ಅಮೆರಿಕದ ಯುದ್ಧ: ಯೋಚನೆಯೂ ಇಲ್ಲ, ಕೊನೆಯೂ ಇಲ್ಲ
ಯುದ್ಧದ ಕುರಿತಂತೆ, ಮಿಲಿಟರಿ ಚಿಂತಕ ಕಾರ್ಲ್ ವಾನ್ ಕ್ಲಾಸ್ವಿಟ್ಜ್ ಒಂದು ಪ್ರಸಿದ್ಧವಾದ ಹೇಳಿಕೆ ನೀಡಿದ್ದಾರೆ. ‘‘ಯುದ್ಧ ಎನ್ನುವುದು ಆಯುಧಗಳ ಮೂಲಕ ಕಾರ್ಯರೂಪಕ್ಕೆ ತರುವ ರಾಜಕಾರಣ’’ ಎಂದು ಅವರು ಹೇಳಿದ್ದಾರೆ. ಸರಳವಾಗಿ ಹೇಳುವುದಾದರೆ, ಪ್ರತಿಯೊಂದು ಯುದ್ಧಕ್ಕೂ ಒಂದು ರಾಜಕೀಯ ಗುರಿ ಇರಲೇಬೇಕು. ಆದರೆ, ಈ ಯುದ್ಧಕ್ಕಿರುವ ಗುರಿ ಏನು? ಅಷ್ಟೆಲ್ಲ ಟಾಮ್ಹಾಕ್ ಕ್ಷಿಪಣಿಗಳು ಮತ್ತು ಬೃಹತ್ತಾದ ನಿರ್ದೇಶಿತ ಬಾಂಬ್ಗಳು ಸಾಧಿಸಲು ಬಯಸುತ್ತಿರುವುದಾದರೂ ಏನನ್ನು? ತನ್ನ ಯೋಧರನ್ನು ಯುದ್ಧಕ್ಕೆ ಕಳುಹಿಸುವುದು ಯಾವುದೇ ದೇಶದ ನಾಯಕನೊಬ್ಬ ಕೈಗೊಳ್ಳಬಹುದಾದ ಅತ್ಯಂತ ದೊಡ್ಡ, ಕಠಿಣವಾದ ನಿರ್ಧಾರ. ಯುದ್ಧ ನಡೆಸುವುದು ಎಂದರೆ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಿದಂತೆ ಅಥವಾ ಭಾಷಣ ಮಾಡಿದಂತೆ ಅಲ್ಲ. ಯುದ್ಧ ಎಂದರೆ ನೈಜ ಮಾನವರು, ಸಮವಸ್ತ್ರ ಧರಿಸಿರುವ ಯುವಕರು, ಯಾರದೋ ತಂದೆ, ಯಾರದೋ ಮಕ್ಕಳು, ಇನ್ಯಾರದೋ ಸೋದರರು ಸೆಣಸಾಟಕ್ಕೆ ತೆರಳುವ ಪ್ರಕ್ರಿಯೆ. ಯುದ್ಧಕ್ಕೆ ತೆರಳಿದ ಯೋಧರಲ್ಲಿ ಅದೆಷ್ಟೋ ಜನರು ಹಿಂದಕ್ಕೆ ಮರಳದಿರುವ ಸಾಧ್ಯತೆಗಳೂ ಇವೆ. ಇದರಿಂದ ಕೇವಲ ಸೈನಿಕರು ಮಾತ್ರವೇ ಕಷ್ಟಪಡುವುದಲ್ಲ. ಶತ್ರು ಯೋಧರೂ ಪ್ರಾಣ ಕಳೆದುಕೊಳ್ಳುತ್ತಾರೆ. ಮನೆಗಳಲ್ಲಿ ತಮ್ಮ ಪಾಡಿಗೆ ತಾವು ಕುಳಿತಿರುವ ಅಮಾಯಕ ಜನರೂ ದಾಳಿಯಲ್ಲಿ ಸಾವಿಗೀಡಾಗುತ್ತಾರೆ. ಮಕ್ಕಳೂ ಮೃತರಾಗುತ್ತಾರೆ. ಆದ್ದರಿಂದಲೇ, ಯಾವುದೇ ಯುದ್ಧ ಆರಂಭವಾಗುವ ಮುನ್ನ, ಒಂದು ಸರಳ ಪ್ರಶ್ನೆಗೆ ಅತ್ಯಂತ ಸ್ಪಷ್ಟವಾದ ಉತ್ತರ ಬೇಕಾಗುತ್ತದೆ. ಅದುವೇ, ಯುದ್ಧ ಯಾಕೆ? ಈಗ ಇರಾನ್ನ ಮೇಲೆ ನಡೆಯುತ್ತಿರುವ ಆಕ್ರಮಣದ ಕುರಿತಂತೆ ಅಮೆರಿಕದ ನಾಯಕತ್ವದಲ್ಲಿ ಯಾರ ಬಳಿಯೂ ಸ್ಪಷ್ಟವಾದ ಉತ್ತರ ಇದ್ದಂತಿಲ್ಲ. ಇರಾನ್ನ ಮೇಲೆ ಅಮೆರಿಕ ಮತ್ತು ಇಸ್ರೇಲ್ಗಳು ಜಂಟಿಯಾಗಿ ದಾಳಿ ನಡೆಸಲು ಆರಂಭಿಸಿ ಈಗಾಗಲೇ ಹನ್ನೆರಡು ದಿನಗಳು ಕಳೆದವು. ಆದರೂ ಜಗತ್ತಿಗೆ ಇನ್ನೂ ಯುದ್ಧದ ಕುರಿತು ಸ್ಪಷ್ಟ ಕಾರಣಗಳಾಗಲಿ, ವಿವರಗಳಾಗಲಿ ನೀಡಲಾಗಿಲ್ಲ. ಇದು ನಿಜಕ್ಕೂ ಆತಂಕಕಾರಿ ಬೆಳವಣಿಗೆಯಾಗಿದೆ. ಯುದ್ಧದ ಕುರಿತಂತೆ, ಮಿಲಿಟರಿ ಚಿಂತಕ ಕಾರ್ಲ್ ವಾನ್ ಕ್ಲಾಸ್ವಿಟ್ಜ್ ಒಂದು ಪ್ರಸಿದ್ಧವಾದ ಹೇಳಿಕೆ ನೀಡಿದ್ದಾರೆ. ‘‘ಯುದ್ಧ ಎನ್ನುವುದು ಆಯುಧಗಳ ಮೂಲಕ ಕಾರ್ಯರೂಪಕ್ಕೆ ತರುವ ರಾಜಕಾರಣ’’ ಎಂದು ಅವರು ಹೇಳಿದ್ದಾರೆ. ಸರಳವಾಗಿ ಹೇಳುವುದಾದರೆ, ಪ್ರತಿಯೊಂದು ಯುದ್ಧಕ್ಕೂ ಒಂದು ರಾಜಕೀಯ ಗುರಿ ಇರಲೇಬೇಕು. ಆದರೆ, ಈ ಯುದ್ಧಕ್ಕಿರುವ ಗುರಿ ಏನು? ಅಷ್ಟೆಲ್ಲ ಟಾಮ್ಹಾಕ್ ಕ್ಷಿಪಣಿಗಳು ಮತ್ತು ಬೃಹತ್ತಾದ ನಿರ್ದೇಶಿತ ಬಾಂಬ್ಗಳು ಸಾಧಿಸಲು ಬಯಸುತ್ತಿರುವುದಾದರೂ ಏನನ್ನು? ಡೊನಾಲ್ಡ್ ಟ್ರಂಪ್ ಪ್ರತೀ ಬಾರಿಯೂ ವಿಭಿನ್ನ ಕಾರಣಗಳನ್ನು ನೀಡುತ್ತಾ ಬಂದಿದ್ದಾರೆ. ಆದರೆ ಇಲ್ಲೊಂದು ಸಮಸ್ಯೆ ಇದೆ. ಟ್ರಂಪ್ ನೀಡುತ್ತಿರುವ ಕಾರಣಗಳು ಅವರ ಮನಸ್ಥಿತಿ ಮತ್ತು ಪರಿಸ್ಥಿತಿಗಳಿಗೆ ಅನುಗುಣವಾಗಿ ಭಿನ್ನವಾಗುತ್ತಾ ಸಾಗುತ್ತವೆ. ಪ್ರತೀ ಬಾರಿ ಹೀಗೆ ಟ್ರಂಪ್ ನೀಡುತ್ತಿರುವ ಕಾರಣಗಳು ಬದಲಾಗುತ್ತಿರುವಾಗ, ಅವರ ಬಳಿ ಯಾವುದೇ ಪ್ರಬಲ ಕಾರಣವೇ ಇಲ್ಲವೇನೋ ಎನ್ನುವ ಭಾವನೆ ಮೂಡುತ್ತದೆ. ಈಗ ಯುದ್ಧಕ್ಕಾಗಿ ನೀಡಿರುವ ಒಂದು ಕಾರಣವೆಂದರೆ ‘ರೆಜಿಮ್ ಚೇಂಜ್’. ಅಂದರೆ, ಇರಾನ್ನಲ್ಲಿ ಈಗಿರುವ ಸರಕಾರವನ್ನು ತೆಗೆದು ಹಾಕಿ, ಅದರ ಜಾಗದಲ್ಲಿ ಹೊಸ ಸರಕಾರವನ್ನು ಜಾರಿಗೆ ತರುವುದು. ಅಮೆರಿಕದ ರಕ್ಷಣಾ ಕಾರ್ಯದರ್ಶಿ ಪೀಟ್ ಹೆಗ್ಸೆತ್ ಅವರು ‘‘ಇದು ಇರಾನ್ನ ಆಡಳಿತ ಬದಲಾವಣೆಗಾಗಿ ನಡೆಯುತ್ತಿರುವ ಯುದ್ಧವಲ್ಲ’’ ಎಂದು ಸ್ಪಷ್ಟ ಮಾತುಗಳಲ್ಲಿ ಹೇಳಿದ್ದಾರೆ. ಒಂದು ವೇಳೆ ಸರಕಾರ ಬದಲಾವಣೆಯೇ ಗುರಿಯಾಗಿದ್ದರೆ, ಕೇವಲ ವಾಯು ದಾಳಿಗಳಿಂದ ಬಲವಾದ ಸರಕಾರವನ್ನು ಉರುಳಿಸಿರುವ ಉದಾಹರಣೆಗಳೇ ಇತಿಹಾಸದಲ್ಲಿ ಇಲ್ಲ. ಇದಕ್ಕಾಗಿ ಪೂರ್ಣ ಪ್ರಮಾಣದ ಭೂ ಆಕ್ರಮಣ ನಡೆಯಬೇಕಿದ್ದು, ಹಿಂದೆ ಇರಾಕ್ನಲ್ಲಿ ನಡೆದ ದಾಳಿ ಅದಕ್ಕೆ ಉದಾಹರಣೆಯಾಗಿದೆ. ಆದರೆ, ಅದರ ಕೊನೆ ಎಷ್ಟು ಕೆಟ್ಟದಾಗಿತ್ತು ಎನ್ನುವುದು ಎಲ್ಲರಿಗೂ ತಿಳಿದೇ ಇದೆ. ಯುದ್ಧಕ್ಕೆ ನೀಡಿರುವ ಇನ್ನೊಂದು ಕಾರಣವೆಂದರೆ, ಇರಾನ್ನ ಪರಮಾಣು ಕಾರ್ಯಕ್ರಮವನ್ನು ನಾಶಪಡಿಸುವುದು. ಆದರೆ, ಇಲ್ಲೊಂದು ಆಸಕ್ತಿಕರ ವಿಚಾರವಿದೆ. ಕೇವಲ ಎಂಟು ತಿಂಗಳ ಹಿಂದೆ, ಸ್ವತಃ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಹಿಂದಿನ ಬಾಂಬ್ ದಾಳಿಗಳ ಮೂಲಕ ಇರಾನ್ನ ಪರಮಾಣು ಕಾರ್ಯಕ್ರಮವನ್ನು ಸಂಪೂರ್ಣವಾಗಿ ನಾಶಪಡಿಸಲಾಗಿದೆ ಎಂದು ಘೋಷಿಸಿದ್ದರು. ಹೀಗಿರುವಾಗ, ಈಗಿನ ಯುದ್ಧದಲ್ಲಿ ನಾಶಪಡಿಸುತ್ತಿರುವುದು ಏನನ್ನು? ಇದೆಲ್ಲಕ್ಕೂ ಮುನ್ನ, ಇರಾನ್ 2015ರಲ್ಲೇ ಒಂದು ಕಟ್ಟುನಿಟ್ಟಿನ ಪರಮಾಣು ಒಪ್ಪಂದಕ್ಕೆ ಸಹಿ ಹಾಕಿತ್ತು. ಆ ಮೂಲಕ ತನ್ನ ಪರಮಾಣು ಕಾರ್ಯಕ್ರಮವನ್ನು ಮಿತಿಗೊಳಿಸಲು ಒಪ್ಪಿಕೊಂಡಿತ್ತು. ಆದರೆ, ಟ್ರಂಪ್ ತನ್ನ ಮೊದಲ ಅಧ್ಯಕ್ಷೀಯ ಅವಧಿಯಲ್ಲಿ ಈ ಒಪ್ಪಂದದಿಂದ ಹೊರನಡೆದರು. ಈ ಒಪ್ಪಂದವನ್ನು ಸ್ವತಃ ಟ್ರಂಪ್ ಮುರಿದಿದ್ದರು. ಆ ಬಳಿಕ, ಯುದ್ಧಕ್ಕೆ ಇರಾನ್ನ ಜನರಿಗೆ ಬೆಂಬಲ ನೀಡುವುದೇ ಕಾರಣ ಎನ್ನಲಾಯಿತು. ವಾಸ್ತವವಾಗಿ ಬಹಳಷ್ಟು ಇರಾನಿಯನ್ನರಿಗೆ ತಮ್ಮ ಸರಕಾರದ ಕುರಿತು ಅಸಮಾಧಾನವಿದೆ. ಲಕ್ಷಾಂತರ ಸಾಮಾನ್ಯ ಇರಾನಿಯನ್ನರು ಜನವರಿ ತಿಂಗಳಲ್ಲಿ ಬೀದಿಗಿಳಿದು ಪ್ರತಿಭಟನೆ ನಡೆಸಲು ಆರಂಭಿಸಿದಾಗ, ‘ಸಹಾಯ ಬರಲಿದೆ’ ಎಂದು ಟ್ರಂಪ್ ಹೇಳಿದ್ದರು. ಆದರೆ, ಇರಾನ್ ಸರಕಾರ ಸಂಪೂರ್ಣ ಬಲ ಪ್ರಯೋಗ ನಡೆಸಿ, ಸಾವಿರಾರು ಜನರನ್ನು ಹತ್ಯೆ ನಡೆಸಿದಾಗ ಟ್ರಂಪ್ ಏನನ್ನೂ ಮಾಡಲಿಲ್ಲ. ಇರಾನಿಯನ್ನರಿಗೆ ಯಾವ ಸಹಾಯವೂ ಬರಲಿಲ್ಲ. ಈಗ ಡೊನಾಲ್ಡ್ ಟ್ರಂಪ್ ವೆನೆಝುವೆಲಾ ಮಾದರಿಯತ್ತ ಬೆರಳು ತೋರಿಸುತ್ತಿದ್ದಾರೆ. ವೆನೆಝುವೆಲಾ ಅಧ್ಯಕ್ಷರನ್ನೇನೋ ಅಧಿಕಾರದಿಂದ ಪದಚ್ಯುತಗೊಳಿಸಲಾಗಿದೆ. ಆದರೆ, ಅಲ್ಲಿನ ಜನಸಾಮಾನ್ಯರ ಜೀವನ ಹಿಂದಿನಂತೆಯೇ ಕೆಟ್ಟದಾಗಿ ಮುಂದುವರಿದಿದೆ. ಇನ್ನು ಇರಾನ್ ಹೊಂದಿರುವ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ನಾಶಪಡಿಸುವುದನ್ನೂ ಒಂದು ಕಾರಣವಾಗಿ ಹೇಳಲಾಗಿದೆ. ಈ ಕಾರಣ ಇಸ್ರೇಲ್ ಪಾಲಿಗೆ ಒಂದಷ್ಟು ಅರ್ಥವಿದೆ ಎನ್ನಬಹುದು. ಏಕೆಂದರೆ, ಇರಾನ್ನ ಶಹಾಬ್-3 ಕ್ಷಿಪಣಿ ಇಸ್ರೇಲಿ ಪ್ರಾಂತಗಳ ಮೇಲೆ ದಾಳಿ ಮಾಡಬಲ್ಲವು. ಇಸ್ರೇಲ್ ಈಗಿನ ಯುದ್ಧದಲ್ಲಿ ಮತ್ತು ಹಿಂದಿನ ಚಕಮಕಿಗಳಲ್ಲಿ ಈ ಕ್ಷಿಪಣಿಯ ದಾಳಿಗೆ ತುತ್ತಾಗಿದೆ. ಆದರೆ, ಗಮನಾರ್ಹ ಸತ್ಯವೆಂದರೆ, ಇರಾನ್ನ ಕ್ಷಿಪಣಿಗಳು ಅಮೆರಿಕವನ್ನು ತಲುಪುವುದು ಸಾಧ್ಯವೇ ಇಲ್ಲ. ಇರಾನ್ನಿಂದ ಅಮೆರಿಕದ ಅತ್ಯಂತ ಸನಿಹದ ಬಿಂದು 7,000 ಕಿಲೋಮೀಟರ್ಗಳಷ್ಟು ದೂರದಲ್ಲಿದೆ. ಟ್ರಂಪ್ ಇರಾನ್ ಈಗ ಅಮೆರಿಕದ ಮೇಲೆ ದಾಳಿ ನಡೆಸಬಲ್ಲ ಕ್ಷಿಪಣಿಯನ್ನು ನಿರ್ಮಿಸುವ ಹಂತದಲ್ಲಿದೆ ಎಂದಿದ್ದಾರೆ. ಆದರೆ, ಸ್ವತಃ ಅಮೆರಿಕನ್ ಗುಪ್ತಚರ ಸಂಸ್ಥೆಗಳೇ ಟ್ರಂಪ್ ಹೇಳಿಕೆಯನ್ನು ನಿರಾಕರಿಸಿವೆ. ಒಂದು ವೇಳೆ ಇರಾನ್ ಇಂತಹ ಕ್ಷಿಪಣಿಯನ್ನು ನಿರ್ಮಿಸುತ್ತದೆ ಎಂದರೂ, ಅದಕ್ಕೆ ಕನಿಷ್ಠ ಪಕ್ಷ ಒಂದು ದಶಕ ಬೇಕು ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ. ಅಮೆರಿಕದ ಸೆಕ್ರೆಟರಿ ಆಫ್ ಸ್ಟೇಟ್ ಮಾರ್ಕೋ ರುಬಿಯೋ ಅವರು ಸ್ವಯಂ ರಕ್ಷಣೆಯ ಕಾರಣಕ್ಕಾಗಿ ಇರಾನ್ ಮೇಲೆ ದಾಳಿ ನಡೆಸಲಾಗಿದೆ ಎಂದಿದ್ದಾರೆ. ಇಸ್ರೇಲ್ ಹೇಗಾದರೂ ಇರಾನ್ ಮೇಲೆ ದಾಳಿ ನಡೆಸಲಿತ್ತು. ಇಸ್ರೇಲ್ ದಾಳಿಗೆ ಪ್ರತಿಯಾಗಿ, ಇರಾನ್ ಕೊಲ್ಲಿ ರಾಷ್ಟ್ರಗಳಲ್ಲಿರುವ ಅಮೆರಿಕನ್ ನೆಲೆಗಳ ಮೇಲೆ ದಾಳಿ ನಡೆಸಬಹುದು ಎಂದು ಅಮೆರಿಕ ನಿರೀಕ್ಷಿಸಿ, ಅದಕ್ಕೂ ಮುನ್ನ ಇರಾನ್ ಮೇಲೆ ದಾಳಿ ನಡೆಸಿತು. ಆದರೆ, ಇಲ್ಲೊಂದು ಬಹು ಮುಖ್ಯವಾದ ಪ್ರಶ್ನೆ ಎದುರಾಗುತ್ತದೆ. ಅಮೆರಿಕ ಇಸ್ರೇಲ್ನ ಬಹುದೊಡ್ಡ ಆಯುಧ ಪೂರೈಕೆದಾರ ಮತ್ತು ಅತ್ಯಂತ ಆತ್ಮೀಯ ಮಿತ್ರ. ಹೀಗಿರುವಾಗ, ಅಮೆರಿಕವೇ ಇಸ್ರೇಲ್ ಬಳಿ ದಾಳಿ ನಡೆಸದೆ ಸುಮ್ಮನಿರುವಂತೆ ಹೇಳಬಹುದಿತ್ತಲ್ಲ? ಒಂದು ವೇಳೆ ಅಮೆರಿಕ ಹಾಗೆ ಮಾಡಿದ್ದರೆ, ಒಂದೇ ಒಂದು ಗುಂಡು ಹಾರಿಸದೆ, ಪರಿಸ್ಥಿತಿ ಹೀಗೆ ವಿಕೋಪಕ್ಕೆ ಹೋಗುವುದನ್ನು ತಡೆಯಬಹುದಿತ್ತಲ್ಲ? ಆಡಳಿತ ಬದಲಾವಣೆ, ಪರಮಾಣು ಶಸ್ತ್ರಾಸ್ತ್ರಗಳ ನಾಶ, ಪ್ರತಿಭಟನಾಕಾರರಿಗೆ ಬೆಂಬಲ, ಕ್ಷಿಪಣಿ ಭೀತಿ, ಸ್ವಯಂ ರಕ್ಷಣೆ ಸೇರಿದಂತೆ, ಹಲವಾರು ಕಾರಣಗಳನ್ನು ವಿವರಣೆಗಳನ್ನು ನೀಡಿದ ಬಳಿಕವೂ ನಮ್ಮ ಮುಂದೆ ಮತ್ತದೇ ಉತ್ತರವಿಲ್ಲದ ಪ್ರಶ್ನೆ ಹಾಗೇ ನಿಂತಿದೆ. ನಿಜಕ್ಕೂ ಈ ಯುದ್ಧ ಯಾಕಾಗಿ ನಡೆಯುತ್ತಿದೆ? ಇರಾಕ್ ಯುದ್ಧದಲ್ಲಿ ಅಮೆರಿಕದ ಸೇನೆಯನ್ನು ಮುನ್ನಡೆಸಿದ್ದ ಜನರಲ್ ಡೇವಿಡ್ ಪೆಟ್ರಾಸ್ ಅವರು ತನ್ನ ನಾಯಕರನ್ನು ಕೇಳಿದ್ದ ಒಂದು ಪ್ರಶ್ನೆ ಬಹಳ ಪ್ರಸಿದ್ಧವಾಗಿತ್ತು. ‘‘ಜನರಲ್ ಈಗ ಈ ಯುದ್ಧ ಮುಕ್ತಾಯವಾಗುವುದು ಹೇಗೆ ಎಂದು ನನಗೆ ಹೇಳಿ’’ ಎಂದು ಕೇಳಿದ್ದರು. ಈ ಪ್ರಶ್ನೆಗೆ ಇಂದಿಗೂ ಸ್ಪಷ್ಟ ಉತ್ತರವಿಲ್ಲ. ಬಹಳಷ್ಟು ವರ್ಷಗಳ ಕಾಲ ಡೊನಾಲ್ಡ್ ಟ್ರಂಪ್ ಅವರನ್ನು ಗಮನಿಸಿದವರು ಈ ಯುದ್ಧಕ್ಕೆ ವಾಸ್ತವ ಕಾರಣವನ್ನು ಸರಳವಾಗಿ ವಿವರಿಸಿದ್ದಾರೆ. ಈ ಯುದ್ಧ ಯಾಕೆ ನಡೆಯುತ್ತಿದೆ ಎಂದರೆ, ಟ್ರಂಪ್ ಈ ಯುದ್ಧವನ್ನು ಬಯಸುತ್ತಿದ್ದಾರೆ! ಯಾಕೆಂದರೆ, ಯುದ್ಧ ಸಾಮರ್ಥ್ಯವನ್ನು ಪ್ರದರ್ಶಿಸುವ ಒಂದು ವೇದಿಕೆಯಾಗಿದ್ದು, ಟ್ರಂಪ್ ತನ್ನ ಜೀವನದಾದ್ಯಂತ ಇತರರ ಮೇಲೆ ಪಾರಮ್ಯ ಸಾಧಿಸಲು, ಪ್ರದರ್ಶಿಸಲು ಬಯಸುತ್ತಾ ಬಂದಿದ್ದರು. ಅವರ ಕೈಗೆ ಹೆಚ್ಚಿನ ಅಧಿಕಾರ ಬಂದಷ್ಟೂ, ಅವರು ಅದನ್ನು ಹೆಚ್ಚು ಹೆಚ್ಚು ಬಳಸಲು ಬಯಸುತ್ತಾರೆ. ಈಗಾಗಲೇ ಏಳು ಅಮೆರಿಕನ್ ಯೋಧರು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ಇರಾನಿನ ಮಿನಾಬ್ ಪಟ್ಟಣದಲ್ಲಿ 170 ಶಾಲಾ ಬಾಲಕಿಯರು ಸಾವಿಗೀಡಾಗಿದ್ದಾರೆ. ಅವರ ಕುಟುಂಬಗಳೂ ಈಗ ತಮ್ಮ ಮಕ್ಕಳು ಯಾಕಾಗಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಪ್ರಶ್ನಿಸುತ್ತಿವೆ. ಬಹಳಷ್ಟು ಟೀಕಾಕಾರರ ಪ್ರಕಾರ, ಇದಕ್ಕಿರುವ ಪ್ರಾಮಾಣಿಕ ಮತ್ತು ನೋವಿನ ಉತ್ತರವೆಂದರೆ, ಓರ್ವ ವ್ಯಕ್ತಿಯನ್ನು ಶಕ್ತಿವಂತನಾಗಿ ತೋರಿಸುವುದು ಎನ್ನಬಹುದು. ಇದಕ್ಕಾಗಿ ಇಷ್ಟೊಂದು ದುಬಾರಿ ಬೆಲೆಯನ್ನು ಯಾವ ಕುಟುಂಬವೂ ತೆರುವಂತಾಗಬಾರದು.
ಯುಎಇ ನಿರ್ಬಂಧದ ಪರಿಣಾಮ: ಏರ್ ಇಂಡಿಯಾ ವಿಮಾನ ರದ್ದು, ಇಂಡಿಗೋ ವೇಳಾಪಟ್ಟಿ ಮರುನಿಗದಿ
ಹೊಸದಿಲ್ಲಿ: ಪಶ್ಚಿಮ ಏಷ್ಯಾದಲ್ಲಿ ತೀವ್ರಗೊಂಡಿರುವ ಬಿಕ್ಕಟ್ಟಿನ ಹಿನ್ನೆಲೆ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ವಿಮಾನ ನಿಲ್ದಾಣ ಅಧಿಕಾರಿಗಳು ಕಾರ್ಯಾಚರಣೆಗಳನ್ನು ಕಡಿತಗೊಳಿಸುವಂತೆ ನೀಡಿರುವ ಸೂಚನೆಯ ಪರಿಣಾಮವಾಗಿ, ಏರ್ ಇಂಡಿಯಾ ರವಿವಾರ ದುಬೈ, ರಾಸ್ ಅಲ್ ಖೈಮಾ ಮತ್ತು ಶಾರ್ಜಾ ಸೇರಿದಂತೆ ಹಲವು ನಗರಗಳಿಗೆ ನಿಗದಿಯಾಗಿದ್ದ ಅನೇಕ ವಿಮಾನಗಳನ್ನು ರದ್ದುಗೊಳಿಸಿದೆ ಎಂದು Times of India ವರದಿ ಮಾಡಿದೆ. ಎಕ್ಸ್ ನಲ್ಲಿ ಪ್ರಕಟಿಸಿದ ಹೇಳಿಕೆಯಲ್ಲಿ, ಯುಎಇ ವಿಮಾನ ನಿಲ್ದಾಣಗಳ ಇತ್ತೀಚಿನ ನಿರ್ದೇಶನಗಳನ್ನು ಗಮನದಲ್ಲಿಟ್ಟುಕೊಂಡು ಮಾರ್ಚ್ 15, 2026ರಂದು ಏರ್ ಇಂಡಿಯಾ ಹಾಗೂ ಏರ್ ಇಂಡಿಯಾ ಎಕ್ಸ್ಪ್ರೆಸ್ ತಮ್ಮ ಕಾರ್ಯಾಚರಣೆಗಳನ್ನು ತಾತ್ಕಾಲಿಕವಾಗಿ ಕಡಿತಗೊಳಿಸಬೇಕಾಗಿದೆ ಎಂದು ಸಂಸ್ಥೆ ತಿಳಿಸಿದೆ. ನಂತರ ಈ ನಿರ್ಬಂಧವನ್ನು ಅಬುಧಾಬಿ, ರಾಸ್ ಅಲ್ ಖೈಮಾ ಮತ್ತು ಶಾರ್ಜಾಗಳಿಗೂ ವಿಸ್ತರಿಸಲಾಗಿದೆ. ಆನ್ ಲೈನ್ ಪ್ರಕಟಣೆಯಲ್ಲಿ, ಯುಎಇ ಅಧಿಕಾರಿಗಳ ಸೂಚನೆಗಳನ್ನು ಅನುಸರಿಸಿ ಈ ನಗರಗಳಿಗೆ ದಿನನಿತ್ಯದ ಎಲ್ಲಾ ಏರ್ ಇಂಡಿಯಾ ಎಕ್ಸ್ಪ್ರೆಸ್ ವಿಮಾನಗಳನ್ನು ರದ್ದುಗೊಳಿಸಲಾಗಿದೆ ಎಂದು ಸ್ಪಷ್ಟಪಡಿಸಲಾಗಿದೆ. ದುಬೈ ಮಾರ್ಗದಲ್ಲಿ ಏರ್ ಇಂಡಿಯಾ ದಿನಕ್ಕೆ ದಿಲ್ಲಿ–ದುಬೈ ನಡುವಿನ ಒಂದೇ ವಿಮಾನವನ್ನು ಮಾತ್ರ ನಡೆಸುತ್ತಿದೆ. ನಿಗದಿಯಾಗಿದ್ದ ಐದು ವಿಮಾನಗಳಲ್ಲಿ ನಾಲ್ಕು ರದ್ದಾಗಿವೆ. ಅದೇ ರೀತಿ ಏರ್ ಇಂಡಿಯಾ ಎಕ್ಸ್ಪ್ರೆಸ್ ನ ಆರು ವಿಮಾನಗಳಲ್ಲಿ ಐದು ರದ್ದುಗೊಂಡಿವೆ. ಅಬುಧಾಬಿಗೆ ತೆರಳಬೇಕಿದ್ದ ಐದು ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನಗಳನ್ನೂ ಸಂಪೂರ್ಣವಾಗಿ ರದ್ದುಗೊಳಿಸಲಾಗಿದೆ. ರದ್ದತಿಯಿಂದ ತೊಂದರೆಗೊಳಗಾದ ಪ್ರಯಾಣಿಕರಿಗೆ ಯಾವುದೇ ಹೆಚ್ಚುವರಿ ಶುಲ್ಕವಿಲ್ಲದೆ ಮುಂದಿನ ದಿನಾಂಕಕ್ಕೆ ಮರುಬುಕಿಂಗ್ ಅಥವಾ ಪೂರ್ಣ ಮರುಪಾವತಿ ಆಯ್ಕೆಯನ್ನು ನೀಡಲಾಗಿದೆ ಎಂದು ಸಂಸ್ಥೆ ತಿಳಿಸಿದೆ. ಇದೇ ವೇಳೆ, ಇಂಡಿಗೋ ವಿಮಾನಯಾನ ಸಂಸ್ಥೆ ದುಬೈನಲ್ಲಿ ವಿಮಾನ ಕಾರ್ಯಾಚರಣೆಗಳ ಮೇಲೆ ಮತ್ತಷ್ಟು ನಿರ್ಬಂಧ ವಿಧಿಸಲಾಗಿದೆ ಎಂದು ತಿಳಿಸಿದೆ. ಎಕ್ಸ್ ನಲ್ಲಿ ಪ್ರಕಟಿಸಿದ ಮಾಹಿತಿಯಲ್ಲಿ, ಮಧ್ಯಪ್ರಾಚ್ಯದ ಉದ್ವಿಗ್ನ ಪರಿಸ್ಥಿತಿಯಿಂದಾಗಿ ವಿಮಾನ ವೇಳಾಪಟ್ಟಿಗಳಲ್ಲಿ ಬದಲಾವಣೆಗಳಾಗಲಿದೆ ಎಂದು ಹೇಳಿದೆ. ದುಬೈಗೆ ಅಥವಾ ದುಬೈನಿಂದ ಪ್ರಯಾಣಿಸುವವರು ವಿಮಾನ ನಿಲ್ದಾಣಕ್ಕೆ ತೆರಳುವ ಮೊದಲು ತಮ್ಮ ವಿಮಾನದ ಹಾರಾಟದ ಸ್ಥಿತಿಯನ್ನು ಪರಿಶೀಲಿಸಬೇಕೆಂದು ಸಂಸ್ಥೆ ಸೂಚಿಸಿದೆ. ಪ್ರಯಾಣಿಕರಿಗೆ ಇತ್ತೀಚಿನ ಬದಲಾವಣೆಗಳ ಕುರಿತು ಸೂಚನೆಗಳನ್ನು ಕಳುಹಿಸಲಾಗುತ್ತಿದೆ ಎಂದೂ ತಿಳಿಸಿದೆ. ಪಶ್ಚಿಮ ಏಷ್ಯಾ ಬಿಕ್ಕಟ್ಟಿನಿಂದ ವಾಯುಯಾನ ವಲಯದಲ್ಲಿ ವ್ಯಾಪಕ ಅಡಚಣೆಗಳು ಉಂಟಾಗಿದ್ದು, ವಿಮಾನ ಟರ್ಬೈನ್ ಇಂಧನದ ಬೆಲೆ ಏರಿಕೆಯಾಗುತ್ತಿದೆ. ಹೆಚ್ಚುತ್ತಿರುವ ಕಾರ್ಯಾಚರಣಾ ವೆಚ್ಚವನ್ನು ಸಮತೋಲನಗೊಳಿಸಲು ಇಂಡಿಗೋ, ಏರ್ ಇಂಡಿಯಾ ಮತ್ತು ಆಕಾಸಾ ಏರ್ ಸೇರಿದಂತೆ ಹಲವು ವಿಮಾನಯಾನ ಸಂಸ್ಥೆಗಳು ದೇಶೀಯ ಹಾಗೂ ಅಂತರರಾಷ್ಟ್ರೀಯ ಮಾರ್ಗಗಳಲ್ಲಿ ಇಂಧನ ಸರ್ಚಾರ್ಜ್ ವಿಧಿಸಿದೆ.
ವಾಣಿಜ್ಯ ಗ್ಯಾಸ್ ಸಿಲಿಂಡರ್ ಕೊರತೆ: ಒಂದು ವಾರದಲ್ಲಿ ಸಮಸ್ಯೆ ಸಂಪೂರ್ಣ ಸರಿಯಾಗಲಿದೆ: ಕೆ.ಹೆಚ್.ಮುನಿಯಪ್ಪ
ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದ ಕಾರ್ಮೋಡ ಕರ್ನಾಟಕದ ಅಡುಗೆಮನೆಗೂ ತಟ್ಟಿದೆಯೇ ಎಂಬ ಆತಂಕಕ್ಕೆ ರಾಜ್ಯ ಸರಕಾರ ತೆರೆ ಎಳೆದಿದೆ. ‘‘ಮುಖ್ಯಮಂತ್ರಿಗಳ ಸೂಚನೆಯಂತೆ ಈಗಾಗಲೇ ತೈಲ ಕಂಪನಿಗಳು ಮತ್ತು ಜಿಎಐಎಲ್ ಅಧಿಕಾರಿಗಳೊಂದಿಗೆ ಸಭೆ ನಡೆಸಲಾಗಿದೆ. ಕಳೆದ 10 ದಿನಗಳಿಂದ ಯಾವುದೇ ಪೂರೈಕೆ ವ್ಯತ್ಯಯವಾಗಿಲ್ಲ. ಒಂದು ಕುಟುಂಬಕ್ಕೆ 25 ರಿಂದ 30 ದಿನಕ್ಕೊಮ್ಮೆ ಸಿಲಿಂಡರ್ ನೀಡಲು ಯಾವುದೇ ತೊಂದರೆಯಿಲ್ಲ,’’ ಎಂದು ಆಹಾರ ಸಚಿವ ಕೆ.ಎಚ್.ಮುನಿಯಪ್ಪ ಭರವಸೆ ನೀಡಿದ್ದಾರೆ.
ಚರಂಡಿಯಿಂದ ಗ್ಯಾಸ್ ಉತ್ಪಾದನೆ ಮಾಡಲಿರುವ ಗಲ್ಗೋಟಿಯಾ....!!
‘‘ಕೋವಿಡ್ ಕಾಲದಂತೆಯೇ ಎಲ್ಪಿಜಿ ಕೊರತೆ ಬಿಕ್ಕಟ್ಟನ್ನು ಜಯಿಸುತ್ತೇವೆ’’ ಎಂದು ಪ್ರಧಾನ ಮಂತ್ರಿ ಮೋದಿಯವರು ಘೋಷಣೆ ಮಾಡಿರುವುದನ್ನು ಕೇಳಿ, ಎಲ್ಪಿಜಿಗಾಗಿ ಸರದಿ ಸಾಲಿನಲ್ಲಿ ನಿಂತಿದ್ದ ಪತ್ರಕರ್ತ ಎಂಜಲು ಕಾಸಿ ಬಿಸಿಲಿನ ಝಳದ ನಡುವೆಯೂ ರೋಮಾಂಚನಗೊಂಡ. ಕೋವಿಡ್ ಕಾಲದಲ್ಲಿ ಆಕ್ಸಿಜನ್ ಸಿಲಿಂಡರ್ ಹೆಸರಿನಲ್ಲಿ ರಾಜಕಾರಣಿಗಳು ಕೋಟಿ ಕೋಟಿ ರೂಪಾಯಿ ಬಾಚಿಕೊಂಡಿರುವುದು, ಈ ಬಾರಿಯೂ ನಡೆಯಲಿದೆ ಎನ್ನುವ ಸೂಚನೆ ಅವನಿಗೆ ಸಿಕ್ಕಿತು. ಮೋದಿಯ ಘೋಷಣೆಯು, ಈ ಬಾರಿ ಸಿಲಿಂಡರ್ ಹೆಸರಿನಲ್ಲಿ ಜನರನ್ನು ದೋಚಲು ನಮಗೆ ಸಿಕ್ಕಿದ ಪರವಾನಿಗೆ ಎಂದು ಪುಡಿ ನಾಯಕರೆಲ್ಲರೂ ಸಂಭ್ರಮಿಸತೊಡಗಿದರು. ಪತ್ರಕರ್ತ ಕಾಸಿ ತನ್ನ ಜೋಳಿಗೆಯ ಜೊತೆಗೆ ನೇರವಾಗಿ ಅಖಿಲ ಭಾರತ ಅಂಧ ಭಕ್ತರ ಸಂಘದ ಅಧ್ಯಕ್ಷ ವಕ್ರವರ್ತಿ ಸುಳ್ಳಿನ ಬೆಲೆಯ ಸಂದರ್ಶನಕ್ಕೆ ಮುಂದಾದ. ‘‘ಸಾರ್, ನೀವು ಅಖಿಲ ಭಾರತ ಅಂಧ ಭಕ್ತರ ಸಂಘದ ಅಧ್ಯಕ್ಷರು. ಪ್ರಧಾನಿ ಮೋದಿಯವರು ಈ ಬಾರಿ ಎಲ್ಪಿಜಿ ಕೊರತೆಯನ್ನು ಹೇಗೆ ತುಂಬಲಿದ್ದಾರೆ?’’ ಕಾಸಿ ಕೇಳಿದ. ‘‘ಭಾರತ ಇಂಧನ ವಿಷಯದಲ್ಲಿ ಈಗಾಗಲೇ ಸ್ವಾವಲಂಬಿಯಾಗಿದೆ. ಎಲ್ಪಿಜಿ ಕೊರತೆಯನ್ನು ತುಂಬಲು ನಾವು ಮೋದಿಯವರ ‘ಮನ್ ಕಿ ಬಾತ್’ ಭಾಷಣದಲ್ಲಿರುವ ಎನರ್ಜಿಯನ್ನು ಬಳಸಲು ಮುಂದಾಗಿದ್ದೇವೆ. ಪ್ರಧಾನಿ ಮೋದಿಯವರು ವಾರಕ್ಕೊಮ್ಮೆ ನೀಡುವ ‘ಮನ್ ಕಿ ಬಾತ್’ ಭಾಷಣವನ್ನು ಈ ಯುದ್ಧ ಕಾಲದಲ್ಲಿ ವಾರಕ್ಕೆ ಮೂರು ಬಾರಿ ನೀಡಲಿದ್ದಾರೆ. ಅವರ ಭಾಷಣದಿಂದ ಉತ್ಪಾದನೆಯಾಗುವ ಪಾಸಿಟಿವ್ ಎನರ್ಜಿಯನ್ನು ನಾವು ಎಲ್ಪಿಜಿ ಇಂಧನವಾಗಿ ಕನ್ವರ್ಟ್ ಮಾಡಿ ಅದನ್ನು ದೇಶಾದ್ಯಂತ ಹಂಚಲಿದ್ದೇವೆ. ಅಷ್ಟೇ ಅಲ್ಲ, ಉಳಿದ ಎಲ್ಪಿಜಿ ಇಂಧನವನ್ನು ನಾವು ವಿದೇಶಗಳಿಗೆ ರಫ್ತು ಮಾಡಲಿದ್ದೇವೆ. ಇಡೀ ವಿಶ್ವ ಯುದ್ಧದಿಂದ ಕಂಗೆಟ್ಟಿದ್ದರೆ ಭಾರತ ಮಾತ್ರ ಇಂಧನವನ್ನು ರಫ್ತು ಮಾಡುವ ಸಾಮರ್ಥ್ಯ ಹೊಂದಿದೆ. ಇದು ಕಣ್ರೀ ಮೋದಿ ಭಾರತ...’’ ಎಂದು ವಕ್ರವರ್ತಿ ಸುಳ್ಳಿನ ಬೆಲೆಯವರು ಕೆನ್ನೆ ಉಜ್ಜಿಕೊಂಡರು. ಕಾಸಿ ಒಂದೇ ಏಟಿಗೆ ಹತ್ತು ಸಿಲಿಂಡರ್ ಸಿಕ್ಕಿದವನಂತೆ ಸಂಭ್ರಮಿಸಿದ. ‘‘ಸಾರ್...ಚರಂಡಿಯಿಂದ ಗ್ಯಾಸ್ ಉತ್ಪಾದನೆಗೆ ಏನಾದರೂ ಕ್ರಮ ತೆಗೆದುಕೊಳ್ಳಬಹುದಲ್ಲ...’’ ವಕ್ರವರ್ತಿ ಸುಳ್ಳಿನ ಬೆಲೆ ಕಾಸಿಯನ್ನು ‘ಭಲೇ ಭಲೇ!’ ಎಂಬಂತೆ ನೋಡಿ ಮುಂದುವರಿಸಿದರು ‘‘ಚರಂಡಿಯಿಂದ ಗ್ಯಾಸ್ ಉತ್ಪಾದನೆ ಮಾಡುವ ಸಂಪೂರ್ಣ ಹೊಣೆಗಾರಿಕೆಯನ್ನು ನಮ್ಮ ಗಲ್ಗೋಟಿಯಾ ವಿಶ್ವವಿದ್ಯಾನಿಲಯಕ್ಕೆ ವಹಿಸಿದ್ದು ಅದಕ್ಕಾಗಿ ಈಗಾಗಲೇ ಸಾವಿರಾರು ಕೋಟಿ ರೂಪಾಯಿಯನ್ನು ಬಿಡುಗಡೆ ಮಾಡುವ ಉದ್ದೇಶವಿದೆ. ಭಾರತ ದೇಶಗಳು ಚರಂಡಿಗಳ ತವರೂರು. ಈಗಾಗಲೇ ಪ್ರಧಾನಿ ಮೋದಿಯವರು ಅಧಿಕಾರಕ್ಕೆ ಬಂದ ದಿನಗಳಿಂದ ಗಂಗಾ, ಯಮುನಾ ಮೊದಲಾದ ನದಿಗಳನ್ನು ಚರಂಡಿಗಳನ್ನಾಗಿ ಪರಿವರ್ತಿಸುವ ಪ್ರಯತ್ನ ಯಶಸ್ವಿಯಾಗಿ ಸಾಗಿದೆ. ಈ ಚರಂಡಿಗಳಿಂದ ಗ್ಯಾಸ್ ಉತ್ಪಾದನೆ ಮಾಡಲು ಗಲ್ಗೋಟಿಯಾ ವಿಶ್ವವಿದ್ಯಾನಿಲಯದ ಸಂಶೋಧಕರು ಪ್ರಯತ್ನಿಸುತ್ತಾ ಇದ್ದಾರೆ. ಕರ್ನಾಟಕದಲ್ಲಿ ಈಶ್ವರಪ್ಪ, ಸಿ. ಟಿ. ರವಿ, ಪ್ರಮೋದ್ ಮುತಾಲಿಕ್ ಹೀಗೆ ಹತ್ತು ಹಲವು ಚರಂಡಿಗಳನ್ನು ರಾಜ್ಯ ಕಾಂಗ್ರೆಸ್ ಸರಕಾರ ಸದ್ ಬಳಕೆ ಮಾಡುತ್ತಿಲ್ಲ. ಈ ಚರಂಡಿಗಳ ನೆಗೆಟಿವ್ ಎನರ್ಜಿಯನ್ನು ಈಗಾಗಲೇ ತನ್ನ ರಾಜಕೀಯಕ್ಕೆ ಬಿಜೆಪಿ ಯಶಸ್ವಿಯಾಗಿ ಬಳಸುತ್ತಿದೆ. ಪ್ರಧಾನಿ ಮೋದಿಯವರ ಸಲಹೆ ಸೂಚನೆಗಳನ್ನು ಪಾಲಿಸಿದರೆ ಈ ಚರಂಡಿಯ ಭಾಷಣಗಳಲ್ಲಿರುವ ನೆಗೆಟಿವ್ ಎನರ್ಜಿಯನ್ನು ಸಂಸ್ಕರಿಸಿ ಅದನ್ನು ಪಾಸಿಟಿವ್ ಎನರ್ಜಿಯಾಗಿ ಪರಿವರ್ತಿಸಿ ಬಳಿಕ ಸಿಲಿಂಡರ್ನಲ್ಲಿ ತುಂಬಿ ಮನೆಮನೆಗೆ ಹಂಚಬಹುದಾಗಿದೆ. ಎನರ್ಜಿ ಉತ್ಪಾದನೆಯಲ್ಲಿ ಕೇಂದ್ರ ಸರಕಾರಕ್ಕಿರುವ ಉತ್ಸಾಹ ರಾಜ್ಯ ಸರಕಾರಕ್ಕಿಲ್ಲ. ರಾಜ್ಯದಲ್ಲಿ ಸಿಲಿಂಡರ್ ಕೊರತೆಗೆ ಸಿದ್ದರಾಮಯ್ಯ ಅವರ ಸರಕಾರವೇ ಕಾರಣ. ಗಲ್ಗೋಟಿಯಾದಂತಹ ವಿಶ್ವವಿದ್ಯಾನಿಲಯ ಕರ್ನಾಟಕದಲ್ಲಿ ಇದ್ದಿದ್ದರೆ ಇಂದು ರಾಜ್ಯಕ್ಕೆ ಸಿಲಿಂಡರ್ ಕೊರತೆಯ ಸಮಸ್ಯೆಯೇ ಎದುರಾಗುತ್ತಿರಲಿಲ್ಲ’’ ವಕ್ರವರ್ತಿ ವಿಷಾದದ ಮುಖಭಾವದಲ್ಲಿ ನುಡಿದರು. ಕಾಸಿಯು ದುಖಿಃತನಾದ. ಕರ್ನಾಟಕದಲ್ಲಿ ಯಥೇಚ್ಛವಾಗಿ ಹರಿಯುತ್ತಿರುವ ರಾಜಕೀಯ ಚರಂಡಿಗಳ ಸದ್ ಉಪಯೋಗವಾಗುತ್ತಿಲ್ಲವಲ್ಲ ಎಂದು ಅವನು ಖೇದಗೊಂಡ. ‘‘ ಸಾರ್, ಮೋದಿಯವರು ಕೋವಿಡ್ ಕಾಲದಂತೆಯೇ ಎಲ್ಪಿಜಿ ಕೊರತೆ ಬಿಕ್ಕಟ್ಟನ್ನು ಜಯಿಸುತ್ತೇವೆ ಎಂದಿದ್ದಾರೆ. ಇದನ್ನು ಸ್ವಲ್ಪ ವಿವರಿಸುತ್ತೀರಾ?’’ ‘‘ಕೋವಿಡ್ ಕಾಲದಲ್ಲಿ ಖಾಸಗಿ ಆಸ್ಪತ್ರೆಗಳು ತಮ್ಮ ಸಂಪಾದನೆಯನ್ನು ಹೆಚ್ಚಿಸಿದವು. ಕೋವಿಡ್ ಕಾಲವನ್ನು ಯಶಸ್ವಿಯಾಗಿ ಬಳಸಿ ಭಾರತದಲ್ಲಿ ಖಾಸಗಿ ಆಸ್ಪತ್ರೆಗಳು ಶ್ರೀಮಂತವಾಗಿರುವುದರಿಂದ ಇಂದು ವಿಶ್ವದ ಶ್ರೀಮಂತ ಉದ್ಯಮಿಗಳು ಭಾರತಕ್ಕೆ ಬರುವ ಧೈರ್ಯವನ್ನು ತೋರಿಸಿದ್ದಾರೆ. ಕೊರೋನ ವೈರಸನ್ನು ಯಾವುದೇ ಬಂಡವಾಳವಿಲ್ಲದೆ ತಟ್ಟೆ, ಗಂಟೆ ಬಾರಿಸಿ ಓಡಿಸಿದ ದೇಶ ನಮ್ಮದು. ಈ ಬಾರಿ ಸಿಲಿಂಡರ್ ಬಿಕ್ಕಟ್ಟನ್ನು ಬೇಯಿಸದೇ ಆಹಾರವನ್ನು ತಿನ್ನುವ ಮೂಲಕ ನಾವು ಜಯಿಸಲಿದ್ದೇವೆ. ಬೇಯಿಸಿದ ಆಹಾರದ ಬದಲಿಗೆ ಒಣಗಿಸಿದ ಸೆಗಣಿ ಬಿಸ್ಕೆಟ್ನ್ನು ಈ ಬಾರಿ ರೇಷನ್ ಅಂಗಡಿಗಳಲ್ಲಿ ಹಂಚಲಿದ್ದೇವೆ. ಬಿಪಿಎಲ್ ಕಾರ್ಡ್ದಾರರಿಗೆ ಕೇಂದ್ರ ಸರಕಾರದಿಂದ ಉಚಿತ ಸೆಗಣಿ ಬಿಸ್ಕೆಟ್ ಹಂಚಲಾಗುತ್ತದೆ. ಇದನ್ನು ಬೇಯಿಸುವ ಅಗತ್ಯವೇ ಇಲ್ಲ. ಎಪಿಎಲ್ ಕಾರ್ಡ್ದಾರರಿಗೆ ಸಬ್ಸಿಡಿಯಲ್ಲಿ ಈ ಸೆಗಣಿ ಬಿಸ್ಕೆಟ್ನ್ನು ನೀಡಲಾಗುತ್ತದೆ. ಸೆಗಣಿ ಗಂಜಲದಿಂದ ಪೌಷ್ಟಿಕ ಅಂಶಗಳನ್ನು ಗುರುತಿಸುವ ಕೆಲಸವನ್ನು ಗಲ್ಗೋಟಿಯಾ ವಿಶ್ವವಿದ್ಯಾಲಯ ಮಾಡುತ್ತಿದೆ. ಅದಕ್ಕಾಗಿ ವಿಶೇಷ ಅನುದಾನವನ್ನು ನೀಡಲಾಗಿದೆ...’’ ಸುಳ್ಳಿನ ಬೆಲೆ ಓತಪ್ರೋತವಾಗಿ ವಿವರಿಸತೊಡಗಿದರು. ‘‘ಸಾರ್, ಈ ಯುದ್ಧದಲ್ಲಿ ಭಾರತದ ಪಾತ್ರವೇನು?’’ ಕಾಸಿ ಇನ್ನೊಂದು ಪ್ರಶ್ನೆ ಮುಂದಿಟ್ಟ. ‘‘ಈ ಯುದ್ಧದಲ್ಲಿ ಅಮೆರಿಕ ಮತ್ತು ಇಸ್ರೇಲ್ ಭಾರತ ಪೂರೈಸಿರುವ ಡ್ರೋನ್ಗಳನ್ನು ಬಳಸುತ್ತಿರುವುದು ವಿಶೇಷ. ನಮ್ಮದೇ ಕರ್ನಾಟಕದ ಹೆಮ್ಮೆಯ ಸುಪುತ್ರ, ನನ್ನ ಪ್ರೀತಿಯ ಶಿಷ್ಯ ಡ್ರೋನ್ ಪ್ರತಾಪ ನಿರ್ಮಿಸಿದ ಡ್ರೋನ್ಗಳನ್ನು ಭಾರತ ರಫ್ತು ಮಾಡಿವೆ. ಅಮೆರಿಕ ಭಾರತ ಒಪ್ಪಂದಲ್ಲಿ ಈ ಡ್ರೋನ್ಗಳ ಪಾತ್ರ ಮಹತ್ವಪೂರ್ಣವಾದುದು. ಇದೀಗ ಇರಾನ್ ಕೂಡ ಡ್ರೋನ್ ಪ್ರತಾಪ ತಯಾರಿಸಿದ ಇನ್ನೂರು ಡ್ರೋನ್ ಕಳುಹಿಸಿದರೆ ಭಾರತದ ಹಡಗುಗಳನ್ನು ಬಿಟ್ಟು ಬಿಡುತ್ತೇವೆ ಎಂದು ಮನವಿ ಮಾಡಿದೆ. ಈ ಬಗ್ಗೆ ಮಾತುಕತೆ ಮುಂದುವರಿದಿದೆ...’’ ‘‘ಅವರು ಹಡಗುಗಳನ್ನು ಬಿಟ್ಟು ಬಿಡುವುದಾದರೆ ಅದಕ್ಕೆ ಬದಲಾಗಿ ಡ್ರೋನ್ ಪ್ರತಾಪನನ್ನೇ ಕಳುಹಿಸಿ ಕೊಡಬಹುದಲ್ಲವೆ ಸಾರ್?’’ ‘‘ತಮಾಷೆ ಮಾಡ್ತೀರಾ? ಡ್ರೋನ್ ಪ್ರತಾಪ ಭಾರತದ ಹೆಮ್ಮೆ ಕಣ್ರೀ...ಅವರನ್ನು ಹಾಗೆ ಕೊಡುವುದಕ್ಕೆ ಆಗುವುದಿಲ್ಲ. ಹಾಗೆಯೇ ನಮ್ಮ ಫಾದರ್ಲ್ಯಾಂಡ್ನಿಂದ ನಮ್ಮ ಪ್ರೀತಿಯ ಫಾದರ್ ಕಾಲ್ ಮಾಡಿದ್ದಾರೆ. ಅವರಿಗೆ ಮಹಾಭಾರತದ ಕಾಲದಲ್ಲಿ ಪಾಂಡವರು ಬಳಸಿದ ಆಯುಧಗಳು ಕೆಲವು ಬೇಕಾಗಿದೆಯಂತೆ. ಮಹಾಭಾರತ, ರಾಮಾಯಣ ನಡೆದಿರುವ ಉತ್ತರ ಪ್ರದೇಶದಲ್ಲಿರುವ ಬೇರೆ ಬೇರೆ ಮಸೀದಿಗಳನ್ನು ಅಗೆಯಲು ಈಗಾಗಲೇ ಯೋಜನೆ ಸಿದ್ಧಪಡಿಸಿದ್ದೇವೆ. ಪ್ರಾಚ್ಯ ಇಲಾಖೆಗೆ ಸೂಚನೆ ನೀಡಿದ್ದೇವೆ. ಹಾಗೆ ಅಗೆದಾಗ ಆಯುಧಗಳೇನಾದರೂ ಸಿಕ್ಕಿದರೆ ಅದನ್ನು ಫಾದರ್ಲ್ಯಾಂಡ್ಗೆ ರಫ್ತು ಮಾಡಿ ಮದರ್ಲ್ಯಾಂಡ್ನ ಋಣ ತೀರಿಸುತ್ತೇವೆ...’’ ಎಂದು ವಕ್ರವರ್ತಿ ನಗೆ ಬೀರಿದರು. ‘‘ಸಾರ್...ಅಮೆರಿಕದವರು ಹಾರಿಸುತ್ತಿರುವ ಕ್ಷಿಪಣಿಗಳಿಗಿಂತ ನೀವು ಹಾರಿಸುತ್ತಿರುವ ಕಾಗೆಗಳೇ ಭೀಕರವಾಗಿವೆ ಸಾರ್. ಈ ಕಾಗೆಗಳನ್ನು ನೀವು ಇರಾನ್ ಕಡೆಗೆ ಹಾರಿಸಿ ಬಿಟ್ಟರೆ ಅವರು ಒಂದೇ ದಿನದಲ್ಲಿ ಸೋಲೊಪ್ಪಿಕೊಳ್ಳುವುದು ಖಂಡಿತ’’ ಎಂದವನೇ, ‘‘ಸಾರ್...ಅಲ್ಲೆಲ್ಲೋ ಸಿಲಿಂಡರ್ ಸ್ಟಾಕ್ ಇದೆಯಂತೆ...ಈಗ ಬಂದೆ’’ ಎಂದು ಅಲ್ಲಿಂದ ಓಡ ತೊಡಗಿದ. ‘‘ಎಲ್ಪಿಜಿ ಸಿಲಿಂಡರ್.. ಎಲ್ಲಿ ಎಲ್ಲಿ... ನನಗೂ ಒಂದು ಬೇಕಿತ್ತೂರೀ...’’ ಎನ್ನುತ್ತಾ ವಕ್ರವರ್ತಿ ಸುಳ್ಳಿನ ಬೆಲೆ ಕಾಸಿಯ ಹಿಂದೆಯೇ ಓಡ ತೊಡಗಿದರು. ► ಚೇಳಯ್ಯ
ಕಾಲೇಜು ಕ್ಯಾಂಪಸ್ ಗೆ ಮತ್ತೆ ರಾಜಕೀಯವೇ?
ಒಂದು ಕಾಲೇಜಿನಲ್ಲಿ ಓದುವ ಮಕ್ಕಳನ್ನು ರಾಜಕೀಯ ನಾಯಕರನ್ನಾಗಿ ಮಾಡುವುದಕ್ಕಿಂತ ಮುಂಚೆ ಅತ್ಯುತ್ತಮ ಪ್ರಜೆಗಳನ್ನಾಗಿ, ಮತದಾರರನ್ನಾಗಿ ಸಂಸ್ಕರಿಸಬೇಕಾದ ತುರ್ತು ಇವತ್ತಿನದು. ಬದಲು ಕ್ಯಾಂಪಸನ್ನು ನೇರ ರಾಜಕೀಯ ಹಣಾಹಣಿಯ ಅಖಾಡವನ್ನಾಗಿ ಮಾಡಿದರೆ ಅದರ ಬೆಲೆ ಶಿಕ್ಷಣವೇ ತೆರಬೇಕಾಗುತ್ತದೆ. ‘ವಿಷ್ಯದಲ್ಲಿ ರಾಷ್ಟ್ರ ತೆರಬೇಕಾಗುತ್ತದೆ. ನಾಡಿನ ಮುಖ್ಯಮಂತ್ರಿ ಆಯವ್ಯಯದಲ್ಲಿ ವಿದ್ಯಾರ್ಥಿ ಕೇಂದ್ರಿತ ಎರಡು ವಿಶೇಷ ಯೋಜನೆಗಳನ್ನು ಘೋಷಿಸಿದ್ದಾರೆ. ಒಂದು, ಹದಿನಾರು ವರ್ಷ ವಯಸ್ಸಿನೊಳಗಿನ ಮಕ್ಕಳಿಗೆ ಶಾಲೆಗಳಲ್ಲಿ ಮೊಬೈಲ್ ನಿಷೇ‘. ಮತ್ತೊಂದು, ಕಾಲೇಜು ಹಾಗೂ ವಿಶ್ವವಿದ್ಯಾನಿಲಯಗಳಲ್ಲಿ ವಿದ್ಯಾರ್ಥಿ ಚುನಾವಣೆಗಳನ್ನು ಮರು ಆರಂಭಿಸುವ ಯೋಚನೆ. ಮಕ್ಕಳ ಮನಸ್ಸಿನಿಂದ ಮೊಬೈಲ್ ಕಳಚುವ ಮೊದಲ ನಿರ್‘ಾರಕ್ಕೆ ಸಮಾಜದಲ್ಲಿ ಸಾಕಷ್ಟು ಒಪ್ಪಿಗೆಯ ಸ್ವರ ಕೇಳಿಬರುತ್ತದೆ. ಆದರೆ ಎರಡನೆಯ ನಿರ್‘ಾರವು ಕಾಲೇಜು ಕ್ಯಾಂಪಸ್ನಲ್ಲಿ ವಿದ್ಯಾರ್ಥಿ ಚುನಾವಣೆಗಳನ್ನು ಮತ್ತೆ ತರಬೇಕು ಎಂಬ ಆಲೋಚನೆ - ಗಂಭೀರವಾದ ಚರ್ಚೆಗೆ ಅರ್ಹವಾಗಿದೆ. ಕಳೆದ ಹತ್ತಿಪ್ಪತ್ತು ವರ್ಷಗಳಿಂದ ಕರ್ನಾಟಕದ ಬಹುತೇಕ ಸರಕಾರಿ ಕಾಲೇಜುಗಳು ಮತ್ತು ವಿಶ್ವವಿದ್ಯಾನಿಲಯಗಳಲ್ಲಿ ನೇರವಾಗಿ ವಿದ್ಯಾರ್ಥಿ ಚುನಾವಣೆಗಳು ನಡೆದಿಲ್ಲ ಮತ್ತು ಇದನ್ನು ನಿಷೇಧಿಸಿದ್ದು ಕೂಡ ಕಾಂಗ್ರೆಸ್ ಸರಕಾರವೇ. ಬದಲಿಗೆ ಶೈಕ್ಷಣಿಕ ವ್ಯವಸ್ಥೆಗೆ ಅನುಕೂಲವಾಗುವಂಥ ಮತ್ತೊಂದು ಸರಳ ಪದ್ಧತಿ ರೂಪುಗೊಂಡಿತ್ತು. ತರಗತಿ ಪ್ರತಿನಿಧಿಗಳಿಂದ ಅಥವಾ ಗರಿಷ್ಠ ಅಂಕ ಪಡೆದ, ಸಂಸ್ಕೃತಿ, ಕ್ರೀಡೆ, ಕಲೆ, ಓದು ಇತ್ಯಾದಿ ಅರ್ಹತೆಯ ಆ‘ಾರದ ಮೇಲೆ ವಿದ್ಯಾರ್ಥಿ ನಾಯಕನನ್ನು ಆಯ್ಕೆ ಮಾಡುವುದು. ಆ ವಿದ್ಯಾರ್ಥಿ ನಾಯಕ ಈ ಮೇಲಿನ ಎಲ್ಲಾ ಚಟುವಟಿಕೆಗಳಲ್ಲಿ ಕಾಲೇಜಿನ ಆಡಳಿತಕ್ಕೆ ನೆರವಾಗುವುದು. ಪ್ರಾಚಾರ್ಯರಿಗೂ ವಿದ್ಯಾರ್ಥಿಗಳಿಗೂ ಮ‘್ಯೆ ಒಂದು ಸೇತುವೆಯಂತೆ ಕೆಲಸ ಮಾಡುವುದು. ಈ ಪದ್ಧತಿ ಸುಲಲಿತವಾಗಿತ್ತು. ಮುಖ್ಯವಾಗಿ - ಅದು ಕ್ಯಾಂಪಸ್ನೊಳಗೆ ಹೊರಗಡೆಯ ರಾಜಕೀಯದ ನೇರ ಪ್ರವೇಶಕ್ಕೆ ಬಾಗಿಲು ತೆರೆಯುತ್ತಿರಲಿಲ್ಲ. ಹೊರಗಡೆಯ ರಾಜಕಾರಣಿಗಳಿಗೆ ಇಂಥ ಕಾಲೇಜುಗಳು ‘ವಿಷ್ಯದ ಮತ ಬ್ಯಾಂಕುಗಳಾಗಿ ಕಾಣಿಸುತ್ತಿರಲಿಲ್ಲ. ಪ್ರಲೋ‘ನೆಗಳು, ಹಣದ ರಾಜಕಾರಣ, ವರ್ಚಸ್ಸಿನ ಸ್ಪರ್‘ೆ, ಗುಂಪು ರಾಜಕಾರಣ - ಇವು ಎಲ್ಲವೂ ಕಾಲೇಜಿನ ಒಳಗೆ ಬಂದು ನೆಲೆಗೊಳ್ಳಲು ಅವಕಾಶ ಕಡಿಮೆ ಇತ್ತು. ‘ಾಗಶಃ ಅವು ಇದ್ದರೂ, ‘ಚುನಾವಣೆ ನಿಷೇ‘’ ಎನ್ನುವ ಪ್ರ‘ುತ್ವ ಪ್ರಕಟಣೆ -ಕಾನೂನು ಕಾಲೇಜಿನ ಆಡಳಿತಕ್ಕೆ ಒಂದು ನೈತಿಕ ಬಲವಾಗಿತ್ತು. ಅದನ್ನು ಹಿಡಿದುಕೊಂಡು ಅವರು ಕ್ಯಾಂಪಸ್ನ ಒಳಗಡೆಯ ಅನೇಕ ಬಡಿದಾಟ, ದೊಂಬಿಯಂಥ ಅನಾಹುತಗಳನ್ನು ತಡೆದಿದ್ದರು. ಆದರೆ ಈಗ ಸರಕಾರವೇ ‘ಚುನಾವಣೆ ನಡೆಸಬಹುದು’ ಎಂದು ನಿಯಮ ರೂಪಿಸಿದರೆ, ಅದು ನೇರ ರಾಜಕೀಯ ಪ್ರವೇಶಕ್ಕೆ ದಾರಿ ಮಾಡಿಕೊಡುವ ಅಪಾಯ ಇದ್ದೇ ಇದೆ. ವಿದ್ಯಾರ್ಥಿಗಳಿಗೆ ರಾಜಕೀಯ ಪ್ರಜ್ಞೆ ಮೂಡಬೇಕು, ಚುನಾವಣೆ, ಮತದಾನ, ಪ್ರತಿನಿಧಿ ಆಯ್ಕೆ, ಆಡಳಿತಾಂಗ, ಸರಕಾರ ಇತ್ಯಾದಿಗಳು ಅರ್ಥವಾಗಬೇಕೆಂಬುದು ಒಳ್ಳೆಯ ಮಾತು. ಸಂವಿ‘ಾನ, ರಾಜ್ಯಶಾಸ್ತ್ರ, ಪ್ರಜಾಪ್ರ‘ುತ್ವದ ಮೌಲ್ಯಗಳು ಅವರಿಗೆ ತಿಳಿಯಬೇಕು ಇದೂ ಸತ್ಯವೇ. ಆದರೆ ರಾಜಕೀಯದ ಪಾಠ ಬೇರೆ; ರಾಜಕೀಯ ಅನು‘ವ ಬೇರೆ; ನೇರ ರಾಜಕೀಯ ಹಣಾಹಣಿ ಬೇರೆ. ಕಾಲೇಜು ಚುನಾವಣೆಗಳು ಒಂದು ದಿನಕ್ಕೆ ಒಂದು ವಾರಕ್ಕೆ ಮುಗಿದು ಹೋದರೆ ಸರಿ, ಅದರ ಪರಿಣಾಮ ಇಡೀ ಶೈಕ್ಷಣಿಕ ವರ್ಷದ ವೇಳಾಪಟ್ಟಿಯನ್ನು ಆವರಿಸಿಕೊಂಡರೆ ಆ ಶಿಕ್ಷಣಾಲಯ ಮುಂದೆ ರಾಜಕೀಯ ತರಬೇತಿ ಮೈದಾನಗಳಾಗಿ ಮಾರ್ಪಡುವ ಅಪಾಯ ಇದೆ. ಕಾಲೇಜುಗಳು ರಾಜಕೀಯ ನಾಯಕತ್ವವನ್ನು ಬೆಳೆಸುತ್ತವೆ ಎನ್ನುವುದು ಒಂದು ಕಾಲಕ್ಕೆ ಖಂಡಿತ ‘್ರಮೆಯಲ್ಲ. ಉದಾಹರಣೆಗೆ ಮಂಗಳೂರಿನ ಹಂಪನಕಟ್ಟೆಯ ಸರಕಾರಿ ಕಾಲೇಜು, ಇಂದಿನ ವಿಶ್ವವಿದ್ಯಾನಿಲಯ ಕಾಲೇಜು. ಅಲ್ಲಿ ಐದಾರು ದಶಕದ ಹಿಂದೆ ಓದಿದ ಕೆಲವು ವಿದ್ಯಾರ್ಥಿ ನಾಯಕರು ನಂತರ ದೊಡ್ಡ ರಾಜಕಾರಣಿಗಳಾಗಿ ಬೆಳೆದಿದ್ದಾರೆ. ಶ್ರೀನಿವಾಸ ಮಲ್ಯ, ಜನಾರ್ದನ ಪೂಜಾರಿ, ವೀರಪ್ಪ ಮೊಯ್ಲಿ, ರಮಾನಾಥ ರೈ ಮೊದಲಾದವರು ಆ ಕಾಲದಲ್ಲಿ ವಿದ್ಯಾರ್ಥಿ ನಾಯಕರಾಗಿದ್ದವರು ಎಂಬುದನ್ನು ನಾವು ಕೇಳಿದ್ದೇವೆ. ಆ ಕಾಲದ ವಿದ್ಯಾರ್ಥಿಗಳನ್ನು ನೆನಪಿಸಿಕೊಂಡಾಗ ಖಂಡಿತ ರಾಜಕೀಯವು ವೃತ್ತಿಯಾಗಿರಲಿಲ್ಲ; ಅದು ಒಂದು ಹೊಣೆಗಾರಿಕೆಯ ‘ಾವನೆಯಾಗಿತ್ತು. ಕಾಲೇಜಿನ ತರಗತಿ ಕೊಠಡಿಗಳಲ್ಲಿ ಓದುತ್ತಿದ್ದ ಯುವಕರು ಸಮಾಜದ ಪ್ರಶ್ನೆಗಳ ಬಗ್ಗೆ ಚರ್ಚಿಸುತ್ತಿದ್ದರು. ದೇಶ ಸ್ವಾತಂತ್ರ್ಯ ಪಡೆದ ನಂತರ ಹೊಸ ಸಮಾಜವನ್ನು ಹೇಗೆ ಕಟ್ಟಬೇಕು ಎಂಬ ಚಿಂತನೆಯೇ ಅವರ ರಾಜಕೀಯದ ಬೀಜವಾಗಿತ್ತು. ಅಲ್ಲಿ ಅಧಿಕಾರದ ಆಸೆಗಿಂತ ಹೆಚ್ಚು ಸೇವೆಯ ಮನಸ್ಸು ಇತ್ತು. ಶ್ರೀನಿವಾಸ ಮಲ್ಯರಂತೂ ಸ್ವಾತಂತ್ರ್ಯ ಹೋರಾಟದ ಅನು‘ವದಿಂದ ರಾಜಕೀಯಕ್ಕೆ ಬಂದವರು. ಬಹುತೇಕ ಆ ನಂತರ ಬಂದವರು ಕೂಡ ಶಿಕ್ಷಣ ಮತ್ತು ಚಿಂತನೆಯ ನೆಲೆಯಲ್ಲಿ ಸಾರ್ವಜನಿಕ ಬದುಕಿಗೆ ಪ್ರವೇಶಿಸಿದರು. ಅವರ ರಾಜಕೀಯ ಪಯಣದ ಹಿಂದೆ ಒಂದು ಗಂಭೀರ ಓದು, ಒಂದು ಆದರ್ಶ, ಒಂದು ವಿಚಾರ‘ಾರೆ, ಒಂದು ಸಾಮಾಜಿಕ ಅನು‘ವ ಇದ್ದದ್ದು ಗಮನಕ್ಕೆ ಬರುತ್ತದೆ. ಇವತ್ತು ಪರಿಸ್ಥಿತಿ ಬದಲಾಗಿದೆ. ರಾಜಕೀಯವು ಈಗ ಹೆಚ್ಚು ಸಂಘಟಿತ, ಹೆಚ್ಚು ಸ್ಪರ್‘ಾತ್ಮಕ ಕ್ಷೇತ್ರವಾಗಿದೆ. ವಿದ್ಯಾರ್ಥಿ ರಾಜಕೀಯವೂ ಕೆಲವೊಮ್ಮೆ ದೊಡ್ಡ ಪಕ್ಷಗಳ ನೆರಳಿನಲ್ಲಿ ನಡೆಯುತ್ತದೆ. ಚರ್ಚೆಗಿಂತ ಘೋಷಣೆ, ವಿಚಾರ‘ಾರೆಗಿಂತ ಪ್ರಚಾರ, ಸೇವೆಗಿಂತ ಸ್ಥಾನಮಾನ-ಇವು ಹೆಚ್ಚು ಗಮನ ಸೆಳೆಯುತ್ತವೆ. ಹಾಗಂತ ಹಳೆಯ ಕಾಲ ಸಂಪೂರ್ಣ ಶುದ್ಧ, ಇವತ್ತಿನದ್ದು ಅಶುದ್ಧ ಎಂದು ನಾನು ಹೇಳಲಾರೆ. ಆಗ ರಾಜಕೀಯವು ಶಿಕ್ಷಣದ ಹಾದಿಯಲ್ಲಿ ಸಮಾಜದತ್ತ ಸಾಗುತ್ತಿತ್ತು. ಈಗ ಕೆಲವೊಮ್ಮೆ ರಾಜಕೀಯವೇ ಕಾಲೇಜಿನ ಬಾಗಿಲು ತಟ್ಟಿ ಒಳಗೆ ನೇರವಾಗಿ ಪ್ರವೇಶಿಸುತ್ತದೆ. ಸೆಮಿಸ್ಟರ್ ಸಿಸ್ಟಮ್ ಬಂದಮೇಲೆ ಕಾಲೇಜಿನ ಶೈಕ್ಷಣಿಕ ಅವಧಿ ತುಂಬಾ ಕಡಿಮೆ ಇದೆ. ಪರೀಕ್ಷೆ, ಮೌಲ್ಯಮಾಪನ, ಲಿತಾಂಶ ಇಷ್ಟರಲ್ಲಿ ಒಂದು ಅವಧಿ ಮುಗಿದುಹೋಗುವ ಒತ್ತಡದ ಶೈಕ್ಷಣಿಕ ವೇಳಾಪಟ್ಟಿಯ ನಡುವೆ ತೂರಿಕೊಳ್ಳುವ ರಾಜಕಾರಣ ಸೃಷ್ಟಿಸಬಹುದಾದ ಪರಿಣಾಮಗಳು ಅಲ್ಲಿಯ ಒಟ್ಟು ವ್ಯವಸ್ಥೆಯ ಮೇಲೆ ಕೆಟ್ಟದಾಗಬಹುದು.. ಆ ಕಾಲದಲ್ಲಿ ಕಾಲೇಜು ಚುನಾವಣೆಗಳು ಹೊರಗಿನ ರಾಜಕೀಯ ಚುನಾವಣೆಗಳಿಗೆ ಕಡಿಮೆ ಇರಲಿಲ್ಲ. ಗುಂಡಾಗುಂಡಿ, ಪೆಟ್ಟು-ಗುಟ್ಟು, ಕುಡಿತ, ಕಿಡ್ನಾಪ್ - ಇವೆಲ್ಲ ಕ್ಯಾಂಪಸ್ನೊಳಗೆ ಕಾಣಿಸಿಕೊಂಡಿದ್ದವು. ಚಾಕು, ಚೂರಿ, ಚೈನ್ಗಳು ಕಾಲೇಜಿನ ಬಾಗಿಲು ದಾಟಿದ್ದವು. ತಿಂಗಳುಗಟ್ಟಲೆ ಪೊಲೀಸ್ ವ್ಯಾನ್ಗಳು ಕ್ಯಾಂಪಸ್ನೊಳಗೆ ನಿಂತಿದ್ದವು. ರಾಜಕೀಯ ಪಕ್ಷಗಳ ಬ್ಯಾನರ್ಗಳು, ಬಂಟಿಂಗ್ಗಳು ಕಾಲೇಜಿನ ಗೋಡೆಗಳನ್ನು ಆವರಿಸಿದ್ದವು. ಹೊರಗಡೆಯ ರಾಜಕೀಯ ನಾಯಕರು ಕ್ಯಾಂಪಸ್ಗೆ ಬಂದು ‘ಇವರಿಗೆ ಮತ ಕೊಡಿ’ ಎಂದು ‘ಾಷಣ ಮಾಡುತ್ತಿದ್ದ ದೃಶ್ಯಗಳನ್ನು ನಾವು ಕಣ್ಣಾರೆ ಕಂಡವರೇ. ಚುನಾವಣೆ ದಿನ ಮದ್ಯಪಾರ್ಟಿಗಳು ನಡೆದದ್ದೂ ಇದೆ. ಚುನಾವಣೆಗಳು ಮುಗಿದ ಮೇಲೂ ಮ್ಯಾನೇಜ್ಮೆಂಟ್, ಪ್ರಾಚಾರ್ಯರು, ಉಪನ್ಯಾಸಕರು ಆತಂಕದಲ್ಲಿ ದಿನ ಕಳೆಯುತ್ತಿದ್ದ ಸಂದ‘ರ್ಗಳೂ ಇತ್ತು. ಇರುವ ಸಮಸ್ಯೆಗಳಿಗೆ ಪರಿಹಾರಗಳನ್ನು ಕಂಡುಹಿಡಿಯುವ ಬದಲು ಶೈಕ್ಷಣಿಕ ವಲಯದಲ್ಲಿ ಹೊಸ ಸಮಸ್ಯೆಗಳನ್ನು ಸೃಷ್ಟಿಸುವುದು ಸದ್ಯದ ಸ್ಥಿತಿಯಲ್ಲಿ ಸರಿಯಲ್ಲ. ಎಷ್ಟೋ ಕಡೆ ಕಾಲೇಜು-ವಿಶ್ವವಿದ್ಯಾನಿಲಯಗಳಲ್ಲಿ ಖಾಯಂ ಉಪನ್ಯಾಸಕರಿಲ್ಲ. ವಿ‘ಾಗ ಮುಖ್ಯಸ್ಥರೇ ಇಲ್ಲದ ವಿ‘ಾಗಗಳೂ ಇವೆ. ಪ್ರಯೋಗಾಲಯಗಳು ಹಳೆಯದಾಗಿವೆ. ಕ್ಯಾಂಪಸ್ಗಳಿಗೆ ಗೋಡೆಗಳಿಲ್ಲ, ಆಟ ಆಡುವ ಮೈದಾನಗಳಿಲ್ಲ. ಗ್ರಂಥಾಲಯಗಳು ನಿರ್ಜೀವವಾಗಿವೆ. ಒಂದು ಕಾಲದಲ್ಲಿ ಸಾವಿರಾರು ಸ್ನಾತಕ ವಿದ್ಯಾರ್ಥಿಗಳನ್ನು ಹೊಂದಿದ್ದ ವಿಶ್ವವಿದ್ಯಾನಿಲಯಗಳಲ್ಲಿಂದು ಬೆರಳೆಣಿಕೆಯ ವಿದ್ಯಾರ್ಥಿಗಳಷ್ಟೇ ಓದುತ್ತಿದ್ದಾರೆ. ಮಾನವೀಯ ವಿ‘ಾಗಗಳು ಬಣಗುಟ್ಟುತ್ತಿವೆ, ಸಾಹಿತ್ಯಕ, ಸಾಮಾಜಿಕ, ಜನಾಂಗಿಕ, ಸಾಂಸ್ಕೃತಿಕ ಪೀಠಗಳ ಕಾರ್ಯಕ್ರಮಗಳಿಗೆ ಹಣವಿಲ್ಲದೆ ಸೊರಗುತ್ತಿವೆ. ಅಕ್ಕಪಕ್ಕದ ಸ್ವಾಯತ್ತ ಕಾಲೇಜುಗಳು ಆರಂ‘ಗೊಂಡು ಪಾಠ ಪ್ರವಚನಗಳು ಅ‘ರ್ಮುಗಿದ ಮೇಲೆ ತಡವಾಗಿ ಸರಕಾರಿ ಕಾಲೇಜುಗಳಿಗೆ ಅತಿಥಿ ಉಪನ್ಯಾಸಕರನ್ನು ನೇಮಕ ಮಾಡಿ ಪಠ್ಯ ಮುಗಿಸಲು ಉಪನ್ಯಾಸಕರು ಉಸಿರು ಕಟ್ಟುವ ಪರಿಸ್ಥಿತಿ ಇದೆ. ಉಪಕುಲಪತಿ, ಕುಲಸಚಿವರ ನೇಮಕಾತಿಯಲ್ಲಿ ನಿರ್ಲಕ್ಷ್ಯ, ಸ್ವಜನ ಪಕ್ಷಪಾತ, ಖಾಯಂ ಉಪನ್ಯಾಸಕರ ನೇಮಕಾತಿಯಲ್ಲಿ ನಿ‘ಾನಗತಿ, ಲಿತಾಂಶಗಳಲ್ಲಿ ಕೊರತೆಗಳು...ಹೀಗೆ ಸರಕಾರ ಮೊದಲು ಮಾಡಬೇಕಾದದ್ದು ಕಳೆದುಹೋಗುತ್ತಿರುವ ಶಿಕ್ಷಣದ ಗುಣಮಟ್ಟವನ್ನು ಎತ್ತುವುದು. ಗುಣಮಟ್ಟದ ಸಂಶೋ‘ನೆಗೆ ಪ್ರೋತ್ಸಾಹ ನೀಡುವುದು. ವಿಶ್ವವಿದ್ಯಾನಿಲಯಗಳನ್ನು ಜಾಗತಿಕ ಮಟ್ಟಕ್ಕೆ ತಲುಪಿಸುವ ಬಗ್ಗೆ ಯೋಚಿಸುವುದು. ಆದರೆ ನಾವಿಂದು ಅವೆಲ್ಲವನ್ನೂ ಮರೆತು ಚುನಾವಣೆಗಳ ಬಗ್ಗೆ ಯೋಚಿಸುತ್ತಿದ್ದೇವೆ! ಹೌದು ವಿದ್ಯಾರ್ಥಿಗಳಿಗೆ ಸಂವಿ‘ಾನದ ಪ್ರಜ್ಞೆ, ಪ್ರಜಾಪ್ರ‘ುತ್ವದ ಮೌಲ್ಯ, ಚುನಾವಣೆ ಗಣನೆ ಇವೆಲ್ಲವೂ ಬೇಕು. ಅದಕ್ಕಾಗಿಯೇ ಅದೇ ಕಾಲೇಜಿನಲ್ಲಿ ರಾಜ್ಯಶಾಸ್ತ್ರದ ಪಾಠಗಳಿವೆ, ಗೋಷ್ಠಿ, ಚರ್ಚೆ, ಮಾದರಿ ಅಣಕು ಸಂಸತ್ತುಗಳಿಗೆ ಅವಕಾಶಗಳಿವೆ. ಮುತ್ಸದ್ದಿ ರಾಜಕಾರಣಿಗಳನ್ನೇ ಕರೆಸಿ ವಿಶೇಷ ಉಪನ್ಯಾಸಗಳನ್ನೇ ಏರ್ಪಡಿಸಬಹುದು. ಒಂದು ಕಾಲೇಜಿನಲ್ಲಿ ಓದುವ ಮಕ್ಕಳನ್ನು ರಾಜಕೀಯ ನಾಯಕರನ್ನಾಗಿ ಮಾಡುವುದಕ್ಕಿಂತ ಮುಂಚೆ ಅತ್ಯುತ್ತಮ ಪ್ರಜೆಗಳನ್ನಾಗಿ, ಮತದಾರರನ್ನಾಗಿ ಸಂಸ್ಕರಿಸಬೇಕಾದ ತುರ್ತು ಇವತ್ತಿನದು. ಬದಲು ಕ್ಯಾಂಪಸನ್ನು ನೇರ ರಾಜಕೀಯ ಹಣಾಹಣಿಯ ಅಖಾಡವನ್ನಾಗಿ ಮಾಡಿದರೆ ಅದರ ಬೆಲೆ ಶಿಕ್ಷಣವೇ ತೆರಬೇಕಾಗುತ್ತದೆ. ‘ವಿಷ್ಯದಲ್ಲಿ ರಾಷ್ಟ್ರ ತೆರಬೇಕಾಗುತ್ತದೆ. ಈಗಾಗಲೇ ವಿಶ್ವವಿದ್ಯಾನಿಲಯಗಳು ಈ ಮೇಲಿನ ಅದ್ವಾನಗಳ ಜೊತೆಗೆ ಜಾತಿ, ‘ರ್ಮ, ಮತ, ‘ಾಷೆ, ಜನಾಂಗಿಕ ಬಿಕ್ಕಟ್ಟು, ಸಂಘರ್ಷಗಳಿಂದ ನಲುಗುವುದನ್ನು ನಾವು ಪ್ರತಿದಿನ ಸುದ್ದಿದಾರಿಯಲ್ಲಿ ತಿಳಿಯುತ್ತಿದ್ದೇವೆ. ಈ ಪ್ರಶ್ನೆಯನ್ನು ಸರಕಾರ ಗಂಭೀರವಾಗಿ ಯೋಚಿಸಬೇಕು. ಪೋಷಕರೂ ತಮ್ಮ ಆತಂಕವನ್ನು ವ್ಯಕ್ತಪಡಿಸಬೇಕು. ಕಾಲೇಜು ಆಡಳಿತ ಮಂಡಳಿಗಳು ತಮ್ಮ ಅನು‘ವವನ್ನು ಪ್ರ‘ುತ್ವಕ್ಕೆ ಮುಟ್ಟಿಸಬೇಕು. ಸ್ವಾತಂತ್ರ್ಯದ ನಂತರ ‘ಾರತದಲ್ಲಿ ವಿಶ್ವವಿದ್ಯಾನಿಲಯಗಳು ಮತ್ತು ಕಾಲೇಜುಗಳಲ್ಲಿ ವಿದ್ಯಾರ್ಥಿ ಸಂಘಗಳು ರೂಪುಗೊಂಡ ಹಿಂದಿನ ಕಲ್ಪನೆ ಸ್ಪಷ್ಟವಾಗಿತ್ತು. ದೇಶ ಪ್ರಜಾಪ್ರ‘ುತ್ವದ ವ್ಯವಸ್ಥೆಯನ್ನು ಅಳವಡಿಸಿಕೊಂಡಿರುವಾಗ ‘ವಿಷ್ಯದ ನಾಗರಿಕರಿಗೆ ಪ್ರಜಾಪ್ರ‘ುತ್ವದ ಸಂಸ್ಕೃತಿಯನ್ನು ಕಲಿಸುವುದು, ಅದು ಶಿಕ್ಷಣದ ‘ಾಗವಾಗಬೇಕು ಎಂಬ ಆಲೋಚನೆ ಅಂದಿನ ಶಿಕ್ಷಣ ತಜ್ಞರಲ್ಲಿತ್ತು. ಶಿಕ್ಷಣಾಲಯದ ಸುತ್ತಲಿನ ಹಾಸ್ಟೆಲ್ ಸಮಸ್ಯೆ, ಶುಲ್ಕದ ಹೆಚ್ಚಳ, ಗ್ರಂಥಾಲಯದ ಕೊರತೆ, ವಿದ್ಯಾರ್ಥಿ ಕಲ್ಯಾಣದ ವಿಚಾರಗಳು ಇತ್ಯಾದಿಗಳನ್ನು ಆಡಳಿತದ ಮುಂದೆ ಮಂಡಿಸಲು ವಿದ್ಯಾರ್ಥಿಗಳಲ್ಲಿ ಆಯ್ಕೆಯಾದ ಪ್ರತಿನಿಧಿಗಳು ಇರಬೇಕು ಎಂಬ ನಂಬಿಕೆ ಇತ್ತು. ಆ ಅರ್ಥದಲ್ಲಿ ವಿದ್ಯಾರ್ಥಿ ಚುನಾವಣೆಗಳು ಪ್ರಜಾಪ್ರ‘ುತ್ವದ ಒಂದು ತರಬೇತಿ ಶಾಲೆಯಂತೆ ಕಾಣಿಸಿಕೊಂಡವು. ಕಾಲಕ್ರಮೇಣ ಈ ಪ್ರಯೋಗದಲ್ಲಿ ಅನೇಕ ಬದಲಾವಣೆಗಳು ಕಾಣಿಸಿಕೊಂಡವು. ಮೊದಲಿಗೆ ವಿದ್ಯಾರ್ಥಿ ಸಂಘಟನೆಗಳು ಕಾಲೇಜಿನ ಒಳಗಿನ ಸಮಸ್ಯೆಗಳ ಸುತ್ತಲೇ ತಿರುಗುತ್ತಿದ್ದವು. ನಂತರ ಅವು ನಿ‘ಾನವಾಗಿ ರಾಷ್ಟ್ರೀಯ ರಾಜಕೀಯ ಪಕ್ಷಗಳ ಪ್ರ‘ಾವಕ್ಕೆ ಒಳಗಾಗಲು ಆರಂಭಿಸಿತು. ದೇಶದ ಪ್ರಮುಖ ರಾಜಕೀಯ ಪಕ್ಷಗಳು ತಮ್ಮದೇ ವಿದ್ಯಾರ್ಥಿ ಸಂಘಟನೆಗಳನ್ನು ನಿರ್ಮಿಸಿಕೊಂಡವು. ಇವು ಕಾಲೇಜುಗಳಲ್ಲಿ ಸಕ್ರಿಯವಾಗುತ್ತಾ ವಿದ್ಯಾರ್ಥಿ ಚುನಾವಣೆಗಳನ್ನು ಪಕ್ಷ ರಾಜಕೀಯದ ವಿಸ್ತರಣೆಯನ್ನಾಗಿಸಿತು. ರಾಜಕೀಯದ ‘ಾಷೆ, ಘೋಷಣೆಗಳು, ಪ್ರಚಾರದ ವಿ‘ಾನಗಳು, ಮೈತ್ರಿಗಳು-ಇವೆಲ್ಲವೂ ವಿದ್ಯಾರ್ಥಿ ರಾಜಕೀಯದಲ್ಲಿಯೂ ಕಾಣಿಸತೊಡಗಿದವು. ಸದ್ಯ ಕರ್ನಾಟಕದ ಪರಿಸ್ಥಿತಿ ಉತ್ತರ ‘ಾರತದಷ್ಟು ಉಗ್ರವಾಗಿಲ್ಲ ಎನ್ನುವುದು ಸತ್ಯ. ಇಲ್ಲಿ ವಿದ್ಯಾರ್ಥಿ ಸಂಘಟನೆಗಳು ಸಕ್ರಿಯವಾಗಿದ್ದರೂ, ಬಹುತೇಕ ಕಾಲೇಜುಗಳಲ್ಲಿ ಚುನಾವಣೆಗಳು ತೀವ್ರ ಸಂಘರ್ಷದ ರೂಪ ತಾಳುವುದಿಲ್ಲ. ಆದರೂ ರಾಜಕೀಯ ಪಕ್ಷಗಳ ವಿದ್ಯಾರ್ಥಿ ಸಂಘಟನೆಗಳು ಇಲ್ಲಿ ಸಹ ಪ್ರ‘ಾವ ಬೀರುತ್ತಿವೆ ಎಂಬುದು ಸತ್ಯ. ಇಲ್ಲಿರುವ ಮೂಲ ಪ್ರಶ್ನೆ ವಿದ್ಯಾರ್ಥಿ ಚುನಾವಣೆಗಳು ನಿಜವಾಗಿಯೂ ಉತ್ತಮ ನಾಯಕತ್ವವನ್ನು ಬೆಳೆಸುತ್ತವೆಯೇ? ಎಂಬುವುದು. ಕಾಲೇಜಿನ ವಿದ್ಯಾರ್ಥಿಯ ಅ‘್ಯಯನದ ವಯಸ್ಸಿನಲ್ಲಿ ರಾಜಕೀಯದ ಉತ್ಸಾಹ ಹೆಚ್ಚು, ಜೀವನದ ಅನು‘ವ ಕಡಿಮೆ. ಆ ಕಾರಣದಿಂದ ರಾಜಕೀಯ ಪಕ್ಷಗಳು ವಿದ್ಯಾರ್ಥಿಗಳನ್ನು ಸುಲ‘ವಾಗಿ ತಮ್ಮ ಪ್ರ‘ಾವಕ್ಕೆ ಒಳಪಡಿಸುತ್ತವೆ. ಮುಂದೆ ಶಿಕ್ಷಣದ ವಾತಾವರಣ ರಾಜಕೀಯ ಘೋಷಣೆಗಳಿಂದ ತುಂಬಿಬಿಟ್ಟರೆ ಅದರ ಪರಿಣಾಮವಾಗಿ ಅ‘್ಯಯನಕ್ಕೆ ಹಾನಿಯಾಗಬಹುದು ಎಂಬ ಆತಂಕವೂ ವ್ಯಕ್ತವಾಗುತ್ತದೆ. ಕೆಲವೆಡೆ ವಿದ್ಯಾರ್ಥಿ ಸಂಘದ ಚುನಾವಣೆಗಳು ನಡೆಯುವ ಸಮಯದಲ್ಲಿ ಕಾಲೇಜು ಆವರಣವೇ ರಾಜಕೀಯ ಸ‘ೆಯ ಮೈದಾನವಾಗುವ ಉದಾಹರಣೆಗಳೂ ಇವೆ. ಹಾಗಂತ ವಿದ್ಯಾರ್ಥಿ ರಾಜಕೀಯ ಸಂಪೂರ್ಣ ಕೆಟ್ಟದ್ದು ಎಂದು ಹೇಳುವುದೂ ಸರಿಯಲ್ಲ; ಅದು ಸಂಪೂರ್ಣ ಒಳ್ಳೆಯದು ಎಂದು ಹೇಳುವುದೂ ಅತಿಶಯೋಕ್ತಿ. ನಿಜವಾದ ಸಮಸ್ಯೆ ಚುನಾವಣೆಗಳಲ್ಲ. ಅವು ನಡೆಯುವ ವಿ‘ಾನದಲ್ಲಿದೆ. ವಿದ್ಯಾರ್ಥಿ ಸಂಘಗಳು ವಿದ್ಯಾರ್ಥಿಗಳ ಹಿತಾಸಕ್ತಿಗಾಗಿ ಕೆಲಸ ಮಾಡಿದರೆ ಅದು ಶಿಕ್ಷಣ ವ್ಯವಸ್ಥೆಗೆ ಸಹಾಯಕವಾಗಬಹುದು. ಆದರೆ ಅವು ಹೊರಗಿನ ರಾಜಕೀಯದ ಶಾಖೆಗಳಾಗಿ ಬದಲಾದರೆ ಕಾಲೇಜುಗಳು ಶಿಕ್ಷಣದ ಮಂದಿರಗಳಿಗಿಂತ ರಾಜಕೀಯದ ತರಬೇತಿ ಶಿಬಿರಗಳಾಗಿ ಕಾಣಿಸಬಹುದು. ವಿದ್ಯಾರ್ಥಿ ಚುನಾವಣೆಗಳು ಪ್ರಜಾಪ್ರ‘ುತ್ವದ ಪಾಠವಾಗಬೇಕು; ಪ್ರಜಾಪ್ರ‘ುತ್ವದ ವ್ಯಂಗ್ಯವಾಗಬಾರದು.
‘ಮೊಜ್ತಬಾ ಖಮೇನಿ ಬದುಕಿಲ್ಲ ಎಂಬ ಮಾತು ಕಿವಿಗೆ ಬಿತ್ತು’: ಊಹಾಪೋಹಕ್ಕೆ ಕಾರಣವಾದ ಡೊನಾಲ್ಡ್ ಟ್ರಂಪ್ ಮಾತು
ಅಧಿಕಾರದ ಚುಕ್ಕಾಣಿ ಹಿಡಿದಾಗಿನಿಂದ ಮೊಜ್ತಬಾ ಖಮೇನಿ ಸಾರ್ವಜನಿಕವಾಗಿ ಎಲ್ಲೂ ಕಾಣಿಸಿಕೊಂಡಿಲ್ಲ. ಮೊದಲ ಸಂದೇಶವನ್ನೂ ಬರವಣಿಗೆ ಮೂಲಕ ಕೊಟ್ಟಿರುವ ಮೊಜ್ತಬಾ ಖಮೇನಿ ನಿಜವಾಗಿಯೂ ಬದುಕಿದ್ದಾರಾ? ಎಂಬ ಪ್ರಶ್ನೆ ಉದ್ಭವಿಸಿರುವಾಗಲೇ, ‘’ಮೊಜ್ತಬಾ ಖಮೇನಿ ಬದುಕಿಲ್ಲ ಎಂಬ ಮಾತು ಕಿವಿಗೆ ಬಿತ್ತು’’ ಅಂತ ಸಂದರ್ಶನದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
4 ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭಾ ಚುನಾವಣೆ ದಿನಾಂಕ ಇಂದು ಘೋಷಣೆ
ಪಶ್ಚಿಮ ಬಂಗಾಳ, ಅಸ್ಸಾಂ, ತಮಿಳುನಾಡು, ಕೇರಳ ಮತ್ತು ಪುದುಚೇರಿ ಸೇರಿದಂತೆ ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶ ವಿಧಾನಸಭಾ ಚುನಾವಣೆಯನ್ನು ಎದುರಿಸಲಿದೆ. ಚುನಾವಣಾ ದಿನಾಂಕಗಳನ್ನು ಇಂದು ಚುನಾವಣಾ ಆಯೋಗ ಘೋಷಣೆ ಮಾಡಲಿದೆ.
ಕೃಷ್ಣಾ ಮೇಲ್ದಂಡೆ ಯೋಜನೆಗೆ 5,000 ಕೋಟಿ ರೂ. ಘೋಷಿಸಿದ ಸಿಎಂ ಸಿದ್ಧರಾಮಯ್ಯ
ಬಾಗಲಕೋಟೆ: ಕೃಷ್ಣಾ ಮೇಲ್ದಂಡೆ ಯೋಜನೆ (ಯುಕೆಪಿ) 3ನೇ ಹಂತದ ಭೂಸ್ವಾಧೀನ ಪ್ರಕ್ರಿಯೆಗೆ ಪೂರಕ ಬಜೆಟ್ನಲ್ಲಿ 5,000 ಕೋಟಿ ರೂ.ಗಳ ಹೆಚ್ಚುವರಿ ಅನುದಾನ ಮೀಸಲಿಡುವುದಾಗಿ ಸಿಎಂ ಸಿದ್ಧರಾಮಯ್ಯ ಘೋಷಿಸಿದ್ದಾರೆ. ಬಾಗಲಕೋಟೆ ನವನಗರದಲ್ಲಿ ನೂತನ ಸರ್ಕಾರಿ ವೈದ್ಯಕೀಯ ಮಹಾವಿದ್ಯಾಲಯ (ಮೆಡಿಕಲ್ ಕಾಲೇಜು) ಹಾಗೂ ಸಂಶೋಧನಾ ಸಂಸ್ಥೆಯ ಕಟ್ಟಡ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿ, ಕೃಷ್ಣಾ ಮೇಲ್ದಂಡೆ ಯೋಜನೆ (ಯುಕೆಪಿ) 3ನೇ ಹಂತದಡಿ
ಎಚ್ ಎನ್. ವ್ಯಾಲಿ ನೀರು 3ನೇ ಹಂತದ ಶುದ್ಧೀಕರಣಕ್ಕೆ ಒತ್ತಾಯಿಸಿ ಚಿಕ್ಕಬಳ್ಳಾಪುರ ಬಂದ್
ಚಿಕ್ಕಬಳ್ಳಾಪುರ | ಚಿಕ್ಕಬಳ್ಳಾಪುರದ ಕೆರೆಗಳಿಗೆ ಬೆಂಗಳೂರಿನ ಹೆಬ್ಬಾಳ–ನಾಗವಾರ್ ಕೆರೆಗಳಿಂದ ಹರಿದುಬರುವ ಎಚ್.ಎನ್. ವ್ಯಾಲಿ ನೀರನ್ನು ಮೂರನೇ ಹಂತದ ಶುದ್ಧೀಕರಣಕ್ಕೆ ಒಳಪಡಿಸಬೇಕು ಎಂದು ಆಗ್ರಹಿಸಿ ರವಿವಾರ ನಗರದಲ್ಲಿ ಸ್ವಯಂಪ್ರೇರಿತ ಬಂದ್ ಆಚರಿಸಲಾಯಿತು. ರಾಜ್ಯ ಬಜೆಟ್ನಲ್ಲಿ ಎಚ್.ಎನ್. ವ್ಯಾಲಿ ನೀರಿನ ಮೂರನೇ ಹಂತದ ಶುದ್ಧೀಕರಣ ಕುರಿತು ಯಾವುದೇ ನಿರ್ಧಾರ ಕೈಗೊಳ್ಳದ ಹಿನ್ನೆಲೆಯಲ್ಲಿ ಶಾಶ್ವತ ನೀರಾವರಿ ಹೋರಾಟ ಸಮಿತಿ, ಕನ್ನಡಪರ ಸಂಘಟನೆಗಳು ಹಾಗೂ ವಿವಿಧ ರೈತಪರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿದವು. ಬೆಳಗ್ಗೆಯಿಂದಲೇ ನಗರದ ಅಂಗಡಿ ಮುಂಗಟ್ಟುಗಳ ಮಾಲಕರು ಬಂದ್ ಗೆ ಬೆಂಬಲ ಸೂಚಿಸಿ ತಮ್ಮ ವ್ಯಾಪಾರ ವಹಿವಾಟುಗಳನ್ನು ಸ್ಥಗಿತಗೊಳಿಸಿದರು. ನಗರದಲ್ಲಿ ವಾಹನ ಸಂಚಾರ ಎಂದಿನಂತೆ ಮುಂದುವರಿದಿದ್ದು, ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸರು ಸೂಕ್ತ ಬಂದೋಬಸ್ತ್ ಏರ್ಪಡಿಸಿದ್ದರು. ಇದೇ ವೇಳೆ ಚಿಕ್ಕಬಳ್ಳಾಪುರ ಜೀವಜಲ ಜಾಗೃತಿ ವೇದಿಕೆ ನೇತೃತ್ವದಲ್ಲಿ ನಗರದಲ್ಲಿ ಮೆರವಣಿಗೆ ನಡೆಯಿತು. ಎಚ್.ಎನ್. ವ್ಯಾಲಿ ನೀರನ್ನು ಮೂರನೇ ಹಂತದ ಶುದ್ಧೀಕರಣಕ್ಕೆ ಒಳಪಡಿಸಬೇಕು ಎಂದು ಘೋಷಣೆಗಳನ್ನು ಕೂಗಿದರು. ಈ ವೇಳೆ ಮಾತನಾಡಿದ ಬಿಜೆಪಿ ಮುಖಂಡ ಸಂದೀಪ್ ರೆಡ್ಡಿ, ಶುದ್ಧ ನೀರು ಒದಗಿಸುವಲ್ಲಿ ಸರ್ಕಾರ ಮುಂದಾಗದಿರುವ ಧೋರಣೆಯನ್ನು ಖಂಡಿಸಿ, ತಕ್ಷಣವೇ ಎಚ್.ಎನ್. ವ್ಯಾಲಿ ನೀರನ್ನು ಮೂರನೇ ಹಂತದ ಶುದ್ಧೀಕರಣಕ್ಕೆ ಒಳಪಡಿಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
Ragi Mudde: ಕರ್ನಾಟಕದ ರಾಗಿ ಮುದ್ದೆ ಸವಿಯಬೇಕು: ಮಂಡ್ಯದಲ್ಲಿ ಬಯಕೆ ಬಿಚ್ಚಿಟ್ಟ ಕೇಂದ್ರ ಸಚಿವ ಮನ್ಸುಖ್ ಮಾಂಡವೀಯ
ಕರ್ನಾಟಕದ ಸಾಂಪ್ರದಾಯಿಕ ಆಹಾರ ಸಂಸ್ಕೃತಿಯಲ್ಲಿ ರಾಗಿ ಮುದ್ದೆಯು ಕನ್ನಡಿಗರ ಶಕ್ತಿ, ಆರೋಗ್ಯದ ಸಂಕೇತವಾಗಿ ಉಳಿದಿದೆ. ವಿಶೇಷವಾಗಿ ಹಳೆ ಮೈಸೂರು ಭಾಗದ ಜನರ ಜೀವನಾಡಿಯಾಗಿರುವ ರಾಗಿ ಮುದ್ದೆ, ಪ್ರೋಟೀನ್ ಮತ್ತು ಕ್ಯಾಲ್ಸಿಯಂನ ಆಗರವಾಗಿದೆ. ಬಿಸಿಬಿಸಿ ಮುದ್ದೆಯೊಂದಿಗೆ ಹಿತವಾದ ಬಸ್ಸಾರು ಅಥವಾ ಸೊಪ್ಪಿನ ಸಾರು ಸೇರಿಕೊಂಡರೆ ಆ ರುಚಿಯೇ ಬೇರೆ. ಮಂಡ್ಯದಂತಹ ಜಿಲ್ಲೆಗಳಲ್ಲಿ ಅತಿಥಿಗಳಿಗೆ ಮುದ್ದೆ ಊಟ ಬಡಿಸುವುದು ಅತ್ಯಂತ
ವಾಹನ ಚಾಲಕರಿಗೆ ಶಾಕಿಂಗ್ ಸುದ್ದಿ : ಏಪ್ರಿಲ್ 1ರಿಂದ FASTag ದರದಲ್ಲಿ ಹೆಚ್ಚಳ
ಹೊಸದಿಲ್ಲಿ: ಫಾಸ್ಟ್ಯಾಗ್ ವಾರ್ಷಿಕ ಪಾಸ್ ಬೆಲೆ ಶೇ.2.5ರಷ್ಟು ಹೆಚ್ಚಳವಾಗಿದ್ದು, ಪರಿಷ್ಕೃತ ದರ ಏಪ್ರಿಲ್ 1ರಿಂದ ಜಾರಿಗೆ ಬರಲಿದೆ. ಖಾಸಗಿ ವಾಹನಗಳಿಗೆ ಫಾಸ್ಟ್ಯಾಗ್ ವಾರ್ಷಿಕ ಪಾಸ್ ಬೆಲೆ ಏಪ್ರಿಲ್ 1 ರಿಂದ ಶೇ. 2.5 ರಷ್ಟು ಹೆಚ್ಚಾಗಿ 3,075 ರೂ.ಗಳಿಗೆ ತಲುಪಲಿದೆ. ಪ್ರಸ್ತುತ, ವಾರ್ಷಿಕ ಪಾಸ್ನ ಬೆಲೆ 3,000ರೂ.ಗಳಾಗಿದೆ. ಈ ಪಾಸ್ ಬಳಸಿದರೆ ಕಾರುಗಳು 200 ಟೋಲ್ ಪ್ಲಾಜಾಗಳನ್ನು ದಾಟುವವರೆಗೆ ಪ್ರತ್ಯೇಕವಾಗಿ ಟೋಲ್ ಪಾವತಿಸಬೇಕಿಲ್ಲ. ಮಾಹಿತಿಯ ಪ್ರಕಾರ ದೇಶದಲ್ಲಿ ಈಗಾಗಲೇ 50 ಲಕ್ಷಕ್ಕೂ ಹೆಚ್ಚು ವಾಹನ ಮಾಲಕರು ವಾರ್ಷಿಕ ಪಾಸ್ ಬಳಸುತ್ತಿದ್ದಾರೆ. ಹೆದ್ದಾರಿಗಳಲ್ಲಿ ಸಂಚಾರ ಸುಗಮವಾಗಲು ಮತ್ತು ಟೋಲ್ ಪಾವತಿಯನ್ನು ವೇಗಗೊಳಿಸಲು ಈ ವ್ಯವಸ್ಥೆಯನ್ನು ಪರಿಚಯಿಸಲಾಗಿದೆ. ರಾಷ್ಟ್ರೀಯ ಹೆದ್ದಾರಿಗಳ ಟೋಲ್ ದರಗಳನ್ನು ಪ್ರತಿ ವರ್ಷವೂ ಪರಿಷ್ಕರಿಸಲಾಗುತ್ತದೆ. ಇದೇ ನಿಯಮದ ಪ್ರಕಾರ ಈ ಬಾರಿ ಫಾಸ್ಟ್ಯಾಗ್ ವಾರ್ಷಿಕ ಪಾಸ್ ದರದಲ್ಲೂ ಹೆಚ್ಚಳ ಮಾಡಲಾಗಿದೆ . ಈ ತಿಂಗಳೊಳಗೆ ರೀಚಾರ್ಜ್ ಮಾಡುವವರು 3,000ರೂ. ಪಾವತಿಸಿ ಖರೀದಿಸಬಹುದು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಒಂದು ಮದುವೆಯಾಗಿದ್ರೂ ಚಂದದ ಸಂಸಾರ ನಡೆಸದೆ, ಮತ್ತೊಂದು ಹೆಣ್ಣನ್ನು ಪ್ರೀತಿಸಿ, ಬೆಂಗಳೂರಿಗೆ ಕರೆತಂದ ಅಯ್ಯಪ್ಪ, ಆಕೆಯನ್ನು ನೇಣಿನ ಕುಣಿಕಿಗೆ ಏರಿಸಿದ್ದಾನೆ. ಈತ ಮಾಡಿದ ಮೋಸಕ್ಕೆ ರಂಜಿತಾ ಪೋಷಕರು ದೂರು ಕೊಟ್ಟಿದ್ದು, ಈಗ ಅಯ್ಯಪ್ಪ ಕಂಬಿಎಣಿಸುತ್ತಿದ್ದಾನೆ. ರಂಜಿತಾ ಶವವನ್ನು ಕೊಡಗಿಗೆ ಕೊಂಡೊಯ್ಯಲಾಗಿದೆ.
ಸುಳ್ಯ: ಇಬ್ಬರು ಯುವಕರಿಗೆ ಚೂರಿ ಇರಿತ; ಪ್ರಕರಣ ದಾಖಲು, ಆರೋಪಿಗಳು ಪೊಲೀಸ್ ವಶಕ್ಕೆ
ಸುಳ್ಯ: ಸುಳ್ಯದ ಶ್ರೀರಾಂಪೇಟೆಯಲ್ಲಿರುವ ರಾಜೇಶ್ ಬಾರ್ ಮುಂಭಾಗದಲ್ಲಿ ನಿಂತಿದ್ದ ಯುವಕರಿಗೆ ದುಷ್ಕರ್ಮಿಗಳು ಚೂರಿಯಿಂದ ಇರಿದ ಘಟನೆ ಶನಿವಾರ ಸಂಜೆ ನಡೆದಿದ್ದು, ಆರೋಪಿಗಳನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪ್ರಕರಣ ದಾಖಲಿಸಿ ತನಿಖೆ ಮುಂದುವರೆಸಲಾಗಿದೆ. ಚೂರಿ ಇರಿತಕ್ಕೊಳಗಾದ ಯುವಕರನ್ನು ಸುಳ್ಯ ಬೀರಮಂಗಲ ಬಂಗ್ಲಗುಡ್ಡೆ ನಿವಾಸಿಗಳಾದ ಹರೀಶ್ ಬಂಗ್ಲಗುಡ್ಡೆ ಹಾಗೂ ನಿತೇಶ್ ಕೆ.ಆರ್. ಬಂಗ್ಲಗುಡ್ಡೆ ಎಂದು ಗುರುತಿಸಲಾಗಿದೆ. ಗಾಯಗೊಂಡ ಇಬ್ಬರನ್ನು ತಾಲೂಕು ಸರಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಆರೋಪಿಗಳಾದ ಅಜ್ಜಾವರ ಗ್ರಾಮದ ಕಾಂತಮಂಗಲ ಗಂಧದಗುಡ್ಡೆ ನಿವಾಸಿಗಳಾದ ದಯಾನಂದ ಮತ್ತು ರಾಜೇಶ್ ಬಿ.ಆರ್. ಎಂಬವರನ್ನು ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ಚೂರಿ ಇರಿತಕ್ಕೆ ನಿಖರ ಕಾರಣವೇನು ಎಂಬುದು ತನಿಖೆಯಿಂದ ತಿಳಿದುಬರಬೇಕಿದೆ.
Chitradurga | ಭೀಕರ ರಸ್ತೆ ಅಪಘಾತ: ಮೂವರು ಪೊಲೀಸ್ ಅಧಿಕಾರಿಗಳು ಮೃತ್ಯು; ಇಬ್ಬರು ಗಂಭೀರ
ಚಿತ್ರದುರ್ಗ, ಮಾ.15: ಕಾರು ಮತ್ತು ಲಾರಿ ಮಧ್ಯೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಕಾರಿನಲ್ಲಿದ್ದ ಮೂವರು ರಿಸರ್ವ್ ಸಬ್ ಇನ್ ಸ್ಪೆಕ್ಟರ್ (RSI) ಗಳು ಸ್ಥಳದಲ್ಲೇ ಮೃತಪಟ್ಟ ಘಟನೆ ಚಳ್ಳಕೆರೆ ತಾಲೂಕಿನ ಹೆಗ್ಗೆರೆ ಗ್ರಾಮದ ಸಮೀಪ ರಾಷ್ಟ್ರೀಯ ಹೆದ್ದಾರಿ 150ಎರಲ್ಲಿ ರವಿವಾರ ಮುಂಜಾನೆ ಸಂಭವಿಸಿದೆ. ಮಂಜುನಾಥ್, ಅಂಬರೀಷ್, ಸಚಿನ್ ಮೃತಪಟ್ಟ ರಿಸರ್ವ್ ಸಬ್ ಇನ್ ಸ್ಪೆಕ್ಟರ್ ಗಳಾಗಿದ್ದಾರೆ. ಕಾರಿನಲ್ಲಿದ್ದ ಪಿಎಸ್ಸೈ ಈಶ್ವರ್ ಹಾಗೂ ಆರ್ ಎಸ್ಸೈ ಮಹಾಂತೇಶ್ ಎಂಬವರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಪೊಲೀಸ್ ಅಧಿಕಾರಿಗಳು ಬೆಂಗಳೂರಿನಿಂದ ಬಳ್ಳಾರಿಗೆ ತೆರಳುತ್ತಿದ್ದ ವೇಳೆ ಹೆಗ್ಗೆರೆ ಗ್ರಾಮದ ಸಮೀಪ ರಾಷ್ಟ್ರೀಯ ಹೆದ್ದಾರಿ 150ಎರಲ್ಲಿ ಈ ಅಪಘಾತ ಸಂಭವಿಸಿದೆ ಎಂದು ತಿಳಿದುಬಂದಿದೆ. ಅಪಘಾತದ ತೀವ್ರತೆಗೆ ಕಾರು ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ. ಈ ಬಗ್ಗೆ ಐಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಸ್ಸಾಂ ವಿಧಾನಸಭಾ ಚುನಾವಣೆ | 23 ಅಭ್ಯರ್ಥಿಗಳ 2ನೇ ಪಟ್ಟಿ ಬಿಡುಗಡೆ ಮಾಡಿದ ಕಾಂಗ್ರೆಸ್
ಗುವಾಹಟಿ : ಅಸ್ಸಾಂನಲ್ಲಿ ವಿಧಾನಸಭಾ ಚುನಾವಣೆ ಹಿನ್ನೆಲೆ 23 ಅಭ್ಯರ್ಥಿಗಳ 2ನೇ ಪಟ್ಟಿಯನ್ನು ಕಾಂಗ್ರೆಸ್ ಬಿಡುಗಡೆ ಮಾಡಿದೆ. ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರು ಬಿಡುಗಡೆ ಮಾಡಿದ ಅಭ್ಯರ್ಥಿಗಳ ಎರಡನೇ ಪಟ್ಟಿಯಲ್ಲಿ, ನೂರುಲ್ ಇಸ್ಲಾಂ ಶ್ರೀಜಂಗ್ ಗ್ರಾಮ್ ಸ್ಥಾನದಿಂದ, ಮಾಂಡಿಯಾದಿಂದ ಅಬ್ದುಲ್ ಖಲೀಕ್, ಚಾಮರಿಯಾದಿಂದ ರಕಿಬುದ್ದೀನ್ ಅಹ್ಮದ್, ಟಿನ್ಸುಕಿಯಾದಿಂದ ಡೇವಿಡ್ ಫುಕಾನ್ ಮತ್ತು ಟಿಂಗ್ ಖಾಂಗ್ ನಿಂದ ಬಿಪುಲ್ ಗೊಗೊಯ್ ಸ್ಪರ್ಧಿಸಲಿದ್ದಾರೆ. ಬಜಾಲಿ, ಪಲಾಸ್ಬರಿ, ಗುವಾಹಟಿ ಸೆಂಟ್ರಲ್, ಗೋರೇಶ್ವರ, ಮೋರಿಗಾಂವ್ ಮತ್ತು ಬರ್ಹಾಂಪುರ್ ಸೇರಿದಂತೆ ಇತರ 15 ಸ್ಥಾನಗಳನ್ನು ಕಾಂಗ್ರೆಸ್ ತನ್ನ ಮೈತ್ರಿ ಪಾಲುದಾರರಿಗೆ ಬಿಟ್ಟುಕೊಟ್ಟಿದೆ. ಮಾರ್ಚ್ 3ರಂದು ಕಾಂಗ್ರೆಸ್ 42 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿತ್ತು.
ಪಾಕಿಸ್ತಾನಿ ಭಯೋತ್ಪಾದಕನ ಹತ್ಯೆ: ಜಮ್ಮು ಕಾಶ್ಮೀರ ಪೊಲೀಸ್ ಹಾಗೂ ಸೈನ್ಯದ ಜಂಟಿ ಕಾರ್ಯಾಚರಣೆ
ನಿರಂತರವಾಗಿ ಭಾರತದ ಗಡಿಯೊಳಗೆ ನುಗ್ಗಿ ವಿಧ್ವಂಸಕ ಕೃತ್ಯಗಳನ್ನು ನಡೆಸುವ ಭಯೋತ್ಪಾದಕರ ವಿರುದ್ಧ ಜಮ್ಮು ಕಾಶ್ಮೀರದ ಪೊಲೀಸರು ಹಾಗೂ ಭದ್ರತಾ ಪಡೆ ಜಂಟಿ ಕಾರ್ಯಾಚರಣೆಯಲ್ಲಿ ಅವರ ಹುಟ್ಟಡಗಿಸುತ್ತಿದೆ. ಭಾರೀ ಪ್ರಮಾಣದ ಸ್ಪೋಟಕಗಳೊಂದಿಗೆ ಒಳನುಸುಳಿದ್ದ ಓರ್ವ ಭಯೋತ್ಪಾದಕನನ್ನು ಸದೆಬಡಿಯಲಾಗಿದೆ.
ಬತ್ತುತ್ತಿದೆ ಪಯಸ್ವಿನಿ: ಸಿಗುತ್ತಿಲ್ಲ ನೀರ ಹನಿ, ಕುಡಿಯುವ ನೀರಿಗೆ ತೀವ್ರ ಸಮಸ್ಯೆ
ಪಯಸ್ವಿನಿ ನದಿ ಬತ್ತಿ ಬರಡಾಗುತ್ತಿದೆ. ಬೇಸಿಗೆ ಆರಂಭದಲ್ಲೇ ನೀರಿಗಾಗಿ ಹಾಹಾಕಾರ ಶುರುವಾಗಿದೆ. ಈಗಾಗಲೇ ನೀರಿನ ಪ್ರಮಾಣ ಕಡಿಮೆಯಾಗಿದ್ದು, ಇನ್ನು ಕೆಲವೇ ದಿನಗಳಲ್ಲಿ ಬತ್ತಲಿದೆ. ಹೀಗೆ ಮುಂದುವರೆದರೆ ಕಾಸರಗೋಡು ಜಿಲ್ಲೆಯ ದೇಲಂಪಾಡಿ, ಕಾರಡ್ಕ, ಮುಳಿಯಾರು ಮೊದಲಾದ ಗ್ರಾಮ ಪಂಚಾಯಿತಿಗಳಲ್ಲಿ ನೀರಿನ ಸಮಸ್ಯೆ ತಲೆದೋರುತ್ತದೆ.
ಹಾರ್ಮುಝ್ ಜಲಸಂಧಿಯಲ್ಲಿ ಭದ್ರತೆಗೆ ಬಹುರಾಷ್ಟ್ರೀಯ ಸಹಕಾರ ಅಗತ್ಯ: ಡೊನಾಲ್ಡ್ ಟ್ರಂಪ್
ಸಹಾಯಕ್ಕಾಗಿ ಕೂಗಿ ಇರಾನ್ ಮುಂದೆ ಮಂಡಿಯೂರಿದ ಟ್ರಂಪ್?
ಮೈಸೂರು : ಮಾದಕ ವ್ಯಸನ ಮುಕ್ತಿಗೆ 'ಸನ್ಮಿತ್ರ' ಪಡೆ ಸಿದ್ಧ
ಮಾದಕ ವ್ಯಸನಿಗಳಿಗೆ ಆಪ್ತ ಸಮಾಲೋಚನೆ, ಅವರನ್ನು ದುಶ್ಚಟದಿಂದ ಮುಕ್ತಗೊಳಿಸಲು ಮೈಸೂರಿನಲ್ಲಿ ‘ಸನ್ಮಿತ್ರ’ ಪಡೆ ಸಿದ್ಧವಾಗುತ್ತಿದೆ. ಈ ಯೋಜನೆಗೆ ಮೈಸೂರು ಜಿಲ್ಲೆಯಲ್ಲಿ ಚಾಲನೆ ದೊರೆತಿದೆ. ಜಿಲ್ಲಾ ಪೊಲೀಸರು ‘‘ಮಾದಕ ವ್ಯಸನಿಗಳ ಸನ್ಮಿತ್ರ’’ರಾಗುತ್ತಿದ್ದಾರೆ. ಅವರನ್ನು ಆ ಸಂಕೋಲೆಯಿಂದ ಹೊರ ತರುತ್ತಿದ್ದಾರೆ.
1 ರೂಪಾಯಿಗೆ 1 ಲೀಟರ್ ಹಾಲು: ಫ್ಲಿಪ್ಕಾರ್ಟ್ ವಿರುದ್ಧ ಸಿಡಿದೆದ್ದ ಡಿ.ಕೆ. ಸುರೇಶ್; ಪ್ರಧಾನಿ ಮೋದಿಗೆ ದೂರು
ಬೆಂಗಳೂರು: ಮಾರುಕಟ್ಟೆಯಲ್ಲಿ ಗ್ರಾಹಕರನ್ನು ಸೆಳೆಯಲು ಫ್ಲಿಪ್ಕಾರ್ಟ್ (Flipkart) ಸಂಸ್ಥೆ ಕೇವಲ 1 ರೂಪಾಯಿಗೆ 1 ಲೀಟರ್ ಹಾಲು ಮಾರಾಟ ಮಾಡಲು ಮುಂದಾಗಿರುವುದು ಇದೀಗ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಫ್ಲಿಪ್ಕಾರ್ಟ್ನ ಇಷ್ಟು ದೊಡ್ಡ ಮಟ್ಟದ 'ಡಿಸ್ಕೌಂಟ್' ನಡೆಯ ವಿರುದ್ಧ ಬೆಂಗಳೂರು ಹಾಲು ಒಕ್ಕೂಟದ (ಬಮೂಲ್) ಅಧ್ಯಕ್ಷ ಡಿ.ಕೆ. ಸುರೇಶ್ ತೀವ್ರ ವಾಗ್ದಾಳಿ ನಡೆಸಿದ್ದು, ಇದು ರೈತ ಸಮುದಾಯವನ್ನು ನಾಶಮಾಡುವ
ಇರಾನ್ ನಿಂದ ಅರ್ಮೇನಿಯಾ, ದುಬೈ ಮೂಲಕ 70 ವಿದ್ಯಾರ್ಥಿಗಳು ಇಂದು ಭಾರತಕ್ಕೆ ವಾಪಾಸು
ಡೆಹ್ರಾಡೂನ್: ಇರಾನ್ ಸಂಘರ್ಷದಿಂದಾಗಿ ಯುದ್ಧಪೀಡಿತ ದೇಶದಲ್ಲಿ ಸಿಲುಕಿಕೊಂಡಿರುವ ಬಹುತೇಕ ಜಮ್ಮು ಮತ್ತು ಕಾಶ್ಮೀರದ ವಿದ್ಯಾರ್ಥಿಗಳು ಸೇರಿದಂತೆ 70ಕ್ಕೂ ಹೆಚ್ಚು ಮಂದಿ ಭಾರತೀಯ ವಿದ್ಯಾರ್ಥಿಗಳು ಇಂದು ಅರ್ಮೇನಿಯಾ, ದುಬೈ ಮಾರ್ಗವಾಗಿ ಭಾರತಕ್ಕೆ ವಾಪಸ್ಸಾಗಲಿದ್ದಾರೆ. ಈ ವಿದ್ಯಾರ್ಥಿಗಳನ್ನು ಹೊತ್ತ ವಿಮಾನ ದೆಹಲಿಯ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ರವಿವಾರ ಬಂದಿಳಿಯಲಿದೆ ಎಂದು ಜಮ್ಮು & ಕಾಶ್ಮೀರ ವಿದ್ಯಾರ್ಥಿ ಸಂಘಟನೆ ಹೇಳಿಕೆನೀಡಿದೆ. ಯಾತ್ರಿಗಳ ಜತೆಗೆ ಭಾರತೀಯ ವಿದ್ಯಾರ್ಥಿಗಳು ಫ್ಲೈದುಬೈ ಏರ್ಲೈನ್ಸ್ ಮೂಲಕ ಅರ್ಮೇನಿಯಾದ ಎರೆವಾನ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಆಗಮಿಸಲಿದ್ದಾರೆ ಎಂದು ಜೆಕೆಎಸ್ಎ ರಾಷ್ಟ್ರೀಯ ಸಂಚಾಲಕ ನಾಸಿರ್ ಖ್ಯುಹಾಮಿ ಹೇಳಿದ್ದಾರೆ. ಇವರಲ್ಲಿ ಬಹುತೇಕ ಮಂದಿ ವಿದ್ಯಾರ್ಥಿಗಳು ಇರಾನಿನ ವಿವಿಧ ವಿಶ್ವವಿದ್ಯಾನಿಲಯಗಳಲ್ಲಿ ಅಧ್ಯಯನ ಮಾಡುತ್ತಿರುವವರಾಗಿದ್ದು, ಮೊದಲ ಹಂತದಲ್ಲಿ ವಿದ್ಯಾರ್ಥಿಗಳು ಸಂಜೆ 5 ಗಂಟೆಯ ವೇಳೆಗೆ ದುಬೈಗೆ ಆಗಮಿಸುವ ನಿರೀಕ್ಷೆ ಇದೆ. ಬಳಿಕ ದೆಹಲಿಗೆ ಮತ್ತೊಂದು ಫ್ಲೈದುಬೈ ವಿಮಾನದಲ್ಲಿ ಆಗಮಿಸುತ್ತಾರೆ ಎಂದು ವಿವರಿಸಿದ್ದಾರೆ.
ರೇಷ್ಮೆ ಉದ್ಯಮಕ್ಕೆ ಸಿಲ್ಕ್ ಪಾರ್ಕ್ ಬೂಸ್ಟ್! ರಾಮನಗರ, ಶಿಡ್ಲಘಟ್ಟ, ಹಾವೇರಿ, ಮೈಸೂರು, ಕಲಬುರಗಿಯಲ್ಲಿ ಸ್ಥಾಪನೆ
ಕರ್ನಾಟಕ ರೇಷ್ಮೆ ಉತ್ಪಾದನೆಗೆ ದೇಶದಲ್ಲೇ ಹೆಸರುವಾಸಿಯಾಗಿದ್ದು, ಸಿಲ್ಕ್ ಪಾರ್ಕ್ ನಿರ್ಮಾಣದ ಘೊಷಣೆಯಿಂದ ಇನ್ನಷ್ಟು ಬೂಸ್ಟ್ ಸಿಗುವ ಮುನ್ಸೂಚನೆ ಸಿಕ್ಕಿದ್ದು, ರೇಷ್ಮೆ ಬೆಳೆಗಾರರಿಗೆ ಹಾಘೂ ಮಾರಾಟಗಾರರಿಗೆ ನುಕೂಲ ಆಗುವ ಹಾಗೆ ಎಲ್ಲಾ ಸೌಲಭ್ಯಗಳಿರುವ ಪಾರ್ಕ್ ನಿರ್ಮಾಣ ಆಗಲಿದೆ.
Gold Rate: ಆಭರಣ ಪ್ರಿಯರ ಗಮನಕ್ಕೆ; ಮಾರುಕಟ್ಟೆಯಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ ಗೊತ್ತಾ? ಇಲ್ಲಿದೆ ಮಾಹಿತಿ
ಬೆಂಗಳೂರು: ದೇಶೀಯ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿಯ ಬೆಲೆಗಳಲ್ಲಿ ಪ್ರತಿದಿನ ಏರಿಳಿತಗಳು ಅತ್ಯಂತ ಸಾಮಾನ್ಯ. ಮದುವೆ, ಮುಂಬರುವ ಹಬ್ಬಗಳು ಅಥವಾ ಶುಭ ಸಮಾರಂಭಗಳಿಗೆ ಆಭರಣ ಖರೀದಿಸಲು ಪ್ಲಾನ್ ಮಾಡುತ್ತಿರುವ ಗ್ರಾಹಕರಿಗೆ ಇಂದಿನ ನಿಖರ ಬೆಲೆಯ ಮಾಹಿತಿ ಪಡೆಯುವುದು ಅತ್ಯಗತ್ಯ. ಜಾಗತಿಕ ಮಾರುಕಟ್ಟೆ ವಿದ್ಯಮಾನಗಳು ಹಾಗೂ ದೇಶೀಯ ಎಂಸಿಎಕ್ಸ್ (MCX) ವಹಿವಾಟಿನ ಅಂಕಿ-ಅಂಶಗಳ ಆಧಾರದ ಮೇಲೆ, ಇಂದು ಅಂದರೆ
ಪಿಯು ಪಾಸಾಗಲು ಗಡುವು: ಎರಡೇ ವರ್ಷ ಚಾನ್ಸ್, ಕರ್ನಾಟಕ ಶಿಕ್ಷಣ ಇಲಾಖೆ ಆದೇಶ
ಈ ವರ್ಷದಿಂದಲೇ ಪಯುಸಿಗೆ ಹೊಸ ನಿಯಮ ಜಾರಿಯಾಗಲಿದ್ದು, ಇದು ಖಾಯಂ, ಖಾಸಗಿ ಹಾಗೂ ಪುನರಾವರ್ತಿತ ವಿದ್ಯಾರ್ಥಿಗಳಿಗೆ ಅನ್ವಯಿಸುತ್ತದೆ. ಎರಡು ವರ್ಷದಲ್ಲಿ ಮರು ಪರೀಕ್ಷೆ ಬರೆಯಬೇಕು, ನಂತರ ಅವಕಾಶ ಇಲ್ಲ ಎಂದಿದೆ.
ಇರಾನ್ ಮೇಲಿನ ದಾಳಿಗೆ ಬೆಂಬಲವಿಲ್ಲ; ತನ್ನ ವಾಯುಪ್ರದೇಶ ಬಳಸಬೇಡಿ: ಅಮೆರಿಕದ ಮನವಿ ತಿರಸ್ಕರಿಸಿದ ಸ್ವಿಟ್ಝರ್ ಲ್ಯಾಂಡ್
ಬರ್ನ್: ಇರಾನ್ ನಲ್ಲಿನ ಯುದ್ಧಕ್ಕೆ ಸಂಬಂಧಿಸಿದಂತೆ ಮಿಲಿಟರಿ ಕಾರ್ಯಾಚರಣೆಗಾಗಿ ತನ್ನ ವಾಯುಪ್ರದೇಶವನ್ನು ಬಳಸಲು ಅನುಮತಿ ನೀಡುವಂತೆ ಅಮೆರಿಕ ಸಲ್ಲಿಸಿದ್ದ ಎರಡು ಮನವಿಗಳನ್ನು ಸ್ವಿಟ್ಝರ್ ಲ್ಯಾಂಡ್ ಸರ್ಕಾರ ತಿರಸ್ಕರಿಸಿದೆ ಎಂದು Aljazeera ವರದಿ ಮಾಡಿದೆ. ಈ ಕುರಿತು ಸ್ವಿಸ್ ಫೆಡರಲ್ ಕೌನ್ಸಿಲ್ ಪ್ರಕಟಣೆ ನೀಡಿದ್ದು, ಅಮೆರಿಕದಿಂದ ಮಿಲಿಟರಿ ಕಾರ್ಯಾಚರಣೆಗಾಗಿ ತಮ್ಮ ವಾಯುಪ್ರದೇಶವನ್ನು ಬಳಸಲು ಅನುಮತಿ ಕೋರಿ ಬಂದ ಮನವಿಗಳ ಕುರಿತು ಚರ್ಚಿಸಲಾಗಿದೆ ಎಂದು ತಿಳಿಸಿದೆ. “ತಟಸ್ಥತೆಯ ಕಾನೂನಿನ ಆಧಾರದ ಮೇಲೆ, ಇರಾನ್ ನಲ್ಲಿನ ಯುದ್ಧಕ್ಕಾಗಿ ತನ್ನ ವಾಯುಪ್ರದೇಶವನ್ನು ಬಳಸಲು ಸಂಬಂಧಿಸಿದಂತೆ ಸಲ್ಲಿಸಲಾದ ಎರಡು ವಿನಂತಿಗಳನ್ನು ತಿರಸ್ಕರಿಸಲಾಗಿದೆ,” ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ. ಇದಕ್ಕೆ ಹೊರತಾಗಿ, ನಿರ್ವಹಣಾ ಹಾರಾಟ ಮತ್ತು ಸಾರಿಗೆ ವಿಮಾನಗಳಿಗೆ ಸಂಬಂಧಿಸಿದಂತೆ ವಾಯುಪ್ರದೇಶವನ್ನು ಬಳಸುವ ಎರಡು ವಿನಂತಿಗಳಿಗೆ ಅನುಮೋದನೆ ನೀಡಲಾಗಿದೆ ಎಂದು ಸ್ವಿಸ್ ಸರ್ಕಾರ ಸ್ಪಷ್ಟಪಡಿಸಿದೆ. ಸ್ವಿಟ್ಝರ್ ಲ್ಯಾಂಡ್ ತನ್ನ ತಟಸ್ಥ ನೀತಿಯನ್ನು ಮುಂದುವರಿಸಿದ್ದು, ಯುದ್ಧ ಸಂಬಂಧಿತಂತೆ ಮಿಲಿಟರಿ ಚಟುವಟಿಕೆಗಳಿಗೆ ಬೆಂಬಲ ನೀಡುವುದಿಲ್ಲ ಎಂದು ಹೇಳಿದೆ.
ಸುಡುತ್ತಿರುವ ಬಿಸಿಲಿನ ಮಧ್ಯೆ ವರುಣ ಹಲವೆಡೆ ತಂಪೆರೆಯಲಿದ್ದಾನೆ. ಕಲಬುರಗಿಯಲ್ಲಿ ಈಗಾಗಲೇ ಬಿಸಿಲು 40 ಡಿಗ್ರಿ ಸೆಲ್ಸಿಯಸ್ ತಲುಪಿದ್ದು, ತೀವ್ರ ಬಿಸಿಯಿಂದ ಜನರು ತತ್ತರಿಸಿದ್ದಾರೆ. ಬೆಂಗಳೂರಲ್ಲಿಯೂ ಸಾಮಾನ್ಯಕ್ಕಿಂತ ಬಿಸಿಲು ಹೆಚ್ಚಾಗಿದೆ. ಕಲಬುರಗಿ, ಬೀದರ್, ಯಾದಗಿರಿಯಲ್ಲಿ ಹವಾಮಾನದ ರೆಡ್ ಅಲರ್ಟ್ ಘೋಷಿಸುವ ಸಾಧ್ಯತೆ ಇದೆ.
ಗ್ಯಾಸ್ ಸಿಲಿಂಡರ್ ಗಾಗಿ ಸಾಲುಗಟ್ಟಿ ನಿಂತ ಜನ : ಗ್ರಾಹಕರು ಅಡ್ಡದಾರಿ ಹಿಡಿದರೆ ಜೈಲೇ ಗತಿ!
ವಾಣಿಜ್ಯ ಬಳಕೆ ಸಿಲಿಂಡರ್ಗಳ ಸರಬರಾಜಿನಲ್ಲಿರುವ ಆಗಿರುವ ವ್ಯತ್ಯಯದ ಲಾಭ ಪಡೆಯಲು ಹಲವು ಗೃಹ ಬಳಕೆ ಸಿಲಿಂಡರ್ ಗ್ರಾಹಕರು ಕಾಳಸಂತೆಯಲ್ಲಿ ಹೆಚ್ಚಿನ ಬೆಲೆಗೆ ಮಾರಾಟ ಮಾಡಿ ದುಡ್ಡು ಮಾಡುವ ದಂಧೆ ಶುರು ಮಾಡಿಕೊಂಡಿದ್ದಾರೆ. ವರ್ಷಕ್ಕೆ 3-4 ಸಿಲಿಂಡರ್ ತೆಗೆದುಕೊಳ್ಳುತ್ತಿದ್ದವರೂ ಈಗ ದಿಢೀರ್ ಎಂದು ಗ್ಯಾಸ್ ಬುಕ್ ಮಾಡಿ ಪಡೆಯುವ ಯತ್ನ ನಡೆಸುತ್ತಿದ್ದು, ಅನುಮಾನಕ್ಕೆ ಕಾರಣವಾಗಿದೆ.
Karnataka Weather: ಸಿಲಿಕಾನ್ ಸಿಟಿಯಲ್ಲಿ ಹೆಚ್ಚಿದ ತಾಪಮಾನ; ಕರಾವಳಿ, ಮಲೆನಾಡಿನಲ್ಲಿ ಇಂದು ಮಳೆಯಾಗುವ ಸಾಧ್ಯತೆ
ಬೆಂಗಳೂರು: ರಾಜ್ಯದಲ್ಲಿ ದಿನದಿಂದ ದಿನಕ್ಕೆ ಬೇಸಿಗೆಯ ಬಿಸಿಲಿನ ಅಬ್ಬರ ಏರುತ್ತಲೇ ಇದೆ. ಕಡು ಬಿಸಿಲಿನಿಂದ ಹೈರಾಣಾಗಿರುವ ರಾಜ್ಯದ ಜನತೆಗೆ ಭಾರತೀಯ ಹವಾಮಾನ ಇಲಾಖೆ (IMD) ಕೊನೆಗೂ ಒಂದು ತಂಪಾದ ಸುದ್ದಿ ನೀಡಿದೆ. ಹೌದು, ಬಹುತೇಕ ಜಿಲ್ಲೆಗಳಲ್ಲಿ ಸುಡುತ್ತಿರುವ ರಣಬಿಸಿಲಿನ ನಡುವೆಯೂ, ಕರ್ನಾಟಕದ ಕರಾವಳಿ ಮತ್ತು ಮಲೆನಾಡು ಭಾಗಗಳಲ್ಲಿ ಭಾನುವಾರ (ಮಾರ್ಚ್ 15) ತುಂತುರು ಮಳೆಯಾಗುವ ಮುನ್ಸೂಚನೆ ಇದೆ.
ಸಿಲಿಂಡರ್ ಅಭಾವ: ಬೆಂಗಳೂರಲ್ಲಿ ಹೆಚ್ಚಾಯ್ತು ಊಟ, ತಿಂಡಿ ದರ
ವೀಕೆಂಡ್ ಊಟ, ತಿಂಡಿ ಹೋಟೆಲ್ನಲ್ಲಿ ಮಾಡೋಣ ಅಂದ್ಕೊತಿದ್ರೆ ನಿಮಗೆ ಶಾಕ್ ಕಾಡಿದೆ. ಸಿಲಿಂಡರ್ ಅಭಾವದಿಂದ ಊಟ ತಿಂಡಿ ದರ ಏರಿಕೆಯಾಗಿದೆ.
ಕುವೈತ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲೆ ಡ್ರೋನ್ ದಾಳಿ; ರಾಡಾರ್ ವ್ಯವಸ್ಥೆಗೆ ಹಾನಿ
ಕುವೈತ್: ಕುವೈತ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಗುರಿಯಾಗಿಸಿಕೊಂಡು ಹಲವಾರು ಡ್ರೋನ್ಗಳು ದಾಳಿ ನಡೆಸಿದ್ದು, ವಿಮಾನ ನಿಲ್ದಾಣದ ರಾಡಾರ್ ವ್ಯವಸ್ಥೆಯ ಒಂದು ಭಾಗಕ್ಕೆ ಹಾನಿಯಾಗಿದೆ ಎಂದು ಕುವೈತ್ ನ ಅಧಿಕಾರಿಗಳು ತಿಳಿಸಿದ್ದಾರೆ ಎಂದು Aljazeera ವರದಿ ಮಾಡಿದೆ. ಘಟನೆಯಲ್ಲಿ ಯಾವುದೇ ಪ್ರಯಾಣಿಕರು ಅಥವಾ ವಿಮಾನ ನಿಲ್ದಾಣದ ಸಿಬ್ಬಂದಿಗೆ ಗಾಯಗಳಾಗಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. “ಕುವೈತ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಗುರಿಯಾಗಿಸಿಕೊಂಡು ಹಲವಾರು ಡ್ರೋನ್ ಗಳು ದಾಳಿ ನಡೆಸಿ ರಾಡಾರ್ ವ್ಯವಸ್ಥೆಗೆ ಹಾನಿ ಮಾಡಿವೆ. ಅದೃಷ್ಟವಶಾತ್ ಯಾವುದೇ ಸಾವು–ನೋವು ಸಂಭವಿಸಿಲ್ಲ,” ಎಂದು ನಾಗರಿಕ ವಿಮಾನಯಾನ ಪ್ರಾಧಿಕಾರದ ವಕ್ತಾರ ಅಬ್ದುಲ್ಲಾ ಅಲ್-ರಾಜ್ಹಿ ತಿಳಿಸಿದ್ದಾರೆ.
1 ಲೀಟರ್ ಹಾಲನ್ನು ಕೇವಲ 1 ರುಪಾಯಿಗೆ ಪ್ಲಿಪ್ಕಾರ್ಟ್ ಕೊಡಲು ಹೇಗೆ ಸಾಧ್ಯ, ಅವರು ಎಲ್ಲಿಂದ ಖರೀದಿಸುತ್ತಾರೆ, ಹಾಲಿನ ಪೌಡರ್ ಅಥವಾ ಬೇರೇನಾದರೂ ಬೆರೆಸುತ್ತಿದ್ದಾರಾ ಎಂದು ಡಿಕೆ ಸುರೇಶ್ ಗಂಭೀರ ಪ್ರಶ್ನೆ ಎತ್ತಿದ್ದಾರೆ.
ಹಾರ್ಮುಝ್ ಜಲಸಂಧಿ ತೆರೆದಿದೆ, ನಿಯಂತ್ರಣ ನಮ್ಮ ಕೈಯಲ್ಲಿದೆ: ಇರಾನ್
ಟೆಹ್ರಾನ್, ಮಾ.15: ಜಾಗತಿಕ ತೈಲ ಸಾಗಣೆಗೆ ಅತ್ಯಂತ ಮಹತ್ವದ ಮಾರ್ಗವಾಗಿರುವ ಹಾರ್ಮುಝ್ ಜಲಸಂಧಿ ಇನ್ನೂ ಮುಚ್ಚಿಲ್ಪ, ತೆರೆದಿದೆ. ಆದರೆ ಅದು ನಮ್ಮ ಸಂಪೂರ್ಣ ನಿಯಂತ್ರಣದಲ್ಲಿದೆ ಎಂದು ಇರಾನ್ ಸ್ಪಷ್ಟಪಡಿಸಿದೆ ಎಂದು Aljazeera ವರದಿ ಮಾಡಿದೆ. ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ನೌಕಾಪಡೆಯ ಕಮಾಂಡರ್ ಅಲಿರೆಜಾ ತಂಗ್ಸಿರಿ ಈ ಕುರಿತು ಹೇಳಿಕೆ ನೀಡಿದ್ದು, ಜಲಸಂಧಿಯ ಪರಿಸ್ಥಿತಿ ಬಗ್ಗೆ ಅಮೆರಿಕ ನೀಡುತ್ತಿರುವ ಮಾಹಿತಿ ತಪ್ಪಾಗಿದೆ ಎಂದು ಆರೋಪಿಸಿದರು. ಇರಾನಿನ ಹಡಗುಗಳನ್ನು ನಾಶಪಡಿಸಲಾಗಿದೆ ಹಾಗೂ ತೈಲ ಟ್ಯಾಂಕರ್ ಗಳಿಗೆ ಬೆಂಗಾವಲು ನೀಡಲಾಗಿದೆ ಎಂಬ ಯುನೈಟೆಡ್ ಸ್ಟೇಟ್ಸ್ ಹೇಳಿಕೆಗಳನ್ನು ಅಲಿರೆಜಾ ತಂಗ್ಸಿರಿ ತಳ್ಳಿಹಾಕಿದರು. ಈ ಸಂಬಂಧ ಅವರು ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಪ್ರತಿಕ್ರಿಯಿಸಿ, ಅಮೆರಿಕ ಸುಳ್ಳು ಪ್ರಚಾರ ಮಾಡುತ್ತಿದೆ ಎಂದು ಅವರು ಆರೋಪಿಸಿದರು. “ಅಮೆರಿಕನ್ನರು ನಮ್ಮ ಹಡಗುಗಳನ್ನು ನಾಶಪಡಿಸಿದ್ದೇವೆ ಹಾಗೂ ತೈಲ ಟ್ಯಾಂಕರ್ಗಳನ್ನು ಬೆಂಗಾವಲು ಮಾಡಿದ್ದೇವೆ ಎಂದು ತಪ್ಪಾಗಿ ಹೇಳಿಕೊಂಡಿದ್ದಾರೆ. ಈಗ ಅವರು ಇತರ ದೇಶಗಳಿಂದ ಬೆಂಬಲವನ್ನು ಕೇಳುತ್ತಿದ್ದಾರೆ,” ಎಂದು ಅವರು ಪೋಸ್ಟ್ನಲ್ಲಿ ತಿಳಿಸಿದ್ದಾರೆ. ಇನ್ನೊಂದೆಡೆ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ‘ಟ್ರುತ್ ಸೋಶಿಯಲ್’ನಲ್ಲಿ ಮಾಡಿದ ಪೋಸ್ಟ್ನಲ್ಲಿ, ಹಾರ್ಮುಜ್ ಜಲಸಂಧಿಯನ್ನು ‘ಮರು ತೆರೆಯಲು’ ಚೀನಾ ಸೇರಿದಂತೆ ಇತರ ರಾಷ್ಟ್ರಗಳ ಸಹಾಯವನ್ನು ಕೋರಿದ್ದಾರೆ. ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆ ನಡುವೆ ಈ ಬೆಳವಣಿಗೆಗಳು ಜಾಗತಿಕ ತೈಲ ಸರಬರಾಜು ಹಾಗೂ ಸಮುದ್ರ ಸಾರಿಗೆ ಭದ್ರತೆ ಕುರಿತ ಆತಂಕವನ್ನು ಮತ್ತಷ್ಟು ಹೆಚ್ಚಿಸಿವೆ.
ನೂತನ ಸರ್ವೋಚ್ಚ ನಾಯಕ ಮೊಜ್ತಬಾ ಖಾಮಿನೈರಿಗೆ ಏನೂ ಆಗಿಲ್ಲ: ಅಬ್ಬಾಸ್ ಅರಘ್ಚಿ
ಗಾಯಗಳ ವರದಿ ತಳ್ಳಿ ಹಾಕಿದ ಇರಾನ್ ವಿದೇಶಾಂಗ ಸಚಿವ
ಬೆಂಗಳೂರು : ಆಡಳಿತಾರೂಢ ಕಾಂಗ್ರೆಸ್ ಪಕ್ಷದಲ್ಲಿ ನಾಯಕತ್ವ ಬದಲಾವಣೆ ಮತ್ತು ಸಚಿವ ಸಂಪುಟ ಪುನರ್ ರಚನೆ ಸುತ್ತ ಬಿರುಸಿನ ಚರ್ಚೆಗಳು ನಡೆಯುತ್ತಿರುವ ಬೆನ್ನಲ್ಲೇ, ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಮ್ಮ ಸಂಪುಟ ಸಹೋದ್ಯೋಗಿಗಳಿಗೆ ಔತಣಕೂಟ ಆಯೋಜಿಸಿರುವುದು ರಾಜಕೀಯ ಕುತೂಹಲಕ್ಕೆ ಕಾರಣವಾಗಿದೆ. ಸಿಎಂ ಸಿದ್ದರಾಮಯ್ಯ ನೇತೃತ್ವದ ಸಚಿವ ಸಂಪುಟದಲ್ಲಿ ಒಟ್ಟು 32 ಮಂದಿ ಸಚಿವರ ಪೈಕಿ ನಾಗೇಂದ್ರ ಹಾಗೂ ಕೆ.ಎನ್.ರಾಜಣ್ಣ ರಾಜೀನಾಮೆ ಹಿನ್ನೆಲೆಯಲ್ಲಿ 30 ಮಂದಿ ಸಚಿವರಿದ್ದಾರೆ. ಸೋಮವಾರ (ಮಾ.16) ನಗರದಲ್ಲಿ ಸಂಪುಟ ಸಚಿವರಿಗೆ ಔತಣಕೂಟ ಆಯೋಜಿಸಿದ್ದು, 16 ಮಂದಿಗೆ ಪ್ರಭಾವಿ ಸಚಿವರಿಗೆ ಆಹ್ವಾನ ನೀಡಲಾಗಿದೆ ಎಂದು ತಿಳಿದು ಬಂದಿದೆ. ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಜಾರಿಗೆ ಸಂಬಂಧಿಸಿದಂತೆ ಮಾ.27ಕ್ಕೆ ವಿಶೇಷ ಸಂಪುಟ ಸಭೆ ಕರೆದಿದ್ದು, ಅದಕ್ಕೂ ಮೊದಲು ಎಡಗೈ ಮತ್ತು ಬಲಗೈ ಸಮುದಾಯದಲ್ಲಿನ ಗೊಂದಲ ನಿವಾರಣೆ ಉದ್ದೇಶಕ್ಕಾಗಿ ಔತಣಕೂಟ ಕರೆಯಲಾಗಿದೆಯೇ ಹೊರತು, ಸಂಪುಟ ಪುನರ್ ರಚನೆ ಅಥವಾ ರಾಜಕೀಯ ಚರ್ಚೆಗಾಗಿ ಅಲ್ಲ ಎಂದು ಮೂಲಗಳು ಸ್ಪಷ್ಟಪಡಿಸಿವೆ. ಸಂಪುಟ ಪುನರ್ ರಚನೆ ಮಾಡದಿರುವುದು ಶಾಸಕರ ಅಸಮಾಧಾನಕ್ಕೆ ಕಾರಣವಾಗಿದೆ. ಇತ್ತೀಚೆಗೆ ನಗರದಲ್ಲಿ 25ಕ್ಕೂ ಅಧಿಕ ಮಂದಿ ಹಿರಿಯ ಶಾಸಕರು ಔತಣಕೂಟದ ನೆಪದಲ್ಲಿ ಸಭೆ ನಡೆಸಿ ಸಂಪುಟದಲ್ಲಿ ತಮಗೂ ಅವಕಾಶ ನೀಡಬೇಕೆಂದು ಆಗ್ರಹಿಸಿ ದಿಲ್ಲಿಗೆ ತೆರಳಿ ಹೈಕಮಾಂಡ್ ಮುಂದೆ ಬೇಡಿಕೆ ಮಂಡಿಸಲು ನಿರ್ಧರಿಸಿದ್ದರು. ಇದರ ಜೊತೆಗೆ ಮೊದಲ ಬಾರಿಗೆ ಆಯ್ಕೆಯಾಗಿದ್ದ ಶಾಸಕರಿಗೂ ಸಚಿವ ಸ್ಥಾನಕ್ಕೆ ಪರಿಗಣಿಸಬೇಕೆಂಬ ಬೇಡಿಕೆಯೂ ಕೇಳಿಬಂದಿದ್ದು, ರಾಜಕೀಯ ಚರ್ಚೆಗೆ ಗ್ರಾಸವಾಗಿದೆ.
ಮೈಸೂರಿಗೆ ಆಗಮಿಸಿದ ಅಸ್ಸಾಂ, ಒಡಿಶಾ ಶಾಸಕರು
ಮೈಸೂರು : ರಾಜ್ಯಸಭಾ ಚುನಾವಣೆಗೆ ಸಂಬಂಧಪಟ್ಟಂತೆ ರಾಜಕೀಯ ಚಟುವಟಿಕೆಗಳು ತೀವ್ರಗೊಂಡಿದ್ದು, ಒಡಿಶಾ ರಾಜ್ಯಸಭಾ ಚುನಾವಣೆಯಲ್ಲಿ ಅಡ್ಡ ಮತದಾನ ನಡೆಯದಂತೆ ತಡೆಯಲು ಕಾಂಗ್ರೆಸ್ ತನ್ನ ಶಾಸಕರನ್ನು ಬೆಂಗಳೂರಿಗೆ ಕರೆಸಿಕೊಂಡಿದ್ದು, ಇದೀಗ ಶನಿವಾರ ಎಲ್ಲ ಶಾಸಕರು ಮೈಸೂರಿಗೆ ಆಗಮಿಸಿದ್ದಾರೆ. ಗುರುವಾರ ರಾತ್ರಿ ಒಡಿಶಾ ಶಾಸಕರು ಬೆಂಗಳೂರಿಗೆ ಆಗಮಿಸಿದ ಬಳಿಕ, ಅಸ್ಸಾಂ ರಾಜ್ಯದ 10 ಕಾಂಗ್ರೆಸ್ ಶಾಸಕರು ಕೂಡ ಬಿಡದಿ ಸಮೀಪದ ವಂಡರ್ಲಾ ರೆಸಾರ್ಟ್ಗೆ ಆಗಮಿಸಿದ್ದು, ಶನಿವಾರ ಮಧ್ಯಾಹ್ನ ಸುಮಾರು 3 ಗಂಟೆಗೆ ಅಸ್ಸಾಂ ಮತ್ತು ಒಡಿಶಾ ಶಾಸಕರು ಮೈಸೂರಿನ ಸರಕಾರಿ ಅತಿಥಿ ಗೃಹಕ್ಕೆ ಆಗಮಿಸಿ ವಾಸ್ತವ್ಯ ಹೂಡಿದ್ದಾರೆ. ಎರಡು ಪೊಲೀಸ್ ಬೆಂಗಾವಲು ವಾಹನಗಳೊಂದಿಗೆ ಹವಾನಿಯಂತ್ರಿತ ಖಾಸಗಿ ಬಸ್ನಲ್ಲಿ ಶಾಸಕರು ಮಧ್ಯಾಹ್ನ 3 ಗಂಟೆಗೆ ನಗರದ ಸರಕಾರಿ ಅತಿಥಿ ಗೃಹಕ್ಕೆ ಆಗಮಿಸಿದರು. ಬಳಿಕ ಚಾಮುಂಡಿ ಬೆಟ್ಟಕ್ಕೆ ತೆರಳಿ ಶ್ರೀಚಾಮುಂಡೇಶ್ವರಿ ತಾಯಿ ದರ್ಶನ ಪಡೆದು ವಾಪಸ್ ಸರಕಾರಿ ಅತಿಥಿಗೃಹಕ್ಕೆ ಆಗಮಿಸಿ ವಾಸ್ತವ್ಯ ಹೂಡಿದ್ದಾರೆ. ಈ ಸಂದರ್ಭದಲ್ಲಿ ಕೆಪಿಸಿಸಿ ವಕ್ತಾರ ಲಕ್ಷಣ್, ಜಿಲ್ಲಾ ಅಧ್ಯಕ್ಷ ವಿಜಯಕುಮಾರ್ ಸೇರಿದಂತೆ ಹಲವು ಮುಖಂಡರು ಹಾಜರಿದ್ದರು. ಭದ್ರತಾ ದೃಷ್ಟಿಯಿಂದ ಸರಕಾರಿ ಅತಿಥಿ ಗೃಹಕ್ಕೆ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ. ಬಿಜೆಪಿ ನಡೆಸುವ ‘ಆಪರೇಷನ್ ಕಮಲ’ ಪ್ರಯತ್ನವನ್ನು ತಡೆಯುವ ಉದ್ದೇಶದಿಂದ ಶಾಸಕರನ್ನು ಒಟ್ಟಿಗೆ ಇರಿಸಲಾಗಿದೆ ಎಂದು ತಿಳಿದುಬಂದಿದೆ.
ದಸಂಸದೊಂದಿಗೆ ನನ್ನ ಸಂಬಂಧ 50 ವರ್ಷದ್ದು : ಬಾನು ಮುಷ್ತಾಕ್
ಸಂವಿಧಾನದ ಉಳಿವಿಗಾಗಿ ಜನಜಾಗೃತಿ ಸಮಾವೇಶ
Chitradurga | ಚಿತ್ರದುರ್ಗ ಡಿಸಿ, ಎಡಿಸಿ ಹೆಸರಲ್ಲಿ ಹಣ ದುರುಪಯೋಗ ಆರೋಪ; ಐವರ ಬಂಧನ, ಓರ್ವ ಪರಾರಿ
ಚಿತ್ರದುರ್ಗ : ಜಿಲ್ಲಾಧಿಕಾರಿ ಹಾಗೂ ಎಡಿಸಿ ಅವರ ಡಿಜಿಟಲ್ ಸಹಿಯನ್ನು ಬಳಸಿಕೊಂಡು ನಕಲಿ ದಾಖಲೆ ಸೃಷ್ಟಿಸಿ ಹಣ ದುರುಪಯೋಗಪಡಿಸಿಕೊಂಡಿರುವ ಆರೋಪದಲ್ಲಿ ಐವರು ಹೊರಗುತ್ತಿಗೆ ನೌಕರರನ್ನು ಚಿತ್ರದುರ್ಗ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ನಗರಾಭಿವೃದ್ಧಿ ಕೋಶದ ನಿರ್ದೇಶಕಿ ರೇಷ್ಮಾ ಹಾನಗಲ್ ನೀಡಿದ ದೂರಿನ ಆಧಾರದ ಮೇಲೆ ಹೊರಗುತ್ತಿಗೆ ನೌಕರರಾದ ಸೈಯದ್ ಸಾದಿಕ್, ವಿನಯ್ ಶರ್ಮಾ, ವಿಜಯ್ ಕುಮಾರ್, ಬಸವರಾಜ್, ಮೆಹಬೂಬ್ ಬಾಷಾ ಹಾಗೂ ವಿಎಂಎಚ್ ಎಂಟರ್ಪ್ರೈಸಸ್ನ ವೆಂಕಟೇಶ್ ವಿರುದ್ಧ ಪ್ರಕರಣ ದಾಖಲಾಗಿತ್ತು. ಪ್ರಕರಣದಲ್ಲಿ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಪ್ರಮುಖ ಆರೋಪಿ ಸೈಯದ್ ಸಾದಿಕ್ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಜಿಲ್ಲಾ ನಗರಾಭಿವೃದ್ಧಿ ಕೋಶ ಸಿಟಿ ಲೆವೆಲ್ ಟೆಕ್ನಿಕಲ್ ಸೆಲ್ ಸಿಬ್ಬಂದಿಯ ವೇತನದ ಹೆಸರಿನಲ್ಲಿ ಆರೋಪಿಗಳು ಸುಮಾರು 15 ಲಕ್ಷ ರೂಪಾಯಿ ಮೌಲ್ಯದ ನಕಲಿ ಬಿಲ್ ಸಲ್ಲಿಸಿರುವುದು ತಿಳಿದು ಬಂದಿದೆ. ಖಜಾನೆ ಇಲಾಖೆಯು ಡಿಜಿಟಲ್ ಸಹಿ ಕುರಿತು ಆಕ್ಷೇಪ ವ್ಯಕ್ತಪಡಿಸಿದ ಹಿನ್ನೆಲೆ ಈ ಅಕ್ರಮ ಬೆಳಕಿಗೆ ಬಂದಿದೆ. ಡಿಸಿ ಕಚೇರಿಯಲ್ಲಿ ಜಿಲ್ಲಾಧಿಕಾರಿ ಮತ್ತು ಎಡಿಸಿ ಅವರ ಸಹಿ ಸರ್ಟಿಫಿಕೇಟ್ ಕೀ ಕಳವು ಮಾಡಿ ದುರುಪಯೋಗ ಪಡಿಸಿಕೊಂಡಿರುವ ಆರೋಪ ಹೊರ ಬಂದಿದೆ. ಪ್ರಕರಣದಲ್ಲಿ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಪ್ರಮುಖ ಆರೋಪಿ ಸೈಯದ್ ಸಾದಿಕ್ ಪರಾರಿಯಾಗಿದ್ದಾನೆ. ಈ ಸಂಬಂಧ ತನಿಖೆ ನಡೆಯುತ್ತಿದೆ. ಸಂಬಂಧಪಟ್ಟವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ. -ಟಿ.ವೆಂಕಟೇಶ್, ಜಿಲ್ಲಾಧಿಕಾರಿ
Bengaluru | ವಿಮಾನ ನಿಲ್ದಾಣಕ್ಕೆ ಪ್ರವೇಶ ನಿರಾಕರಣೆ; ಬಾಂಬ್ ಪದ ಬಳಸಿ ಪೇಚಿಗೆ ಸಿಲುಕಿದ ಆರೋಪಿಯ ಬಂಧನ, ಬಿಡುಗಡೆ
ಬೆಂಗಳೂರು : ತಡವಾಗಿ ಆಗಮಿಸಿದ್ದಕ್ಕೆ ಪ್ರವೇಶ ನಿರಾಕರಿಸಿದ್ದರಿಂದ ವಿಮಾನದಲ್ಲಿ ಪ್ರಯಾಣಿಸಬೇಕಿದ್ದ ವ್ಯಕ್ತಿಯೊಬ್ಬ ಕೋಪದಲ್ಲಿ ಬಾಂಬ್ ಪದ ಬಳಸಿ ಪೇಚಿಗೆ ಸಿಲುಕಿದ ಘಟನೆ ನ ಕೆಂಪೇಗೌಡ ಅಂತರ್ರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 1ರ ಗೇಟ್ ಸಂಖ್ಯೆ 16ರಲ್ಲಿ ವರದಿಯಾಗಿದೆ. ಮಾರ್ಚ್ 11ರಂದು ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಈ ಘಟನೆಯ ಸಂಬಂಧ ಪಶ್ಚಿಮ ಬಂಗಾಳ ಮೂಲದ ರಾಜತೇಶ್ ಬೇರಾ(40) ಎಂಬ ಡಿಸ್ಕ್ ಜಾಕಿಯನ್ನು ಬಂಧಿಸಿ, ಬಳಿಕ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ. ಈತ ಬೆಂಗಳೂರಿನಿಂದ ರಾಯ್ಪುರಕ್ಕೆ ಮಾರ್ಚ್ 11ರಂದು ಇಂಡಿಗೋ ವಿಮಾನದಲ್ಲಿ ಪ್ರಯಾಣಿಸಬೇಕಿತ್ತು ಎಂದು ಕೆಂಪೇಗೌಡ ಅಂತರ್ರಾಷ್ಟ್ರೀಯ ವಿಮಾನ ನಿಲ್ದಾಣ ಠಾಣೆಯ ಪೊಲೀಸರು ತಿಳಿಸಿದ್ದಾರೆ. ರಾಜತೇಶ್ ಬೆಂಗಳೂರಲ್ಲಿ ಡಿಸ್ಕ್ ಜಾಕಿಯಾಗಿ ಕೆಲಸ ಮಾಡುತ್ತಿದ್ದಾರೆ. ವಿಮಾನದಲ್ಲಿ ಪ್ರಯಾಣಿಸಬೇಕಿದ್ದ ಈತ ತಡವಾಗಿ ವಿಮಾನ ನಿಲ್ದಾಣದ ಟರ್ಮಿನಲ್ 1ರ ಗೇಟ್ ಸಂಖ್ಯೆ 16ಕ್ಕೆ ಬಂದಿದ್ದರು. ಬೋರ್ಡಿಂಗ್ ಸಮಯ ಮೀರಿದ ನಂತರ ಆಗಮಿಸಿದ್ದರಿಂದ ಗೇಟ್ ಸಿಬ್ಬಂದಿ ಪ್ರವೇಶ ನಿರಾಕರಿಸಿದ್ದರು. ಪರಿಣಾಮ ಸಿಬ್ಬಂದಿ ಜೊತೆ ವಾಗ್ದಾದ ನಡೆಸಿದ್ದರು. ಬಳಿಕ, ಕೋಪದಲ್ಲಿ ವಿಮಾನದೊಳಗೆ ಬಾಂಬ್ ಇದ್ದರೆ ವಿಮಾನ ನಿಲ್ಲುವುದಿಲ್ಲವೇ ಎಂದು ಈತ ಹೇಳಿದ್ದು, ಆತಂಕ ಮೂಡಿಸಿತ್ತು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಬಾಂಬ್ ಎಂಬ ಪದ ಬಳಸಿದ್ದರಿಂದ ಅಲ್ಲಿನ ಭದ್ರತಾ ಸಿಬ್ಬಂದಿ ಕಳವಳಗೊಂಡು, ತಕ್ಷಣವೇ ಆತನನ್ನು ವಶಕ್ಕೆ ಪಡೆದು ಪೊಲೀಸರಿಗೆ ಹಸ್ತಾಂತರಿಸಿದ್ದರು. ಬಾಂಬ್ ಹೇಳಿಕೆಯ ಗಂಭೀರತೆಯನ್ನು ನಿರ್ಣಯಿಸಲು ಪ್ರೋಟೋಕಾಲ್ ಪ್ರಕಾರ ಬಾಂಬ್ ಬೆದರಿಕೆ ಮೌಲ್ಯಮಾಪನ ಸಮಿತಿ ರಚಿಸಲಾಗಿದೆ ಎಂದು ಅಧಿಕಾರಿಯೊಬ್ಬರು ಹೇಳಿದರು.ವಿಮಾನಯಾನ ಸಿಬ್ಬಂದಿ ಸಲ್ಲಿಸಿದ ದೂರಿನನ್ವಯ ಕೆಂಪೇಗೌಡ ಅಂತರ್ರಾಷ್ಟ್ರೀಯ ವಿಮಾನ ನಿಲ್ದಾಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಅಧಿಕಾರಿ ಮಾಹಿತಿ ನೀಡಿದರು.
ಇರಾನ್ ವಿರುದ್ಧ ಎಲ್ಲಾ ದೇಶಗಳು ನೌಕೆಗಳನ್ನ ಕಳುಹಿಸಲಿವೆ ಎಂಬ ಎಚ್ಚರಿಕೆ ನೀಡಿದ ಅಮೆರಿಕ ಅಧ್ಯಕ್ಷರು | Donald Trump
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತೊಮ್ಮೆ ಇರಾನ್ ನಾಯಕರಿಗೆ ಎಚ್ಚರಿಕೆ ಸಂದೇಶದ ಜೊತೆಗೆ, ಘೋರ ದಾಳಿ ಮುನ್ಸೂಚನೆ ಕೂಡ ನೀಡಿದ್ದಾರೆ. ಈಗಾಗಲೇ ಸಾವಿರಾರು ಜನರನ್ನು ಕಳೆದುಕೊಂಡು ಪರದಾಡುತ್ತಿರುವ ಇರಾನ್ ವಿರುದ್ಧ ಇಸ್ರೇಲ್ ಹಾಗೂ ಅಮೆರಿಕ ಮತ್ತಷ್ಟು ದಾಳಿಗೆ ಪ್ಲಾನ್ ಮಾಡಿವೆ. ಈ ನಡುವೆ ಹೊರ್ಮುಜ್ ಜಲಸಂಧಿ ವಿಚಾರವಾಗಿ ಹೊಸ ಹೊಸದಾಗಿ ಬೆಂಕಿ ಹೊತ್ತಿಕೊಂಡು ಭಾರಿ ಸಂಚಲನ ಸೃಷ್ಟಿ
Middle East Conflict- ಮೊಜ್ತಬಾ ಖಮೇನಿ ಸೇರಿ ಕೆಲ ಇರಾನ್ ಪ್ರಮುಖರ ತಲೆಗೆ ಬಹುಮಾನ ಘೋಷಿಸಿದ ಟ್ರಂಪ್!
ಟೆಹ್ರಾನ್: ಇರಾನ್ ಹೊಸ ಪರಮೋಚ್ಚ ನಾಯಕ ಮೊಜ್ತಬಾ ಖಮೇನಿ ಸೇರಿದಂತೆ ಇರಾನ್ನಲ್ಲಿನ ಸರ್ವಾಧಿಕಾರಿ ಆಡಳಿತ ಹೊಣೆ ಹೊತ್ತ ಪ್ರಮುಖರ ತಲೆಗೆ ಅಮೆರಿಕ 92 ಕೋಟಿ ರೂ. ಬಹುಮಾನ ಘೋಷಣೆ ಮಾಡಿದೆ. ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಅಮೆರಿಕದ ರಾಜತಾಂತ್ರಿಕ ಭದ್ರತಾ ಸೇವೆಗಳ ಇಲಾಖೆ ಇರಾನ್ ಭಯೋತ್ಪಾದಕ ನಾಯಕರು' ಎಂದು ಉಲ್ಲೇಖಿಸಿ, ಪೋಟೋ ಸಮೇತ ಹೆಸರುಗಳನ್ನು ಪ್ರಕಟಿಸಿದ್ದು, ಸುಳಿವು ನೀಡಿದವರಿಗೆ 10 ದಶಲಕ್ಷ ಡಾಲರ್ (ಭಾರತೀಯ ಕರೆನ್ಸಿಯಲ್ಲಿ92 ಕೋಟಿ ರೂ.) ಬಹುಮಾನ ನೀಡುವುದಾಗಿ ಘೋಷಣೆ ಮಾಡಿದೆ.ಮೊಜ್ತಬಾ ಖಮೇನಿ ಜತೆಗೆ ಪರಮೋಚ್ಚ ನಾಯಕರ ಕಚೇರಿಯ (ಎಸ್ಎಲ್ಒ) ಉಪ ಮುಖ್ಯಸ್ಥ ಅಲಿ ಅಸ್ಗರ್ ಹೆಜಾಜಿ, ಎಸ್ಎಲ್ಒ ಮಿಲಿಟರಿ ಸಲಹೆಗಾರ ಮೇಜರ್ ಜನರಲ್ ವೈ.ಆರ್.ಸಫಾವಿ, ಗುಪ್ತಚರ ಇಲಾಖೆ ಸಚಿವ ಇಸ್ಮಾಯಿಲ್ ಖತೀಬ್ ಸೇರಿದಂತೆ 10 ಪ್ರಮುಖರ ಹೆಸರನ್ನು ಅಮೆರಿಕ ಬಿಡುಗಡೆ ಮಾಡಿದೆ. ಮಧ್ಯಪ್ರಾಚ್ಯಕ್ಕೆ ಅಮೆರಿಕದ 'ಟ್ರಿಪೋಲಿ' ಹರ್ಮುಜ್ ಜಲಸಂಧಿ ಮೇಲೆ ಹಿಡಿತ ಹೊಂದಿರುವ ಇರಾನ್ ಹೊರದಬ್ಬಲು ಅಮೆರಿಕ 'ಯುಎಸ್ಎಸ್ ಟ್ರಿಪೋಲಿ' ಯುದ್ಧ ನಾಕೆಯನ್ನು ಮಧ್ಯಪ್ರಾಚ್ಯಕ್ಕೆ ರವಾನಿಸಿದೆ. ನೌಕಾ ಸಿಬ್ಬಂದಿ ರವಾನೆ, ಯುದ್ಧ ಸಾಮಗ್ರಿ ಪೂರೈಕೆ ಜತೆಗೆ ಶತ್ರು ದೇಶಗಳ ಮೇಲೆ ದಾಳಿ ನಡೆಸುವ ಯುದ್ಧ ನೌಕೆಯಾಗಿಯೂ ಕೆಲಸ ಮಾಡಲಿದೆ. ಟ್ರಿಪೋಲಿ ಜತೆಗೆ ತೈಲ ಹಾಗೂ ಸರಕು ಸಾಗಣೆ ಹಡಗುಗಳ ಸಂಚಾರಕ್ಕೆ ಅಡ್ಡಿ ಮಾಡುತ್ತಿರುವ ಇರಾನಿಯನ್ ಗೌಪ್ಯ ನೌಕಾದಳ ಹತ್ತಿಕ್ಕುವುದು, ಸಾಗರದಲ್ಲಿ ಸುರಿಯಲಾದ ಮೈನ್ ಬಾಂಬ್ಗಳನ್ನು ನಿಷ್ಕ್ರಿಯಗೊಳಿಸಲು 2,500 ನೌಕೆಗಳನ್ನು ಅಮೆರಿಕ ರವಾನಿಸಿದೆ. ಇರಾನ್ ಪ್ರತೀಕಾರ ಖಾರ್ಗ್ ದ್ವೀಪದ ಮೇಲೆ ಅಮೆರಿಕ ವಾಯುಪಡೆ ದಾಳಿ ನಡೆಸಿದ ಬೆನ್ನಿಗೆ ಅಮೆರಿಕ ಮಿತ್ರಕೂಟದ ಕೊಲ್ಲಿದೇಶಗಳ ಮೇಲೆ ಇರಾನ್ ವೈಮಾನಿಕ ದಾಳಿ ನಡೆಸಿದೆ. ಸೌದಿ ಅರೇಬಿಯಾ, ಬರಹೇನ್, ಯುಇಎ, ಕುವೈತ್, ಕತಾರ್ ತೈಲಾಗಾರಗಳು, ಇಂಧನ ಉತ್ಪಾದನಾ ಕೇಂದ್ರಗಳು, ಸೇನಾ ನೆಲೆಗಳು, ಮಿಲಿಟರಿ ಮೂಲಸೌಲಭ್ಯ ಕೇಂದ್ರಗಳ ಮೇಲೆ ಕ್ಷಿಪಣಿ, ಡ್ರೋನ್ ಮೂಲಕ ದಾಳಿ ನಡೆಸಿದೆ.ಯುಎಇಯ ಆರ್ಥಿಕ ಶಕ್ತಿ ಕೇಂದ್ರ ದುಬೈ ಮೇಲೆ ಕ್ಷಿಪಣಿ, ಡ್ರೋನ್ ಬಳಸಿಕೊಂಡು ಇರಾನ್ ದಾಳಿಗೈದಿದೆ. ಮಧ್ಯ ದುಬೈನ ಪ್ರಮುಖ ಆಡಳಿತ ಹಾಗೂ ವಾಣಿಜ್ಯ ಕೇಂದ್ರ ಗುರಿಯಾಗಿಸಿಕೊಂಡು ದಾಳಿ ನಡೆಸಲಾಗಿದೆ. ವಾಯು ರಕ್ಷಣಾ ವ್ಯವಸ್ಥೆ ಡ್ರೋನ್ ದಾಳಿ ನಿಗ್ರಹಿಸಿದೆ. ಆದರೆ, ಡ್ರೋನ್ ಅವಶೇಷಗಳಿಂದ ಕಟ್ಟಡಕ್ಕೆ ಹಾನಿಯಾಗಿದೆ ಎಂದು ಯುಎಇ ಅಧಿಕಾರಿಗಳು ತಿಳಿಸಿದ್ದಾರೆ.ಯುಎಇಯ ಫುಜೈರಾ ತೈಲ ಸಂಸ್ಕರಣಾ ಘಟಕದ ಮೇಲೆ ಇರಾನ್ ಡ್ರೋನ್ ದಾಳಿ ನಡೆಸಿದೆ. ಇರಾನಿಯನ್ ಡ್ರೋನ್ ಹೊಡೆದುರಳಿಸಲಾಗಿದೆ, ಆದರೆ, ಅವಶೇಷಗಳು ಬಿದ್ದು ಘಟಕದ ಬಳಿ ಬೆಂಕಿ ಹೊತ್ತಿಕೊಂಡಿದೆ. ತಾತ್ಕಾಲಿಕವಾಗಿ ತೈಲ ಸಂಸ್ಕರಣೆ ಸ್ಥಗಿತಗೊಳಿಸಲಾಗಿದೆ. ಭಾರತದತ್ತ ಮತ್ತೊಂದು ಎಲ್ಪಿಜಿ ನೌಕೆ ಇರಾನ್ ಜತೆಗಿನ ರಾಜತಾಂತ್ರಿಕ ಮಾತುಕತೆ ಫಲಪ್ರದವಾದ ಬಳಿಕ ಭಾರತದ ಮತ್ತೊಂದು ಹಡಗು ಶನಿವಾರ ಹರ್ಮುಜ್ ಜಲಸಂಧಿ ದಾಟಿ ಭಾರತದ ಹೊರಟಿದೆ. ಶುಕ್ರವಾರ ರಾತ್ರಿ 40 ಸಾವಿರ ಮೆಟ್ರಿಕ್ ಟನ್ ಎಲ್ಪಿಜಿ ಸಂಗ್ರಹ ಹೊತ್ತ 'ಶಿವಾಲಿಕ್' ಹಡಗು ಭಾರತದ ಪ್ರಯಾಣ ಬೆಳೆಸಿದ ಬೆನ್ನಿಗೆ ಶನಿವಾರ 46 ಸಾವಿರ ಮೆಟ್ರಿಕ್ ಟನ್ ಎಲ್ಪಿಜಿ ಸಂಗ್ರಹ ಹೊಂದಿದ 'ನಂದಾದೇವಿ' ಹಡಗು ಹರ್ಮುಜ್ ಜಲಸಂಧಿ ಮೂಲಕ ಭಾರತದತ್ತ ಹೊರಟಿದೆ. ಭಾರತೀಯ ನೌಕಾಪಡೆಯ ಯುದ್ಧನೌಕೆ ಎಲ್ಪಿಜಿ ಸರಕು ಹೊತ್ತು ಹೊರಟಿರುವ 'ನಂದಾದೇವಿ' ಹಡಗಿಗೆ ಬೆಂಗಾವಲು ನೀಡಿದೆ. ಮುಂದಿನ ಎರಡು ದಿನದಲ್ಲಿಮುಂಬಯಿನ ಕಾಂಡ್ಲಾಬಂದರಿಗೆ ಹಡಗು ತಲುಪಲಿದೆ. ಐವರು ಭಾರತೀಯರ ಸಾವು ಇರಾನ್- ಅಮೆರಿಕ ಸಂಘರ್ಷದಿಂದ ಮಧ್ಯಪ್ರಾಚ್ಯ, ಕೊಲ್ಲಿಪ್ರದೇಶದಲ್ಲಿ ಇದುವರೆಗೂ ಐವರು ಭಾರತೀಯರು ಮೃತಪಟ್ಟಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಮಾಹಿತಿ ನೀಡಿದೆ.ಓಮನ್ ಕರಾವಳಿ ತೀರ ದಲ್ಲಿತೈಲ ಸಾಗಣೆ ಹಡಗಿನ ಮೇಲೆ ಇರಾನ್ ನಡೆಸಿದ ದಾಳಿಯಲ್ಲಿ ಒಬ್ಬರು, ಇರಾಕ್ನಲ್ಲಿ ಅಮೆರಿಕ ತೈಲ ಹಡಗಿನ ಮೇಲೆ ನಡೆದ ದಾಳಿಯಲ್ಲಿ ಇಬ್ಬರು, ಒಮನ್ ಕೈಗಾರಿಕಾ ಪ್ರದೇಶದ ಮೇಲೆ ಶುಕ್ರವಾರ ನಡೆದ ಕ್ಷಿಪಣಿ ದಾಳಿಯಲ್ಲಿ ಇಬ್ಬರು ಭಾರತೀಯರು ಮೃತಪಟ್ಟಿದ್ದಾರೆ. ಮತ್ತೊಬ್ಬರು ಕಾಣೆಯಾಗಿದ್ದಾರೆ. 10 ಮಂದಿ ಗಾಯಗೊಂಡಿದ್ದಾರೆ ಎಂದು ಕೊಲ್ಲಿದೇಶಗಳ ಭಾರತದ ವಿದೇಶಾಂಗ ವ್ಯವಹಾರ ಇಲಾಖೆ ಹೆಚ್ಚುವರಿ ಕಾರ್ಯದರ್ಶಿ ಅಸೀಮ್ ಮಹಾಜನ್ ಹೇಳಿದ್ದಾರೆ.
Karan Adani: ನವದೆಹಲಿಯಲ್ಲಿ ಮಾರ್ಚ್ 13ರಂದು ನಡೆದ ಲೀಡರ್ಶಿಪ್ ಶೃಂಗಸಭೆಯಲ್ಲಿ ಮಾತನಾಡಿದ ಕರಣ್ ಅದಾನಿ ಅವರು, ಭಾರತದ ಸಾಮಾಜಿಕ ಮೂಲಸೌಕರ್ಯವನ್ನು ಬಲಪಡಿಸಲು ಅದಾನಿ ಸಮೂಹವು ಮಹತ್ವದ ಹೆಜ್ಜೆ ಇಟ್ಟಿದೆ. ಮುಂದಿನ 10 ವರ್ಷಗಳಲ್ಲಿ ದೇಶಾದ್ಯಂತ 300 ಶಾಲೆಗಳು ಮತ್ತು 30 ಅತ್ಯಾಧುನಿಕ ಆಸ್ಪತ್ರೆಗಳನ್ನು ನಿರ್ಮಿಸಲು ಅದಾನಿ ಸಮೂಹವು ₹60,000 ಕೋಟಿ ಹೂಡಿಕೆ ಮಾಡಲು ಯೋಜಿಸಿದೆ. ಆರ್ಥಿಕ ಬೆಳವಣಿಗೆಯು
Middle East Conflict- ಹರ್ಮುಜ್ ಜಲಸಂಧಿ ನಿರ್ಬಂಧ: 15 ದಿನಗಳಲ್ಲಿ ಕಚ್ಚಾತೈಲ ಬೆಲೆ ಶೇಕಡಾ 40ರಷ್ಟು ಜಂಪ್!
ಹೊಸದಿಲ್ಲಿ: ಮಧ್ಯಪ್ರಾಚ್ಯ ಬಿಕ್ಕಟ್ಟಿನಿಂದಾಗಿ ಕೇವಲ 15 ದಿನಗಳಲ್ಲಿ ಕಚ್ಚಾತೈಲದ ಬೆಲೆ ಶೇಕಡಾ 41.1ರಷ್ಟು ಏರಿಕೆ ಕಂಡಿದೆ. ಅಮೆರಿಕ- ಇಸ್ರೇಲ್ ಜಂಟಿ ದಾಳಿಗೆ ಪ್ರತಿದಾಳಿ ನಡೆಸುತ್ತಿರುವ ಇರಾನ್ ತನ್ನ ನಿಯಂತ್ರಣದಲ್ಲಿರುವ ಹರ್ಮುಜ್ ಜಲಸಂಧಿಯನ್ನು ನಿರ್ಬಂಧಿಸಿದೆ. ಇದರಿಂದ ತೈಲ ಹೊತ್ತ ನೂರಾರು ಹಡಗುಗಳು ಮಾರ್ಗಮಧ್ಯದಲ್ಲೇ ಲಂಗರು ಹಾಕಿವೆ. ಇದರಿಂದಾಗಿ ಹಲವು ದೇಶಗಳಲ್ಲಿ ಇಂಧನ ಪೂರೈಕೆ ವ್ಯವಸ್ಥೆಯೇ ಅಸ್ತವ್ಯಸ್ತಗೊಂಡಿದೆ.ಫೆಬ್ರವರಿ 28ರಂದು ಅಮೆರಿಕ ಮತ್ತು ಇಸ್ರೇಲ್ ಕ್ಷಿಪಣಿಗಳು ಇರಾನ್ನ ಮಿಲಿಟರಿ ನೆಲೆಗಳ ಮೇಲೆ ನೇರ ದಾಳಿ ಮಾಡಿದವು. ಇದಕ್ಕೂ ಮೊದಲು ಅಂದರೆ ಫೆಬ್ರವರಿ 27ರಂದು ಬ್ಯಾರೆಲ್ಗೆ 73 ಡಾಲರ್ ಇತ್ತು. ಶನಿವಾರ ಒಂದು ಬ್ಯಾರೆಲ್ ಕಚ್ಚಾತೈಲದ ಬೆಲೆ 103 ಡಾಲರ್ ಆಗಿದೆ.ಅಮೆರಿಕ ಮತ್ತು ಇಸ್ರೇಲ್ ಪಡೆಗಳ ದಾಳಿಯಿಂದ ಇರಾನ್ ಪರಮೋಚ್ಚ ನಾಯಕ ಖಮೇನಿ ಮೃತಪಟ್ಟರು. ಇದರಿಂದ ಕದನ ಇನ್ನಷ್ಟು ಉಲ್ಬಣಗೊಂಡಿತು. ಇಂಧನ ಬೆಲೆ ಕೂಡ ದೊಡ್ಡ ಜಿಗಿತ ಕಂಡಿತು. ಪೂರೈಕೆಯಲ್ಲಿ ಬರ ಉಂಟಾಯಿತು. ತೈಲಕ್ಕಾಗಿ ಪಶ್ಚಿಮ ಏಷ್ಯಾ ದೇಶಗಳನ್ನು ಅವಲಂಬಿಸಿದ್ದ ದೇಶಗಳು ತತ್ತರಗೊಂಡವು. ಭಾರತದಲ್ಲಿ ಸಾಕಷ್ಟು ಇಂಧನ ಮತ್ತು ಅನಿಲ ದಾಸ್ತಾನು ಇದ್ದರೂ ಗ್ರಾಹಕರು ಹೆಚ್ಚು ಕಂಗಾಲಾಗಿದ್ದಾರೆ. ಇದರಿಂದ ಇದರಿಂದ ಹಲವು ವಲಯಗಳಲ್ಲಿ ಹಣದುಬ್ಬರವಾಗಿದೆ. ತಜ್ಞರ ಆತಂಕ ಇರಾನ್ ವಿರುದ್ಧ ನಡೆಯುತ್ತಿರುವ ಸಮರ ಒಂದು 'ಹಗುರ ಆಟ', ಬಹುಬೇಗ ಮುಗಿಯುತ್ತದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ. ಆದರೆ ಈಗಿನ ಸನ್ನಿವೇಶವನ್ನು ಗಮನಿಸಿದರೆ ಇದು ತಕ್ಷಣ ಮುಗಿಯುವಂತೆ ಕಾಣುತ್ತಿಲ್ಲ. ''ಇಂಧನ ಬಿಕ್ಕಟ್ಟಿನಿಂದ ಮುಂಬರುವ ದಿನಗಳಲ್ಲಿ ಜಾಗತಿಕ ಆರ್ಥಿಕತೆ ಇನ್ನಷ್ಟು ಹಿನ್ನಡೆ ಅನುಭವಿಸುತ್ತದೆ. ಈಗಾಗಲೇ ನಮ್ಮಲ್ಲಿ ಚಿಲ್ಲರೆ ಹಣದುಬ್ಬರ ಏರು ಗತಿಯಲ್ಲಿದೆ,'' ಎಂದು ವಿತ್ತ ತಜ್ಞ ಆರ್. ಪೊನ್ಮುಡಿ ಹೇಳಿದ್ದಾರೆ. ಹರ್ಮುಜ್ ಜಲಸಂಧಿ ಭಾರತಕ್ಕೆ ಸುಗಮ ಭಾರತದ ಹಡಗುಗಳು ಹರ್ಮುಜ್ ಜಲಸಂಧಿ ಮೂಲಕ ಸಾಗಲು ನಾವು ಯಾವುದೇ ಅಡ್ಡಿ ಮಾಡುವುದಿಲ್ಲ. ಭಾರತದೊಂದಿಗೆ ನಮ್ಮ ನಂಟು ಚೆನ್ನಾಗಿದೆ. ಹಲವು ಸಂಕಷ್ಟಗಳ ಸಂದರ್ಭದಲ್ಲಿ ನಮಗೆ ನೆರವಾಗಿದೆ. ಹೀಗಾಗಿ ತೈಲ ರವಾನೆ ಸುಸೂತ್ರವಾಗಲಿದೆ ಎಂದು ಘೋಷಿಸಿದ್ದಾರೆ. ಇದರಿಂದ ಮಧ್ಯಪ್ರಾಚ್ಯದಿಂದ ಭಾರತಕ್ಕೆ ಕಚ್ಚಾ ತೈಲ ಮತ್ತು ಅನಿಲ ರವಾನೆ ಆರಂಭವಾಗಿದೆ. ಮುಂದಿನ ದಿನಗಳಲ್ಲಿ ಸಂಘರ್ಷ ಕಡಿಮೆಯಾದರೆ ಇಂಧನ ಬಿಕ್ಕಟ್ಟು ಕೊನೆಗೊಳ್ಳಲಿದೆ. ಭಾರತದಲ್ಲಿ ತೈಲ ದಾಸ್ತಾನು ಹೆಚ್ಚಿರುವುದರಿಂದ ಸದ್ಯಕ್ಕೆ ತೈಲ ಬೆಲೆಯಲ್ಲಿ ಏರಿಕೆಯಾಗಿಲ್ಲ.
ವಾಣಿಜ್ಯ ಸಿಲಿಂಡರ್ ಪೂರೈಕೆಯಲ್ಲಿ ವ್ಯತ್ಯಯ; ಹೊಟೇಲ್ ಉದ್ಯಮ ಸಹಿತ ಜನ ಸಾಮಾನ್ಯರಿಗೆ ತೀವ್ರ ಸಂಕಷ್ಟ
ಬೆಂಗಳೂರು : ಮಧ್ಯಪ್ರಾಚ್ಯದಲ್ಲಿ ಯುದ್ಧ ನಡೆಯುತ್ತಿರುವ ಹಿನ್ನೆಲೆಯಲ್ಲಿ ಭಾರತಕ್ಕೆ ಆಮದಾಗುವ ದ್ರವೀಕೃತ ಪೆಟ್ರೋಲಿಯಂ ಅನಿಲ(ಎಲ್ಪಿಜಿ) ಸರಬರಾಜು ವ್ಯತ್ಯಯಗೊಂಡಿದ್ದು, ದೇಶಾದ್ಯಾಂತ ಎಲ್ಪಿಜಿ ಸಿಲಿಂಡರ್ ಗಳ ಕೊರತೆ ಉಂಟಾಗಿದೆ. ಬೆಂಗಳೂರು ಸೇರಿ ರಾಜ್ಯದ ವಿವಿಧ ನಗರಗಳಿಗೆ ವಾಣಿಜ್ಯ ಸಿಲಿಂಡರ್ ಪೂರೈಕೆ ಕಡಿಮೆಯಾಗುತ್ತಿದ್ದು, ಹೊಟೇಲ್ ಉದ್ಯಮ ಸೇರಿದಂತೆ ಜನ ಸಾಮಾನ್ಯರಿಗೆ ಸಂಕಷ್ಟ ಎದುರಾಗಿದೆ. ಒಂದು ವಾರದಿಂದ ವಾಣಿಜ್ಯ ಎಲ್ಪಿಜಿ ಸಿಲಿಂಡರ್ ಗಳ ಕೊರೆತೆ ಉಂಟಾಗಿದ್ದು, ಎರಡು-ಮೂರು ದಿನಗಳ ಕಾಲ ಹೋಟೆಲ್ಗಳಲ್ಲಿ ಉಳಿಕೆಯಾಗಿದ್ದ ಸಿಲಿಂಡರ್ ಗಳನ್ನು ಬಳಕೆ ಮಾಡಲಾಗುತ್ತಿತ್ತು. ಆದರೆ ಇದೀಗ ವಾಣಿಜ್ಯ ಎಲ್ಪಿಜಿ ಸಿಲಿಂಡರ್ ಗಳಿಲ್ಲದೆ, ಸಣ್ಣ ಹೋಟೆಲ್ಗಳು ಬಂದ್ ಆಗಿವೆ. ಇನ್ನು ಕೆಲವರು ಮೆನು ಕಡಿತ ಮತ್ತು ಆಹಾರದ ಬೆಲೆಯನ್ನು ಏರಿಕೆ ಮಾಡುತ್ತಿದ್ದಾರೆ. ನಗರದ ಕೆಲ ಪಂಚತಾರ ಹೋಟೆಲ್ಗಳು ಸಿಲಿಂಡರ್ ಗಳ ಪೂರೈಕೆ ಇಲ್ಲದ ಕಾರಣ ಕಾರ್ಯಕ್ರಮಗಳ ಬುಕ್ಕಿಂಗ್ ಅನ್ನೂ ಸ್ಥಗಿತ ಮಾಡುತ್ತಿವೆ. ವಾಣಿಜ್ಯ ಬಳಕೆಯ ಅನಿಲ ಸಿಲಿಂಡರ್ ಗಳ ತೀವ್ರ ಅಭಾವದಿಂದಾಗಿ ವಿವಾಹ ಸೇರಿದಂತೆ ಇನ್ನಿತರ ಶುಭ ಸಮಾರಂಭಗಳಿಗೆ ಅಡ್ಡಿಯಾಗುತ್ತಿದ್ದು, ಶುಭ ಕಾರ್ಯಗಳಿಗೆ ಕಲ್ಯಾಣ ಮಂಟಪಗಳನ್ನು ಬುಕ್ ಮಾಡುವ ವೇಳೆ ಅಡುಗೆ ತಯಾರಿಗೆ ಸೀಮಿತ ಅನಿಲ ಸಿಲಿಂಡರ್ ನೀಡಲಾಗುವುದು ಎಂದು ಕಲ್ಯಾಣ ಮಂಟಪದವರು ಒಪ್ಪಂದ ಮಾಡಿಕೊಳ್ಳುತ್ತಿದ್ದಾರೆ. ಇನ್ನು ಕೆಲ ಮಂಟಪಗಳಲ್ಲಿ ಸಿಲಿಂಡರ್ ಅಭಾವ ಉಂಟಾಗಿರುವುದರಿಂದ ಕಾರ್ಯಕ್ರಮದ ಆಯೋಜಕರೇ ಸಿಲಿಂಡರ್ ವ್ಯವಸ್ಥೆ ಮಾಡಿಕೊಳ್ಳುವಂತೆ ಹೇಳುತ್ತಿದ್ದಾರೆ. ಹೋಟೆಲ್ ಉದ್ಯಮ ಮಾತ್ರವಲ್ಲದೆ, ಆಟೋ ಮೊಬೈಲ್ ಕ್ಷೇತ್ರದಲ್ಲಿಯೂ ಬಿಕ್ಕುಟ್ಟು ಶುರುವಾಗಿದೆ. ಫೆಬ್ರವರಿ ಅಂತ್ಯದಲ್ಲಿ ಪ್ರತಿ ಲೀಟರ್ನ ಆಟೋ ಎಲ್ಪಿಜಿ ಸುಮಾರು 59ರೂ. ಇದ್ದದ್ದು, ಇದೀಗ 85 ರೂ. ನಿಂದ 89 ರೂ.ವರೆಗೆ ಏರಿಕೆಯಾಗಿದೆ. ಅಲ್ಲದೆ ಆಟೋ ಎಲ್ಪಿಜಿ ಬಂಕ್ಗಳ ಮುಂದೆ ಸರತಿ ಸಾಲು ನಿರ್ಮಾಣವಾಗುತ್ತಿದೆ. ಓಲಾ, ಉಬರ್, ರಾಪಿಡೋ ಮತ್ತು ನಮ್ಮ ಯಾತ್ರಿ ಅಂತಹ ಆಪ್ ಆಧಾರಿತ ವೇದಿಕೆಗಳಲ್ಲಿ ಕೆಲಸ ಮಾಡುವ ಸಾವಿರಾರು ಚಾಲಕರು ಅತಂತ್ರರಾಗಿದ್ದಾರೆ. ವಾಣಿಜ್ಯ ಸಿಲಿಂಡರ್ ಗಳ ಪೂರೈಕೆಯಲ್ಲಿ ವ್ಯತ್ಯಯ ಉಂಟಾದ ಬೆನ್ನಲ್ಲೇ, ಗೃಹ ಬಳಕೆಯ ಸಿಲಿಂಡರ್ ಗಳಿಗೂ ಬೇಡಿಕೆ ಹೆಚ್ಚಾಗುತ್ತಿದೆ. ನಗರದ ಜನರು ಗೃಹ ಬಳಕೆಯ ಸಿಲಿಂಡರ್ ಗಳನ್ನು ಹೆಚ್ಚಾಗಿ ಬುಕ್ ಮಾಡಿಕೊಂಡು ಸಂಗ್ರಹ ಮಾಡುತ್ತಿದ್ದಾರೆ. ಇದರಿಂದ ಜನ ಸಾಮಾನ್ಯರೂ ಸಂಕಷ್ಟವನ್ನು ಅನುಭವಿಸುವಂತಾಗಿದೆ. ಬೆಂಗಳೂರಿನಲ್ಲಿ ವಾಣಿಜ್ಯ ಸಿಲಿಂಡರ್ ಗಳಿಲ್ಲದೆ ಹೋಟೆಲ್ ಉದ್ಯಮವು ಸಂಕಷ್ಟಕ್ಕೆ ಸಿಲುಕಿರುವುದನ್ನೇ ಬಂಡವಾಳ ಮಾಡಿಕೊಂಡ ಕೆಲವರು ಕಾಳಸಂತೆಯಲ್ಲಿ ಸಿಲಿಂಡರ್ ಗಳನ್ನು ಮಾರಾಟ ಮಾಡುತ್ತಿರುವುದಾಗಿ ತಿಳಿದು ಬಂದಿದೆ. ಒಂದು ಸಿಲಿಂಡರ್ ಬೆಲೆ 4000 ರೂ.ಗಳಿಗಿಂತ ಅಧಿಕ ಹಣಕ್ಕೆ ಮಾರಾಟ ಮಾಡಲಾಗುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ. ‘ಬೆಂಗಳೂರಿನ ಹೋಟೆಲ್ಗಳಿಗೆ ಸಿಲಿಂಡರ್ ಸಮಸ್ಯೆ ಉದ್ಬವವಾಗಿದೆ. ಎಲ್ಲ ಮಾದರಿಯ ಹೋಟೆಲ್ಗಳು ಸಮಸ್ಯೆ ಎದುರಿಸುತ್ತಿವೆ. ಇದರ ನಡುವೆ ಇಂಧನ ಟ್ಯಾಂಕರ್ಗಳು ಭಾರತಕ್ಕೆ ಬಂದಿವೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿವೆ. ಹೀಗಾಗಿ, ಇನ್ನು ಒಂದೆರೆಡು ದಿನಗಳಲ್ಲಿ ಪರಿಸ್ಥಿತಿ ಸುಧಾರಿಸಿ ಸಿಲಿಂಡರ್ ಸಿಗಬಹುದು ಎಂಬ ನಂಬಿಕೆ ಇದೆ’ -ಪಿ.ಸಿ. ರಾವ್, ಬೃಹತ್ ಬೆಂಗಳೂರು ಹೋಟೆಲ್ ಮಾಲಕರ ಸಂಘದ ಗೌರವಾಧ್ಯಕ್ಷ ‘ಅನಿಲ ಕೊರತೆಯಿಂದಾಗಿ ಜನಸಾಮಾನ್ಯರು ಪರ್ಯಾಯ ಇಂಧನಗಳ ಮೊರೆ ಹೋಗುವುದು ಅನಿವಾರ್ಯವಾಗಿದೆ. ಹೀಗಾಗಿ ಕಟ್ಟಿಗೆ, ಪಂಪ್ಸ್ಟೌವ್ ಹಾಗೂ ಎಲೆಕ್ಟ್ರಿಕ್ ಒಲೆಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ. ಶಿವಾಜಿನಗರದ ಆರ್ಮ್ಸ್ಟ್ರಾಂಗ್ ರಸ್ತೆಯಲ್ಲಿ ಕೆಲವು ದಿನಗಳಿಂದ ಕಟ್ಟಿಗೆ ಖರೀದಿಸುವವರ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿದೆ. ರಸ್ತೆ ಬದಿಯ ಆಹಾರ ವ್ಯಾಪಾರಿಗಳು, ಸಣ್ಣ ಹೋಟೆಲ್ಗಳು ಹಾಗೂ ಕ್ಯಾಂಟೀನ್ ಮಾಲಕರು ಸೌದೆ ಖರೀದಿಸುತ್ತಿದ್ದಾರೆ.
ಕನಕಗಿರಿ: ಇಲ್ಲಿನ ನಾಲ್ಕನೇ ವಾರ್ಡ್ ನಿವಾಸಿ ಮಹೇಕಾ ಅಗರಬತ್ತಿ (22) ಎಂಬ ಮಹಿಳೆ ಹೆರಿಗೆಯಾದ ನಂತರ ಮೃತಪಟ್ಟ ಘಟನೆ ರಾಯಚೂರಿನ ಖಾಸಗಿ ಆಸ್ಪತ್ರೆಯಲ್ಲಿ ಶನಿವಾರ ನಡೆದಿದೆ. ಹೆರಿಗೆ ನಿಮಿತ್ತ ತವರು ಮನೆಯಾದ ಸಿಂಧನೂರಿಗೆ ಹೋಗಿದ್ದ ಮಹೇಕಾ ಅವರಿಗೆ ಶುಕ್ರವಾರ ರಾತ್ರಿ ಕಾಲುಗಳಿಗೆ ಬಾವು ಬಂದ ಪರಿಣಾಮ ತಪಾಸಣೆಗಾಗಿ ಸಿಂಧನೂರು ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ, ರಕ್ತ ತಪಾಸಣೆ ನಡೆಸಿದಾಗ ಅಧಿಕ ರಕ್ತದೊತ್ತಡ ಹಾಗೂ ಕಾಮಾಲೆ ರೋಗ ಇರುವುದು ಪತ್ತೆಯಾಗಿದೆ. ಹೆಚ್ಚಿನ ಚಿಕಿತ್ಸೆಗೆ ರಾಯಚೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು ಹೆಣ್ಣು ಮಗುವಿಗೆ ಜನ್ಮ ನೀಡಿದ ನಂತರ ರಕ್ತದೊತ್ತಡ ಏರುಪೇರಾಗಿ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಭಾನುವಾರ ಬೆಳಿಗ್ಗೆ ಗಂಗಾವತಿಯ ರಸ್ತೆಯ ಖಬರಸ್ತಾನದಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದ ಸದಸ್ಯರು ತಿಳಿಸಿದ್ದಾರೆ.
Karan Adani: ತಂದೆ-ತಾಯಿಯಿಂದ ಕಲಿತ ನಾಯಕತ್ವದ ಪಾಠಗಳನ್ನ ಬಿಚ್ಚಿಟ್ಟ ಕರಣ್ ಅದಾನಿ
Karan Adani: ಅದಾನಿ ಪೋರ್ಟ್ಸ್ ಮತ್ತು ಸ್ಪೆಷಲ್ ಎಕನಾಮಿಕ್ ಝೋನ್ನ ವ್ಯವಸ್ಥಾಪಕ ನಿರ್ದೇಶಕ ಹಾಗೂ ಅದಾನಿ ಸಿಮೆಂಟ್ನ ನಿರ್ದೇಶಕರಾಗಿರುವ ಕರಣ್ ಅದಾನಿ ಅವರು, ತಮ್ಮ ಯಶಸ್ಸಿನ ಮೂಲವನ್ನು ಸ್ಮರಿಸಿದ್ದಾರೆ. ತಮ್ಮ ಬಾಲ್ಯದ ದಿನಗಳ ಬಗ್ಗೆ ಮಾತನಾಡಿದ ಅವರು, ಮನೆಯಲ್ಲಿ ಕಲಿತ ಪಾಠಗಳು, ನನ್ನ ನಾಯಕತ್ವದ ದೃಷ್ಟಿಕೋನ ಮತ್ತು ನಿರ್ಧಾರಗಳನ್ನು ತೆಗೆದುಕೊಳ್ಳುವ ಶೈಲಿಯನ್ನು ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದವೆಂದು
Bengaluru | ‘ಅಡುಗೆ ಅನಿಲದ ಬೆಲೆ ಏರಿಕೆ’ ಖಂಡಿಸಿ ಕಾಂಗ್ರೆಸ್ ವಿನೂತನ ಪ್ರತಿಭಟನೆ
ಬೆಂಗಳೂರು : ಅಡುಗೆ ಅನಿಲದ ಬೆಲೆ ಏರಿಕೆ ಮತ್ತು ಪ್ರಧಾನಿ ಮೋದಿ ‘ಗಟಾರ್ ಗ್ಯಾಸ್’ ಹೇಳಿಕೆ ವಿರುದ್ಧ ವಿನೂತನ ಅಣಕು ಪ್ರದರ್ಶನ ನಡೆಸಿ ಬೆಂಗಳೂರಿನ ರೇಸ್ ಕೋರ್ಸ್ ರಸ್ತೆಯ ಕಾಂಗ್ರೆಸ್ ಭವನದ ಬಳಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಸ್.ಮನೋಹರ್ ನೇತೃತ್ವದಲ್ಲಿ ಶನಿವಾರ ಪ್ರತಿಭಟನೆ ನಡೆಸಲಾಯಿತು. ಪ್ರತಿಭಟನೆಯಲ್ಲಿ ಪ್ರಧಾನಿ ಮೋದಿ ಹೇಳಿರುವ ‘ಗಟಾರ್ ಗ್ಯಾಸ್’ ಕುರಿತ ಅವೈಜ್ಞಾನಿಕ ಹೇಳಿಕೆಗಳನ್ನು ಖಂಡಿಸಿ, ದೇಶದ ಜನತೆಗೆ ದಾರಿ ತಪ್ಪಿಸುವ ರೀತಿಯ ಹೇಳಿಕೆಗಳ ಬಗ್ಗೆ ಆಕ್ರೋಶ ವ್ಯಕ್ತಪಡಿಸಲಾಯಿತು. ಈ ವೇಳೆ ಮಾತನಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಸ್.ಮನೋಹರ್, ದೇಶದ ಜನರಿಗೆ ಅಡುಗೆ ಅನಿಲ ಸಿಲಿಂಡರ್ ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವಾಗ ಕೇಂದ್ರ ಸರಕಾರದ ಜವಾಬ್ದಾರಿ ಏನು?. ಜನರ ಕಷ್ಟಕ್ಕೆ ಪರಿಹಾರ ನೀಡುವುದು ಸರಕಾರದ ಆದ್ಯ ಕರ್ತವ್ಯ. ಆದರೆ, ಕೇಂದ್ರ ಸರಕಾರ ಪ್ರಚಾರದಲ್ಲೇ ತೊಡಗಿಕೊಂಡಿದೆ. ವಿಜ್ಞಾನ ಮತ್ತು ತಂತ್ರಜ್ಞಾನದ ಬಗ್ಗೆ ಮಾತನಾಡುವ ಪ್ರಧಾನಿಯವರು ‘ಗಟಾರ್ ಗ್ಯಾಸ್’ ಎಂಬ ಅವೈಜ್ಞಾನಿಕ ಹೇಳಿಕೆಗಳನ್ನು ನೀಡುವುದು ಎಷ್ಟು ಸರಿ? ಇದು ದೇಶದ ಯುವಕರಿಗೂ ಮತ್ತು ವಿಜ್ಞಾನ ಮನೋಭಾವಕ್ಕೂ ತಪ್ಪು ಸಂದೇಶ ನೀಡುವಂತಾಗಿದೆ ಎಂದು ಖಂಡಿಸಿದರು. ಜನರು ದುಬಾರಿ ಗ್ಯಾಸ್ ದರದಿಂದ ತೀವ್ರ ಸಂಕಷ್ಟದಲ್ಲಿದ್ದು, ಈ ಸಂದರ್ಭದಲ್ಲಿ ಕೇಂದ್ರ ಸರಕಾರದ ಆದ್ಯತೆ ಏನು ಎಂಬುದರ ಬಗ್ಗೆ ಮೋದಿ ಸರಕಾರ ಉತ್ತರ ನೀಡಬೇಕು. ಜನರಿಗೆ ಪರಿಹಾರ ನೀಡುವ ಬದಲು ಪ್ರಚಾರ ಮತ್ತು ರಾಜಕೀಯ ಭಾಷಣಗಳೇ ಹೆಚ್ಚಾಗಿವೆ. ಸಂಸತ್ತಿನಲ್ಲಿ ಲೋಕಸಭೆ ವಿರೋಧ ಪಕ್ಷ ನಾಯಕ ರಾಹುಲ್ ಗಾಂಧಿ ಅವರ ಪ್ರಶ್ನೆಗಳಿಗೆ ಉತ್ತರ ನೀಡದೆ ತಪ್ಪಿಸಿಕೊಳ್ಳುವುದು ಏಕೆ? ಪ್ರಜಾಪ್ರಭುತ್ವದಲ್ಲಿ ಪ್ರಶ್ನೆಗಳಿಗೆ ಉತ್ತರಿಸುವುದು ಸರಕಾರದ ಕರ್ತವ್ಯ ಎಂಬುದನ್ನು ಪ್ರಧಾನಿ ಮೋದಿ ಅವರು ಮರೆತಿದ್ದಾರೆ ಎಂದು ಎಸ್.ಮನೋಹರ್ ಆಕ್ರೋಶ ವ್ಯಕ್ತಪಡಿಸಿದರು. ಇದೇ ವೇಳೆ ಜನರ ಸಮಸ್ಯೆಗಳಿಗೆ ಉತ್ತರ ನೀಡುವಲ್ಲಿ ವಿಫಲವಾಗಿರುವ ಪ್ರಧಾನಿ ಮೋದಿ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಲಾಯಿತು. ಪ್ರತಿಭಟನೆಯಲ್ಲಿ ಕೆಪಿಸಿಸಿ ವಕ್ತಾರರಾದ ಆನಂದ್ಕುಮಾರ್ ಎಂ.ಎಸ್., ಪ್ರಕಾಶ್, ಒಬಳೇಶ್, ಚಿನ್ನಿಪ್ರಕಾಶ್, ಹೇಮರಾಜ್, ಪುಟ್ಟರಾಜು, ಸುಂಕದಕಟ್ಟೆ ನವೀನ್, ಕುಶಾಲ್ ಹರವೇಗೌಡ, ಸಾಯಿ ನವೀನ್, ಪ್ರವೀಣ್ ರಾವ್, ಬಾಲಾಜಿ ಡಿ. ಸೇರಿದಂತೆ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.
42 ಸಾವಿರ ಕೋಟಿ ಸಾಲದಲ್ಲಿವೆ ರಾಜ್ಯದ ವಿದ್ಯುತ್ ಸರಬರಾಜು ಕಂಪನಿಗಳು! ವಿವಿಧ ಇಲಾಖೆಗಳಿಂದಲೂ ಕರೆಂಟ್ ಬಿಲ್ ಬಾಕಿ
ರಾಜ್ಯದ ಐದು ರಾಜ್ಯದ ವಿದ್ಯುತ್ ಸರಬರಾಜು ಕಂಪನಿಗಳು ರೂ. 42,750 ಕೋಟಿ ಸಾಲದಲ್ಲಿದೆ. ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ವಿದ್ಯುತ್ ಬೇಡಿಕೆಯ ಹಿನ್ನೆಲೆಯಲ್ಲಿ ಬಂಡವಾಳದ ಅಗತ್ಯತೆಗಳನ್ನು ಪೂರೈಸಲು ಸಾಲದ ಮೊರೆ ಹೋಗಿವೆ. ಇನ್ನು ರಾಜ್ಯ ಸರ್ಕಾರದ ವಿವಿಧ ಇಲಾಖೆಗಳು ಮತ್ತು ಸಂಸ್ಥೆಗಳಿಂದಲೂ ವಿದ್ಯುತ್ ಸರಬರಾಜು ಕಂಪನಿಗಳಿಗೆ ಪಾವತಿ ಬಾಕಿ ಇದೆ. ಇದನ್ನು ಪಡೆದುಕೊಳ್ಳಲು ಕೆಲವೊಂದು ಕ್ರಮಗಳನ್ನು ಕೈಗೊಳ್ಳಲಾಗಿದೆ. ಹಾಗಾದರೆ ಯಾವ ಸಂಸ್ಥೆಯಿಂದ ಎಷ್ಟು ಬಾಕಿ ಇದೆ? ಅದನ್ನು ಪಡೆದುಕೊಳ್ಳಲು ಕೈಗೊಂಡ ಕ್ರಮಗಳೇನು? ಎಂಬ ಮಾಹಿತಿ ಇಲ್ಲಿದೆ.
ಬಳ್ಳಾರಿ | ಮಹಿಳಾ ಸಬಲೀಕರಣ ಮಹೋತ್ಸವ : ಸಾಧಕಿಯರಿಗೆ ಸನ್ಮಾನ,
ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ
ವಿಜಯನಗರ | ರಮಝಾನ್-ಯುಗಾದಿ ಹಬ್ಬ : ಪೊಲೀಸರಿಂದ ಶಾಂತಿ ಸಭೆ
ವಿಜಯನಗರ / ಹೊಸಪೇಟೆ: ನಗರದ ಪಟ್ಟಣ ಪೊಲೀಸ್ ಠಾಣೆಯಲ್ಲಿ ರಮಝಾನ್ ಹಾಗೂ ಯುಗಾದಿ ಹಬ್ಬದ ಪ್ರಯುಕ್ತ ಸರ್ವಧರ್ಮದ ಮುಖಂಡರೊಂದಿಗೆ ಪೊಲೀಸ್ ಠಾಣಾಧಿಕಾರಿ ಹುಲುಗಪ್ಪ ರವರ ನೇತೃತ್ವದಲ್ಲಿ ಶಾಂತಿ ಸಭೆ ಆಯೋಜಿಸಲಾಯಿತು. ಶಾಂತಿ ಸಭೆಯಲ್ಲಿ ಪೊಲೀಸ್ ಠಾಣಾಧಿಕಾರಿಗಳು ಹಬ್ಬಗಳನ್ನು ಶಾಂತಿಯುತವಾಗಿ ಮತ್ತು ವಿಜೃಂಭಣೆಯಿಂದ ಆಚರಿಸುವಂತೆ ಸೂಚಿಸಿದ್ದರು. ಯಾವುದೇ ಅಹಿತಕರ ಘಟನೆ ಸಂಭವಿಸದಂತೆ ಜಾಗೃತಿ ವಹಿಸಲು ಮತ್ತು ಹಬ್ಬವನ್ನು ಶಾಂತಿಪೂರಿತವಾಗಿ ಆಚರಿಸಲು ಎಲ್ಲಾ ಮುಖಂಡರಿಗೆ ವಿನಂತಿಸಲಾಯಿತು. ತೊಂದರೆ ಉಂಟುಮಾಡಬಹುದಾದ ಲೌಡ್ ಸ್ಪೀಕರ್ಗಳು ಅಥವಾ ಪ್ರಚೋದನಕಾರಿ ಬ್ಯಾನರ್ಗಳನ್ನು ಅಳವಡಿಸಬಾರದು ಎಂದು ಸೂಚನೆ ನೀಡಲಾಯಿತು. ಘಟನೆಗಳಿಗೆ ಸಂಬಂಧಿಸಿದ ಯಾವುದೇ ಮಾಹಿತಿ ಇದ್ದಲ್ಲಿ ತಕ್ಷಣ 112 ಗೆ ಕರೆಮಾಡಿ ಅಥವಾ ಸ್ಥಳೀಯ ಪೊಲೀಸರನ್ನು ಸಂಪರ್ಕಿಸುವಂತೆ ಸಹ ಶಾಂತಿ ಸಭೆಯಲ್ಲಿ ಸೂಚಿಸಲಾಯಿತು.
ಉತ್ತರ ಕೊರಿಯಾ ಸರ್ವಾಧಿಕಾರಿ ವರ್ತನೆಗೆ ಬೆಚ್ಚಿಬಿದ್ದ ಜಪಾನ್ ಮತ್ತು ದಕ್ಷಿಣ ಕೊರಿಯಾ | Kim Jong Un
ಇರಾನ್ ಹಾಗೂ ಅಮೆರಿಕ ನಡುವೆ ಯುದ್ಧ ನಡೆಯುವಾಗಲೇ ಉತ್ತರ ಕೊರಿಯಾ ಕೂಡ ಭರ್ಜರಿಯಾಗಿ ಎಂಟ್ರಿ ಕೊಟ್ಟಿದೆ. ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಮೊದಲೇ ಹುಚ್ಚುದೊರೆ, ಜಗತ್ತಿಗೆ ಕಂಟಕ ಎಂಬ ಆರೋಪ ಹೊತ್ತಿದ್ದಾನೆ. ಹಾಗೇ ತನ್ನ ಶತ್ರು ದೇಶಗಳ ಮೇಲೆ ಪದೇ, ಪದೇ ದಾಳಿ ಮಾಡುವ ಬೆದರಿಕೆ ಕೂಡ ಹಾಕುತ್ತಾ ಇರುತ್ತಾನೆ ಕಿಮ್ ಜಾಂಗ್ ಉನ್.
ಗಂಗಾವತಿ | ಫ್ಯಾನ್ಸಿ ಅಂಗಡಿಯಲ್ಲಿ ನೋವು ನಿವಾರಕ ಮಾತ್ರೆಗಳ ಅಕ್ರಮ ಮಾರಾಟ : ಪ್ರಕರಣ ದಾಖಲು
ಗಂಗಾವತಿ | ಫ್ಯಾನ್ಸಿ ಅಂಗಡಿಯಲ್ಲಿ ನೋವು ನಿವಾರಕ ಮಾತ್ರೆಗಳ ಅಕ್ರಮ ಮಾರಾಟ : ಪ್ರಕರಣ ದಾಖಲು ಗಂಗಾವತಿ: ವೈದ್ಯರ ಚೀಟಿ ಇಲ್ಲದೆ ನೋವು ನಿವಾರಕ ಮಾತ್ರೆಗಳನ್ನು ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ಫ್ಯಾನ್ಸಿ ಅಂಗಡಿ ಮಾಲಕನ ವಿರುದ್ಧ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಗರದ ನೀಲಕಂಠೇಶ್ವರ ಕ್ಯಾಂಪ್ ಪ್ರದೇಶದ ಶಾಮಿಯಾನ ಕಾರ್ಮಿಕನೊಬ್ಬ ಮೈಕೈ ನೋವಿಗಾಗಿ ಸ್ನೇಹಿತರ ಸಲಹೆಯಂತೆ ಕೆಲವು ನೋವು ನಿವಾರಕ ಮಾತ್ರೆಗಳನ್ನು ಸೇವಿಸಲು ಆರಂಭಿಸಿದ್ದನು. ಕ್ರಮೇಣ, ಅವನು ಆ ಮಾತ್ರೆಗಳ ಅಮಲಿಗೆ ಒಳಗಾಗಿದ್ದಾನೆ ಎನ್ನಲಾಗಿದೆ. ಹೆಚ್ಚಿನ ಪ್ರಮಾಣದ ಅಮಲು ಪಡೆಯಲು, ಅವನು ಮಾತ್ರೆಗಳನ್ನು ಪುಡಿ ಮಾಡಿ ನೀರಿನಲ್ಲಿ ಕಲಸಿ ಇಂಜೆಕ್ಷನ್ ಮೂಲಕ ನರಗಳಿಗೆ ಚುಚ್ಚಿಸುತ್ತಿದ್ದನೆಂದು ಪೊಲೀಸರು ತಿಳಿಸಿದ್ದಾರೆ. ದುರ್ಗಾದೇವಿ ಗುಡಿ ಸಮೀಪದ ‘ಕೃಷ್ಣಾ ಫ್ಯಾನ್ಸಿ ಸ್ಟೋರ್’ನ ಕಿಶನ್ ಕುಮಾರ್ ಎಂಬಾತ ವೈದ್ಯರ ಚೀಟಿ ಇಲ್ಲದೆ ಮಾತ್ರೆಗಳನ್ನು ಮಾರಾಟ ಮಾಡುತ್ತಿದ್ದನೆಂಬ ಆರೋಪ ದಾಖಲಾಗಿದ್ದು, ಎರಡು ಮಾತ್ರೆಗಳಿಗೆ 300 ರೂ. ಪಡೆಯುತ್ತಾ ಮಾರಾಟ ಮಾಡುತ್ತಿದ್ದಾನೆ ಎಂಬ ಮಾಹಿತಿ ದೊರಕಿದೆ. ಈ ಚಟಕ್ಕೆ ಒಳಗಾದ ಕೆಲವು ಯುವಕರ ಆರೋಗ್ಯ ಹದಗೆಟ್ಟಿದ್ದು, ಹಣಕ್ಕಾಗಿ ಮನೆಯಲ್ಲಿಯೇ ಕಳ್ಳತನ ಮಾಡುವ ಮಟ್ಟಕ್ಕೂ ಇಳಿದಿದ್ದಾರೆ ಎಂಬ ಮಾಹಿತಿ ಪೊಲೀಸರು ಪಡೆದಿದ್ದಾರೆ. ಸಂತ್ರಸ್ತ ಯುವಕ ನೀಡಿದ ದೂರಿನ ಮೇರೆಗೆ, ನಗರ ಠಾಣೆಯ ಪಿಐ ಪ್ರಕಾಶ ಮಾಳಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಹಿಲ್, ಸೋಹೇಬ್ ಸೇರಿದಂತೆ ಹಲವರು ಈ ಜಾಲದಲ್ಲಿ ಸಿಲುಕಿರುವುದು ತನಿಖೆಯಲ್ಲಿ ತಿಳಿದುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಚಿಂಚೋಳಿ | ಪೋಲಕಪಳ್ಳಿ ಮ್ಯಾಟ್ರಿಕ್ಸ್ ಆಗ್ರೋ ಕಂಪನಿ ದಿಢೀರ್ ಬಂದ್ : ಕಾರ್ಮಿಕರಿಂದ ಸಚಿವ ಪ್ರಿಯಾಂಕ್ ಖರ್ಗೆಗೆ ಮನವಿ
ಚಿಂಚೋಳಿ: ಪೋಲಕಪಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಮ್ಯಾಟ್ರಿಕ್ಸ್ ಆಗ್ರೋ ಪ್ರೈವೇಟ್ ಲಿಮಿಟೆಡ್ ಕಂಪನಿ ಕಾರ್ಮಿಕ ಇಲಾಖೆ ನಿಯಮ ಉಲ್ಲಂಘಿಸಿ ದಿಢೀರ್ ಬೀಗ ಜಡಿಸಿದ ಪರಿಣಾಮ ಸುಮಾರು 120 ಕಾರ್ಮಿಕರ ಬದುಕು ಸಂಕಷ್ಟಕ್ಕೆ ಸಿಲುಕಿದೆ. ಈ ಬಗ್ಗೆ ಸ್ಥಳೀಯ ಕಾರ್ಮಿಕ ಮೋರ್ಚಾದ ಪದಾಧಿಕಾರಿಗಳು ಶನಿವಾರ ಜಿಲ್ಲೆ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಮನವಿ ಸಲ್ಲಿಸಿ ತಕ್ಷಣ ಹಸ್ತಕ್ಷೇಪ ಮಾಡಿ ಕಾರ್ಮಿಕರಿಗೆ ನ್ಯಾಯ ಒದಗಿಸುವಂತೆ ಆಗ್ರಹಿಸಿದ್ದಾರೆ. ಮೂಲನಿವಾಸಿ ಕಾರ್ಮಿಕರ ಪ್ರಕಾರ, ಕಳೆದ 15–20 ವರ್ಷಗಳಿಂದ ನೂರಾರು ಕಾರ್ಮಿಕರು ಈ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಆದರೆ ಫೆಬ್ರವರಿ 5, 2026ರ ಮಧ್ಯರಾತ್ರಿ ಕಂಪನಿಯ ಆಡಳಿತ ಮಂಡಳಿ ಯಾವುದೇ ಮುನ್ಸೂಚನೆ ನೀಡದೆ ಕಾರ್ಖಾನೆಯ ಮುಖ್ಯ ದ್ವಾರಕ್ಕೆ ಬೀಗ ಹಾಕಿದ್ದು, ಕಾರ್ಮಿಕರಿಗೆ ತೀವ್ರ ಸಂಕಷ್ಟ ಉಂಟಾಗಿದೆ. ಕನ್ನಡ ಸರ್ಕಾರಿ ಕಾರ್ಖಾನೆ ನಿಯಮಗಳ ಪ್ರಕಾರ, ಯಾವುದೇ ಕಂಪನಿಯನ್ನು ಮುಚ್ಚಲು ಕನಿಷ್ಠ 90 ದಿನಗಳ ಮುಂಚಿತ ಸೂಚನೆ ನೀಡಬೇಕು ಮತ್ತು ಕಾರ್ಮಿಕರಿಗೆ ಬಾಕಿ ವೇತನ ಮತ್ತು ಇತರ ಸೌಲಭ್ಯಗಳನ್ನು ಪಾವತಿಸಬೇಕು. ಆದರೆ ಮ್ಯಾಟ್ರಿಕ್ಸ್ ಆಗ್ರೋ ಕಂಪನಿ ಈ ನಿಯಮಗಳನ್ನು ಪಾಲಿಸದೆ ಕಾರ್ಮಿಕರ ಬದುಕಿನೊಂದಿಗೆ ಆಟವಾಡುತ್ತಿದೆ ಎಂದು ಮೋರ್ಚಾದ ಮುಖಂಡರು ಆರೋಪಿಸಿದ್ದಾರೆ. ಮೋರ್ಚಾದ ಪದಾಧಿಕಾರಿಗಳು ಒತ್ತಾಯಿಸಿದ್ದಾರೆ: ಬಾಕಿ ಸಂಬಳ, ಬೋನಸ್ ಮತ್ತು ಇತರ ಭತ್ಯೆಗಳನ್ನು ತಕ್ಷಣ ಬಿಡುಗಡೆ ಮಾಡಬೇಕು; ಕಂಪನಿ ಆರಂಭದಿಂದಲೇ ನಿಗದಿಪಡಿಸಲಾದ ಕನಿಷ್ಠ ವೇತನ ನೀಡಲಾಗಿಲ್ಲ; ಕಾರ್ಮಿಕರಿಗೆ ಪಾವತಿಸಬೇಕಾದ ಗ್ರಾಚ್ಯುಟಿ, ಕಂಪನ್ಸೇಷನ್, ಪಿಎಫ್ ಮತ್ತು ಓವರ್ಟೈಮ್ ಬಾಕಿ ಹಣವನ್ನು ಕೂಡ ತಕ್ಷಣ ನೀಡಬೇಕು. ಮಾರುತಿ ಗಂಜಗಿರಿ, ವೀರೇಶ ತಾಂಡೂರ, ಹಣಮಂತ ಗೌರಿ ಸೇರಿದಂತೆ ಮುಖಂಡರು, “ಕಾರ್ಮಿಕ ಇಲಾಖೆ ನಿರ್ಲಕ್ಷ್ಯ ವಹಿಸಿರುವುದರಿಂದ ಕಂಪನಿ ಕಾನೂನು ಉಲ್ಲಂಘನೆ ಮಾಡುತ್ತಿದೆ. ರಾಜ್ಯ ಸಚಿವರು ತಕ್ಷಣ ಮಧ್ಯಪ್ರವೇಶಿಸಿ ನೊಂದ ಕಾರ್ಮಿಕರಿಗೆ ನ್ಯಾಯ ಒದಗಿಸಬೇಕು” ಎಂದು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಸೈಯದ್ ಶಕೀಲ್, ಆನಂದ ಚಿಂಚೋಳಿಕರ್, ಪ್ರಲ್ಹಾದ್ ಬೊವಿ, ರಾಘವೇಂದ್ರ ಚಾಂಗಲೇರಾ ಸೇರಿದಂತೆ ಕಂಪನಿಯ ನೂರಾರು ಕಾರ್ಮಿಕರು ಉಪಸ್ಥಿತರಿದ್ದರು.
ಇರಾನ್ ಯುದ್ಧ ನಿರ್ಣಾಯಕ ಹಂತ ಪ್ರವೇಶಿಸಿದೆ : ಇಸ್ರೇಲ್
ಜೆರುಸಲೇಂ, ಮಾ.14: ಇರಾನ್ನೊಂದಿಗಿನ ಯುದ್ಧವು ನಿರ್ಣಾಯಕ ಹಂತವನ್ನು ಪ್ರವೇಶಿಸಿದೆ ಎಂದು ಇಸ್ರೇಲ್ ರಕ್ಷಣಾ ಸಚಿವ ಇಸ್ರೇಲ್ ಕಾಟ್ಝ್ ಶನಿವಾರ ಹೇಳಿದ್ದು ಇರಾನ್ನ ಪ್ರಮುಖ ರಫ್ತು ಕೇಂದ್ರ ಖಾರ್ಗ್ ದ್ವೀಪದ ಮಿಲಿಟರಿ ಗುರಿಗಳ ಮೇಲೆ ಅಮೆರಿಕ ನಡೆಸಿರುವ ದಾಳಿಯನ್ನು ಶ್ಲಾಘಿಸಿದ್ದಾರೆ. ಅಮೆರಿಕ ಅಧ್ಯಕ್ಷ ಟ್ರಂಪ್ ಮತ್ತು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ನೇತೃತ್ವದಲ್ಲಿ ಇರಾನ್ ವಿರುದ್ಧ ನಡೆಯುತ್ತಿರುವ ಜಾಗತಿಕ ಮತ್ತು ಪ್ರಾದೇಶಿಕ ಸಂಘರ್ಷವು ಉಲ್ಬಣಿಸುತ್ತಿದೆ ಮತ್ತು ನಿರ್ಣಾಯಕ ಹಂತವನ್ನು ತಲುಪಿದೆ. ಇದು ಅಗತ್ಯವಿರುವಷ್ಟು ಸಮಯ ಮುಂದುವರಿಯುತ್ತದೆ' ಎಂದು ಕಾಟ್ಝ್ ಹೇಳಿರುವುದಾಗಿ ವರದಿಯಾಗಿದೆ. ಮಧ್ಯಪ್ರಾಚ್ಯ ಸಂಘರ್ಷಕ್ಕೆ ಸಂಬಂಧಿಸಿದ ಕೆಲವು ಪ್ರಮುಖ ಬೆಳವಣಿಗೆಗಳು: ಶನಿವಾರ ಮಿಲಿಟರಿ ಕಾರ್ಯಾಚರಣೆ ನಡೆಯಲಿರುವುದರಿಂದ ಇರಾನ್ನ ಉತ್ತರದ ನಗರ ತಬ್ರೀಝ್ನ ಪಶ್ಚಿಮದಲ್ಲಿರುವ ಕೈಗಾರಿಕಾ ವಲಯದ ಜನರು ಸ್ಥಳಾಂತರಗೊಳ್ಳುವಂತೆ ಇಸ್ರೇಲ್ ಮಿಲಿಟರಿ `ಎಕ್ಸ್'ನಲ್ಲಿ ಎಚ್ಚರಿಕೆ ಸಂದೇಶ ರವಾನಿಸಿದೆ. ನೆದರ್ಲ್ಯಾಂಡ್ನ ಆಮ್ಸ್ಟರ್ಡಂ ನಗರದ ಯೆಹೂದಿ ಶಾಲೆಯಲ್ಲಿ ಶನಿವಾರ ಬೆಳಿಗ್ಗೆ ಸಂಭವಿಸಿದ ಸ್ಫೋಟದಲ್ಲಿ ಶಾಲೆಗೆ ಹಾನಿಯಾಗಿದೆ. ಇದು ಯೆಹೂದಿ ಸಮುದಾಯವನ್ನು ಗುರಿಯಾಗಿಸಿದ ಉದ್ದೇಶಪೂರ್ವಕ ದಾಳಿ ಎಂದು ನಗರದ ಮೇಯರ್ ಅನ್ನು ಉಲ್ಲೇಖಿಸಿ ರಾಯ್ಟರ್ಸ್ ವರದಿ ಮಾಡಿದೆ. ಸುಮಾರು 2,500 ಸಿಬ್ಬಂದಿಗಳ ಸಹಿತ ಯುಎಸ್ಎಸ್ ಟ್ರಿಪೋಲಿ ಸಮರ ನೌಕೆಯನ್ನು ಅಮೆರಿಕ ಮಧ್ಯಪ್ರಾಚ್ಯದತ್ತ ರವಾನಿಸಿರುವುದಾಗಿ ವರದಿಯಾಗಿದೆ. ಇರಾನ್ ರಾಜಧಾನಿ ಟೆಹ್ರಾನ್ನಲ್ಲಿ ಶುಕ್ರವಾರ ತಡರಾತ್ರಿ, ಖತರ್ ರಾಜಧಾನಿ ದೋಹದಲ್ಲಿ ಶನಿವಾರ ಬೆಳಿಗ್ಗೆ ಸ್ಫೋಟ ಸಂಭವಿಸಿರುವುದಾಗಿ ವರದಿಯಾಗಿದೆ. ಟೆಹ್ರಾನ್ನಾದ್ಯಂತ ಶನಿವಾರ ನಡೆಸಿದ ವೈಮಾನಿಕ ದಾಳಿಯಲ್ಲಿ ಇರಾನ್ನ ಪ್ರಮುಖ ಬಾಹ್ಯಾಕಾಶ ಸಂಶೋಧನಾ ಕೇಂದ್ರ ಮತ್ತು ವಾಯು ರಕ್ಷಣಾ ವ್ಯವಸ್ಥೆಗ ಫ್ಯಾಕ್ಟರಿಯನ್ನು ಗುರಿಯಾಗಿಸಲಾಗಿದೆ ಎಂದು ಇಸ್ರೇಲ್ ಮಿಲಿಟರಿ ಹೇಳಿದೆ. ಮಧ್ಯಪ್ರಾಚ್ಯದಾದ್ಯಂತ ಅಮೆರಿಕ ನೆಲೆಗಳು ಹಾಗೂ ಇಸ್ರೇಲ್ ಮೇಲೆ ಇರಾನ್ನಿಂದ ಕ್ಷಿಪಣಿ ಹಾಗೂ ಡ್ರೋನ್ಗಳ ಸುರಿಮಳೆ.
ಕಲಬುರಗಿ | ಝರತ್ ಖ್ವಾಜಾ ಬಂದೇ ನವಾಝ್ ದರ್ಗಾದಲ್ಲಿ ಭವ್ಯ ದಾವತ್-ಎ-ಇಫ್ತಾರ್ ಆಯೋಜನೆ
ಕಲಬುರಗಿ: ಕಲಬುರಗಿಯ ಐತಿಹಾಸಿಕ ಹಝರತ್ ಖ್ವಾಜಾ ಬಂದೇ ನವಾಝ್ ದರ್ಗಾದ ಸಜ್ಜಾದ ನಶೀನ್ ಹಾಗೂ ಕರ್ನಾಟಕ ರಾಜ್ಯ ವಕ್ಫ್ ಮಂಡಳಿಯ ಅಧ್ಯಕ್ಷರಾದ ಹಝರತ್ ಡಾ.ಹಫೀಝ್ ಸೈಯದ್ ಮುಹಮ್ಮದ್ ಅಲಿ ಅಲ್ ಹುಸೈನಿ ಸಾಹೇಬ್ ಅವರಿಂದ ಶನಿವಾರ ಸಂಜೆ ಭವ್ಯವಾದ ದಾವತ್-ಎ-ಇಫ್ತಾರ್ ಮತ್ತು ಊಟದ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಶರಣಬಸವೇಶ್ವರ ದೇವಸ್ಥಾನದ ದೊಡ್ಡಪ್ಪ ಅಪ್ಪಾಜಿ, ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ, ತೆಲಂಗಾಣದ ರಾಜ್ಯದ ಸಾರ್ವಜನಿಕ ಉದ್ಯಮಗಳು ಮತ್ತು ಅಲ್ಪಸಂಖ್ಯಾತ ಕಲ್ಯಾಣ ಸಚಿವರಾದ ಜನಾಬ್ ಮುಹಮ್ಮದ್ ಅಝರುದ್ದೀನ್, ಎಂಎಲ್ಸಿ ಜನಾಬ್ ಸಲೀಂ ಅಹ್ಮದ್, ಶರಣಬಸವೇಶ್ವರ ವಿದ್ಯಾ ವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ್ ದೇಶಮುಖ, ಕೆಬಿಎನ್ ವಿಶ್ವವಿದ್ಯಾಲಯದ ನಿರ್ದೇಶಕರಾದ ಡಾ.ಸೈಯದ್ ಮುಸ್ತಫಾ ಹುಸೈನಿ, ಉಪಕುಲಪತಿ ಪ್ರೊ. ಅಲಿ ರಝಾ ಮೊಸ್ವಿ, ಪ್ರೋ-ವೈಸ್ ಚಾನ್ಸೆಲರ್ ಅಶ್ಫಾಜ್ ಅಹ್ಮದ್, ಹಾಗೂ ರಿಜಿಸ್ಟ್ರಾರ್ ಮಿರ್ ವಿಲಾಯತ್ ಅಲಿ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.
ಟ್ರಂಪ್ ಅವರ ಜನಾಂಗೀಯ ದ್ವೇಷಭಾಷಣ ಮಾನವ ಹಕ್ಕುಗಳನ್ನು ಉಲ್ಲಂಘಿಸುತ್ತದೆ : ವಿಶ್ವಸಂಸ್ಥೆ ಬೆಂಬಲಿತ ಸಮಿತಿ ಕಳವಳ
ಜಿನೆವಾ, ಮಾ.14: ಜನಾಂಗೀಯ ತಾರತಮ್ಯದ ಬಗ್ಗೆ ವಿಶ್ವಸಂಸ್ಥೆ ಬೆಂಬಲಿತ ಸ್ವತಂತ್ರ ತಜ್ಞರ ಸಮಿತಿಯು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಅಮೆರಿಕದ ಇತರ ರಾಜಕೀಯ ನಾಯಕರ ಜನಾಂಗೀಯ ದ್ವೇಷ ಭಾಷಣದಿಂದ ಉಂಟಾದ ಗಂಭೀರ ಮಾನವ ಹಕ್ಕುಗಳ ಉಲ್ಲಂಘನೆಯನ್ನು ಎತ್ತಿ ತೋರಿಸಿದೆ. ಜೊತೆಗೆ, ಅಮೆರಿಕದಲ್ಲಿ ವಲಸೆಯನ್ನು ಹತೋಟಿಗೆ ತರುವ ಕಾರ್ಯಾಚರಣೆಗಳ ಬಗ್ಗೆಯೂ ಸಮಿತಿ ಕಳವಳ ವ್ಯಕ್ತಪಡಿಸಿದೆ. `ಜನಾಂಗೀಯ ತಾರತಮ್ಯ ನಿವಾರಣಾ ಸಮಿತಿ' ಬುಧವಾರ ಬಿಡುಗಡೆಗೊಳಿಸಿರುವ ವರದಿಯಲ್ಲಿ ಶಾಲೆಗಳು, ಆಸ್ಪತ್ರೆಗಳು ಹಾಗೂ ನಂಬಿಕೆ - ಆಧಾರಿತ ಸಂಸ್ಥೆಗಳ ಬಳಿ ವಲಸೆ ಜಾರಿ ಕಾರ್ಯಾಚರಣೆಗಳನ್ನು ನಿಲ್ಲಿಸಲು ಅಮೆರಿಕವನ್ನು ಒತ್ತಾಯಿಸಲಾಗಿದೆ. ವಲಸಿಗರು, ನಿರಾಶ್ರಿತರು ಮತ್ತು ಆಶ್ರಯ ಪಡೆಯುವವರ ಬಗ್ಗೆ ಅವಹೇಳನಕಾರಿ ಮತ್ತು ಅಮಾನವೀಯ ಭಾಷೆಯ ಬಳಕೆಯ ಬಗ್ಗೆ ಸಮಿತಿ ಆತಂಕ ವ್ಯಕ್ತಪಡಿಸಿದೆ. ರಾಜಕಾರಣಿಗಳು ಮತ್ತು ಪ್ರಭಾವಿ ವ್ಯಕ್ತಿಗಳು, ವಿಶೇಷವಾಗಿ ಅಧ್ಯಕ್ಷರು ಅವರನ್ನು (ವಲಸಿಗರು, ನಿರಾಶ್ರಿತರು) ಅಪರಾಧಿಗಳು ಅಥವಾ ಹೊರೆ ಎಂದು ಬಿಂಬಿಸುವುದು ಜನಾಂಗೀಯ ತಾರತಮ್ಯ ಮತ್ತು ದ್ವೇಷಾಪರಾಧವನ್ನು ಪ್ರಚೋದಿಸಬಹುದು' ಎಂದು ಸಮಿತಿ ಹೇಳಿದೆ. `ಪೂರ್ವಾಗ್ರಹ ಪೀಡಿತ ವಿಶ್ವಸಂಸ್ಥೆಯ ತಥಾಕಥಿತ ತಜ್ಞರ ಸಮಿತಿ ಏನು ಯೋಚಿಸುತ್ತಾರೆ ಎಂಬ ಬಗ್ಗೆ ಯಾರೂ ತಲೆಕೆಡಿಸಿಕೊಳ್ಳುವುದಿಲ್ಲ. ಏಕೆಂದರೆ ಅಮೆರಿಕನ್ನರು ಹಿಂದೆಂದಿಗಿಂತಲೂ ಸುರಕ್ಷಿತ, ಬಲಿಷ್ಠ ದೇಶದಲ್ಲಿ ವಾಸಿಸುತ್ತಿದ್ದಾರೆ. ಈ ವಿಶ್ವಸಂಸ್ಥೆಯ ಮೌಲ್ಯಮಾಪನವು ನಿಷ್ಪ್ರಯೋಜಕವಾಗಿದೆ ಮತ್ತು ಅವರನ್ನು ಯಾಕೆ ಯಾರೂ ಗಂಭೀರವಾಗಿ ಪರಿಗಣಿಸಿಲ್ಲ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದೆ' ಎಂದು ಶ್ವೇತಭವನದ ವಕ್ತಾರೆ ಒಲಿವಿಯಾ ವೇಲ್ಸ್ ಪ್ರತಿಕ್ರಿಯಿಸಿದ್ದಾರೆ.
ಹುಲಸೂರ್ | ಕ್ರೂಸರ್ ವಾಹನ ಪಲ್ಟಿ : ವ್ಯಕ್ತಿ ಮೃತ್ಯು
ಹುಲಸೂರ್ : ಕ್ರೂಸರ್ ವಾಹನ ಪಲ್ಟಿಯಾದ ಪರಿಣಾಮ ಮಹಾರಾಷ್ಟ್ರ ಮೂಲದ ವ್ಯಕ್ತಿ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಹುಲಸೂರ ತಾಲೂಕಿನ ಹಣಮಂತವಾಡಿ ಗ್ರಾಮದ ಹತ್ತಿರ ಶುಕ್ರವಾರ ಸಂಜೆ ನಡೆದಿದೆ. ಮೃತ ವ್ಯಕ್ತಿಯನ್ನು ಮಹಾರಾಷ್ಟ್ರ ರಾಜ್ಯದ ನಿಲಂಗಾ ಗ್ರಾಮದ ನಿವಾಸಿ ಸಂದೀಪ್ ವಡಕಲೆ (35) ಎಂದು ಗುರುತಿಸಲಾಗಿದೆ. ಮೂಲಗಳ ಪ್ರಕಾರ, ಬುಧವಾರ ಸಂಜೆ ಸುಮಾರು 7 ಗಂಟೆ ಸುಮಾರಿಗೆ ಬಸವಕಲ್ಯಾಣದಿಂದ ಶಾಹಜಾನಿ ಕಡೆಗೆ ಪ್ರವಾಸಿಗರನ್ನು ಕರೆದೊಯ್ಯುತ್ತಿದ್ದ ಕ್ರೂಸರ್ ವಾಹನ ಹಣಮಂತವಾಡಿ ಗ್ರಾಮ ವ್ಯಾಪ್ತಿಯಲ್ಲಿ ಸಾಗುತ್ತಿದ್ದಾಗ, ವಾಹನದ ಟೈರ್ ಸಿಡಿದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಪರಿಣಾಮವಾಗಿ ಸಂದೀಪ್ ವಡಕಲೆ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಸಂದೀಪ್ ಅವರು ಕಲಬುರಗಿಯಲ್ಲಿ ತಮ್ಮ ಮನೆಯ ಕುಟುಂಬ ಕಾರ್ಯಕ್ರಮದಲ್ಲಿ ಪಾಲ್ಗೊಂಡು ನಿಲಂಗಾ ಕಡೆಗೆ ಮರಳುತ್ತಿದ್ದ ವೇಳೆ ಈ ದುರ್ಘಟನೆ ನಡೆದಿದೆ. ಅಪಘಾತದಲ್ಲಿ ವಾಹನದ ಚಾಲಕ ಗಂಭೀರವಾಗಿ ಗಾಯಗೊಂಡು ಮಹಾರಾಷ್ಟ್ರದ ಲಾತೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇತರ ಪ್ರಯಾಣಿಕರಿಗೆ ಸಣ್ಣಗುಣದ ಗಾಯಗಳಾಗಿವೆ ಎಂದು ತಿಳಿದುಬಂದಿದೆ. ಈ ಸಂಬಂಧ ಹುಲಸೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿನಿಖೆ ಮುಂದುವರಿದಿದೆ ಎಂದು ತಿಳಿದು ಬಂದಿದೆ.
ಕುಂದಾಪುರದ ಲೋಕ ಅದಾಲತ್: ಒಟ್ಟು 891 ಪ್ರಕರಣಗಳು ಇತ್ಯರ್ಥ
ಕುಂದಾಪುರ, ಮಾ.14: ಕುಂದಾಪುರದ ನ್ಯಾಯಾಲಯದಲ್ಲಿ ಶನಿವಾರ ನಡೆದ ಲೋಕ ಅದಾಲತ್ನಲ್ಲಿ ಒಟ್ಟು 891 ಪ್ರಕರಣಗಳು ಇತ್ಯರ್ಥ ಗೊಂಡಿದ್ದು, 5.39ಕೋಟಿ ರೂ. ಮೊತ್ತವನ್ನು ಪರಿಹಾರ ರೂಪದಲ್ಲಿ ಪಾವತಿಸುವಂತೆ ಆದೇಶಿಸಲಾಗಿದೆ. 17,973 ವ್ಯಾಜ್ಯ ಪೂರ್ವ ಪ್ರಕರಣವನ್ನು ಅದಾಲತ್ನಲ್ಲಿ ಇತ್ಯರ್ಥ ಪಡಿಸಿದ್ದು, ಅದರಲ್ಲಿ ಪರಿಹಾರ ರೂಪದಲ್ಲಿ 95.44 ಲಕ್ಷ ರೂ. ನೀಡುವಂತೆ ಸೂಚಿಸಲಾಗಿದೆ. ಇನ್ನು ಕುಂದಾಪುರದ 891 ಪ್ರಕರಣಗಳ ಪೈಕಿ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ 17 ಪ್ರಕರಣ ಇತ್ಯರ್ಥಗೊಂಡು, 89.65ಲಕ್ಷ ರೂ. ಪರಿಹಾರ, ಹಿರಿಯ ಸಿವಿಲ್ ನ್ಯಾಯಾಲಯದಲ್ಲಿ 54 ಇತ್ಯರ್ಥಗೊಂಡು, 2.56ಕೋ.ರೂ. ಪರಿಹಾರ, ಪ್ರಧಾನ ಸಿವಿಲ್ ಮತ್ತು ಜೆಎಎಂಫ್ಸಿ ನ್ಯಾಯಾಲಯದಲ್ಲಿ 100 ಪ್ರಕರಣಗಳು ಇತ್ಯರ್ಥಗೊಂಡು, 89.28ಲಕ್ಷ ರೂ. ಪರಿಹಾರ, ಎರಡನೇ ಹೆಚ್ಚುವರಿ ಸಿವಿಲ್ ಮತ್ತು ಜೆಎಂಎಫ್ಸಿ ನ್ಯಾಯಾಲಯದಲ್ಲಿ 208 ಪ್ರಕರಣಗಳು ಇತ್ಯರ್ಥಗೊಂಡು, 58.86 ಲಕ್ಷ ರೂ. ಪರಿಹಾರ ಹಾಗೂ ಒಂದನೇ ಹೆಚ್ಚವರಿ ಸಿವಿಲ್ ಮತ್ತು ಜೆಎಂಎಫ್ಸಿ ನ್ಯಾಯಾಲಯದಲ್ಲಿ 512 ಪ್ರಕರಣಗಳು ಇತ್ಯರ್ಥಗೊಂಡಿದ್ದು, 44.73ಲಕ್ಷ ರೂ. ಪರಿಹಾರ ನೀಡು ವಂತೆ ಆದೇಶಿಸಲಾಗಿದೆ. ದೂರಾಗಿದ್ದ ದಂಪತಿ ಒಂದಾದರು! ವಿವಾಹವಾದ ಕೆಲವೇ ತಿಂಗಳಿನಲ್ಲಿ ಮನಸ್ತಾಪದಿಂದ ಒಂದೂವರೆ ವರ್ಷದಿಂದ ದೂರವಿದ್ದು, ವಿಚ್ಛೇದನ ಹಾಗೂ ಜೀವನಾಂಶ ಕೋರಿ ಅರ್ಜಿ ಹಾಕಿ ಬೇರೆಯಾಗಲು ನಿರ್ಧರಿಸಿದ್ದ ಜೋಡಿಯೊಂದು ಲೋಕ ಅದಾಲತ್ನಲ್ಲಿ ಮತ್ತೆ ಒಂದಾದ ಅಪರೂಪದ ಘಟನೆ ನಡೆದಿದೆ. ಗಂಗೊಳ್ಳಿಯ ವಿದ್ಯಾ ಹಾಗೂ ಬ್ರಹ್ಮಾವರದ ನಂದ ಕಿಶೋರ್ 2024ರಲ್ಲಿ ವಿವಾಹವಾಗಿದ್ದು, ಅದಾದ ಕೆಲ ತಿಂಗಳ ನಂತರ ಪತಿಯೊಂದಿಗೆ ಬಾಳವುದು ಕಷ್ಟ, ತನಗೆ ಜೀವನಾಂಶ ಕೊಡುವಂತೆ ಕೇಸ್ ದಾಖಲಿಸಿ, ವಿಚ್ಛೇದನಕ್ಕೆ ಅರ್ಜಿ ಹಾಕಿದ್ದರು. ಲೋಕ ಅದಾಲತ್ನಲ್ಲಿ ವಿಚಾರಣೆ ನಡೆಸಿದ ಕುಂದಾಪುರದ ಒಂದನೇ ಜೆಎಂಎಫ್ಸಿ ನ್ಯಾಯಾಲಯದ ನ್ಯಾಯಾಧೀಶೆ ಶ್ರುತಿಶ್ರೀ ಎಸ್., ಒಂದಾಗಿ ಬದುಕುವಂತೆ ಕಿವಿಮಾತು ಹೇಳಿದರು. ಇದಕ್ಕೆ ಇಬ್ಬರೂ ಕೂಡ ಸಹಮತ ವ್ಯಕ್ತಪಡಿಸಿದ್ದರಿಂದ ಪ್ರಕರಣ ಸುಖಾಂತ್ಯ ಕಂಡಿತು. ಕಕ್ಷಿದಾರರ ಪರ ಕುಂದಾಪುರದ ನ್ಯಾಯವಾದಿ ರವಿಕಿರಣ್ ಮುರ್ಡೇಶ್ವರ ವಾದಿಸಿದ್ದರು.
ಸಾಂದರ್ಭಿಕ ಚಿತ್ರ | Photo Credit : freepik ಯುನೈಟೆಡ್ ಸ್ಟೇಟ್ಸ್ ಮತ್ತು ಇಸ್ರೇಲ್ ಟೆಹ್ರಾನ್ ಮೇಲೆ ದಾಳಿ ಮಾಡುವ ಮೂಲಕ ಇರಾನ್ ವಿರುದ್ಧ ಯುದ್ಧವನ್ನು ಪ್ರಾರಂಭಿಸಿದ ಎರಡು ವಾರಗಳ ನಂತರ ಅಂತರರಾಷ್ಟ್ರೀಯ ಇಂಧನ ಸಂಸ್ಥೆ (IEA) ತನ್ನ ಇತಿಹಾಸದಲ್ಲಿಯೇ ಅತಿದೊಡ್ಡ ಸರ್ಕಾರಿ ತೈಲ ನಿಕ್ಷೇಪಗಳನ್ನು ಬಿಡುಗಡೆ ಮಾಡುವುದಾಗಿ ಘೋಷಿಸಿದೆ. ಪ್ರತೀಕಾರದ ದಾಳಿಯಲ್ಲಿ, ಟೆಹ್ರಾನ್ ಇಸ್ರೇಲ್ ಮತ್ತು ಗಲ್ಫ್ ದೇಶಗಳಲ್ಲಿನ ಅಮೆರಿಕ ಮಿಲಿಟರಿ ಸ್ವತ್ತುಗಳು ಮತ್ತು ಇಂಧನ ಸೌಲಭ್ಯಗಳ ಮೇಲೆ ದಾಳಿ ಮಾಡಿದೆ. ಈ ಸಂಘರ್ಷದಿಂದಾಗಿ ಜಾಗತಿಕ ತೈಲ ಪೂರೈಕೆ ಸರಪಳಿಯ ಪ್ರಮುಖ ಮಾರ್ಗವಾದ ಹಾರ್ಮುಜ್ ಜಲಸಂಧಿಯಲ್ಲಿ ಅಡಚಣೆಯುಂಟಾಗಿದೆ. ಈ ಅಡಚಣೆಯಿಂದಾಗಿ ಕಚ್ಚಾ ತೈಲದ ಬೆಲೆ ಬ್ಯಾರೆಲ್ಗೆ 100 ಡಾಲರ್ಗಿಂತ ಹೆಚ್ಚಾಗಿದೆ. ಮಧ್ಯಪ್ರಾಚ್ಯದಲ್ಲಿನ ಯುದ್ಧವು ಜಾಗತಿಕ ತೈಲ ಮಾರುಕಟ್ಟೆಯ ಇತಿಹಾಸದಲ್ಲಿ ಅತಿದೊಡ್ಡ ಪೂರೈಕೆ ಅಡಚಣೆಯನ್ನು ಸೃಷ್ಟಿಸುತ್ತಿದೆ ಎಂದು ಐಇಎ ತನ್ನ ಮಾಸಿಕ ಮಾರುಕಟ್ಟೆ ವರದಿಯಲ್ಲಿ ತಿಳಿಸಿದೆ. ಐಇಎಯ 32 ಸದಸ್ಯ ರಾಷ್ಟ್ರಗಳು ವಾರದ ಆರಂಭದಲ್ಲಿ ಕಾರ್ಯತಂತ್ರದ ನಿಕ್ಷೇಪಗಳನ್ನು ಬಳಸಿಕೊಳ್ಳಲು ಹಿಂಜರಿಯುತ್ತಿರುವಂತೆ ಕಂಡುಬಂದರೂ, ಅಂತಿಮವಾಗಿ ಸುಮಾರು 40 ಕೋಟಿ ಬ್ಯಾರೆಲ್ ತುರ್ತು ಕಚ್ಚಾ ತೈಲವನ್ನು ಬಿಡುಗಡೆ ಮಾಡುವುದಾಗಿ ಘೋಷಿಸಿವೆ. ಇದು ಒಟ್ಟು 1.2 ಬಿಲಿಯನ್ ಬ್ಯಾರೆಲ್ ಸರ್ಕಾರಿ ಮೀಸಲು ಹೊಂದಿರುವ ತೈಲದ ಮೂರನೇ ಒಂದು ಭಾಗವಾಗಿದೆ. ಈ ಹಿಂದೆ 1990-1991ರ ಕೊಲ್ಲಿ ಯುದ್ಧದ ಸಮಯದಲ್ಲಿ, 2005ರಲ್ಲಿ ಕತ್ರಿನಾ ಚಂಡಮಾರುತದ ನಂತರ, 2011ರಲ್ಲಿ ಲಿಬಿಯಾದ ಅಂತರ್ಯುದ್ಧದ ಸಮಯದಲ್ಲಿ ಮತ್ತು ಉಕ್ರೇನ್ನ ಮೇಲೆ ರಷ್ಯಾದ ಆಕ್ರಮಣದ ನಂತರ ಎರಡು ಬಾರಿ ಹೀಗೆ ಒಟ್ಟು ಐದು ಬಾರಿ ಐಇಎ ಸದಸ್ಯ ರಾಷ್ಟ್ರಗಳು ತುರ್ತು ನಿಕ್ಷೇಪಗಳಿಂದ ತೈಲ ಬಿಡುಗಡೆ ಮಾಡಿವೆ. IEA ಏನು ಘೋಷಿಸಿದೆ? ಇರಾನ್ ಸರಕು ಹಡಗುಗಳ ಮೇಲೆ ನಡೆಸಿದ ದಾಳಿ ಮತ್ತು ಹಾರ್ಮುಜ್ ಜಲಸಂಧಿಯಲ್ಲಿನ ಸಂಚಾರ ನಿರ್ಬಂಧದಿಂದಾಗಿ ಉಂಟಾದ ಪೂರೈಕೆ ಅಡಚಣೆಯು ಇಂಧನ ಮಾರುಕಟ್ಟೆಗಳು 1991ರ ಕೊಲ್ಲಿ ಯುದ್ಧ ಮತ್ತು ರಷ್ಯಾ 2022ರ ಉಕ್ರೇನ್ ಆಕ್ರಮಣದ ಸಮಯಕ್ಕಿಂತ ಕೆಟ್ಟ ಬಿಕ್ಕಟ್ಟನ್ನು ಎದುರಿಸುತ್ತಿವೆ ಎಂದು ಐಇಎ ಹೇಳಿದೆ. ಫೆಬ್ರವರಿ 28ರಂದು ಯುಎಸ್ ಮತ್ತು ಇಸ್ರೇಲ್ ಟೆಹ್ರಾನ್ ಮೇಲೆ ದಾಳಿ ಮಾಡಿ ಇರಾನ್ನ ಸರ್ವೋಚ್ಚ ನಾಯಕ ಆಯತೊಲ್ಲಾ ಖಾಮಿನೈ ಅವರನ್ನು ಹತ್ಯೆ ಮಾಡುವ ಮೊದಲು ಬ್ರೆಂಟ್ ಕಚ್ಚಾ ತೈಲವು ಬ್ಯಾರೆಲ್ಗೆ ಸುಮಾರು 65 ಡಾಲರ್ನಲ್ಲಿ ವಹಿವಾಟು ನಡೆಸುತ್ತಿತ್ತು. ಈಗ ಅದು 100 ಡಾಲರ್ಗಿಂತ ಹೆಚ್ಚಾಗಿದೆ. ದಾಳಿಗಳು ಮುಂದುವರಿದರೆ ಒಂದು ಲೀಟರ್ ತೈಲವನ್ನೂ ಹಾರ್ಮುಜ್ ಜಲಸಂಧಿಯನ್ನು ಹಾದುಹೋಗಲು ಬಿಡುವುದಿಲ್ಲ. ತೈಲದ ಬೆಲೆ ಬ್ಯಾರೆಲ್ಗೆ 200 ಡಾಲರ್ಗಿಂತ ಹೆಚ್ಚಾಗಬಹುದು ಎಂದು ಇರಾನ್ ನಾಯಕರು ದೇಶಗಳಿಗೆ ಎಚ್ಚರಿಕೆ ನೀಡಿದ್ದಾರೆ. ತೈಲ ಸಾಗಿಸುವ ಟ್ಯಾಂಕರ್ಗಳನ್ನು ಇರಾನ್ ದಾಳಿಯಿಂದ ರಕ್ಷಿಸಲು ಸಾಧ್ಯವಾಗದಿದ್ದರೆ ಈ ರೀತಿ ಆಗಬಹುದು. ತೈಲದ ಬೆಲೆಗಳು ದೀರ್ಘಕಾಲದವರೆಗೆ ಮಾರುಕಟ್ಟೆಯ ಪ್ರಸ್ತುತ ಬೆಲೆಗಳಿಗಿಂತ ಹೆಚ್ಚಾಗಿರುವುದು ಕಷ್ಟದ ಪರಿಸ್ಥಿತಿ ಎಂದು ಮಾಜಿ ಐಎಂಎಫ್ ಅರ್ಥಶಾಸ್ತ್ರಜ್ಞ ಆಲಿವಿಯರ್ ಬ್ಲಾಂಚಾರ್ಡ್ ಹೇಳಿದ್ದಾರೆ ಎಂದು ಬಿಸಿನೆಸ್ ಇನ್ಸೈಡರ್ ಉಲ್ಲೇಖಿಸಿದೆ. ಇಂಧನ ಭದ್ರತೆಯೇ ಐಇಎ ಉದ್ದೇಶವಾಗಿದೆ. ಐಇಎ ಸದಸ್ಯರು ಒಟ್ಟಾಗಿ ನಿರ್ಣಾಯಕ ಕ್ರಮ ಕೈಗೊಳ್ಳುವಲ್ಲಿ ಒಗ್ಗಟ್ಟನ್ನು ತೋರಿಸುತ್ತಿದ್ದಾರೆ ಎಂದು ನನಗೆ ಸಂತೋಷವಾಗಿದೆ ಎಂದು ಪ್ಯಾರಿಸ್ ಮೂಲದ ಐಇಎಯ ಕಾರ್ಯನಿರ್ವಾಹಕ ನಿರ್ದೇಶಕ ಫಾತಿಹ್ ಬಿರೋಲ್ ಹೇಳಿದ್ದಾರೆ ಎಂದು ಅಲ್ ಜಜೀರಾ ಉಲ್ಲೇಖಿಸಿದೆ. ಅಮೆರಿಕ ಏನು ಘೋಷಿಸಿದೆ? 1975ರಲ್ಲಿ ಅರಬ್ ತೈಲ ನಿರ್ಬಂಧವು ವಾಷಿಂಗ್ಟನ್ನ ಇಂಧನ ಭದ್ರತಾ ದುರ್ಬಲತೆಗಳನ್ನು ಬಹಿರಂಗಪಡಿಸಿದ ನಂತರ ಅಮೆರಿಕ ತನ್ನದೇ ಆದ ಕಾರ್ಯತಂತ್ರದ ಪೆಟ್ರೋಲಿಯಂ ಮೀಸಲು ಪ್ರದೇಶವನ್ನು ರಚಿಸಿತು. ಇದು ವಿಶ್ವದ ಅತಿದೊಡ್ಡ ಮೀಸಲು ಪ್ರದೇಶವಾಗಿದ್ದು, ಇದರ ಗರಿಷ್ಠ ಸಾಮರ್ಥ್ಯ 720 ಮಿಲಿಯನ್ ಬ್ಯಾರೆಲ್ಗಳು. ಪ್ರಸ್ತುತ, ವಾಷಿಂಗ್ಟನ್ ಕೇವಲ 415 ಮಿಲಿಯನ್ ಬ್ಯಾರೆಲ್ ಕಚ್ಚಾ ತೈಲವನ್ನು ಹೊಂದಿದೆ. ಇದನ್ನು ಟೆಕ್ಸಾಸ್ ಮತ್ತು ಲೂಸಿಯಾನಾದ ಗಲ್ಫ್ ಕರಾವಳಿಯಲ್ಲಿ ಸಂಗ್ರಹಿಸಲಾಗಿದೆ. ರಷ್ಯಾ ಉಕ್ರೇನ್ ವಿರುದ್ಧದ ಯುದ್ಧದಿಂದ ದಾಸ್ತಾನುಗಳು ಖಾಲಿಯಾಗಿವೆ. ಪ್ರಸ್ತುತ ಚೀನಾ ಮಾತ್ರ ದೊಡ್ಡ ದಾಸ್ತಾನು ಹೊಂದಿದೆ ಎಂದು ಅಂದಾಜಿಸಲಾಗಿದೆ. ಆದರೆ ಬೀಜಿಂಗ್ನ ನಿಕ್ಷೇಪವನ್ನು ಬಹಿರಂಗಪಡಿಸಲಾಗಿಲ್ಲ. ಅಮೆರಿಕವು ಪ್ರಸ್ತುತ ವಿಶ್ವದ ಅತಿದೊಡ್ಡ ತೈಲ ಉತ್ಪಾದಕ ಮತ್ತು ಗ್ರಾಹಕ ರಾಷ್ಟ್ರವಾಗಿದ್ದು, ಐಇಎ ಜೊತೆಗಿನ ಸಂಘಟಿತ ಪ್ರಯತ್ನಗಳಿಗೆ ಕೊಡುಗೆಯಾಗಿ ತನ್ನ ಕಾರ್ಯತಂತ್ರದ ಪೆಟ್ರೋಲಿಯಂ ಮೀಸಲು ಪ್ರದೇಶದಿಂದ 172 ಮಿಲಿಯನ್ ಬ್ಯಾರೆಲ್ ತೈಲವನ್ನು ಬಿಡುಗಡೆ ಮಾಡುವುದಾಗಿ ಹೇಳಿದೆ. ಇಂಧನ ವಲಯದಲ್ಲಿ ಬೆಲೆಗಳನ್ನು ಸ್ಥಿರಗೊಳಿಸುವ ದಿಟ್ಟ ಪ್ರಯತ್ನದಲ್ಲಿ ಅಮೆರಿಕ ಸರ್ಕಾರವು ಕಾರ್ಯತಂತ್ರದ ಮೀಸಲು ನಿಧಿಯನ್ನು ಬಳಸಿಕೊಳ್ಳಲಿದೆ. ನಂತರ ನಾವು ಅದನ್ನು ಮರುಪೂರಣ ಮಾಡುತ್ತೇವೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗುರುವಾರ ಸ್ಥಳೀಯ ಸುದ್ದಿ ವಾಹಿನಿಯೊಂದಕ್ಕೆ ತಿಳಿಸಿದ್ದಾರೆ. ಪೆಟ್ರೋಲ್ ಬೆಲೆಗಳನ್ನು ತಗ್ಗಿಸಲು ಮೀಸಲು ಹಣವನ್ನು ಬಳಸಿಕೊಳ್ಳುವುದಕ್ಕಾಗಿ ಮಾಜಿ ಅಧ್ಯಕ್ಷ ಜೋ ಬೈಡೆನ್ ಅವರ ಆಡಳಿತವನ್ನು ಟ್ರಂಪ್ ಈ ಹಿಂದೆ ಟೀಕಿಸಿದ್ದರು. ಈ ಬಿಡುಗಡೆ ಮುಂದಿನ ವಾರ ಪ್ರಾರಂಭವಾಗಲಿದ್ದು, ವಿತರಣೆಗೆ ಸರಿಸುಮಾರು 120 ದಿನಗಳು ಬೇಕಾಗುತ್ತದೆ. ನಂತರ ಮುಂದಿನ ವರ್ಷದಲ್ಲಿ ಸುಮಾರು 200 ಮಿಲಿಯನ್ ಬ್ಯಾರೆಲ್ಗಳ ಮರುಪೂರಣಕ್ಕೆ ಸರ್ಕಾರ ಕೆಲಸ ಮಾಡುತ್ತದೆ ಎಂದು ಇಂಧನ ಕಾರ್ಯದರ್ಶಿ ಕ್ರಿಸ್ ರೈಟ್ ತಿಳಿಸಿದ್ದಾರೆ. ಇದು ತೈಲ ಕೊರತೆಯನ್ನು ತಕ್ಷಣವೇ ನೀಗಿಸುತ್ತದೆಯೇ? ಈ ಪ್ರಶ್ನೆಗೆ ಉತ್ತರ 'ಇಲ್ಲ' ಎಂಬುದಾಗಿದೆ. ತೈಲದಂತೆಯೇ ಮಾರುಕಟ್ಟೆಗಳೂ ಸಹ ವೇಗವಾಗಿ ಚಲಿಸುತ್ತವೆ. ಬಿಡುಗಡೆಯಾದ ತೈಲವು ಎಷ್ಟು ವೇಗವಾಗಿ ಚಲಿಸುತ್ತದೆ ಎಂಬುದು ಮುಖ್ಯ. ಮೂಲ ಸಮಸ್ಯೆಯನ್ನು ಪರಿಹರಿಸದ ಹೊರತು, ಯಾವುದೇ ಬಿಡುಗಡೆಯು ಮಾರುಕಟ್ಟೆಯನ್ನು ಸರಿಪಡಿಸಲು ಸಾಧ್ಯವಿಲ್ಲ ಎಂದು ಸ್ಟ್ಯಾನ್ಫೋರ್ಡ್ ವಿಶ್ವವಿದ್ಯಾಲಯದ ಇಂಧನ ಕಾರ್ಯನಿರ್ವಾಹಕ ಮ್ಯಾಕ್ಸಿಮ್ ಸೋನಿನ್ ಅಲ್ ಜಜೀರಾಗೆ ತಿಳಿಸಿದ್ದಾರೆ. ಜಪಾನ್, ದಕ್ಷಿಣ ಕೊರಿಯಾ, ಫ್ರಾನ್ಸ್, ಜರ್ಮನಿ, ಯುಕೆ ಮತ್ತು ಯುಎಸ್ನಿಂದ ಇಲ್ಲಿಯವರೆಗೆ ಘೋಷಿಸಲಾದ ಬದ್ಧತೆಗಳೊಂದಿಗೆ, ಗುಂಪಿನ ಕಾರ್ಯತಂತ್ರದ ತೈಲ ನಿಕ್ಷೇಪಗಳಿಂದ 400 ಮಿಲಿಯನ್ ಬ್ಯಾರೆಲ್ಗಳನ್ನು ಬಿಡುಗಡೆ ಮಾಡಲು ಐಇಎ ನಿರ್ಧರಿಸಿದೆ. ಆದರೆ ಈ ಕ್ರಮದ ಮಾರುಕಟ್ಟೆ ಪರಿಣಾಮ ಸೀಮಿತವಾಗಿರಬಹುದು. ತೈಲವನ್ನು ಮೀಸಲುಗಳಿಂದ ಹೊರತೆಗೆಯಬಹುದಾದ ವೇಗದಿಂದ ಸರಬರಾಜುಗಳನ್ನು ನಿರ್ಬಂಧಿಸಲಾಗುತ್ತದೆ ಎಂದು ಆರ್ಬಿಸಿ ಕ್ಯಾಪಿಟಲ್ ಮಾರ್ಕೆಟ್ಸ್ನ ಜಾಗತಿಕ ಸರಕು ತಂತ್ರದ ಮುಖ್ಯಸ್ಥೆ ಹೆಲಿಮಾ ಕ್ರಾಫ್ಟ್ ತಿಳಿಸಿದ್ದಾರೆ. ಟ್ರಂಪ್ ಮತ್ತು ಅವರ ಅಧಿಕಾರಿಗಳು ಇರಾನ್ ವಿರುದ್ಧದ ಯುದ್ಧದ ಅಂತಿಮ ಹಂತದ ಬಗ್ಗೆ ತಮ್ಮ ನಿಲುವನ್ನು ಬದಲಾಯಿಸಿದ್ದರೂ, ಅಮೆರಿಕದ ಅಧ್ಯಕ್ಷರು ಸಂಘರ್ಷವು ಒಂದು ಸಣ್ಣ ಘಟನೆಯಾಗಿದೆ, ಮತ್ತೊಂದು ದೀರ್ಘ ಯುದ್ಧವಲ್ಲ ಎಂದು ಹೇಳಿದ್ದಾರೆ. 172 ಮಿಲಿಯನ್ ಬ್ಯಾರೆಲ್ಗಳನ್ನು ಬಿಡುಗಡೆ ಮಾಡಲು ಐಇಎ ಜೊತೆ ಸೇರುವ ನಿರ್ಧಾರವು ಒಂದು ಪ್ರಮುಖ ಕ್ರಮವಾಗಿದೆ. ಆದಾಗ್ಯೂ, ಈ ಕಾರ್ಯತಂತ್ರದ ಮೀಸಲುಗಳು ಪೂರೈಕೆ ಅಂತರವನ್ನು ಸರಿದೂಗಿಸುವ ಹಂತವನ್ನು ಮೀರಿ ಸಂಘರ್ಷ ಮುಂದುವರಿದರೆ ಏನಾಗುತ್ತದೆ ಎಂಬ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ ಲಂಡನ್ನ ಚಾಥಮ್ ಹೌಸ್ನ ಮಧ್ಯಪ್ರಾಚ್ಯ ಮತ್ತು ಉತ್ತರ ಆಫ್ರಿಕಾ ಕಾರ್ಯಕ್ರಮದ ಅಸೋಸಿಯೇಟ್ ಫೆಲೋ ನೀಲ್ ಕ್ವಿಲಿಯಮ್. ತೈಲವನ್ನು ಯಾವಾಗ ಬಿಡುಗಡೆ ಮಾಡಬಹುದು? ದಿನಕ್ಕೆ 4.4 ಮಿಲಿಯನ್ ಬ್ಯಾರೆಲ್ಗಳನ್ನು ಬಿಡುಗಡೆ ಮಾಡಬಹುದು ಎಂದು ಅಮೆರಿಕ ಹೇಳಿದೆ. ಆದರೆ ಅದರ ನಿಜವಾದ ಉತ್ಪಾದನೆ ತುಂಬಾ ಕಡಿಮೆಯಾಗಿದೆ. ಡ್ರಾಡೌನ್ಗೆ ಸಹಿ ಹಾಕಿದ ನಂತರ ವಾರಗಳಲ್ಲಿ ವಿತರಣೆ ಆರಂಭವಾಗಬಹುದು. ಮುಂದಿನ 120 ದಿನಗಳಲ್ಲಿ ಅಮೆರಿಕ ತಾನು ವಾಗ್ದಾನ ಮಾಡಿದ 172 ಮಿಲಿಯನ್ ಬ್ಯಾರೆಲ್ಗಳನ್ನು ಯೋಜಿತ ದರಗಳ ಆಧಾರದ ಮೇಲೆ ತಲುಪಿಸಲು ಬಿಡುಗಡೆ ಮಾಡುತ್ತದೆ ಎಂದು ಇಂಧನ ಕಾರ್ಯದರ್ಶಿ ಕ್ರಿಸ್ ರೈಟ್ ತಿಳಿಸಿದ್ದಾರೆ. ಬಿಡುಗಡೆ ಮತ್ತು ಮಾರಾಟದ 13 ದಿನಗಳ ನಂತರ ಮಾರುಕಟ್ಟೆಗೆ ತೈಲ ವಿತರಣೆಯನ್ನು ಪ್ರಾರಂಭಿಸಲು ಸಿದ್ಧವಾಗಿದೆ ಎಂದು ಯುಎಸ್ ಇಂಧನ ಇಲಾಖೆ ಹೇಳುತ್ತದೆ. ಇರಾನ್ ಯುದ್ಧದ ಪರಿಣಾಮವಾಗಿ ಕೊರತೆ ಹೆಚ್ಚು ತೀವ್ರವಾಗಿರುವ ಏಷ್ಯಾಕ್ಕೆ ತೈಲವನ್ನು ಸಾಗಿಸಬೇಕಾದರೆ ಅದು ಹೆಚ್ಚು ಸಮಯ ತೆಗೆದುಕೊಳ್ಳಬಹುದು. ಅಂದರೆ ಮೇ ಮಧ್ಯದವರೆಗೆ ಸರಬರಾಜುಗಳು ಏಷ್ಯಾದ ಸಂಸ್ಕರಣಾಗಾರಗಳನ್ನು ತಲುಪದಿರಬಹುದು. ಪ್ರಸ್ತುತ ಬಿಡುಗಡೆ ಪ್ರಮಾಣವನ್ನು ನೀಡಿದ್ದರೂ ಸಹ ಯುಎಸ್ ಇನ್ನೂ ಉತ್ತಮ ಸ್ಥಿತಿಯಲ್ಲಿದೆ ಎಂದು ಸ್ಟ್ಯಾನ್ಫೋರ್ಡ್ ವಿಶ್ವವಿದ್ಯಾಲಯದ ಸೋನಿನ್ ಹೇಳಿದ್ದಾರೆ. ಅಂತಹ ಗಮನಾರ್ಹ ಪ್ರಮಾಣಗಳು ಒಂದು ಅಥವಾ ಎರಡು ದಿನಗಳಲ್ಲಿ ಸಂಸ್ಕರಣಾಗಾರಗಳನ್ನು ತಲುಪಲು ಸಾಧ್ಯವಿಲ್ಲ. ಇದು ದೇಶೀಯವಾಗಿ ವೇಗವಾಗಿರುತ್ತದೆ, ಅಲ್ಲಿ ಪೈಪ್ಲೈನ್ ಸಂಪರ್ಕವು ಬಲವಾಗಿರುತ್ತದೆ. ಬ್ಯಾರೆಲ್ಗಳನ್ನು ಸಾಗಿಸಿದಾಗ ಅದು ನಿಧಾನವಾಗಿರುತ್ತದೆ. ನಿಕ್ಷೇಪಗಳಿಂದ ಬಿಡುಗಡೆಯಾದ ತೈಲದ ಪ್ರಮಾಣ ಏನೇ ಇರಲಿ, ಸರ್ಕಾರವು ಮಧ್ಯಪ್ರವೇಶಿಸಲು ಇಚ್ಛಿಸಿರುವುದು ಮಾರುಕಟ್ಟೆಗಳಿಗೆ ಬಲವಾದ ಸಕಾರಾತ್ಮಕ ಸಂಕೇತವಾಗಿದೆ ಎಂದು ಸೋನಿನ್ ತಿಳಿಸಿದ್ದಾರೆ. ಇದು 'ಸರಿಯಾದ' ತೈಲವೇ? ಮಾರುಕಟ್ಟೆಗೆ ಬಿಡುಗಡೆಯಾಗುತ್ತಿರುವ ಸಂಪೂರ್ಣ 400 ಮಿಲಿಯನ್ ಬ್ಯಾರೆಲ್ಗಳ ಸಂಯೋಜನೆ ತಿಳಿದಿಲ್ಲ. ಆದರೆ ಅಮೆರಿಕ 155 ಮಿಲಿಯನ್ ಬ್ಯಾರೆಲ್ಗಳಷ್ಟು ಕಡಿಮೆ ಸಲ್ಫರ್ ಹೊಂದಿರುವ ಸಿಹಿ ಕಚ್ಚಾ ತೈಲವನ್ನು ಮತ್ತು 261 ಮಿಲಿಯನ್ ಬ್ಯಾರೆಲ್ಗಳಷ್ಟು ಹೆಚ್ಚಿನ ಸಲ್ಫರ್ ಹೊಂದಿರುವ ಹುಳಿ ಕಚ್ಚಾ ತೈಲವನ್ನು ಹೊಂದಿದೆ. ಸಿಹಿ ಕಚ್ಚಾ ತೈಲವನ್ನು ಸಂಸ್ಕರಿಸಲು ಸುಲಭ, ಅದು ಅಗ್ಗವೂ ಆಗಿದೆ. ಆದರೆ ಹುಳಿ ಕಚ್ಚಾ ತೈಲಕ್ಕೆ ಹೆಚ್ಚು ಸಂಕೀರ್ಣವಾದ ಸಂಸ್ಕರಣೆಯ ಅಗತ್ಯವಿರುತ್ತದೆ. ಅಮೆರಿಕದ ಸಂಸ್ಕರಣಾಗಾರಗಳು ಹುಳಿ ಕಚ್ಚಾ ತೈಲವನ್ನು ನಿರ್ವಹಿಸಲು ಶತಕೋಟಿ ಹೂಡಿಕೆಗಳನ್ನು ಹೊಂದಿವೆ. ಆದರೆ ಇಂಧನ ಬಿಕ್ಕಟ್ಟು ಸರ್ಕಾರವು ಸಂಗ್ರಹಣೆಯನ್ನು ನಿರುತ್ಸಾಹಗೊಳಿಸಲು ತುರ್ತು ಕ್ರಮಗಳನ್ನು ಜಾರಿಗೆ ತರಲು ಕಾರಣವಾದ ಭಾರತದಂತಹ ಅನೇಕ ತೈಲ ಆಮದುದಾರರು ಅದೇ ರೀತಿಯ ಸಂಸ್ಕರಣಾ ಸಾಮರ್ಥ್ಯಗಳನ್ನು ಹೊಂದಿಲ್ಲ. ಇದು ಬಿಕ್ಕಟ್ಟನ್ನು ತಗ್ಗಿಸುವ ಪ್ರಯತ್ನಗಳನ್ನು ಮತ್ತಷ್ಟು ಸಂಕೀರ್ಣಗೊಳಿಸುತ್ತದೆ. ತೈಲ ಯಾವ ರೀತಿಯಲ್ಲಿರುತ್ತದೆ? ಹೆಚ್ಚುವರಿ-ಭಾರೀ ಕಚ್ಚಾ ತೈಲ: ಅತ್ಯಂತ ದಟ್ಟವಾದ ಮತ್ತು ಸ್ನಿಗ್ಧತೆಯ ತೈಲ, ಡಾಂಬರಿನಂತಿರುತ್ತದೆ. ಇದಕ್ಕೆ ಸಂಕೀರ್ಣ ಮತ್ತು ದುಬಾರಿ ಸಂಸ್ಕರಣೆಯ ಅಗತ್ಯವಿರುತ್ತದೆ. ಭಾರೀ ಕಚ್ಚಾ ತೈಲ: ಕಡಿಮೆ ಸಾಂದ್ರತೆಯೊಂದಿಗೆ ದಪ್ಪ, ಗಟ್ಟಿಯಾದ ತೈಲ, ಇದು ಕಡಿಮೆ ಮೌಲ್ಯದ ಇಂಧನಗಳನ್ನು ಉತ್ಪಾದಿಸುತ್ತದೆ. ಸಂಸ್ಕರಿಸಲು ಹೆಚ್ಚಿನ ಸಂಸ್ಕರಣೆಯ ಅಗತ್ಯವಿರುತ್ತದೆ. ಮಧ್ಯಮ ಕಚ್ಚಾ ತೈಲ: ಮಧ್ಯಮ ಸಾಂದ್ರತೆಯ ತೈಲ, ಇದು ತುಲನಾತ್ಮಕವಾಗಿ ಕಡಿಮೆ ಸಂಸ್ಕರಣಾ ವೆಚ್ಚ ಮತ್ತು ಭಾರೀ ಹಾಗೂ ಹಗುರ ಕಚ್ಚಾ ತೈಲಗಳ ನಡುವೆ ಹೆಚ್ಚಿನ ಉತ್ಪನ್ನವನ್ನು ನೀಡುತ್ತದೆ. ಹಗುರ ಕಚ್ಚಾ ತೈಲ: ತೆಳುವಾದ, ಕಡಿಮೆ ಸಾಂದ್ರತೆಯ ತೈಲವು ಸುಲಭವಾಗಿ ಹರಿಯುತ್ತದೆ. ಸರಳವಾದ ಸಂಸ್ಕರಣೆಯೊಂದಿಗೆ ಪೆಟ್ರೋಲ್ (ಗ್ಯಾಸೋಲಿನ್) ಮತ್ತು ಡೀಸೆಲ್ನಂತಹ ಹೆಚ್ಚು ಮೌಲ್ಯಯುತ ಉತ್ಪನ್ನಗಳನ್ನು ನೀಡುತ್ತದೆ. ದೀರ್ಘಾವಧಿಯಲ್ಲಿ 400 ಮಿಲಿಯನ್ ಬ್ಯಾರೆಲ್ ತೈಲ ಸಾಕಾಗುತ್ತದೆಯೇ? ವಿಶ್ಲೇಷಕರು ಐಇಎ ತೈಲ ನಿಕ್ಷೇಪಗಳನ್ನು ಬಿಡುಗಡೆ ಮಾಡುವುದನ್ನು ಬ್ಯಾಂಡ್-ಏಡ್ ಎಂದು ಬಣ್ಣಿಸಿದ್ದಾರೆ. ಇದರ ಸನ್ನಿವೇಶದಲ್ಲಿ, ಐಇಎ G7 ದೇಶಗಳನ್ನು ಒಳಗೊಂಡಂತೆ ತನ್ನ ಸದಸ್ಯರು ಕನಿಷ್ಠ 90 ದಿನಗಳ ಮೌಲ್ಯದ ಆಮದುಗಳ ತುರ್ತು ತೈಲ ದಾಸ್ತಾನುಗಳನ್ನು ಸಂಗ್ರಹಿಸಲು ಆದೇಶಿಸುತ್ತದೆ. ಹಿಂದಿನ ಪೂರ್ವನಿದರ್ಶನಗಳ ಆಧಾರದ ಮೇಲೆ, ಐಇಎ ಸದಸ್ಯ ರಾಷ್ಟ್ರಗಳು ದಿನಕ್ಕೆ 1.2 ಮಿಲಿಯನ್ ಬ್ಯಾರೆಲ್ಗಳಷ್ಟು ತಮ್ಮ ಉತ್ಪಾದನೆಯನ್ನು ಹೆಚ್ಚಿಸಲು ಸಾಧ್ಯವಾಗುತ್ತದೆ ಎಂದು ಡೇಟಾ ಸಂಸ್ಥೆಗಳು ಅಂದಾಜಿಸುತ್ತವೆ. ಆದರೆ ಇದು ಹಾರ್ಮುಜ್ ಜಲಸಂಧಿಯ ಮೂಲಕ ಸಾಗುವ ದೈನಂದಿನ ಪ್ರಮಾಣದ ಒಂದು ಭಾಗ ಮಾತ್ರ. ಆದ್ದರಿಂದ, ಬಿಡುಗಡೆಯು ವಿಶ್ವ ಕೊರತೆಯ ಮೇಲೆ ಗಮನಾರ್ಹ ಪರಿಣಾಮ ಬೀರುವ ಸಾಧ್ಯತೆಯಿಲ್ಲ ಎಂದು ವಿಶ್ಲೇಷಕರು ಹೇಳುತ್ತಾರೆ. ಇರಾನ್ ಯುದ್ಧದಿಂದ ಆರ್ಥಿಕ ಕುಸಿತವನ್ನು ಕಡಿಮೆ ಮಾಡಲು ಅಮೆರಿಕ ಯಾವ ಇತರ ಕ್ರಮಗಳನ್ನು ತೆಗೆದುಕೊಂಡಿದೆ? ಅಮೆರಿಕ ಕಾರ್ಯತಂತ್ರದ ಪೆಟ್ರೋಲಿಯಂ ನಿಕ್ಷೇಪದಿಂದ ತೈಲವನ್ನು ಬಿಡುಗಡೆ ಮಾಡುವುದರ ಜೊತೆಗೆ, ಟ್ರಂಪ್ ಆಡಳಿತವು ಪೂರೈಕೆ ಒತ್ತಡಗಳನ್ನು ಕಡಿಮೆ ಮಾಡಲು ಮತ್ತು ಏರುತ್ತಿರುವ ತೈಲದ ಬೆಲೆಗಳನ್ನು ನಿಗ್ರಹಿಸಲು ಕೆಲವು ಹೆಚ್ಚುವರಿ ಕ್ರಮಗಳನ್ನು ತೆಗೆದುಕೊಂಡಿದೆ. ಜಾಗತಿಕ ಮಾರುಕಟ್ಟೆಗಳಿಗೆ ತ್ವರಿತವಾಗಿ ಪೂರೈಕೆಯನ್ನು ಸೇರಿಸುವ ಪ್ರಯತ್ನದಲ್ಲಿ, ಈಗಾಗಲೇ ಲೋಡ್ ಮಾಡಲಾದ ಮತ್ತು ಸಮುದ್ರದಲ್ಲಿ ಇರುವ ಸುಮಾರು 100 ಮಿಲಿಯನ್ ಬ್ಯಾರೆಲ್ ರಷ್ಯಾದ ತೈಲವನ್ನು ಖರೀದಿಸಲು ದೇಶಗಳಿಗೆ 30 ದಿನಗಳ ವಿನಾಯಿತಿಯನ್ನು ಅಮೆರಿಕ ನೀಡಿದೆ. ದೇಶೀಯ ಪೂರೈಕೆ ಅಡಚಣೆಗಳನ್ನು ಕಡಿಮೆ ಮಾಡುವ ಗುರಿಯನ್ನು ಹೊಂದಿರುವ, ದೇಶೀಯ ಬಂದರುಗಳ ನಡುವೆ ಸಾಗಿಸಲಾದ ಸರಕುಗಳನ್ನು ಅಮೆರಿಕ ನಿರ್ಮಿತ ಮತ್ತು ಅಮೆರಿಕ ಸಿಬ್ಬಂದಿಯ ಹಡಗುಗಳಲ್ಲಿ ಸಾಗಿಸಲು ಅಗತ್ಯವಿರುವ ಅಮೆರಿಕ ಕಡಲ ಕಾನೂನಾದ ಜೋನ್ಸ್ ಕಾಯ್ದೆಯನ್ನು ತಾತ್ಕಾಲಿಕವಾಗಿ ಮನ್ನಾ ಮಾಡಲು ಆಡಳಿತವು ಪರಿಗಣಿಸುತ್ತಿದೆ. ಆದಾಗ್ಯೂ, ಇದನ್ನು ಇನ್ನೂ ಅಂತಿಮಗೊಳಿಸಲಾಗಿಲ್ಲ ಎಂದು ಶ್ವೇತಭವನದ ವಕ್ತಾರರು ತಿಳಿಸಿದ್ದಾರೆ.
ನಾಯಿ ಅಡ್ಡ ಬಂದು ರಿಕ್ಷಾ ಪಲ್ಟಿ: ಚಾಲಕ ಮೃತ್ಯು
ಬ್ರಹ್ಮಾವರ, ಮಾ.14: ನಾಯಿ ಅಡ್ಡ ಬಂದ ಪರಿಣಾಮ ರಿಕ್ಷಾವೊಂದು ಪಲ್ಟಿಯಾಗಿ ಚಾಲಕ ಮೃತಪಟ್ಟ ಘಟನೆ ಹೆಗ್ಗುಂಜೆ ಗ್ರಾಮದ ಮೈರ್ಕೋಮೆ ಹಾಲ್ ಡೈರಿ ಬಳಿ ನಡೆದಿದೆ. ಮೃತರನ್ನು ರಿಕ್ಷಾ ಚಾಲಕ ನರಸಿಂಹ ಪೂಜಾರಿ ಎಂದು ಗುರುತಿಸಲಾಗಿದೆ. ಮಾ.13ರಂದು ಮಧ್ಯಾಹ್ನ ವೇಳೆ ಶಿರೂರು ಮೂರು ಕೈ ಕಡೆಯಿಂದ ಕೊಕ್ಕರ್ಣೆ ಕಡೆಗೆ ಹೋಗುತ್ತಿದ್ದ ರಿಕ್ಷಾಕ್ಕೆ ನಾಯಿ ಅಡ್ಡ ಬಂದಿದ್ದು, ಅದಕ್ಕೆ ನರಸಿಂಹ ಪೂಜಾರಿ ರಿಕ್ಷಾವನ್ನು ಒಮ್ಮೆಲೆ ಎಡಕ್ಕೆ ಚಲಾಯಿಸಿದ್ದರಿಂದ, ರಿಕ್ಷಾದ ನಿಯಂತ್ರಣ ತಪ್ಪಿ ರಸ್ತೆಗೆ ಮಗುಚಿ ಬಿತ್ತೆನ್ನಲಾಗಿದೆ. ಇದರಿಂದ ಗಂಭೀರವಾಗಿ ಗಾಯಗೊಂಡ ನರಸಿಂಹ ಪೂಜಾರಿ ಚಿಕಿತ್ಸೆ ಫಲಕಾರಿಯಾಗದೆ ಮಣಿಪಾಲ ಆಸ್ಪತ್ರೆಯಲ್ಲಿ ಮಾ.14ರಂದು ಬೆಳಗ್ಗೆ 8.30ರ ಸುಮಾರಿಗೆ ಮೃತಪಟ್ಟರು ಎಂದು ತಿಳಿದುಬಂದಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಯಾಂಕ್ ಚಕ್ರವರ್ತಿ ಭಾರತದ 94ನೇ ಗ್ರ್ಯಾಂಡ್ ಮಾಸ್ಟರ್
ಅಸ್ಸಾಂನಿಂದ ಪ್ರಥಮ ಸಾಧನೆ
ಕೋಟ: ಬಾವಿಯೊಳಗೆ ಅಸ್ಥಿಪಂಜರ ಪತ್ತೆ
ಕೋಟ, ಮಾ.14: ಬಾವಿಯೊಳಗೆ ಮಾನವನ ಅಸ್ಥಿಪಂಜರ ಪತ್ತೆಯಾದ ಘಟನೆ ಮಾ.13ರಂದು ಬೆಳಗ್ಗೆ ಗುಂಡ್ಮೀ ಗ್ರಾಮದ ವಿಶ್ವಕರ್ಮ ಸಭಾಭವನದ ಬಳಿ ನಡೆದಿದೆ. ರಕ್ಷೀತ್ ಕಾಮತ್ ಎಂಬವರ ಜಾಗದಲ್ಲಿ ನೀರು ಬತ್ತಿ ಹೋಗಿರುವ ಬಾವಿ ಯೊಳಗೆ ಸುಮಾರು 40-45 ವರ್ಷ ಪ್ರಾಯದ ಅಪರಿಚಿತ ವ್ಯಕ್ತಿಯ ಅಸ್ಥಿಪಂಜರ ಪತ್ತೆಯಾಗಿದೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಭಾರತದಲ್ಲಿ ಸಾಕಷ್ಟು ರಸಗೊಬ್ಬರ ದಾಸ್ತಾನಿದೆ: ಸರಕಾರಿ ಮೂಲಗಳು
ಹಾರ್ಮುಝ್ ಜಲಸಂಧಿ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಸ್ಪಷ್ಟನೆ
ಪಶ್ಚಿಮ ಬಂಗಾಳ | ಪ್ರಧಾನಿ ನರೇಂದ್ರ ಮೋದಿ ರ್ಯಾಲಿಗೂ ಮುನ್ನ ಟಿಎಂಸಿ-ಬಿಜೆಪಿ ಬೆಂಬಲಿಗರ ನಡುವೆ ಘರ್ಷಣೆ
ಕೋಲ್ಕತ್ತಾ: ಪ್ರಧಾನಿ ನರೇಂದ್ರ ಮೋದಿ ಅವರ ರ್ಯಾಲಿ ಪ್ರಾರಂಭಕ್ಕೂ ಮುನ್ನ ಟಿಎಂಸಿ ಹಾಗೂ ಬಿಜೆಪಿ ಬೆಂಬಲಿಗರ ನಡುವೆ ಘರ್ಷಣೆ ನಡೆದಿರುವ ಘಟನೆ ಶನಿವಾರ ಕೇಂದ್ರ ಕೋಲ್ಕತ್ತಾದ ಗಿರೀಶ್ ಪಾರ್ಕ್ ಬಳಿ ನಡೆದಿದೆ. ಪ್ರಧಾನಿ ಮೋದಿಯವರು ಬೆಳಗ್ಗೆ ಬ್ರಿಗೇಡ್ ಪೆರೇಡ್ ಮೈದಾನದಲ್ಲಿ ಆಯೋಜಿಸಲಾಗಿದ್ದ ರ್ಯಾಲಿಯನ್ನುದ್ದೇಶಿಸಿ ಮಾತನಾಡುವುದಕ್ಕೂ ಮುನ್ನ, ಸುಮಾರು 5 ಕಿಮೀ ದೂರದಲ್ಲಿ ಈ ಘಟನೆ ನಡೆದಿದೆ. ಈ ಹಿಂಸಾಚಾರದಲ್ಲಿ ಒಬ್ಬ ಪೊಲೀಸ್ ಅಧಿಕಾರಿ ಹಾಗೂ ಒಬ್ಬ ಬಿಜೆಪಿ ನಾಯಕ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ರ್ಯಾಲಿ ಪ್ರಾರಂಭಕ್ಕೂ ಕೇವಲ ಅರ್ಧ ಗಂಟೆ ಮುನ್ನ ಈ ಘರ್ಷಣೆ ನಡೆದಿದೆ. ಪಶ್ಚಿಮ ಬಂಗಾಳದಲ್ಲಿ ವಿಧಾನಸಭಾ ಚುನಾವಣೆಗೂ ಮುನ್ನ ರಾಜ್ಯಾದ್ಯಂತ ಆಯೋಜಿಸಲಾಗಿರುವ ‘ಪರಿವರ್ತನ್ ಯಾತ್ರಾ’ ಸಮಾರೋಪ ಸಮಾರಂಭವನ್ನುದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಮಾತನಾಡಲಿದ್ದರು. ಹಿಂಸಾಚಾರದ ಬೆನ್ನಿಗೇ, ಗಿರೀಶ್ ಪಾರ್ಕ್ ಪ್ರದೇಶದಲ್ಲಿ ಪಶ್ಚಿಮ ಬಂಗಾಳದ ಸಚಿವ ಶಶಿ ಪಂಜಾ ಅವರ ಮೇಲೆ ಕಲ್ಲು ತೂರಾಟ ನಡೆಸಲಾಗಿದೆ ಎಂಬ ಆರೋಪಗಳು ಕೇಳಿಬಂದಿವೆ. ಪ್ರತ್ಯಕ್ಷದರ್ಶಿಗಳ ಪ್ರಕಾರ, ಘರ್ಷಣೆಯ ವೇಳೆ ಉಭಯ ಪಕ್ಷಗಳ ಕಾರ್ಯಕರ್ತರು ಪರಸ್ಪರ ಕಲ್ಲು ತೂರಾಟ ನಡೆಸಿ ಘೋಷಣೆಗಳನ್ನು ಕೂಗಿದರು ಎನ್ನಲಾಗಿದೆ. “ನಾವು ರ್ಯಾಲಿ ಸ್ಥಳಕ್ಕೆ ತೆರಳುವಾಗ ಹಾಗೂ ಪ್ರಧಾನಿ ನರೇಂದ್ರ ಮೋದಿ ಪರವಾಗಿ ಘೋಷಣೆಗಳನ್ನು ಕೂಗುವಾಗ ಈ ದಾಳಿ ಪ್ರಾರಂಭಗೊಂಡಿತು,” ಎಂದು ಬಿಜೆಪಿ ಬೆಂಬಲಿಗರು ಆರೋಪಿಸಿದ್ದಾರೆ.
ವೈಭವ್ ಸೂರ್ಯವಂಶಿ ಅದೃಷ್ಟದ ಮೇಲೆ ಸವಾರಿ ಮಾಡುತ್ತಿದ್ದಾರೆ: ಕೊಡಗಿನ ರಾಬಿನ್ ಉತ್ತಪ್ಪ ಎಚ್ಚರಿಕೆಯ ಸಲಹೆ
Robin Uthappa: ಅಂಡರ್ 19 ವಿಶ್ವಕಪ್ 2026 ಗೆಲುವಿನ ಸೂತ್ರದಾರ ಯುವ ಸ್ಟಾರ್ ಬ್ಯಾಟರ್ ವೈಭವರ್ ಸೂರ್ಯವಂಶಿ ಅವರು ಐಪಿಎಲ್ನಲ್ಲಿ ರಾಜಸ್ಥಾನ ರಾಯಲ್ ಪರ ಕಣಕ್ಕಿಳಿಯಲಿದ್ದು, ಇದೀಗ ಅಭ್ಯಾಸದಲ್ಲಿ ಕಾರ್ಯನಿರತರಾಗಿದ್ದಾರೆ. ಈ ನಡುವೆಯೇ ಐಪಿಎಲ್ ಆರಂಭಕ್ಕೆ ಮುನ್ನ, ವೈಭವ್ಗೆ ಭಾರತದ ಮಾಜಿ ಕ್ರಿಕೆಟಿಗ ರಾಬಿನ್ ಉತ್ತಪ್ಪ ಅವರು ಎಚ್ಚರಿಕೆಯ ಸಲಹೆಯನ್ನು ನೀಡಿದ್ದಾರೆ. ಇದು ಭಾರೀ ವೈರಲ್ ಆಗುತ್ತಿದೆ.
ದುಬೈ, ಮಾ.14: ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ತೀವ್ರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ, ಯುನೈಟೆಡ್ ಅರಬ್ ಎಮಿರೇಟ್ಸ್ ನ ದುಬೈನ ಜೆಬೆಲ್ ಅಲಿ ಬಂದರು, ಅಬುಧಾಬಿಯ ಖಲೀಫಾ ಬಂದರು ಹಾಗೂ ಫುಜೈರಾ ಬಂದರಿನ ಸುತ್ತಮುತ್ತಲಿನ ಪ್ರದೇಶಗಳನ್ನು ತಕ್ಷಣ ಖಾಲಿ ಮಾಡುವಂತೆ ಇರಾನ್ ತುರ್ತು ಎಚ್ಚರಿಕೆ ನೀಡಿದೆ ಇರಾನ್ ನ ಅರೆ ಸರಕಾರಿ ತಸ್ನಿಮ್ ಸುದ್ದಿ ಸಂಸ್ಥೆ ತಿಳಿಸಿದೆ. “ನಾಗರಿಕ ವಸತಿ ಪ್ರದೇಶಗಳೊಳಗೆ ಅಮೆರಿಕದ ಮಿಲಿಟರಿ ಪಡೆಗಳ ಉಪಸ್ಥಿತಿ ಹಾಗೂ ಅವುಗಳನ್ನು ಮರೆಮಾಚಲಾಗಿರುವುದರಿಂದ ಆ ಪ್ರದೇಶಗಳು ಸೈನಿಕ ಗುರಿಗಳಾಗಿವೆ. ಮುಂದಿನ ಗುರಿ ಅದೇ ಆಗಿರುವ ಸಾಧ್ಯತೆಯಿದೆ” ಎಂದು ಸುದ್ದಿ ಸಂಸ್ಥೆ ತನ್ನ ವರದಿಯಲ್ಲಿ ಎಚ್ಚರಿಸಿದೆ ಎಂದು Aljazeera ವರದಿ ಮಾಡಿದೆ. ಈ ಬೆಳವಣಿಗೆ ಯುಎಇಯ ಪ್ರಮುಖ ವಾಣಿಜ್ಯ ಹಾಗೂ ಇಂಧನ ಸಾಗಣೆ ಕೇಂದ್ರಗಳ ಭದ್ರತೆ ಕುರಿತು ಗಂಭೀರ ಆತಂಕ ಹುಟ್ಟಿಸಿದೆ. ಜಾಗತಿಕ ವ್ಯಾಪಾರದಲ್ಲಿ ಮಹತ್ವದ ಪಾತ್ರವಹಿಸುವ ಜೆಬೆಲ್ ಅಲಿ, ಖಲೀಫಾ ಹಾಗೂ ಫುಜೈರಾ ಬಂದರುಗಳ ಮೇಲೆ ಯಾವುದೇ ದಾಳಿ ನಡೆದರೆ, ಅಂತರಾಷ್ಟ್ರೀಯ ಸರಕು ಸಾಗಣೆ ಮತ್ತು ಇಂಧನ ಪೂರೈಕೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಮಧ್ಯಪ್ರಾಚ್ಯದಲ್ಲಿ ಈಗಾಗಲೇ ನಡೆಯುತ್ತಿರುವ ಸಂಘರ್ಷದ ನಡುವೆ ಅಮೆರಿಕದ ಸೈನಿಕ ಉಪಸ್ಥಿತಿಯ ವಿರುದ್ಧ ಇರಾನ್ ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದು, ಪರಿಸ್ಥಿತಿ ಮತ್ತಷ್ಟು ಉದ್ವಿಗ್ನಗೊಳ್ಳುವ ಭೀತಿ ವ್ಯಕ್ತವಾಗಿದೆ.
ರಾಮನಗರ : ಮೂರು ವರ್ಷಗಳ ಹಿಂದೆ ನನ್ನ ಕ್ಷೇತ್ರದಲ್ಲಿ ಪ್ರವಾಹದಿಂದ ಆಗಿದ್ದ ಹಾನಿಯ ಚಿತ್ರಗಳನ್ನು ತೋರಿಸಿ ಮುಖ್ಯಮಂತ್ರಿ ಬಳಿ ಅನುದಾನ ಕೇಳಿದ್ದೆ. ಆದರೂ, ಬಜೆಟ್ನಲ್ಲಿ ನನ್ನ ಮನವಿಗೆ ಸ್ಪಂದಿಸಲಿಲ್ಲ. ನನ್ನ ಹಾಗೂ ನನ್ನ ಕ್ಷೇತ್ರಕ್ಕೆ ಆಗಿರುವ ನೋವನ್ನು ಹೇಳಿಕೊಂಡಿದ್ದೇನೆಯೇ ಹೊರತು, ಬೇರೆ ಯಾವುದೇ ಉದ್ದೇಶವಿಲ್ಲ ಎಂದು ಶಾಸಕ ಎಚ್.ಎ.ಇಕ್ಬಾಲ್ ಹುಸೇನ್ ತಿಳಿಸಿದ್ದಾರೆ. ಶನಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ಕ್ಷೇತ್ರದಲ್ಲಿ ಆಗಬೇಕಿರುವ ಅಭಿವೃದ್ಧಿ ವಿಚಾರಕ್ಕೆ ಸಂಬಂಧಿಸಿದಂತೆ ಸಾಕಷ್ಟು ಬಾರಿ ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿಯನ್ನು ಭೇಟಿಯಾಗಿದ್ದೇನೆ. 100 ರೂ. ಅನುದಾನ ಕೇಳಿದರೆ, ಕನಿಷ್ಠ 5 ರೂ.ಗಳಾದರೂ ಕೊಡಬಾರದೇ? ಎಂದು ಹೇಳಿದರು. ನಾನು ನೀಡಿರುವ ಹೇಳಿಕೆ ಒಳ್ಳೆಯದಾಗಿದ್ದರೆ ಅದನ್ನು ಒಪ್ಪಿಕೊಳ್ಳಲಿ, ಇಲ್ಲದಿದ್ದರೆ ತಿರಸ್ಕರಿಸಲಿ. ಆದರೆ, ನನ್ನ ಮನವಿಗೆ ಸೂಕ್ತ ಸ್ಪಂದನೆ ಸಿಗಲಿಲ್ಲ. ಇದರಿಂದ ನನಗೆ ಹಾಗೂ ನನ್ನ ಕ್ಷೇತ್ರಕ್ಕೆ ನೋವಾಗಿದೆ. ಮೈಕ್ರೋ ಫೈನಾನ್ಸ್ ನಿಂದಾಗಿ ನನ್ನ ಕ್ಷೇತ್ರದಲ್ಲಿ ಸುಮಾರು 2,800 ಮನೆಗಳು ಹರಾಜಿಗೆ ಬಂದಿವೆ ಎಂದು ಇಕ್ಬಾಲ್ ಹುಸೇನ್ ತಿಳಿಸಿದರು. ರಾಜ್ಯ ರೇಷ್ಮೆ ಮಾರುಕಟ್ಟೆ ಮಂಡಳಿ (ಕೆಎಸ್ಎಂಬಿ) ಪುನರುಜ್ಜಿವನಕ್ಕಾಗಿ 100 ಕೋಟಿ ರೂ. ಕೊಡುವಂತೆ ಕೇಳಿದ್ದೆ. ರಸ್ತೆ ಮತ್ತು ಚರಂಡಿಗಳ ದುರಸ್ತಿಗೂ ಅನುದಾನ ನೀಡಿಲ್ಲ. ನಾನು ನನಗೆ ಆಗಿರುವ ನೋವನ್ನು ವ್ಯಕ್ತಪಡಿಸಿದ್ದೆಯೇ ಹೊರತು, ಬಜೆಟ್ ಅನ್ನು ಟೀಕಿಸಿಲ್ಲ ಎಂದು ಅವರು ಹೇಳಿದರು.
App Exclusive: ಬಂಡೀಪುರ, ನಾಗರಹೊಳೆ ಸಫಾರಿ ಸ್ಥಗಿತದ ಎಫೆಕ್ಟ್: ರಾಜ್ಯ ಸರ್ಕಾರಕ್ಕೆ 6 ಕೋಟಿ ನಷ್ಟ!
ರಾಜ್ಯದಲ್ಲಿ ಸಫಾರಿ ಸ್ಥಗಿತದಿಂದ ರಾಜ್ಯ ಸರ್ಕಾರಕ್ಕೆ ದೊಡ್ಡ ಮಟ್ಟದಲ್ಲಿ ನಷ್ಟ ಉಂಟಾಗಿದೆ. ಈ ನಡುವೆ ಸಫಾರಿಗೆ ಮತ್ತೆ ಅವಕಾಶ ಕೊಡಲಾಗಿದೆ. ಇದು ಮತ್ತೊಮ್ಮೆ ಪರ - ವಿರೋಧ ಚರ್ಚೆಯನ್ನು ಹುಟ್ಟು ಹಾಕಿದೆ. ರಾಜ್ಯದ ಅರಣ್ಯ ಪ್ರದೇಶದಲ್ಲಿ ಪ್ರಾಣಿಗಳ ಸಂಖ್ಯೆ ಹೆಚ್ಚಾಗಿದೆ. ಬಂಡೀಪುರದಲ್ಲಿ 1972ರಲ್ಲಿ 12 ಹುಲಿಗಳು ಇದ್ದವು. ಈಗ 175 ಹುಲಿಗಳು ಇವೆ. ಆದರೆ ಅರಣ್ಯ ವಿಸ್ತೀರ್ಣ ಕಡಿಮೆಯಾದರೂ ಪ್ರಾಣಿಗಳು ಹೆಚ್ಚಾಗುತ್ತಿವೆ. ಮುಂದೆ ಯಾವ ರೀತಿ ನಿಭಾಯಿಸಬೇಕು ಎಂಬ ವಿಚಾರವಾಗಿ ತಜ್ಞರ ವರದಿಯನ್ನು ಪಡೆಯುತ್ತೇವೆ ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ಸದನಕ್ಕೆ ಮಾಹಿತಿ ನೀಡಿದ್ದಾರೆ.
ಕೊಂಕಣ ರೈಲ್ವೆ ಮಾರ್ಗದ ಮುಂಗಾರುಪೂರ್ವ ವಾರ್ಷಿಕ ತಪಾಸಣೆ
ಉಡುಪಿ ಮಾ.14: ಮುಂಬಯಿಯಿಂದ ಮಂಗಳೂರು ಬಳಿಯ ತೋಕೂರುವರೆಗೆ ವ್ಯಾಪಿಸಿರುವ ಕೊಂಕಣ ರೈಲ್ವೆ ಮಾರ್ಗದ ವಾರ್ಷಿಕ ತಪಾಸಣೆ ನಡೆಯುತ್ತಿದೆ. ಕೊಂಕಣ ರೈಲ್ವೆ ಮಾರ್ಗ ಪ್ರಾಕೃತಿಕ ಸೌಂದರ್ಯ ದೊಂದಿಗೆ ಮಳೆಗಾಲದ ಸಂದರ್ಭದಲ್ಲಿ ಹಲವು ಸವಾಲುಗಳನ್ನು ಒಡ್ಡುತಿದ್ದು, ಮುಂಗಾರು ಮಳೆ ಪ್ರಾರಂಭಗೊಳ್ಳುವ ಮೊದಲೇ ಮಾರ್ಗದ ತಪಾಸಣೆಯನ್ನು ಪ್ರತಿ ವರ್ಷ ನಡೆಸಲಾಗುತ್ತಿದೆ. ಈ ಬಾರಿಯ ಮುಂಗಾರು ಪೂರ್ವ ಪರಿವೀಕ್ಷಣೆಯ ನೇತೃತ್ವವನ್ನು ಕೊಂಕಣ ರೈಲ್ವೆ ನಿಗಮದ ಸಿಎಂಡಿ ಸಂತೋಷ್ ಕುಮಾರ್ ಝಾ ಅವರೇ ವಹಿಸಿದ್ದರು. ನಿಗಮದ ವಿವಿಧ ವಿಭಾಗಗಳ ಹಿರಿಯ ಅಧಿಕಾರಿಗಳು ಅವರೊಂದಿಗಿದ್ದರು. ಮಳೆಗಾಲ ಪ್ರಾರಂಭಕ್ಕೆ ಮೊದಲೇ ಮಾರ್ಗದ ಸುರಕ್ಷತೆ, ಮೂಲಭೂತ ಸೌಕರ್ಯಗಳಲ್ಲಿ ಕೊರತೆಯನ್ನು ಗಮನಿಸಿ ಅವುಗಳಿಗೆ ಪರಿಹಾರ ಒದಗಿಸಿ ಮಳೆಗಾಲದಲ್ಲಿ ರೈಲ್ವೆ ಪ್ರಯಾಣಿಕರಿಗೆ ನಿರಂತರ ಸುರಕ್ಷಿತ ಪ್ರಯಾಣವನ್ನು ಖಚಿತ ಪಡಿಸುವುದು ಈ ಪರಿವೀಕ್ಷಣೆಯ ಮುಖ್ಯ ಉದ್ದೇಶವಾಗಿರುತ್ತದೆ. ಮೊದಲು ಮಡಗಾಂವ್ದಿಂದ ತೋಕೂರು ನಡುವಿನ ವಿಭಾಗವನ್ನು ಪರಿಶೀಲಿಸಿದ ಬಳಿಕ ಮರುದಿನ ಮಡಗಾಂವ್ ದಿಂದ ರೋಹಾವರೆಗಿನ ಭಾಗವನ್ನು ಪರಿಶೀಲಿಸಲಾಯಿತು. ಪರೀಕ್ಷೆಯ ವೇಳೆ ರೈಲು ಹಳಿ, ಸೇತುವೆಗಳು, ಸುರಂಗಮಾರ್ಗ, ಇಳಿಜಾರು, ಸಿಗ್ನಲ್ ವ್ಯವಸ್ಥೆ, ಮಳೆಗಾಲದಲ್ಲಿ ನೀರು ನಿಲ್ಲುವ ಪ್ರದೇಶಗಳು, ನಿಲ್ದಾಣಗಳ ಮೂಲಭೂತ ಸೌಲಭ್ಯ ಹಾಗೂ ಸೋಲಾರ್ ಲೈಟನಿಂಗ್ ಅಳವಡಿಕೆಗಳನ್ನು ಸಮಗ್ರವಾಗಿ ತಪಾಸಣೆ ನಡೆಸಲಾಯಿತು.
Vairamuthu Ramaswamy- 90 ದಶಕದ ಜಂಟಲ್ ಮ್ಯಾನ್, ಕಾದಲನ್, ರೋಜಾ, ಕಾದಲನ್, ಎಂದಿರನ್ ಮೊದಲಾದ ಬ್ಲಾಕ್ ಬ್ಲಸ್ಟರ್ ಚಿತ್ರಗಳನ್ನು ಭಾರತೀಯ ಚಿತ್ರರಸಿಕರು ಹೇಗೆ ತಾನೇ ಮರೆಯಲು ಸಾಧ್ಯ? ತಮಿಳುನಾಡು ಮಾತ್ರವಲ್ಲದೆ ಭಾರತದಾದ್ಯಂತ ಆ ಚಿತ್ರಗಳ ಹಾಡುಗಳು ಜನರ ನಾಲಗೆ ತುದಿಯಲ್ಲಿ ಕುಣಿಯುತ್ತಿದ್ದವು. ಅಂತಹ ಅನೇಕ ಚಿತ್ರಗಳ ಯಶಸ್ಸಿನಲ್ಲಿ ಸಾಹಿತಿ, ಗೀತರಚನೆಕಾರ ವೈರಮುತ್ತು ರಾಮಸಾಮಿ ಅವರಿಗೂ ಪಾಲಿದೆ. ಇದೀಗ ಅವರ ಸಮಗ್ರ ಸಾಹಿತ್ಯಕ್ಕೆ ಭಾರತದ ಪ್ರತಿಷ್ಠಿತ ಜ್ಞಾನಪೀಠ ಪ್ರಶಸ್ತಿ ಒಲಿದಿದೆ. ಇದು ತಮಿಳು ಸಾಹಿತ್ಯಕ್ಕೆ ಒಲಿದಿರುವ ಮೂರನೇ ಜ್ಞಾನಪೀಠ ಪ್ರಶಸ್ತಿಯಾಗಿದೆ.
ಚೆನ್ನೈನ ಎಸ್ಆರ್ಎಂ ಅ.ಭಾ.ವಿ.ವಿ. ಪುರುಷ ಚೆಸ್ ಚಾಂಪಿಯನ್
ಉಡುಪಿ, ಮಾ.14: ಮೂವರು ಗ್ರಾಂಡ್ಮಾಸ್ಟರ್ಗಳು ಹಾಗೂ ಮೂವರು ಐಎಂಗಳನ್ನು ತಂಡದಲ್ಲಿ ಹೊಂದಿದ್ದ ಚೆನ್ನೈನ ಎಸ್ಆರ್ಎಂ ಇನ್ಸ್ಟಿಟ್ಯೂಟ್ ಆಫ್ ಸಾಯನ್ಸ್ ಆ್ಯಂಡ್ ಟೆಕ್ನಾಲಜಿ, ಮಣಿಪಾಲದ ಮಾಹೆಯಲ್ಲಿ ನಡೆದ ಪುರುಷರ ಚೆಸ್ ಚಾಂಪಿಯನ್ಷಿಪ್ನಲ್ಲಿ ಅಗ್ರಸ್ಥಾನಿಯಾಗಿ ಹೊರಹೊಮ್ಮುವ ಮೂಲಕ ಅಖಿಲ ಭಾರತ ಅಂತರ ವಿವಿ ಚೆಸ್ ಚಾಂಪಿಯನ್ ಪ್ರಶಸ್ತಿಯನ್ನು ಗೆದ್ದುಕೊಂಡಿತು. ಕೆಎಂಸಿ ಮಣಿಪಾಲದ ಡಾ.ಟಿ.ಎಂ.ಎ.ಪೈ ಸಭಾಂಗಣದಲ್ಲಿ ಮೂರು ದಿನಗಳ ಕಾಲ ನಡೆದ ಈ ಚಾಂಪಿಯನ್ ಷಿಪ್ನಲ್ಲಿ ಅಗ್ರಶ್ರೇಯಾಂಕಿತ, ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡವಾಗಿದ್ದ ಬಲಿಷ್ಠ ಎಸ್ಆರ್ಎಂ ವಿವಿ ನಿರೀಕ್ಷೆಯಂತೆ ಕೊನೆಯ ಸುತ್ತಿನ ಬಳಿಕ ಅತ್ಯಧಿಕ ಅಂಕ ಸಂಗ್ರಹಿಸುವ ಮೂಲಕ ತಂಡ ಪ್ರಶಸ್ತಿಗೆ ಭಾಜನವಾಯಿತು. ಆಂಧ್ರಪ್ರದೇಶದ ಗುಂಟೂರಿನ ಕೊನೇರು ಲಕ್ಷ್ಮಯ್ಯ ಎಜ್ಯುಕೇಶನ್ ಫೌಂಡೇಷನ್ (ಕೆಎಲ್ಇಎಫ್) ತಂಡ ರನ್ನರ್ಅಪ್ ಆಗಿ ಸ್ಪರ್ಧೆಯನ್ನು ಮುಗಿಸಿದೆ. ಡಾ.ಟಿಎಂಎ ಪೈ ಸಭಾಂಗಣದಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ಹೊಸದಿಲ್ಲಿಯ ಭಾರತೀಯ ವಿಶ್ವವಿದ್ಯಾ ನಿಲಯಗಳ ಸಂಘದ ಪರಿವೀಕ್ಷಕ ಡಾ. ನರೇಂದ್ರ ಗೌರ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಮಾಹೆ ವಿವಿ ಕ್ರೀಡಾ ಮಂಡಳಿ ಕಾರ್ಯದರ್ಶಿ ಡಾ. ವಿನೋದ್ ನಾಯಕ್, ಜಿಲ್ಲಾ ಚೆಸ್ ಅಸೋಸಿಯೇಶನ್ ಅಧ್ಯಕ್ಷ ಡಾ.ರಾಜ ಗೋಪಾಲ್ ಶೆಣೈ, ಕೆಎಂಸಿ ಡೀನ್ ಡಾ. ಅನಿಲ್ ಕೆ. ಭಟ್, ಸಂಘಟನಾ ಕಾರ್ಯದರ್ಶಿ ಹಾಗೂ ಕ್ರೀಡಾ ಮಂಡಳಿ ಮುಖ್ಯ ಸಂಯೋಜಕ ಡಾ.ಉಪೇಂದ್ರ ನಾಯಕ್ ಅವರು ಬಹುಮಾನ ವಿತರಣೆಯ ವೇಳೆ ಉಪಸ್ಥಿತರಿದ್ದರು. ಮಾಹೆ ಕ್ರೀಡಾ ಕೌನ್ಸಿಲ್ ಹೆಚ್ಚುವರಿ ಕಾರ್ಯದರ್ಶಿ ಡಾ. ಕುಮಾರ್ ಎಂ.ಆರ್. ಭಟ್ ಸ್ವಾಗತಿಸಿದರೆ, ಕೆಎಂಸಿ ಮಂಗಳೂರು ಕ್ರೀಡಾ ನಿರ್ದೇಶಕ ಡಾ. ರಾಜು ವಂದಿಸಿದರು. ಎಂಐಯ ಪ್ರಾಧ್ಯಾಪಕ ಡಾ.ರಾಘವೇಂದ್ರ ಕೆ.ಜಿ. ಕಾರ್ಯಕ್ರಮ ನಿರೂಪಿಸಿದರು.
ಹಾರ್ಮುಝ್ ಜಲಸಂಧಿಯಲ್ಲಿನ ಅಡಚಣೆ LPG ಮೇಲೆ ಮಾತ್ರ ಪರಿಣಾಮ ಬೀರಿದ್ದೇಕೆ?
ಮಧ್ಯಪ್ರಾಚ್ಯದಲ್ಲಿ ಯುದ್ಧದ ಮಧ್ಯೆ, ಭಾರತದ LPG ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿ, ಗ್ಯಾಸ್ ಏಜೆನ್ಸಿಗಳ ಹೊರಗೆ ಜನರು ಸರತಿ ಸಾಲಿನಲ್ಲಿ ನಿಂತಿದ್ದಾರೆ. ದೇಶದಾದ್ಯಂತ ಹಲವಾರು ರೆಸ್ಟೋರೆಂಟ್ ಗಳು ಮತ್ತು ಢಾಬಾಗಳು ಮುಚ್ಚಲ್ಪಟ್ಟಿವೆ. ಮನೆಯಲ್ಲಿ ಗ್ಯಾಸ್ ಖಾಲಿಯಾಗಿ, ಜನರು ಸಿಲಿಂಡರ್ ರೀಫಿಲ್ ಗಾಗಿ ದಿನಗಟ್ಟಲೆ ಕಾಯುತ್ತಿದ್ದಾರೆ. ವಿಶ್ವದ ಪ್ರಮುಖ ಇಂಧನ ಸರಬರಾಜು ಹಡಗು ಮಾರ್ಗಗಳಲ್ಲಿ ಒಂದಾದ ಹಾರ್ಮುಝ್ ಜಲಸಂಧಿಯಲ್ಲಿ ಉಂಟಾದ ಅಡಚಣೆಯೇ ಇದಕ್ಕೆ ಕಾರಣ. ಇರಾನ್ ಮೇಲೆ ಅಮೆರಿಕ-ಇಸ್ರೇಲಿ ದಾಳಿಗಳು ಮತ್ತು ಟೆಹ್ರಾನ್ ನ ಪ್ರತೀಕಾರ ಕ್ರಮಗಳು ಇಂಧನ ರಫ್ತುದಾರ ಪ್ರದೇಶವಾದ ಮಧ್ಯಪ್ರಾಚ್ಯದಲ್ಲಿ ಸಮುದ್ರ ಸಂಚಾರವನ್ನು ಅಡ್ಡಿಪಡಿಸಿವೆ. ಭಾರತವು ಈ ಪ್ರದೇಶದಿಂದ ಇಂಧನ ಆಮದುಗಳನ್ನು ಅವಲಂಬಿಸಿದೆ. ಪೆಟ್ರೋಲ್ ಮತ್ತು ಡೀಸೆಲ್ ಕೂಡ ಇದೇ ಪ್ರದೇಶದಿಂದ ಬಂದರೂ, ಭಾರತೀಯ ಚಿಲ್ಲರೆ ಮಾರುಕಟ್ಟೆಗಳಲ್ಲಿ LPG ಪೂರೈಕೆಯಷ್ಟೇ ಒತ್ತಡದ ಲಕ್ಷಣಗಳನ್ನು ತೋರಿಸುತ್ತಿಲ್ಲ. ಮಾರ್ಚ್ 9ರಿಂದ ವರದಿಯಾದ LPG ಗ್ಯಾಸ್ ಸಿಲಿಂಡರ್ ಗಳ ಮೇಲಿನ ಭೀತಿ ಈಗ ಹಲವು ಪಟ್ಟು ಹೆಚ್ಚಾಗಿದೆ. ಮಾರ್ಚ್ 12ರಿಂದ ಕೆಲವು ಸಿಎನ್ಜಿ, ಡೀಸೆಲ್ ಮತ್ತು ಪೆಟ್ರೋಲ್ ಬಂಕ್ಗಳಲ್ಲಿಯೂ ಸರತಿ ಸಾಲುಗಳು ಕಂಡುಬಂದರೂ, LPG ಸಿಲಿಂಡರ್ ಬಗ್ಗೆ ಇರುವ ಆತಂಕದಷ್ಟಿಲ್ಲ. ಪೆಟ್ರೋಲ್ ಮತ್ತು ಡೀಸೆಲ್ ಉತ್ಪಾದಿಸಲು ಸಂಸ್ಕರಿಸಿದ ಪೆಟ್ರೋಲಿಯಂ ಇಂಧನದ ಸಾಕಷ್ಟು ಪೂರೈಕೆ ಇದೆ ಎಂದು ಸರ್ಕಾರ ಹೇಳಿದೆ. LPG ವಿಷಯದಲ್ಲೂ ದೇಶೀಯ ವಲಯಕ್ಕೆ ಪೂರೈಕೆಯಲ್ಲಿ ಯಾವುದೇ ಅಡಚಣೆ ಉಂಟಾಗುವುದಿಲ್ಲ ಎಂದು ಸರ್ಕಾರ ಪುನರುಚ್ಚರಿಸಿದೆ. ಆದಾಗ್ಯೂ, ದೇಶೀಯ ಗ್ರಾಹಕರಿಗೆ ಆದ್ಯತೆ ನೀಡಲು ವಾಣಿಜ್ಯ LPG ಸಿಲಿಂಡರ್ ಗಳ ಮಾರಾಟವನ್ನು ನಿಲ್ಲಿಸಲಾಗಿದೆ. ಇದರಿಂದ ಕಾಳಸಂತೆಯಲ್ಲಿ LPG ರೀಫಿಲ್ ಗಳ ಬೆಲೆ ಏರಿಕೆಯಾಗಿದೆ. LPG ಪೂರೈಕೆ ವ್ಯತ್ಯಯದಿಂದ ಈಗಾಗಲೇ ಹಲವಾರು ಹೋಟೆಲ್ ಗಳು ಮುಚ್ಚಿವೆ. ►ಹಾರ್ಮುಝ್ ಅಡಚಣೆ ಭಾರತದ LPG ಸರಬರಾಜಿನ ಮೇಲೆ ಯಾವ ರೀತಿ ಪರಿಣಾಮ ಬೀರಿದೆ? ಪೆಟ್ರೋಲಿಯಂ ಸಚಿವಾಲಯದ ಮಾಹಿತಿಯ ಪ್ರಕಾರ, ಭಾರತವು ಪ್ರತಿ ವರ್ಷ 31 ಮಿಲಿಯನ್ ಟನ್ ಗಳಿಗಿಂತ ಹೆಚ್ಚು LPGಯನ್ನು ಬಳಸುತ್ತದೆ. ದೇಶೀಯ ಉತ್ಪಾದನೆ ಆ ಬೇಡಿಕೆಯ ಅರ್ಧಕ್ಕಿಂತ ಕಡಿಮೆ ಮಾತ್ರ ಪೂರೈಸುತ್ತದೆ. ಉಳಿದ ಭಾಗವನ್ನು ಸೌದಿ ಅರೇಬಿಯಾ, ಖತರ್, ಯುಎಇ ಮತ್ತು ಕುವೈತ್ ನಂತಹ ಗಲ್ಫ್ ದೇಶಗಳಿಂದ ಆಮದು ಮಾಡಿಕೊಳ್ಳುತ್ತದೆ. ಈ ಇಂಧನವನ್ನು ಸಾಗಿಸುವ ಟ್ಯಾಂಕರ್ ಗಳು ಭಾರತವನ್ನು ತಲುಪುವ ಮೊದಲು ಹಾರ್ಮುಝ್ ಜಲಸಂಧಿಯ ಮೂಲಕ ಹಾದು ಹೋಗಬೇಕು. ಭಾರತದ LPG ಸಾಗಣೆಯ ಬಹುಪಾಲು ಈ ಮಾರ್ಗದ ಮೂಲಕವೇ ಚಲಿಸುತ್ತದೆ. ಮಾಧ್ಯಮ ವರದಿಗಳ ಪ್ರಕಾರ, ಭಾರತಕ್ಕೆ ಬರುವ LPG ಸರಕುಗಳಲ್ಲಿ ಸುಮಾರು 80-90% ಹಾರ್ಮುಝ್ ಜಲಸಂಧಿಯ ಮೂಲಕವೇ ಸಾಗುತ್ತವೆ. ಭಾರತವು 40ಕ್ಕೂ ಹೆಚ್ಚು ದೇಶಗಳಿಂದ ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳುತ್ತದೆ. ಇತ್ತೀಚಿನ ವರ್ಷಗಳಲ್ಲಿ ರಷ್ಯಾ ಅತಿದೊಡ್ಡ ಪೂರೈಕೆದಾರನಾಗಿ ಹೊರಹೊಮ್ಮಿದೆ. ನಂತರದ ಸ್ಥಾನಗಳಲ್ಲಿ ಇರಾಕ್ ಮತ್ತು ಸೌದಿ ಅರೇಬಿಯಾ ಇವೆ. ರಷ್ಯಾದ ಕಚ್ಚಾ ತೈಲದ ಗಮನಾರ್ಹ ಭಾಗವು ಹಾರ್ಮುಝ್ ಮೂಲಕ ಹಾದುಹೋಗದ ಮಾರ್ಗಗಳಿಂದ ಭಾರತವನ್ನು ತಲುಪುತ್ತದೆ. ಕೇಂದ್ರ ಪೆಟ್ರೋಲಿಯಂ ಸಚಿವ ಹರ್ದೀಪ್ ಸಿಂಗ್ ಪುರಿ ಅವರ ಪ್ರಕಾರ, ಭಾರತದ ಕಚ್ಚಾ ತೈಲದ 70% ಈಗ ಹಾರ್ಮುಝ್ ಜಲಸಂಧಿಯ ಹೊರಗಿನ ಮೂಲಗಳಿಂದ ಬರುತ್ತಿದೆ. ಅಮೆರಿಕವು ಸಮುದ್ರದಲ್ಲಿ ಈಗಾಗಲೇ ಸಿಲುಕಿರುವ ಸಾಗಣೆಗಳನ್ನು ಖರೀದಿಸಲು 30 ದಿನಗಳ ವಿನಾಯಿತಿ ನೀಡಿದ ನಂತರ, ಭಾರತ ಇತ್ತೀಚೆಗೆ 30 ಮಿಲಿಯನ್ ಬ್ಯಾರೆಲ್ ರಷ್ಯಾದ ಕಚ್ಚಾ ತೈಲವನ್ನು ಖರೀದಿಸಿದೆ ಎಂದು ಬ್ಲೂಮ್ ಬರ್ಗ್ ವರದಿ ತಿಳಿಸಿದೆ. ಕಚ್ಚಾ ತೈಲ ಬಂದ ನಂತರ, ಭಾರತೀಯ ಸಂಸ್ಕರಣಾಗಾರಗಳು ಅದನ್ನು ಪೆಟ್ರೋಲ್, ಡೀಸೆಲ್ ಮತ್ತು ಇತರ ಇಂಧನಗಳಾಗಿ ಪರಿವರ್ತಿಸುತ್ತವೆ. ದೇಶೀಯ ಬೇಡಿಕೆಗೆ ಹೋಲಿಸಿದರೆ ದೇಶವು ಹೆಚ್ಚುವರಿ ಸಂಸ್ಕರಣಾ ಸಾಮರ್ಥ್ಯವನ್ನು ಹೊಂದಿದೆ. ಪೂರೈಕೆ ಮಾದರಿಗಳು ಬದಲಾಗಿದರೆ, ಸಂಸ್ಕರಣಾಗಾರಗಳು ಉತ್ಪಾದನೆಯನ್ನು ಹೊಂದಿಸಿಕೊಳ್ಳಲು ಸಾಧ್ಯವಾಗುತ್ತದೆ. ಭಾರತ ಕಚ್ಚಾ ತೈಲಕ್ಕಾಗಿ ಪೆಟ್ರೋಲಿಯಂ ನಿಕ್ಷೇಪಗಳನ್ನು ನಿರ್ವಹಿಸುತ್ತದೆ. ಈ ಭೂಗತ ಶೇಖರಣಾ ಸೌಲಭ್ಯಗಳು ಹಠಾತ್ ಪೂರೈಕೆ ಅಡಚಣೆಗಳನ್ನು ಕಡಿಮೆ ಮಾಡಲು ಉದ್ದೇಶಿಸಲ್ಪಟ್ಟಿವೆ. ವಿಶಾಖಪಟ್ಟಣಂ, ಮಂಗಳೂರು ಮತ್ತು ಪಾದೂರಿನಲ್ಲಿ ತುರ್ತು ಪರಿಸ್ಥಿತಿಗಳಿಗಾಗಿ ಕಚ್ಚಾ ತೈಲವನ್ನು ಸಂಗ್ರಹಿಸಲಾಗಿದೆ. ಸಂಸ್ಕರಣಾಗಾರಗಳು ಮತ್ತು ತೈಲ ಮಾರುಕಟ್ಟೆ ಕಂಪೆನಿಗಳು (OMCs) ಹೊಂದಿರುವ ವಾಣಿಜ್ಯ ದಾಸ್ತಾನುಗಳೊಂದಿಗೆ, ಇವು ಹಲವಾರು ವಾರಗಳ ಬಳಕೆಯನ್ನು ಪೂರೈಸಬಲ್ಲವು. ಈ ಬಫರ್ನಿಂದ ಭಾರತದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ನ ತಕ್ಷಣದ ಕೊರತೆ ಕಾಣಿಸಿಕೊಳ್ಳುವುದನ್ನು ವಿಳಂಬಗೊಳಿಸುತ್ತದೆ. ►ಇತರ ಇಂಧನಗಳಿಗಿಂತ LPGಗೆ ಯಾಕೆ ಹೆಚ್ಚು ಪರಿಣಾಮ? ಕಚ್ಚಾ ತೈಲಕ್ಕಿಂತ ಭಿನ್ನವಾಗಿ, ಭಾರತದಲ್ಲಿ LPGಗಾಗಿ ಸೀಮಿತ ಸಂಗ್ರಹ ಸಾಮರ್ಥ್ಯವಿದೆ. ಕಚ್ಚಾ ತೈಲದಂತೆ LPGಯ ದೊಡ್ಡ ಕಾರ್ಯತಂತ್ರದ ನಿಕ್ಷೇಪಗಳನ್ನು ಭಾರತ ಹೊಂದಿಲ್ಲ. ಮಂಗಳೂರು ಮತ್ತು ವಿಶಾಖಪಟ್ಟಣದಲ್ಲಿ LPG ನಿಕ್ಷೇಪಗಳಿದ್ದರೂ, ಅವುಗಳ ಒಟ್ಟು ಸಾಮರ್ಥ್ಯ ಸುಮಾರು 1.4 ಲಕ್ಷ ಟನ್ ಗಳು ಮಾತ್ರ. ಇದು ಎರಡು ದಿನಗಳಿಗಿಂತ ಕಡಿಮೆ ಬಳಕೆಗೆ ಸಮಾನ ಎಂದು ಅಂತರರಾಷ್ಟ್ರೀಯ ಇಂಧನ ಸಂಸ್ಥೆ (IEA) ಹೇಳಿದೆ. ಭಾರತದ ಅನಿಲ ವ್ಯವಸ್ಥೆ ದಾಸ್ತಾನು ಮಾಡುವುದಕ್ಕಿಂತ ನಿರಂತರ ಹರಿವಿನ ಮೇಲೆ ಅವಲಂಬಿತವಾಗಿದೆ. ಇಂಡಿಯಾ ಗ್ಯಾಸ್ ಮಾರ್ಕೆಟ್ ರಿಪೋರ್ಟ್–ಔಟ್ ಲುಕ್ ಟು 2030 ಪ್ರಕಾರ, ದೇಶದಲ್ಲಿ ಭೂಗತ ಅನಿಲ ಸಂಗ್ರಹ ಸೌಲಭ್ಯಗಳ ಕೊರತೆ ಇದೆ. ಸುಮಾರು 1.9 ಬಿಲಿಯನ್ ಕ್ಯೂಬಿಕ್ ಮೀಟರ್ ಗಳ ಸೀಮಿತ LPG ಸಂಗ್ರಹ ಸಾಮರ್ಥ್ಯವಿದೆ ಎಂದು IEA ಹೇಳಿದೆ. ಕಾರ್ಯತಂತ್ರದ ಅನಿಲ ನಿಕ್ಷೇಪಗಳ ಪ್ರಸ್ತಾಪಗಳು ಇನ್ನೂ ಕಾರ್ಯಸಾಧ್ಯತಾ ಹಂತದಲ್ಲಿವೆ. “4 ಬಿಲಿಯನ್ ಕ್ಯೂಬಿಕ್ ಮೀಟರ್ ಗಳ ಆರಂಭಿಕ ಭೂಗತ ಅನಿಲ ಸಂಗ್ರಹ ಸಾಮರ್ಥ್ಯಕ್ಕೆ 1–2 ಬಿಲಿಯನ್ ಡಾಲರ್ ವೆಚ್ಚವಾಗಬಹುದು. ಯೋಜನೆ ಅನುಮೋದನೆಯ ನಂತರ ನಿರ್ಮಾಣಕ್ಕೆ 3–4 ವರ್ಷಗಳು ಬೇಕಾಗಬಹುದು” ಎಂದು ಐಇಎ ಫೆಬ್ರವರಿ 2025ರ ವರದಿಯಲ್ಲಿ ಹೇಳಿದೆ. LPG ಟರ್ಮಿನಲ್ ಗಳು ಮತ್ತು ಬಾಟ್ಲಿಂಗ್ ಘಟಕಗಳು ಮುಖ್ಯವಾಗಿ ನಿಯಮಿತ ಪೂರೈಕೆಗೆ ವಿನ್ಯಾಸಗೊಳಿಸಲ್ಪಟ್ಟಿವೆ. ಕಳೆದ ದಶಕದಲ್ಲಿ ಕೇಂದ್ರ ಸರ್ಕಾರದ ಯೋಜನೆಗಳಿಂದ LPG ಸಿಲಿಂಡರ್ ಗಳ ಬೇಡಿಕೆ ಹೆಚ್ಚಾಗಿದೆ. ಪ್ರಧಾನ ಮಂತ್ರಿ ಉಜ್ವಲ ಯೋಜನೆಯಿಂದ ಲಕ್ಷಾಂತರ ಗ್ರಾಮೀಣ ಮನೆಗಳಿಗೆ ಅಡುಗೆ ಅನಿಲದ ಪ್ರವೇಶ ದೊರಕಿದೆ. ಇದರ ಪರಿಣಾಮವಾಗಿ ದೇಶದಲ್ಲಿ LPG ಸಂಪರ್ಕಗಳ ಸಂಖ್ಯೆ 33 ಕೋಟಿಯನ್ನು ದಾಟಿದೆ. ಪೆಟ್ರೋಲಿಯಂ ಯೋಜನೆ ಮತ್ತು ವಿಶ್ಲೇಷಣಾ ಕೋಶದ ದತ್ತಾಂಶ ಪ್ರಕಾರ, 2010ರಲ್ಲಿ 10.6 ಕೋಟಿಯಾಗಿದ್ದ ಸಂಪರ್ಕಗಳು 2014ರಲ್ಲಿ 14.5 ಕೋಟಿ, 2018ರಲ್ಲಿ 22.4 ಕೋಟಿ ಮತ್ತು 2025ರ ವೇಳೆಗೆ ಸುಮಾರು 33 ಕೋಟಿಗೆ ಏರಿವೆ. ಉರುವಲು ಮತ್ತು ಜೈವಿಕ ಇಂಧನದಿಂದ LPGಗೆ ಬದಲಾವಣೆ ಸಾರ್ವಜನಿಕ ಆರೋಗ್ಯದ ದೃಷ್ಟಿಯಿಂದ ಮಹತ್ವದ ಸಾಧನೆ. ಇದರಿಂದ ಭಾರತೀಯ ಅಡುಗೆಮನೆಗಳು ಈಗ ನಿರಂತರ ಅನಿಲ ಪೂರೈಕೆಯ ಮೇಲೆ ಹೆಚ್ಚು ಅವಲಂಬಿತವಾಗಿವೆ. ►ಭಾರತ LPG ಕೊರತೆಯನ್ನು ಹೇಗೆ ನಿರ್ವಹಿಸುತ್ತಿದೆ? LPG ಲಭ್ಯತೆಯನ್ನು ಸ್ಥಿರಗೊಳಿಸಲು ಕೇಂದ್ರ ಸರ್ಕಾರ ಮತ್ತು ಅನಿಲ ಕಂಪೆನಿಗಳು ತುರ್ತು ಕ್ರಮಗಳನ್ನು ಕೈಗೊಂಡಿವೆ. ಕಚ್ಚಾ ಸಂಸ್ಕರಣೆಯಿಂದ LPG ಉತ್ಪಾದನೆಯನ್ನು ಗರಿಷ್ಠಗೊಳಿಸಲು ಸಂಸ್ಕರಣಾಗಾರಗಳಿಗೆ ಸೂಚಿಸಲಾಗಿದೆ. ಹೆಚ್ಚಿನ ಅಡುಗೆ ಅನಿಲ ಉತ್ಪಾದನೆಗಾಗಿ ಪ್ರೋಪೇನ್ ಮತ್ತು ಬ್ಯುಟೇನ್ ನಂತಹ ಪೆಟ್ರೋಕೆಮಿಕಲ್ ಫೀಡ್ಸ್ಟಾಕ್ಗಳನ್ನು ತಾತ್ಕಾಲಿಕವಾಗಿ ಮರುನಿರ್ದೇಶಿಸಲಾಗುತ್ತಿದೆ. ಗಲ್ಫ್ ಹೊರಗಿನ ಪೂರೈಕೆದಾರರಾದ ಅಮೆರಿಕ ಮತ್ತು ಪಶ್ಚಿಮ ಆಫ್ರಿಕಾದಿಂದ ಹೆಚ್ಚುವರಿ ಸರಕುಗಳನ್ನು ಪಡೆಯಲು ಸರ್ಕಾರ ಪ್ರಯತ್ನಿಸುತ್ತಿದೆ. ಆದರೆ, ಅವು ಬರಲು ಹೆಚ್ಚು ಸಮಯ ಬೇಕಾಗುತ್ತದೆ ಮತ್ತು ವೆಚ್ಚವೂ ಹೆಚ್ಚಾಗಬಹುದು. ಆದ್ದರಿಂದ, ವಾಣಿಜ್ಯ ಬಳಕೆಗೆ ಬದಲಾಗಿ ಗೃಹ ಬಳಕೆಗೆ ಆದ್ಯತೆ ನೀಡಲಾಗುತ್ತಿದೆ. ಸದ್ಯಕ್ಕೆ ಡೀಸೆಲ್ ಮತ್ತು ಪೆಟ್ರೋಲ್ ಪಂಪ್ ಗಳಲ್ಲಿ ಸಾಕಷ್ಟು ದಾಸ್ತಾನು ಇದೆ ಎಂದು ಕೇಂದ್ರ ಹೇಳಿದೆ. ಆದರೆ ಅನಿಲ ಏಜೆನ್ಸಿಗಳ ಹೊರಗಿನ ಉದ್ದವಾದ ಸರತಿ ಸಾಲುಗಳು ಜಾಗತಿಕ ಭೌಗೋಳಿಕ ರಾಜಕೀಯದ ಪರಿಣಾಮಗಳು ಭಾರತೀಯ ಅಡುಗೆಮನೆಗಳಿಗೂ ಎಷ್ಟು ಬೇಗ ತಲುಪುತ್ತವೆ ಎಂಬುದನ್ನು ತೋರಿಸುತ್ತವೆ. ಭಾರತದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಗಿಂತ LPG ಸರಬರಾಜಿನ ಮೇಲೆ ಹಾರ್ಮುಝ್ ಅಡಚಣೆ ಹೆಚ್ಚು ಪರಿಣಾಮ ಬೀರಿರುವುದಕ್ಕೆ ಕಾರಣ, ಈ ಇಂಧನಗಳನ್ನು ಪಡೆಯುವ, ಸಂಗ್ರಹಿಸುವ ಮತ್ತು ಬಳಸುವ ವಿಧಾನಗಳಲ್ಲಿನ ವ್ಯತ್ಯಾಸ. ಕಳೆದ ದಶಕದಲ್ಲಿ LPG ಸಂಪರ್ಕಗಳಲ್ಲಿನ ವೇಗವಾದ ಏರಿಕೆ ಮತ್ತು ದೇಶದಲ್ಲಿ ಸೀಮಿತ ಅನಿಲ ಸಂಗ್ರಹ ಸಾಮರ್ಥ್ಯವೂ ಇದಕ್ಕೆ ಕಾರಣ. ಇದಲ್ಲದೆ, LPG ಆಮದುಗಳು ಗಲ್ಫ್ ಪ್ರದೇಶದಲ್ಲೇ ಹೆಚ್ಚು ಕೇಂದ್ರೀಕೃತವಾಗಿವೆ ಮತ್ತು ಅವುಗಳಲ್ಲಿ ಬಹುಪಾಲು ಹಾರ್ಮುಝ್ ಜಲಸಂಧಿಯ ಮೂಲಕವೇ ಸಾಗುತ್ತವೆ. ಇನ್ನೊಂದೆಡೆ, ಪೆಟ್ರೋಲ್ ಮತ್ತು ಡೀಸೆಲ್ ವ್ಯಾಪಕ ದೇಶಗಳಿಂದ ಆಮದು ಮಾಡಿಕೊಳ್ಳುವ ಕಚ್ಚಾ ತೈಲದಿಂದ ಉತ್ಪಾದನೆಯಾಗುತ್ತವೆ. ಜೊತೆಗೆ, ಭಾರತವು ದೊಡ್ಡ ಪ್ರಮಾಣದ ಕಚ್ಚಾ ತೈಲ ನಿಕ್ಷೇಪಗಳನ್ನು ಹೊಂದಿರುವುದರಿಂದ, ಅವುಗಳ ಮೇಲೆ ತಕ್ಷಣದ ಪರಿಣಾಮ ಕಾಣಿಸಿಕೊಳ್ಳುವುದಿಲ್ಲ.
ಪ್ರಶ್ನಿಸುವ ಪ್ರವೃತ್ತಿಯಿಂದ ಗ್ರಾಹಕರಿಗೆ ಪರಿಹಾರ ಲಭ್ಯ: ಅಬೀದ್ ಗದ್ಯಾಳ್
ವಿಶ್ವ ಗ್ರಾಹಕರ ದಿನಾಚರಣೆ
LPG ಹೊತ್ತ ಎರಡು ಹಡಗುಗಳು ಸುರಕ್ಷಿತವಾಗಿ ಹಾರ್ಮುಝ್ ಜಲಸಂಧಿಯನ್ನು ದಾಟಿವೆ: ಕೇಂದ್ರ ಸರಕಾರ
ಹೊಸದಿಲ್ಲಿ: ಶನಿವಾರ ಯುದ್ಧಪೀಡಿತ ಹಾರ್ಮುಝ್ ಜಲಸಂಧಿಯಿಂದ ಕೊಲ್ಲಿ ರಾಷ್ಟ್ರಗಳಿಂದ ಎಲ್ಪಿಜಿಯನ್ನು ಹೊತ್ತು ತರುತ್ತಿರುವ ಭಾರತದ ಧ್ವಜವನ್ನು ಹೊಂದಿರುವ ಎರಡು ಹಡಗುಗಳು ಸುರಕ್ಷಿತವಾಗಿ ದಾಟಿವೆ ಎಂದು ಶಿಪ್ಪಿಂಗ್ ಮತ್ತು ಜಲಮಾರ್ಗಗಳ ಸಚಿವಾಲಯದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಎಲ್ಪಿಜಿಯನ್ನು ಹೊತ್ತಿರುವ ‘ಶಿವಾಲಿಕ್’ ಮತ್ತು ‘ನಂದಾದೇವಿ’ ಹಡಗುಗಳು ಗುಜರಾತ್ ನ ಮುಂದ್ರಾ ಮತ್ತು ಕಾಂಡ್ಲಾ ಬಂದರುಗಳ ಕಡೆಗೆ ಸಾಗುತ್ತಿವೆ ಎಂದು ಸಚಿವಾಲಯದ ವಿಶೇಷ ಕಾರ್ಯದರ್ಶಿ ರಾಜೇಶ್ ಕುಮಾರ್ ಸಿನ್ಹಾ ತಿಳಿಸಿದ್ದಾರೆ. ಈ ಹಡಗುಗಳು 92,700 ಟನ್ ಎಲ್ಪಿಜಿಯನ್ನು ಹೊತ್ತು ತರುತ್ತಿದ್ದು, ಮಾರ್ಚ್ 16 ಅಥವಾ ಮಾರ್ಚ್ 17ರಂದು ಭಾರತೀಯ ಬಂದರುಗಳಲ್ಲಿ ಲಂಗರು ಹಾಕುವ ಸಾಧ್ಯತೆ ಇದೆ ಎಂದು ಅವರು ಹೇಳಿದ್ದಾರೆ. ಮಧ್ಯಪ್ರಾಚ್ಯದಲ್ಲಿ ಯುದ್ಧ ಪ್ರಾರಂಭವಾದಾಗಿನಿಂದ ಹಾರ್ಮುಝ್ ಜಲಸಂಧಿಯ ಪಶ್ಚಿಮ ಭಾಗದಲ್ಲಿ ನಿಂತಿರುವ 24 ಹಡಗುಗಳ ಪೈಕಿ ಈ ಎರಡು ಹಡಗುಗಳೂ ಸೇರಿದ್ದವು.
ದೇಶದಲ್ಲಿ ಪೆಟ್ರೋಲ್, ಡೀಸೆಲ್ ಸಾಕಷ್ಟು ಪ್ರಮಾಣದಲ್ಲಿ ಲಭ್ಯವಿದೆ : ಕೇಂದ್ರ ಸರಕಾರ ಸ್ಪಷ್ಟನೆ
ಹೊಸದಿಲ್ಲಿ,ಮಾ.14: ಪಶ್ಚಿಮ ಏಶ್ಯಾದಲ್ಲಿ ಉಲ್ಬಣಿಸುತ್ತಿರುವ ಸಂಘರ್ಷದ ನಡುವೆಯೇ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯವು ದೇಶಾದ್ಯಂತ ಸಾಕಷ್ಟು ಪ್ರಮಾಣದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಲಭ್ಯವಿವೆ ಎಂದು ಶನಿವಾರ ಜನತೆಗೆ ಭರವಸೆ ನೀಡಿದೆ. ತೆರೆದ ಪಾತ್ರೆಗಳು ಅಥವಾ ಲೂಸ್ ಕಂಟೇನರ್ಗಳಲ್ಲಿ ಪೆಟ್ರೋಲ್ ಅಥವಾ ಡೀಸೆಲ್ ಸಂಗ್ರಹಿಸಿಡದಂತೆ ಅದು ಜನರನ್ನು ಆಗ್ರಹಿಸಿದೆ. ದೇಶಾದ್ಯಂತ ಪೆಟ್ರೋಲ್ ಪಂಪ್ಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಲಭ್ಯತೆಯಿದೆ. ತೆರೆದ ಪಾತ್ರೆಗಳಲ್ಲಿ ಅಥವಾ ಲೂಸ್ ಕಂಟೇನರ್ಗಳಲ್ಲಿ ಇಂಧನವನ್ನು ಒಯ್ಯದಂತೆ ಅಥವಾ ಸಂಗ್ರಹಿಸದಂತೆ ಗ್ರಾಹಕರಿಗೆ ಸೂಚಿಸಲಾಗಿದೆ. ಹಾಗೆ ಮಾಡುವುದು ಗಂಭೀರ ಸುರಕ್ಷತಾ ಅಪಾಯಗಳಿಗೆ ಕಾರಣವಾಗುತ್ತದೆ ಎಂದು ಸಚಿವಾಲಯವು ಎಕ್ಸ್ ಪೋಸ್ಟ್ನಲ್ಲಿ ತಿಳಿಸಿದೆ. ತಮಿಳುನಾಡಿನ ಪೆಟ್ರೋಲ್ ಪಂಪ್ವೊಂದರಲ್ಲಿ ಸುರಕ್ಷತಾ ನಿಯಮಗಳನ್ನು ಉಲ್ಲಂಘಿಸಿ ತೆರೆದ ಪಾತ್ರೆಗಳಲ್ಲಿ ಅಥವಾ ಲೂಸ್ ಕಂಟೇನರ್ಗಳಲ್ಲಿ ಪೆಟ್ರೋಲ್ ಮಾರಾಟ ಮಾಡುತ್ತಿರುವ ಪ್ರಕರಣವನ್ನು ಅಧಿಕಾರಿಗಳು ಪತ್ತೆ ಹಚ್ಚಿದ ಬಳಿಕ ಸಚಿವಾಲಯದ ಈ ಸಲಹೆಯು ಹೊರಬಿದ್ದಿದೆ. ಈ ಬಗ್ಗೆ ಈಗಾಗಲೇ ಕಠಿಣ ಕ್ರಮವನ್ನು ಕೈಗೊಳ್ಳಲಾಗಿದ್ದು, ಸದ್ರಿ ಪೆಟ್ರೋಲ್ ಪಂಪ್ನ್ನು ಮುಚ್ಚಲಾಗಿದೆ ಎಂದೂ ಸಚಿವಾಲಯವು ತಿಳಿಸಿದೆ.
ಹೊಸದಿಲ್ಲಿ,ಮಾ.14: ಪಶ್ಚಿಮ ಏಶ್ಯಾ ಸಂಘರ್ಷದ ಹಿನ್ನೆಲೆಯಲ್ಲಿ ಭಾರತ ಎದುರಿಸುತ್ತಿರುವ ಇಂಧನ ಬಿಕ್ಕಟ್ಟಿಗೆ ತುಸು ನಿರಾಳತೆಯುಂಟು ಮಾಡುವಂತೆ, ಭಾರತದ ಇನ್ನೊಂದು ಎಲ್ಪಿಜಿ ವಾಹಕ ನೌಕೆ ನಂದಾದೇವಿ ಶನಿವಾರ ಯಶಸ್ವಿಯಾಗಿ ಹಾರ್ಮುಝ್ ಜಲಸಂಧಿಯನ್ನು ಯಶಸ್ವಿಯಾಗಿ ದಾಟಿದೆ. ಯುದ್ಧದಿಂದ ಉದ್ವಿಗ್ನವಾಗಿರುವ ಗಲ್ಫ್ ಪ್ರಾಂತದ ಮೂಲಕ ಇಂಧನ ಸಾಗಣೆಯ ಹಡಗುಗಳನ್ನು ಸುರಕ್ಷಿತವಾಗಿ ಸಂಚರಿಸುವಂತೆ ಮಾಡುವ ಭಾರತದ ಪ್ರಯತ್ನದಲ್ಲಿ ಇದೊಂದು ಇನ್ನೊಂದು ಮಹತ್ವದ ಹೆಜ್ಜೆಯಾಗಿದೆ. ಇಂದು ಹಾರ್ಮುಜ್ ಜಲಸಂಧಿಯನ್ನು ದಾಟಿದ ನಂದಾದೇವಿ ಹಡಗಿಗೆ ಭಾರತೀಯ ನೌಕಾಪಡೆ ರಕ್ಷಣೆ ಒದಗಿಸಿದೆ. ಮುಂದಿನ ಎರಡು ದಿನಗಳೊಳಗೆ ಈ ಹಡಗು ಭಾರತೀಯ ಬಂದರನ್ನು ತಲುಪು ನಿರೀಕ್ಷೆಯಿದ್ದು, ಮುಂಬೈ ಅಥವಾ ಕಾಂಡ್ಲಾದಲ್ಲಿ ಅದರ ಲಂಗರುಹಾಕುವ ನಿರೀಕ್ಷೆಯಿದೆ.ನಂದಾದೇವಿ 46 ಸಾವಿರ ಮೆಟ್ರಿಕ್ಟನ್ ಎಲ್ಪಿಜಿಯನ್ನು ಭಾರತಕ್ಕೆ ಒಯ್ಯುತ್ತದೆ. ಇದಕ್ಕೂ ಮುನ್ನ, ಶುಕ್ರವಾರದಂದು 40 ಸಾವಿರ ಮೆಟ್ರಿಕ್ ಟನ್ಗಳಿಗೂ ಅಧಿಕ ಎಲ್ಪಿಜಿಯನ್ನು ಹೊತ್ತೊಯ್ಯುತ್ತಿರುವ ಶಿವಾಲಿಕ್ಹಡಗು ಕೂಡಾ ಭಾರತೀಯ ನೌಕಾಪಡೆಯ ಬೆಂಗಾವಲಿನೊಂದಿಗೆ ಹಾರ್ಮುಜ್ ಜಲಸಂಧಿಯನ್ನು ದಾಟಿತ್ತು. ಹಾರ್ಮುಝ್ ಜಲಸಂಧಿಯನ್ನು ದಾಟುವ ಇತರ ಭಾರತೀಯ ಹಡಗುಗಳಿಗೂ ಇದೇ ರೀತಿಯ ಕಾರ್ಯನಿರ್ವಹಣಾ ವಿಧಾನವನ್ನು ಅನುಸರಿಸುವ ಮೂಲಕ ಅವು ಯಾವುದೇ ಅಡಚಣೆಯಿಲ್ಲದೆ ಸುರಕ್ಷಿತವಾಗಿ ಸಂಚರಿಸಲು ಸಾಧ್ಯವಾಗುವುದೆಂಬ ಆಶಾವಾದವನ್ನು ಭಾರತೀಯ ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ. ಎಲ್ಪಿಜಿಯ ಆಮದಿಗೆ ಭಾರತವು ಗಲ್ಫ್ ಪ್ರಾಂತವನ್ನು ವ್ಯಾಪಕವಾಗಿ ಅವಲಂಭಿಸಿರುವ ಹಿನ್ನೆಲೆಯಲ್ಲಿ ಈ ಬೆಳವಣಿಗೆಯು ಅತ್ಯಂತ ಮಹತ್ವದ್ದಾಗಿದೆ. ಭಾರತದ ಇಂಧನ ಸಾಗಣಿಕೆಗಳನ್ನು, ಅತ್ಯಂತ ಮಹತ್ವದ ಹಾರ್ಮುಝ್ ಜಲಸಂಧಿಯಲ್ಲಿ ಸುರಕ್ಷಿತವಾಗಿ ಸಂಚರಿಸುವಂತೆ ಮಾಡಲು ಕಾರ್ಯಸಾಧ್ಯವಾದ ವಿಧಾನವನ್ನು ಭಾರತವು ರೂಪಿಸಿರುವುದಕ್ಕೆ ಈ ಹಡಗುಗಳ ಸುರಕ್ಷಿತ ಸಂಚಾರವು ಖಾತರಿಪಡಿಸಿದೆಯೆಂದು ಅಧಿಕಾರಿಗಳು ತಿಳಿಸಿದ್ದಾರೆ.
ಕುಂದಾಪುರ | ಓವರ್ ಸ್ಪೀಡ್ ಗೆ ದಂಡ ವಿಧಿಸಿ, ಕಾನೂನು ಅರಿವು ಮೂಡಿಸಿದ ಸಂಚಾರ ಠಾಣೆ ಪೊಲೀಸರು
ಕುಂದಾಪುರ: ರಾಷ್ಟ್ರೀಯ ಹೆದ್ದಾರಿಯಲ್ಲಿ ನಿಗದಿಪಡಿಸಿದ ವೇಗಕ್ಕಿಂತ ಜಾಸ್ಥಿಯಾದ ವೇಗದಲ್ಲಿ ಸಂಚರಿಸುತ್ತಿದ್ದ ಹಲವು ವಾಹನಗಳಿಗೆ ಕುಂದಾಪುರ ಸಂಚಾರ ಠಾಣೆ ಪೊಲೀಸರು ಶನಿವಾರ ಸಂಜೆ ಮೋಟಾರು ನಿಯಮ ಕಾಯ್ದೆ ಯಡಿ ದಂಡ ವಿಧಿಸಿ, ಕಾನೂನು ಪಾಲನೆ ಅರಿವು ಮೂಡಿಸಿದರು. ನಗರದ ಹೊರವಲಯದ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದ ಎದುರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಜೆ ಕಾರ್ಯಾ ಚರಣೆಗಿಳಿದ ಪೊಲೀಸರು ಈ ಪ್ರದೇಶದಲ್ಲಿ ನಿಗದಿಪಡಿಸಿದ (80ಕಿ.ಮೀ.) ವೇಗಕ್ಕಿಂತ ಹೆಚ್ಚು ವೇಗದಲ್ಲಿ ಸಂಚರಿಸಿದ ವಾಹನಗಳನ್ನು ಸ್ಫೀಡ್ ರಾಡರ್ ಗನ್ (ವೇಗ ಪರಿಶೀಲನೆ ಯಂತ್ರ) ಮೂಲಕ ಪತ್ತೆ ಮಾಡಿ ವಾಹನ ತಡೆದು ಸಂಬಂಧ ಪಟ್ಟವರಿಗೆ ವೇಗ ಮಿತಿಯ ಬಗ್ಗೆ ಮಾಹಿತಿ ನೀಡಿದರು ಹಾಗೂ ಅತೀ ವೇಗದಲ್ಲಿ ಸಂಚರಿಸಿದ ಒಂದಷ್ಟು ಮಂದಿಗೆ ದಂಡ ವಿಧಿಸಿದರು. ಹೆಚ್ಚುತ್ತಿರುವ ರಸ್ತೆ ಅಪಘಾತಕ್ಕೆ ವಾಹನಗಳ ಅತೀಯಾದ ವೇಗವೂ ಒಂದು ಕಾರಣವಾಗಿದ್ದು ಇಲಾಖಾ ಮೇಲಾಧಿ ಕಾರಿಗಳ ಮಾರ್ಗದರ್ಶನದಲ್ಲಿ ಈಗಾಗಲೇ ಮೂರ್ನಾಲ್ಕು ಬಾರಿ ಅತೀ ವೇಗ ಪರಿಶೀಲನೆ ಕಾರ್ಯಾಚರಣೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಾಡಲಾಗಿದೆ. ವರದಿಯಾಗುತ್ತಿರುವ ಅಪಘಾತ ಪ್ರಕರಣಗಳಲ್ಲಿ ಸಾವಿನ ಸಂಖ್ಯೆಯೂ ಹೆಚ್ಚಿದ್ದು ಈ ಬಗ್ಗೆ ಇಲಾಖೆ ಗಂಭೀರವಾಗಿ ಪರಿಗಣಿಸುತ್ತದೆ. ಮುಂಬರುವ ದಿನದಲ್ಲಿ ರಾಜ್ಯ ಹೆದ್ದಾರಿ ಸಹಿತ ಅಗತ್ಯ ಕಡೆಗಳಲ್ಲಿ ಕಾರ್ಯಾಚರಣೆ ಮುಂದುವರಿಸಲಾಗುವುದು ಎಂದು ಕುಂದಾಪುರ ಸಂಚಾರ ಠಾಣೆ ಎಸ್ಐ ಅನೂಪ್ ನಾಯಕ್ ಮಾಹಿತಿ ನೀಡಿದರು. ಈ ವೇಳೆ ಟ್ರಾಫಿಕ್ ಠಾಣೆ ಪಿಎಸ್ಐ ಸುಧಾ ಪ್ರಭು, ಎಎಸ್ಐಗಳಾದ ಸುರೇಶ್, ನಾಗರಾಜ್ ಕುಲಾಲ್, ನಾಗಪ್ಪ, ಹೆಡ್ ಕಾನ್ಸ್ಟೇಬಲ್ ಕೇಶವ, ವೀರಪ್ಪ, ಶ್ರೀನಿವಾಸ, ಕಾನ್ಸ್ಟೇಬಲ್ ಪ್ರಸಾದ್, ವೆಂಕಟೇಶ್ ಕಾರ್ಯಾಚರಣೆಯಲ್ಲಿದ್ದರು.
ಟಿಪ್ಪರ್ ಲಾರಿ ಢಿಕ್ಕಿ: ಪಾದಚಾರಿ ಮೃತ್ಯು
ಪಡುಬಿದ್ರಿ, ಮಾ.14: ಮಿನಿ ಟಿಪ್ಪರ್ ಲಾರಿ ಢಿಕ್ಕಿ ಹೊಡೆದ ಪರಿಣಾಮ ರಸ್ತೆ ಬದಿ ನಿಂತಿದ್ದ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಮಾ.13ರಂದು ಸಂಜೆ ವೇಳೆ ನಂದಿಕೂರು ಗ್ರಾಮದ ಪಾಂಡ್ಯರ್ ಕಾಂಪ್ಲೆಕ್ಸ್ ಬಳಿ ನಡೆದಿದೆ. ಮೃತರನ್ನು ಲಿಂಗಪ್ಪ ಕಾಡ್ಯ ಶೆಟ್ಟಿ(77) ಎಂದು ಗುರುತಿಸಲಾಗಿದೆ. ಪಡುಬಿದ್ರಿ ಕಡೆಯಿಂದ ಬರುತ್ತಿದ್ದ ಮಿನಿ ಟಿಪ್ಪರ್ ಲಾರಿಯು ರಸ್ತೆ ದಾಟಲು ರಸ್ತೆ ಬದಿಯಲ್ಲಿ ನಿಂತಿದ್ದ ಲಿಂಗಪ್ಪ ಅವರಿಗೆ ಢಿಕ್ಕಿ ಹೊಡೆಯಿತ್ತೆನ್ನಲಾಗಿದೆ. ಇದರಿಂದ ಗಂಭೀರ ವಾಗಿ ಗಾಯಗೊಂಡ ಅವರು ಉಡುಪಿ ಖಾಸಗಿ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟರು ಎಂದು ತಿಳಿದುಬಂದಿದೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾರ್ಕಳ, ಹೆಬ್ರಿ ಪರಿಸರದಲ್ಲಿ ಸಾದಾರಣ ಮಳೆ
ಉಡುಪಿ, ಮಾ.14: ಜಿಲ್ಲೆಯ ಹೆಬ್ರಿ ಹಾಗೂ ಕಾರ್ಕಳ ತಾಲೂಕಿನ ವಿವಿಧ ಭಾಗಗಳಲ್ಲಿ ಇಂದು ಸಂಜೆಯ ವೇಳೆ ಸಾದಾರಣ ಮಳೆಯಾಗಿದ್ದು, ಇದರಿಂದ ಪರಿಸರದಲ್ಲಿ ತಂಪಿನ ವಾತಾವರಣ ನಿರ್ಮಾಣವಾಗಿದೆ. ಕಾರ್ಕಳ ತಾಲೂಕಿನ ಕಾರ್ಕಳ ನಗರ, ಮಾಳ, ಅಜೆಕಾರು, ಶಿರ್ಲಾಲು, ಬೆಳ್ಮಣ್, ಬಜೆಗೋಳಿ, ಹೆಬ್ರಿ ಸಮೀಪದ ಮುನಿಯಾಲು, ಅಂಡಾರು ಮುದ್ರಾಡಿ, ಕಬ್ಬಿನಾಲೆ ಸೇರಿದಂತೆ ವಿವಿಧೆಡೆ ಗುಡುಗು ಸಹಿತ ಸಾದಾರಣ ಮಳೆಯಾಗಿದೆ. ಕಳೆದ ಕೆಲವು ದಿನಗಳಿಂದ ಬಿಸಿಲ ತಾಪದಿಂದ ತತ್ತರಿಸಿದ ಜನರಿಗೆ ಈ ಮಳೆ ತಂಪಿನ ವಾತಾವರಣ ಕಲ್ಪಿಸಿದೆ. ಮಳೆಯಿಂದಾಗಿ ಕೆಲವು ಕಡೆ ವಾಹನ ಸವಾರರರು ತೀರಾ ತೊಂದರೆ ಅನುಭವಿಸುವಂತಾಯಿತು.
Bidar | ಜಿಲ್ಲಾ ಸಂಕಿರ್ಣ ಕಟ್ಟಡ ಕಾಮಗಾರಿ ವೀಕ್ಷಿಸಿದ ಸಚಿವ ಈಶ್ವರ್ ಖಂಡ್ರೆ
ಬೀದರ್ : ನಗರದ ಹಳೆ ಜಿಲ್ಲಾಧಿಕಾರಿ ಕಚೇರಿ ಸ್ಥಳದಲ್ಲಿ ನಿರ್ಮಾಣಗೊಳ್ಳುತ್ತಿರುವ ನೂತನ ಜಿಲ್ಲಾ ಸಂಕೀರ್ಣ ಕಟ್ಟಡ ಕಾಮಗಾರಿ ಸ್ಥಳಕ್ಕೆ ಶನಿವಾರ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ ಅವರು ಭೇಟಿ ನೀಡಿ ಪರಿಶೀಲಿಸಿದರು. ನಂತರ ಮಾತನಾಡಿದ ಅವರು, ಜಿಲ್ಲಾ ಸಂಕೀರ್ಣ ಕಟ್ಟಡವು 48 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿದ್ದು, ನಗರದ ಅಭಿವೃದ್ಧಿಗೆ ಮತ್ತೊಂದು ಮಹತ್ವದ ಹೆಜ್ಜೆಯಾಗಿದೆ. ಜಿಲ್ಲೆಯ ವಿವಿಧ ಸರ್ಕಾರಿ ಇಲಾಖೆಗಳು ಒಂದೇ ಸಂಕೀರ್ಣದಲ್ಲಿ ಕಾರ್ಯನಿರ್ವಹಿಸುವ ಮೂಲಕ ಸಾರ್ವಜನಿಕರಿಗೆ ಸುಲಭವಾಗಿ ಹಾಗೂ ವೇಗವಾಗಿ ಸೇವೆಗಳು ದೊರೆಯುವಂತೆ ಈ ಜಿಲ್ಲಾ ಸಂಕೀರ್ಣ ನಿರ್ಮಾಣವಾಗುತ್ತಿದೆ. ಜಿಲ್ಲೆಯ ಆಡಳಿತ ವ್ಯವಸ್ಥೆಯನ್ನು ಇನ್ನಷ್ಟು ಪರಿಣಾಮಕಾರಿಯಾಗಿ ರೂಪಿಸಲು ಸಹಾಯಕಾರಿಯಾಗಲಿದೆ ಎಂದರು. ಈ ವೇಳೆ ಕಟ್ಟಡವನ್ನು ಉತ್ತಮ ಗುಣಮಟ್ಟದೊಂದಿಗೆ ಹಾಗೂ ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಗಿರೀಶ್ ಬದೋಲೆ ಹಾಗೂ ಅಪರ ಜಿಲ್ಲಾಧಿಕಾರಿ ಶಿವಾನಂದ್ ಕರಾಳೆ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಉಪಸ್ಥಿತರಿದ್ದರು.
ಕಲಬುರಗಿ | ರಾಷ್ಟ್ರೀಯ ಲೋಕ್ ಅದಾಲತ್ನಲ್ಲಿ 2,42,425 ಪ್ರಕರಣಗಳ ಇತ್ಯರ್ಥ
ಕಲಬುರಗಿ : ಉಚ್ಛ ನ್ಯಾಯಾಲಯ ಹಾಗೂ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಅಡಿಯಲ್ಲಿ ಕಲಬುರಗಿ ಜಿಲ್ಲೆಯ ಎಲ್ಲಾ ನ್ಯಾಯಾಲಯಗಳಲ್ಲಿ ಶನಿವಾರ ಹಮ್ಮಿಕೊಳ್ಳಲಾದ ರಾಷ್ಟ್ರೀಯ ಲೋಕ್ ಅದಾಲತ್ನಲ್ಲಿ ಒಟ್ಟು 2,42,425 ಪ್ರಕರಣಗಳು ಇತ್ಯರ್ಥವಾಗಿದ್ದು, ಅವುಗಳಲ್ಲಿ 9181 ಪೆಂಡಿಂಗ್ ಪ್ರಕರಣಗಳು ಹಾಗೂ 2,33,244 ವ್ಯಾಜ್ಯಪೂರ್ವ ಪ್ರಕರಣಗಳು ಇತ್ಯರ್ಥಗೊಂಡಿರುತ್ತವೆ ಎಂದು ಕಲಬುರಗಿ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಶ್ರೀನಿವಾಸ ನವಲೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಅದೇ ರೀತಿ ಈ ಅದಾಲತ್ನಲ್ಲಿ ಜಿಲ್ಲೆಯಲ್ಲಿ 5 ಪ್ರಕರಣಗಳಲ್ಲಿ ಬೇರ್ಪಡೆಯಾಗಿದ್ದ ಪತಿ ಮತ್ತು ಪತ್ನಿಯರನ್ನು ಒಂದುಗೂಡಿಸಲಾಯಿತು. 10 ವರ್ಷಗಳಿಗಿಂತ ಹೆಚ್ಚಿನ ಅವಧಿಯ 1 ಪ್ರಕರಣ, 7 ವರ್ಷಗಳಿಗಿಂತ ಹೆಚ್ಚಿನ ಅವಧಿಯ 7 ಪ್ರಕರಣಗಳನ್ನು ರಾಜಿ ಮಾಡಿಸಿ ಕಲಬುರಗಿ ಜಿಲ್ಲೆಯಲ್ಲಿ ಮೆಗಾ ಲೋಕ್ ಅದಾಲತ್ ಅದ್ಭುತ ಯಶಸ್ಸನ್ನು ಕಂಡಿರುತ್ತದೆ. ಕಲಬುರಗಿ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಜಿ.ಎಲ್. ಲಕ್ಷ್ಮೀನಾರಾಯಣ ಸೇರಿದಂತೆ ಜಿಲ್ಲೆಯ ಎಲ್ಲಾ ನ್ಯಾಯಾಧೀಶರು, ನ್ಯಾಯವಾದಿಗಳು, ಸಾರ್ವಜನಿಕರು ಹಾಗೂ ಕಕ್ಷಿದಾರರ ಸಹಕಾರದಿಂದ ನ್ಯಾಶನಲ್ ಲೋಕ್ಅದಾಲತ್ ಮೂಲಕ ಸಿವಿಲ್ ದಾವೆಗಳು, ಮೋಟಾರು ವಾಹನ ಅಪಘಾತ ಪರಿಹಾರ ಪ್ರಕರಣಗಳು, ರಾಜಿಯಾಗಬಹುದಾದ ಕ್ರಿಮಿನಲ್ ಪ್ರಕರಣಗಳು, ಚೆಕ್ ಪ್ರಕರಣಗಳು, ಭೂಸ್ವಾಧೀನ ಪರಿಹಾರ ವಸೂಲಾತಿ ಪ್ರಕರಣಗಳು, ಬ್ಯಾಂಕ್ಗಳಿಗೆ ಸಂಬoಧಿಸಿದ ವ್ಯಾಜ್ಯಪೂರ್ವ ಪ್ರಕರಣಗಳನ್ನು ಇತ್ಯರ್ಥಗೊಳಿಸಲಾಗಿದೆ. ಈ ಲೋಕ ಅದಾಲತ್ನಲ್ಲಿ ಕಕ್ಷಿದಾರರು, ನ್ಯಾಯಾಧೀಶರು, ಸಂಧಾನಕಾರರು ಹಾಗೂ ಸಂಬoಧಪಟ್ಟ ನ್ಯಾಯವಾದಿಗಳು ರಾಜೀ ಸಂಧಾನ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದರು. ಶನಿವಾರ ರಾಜ್ಯದ ಎಲ್ಲಾ ನ್ಯಾಯಾಲಯಗಳಲ್ಲಿ ರಾಷ್ಟ್ರೀಯ ಲೋಕ ಅದಾಲತ್ನ್ನು ಹಮ್ಮಿಕೊಳ್ಳಲಾಯಿತು.
ಜೈಲುಗಳಲ್ಲಿ ಮಾದಕ ವಸ್ತುಗಳ ಜಾಲ ತಡೆಗೆ ಕ್ರಮ: ರಾಜ್ಯದ ಎಲ್ಲ ಜೈಲುಗಳ ಕೈದಿಗಳಿಗೆ ಡ್ರಗ್ಸ್ ಪರೀಕ್ಷೆ
ಬೆಂಗಳೂರು : ರಾಜ್ಯದ ಜೈಲುಗಳಲ್ಲಿ ಮಾದಕ ವಸ್ತುಗಳ ಸೇವನೆ ಹಾಗೂ ಸಿಬ್ಬಂದಿಯಿಂದಲೂ ಮಾದಕ ವಸ್ತುಗಳು ಜೈಲಿಗೆ ಸಾಗಣೆಯಾದ ಘಟನೆಗಳ ಹಿನ್ನೆಲೆ, ನಿಮ್ಹಾನ್ಸ್ ಸಹಯೋಗದೊಂದಿಗೆ ಕೈದಿಗಳನ್ನು ಡ್ರಗ್ ಪರೀಕ್ಷೆಗೆ ಒಳಪಡಿಸುವ ವ್ಯವಸ್ಥೆ ಆರಂಭಿಸಲಾಗಿದೆ ಎಂದು ವರದಿಯಾಗಿದೆ. ಕಾರಾಗೃಹ ಇಲಾಖೆಯ ಡಿಜಿಪಿ ಅಲೋಕ್ ಕುಮಾರ್ ಸೂಚನೆಯಂತೆ ರಾಜ್ಯದ ಎಲ್ಲ ಜೈಲುಗಳಲ್ಲಿ ಕೈದಿಗಳನ್ನು ಮಾದಕ ವಸ್ತು ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ರಾಜ್ಯದ ವಿವಿಧ ಕಾರಾಗೃಹಗಳಲ್ಲಿರುವ ಬಂಧಿತರಲ್ಲಿ ಡ್ರಗ್ ಸೇವನೆ ತಡೆಯುವ ಉದ್ದೇಶದಿಂದ ಈ ಕ್ರಮ ಜಾರಿಗೆ ತರಲಾಗಿದೆ ಎಂದು ಮೂಲಗಳು ತಿಳಿಸಿವೆ. ಪ್ರಾರಂಭಿಕ ಹಂತದಲ್ಲಿ ರಾಜ್ಯದ ಎಲ್ಲ ಜೈಲುಗಳಲ್ಲಿ ಶೇ.10ರಷ್ಟು ಕೈದಿಗಳನ್ನು ಆಯ್ಕೆ ಮಾಡಿ ಗಾಂಜಾ, ಹೆರೊಯಿನ್, ಕೊಕೇನ್ ಮುಂತಾದ ಮಾದಕ ವಸ್ತುಗಳಿಗಾಗಿ ವಿಶೇಷ ಕಿಟ್ಗಳ ಸಹಾಯದಿಂದ ಪರೀಕ್ಷೆ ನಡೆಸಲಾಗುತ್ತಿದೆ. ಮಾದಕ ವಸ್ತು ಬಳಕೆ ಕಂಡುಬಂದರೆ, ವ್ಯಸನಕ್ಕೆ ಒಳಗಾದವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತದೆ. ಜೊತೆಗೆ ಅಂತಹವರಿಗೆ ಸಮಾಲೋಚನೆ ನೀಡಲಾಗುತ್ತದೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಲಿಂಗಸುಗೂರು | ಲೋಕ ಅದಾಲತ್ನಲ್ಲಿ 712 ಪ್ರಕರಣಗಳು ಇತ್ಯರ್ಥ
ಲಿಂಗಸುಗೂರು : ಶನಿವಾರ ಲಿಂಗಸುಗೂರಿನಲ್ಲಿ ನಡೆದ ರಾಷ್ಟ್ರೀಯ ಲೋಕ ಅಡಾಲತ್ ನಲ್ಲಿ ಹಿರಿಯ ಶ್ರೇಣಿ ನ್ಯಾಯಾಲಯ, ಪ್ರಧಾನ ಸಿವಿಲ್ ನ್ಯಾಯಾಲಯ ಮತ್ತು ಹೆಚ್ಚುವರಿ ಸಿವಿಲ್ ನ್ಯಾಯಾಲಯಗಳಲ್ಲಿ ನಾವಿಗ್ರಹಿತ ಪ್ರಕರಣಗಳ ವಿಲೇವಾರಿ ಶೇಕಡಾ ಪ್ರಮಾಣದಲ್ಲಿ ಯಶಸ್ವಿಯಾಯಿತು. ಹಿರಿಯ ಶ್ರೇಣಿ ನ್ಯಾಯಾಲಯದಲ್ಲಿ ಒಟ್ಟು 2,399 ಪ್ರಕರಣಗಳಲ್ಲಿ 712 ಪ್ರಕರಣಗಳು ವಿಲೇವಾರಿ ಕಂಡು, ₹2,73,44,300 ಮೊತ್ತದ ಕ್ಲೈಮ್ ಇತ್ಯರ್ಥವಾಗಿದೆ. ಪ್ರಧಾನ ಸಿವಿಲ್ ನ್ಯಾಯಾಲಯದಲ್ಲಿ ಒಟ್ಟು 2,306 ಪ್ರಕರಣಗಳಲ್ಲಿ 874 ಪ್ರಕರಣಗಳ ವಿಲೇವಾರಿ ಮೂಲಕ ₹95,82,551 ಮೊತ್ತದ ಕ್ಲೈಮ್ ಇತ್ಯರ್ಥವಾಗಿದೆ. ಹೆಚ್ಚುವರಿ ಸಿವಿಲ್ ನ್ಯಾಯಾಲಯದಲ್ಲಿ 1,077 ಪ್ರಕರಣಗಳಲ್ಲಿ 682 ಪ್ರಕರಣಗಳ ವಿಲೇವಾರಿ ಮೂಲಕ ₹3,22,183 ಮೊತ್ತದ ಕ್ಲೈಮ್ ಇತ್ಯರ್ಥವಾಗಿದೆ. ವ್ಯಾಜ್ಯಪೂರ್ವ ಪ್ರಕರಣಗಳಲ್ಲಿ 6,000 ಪ್ರಕರಣಗಳಲ್ಲಿ 4,950 ಪ್ರಕರಣಗಳು ವಿಲೇವಾರಿ ಕಂಡು ₹29,65,159 ಮೊತ್ತದ ಕ್ಲೈಮ್ ಇತ್ಯರ್ಥವಾಗಿದೆ. ಈ ವಿಲೇವಾರಿಯಲ್ಲಿ ಹಿರಿಯ ಶ್ರೇಣಿ ನ್ಯಾಯಾಧೀಶ ಉಂಡಿ ಮಂಜುಳಾ ಶಿವಪ್ಪ ಮತ್ತು ಪ್ರಧಾನ ಸಿವಿಲ್ ನ್ಯಾಯಾಧೀಶ ಅಂಬಣ್ಣ ಕೆ. ಪ್ರಮುಖ ಪಾತ್ರ ವಹಿಸಿದ್ದರು. ಈ ಸಂದರ್ಭದಲ್ಲಿ ವಕೀಲರಾದ ಭೂಪನಗೌಡ ಪಾಟೀಲ್, ಬಾಲರಾಜ, ಮಹಾಲಿಂಗಪ್ಪ, ಹಾಜಿಬಾಬ್, ನಾಗರಾಜ ಗಸ್ತಿ, ಕಿರಣ ಮಸ್ಕಿ, ಮಂಜುಳಾ, ವೀಣಾದೇಸಾಯಿ, ಅಮರೇಶ ಪಾಟೀಲ್, ಶಿವಕುಮಾರ, ಈಶ್ವರ ಜಾದವ, ನಾಗರತ್ನ, ಶರಣಬಸವ, ರಾಜಶೇಖರ ಹಾಗೂ ಇತರರು ಭಾಗವಹಿಸಿದ್ದರು.
ಅಡುಗೆ ಅನಿಲ ಕೊರತೆ ಎಫೆಕ್ಟ್: ಅಕ್ರಮ ಗ್ಯಾಸ್ ರೀಪಿಲ್ಲಿಂಗ್ ದಂಧೆ ಜೋರು, ಏಜನ್ಸಿ ಅಂಗಡಿಯ ಮೇಲೆ ಪ್ರಕರಣ ದಾಖಲು
ರಾಜ್ಯದಲ್ಲಿ ಅಡುಗೆ ಅನಿಲ ಕೊರತೆ ಒಂದು ಕಡೆಯಾದರೆ ಅಕ್ರಮ ಗ್ಯಾಸ್ ರೀಪಿಲ್ಲಿಂಗ್ ದಂಧೆ ಜೋರಾಗಿದೆ. ಈ ಹಿನ್ನೆಲೆಯಲ್ಲಿ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಹಾಗೂ ಕಾನೂನು ಮಾಪನ ಶಾಸ್ತ ಇಲಾಖೆ ಎಚ್ಚೆತ್ತುಕೊಂಡಿದೆ. ಬೆಂಗಳೂರು ಸೇರಿದಂತೆ ಹಲವು ಕಡೆಗಳಲ್ಲಿ ದಾಳಿ ನಡೆಸಿದೆ. ಏಜನ್ಸಿ ಅಂಗಡಿಯ ಮೇಲೆ ಪ್ರಕರಣ ದಾಖಲು ಮಾಡಲಾಗಿದೆ. ದಂಧೆಕೋರರ ವಿರುದ್ಧ ಅಗತ್ಯ ವಸ್ತುಗಳ ಕಾಯ್ದೆ 1955 ರ ಕಾಯ್ದೆ ಅಡಿ ಪ್ರಕರಣವನ್ನು ದಾಖಲಿಸಿ ವಶಪಡಿಸಿಕೊಳ್ಳಲಾಗಿದೆ. ಮತ್ತಷ್ಟು ವಿವರ ಇಲ್ಲಿದೆ.
ಬಂಟ್ವಾಳ : ಮಾಜಿ ಸಚಿವ ರಮಾನಾಥ ರೈ ನೇತೃತ್ವದಲ್ಲಿ ಸೌಹಾರ್ದ ಇಫ್ತಾರ್ ಕೂಟ
ಬಂಟ್ವಾಳ : ಮಾಜಿ ಸಚಿವ ಬಿ. ರಮಾನಾಥ ರೈ ಅವರ ನೇತೃತ್ವದಲ್ಲಿ ಸೌಹಾರ್ದ ಇಫ್ತಾರ್ ಕೂಟವು ಶನಿವಾರ ಪಾಣೆಮಂಗಳೂರು ಸಾಗರ್ ಆಡಿಟೋರಿಯಂ ನಲ್ಲಿ ನಡೆಯಿತು. ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬಿ, ರಮಾನಾಥ ರೈ ಮಾತನಾಡಿ, ಸರ್ವ ಧರ್ಮೀಯರು ಪರಸ್ಪರ ಅನ್ಯೋನ್ಯತೆಯಿಂದ ಬಾಳಿ ಬದುಕಿದಾಗ ಸುಂದರ ಸಮಾಜ ನಿರ್ಮಾಣ ಸಾಧ್ಯ, ಈ ನಿಟ್ಟಿನಲ್ಲಿ ಸಾರ್ವಜನಿಕ ಶ್ರೀ ಗಣೇಶೋತ್ಸವ, ಸೌಹಾರ್ದ ಇಫ್ತಾರ್, ಕ್ರಿಸ್ಮಸ್ ಮೊದಲಾದ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸಮಾಜದ ಎಲ್ಲಾ ವರ್ಗದ ಜನರಲ್ಲಿ ಸಹೋದರ ಭಾವನೆಯನ್ನು ಮೂಡಿಸುವ ಪ್ರಯತ್ನ ಮಾಡುತ್ತಿದ್ದೇವೆ ಎಂದರು. ಶ್ರೀಧಾಮ ಮಾಣಿಲದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಮಾತನಾಡಿ, ಐಕ್ಯತೆ, ಭಾವೈಕ್ಯತೆ, ಮಾನವೀಯತೆಯೊಂದಿಗೆ ಜಗತ್ತನ್ನು ಪ್ರೀತಿಸುವ ಜತೆಗೆ ಭಗವಂತನು ಹತ್ತಿರಗೊಳಿಸುವ ಕಾರ್ಯವೇ ಹಬ್ಬಗಳ ಉದ್ದೇಶವಾಗಿದ್ದು, ಎಲ್ಲರಿಗೂ ಸಮಾನಾಗಿ ಅವಕಾಶ ನೀಡಿರುವ ಪ್ರಕೃತಿಯಲ್ಲಿ ಭಗವಂತನು ಸರ್ವ ಜೀವ ಸಂಕುಲಗಳಿಗೂ ಮೌಲ್ಯಗಳನ್ನು ನೀಡಿದ್ದಾನೆ. ಸಮಾಜದಲ್ಲಿ ನೊಂದವರ ಉದ್ಧಾರದ ಕಾರ್ಯದಲ್ಲಿ ರಮಾನಾಥ ರೈಯವರು ಸದಾ ಬದ್ಧತೆಯನ್ನು ಪ್ರದರ್ಶಿಸುವ ಮೂಲಕ ಸಾಮರಸ್ಯಕ್ಕೆ ಸಾಕ್ಷಿಯಾಗಿದ್ದಾರೆ ಎಂದರು. ಮೊಡಂಕಾಪು ಇನ್ಫೆಂಟ್ ಜೀಸಸ್ ಚರ್ಚಿನ ಪ್ರಧಾನ ಧರ್ಮಗುರು ರೆ.ಫಾ.ವಿಕ್ಟರ್ ಡಿಸೋಜಾ ಮಾತನಾಡಿ, ನಮ್ಮ ಜೀವನವೇ ಧರ್ಮಗ್ರಂಥಗಳಾಗಿದ್ದು, ಅದಕ್ಕೆ ಬದ್ಧರಾಗಿ ನಾವು ಬದುಕಿದಾಗ ಸಮಾಜದಲ್ಲಿ ಸೌಹಾರ್ದತೆ ಮೂಡಲು ಸಾಧ್ಯವಿದೆ. ಧರ್ಮದ ನಿಯಮಗಳು, ತಿರುಳನ್ನು ಅರಿತುಕೊಂಡಾಗ ಸಮಾಜದ ಅಭಿವೃದ್ಧಿ ಸಾಧ್ಯ ಎಂದರು. ಮಂಗಳೂರು ಶಾಂತಿ ಪ್ರಕಾಶನದ ಅಧ್ಯಕ್ಷ ಮುಹಮ್ಮದ್ ಕುಂಞಿ ಮಾತನಾಡಿ, ಅಪ ನಂಬಿಕೆಗಳನ್ನು ದೂರ ಮಾಡಿ, ಸಂಬಂಧವನ್ನು ಬಲಪಡಿಸುವುದೇ ಇಫ್ತಾರ್ ಸಂಗಮದ ಉದ್ದೇಶವಾಗಿದ್ದು, ಜಾತಿ, ಧರ್ಮಗಳನ್ನು ಮೀರಿ ನಾವು ಒಟ್ಟು ಸೇರಿದಾಗ ಶಾಂತಿ-ಸಾಮರಸ್ಯದ ಸಮಾಜ ನಿರ್ಮಾಣ ಸಾಧ್ಯ ಎಂದರು. ನೆಹರೂನಗರ ಮಸೀದಿ ಖತೀಬ್ ದಾವೂದ್ ಇಸ್ಮಾಯಿಲ್ ಫೈಝಿ ಪ್ರಾರ್ಥನೆಯ ನೇತೃತ್ವ ವಹಿಸಿದ್ದರು. ಸಮಾರಂಭದಲ್ಲಿ ವಿವಿಧ ಕ್ಷೇತ್ರದ ಗಣ್ಯರಾದ ಡಾ.ಯು.ಟಿ.ಇಫ್ತಿಕಾರ್, ಪದ್ಮರಾಜ್ ಆರ್.ಪೂಜಾರಿ, ಹರೀಶ್ ಇಂಜಾಡಿ, ಪಿಯೂಸ್ ಎಲ್. ರಾಡ್ರಿಗಸ್, ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಬಿ.ಎಂ.ಅಬ್ಬಾಸ್ ಅಲಿ, ಚಂದ್ರಶೇಖರ ಭಂಡಾರಿ, ಬಾಲಕೃಷ್ಣ ಅಂಚನ್, ಇಬ್ರಾಹಿಂ ನವಾಝ್ ಬಡಕಬೈಲ್, ಸುದೀಪ್ ಕುಮಾರ್ ಶೆಟ್ಟಿ ಬೇಬಿ ಕುಂದರ್, ಪದ್ಮಶೇಖರ್ ಜೈನ್, ಅಶ್ವನಿಕುಮಾರ್ ರೈ, ಹಾಜಿ ಪಿ.ಎಸ್. ಅಬ್ದುಲ್ ಹಮೀದ್, ಡಾ.ರಾಜಾರಾಮ್ ಕೆ.ಬಿ, ಕಾವು ಹೇಮನಾಥ ಶೆಟ್ಟಿ, ಹನೀಫ್ ಪೆರ್ಲಾಪು, ಮುಸ್ತಫಾ ಸುಳ್ಯ, ಮುಹಮ್ಮದ್ ಅಲಿ ಪುತ್ತೂರು, ವೆಂಕಪ್ಪ ಗೌಡ ಸುಳ್ಯ, ಪ್ರಶಾಂತ್ ಕಾಜವ, ಎಂ.ಶಶಿಧರ್ ಹೆಗ್ಡೆ, ವಕೀಲರಾದ ಎಂ.ಚಂದ್ರಶೇಖರ್ ಪೂಜಾರಿ, ಸುರೇಶ್ ಪೂಜಾರಿ, ಸುರೇಶ್ ನಾವೂರು, ಕೆ.ಪದ್ಮನಾಭ ರೈ, ಹೈಡಾ ಸುರೇಶ್, ಮಮತಾ ಗಟ್ಟಿ, ಎ.ಬಿ.ಅಬ್ದುಲ್ಲಾ, ನಿರಂಜನ್ ರೈ, ಸತೀಶ್ ಪೂಜಾರಿ ಕೊಪ್ಪರಿಗೆ, ಸಚಿನ್ ಬೆಳ್ಳಾರೆ, ಮುಹಮ್ಮದ್ ನಂದಾವರ, ಸಿರಾಜ್ ಮದಕ, ಅಲ್ತಾಫ್ ಕುಲಾಯಿ, ಯೂಸುಫ್ ಕರಂದಾಡಿ, ರಿಯಾಝ್ ನೆಹರು ನಗರ, ಮೊದಲಾದವರು ಭಾಗವಹಿಸಿದ್ದರು. ಪತ್ರಕರ್ತ ಲತೀಫ್ ನೇರಳಕಟ್ಟೆ ಕಾರ್ಯಕ್ರಮ ನಿರೂಪಿಸಿದರು.
ತಮಿಳು ಕವಿ ವೈರಮುತ್ತು ಅವರಿಗೆ ಜ್ಞಾನಪೀಠ ಪ್ರಶಸ್ತಿಗೌರವ
2002ರ ಬಳಿಕ ತಮಿಳು ಭಾಷೆಗೆ ಮನ್ನಣೆ
ಧರ್ಮ ಸೌಹಾರ್ದತೆಯ ಸಂದೇಶ ನಮ್ಮದಾಗಿರಲಿ : ವಾಲಿ
ಭಟ್ಕಳದಲ್ಲಿ ಲೋಕ ಅದಾಲತ್| 1,526 ಪ್ರಕರಣಗಳ ವಿಚಾರಣೆ; 1,402 ಪ್ರಕರಣಗಳಿಗೆ ತೀರ್ಮಾನ
ಭಟ್ಕಳ: ಇಲ್ಲಿನ ನ್ಯಾಯಾಲಯ ಸಂಕೀರ್ಣದಲ್ಲಿ ಶನಿವಾರ ನಡೆದ ಲೋಕ ಅದಾಲತ್ನಲ್ಲಿ ಒಟ್ಟು 1,526 ಪ್ರಕರಣ ಗಳನ್ನು ಪರಿಗಣಿಸಲಾಗಿದ್ದು, ಅವುಗಳಲ್ಲಿ 1,402 ಪ್ರಕರಣಗಳು ಸಮಜಾಯಿಷಿ ಮೂಲಕ ಇತ್ಯರ್ಥಗೊಂಡಿವೆ. ಪ್ರಧಾನ ಸಿವಿಲ್ ಹಾಗೂ ಜೆ.ಎಂ.ಎಫ್.ಸಿ. ನ್ಯಾಯಾಲಯದಲ್ಲಿ ನ್ಯಾಯಿಕ ಸಂಧಾನಕಾರರಾಗಿ ದೀಪಾ ಅರಳಗುಂಡಿ ಹಾಗೂ ನ್ಯಾಯಿಕೇತರ ಸಂಧಾನಕಾರರಾಗಿ ಸಹನಾ ಮೊಗೇರ ಕಾರ್ಯನಿರ್ವಹಿಸಿದರು. ಇಲ್ಲಿ ಸಂಧಾನಕ್ಕಾಗಿ ಆಯ್ಕೆ ಮಾಡಲಾದ 598 ಪ್ರಕರಣಗಳಲ್ಲಿ 547 ಪ್ರಕರಣಗಳು ಇತ್ಯರ್ಥಗೊಂಡಿದ್ದು, ಪರಿಹಾರ ಮತ್ತು ದಂಡ ರೂಪದಲ್ಲಿ 2,17,98,566 ರೂ. ಮೊತ್ತವನ್ನು ಕಕ್ಷಿದಾರರಿಗೆ ನೀಡಲಾಗಿದ್ದು, ಕೆಲವು ದಂಡ ಮೊತ್ತವನ್ನು ಸರ್ಕಾರದ ಪರವಾಗಿ ವಸೂಲಿ ಮಾಡಲಾಯಿತು. ಹೆಚ್ಚುವರಿ ಸಿವಿಲ್ ಹಾಗೂ ಜೆ.ಎಂ.ಎಫ್.ಸಿ. ನ್ಯಾಯಾಲಯದಲ್ಲಿ ನ್ಯಾಯಿಕ ಸಂಧಾನಕಾರರಾಗಿ ಧನವತಿ ಹಾಗೂ ನ್ಯಾಯಿಕೇತರ ಸಂಧಾನಕಾರರಾಗಿ ಶಬೀನಾ ಕಾರ್ಯನಿರ್ವಹಿಸಿದರು. ಇಲ್ಲಿ ಸಂಧಾನಕ್ಕೆ ಆಯ್ಕೆಗೊಂಡ 625 ಪ್ರಕರಣಗಳಲ್ಲಿ 575 ಪ್ರಕರಣಗಳು ಇತ್ಯರ್ಥಗೊಂಡಿವೆ. ಪರಿಹಾರ ಮತ್ತು ದಂಡ ರೂಪದಲ್ಲಿ 2,26,60,875 ರೂ. ಮೊತ್ತವನ್ನು ಕಕ್ಷಿದಾರರಿಗೆ ನೀಡಲಾಗಿದ್ದು, ದಂಡ ಮೊತ್ತವನ್ನು ಸರ್ಕಾರದ ಪರವಾಗಿ ವಸೂಲಿ ಮಾಡಲಾಯಿತು. ಹಿರಿಯ ಸಿವಿಲ್ ಹಾಗೂ ಜೆ.ಎಂ.ಎಫ್.ಸಿ. ನ್ಯಾಯಾಲಯದಲ್ಲಿ ನ್ಯಾಯಿಕ ಸಂಧಾನಕಾರರಾಗಿ ಕಾಂತ ಕುರಣಿ ಹಾಗೂ ನ್ಯಾಯಿಕೇತರ ಸಂಧಾನಕಾರರಾಗಿ ಶ್ರಾವ್ಯಾ ನಾಯ್ಕ ಕರ್ತವ್ಯ ನಿರ್ವಹಿಸಿದರು. ಇಲ್ಲಿ ಸಂಧಾನಕ್ಕಾಗಿ ಆಯ್ಕೆಗೊಂಡ 303 ಪ್ರಕರಣಗಳಲ್ಲಿ 280 ಪ್ರಕರಣಗಳು ಇತ್ಯರ್ಥಗೊಂಡಿದ್ದು, ಪರಿಹಾರ ಮತ್ತು ದಂಡ ರೂಪದಲ್ಲಿ 1,99,86,153 ರೂ. ಮೊತ್ತವನ್ನು ಕಕ್ಷಿದಾರರಿಗೆ ನೀಡಲಾಗಿದ್ದು, ದಂಡ ಮೊತ್ತವನ್ನು ಸರ್ಕಾರದ ಪರವಾಗಿ ವಸೂಲಿ ಮಾಡಲಾಯಿತು. ಇದಲ್ಲದೆ, ಹಿರಿಯ ಸಿವಿಲ್ ನ್ಯಾಯಾಲಯದಲ್ಲಿ ನಡೆದ ಲೋಕ ಅದಾಲತ್ ವೇಳೆ ದಂಪತಿಗಳ ನಡುವಿನ ಕುಟುಂಬ ಕಲಹವೊಂದೂ ರಾಜೀ ಸಂಧಾನದ ಮೂಲಕ ಬಗೆಹರಿಯಿತು. 2020ರಲ್ಲಿ ವಿವಾಹವಾಗಿದ್ದ ದಂಪತಿಗಳಿಗೆ ಒಂದು ಹೆಣ್ಣು ಮಗು ಇದ್ದು, ಕುಟುಂಬದ ಅಸಮಾಧಾನದ ಹಿನ್ನೆಲೆಯಲ್ಲಿ ಪತ್ನಿ 2024ರಲ್ಲಿ ತವರು ಮನೆ ಸೇರಿದ್ದರು. ಬಳಿಕ 2025ರಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಲೋಕ ಅದಾಲತ್ನಲ್ಲಿ ನಡೆದ ಸಂಧಾನದ ಬಳಿಕ ದಂಪತಿಗಳು ಪರಸ್ಪರ ಒಪ್ಪಿಗೆಯೊಂದಿಗೆ ಒಂದಾಗಿ, ಗುಲಾಬಿ ಹೂ ನೀಡಿಕೊಂಡು ಸಿಹಿ ಹಂಚಿಕೊಳ್ಳುವ ಮೂಲಕ ಸಂಧಾನಕ್ಕೆ ಒಪ್ಪಿದರು. ಲೋಕ ಅದಾಲತ್ ಹಿನ್ನೆಲೆಯಲ್ಲಿ ನ್ಯಾಯಾಲಯ ಆವರಣದಲ್ಲಿ ಸಾರ್ವಜನಿಕರ ಹೆಚ್ಚಿನ ಹಾಜರಾತಿ ಕಂಡುಬಂದಿದ್ದು, ಜನನ ಪ್ರಮಾಣಪತ್ರಕ್ಕೆ ಸಂಬಂಧಿಸಿದ ಅರ್ಜಿಗಳೇ ಹೆಚ್ಚಿನ ಸಂಖ್ಯೆಯಲ್ಲಿ ಸಲ್ಲಿಕೆಯಾಗಿದ್ದವು ಎಂದು ತಿಳಿದು ಬಂದಿದೆ. ಹಲವಾರು ಪ್ರಕರಣಗಳು ಸಮಜಾಯಿಷಿ ಮೂಲಕ ಬಗೆಹರಿದಿರುವುದಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ. ಸೌಲಭ್ಯ ಕೊರತೆ, ದಾಖಲೆಗಳ ಬಗ್ಗೆ ಗೊಂದಲ ಲೋಕ ಅದಾಲತ್ ಸಂದರ್ಭದಲ್ಲಿ ನ್ಯಾಯಾಲಯ ಆವರಣದಲ್ಲಿ ಜನಸಂದಣಿ ಹೆಚ್ಚಾಗಿದ್ದ ಹಿನ್ನೆಲೆಯಲ್ಲಿ ಕುಳಿತು ಕೊಳ್ಳಲು ಸಮರ್ಪಕ ವ್ಯವಸ್ಥೆಯ ಕೊರತೆ ಇದ್ದಿತು ಎಂದು ಕೆಲವರು ಮಾಧ್ಯಮ ಪ್ರತಿನಿಧಿಗಳ ಮುಂದೆ ಅಸಮಾ ಧಾನ ವ್ಯಕ್ತಪಡಿಸಿದರು. ಜೊತೆಗೆ ಮೈಕ್ರೋಫೋನ್ ಅಥವಾ ಡಿಸ್ಪ್ಲೇ ವ್ಯವಸ್ಥೆ ಇಲ್ಲದಿರುವುದರಿಂದ ಒಳಗೆ ಕರೆಯುವ ಹೆಸರುಗಳು ಹೊರಗೆ ಕಾಯುತ್ತಿದ್ದವರಿಗೆ ಸ್ಪಷ್ಟವಾಗಿ ಕೇಳಿಸಲಿಲ್ಲ ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ. ಇನ್ನೂ ಕೆಲ ಅರ್ಜಿದಾರರು ಅಗತ್ಯ ದಾಖಲೆಗಳ ಕೊರತೆಯ ಕಾರಣದಿಂದ ತಮ್ಮ ಅರ್ಜಿಗಳನ್ನು ಪರಿಗಣಿಸಲಾ ಗಲಿಲ್ಲ ಎಂದು ಆರೋಪಿಸಿದರು. ತಮ್ಮ ಬಳಿ ರೇಷನ್ ಕಾರ್ಡ್, ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ ಮತ್ತು ಪಾಸ್ಪೋರ್ಟ್ ಸೇರಿದಂತೆ ಕೆಲವು ದಾಖಲೆಗಳಿದ್ದರೂ ಜನನ ಪ್ರಮಾಣಪತ್ರಕ್ಕೆ ಸಲ್ಲಿಸಿದ ಅರ್ಜಿಗಳನ್ನು ಸ್ವೀಕರಿಸಲಿಲ್ಲ ಎಂದು ಅವರು ತಿಳಿಸಿದ್ದಾರೆ. ಅರ್ಜಿದಾರರ ಪ್ರಕಾರ, ಕೆಲವು ದಿನಗಳ ಹಿಂದೆ ದಾಖಲೆಗಳ ಪ್ರತಿಗಳನ್ನು ಸಲ್ಲಿಸಿದ ಬಳಿಕ ಮೂಲ ದಾಖಲೆ ಗಳೊಂದಿಗೆ ಲೋಕ ಅದಾಲತ್ಗೆ ಹಾಜರಾಗುವಂತೆ ಸೂಚಿಸಲಾಗಿತ್ತು. ಆದರೆ ಲೋಕ ಅದಾಲತ್ ದಿನ ಪೋಷಕರಿಗೆ ಸಂಬಂಧಿಸಿದ ಹೆಚ್ಚುವರಿ ದಾಖಲೆಗಳನ್ನು ಕೇಳಲಾಗಿದೆ ಎಂದು ಅವರು ಮಾಧ್ಯಮದ ಗಮನಕ್ಕೆ ತಂದರು. ಅಗತ್ಯ ದಾಖಲೆಗಳ ಕುರಿತು ಮುಂಚಿತವಾಗಿ ಸ್ಪಷ್ಟ ಮಾಹಿತಿ ನೀಡಿದ್ದರೆ ಅನುಕೂಲವಾಗುತ್ತಿತ್ತು ಎಂದು ಅವರು ಅಭಿಪ್ರಾಯಪಟ್ಟರು. ಈ ಕುರಿತು ನ್ಯಾಯಾಲಯದ ಅಧಿಕಾರಿಗಳ ಅಧಿಕೃತ ಪ್ರತಿಕ್ರಿಯೆ ತಕ್ಷಣ ಲಭ್ಯವಾಗಿಲ್ಲ.
ಬಾಗಲಕೋಟೆ ಉಪಚುನಾವಣೆ | ‘ಗ್ಯಾರಂಟಿ ಸರಕಾರ’ಕ್ಕೆ ಆಶೀರ್ವಾದ ಮಾಡಿ : ಡಿ.ಕೆ.ಶಿವಕುಮಾರ್ ಮನವಿ
ಬಾಗಲಕೋಟೆ : ನಮ್ಮ ಸರಕಾರ ನುಡಿದಂತೆ ನಡೆಯುತ್ತಿದ್ದು, ಬಡವರ ಪರವಾಗಿ ಕಾರ್ಯಕ್ರಮಗಳನ್ನು ರೂಪಿಸುತ್ತಿದೆ. ಹೀಗಾಗಿ ಮುಂಬರುವ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗೆ ಬೆಂಬಲ ನೀಡಿ, ಮತ್ತೆ ನಿಮ್ಮ ಗ್ಯಾರಂಟಿ ಸರಕಾರಕ್ಕೆ ಆಶೀರ್ವಾದ ಮಾಡಿ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಮನವಿ ಮಾಡಿದರು. ಶನಿವಾರ ಬಾಗಲಕೋಟೆಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿ ಉದ್ಘಾಟನೆ ಕಾರ್ಯಕ್ರಮದಲ್ಲಿ ಯುಕೆಪಿ ಯೋಜನೆ ಮೂರನೇ ಹಂತದ ಭೂಸಂತ್ರಸ್ತರಿಗೆ ಪರಿಹಾರ ಚೆಕ್ ವಿತರಣೆ ಮಾಡಿ ಅವರು ಮಾತನಾಡಿದರು. ನೀವು ನಮಗೆ ಆಶೀರ್ವಾದ ಮಾಡಿದಿರಿ, ನಾವು ಕೊಟ್ಟ ಮಾತಿನಂತೆ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿ ದೇಶಕ್ಕೆ ಮಾದರಿಯಾಗಿದ್ದೇವೆ. ಕರ್ನಾಟಕವನ್ನು ನೋಡಿಕೊಂಡು ಬೇರೆ ರಾಜ್ಯಗಳಲ್ಲಿ ಗ್ಯಾರಂಟಿ ಘೋಷಣೆ ಮಾಡಲಾಗುತ್ತಿದೆ ಎಂದು ಅವರು ತಿಳಿಸಿದರು. ಕೆಲವೇ ದಿನಗಳಲ್ಲಿ ಮೇಟಿ ಅವರ ಸ್ಥಾನಕ್ಕೆ ಚುನಾವಣೆ ನಡೆಯಲಿದ್ದು, ಮೇಟಿ ಅವರು ಎಷ್ಟು ಅಂತರದಿಂದ ಗೆದ್ದರೋ ಅದಕ್ಕಿಂತ ಹೆಚ್ಚಿನ ಅಂತರದಲ್ಲಿ ನಮ್ಮ ಅಭ್ಯರ್ಥಿಯನ್ನು ಗೆಲ್ಲಿಸಬೇಕು. ಈ ಜಿಲ್ಲೆಯ ನಮ್ಮ ಎಲ್ಲ ನಾಯಕರು ನಿಮ್ಮ ಸೇವೆ ಮಾಡಲು ಸಿದ್ಧವಿದ್ದೇವೆ. ನಾವು ನಿಮ್ಮ ಜತೆಗೆ ಇದ್ದೇವೆ ಎಂದು ಹೇಳಲು ನಾವು ಇಲ್ಲಿಗೆ ಬಂದಿದ್ದೇವೆ ಎಂದು ಉಪ ಮುಖ್ಯಮಂತ್ರಿ ಹೇಳಿದರು. ಕಳೆದ ವರ್ಷ ನಡೆದ 3 ಕ್ಷೇತ್ರಗಳ ಉಪಚುನಾವಣೆಯಲ್ಲಿ ಇಬ್ಬರು ಮಾಜಿ ಮುಖ್ಯಮಂತ್ರಿಗಳ ಪುತ್ರರನ್ನು ಜನ ಸೋಲಿಸಿದರು. ಈ ಗ್ಯಾರಂಟಿ ಸರಕಾರಕ್ಕೆ ಆಶೀರ್ವಾದ ಮಾಡಿದರು. ಇದು ನಮ್ಮದೇ ಕ್ಷೇತ್ರ, ಬಡವರಿಗೆ ನಾವು ಮಾಡುತ್ತಿರುವ ಕಾರ್ಯಕ್ರಮವನ್ನು ಗಮನದಲ್ಲಿಟ್ಟುಕೊಂಡು ನೀವು ನಮಗೆ ಆಶೀರ್ವಾದ ಮಾಡಬೇಕು ಎಂದು ಅವರು ಕೋರಿದರು. ಕೃಷ್ಣಾ ಮೇಲ್ದಂಡೆ ಯೋಜನೆಗೆ ಸಂಬಂಧಿಸಿದಂತೆ 15 ವರ್ಷಗಳ ಹಿಂದೆ ನ್ಯಾಯಾಧಿಕರಣ ಆದೇಶ ನೀಡಿದ್ದರೂ ಕೇಂದ್ರ ಸರಕಾರ ಅದನ್ನು ಜಾರಿಗೆ ತರಲಿಲ್ಲ. ಆದರೂ ಬಾಗಲಕೋಟೆ, ಬಾದಾಮಿ, ವಿಜಯಪುರ, ಕಲಬುರಗಿ ಭಾಗದ ಜನರ ಬಗ್ಗೆ ತೀರ್ಮಾನ ಮಾಡಲು, ನಾವು ಚರ್ಚೆ ಮಾಡಿ, 1.33 ಲಕ್ಷ ಎಕರೆ ಭೂಸಂತ್ರಸ್ತರಿಗೆ ನ್ಯಾಯಯುತ ಪರಿಹಾರ ನೀಡಲು ತೀರ್ಮಾನಿಸಿದ್ದೇವೆ. ಈ ವರ್ಷವೇ 3 ಸಾವಿರ ಕೋಟಿ ರೂ. ಪರಿಹಾರ ವಿತರಣೆ ಮಾಡಲಾಗುವುದು ಎಂದು ಶಿವಕುಮಾರ್ ತಿಳಿಸಿದರು. ಯುಕೆಪಿ ಯೋಜನೆ ಜಾರಿಗೆ ಆಂಧ್ರ, ಮಹಾರಾಷ್ಟ್ರ ತಕರಾರು: ನಮ್ಮ ಈ ತೀರ್ಮಾನ ನೋಡಿ ನೆರೆಯ ಆಂಧ್ರ ಪ್ರದೇಶ ಸರಕಾರವು ಕೇಂದ್ರ ಸರಕಾರಕ್ಕೆ ಆಕ್ಷೇಪಣಾ ಪತ್ರ ಬರೆದು, ಭೂಸ್ವಾಧೀನ ಪ್ರಕ್ರಿಯೆ ನಡೆಸಬಾರದು, ಅಣೆಕಟ್ಟು ಎತ್ತರಿಸಬಾರದು ಎಂದು ಕೋರಿದೆ. ಇವರ ಜತೆಗೆ ಮಹಾರಾಷ್ಟ್ರ ಈ ಯೋಜನೆ ಜಾರಿಯಾಗಬಾರದು ಎಂದು ಕೇಂದ್ರದ ಮೇಲೆ ಒತ್ತಡ ಹಾಕುತ್ತಿದೆ ಎಂದು ಅವರು ಹೇಳಿದರು. ಎರಡು ಬಾರಿ ಕೇಂದ್ರ ಸಚಿವರು ಸಭೆ ಕರೆದರೂ ಒಮ್ಮೆ ಮಹಾರಾಷ್ಟ್ರದವರು ಸಭೆ ಮುಂದೂಡಿದರೆ, ಮತ್ತೊಮ್ಮೆ ಆಂಧ್ರ ಪ್ರದೇಶದವರು ಮುಂದೂಡಿದರು. ನಂತರ ಈ ತಕರಾರು ಹಾಕಿದ್ದಾರೆ ಎಂದು ಶಿವಕುಮಾರ್ ಬೇಸರ ವ್ಯಕ್ತಪಡಿಸಿದರು. ಈ ವಿಚಾರವಾಗಿ ಸಂಸದರೊಂದಿಗೆ ಚರ್ಚೆ ಮಾಡಿ, ನಮ್ಮ ಯಾವುದೇ ಯೋಜನೆಗಳಿಗೆ ಅಡ್ಡಿಪಡಿಸದೆ, ಅನುಮತಿ ನೀಡಬೇಕು ಎಂದು ಕೇಂದ್ರದ ಮೇಲೆ ಒತ್ತಡ ಹಾಕಲು ನಾವು ದಿಲ್ಲಿಗೆ ಹೋಗುತ್ತಿದ್ದೇವೆ ಎಂದು ಅವರು ಹೇಳಿದರು. ಬಡವರಿಗಾಗಿ ವೈದ್ಯಕೀಯ ಕಾಲೇಜು ಆರಂಭ: ಬಡವರಿಗಾಗಿ ನಾವು ಈ ಭಾಗದಲ್ಲಿ ವೈದ್ಯಕೀಯ ಕಾಲೇಜು ಕೊಟ್ಟಿದ್ದೇವೆ. ಕರ್ನಾಟಕದಲ್ಲಿ 70 ವೈದ್ಯಕೀಯ ಕಾಲೇಜುಗಳಿವೆ. ರಾಜ್ಯದಲ್ಲಿ ಬಡವರ ಮಕ್ಕಳಿಗಾಗಿ 13,945 ವೈದ್ಯಕೀಯ ಸೀಟುಗಳನ್ನು ನೀಡಲಾಗಿದೆ. 7,501 ಪಿಜಿ ಸೀಟು, 3,405 ದಂತ ವೈದ್ಯಕೀಯ ಕಾಲೇಜು, 933 ಪಿಜಿ ಸೀಟುಗಳಿವೆ. 44 ಸಾವಿರ ನಸಿರ್ಂಗ್ ಸೀಟುಗಳಿವೆ. ಪ್ಯಾರಾ ಮೆಡಿಕಲ್ ನಲ್ಲಿ 1 ಲಕ್ಷಕ್ಕೂ ಹೆಚ್ಚು ಸೀಟುಗಳನ್ನು ನೀಡಲಾಗಿದೆ ಎಂದು ಶಿವಕುಮಾರ್
Gold: ದುಬೈಯಿಂದ ಭಾರತಕ್ಕೆ ಚಿನ್ನದ ಪೂರೈಕೆ ಪುನರಾರಂಭ; ಗ್ರಾಹಕರ ನಿರ್ಧಾರದಿಂದ ಬೆದರಿದ ವ್ಯಾಪಾರಿಗಳು
Gold: ವಿಶ್ವದ ಅತಿದೊಡ್ಡ ಚಿನ್ನದ ವಹಿವಾಟು ಕೇಂದ್ರಗಳಲ್ಲಿ ಒಂದಾದ ದುಬೈ, ಭಾರತಕ್ಕೆ ಚಿನ್ನದ ಪ್ರಮುಖ ಪೂರೈಕೆ ಮಾರ್ಗವಾಗಿದೆ. ಆದರೆ, ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಅಮೆರಿಕ-ಇಸ್ರೇಲ್ ಮತ್ತು ಇರಾನ್ ನಡುವಿನ ಸಂಘರ್ಷದಿಂದಾಗಿ ಭಾರತದ ಚಿನ್ನದ ಮಾರುಕಟ್ಟೆ ತೀವ್ರ ಆತಂಕದಲ್ಲಿದೆ. ಚಿನ್ನವು ಅತ್ಯಂತ ಮೌಲ್ಯಯುತ ಲೋಹವಾಗಿರುವುದರಿಂದ, ಭದ್ರತೆ ಮತ್ತು ವಿಮೆಯ ದೃಷ್ಟಿಯಿಂದ ಇದನ್ನು ಬಹುತೇಕವಾಗಿ ವಾಯುಮಾರ್ಗದ ಮೂಲಕವೇ ರವಾನಿಸಲಾಗುತ್ತದೆ. ಪಶ್ಚಿಮ ಏಷ್ಯಾದಲ್ಲಿ
ಬಜ್ಪೆ: ಇಂದಿರಾ ಕ್ಯಾಂಟೀನ್ಗೆ ಚಾಲನೆ
ಮಂಗಳೂರು, ಮಾ.14: ಬಜಪೆಯಲ್ಲಿ ನೂತನವಾಗಿ ನಿರ್ಮಾಣಗೊಂಡ ಇಂದಿರಾ ಕ್ಯಾಂಟೀನನ್ನು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಶನಿವಾರ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಸಾರ್ವಜನಿಕರ ದೀರ್ಘಕಾಲದ ನಿರೀಕ್ಷೆಯಂತೆ ಇಲ್ಲಿ ನೂತನವಾಗಿ ಇಂದಿರಾ ಕ್ಯಾಂಟೀನ್ ನಿರ್ಮಾಣಗೊಂಡಿದೆ. ಬಡವರು ಮತ್ತು ಜನಸಾಮಾನ್ಯರಿಗೆ ಅತ್ಯಂತ ಕಡಿಮೆ ದರದಲ್ಲಿ ಅಚ್ಚುಕಟ್ಟಾದ ಪರಿಸರದಲ್ಲಿ ಉತ್ತಮ ಗುಣಮಟ್ಟದ ಆಹಾರ ಒದಗಿಸುವುದು ಸರಕಾರದ ಮುಖ್ಯ ಉದ್ದೇಶವಾಗಿದೆ. ಬಜಪೆಯ ಈ ಹೊಸ ಕ್ಯಾಂಟೀನ್ ಇಂದಿನಿಂದ ಸಾರ್ವಜನಿಕ ಸೇವೆಗೆ ಲಭ್ಯವಿದ್ದು, ಹಸಿವು ಮುಕ್ತ ಸಮಾಜದತ್ತ ನಮ್ಮ ಮತ್ತೊಂದು ಮಹತ್ವದ ಹೆಜ್ಜೆಯಾಗಿದೆ ಎಂದು ಹೇಳಿದರು. ಈ ಸಂದರ್ಭ ಕರಾವಳಿ ಅಭಿವೃದ್ದಿ ಮಂಡಳಿಯ ಅಧ್ಯಕ್ಷ ಎಂ.ಎ. ಗಫೂರ್, ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷ ಟಿ.ಎಂ. ಶಹೀದ್, ಜಿಲ್ಲಾಧಿಕಾರಿ ದರ್ಶನ್ ಎಚ್.ವಿ., ಬಜಪೆ ಪಟ್ಟಣ ಪಂಚಾಯತ್ ಅಧ್ಯಕ್ಷ ಲೋಕೇಶ್ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.

29 C