ಹೊಸದಿಲ್ಲಿ: ಲೈಂಗಿಕ ಅಪರಾಧಿ ಜೆಫ್ರಿ ಎಪ್ಸ್ಟೀನ್ ಜೊತೆ ಮೈಕ್ರೋಸಾಫ್ಟ್ ಸಹಸ್ಥಾಪಕ ಹಾಗೂ ಲೋಕೋಪಕಾರಿ ಬಿಲ್ ಗೇಟ್ಸ್ ಅವರ ಸಂಬಂಧಗಳು ಮತ್ತೆ ಜಾಗತಿಕವಾಗಿ ಮುನ್ನೆಲೆಗೆ ಬಂದ ಹಿನ್ನೆಲೆಯಲ್ಲಿ ಗೇಟ್ಸ್ ವಾಣಿಜ್ಯ ಸಚಿವರ ಭೇಟಿಯ ವಿರುದ್ಧ ವಿದೇಶಾಂಗ ವ್ಯವಹಾರಗಳ ಸಚಿವಾಲಯವು (ಎಂಇಎ) ಸಲಹೆ ನೀಡಿತ್ತು ಎಂದು The Indian Express ವರದಿ ಮಾಡಿದೆ. ತನ್ನ ಶತಾಬ್ದಿಯ ಪ್ರಯುಕ್ತ ಇಂಡಿಯನ್ ಚೇಂಬರ್ಸ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರಿ ಆಯೋಜಿಸಿದ್ದ ‘ಕರ್ಟೇನ್ ರೇಸರ್ ಆಫ್ ಫಿಕ್ಕಿ @100’ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ವಾಣಿಜ್ಯ ಸಚಿವಾಲಯವು ಎಂಇಎ ಅಭಿಪ್ರಾಯವನ್ನು ಕೋರಿತ್ತು ಎನ್ನಲಾಗಿದೆ. ಕಾರ್ಯಕ್ರಮವನ್ನು ಫೆ.19ರಂದು ನಿಗದಿಗೊಳಿಸಲಾಗಿತ್ತು ಮತ್ತು ಅದೇ ದಿನ ದಿಲ್ಲಿಯಲ್ಲಿ ಜಾಗತಿಕ ಎಐ ಶೃಂಗಸಭೆ ಆರಂಭಗೊಂಡಿತ್ತು. ಈ ಹಂತದಲ್ಲಿ ವಾಣಿಜ್ಯ ಸಚಿವರು ಗೇಟ್ಸ್ ಅವರನ್ನು ಭೇಟಿಯಾಗುವುದು ಅಥವಾ ಕಾರ್ಯಕ್ರಮದಲ್ಲಿ ಜಂಟಿಯಾಗಿ ಭಾಗವಹಿಸುವುದು ರಾಜಕೀಯ ದೃಷ್ಟಿಯಿಂದ ಸೂಕ್ತವಲ್ಲ ಎನ್ನುವುದು ವಿದೇಶಾಂಗ ಸಚಿವಾಲಯದ ಅಭಿಪ್ರಾಯವಾಗಿದೆ ಎಂದು ಎಂಇಎದ ಎಎಂಎಸ್(ಅಮೆರಿಕಾಸ್) ವಿಭಾಗದ ಹಿರಿಯ ಅಧಿಕಾರಿಯೋರ್ವರು ವಾಣಿಜ್ಯ ಸಚಿವಾಲಯಕ್ಕೆ ತಿಳಿಸಿದ್ದರು. ಎಎಂಎಸ್ ವಿಭಾಗವು ಅಮೆರಿಕ ಮತ್ತು ಕೆನಡಾ ಸೇರಿದಂತೆ ಉತ್ತರ,ಮಧ್ಯ ಮತ್ತು ದಕ್ಷಿಣ ಅಮೆರಿಕಾದ ದೇಶಗಳೊಂದಿಗೆ ದ್ವಿಪಕ್ಷೀಯ ಸಂಬಂಧಗಳನ್ನು ನಿರ್ವಹಿಸುತ್ತದೆ. ವಿದೇಶಾಂಗ ಸಚಿವಾಲಯದಿಂದ ಸಂದೇಶ ರವಾನೆಯ ಬಳಿಕ ಫಿಕ್ಕಿ ಕಾರ್ಯಕ್ರಮವನ್ನು ಮುಂದೂಡಲಾಯಿತು ಎಂದು ಮೂಲಗಳು ತಿಳಿಸಿವೆ. ಫೆ.16ರಂದು ಭಾರತಕ್ಕೆ ಆಗಮಿಸಿದ್ದ ಗೇಟ್ಸ್ ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು,ಉಪ ಮುಖ್ಯಮಂತ್ರಿ ಪವನ ಕಲ್ಯಾಣ ಮತ್ತು ಹಿರಿಯ ಸರಕಾರಿ ಅಧಿಕಾರಿಗಳನ್ನು ಭೇಟಿಯಾಗಿದ್ದರು. ಫೆ.19ರಂದು ಅವರು ಇಂಡಿಯಾ ಎಐ ಇಂಪ್ಯಾಕ್ಟ್ ಸಭೆಯಲ್ಲಿ ಪ್ರಮುಖ ಭಾಷಣವನ್ನು ಮಾಡಬೇಕಿತ್ತು, ಆದರೆ ಗಂಟೆಗಳ ಮುನ್ನ ಅವರು ಕಾರ್ಯಕ್ರಮದಿಂದ ಹಿಂದೆ ಸರಿದಿದ್ದರು. ಎಚ್ಚರಿಕೆಯಿಂದ ಪರಿಶೀಲಿಸಿದ ಬಳಿಕ ಮತ್ತು ಎಐ ಶೃಂಗಸಭೆಯ ಪ್ರಮುಖ ಆದ್ಯತೆಗಳ ಮೇಲೆ ಗಮನ ಇರುವಂತೆ ನೋಡಿಕೊಳ್ಳಲು ಗೇಟ್ಸ್ ಭಾಷಣವನ್ನು ಮಾಡುವುದಿಲ್ಲ. ಗೇಟ್ಸ್ ಫೌಂಡೇಷನ್ ಅನ್ನು ಆಫ್ರಿಕಾ ಮತ್ತು ಭಾರತ ಕಚೇರಿಗಳ ಅಧ್ಯಕ್ಷ ಅಂಕುರ ವೋರಾ ಅವರು ಪ್ರತಿನಿಧಿಸಲಿದ್ದಾರೆ ಎಂದು ಗೇಟ್ಸ್ ಫೌಂಡೇಷನ್ ಫೆ.19ರಂದು ಹೇಳಿಕೆಯಲ್ಲಿ ತಿಳಿಸಿತ್ತು. ‘ನಾವು ಹಂಚಿಕೊಂಡಿರುವ ಆರೋಗ್ಯ ಮತ್ತು ಅಭಿವೃದ್ಧಿ ಗುರಿಗಳನ್ನು ಮುನ್ನಡೆಸಲು ಭಾರತದಲ್ಲಿ ನಮ್ಮ ಕೆಲಸಕ್ಕೆ ಗೇಟ್ಸ್ ಫೌಂಡೇಷನ್ ಸಂಪೂರ್ಣವಾಗಿ ಬದ್ಧವಾಗಿದೆ’ ಎಂದೂ ಅದು ಹೇಳಿತ್ತು. ಇದಕ್ಕೂ ಮುನ್ನ,ಎಪ್ಸ್ಟೀನ್ ಫೈಲ್ಗಳಿಗೆ ಸಂಬಂಧಿಸಿದಂತೆ ಬಿಡುಗಡೆಯಾಗಿರುವ ಮಾಹಿತಿಗಳ ಪರಿಶೀಲನೆಯನ್ನು ತಾನು ಮಂದುವರಿಸುವುದಾಗಿ ಗೇಟ್ಸ್ ಫೌಂಡೇಷನ್ ತಿಳಿಸಿತ್ತು. ಜಾಗತಿಕ ಆರೋಗ್ಯ ಮತ್ತು ಅಭಿವೃದ್ಧಿಗಾಗಿ ಗಣನೀಯ ಪ್ರಮಾಣದಲ್ಲಿ ಲೋಕೋಪಕಾರಿ ಸಂಪನ್ಮೂಲಗಳನ್ನು ತಾನು ಕ್ರೋಡೀಕರಿಸಬಲ್ಲೆ ಎಂಬ ಎಪ್ಸ್ಟೀನ್ ಹೇಳಿಕೆಯ ಆಧಾರದಲ್ಲಿ ಫೌಂಡೇಷನ್ನ ಕೆಲವು ಉದ್ಯೋಗಿಗಳು ಈ ಸಂಭಾವ್ಯ ನಿಧಿಯನ್ನು ಪಡೆಯಲು ಎಪ್ಸ್ಟೀನ್ ಜೊತೆ ಮಾತುಕತೆ ನಡೆಸಿದ್ದರು. ಅಂತಿಮವಾಗಿ ಫೌಂಡೇಷನ್ ಎಪ್ಸ್ಟೇನ್ ಜೊತೆ ಯಾವುದೇ ಸಹಯೋಗಕ್ಕೆ ಮುಂದಾಗಿರಲಿಲ್ಲ ಮತ್ತು ಯಾವುದೇ ನಿಧಿಯನ್ನು ಎಂದೂ ರಚಿಸಿರಲಾಗಿರಲಿಲ್ಲ. ಯಾವುದೇ ಸಮಯದಲ್ಲಿಯೂ ಫೌಂಡೇಷನ್ ಎಪ್ಸ್ಟೀನ್ಗೆ ಹಣವನ್ನು ಪಾವತಿಸಿರಲಿಲ್ಲ ಮತ್ತು ಆತನನ್ನು ನೇಮಿಸಿಕೊಂಡಿರಲಿಲ್ಲ ಎಂದು ಗೇಟ್ಸ್ ಫೌಂಡೇಷನ್ ಫೆ.11ರಂದು ಹೇಳಿಕೆಯಲ್ಲಿ ತಿಳಿಸಿತ್ತು. ಮಹಿಳೆಯರು ಮತ್ತು ಬಾಲಕಿಯರ ಮೇಲೆ ಎಪ್ಸ್ಟೀನ್ ದೌರ್ಜನ್ಯ ಭಯಾನಕವಾಗಿತ್ತು ಮತ್ತು ಅವರು ಅನುಭವಿಸಿದ್ದನ್ನು ಯಾರೂ ಎಂದಿಗೂ ಅನುಭವಿಸಬಾರದು ಎಂದೂ ಅದು ಹೇಳಿತ್ತು.
Gulf: ನಾವಿಲ್ಲಿ ಸುರಕ್ಷಿತ: ಕತಾರ್ ಸರ್ಕಾರದ ನೆರವು ನೆನೆದ ಕನ್ನಡಿಗರು
Gulf: ಅಮೆರಿಕ, ಇರಾನ್ vs ಇಸ್ರೇಲ್ ನಡುವಿನ ಯುದ್ಧದ ಬಿಸಿಯು ಇದೀಗ ಗಲ್ಫ್ ರಾಷ್ಟ್ರಗಳಿಗೂ ಮುಟ್ಟಿದೆ. ಆದರೆ ಅಲ್ಲಿನ ಪರಿಸ್ಥಿತಿ ಬೇರೆಯೇ ಇದೆ. ಕೆಲವು ಸುದ್ದಿ ವಾಹಿನಿಗಳು ಪ್ರಸಾರ ಮಾಡುತ್ತಿರುವಂತೆ ಇಲ್ಲಿ ಪರಿಸ್ಥಿತಿ ಇಲ್ಲ ಎಂದು ಕನ್ನಡಿಗ Almeida Gladson ಅವರ ಬರಹ ಇಲ್ಲಿದೆ. ಕಳೆದ ಕೆಲದಿನಗಳಿಂದ ಗಲ್ಫ್ ದೇಶಗಳಾದ ಕತಾರ್, ಯುಎಇ, ಕುವೆಯ್ಟ್, ಒಮಾನ್, ಬಹರೈನ್,
ಬೊಜ್ಜು ಹೊಂದಿರುವ ಮಕ್ಕಳಲ್ಲಿ ಜಾಗತಿಕವಾಗಿ ಎರಡನೇ ಸ್ಥಾನದಲ್ಲಿರುವ ಭಾರತ
World Obesity Federation (WOF) ಪ್ರಕಾರ 2040ರ ವೇಳೆಗೆ ಜಾಗತಿಕವಾಗಿ 507 ದಶಲಕ್ಷ ಮಕ್ಕಳು ಬೊಜ್ಜು ಅಥವಾ ಅಧಿಕ ತೂಕ ಹೊಂದಿರಲಿದ್ದಾರೆ. ಅಧಿಕ ತೂಕ ಮತ್ತು ಬೊಜ್ಜು ಹೊಂದಿರುವ ಮಕ್ಕಳಲ್ಲಿ ಜಾಗತಿಕವಾಗಿ ಭಾರತದ ಎರಡನೇ ಸ್ಥಾನದಲ್ಲಿದೆ. ಅಂದಾಜಿನ ಪ್ರಕಾರ ಭಾರತದಲ್ಲಿ 2040ರ ವೇಳೆಗೆ 5ರಿಂದ9 ವರ್ಷ ವಯಸ್ಸಿನ 20 ದಶಲಕ್ಷ ಮಕ್ಕಳು ಬೊಜ್ಜು ಹೊಂದಿರುವವರಾಗಿರಲಿದ್ದಾರೆ. ಅದೇ ವಯಸ್ಸಿನ 56 ದಶಲಕ್ಷ ಮಕ್ಕಳು ಅಧಿಕ ತೂಕ ಹೊಂದಿರುವವರಾಗಿದ್ದಾರೆ ಎಂದು ವರ್ಲ್ಡ್ ಒಬೆಸಿಟಿ ಅಟ್ಲಾಸ್ 2026 ವರದಿ ಹೇಳಿದೆ. ಮಾರ್ಚ್ 4ರಂದು ಆಚರಿಸಲಾಗುವ World Obesity Day ಸ್ಮರಣಾರ್ಥ ವಿಶ್ವ ಬೊಜ್ಜು ಫೆಡರೇಶನ್ ಬಿಡುಗಡೆ ಮಾಡಿದ ಅಟ್ಲಾಸ್ 2040ರ ವೇಳೆಗೆ ಜಾಗತಿಕವಾಗಿ ಕನಿಷ್ಠ 120 ದಶಲಕ್ಷ ಶಾಲಾ ವಯಸ್ಸಿನ ಮಕ್ಕಳು ಅಧಿಕ ತೂಕ ಮತ್ತು ಬೊಜ್ಜು ಕಾರಣದಿಂದ ಅಧಿಕ ರಕ್ತದೊತ್ತಡ ಮತ್ತು ಹೃದಯ ರಕ್ತನಾಳದ ಕಾಯಿಲೆಯಂತಹ ದೀರ್ಘಕಾಲದ ಕಾಯಿಲೆಗಳ ಆರಂಭಿಕ ಲಕ್ಷಣಗಳನ್ನು ಹೊಂದಿರುತ್ತಾರೆ! ಜಾಗತಿಕವಾಗಿ ಬಹುದೊಡ್ಡ ಸಮಸ್ಯೆ: ಬೊಜ್ಜಿನ ಮೇಲೆ ಪ್ರತ್ಯೇಕವಾಗಿ ಗಮನಹರಿಸುವ ಮತ್ತು ವಿಶ್ವ ಆರೋಗ್ಯ ಸಂಸ್ಥೆ ಸೇರಿದಂತೆ ಬೊಜ್ಜು ಕುರಿತ ಜಾಗತಿಕ ಸಂಸ್ಥೆಗಳ ಪ್ರಮುಖ ಪಾಲುದಾರರಾಗಿರುವ ಏಕೈಕ ಜಾಗತಿಕ ಸಂಸ್ಥೆಯಾದ World Obesity Federation (WOF) ಪ್ರಕಾರ 2040ರ ವೇಳೆಗೆ ಜಾಗತಿಕವಾಗಿ 507 ದಶಲಕ್ಷ ಮಕ್ಕಳು ಬೊಜ್ಜು ಅಥವಾ ಅಧಿಕ ತೂಕ ಹೊಂದಿರಲಿದ್ದಾರೆ. ಅಟ್ಲಾಸ್ ಹೇಳಿರುವ ಪ್ರಕಾರ ವಿಶ್ವಾದ್ಯಂತ 5ರಿಂದ 19ನೇ ವಯಸ್ಸಿನ ಐದು ಮಂದಿಯಲ್ಲಿ ಒಬ್ಬರಿಗಿಂತ ಹೆಚ್ಚು ಅಂದರೆ ಶೇ 20.7ರಷ್ಟು ಮಕ್ಕಳು ಬೊಜ್ಜು ಅಥವಾ ಅಧಿಕ ತೂಕದಿಂದ ಬಳಲುತ್ತಿದ್ದಾರೆ. 2010ರಲ್ಲಿ ಈ ಪ್ರಮಾಣ ಶೇ 14.6ರಷ್ಟಿತ್ತು. ಸಕ್ಕರೆ ತೆರಿಗೆಗಳನ್ನು ವಿಧಿಸುವುದು ಮತ್ತು ಮಾರುಕಟ್ಟೆ ನಿರ್ಬಂಧಗಳನ್ನು ಹೇರುವ ಮೂಲಕ ಬೊಜ್ಜಿನ ಮೇಲ್ವಿಚಾರಣೆ ಮತ್ತು ಕ್ರಮಕ್ಕೆ ಹೆಚ್ಚಿನ ಒತ್ತು ನೀಡಬೇಕೆಂದು World Obesity Federation ಹೇಳಿದೆ. ಗಣನೀಯವಾಗಿ ಏರಲಿರುವ BMI ರೋಗಗಳು: 2025ರ ಅಂಕಿ ಅಂಶಗಳ ಪ್ರಕಾರ ಭಾರತದಲ್ಲಿ 5ರಿಂದ 9 ವರ್ಷ ವಯಸ್ಸಿನ 14.921 ದಶಲಕ್ಷ ಮತ್ತು 10ರಿಂದ 19 ವರ್ಷ ವಯಸ್ಸಿನ 26.402 ದಶಲಕ್ಷಕ್ಕಿಂತಲೂ ಹೆಚ್ಚು ಮಕ್ಕಳು ಅಧಿಕ ತೂಕ ಮತ್ತು ಬೊಜ್ಜು ಹೊಂದಿದ್ದರು. ಭಾರತದಲ್ಲಿ 2025ರಿಂದ 2049ರ ನಡುವೆ ಅಧಿಕ ಬಾಡಿ ಮಾಸ್ ಇಂಡೆಕ್ಸ್ಗೆ (BMI) ಕಾರಣವಾದ ರೋಗ ಸೂಚಕಗಳನ್ನು ಹೊಂದಿರುವ 5ರಿಂದ 19 ವರ್ಷದ ವಯಸ್ಸಿನ ಮಕ್ಕಳ ಸಂಖ್ಯೆ ಗಣನೀಯವಾಗಿ ಏರುವ ಸಾಧ್ಯತೆಯಿದೆ. BMI ಕಾರಣದಿಂದ ಬರುವ ಅಧಿಕ ರಕ್ತದೊತ್ತಡವಿರುವ ಮಕ್ಕಳ ಸಂಖ್ಯೆ 2.99 ದಶಲಕ್ಷದಿಂದ 4.21 ದಶಲಕ್ಷಕ್ಕೆ ಏರಲಿದೆ. ಹೈಪರ್ಗ್ಲೈಸಿಮಿಯ ರೋಗವಿರುವ ಮಕ್ಕಳ ಸಂಖ್ಯೆ 1.39 ದಶಲಕ್ಷದಿಂದ 1.91 ದಶಲಕ್ಷಕ್ಕೆ ಏರಿಕೆಯಾಗುವ ಸಾಧ್ಯತೆಯಿದೆ. ಹೈಟ್ರೈಗ್ಲಿಸರೈಡ್fಗಳು ಇರುವವರ ಸಂಖ್ಯೆ 4.39 ದಶಲಕ್ಷದಿಂದ 6.07 ದಶಲಕ್ಷಕ್ಕೆ ಏರಿಕೆಯಾಗುವ ಸಾಧ್ಯತೆಯಿದೆ. ಚಯಾಪಚಯ ಕ್ರಿಯೆಯಲ್ಲಿನ ಸಮಸ್ಯೆಗೆ ಸಂಬಂಧಿತ ನಾನ್-ಆಲ್ಕೋಹಾಲಿಕ್ ಫ್ಯಾಟಿ ಲಿವರ್ ಡಿಸೀಸ್ (NAFLD) ಎಂದೇ ತಿಳಿದಿರುವ ಸ್ಟೀಟೋಟಿಕ್ ಲಿವರ್ ಡಿಸೀಸ್ಗೆ (MASLD) ತುತ್ತಾಗುವ ಮಕ್ಕಳ ಸಂಖ್ಯೆ 8.39 ದಶಲಕ್ಷದಿಂದ 11.88 ದಶಲಕ್ಷಕ್ಕೆ ಏರುವ ಸಾಧ್ಯತೆಯಿದೆ. ಅಪಾಯಕಾರಿ ಅಂಶಗಳನ್ನು ಪಟ್ಟಿಮಾಡಿದ ಅಟ್ಲಾಸ್: ಅಟ್ಲಾಸ್ ಭಾರತದ ಎಲ್ಲಾ ವಯೋಮಾನದವರಿಗೂ ಅನ್ವಯಿಸುವಂತೆ ತಡೆಗಟ್ಟಬಹುದಾದ ಅಪಾಯಕಾರಿ ಅಂಶಗಳನ್ನು ಪಟ್ಟಿಮಾಡಿದೆ. ವರದಿಯ ಪ್ರಕಾರ 11ರಿಂದ 17 ವರ್ಷ ಪ್ರಾಯದವರಲ್ಲಿ ಶೇ 74ರಷ್ಟು ಹದಿಹರೆಯದವರು ಶಿಫಾರಸು ಮಾಡಲಾಗಿರುವ ದೈಹಿಕ ಚಟುವಟಿಕೆಯ ಮಟ್ಟವನ್ನು ಪೂರೈಸಲು ವಿಫಲರಾಗಿದ್ದಾರೆ. ಅಲ್ಲದೆ, ಶಾಲಾ ವಯಸ್ಸಿನ ಮಕ್ಕಳಲ್ಲಿ (ಪ್ರಾಥಮಿಕ ಮತ್ತು ಮಾಧ್ಯಮಿಕ) ಶೇ 35.5ರಷ್ಟು ಮಂದಿ ಮಾತ್ರ ಶಾಲಾ ಊಟಗಳನ್ನು ಸ್ವೀಕರಿಸುತ್ತಿದ್ದಾರೆ. ಆದರೆ ಆತಂಕಕಾರಿ ವಿಷಯವೆಂದರೆ 6ರಿಂದ 10ನೇ ವಯಸ್ಸಿನ ಮಕ್ಕಳು ನಿತ್ಯವೂ ಸರಾಸರಿ 0ರಿಂದ 50 ಮಿಲಿಲೀಟರ್ ನಷ್ಟು ಸಕ್ಕರೆ ಪಾನೀಯಗಳನ್ನು ಸೇವಿಸುತ್ತಾರೆ. 1ರಿಂದ 5 ತಿಂಗಳ ಶೇ 32.6ರಷ್ಟು ಹಸುಗೂಸುಗಳು ಅಗತ್ಯವಿರುವುದಕ್ಕಿಂತ ಕಡಿಮೆ ಹಾಲುಣಿಸುವಿಕೆ ಪಡೆಯುತ್ತಿದ್ದಾರೆ. 15 ವಯಸ್ಸಿನಿಂದ 49 ವರ್ಷ ವಯಸ್ಸಿನ ಮಹಿಳೆಯರಲ್ಲಿ ಅಧಿಕ BMI ಇದೆ. ಇದೇ ವಯಸ್ಸಿನ ಶೇ 4.2ರಷ್ಟು ಮಹಿಳೆಯರಲ್ಲಿ ಟೈಪ್ 2 ಮಧುಮೇಹದ ರೋಗವಿದೆ. ಬೊಜ್ಜಿನಲ್ಲೂ ಮುಂಚೂಣಿಯಲ್ಲಿರುವ ಚೀನಾ: ಅಧಿಕ ತೂಕ ಮತ್ತು ಬೊಜ್ಜು ಇರುವ 5ರಿಂದ 19 ವರ್ಷ ವಯಸ್ಸಿನ 200 ದಶಲಕ್ಷ ಶಾಲಾ ವಯಸ್ಸಿನ ಮಕ್ಕಳನ್ನು ಹೊಂದಿರುವ ಹತ್ತು ದೇಶಗಳಲ್ಲಿ ಚೀನಾ ಅಗ್ರಸ್ಥಾನದಲ್ಲಿದೆ. ಈ ಹತ್ತು ದೇಶಗಳಲ್ಲಿ ಹೆಚ್ಚಿನ BMI ಮತ್ತು ಬೊಜ್ಜು ಇದೆ. ಚೀನಾ ಎರಡೂ ವಿಭಾಗಗಳಲ್ಲಿ ಮೊದಲ ಸ್ಥಾನದಲ್ಲಿದೆ. ಚೀನಾದ 61 ದಶಲಕ್ಷ ಮಕ್ಕಳಲ್ಲಿ ಅಧಿಕ BMI ಇದ್ದರೆ, 33 ದಶಲಕ್ಷ ಮಕ್ಕಳಲ್ಲಿ ಬೊಜ್ಜು ಇದೆ. ನಂತರದ ಸ್ಥಾನದ್ಲಲಿ ಭಾರತ ಮತ್ತು ಅಮೆರಿಕವಿದೆ. ಅಮೆರಿಕದ 27 ದಶಲಕ್ಷ ಮಕ್ಕಳಲ್ಲಿ ಅಧಿಕ BMI ಇದೆ ಮತ್ತು 13 ದಶಲಕ್ಷ ಮಕ್ಕಳಲ್ಲಿ ಬೊಜ್ಜು ಇದೆ. ಪಟ್ಟಿಯಲ್ಲಿ ನಂತರದ ಸ್ಥಾನದಲ್ಲಿರುವ ದೇಶಗಳೆಂದರೆ ಇಂಡೋನೇಷ್ಯಾ, ಪಾಕಿಸ್ತಾನ, ಬ್ರೆಝಿಲ್, ಈಜಿಪ್ಟ್, ಮೆಕ್ಸಿಕೊ, ನೈಜೀರಿಯ ಮತ್ತು ಕಾಂಗೋ. ಜಾಗತಿಕ ಗುರಿಯನ್ನು ತಪ್ಪಿಸಿಕೊಂಡ ಜಗತ್ತು: ಅಟ್ಲಾಸ್ ಪ್ರಕಾರ 2025ರ ಅಂತ್ಯದಲ್ಲಿ ಚೀನಾ, ಭಾರತ ಮತ್ತು ಅಮೆರಿಕದಲ್ಲಿ 10 ದಶಲಕ್ಕೂ ಮೀರಿ ಮಕ್ಕಳು ಬೊಜ್ಜು ಸಮಸ್ಯೆಯನ್ನು ಎದುರಿಸಿದ್ದಾರೆ. ಬಾಲ್ಯದ ಬೊಜ್ಜು ಹೆಚ್ಚಾಗುವುದನ್ನು ತಡೆಯುವ 2025ರ ಜಾಗತಿಕ ಗುರಿಯನ್ನು ಜಗತ್ತು ತಪ್ಪಿಸಿಕೊಳ್ಳಲಿದೆ ಎಂದು ವರದಿ ಎಚ್ಚರಿಸಿದೆ. 2030ಕ್ಕೆ ಗಡುವು ವಿಸ್ತರಣೆಯಾಗಿದ್ದರೂ, ಭಾರತವೂ ಸೇರಿದಂತೆ ಅನೇಕ ದೇಶಗಳು ಬೊಜ್ಜು ಸಮಸ್ಯೆಯನ್ನು ನಿವಾರಿಸುವ ಪಥದಲ್ಲಿಲ್ಲ ಎಂದು ವರದಿ ಹೇಳಿದೆ. ಬಾಲ್ಯದ ಸ್ಥೂಲಕಾಯತೆ ಮತ್ತು ಅಧಿಕ ತೂಕವು ವಯಸ್ಕರಲ್ಲಿ ಕಂಡುಬರುವ ರೀತಿಯ ಪರಿಸ್ಥಿತಿಗಳಿಗೆ ಕಾರಣವಾಗಲಿದೆ. ಅಧಿಕ ರಕ್ತದೊತ್ತಡ ಮತ್ತು ಹೃದಯ ರಕ್ತನಾಳಗಳ ಸಮಸ್ಯೆ ಕಾಡಬಹುದು. 2040ರ ವೇಳೆಗೆ 57 ದಶಲಕ್ಷಕ್ಕೂ ಹೆಚ್ಚು ಮಕ್ಕಳು ಹೃದಯರಕ್ತನಾಳದ ಕಾಯಿಲೆಯ (ಹೈಟ್ರೈಗ್ಲಿಸರೈಡ್) ಆರಂಭಿಕ ಲಕ್ಷಣಗಳನ್ನು ಹೊಂದಿರಬಹುದು ಮತ್ತು 43 ದಶಲಕ್ಷಕ್ಕೂ ಹೆಚ್ಚು ಮಕ್ಕಳು ಅಧಿಕ ರಕ್ತದೊತ್ತಡ ಲಕ್ಷಣಗಳನ್ನು ಎದುರಿಸಬಹುದು ಎಂದು ವರದಿ ಹೇಳಿದೆ. ತಡೆಗಟ್ಟಲು ಯಾವ ಕ್ರಮ ಕೈಗೊಳ್ಳಬಹುದು?: ಮಕ್ಕಳು ಮನೆ ಅಥವಾ ಶಾಲೆಯಲ್ಲಿ ಆರೋಗ್ಯಕರ ತಿನಿಸುಗಳನ್ನು ಸೇವಿಸುವ ಪರಿಸರವನ್ನು ಸೃಷ್ಟಿಸಬೇಕಿದೆ. ಸಕ್ಕರೆ-ಸಿಹಿ ಬೆರೆಸಿದ ಪಾನೀಯಗಳ ಮೇಲೆ ಅಧಿಕ ತೆರಿಗೆ ವಿಧಿಸುವುದು ಮತ್ತು ಮಕ್ಕಳಿಗೆ ಅನಾರೋಗ್ಯಕರವಾಗಿರುವ ಆಹಾರದ ಜಾಹೀರಾತಿನ ಮೇಲೆ ಮಿತಿ ಹೇರುವುದು ಪ್ರಾಥಮಿಕ ಕ್ರಮಗಳಲ್ಲಿ ಒಂದಾಗಿರುತ್ತದೆ. ಅಲ್ಲದೆ ಮಕ್ಕಳ ದೈಹಿಕ ಚಟುವಟಿಕೆಯತ್ತ ಹೆಚ್ಚಿನ ಗಮನ ಕೊಡಬೇಕು. ಮಕ್ಕಳು ಬೊಜ್ಜಿನ ಅಪಾಯದ ಅಂಶಗಳಿಗೆ ಒಡ್ಡಿಕೊಳ್ಳುವುದನ್ನು ತಡೆಯುವುದು ಪ್ರಮುಖ ಉದ್ದೇಶವಾಗಬೇಕು. ಈ ನಿಟ್ಟಿನಲ್ಲಿ ಸಮರ್ಪಕ ಕಾರ್ಯ ಆಗುತ್ತಿಲ್ಲ. ಈ ಹಿಂದೆ ಬೊಜ್ಜು ಹೆಚ್ಚಿನ ಆದಾಯ ಹೊಂದಿರುವ ದೇಶಗಳ ಮಕ್ಕಳಲ್ಲಿ ಹೆಚ್ಚು ಕಡುಬರುತ್ತಿತ್ತು. ಆದರೆ ಇದೀಗ ಕಡಿಮೆ ಮತ್ತು ಮಧ್ಯಮ ಆದಾಯದ ದೇಶಗಳಲ್ಲೂ ಅತ್ಯಂತ ವೇಗವಾಗಿ ಹರಡುತ್ತಿದೆ. ಜಾಗತಿಕವಾಗಿ ಬೊಜ್ಜು ಹೊಂದಿರುವ ವಯಸ್ಸಿನ ಮಕ್ಕಳ ಪ್ರಮಾಣ ಇದೀಗ ಕಡಿಮೆ ತೂಕ ಹೊಂದಿರುವ ಮಕ್ಕಳ ಸಂಖ್ಯೆಗಿಂತ ಹೆಚ್ಚಾಗಿದೆ.
ಸುಂದರಿ ಜತೆ ಡೇಟಿಂಗ್ ಆಸೆಗೆ ಬಿದ್ದು 20 ಲಕ್ಷ ರೂ ಕಳೆದುಕೊಂಡ ಸರ್ಕಾರಿ ಅಧಿಕಾರಿ, ಮೋಸ ಹೋಗಿದ್ದೇಗೆ
ಊಟಿ: ಭಾರತದಲ್ಲಿ ಡೇಟಿಂಗ್ ಆಪ್ಗಳ ಜನಪ್ರಿಯತೆ ಹೆಚ್ಚುತ್ತಿವೆ. ಇದನ್ನೇ ಬಂಡವಾಳ ಮಾಡಿಕೊಂಡ ಕೆಲವು ವಂಚಕರು ನಕಲಿ ಡೇಟಿಂಗ್ ಆಪ್ ಮೂಲಕ ಅಥವಾ ಅಸಲಿ ಡೇಟಿಂಗ್ ಆಪ್ಗಳಲ್ಲಿ ವಂಚಕ ಯುವತಿ/ಮಹಿಳೆಯರಿಂದ ಬಲೆ ಬೀಸಿ ಹಣವಂತರಿಂದ ಲಕ್ಷ ಲಕ್ಷ ಹಣ ಲಪಟಾಯಿಸುತ್ತಿದ್ದಾರೆ. ಮೊದಲು ಆತ್ಮೀಯವಾಗಿ, ಸುಳ್ಳು ವೈಯಕ್ತಿಕ ಮಾಹಿತಿ ಹಂಚಿಕೊಂಡು ಮರಳು ಮಾಡಿ ನಂಬಿಸಿ ಕೊನೆಗೆ ಹಣ ಎಗರಿಸಿ ನಾಪತ್ತೆ
ಮಾರ್ಚ್ ತಿಂಗಳಲ್ಲಿ 10 ದಿನ ಬ್ಯಾಂಕ್ ರಜೆ
ಮಾರ್ಚ್ ಆರ್ಥಿಕ ವರ್ಷಾಂತ್ಯದ ತಿಂಗಳಾಗಿರುವುದರಿಂದ ಹಣಕಾಸಿನ ಲೆಕ್ಕಾಚಾರ, ತೆರಿಗೆ ಪಾವತಿ ಸೇರಿದಂತೆ ತುರ್ತು ಕೆಲಸಗಳು ಇರುತ್ತವೆ. ಹೀಗಾಗಿ ರಜಾ ದಿನಗಳ ಬಗ್ಗೆ ತಿಳಿದಿರುವುದು ಮುಖ್ಯ. ದೈನಂದಿನ ಹಣಕಾಸು ವಹಿವಾಟಿಗೆ ಬ್ಯಾಂಕ್ ಗಳನ್ನು ಅವಲಂಬಿಸಿರುವ ಗ್ರಾಹಕರು, ರೈತರು ಹಾಗೂ ಉದ್ಯಮಿಗಳು ಗಮನಿಸಬೇಕಾಗಿರುವುದೇನೆಂದರೆ ಈ ತಿಂಗಳಲ್ಲಿ ಸಾಲು ಸಾಲು ಬ್ಯಾಂಕ್ ರಜಾಗಳಿವೆ. ರಜಾ ದಿನಗಳನ್ನು ಗಮನಿಸಿ ಬ್ಯಾಂಕ್ ಕೆಲಸಗಳನ್ನು ಯೋಜಿಸಿಕೊಳ್ಳುವುದು ಉತ್ತಮ. ಏಕೆಂದರೆ ಈ ಬಾರಿ ರವಿವಾರ ಮತ್ತು ಶನಿವಾರದ ಸಾಮಾನ್ಯ ರಜೆಗಳ ಜೊತೆಗೆ ಯುಗಾದಿ, ಈದ್ ಸೇರಿದಂತೆ ಪ್ರಮುಖ ಹಬ್ಬಗಳ ರಜೆಗಳಿವೆ. ಕೆನರಾ ಬ್ಯಾಂಕ್, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಹಾಗೂ ಇತರ ಬ್ಯಾಂಕ್ ಗಳು ಬಿಡುಗಡೆ ಮಾಡಿರುವ 2026ರ ಅಧಿಕೃತ ರಜಾ ಪಟ್ಟಿ ಮತ್ತು ರಾಜ್ಯ ಸರ್ಕಾರದ ಅಧಿಕೃತ ಕ್ಯಾಲೆಂಡರ್ ಪ್ರಕಾರ ಮಾರ್ಚ್ ತಿಂಗಳಲ್ಲಿ ಕರ್ನಾಟಕದಲ್ಲಿ ಒಟ್ಟು 10 ದಿನಗಳ ಕಾಲ ಬ್ಯಾಂಕ್ ಗಳು ಕಾರ್ಯ ನಿರ್ವಹಿಸುವುದಿಲ್ಲ. ಮಾರ್ಚ್ ಆರ್ಥಿಕ ವರ್ಷಾಂತ್ಯದ ತಿಂಗಳಾಗಿರುವುದರಿಂದ ಹಣಕಾಸಿನ ಲೆಕ್ಕಾಚಾರ, ತೆರಿಗೆ ಪಾವತಿ ಸೇರಿದಂತೆ ತುರ್ತು ಕೆಲಸಗಳು ಇರುತ್ತವೆ. ಹೀಗಾಗಿ ರಜಾ ದಿನಗಳ ಬಗ್ಗೆ ತಿಳಿದಿರುವುದು ಮುಖ್ಯ. ರಜಾದಿನಗಳು ಹೀಗಿವೆ: ಮಾರ್ಚ್ 1 ರವಿವಾರ (ವಾರದ ರಜೆ) ಮಾರ್ಚ್ 8 ರವಿವಾರ (ವಾರದ ರಜೆ) ಮಾರ್ಚ್ 14 ಎರಡನೇ ಶನಿವಾರ (ಬ್ಯಾಂಕ್ ರಜೆ) ಮಾರ್ಚ್ 15 ರವಿವಾರ (ವಾರದ ರಜೆ) ಮಾರ್ಚ್ 19 ಯುಗಾದಿ ಹಬ್ಬದ ರಜೆ ಮಾರ್ಚ್ 21 ಈದ್ ಉಲ್ ಫಿತ್ರ್ ರಜೆ ಮಾರ್ಚ್ 22 ರವಿವಾರ (ವಾರದ ರಜೆ) ಮಾರ್ಚ್ 28 ನಾಲ್ಕನೇ ಶನಿವಾರ (ಬ್ಯಾಂಕ್ ರಜೆ) ಮಾರ್ಚ್ 29 ರವಿವಾರ (ವಾರದ ರಜೆ) ಮಾರ್ಚ್ 31 ಮಹಾವೀರ ಜಯಂತಿ ರಜೆ ಎಪ್ರಿಲ್ ತಿಂಗಳಲ್ಲೂ ಗುಡ್ಫ್ರೈಡ್ (ಎಪ್ರಿಲ್ 03), ಬಿಆರ್ ಅಂಬೇಡ್ಕರ್ ಜಯಂತಿ (ಎಪ್ರಿಲ್ 14) ಹಾಗೂ ಬಸವ ಜಯಂತಿ (ಎಪ್ರಿಲ್ 20) ಪ್ರಯಕ್ತ ಬ್ಯಾಂಕ್ಗಳಿಗೆ ರಜೆ ಇರಲಿವೆ. ಜೊತೆಗೆ ಆರ್ಥಿಕ ವರ್ಷದ ಆರಂಭದ ದಿನವಾದ ಎಪ್ರಿಲ್ 1ರಂದು ವಾರ್ಷಿಕ ಲೆಕ್ಕಾಚಾರದ ಕಾರಣಕ್ಕೆ ಗ್ರಾಹಕರಿಗೆ ಬ್ಯಾಂಕ್ ಸೇವೆ ಇರುವುದಿಲ್ಲ. ಬ್ಯಾಂಕ್ಗಳಿಗೆ ರಜೆಗಳಿದ್ದರೂ ಬ್ಯಾಂಕ್ ಶಾಖೆಗಳು ಮಾತ್ರ ಮುಚ್ಚಿರುತ್ತವೆಯೇ ವಿನಾ ಡಿಜಿಟಲ್ ಸೇವೆಗಳಲ್ಲ. ಎಟಿಎಂ, ಇಂಟರ್ನೆಟ್ ಬ್ಯಾಂಕಿಂಗ್, ಮೊಬೈಲ್ ಬ್ಯಾಂಕಿಂಗ್ ಹಾಗೂ ಯುಪಿಐ ಸೇವೆಗಳು ಎಂದಿನಂತೆ 24X7 ಕಾರ್ಯನಿರ್ವಹಿಸಲಿವೆ. ತುರ್ತು ಹಣ ವರ್ಗಾವಣೆಗೆ ಡಿಜಿಟಲ್ ವೇದಿಕೆಗಳನ್ನು ಬಳಸಿಕೊಳ್ಳಬಹುದು. ಆದರೆ ಡಿಡಿ, ಚೆಕ್ ಕ್ಲಿಯರೆನ್ಸ್, ಸಾಲದ ಪ್ರಕ್ರಿಯೆ ಮತ್ತು ಕೆವೈಸಿ ಅಪ್ಡೇಟ್ನಂತಹ ಕೆಲಸಗಳಿದ್ದರೆ ರಜಾ ದಿನಗಳನ್ನು ಹೊರತುಪಡಿಸಿ ಬ್ಯಾಂಕ್ಗೆ ಭೇಟಿ ನೀಡಬೇಕಾಗುತ್ತದೆ.
ರಾಜ್ಯದ ವಿವಿಧ ಕ್ರೀಡಾ ವಸತಿ ನಿಲಯಗಳಿಗೆ ತಾತ್ಕಾಲಿಕ ತರಬೇತುದಾರರ ನೇಮಕಾತಿಗೆ ಅರ್ಜಿ ಆಹ್ವಾನ
ಈ ನೇಮಕಾತಿಯು ಸಂಪೂರ್ಣವಾಗಿ ಗುತ್ತಿಗೆ ಆಧಾರಿತ ಮತ್ತು ತಾತ್ಕಾಲಿಕ ಸೇವೆಯಾಗಿದೆ. ಆಯ್ಕೆಯಾದ ಅಭ್ಯರ್ಥಿಗಳು ನೇಮಕಾತಿ ಆದೇಶ ಪಡೆದ ದಿನಾಂಕದಿಂದ 30-11-2026ರವರೆಗೆ ಮಾತ್ರ ಸೇವೆ ಸಲ್ಲಿಸಲು ಅವಕಾಶವಿರುತ್ತದೆ. ರಾಜ್ಯದ ವಿವಿಧ ಕ್ರೀಡಾ ವಸತಿ ನಿಲಯಗಳಲ್ಲಿ ಖಾಲಿ ಇರುವ ‘ತರಬೇತುದಾರರ’ ಹುದ್ದೆಗಳನ್ನು ಭರ್ತಿ ಮಾಡಲು ಇಲಾಖೆಯು ಅಧಿಕೃತ ಪತ್ರಿಕಾ ಪ್ರಕಟಣೆ ಹೊರಡಿಸಿದೆ. ಗುತ್ತಿಗೆ ಆಧಾರದ ಮೇಲೆ ಮಾಸಿಕ ಸಂಚಿತ ವೇತನದಡಿ ನೇಮಕಾತಿ ನಡೆಯಲಿದ್ದು, ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಭಾರತದ ಅರ್ಹ ನಾಗರಿಕರು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಆಸಕ್ತರು ಅಧಿಕೃತ ಸೂಚನೆ ಮತ್ತು ಅರ್ಜಿ ಫಾರಂ ಅನ್ನು ಈ ಮುಂದಿನ ಲಿಂಕ್ನಲ್ಲಿ ಪಡೆಯಬಹುದು: https://dyes.karnataka.gov.in/kn ಹುದ್ದೆಗಳ ವಿವರ: ಒಟ್ಟು 6 ಕ್ರೀಡಾ ವಿಭಾಗಗಳಿಗೆ ತರಬೇತುದಾರರನ್ನು ನೇಮಿಸಿಕೊಳ್ಳಲಾಗುತ್ತಿದ್ದು, ಅದರ ಸಂಪೂರ್ಣ ವಿವರ ಹೀಗಿದೆ: ಅಥ್ಲೆಟಿಕ್ಸ್: ಹಾವೇರಿ/ಬೀದರ್/ ರಾಮನಗರ ಕ್ರೀಡಾ ವಸತಿ ನಿಲಯ – 1 ಹುದ್ದೆ ಹಾಕಿ: ಕೊಡಗು/ರಾಯಚೂರು/ ಬಾಗಲಕೋಟೆ ಕ್ರೀಡಾ ವಸತಿ ನಿಲಯ - 1 ಹುದ್ದೆ ಜಿಮ್ನಾಸ್ಟಿಕ್ಸ್- ಮೈಸೂರು ಕ್ರೀಡಾ ವಸತಿ ನಿಲಯ - 1 ಹುದ್ದೆ ಸೈಕ್ಲಿಂಗ್: ಬೆಳಗಾವಿ ಕ್ರೀಡಾ ವಸತಿ ನಿಲಯ- 1 ಹುದ್ದೆ ಕುಸ್ತಿ: ಗದಗ ಕ್ರೀಡಾ ವಸತಿ ನಿಲಯ - 1 ಹುದ್ದೆ ಫುಟ್ಬಾಲ್: ರಾಯಚೂರು ಕ್ರೀಡಾ ವಸತಿ ನಿಲಯ - 1 ಹುದ್ದೆ ಉದ್ಯೋಗ ಹೇಗಿರಲಿದೆ? ಈ ನೇಮಕಾತಿಯು ಖಾಯಂ ಹುದ್ದೆಯಲ್ಲ. ಸಂಪೂರ್ಣವಾಗಿ ಗುತ್ತಿಗೆ ಆಧಾರಿತ ಮತ್ತು ತಾತ್ಕಾಲಿಕ ಸೇವೆಯಾಗಿದೆ. ಆಯ್ಕೆಯಾದ ಅಭ್ಯರ್ಥಿಗಳು ನೇಮಕಾತಿ ಆದೇಶ ಪಡೆದ ದಿನಾಂಕದಿಂದ 30-11-2026ರವರೆಗೆ ಮಾತ್ರ ಸೇವೆ ಸಲ್ಲಿಸಲು ಅವಕಾಶವಿರುತ್ತದೆ. ಅರ್ಜಿ ಸಲ್ಲಿಕೆ ಎಲ್ಲಿ ಮತ್ತು ಹೇಗೆ? ಕೊನೆಯ ದಿನಾಂಕ: ಅರ್ಜಿ ಮತ್ತು ಅಗತ್ಯ ಕ್ರೀಡಾ/ಶೈಕ್ಷಣಿಕ ದಾಖಲೆಗಳನ್ನು ಸಲ್ಲಿಸಲು 2026 ಮಾರ್ಚ್ 16ರ ಸಂಜೆ 4 ಗಂಟೆ ಅಂತಿಮ ಗಡುವಾಗಿರುತ್ತದೆ. ಆಸಕ್ತಿ ಅಭ್ಯರ್ಥಿಗಳು ತಮ್ಮ ಭರ್ತಿ ಮಾಡಿದ ಅರ್ಜಿಗಳನ್ನು ಮತ್ತು ಪೂರಕ ದಾಖಲೆಗಳನ್ನು “ಮಹಾ ನಿರ್ದೇಶಕರು, ಕರ್ನಾಟಕ ಕ್ರೀಡಾ ಪ್ರಾಧಿಕಾರ, ರಾಜ್ಯ ಯುವ ಕೇಂದ್ರ, ನೃಪತುಂಗ ರಸ್ತೆ, ಬೆಂಗಳೂರು- 560001 ಇವರಿಗೆ ಖುದ್ದಾಗಿ ಅಥವಾ ಅಂಚೆ ಮೂಲಕ ಸಲ್ಲಿಸಬೇಕು. ಅರ್ಜಿ ಫಾರಂ ಇಲಾಖೆಯ ಅಧಿಕೃತ ವೆಬ್ಸೈಟ್ https://dyes.karnataka.gov.in/kn ನಲ್ಲಿ ಲಭ್ಯವಿದೆ. ಹೆಚ್ಚಿನ ಮಾಹಿತಿಗಾಗಿ ಬೆಂಗಳೂರಿನ ನೃಪತುಂಗ ರಸ್ತೆಯಲ್ಲಿರುವ ಕಚೇರಿಯನ್ನು ಖುದ್ದಾಗಿ ಸಂಪರ್ಕಿಸಬಹುದು.
ಶ್ರೀಲಂಕಾ ಕರಾವಳಿಯಲ್ಲಿ ಇರಾನಿನ ಹಡಗಿನ ಮೇಲೆ ಸಬ್ ಮರೀನ್ ದಾಳಿ ಶಂಕೆ; 101 ಮಂದಿ ನಾಪತ್ತೆ, 78 ಮಂದಿಗೆ ಗಾಯ
ಕೊಲಂಬೊ: ಶ್ರೀಲಂಕಾ ಕರಾವಳಿಯ ಸಮೀಪ ಇರಾನಿನ ಹಡಗಿನ ಮೇಲೆ ನಡೆದ ದಾಳಿಯಲ್ಲಿ ಹಡಗು ಮುಳುಗಿದ ಪರಿಣಾಮ ಕನಿಷ್ಠ 101 ಮಂದಿ ಕಾಣೆಯಾಗಿರುವ ಶಂಕೆ ವ್ಯಕ್ತವಾಗಿದೆ. ಈ ಘಟನೆಯಲ್ಲಿ ಒಬ್ಬರು ಮೃತಪಟ್ಟಿದ್ದು, 78 ಮಂದಿ ಗಾಯಗೊಂಡಿದ್ದಾರೆ ಎಂದು ಶ್ರೀಲಂಕಾ ನೌಕಾಪಡೆ ಮತ್ತು ರಕ್ಷಣಾ ಸಚಿವಾಲಯದ ಮೂಲಗಳು ತಿಳಿಸಿವೆ. ಹಡಗಿನ ಮೇಲೆ ಸಬ್ ಮರೀನ್ ದಾಳಿಯ ನಡೆಸಿರುವ ಶಂಕೆ ವ್ಯಕ್ತವಾಗಿದೆ. ಬುಧವಾರ ರಾಯಿಟರ್ಸ್ ಸುದ್ದಿ ಸಂಸ್ಥೆಗೆ ಮಾತನಾಡಿದ ಮೂಲಗಳ ಪ್ರಕಾರ, ಹಡಗು ಮುಳುಗಿದ್ದು, ದಾಳಿಯನ್ನು ಯಾರು ನಡೆಸಿದ್ದಾರೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಬೆಳಿಗ್ಗೆ 6 ಗಂಟೆಗೆ ವಿಪತ್ತು ಕರೆ ಶ್ರೀಲಂಕಾದ ವಿದೇಶಾಂಗ ಸಚಿವೆ ವಿಜಿತಾ ಹೆರಾತ್ ಸಂಸತ್ತಿನಲ್ಲಿ ಮಾತನಾಡುತ್ತಾ, ಹಡಗಿನಿಂದ ಬೆಳಿಗ್ಗೆ ಸುಮಾರು 6 ಗಂಟೆಗೆ ಬಂದ ವಿಪತ್ತು ಕರೆಗೆ ಸ್ಪಂದಿಸಿ ನೌಕಾಪಡೆ ತಕ್ಷಣ ರಕ್ಷಣಾ ಕಾರ್ಯಾಚರಣೆ ಆರಂಭಿಸಿದೆ ಎಂದು ತಿಳಿಸಿದ್ದಾರೆ. “ಈ ಹಂತದಲ್ಲಿ ನಮಗೆ ಲಭ್ಯವಾಗಿರುವ ಮಾಹಿತಿಯ ಪ್ರಕಾರ 79 ಮಂದಿಯನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರಲ್ಲಿ ಒಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಇನ್ನೂ 101 ಮಂದಿ ಕಾಣೆಯಾಗಿದ್ದಾರೆ ಮತ್ತು ಹಡಗು ಮುಳುಗಿದೆ,” ಎಂದು ಶ್ರೀಲಂಕಾ ನೌಕಾಪಡೆಯ ಮೂಲವೊಂದು ತಿಳಿಸಿದೆ. ಸಂಸತ್ತಿನಲ್ಲಿ ಮಾತನಾಡಿದ ಹೆರಾತ್, ಕಾರ್ಯಾಚರಣೆಯ ಹೆಚ್ಚಿನ ವಿವರಗಳನ್ನು ನೀಡದೆ, ಸೇನೆಯು ಹಡಗಿನಲ್ಲಿದ್ದ ಕನಿಷ್ಠ 30 ಮಂದಿಯನ್ನು ರಕ್ಷಿಸಿದೆ ಎಂದು ತಿಳಿಸಿದ್ದಾರೆ. “ಈ ಘಟನೆಗೆ ಸಂಬಂಧಿಸಿದಂತೆ ಶ್ರೀಲಂಕಾ ಸರ್ಕಾರ ಸೂಕ್ತ ಕ್ರಮಗಳನ್ನು ಕೈಗೊಳ್ಳಲಿದೆ,” ಎಂದು ಅವರು ಹೇಳಿದರು. ಸ್ಥಳೀಯ ಮಾಧ್ಯಮಗಳ ವರದಿ ಪ್ರಕಾರ, ದಕ್ಷಿಣ ಶ್ರೀಲಂಕಾದ ಗ್ಯಾಲೆ ಕರಾವಳಿಯ ಸಮೀಪ ಹಡಗು ಸಂಕಷ್ಟದ ಸೂಚನೆ ನೀಡಿತ್ತು. ಗಾಯಗೊಂಡವರನ್ನು ಗ್ಯಾಲೆ ನಗರದ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿಗಳು ತಿಳಿಸಿವೆ.
Uttar Pradesh | ಹುಟ್ಟುಹಬ್ಬದ ಔತಣಕೂಟದಲ್ಲಿ ಆಕಸ್ಮಿಕವಾಗಿ ಗುಂಡೇಟು: 13 ವರ್ಷದ ಬಾಲಕ ಮೃತ್ಯು
ಲಕ್ನೊ: ಹುಟ್ಟುಹಬ್ಬದ ಔತಣಕೂಟದಲ್ಲಿ 13 ವರ್ಷದ ಬಾಲಕನೊಬ್ಬ ಆಕಸ್ಮಿಕವಾಗಿ ಗುಂಡೇಟಿಗೆ ಗುರಿಯಾಗಿ ಮೃತಪಟ್ಟಿರುವ ಘಟನೆ ಸೋಮವಾರ ಸಂಜೆ ಉತ್ತರ ಪ್ರದೇಶದ ಲಕ್ನೊದ ಕೃಷ್ಣನಗರ್ ನಲ್ಲಿ ನಡೆದಿದೆ. ಈ ಔತಣಕೂಟದಲ್ಲಿ ಪಾಲ್ಗೊಂಡಿದ್ದ ಮೂವರು ಅಪ್ರಾಪ್ತ ಬಾಲಕರನ್ನು ಪೊಲೀಸರು ವಶಕ್ಕೆ ಪಡೆದು, ಘಟನಾ ಸನ್ನಿವೇಶಗಳ ಕುರಿತು ವಿಚಾರಣೆ ಕೈಗೊಂಡಿದ್ದಾರೆ. ಸೋಮವಾರ ಸಂಜೆ ಸುಮಾರು 7 ಗಂಟೆಗೆ ಕೃಷ್ಣನಗರ್ ನಲ್ಲಿರುವ ರಿಯಲ್ ಎಸ್ಟೇಟ್ ಏಜೆಂಟ್ ಒಬ್ಬರ ಮನೆಯಲ್ಲಿ ಈ ಘಟನೆ ನಡೆದಿದೆ ಎಂದು ಪೊಲೀಸ್ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಈ ಕುರಿತು ಪ್ರತಿಕ್ರಿಯಿಸಿದ ಕೃಷ್ಣನಗರ್ ಸಹಾಯಕ ಪೊಲೀಸ್ ಆಯುಕ್ತ ರಜನೀಶ್ ವರ್ಮಾ, “ಏಳನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಸರೋಜಿನಿನಗರ ಪೊಲೀಸ್ ಠಾಣೆ ವ್ಯಾಪ್ತಿಯ ನಿವಾಸಿಯಾದ ಮೃತ ಬಾಲಕನು ತನ್ನ ತರಗತಿಯಲ್ಲೇ ಓದುತ್ತಿದ್ದ ಸ್ನೇಹಿತನ ಹುಟ್ಟುಹಬ್ಬದ ಸಂಭ್ರಮಾಚರಣೆಯಲ್ಲಿ ಪಾಲ್ಗೊಳ್ಳಲು ತೆರಳಿದ್ದ” ಎಂದು ತಿಳಿಸಿದ್ದಾರೆ. ಈ ಸಂಬಂಧ ಮೃತ ಬಾಲಕನ ಪೋಷಕರು ಪೊಲೀಸರಿಗೆ ದೂರು ನೀಡಿದ್ದು, ಉದ್ದೇಶಪೂರ್ವಕವಾಗಿ ಗುಂಡು ಹಾರಿಸಲಾಗಿದೆ. ಈ ಸಂಬಂಧ ಬಾಲಕ ಹಾಗೂ ಆತನ ತಂದೆಯ ವಿರುದ್ಧ ಹತ್ಯೆ ಪ್ರಕರಣ ದಾಖಲಿಸಿ ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ ಎಂದು ಕೃಷ್ಣನಗರ್ ಉಪ ಪೊಲೀಸ್ ಆಯುಕ್ತ ನಿಪುಣ್ ಅಗರ್ವಾಲ್ ತಿಳಿಸಿದ್ದಾರೆ. ಆದರೆ, ಇದು ಆಕಸ್ಮಿಕ ಗುಂಡೇಟಿನ ಘಟನೆ ಎಂದು ತೋರುತ್ತಿದೆ ಎಂದು ಅವರು ಹೇಳಿದ್ದಾರೆ. ಔತಣಕೂಟದ ವೇಳೆ ಮನೆಯಲ್ಲಿರಿಸಲಾಗಿದ್ದ ರಿವಾಲ್ವರ್ ಅನ್ನು ಮಕ್ಕಳು ಕುತೂಹಲದಿಂದ ಎತ್ತಿಕೊಂಡು ನೋಡಲು ಆರಂಭಿಸಿದ್ದಾರೆ. ಈ ವೇಳೆ ಆಯುಧವು ಆಕಸ್ಮಿಕವಾಗಿ ಸಿಡಿದು, ಈ ಪೈಕಿ ಓರ್ವ ಬಾಲಕ ಗುಂಡೇಟಿನಿಂದ ಗಾಯಗೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಆದರೆ, ಪೊಲೀಸರ ಹೇಳಿಕೆಯನ್ನು ಅಲ್ಲಗಳೆದಿರುವ ಮೃತ ಬಾಲಕನ ಪೋಷಕರು, ಮೊದಲಿಗೆ ನನ್ನ ಮಗನಿಗೆ ಅಪಘಾತವಾಗಿದೆ ಎಂದು ತಿಳಿಸಲಾಗಿತ್ತು. ಇದೀಗ ಘಟನೆಯನ್ನು ಮುಚ್ಚಿಹಾಕುವ ಪ್ರಯತ್ನ ನಡೆಯುತ್ತಿದೆ ಎಂದು ಆರೋಪಿಸಿದ್ದಾರೆ.
ಕಲಬುರಗಿ | ಮಾ.6ರಂದು ʼದೇವನಾಂಪ್ರಿಯ ಪ್ರಶಸ್ತಿʼ ಪ್ರದಾನ ಸಮಾರಂಭ
ಕಲಬುರಗಿ: ವಿಶ್ವಕರ್ಮ ಶಿಕ್ಷಣ ಹಾಗೂ ಅಭಿವೃದ್ಧಿ ಸಂಸ್ಥೆಯ ವತಿಯಿಂದ ನಡೆಸಲ್ಪಡುವ ಗಾಯತ್ರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಇನಾಮದಾರ್ ಪ್ರೌಢಶಾಲೆಯ ಸಂಯುಕ್ತ ಆಶ್ರಯದಲ್ಲಿ “ದೇವನಾಂಪ್ರಿಯ ಪ್ರಶಸ್ತಿ” ಪ್ರದಾನ ಸಮಾರಂಭವು ಮಾ.6 ರಂದು ಸಂಜೆ 6.30ಕ್ಕೆ ನಂದೂರು ಗ್ರಾಮದ ಶಾಲಾ ಆವರಣದಲ್ಲಿ ನಡೆಯಲಿದೆ. ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಯಾದಗಿರಿ ಏಕದಂಡಗಿ ಮಠದ ಶ್ರೀ ಸುರೇಂದ್ರನಾಥ ಮಹಾಸ್ವಾಮಿಗಳು ವಹಿಸಲಿದ್ದಾರೆ. ಸಮಾಜಸೇವಕಿ ಜಯಶ್ರೀ ಬಸವರಾಜ ಮತ್ತಿಮಡು ಅವರು ಪ್ರಶಸ್ತಿಗಳನ್ನು ಪ್ರದಾನ ಮಾಡಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮೋನಪ್ಪ ಇನಾಮದಾರ್ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಸೂರಬಾಯಿ ಶಾಂತಪ್ಪ ಪೂಜಾರಿ, ಡಾ.ವಾಸುದೇವ ಸೇಡಂ, ಶಾಂತಕುಮಾರ್ ಪಾಟೀಲ, ಬಸವರಾಜ ಹಂಪಿ, ಸುನಿಲಕುಮಾರ, ವೀರೇಂದ್ರ ಇನಾಮದಾರ್ ಹಾಗೂ ಡಾ. ಶರಣಬಸಪ್ಪ ವಡ್ಡನಕೇರಿ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿರುವರು. 2026ನೇ ಸಾಲಿನ ದೇವನಾಂಪ್ರಿಯ ಪ್ರಶಸ್ತಿಗೆ ವಿವಿಧ ಸಾಹಿತ್ಯ ಕೃತಿಗಳು ಆಯ್ಕೆಯಾಗಿವೆ. ಶ್ರೀ ಮಲ್ಲಿಕಾರ್ಜುನ ಪಾಲಾಮೂರ ಅವರ “ಶರಣರು ಕಟ್ಟ ಬಯಸಿದ ಸಮಾಜ ಬಸವರಾಜ ಐನೋಳಿ ಅವರ “ಇಂಜಿನಿಯರುಗಳು ಶಿಕ್ಷಕರಾದರೆ”, ರೂಪದೇವಿ ಬಂಗಾರ ಅವರ “ಬಂಗಾರದ ಬಿಂದುಗಳು”, ಜಾನಿಮಿಯ ವಿ. ಮೌಜಾನ್ ಅವರ “ಆತ್ಮಾನಂದ ವಚನಾಮೃತ”, ದುರ್ಗಪ್ಪ ಪೂಜಾರ ಅವರ “ಚಿನ್ನ ಬಿತ್ತೇವು ನಾವು ಚಂದಿರನ ಅಂಗಳಕ್ಕೆ”, ಎಸ್.ಎಸ್. ಮಾರನಾಳ ಅವರ “ಶಿವಪ್ಪ ಹೆಬ್ಬಾಳ ಕೊಡೇಕಲ್”, ಪ್ರಮೋದ್ ಕರಣಂ ಅವರ “ಹುಟ್ಟು ಸಾವುಗಳ ನಡುವೆ” ಹಾಗೂ ಸಂಗಮನಾಥ ಪಿ. ಸಜ್ಜನ್ ಅವರ “ಜೇನುಗೂಡು” ಕೃತಿಗಳು ಪ್ರಶಸ್ತಿಗೆ ಭಾಜನವಾಗಿವೆ. ಇದೇ ವೇಳೆ ಶಿಕ್ಷಣ ಕ್ಷೇತ್ರದ ಸಾಧನೆಗಾಗಿ ಡಾ.ನೀಲಮ್ಮ ಎನ್. ಪಾಟೀಲ ಹಾಗೂ ಸಮಾಜಸೇವೆಗೆ ಮೋನಪ್ಪ ಬಡಿಗೇರ್ ಅವರನ್ನು ವಿಶೇಷವಾಗಿ ಸನ್ಮಾನಿಸಲಾಗುವುದು. ಶುಕ್ರವಾರ ಸಂಜೆ ನಡೆಯುವ ಈ ಸಮಾರಂಭಕ್ಕೆ ಸಾಹಿತ್ಯಾಸಕ್ತರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಸಂಸ್ಥೆಯ ಅಧ್ಯಕ್ಷ ವೀರೇಂದ್ರ ಇನಾಮದಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಚಿಂಚೋಳಿ | ವಕೀಲರ ಹಿತರಕ್ಷಣೆಗಾಗಿ ಶ್ರಮಿಸುವೆ : ಎಂ.ಎ. ಮುಲ್ಲಾ
ಚಿಂಚೋಳಿ : ರಾಜ್ಯದ ನ್ಯಾಯಾಂಗ ವ್ಯವಸ್ಥೆಯ ಪ್ರಮುಖ ಅಂಗವಾಗಿರುವ ವಕೀಲರ ಸಮೂಹವು ಸರ್ಕಾರದ ಸೌಲಭ್ಯಗಳಿಂದ ವಂಚಿತವಾಗಿದೆ. ಈ ಸ್ಥಿತಿಯನ್ನು ಬದಲಿಸಿ, ವಕೀಲರ ಹಿತರಕ್ಷಣೆಗಾಗಿ ಪ್ರಾಮಾಣಿಕವಾಗಿ ಶ್ರಮಿಸುವುದಾಗಿ ರಾಜ್ಯ ವಕೀಲರ ಪರಿಷತ್ ಚುನಾವಣೆಯ ಅಭ್ಯರ್ಥಿ ಮಹಮ್ಮದ್ ಸಾ ಎ. ಮುಲ್ಲಾ (ಎಂ.ಎ. ಮುಲ್ಲಾ) ಭರವಸೆ ನೀಡಿದರು. ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ವಕೀಲ ಮತದಾರರನ್ನು ಭೇಟಿ ಮಾಡಿ ಮತಯಾಚಿಸಿದ ಅವರು, ತಮ್ಮ ಪ್ರಮುಖ ಗುರಿಗಳನ್ನು ಹಂಚಿಕೊಂಡರು. ವಕೀಲರಿಗೆ ಯಾವುದೇ ಅನಾಹುತ ಸಂಭವಿಸಿದಲ್ಲಿ ಅವರ ಕುಟುಂಬಕ್ಕೆ ಆಸರೆಯಾಗಲು ಕನಿಷ್ಠ 10 ಲಕ್ಷ ರೂ. ವಿಮೆ ಹಾಗೂ 10 ಲಕ್ಷ ರೂ. ಪರಿಹಾರ ನೀಡುವ ಯೋಜನೆ ರೂಪಿಸಲಾಗುವುದು ಎಂದು ಹೇಳಿದರು. ಕರ್ನಾಟಕ ರಾಜ್ಯ ವಕೀಲರ ಪರಿಷತ್ತುಗೆ ಪ್ರತಿವರ್ಷ ಸರ್ಕಾರದಿಂದ 20 ಕೋಟಿ ರೂ. ಅನುದಾನ ಕೊಡಿಸಲು ಒತ್ತಾಯಿಸಲಾಗುವುದು. ಬೆಂಗಳೂರು ಭಾಗದ ವಕೀಲರಿಗೆ ಹೋಲಿಸಿದರೆ ತಾಲೂಕು ಮಟ್ಟದ ವಕೀಲರ ಪರಿಸ್ಥಿತಿ ಗಂಭೀರವಾಗಿದೆ. ಅವರಿಗೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಆದ್ಯತೆ ನೀಡಲಾಗುವುದು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಹಿರಿಯ ವಕೀಲರಾದ ಶಿವಶರಣಪ್ಪ ಜಾಪಟ್ಟಿ, ಶ್ರೀಮಂತ ಕಟ್ಟಿಮನಿ, ಚಂದ್ರಶೇಖರ್ ಮಾಲಸಾ, ಸೂರ್ಯಕಾಂತ್ ಚಿಂಚೋಳಿಕರ್, ಮಲ್ಲಿಕಾರ್ಜುನ ಕೋಟಪಲ್ಲಿ, ಸೂರ್ಯಕಾಂತ್ ಗಾರಂಪಳ್ಳಿ ಸೇರಿದಂತೆ ಅನೇಕ ಪ್ರಮುಖ ವಕೀಲರು ಉಪಸ್ಥಿತರಿದ್ದರು.
ಮೌಂಟ್ ಕಾರ್ಮೆಲ್ ಕಾಲೇಜಿನ MCCIIE ವತಿಯಿಂದ ಆಯೋಜಿಸಲಾದ 'ಇ-ವೀಕ್ ಟ್ರಾನ್ಸೆಂಡೋ 2026' ನಾಲ್ಕು ದಿನಗಳ ನವೀನತೆ ಮತ್ತು ಉದ್ಯಮಶೀಲತೆಯ ಹಬ್ಬವಾಗಿತ್ತು. ಈ ಕಾರ್ಯಕ್ರಮದ ಮೂಲಕ ವಿದ್ಯಾರ್ಥಿಗಳಿಗೆ ನೈಜ ವ್ಯವಹಾರ ಅನುಭವ, ಉದ್ಯಮಗಳ ಕಾರ್ಯನಿರ್ವಹಣೆ ಬಗ್ಗೆ ಅರಿವು ಮೂಡಿದೆ.
ಮನುಷ್ಯ ಸತ್ತಾಗ ಭೂಮಿಯೊಳಗೆ ಹೂತು ಬಿಡುತ್ತೇವೆ, ಆದರೆ ಅವರು ಮಾಡಿರುವ ಕೆಲಸಗಳು ಭೂಮಿಯ ಮೇಲೆ ಬದುಕಿರುತ್ತವೆ. ಇಂತಹ ನೀರಾವರಿ ಯೋಜನೆಗಳು ಸಾಕ್ಷಿಯಾಗಿ ಉಳಿದಿವೆ. ನಿಮಗೆ ಉತ್ತಮ ಜೀವನ ನೀಡಬೇಕು, ರೈತರನ್ನು ಕಾಪಾಡಬೇಕು. ತಾವರೆಕೆರೆ, ಕುಣಿಗಲ್ ನಿಂದ ಇಲ್ಲಿಯವರೆಗೂ ಅತ್ಯುತ್ತಮ ರಸ್ತೆಗಳು ನಿರ್ಮಾಣ ಮಾಡಲಾಗಿದೆ. ಮನುಷ್ಯನ ಹುಟ್ಟು ಆಕಸ್ಮಿಕ, ಸಾವು ಅನಿವಾರ್ಯ, ಜನನ ಉಚಿತ, ಮರಣ ಖಚಿತ. ಈ ಹುಟ್ಟು ಸಾವಿನ ಮಧ್ಯೆ ನಾವು ಏನು ಮಾಡುತ್ತೇವೆ ಎಂಬುದು ಮುಖ್ಯ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದರು.
ಧೋನಿಯಿಂದ ಸಂಚಾರ ನಿಯಮೋಲ್ಲಂಘನೆ: ರಾಂಚಿಯಲ್ಲಿ ಅತಿವೇಗವಾಗಿ ವಾಹನ ಚಲಾಯಿಸಿದ ಕ್ಯಾಪ್ಟನ್ ಕೂಲ್ ಗೆ ದಂಡ
ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರು ಕೆಮ್ಮಿದರೂ ಭಾರತದಲ್ಲಿ ಸುದ್ದಿಯಾಗುತ್ತದೆ. ಹಾಗಿರುವಾಗ ಟ್ರಾಫಿಕ್ ನಿಯಮೋಲ್ಲಂಘನೆಗಾಗಿ ದಂಡ ತೆತ್ತರೆ ಗೊತ್ತಾಗದಿರುತ್ತದಾ? ರಾಂಚಿಯಲ್ಲಿ ಅತಿ ವೇಗವಾಗಿ ವಾಹನ ಚಲಾಯಿಸಿದ್ದಕ್ಕಾಗಿ 1000 ರೂಪಾಯಿ ದಂಡ ವಿಧಿಸಲಾಗಿರುವ ಘಟನೆ ನಡೆದಿದೆ. ಕ್ಯಾಪ್ಟನ್ ಕೂಲ್ ಗೆ ಈ ದಂಡದ ಮೊತ್ತ ವಿಷಯವೇ ಅಲ್ಲದಿದ್ದರೂ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಯಾಗುತ್ತಿದೆ. ನಿಮಮೋಲ್ಲಂಘನೆ ವಿಚಾರವಾಗಿ ಧೋನಿ ಹೆಸರು ಓಡಾಡುತ್ತಿರುವುದು ಇದೇ ಮೊದಲೇನಲ್ಲ, ಈ ಹಿಂದೆ ರಾಂಚಿಯಲ್ಲಿ ವಸತಿ ನಿವೇಶನವನ್ನು ದುರುಪಯೋಗಪಡಿಸಿಕೊಂಡ ಆರೋಪದ ಮೇರೆಗೆ ಜಾರ್ಖಂಡ್ ರಾಜ್ಯ ವಸತಿ ಮಂಡಳಿಯು ಧೋನಿಗೆ ನೋಟಿಸ್ ಜಾರಿ ಮಾಡಿತ್ತು. ಈ ವಿಚಾರವಾಗಿ ಅವರು ಕಾನೂನು ಸಮಸ್ಯೆಯನ್ನು ಎದುರಿಸಿದ ಕೆಲವೇ ದಿನಗಳಲ್ಲಿ ಇದೀಗ ಸಂಚಾರ ನಿಯಮೋಲ್ಲಂಘನೆಯ ಆರೋಪ ಕೇಳಿ ಬಂದಿದೆ. 91 ಕಿಮೀ. ವೇಗದಲ್ಲಿ ಚಾಲನೆ ರಾಂಚಿ ನಗರದಲ್ಲಿ ಸ್ವಯಂಚಾಲಿತ ವಾಹನ ಕಣ್ಗಾವಲು ವ್ಯವಸ್ಥೆಯಡಿಯಲ್ಲಿ ಎಲ್ಲಾ ಮುಖ್ಯರಸ್ತೆಗಳಲ್ಲೂ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿದೆ. ಧೋನಿ ಅವರು ರಾಂಚಿಯಲ್ಲಿ 60 ಕಿಮೀ ವೇಗದ ಮಿತಿ ನಿಗದಿಪಡಿಸಲಾಗಿರವ ರಸ್ತೆಯಲ್ಲಿ ಕೆಲ ದಿನಗಳ ಹಿಂದೆ ತಮ್ಮ ಕಾರನ್ನು ಗಂಟೆಗೆ 91 ಕಿಮೀ ವೇಗವಾಗಿ ಚಲಾಯಿಸಿದ್ದರು ಎಂಬುದನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ಹೀಗಾಗಿ ಅವರಿಗೆ ಅನ್ವಯ ಡಿಜಿಟಲ್ ನೋಟಿಸ್ ಅನ್ನು ಜಾರಿಗೊಳಿಸಲಾಗಿದ್ದು ಸಾವಿರ ರೂಪಾಯಿ ದಂಡವನ್ನೂ ವಿಧಿಸಲಾಗಿದೆ. ಈ ವಿಚಾರವಾಗಿ ಧೋನಿ ಅವರು ಸಾರ್ವಜನಿಕವಾಗಿ ಯಾವುದೇ ರೀತಿಯ ಪ್ರತಿಕ್ರಿಯೆ ನೀಡಿಲ್ಲ. ಸದಾ ಶಾಂತವಾಗಿರುವ ಜೊತೆಗೆ ಸಾರ್ವಜನಿಕ ಜೀವನದಲ್ಲೂ ಶಾಂತವಾಗಿ ವರ್ತಿಸುವ ಧೋನಿ ಅವರಿಗೆ ಮೋಟಾರು ವಾಹನಗಳ ಬಗ್ಗೆ ಬಹಳ ಕ್ರೇಝ್ ಇದೆ ಎಂಬುದು ತಿಳಿದೇ ಇರುವ ಸಂಗತಿ. ಅವರ ಸಂಗ್ರಹದಲ್ಲಿ ಹಮ್ಮರ್ ಸೇರಿದಂತೆ ಅನೇಕ ಕಾರು ಮತ್ತು ಬೈಕ್ ಗಳಿವೆ. ಯಾವುದನ್ನು ರಸ್ತೆಗಳಿಸಿದರೂ ಸಹ ಅವರು ನಿಯಮವನ್ನು ಉಲ್ಲಂಘಿಸುವುದಿಲ್ಲ. ಆದರೆ ಇದೀಗ ಅವರಿಗೆ ದಂಡ ವಿಧಿಸಲ್ಪಟ್ಟಿರುವುದು ಅಚ್ಚರಿಗೆ ಕಾರಣವಾಗಿದೆ. ಜೊತೆಗೆ ಜಾಲತಾಣಗಳಲ್ಲಿ ಚರ್ಚೆಯ ಸಂಗತಿಯೂ ಅಗಿದೆ. ಕೊನೇ ಬಾರಿ ಐಪಿಎಲ್? ಮಹೇಂದ್ರ ಸಿಂಗ್ ಧೋನಿ ಅವರನ್ನು ಯು ಈ ಬಾರಿಯ ಮಿನಿ ಹರಾಜಿಗೂ ಮುನ್ನ 4 ಕೋಟಿ ರೂಪಾಯಿ ಖರ್ಚು ಮಾಡಿ ರಿಟೈನ್ ಮಾಡಿಕೊಂಡಿತ್ತು. ಆ ಬಳಿಕ ಟ್ರೇಡ್ ನಲ್ಲಿ ಅನುಭವಿ ರವೀಂದ್ರ ಜಡೇಜಾ ಅವರನ್ನು ರಾಜಸ್ಥಾನ ರಾಯಲ್ಸ್ ತಂಡಕ್ಕೆ ನೀಡಿ, ಅಲ್ಲಿಂದ ಸಂಜು ಸ್ಯಾಮ್ಸನ್ ಅವರನ್ನು ತಂಡಕ್ಕೆ ಸೇರಿಸಿಕ1ಂಡಿತ್ತು. ನೀಡುವ ಸಲುವಾಗಿಯೇ ಮತ್ತು ತಂಡದ ಭವಿಷ್ಯದ ದೃಷ್ಟಿಯಿಂದಲೇ ಸಂಜು ಸ್ಯಾಮ್ಸನ್ ಅವರನ್ನು ತಂಡಕ್ಕೆ ಕರೆ ತರಲಾಗಿದೆ ಎಂಬ ಮಾತು ಕೇಳಿ ಬರುತ್ತಿದೆ. ಈ ಸೀಸನ್ ನ ಬಳಿಕ ಧೋನಿ ಅವರು ಐಪಿಎಲ್ ನಿಂದ ನಿವೃತ್ತಿ ಪಡೆದರೆ ಸಕ್ರಿಯ ಕ್ರಿಕೆಟ್ ನಿಂದ ಸಂಪೂರ್ಣವಾಗಿ ನಿವೃತ್ತಿ ಪಡೆದಂತಾಗುತ್ತದೆ. ಭವಿಷ್ಯದಲ್ಲಿ ಅವರು ಚೆನ್ನೈ ಸೂಪರ್ ಕಿಂಗ್ಸ್ ತಂಡದ ಕೋಚ್ ಆಗಿ ಕಾರ್ಯ ನಿರ್ವಹಿಸುವ ಎಲ್ಲಾ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ.
ಅಫಜಲಪುರ | ಆನೂರ ಗ್ರಾಮದಲ್ಲಿ ಹೋಳಿ ಸಂಭ್ರಮ
ಅಫಜಲಪುರ: ತಾಲೂಕಿನ ಆನೂರ ಗ್ರಾಮದಲ್ಲಿ ಹೋಳಿ ಹಬ್ಬವನ್ನು ಗ್ರಾಮಸ್ಥರು ಸಂಭ್ರಮದಿಂದ ಆಚರಣೆ ಮಾಡಿದರು. ಬುಧವಾರ ಬೆಳಿಗ್ಗೆಯಿಂದಲೇ ಗ್ರಾಮದ ಯುವಕರು ವಿವಿಧ ವೇಷಭೂಷಣ ಧರಿಸಿ ಕರಡಿ ಕುಣಿತ, ಪೋತರಾಜ ಕುಣಿತ ಸೇರಿದಂತೆ ಜನಪದ ಕಲೆಗಳ ಮೂಲಕ ಗಮನ ಸೆಳೆದರು. ಹಲಗೆ ವಾದ್ಯದ ನಾದಕ್ಕೆ ತಾಳಮೇಳ ಹೊಂದಿಸಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದ ಯುವಕರು, ಬಣ್ಣದಾಟದಲ್ಲಿ ಮಿಂದೆದ್ದು ಸಂಭ್ರಮಿಸಿದರು. ಈ ವೇಳೆ ಸೋಮರಾಯ ರಿಕ್ಕಿ, ಪಪ್ಪು ಬಳೂಂಡಗಿ, ಮಕ್ತುಮಸಾಬ ಜೇರಟಗಿ, ಲೊಕೇಶ ಸೀತನೂರ, ಮಲ್ಲಯ್ಯ ಮಂದೇವಾಲ, ರೇವಣಸಿದ್ದ ಬಳೂಂಡಗಿ, ಸೋಮು ಸೀತನೂರ, ಮಲ್ಲಯ್ಯ ಸ್ವಾಮಿ, ರವಿ ಜಿರೋಳಿ, ಹಣಮಂತ ಬಳೂಂಡಗಿ, ಶಿವು ಸುತಾರ, ಅನಿಲ, ಚಂದ್ರು ಉಮ್ಮನಗೋಳ, ಕಲ್ಲಪ್ಪ ಪೂಜಾರಿ, ಸುನಿಲ, ಸತೀಶ ಸುತಾರ, ಮಲ್ಲು ಬಳೂಂಡಗಿ ಸೇರಿದಂತೆ ಹಲವಾರು ಯುವಕರು ಈ ಸಂಭ್ರಮದಲ್ಲಿ ಭಾಗವಹಿಸಿದ್ದರು.
ಜೈಲಲ್ಲಿರುವ ಪವಿತ್ರಾ ಗೌಡಗೆ ಮನೆ ಊಟ ವ್ಯವಸ್ಥೆಗೆ ಬ್ರೇಕ್ ಹಾಕಿದ ಹೈಕೋರ್ಟ್
ಬೆಂಗಳೂರು: ಹತ್ಯೆ ಪ್ರಕರಣದಲ್ಲಿ ಜೈಲಿನಲ್ಲಿರುವ ಎ1 ಆರೋಪಿ ಪವಿತ್ರಾ ಗೌಡ ಸೇರಿ ಮೂವರು ಆರೋಪಿಗಳಿಗೆ ಮನೆ ಊಟಕ್ಕೆ ಹೈಕೋರ್ಟ್ ಬ್ರೇಕ್ ಹಾಕಿದೆ. ಈ ಮೂಲಕ ಪವಿತ್ರಾ ಗೌಡಗೆ ಹಿನ್ನಡೆ ಆಗಿದೆ. ವಾರಕ್ಕೊಮ್ಮೆ ಹಾಗೂ ವೈದ್ಯಕೀಯ ಕಾರಣಗಳಿಂದ ಮನೆ ಊಟ ತರಿಸಿಕೊಳ್ಳಬಹುದೆಂಬ ಕೆಳ ಹಂತದ ನ್ಯಾಯಾಲಯದ ಅದೇಶ ಮೇರೆಗೆ ಮನೆ ಊಟ ತರಿಸಿಕೊಳ್ಳುತ್ತಿದ್ದರು. ಇಂದು ಬುಧವಾರ (ಮಾ.4) ಈ
ಕಲಬುರಗಿ | ಬಜೆಟ್ ನಲ್ಲಿ ದಲಿತರಿಗೆ ಶೇ.24.1ರಷ್ಟು ಹಣವನ್ನು ಮೀಸಲಿಡಲು ಒತ್ತಾಯ
ಕಲಬುರಗಿ : ರಾಜ್ಯ ಸರ್ಕಾರದ ಬಜೆಟ್ನಲ್ಲಿ ದಲಿತರಿಗೆ ಶೇ.24.1ರಷ್ಟು ಅನುದಾನ ಮೀಸಲಿಡಬೇಕು ಎಂದು ಆಗ್ರಹಿಸಿ ದಲಿತ ಸಂಘರ್ಷ ಸಮಿತಿ (ಲಕ್ಷ್ಮೀನಾರಾಯಣ ನಾಗವಾರ ಸ್ಥಾಪಿತ) ಸಂಘಟನೆಯವರು ಜಿಲ್ಲಾಧಿಕಾರಿಗಳ ಕಚೇರಿ ಎದುರು ಧರಣಿ ನಡೆಸಿದರು. ಬಳಿಕ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಯಾದ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದರು. ‘ಸಾಮಾಜಿಕ ನ್ಯಾಯ’ದ ಪರ ಬದ್ಧತೆ ಹೊಂದಿರುವ ಮುಖ್ಯಮಂತ್ರಿ ಎಂದು ಖ್ಯಾತರಾಗಿರುವ ನಿಮಗೆ ನಮ್ಮ ಸಂಘಟನೆ ಸರ್ವಾನುಮತದಿಂದ 2023ರ ವಿಧಾನಸಭಾ ಚುನಾವಣೆಯಲ್ಲಿ ಬೆಂಬಲ ನೀಡಿತ್ತು. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಶಾಖೆಗಳನ್ನು ಹೊಂದಿರುವ ಸಂಘಟನೆ ಕಾಂಗ್ರೆಸ್ ಪರವಾಗಿ ಮತ ಚಲಾವಣೆ ಆಗುವಂತೆ ಕಾರ್ಯನಿರ್ವಹಿಸಿದೆ. ಈ ಹಿನ್ನೆಲೆ ದಲಿತ ಸಮುದಾಯಕ್ಕೆ ಬಜೆಟ್ನಲ್ಲಿ ಶೇ.24.1ರಷ್ಟು ಅನುದಾನ ನೀಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು. ಒಳಮೀಸಲಾತಿಯಲ್ಲಿ ಉಂಟಾಗಿರುವ ರೋಸ್ಟರ್ ಬಿಂದು ಗೊಂದಲವನ್ನು ಸರಿಪಡಿಸಿ, ಎಲ್ಲಾ 101 ಪರಿಶಿಷ್ಟ ಜಾತಿಗಳಿಗೆ ಅನ್ಯಾಯವಾಗದಂತೆ ನೇಮಕಾತಿ ಪ್ರಕ್ರಿಯೆ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಹಾಸ್ಟೆಲ್ಗಳಿಗೆ ಪೀಠೋಪಕರಣ ಹಾಗೂ ಪಾಠೋಪಕರಣಗಳ ಸಮರ್ಪಕ ಪೂರೈಕೆ ಮಾಡಬೇಕು. ಪ್ರತಿ ಗ್ರಾಮದಲ್ಲೂ ದಲಿತರಿಗೆ ಸ್ಮಶಾನ ಭೂಮಿ ಮೀಸಲಿರಿಸಬೇಕು. ಎಸ್.ಸಿ/ಎಸ್.ಟಿ ಮೀಸಲಾತಿಗೆ ನಿಗದಿಪಡಿಸಿರುವ ಆದಾಯ ಮಿತಿಯನ್ನು ವಾರ್ಷಿಕ ₹15 ಲಕ್ಷಕ್ಕೆ ಹೆಚ್ಚಿಸಬೇಕು. ಜೊತೆಗೆ ಅರ್ಚಕ ಹಾಗೂ ಪೌರಕಾರ್ಮಿಕ ವೃತ್ತಿಯನ್ನು ಸಾರ್ವತ್ರಿಕಗೊಳಿಸುವಂತೆ ಸರ್ಕಾರವನ್ನು ಮನವಿ ಮಾಡಿದರು. ಈ ಸಂದರ್ಭದಲ್ಲಿ ಕಲಬುರಗಿ ವಿಭಾಗೀಯ ಸಂಘಟನಾ ಸಂಚಾಲಕ ಮಹಾದೇವ ಕೋಳಕೂರ, ಜಿಲ್ಲಾ ಸಂಚಾಲಕ ರಾಮಣ್ಣ ನೂಲಾ ಮೋಘಾ, ಜಿಲ್ಲಾ ಸಂ.ಸoಚಾಲಕರಾದ ಸಾತಪ್ಪ ತೆಗನೂರ, ರಾಜಶೇಖರ ಎಸ್. ಪಡಸಾವಳಿ, ಜಿಲ್ಲಾ ಖಜಾಂಚಿ ನಾಗಪ್ಪ ವಳಕೇರಿ, ತಾಲೂಕಾ ಸಂಚಾಲಕ ವಿಶ್ವರಾಧ್ಯ ಗಂವ್ಹಾರ, ವಿದ್ಯಾರ್ಥಿ ಒಕ್ಕೂಟ ಸಂಚಾಲಕ ಗೌತಮ ಪಾಳಾ ಸೇರಿದಂತೆ ಕಾರ್ಯಕರ್ತರು ಇದ್ದರು.
BTS ತಮ್ಮ ಕಂಬ್ಯಾಕ್ ಆಲ್ಬಂ Arirang ಮೂಲಕ ಮಾ.20ರಂದು ಹವಾ ಸೃಷ್ಟಿಸಲು ಸಿದ್ದವಾಗಿದ್ದ, ಈ ಮಧ್ಯೆ ಈ ಆಲ್ಬಂನಲ್ಲಿರುವ 14 ಟ್ರ್ಯಾಕ್ ಗಳ ಲಿಸ್ಟ್ ಅನ್ನು ಸರ್ಪ್ರೈಸ್ ಆಗಿ ರಿವೀಲ್ ಮಾಡಿದೆ. ಇದರ ಕಂಪ್ಲೀಟ್ ಲಿಸ್ಟ್ ಇಲ್ಲಿದೆ..
ಯುದ್ಧದ ಕಾರ್ಮೋಡದಿಂದ ತೈಲಕ್ಕೆ ಸಂಕಷ್ಟ : ಇವಿ (EV) ವಲಯಕ್ಕೆ ಮೋದಿ ಸರ್ಕಾರದ ಬೂಸ್ಟರ್ ಡೋಸ್
Boost TO EV Sector : ಕರ್ನಾಟಕದಲ್ಲಿ ಇವಿ ಕ್ಷೇತ್ರದಲ್ಲಿ ಕೌಶಲ್ಯಾಭಿವೃದ್ಧಿಗೂ ಕೇಂದ್ರ ಸರ್ಕಾರ ಉತ್ತೇಜನ ನೀಡುತ್ತಿದೆ. ಅತ್ಯಾಧುನಿಕ, ಸಮಗ್ರವಾದ ಇವಿ ಪೂರಕ ವ್ಯವಸ್ಥೆ ಮಾಡುವುದರಿಂದ ರಾಜ್ಯಕ್ಕೆ ಆರ್ಥಿಕ, ಉದ್ಯೋಗ ಹಾಗೂ ಉತ್ಪಾದನೆ ಕ್ಷೇತ್ರಗಳಲ್ಲಿ ಭಾರೀ ಅವಕಾಶಗಳನ್ನು ಸೃಷ್ಟಿಸಬಹುದು ಎಂದು ಕುಮಾರಸ್ವಾಮಿ ಹೇಳಿದರು.
ಕೊಚ್ಚಿ: ತಮ್ಮ ಪದೋನ್ನತಿಗೆ ಧಕ್ಕೆಯುಂಟಾಗಬಹುದು ಅಥವಾ ಅಧಿಕಾರದಲ್ಲಿರುವವರು ಅಸಮಾಧಾನಗೊಳ್ಳಬಹುದು ಎಂಬ ಆತಂಕವಿದ್ದರೂ ಸಹ ನ್ಯಾಯಾಧೀಶರು ಸರಿಯಾದ ನಿರ್ಧಾರವನ್ನು ತೆಗೆದುಕೊಳ್ಳಲು ಹಿಂಜರಿಯಬಾರದು ಎಂದು ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶೆ ನ್ಯಾ.ಬಿ.ವಿ.ನಾಗರತ್ನ ಅವರು ಹೇಳಿದ್ದಾರೆ. ನ್ಯಾಯಾಂಗ ಪರಿಶೀಲನೆಯ ಅರ್ಥಪೂರ್ಣ ಅನುಷ್ಠಾನಕ್ಕೆ ಧೈರ್ಯ ಮತ್ತು ದೃಢ ನಿಲುವು ಅತ್ಯಗತ್ಯ ಎಂದು ಅವರು ಪ್ರತಿಪಾದಿಸಿದ್ದಾರೆ ಎಂದು livelaw.in ವರದಿ ಮಾಡಿದೆ. ಮಂಗಳವಾರ ಕೇರಳ ಉಚ್ಚ ನ್ಯಾಯಾಲಯದಲ್ಲಿ ದ್ವಿತೀಯ ಟಿ.ಎಸ್.ಕೃಷ್ಣಮೂರ್ತಿ ಅಯ್ಯರ್ ಸ್ಮಾರಕ ಉಪನ್ಯಾಸವನ್ನು ನೀಡಿದ ಅವರು, ನ್ಯಾಯಾಂಗ ಪರಿಶೀಲನೆಯು ಹಲವಾರು ಸಂದರ್ಭಗಳಲ್ಲಿ ನ್ಯಾಯಾಲಯಗಳು ಕಾನೂನನ್ನು ಅಮಾನ್ಯಗೊಳಿಸುವುದನ್ನು, ಕಾರ್ಯಾಂಗದ ಕ್ರಮವನ್ನು ನಿರ್ಬಂಧಿಸುವುದನ್ನು ಮತ್ತು ಕೆಲವೊಮ್ಮೆ ರಾಜಕೀಯ ಬಹುಮತದಿಂದ ಜಾರಿಗೊಳಿಸಿದ ಸಾಂವಿಧಾನಿಕ ತಿದ್ದುಪಡಿಗಳನ್ನು ರದ್ದುಗೊಳಿಸುವುದನ್ನೂ ಅಗತ್ಯವಾಗಿಸುತ್ತದೆ ಎಂದು ಹೇಳಿದರು. ಇವು ಸುಲಭದ ಕೆಲಸಗಳಲ್ಲ, ಅವು ಹೆಚ್ಚಿನ ಸಂದರ್ಭಗಳಲ್ಲಿ ರಾಜಕೀಯ ಪರಿಣಾಮಗಳನ್ನು ಹೊಂದಿರುತ್ತವೆ ಎಂದು ಹೇಳಿದ ಅವರು, ಒಂದು ಅಪ್ರಿಯ ತೀರ್ಪು ತಮ್ಮ ಪದೋನ್ನತಿಯ ಮೇಲೆ ಪರಿಣಾಮ ಬೀರಬಹುದು ಅಥವಾ ತಮ್ಮನ್ನು ಅಧಿಕಾರದಲ್ಲಿರುವವರ ಅವಕೃಪೆಗೆ ಪಾತ್ರವಾಗಿಸಬಹುದು ಎಂಬ ಅರಿವು ನ್ಯಾಯಾಧೀಶರಿಗೆ ಇರಬಹುದು. ಆದಾಗ್ಯೂ, ಆ ಅರಿವು ಸಂವಿಧಾನವು ಬಯಸುವ ಕರ್ತವ್ಯವನ್ನು ನಿರ್ವಹಿಸುವಲ್ಲಿ ಅಡ್ಡಿಯಾಗಬಾರದು ಎಂದು ಒತ್ತಿ ಹೇಳಿದರು. ಪ್ರಮಾಣ ವಚನವು ನ್ಯಾಯಾಧೀಶರ ‘ನ್ಯಾಯಾಂಗ ಧರ್ಮ’ ಎಂದು ಬಣ್ಣಿಸಿದ ನ್ಯಾ.ನಾಗರತ್ನಾ, ವೈಯಕ್ತಿಕ ಅಥವಾ ವೃತ್ತಿಪರ ಪರಿಣಾಮಗಳನ್ನು ಲೆಕ್ಕಿಸದೆ ಅದನ್ನು ಗೌರವಿಸಬೇಕು. ವೃತ್ತಿ ಜೀವನದ ಭವಿಷ್ಯದ ಕುರಿತು ಆತಂಕದೊಂದಿಗೆ ತೀರ್ಪುಗಳು ರೂಪುಗೊಂಡರೆ ನ್ಯಾಯಾಂಗ ಪರಿಶೀಲನೆಯು ವಸ್ತುನಿಷ್ಠವಾಗುವ ಬದಲು ಕೇವಲ ಸಾಂಕೇತಿಕವಾಗುವ ಅಪಾಯವಿದೆ ಎಂದರು. ನ್ಯಾಯಾಂಗ ಸ್ವಾತಂತ್ರ್ಯದ ಕುರಿತು ಮಾತನಾಡಿದ ಅವರು, ಅದು ಕೇವಲ ಸಂವಿಧಾನಾತ್ಮಕ ರಕ್ಷಣೆಯಲ್ಲ. ನ್ಯಾಯಾಧೀಶರು ತಮ್ಮ ಹುದ್ದೆಯನ್ನು ಹೇಗೆ ನಿರ್ವಹಿಸುತ್ತಾರೆ ಎನ್ನುವುದರಲ್ಲಿಯೇ ಅದರ ನಿಜವಾದ ಅರ್ಥವಿದೆ. ಇದಕ್ಕೆ ಎರಡು ಆಯಾಮಗಳಿವೆ. ಮೊದಲನೆಯದು ಬಾಹ್ಯ ಪ್ರಭಾವದಿಂದ ಸ್ವಾತಂತ್ರ್ಯ. ಓರ್ವ ನ್ಯಾಯಾಧೀಶರು ರಾಜಕೀಯ ಒತ್ತಡ,ಸಾಂಸ್ಥಿಕ ಬೆದರಿಕೆ ಅಥವಾ ಜನಪ್ರಿಯ ಬೇಡಿಕೆಯಿಂದ ಮುಕ್ತರಾಗಿರಬೇಕು. ಎರಡನೆಯದು ನ್ಯಾಯಾಂಗದ ಒಳಗಿನ ಸ್ವಾತಂತ್ರ್ಯ. ರಾಜಕೀಯದಿಂದ ದೂರವಿರುವುದಷ್ಟೇ ನ್ಯಾಯಾಂಗ ಸ್ವಾತಂತ್ರ್ಯವಲ್ಲ. ಪ್ರತಿಯೊಬ್ಬ ನ್ಯಾಯಾಧೀಶರು ತಮ್ಮ ಸ್ವಂತ ಕಾನೂನು ಮನೋಭಾವವನ್ನು ರೂಪಿಸಿಕೊಳ್ಳಲು ಮತ್ತು ಅದು ಸಹೋದ್ಯೋಗಿಗಳ ಅಭಿಪ್ರಾಯದಿಂದ ಭಿನ್ನವಾಗಿದ್ದರೂ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಲು ಸ್ವತಂತ್ರರಾಗಿರಬೇಕು. ವಿಭಿನ್ನ ಮತ್ತು ಭಿನ್ನಾಭಿಪ್ರಾಯದ ತೀರ್ಪುಗಳು ಬೌದ್ಧಿಕ ಸ್ವಾಯತ್ತತೆಯ ಅಭಿವ್ಯಕ್ತಿಗಳಾಗಿವೆ. ಇದು ನ್ಯಾಯಾಂಗದ ಅತ್ಯುನ್ನತ ಸ್ವಾತಂತ್ರ್ಯವಾಗಿದೆ ಎಂದು ಹೇಳಿದರು.
ಚಿತ್ತಾಪುರ: ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ರಂಗು ರಂಗಿನ ಹಬ್ಬ ಹೋಳಿಯನ್ನು ಪರಸ್ಪರ ಬಣ್ಣ ಹಚ್ಚಿ ಶುಭಾಶಯಗಳನ್ನು ಕೋರುವುದರ ಮೂಲಕ ಅದ್ಧೂರಿಯಾಗಿ ಆಚರಿಸಲಾಯಿತು. ನಂತರ ನಂದಿ ಭಾವಿ, ಕಾಗಿಣಾ ನದಿ ಸೇರಿದಂತೆ ಇತರೆಡೆ ಸ್ನಾನ ಮಾಡುವ ಮೂಲಕ ಸಡಗರದಿಂದ ಆಚರಿಸಲಾಯಿತು. ಬೆಳಿಗ್ಗೆಯಿಂದಲೇ ಯುವಕರ ಗುಂಪುಗಳು ವಿವಿಧೆಡೆಗಳಲ್ಲಿ ಪ್ರಮುಖ ರಸ್ತೆಗಳಲ್ಲಿ ಸಂಚರಿಸುತ್ತಾ ಓಕುಳಿಯಾಟದಲ್ಲಿ ತೊಡಗಿದ್ದರು. ದಾರಿ ಹೋಕರು ಹಾಗೂ ಬೈಕ್ನಲ್ಲಿ ಸಾಗುತ್ತಿದ್ದವರಿಗೆ ಹುಡುಗರು ಬಣ್ಣ ಹಚ್ಚಿ ಹ್ಯಾಪಿ ಹೋಳಿ ಎನ್ನುತ್ತಾ ಶುಭಾಶಯಗಳನ್ನು ಹಂಚಿದರು. ಹಿರಿಯರು, ಕಿರಿಯರು ಎನ್ನದೇ ಎಲ್ಲ ಜಾತಿ ಜನಾಂಗದವರು ಸೇರಿ ಓಕುಳಿಯಾಟದಲ್ಲಿ ಪಾಲ್ಗೊಂಡಿದ್ದು ಕಂಡುಬಂತು. ಪರಸ್ಪರ ಬಣ್ಣ ಎರಚಿ ಸಂಭ್ರಮಿಸಿದರು.
ಜೆಜೆಎಂ ಸ್ಟಾಂಪ್ ಪೇಪರ್ ವಿಚಾರದಲ್ಲಿ ಹಗರಣ ಆರೋಪ: ದಾಖಲೆ ಬಿಡುಗಡೆ ಮಾಡಿದ ಬಿಜೆಪಿ, ಸಿಬಿಐ ತನಿಖೆಗೆ ಒತ್ತಾಯ
ಬಲಗಾರು ಗ್ರಾಮ ಪಂಚಾಯಿತಿಯಲ್ಲಿ 1.49 ಲಕ್ಷ ರೂ. ಬಿಲ್ ಆಗಿದೆ. ಆದರೆ ಬೋರ್ವೆಲ್ ಇಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಗೌರಿಹಳ್ಳದಲ್ಲಿ ಬೋರ್ವೆಲ್ ಇಲ್ಲ; 1.38 ಲಕ್ಷ ಬಿಲ್ ಮಾಡಿದ್ದಾರೆ ಎಂದು ವಿವರ ನೀಡಿದರು. ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮತ್ತು ಕಾಡಾದ ಅಧ್ಯಕ್ಷ ಅಂಶುಮಂತ್ ಅವರು ಕೆಡಿಪಿ ಸಭೆಯಲ್ಲಿ ಜೆಜೆಎಂ ಅಡಿ ಮೋಸ ನಡೆಯುತ್ತಿದೆ. ಶಾಸಕರೇ ಇದನ್ನು ಗಮನಿಸಿ ಎಂದು ಗಮನ ಸೆಳೆದಿದ್ದ ವರದಿಯ ಪೇಪರ್ ತುಣುಕನ್ನೂ ಅವರು ಪ್ರದರ್ಶಿಸಿದರು. ಜಿಲ್ಲಾ ಪಂಚಾಯಿತಿ ಸದಸ್ಯ ಎಚ್.ಎಂ.ಸತೀಶ್ ಅವರು ಸಾರ್ವಜನಿಕ ಸಭೆಯಲ್ಲಿ ಜೆಜೆಎಂ ಅಡಿ ನೂರಾರು ಕೋಟಿಯ ಹಗರಣ ನಡೆದಿದೆ ಎಂದಿದ್ದರು ಎಂದು ಮಾಜಿ ಸಚಿವ ಡಿ.ಎನ್.ಜೀವರಾಜ್ ಆರೋಪ ಮಾಡಿದರು.
Haryana | ಹೋಳಿ ಆಚರಣೆಯ ವೇಳೆ ಜಾನುವಾರಿಗೆ ಮದ್ಯ ಕುಡಿಸಿ ಬಂಡಿ ಎಳೆಯಿಸಿದ ಆರೋಪ: ವೀಡಿಯೋ ವೈರಲ್
ಚಂಡೀಗಡ: ದೇಶದ ವಿವಿಧ ಭಾಗಗಳಲ್ಲಿ ಹೋಳಿ ಹಬ್ಬವನ್ನು ಸಂಭ್ರಮ ಮತ್ತು ಉತ್ಸಾಹದಿಂದ ಆಚರಿಸಲಾಗುತ್ತಿರುವ ನಡುವೆಯೇ, ಹರಿಯಾಣದಲ್ಲಿ ಪ್ರಾಣಿಯ ಮೇಲಿನ ದೌರ್ಜನ್ಯಕ್ಕೆ ಸಂಬಂಧಿಸಿದ ಘಟನೆಯೊಂದು ಬೆಳಕಿಗೆ ಬಂದಿದೆ. ಹೋಳಿ ಆಚರಣೆಯ ವೇಳೆ ಕೆಲವರು ಜಾನುವಾರಿಗೆ ಬಲವಂತವಾಗಿ ಮದ್ಯ ಕುಡಿಸಿ, ಬಂಡಿಯನ್ನು ಅದರಿಂದ ಎಳೆಯಿಸಿದ ಆರೋಪ ಕೇಳಿಬಂದಿದೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ವ್ಯಾಪಕ ಚರ್ಚೆಗೆ ಕಾರಣವಾಗಿದೆ ಎಂದು freepressjournal.in ವರದಿ ಮಾಡಿದೆ. ವಿಡಿಯೋದಲ್ಲಿ ಜಾನುವಾರು ಒಂದು ಬಂಡಿಯನ್ನು ಎಳೆಯುತ್ತಿರುವುದು ಕಾಣುತ್ತದೆ. ಬಂಡಿಯ ಮೇಲೆ ಹಲವಾರು ಪುರುಷರು ಕುಳಿತಿರುವ ದೃಶ್ಯ ಗೋಚರಿಸುತ್ತದೆ. ಇದೇ ವೇಳೆ ಇಬ್ಬರು ವ್ಯಕ್ತಿಗಳು ಜಾನುವಾರಿನ ಬಾಯಿಯನ್ನು ಬಲವಂತವಾಗಿ ತೆರೆದು ಅದಕ್ಕೆ ಮದ್ಯ ಕುಡಿಸುವುದಾಗಿ ಆರೋಪಿಸಲಾದ ದೃಶ್ಯವೂ ವೀಡಿಯೋದಲ್ಲಿ ಕಾಣುತ್ತದೆ. ಸುತ್ತಮುತ್ತ ನಿಂತಿದ್ದ ಇತರರು ಈ ಕೃತ್ಯವನ್ನು ನೋಡುವುದು ಹಾಗೂ ಅದನ್ನು ಚಿತ್ರೀಕರಿಸುತ್ತಿರುವುದು ವೀಡಿಯೋದಲ್ಲಿ ಗೋಚರಿಸುತ್ತದೆ. ಈ ವಿಡಿಯೋವನ್ನು ‘ಸ್ಟ್ರೀಟ್ಡಾಗ್ಸ್ಆಫ್ಬಾಂಬೆ’ ಎಂಬ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಪೋಸ್ಟ್ ಮಾಡಿದ ಕೇವಲ ಒಂದು ಗಂಟೆಯೊಳಗೆ ವೀಡಿಯೋ 36.8 ಸಾವಿರಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದಿದ್ದು, ಸಾಮಾಜಿಕ ಜಾಲತಾಣದಲ್ಲಿ ಜನರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಘಟನೆ ನಡೆದ ಸ್ಥಳ ಮತ್ತು ಸಂಬಂಧಿಸಿದವರ ಬಗ್ಗೆ ಇನ್ನಷ್ಟು ಮಾಹಿತಿ ಹೊರಬರಬೇಕಿದ್ದು, ಸ್ಥಳೀಯ ಆಡಳಿತ ಅಥವಾ ಪೊಲೀಸ್ ಅಧಿಕಾರಿಗಳಿಂದ ಅಧಿಕೃತ ಪ್ರತಿಕ್ರಿಯೆ ಇನ್ನಷ್ಟೇ ಲಭ್ಯವಾಗಬೇಕಿದೆ. ಪ್ರಾಣಿಗಳ ಹಕ್ಕುಗಳ ಪರ ಹೋರಾಟಗಾರರು ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ. View this post on Instagram A post shared by StreetdogsofBombay (@streetdogsofbombay)
ಟಿ20 ವಿಶ್ವಕಪ್: If and Buts - ಭಾರತ Vs ಇಂಗ್ಲೆಂಡ್ ಪಂದ್ಯ ರದ್ದಾದರೆ ಫೈನಲ್’ಗೆ ಯಾರು? ಇಲ್ಲಿದೆ ನಿಯಮ
What will happen if India Vs England match washes out : ಟಿ20 ವಿಶ್ವಕಪ್ ಪಂದ್ಯಾವಳಿಯ ಮೊದಲ ಸೆಮಿಫೈನಲ್ ಮತ್ತು ಎರಡನೇ ಸೆಮಿಫೈನಲ್’ಗೆ ದಿನ ನಿಗದಿಯಾಗಿದೆ. ಎರಡನೇ ಉಪಾಂತ್ಯದ ಪಂದ್ಯದಲ್ಲಿ ಭಾರತ ತಂಡವು ಇಂಗ್ಲೆಂಡ್ ಅನ್ನು ಎದುರಿಸಲಿದೆ. ಮುಂಬೈನಲ್ಲಿ ನಡೆಯುವ ಪಂದ್ಯ, ರದ್ದಾದರೆ ಐಸಿಸಿ ನಿಯಮವೇನು?
Odisha | ಮೇಕೆ ಕದ್ದ ಶಂಕೆಯಲ್ಲಿ 14 ವರ್ಷದ ಬಾಲಕನ ಥಳಿಸಿ ಹತ್ಯೆ; 12 ಮಂದಿಯ ಬಂಧನ
ಬರಿಪಾದ: ಮೇಕೆ ಕದ್ದಿದ್ದಾರೆ ಎಂಬ ಶಂಕೆಯ ಮೇಲೆ ಗ್ರಾಮಸ್ಥರು 14 ವರ್ಷದ ಓರ್ವ ಬಾಲಕನನ್ನು ಥಳಿಸಿ ಹತ್ಯೆಗೈದು, ಮತ್ತೊಬ್ಬನನ್ನು ಗಂಭೀರವಾಗಿ ಗಾಯಗೊಳಿಸಿರುವ ಘಟನೆ ಒಡಿಶಾದ ಮಯೂರ್ ಭಂಜ್ ಜಿಲ್ಲೆಯಲ್ಲಿ ನಡೆದಿದೆ ಎಂದು ಮಂಗಳವಾರ ಪೊಲೀಸರು ತಿಳಿಸಿದ್ದಾರೆ. ಸೋಮವಾರ ಮಧ್ಯಾಹ್ನ ತಿರಿಂಗ್ ಪೊಲೀಸ್ ಠಾಣೆ ವ್ಯಾಪ್ತಿಯ ಇಂಡೊಖೋಲಿ ಹೆರೊಗೊಡ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಮೃತ ಬಾಲಕನನ್ನು ಸಂಬಿತ್ ಬಿಂಧಾನಿ ಎಂದು ಗುರುತಿಸಲಾಗಿದ್ದು, ಆತ ಭುಟಕಬಡಿ ಗ್ರಾಮದ ರಾಜ್ ಕುಮಾರ್ ಬಿಂಧಾನಿ ಎಂಬವರ ಪುತ್ರ ಎಂದು ಹೇಳಲಾಗಿದೆ. ಮೇಕೆಯನ್ನು ಕದ್ದ ಆರೋಪದಲ್ಲಿ ಕೆಲವು ಸ್ಥಳೀಯರು ಸಂಬಿತ್ ಹಾಗೂ ಆತನ ಮೂವರು ಸ್ನೇಹಿತರನ್ನು ಸೆರೆ ಹಿಡಿದಿದ್ದಾರೆ. ಈ ಪೈಕಿ ಇಬ್ಬರು ಬಾಲಕರು ಪರಾರಿಯಾಗುವಲ್ಲಿ ಯಶಸ್ವಿಯಾಗಿದ್ದು, ಸಂಬಿತ್ ಹಾಗೂ ಆತನ ಮತ್ತೊಬ್ಬ ಸ್ನೇಹಿತನ ಮೇಲೆ ಗುಂಪು ಮಾರಣಾಂತಿಕ ಹಲ್ಲೆ ನಡೆಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸುದ್ದಿ ತಿಳಿಯುತ್ತಿದ್ದಂತೆಯೇ ಘಟನಾ ಸ್ಥಳಕ್ಕೆ ಧಾವಿಸಿದ ಪೊಲೀಸರು, ಗಂಭೀರ ಸ್ಥಿತಿಯಲ್ಲಿದ್ದ ಇಬ್ಬರು ಬಾಲಕರನ್ನು ರಕ್ಷಿಸಿದ್ದಾರೆ. ಬಳಿಕ, ಅವರನ್ನು ಮೊದಲು ಝಾರದಿಹಿ ಆಸ್ಪತ್ರೆಗೆ ದಾಖಲಿಸಿ, ತದನಂತರ ರಾಯಿರಂಗ್ ಪರ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಈ ಪೈಕಿ ಸಂಬಿತ್ ಮಾರ್ಗಮಧ್ಯದಲ್ಲೇ ಮೃತಪಟ್ಟಿದ್ದಾನೆ ಎಂದು ವೈದ್ಯರು ಘೋಷಿಸಿದ್ದಾರೆ. ತನ್ನ ಸೋದರ ಮಾವನ ಮನೆಯಲ್ಲಿ ಉಳಿದುಕೊಂಡಿದ್ದ ಸಂಬಿತ್, ಬೆಹಲ್ಡಾ ಪೊಲೀಸ್ ಠಾಣೆ ವ್ಯಾಪ್ತಿಯ ಬಸಿಂಗಿ ಗ್ರಾಮದ ಸರಕಾರಿ ಪ್ರೌಢಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದ ಎನ್ನಲಾಗಿದೆ. ಮೃತ ಬಾಲಕನ ಕುಟುಂಬದ ಸದಸ್ಯರು ದಾಖಲಿಸಿದ ದೂರನ್ನು ಆಧರಿಸಿ, ಹತ್ಯೆ ಪ್ರಕರಣವನ್ನು ದಾಖಲಿಸಿಕೊಂಡಿರುವ ತಿರಿಂಗ್ ಠಾಣೆ ಪೊಲೀಸರು, 12 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ಉಸ್ತುವಾರಿ ಇನ್ಸ್ ಪೆಕ್ಟರ್ ಪ್ರಶಾಂತ್ ಜೆನಾ ತಿಳಿಸಿದ್ದಾರೆ. ಇದೊಂದು ಸೂಕ್ಷ್ಮ ಪ್ರಕರಣವಾಗಿದ್ದು, ಪೊಲೀಸರು ತನಿಖೆಯನ್ನು ತುಂಬಾ ಗಂಭೀರವಾಗಿ ನಡೆಸುತ್ತಿದ್ದಾರೆ ಎಂದೂ ಅವರು ಹೇಳಿದ್ದಾರೆ. ಈ ಘಟನೆಯ ಕುರಿತು ಸೂಕ್ತ ತನಿಖೆ ನಡೆಸಿ, ನ್ಯಾಯ ದೊರಕಿಸಿಕೊಡಬೇಕು ಎಂದು ಮೃತ ಬಾಲಕನ ಕುಟುಂಬದ ಸದಸ್ಯರು ಆಗ್ರಹಿಸಿದ್ದಾರೆ.
ಉತ್ತರ ಕನ್ನಡದ 290 ಹಳ್ಳಿಗಳಿಗೆ ಬೇಸಿಗೆಯಲ್ಲಿ ಜಲಕ್ಷಾಮದ ಭೀತಿ: ಉಪ್ಪುನೀರಿನ ಸಮಸ್ಯೆಯಿಂದ ಹೆಚ್ಚಿದ ಆತಂಕ!
ಬೇಸಿಗೆ ಆರಂಭವಾಗುತ್ತಿದ್ದಂತೆ ಉತ್ತರ ಕನ್ನಡದ 290 ಗ್ರಾಮಗಳು ಕುಡಿಯುವ ನೀರಿನ ಸಮಸ್ಯೆಯನ್ನು ಎದುರಿಸುವ ಆತಂಕ ಎದುರಾಗಿದದೆ. ಜಿಲ್ಲೆಯಲ್ಲಿ ಜಲ ಜೀವನ್ ಮಿಷನ್ ಅವ್ಯವಸ್ಥೆಯಿಂದಾಗಿ ಬೇಸಿಗೆ ಆರಂಭದಲ್ಲೇ ನೀರಿನ ಕೊರತೆಯುಂಟಾಗಿದ್ದು, ಜನ ಟ್ಯಾಂಕರ್ ನೀರಿನ ಮೊರೆ ಹೋಗುವಂತಾಗಿದೆ. ಇನ್ನು, ಕರಾವಳಿ ಭಾಗದಲ್ಲಿನ ಕಾರ್ಲೆಂಡ್ ಸಮಸ್ಯೆಯಿಂದಾಗಿ ಉಪ್ಪು ನೀರು ಕೃಷಿಭೂಮಿಯಲ್ಲಿನ ಬಾವಿಗಳಿಗೆ ನುಗ್ಗಿ ಅದರ ನೀರು ಸಹ ಕುಡಿಯಲು ಯೋಗ್ಯವಿಲ್ಲದಂತಾಗುತ್ತಿದೆ ಎಂಬ ಕೂಗು ಕೇಳಿಬರುತ್ತಿದೆ.
ಅಸ್ಸಾಂ ವಿಧಾನಸಭಾ ಚುನಾವಣೆ | 42 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ ಕಾಂಗ್ರೆಸ್
ಗೌರವ್ ಗೊಗೊಯಿ ಜೋರ್ಹಾಟ್ ವಿಧಾನಸಭಾ ಕ್ಷೇತ್ರದಿಂದ ಸ್ಫರ್ಧೆ
Ind Vs Eng- ಇಂಗ್ಲೆಂಡಿಗೆ ಅಭಿಷೇಕ್ ಶರ್ಮಾ ಭಯ! ಆದ್ರೆ ವಾಂಖೆಡೆಯಲ್ಲಿ ಕಣಕ್ಕಿಳಿವ ಟೀಂ ಇಂಡಿಯಾದಲ್ಲಿ ಅವರಿರ್ತಾರಾ?
ಐಸಿಸಿ 2026 ನಲ್ಲಿ ಸೆಮಿಫೈನಲ್ ಪಂದ್ಯಕ್ಕೆ ಕ್ಷಣಗಣನೆ ಶುರುವಾಗಿದೆ. ಇತ್ತಂಡಗಳೂ ಚುಟುಕು ಕ್ರಿಕೆಟ್ ನ ಬಲಾಢ್ಯ ತಂಡಗಳು. ಆದರೆ ಕಳೆದ ಕೆಲ ವರ್ಷಗಳಿಂದ ಸ್ಥಿರ ಪ್ರದರ್ಶನ ನೀಡುತ್ತಿರುವ ಭಾರತವೇ ಫೇವರಿಟ್ ತಂಡ ಎಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ. ತಂಡದಲ್ಲಿರುವ ಪ್ರತಿಯೊಬ್ಬರೂ ಏಕಾಂಗಿಯಾಗಿ ಪಂದ್ಯವನ್ನು ಗೆದ್ದುಕೊಡಬಲ್ಲ ಸಾಮರ್ಥ್ಯವುಳ್ಳವರು. ಇಂಗ್ಲಂಡ್ ಇದೀಗ ಅತ್ಯಂತ ಹೆಚ್ಚು ಭಯ ಇರುವುದು ಟೀಂ ಇಂಡಿಯಾದ ಸ್ಫೋಟಕ ಬ್ಯಾಟರ್ ಅಭಿಷೇಕ್ ಶರ್ಮಾ ಅವರ ಬಗ್ಗೆ. ಆದರೆ ಮಾರ್ಚ್ 5ರಂದು ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯದಲ್ಲಿ ಟೀಂ ಇಂಡಿಯಾ ಮ್ಯಾನೇಜ್ ಮಂಂಟ್ ಅವರನ್ನು ಕಣಕ್ಕಿಳಿಸುತ್ತಾ ಎಂಬುದೇ ದೊಡ್ಡ ಪ್ರಶ್ನೆಯಾಗಿ ಕಾಡುತ್ತಿದೆ. ನಿಮಗೆ ನೆನಪಿರಬಹುದು, ಕಳೆದ ವರ್ಷ ಐಸಿಸಿ ಚಾಂಪಿಯನ್ಸ್ ಟ್ರೋಫಿಗೂ ಮೊದಲು ಇಂಗ್ಲೆಂಡ್ ತಂಡ ಭಾರತದಲ್ಲಿ ವೈಟ್ ಬಾಲ್ ಸರಣಿ ಆಡಿತ್ತು. ಫೆಬ್ರವರಿ2 ರಂದು ವಾಂಖೆಡೆಯಲ್ಲಿ ನಡೆದ 5ನೇ ಮತ್ತು ಅಂತಿಮ ಟಿ20 ಪಂದ್ಯದಲ್ಲಿ ಅಭಿೇಕ್ ಶರ್ಮಾ ಅವರು ಇಂಗ್ಲೆಂಡ್ ಬೌಲಿಂಗ್ ಅನ್ನು ಧೂಳೀಪಟ ಮಾಡಿದ್ದರು. ಕೇವಲ 37 ಎಸೆತಗಳಲ್ಲಿ ಶತಕ ಪೂರೈಸಿದ್ದ ಅವರು ಅಂತಿಮವಾಗಿ 54 ಎಸೆಗಳಿಂದ 134 ರನ್ ಚಚ್ಚಿದ್ದರು. ಆ ಇನ್ನಿಂಗ್ಸ್ ನಲ್ಲಿ 7 ಬೌಂಡರಿ ಮತ್ತು 13 ಸಿಕ್ಸರ್ ಗಳಿದ್ದವು. ಪರಿಣಾಮ ಭಾರತ ತಂಡ 20 ಓವರ್ ಗಳಲ್ಲಿ 9 ವಿಕೆಟ್ ಗೆ 247 ರನ್ ಗಳ ಬೃಹತ್ ಮೊತ್ತ ಕಲೆ ಹಾಕಿತ್ತು. ಉತ್ತರವಾಗಿ ಇಂಗ್ಲೆಂಡ್ ತಂಡ 13.5 ಓವರ್ ಗಳಲ್ಲಿ 97 ರನ್ ಗಳಿಗೆ ಆಲೌಟ್ ಆಗಿ ಕೊನೆಗೆ 150 ರನ್ ಗಳಿಂದ ಸೋಲೊಪ್ಪಿಕೊಂಡಿತ್ತು. ಇಂಗ್ಲೆಂಡಿಗೆ ಈಗಲೂ ಆ ಪಂದ್ಯ ಕರಾಳ ನೆನಪಾಗಿದೆ. ಮತ್ತೆ ವಾಂಖೆಡೆಯಲ್ಲಿ ಮುಖಾಮುಖಿ ಇದೀಗ ಸರಿಯಾಗಿ ಒಂದು ವರ್ಷ ಒಂದು ತಿಂಗಳ ಬಳಿಕ ಅದೇ ವಾಂಖೆಡೆ ಕ್ರೀಡಾಂಗಣದಲ್ಲಿ ಆಡುತ್ತಿದೆ. ಹೀಗಾಗಿ ಇಂಗ್ಲೆಂಡ್ ಗೆ ಇಲ್ಲಿಎಲ್ಲರಿಗಿಂತ ಹೆಚ್ಚು ಭಯ ಇರುವುದು ಅಭಿಷೇಕ್ ಶರ್ಮಾ ಅವರ ಬಗ್ಗೆ. ಹಾಗೆ ನೋಡಿದರೆ ಮುಂಬೈ ಇಂಡಿಯನ್ಸ್ ತಂಡದ ಆಟಗಾರರಾದ ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ ತಿಲಕ್ ವರ್ಮಾ, ಜಸ್ಪ್ರೀತ್ ಬುಮ್ರಾ, ಮುಂಬೈ ಇಂಡಿಯನ್ಸ್ ಮಾಜಿ ಆಟಗಾರ ಇಶಾನ್ ಕಿಶನ್ ಸಹ ವಾಂಖೆಡೆ ಕ್ರೀಡಾಂಗಣದ ಪಿಚ್ ನ ಮರ್ಮವನ್ನು ಬಹಳ ಚೆನ್ನಾಗಿ ಬಲ್ಲವರೇ. ಆದರೆ ಇಂಗ್ಲೆಂಡ್ ಗೆ ಹೆಚ್ಚು ಭಯ ಇರುವುದು ಅಭಿಷೇಕ್ ಅವರ ಬಗ್ಗೆಯೇ.ಈ ಬಗ್ಗೆ ಮಾತನಾಡಿರವ ಇಂಗ್ಲೆಂಡ್ ನ ಆಲ್ರೌಂಡರ್ ಸ್ಯಾಮ್ ಈಗ ನಮ್ಮ ಮುಖ್ಯ ಗಮನ ಗುರುವಾರ ರಾತ್ರಿಯ ಪಂದ್ಯದ ಕಡೆಗೆ. ಖಂಡಿತವಾಗಿಯೂ ಅಭಿಷೇಕ್ ಅವರು ಮತ್ತೆ ಅದೇ ರೀತಿಯ ಇನ್ನಿಂಗ್ಸ್ ನೀಡುವುದಿಲ್ಲ ಎಂದು ನಾನು ಭಾವಿಸುತ್ತೇನೆ ಎಂದು ಹೇಳಿದ್ದಾರೆ. ಅಭಿಷೇಕ್ ಗೆ ಫಾರ್ಮ್ ಸಮಸ್ಯೆ ಕಳೆದ ಕೆಲ ತಿಂಗಳಿಂದ ಅಭಿಷೇಕ್ ಶರ್ಮಾ ಅವರನ್ನು ಫಾರ್ಮ್ ಸಮಸ್ಯೆ ತುಂಬಾ ಕಾಡುತ್ತಿದೆ. ಈ ವಿಶ್ವಕಪ್ ನ ಆಡಿದ ಮೊದಲ ಮೂರು ಪಂದ್ಯಗಳಲ್ಲಿ ಅವರು ಖಾತೆ ತೆರೆಯುವ ಮುನ್ನವೇ ಔಟಾಗಿದ್ದರು. ಇನ್ನು ಜಿಂಬಾಬ್ವೆ ವಿರುದ್ಧ ಅರ್ಧಶತಕ ಬಾರಿಸಿದಾಗ ಅಭಿಮಾನಿಗಳ ಸಂತಸಪಟ್ಟರು. ಆದರೆ ವೆಸ್ಟ್ ಇಂಡೀಸ್ ವಿರುದ್ಧ ನಿರ್ಣಾಯಕ ಚೇಸ್ ನಲ್ಲಿ ಅವರು ಗಳಿಸಿ ಔಟಾಗಿದ್ದರು. ಹೀಗಾಗಿ ಮಹತ್ವದ ಸೆಮಿಫೈನಲ್ ಪಂದ್ಯದಲ್ಲಿ ಅವರು ಕಣಕಕ್ಕಿಳಿಯುವ ಬಗ್ಗೆಯೇ ಅನುಮಾನಗಳಿವೆ. ಅವರ ಕಳಪೆ ಫಾರ್ಮ್ ತಂಡದ ಮ್ಯಾನೇಜ್ ಮೆಂಟ್ ಚಿಂತೆಗೆ ಕಾರಣವಾಗಿದೆ. ಈ ಬಾರಿ ಅವರು ವಿಶ್ವಕಪ್ ನಲ್ಲಿ ಆಡಿರುವ 6 ಪಂದ್ಯಗಳಲ್ಲಿ ಗಳಿಸಿರುವುದು 80 ರನ್ ಗಳಷ್ಟೇ. ಜಿಂಬಾಬ್ವೆ ವಿರುದ್ಧ ಗಳಿಸಿದ 55 ರನ್ ಗಳನ್ನು ಹೊರತುಪಡಿಸಿದರೆ ಅವರು ಉಳಿದ 5 ಪಂದ್ಯಗಳಲ್ಲಿ ರನ್ ಗಳಿಸಲು ಪರದಾಡಿದ್ದಾರೆ. ಈ ಹಿಂದೆ ಎಂದೂ ಅಭಿಷೇಕ್ ಇಷ್ಟೊಂದು ಫಾರ್ಮ್ ಸಮಸ್ಯೆ ಎದುರಿಸಿದ್ದಿಲ್ಲ. ಜೊತೆಗೆ ತಂಡದಲ್ಲಿ ಇದೀಗ ಪ್ಲೇಯಿಂಗ್ ಇಲೆವೆನ್ ನಲ್ಲಿ ಸ್ಥಾನ ಪಡೆಯಲು ವಿಪರೀತ ಪೈಪೋಟಿ ಇದೆ. ಇಶಾನ್ ಕಿಶನ್ ಅವರು ಭರ್ಜರಿ ಫಾರ್ಮ್ ನಲ್ಲಿದ್ದಾರೆ. ರಿಂಕು ಸಿಂಗ್ ಅವರು ಅಲಭ್ಯತೆಯಿಂದಾಗಿ ತಂಡದಲ್ಲಿ ಸ್ಥಾನ ಪಡೆದ ಸಂಜು ಸ್ಯಾಮ್ಸನ್ ಅವರು ವೆಸ್ಟ್ ಇಂಡೀಸ್ ವಿರುದ್ಧ ಮ್ಯಾಚ್ ವಿನ್ನಿಂಗ್ ಪ್ರದರ್ಶನ ನೀಡಿದ್ದಾರೆ. ಇದೀಗ ರಿಂಕು ಸಿಂಗ್ ತಂಡಕ್ಕೆ ಮರಳಿರುವುದರಿಂದ ಯಾರನ್ನಾದರೂ ಒಬ್ಬರನ್ನು ಹೊರಗೆ ಕೂರಿಸಲೇ ಬೇಕಾಗುತ್ತದೆ. ಕಳೆದ ಪಂದ್ಯದ ಪ್ರದರ್ಶನವನ್ನು ಗಮನದಲ್ಲಿಟ್ಟುಕೊಂಡರೆ ಸಂಜು ಸ್ಯಾಮ್ಸನ್ ಅವರನ್ನು ಹೊರಗಿರಿಸುವುದು ಸಾಧ್ಯವೇ ಇಲ್ಲ. ಹೀಗಾದಾಗ ಅಲ್ಲಿ ಉಳಿಯುವುದು ಅಭಿಷೇಕ್ ಶರ್ಮಾ ಅವರು ಮಾತ್ರ. ಹೀಗಾಗಿ ರಿಂಕು ಸಿಂಗ್ ಅವರಿಗೆ ಸ್ಥಾನ ಕಲ್ಪಿಸಲೇಬೇಕು ಎಂದು ತಂಡದ ಮ್ಯಾನೇಜ್ ಮೆಂಟ್ ತೀರ್ಮಾನಿಸಿದ್ದೇ ಆದಲ್ಲಿ ಆಗ ಅಭಿಷೇಕ್ ಶರ್ಮಾ ಅವರು ಬೆಂಚು ಕಾಯಿಸಬೇಕಾದ ಅನಿವಾರ್ಯತೆ ಎದುರಾಗಬಹುದು. ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ ಅವುರ ಅಭಿಷೇಕ್ ಶರ್ಮಾ ಅವರ ಬೆನ್ನಿಗೆ ನಿಂತಿದ್ದಾರೆ. ಅಭಿಷೇಕ್ ಶರ್ಮಾ ಅವರಿಂದ ಸೆಮಿಫೈನಲ್ನಲ್ಲಿ ದೊಡ್ಡ ಪ್ರದರ್ಶನ ಬರಲಿದೆ ಎಂದು ಭವಿಷ್ಯ ನುಡಿದಿದ್ದಾರೆ. ಆಟಗಾರರ ಫಾರ್ಮ್ ತಾತ್ಕಾಲಿಕ, ಕ್ಲಾಸ್ ಶಾಶ್ವತ ಎಂದಿದ್ದಾರೆ. ಕಳೆದ ಪಂದ್ಯಕ್ಕೂ ಮುನ್ನ ಅಭಿಷೇಕ್ ಶರ್ಮಾ ಅವರ ಫಾರ್ಮ್ ಬಗ್ಗೆ ಚರ್ಚೆ ನಡೆದಿತ್ತು. ಆಗ ಅರು ನೋಡ್ತಾ ಇರಿ ಅಭಿಷೇಕ್ ಅವರು ಫಾರ್ಮ್ ಗೆ ಮರಳುತ್ತಾರೆ ಎಂದು ಭರವಸೆ ವ್ಯಕ್ತಪಡಿಸಿದ್ದರು.
ಸೌದಿ ಅರೇಬಿಯಾದ ರಾಸ್ ತನೂರಾ ತೈಲ ಸಂಸ್ಕರಣಾಗಾರಕ್ಕೆ ಮತ್ತೆ ಅಪ್ಪಳಿಸಿದ ಕ್ಷಿಪಣಿ : ವರದಿ
ರಿಯಾದ್: ಸೌದಿ ಅರೇಬಿಯಾದ ದಮಾಮ್-ಜುಬೈಲ್ ಬಳಿಯ ರಾಸ್ ತನೂರಾ ತೈಲ ಸಂಸ್ಕರಣಾಗಾರಕ್ಕೆ ಕ್ಷಿಪಣಿಯೊಂದು ಮತ್ತೆ ಅಪ್ಪಳಿಸಿರುವ ಬಗ್ಗೆ ಮೂಲಗಳನ್ನು ಉಲ್ಲೇಖಿಸಿ Reuters ವರದಿ ಮಾಡಿದೆ. ಡ್ರೋನ್ ದಾಳಿ ಹಿನ್ನೆಲೆ ರಾಸ್ ತನೂರಾ ತೈಲ ಸಂಸ್ಕರಣಾಗಾರದಲ್ಲಿ ಕಾರ್ಯಾಚರಣೆಯನ್ನು ಸೋಮವಾರ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು. ಸಂಕೀರ್ಣದಲ್ಲಿ ಏನು ಅಪ್ಪಳಿಸಿದೆ ಎಂಬುದು ತಕ್ಷಣಕ್ಕೆ ಸ್ಪಷ್ಟವಾಗಿಲ್ಲ.
ತಾರಕಕ್ಕೇರಿದ ಒಳ ಮೀಸಲಾತಿ ಜಟಾಪಟಿ: ಮಲ್ಲಿಕಾರ್ಜುನ ಖರ್ಗೆಯನ್ನು ಭೇಟಿಯಾದ ಬಲಗೈ, ಎಡಗೈ ನಾಯಕರು, ಬೇಡಿಕೆ ಏನು
ನೇಮಕಾತಿಯಲ್ಲಿ ಒಳಮೀಸಲಾತಿ ಜಟಾಪಟಿ ಇದೀಗ ತಾರಕ್ಕೇರಿದೆ. ಈ ವಿಚಾರವಾಗಿ ಚರ್ಚೆ ನಡೆಸಲು ಎಐಸಿಸಿ ಅಧ್ಯಕ್ಷ ಮಲ್ಲಕಾರ್ಜುನ ಖರ್ಗೆ ಅವರನ್ನು ಎಡಗೈ ಸಮುದಾಯದ ಸಚಿವರು, ಶಾಸಕರು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಅಲ್ಲದೆ, ಗೃಹ ಸಚಿವ ಡಾ. ಜಿ ಪರಮೇಶ್ವರ್ ಜೊತೆಗೂ ಚರ್ಚೆ ನಡೆಸಲಾಗಿದೆ. ಬಿಕ್ಕಟ್ಟು ಪರಿಹಾರ ಮಾಡುವ ನಿಟ್ಟಿನಲ್ಲಿ ಅಂತಿಮ ಹಂತದ ಕಸರತ್ತು ನಡೆಸಲಾಗುತ್ತಿದೆ. ಗುರುವಾರ ಸಚಿವ ಸಂಪುಟ ಸಭೆ ನಡೆಯಲಿದ್ದು, ಈ ಸಭೆಯಲ್ಲಿ ಈ ವಿಚಾರವಾಗಿ ಚರ್ಚೆ ನಡೆದು ನಿರ್ಧಾರ ಆಗುವ ಸಾಧ್ಯತೆ ಇದೆ.
ಬಿಎಂಟಿಸಿ ತನ್ನ ಸೇವೆಯನ್ನು ವಿಸ್ತರಣೆ ಮಾಡಿಕೊಂಡಿದ್ದು, ರಾಮನಗರ ಕನಕಪುರಕ್ಕೆ ಎಸಿ ಬಸ್ಗಳನ್ನು ಆರಂಭಿಸಿದೆ. ಹೊಸ ವಜ್ರ ವಿಸ್ತಾರ ಬಸ್ಗಳಿಗೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಬುಧವಾರ ಚಾಲನೆ ನೀಡಿದರು. ಈ ಬಸ್ಗಳ ಮಾರ್ಗ ಏನು? ಟಿಕೆಟ್, ಪಾಸ್ ದರ ಎಷ್ಟು? ಎಲ್ಲೆಲ್ಲಿ ನಿಲುಗಡೆಯಾಗಲಿದೆ? ಸಂಪೂರ್ಣ ವಿವರ ಇಲ್ಲಿದೆ.
ನಾಗ್ಪುರದ ʼಬೀಫ್ʼ: ಗೋಮಾಂಸ ಉದ್ಯಮ ಜತೆ ನಿತಿನ್ ಗಡ್ಕರಿ ಕುಟುಂಬಕ್ಕೆ ನಂಟು!
caravanmagazine. in ತನಿಖಾ ವರದಿ
ಕರ್ನಾಟಕ ಮಾಧ್ಯಮ ಅಕಾಡೆಮಿಯಿಂದ Infosys Springboard ಅಡಿ ಪತ್ರಕರ್ತೆಯರಿಗಾಗಿ ತರಬೇತಿಗೆ ಅರ್ಜಿ ಆಹ್ವಾನ
ಬೆಂಗಳೂರು : ಕರ್ನಾಟಕ ಮಾಧ್ಯಮ ಅಕಾಡೆಮಿಯು Infosys Springboard ಸಿ.ಎಸ್.ಆರ್. ಕಾರ್ಯಕ್ರಮದಡಿ ಮಹಿಳಾ ಪತ್ರಕರ್ತೆಯರಿಗಾಗಿಯೇ ವಿಶೇಷವಾಗಿ ತರಬೇತಿ ಆಯೋಜಿಸಿದ್ದು, ಪತ್ರಕರ್ತೆಯರಿಂದ ಅರ್ಜಿ ಆಹ್ವಾನಿಸಿದೆ. ತರಬೇತಿಯು ಮಾರ್ಚ್ 25 ರಿಂದ 27ರ ವರೆಗೆ ಮೈಸೂರಿನ ಇನ್ಫೋಸಿಸ್ ಕ್ಯಾಂಪಸ್ನಲ್ಲಿ ನಡೆಯಲಿದೆ. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಮಾಧ್ಯಮ ಪಟ್ಟಿಯಲ್ಲಿರುವ ಮಾಧ್ಯಮ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಕನಿಷ್ಠ 5 ವರ್ಷ ಸೇವಾನುಭವ ಹೊಂದಿರುವ ಪತ್ರಕರ್ತೆಯರು ಅರ್ಜಿ ಸಲ್ಲಿಸಬಹುದು. ಆಸಕ್ತ ಪತ್ರಕರ್ತೆಯರು ಗೂಗಲ್ ಫಾರ್ಮ್ https://forms.gle/tozr4GxUQibDHBvk9 ನಲ್ಲಿ ಮಾಹಿತಿ ಹಾಗೂ ದಾಖಲೆಗಳನ್ನು ಒದಗಿಸುವ ಮೂಲಕ ತರಬೇತಿಗೆ ನೋಂದಾಯಿಸಬಹುದಾಗಿದೆ. • ಅರ್ಜಿ ನಮೂನೆಯಲ್ಲಿ ಸೂಚಿಸಿರುವಂತೆ ಪತ್ರಕರ್ತೆಯರು ಭಾವಚಿತ್ರ, ವಯಸ್ಸಿನ ದಾಖಲೆ, ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಮಾಧ್ಯಮ ಸಂಸ್ಥೆಯ ಮುಖ್ಯಸ್ಥರ ದೃಢೀಕರಣ ಅಥವಾ ಕಚೇರಿಯ ಅಧಿಕೃತ ಗುರುತಿನಚೀಟಿ, ಸದರಿ ಮಾಧ್ಯಮ ಸಂಸ್ಥೆಯು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಮಾಧ್ಯಮ ಪಟ್ಟಿಯಲ್ಲಿ ಸೇರ್ಪಡೆಯಾಗಿರುವ ಕುರಿತ ದಾಖಲೆ ಹಾಗೂ ಕನಿಷ್ಠ 5 ವರ್ಷ ಸೇವೆ ಸಲ್ಲಿಸಿರುವ ಕುರಿತು ಸೇವಾನುಭವ ದಾಖಲೆಗಳನ್ನು ಸಲ್ಲಿಸಬೇಕು. • ಇದು ಮೂರು ದಿನಗಳ ವಸತಿಯುತ ತರಬೇತಿಯಾಗಿದ್ದು, ಪತ್ರಕರ್ತೆಯರಿಗೆ ನಿಯಮಾನುಸಾರ ಪ್ರಯಾಣ ಭತ್ಯೆ ನೀಡಲಾಗುವುದು. • ಈ ತರಬೇತಿ ಕಾರ್ಯಕ್ರಮದಲ್ಲಿ ಡಿಜಿಟಲ್ ಮಾಧ್ಯಮ, ಎಐ ಬಳಕೆ ಹಾಗೂ ಸಾಫ್ಟ್ಸ್ಕಿಲ್ ಅಭಿವೃದ್ಧಿ ಮತ್ತು ನಾಯಕತ್ವ ತರಬೇತಿ ನೀಡಲಾಗುವುದು. •ಪತ್ರಕರ್ತೆಯರ ಆಯ್ಕೆ ಕುರಿತ ಅಂತಿಮ ನಿರ್ಧಾರ ಅಕಾಡೆಮಿಯದ್ದೇ ಆಗಿರುತ್ತದೆ. • ಅರ್ಜಿ ಸಲ್ಲಿಸಲು ಮಾರ್ಚ್ 10, 2026 ಕೊನೆಯ ದಿನವಾಗಿದೆ.
ಟ್ರಂಪ್ ರಾಜತಾಂತ್ರಿಕತೆಗೆ ದ್ರೋಹ ಬಗೆದಿದ್ದಾರೆ: ಇರಾನ್ ವಿದೇಶಾಂಗ ಸಚಿವ ಅರಾಘ್ಚಿ ಆರೋಪ
ಟೆಹ್ರಾನ್: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರಾಜತಾಂತ್ರಿಕತೆಗೆ ದ್ರೋಹ ಬಗೆದಿದ್ದಾರೆ ಎಂದು ಇರಾನ್ ವಿದೇಶಾಂಗ ಸಚಿವ ಸಯ್ಯಿದ್ ಅಬ್ಬಾಸ್ ಅರಾಘ್ಚಿ ಆರೋಪಿಸಿದ್ದಾರೆ. ಎರಡೂ ದೇಶಗಳ ನಡುವೆ ಸಂಕೀರ್ಣ ಪರಮಾಣು ಮಾತುಕತೆಗಳು ನಡೆಯುತ್ತಿರುವ ಸಂದರ್ಭದಲ್ಲಿ ಇರಾನ್ ಮೇಲೆ ಅಮೆರಿಕ ಬಾಂಬ್ ದಾಳಿ ನಡೆಸಿದೆ ಎಂದು ಅವರು ಟೀಕಿಸಿದ್ದಾರೆ. ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿರುವ ಅರಾಘ್ಚಿ, “ಸಂಕೀರ್ಣ ಪರಮಾಣು ಮಾತುಕತೆಗಳನ್ನು ರಿಯಲ್ ಎಸ್ಟೇಟ್ ವ್ಯವಹಾರಗಳಂತೆ ಪರಿಗಣಿಸಿ, ದೊಡ್ಡ ಸುಳ್ಳುಗಳಿಂದ ವಾಸ್ತವಗಳನ್ನು ಮರೆಮಾಡಿದಾಗ ವಾಸ್ತವಿಕ ನಿರೀಕ್ಷೆಗಳು ಎಂದಿಗೂ ಈಡೇರಲಾರವು. ಅದರ ಪರಿಣಾಮವಾಗಿ ಮಾತುಕತೆಯ ಮೇಜುಗಳ ಮೇಲೆಯೇ ದ್ವೇಷದಿಂದ ಬಾಂಬ್ ದಾಳಿ ನಡೆಯುತ್ತದೆ. ಟ್ರಂಪ್ ರಾಜತಾಂತ್ರಿಕತೆಗೆ ಮಾತ್ರವಲ್ಲ, ಅವರನ್ನು ಆಯ್ಕೆ ಮಾಡಿದ ಅಮೆರಿಕದ ಜನರಿಗೂ ದ್ರೋಹ ಬಗೆದಿದ್ದಾರೆ” ಎಂದು ಹೇಳಿದ್ದಾರೆ. ಇದಕ್ಕೂ ಮೊದಲು ಶ್ವೇತಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಟ್ರಂಪ್, ಇರಾನ್ನ ಇಸ್ಲಾಮಿಕ್ ಆಡಳಿತವನ್ನು ತೀವ್ರವಾಗಿ ಟೀಕಿಸಿದ್ದರು. ಅವರು ಪರಮಾಣು ಶಸ್ತ್ರಾಸ್ತ್ರಗಳನ್ನು ಪಡೆದಿದ್ದರೆ ಅವುಗಳನ್ನು ಬಳಸುತ್ತಿದ್ದರು ಎಂದು ಹೇಳಿದ್ದರು. “ನಾವು ಈಗ ಕೈಗೊಂಡ ಕ್ರಮಗಳನ್ನು ಕೈಗೊಳ್ಳದಿದ್ದರೆ ಪರಮಾಣು ಯುದ್ಧವೇ ಸಂಭವಿಸಬಹುದಾಗಿತ್ತು. ಅವರಿಗೆ ಪರಮಾಣು ಶಸ್ತ್ರಾಸ್ತ್ರಗಳು ಇದ್ದರೆ ಅವುಗಳನ್ನು ಬಳಸುತ್ತಿದ್ದರು. ಅವರು ಅಸ್ವಸ್ಥರು, ಮಾನಸಿಕವಾಗಿ ಅಸ್ವಸ್ಥರಾದ ಜನರು. ಅವರು ಕೋಪಗೊಂಡಿದ್ದಾರೆ. ಈ ಜನರು ಹುಚ್ಚರು. ಅವರ ಬಳಿ ಪರಮಾಣು ಶಸ್ತ್ರಾಸ್ತ್ರವಿದ್ದರೆ ಅದನ್ನು ಬಳಸುತ್ತಿದ್ದರು” ಎಂದು ಅವರು ಮಂಗಳವಾರ ರಾತ್ರಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದರು. ಅವರ ಅಭಿಪ್ರಾಯವನ್ನು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ ಸಹ ಪ್ರತಿಧ್ವನಿಸಿದ್ದರು. ಧಾರ್ಮಿಕ ಮೂಲಭೂತವಾದಿಗಳ ಕೈಗೆ ವಿನಾಶಕಾರಿ ಶಸ್ತ್ರಾಸ್ತ್ರಗಳು ಸಿಗದಿದ್ದಾಗ ಜಗತ್ತು ಹೆಚ್ಚು ಸುರಕ್ಷಿತವಾಗಿರುತ್ತದೆ ಎಂದು ಅವರು ಹೇಳಿದರು. “ ಅಮೆರಿಕ ಅಧ್ಯಕ್ಷರು ಅವರ ಕ್ಷಿಪಣಿಗಳು, ನೌಕಾಪಡೆ ಮತ್ತು ಡ್ರೋನ್ಗಳ ಸಾಮರ್ಥ್ಯವನ್ನು ಕುಂಠಿತಗೊಳಿಸುವ ನಿರ್ಧಾರ ಕೈಗೊಂಡಿದ್ದಾರೆ. ಅವರು ಪರಮಾಣು ಶಸ್ತ್ರಾಸ್ತ್ರಗಳನ್ನು ಪಡೆಯದಂತೆ ತಡೆಯುವುದು ಇದರ ಉದ್ದೇಶ. ಈ ಧಾರ್ಮಿಕ ನಾಯಕರು ಇಂತಹ ಶಸ್ತ್ರಾಸ್ತ್ರಗಳನ್ನು ಹೊಂದದಿದ್ದಾಗ ಜಗತ್ತು ಹೆಚ್ಚು ಸುರಕ್ಷಿತವಾಗಿರುತ್ತದೆ,” ಎಂದು ಅವರು ಹೇಳಿದ್ದರು.
Bengaluru-Hyderabad ಬುಲೆಟ್ ಟ್ರೈನ್: ಕೇವಲ 2 ಗಂಟೆ ಪ್ರಯಾಣ, 626 ಕಿಮೀ ಉದ್ದದ ಹಾದಿಯಲ್ಲಿ 12 ನಿಲ್ದಾಣಗಳು
ಬೆಂಗಳೂರು: ದಕ್ಷಿಣ ಭಾರತದ ಪ್ರಮುಖ ಐಟಿ ಹಬ್ಗಳಾದ ಬೆಂಗಳೂರು ಮತ್ತು ಹೈದರಾಬಾದ್ ನಡುವೆ ಸಂಪರ್ಕ ನೀಡುವ ಮಹತ್ವಾಕಾಂಕ್ಷೆಯ 'ಬೆಂಗಳೂರು-ಹೈದರಾಬಾದ್ ಬುಲೆಟ್ ರೈಲು' (ಹೈಸ್ಪೀಡ್ ರೈಲು ಕಾರಿಡಾರ್) ಯೋಜನೆಗೆ ಇದೀಗ ಭಾರಿ ವೇಗ ಸಿಕ್ಕಿದೆ. ಈ ಯೋಜನೆಗೆ ಸಂಬಂಧಿಸಿದಂತೆ ಕರ್ನಾಟಕದಲ್ಲಿ ಭೂಸ್ವಾಧೀನ ಪ್ರಕ್ರಿಯೆ ಮತ್ತು ಮಾರ್ಗ ನಕ್ಷೆ ಸಿದ್ಧಪಡಿಸುವ ಕುರಿತು ಕೇಂದ್ರ ರೈಲ್ವೆ ಅಧಿಕಾರಿಗಳು ರಾಜ್ಯ ಸರ್ಕಾರದೊಂದಿಗೆ ಮಹತ್ವದ
ಅಡುಗೆ ವಿಚಾರಕ್ಕೆ ಅತ್ತೆ- ಸೊಸೆ ಜಗಳ, ಮನನೊಂದ ಟೆಕ್ಕಿ ಆತ್ಮಹತ್ಯೆ
ಕೌಟುಂಬಿಕ ಕಲಹ, ಅತ್ತೆ ಸೊಸೆ ಜಗಳ , ಅತ್ತೆಯ ನಿರಂತರ ಕಿರುಕುಳದಿಂದ ಬೇಸತ್ತ ಟೆಕ್ಕಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಸುಷ್ಮಾ ಎನ್ನುವ ಎಂಜಿನೀಯರ್ ಆತ್ಮಹತ್ಯೆಗೆ ಶರಣಾಗಿದ್ದಾರೆ. ಕೌಟುಂಬಿಕ ಕಲಹದ ಜೊತೆಗೆ ವರದಕ್ಷಿಣೆ ಕಿರುಕುಳದ ಆರೋಪಗಳು ಕೇಳಿ ಬಂದಿವೆ. ಅತ್ತೆಗಾಗಿ ಹುಡುಕಾಟ ಮುಂದುವರೆದಿದೆ.
'ವಂತಾರ'ಕ್ಕೆ ಒಂದು ವರ್ಷ: ಆರೋಗ್ಯ ಸುಧಾರಿಸಿದ ಅನೇಕ ಪ್ರಾಣಿಗಳು ಮರಳಿ ಕಾಡಿಗೆ
ಜಾಮ್ನಗರ (ಗುಜರಾತ್) ಮಾರ್ಚ್4: ಪ್ರಧಾನಿ ನರೇಂದ್ರ ಮೋದಿ ಅವರು 'ವಂತಾರ'ವನ್ನು ಉದ್ಘಾಟಿಸಿ ಯಶಸ್ವಿಯಾಗಿ ಒಂದು ವರ್ಷವನ್ನು ಪೂರೈಸಿದೆ. ರಿಲಯನ್ಸ್ ಇಂಡಸ್ಟ್ರೀಸ್ ಮತ್ತು ರಿಲಯನ್ಸ್ ಫೌಂಡೇಶನ್ ಬೆಂಬಲದೊಂದಿಗೆ ಅನಂತ್ ಅಂಬಾನಿ ಅವರ ನೇತೃತ್ವದಲ್ಲಿ ಆರಂಭವಾದ ಈ ಸಂಸ್ಥೆ ಇಂದು ಜಾಗತಿಕ ಮಟ್ಟದಲ್ಲಿ ವನ್ಯಜೀವಿ ರಕ್ಷಣೆ, ಸುಧಾರಿತ ವೈದ್ಯಕೀಯ ಆರೈಕೆ ಮತ್ತು ಸಂರಕ್ಷಣೆಯಲ್ಲಿ ಮಹತ್ವದ ಪಾತ್ರವನ್ನು ಅದು ವಹಿಸುತ್ತಾ ಬಂದಿದೆ.
ಇರಾನ್ ಸುಪ್ರೀಂ ಲೀಡರ್ ಆಗಿದ್ದ ಆಯತೊಲ್ಲಾ ಅಲಿ ಖಮೇನಿ ಬಳಿಕ ಇರಾನ್ ಸರ್ವೋಚ್ಚ ನಾಯಕನಾಗಿ ಅವರ ಪುತ್ರ ಮೊಜ್ತಬಾ ಹೊಸೇನಿ ಖಮೇನಿಯನ್ನು ಆಯ್ಕೆ ಮಾಡಲಾಗಿದೆ ಎಂದು ವರದಿಯಾಗುತ್ತಿದೆ. ಈ ಬೆನ್ನಲ್ಲೇ, ಇರಾನ್ ಮುಂದಿನ ನಾಯಕರು ಯಾರೇ ಆಗಲಿ ಅವರ ನಿರ್ಮೂಲನೆಯೇ ನಮ್ಮ ಟಾರ್ಗೆಟ್ ಎಂದು ಘೋಷಿಸುವ ಮೂಲಕ ಇರಾನ್ ಮುಂದಿನ ಲೀಡರ್ ಇಸ್ರೇಲ್ ಹಿಟ್ ಲಿಸ್ಟ್ ನಲ್ಲಿರುವ ಟಾರ್ಗೆಟ್ ನಂಬರ್ ಒನ್ ಆಗಲಿದ್ದಾರೆ ಎಂದು ಇರಾನ್ ಗೆ ನೇರ ಬೆದರಿಕೆಯನ್ನು ಇಸ್ರೇಲ್ ರಕ್ಷಣಾ ಸಚಿವ ಹಾಕಿದ್ದಾರೆ. ಈ ಕುರಿತ ವರದಿ ಇಲ್ಲಿದೆ..
ಅಮೆರಿಕ ಮತ್ತು ಇಸ್ರೇಲ್ ದಾಳಿ, ದೇಶ ಬಿಟ್ಟು ಓಡಿ ಹೋಗುತ್ತಿರುವ ಇರಾನ್ ಜನ | Operation Roaring Lion
ಅಮೆರಿಕ ಸೇನೆ ಮತ್ತು ಇಸ್ರೇಲ್ ಸೇನೆ ಭೀಕರವಾಗಿ ಇರಾನ್ ರಾಜಧಾನಿ ತೆಹ್ರಾನ್ ಮೇಲೆ ದಾಳಿಯನ್ನ ಮಾಡುತ್ತಿದ್ದು, ಈ ದಾಳಿಯಲ್ಲಿ ಈಗಾಗಲೇ ಹತ್ತಿರ ಹತ್ತಿರ ಸಾವಿರ ಇರಾನ್ ನಾಗರಿಕರು ಜೀವ ಬಿಟ್ಟ ಆರೋಪ ಕೇಳಿಬಂದಿದೆ. ಇರಾನ್ ಆಡಳಿತ ಮಾಡುತ್ತಿರುವ ತಪ್ಪಿನಿಂದಾಗಿ ಈಗ ಸಾಮಾನ್ಯ ಜನರ ಸಾವು ಸಂಭವಿಸುತ್ತಿದೆ ಎಂಬ ಆರೋಪ ಕೇಳಿಬರುತ್ತಿರುವ ಬೆನ್ನಲ್ಲೇ, ಅಮೆರಿಕ ಮತ್ತು ಇಸ್ರೇಲ್ ದಾಳಿ
ನಮ್ಮ ಸರಕಾರ ಯಾರೊಬ್ಬರ ಫೋನ್ ಕದ್ದಾಲಿಕೆ ಮಾಡುತ್ತಿಲ್ಲ : ಸಚಿವ ರಾಮಲಿಂಗಾರೆಡ್ಡಿ
ಬೆಂಗಳೂರು : ʼಮಾಧ್ಯಮದವರು ಮೈಕ್ ಹಿಡಿಯುತ್ತಿದ್ದಂತೆ ಶಾಸಕರೇ ಎಲ್ಲವನ್ನೂ ಹೇಳುತ್ತಿರುವಾಗ ಫೋನ್ ಕದ್ದಾಲಿಕೆ ಮಾಡುವ ಅಗತ್ಯವೇನಿದೆ? ʼ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಪ್ರಶ್ನಿಸಿದ್ದಾರೆ. ರಾಜ್ಯ ಸರಕಾರದ ವಿರುದ್ಧ ಎಚ್ಡಿಕೆ ಮಾಡಿರುವ ಫೋನ್ ಕದ್ದಾಲಿಕೆ ಆರೋಪ ಸಂಬಂಧ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ನಮ್ಮ ಸರಕಾರವು ಯಾರೊಬ್ಬರ ಫೋನ್ ಕರೆಯನ್ನೂ ಕದ್ದಾಲಿಕೆ ಮಾಡುತ್ತಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಹಿಂದಿನ ರಾಜ್ಯ ಬಿಜೆಪಿ ಸರಕಾರ ಮತ್ತು ಈಗಿನ ಕೇಂದ್ರ ಸರಕಾರದ ವಿರುದ್ಧವೂ ಕದ್ದಾಲಿಕೆಯ ಆರೋಪವಿದೆ ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಸ್ವಾಮೀಜಿ ಅವರ ಫೋನ್ ಕದ್ದಾಲಿಕೆ ಮಾಡಿರುವ ಆರೋಪ ಇತ್ತು ಎಂದು ಉಲ್ಲೇಖಿಸಿದರು.
ಇರಾನ್ ವಿರುದ್ಧ ಹೋರಾಡಲು 50,000 ಅಮೆರಿಕ ಸೈನಿಕರು ಮಧ್ಯಪ್ರಾಚ್ಯ ಭಾಗದಲ್ಲಿ ಸನ್ನದ್ಧ | Operation Roaring Lion
ಅಮೆರಿಕ ಮತ್ತು ಇರಾನ್ ನಡುವೆ ಯುದ್ಧದ ಕಾರ್ಮೋಡ ಕ್ಷಣಕ್ಷಣಕ್ಕೂ ಮಧ್ಯಪ್ರಾಚ್ಯ ಭಾಗವನ್ನು &ಸುತ್ತಮುತ್ತಲಿನ ದೇಶಗಳನ್ನು ಕತ್ತಲಿನಲ್ಲಿ ಮುಳುಗುವಂತೆ ಮಾಡುತ್ತಿದೆ. ಏಕೆಂದರೆ ಇಡೀ ಪ್ರಪಂಚಕ್ಕೆ ಅಗತ್ಯ ಇರುವಂತಹ ಪೆಟ್ರೋಲ್, ಡೀಸೆಲ್ ಹಾಗೂ ತೈಲ ಸರಬರಾಜು ಆಗುವುದು ಇದೇ ಮಧ್ಯಪ್ರಾಚ್ಯ ಭಾಗದಿಂದ. ಹೀಗಿದ್ದಾಗಲೇ ದಿಢೀರ್ ಮಧ್ಯಪ್ರಾಚ್ಯ ಭಾಗದಲ್ಲೇ ಭೀಕರ ಯುದ್ಧ ಶುರುವಾಗಿ ಬಡಿದಾಟ ಹೆಚ್ಚಾದರೆ ಪರಿಸ್ಥಿತಿ ಹೇಗೆ ಇರಬೇಡ
ದುಬೈ: ದುಬೈನಲ್ಲಿ ಸಿಲುಕಿಕೊಂಡಿರುವ ಕರ್ನಾಟಕದ ಪ್ರವಾಸಿಗರ ಸ್ಥಿತಿಗತಿ ಕುರಿತು ತುರ್ತು ಮಾಹಿತಿ ನೀಡಲು ಹಾಗೂ ಅವರ ಸುರಕ್ಷಿತ ವಾಪಸಾತಿಗಾಗಿ ಸರ್ಕಾರದ ಮಧ್ಯಸ್ಥಿಕೆ ಕೋರಲು ಕನ್ನಡಿಗರ ಕೂಟ, ದುಬೈ ತಂಡವು ಖ್ಯಾತ ಅನಿವಾಸಿ ಉದ್ಯಮಿ ಡಾ. ರೊನಾಲ್ಡ್ ಕೊಲಾಸೊ ಅವರ ನಿವಾಸಕ್ಕೆ ಭೇಟಿ ನೀಡಿ ಚರ್ಚೆ ನಡೆಸಿತು. ಅಮೇರಿಕ-ಇಸ್ರೇಲ್ ಹಾಗು ಇರಾನ್ ನೇರ ಸಂಘರ್ಷದ ಪರಿಣಾಮ ಉಂಟಾದ ಅಸ್ಥಿರತೆಯ ನಡುವೆಯೂ ದುಬೈ ನಿಧಾನವಾಗಿ ಸಾಮಾನ್ಯ ಸ್ಥಿತಿಗೆ ಮರಳುತ್ತಿರುವ ಸಂದರ್ಭದಲ್ಲಿ ಈ ಭೇಟಿ ಮಹತ್ವ ಪಡೆದಿದೆ. ದುಬೈನಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿರುವ ಕನ್ನಡಿಗರ ಕೂಟದ ಪ್ರಮುಖರು, ವಿಮಾನಗಳ ರದ್ದತಿಯಿಂದಾಗಿ ಪ್ರವಾಸಿಗರು ಸೇರಿದಂತೆ ಅನೇಕ ಕನ್ನಡಿಗರು ಸಿಲುಕಿಕೊಂಡಿರುವ ಕುರಿತು ಮಾಹಿತಿ ನೀಡಿದರು. ಅವರಿಗೆ ವಸತಿ, ಆಹಾರ, ವೈದ್ಯಕೀಯ ನೆರವು ಮುಂತಾದ ಮೂಲಭೂತ ಅಗತ್ಯಗಳಿಗಾಗಿ ಕನ್ನಡಿಗರ ಕೂಟ ಹಾಗೂ ಇತರ ಸಂಘಟನೆಗಳು ನೀಡುತ್ತಿರುವ ತುರ್ತು ಸಹಾಯದ ವಿವರಗಳನ್ನು ಹಂಚಿಕೊಂಡರು. ಜೊತೆಗೆ ಕುಟುಂಬಗಳಲ್ಲಿ ಉಂಟಾಗಿರುವ ಆತಂಕದ ಸ್ಥಿತಿಯನ್ನೂ ಡಾ. ಕೊಲಾಸೊ ಅವರ ಗಮನಕ್ಕೆ ತಂದರು. ಕರ್ನಾಟಕ ಸರ್ಕಾರದೊಂದಿಗೆ ತಕ್ಷಣ ಸಂಪರ್ಕಿಸುವುದಾಗಿ, ದುಬೈಯ ಭಾರತೀಯ ರಾಯಭಾರ ಕಚೇರಿಯೊಂದಿಗೆ ಮಾತುಕತೆ ನಡೆಸಿ ವಾಪಸಿ ವಿಮಾನಗಳನ್ನು ಶೀಘ್ರಗತಿಯಲ್ಲಿ ವ್ಯವಸ್ಥೆ ಮಾಡುವಂತೆ ಒತ್ತಾಯಿಸುವುದಾಗಿ ಡಾ. ರೊನಾಲ್ಡ್ ಕೊಲಾಸೊ ಭರವಸೆ ನೀಡಿದರು. ಪ್ರವಾಸಿಗರನ್ನು ಸುರಕ್ಷಿತವಾಗಿ ಮನೆಗೆ ಕಳುಹಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವುದಾಗಿ ಅವರು ತಿಳಿಸಿದ್ದಾರೆ. ಈ ವೇಳೆ ಕನ್ನಡಿಗರ ಕೂಟ, ದುಬೈಯ ಅಧ್ಯಕ್ಷ ಅರುಣ್ ಕುಮಾರ್, ಸದನ್ ದಾಸ್(ಸಂಸ್ಥಾಪಕ ಮತ್ತು ಮುಖ್ಯ ಸಲಹೆಗಾರ), ಚೇತನ್ ಸುಬ್ರಹ್ಮಣ್ಯ(ಪ್ರಧಾನ ಕಾರ್ಯದರ್ಶಿ), ಮಂಜುನಾಥ್ ರಾಜನ್(ಸಲಹೆಗಾರ), ದೀಪಕ್ ಸೋಮಶೇಖರ್(ಸಲಹೆಗಾರ), ಭಾರ್ಗವ್ ಶರ್ಮಾ(ಸಲಹೆಗಾರ), ಮಾಧವ್ ಕಿರಣ್(ದುಬೈನಲ್ಲಿ ಅನೇಕ ಪ್ರವಾಸಿಗರಿಗೆ ನೆರವಾದ ಉದ್ಯಮಿ) ಹಾಜರಿದ್ದರು.
ದಾಖಲೆ ಬಜೆಟ್ ಗೆ ಸಿದ್ದರಾಮಯ್ಯ ಅಂತಿಮ ಸಿದ್ದತೆ: ಆಯವ್ಯಯ ಮಂಡನೆಯ ದಿನ ವಿಪಕ್ಷಗಳ ಪ್ಲ್ಯಾನ್ ಏನು?
ಮಾರ್ಚ್ 6 ರಂದು ಸಿಎಂ ಸಿದ್ದರಾಮಯ್ಯ ಅವರು ತಮ್ಮ 17 ನೇ ಬಜೆಟ್ ಮಂಡನೆ ಮಾಡಲಿದ್ದಾರೆ. ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಚರ್ಚೆಯ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರ ಬಜೆಟ್ ಬಗ್ಗೆ ಸಾಕಷ್ಟು ಕುತೂಹಲ ಕೆರಳಿಸಿದೆ. ಬಜೆಟ್ ಗೆ ಸಿದ್ದರಾಮಯ್ಯ ಅಂತಿಮ ಸಿದ್ದತೆ ಮಾಡಿಕೊಳ್ಳುತ್ತಿದ್ದಾರೆ. ಈ ನಡುವೆ ಆಯವ್ಯಯ ಮಂಡನೆಯ ದಿನ ವಿಪಕ್ಷಗಳ ಪ್ಲ್ಯಾನ್ ಏನು ಎಂಬುವುದು ಕೂಡಾ ಅಷ್ಟೇ ಕುತೂಹಲಕ್ಕೆ ಕಾರಣವಾಗಿದೆ. ಬಜೆಟ್ ದಿನ ವಿಪಕ್ಷಗಳು ಏನಾದ್ರೂ ಗಮನ ಸೆಳೆಯುವ ಹೋರಾಟ ನಡೆಸುತ್ತಾ? ಎಂಬುವುದು ಕಾದುನೋಡಬೇಕಾಗಿದೆ.
ಕೆಎಸ್ಐಸಿ ಕಾರ್ಖಾನೆ ಮುಚ್ಚಲಾಗುತ್ತದೆ ಎಂಬುದು ವದಂತಿ: ಕಾಂಗ್ರೆಸ್ ಮುಖಂಡ
ತಿ ನರಸೀಪುರದಲ್ಲಿರುವ ಕೆಎಸ್ಐಸಿ ಕಾರ್ಖಾನೆಯನ್ನು ಮುಚ್ಚಿ,ಕ್ರೀಡಾಂಗಣ ನಿರ್ಮಿಸಲಾಗುತ್ತದೆ ಎನ್ನುವ ವಿಚಾರ ದೊಡ್ಡ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಕ್ರೀಡಾಂಗಣ ನಿರ್ಮಾಣ ಮಾಡುವುದರಿಂದ ಕಾರ್ಖಾನೆ ಮುಚ್ಚಲಾಗುತ್ತದೆ ಎಂಬುದು ವದಂತಿ ಎಂದು ಕಾಂಗ್ರೆಸ್ ಮುಖಂಡ ಕೆ.ವಿ.ಮಲ್ಲೇಶ್ ಹೇಳಿದ್ದಾರೆ.
ದಾಖಲೆಯ 17ನೇ ಬಜೆಟ್ ಮಂಡಿಸಲಿರುವ ಸಿದ್ದರಾಮಯ್ಯ: ನಿರೀಕ್ಷೆಗಳೇನು? ಬೇಡಿಕೆಗಳೇನು?
ದಾಖಲೆಯ 17ನೇ ಬಜೆಟ್ ಮಂಡಿಸಲು ಸಿಎಂ ಸಿದ್ದರಾಮಯ್ಯ ಸಜ್ಜಾಗಿದ್ದಾರೆ. ಈ ಬಾರಿಯ ಬಜೆಟ್ನಲ್ಲಿ ಏನನ್ನೆಲ್ಲಾ ನಿರೀಕ್ಷಿಸಬಹುದು, ಯಾವೆಲ್ಲಾ ಯೋಜನೆಗಳಿಗೆ ಅನುದಾನ ಸಿಗಲಿದೆ, ಯಾವೆಲ್ಲಾ ವಲಯಕ್ಕೆ ಆದ್ಯತೆ ಸಿಗಲಿದೆ ಎಂಬುದರ ಸಂಪೂರ್ಣ ವಿವರ ಇಲ್ಲಿದೆ...
ಮಂಗಳೂರು : ಪಿ.ಎ. ಕಾಲೇಜಿನ ಆಯಿಷತ್ ಲುತ್ಫಾ ನಜಾ B.Sc.ಯಲ್ಲಿ ಪ್ರಥಮ ರ್ಯಾಂಕ್
ಮಂಗಳೂರು: ಪಿ.ಎ. ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿನಿ ಆಯಿಷತ್ ಲುತ್ಫಾ ನಜಾ ಕೆ.ಎ. ಅವರು ಬಿ.ಎಸ್.ಸಿ. (ಆಹಾರ, ಪೋಷಣಾ ವಿಜ್ಞಾನ ಮತ್ತು ಡಯಟೆಟಿಕ್ಸ್) ಪದವಿ ಕೋರ್ಸ್ ನಲ್ಲಿ ಪ್ರಥಮ ರ್ಯಾಂಕ್ ಗಳಿಸಿದ್ದಾರೆ. ಇವರು ಒಟ್ಟು 4550 ಅಂಕಗಳಲ್ಲಿ 4220 ಅಂಕಗಳನ್ನು ಪಡೆದು ಶೇಕಡ 92.75 ಸಾಧನೆ ಮಾಡಿದ್ದು, 9.56 ಸಿಜಿಪಿಎ (CGPA) ಗಳಿಸುವ ಮೂಲಕ ತಮ್ಮ ಉತ್ತಮ ಶೈಕ್ಷಣಿಕ ಮಟ್ಟದಲ್ಲಿ ಮೇಲುಗೈ ಸಾಧಿಸಿದ್ದಾರೆ. ಲುತ್ಫಾ ಅವರು ಕಾಸರಗೋಡು ಜಿಲ್ಲೆಯ ತೆಕ್ಕಿಲ್ ನಿವಾಸಿಗಳಾದ ಅಬ್ದುಲ್ಲ ಕೆ ಮತ್ತು ಆಯಿಶತ್ ಫರೀದಾ ದಂಪತಿಯ ಪುತ್ರಿ. ಅವರು ಪ್ರಸ್ತುತ ಮಂಗಳೂರು ವಿಶ್ವವಿದ್ಯಾಲಯದ ಮಂಗಳಗಂಗೋತ್ರಿಯಲ್ಲಿ ಆಹಾರ ವಿಜ್ಞಾನ ಮತ್ತು ಪೋಷಣಾ ವಿಷಯದಲ್ಲಿ ಸ್ನಾತಕೋತ್ತರ ಪದವಿ ಅಭ್ಯಾಸ ಮಾಡುತ್ತಿದ್ದಾರೆ. ಆಯಿಷತ್ ಲುತ್ಫಾ ನಜಾ ಕೆ.ಎ. ಅವರ ಈ ವಿಶಿಷ್ಟ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು ಹಾಗೂ ಸಿಬ್ಬಂದಿ ವರ್ಗ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
ಇರಾನ್ ವಿರುದ್ದ ಆರಂಭಿಕ ಯಶಸ್ಸು ಸಿಕ್ಕರೂ, ಅಮೆರಿಕದಲ್ಲಿ ಟ್ರಂಪ್’ಗೆ ಸೋಲು : ಏನನ್ನುತ್ತಿದೆ CNN ಸಮೀಕ್ಷೆ?
CNN Survey : ಮಧ್ಯಪ್ರಾಚ್ಯದಲ್ಲಿ ಯುದ್ದದ ಕಾರ್ಮೋಡ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ದದಲ್ಲಿ ಅಮೆರಿಕಾ ಮಧ್ಯಪ್ರವೇಶಿಸಿರುವುದು ಸರಿಯೇ ಎನ್ನುವ ಸಮೀಕ್ಷೆಯೊಂದನ್ನು ಸುದ್ದಿಸಂಸ್ಥೆಯೊಂದು ನಡೆಸಿತ್ತು. ಅದಕ್ಕೆ, ಬಹುಪಾಲು ಜನರು, ಎರಡು ದೇಶಗಳ ನಡುವಿನ ಸಮರದಲ್ಲಿ ಮೂಗು ತೂರಿಸಬಾರದಿತ್ತು ಎನ್ನುವ ಅಭಿಪ್ರಾಯ ವ್ಯಕ್ತವಾಗಿದೆ.
ಕ್ರಿಕೆಟ್ ಸಜೀಪ ವಾಟ್ಸಾಪ್ ಗ್ರೂಪ್ ವತಿಯಿಂದ ಸಾರ್ವಜನಿಕ ಇಫ್ತಾರ್ ಕೂಟ
ಬಂಟ್ವಾಳ : ಕ್ರಿಕೆಟ್ ಸಜೀಪ ವಾಟ್ಸಾಪ್ ಯುವಕರ ಬಳಗದ ವತಿಯಿಂದ 2 ನೇ ವರ್ಷದ ಸಾರ್ವಜನಿಕ ಇಫ್ತಾರ್ ಕಾರ್ಯಕ್ರಮವು ಇತ್ತೀಚೆಗೆ ಸಜೀಪ ನಡು ಬಸ್ ಸ್ಟಾಂಡ್ ಬಳಿಯ ಮೈದಾನದಲ್ಲಿ ನಡೆಯಿತು. ಇತ್ತೀಚೆಗೆ ಮರಣಹೊಂದಿದ ಬಳಗದ ಸದಸ್ಯರಾದ ಮರ್ಹೂಂ ಅರ್ಫಝ್ ಮತ್ತು ರಿಝ್ವಾನ್ ಬೊಳಮೆ ರವರ ಸ್ಮರಣಾರ್ಥ ನಡೆದ ಈ ಇಫ್ತಾರ್ ಕೂಟದಲ್ಲಿ ನೂರಾರು ಮಂದಿ ಭಾಗವಹಿಸಿದ್ದರು.
ವೇಣೂರು ಹಿದಾಯತುಲ್ ಇಸ್ಲಾಂ ಮದರಸಕ್ಕೆ ಶೇ.100 ಫಲಿತಾಂಶ
ಬೆಳ್ತಂಗಡಿ : ಸುನ್ನಿ ವಿದ್ಯಾಭಾಸ ಬೋರ್ಡ್ ನಡೆಸಿದ 2025 - 26 ನೇ ಸಾಲಿನ 5,7, ಮತ್ತು 10 ನೇ ತರಗತಿಗಳ ಪಬ್ಲಿಕ್ ಪರೀಕ್ಷೆಯಲ್ಲಿ ವೇಣೂರು ಮುಹಿಯುದ್ದೀನ್ ಜುಮಾ ಮಸ್ಜಿದ್ ಅಧೀನದಲ್ಲಿರುವ ಹಿದಾಯತುಲ್ ಇಸ್ಲಾಂ ಮದರಸ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ. ಮೂವತ್ತು ವಿದ್ಯಾರ್ಥಿಗಳ ಪೈಕಿ 10ನೇ ತರಗತಿಯ ಮೂರು ವಿದ್ಯಾರ್ಥಿನಿಗಳು ಟಾಪರ್ಸ್ , ನಾಲ್ಕು ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ , 7ನೇ ತರಗತಿಯ 7 ವಿದ್ಯಾರ್ಥಿಗಳು ಹಾಗೂ 5 ನೇ ತರಗತಿಯ ಎಂಟು ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ನಲ್ಲಿ ತೇರ್ಗಡೆ ಹೊಂದಿದ್ದು, ಉಳಿದಂತೆ 8 ವಿದ್ಯಾರ್ಥಿಗಳು ಪ್ರಥಮ ದರ್ಜೆಯೊಂದಿಗೆ ಉತ್ತೀರ್ಣರಾಗಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
ಶ್ರೀನಗರ : ಇರಾನ್ ನ ಪರಮೋಚ್ಚ ನಾಯಕ ಆಯತುಲ್ಲಾ ಅಲಿ ಖಾಮಿನೈ ಹತ್ಯೆ ಕುರಿತು ಸಾಮಾಜಿಕ ಮಾಧ್ಯಮಗಳಲ್ಲಿನ ಪೋಸ್ಟ್ಗಳಿಗೆ ಸಂಬಂಧಿಸಿ ನ್ಯಾಷನಲ್ ಕಾನ್ಫರೆನ್ಸ್ ಸಂಸದ ಅಗಾ ಸೈಯದ್ ರುಹುಲ್ಲಾ ಮೆಹದಿ ಮತ್ತು ಶ್ರೀನಗರದ ಮಾಜಿ ಮೇಯರ್ ಜುನೈದ್ ಅಝೀಂ ಮಟ್ಟು ವಿರುದ್ಧ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. “ಭಯ ಹುಟ್ಟಿಸುವ, ಸಾರ್ವಜನಿಕ ಸುವ್ಯವಸ್ಥೆಗೆ ಭಂಗ ತರುವ ಮತ್ತು ಕಾನೂನುಬಾಹಿರ ಚಟುವಟಿಕೆಗಳನ್ನು ಪ್ರಚೋದಿಸುವ ಉದ್ದೇಶದಿಂದ ಡಿಜಿಟಲ್ ಮತ್ತು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಸುಳ್ಳು, ಕಲ್ಪಿತ ಮತ್ತು ದಾರಿತಪ್ಪಿಸುವ ವಿಷಯಗಳ ಪ್ರಸರಣ ಆರೋಪಿಸಿ ಇಬ್ಬರು ನಾಯಕರ ವಿರುದ್ಧ ಪ್ರಕರಣಗಳನ್ನು ದಾಖಲಿಸಿರುವುದಾಗಿ” ಪೊಲೀಸರು ತಿಳಿಸಿದ್ದಾರೆ. ಶ್ರೀನಗರದ ಸೈಬರ್ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 197(1)(ಡಿ) ಮತ್ತು 353(1)(ಬಿ) ಅಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ. ಎರಡೂ ಪ್ರಕರಣಗಳ ಕುರಿತು ತನಿಖೆ ಪ್ರಗತಿಯಲ್ಲಿದೆ. “ನ್ಯಾಷನಲ್ ಕಾನ್ಫರೆನ್ಸ್ ಸಂಸದರ ಭದ್ರತೆಯನ್ನು ಕಡಿತಗೊಳಿಸಲಾಗಿದೆ ಮತ್ತು ಅವರ ಫೇಸ್ಬುಕ್ ಪುಟವನ್ನು ನಿರ್ಬಂಧಿಸಲಾಗಿದೆ. ಆಯತುಲ್ಲಾ ಅಲಿ ಖಾಮಿನೈ ಅವರ ಹತ್ಯೆ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದ್ದರಿಂದ ಮತ್ತು ಬಿಜೆಪಿ ನೇತೃತ್ವದ ಸರಕಾರದ ವಿರುದ್ಧ ಮಾತನಾಡಿದ ಕಾರಣ ಭದ್ರತೆಯನ್ನು ಹಿಂಪಡೆಯಲಾಗಿದೆ” ಎಂದು ಮಾಜಿ ಮೇಯರ್ ಜುನೈದ್ ಅಝೀಂ ಮಟ್ಟು ಹೇಳಿದ್ದಾರೆ. ಇರಾನಿನ ಸರ್ವೋಚ್ಚ ನಾಯಕನ ಹತ್ಯೆಯನ್ನು ವಿರೋಧಿಸಿ ನಡೆದ ಪ್ರತಿಭಟನೆಗಳ ನಂತರ ಶ್ರೀನಗರದಲ್ಲಿ ನಿರ್ಬಂಧಗಳನ್ನು ವಿಧಿಸಲಾಗಿದೆ. ಮಾರ್ಚ್ 7ರವರೆಗೆ ಎಲ್ಲಾ ಶಿಕ್ಷಣ ಸಂಸ್ಥೆಗಳನ್ನು ಬಂದ್ ಮಾಡಲಾಗಿದೆ.
ಅಮೆರಿಕಾ-ಇಸ್ರೇಲ್ ನಡೆಸಿದ ಜಂಟಿ ದಾಳಿಯಲ್ಲಿ ಇರಾನ್ ಸುಪ್ರೀಂ ಲೀಡರ್ ಆಯತೊಲ್ಲಾ ಅಲಿ ಖಮೇನಿ ಹತ್ಯೆಗೀಡಾಗಿದ್ದಾರೆ. ಸದ್ಯ ಇರಾನ್ ನಲ್ಲಿ ಉದ್ವಿಗ್ನ ಪರಿಸ್ಥಿತಿಯ ನಡುವೆಯೂ ಖಮೇನಿ ಜನ್ಮಸ್ಥಳ ಮಶಾದ್ ನಲ್ಲಿ ಅಂತ್ಯಕ್ರಿಯೆ ನೆರವೇರಿಸಿ ಅಲ್ಲೇ ಸಮಾಧಿ ಮಾಡಲು ನಿರ್ಧರಿಸಿದ್ದು, ಇದಕ್ಕೂ ಮುನ್ನ ಟೆಹ್ರಾನ್ ನಲ್ಲಿ ಅಂತಿಮ ದರ್ಶನ ಸಮಾರಂಭವನ್ನು ನಡೆಸಲಾಗುವುದು ಎಂದು ಇರಾನ್ ಮಾಧ್ಯಮಗಳು ತಿಳಿಸಿರುವುದಾಗಿ ವರದಿಯಾಗಿದೆ. ಆದರೆ, ಇನ್ನು, ಈ ಕಾರ್ಯಕ್ರಮಗಳ ಔಪಚಾರಿಕೆ ವೇಳಾಪಟ್ಟಿ ಬಹಿರಂಗ ಪಡಿಸಲಾಗಿಲ್ಲ. ಇತ್ತ ಖಮೇನಿ ನಿಧನದ ಬಳಿಕ ಇರಾನ್ ನಾಯಕತ್ವವನ್ನು ಖಮೇನಿ ಪುತ್ರ ಮೊಜ್ತಬಾ ಹೊಸೇನಿ ಖಮೇನಿಗೆ ವಹಿಸಲಾಗಿದೆ.
ಇರಾನ್ ಮತ್ತು ಅಮೆರಿಕ ನಡುವೆ ಯುದ್ಧ, ಉತ್ತರ ಕೊರಿಯಾ ಸರ್ವಾಧಿಕಾರಿ ಹೆಸರು ವೈರಲ್ | Operation Roaring Lion
ಇರಾನ್ ಮತ್ತು ಅಮೆರಿಕ ಒಂದು ಕಡೆ ಮಧ್ಯಪ್ರಾಚ್ಯ ಭಾಗದಲ್ಲಿ ಬಡಿದಾಡುತ್ತಿದ್ದು, ಸಾವಿನ ಸಂಖ್ಯೆ ಕ್ಷಣಕ್ಷಣಕ್ಕೂ ಹೆಚ್ಚಾಗುತ್ತಾ ಇದೆ. ಇಸ್ರೇಲ್ ಜೊತೆಗೆ ಸೇರಿ ಅಮೆರಿಕ ಘೋರವಾಗಿ ದಾಳಿ ಮಾಡುತ್ತಾ ಇದ್ದು, ಇರಾನ್ ನೆಲವನ್ನು ಪುಡಿಪುಡಿ ಮಾಡಲು ಮುಂದೆ ನುಗ್ಗಿದೆ. ಈವರೆಗೂ ಸುಮಾರು 800 ಜನ ಅಮೆರಿಕ ಹಾಗೂ ಇಸ್ರೇಲ್ ನಡೆಸಿದ ದಾಳಿಯಲ್ಲಿ ಇರಾನ್ ನೆಲದಲ್ಲಿ ಬಲಿಯಾಗಿದ್ದು, ದೊಡ್ಡ ದೊಡ್ಡ
Gundlupete | ಜಮೀನಿನಲ್ಲಿ ಚಿರತೆ ಮರಿಗಳು ಪತ್ತೆ
ಚಾಮರಾಜನಗರ : ರೈತರ ಜಮೀನಿನಲ್ಲಿ ಎರಡು ಚಿರತೆ ಮರಿಗಳು ಪತ್ತೆಯಾಗಿರುವ ಘಟನೆ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲ್ಲೂಕಿನ ಪಡಗೂರು ಗ್ರಾಮದಲ್ಲಿ ನಡೆದಿದೆ. ಗುಂಡ್ಲುಪೇಟೆ ತಾಲ್ಲೂಕಿನ ಪಡಗೂರು ಗ್ರಾಮದ ಶಿವಕುಮಾರ್ ಎಂಬವರ ಬಾಳೆತೋಟದಲ್ಲಿ ಎರಡು ಚಿರತೆ ಮರಿಗಳು ಕಾಣಿಸಿಕೊಂಡಿದ್ದು, ಮೂರು ತಿಂಗಳ ಮರಿಗಳು ಎಂಬ ಅಂದಾಜು ಮಾಡಲಾಗಿದೆ. ತಾಯಿ ಚಿರತೆ ಪತ್ತೆಗೆ ಅರಣ್ಯ ಇಲಾಖೆ ಅಧಿಕಾರಿಗಳು ಮುಂದಾಗಿ, ಮರಿಗಳ ಸಮೇತ ಬೋನ್ ಇರಿಸಿ ತಾಯಿ ಚಿರತೆ ಸೆರೆಗೆ ಚಿಂತನೆ ನಡೆಸಲಾಗಿದೆ.
ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ಗೆ ಸಿದ್ದರಾಮಯ್ಯ ಪತ್ರ
ಐಪಿಎಲ್ ಕ್ರಿಕೆಟ್ ಪಂದ್ಯಾಟಕ್ಕೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅವಕಾಶ ನೀಡುವ ಕುರಿತಾಗಿ ಸರ್ಕಾರ ಮತ್ತು ಆರ್ ಸಿ ಬಿ ಹಾಗೂ ಕೆಎಸ್ಸಿಎ ನಡುವೆ ಸಾಕಷ್ಟು ಹಗ್ಗಜಗ್ಗಾಟ ನಡೆಯುತ್ತಿತ್ತು. ಕೊನೆಗೂ ಇದೀಗ ಕ್ರಿಕೆಟ್ ಪಂದ್ಯಾಟಕ್ಕೆ ಸರ್ಕಾರ ಒಪ್ಪಿಗೆ ನೀಡಿದೆ. ಆದರೆ ಪ್ರತಿನಿತ್ಯ ಪರಿಶೀಲನೆ ಹಾಗೂ ಅಗತ್ಯ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗುವುದು ಎಂದು ಗೃಹ ಸಚಿವ ಡಾ. ಜಿ ಪರಮೇಶ್ವರ್ ಮಾಹಿತಿಯನ್ನು ನೀಡಿದ್ದಾರೆ. ಈ ಕುರಿತಾಗಿ ಅವರು ಏನು ಹೇಳಿದ್ದಾರೆ ಎಂಬ ವಿವರ ಇಲ್ಲಿದೆ.
ಬೆಂಗಳೂರು : ಪರೀಕ್ಷೆಗೆ ಹೆದರಿ ಮನೆ ಬಿಟ್ಟು ಹೋದ ವಿದ್ಯಾರ್ಥಿನಿಯರು, ಕುಟುಂಬಸ್ಥರ ಕಣ್ಣೀರು
ದ್ವಿತೀಯ ಪಿಯುಸಿ ಪರೀಕ್ಷೆ ವಿದ್ಯಾರ್ಥಿಗಳ ಜೀವನದಲ್ಲಿ ಮಹತ್ವದ ಘಟ್ಟ. ಹಾಗಾಗಿ ಸಹಜವಾಗಿ ಪರೀಕ್ಷಾ ಭಯ ವಿದ್ಯಾರ್ಥಿಗಳಲ್ಲಿ ಇರುತ್ತದೆ. ಅದರಂತೆ ಪರೀಕ್ಷಾ ಭಯದಿಂದ ಬೆಂಗಳೂರಿನಲ್ಲಿ ಇಬ್ಬರು ವಿದ್ಯಾರ್ಥಿನಿಯರು ಮನೆ ಬಿಟ್ಟು ಹೋಗಿದ್ದಾರೆ. ವಿದ್ಯಾರಣ್ಯಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಸತತ ಕುಸಿತದ ಹಾದಿಯಲ್ಲಿ ಚಿನ್ನ- ಬೆಳ್ಳಿ
ಅಮೆರಿಕನ್ ಡಾಲರ್ ಬೆಲೆಯು ಒಂದು ತಿಂಗಳಿಗೂ ಮೀರಿದ ಉತ್ತಮ ಸ್ಥಿತಿಗೆ ತಲುಪಿದೆ. ಪ್ರಬಲವಾಗಿರುವ ಅಮೆರಿಕನ್ ಡಾಲರ್ ಕಾರಣದಿಂದ ಲೋಹಗಳ ಬೇಡಿಕೆ ಕಡಿಮೆಯಾಗಿದೆ. ಫೆಬ್ರವರಿ 23 ಸೋಮವಾರದಿಂದ ಚಿನ್ನದ ಬೆಲೆ ತುಸು ಏರು ಹಾದಿಯಲ್ಲಿತ್ತು. ಕಳೆದ ಶನಿವಾರ ಗ್ರಾಂಗೆ 300 ರೂ. ಮೀರಿ ಏರಿದ ನಂತರ ರವಿವಾರವೂ ಗ್ರಾಂಗೆ 437 ರೂ. ಏರಿಕೆಯಾಗಿ 17 ಸಾವಿರದ ಗಡಿ ದಾಟಿತ್ತು. ಸೋಮವಾರ ದಿಢೀರ್ ಕುಸಿತ ಕಂಡ ಚಿನ್ನದ ಬೆಲೆ ಮತ್ತೆ ಗ್ರಾಂಗೆ 16,980 ರೂ.ಗೆ ಬಂದು ನಿಂತಿತ್ತು, ನಂತರ ಸಂಜೆ ವೇಳೆ ತುಸು ಚೇತರಿಸಿಕೊಂಡ ಬೆಲೆ ಮಂಗಳವಾರ ಮತ್ತೆ ತುಸು ಕುಸಿದಿದೆ. ಇದೀಗ ಬುಧವಾರ ಚಿನ್ನ-ಬೆಳ್ಳಿಯ ಬೆಲೆ ತೀವ್ರವಾಗಿ ಕುಸಿದಿದೆ. ಚಿನ್ನ-ಬೆಳ್ಳಿ ಬೆಲೆ ಕುಸಿತಕ್ಕೆ ಕಾರಣವೇನು? ಜನವರಿಯ ಗರಿಷ್ಠ ಬೆಲೆಗೆ ಹೋಲಿಸಿದರೆ, ಚಿನ್ನದ ಬೆಲೆ ಶೇ 3ರಷ್ಟು ಮತ್ತು ಬೆಳ್ಳಿ ಬೆಲೆ ಶೇ 11ರಷ್ಟು ಕುಸಿದಿದೆ. ಕಳೆದ 2-3 ದಿನಗಳಿಂದ ಚಿನ್ನದ ಬೆಲೆ ಶೇ 1.4ರಷ್ಟು ಮತ್ತು ಬೆಳ್ಳಿ ಬೆಲೆ ಶೇ 6.5ರಷ್ಟು ಕುಸಿದಿದೆ. ಹಾಗಿದ್ದರೆ ಅಮೂಲ್ಯ ಲೋಹಗಳ ಬೆಲೆ ಕುಸಿಯುತ್ತಲೇ ಹೋಗಲಿದೆಯೇ ಎನ್ನುವ ಪ್ರಶ್ನೆ ಮಾಡುತ್ತಿದೆ. ಅಮೆರಿಕ ಮತ್ತು ಇಸ್ರೇಲ್ ಜೊತೆಗೂಡಿ ಇರಾನ್ ಮೇಲೆ ದಾಳಿ ಮಾಡಿರುವುದು, ಜಾಗತಿಕ ಭೌಗೋಳಿಕ ರಾಜಕೀಯದ ಉದ್ವಿಗ್ನತೆ ಮತ್ತು ಮಧ್ಯಪ್ರಾಚ್ಯದಲ್ಲಿ ಸಂಘರ್ಷದ ವಾತಾವರಣದ ನಡುವೆಯೂ ಚಿನ್ನ ಮತ್ತು ಬೆಳ್ಳಿಯ ಬೆಲೆಗಳು ಕುಸಿದಿವೆ. ಅಮೆರಿಕನ್ ಡಾಲರ್ ಬೆಲೆಯೇರಿಕೆ ಮತ್ತು ಹಣದುಬ್ಬರ ಏರುವ ಕಳವಳದಲ್ಲಿ ಮಾರುಕಟ್ಟೆಯ ಗಮನವು ಅಮೆರಿಕದ ಕೇಂದ್ರೀಯ ಬ್ಯಾಂಕ್ ಫೆಡರಲ್ ರಿಸರ್ವ್ ಕೈಗೊಂಡ ನೀತಿ ನಿರೂಪಣೆಗೆ ಸಂಬಂಧಿಸಿದ ನಿರ್ಧಾರಗಳ ಕಡೆಗೆ ಹೋಗಿದೆ. ಹಾರ್ಮುಜ್ ಜಲಸಂಧಿಯಲ್ಲಿ ಹಡಗುಗಳಿಗೆ ತೊಂದರೆಯಾಗಿರುವುದೂ ಅನಿಶ್ಚಿತತೆಗೆ ಕೊಡುಗೆ ನೀಡಿದೆ. ಹೀಗಾಗಿ ವ್ಯಾಪಾರಿಗಳು ಆರ್ಥಿಕ ದತ್ತಾಂಶ, ತೈಲ ಬೆಲೆಗಳು ಮತ್ತು ಕೇಂದ್ರೀಯ ಬ್ಯಾಂಕ್ಗಳ ಸೂಚನೆಗಳನ್ನು ಗಮನಿಸಿ ಹೂಡಿಕೆ ಮಾಡುತ್ತಿದ್ದಾರೆ. ಅಮೆರಿಕನ್ ಡಾಲರ್ ಬೆಲೆಯು ಒಂದು ತಿಂಗಳಿಗೂ ಮೀರಿದ ಉತ್ತಮ ಸ್ಥಿತಿಗೆ ತಲುಪಿದೆ. ಹೀಗಾಗಿ ವಿದೇಶಿ ಖರೀದಿದಾರರಿಗೆ ಚಿನ್ನ-ಬೆಳ್ಳಿ ದುಬಾರಿಯಾಗಿಸಿದೆ. ಪ್ರಬಲವಾಗಿರುವ ಅಮೆರಿಕನ್ ಡಾಲರ್ ಕಾರಣದಿಂದ ಲೋಹಗಳ ಬೇಡಿಕೆ ಕಡಿಮೆಯಾಗಿದೆ. ಹೂಡಿಕೆದಾರರು ಫೆಡರಲ್ ರಿಸರ್ವ್ ದೀರ್ಘ ಸಮಯದವರೆಗೆ ಬಡ್ಡಿದರವನ್ನು ಸ್ಥಿರವಾಗಿಡಲಿದೆ ಎಂದು ನಿರೀಕ್ಷಿಸುತ್ತಿದ್ದಾರೆ. ಹಣದುಬ್ಬರ ಕಳವಳ ಮತ್ತು ಬಡ್ಡಿದರ ಏರಿಕೆ ನಿರೀಕ್ಷೆಯ ನಡುವೆ ಹೆಚ್ಚು ಲಾಭ ಕೊಡದ ಆಸ್ತಿಯ ಮೇಲಿನ ಆಸಕ್ತಿ ಕಡಿಮೆಯಾಗಿದೆ. ಇಂದಿನ ಚಿನ್ನದ ದರ ಹೇಗಿದೆ? ಮಾರ್ಚ್ 04ರಂದು ಬುಧವಾರ ಬೆಂಗಳೂರಿನ ಮಾರುಕಟ್ಟೆಗಳಲ್ಲಿ 24 ಕ್ಯಾರೆಟ್ ಶುದ್ಧ ಚಿನ್ನದ ಬೆಲೆ ಮಂಗಳವಾರ ಸಂಜೆಯ ಬೆಲೆಗೆ ಹೋಲಿಸಿದರೆ ಬರೋಬ್ಬರಿ ಪ್ರತಿ ಗ್ರಾಂಗೆ 311 ರೂ. ಕುಸಿತ ಕಂಡು ಹತ್ತು ಗ್ರಾಂ ಬೆಲೆ 1,64,510 ರೂ. ಗೆ ಬಂದು ನಿಂತಿದೆ. ಆಭರಣ ಚಿನ್ನವಾದ 22 ಕ್ಯಾರೆಟ್ ಬೆಲೆಯು ಗ್ರಾಂಗೆ 285 ರೂ. ಇಳಿದು ಹತ್ತು ಗ್ರಾಂಗೆ 1,50,800 ರೂ. ಗೆ ತಲುಪಿದೆ. 18 ಕ್ಯಾರೆಟ್ ಚಿನ್ನವು ಪ್ರತಿ ಗ್ರಾಂಗೆ 234 ರೂ. ಇಳಿಕೆಯಾಗಿ ಹತ್ತು ಗ್ರಾಂಗೆ 1,23,380 ರೂ. ಗೆ ತಲುಪಿದೆ. ಮಂಗಳೂರಿನಲ್ಲಿ ಚಿನ್ನದ ದರವೆಷ್ಟಿದೆ? ಮಾರ್ಚ್ 04ರಂದು ಬುಧವಾರ ಬೆಳಗಿನ 11 ಗಂಟೆಯ ವಹಿವಾಟಿನಲ್ಲಿ ಮಂಗಳೂರಿನಲ್ಲಿ ಚಿನ್ನದ ಬೆಲೆ ಮತ್ತೆ ಭಾರೀ ಕುಸಿತ ಕಂಡಿದೆ. ಒಂದು ಗ್ರಾಂ 24 ಕ್ಯಾರೆಟ್ ಚಿನ್ನದ ದರ 16,451 (-311) ರೂ. ನಷ್ಟಿದೆ. ಒಂದು ಗ್ರಾಂ 22 ಕ್ಯಾರೆಟ್ ಚಿನ್ನದ ದರ 15,080 (-285) ರೂ. ಮತ್ತು ಒಂದು ಗ್ರಾಂ 18 ಕ್ಯಾರೆಟ್ ಚಿನ್ನದ ದರ 12,338 (-234) ರೂ. ಬೆಲೆಗೆ ತಲುಪಿದೆ. ಮತ್ತೆ ಕುಸಿದ ಬೆಳ್ಳಿ ದರ ಫೆಬ್ರವರಿ ಆರಂಭದಿಂದಲೇ ಸತತ ಕುಸಿತ ಕಂಡಿದ್ದ ಬೆಳ್ಳಿ ಫೆಬ್ರವರಿ ಮಧ್ಯಭಾಗದಲ್ಲಿ ಏರು ಹಾದಿಯಲ್ಲಿತ್ತು. ಕಳೆದ ವಾರದಲ್ಲಿ ಬುಧವಾರ, ಗುರುವಾರ ಮತ್ತು ಶುಕ್ರವಾರ ಸ್ಥಿರವಾಗಿದ್ದ ಬೆಳ್ಳಿಯ ಬೆಲೆ, ಶನಿವಾರ ಗ್ರಾಂಗೆ ರೂ 10 ಏರಿಕೆಯಾಗಿ ಒಂದು ಕೆಜಿ ಬೆಳ್ಳಿ ಬೆಲೆ 2,95,000 ರೂ. ಗೆ ಬಂದು ನಿಂತಿತ್ತು. ಮಾರ್ಚ್ 1ರಂದು ರವಿವಾರವೂ ಇದೇ ಬೆಲೆಯಲ್ಲಿ ಸ್ಥಿರವಾಗಿ ನಿಂತಿತ್ತು. ಆದರೆ ಈ ವಾರದ ಆರಂಭದಲ್ಲಿ ಸೋಮವಾರ ಬರೋಬ್ಬರಿ ಗ್ರಾಂಗೆ 35 ರೂ. ಏರಿಕೆಯಾಗಿ ಒಂದು ಕೆಜಿ ಬೆಳ್ಳಿ ಬೆಲೆಯು 3,30,000 ರೂ. ಗೆ ತಲುಪಿತ್ತು. ಮಂಗಳವಾರ ಮಾರ್ಚ್ 02ರಂದು ಬೆಳ್ಳಿಯ ಬೆಲೆಯಲ್ಲಿ ಮತ್ತೆ ಕುಸಿತ ಕಂಡುಬಂದಿದೆ. ಗ್ರಾಂಗೆ 20 ರೂ. ಕುಸಿತ ಕಂಡು ಒಂದು ಕೆಜಿ ಬೆಳ್ಳಿ ಬೆಲೆಯು 2,95,000 ರೂ. ಗೆ ಬಂದು ನಿಂತಿತ್ತು. ಇದೀಗ ಬುಧವಾರ ಮತ್ತೆ ಪ್ರತಿ ಗ್ರಾಂಗೆ 10 ರೂ. ಕುಸಿದ ಬೆಳ್ಳಿಯ ಬೆಲೆ ಪ್ರತಿ ಕೆಜಿಗೆ 2,85,000 ರೂ. ಗೆ ಬಂದು ನಿಂತಿದೆ. ವಿವಿಧ ನಗರಗಳಲ್ಲಿ 1 ಗ್ರಾಮ್ ಚಿನ್ನದ ದರ (ಬೆಳಗಿನ ವಹಿವಾಟು) ಹೇಗಿದೆ? ದಿಲ್ಲಿ: 24 ಕ್ಯಾರೆಟ್ ಚಿನ್ನದ ದರ 16,466 (-311) ರೂ., 22 ಕ್ಯಾರೆಟ್ ಚಿನ್ನದ ದರ 15,095 (-285) ರೂ. ಮುಂಬೈ: 24 ಕ್ಯಾರೆಟ್ ಚಿನ್ನದ ದರ 16,451 (-311) ರೂ., 22 ಕ್ಯಾರೆಟ್ ಚಿನ್ನದ ದರ 15,080 (-285) ರೂ. ಅಹಮದಾಬಾದ್: 24 ಕ್ಯಾರೆಟ್ ಚಿನ್ನದ ದರ 16,456 (-311) ರೂ., 22 ಕ್ಯಾರೆಟ್ ಚಿನ್ನದ ದರ 15,085 (-285) ರೂ. ಚೆನ್ನೈ: 24 ಕ್ಯಾರೆಟ್ ಚಿನ್ನದ ದರ 16,582 (-289) ರೂ., 22 ಕ್ಯಾರೆಟ್ ಚಿನ್ನದ ದರ 15,200 (-265) ರೂ. ಕೋಲ್ಕತ್ತಾ: 24 ಕ್ಯಾರೆಟ್ ಚಿನ್ನದ ದರ 16,451 (-311) ರೂ., 22 ಕ್ಯಾರೆಟ್ ಚಿನ್ನದ ದರ 15,080 (-285) ರೂ. ಹೈದರಾಬಾದ್: 24 ಕ್ಯಾರೆಟ್ ಚಿನ್ನದ ದರ 16,451 (-311) ರೂ., 22 ಕ್ಯಾರೆಟ್ ಚಿನ್ನದ ದರ 15,080 (-285) ರೂ. ಜೈಪುರ: 24 ಕ್ಯಾರೆಟ್ ಚಿನ್ನದ ದರ 16,466 (-311) ರೂ., 22 ಕ್ಯಾರೆಟ್ ಚಿನ್ನದ ದರ 15,095 (-285) ರೂ. ಚಂಡೀಗಢ: 24 ಕ್ಯಾರೆಟ್ ಚಿನ್ನದ ದರ 16,466 (-311) ರೂ., 22 ಕ್ಯಾರೆಟ್ ಚಿನ್ನದ ದರ 15,095 (-285) ರೂ. ಲಕ್ನೋ: 24 ಕ್ಯಾರೆಟ್ ಚಿನ್ನದ ದರ 16,466 (-311) ರೂ., 22 ಕ್ಯಾರೆಟ್ ಚಿನ್ನದ ದರ 15,095 (-285) ರೂ.
ಕರ್ನಾಟಕ ವಿದ್ಯುತ್ ನಿಗಮ ಬೆಳಕಿನ ಸಂಸ್ಥೆಗೆ ಕತ್ತಲೆಯ ಛಾಯೆ: ಸರ್ಕಾರಿ ನಿರ್ಲಕ್ಷದ ಒಳನೋಟ
ಓದುಗರ ಬರಹ:ಕರ್ನಾಟಕ ವಿದ್ಯುತ್ ನಿಗಮ ಸಂಸ್ಥೆ ಮುಳುಗುತ್ತಿದೆಯೇ ಎಂಬ ಪ್ರಶ್ನೆ ಈಗ ಎಲ್ಲ ಕಡೆ ಕೇಳಿ ಬರುತ್ತಿದೆ. ದೇಶದಲ್ಲೇ ಮೊದಲ ಜಲ ವಿದ್ಯುತ್ ಕೇಂದ್ರ ಸ್ಥಾಪಿಸಿದ ಈ ಸಂಸ್ಥೆ ನಷ್ಟದಲ್ಲೇನೂ ಇಲ್ಲ. ಈಗಲೂ ಈ ಸಂಸ್ಥೆ ಉತ್ಪಾದಿಸುವ ವಿದ್ಯುತ್ತಿಗೆ ಬೇಡಿಕೆ ಇದ್ದೇ ಇದೆ. ಆದರೂ ಮುಳುಗುತ್ತಿರುವುದು ಏಕೆ ಎಂಬ ಪ್ರಶ್ನೆ ಕಾಡುವುದು ಸಹಜ. ಸ್ವಾತಂತ್ರ್ಯ ಪೂರ್ವದಲ್ಲೇ ಮೈಸೂರು
ಪುರುಷರ ‘ಗೌರವ’ಕ್ಕಿಲ್ಲ ಬೆಲೆ, ಮಹಿಳಾ ಘಟಕ ಮಾತ್ರ ನಿರ್ವಹಣೆ
ಕೋಟಿ ವೆಚ್ಚದ ಶೌಚಾಲಯವಿದ್ದರೂ ಬಯಲು ಶೌಚಕ್ಕೆ ಮರಳಿದ ಜನ
‘ಟಾಕ್ಸಿಕ್’ ಬಿಡುಗಡೆ ದಿನಾಂಕವನ್ನು ಮುಂದೂಡಿದ ಚಿತ್ರತಂಡ; ಕಾರಣವೇನು ಗೊತ್ತೇ?
ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನಪ್ಸ್ 2026 ಜೂನ್ 4ರಂದು ಇಂಗ್ಲಿಷ್ ಮತ್ತು ಭಾರತೀಯ ಭಾಷೆಗಳಲ್ಲಿ ಜಾಗತಿಕವಾಗಿ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ಮಾಹಿತಿ ನೀಡಿದೆ. ರಾಕಿಂಗ್ ಸ್ಟಾರ್ ಯಶ್ ನಟನೆಯ ಬಹುನಿರೀಕ್ಷಿತ ‘ಟಾಕ್ಸಿಕ್’ ಸಿನಿಮಾದ ಬಿಡುಗಡೆ ದಿನಾಂಕವನ್ನು ಮುಂದೂಡಿರುವ ಬಗ್ಗೆ ಚಿತ್ರತಂಡ ‘ಎಕ್ಸ್’ ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದೆ. ಸೋಮವಾರವಷ್ಟೇ ಸಿನಿಮಾದ ಮೊದಲ ಹಾಡನ್ನು ಬಿಡುಗಡೆ ಮಾಡಿ ಅಭಿಮಾನಿಗಳಿಂದ ಲಕ್ಷಾಂತರ ವೀಕ್ಷಣೆಗಳನ್ನು ಕಂಡಿದ್ದು, ಚಿತ್ರದ ಕುರಿತ ನಿರೀಕ್ಷೆ ಬೆಟ್ಟದಷ್ಟು ಏರಿತ್ತು. ಆದರೆ ಇದೀಗ ಬುಧವಾರ ಮಾರ್ಚ್ 04ರಂದು ಚಿತ್ರತಂಡ ಸಿನಿಪ್ರೇಮಿಗಳ ಆಘಾತಕಾರಿ ಸುದ್ದಿಯನ್ನು ನೀಡಿದೆ. Toxic : A Fairy Tale for Grown-Ups - in Cinemas Worldwide on 4 June 2026 pic.twitter.com/TlLgyzrKsF — Yash (@TheNameIsYash) March 4, 2026 ‘ಟಾಕ್ಸಿಕ್’ ಸಿನಿಮಾ 2026 ಮಾರ್ಚ್ 19ರ ಬದಲಿಗೆ 2026 ಜೂನ್ 4ರಂದು ಬಿಡುಗಡೆಯಾಗಲಿರುವ ಸುದ್ದಿಯನ್ನು ನಟ ಯಶ್ ಸ್ವತಃ ಸಾಮಾಜಿಕ ಜಾಲತಾಣದಲ್ಲಿ ನೀಡಿದ್ದಾರೆ. “ನಾವು ಸಿನಿಮಾವನ್ನು ಜಾಗತಿಕ ಸಿನಿ ಪ್ರೇಮಿಗಳಿಗೆ ನೀಡುವ ಉದ್ದೇಶದಿಂದ ನಿರ್ಮಿಸಿದ್ದೇವೆ. ಕನ್ನಡ ಮತ್ತು ಇಂಗ್ಲಿಷ್ ಎರಡೂ ಭಾಷೆಯಲ್ಲಿ ಚಿತ್ರೀಕರಣವಾದ ಸಿನಿಮಾವನ್ನು ತವರು ಮತ್ತು ವಿದೇಶಿ ನೆಲಗಳೆರಡರಲ್ಲೂ ಜೊತೆಯಾಗಿ ಬಿಡುಗಡೆ ಮಾಡುವ ಉದ್ದೇಶವನ್ನು ಹೊಂದಿದ್ದೆವು. ವರ್ಷಗಳ ಕಾಲ ಬಹಳ ಬದ್ಧತೆಯಿಂದ ನಿರ್ದೇಶಿಸಿದ ಸಿನಿಮಾವನ್ನು ಮಾರ್ಚ್ 19ರಂದು ನಿಮ್ಮ ಮುಂದಿಡುವ ಉದ್ದೇಶ ಹೊಂದಿದ್ದೆವು. ಆದರೆ ಮಧ್ಯಪ್ರಾಚ್ಯದಲ್ಲಿ ಪ್ರಸ್ತುತ ಅನಿಶ್ಚಿತ ಪರಿಸ್ಥಿತಿಯಲ್ಲಿ ಗಮನದಲ್ಲಿರಿಸಿ ನೋಡಿದಾಗ ವ್ಯಾಪಕ ಪ್ರೇಕ್ಷಕರನ್ನು ತಲುಪುವ ನಮ್ಮ ಉದ್ದೇಶಕ್ಕೆ ಹೊಡೆತ ಬಿದ್ದಿದೆ” ಎಂದು ಪೋಸ್ಟ್ನಲ್ಲಿ ಹೇಳಲಾಗಿದೆ. ಮುಂದುವರಿದು, “ನಮ್ಮ ವಿದೇಶಿ ಪಾಲುದಾರರು ಮತ್ತು ವಿದೇಶಿ ಸಿನಿ ಪ್ರೇಕ್ಷಕರನ್ನು ಗಮನದಲ್ಲಿರಿಸಿ ನಾವು ಬಹಳ ಕಠಿಣ ಆದರೆ ಜಾಗರೂಕವಾಗಿ ಪರಿಗಣಿಸಿದ ನಂತರ ನಮ್ಮ ಬಿಡುಗಡೆಯ ವೇಳಾಪಟ್ಟಿಯನ್ನು ಬದಲಿಸಲು ನಿರ್ಧರಿಸಿದ್ದೇವೆ. ನಿಮ್ಮ ಸಹನೆ ಮತ್ತು ನಿರೀಕ್ಷೆಗಾಗಿ ನಾವು ಧನ್ಯವಾದ ಅರ್ಪಿಸುತ್ತೇವೆ. ಮುಂದೆಯೂ ಇದೇ ರೀತಿ ಪ್ರೀತಿ ಮತ್ತು ಬೆಂಬಲವನ್ನು ನೀಡುತ್ತೀರಿ ಎನ್ನುವ ಭರವಸೆಯ್ಲಲಿದ್ದೇವೆ. ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನಪ್ಸ್ 2026 ಜೂನ್ 4ರಂದು ಇಂಗ್ಲಿಷ್ ಮತ್ತು ಭಾರತೀಯ ಭಾಷೆಗಳಲ್ಲಿ ಜಾಗತಿಕವಾಗಿ ಬಿಡುಗಡೆಯಾಗಲಿದೆ” ಎಂದು ಪೋಸ್ಟ್ನಲ್ಲಿ ವಿವರ ನೀಡಲಾಗಿದೆ. ಟಾಕ್ಸಿಕ್ ಸಿನಿಮಾ ಮಾರ್ಚ್ 19ರಂದು ಬಿಡುಗಡೆಯಾಗುತ್ತಿದ್ದಲ್ಲಿ, ರಣ್ವೀರ್ ಸಿಂಗ್ ಅವರ ಬಾಲಿವುಡ್ ಚಿತ್ರ ‘ಧುರಂಧರ್ -2’ ಜೊತೆಗೆ ನೇರ ಸ್ಪರ್ಧೆ ಎದುರಿಸುತ್ತಿತ್ತು. ಗಲ್ಫ್ ರಾಷ್ಟ್ರಗಳಲ್ಲಿ ‘ಧುರಂಧರ್ 2’ ಬಿಡುಗಡೆಯಾಗುತ್ತಿಲ್ಲ. ಹೀಗಾಗಿ, ಈ ರಾಷ್ಟ್ರವನ್ನು ದೊಡ್ಡ ಮಾರುಕಟ್ಟೆ ಮಾಡಿಕೊಳ್ಳಬೇಕು ಎಂಬುದು ‘ಟಾಕ್ಸಿಕ್’ ಸಿನಿಮಾ ತಂಡದ ಯೋಜನೆಯಾಗಿತ್ತು. ಆದರೆ, ಇದೀಗ ಮಧ್ಯಪ್ರಾಚ್ಯದಲ್ಲಿ ಯುದ್ಧ ಭೀತಿ ಹರಡಿರುವುದರಿಂದ ಯೋಜಿಸಿದ ರೀತಿಯಲ್ಲಿ ಬಿಡುಗಡೆ ಸಾಧ್ಯವಾಗುತ್ತಿಲ್ಲ. ಇದನ್ನು ಗಮನದಲ್ಲಿಟ್ಟುಕೊಂಡು ತಂಡ ಬಿಡುಗಡೆ ದಿನಾಂಕವನ್ನು ಮುಂದಕ್ಕೆ ಹಾಕಿದೆ.
ಕೇರಳ ಒಪಿನಿಯಲ್ ಪೋಲ್ : ಈಗ ಚುನಾವಣೆ ನಡೆದರೆ ಯಾರಿಗೆ ಪಟ್ಟ - ಕಾಂಗ್ರೆಸ್ಸಿಗೆ ಹಿನ್ನಡೆ, ಅರಳಿದ ಕಮಲ?
Kerala Opinion Poll : ಎರಡು ಅವಧಿಗೆ ಅಧಿಕಾರದಲ್ಲಿರುವ ಪಿಣರಾಯಿ ವಿಜಯನ್ ನೇತೃತ್ವದ ಎಡಪಕ್ಷಗಳ ಮೈತ್ರಿಕೂಟ ಮತ್ತೆ ಅಧಿಕಾರದಲ್ಲಿ ಉಳಿಯುವ ಸಾಧ್ಯತೆಯಿದೆ. ಜನ್ ಲೋಕಪಲ್ ನಡೆಸಿದ ಸಮೀಕ್ಷೆಯ ಪ್ರಕಾರ, ಯುಡಿಎಫ್ ಮೈತ್ರಿಕೂಟಕ್ಕೆ ನಿರೀಕ್ಷಿತ ಗೆಲುವು ಸಿಗುವ ಸಾಧ್ಯತೆಯಿಲ್ಲ. ಬಿಜೆಪಿ ತನ್ನ ವರ್ಚಸ್ಸನ್ನು ಇನ್ನಷ್ಟು ವೃದ್ದಿಗೊಳಿಸಿಕೊಳ್ಳಲಿದೆ.
ಯುದ್ಧದ ನಡುವೆಯೂ ಹಾರ್ಮುಜ್ ಜಲಸಂಧಿ ದಾಟಿದ ತೈಲ ಟ್ಯಾಂಕರ್: ವರದಿ
ದುಬೈ/ಅಬುಧಾಬಿ: ಗಲ್ಫ್ ಪ್ರದೇಶದಲ್ಲಿ ಇರಾನ್ ಯುದ್ಧದ ಪರಿಣಾಮ ಸಮುದ್ರದಲ್ಲಿ ಸರಕು ಸಾಗಣೆ ಅಸ್ತವ್ಯಸ್ತಗೊಂಡಿರುವ ನಡುವೆಯೂ ಒಂದು ತೈಲ ಟ್ಯಾಂಕರ್ ಹಾರ್ಮುಜ್ ಜಲಸಂಧಿಯನ್ನು ದಾಟಿ ಯುನೈಟೆಡ್ ಅರಬ್ ಎಮಿರೇಟ್ಸ್ ಬಂದರಿನತ್ತ ಸಾಗಿರುವುದು ವರದಿಯಾಗಿದೆ ಎಂದು aljazeera.com ವರದಿ ಮಾಡಿದೆ. Reuters ಸುದ್ದಿ ಸಂಸ್ಥೆಯ ವರದಿ ಪ್ರಕಾರ, ಮೂಲಗಳು ಮತ್ತು ಹಡಗು ಟ್ರ್ಯಾಕಿಂಗ್ ದತ್ತಾಂಶದಿಂದ ಈ ಮಾಹಿತಿ ಬಹಿರಂಗವಾಗಿದೆ. ಮಾರ್ಚ್ 2 ರ ತಡರಾತ್ರಿ ಪೋಲಾ ಎಂಬ ತೈಲ ಟ್ಯಾಂಕರ್ ಜಲಸಂಧಿಯನ್ನು ಸಮೀಪಿಸಿದಾಗ ತನ್ನ AIS ಟ್ರ್ಯಾಕರ್ ಅನ್ನು ಆಫ್ ಮಾಡಿತ್ತು. ಬಳಿಕ ಮಂಗಳವಾರ ಅದು ಅಬುಧಾಬಿ ಸಮೀಪದಲ್ಲಿ ಮತ್ತೆ ಟ್ರ್ಯಾಕಿಂಗ್ ವ್ಯವಸ್ಥೆಯಲ್ಲಿ ಕಾಣಿಸಿಕೊಂಡಿದೆ ಎಂದು ವರದಿ ತಿಳಿಸಿದೆ. ಅಬುಧಾಬಿಯ ಮುರ್ಬನ್ ಕಚ್ಚಾ ತೈಲವನ್ನು ಥೈಲ್ಯಾಂಡ್ಗೆ ರಫ್ತು ಮಾಡಲು ಈ ಟ್ಯಾಂಕರ್ ಜೆಬೆಲ್ ಧನ್ನಾ ಬಂದರಿಗೆ ಸಾಗುತ್ತಿದೆ ಎಂದು ಎರಡು ಉದ್ಯಮದ ಮೂಲಗಳು ಮಾಹಿತಿ ನೀಡಿವೆ. ಅಮೆರಿಕ ಮತ್ತು ಇಸ್ರೇಲ್ ಜೊತೆ ಟೆಹ್ರಾನ್ನ ಯುದ್ಧ ಹಾಗೂ ಹಾರ್ಮುಜ್ ಜಲಸಂಧಿಯಲ್ಲಿ ಸಾಗಣೆಗೆ ಇರಾನ್ ನೀಡಿರುವ ಬೆದರಿಕೆಗಳ ಪರಿಣಾಮವಾಗಿ ಗಲ್ಫ್ ಪ್ರದೇಶದಲ್ಲಿ ಸಮುದ್ರ ಸಂಚಾರ ಬಹುತೇಕ ಸ್ಥಗಿತಗೊಂಡಿದೆ. ಇದರ ಪರಿಣಾಮವಾಗಿ ಖತರ್ ನಿಂದ ಇರಾಕ್ವರೆಗೆ ಇರುವ ಕೆಲವು ದೇಶಗಳಲ್ಲಿ ಉತ್ಪಾದನೆಯನ್ನು ನಿಲ್ಲಿಸುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ರಾಯಿಟರ್ಸ್ ವರದಿ ಮಾಡಿದೆ.
ನೇಮಕಾತಿಯಲ್ಲಿ ಒಳಮೀಸಲಾತಿ ಬೇಡಿಕೆ: ಎಡಗೈ-ಬಲಗೈ ಪಟ್ಟಿಗೆ ಸರ್ಕಾರ ಸುಸ್ತು, ಸಂಪುಟದಲ್ಲಿ ಏನಾಗುತ್ತೆ ತೀರ್ಮಾನ
ಸರ್ಕಾರದ ವಿವಿಧ ಹುದ್ದೆಗಳ ನೇಮಕಾತಿಯಲ್ಲಿ ಒಳ ಮೀಸಲಾತಿ ಜಾರಿಗೊಳಿಸದೆ ಇರುವ ನಡೆಗೆ ಎಡಗೈ ಸಮುದಾಯದಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಶೇ 15 ರಲ್ಲಿ ಒಳ ಮೀಸಲಾತಿಯನ್ನು ಕಲ್ಪಿಸಿ ಎಂದು ಎಡಗೈ ಪಟ್ಟು ಹಿಡಿದಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರಕ್ಕೂ ಇದು ತಲೆನೋವು ಉಂಟು ಮಾಡಿದೆ. ಈ ಎಲ್ಲಾ ಬೆಳವಣಿಗೆಗಳ ನಡುವೆ ಗುರುವಾರ ಸಚಿವ ಸಂಪುಟ ಸಭೆ ನಡೆಯಲಿದೆ. ಸಂಪುಟ ಸಭೆಯಲ್ಲಿ ಈ ಸಂಬಂಧಿಸಿದಂತೆ ಮಹತ್ವ ಚರ್ಚೆ ನಡೆಯಲಿದೆ. ಬಳಿಕ ತೀರ್ಮಾನ ಪ್ರಕಟ ಆಗುವ ಸಾಧ್ಯತೆ ಇದೆ.
ಯಾದಗಿರಿ: ಆಡಳಿತ ವ್ಯವಸ್ಥೆ ನಿರ್ಲಕ್ಷ್ಯ; ನಶಿಸುತ್ತಿರುವ ಈಚಲ ವನ
ಯಾದಗಿರಿ : ವಡಗೇರಾ ತಾಲೂಕಿನ ವ್ಯಾಪ್ತಿಯಲ್ಲಿ ಇರುವ ಅಪರೂಪದ ಈಚಲವನ ಆಡಳಿತದ ನಿರ್ಲಕ್ಷ್ಯದಿಂದ ನಶಿಸುತ್ತಿದ್ದು, ಇದನ್ನು ತಕ್ಷಣವೇ ರಕ್ಷಿಸಬೇಕು ಎಂಬ ಆಗ್ರಹ ವ್ಯಕ್ತವಾಗತೊಡಗಿವೆ. ವಡಗೇರಾ ತಾಲೂಕಿನ ಹಂಚಿನಾಳ, ಮಳ್ಳಳ್ಳಿ, ಕಾಡಮಗೇರಿ ಹಾಗೂ ಕುರಕುಂದಿ ಗ್ರಾಮಗಳ ಸೀಮಾಂತರದಲ್ಲಿ ಸುಮಾರು 500 ಎಕರೆಗೂ ಅಧಿಕ ಪ್ರದೇಶದಲ್ಲಿ ನೈಸರ್ಗಿಕವಾಗಿ ಬೆಳೆದಿರುವ ಈಚಲ ಮರಗಳ ವಿಶಾಲ ಗೊಂಚಲುಗಳು ಇದ್ದು, ಇವು ಅಪರೂಪದ ವನ ಸಂಪತ್ತಾಗಿವೆ. ಆದರೆ ಈಚಲ ಮರವನ್ನು ಕೇವಲ ಹೆಂಡದ ಮೂಲವೆಂಬ ದೃಷ್ಟಿಯಿಂದ ಮಾತ್ರ ನೋಡಲಾಗುತ್ತಿದೆ. ಇದರ ಪರಿಣಾಮವಾಗಿ ಈ ಅಮೂಲ್ಯ ವನ ನಿರ್ಲಕ್ಷ್ಯಕ್ಕೆ ಒಳಗಾಗಿದೆ ಎಂದು ಸಾಮಾಜಿಕ ಹೋರಾಟಗಾರ ಉಮೇಶ ಕೆ. ಮುದ್ನಾಳ ಆರೋಪಿಸಿದ್ದಾರೆ. ಈಚಲ ಗಿಡಗಳ ಗೊಂಚಲುಗಳು ಅವನತಿ ಹೊಂದುತ್ತಿದ್ದು, ಒಣಗಿ ವಿನಾಶದತ್ತ ಸಾಗುತ್ತಿದ್ದರೂ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಯಾವುದೇ ಕಾಳಜಿ ವಹಿಸುತ್ತಿಲ್ಲ. ಕೋಟ್ಯಂತರ ರೂಪಾಯಿ ವೆಚ್ಚ ಮಾಡಿದರೂ ಇಂತಹ ವನವನ್ನು ಬೆಳೆಸುವುದು ಕಷ್ಟವಾಗಿರುವಾಗ ನೈಸರ್ಗಿಕವಾಗಿ ಬೆಳೆದಿರುವ ಈ ವೃಕ್ಷ ಸಂಪತ್ತನ್ನು ಉಳಿಸಿಕೊಳ್ಳಲಾಗದಿರುವುದು ಆಡಳಿತ ವ್ಯವಸ್ಥೆಯ ನಿರ್ಲಕ್ಷ್ಯ ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ. ತೋಟಗಾರಿಕೆ ಮತ್ತು ಅರಣ್ಯ ಇಲಾಖೆಗಳು ಈ ಬಗ್ಗೆ ತಕ್ಷಣವೇ ಮುಂದಾಗಿ, ಅಗತ್ಯ ಕ್ರಮ ಕೈಗೊಳ್ಳಬೇಕು ಎಂಬ ಬೇಡಿಕೆಯೂ ವ್ಯಕ್ತವಾಗಿದೆ. ಅತಿವೃಷ್ಟಿ ಹಾಗೂ ಅನಾವೃಷ್ಟಿಯ ಕಾರಣದಿಂದ ಗ್ರಾಮೀಣ ಪ್ರದೇಶದ ಕಾರ್ಮಿಕರು ಮಹಾನಗರಗಳಿಗೆ ಗುಳೇ ಹೋಗುವ ಸ್ಥಿತಿ ಇದೆ. ಈಚಲ ವನ ಆಧಾರಿತ ಉದ್ಯಮಗಳನ್ನು ಅಭಿವೃದ್ಧಿಪಡಿಸಿದರೆ ಈ ಸಮಸ್ಯೆಯನ್ನು ತಡೆಯಬಹುದು. ನೈಸರ್ಗಿಕವಾಗಿ ಬೆಳೆಯುವ ಈ ಮರದಿಂದ ಹಲವು ಉಪಯುಕ್ತ ಉ ಪ-ಉತ್ಪನ್ನಗಳನ್ನು ತಯಾರಿಸಿ ಗುಡಿ ಕೈಗಾರಿಕೆಗೆ ಉತ್ತೇಜನ ನೀಡಬಹುದು. ಇದರಿಂದ ಗ್ರಾಮೀಣ ಪ್ರದೇಶದ ರೈತರು ಹಾಗೂ ಕೂಲಿ ಕಾರ್ಮಿಕರಿಗೆ ಉದ್ಯೋಗಾವಕಾಶ ಸೃಷ್ಟಿಯಾಗಿ ಆರ್ಥಿಕ ಚೇತರಿಕೆ ಸಾಧ್ಯವಾಗುತ್ತದೆ. -ಉಮೇಶ ಕೆ. ಮುದ್ನಾಳ
AI ಕ್ರಾಂತಿಯ ನಂತರವೂ ಯಾವ ಉದ್ಯೋಗಗಳು ಸುರಕ್ಷಿತ? ತಂತ್ರಜ್ಞಾನದ ದೈತ್ಯರ ಚರ್ಚೆಯ ವಿವರ ಇಲ್ಲಿದೆ...
ವೇತನಕ್ಕಿಂತ ಹೆಚ್ಚಾಗಿ ಆಸಕ್ತಿ ಮತ್ತು ಉದ್ದೇಶದಿಂದ ಚಾಲಿತ ಮಾನವ ಕೇಂದ್ರಿತ ಉದ್ಯೋಗಗಳು ಸುರಕ್ಷಿತವಾಗಿರುತ್ತವೆ! Zoho ಸಂಸ್ಥಾಪಕ ಶ್ರೀಧರ್ ವೆಂಬು ಇತ್ತೀಚೆಗೆ AI ನಿಂದಾಗುವ ತ್ವರಿತ ಪ್ರಗತಿಯ ಹೊರತಾಗಿಯೂ ಪ್ರಸ್ತುತವಾಗಿ ಉಳಿಯುವ ಸಾಧ್ಯತೆಯಿರುವ ಉದ್ಯೋಗಗಳ ಕುರಿತು ಚಿಂತನಶೀಲ ದೃಷ್ಟಿಕೋನವನ್ನು ವ್ಯಕ್ತಪಡಿಸಿದ್ದಾರೆ. ‘ಎಕ್ಸ್’ ಸಾಮಾಜಿಕ ಜಾಲತಾಣದಲ್ಲಿ ಈ ಕುರಿತಾದ ದೀರ್ಘ ಪೋಸ್ಟ್ ನಲ್ಲಿ ಅವರು AI ನಿಂದ ಬಾಧಿತವಾಗದ ಉದ್ಯೋಗಗಳ ಬಗ್ಗೆ ಹೇಳಲಿಲ್ಲ. ಆದರೆ ವೇತನಕ್ಕಿಂತ ಹೆಚ್ಚಾಗಿ ಆಸಕ್ತಿ ಮತ್ತು ಉದ್ದೇಶದಿಂದ ಚಾಲಿತ ಮಾನವ ಕೇಂದ್ರಿತ ಉದ್ಯೋಗಗಳು ಸುರಕ್ಷಿತವಾಗಿರುತ್ತವೆ ಎಂದು ವಿವರ ನೀಡಿದ್ದಾರೆ. ಜನರು ತಮ್ಮ ಮೌಲ್ಯವನ್ನು ಆರ್ಥಿಕ ಉತ್ಪಾದನೆ ಅಥವ ಬೌದ್ಧಿಕವಾದ ಪ್ರತಿಷ್ಠೆಗೆ ಮಾತ್ರ ಅನ್ವಯಿಸಿದರೆ AI ಆಳವಾದ ವ್ಯಕ್ತಿಗತ ಬಿಕ್ಕಟ್ಟನ್ನು ಉಂಟು ಮಾಡಬಹುದು ಎಂದು ಶ್ರೀಧರ್ ಅವರು ಸೂಚಿಸಿದ್ದಾರೆ. ಸಾಂಪ್ರದಾಯಿಕವಾಗಿ ಸ್ಥಾನಮಾನ ಮತ್ತು ಆದಾಯಕ್ಕೆ ಸಂಬಂಧಿಸಿದ ಕಾರ್ಯಗಳಲ್ಲಿ ಯಂತ್ರಗಳು ಉತ್ತಮವಾಗಿರುವಂತೆ ಅನೇಕ ವೈಟ್ ಕಾಲರ್ ಪಾತ್ರಗಳು ತಮ್ಮ ಪ್ರತ್ಯೇಕತೆಯನ್ನು ಕಳೆದುಕೊಳ್ಳಬಹುದು. ಹಾಗಿದ್ದರೂ ಅನೇಕ ರೀತಿಯ ಕೆಲಸಗಳಿಗೆ AI ಅಡ್ಡಿಯಾಗದು ಎಂದು ಅವರು ಹೇಳಿದ್ದಾರೆ. ಮಕ್ಕಳ ಆರೈಕೆ, ಯುವಜನರಿಗೆ ಕಲಿಸುವುದು, ಹಿರಿಯ ವಯಸ್ಕರ ಆರೈಕೆ, ಕೃಷಿ ಚಟುವಟಿಕೆ, ಪ್ರಕೃತಿ ಮೇಲಿನ ಪ್ರೀತಿಯಿಂದ ಅರಣ್ಯಾಧಿಕಾರಿಗಳಾಗಿ ಕೆಲಸ ಮಾಡುವುದು, ಸ್ಥಳೀಯ ದೇವಾಲಯಗಳಿಗೆ ಪುರೋಹಿತರಾಗಿ ಕೆಲಸ ಮಾಡುವುದು, ಶಾಸ್ತ್ರೀಯ ಸಂಗೀತ-ನೃತ್ಯಗಳು ಮೊದಲಾದ ಕ್ಷೇತ್ರಗಳ ಮೇಲೆ AI ಪ್ರಭಾವ ಬೀರದು ಎಂದು ಶ್ರೀಧರ್ ಅವರು ಹೇಳಿದ್ದಾರೆ. ಅವರ ಪ್ರಕಾರ ಈ ಹಾದಿಗಳನ್ನು ತುಳಿದವರು ಹಣದ ಮೇಲಿನ ಮೋಹದ ಬದಲಾಗಿ ತಮ್ಮ ಆಸಕ್ತಿಯ ಅಥವಾ ಉದ್ದೇಶದ ಕ್ಷೇತ್ರವಾಗಿ ಸ್ವೀಕರಿಸಿರುತ್ತಾರೆ. ಆದೇ ಕಾರಣದಿಂದ AI ಪ್ರಭಾವ ಬೀರುವುದಿಲ್ಲ. ಕಾರ್ಯಕ್ಷಮತೆಯ ಕೆಲಸವನ್ನು ತಂತ್ರಜ್ಞಾನ ಆಕ್ರಮಿಸಿದಾಗ ಕೆಲಸಗಳು ನಿಧಾನವಾಗಿ ಇಂತಹ ಕ್ಷೇತ್ರಗಳ ಕಡೆಗೆ ವ್ಯವಸ್ಥಿತವಾಗಿ ಸಾಗಬಹುದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಆದರೆ ವಿಷ್ಣು ಅಗರ್ವಾಲ್ ಎನ್ನುವ ‘ಎಕ್ಸ್’ ಬಳಕೆದಾರ ಶ್ರೀಧರ್ ವೆಂಬು ಅವರ ಅಭಿಪ್ರಾಯವನ್ನು ಟೀಕಿಸಿದ್ದು, ಆರ್ಥಿಕವಾಗಿ ನಿರುತ್ಸಾಹಿ ಪರಿಸರದಲ್ಲಿ ಆಸಕ್ತಿ ಆಧರಿತ ಚಟುವಟಿಕೆಗಳಿಗೆ ಪ್ರೋತ್ಸಾಹ ಸಿಗುವುದಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ. “ನವೋದಯ ಕಾಲದಲ್ಲಿ ವೈದ್ಯರು ಮತ್ತು ಬ್ಯಾಂಕಿಂಗ್ ಕುಟುಂಬಗಳು ಸಮೃದ್ಧರಾಗಿದ್ದ ಕಾರಣದಿಂದ ಕಲಾವಿದರು ಮತ್ತು ಸಂಗೀತಗಾರರು ಪ್ರವರ್ಧಮಾನಕ್ಕೆ ಬಂದಿದ್ದರು. AI ಪ್ರಾಮುಖ್ಯತೆ ಆರ್ಥಿಕ ಪರಿಸ್ಥಿತಿಯನ್ನು ದುರ್ಬಲಗೊಳಿಸಿದರೆ ಕಲೆ, ಸಂಸ್ಕೃತಿ ಮತ್ತು ಆರೈಕೆಗೆ ಹಣಕಾಸು ಒದಗಿಸುವವರ ಕೊರತೆ ಎದುರಾಗಬಹುದು” ಎಂದು ಅವರು ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯೆಯಾಗಿ ಶ್ರೀಧರ್ ಅವರು ಚರ್ಚೆಯನ್ನು ಹಣದಿಂದ ಹೊರತಾದ ಕಡೆಗೆ ತಿರುಗಿಸಿದರು. AI ಮತ್ತು ಸಂಬಂಧಿತ ತಂತ್ರಜ್ಞಾನಗಳು ಉತ್ಪಾದಕತೆ ಹೆಚ್ಚಿಸಲಿವೆ. ಸರಕುಗಳು ಮತ್ತು ಸೇವೆಗಳು ಹೆಚ್ಚಾಗಿವೆ. ಉತ್ಪಾದನೆಯ ಬದಲಾಗಿ ಬಳಕೆಯೇ ನಿಜವಾದ ಸವಾಲಾಗಲಿದೆ. “ಹೀಗೆ ಸಾಕಷ್ಟು ಉದ್ಯೋಗ ಮತ್ತು ಆದಾಯ ಸೃಷ್ಟಿಯಾಗದೆ ತಂತ್ರಜ್ಞಾನ ವಿಫುಲವಾದುದನ್ನು ಉತ್ಪಾದಿಸಿದಲ್ಲಿ ಜನರು ಅದನ್ನು ಹೇಗೆ ಮೌಲ್ಯಮಾಪನ ಮಾಡಲಿದ್ದಾರೆ ಮತ್ತು ಬಳಸಲಿದ್ದಾರೆ ಎನ್ನುವ ಪ್ರಶ್ನೆ ಏಳುತ್ತದೆ. ಹಿಂದಿನ ಕಾಲದಲ್ಲಿ ಕುಶಲ ಕರ್ಮಿಗಳು ನಿರ್ಮಿಸಿದ ವಾಸ್ತುಶಿಲ್ಪದ ಅದ್ಭುತಗಳು ಸಮಾಜದಲ್ಲಿ ಉತ್ಪತ್ತಿಯಾಗುವ ಹೆಚ್ಚುವರಿಯಿಂದ ಒದಗಿಸಲಾದ ಮತ್ತು ಆಳುವ ರಾಜನಿಂದ ವಿತರಿಸಲಾದ ಆಹಾರ, ಬಟ್ಟೆ ಮತ್ತು ಆಶ್ರಯದ ಮೂಲಕ ಪೋಷಿಸಲಾಗಿದೆ” ಎಂದು ಅವರು ವಿವರಿಸಿದರು. ಶ್ರೀಧರ್ ಅವರ ದೃಷ್ಟಿಕೋನದಲ್ಲಿ ತಂತ್ರಜ್ಞಾನವು ಸಾಂಪ್ರದಾಯಿಕ ಉದ್ಯೋಗವಿಲ್ಲದೆ ಹೆಚ್ಚುವರಿಯನ್ನು ಸೃಷ್ಟಿಸಿದ ನಂತರ ಸಮಸ್ಯೆಯು ರಾಜಕೀಯ ಆರ್ಥಿಕತೆಯ ವಿಷಯವಾಗುತ್ತದೆ. ಜನರು ಹೇಗೆ ಈ ಹೆಚ್ಚುವರಿಯನ್ನು ಹಂಚಿಕೊಂಡು ಬಳಸಿಕೊಳ್ಳುತ್ತಾರೆ ಎನ್ನುವುದನ್ನು ಸಮಾಜಗಳು ನಿರ್ಧರಿಸಬೇಕಾಗುತ್ತದೆ. ಜಾಗತಿಕ ತಂತ್ರಜ್ಞಾನದ ನಾಯಕರು ಅನೇಕರು ಹೇಳುವ ವಿಚಾರಗಳಿಗೆ ಶ್ರೀಧರ್ ಅವರ ಅಭಿಪ್ರಾಯಗಳು ಹೋಲಿಕೆಯಾಗುತ್ತವೆ. ಅಮೆರಿಕ-ಸೌದಿ ಹೂಡಿಕೆ ವೇದಿಕೆಯಲ್ಲಿ ಟೆಸ್ಲಾ ಕಂಪನಿಯ ಮಾಲಕರಾದ ಎಲಾನ್ ಮಸ್ಕ್ ಕೆಲಸವು ಐಚ್ಛಿಕವಾಗುವ ಮತ್ತು ಹಣ ತನ್ನ ಪ್ರಸ್ತುತತೆ ಕಳೆದುಕೊಳ್ಳಲಿದೆ ಎಂದು ಭವಿಷ್ಯ ನುಡಿದಿದ್ದಾರೆ. “ಬುದ್ಧಿವಂತ ಯಂತ್ರಗಳು ಪ್ರಭಾವ ಬೀರಿರುವ ಜಗತ್ತಿನಲ್ಲಿ ಜನರು ಕೇವಲ ಖುಷಿಗಾಗಿ ಮಾತ್ರ ಕೆಲಸ ಮಾಡಲಿದ್ದಾರೆ. ಉದ್ಯಾನವನ, ಆಟವಾಡುವುದು ಅಥವಾ ಹವ್ಯಾಸಗಳು ಮೊದಲಾದ ಕೆಲಸ ಮಾಡಲಿದ್ದಾರೆ. ಅಸ್ತಿತ್ವಕ್ಕಾಗಿ ಕೆಲಸ ಮಾಡುವ ಅಗತ್ಯ ಇರುವುದಿಲ್ಲ. ಟೆಸ್ಲಾದ ಹ್ಯೂಮನಾಯ್ಡ್ ರೊಬೊಟ್ ಆಪ್ಟಿಮಸ್ ಸಂಪೂರ್ಣವಾಗಿ ಮಾನವ ಕಾರ್ಮಿಕರ ಅಗತ್ಯವನ್ನು ತೊಡೆದು ಹಾಕಲಿದೆ” ಎಂದು ಅವರು ಹೇಳಿದ್ದಾರೆ. ಮಸ್ಕ್ ಅವರು ಇಯಾನ್ ಎಂ ಬ್ಯಾಕ್ಸ್ ಅವರ ಕಲ್ಚರ್ ಸರಣಿ ಪುಸ್ತಕಗಳಲ್ಲಿ ತಿಳಿಸಿರುವಂತೆ ಉತ್ಪಾದಕತೆ ಅಗತ್ಯವಿಲ್ಲದ ಸಮಾಜದಲ್ಲಿ AI ಮಾನವರ ಕೆಲಸವನ್ನು ಸ್ವಯಂಸೇವೆಯಾಗಿ ಪರಿವರ್ತಿಸಲಿದೆ. ಆದರೆ ಇದಕ್ಕೆ ವ್ಯತಿರಿಕ್ತವಾಗಿ ಜೆನ್ಸನ್ ಹುವಾಂಗ್ ಹೆಚ್ಚು ಆಧಾರಪೂರ್ಣ ದೃಷ್ಟಿಕೋನ ನೀಡಿದ್ದಾರೆ. AI ಜನರ ಕಲಿಕೆ ಮತ್ತು ಕೆಲಸ ಮಾಡುವ ವಿಧಾನವನ್ನು ಪರಿವರ್ತಿಸುತ್ತದೆ. ಇದರಿಂದ ಸಾಮೂಹಿಕ ನಿರುದ್ಯೋಗ ಸೃಷ್ಟಿಯಾಗದು. ಉದ್ಯೋಗಗಳು ಹುಟ್ಟಿಕೊಳ್ಳಲಿವೆ.
ಕಳೆದ 3 ಬಜೆಟ್ನಲ್ಲಿ ಈಡೇರದ ನಿರೀಕ್ಷೆ; ಈ ಬಾರಿ ಚಿಕ್ಕಮಗಳೂರು ಜನತೆಯ ಬೇಡಿಕೆಗಳಿವು
ಕಾಫಿನಾಡು ಚಿಕ್ಕಮಗಳೂರು ಎಂದ ಕೂಡಲೇ ಪ್ರವಾಸಿ ತಾಣ ಎಂಬ ಕಲ್ಪನೆ ಎಲ್ಲರಲ್ಲಿದೆ. ಆದರೆ, ಇಲ್ಲಿನ ಪ್ರವಾಸಿ ತಾಣಗಳು ಮೂಲ ಸೌಕರ್ಯ ಇಲ್ಲದೆ ಬಳಲುತ್ತಿವೆ. ಮುಳ್ಳಯ್ಯನಗಿರಿ, ಬಾಬಾಬುಡನ್ಗಿರಿ, ರಾಣಿಝರಿ, ಕ್ಯಾತನಮಕ್ಕಿ ರೀತಿಯ ನಿಸರ್ಗ ತಾಣಗಳಿಗೆ ತೆರಳಲು ಪ್ರವಾಸಿಗರು ಕಷ್ಟಪಡಬೇಕಿದೆ. ಅಗತ್ಯವಿರುವ ಸಣ್ಣಪುಟ್ಟ ಮೂಲಸೌಕರ್ಯ ಒದಗಿಸಲು ಚಿಕ್ಕಮಗಳೂರು ಜಿಲ್ಲೆಗೆ ವಿಶೇಷ ಪ್ಯಾಕೇಜ್ ಘೋಷಿಸಬೇಕಿದೆ.
ಸೌಹಾರ್ದಕ್ಕೆ ಮಾದರಿಯಾದ ಲಿಂಗಸುಗೂರು : ಮುಸಲ್ಮಾನರನ್ನು ಎಚ್ಚರಿಸುವ ಬಾಲರೆಡ್ಡಿಯ ಡೋಲಕ್
ಲಿಂಗಸುಗೂರು: ಪವಿತ್ರ ರಮಝಾನ್ ಮಾಸದ ಉಪವಾಸ ವ್ರತಕ್ಕೆ ಹಿಂದೂ ಬಾಂಧವರು ಸಾಥ್ ನೀಡುವ ಮೂಲಕ ಸೌಹಾರ್ದತೆಗೆ ಮಾದರಿಯಾಗಿದೆ. ರೋಜಾ ಉಪವಾಸ ವ್ರತ ಆಚರಣೆಗೆ ಆರಂಭದಲ್ಲಿ ಪ್ರತಿದಿನ ಬೆಳಗಿನ ಜಾವ 1 ಗಂಟೆಯಿಂದ 4 ಗಂಟೆ ವರೆಗೆ ಜನರನ್ನು ಎಚ್ಚರಗೊಳಿಸಲು ಸುಮಾರು ಮೂರು ತಲೆಮಾರುಗಳಿಂದ (ನೂರಕ್ಕೂ ಹೆಚ್ಚು ವರ್ಷ) ಗಲ್ಲಿ ಗಲ್ಲಿಗಳಲ್ಲಿ ಮೈಕ್ ಹಿಡಿದು ಖವ್ವಾಲಿ, ನಾಥ್ ಹಾಡುತ್ತಾ ಓಡಾಡುವ ಪ್ರತೀತಿ ಪಟ್ಟಣದಲ್ಲಿದೆ. ಸುಮಾರು ನೂರು ವರ್ಷಗಳ ಹಿಂದೆ ನಜೀರ್ ಮೌಲಿಸಾಬ ಎನ್ನುವ ಮಹಾನುಭಾವರು ಈ ಪ್ರತೀತಿಯನ್ನು ಆರಂಭಿಸಿದ್ದರು. ಅವರು ಹಾಕಿಕೊಟ್ಟ ಮಾರ್ಗದಲ್ಲಿಯೇ ಇಂದಿಗೂ ಅವರ ಮನೆತನದವರು ಸಾಗುತ್ತಿದ್ದಾರೆ. ಅವರ ಬಳಿಕ ಅವರ ಪುತ್ರ ಖಾದರಬಾಷಾ ಈ ಪರಂಪಂರೆಯನ್ನು ಮುನ್ನಡೆಸಿದ್ದರು. ಇದೀಗ ಅವರ ಪುತ್ರ ಜಿಲಾನಿಪಾಷಾರ ನೇತೃತ್ವದಲ್ಲಿ ಯುವಕರ ತಂಡ ಪ್ರತಿದಿನ ಬೆಳಗಿನ ಜಾವ ಸಹರಿ ಸಮಯದಲ್ಲಿ ಹಾಡುಗಳನ್ನು ಹಾಡುತ್ತಾ ಜನರನ್ನು ಎಚ್ಚರಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಸೌಹಾರ್ದತೆಗೆ ಮಾದರಿ: ಪಟ್ಟಣದ ಹಿರಿಯ ಮುತ್ಸದ್ಧಿ ದಿ.ಲಾಲಹ್ಮದ್ಸಾಬರ ನಿವಾಸದಿಂದ ಸಿದ್ಧತೆ ಮಾಡಿಕೊಂಡು ಓಲ್ಸಿಟಿ ಓಡಾಡುವ ಕಾರ್ಯ ತಿಂಗಳ ಪರ್ಯಂತ ನಡೆಯುತ್ತದೆ. ಮುಸ್ಲಿಮರು ಸಹರಿ ಸಮಯದಲ್ಲಿ ದೇವನಾಮ ಸ್ಮರಣೆ ಮಾಡುತ್ತಾ, ಹಾಡುತ್ತಾ ಸಾಗುವುದರೊಂದಿಗೆ ಇಲ್ಲಿನ ಸ್ಥಳೀಯ ಹಿಂದೂಗಳೂ ಜೊತಗೂಡವುದು ಇಲ್ಲಿನ ವಿಶೇಷ. ಹಾಡು ಹಾಡುತ್ತಾ ಮುಸ್ಲಿಮರು ಹೋಗುವ ಮಾರ್ಗದುದ್ದಕ್ಕೂ ಕೆಲ ಹಿಂದೂ ಬಾಂಧವರು ತಮ್ಮ ನಿದ್ರೆಯನ್ನು ತ್ಯಾಗ ಮಾಡಿ ಅವರ ಜೊತೆಗೆ ಕೈಜೋಡಿಸುವುದು ಸೌಹಾರ್ದತೆಗೆ ಮಾದರಿಯಾಗಿದೆ. ಡೋಲಕ್ ಮ್ಯಾಜಿಕ್ ಬೈಯಾ, ಮಾಮು, ಚಾಚಾ, ಖಾಲು, ಚಾಚಿ ಎಂದು ಮುಸ್ಲಿಮರೊಳಗೆ ಕರೆಯಲ್ಪಡುವ ಬಾಲರೆಡ್ಡಿ ದಶಕಗಳಿಂದ ಡೋಲಕ್ ಬಾರಿಸುವ ಮೂಲಕ ಸಹರಿ ಸಮಯದಲ್ಲಿ ಮುಸ್ಲಿಮರನ್ನು ಎಚ್ಚರಿಸುವ ಕಾಯಕದಲ್ಲಿ ತೊಡಗಿಸಿಕೊಂಡಿದ್ದಾರೆ. ಇವರು ಡೋಲಕ್ ಬಾರಿಸುವ ಪರಿಗೆ ಮೋಡಿಗೊಳಗಾಗದವರು ಇಲ್ಲವೇ ಇಲ್ಲ ಎನ್ನುತ್ತಾರೆ ಸ್ಥಳೀಯರು. ಅಯ್ಯಪ್ಪಸ್ವಾಮಿ ಪೂಜಾ ಕಾರ್ಯಗಳು, ಮುಸಲ್ಮಾನರ ಧಾರ್ಮಿಕ ಕಾರ್ಯಕ್ರಮಗಳು ಸೇರಿ ಜಾತ್ಯಾತೀತ, ಧರ್ಮಾತೀತವಾಗಿ ಬಾಲರೆಡ್ಡಿ ಅವರು ತನ್ನ ಡೋಲಕ್ ಬಾರಿಸುತ್ತಾರೆ. ಆ ಮೂಲಕ ಜನಮಾನಸದಲ್ಲಿ ನೆಲೆಸಿದ್ದಾರೆ. ಅವರೊಂದಿಗೆ, ಪ್ರಕಾಶ ಎನ್ನುವ ಯುವಕ ನಿತ್ಯವೂ ಸಹರಿ ಸಮಯದಲ್ಲಿ ತಮ್ಮ ಮುಸ್ಲಿಂ ಸಹೋದರರಿಗೆ ಸಾಥ್ ನೀಡುತ್ತಾರೆ. ಅಮರೇಶ ವಿಶ್ವಕರ್ಮ, ವಿನೋದ ವಿಶ್ವಕರ್ಮ ಎನ್ನುವ ಸಹೋದರರು ಸಹರಿ ಸಮಯದಲ್ಲಿ ತಮ್ಮ ಮನೆಯ ಮುಂದೆ ಬರುವ ಯುವಕರಿಗೆ ಚಹಾ, ನೀರು, ಉಪಹಾರದ ವ್ಯವಸ್ಥೆ ಮಾಡುವ ಮೂಲಕ ಮಾದರಿಯಾಗಿದ್ದಾರೆ. ಮತೀಯ ಕಲಹಗಳು, ಜಾತಿ ವಿವಾದಗಳ ಮಧ್ಯೆ ಲಿಂಗಸುಗೂರು ಪಟ್ಟಣದಲ್ಲಿ ರಮಝಾನ್ ಆಚರಣೆಗೆ ಹಿಂದೂ ಸಹೋದರರು ಸಾಥ್ ನೀಡುವ ಮೂಲಕ ಭಾವೈಕ್ಯತೆ ಮೆರೆಯುತ್ತಿದ್ದಾರೆ. ಹತ್ತಾರು ವರ್ಷಗಳಿಂದ ಸಹರಿ ಸಮಯದಲ್ಲಿ ಡೋಲಕ್ ಬಾರಿಸುತ್ತಾ ಬಂದಿದ್ದೇನೆ. ನಮ್ಮ ಊರಲ್ಲಿ ಹಿಂದೂ ಮುಸ್ಲಿಂ ಬೇಧವಿಲ್ಲದೇ ಎಲ್ಲರೂ ಸೌಹಾರ್ದತೆಯಿಂದ ಇರುತ್ತೇವೆ. ಇದಕ್ಕೆ ನಾನೇ ಸಾಕ್ಷಿ. ಅಲ್ಲದೇ ನಾವು ಹೋದಲ್ಲೆಲ್ಲಾ ಮುಸ್ಲಿಮರ ಜೊತೆಗೆ ಹಿಂದೂಗಳೂ ಸತ್ಕಾರಗಳನ್ನು ಮಾಡುತ್ತಾರೆ. ಈ ಕೆಲಸ ನನಗೆ ತುಂಬಾ ಖುಷಿಯ ಜೊತೆಗೆ ದೈವಿಕ ಭಾವನೆ ಮೂಡಲು ಕಾರಣವಾಗಿದೆ. -ಬಾಲರೆಡ್ಡಿ , ಡೋಲಕ್ ವಾದಕ, ಲಿಂಗಸುಗೂರು ಪ್ರತಿನಿತ್ಯ ಬೆಳಗಿನ ಜಾವ 1 ಗಂಟೆಯಿಂದ 4 ಗಂಟೆವರೆಗೆ ಸೆಹರಿ ಸಮಯದಲ್ಲಿ ಜನರನ್ನು ರೋಜಾ ಮಾಡಲು ಎಬ್ಬಿಸಲು ಖವ್ವಾಲಿ ಹಾಡುವ ಮೂಲಕ ಎಚ್ಚರಗೊಳಿಸಲು ಹೋಗುತ್ತೇವೆ. ಇದು ನಮ್ಮ ತಾತನವರ ಕಾಲದಿಂದ ಸುಮಾರು ನೂರು ವರ್ಷಗಳಿಂದ ನಡೆದುಕೊಂಡ ಪ್ರತೀತಿಯಾಗಿದೆ. ನಾವುಗಳು ಈ ಕಾರ್ಯವನ್ನು ದೈವದ ಕಾರ್ಯವೆಂದು ಭಯ, ಭಕ್ತಿಯಿಂದ ಮಾಡುತ್ತಿದ್ದೇವೆ. -ಜಿಲಾನಿಪಾಷಾ ಸೆಹರಿ ಟೈಂ ಹಾಡುಗಾರ, ಲಿಂಗಸುಗೂರು
ಧಗೆಯ ನಡುವೆ ದ್ರಾಕ್ಷಿ ಬೆಳೆದು ಮಾದರಿಯಾದ ಕೆಸರಟ್ಟಿ ರೈತ
ಕೃಷಿಯಲ್ಲಿ ಉತ್ತಮ ಗಳಿಕೆ ಕಂಡ ಡಿಪ್ಲೊಮಾ ಪದವೀಧರ
ಎಂದೂ ಶಿಷ್ಟಾಚಾರ ತಪ್ಪಿ ಮಾತಾಡದವರೂ ಸಹಿತ ಹೋಳಿ ಹುಣ್ಣಿಮೆ ದಿನ ಬಾಯಿ ಸಡಿಲಬಿಟ್ಟು ಮಾತಾಡಿ, ಹೊಯ್ಕೊಂಡು ನಿರುಮ್ಮಳಾಗುತ್ತಾರೆ. ಮನುಷ್ಯರೊಳಗಿನ ಕೇಡನ್ನು ಕಳೆದುಕೊಳ್ಳುವ ಕೆಥಾರ್ಸಿಸ್(ಭಾವ ವಿರೇಚನ) ಎಂಬುದು ಕೆಲವರ ವಿಶ್ಲೇಷಣೆ. ಕೆಟ್ಟದ್ದನ್ನು ಕಳೆದುಕೊಂಡು ಮರುದಿನದಿಂದ ಒಳ್ಳೆಯವರಾಗುವ ಪಲ್ಲಟವೆಂಬುದು ನಂಬಿಕೆ. ಗ್ರಾಮೀಣ ಭಾಗದಲ್ಲಿ ಅತ್ಯಂತ ಸಂಭ್ರಮದಿಂದ ಆಚರಿಸುವ ಈ ಹಬ್ಬದಲ್ಲಿ ಎಲ್ಲ ಧರ್ಮ ಮತ್ತು ಜಾತಿಯವರು ಪಾಲ್ಗೊಳ್ಳುತ್ತಾರೆ. ಕರ್ನಾಟಕ ಒಳಗೊಂಡಂತೆ ಭಾರತವೆಂದರೆ ಹಬ್ಬ- ಹರದಿನಗಳ ದೇಶ. 15 ದಿನಕ್ಕೊಂದು ಹಬ್ಬ. ಎಲ್ಲ ಧರ್ಮದವರಿಗೆ ಅವರವರ ಧಾರ್ಮಿಕ ಹಬ್ಬಗಳಂತೂ ಸರಿಯೆ ಸರಿ. ಅವುಗಳೊಂದಿಗೆ ಎಲ್ಲರೂ ಆಚರಿಸುವ ರಾಷ್ಟ್ರೀಯ ಹಬ್ಬಗಳು ಇವೆ. ವೈಶಿಷ್ಟವೆಂದರೆ ಎಲ್ಲ ಧರ್ಮಗಳ ಹಬ್ಬಗಳನ್ನು ಎಲ್ಲರೂ ಸೇರಿ ಆಚರಿಸಿಕೊಂಡು ಬರುವ ಖುಷಿ ಸಂಭ್ರಮ ಇಲ್ಲಿನದು. ಹಬ್ಬಗಳೆಂದರೆ ಸಾಮಾನ್ಯವಾಗಿ ಹೊಸ ಬಟ್ಟೆ, ಒಪ್ಪ ಓರಣ, ಶೃಂಗಾರ, ಸಿಹಿ ತಿನಿಸು, ಪೂಜೆ-ಪುನಸ್ಕಾರ, ಪರಸ್ಪರರ ಭೇಟಿ, ಒಳ್ಳೆಯ ಮಾತುಕತೆ. ಕುಶಲೋಪಚಾರ ಇರುತ್ತವೆ. ಇದಕ್ಕೆ ವ್ಯತಿರಿಕ್ತವೆಂಬಂತೆ ಹಳೆಯ ಬಟ್ಟೆ, ಶೃಂಗಾರವಿಲ್ಲದ ಮೈ ಮುಖ, ಯಥೇಚ್ಛ ಅಶ್ಲೀಲ ಪದ ಬಳಕೆ, ಕುಚೇಷ್ಟೆ, ಹಿರಿಯರು, ಹೆಣ್ಣುಮಕ್ಕಳಿಂದ ತರಾಟೆ, ಜಗಳ ಕಿರಿಕಿರಿ ಕಂಡು ಬಂದರೆ ಹೋಳಿ ಹುಣ್ಣಿಮೆ ಬಂದಿದೆ ಎಂದೇ ಅರ್ಥ. ಹೌದು ಮಾರ್ಚ್ ತಿಂಗಳಿನಲ್ಲಿ ಬರುವ ಹೋಳಿ ಹುಣ್ಣಿಮೆ ಹಬ್ಬದ ಖದರು ಉತ್ತರ ಕರ್ನಾಟಕದಲ್ಲಿ ಬೇರೆಯೆ ಆಗಿರುತ್ತದೆ. ಅನೇಕ ಪೌರಾಣಿಕ ಕಥಾನಕಗಳು ಇದರೊಂದಿಗೆ ಬೆಸೆದುಕೊಂಡಿವೆ. ಶೂದ್ರಾದಿ ಶೈವ ಪರಂಪರೆಯಲ್ಲಿ ಶಿವನ ಇಪ್ಪತ್ತೈದು ಲೀಲೆಗಳಲ್ಲಿ ಗಿರಿಜಾ ಕಲ್ಯಾಣವು ಒಂದಾಗಿದೆ. ಕನ್ನಡದಲ್ಲಿ ಹರಿಹರ ಮಹಾಕವಿಯೂ ಪಾರ್ವತಿ ಪರಮೇಶ್ವರ ವಿವಾಹ ಪ್ರಸಂಗವನ್ನೇ ವಸ್ತುವಾಗಿಟ್ಟುಕೊಂಡು ಪ್ರೌಢ ಚಂಪೂ ಕಾವ್ಯವನ್ನು ರಚಿಸಿದ್ದಾನೆ. ಭೂಮಿಯಲ್ಲಿ ತಾರಾಕಾಸುರ ಎಂಬ ರಾಕ್ಷಸನ ಹಾವಳಿ ಹೆಚ್ಚಾಗಲು ಆತನ ಸಂಹಾರ ಮಾಡಲೆಬೇಕಾದ ದರ್ದು ಕಾಣಿಸಿಕೊಳ್ಳುತ್ತದೆ. ಪೃಥ್ವಿಗೆ ಕಂಟಕನಾಗಿದ್ದ ಈತನ ಸಂಹಾರವು ಸ್ವಯಂ ಶಿವನಿಗೆ ಹುಟ್ಟುವ ವಿಶಿಷ್ಟ ಪುತ್ರನಿಂದಲೇ ಆಗಬೇಕಂತೆ. ಆದರೆ ದಕ್ಷಬ್ರಹ್ಮನು ಯಾಗ ಮಾಡುವಾಗ ಪಾರ್ವತಿಯನ್ನು ಅಪಮಾನ ಮಾಡಿದ್ದರಿಂದಾಗಿ ಆಕೆ ಅದೇ ಯಜ್ಞ ಕುಂಡದಲ್ಲಿ ಹಾರಿ ಪ್ರಾಣ ಬಿಟ್ಟಿರುತ್ತಾಳೆ. ಇದರಿಂದ ಜರ್ಜರಿತನಾದ ಭೋಳೆ ಶಂಕರನು ಎಲ್ಲವನ್ನು ತೊರೆದು ಹಿಮಾಲಯದಲ್ಲಿ ತಪಸ್ಸಿಗೆ ಕುಳಿತಿದ್ದನು. ಶಿವನನ್ನು ತಪಸ್ಸಿನಿಂದ ಎಬ್ಬಿಸಿ ಅವನಿಗಾಗಿ ಕಾದು ಕುಳಿತಿರುವ ಹಿಮವಂತನ ಮಗಳು ಗಿರಿಜೆಯೊಂದಿಗೆ ವಿವಾಹವಾಗಿ; ಶಿವ-ಶಿವೆಯರ ಮಿಲನವಾಗಬೇಕು. ಅವರಿಬ್ಬರಿಂದ ಷಣ್ಮುಖ ಅಥವಾ ಕುಮಾರಸ್ವಾಮಿ ಜನಿಸಬೇಕು. ಈ ಕಾರ್ತಿಕೇಯನಿಂದ ತಾರಕಾಸುರನ ಸಂಹಾರ. ಆದರೆ ಮಹಾಕೋಪಿಯೂ ಪ್ರಳಯಾಂತಕನೂ ಆದ ಶಿವನನ್ನು ತಪಸ್ಸಿನಿಂದ ಎಬ್ಬಿಸುವರು ಯಾರು? ಎಲ್ಲ ದೇವತೆಗಳು ಸೇರಿಕೊಂಡು ಮನ್ಮಥನಾದ ಕಾಮದೇವನಿಗೆ ಶಿವನ ತಪಸ್ಸು ಭಂಗ ಮಾಡುವಂತೆ ಕೇಳಿಕೊಂಡು ಪುಸಲಾಯಿಸುತ್ತಾರೆ. ದೇವತೆಗಳ ಮಾತಿಗೆ ಮರುಳಾದ ಕಾಮದೇವ ಶಿವನ ತಪಸ್ಸನ್ನು ಭಂಗ ಮಾಡಲೆಂದು ತನ್ನಲ್ಲಿಂದ ಪಂಚ ಬಾಣಗಳನ್ನು ಪ್ರಯೋಗಿಸುತ್ತಾನೆ. ಬಾಣಗಳ ಘಾತದಿಂದ ವಿಚಲಿತನಾದ ಶಿವನು ತನ್ನ ಮೂರನೇ ಕಣ್ಣು ತೆರೆದು ನೋಡುತ್ತಾನೆ. ಎದುರಿಗೆ ಅಮಾಯಕ ಕಾಮ ತನ್ನ ಪ್ರೇಮಭಂಗಿಯಲ್ಲಿ ನಿಂತು ತಾನು ಶಿವನನ್ನು ಗಾಢ ತಪಸ್ಸಿನಿಂದ ಎಚ್ಚರಿಸಿದೆ ಎಂದು ಅಭಿಮಾನ ಪಡುವಷ್ಟರಲ್ಲಿ ತಪೋಭಂಗದಿಂದ ಉಗ್ರ ಕೋಪ ತಾಳಿದ ಶಿವನು ತನ್ನ ಉರಿಗಣ್ಣು ತೆರೆದು ನೋಡನೋಡುವಷ್ಟರಲ್ಲಿ ಕಾಮನನ್ನು ಸುಟ್ಟು ಬೂದಿ ಮಾಡುತ್ತಾನೆ. ಕಾಮದೇವನ ಹೆಂಡತಿಯಾದ ರತಿದೇವಿ ಪತಿಯ ವಿಯೋಗದಿಂದ ಪ್ರಲಾಪಿಸುತ್ತ ಗಿರಿಜೆಯ ಬಳಿಗೆ ಬಂದು ಯಾರದೋ ಚಿತಾವಣೆಗೆ ಬಲಿಯಾಗಿ ತನ್ನ ಗಂಡ ಮಡಿದನೆಂದು ಶಿವಪ್ರೇಮಿಯಾದ ನೀನು ನನ್ನ ಪತಿಯನ್ನು ಮರಳಿ ಕೊಡಬೇಕೆಂದು ಅಂಗಲಾಚುತ್ತಾಳೆ. ಗಿರಿಜೆಯಾದರೂ ಶಿವನನ್ನು ವರಿಸಿ ಅವನಿಂದ ಕೃತಾರ್ಥಳಾಗಿದ್ದಲ್ಲದೆ ತಮ್ಮಿಬ್ಬರ ಮಿಲನಕ್ಕಾಗಿ ರತಿದೇವಿ ತನ್ನ ಪತಿಯನ್ನು ಕಳೆದುಕೊಂಡಿದ್ದಾಳೆ. ಇದರಲ್ಲಿ ಕಾಮದೇವನ ತಪ್ಪೇನು ಇಲ್ಲ. ಆದ್ದರಿಂದ ಆಕೆಯ ಪ್ರೇಮಿ ಪತಿಯನ್ನು ಮರಳಿಸಬೇಕೆಂದು ಕೇಳಿಕೊಳ್ಳುತ್ತಾಳೆ. ಈಗಾಗಲೇ ಶಿವೆಯಲ್ಲಿ ಅನುರಕ್ತನಾಗಿದ್ದ ಶಿವನಾದರೂ ಪ್ರಿಯ ಮಡದಿಯ ಮಾತು ಮೀರಲಾದಿತೆ? ಸರಿ ಕಾಮದೇವನನ್ನು ಮರಳಿಸಬಹುದಾದರೂ ಆತನ ಭೌತ ಶರೀರ ಈಗಾಗಲೇ ಸುಟ್ಟು ಭಸ್ಮವಾದ್ದರಿಂದ ಆತ ಅನಂಗನಾಗಿ ಜೀವಿಸುವಂತೆ ಮಾಡುತ್ತಾನೆ. ಆದ್ದರಿಂದ ಆತ ಮನಸಿಜನಾಗಿ ಸದಾ ಎಲ್ಲರಲ್ಲಿಯೂ ಜೀವಂತವಾಗಿರುತ್ತಾನೆ. ಇದಿಷ್ಟು ಪುರಾಣದ ಕಥೆ. ಶಿವನು ಕಾಮದೇವನನ್ನು ಸುಟ್ಟ ಹಬ್ಬವೇ ಕಾಮದಹನ ಅಥವಾ ಹೋಳಿ ಹುಣ್ಣಿಮೆ. ಉತ್ತರ ಭಾರತದಲ್ಲಿ ಇದನ್ನು ‘ಬಸಂತ ಪಂಚಮಿ’ ಎಂದು ಕರೆಯುತ್ತಾರೆ. ಅಲ್ಲಿ ಇದನ್ನು ಹೋಲಿಕಾ ದಹನ ಎಂದೂ ಆಚರಿಸುತ್ತಾರೆ. ಉತ್ತರ ಭಾರತದ ಕಥಾನಕಗಳಲ್ಲಿ ಹಿರಣ್ಯಕಶ್ಯಪು ಶಿವನ ಭಕ್ತನಾಗಿದ್ದು ಆತನ ಮಗ ಪ್ರಹ್ಲಾದನು ವಿಷ್ಣು ಭಕ್ತನಾಗಿದ್ದನಷ್ಟೇ. ಹಿರಣ್ಯಕಶ್ಯಪುವಿಗೆ ಹೋಲಿಕಾ ಎಂಬ ಸಹೋದರಿ ಇದ್ದಳು. ಈಕೆ ಬೆಂಕಿಯಲ್ಲಿ ಬಿದ್ದರೂ ಸುಡದಂಥ ವರ ಪಡೆದಿದ್ದಳಂತೆ. ಪ್ರಹ್ಲಾದ ತನ್ನ ಮಾತು ಕೇಳದಿದ್ದಾಗ ಹಿರಣ್ಯಕಶ್ಯಪು ಹೋಲಿಕಾಳನ್ನು ಕರೆದು ಆತನನ್ನು ತೊಡೆಯ ಮೇಲೆ ಕೂರಿಸಿಕೊಂಡು ಸುಡಬೇಕೆಂದು ಆಜ್ಞಾಪಿಸಿದನಂತೆ. ಹಾಗೆಯೇ ಮಾಡಲು ಪ್ರಹ್ಲಾದನು ವಿಷ್ಣುನಾಮ ಸ್ಮರಣೆ ಮಾಡುತ್ತಿದ್ದರಿಂದ ಬೆಂಕಿ ಅವನನ್ನು ಸೋಂಕಲಿಲ್ಲ. ಹೋಲಿಕಾಳನ್ನು ಸುಟ್ಟು ಹಾಕಿತಂತೆ. ಅಂದಿನಿಂದ ಉತ್ತರ ಭಾರತದಲ್ಲಿ ಹೋಲಿಕೆಯ ದಹನ ಮಾಡಲಾಗುತ್ತದೆ. ಶೈವ, ವೈಷ್ಣವ ಪಂಥಗಳ ನಡುವಿನ ಸಂಘರ್ಷವಿದು. ಜನಪದರ ಕಥನ ಕಾವ್ಯದಲ್ಲಿ ಇನ್ನೊಂದು ಬೇರೆಯ ಕಥೆಯೇ ಇದೆ. ಒಮ್ಮೆ ಶಿವ-ಪಾರ್ವತಿಯರು ಸಲ್ಲಾಪದಲ್ಲಿ ತೊಡಗಿರುವಾಗ ಶಿವನ ಪಾರ್ವತಿಯನ್ನು ಕುರಿತು ಜಗತ್ತಿನಲ್ಲಿ ಅತ್ಯಂತ ಸುಂದರನಾದ ಪುರುಷ ಯಾರು? ಎಂದು ಕೇಳಿದನಂತೆ. ಅದಕ್ಕೆ ಮುಗ್ಧ ಪಾರ್ವತಿ ಜಗತ್ತಿನಲ್ಲಿ ಕಾಮದೇವನೇ ಸುಂದರ ಎಂದಳಂತೆ. ಇದೇ ಪ್ರಮಾದವಾಯ್ತು. ಗಂಡನಾದವನು ಅನ್ಯ ಸ್ತ್ರೀಯರ ಸೌಂದರ್ಯವನ್ನು ಮೆಚ್ಚಿ ಮಾತನಾಡಬಹುದು. ಅದು ಅವನ ರಸಿಕತೆ. ಆದರೆ ಹೆಂಡತಿಯಾದವಳು ಅನ್ಯ ಪುರುಷನ ಸೌಂದರ್ಯವನ್ನು ಕುರಿತು ಮಾತಾಡುವುದೆಂದರೆ ಇದೆಂಥ ಅಪಸವ್ಯ ಅಲ್ಲವೆ? ಇದರಿಂದ ಶಿವನಿಗೆ ಭಯಂಕರ ಕೋಪ ಬಂದು ಪಾರ್ವತಿಗೆ ಏನೂ ಮಾಡಲಾಗಲಿಲ್ಲ. ಆದರೆ ಬಡಪಾಯಿ ಕಾಮನನ್ನು ಮಾತ್ರ ಉರಿಗಣ್ಣು ತೆರೆದು ಸುಟ್ಟನಂತೆ. ಜನಪದರ ಈ ಕಥೆಯು ದುಂದುಮೆ ಪದಗಳಲ್ಲಿ ಮೂಡಿ ನಿಂತಿದೆ. ಅಂದಿನಿಂದ ಕಾಮದಹನ ಆಚರಣೆಯಲ್ಲಿದೆ ಎಂಬುದು ಜನರ ನಂಬಿಕೆ. ಹೋಳಿ ಹುಣ್ಣಿಮೆ ವಸಂತ ಮಾಸದಲ್ಲಿ ಬರುವುದರಿಂದ ಇದನ್ನು ವಸಂತ ಪಂಚಮಿ ಎಂದು ಹೇಳಲಾಗುತ್ತದೆ. ಪ್ರಾಚೀನ ಕಾವ್ಯಗಳಲ್ಲಿ ವಸಂತೋತ್ಸವದ ವರ್ಣನೆ ಕಡ್ಡಾಯವಾಗಿತ್ತು. ವಸಂತ ಮಾಸದಲ್ಲಿನ ಪ್ರಕೃತಿ ವರ್ಣನೆ ಸಂಸ್ಕೃತ ಕಾವ್ಯಗಳಲ್ಲಿಯಂತೂ ನವನವೋನ್ಮೇಷವಾಗಿದೆ. ಕಲ್ಯಾಣ ಕರ್ನಾಟಕದಲ್ಲಿಯಂತೂ ಹೋಳಿ ಹುಣ್ಣಿಮೆ ಹಬ್ಬ ಅತ್ಯಂತ ಸಂಭ್ರಮದಿಂದ ಆದರೆ ವಿಶಿಷ್ಟವಾಗಿ ಆಚರಿಸಿಕೊಂಡು ಬರಲಾಗುತ್ತಿದೆ. ನಮ್ಮ ಗ್ರಾಮೀಣರಿಗೆ ಕೇಳಿದರೆ ಈವರೆಗಿನ ಎಲ್ಲ ಹಬ್ಬಗಳು ಹೆಣ್ಣುಮಕ್ಕಳನ್ನೇ ಕೇಂದ್ರೀಕರಿಸಿಕೊಂಡಿದ್ದರೆ ಹೋಳಿ ಹುಣ್ಣಿಮೆ ಮಾತ್ರ ಗಂಡಸರ ಹಬ್ಬ ಎಂದು ಅಣಕಿಸುವುದು ಇದೆ. ಹುಣ್ಣಿಮೆಗೆ ಎಂಟು ದಿನ ಇದೆ ಎನ್ನುವಾಗಲೆ ಕೇರಿಯ ಹುಡುಗರು ನಾಲ್ಕು ಬೀದಿ ಸೇರುವ ಆಯಕಟ್ಟಿನ ಜಾಗದಲ್ಲಿ ಕುಳಿ (ತೆಗ್ಗು) ತೋಡಿ ಅದರಲ್ಲಿ ಗುಂಡನೆಯ ಕಲ್ಲನ್ನು ಲಿಂಗದಾಕಾರದಲ್ಲಿ ಹೂಳಿ ಅದನ್ನು ಕಾಮಣ್ಣದೇವರೆಂದು ಪೂಜಿಸುತ್ತಾರೆ. ದಿನಾಲೂ ಮನೆ ಮನೆ ಭಿಕ್ಷೆ ಬೇಡಿ ಜೋಳದ ಹಿಟ್ಟು, ಎಣ್ಣೆ, ಬತ್ತಿ ತರುತ್ತಾರೆ. ಕಾಮಣ್ಣದೇವರ ಕುಳಿಯನ್ನು ಸಾರಿಸಿ ಹಿಟ್ಟಿನಿಂದ ರಂಗೋಲಿ ಹಾಕಿ, ತೇರಿನಾಕಾರ ಚಿತ್ರ ಬರೆಯುತ್ತಾರೆ. ಕುಳಿ ಮಾಡಿದಲ್ಲೊಂದು ದೀಪ ಹಚ್ಚಿ ರಾತ್ರಿ ತಾಸ್ಹೊತ್ತು ಪದಗಳನ್ನು ಹಾಡುತ್ತಾರೆ. ಅವುಗಳನ್ನೇ ದುಂದುಮೆ ಪದಗಳೆಂದು ಕರೆಯುತ್ತಾರೆ. ಇದರಲ್ಲಿ ಕಾಮನ ಬಲೆಗೆ ಬಿದ್ದು ಹಾಳಾದವರ ಕಥೆಗಳು, ಪುರಾಣದ ಕಥೆಗಳು ಇರುತ್ತವೆ. ಪ್ರತೀ ನುಡಿಯ ಕೊನೆಯಲ್ಲಿ ‘‘ದುಂ ದುಂ ಎಂದು ಜಾಣರೆಲ್ಲ ಗಂಧ ಕಸ್ತೂರಿ ಪೂಸಿಕೊಂಡು ಚಂದದಿಂದ ಪಾಡಿಕೊಂಡು ॥ ಹೋ ಹೋ’’ ಹೀಗೆ ಸೊಲ್ಲು ಹಿಡಿಯುತ್ತಾರೆ. ಈ ಹಾಡುಗಳಿಗೆ ತನ್ನದೇಯಾದ ವಿಶಿಷ್ಟ ಧಾಟಿ-ಧರತಿಗಳಿವೆ. ಉತ್ತರ ಕರ್ನಾಟಕದ ದುಂದುಮೆ ಪದಗಳನ್ನು ಈಗಾಗಲೇ ವಿದ್ವಾಂಸರು ಸಂಪಾದಿಸಿ ಪ್ರಕಟಿಸಿದ್ದಾರೆ. ಮುಂದಿನ ಪೀಳಿಗೆ ಅವುಗಳ ಸಾಂಸ್ಕೃತಿಕ ಅನನ್ಯತೆಯನ್ನು ಎತ್ತಿ ತೋರಿ, ಮತ್ತೆ ಮತ್ತೆ ಮುನ್ನೆಲೆಗೆ ತರಬೇಕಿದೆ. ಅದೇ ಹೊತ್ತಿಗೆ ಅಲ್ಲಿನ ಅನಾರೋಗ್ಯಕರ ಸಂಗತಿಗಳನ್ನು ತಿರಸ್ಕರಿಸಬೇಕಿದೆ. ಹುಣ್ಣಿಮೆ ದಿನ ರಾತ್ರಿ ಕಾಮಣ್ಣನನ್ನು ಸುಡುವ ಸಂಭ್ರಮ. ಇದಕ್ಕಾಗಿ ಮನೆ ಮನೆಗೆ ತೆರಳಿ ಕುಳ್ಳು, ಕಟ್ಟಿಗೆ ಬೇಡಿ ತರುತ್ತಾರೆ. ಬೇಡಿ ತರುವುದಕ್ಕಿಂತ ರಾತ್ರಿ ಕದ್ದು ತರುವುದೇ ಹೆಚ್ಚು. ಕೊಟ್ಟಿಗೆಯಲ್ಲಿನ ಕಟ್ಟಿಗೆ ಇರಬಹುದು. ಯಾರದೋ ಮನೆಯ ಮುರಿದ ತಟ್ಟಿ, ಬಾಗಿಲು ಆಗಬಹುದು. ಅಂಗಳದಲ್ಲಿ ಇಟ್ಟ ಹೊರಸು, ಮೇಜು, ಕುರ್ಚಿ ಹೀಗೆ ಏನೆಲ್ಲ ಒಟ್ಟಾರೆ ಕಟ್ಟಿಗೆ ಇರಬೇಕು ಅಷ್ಟೆ. ಹೀಗೆ ಕಳವು ಮಾಡುವುದು ಹೋಳಿ ಹುಣ್ಣಿಮೆಯಲ್ಲಿ ಅಪರಾಧವಲ್ಲ. ಬಹಳವಾದರೆ ಕಳುವು ಮಾಡಿದ ಪುಂಡ ಹುಡುಗರನ್ನು ಬಯ್ಯಬಹುದು, ನೆಟಿಕೆ ಮುರಿಬಹುದು. ಇದರಿಂದ ಪಡ್ಡೆ ಹುಡುಗರಿಗೂ ಸಿಟ್ಟು ಬರುವುದಿಲ್ಲ. ಅವರು ಕೂಡ ಊರ ಹೆಂಗಳೆಯರ ಬೈಗುಳಗಳನ್ನು ಆಸ್ವಾದಿಸುತ್ತಾರೆ. ಹುಣ್ಣಿಮೆ ದಿವಸ ಕಾಮಣ್ಣನ ಪೂಜೆ ನಡೆಯುತ್ತದೆ. ಈ ಪೂಜೆಯು ಒಂದೊಂದು ಊರಲ್ಲಿ ಒಂದೊಂದು ಬಗೆಯಾಗಿರುತ್ತದೆ. ಊರ ಗೌಡರ ಮನೆಯಿಂದ ಚಾಜದ ಆರತಿ ಮಾಡಲು ಮಹಿಳೆಯರು ಬರುತ್ತಾರೆ. ಕೆಲವೊಂದು ಕಡೆಯಲ್ಲಿ ದಲಿತರ ಮನೆಯಿಂದಲೇ ಬೆಂಕಿ ತರಬೇಕೆಂಬ ಪದ್ಧತಿ ಇದೆ. ಇದಕ್ಕೂ ಕಥೆಯೊಂದು ಕಟ್ಟಲಾಗಿದೆ. ಜನಪದ ಕಥೆಯ ಪ್ರಕಾರ ಪಾರ್ವತಿಯೂ ಮನ್ಮಥನನ್ನೇ ಜಗತ್ತಿನ ಸುಂದರ ಪುರುಷ ಎಂದು ಹೇಳಿದ್ದರಿಂದ ಕಾಮನನ್ನು ಸುಟ್ಟನಷ್ಟೇ. ಕಾಮನ ಪತ್ನಿ ತನ್ನ ಪತಿ ಕಾಮನನ್ನು ಮರಳಿಸಬೇಕೆಂದು ರೋದಿಸಲು ಅವಳ ಆಕ್ರಂದನಕ್ಕೆ ಮರುಗಿದ ಶಿವನು ಈಗಾಗಲೇ ಕಾಮ ಸುಟ್ಟು ಬೂದಿಯಾಗಿದ್ದರಿಂದ ಈ ಜನ್ಮದಲ್ಲಿ ಸೇರಲು ಸಾಧ್ಯವಿಲ್ಲ. ನೀವಿಬ್ಬರು ಭೂಲೋಕದಲ್ಲಿ ಜನಿಸಿರಿ. ಕಾಮನು ಬ್ರಾಹ್ಮಣ ಕೃಷ್ಣಭಟ್ಟರ ಮಗನಾಗಿ ಹುಟ್ಟುತ್ತಾನೆ. ರತಿದೇವಿಯು ಹೊಲೆಯರ (ಪುರಾಣದ ಕಥೆಯ ಧ್ವನಿ ಅರಿವಾಗಿಸಲು ಈ ಪದವನ್ನು ಕ್ಷಮೆಯಾಚಿಸಿ ಬಳಸುತ್ತಿದ್ದೇನೆ) ಚಂದಪ್ಪನ ಮಗಳಾಗಿ ಹುಟ್ಟುತ್ತಾಳೆ. ನಿಮ್ಮಿಬ್ಬರಲ್ಲಿ ಪ್ರೇಮವಾಗಿ ಮಿಲನವಾಗುತ್ತದೆ ಎಂದು ವರವೋ ಶಾಪವೋ? ನೀಡಿದನಂತೆ. ಅಂತೆಯೇ ಇಬ್ಬರೂ ಜನಿಸಲು ವಯಸ್ಸಿಗೆ ಬಂದೊಡನೆ ಕೃಷ್ಣಭಟ್ಟನ ಮಗನು ಸ್ಪುರದ್ರೂಪಿಯಾದ ಚಂದಪ್ಪನ ಮಗಳನ್ನು ಪ್ರಥಮ ನೋಟದಲ್ಲಿಯೇ ಮರುಳಾಗುತ್ತಾನೆ. ಇವರಿಬ್ಬರ ಪ್ರೇಮ ಕಂಡು ಕನಲಿದ ಚಂದಪ್ಪ ಸಾವಿರ ಹೊನ್ನು ತಂದು ಕೊಟ್ಟರೆ ಮಾತ್ರ ತನ್ನ ಮಗಳೊಂದಿಗೆ ಇರಲು ಬಿಡುತ್ತೇನೆ ಎಂದನಂತೆ. ಆತ ತನ್ನ ಮನೆಯಿಂದ ಸಾವಿರ ಹೊನ್ನು ತಂದು ಕೊಟ್ಟು ಅವಳನ್ನು ಕೂಡಿದನಂತೆ. ಆದರೆ ದಿನದಿನವೂ ಸಾವಿರ ಹೊನ್ನು ತರಲು ಅದ್ಹೇಗೆ ಸಾಧ್ಯ? ಎಂದಿನಂತೆ ಪ್ರೇಮಿ ಕಾಮದೇವ ಚಂದಪ್ಪನ ಮನೆ ಬಾಗಿಲಲ್ಲಿ ಬಂದು ನಿಂತನು. ಚಂದಪ್ಪ ಹಣವಿಲ್ಲದೆ ಒಳ ಬಿಡಲಿಲ್ಲ. ಅಷ್ಟರಲ್ಲಿ ಊರವರಿಗೆ ಸುದ್ದಿ ತಿಳಿಯಿತು. ಬ್ರಾಹ್ಮಣರು ಇದರಿಂದ ಕುಪಿತರಾಗಿ ಕೃಷ್ಣಭಟ್ಟನ ಕುಟುಂಬಕ್ಕೆ ಬಹಿಷ್ಕಾರ ಹಾಕಿದರಂತೆ. ದೈವಕ್ಕೆ ಹೆದರಿದ ಅಪ್ಪ ಮಗನನ್ನು ಮನೆಯಿಂದ ಹೊರದಬ್ಬುತ್ತಾನೆ. ವಿರಹಿ ಕಾಮಣ್ಣ ಎಲ್ಲೆಲ್ಲೂ ತನ್ನ ಪ್ರೇಯಸಿಗಾಗಿ ಅರಸಿ ಊಟ, ನಿದ್ರೆ ಎಲ್ಲ ತೊರೆದು ಅವಳಿಗಾಗಿ ಪರಿತಪಿಸುತ್ತ ಚಂದಪ್ಪನ ಮನೆಯ ಮುಂದೆ ನರಳಿ ನರಳಿ ಸತ್ತನಂತೆ. ಸತ್ತ ವ್ಯಕ್ತಿಗೆ ಶವಸಂಸ್ಕಾರ ಮಾಡಬೇಕಲ್ಲ, ಮತಭ್ರಷ್ಟ ಕಾಮಣ್ಣನ ಶವಸಂಸ್ಕಾರ ಮಾಡಲು ಮತಾಚಾರಿಗಳು ಮುಂದೆ ಬರಲಿಲ್ಲ. ಗೆಳೆಯರೆಲ್ಲ ಸೇರಿ ಎಲ್ಲರ ಮನೆ ಅಲೆದರೂ ಯಾರೂ ಶವದಹನ ಮಾಡಲು ಬೆಂಕಿ ಕೊಡಲಿಲ್ಲವಂತೆ. ಕೊನೆಗೆ ಚಂದಪ್ಪನ ಮನೆಯಿಂದ ಬೆಂಕಿಯನ್ನು ಜಬರದಸ್ತಿನಿಂದ ತಂದು ಸುಟ್ಟರಂತೆ. ಆದ್ದರಿಂದ ಇಂದಿಗೂ ಉತ್ತರ ಕರ್ನಾಟಕದ ಕೆಲವು ಗ್ರಾಮಗಳಲ್ಲಿ ದಲಿತರ ಕೇರಿಯಿಂದಲೇ ಅಗ್ನಿ ತಂದು ಕಾಮದಹನ ಮಾಡುವ ಪದ್ಧತಿ ಇದೆ. ಅಂದರೆ ಅವಮರ್ಯಾದೆ ಹತ್ಯೆಗಳ ಈ ಸರಣಿ ಅನೂಚಾನವಾಗಿ ನಡೆದುಕೊಂಡು ಬರುತ್ತಿದೆಯಲ್ಲವೆ? ಪ್ರಜಾಪ್ರಭುತ್ವೀಯ ವ್ಯವಸ್ಥೆ ಇಲ್ಲದ ಕಾಲಘಟ್ಟದಲ್ಲಿನ ಅಮಾನವೀಯ ಜಾತಿ ವ್ಯವಸ್ಥೆ ಹಾಗೂ ಅದರಿಂದಾಗುವ ಕ್ರೂರ ಹತ್ಯೆಗಳು ಇಂದಿಗೂ ಮುಂದುವರಿಯುತ್ತಿವೆ ಎಂಬುದೇ ಅತ್ಯಂತ ನಾಚಿಕೆಗೇಡಿನ ಸಂಗತಿ. ಜನಪದರ ಈ ಕಥೆಗಳು ಇತಿಹಾಸದಲ್ಲಿನ ಅಪಸವ್ಯಗಳನ್ನು ಆಚರಣೆ ರೂಪದಲ್ಲಿ ಪೋಷಿಸಿಕೊಂಡು ಬರುತ್ತಿವೆಯಷ್ಟೇ. ಪೌರಾಣಿಕ ಕಥನಗಳಾಚೆ ಈ ಹೋಳಿ ಹಬ್ಬದ ಆಚರಣೆಗಳು ಹರಡಿಕೊಂಡಿವೆ. ಕಾಮಣ್ಣನಿಗೆ ಅಗ್ನಿ ಸ್ಪರ್ಶವಾಗುತ್ತಲೇ ಹುಡುಗರಾದಿಯಾಗಿ ಎಲ್ಲರೂ ಹೊಯ್ಯಕೊಳ್ಳುತ್ತಾರೆ. ಕಾಮಣ್ಣನ ಸುತ್ತಲೂ ತಿರುಗುತ್ತ ಹಾಡುಗಳನ್ನು ಹಾಡುತ್ತಾರೆ. ‘‘ದುಮ್ಮ ಸಾಲಿಗಿ ಲೌಡಿ ತಮ್ಮ ದುಮ್ಮ ಸಾಲಿಗಿ ಹಡಸಿ ತಮ್ಮ ದುಮ್ಮಾ ಸಾಲಿಗೆಣ್ಣಿರೋ ಕಾಮಣ್ಣದೇವರಿಗೊ’’ ಎಂದು ಹಾಡುತ್ತ ಬೊಬ್ಬೆ ಹಾಕುತ್ತಾರೆ. ಅಲ್ಲಿಂದ ಅಶ್ಲೀಲ ಪದಗಳ ಸುಗ್ಗಿ ಪ್ರಾರಂಭವಾಗುತ್ತದೆ. ಯಥೇಚ್ಚ ಅಶ್ಲೀಲ ಪದಗಳನ್ನು ಬಳಸುತ್ತಾರೆ. ಆಕಸ್ಮಾತ್ ಅಪ್ಪಿ ತಪ್ಪಿ ಹೊರಬಂದ ಸ್ತ್ರೀಯರ ಜಾತಿ ಹಿಡಿದು ಅಶ್ಲೀಲ ಪದಗಳನ್ನು ಹಾಡುತ್ತಾರೆ. ತೀರ ಮುಜುಗರ ಹುಟ್ಟಿಸುತ್ತಿದ್ದ ಇಂಥ ಪದಗಳು ಇತ್ತೀಚೆಗೆ ಕಡಿಮೆಯಾಗಿವೆಯಾದರೂ ಹೋಳಿ ಹುಣ್ಣಿಮೆ ಎಂದರೇನೆ ಪುಂಡರಿಗೆ ಎಲ್ಲದಕ್ಕೂ ಪರ್ಮಿಷನ್ ಕೊಟ್ಟ ಹಬ್ಬವೆಂಬ ವಾತಾವರಣ ಇತ್ತು. ಮರುದಿನ ಧೂಳಂಡಿ ಅಥವಾ ಬೂದಿ. ಕಾಮಣ್ಣನನ್ನು ಸುಟ್ಟ ಬೂದಿ ಮೈ ತುಂಬ ಎರಚಿಕೊಳ್ಳುವ ಸಂಕೇತ. ಅಂದರೆ ಬಣ್ಣದೋಕುಳಿ ಎರಚುವುದು. ಕಡ್ಡಾಯವಾಗಿ ಹೋಳಿಗೆ ಮಾಡಬೇಕು. ಏಕೆಂದರೆ ‘‘ಹೊಯ್ಯಕೊಂಡ ಬಾಯಿ ಹೋಳಿಗಿ ಉಣಬೇಕು’’ ಎಂಬುದು ಇಲ್ಲಿನವರ ಅಂಬೋಣ. ಗುಲಾಬಿ, ಹಸಿರು, ಹಳದಿ ಬಣ್ಣ ಆಡುವುದೆಂದರೆ ಅದು ಮಾಮೂಲಿಯಲ್ಲ. ಓಣಿ ತುಂಬ ಹಣ ಸಂಗ್ರಹಿಸಿ ಡ್ರಮ್ಗಟ್ಟಲೆ ಬಣ್ಣ ತಯಾರಿಸಿ ಈ ಮೊದಲು ಎತ್ತಿನ ಬಂಡಿ ಈಗ ಟ್ರ್ಯಾಕ್ಟರ್ನಲ್ಲಿಟ್ಟುಕೊಂಡು ಊರೆಲ್ಲರಿಗೂ ಬಣ್ಣ ಎರಚುವುದು ಇರುತ್ತದೆ. ಇದರ ನಡುವೆ ತರಹೇವಾರಿ ಸೋಗುಗಳು ಹಾಕುವುದು ಇರುತ್ತದೆ. ಹುಲಿವೇಷ ಹಾಕುವುದು. ಹೆಣ ಮಾಡಿ ಹಾಡ್ಯಾಡಿ ಅಳುವುದು. ಇದಂತೂ ಫನ್, ಕುಚೇಷ್ಟೆ, ಪ್ರತಿಭೆ ಎಲ್ಲವನ್ನು ಒಳಗೊಂಡಿರುತ್ತದೆ. ಯಾರಾದರೊಬ್ಬರನ್ನು ಹೆಣದಂತೆ ತಯಾರು ಮಾಡಿ ಸಿದಿಗೆ ಮೇಲೆ ಮಲಗಿಸಿರುತ್ತಾರೆ. ಆತ ಸುಮ್ಮನೆ ತಾಸುಗಟ್ಟಲೆ ಮಲಗಬೇಕು. ಇನ್ನೊಬ್ಬ ಯಾರೋ ಸತ್ತವನ ಹೆಂಡತಿ ವೇಷ ಧರಿಸಿ ಅಳಬೇಕು. ಈ ಅಳುವುದೇ ಹೆಚ್ಚು ಮಜಕೂರ ಸಂಗತಿ. ಆತ ಊರವರೆಲ್ಲರ ಹೆಸರು, ಅವರು ಮಾಡಿದ ಕುಚೇಷ್ಟೆ, ಜಿಪುಣತನ, ಬದ್ಮಾಸ್ಗಿರಿ ಎಲ್ಲವನ್ನು ಹಾಡ್ಯಾಡಿ ಅಳುತ್ತಾನೆ. ತಮ್ಮ ನಡುವೆ ಇದ್ದ ಜಗಳ. ಖುಷಿ, ವೈರತ್ವ ಎಲ್ಲವನ್ನು ಫನ್ ಮಾಡುವ ನೆಪದಲ್ಲಿ ಹೊರಹಾಕುತ್ತಾರೆ. ಯಾರೇನೆ ಅಂದರೂ ಏನೂ ಮಾಡುವಂತಿಲ್ಲ. ಏಕೆಂದರೆ ಇದು ಹೋಳಿಹುಣ್ಣಿಮೆ. ಬೈಗುಳ, ಲೈಂಗಿಕ ಪದ ಬಳಕೆ ಮೂಲಕ ಮನುಷ್ಯರು ತಮ್ಮೊಳಗಿನ ವಾಸನೆಯನ್ನು ನೀಗಿ ಕಳೆದುಕೊಳ್ಳುತ್ತಾರೆ. ತಡೆದಿಟ್ಟ ಭಾವನೆಗಳನ್ನು ಹರಿಬಿಟ್ಟು ನಿಚ್ಚಳವಾಗುತ್ತಾರೆ ಎಂಬ ನಂಬಿಕೆ ಹಿರಿಯರದು. ಎಂದೂ ಶಿಷ್ಟಾಚಾರ ತಪ್ಪಿ ಮಾತಾಡದವರೂ ಸಹಿತ ಹೋಳಿ ಹುಣ್ಣಿಮೆ ದಿನ ಬಾಯಿ ಸಡಿಲಬಿಟ್ಟು ಮಾತಾಡಿ, ಹೊಯ್ಕೊಂಡು ನಿರುಮ್ಮಳಾಗುತ್ತಾರೆ. ಮನುಷ್ಯರೊಳಗಿನ ಕೇಡನ್ನು ಕಳೆದುಕೊಳ್ಳುವ ಕೆಥಾರ್ಸಿಸ್(ಭಾವ ವಿರೇಚನ) ಎಂಬುದು ಕೆಲವರ ವಿಶ್ಲೇಷಣೆ. ಕೆಟ್ಟದ್ದನ್ನು ಕಳೆದುಕೊಂಡು ಮರುದಿನದಿಂದ ಒಳ್ಳೆಯವರಾಗುವ ಪಲ್ಲಟವೆಂಬುದು ನಂಬಿಕೆ. ಗ್ರಾಮೀಣ ಭಾಗದಲ್ಲಿ ಅತ್ಯಂತ ಸಂಭ್ರಮದಿಂದ ಆಚರಿಸುವ ಈ ಹಬ್ಬದಲ್ಲಿ ಎಲ್ಲ ಧರ್ಮ ಮತ್ತು ಜಾತಿಯವರು ಪಾಲ್ಗೊಳ್ಳುತ್ತಾರೆ. ಕಲ್ಯಾಣ ಕರ್ನಾಟಕದಲ್ಲಿಯಂತೂ ದುಂ ದುಂ ಪದಗಳನ್ನು ಹಾಡುವಲ್ಲಿ ಮುಸ್ಲಿಮ್ ಬಾಂಧವರು ಹಿಂದೆ ಬೀಳುತ್ತಿರಲಿಲ್ಲ. ಕಾಮದಹನದ ಬೆಂಕಿಯನ್ನು ಮರುದಿನ ಎಲ್ಲರೂ ತಮ್ಮ ಮನೆಗೆ ಹೊತ್ತೊಯುವ ರೂಢಿ ಇಂದಿಗೂ ಇದೆ. ಅದೇ ಬೆಂಕಿಯಲ್ಲಿ ಕೊಬ್ಬರಿ, ಕಡಲೆ ಸುಟ್ಟುಕೊಂಡು ತಿನ್ನುವುದಂತೂ ಬಲು ಮಜಕೂರವಾಗಿರುತ್ತದೆ. ದಿನದುದ್ದಕ್ಕೂ ಬಣ್ಣ ಹಾಕಿ ಹಾಕಿಸಿಕೊಂಡು, ಹೊಯ್ಕೊಂಡು, ಭಾಂಗ ಕುಡಿದು, ಕುಪ್ಪಳಿಸಿದ ಗಂಡಸರು ಸಾಯಂಕಾಲದೊಂದಿಗೆ ಸುಸ್ತು ಹೊಡೆದು ಶಾಂತವಾಗಿ ಬಿಡುತ್ತಾರೆ. ಅಲ್ಲಿಗೆ ಮುಂದಿನ ವರ್ಷದವರೆಗೆ ಯಾರೂ ಹೊಯ್ಕೊಳ್ಳಬಾರದು ಎಂಬ ಅಲಿಖಿತ ನಿಯಮವೊಂದು ಚಾಲ್ತಿಯಲ್ಲಿರುತ್ತದೆ. ಆದರೆ ಈ ನಡುವೆ ಎಲ್ಲ ಹಬ್ಬಗಳಂತೆ ಹೋಳಿ ಹುಣ್ಣಿಮೆಯೂ ತುಸು ಹೆಚ್ಚೇ ಆತಂಕ ಹುಟ್ಟಿಸುತ್ತಿರುವುದು ದುರಂತ. ಮೊದಲಿನ ಆ ಆರೋಗ್ಯಪೂರ್ಣ ಬಣ್ಣದೆರಚಾಟ, ಚೇಷ್ಟೆ, ಹದಿ ಹರೆಯದವರ ತುಂಟಾಟ, ವಯಸ್ಕ ಹೆಂಗಸರಿಂದ ಬೈಯಿಸಿಕೊಳ್ಳುವ ಹುಸಿ ಮುನಿಸು ಎಲ್ಲವೂ ಮಾಯವಾಗಿವೆ. ಈಗ ಹಬ್ಬಗಳು ಸಂಭ್ರಮವಾಗುವ ಬದಲಿಗೆ ದೊಂಬಿ, ಗಲಭೆಗಳಿಗೆ ದಾರಿ ಮಾಡಿಕೊಡುತ್ತಿರುವುದು ನಮ್ಮ ಸಾಂಸ್ಕೃತಿಕ ಅಸಂಗತಿಯಾಗಿ ಪರಿಣಮಿಸುತ್ತಿದೆ.
ಮಾರ್ಚ್ 4 ರಿಂದ ರಸ್ತೆ ಕಾಮಗಾರಿ: ಬೆಂಗಳೂರಿನ MG Road ಕಡೆ ಸಂಚರಿಸುವವರ ಗಮನಕ್ಕೆ..
ನೀವೇನಾದರೂ ಎಂಜಿ ರೋಡ್ ಕಡೆ ಹೋಗುವವರಿದ್ದರೆ, ಅನಿಲ್ ಕುಂಬ್ಳೆ ಸರ್ಕಲ್ ಅಥವಾ ಟ್ರಿನಿಟಿ ಸರ್ಕಲ್ ಮೂಲಕ ಸಂಚಾರ ಮಾಡುವ ಹಾಗಿದ್ದರೆ ಈ ವರದಿ ನೋಡಿ.. ಯಾಕಂದ್ರೆ, ಎಂಜಿ ರೋಡ್ನಲ್ಲಿ ಮಾರ್ಚ್ 4 ರಿಂದ ಗುಂಡಿ ಮುಚ್ಚುವ ಕಾಮಗಾರಿ ಶುರುವಾಗಲಿದೆ. 15 ದಿನಗಳ ಕಾಲ ಕಾಮಗಾರಿ ನಡೆಯಲಿದೆ.
ಅಯೋಧ್ಯೆಯಿಂದ ಹಂಪಿಯವರೆಗೆ; ನೀವು ಭೇಟಿ ನೀಡಲೇಬೇಕಾದ 12 ಶ್ರೀ ರಾಮನ ಪವಿತ್ರ ಮಂದಿರಗಳು
ಶ್ರೀರಾಮ ಕೇವಲ ಒಬ್ಬ ದೇವರಲ್ಲ, ಆತ ಭಾರತೀಯರ ನಂಬಿಕೆ, ಸಂಸ್ಕೃತಿ ಮತ್ತು ಬದುಕಿನ ಆದರ್ಶದ ಪ್ರತೀಕ. ಇತ್ತೀಚೆಗಷ್ಟೇ ಅಯೋಧ್ಯೆಯಲ್ಲಿ ನಿರ್ಮಾಣವಾಗಿರುವ ಭವ್ಯ ರಾಮ ಮಂದಿರ ಇಡೀ ಜಗತ್ತಿನ ಗಮನ ಸೆಳೆದಿದೆ. ಆದರೆ, ಭಾರತದ ಉದ್ದಗಲಕ್ಕೂ ಶ್ರೀರಾಮಚಂದ್ರನ ಹೆಜ್ಜೆಗುರುತುಗಳನ್ನು ಸಾರುವ, ಶತಮಾನಗಳ ಇತಿಹಾಸವಿರುವ ಅನೇಕ ಪ್ರಸಿದ್ಧ ದೇವಾಲಯಗಳಿವೆ. ಭಕ್ತರ ಪಾಲಿಗೆ ಪುಣ್ಯಕ್ಷೇತ್ರಗಳಾಗಿರುವ, ವಾಸ್ತುಶಿಲ್ಪದ ದೃಷ್ಟಿಯಿಂದಲೂ ಅತ್ಯಂತ ಮಹತ್ವ ಪಡೆದಿರುವ
ಸಂಪಾದಕೀಯ | ತನ್ನ ಪಕ್ಷವನ್ನು ಶುಚಿಗೊಳಿಸಲು ಕೇಜ್ರಿವಾಲ್ ಕಸಬರಿಕೆ ಬಳಸಲಿ
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಅಮೆರಿಕ ಮತ್ತು ಬ್ರಿಟನ್ ನಡುವೆ ಬಿರುಕು, ಡೊನಾಲ್ಡ್ ಟ್ರಂಪ್ ತೀವ್ರ ಅಸಮಾಧಾನ | Operation Roaring Lion
ಅಮೆರಿಕ ಮತ್ತು ಯುನೈಟೆಡ್ ಕಿಂಗ್ಡಮ್ ನಡುವೆ ದಿನದಿಂದ ದಿನಕ್ಕೆ ಸಂಬಂಧ ಹಳಸುತ್ತಿದ್ದು, ಈ ಮೂಲಕ ಎರಡೂ ಒಕ್ಕೂಟಗಳು ಈಗ ದೂರವಾಗುತ್ತಿವೆ. ಒಂದು ಕಡೆ ಚೀನಾ ಜೊತೆಗೆ ಯುನೈಟೆಡ್ ಕಿಂಗ್ಡಮ್ ವ್ಯಾಪಾರ ಒಪ್ಪಂದ ಮಾಡಿಕೊಂಡ ನಂತರ ರೊಚ್ಚಿಗೆದ್ದಿದ್ದ ಡೊನಾಲ್ಡ್ ಟ್ರಂಪ್ ಅವರು, ಎಚ್ಚರಿಕೆ ಸಂದೇಶವನ್ನ ರವಾನೆ ಮಾಡಿದ್ದರು. ಅಲ್ಲದೆ ಚೀನಾ ಜೊತೆಗೆ ನೀವು ಸೇರಿದಂತೆ ಅವರಿಂದಲೇ ನಿಮಗೆ ದೊಡ್ಡ
ಅಂದು ದೇವೇಗೌಡ್ರ ಪ್ರಧಾನಿ ಪಟ್ಟ ಉರುಳಿದ್ದು ಹೇಗೆ? ’ವಿಷಾದನೀಯ ವಾಸ್ತವ’ ಎಂದು ಸತ್ಯ ಬಿಚ್ಚಿಟ್ಟ ಸಿದ್ದರಾಮಯ್ಯ
Reason behind Deve Gowda step down from PM Post : ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಫೋನ್ ಕದ್ದಾಲಿಕೆಯ ವಿಚಾರ, ಆಡಳಿತ ಪಕ್ಷ ಮತ್ತು ವಿರೋಧ ಪಕ್ಷಗಳ ನಡುವಿನ ವಾಕ್ಸಮರಕ್ಕೆ ಕಾರಣವಾಗುತ್ತಿದೆ. ದೇವೇಗೌಡ್ರು ಅಂದು ಪ್ರಧಾನಿ ಪಟ್ಟವನ್ನು ಕಳೆದುಕೊಂಡಿದ್ದು ಹೇಗೆ ಎನ್ನುವ ವಿವರಣೆಯನ್ನು ಒಂದು ಕಾಲದ ಅವರ ಶಿಷ್ಯ ಸಿಎಂ ಸಿದ್ದರಾಮಯ್ಯ ವಿವರಿಸಿದ್ದಾರೆ.
ಸಿಕ್ಕಲಿ, ಶವರ, ಕಂದಲಿ, ಕತ್ತರಿ ಮಾಡುವ ಸಿಕ್ಕಲಿಗರು ಅಥವಾ ಶಿಕ್ಕಲಿಗರು
ಸಿಕ್ಕಲಿಗ ಅಥವಾ ಶಿಕ್ಕಲಿಗರು ಯಾವುದೇ ಧರ್ಮಕ್ಕೆ ಸೇರಿದ್ದರೂ ಅವರ ಕಾಯಕ ಒಂದೇ ಆಗಿದೆ. ಕುಲುಮೆಗಳಲ್ಲಿ ಕಬ್ಬಿಣದ ಕೆಲಸ ಮಾಡಿ ರೈತಾಪಿ ಜನಕ್ಕೆ ಕೃಷಿ ಉಪಯೋಗಿ ಸಲಕರಣೆಗಳನ್ನು ಮಾಡುತ್ತಿದ್ದವರು. ಕುಲುಮೆಗಳು ನಿಂತ ಮೇಲೆ ಹೊಟ್ಟೆಪಾಡಿಗಾಗಿ ಬೀದಿಗೆ ಬಿದ್ದು ಸಿಕ್ಕಸಿಕ್ಕ ಕೂಲಿನಾಲಿ ಕೆಲಸಗಳನ್ನು ಮಾಡುತ್ತಾ ಹೊಟ್ಟೆ ಹೊರೆಯುತ್ತಿದ್ದಾರೆ. ಇವರಿಗೆ ತುಂಡು ಭೂಮಿಯಿಲ್ಲ, ನೆಲೆನಿಲ್ಲಲು ಸೂರಿಲ್ಲ, ನಿರ್ದಿಷ್ಟ ಉದ್ಯೋಗವಿಲ್ಲ. ಈ ಸಮುದಾಯದ ಒಬ್ಬರಿಗೂ ಸರಕಾರದ ಕನಿಷ್ಠ ನಾಲ್ಕನೇ ದರ್ಜೆಯ ನೌಕರಿ ಇಲ್ಲ. ಮಕ್ಕಳಿಗೆ ವಿದ್ಯಾಭ್ಯಾಸವಿಲ್ಲ, ಈ ಸಮುದಾಯ ಹಿಂದೂ, ಮುಸ್ಲಿಮ್, ಸಿಖ್ ಧರ್ಮಗಳಲ್ಲಿ ಹಂಚಿಹೋಗಿರುವುದರಿಂದ ಇವರಿಗೆ ಎಲ್ಲೂ ಜಾತಿ ಪ್ರಮಾಣ ಪತ್ರ ಸಿಗುತ್ತಿಲ್ಲ. ಹುಬ್ಬಳ್ಳಿಯ ಕೇಶಾಪುರದ ಹಿಂಭಾಗ ಗೊಪ್ಪನಕೊಪ್ಪ ಪ್ರದೇಶದ ಸಣ್ಣ ಓಣಿಯಲ್ಲಿ ತೂರಿ ಒಂದಷ್ಟು ದೂರ ಹೋದಾಗ ಸಿಖ್ ಸಮುದಾಯದ ಸಿಕ್ಕಲಿಗರ ಲೋಕ ನನ್ನ ಕಣ್ಣ ಮುಂದೆ ತೆರೆದುಕೊಂಡಿತು. ಹಂದಿಗೂಡಿನಂತಹ ಸಣ್ಣ ಮನೆಗಳಲ್ಲಿ ತುಂಬಿತುಳುಕುತ್ತಿದ್ದ ಮಹಿಳೆಯರು, ಪುಟ್ಟ ತಲೆಗಳಿಗೆ ಸಿಖ್ ಪೇಟ ಸುತ್ತಿಕೊಂಡು ಕೊಳಕಾದ ಬಟ್ಟೆಗಳಲ್ಲಿ ಕಾಣಿಸಿಕೊಂಡ ಪುಟ್ಟ ಮಕ್ಕಳು, ಮುದುಕರು ತುಂಬಿದ್ದರೆ, ಅದೇ ಸಿಖ್ ಪೇಟ ಧರಿಸಿ, ಬನೀನು ಚೆಡ್ಡಿಗಳಲ್ಲಿನ ಗಂಡಸರು ಮನೆ ಮುಂದೆ ದೊಡ್ಡ ಟಾರ್ ಡ್ರಮ್ಮುಗಳನ್ನು ಹಾಕಿಕೊಂಡು ತಮ್ಮ ಬಲವನ್ನೆಲ್ಲ ಪ್ರಯೋಗಿಸಿ, ಆ ಡ್ರಮ್ಮುಗಳನ್ನು ಸಿಗಿಯುತ್ತ, ದೊಡ್ಡ ಸುತ್ತಿಗೆಗಳಲ್ಲಿ ತಟ್ಟುತ್ತಾ, ಏದುಸಿರು ಬಿಡುತ್ತಾ, ಬೆವರಿಳಿಸಿಕೊಂಡು ಮರಳು ಬಾಚುವ ಬಾಂಡಲೆಗಳನ್ನು ಮಾಡುತ್ತಿದ್ದರು. ಸುಡುಬಿಸಿಲಿನಲ್ಲಿ ಅವರು ಪಡುತ್ತಿದ್ದ ಕಲ್ಪಿಸಿಕೊಳ್ಳಲಿಕ್ಕೂ ಆಗದಷ್ಟು ಶ್ರಮವನ್ನು ನೋಡಿ ದಂಗುಬಡಿದುಹೋದೆ! ಇಷ್ಟೊಂದು ಕಷ್ಟ ಪಡುವ ಕಷ್ಟಜೀವಿಗಳ ಬದುಕು ತೀರಾ ಹಸಿವು, ಬಡತನದಿಂದ ಕೂಡಿತ್ತು. ಅವರನ್ನು ಮಾತಾಡಿಸಿದಾಗ ಟಾರು ಡ್ರಮ್ಮುಗಳನ್ನು ಹೊತ್ತು ತರುವುದರಿಂದ ಹಿಡಿದು ಅವನ್ನು ಸಿಗಿದು ಬಾಂಡಲೆ ಮಾಡಿ ಮಾರುವವರೆಗಿನ ಅವರ ಶ್ರಮದ ಬದುಕನ್ನು ನನ್ನ ಕಣ್ಣ ಮುಂದೆ ತೆರೆದಿಟ್ಟರು. ದುರಂತವೆಂದರೆ ಇವರಿಗೆ ಸರಕಾರ ಎಂಬುದೊಂದು ಇದೆ, ಇದರಿಂದ ನಮ್ಮ ಬದುಕಿಗೆ ಏನಾದರೂ ಸಹಾಯವಾಗುತ್ತೆ ಎಂಬ ಕನಿಷ್ಠ ಅರಿವೂ ಇದ್ದಂತಿರಲಿಲ್ಲ! ಸಿಖ್ ಸಿಕ್ಕಲಿಗರಂತೆಯೇ ಮುಸ್ಲಿಮ್ ಸಿಕ್ಕಲಿಗರ ಗೋಳನ್ನು ಆ ಸಮುದಾಯವನ್ನು ಸಂಘಟಿಸುತ್ತಿರುವ ನಿಸಾರ್ ಅಹಮದ್ ಹೇಳತೊಡಗಿದರು. ‘‘ಸರ್, ನಮ್ಮ ಗೋಳು ಯಾರಿಗೂ ಬೇಡ.. ಯಾವುದೋ ಕಾಲದಲ್ಲಿ ಹಾವೇರಿ ಜಿಲ್ಲೆ ರಟ್ಟೆಹಳ್ಳಿ ತಾಲೂಕಿಗೆ ಒಂಟೆಗಳ ಮೇಲೆ ಬಂದವರು ನಾವು, ಈಗ ಸುಮಾರು ಇನ್ನೂರು ಮನೆಗಳಿದ್ದೇವೆ. ರೈತರಿಗೆ ಕೃಷಿಗೆ ಬೇಕಾದ ಬಂಡಿಯ ಚಕ್ಕಡಿ, ಕುರಿಗೆ ಬಂಡ ತೆಗೆಯುವ ಕತ್ತರಿ, ಕೋಣ ಕಡಿಯುವ ಕಂದಲಿ, ಬಡಿಗೇರರು ಬಳಸುವ ಬಾಚಿ ಮುಂತಾದ ಹತಾರಗಳನ್ನು ಮಾಡುತ್ತಿದ್ದೆವು..ನಮ್ಮ ಅಜ್ಜಾರು ಬೀಗದ ಕೈ ಮಾಡುತ್ತಿದ್ದರಂತೆ. ಕಬ್ಬಿಣದ್ದು ಏನು ಹೇಳಿದರೂ ಮಾಡಿಕೊಡುತ್ತಿದ್ದೆವು. ಈಗ ಇದ್ದಿಲು ಸಿಗಲ್ಲ, ಬತ್ತದ ಹೊಟ್ಟೂ ಸಿಗಲ್ಲ. ಈ ಕಾರಣಕ್ಕೆ ಕುಲುಮೆಗಳನ್ನು ನಿಲ್ಲಿಸಿ ಬಿಟ್ಟಿದ್ದೇವೆ.. ಈಗ ಈ ಹತಾರಗಳನ್ನು ಕೊಳ್ಳುವವರೂ ಇಲ್ಲ ಬಿಡಿ..’’ ಎಂದು ಹೇಳಿ ನಿಟ್ಟುಸಿರು ಬಿಟ್ಟರು. ‘‘ಈಗ ನಿಮ್ಮ ಸಮುದಾಯ ಕುಲವೃತ್ತಿಯನ್ನು ಕಳಕೊಂಡು ಬದುಕಿಗಾಗಿ ಏನು ಮಾಡುತ್ತಿದೆ..?’’ ಎಂದೆ. ‘‘ಸರ್, ನೀವು ಆಯೋಗದ ಅಧ್ಯಕ್ಷರಾಗಿದ್ದಾಗ ಬಂದು ನಮ್ಮ ಗೋಳು ಕೇಳಿಸಿಕೊಂಡು ಸರಕಾರಕ್ಕೆ ವರದಿ ನೀಡಿದಿರಿ.. ಆದರೂ ಈವರೆಗೂ ನಮ್ಮ ಕಡೆ ಸರಕಾರದಿಂದ ಯಾರೂ ಬಂದಿಲ್ಲ.. ಮಕ್ಕಳಿಗೆ ಸ್ಕೂಲಿಗೆ ಸೇರಿಸಲು ಜಾತಿ ಸರ್ಟಿಫಿಕೇಟ್ ಕೇಳುತ್ತಾರೆ. ನಾವು ಹಿಂದುಳಿದ ವರ್ಗದ ಪ್ರವರ್ಗ ಒಂದರಲ್ಲಿ ಇದ್ದರೂ ನಮಗೆ ಅಧಿಕಾರಿಗಳು ಸರ್ಟಿಫಿಕೇಟ್ ಕೊಡಲ್ಲ, ‘ಎರಡು-ಬಿ’ ಯಲ್ಲಿ ತಗೊಳ್ಳಿ ಅಂತಾರೆ, ಅಲ್ಲಿ ದೊಡ್ಡ ಮುಸ್ಲಿಮ್ ಸಮುದಾಯ ಇದೆ. ಮುಸ್ಲಿಮ್ ಅಲೆಮಾರಿಗಳಾದ ನಮ್ಮಂತಹವರಿಗೆ ಅವಕಾಶ ಸಿಗಲ್ಲ, ಇನ್ನು ಸಾಲಸೋಲ, ಅನುದಾನ, ಸವಲತ್ತು ನಮಗೆ ಏನೂ ಸಿಗಲ್ಲ..’’ ಎಂದರು. ನಮ್ಮ ಆಯೋಗದಲ್ಲಿ ಸಿಕ್ಕಲಿಗರ ಕುರಿತು ವಿಸ್ತೃತ ಅಧ್ಯಯನ ಮಾಡಿ, ಅವರ ವಾಸ ಸ್ಥಳಗಳಿಗೆಲ್ಲ ಹೋಗಿ ಈ ಸಮುದಾಯಕ್ಕೆ ವಿಶೇಷ ಪ್ಯಾಕೇಜ್ ನೀಡಬೇಕೆಂದು ಸರಕಾರಕ್ಕೆ ವರದಿ ನೀಡಿದ್ದೆವು. ಕನಿಷ್ಠ ನಾವು ಶಿಫಾರಸು ಮಾಡಿದ ಪ್ಯಾಕೇಜ್ ಅನ್ನು ಸರಕಾರ ಅಂದೇ ನೀಡಿದ್ದರೆ ಈ ಸಮುದಾಯ ಒಂದಷ್ಟು ಉಸಿರಾಡಲಾದರೂ ಸಾಧ್ಯವಿರುತಿತ್ತು. ಸಿಖ್ ಮತ್ತು ಮುಸ್ಲಿಮ್ ಸಿಕ್ಕಲಿಗರನ್ನು ಭೇಟಿಯಾದ ನಂತರ ಹಿಂದೂ ಸಿಕ್ಕಲಿಗರ ಕುರಿತು ಒಂದಷ್ಟು ಅಧ್ಯಯನ ಮಾಡಿರುವ ಪ್ರಕಾಶ ದಿಲಾನ ಅವರನ್ನು ಮಾತಾಡಿಸಿದಾಗ ಹಿಂದೂ ಸಿಕ್ಕಲಿಗರ ಹಿಂದುಳಿದಿರುವಿಕೆಯ ಕಾರಣಗಳನ್ನು ಅವರು ವಿವರಿಸಿದರು. ಅವರ ಪ್ರಕಾರ ಮೂಲತಃ ಸಿಕ್ಕಲಿಗ ಸಮುದಾಯದವರು ಯುದ್ಧಯೋಧರಂತೆ, ರಾಣಾ ಪ್ರತಾಪಸಿಂಹನ ಸೈನ್ಯದಲ್ಲಿದ್ದರಂತೆ, ಇವರಲ್ಲಿ ೧೭೮ ಉಪಜಾತಿಗಳಿದ್ದವಂತೆ. ರಾಣಾ ಪ್ರತಾಪಸಿಂಹ ಮೊಗಲರ ವಿರುದ್ಧ ಯುದ್ಧದಲ್ಲಿ ಸೋತಾಗ ಶಿಕ್ಕಲಿಗರು ಮೊಗಲರ ಯುದ್ಧ ಕೈದಿಗಳಾಗಿ ಆಗ ಅನೇಕ ಜನ ಮುಸ್ಲಿಮ್ ಧರ್ಮಕ್ಕೆ ಮತಾಂತರವಾದರಂತೆ. ಇನ್ನೂ ಕೆಲವರು ಪಂಜಾಬ್ಗೆ ಹೋಗಿ ಸಿಖ್ ಸಿಕ್ಕಲಿಗರಾದರಂತೆ, ಮಿಕ್ಕ ಹಿಂದೂ ಸಿಕ್ಕಲಿಗರು ಹುಬ್ಬಳ್ಳಿ, ಬಾಗಲಕೋಟೆ, ಬಿಜಾಪುರ, ಬೆಳಗಾವಿ, ಕಾರವಾರ ಮುಂತಾದೆಡೆ ಹಂಚಿಹೋದರು. ಆಯೋಗದಿಂದ ನಾವು ಸಿಕ್ಕಲಿಗರನ್ನು ನೋಡಲು ಹೋದಾಗ, ಹುಬ್ಬಳ್ಳಿಯ ಗುಳೇದ ಗುಡ್ಡದ ಭಾಗದಲ್ಲಿ ಹಂದಿಗಳ ಮಲವನ್ನು ತಂದು ಅದನ್ನು ಬಿಸಿಲಿಗೆ ಹಾಕಿ ಒಣಗಿಸಿ, ಅದು ಒಣಗಿದ ನಂತರ ಅದನ್ನು ಉರುವಲನ್ನಾಗಿ ಉಪಯೋಗಿಸಿ, ಆ ಬೆಂಕಿಯಲ್ಲಿ ಅನ್ನ ಬೇಯಿಸಿ ಉಣ್ಣುವಂತಹ ಹೀನಾಯ ಪರಿಸ್ಥಿತಿಯನ್ನು ಕಂಡೆವು! ತಮ್ಮ ವೃತ್ತಿಯಿಂದ ವಂಚಿತರಾದ ಸಿಕ್ಕಲಿಗರು ಈಗ ಹೆಚ್ಚಾಗಿ ಕೂಲಿಯನ್ನೇ ನಂಬಿಕೊಂಡಿದ್ದಾರೆ. ಪುರಸಭೆಯಲ್ಲಿ ಕಸ ಹೊಡೆಯುವುದು, ಪಿಟ್ ಗುಂಡಿ ಸ್ವಚ್ಛ ಮಾಡುವುದನ್ನೇ ಕಾಯಕ ಮಾಡಿಕೊಂಡಿದ್ದಾರೆ. ಹುಬ್ಬಳ್ಳಿಯ ಹೇಸಿಗೆ ಮಂಡಿಯಲ್ಲಿ ಊರಿನ ಕಸವನ್ನು ತಂದು ಹಾಕುವ ಈ ಜನ ಬೆಳಗಿನ ಜಾವಕ್ಕೆ ಎದ್ದು ಹೋಗಿ ಆ ಕಸದ ರಾಶಿಯಲ್ಲಿ ಕಬ್ಬಿಣದ ಚೂರುಗಳು, ಪ್ಲಾಸ್ಟಿಕ್, ಖಾಲಿ ಬಾಟಲಿಗಳು, ಚಿಲ್ಲರೆ ಕಾಸಿಗಾಗಿ ಹುಡುಕಾಡಿ, ಅಲ್ಲಿ ಸಿಕ್ಕಿದ್ದನ್ನು ಮಾರಿ ಜೀವನ ಸಾಗಿಸುತ್ತಿದ್ದರು. ಹುಬ್ಬಳ್ಳಿ ಮತ್ತು ಗದಗದಲ್ಲಿ ಈ ಸಮುದಾಯದ ಜನ ದನ ಕರುಗಳಿಗೆ ಶವರ ಅಥವ ಗೊರಸು (ಪಾದ ಸವೆಯದಿರಲೆಂದು ದನಗಳ ಪಾದಗಳಿಗೆ ಕಬ್ಬಿಣದ ತುಂಡನ್ನು ಹಾಕುವ ಕೆಲಸ) ಹಾಕಲು ಸುತ್ತಮುತ್ತಲ ಊರುಗಳನ್ನು ಸುತ್ತುತ್ತಾ ಅಲೆಮಾರಿ ಜೀವನ ನಡೆಸುತಿದ್ದರು. ಸಿಕ್ಕಲಿಗ ಅಥವಾ ಶಿಕ್ಕಲಿಗರು ಯಾವುದೇ ಧರ್ಮಕ್ಕೆ ಸೇರಿದ್ದರೂ ಅವರ ಕಾಯಕ ಒಂದೇ ಆಗಿದೆ. ಕುಲುಮೆಗಳಲ್ಲಿ ಕಬ್ಬಿಣದ ಕೆಲಸ ಮಾಡಿ ರೈತಾಪಿ ಜನಕ್ಕೆ ಕೃಷಿ ಉಪಯೋಗಿ ಸಲಕರಣೆಗಳನ್ನು ಮಾಡುತ್ತಿದ್ದವರು. ಕುಲುಮೆಗಳು ನಿಂತ ಮೇಲೆ ಹೊಟ್ಟೆಪಾಡಿಗಾಗಿ ಬೀದಿಗೆ ಬಿದ್ದು ಸಿಕ್ಕಸಿಕ್ಕ ಕೂಲಿನಾಲಿ ಕೆಲಸಗಳನ್ನು ಮಾಡುತ್ತಾ ಹೊಟ್ಟೆ ಹೊರೆಯುತ್ತಿದ್ದಾರೆ. ಇವರಿಗೆ ತುಂಡು ಭೂಮಿಯಿಲ್ಲ, ನೆಲೆನಿಲ್ಲಲು ಸೂರಿಲ್ಲ, ನಿರ್ದಿಷ್ಟ ಉದ್ಯೋಗವಿಲ್ಲ. ಈ ಸಮುದಾಯದ ಒಬ್ಬರಿಗೂ ಸರಕಾರದ ಕನಿಷ್ಠ ನಾಲ್ಕನೇ ದರ್ಜೆಯ ನೌಕರಿ ಇಲ್ಲ. ಮಕ್ಕಳಿಗೆ ವಿದ್ಯಾಭ್ಯಾಸವಿಲ್ಲ, ಈ ಸಮುದಾಯ ಹಿಂದೂ, ಮುಸ್ಲಿಮ್, ಸಿಖ್ ಧರ್ಮಗಳಲ್ಲಿ ಹಂಚಿಹೋಗಿರುವುದರಿಂದ ಇವರಿಗೆ ಎಲ್ಲೂ ಜಾತಿ ಪ್ರಮಾಣ ಪತ್ರ ಸಿಗುತ್ತಿಲ್ಲ. ಸಿಕ್ಕಲಿಗ, ಶಿಕ್ಕಲಿಗ ಸಮುದಾಯದ ಸಾಮಾಜಿಕ, ಶೈಕ್ಷಣಿಕ, ಔದ್ಯೋಗಿಕ ಹಾಗೂ ಆರ್ಥಿಕ ಹಿನ್ನೆಲೆಯನ್ನು ಕೂಲಂಕಶವಾಗಿ ಪರಿಶೀಲಿಸಿ, ಕರ್ನಾಟಕದಾದ್ಯಂತ ಇವರು ಬದುಕಿರುವ ಸ್ಥಳಗಳಿಗೆ ಭೇಟಿ ನೀಡಿ ಇವರ ಬದುಕು ಮತ್ತು ಬವಣೆಗಳನ್ನು ಪರಿಶೀಲಿಸಿ, ಈ ನಿರ್ಗತಿಕ ಸಮುದಾಯದ ಉನ್ನತಿಗಾಗಿ ಸುಮಾರು ಹತ್ತು ಪರಿಹಾರೋಪಾಯಗಳನ್ನು ಪಟ್ಟಿಮಾಡಿ, ಸರಕಾರಕ್ಕೆ ಶಿಫಾರಸು ನೀಡಿ ಹದಿನಾರು ವರ್ಷಗಳಾದವು! ಯಾವುದೇ ಸರಕಾರ ತನ್ನ ಸರಕಾರವೇ ನೇಮಿಸಿದ ಹಿಂದುಳಿದ ವರ್ಗಗಳ ಆಯೋಗ ನೀಡಿರುವ ವರದಿಯನ್ನು ತೆರೆದು ಕೂಡ ನೋಡದಿರುವುದು ವಿಪರ್ಯಾಸ ಮತ್ತು ದುರಂತ.
ಮಧ್ಯಪ್ರಾಚ್ಯ ಧಗಧಗ: ಯಶ್ ನಟನೆಯ ‘ಟಾಕ್ಸಿಕ್’ ಚಿತ್ರ ಮುಂದೂಡಿಕೆ, ಜೂನ್ 4 ರಂದು ಬಿಡುಗಡೆ
ಮಾರ್ಚ್ 19 ರಂದು 'ಟಾಕ್ಸಿಕ್' ಸಿನಿಮಾ ವಿಶ್ವದಾದ್ಯಂತ ತೆರೆಗೆ ಅಪ್ಪಳಿಸಬೇಕಿತ್ತು. ಆದರೆ, ಪ್ರಸ್ತುತ ಮಧ್ಯಪ್ರಾಚ್ಯದಲ್ಲಿ ಕ್ಷಿಪಣಿಗಳು ಅಪ್ಪಳಿಸುತ್ತಿವೆ. ಹೀಗಾಗಿ, 'ಟಾಕ್ಸಿಕ್' ಚಿತ್ರದ ರಿಲೀಸ್ ಡೇಟ್ ಅನ್ನು ಪೋಸ್ಟ್ ಪೋನ್ ಮಾಡಲಾಗಿದೆ. ಜೂನ್ 4ಕ್ಕೆ 'ಟಾಕ್ಸಿಕ್' ಮುಂದೂಡಲಾಗಿದೆ. ಚಿತ್ರದ ಪ್ರಚಾರ ಕಾರ್ಯಗಳಿಗೆ ತಾತ್ಕಾಲಿಕ ಫುಲ್ ಸ್ಟಾಪ್ ಬಿದ್ದಿದೆ.
Gold Rate Fall: ಏರಿದಷ್ಟೇ ವೇಗವಾಗಿ ಕುಸಿದ ಚಿನ್ನದ ಬೆಲೆ: ಬೆಳ್ಳಿ ಬೆಲೆಯಲ್ಲೂ ಇಳಿಕೆ
ಚಿನ್ನ ಬೆಳ್ಳಿ ದರದಲ್ಲಿ ಭಾರಿ ಇಳಿಕೆ ದಾಖಲಿಸಿದೆ. ಚಿನ್ನದ ದರದಲ್ಲಿ ಇಂದು 3, 110 ರೂ ಇಳಿಕೆ ಆಗಿದ್ದರೆ, ಬೆಳ್ಳಿ ಬೆಲೆಯಲ್ಲಿ 10 ಸಾವಿರ ಇಳಿದಿದೆ.
ಇರಾನ್ ಮೇಲೆ ಇಸ್ರೇಲ್ ಹಾಗೂ ಅಮೆರಿಕ ಯುದ್ಧ ಸಾರಿದ ಕೇವಲ ಮೂರು ದಿನಗಳಲ್ಲೇ ಅದರ ನೇರ ಹಾಗೂ ತೀವ್ರವಾದ ಪರಿಣಾಮ ಕರ್ನಾಟಕದ ಹೈನೋದ್ಯಮ, ಕುಕ್ಕುಟೋದ್ಯಮ ಹಾಗೂ ಕೃಷಿ ವಲಯದ ಮೇಲೆ ಬೀರಿದೆ. ಮಧ್ಯಪ್ರಾಚ್ಯದಲ್ಲಿ ಭುಗಿಲೆದ್ದಿರುವ ಈ ಯುದ್ಧದಿಂದಾಗಿ ವಿಮಾನಗಳ ಸಂಚಾರ ಹಾಗೂ ಹಡಗು ಮಾರ್ಗಗಳು ಸಂಪೂರ್ಣವಾಗಿ ಸ್ಥಗಿತಗೊಂಡಿವೆ. ಇದರ ಪರಿಣಾಮವಾಗಿ, ಗಲ್ಫ್ ರಾಷ್ಟ್ರಗಳಿಗೆ ರಫ್ತಾಗಬೇಕಿದ್ದ ಕೋಟ್ಯಂತರ ರೂಪಾಯಿ
ವೃದ್ಧರು, ವಿಧವೆಯರು, ಲಿಂಗತ್ವ ಅಲ್ಪಸಂಖ್ಯಾತರಿಗೆ ತಲಾ 2,000ರೂ ವಿಶೇಷ ನೆರವು : ತಮಿಳುನಾಡು ಸಿಎಂ ಸ್ಟಾಲಿನ್ ಘೋಷಣೆ
ಚೆನ್ನೈ: ಸಮಾಜದ ದುರ್ಬಲ ವರ್ಗದ 37.79 ಲಕ್ಷ ಜನರ ಬ್ಯಾಂಕ್ ಖಾತೆಗಳಿಗೆ ತಲಾ 2,000ರೂ. ಜಮೆ ಮಾಡಲಾಗಿದೆ ಎಂದು ತಮಿಳುನಾಡು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಹೇಳಿದ್ದಾರೆ. ವೃದ್ಧರು, ವಿಧವೆಯರು, ಲಿಂಗತ್ವ ಅಲ್ಪ ಸಂಖ್ಯಾತರು ಮತ್ತು ಅಂಗವಿಕಲರಿಗೆ ಹೆಚ್ಚುವರಿ ಬೆಂಬಲ ನೀಡುವಂತೆ ಕೋರಿದ ಮನವಿಗೆ ಪ್ರತಿಕ್ರಿಯಿಸಿದ ಸರಕಾರ, ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ಅಸ್ತಿತ್ವದಲ್ಲಿರುವ ಮಾಸಿಕ ಪಿಂಚಣಿಗಿಂತ 2,000 ರೂ. ವಿಶೇಷ ನೆರವು ನೀಡಿದೆ. ಸಮಾಜದಲ್ಲಿರುವ ದುರ್ಬಲ ವರ್ಗದ ಜನರ ಆರ್ಥಿಕ ಸಂಕಷ್ಟಗಳನ್ನು ನಿವಾರಿಸುವ ಗುರಿಯನ್ನು ಈ ಕ್ರಮ ಹೊಂದಿದೆ ಎಂದು ಸ್ಟಾಲಿನ್ ಹೇಳಿದ್ದಾರೆ. ಈ ಕ್ರಮವು ಬಡವರ, ಸಮಾಜನದ ದುರ್ಬಲ ವರ್ಗದ ಜನರ ಆರ್ಥಿಕ ಸಂಕಷ್ಟಗಳನ್ನು ನಿವಾರಿಸುವ ಗುರಿಯನ್ನು ಹೊಂದಿದೆ ಎಂದು ಸ್ಟಾಲಿನ್ ಹೇಳಿದ್ದಾರೆ.
ಇರಾನ್ ನ ಪರಮೋಚ್ಛ ನಾಯಕನಾಗಿ ಆಯತೊಲ್ಲಾ ಪುತ್ರ ಮೊಜ್ತಬಾ ಖಮೇನಿ ಆಯ್ಕೆ: ತಂದೆಗಿಂತ ಭಿನ್ನ ಹೇಗೆ? ಆಯ್ಕೆಗೆ ಕಾರಣಗಳಿವು!
ಅಮೆರಿಕ- ಇಸ್ರೇಲ್ ನಿರಂತರ ದಾಳಿ ಮಧ್ಯೆಯೂ ಇರಾನ್ ಗೆ ನೂತನ ಪರಮೋಚ್ಛ ನಾಯಕನ ಆಯ್ಕೆಯಾಗಿದೆ. 56 ವರ್ಷದ ಮೊಜ್ತಬಾ ಖಮೇನಿ, ಮಿಲಿಟರಿ ವ್ಯವಸ್ಥೆಗಳ ನಿರ್ವಹಣೆಯಲ್ಲಿ ಉತ್ತಮ ಹಿಡಿತವಿದೆ ಎನ್ನಲಾಗಿದೆ.
PC : PTI ಬೆಂಗಳೂರು : ವಿಪತ್ತುಗಳ ಅಪಾಯವನ್ನು ತಡೆಗಟ್ಟುವುದು ಮತ್ತು ಕಡಿಮೆ ಮಾಡುವ ಉದ್ದೇಶದಿಂದ ಕರ್ನಾಟಕ ಸೇರಿದಂತೆ ಒಟ್ಟು 12 ರಾಜ್ಯಗಳು ತಮಗೆ ಹಂಚಿಕೆಯಾಗಿದ್ದ 1,200 ಕೋಟಿ ರೂ. ಅನುದಾನದ ಬಳಕೆ ಮಾಡಿರುವ ಪ್ರಮಾಣ ಪತ್ರಗಳನ್ನು ಸಲ್ಲಿಸಿಲ್ಲ. ಕೇಂದ್ರ ಗೃಹ ಸಚಿವಾಲಯದ ವಿಪತ್ತು ನಿರ್ವಹಣೆ ವಿಭಾಗವು ಕರ್ನಾಟಕ ಸೇರಿದಂತೆ ದೇಶದ 12 ರಾಜ್ಯ ಸರಕಾರಗಳಿಗೆ 2026ರ ಫೆ. 6ರಂದೇ ಈ ಕುರಿತು ಪತ್ರ ಬರೆದಿದೆ. ಈ 12 ರಾಜ್ಯಗಳಿಗೆ ತಲಾ 100 ಕೋಟಿ ರೂ. ನಂತೆ 1,200 ಕೋಟಿ ರೂ. ಅನುದಾನ ಹಂಚಿಕೆ ಮಾಡಿತ್ತು. ಆದರೆ ಅನುದಾನ ಬಳಕೆ ಮಾಡಿರುವ ಪ್ರಮಾಣ ಪತ್ರಗಳನ್ನು ಸಲ್ಲಿಸಿಲ್ಲ. ಹೀಗಾಗಿ ಕೇಂದ್ರ ಸರಕಾರವು ರಾಜ್ಯಗಳಿಗೆ ಪತ್ರ ಬರೆದಿದೆ. ಈ ಪತ್ರವನ್ನಾಧರಿಸಿ ಕರ್ನಾಟಕ ಸರಕಾರದ ಕಂದಾಯ ಇಲಾಖೆಯ ವಿಪತ್ತು ನಿರ್ವಹಣೆ ವಿಭಾಗವು ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಮತ್ತು ಕರ್ನಾಟಕ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಪೊಲೀಸ್ ಮಹಾನಿರ್ದೇಶಕರಿಗೆ 2026ರ ಫೆ.26ರಂದು ಪತ್ರ ಬರೆದಿದೆ. ಈ ಪತ್ರಗಳು he-file.inಗೆ ಲಭ್ಯವಾಗಿದೆ. ಕರ್ನಾಟಕ ಅಗ್ನಿಶಾಮಕ ಹಾಗೂ ತುರ್ತು ಸೇವೆಗಳಿಗೆ ಎನ್ಡಿಆರ್ಎಫ್ರಲ್ಲಿ ನಿಗದಿಪಡಿಸಿದ್ದ ಮಾನದಂಡಗಳ ಅನ್ವಯ ಸ್ವಯಂ ಸೇವಕರ ತರಬೇತಿ, ಇಆರ್ಕೆಗಳ ಸಂಗ್ರಹಣೆ, ಯುವ ಆಪದ್ ಮಿತ್ರ ಯೋಜನೆ ಅನುಷ್ಠಾನ, ಎಂಐಎಸ್ ನವೀಕರಣ, ವಿಮಾ ರಕ್ಷಣೆ ಒಪ್ಪಂದಗಳಿಗೆ ಸಹಿ ಹಾಕುವುದು ಸೇರಿದಂತೆ ಪ್ರಮುಖ ಕಾರ್ಯಗಳನ್ನು ತ್ವರಿತವಾಗಿ ಕೈಗೆತ್ತಿಕೊಳ್ಳಬೇಕು. ಇದಕ್ಕಾಗಿ 3ನೇ ಕಂತಿನ ಅನುದಾನ ಹಂಚಿಕೆ ಮಾಡಬೇಕಿದೆ. ಅಂತಿಮ ಕಂತಿನ ಬಿಡುಗಡೆಗೆ ಅನುವು ಮಾಡಿಕೊಡಲು 2026ರ ಮಾ.15ರೊಳಗೇ ಎನ್ಡಿಎಂಎಗೆ ಬಾಕಿ ಇರುವ ಹಣ ಬಳಕೆ ಪ್ರಮಾಣ ಪತ್ರಗಳನ್ನು ಸಲ್ಲಿಸಬೇಕು ಎಂದು ಕಂದಾಯ ಇಲಾಖೆಯು ಸೂಚಿಸಿದೆ. ವಿಪತ್ತುಗಳ ಅಪಾಯವನ್ನು ತಡೆಗಟ್ಟಲು ಕಡಿಮೆ ಮಾಡಲು ಮತ್ತು ಸನ್ನದ್ಧತೆಯನ್ನು ಹೆಚ್ಚಿಸಲು ಭಾರತ ಸರಕಾರವು ರಾಷ್ಟ್ರೀಯ ವಿಪತ್ತು ತಗ್ಗಿಸುವಿಕೆ ನಿಧಿ ಸ್ಥಾಪಿಸಿದೆ. 15ನೇ ಹಣಕಾಸು ಆಯೋಗದ ಶಿಫಾರಸಿನ ಮೇರೆಗೆ ಎನ್ಡಿಆರ್ಎಫ್ ಜೊತೆಗೆ ವಿಶೇಷವಾಗಿ ತಗ್ಗಿಸುವಿಕೆಯ ಯೋಜನೆಗಳಿಗಾಗಿ ಈ ಪ್ರತ್ಯೇಕ ನಿಧಿಯನ್ನು ರಚಿಸಿದೆ. 15ನೇ ಹಣಕಾಸು ಆಯೋಗವು ತನ್ನ ವರದಿಯಲ್ಲಿ ಪರಿಹಾರ ನಿಧಿಗಳನ್ನು ಸ್ಥಾಪಿಸಲು ಶಿಫಾರಸುಗಳನ್ನು ಮಾಡಿತ್ತು. ಮತ್ತು ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದಲ್ಲಿ ಹಂಚಿಕೆಗಳನ್ನು ಸೂಚಿಸಿತ್ತು. ಹಣಕಾಸು ಆಯೋಗದ ಶಿಫಾರಸುಗಳನ್ನು ಅಂಗೀಕರಿಸಿದ್ದ ಕೇಂದ್ರ ಸರಕಾರವು 2021-22 ರಿಂದ 2025-26ರ ಅವಧಿಗೆ ರಾಷ್ಟ್ರೀಯ ವಿಪತ್ತು ತಗ್ಗಿಸುವಿಕೆ ನಿಧಿಗೆ 13,693 ಕೋಟಿ ರೂ. ಮತ್ತು ರಾಜ್ಯ ವಿಪತ್ತು ತಗ್ಗಿಸುವಿಕೆ ನಿಧಿಗೆ 32,030.60 ಕೋಟಿ ರೂ.ಗಳನ್ನು ನಿಗದಿಪಡಿಸಿತ್ತು. 15ನೇ ಹಣಕಾಸು ಆಯೋಗದ ಮಧ್ಯಂತರ ಶಿಫಾರಸುಗಳ ಆಧಾರದ ಮೇಲೆ 2020-21ರ ಅವಧಿಗೆ ಎಸ್ಡಿಎಂಎಫ್ಗೆ 5,796.60 ಕೋಟಿ ರೂ.ಗಳನ್ನು ಹಂಚಿಕೆ ಮಾಡಿದೆ. 2021-22ರಲ್ಲಿ ಎನ್ಡಿಆರ್ಎಂಎಫ್ ಅಡಿಯಲ್ಲಿ 12,390 ಕೋಟಿ ರೂ. ಮತ್ತು ಎನ್ಡಿಎಂಎಫ್ಗೆ 2,478.00 ಕೋಟಿ ರೂ. , 2022-23ರಲ್ಲಿ ಎನ್ಡಿಆರ್ಎಂಎಫ್ಗೆ 13,010 ಕೋಟಿ ರೂ. , ಎನ್ಡಿಎಂಎಫ್ಗೆ 2,602 ಕೋಟಿ ರೂ., 2023-24ರಲ್ಲಿ ಎನ್ಆರ್ಎಂಎಫ್ಗೆ 13,660 ಕೋಟಿ ರೂ. , ಎನ್ಎಂಎಫ್ಗೆ 2,732 ಕೋಟಿ ರೂ., 2024-25ರಲ್ಲಿ ಎನ್ಆರ್ಎಂಎಫ್ಗೆ 14,343 ಕೋಟಿ ರೂ., ಎನ್ಡಿಎಂಎಫ್ಗೆ 2,869 ಕೋಟಿ ರೂ., 2025-26ರಲ್ಲಿ ಎನ್ಎಆರ್ಎಂಎಫ್ಗೆ 15,060 ಕೋಟಿ ರೂ. ಸೇರಿ ಒಟ್ಟಾರೆ 68,463 ಕೋಟಿ ರೂ. ಅನುದಾನ ಹಂಚಿಕೆ ಮಾಡಿತ್ತು. ಅದೇ ರೀತಿ ಎನ್ಡಿಎಂಎಫ್ಗೆ 2026-26ರಲ್ಲಿ 3,012 ಕೋಟಿ ರೂ. ಸೇರಿ ಒಟ್ಟಾರೆ 13,693 ಕೋಟಿ ರೂ. ಹಂಚಿಕೆ ಮಾಡಿತ್ತು. ಅಲ್ಲದೇ ಬರ ಪೀಡಿತ ಕರ್ನಾಟಕ, ಬಿಹಾರ, ಗುಜರಾತ್, ಜಾರ್ಖಂಡ್, ಮಧ್ಯ ಪ್ರದೇಶ, ಮಹಾರಾಷ್ಟ್ರ, ಒಡಿಶಾ, ರಾಜಸ್ಥಾನ, ತಮಿಳುನಾಡು, ತೆಲಂಗಾಣ, ಉತ್ತರ ಪ್ರದೇಶ ಸೇರಿದಂತೆ ಒಟ್ಟು 12 ರಾಜ್ಯಗಳಿಗೆ ತಲಾ 100 ಕೋಟಿ ರೂ. ನಂತೆ ಒಟ್ಟಾರೆ 1,200 ಕೋಟಿ ರೂ. ಗಳನ್ನು ಬರ ತಗ್ಗಿಸುವಿಕೆ ನಿಧಿಯಡಿ 2021-26ರವರೆಗೆ ಹಂಚಿಕೆಮಾಡಿದೆ. ಅದೇ ರೀತಿ ಭೂಕಂಪ ಮತ್ತು ಭೂ ಕುಸಿತಗಳನ್ನು ತಡೆಗಟ್ಟಲು 2021-22ರಿಂದ 2025-26ರವರೆಗೆ ಹಿಮಾಚಲ ಪ್ರದೇಶ, ಉತ್ತರಾಖಂಡ್ ಮತ್ತು ಈಶಾನ್ಯ ರಾಜ್ಯಗಳಿಗೆ ತಲಾ 250 ಕೋಟಿ ರೂ. ನಂತೆ ಒಟ್ಟಾರೆ 750 ಕೋಟಿ ರೂ. ಗಳನ್ನು ಹಂಚಿಕೆ ಮಾಡಿದೆ. ಹಾಗೆಯೇ ಬೆಂಗಳೂರು ನಗರ, ಮುಂಬೈ, ಚೆನ್ನೈ, ಕೋಲ್ಕತ್ತಾ, ಹೈದರಾಬಾದ್, ಅಹಮದಾಬಾದ್ ಮತ್ತು ಪುಣೆ ರಾಜ್ಯಕ್ಕೆ ವಾರ್ಷಿಕವಾಗಿ 500 ಕೋಟಿ ರೂ.ಹಂಚಿಕೆ ಮಾಡಿತ್ತು. 2021-26ರ ಅವಧಿಯಲ್ಲಿ ಈ ನಗರಗಳಿಗೆ ಒಟ್ಟಾರೆ 2,500 ಕೋಟಿ ರೂ. ಅನುದಾನ ಹಂಚಿಕೆಯಾಗಿದೆ. ಇದರಲ್ಲಿ ಬೆಂಗಳೂರು ನಗರಕ್ಕೆ ವಾರ್ಷಿಕ 50 ಕೋಟಿ ರೂ. ನಂತೆ 2021-26ರವರೆಗೆ 250 ಕೋಟಿ ರೂ. ಹಂಚಿಕೆ ಮಾಡಿದೆ. ಮೊದಲ ಬಾರಿಗೆ ಸರಕಾರವು ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದಲ್ಲಿ ವಿಪತ್ತು ಅಪಾಯಗಳನ್ನು ತಗ್ಗಿ ಸಲು ಮಾತ್ರ ಹಣವನ್ನು ಹಂಚಿಕೆ ಮಾಡಿತ್ತು. ಇದು ವಿಪತ್ತುಗಳ ಪರಿಣಾಮವನ್ನು ಕಡಿಮೆ ಮಾಡಲು ತಗ್ಗಿಸುವ ಚಟುವಟಿಕೆಗಳನ್ನು ಕೈಗೊಳ್ಳಲು ರಾಜ್ಯಗಳಿಗೆ ಸಹಾಯ ಮಾಡಲಿದೆ. ಕೇಂದ್ರ ಸರಕಾರವು ಎಸ್ಡಿಎಂಫ್ಎಫ್ನಲ್ಲಿ ಕೇಂದ್ರದ ಪಾಲಾಗಿ ಎಲ್ಲ ರಾಜ್ಯಗಳಿಗೆ ಶೇ 75 (ಈಶಾನ್ಯ ಮತ್ತು ಹಿಮಾಲಯನ್ ರಾಜ್ಯಗಳಿಗೆ ಶೇ 90) ಕೊಡುಗೆ ನೀಡುತ್ತಿದೆ. 2013-14ರಿಂದ 2022-23ರವರೆಗೆ ರಾಜ್ಯದಲ್ಲಿ ಕಂದಾಯ ಇಲಾಖೆಯು ನೀಡಿದ್ದ ಒಟ್ಟು 43.37 ಕೋಟಿ ರೂ.ಗಳಲ್ಲಿ 23.68 ಕೋಟಿ ರೂ.ಖರ್ಚಾಗಿದೆ. ಎನ್ಡಿಆರ್ಎಫ್ನಲ್ಲಿ 7.69 ಕೋಟಿ ರೂ. ಉಳಿದಿತ್ತು. ಆದರೆ 2022-23ರಲ್ಲಿ ಹಂಚಿಕೆಯಾಗಿದ್ದ ನಿಧಿಯ ಒಟ್ಟು 12 ಕೋಟಿ ರೂ. ಕಳೆದು ಹೋಗಿದೆ ಎಂದು ಗಮನಿಸಿದೆ ಎಂದು ಸಿಎಜಿಯು ತನ್ನ ವರದಿಯಲ್ಲಿ ಉಲ್ಲೇಖಿಸಿದೆ. ಸಾವು, ಗಾಯ, ವರ್ಗಗಳ ಆಧಾರದ ಮೇಲೆ ಜನಸಂಖ್ಯೆ, ಶಿಕ್ಷಣ, ಆರೋಗ್ಯ, ವಸತಿ, ಕೃಷಿ, ಕೈಗಾರಿಕೆಗಳು, ರಸ್ತೆಗಳು, ಸೇತುವೆಗಳು, ಕಟ್ಟಡಗಳಂತಹ ನಿರ್ಣಾಯಕ ಮೂಲಸೌಕರ್ಯಗಳ, ಸಾಂಸ್ಕೃತಿಕ ಪರಂಪರೆಗಳು ಮತ್ತಿತರ ಕ್ಷೇತ್ರಗಳಲ್ಲಿನ ಆರ್ಥಿಕ ನಷ್ಟಗಳ ಕುರಿತು ರಾಜ್ಯ ಅಧಿಕಾರಿಗಳು, ಆಯಾ ಜಿಲ್ಲೆಗಳು ತಮ್ಮ ಸ್ಥಳೀಯ ವಿಪತ್ತುಗಳ ಕುರಿತು ದತ್ತಾಂಶವನ್ನು ನಮೂದಿಸಬೇಕು. ಆದರೆ ಇಂತಹ ಜವಾಬ್ದಾರಿಯು ಪರಿಣಾಮಕಾರಿಯಾಗಿ ನಿಭಾಯಿಸಿಲ್ಲ ಎಂದು ಸಿಎಜಿಯು ಪತ್ತೆ ಹಚ್ಚಿತ್ತು. ಹೆಸರಿಗಷ್ಟೇ ಆಪ್ತಮಿತ್ರ! ಸಿದ್ದರಾಮಯ್ಯ ಅವರ ಮೊದಲ ಅವಧಿಯಲ್ಲಿ(2016-17) ಕೇಂದ್ರ ಸರಕಾರವು ಆಪ್ತಮಿತ್ರ ಯೋಜನೆಯನ್ನು ಅನುಮೋದಿಸಿತ್ತು. ಆದರೆ ಈ ಯೋಜನೆಯಡಿಯಲ್ಲಿ ತರಬೇತಿ ಪಡೆದಿದ್ದ ಸ್ವಯಂ ಸೇವಕರಿಗೆ ತುರ್ತು ಪ್ರತಿಸ್ಪಂದಕ ಕಿಟ್ಗಳನ್ನೇ ನೀಡಿರಲಿಲ್ಲ. ಹೀಗಾಗಿ ಈ ಯೋಜನೆಯು ಹೆಸರಿಗಷ್ಟೇ ಆಪ್ತಮಿತ್ರವಾಗಿತ್ತು. ಈ ಯೋಜನೆಯಡಿಯಲ್ಲಿ 2022ರ ಜೂನ್ನಿಂದ ಆಗಸ್ಟ್ವರೆಗೆ 11 ಜಿಲ್ಲೆಗಳಲ್ಲಿ 3,400 ಸ್ವಯಂ ಸೇವಕರಿಗೆ ತರಬೇತಿ ನೀಡಿತ್ತು. ಇದಕ್ಕಾಗಿ 4.14 ಕೋಟಿ ರೂ. ವೆಚ್ಚವಾಗಿತ್ತು ಎಂದು ದಾಖಲೆಗಳಲ್ಲಿ ತೋರಿಸಿತ್ತು. ಆದರೆ ತುರ್ತು ಪ್ರತಿಸ್ಪಂದಕ ಕಿಟ್ಗಳನ್ನು ಖರೀದಿಸಿ ಯಾವುದೇ ಪ್ರಶಿಕ್ಷಣಾರ್ಥಿಗಳಿಗೆ ವಿತರಿಸಿಲ್ಲ ಎಂದು ಲೆಕ್ಕ ಪರಿಶೋಧನೆಯು ಗಮನಿಸಿದೆ. ಅಲ್ಲದೇ ತರಬೇತಿ ಪಡೆದಿದ್ದ ಸ್ವಯಂ ಸೇವಕರ ಸೇವೆಯನ್ನು ಅಪಾಯದ ಸಮಯದಲ್ಲಿ ರಕ್ಷಣಾ ಕಾರ್ಯಾಚರಣೆಗೆ ಬಳಸಲಾಗಿದೆ ಎಂದು ಸೂಚಿಸುವ ಯಾವುದೇ ಪರೀಕ್ಷಾ ತನಿಖೆ ನಡೆಸಿದ ಜಿಲ್ಲೆಗಳಲ್ಲಿ ಯಾವುದೇ ದಾಖಲೆಗಳೂ ಲಭ್ಯವಿಲ್ಲ ಎಂದು ಸಿಎಜಿ ವರದಿಯು ಪತ್ತೆ ಹಚ್ಚಿತ್ತು.
ಮಧ್ಯಪ್ರಾಚ್ಯ ಬಿಟ್ಟು ತಕ್ಷಣ ಹೊರಡಿ, ಅಮೆರಿಕ ಪ್ರಜೆಗಳಿಗೆ ಟ್ರಂಪ್ ಸರ್ಕಾರದ ಸೂಚನೆ | Operation Roaring Lion
ಎಲ್ಲೆಲ್ಲೂ ಬೀಳುತ್ತಿರುವ ಮಿಸೈಲ್ &ಬಾಂಬ್ಗಳು, ಜೀವ ಉಳಿಸಿಕೊಳ್ಳಲು ಪರದಾಡುತ್ತಿರುವ ಜನರು... ಅಂದಹಾಗೆ, ಇದು ಮಧ್ಯಪ್ರಾಚ್ಯ ಭಾಗದಲ್ಲಿ ಇದೀಗ ಕಂಡುಬರುತ್ತಿರುವ ಸಾಮಾನ್ಯ ದೃಶ್ಯಗಳು ಇವು. ಇರಾನ್ ಮೇಲೆ ಅಮೆರಿಕ ಇನ್ನಷ್ಟು ದೊಡ್ಡ ಮಟ್ಟದಲ್ಲಿ ದಾಳಿ ನಡೆಸುತ್ತಿದ್ದು, ಇಸ್ರೇಲ್ ಸೇನೆ ಜೊತೆ ಸೇರಿ ಇರಾನ್ ರಾಜಧಾನಿ ತೆಹ್ರಾನ್ ಧೂಳ್ ಧೂಳ್ ಮಾಡುತ್ತಿದೆ ಅಮೆರಿಕ. ತಾನು ಇಟ್ಟಿರುವ ಗುರಿ ತಲುಪುವ
ಷೇರು ಮಾರುಕಟ್ಟೆಗೆ ತಟ್ಟಿದ ಯುದ್ಧದ ಬಿಸಿ: ಸೆನ್ಸೆಕ್ಸ್ 78,500 ಮಟ್ಟಕ್ಕೆ ಕುಸಿತ, ನಿಫ್ಟಿಗೂ ಬಲವಾದ ಪೆಟ್ಟು
ಭಾರತೀಯ ಷೇರು ಮಾರುಕಟ್ಟೆಯಲ್ಲಿ ಇಂದು ಭೀಕರ ಕುಸಿತ ಕಂಡುಬಂದಿದೆ. ಅಮೆರಿಕ-ಇರಾನ್ ನಡುವಿನ ಯುದ್ಧದ ಭೀತಿ ಮತ್ತು ಕಚ್ಚಾ ತೈಲ ಬೆಲೆ ಏರಿಕೆಯ ಪರಿಣಾಮವಾಗಿ ಬುಧವಾರ ಬೆಳಗ್ಗೆ ವಹಿವಾಟು ಆರಂಭವಾಗುತ್ತಿದ್ದಂತೆ ಸೆನ್ಸೆಕ್ಸ್ ಮತ್ತು ನಿಫ್ಟಿ ಪಾತಾಳಕ್ಕೆ ಕುಸಿದಿವೆ. ಬಿಎಸ್ಇ ಸೆನ್ಸೆಕ್ಸ್ ಬರೋಬ್ಬರಿ 1,750 ಪಾಯಿಂಟ್ಸ್ ಕುಸಿತ ಕಂಡು 78,480.63 ಮಟ್ಟಕ್ಕೆ ತಲುಪಿದೆ. ಎನ್ಎಸ್ಇ ನಿಫ್ಟಿ 500 ಪಾಯಿಂಟ್ಸ್ಗಿಂತಲೂ ಹೆಚ್ಚು
ಇರಾನ್ನ ನೂತನ ಸರ್ವೋಚ್ಚ ನಾಯಕನಾಗಿ ಅಲಿ ಖಮೇನಿ ಪುತ್ರ ಮೊಜ್ತಬಾ ಖಮೇನಿ ಆಯ್ಕೆ
ಟೆಹ್ರಾನ್: ಅಮೆರಿಕ ಮತ್ತು ಇಸ್ರೇಲ್ ನಡೆಸಿದ ಭೀಕರ ವೈಮಾನಿಕ ದಾಳಿಯಲ್ಲಿ ಇರಾನ್ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಹತ್ಯೆಯಾದ ಬೆನ್ನಲ್ಲೇ, ಅವರ ಪುತ್ರ ಮೊಜ್ತಬಾ ಖಮೇನಿ ಅವರನ್ನು ದೇಶದ ನೂತನ ಸರ್ವೋಚ್ಚ ನಾಯಕನನ್ನಾಗಿ (Supreme Leader) ನೇಮಿಸಲಾಗಿದೆ. ಈ ಮಹತ್ವದ ಬೆಳವಣಿಗೆಯು ಇರಾನ್ನ ರಾಜಕೀಯ ಭವಿಷ್ಯ ಮತ್ತು ಇಡೀ ಮಧ್ಯಪ್ರಾಚ್ಯದ (Middle East) ಪ್ರಾದೇಶಿಕ ಸ್ಥಿರತೆಯ
ಉಬರ್ನ ಸಾರಿಗೆ ಸಂಗ್ರಾಹಕ ಪರವಾನಗಿಯನ್ನು 2026 ರ ಡಿಸೆಂಬರ್ 30 ರವರೆಗೆ ನವೀಕರಿಸಿದ ರಾಜ್ಯ ಸರ್ಕಾರ
ಕರ್ನಾಟಕದಲ್ಲಿ ಉಬರ್ನ ಸಾರಿಗೆ ಸಂಗ್ರಾಹಕ ಪರವಾನಗಿಯನ್ನು ಡಿಸೆಂಬರ್ 30, 2026 ರವರೆಗೆ ರಾಜ್ಯ ಸರ್ಕಾರ ನವೀಕರಿಸಿದೆ. ಆನ್-ಡಿಮಾಂಡ್ ಸಾರಿಗೆ ಸಂಗ್ರಾಹಕ ನಿಯಮಗಳು, 2016 ರ ಅಡಿಯಲ್ಲಿ, ಡಿಸೆಂಬರ್ 31, 2021 ರಿಂದ ಜಾರಿಗೆ ಬರುವಂತೆ ಐದು ವರ್ಷಗಳ ಅವಧಿಗೆ ಸಾರಿಗೆ ಸಂಗ್ರಾಹಕ ಪರವಾನಗಿಯನ್ನು ನವೀಕರಿಸಲಾಗಿದೆ.
ಅಮೆರಿಕ ಅಧ್ಯಕ್ಷರ ಯುದ್ಧಾಧಿಕಾರ ನಿರ್ಣಯದ ಮೇಲೆ ಸೆನೆಟ್ ನಲ್ಲಿ ಇಂದು ಮತದಾನ
ಇರಾನ್ ವಿರುದ್ಧ 'ಟ್ರಂಪ್ ಮಿಲಿಟರಿ' ಕಾರ್ಯಾಚರಣೆಗೆ ಅಂಕುಶ?
ಇರಾನ್ ದಾಳಿ: ಮೃತ ಸೈನಿಕರ ಹೆಸರು ಬಹಿರಂಗಪಡಿಸಿದ ಅಮೆರಿಕ
ವಾಷಿಂಗ್ಟನ್: ಇರಾನ್ ಜತೆಗಿನ ಸಂಘರ್ಷದ ವೇಳೆ ಕುವೈತ್ನಲ್ಲಿ ನಡೆದ ಡ್ರೋನ್ ದಾಳಿಯಲ್ಲಿ ಮೃತಪಟ್ಟ ಆರು ಅಮೆರಿಕನ್ ಸೈನಿಕರ ಪೈಕಿ ನಾಲ್ವರ ಹೆಸರನ್ನು ಅಮೆರಿಕ ಬಹಿರಂಗಪಡಿಸಿದೆ. ಎಲ್ಲ ನಾಲ್ವರು ಸಂತ್ರಸ್ತರು ಸೇನೆಯ ಮೀಸಲು ಸೈನಿಕರಾಗಿದ್ದು, ಲೋವಾದ ಡೆಸ್ ಮೊನಿಸ್ 103ನೇ ಸಸ್ಟೈನ್ಮೆಂಟ್ ಕಮಾಂಡ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದರು ಎಂದು ಸ್ಪಷ್ಟಪಡಿಸಿದೆ. ಪೋರ್ಟ್ ಶುಯೈಬಾ ಕಮಾಂಡ್ ಸೆಂಟರ್ ಮೇಲೆ ಡ್ರೋನ್ ಅಪ್ಪಳಿಸಿ ಇವರು ಮೃತಪಟ್ಟಿದ್ದಾಗಿ ಪೆಂಟಗಾನ್ ದೃಢಪಡಿಸಿದೆ. ಇರಾನ್ ವಿರುದ್ಧ ಅಮೆರಿಕ ಹಾಗೂ ಇಸ್ರೇಲ್ ಜಂಟಿ ದಾಳಿ ಆರಂಭಿಸುವ ಘೋಷಣೆ ಮಾಡಿದ ಮರುದಿನವೇ ಇರಾನ್ ಈ ಪ್ರತಿದಾಳಿ ನಡೆಸಿತ್ತು. ಇದರಲ್ಲಿ ಫ್ಲೋರಿಡಾ ವಿಂಟರ್ ಹೆವನ್ ನ ಕ್ಯಾಪ್ಟನ್ ಕೋಡಿ ಎ ಖೋರ್ಕ್ (35), ನೆರ್ಬಸ್ಕಾ ಬೆಲ್ಲೆವ್ಯೂನ ಫಸ್ಟ್ ಕ್ಲಾಸ್ ಸಾರ್ಜೆಂಟ್ ನೋಹ್ ಎಲ್ ಟೈಟ್ಜೆನ್ಸ್ (42), ಮಿನ್ನೆಸೊಟಾ ವೈಟ್ ಬೀರ್ ಲೇಕ್ನ ಫಸ್ಟ್ ಕ್ಲಾಸ್ ಸಾರ್ಜೆಂಟ್ ನಿಕೋಲ್ ಎಂ ಅಮೋರ್ (39) ಮತ್ತು ಲೋವಾ ವೆಸ್ಟ್ ಡೇಸ್ ಮೊನಿಸ್ ನ ಪರಿಣತ ಡಿಕ್ಲೀನ್ ಜೆ ಕವೋಡಿ (20) ಎಂದು ಗುರುತಿಸಲಾಗಿದೆ. ಯುದ್ಧದಲ್ಲಿ ಇರಾನ್ ನ 2000 ನೆಲೆಗಳ ಮೇಲೆ ಅಮೆರಿಕನ್ ಪಡೆಗಳು ದಾಳಿ ನಡೆಸಿವೆ ಎಂದು ಅಮೆರಿಕ ಪ್ರಕಟಿಸಿದೆ. ಅಪಾಯವನ್ನು ನಿರ್ಮೂಲನೆ ಮಾಡುವ ಸಲುವಾಗಿ ಈ ದಾಳಿ ನಡೆಸುತ್ತಿದೆ ಎಂದು ಟ್ರಂಪ್ ಸಮರ್ಥಿಸಿಕೊಂಡಿದ್ದಾರೆ. ಆದರೆ ಈ ಸಂಘರ್ಷ ಹೇಗೆ ಕೊನೆಗೊಳ್ಳುತ್ತದೆ ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ. ಅಮೆರಿಕನ್ ರಾಯಭಾರ ಕಚೇರಿಯ ಮೇಲೆ ದಾಳಿ ನಡೆದ ಹಿನ್ನೆಲೆಯಲ್ಲಿ ದೇಶದ ಭದ್ರತೆಯನ್ನು ರಕ್ಷಿಸಲು ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಸೌದಿ ಅರೇಬಿಯಾ ಬುಧವಾರ ಘೋಷಿಸಿದೆ. ದೇಶದ ಭದ್ರತೆ, ಭೂಪ್ರದೇಶ ಮತ್ತು ನಾಗರಿಕರ ರಕ್ಷಣೆಗೆ ಬದ್ಧ ಎಂದು ಸ್ಪಷ್ಟಪಡಿಸಿದೆ. ಇರಾನ್ ನ ದಾಳಿಗೆ ಸೂಕ್ತ ಪ್ರತಿಕ್ರಿಯೆ ನೀಡುವ ಎಲ್ಲ ಹಕ್ಕು ಸೌದಿ ಅರೇಬಿಯಾಗೆ ಇದೆ ಎಂದು ಸಂಪುಟ ಪ್ರಕಟಣೆ ಹೇಳಿದೆ.
ಒಕ್ಕೂಟ ವ್ಯವಸ್ಥೆ ಸಂವಿಧಾನದ ಮೂಲಭೂತ ರಚನೆಯ ಭಾಗ: ತಮಿಳುನಾಡು ಸಿಎಂ ಸ್ಟಾಲಿನ್ ಪತ್ರಕ್ಕೆ ಸಿದ್ದರಾಮಯ್ಯ ಉತ್ತರ
ಭಾರತದ ಪ್ರಜಾಪ್ರಭುತ್ವದ ಅಡಿಪಾಯವಾಗಿರುವ 'ಒಕ್ಕೂಟ ವ್ಯವಸ್ಥೆ' ಇಂದು ಹೊಸ ಚರ್ಚೆಗೆ ನಾಂದಿ ಹಾಡಿದೆ. ಕೇಂದ್ರ ಮತ್ತು ರಾಜ್ಯಗಳ ನಡುವಿನ ಸಂಬಂಧಗಳ ಪುನರ್ ವಿಮರ್ಶೆಗಾಗಿ ತಮಿಳುನಾಡು ಸರ್ಕಾರ ರಚಿಸಿದ್ದ ಉನ್ನತ ಮಟ್ಟದ ಸಮಿತಿಯ ವರದಿಯ ಹಿನ್ನೆಲೆಯಲ್ಲಿ, ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮಿಳುನಾಡು ಸಿಎಂ ಎಂ.ಕೆ. ಸ್ಟಾಲಿನ್ ಅವರಿಗೆ ಪತ್ರ ಬರೆಯುವ ಮೂಲಕ ತಮ್ಮ ಬೆಂಬಲ ಮತ್ತು ಸೈದ್ಧಾಂತಿಕ
ಇರಾನ್ ಮನಬಂದಂತೆ ಅರಬ್ ರಾಷ್ಟ್ರಗಳ ಮೇಲೂ ದಾಳಿ ಮಾಡುತ್ತಿರುವುದರಿಂದ ಮುನ್ನೆಚ್ಚರಿಕಾ ಕ್ರಮವಾಗಿ ದುಬೈ ಅಲರ್ಟ್ ಸಂದೇಶಗಳನ್ನು ನಾಗರಿಕರಿಗೆ ಕಳಿಸುತ್ತಿದೆ. ಅಲ್ಲದೆ ಸೈರನ್ ಕೊಡುತ್ತಿದೆ. ಸದ್ಯದ ಮಟ್ಟಿಗೆ ನಾರಿಕರ ಸುರಕ್ಷತೆಗೆ ಹೆಚ್ಚಿನ ಆದ್ಯತೆ ಕೊಟ್ಟು, ಜನಜೀವನ ಅಸ್ತವ್ಯಸ್ತ ಆಗದಂತೆ ನೋಡಿಕೊಳ್ಳಲಾಗಿದೆ. ಆದರೆ ಭಾರತಕ್ಕೆ ಮರಳಲು ಯಾವುದೇ ಕ್ಷಣದಲ್ಲಿ ಸಿದ್ಧವಿರುವಂತೆ, ರಾಯಭಾರ ಕಚೇರಿ ಸೂಚನೆ ಕೊಟ್ಟಿದೆ.
ಡಿಸಿಎಂ ಫೋನ್ ಕದ್ದಾಲಿಕೆ ಆಗುತ್ತಿದೆಯಾ - ಸಿಎಂ ವಿರುದ್ದ ತಿರುಗಿಬಿದ್ದ HDK : ಕುರ್ಚಿ ಸಮರಕ್ಕೆ ಹೊಸ ಟ್ವಿಸ್ಟ್?
DCM Phone Tapping : ಕಾಂಗ್ರೆಸ್ ನಲ್ಲಿನ ಆಂತರಿಕ ಪ್ರಜಾಪ್ರಭುತ್ವದ ವ್ಯಾಸ, ತ್ರಿಜ್ಯದ ಬಗ್ಗೆ ಅಳತೆ ಮಾಡುವ ತೆವಲು ನನಗಿಲ್ಲ. ಪ್ರಜಾಪ್ರಭುತ್ವ ಎಂದರೆ ಶಾಸಕರು ಬೀದಿಯಲ್ಲಿ ಮುಖ್ಯಮಂತ್ರಿಯನ್ನು ಬೈಯ್ಯುವುದಲ್ಲ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ. ಡಿಸಿಎಂ ಡಿಕೆ ಶಿವಕುಮಾರ್ ಅವರ ಫೋನ್ ಕದ್ದಾಲಿಕೆಯ ಆರೋಪ, ರಾಜ್ಯ ರಾಜಕಾರಣದಲ್ಲಿ ಭಾರೀ ಸದ್ದನ್ನು ಮಾಡಲಾರಂಭಿಸಿದೆ.
ಲಿವ್ ಇನ್ ರಿಲೇಶನ್ಶಿಪ್ನಲ್ಲಿದ್ದ ಪ್ರೇಮಿಗಳ ಬಂಧನ: 18 ಕೋಟಿ ಮೌಲ್ಯದ ಡ್ರಗ್ಸ್ ಜಪ್ತಿ
ಬೆಂಗಳೂರಿನಲ್ಲಿ ಡ್ರಗ್ಸ್ ದಂಧೆಯಲ್ಲಿ ತೊಡಗಿದ್ದ ಪ್ರೇಮಿಗಳನ್ನು ಬಂಧಿಸಿ 18 ಕೋಟಿ ರೂಪಾಯಿ ಮೌಲ್ಯದ ಮಾದಕ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಅಪಾರ್ಟ್ಮೆಂಟ್ನಲ್ಲಿ ಲಿವ್-ಇನ್ ರಿಲೇಶನ್ನಲ್ಲಿದ್ದ ಅಶ್ವಿನ್ ಹಾಗೂ ಮುಬೀನಾ ಬಂಧಿತ ಆರೋಪಿಗಳು.

31 C