ಪಂಚ ರಾಜ್ಯಗಳ ಚುನಾವಣೆ ಬಳಿಕ ಸಂಪುಟ ವಿಸ್ತರಣೆ ಸಾಧ್ಯತೆ : ಸಲೀಂ ಅಹ್ಮದ್
ವಿಜಯಪುರ : ಮೇ ತಿಂಗಳಲ್ಲಿ ಪಂಚ ರಾಜ್ಯಗಳ ವಿಧಾನಸಭೆ ಚುನಾವಣೆ ನಡೆಯಲಿದೆ. ಇದರ ಬಳಿಕ ಸಂಪುಟ ವಿಸ್ತರಣೆಯ ವಿಶ್ವಾಸ ಇದೆ ಎಂದು ವಿಧಾನ ಪರಿಷತ್ತಿನ ಕಾಂಗ್ರೆಸ್ ಮುಖ್ಯ ಸಚೇತಕ ಸಲೀಂ ಅಹ್ಮದ್ ತಿಳಿಸಿದರು. ವಿಜಯಪುರದಲ್ಲಿ ರವಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಂಚ ರಾಜ್ಯಗಳ ಚುನಾವಣೆ ನಂತರ ರಾಜ್ಯದ ಸಚಿವ ಸಂಪುಟ ವಿಸ್ತರಣೆ ಮಾಡುವ ಸಾಧ್ಯತೆ ಇದ್ದು, ಅದರಲ್ಲಿ ಶೇ.50ರಷ್ಟು ಹೊಸಬರಿಗೆ ಸಂಪುಟದಲ್ಲಿ ಅವಕಾಶ ಕೊಡಬೇಕು ಎಂಬ ಬೇಡಿಕೆ ಇದೆ ಎಂದರು. ಮುಖ್ಯಮಂತ್ರಿಗಳ ಅಧಿಕಾರ ಹಂಚಿಕೆ ಹಾಗೂ ವಿಚಾರದಲ್ಲಿ ಪಕ್ಷದ ವರಿಷ್ಠರು ಅಂತಿಮ ತೀರ್ಮಾನ ಮಾಡಲಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ಯಾವುದೇ ಗುಂಪುಗಾರಿಕೆ ಇಲ್ಲ. ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದು 2.9 ವರ್ಷವಾಗಿದೆ. ನಮ್ಮ ಸರಕಾರ ನುಡಿದಂತೆ ನಡೆದಿದೆ. ಐದು ಗ್ಯಾರಂಟಿಗಳ ಅನುಷ್ಠಾನದೊಂದಿಗೆ ಆರನೇ ಗ್ಯಾರಂಟಿಯಾಗಿ 2.20 ಲಕ್ಷ ಜನರಿಗೆ ಹಕ್ಕು ಪತ್ರಗಳ ವಿತರಣೆ ಮಾಡಲಾಗಿದೆ ಎಂದರು. ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದು 12 ವರ್ಷಗಳಾಗಿವೆ. ಆದರೆ, ಬಿಜೆಪಿ ಸರಕಾರ ಮಾತಿಗೆ ತಪ್ಪಿದ ಸರಕಾರವಾಗಿದೆ. 15 ಲಕ್ಷ ರೂ. ಕೊಡಲಿಲ್ಲ, 2 ಕೋಟಿ ಉದ್ಯೋಗ ಸೃಷ್ಟಿ ಮಾಡಲಿಲ್ಲ. ಬೆಲೆ ಏರಿಕೆ ನಿಯಂತ್ರಣ ಮಾಡಲಿಲ್ಲ. ಹೀಗಾಗಿ ಕಾಂಗ್ರೆಸ್ ಬಗ್ಗೆ ಮಾತನಾಡುವ ನೈತಿಕತೆ ಬಿಜೆಪಿಯವರಿಗೆ ಇಲ್ಲ ಎಂದರು. ಈ ಪತ್ರಿಕಾಗೋಷ್ಠಿಯಲ್ಲಿ ಮುಖಂಡರಾದ ಮಲ್ಲಿಕಾರ್ಜುನ ಲೋಣಿ, ಅಬ್ದುಲ್ ಹಮೀದ್ ಮುಶ್ರೀಫ್, ಎಸ್.ಎಂ.ಪಾಟೀಲ ಗಣಿಹಾರ, ರಫೀಕ್ ಟಾಪಲ್, ವಸಂತ ಹೊನಮೋಡೆ ಇದ್ದರು.
‘ಗಝಲ್ ಗಾರುಡಿಗ’ ಇಮ್ತಿಯಾಝ್ ಸುಲ್ತಾನ್
ಕನ್ನಡದಲ್ಲಿ ಗಜಲ್ ಶಾಖೆಯಲ್ಲಿ ತೊಡಗಿಸಿಕೊಂಡವರು ತೀರ ಅಪರೂಪ. ಈ ಸಂದರ್ಭದಲ್ಲಿ ಚಿಕ್ಕಮಗಳೂರಿನ ಇಮ್ತಿಯಾಝ್ ಸುಲ್ತಾನ್ ಹೊಸ ಭರವಸೆಯಾಗಿದ್ದಾರೆ. ಮಾತ್ರವಲ್ಲ, ಚಿಟಿಕೆ ಹೊಡೆಯುವುದರೊಳಗೆ ಆಕರ್ಷಕವಾಗಿ ಸಂಗೀತ ಸಂಯೋಜಿಸುವುದು ಇವರ ವಿಶೇಷತೆ. ಪ್ರಸ್ತುತ ಇವರು ಚಿಕ್ಕಮಗಳೂರಿನ ಎನ್.ಆರ್ ಪುರದ ಮೊರಾರ್ಜಿ ದೇಸಾಯಿ ಶಾಲೆಯಲ್ಲಿ ಸಂಗೀತ ಶಿಕ್ಷಕ. ಇತ್ತೀಚೆಗಷ್ಟೇ ಬೆಂಗಳೂರಿನ ಸುಚಿತ್ರಾ ಸಾಂಸ್ಕೃತಿಕ ಸಭಾಭವನದಲ್ಲಿ ‘ತ್ರಯಿ ಕಲ್ಚರಲ್ಸ್’ ಗಾಗಿ ಕಾರ್ಯಕ್ರಮ ನೀಡಿದ್ದಾರೆ. ಒಂದೂವರೆ ಗಂಟೆಗಳ ಕಾಲ ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿದ್ದಾರೆ. ಇಂಥ ಇಮ್ತಿಯಾಝ್ ಸುಲ್ತಾನ್ ಜೊತೆ ವಾರ್ತಾಭಾರತಿ ನಡೆಸಿದ ಮಾತುಕತೆ ಇಲ್ಲಿದೆ. ನಿಮಗೆ ಸಂಗೀತದಲ್ಲಿ ಒಲವು ಮೂಡಿದ್ದು ಹೇಗೆ? ನಾನು ಜನಿಸಿದ್ದು, ಶಿಕ್ಷಣ ಪಡೆದಿದ್ದು ಎಲ್ಲವೂ ತೀರ್ಥಹಳ್ಳಿಯ ಕೋಣಂದೂರಿನಲ್ಲಿ. ಕುವೆಂಪು ಅವರಿಂದ ಜಗತ್ತೇ ಪ್ರಭಾವಿತಗೊಂಡಿರುವಾಗ, ಅದೇ ತೀರ್ಥಹಳ್ಳಿಯೇ ನನಗೆ ಸಂಗೀತದ ಆಸಕ್ತಿಯನ್ನೂ ನೀಡಿತು. 7ನೇ ತರಗತಿಯಲ್ಲಿದ್ದಾಗಲೇ ಹಾಡುತ್ತಿದ್ದೆ. ಆಗ ತುಂಬ ಬಡತನ ಇತ್ತು. ಹಾಗಾಗಿಯೇ ಶಾಸ್ತ್ರೀಯ ಸಂಗೀತ ಕಲಿಯಲು ಆರಂಭಿಸಿದ್ದು ನನ್ನ 25ನೇ ವರ್ಷದಲ್ಲಿ! ಸಂಗೀತದಲ್ಲಿ ಗಝಲ್ ಪ್ರಕಾರವನ್ನೇ ಆಯ್ದುಕೊಳ್ಳಲು ಕಾರಣವೇನು? ನನ್ನ ಸಂಗೀತದ ಗುರುಗಳಾದ ಪಂಡಿತ್ ಹುಮಾಯೂನ ಹರಲಾಪುರರು ಪುಟ್ಟರಾಜ ಗುರುಗಳ ಪರಂಪರೆಯವರು. ಅವರ ಬಳಿ ನಾನು ಏಳು ವರ್ಷ ಸಂಗೀತಾ ಭ್ಯಾಸ ಮಾಡಿದೆ. ಹಿಂದೂಸ್ತಾನಿಯಲ್ಲಿ ಗಝಲ್, ಕವಾಲಿ, ಟುಮ್ರಿ, ದ್ರುಪದ್ ಗಾಯನ ಎಲ್ಲವೂ ಇದೆ. ಆದರೆ ಅದಾಗಲೇ ನನಗೆ ಹರಿಹರನ್, ಗುಲಾಮ್ ಅಲಿ, ಜಗದೀಶ್ ಸಿಂಗ್ ಅವರ ಗಝಲ್ಸ್ ತುಂಬಾ ಇಷ್ಟವಾಗಿದ್ದವು. ಕನ್ನಡದಲ್ಲಿ ರವೀಂದ್ರ ಹಂದಿಗನೂರು ಅವರು ಕೂಡ ಸ್ಫೂರ್ತಿಯಾದರು. ಗಝಲ್ನಲ್ಲಿ ರಾಗ ಸಂಯೋಜನೆಗೆ ವಿಪುಲ ಸ್ವಾತಂತ್ರ್ಯವಿದೆ ಎನ್ನುವ ನಂಬಿಕೆ ನನ್ನದು. ನೀವು ಇದುವರೆಗೆ ಎಷ್ಟು ವೇದಿಕೆ ಕಾರ್ಯಕ್ರಮಗಳನ್ನು ಕೊಟ್ಟಿದ್ದೀರಿ? ಕಳೆದ 25 ವರ್ಷಗಳಿಂದ ನಾನು ವೇದಿಕೆ ಕಾರ್ಯಕ್ರಮಗಳನ್ನು ಕೊಡುತ್ತಾ ಬಂದಿದ್ದೇನೆ. ಆದರೆ ಶಿಕ್ಷಕನಾಗಿ ವೃತ್ತಿಯಲ್ಲಿರುವ ಕಾರಣ ಸಂಪೂರ್ಣವಾಗಿ ವೇದಿಕೆಗಳಲ್ಲಿ ತೊಡಗಿಸಿಕೊಂಡಿಲ್ಲ. ನನ್ನದೇ ತಂಡ ಕಟ್ಟಿಲ್ಲ. ಅಬ್ಬಬ್ಬಾ ಅಂದರೆ ಇದುವರೆಗೆ ಗಝಲ್, ಸುಗಮ ಸಂಗೀತ ಎಂದು ಸುಮಾರು 300ರಷ್ಟು ಕಾರ್ಯಕ್ರಮಗಳನ್ನು ನೀಡಿರಬಹುದು. ಗಾಯನ ಜೀವನದಲ್ಲಿ ಮರೆಯಲಾಗದ ಸಂದರ್ಭ ಯಾವುದು? ಖ್ಯಾತ ಕವಿ ಎಚ್. ಎಸ್. ವೆಂಕಟೇಶ್ ಮೂರ್ತಿಯವರು ಕೊಪ್ಪ ತಾಲೂಕಿಗೆ ಬಂದಿದ್ದರು. ಅಲ್ಲಿ ನನ್ನ ಗಾಯನಕ್ಕೆಂದೇ ಒಂದು ಹಾಡು ಬರೆದು ಕೊಟ್ಟಿದ್ದರು. ಪ್ರಿಯೆ ನಿನ್ನ ಕಾಣದೆ.. ಎನ್ನುವ ಆ ಸಾಲುಗಳಿಗೆ ನಾನು ರಾಗ ಸಂಯೋಜಿಸಿದಾಗ ಅವರೇ ಮೆಚ್ಚಿ ವೇದಿಕೆಗೆ ಬಂದಿದ್ದರು. ನನ್ನ ಕವಿತೆಯನ್ನು ಗಝಲ್ ರೂಪದಲ್ಲಿ ಹಾಡಿದ ಮೊದಲ ವ್ಯಕ್ತಿ ನೀನೇ.. ಎಂದು ಖುಷಿ ಪಟ್ಟು ತಬ್ಬಿಕೊಂಡರು. ಆ ಘಟನೆ ಖಂಡಿತವಾಗಿ ಮರೆಯಲಾರದಂತೆ ಉಳಿದುಕೊಂಡಿದೆ. ನಿಮ್ಮ ಗಝಲ್ ಗಾಯನದ ಹುಚ್ಚು ಅಭಿಮಾನಿಗಳ ಬಗ್ಗೆ ಹೇಳಬಹುದೇ? ಅಭಿಮಾನವನ್ನು ಹುಚ್ಚು ಅಂತ ಹೇಳಬಾರದು. ಆದರೆ ಅಂಥ ಅತಿರೇಕದಲ್ಲಿ ವರ್ತಿಸಿದವರು ಕೂಡ ಇದ್ದರು. ಶಿವಮೊಗ್ಗದಲ್ಲಿ ವೃತ್ತಿಯಲ್ಲಿದ್ದ ಸಂತೋಷ್ ಎನ್ನುವವರು ಅದಕ್ಕೊಂದು ಉದಾಹರಣೆ. ಹೃದಯ ಶಿವ ಅವರ ರಚನೆಯ ‘ನಾ ಸತ್ತು ಮಲಗಿರಲು.. ’ಎನ್ನುವ ಗೀತೆ ಒಮ್ಮೆ ಅವರ ಮುಂದೆ ಹಾಡಿದ್ದೆ. ಅದು ಅವರಿಗೆ ಎಷ್ಟೊಂದು ಇಷ್ಟವಾಗಿತ್ತು ಅಂದರೆ ಮಧ್ಯರಾತ್ರಿ ಎಲ್ಲ ಫೋನ್ ಮಾಡಿ ಹಾಡಲು ಹೇಳುತ್ತಿದ್ದರು! ನೋವಿನ ವಿಚಾರ ಏನೆಂದರೆ ಅವರೀಗ ಜೀವಂತ ಇಲ್ಲ. ಇದುವರೆಗೆ ನೀವು ಎಷ್ಟು ಗೀತೆಗಳಿಗೆ ಸಂಗೀತ ಸಂಯೋಜನೆ ಮಾಡಿದ್ದೀರಿ? ನಾನು ಸಂಗೀತ ನೀಡಿ ಹಾಡಿರುವ ಗೀತೆಗಳಿಗೆ ಲೆಕ್ಕ ಇಟ್ಟಿಲ್ಲ. ಅವುಗಳಲ್ಲಿ ವಚನಗಳು, ದಾಸರ ಪದಗಳು ಕೂಡ ಇವೆ. ಆದರೆ ರೆಕಾರ್ಡಿಂಗ್ ಆಗಿರುವಂಥವು ಕಡಿಮೆ. ಅವುಗಳಲ್ಲಿ ‘ಮನೋ ಮಂದಿರಕೆ’ ಎನ್ನುವ ಭಾವಗೀತೆಗಳ ಗುಚ್ಛವೂ ಸೇರಿದೆ. ಉಳಿದಂತೆ ಎರಡು ಸಿನೆಮಾಗಳಿಗೂ ಸಂಗೀತ ನಿರ್ದೇಶನ ಮಾಡಿದ್ದೇನೆ. ಸಿನೆಮಾ ಕ್ಷೇತ್ರದ ಸಂಪರ್ಕ ಆಗಿದ್ದು ಹೇಗೆ? ನನಗೆ ಸಿನೆಮಾ ಕ್ಷೇತ್ರದ ಮೊದಲ ಸಂಪರ್ಕ ಅಂದರೆ ಅದು ವಿ. ಮನೋಹರ್ ಅವರೇ. ಆದರೆ ಸಂಗೀತ ನಿರ್ದೇಶನದ ಮೊದಲ ಅವಕಾಶ ದೊರಕಿದ್ದು ನನ್ನ ಸ್ನೇಹಿತ ಶಂಕರ್ ಹೊಸಕೊಪ್ಪ ನಿರ್ದೇಶನದ ಚೊಚ್ಚಲ ಚಿತ್ರ ‘ಮತ್ತೆ ಮತ್ತೆ’ ಮೂಲಕ. ಎರಡನೇ ಸಿನೆಮಾವನ್ನು ಗೀತರಚನೆಕಾರ ಹೃದಯ ಶಿವ ನಿರ್ದೇಶನ ಮಾಡಿದ್ದರು. ‘ಬಿಸಿಲು ಕುದುರೆ’ ಹೆಸರಿನ ಆ ಚಿತ್ರಕ್ಕೆ ನಾನು ನೀಡಿದ ಸಂಗೀತ 2021ನೇ ವರ್ಷದ ರಾಜ್ಯ ಪ್ರಶಸ್ತಿಯ ಮನ್ನಣೆಯನ್ನು ಪಡೆಯಿತು. ನಿಮ್ಮ ಕುಟುಂಬದ ಬಗ್ಗೆ ಹೇಳುತ್ತೀರ? ನಮ್ಮ ತಂದೆ ಆಯನೂರು ಸುಲ್ತಾನ್ ಅವರು ಹಾಡುಗಳನ್ನು ರಚಿಸುತ್ತಿದ್ದರು. ತಾಯಿ ನೂರ್ ಜಹಾನ್. ಒಟ್ಟು ಐದು ಜನ ಮಕ್ಕಳಲ್ಲಿ ನಾನು ಮಧ್ಯಮದವನು. ಇಬ್ಬರು ಅಕ್ಕಂದಿರು. ಇಬ್ಬರು ತಮ್ಮಂದಿರು. ನನ್ನ ಪತ್ನಿ ಶಮೀಮಾ. ನಮಗೆ ಇಬ್ಬರು ಮಕ್ಕಳು. ಮಗಳು ಸನಾ ಸುಲ್ತಾನ್ ಆರನೇ ತರಗತಿ. ಮಗ ಸಫ್ವಾನ್ ಸುಲ್ತಾನ್ ಎರಡನೇ ಕ್ಲಾಸ್. ಇಬ್ಬರಿಗೂ ಹಾಡುವ ಕಲೆ ಒಲಿದು ಬಂದಿದೆ. ಸಂಗೀತ ಕಲಿಸಬೇಕಿದೆ.
‘ಒನ್ ಬ್ಯಾಟಲ್ ಆಫ್ಟರ್ ಅನದರ್’ಗೆ 6 ಆಸ್ಕರ್; ‘ಸಿನ್ನರ್ಸ್’ಗೆ ನಾಲ್ಕು ಪ್ರಶಸ್ತಿ
ಈ ಬಾರಿ ಆಸ್ಕರ್ ಪ್ರಶಸ್ತಿ ಮುಡಿಗೇರಿಸಿಕೊಂಡವರು ಯಾರು?
ರಾಜ್ಯದಲ್ಲಿ 'ಡಿಜಿಟಲ್ ಅರೆಸ್ಟ್' ಅಟ್ಟಹಾಸ: 4 ವರ್ಷದಲ್ಲಿ 1695 ಪ್ರಕರಣ, 468 ಕೋಟಿ ರೂ ಲೂಟಿ!
ಸೈಬರ್ ವಂಚನೆಯ ಸಂತ್ರಸ್ತರ ದಿನವನ್ನು ಆಚರಿಸಲಾಗತ್ತಿದೆ. ಸಂತ್ರಸ್ತರ ದೂರು, ಅವಹಾಲುಗಳು, ಜೀವಬೇದರಿಕೆ ಇದ್ದರೆ ಆ ದಿನ ಪರಿಶೀಲನೆ ನಡೆಸಲಾಗುತ್ತದೆ. ಅಲ್ಲದೆ, ಅಗತ್ಯ ರಕ್ಷಣೆ ಜಾಮೀನು ಅರ್ಜಿಗಳು ಇದ್ದರೆ ಪರಿಶೀಲನೆ ಮುಂತಾದ ಸಮಸ್ಯೆಗಳನ್ನು ಆಲಿಸಲು ಪ್ರತಿ ತಿಂಗಳ 3ನೇ ಭಾನುವಾರವನ್ನು ಸಂತ್ರಸ್ತರ/ದೂರುದಾರರ ನೊಂದವರ ದಿನವೆಂಬ ಕಾರ್ಯಕ್ರಮವನ್ನು ಪ್ರತಿ ಠಾಣಾ ವ್ಯಾಪ್ತಿಯಲ್ಲಿ ಆಯೋಜಿಸಲಾಗುತ್ತಿದೆ.
ಸದನದಲ್ಲಿ ನೈಸ್ ರಸ್ತೆ ಸಂಸ್ಥೆಯ ವಿರುದ್ದ ಶಾಸಕ ಎಸ್ ಟಿ ಸೋಮಶೇಖರ್ ಕಿಡಿಕಾರಿದ್ದು, ನೈಸ್ ರಸ್ತೆಯಿಂದ ದಿನಕ್ಕೆ 10ಕೋಟಿ ಸಂಗ್ರಹವಾಗುತ್ತಿದೆ. ಆದರೂ ಈ ರಸ್ತೆಯ ಅಕ್ಕಪಕ್ಕದ ಹಳ್ಳಿಗಳಿಗೆ ಸಂಪರ್ಕ ಕಲ್ಪಿಸುವ ಮೇಲ್ಸೇತುವೆ ನಿರ್ಮಿಸಿಲ್ಲ. ಅಲ್ಲದೆ, ಈ ಬಗ್ಗೆ ಸರ್ಕಾರ ದ ಮನವಿಗೂ ಸಹ ನೈಸ್ ಸಂಸ್ಥೆ ಸ್ಪಂದಿಸದೇ ಇದ್ದು, ಅವರಿಗೆ ನೀಡಲಾಗಿರುವ 30 ವರ್ಷಗಳ ಲೀಝ್ ಅವಧಿಯನ್ನು ರದ್ದು ಮಾಡುವ ಮೂಲಕ ರಸ್ತೆಯನ್ನು ಸರ್ಕಾರ ತಮ್ಮ ವಶಕ್ಕೆ ಪಡೆದುಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಚಿನ್ನದ ಬೆಲೆಯಲ್ಲಿ ಅಲ್ಪ ಕುಸಿತ : ಇಂದಿನ ದರವೆಷ್ಟು?
ಅಮೆರಿಕದ ಕೇಂದ್ರೀಯ ಬ್ಯಾಂಕ್ ಫೆಡರಲ್ ರಿಸರ್ವ್ ಬಡ್ಡಿದರ ಕಡಿತ ಮಾಡುವ ಸಾಧ್ಯತೆ ಕಡಿಮೆ ಇರುವುದು ಮತ್ತು ಹಣದುಬ್ಬರದ ಕಳವಳಗಳ ನಡುವೆ ಇಂಧನ ವೆಚ್ಚಗಳು ಏರುತ್ತಿರುವುದು ಚಿನ್ನದ ಆಕರ್ಷಣೆ ಕಡಿಮೆ ಮಾಡಿದೆ. ಮಾರ್ಚ್ ಆರಂಭದಲ್ಲಿ ಚಿನ್ನದ ಬೆಲೆ ಪ್ರತಿ ಗ್ರಾಂಗೆ 17 ಸಾವಿರ ದಾಟಿತ್ತು. ಆದರೆ ನಂತರ ಚಿನ್ನದ ಬೆಲೆ ಕುಸಿತದ ಹಾದಿಯಲ್ಲಿದೆ. ಮಾರ್ಚ್ 9 ಸೋಮವಾರ ಮತ್ತೆ ಕುಸಿದ ಶುದ್ಧ ಚಿನ್ನದ ಬೆಲೆ 16 ಸಾವಿರದ ಮಿತಿಯೊಳಗೆ ನಿಂತಿತ್ತು. ಕಳೆದ ಮಂಗಳವಾರ ಮತ್ತು ಬುಧವಾರ ಚಿನ್ನದ ಬೆಲೆಯಲ್ಲಿ ಅಲ್ಪ ಮಟ್ಟಿಗೆ ಸತತ ಏರಿಕೆಯಾಗಿದ್ದು, ಮತ್ತೆ 16 ಸಾವಿರದ ಮಿತಿ ಮೀರಿ ಬೆಳೆದಿತ್ತು. ಆದರೆ ನಂತರ ಗುರುವಾರ, ಶುಕ್ರವಾರ ಮತ್ತು ಶನಿವಾರ ಸತತ ಕುಸಿತದ ನಂತರ ಚಿನ್ನದ ಬೆಲೆಯು 15 ಸಾವಿರದ ಮಿತಿಯೊಳಗೆ ಬಂದು ನಿಂತಿದೆ. ಇದೀಗ ಸೋಮವಾರವೂ ಅಲ್ಪ ಮಟ್ಟಿಗೆ ಕುಸಿದಿದೆ. ಚಿನ್ನ-ಬೆಳ್ಳಿ ಬೆಲೆ ಏರಿಳಿತಕ್ಕೆ ಕಾರಣವೇನು? ಅಮೆರಿಕ ಮತ್ತು ಇಸ್ರೇಲ್ ಜೊತೆಗೂಡಿ ಇರಾನ್ ಮೇಲೆ ದಾಳಿ ಮಾಡಿರುವುದು, ಜಾಗತಿಕ ಭೌಗೋಳಿಕ ರಾಜಕೀಯದ ಉದ್ವಿಗ್ನತೆ ಮತ್ತು ಪಶ್ಚಿಮ ಏಷ್ಯಾದಲ್ಲಿ ಸಂಘರ್ಷದ ವಾತಾವರಣದ ನಡುವೆಯೂ ಚಿನ್ನ ಮತ್ತು ಬೆಳ್ಳಿಯ ಬೆಲೆಗಳು ವಿಪರೀತ ಏರದೆ ಸ್ಥಿರವಾಗಿವೆ. ಈ ವಾರವೂ ಹೆಚ್ಚು ಏರಿಳಿತ ಕಾಣದೆ ಸ್ಥಿರವಾಗಿರುವ ಸಾಧ್ಯತೆಯಿದೆ. ಅಮೆರಿಕದ ಕೇಂದ್ರೀಯ ಬ್ಯಾಂಕ್ ಫೆಡರಲ್ ರಿಸರ್ವ್ ಬಡ್ಡಿದರ ಕಡಿತ ಮಾಡುವ ಸಾಧ್ಯತೆ ಕಡಿಮೆ ಇರುವುದು ಮತ್ತು ಹಣದುಬ್ಬರದ ಕಳವಳಗಳ ನಡುವೆ ಇಂಧನ ವೆಚ್ಚಗಳು ಏರುತ್ತಿರುವುದನ್ನು ಹೂಡಿಕೆದಾರರು ಗಮನಿಸುತ್ತಿದ್ದಾರೆ. ತೈಲ ಬೆಲೆ ಹೆಚ್ಚಿದ್ದರೆ ದರಗಳನ್ನು ಕಡಿಮೆ ಮಾಡುವುದು ಫೆಡರಲ್ ರಿಸರ್ವ್ಗೆ ಕಷ್ಟವಾಗಬಹುದು ಎನ್ನುವ ಆತಂಕಗಳ ನಡುವೆ ಪ್ರಬಲ ಅಮೆರಿಕನ್ ಡಾಲರ್ನಿಂದಾಗಿ ಚಿನ್ನದ ಆಕರ್ಷಣೆ ಬಾಗಶಃ ಕಡಿಮೆ ಮಾಡಿದೆ. ಇಂದಿನ ಚಿನ್ನದ ದರ ಹೇಗಿದೆ? ಮಾರ್ಚ್ 16ರಂದು ಸೋಮವಾರ ಬೆಂಗಳೂರಿನ ಮಾರುಕಟ್ಟೆಗಳಲ್ಲಿ 24 ಕ್ಯಾರೆಟ್ ಶುದ್ಧ ಚಿನ್ನದ ಬೆಲೆ ಶನಿವಾರ ಸಂಜೆಯ ಬೆಲೆಗೆ ಹೋಲಿಸಿದರೆ ಪ್ರತಿ ಗ್ರಾಂಗೆ 49 ರೂ. ಕುಸಿತ ಕಂಡು ಹತ್ತು ಗ್ರಾಂ ಬೆಲೆ 1,59,170 ರೂ. ಗೆ ಬಂದು ನಿಂತಿದೆ. ಆಭರಣ ಚಿನ್ನವಾದ 22 ಕ್ಯಾರೆಟ್ ಬೆಲೆಯು ಗ್ರಾಂಗೆ 45 ರೂ. ಕುಸಿತವಾಗಿ 10 ಗ್ರಾಂಗೆ 1,45,900 ರೂ. ಗೆ ತಲುಪಿದೆ. 18 ಕ್ಯಾರೆಟ್ ಚಿನ್ನವು ಪ್ರತಿ ಗ್ರಾಂಗೆ 36 ರೂ. ಕುಸಿದು ಹತ್ತು ಗ್ರಾಂಗೆ 1,19,380 ರೂ. ಗೆ ತಲುಪಿದೆ. ಮಂಗಳೂರಿನಲ್ಲಿ ಚಿನ್ನದ ದರವೆಷ್ಟಿದೆ? ಮಾರ್ಚ್ 16ರಂದು ಸೋಮವಾರ ಬೆಳಗಿನ 11 ಗಂಟೆಯ ವಹಿವಾಟಿನಲ್ಲಿ ಮಂಗಳೂರಿನಲ್ಲಿ ಚಿನ್ನದ ಬೆಲೆ ಮತ್ತೆ ಅಲ್ಪಮಟ್ಟಿಗೆ ಕುಸಿತ ಕಂಡುಬಂದಿದೆ. ಒಂದು ಗ್ರಾಂ 24 ಕ್ಯಾರೆಟ್ ಚಿನ್ನದ ದರ 15,917 (-49) ರೂ. ನಷ್ಟಿದೆ. ಒಂದು ಗ್ರಾಂ 22 ಕ್ಯಾರೆಟ್ ಚಿನ್ನದ 14,590 (-45) ರೂ. ಮತ್ತು ಒಂದು ಗ್ರಾಂ 18 ಕ್ಯಾರೆಟ್ ಚಿನ್ನದ ದರ 11,938 (-36) ರೂ. ಬೆಲೆಗೆ ತಲುಪಿದೆ. ಮತ್ತೆ ಕುಸಿದ ಬೆಳ್ಳಿ ದರ ಮಾರ್ಚ್ 2ರಂದು ಗ್ರಾಂಗೆ 20 ರೂ. ಕುಸಿತ ಕಂಡು ಒಂದು ಕೆಜಿ ಬೆಳ್ಳಿ ಬೆಲೆಯು 2,95,000 ರೂ. ಗೆ ಬಂದು ನಿಂತಿತ್ತು. ಮಾರ್ಚ್ 4ರಂದು ಮತ್ತೆ ಪ್ರತಿ ಗ್ರಾಂಗೆ 10ರೂ. ಕುಸಿದ ಬೆಳ್ಳಿಯ ಬೆಲೆ ಪ್ರತಿ ಕೆಜಿಗೆ 2,85,000 ರೂ.ಗೆ ತಲುಪಿತ್ತು. ನಂತರ ಸತತ ಮೂರು ದಿನ ಇದೇ ಬೆಲೆಗೆ ಸ್ಥಿರವಾಗಿ ನಿಂತಿತ್ತು. ಮಾರ್ಚ್ 9ರಂದು ಸೋಮವಾರ ಮತ್ತೆ ಪ್ರತಿ ಗ್ರಾಂಗೆ 5 ರೂ. ಕುಸಿದ ಬೆಳ್ಳಿ ಪ್ರತಿ ಕೆಜಿಗೆ 2,80,000 ರೂ. ಗೆ ತಲುಪಿತ್ತು. ಕಳೆದ ಮಂಗಳವಾರ ಪ್ರತಿ ಗ್ರಾಂಗೆ 10 ರೂ. ಏರಿಕೆಯಾಗಿರುವ ಬೆಳ್ಳಿಯ ಬೆಲೆ ಪ್ರತಿ ಕೆಜಿಗೆ 2,90,000 ರೂ.ಗೆ ಆಗಿತ್ತು. ಬುಧವಾರ ಇದೇ ಬೆಲೆಯಲ್ಲಿ ಸ್ಥಿರವಾಗಿ ನಿಂತಿದ್ದ ಪ್ರತಿ ಗ್ರಾಂ ಬೆಳ್ಳಿಯ ಬೆಲೆ ಗುರುವಾರ 10 ರೂ. ಕುಸಿದು ಮತ್ತೆ ಪ್ರತಿ ಕೆಜಿಗೆ 2,80,000 ರೂ.ಗೆ ಬಂದು ತಲುಪಿದೆ. ಶುಕ್ರವಾರ ಇದೇ ಬೆಲೆಗೆ ಸ್ಥಿರವಾಗಿ ನಿಂತಿದೆ. ಆದರೆ ಶನಿವಾರ ಮತ್ತೆ ಪ್ರತಿ ಗ್ರಾಂಗೆ 5 ರೂ. ಕುಸಿದು ಪ್ರತಿ ಕೆಜಿಗೆ 2,75,000 ರೂ. ಗೆ ತಲುಪಿದೆ. ಇದೀಗ ಮತ್ತೆ ಪ್ರತಿ ಗ್ರಾಂಗೆ 5 ರೂ. ಕುಸಿದು ಪ್ರತಿ ಕೆಜಿ ಬೆಳ್ಳಿಯ ಬೆಲೆ 2,70,000 ರೂ.ಗೆ ತಲುಪಿದೆ. ವಿವಿಧ ನಗರಗಳಲ್ಲಿ 1 ಗ್ರಾಂ ಚಿನ್ನದ ದರ (ಬೆಳಗಿನ ವಹಿವಾಟು) ಹೇಗಿದೆ? ದಿಲ್ಲಿ: 24 ಕ್ಯಾರೆಟ್ ಚಿನ್ನದ ದರ 15,930 (-51) ರೂ., 22 ಕ್ಯಾರೆಟ್ ಚಿನ್ನದ ದರ 14,605 (-45) ರೂ. ಮುಂಬೈ: 24 ಕ್ಯಾರೆಟ್ ಚಿನ್ನದ ದರ 15,917 (-49) ರೂ., 22 ಕ್ಯಾರೆಟ್ ಚಿನ್ನದ ದರ 14,590 (-45) ರೂ. ಅಹಮದಾಬಾದ್: 24 ಕ್ಯಾರೆಟ್ ಚಿನ್ನದ ದರ 15,920 (-51) ರೂ., 22 ಕ್ಯಾರೆಟ್ ಚಿನ್ನದ ದರ 14,595 (-45) ರೂ. ಚೆನ್ನೈ: 24 ಕ್ಯಾರೆಟ್ ಚಿನ್ನದ ದರ 16,101 (-1) ರೂ., 22 ಕ್ಯಾರೆಟ್ ಚಿನ್ನದ ದರ 14,759 (-1) ರೂ. ಕೋಲ್ಕತ್ತಾ: 24 ಕ್ಯಾರೆಟ್ ಚಿನ್ನದ ದರ 15,917 (-49) ರೂ., 22 ಕ್ಯಾರೆಟ್ ಚಿನ್ನದ ದರ 14,590 (-45) ರೂ. ಹೈದರಾಬಾದ್: 24 ಕ್ಯಾರೆಟ್ ಚಿನ್ನದ ದರ 15,917 (-49) ರೂ., 22 ಕ್ಯಾರೆಟ್ ಚಿನ್ನದ ದರ 14,590 (-45) ರೂ. ಜೈಪುರ: 24 ಕ್ಯಾರೆಟ್ ಚಿನ್ನದ ದರ 15,930 (-51) ರೂ., 22 ಕ್ಯಾರೆಟ್ ಚಿನ್ನದ ದರ 14,605 (-45) ರೂ. ಚಂಡೀಗಢ: 24 ಕ್ಯಾರೆಟ್ ಚಿನ್ನದ ದರ 15,930 (-51) ರೂ., 22 ಕ್ಯಾರೆಟ್ ಚಿನ್ನದ ದರ 14,605 (-45) ರೂ. ಲಕ್ನೋ: 24 ಕ್ಯಾರೆಟ್ ಚಿನ್ನದ ದರ 15,930 (-51) ರೂ., 22 ಕ್ಯಾರೆಟ್ ಚಿನ್ನದ ದರ 14,605 (-45) ರೂ.
ಕುಖ್ಯಾತ ಯುದ್ಧೋತ್ಪಾದಕ ದೇಶ ಅಮೆರಿಕ
ಸದ್ದಾಮ್ ಹುಸೇನ್ ದೇಶದಲ್ಲಿ ಅನೇಕ ಸುಧಾರಣಾ ಕ್ರಮಗಳನ್ನು ಕೈಗೊಂಡಿದ್ದರು. ಸಾಕ್ಷರತೆಯ ಪ್ರಮಾಣ ಹೆಚ್ಚಾಗಿತ್ತು. ಮಹಿಳೆಯರಿಗೆ ಸಂಪೂರ್ಣ ಸ್ವಾತಂತ್ರ್ಯ ಇತ್ತು. ಮಹಿಳೆಯರು ವೈದ್ಯರಾಗಿ, ಶಿಕ್ಷಕಿಯರಾಗಿ, ಕ್ರೀಡಾಪಟುಗಳಾಗಿ, ವಿಜ್ಞಾನಿಗಳಾಗಿ ಹೆಸರು ಮಾಡಿದ್ದರು. ಎಲ್ಲಕ್ಕಿಂತ ಮಿಗಿಲಾಗಿ ಇರಾಕ್ ಭಾರತದ ಅತ್ಯಂತ ಆಪ್ತ ಮಿತ್ರ ದೇಶವಾಗಿತ್ತು. ಕೊನೆಗೆ ಅಮೆರಿಕದ ಸಂಪತ್ತಿನ ದುರಾಸೆ, ಮತ್ತು ದಾಹ ಇರಾಕನ್ನು ನಾಶಗೊಳಿಸಿತು. ಜಗತ್ತಿಗೆಲ್ಲ ಪ್ರಜಾಪ್ರಭುತ್ವದ ಬಗ್ಗೆ ಧಾರಾಳವಾಗಿ ಉಪದೇಶ ನೀಡುತ್ತ ಬಂದ ಅಮೆರಿಕದ ಮುಖವಾಡ ಕಳಚಿ ಬೀಳುತ್ತಲೇ ಇದೆ. ಇರಾನ್ನ ಮೇಲೆ ಅದು ನಡೆಸಿದ ದಾಳಿ ಸ್ವತಂತ್ರ ಸ್ವಾಯತ್ತ ದೇಶವೊಂದರ ಮೇಲೆ ನಡೆಸಿದ ಮೊದಲ ದಾಳಿಯೇನಲ್ಲ. ಕೊನೆಯದೂ ಅಲ್ಲ. ಇದಕ್ಕೆಲ್ಲ ಕೇವಲ ಟ್ರಂಪ್ ಮಾತ್ರ ಕಾರಣವಲ್ಲ, ಆತ ಅವಿವೇಕಿ, ಹುಂಬ, ಉದ್ಯಮಿ ಎಲ್ಲ ನಿಜ. ಆದರೆ ಸ್ವತಂತ್ರ ಸ್ವಾಯತ್ತ ದೇಶಗಳ ಮೇಲೆ ದಾಳಿ ಮಾಡುವುದು ಅಮೆರಿಕ ಎಂಬ ಲೂಟಿಕೋರ ದೇಶದ ಹಳೆಯ ಚಾಳಿ. ಪ್ರಜಾಪ್ರಭುತ್ವದ ಆಪ್ತ ರಕ್ಷಕ ಎಂದು ತನ್ನ ಬೆನ್ನನ್ನು ತಾನೇ ತಟ್ಟಿಸಿಕೊಳ್ಳುತ್ತಲೇ ಬಂದ ಅಮೆರಿಕ ಉದ್ದಕ್ಕೂ ಅನುಸರಿಸಿಕೊಂಡು ಬಂದ ನೀತಿ ಎಂಥದು ಎಂಬುದನ್ನು ಅವಲೋಕಿಸಿದರೆ ಅದರ ನಿಜ ಸ್ವರೂಪ ಗೊತ್ತಾಗುತ್ತದೆ. ಆಂತರಿಕ ಆರ್ಥಿಕ ಬಿಕ್ಕಟ್ಟು ಉಂಟಾದಾಗಲೆಲ್ಲ ಅದು ಇನ್ನೊಂದು ದೇಶದ ಮೇಲೆ ದುರಾಕ್ರಮಣಕ್ಕೆ ಮುಂದಾಗುತ್ತದೆ. ಅಮೆರಿಕದ ಸಾಮ್ರಾಜ್ಯಶಾಹಿ ನಡೆದು ಬಂದ ದಾರಿಯುದ್ದಕ್ಕೂ ನೆತ್ತರಿನ ಕಲೆಗಳಿವೆ. ಅದರ ರಕ್ತಪಾತದ ಇತಿಹಾಸ ನಿನ್ನೆ, ಮೊನ್ನೆಯದಲ್ಲ. ಎರಡನೇ ಮಹಾಯುದ್ಧದ ಸಂದರ್ಭದಲ್ಲಿ 1945ರ ಆಗಸ್ಟ್ 6ರಂದು ಹಿರೋಷಿಮಾ ಮೇಲೆ ಮತ್ತು ಆಗಸ್ಟ್ 9 ರಂದು ನಾಗಸಾಕಿ ಮೇಲೆ ಅಮೆರಿಕ ನಡೆಸಿದ ಪರಮಾಣು ಬಾಂಬ್ ದಾಳಿ ಯುದ್ಧದ ಸಂದರ್ಭದಲ್ಲಿ ನಡೆದ ದಾಳಿಯಲ್ಲ. ಸೇನಾಪಡೆಗಳ ಘರ್ಷಣೆ ಸಂದರ್ಭದಲ್ಲಿ ನಡೆದ ದಾಳಿಯೂ ಅಲ್ಲ. ಅದು ತಮ್ಮ ಪಾಡಿಗೆ ತಾವಿದ್ದ ಅಮಾಯಕ ನಾಗರಿಕರ ಮೇಲೆ ಅಮೆರಿಕ ನಡೆಸಿದ ಅತ್ಯಂತ ಪೈಶಾಚಿಕ ದಾಳಿ. ಈ ಬಾಂಬ್ ದಾಳಿಯಲ್ಲಿ ಸತ್ತವರೆಲ್ಲ ಅಮಾಯಕ ನಾಗರಿಕರು. ಸತ್ತವರಲ್ಲಿ ಶೇಕಡಾ 80 ರಷ್ಟು ಮಂದಿ ಸುಟ್ಟ ಗಾಯಗಳಿಂದ ಸತ್ತರು. ನಂತರ ಬಾಂಬ್ ದಾಳಿಯ ಪರಿಣಾಮದ ಬಗ್ಗೆ ಅಧ್ಯಯನ ಮಾಡಲು ಹಿರೋಷಿಮಾಗೆ ಹೋದ ಭೌತ ಶಾಸ್ತ್ರಜ್ಞ ಪಿಲಿಪ್ ಮಾರಿಸನ್ ನೀಡಿದ ವರದಿ ಅತ್ಯಂತ ಭಯಾನಕ ಹಾಗೂ ದಾರುಣವಾಗಿದೆ. ಈ ಬಾಂಬ್ ದಾಳಿಯಿಂದ 33 ಅಗ್ನಿ ಶಾಮಕ ಠಾಣೆಗಳಲ್ಲಿ 26 ನಾಶವಾದವು. 2,400 ದಾದಿಯರ ಪೈಕಿ 1,800 ಮಂದಿ ಸಾವಿಗೀಡಾದರು. ಆಗಿನಿಂದಲೂ ಅಮೆರಿಕ ಜಗತ್ತಿನ ಸ್ವತಂತ್ರ ದೇಶಗಳ ಮೇಲೆ ಇಂಥ ದುರಾಕ್ರಮಣಗಳನ್ನು ಮಾಡುತ್ತಲೇ ಬಂದಿದೆ. ಇಂಥ ದಾಳಿಗಳಿಗೆ ಬೇರೇನೂ ಕಾರಣವಲ್ಲ, ಅಮೆರಿಕದ ಬಂಡವಾಳಶಾಹಿ ಆರ್ಥಿಕತೆ ಬಿಕ್ಕಟ್ಟಿನ ಸುಳಿಗೆ ಸಿಲುಕಿದಾಗ ಅದರಿಂದ ಹೊರ ಬರಲು ಇಂಥ ದುರಾಕ್ರಮಣಕ್ಕೆ ಅದು ಕೈ ಹಾಕುತ್ತದೆ. ಸ್ವತಂತ್ರ, ಸ್ವಾಯತ್ತ ದೇಶಗಳ ಚುನಾಯಿತ ಸರಕಾರಗಳನ್ನು ಬುಡಮೇಲು ಮಾಡಿ ತನ್ನ ಕೈಗೊಂಬೆ ಸರಕಾರಗಳನ್ನು ಅಲ್ಲಿ ಪ್ರತಿಷ್ಠಾಪನೆ ಮಾಡುತ್ತದೆ. ಸಾಮ್ರಾಜ್ಯಶಾಹಿ ಬದುಕಲು ವಸಾಹತುಗಳು ಇರಲೇ ಬೇಕು. ಒಂದಲ್ಲ, ಎರಡಲ್ಲ ಹಲವಾರು ದೇಶಗಳು ಈ ದುರಾಕಾಂಕ್ಷೆಗೆ ಬಲಿಯಾಗಿವೆ. ಚಿಲಿ, ಅರ್ಜೆಂಟೀನಾ, ಕ್ಯೂಬಾ,ಇರಾಕ್, ಲಿಬಿಯಾ , ಈಗ ಇರಾನ್ ಹೀಗೆ ಪಟ್ಟಿ ಮಾಡುತ್ತ ಹೋದರೆ ಅಮೆರಿಕದ ಕರಾಳ ಇತಿಹಾಸ ಕಣ್ಣ ಮುಂದೆ ಬಂದು ನಿಲ್ಲುತ್ತದೆ. ಅದಕ್ಕೆ ಪ್ರತಿರೋಧ ಒಡ್ಡಿದ ಹೋರಾಟಗಳು ಕೂಡ ನಡೆದಿವೆ. ನಡೆಯುತ್ತಲೂ ಇವೆ.ವಾಶಿಂಗ್ಟನ್ನಿಂದ 80 ಮೈಲಿ ಅಂತರದಲ್ಲಿ ಇರುವ ಕ್ಯೂಬಾದಲ್ಲಿ ಚೇ ಗವೆರಾ ಮತ್ತು ಫಿಡಲ್ ಕ್ಯಾಸ್ಟ್ರೋ ನೇತೃತ್ವದಲ್ಲಿ ನಡೆದ ಕ್ರಾಂತಿ ಎಲ್ಲರಿಗೂ ಗೊತ್ತಿದೆ. ಇರಾನ್ ನಂತರ ಅಂಥ ಕ್ಯೂಬಾವನ್ನು ಮುಗಿಸಲು ಅಮೆರಿಕದ ಟ್ರಂಪ್ ಆಡಳಿತ ಈಗ ಹೊಂಚು ಹಾಕಿದೆ. ಚಿಲಿ ಒಂದು ಚಿಕ್ಕ ದೇಶ. ಎಪ್ಪತ್ತರ ದಶಕದಲ್ಲಿ ಅಲ್ಲಿ ಪ್ರಜಾಪ್ರಭುತ್ವ ಪದ್ಧತಿಯ ಪ್ರಕಾರ ಚುನಾವಣೆ ನಡೆದು ಸಾಲ್ವಡೋರ್ ಅಲೆಂಡೆ ಅಧ್ಯಕ್ಷರಾಗಿ ಚುನಾಯಿತರಾಗಿದ್ದರು. ವಿಶ್ವ ವಿಖ್ಯಾತ ಕವಿ ಪ್ಯಾಬ್ಲೋ ನೆರುಡಾ ಅಲೆಂಡೆಯವರ ಆತ್ಮೀಯ ಮಿತ್ರ. ಜಗತ್ತಿಗೆಲ್ಲ, ಪ್ರಜಾಪ್ರಭುತ್ವದ ಪಾಠ ಮಾಡುವ ಅಮೆರಿಕ ಚಿಲಿ ಮೇಲೆ ದಾಳಿ ಮಾಡಿ ಅಲ್ಲಿನ ಚುನಾಯಿತ ಅಧ್ಯಕ್ಷ ಅಲೆಂಡೆಯವರನ್ನು ಗುಂಡಿಕ್ಕಿ ಕೊಂದಿತು. ಚುನಾಯಿತ ಅಧ್ಯಕ್ಷ ನ ಬದಲಿಗೆ ಮಿಲಿಟರಿ ಸರ್ವಾಧಿಕಾರಿ ಫಿನೋಶೆಯನ್ನು ಅಲ್ಲಿ ಪ್ರತಿಷ್ಠಾಪಿಸಿತು. ವಿಯೆಟ್ನಾಂ ಮೇಲೆ ದಶಕಗಳ ಕಾಲ ಅಮೆರಿಕ ನಡೆಸಿದ ದಾಳಿ ಹಾಗೂ ವಿಯೆಟ್ನಾಂನ ದೇಶ ಪ್ರೇಮಿ ಜನರು ಹಿಮ್ಮೆಟ್ಟಿಸಿದ ರೋಮಾಂಚಕ ಇತಿಹಾಸ ಎಲ್ಲರಿಗೂ ಗೊತ್ತು.ಅರುವತ್ತರ ದಶಕದ ಕೊನೆಯಲ್ಲಿ ಇಂಡೋನೇಶ್ಯದ ಆಂತರಿಕ ವ್ಯವಹಾರಗಳಲ್ಲಿ ಕೈ ಹಾಕಿ ಅಲ್ಲಿನ ಚುನಾಯಿತ ಅಧ್ಯಕ್ಷ ಸುಕರ್ಣೊ ಅವರನ್ನು ಪದಚ್ಯುತಗೊಳಿಸಿ ಹತ್ಯೆ ಮಾಡಿತು. ಅಲ್ಲಿ 80 ಸಾವಿರಕ್ಕೂ ಹೆಚ್ಚು ಕಮ್ಯುನಿಸ್ಟ್ ಕಾರ್ಯಕರ್ತರನ್ನು ಕೊಂದು ಹಾಕಿತು. ಅಲ್ಲಿ ಸುಹಾರ್ತೋ ಎಂಬ ತನ್ನ ಕೈಗೊಂಬೆ ಸೇನಾಧಿಕಾರಿಯ ನೇತೃತ್ವದ ಮಿಲಿಟರಿ ಸರಕಾರ ಸ್ಥಾಪನೆ ಮಾಡಿತು. ಇರಾಕ್ ಮೇಲೆ ದಾಳಿಯ ಕತೆ ಕೂಡ ಭಿನ್ನವಲ್ಲ. ಮೂರು ದಶಕಗಳ ಹಿಂದೆ ಅಲ್ಲಿನ ಪೆಟ್ರೋಲಿಯಂ ಸಂಪನ್ಮೂಲಗಳ ಮೇಲೆ ಅಮೆರಿಕದ ಬಹುರಾಷ್ಟ್ರೀಯ ಕಂಪೆನಿಗಳು ಹೊಂದಿದ್ದ ಹಿಡಿತವನ್ನು ತೆಗೆದು ಹಾಕಿ ಅದನ್ನು ರಾಷ್ಟ್ರೀಕರಣ ಗೊಳಿಸಿದ ಇರಾಕ್ ಅಧ್ಯಕ್ಷ ಸದ್ದಾಮ್ ಹುಸೇನ್ ಅವರನ್ನು ಪದಚ್ಯುತಗೊಳಿಸಲು ಅಮೆರಿಕ ಮಸಲತ್ತು ನಡೆಸಿತು. ಇರಾಕ್ನಲ್ಲಿ ರಹಸ್ಯವಾಗಿ ಪರಮಾಣು ಅಸ್ತ್ರವನ್ನು ತಯಾರಿಸಲಾಗುತ್ತದೆ ಎಂದು ಆರೋಪಿಸಿತು. ಅಮೆರಿಕದ ಆರೋಪದ ಬಗ್ಗೆ ಸಂಯುಕ್ತ ರಾಷ್ಟ್ರ ಸಂಸ್ಥೆಯ ಪರಿಶೋಧಕರ ತಂಡ ಅಲ್ಲಿ ಹೋಗಿ ಅಧ್ಯಯನ ನಡೆಸಿದ ನಂತರ ಅಮೆರಿಕದ ಆರೋಪ ಸುಳ್ಳೆಂದು ಸಾಬೀತಾಯಿತು. ಆದರೂ ಅಲ್ಲಿನ ತೈಲ ಸಂಪತ್ತಿನ ಮೇಲೆ ಕಣ್ಣು ಹಾಕಿದ ಅಮೆರಿಕ ಕೊನೆಗೆ ಇರಾಕ್ ಮೇಲೆ ದಾಳಿ ಮಾಡಿ ಸದ್ದಾಮ್ ಹುಸೇನ್ ಅವರನ್ನು ಹೇಗೆ ಮುಗಿಸಿತು ಎಂಬುದು ಎಲ್ಲರಿಗೂ ಗೊತ್ತಿದೆ. ಸದ್ದಾಮ್ ಹುಸೇನ್ ದೇಶದಲ್ಲಿ ಅನೇಕ ಸುಧಾರಣಾ ಕ್ರಮಗಳನ್ನು ಕೈಗೊಂಡಿದ್ದರು. ಸಾಕ್ಷರತೆಯ ಪ್ರಮಾಣ ಹೆಚ್ಚಾಗಿತ್ತು. ಮಹಿಳೆಯರಿಗೆ ಸಂಪೂರ್ಣ ಸ್ವಾತಂತ್ರ್ಯ ವಿತ್ತು.ಮಹಿಳೆಯರು ವೈದ್ಯರಾಗಿ, ಶಿಕ್ಷಕಿಯರಾಗಿ, ಕ್ರೀಡಾಪಟುಗಳಾಗಿ, ವಿಜ್ಞಾನಿಗಳಾಗಿ ಹೆಸರು ಮಾಡಿದ್ದರು. ಎಲ್ಲಕ್ಕಿಂತ ಮಿಗಿಲಾಗಿ ಇರಾಕ್ ಭಾರತದ ಅತ್ಯಂತ ಆಪ್ತ ಮಿತ್ರ ದೇಶವಾಗಿತ್ತು. ಕೊನೆಗೆ ಅಮೆರಿಕದ ಸಂಪತ್ತಿನ ದುರಾಸೆ, ಮತ್ತು ದಾಹ ಇರಾಕನ್ನು ನಾಶಗೊಳಿಸಿತು. ಇರಾಕ್ನಲ್ಲಿ ಸದ್ದಾಮ್ ಹುಸೇನರನ್ನು ಕೊಂದು ಆ ಸ್ವತಂತ್ರ ಸಾರ್ವಭೌಮ ದೇಶವನ್ನು ವಶಪಡಿಸಿಕೊಂಡ ಅಮೆರಿಕ ನಂತರ ತನ್ನ ಹದ್ದಿನ ಕಣ್ಣು ಹಾಕಿದ್ದು ಲಿಬಿಯಾದತ್ತ. ಅಲ್ಲಿನ ಜನಪ್ರಿಯ ನಾಯಕ ಮುಹಮ್ಮದ್ ಗದ್ದಾಫಿಯವರನ್ನು ಹೇಗೆ ಮುಗಿಸಿತು ಎಂಬ ವಿವರಗಳತ್ತ ಕಣ್ಣು ಹಾಯಿಸಿದರೆ ಎದೆ ನಡುಗುತ್ತದೆ. ಇರಾಕ್ನ ಸದ್ದಾಮ್ ಹುಸೇನರಂತೆ ಗದ್ದಾಫಿ ಲಿಬಿಯಾದ ಅತ್ಯಂತ ಜನಪ್ರಿಯ ನಾಯಕ. ಮಹಿಳಾ ಸ್ವಾತಂತ್ರ್ಯದ ಅಗ್ರ ಪ್ರತಿಪಾದಕ. ಅಮೆರಿಕ ಗದ್ದಾಫಿಯನ್ನು ಖಳನಾಯಕ ಎಂಬಂತೆ ಬಿಂಬಿಸಿ ಪ್ರಚಾರ ಮಾಡಿತು.ಲಿಬಿಯಾ ಜನಸಂಖ್ಯೆ ಕಡಿಮೆಯಿದ್ದರೂ ಹೇರಳವಾದ ತೈಲ ಸಂಪತ್ತನ್ನು ಹೊಂದಿದ ದೇಶ. ಆದರೆ ಈ ತೈಲ ಸಂಪತ್ತನ್ನು ಪಾಶ್ಚಿಮಾತ್ಯ ಬಹುರಾಷ್ಟ್ರೀಯ ಕಂಪೆನಿಗಳು ಲೂಟಿ ಮಾಡುತ್ತಿದ್ದವು.ಲಿಬಿಯಾದ ಜನರು ಕಡು ಬಡತನದಲ್ಲಿ ನರಳುತ್ತಿದ್ದರು. ಆದರೆ 1969ರಲ್ಲಿ ಕರ್ನಲ್ ಗದ್ದಾಫಿ ದೇಶದ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ನಂತರ ವಿದೇಶಿ ತೈಲ ಕಂಪೆನಿಗಳಿಗೆ ಕಡಿವಾಣ ಹಾಕಿದರು, ರಾಷ್ಟ್ರೀಕರಣ ಮಾಡಿದರು. ತೈಲ ಸಂಪನ್ಮೂಲಗಳಿಂದ ಬರುವ ಲಾಭ ಮುಂಚೆ ವಿದೇಶಿ ಕಾರ್ಪೊರೇಟ್ ಕಂಪನಿಗಳಿಗೆ ಹೋಗುತ್ತಿತ್ತು. ಇದನ್ನು ತಡೆದು. ಗದ್ದಾಫಿ ಅದನ್ನು ತನ್ನ ದೇಶದ ಜನಸಾಮಾನ್ಯರ ಏಳಿಗೆಗೆ ಬಳಸತೊಡಗಿದರು.ದೇಶದ ಪ್ರಜೆಗಳಿಗೆ ಉಚಿತ ಶಿಕ್ಷಣ, ಉಚಿತ ವಿದ್ಯುತ್, ಉಚಿತ ಆಸ್ಪತ್ರೆ, ಹೀಗೆ ಎಲ್ಲವನ್ನೂ ಧಾರಾಳವಾಗಿ ನೀಡ ತೊಡಗಿದ ನಂತರ ಜನರ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಪರಿಸ್ಥಿತಿ ಸುಧಾರಿಸಿತು. ಗದ್ದಾಫಿಯನ್ನು ಅರಬ್ ಜಗತ್ತಿನ ಚೇಗುವೆರಾ ಎಂದು ಜನ ಕರೆಯುತ್ತಿದ್ದರು. ವೈಯಕ್ತಿಕವಾಗಿ ಸರ್ವಾಧಿಕಾರಿಯಾಗಿದ್ದರೂ ತನ್ನ ಜನರನ್ನು ಚೆನ್ನಾಗಿ ನೋಡಿಕೊಂಡಿದ್ದ ಗದ್ದಾಫಿಯನ್ನು ಮುಗಿಸಲು ಅಮೆರಿಕ ಹೊಂಚು ಹಾಕುತ್ತಲೇ ಬಂತು. ಬಾಡಿಗೆ ಬಂಡುಕೋರರನ್ನು ಸೃಷ್ಟಿಸಿದ ಅಮೆರಿಕ ಕೊನೆಗೂ ಗದ್ದಾಫಿಯನ್ನು ಪದಚ್ಯುತಗೊಳಿಸಿ ಅತ್ಯಂತ ಅಮಾನುಷವಾಗಿ ಆತನನ್ನು ಕೊಂದು ಹಾಕಿತು. ಈ ಬಗ್ಗೆ ಲಿಬಿಯಾದಲ್ಲಿ ಹತ್ತು ವರ್ಷಕ್ಕಿಂತ ಹೆಚ್ಚು ಕಾಲ ನೆಲೆಸಿದ್ದ ನಮ್ಮ ಕರ್ನಾಟಕದ ಕೊಪ್ಪಳದ ಉದಯ ಇಟಗಿ ಅವರು ಬರೆದ ಪುಸ್ತಕ ಅಲ್ಲಿನ ವಾಸ್ತವ ಪರಿಸ್ಥಿತಿಯ ಮೇಲೆ ಬೆಳಕು ಚೆಲ್ಲುತ್ತದೆ. ನಮ್ಮ ಪಕ್ಕದ ಅಫ್ಘಾನಿಸ್ತಾನದ್ದು ಅದಕ್ಕಿಂತಲೂ ಘೋರ ಕತೆ. ಅಲ್ಲಿ ನಜೀಬುಲ್ಲಾ ನೇತೃತ್ವದಲ್ಲಿ ಸರಕಾರವಿತ್ತು. ಮಹಿಳೆಯರು ಸೇರಿದಂತೆ ಎಲ್ಲರ ಏಳಿಗೆಗಾಗಿ ಹಲವಾರು ಕಾರ್ಯಕ್ರಮ ಗಳನ್ನು ರೂಪಿಸಲಾಗಿತ್ತು. ಇದನ್ನು ಸಹಿಸದ ಅಮೆರಿಕದ ಸಾಮ್ರಾಜ್ಯಶಾಹಿ ಅಲ್ಲಿ ತಾಲಿಬಾನ್ ಭಯೋತ್ಪಾದಕರನ್ನು ಸೃಷ್ಟಿಸಿ ಅವರಿಗೆ ಹಣ ಮತ್ತು ಶಸ್ತ್ರಾಸ್ತ್ರ ಗಳನ್ನು ಗುಟ್ಟಾಗಿ ನೀಡಿತು. ಕೊನೆಗೆ ಅಧ್ಯಕ್ಷ ನಜೀಬುಲ್ಲಾ ಅವರನ್ನು ಪದಚ್ಯುತಗೊಳಿಸಿತು. ಬೀದಿಯ ವಿದ್ಯುತ್ ಕಂಬಕ್ಕೆ ಅವರನ್ನು ನೇತು ಹಾಕಿ ಹತ್ಯೆ ಮಾಡಿತು. ಮುಂದೆ ತಾನೇ ಸೃಷ್ಟಿಸಿದ ತಾಲಿಬಾನ್ ಉಗ್ರರು ತನಗೇ ತಲೆ ಬೇನೆಯಾದಾಗ ಅವರ ವಿರುದ್ಧ ಕಾರ್ಯಾಚರಣೆ ಗೆ ಮುಂದಾಯಿತು. ಈಗ ಮತ್ತೆ ಅದು ತಾಲಿಬಾನಿಗಳ ಆಡಳಿತಕ್ಕೆ ಒಳ ಪಟ್ಟಿದೆ. ನಮ್ಮ ಪ್ರಧಾನಿ ನರೇಂದ್ರ ಮೋದಿಯವರಿಗೂ ತಾಲಿಬಾನಿಗಳ ಮೇಲೆ ವಿಶೇಷ ಪ್ರೀತಿ.ಭಾರತದಿಂದ ಅವರಿಗೆ ಕೋಟ್ಯಂತರ ರೂಪಾಯಿ ನೆರವನ್ನು ಒದಗಿಸಲಾಗಿದೆ. ದಗಾಕೋರ ಅಮೆರಿಕದ ಇತ್ತೀಚಿನ ಕುಕೃತ್ಯವೆಂದರೆ ವೆನೆಝುವೆಲಾ ಮೇಲೆ ನಡೆಸಿದ ದುರಾಕ್ರಮಣ. ಜಗತ್ತಿನ ಒಟ್ಟು ತೈಲ ಸಂಗ್ರಹದ ಸುಮಾರು ಐದನೇ ಭಾಗ ಈ ದೇಶದಲ್ಲಿದೆ. ಆ ದೇಶದ ಕಚ್ಚಾ ತೈಲದ ಸಂಗ್ರಹ 303 ಮಿಲಿಯನ್ ಬ್ಯಾರೆಲ್ಗಳು. ಸೌದಿ ಅರೇಬಿಯಾದ್ದು ಕೇವಲ 267 ಬಿಲಿಯನ್ ಬ್ಯಾರೆಲ್ ಮಾತ್ರ. ಅಂತಲೇ ವೆನೆಝುವೆಲಾದ ತೈಲ ಸಂಪತ್ತನ್ನು ಕೊಳ್ಳೆ ಹೊಡೆಯಲು ಅಮೆರಿಕ ಸಂಚು ನಡೆಸುತ್ತಲೇ ಬಂದಿದೆ. ಈ ದೇಶದ ಹಿಂದಿನ ಅಧ್ಯಕ್ಷ ಚವೇಜ್ರಿಗೆ ಸಾಕಷ್ಟು ಕಾಟ ಕೊಟ್ಟ ಅಮೆರಿಕ ಈಗ ಯುದ್ಧ ವಿಮಾನಗಳೊಂದಿಗೆ ದಾಳಿ ಮಾಡಿ ಆ ದೇಶದ ರಾಷ್ಟ್ರಾಧ್ಯಕ್ಷ ಮತ್ತು ಅವರ ಪತ್ನಿಯನ್ನು ಬಂಧಿಸಿ ಎತ್ತಿ ಹಾಕಿಕೊಂಡು ಹೋಯಿತು. ಇದನ್ನು ಸರಳ ಭಾಷೆಯಲ್ಲಿ ಹೇಳ ಬೇಕಂದರೆ ಡಕಾಯಿತರ ಗ್ಯಾಂಗು ಮನೆಯೊಂದಕ್ಕೆ ನುಗ್ಗಿ ಆ ಮನೆಯ ಮಾಲೀಕನನ್ನೇ ಕಟ್ಟಿಹಾಕಿ ಸಂಪತ್ತನ್ನು ದೋಚಿದಂತೆ ಎಂದು ಹೇಳಿದರೆ ತಪ್ಪಿಲ್ಲ. ಈಗ ಇರಾನ್ ಮೇಲಿನ ಅಮೆರಿಕದ ದುರಾಕ್ರಮಣಕ್ಕೂ ಇಂಥದೇ ಕುಂಟು ನೆಪ ಕಾರಣ. ಇರಾನ್ ತನ್ನೆಲ್ಲಾ ಯುರೇನಿಯಂ ಪುಷ್ಟೀಕರಣ ಪ್ರಕ್ರಿಯೆಯನ್ನು ತಕ್ಷಣ ನಿಲ್ಲಿಸಬೇಕು, ಈಗಾಗಲೇ ತನ್ನ ಬಳಿ ಇರುವ ಯುರೇನಿಯಂ ದಾಸ್ತಾನನ್ನು ದೇಶದಿಂದ ಹೊರಗೆ ಸಾಗಿಸಬೇಕು,ತನ್ನ ಬಳಿ ಇರುವ ಎಲ್ಲ ದೂರಗಾಮಿ ಬಾಲಿಸ್ಟಿಕ್ ಕ್ಷಿಪಣಿಗಳನ್ನು ಮತ್ತು ಕ್ರೂಸ್ ಕ್ಷಿಪಣಿ ಉತ್ಪಾದನಾ ಯೋಜನೆಗಳನ್ನು ಕೈ ಬಿಡಬೇಕು ಮತ್ತು ಅವುಗಳನ್ನು ನಾಶ ಮಾಡಬೇಕು, ಇಂಥ ಷರತ್ತುಗಳನ್ನು ಹಾಕಿ ಆ ದೇಶದ ಮೇಲೆ ದಾಳಿ ಮಾಡಿ ದೇಶದ ಸರ್ವೋಚ್ಚನೀಯರ ಆಯತುಲ್ಲಾ ಅಲಿ ಖಾಮೆನೈಯವರನ್ನೇ ಹತ್ಯೆ ಮಾಡಿದೆ. ಅಮೆರಿಕ ಎರಡನೇ ಮಹಾಯುದ್ಧದ ನಂತರ ಗಳಿಸಿದ ದಾದಾಗಿರಿಯ ಯಜಮಾನಿಕೆಯನ್ನು ಉಳಿಸಿಕೊಳ್ಳಲು ಹೆಣಗಾಡುತ್ತಿದೆ.ತನ್ನ ಅಡಿಯಾಳಾಗದ ದೇಶಗಳ ನಾಯಕತ್ವವನ್ನು ಬಲವಂತವಾಗಿ ಬದಲಿಸಲು ಯುದ್ಧವನ್ನು ಸಾರುತ್ತಿದೆ. ಜಾಗತಿಕ ಕಾನೂನು ಮತ್ತು ಒಪ್ಪಿತ ನಿಯಮಗಳನ್ನು ಧಿಕ್ಕರಿಸಿ ನೇರ ಸೇನಾ ಕಾರ್ಯಾಚರಣೆಯನ್ನು ನಡೆಸುತ್ತಿದೆ.ಹಲವಾರು ವರ್ಷಗಳ ಕಾಲ ವಸಾಹತುಶಾಹಿ ದುರಾಕ್ರಮಣವನ್ನು ವಿರೋಧಿಸಿ, ಹೋರಾಡಿ ಗಳಿಸಿದ ಸ್ವಾತಂತ್ರ್ಯವನ್ನು ಕಿತ್ತುಕೊಳ್ಳಲು ಗೂಂಡಾಗಿರಿಗೆ ಇಳಿದಿದೆ.ಇದಕ್ಕೆ ನಮ್ಮದೇ ತಾಜಾ ಉದಾಹರಣೆಯೆಂದರೆ ರಶ್ಯದಿಂದ ಪೆಟ್ರೋಲ್ ಖರೀದಿಸಲು ಅಮೆರಿಕದ ಎದುರು ದೈನ್ಯದಿಂದ ಅನುಮತಿ ಕೇಳಬೇಕಾದ ಪರಿಸ್ಥಿತಿ ಭಾರತಕ್ಕೆ ಬಂದಿದೆ. ಮಿತ್ರ ದೇಶ ಇರಾನ್ ಮೇಲೆ ಅಮೆರಿಕ ಮತ್ತು ಇಸ್ರೇಲ್ ನಡೆಸಿದ ದಾಳಿಯನ್ನು ಖಂಡಿಸಬೇಕಾದ ಭಾರತ ಅಂದರೆ ಭಾರತದ ಸರಕಾರ ಮತ್ತು ಪ್ರಧಾನಿ ಅಸಹಾಯಕ ಮೌನ ತಾಳಬೇಕಾಗಿ ಬಂದಿದೆ. ಇಂಥ ಸ್ವಾಭಿಮಾನ ಶೂನ್ಯ ಪರಿಸ್ಥಿತಿ ಯಾವುದೇ ದೇಶಕ್ಕೆ ಬರಬಾರದು.
ದಯಾಮರಣಕ್ಕೆ ಸುಪ್ರೀಂ ಕೋರ್ಟ್ ಅನುಮತಿ ಹಿನ್ನೆಲೆ | ಹರೀಶ್ ರಾಣಾಗೆ ಭಾವಪೂರ್ಣ ವಿದಾಯ
ಹೊಸದಿಲ್ಲಿ: ಹಲವು ವರ್ಷಗಳಿಂದ ಕೋಮಾಗೆ ಜಾರಿದ್ದ ಪಂಜಾಬ್ ವಿಶ್ವವಿದ್ಯಾಲಯದ ವಿದ್ಯಾರ್ಥಿ ಹರೀಶ್ ರಾಣಾಗೆ ದಯಾಮರಣ ನೀಡಲು ಸುಪ್ರೀಂ ಕೋರ್ಟ್ ಅನುಮತಿ ನೀಡಿದ ಹಿನ್ನೆಲೆ ದಿಲ್ಲಿ ಏಮ್ಸ್ ವೈದ್ಯರು ಹಂತಹಂತವಾಗಿ ಹರೀಶ್ ರಾಣಾಗೆ ನೀಡಿರುವ ಜೀವ ರಕ್ಷಕ ನೆರವನ್ನು ಹಿಂಪಡೆಯಲಿದ್ದಾರೆ. ಹರೀಶ್ ರಾಣಾರೊಂದಿಗೆ ಆತನ ಕುಟುಂಬದ ಸದಸ್ಯರು ಕೊನೆಯ ಕ್ಷಣಗಳನ್ನು ಕಳೆದಿರುವ ಭಾವನಾತ್ಮಕ 22 ಸೆಕೆಂಡ್ಗಳ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಆತನ ತಾಯಿ ಆತನಿಗೆ ಸಮೀಪದಲ್ಲಿ ಕುಳಿತಿದ್ದು, ಅವರ ಮುಖ ದುಃಖದಿಂದ ಇರುವುದು ಈ ವಿಡಿಯೊದಲ್ಲಿ ಕಂಡು ಬಂದಿದೆ. ಬ್ರಹ್ಮಕುಮಾರಿ ಸಮಾಜದ ಸೋದರಿಯೊಬ್ಬರು ಹರೀಶ್ ರಾಣಾ ಹಣೆಗೆ ತಿಲಕ ಇಡುತ್ತಿರುವುದೂ ಈ ವಿಡಿಯೊದಲ್ಲಿ ಕಂಡು ಬಂದಿದೆ. “ಎಲ್ಲರನ್ನೂ ಕ್ಷಮಿಸಿಬಿಡು, ಎಲ್ಲರಿಗೂ ಕ್ಷಮೆ ಕೇಳು. ಇದು ಹೊರಡುವ ಸಮಯ, ತಿಳಿಯಿತೆ?” ಎಂದು ಆಕೆ ಹರೀಶ್ ರಾಣಾ ತಲೆ ತಟ್ಟುತ್ತಾ ಹೇಳುತ್ತಿರುವುದು ಈ ವಿಡಿಯೊದಲ್ಲಿ ಸೆರೆಯಾಗಿದೆ. 2013ರಲ್ಲಿ ನಾಲ್ಕನೆ ಮಹಡಿಯಿಂದ ಕೆಳಗೆ ಬಿದ್ದ ಬಳಿಕ ಹರೀಶ್ ರಾಣಾ ಮೆದುಳಿಗೆ ಗಂಭೀರವಾಗಿ ಗಾಯವಾಗಿತ್ತು. ಅಲ್ಲಿಂದ ಆತ ಜೀವರಕ್ಷಕಗಳ ನೆರವಿನಲ್ಲಿ ಜೀವಿಸಿದ್ದ. ವರ್ಷಗಳು ಕಳೆದಂತೆ ಆತ ಬದುಕುಳಿಯುವ ಆಸೆ ಕಮರಿ ಹೋಗಿತ್ತು. ಹೀಗಾಗಿ, ಆತನ ಕುಟುಂಬದ ಸದಸ್ಯರು ದಯಾಮರಣ ಕೋರಿ ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಭಾರತದಲ್ಲಿ ದಯಾಮರಣ ಕಾಯ್ದೆ ಜಾರಿಗೆ ಬಂದ ಬಳಿಕ ಇದೇ ಪ್ರಥಮ ಬಾರಿಗೆ ಅದಕ್ಕೆ ಅವಕಾಶ ಒದಗಿಸಿದೆ. 53 ವರ್ಷಗಳ ಹಿಂದೆ ಭೀಕರ ಲೈಂಗಿಕ ದೌರ್ಜನ್ಯಕ್ಕೆ ಗುರಿಯಾಗಿದ್ದ 25 ವರ್ಷದ ಶುಶ್ರೂಷಕಿ ಅರುಣಾ ಶಾನಭಾಗ್ ಗೆ ಮುಂಬೈನ ಕಿಂಗ್ ಎಡ್ವರ್ಡ್ ಸ್ಮಾರಕ ಆಸ್ಪತ್ರೆಯಲ್ಲಿ ದಯಾಮರಣ ನೀಡಲಾಗಿತ್ತು.
IDBI ಷೇರು ಬೆಲೆ ಕುಸಿತ : 52 ವಾರಗಳ ಕನಿಷ್ಠ ಮಟ್ಟಕ್ಕೆ - ಹೂಡಿಕೆದಾರರು ಏನು ಮಾಡಬೇಕು, ಕೆಲವು ಟಿಪ್ಸ್
IDBI Share price fallen : ಪಶ್ಚಿಮ ಏಷ್ಯಾದಲ್ಲಿನ ಉದ್ವಿಗ್ನತೆಯಿಂದಾಗಿ, ಷೇರು ಮಾರುಕಟ್ಟೆಯಲ್ಲಿ ಒಂದಲ್ಲಾ ಒಂದು ಏರಿಳಿತ ಸಂಭವಿಸುತ್ತಲೇ ಇದೆ. ಐಡಿಬಿಐ ಬ್ಯಾಂಕಿನ ಷೇರು ಬೆಲೆ 52 ವಾರದಲ್ಲೇ ಕನಿಷ್ಠ ಮಟ್ಟಕ್ಕೆ ಇಳಿದಿದೆ. ಬ್ಯಾಂಕಿನ ಬಹುಪಾಲು ಮಾರಾಟ ಮಾಡುವ ನಿರ್ಧಾರದಿಂದ ಕೇಂದ್ರ ಸರ್ಕಾರ ಹಿಂದಕ್ಕೆ ಹೋಗುವ ಸಾಧ್ಯತೆಯ ಹಿನ್ನಲೆಯಲ್ಲಿ, ಷೇರುಗಳು ಬೆಲೆ ಕುಸಿತಗೊಂಡಿದೆ.
Gold Rate Today: ಬಂಗಾರ ಪ್ರಿಯರಿಗೆ ಸಿಹಿಸುದ್ದಿ: ಇಂದೂ ಇಳಿಕೆ ಕಂಡ ಚಿನ್ನದ ಬೆಲೆ, ಬೆಂಗಳೂರಿನಲ್ಲಿ ದರಗಳು ಹೀಗಿವೆ
ಕಳೆದ ಕೆಲವು ದಿನಗಳಿಂದ ಸತತವಾಗಿ ಏರಿಕೆ ಕಾಣುತ್ತಿದ್ದ ಹಳದಿ ಲೋಹದ ಬೆಲೆಯಲ್ಲಿ ಇಂದು ಕೊಂಚ ಇಳಿಕೆಯಾಗುವ ಮೂಲಕ ಚಿನ್ನದ ಪ್ರಿಯರಿಗೆ ನಿರಾಳ ತಂದಿದೆ. ಬೆಂಗಳೂರಿನಲ್ಲಿ ಇಂದು ಪ್ರತಿ ಗ್ರಾಂ ಚಿನ್ನದ ದರದಲ್ಲಿ ಸಣ್ಣ ಪ್ರಮಾಣದ ಕುಸಿತ ಕಂಡುಬಂದಿದೆ. ಜಾಗತಿಕ ಮಾರುಕಟ್ಟೆಯಲ್ಲಿನ ಏರಿಳಿತ ಹಾಗೂ ಡಾಲರ್ ಮೌಲ್ಯದಲ್ಲಿನ ಬದಲಾವಣೆಗಳು ಸ್ಥಳೀಯವಾಗಿ ಚಿನ್ನದ ದರದ ಮೇಲೆ ಪರಿಣಾಮ ಬೀರಿವೆ. ದರದಲ್ಲಿ
ಮೊದಲೇ ಗ್ಯಾಸ್ ಸಮಸ್ಯೆ, ಉಡುಪಿ ಬಳಿ ಎಲ್ಪಿಜಿ ಟ್ಯಾಂಕರ್ ಪಲ್ಟಿ
ರಾಷ್ಟ್ರೀಯ ಹೆದ್ದಾರಿ ಕಟಪಾಡಿ (ಎನ್ಎಚ್ 66) ಬಳಿ ಚಾಲಕನ ನಿಯಂತ್ರಣ ತಪ್ಪಿ ಗ್ಯಾಸ್ ಟ್ಯಾಂಕರ್ವೊಂದು ಪಲ್ಟಿಯಾಗಿದೆ. ಚಾಲಕನ ನಿಯಂತ್ರಣ ತಪ್ಪಿ ಈ ಅಪಘಾತ ಸಂಭವಿಸಿದೆ. ಸದ್ಯ ಯಾವುದೇ ಆತಂಕ ಬೇಡವೆಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ರಾಜ್ಯದಲ್ಲಿ ಬಾಲ್ಯವಿವಾಹ ಪ್ರಕರಣ ಶೇ.21.35ಕ್ಕೆ ಇಳಿಕೆ: 2025ರಲ್ಲಿ 2,394 ಬಾಲ್ಯವಿವಾಹ ತಡೆದ ಇಲಾಖೆ!
ರಾಜ್ಯದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಜಾಗೃತಿ ಅಭಿಯಾನ ಹಾಗೂ ‘ಸುರಕ್ಷಿಣಿ’ ವೆಬ್ಪೋರ್ಟಲ್ನಂತಹ ತಾಂತ್ರಿಕ ಕ್ರಮಗಳಿಂದಾಗಿ ಬಾಲ್ಯವಿವಾಹ ಪ್ರಕರಣಗಳ ಇಳಿಕೆಯಾಗಿದ್ದು, 2025ನೇ ಸಾಲಿನಲ್ಲಿ ಬಾಲ್ಯವಿವಾಹ ಪ್ರಕರಣಗಳು ಶೇ.21.35ಕ್ಕೆ ಇಳಿಕೆಯಾಗಿದೆ. ಇನ್ನು, 2023ರಿಂದ ಸತತವಾಗಿ 3 ವರ್ಷಗಳಲ್ಲಿ ಬಾಲ್ಯವಿವಾಹದಲ್ಲಿ ಇಳಿಕೆ ಕಂಡುಬರುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಆದಾಗ್ಯೂ, ಕೆಲ ಜಿಲ್ಲೆಗಳಲ್ಲಿ ಬಾಲ್ಯವಿವಾಹಗಳು ಅತಿಹೆಚ್ಚಾಗಿ ನಡೆಯುತ್ತಿದ್ದು, ಇವುಗಳ ಪೈಕಿ ಚಿತ್ರದುರ್ಗದ ಮೊದಲ ಸ್ಥಾನದಲ್ಲಿದ್ದರೆ, ಕೋಲಾರ ಹಾಗೂ ಶಿವಮೊಗ್ಗ ನಂತರದ ಸ್ಥಾನಗಳಲ್ಲಿವೆ. ಈ ಕುರಿತ ಮಾಹಿತಿ ಇಲ್ಲಿದೆ..
ಮಾರ್ಚ್ 16ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ
Petrol, Diesel Price: ಶಕ್ತಿಯ ಮೂಲಗಳು ಎನಿಸಿಕೊಂಡಿರುವ ಪೆಟ್ರೋಲ್ ಮತ್ತು ಡೀಸೆಲ್ ಇಂಧನ ಅತ್ಯವಶ್ಯಕವಾಗಿ ಬೇಕಾಗುವ ಸಂಪನ್ಮೂಲಗಳಾಗಿವೆ. ಹಾಗಾದ್ರೆ, ಬೆಂಗಳೂರು ಸೇರಿದಂತೆ ಕರ್ನಾಟಕದ ಇತರ ಜಿಲ್ಲೆಗಳಲ್ಲಿ ಇಂದು (ಮಾರ್ಚ್ 16) ಲೀಟರ್ ಪೆಟ್ರೋಲ್, ಡೀಸೆಲ್ ಬೆಲೆ ಎಷ್ಟಿದೆ ಎಂದು ಇಲ್ಲಿ ತಿಳಿಯಿರಿ. ಇತ್ತೀಚಿನ ದಿನಗಳಲ್ಲಿ ಎಲೆಕ್ಟ್ರಿಕ್ ವಾಹನಗಳು ಹೆಚ್ಚಾಗುತ್ತಿವೆ. ಹಾಗಂತ ಇಂಧನದ ಬೇಡಿಕೆ ಏನು ಕಡಿಮೆ ಆಗಿಲ್ಲ.
ಶರಾವತಿ ಪಂಪ್ಡ್ ಸ್ಟೋರೆಜ್ ಯೋಜನೆಗೆ ತಡೆ ಬಿದ್ದರೂ ವಾರಾಹಿಯಲ್ಲಿ ಮುಂದುವರಿಕೆ
ಪಶ್ಚಿಮಘಟ್ಟದ ಪರಿಸರ ಸೂಕ್ಷ್ಮ ಪ್ರದೇಶಕ್ಕೆ ವಾರಾಹಿ ಪಂಪ್ಡ್ ಸ್ಟೋರೇಜ್ ಯೋಜನೆ ಮಾರಕವಾದರೂ, ಯಾವುದೇ ಆತಂಕ ಇಲ್ಲದಂತೆ ವಿಸ್ತೃತ ಯೋಜನಾ ವರದಿ(ಡಿಪಿಆರ್) ಸಿದ್ಧವಾಗುತ್ತಿದೆ. ಡಿಪಿಆರ್ ಈ ವರ್ಷದ ಅಂತ್ಯದೊಳಗೆ ಕೆಪಿಸಿಎಲ್ಗೆ ಸಲ್ಲಿಕೆಯಾಗುವ ಸಾಧ್ಯತೆ ಇದೆ.
ಮಧ್ಯಪ್ರಾಚ್ಯದಲ್ಲಿ ಇರಾನ್ US ಸಂಘರ್ಷ ಉಲ್ಬಣಗೊಳ್ಳುತ್ತಿದ್ದು, ಇರಾನ್ ನ ಆರ್ಥಿಕ ಬೆನ್ನೆಲುಬು ಖಾರ್ಗ್ ದ್ವೀಪದ ಮೇಲಿನ US ದಾಳಿಗೆ ಪ್ರತೀಕಾರಕ್ಕಾಗಿ ಇರಾನ್ ಮಹತ್ವದ ಯೋಜನೆಯನ್ನು ರೂಪಿಸುತ್ತಿದೆ ಎಂದು ವರದಿಯಾಗಿದ್ದು, ಇದರ ಪ್ರಕಾರ, ಚೀನಾದೊಂದಿಗೆ ತೈಲ ವ್ಯಾಪಾರದಲ್ಲಿ ಇರಾನ್ ಚೈನೀಸ್ ಯುವಾನ್ ಬಳಕೆ ಮಾಡುವ ಮೂಲಕ ಜಾಗತಿಕವಾಗಿ ಬಳಕೆಯಲ್ಲಿರುವ ಪೆಟ್ರೋಡಾಲರ್ ವ್ಯವಸ್ಥೆಯಿಂದ ಪೆಟ್ರೋಯುವಾನ್ ವ್ಯವಸ್ಥೆಗೆ ಸಾಗುವ ಮೂಲಕ ಅಮೆರಿಕಾದ ಆರ್ಥಿಕತೆಗೆ ಪೆಟ್ಟು ನೀಡಲು ಚಿಂತನೆ ನಡೆಸುತ್ತದೆ. ಆದರೆ, ಇದು ಕೇವಲ ಅಮೆರಿಕಾದ ಆರ್ಥಿಕತೆ ಮಾತ್ರವಲ್ಲದೆ, ಅಲ್ಫಾವಧಿಯಲ್ಲಿ ಜಾಗತಿಕ ಮಾರುಕಟ್ಟೆಯಲ್ಲೂ ಅನಿಶ್ಚಿತತೆಯನ್ನುಂಟು ಮಾಡಲಿದ್ದು, ಷೇರು, ಬಾಂಡ್, ಕರೆನ್ಸಿ ಹಾಗೂ ಚಿನ್ನ ಬೆಳ್ಳಿ ದರದ ಮೇಲೆ ಪ್ರಭಾವ ಬೀರಲಿದೆ. ಈ ಕುರಿತ ಮಾಹಿತಿ ಇಲ್ಲಿದೆ..
ಪಿಯು ಮೌಲ್ಯಮಾಪನ ಬಹಿಷ್ಕಾರಕ್ಕೆ ಮುಂದಾದ ಉಪನ್ಯಾಸಕರು: ಫಲಿತಾಂಶ ವಿಳಂಬದ ಆತಂಕದಲ್ಲಿ ದ್ವಿತೀಯ ಪಿಯು ವಿದ್ಯಾರ್ಥಿಗಳು
ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರ ಕಚೇರಿಗಳ ನಿಯಂತ್ರಣ ಮತ್ತು ಜವಾಬ್ದಾರಿಯನ್ನು ಜಿಲ್ಲಾ ಪಂಚಾಯತ್ಗಳಿಗೆ ವರ್ಗಾಯಿಸುವ ಸರ್ಕಾರದ ಪ್ರಸ್ತಾವನೆಯನ್ನು ವಿರೋಧಿಸಿ ರಾಜ್ಯದ ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರು ಮತ್ತು ಪ್ರಾಂಶುಪಾಲರು ಹೋರಾಟಕ್ಕೆ ಮುಂದಾಗಿದ್ದಾರೆ. ಇದರ ಭಾಗವಾಗಿ ಮಾರ್ಚ್ 20ರಿಂದ ಆರಂಭವಾಗಲಿರುವ ದ್ವಿತೀಯ ಪಿಯುಸಿ ಉತ್ತರ ಪತ್ರಿಕೆಗಳ ಮೌಲ್ಯಮಾಪನವನ್ನು ಬಹಿಷ್ಕರಿಸಲು ನಿರ್ಧರಿಸಿದ್ದಾರೆ. ಭಾನುವಾರ ಶಿವಮೊಗ್ಗದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ನಡೆದ ಕರ್ನಾಟಕ
ಡ್ರೋನ್ ದಾಳಿ ಬೆನ್ನಲ್ಲೇ ದುಬೈ ಏರ್ ಪೋರ್ಟ್ನಲ್ಲಿ ವಿಮಾನ ಹಾರಾಟ ಸ್ಥಗಿತ
ದುಬೈ: ವಾಯುನೆಲೆಯ ಸಮೀಪದಲ್ಲಿರುವ ಸೌಲಭ್ಯಗಳ ಮೇಲೆ ನಡೆದ ಡ್ರೋನ್ ದಾಳಿಯ ಪರಿಣಾಮವಾಗಿ ಸೋಮವಾರ ದುಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನಗಳ ಹಾರಾಟವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿರುವ ಬಗ್ಗೆ ವರದಿಯಾಗಿದೆ. ದಾಳಿಯಿಂದ ಇಂಧನ ಟ್ಯಾಂಕ್ ಗಳಿಗೆ ಹಾನಿಯಾಗಿದ್ದು, ತುರ್ತು ಸೇವಾ ತಂಡಗಳು ತಕ್ಷಣವೇ ಕಾರ್ಯಾಚರಣೆ ಆರಂಭಿಸಿ ಬೆಂಕಿಯನ್ನು ನಿಯಂತ್ರಣಕ್ಕೆ ತಂದವು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಘಟನೆ ನಡೆದ ಕೂಡಲೇ ಸುರಕ್ಷತಾ ಕ್ರಮಗಳನ್ನು ಕಟ್ಟುನಿಟ್ಟುಗೊಳಿಸಲಾಗಿದ್ದು, ವಿಮಾನ ನಿಲ್ದಾಣದ ಕಾರ್ಯಾಚರಣೆ ಮೇಲೆ ಪರಿಣಾಮ ಬೀರಿದೆ. ಈ ಹಿನ್ನೆಲೆಯಲ್ಲಿ ಹಲವು ವಿಮಾನಗಳನ್ನು ವಿಮಾನ ನಿಲ್ದಾಣದ ಹೊರವಲಯದಲ್ಲಿ ಸುತ್ತುವಂತೆ ಮಾಡಲಾಗಿದ್ದು, ಕೆಲ ವಿಮಾನಗಳ ವೇಳಾಪಟ್ಟಿಯಲ್ಲಿ ವ್ಯತ್ಯಯ ಉಂಟಾಗಿದೆ. ದುಬೈನ ಅತ್ಯಂತ ಜನನಿಬಿಡ ವಿಮಾನ ನಿಲ್ದಾಣದಿಂದ ಕಾರ್ಯನಿರ್ವಹಿಸುವ ಪ್ರಮುಖ ವಿಮಾನಯಾನ ಸಂಸ್ಥೆಯಾದ ಎಮಿರೇಟ್ಸ್ ತನ್ನ ವಿಮಾನಗಳ ಹಾರಾಟವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿರುವುದಾಗಿ ದೃಢಪಡಿಸಿದೆ. ಇದೇ ವೇಳೆ, ಯುನೈಟೆಡ್ ಅರಬ್ ಎಮಿರೇಟ್ಸ್ನಲ್ಲಿ ಘಟನೆಯ ವಿಡಿಯೋ ತುಣುಕುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡ ಆರೋಪದ ಮೇರೆಗೆ ಬಂಧಿಸಲಾದ 35 ಮಂದಿಯಲ್ಲಿ 19 ಭಾರತೀಯರು ಸೇರಿದ್ದಾರೆ ಎಂದು ತಿಳಿದುಬಂದಿದೆ. ಕೆಲ ದಿನಗಳ ಹಿಂದೆ ಸಂಭವಿಸಿದ ಮತ್ತೊಂದು ದಾಳಿಯಿಂದ ಉಂಟಾದ ಸಣ್ಣ ಮಟ್ಟದ ಅಡಚಣೆಯ ಬಳಿಕ ಮತ್ತೆ ಈ ರೀತಿಯ ಘಟನೆ ಸಂಭವಿಸಿರುವುದು ಭದ್ರತಾ ಕಳವಳಗಳನ್ನು ಹೆಚ್ಚಿಸಿದೆ.
ಚಿನ್ನ ಬೆಳ್ಳಿ ದರದಲ್ಲಿ ಭಾರಿ ಇಳಿಕೆಯಾಗಿದ್ದು, ಮಾರ್ಚ್ ತಿಂಗಳ ಕನಿಷ್ಠ ದರ ದಾಖಲಿಸಿದೆ. ಈ ತಿಂಗಳಲ್ಲಿ ಗರಿಷ್ಠ ದರ ಮಾರ್ಚ್ 1 ಕ್ಕೆ 22 ಕ್ಯಾರೆಟ್ ಗೆ 15,865 ರೂಪಾಯಿ ದಾಖಲಾಗಿತ್ತು.
West Asia War : ಜಾಗತಿಕ ಶಾಂತಿ ಸ್ಥಾಪನೆ - ಇದ್ದೂ ಇಲ್ಲದಂತಾಯಿತೇ ವಿಶ್ವಸಂಸ್ಥೆ? ಯಶಸ್ಸು, ವೈಫಲ್ಯತೆಗಳು
UN Efforts For Global Peace : ಜಾಗತಿಕ ಮಟ್ಟದಲ್ಲಿ ಶಾಂತಿ ನೆಲೆಸುವಂತಾಗಲು ವಿಶ್ವಸಂಸ್ಥೆಯ ಪಾತ್ರ ಬಹಳ ನಿರ್ಣಾಯಕ. ಕಳೆದ ಹಲವು ದಶಕಗಳಿಂದ ವಿಶ್ವಸಂಸ್ಥೆಯು, ಶಾಂತಿ ಸ್ಥಾಪನೆಗೆ ಗಮನಾರ್ಹ ಕೆಲಸವನ್ನು ಮಾಡಿದೆ. ಆದರೆ, ಇತ್ತೀಚಿನ ವರ್ಷಗಳಲ್ಲಿ ಜಾಗತಿಕ ಮಟ್ಟದಲ್ಲಿ ಒಂದಲ್ಲಾ ಒಂದು ಯುದ್ದ ಅಥವಾ ಅಶಾಂತಿಯ ವಿದ್ಯಮಾನಗಳು ನಡೆಯುತ್ತಲೇ ಇದೆ. ಪಶ್ಚಿಮ ಏಷ್ಯಾದಲ್ಲಿನ ಸಂಘರ್ಷ ಇದಕ್ಕೆ ಕೊಡಬಹುದಾದ ಉದಾಹರಣೆ. ಯುದ್ದ ಆರಂಭವಾಗಿ, ಎರಡು ವಾರ ಆಗುತ್ತಾ ಬಂದರೂ, ರಣೋತ್ಸಾಹ ಕಮ್ಮಿಯಾಗುತ್ತಿಲ್ಲ. ಹಾಗಾದರೆ, ಇಂತಹ ಸಂದರ್ಭಗಳಲ್ಲಿ ವಿಶ್ವಸಂಸ್ಥೆಯ ಪಾತ್ರವೇನು? ಇದುವರೆಗಿನ ಸಕ್ಸಸ್ ಮತ್ತು ವೈಫಲ್ಯತೆಗಳು ಯಾವುದು ಎನ್ನುವ ಸಂಕ್ಷಿಪ್ತ ವಿವರಣೆಯನ್ನು ಈ ಲೇಖನದಲ್ಲಿ ನೀಡುವ ಪ್ರಯತ್ನವನ್ನು ಮಾಡಲಾಗಿದೆ.
Udupi : ಕಟಪಾಡಿಯಲ್ಲಿ ಗ್ಯಾಸ್ ಟ್ಯಾಂಕರ್ ಪಲ್ಟಿ; ಆತಂಕದ ವಾತಾವರಣ
ಉಡುಪಿ: ಗ್ಯಾಸ್ ತುಂಬಿದ ಬುಲೆಟ್ ಟ್ಯಾಂಕರೊಂದು ಕಟಪಾಡಿ ಸಮೀಪದ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಪಲ್ಟಿಯಾದ ಘಟನೆ ಇಂದು ಬೆಳಗ್ಗೆ ನಡೆದಿದೆ. ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದ್ದು ಅಗ್ನಿಶಾಮಕ ದಳದವರು ನಿರಂತರ ನೀರು ಹಾಯಿಸುವ ಮೂಲಕ ಪರಿಸ್ಥಿತಿಯನ್ನು ನಿಯಂತ್ರಣದಲ್ಲಿರಿಸಿದ್ದಾರೆ. ಮಂಗಳೂರಿನಿಂದ ಉಡುಪಿ ಕಡೆ ಹೋಗುತ್ತಿದ್ದ ಗ್ಯಾಸ್ ತುಂಬಿದ ಬುಲೆಟ್ ಟ್ಯಾಂಕರ್ ಕಟಪಾಡಿ ಜಂಕ್ಷನ್ ನಲ್ಲಿ ಪಲ್ಟಿಯಾಗಿದೆ ಎನ್ನಲಾಗಿದೆ. ಕಡಪಾಡಿ ಜಂಕ್ಷನ್ ನಲ್ಲಿ ನಡೆಯುತ್ತಿರುವ ಅಂಡರ್ ಪಾಸ್ ಕಾಮಗಾರಿಗಾಗಿ ರಸ್ತೆಯನ್ನು ಡೈವರ್ಶನ್ ಮಾಡಲಾಗಿತ್ತು. ಈ ತಿರುವಿನಲ್ಲಿ ವೇಗದಿಂದ ಬಂದ ಟ್ಯಾಂಕರ್ ಅನ್ನು ಚಾಲಕ ಒಮ್ಮೆಲೆ ತಿರುಗಿಸಿದ ಪರಿಣಾಮ ಪಲ್ಟಿ ಆಯಿತೆಂದು ತಿಳಿದು ಬಂದಿದೆ ಕೂಡಲೇ ಸ್ಥಳಕ್ಕೆ ಆಗಮಿಸಿರುವ ಉಡುಪಿ ಅಗ್ನಿಶಾಮಕ ದಳದ ಮೂರು ವಾಹನಗಳು ಟ್ಯಾಂಕರ್ ಗೆ ನೀರು ಹಾಯಿಸುವ ಮೂಲಕ ತಂಪಾಗಿರಿಸುವ ಪ್ರಯತ್ನ ಮಾಡುತ್ತಿದೆ. ಅದೇ ರೀತಿ ಇತರ ಟ್ಯಾಂಕರ್ ಗಳ ಮೂಲಕ ನೀರನ್ನು ತಂದು ಹಾಯಿಸಲಾಗುತ್ತಿದೆ. ಸ್ಥಳಕ್ಕೆ ತಜ್ಞರು ಆಗಮಿಸಿ ಟ್ಯಾಂಕರ್ ನಿಂದ ಗ್ಯಾಸ್ ಶಿಫ್ಟ್ ಮಾಡುವ ಪ್ರಯತ್ನ ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಸ್ಥಳದಲ್ಲಿ ಪೊಲೀಸರು ಹಾಗೂ ಅಗ್ನಿಶಾಮಕದ ಅಧಿಕಾರಿಗಳು ಹಾಜರಿದ್ದಾರೆ. ಇದರಿಂದ ಒಂದು ಗಂಟೆಗಳ ಕಾಲ ರಸ್ತೆ ಸಂಚಾರದಲ್ಲಿ ವ್ಯತ್ಯಯ ಉಂಟಾಯಿತು ಒಂದು ಬದಿಯ ರಸ್ತೆ ಸಂಚಾರವನ್ನು ಸ್ಥಗಿತಗೊಳಿಸಿ ಕಟಪಾಡಿಯ ಒಳಗಿನ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ.
Rajya Sabha Election | 10 ರಾಜ್ಯಗಳ 37 ರಾಜ್ಯಸಭಾ ಸ್ಥಾನಗಳಿಗೆ ಮತದಾನ ಪ್ರಾರಂಭ
ಹೊಸ ದಿಲ್ಲಿ: 10 ರಾಜ್ಯಗಳಲ್ಲಿನ 37 ರಾಜ್ಯಸಭಾ ಸ್ಥಾನಗಳ ಚುನಾವಣೆಗೆ ಸೋಮವಾರ ಬೆಳಗ್ಗೆ ಮತದಾನ ಪ್ರಾರಂಭಗೊಂಡಿದೆ. ಬೆಳಗ್ಗೆ 9 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಮತದಾನ ನಡೆಯಲಿದ್ದು, 5 ಗಂಟೆಯಿಂದ ಮತ ಎಣಿಕೆ ಪ್ರಕ್ರಿಯೆ ಪ್ರಾರಂಭಗೊಳ್ಳಲಿದೆ ಎಂದು ಚುನಾವಣಾ ಆಯೋಗ ಹೇಳಿದೆ. ಎಲ್ಲ ರಾಜ್ಯಗಳಲ್ಲೂ ಸುಗಮ ಮತದಾನ ನಡೆಯುವುದನ್ನು ಖಾತರಿಪಡಿಸಲು ಚುನಾವಣಾ ಆಯೋಗವು ವಿಸ್ತೃತ ವೇಳಾಪಟ್ವಿಯನ್ನು ನಿಗದಿಗೊಳಿಸಿದೆ. ಐದು ರಾಜ್ಯಸಭಾ ಸ್ಥಾನಗಳಿಗಾಗಿ ಬಿಹಾರದಲ್ಲಿ ಮತದಾನ ಪ್ರಕ್ರಿಯೆ ಪ್ರಾರಂಭಗೊಂಡಿದೆ. ಈ ದ್ವೈವಾರ್ಷಿಕ ರಾಜ್ಯಸಭಾ ಚುನಾವಣೆಯಲ್ಲಿ ಬಿಹಾರದ ಆಡಳಿತಾರೂಢ ಎನ್ಡಿಎ ಮೈತ್ರಿಕೂಟದಿಂದ ಐವರು ಹಾಗೂ ಆರ್ಜೆಡಿಯಿಂದ ಓರ್ವ ಅಭ್ಯರ್ಥಿ ಕಣಕ್ಕಿಳಿದಿದ್ದಾರೆ. ಬಿಹಾರ ವಿಧಾನಸಭಾ ಸಂಕೀರ್ಣದಲ್ಲಿ ಬೆಳಗ್ಗೆ 9 ಗಂಟೆಗೆ ಮತದಾನ ಪ್ರಾರಂಭವಾಗಲಿದ್ದು, ಸಂಜೆ ಐದು ಗಂಟೆಯವರೆಗೂ ಮುಂದುವರಿಯಲಿದೆ. ಶಾಸಕರು ಈಗಾಗಲೇ ತಮ್ಮ ಮತ ಚಲಾಯಿಸಲು ಪ್ರಾರಂಭಿಸಿದ್ದಾರೆ. ಸಂಜೆ 5 ಗಂಟೆಯಿಂದ ಮತ ಎಣಿಕೆ ಪ್ರಕ್ರಿಯೆ ನಡೆಯಲಿದ್ದು, ಇಂದೇ ಫಲಿತಾಂಶ ಪ್ರಕಟವಾಗುವ ನಿರೀಕ್ಷೆ ಇದೆ. ಎನ್ಡಿಎ ಅಭ್ಯರ್ಥಿಗಳ ಪೈಕಿ ಜೆಡಿಯು ವರಿಷ್ಠ ನಿತೀಶ್ ಕುಮಾರ್ ಹಾಗೂ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ಸೇರಿದ್ದಾರೆ. ಉಳಿದಂತೆ ಕೇಂದ್ರ ಸಚಿವ ರಾಮ್ ನಾಥ್ ಠಾಕೂರ್, ಆರ್ ಎಲ್ಎಂ ಮುಖ್ಯಸ್ಥ ಉಪೇಂದ್ರ ಕುಶ್ವಾಹ, ಬಿಜೆಪಿಯ ಶಿವೇಶ್ ಕುಮಾರ್ ಸ್ಪರ್ಧಿಸಿದ್ದಾರೆ. ಈ ಪೈಕಿ ಕೇಂದ್ರ ಸಚಿವ ರಾಮ್ ನಾಥ್ ಠಾಕೂರ್ ಹಾಗೂ ಆರ್ ಎಲ್ಎಂ ಮುಖ್ಯಸ್ಥ ಉಪೇಂದ್ರ ಕುಶ್ವಾಹ ಮರು ಆಯ್ಕೆ ಬಯಸಿದ್ದಾರೆ.
Tamil Nadu : ಮೆಟ್ರಿಜ್ ಚುನಾವಣಾ ಸಮೀಕ್ಷೆ - NDA ಮೈತ್ರಿಕೂಟಕ್ಕೆ ಅಲ್ಪ ಮುನ್ನಡೆ, ಆದರೂ ಎಡವದಂತೆ ಎಚ್ಚರಿಕೆ
TN Election : ದೇಶಾದ್ಯಂತ ಭಾರೀ ಕುತೂಹಲಕ್ಕೆ ಕಾರಣವಾಗಿರುವ ತಮಿಳುನಾಡು ವಿಧಾನಸಭೆಗೆ ದಿನಾಂಕವನ್ನು ಕೇಂದ್ರ ಚುನಾವಣಾ ಆಯೋಗ ಘೋಷಿಸಿದೆ. ಏಪ್ರಿಲ್ 23ರಂದು ಒಂದೇ ಹಂತದಲ್ಲಿ ಅಲ್ಲಿ ಚುನಾವಣೆ ನಡೆಯಲಿದೆ. ಮೇ ನಾಲ್ಕರಂದು ಫಲಿತಾಂಶ ಪ್ರಕಟವಾಗಲಿದೆ. ಈ ನಡುವೆ, ಮೆಟ್ರಿಜ್ ಚುನಾವಣಾಪೂರ್ವ ಸಮೀಕ್ಷೆಯನ್ನು ಪ್ರಕಟಿಸಿದ್ದು, ಬಿಜೆಪಿ ಮೈತ್ರಿಕೂಟಕ್ಕೆ ಖುಷಿ ನೀಡುವ ಫಲಿತಾಂಶ ಹೊರಬಿದ್ದಿದೆ.
ಪ್ರತಿಷ್ಟಿತ 98ನೇ ಅಕಾಡೆಮಿ ಅವಾರ್ಡ್ಸ್ನಲ್ಲಿ ‘ಸಿನ್ನರ್ಸ್’ ಚಿತ್ರದಲ್ಲಿನ ನಟನೆಗಾಗಿ ಅಮೆರಿಕದ ನಟ ಮೈಕಲ್ ಬಿ ಜೋರ್ಡಾನ್ ‘ಅತ್ಯುತ್ತಮ ನಟ’ ಪ್ರಶಸ್ತಿಯನ್ನ ಪಡೆದಿದ್ದಾರೆ. ಆ ಮೂಲಕ ಮೊದಲ ಆಸ್ಕರ್ ಪ್ರಶಸ್ತಿಯನ್ನ ಪಡೆದ ಹಿರಿಮೆ ಅವರದ್ದು. ಇನ್ನೂ ಬೆಸ್ಟ್ ಆಕ್ಟ್ರೆಸ್ ಅವಾರ್ಡ್ ಐರಿಷ್ ನಟಿ ಜೆಸ್ಸಿ ಬಕ್ಲಿ ಪಡೆದಿದ್ದಾರೆ.
ಮಾರ್ಚ್ 16 ರಿಂದ ಮಧ್ಯಪ್ರಾಚ್ಯ ನಗರಗಳಿಂದ ಏರ್ ಇಂಡಿಯಾ, ಏರ್ ಇಂಡಿಯಾ ಎಕ್ಸ್ಪ್ರೆಸ್ 48 ವಿಮಾನಗಳ ಕಾರ್ಯಾಚರಣೆ
ಮಧ್ಯಪ್ರಾಚ್ಯ ನಗರಗಳಲ್ಲಿ ಸಿಲುಕಿಕೊಂಡಿರುವ ಭಾರತೀಯರನ್ನು ವಾಪಸ್ ಕರೆತರಲು ಏರ್ ಇಂಡಿಯಾ ಮತ್ತು ಏರ್ ಇಂಡಿಯಾ ಎಕ್ಸ್ಪ್ರೆಸ್ ಇಂದಿನಿಂದ ಮಾರ್ಚ್ 16 ರಿಂದ ಮಧ್ಯಪ್ರಾಚ್ಯದಿಂದ ವಿಮಾನ ಹಾರಾಟ ನಡೆಸಲಿವೆ. ಇನ್ನೊಂದೆಡೆ ಜಾಗತಿಕ ವಿಮಾನಯಾನ ಇಂಧನ ಬೆಲೆಗಳಲ್ಲಿ ತೀವ್ರ ಏರಿಕೆ ಕಂಡುಬಂದಿದೆ.
ಇನ್ನೆರಡು ವಾರ ಒಂದೊಂದು ದಿನ ರಜೆ ಹಾಕಿದ್ರೆ, ನಾಲ್ಕುನಾಲ್ಕು ದಿನಗಳ ಭರ್ಜರಿ ವೀಕೆಂಡ್
Long weekedn of 4 days : ಕೆಲವೊಂದು ಕಡೆ ಪರೀಕ್ಷೆಗಳು ಇನ್ನೂ ಮುಗಿಯಬೇಕಷ್ಟೇ. ಮಾರ್ಚ್ ತಿಂಗಳ ಮೂರನೇ ಮತ್ತು ನಾಲ್ಕನೇ ವಾರಾಂತ್ಯಕ್ಕೆ ಹೊಂದಿಕೊಂಡಂತೆ, ಹಬ್ಬಗಳು ಬಂದಿರುವ ಹಿನ್ನಲೆಯಲ್ಲಿ ಒಂದು ದಿನ ರಜೆ ಹಾಕಿದರೆ, ನಾಲ್ಕು ದಿನಗಳ ಸುದೀರ್ಘ ರಜೆಯ ಮಜಾವನ್ನು ಪಡೆಯಬಹುದು. ಇಂತಹ ಲಾಂಗ್ ವೀಕೆಂಡ್’ಗಳಲ್ಲಿ ಎಲ್ಲವೂ ತುಟ್ಟಿಯಾಗಿರುವುದಂತೂ ಹೌದು.
ಮಧ್ಯಪ್ರಾಚ್ಯ ಸಂಘರ್ಷ ಇನ್ನೂ ಹೊತ್ತಿ ಉರಿಯುತ್ತಿದೆ. ಇರಾನ್ ಕೊಲ್ಲಿ ರಾಷ್ಟ್ರಗಳ ಮೇಲಿನ ದಾಳಿ ಮುಂದುವರಿಸಿದೆ. ಅಮೆರಿಕ- ಇಸ್ರೇಲ್ ದಾಳಿಗೆ ಪ್ರತಿಯಾಗಿ ದುಬೈ ಏರ್ಪೋರ್ಟ್ ಬಳಿ ಇಂದು ಮುಂಜಾನೆ ಇರಾನ್ ದಾಳಿ ನಡೆಸಿದೆ.
ಮೈಸೂರು : ಸರಕಾರಿ ಬಸ್ಗಳ ಅಪಘಾತ ಹೆಚ್ಚಳ, ಸ್ಪೀಡ್ಗೆ ಬೇಕಿದೆ ಬ್ರೇಕ್
ಕಳೆದ ಮೂರು ವರ್ಷಗಳಲ್ಲಿ 300 ಕ್ಕೂ ಹೆಚ್ಚು ಬಸ್ಗಳು ಅಪಘಾತಕ್ಕೀಡಾಗಿವೆ. ಸರಕಾರಿ ಬಸ್ಗಳ ಅಪಘಾತ ಸಂಖ್ಯೆಯಲ್ಲಿ ಬೆಂಗಳೂರು ಜಿಲ್ಲೆ ನಂತರ ಎರಡನೇ ಸ್ಥಾನದಲ್ಲಿ ಮೈಸೂರಿದೆ. ಖಾಸಗಿ ಬಸ್ಗಳ ಅಪಘಾತ ಸಂಖ್ಯೆಗೆ ಹೋಲಿಸಿದರೆ ಮೈಸೂರಿನಲ್ಲಿ ಸರಕಾರಿ ಬಸ್ಗಳ ಅಪಘಾತ ಸಂಖ್ಯೆಯೇ ಹೆಚ್ಚಾಗಿದೆ.
Odisha Hospital Fire Accident: ಒಡಿಶಾ ಆಸ್ಪತ್ರೆಯಲ್ಲಿ ಭೀಕರ ಅಗ್ನಿ ದುರಂತ: ಹತ್ತು ರೋಗಿಗಳು ಸಾವು
ಒಡಿಶಾದ ಕಟಕ್ನಲ್ಲಿರುವ ಪ್ರಖ್ಯಾತ ಎಸ್ಸಿಬಿ (SCB) ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಟ್ರಾಮಾ ಕೇರ್ ಐಸಿಯು (ICU) ವಿಭಾಗದಲ್ಲಿ ಸೋಮವಾರ ಮುಂಜಾನೆ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ ಕನಿಷ್ಠ 10 ರೋಗಿಗಳು ಮೃತಪಟ್ಟಿದ್ದಾರೆ. ಬೆಳಗಿನ ಜಾವ ಸುಮಾರು 3 ಗಂಟೆಯ ಸುಮಾರಿಗೆ ಈ ಘಟನೆ ಸಂಭವಿಸಿದ್ದು, ಮೃತರ ಸಂಖ್ಯೆಯನ್ನು ಮುಖ್ಯಮಂತ್ರಿ ಮೋಹನ್ ಚರಣ್ ಮಾಝಿ ಅವರು ಖಚಿತಪಡಿಸಿದ್ದಾರೆ.
ಲಾಸ್ ಏಂಜಲಿಸ್: ಹಾಲಿವುಡ್ನ ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿ ಸಮಾರಂಭದಲ್ಲಿ ಈ ಬಾರಿ ಅತ್ಯುತ್ತಮ ನಟ ಪ್ರಶಸ್ತಿಯನ್ನು ಸಿನ್ನರ್ಸ್ ಚಿತ್ರದ ನಟನೆಗಾಗಿ ಮೈಕೆಲ್ ಬಿ ಜೋರ್ಡಾನ್ ಪಡೆದಿದ್ದಾರೆ. ಈ ವಿಭಾಗದಲ್ಲಿ ಟಿಮೋತಿ ಚಾಲಮೆಟ್ ಅವರೊಂದಿಗೆ ತೀವ್ರ ಸ್ಪರ್ಧೆ ಇದ್ದರೂ, ಅಂತಿಮವಾಗಿ ಪ್ರಶಸ್ತಿ ಜೋರ್ಡಾನ್ ಪಾಲಾಯಿತು. 39 ವರ್ಷದ ಜೋರ್ಡಾನ್, ಸಾಮಾಜಿಕ ಕಳಕಳಿಯ ವ್ಯಾಂಪೈರ್ ಕಥಾಹಂದರ ಹೊಂದಿರುವ ಈ ಚಿತ್ರದಲ್ಲಿ ದ್ವಿಪಾತ್ರ ಅಭಿನಯದ ಮೂಲಕ ಗಮನ ಸೆಳೆದಿದ್ದಾರೆ. ಅವರು ‘ಸ್ಮೋಕ್’ ಮತ್ತು ‘ಸ್ಟಾಕ್’ ಎಂಬ ಜವಳಿ ಸಹೋದರರ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದು, ಎರಡೂ ಪಾತ್ರಗಳು ಪರಸ್ಪರ ಸಂಪೂರ್ಣ ವಿಭಿನ್ನ ಸ್ವಭಾವಗಳನ್ನು ಹೊಂದಿವೆ. ಸ್ಮೋಕ್ ಶಾಂತ ಹಾಗೂ ಜವಾಬ್ದಾರಿಯುತ ವ್ಯಕ್ತಿಯಾಗಿದ್ದರೆ, ಸ್ಟಾಕ್ ಭಾವೋದ್ರಿಕ್ತ ಹಾಗೂ ಹಠಾತ್ ನಿರ್ಧಾರಗಳನ್ನು ತೆಗೆದುಕೊಳ್ಳುವ ವ್ಯಕ್ತಿಯಾಗಿ ಕಾಣಿಸಿಕೊಂಡಿದ್ದಾರೆ. ಈ ಎರಡೂ ಪಾತ್ರಗಳ ನಡುವಿನ ವ್ಯತ್ಯಾಸವನ್ನು ಸ್ಪಷ್ಟವಾಗಿ ತೋರಿಸಲು ಜೋರ್ಡಾನ್ ಹಲವು ವಿಶೇಷ ತಂತ್ರಗಳನ್ನು ಅನುಸರಿಸಿದ್ದಾರೆ. ವಿಶೇಷವಾಗಿ ಸ್ಟಾಕ್ ಪಾತ್ರದ ಅಸ್ವಸ್ಥತೆಯನ್ನು ವ್ಯಕ್ತಪಡಿಸಲು ಚಿಕ್ಕ ಗಾತ್ರದ ಬೂಟುಗಳನ್ನು ಧರಿಸಿದ್ದೂ ಗಮನಾರ್ಹವಾಗಿದೆ. ಇದೇ ಮೊದಲ ಬಾರಿಗೆ ಆಸ್ಕರ್ ಗೆ ನಾಮನಿರ್ದೇಶನಗೊಂಡ ಜೋರ್ಡಾನ್, ತಮ್ಮ ಮೊದಲ ಅವಕಾಶದಲ್ಲೇ ಪ್ರಶಸ್ತಿ ಗೆದ್ದು ಸಾಧನೆ ಮಾಡಿದ್ದಾರೆ. ಪ್ರಶಸ್ತಿ ಸ್ವೀಕರಿಸುವ ವೇಳೆ ಅವರು, “ನಾನು ಇಲ್ಲಿ ನಿಂತಿರುವುದು ನನಗಿಂತ ಮೊದಲು ಬಂದ ಸಿಡ್ನಿ ಪೊಯ್ಟಿಯರ್, ಡೆನ್ಜೆಲ್ ವಾಷಿಂಗ್ಟನ್, ಹ್ಯಾಲಿ ಬೆರ್ರಿ, ಜೇಮೀ ಫಾಕ್ಸ್, ಫಾರೆಸ್ಟ್ ವಿಟೇಕರ್ ಹಾಗೂ ವಿಲ್ ಸ್ಮಿತ್ ಅವರಂತಹ ಮಹಾನ್ ಕಲಾವಿದರ ಕಾರಣದಿಂದ,” ಎಂದು ಹೇಳಿದರು. ಐರಿಷ್ ನಟಿ ಜೆಸ್ಸಿ ಬಕ್ಲಿ ಹ್ಯಾಮ್ನೆಟ್ ಚಿತ್ರದಲ್ಲಿನ ಅಭಿನಯಕ್ಕಾಗಿ ಅತ್ಯುತ್ತಮ ನಟಿ ಪ್ರಶಸ್ತಿಯನ್ನು ಗೆದ್ದಿದ್ದಾರೆ. ರಿಯಾಲಿಟಿ ಟಿವಿ ಕಾರ್ಯಕ್ರಮದ ಮೂಲಕ ವೃತ್ತಿಜೀವನ ಆರಂಭಿಸಿದ್ದ ಅವರು, ಇದೀಗ ಆಸ್ಕರ್ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡು ಹೊಸ ಮೈಲಿಗಲ್ಲು ಸಾಧಿಸಿದ್ದಾರೆ. ಈ ಚಿತ್ರದಲ್ಲಿ ಬಕ್ಲಿ, ಇಂಗ್ಲಿಷ್ ನಾಟಕಕಾರ ವಿಲಿಯಂ ಶೇಕ್ಸ್ ಪಿಯರ್ ಅವರ ಪತ್ನಿ ಆಗ್ನೆಸ್ ಪಾತ್ರಕ್ಕೆ ಜೀವಂತಿಕೆ ತುಂಬಿದ್ದಾರೆ. ಪ್ರೀತಿ ಹಾಗೂ ಮಗುವಿನ ಸಾವಿನಿಂದ ಉಂಟಾಗುವ ಗಾಢ ಭಾವನೆಗಳನ್ನು ಅವರು ನೈಸರ್ಗಿಕವಾಗಿ ಅಭಿನಯಿಸಿದ್ದಾರೆ. ಬಕ್ಲಿಗೆ ಇದು ಮೊದಲ ಆಸ್ಕರ್ ಪ್ರಶಸ್ತಿಯಾಗಿದ್ದು, ಇದಕ್ಕೂ ಮುನ್ನ BAFTA, ವಿಮರ್ಶಕರ ಆಯ್ಕೆ ಪ್ರಶಸ್ತಿಗಳು ಹಾಗೂ ಗೋಲ್ಡನ್ ಗ್ಲೋಬ್ ಪ್ರಶಸ್ತಿಗಳಲ್ಲೂ ಜಯಗಳಿಸಿದ್ದರು. 2022ರ ದಿ ಲಾಸ್ಟ್ ಡಾಟರ್ ಚಿತ್ರದ ನಂತರ ಇದು ಅವರ ಎರಡನೇ ಆಸ್ಕರ್ ನಾಮನಿರ್ದೇಶನವಾಗಿತ್ತು.
2026ರ ಆಸ್ಕರ್ ಪ್ರಶಸ್ತಿ ಪ್ರದಾನ ವೇದಿಕೆಯಲ್ಲಿ ಫೆಲಸ್ತೀನ್ ಬೆಂಬಲಿಸಿದ ಸ್ಪ್ಯಾನಿಷ್ ನಟ ಜೇವಿಯರ್
ಲಾಸ್ ಏಂಜಲಿಸ್: 2026ರ ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸ್ಪ್ಯಾನಿಷ್ ನಟ ಜೇವಿಯರ್ ಬಾರ್ಡೆಮ್ ಫೆಲಸ್ತೀನ್ ಬೆಂಬಲಿಸಿ ಗಮನ ಸೆಳೆದರು. ಅತ್ಯುತ್ತಮ ಅಂತರರಾಷ್ಟ್ರೀಯ ಫೀಚರ್ ಚಿತ್ರ ಪ್ರಶಸ್ತಿಯನ್ನು ಪ್ರದಾನಿಸುವ ವೇಳೆ ಮಾತನಾಡಿದ ಅವರು, “ಯುದ್ಧ ಬೇಡ; ಫೆಲಸ್ತೀನ್ ಮುಕ್ತವಾಗಲಿ” ಎಂದು ಹೇಳಿದರು. ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಸಂಘರ್ಷ ತಕ್ಷಣ ಅಂತ್ಯಗೊಳ್ಳಬೇಕು ಎಂದು ಒತ್ತಾಯಿಸಿದ ಅವರು, ಶಾಂತಿ ಸ್ಥಾಪನೆ ಅಗತ್ಯವಿದೆ. ಹಿಂಸಾಚಾರಕ್ಕಿಂತ ಸಂವಾದದ ಮೂಲಕವೇ ಸಮಸ್ಯೆಗೆ ಪರಿಹಾರ ಕಂಡುಹಿಡಿಯಬೇಕು ಎಂದು ಅಭಿಪ್ರಾಯಪಟ್ಟರು. ಇಸ್ರೇಲ್ ನ ಕ್ರಮಗಳ ಬಗ್ಗೆ ಟೀಕಿಸಿದ ಬಾರ್ಡೆಮ್, ಮಾನವೀಯ ದೃಷ್ಟಿಕೋನದಿಂದ ಸಮಸ್ಯೆಯನ್ನು ನೋಡುವ ಅಗತ್ಯವಿದೆ ಎಂದು ಹೇಳಿದರು.
Karnataka Weather: ಕರ್ನಾಟಕದ ಈ 9 ಜಿಲ್ಲೆಗಳಲ್ಲಿ ಮಾರ್ಚ್ 21ರವರೆಗೆ ಮಳೆ ಸಾಧ್ಯತೆ: ಹವಾಮಾನ ಇಲಾಖೆ
ಕರ್ನಾಟಕದ ಹವಾಮಾನದಲ್ಲಿ ಕಳೆದ 24 ಗಂಟೆಗಳಲ್ಲಿ ಬದಲಾವಣೆ ಕಂಡುಬಂದಿದ್ದು, ಕರಾವಳಿ ಮತ್ತು ಉತ್ತರ ಒಳನಾಡಿನ ಒಂದೆರಡು ಕಡೆಗಳಲ್ಲಿ ಮಳೆಯಾಗಿದೆ. ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಮಾತ್ರ ಒಣಹವೆ ಮುಂದುವರಿದಿದೆ. ಮಳೆಯ ಪ್ರಮಾಣವನ್ನು ಗಮನಿಸಿದರೆ, ಧಾರವಾಡ ಜಿಲ್ಲೆಯಲ್ಲಿ ಅತಿ ಹೆಚ್ಚು ಅಂದರೆ 3 ಸೆಂಟಿಮೀಟರ್ ಮಳೆಯಾಗಿದ್ದರೆ, ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳದಲ್ಲಿ 1 ಸೆಂಟಿಮೀಟರ್ ಮಳೆ ವರದಿಯಾಗಿದೆ. ರಾಜ್ಯದ 9
ಹೆಣ್ಣುಬಾಕ ಕಾಮಪೀಠಿ ವೈರಮುತ್ತು ರಾಮಸ್ವಾಮಿ ಜ್ಞಾನಪೀಠಕ್ಕೆ ಕಳಂಕ: ಲೇಖಕ ಅರುಣ್ ಜೋಳದಕೂಡ್ಲಿಗಿ
ಸಾಹಿತ್ಯ ಲೋಕದ ಅತ್ಯುನ್ನತ ಗೌರವವಾದ ಜ್ಞಾನಪೀಠ ಪ್ರಶಸ್ತಿಯು ಈ ಬಾರಿ ವಿವಾದದ ಸುಳಿಗೆ ಸಿಲುಕಿದೆ. 2026ರ ಸಾಲಿನ ಪ್ರಶಸ್ತಿಗೆ ತಮಿಳು ಸಾಹಿತಿ ವೈರಮುತ್ತು ಅವರು ಆಯ್ಕೆಯಾಗಿರುವುದು ಮಹಿಳಾ ಪರ ಹೋರಾಟಗಾರರು ಹಾಗೂ ಸಾಹಿತ್ಯಾಸಕ್ತರಲ್ಲಿ ತೀವ್ರ ಅಸಮಾಧಾನ ಮೂಡಿಸಿದೆ. ಮೀಟೂ ಚಳವಳಿಯ ಸಂದರ್ಭದಲ್ಲಿ ಲೈಂಗಿಕ ಕಿರುಕುಳದ ಗಂಭೀರ ಆರೋಪ ಎದುರಿಸಿದ್ದ ವ್ಯಕ್ತಿಗೆ ಇಂತಹ ಗೌರವ ನೀಡುವುದು ಸಂಸ್ಥೆಯ ಮೌಲ್ಯಗಳಿಗೆ
ನಮ್ಮ ಮೆಟ್ರೋ ಮಲ್ಲಿಗೆ ಮಾರ್ಗದ ಕಾಮಗಾರಿಗೆ ಗ್ರಹಣ; ಯೋಜನೆ ಮತ್ತಷ್ಟು ವಿಳಂಬ ಸಾಧ್ಯತೆ
ಭೂಸ್ವಾಧೀನ ಸಂಪೂರ್ಣವಾಗದೆ ಕಾಮಗಾರಿ ನಡೆಸಲು ಸಾಧ್ಯವಿಲ್ಲಎಂಬ ಕಾರಣ ಹೇಳಿ ಎಲ್ ಆ್ಯಂಡ್ ಟಿ ಸಂಸ್ಥೆ ‘ಮಲ್ಲಿಗೆ’ ಮಾರ್ಗದ ಕಾಮಗಾರಿಯಿಂದ ಹಿಂದೆ ಸರಿಯಿತು. ಬಳಿಕ ಎಲಿವೇಟೆಡ್ ವಿಭಾಗದ ಬೆನ್ನಿಗಾನಹಳ್ಳಿ- ಶೆಟ್ಟಿಹಳ್ಳಿ 7.795 ಕಿ.ಮೀ., ನೆಲಮಟ್ಟ ವಿಭಾಗದ ಬೆನ್ನಿಗಾನಹಳ್ಳಿ- ಬಾಣಸವಾಡಿ 11.569 ಕಿ.ಮೀ. ಹಾಗೂ ಯಶವಂತಪುರ- ಚಿಕ್ಕಬಾಣಾವರ 5.80 ಕಿ.ಮೀ. ಕಾಮಗಾರಿ ನಡೆಸಲು ‘ಕೆ-ರೈಡ್’ ಉದ್ದೇಶಿಸಿದೆ. ಆದರೆ, ಈ ಸಂಬಂಧ ಮುಂದಿನ ಪ್ರಕ್ರಿಯೆ ಆಗಿಲ್ಲ.
ಇರಾನ್ ಯುದ್ಧ ವರದಿ: ಅಮೆರಿಕ ಮಾಧ್ಯಮಗಳ ಮೇಲೆ ಟ್ರಂಪ್ ‘ದೇಶದ್ರೋಹ’ದ ಆರೋಪ
ವಾಷಿಂಗ್ಟನ್: ಇರಾನ್ ವಿರುದ್ಧದ ಯುದ್ಧದ ವರದಿ ಹಿನ್ನೆಲೆಯಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಮೆರಿಕದ ಮಾಧ್ಯಮಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸುಳ್ಳು ಮಾಹಿತಿಯನ್ನು ಹರಡುವ ಮೂಲಕ ದೇಶದ್ರೋಹ ನಡೆಸುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಟ್ರೂತ್ ಸೋಷಿಯಲ್ನಲ್ಲಿ ಪ್ರಕಟಿಸಿದ ಪೋಸ್ಟ್ ನಲ್ಲಿ, ಅಮೆರಿಕದ ಕೆಲವು ಮಾಧ್ಯಮಗಳು ಇರಾನ್ ನೊಂದಿಗೆ ಸಮನ್ವಯದಲ್ಲಿ ಕಾರ್ಯನಿರ್ವಹಿಸುತ್ತಿವೆ ಎಂದು ಅವರು ದೂರಿದ್ದಾರೆ. ಕೃತಕ ಬುದ್ಧಿಮತ್ತೆ (AI) ಬಳಸಿ ನಕಲಿ ದೃಶ್ಯಗಳನ್ನು ಸೃಷ್ಟಿಸಿ, ಅವುಗಳನ್ನು ನಿಜವೆಂದು ಪ್ರಸಾರ ಮಾಡಲಾಗುತ್ತಿದೆ ಎಂದು ಟ್ರಂಪ್ ಹೇಳಿದ್ದಾರೆ. “ನಕಲಿ ಸುದ್ದಿ ಮಾಧ್ಯಮದೊಂದಿಗೆ ಸಮನ್ವಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಇರಾನ್, ವಿಶ್ವದ ಅತ್ಯಂತ ಪ್ರತಿಷ್ಠಿತ ಯುದ್ಧನೌಕೆಗಳಲ್ಲಿ ಒಂದಾದ ಯುಎಸ್ಎಸ್ ಅಬ್ರಹಾಂ ಲಿಂಕನ್ ವಿಮಾನವಾಹಕ ನೌಕೆ ಸಮುದ್ರದಲ್ಲಿ ಬೆಂಕಿಗಾಹುತಿಯಾಗುತ್ತಿದೆ ಎಂಬ ದೃಶ್ಯಗಳನ್ನು ತೋರಿಸಿದೆ. ಆದರೆ ವಾಸ್ತವದಲ್ಲಿ ಆ ನೌಕೆಗೆ ಯಾವುದೇ ಹಾನಿಯೂ ಆಗಿಲ್ಲ. ಅದು ಉರಿಯಲಿಲ್ಲ, ಅದರ ಮೇಲೆ ದಾಳಿ ನಡೆದಿಲ್ಲ. ಇಂತಹ ಸುಳ್ಳು ಕಥೆಗಳನ್ನು ತಿಳಿದೂ ಪ್ರಸಾರ ಮಾಡಿದ ಮಾಧ್ಯಮ ಸಂಸ್ಥೆಗಳ ವಿರುದ್ಧ ದೇಶದ್ರೋಹದ ಆರೋಪ ಮಾಡಬಹುದು,” ಎಂದು ಅವರು ಹೇಳಿದ್ದಾರೆ. ಇರಾನ್ ನಿಜವಾಗಿ ಸಂಕಷ್ಟದಲ್ಲಿದ್ದು, ‘ಗೆಲುವು’ ಎಂಬ ಭ್ರಮೆಯನ್ನು ಸೃಷ್ಟಿಸಲು AI ಮೂಲಕ ನಕಲಿ ಯುದ್ಧ ದೃಶ್ಯಗಳನ್ನು ನಿರ್ಮಿಸಿ ಅವನ್ನು ಭ್ರಷ್ಟ ಮಾಧ್ಯಮಗಳ ಮೂಲಕ ಹರಡುತ್ತಿದೆ ಎಂದು ಟ್ರಂಪ್ ಆರೋಪಿಸಿದ್ದಾರೆ. “ಆಮೂಲಾಗ್ರ ಎಡಪಂಥೀಯ ಮಾಧ್ಯಮಗಳಿಗೆ ಇದು ಗೊತ್ತಿದ್ದರೂ ಸುಳ್ಳು ಕಥೆಗಳನ್ನು ಮುಂದುವರಿಸುತ್ತಿವೆ,” ಎಂದು ಅವರು ಟೀಕಿಸಿದ್ದಾರೆ. ಇದೇ ವೇಳೆ, ತಪ್ಪು ಮಾಹಿತಿಯನ್ನು ಹರಡಿದ ಮಾಧ್ಯಮ ಸಂಸ್ಥೆಗಳ ಪ್ರಸಾರ ಪರವಾನಗಿಗಳನ್ನು ಪರಿಶೀಲಿಸುವುದಾಗಿ ಘೋಷಿಸಿರುವ ಅಮೆರಿಕ ನಿಯಂತ್ರಕ ಸಂಸ್ಥೆಯ ಮುಖ್ಯಸ್ಥ ಬ್ರೆಂಡನ್ ಕಾರ್ ಅವರನ್ನು ಟ್ರಂಪ್ ಪ್ರಶಂಸಿಸಿದ್ದಾರೆ. “ಅವರು ಶತಕೋಟಿ ಡಾಲರ್ ಮೌಲ್ಯದ ಉಚಿತ ಅಮೆರಿಕನ್ ಏರ್ವೇವ್ ಗಳನ್ನು ಪಡೆದು ಅದನ್ನು ಸುಳ್ಳು ಸುದ್ದಿಗಳಿಗೆ ಬಳಸುತ್ತಿದ್ದಾರೆ,” ಎಂದು ಅವರು ಆರೋಪಿಸಿದ್ದಾರೆ.
ಶಾಂತಿ ಮಾತುಕತೆಗೆ ಅಮೆರಿಕ ರೆಡ್ ಸಿಗ್ನಲ್ : ಟೆಹ್ರಾನ್ ವಿಧಿಸಿದ 3 ಷರತ್ತುಗಳಿಗೆ ವಿರೋಧ
ಪರಮಾಣು ಶಸ್ತ್ರಾಸ್ತ್ರಗಳ ನಿಶ್ಶಸ್ತ್ರೀಕರಣ ಚರತ್ತು ಮುಂದಿಟ್ಟು ಅಮೆರಿಕ ಶಾಂತಿ ಕತೆಗೆ ಮುಂದಾಗಿದ್ದರೆ, ಇತ್ತ ಇರಾನ್ ಪ್ರಮುಖ 3 ಷರತ್ತುಗಳನ್ನು ಮುಂದಿಟ್ಟಿರುವುದು ಅಮೆರಿಕಕ್ಕೆ ಸಹ್ಯವಾಗಿಲ್ಲ. ಹೀಗಾಗಿ ಸಂಧಾನ ಮಾತುಕತೆಗೆ ನಮ್ಮ ಒಪ್ಪಿಗೆ ಇಲ್ಲವೆಂದು ಟ್ರಂಪ್ ಕಡ್ಡಿ ಮುರಿದಂತೆ ಹೇಳಿಕೆ ನೀಡಿದ್ದಾರೆ.
ಇರಾನ್ ಜೊತೆ ಮಾತುಕತೆ ಫಲಪ್ರದ; ಹಾರ್ಮುಝ್ ಜಲಸಂಧಿಯಲ್ಲಿ ಸಾಗಾಟಕ್ಕೆ ಅನುಮತಿ: ವಿದೇಶಾಂಗ ಸಚಿವ ಎಸ್ ಜೈಶಂಕರ್
ಹೊಸದಿಲ್ಲಿ, ಮಾ. 16: ಹಾರ್ಮುಝ್ ಜಲಸಂಧಿಯಲ್ಲಿ ಸಿಲುಕಿದ್ದ ಭಾರತೀಯ ಹಡಗುಗಳಿಗೆ ಇರಾನ್ನೊಂದಿಗಿನ ಮಾತುಕತೆಗಳ ಪರಿಣಾಮವಾಗಿ ಮುಂದೆ ಸಾಗಲು ಅನುಮತಿ ಸಿಕ್ಕಿದೆ ಎಂದು ವಿದೇಶಾಂಗ ಸಚಿವ ಎಸ್. ಜೈಶಂಕರ್ ತಿಳಿಸಿದ್ದಾರೆ. ಮಿಲಿಟರಿ ಕಾರ್ಯಾಚರಣೆಗಿಂತ ರಾಜತಾಂತ್ರಿಕ ಮಾತುಕತೆಯೇ ಪರಿಣಾಮಕಾರಿ ಎಂದು ಅವರು ಹೇಳಿದ್ದಾರೆ ಎಂದು Aljazeera ವರದಿ ಮಾಡಿದೆ. ಇರಾನ್ ನೊಂದಿಗೆ ನಡೆದ ಸಂವಾದದ ಫಲವಾಗಿ ಭಾರತೀಯ ಧ್ವಜ ಹೊಂದಿರುವ 2 ಅನಿಲ ಟ್ಯಾಂಕರ್ ಗಳು ಜಲಸಂಧಿಯನ್ನು ಸುರಕ್ಷಿತವಾಗಿ ದಾಟಿವೆ. ಈ ಕುರಿತು Financial Timesಗೆ ನೀಡಿದ ಸಂದರ್ಶನದಲ್ಲಿ ಜೈಶಂಕರ್ ಮಾಹಿತಿ ನೀಡಿದ್ದಾರೆ. “ಇರಾನ್ ನೊಂದಿಗೆ ನಾವು ನಿರಂತರ ಸಂಪರ್ಕದಲ್ಲಿದ್ದೇವೆ. ಮಾತುಕತೆಗಳಿಂದ ಫಲಿತಾಂಶ ದೊರಕುತ್ತಿದೆ. ಈ ಪ್ರಕ್ರಿಯೆ ಮುಂದುವರಿಯುತ್ತಿದ್ದು, ಇದರಿಂದ ಲಾಭವಾಗುತ್ತಿರುವುದರಿಂದ ಅದನ್ನೇ ಮುಂದುವರಿಸುತ್ತೇವೆ,” ಎಂದರು. ಭಾರತದ ನಿಲುವು ಸ್ಪಷ್ಟಪಡಿಸಿದ ಅವರು, “ಸಂವಾದ ಮತ್ತು ಸಮನ್ವಯದ ಮೂಲಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದು ಉತ್ತಮ ಮಾರ್ಗ,” ಎಂದು ಹೇಳಿದರು. ಹಾರ್ಮುಝ್ ಜಲಸಂಧಿ ಜಾಗತಿಕ ವಾಣಿಜ್ಯಕ್ಕೆ ಪ್ರಮುಖ ಮಾರ್ಗವಾಗಿದ್ದು, ಇಲ್ಲಿ ಉದ್ವಿಗ್ನತೆ ಕಡಿಮೆಯಾಗುವುದು ಭಾರತ ಸೇರಿದಂತೆ ಅನೇಕ ದೇಶಗಳಿಗೆ ಮಹತ್ವದ್ದಾಗಿದೆ.
ಹಾರ್ಮುಝ್ ಉದ್ವಿಗ್ನತೆ ತೀವ್ರ: ಪರ್ಯಾಯ ತೈಲ ರಫ್ತು ಮಾರ್ಗಗಳತ್ತ ಗಲ್ಫ್ ರಾಷ್ಟ್ರಗಳು
ದುಬೈ/ದೋಹಾ: ಇರಾನ್ ಮೇಲಿನ ಇಸ್ರೇಲ್–ಅಮೆರಿಕಾ ಯುದ್ಧದ ಪರಿಣಾಮವಾಗಿ ಹಾರ್ಮುಝ್ ಜಲಸಂಧಿಯಲ್ಲಿ ಇಂಧನ ಸಾಗಣೆಗೆ ಅಡ್ಡಿ ಉಂಟಾಗುತ್ತಿರುವ ಹಿನ್ನೆಲೆಯಲ್ಲಿ, ಗಲ್ಫ್ ರಾಷ್ಟ್ರಗಳು ತೈಲ ಮತ್ತು LNG ರಫ್ತಿಗೆ ಪರ್ಯಾಯ ಮಾರ್ಗಗಳನ್ನು ಹುಡುಕುವತ್ತ ಮುಖ ಮಾಡಿವೆ ಎಂದು ಪ್ರಾದೇಶಿಕ ವಿಶ್ಲೇಷಕರು ತಿಳಿಸಿದ್ದಾರೆ ಎಂದು Aljazeera ವರದಿ ಮಾಡಿದೆ. ಈ ಉದ್ವಿಗ್ನ ಪರಿಸ್ಥಿತಿಯ ನಡುವೆ ಬಿಕ್ಕಟ್ಟನ್ನು ತಗ್ಗಿಸುವುದಕ್ಕೂ ಗಲ್ಫ್ ರಾಷ್ಟ್ರಗಳು ಆದ್ಯತೆ ನೀಡುತ್ತಿವೆ. Aljazeera ಜೊತೆ ಮಾತನಾಡಿದ ಸಂಘರ್ಷ ಮತ್ತು ಮಾನವೀಯ ಅಧ್ಯಯನ ಕೇಂದ್ರದ ವಿಶ್ಲೇಷಕ ಸುಲ್ತಾನ್ ಅಲ್ ಖುಲೈಫಿ, ಗಲ್ಫ್ ರಾಷ್ಟ್ರಗಳು ಈ ಸನ್ನಿವೇಶಕ್ಕೆ ಹೊಂದಿಕೊಳ್ಳುವ ಸಂದರ್ಭದಲ್ಲಿ ಬಲವಾದ ರಕ್ಷಣಾ ವ್ಯವಸ್ಥೆಗಳನ್ನು ಅವಲಂಬಿಸಿವೆ ಎಂದು ಹೇಳಿದರು. “ಗಲ್ಫ್ ರಾಷ್ಟ್ರಗಳು ತಮ್ಮ ರಕ್ಷಣಾ ಸಾಮರ್ಥ್ಯವನ್ನು ಬಲಪಡಿಸಿಕೊಂಡಿದ್ದು, ದೇಶದ ಭದ್ರತೆಯನ್ನು ಸಮರ್ಥವಾಗಿ ಕಾಪಾಡುವ ಶಕ್ತಿ ಹೊಂದಿರುವುದನ್ನು ತೋರಿಸಿವೆ,” ಎಂದು ಅವರು ಹೇಳಿದರು. ಈ ಪ್ರದೇಶದ ರಾಷ್ಟ್ರಗಳು ಈಗಾಗಲೇ ಪರ್ಯಾಯ ರಫ್ತು ಮಾರ್ಗಗಳನ್ನು ಪರಿಗಣಿಸುತ್ತಿರುವುದಾಗಿ ಅವರು ತಿಳಿಸಿದರು. “ಸೌದಿ ಅರೇಬಿಯಾ ಸೇರಿದಂತೆ ಹಲವು ಗಲ್ಫ್ ರಾಷ್ಟ್ರಗಳು ತಮ್ಮ ತೈಲ ಮತ್ತು LNG ರಫ್ತಿಗಾಗಿ ಹೊಸ ಮಾರ್ಗಗಳನ್ನು ಅನ್ವೇಷಿಸುತ್ತಿರುವುದು ಕಂಡುಬರುತ್ತಿದೆ,” ಎಂದು ಹೇಳಿದರು. ಆದರೂ, ಈ ಬೆಳವಣಿಗೆಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ದೊರೆಯುತ್ತಿರುವ ಪ್ರತಿಕ್ರಿಯೆ ತೀರಾ ಸೀಮಿತವಾಗಿದೆ ಎಂದು ಅವರು ಎಚ್ಚರಿಸಿದರು. “ಜಾಗತಿಕ ಪ್ರತಿಕ್ರಿಯೆ ಇನ್ನೂ ನೀರಸವಾಗಿದೆ. ಉದ್ವಿಗ್ನತೆಯನ್ನು ಕಡಿಮೆ ಮಾಡಲು ಏಷ್ಯಾ ಹಾಗೂ ಯುರೋಪಿನ ರಾಷ್ಟ್ರಗಳು ಹೆಚ್ಚು ಸಕ್ರಿಯ ಪಾತ್ರವಹಿಸಬೇಕಾಗಿದೆ,” ಎಂದು ಸುಲ್ತಾನ್ ಅಲ್ ಖುಲೈಫಿ ಹೇಳಿದರು.
Anil Kumble: ನಟ ಶಾರುಖ್ ಖಾನ್ ಮಾಲೀಕತ್ವದ ಕೆಕೆಆರ್ ತಂಡ ದಾರಿತಪ್ಪಿದ ಬಗ್ಗೆ ಅನಿಲ್ ಕುಂಬ್ಳೆ ಮಹತ್ವದ ಮಾಹಿತಿ
Anil Kumble: ಈಗಾಗಲೇ ಐಪಿಎಲ್ 2026 ಮೊದಲ ಹಂತದ ವೇಳಾಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಇದರ ಬೆನ್ನಲ್ಲೇ ಭಾರತದ ಮಾಜಿ ಕ್ರಿಕೆಟರ್ ಅನಿಲ್ ಕುಂಬ್ಳೆ ಅವರು ನಟ ಶಾರುಖ್ ಖಾನ್ ಮಾಲೀಕತ್ವದ ಕೊಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ಮಾಡಿದ ದೊಡ್ಡ ಎಡವಟ್ಟುಗಳನ್ನು ಬಿಚ್ಚಿಟ್ಟಿದ್ದಾರೆ. ಅಲ್ಲದೆ, ಇದರ ಲಾಭವನ್ನು ಯಾರು ಪಡೆದುಕೊಂಡರು ಅಂತಲೂ ಹೇಳಿ ಗಮನ ಸೆಳೆದಿದ್ದಾರೆ. ಕೆಕೆಆರ್ ತಂಡವು
Gaza | ರಫಾ ಗಡಿ ದಾಟು ಕೇಂದ್ರ ಮತ್ತೆ ತೆರೆಯಲು ಇಸ್ರೇಲ್ ನಿರ್ಧಾರ
ಗಾಝಾ: ಗಾಝಾ ಮತ್ತು ಈಜಿಪ್ಟ್ ನಡುವಿನ ರಫಾ ಗಡಿ ದಾಟುವ ಕೇಂದ್ರವನ್ನು ಮಾರ್ಚ್ 18ರಂದು ಮತ್ತೆ ತೆರೆಯಲಾಗುವುದಾಗಿ ಇಸ್ರೇಲ್ ತಿಳಿಸಿದೆ. ಆದರೆ, ಎರಡೂ ದಿಕ್ಕುಗಳಲ್ಲಿ ಜನರ ಸೀಮಿತ ಸಂಚಾರಕ್ಕೆ ಮಾತ್ರ ಅವಕಾಶ ಇರುತ್ತದೆ ಎಂದು ಸ್ಪಷ್ಟಪಡಿಸಿದೆ ಎಂದು Aljazeera ವರದಿ ಮಾಡಿದೆ. ಈ ಕುರಿತು ಇಸ್ರೇಲ್ ನ ಸಂಬಂಧಿತ ಸರ್ಕಾರಿ ಸಂಸ್ಥೆ ಮಾಹಿತಿ ನೀಡಿದೆ. ಭದ್ರತಾ ಕಾರಣಗಳಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಅದು ಹೇಳಿದೆ. ಇರಾನ್ ವಿರುದ್ಧ ಅಮೆರಿಕದೊಂದಿಗೆ ಜಂಟಿ ಸೈನಿಕ ಕ್ರಮ ಆರಂಭಿಸಿದ ಬಳಿಕ, ಭದ್ರತಾ ಕಾಳಜಿಗಳನ್ನು ಮುಂದಿರಿಸಿ ಇಸ್ರೇಲ್ ಸರ್ಕಾರ ಮಾರ್ಚ್ 1ರಂದು ರಫಾ ಗಡಿ ದಾಟುವ ಕೇಂದ್ರವನ್ನು ಮುಚ್ಚಿತ್ತು. ಹಲವು ತಿಂಗಳುಗಳ ಕಾಲ ಮುಚ್ಚಿದ್ದ ಈ ಕೇಂದ್ರವನ್ನು ಫೆಬ್ರವರಿಯಲ್ಲಿ ಮಾತ್ರ ಪುನಃ ತೆರೆಯಲಾಗಿತ್ತು. ಗಾಝಾಕ್ಕೆ ಮಾನವೀಯ ನೆರವು ತಲುಪಿಸಲು ಹಾಗೂ ತೀವ್ರ ಅಸ್ವಸ್ಥ ರೋಗಿಗಳನ್ನು ಸ್ಥಳಾಂತರಿಸಲು ರಫಾ ಗಡಿ ದಾಟುವ ಕೇಂದ್ರವು ಅತ್ಯಂತ ಪ್ರಮುಖವೆಂದು ಪರಿಗಣಿಸಲಾಗಿದೆ.
ಧರ್ಮದ ವಿಷಯ ಮುನ್ನೆಲೆಗೆ ತಂದು ಯುವಕರ ಹಾದಿ ತಪ್ಪಿಸಲಾಗುತ್ತಿದೆ : ಪ್ರೊ.ಬರಗೂರು ರಾಮಚಂದ್ರಪ್ಪ
ಬೆಂಗಳೂರು : ದೇಶದಲ್ಲಿ ದಲಿತ ಹಾಗೂ ಮಹಿಳೆಯರ ಸ್ಥಿತಿ ಶೋಚನೀಯ ಸ್ಥಿತಿಯಲ್ಲಿದ್ದರೂ, ಇಂತಹ ಸಾಮಾಜಿಕ, ಆರ್ಥಿಕ ಸಮಸ್ಯೆಗಳನ್ನು ಹಿನ್ನೆಲೆಗೆ ಸರಿಸಿ, ಧರ್ಮದ ವಿಷಯಗಳನ್ನು ಮುನ್ನೆಲೆಗೆ ತರುವ ಮೂಲಕ ಯುವಕರ ಹಾದಿ ತಪ್ಪಿಸಲಾಗುತ್ತಿದೆ ಎಂದು ಸಾಹಿತಿ ಪ್ರೊ. ಬರಗೂರು ರಾಮಚಂದ್ರಪ್ಪ ಬೇಸರ ವ್ಯಕ್ತಪಡಿಸಿದ್ದಾರೆ. ರವಿವಾರ ನಗರದ ಗಾಂಭವನದಲ್ಲಿ ರಾಜ್ಯ ಬಂಡಾಯ ಸಾಹಿತ್ಯ ಸಂಘಟನೆಯು ‘ಬಂಡಾಯ ಸಾಹಿತ್ಯ: ಹೊಸ ತಲೆಮಾರು’ ಅಭಿಯಾನದ ಅಂಗವಾಗಿ ಆಯೋಜಿಸಿದ್ದ ‘ಜನ ಚಳವಳಿಗಳು ಮತ್ತು ಸಾಹಿತ್ಯ’ ವಿಷಯ ಕುರಿತ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು. ಕೇಂದ್ರ ಅಪರಾಧ ಸಂಸ್ಥೆಯ ಅಂಕಿ-ಸಂಖ್ಯೆಗಳನ್ವಯ ಈ ದೇಶದಲ್ಲಿ 18 ನಿಮಿಷಕ್ಕೊಬ್ಬ ದಲಿತನ ಮೇಲೆ ದೌರ್ಜನ್ಯ ನಡೆಯುತ್ತಿದೆ. ಪ್ರತೀ ವಾರ 13 ಜನ ದಲಿತರ ಹತ್ಯೆಯಾಗುತ್ತಿದೆ. ಇನ್ನು, ಒಂದು ಗಂಟೆಗೆ 51 ಮಹಿಳೆಯರ ಮೇಲೆ ದೌರ್ಜನ್ಯ ನಡೆಯುತ್ತಿದ್ದು, ದಿನಕ್ಕೆ 86 ಜನ ಮಹಿಳೆಯರ ಮೇಲೆ ಅತ್ಯಾಚಾರ ಸಂಭವಿಸುತ್ತಿದೆ. ಇದು ಈ ದೇಶದ ದಲಿತರು, ಮಹಿಳೆಯರ ಸ್ಥಿತಿಯಾಗಿದೆ. ಆದರೆ ಇಂತಹ ಸಮಸ್ಯೆಗಳನ್ನು ಹಿನ್ನೆಲೆಗೆ ಸರಿಸಿ, ಭಾವೋದ್ವೇಗ ಉಂಟುಮಾಡುವ ಧರ್ಮದ ವಿಷಯಗಳನ್ನು ಮುನ್ನೆಲೆಗೆ ತಂದು, ಯುವ ತಲೆಮಾರಿನ ಹಾದಿ ತಪ್ಪಿಸಲಾಗುತ್ತಿದೆ ಎಂದು ಅವರು ಹೇಳಿದರು. ದೇಶದಲ್ಲಿ ಶೇ.29.9ರಷ್ಟು ಜನರಿಗೆ ಸ್ವಂತ ಭೂಮಿಯಿಲ್ಲ. ಶೇ.51.14ರಷ್ಟು ಜನ ಕೂಲಿಕಾರರಿದ್ದಾರೆ. 2011ರ ಜನಗಣತಿ ಪ್ರಕಾರ ದೇಶದಲ್ಲಿ ಸುಮಾರು 11 ಕೋಟಿಯಷ್ಟು ಬುಡಕಟ್ಟು, ಅಲೆಮಾರಿ, ಅರೆ-ಅಲೆಮಾರಿ ಜನರಿದ್ದಾರೆ. ದೇಶದ ಶೇ.60ಕ್ಕಿಂತ ಹೆಚ್ಚು ಸಂಪತ್ತನ್ನು ಕೇವಲ ಶೇ.1ರಷ್ಟು ಜನ ಅನುಭವಿಸುತ್ತಿದ್ದು, ಶೇ.24ಕ್ಕಿಂತ ಹೆಚ್ಚಿನ ಜನ ಕಡುಬಡವರಾಗಿದ್ದಾರೆ. ಜಾಗತಿಕ ಮಟ್ಟದಲ್ಲಿ ದೇಶದ ಆರ್ಥಿಕತೆ ಪ್ರಬಲವಾಗಿರುವುದರ ಹಿಂದೆ, ಕೋಟ್ಯಾದೀಶರ ಸಂಖ್ಯೆಯಷ್ಟೇ ಹೆಚ್ಚಾಗಿದ್ದು, ಬಡತನ ಹಾಗೆಯೇ ಉಳಿದಿದೆ ಎಂದು ಅವರು ಹೇಳಿದರು. ದೇಶದಲ್ಲಿ ಜಾತಿ, ಲಿಂಗ, ವರ್ಗ ತಾರತಮ್ಯ ಇಂದಿಗೂ ಇದ್ದು, ಧರ್ಮದ ಹೆಸರಿನಲ್ಲಿ ದ್ವೇಷೋ ತ್ಪಾದನೆ ಮಾಡಲಾಗುತ್ತಿದೆ. ಇಂತಹ ಸಂದರ್ಭದಲ್ಲಿ ಸಾಹಿತಿಗಳು ಸನ್ನಿವೇಶಗಳ ತಿಳುವಳಿಕೆ, ಅರಿವು ಮೂಡಿಸುವ ಜತೆಗೆ, ತಾರತಮ್ಯ ಮೀರಿದ ಸಮಾಜ ಕಟ್ಟಲು ಬೇಕಾದ ಮನೋಭೂಮಿಕೆ ಸಿದ್ಧಪಡಿಸಬೇಕು. ಇದಕ್ಕಾಗಿ, ಕಟುವಾದರೂ ಕೆಲ ಸತ್ಯಗಳನ್ನು ಹೇಳಲೇಬೇಕು. ಸತ್ಯ ಹೇಳದೆ ಯಾವ ಸಮಾಜವೂ ಬದಲಾಗುವುದಿಲ್ಲ ಎಂದು ಅವರು ಕರೆ ನೀಡಿದರು. ಕಾರ್ಯಕ್ರಮದಲ್ಲಿ ಲೇಖಕಿ ಡಾ. ಎಚ್.ಎಲ್.ಪುಷ್ಪಾ, ಡಾ. ವಿಕ್ರಮ್ ವಿಸಾಜಿ ಹಾಗೂ ಡಾ. ಕಿರಣ್ ಎಂ.ಗಾಜನೂರು ಉಪಸ್ಥಿತರಿದ್ದರು.
ಟೀಂ ಇಂಡಿಯಾ ಕ್ರಿಕೆಟರ್ ಕುಲದೀಪ್ ಯಾದವ್ ಕೈಹಿಡಿದ ವಂಶಿಕಾ ಚಡ್ಡಾ ಯಾರು?
Kuldeep Yadav: ಟೀಮ್ ಇಂಡಿಯಾದ ಸ್ಟಾರ್ ಸ್ಪಿನ್ನರ್ ಕುಲದೀಪ್ ಯಾದವ್ ಅವರು ಉತ್ತರಾಖಂಡದ ಮಸ್ಸೂರಿಯ ಖಾಸಗಿ ರೆಸಾರ್ಟ್ನಲ್ಲಿ ತಮ್ಮ ಬಾಲ್ಯದ ಗೆಳತಿ ವಂಶಿಕಾ ಚಡ್ಡಾ ಅವರನ್ನು ವಿವಾಹವಾದರು. ಈ ಜೋಡಿ ಮದು ಸಾಕಷ್ಟು ಗಮನ ಸೆಳೆದಿದ್ದರೂ, ವಂಶಿಕಾ ಚಡ್ಡಾ ಅವರ ಹಿನ್ನೆಲೆ ಬಗ್ಗೆ ತಿಳಿದುಕೊಳ್ಳುವ ಕಾತರದಲ್ಲಿ ತುಂಬಾ ಜನರಿದ್ದಾರೆ. ಹಾಗಾದ್ರೆ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ರಾಜ್ಯಸಭಾ ಚುನಾವಣೆ ಹಿನ್ನೆಲೆ ಅಡ್ಡ ಮತದಾನ ಭೀತಿಯಿಂದ ಬೆಂಗಳೂರಿಗೆ ಕರೆತಂದ ಒಡಿಶಾ ಕಾಂಗ್ರೆಸ್ ಎಂಎಲ್ಎಗಳನ್ನು ರೆಸಾರ್ಟ್ನಲ್ಲಿರಿಸಲಾಗಿತ್ತು. ಆದರೆ, ಇಲ್ಲಿಯೂ ಆಪರೇಷನ್ ಕಮಲ ಯತ್ನ ನಡೆದಿದೆ. ಚೆಕ್ ಬುಕ್ ಸಮೇತ ಬಂದ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇನ್ನು ಶಾಸಕರನ್ನು ಖರ್ಗೆ ಮನೆಗೆ ಶಿಫ್ಟ್ ಮಾಡಲಾಗಿದೆ.
Tamil Nadu | ಎಲ್ಪಿಜಿ ಕೊರತೆ: ಉಪಾಹಾರ ಗೃಹಗಳಿಗೆ ವಿದ್ಯುತ್ ಸಬ್ಸಿಡಿ ಘೋಷಣೆ
ಚೆನ್ನೈ, ಮಾ.15: ಜಾಗತಿಕ ಅಡುಗೆ ಅನಿಲ (LPG) ಪೂರೈಕೆಯಲ್ಲಿ ಉಂಟಾದ ವ್ಯತ್ಯಯದ ಪರಿಣಾಮ ರಾಜ್ಯದಲ್ಲಿ ಕೊರತೆ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ, ವಿದ್ಯುತ್ ಅಡುಗೆ ಸಾಧನಗಳಿಗೆ ಮಾರ್ಪಡುವ ಉಪಾಹಾರ ಗೃಹಗಳಿಗೆ ತಮಿಳುನಾಡು ಸರಕಾರ ಸಬ್ಸಿಡಿ ನೀಡಲು ಮುಂದಾಗಿದೆ. ಹೆಚ್ಚುವರಿ ವಿದ್ಯುತ್ ಬಳಕೆಗೆ ಪ್ರತಿಯೂನಿಟ್ ಗೆ 2 ರೂ. ಸಬ್ಸಿಡಿ ನೀಡುವುದಾಗಿ ಶನಿವಾರ ಪ್ರಕಟಿಸಿದೆ. ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರ ಅಧ್ಯಕ್ಷತೆಯಲ್ಲಿ ಚೆನ್ನೈನಲ್ಲಿ ನಡೆದ ಉನ್ನತ ಮಟ್ಟದ ಸಭೆಯ ಬಳಿಕ ಈ ನಿರ್ಧಾರ ಕೈಗೊಳ್ಳಲಾಗಿದೆ. ಕಿರು, ಸಣ್ಣ ಹಾಗೂ ಮಧ್ಯಮ ಗಾತ್ರದ ಉದ್ಯಮಗಳಿಗೆ ಕೈಗೊಳ್ಳಲಾಗಿರುವ ಕ್ರಮಗಳ ಪೈಕಿ ವಿದ್ಯುತ್ ಅಡುಗೆ ಸಾಧನಗಳ ಖರೀದಿಗೆ ಆರ್ಥಿಕ ನೆರವು ನೀಡುವ ವ್ಯವಸ್ಥೆಯೂ ಸೇರಿದೆ. ಜೊತೆಗೆ, ಆಸ್ಪತ್ರೆಗಳು ಮತ್ತು ಶೈಕ್ಷಣಿಕ ಸಂಸ್ಥೆಗಳಂತಹ ಅಗತ್ಯ ಸೇವಾ ಸಂಸ್ಥೆಗಳಿಗೆ ವಾಣಿಜ್ಯ ಅಡುಗೆ ಅನಿಲವನ್ನು ನ್ಯಾಯಸಮ್ಮತವಾಗಿ ಹಂಚಿಕೆಯಾಗುವಂತೆ ನೋಡಿಕೊಳ್ಳಲು ರಾಜ್ಯ ಹಾಗೂ ಜಿಲ್ಲಾ ಮಟ್ಟದ ಸಮಿತಿಗಳನ್ನು ರಚಿಸಲು ನಿರ್ಧರಿಸಲಾಗಿದೆ. ಇಂಧನ ಕೊರತೆಯಿಂದ ತೊಂದರೆಗೀಡಾಗಿರುವ ವಾಣಿಜ್ಯ ಉಪಾಹಾರ ಗೃಹಗಳು ಮತ್ತು ಸಂಬಂಧಿತ ಕ್ಷೇತ್ರಗಳಿಂದ ಹಾಲಿನ ಬೇಡಿಕೆ ಕುಸಿಯುವ ಸಾಧ್ಯತೆಯಿರುವುದರಿಂದ, ರಾಜ್ಯ ಮಾಲಕತ್ವದ ‘ಆವಿನ್’ ಡೈರಿ ಬ್ರ್ಯಾಂಡ್ ಮೂಲಕ ಹಾಲು ಖರೀದಿಯನ್ನು ಹೆಚ್ಚಿಸಲು ಕ್ರಮ ಕೈಗೊಳ್ಳಲಾಗಿದೆ. ಎಲ್ಲಾ ರೆಸ್ಟೋರೆಂಟ್ ಗಳು, ಕ್ಲೌಡ್ ಕಿಚನ್ ಗಳು, ಟೀ ಅಂಗಡಿಗಳು ಸೇರಿದಂತೆ ಸಮಾನ ಸ್ವರೂಪದ ಎಲ್ಲಾ ಸಂಸ್ಥೆಗಳಿಗೆ ವಿದ್ಯುತ್ ಸಬ್ಸಿಡಿ ಅನ್ವಯವಾಗಲಿದೆ. ವಾಣಿಜ್ಯ ಹೋಟೆಲ್ ಪರವಾನಗಿ ಹೊಂದಿದ್ದರೂ ಅಥವಾ ಹೊಂದಿರದಿದ್ದರೂ ಈ ಸೌಲಭ್ಯ ಲಭ್ಯವಾಗಲಿದೆ. ಈ ಅವಧಿಯಲ್ಲಿ ಹಲವು ಸಾಲ ಹಾಗೂ ಸಬ್ಸಿಡಿ ಯೋಜನೆಗಳನ್ನೂ ಪ್ರಕಟಿಸಲಾಗಿದೆ. ನಿರುದ್ಯೋಗಿ ಯುವಕರ ಉದ್ಯೋಗ ಸೃಜನ ಯೋಜನೆಯಡಿ ವ್ಯಾಪಾರಗಳಿಗೆ 3.75 ಲಕ್ಷ ರೂ.ವರೆಗೆ ಶೇ.25ರಷ್ಟು ಸಬ್ಸಿಡಿ ದೊರೆಯಲಿದೆ. ಅನ್ನಾಳ್ ಅಂಬೇಡ್ಕರ್ ಬಿಸಿನೆಸ್ ಚಾಂಪಿಯನ್ಸ್ ಯೋಜನೆಯಡಿ ಶೇ.35ರಷ್ಟು ಸಬ್ಸಿಡಿಯೊಂದಿಗೆ ಪಡೆಯುವ ಸಾಲಗಳಿಗೆ ಗರಿಷ್ಠ 1 ಕೋಟಿ ರೂ.ವರೆಗೆ ಸಬ್ಸಿಡಿ ದೊರೆಯಲಿದೆ. ಇದೇ ವೇಳೆ, ತಮಿಳುನಾಡು ಮಹಿಳಾ ಉದ್ಯಮಶೀಲತೆ ಅಭಿವೃದ್ಧಿ ಯೋಜನೆಯಡಿ 10 ಲಕ್ಷ ರೂ.ವರೆಗೆ ಸಾಲಗಳಿಗೆ ಶೇ.25ರಷ್ಟು ಸಬ್ಸಿಡಿ (ಗರಿಷ್ಠ 2 ಲಕ್ಷ ರೂ. ಮಿತಿ) ನೀಡಲಾಗುತ್ತದೆ. ಮಧ್ಯಪ್ರಾಚ್ಯದಲ್ಲಿ ಇರಾನ್, ಇಸ್ರೇಲ್ ಮತ್ತು ಅಮೆರಿಕ ನಡುವಿನ ಯುದ್ಧದಿಂದ ಜಾಗತಿಕ ಇಂಧನ ಪೂರೈಕೆಯಲ್ಲಿ ಉಂಟಾದ ವ್ಯತ್ಯಯವೇ ಈ ಕ್ರಮಗಳಿಗೆ ಕಾರಣವಾಗಿದೆ ಎಂದು ಸರಕಾರ ತಿಳಿಸಿದೆ.
BCCI ಪ್ರಶಸ್ತಿ ಪ್ರದಾನ ಸಮಾರಂಭ | ರಾಹುಲ್ ದ್ರಾವಿಡ್, ಬಿನ್ನಿ, ಮಿಥಾಲಿ ರಾಜ್ ಗೆ ಜೀವಮಾನ ಸಾಧನೆ ಗೌರವ
ಹೊಸದಿಲ್ಲಿ: ಬಿಸಿಸಿಐ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾರತದ ಕ್ರಿಕೆಟ್ ದಿಗ್ಗಜರಾದ ರಾಹುಲ್ ದ್ರಾವಿಡ್, ರೋಜರ್ ಬಿನ್ನಿ ಹಾಗೂ ಮಿಥಾಲಿ ರಾಜ್ ಅವರಿಗೆ ಜೀವಮಾನ ಸಾಧನೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ರವಿವಾರ ಇಲ್ಲಿ ನಡೆದ ಕಾರ್ಯಕ್ರಮದಲ್ಲಿ ಈ ಮೂವರು ತಮ್ಮ ದೀರ್ಘಕಾಲದ ಸೇವೆ ಮತ್ತು ಸಾಧನೆಗಾಗಿ ಸನ್ಮಾನಿತರಾದರು. ಟೆಸ್ಟ್ ಮತ್ತು ಏಕದಿನ ಕ್ರಿಕೆಟ್ ಎರಡರಲ್ಲೂ 10,000 ಕ್ಕೂ ಹೆಚ್ಚು ರನ್ ಗಳಿಸಿರುವ ದ್ರಾವಿಡ್, ಭಾರತದ ಅತ್ಯಂತ ಪ್ರಮುಖ ಬ್ಯಾಟರ್ ಗಳಲ್ಲಿ ಒಬ್ಬರು. ಟೆಸ್ಟ್ ನಲ್ಲಿ 13,288 ಮತ್ತು ಏಕದಿನದಲ್ಲಿ 10,899 ರನ್ಗಳನ್ನು ಗಳಿಸಿರುವ ಅವರು, ಇಂಗ್ಲೆಂಡ್ ನಲ್ಲಿ ಟೆಸ್ಟ್ ಸರಣಿ ಗೆದ್ದ ಭಾರತೀಯ ನಾಯಕರಲ್ಲಿ ಒಬ್ಬರಾಗಿದ್ದಾರೆ. 1996ರಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್ ಗೆ ಪ್ರವೇಶಿಸಿದ ಅವರು 2012ರಲ್ಲಿ ನಿವೃತ್ತರಾದರು. ನಿವೃತ್ತಿಯ ನಂತರ ದ್ರಾವಿಡ್ ತರಬೇತುದಾರರಾಗಿ ಸೇವೆ ಸಲ್ಲಿಸಿ, ಭಾರತ ‘ಎ’ ಮತ್ತು ಅಂಡರ್–19 ತಂಡಗಳನ್ನು ಮುನ್ನಡೆಸಿದರು. 2018ರಲ್ಲಿ ಅಂಡರ್–19 ವಿಶ್ವಕಪ್ ಗೆಲುವಿನಲ್ಲಿ ಅವರು ಪ್ರಮುಖ ಪಾತ್ರವಹಿಸಿದರು. ಬಳಿಕ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯ ಮುಖ್ಯಸ್ಥರಾಗಿದ್ದು, 2021ರಲ್ಲಿ ಭಾರತ ತಂಡದ ಮುಖ್ಯ ಕೋಚ್ ಆಗಿ ನೇಮಕಗೊಂಡರು. 2024ರ ಟಿ20 ವಿಶ್ವಕಪ್ ಗೆಲುವಿನೊಂದಿಗೆ ಅವರ ಅವಧಿ ಅಂತ್ಯಗೊಂಡಿತು. 1983ರ ವಿಶ್ವಕಪ್ ವಿಜೇತ ತಂಡದ ಸದಸ್ಯರಾಗಿದ್ದ ರೋಜರ್ ಬಿನ್ನಿ, ಆ ಟೂರ್ನಿಯಲ್ಲಿ 18 ವಿಕೆಟ್ ಪಡೆದು ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿದ್ದರು. 1985ರ ವಿಶ್ವ ಚಾಂಪಿಯನ್ ಶಿಪ್ ಆಫ್ ಕ್ರಿಕೆಟ್ ನಲ್ಲೂ ಅವರು ಗಮನಾರ್ಹ ಪ್ರದರ್ಶನ ನೀಡಿದ್ದರು. ನಂತರ ಅಂಡರ್–19 ತಂಡದ ಕೋಚ್ ಹಾಗೂ ರಾಷ್ಟ್ರೀಯ ತಂಡದ ಆಯ್ಕೆದಾರರಾಗಿ ಸೇವೆ ಸಲ್ಲಿಸಿದ ಅವರು, 2022ರಲ್ಲಿ ಬಿಸಿಸಿಐ ಅಧ್ಯಕ್ಷರಾದರು. ಮಿಥಾಲಿ ರಾಜ್ ಭಾರತೀಯ ಮಹಿಳಾ ಕ್ರಿಕೆಟ್ ನ ಪ್ರಮುಖ ಮುಖವಾಗಿದ್ದು, ದೀರ್ಘಕಾಲ ತಂಡವನ್ನು ಮುನ್ನಡೆಸಿ ಅನೇಕ ಸಾಧನೆಗಳನ್ನು ನಿರ್ಮಿಸಿದ್ದಾರೆ. ಮಹಿಳಾ ಕ್ರಿಕೆಟ್ಗೆ ಜಾಗತಿಕ ಮಟ್ಟದಲ್ಲಿ ಗುರುತು ತಂದುಕೊಡುವಲ್ಲಿ ಅವರ ಪಾತ್ರ ಮಹತ್ವದ್ದಾಗಿದೆ. ಭಾರತೀಯ ಕ್ರಿಕೆಟ್ಗೆ ನೀಡಿದ ಅಪಾರ ಕೊಡುಗೆಯನ್ನು ಗುರುತಿಸಿ ಈ ಪ್ರಶಸ್ತಿಗಳನ್ನು ಪ್ರದಾನಿಸಲಾಗಿದೆ ಎಂದು ಬಿಸಿಸಿಐ ತಿಳಿಸಿದೆ.
ಎರಡು ಕೈಗಳ 5+5 ಬೆರಳು ತೋರಿಸಿ, ಸಾವಿನ ವದಂತಿಗೆ ಅಂತಿಮ ಮೊಳೆ ಹೊಡೆದ ಇಸ್ರೇಲ್ ಪ್ರಧಾನಿ ನೆತನ್ಯಾಹು
ನಾನು ಸತ್ತಿರುವುದು ಕಾಫಿಗಾಗಿ ಮಾತ್ರ ಎಂದು ವಿಡಿಯೋ ಮಾಡುವ ಮೂಲಕ ಸಾವಿನ ವದಂತಿಗೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಸ್ಷಪ್ಟನೆ ನೀಡಿದ್ದಾರೆ. ಜತೆಗೆ ಅವರಿಗೆ ಕೈಯಲ್ಲಿ 6 ಬೆರಳಿದೆ ಎಂಬ ವದಂತಿಗೆ ವಿಡಿಯೋ ಮೂಲಕ ತಿರುಗೇಟು ನೀಡಿದ್ದಾರೆ. ಜತೆಗೆ ಯುದ್ಧಪೀಡಿತ ಇಸ್ರೇಲ್ ತಾಣಗಳ ನಾಗರಿಕರಿಗೆ ಪ್ರಧಾನಿಗಳು ಧೈರ್ಯ ತುಂಬಿದ್ದಾರೆ.
ಬಳ್ಳಾರಿ | ಬುರ್ಖಾ ಧರಿಸಿ ಮನೆ ದರೋಡೆ ವದಂತಿ ಸುಳ್ಳು: ಪೊಲೀಸರ ತನಿಖೆಯಲ್ಲಿ ಸತ್ಯ ಬಹಿರಂಗ
ಬಳ್ಳಾರಿ: ರಮಝಾನ್ ಮಾಸದ ನಿಮಿತ್ತ ದಾನ ಕೇಳುವ ನೆಪದಲ್ಲಿ ಬುರ್ಖಾ ಧರಿಸಿಕೊಂಡ ಇಬ್ಬರು ಮಹಿಳೆಯರು ಹಾಗೂ ಒಬ್ಬ ಪುರುಷ ಮನೆಗೆ ನುಗ್ಗಿ ಮಹಿಳೆಯನ್ನು ಬೆದರಿಸಿ ಬಂಗಾರ–ಬೆಳ್ಳಿ ಆಭರಣಗಳನ್ನು ಕಿತ್ತುಕೊಂಡು ಹೋಗಿದ್ದಾರೆ ಎಂಬ ಮಾಹಿತಿ ಬಳ್ಳಾರಿ ನಗರದ ಗಾಂಧಿನಗರ ಪೊಲೀಸ್ ಠಾಣೆಗೆ ಬಂದಿತ್ತು. ಈ ಕುರಿತು ಪೊಲೀಸರು ತಕ್ಷಣ ತನಿಖೆ ನಡೆಸಿ ಪ್ರಕರಣದ ಸತ್ಯಾಂಶವನ್ನು ಬಹಿರಂಗಪಡಿಸಿದ್ದಾರೆ. ಮಾ.13, 2026ರಂದು ಗಾಂಧಿನಗರ ಪೊಲೀಸ್ ಠಾಣಾ ವ್ಯಾಪ್ತಿಯ ಹುಸೇನ್ ನಗರ ಪ್ರದೇಶದಲ್ಲಿ ಈ ಘಟನೆ ನಡೆದಿದೆ ಎಂಬ ಮಾಹಿತಿ ಹರಡಿತ್ತು. ಮಾಹಿತಿ ದೊರಕುತ್ತಿದ್ದಂತೆಯೇ ಹಿರಿಯ ಪೊಲೀಸ್ ಅಧಿಕಾರಿಗಳು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಗಾಂಧಿನಗರ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ಗೆ ತಕ್ಷಣ ತನಿಖೆ ನಡೆಸುವಂತೆ ಸೂಚಿಸಿದ್ದರು. ಇದನ್ವಯ ಪೊಲೀಸ್ ಇನ್ಸ್ಪೆಕ್ಟರ್ ರವಿಚಂದ್ರನ್ ಅವರ ನೇತೃತ್ವದಲ್ಲಿ ಡಿಬಿ ಪಿಎಸ್ಐ ಕೆ. ವಿರೂಪಾಕ್ಷಪ್ಪ ಹಾಗೂ ಸಿಬ್ಬಂದಿಗಳಾದ ಜಯರಾಮ್, ನಾರಾಯಣ, ರಾಮದಾಸ್, ತಿಮ್ಮಪ್ಪ ಮತ್ತು ಕಾಳಿಂಗಪ್ಪ ಅವರ ತಂಡ ತನಿಖೆ ಆರಂಭಿಸಿತು. ವಿವಿಧ ಆಯಾಮಗಳಲ್ಲಿ ವಿಚಾರಣೆ ನಡೆಸಿದಾಗ ದಾನ ಕೇಳುವ ನೆಪದಲ್ಲಿ ಯಾರೂ ಮನೆಗೆ ನುಗ್ಗಿ ಆಭರಣಗಳನ್ನು ಕಿತ್ತುಕೊಂಡು ಹೋಗಿಲ್ಲ ಎಂಬುದು ಬೆಳಕಿಗೆ ಬಂದಿದೆ. ತನಿಖೆಯಲ್ಲಿ ಇದು ಕುಟುಂಬದ ಒಳಗಿನ ವಿಷಯಕ್ಕೆ ಸಂಬಂಧಿಸಿದ ಘಟನೆ ಎಂಬುದು ಸ್ಪಷ್ಟವಾಗಿದ್ದು, ಈ ಕುರಿತು ಹರಿದಾಡುತ್ತಿರುವ ವದಂತಿಗಳು ಸತ್ಯವಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ಇಂತಹ ಸುಳ್ಳು ವದಂತಿಗಳನ್ನು ನಂಬಬಾರದು. ಯಾವುದೇ ಅನುಮಾನಾಸ್ಪದ ವ್ಯಕ್ತಿಗಳು ಅಥವಾ ಮಾಹಿತಿ ಕಂಡುಬಂದಲ್ಲಿ ತಕ್ಷಣ ಪೊಲೀಸ್ ಕಂಟ್ರೋಲ್ ರೂಮ್ (112) ಗೆ ಮಾಹಿತಿ ನೀಡುವಂತೆ ಗಾಂಧಿನಗರ ಪೊಲೀಸರು ಮನವಿ ಮಾಡಿದ್ದಾರೆ.
Kalaburagi | ʼಮುಂಗನಸುʼ ಕೃತಿ ವರ್ತಮಾನದ ತಲ್ಲಣಗಳ ಪ್ರತಿಬಿಂಬ: ಡಾ. ಚಿದಾನಂದ ಚಿಕ್ಕಮಠ
ಕಲಬುರಗಿ: ಕಲಬುರಗಿ ಸಾಂಸ್ಕೃತಿಕ ಪ್ರತಿಷ್ಠಾನ ವತಿಯಿಂದ ಹಿರಿಯ ಸಾಹಿತಿ ರೇವಣಸಿದ್ಧಪ್ಪ ದುಕಾನ ಅವರು ರಚಿಸಿದ “ಮುಂಗನಸು” ಕವನ ಸಂಕಲನದ ಜನಾರ್ಪಣೆ ಕಾರ್ಯಕ್ರಮ ರವಿವಾರ ಸಂಜೆ ನಗರದ ಕಲಾಮಂಡಳದಲ್ಲಿ ನೆರವೇರಿತು. ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಹಿರಿಯ ಉಪಾಧ್ಯಕ್ಷರಾದ ಅಪ್ಪಾರಾವ ಅಕ್ಕೋಣೆ ಅವರು ಕೃತಿಯನ್ನು ಜನಾರ್ಪಣೆಗೊಳಿಸಿದರು. ಕೃತಿ ಕುರಿತು ಮಾತನಾಡಿದ ಶರಣಬಸವ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾದ ಡಾ.ಚಿದಾನಂದ ಚಿಕ್ಕಮಠ ಅವರು, “ಮುಂಗನಸು” ಕವನ ಸಂಕಲನವು ವರ್ತಮಾನದ ಹಲವು ತಲ್ಲಣಗಳನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿದರು. ಕೃತಿಯಲ್ಲಿರುವ ಅನೇಕ ಕವಿತೆಗಳು ಇಂದಿನ ಕಲುಷಿತ ಪರಿಸರದ ಬಗ್ಗೆ ಕಳಕಳಿ ವ್ಯಕ್ತಪಡಿಸುವುದರ ಜೊತೆಗೆ ಸಾಮರಸ್ಯ, ಹಸಿವು, ಪ್ರೀತಿ, ತಂದೆ–ತಾಯಿ ಹಾಗೂ ಗುರುವಿನ ಆಶೀರ್ವಾದಗಳ ಮಹತ್ವವನ್ನು ಕವಿತೆಗಳ ಮೂಲಕ ಲೇಖಕರು ಅಭಿವ್ಯಕ್ತಿಸಿದ್ದಾರೆ ಎಂದು ಅವರು ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ.ವಿಜಯಕುಮಾರ ಪರುತೆ ವಹಿಸಿದ್ದರು. ಮಡಿವಾಳಪ್ಪ ಹಣಮಗೊಂಡ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಶಿಕ್ಷಣ ಇಲಾಖೆಯ ನಿವೃತ್ತ ನಿರ್ದೇಶಕರಾದ ಬಸವರಾಜ ಗೌನಳ್ಳಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು. ಕಲಬುರಗಿ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷರಾದ ಸಾಹಿತಿ ಮತ್ತು ಸಂಘಟಕರಾದ ಬಿ.ಎಚ್. ನಿರಗುಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಗುರುಪ್ರಸಾದ ದುಕಾನ ಸಭಿಕರನ್ನು ಸ್ವಾಗತಿಸಿದರು. ರೇವಣಸಿದ್ಧಯ್ಯ ನರನಾಳ ವಂದಿಸಿದರು. ಡಾ.ಶ್ವೇತಾ ಗುರುಪ್ರಸಾದ ದುಕಾನ ನಿರೂಪಿಸಿದರು. ಈ ಸಂದರ್ಭದಲ್ಲಿ ಹಿರಿಯ ಸಾಹಿತಿಗಳಾದ ಡಾ.ಹಣಮಂತರಾವ ದೊಡ್ಡಮನಿ, ಡಾ.ಗವಿಸಿದ್ಧಪ್ಪ ಪಾಟೀಲ್, ಡಾ.ಟಿ.ಗುರುಬಸಪ್ಪ, ಡಾ.ಕಾಶಿನಾಥ ಬಿರಾದಾರ, ಡಾ.ಎಸ್.ಎಸ್.ಗುಬ್ಬಿ, ಎಚ್.ಎಸ್.ಕೌಂಟೆ, ವಿಜಯಕುಮಾರ್ ಹಂಚಿನಾಳ, ಶ್ರೀಶೈಲ ಬೋನಾಳ, ಬಸವರಾಜ ಗಾಣೂರೆ, ರವೀಂದ್ರರೆಡ್ಡಿ, ಶ್ರೀಶೈಲ ಮದಾನೆ, ಡಾ.ನಾಗಪ್ಪ ಗೋಗಿ, ಸಿದ್ದರಾಮಯ್ಯಮಠ ಸೇರಿದಂತೆ ಅನೇಕ ಸಾಹಿತ್ಯಾಸಕ್ತರು ಉಪಸ್ಥಿತರಿದ್ದರು.
ಒಳಮೀಸಲಾತಿ ಜಾರಿ ಮಾಡುವಂತೆ ಅಹಿಂದ ಚಳುವಳಿ ಒತ್ತಾಯ
ಬೆಂಗಳೂರು : ಒಳಮೀಸಲಾತಿ ಸಂಬಂಧ ನ್ಯಾಯಮೂರ್ತಿ ನಾಗಮೋಹನ ದಾಸ್ ಆಯೋಗ ನೀಡಿರುವ ವರದಿಯಲ್ಲಿ ಮಾಡಲ್ಪಟ್ಟಿರುವ ಶಿಫಾರಸ್ಸುಗಳಂತೆಯೇ 101 ಜಾತಿಗಳಿಗೆ ಮೀಸಲಾತಿ ಪ್ರಮಾಣಗಳನ್ನು ವರ್ಗೀಕರಣ ಮಾಡಬೇಕು ಎಂದು ಅಹಿಂದ ಚಳುವಳಿಯ ರಾಜ್ಯ ಸಂಚಾಲಕ ಎಸ್. ಮೂರ್ತಿ ಒತ್ತಾಯಿಸಿದ್ದಾರೆ. ಶನಿವಾರ ನಗರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಿದ ಅವರು, ರಾಜ್ಯದಲ್ಲಿ ಸಂಪೂರ್ಣ ಒಳಮೀಸಲಾತಿ ಅನುಷ್ಠಾ ನ ಮಾಡಿದ ನಂತರವೇ ಸರಕಾರಿ ಉದ್ಯೋಗಗಳನ್ನು ಭರ್ತಿ ಮಾಡಬೇಕು. ನೇರ ನೇಮಕಾತಿ ಜೊತಗೆ ಮುಂಬಡ್ತಿ, ಬ್ಯಾಕ್ಲಾಗ್ಗಳಿಗೂ ಒಳಮೀಸಲಾತಿಯನ್ನು ಅಳವಡಿಸಬೇಕು ಎಂದಿದ್ದಾರೆ. ಪರಿಶಿಷ್ಟ ಜಾತಿ ಪಟ್ಟಿಯಲ್ಲಿನ 101 ಜಾತಿಗಳಿಗೆ ನೀಡಿರುವ ಒಟ್ಟು ಮೀಸಲಾತಿಯನ್ನೂ ಬೆರಳೆಣಿಕೆ ಜಾತಿಯವರು ಮಾತ್ರ ಪಡೆದು, ಅಭಿವೃದ್ಧಿ ಹೊಂದುತ್ತಿದ್ದಾರೆ. ಉಳಿದ ಜಾತಿಗಳು ಮತ್ತಷ್ಟು ಹಿಂದುಳಿಯುತ್ತಿವೆ. ಅದಕ್ಕಾಗಿ ಜನಸಂಖ್ಯೆಗೆ ಅನುಗುಣವಾಗಿ ಒಳಮೀಸಲಾತಿ ಜಾರಿ ಮಾಡಿ ಎಂದು ರಾಜ್ಯದ ಮಾದಿಗ ಸಮಾಜ ಕಳೆದ 30 ವರ್ಷಗಳಿಂದ ಸತತ ಹೋರಾಟಗಳನ್ನು ರಾಜ್ಯದಲ್ಲಿ ಮಾಡಿದೆ ಎಂದು ಅವರು ವಿವರಿಸಿದ್ದಾರೆ.
LPG ಕೊರತೆ | ಶಿರ್ಡಿ ಸಾಯಿಬಾಬಾ ದೇವಾಲಯದಲ್ಲಿ ಪ್ರಸಾದ ವಿತರಣೆಗೆ ಅಡ್ಡಿ
ಮುಂಬೈ, ಮಾ. 15: ಎಲ್ಪಿಜಿ ಸಿಲಿಂಡರ್ಗಳ ಕೊರತೆ ಮುಂಬೈಯ ಶಿರ್ಡಿ ಸಾಯಿಬಾಬಾ ದೇವಾಲಯದಲ್ಲಿ ಭಕ್ತರ ಮೇಲೆ ಕೂಡ ಪರಿಣಾಮ ಉಂಟು ಮಾಡಿದೆ. ಸಾಮಾನ್ಯವಾಗಿ ಎರಡು ಲಾಡುಗಳನ್ನು ವಿತರಿಸುವ ಬದಲು ಒಂದೇ ಲಾಡು ವಿತರಿಸಲು ದೇವಾಲಯದ ಟ್ರಸ್ಟ್ ನಿರ್ಧರಿಸಿದೆ. ಅನಿಲ ಪೂರೈಕೆಯ ಕೊರತೆ ನಿಭಾಯಿಸಲು ಕ್ಯಾಂಟೀನ್ ಮೆನುವನ್ನು ಸಾಮಾನ್ಯ ದಾಲ್ ರೈಸ್ ಊಟದಿಂದ ದಾಲ್ ಕಿಚಿಡಿಗೆ ಇಳಿಸಲು ದೇವಾಲಯದ ಟ್ರಸ್ಟ್ ಪ್ರಸ್ತಾಪಿಸಿದೆ. ಶಿರಿಡಿ ಸಾಯಿಬಾಬಾ ದೇವಾಲಯಕ್ಕೆ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಬರುತ್ತಾರೆ. ದಿನಂಪ್ರತಿ ನಾವು 45,000 ಪ್ಯಾಕೆಟ್ ಲಾಡುಗಳನ್ನು ಮಾರಾಟ ಮಾಡುತ್ತೇವೆ. 50,000 ಲಾಡುಗಳನ್ನು ಭಕ್ತರಿಗೆ ಉಚಿತವಾಗಿ ನೀಡುತ್ತೇವೆ. ಪ್ರಸ್ತುತ ನಮ್ಮಲ್ಲಿ 10ರಿಂದ 12 ದಿನಕ್ಕೆ ಬೇಕಾಗುವಷ್ಟು ಮಾತ್ರ ಎಲ್ಪಿಜಿ ಸಿಲಿಂಡರ್ಗಳು ಇವೆ ದೇವಾಲಯದ ಟ್ರಸ್ಟ್ ತಿಳಿಸಿದೆ. ಈ ನಡುವೆ, ಗೃಹ ಬಳಕೆಯ ಎಲ್ಪಿಜಿ ಸಿಲಿಂಡರ್ಗಳ ಕೊರತೆ ಉಂಟಾಗದಂತೆ ನೋಡಿಕೊಳ್ಳಲು ಜಿಲ್ಲಾ ಮಟ್ಟದಲ್ಲಿ ಸಮಿತಿಗಳನ್ನು ರಚಿಸಲಾಗಿದೆ ಎಂದು ಮಹಾರಾಷ್ಟ್ರ ಆಹಾರ ಮತ್ತು ನಾಗರಿಕ ಪೂರೈಕೆ ಖಾತೆ ಸಚಿವ ಛಗನ್ ಭುಜ್ಬಲ್ ತಿಳಿಸಿದ್ದಾರೆ.
ಮಧ್ಯಪ್ರದೇಶ | LPG ದರ ಏರಿಕೆ ಕುರಿತು ಪ್ರಧಾನಿಯನ್ನು ಅಣಕಿಸಿ ವೀಡಿಯೊ ಪೋಸ್ಟ್ : ಸರಕಾರಿ ಶಾಲೆ ಶಿಕ್ಷಕನ ಅಮಾನತು
ಭೋಪಾಲ, ಮಾ. 15: ಎಲ್ಪಿಜಿ ಸಿಲಿಂಡರ್ನ ಬೆಲೆ ಏರಿಕೆ ಕುರಿತಂತೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಣಕಿಸಿ ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊ ಪೋಸ್ಟ್ ಹಾಕಿದ ಮಧ್ಯಪ್ರದೇಶದ ಸರಕಾರಿ ಶಾಲಾ ಶಿಕ್ಷಕರೊಬ್ಬರನ್ನು ಅಮಾನತುಗೊಳಿಸಲಾಗಿದೆ. ಮಧ್ಯಪ್ರದೇಶದ ಶಿವಪುರಿ ಜಿಲ್ಲೆಯ ಪೊಹ್ರಿ ಬ್ಲಾಕ್ನ ಸರಕಾರಿ ಶಾಲೆಯ ಶಿಕ್ಷಕ ಸಾಕೇತ್ ಪುರೋಹಿತ್ ಅವರು ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊ ಒಂದನ್ನು ಪೋಸ್ಟ್ ಮಾಡಿದ್ದರು. ಈ ಪೋಸ್ಟ್ನಲ್ಲಿ ಅವರು ಪ್ರಧಾನಿ ನರೇಂದ್ರ ಮೋದಿ ಅವರಂತೆ ಮಾತನಾಡುತ್ತಾ, ಏರುತ್ತಿರುವ ಎಲ್ಪಿಜಿ ಸಿಲಿಂಡರ್ ಬೆಲೆ ಹಾಗೂ ಅವುಗಳ ಕೊರತೆಯನ್ನು ಉಲ್ಲೇಖಿಸಿದ್ದರು. ಈ ಕುರಿತು ಪಿಛೋರೆ ವಿಧಾನ ಸಭಾ ಕ್ಷೇತ್ರ ಬಿಜೆಪಿ ಶಾಸಕ ಪ್ರೀತಮ್ ಲೋದಿ ಅವರು ಶಿವಪುರಿ ಜಿಲ್ಲಾ ಶಿಕ್ಷಣ ಅಧಿಕಾರಿ (ಡಿಇಒ)ಗೆ ದೂರು ನೀಡಿದ್ದರು. ಈ ದೂರಿನ ಹಿನ್ನೆಲೆಯಲ್ಲಿ ಕಾರ್ಯಪ್ರವೃತ್ತರಾದ ಡಿಇಒ ಆರೋಪದ ಕುರಿತು ತನಿಖೆ ನಡೆಸಿದ್ದಾರೆ. ಅನಂತರ ಸಾಕೇತ್ ಪುರೋಹಿತ್ ಅವರನ್ನು ಶುಕ್ರವಾರ ಅಮಾನತುಗೊಳಿಸಿದ್ದಾರೆ. ಅಮಾನತು ಆದೇಶದಲ್ಲಿ ಡಿಇಒ ಸಾಕೇತ್ ಪುರೋಹಿತ್ ಅವರು ಪೋಸ್ಟ್ ಮಾಡಿದ ವೀಡಿಯೊ ಅಶಾಂತಿ ಸೃಷ್ಟಿಸುವ ಉದ್ದೇಶವನ್ನು ಹೊಂದಿದೆ ಎಂದು ಹೇಳಿದ್ದಾರೆ. ಸರಕಾರಿ ನಿಯಮಗಳಿಗೆ ಅನುಸಾರವಾಗಿ ಮಧ್ಯಪ್ರದೇಶ ನಾಗರಿಕ ಸೇವೆಗಳ ಕಾಯ್ದೆ, 1965ರ ಸಂಬಂಧಿತ ವಿಭಾಗಗಳ ಅಡಿಯಲ್ಲಿ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ. ತನ್ನ ವಿರುದ್ಧದ ಕ್ರಮದ ಬಗ್ಗೆ ಪ್ರತಿಕ್ರಿಯಿಸಿರುವ ಸಾಕೇತ್ ಪುರೋಹಿತ್, ತನಗೆ ನೋಟಿಸು ನೀಡದೆ, ತನ್ನ ಮಾತುಗಳನ್ನು ಆಲಿಸದೆ ಏಕಪಕ್ಷೀಯವಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಆರೋಪಿಸಿದ್ದಾರೆ. ಎಲ್ಪಿಜಿ ಸಿಲಿಂಡರ್ ಬೆಲೆ ಏರಿಕೆ ಹಾಗೂ ವ್ಯತ್ಯಯದ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಣಕಿಸುವ 58 ಸೆಕೆಂಡುಗಳ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಇತ್ತೀಚೆಗೆ ವೈರಲ್ ಆಗಿತ್ತು.
ಬನ್ನೇರುಘಟ್ಟ ನೈಸ್ ರಸ್ತೆಯಲ್ಲಿ ವಾಹನ ಢಿಕ್ಕಿಯಾಗಿ ಚಿರತೆ ಮೃತ್ಯು
ಬೆಂಗಳೂರು : ಬೆಂಗಳೂರು ಹೊರವಲಯದ ಬನ್ನೇರುಘಟ್ಟ ನೈಸ್ ರಸ್ತೆಯಲ್ಲಿ ಅಪರಿಚಿತ ವಾಹನ ಢಿಕ್ಕಿ ಹೊಡೆದ ಪರಿಣಾಮ ಚಿರತೆಯೊಂದು ಮೃತಪಟ್ಟಿರುವ ಘಟನೆ ರವಿವಾರ ಬೆಳಗಿನ ಜಾವ ವರದಿಯಾಗಿದೆ. ಬನ್ನೇರುಘಟ್ಟ ನೈಸ್ ರಸ್ತೆಯಲ್ಲಿ ರವಿವಾರ ಬೆಳಗಿನ ಜಾವ ಮೂರು ಗಂಟೆ ಸುಮಾರಿಗೆ ಅಪರಿಚಿತ ವಾಹನ ಢಿಕ್ಕಿ ಹೊಡೆದು ಚಿರತೆ ಗಂಭೀರವಾಗಿ ಗಾಯಗೊಂಡು, ಸ್ಥಳದಲ್ಲೇ ಚಿರತೆ ಸಾವನ್ನಪ್ಪಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಇದು ಮೂರು ವರ್ಷದ ಹೆಣ್ಣು ಚಿರತೆ ಎಂದು ಗುರುತಿಸಲಾಗಿದೆ. ಈ ಘಟನೆಯ ಮಾಹಿತಿ ತಿಳಿದು ಸ್ಥಳಕ್ಕೆ ಕಗ್ಗಲೀಪುರ ಅರಣ್ಯ ವಲಯದ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಬಳಿಕ ಮೃತ ಚಿರತೆಯನ್ನು ವಶಕ್ಕೆ ಪಡೆದು ಅರಣ್ಯ ಇಲಾಖೆಯ ಕಚೇರಿಗೆ ಸಾಗಿಸಲಾಗಿದೆ.
ಗುಜರಾತ್ | ಮರ್ಯಾದೆಗೇಡು ಹತ್ಯೆ : ದಂಪತಿಯನ್ನು ಹತ್ಯೆಗೈದ ಯುವತಿಯ ತಂದೆ, ಸೋದರ ಸಂಬಂಧಿ
ಹೊಸದಿಲ್ಲಿ, ಮಾ. 15: ತಮ್ಮ ಇಚ್ಛೆಗೆ ವಿರುದ್ಧವಾಗಿ ವಿವಾಹವಾದ ದಂಪತಿಯನ್ನು ಯುವತಿಯ ತಂದೆ ಹಾಗೂ ಆತನ ಸೋದರ ಅಳಿಯ ಹತ್ಯೆಗೈದಿದ್ದಾರೆ ಎಂದು ಹೇಳಲಾದ ಘಟನೆ ಗುಜರಾತ್ನ ರಾಜ್ಕೋಟ್ನ ಜಿಲ್ಲೆಯ ಕಛ್ನಿಂದ ವರದಿಯಾಗಿದೆ. ಫೆಬ್ರವರಿ 3ರಂದು ನಾಪತ್ತೆಯಾಗಿದ್ದ ನವೀನ್ ರಾಬರಿ (24) ಹಾಗೂ ನಾಥಿ ಆಲಿಯಾಸ್ ಸೋನು ರಾಬರಿ ಅವರ ಮೃತದೇಹಗಳನ್ನು ಪೊಲೀಸರು ನಖತ್ರಾಣ ತಾಲೂಕಿನ ಖಂಭ್ಲಾ ಗ್ರಾಮದ ಸಮೀಪದ ಬಾವಿಯೊಂದರಲ್ಲಿ ಶುಕ್ರವಾರ ರಾತ್ರಿ ಪತ್ತೆ ಮಾಡಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಸೋನು ತಂದೆ ವಂಕ ಆಲಿಯಾಸ್ ರಾಜಾ ರಾಬರಿ ಹಾಗೂ ಅವರ ಸೋದರಳಿಯ ಸೋಮ ಆಲಿಯಾಸ್ ಪ್ರಭಾತ್ ರಾಬರಿಯವರನ್ನು ಬಂಧಿಸಿದ್ದಾರೆ. ಅವರ ತಾಯಿ ಹಿಮಾ ಅವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಸಮುದಾಯದಲ್ಲಿ ತಮಗೆ ತೀವ್ರ ಅವಮಾನ ಉಂಟಾಗುತ್ತದೆ ಎಂಬ ಕಾರಣಕ್ಕೆ ಈ ದಂಪತಿಯನ್ನು ಹತ್ಯೆಗೈಯಲು ವಂಕ ಹಾಗೂ ಸೋಮ ಪಿತೂರಿ ನಡೆಸಿದ್ದಾರೆ ಎಂದು ತನಿಖೆಯಲ್ಲಿ ಬಹಿರಂಗಗೊಂಡಿದೆ. ಸೋನುವನ್ನು ಭೇಟಿಯಾಗಲು ತೆರಳಿದ್ದ ನವೀನ್ ಫೆ. 3ರಂದು ನಾಪತ್ತೆಯಾಗಿದ್ದರು. ನವೀನ್ ಹಿಂದಿರುಗದೇ ಇದ್ದಾಗ, ಅವರ ಕುಟುಂಬ ಶೋಧ ಕಾರ್ಯಾಚರಣೆ ಆರಂಭಿಸಿತು. ಸೋನುವಿನ ತಂದೆಯನ್ನು ಸಂಪರ್ಕಿಸಿತು. ಆಗ ಅವರು, ತಮ್ಮ ಮಗಳು ಮನೆಯಲ್ಲಿ ಇಲ್ಲ ಎಂದು ತಿಳಿಸಿದರು. ದಂಪತಿ ಕೆಲವೇ ದಿನಗಳಲ್ಲಿ ಹಿಂದಿರುಗಬಹುದು ಎಂದು ಕೂಡ ಅವರು ತಿಳಿಸಿದರು. ನವೀನ್ನ ದ್ವಿಚಕ್ರ ವಾಹನ ಕೋಟ್ದಾ ಗ್ರಾಮದ ಕ್ರಿಕೆಟ್ ಮೈದಾನದಲ್ಲಿ ನಿಲ್ಲಿಸಿರುವುದನ್ನು ಅವರ ಕುಟುಂಬ ಪತ್ತೆ ಹಚ್ಚಿತ್ತು. ಅನಂತರ ನವೀನ್ ಸಹೋದರ ರಾಹುಲ್ ನಖತ್ರಾನಾ ಪೊಲೀಸ್ ಠಾಣೆಯಲ್ಲಿ ಫೆಬ್ರವರಿ 5ರಂದು ನಾಪತ್ತೆ ಪ್ರಕರಣ ದಾಖಲಿಸಿದ್ದರು. ಕಚ್ (ಪಶ್ಚಿಮ) ಡಿಎಸ್ಪಿ ವಿಕಾಸ್ ಸುಂದಾ, ‘‘ಮರ್ಯಾದೆಗೇಡು ಹತ್ಯೆ ಶಂಕೆಯಿಂದ ನಾವು ಯುವತಿಯ ಕುಟುಂಬದ ಮೇಲೆ ನಿಗಾ ವಹಿಸುವುದನ್ನು ಮುಂದುವರಿಸಿದ್ದೇವೆ. ಗುಪ್ತಚರ ಮಾಹಿತಿ ಹಾಗೂ ಶಂಕಿತ ವ್ಯಕ್ತಿಯ ವಿಚಾರಣೆಯ ಸಂದರ್ಭ ಸಿಕ್ಕಿದ ಮಾಹಿತಿಯ ಆಧಾರದಲ್ಲಿ ಶವಗಳನ್ನು ಬಾವಿಯಲ್ಲಿ ಎಸೆಯಲಾಗಿದೆ ಎಂಬುದು ನಮಗೆ ತಿಳಿದು ಬಂದಿದೆ’’ ಎಂದಿದ್ದರು. ಶುಕ್ರವಾರ ಪೊಲೀಸರ ತಂಡ, ಅಗ್ನಿ ಶಾಮಕ ದಳದ ಸಿಬ್ಬಂದಿ, ವಿಧಿವಿಜ್ಞಾನ ತಜ್ಞರು ಮೃತದೇಹಗಳನ್ನು ಬಾವಿಯಿಂದ ಹೊರ ತೆಗೆದರು. ವಂಕಾ ಹಾಗೂ ಆತನ ಸಹಚರರು ನವೀನ್ ಹಾಗೂ ಸೋನು ಅವರು ಕುತ್ತಿಗೆ ಹಿಸುಕಿ ಕೊಂದಿದ್ದಾರೆ. ಸಾಕ್ಷ್ಯ ನಾಶ ಮಾಡಲು ಮೃತದೇಹಗಳನ್ನು ಬಾವಿಗೆ ಎಸೆದಿದ್ದಾರೆ ಎಂದು ಹೇಳಲಾಗಿದೆ. ಮೃತದೇಹಗಳು ಕೊಳೆತಿದ್ದರೂ ರಾಹುಲ್ ಬಟ್ಟೆಗಳ ಮೂಲಕ ನವೀನ್ ಮೃತದೇಹವನ್ನು ಗುರುತು ಹಿಡಿದಿದ್ದಾನೆ. ಇನ್ನೊಂದು ಮೃತದೇಹವನ್ನು ಅನಂತರ ಸೋನು ಅವರದ್ದೆಂದು ದೃಢಪಡಿಸಲಾಯಿತು.
ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ವತಿಯಿಂದ 23ನೇ ವರ್ಷದ ಇಫ್ತಾರ್ ಕೂಟ
ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ವಿದ್ಯಾಗಿರಿ ಕೃಷಿ ಸಿರಿ ಆವರಣದಲ್ಲಿ 23ನೇ ವರ್ಷದ ಇಫ್ತಾರ್ ಕೂಟವನ್ನು ಶನಿವಾರ ಆಯೋಜಿಸಲಾಯಿತು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು, ಪೋಷಕರು ಹಾಗೂ ಸಿಬ್ಬಂದಿ ಸೇರಿ ಸುಮಾರು 6 ಸಾವಿರಕ್ಕೂ ಅಧಿಕ ಮಂದಿ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ರಮಝಾನ್ ಸಂದೇಶ ನೀಡಿದ ರಾಜ್ಯ ವಕ್ಫ್ ಕೌನ್ಸಿಲ್ ಸದಸ್ಯ ಅನೀಸ್ ಕೌಸರಿ ಅವರು, ಇಂದಿನ ಸಮಾಜದಲ್ಲಿ ಹೆಚ್ಚುತ್ತಿರುವ ಭಿನ್ನಾಭಿಪ್ರಾಯಗಳ ನಡುವೆ ಇಫ್ತಾರ್ನಂತಹ ಕಾರ್ಯಕ್ರಮಗಳು ಅತ್ಯಂತ ಅಗತ್ಯ ವಾಗಿವೆ. ಇವು ವಿಭಿನ್ನ ಧರ್ಮಗಳ ನಡುವೆ ಪರಸ್ಪರ ಗೌರವ ಹಾಗೂ ಸಾಮರಸ್ಯವನ್ನು ಬೆಳೆಸುವಲ್ಲಿ ಮಹತ್ವದ ಪಾತ್ರವಹಿಸುತ್ತವೆ ಎಂದು ಅಭಿಪ್ರಾಯಪಟ್ಟರು. ಪವಿತ್ರ ರಮಝಾನ್ ತಿಂಗಳಲ್ಲಿ ಆಚರಿಸಲಾಗುವ ಉಪವಾಸವು ದೇಹವನ್ನು ಮಾತ್ರವಲ್ಲದೆ ಹೃದಯವನ್ನೂ ಶುದ್ಧಗೊಳಿಸಿ ಮಾನವೀಯತೆ, ಕರುಣೆ ಮತ್ತು ದಯೆಯ ಗುಣಗಳನ್ನು ಬೆಳೆಸುತ್ತದೆ ಎಂದು ಅವರು ಹೇಳಿದರು. ಕಾರ್ಯಕ್ರಮದಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ, ದಕ್ಷಿಣ ಕನ್ನಡ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಇಬ್ರಾಹಿಂ ನವಾಝ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಎಂ.ಎ. ಗಫೂರ್, ಟ್ರಸ್ಟಿಗಳಾದ ವಿವೇಕ್ ಆಳ್ವ, ಡಾ. ವಿನಯ ಆಳ್ವ, ಬಿಲ್ಡರ್ ಮುಸ್ತಫಾ, ಎನ್.ಎಸ್. ಸೈಫುದ್ದೀನ್ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.
ಬಳ್ಳಾರಿ | ಚೀಟಿ ವ್ಯವಹಾರದಲ್ಲಿ ವಂಚನೆ ಆರೋಪ : ಆರೋಪಿ ಬಂಧನ
ಬಳ್ಳಾರಿ: ಚೀಟಿ ವ್ಯವಹಾರದ ಹೆಸರಿನಲ್ಲಿ ಸಾರ್ವಜನಿಕರಿಂದ ಲಕ್ಷಾಂತರ ರೂಪಾಯಿ ಸಂಗ್ರಹಿಸಿ ಮೋಸ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಬಳ್ಳಾರಿ ಜಿಲ್ಲೆಯ ಬ್ರೂಸ್ಪೇಟೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಪೊಲೀಸರು ನೀಡಿದ ಮಾಹಿತಿಯ ಪ್ರಕಾರ, ಜ.8, 2026ರಂದು ಬಳ್ಳಾರಿ ನಗರದ ಬ್ರೂಸ್ಪೇಟೆ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 08/2026ರಡಿ ಭಾರತೀಯ ನ್ಯಾಯ ಸಂಹಿತೆ (BNS-2023) ಕಲಂ 316(2), 318(4) ಹಾಗೂ ಬಡ್ಸ್ ಕಾಯ್ದೆ (BUDS Act-2019) ಕಲಂ 21(3) ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ಚೀಟಿ ವ್ಯವಹಾರದ ಹೆಸರಿನಲ್ಲಿ ಸಾರ್ವಜನಿಕರಿಂದ ಹಣ ಸಂಗ್ರಹಿಸಿ ಮೋಸ ಮಾಡಲಾಗಿದೆ ಎಂಬ ದೂರಿನ ಮೇರೆಗೆ ತನಿಖೆ ಆರಂಭಿಸಲಾಗಿತ್ತು. ಪ್ರಕರಣದ ತನಿಖೆಯನ್ನು ಬ್ರೂಸ್ಪೇಟೆ ಪೊಲೀಸ್ ಠಾಣೆಯ ಪಿ.ಐ ನೇತೃತ್ವದಲ್ಲಿ ವಿಶೇಷ ತಂಡ ರಚಿಸಿ ನಡೆಸಲಾಗಿದ್ದು, ಪಿಎಸ್ಐ ರಮೇಶ್ ಸೇರಿದಂತೆ ಪೊಲೀಸ್ ಸಿಬ್ಬಂದಿ ಕಾರ್ಯಾಚರಣೆ ನಡೆಸಿದರು. ತನಿಖೆಯ ವೇಳೆ ಮಾ.13ರಂದು ಸುಮಾರು 50 ವರ್ಷದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿ ನಾಗಭೂಷಣ ಎಂದು ಗುರುತಿಸಲಾಗಿದ್ದು, ಬಳ್ಳಾರಿ ನಗರದ ದೇವಿನಗರ ನಿವಾಸಿ ಎಂದು ತಿಳಿದುಬಂದಿದೆ. ಆರೋಪಿಯ ವಿಚಾರಣೆಯಲ್ಲಿ ಚೀಟಿ ವ್ಯವಹಾರದಿಂದ ಸಂಗ್ರಹಿಸಿದ ಸುಮಾರು 310 ಗ್ರಾಂ ತೂಕದ ಬಂಗಾರದ ಆಭರಣಗಳನ್ನು ಬಳ್ಳಾರಿ ನಗರದ ಮುನ್ಸಿಪಲ್ ಮೈದಾನ ಸಮೀಪ ಅಡಗಿಸಿದ್ದಾಗಿ ತಿಳಿಸಿದ್ದರಿಂದ ಪೊಲೀಸರು ಅವುಗಳನ್ನು ವಶಪಡಿಸಿಕೊಂಡಿದ್ದಾರೆ. ಇದಲ್ಲದೆ ಪ್ರಕರಣಕ್ಕೆ ಸಂಬಂಧಿಸಿದಂತೆ ಒಂದು ಮೊಬೈಲ್ ಫೋನ್, KA-34/ES-2152 ಸಂಖ್ಯೆಯ ಬೈಕ್ ಹಾಗೂ KA-34/ES-0427 ಸಂಖ್ಯೆಯ ಟಿವಿಎಸ್ ಜುಪಿಟರ್ ದ್ವಿಚಕ್ರ ವಾಹನಗಳನ್ನು ಕೂಡ ಪೊಲೀಸರು ಜಪ್ತಿ ಮಾಡಿದ್ದಾರೆ. ಬಂಧಿತ ಆರೋಪಿಯನ್ನು ಮಾ.14ರಂದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಪ್ರಕರಣದ ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪಶ್ಚಿಮ ಏಶ್ಯ ಸಂಘರ್ಷ | ಬಹರೈನ್, ಸೌದಿ ಅರೇಬಿಯದ ಎಫ್1 ರೇಸ್ಗಳು ರದ್ದು
ಮನಾಮ, ಮಾ. 15: ಅಮೆರಿಕ ಮತ್ತು ಇಸ್ರೇಲ್ ಇರಾನ್ ವಿರುದ್ಧ ನಡೆಸುತ್ತಿರುವ ಯುದ್ಧದಿಂದ ಉದ್ಭವಿಸಿರುವ ಉದ್ವಿಗ್ನ ಪರಿಸ್ಥಿತಿಯ ಹಿನ್ನೆಲೆಯಲ್ಲಿ, ಬಹರೈನ್ ಮತ್ತು ಸೌದಿ ಅರೇಬಿಯದಲ್ಲಿ ನಡೆಯಬೇಕಾಗಿದ್ದ ಫಾರ್ಮುಲಾ ವನ್ ರೇಸ್ಗಳನ್ನು ರದ್ದುಗೊಳಿಸಲಾಗಿದೆ ಎಂದು ಮೋಟರ್ಸ್ಪೋರ್ಟ್ನ ಆಡಳಿತ ಮಂಡಳಿ ಎಫ್ಐಎ ಶನಿವಾರ ಘೋಷಿಸಿದೆ. ‘‘ಮಧ್ಯಪ್ರಾಚ್ಯ ವಲಯದಲ್ಲಿ ನೆಲೆಸಿರುವ ಉದ್ವಿಗ್ನ ಪರಿಸ್ಥಿತಿಯನ್ನು ಗಣನೆಗೆ ತೆಗೆದುಕೊಂಡು, ಎಪ್ರಿಲ್ನಲ್ಲಿ ನಡೆಯಬೇಕಾಗಿದ್ದ ಬಹರೈನ್ ಮತ್ತು ಸೌದಿ ಗ್ರ್ಯಾನ್ ಪ್ರಿ ಪಂದ್ಯಾವಳಿಗಳನ್ನು ರದ್ದುಗೊಳಿಸಲು ಇಂದು ನಿರ್ಧರಿಸಲಾಗಿದೆ’’ ಎಂದು ಅಂತರ್ರಾಷ್ಟ್ರೀಯ ಆಟೊಮೊಬೈಲ್ ಫೆಡರೇಶನ್ (ಎಫ್ಐಎ) ಹೇಳಿಕೆಯೊಂದರಲ್ಲಿ ತಿಳಿಸಿದೆ. ‘‘ಹಲವಾರು ಪರ್ಯಾಯ ವ್ಯವಸ್ಥೆಗಳ ಬಗ್ಗೆ ಪರಿಶೀಲನೆ ನಡೆಸಲಾಯಿತಾದರೂ, ಈ ಎಪ್ರಿಲ್ನಲ್ಲಿ ಯಾವುದೇ ಪರ್ಯಾಯ ಕ್ರಮಗಳನ್ನು ಕೈಗೊಳ್ಳದಿರಲು ಅಂತಿಮವಾಗಿ ನಿರ್ಧರಿಸಲಾಯಿತು. ಫಾರ್ಮುಲಾ ವನ್ ಗ್ರೂಪ್, ಸ್ಥಳೀಯ ಪ್ರಾಯೋಜಕರು ಮತ್ತು ವಲಯದಲ್ಲಿರುವ ನಮ್ಮ ಸದಸ್ಯ ಕ್ಲಬ್ಗಳೊಂದಿಗೆ ಸುದೀರ್ಘ ಸಮಾಲೋಚನೆಗಳನ್ನು ನಡೆಸಿದ ಬಳಿಕ ಈ ನಿರ್ಧಾರವನ್ನು ತೆಗೆದುಕೊಳ್ಳಲಾಯಿತು’’ ಎಂದು ಎಫ್ಐಎ ಹೇಳಿದೆ. ಈ ಋತುವಿನ ನಾಲ್ಕನೇ ಗ್ರ್ಯಾನ್ ಪ್ರಿ ಬಹರೈನ್ನಲ್ಲಿ ಎಪ್ರಿಲ್ 10ರಿಂದ 12ರವರೆಗೆ ನಡೆಯಬೇಕಾಗಿತ್ತು. ಒಂದು ವಾರದ ಬಳಿಕ ಸೌದಿ ಗ್ರ್ಯಾನ್ ಪ್ರಿ ನಡೆಯಬೇಕಾಗಿತ್ತು
ಲೆಬನಾನ್ | ಇಸ್ರೇಲ್ ದಾಳಿಯಲ್ಲಿ ಕನಿಷ್ಠ ನಾಲ್ವರು ಮೃತ್ಯು
ಬೈರುತ್, ಮಾ.15: ದಕ್ಷಿಣ ಲೆಬನಾನ್ನ ಹಲವೆಡೆ ಶನಿವಾರ ತಡರಾತ್ರಿಯಿಂದ ಇಸ್ರೇಲ್ನ ವೈಮಾನಿಕ ದಾಳಿಯಲ್ಲಿ ಕನಿಷ್ಠ 4 ಮಂದಿ ಮೃತಪಟ್ಟಿದ್ದು, ಇತರ ಹಲವರು ಗಾಯಗೊಂಡಿರುವುದಾಗಿ ವರದಿಯಾಗಿದೆ. ಕರಾವಳಿ ನಗರವಾದ ಸಿಡಾನ್ನ ಉತ್ತರದ ಜಿಲ್ಲೆಯಲ್ಲಿ ವಸತಿ ಕಟ್ಟಡದ ಅಪಾರ್ಟ್ಮೆಂಟ್ ಮೇಲೆ ಶನಿವಾರ ತಡರಾತ್ರಿ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ಒಬ್ಬ ವ್ಯಕ್ತಿ ಮೃತಪಟ್ಟಿದ್ದು ಕಟ್ಟಡಕ್ಕೆ ಬೆಂಕಿ ವ್ಯಾಪಿಸಿದೆ. ಸಿಡಾನ್ನ ಸಮೀಪದ ಅಲ್-ಖತ್ರಾನಿ ಗ್ರಾಮದ ಮೇಲೆ ನಡೆದ ಮತ್ತೊಂದು ದಾಳಿಯಲ್ಲಿ ಮೂವರು ಮೃತಪಟ್ಟಿದ್ದಾರೆ ಎಂದು ಲೆಬನಾನ್ನ ಸರ್ಕಾರಿ ಸ್ವಾಮ್ಯದ ನ್ಯಾಷನಲ್ ನ್ಯೂಸ್ ಏಜೆನ್ಸಿ(ಎನ್ಎನ್ಎ) ವರದಿ ಮಾಡಿದೆ. ಲೆಬನಾನ್ನಾದ್ಯಂತ ಹಿಜ್ಬುಲ್ಲಾಗಳ ಮೂಲಸೌಕರ್ಯಗಳನ್ನು ಗುರಿಯಾಗಿಸಿದ ದಾಳಿ ಮುಂದುವರಿಯಲಿದೆ. ಬೈರುತ್ನಲ್ಲಿ ಹಿಜ್ಬುಲ್ಲಾದ ರದ್ವಾನ್ ಪಡೆಯ ಕಮಾಂಡ್ ಕೇಂದ್ರಗಳನ್ನು ಧ್ವಂಸಗೊಳಿಸಲಾಗಿದೆ ಎಂದು ಇಸ್ರೇಲಿ ಮಿಲಿಟರಿ ರವಿವಾರ ಹೇಳಿದೆ. ಈ ಮಧ್ಯೆ, ಇಸ್ರೇಲ್ ಜೊತೆ ಮಾತುಕತೆ ನಡೆಸಲು ನಿಯೋಗವನ್ನು ರಚಿಸಿ ಇಸ್ರೇಲ್ಗೆ ಆಹ್ವಾನ ನೀಡಲಾಗಿದೆ. ಆದರೆ ಅವರಿಂದ ಪ್ರತ್ಯುತ್ತರ ಬಂದಿಲ್ಲ ಎಂದು ಲೆಬನಾನ್ ಸರಕಾರದ ಮೂಲಗಳು ಹೇಳಿವೆ. ಲೆಬನಾನ್ ಮತ್ತು ಇಸ್ರೇಲ್ ನಡುವೆ ನೇರ ಮಾತುಕತೆ ನಡೆಯಬೇಕು. ಇಲ್ಲದಿದ್ದರೆ ಲೆಬನಾನ್ನ ಅವ್ಯವಸ್ಥೆಯ ಪ್ರಪಾತಕ್ಕೆ ಕುಸಿಯಲಿದೆ ಎಂದು ಫ್ರಾನ್ಸ್ ಅಧ್ಯಕ್ಷ ಇಮ್ಯಾನುವೆಲ್ ಮ್ಯಾಕ್ರೋನ್ ಎಚ್ಚರಿಕೆ ನೀಡಿದ್ದು ಪ್ಯಾರಿಸ್ನಲ್ಲಿ ಮಾತುಕತೆಯನ್ನು ಆಯೋಜಿಸಲು ಸಿದ್ಧ ಎಂದು ಹೇಳಿರುವುದಾಗಿ ಎಎಫ್ಪಿ ಸುದ್ದಿಸಂಸ್ಥೆ ವರದಿ ಮಾಡಿದೆ.
ತಮಿಳುನಾಡು | ಕಾಲೇಜ್ ಬಸ್ಗೆ ಗೂಡ್ಸ್ ರೈಲು ಢಿಕ್ಕಿ : 20ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಗಾಯ
ಕರೂರು,ಮಾ.15: ಖಾಸಗಿ ಇಂಜಿನಿಯರಿಂಗ್ ಕಾಲೇಜಿಗೆ ಸೇರಿದ ಬಸ್ಗೆ ಸರಕು ಸಾಗಣೆ ರೈಲು ಢಿಕ್ಕಿ ಹೊಡೆದ ಪರಿಣಾಮ 20ಕ್ಕೂ ಅಧಿಕ ವಿದ್ಯಾರ್ಥಿಗಳು ಗಾಯಗೊಂಡಿರುವ ಘಟನೆ ಶನಿವಾರ ಇಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬಸ್ ವೀರರಕ್ಕಿಯಂ ಮತ್ತು ಪಾಳಯಂ ನಡುವಿನ ಕಾವಲುರಹಿತ ಕ್ರಾಸಿಂಗ್ ಮೂಲಕ ಚಲಿಸುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ಗಾಯಾಳುಗಳನ್ನು ಜಿಲ್ಲಾ ಸರಕಾರಿ ಆಸ್ಪತ್ರೆಗೆ ಸಾಗಿಸಲಾಗಿದ್ದು, ಈ ಪೈಕಿ ಇಬ್ಬರನ್ನು ನಂತರ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಗಾಯಾಳುಗಳನ್ನು ಭೇಟಿಯಾದ ಡಿಎಂಕೆ ನಾಯಕ ಸೆಂಥಿಲ್ ಬಾಲಾಜಿ ತಿಳಿಸಿದರು. ಮೂವರು ವಿದ್ಯಾರ್ಥಿಗಳಿಗೆ ಪ್ರಥಮ ಚಿಕಿತ್ಸೆ ನೀಡಿ ಕಳುಹಿಸಲಾಗಿದೆ. ಇತರ 20 ವಿದ್ಯಾರ್ಥಿಗಳಿಗೆ ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ ಎಂದರು. ಚೆಟ್ಟಿನಾಡ್ ಸಿಮೆಂಟ್ಸ್ಗೆ ಸೇರಿದ ಖಾಸಗಿ ರೈಲು ಮಾರ್ಗದಲ್ಲಿ ಅಪಘಾತ ಸಂಭವಿಸಿದೆ. ತನ್ನ ವ್ಯಾಪ್ತಿಯಲ್ಲಿ ಅಲ್ಲ ಎಂದು ದಕ್ಷಿಣ ರೈಲ್ವೆ ತಿಳಿಸಿದೆ.
RCB Yash Dayal Marriage: ಇನ್ನೂ ಕೆಲವೇ ದಿನಗಳಲ್ಲಿ ಐಪಿಎಲ್ 2026 ಹಬ್ಬ ಆರಂಭವಾಗಲಿದೆ. ಇದಕ್ಕೂ ಮುನ್ನಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸ್ಟಾರ್ ಬೌಲರ್ ಯಶ್ ದಯಾಳ್ ಅವರು ಕಂಟೆಂಟ್ ಕ್ರಿಯೇಟರ್ ಶ್ವೇತಾ ಪುಂಡಿರ್ ಅವರೊಂದಿಗೆ ಸದ್ದಿಲ್ಲದೆ ದಾಂಪತ್ಯೆ ಜೀವನಕ್ಕೆ ಕಾಲಿಟ್ಟಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ. ಫೆಬ್ರವರಿ 4, 2026ರಂದು ಉತ್ತರ ಪ್ರದೇಶದ ನೋಯ್ಡಾದಲ್ಲಿ
Telangana| ಮದುವೆ ನಿಲ್ಲಿಸಿದ ವಧುವಿಗೆ ತನ್ನ ಎಚ್ಐವಿ ಸೋಂಕಿತ ರಕ್ತ ಚುಚ್ಚಿದ ವರ!
ಹೈದರಾಬಾದ್: ತನಗೆ ಎಚ್ಐವಿ ಸೋಂಕಿದೆ ಎಂದು ತಿಳಿದು ತನ್ನ ಮದುವೆ ಯೋಜನೆಯನ್ನು ರದ್ದುಗೊಳಿಸಿದ ಸಂಬಂಧಿಕ ವಧುವಿಗೆ ವರನೊಬ್ಬ ತನ್ನದೇ ಎಚ್ಐವಿ ಸೋಂಕಿತ ರಕ್ತ ಹೊಂದಿರುವ ಸಿರಿಂಜ್ ಚುಚ್ಚಿರುವ ಘಟನೆ ನಡೆದಿದೆ ಎಂದು ವರದಿಯಾಗಿದೆ. ಮನೋಹರ್ (24) ಎಂಬ ವರ ಸಿರಿಂಜ್ ಒಂದನ್ನು ಖರೀದಿಸಿ, ಅದಕ್ಕೆ ತನ್ನದೇ ಎಚ್ಐವಿ ಸೋಂಕಿತ ರಕ್ತವನ್ನು ತುಂಬಿದ್ದಾನೆ. ಬಳಿಕ, ಮಾರ್ಚ್ 11ರಂದು ವಧುವಿನ ಮನೆಗೆ ತೆರಳಿ, ಆಕೆಯ ತೋಳಿಗೆ ಆ ಸಿರಿಂಜ್ ಚುಚ್ಚಿದ್ದಾನೆ ಎಂದು ಹೇಳಲಾಗಿದೆ. ವಧು ಕೂಡ ಎಚ್ಐವಿ ಸೋಂಕಿತಳಾದರೆ, ಆಕೆಯ ಪೋಷಕರಿಗೆ ಬೇರೆ ಪರ್ಯಾಯವಿಲ್ಲದೆ ಆಕೆ ತನ್ನನ್ನು ವಿವಾಹವಾಗಲು ಅನುಮತಿ ನೀಡುತ್ತಾರೆ ಎಂದು ಆರೋಪಿ ಮನೋಹರ್ ಭಾವಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಘಟನೆ ಪೋಚರಂ ಐಟಿ ಕಾರಿಡಾರ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಮನೋಹರ್ ಹಾಗೂ ಯುವತಿಯ ಕುಟುಂಬ ಅಣ್ಣೋಜಿಗುಡದ ರಾಜೀವ್ ಗೃಹ ಕಲ್ಪ ಕಾಲನಿಯ ನಿವಾಸಿಗಳಾಗಿದ್ದಾರೆ. ಐಟಿ ಕಂಪನಿಯೊಂದರಲ್ಲಿ ಮನೋಹರ್ ಟ್ರಾನ್ಸ್ಪೋರ್ಟ್ ಮೇಲ್ವಿಚಾರಕನಾಗಿ ಕಾರ್ಯನಿರ್ವಹಿಸುತ್ತಿದ್ದನು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಮನೋಹರ್ ತಾಯಿ ಹಾಗೂ ತಂದೆ ಇಬ್ಬರೂ ಎಚ್ಐವಿ ಸೋಂಕಿತರಾಗಿದ್ದರು. ಮನೋಹರ್ ತಂದೆ ಏಡ್ಸ್ ನಿಂದ ಸುಮಾರು 19 ವರ್ಷಗಳ ಹಿಂದೆ ಮೃತಪಟ್ಟಿದ್ದರು ಎಂದು ಮೇದಿಪಲ್ಲಿ ಸಹಾಯಕ ಪೊಲೀಸ್ ಆಯುಕ್ತ ಮೋಹನ್ ಕುಮಾರ್ ತಿಳಿಸಿದ್ದಾರೆ. ಮನೋಹರ್ ಹಾಗೂ ಯುವತಿಯ ಕುಟುಂಬದವರು ಅವರಿಬ್ಬರಿಗೂ ಮದುವೆ ಮಾಡುವ ಯೋಜನೆ ಹೊಂದಿದ್ದರು. ಮನೋಹರ್ ಪೋಷಕರಿಬ್ಬರಿಗೂ ಎಚ್ಐವಿ ಸೋಂಕು ಇರುವುದರಿಂದ, ಆತನಿಗೆ ಪರೀಕ್ಷೆಗೊಳಗಾಗುವಂತೆ ಯುವತಿಯ ಕುಟುಂಬದವರು ಸೂಚಿಸಿದ್ದರು. ಪರೀಕ್ಷೆಗೆ ಒಳಗಾದ ಮನೋಹರ್ಗೆ ಎಚ್ಐವಿ ಸೋಂಕು ಇರುವುದು ದೃಢಪಟ್ಟರೆ, ಯುವತಿಗೆ ಎಚ್ಐವಿ ಸೋಂಕು ಇಲ್ಲದಿರುವುದು ಪತ್ತೆಯಾಗಿತ್ತು ಎಂದು ಅವರು ಹೇಳಿದ್ದಾರೆ. ಬಳಿಕ, ಯುವತಿಯ ಪೋಷಕರು ತಮ್ಮ ಪುತ್ರಿಯನ್ನು ಆತನಿಗೆ ಮದುವೆ ಮಾಡಿಕೊಡಲು ನಿರಾಕರಿಸಿದರು. ಆಗ, ಯುವತಿಯೂ ಎಚ್ಐವಿ ಸೋಂಕಿಗೆ ಒಳಗಾದರೆ, ಅವರು ಯಾವುದೇ ಪರ್ಯಾಯವಿಲ್ಲದೆ ಮದುವೆಗೆ ಒಪ್ಪುತ್ತಾರೆ ಎಂದು ಮನೋಹರ್ ಭಾವಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಘಟನೆಯ ಕುರಿತು ತಕ್ಷಣವೇ ತನ್ನ ಕುಟುಂಬದವರಿಗೆ ತಿಳಿಸಲು ಯುವತಿ ಹಿಂಜರಿದಳು. ಆದರೆ, ಮರುದಿನ ಆಕೆಗೆ ಜ್ವರ ಕಾಣಿಸಿಕೊಂಡಿತು. ಆಕೆಯನ್ನು ಆಸ್ಪತ್ರೆಗೆ ಕರೆದೊಯ್ದಾಗ, ತೋಳಿನಲ್ಲಿ ರಕ್ತ ಹೆಪ್ಪುಗಟ್ಟಿರುವುದನ್ನು ವೈದ್ಯರು ಗಮನಿಸಿ ಪ್ರಶ್ನಿಸಿದರು. ಆಗ ಆಕೆ ಮನೋಹರ್ ತನ್ನ ಮೇಲೆ ಬಲವಂತವಾಗಿ ರಕ್ತದ ಸಿರಿಂಜ್ ಚುಚ್ಚಿದ ಘಟನೆವನ್ನು ಬಹಿರಂಗಪಡಿಸಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ಮನೋಹರ್ ವಿರುದ್ಧ ಹತ್ಯೆ ಯತ್ನದ ಆರೋಪ ಹೊರಿಸಲಾಗಿದ್ದು, ಮಾರ್ಚ್ 13ರಂದು ಆತನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ತಿಳಿದು ಬಂದಿದೆ.
ಕದನ ವಿರಾಮ ಮಾಡಿಕೊಳ್ಳುವುದಿಲ್ಲ, ಆತ್ಮರಕ್ಷಣೆಗೆ ಬದ್ಧ: ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಘ್ಚಿ
ಟೆಹ್ರಾನ್: ಅಮೆರಿಕದೊಂದಿಗೆ ನಡೆಯುತ್ತಿರುವ ಸಂಘರ್ಷದ ನಡುವೆಯೂ ಕದನ ವಿರಾಮವನ್ನು ಬಯಸುವುದಿಲ್ಲ ಮತ್ತು ಯಾವುದೇ ಮಾತುಕತೆಗೂ ಮುಂದಾಗುವುದಿಲ್ಲ ಎಂದು ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಘ್ಚಿ ಹೇಳಿದ್ದಾರೆ ಎಂದು Aljazeera ವರದಿ ಮಾಡಿದೆ. ಅಮೆರಿಕದ ‘CBS ನ್ಯೂಸ್’ಗೆ ನೀಡಿದ ಸಂದರ್ಶನದಲ್ಲಿ ಅಬ್ಬಾಸ್ ಅರಘ್ಚಿ ಅವರು, “ದೇಶವು ತನ್ನನ್ನು ತಾನು ರಕ್ಷಿಸಿಕೊಳ್ಳುವುದನ್ನು ನಿರಂತರವಾಗಿ ಮುಂದುವರಿಸಲಿದೆ. ನಾವು ಎಂದಿಗೂ ಕದನ ವಿರಾಮವನ್ನು ಕೇಳಿಲ್ಲ. ಮಾತುಕತೆಗೂ ಮುಂದಾಗಿಲ್ಲ. ಅಗತ್ಯವಿರುವಷ್ಟು ಕಾಲ ನಮ್ಮನ್ನು ನಾವು ರಕ್ಷಿಸಿಕೊಳ್ಳಲು ಸಿದ್ಧರಾಗಿದ್ದೇವೆ. ಈಗಲೂ ಅದನ್ನೇ ಮಾಡುತ್ತಿದ್ದೇವೆ. ಈ ಯುದ್ಧವು ಯಾವುದೇ ವಿಜಯವಿಲ್ಲದ, ಕಾನೂನುಬಾಹಿರ ಸಂಘರ್ಷ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅರ್ಥಮಾಡಿಕೊಳ್ಳುವವರೆಗೂ ನಾವು ಇದನ್ನು ಮುಂದುವರಿಸುತ್ತೇವೆ,” ಎಂದು ಹೇಳಿದರು. “ಅಧ್ಯಕ್ಷ ಟ್ರಂಪ್ ಮನರಂಜನೆಗಾಗಿ ಯುದ್ಧ ನಡೆಸುತ್ತಿರುವಂತಿದೆ. ಇದರ ಪರಿಣಾಮವಾಗಿ ನಿರಪರಾಧಿ ಜನರು ಸಾವಿಗೀಡಾಗುತ್ತಿದ್ದಾರೆ. ಇದು, ಅಧ್ಯಕ್ಷ ಟ್ರಂಪ್ ಮತ್ತು ಅಮೆರಿಕ ಹಡಗುಗಳನ್ನು ಗುರಿಯಾಗಿಸುವ ಕ್ರಮಗಳನ್ನು ಆಯ್ಕೆ ಮಾಡಿಕೊಂಡ ಯುದ್ಧ”, ಎಂದು ಆರೋಪಿಸಿದರು.
ವಿಜಯನಗರ | ಗ್ಯಾಸ್ ಪೈಪ್ಲೈನ್ ಕಾಮಗಾರಿಯಿಂದ 88 ವರ್ಷದ ಹಗರಿ ಸೇತುವೆಯಲ್ಲಿ ಬಿರುಕು : ಸಾರ್ವಜನಿಕರಲ್ಲಿ ಆತಂಕ
ವಿಜಯನಗರ / ಹಗರಿಬೊಮ್ಮನಹಳ್ಳಿ: ಪಟ್ಟಣದ ಹಗರಿ ನದಿಯ ಮೇಲಿರುವ ಐತಿಹಾಸಿಕ ಹಗರಿ ಸೇತುವೆಯಲ್ಲಿ ಗ್ಯಾಸ್ ಪೈಪ್ಲೈನ್ ಅಳವಡಿಸುವ ಕಾಮಗಾರಿಯ ವೇಳೆ ಹಲವು ಕಡೆ ಬಿರುಕುಗಳು ಕಾಣಿಸಿಕೊಂಡಿರುವುದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ಸುಮಾರು 275 ಮೀಟರ್ ಉದ್ದದ ಈ ಸೇತುವೆಯನ್ನು ಮದ್ರಾಸ್ ಸರ್ಕಾರದ ಅವಧಿಯಲ್ಲಿ ಮಂತ್ರಿಯಾಗಿದ್ದ ಗೋಪಾಲರೆಡ್ಡಿ ಅವರು 1938ರಲ್ಲಿ ಉದ್ಘಾಟಿಸಿದ್ದರು. ಆಗಿನಿಂದಲೂ ಸುಮಾರು 88 ವರ್ಷಗಳಿಂದ ಈ ಸೇತುವೆ ಸಾರ್ವಜನಿಕರ ಸಂಚಾರಕ್ಕೆ ಪ್ರಮುಖ ಮಾರ್ಗವಾಗಿ ಸೇವೆ ಸಲ್ಲಿಸುತ್ತಿತ್ತು. ಪ್ರತಿದಿನ ಸಾವಿರಾರು ವಾಹನಗಳು ಇದೇ ಸೇತುವೆ ಮೂಲಕ ಸಂಚರಿಸುತ್ತಿದ್ದವು. ಇತ್ತೀಚೆಗೆ ಗ್ಯಾಸ್ ಪೈಪ್ಲೈನ್ ಅಳವಡಿಸುವ ಕಾಮಗಾರಿ ಕೈಗೊಂಡಿದ್ದು, ಈ ವೇಳೆ ಸೇತುವೆಯ ಗೋಡೆ ಹಾಗೂ ಅಡಿಪಾಯ ಭಾಗಗಳಲ್ಲಿ ಹಲವು ಕಡೆ ಬಿರುಕುಗಳು ಕಾಣಿಸಿಕೊಂಡಿರುವುದು ಗಮನಕ್ಕೆ ಬಂದಿದೆ. ಇದರಿಂದ ಸೇತುವೆಯ ಸ್ಥಿರತೆ ಬಗ್ಗೆ ಸಾರ್ವಜನಿಕರಲ್ಲಿ ಆತಂಕ ವ್ಯಕ್ತವಾಗುತ್ತಿದೆ. ಸುರಕ್ಷತೆಯ ದೃಷ್ಟಿಯಿಂದ ಸೇತುವೆಯ ಎರಡೂ ಬದಿಗಳಲ್ಲಿ ತಡೆಗಳನ್ನು ನಿರ್ಮಿಸಿ ಸಂಚಾರವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದೆ. ಇದರಿಂದ ಸ್ಥಳೀಯರು ಹಾಗೂ ವಾಹನ ಸವಾರರು ಪರ್ಯಾಯ ಮಾರ್ಗಗಳನ್ನು ಬಳಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಗೂಗಲ್ ಮ್ಯಾಪ್ನಲ್ಲಿಯೂ ಇದೇ ಮಾರ್ಗ ತೋರಿಸಲಾಗುತ್ತಿರುವುದರಿಂದ ಜನರು ಇದೇ ಸೇತುವೆಯನ್ನು ಅವಲಂಬಿಸಿಕೊಂಡಿದ್ದರು. ಸ್ಥಳೀಯರು ಹಾಗೂ ಸಾರ್ವಜನಿಕರು ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಸೇತುವೆಯ ಸ್ಥಿತಿಯನ್ನು ತಕ್ಷಣ ಪರಿಶೀಲಿಸಿ ಅಗತ್ಯ ದುರಸ್ತಿ ಕಾಮಗಾರಿಗಳನ್ನು ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಹಲವು ದಶಕಗಳಿಂದ ಜನರಿಗೆ ಸೇವೆ ಸಲ್ಲಿಸುತ್ತಿರುವ ಈ ಐತಿಹಾಸಿಕ ಸೇತುವೆಯನ್ನು ಸಂರಕ್ಷಿಸುವಂತೆ ಸಾರ್ವಜನಿಕರು ಮನವಿ ಮಾಡಿದ್ದಾರೆ.
ಯುದ್ಧವನ್ನು ಸಂಪೂರ್ಣವಾಗಿ ಕೊನೆಗೊಳಿಸುವ ಯಾವುದೇ ಉಪಕ್ರಮಗಳಿಗೆ ಸ್ವಾಗತ: ಇರಾನ್
ಟೆಹ್ರಾನ್, ಮಾ.15: ಯುದ್ಧದ ಸಂಪೂರ್ಣ ಅಂತ್ಯಕ್ಕೆ ಕಾರಣವಾಗುವ ಯಾವುದೇ ಉಪಕ್ರಮವನ್ನು ಇರಾನ್ ಸ್ವಾಗತಿಸುತ್ತದೆ ಎಂದು ಇರಾನ್ನ ವಿದೇಶಾಂಗ ಸಚಿವ ಅಬ್ಬಾಸ್ ಅರಾಘ್ಚಿ ರವಿವಾರ ಹೇಳಿರುವುದಾಗಿ ಮೂಲಗಳನ್ನು ಉಲ್ಲೇಖಿಸಿ ರಾಯ್ಟರ್ಸ್ ವರದಿ ಮಾಡಿದೆ. ಇರಾನ್ ವಿವಿಧ ಗಲ್ಫ್ ದೇಶಗಳೊಂದಿಗೆ ಸಂವಹನ ನಡೆಸುತ್ತಿದೆ ಮತ್ತು ಇರಾನ್ ಮೇಲಿನ ಅಮೆರಿಕ-ಇಸ್ರೇಲ್ ಯುದ್ಧಕ್ಕೆ ಸಂಪೂರ್ಣ ಅಂತ್ಯವನ್ನು ಖಾತರಿಪಡಿಸುವ ಯಾವುದೇ ಉಪಕ್ರಮವನ್ನು ಸ್ವಾಗತಿಸುತ್ತದೆ. ಪ್ರಾದೇಶಿಕ ಸ್ಥಿರತೆಗೆ ಇರಾನ್ನ ಬದ್ಧತೆಯ ಪ್ರತೀಕವಾಗಿ ಶಾಂತಿ ಪ್ರಸ್ತಾಪವನ್ನು ಮುಂದಿರಿಸಿರುವುದಾಗಿ ಅರಾಘ್ಚಿ ಪ್ರತಿಪಾದಿಸಿದ್ದಾರೆ. ಇರಾನ್ ಈ ಪ್ರದೇಶದಲ್ಲಿ ನಾಗರಿಕ ಸ್ಥಳಗಳ ಮೇಲೆ ಪ್ರಹಾರ ಮಾಡಿದೆ ಎಂಬ ಆರೋಪವನ್ನು ತಿರಸ್ಕರಿಸಿದ ಅವರು, ಕೆಲವು ಅರಬ್ ರಾಷ್ಟ್ರಗಳಲ್ಲಿ ನಾಗರಿಕ ಗುರಿಗಳ ಮೇಲಿನ ದಾಳಿಗಳ ಹಿಂದೆ ಇಸ್ರೇಲ್ ಇರುವ ಸಾಧ್ಯತೆಯಿದೆ. ಇಂತಹ ದಾಳಿಗಳಿಗೆ ಹೊಣೆಗಾರಿಕೆಯನ್ನು ಗುರುತಿಸಲು ನೆರೆಹೊರೆಯವರೊಂದಿಗೆ ಸಮಿತಿಯನ್ನು ರಚಿಸಲು ಇರಾನ್ ಸಿದ್ಧವಿದೆ ಎಂದು ಹೇಳಿದ್ದಾರೆ.
ಯುವತಿಗೆ ಬೆದರಿಸಿ 14 ಲಕ್ಷ ರೂ. ಪಡೆದ ಯುವಕ: ಪ್ರಕರಣ ದಾಖಲು
ಉಡುಪಿ, ಮಾ.15: ಯುವತಿಗೆ ಬೆದರಿಸಿ 14ಲಕ್ಷ ರೂ. ಹಣ ಪಡೆದು ಕೊಂಡಿರುವ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಾರ್ಪಳ್ಳಿಯ ಮಹಿಮಾ(22) ಎಂಬವರಿಗೆ ಶರತ್ ಎಂಬಾತ ಬೇರೆ ಬೇರೆ ಸಮಸ್ಯೆಗಳನ್ನು ಹೇಳಿಕೊಂಡು ಹಣವನ್ನು ಪಡೆದುಕೊಳ್ಳುತ್ತಿದ್ದನು. ಮಹಿಮಾ ಹಣವನ್ನು ವಾಪಸ್ಸು ಕೇಳಿದಾಗ ನೆಪ ಹೇಳಿ ತಪ್ಪಿಸಿಕೊಳ್ಳುತ್ತಿದ್ದು, 2026ರ ಫೆಬ್ರವರಿಯಲ್ಲಿ ಶರತ್ ಕರೆ ಮಾಡಿ ತಂದೆಗೆ ಹುಷಾರಿಲ್ಲ 15,00,000ರೂ. ಹಣ ಕೊಡುವಂತೆ ಕೇಳಿದ್ದನು. ಅದಕ್ಕೆ ಶರತ್, ಆಕೆಗೆ ಅವಾಚ್ಯ ಶಬ್ದಗಳಿಂದ ಬೈದು ನೀನು ಹಣ ಕೊಡದಿದ್ದರೆ ಜೀವ ಸಹಿತ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದ ಎನ್ನಲಾಗಿದೆ. ಇದರಿಂದ ಭೀತಿಗೊಂಡ ಮಹಿಮಾ ಆತನಿಗೆ 14 ಲಕ್ಷ ರೂ. ಹಣವನ್ನು ಒತ್ತಾಯಪೂರ್ವಕವಾಗಿ ನೀಡಿದ್ದರು.
ಹಾರ್ಮುಝ್ ಜಲಸಂಧಿಯಲ್ಲಿ ಉದ್ವಿಗ್ನತೆ | ಕಾಯುತ್ತಿರುವ ಸಾವಿರಕ್ಕೂ ಹೆಚ್ಚಿನ ಹಡಗುಗಳು; ಇಂಧನ ಮಾರುಕಟ್ಟೆ ಆತಂಕದಲ್ಲಿ
ಟೆಹ್ರಾನ್: ಪಶ್ಚಿಮ ಏಷ್ಯಾದಲ್ಲಿ ಹೆಚ್ಚುತ್ತಿರುವ ಸಂಘರ್ಷದ ನಡುವೆಯೇ ಜಾಗತಿಕ ವಾಣಿಜ್ಯಕ್ಕೆ ಅತ್ಯಂತ ಪ್ರಮುಖವಾದ ಹಾರ್ಮುಝ್ ಜಲಸಂಧಿಯಲ್ಲಿ ಉದ್ವಿಗ್ನತೆ ತಾರಕಕ್ಕೇರಿದೆ. ಜಲಮಾರ್ಗವನ್ನು ದಾಟಲು ಸುಮಾರು 1,000 ಹಡಗುಗಳು ಕಾಯುತ್ತಿದ್ದು, ಇವುಗಳಲ್ಲಿ 200ಕ್ಕೂ ಹೆಚ್ಚು ತೈಲ ಟ್ಯಾಂಕರ್ ಗಳಿರುವುದು ಜಾಗತಿಕ ಇಂಧನ ಸರಬರಾಜಿನ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ ಎಂದು Aljazeera ವರದಿ ಮಾಡಿದೆ. ತೈಲ ಸರಬರಾಜಿನ ಅಡಚಣೆಯಿಂದ ಜಾಗತಿಕ ಮಾರುಕಟ್ಟೆಗಳಲ್ಲಿ ಬೆಲೆಗಳು ಏರಿಕೆಯಾಗುತ್ತಿದ್ದು, ಅನೇಕ ದೇಶಗಳಲ್ಲಿ ಇಂಧನ ವೆಚ್ಚಗಳು ಹೆಚ್ಚಾಗುತ್ತಿವೆ. ಇರಾನ್ ಮಿಲಿಟರಿಯ ಬಿಗಿ ನಿಯಂತ್ರಣ ಹಾರ್ಮುಝ್ ಜಲಸಂಧಿಯ ಮೇಲಿರುವುದರಿಂದ ತೈಲ ಟ್ಯಾಂಕರ್ ಗಳು ಈ ದಾರಿಯಲ್ಲಿ ಸಾಗಲು ಹಿಂದೇಟು ಹಾಕುತ್ತಿವೆ. ಜಲಸಂಧಿಯ ಪ್ರವೇಶದ್ವಾರವನ್ನು ತಲುಪಲು ಅಥವಾ ಅದನ್ನು ದಾಟಲು ಯತ್ನಿಸುವ ಹಡಗುಗಳಿಗೆ ಇರಾನ್ ಮಿಲಿಟರಿಯಿಂದ ನಿರಂತರ ಬೆದರಿಕೆಗಳು ಎದುರಾಗುತ್ತಿವೆ. ಕೆಲವು ದಿನಗಳ ಹಿಂದೆ ಒಂದು ಹಡಗು ಈ ಪ್ರದೇಶದಲ್ಲಿ ಬೆಂಕಿಗಾಹುತಿಯಾಗಿರುವುದು ಕಂಡುಬಂದಿತ್ತು. ಆ ದಾಳಿ ಇರಾನ್ ನಡೆಸಿದೆಯೇ ಎಂಬುದು ಸ್ಪಷ್ಟವಾಗದಿದ್ದರೂ, ಇತ್ತೀಚಿನ ಬೆಳವಣಿಗೆಗಳನ್ನು ಗಮನಿಸಿದರೆ ಅದು ಇರಾನ್ ನಡೆಸಿರಬಹುದು ಎನ್ನಲಾಗಿದೆ. ಈ ನಡುವೆ, ಅಮೆರಿಕ ಹಾಗೂ ಅದರೊಂದಿಗೆ ಸಂಬಂಧ ಹೊಂದಿರುವ ಹಡಗುಗಳಿಗೆ ಜಲಮಾರ್ಗವನ್ನು ಬಳಸಲು ಅವಕಾಶ ನೀಡುವುದಿಲ್ಲ ಎಂದು ಇರಾನ್ ಘೋಷಿಸಿದೆ. ಆದರೆ ಅಮರಿಕಕ್ಕೆ ಸಂಬಂಧಿಸದ ಹಡಗುಗಳೂ ದಾಳಿಗೆ ಗುರಿಯಾಗುತ್ತಿರುವುದು ಪರಿಸ್ಥಿತಿಯನ್ನು ಮತ್ತಷ್ಟು ಗಂಭೀರಗೊಳಿಸಿದೆ. ಇತ್ತೀಚೆಗೆ ಥಾಯ್ಲೆಂಡ್ ಧ್ವಜ ಹೊಂದಿದ್ದ ಒಂದು ಹಡಗು ಜಲಸಂಧಿಯನ್ನು ದಾಟಲು ಯತ್ನಿಸಿದಾಗ ಅದರ ಮೇಲೆ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಗುರಿಯಾಗಿಸಲಾಗಿತ್ತು. ದಾಳಿಯಿಂದ ಹಡಗು ಗಂಭೀರವಾಗಿ ಹಾನಿಗೊಂಡಿದ್ದು, ಸುಮಾರು 20 ಸಿಬ್ಬಂದಿಯನ್ನು ಒಮಾನಿನ ನೌಕಾಪಡೆ ರಕ್ಷಿಸಿದೆ. ಇನ್ನೂ ಮೂವರು ಸಿಬ್ಬಂದಿ ಸಮುದ್ರದಲ್ಲಿ ಕಾಣೆಯಾಗಿರುವ ಸಾಧ್ಯತೆ ವ್ಯಕ್ತವಾಗಿದೆ. ಈ ಬೆಳವಣಿಗೆಗಳು ಜಾಗತಿಕ ವಾಣಿಜ್ಯ ಮಾರ್ಗಗಳ ಭದ್ರತೆ ಹಾಗೂ ಇಂಧನ ಸರಬರಾಜಿನ ಸ್ಥಿರತೆಯ ಬಗ್ಗೆ ಆತಂಕವನ್ನು ಹೆಚ್ಚಿಸಿವೆ.
ಹೊಟೇಲ್ಗಳಿಗೆ ಎಲ್ಪಿಜಿ ಪೂರೈಸುವ ಕುರಿತು ಚರ್ಚೆ : ಸಚಿವ ಕೆ.ಎಚ್.ಮುನಿಯಪ್ಪ
ಬೆಂಗಳೂರು : ವಾಣಿಜ್ಯ ಎಲ್ಪಿಜಿ ಕೊರತೆಯಿಂದಾಗಿ ನಗರದಲ್ಲಿ ಹಲವೆಡೆ ಹೊಟೇಲ್ಗಳು ಮುಚ್ಚಲ್ಪಟ್ಟಿವೆ. ಆದುದರಿಂದ, ಸ್ವಲ್ಪ ಮಟ್ಟಿಗೆ ಹೋಟೆಲ್ಗಳಿಗೆ ಎಲ್ಪಿಜಿ ಪೂರೈಸುವ ಕುರಿತು ಸರಕಾರದ ಮಟ್ಟದಲ್ಲಿ ಚರ್ಚೆ ನಡೆಸಲಾಗುವುದು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್.ಮುನಿಯಪ್ಪ ತಿಳಿಸಿದರು. ರವಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯ ಕಾರ್ಯದರ್ಶಿ ನೇತೃತ್ವದಲ್ಲಿ ಸೋಮವಾರ ಸಂಜೆ 4 ಗಂಟೆಗೆ ವಿಧಾನಸೌಧದಲ್ಲಿ ಅನಿಲ ಪೂರೈಕೆ ಮಾಡುವ ತೈಲ ಕಂಪೆನಿಗಳ ಪ್ರತಿನಿಧಿಗಳೊಂದಿಗೆ ಸಭೆ ನಡೆಯಲಿದೆ. ಆನಂತರ ಮುಂದಿನ ನಿರ್ಧಾರವನ್ನು ತಿಳಿಸಲಾಗುವುದು ಎಂದು ಹೇಳಿದರು. ಎರಡು ಕಾರ್ಗೋ ಹಡಗುಗಳು ಭಾರತಕ್ಕೆ ಬಂದಿರುವುದರಿಂದ ಎಲ್ಪಿಜಿ ಸಮಸ್ಯೆ ಕ್ರಮೇಣ ಬಗೆಹರಿಯುವ ಸಾಧ್ಯತೆಯಿದೆ. ಇರಾನ್, ಅಮೆರಿಕ-ಇಸ್ರೇಲ್ ನಡುವಿನ ಯುದ್ಧ ಇನ್ನೂ ನಿಂತಿಲ್ಲ. ಆದುದರಿಂದ, ಎಲ್ಪಿಜಿಯನ್ನು ಮಿತವಾಗಿ ಬಳಸುವುದು ಉತ್ತಮ ಎಂದು ಮುನಿಯಪ್ಪ ಸಲಹೆ ನೀಡಿದರು.
ಉಡುಪಿ, ಮಾ.15: ಮಾರ್ಪಳ್ಳಿ ಶ್ರೀಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಸದಸ್ಯ ಎಂ.ಲಕ್ಷ್ಮೀನಾರಾಯಣ ರಾವ್(58) ಶನಿವಾರ ರಾತ್ರಿ ಹೃದಯಾಘಾತದಿಂದ ನಿಧನರಾದರು. ಮಹಾರಾಷ್ಟ್ರ ರಾಜ್ಯದ ಪೂನಾದಲ್ಲಿರುವ ತನ್ನ ಮಗಳ ಮನೆಯಲ್ಲಿದ್ದ ಇವರು, ಕುಸಿದು ಬಿದ್ದು ಕೊನೆಯುಸಿರೆಳೆದಿ ದ್ದಾರೆ. ಮೃತರು ಪತ್ನಿ, ಓರ್ವ ಪುತ್ರ, ಓರ್ವ ಪುತ್ರಿ, ತಂದೆ, ತಾಯಿ ಹಾಗೂ ಸಹೋದರನನ್ನು ಅಗಲಿದ್ದಾರೆ.
ಕಲಾವಿದರು, ಸಾಹಿತಿಗಳು, ಪತ್ರಕರ್ತರು ಸದಾ ವಿರೋಧಪಕ್ಷವಾಗಿ ಇರಬೇಕು : ಪ್ರಕಾಶ್ ರಾಜ್
ಡಾ.ನಟರಾಜ್ ಹುಳಿಯಾರ್ ರಚಿತ ‘ಪಿ.ಲಂಕೇಶ್ ಅವರ ಟೀಕೆ ಟಿಪ್ಪಣಿ’ 3 ಭಾಗಗಳ ಪುಸ್ತಕ, ಲಂಕೇಶ್ ಕತೆಗಳ ಧ್ವನಿಸುರುಳಿ ಲೋಕಾರ್ಪಣೆ
ವಸತಿ ಗೃಹದಲ್ಲಿ ವ್ಯಕ್ತಿ ಆತ್ಮಹತ್ಯೆ
ಉಡುಪಿ, ಮಾ.15; ನಗರದ ಹಳೆ ಸರಕಾರಿ ಬಸ್ಸು ನಿಲ್ದಾಣದ ಸನಿಹದ ವಸತಿ ಗೃಹದಲ್ಲಿ ಕೊಠಡಿ ಪಡೆದುಕೊಂಡಿದ್ದ ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ರವಿವಾರ ನಡೆದಿದೆ. ಮೃತರನ್ನು ಪೂತ್ತೂರು ನೆಲ್ಯಾಡಿ ನಿವಾಸಿ ಜಿನ್ಸನ್ ಪಿ.ಎಂ. ಎಂದು ಗುರುತಿಸಲಾಗಿದೆ. ವೈಯಕ್ತಿಕ ಕಾರಣದಿಂದ ಮನನೊಂದ ಫ್ಯಾನಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನಗರ ಪೋಲಿಸ್ ಠಾಣೆಯ ಠಾಣಾಧಿಕಾರಿ ಭರತೇಶ್, ಎಸ್ಸೈ ನಾರಾಯಣ, ಎಎಸ್ಸೈ ವಿಜಯ್ ಘಟನಾ ಸ್ಥಳದಲ್ಲಿದ್ದು, ಮಹಜರು ಪ್ರಕ್ರಿಯೆ ನಡೆಸಿದರು. ಸಮಾಜ ಸೇವಕ ನಿತ್ಯಾನಂದ ಒಳಕಾಡು ಶವವನ್ನು ಜಿಲ್ಲಾಸ್ಪತ್ರೆಯ ಮರಣೋತ್ತರ ಪರೀಕ್ಷಾ ಕೇಂದ್ರಕ್ಕೆ ಸಾಗಿಸಲು ನೆರವಾದರು.
ಅರಾವಳಿ ಬೆಟ್ಟಗಳನ್ನು ವ್ಯಾಖ್ಯಾನಿಸಲು ರಚಿತ ತಜ್ಞರ ಸಮಿತಿಯ 10 ಸದಸ್ಯರ ಹೆಸರುಗಳಿಗೆ ಪರಿಸರ ಸಚಿವಾಲಯದ ಅನುಮೋದನೆ
ಹೊಸದಿಲ್ಲಿ,ಮಾ.15: ಅರಾವಳಿ ಬೆಟ್ಟಗಳು ಮತ್ತು ಶ್ರೇಣಿಗಳಿಗೆ ಏಕರೂಪ ವ್ಯಾಖ್ಯಾನವನ್ನು ನೀಡುವ ಕಾರ್ಯವನ್ನು ವಹಿಸಲಾಗಿರುವ ಕೇಂದ್ರೀಯ ಉನ್ನತಾಧಿಕಾರ ಸಮಿತಿಯ (ಸಿಇಸಿ) 10 ಸದಸ್ಯರ ಉನ್ನತಾಧಿಕಾರ ತಜ್ಞ ಸಮಿತಿಗೆ ತನ್ನ ಆಕ್ಷೇಪವಿಲ್ಲ ಎಂದು ಕೇಂದ್ರ ಪರಿಸರ ಸಚಿವಾಲಯವು ಸರ್ವೋಚ್ಚ ನ್ಯಾಯಾಲಯಕ್ಕೆ ತಿಳಿಸಿದೆ. ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯವು ಸರ್ವೋಚ್ಚ ನ್ಯಾಯಾಲಯಕ್ಕೆ ಸಲ್ಲಿಸಿರುವ ಅಫಿಡವಿಟ್ನಲ್ಲಿ ಉನ್ನತಾಧಿಕಾರ ತಜ್ಞ ಸಮಿತಿಗೆ ಸೂಚಿಸಲಾಗಿರುವ ಹೆಸರುಗಳನ್ನು ಅನುಮೋದಿಸಿದೆ. ಸಮಿತಿಯು ಭಾರತೀಯ ಅರಣ್ಯ ಸಮೀಕ್ಷೆ (ಎಫ್ಎಸ್), ಭಾರತೀಯ ಭೂವೈಜ್ಞಾನಿಕ ಸಮೀಕ್ಷೆ (ಜಿಎಸ್ಐ) ಮತ್ತು ಭಾರತೀಯ ಸಮೀಕ್ಷೆಯ ಹಾಲಿ ಮತ್ತು ನಿವೃತ್ತ ಅಧಿಕಾರಿಗಳನ್ನು ಒಳಗೊಂಡಿದೆ. ಈ ಹಂತದಲ್ಲಿ ಸಮಿತಿಯಲ್ಲಿ ಸೇರ್ಪಡೆಗೆ ಯಾವುದೇ ಹೆಚ್ಚುವರಿ ಹೆಸರುಗಳನ್ನು ತಾನು ಸೂಚಿಸುವುದಿಲ್ಲ ಎಂದು ಸಚಿವಾಲಯವು ಅಫಿಡವಿತ್ನಲ್ಲಿ ತಿಳಿಸಿದೆ. ಭಾರತೀಯ ಅರಣ್ಯ ಸಂಶೋಧನೆ ಮತ್ತು ಶಿಕ್ಷಣ ಮಂಡಳಿಯ ಮಹಾ ನಿರ್ದೇಶಕಿ ಕಂಚನ ದೇವಿ ಅವರು ಸಮಿತಿಯ ನೇತೃತ್ವ ವಹಿಸಲಿದ್ದಾರೆ. 1991ರ ಮಧ್ಯಪ್ರದೇಶ ಕೇಡರ್ನ ಐಎಫ್ಎಸ್ ಅಧಿಕಾರಿಯಾಗಿರುವ ದೇವಿ ಅರಣ್ಯ ಶಿಕ್ಷಣ ಮತ್ತು ಸಂಶೋಧನೆ, ವನ್ಯಜೀವಿ ಮತ್ತು ಅರಣ್ಯ ನೀತಿ ಹಾಗೂ ಸಾಂಸ್ಥಿಕ ನಾಯಕತ್ವದಲ್ಲಿ ಮೂರು ದಶಕಗಳಿಗೂ ಹೆಚ್ಚಿನ ಅನುಭವವನ್ನು ಹೊಂದಿದ್ದಾರೆ ಎಂದು ಸಿಇಸಿ ಸರ್ವೋಚ್ಚ ನ್ಯಾಯಾಲಯಕ್ಕೆ ಸಲ್ಲಿಸಿರುವ ತನ್ನ ವರದಿಯಲ್ಲಿ ತಿಳಿಸಿದೆ. ಸಚಿವಾಲಯವು ತನ್ನ ಅಫಿಡವಿತ್ನಲ್ಲಿ ಅರಾವಳಿ ಬೆಟ್ಟಗಳು ಮತ್ತು ಶ್ರೇಣಿಗಳಿಗೆ ಸಂಬಂಧಿಸಿದಂತೆ ಪಾಲುದಾರರೊಂದಿಗೆ ಸಮಾಲೋಚನೆ ಸೇರಿದಂತೆ ಸಂಬಂಧಿತ ಕ್ಷೇತ್ರಗಳ ವಿಷಯ ತಜ್ಞರ ಗುಂಪಿನಿಂದ ಸಮಗ್ರ ಮತ್ತು ವಿಶ್ಲೇಷಣಾತ್ಮಕ ಪರಿಶೀಲನೆಯ ಅಗತ್ಯವಿದೆ ಎಂದು ತಿಳಿಸಿದೆ. ಸರ್ವೋಚ್ಚ ನ್ಯಾಯಾಲಯವು ಫೆ.26ರಂದು ಅರಾವಳಿ ಬೆಟ್ಟಗಳು ಮತ್ತು ಶ್ರೇಣಿಗಳನ್ನು ವ್ಯಾಖ್ಯಾನಿಸುವ ಸಮಿತಿಗೆ ವಿಷಯ ತಜ್ಞರ ಹೆಸರುಗಳನ್ನು ಸೂಚಿಸುವಂತೆ ಪರಿಸರ ಸಚಿವಾಲಯ ಮತ್ತು ಸಂಬಂಧಿಸಿದ ಇತರರಿಗೆ ಸೂಚಿಸಿತ್ತು ಮತ್ತು ಈ ಪ್ರದೇಶದಲ್ಲಿ ಕಾನೂನುಬದ್ಧ ಗಣಿಗಾರಿಕೆಗೆ ಮಾತ್ರ ಅವಕಾಶ ನೀಡಲಾಗುವುದು ಎಂದು ಹೇಳಿತ್ತು.
ಮಣಿಪಾಲ ಕೈಗಾರಿಕಾ ಪ್ರದೇಶದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ
ಮಣಿಪಾಲ, ಮಾ.15: ಮಣಿಪಾಲ ಕೈಗಾರಿಕಾ ಪ್ರದೇಶದಲ್ಲಿ ಸುಮಾರು 3 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಗೊಳ್ಳಲಿರುವ ಮುಖ್ಯ ರಸ್ತೆ ಕಾಮಗಾರಿಗೆ ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ಗುದ್ದಲಿಪೂಜೆ ನೆರವೇರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಯಶ್ಪಾಲ್ ಸುವರ್ಣ, ಮಣಿಪಾಲ ಕೈಗಾರಿಕಾ ಪ್ರದೇಶದ ರಸ್ತೆ ಸಂಪೂರ್ಣ ಹದಗೆಟ್ಟು ಈ ಭಾಗದಲ್ಲಿ ಕಾರ್ಯಾಚರಿಸುತ್ತಿರುವ ಕೈಗಾರಿಕೆಗಳಿಗೆ ಹಾಗೂ ದಿನಂಪ್ರತಿ ಸಂಚರಿಸುವ ಸಾರ್ವಜನಿಕರಿಗೆ ತೀವ್ರ ಸಮಸ್ಯೆಗೆ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಉಡುಪಿ ನಗರಸಭೆಯ ಮೂಲಕ 40 ಲಕ್ಷ ಅನುದಾನ ಒದಗಿಸಿ, ಸ್ಥಳೀಯ ಕಂಪೆನಿಗಳ ಸಿಎಸ್ಆರ್ ಅನುದಾನದ ಮೂಲಕ ಒಟ್ಟು 3 ಕೋಟಿ ವೆಚ್ಚದಲ್ಲಿ ರಸ್ತೆ ಅಭಿವೃದ್ಧಿಗೆ ಗುದ್ದಲಿ ಪೂಜೆ ನೆರವೇರಿಸಿ ಚಾಲನೆ ನೀಡಲಾಗಿದೆ ಎಂದರು. ಜಿಲ್ಲಾ ಸಣ್ಣ ಕೈಗಾರಿಕೆ ಸಂಘದ ಅಧ್ಯಕ್ಷ ಮಟ್ಟಾರು ವಸಂತ ಕಿಣಿ ಮಾತನಾಡಿದರು. ಈ ಸಂದರ್ಭದಲ್ಲಿ ಉಡುಪಿ ನಗರಸಭೆ ಮಾಜಿ ಅಧ್ಯಕ್ಷ ಪ್ರಭಾಕರ ಪೂಜಾರಿ, ಮಾಜಿ ಸದಸ್ಯರಾದ ಕಲ್ಪನಾ ಸುಧಾಮ, ನರಸಿಂಹ ನಾಯಕ್, ಟಿ.ಜಿ.ಹೆಗ್ಡೆ, ಹರೀಶ್ ಶೆಟ್ಟಿ, ಜಿಲ್ಲಾ ಸಣ್ಣಾ ಕೈಗಾರಿಕೆಗಳ ಸಂಘದ ಪದಾಧಿಕಾರಿಗಳಾದ ವಿಶ್ವನಾಥ ಭಟ್, ಚಿತ್ರ ರಂಜನ್ ಭಟ್, ವಲ್ಲಭ್ ಭಟ್, ಉಡುಪಿ ನಗರ ಬಿಜೆಪಿ ಅಧ್ಯಕ್ಷ ದಿನೇಶ್ ಅಮೀನ್, ಪ್ರಮುಖರಾದ ಕೃಷ್ಣ ಕುಲಾಲ್, ಸದಾನಂದ ಪ್ರಭು, ನಿತಿನ್ ಪೈ, ಪೃಥ್ವಿರಾಜ್ ಹಾಗೂ ವಿವಿಧ ಕಂಪೆನಿಗಳ ಪ್ರಮುಖರು ಉಪಸ್ಥಿತರಿದ್ದರು.
LPG ಸಿಲಿಂಡರ್ ಸಮಸ್ಯೆಯಾದ್ರೆ ಕಾಲ್ ಮಾಡಿ; ಸಹಾಯವಾಣಿ ಆರಂಭಿಸಿದ ಕರ್ನಾಟಕ ಆಹಾರ ಇಲಾಖೆ
ಎಲ್ಪಿಸಿ ಸಿಲಿಂಡರ್ ಸಮಸ್ಯೆಗೆ ಸಂಬಂಧಿಸಿದಂತೆ ಕರ್ನಾಟಕ ಆಹಾರ ಇಲಾಖೆಯು ಸಹಾಯವಾಣಿ ಆರಂಭಿಸಿದೆ. ನಾಗರೀಕರು ಯಾವುದೇ ದೂರುಗಳಿದ್ದರೂ ಕರೆ ಮಾಡಿ ಸಲ್ಲಿಕೆ ಮಾಡಬಹುದು ಎಂದು ಆಹಾರ ಇಲಾಖೆಯ ಹೆಚ್ಚುವರಿ ನಿರ್ದೇಶಕರು ತಿಳಿದ್ದಾರೆ. ದುಪಟ್ಟು ಬೆಲೆಗೆ ಸಿಲಿಂಡರ್ ಮಾರಾಟ ಮಾಡಿದ್ರೆ ಕ್ರಮ ಕೈಗೊಳ್ಳಲು ಆಹಾರ ಇಲಾಖೆಯು ಮುಂದಾಗಿದೆ. ಇನ್ನು ಕರ್ನಾಟಕದಲ್ಲಿ ಕಳೆದ ಕೆಲ ದಿನಗಳಿಂದ 11 ಲಕ್ಷ ಗೃಹಬಳಕೆಯ, 20 ಸಾವಿರ ವಾಣಿಜ್ಯ ಬಳಕೆಯ ಸಿಲಿಂಡರ್ ಹಂಚಿಕೆ ಮಾಡಲಾಗಿದೆ.
ಇಂಡಿಯನ್ ವೆಲ್ಸ್ ಓಪನ್ ಟೆನಿಸ್ ಪುರುಷರ ಸಿಂಗಲ್ಸ್ ಫೈನಲ್ | ಮೆಡ್ವೆಡೆವ್- ಸಿನ್ನರ್ ಮುಖಾಮುಖಿ
ಇಂಡಿಯನ್ ವೆಲ್ಸ್ (ಕ್ಯಾಲಿಫೋರ್ನಿಯ), ಮಾ. 15: ಇಂಡಿಯನ್ ವೆಲ್ಸ್ ಓಪನ್ ಟೆನಿಸ್ ಪಂದ್ಯಾವಳಿಯಲ್ಲಿ ಶನಿವಾರ ರಶ್ಯದ ಡನೀಲ್ ಮೆಡ್ವೆಡೆವ್ ಸ್ಪೇನ್ನ ಅಗ್ರ ಶ್ರೇಯಾಂಕದ ಕಾರ್ಲೋಸ್ ಅಲ್ಕರಾಝ್ಗೆ ವರ್ಷದ ಮೊದಲ ಸೋಲುಣಿಸಿ ಪುರುಷರ ಸಿಂಗಲ್ಸ್ ಫೈನಲ್ ತಲುಪಿದ್ದಾರೆ. ಫೈನಲ್ನಲ್ಲಿ ಅವರು ಇಟಲಿಯ ಎರಡನೇ ಶ್ರೇಯಾಂಕದ ಜನ್ನಿಕ್ ಸಿನ್ನರ್ರನ್ನು ಎದುರಿಸಲಿದ್ದಾರೆ. ಸೆಮಿಫೈನಲ್ನಲ್ಲಿ 11ನೇ ಶ್ರೇಯಾಂಕದ ಮೆಡ್ವೆಡೆವ್, ಕಾರ್ಲೋಸ್ ಅಲ್ಕರಾಝ್ರನ್ನು 6-3, 7-6(3) ಸೆಟ್ಗಳಿಂದ ಸೋಲಿಸಿದರು. ಈ ವರ್ಷ ಈ ಪಂದ್ಯಕ್ಕೆ ಮುನ್ನ, ಅಲ್ಕರಾಝ್ ನಿರಂತರವಾಗಿ 16 ಪಂದ್ಯಗಳನ್ನು ಗೆದ್ದಿದ್ದರು. ಈ ಅವಧಿಯಲ್ಲಿ ಅವರು ಆಸ್ಟ್ರೇಲಿಯನ್ ಓಪನ್ ಮತ್ತು ಖತರ್ ಓಪನ್ ಪ್ರಶಸ್ತಿಗಳನ್ನು ತನ್ನ ಮುಡಿಗೆ ಏರಿಸಿಕೊಂಡಿದ್ದರು. ಆದರೆ, ಅಲ್ಕರಾಝ್-ಸಿನ್ನರ್ ಫೈನಲ್ ಸಾಧ್ಯತೆಯನ್ನು ಮೆಡ್ವೆಡೆವ್ ತಳ್ಳಿಹಾಕಿದರು. ಅಲ್ಕರಾಝ್ ವಿರುದ್ಧದ ಕೊನೆಯ ನಾಲ್ಕು ಮುಖಾಮುಖಿಗಳಲ್ಲಿ ಮೆಡ್ವೆಡೆವ್ ಸೋಲನುಭವಿಸಿದ್ದರು. ಇದರಲ್ಲಿ 2024ರಲ್ಲಿ ಇಂಡಿಯನ್ ವೆಲ್ಸ್ ಫೈನಲ್ನಲ್ಲಿ ಅನುಭವಿಸಿದ ಸೋಲು ಕೂಡ ಸೇರಿದೆ. 2023ರ ಯುಎಸ್ ಓಪನ್ ಸೆಮಿಫೈನಲ್ ಬಳಿಕ, ಇದು ಅಲ್ಕರಾಝ್ ವಿರುದ್ಧ ಮೆಡ್ವೆಡೆವ್ರ ಮೊದಲ ಗೆಲುವಾಗಿದೆ. ಇನ್ನೊಂದು ಸೆಮಿಫೈನಲ್ನಲ್ಲಿ, ಜನ್ನಿಕ್ ಸಿನ್ನರ್ ಜರ್ಮನಿಯ ನಾಲ್ಕನೇ ಶ್ರೇಯಾಂಕದ ಅಲೆಕ್ಸಾಂಡರ್ ಝ್ವೆರೆವ್ರನ್ನು 6-2, 6-4 ಸೆಟ್ಗಳಿಂದ ಪರಾಭವಗೊಳಿಸಿದರು. ಸಿನ್ನರ್, ಝ್ವೆರೆವ್ರನ್ನು ಬೇಗನೇ, ಅಂದರೆ ಒಂದು ಗಂಟೆ 23 ನಿಮಿಷಗಳಲ್ಲಿ ಮಣಿಸಿದರು. ಝ್ವೆರೆವ್ ವಿರುದ್ಧ ಸಿನ್ನರ್ ಆರು ಏಸ್ಗಳನ್ನು ಸಿಡಿಸಿದರು. ಈ ಪಂದ್ಯಾವಳಿಯ ಪುರುಷರ ಸಿಂಗಲ್ಸ್ ಫೈನಲ್ನಲ್ಲಿ ಮೆಡ್ವೆಡೆವ್ ಮತ್ತು ಸಿನ್ನರ್ ಮುಖಾಮುಖಿಯಾಗಲಿದ್ದಾರೆ. ಈ ಪಂದ್ಯಾವಳಿಯಲ್ಲಿ ಈವರೆಗೆ, ಮೆಡ್ವೆಡೆವ್ ಆಗಲಿ, ಸಿನ್ನರ್ ಆಗಲಿ ಒಂದು ಸೆಟ್ಟನ್ನೂ ಬಿಟ್ಟುಕೊಟ್ಟಿಲ್ಲ. ಮೆಡ್ವೆಡೆವ್ ವಿರುದ್ಧದ ಕೊನೆಯ ಮೂರು ಪಂದ್ಯಗಳನ್ನು ಸಿನ್ನರ್ ಗೆದ್ದಿದ್ದಾರೆ. ಅದರಲ್ಲಿ, 2024ರ ಯುಎಸ್ ಓಪನ್ ಕ್ವಾರ್ಟರ್ಫೈನಲ್ ಸೇರಿದೆ. ಟೌನ್ಸೆಂಡ್, ಸಿನಿಯಕೋವ ಜೋಡಿಗೆ ಮಹಿಳೆಯರ ಡಬಲ್ಸ್ ಪ್ರಶಸ್ತಿ ಆ್ಯಂಡ್ರಿಯೋಝಿ, ಮ್ಯಾನುಯೆಲ್ ಜೋಡಿಗೆ ಪುರುಷರ ಡಬಲ್ಸ್ ಪ್ರಶಸ್ತಿ ಬೆಲಿಂಡಾ, ಫ್ಲಾವಿಯೊ ಜೋಡಿಗೆ ಮಿಶ್ರ ಡಬಲ್ಸ್ ಕಿಕರ್/ಇಂಡಿಯನ್ ವೆಲ್ಸ್ ಓಪನ್ ಮಹಿಳೆಯರ ಡಬಲ್ಸ್ ಪ್ರಶಸ್ತಿಯನ್ನು ಟೇಲರ್ ಟೌನ್ಸೆಂಡ್ ಮತ್ತು ಕ್ಯಾಟರೀನಾ ಸಿನಿಯಕೋವ ಜೋಡಿ ಗೆದ್ದಿದೆ. ಶನಿವಾರ ನಡೆದ ಫೈನಲ್ನಲ್ಲಿ ಈ ಜೋಡಿಯು ಆನಾ ಡನಿಲಿನಾ ಮತ್ತು ಅಲೆಕ್ಸಾಂಡ್ರಾ ಕ್ರೂನಿಕ್ ಜೋಡಿಯನ್ನು 7-6 (4), 6-4 ಸೆಟ್ಗಳಿಂದ ಪರಾಭವಗೊಳಿಸಿದೆ. ಇದು ಇಂಡಿಯನ್ ವೆಲ್ಸ್ನಲ್ಲಿ ಟೌನ್ಸೆಂಡ್ರ ಮೊದಲ ಮತ್ತು ಸಿನಿಯಕೋವರ ಎರಡನೇ ಪ್ರಶಸ್ತಿಯಾಗಿದೆ. 2023ರಲ್ಲಿ, ಸಿನಿಯಕೋವ ತನ್ನ ದೀರ್ಘಕಾಲೀನ ಜೋಡಿ ಬಾರ್ಬರಾ ಕ್ರೆಜ್ಸಿಕೋವ ಜೊತೆಗೂಡಿ ಪ್ರಶಸ್ತಿ ಗೆದ್ದಿದ್ದರು. ಶನಿವಾರ ಪುರುಷರ ಡಬಲ್ಸ್ ಪ್ರಶಸ್ತಿಯನ್ನು ಗೈಡೊ ಆ್ಯಂಡ್ರಿಯೋಝಿ ಮತ್ತು ಮ್ಯಾನುಯೆಲ್ ಗಿನಾರ್ಡ್ ಜೋಡಿ ಗೆದ್ದಿದೆ. ಈ ಜೋಡಿಯು ಆರ್ತರ್ ರಿಂಡರ್ನೆಕ್ ಮತ್ತು ವ್ಯಾಲೆಂಟಿನ್ ವಷೆರೊಟ್ ಜೋಡಿಯನ್ನು 7-6(3), 6-3 ಸೆಟ್ಗಳಿಂದ ಮಣಿಸಿದೆ. ಮಿಶ್ರ ಡಬಲ್ಸ್ನಲ್ಲಿ, ಬೆಲಿಂಡಾ ಬೆನ್ಸಿಕ್ ಮತ್ತು ಫ್ಲಾವಿಯೊ ಕೊಬೊಲಿ ಜೋಡಿಯು ಪ್ರಶಸ್ತಿ ಪಡೆದಿದೆ. ಫೈನಲ್ನಲ್ಲಿ ಈ ಜೋಡಿಯು ಅಗ್ರ ಶ್ರೇಯಾಂಕದ ಗ್ಯಾಬ್ರಿಯೆಲಾ ಡಬ್ರೊವ್ಸ್ಕಿ ಮತ್ತು ಲಾಯ್ಡ್ ಗ್ಲಾಸ್ಪೂಲ್ ಜೋಡಿಯನ್ನು 6-3, 2-6, 10-7 ಸೆಟ್ಗಳಿಂದ ಸೋಲಿಸಿದೆ.
ಬೆಂಗಳೂರಿನ ಕೆಫೆಯಲ್ಲಿ ಲಿಂಬೆ ಪಾನಕಕ್ಕೆ ಗ್ಯಾಸ್ ಕ್ರೈಸಿಸ್ ಚಾರ್ಜ್! ವೈರಲ್ ಆದ ಬಿಲ್..
ಬೆಂಗಳೂರಿನ ಕೆಫೆಯೊಂದರ ಬಿಲ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಎರಡು ಮಿಂಟ್ ಲೆಮನೇಡ್ಗಳಿಗೆ ವಿಧಿಸಿದ ಬಿಲ್ನಲ್ಲಿ ‘ಗ್ಯಾಸ್ ಕ್ರೈಸಿಸ್ ಚಾರ್ಜ್’ ಎಂಬ ಹೆಸರಿನಲ್ಲಿ ಹೆಚ್ಚುವರಿ 5% ಶುಲ್ಕ ಸೇರಿಸಿರುವುದಕ್ಕೆ ನೆಟ್ಟಿಗರು ಟೀಕಿಸುತ್ತಿದ್ದಾರೆ. ವೈರಲ್ ಆದ ಬಿಲ್ ಇಲ್ಲಿದೆ ನೋಡಿ…
Kalaburagi | ಹಳೆಯ ಗೆಳೆಯರ ಸಮ್ಮಿಲನ : ಸಾಧಕರಿಗೆ ಅಭಿನಂದನೆ
ಕಲಬುರಗಿ: ಆಧುನಿಕ ಜೀವನದ ಧಾವಂತದಲ್ಲಿ ಮಾನವ ಸಂಬಂಧಗಳು ಕ್ಷೀಣಿಸುತ್ತಿರುವ ಸಂದರ್ಭದಲ್ಲಿ ಇಪ್ಪತ್ತಕ್ಕೂ ಹೆಚ್ಚು ವರ್ಷಗಳ ಹಿಂದಿನ ಸ್ನೇಹವನ್ನು ಉಳಿಸಿಕೊಂಡು ಗೆಳೆಯರ ಸಾಧನೆಗಳನ್ನು ಗುರುತಿಸಿ ಅವರಿಗೆ ಅಭಿನಂದನೆ ಸಲ್ಲಿಸುವುದು ಅಪರೂಪದ ಸಂಗತಿಯಾಗಿದೆ ಎಂದು ಪತ್ರಾಗಾರ ಇಲಾಖೆ ನಿರ್ದೇಶಕ ಡಾ. ವೀರಶೆಟ್ಟಿ ಗಾರಂಪಳ್ಳಿ ಹೇಳಿದರು. ನಗರದ ನೂತನ ವಿದ್ಯಾಲಯದ ಸಭಾಭವನದಲ್ಲಿ ಹಳೆ ವಿದ್ಯಾರ್ಥಿ ಗೆಳೆಯರ ಬಳಗದ ವತಿಯಿಂದ ಆಯೋಜಿಸಿದ್ದ ಅಭಿನಂದನಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ, ಸಾಧಕರಿಗೆ ಸ್ನೇಹಿತರು ಹಮ್ಮಿಕೊಂಡ ಅಭಿನಂದನಾ ಸಮಾರಂಭವು ಇಂದಿನ ಸಮಾಜದಲ್ಲಿ ಸ್ನೇಹ ಮತ್ತು ಸಂಬಂಧಗಳಿಗೆ ಹೊಸ ಅರ್ಥ ನೀಡಿದೆ ಎಂದು ಅವರು ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ನೂತನ ವಿದ್ಯಾಲಯದ ಪ್ರಾಂಶುಪಾಲ ಡಾ.ದಯಾನಂದ ಶಾಸ್ತ್ರಿ ವಹಿಸಿದ್ದರು. ಸುಭಾಷ್ ಚಂದ್ರ ಪಾಟೀಲ್ ಸ್ಮಾರಕ ಜನಕಲ್ಯಾಣ ಟ್ರಸ್ಟ್ ಪಾಳಾ–ಕಲಬುರಗಿ ಹಾಗೂ ನೂತನ ವಿದ್ಯಾಲಯದ ನಿರ್ದೇಶಕರಾದ ಡಾ.ಗೋವಿಂದ್ ರಾಜ್ ಪೂಜಾರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಕಲ್ಯಾಣ ಕರ್ನಾಟಕ ಗ್ರಂಥಪಾಲಕರ ಸಂಘದ ಅಧ್ಯಕ್ಷರಾಗಿ ಆಯ್ಕೆಯಾದ ಡಾ.ಪರಮಾನಂದ ಹಂಗರಗಿ ಹಾಗೂ ಜಿಲ್ಲಾಮಟ್ಟದ ಜ್ಯೋತಿಬಾ ಫುಲೆ ಪ್ರಶಸ್ತಿ ಪುರಸ್ಕೃತರಾದ ಶ್ರೀನಿವಾಸ ಡಿ.ಜಾಧವ, ಜ್ನ್ಯಾನ ಜ್ಯೋತಿ ಮತ್ತು ಕಲ್ಯಾಣ ಕರ್ನಾಟಕ ಪ್ರಾಂತ್ಯದ ಶ್ರೇಷ್ಠ ವಿದ್ಯಾಲಯ ಪ್ರಶಸ್ತಿ ಪಡೆದ ಎ.ಕೆ.ಆರ್. ದೇವಿ ಕಾಲೇಜಿನ ಪ್ರಾಂಶುಪಾಲ ವಿದ್ಯಾಸಾಗರ್ ದೇಶಮುಖ ಅವರನ್ನು ಗೌರವಿಸಿ ಸನ್ಮಾನಿಸಿ ಅಭಿನಂದಿಸಲಾಯಿತು. ಕಾರ್ಯಕ್ರಮದಲ್ಲಿ ನೀಷಾದ ಮತ್ತು ನಿನಾದ ಮುಡಬಿ ಸಂಗಡಿಗರಿಂದ ಸಂಗೀತ ಕಾರ್ಯಕ್ರಮ ನಡೆಯಿತು. ಡಾ.ಎನ್.ಎಸ್.ಕುಲಕರ್ಣಿ ಸ್ವಾಗತಿಸಿದರು, ಶಿಕ್ಷಕ ಶಂಕರ ಬಿರಾದಾರ ಹಾಗೂ ಬಸವರಾಜ ಭಾಗಾ ಕಾರ್ಯಕ್ರಮ ನಿರೂಪಣೆ ನಡೆಸಿದರು. ದಾನಪ್ಪ ವಗ್ಗಿ ವಂದಿಸಿದರು. ಡಾ. ಲಿಂಗಾಬಸವ ಪಾಟೀಲ, ಗುಂಡೂರಾವ. ಹುಮನಾಬಾದ, ಶಿವಕುಮಾರ ಪಾಟೀಲ, ಎಂ ಬಿ ರಾಜ್ , ನಾಗೇಂದ್ರ ಪೂಜಾರಿ, ಸೂರ್ಯಕಾಂತ ಉಮಾಪುರೆ, ಜಿತೇಂದ್ರ ಬೆಳಗುಂದಿ, ಮಹೇಂದ್ರ ಅಯ್ಯಳಕರ್, ರಾಜೇಶ್ ರಾಸೂರ್, ಸಂಜೀವಕುಮಾರ ಜೋಗ, ಶರಣು ಜೇವರ್ಗಿ ಉಪಸ್ಥಿತರಿದ್ದರು.
ಎಲ್ಲಾ ಮಾದರಿಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ ಸರ್ಫರಾಝ್ ಅಹ್ಮದ್
ಕರಾಚಿ, ಮಾ. 15: ಪಾಕಿಸ್ತಾನ ಕ್ರಿಕೆಟ್ ತಂಡದ ವಿಕೆಟ್ಕೀಪರ್-ಬ್ಯಾಟರ್ ಸರ್ಫರಾಝ್ ಅಹ್ಮದ್ ರವಿವಾರ ಎಲ್ಲಾ ಮಾದರಿಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ್ದಾರೆ. ಅವರು ಎರಡು ಪ್ರಮುಖ ಐಸಿಸಿ ಪಂದ್ಯಾವಳಿಗಳ ಫೈನಲ್ಗಳಲ್ಲಿ ಸಾಂಪ್ರದಾಯಿಕ ಎದುರಾಳಿ ಭಾರತದ ವಿರುದ್ಧ ಗೆದ್ದಿರುವ ಪಾಕಿಸ್ತಾನ ತಂಡದ ಏಕೈಕ ನಾಯಕನಾಗಿದ್ದಾರೆ. ಮೂವತ್ತೊಂಭತ್ತು ವರ್ಷದ ಸರ್ಫರಾಜ್ ಪಾಕಿಸ್ತಾನದ ಪರವಾಗಿ ಕೊನೆಯದಾಗಿ 2023 ಡಿಸೆಂಬರ್ನಲ್ಲಿ ಪರ್ತ್ನಲ್ಲಿ ಆಸ್ಟ್ರೇಲಿಯ ವಿರುದ್ಧ ಟೆಸ್ಟ್ ಪಂದ್ಯವನ್ನು ಆಡಿದ್ದರು. ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ)ಯು ಬಿಡುಗಡೆ ಮಾಡಿದ ಹೇಳಿಕೆಯೊಂದರಲ್ಲಿ ಸರ್ಫರಾಜ್ ತನ್ನ ನಿವೃತ್ತಿ ನಿರ್ಧಾರವನ್ನು ಘೋಷಿಸಿದ್ದಾರೆ. ಅವರನ್ನು ಪಾಕಿಸ್ತಾನಿ ಟೆಸ್ಟ್ ತಂಡದ ಪ್ರಧಾನ ಕೋಚ್ ಆಗಿ ಪಿಸಿಬಿಯು ನೇಮಿಸುವ ಸಾಧ್ಯತೆಯಿದೆ ಎಂದು ಮೂಲವೊಂದು ತಿಳಿಸಿದೆ. ವಿಕೆಟ್ಕೀಪರ್-ಬ್ಯಾಟರ್ ಸರ್ಫರಾಝ್ ಅಹ್ಮದ್ 54 ಟೆಸ್ಟ್ಗಳು, 117 ಏಕದಿನ ಪಂದ್ಯಗಳು ಮತ್ತು 61 ಅಂತರ್ರಾಷ್ಟ್ರೀಯ ಟಿ20 ಪಂದ್ಯಗಳನ್ನು ಆಡಿದ್ದಾರೆ. ಅವರು ಎಲ್ಲಾ ಮೂರು ಮಾದರಿಗಳ ಕ್ರಿಕೆಟ್ನಲ್ಲಿ 100 ಅಂತರ್ರಾಷ್ಟ್ರೀಯ ಪಂದ್ಯಗಳಲ್ಲಿ ನಾಯಕತ್ವ ವಹಿಸಿದ್ದಾರೆ.
IPL ಬಳಿಕ 8 ತಂಡಗಳ ಟಿ20 ಮುಂಬೈ ಲೀಗ್ : ಈ ಬಾರಿ 3 ತಂಡಗಳ ಮಹಿಳಾ ಲೀಗ್ಗೂ ಚಾಲನೆ
ಮುಂಬೈ, ಮಾ. 15: ಎಂಟು ತಂಡಗಳನ್ನು ಒಳಗೊಂಡ ಟಿ20 ಮುಂಬೈ ಲೀಗ್ನ ಪುರುಷರ ಪಂದ್ಯಾವಳಿಯು ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನ ಮುಕ್ತಾಯದ ಬಳಿಕ ನಡೆಯಲಿದೆ. ಅದೇ ವೇಳೆ, ಇದೇ ಮೊದಲ ಬಾರಿಗೆ ಮೂರು ತಂಡಗಳನ್ನು ಒಳಗೊಂಡ ಮಹಿಳಾ ಲೀಗ್ ಕೂಡ ಜೊತೆ ಜೊತೆಯಾಗಿ ನಡೆಯಲಿದೆ. ಹಲವು ವರ್ಷಗಳ ಸ್ಥಾಗಿತ್ಯದ ಬಳಿಕ, ಪಂದ್ಯಾವಳಿಯು ಕಳೆದ ವರ್ಷ ತನ್ನ ಮೂರನೇ ಆವೃತ್ತಿಯನ್ನು ಕಂಡಿತ್ತು. ಕಳೆದ ವರ್ಷ, ಐಪಿಎಲ್ ಮುಕ್ತಾಯದ ಬಳಿಕ ಈ ಪಂದ್ಯಾವಳಿ ನಡೆದಿತ್ತು. ಮುಂಬೈಯ ಆಟಗಾರರ ಬೆಳವಣಿಗೆಗೆ ಈ ಪಂದ್ಯಾವಳಿಯು ಅಗತ್ಯವಾಗಿದೆ ಎಂದು ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಹಾಗೂ ಮುಂಬೈ ಆಟಗಾರ ರೋಹಿತ್ ಶರ್ಮಾ ಲೀಗ್ನ್ನು ಘೋಷಿಸುತ್ತಾ ಹೇಳಿದರು. ಈ ಋತುವಿನಲ್ಲಿ ಮಹಿಳಾ ಲೀಗ್ ಕೂಡ ಆರಂಭಗೊಳ್ಳುತ್ತಿರುವುದು ಮುಂಬೈ ಕ್ರಿಕೆಟ್ನ ಒಂದು ಮಹತ್ವದ ಹೆಗ್ಗುರುತಾಗಿದೆ ಎಂದು ಮುಂಬೈ ಕ್ರಿಕೆಟ್ ಅಸೋಸಿಯೇಶನ್ ಅಧ್ಯಕ್ಷ ಅಜಿಂಕ್ಯ ನಾಯಕ್ ಹೇಳಿದರು.
ಬಿಡದಿ ರೆಸಾರ್ಟ್ನಲ್ಲಿರುವ ಒಡಿಶಾದ ಕಾಂಗ್ರೆಸ್ ಶಾಸಕರಿಗೆ ಲಂಚದ ಆಮಿಷಕ್ಕೆ ಯತ್ನ: ಇಬ್ಬರು ವಶಕ್ಕೆ
ಬೆಂಗಳೂರು : ರಾಜ್ಯಸಭಾ ಚುನಾವಣೆ ಹಿನ್ನೆಲೆ ಬಿಡದಿ ವಂಡರ್ಲಾ ರೆಸಾರ್ಟ್ನಲ್ಲಿರುವ ಒಡಿಶಾ ಕಾಂಗ್ರೆಸ್ ಶಾಸಕರಿಗೆ ಅಡ್ಡ ಮತದಾನಕ್ಕಾಗಿ ತಲಾ 5 ಕೋಟಿ ರೂ. ಲಂಚದ ಆಮಿಷ ನೀಡಲು ಯತ್ನಿಸಿದ್ದ ಆರೋಪದಡಿ ಖಾಲಿ ಚೆಕ್ ಸಮೇತ ಇಬ್ಬರನ್ನು ಬಿಡದಿ ಠಾಣೆಯ ಪೊಲೀಸರು ವಶಕ್ಕೆ ಪಡೆದಿರುವುದಾಗಿ ವರದಿಯಾಗಿದೆ. ಮಾ.15ರ ರವಿವಾರ ಬೆಳಗ್ಗೆ ಒಡಿಶಾದಿಂದ ಮೂವರು ವ್ಯಕ್ತಿಗಳು, ಓರ್ವ ಸ್ಥಳೀಯ ವ್ಯಕ್ತಿ ಜೊತೆ ಸೇರಿ ರೆಸಾರ್ಟ್ನಲ್ಲಿರುವ ಶಾಸಕರ ಖರೀದಿಗೆ ಯತ್ನಿಸಿದ್ದು, ಈ ವಿಷಯ ತಿಳಿದ ಸ್ಥಳೀಯ ಕಾಂಗ್ರೆಸ್ ಮುಖಂಡರು ತಕ್ಷಣ ಕ್ರಮ ಕೈಗೊಂಡು ಇಬ್ಬರನ್ನು ಹಿಡಿದಿದ್ದಾರೆ. ಇನ್ನಿಬ್ಬರು ವ್ಯಕ್ತಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ. ಈ ಸಂಬಂಧ ಕಾಂಗ್ರೆಸ್ ಮುಖಂಡರು ನೀಡಿದ ದೂರಿನ ಮೇರೆಗೆ ಬಿಡದಿ ಠಾಣೆಯ ಪೊಲೀಸರು ಸ್ಥಳಕ್ಕೆ ಆಗಮಿಸಿ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ಆರಂಭಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಆರೋಪಿಗಳಲ್ಲಿ ಓರ್ವನನ್ನು ಸುರೇಶ್ ಎಂದು ಗುರುತಿಸಲಾಗಿದೆ. ಪರಾಜಿತ ಲೋಕಸಭಾ ಅಭ್ಯರ್ಥಿಯಾಗಿರುವ ಮೂರನೇ ಆರೋಪಿಗಾಗಿ ಹುಡುಕಾಟ ನಡೆಯುತ್ತಿದೆ. ಬಂಧಿತರ ಬಳಿ ಖಾಲಿ ಚೆಕ್ಗಳು ಸಹ ಕಂಡುಬಂದಿವೆ ಎಂದು ಮೂಲಗಳು ತಿಳಿಸಿವೆ. ರಾಜ್ಯಸಭಾ ಚುನಾವಣೆಯ ಸಮಯದಲ್ಲಿ ಆಡಳಿತಾರೂಢ ಬಿಜೆಪಿಯ ರಾಜ್ಯಸಭಾ ಅಭ್ಯರ್ಥಿಯ ಪರವಾಗಿ ಅಡ್ಡಮತದಾನದ ಆತಂಕ ಹಿನ್ನೆಲೆಯಲ್ಲಿ ಮಾ.12ರಂದು ಒಡಿಶಾದಿಂದ 14 ಕಾಂಗ್ರೆಸ್ ಶಾಸಕರು ರಾಮನಗರದ ಬಿಡದಿಯಲ್ಲಿರುವ ವಂಡರ್ಲಾ ರೆಸಾರ್ಟ್ಗೆ ಬಂದು ವಾಸ್ತವ್ಯ ಹೂಡಿದ್ದರು.
ನಿನ್ನ ಹಣೆಗೆ ಗುಂಡಿಕ್ಕುತ್ತೇವೆ : ಗಾಯಕ ಬಾದಶಾಹ್ಗೆ ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್ನಿಂದ ಜೀವ ಬೆದರಿಕೆ
ಹೊಸದಿಲ್ಲಿ,ಮಾ.15: ತನ್ನ ನೂತನ ಹಾಡು ‘ಟಟೀರಿ’ಯಲ್ಲಿ ಮಹಿಳೆಯರು ಮತ್ತು ಅಪ್ರಾಪ್ತ ವಯಸ್ಕರ ಕುರಿತು ಆಕ್ಷೇಪಾರ್ಹ ಸಾಹಿತ್ಯ ಬಳಸಿದ್ದಾರೆ ಎಂಬ ಆರೋಪಕ್ಕೆ ಗುರಿಯಾಗಿರುವ ಗಾಯಕ-ರ್ಯಾಪರ್ ಬಾದಶಾಹ್ಗೆ ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್ ಜೀವ ಬೆದರಿಕೆಯನ್ನೊಡ್ಡಿದೆ. ಬಿಷ್ಣೋಯಿ ಗ್ಯಾಂಗ್ ಸದಸ್ಯರು ‘ನಿನ್ನ ಹಣೆಗೆ ಗುಂಡಿಕ್ಕುವುದಾಗಿ’ ಫೇಸ್ಬುಕ್ ಪೋಸ್ಟ್ನಲ್ಲಿ ಬಾದಶಾಹ್ಗೆ ಬೆದರಿಕೆ ಹಾಕಿದ್ದಾರೆ. ‘ಗಾಯಕ ಬಾದಶಾಹ್, ನೀವು ಹರ್ಯಾಣದ ಸಂಸ್ಕೃತಿಯನ್ನು ನಾಶಗೊಳಿಸಲು ಪ್ರಯತ್ನಿಸಿದ್ದೀರಿ. 2024ರಲ್ಲಿ ನಿಮ್ಮ ಕ್ಲಬ್ನಲ್ಲಿ ನಾವು ನಿಮಗೆ ಟ್ರೇಲರ್ ತೋರಿಸಿದ್ದೆವು; ಮುಂದಿನ ಸಲ ನೇರವಾಗಿ ನಿಮ್ಮ ಹಣೆಗೇ ಗುಂಡು ಹಾರಿಸುತ್ತೇವೆ’ ಎಂದು ಪೋಸ್ಟ್ನಲ್ಲಿ ಹೇಳಲಾಗಿದೆ. 2024ರಲ್ಲಿ ಚಂಡೀಗಡದಲ್ಲಿ ಬಾದಶಾಹ್ ಒಡೆತನದ ‘ಸೆವಿಲ್ಲೆ ಬಾರ್ ಆ್ಯಂಡ್ ಲೌಂಜ್’ನ ಹೊರಗೆ ಸ್ಫೋಟ ಸಂಭವಿಸಿತ್ತು. ಲಾರೆನ್ಸ್ ಬಿಷ್ಣೋಯಿ ಜೊತೆ ಗುರುತಿಸಿಕೊಂಡಿರುವ ಕೆನಡಾ ಮೂಲದ ಗೋಲ್ಡಿ ಬ್ರಾರ್ ಸ್ಫೋಟದ ಹೊಣೆಯನ್ನು ಹೊತ್ತುಕೊಂಡಿದ್ದ. ಫೇಸ್ಬುಕ್ ಪೋಸ್ಟ್ನಲ್ಲಿ ಬಿಷ್ಣಯಿ ಗ್ಯಾಂಗಿನ ಸದಸ್ಯರೆನ್ನಲಾಗಿರುವ ರಣದೀಪ್ ಮಲ್ಲಿಕ್ ಮತ್ತು ಅನಿಲ್ ಪಂಡಿತ್ ಅವರು ಇತ್ತೀಚಿಗೆ ಪಾಣಿಪತ್ನಲ್ಲಿ ವೆಸ್ಟರ್ನ್ ಯೂನಿಯನ್ ಕಚೇರಿಯ ಹೊರಗೆ ನಡೆದಿದ್ದ ಗುಂಡು ಹಾರಾಣದ ಹೊಣೆಯನ್ನೂ ಹೊತ್ತುಕೊಂಡಿದ್ದಾರೆ. ಬಾದಶಾಹ್ ಅವರ ಇತ್ತೀಚಿನ ಹರ್ಯಾಣ್ವಿ ಹಾಡು ‘ಟಟೀರಿ’ ಆಕ್ಷೇಪಾರ್ಹ ಸಾಹಿತ್ಯ ಮತ್ತು ದೃಶ್ಯಗಳನ್ನು ಒಳಗೊಂಡಿದೆ ಎನ್ನಲಾಗಿದ್ದು, ವ್ಯಾಪಕ ಟೀಕೆಗೆ ಗುರಿಯಾಗಿದೆ. ಪಂಚಕುಲಾ ನಿವಾಸಿಯೋರ್ವರ ದೂರಿನ ಮೇರೆಗೆ ಬಾದಶಾಹ್ ವಿರುದ್ಧ ಪ್ರಕರಣವೂ ದಾಖಲಾಗಿದೆ. ಈ ಹಾಡು ಬಾದಶಾಹ್ ಅವರ ಅಧಿಕೃತ ಯೂಟ್ಯೂಬ್ ಚಾನೆಲ್ನಲ್ಲಿ ಬಿಡುಗಡೆಗೊಂಡ ಬೆನ್ನಲ್ಲೇ ವೈರಲ್ ಆಗಿತ್ತು. ಕಳೆದ ವಾರ ಕ್ಷಮೆ ಯಾಚಿಸಿದ್ದ ಬಾದಶಾಹ್, ಈ ಹಾಡಿನಿಂದ ಯಾರಿಗೂ ನೋವನ್ನುಂಟು ಮಾಡಲು ತಾನೆಂದಿಗೂ ಉದ್ದೇಶಿಸಿರಲಿಲ್ಲ ಎಂದು ಹೇಳಿದ್ದರು.
ಬಾರಾಮತಿ ಉಪ ಚುನಾವಣೆ: ಸುನೇತ್ರಾ ಪವಾರ್ ಅವಿರೋಧ ಆಯ್ಕೆ ಸಾಧ್ಯತೆ
ಮುಂಬೈ: ಮಹಾರಾಷ್ಟ್ರದ ಬಾರಾಮತಿ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಉಪ ಮುಖ್ಯಮಂತ್ರಿ ಸುನೇತ್ರಾ ಪವಾರ್ ಅವಿರೋಧವಾಗಿ ಆಯ್ಕೆಯಾಗುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಉಪ ಮುಖ್ಯಮಂತ್ರಿ ಅಜಿತ್ ಪವಾರ್ ನಿಧನದಿಂದ ತೆರವಾದ ಈ ಕ್ಷೇತ್ರಕ್ಕೆ ಏಪ್ರಿಲ್ 23ರಂದು ಮತದಾನ ನಿಗದಿಯಾಗಿದೆ. ಇದೇ ದಿನ ಅಹಿಲ್ಯಾನಗರ್ ಜಿಲ್ಲೆಯ ರಾಹುರಿ ವಿಧಾನಸಭಾ ಕ್ಷೇತ್ರಕ್ಕೂ ಉಪ ಚುನಾವಣೆ ನಡೆಯಲಿದೆ. ಆ ಕ್ಷೇತ್ರ ಬಿಜೆಪಿ ಶಾಸಕ ಶಿವಾಜಿ ಕರ್ದಿಲೆ ಅವರ ನಿಧನದಿಂದ ಖಾಲಿಯಾಗಿದೆ. ಎನ್ಸಿಪಿ ಅಧ್ಯಕ್ಷರಾಗಿದ್ದ ಹಾಗೂ ಬಾರಾಮತಿ ಕ್ಷೇತ್ರದ ಎಂಟು ಬಾರಿ ಶಾಸಕರಾಗಿದ್ದ ಅಜಿತ್ ಪವಾರ್ (66) ಜನವರಿ 28ರಂದು ಬಾರಾಮತಿ ವಿಮಾನ ನಿಲ್ದಾಣದ ಸಮೀಪ ಸಂಭವಿಸಿದ ವಿಮಾನ ಅಪಘಾತದಲ್ಲಿ ಮೃತಪಟ್ಟಿದ್ದರು. ನಿಧನದ ಬಳಿಕ ಮೂರೇ ದಿನಗಳಲ್ಲಿ ಸುನೇತ್ರಾ ಪವಾರ್ ಅವರನ್ನು ಎನ್ಸಿಪಿ ಶಾಸಕಾಂಗ ಪಕ್ಷದ ನಾಯಕಿಯಾಗಿ ಆಯ್ಕೆ ಮಾಡಲಾಗಿತ್ತು. ನಂತರ ಬಿಜೆಪಿ ನೇತೃತ್ವದ ಮಹಾಯುತಿ ಸರ್ಕಾರದಲ್ಲಿ ಉಪ ಮುಖ್ಯಮಂತ್ರಿಯಾಗಿ ನೇಮಕ ಮಾಡಲಾಯಿತು. ಫೆಬ್ರವರಿ 26ರಂದು ಎನ್ಸಿಪಿ ರಾಷ್ಟ್ರಾಧ್ಯಕ್ಷ ಸ್ಥಾನಕ್ಕೂ ಸುನೇತ್ರಾ ಪವಾರ್ ಅವಿರೋಧವಾಗಿ ಆಯ್ಕೆಯಾಗಿದ್ದರು. ಸುನೇತ್ರಾ ಪವಾರ್ ಪ್ರಸ್ತುತ ವಿಧಾನಸಭೆ ಅಥವಾ ವಿಧಾನ ಪರಿಷತ್ ಯಾವುದೇ ಸದನದ ಸದಸ್ಯೆಯಾಗಿಲ್ಲ. ಸಂವಿಧಾನಾತ್ಮಕವಾಗಿ ಉಪ ಮುಖ್ಯಮಂತ್ರಿಯಾಗಿ ಮುಂದುವರಿಯಲು ಆರು ತಿಂಗಳೊಳಗೆ ಯಾವುದೇ ಒಂದು ಸದನಕ್ಕೆ ಅವರು ಆಯ್ಕೆಯಾಗಬೇಕು. ಈ ಹಿನ್ನೆಲೆಯಲ್ಲಿ ಬಾರಾಮತಿ ಉಪ ಚುನಾವಣೆ ಅವರಿಗೆ ಪ್ರಮುಖವಾಗಿದ್ದು, ಅವಿರೋಧ ಆಯ್ಕೆಯ ಸಾಧ್ಯತೆ ಹೆಚ್ಚಿದೆ ಎಂದು ರಾಜಕೀಯ ವಲಯಗಳು ವಿಶ್ಲೇಷಿಸಿವೆ. ಇದೇ ವೇಳೆ, ತಮ್ಮ ರಾಜ್ಯಸಭಾ ಸ್ಥಾನಕ್ಕೆ ಅವರು ರಾಜೀನಾಮೆ ಸಲ್ಲಿಸುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.
ಕಲಬುರಗಿ | ದಕ್ಷಿಣ ವಲಯ ಅಂತರ ವಿಶ್ವವಿದ್ಯಾಲಯ ಪಂದ್ಯಾಟ : ಗುಲ್ಬರ್ಗಾ ವಿವಿಯ ಹ್ಯಾಂಡ್ಬಾಲ್ ತಂಡ ಭಾಗಿ
ಕಲಬುರಗಿ: ತಮಿಳುನಾಡಿನ ವೆಲ್ಲೂರು ಇನ್ಸಟ್ಯೂಟ್ ಆಫ್ ಟೆಕ್ನಾಲಜಿ (ವಿಐಟಿ) ಸಂಸ್ಥೆಯಲ್ಲಿ ಮಾ.17 ರಿಂದ ಮಾ. 21ರವರೆಗೆ ನಡೆಯಲಿರುವ ದಕ್ಷಿಣ ವಲಯ ಅಂತರ ವಿಶ್ವವಿದ್ಯಾಲಯಗಳ ಹ್ಯಾಂಡ್ಬಾಲ್ ಪುರುಷ ಕ್ರೀಡಾ ಪಂದ್ಯಾಟದಲ್ಲಿ ಗುಲ್ಬರ್ಗಾ ವಿಶ್ವವಿದ್ಯಾಲಯದ ದೈಹಿಕ ಶಿಕ್ಷಣ ವಿಭಾಗದ ಹ್ಯಾಂಡ್ಬಾಲ್ ತಂಡ ಭಾಗವಹಿಸಲಿದೆ. ತಂಡದ ನಾಯಕ ಪ್ರಕಾಶ ಹಾಗೂ ಸದಸ್ಯರಾದ ಪ್ರಜ್ವಲ್, ಆದತ್ಯ, ಸೋಹಾಂ, ಸನಿಕುಮಾರ, ನಿತೀನ್, ಪ್ರಜ್ವಲ್, ಅಮೋಘ ಸಿದ್ದ, ಆಷಿಪ್ ಶಹಾ, ಮಾದೇಶ, ಶಿವರಾಜ ಕಾರ್ತಿಕ ಭಾಗವಹಿಸಲಿದ್ದಾರೆ. ತಂಡದ ವ್ಯವಸ್ಥಾಪಕ/ತರಬೇತಿದಾರರಾಗಿ ಎಂಜೆಪಿ ಆರ್ಟ್ಸ ಕಾಲೇಜಿನ ದೈಹಿಕ ಶಿಕ್ಷಣ ಬೋಧಕ ಡಾ. ಮಧುಸೂದನ ರೆಡ್ಡಿ ತೆರಳುವರು. ಗುಲ್ಬರ್ಗಾ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಶಶಿಕಾಂತ ಎಸ್. ಉಡಿಕೇರಿ, ಕುಲಸಚಿವ ಪ್ರೊ. ರಮೇಶ್ ಲಂಡನಕರ್, ಮೌಲ್ಯಮಾಪನ ಕುಲಸಚಿವ ಡಾ. ಎನ್.ಜಿ. ಕಣ್ಣೂರ, ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಡಾ. ಹನುಮಂತ ಎಸ್. ಜಂಗೆ, ಯೋಗ ತಾಂತ್ರಿಕ ಸಹಾಯಕ ಡಾ. ಚಂದ್ರಕಾoತ ಬಿರಾದಾರ, ಪ್ರಶಾಂತ್ ಕುಮಾರ್ ಡಿ, ಅರುಣ್ ಕುಮಾರ್ ಎಚ್ ಅವರು ತಂಡಕ್ಕೆ ಶುಭ ಹಾರೈಸಿದ್ದಾರೆ.
ಜೇವರ್ಗಿ | ಶಿಕ್ಷಕಿ ದೀಪಾಗೆ ಜಿಲ್ಲಾ ಮಟ್ಟದ ‘ಗುರು ಸರ್ವೋತ್ತಮ’ ಪ್ರಶಸ್ತಿ
ಜೇವರ್ಗಿ: ಶಿಕ್ಷಣ ಕ್ಷೇತ್ರದಲ್ಲಿ ಕಳೆದ ಹತ್ತು ವರ್ಷಗಳಿಂದ ಸಲ್ಲಿಸುತ್ತಿರುವ ಅನನ್ಯ ಸೇವೆ ಹಾಗೂ ಗ್ರಾಮೀಣ ಭಾಗದ ಮಕ್ಕಳ ಶೈಕ್ಷಣಿಕ ಪ್ರಗತಿಗಾಗಿ ತೋರುತ್ತಿರುವ ವಿಶೇಷ ಶ್ರಮವನ್ನು ಗುರುತಿಸಿ, ತಾಲ್ಲೂಕಿನ ಕರಕಿಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಪದವೀಧರ ಶಿಕ್ಷಕಿ ದೀಪಾ ಮಲ್ಲಿಕಾರ್ಜುನ ಕಟ್ಟಿಮನಿ ಅವರಿಗೆ 2025-26ನೇ ಸಾಲಿನ ಜಿಲ್ಲಾ ಮಟ್ಟದ ‘ಗುರು ಸರ್ವೋತ್ತಮ’ ಪ್ರಶಸ್ತಿ ಒಲಿದು ಬಂದಿದೆ. ಕರ್ನಾಟಕ ರಾಜ್ಯ (6-8) ಪದವೀಧರ ಪ್ರಾಥಮಿಕ ಶಿಕ್ಷಕರ ಸಂಘ (ರಿ) ಬೆಂಗಳೂರು ಹಾಗೂ ಜಿಲ್ಲಾ ಘಟಕ ಕಲಬುರಗಿ ಇವರ ಸಂಯುಕ್ತಾಶ್ರಯದಲ್ಲಿ ಈ ಅತ್ಯುನ್ನತ ಗೌರವಕ್ಕೆ ಅವರನ್ನು ಆಯ್ಕೆ ಮಾಡಲಾಗಿದೆ. ಶಿಕ್ಷಕ ವೃತ್ತಿಗೆ ಸೇರಿ ದಶಕ ಪೂರೈಸಿರುವ ದೀಪಾ ಅವರು, ಆರಂಭದಿಂದಲೂ ಸಮರ್ಪಣಾ ಭಾವದಿಂದ ಕೆಲಸ ಮಾಡುತ್ತಿದ್ದಾರೆ. ಶಾಲಾ ದಾಖಲಾತಿ ಹೆಚ್ಚಳ, ನವೀನ ಮಾದರಿಯ ಬೋಧನಾ ಕ್ರಮಗಳ ಅಳವಡಿಕೆ ಹಾಗೂ ಶಾಲೆಯ ಮೂಲಸೌಕರ್ಯಗಳ ಅಭಿವೃದ್ಧಿಗಾಗಿ ಗ್ರಾಮಸ್ಥರನ್ನು ಒಗ್ಗೂಡಿಸಿ ಅವರು ನಡೆಸಿದ ಕೆಲಸಗಳು ಮಾದರಿಯಾಗಿವೆ. ರಾಜ್ಯ ಮಟ್ಟದ ಜಿಪಿಟಿ ಶಿಕ್ಷಕರ ಮಹಾಸಭೆ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭದ ವೇದಿಕೆಯಲ್ಲಿ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಪ್ರಶಸ್ತಿಗೆ ಭಾಜನರಾದ ದೀಪಾ ಮಲ್ಲಿಕಾರ್ಜುನ ಕಟ್ಟಿಮನಿ ಅವರಿಗೆ ಕರಕಿಹಳ್ಳಿ ಶಾಲಾ ಅಭಿವೃದ್ಧಿ ಮತ್ತು ಮೇಲ್ವಿಚಾರಣಾ ಸಮಿತಿ (SDMC), ಸಹೋದ್ಯೋಗಿಗಳು, ಗ್ರಾಮದ ಮುಖಂಡರು ಹಾಗೂ ಶಿಕ್ಷಕ ವೃಂದದವರು ಅಭಿನಂದನೆ ಸಲ್ಲಿಸಿದ್ದಾರೆ.
ಹೋರಾಟಗಾರರ ಬಂಧನದ ವಿವರ ಕೇಳಿದ ದಿಲ್ಲಿ ಹೈಕೋರ್ಟ್; ಸಿಸಿಟಿವಿ ದೃಶ್ಯ ಸಂರಕ್ಷಣೆಗೂ ಸೂಚನೆ
ಹೊಸದಿಲ್ಲಿ: ಕಳೆದ ವಾರ ಹೋರಾಟಗಾರರನ್ನು ಯಾವ ಸನ್ನಿವೇಶದಲ್ಲಿ ಹಾಗೂ ಯಾವ ಕಾನೂನುಬದ್ಧ ಅಧಿಕಾರದಡಿ ಬಂಧಿಸಲಾಗಿದೆ ಎಂಬುದನ್ನು ವಿವರಿಸಿ ಪ್ರಮಾಣಪತ್ರ ಸಲ್ಲಿಸುವಂತೆ ದಿಲ್ಲಿ ಪೊಲೀಸರಿಗೆ ರವಿವಾರ ದಿಲ್ಲಿ ಹೈಕೋರ್ಟ್ ಸೂಚಿಸಿದೆ. ರವಿವಾರ ನಡೆದ ವಿಶೇಷ ವಿಚಾರಣೆಯಲ್ಲಿ ನ್ಯಾಯಮೂರ್ತಿಗಳಾದ ನವೀನ್ ಚಾವ್ಲಾ ಹಾಗೂ ರವೀಂದರ್ ದುಡೇಜಾರನ್ನೊಳಗೊಂಡ ನ್ಯಾಯಪೀಠ, ಹೋರಾಟಗಾರರನ್ನು ಕರೆದೊಯ್ಯುವ ಸಂದರ್ಭದ ಸಿಸಿಟಿವಿ ದೃಶ್ಯಾವಳಿಗಳನ್ನು ಸಂರಕ್ಷಿಸಿಡುವಂತೆ ಪೊಲೀಸರಿಗೆ ನಿರ್ದೇಶನ ನೀಡಿತು. ವಿಶೇಷ ಘಟಕ ಕಚೇರಿಯ ಸಿಸಿಟಿವಿ ದೃಶ್ಯಾವಳಿ ಕುರಿತು ಮುಂದಿನ ಹಂತದಲ್ಲಿ ಪರಿಗಣಿಸಲಾಗುವುದು ಎಂದು ಹೇಳಿದ ನ್ಯಾಯಾಲಯ, ಪ್ರಕರಣದ ಮುಂದಿನ ವಿಚಾರಣೆಯನ್ನು ಮಾರ್ಚ್ 27ಕ್ಕೆ ಮುಂದೂಡಿತು. ಬಂಧಿತರನ್ನೆಲ್ಲ ಬಿಡುಗಡೆ ಮಾಡಲಾಗಿದೆ ಎಂದು ದಿಲ್ಲಿ ಪೊಲೀಸರ ಪರ ವಕೀಲರು ನ್ಯಾಯಾಲಯಕ್ಕೆ ತಿಳಿಸಿದರು. ಪ್ರಕರಣ ಅಷ್ಟು ಸರಳವಾಗಿಲ್ಲ ಎಂದು ಹೇಳಿ, ಎಫ್ಐಆರ್ ಗೋಪ್ಯವಾಗಿರುತ್ತದೆ ಎಂಬ ವಾದವನ್ನೂ ಮಂಡಿಸಿದರು. ಬಂಧಿತರ ಪೈಕಿ ಒಬ್ಬರು ಇನ್ನೂ ಬಿಡುಗಡೆಯಾಗಿಲ್ಲ ಎಂಬ ಆರೋಪದ ಅರ್ಜಿಯ ವಿಚಾರಣೆಯನ್ನೂ ನ್ಯಾಯಾಲಯ ಮಾರ್ಚ್ 27ಕ್ಕೆ ಪಟ್ಟಿ ಮಾಡಿತು. ಆದರೆ, ಎಲ್ಲ ಹೋರಾಟಗಾರರನ್ನೂ ಬಿಡುಗಡೆ ಮಾಡಲಾಗಿದೆ ಎಂದು ಪೊಲೀಸರು ಪುನರುಚ್ಚರಿಸಿದರು. ಈ ವೇಳೆ, “ನೀವು ಅವರನ್ನು ಪತ್ತೆಹಚ್ಚಬೇಕು” ಎಂದು ನ್ಯಾಯಪೀಠ ದಿಲ್ಲಿ ಪೊಲೀಸರಿಗೆ ಸೂಚಿಸಿತು. ದಯಾಳ್ ಸಿಂಗ್ ಕಾಲೇಜು ಮತ್ತು ವಿಜಯನಗರ ಪ್ರದೇಶಗಳಿಂದ ಸುಮಾರು ಹತ್ತು ಮಂದಿ ಹೋರಾಟಗಾರರನ್ನು ಪೊಲೀಸರು ಕರೆದೊಯ್ದಿದ್ದಾರೆ ಎಂದು ವಕೀಲರು ಆರೋಪಿಸಿದರು. ಅರ್ಜಿದಾರರಾದ ಸಾಗರಿಕಾ ರಜೋರಾ ಅವರ ಸಹೋದರಿ ಲಕ್ಷಿತಾ ರಜೋರಾರನ್ನು ಸಾಮಾನ್ಯ ಉಡುಪಿನಲ್ಲೇ ಪೊಲೀಸರು ಕರೆದೊಯ್ದಿದ್ದಾರೆ ಎಂದು ವಕೀಲ ಶಾರೂಖ್ ಅಲಮ್ ದೂರಿದರು. ಅರ್ಜಿದಾರ ಎಹ್ಸಾನುಲ್ ಹಕ್ ಪರವಾಗಿ ಹಿರಿಯ ವಕೀಲ ಕಾಲಿನ್ ಗೋನ್ಸಾಲ್ವ್ಸ್ ಹಾಜರಾಗಿ, “ಪರಿಸ್ಥಿತಿ ಕಳವಳಕಾರಿಯಾಗಿದೆ. ಎಲ್ಲ ಎಫ್ಐಆರ್ ಪ್ರತಿಗಳನ್ನು ನಮಗೆ ನೀಡುವಂತೆ ಪೊಲೀಸರಿಗೆ ಸೂಚಿಸಬೇಕು” ಎಂದು ನ್ಯಾಯಾಲಯಕ್ಕೆ ಮನವಿ ಮಾಡಿದರು. ಆದರೆ, ಈ ಮನವಿಯನ್ನು ತಳ್ಳಿ ಹಾಕಿದ ಪೊಲೀಸರು, ಎಫ್ಐಆರ್ ಗೋಪ್ಯ ಸ್ವರೂಪ ಹೊಂದಿದೆ ಎಂದು ಪ್ರತಿವಾದ ಮಂಡಿಸಿದರು.
ಯಡ್ರಾಮಿ | ಮಾಗಣಗೇರಿ ಶಾಲೆಗೆ ಡಿಜಿಟಲ್ ಬೋರ್ಡ್ ಹಸ್ತಾಂತರ
ಯಡ್ರಾಮಿ: ಮಕ್ಕಳಲ್ಲಿ ಸಮಯಪ್ರಜ್ಞೆ ಇರಬೇಕು. ಅಂದಿನ ಪಾಠವನ್ನು ಅಂದೇ ಓದುವ ಹವ್ಯಾಸವನ್ನು ತಮ್ಮದಾಗಿಸಿಕೊಳ್ಳಬೇಕು. ಉತ್ತಮ ಗುರಿಯನ್ನು ಇಟ್ಟುಕೊಂಡು ಗುರುಗಳ ಮಾರ್ಗದರ್ಶನದಲ್ಲಿ ಶ್ರದ್ದೆ ಮತ್ತು ನಿಷ್ಠೆಯಿಂದ ಕಲಿಯಬೇಕು. ಆಗ ಮಾತ್ರ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯವಿದೆ ಎಂದು ಯುವಾ ಬೆಂಗಳೂರು ಟ್ರಸ್ಟ್ ಸಂಸ್ಥಾಪಕ ಜಿ.ಕಿರಣ್ ಸಾಗರ್ ತಿಳಿಸಿದರು. ತಾಲೂಕಿನ ಮಾಗಣಗೇರಿ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಯುವಾ ಬೆಂಗಳೂರು ಟ್ರಸ್ಟ್ ಹಾಗೂ ಡೈರಿ ಡೇ ಐಸ್ಕ್ರೀಮ್ ಸಂಸ್ಥೆಯ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಡಿಜಿಟಲ್ ಬೋರ್ಡ್ನ ಹಸ್ತಾಂತರ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಯುವಾ ಬೆಂಗಳೂರು ಟ್ರಸ್ಟ್ ನ ಅಧ್ಯಕ್ಷ ಬಿ.ವಿ. ಸುನಿಲ ಮಾತನಾಡಿ, ಗ್ರಾಮೀಣ ಭಾಗದ ಮಕ್ಕಳು ಇಂದಿನ ಸ್ಪರ್ಧಾ ಯುಗದಲ್ಲಿ ನಗರ ಪ್ರದೇಶದಲ್ಲಿ ಕಲಿತ ಮಕ್ಕಳೊಂದಿಗೆ ಉನ್ನತ ಶಿಕ್ಷಣ ಉದ್ಯೋಗಗಳಿಗಾಗಿ ಸ್ಪರ್ಧೆ ಎದುರಿಸುವುದು ಕಷ್ಟಕರವಾಗಿದೆ. ಮಕ್ಕಳು ಕಲಿಕೆಯಲ್ಲಿ ಶಿಸ್ತು, ಸಮಯ ಪ್ರಜ್ಞೆಯಂತಹ ಗುಣಗಳನ್ನು ರೂಢಿಸಿಕೊಂಡು ಆತ್ಮವಿಶ್ವಾಸದಿಂದ ಕಲಿಯಬೇಕು ಎಂದು ಅವರು ತಿಳಿಸಿದರು. ಪ್ರಭಾರಿ ಮುಖ್ಯಶಿಕ್ಷಕ ಡಿ.ಸಿ.ಜಮಾದಾರ ಮಾತನಾಡಿದರು. ಈ ವೇಳೆ ಶಾಲೆಯ ಮಕ್ಕಳು ಹಾಗೂ ಶಾಲೆ ಶಿಕ್ಷಕರು ಸೇರಿದಂತೆ ಇತರಿದ್ದರು.
ಸರಕಾರದ ನೀತಿಯು ದೇಶದಲ್ಲಿ ಇಂಧನ ಕೊರತೆಯನ್ನು ಸೃಷ್ಟಿಸುತ್ತಿದೆ: ಯಾಸ್ಮಿನ್ ಇಸ್ಲಾಂ ಆರೋಪ
ಹೊಸದಿಲ್ಲಿ: ವುಮೆನ್ ಇಂಡಿಯಾ ಮೂವ್ಮೆಂಟ್ನ ರಾಷ್ಟ್ರೀಯ ಅಧ್ಯಕ್ಷೆ ಯಾಸ್ಮಿನ್ ಇಸ್ಲಾಂ ಅವರು ಸರ್ಕಾರದ ನೀತಿಗಳು ಮತ್ತು ನಿಯಂತ್ರಣದ ವೈಫಲ್ಯಗಳು ದೇಶದಲ್ಲಿ ಇಂಧನ ಕೊರತೆಯನ್ನು ಉಂಟುಮಾಡುತ್ತಿದೆ ಎಂದು ಆರೋಪಿಸಿದ್ದಾರೆ. ಇದರಿಂದ ಸಾಮಾನ್ಯ ಜನರು ಆರ್ಥಿಕ ಸಂಕಷ್ಟ ಮತ್ತು ಹಸಿವಿನತ್ತ ತಳ್ಳಲ್ಪಡುತ್ತಿದ್ದಾರೆ ಎಂದು ಅವರು ಹೇಳಿದರು. ಅಡುಗೆ ಅನಿಲ ಸೇರಿದಂತೆ ಅಗತ್ಯ ಇಂಧನಗಳನ್ನು ಪಡೆಯುವುದು ದಿನದಿಂದ ದಿನಕ್ಕೆ ಕಷ್ಟವಾಗುತ್ತಿರುವುದು ಸಾಮಾನ್ಯ ನಾಗರಿಕರ ದಿನನಿತ್ಯದ ಜೀವನವನ್ನು ನೇರವಾಗಿ ಪ್ರಭಾವಿತಗೊಳಿಸುತ್ತಿದೆ, ಇದು ತಪ್ಪಿಸಿಕೊಳ್ಳಲಾಗದ ಸಂಕಷ್ಟವಲ್ಲ; ಬದಲಾಗಿ ಆಡಳಿತ ಮತ್ತು ನಿಯಂತ್ರಣದಲ್ಲಿ ಇರುವ ಗಂಭೀರ ಕೊರತೆಯನ್ನು ತೋರಿಸುತ್ತದೆ ಎಂದು ಅವರು ತಿಳಿಸಿದ್ದಾರೆ. ಇಸ್ರೇಲ್–ಇರಾನ್ ಸಂಘರ್ಷದ ಕುರಿತು ಉಲ್ಲೇಖಿಸಿದ ಯಾಸ್ಮಿನ್ ಇಸ್ಲಾಂ ಅವರು, ಅಡುಗೆ ಅನಿಲ ಸೇರಿದಂತೆ ಇತರೆ ಇಂಧನಗಳ ಅಕ್ರಮ ಮಾರುಕಟ್ಟೆ ವ್ಯಾಪಕವಾಗಿ ನಡೆಯುತ್ತಿದೆ ಎಂದು ಹೇಳಿದರು. “ಭಾರತದ ಇಂಧನ ಭದ್ರತೆ ಬಲವಾಗಿದೆ” ಹಾಗೂ “ದೇಶಕ್ಕೆ ಅಗತ್ಯವಾದ ಅನಿಲದ ದೊಡ್ಡ ಭಾಗವನ್ನು ದೇಶದಲ್ಲೇ ಉತ್ಪಾದಿಸಲಾ ಗುತ್ತಿದೆ” ಎಂಬ ಸರ್ಕಾರದ ಹೇಳಿಕೆಗಳು ಈಗಿನ ಬೆಲೆ ಏರಿಕೆ ಮತ್ತು ಲಭ್ಯತೆಯ ಕೊರತೆಯ ವಾಸ್ತವಿಕತೆಗೆ ಸಂಪೂರ್ಣವಾಗಿ ವಿರುದ್ಧವಾಗಿವೆ. ಇಂತಹ ಹೇಳಿಕೆಗಳು ಪೊಳ್ಳು ಮಾತುಗಳಂತೆ ಕಾಣಿಸುತ್ತಿವೆ ಎಂದು ಅವರು ಟೀಕಿಸಿದರು. ಇದು ಜನರಿಗೆ ಆಗುತ್ತಿರುವ ಅನ್ಯಾಯವಾಗಿದ್ದು, ಸಾರ್ವಜನಿಕ ಹಿತಾಸಕ್ತಿಯನ್ನು ಕಾಪಾಡುವಂತಹ ಪಾರದರ್ಶಕ ಮತ್ತು ಜನಪರ ಇಂಧನ ವಿತರಣಾ ವ್ಯವಸ್ಥೆಯನ್ನು ಸರ್ಕಾರ ತಕ್ಷಣ ಯೋಜಿಸಬೇಕು. ಜೊತೆಗೆ ಅಕ್ರಮ ಮಾರುಕಟ್ಟೆಯ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ರಾಷ್ಟ್ರೀಯ ಅಧ್ಯಕ್ಷೆ ಯಾಸ್ಮಿನ್ ಇಸ್ಲಾಂ ಅವರು ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.
Kalaburagi | ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ
ಕಲಬುರಗಿ: ನಗರದ ದರಿಯಾಪುರ ಬಡಾವಣೆಯಲ್ಲಿರುವ ಶ್ರೀ ಚಂದ್ರಶೇಖರ್ ಡಿ.ಪಾಟೀಲ್ ರೇವೂರ್ ಸ್ಮಾರಕ ಔಷಧ ಭವನದಲ್ಲಿ ಸಂಪೂರ್ಣೇಶ್ವರಿ ಮಹಿಳಾ ಸಬಲೀಕರಣ ಒಕ್ಕೂಟದ ವತಿಯಿಂದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಸಮಾಜ ಸೇವಕಿ ಲಕ್ಷ್ಮೀ ದತ್ತಾತ್ರೇಯ ಪಾಟೀಲ್ ರೇವೂರ್ ಹಾಗೂ ಕರ್ನಾಟಕ ಬಿಜೆಪಿ ವಕ್ತಾರ ಡಾ.ಸುಧಾ ಆರ್.ಹಾಲಕಾಯಿ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಮಹಿಳೆಯರು ಮಹತ್ತರ ಸಾಧನೆಗಳನ್ನು ಮಾಡುತ್ತಿರುವುದು ಹೆಮ್ಮೆಯ ಸಂಗತಿ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಮಹಿಳಾ ಸಾಧಕರಿಗೆ “ಸಂಪೂರ್ಣೇಶ್ವರಿ ಸ್ಫೂರ್ತಿದಾಯಕ ಮಹಿಳಾ ಪ್ರಶಸ್ತಿ” ಪ್ರದಾನ ಮಾಡಲಾಯಿತು. ಅದರಂತೆಯೇ ಸಮಾಜ ಸೇವೆ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಮಹಿಳೆಯರನ್ನು ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಉಪ ಮೇಯರ್ ತೃಪ್ತಿ ಎಸ್. ಲಾಖೆ, ವಿರೋಧ ಪಕ್ಷದ ನಾಯಕಿ ಶೋಭಾ ಗುರುರಾಜ ದೇಸಾಯಿ, ಡಾ. ಸ್ನೇಹಾ ಕೆ., ಕವಿತಾ ಚೌಹಾಣ್, ಡಾ. ಶ್ವೇತಾ ನಿಧಿ, ಅಮೂಲ್ಯ ಶೆಟ್ಟಿ, ಸ್ನೇಹಲ್ ಪಾಟೀಲ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
LPG ಬುಕಿಂಗ್ 77 ಲಕ್ಷಕ್ಕೆ ಇಳಿಕೆ; ಭೀತಿ ಕುಂಠಿತ: ಕೇಂದ್ರ ಸರಕಾರ
ಹೊಸದಿಲ್ಲಿ: ಮಧ್ಯಪ್ರಾಚ್ಯ ಬಿಕ್ಕಟ್ಟಿನ ನಡುವೆಯೂ ದೇಶದಲ್ಲಿ ಪೆಟ್ರೋಲ್, ಡೀಸೆಲ್ ಹಾಗೂ ಅಡುಗೆ ಅನಿಲದ ಪೂರೈಕೆ ಸ್ಥಿರವಾಗಿದೆ ಎಂದು ಕೇಂದ್ರ ಸರಕಾರ ತಿಳಿಸಿದೆ. ಇತ್ತೀಚಿನ ದಿನಗಳಲ್ಲಿ ಏರಿಕೆಯಾಗಿದ್ದ LPG ಬುಕಿಂಗ್ ಪ್ರಮಾಣವು 88.8 ಲಕ್ಷದಿಂದ 77 ಲಕ್ಷಕ್ಕೆ ಇಳಿಕೆಯಾಗಿದೆ. ಇದರಿಂದ ಜನರಲ್ಲಿ ಉಂಟಾಗಿದ್ದ ಭೀತಿ ಕುಂಠಿತವಾಗುತ್ತಿರುವ ಸೂಚನೆ ದೊರೆತಿದೆ ಎಂದು ಕೇಂದ್ರ ಹೇಳಿದೆ. ಮಧ್ಯಪ್ರಾಚ್ಯ ಪರಿಸ್ಥಿತಿಯ ಬಗ್ಗೆ ದೈನಂದಿನ ಮಾಹಿತಿ ಹಂಚಿಕೊಳ್ಳುತ್ತಿರುವ ಕೇಂದ್ರ, ಆನ್ಲೈನ್ ಮೂಲಕ LPG ಬುಕ್ಕಿಂಗ್ ಪ್ರಮಾಣವು ಶೇ. 84ರಿಂದ ಶೇ. 87ಕ್ಕೆ ಏರಿಕೆಯಾಗಿದೆ ಎಂದು ತಿಳಿಸಿದೆ. ಅನಿಲ ವಿತರಣಾ ಕಂಪೆನಿಗಳು ಡಿಜಿಟಲ್ ಬುಕ್ಕಿಂಗ್ ಗೆ ಉತ್ತೇಜನ ನೀಡಿರುವುದು ಹಾಗೂ ಡೀಲರ್ ಗಳ ಬಳಿ ಜನರು ಗುಂಪುಗೂಡಿ ಖರೀದಿಸುವ ಪ್ರವೃತ್ತಿ ಕಡಿಮೆಯಾಗಿರುವುದರಿಂದ ಈ ಬೆಳವಣಿಗೆ ಕಂಡುಬಂದಿದೆ ಎಂದು ಹೇಳಿದೆ. ದೇಶದ ಎಲ್ಲಾ ತೈಲ ಸಂಸ್ಕರಣಾ ಘಟಕಗಳು ಪೂರ್ಣ ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಅಗತ್ಯ ಪ್ರಮಾಣದ ಕಚ್ಚಾ ತೈಲದ ಸಂಗ್ರಹ ಲಭ್ಯವಿದೆ ಎಂದು ಸರಕಾರ ಸ್ಪಷ್ಟಪಡಿಸಿದೆ. ಪೆಟ್ರೋಲ್ ಮತ್ತು ಡೀಸೆಲ್ ಉತ್ಪಾದನೆಯಲ್ಲಿ ದೇಶ ಸ್ವಾವಲಂಬಿಯಾಗಿದ್ದು, ದೇಶೀಯ ಬೇಡಿಕೆಯನ್ನು ಪೂರೈಸಲು ಹೆಚ್ಚುವರಿ ಆಮದು ಅಗತ್ಯವಿಲ್ಲ ಎಂದೂ ತಿಳಿಸಿದೆ. LPG ಚಿಲ್ಲರೆ ಮಾರುಕಟ್ಟೆಗಳಲ್ಲಿ ಸಿಲಿಂಡರ್ ಕೊರತೆ ಕಂಡುಬಂದಿಲ್ಲ ಎಂದು ತೈಲ ಮಾರುಕಟ್ಟೆ ಕಂಪೆನಿಗಳು ತಿಳಿಸಿವೆ. ಪೆಟ್ರೋಲ್, ಡೀಸೆಲ್ ಹಾಗೂ LPGಯ ಪೂರೈಕೆಯನ್ನು ಪ್ರತಿದಿನ ಸಮರ್ಪಕವಾಗಿ ನಿರ್ವಹಿಸಲಾಗುತ್ತಿದೆ ಎಂದು ಅವು ಹೇಳಿವೆ.
ಶಹಾಬಾದ್ | ಗರ್ಭಕಂಠ ಕ್ಯಾನ್ಸರ್ ತಡೆಗೆ ಹೆಚ್ಪಿವಿ ಲಸಿಕೆ ಪರಿಣಾಮಕಾರಿ: ಡಾ.ವೀರನಾಥ ಕನಕ
ಶಹಾಬಾದ್: ಆರೋಗ್ಯವಂತ ರಾಷ್ಟ್ರದ ಉದಯ ಆರೋಗ್ಯವಂತ ಮಹಿಳೆಯರಿಂದ ಆರಂಭವಾಗುತ್ತದೆ. ಮಹಿಳೆಯರಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುವ ಗರ್ಭಕಂಠ ಕ್ಯಾನ್ಸರ್ ತಡೆಗೆ ಹೆಚ್.ಪಿ.ವಿ ಲಸಿಕೆ ಸಹಕಾರಿಯಾಗಿದ್ದು, ಹೆಣ್ಣುಮಕ್ಕಳ ಸದೃಢ ಆರೋಗ್ಯ ರಕ್ಷಣೆಗಾಗಿ ಈ ಲಸಿಕಾ ಅಭಿಯಾನ ಪ್ರಮುಖ ಮೈಲಿಗಲ್ಲಾಗಲಿದೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ. ವೀರನಾಥ ಕನಕ ಹೇಳಿದರು. ಅವರು ರವಿವಾರ ನಗರದ ಸಮುದಾಯ ಆರೋಗ್ಯ ಕೇಂದ್ರ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರದ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ಹೆಚ್.ಪಿ.ವಿ ಲಸಿಕಾ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿದರು. ಹ್ಯೂಮನ್ ಪ್ಯಾಪಿಲೋಮ ವೈರಸ್ (HPV) ಗರ್ಭಕಂಠ ಸೇರಿದಂತೆ ಹಲವು ವಿಧದ ಕ್ಯಾನ್ಸರ್ಗೆ ಕಾರಣವಾಗುತ್ತದೆ. ಮಹಿಳೆಯರಲ್ಲಿ ಸಾಮಾನ್ಯವಾಗಿ ಕಂಡುಬರುವ ಗರ್ಭಕಂಠ ಕ್ಯಾನ್ಸರ್ ತಡೆಗಟ್ಟುವ ಉದ್ದೇಶದಿಂದ ಹೆಚ್.ಪಿ.ವಿ ಲಸಿಕಾ ಅಭಿಯಾನ ಆರಂಭಿಸಲಾಗಿದೆ. ಪ್ರಸ್ತುತ ಈ ಲಸಿಕೆಯನ್ನು 14 ವರ್ಷ ಪೂರ್ಣಗೊಂಡು 15 ವರ್ಷದೊಳಗಿನ ಹೆಣ್ಣುಮಕ್ಕಳಿಗೆ ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಸಮುದಾಯ ಆರೋಗ್ಯ ಕೇಂದ್ರಗಳು ಹಾಗೂ ತಾಲೂಕು ಆಸ್ಪತ್ರೆಗಳಲ್ಲಿ ಸಂಪೂರ್ಣ ಉಚಿತವಾಗಿ ನೀಡಲಾಗುತ್ತಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಮಾತನಾಡಿದ ಡಾ. ಶಂಕರ ರಾಠೋಡ, ಮಹಿಳೆಯರಲ್ಲಿ ಕಾಣಿಸಿಕೊಳ್ಳುವ ಗರ್ಭಕಂಠ ಕ್ಯಾನ್ಸರ್ ತಡೆಗೆ ಈ ಲಸಿಕೆ ಪರಿಣಾಮಕಾರಿಯಾಗಿದೆ. ಲಸಿಕೆ ಪಡೆದವರಿಗೆ ಯಾವುದೇ ಆರೋಗ್ಯ ಸಮಸ್ಯೆಗಳು ಅಥವಾ ಅಡ್ಡಪರಿಣಾಮಗಳಿಲ್ಲ. ಈ ಕುರಿತು ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಮನೆಮನೆಗೆ ಭೇಟಿ ನೀಡಿ ಜನರಿಗೆ ಜಾಗೃತಿ ಮೂಡಿಸಬೇಕು ಎಂದು ಹೇಳಿದರು. ಈ ಸಂದರ್ಭದಲ್ಲಿ ಯೂಸುಫ್ ನಾಕೇದಾರ, ಸಂಜಯ ರಾಠೋಡ ಸೇರಿದಂತೆ ಆರೋಗ್ಯ ಕೇಂದ್ರದ ಅಧಿಕಾರಿಗಳು, ಸಿಬ್ಬಂದಿಗಳು, ಆಶಾ ಕಾರ್ಯಕರ್ತೆಯರು ಹಾಗೂ 15 ವರ್ಷದೊಳಗಿನ ಹೆಣ್ಣುಮಕ್ಕಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ತೆಲಂಗಾಣ | ನೂರು ಬೀದಿನಾಯಿಗಳಿಗೆ ವಿಷಪ್ರಾಶನ : ಸರಪಂಚ್ ವಿರುದ್ಧ ಪ್ರಕರಣ ದಾಖಲು
ಹೈದರಾಬಾದ್,ಮಾ.15: ಬೀದಿನಾಯಿಗಳ ವಿರುದ್ಧ ಹಿಂಸೆಯ ಮತ್ತೊಂದು ನಿದರ್ಶನವು ಬೆಳಕಿಗೆ ಬಂದಿದೆ. ಮಂಚಿರ್ಯಾಲ್ ಜಿಲ್ಲೆಯ ಕಿಸ್ಟಾಪುರ ಗ್ರಾಮದಲ್ಲಿ ಮಾ.7 ಮತ್ತು 8ರ ನಡುವಿನ ರಾತ್ರಿ ಸುಮಾರು ನೂರು ಬೀದಿನಾಯಿಗಳಿಗೆ ವಿಷವುಣಿಸಿ ಕೊಲ್ಲಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸ್ಟ್ರೇ ಆ್ಯನಿಮಲ್ ಫೌಂಡೇಷನ್ ಆಫ್ ಇಂಡಿಯಾದ ಗೌತಮ್ ಎನ್ನುವವರು ಈ ಬಗ್ಗೆ ದೂರು ಸಲ್ಲಿಸಿದ್ದಾರೆ. ಸರಪಂಚ್ ಮತ್ತು ಗ್ರಾಮ ಪಂಚಾಯತ್ ಕಾರ್ಯದರ್ಶಿ ಬೀದಿನಾಯಿಗಳನ್ನು ಕೊಲ್ಲಲು ಇಬ್ಬರು ವ್ಯಕ್ತಿಗಳನ್ನು ನೇಮಿಸಿಕೊಂಡಿದ್ದರು. ನಾಯಿಗಳಿಗೆ ವಿಷದ ಚುಚ್ಚುಮದ್ದು ನೀಡಿ ಬಳಿಕ ಅವುಗಳನ್ನು ನದಿಯೊಂದರ ಬಳಿ ಎಸೆಯಲಾಗಿತ್ತು ಎಂದು ಅವರು ಆರೋಪಿಸಿದ್ದಾರೆ. ಪೊಲೀಸರು ಸರಪಂಚ್ ಮತ್ತು ಗ್ರಾಮ ಪಂಚಾಯತ್ ಕಾರ್ಯದರ್ಶಿ ವಿರುದ್ಧ ಬಿಎನ್ಎಸ್ನ ಸಂಬಂಧಿತ ಕಲಂಗಳು ಮತ್ತು ಪ್ರಾಣಿಗಳ ಮೇಲೆ ಕ್ರೌರ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಜ.2026 ಮತ್ತು ಡಿ.2025ರಲ್ಲಿ ತೆಲಂಗಾಣದ ವಿಭಿನ್ನ ಭಾಗಗಳಲ್ಲಿ ಬೀದಿನಾಯಿಗಳ ಸಾಮೂಹಿಕ ಹತ್ಯೆಯ ಹಲವಾರು ಘಟನೆಗಳು ವರದಿಯಾಗಿದ್ದವು. ಕಳೆದ ವರ್ಷದ ಡಿಸೆಂಬರ್ನಲ್ಲಿ ಗ್ರಾಮ ಪಂಚಾಯತ್ ಚುನಾವಣೆಗಳಿಗೆ ಮುನ್ನ ಗ್ರಾಮಸ್ಥರಿಗೆ ನೀಡಿದ್ದ ಭರವಸೆಗಳನ್ನು ಈಡೇರಿಸಲು ಕೆಲವು ಅಭ್ಯರ್ಥಿಗಳು ಈ ಹತ್ಯೆಗಳನ್ನು ನಡೆಸಿದ್ದಾರೆ ಎಂದು ಆರೋಪಿಸಲಾಗಿತ್ತು.
ಚಿತ್ರದುರ್ಗದ ಚಳ್ಳಕೆರೆ ಬಳಿ ಲಾರಿಗೆ ಹಿಂಬದಿಯಿಂದ ಕಾರು ಡಿಕ್ಕಿ ಹೊಡೆದಿದ್ದು, ಅಪಘಾತದಲ್ಲಿ ಮೂವರು ಮೃತಪಟ್ಟಿದ್ದಾರೆ. ಎಲ್ಲರೂ ಬೆಂಗಳೂರಿನಲ್ಲಿ ಪೊಲೀಸ್ ಸಬ್ ಇನ್ಸ್ಪೆಕ್ಟರ್ಗಳಾಗಿದ್ದರು. ಈ ಪೈಕಿ ಇಬ್ಬರಿಗೆ ಕೆಲ ದಿನಗಳ ಬಳಿಕ ಮದುವೆ ನಿಶ್ಚಯವಾಗಿತ್ತು. ಮೃತರು ಅಮರೇಶ್ (29), ಮಂಜುನಾಥ್ (32) ಹಾಗೂ ಸಚಿನ್ (30) ಎಂದು ಗುರುತಿಸಲಾಗಿದೆ.
‘9/11 ಶೈಲಿಯಲ್ಲಿ ದಾಳಿ ನಡೆಸಿ, ನಮ್ಮ ಮೇಲೆ ಗೂಬೆ ಕೂರಿಸುವ ಸಂಚು ನಡೆದಿದೆ’: ಇರಾನ್ ಗಂಭೀರ ಆರೋಪ
ಇರಾನ್ ಬಗ್ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಂದುಕೊಂಡಿದ್ದೇ ಒಂದು, ಈಗ ನಡೆಯುತ್ತಿರುವುದೇ ಇನ್ನೊಂದು. ಈ ಯುದ್ಧದಿಂದ ಹೊರಬರಲು ಟ್ರಂಪ್ ಎಸ್ಕೇಪ್ ರೂಟ್ ಹುಡುಕುತ್ತಿದ್ದಾರೆ. ಹೀಗಿರುವಾಗಲೇ, ಅಮೆರಿಕ ಮೇಲೆ ಇರಾನ್ ಗಂಭೀರ ಆರೋಪ ಮಾಡಿದೆ. ‘9/11 ಶೈಲಿಯಲ್ಲಿ ಟೆರರ್ ಅಟ್ಯಾಕ್ ಮಾಡಿಸಿ, ಅದನ್ನ ನಮ್ಮ ಮೇಲೆ ಗೂಬೆ ಕೂರಿಸುವ ಸಂಚು ನಡೆದಿದೆ’ ಎಂದು ಹೇಳಿ ಇರಾನ್ನ ಅಲಿ ಲಾರಿಜಾನಿ ಬಾಂಬ್ ಸಿಡಿಸಿದ್ದಾರೆ.

29 C