ಅಫಜಲಪುರ | ನಿಜ ಶರಣ ಅಂಬಿಗರ ಚೌಡಯ್ಯನವರ ಜಯಂತೋತ್ಸವ ಆಚರಣೆ
ಅಫಜಲಪುರ : ಪಟ್ಟಣದ ತಹಶೀಲ್ ಕಚೇರಿಯಲ್ಲಿ ತಾಲೂಕು ಆಡಳಿತದ ವತಿಯಿಂದ ಬುಧವಾರ ನಿಜ ಶರಣ ಅಂಬಿಗರ ಚೌಡಯ್ಯನವರ ಜಯಂತೋತ್ಸವವನ್ನು ಭಕ್ತಿಭಾವ ಹಾಗೂ ಗೌರವಪೂರ್ವಕವಾಗಿ ಆಚರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಹಶೀಲ್ದಾರ್ ಸಂಜೀವಕುಮಾರ ದಾಸರ ಅವರು ವಹಿಸಿ, ನಿಜ ಶರಣ ಅಂಬಿಗರ ಚೌಡಯ್ಯನವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿದರು. ಈ ಸಂದರ್ಭದಲ್ಲಿ ಮಳೇಂದ್ರ ಮಠದ ಶ್ರೀ ವಿಶ್ವರಾಧ್ಯ ಮಳೇಂದ್ರ ಶಿವಾಚಾರ್ಯರು, ಹಾಗೂ ಕೆಕೆಆರ್ಟಿಸಿ ಅಧ್ಯಕ್ಷ ಅರುಣಕುಮಾರ ಪಾಟೀಲ, ಜೆ.ಎಂ.ಕೊರಬು, ಕೋಲಿ ಸಮಾಜದ ಅಧ್ಯಕ್ಷ ಮಹರಾಯ ಅಗಸಿ, ಶಂಕರ ಮ್ಯಾಕೇರಿ, ಪ್ರಕಾಶ ಜಮಾದಾರ, ಜೆ.ಡಿ.ಎಸ್. ರಾಜ್ಯ ಪ್ರಧಾನ ಕಾರ್ಯದರ್ಶಿ ಶಿವಕುಮಾರ ನಾಟೀಕಾರ, ಬಸವರಾಜ ಸಪ್ಪನಗೋಳ, ಮಹಾಂತೇಶ ತಳವಾರ, ಶ್ರೀಮಂತ ಬಿರಾದಾರ, ಬಸವರಾಜ ಚಾಂದಕವಟೆ, ರಮೇಶ ಪೂಜಾರಿ, ವಿಧ್ಯಾಧರ ಮಂಗಳೂರ,ಲಕ್ಷ್ಮೀಪುತ್ರ ಜಮಾದಾರ, ಮಲ್ಲಿಕಾರ್ಜುನ ಸಿಂಗೆ,ದೇವೀಂದ್ರ ಜಮಾದಾರ, ಪ್ರಭಾವತಿ ಮೇತ್ರಿ,ಮಹಾಂತೇಶ ಬಳೂಂಡಗಿ, ರವಿ ಗೌರ, ಶ್ರೀಕಾಂತ ದಿವಾಣಜಿ, ಬಸವರಾಜ ನಿಂಬರ್ಗಿ, ಯಲ್ಲಪ್ಪ ರಮಗಾ,ಮಾರುತಿ ಮೂರನೆತ್ತಿ, ಉದಯಭಟ್ ಪೂಜಾರಿ, ಸೇರಿದಂತೆ ಹಲವರು ಇದ್ದರು.
E Swathu: ಇ-ಸ್ವತ್ತು ಅರ್ಜಿ ಸಲ್ಲಿಕೆಯಲ್ಲಿ NIC ತಾಂತ್ರಿಕ ದೋಷ: ಕೇಂದ್ರ ಸಚಿವರಿಗೆ ಪತ್ರ ಬರೆದ ಪ್ರಿಯಾಂಕ್ ಖರ್ಗೆ
ಬೆಂಗಳೂರು: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು ಗ್ರಾಮೀಣ ಜನರಿಗೆ ಸೌಲಭ್ಯ ನೀಡುವ ಸಲುವಾಗಿ ಅನುಷ್ಠಾನಗೊಳಿಸಿರುವ -ಸ್ವತ್ತು ಕೇಂದ್ರ ಸರ್ಕಾರದ ಎನ್.ಐ.ಸಿ (NIC) ತಂಡದ ವಿಫಲತೆಯಿಂದಾಗಿ ಪ್ರತಿಕೂಲ ಪರಿಣಾಮ ಬೀರಿದ್ದು ಫಲಿತಾಂಶಗಳನ್ನು ಸಾಧಿಸಲಾಗುತ್ತಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಮಾಹಿತಿ ಮತ್ತು ಜೈವಿಕ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ
ಟ್ರಂಪ್ ಜೀವಕ್ಕೆ ಆಪತ್ತು ಎಂದ ಇರಾನ್: ತಣ್ಣಗಾಯ್ತು ಅಮೆರಿಕ - ಗೋಪಾಲಕೃಷ್ಣ ಕುಂಟಿನಿ ಬರಹ
ಟ್ರಂಪ್ ಜೀವಕ್ಕೆ ಆಪತ್ತು ಎಂದ ಇರಾನ್: ತಣ್ಣಗಾಯ್ತು ಅಮೆರಿಕ - ಗೋಪಾಲಕೃಷ್ಣ ಕುಂಟಿನಿ ಅವರ ಬರಹ ಇಲ್ಲಿದೆ. ಖೊಮೇನಿ ಆಡಳಿತ ದಂಗೆಯನ್ನು ನೀಟಾಗಿ ಹತ್ತಿಕ್ಕಿದೆ. ಇದು ಹೀಗೇ ಆಗುತ್ತದೆ ಎಂದು ನಾನೂ ಬರೆದಿದ್ದೆ. ಖೊಮೇನಿ ರೆಜಿಮ್ ಶುರುವಾಗಿ 47 ವರ್ಷಗಳಾದವು. ಈ ಅವಧಿಯಲ್ಲಿ ಅನೇಕ ಬಾರಿ ದಂಗೆ ನಡೆದಿದ್ದವು. ಒಂದೊಂದು ದಂಗೆಯೂ ಎರಡು ಮೂರು ವಾರಗಳಿಗೆ ಸದ್ದಡಗಿ
ಕರಾವಳಿಯ ನಿರ್ದಿಗಂತಕ್ಕೆ ಮಣಿಪುರದ ಕನಯ್ಯಲಾಲ್ ರಂಗಭೂಮಿಯ ಇಮಾ ಸಾಬಿತ್ರಿ ತಂಡ ಭೇಟಿ
ಉಡುಪಿ: ಕರಾವಳಿಯ ನಿರ್ದಿಗಂತಕ್ಕೆ ಮಣಿಪುರದ ಕನಯ್ಯಲಾಲ್ ರಂಗಭೂಮಿಯ ಇಮಾ ಸಾಬಿತ್ರಿ ಮತ್ತು ಅವರ ಮಗ ಹೈಸ್ನಂ ತೊಂಬಾ ಅವರ ತಂಡ ಭೇಟಿ ನೀಡಿದ್ದಾರೆ. ಇಮಾ ಸಾಬಿತ್ರಿ ಮತ್ತು ಅವರ ಮಗ ಹೈಸ್ನಂ ತೊಂಬಾ ಅವರು 18 ಜನರ ತಂಡದೊಂದಿಗೆ ಕರಾವಳಿಯ ನಿರ್ದಿಗಂತಕ್ಕೆ ಭೇಟಿ ಕೊಟ್ಟರು. ಖ್ಯಾತ ಚಿತ್ರನಟ ಪ್ರಕಾಶ್ ರಾಜ್ ಮತ್ತು ನಿರ್ದಿಗಂತದ ಸದಸ್ಯರು ಅವರನ್ನು ಪ್ರೀತಿಯಿಂದ ಬರ ಮಾಡಿಕೊಳ್ಳುತ್ತಾ, ನಿರ್ದಿಗಂತದ ಕನಸುಗಳನ್ನು ಅವರೊಂದಿಗೆ ಹಂಚಿಕೊಂಡು, ಅವರ ಕೆಲಸಗಳ ಬಗ್ಗೆ ಆಸಕ್ತಿಯಿಂದ ವಿಚಾರಿಸುತ್ತ ಪರಸ್ಪರ ತಮ್ಮ ಅನುಭವಗಳನ್ನು ಹಂಚಿಕೊಂಡರು. 'ಕನಯ್ಯಾಲಾಲ ರಂಗಭೂಮಿ' ಎಂದೇ ಪ್ರಸಿದ್ಧವಾದ ರಂಗ ಪಠ್ಯವನ್ನು ಜಗಕ್ಕೆ ನೀಡಿದ 'ಕಲಾ ಕ್ಷೇತ್ರ ಮಣಿಪುರ' ತಂಡದ ಇಮಾ ಸಾಬಿತ್ರಿ ಮತ್ತು ಹೈಸ್ನಂ ತೊಂಬಾ ನಮ್ಮ ಕರಾವಳಿ ನಿರ್ದಿಗಂತಕ್ಕೆ ಭೇಟಿ ಇತ್ತದ್ದು ಒಂದು ಸಂತಸದ ಕ್ಷಣವಾಗಿತ್ತು ಎಂದು ಅವರು ಬಣ್ಣಿಸಿದರು. 'ಕಲಾಕ್ಷೇತ್ರ ಮಣಿಪುರ' ತನ್ನ ಪ್ರಯೋಗಗಳಿಂದ ದೇಶದ ರಂಗಭೂಮಿಯ ಚರಿತ್ರೆಯಲ್ಲೇ ಸಂಚಲನವನ್ನು ಉಂಟು ಮಾಡಿದ್ದ ಒಂದು ರಂಗ ತಂಡವಾಗಿದ್ದು, ಹೈಸ್ನಂ ಕನಯ್ಯಲಾಲ್ ಮತ್ತು ಅವರ ಪತ್ನಿ ಹೈಸ್ನಂ ಸಾಬಿತ್ರಿ ಜೊತೆಯಾಗಿ 1969ರಲ್ಲಿ ಕಟ್ಟಿದ ಈ ತಂಡದಿಂದ ಮೃತ್ಯುಸ್ವರ, ಪಬೇತ್, ಇಂಫಾಲ್ 73, ದ್ರೌಪದಿ, ಡಾಕ್ ಘರ್, ಸತಿ, ಹಸಿದ ಕಲ್ಲುಗಳು, ಕರ್ಣನಂತಹ ಇನ್ನೂ ಅನೇಕ ಪ್ರಮುಖ ನಾಟಕಗಳು ಹುಟ್ಟಿಕೊಂಡವು. ಅದರಲ್ಲೂ 'ಪೆಬೆತ್' ಇಡೀ ದೇಶವನ್ನೇ ನಿಬ್ಬರಗುಗೊಳಿಸಿದ ಒಂದು ವಿನೂತನ ಪ್ರಯೋಗವಾಗಿದ್ದು, ಇಂಪಾಲ್ 73 ಹಾಗೂ ದ್ರೌಪತಿಯಂತಹ ನಾಟಕಗಳೊಳಗಿನ ರಾಜಕೀಯ ಎಚ್ಚರ ಇಡೀ ದೇಶಕ್ಕೆ ರಂಗಭೂಮಿಯ ತಾಕತ್ತನ್ನು ತೋರಿಸಿಕೊಟ್ಟವು. ಕನಯ್ಯ ಲಾಲ್ ದಂಪತಿಗಳ ಮಗ ಹೈಸ್ನಂ ತೊಂಬಾ ಕೂಡ ಮಣಿಪುರದ ರಂಗಭೂಮಿಯಲ್ಲಿ ದೊಡ್ಡ ಹೆಸರು ಮಾಡಿದ ನಿರ್ದೇಶಕ, ನಟ. ಇಂದು ಆ ತಂಡದ ಪ್ರಸಿದ್ಧ ನಾಟಕ ಪೆಬೆತ್ ಮಣಿಪಾಲದ ಗಂಗೂಬಾಯಿ ಹಾನಗಲ್ ಸಭಾಂಗಣದಲ್ಲಿ ಪ್ರದರ್ಶನಗೊಳ್ಳುತ್ತಿದೆ.
Uttar Pradesh | ಸಂಭಲ್ ಗುಂಡಿನ ದಾಳಿ ಪ್ರಕರಣ: ಪೊಲೀಸರ ವಿರುದ್ಧ ಎಫ್ಐಆರ್ ಗೆ ಆದೇಶಿಸಿದ್ದ ಜಡ್ಜ್ ವರ್ಗಾವಣೆ
ಲಕ್ನೋ: ಉತ್ತರ ಪ್ರದೇಶದ ಸಂಭಲ್ನಲ್ಲಿ ನಡೆದಿದ್ದ ಗುಂಡಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಅಧಿಕಾರಿಗಳ ವಿರುದ್ಧ ಪ್ರಥಮ ಮಾಹಿತಿ ವರದಿ (ಎಫ್ಐಆರ್) ದಾಖಲಿಸುವಂತೆ ಆದೇಶ ನೀಡಿದ್ದ ಸಂಭಲ್ ನ ಚೀಫ್ ಜುಡೀಶಿಯಲ್ ಮ್ಯಾಜಿಸ್ಟ್ರೇಟ್ (ಸಿಜೆಎಂ) ವಿಭಾಂಶು ಸುಧೀರ್ ಅವರನ್ನು ವರ್ಗಾವಣೆ ಮಾಡಲಾಗಿದೆ. ಅವರನ್ನು ಸುಲ್ತಾನ್ಪುರದ ಹಿರಿಯ ಸಿವಿಲ್ ನ್ಯಾಯಾಧೀಶರಾಗಿ ನೇಮಕಗೊಳಿಸಲಾಗಿದೆ. ಸಿಜೆಎಂ ಸುಧೀರ್ ಸೇರಿದಂತೆ ಒಟ್ಟು 14 ನ್ಯಾಯಾಂಗ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಅಲಹಾಬಾದ್ ಹೈಕೋರ್ಟ್ ಮಂಗಳವಾರ ಆದೇಶ ಹೊರಡಿಸಿದೆ. ನವೆಂಬರ್ 2024ರಲ್ಲಿ ನಡೆದ ಸಂಭಲ್ ಹಿಂಸಾಚಾರಕ್ಕೆ ಸಂಬಂಧಿಸಿದಂತೆ, ಹಲವು ಪೊಲೀಸ್ ಅಧಿಕಾರಿಗಳ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಪೊಲೀಸರಿಗೆ ನಿರ್ದೇಶನ ನೀಡಿದ್ದ ಕೆಲವೇ ದಿನಗಳ ಬಳಿಕ ಈ ವರ್ಗಾವಣೆ ನಡೆದಿದೆ. ಆದೇಶದಲ್ಲಿ ಆಗಿನ ಸಂಭಲ್ ವೃತ್ತಾಧಿಕಾರಿ ಅನುಜ್ ಚೌಧರಿ, ಸಂಭಲ್ ಕೊತ್ವಾಲಿ ಠಾಣೆಯ ಉಸ್ತುವಾರಿ ಅನುಜ್ ಕುಮಾರ್ ತೋಮರ್ ಹಾಗೂ 15ರಿಂದ 20 ಮಂದಿ ಗುರುತಿಸಲಾಗದ ಪೊಲೀಸ್ ಸಿಬ್ಬಂದಿಯ ಹೆಸರುಗಳು ಸೇರಿವೆ. ನ್ಯಾಯಾಲಯಕ್ಕೆ ಸಲ್ಲಿಸಲಾದ ಅರ್ಜಿಯ ಪ್ರಕಾರ, 2024ರ ನವೆಂಬರ್ 24ರಂದು ಬೆಳಿಗ್ಗೆ ಸುಮಾರು 8.45ರ ವೇಳೆಗೆ, ಸಂಭಲ್ನ ಮೊಹಲ್ಲಾ ಕೋಟ್ ಪ್ರದೇಶದಲ್ಲಿರುವ ಜಾಮಾ ಮಸೀದಿ ಸಮೀಪ, ಆಲಂ ತಳ್ಳುವ ಗಾಡಿಯಲ್ಲಿ ರಸ್ಕ್ ಮತ್ತು ಬಿಸ್ಕತ್ತುಗಳನ್ನು ಮಾರಾಟ ಮಾಡುತ್ತಿದ್ದಾಗ, ಪೊಲೀಸ್ ಸಿಬ್ಬಂದಿ ಜನಸಮೂಹದ ಮೇಲೆ ಗುಂಡು ಹಾರಿಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಈ ಪ್ರಕರಣವು ಕೊಲೆ ಯತ್ನದ ಆರೋಪಕ್ಕೆ ಸಂಬಂಧಿಸಿದೆ. ಸ್ಥಳೀಯ ಯುವಕ ಆಲಂ ಅವರಿಗೆ ಗುಂಡೇಟಿನಿಂದ ಗಂಭೀರ ಗಾಯಗಳಾಗಿವೆ ಎಂದು ಆರೋಪಿಸಲಾಗಿತ್ತು. ಪೊಲೀಸ್ ವರದಿ ಹಾಗೂ ವೈದ್ಯಕೀಯ ದಾಖಲೆಗಳನ್ನು ಪರಿಶೀಲಿಸಿದ ನ್ಯಾಯಾಲಯ, ಸಂತ್ರಸ್ತನಿಗೆ ನಿಜವಾಗಿಯೂ ಗುಂಡೇಟಿನ ಗಾಯಗಳಾಗಿವೆ ಎಂಬುದನ್ನು ಗಮನಿಸಿದೆ. ಆದರೆ ಗುಂಡು ಹಾರಿಸಿದ ವ್ಯಕ್ತಿಯ ಗುರುತು ಇನ್ನೂ ದೃಢಪಟ್ಟಿಲ್ಲ ಎಂದು ನ್ಯಾಯಾಲಯ ತಿಳಿಸಿದೆ. ಘಟನೆಯ ನಿಜವಾದ ಸಂಗತಿಗಳು ಸಂಪೂರ್ಣ ತನಿಖೆಯಿಂದಲೇ ಬಹಿರಂಗವಾಗಬೇಕೆಂದು ನ್ಯಾಯಾಲಯ ಅಭಿಪ್ರಾಯಪಟ್ಟಿತ್ತು. ಕೊಲೆ ಯತ್ನದಂತಹ ಗಂಭೀರ ಅಪರಾಧ ಪ್ರಕರಣದಲ್ಲಿ, ಸಂತ್ರಸ್ತನು ನಿಜವಾದ ಅಪರಾಧಿಯನ್ನು ತಪ್ಪಿಸಿ ಬೇರೆ ವ್ಯಕ್ತಿಯ ಮೇಲೆ ತಪ್ಪಾಗಿ ಆರೋಪ ಮಾಡುವ ಸಾಧ್ಯತೆ ಕಡಿಮೆ ಎಂಬುದನ್ನು ಸಿಜೆಎಂ ತಮ್ಮ ಆದೇಶದಲ್ಲಿ ದಾಖಲಿಸಿದ್ದಾರೆ. ಗುಂಡು ಹಾರಿಸುವುದು ಅಧಿಕೃತ ಕರ್ತವ್ಯದ ಭಾಗ ಎಂಬ ಪೊಲೀಸರ ಪ್ರಾಥಮಿಕ ವಾದವನ್ನು ನ್ಯಾಯಾಲಯ ತಿರಸ್ಕರಿಸಿದೆ. ಭಾರತದ ಸುಪ್ರೀಂ ಕೋರ್ಟ್ನ ತೀರ್ಪುಗಳನ್ನು ಉಲ್ಲೇಖಿಸಿರುವ ಸಿಜೆಎಂ, ವ್ಯಕ್ತಿಯ ಮೇಲೆ ಗುಂಡು ಹಾರಿಸುವುದನ್ನು ಅಧಿಕೃತ ಕರ್ತವ್ಯ ನಿರ್ವಹಣೆ ಎಂದು ಪರಿಗಣಿಸಲಾಗುವುದಿಲ್ಲ ಹಾಗೂ ಅಂತಹ ಕ್ರಮಕ್ಕೆ ಶಾಸನಬದ್ಧ ರಕ್ಷಣೆ ಅನ್ವಯಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದರು. ಪೊಲೀಸ್ ವರದಿಯು ಅನುಮಾನಾಸ್ಪದವಾಗಿದ್ದು, ಅದು ವೈದ್ಯಕೀಯ ಸಾಕ್ಷ್ಯಗಳಿಗೆ ಹೊಂದಿಕೆಯಾಗುವುದಿಲ್ಲ ಎಂದು ನ್ಯಾಯಾಲಯ ಗಮನಿಸಿದೆ. ವರದಿಯಲ್ಲಿ ‘ಗುಂಡೇಟಿನ ಗಾಯ’ ಹಾಗೂ ‘ಗಲಭೆಯ ವೇಳೆ ಪೊಲೀಸರು ಗುಂಡು ಹಾರಿಸಿದ್ದಾರೆ’ ಎಂಬ ಉಲ್ಲೇಖಗಳಿರುವುದನ್ನೂ ನ್ಯಾಯಾಲಯ ಸೂಚಿಸಿದೆ. ಪ್ರಾಥಮಿಕವಾಗಿ ಗುರುತಿಸಬಹುದಾದ ಅಪರಾಧ ನಡೆದಿರುವ ಸಾಧ್ಯತೆ ಇದೆ ಎಂದು ಅಭಿಪ್ರಾಯಪಟ್ಟ ನ್ಯಾಯಾಲಯ, ಸಂಪೂರ್ಣ ತನಿಖೆಯಿಂದ ಮಾತ್ರ ಸತ್ಯ ಬಹಿರಂಗವಾಗಲಿದೆ ಎಂದು ಹೇಳಿದೆ. ಗಾಯಗೊಂಡ ಯುವಕನ ತಂದೆ ಯಾಮೀನ್ ಸಲ್ಲಿಸಿದ್ದ ಅರ್ಜಿಯನ್ನು ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (ಬಿಎನ್ಎಸ್ಎಸ್) ಸೆಕ್ಷನ್ 173(4)ರ ಅಡಿಯಲ್ಲಿ ಅಂಗೀಕರಿಸಿರುವ ಸಿಜೆಎಂ ವಿಭಾಂಶು ಸುಧೀರ್, ಸಂಬಂಧಪಟ್ಟ ಪೊಲೀಸ್ ಅಧಿಕಾರಿಗಳ ವಿರುದ್ಧ ಎಫ್ಐಆರ್ ದಾಖಲಿಸುವಂತೆ ನಿರ್ದೇಶಿಸಿದ್ದರು.
ಜನವರಿ 22ರ ಯಂಕಂಚಿ ದಾವಲ್ ಮಲಿಕ್ ಜಾತ್ರೆ: ಮುಸ್ಲಿಂ ದೇವರಿಗೆ ಹಿಂದೂ ಪೂಜಾರಿ, ಸರ್ವ ಧರ್ಮ ಸಂಗಮ
ಸಿಂದಗಿ: ಭಕ್ತರ ಮನದಿಚ್ಛೆಯ ಸತ್ಯ ಅರಿತು. ಬೇಡಿದ ವರ ಕೊಡುವ ಭಕ್ತರ ಕಾಮಧೇನುವಾಗಿ ನೆಲೆ ನಿಂತು ಹಿಂದು-ಮುಸ್ಲಿಂರ ಸಾಮರಸ್ಯದ ಕೊಂಡಿಯಾಗಿ ಬೆಳೆದು ಬಂದಿರುವ ದಾವಲ್ ಮಲ್ಲಿಕ್ ದೇವರ ಜಾತ್ರೆ ನೆರೆಯ ನಾಲ್ಕು ರಾಜ್ಯಗಳಲ್ಲಿ ಪ್ರಸಿದ್ದಿ ಪಡೆದಿದೆ. ಇಂಥದ್ದೊಂದು ಜಾತ್ರೆಗೆ ಅಪಾರ ಪ್ರಮಾಣದ ಭಕ್ತಗಣ ಸಾಕ್ಷಿಯಾಗಲಿದೆ. ಈ ಜಾತ್ರೆಯು ಜನವರಿ 22ರ ಗುರುವಾರದಿಂದ ಜರುಗಲಿದೆ. ಹೌದು, ಉತ್ತರ ಕರ್ನಾಟಕದ
ನಾಸಾದಿಂದ ಗಗನಯಾನಿ ಸುನಿತಾ ವಿಲಿಯಮ್ಸ್ ನಿವೃತ್ತಿ
ಭಾರತ ಮೂಲದ ಸುನಿತಾ ಬಾಹ್ಯಾಕಾಶದಲ್ಲಿ ಮಾಡಿದ ಸಾಧನೆ ಅಪಾರ
ಸಿಎಂ ಹುದ್ದೆಯಲ್ಲಿ ಇದ್ದಾಗಲೇ ಚೀಲ ತುಂಬಿಸಿಕೊಳ್ಳಲು ಭ್ರಷ್ಟಾಚಾರ, ವಜಾಕ್ಕೆ ಸಿ ಟಿ ರವಿ ಆಗ್ರಹ
ಬೆಂಗಳೂರು: ಅಬಕಾರಿ ಸಚಿವರನ್ನು ವಜಾ ಮಾಡದೇ ಇಟ್ಟುಕೊಂಡಿದ್ದನ್ನು ನೋಡಿದಾಗ ಮುಖ್ಯಮಂತ್ರಿಗಳ ಕೃಪಾಕಟಾಕ್ಷದಲ್ಲೇ ಅಬಕಾರಿ ಸಚಿವರೂ ಭ್ರಷ್ಟಾಚಾರ ನಡೆಸುತ್ತಿರುವುದು ಸ್ಪಷ್ಟವಾಗುತ್ತದೆ ಎಂದು ಬಿಜೆಪಿ ರಾಷ್ಟ್ರೀಯ ಮಾಜಿ ಪ್ರಧಾನ ಕಾರ್ಯದರ್ಶಿ ಹಾಗೂ ವಿಧಾನಪರಿಷತ್ ಸದಸ್ಯ ಸಿ.ಟಿ. ರವಿ ಅವರು ಆರೋಪಿಸಿದ್ದಾರೆ. ಅಬಕಾರಿ ಇಲಾಖೆ ಭ್ರಷ್ಟಾಚಾರ ಒಂದು ವರ್ಷದ ಹಿಂದೆಯೇ ಜಗಜ್ಜಾಹೀರಾಗಿತ್ತು. ಆ ಸಂದರ್ಭದಲ್ಲಿ ತೇಪೆ ಹಾಕುವ ಕೆಲಸ ಮಾಡಿದ್ದರು. ಅವತ್ತೇ
ಮಹಾರಾಷ್ಟ್ರ | ಮೇಯರ್ ಪಟ್ಟಕ್ಕಾಗಿ ರಾಜ್ ಠಾಕ್ರೆಯ ಎಂಎನ್ಎಸ್ ಜೊತೆ ಶಿಂಧೆ ಶಿವಸೇನಾ ಮೈತ್ರಿ!
ಕಲ್ಯಾಣ್–ಡೊಂಬಿವಿಲಿಯಲ್ಲಿ ಬಿಜೆಪಿಯ ಮೇಯರ್ ಕನಸು ಭಗ್ನ!
ವಿಜಯನಗರ | ಗಣಿ ಇಲಾಖೆ ಅಧಿಕಾರಿಗಳಿಂದ ದಾಳಿ: 7 ಲಾರಿಗಳು ವಶ
ಹೊಸಪೇಟೆ: ನಗರದ ಹೊರವಲಯದ ಟಿಬಿ ಡ್ಯಾಂ ಚೆಕ್ ಪೋಸ್ಟ್ನಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು ಮಂಗಳವಾರ ಕಾರ್ಯಾಚರಣೆ ನಡೆಸಿ, ಅಕ್ರಮವಾಗಿ ಮರಳು, ಮಣ್ಣು (ಗ್ರಾವೆಲ್) ಹಾಗೂ ಬಿಳಿ ಕಲ್ಲುಗಳನ್ನು ಸಾಗಿಸುತ್ತಿದ್ದ 7 ಲಾರಿಗಳನ್ನು ವಶಪಡಿಸಿಕೊಂಡಿದ್ದಾರೆ. ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿದ ಅಧಿಕಾರಿಗಳು ವಾಹನಗಳನ್ನು ತಪಾಸಣೆ ನಡೆಸಿದಾಗ, ಒಂದು ಲಾರಿಯಲ್ಲಿ ಪರವಾನಗಿ ಇಲ್ಲದೆ ಅಕ್ರಮವಾಗಿ ಮರಳು ಸಾಗಿಸುತ್ತಿರುವುದು ಪತ್ತೆಯಾಗಿದೆ. ಇನ್ನುಳಿದ ಆರು ಲಾರಿಗಳಲ್ಲಿ ನಿಗದಿಗಿಂತ ಹೆಚ್ಚಿನ ಭಾರ (ಓವರ್ ಲೋಡ್) ಸಾಗಿಸುತ್ತಿರುವುದು ಕಂಡುಬಂದಿದೆ. ನೈಸರ್ಗಿಕ ಸಂಪನ್ಮೂಲಗಳನ್ನು ಲೂಟಿ ಮಾಡುತ್ತಿರುವವರ ವಿರುದ್ಧ ಕಟ್ಟುನಿಟ್ಟಿನ ಕಾನೂನು ಕ್ರಮ ಜರುಗಿಸಲು ಸಾರಿಗೆ ಇಲಾಖೆಗೆ ಶಿಫಾರಸು ಮಾಡಲಾಗುವುದು ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ. ಆಡಳಿತರೂಢ ಸರ್ಕಾರದ ರಾಜಕೀಯ ಪ್ರಭಾವಿಗಳ ಬೆಂಗಾವಲಿನಿಂದ ಈ ಅಕ್ರಮ ಮರಳು, ಮಣ್ಣು,ಹಾಗೂ ಕಲ್ಲು ದಂಧೆ ನಡೆಯುತ್ತಿದೆ ಇದಕ್ಕೆ ಕಡಿವಾಣ ಹಾಕುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ ಎಂಬ ಮಾತು ಸಾರ್ವಜನಿಕರ ಚರ್ಚೆಗೆ ಗ್ರಾಸವಾಯಿತು. ಜಿಲ್ಲೆಯಲ್ಲಿ ರಾಜಕೀಯ ಪ್ರಭಾವಿಗಳ ಬೆಂಗಾವಲಿನಿಂದಲೇ ಅಕ್ರಮ ಮರಳು ಮತ್ತು ಕಲ್ಲು ದಂಧೆ ಎಗ್ಗಿಲ್ಲದೆ ನಡೆಯುತ್ತಿದೆ. ರಾಜ್ಯ ಸರ್ಕಾರ ಹಾಗೂ ಸ್ಥಳೀಯ ಆಡಳಿತ ಇಂತಹ ದಂಧೆಗಳಿಗೆ ಕಡಿವಾಣ ಹಾಕುವಲ್ಲಿ ವಿಫಲವಾಗಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಿಜೆಪಿಯ ಅತ್ಯಂತ ಕಿರಿಯ ರಾಷ್ಟ್ರೀಯ ಅಧ್ಯಕ್ಷ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ನಿತಿನ್ ನಬಿನ್, ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿರುವ ಪಕ್ಷದ ಕಚೇರಿಯಲ್ಲಿ ಅಧಿಕೃತವಾಗಿ ಕಾರ್ಯಾರಂಭ ಮಾಡಿದ್ದಾರೆ. ನಿಕಟಪೂರ್ವ ಅಧ್ಯಕ್ಷ ಜೆಪಿ ನಡ್ಡಾ ಅವರಿಗೆ ನೀಡಿದಂತೆ, ನಿತಿನ್ ನಬಿನ್ ಅವರಿಗೂ ರಾಜ್ಯಸಭಾ ಸ್ಥಾನ ನೀಡಲಾಗುವುದೇ ಎಂಬ ಚರ್ಚೆ ಶುರುವಾಗಿದೆ. ಆದರೆ ಪಕ್ಷದ ಉನ್ನತ ನಾಯಕತ್ವವು ನಿತಿನ್ ನಬಿನ್ ಬಿಹಾರ ಬಿಜೆಪಿ ಶಾಸಕರಾಗಿ ಮುಂದುವರೆಯಬೇಕು ಎಂದು ಬಯಸುತ್ತದೆ. ಏಕೆ? ಇಲ್ಲಿದೆ ನೋಡಿ ಸಮಗ್ರ ವಿಶ್ಲೇಷಣೆ.
ಕಳ್ಳನಿಗೆ ಸುಳ್ಳ ಸಾಕ್ಷಿ!: ಭಾರತದಲ್ಲಿ ಆಡೊಲ್ಲ ಎಂದ ಬಾಂಗ್ಲಾ ಬೆನ್ನಿಗೆ ನಿಂತ ಪಾಕ್; ಉಳಿದವರ ಎತ್ತಿ ಕಟ್ಟುವ ಹುನ್ನಾರ
PCB Supports BCB- ಭಾರತದಲ್ಲಿ ಟಿ20 ವಿಶ್ವಕಪ್ ಪಂದ್ಯಗಳನ್ನು ಆಡಲು ನಿರಾಕರಿಸಿರುವ ಬಾಂಗ್ಲಾದೇಶದ ಪರವಾಗಿ ಇದೀಗ ಪಾಕಿಸ್ತಾನ ಕ್ರಿಕೆಟ್ ಮಂಡಳಿ ನಿಂತಿದೆ. ಮಾತ್ರವಲ್ಲದೆ ಈ ವಿಚಾರವಾಗಿ ಐಸಿಸಿಯ ಉಳಿದ ರಾಷ್ಟ್ರಗಳನ್ನು ಭಾರತದ ವಿರುದ್ಧ ಎತ್ತಿ ಕಟ್ಟುವ ಯತ್ನಕ್ಕೆ ಮುಂದಾಗಿದೆ. ಬಿಸಿಸಿಐ- ಬಿಸಿಬಿ ಬಿಕ್ಕಟ್ಟು ವಿಚಾರವಾಗಿ ನಡೆಯಲಿರುವ ಐಸಿಸಿ ಸಭೆಗೂ ಮುಂಚಿತವಾಗಿ ಈ ಬೆಳವಣಿಗೆ ನಡೆದಿದೆ. ಒಟ್ಟಾರೆ ಈಗ ಚೆಂಡು ಐಸಿಸಿ ಅಂಗಳದಲ್ಲಿದೆ. ಈ ಬೆಳವಣಿಗೆಯು ಕ್ರಿಕೆಟ್ ಲೋಕದಲ್ಲಿ ತೀವ್ರ ಕುತೂಹಲ ಮೂಡಿಸಿದೆ.
SIR ಸುಳಿಯಲ್ಲಿ ಮೊಹಮ್ಮದ್ ಶಮಿ - 'ಮ್ಯಾಪ್ ಆಗದ ಮತದಾರ' ಎಂದು ಗುರುತು - ಪೌರತ್ವ ಸಾಬೀತಿಗಾಗಿ ಕ್ರಿಕೆಟಿಗನ ಸಾಹಸ
ಭಾರತದ ಕ್ರಿಕೆಟ್ ಆಟಗಾರ ಮೊಹಮ್ಮದ್ ಶಮಿ ಅವರು ತಮ್ಮ ಪೌರತ್ವ ಮತ್ತು ಮತದಾರರ ಪಟ್ಟಿಯ ಖಚಿತತೆಗಾಗಿ ಕೋಲ್ಕತ್ತಾದಲ್ಲಿ ವಿಚಾರಣೆಗೆ ಹಾಜರಾದರು. ತಮ್ಮ ಪೋಷಕರ ಹೆಸರುಗಳ ತಾಂತ್ರಿಕ ಅಸಮಂಜಸತೆಯಿಂದಾಗಿ ಈ ಪ್ರಕ್ರಿಯೆ ನಡೆಯಿತು. ಶಮಿ ಅವರು ಹೆಮ್ಮೆಯ ಭಾರತೀಯ ಮತ್ತು ಬಂಗಾಳದ ನಾಗರಿಕ ಎಂದು ಸ್ಪಷ್ಟಪಡಿಸಿದರು. ಪಾಸ್ಪೋರ್ಟ್ ಸಲ್ಲಿಸಿ ಗುರುತನ್ನು ಖಚಿತಪಡಿಸಿದರು. ಚುನಾವಣಾ ಪ್ರಕ್ರಿಯೆಯಲ್ಲಿ ತಮ್ಮ ಸಹಭಾಗಿತ್ವದ ಬಗ್ಗೆ ಸಂತಸ ವ್ಯಕ್ತಪಡಿಸಿದರು.
'ಕೆಪಿಎಸ್ ಮ್ಯಾಗ್ನೆಟ್ ಯೋಜನೆ': 40,000 ಸರ್ಕಾರಿ ಶಾಲೆ ಮುಚ್ಚಲು ಸರ್ಕಾರ ಆದೇಶ, ಜನಾಕ್ರೋಶ
ಬೆಂಗಳೂರು: ಕರ್ನಾಟಕದಲ್ಲಿನ ಬಡ ಮಕ್ಕಳಿಂದ ಶಿಕ್ಷಣವನ್ನು ಕಸಿಯುವ ಉದ್ದೇಶದಿಂದ ರಾಜ್ಯ ಸರ್ಕಾರ 'ಕೆಪಿಎಸ್ ಮ್ಯಾಗ್ನೆಟ್' ಹೆಸರಿನಲ್ಲಿ 40,000ಕ್ಕೂ ಅಧಿಕ ಸರ್ಕಾರಿ ಶಾಲೆಗಳನ್ನು ಮುಚ್ಚಲು ಹೊರಟಿದೆ. ಈ ಸಂಬಂಧ ವಿವಿಧ ಸಂಘಟನೆಗಳು 'ಕೆಪಿಎಸ್ ಮ್ಯಾಗ್ನೆಟ್ ಯೋಜನೆ ಕೈಬಿಡಿ! ಸಾರ್ವಜನಿಕ ಶಿಕ್ಷಣ ಉಳಿಸಿ, ನಮ್ಮೂರ ಸರ್ಕಾರಿ ಶಾಲೆಗಳನ್ನು ಉಳಿಸಿ' ಎಂಬ ಅಭಿಯಾನ ಆರಂಭಿಸಿವೆ. ಜೊತಗೆ ಸರ್ಕಾರ ನಿರ್ಧಾರ ಕುರಿತು ಆದೇಶವನ್ನು
DHARAWADA | ಲ್ಯಾಬ್ ಗೆಂದು ಹೋದ ಯುವತಿಯ ಮೃತದೇಹ ಕೊಲೆಯಾದ ಸ್ಥಿತಿಯಲ್ಲಿ ಪತ್ತೆ
ಪ್ಯಾರಾ ಮೆಡಿಕಲ್ ಶಿಕ್ಷಣ ಮುಗಿಸಿ ಉದ್ಯೋಗದ ಹುಡುಕಾಟದಲ್ಲಿದ್ದ ಝಕಿಯಾ
ಕರ್ನಾಟಕದ ರಾಜಕೀಯ ಸ್ಥಿತಿಗೆ ಕೈ ಮುಗಿದು ಸುಮ್ಮನಾದ ಹೈಕಮಾಂಡ್! ಮಲ್ಲಿಕಾರ್ಜುನ ಖರ್ಗೆ ನಿರಂತರ ಮೌನದ ಅರ್ಥನೇನು?
ರಾಜ್ಯ ಕಾಂಗ್ರೆಸ್ನಲ್ಲಿ ನಾಯಕತ್ವ ಬಿಕ್ಕಟ್ಟು ತೀವ್ರಗೊಂಡಿದ್ದು, ಹೈಕಮಾಂಡ್ ಮೌನ ಮುಂದುವರೆಸಿದೆ. ಮುಖ್ಯಮಂತ್ರಿ ಸ್ಥಾನಕ್ಕಾಗಿ ಸಿದ್ದರಾಮಯ್ಯ ಬಣದ ದಾಳಗಳು ಯಶಸ್ವಿಯಾಗುತ್ತಿದ್ದು, ಡಿಕೆ ಶಿವಕುಮಾರ್ ಬಣದ ಪ್ರಯತ್ನಗಳು ವಿಫಲವಾಗುತ್ತಿವೆ. ಈ ನಡುವೆ, ಡಿಕೆ ಸುರೇಶ್ ಅವರ ತಾಳ್ಮೆಯ ಮಾತುಗಳು ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿವೆ.
ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ ಬಾಲಿವುಡ್ನಲ್ಲಿ ಅವಕಾಶಗಳು ಕಡಿಮೆಯಾಗಲು ತಮ್ಮ ಧರ್ಮವೇ ಕಾರಣ ಎಂದು ಹೇಳಿಕೆ ನೀಡಿದ ಬೆನ್ನಲ್ಲೇ, ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರ ಹಳೆಯ ಸಂದರ್ಶನವೊಂದು ವೈರಲ್ ಆಗಿದ್ದು,ಇದರಲ್ಲಿ 'ಜೈ ಹೋ' ಹಾಡನ್ನು ರೆಹಮಾನ್ ಸಂಯೋಜಿಸಿಲ್ಲ, ಬದಲಿಗೆ ಸುಖವಿಂದರ್ ಸಿಂಗ್ ಸಂಯೋಜಿಸಿದ್ದಾರೆ ಎಂದು ಆರ್.ಜಿ.ವಿ ಹೇಳಿದ್ದಾರೆ.ಸದ್ಯ ಇದಕ್ಕೆ ಸ್ಪಷ್ಟನೆ ನೀಡಲು ಮುಂದಾಗಿರುವ ಆರ್.ಜಿ.ವಿ ನಾನು ಆ ಅರ್ಥದಲ್ಲಿ ಹೇಳಿಲ್ಲ ಎಂದು ಸ್ಪಷ್ಟನೆ ನೀಡಲು ಮುಂದಾಗಿದ್ದಾರೆ.
ಸಿನೆಮಾದಿಂದ ರಾಜಕೀಯಕ್ಕೆ: ಗೆದ್ದವರೆಷ್ಟು? ಬಿದ್ದವರೆಷ್ಟು?
ತಮಿಳುನಾಡು ರಾಜಕಾರಣದಲ್ಲಿ ನಟ ದಳಪತಿ ವಿಜಯ್ ಅವರ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷ ಈಗಾಗಲೇ ಅಸ್ತಿತ್ವದಲ್ಲಿರುವ ಎಲ್ಲ ಪಕ್ಷಗಳಿಗೂ ನಡುಕ ಹುಟ್ಟಿಸಿರುವಾಗಲೇ, ಅವರ ಸಿನೆಮಾ ಬದುಕಿನ ಕೊನೇ ಚಿತ್ರಕ್ಕೆ ದೊಡ್ಡ ಸವಾಲು ಎದುರಾಗಿದೆ. ಜನನಾಯಗನ್ ಸಿನೆಮಾ ಬಿಡುಗಡೆಗೆ ಸೆನ್ಸರ್ ಮಂಡಳಿಯಿಂದ ಅಡೆತಡೆ ಉಂಟಾಗಿದೆ. ಸೆನ್ಸರ್ ಸರ್ಟಿಫಿಕೇಟ್ ಸಿಗದ ಹಿನ್ನೆಲೆಯಲ್ಲಿ ಸಿನೆಮಾ ಬಿಡುಗಡೆ ಮುಂದೂಡಲಾಗಿದೆ. ನಿರ್ಮಾಪಕರ ಅರ್ಜಿಯನ್ನು ವಿಚಾರಣೆಗೆ ತೆಗೆದುಕೊಳ್ಳಲು ಸುಪ್ರೀಂ ಕೋರ್ಟ್ ನಿರಾಕರಿಸಿದ್ದು, ಮದ್ರಾಸ್ ಹೈಕೋರ್ಟ್ನ ವಿಭಾಗೀಯ ಪೀಠದೆದುರು ಹೋಗಲು ಸೂಚಿಸಿದೆ. ತಮ್ಮ ನೆಚ್ಚಿನ ನಟನ ಚಿತ್ರಕ್ಕಾಗಿ ಕಾದಿದ್ದ ಅಭಿಮಾನಿಗಳಿಗೆ ಇದು ನಿರಾಸೆ ತಂದಿದೆ. ಇನ್ನೊಂದೆಡೆ ಇದು ವಿಜಯ್ ಪಾಲಿನ ರಾಜಕೀಯ ಸವಾಲಾಗಿಯೂ ಕಾಣತೊಡಗಿದೆ. ರಾಜಕೀಯಕ್ಕಾಗಿ ಈಗಾಗಲೇ ಸಿನೆಮಾ ರಂಗಕ್ಕೆ ವಿದಾಯ ಘೋಷಿಸಿರುವ ವಿಜಯ್ ಎದುರಿನ ದಾರಿ ಸುಲಭವಿಲ್ಲ ಎಂಬ ಸೂಚನೆ ಇದಾಗಿರುವಂತಿದೆ. ಅವರು ಸಿನೆಮಾದಿಂದ ಸಿಎಂ ಕುರ್ಚಿಯೆಡೆಗಿನ ಹಾದಿಗೆ ಸಜ್ಜಾಗಿರುವ ಹೊತ್ತಲ್ಲಿನ ಸವಾಲು ಇದು. 2026ರಲ್ಲಿ ಇತಿಹಾಸ ಪುನರಾವರ್ತನೆಯಾಗುತ್ತದೆ ಎಂದು ಹೇಳುವ ಮೂಲಕ ಅವರು, ಮತ್ತೊಮ್ಮೆ ಸಿನೆಮಾ ಸ್ಟಾರ್ ರಾಜಕೀಯದಲ್ಲಿ ಅಧಿಕಾರಕ್ಕೇರುವ ಭರವಸೆ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅವರು ಈಗ ತಮಿಳುನಾಡು ರಾಜಕೀಯದಲ್ಲಿ ನಿಜವಾಗಿಯೂ ಇತಿಹಾಸ ಪುನರಾವರ್ತನೆಗೆ ಕಾರಣರಾಗುತ್ತಾರೆಯೇ ಎಂಬ ಕುತೂಹಲವಿದೆ. ಸಿಎಂ ಆಗಬೇಕೆಂದು ರಾಜಕೀಯಕ್ಕೆ ಬಂದ ಚಿತ್ರನಟರಲ್ಲಿ ಗೆದ್ದವರೆಷ್ಟು, ವಿಫಲರಾದವರೆಷ್ಟು? ರಾಜಕೀಯ ಏಕೆ ಚಿತ್ರನಟರ ಪಾಲಿನ ಆಕರ್ಷಣೆಯಾಗಿದೆ ಅಥವಾ ರಾಜಕೀಯ ಹೇಗೆ ಚಿತ್ರನಟರನ್ನು ಬಂಡವಾಳ ಮಾಡಿಕೊಳ್ಳಲು ನೋಡುತ್ತದೆ? ಭಾಗ - 1 ಸಿನೆಮಾ ಮತ್ತು ರಾಜಕಾರಣದ ಭಾರೀ ನಂಟಿನ ಬಗ್ಗೆ ಹೇಳುವಾಗ ತಮಿಳುನಾಡು ಮತ್ತು ಆಂಧ್ರವನ್ನು ಬಿಟ್ಟು ಮಾತಾಡುವುದು ಸಾಧ್ಯವೇ ಇಲ್ಲ. ಹಾಗೆ ನೋಡಿದರೆ, ಸಿನೆಮಾ ಮತ್ತು ರಾಜಕೀಯದ ನಂಟು ಉತ್ತರಕ್ಕಿಂತ ದಕ್ಷಿಣ ಭಾರತದಲ್ಲೇ ಹೆಚ್ಚು. ಕರ್ನಾಟಕದಲ್ಲೂ ರಾಜಕೀಯ ಮತ್ತು ಸಿನೆಮಾ ರಂಗದ ನಡುವೆ ಒಂದು ನಿರಂತರ ಬೆಸುಗೆ ಇದ್ದೇ ಇದೆ. ತಮಿಳುನಾಡಿನಲ್ಲಿ ಸಿನೆಮಾ ರಂಗದ ಐವರು ಮುಖ್ಯಮಂತ್ರಿ ಹುದ್ದೆ ಅಲಂಕರಿಸಿದರೆಂಬುದು ದೊಡ್ಡ ಸಂಗತಿ. ಸಿ.ಎನ್. ಅಣ್ಣಾದೊರೈ, ಎಂ.ಜಿ. ರಾಮಚಂದ್ರನ್, ಎಂ. ಕರುಣಾನಿಧಿ, ಜಾನಕಿ ರಾಮಚಂದ್ರನ್ ಮತ್ತು ಜೆ. ಜಯಲಲಿತಾ ಆ ಸಾಲಿನಲ್ಲಿರುವ ಹೆಸರುಗಳು. ಇದಲ್ಲದೆ ತಮಿಳಿನ ಸೂಪರ್ ಸ್ಟಾರ್ಗಳಾದ ರಜನಿಕಾಂತ್, ಕಮಲ್ ಹಾಸನ್, ವಿಜಯಕಾಂತ್, ಶಿವಾಜಿ ಗಣೇಶನ್, ಟಿ. ರಾಜೇಂದರ್, ಶರತ್ ಕುಮಾರ್ ಎಲ್ಲರೂ ರಾಜಕೀಯದಲ್ಲಿ ಒಂದಲ್ಲ ಒಂದು ಹಂತದಲ್ಲಿ ಗುರುತಿಸಿಕೊಂಡವರೇ ಆಗಿದ್ದಾರೆ. ಈಗ ರಾಜಕಿಯಕ್ಕೆ ಇಳಿದಿರುವವರು ದಳಪತಿ ವಿಜಯ್. ಅವರ ಪಕ್ಷ ತಮಿಳಗ ವೆಟ್ರಿ ಕಳಗಂ ದೊಡ್ಡ ಸದ್ದು ಮಾಡುತ್ತಿದ್ದು, ಈ ಸಲದ ಚುನಾವಣೆಯಲ್ಲಿ ಇತಿಹಾಸ ಪುನರಾವರ್ತಿಸುವ ಮಹತ್ವಾಕಾಂಕ್ಷೆ ಹೊಂದಿದೆ. 2026ರ ವಿಧಾನಸಭಾ ಚುನಾವಣೆಗೆ ತಮಿಳುನಾಡು ಸಜ್ಜಾಗುತ್ತಿರುವಾಗ, ಎಲ್ಲರ ಕಣ್ಣು ನೆಟ್ಟಿರುವುದು ಟಿವಿಕೆ ಮೇಲೆ. ತಮಿಳು ರಾಜಕಾರಣದಲ್ಲಿ ಚಿತ್ರರಂಗದವರ ಸ್ಥಾನ ಬಹಳ ಹಿಂದಿನಿಂದಲೂ ಪ್ರಬಲವಾಗಿದೆ. ತಮಿಳುನಾಡಿನಲ್ಲಿ ಸಿನೆಮಾ ಕೇವಲ ಮನರಂಜನೆಗೆ ಸೀಮಿತವಾಗುಳಿಯದೆ, ರಾಜಕೀಯವನ್ನೇ ಬದಲಿಸಿದ ಹೆಚ್ಚುಗಾರಿಕೆ ಹೊಂದಿದೆ. ಅಣ್ಣಾದೊರೈ ತಮಿಳುನಾಡು ರಾಜಕೀಯದಲ್ಲಿ ಸಿನೆಮಾ ರಂಗದ ತಾಕತ್ತು ದಾಖಲಿಸಿದ ಮೊದಲ ನಾಯಕರಲ್ಲಿ ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಸ್ಥಾಪಕ ಸಿ.ಎನ್. ಅಣ್ಣಾದೊರೈ ಪ್ರಮುಖರು. ಅವರು ಸಿನೆಮಾ ನಟರಲ್ಲದಿದ್ದರೂ ತಮ್ಮ ಬರವಣಿಗೆ ಮತ್ತು ಭಾಷಣಕ್ಕೆ ಹೆಸರಾಗಿದ್ದರು. ರಾಜಕೀಯ ಪ್ರಚಾರಕ್ಕೆ ತಮಿಳು ಸಿನೆಮಾಗಳನ್ನು ಬಳಸುವ ಮೂಲಕ ಹೊಸ ಪರಂಪರೆಯೊಂದಕ್ಕೆ ನಾಂದಿ ಹಾಡಿದ್ದವರೂ ಅವರೇ. ರಾಜ್ಯಸಭೆಯಲ್ಲಿನ ಭಾಷಣಗಳಿಗಾಗಿ ಅತ್ಯುತ್ತಮ ಸಂಸದೀಯ ಪಟು ಎಂದು ನೆಹರೂ ಅವರಿಂದ ಹೊಗಳಿಸಿಕೊಂಡಿದ್ದರೆಂದು ಹೇಳಲಾಗುತ್ತದೆ. ತಮಿಳು ರಾಜಕಾರಣದಲ್ಲಿ ಸೈದ್ಧಾಂತಿಕ ಕಾರಣಕ್ಕೂ ಅಣ್ಣಾದೊರೈ ಬಹಳ ದೊಡ್ಡ ಹೆಸರು. ಅವರ ಸರಕಾರ ಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬಂದ ಮೊದಲ ಕಾಂಗ್ರೆಸೇತರ ಸರಕಾರವಾಗಿತ್ತು. 1967ರಿಂದ 1969ರವರೆಗೆ ಅವರು ತಮಿಳುನಾಡು ಮುಖ್ಯಮಂತ್ರಿಯಾಗಿದ್ದರು. ಎಂ.ಜಿ. ರಾಮಚಂದ್ರನ್ ಅಣ್ಣಾದೊರೈ ಅವರ ಜೊತೆಗೇ ಕೆಲಸ ಮಾಡಿದ್ದ ಎಂ.ಜಿ. ರಾಮಚಂದ್ರನ್, ತಮಿಳು ಚಿತ್ರರಂಗದ ಐಕಾನ್ ಹೇಗೋ ಹಾಗೆಯೇ ತಮಿಳು ರಾಜಕೀಯದಲ್ಲೂ ಅಸಾಮಾನ್ಯ ಹೆಸರು. ಸಿನೆಮಾ ತಾರೆಯರು ಹಾಗೂ ರಾಜಕೀಯದ ನಡುವಿನ ನಂಟು ಗಟ್ಟಿಯಾಗಿ ಬೆಳೆದದ್ದು ಎಂಜಿಆರ್ ಮೂಲಕ. ತೆರೆಯ ಮೇಲಿನ ಅವರ ಇಮೇಜ್ ರಾಜಕೀಯದಲ್ಲೂ ಅಷ್ಟೇ ಪ್ರಭಾವಶಾಲಿಯಾಯಿತು. ವಿಶೇಷವೆಂದರೆ, ಇಂಥ ಎಂಜಿಆರ್ ಸಿನೆಮಾದಿಂದ ರಾಜಕೀಯಕ್ಕೆ ಬರುವ ಮೊದಲೇ ಅವರ ಬೇರುಗಳು ರಾಜಕೀಯದಲ್ಲಿದ್ದವು. ಅವರು ಡಿಎಂಕೆ ಸೇರುವ ಮೊದಲು 1953ರವರೆಗೆ ಕಾಂಗ್ರೆಸ್ನಲ್ಲಿದ್ದರು. ಡಿಎಂಕೆ ಒಡೆದಾಗ ಅವರು ‘ಅಖಿಲ ಭಾರತ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ’ (ಎಐಎಡಿಎಂಕೆ) ಪಕ್ಷ ಸ್ಥಾಪಿಸಿದರು ಮತ್ತು ತಮಿಳುನಾಡಿನ ಮುಖ್ಯಮಂತ್ರಿಯಾದರು. ಅವರ ಚಲನಚಿತ್ರಗಳು ಜನರೊಂದಿಗೆ ಆಳವಾದ ಭಾವನಾತ್ಮಕ ಬಾಂಧವ್ಯ ಹೊಂದಿದ್ದವು. ಜಯಲಲಿತಾ ಎಂಜಿಆರ್ ಅವರಂತೆಯೇ ಸಿನೆಮಾದಿಂದ ರಾಜಕೀಯಕ್ಕೆ ಬಂದವರಲ್ಲಿ ಬಹಳ ದೊಡ್ಡ ಹೆಸರು ಜಯಲಲಿತಾ ಅವರದು. ಎಂಜಿಆರ್ ಜೊತೆ ಹಲವಾರು ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದ ಕರ್ನಾಟಕ ಮೂಲದ ಜಯಲಲಿತಾ ರಾಜಕೀಯದಲ್ಲೂ ಆವರ ಹೆಜ್ಜೆಯನ್ನೇ ಅನುಸರಿಸಿ ಬಂದರು. ಅವರ ಪಕ್ಷದಲ್ಲಿ ಅತ್ಯುನ್ನತ ಹುದ್ದೆಗೆ ಏರಿದರು ಮಾತ್ರವಲ್ಲ, 1991ರಿಂದ 2016ರವರೆಗಿನ ಅವಧಿಯಲ್ಲಿ ಸುಮಾರು 16 ವರ್ಷಗಳ ಕಾಲ ಐದು ಬಾರಿ ತಮಿಳುನಾಡು ಮುಖ್ಯಮಂತ್ರಿಯಾಗಿ ಆಳ್ವಿಕೆ ನಡೆಸಿದರು. ತಮಿಳು ರಾಜಕಾರಣದಲ್ಲಿ ಅಮ್ಮ ಎಂದೇ ಗುರುತಾದರು. ಎಂ. ಕರುಣಾನಿಧಿ ತಮಿಳು ಸಾಹಿತ್ಯದಲ್ಲಿ ದೊಡ್ಡ ಹೆಸರಾಗಿದ್ದ ಕರುಣಾನಿಧಿ ಅವರು, ಸಿನೆಮಾಗಳಲ್ಲಿನ ಬರವಣಿಗೆ ಮೂಲಕವೂ ಮನೆಮಾತಾಗಿದ್ದರು. 1960ರ ದಶಕದಲ್ಲಿ ರಾಜಕಾರಣಕ್ಕೆ ಬಂದರು. ಅಣ್ಣಾದೊರೈ ಮರಣದ ಬಳಿಕ ಡಿಎಂಕೆ ಪಕ್ಷದ ನಾಯಕತ್ವ ವಹಿಸಿಕೊಂಡರು. ಅವರು ಐದು ಬಾರಿ ತಮಿಳುನಾಡು ಮುಖ್ಯಮಂತ್ರಿಯಾದರು. ವಿ.ಎನ್. ಜಾನಕಿ ರಾಮಚಂದ್ರನ್ ಚಿತ್ರನಟಿಯಾಗಿದ್ದ ಜಾನಕಿ ಅವರು ಎಂಜಿಆರ್ ಪತ್ನಿಯೂ ಹೌದು. ಎಂಜಿಆರ್ ಮರಣದ ಬಳಿಕ ಸಿಎಂ ಹುದ್ದೆಗೇರಿದರಾದರೂ, ಅವರು ಅಧಿಕಾರದಲ್ಲಿದ್ದದ್ದು 23 ದಿನಗಳು ಮಾತ್ರ. ಅದೇನೇ ಇದ್ದರೂ, ತಮಿಳುನಾಡಿನ ಮೊದಲ ಮಹಿಳಾ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆ ಅವರದು. ದೇಶದ ಇತಿಹಾಸದಲ್ಲಿ ಸಿಎಂ ಹುದ್ದೆಗೇರಿದ ಮೊದಲ ನಟಿ ಎಂಬ ಹೆಗ್ಗಳಿಕೆಗೂ ಅವರು ಪಾತ್ರರಾಗಿದ್ದಾರೆ. ತಮಿಳು ರಾಜಕಾರಣದಲ್ಲಿ ಜಯಲಲಿತಾ ಯುಗದ ನಂತರ ಚಿತ್ರರಂಗದ ಸೂಪರ್ ಸ್ಟಾರ್ಗಳು ಅಷ್ಟೇ ಮಟ್ಟದ ಪ್ರಭಾವ ಬೀರುವುದು ಸಾಧ್ಯವಾಗಿಲ್ಲ. ಸಿಎಂ ಹುದ್ದೆಯೆಡೆಗಿನ ಹಾದಿಯಲ್ಲಿ ಹೋಗಬಯಸಿದ್ದವರ ಕನಸುಗಳು ಅರ್ಧದಲ್ಲೇ ಮುರಿದಿವೆ. ಶಿವಾಜಿ ಗಣೇಶನ್, ವಿಜಯಕಾಂತ್, ಆರ್. ಶರತ್ ಕುಮಾರ್, ರಜನಿಕಾಂತ್, ಕಮಲ್ ಹಾಸನ್, ನೆಪೋಲಿಯನ್ ರಾಜಕೀಯಕ್ಕೆ ಬಂದರೂ, ರಾಜಕೀಯ ರಂಗ ಅವರನ್ನು ಅಷ್ಟಾಗಿ ಸ್ವೀಕರಿಸದೇ ಹೋಯಿತು. ನಟಿಯರಾದ ಖುಷ್ಬೂ, ಗೌತಮಿಯಂಥವರೂ ರಾಜಕೀಯದಲ್ಲಿ ಕಾಣಿಸಿರುವುದು ಹೌದು. ತಮಿಳುನಾಡಿನಲ್ಲಿ ಎಸ್.ಎಸ್. ರಾಜೇಂದ್ರನ್ ಶಾಸಕರಾಗಿ ಆಯ್ಕೆಯಾದ ಮೊದಲ ನಟ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಹಾಗೆಯೇ ನಟ ನೆಪೋಲಿಯನ್ ಕೇಂದ್ರ ಸಚಿವರಾಗಿ ಮತ್ತು ನಟಿ ಖುಷ್ಬೂ ಸುಂದರ್ ವಿವಿಧ ಪಕ್ಷಗಳಲ್ಲಿ ಗುರುತಿಸಿಕೊಂಡು ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯರಾಗಿಯೂ ಕಾರ್ಯನಿರ್ವಹಿಸಿದ್ದಾರೆ. ತಮಿಳು ಸಿನೆಮಾ ರಂಗದಲ್ಲಿ ಮತ್ತೊಂದು ದೊಡ್ಡ ಹೆಸರಾಗಿದ್ದ ಶಿವಾಜಿ ಗಣೇಶನ್ ರಾಜಕೀಯ ಒಲವು ಹೊಂದಿದ್ದವರಾಗಿದ್ದರೂ, ಅವರಿಗೆ ಎಂಜಿಆರ್ ಅವರಂತೆ ರಾಜಕೀಯ ವ್ಯಕ್ತಿತ್ವ ಬೆಳೆಸಿಕೊಳ್ಳುವುದು ಸಾಧ್ಯವಾಗಲೇ ಇಲ್ಲ. 1988ರಲ್ಲಿ ಅವರು ತಮಿಳಗ ಮುನ್ನೇಟ್ರ ಮುನ್ನನಿ (ಟಿಎಂಎಂ) ಪಕ್ಷ ಸ್ಥಾಪಿಸಿದರು. ಆದರೆ 1989ರ ವಿಧಾನಸಭಾ ಚುನಾವಣೆಯಲ್ಲಿ ಒಂದೇ ಒಂದು ಸ್ಥಾನ ಗೆಲ್ಲುವುದೂ ಅದಕ್ಕೆ ಸಾಧ್ಯವಾಗಲಿಲ್ಲ. ಆಮೇಲೆ ಶಿವಾಜಿ ಗಣೇಶನ್ ರಾಜಕೀಯದಿಂದಲೇ ಹಿಂದೆ ಸರಿದರು. 2005ರಲ್ಲಿ ದೇಶೀಯ ‘ಮುರ್ಪೋಕ್ಕು ದ್ರಾವಿಡ ಕಳಗಂ’ (ಡಿಎಂಡಿಕೆ) ಸ್ಥಾಪಿಸಿದ ವಿಜಯಕಾಂತ್, ಜಯಲಲಿತಾ ನಂತರ ಗಮನಾರ್ಹ ಚುನಾವಣಾ ಯಶಸ್ಸನ್ನು ಸಾಧಿಸಿದ ಮತ್ತು ತಮಿಳುನಾಡು ವಿಧಾನಸಭೆಯಲ್ಲಿ ವಿಪಕ್ಷ ನಾಯಕನಾಗಿ ಸೇವೆ ಸಲ್ಲಿಸಿದ ಏಕೈಕ ನಟ. ರಜನಿಕಾಂತ್ ಡಿಸೆಂಬರ್ 2017ರಲ್ಲಿ ರಾಜಕೀಯ ಪ್ರವೇಶಿಸುವ ನಿರ್ಧಾರ ಘೋಷಿಸಿದರು. 2020ರಲ್ಲಿ ಅವರು ತಮ್ಮ ರಾಜಕೀಯ ಪಕ್ಷ ‘ರಜನಿ ಮಕ್ಕಳ್ ಮಂದ್ರಂ’ ಅನ್ನು ಪ್ರಾರಂಭಿಸುವ ಘೋಷಣೆಯನ್ನೂ ಮಾಡಿದ್ದರು. ಆದರೆ ಅದಾವುದೂ ಈಡೇರಲಿಲ್ಲ. ನಂತರ ಅವರು ಅನಾರೋಗ್ಯದ ಕಾರಣ ಮುಂದೆಮಾಡಿ ರಾಜಕೀಯದಿಂದ ದೂರವಾದರು. 2018ರಲ್ಲಿ ಕಮಲ್ ಹಾಸನ್ ರಾಜಕೀಯ ಪ್ರವೇಶದ ಘೋಷಣೆ ಮಾಡಿದರು. ಅವರು ಸ್ಥಾಪಿಸಿದ ‘ಮಕ್ಕಳ್ ನೀಧಿ ಮಯ್ಯಮ್’ ಪಕ್ಷ ಕೂಡ ಲೋಕಸಭೆಯಲ್ಲಾಗಲೀ ವಿಧಾನಸಭೆಯಲ್ಲಾಗಲೀ ಒಂದೇ ಒಂದು ಸ್ಥಾನ ಗೆಲ್ಲಲೂ ಆಗದೆ ಮೂಲೆಗುಂಪಾಯಿತು. ಬಳಿಕ ಡಿಎಂಕೆಗೆ ಬೆಂಬಲ ಘೋಷಿಸಿದ ಅವರು ಈಗ ರಾಜ್ಯಸಭಾ ಸದಸ್ಯರಾಗಿದ್ದಾರೆ. ಹೀಗಿರುವಾಗ, ಜಯಲಲಿತಾ ನಂತರ ಚಿತ್ರರಂಗದ ಮತ್ತೊಬ್ಬರು ತಮಿಳುನಾಡಿನ ಮುಖ್ಯಮಂತ್ರಿ ಹುದ್ದೆಯತ್ತ ಹೋಗಬಹುದು ಎಂಬ ನಿರೀಕ್ಷೆ ಹುಟ್ಟುಹಾಕಿರುವುದು ನಟ ದಳಪತಿ ವಿಜಯ್. ಸದ್ಯದ ತಮಿಳು ರಾಜಕಾರಣವೇನಿದ್ದರೂ ಡಿಎಂಕೆ ಮತ್ತು ಎಐಎಡಿಎಂಕೆ ನಡುವಿನ ಕದನ ಮಾತ್ರವಾಗಿರುವಾಗ, ವಿಜಯ್ ಅವರ ಟಿವಿಕೆ ಈ ಪ್ರಾಬಲ್ಯಕ್ಕೆ ದೊಡ್ಡ ಪೈಪೋಟಿಯಾಗುವ ಹಾಗೆ ಕಂಡಿದೆ. ರಾಜಕೀಯಕ್ಕಾಗಿ ಚಿತ್ರರಂಗವನ್ನೇ ತೊರೆದಿರುವ, ಜನರಿಗಾಗಿ ಹೋರಾಟದ ಮಾತಾಡುತ್ತಿರುವ ಅವರ ಪ್ರಯಾಣ ಚರಿತ್ರೆ ಬರೆಯಲಿದೆಯೇ ಎಂಬುದನ್ನು ನೋಡಬೇಕಿದೆ. ಎನ್.ಟಿ. ರಾಮರಾವ್ ಸಿನೆಮಾ ಮತ್ತು ರಾಜಕೀಯ ನಂಟಿನ ವಿಷಯದಲ್ಲಿ ಆಂಧ್ರದ ಎನ್.ಟಿ. ರಾಮರಾವ್ ಅವರದು ಬಹಳ ದೊಡ್ಡ ಸಾಧನೆ. ತೆಲುಗು ಚಿತ್ರರಂಗದ ಮಹಾತಾರೆ ಎನ್.ಟಿ. ರಾಮರಾವ್ ಚುನಾವಣಾ ರಾಜಕಾರಣದಲ್ಲೂ ಅಷ್ಟೇ ದೊಡ್ಡ ಯಶಸ್ಸು ಕಂಡಿದ್ದವರು. 1982ರಲ್ಲಿ ತೆಲುಗು ದೇಶಂ ಪಕ್ಷ (ಟಿಡಿಪಿ) ಸ್ಥಾಪಿಸಿದರು. ಆಂಧ್ರದಲ್ಲಿ ಮೊದಲ ಕಾಂಗ್ರೆಸೇತರ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆ. ಆಂಧ್ರ ಮುಖ್ಯಮಂತ್ರಿಯಾಗಿ ಮೂರು ಅವಧಿಗೆ ಸುಮಾರು 7 ವರ್ಷಗಳ ಕಾಲ ಆಳ್ವಿಕೆ ನಡೆಸಿದರು. ತೆರೆಯ ಮೇಲಿನ ವರ್ಚಸ್ಸೇ ಹೀಗೆ ನಿಜಜೀವನದ ರಾಜಕಾರಣದಲ್ಲೂ ಮುಂದುವರಿದು ಮಿಂಚಿದ ಇಂಥ ಅದೃಷ್ಟಶಾಲಿಗಳು ಕಡಿಮೆ. ಎನ್ಟಿಆರ್ ಕುಟುಂಬದ ನಂತರದ ತಲೆಮಾರು ರಾಜಕಾರಣದಲ್ಲಿ ಮೊದಮೊದಲು ಕೊಂಚ ಆಸಕ್ತಿ ತೋರಿಸಿತ್ತಾದರೂ, ಈಗ ರಾಜಕೀಯದಿಂದ ದೂರವೇ ಇದೆ. ಚಿರಂಜೀವಿ ಎನ್ಟಿಆರ್ ಬಳಿಕ, ಚಿತ್ರರಂಗದಲ್ಲಿನ ಸ್ಟಾರ್ಗಿರಿಯನ್ನು ಬಳಸಿಕೊಂಡು ಆಂಧ್ರ ಸಿಎಂ ಆಗುವ ಕನಸು ಕಂಡಿದ್ದವರು ಚಿರಂಜೀವಿ. ಚಿರಂಜೀವಿ ಪಾಲಿಗೆ ಎಷ್ಟೇ ಅಭಿಮಾನಿಗಳಿದ್ದರೂ, ಆಂಧ್ರ ರಾಜಕಾರಣದಲ್ಲಿ ಮತ್ತೊಂದು ಅಧ್ಯಾಯವನ್ನೇ ಬರೆಯುತ್ತಾರೇನೋ ಅನ್ನಿಸುವಂತೆ ಕಾಣಿಸಿಕೊಂಡಿದ್ದರೂ ಕಡೆಗೆ ಎಲ್ಲ ಸುಳ್ಳಾಗಿತ್ತು. ಚಿರಂಜೀವಿ 2008ರಲ್ಲಿ ಆಂಧ್ರಪ್ರದೇಶದಲ್ಲಿ ‘ಪ್ರಜಾ ರಾಜ್ಯಂ ಪಕ್ಷ’ ಸ್ಥಾಪಿಸಿದರು. 2009ರ ಸಾರ್ವತ್ರಿಕ ಚುನಾವಣೆಯಲ್ಲಿ ಪ್ರಜಾರಾಜ್ಯಂ ಪಕ್ಷ ಹೆಚ್ಚಿನ ಪ್ರಭಾವ ಬೀರಲಿಲ್ಲ. ಹಾಗಾಗಿ ಚಿರಂಜೀವಿ ಪಿಆರ್ಪಿಯನ್ನು ಕಾಂಗ್ರೆಸ್ ನಲ್ಲಿ ವಿಲೀನಗೊಳಿಸಿದರು. ಕಾಂಗ್ರೆಸ್ ಸರಕಾರದಲ್ಲಿ ಪ್ರವಾಸೋದ್ಯಮ ಖಾತೆ ಸಹಾಯಕ ಸಚಿವರಾಗಿ ಸೇವೆ ಸಲ್ಲಿಸಿದರು. ಪ್ರಸ್ತುತ ರಾಜಕೀಯದಿಂದ ದೂರ ಉಳಿದಿದ್ದಾರೆ. ಪವನ್ ಕಲ್ಯಾಣ್ ಚಿರಂಜೀವಿ ಸಹೋದರ ಪವನ್ ಕಲ್ಯಾಣ್ ಪಾಲಿಗೆ ಮಾತ್ರ ರಾಜಕೀಯದಲ್ಲಿ ಯಶಸ್ಸು ಒಲಿದಿದೆ. ಜನಸೇನಾ ಪಕ್ಷ ಕಟ್ಟಿದ್ದ ಅವರಿಗೆ ಸದ್ಯದ ರಾಜಕೀಯ ಸನ್ನಿವೇಶವೂ ಅನುಕೂಲಕರವಾಗಿ ಒದಗಿತು. ಕಳೆದ ಆಂಧ್ರಪ್ರದೇಶ ವಿಧಾನ ಸಭಾ ಚುನಾವಣೆಯಲ್ಲಿ ಅವರ ಪಕ್ಷ ಯಶಸ್ಸು ಸಾಧಿಸಿದ್ದು, ಅವರೀಗ ಆಂಧ್ರಪ್ರದೇಶ ಮೈತ್ರಿ ಸರಕಾರದಲ್ಲಿ ಉಪಮುಖ್ಯಮಂತ್ರಿಯಾಗಿದ್ದಾರೆ. ಇವರಲ್ಲದೆ, ಆಂಧ್ರ ಚಿತ್ರರಂಗದ ನಂದಮೂರಿ ಬಾಲಕೃಷ್ಣ, ನಂದಮೂರಿ ಹರಿಕೃಷ್ಣ, ಜಮುನಾ, ಜಯಸುಧಾ, ಕೃಷ್ಣಂರಾಜು, ದಾಸರಿ ನಾರಾಯಣ ರಾವ್, ರೋಜಾ, ವಿಜಯಶಾಂತಿ ಮುಂತಾದವರು ರಾಜ್ಯ ಮತ್ತು ರಾಷ್ಟ್ರ ಮಟ್ಟದ ರಾಜಕಾರಣದಲ್ಲಿ ಗುರುತಿಸಿಕೊಂಡಿದ್ದಾರೆ. ಲೇಡಿ ಸೂಪರ್ಸ್ಟಾರ್ ವಿಜಯಶಾಂತಿ ತೆಲಂಗಾಣ ಹೋರಾಟದಲ್ಲಿ ಸಕ್ರಿಯರಾಗಿ ಮುಂದೆ ಸಂಸದೆಯಾಗಿದ್ದರು.
Odisha | ಪಾದ್ರಿಯ ಮೇಲೆ ಗುಂಪು ಹಲ್ಲೆ; ಸಗಣಿ ತಿನ್ನಿಸಿ ‘ಜೈ ಶ್ರೀ ರಾಮ್’ ಹೇಳುವಂತೆ ಒತ್ತಾಯ; ವರದಿ
ಧೆಂಕನಲ್ (ಒಡಿಶಾ): ಧೆಂಕನಲ್ ಜಿಲ್ಲೆಯ ಪರ್ಜಂಗ್ ಗ್ರಾಮದಲ್ಲಿ ಪಾದ್ರಿಯೊಬ್ಬರ ಮೇಲೆ ಹಲ್ಲೆ ನಡೆಸಿ, ಹಸುವಿನ ಸಗಣಿ ತಿನ್ನಿಸಿ ‘ಜೈ ಶ್ರೀ ರಾಮ್’ ಎಂದು ಹೇಳುವಂತೆ ಒತ್ತಾಯಿಸಿದ ಘಟನೆ ಜ. 4ರಂದು ನಡೆದಿದೆ ಎಂದು ವರದಿಯಾಗಿದೆ. ಪಾದ್ರಿ ಬಿಪಿನ್ ಬಿಹಾರಿ ನಾಯಕ್ ಅವರ ಮನೆಯಲ್ಲಿ ಪ್ರಾರ್ಥನಾ ಸಭೆ ನಡೆಯುತ್ತಿದ್ದ ವೇಳೆ ಸುಮಾರು 40 ಮಂದಿಯ ಗುಂಪು ಬಲವಂತವಾಗಿ ಪ್ರವೇಶಿಸಿ ಹಲ್ಲೆ ನಡೆಸಿದೆ ಎಂದು Maktoob Media ವರದಿ ಮಾಡಿದೆ. ಸಭೆಯಲ್ಲಿ ಬಿಪಿನ್ ನಾಯಕ್ ಅವರ ಕುಟುಂಬದೊಂದಿಗೆ ಇನ್ನೂ ಏಳು ಕುಟುಂಬಗಳು ಭಾಗವಹಿಸಿದ್ದವು ಎಂದು ತಿಳಿದು ಬಂದಿದೆ. ನಾಯಕ್ ಅವರ ಪತ್ನಿ ವಂದನಾ ಅವರ ಪ್ರಕಾರ, ಗುಂಪು ಮನೆಯೊಳಗಿನವರ ಮೇಲೆ ಹಲ್ಲೆ ಮಾಡಲು ಆರಂಭಿಸಿದಾಗ ಅವರು ಮಕ್ಕಳೊಂದಿಗೆ ಮನೆಯಿಂದ ಹೊರಗೆ ಓಡಿ ಹತ್ತಿರದ ಪೊಲೀಸ್ ಠಾಣೆಗೆ ತೆರಳಿದರು. ನಾಯಕ್ ಅವರ ಮೇಲೆ ಕೋಲುಗಳಿಂದ ಹಲ್ಲೆ ಮಾಡಿ, ಮುಖಕ್ಕೆ ನಾಮ ಬಳಿದು, ಚಪ್ಪಲಿ ಹಾರ ಹಾಕಿಸಿ ಗ್ರಾಮದಲ್ಲಿ ಮೆರವಣಿಗೆ ನಡೆಸಿದ್ದಾರೆ ಎನ್ನಲಾಗಿದೆ. ನಂತರ ಅವರನ್ನು ಗ್ರಾಮದ ಹನುಮಾನ್ ದೇವಸ್ಥಾನಕ್ಕೆ ಕರೆದೊಯ್ದು ಕಟ್ಟಿಹಾಕಿ, ಹಸುವಿನ ಸಗಣಿ ತಿನ್ನುವಂತೆ ಹಾಗೂ ‘ಜೈ ಶ್ರೀ ರಾಮ್’ ಎಂದು ಹೇಳುವಂತೆ ಬಲವಂತಪಡಿಸಲಾಗಿದೆ ಎಂದು ವಂದನಾ ಆರೋಪಿಸಿದ್ದಾರೆ. ಹಲ್ಲೆಯಿಂದ ನಾಯಕ್ ಅವರಿಗೆ ಗಂಭೀರ ಗಾಯಗಳಾಗಿ ರಕ್ತಸ್ರಾವವಾಗುತ್ತಿತ್ತು ಎಂದು ಅವರು ತಿಳಿಸಿದ್ದಾರೆ. ಪೊಲೀಸರಿಗೆ ಮಾಹಿತಿ ನೀಡಿದರೂ ತಕ್ಷಣ ನೆರವು ದೊರಕಲಿಲ್ಲ ಎಂಬ ಆರೋಪವೂ ಕೇಳಿಬಂದಿದೆ. ಬಳಿಕ ಪೊಲೀಸರು ಮಧ್ಯಪ್ರವೇಶಿಸಿ ನಾಯಕ್ ಅವರನ್ನು ರಕ್ಷಿಸಿ ಠಾಣೆಗೆ ಕರೆದೊಯ್ದಿದ್ದಾರೆ. ಆದರೆ ಠಾಣೆಯಲ್ಲಿ ಸುಮಾರು ಒಂದು ಗಂಟೆಗಳ ಕಾಲ ಯಾವುದೇ ವೈದ್ಯಕೀಯ ನೆರವು ನೀಡಲಾಗಿಲ್ಲ ಎಂದು ಸಾಮಾಜಿಕ ಕಾರ್ಯಕರ್ತರೊಬ್ಬರು ತಿಳಿಸಿದ್ದಾರೆ. ಪರ್ಜಂಗ್ ಗ್ರಾಮದಲ್ಲಿ ಕೇವಲ ಏಳು ಕ್ರಿಶ್ಚಿಯನ್ ಕುಟುಂಬಗಳು ವಾಸಿಸುತ್ತಿವೆ. ನಾಯಕ್ ಬಲವಂತದ ಮತಾಂತರ ನಡೆಸುತ್ತಿದ್ದಾರೆ ಎಂಬ ಆರೋಪದ ಮೇಲೆ ಗುಂಪು ಹಲ್ಲೆ ನಡೆಸಿದೆ ಎಂದು ಹೇಳಲಾಗಿದೆ. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿದ್ದು, ಘಟನೆಯ ಬಳಿಕ ನಾಯಕ್ ವಿರುದ್ಧವೂ ಬಲವಂತದ ಮತಾಂತರ ಆರೋಪದಡಿ ಪ್ರತ್ಯೇಕ ಎಫ್ಐಆರ್ ದಾಖಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ತಪ್ಪು ಕನ್ನಡ ಬರಹ: ಗಿಲ್ಲಿ ನಟನೇ ಕಾರಣ, ನಂಗೆ ಕನ್ನಡ ಬರೆಯುವುದಕ್ಕೆ ಬರಲ್ಲ: ಅಶ್ವಿನಿ ಗೌಡ
ಬಿಗ್ಬಾಸ್ ಕನ್ನಡ ಸೀಸನ್ 12ರ ಸ್ಪರ್ಧಿ, ನಟಿ ಹಾಗೂ ಕನ್ನಡಪರ ಹೋರಾಟಗಾರರಾದ ಅಶ್ವಿನಿ ಗೌಡ ಅವರಿಗೆ ಕನ್ನಡ ಬರೆಯುವುದಕ್ಕೆ ಬರುವುದಿಲ್ಲ ಎನ್ನುವ ಆರೋಪ, ಟೀಕೆ ಸೋಷಿಯಲ್ ಮೀಡಿಯಾದಲ್ಲಿ ಕೇಳಿ ಬಂದಿತ್ತು. ಈ ಬಗ್ಗೆ ಇದೀಗ ಅಶ್ವಿನಿ ಗೌಡ ಅವರು ಮಾತನಾಡಿದ್ದಾರೆ. ನಾನು ಓದಿದ್ದು ಆಂಗ್ಲ ಮಾಧ್ಯಮದಲ್ಲಿ ಹೀಗಾಗಿ ನನಗೆ ಕನ್ನಡ ಬರೆಯುವುದಕ್ಕೆ ಬರುವುದಿಲ್ಲ ಎಂದು ಅವರು ಹೇಳಿದ್ದಾರೆ.
ODI ರ್ಯಾಂಕಿಂಗ್: ಎರಡನೇ ಸ್ಥಾನಕ್ಕೆ ಇಳಿದ ವಿರಾಟ್ ಕೊಹ್ಲಿ
ದುಬೈ: ಭಾರತ ತಂಡವು ತವರಿನಲ್ಲೇ ನ್ಯೂಝಿಲೆಂಡ್ ತಂಡದ ವಿರುದ್ಧ 1-2ರ ಅಂತರದಲ್ಲಿ ಏಕದಿನ ಸರಣಿ ಪರಾಭವಗೊಂಡ ಬೆನ್ನಿಗೇ, ಭಾರತ ತಂಡದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಕೂಡಾ ಐಸಿಸಿ ಏಕದಿನ ಕ್ರಿಕೆಟ್ ಶ್ರೇಯಾಂಕದಲ್ಲಿ ಅಗ್ರ ಸ್ಥಾನದಿಂದ ಎರಡನೆ ಸ್ಥಾನಕ್ಕೆ ಇಳಿದಿದ್ದಾರೆ. ಇತ್ತೀಚೆಗೆ ಮುಕ್ತಾಯಗೊಂಡ ಭಾರತ-ನ್ಯೂಝಿಲೆಂಡ್ ಏಕದಿನ ಸರಣಿಯಲ್ಲಿ ಸರಣಿ ಶ್ರೇಷ್ಠ ಪ್ರದರ್ಶನ ನೀಡಿದ್ದ ನ್ಯೂಝಿಲೆಂಡ್ ಬ್ಯಾಟರ್ ಡ್ಯಾರಿಲ್ ಮಿಚೆಲ್ ಅವರು ಕೊಹ್ಲಿ ಸ್ಥಾನವನ್ನು ಕಸಿದುಕೊಂಡು ಅಗ್ರಸ್ಥಾನಕ್ಕೆ ಲಗ್ಗೆ ಇಟ್ಟಿದ್ದಾರೆ. 37 ವರ್ಷದ ಬಳಿಕ ನ್ಯೂಝಿಲೆಂಡ್ ತಂಡವು ಭಾರತದ ನೆಲದಲ್ಲೇ ಸರಣಿ ಗೆಲುವು ಸಾಧಿಸುವಲ್ಲಿ ಡ್ಯಾರಿಲ್ ಮಿಚೆಲ್ ಪ್ರಮುಖ ಪಾತ್ರ ವಹಿಸಿದ್ದರು. ಒಟ್ಟು ಮೂರು ಪಂದ್ಯಗಳಲ್ಲಿ ಎರಡು ಶತಕ ಹಾಗೂ ಒಂದು ಅರ್ಧಶತಕದ ಸಾಧನೆಯೊಂದಿಗೆ ಅವರು ಒಟ್ಟು 352 ರನ್ ಗಳನ್ನು ಕಲೆ ಹಾಕುವ ಮೂಲಕ, ಅಗ್ರ ಸ್ಥಾನಕ್ಕೇರಿದ್ದಾರೆ. ಸರಣಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದ ವಿರಾಟ್ ಕೊಹ್ಲಿ ಕೂಡಾ ಒಂದು ಶತಕ ಹಾಗೂ ಅರ್ಧ ಶತಕದ ನೆರವಿನಿಂದ ಒಟ್ಟು 240 ರನ್ ಗಳಿಸಿದ್ದರು. ಮೊದಲ ಪಂದ್ಯದಲ್ಲಿ 93 ರನ್ ಗಳಿಸಿದ ನಂತರ ವಿರಾಟ್ ಕೊಹ್ಲಿ ಐಸಿಸಿ ಏಕದಿನ ಶ್ರೇಯಾಂಕದಲ್ಲಿ ಅಗ್ರಸ್ಥಾನಕ್ಕೇರಿದ್ದರು. ಆಗ ಒಟ್ಟು 845 ಅಂಕ ಗಳಿಸಿದ್ದ ವಿರಾಟ್ ಕೊಹ್ಲಿ, ಇದೀಗ 795 ಅಂಕ ಗಳಿಸಿ ಎರಡನೆ ಸ್ಥಾನಕ್ಕೆ ಕುಸಿದಿದ್ದಾರೆ. ಹೀಗಾಗಿ ಶ್ರೇಯಾಂಕ ಪಟ್ಟಿಯಲ್ಲಿ ಅಗ್ರಸ್ಥಾನಕ್ಕಿರುವ ಅಂತರ ಕೂಡಾ ಹಿಗ್ಗಿದೆ. ಮತ್ತೊಂದೆಡೆ, ನ್ಯೂಝಿಲೆಂಡ್ ಸರಣಿ ಮುಕ್ತಾಯದ ಬಳಿಕ ರೋಹಿತ್ ಶರ್ಮ ಮೂರನೆಯ ಸ್ಥಾನದಿಂದ ನಾಲ್ಕನೇ ಸ್ಥಾನಕ್ಕೆ ಕುಸಿದಿದ್ದಾರೆ. ಅವರ ಸ್ಥಾನಕ್ಕೆ ಅಫ್ಘಾನಿಸ್ತಾನದ ಇಬ್ರಾಹಿಂ ಝದ್ರಾನ್ ಏರಿದ್ದಾರೆ. ಉಳಿದಂತೆ, ಶುಭಮನ್ ಗಿಲ್ 5ನೇ ಸ್ಥಾನದಲ್ಲಿ, ಪಾಕಿಸ್ತಾನದ ಬಾಬರ್ ಅಝಂ 6ನೇ ಸ್ಥಾನದಲ್ಲಿ, ಐರ್ಲೆಂಡ್ ನ ಹ್ಯಾರಿ ಟೆಕ್ಟರ್ 7ನೇ ಸ್ಥಾನದಲ್ಲಿ, ವೆಸ್ಟ್ ಇಂಡೀಸ್ ನ ಶಾಯ್ ಹೋಪ್ 8ನೇ ಸ್ಥಾನದಲ್ಲಿ, ಶ್ರೀಲಂಕಾದ ಚರಿತ್ ಅಸಲಂಕಾ 9ನೇ ಸ್ಥಾ ನದಲ್ಲಿದ್ದು, 10ನೇ ಸ್ಥಾನವನ್ನು ಭಾರತ ತಂಡದ ಬ್ಯಾಟರ್ ಗಳೇ ಆದ ಶ್ರೇಯಸ್ ಅಯ್ಯರ್ ಹಾಗೂ ಕೆ.ಎಲ್.ರಾಹುಲ್ ಹಂಚಿಕೊಂಡಿದ್ದಾರೆ.
ಡಾ.ಶಿವಕುಮಾರ ಸ್ವಾಮೀಜಿಯವರ ಪ್ರಸ್ತುತತೆ ಮತ್ತಷ್ಟು ಗಟ್ಟಿಯಾಗಿದೆ: ಉಪರಾಷ್ಟ್ರಪತಿ ರಾಧಾಕೃಷ್ಣನ್
ಸಿದ್ಧಗಂಗಾ ಮಠದಲ್ಲಿ ಲಿಂಗೈಕ್ಯ ಡಾ. ಶ್ರೀ ಶಿವಕುಮಾರ ಸ್ವಾಮೀಜಿಯವರ 7ನೇ ವರ್ಷದ ಪುಣ್ಯ ಸಂಸ್ಮರಣೋತ್ಸವವನ್ನು ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ ಉದ್ಘಾಟಿಸಿದರು. ರಾಜ್ಯಪಾಲ ಥಾವರ್ಚಂದ್ ಗೆಹ್ಲೋಟ್ ಅಧ್ಯಕ್ಷತೆ ವಹಿಸಿದ್ದರು. ಸ್ವಾಮೀಜಿಯವರ ತ್ಯಾಗ, ದಯೆ, ಅನ್ನ-ಅಕ್ಷರ-ಆಶ್ರಯ ದಾಸೋಹದ ಸಂದೇಶವನ್ನು ಗಣ್ಯರು ಸ್ಮರಿಸಿದರು.
ಫೆ.10ರೊಳಗೆ ಸಾಮಾಜಿಕ, ಶೈಕ್ಷಣಿಕ ಸಮೀಕ್ಷಾ ವರದಿ ಸರಕಾರಕ್ಕೆ ಸಲ್ಲಿಕೆ ಸಾಧ್ಯತೆ: ಸಚಿವ ತಂಗಡಗಿ
ಬೆಂಗಳೂರು: ಜ.21: ಜನವರಿ ಅಂತ್ಯ ಅಥವಾ ಫೆಬ್ರವರಿ 10ರೊಳಗೆ ಮಧುಸೂದನ್ ನಾಯಕ್ ನೇತೃತ್ವದ ಶಾಶ್ವತ ಹಿಂದುಳಿದ ವರ್ಗಗಳ ಆಯೋಗ ಸರಕಾರಕ್ಕೆ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷಾ ವರದಿ ಸಲ್ಲಿಸುವ ಸಾಧ್ಯತೆ ಇದೆ ಎಂದು ಕನ್ನಡ ಮತ್ತು ಸಂಸ್ಕೃತಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಶಿವರಾಜ್ ಎಸ್ .ತಂಗಡಗಿ ಹೇಳಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ನಯನಾ ಸಭಾಂಗಣದಲ್ಲಿ ಬುಧವಾರ ಶಾಂತ ಭೀಷ್ಮ ಚೌಡಯ್ಯ ಸ್ವಾಮೀಜಿ ಅವರ ದಿವ್ಯ ಸಾನಿಧ್ಯದಲ್ಲಿ ಆಯೋಜಿಸಿದ್ದ ಅಂಬಿಗರ ಚೌಡಯ್ಯ ಜಯಂತಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಈಗಾಗಲೇ ಅಂಕಿಅಂಶಗಳ ಕ್ರೋಡೀಕರಣ ನಡೆಯುತ್ತಿದ್ದು, ವರದಿ ಶೀಘ್ರ ಸಲ್ಲಿಸಲಿದ್ದಾರೆ. ಈ ವರದಿಯಿಂದ ಸಮಾಜದ ಕಟ್ಟಕಡೆಯ ವ್ಯಕ್ತಿಯನ್ನು ಗುರುತಿಸಿ ಸರಕಾರದ ಯೋಜನೆ ತಲುಪಿಸಲು ಸಾಧ್ಯವಾಗಲಿದೆ ಎಂದರು. ಅಲ್ಲದೆ, ಕೆಲವರು ಯಾವುದೇ ಮಾಹಿತಿ ಕೇಳಿದರೂ ನಮ್ಮ ಸಮುದಾಯವರು ಅಷ್ಟಿದ್ದಾರೆ. ಇಷ್ಟಿದ್ದಾರೆ ಅನ್ನುತ್ತಾರೆ. ವರದಿಯಿಂದ ವಾಸ್ತವ ಅಂಶ ಗೊತ್ತಾಗಲಿದೆ ಎಂದು ತಿಳಿಸಿದರು. ಹಿಂದುಳಿದ ವರ್ಗಗಳ ಬಗ್ಗೆ ಮುಖ್ಯಮಂತ್ರಿ ವಿಶೇಷ ಕಾಳಜಿ ಹೊಂದಿದ್ದಾರೆ. ಈ ಹಿಂದಿನ ಸರಕಾರಗಳು ನಿಗಮಕ್ಕೆ ಮೊದಲು ಐದು ಕೋಟಿಯಷ್ಟೇ ಅನುದಾನ ನೀಡುತ್ತಿದ್ದರು. ಕಳೆದ ವರ್ಷ ಮುಖ್ಯಮಂತ್ರಿ ಬಳಿ ಹೆಚ್ಚಿನ ಅನುದಾನಕ್ಕೆ ಬೇಡಿಕೆ ಇಟ್ಟಾಗ, ಅದಕ್ಕೆ ಸ್ಪಂದಿಸಿ ಇಲಾಖೆಯ ಎಲ್ಲ ನಿಗಮಗಳಿಗೆ 1,600 ಕೋಟಿ ರೂ. ಅನುದಾನ ಒದಗಿಸಿದ್ದರು. ಈ ಪೈಕಿ ರೂ. 23.24 ಕೋಟಿ ಅನುದಾನವನ್ನು ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮಕ್ಕೆ ನೀಡಲಾಗಿದೆ. ಅಲ್ಲದೆ, ಗಂಗಾ ಕಲ್ಯಾಣ ಯೋಜನೆಯಡಿ ನೀಡುತ್ತಿದ್ದ ಘಟಕದ ವೆಚ್ಚವನ್ನು ರೂ.2.50 ಲಕ್ಷದಿಂದ ರೂ. 3.75 ಲಕ್ಷಕ್ಕೆ ಹೆಚ್ಚಳ ಮಾಡಲಾಗಿದೆ. ಹಿಂದಿನ ಸರಕಾರ ಮೂರುವರೆ ವರ್ಷದಲ್ಲಿ ಗಂಗಾ ಕಲ್ಯಾಣ ಯೋಜನೆಯಡಿ ಒಂದೇ ಒಂದು ಕೊಳವೆಬಾವಿ ಕೊರೆದಿಲ್ಲ. ನಾನು ಇಲಾಖೆ ಸಚಿವನಾದ ಬಳಿಕ 18 ಸಾವಿರ ಕೊಳವೆಬಾವಿ ಕೊರೆಸಲಾಗಿದೆ. ಇನ್ನು ಹಿಂದುಳಿದ ವರ್ಗಗಳ ಮಕ್ಕಳ ವಿದೇಶ ವ್ಯಾಸಂಗಕ್ಕೆ ರೂ. 20 ಲಕ್ಷ ಸಾಲ ನೀಡಲಾಗುತ್ತಿತ್ತು. ನಾವು ಆ ಮೊತ್ತವನ್ನು ಶೂನ್ಯ ಬಡ್ಡಿದರಲ್ಲಿ ರೂ.50 ಲಕ್ಷಕ್ಕೆ ಹೆಚ್ಚಳ ಮಾಡಲಾಗಿದೆ ಎಂದು ಮಾಹಿತಿ ನೀಡಿದರು. ಕೂಲಿ ಸಮಾಜ, ಗಂಗಾಮತಸ್ಥ ಸಮಾಜದ ಪ್ರತಿಯೊಬ್ಬರು ಎಚ್ಚೆತ್ತುಕೊಳ್ಳುವ ಕೆಲಸ ಆಗಬೇಕು. ಯಾವ ಜಿಲ್ಲೆಯಲ್ಲಿ ಜಯಂತಿ ಆಚರಣೆ ಮಾಡುತ್ತಿಲ್ಲ ಎಂದು ಹೇಳಿದರೆ ಅವರ ವಿರುದ್ಧ ಕ್ರಮ ವಹಿಸಲಾಗುವುದು ಎಂದು ವೇದಿಕೆಯಲ್ಲಿದ್ದ ಸಮಾಜದ ಮುಖಂಡರಿಗೆ ಸಚಿವರು ಭರವಸೆ ನೀಡಿದರು. ಮಹಾನ್ ನಿಷ್ಠುರ ಮಾನವತಾವಾದಿ ಚೌಡಯ್ಯ: ಹನ್ನೆರಡನೇ ಶತಮಾನದ ಬಸವಣ್ಣನವರ ವಚನ ಚಳವಳಿ ಹುಟ್ಟುಹಾಕಿದ ಹಲವಾರು ಪ್ರತಿಭೆಗಳಲ್ಲಿ ಅಂಬಿಗರ ಚೌಡಯ್ಯ ಅಗ್ರಸ್ಥಾನದಲ್ಲಿ ನಿಲ್ಲುತ್ತಾರೆ. ತಮ್ಮ ವಚನಗಳಲ್ಲಿ ವೈಚಾರಿಕ ನಿರೂಪಣೆಯ ಧಾರೆಯನ್ನು ಹರಿಸುವ ಮೂಲಕ ನಿಷ್ಠುರ ಮಾನವತಾವಾದಿ ಎಂದೇ ಹೆಸರಾಗಿದ್ದವರು ಎಂದರು. ಶೋಷಣೆಗೆ ಒಳಗಾಗಿದ್ದ ಪರಿಸರದಲ್ಲಿ ಹುಟ್ಟಿ ಬೆಳೆದ ಚೌಡಯ್ಯ ತಮ್ಮ ಸಮುದಾಯದ ಬದಲಾವಣೆಯತ್ತ ಗಮನ ಹರಿಸಿದ್ದರು. ಶರಣರು ತಮ್ಮ ದಿಟ್ಟತನದಿಂದ ಗುರುತಿಸಿಕೊಂಡವರು. ಸಮಾಜದಲ್ಲಿನ ದುರ್ಗಣಗಳ ಕುರಿತು ನಿರ್ದಾಕ್ಷಿಣ್ಯವಾಗಿ ಹಲವು ಅಂಶಗಳನ್ನು ಅವರು ಖಂಡಿಸಿದ್ದಾರೆ. ಧಾರ್ಮಿಕ ಹೆಸರಿನಲ್ಲಿ ನಡೆಯುವ ಮಳಸ, ವಂಚನೆ, ಲಿಂಗಭೇದ, ತಾರತಮ್ಯಗಳನ್ನು ಅವರು ಖಂಡಿಸಿದ್ದರು ಎಂದು ನೆನೆದರು. ಬೆಂಗಳೂರಿನಲ್ಲೇ ಪ್ರತಿಮೆ ನಿರ್ಮಾಣ: ಬೆಂಗಳೂರಿನಲ್ಲಿ ಅಂಬಿಗರ ಚೌಡಯ್ಯರ ಪ್ರತಿಮೆಯನ್ನು ನಿರ್ಮಾಣ ಮಾಡಲಾಗುವುದು. ಪ್ರತಿಮೆ ನಿರ್ಮಾಣಕ್ಕಾಗಿ ಈಗಾಗಲೇ ಸ್ಥಳ ಹುಡುಕಾಟ ನಡೆಸಿದ್ದೇವೆ. ಸ್ಥಳ ಗುರುತಿಸಿದ ಬಳಿಕ ಇಲಾಖೆ ವತಿಯಿಂದ ಪ್ರತಿಮೆ ನಿರ್ಮಾಣವನ್ನು ಬೆಂಗಳೂರಿನಲ್ಲಿ ಮಾಡಲಾಗುವುದು ಎಂದು ಸಚಿವ ಶಿವರಾಜ್ ತಂಗಡಗಿ ಭರವಸೆ ನೀಡಿದರು. ಕಾರ್ಯಕ್ರಮದಲ್ಲಿ ಮಾಜಿ ಸಚಿವರೂ ಆದ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಾಬುರಾವ್ ಚಿಂಚನಸೂರ್, ರೇಷ್ಮೆ ಮಾರುಕಟ್ಟೆ ಮಂಡಳಿ ಅಧ್ಯಕ್ಷ ಗಂಗಾಧರ್, ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ.ಕೆ.ಮಾನಸ, ಇಲಾಖೆ ಕಾರ್ಯದರ್ಶಿ ಜೆ.ಮಂಜುನಾಥ್, ನಿರ್ದೇಶಕಿ ಕೆ.ಎಂ.ಗಾಯಿತ್ರಿ, ಪ್ರಾಧ್ಯಾಪಕ ಡಾ.ಸ್ವಾಮಿ ಹಾಗೂ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.
ಇರಾನ್ನಲ್ಲಿ ನಡೆಯುತ್ತಿರುವ ಖಮೇನಿ ಆಡಳಿತ ವಿರೋಧಿ ಪ್ರತಿಭಟನೆಗಳು ಅಂತ್ಯಗೊಂಡಿದ್ದರೂ, ಇರಾನ್ ಮತ್ತು ಅಮೆರಿಕದ ನಡುವಿನ ವಾಕ್ಸಮರ ಇನ್ನೂ ಅಂತ್ಯಗೊಂಡಿಲ್ಲ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಕೊಲೆ ಬೆದರಿಕೆ ಹಾಕಿರುವ ಇರಾನ್, ಈ ಬಾರಿ ಗುರಿ ಮಿಸ್ ಆಗಲ್ಲ ಎಂದು ಹೇಳಿದೆ. ಇದಕ್ಕೆ ಅದೇ ಧಾಟಿಯಲ್ಲಿ ತಿರುಗೇಟು ನೀಡಿರುವ ಡೊನಾಲ್ಡ್ ಟ್ರಂಪ್, ಒಂದು ವೇಳೆ ತಮ್ಮ ಹತ್ಯೆಯಾದರೆ, ಅಮೆರಿಕವು ಭೂಮಿಯ ಮೇಲೆ ಇರಾನ್ನ ಅಸ್ತಿತ್ವದ ಕುರುಹು ಇಲ್ಲದಂತೆ ಮಾಡುತ್ತದೆ ಎಂದು ಎಚ್ಚರಿಸಿದ್ದಾರೆ.
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ: ಬಿಜೆಪಿಯಿಂದ ಚುನಾವಣಾ ಉಸ್ತುವಾರಿಗಳ ನೇಮಕ
ಬೆಂಗಳೂರು: ಮುಂಬರುವ ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಚುನಾವಣೆಗೆ ಬಿಜೆಪಿ ಚುನಾವಣಾ ಉಸ್ತುವಾರಿಗಳನ್ನು ನೇಮಕ ಮಾಡಿದೆ. ಈ ಬಗ್ಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್ ಆದೇಶ ಹೊರಡಿಸಿದ್ದು, ಪಕ್ಷದ ಹಿರಿಯ ನಾಯಕ ಹಾಗೂ ರಾಷ್ಟ್ರೀಯ ಮಾಜಿ ಪ್ರಧಾನ ಕಾರ್ಯದರ್ಶಿ ರಾಮ್ ಮಾಧವ್ ಅವರನ್ನು ಚುನಾವಣಾ ಉಸ್ತುವಾರಿಯನ್ನಾಗಿ ನೇಮಕ ಮಾಡಲಾಗಿದೆ. ಸಹ-ಉಸ್ತುವಾರಿಗಳಾಗಿ ರಾಜಸ್ಥಾನ ಬಿಜೆಪಿಯ ಸತೀಶ್ ಪೂನಿಯಾ ಹಾಗೂ ಮಹಾರಾಷ್ಟ್ರದ ಬಿಜೆಪಿ ಶಾಸಕ ಸಂಜಯ್ ಉಪಾಧ್ಯಾಯರನ್ನು ನೇಮಕ ಮಾಡಲಾಗಿದೆ. 2018ರ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ರಾಮ್ ಮಾಧವ್ ಬಿಜೆಪಿಯ ಚುನಾವಣೆ ಉಸ್ತುವಾರಿಯಾಗಿ ಕೆಲಸ ಮಾಡಿದ್ದರು. ಜೂನ್ 30ರೊಳಗಾಗಿ ಜಿಬಿಎ ಚುನಾವಣೆ ನಡೆಸುವಂತೆ ಸುಪ್ರೀಂ ಕೋರ್ಟ್ ಆದೇಶಿಸಿದೆ. ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿರುವ ಬಿಜೆಪಿ ಸಿದ್ಧತೆ ಆರಂಭಿಸಿದ್ದು, ಚುನಾವಣಾ ಉಸ್ತುವಾರಿಗಳನ್ನು ನೇಮಕ ಮಾಡಿದೆ.
CM Post Fight: ತಾಳ್ಮೆಗೆ ಅಂತಿಮ ಗಡುವು; ಭಗವಂತನ ಇಚ್ಛೆ, ಹಣೆಯಲ್ಲಿ ಬರೆದಿದ್ದರೆ ಸಿಎಂ ಆಗುತ್ತಾರೆ: ಡಿ ಕೆ ಸುರೇಶ್
ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ನಾಯಕತ್ವ ಬದಲಾವಣೆ ಕೂಗು ಜೋರಾಗಿದೆ. ಇತ್ತ ಮುಖ್ಯಮಂತ್ರಿ ಪಟ್ಟಕ್ಕಾಗಿ ಪಟ್ಟು ಹಿಡಿದಿರುವ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ದೆಹಲಿಯಲ್ಲಿ ಕಾಂಗ್ರೆಸ್ ಹೈಕಮಾಂಡ್ ನಾಯಕರನ್ನ ಭೇಟಿಯಾಗಿದ್ದು, ಸದ್ಯ ಹೈಕಮಾಂಡ್ ನಾಯಕತ್ವ ಬದಲಾವಣೆಗೆ ಬ್ರೇಕ್ ಹಾಕಿದೆ. ಇನ್ನೂ ಅಣ್ಣನಿಗೆ ಮುಖ್ಯಮಂತ್ರಿ ಸ್ಥಾನ ಸಿಗುವ ಕುರಿತು ಬೇಸರದಿಂದ ಮಾಜಿ ಸಂಸದ ಹಾಗೂ ಬಮೂಲ್ ಅಧ್ಯಕ್ಷರಾದ ಡಿ.ಕೆ.
ಕೇಂದ್ರ ಬಜೆಟ್ ಕೇವಲ ಹಣದ ಲೆಕ್ಕಾಚಾರವಲ್ಲ, ಅದು ದೇಶದ ಭವಿಷ್ಯದ ರೂಪುರೇಷೆ. ಫೆಬ್ರುವರಿ 1ರಂದು ಪ್ರಸ್ತುತವಾಗಲಿರುವ ಈ ಬಜೆಟ್, ಪ್ರತಿಯೊಬ್ಬರ ನಿರೀಕ್ಷೆಗಳನ್ನು ಹೊತ್ತಿದೆ. ವಿಶೇಷವಾಗಿ ಅಸ್ಸಾಂ, ಕೇರಳ, ತಮಿಳುನಾಡು, ಪಶ್ಚಿಮ ಬಂಗಾಳ ರಾಜ್ಯಗಳ ಅಭಿವೃದ್ಧಿಗೆ ಮಹತ್ವದ ಕೊಡುಗೆಗಳು ದೊರಕುವ ಸಾಧ್ಯತೆ ಇದೆ. ಬಿಹಾರಕ್ಕೆ ನೀಡಿದ ಆದ್ಯತೆಯ ಮಾದರಿಯಲ್ಲಿ ಈ ರಾಜ್ಯಗಳಿಗೂ ವಿಶೇಷ ಸ್ಥಾನಮಾನ ಸಿಗಬಹುದೆಂಬುದು ಜನಸಾಮಾನ್ಯರ ಆಶಯ. ಬಿಜೆಪಿ, ಅಭಿವೃದ್ಧಿ, ಸಂಸ್ಕೃತಿ, ಪರಂಪರೆಗೆ ಒತ್ತು ನೀಡಿ, ಮತದಾರರ ಹೃದಯ ಗೆಲ್ಲುವ ದೃಢ ಸಂಕಲ್ಪದಲ್ಲಿದೆ.
Friendflation ಕಾರಣದಿಂದ ಜನರು ಒಂಟಿಯಾಗುತ್ತಿದ್ದಾರೆಯೆ?
ಏನಿದು Friendflation?; ಇಲ್ಲಿದೆ ಮಾಹಿತಿ…
ಪುತ್ತೂರು: ವಿವೇಕಾನಂದ ಜಯಂತಿಯಲ್ಲಿ ದ್ವೇಷ ಭಾಷಣ ಆರೋಪ; ಕಲ್ಲಡ್ಕ ಪ್ರಭಾಕರ ಭಟ್ ವಿರುದ್ಧ ದೂರು
ಪುತ್ತೂರು: ಇಲ್ಲಿನ ವಿವೇಕಾನಂದ ಕಾಲೇಜಿನ ಆವರಣದಲ್ಲಿ ಜ.12ರಂದು ನಡೆದ ವಿವೇಕಾನಂದ ಜಯಂತಿ ಕಾರ್ಯಕ್ರಮದ ಸಭೆಯಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಕಲ್ಲಡ್ಕ ಪ್ರಭಾಕರ ಭಟ್ ಅವರು ಸಮಾಜದ ನಾಗರಿಕ ಸಮುದಾಯಗಳ ನಡುವೆ ಪರಸ್ಪರ ದ್ವೇಷ ಉಂಟಾಗುವ ರೀತಿಯಲ್ಲಿ ದ್ವೇಷ ಭಾಷಣ ಮಾಡಿದ್ದಾರೆ ಎಂದು ಆರೋಪಿಸಿ, ಅವರ ವಿರುದ್ಧ ಹಾಗೂ ಆ ಭಾಷಣವನ್ನು ಪ್ರಸಾರ ಮಾಡಿದ ಯೂಟ್ಯೂಬ್ ಚಾನೆಲ್ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಕರ್ನಾಟಕ ಮಾನವ ಬಂಧುತ್ವ ವೇದಿಕೆಯ ಪುತ್ತೂರು ತಾಲೂಕು ಸಮಿತಿ ಪುತ್ತೂರು ನಗರ ಠಾಣೆಗೆ ದೂರು ನೀಡಿದೆ. ದಿನಾಂಕ 12.01.2026ರಂದು ಪುತ್ತೂರಿನ ವಿವೇಕಾನಂದ ಕಾಲೇಜಿನ ಆವರಣದಲ್ಲಿ ನಡೆದ ವಿವೇಕಾನಂದ ಜಯಂತಿ ಕಾರ್ಯಕ್ರಮದಲ್ಲಿ ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಕಲ್ಲಡ್ಕ ಪ್ರಭಾಕರ ಭಟ್, ಕಾಲೇಜಿನ ವಿದ್ಯಾರ್ಥಿಗಳು, ಪೋಷಕರು ಹಾಗೂ ಹದಿಹರೆಯದ ಬಾಲಕ–ಬಾಲಕಿಯರು ಭಾಗವಹಿಸಿದ್ದ ಸಭೆಯಲ್ಲಿ ಸಮಾಜದ ವಿವಿಧ ನಾಗರಿಕ ಸಮುದಾಯಗಳ ನಡುವೆ ದ್ವೇಷ ಉಂಟಾಗುವ ರೀತಿಯಲ್ಲಿ ಭಾಷಣ ಮಾಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಈ ಕಾರ್ಯಕ್ರಮದ ವಿಡಿಯೋವನ್ನು ‘VIKASANA TV’ (ವಿಕಸನ ಟಿವಿ) ಎಂಬ ಯೂಟ್ಯೂಬ್ ಚಾನೆಲ್ನಲ್ಲಿ 12.01.2026ರಂದು ಅಪ್ಲೋಡ್ ಮಾಡಲಾಗಿದ್ದು, ಅದರಲ್ಲಿ ಡಾ. ಕಲ್ಲಡ್ಕ ಪ್ರಭಾಕರ ಭಟ್ ಅವರು ಇತಿಹಾಸದ ಘಟನೆಗಳನ್ನು ಉಲ್ಲೇಖಿಸಿ ಮುಸ್ಲಿಂ ಮತ್ತು ಕ್ರೈಸ್ತ ಸಮುದಾಯಗಳ ಬಗ್ಗೆ ಅವಹೇಳನಕಾರಿ ಹಾಗೂ ನಿಂದನಾತ್ಮಕ ಹೇಳಿಕೆಗಳನ್ನು ನೀಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಭಾಷಣದ ವೇಳೆ ಅವರು ಹಿಂದೂ ಮತ್ತು ಮುಸ್ಲಿಂ ಸಮುದಾಯಗಳ ನಡುವೆ ದ್ವೇಷ ಮೂಡುವಂತೆ ಹೇಳಿಕೆಗಳನ್ನು ನೀಡಿದ್ದು, ಅಲ್ಪಸಂಖ್ಯಾತರ ವಿರುದ್ಧ ಆಕ್ಷೇಪಾರ್ಹ ಮಾತುಗಳನ್ನು ಆಡಿದ್ದಾರೆ. ಇದೇ ವೇಳೆ ಮತಾಂತರದ ವಿಚಾರ ಉಲ್ಲೇಖಿಸಿ ಕ್ರೈಸ್ತ ಸಮುದಾಯವನ್ನು ದೂಷಿಸಿರುವುದಾಗಿ ದೂರಿನಲ್ಲಿ ಹೇಳಲಾಗಿದೆ. ಕೆಲವು ಕಲ್ಪಿತ ಘಟನೆಗಳನ್ನು ಉಲ್ಲೇಖಿಸಿ ಸಮಾಜದಲ್ಲಿ ಭಯ ಮತ್ತು ದ್ವೇಷ ಉಂಟುಮಾಡುವ ಪ್ರಯತ್ನ ಮಾಡಿದ್ದಾರೆ ಎಂದೂ ಆರೋಪಿಸಲಾಗಿದೆ. ಭಾಷಣದ ಕೊನೆಯಲ್ಲಿ ಒನಕೆ ಓಬವ್ವನ ಕಥೆಯನ್ನು ಉಲ್ಲೇಖಿಸಿ, ನಿರ್ದಿಷ್ಟ ಸಮುದಾಯಗಳ ವಿರುದ್ಧ ಹಿಂಸೆಗೆ ಪ್ರಚೋದಿಸುವಂತ ಮಾತುಗಳನ್ನು ಆಡಿರುವುದು ಅತ್ಯಂತ ಗಂಭೀರ ವಿಷಯವಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಇದರಿಂದ ಸಭೆಯಲ್ಲಿ ಭಾಗವಹಿಸಿದ್ದವರು, ವಿಶೇಷವಾಗಿ ಎಳೆಯ ಪ್ರಾಯದ ವಿದ್ಯಾರ್ಥಿಗಳು ಹಾಗೂ ಯೂಟ್ಯೂಬ್ ಮೂಲಕ ಭಾಷಣ ವೀಕ್ಷಿಸಿದ ಸಾವಿರಾರು ಜನರಲ್ಲಿ ಮುಸ್ಲಿಂ ಮತ್ತು ಕ್ರೈಸ್ತ ಸಮುದಾಯಗಳ ವಿರುದ್ಧ ದ್ವೇಷ ಹುಟ್ಟುವ ಸಾಧ್ಯತೆ ಇದೆ ಎಂದು ಮಾನವ ಬಂಧುತ್ವ ವೇದಿಕೆ ಆರೋಪಿಸಿದೆ. ಹಿಂದೆಯೇ ದ್ವೇಷ ಭಾಷಣ ಮಾಡಬಾರದು ಎಂದು ನ್ಯಾಯಾಲಯ ಷರತ್ತು ವಿಧಿಸಿದ್ದರೂ ಅದನ್ನು ಉಲ್ಲಂಘಿಸಿ ಪುನಃ ದ್ವೇಷ ಭಾಷಣ ಮಾಡಿರುವುದು ಸಮಾಜದಲ್ಲಿ ಅಶಾಂತಿ ಮತ್ತು ಹಿಂಸೆಗೆ ಕಾರಣವಾಗಬಹುದು ಎಂದು ದೂರಿನಲ್ಲಿ ತಿಳಿಸಲಾಗಿದೆ. ಆದ್ದರಿಂದ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ದ್ವೇಷ ಭಾಷಣ ಮಾಡಿದ ಡಾ. ಕಲ್ಲಡ್ಕ ಪ್ರಭಾಕರ ಭಟ್ ಅವರನ್ನು ಬಂಧಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಹಾಗೂ ಈ ಭಾಷಣವನ್ನು ಪ್ರಸಾರ ಮಾಡಿದ ‘VIKASANA TV’ (ವಿಕಸನ ಟಿವಿ) ಯೂಟ್ಯೂಬ್ ಚಾನೆಲ್ ಮೇಲೆಯೂ ಕ್ರಮ ಜರುಗಿಸಬೇಕು ಎಂದು ದೂರಿನಲ್ಲಿ ಆಗ್ರಹಿಸಲಾಗಿದೆ. ಈ ಸಂದರ್ಭದಲ್ಲಿ ಮಾನವ ಬಂಧುತ್ವ ವೇದಿಕೆಯ ಪುತ್ತೂರು ತಾಲೂಕು ಸಮಿತಿಯ ಪ್ರಧಾನ ಸಂಚಾಲಕ ರಾಮಚಂದ್ರ ಕೆ., ಪ್ರಮುಖರಾದ ಎಂ.ಬಿ. ವಿಶ್ವನಾಥ ರೈ, ಮೌರಿಸ್ ಮಸ್ಕರೇನ್ಹಸ್, ಎಚ್. ಮಹಮ್ಮದ್ ಆಲಿ, ಕೆನ್ಯೂಟ್ ಮಸ್ಕರೇನ್ಹಸ್, ಡಾ. ರಾಜಾರಾಮ್ ಕೆ.ಬಿ., ಬೋಲೋಡಿ ಚಂದ್ರಹಾಸ ರೈ, ಶಶಿಕಿರಣ್ ರೈ, ಅಬ್ದುಲ್ ರೆಹಮಾನ್ ಯೂನಿಕ್, ಉಲ್ಲಾಸ್ ಕೋಟ್ಯಾನ್, ಪ್ರಕಾಶ್ ಗೌಡ ತೆಂಕಿಲ ಸೇರಿದಂತೆ ಇತರರು ಉಪಸ್ಥಿತರಿದ್ದರು.
ICC Rankings-ವಿರಾಟ್ ಕೊಹ್ಲಿಯನ್ನು ಹಿಂದಿಕ್ಕಿ ನಂಬರ್ 1 ಆದ ಡೆರಿಲ್ ಮಿಚೆಲ್! ಮಹತ್ವದ ಸ್ಥಾನ ಹಿಡಿದ ಕೆಎಲ್ ರಾಹುಲ್
ನ್ಯೂಜಿಲೆಂಡ್ ವಿರುದ್ಧ ಏಕದಿನ ಸರಣಿಯಲ್ಲಿ ಅತ್ಯುತ್ತಮ ಪ್ರದರ್ಶನದ ಹೊರತಾಗಿಯೂ ಭಾರತದ ಸ್ಟಾರ್ ಬ್ಯಾಟ್ಸ್ಮನ್ ವಿರಾಟ್ ಕೊಹ್ಲಿ ಅವರು ಐಸಿಸಿ ಏಕದಿನ ರ್ಯಾಂಕಿಂಗ್ ಪಟ್ಟಿಯಲ್ಲಿ ತಮ್ಮ ಅಗ್ರಸ್ಥಾನವನ್ನು ಕಳೆದುಕೊಂಡಿದ್ದಾರೆ. ಭಾರತದ ವಿರುದ್ಧ ಸತತ 2 ಶತಕ ಬಾರಿಸಿದ ನ್ಯೂಜಿಲೆಂಡ್ ನ ಡೆರಿಲ್ ಮಿಚೆಲ್ ಅವರು ವಿರಾಟ್ ಕೊಹ್ಲಿ ಅವರನ್ನು ಹಿಂದಿಕ್ಕಿ ಪ್ರಥಮ ಸ್ಥಾನಕ್ಕೇರಿದ್ದಾರೆ. ಪ್ರವಾಸಿ ನ್ಯೂಜಿಲೆಂಡ್ ವಿರುದ್ಧ ಇತ್ತೀಚೆಗೆ ಮುಗಿದ ಭಾರತ 1-2 ಸರಣಿ ಸೋಲು ಅನುಭವಿಸಿದ ನಂತರ ಈ ಬದಲಾವಣೆ ಆಗಿದೆ. ಪಡೆದುಕೊಂಡಿದ್ದಾರೆ. ಭಾರತದಲ್ಲಿ ನ್ಯೂಜಿಲೆಂಡ್ ತಂಡ ತನ್ನ ಮೊದಲ ಏಕದಿನ ಸರಣಿ ಗೆಲುವಿನಲ್ಲಿ ಮಿಚೆಲ್ ಪ್ರಮುಖ ಪಾತ್ರ ವಹಿಸಿದ್ದರು. ಕೊಹ್ಲಿ ಮತ್ತು ಮಿಚೆಲ್ ನಡುವಿನ ರೇಟಿಂಗ್ ಅಂಕಗಳಲ್ಲಿ ಅಗಾಧ ವ್ಯತ್ಯಾಸ ಇರುವುದರಿಂದ ಸ್ವಲ್ಪ ಸಮಯದ ವರೆಗೆ ಡೆರಿಲ್ ಮಿಚೆಲ್ ಅವರು 1ನೇ ಸ್ಥಾನದಲ್ಲಿ ಮುಂದುವರಿಯುವ ಎಲ್ಲಾ ಲಕ್ಷಣಗಳಿವೆ. ಮಿಚೆಲ್ ಅವರು 845 ರೇಟಿಂಗ್ ಅಂಕಗಳನ್ನು ಹೊಂದಿದ್ದರೆ, ಕೊಹ್ಲಿ ಬಳಿ ಸದ್ಯ 795 ರೇಟಿಂಗ್ ಅಂಕಗಳಿವೆ. ಈ ಬೆಳವಣಿಗೆಯಿಂದಾಗಿ ರೋಹಿತ್ ಶರ್ಮಾ ಅವರು 3ರಿಂದ 4ನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದಾರೆ. ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧ ಸರಣಿಯಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದ್ದ ಅವರು ರಾಗಿದ್ದರು. ಐದನೇ ಸ್ಥಾನದಲ್ಲಿ ಭಾರತ ತಂಡದ ನಾಯಕ ಶುಭಮನ್ ಗಿಲ್ ಅವರು ಯಥಾಸ್ಥಿತಿಯಲ್ಲಿ ಇದ್ದಾರೆ. ಹೀಗಾಗಿ ಪಟ್ಟಿಯ ಟಾಪ್ 5ರಲ್ಲಿ ಮೂವರು ಬ್ಯಾಟರ್ ಗಳು ಭಾರತೀಯರೇ ಆಗಿದ್ದಾರೆ. ಟಾಪ್ 10ರೊಳಗೆ ಕೆಎಲ್ ರಾಹುಲ್ ಅವರೂ ಸೇರಿ ನಾಲ್ಕರಿದ್ದಾರೆ. ಟಾಪ್ 10ರೊಳಗೆ ಕೆ.ಎಲ್. ರಾಹುಲ್ ನ್ಯೂಜಿಲೆಂಡ್ ವಿರುದ್ಧ 2ನೇ ಪಂದ್ಯದಲ್ಲಿ ಶತಕ ಗಳಿಸಿದ ಭಾರತದ ವಿಕೆಟ್ ಕೀಪರ್ ಬ್ಯಾಟರ್ ಕೆಎಲ್ ರಾಹುಲ್ ಅವರು ಐಸಿಸಿ ಏಕದಿನ ಬ್ಯಾಟಿಂಗ್ ಶ್ರೇಯಾಂಕದಲ್ಲಿ 10ನೇ ಸ್ಥಾನಕ್ಕೆ ಏರಿದ್ದಾರೆ. ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ರಾಹುಲ್ ಉತ್ತಮ ಪ್ರದರ್ಶನ ನೀಡಿದ್ದಾರೆ. 32 ವರ್ಷದ ರಾಹುಲ್ ಸರಣಿಯ ಮೊದಲ ಪಂದ್ಯದಲ್ಲಿ ಅಜೇಯರಾಗಿ ತಂಡಕ್ಕೆ ಗೆಲುವು ತಂದುಕೊಟ್ಟರು. ನಂತರದ ಪಂದ್ಯದಲ್ಲಿ ಅದ್ಭುತ ಶತಕ ಬಾರಿಸಿದರು. ಆದರೆ ನಿರ್ಣಾಯಕ ಪಂದ್ಯದಲ್ಲಿ ಕೇವಲ ಒಂದು ರನ್ಗೆ ಔಟಾದರು. ಇನ್ನು ಭಾರತ ತಂಡದ ಉಪನಾಯಕ ಶ್ರೇಯಸ್ ಅಯ್ಯರ್ ಅವರು 11ನೇ ಸ್ಥಾನದಲ್ಲಿದ್ದಾರೆ. ಏಕದಿನ ಬ್ಯಾಟರ್ಗಳ ರ್ಯಾಂಕಿಂಗ್ ಶ್ರೇಯಾಂಕ ಆಟಗಾರನ ಹೆಸರು ದೇಶ ರೇಟಿಂಗ್ ಅಂಕ 1 ಡೆರಿಲ್ ಮಿಚೆಲ್ ನ್ಯೂಜಿಲೆಂಡ್ 845 2 ವಿರಾಟ್ ಕೊಹ್ಲಿ ಭಾರತ 795 3 ಇಬ್ರಾಹಿಂ ಜದ್ರಾನ್ ಅಫ್ಘಾನಿಸ್ತಾನ 764 4 ರೋಹಿತ್ ಶರ್ಮಾ ಭಾರತ 757 5 ಶುಭ್ಮನ್ ಗಿಲ್ ಭಾರತ 723 6 ಬಾಬರ್ ಆಝಂ ಪಾಕಿಸ್ತಾನ 722 7 ಹ್ಯಾರಿ ಟೆಕ್ಟರ್ ಐರ್ಲೆಂಡ್ 708 8 ಶಾಯ್ ಹೋಪ್ ವೆಸ್ಟ್ ಇಂಡೀಸ್ 701 9 ಚರಿತ್ ಅಸಲಂಕ ಶ್ರೀಲಂಕಾ 690 10 ಕೆ.ಎಲ್. ರಾಹುಲ್ ಭಾರತ 670 ಟಿ20ಯಲ್ಲಿ ರಶೀದ್ ಖಾನ್ ವಿಕ್ರಮ ವೆಸ್ಟ್ ಇಂಡೀಸ್ ವಿರುದ್ಧ ದುಬೈನಲ್ಲಿ ನಡೆದ ಮೊದಲ ಟಿ20 ಪಂದ್ಯದಲ್ಲಿ ಎರಡು ವಿಕೆಟ್ ಪಡೆದಿರುವ ರಶೀದ್ ಖಾನ್ ಇದೀಗ ಟಿ20 ಬೌಲಿಂಗ್ ಶ್ರೇಯಾಂಕದಲ್ಲಿ ಎರಡು ಸ್ಥಾನಗಳನ್ನು ಮೇಲೇರಿ ಎರಡನೇ ಸ್ಥಾನಕ್ಕೆ ತಲುಪಿದ್ದಾರೆ. ಅವರ ಸಹ ಆಟಗಾರ ಮುಜೀಬ್ ಉರ್ ರೆಹಮಾನ್ (ಎರಡು ಸ್ಥಾನ ಏರಿ ಜಂಟಿ 14ನೇ ಸ್ಥಾನ) ಕೂಡ ಈ ಪಟ್ಟಿಯಲ್ಲಿ ಮುನ್ನಡೆ ಸಾಧಿಸಿದ್ದಾರೆ. ಇನ್ನು, ಅಫ್ಘಾನಿಸ್ತಾನದ ಇಬ್ರಾಹಿಂ ಝದ್ರನ್ (ಐದು ಸ್ಥಾನ ಏರಿ 15ನೇ ಸ್ಥಾನ) ಟಿ20 ಬ್ಯಾಟಿಂಗ್ ಶ್ರೇಯಾಂಕದಲ್ಲಿ ಅತಿ ಹೆಚ್ಚು ಮುನ್ನಡೆ ಸಾಧಿಸಿದ ಆಟಗಾರರಾಗಿದ್ದಾರೆ.
ತಿಪ್ಪೆಗುಂಡಿ, ಸ್ಮಶಾನದಂತಾದ ವಿಶ್ವಶ್ರೇಷ್ಠ 'ರಾಷ್ಟ್ರಕೂಟ ಕೋಟೆ'
ಕವಿರಾಜಮಾರ್ಗ ತೋರಿದ ನೆಲಕ್ಕೆ ಸರಕಾರ ನಿರ್ಲಕ್ಷ್ಯ ►ಕೋಟೆಯಲ್ಲಿ ಕುಡುಕರ ಹಾವಳಿ: ಬಯಲಲ್ಲೇ ಶೌಚ!
'ಫೆಬ್ರವರಿ10ರೊಳಗೆ ಸಾಮಾಜಿಕ, ಶೈಕ್ಷಣಿಕ ಸಮೀಕ್ಷಾ ವರದಿ ಸರ್ಕಾರಕ್ಕೆ ಸಲ್ಲಿಕೆ ಸಾಧ್ಯತೆ'
ಬೆಂಗಳೂರು: ರಾಜ್ಯದಲ್ಲಿ ಕಳೆದ ವರ್ಷ ಸಾಕಷ್ಟು ಚರ್ಚೆಗೆ ಕಾರಣವಾಗಿದ್ದ 'ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ 2025' ಕಾರ್ಯ ಈಗಾಗಲೇ ಪೂರ್ಣಗೊಂಡಿದೆ. ಆ ಸಮೀಕ್ಷೆಯ ವರದಿ ಸಲ್ಲಿಕೆ ಯಾವಾಗ ಎಂಬ ಪ್ರಶ್ನೆ ರಾಜ್ಯದ ಜನರಲ್ಲಿ ಹಾಗೂ ವಿಪಕ್ಷ ನಾಯಕರಲ್ಲಿ ಉದ್ಭವವಾಗಿತ್ತು. ಅದಕ್ಕೀಗ ಉತ್ತರಿಸಿರುವ ಕನ್ನಡ ಮತ್ತು ಸಂಸ್ಕೃತಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಶಿವರಾಜ್ ಎಸ್
ಭಾರತೀಯರಲ್ಲಿ ಕಬ್ಬಿಣದಂಶದ ಕೊರತೆ; 8 ಆರಂಭಿಕ ಚಿಹ್ನೆಗಳನ್ನು ಆಲಕ್ಷಿಸಬೇಡಿ…
ಕೇಂದ್ರ ಸರ್ಕಾರ 2018ರಲ್ಲಿ ಅನೀಮಿಯ ಮುಕ್ತ್ ಭಾರತ್ (ಎಎಂಬಿ) ಕಾರ್ಯಯೋಜನೆಯನ್ನು ಆರಂಭಿಸಿತ್ತು. ಆದರೆ ರಕ್ತಹೀನತೆಯನ್ನು ಸಂಪೂರ್ಣವಾಗಿ ತೊಡೆದು ಹಾಕಬೇಕಾದರೆ ಆರಂಭಿಕ ಚಿಹ್ನೆಗಳನ್ನು ಪತ್ತೆಹಚ್ಚಿ ಬದಲಾವಣೆ ತರಬೇಕಿದೆ. ರಕ್ತಹೀನತೆಯ ಆರಂಭಿಕ ಚಿಹ್ನೆಗಳು ಯಾವುವು? ಕಬ್ಬಿಣಂಶದ ಕೊರತೆ ಭಾರತದಲ್ಲಿ ಸಾರ್ವಜನಿಕ ಆರೋಗ್ಯ ಬಿಕ್ಕಟ್ಟು. ಕಬ್ಬಿಣವು ಮಾನವ ದೇಹದಲ್ಲಿ ಬಹಳ ಮುಖ್ಯ ಪಾತ್ರವಹಿಸುವ ಸೂಕ್ಷ್ಮ ಪೋಷಕಾಂಶವಾಗಿದೆ. ಕೆಂಪು ರಕ್ತಕಣಗಳಲ್ಲಿ ಹಿಮೋಗ್ಲೋಬಿನ್ ಮೂಲಕ ಆಮ್ಲಜನಕ ಸಾಗಿಸಲು ಈ ಖನಿಜ ಮುಖ್ಯವಾಗಿದೆ. ಇದು ಶಕ್ತಿ ಉತ್ಪಾದನೆಗೆ ಸಹಕರಿಸುತ್ತದೆ. ಪ್ರತಿರಕ್ಷಣಾ ವ್ಯವಸ್ಥೆಯನ್ನು ಬೆಂಬಲಿಸುತ್ತದೆ. ಸ್ನಾಯು ಚಟುವಟಿಕೆಯನ್ನು ಬೆಂಬಲಿಸುತ್ತದೆ. ಜೀವಕೋಶಗಳ ಬೆಳವಣಿಗೆ, ಡಿಎನ್ಎ ಸಂಶ್ಲೇಷಣೆ ಮತ್ತು ಹಾರ್ಮೋನ್ ಉತ್ಪಾದನೆಗೆ ನೆರವಾಗುತ್ತದೆ. ದೇಹದಲ್ಲಿ ಕಬ್ಬಿಣದಂಶದ ಕೊರತೆ ಇದ್ದರೆ, ಸುಸ್ತು, ಆಯಾಸ ಆವರಿಸುತ್ತದೆ ಮತ್ತು ಅರಿವಿನ ಕಾರ್ಯ ಕಳಪೆಯಾಗುತ್ತದೆ. ಮಾತ್ರವಲ್ಲದೆ ಕಬ್ಬಿಣಂಶದ ಕೊರತೆಯು ರಕ್ತಹೀನತೆಗೂ ಕಾರಣವಾಗುತ್ತದೆ. ಭಾರತದಲ್ಲಿ ಕಬ್ಬಿಣಂಶದ ಕೊರತೆಯು ರಕ್ತಹೀನತೆಗೆ ಪ್ರಮುಖ ಕಾರಣವಾಗಿದೆ. ಮಹಿಳೆಯರಲ್ಲಿ ಈ ಸಮಸ್ಯೆ ಹೆಚ್ಚಾಗಿರುತ್ತದೆ. ರಾಷ್ಟ್ರೀಯ ಕೌಟುಂಬಿಕ ಆರೋಗ್ಯ ಸಮೀಕ್ಷೆ 5ರ ಪ್ರಕಾರ 6ರಿಂದ 59 ತಿಂಗಳ ನಡುವಿನ ಮಕ್ಕಳಲ್ಲಿ ರಕ್ತಹೀನತೆ ಶೇ 67.2ರಷ್ಟಿದ್ದರೆ, ಬಾಲಕಿಯರಲ್ಲಿ ಶೇ 59.1ರಷ್ಟು ಇರುತ್ತದೆ. 15ರಿಂದ 49ರ ವಯಸ್ಸಿನ ಮಹಿಳೆಯರಲ್ಲಿ ಶೇ 57ರಷ್ಟು ಮತ್ತು ಅದೇ ವಯಸ್ಸಿನ ಪುರುಷರಲ್ಲಿ ಶೇ 25ರಷ್ಟು ಪ್ರಮಾಣದಲ್ಲಿ ರಕ್ತಹೀನತೆ ಇರುವುದು ಪತ್ತೆಯಾಗಿದೆ. ಕೇಂದ್ರ ಸರ್ಕಾರ 2018ರಲ್ಲಿ ಅನೀಮಿಯ ಮುಕ್ತ್ ಭಾರತ್ (ಎಎಂಬಿ) ಕಾರ್ಯಯೋಜನೆಯನ್ನು ಆರಂಭಿಸಿತ್ತು. ಆದರೆ ರಕ್ತಹೀನತೆಯನ್ನು ಸಂಪೂರ್ಣವಾಗಿ ತೊಡೆದು ಹಾಕಬೇಕಾದರೆ ಆರಂಭಿಕ ಚಿಹ್ನೆಗಳನ್ನು ಪತ್ತೆಹಚ್ಚಿ ಬದಲಾವಣೆ ತರಬೇಕಿದೆ. ರಕ್ತಹೀನತೆಯ ಆರಂಭಿಕ ಚಿಹ್ನೆಗಳು ಯಾವುವು? ಸುಸ್ತು ಮತ್ತು ಆಯಾಸ ಸಾಕಷ್ಟು ವಿಶ್ರಾಂತಿ ಪಡೆದರೂ ಪದೇಪದೆ ಆಯಾಸವಾಗುವುದು ರಕ್ತಹೀನತೆಯ ಆರಂಭಿಕ ಲಕ್ಷಣಗಳಲ್ಲಿ ಒಂದಾಗಿದೆ. ರಕ್ತದಲ್ಲಿ ಸಾಕಷ್ಟು ಆಮ್ಲಜನಕ ಇಲ್ಲದೆ ಇದ್ದಾಗ ಸ್ನಾಯುಗಳು ಮತ್ತು ಮೆದುಳಿಗೆ ಚೈತನ್ಯ ನೀಡಲು ಸಾಧ್ಯವಾಗದು. ಹೀಗಾಗಿ ಕೊನೆಗೆ ನಡಿಗೆ ಮತ್ತು ಮೆಟ್ಟಿಲು ಹತ್ತುವಂತಹ ಕೆಲಸದಲ್ಲೂ ಸುಸ್ತು ಆರಂಭವಾಗುತ್ತದೆ. ರಕ್ತಹೀನತೆಯಿಂದ ಬಳಲುತ್ತಿರುವವರಿಗೆ ಆಯಾಸದಿಂದಾಗಿ ದೈನಂದಿನ ಚಟುವಟಿಕೆಗಳನ್ನೂ ಮಾಡಲು ಸಾಧ್ಯವಾಗುವುದಿಲ್ಲ. ಹಳದಿ ಬಣ್ಣಕ್ಕೆ ತಿರುಗುವ ಚರ್ಮ ಚರ್ಮ ತನ್ನ ಸಹಜವಾದ ಬಣ್ಣವನ್ನು ಕಳೆದುಕೊಳ್ಳಬಹುದು. ಮುಖ್ಯವಾಗಿ ಮುಖ, ಅಂಗೈ ಅಥವಾ ಕಣ್ಣಿನ ಒಳಗೆ ಬಣ್ಣ ಮಾಸಬಹುದು. ಆಮ್ಲಜನಕ ಸಾಗಿಸುವ ಹಿಮೋಗ್ಲೋಬಿನ್ ಕಡಿಮೆಯಾಗುವುದರಿಂದ ಬಣ್ಣ ಮಾಸಬಹುದು ಮತ್ತು ಸೌಮ್ಯವಾದ ಚರ್ಮದ ಟೋನ್ಗಳಲ್ಲಿ ಹೆಚ್ಚು ಗಮನಾರ್ಹವಾಗಿ ಕಂಡುಬರಬಹುದು. ಕೆಲವೊಮ್ಮೆ ಹಳದಿ ಬಣ್ಣ ಕಾಮಾಲೆ ಸಂಬಂಧಿತ ಸಮಸ್ಯೆಗಳ ಸಂಕೇತವೂ ಆಗಿರಬಹುದು. ಉಸಿರಾಟದ ಸಮಸ್ಯೆ ಆಮ್ಲಜನಕದ ಕೊರತೆ ನೀಗಿಸಲು ದೇಹ ವೇಗವಾಗಿ ಉಸಿರಾಡಲು ಪ್ರಯತ್ನಿಸುವಾಗ ಸೌಮ್ಯವಾದ ಪರಿಶ್ರಮ ಕೂಡ ಉಸಿರಾಟದ ತೊಂದರೆಗೆ ಕಾರಣವಾಗಬಹುದು. ವ್ಯಾಯಾಮ ಮಾಡುವಾಗ ಅಥವಾ ಮೆಟ್ಟಿಲನ್ನು ಹತ್ತುವಾಗ ಈ ಸಮಸ್ಯೆ ಕಾಡಬಹುದು. ಅಂದರೆ, ಆಮ್ಲಜನಕ ತಲುಪಿಸಲು ಹೃದಯ ಮತ್ತು ಶ್ವಾಸಕೋಶಗಳ ಮೇಲೆ ಹೆಚ್ಚು ಒತ್ತಡ ಬಿದ್ದಿರುತ್ತದೆ. ಹೀಗಾಗಿ ದೀರ್ಘಕಾಲದಲ್ಲಿ ಹೃದಯದ ಅಪಾಯಗಳೂ ಸಂಭವಿಸಬಹುದು. ಅನಿಯಮಿತ ಹೃದಯ ಬಡಿತ ಚಟುವಟಿಕೆಯ ಸಮಯದಲ್ಲಿ ತ್ವರಿತ ಮತ್ತು ಅನಿಯಮಿತ ಹೃದಯದ ಬಡಿತ ಕಂಡುಬರಬಹುದು. ವಿಶೇಷವಾಗಿ ಚಟುವಟಿಕೆಯ ಸಮಯದಲ್ಲಿ ಹೃದಯ ಬೇಗಬೇಗನೇ ಬಡಿದುಕೊಳ್ಳಬಹುದು. ಹೃದಯವು ರಕ್ತಪರಿಚಲನೆಗೆ ಹೆಚ್ಚು ಶ್ರಮಿಸಿದಾಗ ಇದು ಸಂಭವಿಸುತ್ತದೆ. ತಲೆತಿರುಗುವಿಕೆ ಮತ್ತು ತಲೆನೋವು ಹಗುರವಾದ ತಲೆನೋವು ಅಥವಾ ಆಗಾಗ ತಲೆನೋವು ಬರುವುದು ಮೆದುಳಿನ ಆಕ್ಸಿಜನೇಶನ್ ಸಾಕಷ್ಟು ಇಲ್ಲದೆ ಇದ್ದಾಗ ಸಂಭವಿಸುತ್ತದೆ. ತ್ವರಿತವಾಗಿ ನಿಲ್ಲಲು ಪ್ರಯತ್ನಿಸಿದಾಗ ಹೆಚ್ಚು ದುಸ್ತರವಾಗಬಹುದು. ಗಮನ ಕೇಂದ್ರೀಕರಿಸಲು ಕಷ್ಟವಾಗಬಹುದು. ಅಂತಹ ಸಂದರ್ಭ ಮೆದುಳು ಮಂಜಾಗುವುದು ಅಥವಾ ವರ್ಟಿಗೊಗೆ ಕಾರಣವಾಗಬಹುದು. ಕೈಗಳು ತಂಪಾಗಿರುವುದು ರಕ್ತಪರಿಚಲನೆ ಸರಿಯಾಗಿ ಆಗದೆ ಇದ್ದಾಗ ಬೆಚ್ಚನೆಯ ಪರಿಸರದಲ್ಲೂ ಕೈಗಳು ಮತ್ತು ಪಾದಗಳು ತಂಪಾಗಬಹುದು. ಆಮ್ಲಜನಕ ಕೊರತೆ ಇರುವ ರಕ್ತವು ದೂರದ ಅಂಗಾಂಶಗಳನ್ನು ತಲುಪಲು ಕಷ್ಟಪಡುವುದರಿಂದ ಇದು ಸಂಭವಿಸಬಹುದು. ಅಸಹಜವಾದ ಹಸಿವು ಪೈಕಾ ರೋಗವು ಐಸ್, ಜೇಡಿಮಣ್ಣು, ಮಣ್ಣು ಅಥವಾ ಸೀಮೆ ಸುಣ್ಣದಂತಹ ಆಹಾರೇತರ ವಸ್ತುಗಳನ್ನು ತಿನ್ನುವ ಹಂಬಲ ತರುತ್ತದೆ. ಕಬ್ಬಿಣದ ಕೊರತೆ ಇದ್ದರೆ ಇಂತಹ ವಿಚಿತ್ರ ಹಸಿವು ಉಂಟಾಗುತ್ತದೆ. ಬಾಯಿ ಹುಣ್ಣು, ತುಟಿಗಳು ಬಿರುಕುಬಿಡುವುದು ಅಥವಾ ನಾಲಿಗೆಯಲ್ಲಿ ನೋವು ಕೂಡ ರಕ್ತಹೀನತೆಯ ಲಕ್ಷಣಗಳಾಗಿವೆ. ಕೂದಲು ಉದುರುವಿಕೆ ಬೆಳವಣಿಗೆಗೆ ಅಗತ್ಯವಿರುವ ಸಾಕಷ್ಟು ಪೋಷಕಾಂಶಗಳು ಇಲ್ಲದೆ ಉಗುರುಗಳು ಸುಲಭವಾಗಿ ಒಡೆದು ಹೋಗಬಹುದು, ಚಮಚದ ಆಕಾರಕ್ಕೆ ತಿರುಗಬಹುದು. ಕೂದಲುಗಳು ಉದುರಬಹುದು. ಇವು ತೀವ್ರವಾದ ಆಯಾಸಕ್ಕೆ ಮೊದಲು ಕಾಣಿಸಿಕೊಳ್ಳುತ್ತವೆ. ಆಯಾಸದ ಜೊತೆಗೆ ಹೀಗಾದರೆ ಖಂಡಿತಾ ರಕ್ತಹೀನತೆಯ ಚಿಹ್ನೆಗಳು. ಕೃಪೆ: ndtv.com
ಸಂಪಾದಕೀಯ | ಜಿ ರಾಮ್ ಜಿ ಬಗ್ಗೆ ವಿಶೇಷ ಗ್ರಾಮ ಸಭೆ ಎಂಬ ಅಭಾಸ
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಡಬ್ಲ್ಯೂಪಿಎಲ್ನಲ್ಲಿ ಮಿಂಚಿದ ಆರ್ಸಿಬಿ ಗೌತಮಿ ನಾಯಕ್ಗೆ ಹಾರ್ದಿಕ್ ಪಾಂಡ್ಯ, ಸ್ಮೃತಿ ಮಂಧಾನ ವಿಶೇಷ ಸಂದೇಶ
WPL 2026 RCB Gautami Naik: ಗುಜರಾತ್ ಜೈಂಟ್ ವಿರುದ್ಧ ಡಬ್ಲ್ಯೂಪಿಎಲ್ನಲ್ಲಿ ಚೊಚ್ಚಲ ಅರ್ಧ ಶತಕ ಸಿಡಿಸಿದ ಆರ್ಸಿಬಿ ಗೌತಮಿ ನಾಯಕ್ಗೆ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ. ಹಾಗೆಯೇ ಟೀಮ್ ಇಂಡಿಯಾ ಹಾಗೂ ಮುಂಬೈ ಇಂಡಿಯನ್ಸ್ ತಂಡದ ಹಾರ್ದಿಕ್ ಪಾಂಡ್ಯ ಹಾಗೂ ಸ್ಮೃತಿ ಮಂಧಾನ ವಿಶೇಷ ಸಂದೇಶ ರವಾನಿಸಿದ್ದಾರೆ. ಹಾಗಾದ್ರೆ ಅವರು ಏನು ಹೇಳಿದ್ದಾರೆ ಎನ್ನುವ ಮಾಹಿತಿಯನ್ನು ಇಲ್ಲಿ
ಮಿಲಾಗ್ರಿಸ್ ಕಾಲೇಜಿನಲ್ಲಿ ಶಿಕ್ಷಕರ ಸಬಲೀಕರಣ ಕಾರ್ಯಾಗಾರ
ಮಂಗಳೂರು, ಜ.21: ಹಂಪನಕಟ್ಟೆಯ ಮಿಲಾಗ್ರಿಸ್ ಕಾಲೇಜಿನ ಆಂತರಿಕ ಗುಣಮಟ್ಟ ಭರವಸೆ ಕೋಶ (ಐಕ್ಯೂಎಸಿ) ಹಾಗೂ ಸೈಂಟ್ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾನಿಲಯದ ಸಹಯೋಗದಲ್ಲಿ, ‘ಬೋಧನೆ ಮತ್ತು ಮಾಧ್ಯಮದಲ್ಲಿ ಕೃತಕ ಬುದ್ಧಿಮತ್ತೆ (ಎಐ) ಮೂಲಕ ಶಿಕ್ಷಕರ ಸಬಲೀಕರಣ’ ಎಂಬ ವಿಷಯದ ಕುರಿತು ಶಿಕ್ಷಕರಿಗಾಗಿ ಒಂದು ದಿನದ ಕಾರ್ಯಾಗಾರವನ್ನು ಮಂಗಳವಾರ ಕಾಲೇಜಿನಲ್ಲಿ ಆಯೋಜಿಸಲಾಗಿತ್ತು. ಕಾರ್ಯಕ್ರಮದ ಮೊದಲ ಗೋಷ್ಠಿಯಲ್ಲಿ ಮಂಗಳೂರಿನ ಸೈಂಟ್ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾನಿಲಯದ ಮಾಧ್ಯಮ ಅಧ್ಯಯನ ವಿಭಾಗದ ಪ್ರಾಧ್ಯಾಪಕ ಯೂಸಫುಲ್ ಅರ್ಶದ್ ಮಾತನಾಡಿ, ಬೋಧನೆ–ಕಲಿಕಾ ಪ್ರಕ್ರಿಯೆ ಹಾಗೂ ದಿನನಿತ್ಯದ ಶೈಕ್ಷಣಿಕ ಬದುಕಿನಲ್ಲಿ ಕೃತಕ ಬುದ್ಧಿಮತ್ತೆ (ಎಐ) ಪರಿಕರಗಳ ಪರಿಣಾಮಕಾರಿ ಬಳಕೆಯ ಕುರಿತು ವಿವರಿಸಿದರು. ಎರಡನೇ ಅವಧಿಯಲ್ಲಿ ಸೈಂಟ್ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾನಿಲಯದ ಮಾಧ್ಯಮ ಅಧ್ಯಯನ ವಿಭಾಗದ ಪ್ರಾಧ್ಯಾಪಕ ವಿಲ್ಸನ್ ಪಿರೇರಾ ಮಾತನಾಡಿ, ಕೃತಕ ಬುದ್ಧಿಮತ್ತೆಯ ಸಾಧಕ–ಬಾಧಕಗಳ ಬಗ್ಗೆ ಮಾಹಿತಿ ನೀಡಿದರು. ಮೂರನೇ ಗೋಷ್ಠಿಯಲ್ಲಿ ಅದೇ ವಿಭಾಗದ ಪ್ರಾಧ್ಯಾಪಕ ವಿಶಾಲ್ ನಾಯಕ್ ಅವರು, ಕಾಲೇಜುಗಳ ಮಾಧ್ಯಮ ಶಿಕ್ಷಣದಲ್ಲಿ ಎಐ ಪರಿಕರಗಳನ್ನು ಸಂಯೋಜಿಸುವ ಕುರಿತು ಪ್ರಾಯೋಗಿಕ ತರಬೇತಿ ನೀಡಿದರು. ಕಾರ್ಯಕ್ರಮದ ಸಂಯೋಜಕರಾದ ಅಂಜು ಎಲ್ಸಾ ಥಾಮಸ್ ಹಾಗೂ ಉಪಪ್ರಾಂಶುಪಾಲೆ ಗ್ಲಾನ್ಸಿಯಾ ಫರ್ನಾಂಡಿಸ್ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಮಿಲಾಗ್ರಿಸ್ ಕಾಲೇಜಿನ ಪ್ರಾಂಶುಪಾಲರು ಹಾಗೂ ಕ್ಯಾಂಪಸ್ ನಿರ್ದೇಶಕರಾದ ರೆ. ಡಾ. ಆಲ್ವಿನ್ ಸೆರಾವೊ ಸ್ವಾಗತಿಸಿದರು. ಪ್ರತಿಭಾ ಕಾರ್ಯಕ್ರಮ ನಿರೂಪಿಸಿದರು. ಐಕ್ಯೂಎಸಿ ಸಂಯೋಜಕಿ ಚೇತನ ವಂದಿಸಿದರು.
ನೈಸರ್ಗಿಕ ಕೃಷಿ ಪದ್ಧತಿ ಎಲ್ಲರ ಪಾಲಿಗೆ ಜೀವನೋಪಾಯವಾಗಲಿ: ಡಾ. ಶರಣಪ್ರಕಾಶ ಪಾಟೀಲ್
ನೈಸರ್ಗಿಕ ಕೃಷಿ ಕುರಿತ ರಾಷ್ಟ್ರೀಯ ಸಮಾವೇಶದಲ್ಲಿ ಸಚಿವರ ಸಲಹೆ
Health Tips: ಚಳಿಗಾಲದಲ್ಲಿ ಜ್ವರ-ಉಸಿರಾಟ ಸಮಸ್ಯೆಯಿಂದ ದೂರವಿರಲು ವೈದ್ಯರ 5 ಸಲಹೆಗಳು
ಬೆಂಗಳೂರು: ಚಳಿಗಾಲದಲ್ಲಿ ಕೆಮ್ಮು, ಶೀತ ಮತ್ತು ಜ್ವರ (ಫ್ಲೂ) ಹಾಗೂ ಉಸಿರಾಟ ಸಮಸ್ಯೆ (ನ್ಯುಮೋನಿಯಾ)ಯ ಸೋಂಕುಗಳು ಎಲ್ಲಾ ಕಡೆ ಕಾಣಿಸಿಕೊಳ್ಳುತ್ತವೆ. ಸುತ್ತಮುತ್ತ ಇರುವವರಲ್ಲಿ ಯಾರಾದರೊಬ್ಬರು ಕೆಮ್ಮು, ಶೀತದಿಂದ ಬಳಲುತ್ತಿರುವುದನ್ನು ನೀವು ಗಮನಿಸಿರಬಹುದು ಇಲ್ಲವೇ ನೀವೇ ಆ ಬಾಧೆಗೆ ಒಳಗಾಗಿರಬಹುದು. ಅದು ಯಾಕೆಂದರೆ ಶೀತ ವಾತಾವರಣದಲ್ಲಿ ವೈರಸ್ಗಳ ಹರಡುವಿಕೆ ಸುಲಭ. ಹಾಗಾಗಿ ಈ ಸಮಯದಲ್ಲಿ ಹೆಚ್ಚು ಜನರು ಕಾಯಿಲೆಗೆ
ಬಡೇ ಬಡೇ ದೇಶೋ ಮೇ ಬಡೀ ಬಾತ್ ಹೋತಿ ಹೈ 'ಸಿಮ್ರನ್'; R'Day ಪರೇಡ್ನಲ್ಲಿ CRPF ಪುರುಷ ತುಕಡಿಗೆ ಇವರೇ ಲೀಡ್ ವುಮನ್
ಭಾರತದ ನಾರಿಶಕ್ತಿಯ ಬಗ್ಗೆ ಇಡೀ ಜಗತ್ತು ಮೆಚ್ಚುಗೆಯ ಮಾತುಗಳನ್ನಾಡುತ್ತದೆ. ದೇಶದ ಎಲ್ಲಾ ಕ್ಷೇತ್ರಗಳಲ್ಲಿ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿರುವ ಆಧುನಿಕ ಮಹಿಳೆ, ರಕ್ಷಣಾ ಕ್ಷೇತ್ರದಲ್ಲೂ ಛಾಪು ಮೂಡಿಸಿದ್ದಾಳೆ. ಆಪರೇಷನ್ ಸಿಂಧೂರ ಸೇನಾ ಕಾರ್ಯಾಚರಣೆಯಲ್ಲಿ ಮಹಿಳಾ ಅಧಿಕಾರಿಗಳ ಪಾತ್ರವನ್ನು ಇಡೀ ದೇಶ ಸ್ಮರಿಸುತ್ತಿದೆ. ಈ ಸಂದರ್ಭದಲ್ಲಿ ಮುಂಬರುವ ಜ.26ರ ಗಣರಾಜ್ಯೋತ್ಸವ ಪರೇಡ್ನಲ್ಲಿ ಸಿಮ್ರನ್ ಬಾಲಾ ಎಂಬ ಅಸಿಸ್ಟಂಟ್ ಕಮಾಂಡೆಂಟ್, ಸಿಆರ್ಪಿಎಫ್ನ ಪುರುಷ ತುಕಡಿಗೆ ನಾಯಕತ್ವವಹಿಸಲಿದ್ದಾರೆ. ಈ ಮಹಿಳಾ ಅಧಿಕಾರಿಯ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ.
ವಿದೇಶಿ ಹಡಗಿನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 180 ಟನ್ ಡಿಸೇಲ್ ವಶಪಡಿಸಿಕೊಂಡ ಮುಂಬೈ ಕಸ್ಟಮ್ಸ್ ಅಧಿಕಾರಿಗಳು
ಮುಂಬೈ ಕಸ್ಟಮ್ಸ್ ಅಧಿಕಾರಿಗಳು ಸಮುದ್ರದಲ್ಲಿ 180 ಟನ್ಗೂ ಹೆಚ್ಚು ಅಕ್ರಮ ಡೀಸೆಲ್ ಸಾಗಾಟ ಮಾಡುತ್ತಿದ್ದ ಬಾರ್ಜ್ ಅನ್ನು ವಶಪಡಿಸಿಕೊಂಡಿದ್ದಾರೆ. ವಿದೇಶಿ ಹಡಗುಗಳಿಂದ ಕಳ್ಳಸಾಗಣೆ ಮಾಡಲಾಗುತ್ತಿದ್ದ ಈ ಡೀಸೆಲ್ ಅನ್ನು ಸುಂಕ ವಂಚಿಸಿ ಸ್ಥಳೀಯರಿಗೆ ಮಾರಾಟ ಮಾಡಲು ಯತ್ನಿಸಲಾಗಿತ್ತು. ಈ ಪ್ರಕರಣದಲ್ಲಿ ಇಬ್ಬರನ್ನು ಬಂಧಿಸಲಾಗಿದ್ದು, ದೊಡ್ಡ ಜಾಲದ ಶಂಕೆ ವ್ಯಕ್ತವಾಗಿದ್ದು, ಕಾರ್ಯಚರಣೆ ನಡೆಯುತ್ತಿದೆ.
ತಲಪಾಡಿ : ಫಲಾಹ್ ಪ್ರೌಢ ಶಾಲೆ ಆಶ್ರಯದಲ್ಲಿ ರಸ್ತೆ ಸುರಕ್ಷತಾ ನಿಯಮಗಳ ಜಾಗೃತಿ ಕಾರ್ಯಾಗಾರ
ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ ಕಾರ್ಯಕ್ರಮ
ವಾರಾಂತ್ಯಕ್ಕೆ ಸತತ 4 ದಿನಗಳು ಬ್ಯಾಂಕ್ ಬಂದ್! ಯಾವೆಲ್ಲಾ ದಿನಾಂಕ ಸೇವೆಯಲ್ಲಿ ವ್ಯತ್ಯಯ? ಯಾಕೆ?
ಈ ವಾರಾಂತ್ಯದಲ್ಲಿ ಕರ್ನಾಟಕ ಸೇರಿದಂತೆ ದೇಶದಾದ್ಯಂತ ಬ್ಯಾಂಕುಗಳು ಸತತ ನಾಲ್ಕು ದಿನ ಮುಚ್ಚಿರುತ್ತವೆ. ಜನವರಿ 27 ರಂದು ಬ್ಯಾಂಕ್ ನೌಕರರು ವಾರಕ್ಕೆ 5 ದಿನ ಕೆಲಸಕ್ಕೆ ಒತ್ತಾಯಿಸಿ ಮುಷ್ಕರ ನಡೆಸಲಿದ್ದಾರೆ. ಇದರಿಂದ ಗ್ರಾಹಕ ಸೇವೆಗೆ ಅಡಚಣೆಯಾಗಲಿದ್ದು, ಬ್ಯಾಂಕ್ಗಳು ಐದು ದಿನಗಳ ಕೆಲಸದ ವಾರವನ್ನು ಜಾರಿಗೆ ತರಬೇಕೆಂದು ಒತ್ತಾಯಿಸುತ್ತಿವೆ.
ಚಾಮರಾಜನಗರ | ಮದ್ಯದಂಗಡಿ ವಿರುದ್ಧ ದಂಗೆ ಎದ್ದ ಗ್ರಾಮಸ್ಥರು
ಅಧಿಕಾರಿಗಳ ಮೌನ: ಆರೋಪ
ಅಮೆರಿಕ ಉಪಾಧ್ಯಕ್ಷ ಜೆಡಿ ವ್ಯಾನ್ಸ್-ಉಷಾ ದಂಪತಿಗೆ 4ನೇ ಮಗು! ಸಾಮಾಜಿಕ ಜಾಲತಾಣದಲ್ಲಿ ಘೋಷಿಸಿದ ದಂಪತಿ
ನಾಲ್ಕನೇ ಮಗುವನ್ನು ಬರಮಾಡಿಕೊಳ್ಳಲು ಕುತೂಹಲದಿಂದ ಕಾಯುತ್ತಿದ್ದೇವೆ, ಉಷಾ ಗರ್ಭಿಣಿಯಾಗಿದ್ದು, ಜುಲೈ ಅಂತ್ಯದಲ್ಲಿ ಮಗುವಿನ ನಿರೀಕ್ಷೆಯಲ್ಲಿದ್ದೇವೆ ಎಂದು ದಂಪತಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದೇ ತಡ 13 ಸಾವಿರಕ್ಕೂ ಹೆಚ್ಚು ಕಮೆಂಟ್ಗಳು, ಲಕ್ಷಾಂತರ ಲೈಕ್ಗಳು ಬಂದಿವೆ. ಉನ್ನತ ಸ್ಥಾನದಲ್ಲಿರುವವರ ಕುಟುಂಬದ ಸುದ್ದಿ ಬಗ್ಗೆ ಹೆಚಚು ಉತ್ಸುಕರಾಗಿರುವ ಜನ ಈ ಪೋಸ್ಟ್ಗೆ ಮಿಶ್ರ ಪ್ರತಿಕ್ರಿಯೆಗಳನ್ನೂ ನೀಡಿದ್ದಾರೆ.
8 ಯುದ್ಧ ನಿಲ್ಲಿಸಿದ್ದೇನೆ ಎಂದು ಹೇಳುತ್ತಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಯಾವೆಲ್ಲಾ ಯುದ್ಧಗಳು?
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾತು ಎತ್ತಿದರೆ ಸಾಕು, ನಾನು 8 ಯುದ್ಧ ನಿಲ್ಲಿಸಿದ್ದೇನೆ ಎಂದು ಪದೇ ಪದೇ ಹೇಳುತ್ತಾರೆ. ಡೊನಾಲ್ಡ್ ಟ್ರಂಪ್ ಅವರ ಈ ಹೇಳಿಕೆ ಹಲವು ದೇಶಗಳಿಗೆ ಕೋಪ ಕೂಡ ತರಿಸಿದೆ. ಭಾರತ ಮತ್ತು ಪಾಕಿಸ್ತಾನ ವಿಚಾರದಲ್ಲೂ ಇದೇ ರೀತಿ ಡೊನಾಲ್ಡ್ ಟ್ರಂಪ್ ನೀಡಿದ್ದ ಹೇಳಿಕೆಗೆ ಭಾರತ ತಕ್ಕ ತಿರುಗೇಟು ನೀಡಿತ್ತು. ಹೀಗಿದ್ದಾಗ 8
ಯುವಕರೇ ಎಚ್ಚರ; ಮಿಡ್ ನೈಟ್ ಹರಟೆಗೆ ಬರುವ ಕಾಲ್ ಗರ್ಲ್ ನಂಬಿದ್ರೆ, ಲಕ್ಷ ಲಕ್ಷ ಪಂಗನಾಮ ಗ್ಯಾರಂಟಿ
ಸಾಮಾಜಿಕ ಜಾಲತಾಣದಲ್ಲಿ ಇತ್ತೀಚೆಗೆ ಕಾಲ್ ಗರ್ಲ್ ಹೆಸರಲ್ಲಿ ಆಗುತ್ತಿರುವ ವಂಚನೆ ಪ್ರಕರಣಗಳು ಹೆಚ್ಚಾಗುತ್ತಿದೆ. ಸಂಗಾತಿಯಿಲ್ಲದ ಯುವಕರು ಸೇರಿದಂತೆ ವಿವಾಹಿತರು ಏಕಾಂಗಿತನ ನಿವಾರಿಸಿಕೊಳ್ಳಲು ಆ್ಯಪ್ಗಳ ಜಾಹೀರಾತುಗಳ ಆಕರ್ಷಣೆಗೆ ಒಳಗಾಗಿ ಹಣ ಕಳೆದುಕೊಳ್ಳುತ್ತಿದ್ದಾರೆ. ಈ ಆ್ಯಪ್ಗಳ ಮೂಲಕ ಅಪರಿಚಿತರೊಂದಿಗೆ ಖಾಸಗಿ ಕ್ಷಣಗಳನ್ನು ಹಂಚಿಕೊಂಡರೆ, ವಿಡಿಯೋ ರೆಕಾರ್ಡ್ ಮಾಡಿ ಹಣಕ್ಕಾಗಿ ಬ್ಲ್ಯಾಕ್ಮೇಲ್ ಮಾಡಲಾಗುತ್ತಿದೆ. ಹೂಡಿಕೆ ನೆಪದಲ್ಲೂ ವಂಚನೆ ಪ್ರಕರಣಗಳು ಇತ್ತೀಚೆಗೆ ವರದಿಯಾಗಿವೆ.
ಮಧುರೈ: ಮಧುರೈಯಲ್ಲಿನ LIC ಕಚೇರಿಯಲ್ಲಿ ಸಂಭವಿಸಿದ್ದ ಆಕಸ್ಮಿಕ ಬೆಂಕಿ ಪ್ರಕರಣವು, ವಾಸ್ತವದಲ್ಲಿ ಹಿರಿಯ ಶಾಖಾ ವ್ಯವಸ್ಥಾಪಕಿಯೊಬ್ಬರ ಹತ್ಯೆ ಎಂಬುದು ಪೊಲೀಸ್ ತನಿಖೆಯಲ್ಲಿ ಬಹಿರಂಗವಾಗಿದೆ. ಡಿ. 17ರ ರಾತ್ರಿ ಸುಮಾರು 8.15ರ ವೇಳೆಗೆ ಎಲ್ಐಸಿ ಕಚೇರಿಯಲ್ಲಿ ಬೆಂಕಿ ಕಾಣಿಸಿಕೊಂಡು ಹಿರಿಯ ಶಾಖಾ ವ್ಯವಸ್ಥಾಪಕಿ ಕಲ್ಯಾಣಿ ನಂಬಿ (55) ಮೃತಪಟ್ಟಿದ್ದರು. ಆರಂಭದಲ್ಲಿ ಇದನ್ನು ಆಕಸ್ಮಿಕ ಘಟನೆ ಎಂದು ಪರಿಗಣಿಸಲಾಗಿತ್ತು. ಆದರೆ ತನಿಖೆಯಲ್ಲಿ ಸಹಾಯಕ ಆಡಳಿತಾಧಿಕಾರಿ ರಾಮ್ (45), ದಾಖಲೆಯ ಅಕ್ರಮಗಳನ್ನು ಮುಚ್ಚಿಹಾಕುವ ಉದ್ದೇಶದಿಂದ ಕಲ್ಯಾಣಿ ನಂಬಿ ಅವರನ್ನು ಕೊಲೆ ಮಾಡಿರುವುದು ದೃಢಪಟ್ಟಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕಲ್ಯಾಣಿ ನಂಬಿ ಅವರು ಶಾಖೆಯ ಉಸ್ತುವಾರಿ ವಹಿಸಿಕೊಂಡ ಬಳಿಕ, ರಾಮ್ ಗೆ ಸಂಬಂಧಿಸಿದ ದಾಖಲೆಗಳ ಅಕ್ರಮಗಳ ತನಿಖೆ ಆರಂಭಿಸಿದ್ದರು. ಘಟನೆಯ ದಿನ ರಾಮ್ ದಾಖಲೆಗಳ ಮೇಲೆ ಪೆಟ್ರೋಲ್ ಸುರಿದು ಸುಟ್ಟುಹಾಕುತ್ತಿದ್ದುದನ್ನು ಗಮನಿಸಿದ ಕಲ್ಯಾಣಿ ನಂಬಿ ತಮ್ಮ ಮಗನಿಗೆ ಕರೆ ಮಾಡಲು ಯತ್ನಿಸಿದ್ದಾರೆ. ಈ ವೇಳೆ ರಾಮ್ ವ್ಯವಸ್ಥಾಪಕಿ ಕಲ್ಯಾಣಿ ಅವರ ಮೇಲೆ ಪೆಟ್ರೋಲ್ ಸುರಿದು, ಉರಿಯುತ್ತಿದ್ದ ಕೋಣೆಯೊಳಗೆ ತಳ್ಳಿ, ಹೊರಗಿನಿಂದ ಬಾಗಿಲು ಹಾಕಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆಯಲ್ಲಿ ರಾಮ್ ನ ಕಾಲುಗಳಿಗೆ ಸುಟ್ಟ ಗಾಯಗಳಾಗಿದ್ದು, ಅವನು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಎನ್ನಲಾಗಿದೆ. ಕಚೇರಿ ಹಾಗೂ ಸುತ್ತಮುತ್ತಲ ಪ್ರದೇಶಗಳ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ ಬಳಿಕ, ಪೊಲೀಸರ ಅನುಮಾನ ರಾಮ್ ಮೇಲೆಯೇ ಕೇಂದ್ರೀಕೃತವಾಯಿತು. ಮೃತರ ಮಗ ಲಕ್ಷ್ಮಿ ನಾರಾಯಣನ್ (25) ತಿಲಗರ್ ತಿಡಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ ಬಳಿಕ ಪ್ರಕರಣಕ್ಕೆ ತಿರುವು ದೊರಕಿತು. ಮಧುರೈ ಸರ್ಕಾರಿ ರಾಜಾಜಿ ಆಸ್ಪತ್ರೆಯಲ್ಲಿ ನಡೆದ ಮರಣೋತ್ತರ ಪರೀಕ್ಷೆಯಲ್ಲಿ ಕೊಲೆ ಎಂಬುದು ದೃಢಪಟ್ಟಿದೆ. ಪೊಲೀಸರ ವಿಚಾರಣೆಯಲ್ಲಿ, ಕಳೆದ ವರ್ಷ ಮೇ ತಿಂಗಳಲ್ಲಿ ತಿರುನಲ್ವೇಲಿಯಿಂದ ವರ್ಗಾವಣೆಯಾಗಿ ಬಂದಿದ್ದ ಕಲ್ಯಾಣಿ ನಂಬಿ, ತಮ್ಮ ಸೇವಾವಧಿಯಲ್ಲಿ ಕಳೆದ ಕೆಲವು ತಿಂಗಳುಗಳಿಂದ ದಾಖಲೆ ಅಕ್ರಮಗಳ ತನಿಖೆ ನಡೆಸುತ್ತಿದ್ದರು ಎಂದು ರಾಮ್ ಒಪ್ಪಿಕೊಂಡಿದ್ದಾನೆ. ಜ. 20ರಂದು ತಿಲಗರ್ ತಿಡಲ್ ಪೊಲೀಸರು ರಾಮ್ ನನ್ನು ಕೊಲೆ ಪ್ರಕರಣದಲ್ಲಿ ಬಂಧಿಸಿದ್ದಾರೆ. ಸುಟ್ಟಗಾಯಗಳಿಗೆ ಚಿಕಿತ್ಸೆ ಪಡೆಯುತ್ತಿರುವ ರಾಜಾಜಿ ಆಸ್ಪತ್ರೆಯಲ್ಲಿ ಬುಧವಾರ ಮ್ಯಾಜಿಸ್ಟ್ರೇಟ್ ಮುಂದೆ ಅವನನ್ನು ವಿಚಾರಣೆಗೆ ಒಳಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಪತಿ ಅಳಗಿಯ ನಂಬಿ (61, ನಿವೃತ್ತ ಆಲ್ ಇಂಡಿಯಾ ರೇಡಿಯೋ ಉದ್ಯೋಗಿ) ಮತ್ತು ಮಗನೊಂದಿಗೆ ಪೊನ್ಮೇನಿ ಪ್ರದೇಶದಲ್ಲಿ ವಾಸಿಸುತ್ತಿದ್ದ ಕಲ್ಯಾಣಿ ನಂಬಿ, ಕಚೇರಿ ವಂಚನೆಗಳ ತನಿಖೆಯಲ್ಲಿ ಪ್ರಾಮಾಣಿಕತೆಗೆ ಹೆಸರುವಾಸಿಯಾಗಿದ್ದರು ಎಂದು ಮೂಲಗಳು ತಿಳಿಸಿವೆ.
ಹುಬ್ಬಳ್ಳಿಯಲ್ಲಿ ಜನವರಿ 24, 2026 ರಂದು ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ನಿರ್ಮಾಣಗೊಂಡ 42,345 ಮನೆಗಳ ಉದ್ಘಾಟನೆಗೆ ಕರ್ನಾಟಕ ಸಜ್ಜಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಉಪಸ್ಥಿತಿಯಲ್ಲಿ ನಡೆಯಲಿರುವ ಈ ಮಹತ್ವದ ಕಾರ್ಯಕ್ರಮದಲ್ಲಿ, ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ 20,312 ಮನೆಗಳನ್ನು ಮೀಸಲಿಡಲಾಗಿದೆ. ಕೇವಲ 1 ಲಕ್ಷ ರೂ. ಪಾವತಿಸಿ ಸ್ವಂತ ಸೂರು ಹೊಂದುವ ಕನಸು ನನಸಾಗಲಿದೆ.
India Metro Network 2026: ದೇಶದ ಟಾಪ್ 20 ನಗರಗಳ ಮೆಟ್ರೋ ಜಾಲ: ದೆಹಲಿ ನಂ.1, ಬೆಂಗಳೂರಿಗೆ ಎಷ್ಟನೇ ಸ್ಥಾನ!
ನವದೆಹಲಿ: ಕರ್ನಾಟಕದ ಬೆಂಗಳೂರು, ದೆಹಲಿ, ಪುಣೆ, ಪಾಟ್ನಾ, ಕೊಲ್ಕತ್ತಾ ಸೇರಿದಂತೆ ಭಾರತದ ಮಹಾನಗರಗಳಲ್ಲಿ ಮೆಟ್ರೋ ಸಾರಿಗೆ ಸೇವೆ ದಟ್ಟಣೆ ನಿರ್ವಹಣೆಯಲ್ಲಿ ಮಹತ್ವದ ಪಾತ್ರ ವಹಿಸಿದೆ. ಇದರಿಂದ ಪ್ರಯಾಣಿಕರಿಗೂ ತ್ವರಿತ ಸಂಚಾರ ಸೇವೆ ಲಭ್ಯವಾಗುತ್ತಿದೆ. ಅತ್ಯಗತ್ಯವಾದ ಸಾರಿಗೆ ಸೇವೆ ಇದಾಗಿದೆ. ಆದರೆ ಬೆಂಗಳೂರು ಸೇರಿ ಕೆಲವು ಮಹಾನಗರಗಳ ಮೆಟ್ರೋ ಜಾಲ ವಿಸ್ತರಣೆಯು ನಿಧಾನಗತಿಯಲ್ಲಿ ಸಾಗುತ್ತಿದೆ. ಈ ಕಾರಣದಿಂದ 2026ರಲ್ಲಿ
Khawaja Asif in huge embracement : ವಿವಾದಕಾರಿ ಹೇಳಿಕೆ ನೀಡುವುದರಲ್ಲಿ ಎತ್ತಿದ ಕೈಯಾಗಿರುವ ಪಾಕಿಸ್ತಾನದ ರಕ್ಷಣಾ ಸಚಿವ ಖ್ವಾಜಾ ಆಸಿಫ್, ಖುದ್ದು ತೀವ್ರ ಮುಜುಗರಕ್ಕೀಡಾಗಿದ್ದಾರೆ. ಸಿಯಾಲ್’ಕೋಟ್ ನಲ್ಲಿ ನಕಲಿ ಪಿಜ್ಜಾ ಅಂಗಡಿಯನ್ನು ಭರ್ಜರಿಯಾಗಿ ಉದ್ಘಾಟಿಸಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮುಖಭಂಗಕ್ಕೆ ಒಳಗಾಗಿದ್ದಾರೆ.
608 ದಿನಗಳ ಒದ್ದಾಟ & 27 ವರ್ಷಗಳ ಸೇವೆ, ಸುನಿತಾ ಸಾಧನೆ ಕೋಟಿ ಕೋಟಿ ಮಹಿಳೆಯರಿಗೆ ಮಾದರಿ... Sunita Williams
ಸುನಿತಾ ವಿಲಿಯಮ್ಸ್ ಹೆಸರು ಕೇಳಿದರೆ ಸಾಕು ಬಾಹ್ಯಾಕಾಶ ಲೋಕವೇ ಒಮ್ಮೆ ತಲೆಬಾಗುತ್ತದೆ, ಏಕೆ ಹೀಗೆ ಅನ್ನೋದನ್ನ ನಾವು ವಿವರವಾಗಿ ಹೇಳಬೇಕಿಲ್ಲ ಬಿಡಿ. ಜಗತ್ತಿನ ಬಗ್ಗೆ ಸಾಮಾನ್ಯ ಜ್ಞಾನ ಇರುವ ಪ್ರತಿಯೊಬ್ಬರಿಗೂ ಸುನಿತಾ ವಿಲಿಯಮ್ಸ್ ಅವರ ಬಗ್ಗೆ ಚನ್ನಾಗಿ ಗೊತ್ತು. ಮನುಷ್ಯರ ಭವಿಷ್ಯಕ್ಕಾಗಿ &ಭೂಮಿ ಮೇಲೆ ಮನುಷ್ಯರ ನಾಳೆಯ ದಿನಗಳು ಅದ್ಭುತವಾಗಿ ಇರಲಿ ಎಂಬ ಕಾರಣಕ್ಕೆ, ತಮ್ಮ
ರಾಘವೇಂದ್ರ ಸ್ವಾಮಿ ಫೋಟೋ ನಿರಾಕರಿಸಿದ ಸಿಎಂ ಸಿದ್ದರಾಮಯ್ಯ; ಅಪಮಾನ ಮಾಡಿದ ಯಾರೂ ಉದ್ಧಾರ ಆಗಲ್ಲ ಎಂದ ನಟ ಜಗ್ಗೇಶ್!
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಘವೇಂದ್ರ ಸ್ವಾಮಿಗಳ ಭಾವಚಿತ್ರವನ್ನು ನಿರಾಕರಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ಬಗ್ಗೆ ನಟ ಹಾಗೂ ಸಂಸದ ಜಗ್ಗೇಶ್ ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ರಾಯರ ಭಕ್ತರು ಇದರಿಂದ ಕೆರಳಿದ್ದಾರೆ. ಜಗ್ಗೇಶ್ ಅವರು ಟ್ವಿಟರ್ ಮೂಲಕ ತಮ್ಮ ಪ್ರತಿಕ್ರಿಯೆಯನ್ನು ನೀಡಿದ್ದಾರೆ. ರಾಯರನ್ನು ಅವಮಾನಿಸಿದವರು ಉದ್ಧಾರ ಆಗಿಲ್ಲ ಎಂದು ಅವರು ಹೇಳಿದ್ದಾರೆ.
CHAMARAJANAGAR | ಮಲೆ ಮಹದೇಶ್ವರ ಬೆಟ್ಟದ ಬಳಿ ಯುವಕನೋರ್ವನನ್ನು ಹೊತ್ತೊಯ್ದ ಚಿರತೆ
ಚಾಮರಾಜನಗರ: ಮಲೆ ಮಹದೇಶ್ವರ ಬೆಟ್ಟದ ತಪ್ಪಲಲ್ಲಿನ ತಾಳಬೆಟ್ಟದಲ್ಲಿ ಚಿರತೆ ದಾಳಿಗೆ ಯುವಕನೊಬ್ಬ ಬಲಿಯಾಗಿರುವ ಘಟನೆ ಬುಧವಾರ ನಡೆದಿದೆ. ಮೃತರನ್ನು ಮಂಡ್ಯ ಜಿಲ್ಲೆಯ ಚಿರನಹಳ್ಳಿ ಗ್ರಾಮದ ಪ್ರವೀಣ್ ಎಂದು ಗುರುತಿಸಲಾಗಿದೆ. ಹನೂರು ತಾಲೂಕಿನ ಮಹದೇಶ್ವರ ಬೆಟ್ಟದ ತಾಳಬೆಟ್ಟದ ಸಮೀಪ ಘಟನೆ ನಡೆದಿದೆ. ಏಕಾಏಕಿ ದಾಳಿ ನಡೆಸಿದ ಚಿರತೆ ಪ್ರವೀಣ್ ರನ್ನು ಅರಣ್ಯದೊಳಗೆ ಹೊತ್ತೊಯ್ದಿದೆ. ಮಾಹಿತಿ ತಿಳಿದ ಕೂಡಲೇ ಪೊಲೀಸರು ಸ್ಥಳಕ್ಕೆ ಧಾವಿಸಿ, ಅರಣ್ಯ ಇಲಾಖೆ ಸಹಯೋಗದೊಂದಿಗೆ ಪ್ರವೀಣ್ ಪತ್ತೆಗೆ ಶೋಧ ಕಾರ್ಯ ಕೈಗೊಂಡರು. ಸುಮಾರು ಒಂದು ಗಂಟೆಗಳ ಹುಡುಕಾಟದ ಬಳಿಕ ಮೃತದೇಹವನ್ನು ಪತ್ತೆಹಚ್ಚಿ ಮೇಲಕ್ಕೆತ್ತಿದರು. ಘಟನೆಯಿಂದಾಗಿ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಅರಣ್ಯ ಇಲಾಖೆ ಹೆಚ್ಚಿನ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದೆ.
ಸ್ಥಳೀಯ ಸಂಸ್ಥೆಗಳ ಚುನಾವಣೆ; ಒಬಿಸಿ ಸಮುದಾಯಕ್ಕೆ ಅವಕಾಶ: ರಘು ಕೌಟಿಲ್ಯ ಮನವಿ
ಬೆಂಗಳೂರು: ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆ ಮತ್ತು ಜಿಬಿಎ ಚುನಾವಣೆಯಲ್ಲಿ ಒಬಿಸಿ ಸಮುದಾಯಗಳಿಗೆ ಅವಕಾಶ ನೀಡಬೇಕೆಂದು ಹಾಗೂ ಒಬಿಸಿಯಲ್ಲಿ ಬರುವ ಸಣ್ಣ ಸಣ್ಣ ಸಮುದಾಯವನ್ನು ಗುರುತಿಸಿ ಮುಂಬರುವ ಸಂಘಟನಾ ಪರ್ವದಲ್ಲಿ ಪಕ್ಷದ ಜವಾಬ್ದಾರಿಯನ್ನು ನೀಡಬೇಕೆಂದು ವರಿಷ್ಠರಿಗೆ ಮನವಿ ಮಾಡಲಾಗುವುದು ಎಂದು ಹಿಂದುಳಿದ ವರ್ಗಗಳ ಮೋರ್ಚಾದ ರಾಜ್ಯ ಅಧ್ಯಕ್ಷ ರಘು ಕೌಟಿಲ್ಯ ಅವರು ತಿಳಿಸಿದ್ದಾರೆ. ಒಬಿಸಿ ಸಮುದಾಯಗಳಿಗೆ ಕಾಂಗ್ರೆಸ್
ಲಕ್ಕುಂಡಿಯಲ್ಲಿ ಬಂಗಾರದ ನಿಧಿ ಸಿಕ್ಕ ಬಳಿಕ ಹೊಸ ತಿರುವು, ಭೂಮಿ ಬೆಲೆ ದುಪ್ಪಟ್ಟು
ಗದಗ: ಜಿಲ್ಲೆಯ ಐತಿಹಾಸಿಕ ಲಕ್ಕುಂಡಿ ಪಟ್ಟಣದಲ್ಲಿ ಇತ್ತೀಚೆಗೆ ಮನೆ ನಿರ್ಮಾಣದ ವೇಳೆ ಬಂಗಾರದ ನಿಧಿ ಪತ್ತೆಯಾದ ಘಟನೆ ರಾಜ್ಯಾದ್ಯಂತ ಭಾರೀ ಚರ್ಚೆಗೆ ಕಾರಣವಾಗಿತ್ತು. ಈ ಘಟನೆಯ ನಂತರ ಲಕ್ಕುಂಡಿಯ ಇತಿಹಾಸ, ಪಾರಂಪರಿಕ ಮಹತ್ವ ಹಾಗೂ ಅಭಿವೃದ್ಧಿ ಸಾಧ್ಯತೆಗಳ ಬಗ್ಗೆ ಮತ್ತೆ ಗಮನ ಸೆಳೆಯಲಾಗಿದೆ. ಇದೀಗ ಸರ್ಕಾರದ ವತಿಯಿಂದ ಲಕ್ಕುಂಡಿಯಲ್ಲಿ ಅಧಿಕೃತ ಉತ್ಖನನ ಕಾರ್ಯ ಕೂಡ ಆರಂಭಗೊಂಡಿದ್ದು, ಉತ್ಖನನದಲ್ಲಿ
ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಏರ್ ಫೋರ್ಸ್ ಒನ್ ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದು, ಸ್ವಿಟ್ಜರ್ಲೆಂಡ್ನ ದಾವೋಸ್ಗೆ ತೆರಳುತ್ತಿದ್ದ ವಿಮಾನ ಅರ್ಧ ದಾರಿಯಲ್ಲೇ ವಾಪಸ್ಸು ಅಮೆರಿಕಾಗೆ ಮರಳಿದೆ. ಬಳಿಕ ಮತ್ತೊಂದು ವಿಮಾನದಲ್ಲಿ ಟ್ರಂಪ್ ಪ್ರಯಾಣ ಮುಂದುವರೆಸಿದ್ದಾರೆ. ಇಂದು ದಾವೋಸ್ನಲ್ಲಿ ಟ್ರಂಪ್ ಭಾಷಣ ನಡೆಸಲಿದ್ದು, ಟ್ರಂಪ್ ಭಾಷಣದತ್ತ ಜಾಗತಿಕ ನಾಯಕರ ಚಿತ್ತ ನೆಟ್ಟಿದೆ.
ಸುರಕ್ಷಿತ ಸಾರಿಗೆಗೆ ದ.ಕ. ಜಿಲ್ಲೆಯಲ್ಲಿ ಸಂಚಾರದ ಅಡಚಣೆ ನಿವಾರಿಸಲು ಬಸ್ ಮಾಲಕರ ಸಂಘ ಆಗ್ರಹ
ಮಂಗಳೂರು, ಜ.21: ದ.ಕ. ಜಿಲ್ಲೆಯಲ್ಲಿ ಸುರಕ್ಷಿತ ಸಂಚಾರ ವ್ಯವಸ್ಥೆಗೆ ಅನುಕೂಲವಾಗುವಂತೆ ಸಂಚಾರದ ಅಡಚಣೆ ನಿವಾರಿಸಲು ಕ್ರಮ ಕೈಗೊಳ್ಳುವಂತೆ ದ.ಕ. ಬಸ್ಸು ಮಾಲಕರ ಸಂಘ ಒತ್ತಾಯಿಸಿದೆ. ಮಂಗಳೂರಿನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಅಝೀಝ್ ಪರ್ತಿಪ್ಪಾಡಿ, ಮಂಗಳೂರು ನಗರದಲ್ಲಿ ಸದ್ಯ ಕೆಲವು ರಸ್ತೆಗಳು ಅಗಲಗೊಂಡಿದ್ದರೂ ರಸ್ತೆಯ ಎರಡೂ ಬದಿಗಳಲ್ಲಿ ಕಾರುಗಳು. ರಿಕ್ಷಾಗಳು ಸೇರಿದಂತೆ ಲಘು ವಾಹನಗಳು ಪಾರ್ಕಿಂಗ್ ಮಾಡುವುದರಿಂದ ಬಸ್ ಗಳ ಸಂಚಾರಕ್ಕೆ ಅಡಚಣೆಯಾಗುತ್ತದೆ. ಜೊತೆಗೆ ರಸ್ತೆಗಳನ್ನು ಅಗೆದು ಹಲವು ದಿನಗಳ ಕಾಲ ಹಾಗೆಯೇ ಬಿಟ್ಟಿರುತ್ತಾರೆ. ಇದು ಸಂಚಾರ ದಟ್ಟಣೆಗೆ ಪ್ರಮುಖ ಕಾರಣವಾಗುತ್ತಿದೆ. ಹಾಗೂ ಅಲ್ಲಲ್ಲಿ ನಡೆಯುತ್ತಿರುವ ಭೂಗತ ಕೇಬಲ್ಗಳ ಅಳವಡಿಕೆ, ದೂರ ಸಂಪರ್ಕ ಹಾಗೂ ನೀರಿನ ಸಂಪರ್ಕದ ಕಾಮಗಾರಿಗಳನ್ನು ನಡೆಯುವುದರಿಂದ ಶೀಘ್ರ ಮುಗಿಸದಿರುವುದರಿಂದ ಸಂಚಾರಕ್ಕೆ ತುಂಬಾ ತೊಂದರೆಯಾಗಿರುತ್ತದೆ ಎಂದು ಹೇಳಿದರು. ನಗರದಲ್ಲಿ ರಾಷ್ಟ್ರೀಯ ಹೆದ್ದಾರಿಗಳು ಹಾದು ಹೋಗುತ್ತಿದ್ದು ಇಲ್ಲಿ ಸಮರ್ಪಕ ಸರ್ವೀಸ್ ರಸ್ತೆ ಮಾಡದೆ ಇರುವುದರಿಂದ ಅನೇಕ ಸಮಸ್ಯೆಗಳು ಈ ಸಂಚಾರ ದಟ್ಟಣೆಗೆ ಕಾರಣವಾಗಿರುತ್ತದೆ. ಅಲ್ಲದೆ, ಲಾರಿ, ಬುಲೆಟ್ ಟ್ಯಾಂಕರುಗಳೆಲ್ಲ ಹೆದ್ದಾರಿಯಲ್ಲಿ ಬದಿಯಲ್ಲೇ ನಿಲ್ಲುವುದರಿಂದಲೂ ಸುಗಮ ಸಂಚಾರಕ್ಕೆ ಅಡಚಣೆಯಾಗುತ್ತಿದೆ. ನಗರದಲ್ಲಿ ಹೆಚ್ಚಿನ ಕಡೆ ಬಸ್ ಬೇ ಗಳು ಇಲ್ಲ. ಮಳೆಗಾಲದಲ್ಲಿ ಮಳೆ ನೀರುಗಳು ಸರಿಯಾಗಿ ಹೋಗಲು ಚರಂಡಿ ವ್ಯವಸ್ಥೆಯಿಲ್ಲದೆ ರಸ್ತೆಯಲ್ಲೇ ನೀರು ನಿಲ್ಲುವುದರಿಂದ ವಾಹನಗಳು ತಾಂತ್ರಿಕ ತೊಂದರೆಗೆ ಸಿಲುಕಿ ಕಷ್ಟನಷ್ಟಗಳು ಉಂಟಾಗುತ್ತದೆ ಎಂದವರು ವಿವರಿಸಿದರು. ಇತ್ತೀಚಿನ ದಿನಗಳಲ್ಲಿ ನಗರದಲ್ಲಿ ಅದರಲ್ಲೂ ಕೆ.ಎಸ್.ರಾವ್ ರಸ್ತೆ, ಬಂಟ್ಸ್ ಹಾಸ್ಟೆಲ್, ಬಲ್ಮಠದಿಂದ ಕಂಕನಾಡಿ ಕರಾವಳಿ ಸರ್ಕಲ್ ತನಕ ಅಲ್ಲಿಂದ ಪಂಪ್ಲ್ ತನಕ ವಿಪರೀತ ಸಂಚಾರ ದಟ್ಟಣೆಯಿಂದ ಕೂಡಿರುತ್ತದೆ. ಇದಕ್ಕೆ ಪ್ರಮುಖ ಕಾರಣ ರಸ್ತೆಯ ಎರಡೂ ಬದಿಯಲ್ಲಿ ಲಘು ವಾಹನಗಳ ಪಾರ್ಕಿಂಗ್ ಮುಖ್ಯ ಕಾರಣ. ಅಲ್ಲದೇ ಬಂಟ್ಸ್ ಹಾಸ್ಟೆಲ್, ಕರಂಗಲ್ಪಾಡಿ, ಎಂ.ಜಿ.ರೋಡ್, ಕೆಎಸ್ಸಾರ್ಟಿಸಿ, ನಂತೂರು, ಕೆಪಿಟಿಯಿಂದ ಪದುವ ಸ್ಕೂಲ್ ತುಂಬಾ ಸಂಚಾರ ದಟ್ಟಣೆಯಾಗಿರುತ್ತದೆ. ಹಾಗೂ ಫಳ್ನೀರ್ನಿಂದ ಕಂಕನಾಡಿ ತನಕ ಎರಡು ಕಡೆ ರಸ್ತೆಗಳಲ್ಲಿ ಕಾರುಗಳು ಪಾರ್ಕಿಂಗ್ ಮಾಡಿರುವುದರಿಂದ ಹಲವು ತಾಸುಗಳ ವರೆಗೆ ಸಂಚಾರ ಅಸ್ತವ್ಯಸ್ತವಾಗಿರುತ್ತವೆ. ಕುಂಟಿಕಾನ, ಕೊಟ್ಟಾರ ಚೌಕಿ, ಕೂಳೂರು ಹಳೆ ಸೇತುವೆಯಲ್ಲೂ ವಿಪರೀತ ವಾಹನಗಳ ದಟ್ಟಣೆ ಇರುವುದರಿಂದ ವಾಹನ ಸಂಚಾರ ವ್ಯವಸ್ಥೆ ಬಹಳ ಕಷ್ಟಕರವಾಗಿದೆ. ನಗರದ ರಸ್ತೆ ಬದಿಯಲ್ಲಿ ಅನಧಿಕೃತವಾಗಿ ತಳ್ಳುಗಾಡಿ ವ್ಯಾಪಾರ ಮಾಡುವುದರಿಂದ ಅದನ್ನು ತೆಗೆದು ಕೊಳ್ಳಲು ಬರುವ ಗ್ರಾಹಕರು ತಮ್ಮ ವಾಹನವನ್ನು ರಸ್ತೆಯ ಬದಿಯಲ್ಲೇ ನಿಲ್ಲಿಸುವುದರಿಂದ ವಾಹನಗಳ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ನಗರದಲ್ಲಿ ಗೂಡ್ಸ್ ಟೆಂಪೋಗಳು ವಿಪರೀತ ಉದ್ದುದ್ದ ಪೈಪುಗಳನ್ನು, ಸರಳುಗಳನ್ನು ಹಾಕಿಕೊಂಡು ಅಪಾಯಕಾರಿಯಾಗಿ ಬರುವುದು ಸುರಕ್ಷಿತ ಸಂಚಾರ ವ್ಯವಸ್ಥೆಗೆ ಸಮಸ್ಯೆಯಾಗಿದೆ. ಆದುದರಿಂದ ನಮ್ಮ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಲ್ಲಾ ಜನರ ಹಿತದೃಷ್ಟಿಯಿಂದ ಜಿಲ್ಲೆಯಲ್ಲಿ ಖಾಸಗಿ ಸುಗಮ ಸೇವೆಯನ್ನು ನೀಡಲು ಅನುವು ಮಾಡಿ ಮುಂದುವರಿಸಿಕೊಂಡು ಹೋಗಲು ಸಹಕಾರಕ್ಕೆ ನೀಡ ಬೇಕೆಂದು ಜಿಲ್ಲಾಡಳಿತ, ಸರಕಾರಕ್ಕೆ ಮನವಿ ಮಾಡುವುದಾಗಿ ಅಝೀಝ್ ಪರ್ತಿಪ್ಪಾಡಿ ತಿಳಿಸಿದ್ದಾರೆ. ರಾಜ್ಯದಲ್ಲಿ ಸಾರಿಗೆ ಸಂಚಾರ ಇಲ್ಲದ ಕಡೆ ಸರಕಾರಿ ನಿಗಮದ ಬಸ್ ಸಂಚಾರ ಆರಂಭಿಸಿ, ಖಾಸಗಿ ಬಸ್ಸು ಸಂಚಾರ ವ್ಯವಸ್ಥೆ ಉತ್ತಮವಾಗಿ ಇರುವ ಕಡೆ ಸರಕಾರಿ ನಿಗಮದ ಸ್ಪರ್ಧೆ ಅನಗತ್ಯ. ಖಾಸಗಿ ಬಸ್ ಗಳ ಸಂಚಾರ ಸೇವೆ ಉತ್ತಮವಾಗಿ ಇರುವ ಕಡೆ ಸರಕಾರಿ ನಿಗಮದ ಬಸ್ ಹಾಕಿ ಓಡಿಸಿದಾಗ ಖಾಸಗಿ ಬಸ್ ಮಾಲಕರು ನಷ್ಟ ಅನುಭವಿಸಿ ವೃತ್ತಿಯನ್ನು ಬಿಡಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತಿದೆ ಈ ರೀತಿಯ ಸ್ಪರ್ಧೆ ಯನ್ನು ಕೈ ಬಿಡಬೇಕೆಂದು ಮನವಿ ಮಾಡುವುದಾಗಿ ಅವರು ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ರಾಮಚಂದ್ರ ಪಿಲಾರ್, ಉಪಾಧ್ಯಕ್ಷ ಕೆ. ರಾಮಚಂದ್ರ ನಾಯ್ಕ್,ಕಾರ್ಯದರ್ಶಿ ರಾಜೇಶ್ ಟಿ. ಉಪಸ್ಥಿತರಿದ್ದರು.
Sports Street- ಹರ್ಷಿತ್ ನ ಒಂದು ಯಶಸ್ಸು ಮತ್ತು ರೋಹಿತ್ ನ ಒಂದು ವೈಫಲ್ಯ; ಯಾಕೆ ಇಷ್ಟೊಂದು ವೈರುಧ್ಯ?
Rohit Sharma- Harshit Rana- ಒಂದೇ ಒಂದು ಪಂದ್ಯ. ನಿನ್ನೆವರೆಗೂ ಹೀರೋ ಆಗಿದ್ದ ರೋಹಿತ್ ಶರ್ಮಾ ಇಂದು ವಿಲನ್, ಪ್ರತಿ ಪಂದ್ಯದಲ್ಲೂ ವಿಲನ್ ಆಗಿದ್ದ ಹರ್ಷಿತ್ ರಾಣಾ ಈಗ ಒಂದೇ ಪಂದ್ಯದಲ್ಲಿ ಹೀರೋ. ಇದೇ ಕ್ರಿಕೆಟ್! ನ್ಯೂಜಿಲೆಂಡ್ ವಿರುದ್ಧದ ಸರಣಿ ಸೋಲಿನ ಬಳಿಕ ರೋಹಿತ್ ಫಿಟ್ನೆಸ್, ಫಾರ್ಮ್ ಬಗ್ಗೆ ಪ್ರಶ್ನೆಗಳು ಎದ್ದಿವೆ. ವಿಶ್ವಕಪ್ ವರೆಗೂ ಆಡ್ತಾರಾ ಎಂಬ ಹಳೇ ವರಾತ ಬೇರೆ. ಅದೇ ಹರ್ಷಿತ್ ರಾಣಾ ಒಂದು ಪಂದ್ಯದ ಯಶಸ್ಸಿನಿಂದ ಟಿ20 ವಿಶ್ವಕಪ್ ನಲ್ಲಿ ಕಣಕ್ಕಿಳಿಯಲಿರುವ ಪ್ಲೇಯಿಂಗ್ ಇಲೆವೆನ್ ನಲ್ಲಿ ಸ್ಥಾನ ಪಕ್ಕಾ!
ಗಲ್ಫ್ ನಿಂದ ಡೀಸೆಲ್ ಕಳ್ಳ ಸಾಗಣೆ: ಬೆಳಗಾವಿಯಲ್ಲಿ ಬಯಲಾಯಿತು ಭಾರೀ ಜಾಲ
ಅಕ್ರಮವಾಗಿ ಸಾಗಿಸುತ್ತಿದ್ದ 17 ಸಾವಿರ ಲೀಟರ್ ಡೀಸೆಲ್ ಸಹಿತ ಟ್ಯಾಂಕರ್ ಜಪ್ತಿ: ಓರ್ವನ ಬಂಧನ
ಅಮೆರಿಕ | ಟ್ರಂಪ್ ಪ್ರಯಾಣಿಸುತ್ತಿದ್ದ 'ಏರ್ ಫೋರ್ಸ್ ಒನ್' ನಲ್ಲಿ ತಾಂತ್ರಿಕ ಸಮಸ್ಯೆ; ವಾಷಿಂಗ್ಟನ್ ಗೆ ಮರಳಿದ ವಿಮಾನ
ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಪ್ರಯಾಣಿಸುತ್ತಿದ್ದ ಏರ್ ಫೋರ್ಸ್ ಒನ್ ವಿಮಾನವು ಮಂಗಳವಾರ ಸ್ವಿಟ್ಜರ್ಲೆಂಡ್ಗೆ ತೆರಳಿದ ಸುಮಾರು ಒಂದು ಗಂಟೆಯ ಬಳಿಕ ವಾಷಿಂಗ್ಟನ್ ನ ಜಂಟಿ ನೆಲೆ ಆಂಡ್ರ್ಯೂಸ್ಗೆ ಮರಳಿದೆ. ವಿಮಾನದಲ್ಲಿದ್ದ ಸಿಬ್ಬಂದಿ ಸಣ್ಣ ವಿದ್ಯುತ್ ಸಮಸ್ಯೆಯನ್ನು ಗುರುತಿಸಿದ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ವಿಮಾನವನ್ನು ಹಿಂತಿರುಗಿಸಲಾಗಿದೆ ಎಂದು ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಕ್ಯಾರೋಲಿನ್ ಲೀವಿಟ್ ತಿಳಿಸಿದ್ದಾರೆ. ವಿಮಾನದಲ್ಲಿದ್ದ ವರದಿಗಾರರ ಪ್ರಕಾರ, ಟೇಕ್ಆಫ್ ಆದ ಕೆಲಕಾಲದ ಬಳಿಕ ಪ್ರೆಸ್ ಕ್ಯಾಬಿನ್ ನ ದೀಪಗಳು ಆರಿಹೋಗಿದ್ದವು. ಬಳಿಕ ಸುಮಾರು ಅರ್ಧ ಗಂಟೆಯ ಹಾರಾಟದ ನಂತರ ವಿಮಾನವು ವಾಷಿಂಗ್ಟನ್ ಗೆ ಮರಳಲಿದೆ ಎಂಬ ಮಾಹಿತಿ ನೀಡಲಾಯಿತು. ಘಟನೆಯ ಸಮಯದಲ್ಲಿ ವಿಮಾನದಲ್ಲಿದ್ದ ಟ್ರಂಪ್, ಮತ್ತೊಂದು ವಿಮಾನದ ಮೂಲಕ ವಿಶ್ವ ಆರ್ಥಿಕ ವೇದಿಕೆ ಸಭೆಗೆ ದಾವೋಸ್ ಗೆ ತೆರಳುವುದಾಗಿ ತಿಳಿಸಿದ್ದಾರೆ. ಏರ್ ಫೋರ್ಸ್ ಒನ್ ಆಗಿ ಬಳಸಲಾಗುತ್ತಿರುವ ವಿಮಾನಗಳು ಸುಮಾರು ಎರಡು ದಶಕಗಳಿಂದ ಸೇವೆಯಲ್ಲಿವೆ. ಬದಲಿ ವಿಮಾನಗಳ ನಿರ್ಮಾಣ ಕಾರ್ಯವನ್ನು ಬೋಯಿಂಗ್ ಕೈಗೊಂಡಿದ್ದರೂ, ಯೋಜನೆ ಹಲವು ಬಾರಿ ವಿಳಂಬವನ್ನು ಎದುರಿಸಿದೆ. ಅಮೆರಿಕ ಅಧ್ಯಕ್ಷರ ಭದ್ರತೆಗೆ ಸಂಬಂಧಿಸಿದಂತೆ ವಿಕಿರಣ ರಕ್ಷಾಕವಚ, ಕ್ಷಿಪಣಿ ವಿರೋಧಿ ತಂತ್ರಜ್ಞಾನ ಸೇರಿದಂತೆ ವಿವಿಧ ತುರ್ತು ವ್ಯವಸ್ಥೆಗಳನ್ನು ಏರ್ ಫೋರ್ಸ್ ಒನ್ ವಿಮಾನಗಳಲ್ಲಿ ಅಳವಡಿಸಲಾಗಿದೆ. ಸೇನೆಯೊಂದಿಗೆ ನಿರಂತರ ಸಂಪರ್ಕ ಸಾಧಿಸಲು ಅಗತ್ಯವಿರುವ ಸಂವಹನ ವ್ಯವಸ್ಥೆಗಳೂ ವಿಮಾನದಲ್ಲಿವೆ. ಕಳೆದ ವರ್ಷ ಖತರ್ ನ ರಾಜ ಕುಟುಂಬ ನೀಡಿದ ಬೋಯಿಂಗ್ 747–8 ಜೆಟ್ ಅನ್ನು ಏರ್ ಫೋರ್ಸ್ ಒನ್ ಫ್ಲೀಟ್ಗೆ ಸೇರಿಸುವ ಕುರಿತು ನಿರ್ಧಾರ ಪರಿಶೀಲನೆಗೆ ಒಳಪಟ್ಟಿದ್ದು, ಭದ್ರತಾ ಮಾನದಂಡಗಳಿಗೆ ಅನುಗುಣವಾಗಿ ಆ ವಿಮಾನವನ್ನು ಪ್ರಸ್ತುತ ಮರುರೂಪಿಸಲಾಗುತ್ತಿದೆ.
ಅತ್ಯಾಚಾರ ಸಂತ್ರಸ್ತೆಯ ಹೆಸರು ಪ್ರಸ್ತಾಪಿಸಬಾರದಿತ್ತು, ಕ್ಷಮೆಯಾಚಿಸುತ್ತೇನೆ: ಶ್ರೀರಾಮುಲು
ಮಾಜಿ ಸಚಿವ ಬಿ.ಶ್ರೀರಾಮುಲು ಅವರು ಬ್ಯಾನರ್ ಗಲಭೆ ಪ್ರಕರಣವನ್ನು ಸಿಐಡಿ ವರದಿ ನೀಡಿದರೂ ಸರ್ಕಾರ ಗಂಭೀರವಾಗಿ ಪರಿಗಣಿಸಿಲ್ಲ ಎಂದು ಆರೋಪಿಸಿದ್ದಾರೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ರಾಜ್ಯದಲ್ಲಿ ದಾಂಧಲೆ, ಗಾಂಜಾ ಹೆಚ್ಚಾಗಿದೆ ಎಂದಿರುವ ಅವರು, ಬಾಲಕಿಯ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ತಮ್ಮ ಹೇಳಿಕೆಯಿಂದ ನೋವಾದಲ್ಲಿ ಕ್ಷಮೆಯಾಚಿಸಿದ್ದಾರೆ. ಅಬಕಾರಿ ಇಲಾಖೆಯಲ್ಲಿ ಭ್ರಷ್ಟಾಚಾರ ನಡೆದಿದ್ದು, ಸಚಿವ ಆರ್.ಬಿ.ತಿಮ್ಮಾಪುರ ಅವರನ್ನು ಸಂಪುಟದಿಂದ ಕೈಬಿಡದಿದ್ದರೆ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಗಡಿಯಾರ: ಸಮಸ್ತ 100ನೇ ವಾರ್ಷಿಕ ಪ್ರಚಾರ, ನೂರೇ ಅಜ್ಮೀರ್ ಆಧ್ಯಾತ್ಮಿಕ ಸಂಗಮ
ಬಂಟ್ವಾಳ: ಎಸ್ಕೆಎಸ್ಸೆಸ್ಸೆಫ್ ಗಡಿಯಾರ ಶಾಖೆ ವತಿಯಿಂದ ಸಮಸ್ತ 100ನೇ ವಾರ್ಷಿಕ ಪ್ರಚಾರ ಹಾಗೂ ನೂರೇ ಅಜ್ಮೀರ್ ಆಧ್ಯಾತ್ಮಿಕ ಸಂಗಮ ಜ.24ರಂದು ಗಡಿಯಾರ ಶಂಶುಲ್ ಉಲಮಾ ನಗರ (ಡಿ.ಪಿ. ಮೈದಾನ)ದಲ್ಲಿ ನಡೆಯಲಿದೆ. ಸಮಸ್ತದ ಹಿರಿಯ ಉಮರಾ ನಾಯಕ ಹಾಜಿ ಯೂಸುಫ್ ಹುಸೈನ್ ಬುಡೋಳಿ ಧ್ವಜಾರೋಹಣ ನೆರವೇರಿಸಲಿದ್ದು, ಇರ್ಷಾದ್ ದಾರಿಮಿ ಅಲ್ ಜಝ್ಹರಿ ಮಿತ್ತಬೈಲ್ ನೇತೃತ್ವದಲ್ಲಿ ಶಂಶುಲ್ ಉಲಮಾ ಮೌಲಿದ್ ನಡೆಯಲಿದೆ. ಮಗ್ರಿಬ್ ನಮಾಜಿನ ಬಳಿಕ ನಡೆಯುವ ಕಾರ್ಯಕ್ರಮಕ್ಕೆ ಎಸ್ಕೆಎಸ್ಸೆಸ್ಸೆಫ್ ಗಡಿಯಾರ ಶಾಖಾಧ್ಯಕ್ಷ ಹಂಝ ಗಡಿಯಾರ ಅಧ್ಯಕ್ಷತೆ ವಹಿಸಲಿದ್ದಾರೆ. ಅಸ್ಸಯ್ಯದ್ ಅಕ್ರಂ ಅಲಿ ತಂಗಳ್ ದುಆ ಹಾಶೀರ್ವಚನ ನೀಡಲಿದ್ದು, ಎ.ಎಸ್. ಮುಹಮ್ಮದಲಿ ದಾರಿಮಿ ಉದ್ಘಾಟಿಸಲಿದ್ದಾರೆ. ವಲಿಯುದ್ದೀನ್ ಫೈಝಿ ವಾಝಕ್ಕಾಡ್ ನೇತೃತ್ವದಲ್ಲಿ ನೂರೇ ಅಜ್ಮೀರ್ ಆಧ್ಯಾತ್ಮಿಕ ಸಂಗಮ ನಡೆಯಲಿದೆ ಎಂದು ಸ್ವಾಗತ ಸಮಿತಿಯ ಕನ್ವಿನರ್ ಪಿ.ಜೆ. ಅಬ್ದುಲ್ ಅಝೀಝ್ ಹಾಗೂ ಪ್ರಧಾನ ಕಾರ್ಯದರ್ಶಿ ಸನಾವುಲ್ಲಾ ಗಡಿಯಾರ ತಿಳಿಸಿದ್ದಾರೆ.
ಬೋಧಗಯಾ ಬುದ್ಧವಿಹಾರ ಮತ್ತು ದೇಶದ ಜಾತ್ಯತೀತತೆಯ ಸಾಂವಿಧಾನಿಕ ಪ್ರಶ್ನೆ
ಬೋಧಗಯಾದಲ್ಲಿರುವ ಮಹಾಬೋಧಿ ದೇವಾಲಯವು ಕೇವಲ ಅದ್ಭುತ ವಾಸ್ತುಶಿಲ್ಪದ ಅಥವಾ ಯುನೆಸ್ಕೋ ವಿಶ್ವ ಪರಂಪರೆಯ ತಾಣವಲ್ಲ; ಇದು ವಿಶ್ವಾದ್ಯಂತ ಬೌದ್ಧಧರ್ಮದ ಆಧ್ಯಾತ್ಮಿಕ ಕೇಂದ್ರವಾಗಿದೆ. ಸಿದ್ಧಾರ್ಥ ಗೌತಮನು ಜ್ಞಾನೋದಯವನ್ನು ಪಡೆದು ಬುದ್ಧನಾದ ಸ್ಥಳವನ್ನು ಇದು ಗುರುತಿಸುತ್ತದೆ. ಎರಡು ಸಹಸ್ರಮಾನಗಳಿಗೂ ಹೆಚ್ಚು ಕಾಲ, ಇದು ನೈತಿಕ ಕಾರಣ, ಕರುಣೆ ಮತ್ತು ಮಾನವ ಸಮಾನತೆಯನ್ನು ಸಂಕೇತಿಸಿದೆ. ಆದರೂ, ವಿರೋಧಾಭಾಸವೆಂದರೆ, ಈ ಅತ್ಯಂತ ಪವಿತ್ರ ಬೌದ್ಧ ದೇವಾಲಯವು ಕಾನೂನು ಚೌಕಟ್ಟಿನ ಅಡಿಯಲ್ಲಿ ಆಡಳಿತದಲ್ಲಿದೆ, ಇದು ಬೌದ್ಧರಿಗೆ ತಮ್ಮದೇ ಆದ ಧಾರ್ಮಿಕ ಸಂಸ್ಥೆಯ ಮೇಲೆ ಸಂಪೂರ್ಣ ನಿಯಂತ್ರಣವನ್ನು ವ್ಯವಸ್ಥಿತವಾಗಿ ನಿರಾಕರಿಸುತ್ತದೆ. ಈ ವಿರೋಧಾಭಾಸವು ಭಾರತಕ್ಕೆ ಗಂಭೀರವಾದ ಸಾಂವಿಧಾನಿಕ, ನೈತಿಕ ಮತ್ತು ಪ್ರಜಾಪ್ರಭುತ್ವ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ. ಈ ವಿವಾದದ ತಿರುಳು 1949ರ ಬೋಧ್ ಗಯಾ ದೇವಾಲಯ ಕಾಯ್ದೆ (ಬಿಜಿಟಿ ಕಾಯ್ದೆ) ಆಗಿದ್ದು, ಇದನ್ನು ಬಿಹಾರ ಶಾಸಕಾಂಗವು ದೇವಾಲಯದ ಉತ್ತಮ ನಿರ್ವಹಣೆಯನ್ನು ಖಚಿತಪಡಿಸಿಕೊಳ್ಳುವ ಉದ್ದೇಶದಡಿಯಲ್ಲಿ ಅಂಗೀಕರಿಸಿದೆ. ವಾಸ್ತವದಲ್ಲಿ, ಈ ಕಾಯ್ದೆಯು ಬೌದ್ಧ ದೇವಾಲಯದ ನಿರ್ಣಾಯಕ ನಿಯಂತ್ರಣವನ್ನು ಬೌದ್ಧೇತರ, ನಿರ್ದಿಷ್ಟವಾಗಿ ಬ್ರಾಹ್ಮಣ ಹಿಂದೂ ಅಧಿಕಾರಿಗಳಿಗೆ ನೀಡುವ ರಚನೆಯನ್ನು ಸಾಂಸ್ಥಿಕಗೊಳಿಸಿತು. ಕಾಯ್ದೆಯಡಿ ಆದೇಶಿಸಲಾದ ಒಂಭತ್ತು ಸದಸ್ಯರ ನಿರ್ವಹಣಾ ಸಮಿತಿಯು ನಾಲ್ವರು ಬೌದ್ಧರು ಮತ್ತು ನಾಲ್ವರು ಹಿಂದೂಗಳನ್ನು ಒಳಗೊಂಡಿದೆ. ಗಯಾದ ಜಿಲ್ಲಾ ಮ್ಯಾಜಿಸ್ಟ್ರೇಟ್, ಕಡ್ಡಾಯವಾಗಿ ಹಿಂದೂ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಾರೆ. ವಾಸ್ತವವಾಗಿ, ಬೌದ್ಧರನ್ನು ಅವರ ಪವಿತ್ರ ಸ್ಥಳದ ಆಧ್ಯಾತ್ಮಿಕ, ಸಾಂಸ್ಕೃತಿಕ ಮತ್ತು ಆರ್ಥಿಕ ವ್ಯವಹಾರಗಳಿಗೆ ಸಂಬಂಧಿಸಿದ ನಿರ್ಧಾರಗಳಲ್ಲಿ ಶಾಶ್ವತ ಅಲ್ಪಸಂಖ್ಯಾತರಲ್ಲಿ ಇರಿಸಲಾಗುತ್ತದೆ. ಈ ವ್ಯವಸ್ಥೆಯು ಆಡಳಿತಾತ್ಮಕ ಅನುಕೂಲತೆಯ ಆಕಸ್ಮಿಕವಲ್ಲ; ಇದು ಐತಿಹಾಸಿಕ ವಿಲೇವಾರಿಯ ಪರಂಪರೆಯಾಗಿದೆ. ಬ್ರಾಹ್ಮಣ ಪುನರುಜ್ಜೀವನ ಮತ್ತು ನಂತರದ ಆಕ್ರಮಣಗಳಿಂದಾಗಿ ಭಾರತದಲ್ಲಿ ಬೌದ್ಧಧರ್ಮದ ಅವನತಿಯ ನಂತರ, ಬೋಧಗಯಾ ಕ್ರಮೇಣ ಬ್ರಾಹ್ಮಣ ಮಹಾಂತನ ನೇತೃತ್ವದ ಶೈವ ಮಠದ ಕೈಗೆ ಹೋಯಿತು. ಜಾಗತಿಕ ಬೌದ್ಧ ನಾಯಕರ, ಮುಖ್ಯವಾಗಿ ಹತ್ತೊಂಭತ್ತನೇ ಶತಮಾನದ ಉತ್ತರಾರ್ಧದಲ್ಲಿ ಅನಾಗರಿಕ ಧರ್ಮಪಾಲರ ನಿರಂತರ ಪ್ರಯತ್ನಗಳ ಹೊರತಾಗಿಯೂ, ದೇವಾಲಯವನ್ನು ಎಂದಿಗೂ ಬೌದ್ಧ ನಿಯಂತ್ರಣಕ್ಕೆ ಸಂಪೂರ್ಣವಾಗಿ ಪುನಃಸ್ಥಾಪಿಸಲಾಗಿಲ್ಲ. ಭಾರತೀಯ ರಾಷ್ಟ್ರೀಯ ಚಳವಳಿಯ ನಾಯಕರು ಸಹ ಈ ಅನ್ಯಾಯವನ್ನು ಸರಿಪಡಿಸುತ್ತೇವೆ ಎಂದು ಭರವಸೆ ನೀಡಿದ್ದರು. ಆ ಭರವಸೆ ಏಳು ದಶಕಗಳಿಗೂ ಹೆಚ್ಚು ಕಾಲ ಈಡೇರಿಲ್ಲ. ಬೋಧ್ ಗಯಾ ದೇವಾಲಯ ಕಾಯ್ದೆಯು ಭಾರತದ ಜಾತ್ಯತೀತತೆಯ ಸಾಂವಿಧಾನಿಕ ದೃಷ್ಟಿಕೋನಕ್ಕೆ ವಿರುದ್ಧವಾಗಿದೆ. ಸಂವಿಧಾನವು ಕಾನೂನಿನ ಮುಂದೆ ಸಮಾನತೆಯನ್ನು ಖಾತರಿಪಡಿಸುತ್ತದೆ (ಅನುಚ್ಛೇದ 14), ಧಾರ್ಮಿಕ ಆಧಾರದ ಮೇಲೆ ತಾರತಮ್ಯವನ್ನು ನಿಷೇಧಿಸುತ್ತದೆ (ಅನುಚ್ಛೇದ 15) ಮತ್ತು ಧಾರ್ಮಿಕ ಪಂಗಡಗಳು ತಮ್ಮದೇ ಆದ ವ್ಯವಹಾರಗಳನ್ನು ನಿರ್ವಹಿಸುವ ಹಕ್ಕನ್ನು ಒಳಗೊಂಡಂತೆ ಧಾರ್ಮಿಕ ಸ್ವಾತಂತ್ರ್ಯವನ್ನು ಭದ್ರಪಡಿಸುತ್ತದೆ (ಅನುಚ್ಛೇದ 25 ಮತ್ತು 26). ಸುಪ್ರೀಂ ಕೋರ್ಟ್ನ ಕೆಲವು ತೀರ್ಪುಗಳು ರಾಜ್ಯವು ಧಾರ್ಮಿಕ ವಿಷಯಗಳಲ್ಲಿ ತಟಸ್ಥವಾಗಿರಬೇಕು ಮತ್ತು ಧಾರ್ಮಿಕ ಸಂಸ್ಥೆಯ ನಿರ್ವಹಣೆಯನ್ನು ಮತ್ತೊಂದು ಪಂಗಡಕ್ಕೆ ವರ್ಗಾಯಿಸಲು ಸಾಧ್ಯವಿಲ್ಲ ಎಂದು ಪದೇ ಪದೇ ದೃಢಪಡಿಸಿದೆ. ಆದರೂ, ಬಿಜಿಟಿ ಕಾಯ್ದೆಯು ನಿಖರವಾಗಿ ಇದನ್ನೇ ಮಾಡುತ್ತದೆ. ಭಾರತದಲ್ಲಿ ಬೇರೆ ಯಾವುದೇ ಪ್ರಮುಖ ಧಾರ್ಮಿಕ ಸಮುದಾಯವು ಅಂತಹ ವ್ಯವಸ್ಥೆಗೆ ಒಳಪಟ್ಟಿಲ್ಲ. ಕಾನೂನಿನ ಮೂಲಕ, ಬೌದ್ಧರು ಮಾತ್ರ ತಮ್ಮ ಅತ್ಯಂತ ಪವಿತ್ರ ದೇವಾಲಯದ ನಿಯಂತ್ರಣವನ್ನು ಮತ್ತೊಂದು ಧರ್ಮದೊಂದಿಗೆ ಹಂಚಿಕೊಳ್ಳಲು ಒತ್ತಾಯಿಸಲ್ಪಡುತ್ತಾರೆ. ಜಾತ್ಯತೀತ ನಿರ್ವಹಣೆಯ ಈ ಆಯ್ದ ಅನ್ಯಾಯವು ರಾಜ್ಯದ ತಟಸ್ಥತೆಯ ಟೊಳ್ಳನ್ನು ಬಹಿರಂಗಪಡಿಸುತ್ತದೆ. ಬೌದ್ಧಧರ್ಮವನ್ನು ಹಿಂದೂ ಧರ್ಮದ ಅಡಿಯಲ್ಲಿ ಅಧೀನಗೊಳಿಸುವ ವಿಶಾಲವಾದ ಕಾನೂನು ಪ್ರವೃತ್ತಿಯಿಂದ ಸಮಸ್ಯೆ ಜಟಿಲವಾಗಿದೆ. ಹಿಂದೂ ವೈಯಕ್ತಿಕ ಕಾನೂನು ಮತ್ತು ಬಿಹಾರ ಹಿಂದೂ ಟ್ರಸ್ಟ್ ಕಾಯ್ದೆಯ ಅಂಶಗಳು ಸೇರಿದಂತೆ ವಿವಿಧ ಕಾನೂನುಗಳು ಆಡಳಿತಾತ್ಮಕ ಉದ್ದೇಶಗಳಿಗಾಗಿ ಬೌದ್ಧರನ್ನು ಹಿಂದೂಗಳು ಎಂದು ವ್ಯಾಖ್ಯಾನಿಸುತ್ತವೆ. ಈ ನ್ಯಾಯಾಂಗ ಸಂಯೋಜನೆಯು ಬೌದ್ಧಧರ್ಮದ ವಿಶಿಷ್ಟ ತಾತ್ವಿಕ, ನೈತಿಕ ಮತ್ತು ಐತಿಹಾಸಿಕ ಅಡಿಪಾಯಗಳನ್ನು ನಿರ್ಲಕ್ಷಿಸುತ್ತದೆ ಬ್ರಾಹ್ಮಣ ಅಧಿಕಾರ ಮತ್ತು ಜಾತಿ ಶ್ರೇಣಿಯನ್ನು ಸ್ಪಷ್ಟವಾಗಿ ತಿರಸ್ಕರಿಸುವ ಅಡಿಪಾಯಗಳು. ಅಂತಹ ಕಾನೂನು ಚೌಕಟ್ಟು ಬೌದ್ಧ ಗುರುತನ್ನು ಅಳಿಸಿಹಾಕುವುದಲ್ಲದೆ ಬೌದ್ಧ ಸಂಸ್ಥೆಗಳ ಮೇಲೆ ಹಿಂದೂ ಪ್ರಾಬಲ್ಯವನ್ನು ಕಾನೂನುಬದ್ಧಗೊಳಿಸುತ್ತದೆ. ಇದರ ಪರಿಣಾಮಗಳು ಕೇವಲ ಸೈದ್ಧಾಂತಿಕವಲ್ಲ. ಕಳೆದ ವರ್ಷಗಳಲ್ಲಿ, ದೇಣಿಗೆಗಳ ದುರುಪಯೋಗ, ಬೌದ್ಧ ಕಲಾಕೃತಿಗಳ ಕಳ್ಳತನ, ಮಹಾಬೋಧಿ ಸಂಕೀರ್ಣದೊಳಗೆ ಹಿಂದೂ ಆಚರಣೆಗಳನ್ನು ಹೇರುವುದು ಮತ್ತು ಅದರ ಆವರಣದಲ್ಲಿ ಹಿಂದೂ ದೇವಾಲಯಗಳನ್ನು ನಿರ್ಮಿಸುವ ಪ್ರಸ್ತಾವ ಬರುತ್ತಿವೆ. ಇದು ಸ್ಥಳದ ಧಾರ್ಮಿಕ ಸ್ವರೂಪಕ್ಕೆ ನೇರವಾಗಿ ಬೆದರಿಕೆ ಹಾಕುವ ಮತ್ತು 1991ರ ಪೂಜಾ ಸ್ಥಳಗಳ ಕಾಯ್ದೆಯನ್ನು ಉಲ್ಲಂಘಿಸುವ ಕ್ರಮಗಳು. ಬೌದ್ಧ ಸನ್ಯಾಸಿಗಳು ಮತ್ತು ಕಾರ್ಯಕರ್ತರು ಪದೇ ಪದೇ ಪ್ರತಿಭಟನೆ ನಡೆಸಿದ್ದಾರೆ, ಉಪವಾಸಗಳನ್ನು ಕೈಗೊಂಡಿದ್ದಾರೆ ಮತ್ತು ರಾಷ್ಟ್ರೀಯ ಮತ್ತು ಅಂತರ್ರಾಷ್ಟ್ರೀಯ ಸಂಸ್ಥೆಗಳಿಗೆ ಮನವಿ ಮಾಡಿದ್ದಾರೆ. 2005ರಲ್ಲಿ ಅಲ್ಪಸಂಖ್ಯಾತರ ರಾಷ್ಟ್ರೀಯ ಆಯೋಗವು ಬಿಜಿಟಿ ಕಾಯ್ದೆಯು ಸಂವಿಧಾನದ 26ನೇ ವಿಧಿಯನ್ನು ಉಲ್ಲಂಘಿಸುತ್ತದೆ ಎಂದು ನಿಸ್ಸಂದಿಗ್ಧವಾಗಿ ಹೇಳಿದೆ ಮತ್ತು ದೇವಾಲಯವನ್ನು ಬೌದ್ಧರು ಮಾತ್ರ ನಿರ್ವಹಿಸಬೇಕೆಂದು ಶಿಫಾರಸು ಮಾಡಿದೆ. ಮಹಾಬೋಧಿ ದೇವಾಲಯದ ವಿಷಯವು ಭಾರತೀಯ ಜಾತ್ಯತೀತತೆಗೆ ಒಂದು ಪರೀಕ್ಷೆಯಾಗಿ ಕಾರ್ಯನಿರ್ವಹಿಸುತ್ತದೆ. ಜಾತ್ಯತೀತತೆ ಎಂದರೆ ಎಲ್ಲಾ ಧರ್ಮಗಳಿಗೆ ಸಮಾನ ಗೌರವ ಎಂದಾದರೆ, ಬೌದ್ಧರು ತಮ್ಮ ಅತ್ಯಂತ ಪವಿತ್ರ ಸ್ಥಳದ ಮೇಲೆ ನಿಯಂತ್ರಣವನ್ನು ನಿರಾಕರಿಸುವುದು ಸಮರ್ಥನೀಯವಲ್ಲ. ಅದರ ರದ್ದತಿ ಅಥವಾ ಆಮೂಲಾಗ್ರ ತಿದ್ದುಪಡಿ ಅಲ್ಪಸಂಖ್ಯಾತ ಸಮುದಾಯಕ್ಕೆ ರಿಯಾಯಿತಿಯಲ್ಲ; ಇದು ಸಾಂವಿಧಾನಿಕ ಅವಶ್ಯಕತೆಯಾಗಿದೆ. ನಿಜವಾದ ಜಾತ್ಯತೀತ ಮತ್ತು ಪ್ರಜಾಪ್ರಭುತ್ವ ಭಾರತವು ಈ ಐತಿಹಾಸಿಕ ತಪ್ಪನ್ನು ಸರಿಪಡಿಸಬೇಕು. ಮಹಾಬೋಧಿ ಬುದ್ಧವಿಹಾರವನ್ನು ಬೌದ್ಧ ನಿರ್ವಹಣೆಗೆ ಮರುಸ್ಥಾಪಿಸುವುದು ಸಂವಿಧಾನವನ್ನು ಗೌರವಿಸಿದಂತಾಗುತ್ತದೆ, ಧಾರ್ಮಿಕ ಸ್ವಾತಂತ್ರ್ಯವನ್ನು ಎತ್ತಿಹಿಡಿಯುತ್ತದೆ ಮತ್ತು ಬುದ್ಧನ ಪರಂಪರೆಯಲ್ಲಿ ಬೇರೂರಿರುವ ನೈತಿಕ ನಾಯಕತ್ವದ ಭಾರತದ ಹಕ್ಕನ್ನು ಪುನರುಚ್ಚರಿಸುತ್ತದೆ.
ಪ್ರಮುಖ ಸಂಘಟನಾ ನೇಮಕಾತಿ ಪ್ರಕಟಿಸಿದ ಬಿಜೆಪಿ ಹೊಸ ಸಾರಥಿ ನಿತಿನ್ ನವೀನ್
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿ ನಿತಿನ್ ನವೀನ್ ಅವರು ಪ್ರಮುಖ ಸಂಘಟನಾ ನೇಮಕಾತಿಗಳನ್ನು ಪ್ರಕಟಿಸಿದ್ದಾರೆ. ಕೇರಳ ಚುನಾವಣೆಗೆ ವಿನೋದ್ ತಾವ್ಡೆ, ಬೆಂಗಳೂರಿಗೆ ರಾಮ್ ಮಾಧವ್ ಉಸ್ತುವಾರಿಯಾಗಿ ನೇಮಕಗೊಂಡಿದ್ದಾರೆ. ತೆಲಂಗಾಣದಲ್ಲಿ ಯುವ ನಾಯಕತ್ವಕ್ಕೆ ಒತ್ತು ನೀಡಲಾಗಿದ್ದು, ಅಶೀಶ್ ಶೇಲಾರ್ ಉಸ್ತುವಾರಿಯಾಗಿದ್ದಾರೆ. ಕಾಂಗ್ರೆಸ್ ಅಸ್ಸಾಂ ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧಿಸಲಿದೆ.
ರಾಜ್ಯ ರಾಜಕಾರಣಕ್ಕೆ ಎಚ್ಡಿ ಕುಮಾರಸ್ವಾಮಿ ರೀ ಎಂಟ್ರಿ: ಡಿ ಕೆ ಸುರೇಶ್ ಹೇಳಿದ್ದೇನು?
ಬೆಂಗಳೂರು: ದೆಹಲಿ ರಾಜಕಾರಣದಲ್ಲಿ ಸಕ್ರಿಯರಾಗಿರುವ ಹೆಚ್ ಡಿ ಕುಮಾರಸ್ವಾಮಿ ಅವರು ಸದ್ಯ ರಾಜ್ಯ ರಾಜಕಾರಣದ ಬಗ್ಗೆಯೂ ಕಣ್ಣಾಡಿಸುತ್ತಾ ಇದ್ದಾರೆ. ಕುಮಾರಸ್ವಾಮಿಯವರು ಸಂಕ್ರಾಂತಿ ಹಬ್ಬದಂದೇ ಸೂರ್ಯ ಪಥಬದಲಿಸುವಂತೆ ಕುಮಾರಸ್ವಾಮಿ ಈಗ ಪಥಬದಲಿಸುವ ಸುಳಿವು ಕೊಟ್ಟಿದ್ದಾರೆ. ಮತ್ತೆ ರಾಜ್ಯ ರಾಜಕಾರಣಕ್ಕೆ ರೀ-ಎಂಟ್ರಿ ಕೊಡುವ ಸ್ಪಷ್ಟ ಮುನ್ಸೂಚನೆ ನೀಡಿದ್ದಾರೆ. ನಾನು ಎಲ್ಲೇ ಹೋದರು ಸುಮ್ಮನೆ ಕೂರಲ್ಲ, ರಾಜ್ಯದ ಜನ ತೀರ್ಮಾನ ಮಾಡಿದರೆ
15 ಸಾವಿರದ ಗಡಿ ದಾಟಿದ ಚಿನ್ನ; ಒಂದೇ ದಿನದಲ್ಲಿ 5,020 ಏರಿಕೆ!
ಭೌಗೋಳಿಕ-ರಾಜಕೀಯ ಬಿಕ್ಕಟ್ಟು ಚಿನ್ನದ ಜೊತೆಗೆ ಬೆಳ್ಳಿ, ಪ್ಲಾಟಿನಂ, ಕರೆನ್ಸಿ ಚಲನೆಗಳು ಮತ್ತು ಜಾಗತಿಕ ಮಾರುಕಟ್ಟೆಗಳ ಮೇಲೆ ಪ್ರಭಾವ ಬೀರುತ್ತಿವೆ. ಫೆಡರಲ್ ರಿಸರ್ವ್ ನಿರ್ಧಾರಗಳ ಕುರಿತ ಊಹಾಪೋಹಗಳೂ ಚಿನ್ನದ ಬೆಲೆಯ ಮೇಲೆ ಪರಿಣಾಮ ಬೀರಿವೆ. ಚಿನ್ನದ ಬೆಲೆ ಔನ್ಸ್ಗೆ 4800 ಡಾಲರ್ ಮೀರಿ ಬೆಳೆಯುತ್ತಿದೆ. ಇಂದು ಜನವರಿ 21ರಂದು ಬುಧವಾರ ಚಿನ್ನದ ಬೆಲೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಔನ್ಸ್ಗೆ 4,821.26 ಡಾಲರ್ಗೆ ಏರಿದೆ. ಭೌಗೋಳಿಕ-ರಾಜಕೀಯ ಉದ್ವಿಗ್ನತೆ ಮತ್ತು ದುರ್ಬಲ ಅಮೆರಿಕನ್ ಡಾಲರ್ ನಡುವೆ ಹೂಡಿಕೆದಾರರು ಸುರಕ್ಷಿತ ಹೂಡಿಕೆಗೆ ದಾರಿ ಹುಡುಕುತ್ತಿರುವುದರಿಂದ ಚಿನ್ನದ ಬೆಲೆ ಏರಿಕೆಯಾಗುತ್ತಿದೆ. ಗ್ರೀನ್ ಲ್ಯಾಂಡ್ ವಶಪಡಿಸಿಕೊಳ್ಳುವುದಾಗಿ ಅಮೆರಿಕದ ಅಧ್ಯಕ್ಷ ಹೇಳಿಕೆ ನೀಡಿರುವುದು ಮತ್ತು ಯುರೋಪ್ ಅದನ್ನು ವಿರೋಧಿಸಿರುವುದರಿಂದ ಚಿನ್ನದ ದರದ ಮೇಲೆ ಹೆಚ್ಚು ಭಾರ ಬಿದ್ದಿದೆ. ಈ ಭೌಗೋಳಿಕ-ರಾಜಕೀಯ ಬಿಕ್ಕಟ್ಟು ಚಿನ್ನದ ಜೊತೆಗೆ ಬೆಳ್ಳಿ, ಪ್ಲಾಟಿನಂ, ಕರೆನ್ಸಿ ಚಲನೆಗಳು ಮತ್ತು ಜಾಗತಿಕ ಮಾರುಕಟ್ಟೆಗಳ ಮೇಲೆ ಪ್ರಭಾವ ಬೀರುತ್ತಿವೆ. ಮಾತ್ರವಲ್ಲದೆ. ಅಮೆರಿಕ ಸಂಯುಕ್ತ ಸಂಸ್ಥಾನದ ಫೆಡರಲ್ ರಿಸರ್ವ್ ನಿರ್ಧಾರಗಳ ಕುರಿತ ಊಹಾಪೋಹಗಳೂ ಚಿನ್ನದ ಬೆಲೆಯ ಮೇಲೆ ಪರಿಣಾಮ ಬೀರಿವೆ. ಮಂಗಳೂರಿನಲ್ಲಿ ಇಂದಿನ ಚಿನ್ನದ ದರವೆಷ್ಟು? ಬುಧವಾರ ಜನವರಿ 21ರಂದು ಬೆಳಗಿನ 11 ಗಂಟೆಯ ವಹಿವಾಟಿನಲ್ಲಿ ಮಂಗಳೂರಿನಲ್ಲಿ ಚಿನ್ನದ ಬೆಲೆ ಮತ್ತೆ ದಾಖಲೆ ಮಟ್ಟದ ಏರಿಕೆ ಕಂಡಿದೆ. ಬೆಳಗಿನ ವಹಿವಾಟಿನಲ್ಲಿ ಒಂದು ಗ್ರಾಂ 24 ಕ್ಯಾರೆಟ್ ಚಿನ್ನದ ದರ 15,480 (+502) ರೂ. ಗೆ ಏರಿಕೆ ಕಂಡಿದೆ. ಒಂದು ಗ್ರಾಂ 22 ಕ್ಯಾರೆಟ್ ಚಿನ್ನದ ದರ 14,190 (+460) ರೂ. ಮತ್ತು ಒಂದು ಗ್ರಾಂ 18 ಕ್ಯಾರೆಟ್ ಚಿನ್ನದ ದರ 11,611 (+377) ರೂ. ಬೆಲೆಗೆ ತಲುಪಿದೆ. ಕರ್ನಾಟಕದಲ್ಲಿ ಚಿನ್ನದ ಬೆಲೆ ಎಷ್ಟಿದೆ (ಬೆಳಗಿನ 8 ಗಂಟೆ)? 24 ಕ್ಯಾರೆಟ್ನ ಅಪರಂಜಿ ಬಂಗಾರದ ಬಲೆ ರೂ 14,979 ಇದೆ. 22 ಕ್ಯಾರೆಟ್ನ ಆಭರಣ ಚಿನ್ನದ ಬೆಲೆ ರೂ 13,731 ಮತ್ತು 18 ಕ್ಯಾರೆಟ್ ಆಭರಣ ಚಿನ್ನದ ಬೆಲೆ ರೂ 11,235 ಇದೆ. ಭಾರತದಲ್ಲಿ ಚಿನ್ನದ ಬೆಲೆ (ಬೆಳಗಿನ 8 ಗಂಟೆ)? ಭಾರತದಲ್ಲಿ ಇಂದು ಬುಧವಾರ ಮಾರುಕಟ್ಟೆ ತೆರೆದುಕೊಂಡಾಗ 22 ಕ್ಯಾರೆಟ್ ಚಿನ್ನದ ಸರಾಸರಿ ಬೆಲೆ ಪ್ರತಿ ಗ್ರಾಂಗೆ 13,550 ರೂ. ಆಗಿದ್ದು, 145 ರೂ.ನಷ್ಟು ಏರಿಕೆಯಾಗಿದೆ. 24 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ 153 ರೂ. ಏರಿಕೆಯಾಗಿ 14,228 ರೂ.ಗೆ ಏರಿದೆ.
Gold, Silver Price: ಗಗನಕ್ಕೇರಿದ ಬೆಳ್ಳಿ, ಬಂಗಾರ ಬೆಲೆ: ಬೆಂಗಳೂರಿನಲ್ಲಿ ಎಷ್ಟಿದೆ ದರ ತಿಳಿಯಿರಿ
Gold, Silver Price: ಮತ್ತೆ ಬಂಗಾರ, ಬೆಳ್ಳಿ ದರದಲ್ಲಿ ದಾಖಲೆಯ ಏರಿಕೆ ಆಗಿದೆ. ಹಾಗಾದ್ರೆ ಇಂದು (ಜನವರಿ 21) ಕರ್ನಾಟಕ ರಾಜಧಾನಿ ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಬೆಲೆ ಎಷ್ಟಿದೆ ಎನ್ನುವ ಸಂಪೂರ್ಣ ವಿವರವನ್ನು ಅಂಕಿಅಂಶಗಳ ಸಹಿತ ಇಲ್ಲಿ ನೀಡಲಾಗಿದೆ ತಿಳಿಯಿರಿ. ಬಂಗಾರ ದರಗಳ ವಿವರ: ನಿನ್ನೆ (ಜನವರಿ 20) ಬೆಂಗಳೂರು ಸೇರಿದಂತೆ ದೇಶದ ಬಹುತೇಕ
‘ಬಿಯಾಂಡ್ ಬೆಂಗಳೂರು’ ಮಿಷನ್: ಮಂಗಳೂರಿನ ವರ್ಟೆಕ್ಸ್ ಮ್ಯಾನೇಜ್ಡ್ ವರ್ಕ್ಸ್ಪೇಸ್ಗೆ ರೂ. 1.93 ಕೋಟಿ ಅನುದಾನ ಬಿಡುಗಡೆ
ಮಂಗಳೂರು: ಕರ್ನಾಟಕ ಸರ್ಕಾರದ ಎಲೆಕ್ಟ್ರಾನಿಕ್ಸ್, ಐಟಿ ಮತ್ತು ಬಿಟಿ ಇಲಾಖೆಯು ‘ಬಿಯಾಂಡ್ ಬೆಂಗಳೂರು’ ಮಿಷನ್ ಅಡಿಯಲ್ಲಿ ಮಂಗಳೂರಿನ ವರ್ಟೆಕ್ಸ್ ಮ್ಯಾನೇಜ್ಡ್ ವರ್ಕ್ಸ್ಪೇಸ್ಗೆ ರೂ.1.93 ಕೋಟಿ ಅನುದಾನವನ್ನು ಬಿಡುಗಡೆ ಮಾಡಿದೆ. ಬೆಂಗಳೂರಿನ ಹೊರಗೆ ಉನ್ನತ ತಂತ್ರಜ್ಞಾನ ಕೇಂದ್ರಗಳನ್ನು ಬೆಳೆಸುವ ರಾಜ್ಯ ಸರ್ಕಾರದ ಗುರಿಯಲ್ಲಿ ಇದು ಮಹತ್ವದ ಹೆಜ್ಜೆಯಾಗಿದೆ. ಇಲಾಖೆಯ ಸಚಿವ ಪ್ರಿಯಾಂಕ್ ಖರ್ಗೆ ಹಾಗೂ ಕಾರ್ಯದರ್ಶಿ ಡಾ. ಎನ್. ಮಂಜುಳಾ ಅವರು ವರ್ಟೆಕ್ಸ್ ಮ್ಯಾನೇಜ್ಡ್ ವರ್ಕ್ಸ್ಪೇಸ್ನ ವ್ಯವಸ್ಥಾಪಕ ಪಾಲುದಾರ ಗುರುದತ್ತ ಶೆಣೈ ಅವರಿಗೆ ಚೆಕ್ ಹಸ್ತಾಂತರಿಸಿದರು. ಮಂಗಳೂರಿನ ಐಟಿ ಹಾಗೂ ಜಿಸಿಸಿ (ಜಾಗತಿಕ ಸಾಮರ್ಥ್ಯ ಕೇಂದ್ರ) ಪರಿಸರ ವ್ಯವಸ್ಥೆಯಲ್ಲಿ ವರ್ಟೆಕ್ಸ್ ಪ್ರಮುಖ ಪಾತ್ರ ವಹಿಸುತ್ತಿದ್ದು, ಪ್ರಸ್ತುತ ಆರು ನಿರ್ವಹಿತ ಕಾರ್ಯಸ್ಥಳಗಳ ಮೂಲಕ 2,250ಕ್ಕೂ ಹೆಚ್ಚು ವೃತ್ತಿಪರರಿಗೆ ಬೆಂಬಲ ನೀಡುತ್ತಿದೆ. ಜಾಗತಿಕ ಉದ್ಯಮಗಳು ಹಾಗೂ ಜಿಸಿಸಿ ಸೇರಿದಂತೆ 40ಕ್ಕೂ ಹೆಚ್ಚು ಕಂಪನಿಗಳು ಇಲ್ಲಿ ಕಾರ್ಯನಿರ್ವಹಿಸುತ್ತಿವೆ. ಇದರಿಂದ ಮಂಗಳೂರು, ಬೆಂಗಳೂರು ಹೊರಗಿನ ಪ್ರಮುಖ ತಂತ್ರಜ್ಞಾನ ಕ್ಲಸ್ಟರ್ಗಳಲ್ಲೊಂದು ಎಂಬ ಸ್ಥಾನವನ್ನು ಪಡೆದಿದೆ. ‘ಬಿಯಾಂಡ್ ಬೆಂಗಳೂರು’ ಮಿಷನ್ ಅಡಿಯಲ್ಲಿ, ಬೆಂಗಳೂರಿನ ಹೊರಗಿನ ವರ್ಕ್ಸ್ಪೇಸ್ ಆಪರೇಟರ್ಗೆ ನೀಡಲಾದ ಮೊದಲ ಹಾಗೂ ಅತಿದೊಡ್ಡ ಅನುದಾನಗಳಲ್ಲಿ ಇದೊಂದು ಎಂಬುದು ಗಮನಾರ್ಹ. ಈ ಸಂದರ್ಭದಲ್ಲಿ ಮಾತನಾಡಿದ ಗುರುದತ್ತ ಶೆಣೈ ಅವರು, “ಕರ್ನಾಟಕ ಸರ್ಕಾರ ಮತ್ತು ಕೆಡಿಇಎಂ ನಮ್ಮ ಮೇಲಿಟ್ಟ ವಿಶ್ವಾಸಕ್ಕೆ ನಾವು ಕೃತಜ್ಞರು. ಈ ಅನುದಾನದಿಂದ ಬೆಂಗಳೂರು ಹೊರಗಿನ ಐಟಿ ಮೂಲಸೌಕರ್ಯ ಬಲಪಡಿಸುವುದು, ಉದ್ಯಮ ವಿಸ್ತರಣೆ ಹಾಗೂ ಗುಣಮಟ್ಟದ ಉದ್ಯೋಗ ಸೃಷ್ಟಿಗೆ ಉತ್ತೇಜನ ದೊರೆಯಲಿದೆ. ಮಂಗಳೂರಿನ ಕಾರ್ಯಾಚರಣೆಯನ್ನು 6,000 ಕಾರ್ಯಸ್ಥಳಗಳಿಗೆ ವಿಸ್ತರಿಸುವ ಯೋಜನೆ ನಮ್ಮದು,” ಎಂದರು. ಸ್ಟಾರ್ಟ್ಅಪ್ಗಳು, ಸಣ್ಣ–ಮಧ್ಯಮ ಉದ್ದಿಮೆಗಳು ಹಾಗೂ ಬಹುರಾಷ್ಟ್ರೀಯ ಕಂಪನಿಗಳಿಗೆ ಸಿದ್ಧ ಮಾದರಿಯ ವರ್ಕ್ಸ್ಪೇಸ್ ಒದಗಿಸುವ ಮೂಲಕ, ವರ್ಟೆಕ್ಸ್ ಮಂಗಳೂರಿನಲ್ಲಿ ಉದ್ಯೋಗ ಸೃಷ್ಟಿ ಮತ್ತು ಸ್ಥಳೀಯ ಪ್ರತಿಭೆಗಳ ಉಳಿವಿಗೆ ಮಹತ್ವದ ಕೊಡುಗೆ ನೀಡುತ್ತಿದೆ.
ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ವಿಸ್ತರಣಾ ನೀತಿ ವಿವಾದ ಸೃಷ್ಟಿಸಿದ್ದು, ಈ ನಡುವೆ ದಾವೋಸ್ ನಲ್ಲಿ ಕೆನಡಾ ಪ್ರಧಾನಿ ಮಾರ್ಕ್ ಕಾರ್ನಿ ಅವರು ಗ್ರೀನ್ಲ್ಯಾಂಡ್ ವಿಚಾರದಲ್ಲಿ ಡೆನ್ಮಾರ್ಕ್ಗೆ ಬೆಂಬಲ ಸೂಚಿಸಿದ್ದಾರೆ. ಅಂತರಾಷ್ಟ್ರೀಯ ನಿಯಮಗಳ ಆಧಾರಿತ ವ್ಯವಸ್ಥೆ ದುರ್ಬಲಗೊಳ್ಳುತ್ತಿದ್ದು, ಮಧ್ಯಮ ಗಾತ್ರದ ದೇಶಗಳು ಒಟ್ಟಾಗಿರಬೇಕು ಎಂದು ಅವರು ಎಚ್ಚರಿಕೆ ನೀಡಿದ್ದಾರೆ. ಪ್ರಮುಖ ರಾಷ್ಟ್ರಗಳು ಆರ್ಥಿಕ ಸಾಧನಗಳನ್ನು ಒತ್ತಡದ ಸಾಧನಗಳಾಗಿ ಬಳಸುತ್ತಿವೆ ಎಂದು ಕಾರ್ನಿ ಟೀಕಿಸಿದ್ದಾರೆ.
ಭಾರತೀಯ ರೈಲ್ವೆಯ 'ಒಂದು ನಿಲ್ದಾಣ ಒಂದು ಉತ್ಪನ್ನ' ಯೋಜನೆಯು ಸ್ಥಳೀಯ ಉತ್ಪನ್ನಗಳಿಗೆ ರಾಷ್ಟ್ರೀಯ ಮಾರುಕಟ್ಟೆ ಒದಗಿಸುತ್ತಿದೆ. ಇದು ಕುಶಲಕರ್ಮಿಗಳು, ನೇಕಾರರು ಮತ್ತು ಸಣ್ಣ ಉತ್ಪಾದಕರಿಗೆ ನೇರ ಆದಾಯದ ಮೂಲವಾಗಿದೆ. ದೇಶದಾದ್ಯಂತ 2,002 ನಿಲ್ದಾಣಗಳಲ್ಲಿ 2,326 ಮಳಿಗೆಗಳು ಕಾರ್ಯನಿರ್ವಹಿಸುತ್ತಿವೆ. ಈ ಯೋಜನೆಯು 'ವೋಕಲ್ ಫಾರ್ ಲೋಕಲ್' ಆಶಯದಡಿ ಸ್ಥಳೀಯ ಕಲೆ ಮತ್ತು ಸಂಸ್ಕೃತಿಯನ್ನು ಉತ್ತೇಜಿಸುತ್ತದೆ. ಇದು 'ಆತ್ಮನಿರ್ಭರ ಭಾರತ' ಕನಸಿಗೆ ಬಲ ತುಂಬುತ್ತದೆ.
Train Accident: ರೈಲು ಪ್ರಯಾಣಿಕರಿಗೆ ಹೈಟೆಕ್ ಸುರಕ್ಷತೆ: ವಾರ್ಷಿಕ ಅಪಘಾತಗಳ ಸಂಖ್ಯೆ 11ಕ್ಕೆ ಇಳಿಕೆ
ಬೆಂಗಳೂರು: ಭಾರತೀಯ ರೈಲ್ವೆಯು (Indian Railways) ಸುರಕ್ಷತಾ ಪ್ರದರ್ಶನದಲ್ಲಿ ಗಮನಾರ್ಹ ಪ್ರಗತಿ ಸಾಧಿಸಿದೆ. ದೇಶಿಯವಾಗಿ ಅಭಿವೃದ್ಧಿಪಡಿಸಿದ ಸ್ವಯಂಚಾಲಿತ ರೈಲು ರಕ್ಷಣಾ ವ್ಯವಸ್ಥೆಯಾದ 'ಕವಚ' (Kavacha) ಅಳವಡಿಕೆಯಿಂದ ರೈಲು ಅಪಘಾತಗಳು ತಗ್ಗಿವೆ. ಪ್ರತಿ ವರ್ಷಕ್ಕೆ 171 ಅಪಾಘತಗಳು ಇನ್ನು ಎರಡಂಕಿಗೆ ಬಂದು ನಿಂತಿದೆ ಎಂದು ರೈಲ್ವೆ ಇಲಾಖೆಯು ಅಧಿಕೃತ ಮಾಹಿತಿ ನೀಡಿದೆ. ಭಾರತೀಯ ರೈಲ್ವೆ ಇಲಾಖೆ ನೀಡಿರುವ ಮಾಹಿತಿ
ಬೆಂಗಳೂರಿಗೆ ಆಗಮಿಸಿದ ಉಪರಾಷ್ಟ್ರಪತಿ ಸಿ.ಪಿ.ರಾಮಕೃಷ್ಣನ್
ಬೆಂಗಳೂರು, ಜ.21: ತುಮಕೂರಿನ ಸಿದ್ದಗಂಗಾ ಮಠದ ದಾಸೋಹಿ ಶ್ರೀ ಶಿವಕುಮಾರ ಸ್ವಾಮೀಜಿyವರ ಪುಣ್ಯಸ್ಮರಣೆ ಕಾರ್ಯಕ್ರಮ ಹಾಗೂ ಬೆಂಗಳೂರಿನ ಸಿ.ಎಂ.ಆರ್. ಇನ್ ಸ್ಟಿಟ್ಯೂಟ್ ಆಪ್ ಟೆಕ್ನಾಲಜಿಯ ರಜತ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸುವ ಸಲುವಾಗಿ ಉಪರಾಷ್ಟ್ರಪತಿ ಸಿ.ಪಿ. ರಾಮಕೃಷ್ಣನ್ ಅವರು ವಾಯುಸೇನೆಯ ವಿಶೇಷ ವಿಮಾನದ ಮೂಲಕ ಇಂದು ಬೆಂಗಳೂರಿನ ಎಚ್.ಎ.ಎಲ್ ವಿಮಾನ ನಿಲ್ದಾಣಕ್ಕೆ ಆಗಮಿಸಿದರು. ಉಪರಾಷ್ಟ್ರಪತಿಯನ್ನು ರಾಜ್ಯದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಆತ್ಮೀಯವಾಗಿ ಬರಮಾಡಿಕೊಂಡರು. ಈ ವೇಳೆ ಕೇಂದ್ರ ರೈಲ್ವೇ ರಾಜ್ಯ ಖಾತೆ ಸಚಿವ ವಿ.ಸೋಮಣ್ಣ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ದಿನೇಶ್ ಗುಂಡೂರಾವ್, ಸರಕಾರದ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್, ಕರ್ನಾಟಕ ಪೊಲೀಸ್ ಮಹಾ ನಿರ್ದೇಶಕ ಎಂ.ಎ.ಸಲೀಂ, ಬೆಂಗಳೂರು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್, ಬೆಂಗಳೂರು ನಗರ ಜಿಲ್ಲಾಧಿಕಾರಿ ಜಿ. ಜಗದೀಶ್ ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು. ಉಪರಾಷ್ಟ್ರಪತಿಯವರು ಬಳಿಕ ತುಮಕೂರಿನ ಸಿದ್ದಗಂಗಾ ಮಠದ ದಾಸೋಹಿ ಶ್ರೀ ಶಿವಕುಮಾರ ಸ್ವಾಮೀಜಿವರ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಭಾಗವಹಿಸುವ ಸಲುವಾಗಿ ಎಚ್ಎ.ಎಲ್ ವಿಮಾನ ನಿಲ್ದಾಣದಿಂದ ವಿಶೇಷ ಹೆಲಿಕಾಪ್ಟರ್ ಮೂಲಕ ತುಮಕೂರಿಗೆ ಪ್ರಯಾಣಿಸಿದರು.
ಸನಾತನ ಧರ್ಮ ಕುರಿತು ಉದಯನಿಧಿ ಹೇಳಿಕೆಗಳು ದ್ವೇಷ ಭಾಷಣಕ್ಕೆ ಸಮ: ಮದ್ರಾಸ್ ಹೈಕೋರ್ಟ್
ಅಮಿತ್ ಮಾಳವೀಯ ವಿರುದ್ಧದ ಎಫ್ಐಆರ್ ರದ್ದು
IMD Weather Forecast: ಈ ಭಾಗಗಳಲ್ಲಿ ಒಂದು ವಾರ ಗುಡುಗು, ಮಿಂಚು ಸಹಿತ ಭಾರೀ ಮಳೆ ಮುನ್ಸೂಚನೆ
IMD Weather Forecast: ದೇಶದ ಬಹುತೇಕ ರಾಜ್ಯಗಳಲ್ಲಿ ಭಾರೀ ಚಳಿಗಾಳಿ ಮುಂದುವರೆದಿದೆ. ಈ ನಡುವೆಯೇ ಹಲವು ಭಾಗಗಳಲ್ಲಿ ಮುಂದಿನ ಒಂದು ವಾರ ಗುಡುಗು, ಮಿಂಚು ಸಹಿತ ಮಳೆ ಸುರಿಯುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಹಾಗಾದ್ರೆ, ಎಲ್ಲೆಲ್ಲಿ ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ. ಪಶ್ಚಿಮ ಹಿಮಾಲಯ ಪ್ರದೇಶದಾದ್ಯಂತ ಮುಂದಿನ ಒಂದು
ಅಶ್ಲೀಲ ವಿಡಿಯೊ ಪ್ರಕರಣ ; ರಾಮಚಂದ್ರ ರಾವ್ ವಿರುದ್ಧ ಮಾನಹಾನಿಕರ ಸುದ್ದಿ ಬಿತ್ತರಿಸಂದತೆ ಪ್ರತಿಬಂಧಕಾದೇಶ
ಬೆಂಗಳೂರು: ಅಶ್ಲೀಲ ವಿಡಿಯೊ ಬಹಿರಂಗ ಪ್ರಕರಣಕ್ಕೆ ಸಂಬಂಧಿಸಿದಂತೆ ಐಪಿಎಸ್ ಅಧಿಕಾರಿ ಕೆ. ರಾಮಚಂದ್ರ ರಾವ್ ವಿರುದ್ಧ ಯಾವುದೇ ಮಾನಹಾನಿಕರ ಹೇಳಿಕೆ ಅಥವಾ ಸುದ್ದಿಗಳನ್ನು ಬಿತ್ತರಿಸಂತೆ ಮಾಧ್ಯಮಗಳಿಗೆ ಬೆಂಗಳೂರಿನ 25ನೇ ಹೆಚ್ಚುವರಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ ಏಕಪಕ್ಷೀಯ ತಾತ್ಕಾಲಿಕ ಪ್ರತಿಬಂಧಕಾದೇಶ ವಿಧಿಸಿದೆ. ವೆಬ್ಸೈಟ್ಗಳು, ಡಿಜಿಟಲ್ ಪ್ಲಾಟ್ಫಾರ್ಮ್ಗಳು ಮತ್ತು ಅಧಿಕೃತ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿನ ರಾಮಚಂದ್ರ ರಾವ್ ಅವರಿಗೆ ಸಂಬಂಧಿಸಿದ ಎಲ್ಲ ಮಾನಹಾನಿಕರ ವೀಡಿಯೊಗಳು, ಆಡಿಯೊ ಕ್ಲಿಪ್ಗಳು, ಕರೆ ರೆಕಾರ್ಡಿಂಗ್ಗಳು, ದೃಶ್ಯಗಳು ಮತ್ತು ಪತ್ರಿಕಾ ವರದಿಗಳನ್ನು ತಕ್ಷಣವೇ ತೆಗೆದುಹಾಕಲು ಮಾಧ್ಯಮ ಸಂಸ್ಥೆಗಳಿಗೆ ನಿರ್ದೇಶಿಸಿದೆ. ಜತೆಗೆ, ಪ್ರತಿವಾದಿಗಳಿಗೆ ತುರ್ತು ನೋಟಿಸ್ ಹಾಗೂ ಸಮನ್ಸ್ ಜಾರಿಗೊಳಿಸಿರುವ ನ್ಯಾಯಾಲಯ, ವಿಚಾರಣೆಯನ್ನು ಫೆಬ್ರವರಿ 27ಕ್ಕೆ ಮುಂದೂಡಿದೆ. ಕಚೇರಿಯಲ್ಲಿ ಮಹಿಳೆಯೊಂದಿಗೆ ಅಸಭ್ಯ ರೀತಿಯಲ್ಲಿ ವರ್ತಿಸಿದ ಆರೋಪದಲ್ಲಿ ಸದ್ಯ ಸೇವೆಯಿಂದ ಅಮಾನತುಗೊಂಡಿರುವ ಡಿಜಿಪಿ ರಾಮಚಂದ್ರ ರಾವ್ ಸಲ್ಲಿಸಿದ್ದ ಅಸಲು ದಾವೆಯ ವಿಚಾರಣೆ ನಡೆಸಿದ ನ್ಯಾಯಾಧೀಶ ಗೋಪಾಲ ಕೃಷ್ಣ ರೈ ಅವರು ಈ ಆದೇಶ ಮಾಡಿದ್ದಾರೆ. ಆದೇಶವೇನು? ಪ್ರತಿವಾದಿ ಮಾಧ್ಯಮ ಸಂಸ್ಥೆಗಳು, ಅವುಗಳ ವರದಿಗಾರರು, ನಿರೂಪಕರು ಅಥವಾ ಅವುಗಳ ಪರವಾಗಿ ಹಕ್ಕು ಸಾಧಿಸುವ ಯಾವುದೇ ವ್ಯಕ್ತಿಗಳು ಪ್ರಕರಣದ ಮುಂದಿನ ವಿಚಾರಣೆಯವರೆಗೆ ಮುದ್ರಣ ಮಾಧ್ಯಮ, ಎಲೆಕ್ಟ್ರಾನಿಕ್ ಮಾಧ್ಯಮ, ದೂರದರ್ಶನ ವಾಹಿನಿಗಳು, ವೆಬ್ಸೈಟ್ಗಳು, ಫೇಸ್ಬುಕ್, ಟ್ವಿಟರ್, ಇನ್ಸ್ಟಾಗ್ರಾಮ್, ಟೆಲಿಗ್ರಾಮ್, ವಾಟ್ಸ್ಆ್ಯಪ್, ಯೂಟ್ಯೂಬ್ ಮುಂತಾದವುಗಳಲ್ಲಿ ರಾಮಚಂದ್ರ ರಾವ್ ವಿರುದ್ಧ ಯಾವುದೇ ಮಾನಹಾನಿಕರ ಸುದ್ದಿ, ಕಾಮೆಂಟ್ಗಳು, ಹೇಳಿಕೆಗಳು ಅಥವಾ ಕರೆ ರೆಕಾರ್ಡಿಂಗ್ಗಳನ್ನು ಪ್ರಕಟಿಸುವುದು, ಬಿತ್ತರಿಸುವುದು, ಅಪ್ಲೋಡ್ ಮಾಡುವುದು ಅಥವಾ ಪ್ರಸಾರ ಮಾಡದಂತೆ ಏಕಪಕ್ಷೀಯ ಪ್ರತಿಬಂಧಕಾದೇಶದ ಮೂಲಕ ನಿರ್ಬಂಧಿಸಲಾಗಿದೆ ಎಂದು ನ್ಯಾಯಾಲಯ ಆದೇಶದಲ್ಲಿ ಹೇಳಿದೆ. ಮುಂದುವರಿದು, ರಾಮಚಂದ್ರ ರಾವ್ ಅವರಿಗೆ ಸಂಬಂಧಿಸಿದಂತೆ ಪ್ರತಿವಾದಿ ಮಾಧ್ಯಮ ಸಂಸ್ಥೆಗಳ ವೆಬ್ಸೈಟ್ಗಳು, ಡಿಜಿಟಲ್ ಪ್ಲಾಟ್ಫಾರ್ಮ್ಗಳು ಮತ್ತು ಅಧಿಕೃತ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಲಭ್ಯವಿರುವ ಎಲ್ಲ ಮಾನಹಾನಿಕರ ವೀಡಿಯೊಗಳು, ಆಡಿಯೊ ಕ್ಲಿಪ್ಗಳು, ಕರೆ ರೆಕಾರ್ಡಿಂಗ್ಗಳು, ದೃಶ್ಯಗಳು ಮತ್ತು ಪತ್ರಿಕಾ ವರದಿಗಳನ್ನು ತಕ್ಷಣವೇ ತೆಗೆದುಹಾಕುವಂತೆ ನ್ಯಾಯಾಲಯ ನಿರ್ದೇಶಿಸಿದೆ. ಪ್ರಕರಣವೇನು? ರಾಜ್ಯದ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ (ಡಿಸಿಆರ್ಇ) ಡಿಜಿಪಿ ಆಗಿದ್ದ ಹಿರಿಯ ಐಪಿಎಸ್ ಅಧಿಕಾರಿ ಡಾ. ಕೆ. ರಾಮಚಂದ್ರ ರಾವ್ ಅವರಿಗೆ ಸಂಬಂಧಿಸಿದ್ದು ಎನ್ನಲಾದ ಕೆಲ ಅಶ್ಲೀಲ ವಿಡಿಯೋಗಳು ಮತ್ತು ಆಡಿಯೋ ತುಣುಕುಗಳು ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಸುದ್ದಿವಾಹಿನಿಗಳಲ್ಲಿ ವ್ಯಾಪಕವಾಗಿ ಪ್ರಸಾರಗೊಂಡಿದ್ದವು. ಇದರ ಬೆನ್ನಲ್ಲೇ ರಾಮಚಂದ್ರ ರಾವ್ ಅವರನ್ನು ಸೇವೆಯಿಂದ ಅಮಾನತುಗೊಳಿಸಿ ರಾಜ್ಯ ಸರ್ಕಾರ ಆದೇಶಿಸಿತ್ತು. ಇದರಿಂದ, ನ್ಯಾಯಾಲಯದ ಮೊರೆ ಹೋಗಿರುವ ರಾಮಚಂದ್ರ ರಾವ್, ತಮಗೆ ಸಂಬಂಧಿಸಿದ್ದು ಎನ್ನಲಾದ ಅಶ್ಲೀಲ ವಿಡಿಯೊ ಮತ್ತು ಆಡಿಯೋ ತುಣುಕುಗಳ ಆಧಾರದ ಮೇಲೆ ಹಲವಾರು ಕನ್ನಡ ಹಾಗೂ ರಾಷ್ಟ್ರೀಯ ಸುದ್ದಿವಾಹಿನಿಗಳು ದುರುದ್ದೇಶಪೂರಿತ, ಪರಿಶೀಲಿಸದ ಮತ್ತು ಸುಳ್ಳು ಹೇಳಿಕೆಗಳನ್ನು ಪ್ರಸಾರ ಮಾಡುತ್ತಿವೆ. ಆದ್ದರಿಂದ, ತಮ್ಮ ವಿರುದ್ಧ ಯಾವುದೇ ಮಾನಹಾನಿಕರ ಸುದ್ದಿಗಳನ್ನು ಬಿತ್ತರಿಸದಂತೆ ಪ್ರತಿಬಂಧಕಾದೇಶ ವಿಧಿಸಬೇಕು ಹಾಗೂ ಈಗಾಗಲೇ ಪ್ರಕಟಿಸಲಾಗಿರುವ ಸುದ್ದಿಗಳು, ವಿಡಿಯೊ ಹಾಗೂ ಆಡಿಯೊ ತುಣುಗಳನ್ನು ಅಳಿಸಿಹಾಕಲು ಮಾಧ್ಯಮಗಳಿಗೆ ನಿರ್ದೇಶಿಸಬೇಕು ಎಂದು ಕೋರಿದ್ದಾರೆ.
HAVERI | ರಾಜ್ಯದಲ್ಲಿ ಮಲ ಹೊರುವ ಪದ್ಧತಿ ಜೀವಂತ: ಕಾರ್ಮಿಕರನ್ನು ಶೌಚ ಗುಂಡಿಗಿಳಿಸಿ ಸ್ವಚ್ಛತೆ
ಇಬ್ಬರ ವಿರುದ್ಧ ಪ್ರಕರಣ ದಾಖಲು
ಸಕಲೇಶಪುರ ಆಲೂರು ಕ್ಷೇತ್ರದ ಕಾಂಗ್ರೆಸ್ ಮುಖಂಡರದಲ್ಲಿ ಭಿನ್ನಮತ ; ಹೈಕಮಾಂಡ್ ಅಂಗಳಕ್ಕೆ ಕೈ ಸಂಘರ್ಷ
ಸಕಲೇಶಪುರ-ಆಲೂರು ಮೀಸಲು ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಮುಖಂಡರ ನಡುವಿನ ಅಸಮಾಧಾನ ತಾರಕಕ್ಕೇರಿದೆ. ಪರಾಜಿತ ಅಭ್ಯರ್ಥಿ ಮುರಳಿ ಮೋಹನ್ ಅವರ ವರ್ತನೆ ಸ್ಥಳೀಯ ನಾಯಕರ ಬೇಸರಕ್ಕೆ ಕಾರಣವಾಗಿದ್ದು, ಇತ್ತೀಚೆಗೆ ಸಚಿವರ ಸಭೆಯಲ್ಲೂ ಇದು ಸ್ಫೋಟಗೊಂಡಿದೆ. ಹಿರಿಯರನ್ನು ಕಡೆಗಣಿಸಲಾಗುತ್ತಿದೆ ಎಂಬ ಆರೋಪಗಳು ಕೇಳಿಬರುತ್ತಿವೆ.
ಮಧುರೈ LIC ಕಚೇರಿಯಲ್ಲಿ ಮಹಿಳಾ ಅಧಿಕಾರಿ ಸಾವು; ಭ್ರಷ್ಟಚಾರ ಬಯಲಿಗೆಳೆದಿದ್ದಕ್ಕೆ ಕೊಂದೇ ಬಿಟ್ಟ ಸಹದ್ಯೋಗಿ
ತಮಿಳುನಾಡಿನಲ್ಲಿ ಭೀಕರ ಕೊಲೆ ಪ್ರಕರಣವೊಂದು ಬೆಳಕಿಗೆ ಬಂದಿದೆ. ಬಾಕಿ ಉಳಿಸಿಕೊಂಡಿದ್ದ ಡೆತ್ ಕ್ಲೈಮ್ಗಳನ್ನು ವಿಲೇವಾರಿ ಮಾಡಲು ಸೂಚನೆ ಕೊಟ್ಟಿದ್ದಕ್ಕೆ ಸಹೋದ್ಯೋಗಿಯೊಬ್ಬ ಮಹಿಳಾ ಅಧಿಕಾರಿಯನ್ನೇ ಸುಟ್ಟು ಕೊಂದ ಘಟನೆ ಬೆಳಕಿಗೆ ಬಂದಿದೆ. ಸದ್ಯ ಆರೋಪಿಯನ್ನು ಬಂಧಿಸಲಾಗಿದ್ದು, ವಿಚಾರಣೆ ಮುಂದುವರೆದಿದೆ. ಮೊದಲಿಗೆ ಇದು ಶಾರ್ಟ್ಸರ್ಕ್ಯೂಟ್ನಿಂದ ನಡೆದ ಘಟನೆ ಎಂದು ಭಾವಿಸಲಾಗಿತ್ತು. ಆದರೆ, ಮೃತ ಅಧಿಕಾರಿ ಸಾಯುವ ಮುನ್ನ ಆಕೆಯ ಮಗನಿಗೆ ಕರೆ ಮಾಡಿ ಅಪಾಯದಲ್ಲಿರುವುದನ್ನು ತಿಳಿಸಿದ್ದರು. ಈ ಹಿನ್ನೆಲೆ ಪ್ರಕರಣ ತನಿಖೆ ನಡೆಸಿದಾಗ ಕೃತ್ಯ ಬಯಲಿಗೆ ಬಂದಿದೆ.
ಗಾಜಾ ಯುದ್ಧ ನಿಲ್ಲಿಸಲು ಟ್ರಂಪ್ ಮಾಸ್ಟರ್ ಪ್ಲಾನ್, ಶಾಂತಿ ಮಂಡಳಿಗೆ ಯಾರೆಲ್ಲಾ ಎಂಟ್ರಿ?
ಗಾಜಾ ಪಟ್ಟಿಯಲ್ಲಿ ಯುದ್ಧ ಶುರುವಾಗಿ ಬರೋಬ್ಬರಿ 2 ವರ್ಷಕ್ಕೂ ಹೆಚ್ಚು ಸಮಯ ಆಗಿದೆ, ಇಸ್ರೇಲ್ ಮತ್ತು ಹಮಾಸ್ ನಡುವೆ ಶುರುವಾಗಿದ್ದ ಈ ಕಿರಿಕ್ ಹತ್ತಾರು ಸಾವಿರ ಜನರ ಜೀವ ಬಲಿ ಪಡೆದಿರುವ ಆರೋಪ ಕೂಡ ಇದೆ. ಹೀಗಾಗಿಯೇ ಗಾಜಾ ಪಟ್ಟಿಯಲ್ಲಿ ಶಾಂತಿ ನೆಲೆಸುವಂತೆ ಮಾಡಬೇಕು ಎಂಬುದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆಶಯ. ಹೀಗಿದ್ದರೂ ಏನೆಲ್ಲಾ
Gujarat | ಉದ್ಘಾಟನೆಗೂ ಮುನ್ನವೇ 21 ಕೋಟಿ ರೂ. ವೆಚ್ಚದ ನೀರಿನ ಟ್ಯಾಂಕ್ ಕುಸಿತ
ಸೂರತ್ ಜಿಲ್ಲೆಯ 33 ಹಳ್ಳಿಗಳ ಕುಡಿಯುವ ನೀರು ಯೋಜನೆಗೆ ಹಿನ್ನಡೆ
Sunita Williams: ಸುನಿತಾ ವಿಲಿಯಮ್ಸ್ ಬಾಹ್ಯಾಕಾಶ ಪಯಣಕ್ಕೆ ವಿದಾಯ, ನಾಸಾದಿಂದ ನಿವೃತ್ತಿ
ಟೆಕ್ಸಾಸ್: ರಾಷ್ಟ್ರೀಯ ವಾಯುಯಾನ ಮತ್ತು ಬಾಹ್ಯಾಕಾಶ ಆಡಳಿತದ (NASA) 27 ವರ್ಷಗಳಿಂದ ಗಗನಯಾನಿಯಾಗಿದ್ದ ಸುನಿತಾ ವಿಲಿಯಮ್ಸ್ (Astronaut Sunita Williams) 27 ಅವರು ನಿವೃತ್ತಿಯಾಗಿದ್ದಾರೆ. ಈ ಬಗ್ಗೆ ನಾಸಾ ಜನವರಿ 20ರಂದು ಮಂಗಳವಾರ ಅಧಿಕೃತ ಮಾಹಿತಿ ನೀಡಿದೆ.
ಭಾರತದ ಸಂಸತ್ನಲ್ಲಿ ವ್ಯರ್ಥವಾಗುವ ಸಮಯಕ್ಕೆ ಬೆಲೆ ತೆರಬೇಕಾದವರು ಯಾರು?
‘ದಿ ಕ್ವಿಂಟ್’ಗಾಗಿ ಹಿಮಾಂಶಿ ದಹಿಯಾ ಮಾಡಿರುವ ವರದಿ, ಕಳೆದೊಂದು ದಶಕದಲ್ಲಿ ಹೇಗೆ ಸಂಸತ್ ಕಲಾಪದ ಸಾವಿರಾರು ಗಂಟೆಗಳು ವ್ಯರ್ಥವಾಗಿವೆ? ಮತ್ತದಕ್ಕಾಗಿ ಸಾರ್ವಜನಿಕರ ಕೋಟಿಗಟ್ಟಲೆ ಎಷ್ಟು ಹಣ ಕಳೆದುಹೋಗಿದೆ ಎಂಬುದನ್ನು ಹೇಳುತ್ತದೆ. ಪ್ರತೀ ನಿಮಿಷಕ್ಕೆ 2.5 ಲಕ್ಷ ರೂ. ಖರ್ಚಾಗುತ್ತದೆ ಎಂಬ ಮಾನದಂಡವನ್ನು ಇಟ್ಟು ನೋಡಿದರೆ, 2014ರಿಂದ 2024ರ ನಡುವೆ ವ್ಯರ್ಥವಾದ ಸಂಸತ್ ಕಲಾಪದ ಸಮಯಕ್ಕೆ ಖರ್ಚಾಗಿರುವ ಅಂದಾಜು ಮೊತ್ತ 3,300 ಕೋಟಿ ರೂ.ಗಳಿಗಿಂತ ಹೆಚ್ಚು ಎಂದು ವರದಿ ಕಂಡುಕೊಂಡಿದೆ. ಕಳೆದೊಂದು ದಶಕದಲ್ಲಿ, ಭಾರತದ ಸಂಸತ್ತಿನಲ್ಲಿ ಏನಾಗುತ್ತಿದೆ ಎಂದು ನೋಡಿದರೆ ಆತಂಕವಾಗುತ್ತದೆ. ಅಧಿವೇಶನ ನಿಗದಿಯಾಗುವುದಷ್ಟೇ ನಿಜ. ಸಮಯವೆಲ್ಲ ಕದನಕ್ಕೆ ಅಣಿಯಾಗುವುದರಲ್ಲಿ, ಮುಂದೂಡಿಕೆಯಲ್ಲೇ ಕಳೆದುಹೋಗುತ್ತದೆ.ಚರ್ಚೆಗಳೇ ಇಲ್ಲದೆ, ಗದ್ದಲದ ನಡುವೆಯೇ ಅತಿ ಅವಸರವಾಗಿ ಕಾನೂನುಗಳನ್ನು ಅಂಗೀಕರಿಸಲಾಗುತ್ತದೆ. ಆದರೆ, ಸತ್ಯವೆಂದರೆ, ಈ ವ್ಯರ್ಥವಾಗುವ ಪ್ರತೀ ನಿಮಿಷಕ್ಕೂ ಸಾರ್ವಜನಿಕರೇ ದೊಡ್ಡ ಬೆಲೆ ತೆರಬೇಕಾಗುತ್ತದೆ. ‘ದಿ ಕ್ವಿಂಟ್’ಗಾಗಿ ಹಿಮಾಂಶಿ ದಹಿಯಾ ಮಾಡಿರುವ ವರದಿ, ಕಳೆದೊಂದು ದಶಕದಲ್ಲಿ ಹೇಗೆ ಸಂಸತ್ ಕಲಾಪದ ಸಾವಿರಾರು ಗಂಟೆಗಳು ವ್ಯರ್ಥವಾಗಿವೆ? ಮತ್ತದಕ್ಕಾಗಿ ಸಾರ್ವಜನಿಕರ ಕೋಟಿಗಟ್ಟಲೆ ಎಷ್ಟು ಹಣ ಕಳೆದುಹೋಗಿದೆ ಎಂಬುದನ್ನು ಹೇಳುತ್ತದೆ. ಪ್ರತೀ ನಿಮಿಷಕ್ಕೆ 2.5 ಲಕ್ಷ ರೂ. ಖರ್ಚಾಗುತ್ತದೆ ಎಂಬ ಮಾನದಂಡವನ್ನು ಇಟ್ಟು ನೋಡಿದರೆ, 2014ರಿಂದ 2024ರ ನಡುವೆ ವ್ಯರ್ಥವಾದ ಸಂಸತ್ ಕಲಾಪದ ಸಮಯಕ್ಕೆ ಖರ್ಚಾಗಿರುವ ಅಂದಾಜು ಮೊತ್ತ 3,300 ಕೋಟಿ ರೂ.ಗಳಿಗಿಂತ ಹೆಚ್ಚು ಎಂದು ವರದಿ ಕಂಡುಕೊಂಡಿದೆ. ಇಷ್ಟು ದೊಡ್ಡ ಮೊತ್ತದ ಹಣ ಚರ್ಚೆಗಾಗಿ ಖರ್ಚಾಗಲಿಲ್ಲ, ಕಾನೂನು ರಚನೆಗಾಗಿ ಖರ್ಚಾಗಲಿಲ್ಲ, ಆದರೆ ಬರೀ ಮುಂದೂಡಿಕೆಗಳಿಗೆ ಖರ್ಚಾಯಿತು. ಸಂಸತ್ ಅಧಿವೇಶನ ಒಂದು ಕಾಲದಲ್ಲಿ ಹೇಗಿರುತ್ತಿತ್ತು? 1950 ಮತ್ತು 1960ರ ದಶಕಗಳಲ್ಲಿ ವರ್ಷಕ್ಕೆ 120 ದಿನಗಳಿಗೂ ಹೆಚ್ಚು ಕಾಲ ಸಂಸತ್ ಕಲಾಪ ನಡೆಯುತ್ತಿತ್ತು. ಸಂಸದರು ನೀತಿಗಳ ಬಗ್ಗೆ ಚರ್ಚಿಸುತ್ತಿದ್ದರು. ಪ್ರಶ್ನೋತ್ತರ ಅವಧಿಗೆ ಬಹಳ ಪ್ರಾಮುಖ್ಯತೆಯಿತ್ತು. ಆದರೆ 2019-2024ರ 17ನೇ ಲೋಕಸಭೆಯ ಹೊತ್ತಲ್ಲಿ ಸಂಸತ್ತು ವರ್ಷಕ್ಕೆ ಸರಾಸರಿ 55 ದಿನಗಳ ಕಾಲ ಅಧಿವೇಶನ ನಡೆಸುತ್ತಿತ್ತು. 18ನೇ ಲೋಕಸಭೆಯ ಈ ಮೊದಲ ವರ್ಷಗಳಲ್ಲೂ ಅದೇ ಕಥೆ ಮುಂದುವರಿದಿದೆ. 2025ರ ಚಳಿಗಾಲದ ಅಧಿವೇಶನ ಡಿಸೆಂಬರ್ 1ರಿಂದ 19ರವರೆಗೆ ಕೇವಲ 15 ದಿನಗಳಿಗೆ ಮಾತ್ರ ಸೀಮಿತವಾಗಿತ್ತು. ಮೋದಿ ನೇತೃತ್ವದ ಸರಕಾರ 2014ರಲ್ಲಿ ಅಧಿಕಾರಕ್ಕೆ ಬಂದ ನಂತರ, ಒಟ್ಟು 35 ಅಧಿವೇಶನಗಳಲ್ಲಿ ಇದಕ್ಕಿಂತ ಕಡಿಮೆ ಅವಧಿಗೆ ನಡೆದ ಅಧಿವೇಶನಗಳೂ ಇವೆ. ಸಂಸತ್ತು ವರ್ಷಕ್ಕೆ ಕನಿಷ್ಠ 120 ದಿನಗಳವರೆಗೆ ಸಭೆ ಸೇರಬೇಕೆಂದು ಹಲವಾರು ಸಮಿತಿಗಳು ಶಿಫಾರಸು ಮಾಡಿರುವುದಿದೆ. ಕ್ವಿಂಟ್ ವರದಿ ಸಂಸದೀಯ ವ್ಯವಹಾರಗಳ ಸಚಿವಾಲಯದ ಅಧಿಕೃತ ಡೇಟಾವನ್ನು ಆಧರಿಸಿದೆ. ಸಂಸತ್ತು ಎಷ್ಟು ಚರ್ಚಾ ಸಮಯವನ್ನು ನಿಗದಿಪಡಿಸುತ್ತದೆ ಮತ್ತು ಅಡಚಣೆಗಳಿಂದಾಗಿ ಎಷ್ಟು ಸಮಯ ಕಳೆದುಹೋಗುತ್ತದೆ ಎಂಬುದನ್ನು ಆ ಡೇಟಾ ದಾಖಲಿಸುತ್ತದೆ. ಕಲಾಪದ ಹೊತ್ತಿನ ಅಡಚಣೆಗಳಿಂದ ಕಳೆದುಹೋದ ಪ್ರತೀ ನಿಮಿಷಕ್ಕೂ ಖರ್ಚಾಗುವ ಹಣ 2.5 ಲಕ್ಷ ಮತ್ತು ಇದು ತೆರಿಗೆದಾರರ ಹಣ. ಕಲಾಪಕ್ಕೆ ಅಡಚಣೆಯುಂಟಾಗಿ ಹಣ ವ್ಯರ್ಥವಾದರೆ ತೆರಿಗೆದಾರರ ದುಡ್ಡು ವ್ಯರ್ಥವಾದ ಹಾಗೆ. ಸರಕಾರದ ಡೇಟಾದಲ್ಲಿ ಅಧಿಕೃತವಾಗಿ ದಾಖಲಿಸಲಾದ ಸಮಯವನ್ನಷ್ಟೆ ತೆಗೆದುಕೊಂಡು ನೋಡಿದರೂ ಹಾಗೆ ವ್ಯರ್ಥವಾಗಿರುವ ಸಮಯ, ದುಡ್ಡು ಸಣ್ಣ ಪ್ರಮಾಣದ್ದಲ್ಲ. 2018ರಲ್ಲಿ ಸುಮಾರು 494 ಕೋಟಿ ರೂ. ವ್ಯರ್ಥವಾಗಿದೆ. 2023ರಲ್ಲಿ ಸುಮಾರು 386 ಕೋಟಿ ರೂ. ವ್ಯರ್ಥವಾಗಿದೆ. 2025ರಲ್ಲಿ ಸುಮಾರು 298 ಕೋಟಿ ರೂ. ವ್ಯರ್ಥವಾಗಿದೆ. 2014ರಿಂದ 2024ರವರೆಗೆ ಆದ ಅಂದಾಜು ನಷ್ಟ 3,300 ಕೋಟಿ ರೂ.ಗಿಂತಲೂ ಹೆಚ್ಚು. ಸಂಸತ್ ಕಲಾಪ ನಡೆದಾಗಲೂ, ಅದು ಸಾಮಾನ್ಯವಾಗಿ ಕಾರ್ಯನಿರ್ವಹಿಸುವುದೇ ಬಹಳ ಕಡಿಮೆ. 2014ರಿಂದ 2025 ರವರೆಗೆ ಸಂಸತ್ತಿನ ನಿಗದಿತ ಸಮಯದ ದೊಡ್ಡ ಭಾಗ ಅಡಚಣೆಗಳಿಂದಾಗಿ ಕಳೆದುಹೋಗಿದೆ ಎಂಬುದನ್ನು ಅಧಿಕೃತ ದಾಖಲೆಗಳೇ ತೋರಿಸುತ್ತವೆ ಎಂದು ವರದಿ ಹೇಳುತ್ತದೆ. 2018ರಲ್ಲಿ ಲೋಕಸಭೆಯಲ್ಲಿ ಚರ್ಚಾ ಸಮಯದ ಸುಮಾರು ಶೇ. 39ರಷ್ಟು ವ್ಯರ್ಥವಾಯಿತು. ರಾಜ್ಯಸಭೆಯಲ್ಲಿ ಸುಮಾರು ಶೇ.53ರಷ್ಟು ಸಮಯ ವ್ಯರ್ಥವಾಯಿತು. 2023ರಲ್ಲಿ ಎರಡೂ ಸದನಗಳಲ್ಲಿ ನಿಗದಿತ ಸಮಯದ ಅರ್ಧಕ್ಕಿಂತ ಹೆಚ್ಚು ಸಮಯ ವ್ಯರ್ಥವಾಯಿತು. 2025ರ ಮುಂಗಾರು ಅಧಿವೇಶನದಲ್ಲಿ ಲೋಕಸಭೆ 120 ನಿಗದಿತ ಗಂಟೆಗಳಲ್ಲಿ 37 ಗಂಟೆಗಳ ಕಾಲ ಮಾತ್ರ ಕಾರ್ಯನಿರ್ವಹಿಸಿತು. ರಾಜ್ಯಸಭೆ ಸುಮಾರು 41 ಗಂಟೆಗಳ ಕಾಲ ಕಾರ್ಯನಿರ್ವಹಿಸಿತು. ಸಂಸತ್ ಅಧಿವೇಶನದ ಅವಧಿ ವ್ಯರ್ಥವಾಗುವ ಎರಡು ಬಗೆಗಳಿವೆ. ಒಂದು, ಗದ್ದಲದಲ್ಲೇ ಕಳೆದುಹೋಗುವುದು ಮತ್ತು ಇನ್ನೊಂದು, ಯಾವ ಚರ್ಚೆಯೂ ಇಲ್ಲದೆ ಅವಸರದಲ್ಲಿ ಕಾನೂನುಗಳ ಅಂಗೀಕಾರವಾಗುವುದು. 2023ರಲ್ಲಿ ಸಂಸತ್ ಕಲಾಪವನ್ನು ನುಂಗಿಹಾಕಿದ್ದು ಮಣಿಪುರ ಬಿಕ್ಕಟ್ಟು. ಬಿಕ್ಕಟ್ಟನ್ನು ನಿಭಾಯಿಸದೇ ಇದ್ದುದಕ್ಕಾಗಿ ಸರಕಾರವನ್ನು ಹೊಣೆಗಾರರನ್ನಾಗಿ ಮಾಡಲು ಪ್ರಧಾನಿ ಹೇಳಿಕೆಗಾಗಿ ವಿಪಕ್ಷದ ಸಂಸದರು ಒತ್ತಾಯಿಸಿದರು. ಆದರೆ ಬಿಜೆಪಿ ಸಂಸದರು ಇತರ ರಾಜ್ಯಗಳ ಕುರಿತು ಚರ್ಚೆಗೆ ಒತ್ತಾಯಿಸುವ ಮೂಲಕ ಪ್ರತಿವಾದ ಎತ್ತಿದರು. ಎರಡೂ ಕಡೆಯವರ ನಡುವಿನ ಈ ಘರ್ಷಣೆಯಲ್ಲಿ ಕೋಲಾಹಲವೆದ್ದು, ಸಂಸತ್ ಕಲಾಪವನ್ನು ಪದೇ ಪದೇ ಮುಂದೂಡಲಾಯಿತು. ಸಂಸತ್ತು ಅಂತಿಮವಾಗಿ ಈ ವಿಷಯವನ್ನು ಚರ್ಚಿಸುವ ಹೊತ್ತಿಗೆ ಸಂಸತ್ತಿನ ವರ್ಷದ ಅರ್ಧದಷ್ಟು ಸಮಯ ಬರೀ ಅಡಚಣೆಗಳಲ್ಲೇ ಕಳೆದುಹೋಗಿತ್ತು. ಅಂದರೆ, ತೆರಿಗೆದಾರರ ಹಣವೆಲ್ಲ ಯಾವುದಕ್ಕೂ ಆಗದೆ ವ್ಯರ್ಥವಾಗಿತ್ತು. ಸೆಪ್ಟಂಬರ್ 2020ರಲ್ಲಿ ವಿವಾದಾತ್ಮಕ ಕೃಷಿ ಕಾನೂನುಗಳನ್ನು ಪ್ರತಿಪಕ್ಷಗಳ ಪ್ರತಿಭಟನೆಯ ಹೊರತಾಗಿಯೂ ರಾಜ್ಯಸಭೆಯಲ್ಲಿ ದಾಖಲೆಯ ಮತವಿಲ್ಲದೆ ಅಂಗೀಕರಿಸಲಾಯಿತು. ವಿಪಕ್ಷದ ಸಂಸದರು ವಿಭಾಗೀಯ ಮತಕ್ಕೆ ಒತ್ತಾಯಿಸಿದಾಗ, ರಾಜ್ಯಸಭೆಯ ಉಪ ಸಭಾಪತಿಗಳು ಮಸೂದೆಗಳನ್ನು ಧ್ವನಿ ಮತದಿಂದ ಅಂಗೀಕರಿಸಲಾಗಿದೆ ಎಂದು ಘೋಷಿಸಿದರು. ಅದು ಆಕ್ರೋಶವನ್ನು ಹುಟ್ಟುಹಾಕಿತು. ಸಂಸದರು ಮೇಜುಗಳ ಮೇಲೆ ಹತ್ತಿ ಪ್ರತಿಭಟನೆಯಲ್ಲಿ ನಿಯಮ ಪುಸ್ತಕಗಳನ್ನು ಹರಿದು ಹಾಕಿದರು. ಕೋಲಾಹಲದ ಹೊರತಾಗಿಯೂ, ಕೃಷಿ ಕಾನೂನುಗಳನ್ನು ಕನಿಷ್ಠ ಪರಿಶೀಲನೆ ಅಥವಾ ಯಾವುದೇ ಚರ್ಚೆಯಿಲ್ಲದೆ ಅಂಗೀಕರಿಸಲಾಯಿತು.ಕಡೆಗೆ ಅದನ್ನು ಹಿಂದಕ್ಕೆ ಪಡೆಯಲಾಯಿತು ಎಂಬುದು ಬೇರೆ. ಆಗಸ್ಟ್ 2019ರಲ್ಲಿ ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದುಗೊಳಿಸಿದ 370ನೇ ವಿಧಿಯನ್ನು ರದ್ದುಗೊಳಿಸುವ ನಿರ್ಧಾರವನ್ನು ಸಂಸತ್ತಿನಲ್ಲಿ ಕೆಲವೇ ಗಂಟೆಗಳಲ್ಲಿ ಅಂಗೀಕರಿಸಲಾಯಿತು. ಚರ್ಚೆಗೆ ಕನಿಷ್ಠ ಸಮಯವಿತ್ತು. ಹೆಸರಿಗಷ್ಟೇ ಚರ್ಚೆ ನಡೆದಂತಿತ್ತು.ವಿರೋಧ ಪಕ್ಷದ ಸಂಸದರು ಹೆಚ್ಚಿನ ಚರ್ಚೆ ಮತ್ತು ಸಮಾಲೋಚನೆಗಾಗಿ ಒತ್ತಾಯಿಸುತ್ತಿದ್ದಂತೆ, ಸರಕಾರ ಅದನ್ನೆಲ್ಲ ದಾಟಿ ತನ್ನ ಬಹುಮತ ಬಳಸಿಕೊಂಡು ಕಾನೂನನ್ನು ಜಾರಿಗೆ ತಂದಿತು. ಅಂತಹ ದೂರಗಾಮಿ ಸಾಂವಿಧಾನಿಕ ಬದಲಾವಣೆಯ ಅಂಗೀಕಾರ ಬಹಳ ಕಡಿಮೆ ಸಮಯದಲ್ಲಿ ಮುಗಿದಿತ್ತು. ಅದರ ವಿಷಯದಲ್ಲಿನ ಅಗತ್ಯ ಚರ್ಚೆಯನ್ನು ಬಿಟ್ಟುಬಿಡಲಾಗಿತ್ತು. ಇತ್ತೀಚಿನ ಅಧಿವೇಶನಗಳಲ್ಲಿ ಸರಕಾರಗಳು ಸಂಸತ್ತು ಎಂದಿಗಿಂತಲೂ ಹೆಚ್ಚು ಉತ್ಪಾದಕವಾಗಿದೆ ಎಂದು ಹೇಳಿಕೊಳ್ಳುತ್ತವೆ. ಆದರೆ ಹಾಗೆ ಹೇಳಿಕೊಳ್ಳುವುದು ದಾರಿ ತಪ್ಪಿಸುವ ಆಟವಾಗಿರುವುದೇ ಹೆಚ್ಚು. 2018ರಲ್ಲಿ ಸಂಸತ್ತು ನಿಗದಿತ ಸಮಯದ ಕೇವಲ ಶೇ.61ರಷ್ಟು ಮಾತ್ರ ಕಲಾಪ ನಡೆಸಿದರೂ, ಏನೊ ಸಾಧಿಸಲಾಗಿದೆ ಎಂದು ಹೇಳಿಕೊಂಡದ್ದು ಜೋರಾಗಿಯೇ ಇತ್ತು. 2023ರ ಚಳಿಗಾಲದ ಅಧಿವೇಶನದಲ್ಲಿ ವಿರೋಧ ಪಕ್ಷದ 141 ಸಂಸದರನ್ನು ಅಮಾನತುಗೊಳಿಸಿದ ನಂತರ ಸಂಸತ್ತು ಯಾವ ಅಡಚಣೆಯಿಲ್ಲದೆ ಕಾರ್ಯನಿರ್ವಹಿಸಿತು. ಮಸೂದೆಗಳು ಒಂದರ ಬೆನ್ನಲ್ಲಿ ಒಂದರಂತೆ ಅತಿ ಬೇಗನೆ ಅಂಗೀಕಾರಗೊಂಡವು. ಚರ್ಚೆ ಎಂಬುದು ಕಾಗದದ ಮೇಲೆ ಮಾತ್ರ ಉಳಿಯಿತು. 2025ರಲ್ಲಿ ಅಧಿಕೃತವಾಗಿ 100 ಪ್ರತಿಶತಕ್ಕಿಂತ ಹೆಚ್ಚಿನ ಉತ್ಪಾದಕತೆಯನ್ನು ದಾಖಲಿಸಿದರೂ, ಸಂಸತ್ತಿನ ಮಳೆಗಾಲದ ಅಧಿವೇಶನದಲ್ಲಿ ನಿಗದಿತ ಗಂಟೆಗಳ ಮೂರನೇ ಎರಡರಷ್ಟು ವ್ಯರ್ಥವಾಗಿತ್ತು. ಆದರೂ, ಮಸೂದೆಗಳನ್ನು ತರಾತುರಿಯಲ್ಲಿ ಹೆಚ್ಚುಕಡಿಮೆ ಚರ್ಚೆಯೇ ಇಲ್ಲದೆ ಅಂಗೀಕರಿಸಲಾಯಿತು. ಕೇಂದ್ರ ಬಜೆಟ್ನ ಶೇ. 90ರಷ್ಟನ್ನು ಚರ್ಚೆಯಿಲ್ಲದೆ ಅಂಗೀಕರಿಸಲಾಯಿತು. ಸಂಸತ್ ಮಾತ್ರವಲ್ಲ. ರಾಜ್ಯ ವಿಧಾನಸಭೆಗಳ ಕಥೆಯೂ ಇದೇ ಆಗಿದೆ. 2024ರಲ್ಲಿ ದೇಶಾದ್ಯಂತ ಸರಾಸರಿ 20 ದಿನಗಳ ಕಾಲ ರಾಜ್ಯ ವಿಧಾನಸಭೆ ಅಧಿವೇಶನಗಳು ನಡೆದಿವೆ. ಇದು ಅರ್ಥಪೂರ್ಣ ಶಾಸಕಾಂಗ ವ್ಯವಹಾರಕ್ಕೆ ಅಗತ್ಯವಾಗಿರುವುದಕ್ಕಿಂತ ಬಹಳ ಕಡಿಮೆ ಎಂದು ವರದಿ ಹೇಳುತ್ತದೆ. 2024ರ ಡೇಟಾ ಪ್ರಕಾರ, ಜಮ್ಮು-ಕಾಶ್ಮೀರ, ನಾಗಾಲ್ಯಾಂಡ್ ಮತ್ತು ಉತ್ತರ ಪ್ರದೇಶ ರಾಜ್ಯ ವಿಧಾನಸಭೆಗಳು ಕ್ರಮವಾಗಿ 5, 6 ಮತ್ತು 16 ದಿನಗಳ ಅಧಿವೇಶನಗಳನ್ನು ನಡೆಸಿವೆ. ಒಡಿಶಾ, ಕೇರಳ ಮತ್ತು ಪಶ್ಚಿಮ ಬಂಗಾಳದ ವಿಧಾನಸಭೆಗಳು 42, 38 ಮತ್ತು 36 ಕೆಲಸದ ದಿನಗಳ ಅಧಿವೇಶನದ ಮೂಲಕ ಗಮನ ಸೆಳೆದಿವೆ. ಸಂಸತ್ತು ಈಚಿನ ವರ್ಷಗಳಲ್ಲಿ ಬಹುತೇಕ ನಿಷ್ಕ್ರಿಯವಾಗುತ್ತಿದೆ ಮತ್ತು ತೆರಿಗೆದಾರರ ಹಣ ವ್ಯರ್ಥವಾಗಿ ಖರ್ಚಾಗುತ್ತಿದೆ. ಆಡಳಿತ ನಡೆಸುವವರು ಹೇಗೆ ಪ್ರಜಾಸತ್ತಾತ್ಮಕ ಮೌಲ್ಯವನ್ನು ಮರೆತಿದ್ದಾರೆ ಎಂಬುದಕ್ಕೆ ಇದು ನಿದರ್ಶನವಾಗಿದೆ.
ಜಂಟಿ ಅಧಿವೇಶನದಲ್ಲಿ ಸಿದ್ದು ಸರ್ಕಾರಕ್ಕೆ ಕಾದಿದ್ಯಾ ರಾಜ್ಯಪಾಲರ ಶಾಕ್? ಗೆಹ್ಲೋಟ್ ಅವರ ಮುಂದಿನ ನಡೆಯತ್ತ ಎಲ್ಲರ ಚಿತ್ತ
ತಮಿಳುನಾಡು ಮತ್ತು ಕೇರಳ ರಾಜ್ಯಪಾಲರ ನಡೆ ವಿವಾದಕ್ಕೆ ಕಾರಣವಾಗಿದ್ದು, ಕೇಂದ್ರ ಸರ್ಕಾರದ ವಿರುದ್ಧದ ಅಂಶಗಳನ್ನು ಭಾಷಣದಿಂದ ಕೈಬಿಡಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಇದೀಗ ಗುರುವಾರದಿಂದ ಕರ್ನಾಟಕ ವಿಧಾನಸಭೆಯ ಜಂಟಿ ಅಧಿವೇಶನ ಆರಂಭಗೊಳ್ಳಲಿದ್ದು, ಇದರಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ರಾಜ್ಯ ಸರ್ಕಾರ ಸಿದ್ದಪಡಿಸಿರುವ ಭಾಷಣವನ್ನು ಓದಬೇಕಿದೆ. ಈ ವೇಳೆ ರಾಜ್ಯ ಸರ್ಕಾರ ಸಿದ್ಧಪಡಿಸಿದ ಭಾಷಣದಲ್ಲಿ ಕೇಂದ್ರದ ವಿರುದ್ಧದ ಅಂಶಗಳಿರಲಿವೆ ಎಂಬ ಮಾಹಿತಿ ಲಭ್ಯವಾಗಿದ್ದು, ರಾಜ್ಯಪಾಲನಡೆ ಬಗ್ಗೆ ನಡೆ ಏನಾಗಿರಲಿದೆ ಎಂಬ ಕುತೂಹಲ ಮೂಡಿಸಿದೆ. ತ.ನಾಡು ಹಾಗೂ ಕೇರಳ ರಾಜ್ಯಪಾಲರ ಮಾರ್ಗವನ್ನು ಅನುಸರಿಸುತ್ತಾರಾ ಅಥವಾ ಸಂಪೂರ್ಣವಾಗಿ ಭಾಷಣ ಓದುತ್ತಾರಾ ಎಂಬುದು ಸದ್ಯದ ಪ್ರಶ್ನೆಯಾಗಿದೆ.
ಲಕ್ಕುಂಡಿ ವಿಸ್ಮಯ: 10ನೇ ಶತಮಾನದ ಈಶ್ವರನ ಗರ್ಭಗುಡಿ, ಶಿವಲಿಂಗ ಪಾಣಿ ಬಟ್ಟಲು ಪತ್ತೆ
ಐತಿಹಾಸಿಕ ತಾಣವಾದ ಲಕ್ಕುಂಡಿ ದಿನೇ ದಿನೇ ಅಚ್ಚರಿಗಳ ತವರಾಗಿ ಮಾರ್ಪಾಡಾಗುತ್ತಿದೆ. ಇಲ್ಲಿನ ಪ್ರತಿ ಪ್ರದೇಶದಲ್ಲಿಯೂ ಇತಿಹಾಸ ಅಡಗಿದೆ ಎನ್ನುವದುದಕ್ಕೆ ಸದ್ಯ ಮನೆಯೊಂದು ಸಾಕ್ಷಿಯಾಗಿದೆ. ಗ್ರಾಮದ ನಿವಾಸಿಯೊಬ್ಬರ ಮನೆಯ ಹಾಲ್ ಪಕ್ಕದಲ್ಲಿ 10ನೇ ಶತಮಾನದ ಪುರಾತನ ಈಶ್ವರನ ಗರ್ಭಗುಡಿ ಪತ್ತೆಯಾಗಿದೆ. ಅಷ್ಟೇ ಅಲ್ಲದೇ ಉತ್ಖನನ ಸ್ಥಳದಲ್ಲೇ ಮಣ್ಣಿನ ಮಡಿಕೆಗಳು ಪತ್ತೆಯಾಗಿದ್ದು, ಅದರಲ್ಲಿ ಬಂಗಾರದ ನಾಣ್ಯಗಳಿರಬಹುದು ಎಂದು ಊಹಿಸಲಾಗಿದೆ.
ಇಎಸ್ಐ ಆರೋಗ್ಯ ಸೇವೆ ಸನ್ನಿಹಿತ? ಏಪ್ರಿಲ್ - ಮೇ ವೇಳೆಗೆ ಆಸ್ಪತ್ರೆ ಉದ್ಘಾಟನೆಯಾಗುವ ನಿರೀಕ್ಷೆ
ದೊಡ್ಡಬಳ್ಳಾಪುರದಲ್ಲಿ 85 ಕೋಟಿ ವೆಚ್ಚದ 100 ಹಾಸಿಗೆಯ ಇಎಸ್ಐ ಆಸ್ಪತ್ರೆ ಕಾರ್ಯಾರಂಭಕ್ಕೆ ಸನ್ನಿಹಿತವಾಗಿದೆ. ಒಂದು ದಶಕದ ಬಳಿಕ, ಅತ್ಯಾಧುನಿಕ ಸೌಲಭ್ಯಗಳೊಂದಿಗೆ ನಿರ್ಮಾಣಗೊಂಡ ಈ ಆಸ್ಪತ್ರೆ, ಲಕ್ಷಾಂತರ ಕಾರ್ಮಿಕರ ಆರೋಗ್ಯ ಸೇವಾ ಸಮಸ್ಯೆಗೆ ಪರಿಹಾರ ನೀಡುವ ನಿರೀಕ್ಷೆಯಿದೆ. ಶೀಘ್ರದಲ್ಲೇ ಉದ್ಘಾಟನೆಗೊಂಡು, ಬೆಂಗಳೂರಿಗೆ ಅಲೆದಾಟ ತಪ್ಪಲಿದೆ.
ಬೆಳ್ತಂಗಡಿ, ಜ.21: ತಣ್ಣೀರುಪಂಥ ಗ್ರಾಮದ ಬಲ್ಯಡ್ಡ ನಿವಾಸಿ ಸುಲೈಮಾನ್ ಹಾಜಿ ಕುಪ್ಪೆಟ್ಟಿ(88) ತನ್ನ ನಿವಾಸದಲ್ಲಿ ಮಂಗಳವಾರ ರಾತ್ರಿ 8:10ಕ್ಕೆ ನಿಧನರಾಗಿದ್ದಾರೆ. ಮೃತರು ಇಬ್ಬರು ಪುತ್ರಿಯರು, ಮೂವರು ಪುತ್ರರು ಸೇರಿದಂತೆ ಅಪಾರ ಬಂಧುಬಳಗವನ್ನು ಅಗಲಿದ್ದಾರೆ. ಬುಧವಾರ ಮಧ್ಯಾಹ್ನ ಸ್ಥಳೀಯ ಜುಮಾ ಮಸೀದಿ ಆವರಣದಲ್ಲಿ ಅಂತ್ಯಕ್ರಿಯೆ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
Rajeev Gowda: ಪೌರಾಯುಕ್ತೆಗೆ ಧಮ್ಕಿ ಹಾಕಿದ್ದ ಕಾಂಗ್ರೆಸ್ ಮುಖಂಡ ರಾಜೀವ್ ಗೌಡಗೆ ಹೈಕೋರ್ಟ್ ತರಾಟೆ
ಬೆಂಗಳೂರು: ಶಿಡ್ಲಘಟ್ಟ ಪಾರಾಯುಕ್ತೆ ಅಮೃತಾ ಅವರಿಗೆ ದೂರವಾಣಿ ಮೂಲಕ ಬೆದರಿಕೆ ಮತ್ತು ನಿಂದನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ರಾಜೀವ್ ಗೌಡ ಅವರನ್ನು ಕರ್ನಾಟಕ ಹೈಕೋರ್ಟ್ ಮಂಗಳವಾರ ತರಾಟೆಗೆ ತೆಗೆದುಕೊಂಡಿದೆ ಮತ್ತು ಅವರ ಮೇಲೆ ಗಂಭೀರ ಆರೋಪಗಳನ್ನು ದಾಖಲಿಸದಿದ್ದಕ್ಕಾಗಿ ಸರ್ಕಾರವನ್ನು ಪ್ರಶ್ನಿಸಿದೆ. ಪ್ರಕರಣದಲ್ಲಿ ಅವರ ವಿರುದ್ಧ ದಾಖಲಾಗಿರುವ ಎಫ್ಐಆರ್ ರದ್ದುಗೊಳಿಸುವಂತೆ ಕೋರಿ ಸಲ್ಲಿಸಲಾದ ಅರ್ಜಿಯ ವಿಚಾರಣೆ ನಡೆಸುತ್ತಿದ್ದ
ಕಬ್ಬಾಳು ಕೆರೆಗಳಲ್ಲಿ ಜೆಸಿಬಿ, ಹಿಟ್ಯಾಚಿ ಯಂತ್ರಗಳಿಂದ ಅಗೆದ ಆಳವಾದ ಗುಂಡಿಗಳು ಪ್ರವಾಸಿಗರು, ಭಕ್ತರು, ವಿದ್ಯಾರ್ಥಿಗಳಿಗೆ ಮೃತ್ಯುಕೂಪಗಳಾಗಿ ಪರಿಣಮಿಸಿವೆ. ಇತ್ತೀಚೆಗೆ ಇಬ್ಬರು ವಿದ್ಯಾರ್ಥಿಗಳು ಹಾಗೂ ಭಿಕ್ಷುಕ ಸೇರಿದಂತೆ ಹಲವರು ಈಜಲು ಹೋಗಿ ಪ್ರಾಣ ಕಳೆದುಕೊಂಡಿದ್ದಾರೆ. ಕೂಡಲೇ ಎಚ್ಚರಿಕೆ ಫಲಕ ಅಳವಡಿಸಿ, ತಡೆಗೋಡೆ ನಿರ್ಮಿಸಿ ಜೀವಹಾನಿ ತಡೆಯಲು ಗ್ರಾಮಸ್ಥರ ಆಗ್ರಹ.
ಸುರತ್ಕಲ್: ಎಂ.ಆರ್.ಪಿ.ಎಲ್. ತ್ಯಾಜ್ಯ ಸಂಸ್ಕರಣಾ ಘಟಕದಲ್ಲಿ ಬೆಂಕಿ ಅವಘಡ
ಎಂ.ಆರ್.ಪಿ.ಎಲ್.ನ ಬೇಜವಾಬ್ದಾರಿ, ನಿರ್ಲಕ್ಷ್ಯತನವೇ ಘಟನೆಗೆ ಕಾರಣ: ಜೋಕಟ್ಟೆ ನಿವಾಸಿಗಳ ಆರೋಪ
ಹೊದಿಕೆ ಹೊದಿಸದೇ ಸರಕು ಸಾಗಣೆ, ನಿಯಮ ಗಾಳಿಗೆ, ಮರಳು ವಾಹನ ಸವಾರರ ಕಣ್ಣಿಗೆ!
ಬೆಳಗಾವಿ ಜಿಲ್ಲೆಯಲ್ಲಿ ರಸ್ತೆಗಳಲ್ಲಿ ಮರಳು, ಮಣ್ಣು, ಖಡಿ ಸಾಗಿಸುವ ವಾಹನಗಳು ನಿಯಮ ಉಲ್ಲಂಘಿಸುತ್ತಿವೆ. ಹೊದಿಕೆ ಹಾಕದೆ ಸಾಗಾಟದಿಂದ ರಸ್ತೆಗೆ ವಸ್ತುಗಳು ಬಿದ್ದು, ಧೂಳು ಹಾರುತ್ತಿದೆ. ಇದರಿಂದ ಬೈಕ್ ಸವಾರರು ಗಾಯಗೊಳ್ಳುತ್ತಿದ್ದಾರೆ. ಕಣ್ಣಿನ ಸಮಸ್ಯೆ, ಉಸಿರಾಟದ ತೊಂದರೆಗಳು ಹೆಚ್ಚಾಗುತ್ತಿವೆ. ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿಲ್ಲ. ಕಾಟಾಚಾರಕ್ಕೆ ದಂಡ ವಿಧಿಸಲಾಗುತ್ತಿದೆ.

26 C