ಮಶ್ರೀ ನಾರಾಯಣ ಗುರು ಶಕ್ತಿ ಪೀಠದ ಟ್ರಸ್ಟಿಗಳಾದ ಮಹಾದೇವ ಗುತ್ತೇದಾರ್, ವೆಂಕಟೇಶ ಎಂ. ಕಡೇಚೂರ್, ಪ್ರವೀಣ ಜತ್ತನ್, ಅಂಬಯ್ಯ ಗುತ್ತೇದಾರ್ (ಇಬ್ರಾಹಿಂಪುರ್), ಈ. ತಿಮ್ಮಪ್ಪ (ಗಂಗಾವತಿ), ಡಾ. ಸದಾನಂದ ಪೆರ್ಲ, ಸುರೇಶ್ ಗುತ್ತೇದಾರ್ (ಮಟ್ಟೂರು), ನಾರಾಯಣ ಗುತ್ತೇದಾರ್ (ಬೆಳಗಾವಿ), ಸಂತೋಷ್ ಚೌಧರಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಈ ವೇಳೆ ಸಮಾಜದ ಹಿರಿಯ ಮುಖಂಡ ಹಾಗೂ ವಿಧಾನ ಪರಿಷತ್ ಮಾಜಿ ಸದಸ್ಯರಾದ ಎಚ್.ಆರ್. ಶ್ರೀನಾಥ್ ಅವರನ್ನು ಸಹ ಗೌರವಿಸಿ ಸನ್ಮಾನಿಸಲಾಯಿತು.
ಚಾರ್ಮಾಡಿ ಘಾಟಿಯಲ್ಲಿ ಗ್ಯಾಸ್ ಸಿಲಿಂಡರ್ ತುಂಬಿದ್ದ ಲಾರಿ ಪಲ್ಟಿ
ಚಿಕ್ಕಮಗಳೂರು: ಜಿಲ್ಲೆಯ ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟಿಯ ಅಣ್ಣಪ್ಪ ಸ್ವಾಮಿ ದೇವಾಲಯದ ಸಮೀಪದ ತಿರುವಿನಲ್ಲಿ ಗ್ಯಾಸ್ ಸಿಲಿಂಡರ್ಗಳಿಂದ ತುಂಬಿದ್ದ ಲಾರಿಯೊಂದು ಪಲ್ಟಿಯಾದ ಘಟನೆ ನಡೆದಿದೆ. ಕಡೂರಿನಿಂದ ಮಂಗಳೂರಿಗೆ ತೆರಳುತ್ತಿದ್ದ ಲಾರಿ, ಚಾಲಕನ ನಿಯಂತ್ರಣ ತಪ್ಪಿದ ಪರಿಣಾಮ ತಿರುವಿನಲ್ಲಿ ಉರುಳಿದೆ. ಅಪಘಾತದಲ್ಲಿ ಲಾರಿ ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಣಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಪಘಾತದ ಕಾರಣ ಕೆಲಕಾಲ ಸಂಚಾರದಲ್ಲಿ ಅಡಚಣೆ ಉಂಟಾಯಿತು.
ಸೇಡಂ | ವಾಣಿಜ್ಯ ಮಳಿಗೆಗಳ ಕಟ್ಟಡ ಉದ್ಘಾಟಿಸಿದ ಸಚಿವ ಡಾ.ಶರಣಪ್ರಕಾಶ್ ಪಾಟೀಲ್
ಸೇಡಂ: ಪಟ್ಟಣದ ಹೃದಯ ಭಾಗದಲ್ಲಿ ಸರ್ಕಾರದಿಂದ ಬೃಹತ್ ವಾಣಿಜ್ಯ ಮಳಿಗೆಗಳ ಕಟ್ಟಡ ನಿರ್ಮಿಸುವ ಮೂಲಕ ವ್ಯಾಪಾರಿಗಳು ಹಾಗೂ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಲಾಗಿದೆ ಎಂದು ವೈದ್ಯಕೀಯ ಶಿಕ್ಷಣ ಹಾಗೂ ಕೌಶಲಾಭಿವೃದ್ಧಿ ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ಹೇಳಿದರು. ಪಟ್ಟಣದ ತಾಲೂಕು ಕ್ರೀಡಾಂಗಣದ ಸಮೀಪ, ಮುಖ್ಯರಸ್ತೆಗೆ ಹೊಂದಿಕೊಂಡಂತೆ ಕೆಆರ್ಐಡಿಎಲ್ ವತಿಯಿಂದ ಸುಮಾರು 2.99 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾದ ವಾಣಿಜ್ಯ ಮಳಿಗೆಗಳ ಕಟ್ಟಡವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಈ ಹಿಂದೆ ನಾನು ಸಚಿವನಾಗಿದ್ದ ಸಂದರ್ಭದಲ್ಲಿ ಈ ಕಟ್ಟಡಕ್ಕೆ ಅನುದಾನ ಒದಗಿಸಲಾಗಿತ್ತು. ಆದರೆ ಹಿಂದಿನ ಸರ್ಕಾರ ಇದಕ್ಕೆ ಕಾಯಕಲ್ಪ ನೀಡಲು ವಿಫಲವಾಗಿತ್ತು. ಇದೀಗ ಮತ್ತೆ ನಾನು ಚುನಾಯಿತನಾಗಿ ಬಂದ ಬಳಿಕ ಈ ಕಟ್ಟಡವನ್ನು ಸಾರ್ವಜನಿಕರಿಗೆ ಸಮರ್ಪಿಸುವ ಕೆಲಸ ಮಾಡಲಾಗಿದೆ ಎಂದು ತಿಳಿಸಿದರು. ಈ ಕಟ್ಟಡದಲ್ಲಿ ಒಟ್ಟು 42 ಅಂಗಡಿಗಳನ್ನು ನಿರ್ಮಿಸಲಾಗಿದ್ದು, ಜೊತೆಗೆ ಖಾಲಿ ಜಾಗವನ್ನೂ ವಿವಿಧ ವ್ಯಾಪಾರ ಚಟುವಟಿಕೆಗಳಿಗೆ ಬಳಸಲು ಅವಕಾಶ ಕಲ್ಪಿಸಲಾಗಿದೆ. ಕಟ್ಟಡವನ್ನು ನಗರಸಭೆಗೆ ಹಸ್ತಾಂತರಿಸಲಾಗಿದ್ದು, ನಿಯಮಾನುಸಾರ ಬಾಡಿಗೆದಾರರಿಗೆ ಮಳಿಗೆಗಳನ್ನು ನೀಡಲಾಗುತ್ತದೆ ಎಂದು ಅವರು ಹೇಳಿದರು. ಈ ಸಂದರ್ಭದಲ್ಲಿ ಕೆಆರ್ಐಡಿಎಲ್ ಇಇ ನೀಲಕಂಡ ರಾಠೋಡ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ವಿಶ್ವನಾಥ ಪಾಟೀಲ್, ಸಹಾಯಕ ಆಯುಕ್ತ ಪ್ರಭುರೆಡ್ಡಿ, ತಹಸೀಲ್ದಾರ್ ಶ್ರೀಯಾಂಕಾ ಧನಶ್ರೀ, ಡಿವೈಎಸ್ಪಿ ಸಂಗಮನಾಥ ಹಿರೇಮಠ, ನಗರಸಭೆ ಪೌರಾಯುಕ್ತ ಶರಣಯ್ಯಸ್ವಾಮಿ, ಕೆಪಿಸಿಸಿ ಕಾರ್ಯದರ್ಶಿ ನಾಗೇಶ್ವರಾವ ಮಾಲೀಪಾಟೀಲ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಿವಶರಣರೆಡ್ಡಿ ಪಾಟೀಲ್ ಸೇರಿದಂತೆ ಜಗದೇವಪ್ಪ ಪಾಟೀಲ್ ಕೊಂಕನಹಳ್ಳಿ, ವೆಂಕಟೇಶ ನಾಡೇಪಲ್ಲಿ, ಶರಣಗೌಡ ನಾಚವಾರ, ಗುರುನಾಥರೆಡ್ಡಿ ಪಾಟೀಲ್, ಶ್ರೀನಿವಾಸ ಪ್ಯಾಟಿ, ಮಹ್ಮದ್ ಗೌಸ, ದೀಪಕ ಎಂ.ಜಿ, ಶ್ರೀನಿವಾಸರೆಡ್ಡಿ ಕೋಲಕುಂದಾ, ಸಂತೋಷ ತಳವಾರ, ಬಸವರಾಜ ಮಾಲೀಪಾಟೀಲ್ ಊಡಗಿ, ನೀಲಕಂಠ ಹಂಗನಹಳ್ಳಿ, ಜಗದೇವಯ್ಯ ಬಂಡಾ ಮತ್ತಿತರರು ಉಪಸ್ಥಿತರಿದ್ದರು.
US Military: ಇರಾನ್ ಕಡೆಗೆ ನುಗ್ಗುತ್ತಿರುವ ಅಮೆರಿಕದ ಬೃಹತ್ ಸೇನೆ, ಟ್ರಂಪ್ ಹೇಳಿಕೆ ನಂತರ ತಲ್ಲಣ
ಅಮೆರಿಕ ಮತ್ತು ಇರಾನ್ ನಡುವೆ ಪರಿಸ್ಥಿತಿ ಇನ್ನೇನು ತಣ್ಣಗೆ ಆಗಿದೆ ಬಿಡು ಅನ್ನುವಷ್ಟರಲ್ಲೇ ಮತ್ತೆ ಇಬ್ಬರೂ ಕದನಕ್ಕೆ ಸಜ್ಜಾದಂತೆ ಕಾಣುತ್ತಿದೆ. ಅದರಲ್ಲೂ ಅಮೆರಿಕ ಅಧ್ಯಕ್ಷರು ಇರಾನ್ ವಿರುದ್ಧ ಈಗ ಸಾಕಷ್ಟು ಆಕ್ರೋಶಗೊಂಡಿದ್ದು ಯಾವುದೇ ಸಮಯದಲ್ಲಿ ಎರಡೂ ದೇಶಗಳ ನಡುವೆ ಬೃಹತ್ ಯುದ್ಧ ಆರಂಭ ಆಗುವ ಲಕ್ಷಣ ಗೋಚರಿಸುತ್ತಿದೆ. ಒಂದು ಕಡೆ ಇರಾನ್ ಕೆಲವು ದಿನಗಳ ಹಿಂದಷ್ಟೇ ಆಂತರಿಕ
ಕಲಬುರಗಿ | ‘ಆಫ್ಟರ್ ಪೆಟ್ರೋಲ್ ಪ್ರೈಸ್’ ಕಲಾಕೃತಿಗೆ ಅಯಾಜುದ್ದೀನ್ ಪಟೇಲ್ಗೆ ಪ್ರಶಸ್ತಿ
ಕಲಬುರಗಿ, ಜ.23: ಹೈದರಾಬಾದ್ ಆರ್ಟ್ ಸೊಸೈಟಿಯ 85ನೇ ವಾರ್ಷಿಕ ಅಖಿಲ ಭಾರತ ಕಲಾ ಪ್ರದರ್ಶನ-2026ರ ನಿಮಿತ್ತ ಸೊಸೈಟಿ ಕೊಡುವ ಎಕ್ಸಲೆನ್ಸ್ ಪ್ರಶಸ್ತಿಯನ್ನು ಕಲಬುರಗಿ ಕಲಾವಿದ ಮುಹಮ್ಮದ್ ಅಯಾಜುದ್ದೀನ್ ಪಟೇಲ್ ಅವರು ಸ್ವೀಕರಿಸಿದರು. ಹೈದರಾಬಾದ್ನ ಗಾಂಧಿ ಸೆಂಟಿನರಿ ಹಾಲ್ನ ಪ್ರದರ್ಶನ ಮೈದಾನದಲ್ಲಿ ಶುಕ್ರವಾರ ಆಯೋಜಿಸಿದ ಕಾರ್ಯಕ್ರಮದಲ್ಲಿ ಜಮ್ಮು ಮತ್ತು ಕಾಶ್ಮೀರದ ಮಾಜಿ ಪೊಲೀಸ್ ಮಹಾನಿರ್ದೇಶಕ ಎಸ್. ಗೋಪಾಲ್ ರೆಡ್ಡಿ ಅವರು 25,000 ರೂ. ನಗದು ಬಹುಮಾನ ಜೊತೆಗೆ ಪ್ರಶಸ್ತಿ ಪ್ರಮಾಣಪತ್ರವನ್ನು ಅಯಾಜುದ್ದೀನ್ ಪಟೇಲ್ ಅವರಿಗೆ ಪ್ರದಾನ ಮಾಡಿದರು. ‘ಆಫ್ಟರ್ ಪೆಟ್ರೋಲ್ ಪ್ರೈಸ್’ ಎಂಬ ಶೀರ್ಷಿಕೆಯ ಅಡಿಯಲ್ಲಿ ರಚಿಸಲಾದ ಕಲಾಕೃತಿಗೆ ಈ ಪ್ರಶಸ್ತಿ ಬಂದಿದೆ. ಈ ಸಂದರ್ಭದಲ್ಲಿ ಹೈದರಾಬಾದ್ ಆರ್ಟ್ ಸೊಸೈಟಿಯ ಅಧ್ಯಕ್ಷರಾದ ವಿ.ರಾಮಣ ರೆಡ್ಡಿ, ಕಾರ್ಯದರ್ಶಿ ಜಗತಿ ವೆಂಕಟೇಶ್ವರಲು ಹಾಗೂ ಪ್ರದರ್ಶನ ಸಮಿತಿಯ ಹಲವು ಸದಸ್ಯರು ಉಪಸ್ಥಿತರಿದ್ದರು.
Vijayapura | ಕಳವು, ವಂಚನೆ ಪ್ರಕರಣ: 14 ಮಂದಿಯ ಬಂಧನ; 1.17 ಕೋಟಿ ರೂ. ಮೌಲ್ಯದ ಸೊತ್ತು ವಶ
ವಿಜಯಪುರ: ವಿಜಯಪುರ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ದಾಖಲಾದ 48 ಕಳವು ಪ್ರಕರಣಗಳಿಗೆ ಸಂಬಂಧಿಸಿದಂತೆ ಒಟ್ಟು 14 ಜನ ಅಂತರ ರಾಜ್ಯ ಹಾಗೂ ಅಂತರ ಜಿಲ್ಲಾ ಆರೋಪಿತಗಳನ್ನು ಬಂಧಿಸಲಾಗಿದೆ. ಬಂಧಿತರಿಂದ ಅಂದಾಜು 65 ಲಕ್ಷ ರೂ. ಮೌಲ್ಯದ 426.2 ಗ್ರಾಂ ಬಂಗಾರದ ಆಭರಣಗಳನ್ನು ಮತ್ತು 20 ಲಕ್ಷ ರೂ. ನಗದು ಹಣ ಮತ್ತು ಕೃತ್ಯಕ್ಕೆ ಬಳಸಿದ ಎರಡು ಕಾರುಗಳನ್ನು ಹಾಗೂ 39 ಮೋಟಾರ್ ಬೈಕ್ಗಳನ್ನು ಜಪ್ತಿ ಮಾಡಲಾಗಿದ್ದು, ಒಟ್ಟು 1,17,00,000 ರೂ. ಮೌಲ್ಯದ ವಸ್ತಗಳನ್ನು ಸ್ವತ್ತುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ತಿಳಿಸಿದ್ದಾರೆ. ನಗರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 48 ಪ್ರಕರಣ ಬೇಧಿಸುವಲ್ಲಿ ಇಲಾಖೆಯ ಸಿಬ್ಬಂದಿ ಪ್ರಯತ್ನ ಅನನ್ಯ, ಕಳೆದ ಕೆಲವು ದಿನಗಳಿಂದ ಸರಿಸುಮಾರು 2 ಕೋಟಿ ರೂ.ಗಳಷ್ಟು ಮೌಲ್ಯದ ನಗದು ಹಾಗೂ ಬಂಗಾರವನ್ನು ವಿವಿಧ ಪ್ರಕರಣಗಳಿಗೆ ಸಂಬಂಧಿಸಿದಂತೆ ಮರಳಿ ನೀಡುವಲ್ಲಿ ಇಲಾಖೆ ಯಶಸ್ವಿಯಾಗಿದೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಎಎಸ್ಪಿ ರಾಮನಗೌಡ ಹಟ್ಟಿ, ಡಿವೈಎಸ್ಪಿ ಟಿ.ಎಸ್. ಸುಲ್ಫಿ ಮುಂತಾದವರು ಇದ್ದರು. ಮೋಟರ್ ಬೈಕ್ ಕಳ್ಳತನ: ಮೂವರ ಬಂಧನ ನಾಗಠಾಣ ಸೇರಿದಂತೆ ಸುತ್ತಮುತ್ತಲಿನ ಗ್ರಾಮದಲ್ಲಿ ವಿವಿಧ ಬೈಕ್ ಕಳ್ಳತನದಲ್ಲಿ ಭಾಗಿಯಾದ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಆರೋಪಿಗಳನ್ನು ಸಿದ್ರಾಮ ಅರಕೇರಿ(25), ಮಂಜುನಾಥ ಉಕ್ಕಲಿ(29), ಆಕಾಶ ಮಠಪತಿ(20) ಎಂದು ಗುರುತಿಸಲಾಗಿದೆ. ವಿವಿಧ ಠಾಣೆಗಳಲ್ಲಿ ದಾಖಲಾಗಿದ್ದ ಮೋಟಾರ್ ಬೈಕ್ ಕಳ್ಳತನ ಪ್ರಕರಣಗಳಿಗೆ ಸಂಬಂಧಿಸಿದಂತೆ ಆರೋಪಿಗಳಿಂದ 7 ಲಕ್ಷ ರೂ. ಮೌಲ್ಯದ ಒಟ್ಟು 20 ಮೋಟಾರ ಬೈಕ್ಗಳನ್ನು ವಶಪಡಿಸಿಕೊಳ್ಳಲಾಗಿದೆ. ವಿಶೇಷ ಪೊಲೀಸ್ ತನಿಖಾ ತಂಡ ಅಲಿಯಾಬಾದ್ ಬಳಿ ಕರ್ತವ್ಯ ನಿರ್ವಹಿಸುತ್ತಿರುವ ವೇಳೆ ಮೂವರು ವ್ಯಕ್ತಿಗಳು ಸಂಶಯಾಸ್ಪದವಾಗಿ ತಿರುಗಾಡುತ್ತಿರುವುದನ್ನು ನೋಡಿ ಅವರನ್ನು ವಿಚಾರಿಸಿದಾಗ ಸತ್ಯಾಂಶ ಹೊರಬಂದಿದೆ ಎಂದು ಅವರು ತಿಳಿಸಿದ್ದಾರೆ. ಬಸ್ನಲ್ಲಿ ಚಿನ್ನ ಕಳ್ಳತನ ಪ್ರಕರಣ : ಐವರ ಬಂಧನ ಕಳೆದ 2025 ರ ಮೇ 30 ರಂದು ವಿಜಯಪುರ-ತಾಳಿಕೋಟೆಗೆ ಬಸ್ನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯ ಬಳಿ ಇದ್ದ 65 ಗ್ರಾಂ ಚಿನ್ನಾಭರಣವನ್ನು ಮನಗೂಳಿ ಬಳಿ ಕಳ್ಳತನ ಮಾಡಿದ ಪ್ರಕರಣವನ್ನು ಬೇಧಿಸಿರುವ ಪೊಲೀಸರು ಐದು ಆರೋಪಿಗಳನ್ನು ಬಂಧಿಸಿದ್ದಾರೆ. ಅರಕೇರಿ ಗ್ರಾಮದ ಪ್ರಕಾಶ ವೆಂಕಟೇಶ ಭೋಯ್ರ್(33), ಅಂಕುಶ ಸಾಹೇಬರಾವ್ ಜಾಧವ(40), ಗೋವರ್ಧನ ವಿಠ್ಠಲ ಪವಾರ(48), ರಜನಿ ಶಿವು ಭೋವಿ(38), ಮಂಜು ಪ್ರಶಾಂತ ಭೋಯ್ರ (30), ಶಿವು ರಾಜಣ್ಣ ಬೋವಿ(42) ಬಂಧಿತ ಆರೋಪಿಗಳು. ಆರೋಪಿತರ ಪತ್ತೆಗಾಗಿ ರಚನೆ ಮಾಡಲಾಗಿದ್ದ ವಿಶೇಷ ತನಿಖಾ ತಂಡ ಕಾರ್ಯಾಚರಣೆಯಲ್ಲಿ ತೊಡಗಿದ್ದ ವೇಳೆ ಮುಳವಾಡ ಕ್ರಾಸ್ನಲ್ಲಿ ಸಂಶಯಾಸ್ಪದ ರೀತಿಯಲ್ಲಿ ಸಂಚರಿಸುತ್ತಿದ್ದ ಕಾರನ್ನು ನಿಲ್ಲಿಸಲು ಸೂಚಿಸಿದಾಗ, ಕಾರು ನಿಲ್ಲಿಸದೆ ಆರೋಪಿತರು ಪರಾರಿಯಾಗಲು ಯತ್ನಿಸಿದ್ದರು. ಈ ವೇಳೆ ಪೊಲೀಸರು ಕಾರನ್ನು ಹಿಂಬಾಲಿಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ವಿಚಾರಣೆ ನಡೆಸಿದಾಗ ಸತ್ಯಾಂಶ ಬಹಿರಂಗವಾಗಿದೆ ಎಂದು ಲಕ್ಷ್ಮಣ ನಿಂಬರಗಿ ತಿಳಿಸಿದ್ದಾರೆ. ಬಂಗಾರದ ನಾಣ್ಯ ಹೆಸರಲ್ಲಿ ವಂಚನೆ : ನಾಲ್ವರ ಬಂಧನ ನಿಧಿ ಇದೆ ಎಂದು ನಂಬಿಸಿ ಲಕ್ಷಾಂತರ ರೂ. ಹಣ ಪಡೆದಿದ್ದ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಮನಗೂಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳೆದ ವರ್ಷದ ಮೇ.8 ರಂದು ಈ ಪ್ರಕರಣ ದಾಖಲಾಗಿದ್ದು, ನಕಲಿ ಬಂಗಾರ ನಾಣ್ಯಗಳನ್ನು ಅಸಲಿ ಎಂದು ಯಾಮಾರಿಸಿ ದೂರುದಾರರಿಂದ 26 ಲಕ್ಷ ರೂ. ಹಣ ಪಡೆದುಕೊಂಡು ಮೋಸ ಮಾಡಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಬಂಧಿಸಲಾಗಿದ್ದು, ಆರೋಪಿಗಳನ್ನು ವಿಜಯನಗರದ ಹಣಮಂತ ಯಾನೆ ಸಂತೋಷ ಲಾಲ ಮಾನಪ್ಪ ಯಾನೆ ಲಕ್ಷ್ಮಣ ಕೊರಚರ(28), ರಾಜಾ ಗೋವಿಂದ ಯಾನೆ ವೆಂಕಟೇಶ ಕಾವಾಡಿ(26), ಹರೀಶ ಚೌಡಪ್ಪ ಕೊರಚರ(30), ಚೀರಂಜೀವಿ ದುರ್ಗಪ್ಪ ಕೊರಚರ (27) ಎಂದು ಗುರುತಿಸಲಾಗಿದೆ. ಈ ಆರೋಪಿಗಳು ಮೋಸ ಮಾಡಿ ತೆಗೆದುಕೊಂಡು ಹೋದ 20 ಲಕ್ಷ ನಗದು ಹಣವನ್ನು ಹಾಗೂ ಕೃತ್ಯಕ್ಕೆ ಬಳಸಿದ ಒಂದು ಕಾರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದರು.
ಅಮೆರಿಕ | ವಲಸೆ ಅಧಿಕಾರಿಗಳಿಂದ ಶಿಶು ವಿಹಾರದಿಂದ ವಾಪಸಾಗುತ್ತಿದ್ದ 5 ವರ್ಷದ ಬಾಲಕನ ಬಂಧನ!
ನ್ಯೂಯಾರ್ಕ್, ಜ.23: ಅಮೆರಿಕಾದ ಮಿನ್ನೆಸೋಟದಲ್ಲಿ ಶಿಶುವಿಹಾರದಿಂದ ಮನೆಗೆ ವಾಪಸಾಗುತ್ತಿದ್ದ ಐದು ವರ್ಷದ ಬಾಲಕನನ್ನು ವಲಸೆ ಅಧಿಕಾರಿಗಳು ಬಂಧಿಸಿ, ಆತನನ್ನು ತಂದೆ ಅಡ್ರಿಯಾನ್ ಕೊನೆಜೊ ಜೊತೆಗೆ ಟೆಕ್ಸಾಸ್ ನಲ್ಲಿನ ಬಂಧನ ಕೇಂದ್ರಕ್ಕೆ ಕರೆದೊಯ್ದಿದ್ದಾರೆ ಎಂದು ಶಾಲಾ ಅಧಿಕಾರಿಗಳು ಮತ್ತು ಕುಟುಂಬದ ವಕೀಲರು ತಿಳಿಸಿದ್ದಾರೆ. ಬಾಲಕನನ್ನು ಲಿಯಾಮ್ ಕೊನೆಜೊ ರಮೋಸ್ ಎಂದು ಗುರುತಿಸಲಾಗಿದ್ದು, ಇತ್ತೀಚಿನ ವಾರಗಳಲ್ಲಿ ಮಿನ್ನೆಸೋಟ ಹಾಗೂ ಸಮೀಪದ ಪ್ರದೇಶಗಳಲ್ಲಿ ವಲಸೆ ಅಧಿಕಾರಿಗಳಿಂದ ಬಂಧಿಸಲ್ಪಟ್ಟ ನಾಲ್ಕನೇ ವಿದ್ಯಾರ್ಥಿಯಾಗಿದ್ದಾನೆ. ಅಧಿಕಾರಿಗಳು ಮನೆಯೊಳಗೆ ಬೇರೆ ಯಾರಾದರೂ ಇದ್ದಾರೆಯೇ ಎಂಬುದನ್ನು ತಿಳಿದುಕೊಳ್ಳಲು, ಮನೆಯ ಬಾಗಿಲು ತಟ್ಟುವಂತೆ ಬಾಲಕನಿಗೆ ಸೂಚಿಸಿದ್ದಾರೆ ಎನ್ನಲಾಗಿದೆ. ಬಾಗಿಲು ತೆರೆಯಬೇಡ ಎಂದು ಮನೆಯೊಳಗೆ ಇದ್ದ ತನ್ನ ಪತ್ನಿಗೆ ಅಡ್ರಿಯಾನ್ ಕೊನೆಜೊ ತಿಳಿಸಿದ್ದರಿಂದ ಆಕೆ ಬಾಗಿಲು ತೆರೆಯಲಿಲ್ಲ. ಐದು ವರ್ಷದ ಬಾಲಕನನ್ನು ಬಂಧಿಸಿದ್ದು ಏಕೆ? ಈ ಮಗುವನ್ನೂ ಕ್ರಿಮಿನಲ್ ಎಂದು ಗುರುತಿಸಲಾಗಿದೆಯೇ? ಎಂದು ಕೊಲಂಬಿಯಾ ಹೈಟ್ಸ್ ಪಬ್ಲಿಕ್ ಶಾಲೆಯ ಕರೆಸ್ಪಾಂಡೆಂಟ್ ಝಿನಾ ಸ್ಟೆನ್ವಿಕ್ ಪ್ರಶ್ನಿಸಿದ್ದಾರೆ. ಈ ಘಟನೆ ರಾಷ್ಟ್ರವ್ಯಾಪಿ ಚರ್ಚೆಗೆ ಕಾರಣವಾಗಿದೆ. ವಲಸೆ ಅಧಿಕಾರಿಗಳು ಮಗುವನ್ನು ಬಂಧಿಸಿಲ್ಲ ಎಂದು ಆಂತರಿಕ ಭದ್ರತಾ ಇಲಾಖೆಯ ವಕ್ತಾರೆ ಟ್ರಿಷಿಯಾ ಮೆಕ್ಲಾಗ್ಲಿನ್ ಹೇಳಿದ್ದಾರೆ. ವಲಸೆ ಅಧಿಕಾರಿಗಳನ್ನು ಕಂಡೊಡನೆ ಅಡ್ರಿಯಾನ್ ತನ್ನ ಮಗನನ್ನು ಅಲ್ಲೇ ಬಿಟ್ಟು ಪರಾರಿಯಾಗಲು ಪ್ರಯತ್ನಿಸಿದಾಗ ಅಧಿಕಾರಿಗಳು ಅಡ್ರಿಯಾನ್ನ್ನು ಬಂಧಿಸಿದ್ದಾರೆ ಎಂದು ಅವರು ಪ್ರತಿಪಾದಿಸಿದ್ದಾರೆ.
Pakistan | ಮಾನವ ಹಕ್ಕುಗಳ ಕಾರ್ಯಕರ್ತೆ ಬಂಧನ
ಇಸ್ಲಾಮಾಬಾದ್, ಜ.23: ಇಸ್ಲಾಮಾಬಾದಿನ ನ್ಯಾಯಾಲಯಕ್ಕೆ ತೆರಳುತ್ತಿದ್ದಾಗ ಪಾಕಿಸ್ತಾನದ ಪ್ರಮುಖ ಮಾನವ ಹಕ್ಕುಗಳ ಕಾರ್ಯಕರ್ತೆ ಝೈನಾಬ್ ಮಜಾರಿ–ಹಜೀರ್ ಮತ್ತು ಅವರ ಪತಿ, ವಕೀಲ ಹಾದಿ ಅಲಿ ಚಟ್ಟಾ ಅವರನ್ನು ಶುಕ್ರವಾರ ಪೊಲೀಸರು ಬಂಧಿಸಿರುವುದಾಗಿ ವರದಿಯಾಗಿದೆ. ವಿವಾದಾತ್ಮಕ ಸಾಮಾಜಿಕ ಮಾಧ್ಯಮ ಪೋಸ್ಟ್ ಗೆ ಸಂಬಂಧಿಸಿದ ಪ್ರಕರಣದ ವಿಚಾರಣೆಗೆ ಹಾಜರಾಗಲು ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯಕ್ಕೆ ತೆರಳುತ್ತಿದ್ದ ವೇಳೆ ದಂಪತಿಯನ್ನು ಬಂಧಿಸಲಾಗಿದೆ. ಪಾಕಿಸ್ತಾನದ ಮಿಲಿಟರಿಯನ್ನು ಕಟುವಾಗಿ ಟೀಕಿಸುತ್ತಿದ್ದ ಝೈನಾಬ್ ಅವರನ್ನು ಬಂಧಿಸಿರುವುದನ್ನು ಅವರ ತಾಯಿ, ಇಮ್ರಾನ್ ಖಾನ್ ಸರಕಾರದಲ್ಲಿ ಸಚಿವರಾಗಿದ್ದ ಡಾ. ಶಿರೀನ್ ಮಜಾರಿ ದೃಢಪಡಿಸಿದ್ದಾರೆ.
ಕಲಬುರಗಿ | ತೊಗರಿಗೆ ಬೆಂಬಲ ಬೆಲೆಗೆ ಒತ್ತಾಯಿಸಿ ಧರಣಿ ತಾತ್ಕಾಲಿಕ ಹಿಂದಕ್ಕೆ
ಕಲಬುರಗಿ, ಜ.23: ತೊಗರಿಗೆ 12,500 ರೂ. ಬೆಂಬಲ ಬೆಲೆ ನೀಡುವುದು ಸೇರಿದಂತೆ ರೈತರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ, ನಗರದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಸಂಯುಕ್ತ ಹೋರಾಟ ಕರ್ನಾಟಕ ಸಮಿತಿ ವತಿಯಿಂದ ನಡೆಸುತ್ತಿರುವ ಧರಣಿ ಸತ್ಯಾಗ್ರಹವು ಅಧಿಕಾರಿಗಳ ಭರವಸೆಯ ಹಿನ್ನೆಲೆಯಲ್ಲಿ ಎರಡನೇ ದಿನಕ್ಕೆ(ಶುಕ್ರವಾರ) ತಾತ್ಕಾಲಿಕವಾಗಿ ಮೊಟಕುಗೊಂಡಿದೆ. ಗುರುವಾರ ಬೆಳಗ್ಗೆಯಿಂದ ಪ್ರಾರಂಭವಾದ ರೈತರ ಧರಣಿಯು ಶುಕ್ರವಾರ ಮಧ್ಯಾಹ್ನ 3 ಗಂಟೆಯವರೆಗೆ ನಡೆಯಿತು. ಮಧ್ಯಾಹ್ನದ ವೇಳೆಯಲ್ಲಿ ರೈತ ಮುಖಂಡರು ಟ್ರ್ಯಾಕ್ಟರ್ ಹಾಗೂ ಎತ್ತಿನ ಬಂಡಿಗಳನ್ನು ಜಿಲ್ಲಾಧಿಕಾರಿಗಳ ಕಚೇರಿ ಎದುರು ನಿಲ್ಲಿಸುವ ಮೂಲಕ ರಸ್ತಾ ರೋಕೋ ಚಳುವಳಿ ನಡೆಸಿದರು. ರೈತರ ಹೋರಾಟ ತೀವ್ರಗೊಳ್ಳುತ್ತಿದ್ದಂತೆಯೇ ಸಹಾಯಕ ಆಯುಕ್ತ ಪ್ರಭು ರೆಡ್ಡಿ ಅವರು ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ, ರೈತರ ಸಮಸ್ಯೆ ಆಲಿಸಿದರು. ಇದೇ ಸಮಯದಲ್ಲಿ ರೈತರ ಬೇಡಿಕೆಗಳನ್ನು ಈಡೇರಿಸುವುದಾಗಿ ಭರವಸೆ ಕೊಟ್ಟರು. ಈ ಮೇರೆಗೆ ರೈತರು ಧರಣಿ ಸತ್ಯಾಗ್ರಹವನ್ನು ತಾತ್ಕಾಲಿಕವಾಗಿ ಹಿಂಪಡೆಯುವುದಾ ಘೋಷಿಸಿದರು. ಈ ವೇಳೆ ಮಾತನಾಡಿದ ಹೋರಾಟ ಸಮಿತಿಯ ಸಂಚಾಲಕ ಶರಣಬಸಪ್ಪ ಮಮಶೆಟ್ಟಿ, ಪ್ರತಿ ಕ್ವಿಂಟಲ್ ತೊಗರಿಗೆ 12,500 ರೂ. ಬೆಂಬಲ ಬೆಲೆ ನೀಡಬೇಕು, ರಾಜ್ಯ ಹಾಗೂ ಕೇಂದ್ರ ಸರಕಾರದಿಂದ ತಲಾ 1,000 ರೂಪಾಯಿ ಪ್ರೋತ್ಸಾಹಧನ ನೀಡಬೇಕು. ಬೆಳೆ ವಿಮೆ ಮಂಜೂರು ಸೇರಿದಂತೆ ಹಲವು ಬೇಡಿಕೆಗಳು ಈಡೇರಿಸಬೇಕೆಂದು ಒತ್ತಾಯಿಸಿದರು. ತೊಗರಿ ಈ ಭಾಗದ ವಾಣಿಜ್ಯ ಬೆಳೆ ಆಗಿದ್ದಲ್ಲದೆ ಆರ್ಥಿಕತೆ ನಿರ್ಧರಿಸುವ ಬೆಳೆಯಾಗಿದೆ. ಹಾಗಾಗಿ ಕನಿಷ್ಠ ಬೆಂಬಲ ಬೆಲೆಯನ್ನಾದರೂ ಘೋಷಿಸಬೇಕು ಎಂದು ಆಗ್ರಹಿಸಿದರು. ಈ ವೇಳೆ ರೈತ ಮುಖಂಡರಾದ ಶರಣಬಸಪ್ಪ ಮಮಶೆಟ್ಟಿ, ಭೀಮಾಶಂಕರ ಮಾಡ್ಯಾಳ, ಮೌಲಾ ಮುಲ್ಲಾ, ಉಮಾಪತಿ ಪಾಟೀಲ್, ಕರೆಪ್ಪ ಕರಗೊಂಡ, ಸಿದ್ದು ಎಸ್.ಎಲ್, ವೀರಣ್ಣ ಗಂಗಾಣಿ, ಸಿದ್ದಪ್ಪ ಕಲಶೆಟ್ಟಿ, ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು ಇದ್ದರು. ಬೇಡಿಕೆ ಈಡೇರಿಸದಿದ್ದರೆ ಉಪವಾಸ ಸತ್ಯಾಗ್ರಹ : ತೊಗರಿಗೆ ಬೆಂಬಲ ಬೆಲೆ ಘೋಷಣೆ ಆಗಬೇಕು. ಬೆಳೆ ವಿಮೆ ಕೂಡಲೇ ಬಿಡುಗಡೆಗೊಳಿಸಬೇಕು. ಒಂದು ವೇಳೆ ಜನವರಿ 26ರೊಳಗೆ ಈಡೇರಿಸದೇ ಇದ್ದರೆ ಮತ್ತೆ ಹೋರಾಟ ಕೈಗೊಳ್ಳಲಾಗುವುದು. 26 ರ ಬಳಿಕ ಸಚಿವ ಪ್ರಿಯಾಂಕ್ ಖರ್ಗೆ ಅವರ ಕಲಬುರಗಿ ಕಚೇರಿ ಎದುರು ಉಪವಾಸ ಸತ್ಯಾಗ್ರಹ ನಡೆಸಲಾಗುವುದು. ಅದರಂತೆಯೇ ರಿಂಗ್ ರಸ್ತೆಗಳಲ್ಲಿ ರಸ್ತಾ ರೋಕೋ ನಡೆಸಿ ಪ್ರತಿಭಟನೆ ಮಾಡಲಾಗುವುದು ಎಂದು ರೈತ ಮುಖಂಡರಾದ ಶರಣಬಸಪ್ಪ ಮಮಶೆಟ್ಟಿ, ಕರೆಪ್ಪ ಕರಗೊಂಡ, ಭೀಮಾಶಂಕರ ಮಾಡ್ಯಾಳ ಮತ್ತಿತರರು ತಿಳಿಸಿದ್ದಾರೆ.
ದಾವೋಸ್ನಲ್ಲಿ ರಾಜಕೀಯ–ಉದ್ಯಮ ನಾಯಕರನ್ನು ಭೇಟಿಯಾದ ಎಕ್ಸ್ಪರ್ಟೈಸ್ ಕಂಪೆನಿ ಮುಖ್ಯಸ್ಥರು
ದಾವೋಸ್ (ಸ್ವಿಟ್ಜರ್ಲೆಂಡ್): ಸ್ವಿಟ್ಜರ್ಲ್ಯಾಂಡ್ನ ದಾವೋಸ್ನಲ್ಲಿ ನಡೆದ ವಿಶ್ವ ಆರ್ಥಿಕ ವೇದಿಕೆ (WEF) ವಾರ್ಷಿಕ ಸಭೆಯಲ್ಲಿ ಎಕ್ಸ್ಪರ್ಟೈಸ್ ಕಂಪೆನಿಯ ಉನ್ನತ ಮಟ್ಟದ ನಿಯೋಗ ಭಾಗವಹಿಸಿ, ಭಾರತೀಯ ರಾಜಕೀಯ ನಾಯಕರು ಹಾಗೂ ಪ್ರಮುಖ ಉದ್ಯಮ ಪ್ರತಿನಿಧಿಗಳೊಂದಿಗೆ ದ್ವಿಪಕ್ಷೀಯ ಚರ್ಚೆಗಳನ್ನು ನಡೆಸಿತು. ಜಾಗತಿಕ ಪಾಲುದಾರಿಕೆಗಳನ್ನು ವಿಸ್ತರಿಸುವುದು ಹಾಗೂ ಪ್ರಮುಖ ಕೈಗಾರಿಕಾ ವಲಯಗಳಲ್ಲಿ ಸಹಯೋಗದ ಅವಕಾಶಗಳನ್ನು ಅನ್ವೇಷಿಸುವ ಉದ್ದೇಶದಿಂದ ಈ ಸಂವಾದಗಳು ನಡೆದವು. ಎಕ್ಸ್ಪರ್ಟೈಸ್ ಕಂಪೆನಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮುಹಮ್ಮದ್ ಆಶಿಫ್ ಮತ್ತು ಮುಖ್ಯ ಕಾರ್ಯತಂತ್ರ ಅಧಿಕಾರಿ ಮುಹಮ್ಮದ್ ಅನ್ಶಿಫ್ ಅವರನ್ನು ಒಳಗೊಂಡ ನಿಯೋಗವು ಕರ್ನಾಟಕದ ಡಿಸಿಎಂ ಡಿ.ಕೆ. ಶಿವಕುಮಾರ್, ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು, ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಪ್ರಹ್ಲಾದ್ ಜೋಶಿ, ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್, ಕರ್ನಾಟಕದ ಬೃಹತ್ ಮತ್ತು ಮಧ್ಯಮ ಪ್ರಮಾಣದ ಕೈಗಾರಿಕೆಗಳ ಸಚಿವ ಎಂ.ಬಿ. ಪಾಟೀಲ್, ಕರ್ನಾಟಕ ವಿಧಾನಸಭಾ ಸದಸ್ಯ ಎನ್.ಎ. ಹ್ಯಾರಿಸ್, ತೆಲಂಗಾಣದ ಕೈಗಾರಿಕೆ ಮತ್ತು ವಾಣಿಜ್ಯ ಸಚಿವ ಶ್ರೀಧರ್ ಬಾಬು ಹಾಗೂ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರೊಂದಿಗೆ ಮಾತುಕತೆ ನಡೆಸಿತು. ಇದಲ್ಲದೆ, ಬುರ್ಜೀಲ್ ಹೋಲ್ಡಿಂಗ್ಸ್ನ ಸ್ಥಾಪಕ ಹಾಗೂ ಅಧ್ಯಕ್ಷ ಡಾ. ಶಂಶೀರ್ ವಯಲಿಲ್, ಅಪೋಲೋ ಆಸ್ಪತ್ರೆಗಳ ವ್ಯವಸ್ಥಾಪಕ ನಿರ್ದೇಶಕಿ ಸುನೀತಾ ರೆಡ್ಡಿ ಹಾಗೂ ಜನರಲ್ ಕ್ಯಾಟಲಿಸ್ಟ್ನ ಸಿಇಒ ಹೇಮಂತ್ ತನೇಜಾ ಸೇರಿದಂತೆ ಪ್ರಮುಖ ಉದ್ಯಮ ನಾಯಕರೊಂದಿಗೂ ಸಮಾಲೋಚನೆ ನಡೆಯಿತು. ಈ ಚರ್ಚೆಗಳು ಆರೋಗ್ಯ ಮತ್ತು ಕೈಗಾರಿಕಾ ವಲಯಗಳಲ್ಲಿ ಸಹಯೋಗ - ಸಾಧ್ಯತೆಗಳ ಮೇಲೆ ಕೇಂದ್ರೀಕೃತವಾಗಿದ್ದವು. ಈ ಕುರಿತು ಪ್ರತಿಕ್ರಿಯಿಸಿದ ಎಕ್ಸ್ಪರ್ಟೈಸ್ ಕಂಪೆನಿಯ ಸಿಇಒ ಮುಹಮ್ಮದ್ ಆಶಿಫ್, “WEF ದಾವೋಸ್ 2026ರಲ್ಲಿ ನಮ್ಮ ಭಾಗವಹಿಸುವಿಕೆಯು ಜಾಗತಿಕ ಮಟ್ಟದಲ್ಲಿ ಕೈಗಾರಿಕಾ ನವೀನತೆಯನ್ನು ಉತ್ತೇಜಿಸುವ ಉಪ ಕ್ರಮಗಳತ್ತ ಕಂಪೆನಿಯ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ. ಭಾರತೀಯ ರಾಜಕೀಯ ನಾಯಕರು ಮತ್ತು ಸರ್ಕಾರದ ಪ್ರತಿನಿಧಿಗಳ ಜೊತೆ ನಡೆದ ಸಂವಾದಗಳು ವಿಸ್ತರಣೆ ಹಾಗೂ ಕಾರ್ಯತಂತ್ರದ ಪಾಲುದಾರಿಕೆಗಳಿಗೆ ಹೊಸ ಅವಕಾಶಗಳನ್ನು ತೆರೆದಿವೆ” ಎಂದರು. ವಿಶ್ವ ಆರ್ಥಿಕ ವೇದಿಕೆಯ ವಾರ್ಷಿಕ ಸಭೆಯಲ್ಲಿ ರಾಷ್ಟ್ರಗಳ ಮುಖ್ಯಸ್ಥರು, ಹಿರಿಯ ರಾಜಕೀಯ - ಸರಕಾರದ ಪ್ರತಿನಿಧಿಗಳು, ಜಾಗತಿಕ ಸಿಇಒಗಳು ಹಾಗೂ ವಿವಿಧ ದೇಶಗಳ ಉದ್ಯಮ ನಾಯಕರು ಭಾಗವಹಿಸುತ್ತಾರೆ. ಅಂತರರಾಷ್ಟ್ರೀಯ ಆರ್ಥಿಕ ಸವಾಲುಗಳು, ಹೂಡಿಕೆ ಅವಕಾಶಗಳು ಹಾಗೂ ಸುಸ್ಥಿರ ಬೆಳವಣಿಗೆ ಕುರಿತ ಚರ್ಚೆಗೆ ಇದು ಪ್ರಮುಖ ವೇದಿಕೆಯಾಗಿದೆ. ಈ ಸಭೆಯಲ್ಲಿ ನಡೆದ ಸಂವಾದಗಳು ಆದ್ಯತೆಯ ವಲಯಗಳು ಹಾಗೂ ಉದಯೋನ್ಮುಖ ಮಾರುಕಟ್ಟೆಗಳಲ್ಲಿ ಎಕ್ಸ್ಪರ್ಟೈಸ್ ಕಂಪೆನಿಯ ಹಾಜರಾತಿಯನ್ನು ಬಲಪಡಿಸುವತ್ತ ಗಮನಹರಿಸಿವೆ. ಕಂಪೆನಿಯ CSO ಮುಹಮ್ಮದ್ ಅನ್ಶಿಫ್ ಮಾತನಾಡಿ, “ಉದ್ಯಮ ವಲಯದ ನಾಯಕರು ಹಾಗೂ ನೀತಿ ನಿರೂಪಕರೊಂದಿಗೆ ಕಾರ್ಯತಂತ್ರದ ಮೈತ್ರಿಗಳನ್ನು ರೂಪಿಸಲು WEF ದಾವೋಸ್ ಬಲವಾದ ವೇದಿಕೆಯನ್ನು ಒದಗಿಸಿದೆ. ಅದರಲ್ಲಿ ಭಾಗವಹಿಸಿರುವುದು ಜಾಗತಿಕ ಮತ್ತು ಭಾರತೀಯ ಮಾರುಕಟ್ಟೆಗಳಲ್ಲಿ ಕಂಪೆನಿಯ ಕಾರ್ಯಾಚರಣೆಯ ವ್ಯಾಪ್ತಿಯನ್ನು ವಿಸ್ತರಿಸಲು ನೆರವಾಗಲಿವೆ” ಎಂದು ಹೇಳಿದರು. ಸೌದಿ ಅರೇಬಿಯಾದಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಮಂಗಳೂರು ಮೂಲದ ಎಕ್ಸ್ಪರ್ಟೈಸ್ ಗ್ರೂಪ್ ಜಾಗತಿಕ ಕೈಗಾರಿಕಾ ಹಾಗೂ ಮೂಲಸೌಕರ್ಯ ಸೇವೆ ಪೂರೈಕೆದಾರ ಸಂಸ್ಥೆಯಾಗಿದ್ದು, ಮಧ್ಯಪ್ರಾಚ್ಯ ಮತ್ತು ಭಾರತದಲ್ಲಿ ತನ್ನ ಕಾರ್ಯಾಚರಣೆಗಳನ್ನು ಹೊಂದಿದೆ.
ಖ್ಯಾತ ಗಾಯಕಿ ಎಸ್.ಜಾನಕಿ ಪುತ್ರ ಮುರಳಿ ಕೃಷ್ಣ ನಿಧನ
ಮೈಸೂರು: ಖ್ಯಾತ ಚಲನಚಿತ್ರ ಗಾಯಕಿ ಎಸ್.ಜಾನಕಿ ಅವರ ಪುತ್ರ ಮುರಳಿ ಕೃಷ್ಣ (55) ನಿಧನರಾಗಿದ್ದಾರೆ. ಅವರು ಮೈಸೂರಿನ ಬೋಗಾದಿಯಲ್ಲಿ ತನ್ನ ತಾಯಿ ಎಸ್.ಜಾನಕಿ ಅವರೊಂದಿಗೆ ವಾಸವಾಗಿದ್ದರು. ಅನಾರೋಗ್ಯಕ್ಕೀಡಾಗಿದ್ದ ಅವರು ಜ.21 ರ ಬುಧವಾರ ರಾತ್ರಿ ಅವರ ನಿವಾಸದಲ್ಲೇ ಅಸುನೀಗಿದ್ದಾರೆ. ಮೃತರು ತಾಯಿ, ಇಬ್ಬರು ಪುತ್ರಿಯರು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆ ಜ.22 ರ ಗುರುವಾರ ಮಧ್ಯಾಹ್ನ ಚಾಮುಂಡಿ ಬೆಟ್ಟದ ತಪ್ಪಲಿನ ರುದ್ರಭೂಮಿಯಲ್ಲಿ ನೆರವೇರಿತು ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಅಹಮದಾಬಾದ್: ಅದಾನಿ ಗ್ರೀನ್ ಎನರ್ಜಿ ಲಿಮಿಟೆಡ್ (AGEL) ಭಾರತದ ಅತಿದೊಡ್ಡ ಮತ್ತು ವೇಗವಾಗಿ ಬೆಳೆಯುತ್ತಿರುವ ನವೀಕರಿಸಬಹುದಾದ ಇಂಧನ (RE) ಕಂಪನಿಯಾಗಿದೆ. ಡಿಸೆಂಬರ್ 31, 2025ಕ್ಕೆ ಕೊನೆಗೊಳ್ಳುವ ಅವಧಿಗೆ ಆರ್ಥಿಕ ಪ್ರಗತಿ ವರದಿಯನ್ನು ಪ್ರಕಟಿಸಿದೆ. ಇದು ಬಲವಾದ ಬೆಳವಣಿಗೆ ಮತ್ತು ಕಾರ್ಯಾಚರಣೆಯ ಶ್ರೇಷ್ಠತೆಯನ್ನು ಪ್ರದರ್ಶಿಸುತ್ತದೆ. ಹಣಕಾಸು ಕಾರ್ಯಕ್ಷಮತೆ - Q3 & 9M FY26: ಅದಾನಿ ಗ್ರೀನ್ ಎನರ್ಜಿ
ಬೆಂಗಳೂರು: ಮಾಜಿ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ದಾಖಲಾಗಿದ್ದ ಲೈಂಗಿಕ ದೌರ್ಜನ್ಯ ಪ್ರಕರಣಗಳ ಪರಿಣಾಮಕಾರಿ ತನಿಖೆ ಹಾಗೂ ಯಶಸ್ವಿ ನ್ಯಾಯಾಂಗ ಪ್ರಕ್ರಿಯೆಗೆ ಕಾರಣವಾದ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗೆ 35 ಲಕ್ಷ ರೂ. ನಗದು ಬಹುಮಾನವನ್ನು ಘೋಷಿಸಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ. ಈ ಆದೇಶದಂತೆ ಡಿಜಿ ಮತ್ತು ಐಜಿಪಿ ಹುದ್ದೆಯ ಅಧಿಕಾರಿಗಳಿಗೆ ತಲಾ 20 ಸಾವಿರ ರೂ.ನಂತೆ ಒಟ್ಟು 25 ಲಕ್ಷ ರೂ., ಡಿಜಿಪಿ, ಎಡಿಜಿಪಿ ಹಾಗೂ ಐಜಿಪಿ ಹುದ್ದೆಯ ಅಧಿಕಾರಿಗಳಿಗೆ ತಲಾ 8 ಸಾವಿರ ರೂ.ನಂತೆ ಒಟ್ಟು 3 ಲಕ್ಷ ರೂ. ಮಂಜೂರಾಗಿದೆ. ಇತರೆ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ತಲಾ 5 ಸಾವಿರ ರೂ.ನಂತೆ 2 ಲಕ್ಷ ರೂ. ನೀಡಲಾಗಿದ್ದು, ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ತಲಾ 5 ಸಾವಿರ ರೂ.ನಂತೆ ಒಟ್ಟು 1 ಲಕ್ಷ ರೂ. ಬಹುಮಾನ ನೀಡಲಾಗಿದೆ. ಮಾಜಿ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ದಾಖಲಾಗಿರುವ ಲೈಂಗಿಕ ದೌರ್ಜನ್ಯ ಪ್ರಕರಣಗಳು ಸೇರಿದಂತೆ ಹಲವಾರು ಪ್ರಕರಣಗಳ ಪರಿಣಾಮಕಾರಿ ತನಿಖೆ ಮತ್ತು ವಿಚಾರಣೆಯನ್ನು ಗುರುತಿಸಿ ಈ ಬಹುಮಾನಗಳನ್ನು ನೀಡಲಾಗಿದೆ. ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಸಮಗ್ರ ತನಿಖೆ ನಡೆಸಿ ಅಪರಾಧಿಗೆ ಶಿಕ್ಷೆ ವಿಧಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿ ಪ್ರಜ್ವಲ್ ರೇವಣ್ಣಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ. ಪೊಲೀಸ್ ಇಲಾಖೆಯಲ್ಲಿ ವೃತ್ತಿಪರತೆ, ಹೊಣೆಗಾರಿಕೆ ಮತ್ತು ಶ್ರೇಷ್ಠತೆಯನ್ನು ಉತ್ತೇಜಿಸುವ ಉದ್ದೇಶದೊಂದಿಗೆ ಈ ನಗದು ಬಹುಮಾನವನ್ನು ನೀಡಲಾಗಿದೆ ಎಂದು ಒಳಾಡಳಿತ ಇಲಾಖೆ(ಪೊಲೀಸ್ ವೆಚ್ಚ)ಯ ಸರಕಾರದ ಅಧೀನ ಕಾರ್ಯದರ್ಶಿ ಕೆ.ಎನ್.ವನಜ ಆದೇಶದಲ್ಲಿ ತಿಳಿಸಿದ್ದಾರೆ.
ಸುನ್ನೀ ಜಂಇಯ್ಯತುಲ್ ಉಲಮಾ ಸುರತ್ಕಲ್ ಝೋನ್ ವತಿಯಿಂದ ನಶೆ ಮುಕ್ತ ಸಮಾಜ ಅಭಿಯಾನ
ಸುರತ್ಕಲ್: ಸುನ್ನೀ ಜಂಇಯ್ಯತುಲ್ ಉಲಮಾ ಸುರತ್ಕಲ್ ಝೋನ್ ಇದರ ಆಶ್ರಯದಲ್ಲಿ ಬೃಹತ್ ಆದರ್ಶ ಸಮ್ಮೇಳನ ಹಾಗೂ ನಶೆ ಮುಕ್ತ ಸಮಾಜ ಅಭಿಯಾನವು ಶುಕ್ರವಾರ ರಾತ್ರಿ ಕೃಷ್ಣಾಪುರ ಕೇಂದ್ರ ಮೈದಾನದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಕೃಷ್ಣಾಪುರ ಮುಸ್ಲಿಂ ಜಮಾಅತ್ ನ ಖಾಝಿ ಅಲ್ ಹಾಜ್ ಇ. ಕೆ. ಇಬ್ರಾಹಿಂ ಮದನಿ ಅವರು ಉದ್ಘಾಟಿಸಿದರು. ಸುನ್ನೀ ಜಂಇಯ್ಯತುಲ್ ಉಲಮಾದ ಸುರತ್ಕಲ್ ಝೋನ್ ಅಧ್ಯಕ್ಷ ಎ. ಪಿ. ಅಬ್ದುಲ್ಲ ಮದನಿ ಅವರು ಅಧ್ಯಕ್ಷತೆ ವಹಿಸಿದ್ದರು. ಎಸ್.ಜೆ.ಎಂ. ಕಾಟಿಪಳ್ಳ ರೇಂಜ್ ಅಧ್ಯಕ್ಷ ಅಸ್ಸಯ್ಯದ್ ಝೈನುಲ್ ಆಬಿದೀನ್ ಅಲ್ಹಾದೀ ತಂಙಳ್ ದುಆ ನೆರವೇರಿಸಿದರು. ಸುನ್ನೀ ಜಂಇಯ್ಯತುಲ್ ಉಲಮಾ ಸುರತ್ಕಲ್ ಝೋಮ್ ಪ್ರಧಾನ ಕಾರ್ಯದರ್ಶಿ ಉಮರುಲ್ ಫಾರೂಖ್ ಸಖಾಫಿ ಅಲ್ ಹಿಕಮಿ ಅವರು ಸ್ವಾಗತ ಭಾಷಣ ಗೈದರು. ಸಮಸ್ತ ಕೇರಳ ಜಂಇಯ್ಯತುಲ್ ಉಲಮಾದ ಕೇಂದ್ರ ಮುಶಾವರ ಸದಸ್ಯರಾದ ಅಲವಿ ಸಖಾಫಿ ಕೊಳತ್ತೂರು ಅವರು “ಆಹ್ವುಸ್ಸುನ್ನ ವಲ್ ಜಮಾಅ:” ವಿಷಯದ ಕುರಿತು ಮುಖ್ಯ ಪ್ರಭಾಷಣ ಗೈದರು. ಎಸ್ಸೆಸ್ಸೆಫ್ ಕರ್ನಾಟಕ ರಾಜ್ಯಾಧ್ಯಕ್ಷರಾದ ಹಾಫಿಲ್ ಸುಫ್ಯಾನ್ ಸಖಾಫಿ, ಮೂಡಬಿದ್ರೆ ಅವರು “ಅಮಲು ಪದಾರ್ಥಗಳ ದುಷ್ಪರಿಣಾಮಗಳು” ಕುರಿತು ಉಪನ್ಯಾಸ ನೀಡಿದರು. ಮಾಜಿ ಶಾಸಕ ಮೊಯ್ದಿನ್ ಬಾವ, ಮುಹಮ್ಮದ್ ಆಲಿ ರೂಮಿ, ಕೃಷ್ಣಾಪುರ ಬದ್ರಿಯಾ ಜುಮ್ ಮಸ್ಜಿದ್ ಮುಸ್ಲಿಂ ಜಮಾಅತ್ ಅಧ್ಯಕ್ಷ ಹಾಜಿ ಝಾಕಿರ್ ಹುಸೈನ್, ಕಾಟಿಪಳ್ಳ ಮುಹಿಯುದ್ದೀನ್ ಜುಮಾ ಮಸೀದಿಯ ಅಧ್ಯಕ್ಷ ಹಾಜಿ ಎಸ್. ರಹ್ಮತುಲ್ಲಾ, ಚೊಕ್ಕಬೆಟ್ಟು ಮುಹಿಯುದ್ದೀನ್ ಜುಮಾ ಮಸೀದಿಯ ಅಧ್ಯಕ್ಷ ಅಬ್ದುಲ್ ಅಝೀಝ್, ಮಂಗಳ ಪೇಟೆ ಮುಹಿಯುದ್ದೀನ್ ಜುಮಾ ಮಸೀದಿಯ ಅಧ್ಯಕ್ಷ, ಎಸ್.ಎಮ.ಎ. ಕಾಟಿಪಳ್ಳ ರೀಜನಲ್ ಅಧ್ಯಕ್ಷ ಸಿ. ಅಬ್ದುಲ್ ಹಮೀದ್ ಮಂಗಳಪೇಟೆ, ಕೃಷ್ಣಾಪುರ ಈದ್ಗಾ ಜುಮಾ ಮಸೀದಿಯ ಅಧ್ಯಕ್ಷ ಅಬ್ದುಲ್ ಹಕ್, ಕೃಷ್ಣಾಪುರ ಬದ್ರುಲ್ ಹುದಾ ಜುಮಾ ಮಸೀದಿಯ ಅಧ್ಯಕ್ಷ ಅಬೂಬಕರ್ ಟಿ. ಎಂ., ಸುರತ್ಕಲ್ ಝೋನ್ ಸುನ್ನಿ ಜಂಇಯ್ಯತುಲ್ ಉಲಮಾದ ಕಾರ್ಯಾಧ್ಯಕ್ಷ ಕೆ. ಕೆ. ಮುಹಹಿಯುದ್ದೀನ್ ಕಾಮಿಲ್ ಸಖಾಫಿ, ಕರ್ನಾಟಕ ಮುಸ್ಲಿಂ ಜಮಾಆತ್ ನ ಸುರತ್ಕಲ್ ಝೋನ್ ಅಧ್ಯಕ್ಷ ಲುಕ್ಮಾನಿಯಾ ಇಸ್ಮಾಈಲ್ ಮುಸ್ಲಿಯಾರ್, ಎಸ್.ವಿ. ಎಸ್. ಸುರತ್ಕಲ್ ಝೋನ್ ಅಧ್ಯಕ್ಷ ಅಬ್ದುನ್ನಾಸಿರ್ ಮದನಿ ಸೂರಿಂಜೆ, ಎಸ್.ಜೆ.ಎಂ. ಸುರತ್ಕಲ್ ರೇಂಜ್ ಅಧ್ಯಕ್ಷ ಅಬ್ದುಲ್ ಲತೀಫ್ ಮದನಿ, ಎಸ್.ಜೆ.ಎಂ.ಕಿನ್ನಿಗೋಳಿ ರೇಂಜ್ ಅಧ್ಯಕ್ಷ ಇಬ್ರಾಹೀಂ ಫಾಳಲಿ, ಎಸ್.ಎಂ.ಎ. ಸುರತ್ಕಲ್ ಅಧ್ಯಕ್ಷ ಅಬ್ದುಲ್ ಹಮೀದ್, ಎಸ್.ಎಂ.ಎ. ಸುರತ್ಕಲ್ ರೀಜನಲ್ ಅಧ್ಯಕ್ಷ ಮನ್ಸೂರ್ ರಯ್ಯಾನ್ ಕೃಷ್ಣಾಪುರ, ಎಸ್.ಎಂ.ಎ. ಕಿನ್ನಿಗೋಳಿ ರೀಜನಲ್ ಅಧ್ಯಕ್ಷ ಅಬ್ದುರಝಾಕ್ ಮುಕ್ಕ, ಎಸ್ಸೆಸ್ಸೆಫ್ ಸುರತ್ಕಲ್ ಡಿವಿಶನ್ ಅಧ್ಯಕ್ಷ ಅಬ್ದುರಶೀದ್ ಸಅದಿ ಅಂಗರಗುಂಡಿ, ಕೃಷ್ಣಾಪುರ ಕೇಂದ್ರ ಅಲ್ ಮದ್ರಸತುಲ್ ಬದ್ರಿಯಾದ ಅಧ್ಯಕ್ಷ ಅಬ್ದುಲ್ ಹಕೀಂ ಫಾಲ್ಕನ್, ಕೃಷ್ಣಾಪುರ ತ್ವಯಿಬಾ ಜುಮಾ ಮಸೀದಿಯ ಅಧ್ಯಕ್ಷ ಹಾಜಿ ಅಬ್ದುಲ್ ಹಮೀದ್ ತಾಜ್ ಫಿಶ್, ಮಸ್ಜಿದುಲ್ ಹುದಾ ಅಧ್ಯಕ್ಷ ಹಾಜಿ ಅಬ್ದುರ್ರಹ್ಮಾನ್, ಮಸ್ಜಿದುಲ್ ಹುದಾ ಅಧ್ಯಕ್ಷ ಅಬ್ದುಲ್ ಖಾದಿರ್, ಮೈಂದಗುರಿ ನೂರುಲ್ ಇಸ್ಲಾಂ ಜುಮಾ ಮಸೀದಿಯ ಅಧ್ಯಕ್ಷ ಹಸನಬ್ಬ ಹನೀಫ್, ಮುಕ್ಕ ಜುಮಾ ಮಸೀದಿಯ ಅಧ್ಯಕ್ಷ ಕೆ. ಎಂ. ಹಸನ್, ಕೋಟೆ ಆಯಿಷಾ ಜುಮಾ ಮಸೀದಿಯ ಅಧ್ಯಕ್ಷರಾದ ಎಸ್. ಅಬ್ದುಲ್ ರಝಾಕ್, ಬದ್ರಿಯಾ ನಗರ ಮಸ್ಜಿದುನ್ನೂರ್ ಜುಮಾ ಮಸೀದಿಯ ಅಧ್ಯಕ್ಷ ಹಾಜಿ ಮುಹಮ್ಮದ್ ಶರೀಫ್, ಕುಳಾಯಿ ಬದ್ರಿಯಾ ಜುಮಾ ಮಸೀದಿಯ ಅಧ್ಯಕ್ಷ ಇಮ್ಮಿಯಾಝ್ ಅಹ್ಮದ್, ಅನ್ಸಾರಿಯಾ ಜುಮಾ ಮಸೀದಿಯ ಅಧ್ಯಕ್ಷ ಝುಬೈರ್, ಜನತಾ ಕಾಲನಿ ಶಾಝುಲಿ ಜುಮಾ ಮಸೀದಿಯ ಅಧ್ಯಕ್ಷ ಇಸ್ಮಾಯಿಲ್ ಅಶ್ರಫ್, ಗುತ್ತಕಾಡು ಖಿಲ್ರಿಯಾ ಜುಮಾ ಮಸೀದಿಯ ಅಧ್ಯಕ್ಷ ಟಿ.ಎ. ಹನೀಫ್, ಪುನರೂರು ಜುಮಾ ಮಸೀದಿಯ ಅಧ್ಯಕ್ಷ ಮುಹಮ್ಮದ್ ಹಾಜಿ, ಕಾನ ಬದ್ರಿಯಾ ಜುಮಾ ಮಸೀದಿಯ ಅಧ್ಯಕ್ಷ ಮುಹಮ್ಮದ್, ಸುರತ್ಕಲ್ ಮುಹಿಯುದ್ದೀನ್ ಕೇಂದ್ರ ಜುಮಾ ಮಸೀದಿಯ ಅಧ್ಯಕ್ಷ ಮುಸ್ತಫಾ, ಸಾಗ್ ಬದ್ರಿಯಾ ಜುಮಾ ಮಸೀದಿಯ ಅಧ್ಯಕ್ಷ ಅಬ್ದುಲ್ ಖಾದರ್, ಸೂರಿಂಜೆ ಮುಹಿಯುದ್ದೀನ್ ಜುಮಾ ಮಸೀದಿಯ ಅಧ್ಯಕ್ಷ ಹಾಜಿ ಎಸ್. ಎ. ಜಲೀಲ್, 62ನೇ ತೋಕೂರು ಜುಮಾ ಮಸೀದಿಯ ಅಧ್ಯಕ್ಷ ಎಂ. ಮಯ್ಯದ್ದಿ, ಪಕ್ಷಿಕೆರೆ ಬದ್ರಿಯಾ ಜುಮಾ ಮಸೀದಿ ಅಧ್ಯಕ್ಷ ಹಾಜಿ ಮುಹಮ್ಮದ್ ನೂರಾನಿಯ, ಎಸ್.ಕೋಡಿ ಇಖ್ಲಾಸ್ ಜುಮಾ ಮಸೀದಿಯ ಅಧ್ಯಕ್ಷ ರಿಝ್ವಾನ್, ಕಿನ್ನಿಗೋಳಿ ಮುಹಿಯುದ್ದೀನ್ ಜುಮಾ ಮಸೀದಿಯ ಅಧ್ಯಕ್ಷ ಮುಹಮ್ಮದ್ ರಫೀಕ್ ಪ್ಲವರ್, ಸಸಿಹಿತ್ಲು ರಿಫಾಯಿ ಜುಮಾ ಮಸೀದಿಯ ಅಧ್ಯಕ್ಷ ಅಬ್ದುರ್ರಹ್ಮಾನ್, 10ನೇ ತೋಕೂರು ಜಾಮಿಯಾ ಮೊಹಲ್ಲಾ ನೂರುಲ್ ಹುದಾ ಅರೇಬಿಕ್ ಮದ್ರಸದ ಅಧ್ಯಕ್ಷ ಟಿ. ಎಂ. ಹಸನಬ್ಬ, ಚೇಳಾಯರು ಖುವ್ವತುಲ್ ಇಸ್ಲಾಂ ಮದ್ರಸದ ಅಧ್ಯಕ್ಷ ಮುಹಮ್ಮದ್, ಸ್ವಾತ ಸಮಿತಿಯ ಚೆಯರ್ ಮೆನ್ ಎಂ.ಎಸ್. ಶರೀಫ್ ಕೃಷ್ಣಾಪುರ, ಚೀಫ್ ಕನ್ವೀನರ್ ಉಮರುಲ್ ಫಾರೂಖ್ ಸಖಾಫಿ, ಫೈನಾಲ್ಸ್ ಕನ್ವೀನರ್ ಸ್ವಾದಿಕ್ ಈದ್ಗಾ ಮೊದಲಾದವರು ಉಪಸ್ಥಿತರಿದ್ದರು. ಬೃಹತ್ ಆದರ್ಶ ಸಮ್ಮೇಳನ ಹಾಗೂ ನಶೆ ಮುಕ್ತ ಸಮಾಜ ಅಭಿಯಾನದ ಪ್ರಯುಕ್ತ ಸಂಜೆಯ ವೇಳೆ 30 ಮದ್ರಸಗಳ ಮಕ್ಕಳಿಂದ ಮಾದಕ ದ್ರವ್ಯ ವಿರುದ್ಧ ಜನ ಜಾಗೃತಿ ಕಾಲ್ನಡಿಗೆ ಜಾಥಾ ನಡೆಯಿತು. ಮಾದಕ ದ್ರವ್ಯ ಬಳಕೆಯ ದುಷ್ಪರಿಣಾಮಗಳ ಬಗ್ಗೆ ಬೃಹತ್ ಪರದೆಯ ಮೂಲಕ ವಿವರಣೆ ಹಾಗೂ ಪ್ರತಿಜ್ಞಾ ಬೋಧನೆ ನಡೆಯಿತು.
ನಿಟ್ಟೆ: 'ಸಂವಹನ ಮತ್ತು ತಂತ್ರಜ್ಞಾನದ ಇತ್ತೀಚಿನ ಟ್ರೆಂಡ್ಸ್' ಕಾರ್ಯಾಗಾರ ಉದ್ಘಾಟನೆ
ಕಾರ್ಕಳ: ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದ ಐಇಇಇ ಎಂಟಿಟಿಎಸ್ ವಿದ್ಯಾರ್ಥಿ ಶಾಖೆಯ ಚಾಪ್ಟರ್ ಹಾಗೂ ಅಡ್ವಾನ್ಸ್ಡ್ ಕಮ್ಯೂನಿಕೇಶನ್ ಟೆಕ್ನಾಲಜಿ ವಿಭಾಗದ ಸಹಯೋಗ ದೊಂದಿಗೆ ಸಂವಹನ ಮತ್ತು ತಂತ್ರಜ್ಞಾನದ ಇತ್ತೀಚಿನ ಪ್ರವೃತ್ತಿಗಳು - 5ಜಿಯಿಂದ 6ಜಿ ಕಡೆಗೆ ಹಾದಿ ಕುರಿತು ಮೂರು ದಿನಗಳ ಕಾರ್ಯಾಗಾರವನ್ನು ಡಿ.ಆರ್.ಡಿ.ಒ ದ ಎಲೆಕ್ಟ್ರಾನಿಕ್ಸ್ ಮತ್ತು ರಾಡಾರ್ ಡೆವಲಪ್ಮೆಂಟ್ ಎಸ್ಟಾಬ್ಲಿಷ್ಮೆಂಟ್ (ಎಲ್ಆರ್ಡಿಇ) 'ಜಿ' ವಿಜ್ಞಾನಿ ಮತ್ತು ಬೆಂಗಳೂರಿನ ಐಇಇಇ ಎಪಿ/ಎಂಟಿಟಿ-ಎಸ್ ಜಂಟಿ ಘಟಕದ ಅಧ್ಯಕ್ಷ ಡಾ.ಅಶುತೋಷ್ ಕೇದಾರ್ ಉದ್ಘಾಟಿಸಿದರು. ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು ವೈರ್ ಲೆಸ್ ಸಂವಹನ ತಂತ್ರಜ್ಞಾನಗಳಲ್ಲಿನ ತ್ವರಿತ ಪ್ರಗತಿಯ ಬಗ್ಗೆ ಮಾತನಾಡಿದರು ಮತ್ತು ರಾಡಾರ್ ಮತ್ತು ರಕ್ಷಣಾ ಎಲೆಕ್ಟ್ರಾನಿಕ್ಸ್ ಸಂಶೋಧನೆಯಲ್ಲಿ ತಮ್ಮ ವ್ಯಾಪಕ ಅನುಭವದ ಒಳನೋಟಗಳನ್ನು ಹಂಚಿಕೊಂಡರು. ಜಾಗತಿಕ ತಾಂತ್ರಿಕ ಬೆಳವಣಿಗೆಗಳೊಂದಿಗೆ ವೇಗವನ್ನು ಕಾಯ್ದುಕೊಳ್ಳಲು ಸಂಶೋಧನೆ, ನಾವೀನ್ಯತೆ ಮತ್ತು ವೃತ್ತಿಪರ ಸಂಸ್ಥೆಗಳಾದ ಐಇಇಇಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಲು ಅವರು ವಿದ್ಯಾರ್ಥಿಗಳು ಮತ್ತು ಅಧ್ಯಾಪಕರನ್ನು ಪ್ರೋತ್ಸಾಹಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನಿಟ್ಟೆ ತಾಂತ್ರಿಕ ಕಾಲೇಜಿನ ಪ್ರಾಂಶುಪಾಲ ಡಾ. ನಿರಂಜನ್ ಎನ್. ಚಿಪ್ಲುಂಕರ್ ಅವರು, ಸುಧಾರಿತ ಸಂವಹನ ತಂತ್ರಜ್ಞಾನಗಳ ಮಹತ್ವ ಮತ್ತು ಶೈಕ್ಷಣಿಕ ಸಂಸ್ಥೆಗಳು 5ಜಿ ವಿಕಾಸ ಮತ್ತು 6ಜಿ ಕಡೆಗೆ ಮಾರ್ಗಸೂಚಿಯಂತಹ ಉದಯೋನ್ಮುಖ ಪ್ರವೃತ್ತಿಗಳೊಂದಿಗೆ ಬೋಧನೆ ಮತ್ತು ಸಂಶೋಧನೆಯನ್ನು ಹೊಂದಿಸುವ ಅಗತ್ಯವನ್ನು ವಿವರಿಸಿದರು. ಭವಿಷ್ಯದ ತಾಂತ್ರಿಕ ಸವಾಲುಗಳಿಗೆ ವಿದ್ಯಾರ್ಥಿಗಳನ್ನು ಸಿದ್ಧಪಡಿಸುವಲ್ಲಿ ಉದ್ಯಮ-ಶೈಕ್ಷಣಿಕ ಸಹಯೋಗದ ಪಾತ್ರವನ್ನು ಅವರು ತಿಳಿಸಿದರು. ವೇದಿಕೆಯಲ್ಲಿ ಗೌರವ ಅತಿಥಿಯಾಗಿ ಆರ್.ವಿ ಕಾಲೇಜ್ ಆಫ್ ಇಂಜಿನಿಯರಿಂಗ್ ನ ಅಸೋಸಿಯೇಟ್ ಪ್ರೊಫೆಸರ್ ಡಾ. ಮಹೇಶ್ ಎ, ಕಾಲೇಜಿನ ಐಇಇಇ ಕೌನ್ಸಿಲರ್ ಡಾ. ವಾಸುದೇವ, ಅಡ್ವಾನ್ಸ್ಡ್ ಕಮ್ಯೂನಿಕೇಶನ್ ಟೆಕ್ನಾಲಜಿ ವಿಭಾಗದ ಮುಖ್ಯಸ್ಥ ಡಾ. ದುರ್ಗಾಪ್ರಸಾದ್ ಉಪಸ್ಥಿತರಿದ್ದರು. ಐಇಇಇ ಎಂಟಿಟಿಎಸ್ ವಿದ್ಯಾರ್ಥಿ ಶಾಖೆಯ ವಿದ್ಯಾರ್ಥಿ ನಾಯಕ ಅದ್ವೈತ್ ಸ್ವಾಗತಿಸಿದರು. ಐಇಇಇ ಎಂಟಿಟಿಎಸ್ ವಿದ್ಯಾರ್ಥಿ ಶಾಖೆಯ ಅಧ್ಯಾಪಕ ಸಲಹೆಗಾರ ಡಾ.ಪರ್ವೀಜ್ ಶರೀಫ್ ಬಿ.ಜಿ ಕಾರ್ಯಾಗಾರದ ಬಗೆಗೆ ವಿವರಿಸಿದರು. ವಿದ್ಯಾರ್ಥಿ ಉಪನಾಯಕ ಫರಾನ್ ವಂದಿಸಿದರು. ವಿದ್ಯಾರ್ಥಿನಿ ಧನುಶ್ರೀ ಕಾರ್ಯಕ್ರಮ ನಿರೂಪಿಸಿದರು. ಮೂರು ದಿನಗಳ ಕಾಲ, ಕಾರ್ಯಾಗಾರವು ಪ್ರಖ್ಯಾತ ಶಿಕ್ಷಣ ತಜ್ಞರು ಮತ್ತು ಉದ್ಯಮ ತಜ್ಞರ ಆಕರ್ಷಕ ತಾಂತ್ರಿಕ ಅಧಿವೇಶನಗಳನ್ನು ಒಳಗೊಂಡಿರುತ್ತದೆ. ಸಂಪನ್ಮೂಲ ವ್ಯಕ್ತಿಗಳಾಗಿ ಡಾ. ಅಶುತೋಷ್ ಕೇದಾರ್ ಸೇರಿದ್ದಾರೆ; ಡಾ. ಸುಕೋಮಲ್ ಡೇ, ಸಹಪ್ರಾಧ್ಯಾಪಕರು, ಐಐಟಿ ಪಾಲಕ್ಕಾಡ್ ಮತ್ತು ಅಧ್ಯಕ್ಷರು, ಐಇಇಇ ಎಪಿ-ಎಸ್ ಚಾಪ್ಟರ್, ಕೇರಳ ವಿಭಾಗ; ಡಾ. ಗೌತಮ್ ಸಿಂಹ, ಸಹಪ್ರಾಧ್ಯಾಪಕರು, ಎಂಐಟಿ ಮಣಿಪಾಲ; ಡಾ.ಜಿ.ಶ್ರೀಕಾಂತ್ ರೆಡ್ಡಿ, ಸಹಪ್ರಾಧ್ಯಾಪಕರು, ಐಐಟಿ ಪಾಲಕ್ಕಾಡ್; ಡಾ.ಮಹೇಶ್ ಎ, ಸಹಪ್ರಾಧ್ಯಾಪಕರು, ಆರ್.ವಿ ಎಂಜಿನಿಯರಿಂಗ್ ಕಾಲೇಜು, ಬೆಂಗಳೂರು; ಗಿರೀಶ್ ಬಾಳಿಗ, ಜನರಲ್ ಮ್ಯಾನೇಜರ್ - ಇಂಡಸ್ಟ್ರಿ ಮಾರ್ಕೆಟಿಂಗ್, ಕೀಸೈಟ್ ಟೆಕ್ನಾಲಜೀಸ್, ಬೆಂಗಳೂರು; ಡಾ.ಪ್ರವೀಣ್ ಕುಮಾರ್, ಸಹಾಯಕ ಪ್ರಾಧ್ಯಾಪಕರು, ಎಂಐಟಿ ಮಣಿಪಾಲ್; ಮತ್ತು ಡಾ. ಪರ್ವೀಜ್ ಶರೀಫ್ ಬಿ.ಜಿ, ಬೋಧಕ ಸಲಹೆಗಾರ, ಎಂಟಿಟಿಎಸ್ ಎಸ್ಬಿಸಿ, ನಿಟ್ಟೆ ಭಾಗವಹಿಸುವರು.
ಎಸ್ಸೆಸ್ಸೆಲ್ಸಿ: ಅತಿ ಹೆಚ್ಚು ಅಂಕ ಪಡೆದವಧಿರಿಧಿಗೆ ಲ್ಯಾಪ್ಟಾಪ್ ಬದಲು ಹಣ
2024-25ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಲ್ಯಾಪ್ಟಾಪ್ ಬದಲಾಗಿ ಹಣ ನೀಡಲು ಶಾಲಾ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದೆ. ಒಟ್ಟು 3.25 ಕೋಟಿ ರೂ.ಗಳನ್ನು 758 ವಿದ್ಯಾರ್ಥಿಗಳಿಗೆ ತಲಾ 50 ಸಾವಿರ ರೂ.ನಂತೆ ಡಿಬಿಟಿ ಮೂಲಕ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗುವುದು.
ಟಿವಿಯಲ್ಲಿ ಕೋಮು ಉದ್ವಿಗ್ನತೆ ಉತ್ತೇಜಿಸುವ ಕಾರ್ಯಕ್ರಮಗಳ ಪ್ರಸಾರ; NBDSA ಕೈಗೊಂಡ ಕ್ರಮಗಳೇನು?
ಕಳೆದ ಮೂರು ವರ್ಷಗಳಲ್ಲಿ ಖಾಸಗಿ ದೂರದರ್ಶನ ಮತ್ತು ಡಿಜಿಟಲ್ ಸುದ್ದಿ ಪ್ರಸಾರಕರಿಗೆ ಭಾರತದ ಸ್ವಯಂ-ನಿಯಂತ್ರಣ ಪ್ರಾಧಿಕಾರ ನೀಡಿದ ಆದೇಶಗಳಲ್ಲಿ ಸುಮಾರು ಶೇ.60ರಷ್ಟು ಕೋಮು ಸಾಮರಸ್ಯಕ್ಕೆ ಸಂಬಂಧಿಸಿದ ನಿಯಮಗಳ ಉಲ್ಲಂಘನೆಗೆ ಸಂಬಂಧಿಸಿದ್ದಾಗಿ ಅಧಿಕೃತ ದಾಖಲೆಗಳ ವಿಶ್ಲೇಷಣೆಯಿಂದ ತಿಳಿದುಬಂದಿದೆ. ದೇಶಾದ್ಯಂತ ಖಾಸಗಿ ಟಿವಿ ಮತ್ತು ಡಿಜಿಟಲ್ ಸುದ್ದಿ ವಾಹಿನಿಗಳನ್ನು ಪ್ರತಿನಿಧಿಸುವ ನ್ಯೂಸ್ ಬ್ರಾಡ್ಕಾಸ್ಟರ್ಸ್ ಮತ್ತು ಡಿಜಿಟಲ್ ಅಸೋಸಿಯೇಷನ್ (NBDA) ಸ್ಥಾಪಿಸಿರುವ ಸ್ವತಂತ್ರ ಸಂಸ್ಥೆಯಾದ ನ್ಯೂಸ್ ಬ್ರಾಡ್ಕಾಸ್ಟಿಂಗ್ ಮತ್ತು ಡಿಜಿಟಲ್ ಸ್ಟ್ಯಾಂಡರ್ಡ್ಸ್ ಅಥಾರಿಟಿ (NBDSA) ಈ ಆದೇಶಗಳನ್ನು ಹೊರಡಿಸಿದೆ. ಜನವರಿ 1, 2023 ರಿಂದ ಡಿಸೆಂಬರ್ 31, 2025ರ ನಡುವೆ NBDSA ಒಟ್ಟು 54 ಆದೇಶಗಳನ್ನು ಹೊರಡಿಸಿದೆ. ಇವುಗಳಲ್ಲಿ ನೀತಿ ಸಂಹಿತೆ ಮತ್ತು ಪ್ರಸಾರ ಮಾರ್ಗಸೂಚಿಗಳ ಉಲ್ಲಂಘನೆಗಾಗಿ 43 ಪ್ರಕರಣಗಳಲ್ಲಿ ಪ್ರಸಾರಕರಿಗೆ ದಂಡ ವಿಧಿಸಲಾಗಿದೆ. ಅವುಗಳಲ್ಲಿ 32 ಪ್ರಕರಣಗಳು ನಿರ್ದಿಷ್ಟವಾಗಿ ಸುದ್ದಿ ಕಾರ್ಯಕ್ರಮಗಳಲ್ಲಿ ಧಾರ್ಮಿಕ ಸ್ಟೀರಿಯೋಟೈಪ್ಗಳು ಹಾಗೂ ಪ್ರಚೋದನಕಾರಿ ಪರಿಭಾಷೆಯ ಬಳಕೆ ಸೇರಿದಂತೆ ಕೋಮು ಸಾಮರಸ್ಯ ಉಲ್ಲಂಘನೆಗೆ ಸಂಬಂಧಿಸಿದ್ದಾಗಿವೆ. ಭೂ ಅತಿಕ್ರಮಣ, ಮಹಿಳೆಯರ ಸುರಕ್ಷತೆ, ಆಹಾರ ನೈರ್ಮಲ್ಯ ಮತ್ತು ಜನಸಂಖ್ಯಾ ಬದಲಾವಣೆಯಂತಹ ವಿಷಯಗಳನ್ನು ಹೈಲೈಟ್ ಮಾಡಲು ಪೂರ್ವಪ್ರತ್ಯಯವಾಗಿ “ಜಿಹಾದ್” ಪದವನ್ನು ಬಳಸಿರುವುದನ್ನು ಪ್ರಾಧಿಕಾರ ಗಂಭೀರವಾಗಿ ಪರಿಗಣಿಸಿದೆ. ಅಂತರಧರ್ಮೀಯ ಸಂಬಂಧಗಳು, ಭೂ ವಿವಾದಗಳು, ಆಹಾರ ನೈರ್ಮಲ್ಯ ಮತ್ತು ಅಪರಾಧದಂತಹ ವಿಷಯಗಳನ್ನು ತೋರಿಸಲು “ಲವ್ ಜಿಹಾದ್”, “ಲ್ಯಾಂಡ್ ಜಿಹಾದ್” ಮತ್ತು “ಥೂಕ್ ಜಿಹಾದ್” ಮುಂತಾದ ಪದಗಳನ್ನು ಪದೇಪದೇ ಬಳಸಿರುವುದನ್ನು ದಾಖಲೆಗಳು ಉಲ್ಲೇಖಿಸುತ್ತವೆ. ಅಲ್ಪಸಂಖ್ಯಾತ ಸಮುದಾಯಗಳನ್ನು ನಕಾರಾತ್ಮಕವಾಗಿ ಚಿತ್ರಿಸಲು ಆಯ್ದ ದತ್ತಾಂಶ ಅಥವಾ ಪರಿಶೀಲಿಸದ ಹಕ್ಕುಗಳನ್ನು ಬಳಸಲಾಗಿದೆ ಎಂದು ಹಲವು ಪ್ರಕರಣಗಳಲ್ಲಿ ಕಂಡುಬಂದಿದ್ದು, ಇದು ಸಮುದಾಯಗಳ ನಡುವೆ ಉದ್ವಿಗ್ನತೆಗೆ ಕಾರಣವಾಗಿದೆ. ಒಟ್ಟು 37 ಪ್ರಕರಣಗಳಲ್ಲಿ, ಪ್ರಸಾರಕರಿಗೆ ತಮ್ಮ ವೇದಿಕೆಗಳಿಂದ ಆಕ್ಷೇಪಾರ್ಹ ವಿಷಯವನ್ನು ಭಾಗಶಃ ಅಥವಾ ಸಂಪೂರ್ಣವಾಗಿ ತೆಗೆದುಹಾಕುವಂತೆ ನಿರ್ದೇಶನ ನೀಡಲಾಗಿದೆ. ನಿಯಮಗಳ ಅಡಿಯಲ್ಲಿ ಹಣಕಾಸಿನ ದಂಡ ವಿಧಿಸಲು ಅವಕಾಶವಿದ್ದರೂ, ಕೇವಲ ಆರು ಸಂದರ್ಭಗಳಲ್ಲಿ ಮಾತ್ರ ದಂಡ ವಿಧಿಸಲಾಗಿದ್ದು, ಮೂರು ವರ್ಷಗಳಲ್ಲಿ ಒಟ್ಟು 3.2 ಲಕ್ಷ ರೂ.ನಷ್ಟು ದಂಡ ಸಂಗ್ರಹಿಸಲಾಗಿದೆ. 2025ರಲ್ಲಿ ಹೊರಡಿಸಲಾದ 19 ಆದೇಶಗಳಲ್ಲಿ ಒಂದಲ್ಲಿಯೂ ದಂಡ ವಿಧಿಸಲಾಗಿಲ್ಲ. ಕುಂದುಕೊರತೆ ಪರಿಹಾರ ಪ್ರಕ್ರಿಯೆಯಲ್ಲಿನ ಕಾರ್ಯವಿಧಾನ ವಿಳಂಬಗಳನ್ನೂ ವಿಶ್ಲೇಷಣೆ ಎತ್ತಿ ತೋರಿಸಿದೆ. ದೂರು ಸಲ್ಲಿಸಿದ ದಿನದಿಂದ ಅಂತಿಮ ಆದೇಶ ಹೊರಬರುವವರೆಗೆ ಸರಾಸರಿ 11ರಿಂದ 12 ತಿಂಗಳುಗಳ ಸಮಯ ತೆಗೆದುಕೊಂಡಿದ್ದು, ಈ ಅವಧಿಯಲ್ಲಿ ವಿವಾದಿತ ವಿಷಯ ಸಾರ್ವಜನಿಕ ವಲಯದಲ್ಲೇ ಉಳಿದಿತ್ತು. ಟೈಮ್ಸ್ ನೌ ನವಭಾರತ್ ಅತಿ ಹೆಚ್ಚು ಪ್ರತಿಕೂಲ ಆದೇಶಗಳನ್ನು ದಾಖಲಿಸಿದ್ದು, ವಿಷಯ ತೆಗೆದುಹಾಕಲು 16 ನಿರ್ದೇಶನಗಳನ್ನು ಪಡೆದಿದೆ. ನಂತರ ನ್ಯೂಸ್ 18 ಇಂಡಿಯಾ ಹಾಗೂ ಝೀ ನ್ಯೂಸ್ ಸ್ಥಾನ ಪಡೆದಿವೆ. ಪರಿಶೀಲಿಸದ ಹಕ್ಕುಗಳ ಆಧಾರದ ಮೇಲೆ ಅಂತರ್ಧರ್ಮೀಯ ವಿವಾಹಗಳನ್ನು “ಲವ್ ಜಿಹಾದ್” ಎಂದು ಸಾಮಾನ್ಯೀಕರಿಸಿದ ಪ್ರಕರಣದಲ್ಲಿ ಟೈಮ್ಸ್ ನೌ ನವಭಾರತ್ಗೆ 1 ಲಕ್ಷ ರೂ. ದಂಡ ವಿಧಿಸಲಾಗಿದೆ. ಕೋಮು ಸೌಹಾರ್ದತೆಗೆ ಸಂಬಂಧಿಸಿದ 39 ದೂರುಗಳಲ್ಲಿ 32 ಸೇರಿ, ಒಟ್ಟು 54 ದೂರುಗಳಲ್ಲಿ ನೀತಿ ಸಂಹಿತೆ ಮತ್ತು ಪ್ರಸಾರ ಮಾರ್ಗಸೂಚಿಗಳ ಉಲ್ಲಂಘನೆಗಾಗಿ NBDSA ಕ್ರಮ ಕೈಗೊಂಡಿದೆ. ಉಳಿದ 11 ಆದೇಶಗಳಲ್ಲಿ ದಂಡ ವಿಧಿಸಲಾಗಿಲ್ಲ; ಕಾರಣಗಳಲ್ಲಿ ಉಲ್ಲಂಘನೆ ಕಂಡುಬರದಿರುವುದು, ಉಲ್ಲಂಘನೆ ಗಂಭೀರವಾಗಿರದಿರುವುದು, ಈಗಾಗಲೇ ಸರಿಪಡಿಸುವ ಕ್ರಮಗಳನ್ನು ತೆಗೆದುಕೊಂಡಿರುವುದು ಅಥವಾ ವಿಷಯ ನ್ಯಾಯಾಲಯದ ಮುಂದೆ ಬಾಕಿ ಇರುವುದು ಸೇರಿವೆ. 54 ಪ್ರಕರಣಗಳಲ್ಲಿ 37 ಪ್ರಕರಣಗಳಲ್ಲಿ ಆಕ್ಷೇಪಾರ್ಹ ವೀಡಿಯೊಗಳನ್ನು ಭಾಗಶಃ ಅಥವಾ ಸಂಪೂರ್ಣವಾಗಿ ತೆಗೆದುಹಾಕುವಂತೆ ನಿರ್ದೇಶಿಸಲಾಗಿದೆ. ಕಳೆದ ಮೂರು ವರ್ಷಗಳಲ್ಲಿ ಕೇವಲ ಆರು ಸಂದರ್ಭಗಳಲ್ಲಿ ಮಾತ್ರ ಆರ್ಥಿಕ ದಂಡ ವಿಧಿಸಲಾಗಿದ್ದು, ಒಟ್ಟು 3.2 ಲಕ್ಷ ದಂಡ ಸಂಗ್ರಹವಾಗಿದೆ. 2025ರಲ್ಲಿ ಹೊರಡಿಸಿದ 19 ಆದೇಶಗಳಲ್ಲಿ ಒಂದಲ್ಲಿಯೂ ದಂಡ ವಿಧಿಸಲಾಗಿಲ್ಲ. ಕೋಮು ಸೌಹಾರ್ದತೆಗೆ ಸಂಬಂಧಿಸಿದ ಪ್ರಕರಣಗಳು ಜನಸಂಖ್ಯಾ ಸ್ಫೋಟ ಅಥವಾ ಅಲ್ಪಸಂಖ್ಯಾತರಿಗೆ ಸಂಬಂಧಿಸಿದ ಜನಸಂಖ್ಯಾ ಬದಲಾವಣೆಯ ನಿರೂಪಣೆಯನ್ನು ಪ್ರಚೋದಿಸುವ ಟಿವಿ ಸುದ್ದಿ ಕಾರ್ಯಕ್ರಮಗಳಿಗೆ ಸಂಬಂಧಿಸಿದ 9 ಪ್ರಕರಣಗಳು. ಅವುಗಳಲ್ಲಿ ಎರಡು ಭೂ ಅತಿಕ್ರಮಣ ಸಮಸ್ಯೆಗೆ ಸಂಬಂಧಿಸಿ “ಭೂ ಜಿಹಾದ್” ಎಂಬ ಪದವನ್ನು ಬಳಸಿವೆ. ಕನಿಷ್ಠ 9 ಪ್ರಕರಣಗಳು “ಲವ್ ಜಿಹಾದ್” ನಿರೂಪಣೆಯ ಮೇಲೆ ಕೇಂದ್ರೀಕೃತವಾಗಿದ್ದು, ಅಂತರಧರ್ಮೀಯ ಸಂಬಂಧಗಳು ಅಥವಾ ಮಹಿಳೆಯರ ಮೇಲಿನ ಅಪರಾಧಗಳನ್ನು ಪಿತೂರಿಗಳಾಗಿ ಚಿತ್ರಿಸಲಾಗಿದೆ. ಆಹಾರಕ್ಕೆ ಸಂಬಂಧಿಸಿದ ಎರಡು ಪ್ರಕರಣಗಳಲ್ಲಿ “ಥೂಕ್ (ಉಗುಳು) ಜಿಹಾದ್” ಪದ ಬಳಕೆಯಾಗಿದೆ. ಇನ್ನು ನಾಲ್ಕು ಪ್ರಕರಣಗಳಲ್ಲಿ ಅಂತರರಾಷ್ಟ್ರೀಯ ಘಟನೆಗಳಾದ ಇಸ್ರೇಲ್–ಹಮಾಸ್ ಸಂಘರ್ಷವನ್ನು ಉಲ್ಲೇಖಿಸಿ ಅಲ್ಪಸಂಖ್ಯಾತರನ್ನು ಗುರಿಯಾಗಿಸಿಕೊಂಡ ಸ್ಥಳೀಯ ನಿರೂಪಣೆಗಳನ್ನು ರೂಪಿಸಲಾಗಿದೆ. ಚುನಾವಣಾ ಆಯೋಗವು ಒಂದೇ ಒಂದು ಸಂದರ್ಭದಲ್ಲಿ, ನ್ಯೂಸ್ 18 ಇಂಡಿಯಾದ ರಾಮ ನವಮಿ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಸಿಪಿಐ ನೀಡಿದ ದೂರನ್ನು ರವಾನಿಸಿದೆ. ದಿಲ್ಲಿ ವಿಧಾನಸಭಾ ಚುನಾವಣೆಯ (2025) ಸಂದರ್ಭದಲ್ಲಿ ಈ ಕಾರ್ಯಕ್ರಮವು ಮಾದರಿ ನೀತಿ ಸಂಹಿತೆ ಉಲ್ಲಂಘಿಸಿದೆ ಎಂದು ದೂರಿನಲ್ಲಿ ಆರೋಪಿಸಲಾಗಿತ್ತು. “ರಾಮ್ನಿಂದ ಬಿಜೆಪಿಯ ಮತ ಹಂಚಿಕೆಯಲ್ಲಿ ಹೆಚ್ಚಳ ಮತ್ತು ಕಾಂಗ್ರೆಸ್ನ ಕುಸಿತ” ಎಂಬ ಪರಸ್ಪರ ಸಂಬಂಧವನ್ನು ನಿರೂಪಕರು ವಿವರಿಸಿದ ರೀತಿಯಲ್ಲಿ NBDSA ದೋಷ ಕಂಡಿದೆ. ವಿರೋಧ ಪಕ್ಷಗಳು ಮತ್ತು ಕ್ವೀರ್ ಸಮುದಾಯದ ವಿರುದ್ಧದ ರಾಜಕೀಯ ಪಕ್ಷಪಾತ, ಜಾತಿ ಹಾಗೂ ಬುಡಕಟ್ಟು ಗುರುತಿಗೆ ಸಂಬಂಧಿಸಿದ ಅವಮಾನಕರ ಭಾಷೆ, ದಾರಿತಪ್ಪಿಸುವ ಮತ್ತು ಮಾನಹಾನಿಕರ ವಿಷಯ ಪ್ರಸಾರಕ್ಕೆ ಸಂಬಂಧಿಸಿದ ಹಲವು ದೂರುಗಳನ್ನೂ NBDSA ನಿರ್ಣಯಿಸಿದೆ. ಟೈಮ್ಸ್ ನೌ ನವಭಾರತ್ 16 ಆದೇಶಗಳೊಂದಿಗೆ ಕಾರ್ಯಕ್ರಮ ಡಿಲೀಟ್ ಮಾಡುವುದರಲ್ಲಿ ಅಗ್ರಸ್ಥಾನದಲ್ಲಿದ್ದು, ಅದರಲ್ಲಿ ಒಂದು ದಂಡವೂ ಸೇರಿದೆ. ನ್ಯೂಸ್ 18 ಇಂಡಿಯಾ ಎಂಟು ಆದೇಶಗಳೊಂದಿಗೆ (ನಾಲ್ಕು ದಂಡಗಳೊಂದಿಗೆ) ನಂತರದ ಸ್ಥಾನದಲ್ಲಿದ್ದು, ಜೀ ನ್ಯೂಸ್ ಐದು ಆದೇಶಗಳೊಂದಿಗೆ ಕಾರ್ಯಕ್ರಮಗಳನ್ನು ತೆಗೆದುಹಾಕಿದೆ. ಜನಸಂಖ್ಯಾ ಬೆಳವಣಿಗೆ ಕಾನೂನುಬದ್ಧ ಕಾಳಜಿಯ ವಿಷಯವಾದರೂ, ಅದನ್ನು ವಸ್ತುನಿಷ್ಠವಾಗಿ ನಿರ್ವಹಿಸಬೇಕು ಎಂದು ಪ್ರಾಧಿಕಾರ ತನ್ನ ಆದೇಶಗಳಲ್ಲಿ ಹೇಳಿದೆ. ಸ್ಪಷ್ಟ ಪುರಾವೆಗಳಿಲ್ಲದೆ ನಿರ್ದಿಷ್ಟ ಸಮುದಾಯವನ್ನು ದೂಷಿಸಲು ಆಯ್ದ ದತ್ತಾಂಶವನ್ನು ಬಳಸುವುದನ್ನು ಅದು ಖಂಡಿಸಿದ್ದು, ಅಂತಹ ಪ್ರಕರಣಗಳನ್ನು “ಲವ್ ಜಿಹಾದ್” ಎಂದು ಹೇಳುವುದು ಅಥವಾ ಇಡೀ ಸಮುದಾಯವನ್ನು ಗುರಿಯಾಗಿಸುವುದು ಅನುಚಿತ ಎಂದು ಸ್ಪಷ್ಟಪಡಿಸಿದೆ. NBDSA ಆದೇಶಗಳನ್ನು ಪಾಲಿಸಿದ್ದಾರೆಯೇ ಮತ್ತು ಯಾವ ಸುರಕ್ಷತಾ ಕ್ರಮಗಳನ್ನು ಜಾರಿಗೆ ತಂದಿದ್ದಾರೆ ಎಂಬ ಪ್ರಶ್ನೆಗೆ, ನ್ಯೂಸ್ 18 ನೆಟ್ವರ್ಕ್ ವಕ್ತಾರರು NBDSA ಹೊರಡಿಸಿದ ಆದೇಶಗಳನ್ನು ಪಾಲಿಸಲಾಗಿದೆ ಎಂದು ಹೇಳಿದ್ದಾರೆ. ಟೈಮ್ಸ್ ನೌ ನವಭಾರತ್ ಮತ್ತು ಜೀ ನ್ಯೂಸ್ ಈ ಬಗ್ಗೆ ಪ್ರತಿಕ್ರಿಯಿಸಿಲ್ಲ ಎಂದು ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ. ಪ್ರಾಧಿಕಾರ ಹೇಗೆ ಕಾರ್ಯನಿರ್ವಹಿಸುತ್ತದೆ ನಿವೃತ್ತ ಸುಪ್ರೀಂ ಕೋರ್ಟ್ ನ್ಯಾಯಾಧೀಶ ನ್ಯಾಯಮೂರ್ತಿ ಎ.ಕೆ. ಸಿಕ್ರಿ ಅವರ ಅಧ್ಯಕ್ಷತೆಯಲ್ಲಿರುವ ಈ ಪ್ರಾಧಿಕಾರದಲ್ಲಿ ಎಂಟು ಇತರ ಸದಸ್ಯರಿದ್ದು, ಅವರಲ್ಲಿ ನಾಲ್ವರು ನಿವೃತ್ತ ಐಎಎಸ್ ಅಥವಾ ಐಎಫ್ಎಸ್ ಅಧಿಕಾರಿಗಳಾದ ಸ್ವತಂತ್ರ ಸದಸ್ಯರು ಮತ್ತು ನಾಲ್ವರು ಟಿವಿ ಸುದ್ದಿ ವಾಹಿನಿಗಳ “ಸಂಪಾದಕ ಸದಸ್ಯರು” ಸೇರಿದ್ದಾರೆ. ಪ್ರಾಧಿಕಾರ ಕನಿಷ್ಠ ಎರಡು ತಿಂಗಳಿಗೊಮ್ಮೆ ಸಭೆ ಸೇರುತ್ತದೆ ಮತ್ತು ಎಲ್ಲ ನಿರ್ಧಾರಗಳನ್ನು ಒಮ್ಮತದಿಂದ ತೆಗೆದುಕೊಳ್ಳಲಾಗುತ್ತದೆ. ಸ್ವತಂತ್ರ ಸದಸ್ಯರಲ್ಲಿ ಮಾಜಿ ಐಎಎಸ್ ಅಧಿಕಾರಿಗಳಾದ ಡಾ. ನಸೀಮ್ ಜೈದಿ, ವೃಂದಾ ಸರೂಪ್, ಜೆ.ಎಸ್. ದೀಪಕ್ ಮತ್ತು ಮಾಜಿ ಐಎಫ್ಎಸ್ ಅಧಿಕಾರಿ ನವತೇಜ್ ಸರ್ನಾ ಇದ್ದಾರೆ. ಸಂಪಾದಕ ಸದಸ್ಯರಾಗಿ ಸನ್ ನ್ಯೂಸ್ ಪ್ರಧಾನ ಸಂಪಾದಕ ಎಂ. ಗುಣಶೇಖರನ್, ಎನ್ಡಿಟಿವಿ ಹಿರಿಯ ವ್ಯವಸ್ಥಾಪಕ ಸಂಪಾದಕ ವೈಶಾಲಿ ಸೂದ್, ಟೈಮ್ಸ್ ನೌ ನವಭಾರತ್ ವ್ಯವಸ್ಥಾಪಕ ಸಂಪಾದಕ ರಂಜಿತ್ ಕುಮಾರ್ ಮತ್ತು ಸಾಕ್ಷಿ ಟಿವಿ ವ್ಯವಸ್ಥಾಪಕ ಸಂಪಾದಕ ಯಾದಗಿರಿ ರೆಡ್ಡಿ ಕಂಚರ್ಲಾ ಕಾರ್ಯನಿರ್ವಹಿಸುತ್ತಿದ್ದಾರೆ. ವರದಿಗಾರಿಕೆಗೆ ಸಂಬಂಧಿಸಿದ ಮಾರ್ಗಸೂಚಿಗಳು, ಯಾವುದೇ ಧಾರ್ಮಿಕ ಗುಂಪಿನ ಸೂಕ್ಷ್ಮತೆಯನ್ನು ಅವಹೇಳನ ಮಾಡುವ ಅಥವಾ ಅಪರಾಧ ಮಾಡುವ ಅಥವಾ ಜಗಳ ಸೃಷ್ಟಿಸುವ ವಿಷಯವನ್ನು ವರದಿ ಮಾಡುವಾಗ ಎಚ್ಚರಿಕೆ ವಹಿಸಬೇಕು ಎಂದು ಷರತ್ತು ವಿಧಿಸುತ್ತವೆ. ಏಪ್ರಿಲ್ 2008ರಲ್ಲಿ ಜಾರಿಗೆ ಬಂದ ಹಾಗೂ ಡಿಸೆಂಬರ್ 2024ರಲ್ಲಿ ಕೊನೆಯದಾಗಿ ತಿದ್ದುಪಡಿ ಮಾಡಲಾದ ಸುದ್ದಿ ಪ್ರಸಾರ ಮತ್ತು ಡಿಜಿಟಲ್ ಮಾನದಂಡಗಳ ನಿಯಮಗಳ ಅಡಿಯಲ್ಲಿ NBDSA ಶ್ರೇಣೀಕೃತ ದಂಡ ವ್ಯವಸ್ಥೆಯನ್ನು ಅನುಸರಿಸುತ್ತದೆ. ಮೊದಲ ಉಲ್ಲಂಘನೆಗೆ ರೂ.2 ಲಕ್ಷದವರೆಗೆ, ಎರಡನೇ ಉಲ್ಲಂಘನೆಗೆ 5 ಲಕ್ಷ ರೂ.ವರೆಗೆ, ಮೂರನೇ ಉಲ್ಲಂಘನೆಗೆ 10 ಲಕ್ಷ ರೂ. ದವರೆಗೆ ಹಾಗೂ ನಾಲ್ಕನೇ ಉಲ್ಲಂಘನೆಗೆ ಚಾನೆಲ್ ವಹಿವಾಟಿನ ಶೇ.1ರಷ್ಟು (ಗರಿಷ್ಠ 25 ಲಕ್ಷ ರೂ.) ದಂಡ ವಿಧಿಸುವ ವ್ಯವಸ್ಥೆಯಿದೆ. NBDSA ಎರಡು ಹಂತದ ದೂರು ಪರಿಹಾರ ವ್ಯವಸ್ಥೆ ಹೊಂದಿದೆ. ದೂರುಗಳನ್ನು ಮೊದಲು ಪ್ರಸಾರಕರಿಗೆ 15 ದಿನಗಳಲ್ಲಿ ಸಲ್ಲಿಸಬೇಕು. ಪರಿಹಾರವಾಗದಿದ್ದರೆ ಮುಂದಿನ 15 ದಿನಗಳಲ್ಲಿ ಪ್ರಾಧಿಕಾರಕ್ಕೆ ವರ್ಗಾಯಿಸಬಹುದು. ಸ್ವಯಂ ಪ್ರೇರಿತವಾಗಿ ಕ್ರಮ ಕೈಗೊಳ್ಳುವ ಅಧಿಕಾರವಿದ್ದರೂ, ಕಳೆದ ಮೂರು ವರ್ಷಗಳಲ್ಲಿ ಹೊರಡಿಸಿದ ಎಲ್ಲ ಆದೇಶಗಳು ವೈಯಕ್ತಿಕ ದೂರುಗಳಿಂದಲೇ ಉದ್ಭವಿಸಿವೆ. NBDSA ತನ್ನ ತೀರ್ಪು ಪ್ರಕ್ರಿಯೆ ನ್ಯಾಯಯುತ ಮತ್ತು ಒಮ್ಮತದ ಆಧಾರದ ಮೇಲೆ ನಡೆಯುತ್ತದೆ ಎಂದು ಸಮರ್ಥಿಸಿಕೊಂಡಿದೆ. ಆದರೆ ಸೀಮಿತ ದಂಡ ಮೊತ್ತಗಳು ಮತ್ತು ದೀರ್ಘಾವಧಿಯ ವಿಚಾರಣೆ ಪ್ರಕ್ರಿಯೆ ಸ್ವಯಂ-ನಿಯಂತ್ರಣದ ಪರಿಣಾಮಕಾರಿತ್ವವನ್ನು ಕುಂದಿಸುತ್ತದೆ ಹಾಗೂ ಅದರ ಪ್ರತಿಬಂಧಕ ಪರಿಣಾಮವನ್ನು ಕಡಿಮೆ ಮಾಡುತ್ತದೆ ಎಂದು ಮಾಧ್ಯಮ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
‘ಜನನಾಯಗನ್’ ಸೆನ್ಸಾರ್ ವಿವಾದ: ಜ. 27ರಂದು ಮದ್ರಾಸ್ ಹೈಕೋರ್ಟ್ನಿಂದ ತೀರ್ಪು
ಚೆನ್ನೈ: ನಟ ಹಾಗೂ ತಮಿಳಗ ವೆಟ್ರಿ ಕಳಗಂ ಮುಖ್ಯಸ್ಥ ವಿಜಯ್ ನಟಿಸಿರುವ ಬಹು ನಿರೀಕ್ಷಿತ ‘ಜನನಾಯಗನ್’ ಚಿತ್ರಕ್ಕೆ 16 ವರ್ಷ ಮೇಲ್ಪಟ್ಟವರು ವೀಕ್ಷಿಸಲು ಅನುವಾಗುವಂತೆ ಯು/ಎ ಪ್ರಮಾಣ ಪತ್ರ ನೀಡುವಂತೆ ಜ. 9ರಂದು ಮದ್ರಾಸ್ ಹೈಕೋರ್ಟ್ನ ಏಕಸದಸ್ಯ ಪೀಠ ನೀಡಿದ್ದ ಆದೇಶವನ್ನು ಪ್ರಶ್ನಿಸಿ, ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ (CBFC) ಸಲ್ಲಿಸಿರುವ ಮೇಲ್ಮನವಿಯ ಕುರಿತು ಜನವರಿ 27ರಂದು ತೀರ್ಪು ಪ್ರಕಟಿಸಲು ಮದ್ರಾಸ್ ಹೈಕೋರ್ಟ್ ಪ್ರಥಮ ವಿಭಾಗೀಯ ಪೀಠ ಸಜ್ಜಾಗಿದೆ. ಮುಖ್ಯ ನ್ಯಾಯಮೂರ್ತಿ ಮಣೀಂದರ್ ಮೋಹನ್ ಶ್ರೀವಾಸ್ತವ ಹಾಗೂ ನ್ಯಾಯಮೂರ್ತಿ ಜಿ. ಅರುಳ್ ಮುರುಗನ್ ಅವರನ್ನು ಒಳಗೊಂಡ ನ್ಯಾಯಪೀಠ, ಜನವರಿ 20ರಂದು ಕಾಯ್ದಿರಿಸಿದ್ದ ತೀರ್ಪನ್ನು ಜನವರಿ 27ರಂದು ಪ್ರಕಟಿಸಲಿದೆ. ಸಿಬಿಎಫ್ಸಿ ಪರವಾಗಿ ಹೆಚ್ಚುವರಿ ಸಾಲಿಸಿಟರ್ ಜನರಲ್ ಎ. ಆರ್. ಸುಂದರೇಶನ್ ಹಾಗೂ ಕೆವಿಎನ್ ಪ್ರೊಡಕ್ಷನ್ಸ್ ಎಲ್ಎಲ್ಪಿ ಪರ ಹಿರಿಯ ವಕೀಲ ಸತೀಶ್ ಪರಾಸರನ್, ಅವರಿಗೆ ನೆರವು ನೀಡಿದ ವಿಜಯನ್ ಸುಬ್ರಮಣಿಯನ್ ಅವರ ವಾದ–ಪ್ರತಿವಾದಗಳನ್ನು ಆಲಿಸಿದ ಬಳಿಕ ನ್ಯಾಯಪೀಠ ತೀರ್ಪನ್ನು ಕಾಯ್ದಿರಿಸಿತ್ತು. ವಾದ–ಪ್ರತಿವಾದದ ವೇಳೆ, ಸಿಬಿಎಫ್ಸಿಗೆ ಪ್ರತಿಪ್ರಮಾಣ ಪತ್ರ ಸಲ್ಲಿಸಲು ಅವಕಾಶ ನೀಡದೆ, ನಿರ್ಮಾಣ ಸಂಸ್ಥೆ ಸಲ್ಲಿಸಿದ್ದ ರಿಟ್ ಅರ್ಜಿ ವಿಲೇವಾರಿಯಲ್ಲಿ ಏಕಸದಸ್ಯ ಪೀಠದ ತೀರ್ಪು ಸಮರ್ಥನೀಯವಾಗಿದೆಯೇ ಎಂಬುದನ್ನು ದಾಖಲಿಸಲು ಮಾತ್ರ ಮೊದಲಿಗೆ ತಮ್ಮ ವಾದಗಳನ್ನು ಮಂಡಿಸಬೇಕೆಂದು ವಿಭಾಗೀಯ ನ್ಯಾಯಪೀಠ ಎರಡೂ ಕಡೆಯ ವಾದಿಗಳಿಗೆ ಒತ್ತಿ ಹೇಳಿತ್ತು.
ಸದನದಲ್ಲಿ ಶಿಸ್ತು ರೂಪಿಸಲು ಶ್ರೀ ಮಹಾವೀರ ಕಾಲೇಜು ಕಲಿಸಿದ ಪಾಠ ನೆರವಾಗಿದೆ: ಯು.ಟಿ ಖಾದರ್
ಮೂಡುಬಿದಿರೆ : ಸದನದಲ್ಲಿ ಶಿಸ್ತು ರೂಪಿಸಲು ಶ್ರೀ ಮಹಾವೀರ ಕಾಲೇಜು ಕಲಿಸಿದ ಪಾಠ ನೆರವಾಗಿದೆ ಎಂದು ವಿಧಾನಸಭಾಧ್ಯಕ್ಷ ಯು.ಟಿ ಖಾದರ್ ಹೇಳಿದರು. ಬೆಂಗಳೂರಿನಲ್ಲಿ ಆಯೋಜಿತವಾಗಿದ್ದ ಮೂಡುಬಿದಿರೆ ಶ್ರೀ ಮಹಾವೀರ ಕಾಲೇಜಿನ ಹಳೆ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ತಮ್ಮ ವ್ಯಕ್ತಿತ್ವ ರೂಪಿಸುವಲ್ಲಿ ಕಾಲೇಜು ಯಾವ ರೀತಿ ಮಾರ್ಗದರ್ಶಿಯಾಯಿತು ಎಂದು ವಿವರಿಸಿದರು. ಕಾಲೇಜು ವಿದ್ಯಾರ್ಥಿಗಳಾಗಿದ್ದಾಗ ನಾವು ಸಾಕಷ್ಟು ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲು ಪ್ರಾಧ್ಯಾಪಕರು ನಮಗೆ ಪ್ರೋತ್ಸಾಹ ನೀಡುತ್ತಿದ್ದರು. ನಮ್ಮೆಲ್ಲ ತಪ್ಪುಗಳನ್ನು ತಿದ್ದಿ ಅಗತ್ಯವಿದ್ದಾಗ ನಮ್ಮ ಪೋಷಕರನ್ನೂ ಕರೆಸಿ ಬುದ್ದಿ ಹೇಳಿದ್ದರಿಂದಲೇ ಸಮಾಜದಲ್ಲಿ ಈ ಸಾಧನೆಯೊಂದಿಗೆ ಗುರುತಿಸುವಂತಾಗಿದೆ. ಮಹಾವೀರ ಕಾಲೇಜು ವಿದ್ಯಾರ್ಥಿ ಗಳಾಗಿದ್ದವರು ಇಂದು ಸಾಕಷ್ಟು ಸಾಧನೆಗಳನ್ನು ಮಾಡಿದ್ದಾರೆ. ಅತ್ಯುನ್ನತ ಹುದ್ದೆಗಳಲ್ಲಿದ್ದಾರೆ. ಕಾಲೇಜು ನಮಗೆ ಅಂದು ಕಲಿಸಿಕೊಟ್ಟ ಪಾಠ ಇಂದಿಗೂ ದಾರಿದೀವಿಗೆಯಾಗಿದ್ದು ಸದಾ ನೆನಪಿನಲ್ಲುಳಿಯುವಂತಹುದು. ಮಹಾವೀರ ಕಾಲೇಜು ವಜ್ರಮಹೋತ್ಸವ ಆಚರಿಸುತ್ತಿರುವ ಈ ವರ್ಷದಲ್ಲಿ ಕಾಲೇಜಿನ ಎಲ್ಲ ಅಭಿವೃದ್ಧಿ ಯೋಜನೆಗಳಲ್ಲಿ, ಸಕ್ರಿಯವಾಗಿ ತೊಡಗಿಕೊಳ್ಳುವುದಾಗಿ ಹೇಳಿದರು. ಮಾಜಿ ಸಚಿವ ಅಭಯಚಂದ್ರ ಜೈನ್ ಮಾತನಾಡಿ, ಮಹಾವೀರ ಕಾಲೇಜು ಈ ಭಾಗದಲ್ಲಿ ಮಾಡಿದ ಶೈಕ್ಷಣಿಕ ಕ್ರಾಂತಿಗೆ ಹಳೆ ವಿದ್ಯಾರ್ಥಿಗಳ ಯಶೋಗಥೆಗಳೇ ಸಾಕ್ಷಿಯಾಗಿದೆ ಎಂದರು. ಯಾವುದೇ ರೀತಿಯಲ್ಲೂ ಲಾಭ ದಾಯಕವಲ್ಲದ ಶಿಕ್ಷಣ ಇಂದಿನಂತೆ ಉದ್ಯಮವೂ ಆಗಿರದ ಆ ಕಾಲಘಟ್ಟದಲ್ಲಿ ಕೇವಲ ಈ ಭಾಗದ ಮಕ್ಕಳ ಕಾಲೇಜು ಶಿಕ್ಷಣಕ್ಕಾಗಿ ಮಣಿಪಾಲ್ ಸಮೂಹದಿಂದ ಆರಂಭಗೊಂಡಿದ್ದ ಕಾಲೇಜು ಸಹಸ್ರ ಸಹಸ್ರ ಮಕ್ಕಳ ಬದುಕನ್ನು ರೂಪಿ ಸಿದೆ. ಟಿ.ಎಂ.ಎ ಪೈ, ಎಸ್.ಎನ್ ಮೂಡುಬಿದಿರೆ ಮೊದಲಾದವರು ಅವಿಭಜಿತ ದಕ್ಷಿಣ ಕನ್ನಡದ ಹಲವು ಪಟ್ಟಣಗಳಲ್ಲಿ ಅಲಭ್ಯವಾಗಿದ್ದ ಕಾಲೇಜನ್ನು ಮೂಡುಬಿದಿರೆಯಲ್ಲಿ ಆರಂಭಿಸಿ, ಯಶಸ್ವಿ ಸಭಾಧ್ಯಕ್ಷರೆನಿಸಿಕೊಂಡಿರುವ ಯು.ಟಿ ಖಾದರ್ ಅವರಂತೆ ಸಹಸ್ರಾರು ಜನರ ಭವ್ಯ ಭವಿಷ್ಯಕ್ಕೆ ನಾಂದಿ ಹಾಡಿದ್ದಾರೆ. ಅವರನ್ನು ವಜ್ರಮಹೋತ್ಸವದ ಈ ಸಂದರ್ಭದಲ್ಲಿ ನಾವೆಲ್ಲ ಸೇರಿ ಸ್ಮರಿಸಬೇಕಿದೆ. ಕಾಲೇಜು ಶಿಕ್ಷಣ ಬಡ ಮಕ್ಕಳ ಕಾಲೇಜು ಶಿಕ್ಷಣದ ಕನಸು ನನಸು ಮಾಡುತ್ತಿದೆ ಎಂದರು. ಮಹಾವೀರ ಕಾಲೇಜು ಪ್ರಾಂಶುಪಾಲ ಡಾ. ರಾಧಾಕೃಷ್ಣ ಕಾಲೇಜಿನ ಪ್ರಸ್ತುತ ಕಾರ್ಯಕ್ರಮಗಳನ್ನು ಪರಿಚಯಿಸಿ ಬಡ ಮಕ್ಕಳ ಕಾಲೇಜು ಶಿಕ್ಷಣ, ಮಧ್ಯಾಹ್ನದ ಉಚಿತ ಊಟದ ವ್ಯವಸ್ಥೆ ಜೊತೆಗೆ ಕಾಲೇಜಿನ ಅಭಿವೃದ್ಧಿ ಕೆಲಸಗಳಲ್ಲಿ ಹಳೆ ವಿದ್ಯಾರ್ಥಿಗಳು ಕೈ ಜೋಡಿಸುವಂತೆ ಮನವಿ ಮಾಡಿದರು. ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ನಾಗರಾಜ್ ಬಿ. ಮಾತನಾಡಿ, ರಾಜ್ಯದ ಮತ್ತು ಮುಂಬೈ, ಕೇರಳ ಸೇರಿದಂತೆ ವಿದೇಶಗಳಲ್ಲಿ ನೆಲೆಸಿರುವ ವಿದ್ಯಾರ್ಥಿಗಳನ್ನೂ ಸಂಪರ್ಕಿಸುವ ಕಾರ್ಯ ನಡೆಯುತ್ತಿದ್ದು ಎಲ್ಲಾ ಪ್ರಮುಖ ನಗರ ಗಳಲ್ಲೂ ಹಳೆ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ ನಡೆಸುವುದಾಗಿ ತಿಳಿಸಿದರು. ಅನಿತಾ ಸುರೇಂದ್ರ ಕುಮಾರ್, ಶಿರ್ತಾಡಿ ಸಂಪತ್ ಸಾಮ್ರಾಜ್ಯ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಸುಚರಿತ ಶೆಟ್ಟಿ ಭಾಗವಹಿಸಿದ್ದರು. ಹಳೆ ವಿದ್ಯಾರ್ಥಿಗಳು ಕಾಲೇಜು ದಿನಗಳ ಸವಿ ನೆನಪುಗಳನ್ನು ಮೆಲುಕು ಹಾಕಿದರು.
ಯುದ್ದನೌಕೆಗಳ ಸಮೂಹ ಇರಾನಿನತ್ತ ಸಾಗುತ್ತಿದೆ: ಡೊನಾಲ್ಡ್ ಟ್ರಂಪ್
ವಾಷಿಂಗ್ಟನ್, ಜ.23: ಇರಾನಿನ ಮೇಲೆ ಒತ್ತಡವನ್ನು ಮುಂದುವರಿಸುವ ಕ್ರಮವಾಗಿ ಅಮೆರಿಕಾದ ಬೃಹತ್ ಯುದ್ದನೌಕೆಗಳ ಸಮೂಹವು ಇರಾನಿನತ್ತ ಸಾಗುತ್ತಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ. ʼಪಡೆಗಳ ಅಗತ್ಯಬಾರದು ಎಂಬ ವಿಶ್ವಾಸವಿದ್ದರೂ ಇರಾನ್ ರಾಷ್ಟ್ರದೊಳಗಿನ ಘಟನೆಗಳು ಅಂತಾರಾಷ್ಟ್ರೀಯ ಪರಿಶೀಲನೆಯನ್ನು ಮುಂದುವರಿಸುತ್ತಿರುವುದರಿಂದ ನೌಕಾಪಡೆ ನಿಯೋಜನೆ ಅಗತ್ಯವಾಗಿದೆ. ನಮ್ಮ ಬಹಳಷ್ಟು ಹಡಗುಗಳು ಆ ದಿಕ್ಕಿನತ್ತ ಸಾಗುತ್ತಿವೆ. ಬಲ ಪ್ರಯೋಗಕ್ಕೆ ಆಸ್ಪದ ನೀಡುವಂತಹ ಘಟನೆ ಸಂಭವಿಸದು ಎಂದು ಆಶಿಸುತ್ತೇವೆ. ಆದರೆ ಪರಿಸ್ಥಿತಿಯನ್ನು ಬಹಳ ಹತ್ತಿರದಿಂದ ನೋಡುತ್ತೇವೆ. ಯುದ್ದನೌಕೆಗಳ ಸಮೂಹವು ಆ ದಿಕ್ಕಿನತ್ತ ಸಾಗುತ್ತಿದೆ. ಬಹುಶಃ ಅವುಗಳನ್ನು ನಾವು ಬಳಸಬೇಕಾಗಿಲ್ಲ' ಎಂದು ಟ್ರಂಪ್ ಪ್ರತಿಪಾದಿಸಿದ್ದಾರೆ. ಮುಂದಿನ ದಿನಗಳಲ್ಲಿ ಅಮೆರಿಕದ ವಿಮಾನವಾಹಕ ನೌಕೆ ಯುಎಸ್ಎಸ್ ಅಬ್ರಹಾಂ ಲಿಂಕನ್ ಹಾಗೂ ಹಲವಾರು ಮಾರ್ಗದರ್ಶಿ ಕ್ಷಿಪಣಿ ವಿಧ್ವಂಸಕಗಳು ಮಧ್ಯಪ್ರಾಚ್ಯಕ್ಕೆ ಆಗಮಿಸಲಿವೆ. ಹಲವು ನೌಕೆಗಳು ಮಧ್ಯಪ್ರಾಚ್ಯದತ್ತ ಸಾಗುತ್ತಿವೆ ಮತ್ತು ಇರಾನಿನಲ್ಲಿನ ಬೆಳವಣಿಗೆಗಳನ್ನು ಅಮೆರಿಕಾ ನಿಕಟವಾಗಿ ಗಮನಿಸುತ್ತಿದೆ ಎಂದು ಅಧಿಕಾರಿಗಳನ್ನು ಉಲ್ಲೇಖಿಸಿ `ರಾಯ್ಟರ್ಸ್' ವರದಿ ಮಾಡಿದೆ.
ಪ್ರತಿಭಟನಾಕಾರರಿಗೆ ಮರಣದಂಡನೆ| ಟ್ರಂಪ್ ಹೇಳಿಕೆ ನಿರಾಕರಿಸಿದ ಇರಾನ್
ಟೆಹ್ರಾನ್, ಜ.23: ರಾಷ್ಟ್ರವ್ಯಾಪಿ ಪ್ರತಿಭಟನೆಗಳ ಸಂದರ್ಭ ಬಂಧಿಸಲಾಗಿದ್ದ 800ಕ್ಕೂ ಹೆಚ್ಚು ಪ್ರತಿಭಟನಾಕಾರರಿಗೆ ಮರಣದಂಡನೆ ವಿಧಿಸುವುದನ್ನು ತನ್ನ ಮಧ್ಯಪ್ರವೇಶ ತಪ್ಪಿಸಿದೆ ಎಂಬ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿಕೆಯನ್ನು ಇರಾನ್ ಶುಕ್ರವಾರ ನಿರಾಕರಿಸಿದೆ. ಈ ಪ್ರತಿಪಾದನೆ ಸಂಪೂರ್ಣ ಸುಳ್ಳು. ನ್ಯಾಯಾಂಗವು ಇಂತಹ ನಿರ್ಧಾರವನ್ನು ತೆಗೆದುಕೊಂಡಿಲ್ಲ ಎಂದು ಇರಾನ್ನ ಉನ್ನತ ಪ್ರಾಸಿಕ್ಯೂಟರ್ ಮುಹಮ್ಮದ್ ಮೊವಾಹೆದಿಯನ್ನು ಉಲ್ಲೇಖಿಸಿ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಸಾಮೂಹಿಕ ಮರಣದಂಡನೆ ಮತ್ತು ಶಾಂತಿಯುತ ಪ್ರತಿಭಟನಾಕಾರರನ್ನು ಹತ್ಯೆ ಮಾಡುವುದು ಇರಾನ್ ಮೇಲೆ ಅಮೆರಿಕದ ಮಿಲಿಟರಿ ದಾಳಿಗೆ ಕೆಂಪು ಗೆರೆಯಾಗಿದೆ ಎಂದು ಟ್ರಂಪ್ ಎಚ್ಚರಿಕೆ ನೀಡಿದ್ದರು. ಈ ಮಧ್ಯೆ, ರಾಷ್ಟ್ರವ್ಯಾಪಿ ಪ್ರತಿಭಟನೆಯನ್ನು ಹಿಂಸಾತ್ಮಕ ರೀತಿಯಲ್ಲಿ ದಮನಿಸುವ ಸಂದರ್ಭ ಕನಿಷ್ಠ 5,002 ಮಂದಿ ಮೃತಪಟ್ಟಿದ್ದು ಇದರಲ್ಲಿ 4,716 ಪ್ರತಿಭಟನಾಕಾರರು, 203 ಮಂದಿ ಸರಕಾರಕ್ಕೆ ಸಂಬಂಧಿಸಿದವರು, 43 ಮಕ್ಕಳು, 40 ಮಂದಿ ನಾಗರಿಕರು ಸೇರಿದ್ದಾರೆ. ಪ್ರತಿಭಟನೆಗೆ ಸಂಬಂಧಿಸಿ 26,800 ಮಂದಿಯನ್ನು ಬಂಧಿಸಲಾಗಿದೆ ಎಂದು ಅಮೆರಿಕಾ ಮೂಲದ `ಹ್ಯೂಮನ್ ರೈಟ್ಸ್ ಆಕ್ಟಿವಿಸ್ಟ್ಸ್ ನ್ಯೂಸ್ ಏಜೆನ್ಸಿ' ಶುಕ್ರವಾರ ಹೇಳಿದೆ.
ಜಪಾನ್ ಸಂಸತ್ತನ್ನು ವಿಸರ್ಜಿಸಿದ ಪ್ರಧಾನಿ ಸನೇ ಟಕೈಚಿ
ಟೋಕಿಯೊ, ಜ.23: ಜಪಾನ್ ಪ್ರಧಾನಿ ಸನೇ ಟಕೈಚಿ ಶುಕ್ರವಾರ ಸಂಸತ್ತಿನ ಕೆಳಮನೆಯನ್ನು ವಿಸರ್ಜಿಸುವ ಮೂಲಕ ಫೆಬ್ರವರಿ 8ರ ಕ್ಷಿಪ್ರ ಚುನಾವಣೆಗೆ ದಾರಿ ಮಾಡಿಕೊಟ್ಟಿದ್ದಾರೆ. 465 ಸದಸ್ಯ ಬಲದ ಸಂಸತ್ತಿನ ಕೆಳಮನೆಯನ್ನು ವಿಸರ್ಜಿಸುವ ಪತ್ರವನ್ನು ಸಂಸತ್ತಿನ ಸ್ಪೀಕರ್ ಓದಿ ಹೇಳಿದಾಗ ಸದಸ್ಯರು ಸ್ವಾಗತಿಸಿದರು. 12 ದಿನಗಳ ಚುನಾವಣಾ ಪ್ರಚಾರ ಕಾರ್ಯಕ್ಕೆ ಮಂಗಳವಾರ ಅಧಿಕೃತ ಚಾಲನೆ ದೊರಕಿದೆ. ದೇಶದ ಮೊದಲ ಮಹಿಳಾ ಪ್ರಧಾನಿಯಾಗಿರುವ ಟಕೈಚಿ ಕೇವಲ ಮೂರು ತಿಂಗಳು ಅಧಿಕಾರದಲ್ಲಿದ್ದು ಕ್ಷಿಪ್ರ ಚುನಾವಣೆ ನಡೆಸುವ ಇಂಗಿತವನ್ನು ಸೋಮವಾರ ವ್ಯಕ್ತಪಡಿಸಿದ್ದರು.
ಜ.26ರಿಂದ ಕಾರ್ಮಿಕ ಸಂಹಿತೆಗಳ ವಿರುದ್ಧ ಜಿಲ್ಲಾದ್ಯಂತ 4 ಕಡೆಗಳಿಂದ ಪಾದಯಾತ್ರೆ
ಮಂಗಳೂರು, ಜ.23: ಪ್ರಮುಖ 29 ಕಾರ್ಮಿಕ ಕಾನೂನುಗಳನ್ನು ರದ್ದುಗೊಳಿಸಿರುವುದರ ವಿರುದ್ಧ ಮತ್ತು ಕಾರ್ಪೊರೇಟ್ ಪರ ರೂಪಿಸಿರುವ ಸಂಹಿತೆಗಳ ವಿರುದ್ಧ, ರೈತ ವಿರೋಧಿ ಬೀಜ ಮಸೂದೆ, ವಿದ್ಯುತ್ ಮಸೂದೆ ಹಾಗೂ ಉದ್ಯೋಗ ಖಾತ್ರಿ ಯೋಜನೆಯ ತಿದ್ದುಪಡಿಯನ್ನು ವಿರೋಧಿಸಿ ಫೆ.12ರಂದು ರೈತ ಕಾರ್ಮಿಕರ ನೇತೃತ್ವ ದಲ್ಲಿ ನಡೆಯಲಿರುವ ಅಖಿಲ ಭಾರತ ಮಹಾಮುಷ್ಕರದ ಪ್ರಚಾರಾರ್ಥವಾಗಿ ಜ.26ರಿಂದ 29ರವರೆಗೆ ದ.ಕ.ಜಿಲ್ಲಾದ್ಯಂತ 4 ಕಡೆಗಳಿಂದ ಪಾದಯಾತ್ರೆ ನಡೆಯಲಿದೆ. ಜ.26ರಂದು ಬೆಳ್ತಂಗಡಿ, ಜ.27ರಂದು ಮೂಡುಬಿದಿರೆ, ಜ.28ರಂದು ಮುಲ್ಕಿಯಿಂದ ಪಾದಯಾತ್ರೆ ಹೊರಡಲಿದೆ. ಜ.29ರಂದು ಬೆಳಗ್ಗೆ 10ಕ್ಕೆ ಈ ಪಾದಯಾತ್ರೆಗಳು ನಗರದ ಅಂಬೇಡ್ಕರ್ ವೃತ್ತದಲ್ಲಿ ಸಮಾಪನಗೊಳ್ಳಲಿದೆ. ಬಳಿಕ ಕ್ಲಾಕ್ ಟವರ್ ಬಳಿ ಬಹಿರಂಗ ಸಭೆ ನಡೆಯಲಿದೆ ಎಂದು ಸಿಐಟಿಯು ದ.ಕ.ಜಿಲ್ಲಾ ಸಮಿತಿಯ ಪ್ರಕಟನೆ ತಿಳಿಸಿದೆ.
ಮಂಗಳೂರು,ಜ.23:ಸಾಮಾಜಿಕ ಜಾಲತಾಣದಲ್ಲಿ ರೀಲ್ಸ್ ಮಾಡುತ್ತಿದ್ದ ನಗರದ ನಾಗುರಿ ನಿವಾಸಿ ಆಶಾ ಪಂಡಿತ್ (63) ಜ.23ರಂದು ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ನಗರದ ನಾಗರಿ ಬಳಿ ಕ್ಯಾಂಟೀನ್ ನಡೆಸುತ್ತಿದ್ದ ಅವರು ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣದಲ್ಲಿ ರೀಲ್ಸ್ ಮಾಡುವ ಮೂಲಕ ಸಕ್ರಿಯರಾಗಿದ್ದರು. ಓರ್ವ ಪುತ್ರ ಮತ್ತು ಓರ್ವ ಪುತ್ರಿಯನ್ನು ಮೃತರು ಅಗಲಿದ್ದಾರೆ.
ಮಂಗಳೂರು: ಇನ್ಸ್ಟಾಗ್ರಾಮ್ ರೀಲ್ಸ್ ಮೂಲಕ ಖ್ಯಾತಿ ಪಡೆದಿದ್ದ ಆಶಾ ಪಂಡಿತ್ ನಿಧನ
ಮಂಗಳೂರು,ಜ.23: ಸಾಮಾಜಿಕ ಜಾಲತಾಣದಲ್ಲಿ ರೀಲ್ಸ್ ಮಾಡುತ್ತಿದ್ದ ನಗರದ ನಾಗುರಿ ನಿವಾಸಿ ಆಶಾ ಪಂಡಿತ್ (63) ಜ.23ರಂದು ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ನಗರದ ನಾಗರಿ ಬಳಿ ಕ್ಯಾಂಟೀನ್ ನಡೆಸುತ್ತಿದ್ದ ಅವರು ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣದಲ್ಲಿ ರೀಲ್ಸ್ ಮಾಡುವ ಮೂಲಕ ಸಕ್ರಿಯರಾಗಿದ್ದರು. ಓರ್ವ ಪುತ್ರ ಮತ್ತು ಓರ್ವ ಪುತ್ರಿಯನ್ನು ಮೃತರು ಅಗಲಿದ್ದಾರೆ.
ಉತ್ತರಪ್ರದೇಶ| ಕಾರು ಹೊಂಡಕ್ಕೆ ಬಿದ್ದು ಸಾಫ್ಟ್ವೇರ್ ಎಂಜಿನಿಯರ್ ಮೃತಪಟ್ಟ ಪ್ರಕರಣ: ಇಬ್ಬರು ಬಿಲ್ಡರ್ಗಳ ಬಂಧನ
ನೊಯ್ಡಾ,ಜ.23: ಉತ್ತರಪ್ರದೇಶದ ನೊಯ್ಡಾದಲ್ಲಿ ನಿರ್ಮಾಣಹಂತದ ಕಟ್ಟಡವೊಂದರ ಸಮೀಪ ನೀರು ತುಂಬಿದ ಹೊಂಡಕ್ಕೆ ಕಾರು ಬಿದ್ದು, 27ವರ್ಷ ವಯಸ್ಸಿನ ಸಾಫ್ಟ್ವೇರ್ ಎಂಜಿನಿಯರ್ ಮೃತಪಟ್ಟ ಘಟನೆಗೆ ಸಂಬಂಧಿಸಿ ನಗರ ಪೊಲೀಸರು ಶುಕ್ರವಾರ ಇನ್ನಿಬ್ಬರು ಬಿಲ್ಡರ್ಗಳನ್ನು ಬಂಧಿಸಿದ್ದಾರೆ. ಎಂಜಿನಿಯರ್ ಯುವರಾಜ್ ಮೆಹ್ತಾ ಅವರು ದಟ್ಟಮಂಜಿನ ನಡುವೆ ಕಾರು ಚಲಾಯಿಸುತ್ತಾ ನೊಯ್ಡಾದಲ್ಲಿರುವ ತನ್ನ ಮನೆಗೆ ಹಿಂತಿರುಗುತ್ತಿದ್ದಾಗ ರಸ್ತೆಯ ಕಡಿದಾದ ತಿರುವಿನಲ್ಲಿ ಈ ದುರಂತ ಸಂಭವಿಸಿತ್ತು. ಬಂಧಿತರನ್ನು ಫರೀದಾಬಾದ್ ನಿವಾಸಿ ರವಿ ಬನ್ಸಾಲ್ ಹಾಗೂ ಗಾಝಿಯಾಬಾದ್ ನಿವಾಸಿ ಸಚಿನ್ ಕರಣ್ವಾಲ್ ಎಂದು ಗುರುತಿಸಲಾಗಿದೆ. ಇವರಿಬ್ಬರೂ ಅವಘಡ ನಡೆದ ಸ್ಥಳ ಜೊತೆ ನಂಟು ಹೊಂದಿರುವ ರಿಯಲ್ ಎಸ್ಟೇಟ್ ಕಂಪೆನಿಯಾದ ಲೋಟಸ್ ಗ್ರೀನ್ ಕನ್ಸ್ಟ್ರಕ್ಷನ್ಸ್ನ ಪದಾಧಿಕಾರಿಗಳಾಗಿದ್ದಾರೆ ಮತ್ತು ಈ ನಿವೇಶನದ ಪಾಲುದಾರಿಕೆ ಹೊಂದಿದ್ದಾರೆಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಭೀಮಾ ಕೋರೆಗಾಂವ್ ಹಿಂಸಾಚಾರ ಪ್ರಕರಣ| ಸಾಗರ್ ಗೋರ್ಖೆ, ರಮೇಶ್ ಘಾಯ್ಚೋರ್ಗೆ ಜಾಮೀನಿನ ಮೇಲೆ ಬಿಡುಗಡೆ
ಮುಂಬೈ,ಜ.23: 2018ರ ಭೀಮಾಕೋರೆಗಾಂವ್ ಹಿಂಸಾಚಾರ ಪ್ರಕರಣದ ಆರೋಪಿಗಳಾದ ಸಾಗರ್ ಗೋರ್ಖೆ ಹಾಗೂ ರಮೇಶ್ ಘಾಯ್ಚೋರ್ ಅವರನ್ನು ಬಾಂಬೆ ಹೈಕೋರ್ಟ್ ಶುಕ್ರವಾರ ಜಾಮೀನಿನ ಮೇಲೆ ಬಿಡುಗಡೆಗೊಳಿಸಿದೆ. ಸಾಂಸ್ಕೃತಿಕ ಸಂಘಟನೆ ‘ಕಬೀರ್ ಕಲಾ ಮಂಚ್’ನ ಕಲಾವಿದರಾದ ಇವರು ದೀರ್ಘಾವಧಿಯ ಜೈಲುವಾಸ ಅನುಭವಿಸಿದ್ದಾರೆಂಬ ನೆಲೆಯಲ್ಲಿ ಅವರನ್ನು ನ್ಯಾಯಮೂರ್ತಿಗಳಾದ ಅಜಯ್ ಗಡ್ಕರಿ ಹಾಗೂ ಶ್ಯಾಮ್ ಚಂದಕ್ ಅವರನ್ನೊಳಗೊಂಡ ವಿಭಾಗೀಯ ಪೀಠವು ಜಾಮೀನಿನ ಮೇಲೆ ಬಿಡುಗಡೆಗೊಳಿಸಿ ಆದೇಶ ಹೊರಡಿಸಿದೆ. ಭೀಮಾ ಕೋರೆಗಾಂವ್ ಯುದ್ಧದ 200ನೇ ವರ್ಷಾಚರಣೆಯ ಅಂಗವಾಗಿ 2018ರ ಜನವರಿ 1ರಂದು ಪುಣೆ ಸಮೀಪ ಎಲ್ಗಾರ್ ಪರಿಷದ್ ಆಯೋಜಿಸಿದ ಸಮಾವೇಶದ ಮರುದಿನ ಭುಗಿಲೆದ್ದ ಹಿಂಸಾಚಾರಕ್ಕೆ ಸಂಬಂಧಿಸಿದ ಪ್ರಕರಣ ಇದಾಗಿದೆ. ಹಿಂಸಾಚಾರದಲ್ಲಿ ಓರ್ವ ಮೃತಪಟ್ಟಿದ್ದು, ಇತರ ಹಲವು ಮಂದಿ ಗಾಯಗೊಂಡಿದ್ದರು. ಎಲ್ಗಾರ್ ಪರಿಷತ್ ಸಂಘಟನೆಯು, ಜಾತಿ ಹಿಂಸಾಚಾರದ ಕಿಡಿಹಚ್ಚಲು ಹಾಗೂ ಕೇಂದ್ರ ಸರಕಾರವನ್ನು ಅಸ್ಥಿರಗೊಳಿಸಲು ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ಹತ್ಯೆಗೆ ಮಾವೋವಾದಿಗಳು ನಡೆಸಿದ ಸಂಚಿನ ಭಾಗವಾಗಿತ್ತು ಎಂದು ಪ್ರಕರಣದ ತನಿಖೆ ನಡೆಸಿದ್ದ ರಾಷ್ಟ್ರೀಯ ತನಿಖಾ ಏಜೆನ್ಸಿ ಆರೋಪಿಸಿದೆ. ಭೀಮಾಕೋರೆಗಾಂವ್ ಹಿಂಸಾಚಾರ ಪ್ರಕರಣದ ಆರೋಪಿಗಳಾದ ಗೋರ್ಖೆ ಹಾಗೂ ಘಾಯ್ಚೋರ್ ಅವರನ್ನು 2020ರ ಸೆಪ್ಟೆಂಬರ್ನಲ್ಲಿ ಬಂಧಿಸಲಾಗಿತ್ತು. ತಮಗೆ ಜಾಮೀನು ಬಿಡುಗಡೆ ನಿರಾಕರಿಸಿದ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ)ಯ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಇವರಿಬ್ಬರು ಸಲ್ಲಿಸಿದ ಅರ್ಜಿಯ ವಿಚಾರಣೆಯನ್ನು ಬಾಂಬೆ ಹೈಕೋರ್ಟ್ ಶುಕ್ರವಾರ ನಡೆಸಿತ್ತು. ತಲಾ 1 ಲಕ್ಷ ರೂ. ವೈಯಕ್ತಿಕ ಮುಚ್ಚಳಿಕೆ ಹಾಗೂ ಅಷ್ಟೇ ಮೊತ್ತದ ಖಾತರಿ ಪಡೆದ ಬಳಿಕ ಗೋರ್ಕೆ ಹಾಗೂ ಘಾಯ್ಚೋರ್ ಅವರನ್ನು ಬಿಡುಗಡೆಗೊಳಿಸುವಂತೆ ಹೈಕೋರ್ಟ್ ಆದೇಶಿಸಿದೆ. ಅಲ್ಲದೆ ಪ್ರತಿ ತಿಂಗಳ ಮೊದಲ ಸೋಮವಾರ ಮುಂಬೈಯಲ್ಲಿರುವ ಎನ್ಐಎ ಕಚೇರಿಗೆ ಹಾಜರಾಗುವಂತೆಯೂ ಆರೋಪಿಗಳಿಗೆ ನಿರ್ದೇಶನ ನೀಡಿದೆ.
ವಾಯುಮಾಲಿನ್ಯ| ಉತ್ಪಾದನಾ ಘಟಕ ಮುಚ್ಚಲು ನಿರ್ಣಯ: ಪಲಿಮಾರು ಗ್ರಾಮಸಭೆ
ಪಡುಬಿದ್ರಿ: ನಂದಿಕೂರಿನಲ್ಲಿ ಕಾರ್ಯಾಚರಿಸುತ್ತಿರುವ ಬಯೋ ಡೀಸೆಲ್, ಪಾಮ್ ಆಯಿಲ್ ಮತ್ತು ಗ್ಲಿಸರಿನ್ ಉತ್ಪಾದನಾ ಘಟಕದಿಂದ ಸುತ್ತಮುತ್ತ ವಾಯುಮಾಲಿನ್ಯ ಉಂಟಾಗುತಿದ್ದು, ಘಟಕವನ್ನು ಮುಚ್ಚವಂತೆ ಶುಕ್ರವಾರ ಪಲಿಮಾರು ಗ್ರಾಮಸಭೆಯಲ್ಲಿ ಗ್ರಾಮಸ್ಥರು ಆಗ್ರಹಿಸಿದ್ದು, ಬಳಿಕ ಘಟಕವನ್ನು ಮುಚ್ಚಲು ನಿರ್ಣಯ ಕೈಗೊಂಡು ಜಿಲ್ಲಾಧಿಕಾರಿಗೆ ವರದಿ ಸಲ್ಲಿಸಲು ತೀರ್ಮಾನಿಸಲಾಯಿತು. ಘಟಕದ ದುರ್ವಾಸನೆಯಿಂದ ಜನರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದ್ದು, ಮಾಲಿನ್ಯ ನಿಯಂತ್ರಣ ಮಂಡಳಿ ನಡಾವಳಿಯಂತೆ 2024ರಲ್ಲಿ ಅಂದಿನ ಜಿಲ್ಲಾಧಿಕಾರಿ ಸಂಸ್ಕರಣಗಾರವನ್ನು ಸ್ಥಗಿತಗೊಳಿಸಿ ಅಗತ್ಯ ಕ್ರಮ ಕೈಗೊಂಡು ತಜ್ಞರ ಶಿಪಾರಸಿನಂತೆ ಪುನರಾರಂಭಕ್ಕೆ ನಿರ್ದೇಶಿಸಿದ್ದರು. ಆದರೆ ತಜ್ಞರ ಸಮಿತಿ ವರದಿ ಬರುವ ಮೊದಲೇ ಘಟಕ ಪುನರಾರಂಭಿಸಿ ಜಿಲ್ಲಾಧಿಕಾರಿ ನಿರ್ದೇಶನವನ್ನು ಉಲ್ಲಂಘಿಸಿದ್ದಾರೆ ಎಂದು ಗ್ರಾಮಸ್ಥರಾದ ದಿನೇಶ್ ಪಲಿಮಾರು, ಲಕ್ಷ್ಮಣ ಎಲ್ ಶೆಟ್ಟಿವಾಲ್, ಸಂದೀಪ್ ಪಲಿಮಾರು ಮತ್ತಿತರರು ದೂರಿದರು. ಗ್ರಾಮಸ್ಥರು ಘಟಕದ ವಿರುದ್ಧ ತುರ್ತು ಕ್ರಮಕ್ಕೆ ಆಗ್ರಹಿಸಿ ತಹಸೀಲ್ದಾರ್ ಆಗಮಿಸುವಂತೆ ಒತ್ತಾಯಿಸಿದರು. ಸಭೆಗೆ ಆಗಮಿಸಿದ ತಹಸೀಲ್ದಾರ್ ಅನಂತಶಂಕರ ಬಿ. ಗ್ರಾಪಂ ನಿರ್ಣಯ ಕೈಗೊಂಡು ವರದಿ ನೀಡುವಂತೆ ಪಿಡಿಒಗೆ ಸೂಚಿಸಿದರು. ಅ ವರದಿಯನ್ನು ಜಿಲ್ಲಾಧಿಕಾರಿಗೆ ನೀಡುವುದಾಗಿ ಭರವಸೆ ನೀಡಿದರು. ಪಲಿಮಾರಿನ ಸರ್ಕಾರಿ ಶಾಲೆಯೊಂದು ಘಟಕದ ಸಿಎಸ್ಆರ್ ಪಡೆದುಕೊಂಡಿರುವ ಬಗ್ಗೆ ಕ್ಷೇತ್ರ ಶಿಕ್ಷಣಾಧಿಕಾರಿ ಯಲ್ಲಮ್ಮ ಅವರನ್ನು ತರಾಟೆಗೆ ತೆಗೆದುಕೊಂಡ ಗ್ರಾಮಸ್ಥರು. ಮುಂದಿನ ದಿನಗಳಲ್ಲಿ ಶಾಲೆಗೆ ಯಾವುದೇ ರೀತಿಯ ಸಹಕಾರ ನೀಡದಿಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಶಾಲೆಯಿಂದ ವರದಿ ಪಡೆದುಕೊಂಡ ಕ್ಷೇತ್ರ ಶಿಕ್ಷಣಾಧಿಕಾರಿಯವರು ಎಸ್ಡಿಎಂಸಿ ಬೇಡಿಕೆಯಂತೆ ಕಂಪೆನಿ ಸಿಎಸ್ಆರ್ ಪಡೆದುಕೊಂಡಿದೆ. ಈ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಪಡುಬಿದ್ರಿ ಚಿಕ್ಕಲ್ಗುಡ್ಡ ರಾಜ್ಯ ಹೆದ್ದಾರಿ ಸಂಪರ್ಕಿಸುವ ಅಡ್ವೆ ಹಾಗೂ ಅವರಾಲು ಮಟ್ಟು ರಸ್ತೆ ತೀರಾ ನಾದುರಸ್ತಿ ಯಲ್ಲಿದ್ದು, ಹಲವು ದಶಕಗಳಿಂದ ಮನವಿ ನೀಡಿದ್ದರೂ, ಅಭಿವೃದ್ಧಿ ಕಾಣದಿರುವ ಬಗ್ಗೆ ಅ ಭಾಗದ ಗ್ರಾಮಸ್ಥರು ಗ್ರಾಮಾಡಳಿತವನ್ನು ತರಾಟೆಗೆ ತೆಗೆದುಕೊಂಡರು. ಈ ವೇಳೆ ಪ್ರತಿಕ್ರಿಯಿಸಿದ ಅಧ್ಯಕ್ಷೆ ಸೌಮ್ಯಲತಾ ಶೆಟ್ಟಿ, ದೊಡ್ಡ ಮೊತ್ತದ ಅನುದಾನ ಅಗತ್ಯವಿರುವ ಕಾರಣ ಶಾಸಕರ ಇಲ್ಲವೇ ಸಂಸದರ ಅನುದಾನ ಪಡೆಯಲು ಮನವಿ ಮಾಡಲಾಗಿದೆ. ಅನುದಾನ ಲಭ್ಯತೆ ನೋಡಿಕೊಂಡು ಕಾಮಗಾರಿ ನಡೆಸುವುದಾಗಿ ಭರವಸೆ ನೀಡಿದರು. ಗ್ರಾಮಸ್ಥರು ನೀಡಿದ ಅರ್ಜಿಯನ್ನು ಶಾಸಕರ ಗಮನಕ್ಕೂ ತರುವುದಾಗಿ ನೋಡೆಲ್ ಅಧಿಕಾರಿ ಯಲ್ಲಮ್ಮ ತಿಳಿಸಿದರು. ಜನರ ವಿರೋಧದ ನಡುವೆಯೂ ಅವರಾರು ಮಟ್ಟುವಿನಲ್ಲಿ ಪ್ರಾರ್ಥನಾ ಮಂದಿರ ನಿರ್ಮಾಣಕ್ಕೆ ಪರವಾನಿಗೆ ನೀಡಿರುವ, ಪಲಿಮಾರು ಆಟೋ ನಿಲ್ದಾಣ ಬಳಿ ಇಂಟರ್ಲಾಕ್ ಅಳವಡಿಕೆಯಲ್ಲಿ ಆಗಿರುವ ದುಂದುವೆಚ್ಚ ಬಗ್ಗೆ ಸಂದೀಪ್ ಪ್ರಶ್ನಿಸಿದರು. ಈ ಬಗ್ಗೆ ಪರಿಶೀಲಿಸಿ ಕ್ರಮವಹಿಸುವುದಾಗಿ ಪಿಡಿಒ ಸತೀಶ್ ಆರ್. ಜಿ. ಸಮಜಾಯಿಷಿ ನೀಡಿದರು. ವಿವಿಧ ಇಲಾಖೆ ಅಧಿಕಾರಿಗಳಾದ ಎಂ. ಹುಸೇನ್, ಫಿಲೋಮಿನಾ, ರೀನಾ, ಅಮೃತಾ, ಸುಧಾಕರ ಶೆಟ್ಟಿ, ಪುಷ್ಪಲತಾ, ಶಿವಪುತ್ರ ಮಾಹಿತಿ ನೀಡಿದರು. ಗ್ರಾಪಂ ಉಪಾಧ್ಯಕ್ಷ ರಾಯೇಶ್ವರ ಪೈ, ಶಿಕ್ಷಣ ಇಲಾಖೆ ರಮಣಿ ಉಪಸ್ಥಿತರಿದ್ದರು. ಗಿರೀಶ್ ವರದಿ ವಾಚಿಸಿದರು.
ಟ್ರಂಪ್ ಅವರ ‘ಶಾಂತಿ ಮಂಡಳಿ’ಯ ಉದ್ದೇಶ ಏನು? ಇದು ಹೇಗೆ ಕಾರ್ಯನಿರ್ವಹಿಸುತ್ತದೆ? ಇದರಲ್ಲಿ ಯಾವೆಲ್ಲ ದೇಶಗಳಿವೆ?
ಸ್ವಿಟ್ಜರ್ಲೆಂಡ್ನ ದಾವೋಸ್ನಲ್ಲಿ ನಡೆದ ವಿಶ್ವ ಆರ್ಥಿಕ ವೇದಿಕೆ (WEF) ಕಾರ್ಯಕ್ರಮದ ಸಂದರ್ಭದಲ್ಲಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೂತನ ‘ಶಾಂತಿ ಮಂಡಳಿ’ (Board of Peace) ಅನ್ನು ಉದ್ಘಾಟಿಸಿದ್ದಾರೆ. ಗಾಝಾದಲ್ಲಿ ಶಾಶ್ವತ ಶಾಂತಿ ಸ್ಥಾಪಿಸುವ ಉದ್ದೇಶದಿಂದ ಈ ಮಂಡಳಿಯನ್ನು ರಚಿಸಲಾಗಿದೆ. ಇಸ್ರೇಲ್ ಹಾಗೂ ಗಾಝಾ ಪಟ್ಟಿಯ ಹಮಾಸ್ ಬಂಡುಕೋರರ ನಡುವಿನ ಕದನ ವಿರಾಮ ಒಪ್ಪಂದದ ಎರಡನೇ ಹಂತದ ಭಾಗವಾಗಿ ಟ್ರಂಪ್ ಈ ‘ಶಾಂತಿ ಮಂಡಳಿ’ಯನ್ನು ಘೋಷಿಸಿದ್ದರು. ಕಳೆದ ಸೆಪ್ಟೆಂಬರ್ನಲ್ಲಿ ಗಾಝಾ ಯುದ್ಧವನ್ನು ಅಂತ್ಯಗೊಳಿಸುವ ಯೋಜನೆಯನ್ನು ಪ್ರಕಟಿಸುವ ವೇಳೆ ಟ್ರಂಪ್ ಮೊದಲ ಬಾರಿಗೆ ಶಾಂತಿ ಮಂಡಳಿಯ ಆಲೋಚನೆಯನ್ನು ಮುಂದಿಟ್ಟಿದ್ದರು. ನಂತರ ಗಾಝಾವನ್ನು ಮೀರಿ ಜಗತ್ತಿನ ಇತರ ಸಂಘರ್ಷ ಪ್ರದೇಶಗಳಿಗೂ ಇದರ ಕಾರ್ಯವ್ಯಾಪ್ತಿಯನ್ನು ವಿಸ್ತರಿಸಲಾಗುವುದು ಎಂದು ಅವರು ಸ್ಪಷ್ಟಪಡಿಸಿದ್ದರು. ಕಳೆದ ವರ್ಷ ನವೆಂಬರ್ನಲ್ಲಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಈ ಶಾಂತಿ ಮಂಡಳಿಗೆ ಅನುಮೋದನೆ ನೀಡಿತ್ತು. ದಾವೋಸ್ ಶೃಂಗಸಭೆಯ ಸಂದರ್ಭ ನಡೆದ ಉನ್ನತ ಮಟ್ಟದ ಸಮಾರಂಭದಲ್ಲಿ ಟ್ರಂಪ್ ವಿವಿಧ ದೇಶಗಳ ಅಧ್ಯಕ್ಷರು, ಪ್ರಧಾನ ಮಂತ್ರಿಗಳು ಮತ್ತು ಹಿರಿಯ ರಾಜತಾಂತ್ರಿಕರಿಗೆ ಆತಿಥ್ಯ ವಹಿಸಿದ್ದರು. ಶ್ವೇತಭವನ ಈ ಸಭೆಯನ್ನು ಹೊಸ ಗುಂಪಿನ ಅಧಿಕೃತ ಉದ್ಘಾಟನೆ ಎಂದು ಬಣ್ಣಿಸಿದೆ. ಆದರೆ ಮಂಡಳಿಗೆ ಸಂಬಂಧಿಸಿದ ಅಧಿಕೃತ ದಾಖಲೆ ಅಥವಾ ಸದಸ್ಯರ ಪೂರ್ಣ ಪಟ್ಟಿಯನ್ನು ಪ್ರಕಟಿಸಲಾಗಿಲ್ಲ. ಈ ಸಂದರ್ಭದಲ್ಲಿ ಟ್ರಂಪ್ ಅವರೊಂದಿಗೆ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಹಾಗೂ ರಾಯಭಾರಿ ಸ್ಟೀವ್ ವಿಟ್ಕಾಫ್ ಹಾಜರಿದ್ದರು. ಇಸ್ರೇಲ್–ಹಮಾಸ್ ಯುದ್ಧವು “ನಿಜವಾಗಿಯೂ ಅಂತ್ಯದ ಹಂತದಲ್ಲಿದೆ” ಎಂದು ಟ್ರಂಪ್ ಹೇಳಿದ್ದು, ಗಾಝಾದಲ್ಲಿ ಉಳಿದಿರುವ ಹಿಂಸಾಚಾರವನ್ನು “ಸಣ್ಣ ಬೆಂಕಿ” ಎಂದು ವರ್ಣಿಸಿ, ಅದನ್ನು ಶೀಘ್ರ ನಂದಿಸಬಹುದು ಎಂದು ಹೇಳಿದ್ದಾರೆ. ಗಾಝಾ, ಶಾಂತಿ ಮಂಡಳಿಗೆ ಒಂದು ‘ಪರೀಕ್ಷಾ ನೆಲೆ’ಯಾಗಿ ಕಾರ್ಯನಿರ್ವಹಿಸಲಿದೆ. ಇದು ಯಶಸ್ವಿಯಾದರೆ ಇದೇ ಮಾದರಿಯನ್ನು ಇತರ ಸಂಘರ್ಷ ಪ್ರದೇಶಗಳಿಗೂ ವಿಸ್ತರಿಸುವ ಸಾಧ್ಯತೆ ಇದೆ. ಜಾಗತಿಕ ಸಂಸ್ಥೆಗಳ ಪರಿಣಾಮಕಾರಿತ್ವದ ಕುರಿತಾಗಿ ದೀರ್ಘಕಾಲದಿಂದಿರುವ ಟೀಕೆಗಳ ನಡುವೆಯೂ, ಮಂಡಳಿ “ವಿಶ್ವಸಂಸ್ಥೆಯೊಂದಿಗೆ ಸಹಕರಿಸಲಿದೆ” ಎಂದು ಟ್ರಂಪ್ ತಿಳಿಸಿದ್ದಾರೆ. ಇತ್ತೀಚಿನ ಬೆಳವಣಿಗೆಗಳು ಈ ಉಪಕ್ರಮವನ್ನು ಇನ್ನಷ್ಟು ತುರ್ತುಗೊಳಿಸಿವೆ. ಕೆಲವು ಹೋರಾಟಗಳು ನಿಧಾನಗೊಂಡಿರುವ ಹಿನ್ನೆಲೆಯಲ್ಲಿ ಇಸ್ರೇಲ್ ಇದೀಗ ಹಲವು ಅರಬ್ ರಾಷ್ಟ್ರಗಳೊಂದಿಗೆ ಹತ್ತಿರವಾಗಿ ಕಾರ್ಯನಿರ್ವಹಿಸುತ್ತಿದೆ. ಇದೇ ವೇಳೆ ಗಾಝಾ, ಲೆಬನಾನ್, ಇರಾಕ್ ಮತ್ತು ಯೆಮೆನ್ನಲ್ಲಿ ಸಶಸ್ತ್ರ ಗುಂಪುಗಳಿಗೆ ಇರಾನ್ ನೀಡುತ್ತಿರುವ ಬೆಂಬಲವನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ. ಅಮೆರಿಕದ ನಿರ್ಬಂಧಗಳು ಇರಾನ್ನ ಆರ್ಥಿಕತೆಯ ಮೇಲೆ ಒತ್ತಡ ಹೇರಿದ್ದರೂ, ದಾವೋಸ್ ಶೃಂಗಸಭೆಯಲ್ಲಿ ಅಮೆರಿಕ ಮತ್ತು ಇರಾನ್ ನಡುವೆ ಯಾವುದೇ ಅಧಿಕೃತ ಮಾತುಕತೆಗಳು ನಡೆದಿಲ್ಲ. ಟ್ರಂಪ್ ಶಾಂತಿ ಮಂಡಳಿಯನ್ನು ರಚಿಸಿದ್ದೇಕೆ? 2025ರ ಕೊನೆಯಲ್ಲಿ ಟ್ರಂಪ್ ಇಸ್ರೇಲ್–ಹಮಾಸ್ ಸಂಘರ್ಷಕ್ಕೆ ಸಂಬಂಧಿಸಿದ ಯುದ್ಧಾನಂತರದ ಆಡಳಿತ ಯೋಜನೆಗೆ ಒತ್ತಾಯಿಸಿದಾಗ ಶಾಂತಿ ಮಂಡಳಿಯ ಹಿಂದಿನ ಕಲ್ಪನೆ ರೂಪುಗೊಂಡಿತು. ದೀರ್ಘಾವಧಿಯ ರಾಜಕೀಯ ಹಾಗೂ ಆರ್ಥಿಕ ಮೇಲ್ವಿಚಾರಣೆ ಇಲ್ಲದ ಕದನ ವಿರಾಮಗಳು ವಿಫಲವಾಗುತ್ತವೆ ಎಂದು ಟ್ರಂಪ್ ವಾದಿಸಿದ್ದಾರೆ. ಆ ಕೊರತೆಯನ್ನು ಈ ಮಂಡಳಿ ತುಂಬುತ್ತದೆ ಎನ್ನುವುದು ಅವರ ಅಭಿಪ್ರಾಯ. ಔಪಚಾರಿಕವಾಗಿ, ಶಾಂತಿ ಮಂಡಳಿಯನ್ನು ಸಂಘರ್ಷಪೀಡಿತ ಪ್ರದೇಶಗಳಲ್ಲಿ ಸ್ಥಿರತೆ ಪುನಃಸ್ಥಾಪಿಸುವುದು, ಸಂಸ್ಥೆಗಳನ್ನು ಮರುನಿರ್ಮಿಸುವುದು ಹಾಗೂ ದೀರ್ಘಕಾಲೀನ ಭದ್ರತೆಯನ್ನು ಖಚಿತಪಡಿಸುವ ಉದ್ದೇಶ ಹೊಂದಿರುವ ಅಂತರರಾಷ್ಟ್ರೀಯ ಸಂಸ್ಥೆಯಾಗಿ ವಿವರಿಸಲಾಗಿದೆ. ದೊಡ್ಡ ಸಭೆಗಳು ಹಾಗೂ ಸಂಕೀರ್ಣ ಅಧಿಕಾರ ರಚನೆಯ ಮೂಲಕ ಕಾರ್ಯನಿರ್ವಹಿಸುವ ವಿಶ್ವಸಂಸ್ಥೆಯಂತಲ್ಲದೆ, ಈ ಮಂಡಳಿಯನ್ನು ಸಣ್ಣ, ಕೇಂದ್ರೀಕೃತ ಮತ್ತು ವೇಗವಾಗಿ ನಿರ್ಧಾರ ಕೈಗೊಳ್ಳುವಂತೆ ವಿನ್ಯಾಸಗೊಳಿಸಲಾಗಿದೆ. ಮಂಡಳಿ ರಾಜತಾಂತ್ರಿಕತೆ, ಆರ್ಥಿಕ ಹೂಡಿಕೆ ಮತ್ತು ಭದ್ರತಾ ಖಾತರಿಗಳನ್ನು ಸಂಯೋಜಿಸುವ ಮಾದರಿಯನ್ನು ಅಳವಡಿಸಿಕೊಂಡಿದೆ. ಇದರ ಆಡಳಿತ ರಚನೆ ಸಾಂಪ್ರದಾಯಿಕ ಅಂತರಸರ್ಕಾರಿ ಸಂಸ್ಥೆಗಳಿಗಿಂತ ಕಾರ್ಪೊರೇಟ್ ಶೈಲಿಗೆ ಹೆಚ್ಚು ಹತ್ತಿರವಾಗಿದೆ. ಅಂದರೆ, ಉಸ್ತುವಾರಿ ಹೊಂದಿರುವ ವ್ಯಕ್ತಿಗೆ ಮಂಡಳಿಯ ಕಾರ್ಯವ್ಯಾಪ್ತಿ ಹಾಗೂ ಸದಸ್ಯತ್ವದ ಕುರಿತು ಹೆಚ್ಚಿನ ಅಧಿಕಾರವಿರುತ್ತದೆ. ಇದರ ಅತ್ಯಂತ ವಿವಾದಾತ್ಮಕ ಅಂಶ ನಾಯಕತ್ವವಾಗಿದೆ. ನಿಯಮಾವಳಿಯ ಪ್ರಕಾರ ಟ್ರಂಪ್ ಸ್ವತಃ ಅಧ್ಯಕ್ಷರಾಗಿ ಸೇವೆ ಸಲ್ಲಿಸಲಿದ್ದು, ಅವರ ಅವಧಿಗೆ ಯಾವುದೇ ನಿಗದಿತ ಅಂತಿಮ ದಿನಾಂಕವಿಲ್ಲ. ಈ ಅಂಶಕ್ಕೆ ಯುರೋಪಿಯನ್ ರಾಜತಾಂತ್ರಿಕರಿಂದ ತೀವ್ರ ಟೀಕೆ ವ್ಯಕ್ತವಾಗಿದೆ. ರಾಷ್ಟ್ರೀಯ ನಾಯಕತ್ವ ಮತ್ತು ಅಂತರರಾಷ್ಟ್ರೀಯ ಅಧಿಕಾರದ ನಡುವಿನ ರೇಖೆ ಮಸುಕಾಗುತ್ತದೆ ಎಂಬುದು ಅವರ ಆಕ್ಷೇಪ. ಆದರೆ ಟ್ರಂಪ್ ಇದನ್ನು “ನಿಯಂತ್ರಣವಲ್ಲ, ನಿರಂತರತೆ” ಎಂದು ಸಮರ್ಥಿಸಿಕೊಂಡಿದ್ದು, ನಾಯಕತ್ವವು ಪದೇಪದೇ ಬದಲಾಗುವುದರಿಂದ ಶಾಂತಿ ಪ್ರಯತ್ನಗಳು ವಿಫಲವಾಗುತ್ತವೆ ಎಂದು ವಾದಿಸಿದ್ದಾರೆ. ಈ ವ್ಯವಸ್ಥೆಯ ಮೂಲಕ ಮಂಡಳಿ ಸರ್ಕಾರಗಳು, ಹಣಕಾಸು ಸಂಸ್ಥೆಗಳು ಮತ್ತು ಖಾಸಗಿ ಹೂಡಿಕೆದಾರರೊಂದಿಗೆ ನೇರವಾಗಿ ಸಮನ್ವಯ ಸಾಧಿಸಬಹುದು. ಇದರಿಂದ ಪುನರ್ನಿರ್ಮಾಣಕ್ಕೆ ಹಣ ಹಂಚಿಕೆ, ಮೂಲಸೌಕರ್ಯ ಅಭಿವೃದ್ಧಿ ಮತ್ತು ಅಧಿಕಾರ ವರ್ಗಾವಣೆಯ ಕುರಿತ ನಿರ್ಧಾರಗಳನ್ನು ತೆಗೆದುಕೊಳ್ಳುವ ಶಕ್ತಿ ಮಂಡಳಿಗೆ ಲಭ್ಯವಾಗುತ್ತದೆ. ಶಾಂತಿ ಮಂಡಳಿಯಲ್ಲಿ ಯಾರು ಸದಸ್ಯರು? ಆರಂಭಿಕ ಹಂತದಲ್ಲಿ ಶಾಂತಿ ಮಂಡಳಿಯಲ್ಲಿ ರಾಜಕೀಯ ನಾಯಕರು, ರಾಜತಾಂತ್ರಿಕರು ಮತ್ತು ರಾಜ್ಯ ಪ್ರತಿನಿಧಿಗಳು ಸೇರಿದ್ದಾರೆ. ಮಂಡಳಿಯ ಅಧ್ಯಕ್ಷತೆಯನ್ನು ಟ್ರಂಪ್ ವಹಿಸಿದ್ದು, ಸ್ಥಾಪಕ ಕಾರ್ಯನಿರ್ವಾಹಕ ಸದಸ್ಯರನ್ನು ಅವರೇ ಘೋಷಿಸಿದ್ದಾರೆ. ಯುಎಸ್ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಹಾಗೂ ಟ್ರಂಪ್ನ ಆಪ್ತ ಮಿತ್ರ ಹಾಗೂ ಅಂತರರಾಷ್ಟ್ರೀಯ ಮಾತುಕತೆಯಲ್ಲಿ ತೊಡಗಿಸಿಕೊಂಡಿರುವ ಸ್ಟೀವ್ ವಿಟ್ಕಾಫ್ ಪ್ರಮುಖರು. ಟ್ರಂಪ್ ಏಳು ಸದಸ್ಯರ ಕಾರ್ಯನಿರ್ವಾಹಕ ಮಂಡಳಿಯನ್ನು ನೇಮಕ ಮಾಡಿದ್ದಾರೆ. ಅವರು: ಮಾರ್ಕೊ ರೂಬಿಯೊ – ಯುಎಸ್ ವಿದೇಶಾಂಗ ಕಾರ್ಯದರ್ಶಿ ಜರೆಡ್ ಕುಶ್ನರ್ – ಮಧ್ಯಪ್ರಾಚ್ಯ ಪ್ರಾದೇಶಿಕ ಏಕೀಕರಣ ತಂತ್ರಜ್ಞ ಸ್ಟೀವ್ ವಿಟ್ಕಾಫ್ – ಮಧ್ಯಪ್ರಾಚ್ಯಕ್ಕೆ ಯುಎಸ್ ವಿಶೇಷ ರಾಯಭಾರಿ ಟೋನಿ ಬ್ಲೇರ್ – ಬ್ರಿಟನ್ ಮಾಜಿ ಪ್ರಧಾನಿ ಅಜಯ್ ಬಂಗಾ – ವಿಶ್ವಬ್ಯಾಂಕ್ ಅಧ್ಯಕ್ಷ ಮಾರ್ಕ್ ರೋವನ್ – ಅಪೊಲೊ ಗ್ಲೋಬಲ್ ಮ್ಯಾನೇಜ್ಮೆಂಟ್ ಸಿಇಒ ನಿಕೋಲೇ ಮ್ಲಾಡೆನೋವ್ – ಗಾಝಾದ ಉನ್ನತ ಪ್ರತಿನಿಧಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಮಂಡಳಿ ವ್ಯಕ್ತಿಗಳಿಗಿಂತ ದೇಶಗಳ ಭಾಗವಹಿಸುವಿಕೆಗೆ ಒತ್ತು ನೀಡಿದೆ. ಸೌದಿ ಅರೇಬಿಯಾ, ಯುಎಇ, ಈಜಿಪ್ಟ್, ಖತರ್, ಜೋರ್ಡಾನ್, ಬಹ್ರೇನ್, ಟರ್ಕಿ, ಪಾಕಿಸ್ತಾನ ಮತ್ತು ಇಂಡೋನೇಷ್ಯಾ ಮೊದಲಾಗಿ ತಮ್ಮ ಭಾಗವಹಿಸುವಿಕೆಯನ್ನು ದೃಢಪಡಿಸಿದ ದೇಶಗಳಾಗಿವೆ. ಮೊರಾಕೊ, ಕೊಸೊವೊ, ಹಂಗೇರಿ, ವಿಯೆಟ್ನಾಂ, ಅರ್ಮೇನಿಯಾ, ಅಜೆರ್ಬೈಜಾನ್, ಉಜ್ಬೇಕಿಸ್ತಾನ್, ಕಝಾಕಿಸ್ತಾನ್ ಮತ್ತು ಪರಾಗ್ವೆಯಂತಹ ದೇಶಗಳು ಆಹ್ವಾನವನ್ನು ಸ್ವೀಕರಿಸಿವೆ ಅಥವಾ ಬೆಂಬಲ ಸೂಚಿಸಿವೆ. ದೃಢೀಕರಿಸಿದ ಸದಸ್ಯರಲ್ಲಿ ಇಸ್ರೇಲ್, ಅರ್ಜೆಂಟೀನಾ, ಸೌದಿ ಅರೇಬಿಯಾ, ಈಜಿಪ್ಟ್, ಯುಎಇ, ಪಾಕಿಸ್ತಾನ, ಟರ್ಕಿ, ಕತಾರ್, ಹಂಗೇರಿ, ವಿಯೆಟ್ನಾಂ, ಕಝಾಕಿಸ್ತಾನ್, ಮೊರಾಕೊ, ಬೆಲಾರಸ್, ಅಝರ್ಬೈಜಾನ್, ಬಹ್ರೇನ್ ಮತ್ತು ಉಝ್ಬೆಕಿಸ್ತಾನ್ ಸೇರಿವೆ. ಗಮನಾರ್ಹ ಗೈರುಹಾಜರಿ: ಭಾರತ (ಆಹ್ವಾನಿತವಾಗಿದ್ದರೂ ದೂರ ಉಳಿದಿದೆ), ಫ್ರಾನ್ಸ್, ಜರ್ಮನಿ, ಸ್ವೀಡನ್ ಮತ್ತು ನಾರ್ವೆ. ಕೆನಡಾಕ್ಕೆ ನೀಡಿದ್ದ ಆಹ್ವಾನ ಹಿಂಪಡೆದ ಟ್ರಂಪ್ ಹೊಸದಾಗಿ ರಚಿಸಲಾದ ಶಾಂತಿ ಮಂಡಳಿಗೆ ಸೇರ್ಪಡೆಯಾಗಲು ಕೆನಡಾಕ್ಕೆ ನೀಡಿದ್ದ ಆಹ್ವಾನವನ್ನು ಟ್ರಂಪ್ ಹಿಂತೆಗೆದುಕೊಂಡಿದ್ದಾರೆ. “ಈ ಪತ್ರದ ಮೂಲಕ ಕೆನಡಾ ಸೇರ್ಪಡೆಗೆ ನೀಡಿದ್ದ ಆಹ್ವಾನವನ್ನು ಶಾಂತಿ ಮಂಡಳಿ ಹಿಂತೆಗೆದುಕೊಳ್ಳುತ್ತಿದೆ” ಎಂದು ಟ್ರಂಪ್ ಟ್ರೂತ್ ಸೋಷಿಯಲ್ನಲ್ಲಿ ಪ್ರಧಾನಿ ಮಾರ್ಕ್ ಕಾರ್ನಿ ಅವರಿಗೆ ಉದ್ದೇಶಿಸಿ ಬರೆದಿದ್ದಾರೆ. ಮಂಡಳಿಗೆ ಸೇರ್ಪಡೆಯಾಗಲು ಅಗತ್ಯವಿರುವ 1 ಬಿಲಿಯನ್ ಡಾಲರ್ ಸದಸ್ಯತ್ವ ಶುಲ್ಕವನ್ನು ಕೆನಡಾ ಪಾವತಿಸುವುದಿಲ್ಲ ಎಂದು ತಿಳಿಸಿದ್ದ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎನ್ನಲಾಗಿದೆ. ಆದರೆ ಟ್ರಂಪ್ ತಮ್ಮ ಪೋಸ್ಟ್ನಲ್ಲಿ ಆಹ್ವಾನ ಹಿಂಪಡೆಯಲು ಕಾರಣವನ್ನು ಸ್ಪಷ್ಟಪಡಿಸಿಲ್ಲ. ಟ್ರಂಪ್ ಶಾಂತಿ ಮಂಡಳಿಗೆ ಸೇರುವುದಿಲ್ಲ: ಸ್ಪೇನ್ ಜಾಗತಿಕ ಸಂಘರ್ಷಗಳನ್ನು ನಿಭಾಯಿಸಲು ಟ್ರಂಪ್ ಆರಂಭಿಸಿದ ಶಾಂತಿ ಮಂಡಳಿಯಲ್ಲಿ ಸ್ಪೇನ್ ಭಾಗವಹಿಸುವುದಿಲ್ಲ ಎಂದು ಪ್ರಧಾನಿ ಪೆಡ್ರೊ ಸ್ಯಾಂಚೆಜ್ ತಿಳಿಸಿದ್ದಾರೆ. ಬಹುಪಕ್ಷೀಯತೆ ಹಾಗೂ ವಿಶ್ವಸಂಸ್ಥಾ ವ್ಯವಸ್ಥೆಯ ಮೇಲಿನ ನಂಬಿಕೆಗೆ ಅನುಗುಣವಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ. ಗುರುವಾರ ಬ್ರಸೆಲ್ಸ್ನಲ್ಲಿ ನಡೆದ ಯುರೋಪಿಯನ್ ಯೂನಿಯನ್ ಶೃಂಗಸಭೆಯ ನಂತರ ಮಾತನಾಡಿದ ಸ್ಯಾಂಚೆಜ್, “ನಾವು ಆಹ್ವಾನವನ್ನು ಮೆಚ್ಚುತ್ತೇವೆ, ಆದರೆ ಅದನ್ನು ನಿರಾಕರಿಸುತ್ತೇವೆ” ಎಂದು ಸ್ಪಷ್ಟಪಡಿಸಿದರು.
ಸಿದ್ದಾಪುರ ಏತ ನೀರಾವರಿ ಯೋಜನೆಗೆ ವಿರೋಧವಿಲ್ಲ: ಗೋಪಾಲ ಪೂಜಾರಿ
ಕುಂದಾಪುರ, ಜ.23: ಸಿದ್ದಾಪುರ ಏತ ನೀರಾವರಿ ಯೋಜನೆಗೆ ನನ್ನ ವಿರೋಧವಿಲ್ಲ ಎಂಬುದು ಈ ಹಿಂದೆ ಸ್ಪಷ್ಟಪಡಿ ಸಲಾಗಿದೆ. ವಾರಾಹಿ ಯೋಜನೆ ಮೂಲ ಆಶಯಕ್ಕೆ ಧಕ್ಕೆಯಾಗುವಂತೆ ಕಾಮಗಾರಿ ನಡೆದರೆ ವಾರಾಹಿ ನದಿಪಾತ್ರದ ಜನರಿಗೆ ನೀರಿಲ್ಲದಾಗುತ್ತದೆ. ತಜ್ಞರು ಸ್ಥಳ ಪರಿಶೀಲನೆ ಮಾಡಿ ಎಲ್ಲರಿಗೂ ನೀರು ಸಿಗಬೇಕೆನ್ನುವುದೇ ಕಳಕಳಿ. ಸ್ಥಳಿಯಾಡಳಿತ ಚುನಾವಣೆಯಲ್ಲಿ ಕಾಂಗ್ರೆಸನ್ನು ಮುಗಿಸಲು ಬಿಜೆಪಿ ಈ ಬಗ್ಗೆ ಅಪಪ್ರಚಾರ ಮಾಡುತ್ತಿದೆಂದು ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ ಆರೋಪಿಸಿದ್ದಾರೆ. ಶುಕ್ರವಾರ ಕರೆದ ಸುದ್ದಿಗೋಷ್ಟಿಯಲ್ಲಿ ಅವರು, ಸಿದ್ದಾಪುರದಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ಬೈಂದೂರು ಶಾಸಕರು ಮಾಡಿದ ಆರೋಪಗಳಿಗೆ ಉತ್ತರ ನೀಡಿದರು. ಹಲವಾರು ಅಣೆಕಟ್ಟು ತಂದು ಹಾಕಿದ್ದೇನೆ ಎಂದು ಶಾಸಕರು ಹೇಳಿದ್ದು, ಅದು ಯಾವುದು ಎಂದು ಅವರೇ ಪಟ್ಟಿಕೊಡಬೇಕು. ತಾನು ಶಾಸಕನಾಗಿದ್ದಾಗ ಸುಬ್ಬರಾಡಿ, ರಾಜಾಡಿ, ಆಜ್ರಿ, ಹೆಮ್ಮಾಡಿಕಟ್ಟು, ಶಾರದಾಪುರ, ಬಿಜೂರು ಅಣೆಕಟ್ಟಿಗೆ ಅನುದಾನ ಮಂಜೂರಾಗಿದ್ದು ಸೌಕೂರು ಏತನೀರಾವರಿ ಡಿಪಿಆರ್ ಆಗಿತ್ತು. ಈಗಿನ ಶಾಸಕರು ಮಾಡಿದ್ದು ಯಾವುದು ಎಂದು ಹೇಳಲಿ ಎಂದು ಸವಾಲು ಹಾಕಿದರು. ಈಗ ಸಿದ್ದಾಪುರದ ಶೇ.70 ಭಾಗಕ್ಕೆ ವಾರಾಹಿ ನೀರಿಲ್ಲ. ಬಲದಂಡೆ ಯೋಜನೆ, ಶಂಕರನಾರಾಯಣ, ಅಂಪಾರು ಭಾಗದ ನೀರಿಗೂ ಸಮಸ್ಯೆ ಆಗುತ್ತದೆ. ಹೊಳೆಶಂಕರನಾರಾಯಣ ದೇವಸ್ಥಾನ ಸಹಿತ ಅಣೆಕಟ್ಟಿನ ಕೆಳಭಾಗದ ರೈತರಿಗೆ ಸಮಸ್ಯೆ ಆಗಬಾರದು ಎನ್ನುವುದು ನನ್ನ ಉದ್ದೇಶ. ಹಾಗಾಗಿ 2023ರಲ್ಲಿ ನೀಡಿದ್ದ ಪತ್ರವನ್ನು 2025ರಲ್ಲಿ ನೆನಪಿಸಿದ್ದೆ. ಅದಕ್ಕಾಗಿ ತಜ್ಞರ ಸಮಿತಿ ನೇಮಿಸಿದ್ದು ಅದರಲ್ಲಿ ಸುರತ್ಕಲ್ ಎನ್ಐಟಿಕೆಯವರನ್ನೂ ಸೇರಿಸಬೇಕು ಎನ್ನುವ ಒತ್ತಾಯವು ನನ್ನದಿದೆ ಎಂದರು. ರೈತ ಮುಖಂಡ ಬಲಾಡಿ ಸಂತೋಷ್ ಕುಮಾರ್ ಶೆಟ್ಟಿ ಮಾತನಾಡಿ, ವಾರಾಹಿ ಮೂಲಯೋಜನೆಯಂತೆ 38 ಸಾವಿರ ಎಕರೆಗೆ ನೀರು ಹೋಗ ಬೇಕು. ಈಗ ಶೇ.30 ಕಾಮಗಾರಿ ಮಾತ್ರ ನಡೆದಿದೆ. ಹೊಸ ಕಾಮಗಾರಿಗಳು ನಡೆದರೆ ಮೂಲಯೋಜನೆಯಂತೆ ನೀರು ಸಿಗುವುದಿಲ್ಲ. ಈಗ ಅಣೆಕಟ್ಟಿಗೆ ಅಪಾಯ ಆಗುವಂತೆ ಕಲ್ಲು ಸ್ಫೋಟ ನಡೆಯುತ್ತಿದೆ. ಸೌಕೂರು ಏತ ನೀರಾವರಿಯಿಂದ 8 ಗ್ರಾಮಗಳಿಗೆ ನೀರು ಹೋಗುತ್ತದೆ. ಈಗ ಆದ ವಾರಾಹಿ ಕಾಮಗಾರಿಯಿಂದ ಕೋಟೇಶ್ವರ ವರೆಗೆ ನೀರು ಹೋಗುತ್ತದೆ ಎಂದು ತಿಳಿಸಿದರು. ವಾರಾಹಿ ಮೂಲಯೋಜನೆಯಂತೆ ಎಲ್ಲರಿಗೂ ನೀರು ಕೊಡಿ ಎನ್ನುವ ಸಲುವಾಗಿ ಜ.25ರಂದು ಕಂಡ್ಲೂರಿನಲ್ಲಿ ಬೆಳಗ್ಗೆ ವಾರಾಹಿ ನದಿ ನೀರು ಬಳಕೆದಾರರ ಜನಾಂದೋಲನ ಸಭೆ ಆಯೋಜಿಸಲಾಗಿದೆ. ಹೋರಿಯಬ್ಬೆ ಡ್ಯಾಂನ ಕೆಳ ಭಾಗದ ಮಚ್ಚಟ್ಟು, ಅಮಾಸೆಬೈಲು, ರಟ್ಟಾಡಿ, ಹಾಲಾಡಿ, 76 ಹಾಲಾಡಿ, ಹಾರ್ದಳ್ಳಿ ಮಂಡಳ್ಳಿ, ಮೊಳಹಳ್ಳಿ, ಜಪ್ತಿ, ಬಳ್ಕೂರು, ಬಸ್ರೂರು, ಹಟ್ಟಿಕುದ್ರು, ಆನಗಳ್ಳಿ, ಗುಲ್ವಾಡಿ, ಸಿದ್ದಾಪುರ, ಉಳ್ಳೂರು 74, ಶಂಕರನಾರಾಯಣ, ಕುಳ್ಳಂಜೆ, ಅಂಪಾರು, ಹಳ್ನಾಡು, ಕಾವ್ರಾಡಿಯ ರೈತರಿಗೆ ಸಮಸ್ಯೆ ಆಗಲಿದೆ. ಸಿದ್ದಾಪುರಕ್ಕೆ ಏತ ನೀರಾವರಿ ಬೇಕು ಎನ್ನುವುದು ನಮ್ಮ ಆಗ್ರಹ ಎಂದರು. ಕಾಂಗ್ರೆಸ್ ಮುಖಂಡರಾದ ಅಶೋಕ್ ಪೂಜಾರಿ ಬೀಜಾಡಿ, ಅರವಿಂದ ಪೂಜಾರಿ ಬೈಂದೂರು, ವಿಜಯ ಪುತ್ರನ್, ಸುದೇಶ್ ಶೆಟ್ಟಿ ಗುಲ್ವಾಡಿ, ಶ್ರೀನಿವಾಸ ಸೌಡ, ಅಕ್ಷಯ್ ಶೆಟ್ಟಿ, ಯೋಗೇಶ್ ಪೂಜಾರಿ ಕೋಡಿ ಮೊದಲಾದವರು ಉಪಸ್ಥಿತರಿದ್ದರು.
ಪಿಎಸ್ಜಿಐಸಿ, ನಾಬಾರ್ಡ್ ಉದ್ಯೋಗಿಗಳ ವೇತನ ಏರಿಕೆ, ಪಿಂಚಣಿ ಪರಿಷ್ಕರಣೆಗೆ ಕೇಂದ್ರದ ಅಸ್ತು
ಹೊಸದಿಲ್ಲಿ, ಜ.23: ದೀರ್ಘಾವಧಿಯಿಂದ ಬಾಕಿಯಿರುವ ಸಾರ್ವಜನಿಕ ರಂಗದ ಜನರಲ್ ಇನ್ಶೂರೆನ್ಸ್ ಕಂಪೆನಿಗಳು (ಪಿಎಸ್ಜಿಐಸಿ) ಹಾಗೂ ಕೃಷಿ,ಗ್ರಾಮೀಣ ಅಭಿವೃದ್ಧಿಗಾಗಿನ ರಾಷ್ಟ್ರೀಯ ಬ್ಯಾಂಕ್ (ನಾಬಾರ್ಡ್) ಉದ್ಯೋಗಿಗಳ ವೇತನ ಪರಿಷ್ಕರಣೆಗೆ ಕೇಂದ್ರ ಸರಕಾರ ಶುಕ್ರವಾರ ಅನುಮೋದನೆ ನೀಡಿದೆ. ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಹಾಗೂ ನಾಬಾರ್ಡ್ನ ನಿವೃತ್ತ ಉದ್ಯೋಗಿಗಳ ಪಿಂಚಣಿ ಪರಿಷ್ಕರಣೆಯನ್ನು ಮಂಜೂರು ಮಾಡಿದೆ. ಸುಮಾರು 46,332 ಉದ್ಯೋಗಿಗಳು, 23,570 ಪಿಂಚಣಿದಾರರು ಹಾಗೂ 23,260 ಕುಟುಂಬ ಪಿಂಚಣಿದಾರರು ಇದರ ಪ್ರಯೋಜನ ಪಡೆಯಲಿದ್ದಾರೆ. ಈ ನಡೆಯು ಸೇವಾವಧಿಯಲ್ಲಿ ಪಿಂಚಣಿದಾರರ ಸುದೀರ್ಘ ಹಾಗೂ ಸಮರ್ಪಿತ ಸೇವೆಯನ್ನು ಪರಿಗಣನೆಗೆ ತೆಗೆದುಕೊಂಡು ಅವರ ಆರ್ಥಿಕ ಕ್ಷೇಮ ಹಾಗೂ ಸಾಮಾಜಿಕ ಭದ್ರತೆಗೆ ರಾಜ್ಯ ಸರಕಾರದ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ ಎಂದು ಅಧಿಕೃತ ಹೇಳಿಕೆಯೊಂದು ತಿಳಿಸಿದೆ. ಪಿಎಸ್ಜಿಐಸಿಗಳ ವೇತನ ಹಾಗೂ ಪಿಂಚಣಿ ಪರಿಷ್ಕರಣೆಗೆ ಅನುಮೋದನೆ 2022ರ ಆಗಸ್ಟ್ 1ರಿಂದ ಅನ್ವಯವಾಗುವಂತೆ ಸಾರ್ವಜನಿಕರಂಗದ ವಿಮಾ ಕಂಪೆನಿಗಳ ಉದ್ಯೋಗಿಗಳ ವೇತನ ಪರಿಷ್ಕರಣೆಯಾಗಲಿದೆ. ಇದರಿಂದಾಗಿ ಮೂಲವೇತನ, ತುಟ್ಟಿಭತ್ತೆಯಲ್ಲಿ ಶೇ.14 ಹೆಚ್ಚಳ ಸೇರಿದಂತೆ ಒಟ್ಟಾರೆ ವೇತನದಲ್ಲಿ 12.41 ಶೇ.ಏರಿಕೆಯಾಗಲಿದೆ. 43,247 ಉದ್ಯೋಗಿಗಳು ಪ್ರಯೋಜನ ಪಡೆಯಲಿದ್ದಾರೆ. 2010ರ ಎಪ್ರಿಲ್ 1ರ ಆನಂತರ ಸೇರ್ಪಡೆಗೊಂಡ ಸಿಬ್ಬಂದಿಗಾಗಿ ರಾಷ್ಟ್ರೀಯ ಪಿಂಚಣಿ ವ್ಯವಸ್ಥೆಗೆ ಉದ್ಯೋಗದಾತರ ಕೊಡುಗೆಯನ್ನು ಶೇ.10ರಿಂದ ಶೇ.14ಕ್ಕೆ ಏರಿಸಲಾಗಿದೆ. ಕುಟುಂಬ ಪಿಂಚಣಿಯನ್ನು ಏಕರೂಪವಾಗಿ ಶೇ.30ರಷ್ಟು ಪರಿಷ್ಕರಿಸಲಾಗಿದೆ. ಇದರಿಂದಾಗಿ 14,615 ಮಂದಿ ಕುಟುಂಬ ಪಿಂಚಣಿದಾರರು ಪಡೆಯಲಿದ್ದಾರೆ. ಕೇಂದ್ರದ ಬೊಕ್ಕಸಕ್ಕೆ 8,170 ಕೋಟಿ ರೂ. ಹೊರೆ ಬೀಳಲಿದೆ. ನಾಬಾರ್ಡ್ ಉದ್ಯೋಗಿಗಳ ವೇತನ, ಭತ್ತೆಯಲ್ಲಿ ಶೇ.20 ಹೆಚ್ಚಳ ನಾಬಾರ್ಡ್ನ ಗ್ರೂಪ್ ಎ, ಬಿ ಮತ್ತು ಸಿ ಉದ್ಯೋಗಿಗಳ ವೇತನ ಹಾಗೂ ಭತ್ತೆಗಳಲ್ಲಿ ಶೇ.20ರಷ್ಟು ಏರಿಕೆಯನ್ನು ಮಾಡಲಾಗಿದ್ದು, 3800 ಮಂದಿ ಸೇವಾ ನಿರತರು ಹಾಗೂ ಮಾಜಿ ಸಿಬ್ಬಂದಿಗೆ ಪ್ರಯೋಜನವಾಗಲಿದೆ. ಪಿಂಚಣಿ ಪರಿಷ್ಕರಣೆಯಿಂದಾಗಿ ನಿವೃತ್ತರ ಮೂಲ ಪಿಂಚಣಿ ಹಾಗೂ ಕುಟುಂಬ ಪಿಂಚಣಿಯು ಮಾಜಿ ಆರ್ಬಿಐ-ನಬಾರ್ಡ್ ನಿವೃತ್ತರಿಗೆ ಸರಿಸಮವಾಗಲಿದೆ. ಭಾರತೀಯ ರಿಸರ್ವ್ ಬ್ಯಾಂಕ್ನ ನಿವೃತ್ತರ ಪಿಂಚಣಿ ಹಾಗೂ ಕುಟುಂಬ ಪಿಂಚಣಿಯನ್ನು ಪರಿಷ್ಕರಿಸಲಾಗಿದೆ. ಕುಟುಂಬ ಪಿಂಚಣಿಯನ್ನು ಮೂಲ ಪಿಂಚಣಿ ಹಾಗೂ ತುಟ್ಟಿಭತ್ತೆ ಪರಿಹಾರದ ಮೇಲಿನ ಶೇ.10ರಷ್ಟು ಏರಿಕೆ ಮಾಡಲಾಗಿದೆ. 2022ರ ನವೆಂಬರ್ 1ರಿಂದ ಅನ್ವಯವಾಗುವಂತೆ ಇದು ಜಾರಿಗೆ ಬರಲಿದೆ. 22,580 ಪಿಂಚಣಿದಾರರು ಹಾಗೂ 8189 ಕುಟುಂಬ ಪಿಂಚಣಿದಾರರು ಸೇರಿದಂತೆ ಒಟ್ಟು 30,769 ಮಂದಿ ಪ್ರಯೋಜನ ಪಡೆಯಲಿದ್ದಾರೆ. ಎಲ್ಲರನ್ನೂ ಒಳಗೊಂಡ ಹಾಗೂ ಸುಸ್ಥಿರವಾದ ಆರ್ಥಿಕ ಬೆಳವಣಿಗೆಗೆ ಆಧಾರವಾಗಿರುವ ಸಂಸ್ಥೆಗಳನ್ನು ಬಲಪಡಿಸುವ ಬದ್ಧತೆಯನ್ನು ತಾನು ಹೊಂದಿರುವುದಾಗಿ ಕೇಂದ್ರ ಸರಕಾರದ ಹೇಳಿಕೆ ತಿಳಿಸಿದೆ.
ಡಾಲರ್ ಎದುರು ರೂಪಾಯಿ ಮೌಲ್ಯ ಸಾರ್ವಕಾಲಿಕ ಕುಸಿತ
ಮುಂಬೈ,ಜ.23: ಅಮೆರಿಕನ್ ಡಾಲರ್ ಎದುರು ರೂಪಾಯಿ ಮೌಲ್ಯವು ಭಾರೀ ಪ್ರಮಾಣದಲ್ಲಿ ಕುಸಿಯುತ್ತಾ ಬರುತ್ತಿದ್ದು, ಶುಕ್ರವಾರ 91.99 ರೂ.ಗೆ ಇಳಿದಿದ್ದು, ಸಾರ್ವಕಾಲಿಕವಾಗಿ ಅತ್ಯಧಿಕ ಕುಸಿತವನ್ನು ಕಂಡಿದೆ. ದಿನದ ವಹಿವಾಟಿನ ಅಂತ್ಯದ ವೇಳೆಗೆ 91.88 ರೂ.ಗೆ ಸ್ಥಿರಗೊಂಡಿದೆ. ವಿದೇಶಿ ಹೂಡಿಕೆದಾರರು ಅತ್ಯಧಿಕ ಪ್ರಮಾಣದಲ್ಲಿ ಶೇರುಗಳನ್ನು ಮಾರಾಟ ಮಾಡುತ್ತಿರುವುದು ಹಾಗೂ ಭಾರತ-ಅಮೆರಿಕ ವ್ಯಾಪಾರ ಒಪ್ಪಂದ ಏರ್ಪಡುವ ಕುರಿತ ಅನಿಶ್ಚಿತತೆಯು ರೂಪಾಯಿ ಮೌಲ್ಯ ಕುಸಿತಕ್ಕೆ ಕಾರಣವೆನ್ನಲಾಗಿದೆ. ಗುರುವಾರದಂದು ಅಮೆರಿಕ ಡಾಲರ್ ಎದುರು ರೂಪಾಯಿ ಮೌಲ್ಯವು 7 ಪೈಸೆಯಷ್ಟು ಕುಸಿತವನ್ನು ಕಂಡಿದ್ದು, 91.58 ರೂ. ಆಗಿತ್ತು. ಜನವರಿ 21ರಂದು ರೂಪಾಯಿ ಮೌಲ್ಯವು 91.65 ಆಗಿದ್ದು, ಇದು ಈವರೆಗಿನ ಸಾರ್ವಕಾಲಿಕ ಗರಿಷ್ಠ ಕುಸಿತವಾಗಿತ್ತು.
Ukraine Peace Plan: ಅರಬ್ ನೆಲದಲ್ಲಿ ರಷ್ಯಾ ಮತ್ತು ಉಕ್ರೇನ್ ಯುದ್ಧ ನಿಲ್ಲಿಸಲು ಮಹತ್ವದ ಮಾತುಕತೆ
ರಷ್ಯಾ ಮತ್ತು ಉಕ್ರೇನ್ ನಡುವೆ ಯುದ್ಧ ಆರಂಭವಾಗಿ 4 ವರ್ಷ ಮುಗಿಯುತ್ತಿದೆ, ಈ ಇಬ್ಬರ ಕದನ ಭಾರಿ ದೊಡ್ಡ ಅಲ್ಲೋಲ ಕಲ್ಲೋಲ ಸೃಷ್ಟಿಸಿ ಹಲವು ವಿನಾಶಕ್ಕೆ ಕೂಡ ಕಾರಣವಾಗಿದೆ. ಹೀಗಾಗಿಯೇ ರಷ್ಯಾ ಮತ್ತು ಉಕ್ರೇನ್ ಯುದ್ಧ ಹೇಗಾದರೂ ಮಾಡಿ ನಿಲ್ಲಿಸಬೇಕು ಎಂಬ ಹಠಕ್ಕೆ ಬಿದ್ದಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಎಲ್ಲಾ ರೀತಿಯ ಪ್ರಯತ್ನ ಮಾಡುತ್ತಿದ್ದರು.
ಜ.25ರಂದು ಎಂ.ಎಂ.ಹೆಗ್ಡೆ ಪ್ರಶಸ್ತಿ ಪ್ರದಾನ
ಉಡುಪಿ, ಜ.23: ಯಕ್ಷಗಾನ ಕೇಂದ್ರ ಇಂದ್ರಾಳಿ, ಯಕ್ಷಗುರುಕುಲ ಶಿಕ್ಷಣ ಟ್ರಸ್ಟ್ ಇದರ 53ನೇ ವಾರ್ಷಿಕೋತ್ಸವ, ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ) ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಗಳ ಸಹಯೋಗದಲ್ಲಿ ಜ.25ರ ರವಿವಾರ ಅಪರಾಹ್ನ 3:00ಗಂಟೆಗೆ ಇಂದ್ರಾಳಿಯಲ್ಲಿರುವ ಯಕ್ಷಗಾನ ಕೇಂದ್ರದಲ್ಲಿ ನಡೆಯಲಿದೆ. ಕಾರ್ಯಕ್ರಮವನ್ನು ಮಾಹೆ ಸಹಕುಲಾಧಿಪತಿ ಡಾ. ಎಚ್. ಎಸ್. ಬಲ್ಲಾಳ್ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮಾಹೆಯ ಪ್ರೊವೈಸ್ ಚಾನ್ಸಲರ್ ಡಾ. ನಾರಾಯಣ ಸಭಾಹಿತ್, ನಿವೃತ್ತ ಇಂಜಿನಿಯರ್ ವೈ. ಸೀತಾರಾಮ ಶೆಟ್ಟಿ ಉಪಸ್ಥಿತರಿವರು. ಯಕ್ಷಗಾನ ಕೇಂದ್ರದ ಸಲಹಾ ಸಮಿತಿಯ ಅಧ್ಯಕ್ಷ ಪಳ್ಳಿ ಕಿಶನ್ ಹೆಗ್ಡೆ ಅಧ್ಯಕ್ಷತೆ ವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಬಡಗುತಿಟ್ಟು ಯಕ್ಷಗಾನದ ಪ್ರಸಿದ್ಧ ವೇಷಧಾರಿ ಚಂದ್ರಗೌಡ ಗೋಳಿಕೆರೆ ಇವರಿಗೆ ಎಂ.ಎಂ ಹೆಗ್ಡೆ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಬಳಿಕ ಯಕ್ಷಗಾನ ಕಲಿಕಾ ವಿದ್ಯಾರ್ಥಿಗಳಿಂದ ಹಿಮ್ಮೇಳ ಪ್ರತಿಭೆ ಹಾಗೂ ಸರ್ಟಿಫಿ ಕೇಟ್ ಕೋರ್ಸ್ನ ವಿದ್ಯಾರ್ಥಿಗಳಿಂದ ಯಕ್ಷಗಾನ ಪೂರ್ವರಂಗ ಮತ್ತು ಸಂಜೆ 6:00ರಿಂದ ಕೇಂದ್ರದ ವಿದ್ಯಾರ್ಥಿ ಗಳಿಂದ ‘ಸಮರ ಸೌಗಂಧಿಕ’ ಯಕ್ಷಗಾನ ಪ್ರದರ್ಶನವಿರುತ್ತದೆ ಎಂದು ಯಕ್ಷಗಾನ ಕೇಂದ್ರದ ಪ್ರಕಟಣೆ ತಿಳಿಸಿದೆ.
ಜನಾರ್ದನ ರೆಡ್ಡಿ-ಶ್ರೀರಾಮುಲುಗೆ ಸೇರಿದ ಬಳ್ಳಾರಿ ಮಾಡೆಲ್ ಹೌಸ್ಗೆ ಬೆಂಕಿ
ಬಳ್ಳಾರಿಯಲ್ಲಿ ಜನಾರ್ದನ ರೆಡ್ಡಿ ಮತ್ತು ಶ್ರೀರಾಮುಲು ಅವರ ಮಾಡೆಲ್ ಹೌಸ್ಗೆ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದಾರೆ. ಇದು ಇತ್ತೀಚೆಗೆ ನಡೆದ ಬ್ಯಾನರ್ ಗಲಾಟೆಯ ಮುಂದುವರಿದ ಭಾಗ ಎಂದು ಸೋಮಶೇಖರ್ ರೆಡ್ಡಿ ಹೇಳಿದ್ದಾರೆ. ಕಾಂಗ್ರೆಸ್ನವರು ಉದ್ದೇಶಪೂರ್ವಕವಾಗಿ ಈ ಕೃತ್ಯ ಎಸಗಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. ಸಂಜೆ ಸುಮಾರು 6:30ಕ್ಕೆ ಬೆಂಕಿ ಹೊತ್ತಿಕೊಂಡಿದ್ದು, ಮನೆಯ ಬಹುಪಾಲು ಸುಟ್ಟು ಹೋಗಿದೆ. ಕಿಡಿಗೇಡಿಗಳು ಪರಾರಿಯಾಗಿದ್ದಾರೆ. ಇದರಿಂದಾಗಿ ನಗರದಲ್ಲಿ ಮತ್ತೆ ರಾಜಕೀಯ ಕಿಚ್ಚು ಜೋರಾಗಿದೆ.
ನಿಟ್ಟೆ: ಸರಿತಾ ಶೆಟ್ಟಿಗೆ ಪಿಹೆಚ್.ಡಿ ಪದವಿ
ಕಾರ್ಕಳ: ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದ ಎಂಸಿಎ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಸರಿತಾ ಶೆಟ್ಟಿ ಅವರು ‘ಡೆವಲಪ್ಮೆಂಟ್ ಆಫ್ ನ್ಯಾಚುರಲ್ ಲ್ಯಾಂಗ್ವೇಜ್ ಡಯಲಾಗ್ ಸಿಸ್ಟಮ್ ಫಾರ್ ಕನ್ನಡ ಲ್ಯಾಂಗ್ವೇಜ್ ಇನ್ ಹೆಲ್ತ್ ಕೇರ್ ಡೊಮೈನ್’ ಎಂಬ ವಿಷಯ ಮೇಲೆ ಮಂಡಿಸಿದ ಸಂಶೋಧನಾ ಪ್ರಬಂಧಕ್ಕೆ ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಡಾಕ್ಟರೇಟ್ ಪದವಿ ಘೋಷಿಸಿದೆ. ಸರಿತಾ ಅವರು ಕಂಪ್ಯೂಟರ್ ಸಾಯನ್ಸ್ ಇಂಜಿನಿಯರಿಂಗ್ ವಿಭಾಗದ ಪ್ರಾಧ್ಯಾಪಕಿ ಡಾ.ಸಾರಿಕಾ ಹೆಗ್ಡೆ ಅವರ ಮಾರ್ಗದರ್ಶನದಲ್ಲಿ ಸಂಶೋಧನಾ ಕಾರ್ಯವನ್ನು ಕೈಗೊಂಡಿದ್ದರು. ಇವರು ನಿಟ್ಟೆಯ ಚಂದ್ರಹಾಸ ಶೆಟ್ಟಿ ಹಾಗೂ ಕುಮುದಾ ಶೆಟ್ಟಿ ದಂಪತಿಯ ಅವಳಿ ಪುತ್ರಿಯರಲ್ಲಿ ಒಬ್ಬರು. ಇವರ ಶಿಕ್ಷಣದ ಸಂಪೂರ್ಣ ವೆಚ್ಚವನ್ನು ನಿಟ್ಟೆ ವಿಶ್ವವಿದ್ಯಾಲಯದ ಕುಲಾಧಿಪತಿಗಳಾಗಿದ್ದ ದಿ.ಎನ್. ವಿನಯ ಹೆಗ್ಡೆ ಭರಿಸಿದ್ದರು. ಸರಿತಾ ಮಂಗಳೂರಿನ ಎಂಆರ್ಪಿಎಲ್. ಉದ್ಯೋಗಿ ಪ್ರಸನ್ನ ಕುಮಾರ್ ಶೆಟ್ಟಿ ಇವರ ಪತ್ನಿ.
ವಿಬಿ ಜಿ ರಾಮ್ ಜಿ ಕಾಯ್ದೆಯ ಜಾರಿ ಆಂಧ್ರ ಸಿ.ಎಂ ಚಂದ್ರಬಾಬು ನಾಯ್ಡು ಕಳವಳ: ಸಿ.ಎಂ ಸಿದ್ದರಾಮಯ್ಯ ಹೇಳಿದ್ದೇನು
ಯುಪಿಎ ಸರ್ಕಾರದ ಆಡಳಿತಾವಧಿಯಲ್ಲಿ ಜಾರಿಗೆ ತರಲಾಗಿದ್ದ ಮನ್ರೇಗಾ ಯೋಜನೆ(MGNREGA) ಬದಲಿಗೆ ಬಿಜೆಪಿ ನೇತೃತ್ವದ ಎನ್ಡಿಎ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಹೊಸ ಗ್ರಾಮೀಣ ಉದ್ಯೋಗ ಕಾನೂನನ್ನು ಕಾಂಗ್ರೆಸ್ ವಿರೋಧಿಸಿದೆ. ಇದೀಗ ಬಿಜೆಪಿಯ ಮಿತ್ರಪಕ್ಷವಾಗಿರುವ ತೆಲುಗುದೇಶಂ ಪಕ್ಷವೂ ಸಹ ಪರೋಕ್ಷವಾಗಿ ಅಸಮಾಧಾನ ಹೊರ ಹಾಕಿದೆ. ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರು ವಿಬಿ ಜಿ ರಾಮ್ ಜಿ
ಅಮೆರಿಕ ಜವಳಿ ಮೇಲೆ ಶೇ.50ರಷ್ಟು ಸುಂಕ ವಿಧಿಸಿರುವುದಕ್ಕೆ ಪ್ರಧಾನಿ ಮೋದಿ ಹೊಣೆ: ರಾಹುಲ್ ಗಾಂಧಿ
ಹೊಸದಿಲ್ಲಿ,ಜ.23: ಪ್ರಧಾನಿ ನರೇಂದ್ರ ಮೋದಿ ವಿರುದ್ಧ ತನ್ನ ‘ಸತ್ತ ಆರ್ಥಿಕತೆ’ ದಾಳಿಯನ್ನು ಶುಕ್ರವಾರ ಪುನರಾರಂಭಿಸಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಅಮೆರಿಕದ ಭಾರೀ ಸುಂಕಗಳು ಭಾರತದ ಜವಳಿ ಕ್ಷೇತ್ರದ ಬೀರಿರುವ ಪ್ರತಿಕೂಲ ಪರಿಣಾಮವನ್ನು ಉಲ್ಲೇಖಿಸಿದ್ದಾರೆ. ಉದ್ಯೋಗ ನಷ್ಟ ಮತ್ತು ರಫ್ತುದಾರರಿಗೆ ಎದುರಾಗಿರುವ ಹೆಚ್ಚುತ್ತಿರುವ ಅನಿಶ್ಚಿತತೆಗಳ ನಡುವೆ ಸರಕಾರದ ನಿಷ್ಕ್ರಿಯತೆಯನ್ನು ಆರೋಪಿಸಿರುವ ಅವರು, ಇದಕ್ಕಾಗಿ ಮೋದಿಯವರನ್ನು ಹೊಣೆಯಾಗಿಸಿದ್ದಾರೆ. ‘ಅಮೆರಿಕದ ಶೇ.50ರಷ್ಟು ಸುಂಕಗಳು ಮತ್ತು ಅನಿಶ್ಚಿತತೆ ಭಾರತದ ಜವಳಿ ರಫ್ತುದಾರರನ್ನು ತೀವ್ರವಾಗಿ ಬಾಧಿಸುತ್ತಿವೆ. ಉದ್ಯೋಗ ನಷ್ಟಗಳು, ಫ್ಯಾಕ್ಟರಿಗಳ ಮುಚ್ಚುವಿಕೆಗಳು ಮತ್ತು ತಗ್ಗಿದ ಬೇಡಿಕೆಗಳು ನಮ್ಮ ‘ಸತ್ತ ಆರ್ಥಿಕತೆ’ಯ ವಾಸ್ತವವಾಗಿವೆ’ ಎಂದು ರಾಹುಲ್ ಎಕ್ಸ್ಪೋಸ್ಟ್ನಲ್ಲಿ ಬರೆದಿದ್ದಾರೆ. ಮೋದಿಯವರನ್ನು ಗುರಿಯಾಗಿಸಿಕೊಂಡು ವಾಗ್ದಾಳಿ ನಡೆಸಿರುವ ಅವರು, ತೀವ್ರ ಪರಿಣಾಮದ ಹೊರತಾಗಿಯೂ ಸರಕಾರವು ಬಿಕ್ಕಟ್ಟಿಗೆ ಸ್ಪಂದಿಸುವಲ್ಲಿ ವಿಫಲಗೊಂಡಿದೆ ಎಂದು ಆರೋಪಿಸಿದ್ದಾರೆ. 4.5 ಕೋಟಿಗೂ ಅಧಿಕ ಉದ್ಯೋಗಗಳು ಮತ್ತು ಲಕ್ಷಾಂತರ ಉದ್ಯಮಗಳು ಅಪಾಯದಲ್ಲಿದ್ದರೂ ಮೋದಿ ಯಾವುದೇ ಪರಿಹಾರವನ್ನು ನೀಡಿಲ್ಲ,ಅವರು ಸುಂಕಗಳ ಬಗ್ಗೆ ಮಾತೇ ಆಡಲಿಲ್ಲ. ಮೋದಿಜಿ, ನೀವೇ ಹೊಣೆಯಾಗಿದ್ದೀರಿ, ದಯವಿಟ್ಟು ಈ ವಿಷಯದ ಬಗ್ಗೆ ನಿಮ್ಮ ಗಮನ ಹರಿಸಿ ಎಂದು ವಿಪಕ್ಷ ನಾಯಕ ರಾಹುಲ್ ಬರೆದಿದ್ದಾರೆ. ಈ ಹಿಂದೆ ಭಾರತದ ಆರ್ಥಿಕತೆಯ ಕುರಿತು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ತೀಕ್ಷ್ಣ ಟೀಕೆಯನ್ನು ಪ್ರತಿಧ್ವನಿಸಿದ್ದ ರಾಹುಲ್, ಭಾರತದ ಆರ್ಥಿಕತೆಯು ಸತ್ತಿದೆ ಮತ್ತು ಈ ಸ್ಥಿತಿಗೆ ಮೋದಿ ಸರಕಾರದ ನೀತಿಗಳೇ ಕಾರಣ ಎಂದು ಹೇಳಿದ್ದರು.
Uttar Pradesh | ರಾಜಕೀಯ ಪೋಸ್ಟ್ಗಳಿಗಾಗಿ 14 ವರ್ಷದ ಬಾಲಕನ ವಿರುದ್ಧ ಎಫ್ಐಆರ್ ದಾಖಲಿಸಿದ ಯೋಗಿ ಸರಕಾರ!
ಲಕ್ನೊ: ತನ್ನ ಸಾಮಾಜಿಕ ಮಾಧ್ಯಮ ಪೋಸ್ಟ್ಗಳಲ್ಲಿ ಸರ್ಕಾರದ ನೀತಿಗಳು ಹಾಗೂ ಸಾಮಾಜಿಕ–ಆರ್ಥಿಕ ಪರಿಸ್ಥಿತಿಯನ್ನು ವಿಮರ್ಶಾತ್ಮಕವಾಗಿ ಪರಿಶೀಲಿಸುತ್ತಿದ್ದ 14 ವರ್ಷದ ಬಾಲಕನೊಬ್ಬನ ವಿರುದ್ಧ ಉತ್ತರ ಪ್ರದೇಶದ ರಾಜಧಾನಿ ಲಕ್ನೊದಲ್ಲಿ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ ಎಂದು ವರದಿಯಾಗಿದೆ. ಆರೋಪಿ ಬಾಲಕನನ್ನು ಅಶ್ವಮಿತ್ ಗೌತಮ್ ಎಂದು ಗುರುತಿಸಲಾಗಿದೆ. ಅಶ್ವಮಿತ್ ಗೌತಮ್ನ ಆನ್ಲೈನ್ ಚಟುವಟಿಕೆಗಳ ಕುರಿತು ಲಕ್ನೊ ಪೊಲೀಸರು ತಮ್ಮ ಎಫ್ಐಆರ್ನಲ್ಲಿ ಕಳವಳ ವ್ಯಕ್ತಪಡಿಸಿದ್ದಾರೆ. ಆದರೆ, ಬಾಲಕನ ವಿರುದ್ಧ ಹೇರಿರುವ ನಿರ್ದಿಷ್ಟ ಸೆಕ್ಷನ್ಗಳು ಅಥವಾ ದೂರುದಾರರ ಹೆಸರನ್ನು ಪೊಲೀಸರು ಬಹಿರಂಗಪಡಿಸಿಲ್ಲ. ರಾಜ್ಯ ಸರ್ಕಾರದ ಕುರಿತು ಮಾಡಿದ್ದ ವಿಮರ್ಶಾತ್ಮಕ ಪೋಸ್ಟ್ಗೆ ಈ ಪ್ರಕರಣ ಸಂಬಂಧಿಸಿದೆ ಎಂದು ವಿಶ್ವಾಸಾರ್ಹ ಮೂಲಗಳು ತಿಳಿಸಿವೆ ಎಂದು ಹೇಳಲಾಗಿದೆ. ಗಮನಾರ್ಹ ಪ್ರಮಾಣದ ಫಾಲೋವರ್ಗಳನ್ನು ಹೊಂದಿರುವ ಅಶ್ವಮಿತ್ ಗೌತಮ್, ತನ್ನ ದೀರ್ಘಾವಧಿಯ ವಿಶ್ಲೇಷಣಾತ್ಮಕ ವೀಡಿಯೊಗಳಲ್ಲಿ ಏರುತ್ತಿರುವ ಹಣದುಬ್ಬರ ಮತ್ತು ಜೀವನ ವೆಚ್ಚ, ಯುವಜನರಲ್ಲಿನ ನಿರುದ್ಯೋಗ, ಹಿಗ್ಗುತ್ತಿರುವ ಸಾಮಾಜಿಕ ಅಸಮಾನತೆ ಹಾಗೂ ದಲಿತರಿಗೆ ಉಂಟಾಗುತ್ತಿರುವ ತೊಂದರೆಗಳ ಕುರಿತು ಚರ್ಚಿಸುತ್ತಿದ್ದ ಎನ್ನಲಾಗಿದೆ. ಯಾವುದೇ ಸ್ಕ್ರಿಪ್ಟ್ ಇಲ್ಲದ ಈತನ ವೀಡಿಯೊಗಳು ಉತ್ತರ ಪ್ರದೇಶದಾದ್ಯಂತ ಇರುವ ಯುವ ಪ್ರೇಕ್ಷಕರ ಗಮನ ಸೆಳೆದಿವೆ. ಅಪ್ರಾಪ್ತ ಬಾಲಕನ ವಿರುದ್ಧ ಕಾನೂನು ಕ್ರಮಕ್ಕೆ ಚಾಲನೆ ನೀಡಿರುವುದಕ್ಕೆ ನಾಗರಿಕ ಸಂಘಟನೆಗಳ ಸದಸ್ಯರು, ಡಿಜಿಟಲ್ ಹಕ್ಕುಗಳ ಕಾರ್ಯಕರ್ತರು ಹಾಗೂ ವಿರೋಧ ಪಕ್ಷಗಳ ನಾಯಕರಿಂದ ತೀವ್ರ ಟೀಕೆ ವ್ಯಕ್ತವಾಗಿದೆ. ಬಾಲಕನ ರಾಜಕೀಯ ಅಭಿವ್ಯಕ್ತಿಯ ವಿರುದ್ಧ ಎಫ್ಐಆರ್ ದಾಖಲಿಸಿರುವುದನ್ನು ಹಲವರು ಪ್ರಶ್ನಿಸಿದ್ದು, ಇದನ್ನು ಕಾನೂನು ಜಾರಿ ಕ್ರಮಕ್ಕಿಂತಲೂ ಬೆದರಿಕೆಯಾಗಿ ಅವರು ಆಕ್ಷೇಪಿಸಿದ್ದಾರೆ. ಅಶ್ವಮಿತ್ ಗೌತಮ್ ಯಾವುದೇ ಹಿಂಸೆಗೆ ಅಥವಾ ದ್ವೇಷಕ್ಕೆ ಪ್ರಚೋದನೆ ನೀಡಿಲ್ಲ. ಆತನ ವೀಡಿಯೊ ತುಣುಕುಗಳಿಗೆ ಸಂವಿಧಾನದ ಅಭಿವ್ಯಕ್ತಿ ಸ್ವಾತಂತ್ರ್ಯದಡಿ ರಕ್ಷಣೆ ಇದೆ ಎಂದು ಅಶ್ವಮಿತ್ ಗೌತಮ್ ಬೆಂಬಲಿಗರು ಸಮರ್ಥಿಸಿಕೊಂಡಿದ್ದಾರೆ. ನೈಜ ಪ್ರಜಾತಂತ್ರದಲ್ಲಿ ಉದ್ಯೋಗ, ಹಣದುಬ್ಬರ ಹಾಗೂ ಸಾಮಾಜಿಕ ನ್ಯಾಯದ ಕುರಿತು ಸರ್ಕಾರದ ನೀತಿಗಳನ್ನು ಪ್ರಶ್ನಿಸುವುದು ಅಪರಾಧವಲ್ಲ ಎಂದು ಅವರು ವಾದಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಯೋಗಿ ಆದಿತ್ಯನಾಥ್ ನೇತೃತ್ವದ ಸರ್ಕಾರ ಇದುವರೆಗೆ ಯಾವುದೇ ಅಧಿಕೃತ ಹೇಳಿಕೆಯನ್ನು ಬಿಡುಗಡೆ ಮಾಡಿಲ್ಲ.
ಜಮ್ಮುಕಾಶ್ಮೀರ ಗುಂಡಿನ ಕಾಳಗ| ಕಥುವಾದಲ್ಲಿ ಜೈಷ್ ಭಯೋತ್ಪಾದಕನ ಹತ್ಯೆ
ಹೊಸದಿಲ್ಲಿ,ಜ.23: ಕಥುವಾದ ಬಿಲಾವರ್ ಪ್ರದೇಶದಲ್ಲಿ ಶುಕ್ರವಾರ ಭಯೋತ್ಪಾದನೆ ನಿಗ್ರಹ ಕಾರ್ಯಾಚರಣೆಯಲ್ಲಿ ಪಾಕಿಸ್ತಾನದ ಜೈಷ್ ಮುಹಮ್ಮದ್ಗೆ ಸೇರಿದ ಭಯೋತ್ಪಾದಕನೋರ್ವ ಕೊಲ್ಲಲ್ಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದರು. ಸೇನೆ ಮತ್ತು ಸಿಆರ್ಪಿಎಫ್ ಜೊತೆ ಜಂಟಿ ಕಾರ್ಯಾಚರಣೆಯಲ್ಲಿ ಜಮ್ಮುಕಾಶ್ಮೀರ ಪೊಲೀಸರ ಸಣ್ಣ ತಂಡವೊಂದು ಓರ್ವ ಪಾಕಿಸ್ತಾನಿ ಜೈಷ್ ಭಯೋತ್ಪಾದಕನ್ನು ಹೊಡೆದುರುಳಿಸಿದೆ ಎಂದು ಜಮ್ಮು ಐಜಿಪಿ ಎಕ್ಸ್ ಪೋಸ್ಟ್ನಲ್ಲಿ ತಿಳಿಸಿದ್ದಾರೆ. ನಿರ್ದಿಷ್ಟ ಮಾಹಿತಿಯ ಮೇರೆಗೆ ಕಥುವಾದಲ್ಲಿ ಜಂಟಿ ಕಾರ್ಯಾಚರಣೆಯನ್ನು ಆರಂಭಿಸಲಾಗಿದ್ದು, ಅದು ಈಗಲೂ ಮುಂದುವರಿದಿದೆ ಎಂದು ಸೇನೆಯ ವೈಟ್ ನೈಟ್ ಕಾರ್ಪ್ಸ್ ತಿಳಿಸಿದೆ.
ಮುಂಬೈ,ಜ.23: ವಾಯುಮಾಲಿನ್ಯವನ್ನು ತಗ್ಗಿಸುವಂತೆ ತನ್ನ ಆದೇಶಗಳನ್ನು ನಿರ್ಲಕ್ಷಿಸಿದ್ದಕ್ಕಾಗಿ ಮುನ್ಸಿಪಲ್ ಅಧಿಕಾರಿಗಳನ್ನು ಶುಕ್ರವಾರ ತೀವ್ರ ತರಾಟೆಗೆತ್ತಿಕೊಂಡ ಬಾಂಬೆ ಉಚ್ಚ ನ್ಯಾಯಾಲಯವು, ಅವರೂ ಇದೇ ಅಶುದ್ಧ ಗಾಳಿಯನ್ನು ಸೇವಿಸುತ್ತಿದ್ದಾರೆ ಮತ್ತು ಅನ್ಯಗ್ರಹದಲ್ಲಿ ವಾಸಿಸುತ್ತಿಲ್ಲ ಎಂದು ಬೆಟ್ಟು ಮಾಡಿತು. ಇದಕ್ಕಾಗಿ ಹಿರಿಯ ಅಧಿಕಾರಿಗಳ ವೇತನಗಳನ್ನು ಸ್ಥಗಿತಗೊಳಿಸುವುದಾಗಿ ಎಚ್ಚರಿಕೆಯನ್ನೂ ನೀಡಿತು. ನ್ಯಾಯಾಲಯವು ಪದೇ ಪದೇ ಹೊರಡಿಸಿದ್ದ ಆದೇಶಗಳನ್ನು ಪಾಲಿಸದ್ದಕ್ಕಾಗಿ ಮತ್ತು ಹದಗೆಡುತ್ತಿರುವ ವಾಯುಮಾಲಿನ್ಯವನ್ನು ತಗ್ಗಿಸಲು ಕ್ರಮಗಳನ್ನು ತೆಗೆದುಕೊಳ್ಳಲು ವಿಫಲಗೊಂಡಿದ್ದಕ್ಕಾಗಿ ಮುಂಬೈ ಮತ್ತು ನವಿ ಮುಂಬೈ ಮಹಾನಗರ ಪಾಲಿಕೆಗಳ ಆಯುಕ್ತರ ವೇತನಗಳನ್ನು ಸ್ಥಗಿತಗೊಳಿಸುವುದಾಗಿ ಮುಖ್ಯ ನ್ಯಾಯಾಧೀಶ ಶ್ರೀ ಚಂದ್ರಶೇಖರ್ ಮತ್ತು ನ್ಯಾ.ಸುಮನ್ ಶ್ಯಾಮ್ ಅವರ ಪೀಠವು ಎಚ್ಚರಿಕೆ ನೀಡಿತು. ‘ಮುಂಬೈನಲ್ಲಿರುವ ಪ್ರತಿಯೊಬ್ಬರಂತೆಯೇ ಮುನ್ಸಿಪಲ್ ಅಧಿಕಾರಿಗಳೂ ಅಶುದ್ಧ ವಾಯುವನ್ನು ಉಸಿರಾಡುತ್ತಿದ್ದಾರೆ. ನೀವು ಅನ್ಯಗ್ರಹದಲ್ಲಿ ವಾಸವಾಗಿಲ್ಲ. ನಾವೆಲ್ಲ ಇದೇ ಗಾಳಿಯನ್ನು ಉಸಿರಾಡುತ್ತಿದ್ದೇವೆ’ ಎಂದು ಪೀಠವು ಹೇಳಿತು. ಮುಂದಿನ ವಿಚಾರಣೆಯು ಜ.27ರಂದು ನಡೆಯಲಿದೆ. 2023ರಲ್ಲಿ ನಗರದಲ್ಲಿ ಹೆಚ್ಚುತ್ತಿರುವ ವಾಯುಮಾಲಿನ್ಯವನ್ನು ಸ್ವಯಂಪ್ರೇರಿತವಾಗಿ ಗಮನಕ್ಕೆ ತೆಗೆದುಕೊಂಡಿದ್ದ ಬಾಂಬೆ ಉಚ್ಚ ನ್ಯಾಯಾಲಯವು, ವಾಯುಮಾಲಿನ್ಯವನ್ನು ತಗ್ಗಿಸಲು ಕ್ರಮಗಳನ್ನು ತೆಗೆದುಕೊಳ್ಳುವಂತೆ ಮುನ್ಸಿಪಲ್ ಸಂಸ್ಥೆಗಳಿಗೆ ಮತ್ತು ಅಧಿಕಾರಿಗಳಿಗೆ ಹಲವಾರು ನಿರ್ದೇಶನಗಳನ್ನು ಹೊರಡಿಸಿತ್ತು.
ಮುಡಾ ಪ್ರಕರಣ: 20.85 ಕೋಟಿ ರೂ. ಮೌಲ್ಯದ ಆಸ್ತಿ ತಾತ್ಕಾಲಿಕ ಜಪ್ತಿ ಮಾಡಿದ ಈಡಿ
ಬೆಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ(ಮುಡಾ)ದಲ್ಲಿ ನಡೆದ ಅಕ್ರಮ ನಿವೇಶನ ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಈಡಿ), ಬೆಂಗಳೂರು ವಲಯ ಕಚೇರಿ ಅಧಿಕಾರಿಗಳ ತಂಡ 20.85 ಕೋಟಿ ರೂ. ಮಾರುಕಟ್ಟೆ ಮೌಲ್ಯದ ಆಸ್ತಿಗಳನ್ನು ತಾತ್ಕಾಲಿಕವಾಗಿ ಜಪ್ತಿ ಮಾಡಿದೆ. ತಾತ್ಕಾಲಿಕ ಜಪ್ತಿಗೊಂಡ ಆಸ್ತಿಗಳಲ್ಲಿ ಕಾನೂನುಬಾಹಿರವಾಗಿ ಹಂಚಿಕೆಗೊಂಡ 6 ಮುಡಾ ನಿವೇಶನಗಳು, 3 ಇತರೆ ಮಾದರಿ ಆಸ್ತಿಗಳು ಹಾಗೂ ಒಂದು ವಾಣಿಜ್ಯ ಕಟ್ಟಡ ಸೇರಿವೆ. ಜನವರಿ 21ರಂದು ಈಡಿ ದಾಳಿಯನ್ನು ನಡೆಸಿದೆ. ಮೈಸೂರಿನಲ್ಲಿ ದಾಖಲಾಗಿದ್ದ ಮುಡಾ ಪ್ರಕರಣದ ಎಫ್ಐಆರ್ ತನಿಖೆಯನ್ನು ಜಾರಿ ನಿರ್ದೇಶನಾಲಯ ಆರಂಭಿಸಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ನಗರಾಭಿವೃದ್ಧಿ ಪ್ರಾಧಿಕಾರ (ಭೂಸ್ವಾಧೀನಕ್ಕೆ ಪರಿಹಾರವಾಗಿ ನಿವೇಶನ ಹಂಚಿಕೆ) ನಿಯಮಗಳು-2009 (2015ರ ತಿದ್ದುಪಡಿ ಸಹಿತ) ಹಾಗೂ ಕರ್ನಾಟಕ ನಗರಾಭಿವೃದ್ಧಿ ಪ್ರಾಧಿಕಾರ (ಸ್ವಯಂ ಭೂಸರಣಿ ಪ್ರೋತ್ಸಾಹ ಯೋಜನೆ) ನಿಯಮಗಳು-1991ರ ಘೋರ ಉಲ್ಲಂಘನೆಯೊಂದಿಗೆ ನಿವೇಶನಗಳನ್ನು ಹಂಚಿಕೆ ಮಾಡಿರುವುದು ಬೆಳಕಿಗೆ ಬಂದಿದೆ ಎಂದು ಈಡಿ ಹೇಳಿದೆ. ಇದೇ ವೇಳೆ, ಮುಡಾ ಅಧಿಕಾರಿಗಳು ಹಾಗೂ ರಿಯಲ್ ಎಸ್ಟೇಟ್ ಉದ್ಯಮಿಗಳ ನಡುವಿನ ಸಂಬಂಧ ಹಾಗೂ ಪರಿಹಾರ ರೂಪದಲ್ಲಿ ನಿವೇಶನ ಹಂಚಿಕೆ ಹಾಗೂ ಲೇಔಟ್ ಅನುಮೋದನೆಗಾಗಿ ನಗದು ಪಾವತಿ ನಡೆದಿರುವುದಕ್ಕೆ ಸಂಬಂಧಿಸಿದ ಕೆಲ ಸಾಕ್ಷ್ಯಗಳು ಪತ್ತೆಯಾಗಿವೆ ಎಂದು ಈ.ಡಿ. ತಿಳಿಸಿದೆ. ಇದಕ್ಕೂ ಮುನ್ನ, ಈಡಿ 283 ಕಾನೂನುಬಾಹಿರ ಮುಡಾ ನಿವೇಶನಗಳು ಮತ್ತು ಮೂರು ಜನರ ವೈಯಕ್ತಿಕ ಆಸ್ತಿಗಳನ್ನು ಜಪ್ತಿ ಮಾಡಿತ್ತು. ನಿವೇಶನ ಹಂಚಿಕೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಆರೋಪದ ಮೇಲೆ ಮುಡಾದ ಮಾಜಿ ಆಯುಕ್ತ ಜಿ.ಟಿ.ದಿನೇಶ್ ಕುಮಾರ್ ಅವರನ್ನು 16.09.2025ರಂದು ಪಿಎಂಎಲ್ಎ ಅಡಿಯಲ್ಲಿ ಬಂಧಿಸಲಾಗಿದ್ದು, ಅವರು ಪ್ರಸ್ತುತ ನ್ಯಾಯಾಂಗ ಬಂಧನದಲ್ಲಿದ್ದಾರೆ. ಈವರೆಗೆ ಈ ಪ್ರಕರಣದಲ್ಲಿ ಸುಮಾರು 460 ಕೋಟಿ ರೂ. ಮಾರುಕಟ್ಟೆ ಮೌಲ್ಯದ ಆಸ್ತಿ ಇದಾಗಿದ್ದು, ತನಿಖೆ ಮುಂದುವರೆದಿದೆ ಎಂದು ಜಾರಿ ನಿರ್ದೇಶನಾಲಯದ ಪ್ರಕಟನೆಯಲ್ಲಿ ತಿಳಿಸಲಾಗಿದೆ.

22 C