Bengaluru | ಶಾರ್ಟ್ ಸರ್ಕ್ಯೂಟ್ನಿಂದ ಬೆಂಕಿ : ಲಕ್ಷಾಂತರ ರೂ. ಮೌಲ್ಯದ ಸೊತ್ತು ಹಾನಿ
ಬೆಂಗಳೂರು : ನಗರದ ಚಿಕ್ಕಪೇಟೆ ಮೆಟ್ರೋ ನಿಲ್ದಾಣದ ಸಮೀಪ ಫ್ಯಾನ್ಸಿ ಅಂಗಡಿಯಲ್ಲಿ ಶಾರ್ಟ್ ಸರ್ಕ್ಯೂಟ್ನಿಂದ ಬೆಂಕಿ ಕಾಣಿಸಿಕೊಂಡ ಘಟನೆ ಮಂಗಳವಾರ ಬೆಳಿಗ್ಗೆ ನಡೆದಿದೆ. ಬೆಳಿಗ್ಗೆ ಸುಮಾರು 7 ಗಂಟೆ ಸುಮಾರಿಗೆ ಕಟ್ಟಡದಲ್ಲಿದ್ದ ಫ್ಯಾನ್ಸಿ ಸ್ಟೋರ್ನಲ್ಲಿ ಏಕಾಏಕಿ ಬೆಂಕಿ ಹೊತ್ತಿಕೊಂಡಿದ್ದು, ಲಕ್ಷಾಂತರ ಮೌಲ್ಯದ ವಸ್ತುಗಳು ಬೆಂಕಿಗೆ ಆಹುತಿಯಾಗಿವೆ ಎಂದು ತಿಳಿದು ಬಂದಿದೆ. ಘಟನಾ ಸ್ಥಳಕ್ಕೆ ಆರು ಅಗ್ನಿಶಾಮಕ ದಳದ ವಾಹನಗಳು ಧಾವಿಸಿದ್ದು, ದಟ್ಟ ಹೊಗೆ ಆವರಿಸಿದ್ದ ಹಿನ್ನೆಲೆ ಆಕ್ಸಿಜನ್ ಸಿಲಿಂಡರ್ ಮತ್ತು ಮಾಸ್ಕ್ ಧರಿಸಿ ಸಿಬ್ಬಂದಿ ಅಂಗಡಿ ಒಳಗೆ ಪ್ರವೇಶಿಸಿ ಬೆಂಕಿ ನಂದಿಸುವ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಕಳೆದ ಒಂದು ಗಂಟೆಯಿಂದ ಕಾರ್ಯಾಚರಣೆ ಮುಂದುವರಿದಿದ್ದು, ಹೆಚ್ಚಿನ ವಿವರಗಳು ಇನ್ನಷ್ಟೇ ಲಭ್ಯವಾಗಬೇಕಿದೆ.
NCERT ಪಠ್ಯದಲ್ಲಿನ 'ನ್ಯಾಯಾಂಗದಲ್ಲಿನ ಭ್ರಷ್ಟಾಚಾರ' ವಿಷಯಗಳ ಬಗ್ಗೆ ಸುಪ್ರೀಂ ಕೋರ್ಟ್ ಗಂಭೀರ ಆಕ್ಷೇಪ
ಸ್ವಯಂಪ್ರೇರಿತವಾಗಿ ವಿಚಾರಣೆಗೆ ಕೈಗೆತ್ತಿಕೊಂಡ ನ್ಯಾಯಾಲಯ
ರಮಝಾನ್ ಸಂಭ್ರಮದಲ್ಲಿ ಸಮೋಸಗಳ ಕಾರುಬಾರು
ದಿನಕ್ಕೆ 25ರಿಂದ 30 ಸಾವಿರ ಮಾರಾಟ: ವ್ಯಾಪಾರಿಗಳಿಗೆ ಬಂಪರ್ ಲಾಭ
ನ್ಯಾಯಾಂಗಕ್ಕೆ ಮಸಿ ಬಳಿಯುವ ಷಡ್ಯಂತ್ರ, ಸುಮ್ಮನಿರಲ್ಲ: NCERT ಪಠ್ಯದ ಬಗ್ಗೆ ಸುಪ್ರೀಂ ಕೋರ್ಟ್ ಸಿಜೆಐ ಆಕ್ಷೇಪ
ನವದೆಹಲಿ: 8ನೇ ತರಗತಿಯ ಹೊಸ ಎನ್ಸಿಇಆರ್ಟಿ ಸಮಾಜ ವಿಜ್ಞಾನ ಪಠ್ಯಪುಸ್ತಕದಲ್ಲಿ ನ್ಯಾಯಾಂಗದಲ್ಲಿನ ಭ್ರಷ್ಟಾಚಾರ ಕುರಿತು ಉಲ್ಲೇಖಿಸಿರುವುದಕ್ಕೆ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ (CJI) ಸೂರ್ಯಕಾಂತ್ ಅವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇದೊಂದು ಪೂರ್ವನಿಯೋಜಿತ ಮತ್ತು ವ್ಯವಸ್ಥಿತ ಸಂಚು ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಅವರು, ನ್ಯಾಯಾಂಗ ವ್ಯವಸ್ಥೆಯನ್ನು ನಿಂದಿಸಲು ಅಥವಾ ಅದರ ಘನತೆಗೆ ಕುಂದು ತರಲು ತಾವು
ಕೊಪ್ಪಳ | ವಸತಿ ಶಾಲೆಯ ಪಿಯುಸಿ ವಿದ್ಯಾರ್ಥಿನಿಗೆ ಲೈಂಗಿಕ ದೌರ್ಜನ್ಯ : ಆರೋಪಿಯ ಬಂಧನ
ಕೊಪ್ಪಳ/ಕನಕಗಿರಿ: ಕನಕಗಿರಿ ತಾಲೂಕಿನ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಪ್ರಥಮ ಪಿಯುಸಿ ಓದುತ್ತಿದ್ದ ವಿದ್ಯಾರ್ಥಿನಿಯೊಬ್ಬಳು ಗರ್ಭಿಣಿಯಾದ ಆಘಾತಕಾರಿ ಘಟನೆಯೊಂದು ತಡವಾಗಿ ಬೆಳಕಿಗೆ ಬಂದಿದೆ. ಈ ಕುರಿತು ಕನಕಗಿರಿ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಕರಣದ ಹಿನ್ನೆಲೆ : ವಸತಿ ಶಾಲೆಯಲ್ಲಿ ಓದುತ್ತಿದ್ದ ಬಾಲಕಿ ರಜೆ ಸಂದರ್ಭದಲ್ಲಿ ಮಾವನ ಮನೆಗೆ ತೆರಳುತ್ತಿದ್ದಳು. ಅಲ್ಲಿ ಪರಿಚಯವಾದ ಮಾವನ ಮಗನ ದೀಪಾವಳಿ ರಜೆ ವೇಳೆ ಎರಡು ಬಾರಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎನ್ನಲಾಗಿದೆ. ಇದರ ಪರಿಣಾಮವಾಗಿ ಬಾಲಕಿ ಗರ್ಭಿಣಿಯಾಗಿದ್ದಾಳೆ. ಫೆ.19ರಂದು ವಿದ್ಯಾರ್ಥಿನಿಗೆ ಹಠಾತ್ ರಕ್ತಸ್ರಾವ ಉಂಟಾದ ಹಿನ್ನೆಲೆಯಲ್ಲಿ ವೈದ್ಯಕೀಯ ತಪಾಸಣೆ ನಡೆಸಿದಾಗ ಗರ್ಭಿಣಿಯಾಗಿರುವುದು ದೃಢಪಟ್ಟಿದೆ. ಘಟನೆ ಕುರಿತು ಯಾರಿಗೂ ಹೇಳದಂತೆ ಬೆದರಿಕೆ ಹಾಕಿದ್ದಾನೆ ಎಂದು ಬಾಲಕಿ ದೂರಿನಲ್ಲಿ ಉಲ್ಲೇಖಿಸಿದ್ದಾಳೆ. ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಸಂತ್ರಸ್ತ ವಿದ್ಯಾರ್ಥಿನಿಗೆ ವೈದ್ಯಕೀಯ ಹಾಗೂ ಮಾನಸಿಕ ನೆರವು ನೀಡಲಾಗುತ್ತಿದ್ದು, ತನಿಖೆ ಮುಂದುವರಿದಿದೆ. ವಸತಿ ಶಾಲೆಯ ಪ್ರಾಂಶುಪಾಲರು ಪ್ರಕರಣವನ್ನು ಮುಚ್ಚಿಹಾಕಲು ಯತ್ನಿಸಿದರೆಂಬ ಆರೋಪ ಕೇಳಿಬಂದಿದ್ದು, ನಿಲಯಪಾಲಕರು ಹಾಗೂ ಪ್ರಾಂಶುಪಾಲರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಎಸ್ಎಫ್ಐ ಕೊಪ್ಪಳ ಜಿಲ್ಲಾ ಸಮಿತಿ ಆಗ್ರಹಿಸಿದೆ. ಪಾಲಕರಲ್ಲಿ ಆತಂಕ : ಕೆಲ ತಿಂಗಳ ಹಿಂದೆ ಕುಕನೂರು ತಾಲೂಕಿನ ವ್ಯಾಪ್ತಿಯ ವಸತಿ ನಿಲಯದಲ್ಲಿ ಓದುತ್ತಿದ್ದ 16 ವರ್ಷದ ಬಾಲಕಿಯೊಬ್ಬಳು ಮಗುವಿಗೆ ಜನ್ಮ ನೀಡಿದ ಆಘಾತಕಾರಿ ಘಟನೆ ನಡೆದಿತ್ತು, ಇದಾದ ನಂತರ ಮತ್ತೆ ಈ ಘಟನೆ ನಡೆದಿದೆ. ಇದರಿಂದ ಪಾಲಕರಲ್ಲಿ ಆತಂಕ ಹೆಚ್ಚಾಗಿದ್ದು, ಕಡುಗಾವಲಿನಲ್ಲಿ ಇರಬೇಕಾದ ವಸತಿ ಶಾಲೆಯ ಆವರಣದಲ್ಲೇ ಇಂತಹ ಘಟನೆ ನಡೆದಿರುವುದು ಪೋಷಕರಲ್ಲಿ ತೀವ್ರ ಆತಂಕ ಮೂಡಿಸಿದೆ.
ಬೆಂಗಳೂರು:ಧಾರವಾಡದಲ್ಲಿ ಸರ್ಕಾರಿ ಉದ್ಯೋಗಾಕಾಂಕ್ಷಿಗಳು ನಡೆಸುತ್ತಿರುವ ಯುವಜನತೆಯನ್ನು ಉದ್ದೇಶಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಟ್ವೀಟ್ ಮೂಲಕ ದೀರ್ಘವಾದ ಸ್ಪಷ್ಟನೆ ನೀಡಿದ್ದು, ಹಿಂದಿನ ಬಿಜೆಪಿ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಸಿಎಂ ಅವರ ಈ ಹೇಳಿಕೆಗೆ ತಿರುಗೇಟು ನೀಡಿರುವ ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ರಾಜಕೀಯ ಬದಿಗಿಟ್ಟು ವ್ಯವಸ್ಥೆಯನ್ನು ಸರಿಪಡಿಸೋಣ ಎಂದು 7 ಪ್ರಮುಖ ಸುಧಾರಣೆಗಳ
ಏರುತ್ತಿರುವ ಚಿನ್ನದ ಬೆಲೆ, ಸ್ಥಿರವಾದ ಬೆಳ್ಳಿ; ಇಂದಿನ ದರವೆಷ್ಟು?
ಸೋಮವಾರದಿಂದ ಏರು ಹಾದಿಯಲ್ಲಿರುವ ಚಿನ್ನ ರೂ. 16 ಸಾವಿರದ ಗಡಿದಾಟಿ ನಿಂತಿದೆ. ಬೆಳ್ಳಿ ಬೆಲೆ ಸ್ಥಿರವಾಗಿದೆ. ಫೆಬ್ರವರಿಯಲ್ಲಿ ಬಹುತೇಕ ಕುಸಿತದಲ್ಲೇ ಮುಂದುವರಿದ ಚಿನ್ನ ಮತ್ತು ಬೆಳ್ಳಿಯ ಬೆಲೆಗಳು ಫೆಬ್ರವರಿ 23 ಸೋಮವಾರದಿಂದ ಮತ್ತೆ ಏರು ಹಾದಿಯಲ್ಲಿದೆ. ಸೋಮವಾರ ಫೆಬ್ರವರಿಯಲ್ಲೇ ಮೊದಲ ಬಾರಿಗೆ 16 ಸಾವಿರದ ಗಡಿ ದಾಟಿದ ಚಿನ್ನ ಮಂಗಳವಾರವೂ ಅಲ್ಪ ಏರಿಕೆ ಕಂಡಿದೆ. ಇದೀಗ ಬುಧವಾರವೂ ಮತ್ತೆ ಸ್ವಲ್ಪ ಏರಿಕೆ ಕಂಡುಬಂದಿದೆ. ಆದರೆ ಬೆಳ್ಳಿ ಬೆಲೆಯಲ್ಲಿ ಸ್ಥಿರತೆ ಕಂಡುಬಂದಿದೆ. ಮಂಗಳವಾರ ಕುಸಿದಿದ್ದ ಬೆಳ್ಳಿ, ಬುಧವಾರ ಅದೇ ಬೆಲೆಯಲ್ಲಿ ಸ್ಥಿರವಾಗಿದೆ. ಫೆಬ್ರವರಿ 25ರಂದು ಬುಧವಾರ ಮಾರುಕಟ್ಟೆಗಳಲ್ಲಿ 24 ಕ್ಯಾರೆಟ್ ಶುದ್ಧ ಚಿನ್ನದ ಬೆಲೆ ಗ್ರಾಂಗೆ 11 ರೂ. ಏರಿಕೆಯಾಗಿ ಹತ್ತು ಗ್ರಾಂ ಬೆಲೆ 1,61,890 ರೂ.ಗೆ ಬಂದು ನಿಂತಿದೆ. ಆಭರಣ ಚಿನ್ನವಾದ 22 ಕ್ಯಾರೆಟ್ ಬೆಲೆಯು ಗ್ರಾಂಗೆ 10 ರೂ. ಏರಿಕೆಯಾಗಿ ಹತ್ತು ಗ್ರಾಂಗೆ 1,48,400 ರೂ.ಗೆ ತಲುಪಿದೆ. 18 ಕ್ಯಾರೆಟ್ ಚಿನ್ನವು ಪ್ರತಿ ಗ್ರಾಂಗೆ 8 ರೂ. ಏರಿಕೆಯಾಗಿ ಹತ್ತು ಗ್ರಾಂಗೆ 1,21,420 ರೂ. ಗೆ ತಲುಪಿದೆ. ಮಂಗಳೂರಿನಲ್ಲಿ ಚಿನ್ನದ ದರವೆಷ್ಟಿದೆ? ಫೆಬ್ರವರಿ 25ರಂದು ಬುಧವಾರ ಬೆಳಗಿನ 11 ಗಂಟೆಯ ವಹಿವಾಟಿನಲ್ಲಿ ಮಂಗಳೂರಿನಲ್ಲಿ ಚಿನ್ನದ ಬೆಲೆ ಮತ್ತೆ ಅಲ್ಪ ಏರಿಕೆ ಕಂಡಿದೆ. ಒಂದು ಗ್ರಾಂ 24 ಕ್ಯಾರೆಟ್ ಚಿನ್ನದ ದರ 16,189 (+11) ರೂ. ನಷ್ಟಿದೆ. ಒಂದು ಗ್ರಾಂ 22 ಕ್ಯಾರೆಟ್ ಚಿನ್ನದ ದರ 14,840 (+10) ರೂ. ಮತ್ತು ಒಂದು ಗ್ರಾಂ 18 ಕ್ಯಾರೆಟ್ ಚಿನ್ನದ ದರ 12,142 (+8) ರೂ. ಬೆಲೆಗೆ ತಲುಪಿದೆ. ಸ್ಥಿರವಾದ ಬೆಳ್ಳಿದರ ಫೆಬ್ರವರಿ ಆರಂಭದಿಂದಲೇ ಸತತ ಕುಸಿತ ಕಂಡಿದ್ದ ಬೆಳ್ಳಿ ಫೆಬ್ರವರಿ 19ರ ಗುರುವಾರದಿಂದ ಬೆಳ್ಳಿ ಏರುಹಾದಿಯಲ್ಲಿತ್ತು. ಗುರುವಾರ ಮತ್ತು ಶುಕ್ರವಾರ ಕೆಜಿಗೆ 2,70,000 ರೂ. ಗೆ ಸ್ಥಿರವಾಗಿ ನಿಂತಿದ್ದ ಬೆಳ್ಳಿ ಬೆಲೆ, ಶನಿವಾರ 5 ರೂ. ಏರಿಕೆಯಾಗಿ 2,75,000ಗೆ ಬಂದು ತಲುಪಿತ್ತು. ನಂತರ ಸೋಮವಾರ ಬರೋಬ್ಬರಿ ಪ್ರತಿ ಗ್ರಾಂಗೆ 25 ರೂ. ಏರಿಕೆ ಕಂಡ ಚಿನ್ನ ಅಂತಿಮವಾಗಿ ಕೆಜಿಗೆ 3,00,000ಕ್ಕೆ ತಲುಪಿತ್ತು. ಆದರೆ ಮಂಗಳವಾರ ಪ್ರತಿ ಗ್ರಾಂಗೆ 15 ರೂ. ಕುಸಿದು ಕೆಜಿಗೆ 2,85,000 ರೂ.ಗೆ ತಲುಪಿದೆ. ಇದೀಗ ಬುಧವಾರವೂ ಇದೇ ಬೆಲೆಗೆ ಸ್ಥಿರವಾಗಿ ನಂತಿದೆ. ವಿವಿಧ ನಗರಗಳಲ್ಲಿ 1 ಗ್ರಾಮ್ ಚಿನ್ನದ ದರ (ಬೆಳಗಿನ ವಹಿವಾಟು) ಹೇಗಿದೆ? ದಿಲ್ಲಿ: 24 ಕ್ಯಾರೆಟ್ ಚಿನ್ನದ ದರ 16,204 (+11) ರೂ., 22 ಕ್ಯಾರೆಟ್ ಚಿನ್ನದ ದರ 14,855 (+10) ರೂ. ಮುಂಬೈ: 24 ಕ್ಯಾರೆಟ್ ಚಿನ್ನದ ದರ 16,189 (+11) ರೂ., 22 ಕ್ಯಾರೆಟ್ ಚಿನ್ನದ ದರ 14,840 (+10) ರೂ. ಅಹಮದಾಬಾದ್: 24 ಕ್ಯಾರೆಟ್ ಚಿನ್ನದ ದರ 16,194 (+11) ರೂ., 22 ಕ್ಯಾರೆಟ್ ಚಿನ್ನದ ದರ 14,845 (+10) ರೂ. ಚೆನ್ನೈ: 24 ಕ್ಯಾರೆಟ್ ಚಿನ್ನದ ದರ 16,288 (+44) ರೂ., 22 ಕ್ಯಾರೆಟ್ ಚಿನ್ನದ ದರ 14,930 (+40) ರೂ. ಕೋಲ್ಕತ್ತಾ: 24 ಕ್ಯಾರೆಟ್ ಚಿನ್ನದ ದರ 16,189 (+11) ರೂ., 22 ಕ್ಯಾರೆಟ್ ಚಿನ್ನದ ದರ 14,840 (+10) ರೂ. ಹೈದರಾಬಾದ್: 24 ಕ್ಯಾರೆಟ್ ಚಿನ್ನದ ದರ 16,189 (+11) ರೂ., 22 ಕ್ಯಾರೆಟ್ ಚಿನ್ನದ ದರ 14,840 (+10) ರೂ. ಜೈಪುರ: 24 ಕ್ಯಾರೆಟ್ ಚಿನ್ನದ ದರ 16,204 (+11) ರೂ., 22 ಕ್ಯಾರೆಟ್ ಚಿನ್ನದ ದರ 14,855 (+10) ರೂ. ಚಂಡೀಗಢ: 24 ಕ್ಯಾರೆಟ್ ಚಿನ್ನದ ದರ 16,204 (+11) ರೂ., 22 ಕ್ಯಾರೆಟ್ ಚಿನ್ನದ ದರ 14,855 (+10) ರೂ. ಲಕ್ನೋ: 24 ಕ್ಯಾರೆಟ್ ಚಿನ್ನದ ದರ 16,204 (+11) ರೂ., 22 ಕ್ಯಾರೆಟ್ ಚಿನ್ನದ ದರ 14,855 (+10) ರೂ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಏನು ಹೇಳುತ್ತಿದ್ದಾರೆ ಎಂಬುದನ್ನು ತಿಳಿದುಕೊಳ್ಳಲು ಯಾರಿಗಾದರೂ ಸ್ವಲ್ಪ ಸಮಯ ಬೇಕು. ಬಹುತೇಕ ಸಂದರ್ಭಗಳಲ್ಲಿ ಅವರ ಮಾತುಗಳು ಹೇಳುವುದು ಒಂದು, ಮಾಡುವುದು ಇನ್ನೊಂದು ಎಂಬಂತೆ ಇರುತ್ತವೆ. ಅದೇ ರೀತಿ ನಿನ್ನೆ (ಫೆ.24-ಮಂಗಳವಾರ) ಯುಎಸ್ ಸ್ಟೇಟ್ ಆಫ್ ದಿ ಯೂನಿಯನ್ ಉದ್ದೇಶಿಸಿ ಭಾಷಣ ಮಾಡಿದ ಡೊನಾಲ್ಡ್ ಟ್ರಂಪ್, ಮತ್ತೊಮ್ಮೆ ಭಾರತ-ಪಾಕಿಸ್ತಾನ ಕದನ ವಿರಾಮ ಒಪ್ಪಂದದಲ್ಲಿ ತಮ್ಮ ಪಾತ್ರವಿದೆ ಎಂದು ಹೇಳಿದ್ದಾರೆ. ಆದರೆ ತಮ್ಮ ಭಾಷಣದಲ್ಲಿ ಅವರು ಪಾಕ್ ಪ್ರಧಾನಿ ಶೆಹಬಾಜ್ ಷರೀಫ್ ಸಾಯುತ್ತಿದ್ದರು ಎಂದು ಹೇಳಿ ಅಚ್ಚರಿ ಮೂಡಿಸಿದರು.
ಜಮ್ಮು-ಕಾಶ್ಮೀರ ರಣಜಿ ಕ್ರಿಕೆಟ್ ಆಡುತ್ತಿರುವುದು ನರೇಂದ್ರ ಮೋದಿಯ ಮುತ್ಸದ್ದಿ ನಾಯಕತ್ವದ ಫಲ ಎಂದ ಬಸವರಾಜ ಬೊಮ್ಮಾಯಿ!
► ಎಲ್ಲವನ್ನೂ ಮೋದೀಜಿ ಮಾಡಿದ್ದು ಅನ್ನೋದೇ ಇವರ ಮಂತ್ರವಾಗಿದೆ : ಬಿ.ಕೆ.ಹರಿಪ್ರಸಾದ್ ►67 ವರ್ಷದಿಂದಲೂ ಜಮ್ಮು-ಕಾಶ್ಮೀರ ರಣಜಿ ಆಡುತ್ತಿದೆ ಎಂದು ಮಾಜಿ ಸಿಎಂಗೆ ನೆನಪಿಸಿದ ಕ್ರಿಕೆಟ್ ಪ್ರೇಮಿಗಳು
ನನ್ನ ಹಣೆಬರಹ ನನಗೆ ಗೊತ್ತಿಲ್ಲ, ಇನ್ನು ಬೇರೆಯವರು ಹೇಳೋದೇನು? ಹೀಗೆ ಪ್ರಶ್ನಿಸಿದ್ದು ಸಚಿವ ಪ್ರಿಯಾಂಕ್ ಖರ್ಗೆ. ಬೆಂಗಳೂರಿನಲ್ಲಿ ಬುಧವಾರ ಮಾತನಾಡಿದ ಅವರು, ರಾಜಕೀಯ ಪದೋನ್ನತಿ ಬಗ್ಗೆ ಮಾರ್ಮಿಕ ಮಾತನ್ನು ಆಡಿದರು. ನನಗೆ ರಾಜಕೀಯವಾಗಿ ಪದೋನ್ನತಿ ಸಿಗಲಿದೆ ಎಂದು ಬೇರೆ ಯಾರೂ ಹೇಳಿದರೂ ಪ್ರಯೋಜನ ಆಗುವುದಿಲ್ಲ. ಬದಲಾಗಿ ರಾಜಕೀಯ ಪದೋನ್ನತಿಯ ಬಗ್ಗೆ ಹೈಕಮಾಂಡ್ ಹೇಳಬೇಕು ಎಂದು ತಿಳಿಸಿದರು. ಇದೇ ಸಂದರ್ಭದಲ್ಲಿ ಸಂಪುಟ ಪುನಾರಚನೆ ಹಾಗೂ ಇನ್ನಿತರ ವಿಚಾರವಾಗಿ ಅವರು ಮಾತನಾಡಿದ್ದಾರೆ. ವಿವರ ಇಲ್ಲದೆ.
ಹುಬ್ಬಳ್ಳಿ ಹೆದ್ದಾರಿಯಲ್ಲಿ ಯುವಕನ ಮೃತದೇಹ ಪತ್ತೆ; ಕೊಲೆ ಮಾಡಿ ಚೀಲದಲ್ಲಿ ತುಂಬಿ ಎಸೆದಿರುವ ಶಂಕೆ
ಹುಬ್ಬಳ್ಳಿ: ನಗರದ ಹೊರವಲಯದ ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ ಗದಗ ರಸ್ತೆಯಲ್ಲಿರುವ ITC ಗೋಡೌನ್ ಸಮೀಪದ ರಾಷ್ಟ್ರೀಯ ಹೆದ್ದಾರಿಯಲ್ಲಿ ಬುಧವಾರ ಬೆಳ್ಳಂಬೆಳಗ್ಗೆ ಯುವಕನ ಮೃತದೇಹ ಪತ್ತೆಯಾಗಿರುವ ಭೀಕರ ಘಟನೆ ಬೆಳಕಿಗೆ ಬಂದಿದೆ. ಮೃತ ಯುವಕನನ್ನು ಬಂಡಿವಾಡ ಮೂಲದ ಮಂಜುನಾಥ (29) ಎಂದು ಗುರುತಿಸಲಾಗಿದೆ. ಬುಧವಾರ ಮುಂಜಾನೆ ರಸ್ತೆ ಮೂಲಕ ತೆರಳುತ್ತಿದ್ದವರು ಅನುಮಾನಾಸ್ಪದ ಚೀಲವನ್ನು ಕಂಡು ಪೊಲೀಸರಿಗೆ ಮಾಹಿತಿ ನೀಡಿದ ಬಳಿಕ ಘಟನೆ ಬಯಲಾಗಿದೆ. ದುಷ್ಕರ್ಮಿಗಳು ಯುವಕನನ್ನು ಅಮಾನವೀಯವಾಗಿ ಕೊಲೆ ಮಾಡಿ, ಮೃತದೇಹವನ್ನು ಚೀಲದಲ್ಲಿ ತುಂಬಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಎಸೆದು ಹೋಗಿರುವ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ಧಾವಿಸಿದ ಪೊಲೀಸರು ಮೃತದೇಹವನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗಾಗಿ ಕಿಮ್ಸ್ ಆಸ್ಪತ್ರೆಗೆ ರವಾನಿಸಿದ್ದಾರೆ. ಕೊಲೆಗೆ ನಿಖರ ಕಾರಣವೇನು, ಹಂತಕರು ಯಾರು ಎಂಬುದು ಇನ್ನೂ ನಿಗೂಢವಾಗಿದೆ. ಹಳೆಯ ದ್ವೇಷ ಅಥವಾ ವೈಯಕ್ತಿಕ ವೈಮನಸ್ಸಿನ ಹಿನ್ನೆಲೆಯಲ್ಲಿ ಈ ಕೃತ್ಯ ನಡೆದಿದೆಯೇ ಎಂಬ ನಿಟ್ಟಿನಲ್ಲಿ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಘಟನಾ ಸ್ಥಳದ ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ. ನಡುರಸ್ತೆಯಲ್ಲೇ ಮೃತದೇಹ ಪತ್ತೆಯಾಗಿರುವುದು ಸ್ಥಳೀಯರಲ್ಲಿ ಆತಂಕ ಮೂಡಿಸಿದ್ದು, ಆರೋಪಿಗಳ ಪತ್ತೆಗಾಗಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ವಾಷಿಂಗ್ಟನ್: ಭಾರತ-ಪಾಕಿಸ್ತಾನ ಸಂಘರ್ಷವನ್ನು ಬಗೆಹರಿಸಲು ಮಧ್ಯಪ್ರವೇಶಿಸಿರುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬುಧವಾರ ಪುನರುಚ್ಚರಿಸಿದ್ದಾರೆ. ನಾನು ಮಧ್ಯಸ್ಥಿಕೆ ವಹಿಸದಿದ್ದರೆ ಪಾಕಿಸ್ತಾನದ ಪ್ರಧಾನಮಂತ್ರಿ ಶಹಬಾಝ್ ಷರೀಫ್ ಹತ್ಯೆಯಾಗುತ್ತಿದ್ದರೆಂದು ಹೇಳಿದ್ದಾರೆ. ಜಾಗತಿಕವಾಗಿ ಎಂಟು ಯುದ್ಧಗಳನ್ನು ತಡೆದಿದ್ದೇನೆ. ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಘರ್ಷ ಅಣ್ವಸ್ತ್ರ ಯುದ್ಧದ ಮಟ್ಟಕ್ಕೆ ತಲುಪುವ ಸಾಧ್ಯತೆ ಇತ್ತು ಎಂದು ಟ್ರಂಪ್ ಹೇಳಿದ್ದಾರೆ. ನನ್ನ ಮೊದಲ 10 ತಿಂಗಳಲ್ಲಿ, ನಾನು ಎಂಟು ಯುದ್ಧಗಳನ್ನು ಕೊನೆಗೊಳಿಸಿದೆ. ಪಾಕಿಸ್ತಾನ ಮತ್ತು ಭಾರತದ ನಡುವೆ ಪರಮಾಣು ಯುದ್ಧದ ಸಾಧ್ಯತೆ ಇತ್ತು. ನಾನು ಮಧ್ಯಸ್ಥಿಕೆ ವಹಿಸದಿದ್ದರೆ ಪಾಕಿಸ್ತಾನದ ಪ್ರಧಾನಿ ಹತ್ಯೆಯಾಗುತ್ತಿದ್ದರು ಎಂದು 3.5 ಕೋಟಿ ಜನರು ಹೇಳುತ್ತಿದ್ದಾರೆ ಎಂದು ಟ್ರಂಪ್ ಹೇಳಿದ್ದಾರೆ. ಭಾರತ ಮತ್ತು ಪಾಕಿಸ್ತಾನ ನಡುವಿನ ಯುದ್ಧ ಕೊನೆಗೊಳಿಸಿರುವ ಬಗ್ಗೆ ಹಲವು ಬಾರಿ ಹೇಳಿಕೆ ನೀಡಿದ್ದ ಟ್ರಂಪ್, ಯುದ್ಧದ ಸಮಯದಲ್ಲಿ 11 ದುಬಾರಿ ಜೆಟ್ಗಳನ್ನು ಹೊಡೆದುರುಳಿಸಲಾಗಿತ್ತು ಎಂದು ಹೇಳಿದ್ದರು.
ಕಾಂಗ್ರೆಸ್ ನಲ್ಲಿ ಸದ್ದುಮಾಡುತ್ತಿದೆ ಪತ್ರ ವ್ಯವಹಾರ: ಎಂಎಲ್ಎಗಳ ಬೆನ್ನಲ್ಲೇ ಎಂಎಲ್ ಸಿಗಳ ಸರದಿ, ಬೇಡಿಕೆ ಏನು?
ಪ್ರಸ್ತುತ ಸರ್ಕಾರದಲ್ಲಿ ವಿಧಾನಪರಿಷತ್ ಸದಸ್ಯರಿಗೆ ಐದು ಕ್ಯಾಬಿನೆಟ್ ಸ್ಥಾನಗಳನ್ನು ಒದಗಿಸುವುದು ಸೂಕ್ತವಾಗಿದೆ. ಸ್ಥಳೀಯ ಸಂಸ್ಥೆಗಳ ಕ್ಷೇತ್ರಗಳಿಂದ ಒಬ್ಬರು, ಪದವೀಧರ ಅಥವಾ ಶಿಕ್ಷಕರ ಕ್ಷೇತ್ರಗಳಿಂದ ಒಬ್ಬರು, ಕೆಳಮನೆ ಅಥವಾ ನಾಮನಿರ್ದೇಶಿತ ವರ್ಗದಿಂದ ಒಬ್ಬ ಎಂಎಲ್ಸಿಯನ್ನ ಆಯ್ಕೆ ಮಾಡಿ ಎಂದು ಹೈಕಮಾಂಡ್ಗೆ ವಿಧಾನಪರಿಷತ್ ಸದಸ್ಯರು ಮನವಿ ಮಾಡಿದ್ದಾರೆ. ಈ ಕುರಿತಾಗಿ ಅವರು ಪತ್ರವನ್ನು ಬರೆದಿದ್ದು, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಈ ಕುರಿತಾದ ಮತ್ತಷ್ಟು ವಿವರ ಇಲ್ಲಿದೆ.
Expressway: ಬೆಂಗಳೂರು-ಚೆನ್ನೈ ಎಕ್ಸ್ಪ್ರೆಸ್ವೇ ಶೀಘ್ರ ಆರಂಭ, 262 ಕಿಮೀ ಪ್ರಯಾಣಕ್ಕೆ ಕೇವಲ 3 ತಾಸು
Bengaluru-Chennai Expressway: ಕರ್ನಾಟಕ ಸೇರಿದಂತೆ ಒಟ್ಟು ಮೂರು ರಾಜ್ಯಗಳಲ್ಲಿ ಹಾದು ಹೋಗುವ ಬೆಂಗಳೂರು-ಚೆನ್ನೈ ಮಾರ್ಗದಲ್ಲಿ ಆರಂಭವಾಗಿರುವ 'ಗ್ರೀನ್ಫೀಲ್ಡ್ ಎಕ್ಸ್ಪ್ರೆಸ್ವೇ (NE-7)' (Bengaluru-Chennai Expressway) ಕಾರಿಡಾರ್ ಯೋಜನೆಯ ಉದ್ಘಾಟನೆಗೆ ವರ್ಷಗಳ ವಿಳಂಬ, ಗಡುವುಗಳ ಬಳಿಕ ಮುಹೂರ್ತ ಫಿಕ್ಸ್ ಆಗಿದೆ. ಪ್ರಮುಖ ಮಾರ್ಗದ ನಿರ್ಮಾಣ ಕೆಲಸ ಪೂರ್ಣಗೊಂಡಿದ್ದು, ಒಂದಷ್ಟು ಕಾಮಗಾರಿಗಳು ಬಾಕಿ ಉಳಿದಿವೆ. ಯಾವ ರಾಜ್ಯಗಳಲ್ಲಿ ಎಷ್ಟು ಪ್ರಮಾಣದ ಕೆಲಸ
ಧಾರವಾಡ ಯುವನಿರುದ್ಯೋಗಿಗಳ ಬಂಡಾಯ | ಸರ್ಕಾರಿ ಹುದ್ದೆಗಳು ಭರ್ತಿಯಾಗದಿರಲು ಬಿಜೆಪಿ-ಕಾಂಗ್ರೆಸ್ ಗಳೆರಡೂ ಕಾರಣ
2003ರಲ್ಲಿ ವಾಜಪೇಯಿ ನೇತೃತ್ವದ ಕೇಂದ್ರ ಸರ್ಕಾರ ಜಾರಿಗೆ ತಂದ FRBM ಕಾಯ್ದೆಯೇ ಸರ್ಕಾರಿ ಹುದ್ದೆಗಳು ಭರ್ತಿ ಆಗದಿರಲು ಮೂಲ ಕಾರಣ
AI ಜಗತ್ತಿನಲ್ಲಿ ನಾನು AI ರೆಡಿಯಾಗಿಲ್ಲದಿದ್ದರೆ, ಒಂದು ದಿನದಲ್ಲಿ ನಮ್ಮ ಜೀವನವೇ ತಲೆಕೆಳಗಾಗಬಹುದು ಎಂಬುದು ಎಲ್ಲರಿಗೂ ತಿಳಿದಿರಬೇಕಾದ ವಿಚಾರ. ನಾವು ಎಷ್ಟೇ ಪರಿಶ್ರಮ ಮಾಡುವ ಅಥವಾ ಕ್ರಿಯೇಟಿವ್ ವ್ಯಕ್ತಿಯಾಗಿರಬಹುದು, AIಯನ್ನು ಅಳವಡಿಸಿಕೊಳ್ಳದಿದ್ದರೆ ಎಲ್ಲವೂ ವ್ಯರ್ಥ್ಯ. ಇದಕ್ಕೆ ತಾಜಾ ಉದಾಹರಣೆಯಾಗಿ ಅಮೆರಿಕಾದ ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಜಾಹೀರಾತುಗಳನ್ನು ನಿರ್ವಹಿಸುವ ಸ್ಟಾರ್ಟ್ ಅಪ್ ಕಂಪನಿಯೊಂದು ಆಂಥ್ರೋಪಿಕ್ ಒಂದೇ ಒಂದು ಫೀಚರ್ ನಿಂದಾಗಿ ತನ್ನ ಗ್ರಾಹರಕನ್ನು ಕಳೆದುಕೊಂಡು ನೆಲಕಚ್ಚಿದೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಕಂಪನಿಯ ಸಂಸ್ಥಾಪಕಿ ಬರೆದುಕೊಂಡಿದ್ದು, ಕ್ಲೌಡ್ ನನ್ನ ಕಂಪನಿಯನ್ನೇ ಕೊಂದುಹಾಕಿದೆ ಎಂಬ ಶೀರ್ಷೀಕೆಯಡಿ ಲೇಖನವನ್ನು ಹಂಚಿಕೊಂಡಿದ್ದಾರೆ. ಹಾಗಾದ್ರೆ, ಈ ಲೇಖನದಲ್ಲಿ ಆಕೆ ಹೇಳಿದ್ದೇನು? AI ರೇಸ್ ನಲ್ಲಿ ಉಳಿಯಲು ಆಕೆ ಕೊಟ್ಟ ಸಲಹೆಗಳೇನು ಎಂಬುದರ ಕುರಿತು ಮಾಹಿತಿ ಇಲ್ಲಿದೆ..
ಬಜೆಟ್ ಕಾಲದಲ್ಲಿ... ಬೊಮ್ಮಾಯಿಯವರ ಭಂಡ ಬಡಾಯಿಗಳು ಮತ್ತು ಬೈರೇಗೌಡರ ನಾಜೂಕು ಸುಳ್ಳುಗಳು
ಕರ್ನಾಟಕದ ಹಾಗೂ ಇತರ ರಾಜ್ಯಗಳಿಗೂ ಮೋದಿ ಕಾಲದಲ್ಲಿ ಅಪರಿಮಿತ ಅನ್ಯಾಯ ಹಾಗೂ ವಂಚನೆ ನಡೆಯುತ್ತಿರುವುದು ನಿಜವಾದರೂ, ಕಾಂಗ್ರೆಸ್ಗೂ ಇತರ ವಿರೋಧ ಪಕ್ಷಗಳಿಗೂ ಕರ್ನಾಟಕದ ಜನರು ಕ್ಲೀನ್ ಚಿಟ್ ಕೊಡಲಾಗದು. ಹೀಗಾಗಿ ಮೋದಿ ಸರಕಾರ ನಡೆಸುತ್ತಿರುವ ಕರ್ನಾಟಕ ದರೋಡೆ ನಿಲ್ಲಬೇಕೆಂದರೆ ಕರ್ನಾಟಕದ ಜನತೆ ಮೋದಿ ಸರಕಾರದ ತಾರತಮ್ಯಗಳ ವಿರುದ್ಧ ಹೋರಾಡುತ್ತಲೇ ಕಾಂಗ್ರೆಸ್ನ ನೀತಿಗಳನ್ನೂ ಖಂಡಿಸಬೇಕು. ಪ್ರತಿವರ್ಷ ಬಜೆಟ್ ಸೀಸನ್ ಶುರುವಾಗುತ್ತಿದ್ದಂತೆ, ಭಾರತದ ವಿತ್ತೀಯ ಫೆೆಡರಲಿಸಂ ಬಗ್ಗೆಯೂ ಬಿಸಿಬಿಸಿ ಚರ್ಚೆಗಳು ಶುರುವಾಗುತ್ತದೆ. ಭಾರತವು ಆದರ್ಶ ಫೆಡರಲ್ ಒಕ್ಕೂಟವಾಗುವ ಸಾಧ್ಯತೆಯು ಸಂವಿಧಾನದಲ್ಲೇ ಕೊಡಮಾಡಿಲ್ಲ. ಆದರೆ ಅದೇ ಸಮಯದಲ್ಲಿ ಸಂವಿಧಾನವು ಕೇಂದ್ರದ ಮೇಲೆ ಬಿಕ್ಕಟ್ಟು ಮತ್ತು ಯುದ್ಧ ಕಾಲವನ್ನು ಹೊರತುಪಡಿಸಿ ಶಾಂತಿಕಾಲದಲ್ಲಿ ಸರ್ವಾಧಿಕಾರಿಯಾಗದಂತಹ ನಿಯಂತ್ರಣ ಹೇರಿದೆ. ಆದರೆ ಮೋದಿ ಸರಕಾರ ಅಧಿಕಾರಕ್ಕೆ ಬಂದ ಮೇಲೆ ರಾಜ್ಯಗಳ ಮೇಲೆ ನಿರಂತರ ಯುದ್ಧವನ್ನು ಸಾರಿದೆಯಲ್ಲದೆ, ರಾಜ್ಯಗಳ ವಿತ್ತೀಯ ಪರಿಸ್ಥಿತಿಯನ್ನು ಸದಾ ಬಿಕ್ಕಟ್ಟಿನಲ್ಲಿರಿಸಿದೆ. ಇದು ಭಾರತದ ಒಕ್ಕೂಟ ಸ್ವರೂಪದ ಮೇಲೂ, ಎಲ್ಲಕ್ಕಿಂತ ಹೆಚ್ಚಾಗಿ ಜನರ ನಿತ್ಯ ಬದುಕಿನ ಮೇಲೂ ಗಾಢ ಪರಿಣಾಮವನ್ನು ಬೀರುತ್ತಿದೆ. ಏಕೆಂದರೆ ಆಹಾರ, ಉದ್ಯೋಗ, ಆರೋಗ್ಯ, ವಸತಿ, ಕಾನೂನು ಮತ್ತು ಸುವ್ಯವಸ್ಥೆಯಂತಹ ಜನರ ಬದುಕಿಗೆ ನೇರವಾಗಿ ಸಂಬಂಧಪಟ್ಟ ಶೇ. 67ಕ್ಕೂ ಹೆಚ್ಚು ಕಲ್ಯಾಣ ಕಾರ್ಯಕ್ರಮಗಳ ಹೊಣೆಗಾರಿಕೆ ರಾಜ್ಯಗಳದ್ದು. ಆದರೆ ದೇಶದ ಒಟ್ಟಾರೆ ವಿತ್ತೀಯ ಸಂಪನ್ಮೂಲಗಳಲ್ಲಿ ರಾಜ್ಯಗಳ ಪಾಲು ಕೇವಲ. ಶೇ. 33. ಕಾಂಗ್ರೆಸ್ ಎಂಬ ಕಾರಣವೂ, ಬಿಜೆಪಿ ಎಂಬ ಪರಿಣಾಮವೂ! ಮೋದಿ ಸರಕಾರ ಬಂದಮೇಲೆ ರಾಜ್ಯಗಳ ಪಾಲು ತೀವ್ರವಾಗಿ ಕಡಿತವಾಗುತ್ತಿರುವುದು ನಿಜವಾದರೂ ಅದನ್ನು ಸಾಧ್ಯಗೊಳಿಸಿದ್ದು ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿ ಇದ್ದಾಗ ತಂದ ಕಾರ್ಪೊರೇಟ್ ಆರ್ಥಿಕ ನೀತಿಗಳೇ. 1991ರಲ್ಲಿ ಕಾಂಗ್ರೆಸ್ ಪಕ್ಷ ಸಂವಿಧಾನದ ಆಶಯಗಳ ವಿರುದ್ಧವಾಗಿ ಮತ್ತು ಬಿಜೆಪಿ ಹಾಗೂ ಇತರೆಲ್ಲಾ ಪಕ್ಷಗಳ ಬೆಂಬಲದೊಂದಿಗೆ ಜಾರಿಗೆ ತಂದ ಕಾರ್ಪೊರೇಟ್ ನಿರ್ದೇಶಿತ ನವ ಉದಾರವಾದಿ ಖಾಸಗೀಕರಣ, ಉದಾರೀಕರಣ ಮತ್ತು ಜಾಗತೀಕರಣದ ನೀತಿಗಳೆಲ್ಲವೂ ರಾಜ್ಯಗಳ ಅಧಿಕಾರವನ್ನು ಹಾಗೂ ಜನಪರತೆಯನ್ನು ಮೊಟಕುಗೊಳಿಸುವ ಕಾರ್ಪೊರೇಟ್ ಆರ್ಥಿಕ ಕೇಂದ್ರೀಕರಣ ನೀತಿಗಳೇ ಆಗಿದ್ದವು. ಜಿಎಸ್ಟಿ, ರಾಜ್ಯಗಳ ಪಾಲಿನ ಮತ್ತು ಕಲ್ಯಾಣ ಕಾರ್ಯಕ್ರಮಗಳ ಕಡಿತ, ದೇಶವ್ಯಾಪಿ ಏಕರೂಪ ಆರ್ಥಿಕ ಕ್ರಾಯಕ್ರಮಗಳೆಲ್ಲವೂ ಈ ನೀತಿಗಳ ಪರಿಣಾಮಗಳೇ. ಹೀಗಾಗಿ ಮೋದಿ ಆರ್ಥಿಕ ನೀತಿಗಳ ಪರಿಣಾಮವನ್ನು ಮಾತ್ರ ವಿರೋಧಿಸುತ್ತಾ ಅದಕ್ಕೆ ಕಾರಣವಾದ ಮೂಲಭೂತ ಪಕ್ಷಾತೀತ ಕಾರ್ಪೊರೇಟ್ ಪರತೆಯನ್ನು ಬದಲಿಸದಿದ್ದರೆ ಅಂತಹ ಚರ್ಚೆಗಳಿಂದ ಯಾವ ಪ್ರಯೋಜನವೂ ಇರುವುದಿಲ್ಲ. ಆದರೂ ಕಾಲಕಾಲಕ್ಕೆ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳು ಅಂತಹ ಉದ್ದೇಶಪೂರ್ವಕ ಮೇಲ್ ತೋರಿಕೆಯ ಚರ್ಚೆಯನ್ನು ಮಾಡುತ್ತಾ ಜನರನ್ನು ಗೊಂದಲಗೊಳಿಸುತ್ತಿವೆ. ಅಂತಹ ಒಂದು ಚರ್ಚೆ ಇತ್ತೀಚೆಗೆ ಪತ್ರಿಕೆಯೊಂದರಲ್ಲಿ ನಡೆಯಿತು. ಮೋದಿ ಸರಕಾರದ ತೆರಿಗೆ ನೀತಿಯಿಂದ ರಾಜ್ಯಕ್ಕೆ ಆಗುತ್ತಿರುವ ಲಾಭ/ಅನ್ಯಾಯದ ಬಗ್ಗೆ ಬಿಜೆಪಿಯ ಮಾಜಿ ಮುಖ್ಯಮಂತ್ರಿ ಬೊಮ್ಮಾಯಿ ಮತ್ತು ಹಾಲಿ ಕಾಂಗ್ರೆಸ್ ಸರಕಾರದ ಕ್ಯಾಬಿನೆಟ್ ಮಂತ್ರಿ ಕೃಷ್ಣ ಬೈರೆೇಗೌಡರು ತಮ್ಮ ತಮ್ಮ ಪಕ್ಷದ ನೀತಿಗನುಸಾರವಾದ ವಾದಗಳನ್ನು ಮಂಡಿಸಿದ್ದರು. ಬೊಮ್ಮಾಯಿಯವರ ವಾದಗಳಲ್ಲಿ ಬಿಜೆಪಿ ಬ್ರಾಂಡ್ನ ಅತ್ಯಂತ ಬೇಜವಾಬ್ದಾರಿಯುತ ಸುಳ್ಳು ಬಡಾಯಿಗಳು, ಕರ್ನಾಟಕ ದ್ರೋಹಿ ವಾದಗಳು ಮತ್ತು ಅವರ ಕಾಲದಲ್ಲೂ ಆಗಿರಲಿಲ್ಲವೇ (Whataboutry) ಎಂಬ ಭಂಡ ಸಮರ್ಥನೆಗಳು ಮಾತ್ರ ಇದ್ದವು. ಕೃಷ್ಣಬೈರೇಗೌಡರ ವಾದದಲ್ಲಿ ಅರ್ಧ ಸತ್ಯಗಳಿದ್ದರೆ ಉಳಿದರ್ಧ ಉತ್ಪ್ರೇಕ್ಷೆಗಳು ಮತ್ತು ತಮ್ಮ ಪಕ್ಷದ ತಪ್ಪುಗಳನ್ನು ಮರೆಮಾಚುವಂತಹ ನಾಜೂಕು ವಾದಗಳಿದ್ದವು. ಆದರೆ ಕರ್ನಾಟಕಪರತೆಯೆಂದರೆ ಬಿಜೆಪಿ ಪರತೆಯೋ, ಕಾಂಗ್ರೆಸ್ ಪರತೆಯೋ ಆಗುವ ಅಗತ್ಯವಿಲ್ಲ. ಬಿಜೆಪಿಯ ಕರ್ನಾಟಕ ದ್ರೋಹವನ್ನು ಖಂಡಿಸುವ ಮತ್ತು ಕಾಂಗ್ರೆಸ್ನ ಅರ್ಧಸತ್ಯಗಳನ್ನು, ಸರಕಾರಿ ಉತ್ಪ್ರೇಕ್ಷೆಗಳನ್ನು ದಾಟಿ ಅರ್ಥಮಾಡಿಕೊಳ್ಳುವ ಧೋರಣೆಗಳು ಮಾತ್ರ ನಿಜವಾದ ಕರ್ನಾಟಕ ಪರತೆಯಾಗುತ್ತದೆ. ಅವುಗಳನ್ನು ಪರಿಶೀಲಿಸುವ ಮೊದಲು ಒಂದಂತೂ ಅಪ್ಪಟ ವಾಸ್ತವ. ಈ ಜಿಎಸ್ಟಿ ಮತ್ತು ಸೆಸ್ ನೀತಿಯಿಂದ ಮತ್ತು ಮೋದಿ ಸರಕಾರದ ಕಾರ್ಪೊರೇಟ್ ಪರ ಮತ್ತು ಕರ್ನಾಟಕ ವಿರೋಧಿ ನೀತಿಗಳಿಂದ ಕರ್ನಾಟಕಕ್ಕೇ ಅನ್ಯಾಯವಾಗುತ್ತಿವೆ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಒಂದು ಕಡೆ ಬೊಮ್ಮಾಯಿಯವರು ಭಂಡ ಬಿಜೆಪಿಗೆ ತಕ್ಕಂತೆ ಆ ವಾಸ್ತವವನ್ನು ಒಪ್ಪಿಕೊಳ್ಳಲೇ ತಯಾರಿಲ್ಲ. ಮತ್ತೊಂದು ಕಡೆ ಕೃಷ್ಣಬೈರೆೇಗೌಡರು ಕಾಂಗ್ರೆಸ್ ಪಕ್ಷದ ಕಾರ್ಪೊರೇಟ್ ಪರ ನೀತಿಗಳ ಭಾಗವಾಗಿಯೇ ಜಿಎಸ್ಟಿ ಜಾರಿಗೆ ಸೆಸ್ ನೀತಿಗೆ ತಾವೇ ಅಡಿಪಾಯ ಹಾಕಿದ ಸತ್ಯವನ್ನು ಮರೆಮಾಚುತ್ತಾರೆ. ಮತ್ತು ಕೇಂದ್ರದ ತಾರತಮ್ಯ ನೀತಿಗಳನ್ನು ತಮ್ಮ ಸರಕಾರದ ಎಲ್ಲಾ ದೌರ್ಬಲ್ಯಗಳನ್ನು ಮತ್ತು ವೈಫಲ್ಯಗಳನ್ನು ಮುಚ್ಚಿಕೊಳ್ಳಲು ನಾಜೂಕಾಗಿ ಬಳಸಿಕೊಳ್ಳುತ್ತಾರೆ. ಬೊಮ್ಮಾಯಿಯವರ ಭಂಡ ಬಡಾಯಿ 1. ಜಿಎಸ್ಟಿ ಎಂಬುದೇ ಜನಸಾಮಾನ್ಯರ ಮೇಲಿನ ತೆರಿಗೆ ಹೊರೆಯಾದ ಪ್ರತ್ಯಕ್ಷ ತೆರಿಗೆಯನ್ನು ಹೆಚ್ಚಿಸುವ ನವಉದಾರವಾದಿ ತೆರಿಗೆ ಪದ್ಧತಿ. ಅದನ್ನು ಜಾರಿ ಮಾಡಲು ಕಾಂಗ್ರೆಸ್ ವಿಫಲ ಪ್ರಯತ್ನ ಮಾಡಿದರೂ ಅದನ್ನು ತೀವ್ರವಾಗಿ ಮತ್ತು ಉಗ್ರವಾಗಿ ಜಾರಿಗೆ ತಂದದ್ದೇ ಮೋದಿ ನೇತೃತ್ವದ ಬಿಜೆಪಿ ಸರಕಾರ. ಹೀಗಾಗಿ ಇಂದಿನ ಕರ್ನಾಟಕದ ಬವಣೆಗೆ ನೇರ ಕಾರಣ ಬಿಜೆಪಿ. ಬೊಮ್ಮಯಿಯವರ ಲೇಖನದಲ್ಲಿ ಈ ವಾಸ್ತವದ ಲವಲೇಶವೂ ಇಲ್ಲ. 2. ಮೋದಿ ಸರಕಾರದ ಅವಧಿಯಲ್ಲಿ ಕರ್ನಾಟಕದ ತೆರಿಗೆ ಪಾಲು ಶೇ. 4.71ರಿಂದ 3.65ಕ್ಕೆ ಇಳಿದಿದ್ದೇಕೆ? ಅದನ್ನು ಸರಿ ಮಾಡುವಲ್ಲಿ ಕೇಂದ್ರದ ಮೇಲೆ ಒತ್ತಡ ತರದೆ ಕರ್ನಾಟಕದ ಬಿಜೆಪಿ ಸಂಸದರು ಮೋದಿ ಮುಂದೆ ಏಕೆ ಬಾಯಿ ಮುಚ್ಚಿ ಕೂತು ಕರ್ನಾಟಕ ದ್ರೋಹಿ ನಿಲುವನ್ನು ತಾಳಿದರು? ಎಂಬುದಕ್ಕೆ ಬೊಮ್ಮಾಯಿ ವಾದದಲ್ಲಿ ಉತ್ತರವಿಲ್ಲ. 3.ರಾಜ್ಯಗಳ ಸರಾಸರಿ ತೆರಿಗೆ ಆದಾಯದ ವಾರ್ಷಿಕ ಶೇ. 14ರಷ್ಟು ಹೆಚ್ಚುತ್ತದೆ ಎಂದು ಪರಿಗಣಿಸಲಾಗುತ್ತದೆ. ಒಂದು ವೇಳೆ ಜಿಎಸ್ಟಿ ವ್ಯವಸ್ಥೆಯಿಂದ ವಾರ್ಷಿಕ ಶೇ. 14ಕ್ಕಿಂತ ತೆರಿಗೆ ಆದಾಯ ಹೆಚ್ಚಳವಾಗದಿದ್ದಲ್ಲಿ, ಉಂಟಾಗುವ ಕೊರತೆಯನ್ನು ಮುಂದಿನ ಐದು ವರ್ಷಗಳ ಕಾಲ ಅಂದರೆ 2022ರ ತನಕ ಭರಿಸುವುದಾಗಿ ಜಿಎಸ್ಟಿ ಕಾಯ್ದೆಯ ಭರವಸೆ ಇತ್ತು. ಆದರೆ 2020ರಲ್ಲಿ ಕೋವಿಡ್ ದಾಳಿಯಾದ ಮೇಲೆ ಎಲ್ಲಾ ರಾಜ್ಯಗಳ ಆರ್ಥಿಕ ಪ್ರಗತಿ ನಕಾರಾತ್ಮಕವಾಗಿದೆ ಮತ್ತು ಕೋವಿಡ್ ಪೂರ್ವ ಪರಿಸ್ಥಿತಿ ತಲುಪಲು ಇನ್ನೂ ಕೆಲ ವರ್ಷಗಳು ಬೇಕು. ಹಾಗಿರುವಾಗ 2022ರ ಗಡುವನ್ನು ಇನ್ನೂ ಕೆಲ ವರ್ಷಗಳ ಕಾಲ ಮೋದಿ ಸರಕಾರ ಏಕೆ ವಿಸ್ತರಿಸುತ್ತಿಲ್ಲ? ತಾನು ಮುಖ್ಯಮಂತ್ರಿಯಾಗಿದ್ದಾಗಲೂ ಇದೇ ಬೇಡಿಕೆ ಇಟ್ಟಿದ್ದಲ್ಲವೇ ಎಂಬ ಪ್ರಶ್ನೆಗೆ ಬೊಮ್ಮಾಯಿ ಬಡಾಯಿಯಲ್ಲಿ ಉತ್ತರವಿಲ್ಲ. 4. ಸೆಸ್ ವ್ಯವಸ್ಥೆ ಕಾಂಗ್ರೆಸ್ ಕಾಲದಲ್ಲಿ ಜಾರಿಯಾದರೂ ಅದಕ್ಕೆ ಸಂವಿಧಾನ ತಿದ್ದುಪಡಿ ಮಾಡಿ ಕೋಟೆ ಕಟ್ಟಿದ್ದು ವಾಜಪೇಯಿ ಸರಕಾರ ಎಂಬುದನ್ನು ಬೊಮ್ಮಾಯಿ ಮರೆಮಾಚುತ್ತಿದ್ದಾರೆ. ಅಷ್ಟು ಮಾತ್ರವಲ್ಲ, ಕಳೆದ ಐದು ವರ್ಷಗಳಲ್ಲಿ ಕೇಂದ್ರ ತೆರಿಗೆಯಲ್ಲಿ ರಾಜ್ಯದ ಜೊತೆಗೆ ಹಂಚಿಕೊಳ್ಳದ ಸೆಸ್ ಮತ್ತು ಸರ್ಚಾರ್ಜ್ಗಳ ಪಾಲು ಶೇ. 8ರಿಂದ ಶೇ. 28ಕ್ಕೆ ಮುಟ್ಟಿರುವುದು ರಾಜ್ಯಕ್ಕೆ ಬಗೆಯುತ್ತಿರುವ ದ್ರೋಹವಲ್ಲವೇ ಎಂಬುದಕ್ಕೆ ಬೊಮ್ಮಾಯಿ ಬಾಯಿಗೆ ಬೀಗ ಹಾಕಲಾಗಿದೆ. 5. ಕೇಂದ್ರದಿಂದ ರಾಜ್ಯಕ್ಕೆ ಕೇಂದ್ರ ಯೋಜನೆಗಳಿಗೆ ಅನುದಾನದ ರೂಪದಲ್ಲಿ ವರ್ಗಾವಣೆಯಾಗುವ ಮೊತ್ತದಲ್ಲಿ ಕರ್ನಾಟಕ್ಕೆ ವಿಶೇಷ ಅನ್ಯಾಯವಾಗುತ್ತಿರುವ ಬಗ್ಗೆ ಬೊಮ್ಮಾಯಿ ಮೌನ ಮತ್ತು ಅದರಲ್ಲಿ ರಾಜ್ಯಗಳ ಮಾಡಬೇಕಾದ ವೆಚ್ಚದ ಪಾಲು ಹೆಚ್ಚುತ್ತಾ ಅದರ ಮೇಲಿನ ನಿಯಂತ್ರಣದಲ್ಲಿ ಮಾತ್ರ ಕೇಂದ್ರದ ಪಾತ್ರ ಹೆಚ್ಚುತ್ತಿರುವ ಫೆಡರಲ್ ವಿರೋಧಿ, ಕರ್ನಾಟಕ ದ್ರೋಹಿ ಮೋದಿ ನೀತಿಗಳ ಬಗ್ಗೆಯೂ ಬೊಮ್ಮಾಯಿಯವರದ್ದು Master Voice... ಅಥವಾ ಕುತಂತ್ರಿ ಮೌನ ಅನುಸರಿಸಿದೆ. 6.ಗ್ಯಾರಂಟಿಗಳ ಮೇಲೆ ಗೂಬೆ ಕೂರಿಸುವ ಮನುವಾದ ಒಂದು ಜವಾಬ್ದಾರಿಯುತವಾದ ವಿರೋಧ ಪಕ್ಷವಾಗಿ ಆಳುವ ಕಾಂಗ್ರೆಸನ್ನು ಸಕಾರಣವಾಗಿ ತರಾಟೆಗೆ ತೆಗೆದುಕೊಳ್ಳಲು ಸಾಕಷ್ಟು ಕಾರಣಗಳಿವೆ. ಆದರೆ ಅದರಲ್ಲಿ ಐದು ಗ್ಯಾರಂಟಿಗಳು ಸೇರುವುದಿಲ್ಲ. ಗ್ಯಾರಂಟಿಗಳು ಜನೋಪಯೋಗಿ ಕಲ್ಯಾಣ ಕಾರ್ಯಕ್ರಮಗಳಾಗಿದ್ದು ದಣಿದಿದ್ದ ಕರ್ನಾಟಕದ ಜನರಿಗೆ ಸ್ವಲ್ಪ ಉಸಿರು ನೀಡಿದೆ. ಆದರೆ ಅದಕ್ಕೆ ಸಂಪನ್ಮೂಲ ಒದಗಿಸಿಕೊಳ್ಳುವಲ್ಲಿ ಕಾಂಗ್ರೆಸ್ ಸರಕಾರ ಅನುಸರಿಸುತ್ತಿರುವ ಮಾರ್ಗ ಇತ್ಯಾದಿಗಳು ಪ್ರಶ್ನಾರ್ಹ ಮತ್ತು ಖಂಡನಾರ್ಹ. ಆದರೆ ಬೊಮ್ಮಾಯಿಯವರು ತಮ್ಮ ಲೇಖನದ ಪ್ರಧಾನ ವಾದವನ್ನು ಪರೋಕ್ಷವಾಗಿ ಬಡವರ ಕಲ್ಯಾಣ ಯೋಜನೆಯಾದ ಗ್ಯಾರಂಟಿಯನ್ನು ಖಂಡಿಸಲೆಂದೇ ಬಳಸಿಕೊಂಡಿದ್ದಾರೆ. ಕಾಂಗ್ರೆಸ್ ಸರಕಾರದ ಪ್ರಧಾನ ವೈಫಲ್ಯವೇ ಗ್ಯಾರಂಟಿ ಎಂಬಂತೆ ಅವರ ವಾದವಿದೆ. ಇದು ಕೂಡ ಬಿಜೆಪಿ ಮತ್ತು ಬೊಮ್ಮಾಯಿಯವರ ಅಂತರ್ಗತ ಜನದ್ರೋಹಿ ಮನುವಾದಿ ಧೋರಣೆಗಳ ಪ್ರತೀಕವಾಗಿದೆ. ಹೀಗಾಗಿ ಅಲ್ಲಿ ಬೊಮ್ಮಾಯಿಯ ವಾದ ಭಂಡತನದಿಂದಲೂ ಕೂಡಿದೆ. ಕರ್ನಾಟಕ ದ್ರೋಹಿಯೇ ಆಗಿದೆ. ಕೃಷ್ಣಬೈರೇಗೌಡರ ನಾಜೂಕು ವಾದಗಳು ಮತ್ತು ಅರ್ಧ ಸತ್ಯಗಳು 1. ಕಾಂಗ್ರೆಸ್ ಸರಕಾರದ ವೈಫಲ್ಯಗಳನ್ನು ಮುಚ್ಚಿಕ್ಕೊಳ್ಳಲು ಉತ್ಪ್ರೇಕ್ಷೆಗಳು: ಕಾಂಗ್ರೆಸ್ನ ಬೈರೆೇಗೌಡರ ವಾದಗಳಲ್ಲಿ ಇರುವ ಅರ್ಧ ಸತ್ಯವು ಉಳಿದ ಅರ್ಧ ಸುಳ್ಳನ್ನು ಸಮರ್ಥಿಸಿಕೊಳ್ಳಲೆಂದೇ ಮಂಡಿಸಲಾಗಿದೆ. ಉದಾಹರಣೆಗೆ ಬೈರೆೇಗೌಡರು ಜಿಎಸ್ಟಿ ಪರಿಹಾರ ಯೋಜನೆ ಹಿಂದೆಗೆದುಕೊಂಡ ಮೇಲೆ ಕರ್ನಾಟಕದ ಬಜೆಟ್ನಲ್ಲಿ ಶೇ. 25ರಷ್ಟು ಕೊರತೆಯಾಗಿದೆ ಎಂದು ಬರೆಯುತ್ತಾರೆ. ಆದರೆ ಇದು ಉತ್ಪ್ರೇಕ್ಷೆ. ಜಿಎಸ್ಟಿ ಪರಿಹಾರವು ಒಂದು ರಾಜ್ಯದ ಸರಾಸರಿ ತೆರಿಗೆ ಸಂಗ್ರಹದ ಏರಿಕೆಯಲ್ಲಿ ಬೀಳುವ ಕೊರತೆಯನ್ನು ಮಾತ್ರ ತುಂಬುತ್ತದೆ. ಜಿಎಸ್ಟಿ ಮಂಡಳಿಯು ರಾಜ್ಯಗಳ ಸರಾಸರೀ ವಾರ್ಷಿಕ ತೆರಿಗೆ ಏರಿಕೆ ದರವನ್ನು ಶೇ. 14 ಎಂದು ನಿಗದಿ ಮಾಡಿದೆ. ಅಂದರೆ ಈ ವರ್ಷ ಒಂದು ರಾಜ್ಯದ ತೆರಿಗೆ ಸಂಗ್ರಹಣೆ ರೂ. 1,00,000 ಕೋಟಿಯಾಗಿದ್ದರೆ, ಮುಂದಿನ ವರ್ಷ ಅದು 1,14,000 ಕೋಟಿ ರೂ. ಆಗುತ್ತದೆಂದು ಮಂಡಳಿಯ ಅಂದಾಜು. ಕರ್ನಾಟಕ ರಾಜ್ಯದ ತೆರಿಗೆ ಸಂಗ್ರಹಣೆ ಅದರ ಬದಲಿಗೆ ರೂ. 1,12,000 ಕೋಟಿ ಮಾತ್ರ ಆದರೆ, ಅಂದಾಜಿಗಿಂತ ಕಡಿಮೆಯಾದ 2,000 ಕೋಟಿ ರೂ. ಪರಿಹಾರವನ್ನು ಮಾತ್ರ ಮಂಡಳಿ ಕೊಡಬೇಕು. ರೂ. 14,000 ಕೋಟಿಯನ್ನಲ್ಲ. ಮೋದಿ ಸರಕಾರ ಅದನ್ನು ಕೊಡದೆ ಸತಾಯಿಸುತ್ತಿದೆ ಎಂಬುದು ನಿಜ. ಆದರ ವಿರುದ್ಧ ಹೋರಾಡಬೇಕೆನ್ನುವುದೂ ನಿಜ. ಹಾಗೆಯೇ ಕಳೆದ ವರ್ಷ ಕರ್ನಾಟಕ ಸರಕಾರದ ಬಜೆಟ್ ರೂ. 4,09,000 ಕೋಟಿ. ಅದರಲ್ಲಿ ಜಿಎಸ್ಟಿ ಅನುದಾನ ಕೊರತೆ, ಹಣಕಾಸು ಆಯೋಗದ ತಾರತಮ್ಯದಿಂದ ಆದ ವಾರ್ಷಿಕ ಕೊರತೆ ಇನ್ನಿತ್ಯಾದಿಗಳೆಲ್ಲಾ ಸೇರಿ ಕರ್ನಾಟಕಕ್ಕೇ ರೂ. 25,000 ಕೋಟಿ ಅನ್ಯಾಯವಾಗಿರುವುದು ವಾಸ್ತವ. ಈ ಅನ್ಯಾಯದ ವಿರುದ್ಧವೂ ಹೋರಾಡಬೇಕೆನ್ನುವುದು ನಿಜ. ಆದರೆ ಕೇಂದ್ರ ಮಾಡಿರುವ ಅನ್ಯಾಯದ ಮೊತ್ತ ಕರ್ನಾಟಕದ ಬಜೆಟ್ನ ಶೇ. 6.1ರಷ್ಟು ಮಾತ್ರ. ಉಳಿದ ಶೇ. 94ರಷ್ಟು ಬಜೆಟ್ನ ಆದ್ಯತೆ, ವೈಫಲ್ಯ, ಅನುಷ್ಠಾನ ಕೊರತೆ, ನೀತಿಗಳಲ್ಲಿನ ಜನವಿರೋಧಿತನ ಇವೆಲ್ಲಕ್ಕೂ ಕಾಂಗ್ರೆಸ್ ಸರಕಾರ ತನ್ನೊಳಗೆ ನೋಡಿಕೊಳ್ಳಬೇಕು. ಬೈರೆೇಗೌಡರು ತಮ್ಮ ಲೇಖನದಲ್ಲಿ ಕೊರತೆಯಾದ ಮೊತ್ತವನ್ನು ಹಿಗ್ಗಿಸಿ ತೋರಿಸುವ ಮೂಲಕ ತಮ್ಮ ಸರಕಾರದ ಎಲ್ಲಾ ವೈಫಲ್ಯಗಳಿಗೂ ಕೇಂದ್ರ ಮಾಡುತ್ತಿರುವ ತಾರತಮ್ಯದಿಂದ ಉಂಟಾಗಿರುವ ಕೊರತೆಯೇ ಕಾರಣ ಎಂಬ ತಪ್ಪು ಅಭಿಪ್ರಾಯ ಮೂಡಿಸುತ್ತಿದ್ದಾರೆ. 2. ಗ್ಯಾರಂಟಿಗಳೇ ಸಾಧನೆ ಮತ್ತು ಗ್ಯಾರಂಟಿಗಳೇ ವೈಫಲ್ಯ ಗ್ಯಾರಂಟಿಗಳು ಸ್ವಾಗತಾರ್ಹ ಕಲ್ಯಾಣ ಕಾರ್ಯಕ್ರಮ. ಆದರೆ ಅದಕ್ಕೆ ಕಾಂಗ್ರೆಸ್ ಸರಕಾರ ಹಣಕಾಸು ನಿಭಾಯಿಸುತ್ತಿರುವ ರೀತಿ ಕಲ್ಯಾಣದ ಉದ್ದೇಶವನ್ನೇ ವಿಫಲಗೊಳಿಸುತ್ತಿದೆ. ಕಾಂಗ್ರೆಸ್ ಸರಕಾರವು ಅಧಿಕಾರಕ್ಕೆ ಬಂದಾಗ ತನ್ನ ಐದು ಗ್ಯಾರಂಟಿಗಳಿಗೆ ಬೇಕಾದ ಸಂಪನ್ಮೂಲವನ್ನು ಆಡಳಿತದಲ್ಲಿ ದಕ್ಷತೆ, ಭ್ರಷ್ಟಾಚಾರ ನಿಗ್ರಹ ಮತ್ತು ಅಭಿವೃದ್ಧಿಗಳ ಮೂಲಕ ಒದಗಿಸಿಕೊಳ್ಳುವುದಾಗಿ ಘೋಷಿಸಿತ್ತು. ಆದರೆ ಈ ಮೂರರಲ್ಲೂ ಸಿದ್ದು ಸರಕಾರ ಘೋರವಾಗಿ ವಿಫಲವಾಗಿದೆ. ಎಲ್ಲಕ್ಕಿಂತ ಮುಖ್ಯವಾಗಿ ಒಂದು ಕಲ್ಯಾಣ ಸರಕಾರ ಉಳ್ಳವರ ಮೇಲೆ ತೆರಿಗೆ ಹೆಚ್ಚಿಸಿ ಇಲ್ಲದವರಿಗೆ ನೀಡಬೇಕು. ಆದರೆ ಕಾಂಗ್ರೆಸ್ ಸರಕಾರದ ಅಭಿವೃದ್ಧಿ ಮಾದರಿಯೂ ಬಿಜೆಪಿ ಅಭಿವೃದ್ಧಿ ಮಾದರಿಯಂತೆ ಕಾರ್ಪೊರೇಟ್ಗಳಿಗೆ ರಿಯಾಯಿತಿ-ವಿನಾಯಿತಿ-ಸಬ್ಸಿಡಿ ನೀತಿ ಕೊಟ್ಟು ಓಲೈಸುವ ಮಾದರಿಯೇ ಆಗಿದೆ. ಹೀಗಾಗಿ ಅಭಿವೃದ್ಧಿಯಾದಷ್ಟೂ ತೆರಿಗೆ ಹೆಚ್ಚಳವಾಗುವುದಿರಲಿ ಕಡಿಮೆಯಾಗುತ್ತಾ ಹೋಗುತ್ತಿದೆ. ಹೀಗಾಗಿ ಗ್ಯಾರಂಟಿಗಳಿಗೆ ಬೇಕಾದ ಹಣಕಾಸನ್ನು ಇತರ ಕಲ್ಯಾಣ ಕಾರ್ಯಕ್ರಗಳಿಗೆ ನಿಧಿ ಕೊರತೆ, SಅSP-ಖಿSP ನಿಧಿಯ ದುರ್ಬಳಕೆ ಇತ್ಯಾದಿಗಳ ಮೂಲಕ ರೂಢಿಸಿಕೊಳ್ಳುತ್ತಾ ಅನ್ಯಾಯ ಮಾಡುತ್ತಿದೆ. ಇದರ ಬಗ್ಗೆ ಬೈರೆೇಗೌಡರ ಲೇಖನ ಮೌನ! ಗ್ಯಾರಂಟಿಗಳು ಈಗಾಗಲೇ ಇರುವ ಕಲ್ಯಾಣ ಯೋಜನೆಗಳ ಜೊತೆಗೆ ಸಿಗುವ ಮತ್ತೊಂದು ಸೌಲಭ್ಯವಾಗಬೇಕಿತ್ತು. ಈಗ ಅವುಗಳ ಬದಲಿಗೆ ಸಿಗುವ ಯೋಜನೆಯಾಗುತ್ತಿದೆ. ಈ ಗ್ಯಾರಂಟಿ ಯೋಜನೆಗಳಿಗೆ ಬಿಜೆಪಿಯ ಮನುವಾದಿ ವಿರೋಧವನ್ನು ವಿರೋಧಿಸಬೇಕು. ಹಾಗೆಯೇ ಒಂದು ಕೈಯಲ್ಲಿ ಕೊಟ್ಟು ಮತ್ತೊಂದು ಕೈಯಲ್ಲಿ ಕಿತ್ತುಕೊಳ್ಳುವ ಕಾಂಗ್ರೆಸ್ನ ಅವಕಾಶವಾದಿ ಜನವಿರೋಧಿ ನೀತಿಯನ್ನು ಕೂಡ ವಿರೋಧಿಸಲೇ ಬೇಕಲ್ಲವೇ? 3. ಜಿಎಸ್ಟಿ ವಂಚನೆಯ ಮೂಲ: ಈ ಅನ್ಯಾಯದ ಮೂಲ ಕಾಂಗ್ರೆಸ್ ಕೂಡ ಒಪ್ಪಿಕೊಂಡು ಜಿಎಸ್ಟಿ ಜಾರಿಯಾದ ರೀತಿಯಲ್ಲೇ ಇದೆ. ಬೈರೆೇಗೌಡರು ಮತ್ತು ಕಾಂಗ್ರೆಸ್ ಹೇಳದೆ ಹೋಗುತ್ತಿರುವ ಮಾತೆಂದರೆ ಅತ್ಯಂತ ಪ್ರತಿಗಾಮಿ ತೆರಿಗೆ ಪದ್ಧತಿಯಾದ ಈ ಜಿಎಸ್ಟಿ ತೆರಿಗೆ ವ್ಯವಸ್ಥೆಯ ತಾಯಿ ಸ್ವಯಂ ಕಾಂಗ್ರೆಸೇ. ಆದರೆ 2014ರಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ತೆರಿಗೆಯ ಭಾರವನ್ನು ಶ್ರೀಮಂತರಿಗಿಂತ ಜಾಸ್ತಿ ಬಡವರ ಮೇಲೆ ವರ್ಗಾಯಿಸುವ ಜಿಎಸ್ಟಿ ವ್ಯವಸ್ಥೆಗೆ ಸಂವಿಧಾನ ತಿದ್ದುಪಡಿ ಮಾಡಬೇಕಿತ್ತು. ಇದಕ್ಕೆ ಇತರ ಪಕ್ಷಗಳ ಮನ ಒಲಿಸಲು ಆಗಿನ ಹಣಕಾಸು ಮಂತ್ರಿ ಅರುಣ್ ಜೇಟ್ಲಿ ಐದು ವರ್ಷಗಳ ಕಾಲ ಖೋತಾ ಪರಿಹಾರ ಯೋಜನೆ ಮುಂದಿಟ್ಟರು. ಅದಕ್ಕಾಗಿ ಮತ್ತೆ ಜನರ ಮೇಲೆ ವಿಶೇಷ ಸೆಸ್ ಹೇರುವ ಪ್ರಸ್ತಾವವೂ ಅದರಲ್ಲಿ ಅಡಕವಾಗಿತ್ತು!. ಈ ಅನ್ಯಾಯವನ್ನು ಕಾಂಗ್ರೆಸ್ ಒಪ್ಪಿಕೊಂಡ ಮೇಲೆ ಜಿಎಸ್ಟಿ ಜಾರಿಯಾಗಿದ್ದು. ಹಾಗೆಯೇ ಜಿಎಸ್ಟಿ ನಿರ್ವಹಿಸಲು ಎಲ್ಲಾ ರಾಜ್ಯಗಳ ಪ್ರಾತಿನಿಧ್ಯವಿರುವ ಆದರೆ ಕೇಂದ್ರ ಸರಕಾರಕ್ಕೆ ಸದಾ ಬಹುಮತವಿರುವಂತಹ ಫೆಡರಲ್ ವಿರೋಧಿ ಜಿಎಸ್ಟಿ ನಿರ್ವಹಣಾ ಮಂಡಳಿಯೂ ಆಗಿನ ಪ್ರಮುಖ ಪಕ್ಷದ ಕಾಂಗ್ರೆಸ್ ಒಪ್ಪಿಗೆ ಕೊಟ್ಟ ಮೇಲೆ ಅದು ಜಾರಿಯಾದದ್ದು. ಕಾರ್ಪೊರೇಟ್ಗಳ ತೆರಿಗೆ ಭಾರ ಇಳಿಸಿ, ಜನಸಾಮಾನ್ಯರ ತೆರಿಗೆ ಭಾರ ಹೆಚ್ಚಿಸುವ ಈ ನವ ಉದಾರವಾದಿ ಜಿಎಸ್ಟಿ ತೆರಿಗೆ ನೀತಿ ಪರ ಎಂದು ಸಾಬೀತುಪಡಿಸಿಕೊಳ್ಳಲು ಎಲ್ಲಾ ವಿರೋಧ ಪಕ್ಷಗಳೂ ಪೈಪೋಟಿಯಲ್ಲಿ ಈ ಜನದ್ರೋಹಿ ಸಂವಿಧಾನ ತಿದ್ದುಪಡಿಗೆ ಒಪ್ಪಿಗೆ ನೀಡಿದ್ದವು. ಈ ಜನದ್ರೋಹಕ್ಕೆ ನೇತೃತ್ವ ವಹಿಸಿದ್ದು ಬಿಜೆಪಿ. ಕಾಂಗ್ರೆಸ್ ಈ ಅನ್ಯಾಯವನ್ನು ಒಪ್ಪಿಕೊಂಡಿದ್ದು ಏಕೆ? ಒಪ್ಪಿಕೊಂಡ ನಂತರ ಈಗ ಐದು ವರ್ಷಗಳ ನಂತರ ಪರಿಹಾರ ರದ್ದು ಮಾಡುತ್ತಿದ್ದಾರೆ ಎಂದು ದೂರುತ್ತಿರುವುದು ಬೇಜವಾಬ್ದಾರಿಯಾಗುವುದಿಲ್ಲವೇ? 4.ಸೆಸ್ ಸುಲಿಗೆ- ಕಾಂಗ್ರೆಸ್ ಹೇಳದ್ದು: ಮೋದಿ ಸರಕಾರ ಕೇಂದ್ರದ ತೆರಿಗೆಯಲ್ಲಿ ಶೇ. 28ರಷ್ಟು ಭಾಗವನ್ನು ಸೆಸ್ ಮತ್ತು ಸರ್ಚಾರ್ಜ್ ರೂಪದಲ್ಲಿ ಸುಲಿಯುತ್ತಿರುವುದರಿಂದ ಕೇಂದ್ರದ ತೆರಿಗೆಯಲ್ಲಿ ರಾಜ್ಯಗಳ ಪಾಲು ಕಡಿಮೆಯಾಗುತ್ತಿದೆ ಎಂಬ ಬೈರೆೇಗೌಡರ ಮತ್ತು ಕಾಂಗ್ರೆಸ್ನ ವಾದ ಅಕ್ಷರಶಃ ಸತ್ಯ. ಆದರೆ ಈ ಸತ್ಯಕ್ಕೆ ಮತ್ತೊಂದು ಮುಖವೂ ಇದೆ. 1970ರ ದಶಕದಲ್ಲಿ ಸೆಸ್ ಮತ್ತು ಸರ್ಚಾರ್ಜ್ ವ್ಯವಸ್ಥೆ ಪ್ರಾರಂಭವಾಗುವ ಮುನ್ನ ಕೇಂದ್ರದ ಆದಾಯ ತೆರಿಗೆಯನ್ನು ರಾಜ್ಯಗಳ ಜೊತೆಗೆ ಹಂಚಿಕೊಳ್ಳಬೇಕಾದ ಸಂಪನ್ಮೂಲಗಳಲ್ಲಿ ಸೇರಿಸುತ್ತಿರಲಿಲ್ಲ. 2000ದಲ್ಲಿ ಬಿಜೆಪಿಯ ವಾಜಪೇಯಿ ನೇತೃತ್ವದ ಸರಕಾರ ತಂದ ಸಂವಿಧಾನ ತಿದ್ದುಪಡಿಯಲ್ಲಿ ಆದಾಯ ತೆರಿಗೆಯನ್ನು-Divisible pool- ರಾಜ್ಯಗಳ ಜೊತೆ ಹಂಚಿಕೊಳ್ಳುವ ಸಂಪನ್ಮೂಲಗಳಲ್ಲಿ ಸೇರಿಸಿ, ಸೆಸ್ ಮತ್ತು ಸರ್ಚಾರ್ಜ್ ಹೊರಗಿಟ್ಟಿತು. ಈ ತಿದ್ದುಪಡಿಯನ್ನು ಕಾಂಗ್ರೆಸ್ ಮತ್ತು ಇತರ ವಿರೋಧ ಪಕ್ಷಗಳೂ ಅನುಮೋದಿಸಿದವು. ದೇಶದ ಒಟ್ಟಾರೆ ವೆಚ್ಚದ ಹೊಣೆಗಾರಿಕೆಯಲ್ಲಿ ರಾಜ್ಯಗಳ ಪಾಲು ಶೇ. 67 ರಷ್ಟಿದ್ದರೆ ತೆರಿಗೆ ಆದಾಯದ ಪಾಲು ಮಾತ್ರ ಶೇ. 33. ಹೀಗಿರುವಾಗ ರಾಜ್ಯಗಳ ಕಾಲು ಕತ್ತರಿಸುವಂತಹ ಬಿಜೆಪಿ ಮಾಡಿದ ತಿದ್ದುಪಡಿಗೆ ಕಾಂಗ್ರೆಸ್ ಒಪ್ಪಿಗೆ ಕೊಟ್ಟಿದ್ದೇಕೆ? ಅಷ್ಟು ಮಾತ್ರವಲ್ಲ. ಕೇಂದ್ರದಲ್ಲಿ 2004-214ರ ತನಕ ಅಧಿಕಾರದಲ್ಲಿದ್ದ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರ ಈ ಫೆಡರಲ್ ವಿರೋಧಿ ಸಂವಿಧಾನ ತಿದ್ದುಪಡಿಗೆ ಬದಲಾವಣೆಗಳನ್ನು ತರಲಿಲ್ಲ. ಬದಲಿಗೆ ತಾನೂ ಕೂಡ ಶೇ. 10-15ರಷ್ಟು ತೆರಿಗೆ ಸಂಪನ್ಮೂಲಗಳನ್ನು ಸೆಸ್ ಅಡಿ ಸಂಗ್ರಹಿಸುತ್ತಾ ಅಷ್ಟ್ರರಮಟ್ಟಿಗೆ ರಾಜ್ಯಗಳ ಪಾಲನ್ನು ಖೋತಾ ಮಾಡಿತ್ತು. ಅದನ್ನೇ ಬಿಜೆಪಿ ಅತಿರೇಕಕ್ಕೆ ತೆಗೆದುಕೊಂಡು ಹೋಗಿ ಶೇ. 28ರಷ್ಟು ಸೆಸ್ ಸಂಗ್ರಹಿಸುತ್ತಿದೆ. ಆದ್ದರಿಂದ ಕರ್ನಾಟಕದ ಹಾಗೂ ಇತರ ರಾಜ್ಯಗಳಿಗೂ ಮೋದಿ ಕಾಲದಲ್ಲಿ ಅಪರಿಮಿತ ಅನ್ಯಾಯ ಹಾಗೂ ವಂಚನೆ ನಡೆಯುತ್ತಿರುವುದು ನಿಜವಾದರೂ, ಕಾಂಗ್ರೆಸ್ಗೂ ಇತರ ವಿರೋಧ ಪಕ್ಷಗಳಿಗೂ ಕರ್ನಾಟಕದ ಜನರು ಕ್ಲೀನ್ ಚಿಟ್ ಕೊಡಲಾಗದು. ಹೀಗಾಗಿ ಮೋದಿ ಸರಕಾರ ನಡೆಸುತ್ತಿರುವ ಕರ್ನಾಟಕ ದರೋಡೆ ನಿಲ್ಲಬೇಕೆಂದರೆ ಕರ್ನಾಟಕದ ಜನತೆ ಮೋದಿ ಸರಕಾರದ ತಾರತಮ್ಯಗಳ ವಿರುದ್ಧ ಹೋರಾಡುತ್ತಲೇ ಕಾಂಗ್ರೆಸ್ನ ನೀತಿಗಳನ್ನೂ ಖಂಡಿಸಬೇಕು. ಜನರ ಮೇಲಿನ ತೆರಿಗೆ ಶೋಷಣೆ ಮತ್ತು ರಾಜ್ಯಗಳಿಗಾಗುವ ಅನ್ಯಾಯ ಗಳನ್ನೂ ನಿಲ್ಲಿಸಲು ಈ ಕೆಳಗಿನ ಜನಾಗ್ರಹಗಳನ್ನು ಸ್ವತಂತ್ರವಾಗಿ ಮುಂದಿಡಬೇಕು: 1. ಶೇ. 67ರಷ್ಟು ವೆಚ್ಚಗಳ ಜವಾಬ್ದಾರಿ ಹೊಂದಿರುವ ರಾಜ್ಯಗಳಿಗೆ ಶೇ. 67ರಷ್ಟು ತೆರಿಗೆ ಪಾಲು ಸಿಗಬೇಕು. 2. ಸೆಸ್ ಹಾಕುವ ಅಧಿಕಾರ ರಾಜ್ಯ ಸರಕಾರಗಳಿಗೂ ನೀಡುವಂತೆ ಕಾನೂನು ತಿದ್ದುಪಡಿ ಮಾಡಬೇಕು. 3. ಕೇವಲ ಐಷಾರಾಮಿ ಹಾಗೂ ವಿಲಾಸಿ ಸರಕು ಮತ್ತು ಸೇವೆಗಳ ಮೇಲೆ ಮಾತ್ರ ಸೆಸ್ ಹಾಕುವಂತೆ ಕಾನೂನು ತಿದ್ದುಪಡಿ ತರಬೇಕು. 4. ಪೆಟ್ರೋಲ್ ಮತ್ತು ಡೀಸೆಲ್ ನಂಥ ಹಣದುಬ್ಬರ ಕಾರಕ ಸರಕುಗಳ ಮೇಲೆ ಸೆಸ್ ಮತ್ತು ಸರ್ಚಾರ್ಜ್ ನಿಲ್ಲಿಸಬೇಕು. 5. ರಾಜ್ಯಗಳಿಗೂ ಕೂಡ ಕಾರ್ಪೊರೇಟ್ ತೆರಿಗೆ ವಿಧಿಸುವ ಅಧಿಕಾರ ಒದಗಬೇಕು. 6. ಕೇಂದ್ರದ ಡಿವಿಸಬಲ್ ಪೂಲ್ನ ರಾಜ್ಯವಾರು ತೆರಿಗೆ ಹಂಚಿಕೆಯ ಸೂತ್ರವನ್ನು ಕೇಂದ್ರದ ಕ್ಯಾಬಿನೆಟ್ ತೀರ್ಮಾನ ಮಾಡದೆ ರಾಜ್ಯ ಸರಕಾರಗಳ ಸಮಾಲೋಚನೆಯೊಂದಿಗೆ ನಿಗದಿಯಾಗಬೇಕು. 7. ಜಿಎಸ್ಟಿ ವ್ಯವಸ್ಥೆ ಮಾರ್ಪಾಡಾಗಬೇಕು. 8.ದೇಶದ ಒಟ್ಟಾರೆ ತೆರಿಗೆ ಆದಾಯದಲ್ಲಿ ಜಿಎಸ್ಟಿ ಪಾಲು ಕಡಿಮೆಯಾಗುತ್ತಾ ಅತಿ ಶ್ರೀಮಂತ, ಶ್ರೀಮಂತ, ಮೇಲ್ಮಧ್ಯಮ ವರ್ಗಗಳ ಮೇಲೆ ವಿಧಿಸುವ ತೆರಿಗೆ ಆದಾಯಗಳು ಹೆಚ್ಚಾಗಬೇಕು.
DKSC ಜುಬೈಲ್ ಯೂನಿಟ್, ಯೂತ್ ವಿಂಗ್ ವತಿಯಿಂದ “ಗ್ರ್ಯಾಂಡ್ ಫ್ಯಾಮಿಲಿ ಇಫ್ತಾರ್ ಮೀಟ್”
ಜುಬೈಲ್: ದಕ್ಷಿಣ ಕರ್ನಾಟಕ ಸುನ್ನಿ ಸೆಂಟರ್ (DKSC) ಜುಬೈಲ್ ಘಟಕ ಮತ್ತು ಯೂತ್ ವಿಂಗ್ ವತಿಯಿಂದ “ಗ್ರ್ಯಾಂಡ್ ಫ್ಯಾಮಿಲಿ ಇಫ್ತಾರ್ ಮೀಟ್” ಕಾರ್ಯಕ್ರಮವು ಫೆ.27 ರಂದು ಜುಬೈಲ್ನ ಅಲ್ ಫಲಾಹ್ ಗ್ರೌಂಡ್ನಲ್ಲಿ ನಡೆಯಲಿದೆ. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಕರ್ನಾಟಕ ವಿಧಾನಸಭೆಯ ಗೌರವಾನ್ವಿತ ಸ್ಪೀಕರ್ ಯು. ಟಿ. ಖಾದರ್ ಭಾಗವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ DKSC ವಿಷನರಿ ಕೌನ್ಸಿಲ್ ಚೇರ್ಮನ್ ಝಕರಿಯಾ ಜೋಕಟ್ಟೆ, ಕಾರ್ಯನಿರ್ವಹಣಾ ಅಧ್ಯಕ್ಷ ಯು. ಟಿ. ಇಫ್ತಿಕಾರ್, ಸಲಹೆಗಾರ ಅಶ್ರಫ್ ಎಕ್ಸ್ಪರ್ಟೈಸ್, ಪ್ರಿಸಿಷನ್ ವಾಲ್ವ್ಸ್ ಸಂಸ್ಥೆಯ ಸ್ಥಾಪಕ ಮತ್ತು ವ್ಯವಸ್ಥಾಪಕ ನಿರ್ದೇಶಕ ಯೂನುಸ್ ಸಯ್ಯದ್, DKSC ವಿಷನರಿ ಕೌನ್ಸಿಲ್ ಸಲಹೆಗಾರ ರೌಫ್ ಸುಲ್ತಾನ್ ಗೋಲ್ಡ್, ಖಜಾಂಚಿ ಎಂ. ಶರೀಫ್ ಬೋಳಾರ್, ಪ್ರ.ಕಾರ್ಯದರ್ಶಿ ಅಬ್ದುಲ್ ಹಮೀದ್ ಅಶ್ಕಾಫ್, ಮಹಮ್ಮದ್ ಹಾಜಿ ಕರ್ನಿರೆ (ಸಲಹೆಗಾರ, ಫೇಸ್ ಕಂಪನಿ), ಹಿದಾಯತ್ ಅಡ್ಡೂರು (BCCI ದುಬೈ ಚಾಪ್ಟರ್ ಅಧ್ಯಕ್ಷ), ಉಸ್ಮಾನ್ ತೀರ್ಥಹಳ್ಳಿ (ಎನ್ಆರ್ಐ ಉದ್ಯಮಿ), ಮುಹಮ್ಮದ್ ಶಹೀರ್ (ಅಂಪ್ಲಿಟ್ಯೂಡ್ ಕಂಪನಿ, ಜುಬೈಲ್), ಮುಷ್ತಾಕ್ ಅಹ್ಮದ್ (ಫತಹ್ ಅಲ್ ಜುಬೈಲ್ ಟ್ರೇಡಿಂಗ್), ನಜೀರ್ ಹುಸೈನ್ (ಸಿಇಒಅಲ್ ಫಲಾಹ್ ಗ್ರೂಪ್), ಶರೀಫ್ ಬಜ್ಪೆ(DKSC ಖೋಬರ್ ಘಟಕ), ಇಮ್ರಾನ್ ಬಂದರ್ (ವ್ಯವಸ್ಥಾಪಕ ನಿರ್ದೇಶಕ, ಸಾನಿವೇಟ್), ಇಬ್ರಾಹಿಂ ಹುಸೈನ್ (ಸಿಇಒ, ರಖ್ವಾನಿ ಕಂಪನಿ), ಇಸ್ಮಾಯಿಲ್ ಝಕರಿಯಾ (ಸಿಇಒ, ಝಕಿಯಾ ಜನರಲ್ ಕಾಂಟ್ರಾಕ್ಟಿಂಗ್ ಕಂಪನಿ ) ಸೇರಿದಂತೆ ಹಲವು ನಾಯಕರು ಹಾಗೂ ಉದ್ಯಮಿಗಳು ಉಪಸ್ಥಿತರಿರಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.
ಅಶ್ಲೀಲ ಕಂಟೆಂಟ್ ಪ್ರಸಾರ: ಭಾರತದಲ್ಲಿ ಈ 5 ಒಟಿಟಿ ವೇದಿಕೆಗಳು ಬ್ಯಾನ್
ನವದೆಹಲಿ: ಡಿಜಿಟಲ್ ಯುಗದಲ್ಲಿ ಆನ್ಲೈನ್ ಕಂಟೆಂಟ್ಗಳನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಬಹುದೊಡ್ಡ ಹೆಜ್ಜೆಯೊಂದನ್ನು ಇಟ್ಟಿದೆ. ಅಶ್ಲೀಲ ಮತ್ತು ಅಸಭ್ಯ ಕಂಟೆಂಟ್ಗಳನ್ನು ಪ್ರಸಾರ ಮಾಡುತ್ತಿದ್ದ ಆರೋಪದ ಮೇಲೆ ಐದು ಪ್ರಮುಖ ಒಟಿಟಿ ಪ್ಲಾಟ್ಫಾರ್ಮ್ಗಳನ್ನು (OTT Platforms) ಭಾರತದಲ್ಲಿ ಸಂಪೂರ್ಣವಾಗಿ ನಿರ್ಬಂಧಿಸಿ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ (Ministry of I&B) ಮಂಗಳವಾರ ಆದೇಶ ಹೊರಡಿಸಿದೆ. ಆನ್ಲೈನ್
ಮುಸ್ಲಿಂ ವ್ಯಾಪಾರಿಗೆ ಘೇರಾವ್ ಹಾಕಿದ್ದ ಬಜರಂಗದಳ ಕಾರ್ಯಕರ್ತರನ್ನು ಏಕಾಂಗಿಯಾಗಿ ಎದುರಿಸಿದ್ದ ಉತ್ತರಾಖಂಡ್ ಜಿಮ್ ಮಾಲೀಕ ಮೊಹಮ್ಮದ್ ದೀಪಕ್ ಕುಮಾರ್ ಅವರನ್ನು, ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಭೇಟಿ ಮಾಡಿದ್ದಾರೆ. ಕಳೆದ ಸೋಮವಾರ (ಫೆ.23) ದೆಹಲಿಯಲ್ಲಿ ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ ಭೇಟಿ ಮಾಡಿದ ಮೊಹಮ್ಮದ್ ದೀಪಕ್, ಕಾಂಗ್ರೆಸ್ ನಾಯಕರಿಂದ ಭರಪೂರ ಪ್ರಶಂಸೆಗಳನ್ನು ಸ್ವೀಕರಿಸಿದರು. ಯಾರು ಈ ಮೊಹಮ್ಮದ್ ದೀಪಕ್? ರಾಹುಲ್ ಗಾಂಧಿ ಏಕೆ ಈ ಜಿಮ್ ತರಬೇತುದಾರನ ಪರ ನಿಂತಿದ್ದಾರೆ? ಇಲ್ಲಿದೆ ಮಾಹಿತಿ.
ಪ್ರಚೋದನಕಾರಿ ಭಾಷಣ; ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಪ್ರಕರಣ ದಾಖಲು
ಯಾದಗಿರಿ: ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಪ್ರಚೋದನಕಾರಿ ಹಾಗೂ ವಿವಾದಾತ್ಮಕ ಭಾಷಣ ಮಾಡಿದ ಆರೋಪದಡಿ ಪ್ರಕರಣ ದಾಖಲಾಗಿದೆ. ಜಿಲ್ಲೆಯ ಗುರುಮಠಕಲ್ ಪಟ್ಟಣದಲ್ಲಿ ಫೆ. 21ರಂದು ನಡೆದ ಶಿವಾಜಿ ಜಯಂತಿ ಪ್ರಯುಕ್ತ ನಡೆದ ಬಹಿರಂಗ ಸಭೆಯಲ್ಲಿ ಭಾಗವಹಿಸಿದ್ದ ವೇಳೆ ಅವರು ಒಂದು ಸಮುದಾಯದ ವಿರುದ್ಧ ಆಕ್ಷೇಪಾರ್ಹ ಟೀಕೆಗಳನ್ನು ಮಾಡಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ. ಅಲ್ಲದೆ ದೇಶದ ಕುರಿತು ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ ಆರೋಪವೂ ಕೇಳಿ ಬಂದಿದೆ. ಸಭೆಯಲ್ಲಿ “ಈ ದೇಶದಲ್ಲಿ ಇರಬೇಕಾದರೆ ಒಂದೇ ಮಾತರಂ ಹೇಳಬೇಕು” ಎಂಬ ಹೇಳಿಕೆ ನೀಡಿದ ಅವರು, ಮಹಾತ್ಮಾ ಗಾಂಧಿ ಕುರಿತು “ಗಾಂಧೀಜಿ ಪಾಕಿಸ್ತಾನದ ಪಿತಾಮಹ” ಎಂದು ಹೇಳಿಕೆ ನೀಡಿರುವುದಾಗಿ ಆರೋಪಿಸಲಾಗಿದೆ. ಶಾಸಕರ ಹೇಳಿಕೆಗಳು ಸಮಾಜದ ಶಾಂತಿ ಹಾಗೂ ಸೌಹಾರ್ದತೆಗೆ ಧಕ್ಕೆ ತರುವಂತಿವೆ ಎಂದು ಪರಿಗಣಿಸಿ, ಗುರುಮಠಕಲ್ ಪೊಲೀಸ್ ಠಾಣೆಯಲ್ಲಿ ಸ್ವಯಂಪ್ರೇರಿತ ದೂರು ದಾಖಲಿಸಲಾಗಿದೆ. ಅವರ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (BNS) ಸೆಕ್ಷನ್ 196, 299, 302, 352 ಹಾಗೂ 353 ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ದ್ವೇಷ ಭಾಷಣ ಆರೋಪ; ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಪ್ರಕರಣ ದಾಖಲು
ಯಾದಗಿರಿ , ಫೆ.25: ದ್ವೇಷ ಭಾಷಣ ಆರೋಪದ ಮೇಲೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ. ಜಿಲ್ಲೆಯ ಗುರುಮಠಕಲ್ ಪಟ್ಟಣದಲ್ಲಿ ಫೆ. 21ರಂದು ಶಿವಾಜಿ ಜಯಂತಿ ಅಂಗವಾಗಿ ನಡೆದ ಭವ್ಯ ಮೆರವಣಿಗೆಯ ಬಳಿಕ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ವೇಳೆ ಅವರು ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ ಆರೋಪ ಕೇಳಿಬಂದಿದೆ. ಎಫ್ಐಆರ್ ಪ್ರಕಾರ, ತಮ್ಮ ಭಾಷಣದಲ್ಲಿ ನಿರ್ದಿಷ್ಟ ಸಮುದಾಯವನ್ನು ಗುರಿಯಾಗಿಸಿಕೊಂಡು ಹಿಂದಿ ಕವಿತೆಯನ್ನು ಉಲ್ಲೇಖಿಸಿದ್ದಲ್ಲದೆ, ಮಹಾತ್ಮಾ ಗಾಂಧಿ ಹಾಗೂ ಜವಾಹರಲಾಲ್ ನೆಹರು ಕುರಿತು ಸಹ ವಿವಾದಾತ್ಮಕ ಟೀಕೆಗಳನ್ನು ಮಾಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಘಟನೆಯ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಜೀಂ ಪ್ರೇಮ್ ಜಿ ವಿಶ್ವವಿದ್ಯಾಲಯದಲ್ಲಿ ಎಬಿವಿಪಿ ಕಾರ್ಯಕರ್ತರ ಪ್ರತಿಭಟನೆ ವಿಚಾರವಾಗಿಯೂ ಗೃಹ ಸಚಿವ ಡಾ. ಜಿ ಪರಮೇಶ್ವರ್ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಬೆಂಗಳೂರಿನಲ್ಲಿ ಬುಧವಾರ ಮಾತನಾಡಿದ ಅವರು, ಅವರ ಕ್ಯಾಂಪಸ್ ಅಲ್ಲಿ ಅದೇನೋ ಸೆಮಿನಾರ್ ಮಾಡಿದ್ದಾರೆ, ವಿಷಯ ಏನಾದರೂ ಇರಲಿ. ಪರ- ವಿರೋಧ ಇದ್ದೆ ಇರುತ್ತದೆ. ಅದಕ್ಕೆ ಒಂದು ಗುಂಪು ಹೋಗಿ ಗಲಾಟೆ ಮಾಡಿದ್ದಾರೆ. ಕಾನೂನು ಇವರೇ ಕೈಗೆ ತೆಗೆದುಕೊಂಡರೆ ಪೊಲೀಸರು ಸುಮ್ಮನೇ ಇರುವುದಿಲ್ಲ. ಅದಕ್ಕೆ ಅವಕಾಶ ಇರಲ್ಲ, ಪೊಲೀಸರು ಕ್ರಮ ತೆಗೆದುಕೊಳ್ತಾರೆ ಎಂದು ಪರಮೇಶ್ವರ್ ಎಚ್ಚರಿಕೆ ನೀಡಿದರು.
Gold Rate Rise : ಟ್ರಂಪ್ ಪ್ರತಿಸುಂಕ ದರ ಏರಿಕೆ ಎಫೆಕ್ಟ್: ಚಿನ್ನದ ದರದಲ್ಲಿ ಹೆಚ್ಚಳ: ಬೆಳ್ಳಿ ಬೆಲೆ ತಟಸ್ಥ
ಚಿನ್ನದ ಬೆಲೆ ಸತತವಾಗಿ ಏರಿಕೆ ದಾಖಲಿಸುತ್ತಿದ್ದು, ಇದಕ್ಕೆ ಜಾಗತಿಕವಾಗಿ ನಡೆಯುತ್ತಿರುವ ಬದಲಾವಣೆಗಳು, ಅಮೆರಿಕ- ಇರಾನ್ ಉದ್ಚಿಗ್ನತೆಯೇ ಕಾರಣವಾಗಿದೆ.
ವೈವಿಧ್ಯಮಯ ಬುಡಕಟ್ಟಿನ ಹಾಲಕ್ಕಿ ಒಕ್ಕಲಿಗರು
ಕೊಂಕಣದ ವೈಶಿಷ್ಟ್ಯ ಮತ್ತು ಮಲೆನಾಡಿನ ಮೆದು ಸ್ವಭಾವ ಹಾಲಕ್ಕಿಗಳಲ್ಲಿ ಸಹಜವಾಗಿಯೇ ಮೈದಾಳಿದೆ. ಹಾಲಕ್ಕಿಯರು ಕೇವಲ ತಮ್ಮ ಉಡುಗೆ ತೊಡಿಗೆ, ಆಭರಣ ಧರಿಸುವಿಕೆಯಿಂದ ಮಾತ್ರ ಮಿಕ್ಕ ಸಮುದಾಯಗಳಿಗಿಂತ ಭಿನ್ನವಾಗಿಲ್ಲ. ಇವರ ನಿತ್ಯದ ಬದುಕು ಮತ್ತು ಪ್ರಾಚೀನ ಸಾಂಸ್ಕೃತಿಕ ಕುರುಹುಗಳಿಂದಲೂ ಇವರು ಇತರ ಬುಡಕಟ್ಟು ಸಮುದಾಯಗಳಿಗಿಂತ ಭಿನ್ನವಾಗಿದ್ದಾರೆ. ‘ಹಾಲಕ್ಕಿ ಒಕ್ಕಲಿಗ’ ಅಥವಾ ‘ಹಾಲಕ್ಕಿ ಒಕ್ಕಲ್’ ಎಂದು ಕರೆಯಲಾಗುವ ಅಪ್ಪಟ ಬುಡಕಟ್ಟು ಸಮುದಾಯಕ್ಕೂ ನಮ್ಮ ನಾಡಿನ ಕೃಷಿಕ ಸಮುದಾಯವಾದ ಒಕ್ಕಲಿಗರಿಗೂ ಯಾವುದೇ ಸಂಬಂಧವಿಲ್ಲ. ಹಾಲಕ್ಕಿಗಳ ವೈವಿಧ್ಯಮಯ ಬದುಕನ್ನು ಕಂಡಾಗ, ಅವರು ಕಡುಕೆಂಪು, ಕಡುಹಳದಿ, ಕಡುಹಸಿರು, ಕಡುನೀಲಿ, ಕಡುಕಪ್ಪು ಬಣ್ಣಗಳ ಸರಗಳನ್ನು ಕೊರಳಲ್ಲಿ ಹಾಕಿಕೊಂಡು, ಕುಪ್ಪಸ ತೊಡದೆ ‘ಗೇಟ’ ಪದ್ಧತಿಯಲ್ಲಿ ಸೀರೆಯುಟ್ಟು ಕರಾವಳಿ ಉದ್ದಕ್ಕೂ ಬಣ್ಣದ ಹಕ್ಕಿಗಳಂತೆ ಬುಡಕಟ್ಟು ಸಂಸ್ಕೃತಿಯಲ್ಲೇ ಕಾಣುವ ಅಪ್ಪಟ ಆದಿಮ ಬುಡಕಟ್ಟುಗಳೇ ಹೊರತು ಇವರಿಗೆ ನಗರೀಕರಣದ ಲವಲೇಶದಷ್ಟು ಆಧುನೀಕರಣವೂ ಇವರ ಮೇಲೆ ಈವರೆಗೂ ಪ್ರಭಾವ ಬೀರಿದಂತಿಲ್ಲ. ಹಾಲಕ್ಕಿ ಎಂದಕ್ಷಣ ನಮಗೆ ನೆನಪಿಗೆ ಬರುವುದು ‘ಹಾಲಕ್ಕಿಯರ ಕೋಗಿಲೆ’ ಎಂದೇ ಪ್ರಸಿದ್ಧರಾಗಿರುವ ಜಾನಪದ ಗಾಯಕಿ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಸುಕ್ರಿ ಬೊಮ್ಮನಗೌಡ. ಹಲವು ವರ್ಷಗಳ ಹಿಂದೆ ಹಂಪಿಯ ಕನ್ನಡ ವಿಶ್ವವಿದ್ಯಾನಿಲಯದಿಂದ ಸುಕ್ರಿ ಬೊಮ್ಮನಗೌಡರ ‘ಬಡಿಗೇರಿ ಕೊಪ್ಪ’ದಲ್ಲೇ ಜಾನಪದ ಕಾರ್ಯಕ್ರಮವೊಂದನ್ನು ಆಯೋಜಿಸಿ, ಅಂದಿನ ವೈಸ್ ಚಾನ್ಸಲರ್ ಆದ ಡಾ.ಬೋರಲಿಂಗಯ್ಯನವರು ನನ್ನನ್ನು ಸಂಪನ್ಮೂಲ ವ್ಯಕ್ತಿಯನ್ನಾಗಿ ಆಹ್ವಾನಿಸಿ, ಇಲ್ಲಿನ ಕಾರ್ಯಕ್ರಮದಲ್ಲಿ ಭಾಗವಹಿಸುವ ಅವಕಾಶ ಕಲ್ಪಿಸಿದ್ದರು. ಆಗ ಸುಕ್ರಿ ಬೊಮ್ಮನಗೌಡರ ಜತೆ ಹಾಲಕ್ಕಿ ಒಕ್ಕಲಿಗ ಸಮುದಾಯದೊಂದಿಗೆ ಒಂದೆರಡು ದಿನ ಇರುವ ಅವಕಾಶ ಸಿಕ್ಕಿ, ಈ ಸಮುದಾಯದ ಬದುಕು, ಬವಣೆ, ಸಂಸ್ಕೃತಿ, ಜೀವನವಿಧಾನವನ್ನು ಹತ್ತಿರದಿಂದ ನೋಡುವ ಯೋಗ ಸಿಕ್ಕಿತ್ತು. ಅರಬಿ ಸಮುದ್ರದ ಕರಾವಳಿ ಮತ್ತು ಸಹ್ಯಾದ್ರಿಯ ಪಶ್ಚಿಮ ಭಾಗದ ಉತ್ತರ ಕನ್ನಡ ಜಿಲ್ಲೆಯ ಕಣಿವೆಗಳಲ್ಲಿ ಹಾಲಕ್ಕಿಯರು ವಾಸಿಸುತ್ತಿದ್ದಾರೆ. ಕರ್ನಾಟಕ ಪಶ್ಚಿಮ ಕರಾವಳಿಯು ಪ್ರಾರಂಭವಾಗುವ ಕಾರವಾರದಿಂದ ಭಟ್ಕಳದವರೆಗೂ ಹಾಲಕ್ಕಿಗಳ ಕೊಪ್ಪಗಳಿವೆ. ಇದಲ್ಲದೆ ಕರಾವಳಿಗೆ ಮೈಯೊಡ್ಡಿ ನಿಂತಿರುವ ಸಹ್ಯಾದ್ರಿಯ ರಮಣೀಯ ಕಣಿವೆಗಳಲ್ಲಿ, ನದಿಗಳ ದಂಡೆಗಳಲ್ಲಿ ಹಾಲಕ್ಕಿಯರು ನೆಲೆನಿಂತಿದ್ದಾರೆ. ಈ ಕಾರಣದಿಂದಲೇ ಹಾಲಕ್ಕಿಗಳ ಮೌಖಿಕ ಧಾರೆಗಳಲ್ಲಿ ಕಡಲು ಮತ್ತು ಸಹ್ಯಾದ್ರಿಯ ಕಣಿವೆಗಳ ಅಗಾಧತೆ ಮತ್ತು ಲಾಲಿತ್ಯಗಳು ಢಾಳಾಗಿ ಕಾಣಿಸಿಕೊಳ್ಳುತ್ತವೆ. ಕೊಂಕಣದ ವೈಶಿಷ್ಟ್ಯ ಮತ್ತು ಮಲೆನಾಡಿನ ಮೆದು ಸ್ವಭಾವ ಹಾಲಕ್ಕಿಗಳಲ್ಲಿ ಸಹಜವಾಗಿಯೇ ಮೈದಾಳಿದೆ. ಹಾಲಕ್ಕಿಯರು ಕೇವಲ ತಮ್ಮ ಉಡುಗೆ ತೊಡಿಗೆ, ಆಭರಣ ಧರಿಸುವಿಕೆಯಿಂದ ಮಾತ್ರ ಮಿಕ್ಕ ಸಮುದಾಯ ಗಳಿಗಿಂತ ಭಿನ್ನವಾಗಿಲ್ಲ. ಇವರ ನಿತ್ಯದ ಬದುಕು ಮತ್ತು ಪ್ರಾಚೀನ ಸಾಂಸ್ಕೃತಿಕ ಕುರುಹುಗಳಿಂದಲೂ ಇವರು ಇತರ ಬುಡಕಟ್ಟು ಸಮುದಾಯಗಳಿಗಿಂತ ಭಿನ್ನವಾಗಿದ್ದಾರೆ. ಹಾಲಕ್ಕಿಯರು ಉತ್ತರ ಕನ್ನಡ ಜಿಲ್ಲೆಯ ಕಾರವಾರ, ಅಂಕೋಲ, ಕುಮಟಾ ಮತ್ತು ಹೊನ್ನಾವರ ತಾಲೂಕುಗಳಲ್ಲಿ ಹೆಚ್ಚಾಗಿ ವಾಸಿಸುತ್ತಿದ್ದಾರೆ. ಇವರು ವಾಸಿಸುವ ಸೀಮೆಗಳನ್ನು ಏಳು ಭಾಗಗಳಾಗಿ ವಿಂಗಡಿಸಿಕೊಂಡಿದ್ದಾರೆ. ಕಡವಾಡ ಸೀಮೆ, ಅಂಕೋಲ ಸೀಮೆ, ಗೋಕರ್ಣ ಸೀಮೆ, ನುಸಿಕೋಟೆ ಸೀಮೆ, ಹರಿಟ್ಟೆ ಸೀಮೆ, ಕುಂಬಾರಗದ್ದೆ ಸೀಮೆ, ಚಂದಾವರ ಸೀಮೆ. ಈ ಏಳೂ ಸೀಮೆಗಳು ಪಾರಂಪರಿಕವಾಗಿ ಒಂದೇ ಟಿಸಿಲಿನಿಂದ ಬಂದಂತಿವೆ. ಹಾಲಕ್ಕಿಯರಲ್ಲಿ ಇನ್ನೂ ಬಳಿ ಪದ್ಧತಿ ಜಾರಿಯಲ್ಲಿದೆ. ಈ ಬಳಿಗಳ ಮೂಲಕವೇ ತಮ್ಮನ್ನು ಗುರುತಿಸಿಕೊಳ್ಳುತ್ತಾರೆ. ಈ ಬಳಿಗಳು ಪ್ರಾಣಿ, ಪಕ್ಷಿ, ಹೂವು, ಗಿಡ, ಮರ, ಬಳ್ಳಿ, ಮೀನು, ಹಾವು ಮುಂತಾದ ಪ್ರಕೃತಿಜನ್ಯ ಜೀವಗಳಿಗೆ ಸಂಬಂಧಿಸಿದವುಗಳಾಗಿವೆ. ಹಂಪಿ ಕನ್ನಡ ವಿಶ್ವವಿದ್ಯಾನಿಲಯ ಪ್ರಕಟಿಸಿರುವ ‘ಕರ್ನಾಟಕ ಬುಡಕಟ್ಟು, ಸಚಿತ್ರ ಕೋಶ’ದಲ್ಲಿ (ಸಂ: ಡಾ.ಹಿ.ಚಿ.ಬೋರಲಿಂಗಯ್ಯ, ಡಾ.ಎ.ಎಸ್. ಪ್ರಭಾಕರ) ಚಿತ್ರಗಳೊಂದಿಗೆ ಹಾಲಕ್ಕಿಯರ ಕುರಿತ ಸಂಕ್ಷಿಪ್ತ ಮಾಹಿತಿ ಲಭ್ಯವಿದೆ. ಅಪ್ಪಟ ಅರಣ್ಯವಾಸಿಗಳಾದ ಹಾಲಕ್ಕಿಯರು ಬ್ಯಾಟೋಬೀರ, ಕರಿದೇವರು(ಕರಬೀರ) ಜಟ್ಟಿಗ, ನಾಗದೇವತೆ, ಬಲೀಂದ್ರರಾಯ, ಮಾಸ್ತಿ(ಮಹಾಸತಿ), ಮಂಜಲ ದೇವರು, ಮುಸುಕಿನ ಬಳಿದೇವರು, ನಗೆದೇವರು, ದ್ಯಾವನ ಅಥವಾ ದೇವಬಳಿ ದೇವರು, ಅರಬರ್ ದೇವರು(ಅರಬ್ ದೇವಸ್ಥಾನ), ಹೊಲಡು ದೇವರು, ಹುಲದೇವರು, ಹುಲಿದೇವರು, ಹರ್ ಕರೆ ಬಿರ್ಲು, ಹೆದ್ದೇವರ ಗುರ್ತು, ಹಲ್ ಮುಕ್ಕಾ, ಬಂಟದೇವರು, ಕಂಬದೇವರು, ಬೀರಲಕಟ್ಟೆ ದೇವರು ಮುಂತಾಗಿ ಅನೇಕ ದೈವಗಳನ್ನು ಆರಾಧಿಸುತ್ತಾರೆ. ಬಲೀಂದ್ರರಾಯನ ಮಕ್ಕಳು ಎಂದು ತಮ್ಮನ್ನು ತಾವು ಗುರುತಿಸಿಕೊಳ್ಳುವ ಹಾಲಕ್ಕಿಗಳು ಕೃಷಿಯನ್ನು ಒಂದು ರೀತಿಯ ಆರಾಧನೆಯ ರೀತಿಯಲ್ಲಿ ಆಚರಿಸುತ್ತಾರೆ. ಸುಗ್ಗಿಬೆಳೆ ಅಥವಾ ಕಾರುಬೆಳೆ ಬರುವ ಸಂದರ್ಭದಲ್ಲಿ ಸುಗ್ಗಿ ಹಬ್ಬ ಮಾಡಿ ವಿಜೃಂಭಣೆಯಿಂದ ಆಚರಿಸುತ್ತಾರೆ. ಉತ್ತು, ಬಿತ್ತು, ತೆನೆಕೊಯ್ದು ಗೊಣಬೆ ಹಾಕಿ, ಬಡಿದು ಹುಲ್ಲುಕಟ್ಟೆ, ಭತ್ತ ತೂರಿ, ಖಣಜ ಕಟ್ಟುವವರೆಗಿನ ಮತ್ತು ನಿಸರ್ಗದ ಏರಿಳಿತಗಳು ಈ ಸುಗ್ಗಿಹಬ್ಬದ ಸಂಭ್ರಮ, ಕುಣಿತಗಳಲ್ಲಿ ಅಡಕವಾಗಿರುತ್ತವೆ. ಹಾಲಕ್ಕಿಯರು ಕೃಷಿಯನ್ನು ಕೇವಲ ವೃತ್ತಿಯಾಗಿ ಮಾತ್ರ ನೋಡಿದವರಲ್ಲ, ಇವರಿಗೆ ಕೃಷಿಯೇ ಒಂದು ಜೀವದ್ರವ್ಯ ಮತ್ತು ಸಂಭ್ರಮದ ಆಚರಣೆ. ಹೀಗೆ ನಿಸರ್ಗದಲ್ಲಿ ನಿಸರ್ಗವಾಗಿ ಕರಗಿಹೋಗಿರುವ ಈ ಹಾಲಕ್ಕಿಗಳು ಲಘು ಕೃಷಿ ಮಾಡುತ್ತಾ, ಅರಣ್ಯದ ಉತ್ಪನ್ನಗಳನ್ನು ಸಂಗ್ರಹಿಸಿ ನೆಮ್ಮದಿಯಿಂದ ಇದ್ದವರು, ಕೈಗಾ ಅಣುಸ್ಥಾವರ, ಕೊಂಕಣ ರೈಲ್ವೆ, ಸೀಬರ್ಡ್ ನಂತಹ ಸೋ ಕಾಲ್ಡ್ ‘ಅಭಿವೃದ್ಧಿ’ಯ ಯೋಜನೆಗಳಿಂದಾಗಿ ತಮ್ಮ ಪಾರಂಪರಿಕ ನೆಲೆಗಳನ್ನು, ಅಷ್ಟಿಷ್ಟು ಇದ್ದ ಕೃಷಿ ಭೂಮಿಯನ್ನು ಕಳೆದುಕೊಂಡು ದಿಕ್ಕಾಪಾಲಾಗಿದ್ದಾರೆ! ಇಂದಿಗೂ ಹಾಲಕ್ಕಿಯರಿಗೆ ತಮ್ಮನ್ನು ಸರಕಾರ ಸ್ಥಳಾಂತರಿಸಿದ ದುಷ್ಪರಿಣಾಮಗಳಿಂದ ಮುಕ್ತಿ ಪಡೆಯಲು ಸಾಧ್ಯವಾಗಿಲ್ಲ. ಸಾಮಾಜಿಕವಾಗಿ, ಆರ್ಥಿಕವಾಗಿ ಮತ್ತು ರಾಜಕೀಯವಾಗಿ ಅತ್ಯಂತ ಹಿಂದುಳಿದ ಸಮುದಾಯದ ನೋವು ಯಾರಿಗೆ ಅರ್ಥವಾಗಬೇಕು..?
ಹೊಸದಿಲ್ಲಿ: ಕೇರಳವನ್ನು 'ಕೇರಳಂ' ಎಂದು ಮರುನಾಮಕರಣಕ್ಕೆ ಅನುಮೋದನೆ ನೀಡಿರುವ ಕೇಂದ್ರ ಸರಕಾರಕ್ಕೆ ಕಾಂಗ್ರೆಸ್ ಸಂಸದ ಶಶಿ ತರೂರ್ ಟೀಕಿಸಿದ್ದಾರೆ. ಹೆಸರು ಬದಲಾವಣೆಗೆ ಪ್ರಾಶಸ್ತ್ಯ ನೀಡುವ ಸರಕಾರ, ರಾಜ್ಯಕ್ಕೆ ಅಗತ್ಯವಿರುವ ಯೋಜನೆಗಳ ಬಗ್ಗೆ ಗಮನ ಹರಿಸುತ್ತಿಲ್ಲ ಎಂದು ಹೇಳಿದ್ದಾರೆ. “ಮಲಯಾಳಂ ಭಾಷೆಯಲ್ಲಿ ಕೇರಳವನ್ನು ಈಗಾಗಲೇ ‘ಕೇರಳಂ’ ಎಂದೇ ಕರೆಯಲಾಗುತ್ತಿದೆ. ಈಗ ಇಂಗ್ಲಿಷ್ನಲ್ಲೂ ಮಲಯಾಳಂ ಪದವನ್ನೇ ಬಳಸಲಾಗುತ್ತದೆ. ಅದರಿಂದ ಏನು ವ್ಯತ್ಯಾಸವಾಗುತ್ತದೆ ಎಂಬುದು ನನಗೆ ಗೊತ್ತಿಲ್ಲ. ನಮ್ಮ ರಾಜ್ಯಕ್ಕೆ ಒಂದು AIIMS ಅಥವಾ ಯಾವುದೇ ಹೊಸ ಸಂಸ್ಥೆಗಳನ್ನು ನೀಡಿಲ್ಲ. ಕೇಂದ್ರ ಬಜೆಟ್ನಲ್ಲಿ ಯಾವುದೇ ಹೊಸ ಯೋಜನೆಗಳನ್ನು ಘೋಷಿಸಿಲ್ಲ. ಆದರೆ ಹೆಸರು ಬದಲಾಯಿಸುವ ವಿಚಾರ ಬಂದಾಗ ಮಾತ್ರ ಅನುಮೋದನೆ ನೀಡಲಾಗಿದೆ ಎಂದು ರಾಜ್ಯದ ಹೆಸರನ್ನು ಮರುನಾಮಕರಣ ಮಾಡುವ ಅಗತ್ಯತೆಯ ಬಗ್ಗೆ ಪ್ರಶ್ನೆಗಳನ್ನು ಎತ್ತಿದ್ದಾರೆ. ಈ ಕುರಿತು ಎಕ್ಸ್ನಲ್ಲಿ ಪೋಸ್ಟ್ ಮಾಡಿದ ಶಶಿ ತರೂರ್, ಕೇರಳಂ ಎಂಬ ಹೊಸ ಹೆಸರಿನ ನಂತರ ಅಲ್ಲಿನ ಜನರನ್ನು ಏನೆಂದು ಕರೆಯಬೇಕು ಎಂಬ “ಸಣ್ಣ ಭಾಷಾ ಪ್ರಶ್ನೆ”ಯನ್ನೂ ಉಲ್ಲೇಖಿಸಿದರು. ‘ಕೇರಲೈಟ್’ ಅಥವಾ ‘ಕೇರಳನ್’ ಎಂಬ ಪದಗಳಿಗೆ ಬದಲಾಗಿ ‘ಕೇರಳಮೈಟ್’ ಎಂದರೆ ಅದು ಸೂಕ್ಷ್ಮಾಣುವಿನ ಹೆಸರಿನಂತಿದೆ. ‘ಕೇರಳಮಿಯನ್’ ಎಂದರೆ ಅಪರೂಪದ ಖನಿಜದ ಹೆಸರಿನಂತಿದೆ ಎಂದು ವ್ಯಂಗ್ಯವಾಡಿದರು. ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಕೇರಳದ ಹೆಸರನ್ನು 'ಕೇರಳಂ' ಎಂದು ಬದಲಾಯಿಸುವ ಪ್ರಸ್ತಾವನೆಗೆ ಅನುಮೋದನೆ ನೀಡಿದೆ.
ಅಮೆರಿಕಾ ವನೆಜುವೆಲಾದ ತೈಲ ಟ್ಯಾಂಕರ್ ಗಳ ಮಡುರೊ ಕಾಲದಲ್ಲಿ ವಿಧಿಸಿದ್ದ ನಿರ್ಬಂಧವನ್ನು ಮುಂದುವರೆಸುತ್ತಿದ್ದು, ಇದರೊಂದಿಗೆ ಅಕ್ರಮವಾಗಿ ಕೈಜೋಡಿಸಿ ತೈಲ ಪೂರೈಕೆಗೆ ಮುಂದಾಗುತ್ತಿರುವ ಟ್ಯಾಂಕರ್ ಗಳನ್ನು ವಶಪಡಿಸಿಕೊಳ್ಳುತ್ತಿದೆ. ಈಗಾಗಲೇ ಜನವರಿಯಿಂದ ಈ ಕಾರ್ಯಚರಣೆಯನ್ನು ವೇಗಗೊಳಿಸಿರುವ ಯುಎಸ್ ಮಿಲಿಟರಿ ಪಡೆಗಳು ಕೇವಲ 2 ತಿಂಗಳ ಒಳಗೆ 3 ನಿರ್ಬಂಧಿತ ತೈಲ ಟ್ಯಾಂಕರ್ ಗಳನ್ನು ವಶಪಡಿಸಿಕೊಂಡಿದೆ. ಈ ಕುರಿತ ವರದಿ ಇಲ್ಲಿದೆ..
ಕರಾವಳಿ ಕರ್ನಾಟಕದ ಯಾವುದೇ ರೈಲ್ವೆ ನಿಲ್ದಾಣಗಳಲ್ಲಿ ಕೋಚ್ಗಳಿಗೆ ನೀರು ತುಂಬಿಸುವ (Coach Watering) ಸೌಲಭ್ಯವಿಲ್ಲದ ಕಾರಣ, ಉಡುಪಿ-ಚಿಕ್ಕಮಗಳೂರು ಬಿಜೆಪಿ ಸಂಸದ ಕೋಟ ಶ್ರೀನಿವಾಸ ಪೂಜಾರಿಯವರು ಉಡುಪಿ ಅಥವಾ ಕುಂದಾಪುರದಲ್ಲಿ ತಕ್ಷಣವೇ ತಾತ್ಕಾಲಿಕ ನೀರು ತುಂಬಿಸುವ ಸೌಲಭ್ಯವನ್ನು ಕಲ್ಪಿಸುವಂತೆ ಕೊಂಕಣ ರೈಲ್ವೆ ಕಾರ್ಪೊರೇಷನ್ ಲಿಮಿಟೆಡ್ಗೆ (ಕೆಆರ್ಸಿಎಲ್) ಆಗ್ರಹಿಸಿದ್ದಾರೆ. ಕರಾವಳಿ ವಂದೇ ಭಾರತ್ ಎಕ್ಸ್ಪ್ರೆಸ್ ಅನ್ನು ಕಾರವಾರದವರೆಗೆ ಮಾತ್ರ ಓಡಿಸುವ
ವಿವಿ ಘಟಿಕೋತ್ಸವಗಳಲ್ಲಿ ಬ್ರಿಟಿಷ್ ಗೌನ್ಗೆ ಗುಡ್ಬೈ: ಕರ್ನಾಟಕದಲ್ಲಿ ಇನ್ಮುಂದೆ ದೇಸಿ ಉಡುಪು ಕಡ್ಡಾಯ
ಬೆಂಗಳೂರು: ರಾಜ್ಯದ ವಿಶ್ವವಿದ್ಯಾಲಯಗಳ ಘಟಿಕೋತ್ಸವಗಳಲ್ಲಿ (Convocation ceremonies) ದಶಕಗಳಿಂದಲೂ ಬಳಕೆಯಲ್ಲಿದ್ದ ಬ್ರಿಟಿಷ್ ಆಡಳಿತ ಕಾಲದ ಪಾಶ್ಚಾತ್ಯ ಗೌನ್ ಮತ್ತು ಕ್ಯಾಪ್ಗಳು (Western gowns and caps) ಶೀಘ್ರದಲ್ಲೇ ಇತಿಹಾಸದ ಪುಟ ಸೇರಲಿವೆ. ಹೌದು, ರಾಜ್ಯದ ಎಲ್ಲ ಸಾರ್ವಜನಿಕ ವಿವಿಗಳ ಘಟಿಕೋತ್ಸವಗಳಲ್ಲಿ ಇನ್ಮುಂದೆ ಕಡ್ಡಾಯವಾಗಿ ಏಕರೂಪದ ಸಾಂಪ್ರದಾಯಿಕ ಭಾರತೀಯ ಉಡುಪುಗಳನ್ನು ಅಳವಡಿಸಲು ಉನ್ನತ ಶಿಕ್ಷಣ ಇಲಾಖೆಯು ಮಹತ್ವದ ನಿರ್ಧಾರ
Lakkundi: ಲಕ್ಕುಂಡಿ ಉತ್ಖನನ ಸ್ಥಗಿತಕ್ಕೆ ನಿರ್ಧಾರ: ಬಂಗಾರ ಸಿಗದಿದ್ದರೂ ಚಾಲುಕ್ಯ-ಹೊಯ್ಸಳರ ಕಾಲದ ಅವಶೇಷಗಳು ಪತ್ತೆ
ಕಳೆದ ಒಂದು ತಿಂಗಳಿನಿಂದ ದೇಶಾದ್ಯಂತ ಕುತೂಹಲ ಮೂಡಿಸಿದ್ದ ಗದಗ ಜಿಲ್ಲೆಯ ಲಕ್ಕುಂಡಿಯ ಪುರಾತತ್ವ ಉತ್ಖನನವು ಅಂತಿಮ ಹಂತ ತಲುಪಿದ್ದು, ಮುಂದಿನ 5-6 ದಿನಗಳಲ್ಲಿ ಮುಕ್ತಾಯಗೊಳ್ಳಲಿದೆ. ಲಕ್ಕುಂಡಿಯಲ್ಲಿ ಈ ಹಿಂದೆ ಮನೆ ನಿರ್ಮಾಣಕ್ಕಾಗಿ ಗುಂಡಿ ತೋಡುವಾಗ ಬಂಗಾರದ ಆಭರಣಗಳು ಪತ್ತೆಯಾದ ಬೆನ್ನಲ್ಲೇ ಈ ಉತ್ಖನನ ಆರಂಭವಾಗಿದ್ದರಿಂದ, ಇಲ್ಲಿ ಮತ್ತಷ್ಟು ಚಿನ್ನ ಸಿಗಬಹುದು ಎಂಬ ನಿರೀಕ್ಷೆ ಜನರಲ್ಲಿತ್ತು. ಆದರೆ ಇಲಾಖೆಯು
ಕೇರಳ ಹೆಸರು ಕೇರಳಂ ಎಂದು ಬದಲಾವಣೆ ಮಾಡಿ ಮಾಡಿ ಏನು ಪ್ರಯೋಜನ? ಶಶಿ ತರೂರ್ ವಿರೋಧ ತಂದ ಆಶ್ಚರ್ಯ!
ಕೇರಳ ಹೆಸರನ್ನು ಕೇರಳಂ ಎಂದು ಮರುನಾಮಕರಣ ಮಾಡಿರುವ ಕೇಂದ್ರ ಸರ್ಕಾರದ ನಿರ್ಧಾರಕ್ಕೆ ಇಡೀ ರಾಜ್ಯ ಸಂಭ್ರಮಿಸುತ್ತಿದೆ. ಆದರೆ ತಿರುವನಂತಪುರಂ ಕಾಂಗ್ರೆಸ್ ಸಂಸದ ಶಶಿ ತರೂರ್ ಮಾತ್ರ ಹೆಸರು ಬದಲಾವಣೆ ನಿರ್ಧಾರವನ್ನು ವಿರೋಧಿಸಿದ್ದಾರೆ. ಈ ಕುರಿತು ತಮ್ಮದೇ ಅಭಿಪ್ರಾಯವನ್ನು ಹೊರಹಾಕಿರುವ ಅವರು, ರಾಜ್ಯದಹೆಸರು ಬದಲಾವಣೆ ಮಾಡುವುದರ ಬದಲು ರಾಜ್ಯಕ್ಕೆ ಹೆಚ್ಚಿನ ಅನುದಾನ ಮತ್ತು ಯೋಜನೆಗಳನ್ನು ಘೋಷಿಸಬೇಕಿತ್ತು ಎಂದು ಹೇಳಿದ್ದಾರೆ. ಬಹಳ ದಿನಗಳ ಬಳಿಕ ಶಶಿ ತರೂರ್ ಕೇಂದ್ರ ಸರ್ಕಾರದ ಒಂದು ನಿರ್ಧಾರಕ್ಕೆ ತಮ್ಮ ಅಸಹಮತಿ ಸೂಚಿಸಿದ್ದಾರೆ.
'ರಕ್ಷಣಾ ಉತ್ಪಾದನೆಯ 'ರಾಜಧಾನಿ'ಯಾಗಲಿದೆ ಬೆಂಗಳೂರು: 300 ಎಕರೆಯಲ್ಲಿ ಹೊಸ ಕೈಗಾರಿಕಾ ಪಾರ್ಕ್ ಘೋಷಣೆ'
ಬೆಂಗಳೂರು: ಕರ್ನಾಟಕ ರಾಜ್ಯದಲ್ಲಿ ಮಶಿನ್ ಟೂಲ್ಸ್ ಕ್ಷೇತ್ರದಲ್ಲಿ ವರ್ಷಕ್ಕೆ ಬರೋಬ್ಬರಿ 36,500 ಕೋಟಿ ರೂ. ವಹಿವಾಟು ನಡೆದಿದೆ. ಕೈಗಾರಿಕಾ ರಂಗದಲ್ಲಿ ಇದು ಒಳ್ಳೆಯ ಬೆಳವಣಿಗೆ. ಇದರ ಉತ್ತೇಜನಕ್ಕೆಂದೇ ನಾವು ಬೃಹತ್ ಪ್ರಮಾಣದ ಪ್ರದರ್ಶನ ಮೇಳಗಳನ್ನು ನಡೆಸಿದ್ದೇವೆ. ಇದೀಗ ರಾಜ್ಯದಲ್ಲಿ 200 ಎಕರೆಯಲ್ಲಿ ಡಿಫೆನ್ಸ್ ಎಲೆಕ್ಟ್ರಾನಿಕ್ಸ್ ಪಾರ್ಕ್ ಮತ್ತು 100 ಎಕರೆಯಲ್ಲಿ ಏವಿಯಾನಿಕ್ಸ್-ಸೆನ್ಸರ್ ಪಾರ್ಕ್ ಸ್ಥಾಪನೆಗೆ ಚಿಂತನೆ ಇದೆ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಚಿರತೆ ಆತಂಕ ಹೆಚ್ಚಲು 6 ಕಾರಣಗಳು: ಬೋನಿಗೆ ಬಿದ್ದಿವೆ 50 ಕ್ಕೂ ಅಧಿಕ ಚಿರತೆಗಳು
ಕಾಡಲ್ಲಿರುತ್ತಿದ್ದ ಚಿರತೆಗಳು ಈಗ ಜನವಸತಿ ಪ್ರದೇಶಗಳಲ್ಲಿ ಪ್ರತ್ಯಕ್ಷ ಆಗುತ್ತಿದ್ದು, ಹಲವು ಹಳ್ಳಿಗಳ ಜನರ ನಿದ್ದೆಗೆಡಿಸಿದೆ. ಸಾಕುಪ್ರಾಣಿಗಳನ್ನು ಚಿರತೆ ಆಹಾರವಾಗಿಸುತ್ತಿದೆ. ಚಿರತೆ ಹಾವಳಿ ಹೆಚ್ಚಾಗಲು 6 ಕಾರಣಗಳು ಇಲ್ಲಿವೆ ನೋಡಿ.
ಸಿನೆಮಾ ಮಾಧ್ಯಮಗಳ ಮೂಲಕ ದಕ್ಷಿಣ ಭಾರತೀಯರ ಮೇಲೆ ದಾಳಿ
ಈ ಹಿಂದೆ ಮಾಧ್ಯಮಗಳ ಮೂಲಕ ಕೆಲವು ಹಿತಾಸಕ್ತಿಗಳು ‘ಗುಜರಾತ್ ಮಾದರಿ’ಯನ್ನು ಹರಿಯಬಿಟ್ಟಿದ್ದವು. ಬಡತನ, ಅನಕ್ಷರತೆ, ಅಪೌಷ್ಟಿಕತೆಯ ಕ್ಷೇತ್ರದಲ್ಲಿ ಗುಜರಾತ್ ಗುರುತಿಸಲ್ಪಡುತ್ತಾ ಬರುತ್ತಿದೆಯಾದರೂ ಇವೆಲ್ಲವನ್ನು ಮರೆ ಮಾಚಿ ಗುಜರಾತ್ನ ಅಭಿವೃದ್ಧಿಯನ್ನು ವೈಭವೀಕರಿಸಿ ಜನರ ಮುಂದಿಡುವಲ್ಲಿ ಮಾಧ್ಯಮಗಳು ಯಶಸ್ವಿಯಾಗಿದ್ದವು. ‘ಗುಜರಾತ್ ಮಾದರಿ’ ಎನ್ನುವ ಅಭಿವೃದ್ಧಿಯ ತುತ್ತೂರಿಯನ್ನು ಊದುವುದರ ಹಿಂದೆ ಪ್ರಧಾನಿ ಮೋದಿಯವರನ್ನು ಅಧಿಕಾರಕ್ಕೇರಿಸುವ ರಾಜಕೀಯ ಉದ್ದೇಶ ಮಾತ್ರವಲ್ಲ, ಅದಾನಿ, ಅಂಬಾನಿಗಳಂತಹ ಕಾರ್ಪೊರೇಟ್ಗಳನ್ನು ಪೋಷಿಸುವ ದುರುದ್ದೇಶವೂ ಇತ್ತು. ನಿಜಕ್ಕೂ ದೇಶಕ್ಕೆ ಮಾದರಿಯಾಗಬೇಕಾದ ಅಭಿವೃದ್ಧಿಯ ಪರಿಕಲ್ಪನೆಗಳು ದಕ್ಷಿಣ ಭಾರತದ ರಾಜ್ಯಗಳಲ್ಲಿದ್ದವು. ಸಾಕ್ಷರತೆ, ಐಟಿ ಬಿಟಿ, ಆರೋಗ್ಯ ಸೇರಿದಂತೆ ಹಲವು ವಲಯಗಳಲ್ಲಿ ದಕ್ಷಿಣ ಭಾರತದ ರಾಜ್ಯಗಳು ಸಾಧಿಸಿರುವ ಸಾಧನೆಗಳು ಇಡೀ ದೇಶಕ್ಕೆ ಮಾದರಿಯಾಗಿದ್ದವು. ಇಂದಿಗೂ ಕರ್ನಾಟಕ ರಾಜ್ಯ ಜಾರಿಗೊಳಿಸುತ್ತಿರುವ ಹಲವು ಯೋಜನೆಗಳನ್ನು ಉತ್ತರ ಭಾರತದ ರಾಜ್ಯಗಳು ಮಾದರಿಯಾಗಿ ಅನುಷ್ಠಾನಕ್ಕೆ ತರಲು ಪ್ರಯತ್ನಿಸುತ್ತಿವೆ. ಯಾವಾಗ ‘ಗುಜರಾತ್ ಮಾದರಿ’ ತುತ್ತೂರಿಯ ಬಣ್ಣ ಕರಗಲು ಆರಂಭಿಸಿತೋ ಆಗ, ಉತ್ತರ ಭಾರತದ ಹುಳುಕುಗಳನ್ನು ಮರೆ ಮಾಚಲು ದಕ್ಷಿಣ ಭಾರತದ ರಾಜ್ಯಗಳ ವಿರುದ್ಧ ಅಪಪ್ರಚಾರಗಳನ್ನು ಮಾಡತೊಡಗಿತು. ಈ ಕೆಲಸಕ್ಕಾಗಿಯೇ ಕೇಂದ್ರ ಸರಕಾರ ರಾಜ್ಯಪಾಲರನ್ನು ದುರುಪಯೋಗಪಡಿಸಿಕೊಂಡಿತು. ಹಾಗೆಯೇ ‘ಸಿನೆಮಾ’ ಮಾಧ್ಯಮವನ್ನು ದಕ್ಷಿಣ ಭಾರತೀಯ ವಿರುದ್ಧ ಬಳಸಲು ಮುಂದಾಯಿತು. ಪರಿಣಾಮವಾಗಿ ‘ಕೇರಳ ಸ್ಟೋರಿ’ಯಂತಹ ಮೂರನೇ ದರ್ಜೆಯ ಚಿತ್ರಗಳಿಗೆ ಕೆಲವು ಶಕ್ತಿಗಳು ದುಡ್ಡು ಸುರಿಯತೊಡಗಿವೆ. ಸಂಘಪರಿವಾರದ ದ್ವೇಷ ಸಿದ್ಧಾಂತದ ವಿರುದ್ಧ ತೀವ್ರ ಪ್ರತಿರೋಧಗಳನ್ನು ವ್ಯಕ್ತಪಡಿಸಿದ ಪಶ್ಚಿಮ ಬಂಗಾಳದ ವಿರುದ್ಧ ‘ಬಂಗಾಳಿ ಫೈಲ್ಸ್’ ಹೊರ ಬಿದ್ದರೆ, ಕೇರಳದ ವಿರುದ್ಧ ‘ಕೇರಳ ಸ್ಟೋರಿ’ ಸಿನೆಮಾಗಳನ್ನು ಮಾಡಿದರು. ಈ ಹಿಂದೆ ಕಾಶ್ಮೀರ ಫೈಲ್ಸ್ ಮೂಲಕ ಕಾಶ್ಮೀರದ ಅಳಿದುಳಿದ ಶಾಂತಿ, ನೆಮ್ಮದಿಯನ್ನು ಕೆಡಿಸಲು ಪ್ರಯತ್ನಿಸಿದ ಮಂದಿಯೇ ಇದೀಗ ದಕ್ಷಿಣ ಭಾರತದ ಕಡೆಗೆ ಸಿನೆಮಾಗಳ ಮೂಲಕ ದ್ವೇಷ ಅಭಿಯಾನಕ್ಕೆ ಹೊರಟಿದ್ದಾರೆ. ಇಡೀ ರಾಜ್ಯವನ್ನೇ ‘ಅಪರಾಧಿ’ಯನ್ನಾಗಿ ಚಿತ್ರಿಸುವ ಈ ಪ್ರಯತ್ನಕ್ಕೆ ಕೇಂದ್ರ ಸರಕಾರ ಕುಮ್ಮಕ್ಕು ನೀಡುತ್ತಿರುವುದು ನಿಜಕ್ಕೂ ಕಳವಳಕಾರಿಯಾಗಿದೆ. ಇದು ನಿಧಾನಕ್ಕೆ ರಾಜ್ಯಗಳ ನಡುವಿನ ಬಿರುಕನ್ನು ಹೆಚ್ಚಿಸುವ ಸಾಧ್ಯತೆಗಳಿವೆ. ಸದ್ಯ ಸುದ್ದಿಯಲ್ಲಿರುವ ‘ದಿ ಕೇರಳ ಸ್ಟೋರಿ 2’ ಚಿತ್ರದ ಬಗ್ಗೆ ಕೇರಳದಲ್ಲಿ ಬಿಜೆಪಿಯ ಮುಖಂಡರೇ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಕೇರಳದ ಬಿಜೆಪಿ ರಾಜ್ಯಾಧ್ಯಕ್ಷ ರಾಜೀವ್ ಚಂದ್ರಶೇಖರ್ ಅವರು ‘‘ಈ ಚಿತ್ರವನ್ನು ನೋಡುವುದಕ್ಕೆ ಯಾವ ಆಸಕ್ತಿಯೂ ಇಲ್ಲ’’ ಎಂದಿದ್ದಾರೆ. ಇದರ ಬೆನ್ನಿಗೇ ಕೇರಳ ಹೈಕೋರ್ಟ್ ಚಿತ್ರದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದು ‘ಕೇರಳವು ಸಾಮರಸ್ಯದಿಂದ ಬದುಕುತ್ತಿದೆ. ಸಿನೆಮಾದಲ್ಲಿ ತಪ್ಪು ಚಿತ್ರಣವಿದೆ’’ ಎಂದು ಅಭಿಪ್ರಾಯಪಟ್ಟಿದೆ. ದಕ್ಷಿಣ ಭಾರತದಲ್ಲಿ ಹಸಿರಾಗಿರುವ ಸೌಹಾರ್ದ ಬದುಕಿನ ಮೇಲೆ ದಾಳಿ ನಡೆಸುವ ಏಕೈಕ ಉದ್ದೇಶದಿಂದ ಉತ್ತರ ಭಾರತದ ಕೆಲವು ಶಕ್ತಿಗಳು ಈ ಸರಣಿ ಚಿತ್ರವನ್ನು ತಯಾರಿಸಿವೆ. ಉತ್ತರ ಭಾರತವು ಅಭಿವೃದ್ಧಿ, ಆರೋಗ್ಯ, ಪೌಷ್ಟಿಕತೆ, ಶಿಕ್ಷಣದಲ್ಲಿ ಅನುಭವಿಸುತ್ತಿರುವ ಹಿನ್ನಡೆ ಮತ್ತು ದಕ್ಷಿಣ ಭಾರತದ ರಾಜ್ಯಗಳು ಎಲ್ಲ ವಲಯಗಳಲ್ಲಿ ಸಾಧಿಸುತ್ತಿರುವ ಮುನ್ನ್ನಡೆಯನ್ನು ಸಹಿಸಲು ಸಿದ್ಧವಿಲ್ಲದ ರಾಜಕೀಯ ಮನಸ್ಥಿತಿಗಳು ಸಾಂಸ್ಕೃತಿಕ ವಲಯದ ಸಹಾಯ ಪಡೆದು ಈ ಸಿನೆಮಾಗಳಿಗೆ ಹಣ ಹೂಡಿಕೆ ಮಾಡುತ್ತಿವೆೆ. ಈ ಮೂಲಕ ದೇಶದ ಒಕ್ಕೂಟ ವ್ಯವಸ್ಥೆಗೆ ಇನ್ನಷ್ಟ್ಟು ಆಳವಾದ ಗಾಯಗಳನ್ನು ಮಾಡುತ್ತಿವೆೆ. ಈಗಾಗಲೇ ದಕ್ಷಿಣ ಭಾರತೀಯರ ಕುರಿತಂತೆ ಉತ್ತರ ಭಾರತೀಯರಿಗೆ ಇರುವ ಪೂರ್ವಾಗ್ರಹಗಳನ್ನು ಈ ಚಿತ್ರ ಹೆಚ್ಚಿಸುವ ಉದ್ದೇಶವನ್ನು ಹೊಂದಿದೆ ಮಾತ್ರವಲ್ಲ, ಉತ್ತರದ ರಾಜ್ಯಗಳನ್ನು ನಾಶ ಮಾಡುತ್ತಿರುವ ದ್ವೇಷದ ವೈರಸ್ಗಳನ್ನು ದಕ್ಷಿಣ ಭಾರತಕ್ಕೂ ಹರಡುವ ದುರುದ್ದೇಶವನ್ನು ಹೊಂದಿದೆ. ದಕ್ಷಿಣ ಭಾರತದ ಎಲ್ಲ ರಾಜ್ಯಗಳು ಒಂದಲ್ಲ ಒಂದು ರೀತಿಯಲ್ಲಿ ಉತ್ತರ ಭಾರತದ ರಾಜ್ಯಗಳಿಗೆ ಮಾದರಿಯಾಗಿವೆ. ಆಂಧ್ರ, ಕರ್ನಾಟಕ ಐಟಿ ಬಿಟಿಗಳ ಮೂಲಕ ವಿಶ್ವಮಟ್ಟದಲ್ಲಿ ಗುರುತಿಸಲ್ಪಡುತ್ತಿವೆೆ. ಸಾಕ್ಷರತೆ, ಆರೋಗ್ಯ, ಪೌಷ್ಟಿಕತೆಯ ವಿಷಯದಲ್ಲಿ ಕೇರಳ ರಾಜ್ಯ ಸಾಧಿಸಿರುವ ಸಾಧನೆಗಳು ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿವೆ. ಒಂದು ಕಾಲವಿತ್ತು. ಕೇರಳಕ್ಕೆ ಭೇಟಿ ನೀಡಿದ ಸ್ವಾಮಿ ವಿವೇಕಾನಂದರು ಈ ರಾಜ್ಯವನ್ನು ‘ಜಾತೀವಾದಿಗಳ ಹುಚ್ಚಾಸ್ಪತ್ರೆ’ ಎಂದು ಕರೆದಿದ್ದರು. ಇಲ್ಲಿನ ಜಾತೀಯತೆಗೆ ರೋಸಿ ಈ ಮಾತುಗಳನ್ನು ಆಡಿದ್ದರು. ಕೇರಳ ರಾಜ್ಯವು ಮನುವಾದಿಗಳ ಕೈಯಲ್ಲಿ ಸಿಲುಕಿಕೊಂಡಿದ್ದಾಗ, ನಂಬೂದಿರಿಗಳು ಕೇರಳ ಸಮಾಜವನ್ನು ನಿಯಂತ್ರಿಸುತ್ತಿದ್ದಾಗ ‘ಕೇರಳ ಸ್ಟೋರಿ’ ಅತ್ಯಂತ ಭಯಾನಕವಾಗಿತ್ತು. ಒಂದು ಕಾಲದಲ್ಲಿ, ಈಳವ ಮತ್ತು ಕೆಳಜಾತಿಯ ಮಹಿಳೆಯರು ತಮ್ಮ ಸ್ತನವನ್ನು ಬಟ್ಟೆಯಿಂದ ಮುಚ್ಚಬೇಕಿದ್ದರೂ ತೆರಿಗೆ ಪಾವತಿ ಮಾಡಬೇಕಾದ ಸ್ಥಿತಿಯಿತ್ತು. ಆದರೆ ನಾರಾಯಣ ಗುರುಗಳು, ಮಾಲಿಕ್ ದೀನಾರ್ರಂತಹ ಸೂಫಿಸಂತರು ಹಾಗೆಯೇ ಕಮ್ಯುನಿಸ್ಟ್ ಚಳವಳಿಗಳು ಕೇರಳದ ಸಮಾಜವನ್ನು ಮನುಷ್ಯರು ವಾಸಿಸುವುದಕ್ಕೆ ಅರ್ಹವಾಗುವಂತೆ ಮಾಡಿದವು. ಹಲವು ಜನಪರ ಹೋರಾಟ, ಕ್ರಾಂತಿಯ ಫಲವಾಗಿಯೇ ಇಂದು ಕೇರಳವು ದೇಶಕ್ಕೆ ಮಾದರಿಯಾಗುವಂತಿದೆ. ಆಕಾರದಲ್ಲಿ ಕೇರಳ ಕಿರಿದಾಗಿದ್ದರೂ ರಾಜ್ಯದ ಒಟ್ಟು ಉತ್ಪನ್ನದಲ್ಲಿ ದೇಶದಲ್ಲೇ ಆರನೇ ಸ್ಥಾನವನ್ನು ಪಡೆದಿದೆ. 2013ನೇ ಆರ್ಬಿಐ ವಾರ್ಷಿಕ ವರದಿಯ ಪ್ರಕಾರ ಗೋವಾವನ್ನು ಹೊರತು ಪಡಿಸಿದರೆ ಕೇರಳವು ಭಾರತದಲ್ಲಿ ಎರಡನೇ ಕಡಿಮೆ ಬಡತನವುಳ್ಳ ರಾಜ್ಯವಾಗಿದೆ. ಕೇರಳವು ಭಾರತದ ಜಿಡಿಪಿಗೆ ಶೇ. 4ಕ್ಕಿಂತ ಹೆಚ್ಚು ಕೊಡುಗೆಗಳನ್ನು ನೀಡುತ್ತಿದೆ. ಹಿಂದೂ, ಮುಸ್ಲಿಮ್, ಕ್ರೈಸ್ತರು ಅತ್ಯಂತ ಹೆಚ್ಚು ಸೌಹಾರ್ದವಾಗಿ ಬಾಳುತ್ತಿರುವ, ಬದುಕುತ್ತಿರುವ ಒಂದು ರಾಜ್ಯವಿದ್ದರೆ ಅದು ಕೇರಳವಾಗಿದೆ. ಉತ್ತರ ಭಾರತವನ್ನು ಕೇಂದ್ರವಾಗಿಟ್ಟುಕೊಂಡು ದೇಶಾದ್ಯಂತ ದ್ವೇಷ ರಾಜಕೀಯ ಅಭಿಯಾನ ನಡೆಸುತ್ತಿರುವ ಆರೆಸ್ಸೆಸ್ಗೆ ದಕ್ಷಿಣ ಭಾರತಕ್ಕೆ ಕಾಲಿಡಲು ಅತಿ ದೊಡ್ಡ ತಡೆ ಕೇರಳವಾಗಿದೆ. ಧಾರ್ಮಿಕವಾಗಿ, ಸಾಂಸ್ಕೃತಿಕವಾಗಿ ಅತ್ಯುನ್ನತ ಮಟ್ಟದಲ್ಲಿರುವ ಕೇರಳವು, ಜಾತಿವಾದ, ಕೋಮುವಾದಗಳಿಗೆ ಸಾಂಸ್ಕೃತಿಕವಾಗಿ ತೀವ್ರ ಪ್ರತಿರೋಧವನ್ನು ಒಡ್ಡುತ್ತಾ ಬಂದಿದೆ. ಕೇರಳವನ್ನು ಒಂದು ಕಾಲದಲ್ಲಿ ಹುಚ್ಚಾಸ್ಪತ್ರೆಯನ್ನಾಗಿಸಿದ ಶಕ್ತಿಗಳು ಇದೀಗ ಆರೆಸ್ಸೆಸ್ ವೇಷದಲ್ಲಿ ಮತ್ತೆ ಕೇರಳದ ಮೇಲೆ ಪ್ರಾಬಲ್ಯವನ್ನು ಸ್ಥಾಪಿಸಲು ಪ್ರಯತ್ನಿಸುತ್ತಿವೆ. ಅದರ ಭಾಗವಾಗಿಯೇ ಕೇರಳಸ್ಟೋರಿಯಂತಹ ಕತೆಗಳನ್ನು ಹೆಣೆದು ಅದನ್ನು ಹಂಚುವುದಕ್ಕೆ ಹೊರಟಿವೆ. ಇಂದು ಉದ್ಯೋಗ ಅರಸಿಕೊಂಡು ಸಾಲು ಸಾಲು ಜನರು ಉತ್ತರ ಭಾರತದಿಂದ ದಕ್ಷಿಣ ಭಾರತಕ್ಕೆ ಬರುತ್ತಿದ್ದಾರೆ. ಗುಂಪುಹತ್ಯೆ, ಜನಾಂಗೀಯ ದ್ವೇಷ, ಬಡತನ, ಅನಕ್ಷರತೆ, ಮೌಢ್ಯ ಇತ್ಯಾದಿಗಳಿಗಾಗಿ ಉತ್ತರ ಪ್ರದೇಶದಂತಹ ರಾಜ್ಯಗಳು ಮುಂಚೂಣಿಯಲ್ಲಿವೆ. ಜನಾಂಗೀಯ ಹತ್ಯೆಗಳು, ಜಾತಿ ದೌರ್ಜನ್ಯಗಳು ಉತ್ತರ ಭಾರತದಲ್ಲಿ ನಡೆಯುವಷ್ಟು ದಕ್ಷಿಣ ಭಾರತದಲ್ಲಿ ನಡೆಯುತ್ತಿಲ್ಲ. ಇವೆಲ್ಲ ಯಾಕೆ ಸಂಭವಿಸುತ್ತಿವೆ, ವರ್ಷದಿಂದ ವರ್ಷಕ್ಕೆ ಉತ್ತರ ಭಾರತದ ಸ್ಥಿತಿ ಯಾಕೆ ಚಿಂತಾಜನಕವಾಗುತ್ತಿದೆ ಎಂಬ ಪ್ರಶ್ನೆಗಳಿಗೆ ತಮ್ಮ ಸಿನೆಮಾಗಳ ಉತ್ತರ ಹುಡುಕುವ ಕೆಲಸವನು ಉತ್ತರ ಭಾರತದ ಸಾಂಸ್ಕೃತಿಕ ವಲಯ ಮಾಡಬೇಕಾಗಿದೆ. ಕೇರಳವೂ ಸೇರಿದಂತೆ ದಕ್ಷಿಣ ಭಾರತದ ರಾಜ್ಯಗಳನ್ನು ಮಾದರಿಯಾಗಿಸಿ ಉತ್ತರ ಭಾರತವನ್ನು ಮರು ನಿರ್ಮಿಸುವ ಬಗ್ಗೆ ಯೋಚಿಸಬೇಕಾಗಿದೆ.
ಗಲ-ಗಲ ಎನ್ನುತಿದೆ ನನ್ನ ಮನ, ಹೇಳದಿರು ನಿಜವನ್ನು , ಮೆಚ್ಚುವುದಿಲ್ಲ ಜನ !
ಲೇಖಕಿ ಸಹನಾ ಪ್ರಸಾದ್ ಅವರು ಕನ್ನಡದ ಸಣ್ಣ ಕಥೆ ಬರೆದಿದ್ದು, ಸತ್ಯ ಹೇಳಿಯೇ ಪೇಚೆಗೆ ಸಿಲುಕುವ ಮೋಹನನ ಘಟನೆಗಳನ್ನು ವಿವರಿಸಿದ್ದಾರೆ. ಧಾರವಾಹಿ, ಕಾದಂಬರಿಗಳನ್ನು ಬರೆದಿರುವ ಸಹನಾ ಪ್ರಸಾದ್ ಅವರ 15 ಸಾವಿರಕ್ಕೂ ಹೆಚ್ಚು ಲೇಖನಗಳ ಈ ವರೆಗೆ ಪ್ರಕಟಗೊಂಡಿವೆ.
ರಾಜ್ಯ ವಕ್ಫ್ ಬೋರ್ಡಿನ ನೂತನ ಸಿಇಒ ಆಗಿ ಶೇಖ್ ಲತೀಫ್ ಅಧಿಕಾರ ಸ್ವೀಕಾರ
ಬೆಂಗಳೂರು, ಫೆ.25: ರಾಜ್ಯ ವಕ್ಫ್ ಬೋರ್ಡಿನ ನೂತನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಶೇಖ್ ಲತೀಫ್ ಅಧಿಕಾರ ಸ್ವೀಕರಿಸಿದ್ದಾರೆ. ಈ ಸಂದರ್ಭದಲ್ಲಿ ಬೋರ್ಡಿನ ಅಧ್ಯಕ್ಷ ಡಾ. ಸಯ್ಯದ್ ಮುಹಮ್ಮದ್ ಅಲಿ ಅಲ್ ಹುಸೈನಿ ಅವರು ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿ ಶುಭಾಶಯಗಳನ್ನು ತಿಳಿಸಿದರು. ಶೇಖ್ ಲತೀಫ್ ಅವರ ವಿಶಾಲ ಆಡಳಿತಾತ್ಮಕ ಅನುಭವ ಮತ್ತು ಸಾಮರ್ಥ್ಯದ ನೆರವಿನಿಂದ ವಕ್ಫ್ ಬೋರ್ಡಿನ ಕಾರ್ಯಗಳನ್ನು ಪರಿಣಾಮಕಾರಿ, ವ್ಯವಸ್ಥಿತ ಹಾಗೂ ಪಾರದರ್ಶಕ ರೀತಿಯಲ್ಲಿ ಮುಂದಕ್ಕೆ ಸಾಗಿಸಲಾಗುತ್ತದೆ ಎಂದು ಸಯ್ಯದ್ ಮುಹಮ್ಮದ್ ಅಲಿ ಅಲ್ ಹುಸೈನಿ ತಿಳಿಸಿದರು. ಶೇಕ್ ಲತೀಫ್ ಅಧಿಕಾರಾವಧಿಯಲ್ಲಿ ವಕ್ಫ್ ಆಸ್ತಿಗಳ ರಕ್ಷಣೆ, ಅಭಿವೃದ್ಧಿ ಮತ್ತು ಉತ್ತಮ ಮೇಲ್ವಿಚಾರಣೆ ವ್ಯವಸ್ಥಿತವಾಗಿ ನಡೆಯಲಿದೆ ಎಂಬ ವಿಶ್ವಾಸವಿದೆ ಎಂದು ಸಯ್ಯದ್ ಮುಹಮ್ಮದ್ ಅಲಿ ಅಲ್ ಹುಸೇನಿ ಹೇಳಿದರು. ರಾಜ್ಯ ಸರಕಾರ ತನಗೆ ವಹಿಸಿರುವ ಹೊಣೆಗಾರಿಕೆಯನ್ನು ಪ್ರಾಮಾಣಿಕತೆ ಮತ್ತು ಕರ್ತವ್ಯನಿಷ್ಠೆಯಿಂದ ನಿರ್ವಹಿಸುತ್ತೇನೆ. ವಕ್ಫ್ ಆಸ್ತಿಗಳ ಸಂರಕ್ಷಣೆ ಜೊತೆಗೆ ಸಾರ್ವಜನಿಕ ಹಿತಾಸಕ್ತಿಗೆ ಆದ್ಯತೆ ನೀಡಲಾಗುವುದು ಎಂದು ಶೇಕ್ ಲತೀಫ್ ಹೇಳಿದರು.
ಇಂಗ್ಲೆಂಡ್ ವಿರುದ್ಧ ಸೋಲು: ಪಾಕ್ ಸೆಮೀಸ್ ಆಸೆಗೆ ತಣ್ಣೀರು
ಹೊಸದಿಲ್ಲಿ: ಹ್ಯಾರಿ ಬ್ರೂಕ್ ಕೇವಲ 51 ಎಸೆತಗಳಲ್ಲಿ ಶತಕ ಸಿಡಿಸುವ ಮೂಲಕ ಟಿ20 ವಿಶ್ವಕಪ್ ಸೂಪರ್ 8 ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ 2 ವಿಕೆಟ್ಗಳ ರೋಚಕ ಜಯ ಸಾಧಿಸುವುದರೊಂದಿಗೆ ಪಾಕಿಸ್ತಾನ ತಂಡದ ಸೆಮಿಫೈನಲ್ ಆಸೆಗೆ ತಣ್ಣೀರೆರಚಿದಂತಾಗಿದೆ. ಈ ಗೆಲುವಿನೊಂದಿಗೆ ಇಂಗ್ಲೆಂಡ್ ತಂಡ ಟಿ20 ವಿಶ್ವಕಪ್ ಸೆಮಿಫೈನಲ್ ತಲುಪಿದ ಮೊದಲ ತಂಡ ಎನಿಸಿದೆ. ಇದಕ್ಕೂ ಮುನ್ನ ಶಹೀಬ್ದಾದಾ ಫರ್ಹಾನ್ ಅವರ 63 ರನ್ಗಳ ನೆರವಿನೊಂದಿಗೆ ನಿಗದಿತ 20 ಓವರ್ಗಳಲ್ಲಿ ಪಾಕಿಸ್ತಾನ 9 ವಿಕೆಟ್ ನಷ್ಟಕ್ಕೆ 164 ರನ್ ಗಳಿಸಿತ್ತು. ಸೂಪರ್ 8 ಹಂತದಲ್ಲಿ 2ನೇ ಗುಂಪಿನಲ್ಲಿರುವ ಪಾಕಿಸ್ತಾನ ಹಾಗೂ ನ್ಯೂಜಿಲೆಂಡ್ ನಡುವಿನ ಮೊದಲ ಪಂದ್ಯ ಮಳೆಯಿಂದ ರದ್ದಾಗಿ ಉಭಯ ತಂಡಗಳು ತಲಾ ಒಂದು ಅಂಕ ಹಂಚಿಕೊಂಡಿದ್ದವು. ಇದೀಗ ಎರಡು ಪಂದ್ಯಗಳಿಂದ ಒಂದು ಅಂಕ ಸಂಪಾದಿಸಿದ ಪಾಕಿಸ್ತಾನ ಗುಂಪಿನಲ್ಲಿ ಮೂರನೇ ಸ್ಥಾನದಲ್ಲಿದೆ. ನ್ಯೂಜಿಲೆಂಡ್ಗೆ ಶ್ರೀಲಂಕಾ ಹಾಗೂ ಇಂಗ್ಲೆಂಡ್ ಎದುರು ಎರಡು ಪಂದ್ಯಗಳು ಬಾಕಿ ಇದ್ದು, ಎರಡೂ ಪಂದ್ಯಗಳಲ್ಲಿ ಜಯ ಸಾಧಿಸಿದರೆ ಗುಂಪಿನಿಂದ ಎರಡನೇ ತಂಡವಾಗಿ ಸುಲಭವಾಗಿ ಸೆಮಿಫೈನಲ್ ತಲುಪುತ್ತದೆ. ಒಂದು ಪಂದ್ಯವನ್ನು ನ್ಯೂಜಿಲೆಂಡ್ ಸೋತಲ್ಲಿ ಹಾಗೂ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಪಾಕಿಸ್ತಾನ ಜಯ ಗಳಿಸಿದಲ್ಲಿ ಉಭಯ ತಂಡಗಳಿಗೆ ಮೂರು ಅಂಕಗಳು ಲಭ್ಯವಾಗುತ್ತವೆ. ನಿವ್ವಳ ರನ್ರೇಟ್ ಆಧಾರದಲ್ಲಿ ತಂಡ ಸೆಮೀಸ್ ಅರ್ಹತೆ ಪಡೆಯುತ್ತದೆ. ಮೊದಲ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಸೋತಿರುವ ಅತಿಥೇಯ ಶ್ರೀಲಂಕಾ ತಂಡ ನ್ಯೂಜಿಲೆಂಡ್ ಹಾಗೂ ಪಾಕಿಸ್ತಾನ ವಿರುದ್ಧದ ಪಂದ್ಯಗಳಲ್ಲಿ ಗೆಲುವು ಸಾಧಿಸಿದರೆ ಅಂತಿಮ ನಾಲ್ಕರ ಘಟ್ಟಕ್ಕೆ ತೇರ್ಗಡೆಯಾಗುತ್ತದೆ. ಶ್ರೀಲಂಕಾ ಒಂದು ಪಂದ್ಯವನ್ನು ಸೋತರೂ, ನ್ಯೂಜಿಲೆಂಡ್ ಅಥವಾ ಪಾಕಿಸ್ತಾನಕ್ಕೆ ಅವಕಾಶದ ಬಾಗಿಲು ತೆರೆಯುತ್ತದೆ.
ಕೇರಳ ಕೇರಳಂ ಆಯ್ತು, ಪಶ್ಚಿಮ ಬಂಗಾಳ ಬಾಂಗ್ಲಾ ಆಗಲು ಏನು ಸಮಸ್ಯೆ? ಕೇಂದ್ರ ಕಂಡ ನೆರೆʻಹೊರೆʼ ದೀದಿಗೆ ಕಾಣಿಸುತ್ತಿಲ್ಲ!
ಕೇಂದ್ರ ಸರ್ಕಾರ ಕೇರಳ ರಾಜ್ಯದ ಹೆಸರನ್ನು ಕೇರಳಂ ಎಂದು ಮರುನಾಮಕರಣ ಮಾಡಿದ್ದೇ ತಡ, ಪಶ್ಚಿಮ ಬಂಗಾಳ ರಾಜ್ಯದ ಹೆಸರು ಬದಲಾವಣೆ ವಿವಾದ ಮತ್ತೆ ಮುನ್ನೆಲೆಗೆ ಬಂದಿದೆ. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಸರ್ಕಾರ, ಪಶ್ಚಿಮ ಬಂಗಾಳ ಹೆಸರು ಬದಲಾವಣೆಗೆ ಕೇಂದ್ರ ಸರ್ಕಾರದ ಮೇಲೆ ನಿರಂತರವಾಗಿ ಒತ್ತಡ ಹಾಕುತ್ತಲೇ ಇದ್ದು, ರಾಜ್ಯ ಸರ್ಕಾರ ಸೂಚಿಸಿದ ಎಲ್ಲಾ ಹೆಸರುಗಳನ್ನು ಕೇಂದ್ರ ಸರ್ಕಾರ ತಿರಸ್ಕರಿಸಿದೆ. ಏನಿದು ವಿವಾದ? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.
ರಾಹುಲ್ ಗಾಂಧಿ ವಿರುದ್ಧದ ಮಾನಹಾನಿ ಪ್ರಕರಣ: ತೀರ್ಪು ಕಾಯ್ದಿರಿಸಿದ ಹೈಕೋರ್ಟ್
ಮುಂಬೈ: ಪ್ರಧಾನಿ ನರೇಂದ್ರ ಮೋದಿಯವರನ್ನು 'ಕಮಾಂಡರ್ ಇನ್ ತೀಫ್' ಎಂದು ಕರೆದಿದ್ದಾರೆ ಎಂದು ಆಪಾದಿಸಿ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ವಿರುದ್ಧ ದಾಖಲಿಸಿರುವ ಮಾನನಷ್ಟ ಮೊಕದ್ದಮೆ ಪ್ರಕರಣಕ್ಕೆ ಸಂಬಂಧಿಸಿದಂತೆ 2019ರಲ್ಲಿ ಮುಂಬೈ ಹೈಕೋರ್ಟ್ ನೀಡಿದ್ದ ತೀರ್ಪನ್ನು ಪ್ರಶ್ನಿಸಿ ರಾಹುಲ್ಗಾಂಧಿ ಸಲ್ಲಿಸಿದ್ದ ಅರ್ಜಿಯ ತೀರ್ಪನ್ನು ಮುಂಬೈ ಹೈಕೋರ್ಟ್ ಮಂಗಳವಾರ ಕಾಯ್ದಿರಿಸಿದೆ. ಲೋಕಸಭೆಯ ವಿರೋಧ ಪಕ್ಷದ ನಾಯಕರೂ ಆಗಿರುವ ರಾಹುಲ್ ವಿರುದ್ಧ ವಿಧ್ಯುಕ್ತ ಮಾನನಷ್ಟ ಪ್ರಕ್ರಿಯೆಯನ್ನು ಆರಂಭಿಸಲು ಹೈಕೋರ್ಟ್ 2019ರಲ್ಲಿ ನೋಟಿಸ್ ನೀಡಿತ್ತು. ಉಭಯ ಪಕ್ಷಗಳ ವಾದ- ಪ್ರತಿವಾದಗಳನ್ನು ಆಲಿಸಿದ ನ್ಯಾಯಮೂರ್ತಿಗಳು ಪರಸ್ಪರ ಚರ್ಚಿಸಿದ ಬಳಿಕ ತೀರ್ಮಾನಕ್ಕೆ ಬರಲಿದ್ದಾರೆ. ಆದಾಗ್ಯೂ ರಾಹುಲ್ಗಾಂಧಿಯವರಿಗೆ ಮಂಜೂರು ಮಾಡಿರುವ ಮಧ್ಯಂತರ ಪರಿಹಾರವು ಅಂತಿಮ ತೀರ್ಪು ಬರುವವರೆಗೂ ಮುಂದುವರಿಯಲಿದೆ ಎಂದು ನ್ಯಾಯಮೂರ್ತಿ ಎನ್.ಆರ್.ಬೋರ್ಕರ್ ಸ್ಪಷ್ಟಪಡಿಸಿದ್ದಾರೆ. ಮಹೇಶ್ ಹುಕುಂಚಂದ್ ಶ್ರೀಶ್ರೀಮಲ್ ಎಂಬ ಬಿಜೆಪಿ ಸದಸ್ಯ 2018ರ ನವೆಂಬರ್ 1ರಂದು ಖಾಸಗಿ ದೂರು ದಾಖಲಿಸಿದ್ದು, 2018ರ ಸೆಪ್ಟೆಂಬರ್ 20ರಂದು ರಾಜಸ್ಥಾನದಲ್ಲಿ ನಡೆದ ರ್ಯಾಲಿಯಲ್ಲಿ ರಾಹುಲ್ಗಾಂಧಿಯವವರು ಪ್ರಧಾನಿ ವಿರುದ್ಧ ಹಿಂದೂಸ್ತಾನ್ ಕಾ ಚೌಕಿದಾರ್ ಚೋರ್ ಹೈ ಎಂಬ ಹೇಳಿಕೆ ಸೇರಿದಂತೆ ಮಾನಹಾನಿಕರ ಹೇಳಿಕೆಗಳನ್ನು ನೀಡಿದ್ದರು ಎಂದು ಆಪಾದಿಸಿದ್ದರು.
E-Khata: ಕರ್ನಾಟಕದಲ್ಲಿ ಆಸ್ತಿಗಳ ಮಾರಾಟ ಹಾಗೂ ಖರೀದಿಯಲ್ಲಿ ಆಗುವ ಲೋಪಗಳನ್ನು ತಪ್ಪಿಸುವ ಉದ್ದೇಶದಿಂದ ಕರ್ನಾಟಕ ಸರ್ಕಾರವು ಇ - ಖಾತಾ ಪರಿಚಯಿಸಿದೆ. ಇದು ಆಸ್ತಿಗಳ ವಿವರ ಹೊಂದಿರುವ ಡಿಜಿಟಲ್ ಸ್ವರೂಪವಾಗಿದೆ. ಆದರೆ ಇ ಖಾತಾ ವಿತರಣೆಯಲ್ಲಿ ಕೆಲವೊಂದು ಸಮಸ್ಯೆಗಳು ಸಹ ಸೃಷ್ಟಿ ಆಗಿವೆ. ಬೆಂಗಳೂರಿನ ನಂತರ ಕರ್ನಾಟಕದ ಮತ್ತೊಂದು ಪ್ರಮುಖ ನಗರದಲ್ಲಿ ಇ ಖಾತಾ ಸಮಸ್ಯೆ ಆಗಿದ್ದು,
Madhya Pradesh | ಉದ್ಯೋಗದ ಆಮಿಷವೊಡ್ಡಿ ಮಹಿಳೆಯರ ಮೇಲೆ ಅತ್ಯಾಚಾರ: ಮೂವರ ಬಂಧನ
ಲೈಂಗಿಕ ದೌರ್ಜನ್ಯ, ಡ್ರಗ್ಸ್ ದಂಧೆ ಬಯಲು
Gold Rate: ಚಿನ್ನ, ಬೆಳ್ಳಿ ದರದಲ್ಲಿ ಏರಿಳಿತ: ಇಂದಿನ ಬೆಲೆ ಎಷ್ಟು? ಇಲ್ಲಿದೆ ಮಾಹಿತಿ
ಆಭರಣ ಪ್ರಿಯರಿಗೆ ಚಿನ್ನ ಮತ್ತು ಬೆಳ್ಳಿ ಮಾರುಕಟ್ಟೆಯಲಲ್ಲಿ ಆಗುತ್ತಿರುವ ದಿನನಿತ್ಯದ ಬೆಲೆಗಳ ಏರಿಳಿತ ತೀವ್ರ ಕುತೂಹಲ ಮೂಡಿಸಿವೆ. ಜಾಗತಿಕ ಮಾರುಕಟ್ಟೆಯಲ್ಲಿನ ದಿಢೀರ್ ಆರ್ಥಿಕ ಬೆಳವಣಿಗೆಗಳು, ಅಮೆರಿಕದ ಡಾಲರ್ ಮೌಲ್ಯದಲ್ಲಿನ ಏರಿಳಿತ ಹಾಗೂ ಭೌಗೋಳಿಕ ರಾಜಕೀಯ ಉದ್ವಿಗ್ನತೆಗಳ (Geopolitical tensions) ಪರಿಣಾಮವಾಗಿ ಭಾರತೀಯ ಮಾರುಕಟ್ಟೆಯಲ್ಲಿ ಹಳದಿ ಲೋಹ ಹಾಗೂ ಬಿಳಿ ಲೋಹದ ದರದಲ್ಲಿ ನಿರಂತರ ಏರಿಳಿತಗಳು ಕಂಡುಬರುತ್ತಿವೆ. ಬುಧವಾರ,
ಚಳಿ ವಾತಾವರಣ ಕಡಿಮೆಯಾಗಿ ದಿಢೀರನೆ ಬಿಸಿಲು ಏರತೊಡಗಿದೆ. ಮಂಡ್ಯದಲ್ಲಿ ತಂಪು ಪಾನೀಯಗಳಿಗೆ ಬೇಡಿಕೆ ಹೆಚ್ಚಿದೆ. ವರ್ಷದ ಮೊದಲ ಮಳೆ ಬಂಡೀಪುರ ಕಾಡನ್ನು ಸ್ವಲ್ಪ ಮಟ್ಟಿಗೆ ತಂಪಾಗಿಸಿದೆ.
ನರೇಂದ್ರ ಮೋದಿ ಇಸ್ರೇಲ್ ಭೇಟಿಗೂ ಮೊದಲು ʻಹೆಕ್ಸಗಾನ್ʼ ಮೈತ್ರಿ ಘೋಷಿಸಿದ ಬೆಂಜಮಿನ್ ನೆತನ್ಯಾಹು; ಭಾರತದ ಪಾತ್ರವೇನು?
2014ರ ಬಳಿಕ ಭಾರತ ಮತ್ತು ಇಸ್ರೇಲ್ ನಡುವಿನ ರಾಜತಾಂತ್ರಿಕ ಸಂಬಂಧ ಗಟ್ಟಿಗೊಳ್ಳುತ್ತಿದೆ. ಈ ದ್ವಿಪಕ್ಷೀಯ ಸಂಬಂಧವನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯುವ ಉದ್ದೇಶದಿಂದ, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಂದಿನಿಂದ (ಫೆ.25-ಬುಧವಾರ) ಎರಡು ದಿನಗಳ ಕಾಲ ಇಸ್ರೇಲ್ ಪ್ರವಾಸ ಕೈಗೊಳ್ಳಲಿದ್ದಾರೆ. ಪ್ರಧಾನಿ ಮೋದಿ ಭೇಟಿಗೂ ಮೊದಲೇ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಹೆಕ್ಸಗಾನ್ ಮೈತ್ರಿ ಘೋಷಿಸಿದ್ದು, ಭಾರತವನ್ನು ಅತ್ಯಂತ ಪ್ರಮುಖ ಪಾಲುದಾರ ಎಂದು ಕರೆದಿದ್ದಾರೆ. ಏನಿದು ಹೆಕ್ಸಗಾನ್ ಮೈತ್ರಿ? ಇಲ್ಲಿದೆ ಮಾಹಿತಿ.
ಬಹುನಿರೀಕ್ಷಿತ ರೈಲು ಮಾರ್ಗ ಧಾರವಾಡ-ಬೆಳಗಾವಿಗೆ ನೇರ ರೈಲು ಯೋಜನೆಯ ಭೂಸ್ವಾಧೀನ ಸಮಸ್ಯೆ ಪರಿಹಾರವಾಗಿದೆ, ಆದರೆ ಪರಿಹಾರ ವಿತರಣೆ ಇನ್ನೂ ಬಾಕಿಯಾಗಿದೆ. ಪರಿಹಾರ ಕೊಟ್ಟು, ಅದನ್ನು ನೈಋತ್ಯ ರೈಕ್ವೆಗೆ ಹಸ್ತಾಂತರಿಸುವ ಪ್ರಕ್ರಿಯೆ ನಡೆಯಬೇಕಿರುವುದರಿಂದ ಯೋಜನೆ ವಿಳಂಬವಾಗುವ ಸಾಧ್ಯತೆಗಳು ದಟ್ಟವಾಗಿದೆ.
ರಾಮನಗರದ ರಾಜೀವ್ ಗಾಂಧಿ ಆರೋಗ್ಯ ವಿವಿ ಕ್ಯಾಂಪಸ್ನಲ್ಲಿ 450 ಬೆಡ್ ಸಾಮರ್ಥ್ಯದ ಹೈಟೆಕ್ ಆಸ್ಪತ್ರೆಗೆ ಡಿಪಿಆರ್?
ರಾಮನಗರದ ರಾಜೀವ್ ಗಾಂಧಿ ಆರೋಗ್ಯ ವಿವಿ ಕ್ಯಾಂಪಸ್ನಲ್ಲಿ ಹೈಟೆಕ್ ಆಸ್ಪತ್ರೆ ಮಂಜೂರು ಮಾಡಿಸಿಕೊಳ್ಳುವ ಸಂಸದ ಡಾ.ಸಿಎನ್. ಮಂಜುನಾಥ್ ಅವರ ಪ್ರಯತ್ನಗಳು ಫಲ ನೀಡುವ ಸಾಧ್ಯತೆಗಳು ದಟ್ಟವಾಗಿವೆ. ವಿವಿ ಸಂಕೀರ್ಣದಲ್ಲಿ 450 ಹಾಸಿಗೆ ಸಾಮರ್ಥ್ಯದ ಹೈಟೆಕ್ ಆಸ್ಪತ್ರೆ ನಿರ್ಮಾಣಕ್ಕೆ ಶೀಘ್ರದಲ್ಲೇ ಡಿಪಿಆರ್ ಸಿದ್ದವಾಗುವ ಲಕ್ಷಣಗಳು ಕಂಡುಬರುತ್ತಿವೆ. ಈ ಕುರಿತು ಸಂಸದರು ಬರೆದ ಪತ್ರಕ್ಕೆ ವೈದ್ಯಕೀಯ ಶಿಕ್ಷಣ ಸಚಿವ ಶರಣ್ ಪ್ರಕಾಶ್ ಪಾಟೀಲ್ ಪ್ರತಿಕ್ರಿಯೆ ನೀಡಿದ್ದು, ಡಿಪಿಆರ್ ಸಿದ್ಧಪಡಿಸಲು ಉಪಕುಲಪತಿಗಳಿಗೆ ಸೂಚನೆ ನೀಡಿದ್ದಾರೆ.
Explained: ಬೆಂಗಳೂರಿನ ಪ್ರಮುಖ ರಸ್ತೆಗಳಲ್ಲಿ ಪೇ ಆ್ಯಂಡ್ ಪಾರ್ಕಿಂಗ್ ವ್ಯವಸ್ಥೆ; ಯಾವ ನಗರದಲ್ಲಿ ಹೊಸ ನಿಯಮ ಜಾರಿ?
ರಾಜಧಾನಿ ಬೆಂಗಳೂರಿನ ಟ್ರಾಫಿಕ್ ಸಮಸ್ಯೆ ಜಾಗತಿಕ ಮಟ್ಟದಲ್ಲಿ ಚರ್ಚೆಯಾಗುತ್ತಿರುವುದು ನಮಗೆಲ್ಲಾ ತಿಳಿದಿರುವ ಸಂಗತಿ. ವಾಹನಗಳ ಅವೈಜ್ಞಾನಿಕ ಪಾರ್ಕಿಂಗ್ ಕೂಡ ಟ್ರಾಫಿಕ್ ಕಿರಿಕಿರಿ ಹೆಚ್ಚಲು ಪ್ರಮುಖ ಕಾರಣ. ಈ ಹಿನ್ನೆಲೆಯಲ್ಲಿ ನಗರದ ಪಾರ್ಕಿಂಗ್ ವ್ಯವಸ್ಥೆಯನ್ನು ಸರಿಮಾಡಲು ನಿರ್ಧರಿಸಿರುವ ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ), ನಗರದ ಪ್ರಮುಖ ರಸ್ತೆಗಳಲ್ಲಿ ಪೇ ಆ್ಯಂಡ್ ಪಾರ್ಕಿಂಗ್ ವ್ಯವಸ್ಥೆಯನ್ನು ಜಾರಿಗೆ ತರಲು ಮುಂದಾಗದೆ. ಅದರಂತೆ ಜಯನಗ ವಿಧಾನಸಭಾ ಕ್ಷೇತ್ರದ 42 ರಸ್ತೆಗಳಲ್ಲಿ ಪಾರ್ಕಿಂಗ್ ಶುಲ್ಕ ನಿಯಮ ಜಾರಿಯಾಗಲಿದೆ.
ಲಕ್ನೋ,ಫೆ.24: ಅಪ್ರಾಪ್ತ ವಯಸ್ಕ ಮಕ್ಕಳಿಗೆ ಲೈಂಗಿಕ ಕಿರುಕುಳ ಮತ್ತು ಇತರ ಅಪರಾಧಗಳಿಗಾಗಿ ತನ್ನ ವಿರುದ್ಧ ದಾಖಲಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಜ್ಯೋತಿಷ್ ಪೀಠದ ಶಂಕರಾಚಾರ್ಯ ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿ ಅವರು ನಿರೀಕ್ಷಣಾ ಜಾಮೀನು ಕೋರಿ ಮಂಗಳವಾರ ಅಲಹಾಬಾದ್ ಉಚ್ಚ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ಕಳೆದೊಂದು ವರ್ಷದಲ್ಲಿ ಅಪ್ರಾಪ್ತ ವಯಸ್ಕರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಲ್ಲಿ ಸರಸ್ವತಿ ಮತ್ತು ಅವರ ಶಿಷ್ಯ ಮುಕುಂದಾನಂದ ಬ್ರಹ್ಮಚಾರಿ ವಿರುದ್ಧ ಸೋಮವಾರ ಪೊಕ್ಸೊ ಕಾಯ್ದೆಯಡಿ ಪ್ರಯಾಗರಾಜ್ನ ಝುನ್ಸಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಪ್ರಯಾಗರಾಜ್ನ ವಿಶೇಷ ಪೊಕ್ಸೊ ನ್ಯಾಯಾಲಯವು ಎಫ್ಐಆರ್ ದಾಖಲಿಸುವಂತೆ ಶನಿವಾರ ಪೊಲೀಸರಿಗೆ ಆದೇಶಿಸಿತ್ತು. ಬಲ್ಲ ಮೂಲಗಳ ಪ್ರಕಾರ ನ್ಯಾಯಾಲಯದಲ್ಲಿ ಅರ್ಜಿಯನ್ನು ಸಲ್ಲಿಸುವ ಮುನ್ನ ಸರಕಾರಿ ವಕೀಲರ ಕಚೇರಿಗೆ ನೋಟಿಸ್ ರವಾನಿಸಲಾಗಿದೆ. ಎಫ್ಐಆರ್ ಪ್ರಕಾರ, ಆರೋಪಿಗಳು ಗುರುಕುಲದಲ್ಲಿ ಮತ್ತು ಪ್ರಯಾಗರಾಜ್ನಲ್ಲಿ ಇತ್ತೀಚಿಗೆ ನಡೆದ ಮಾಘ ಮೇಳ ಸೇರಿದಂತೆ ಧಾರ್ಮಿಕ ಸಮಾವೇಶಗಳ ಸಂದರ್ಭಗಳಲ್ಲಿ ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ದೂರುದಾರರಾದ ಅಶುತೋಷ ಬ್ರಹ್ಮಚಾರಿ ಮಹಾರಾಜ್ ಮತ್ತು ಓರ್ವ ಅಪ್ರಾಪ್ತ ವಯಸ್ಕ ಸೇರಿದಂತೆ ಇತರ ಇಬ್ಬರು ಆರೋಪಿಸಿದ್ದಾರೆ. ದೂರುದಾರರು ಎಫ್ಐಆರ್ನಲ್ಲಿ ಸರಸ್ವತಿ ಮತ್ತು ಮುಕುಂದಾನಂದರ ಜೊತೆ 2-3 ಅಪರಿಚಿತ ವ್ಯಕ್ತಿಗಳನ್ನೂ ಹೆಸರಿಸಿದ್ದಾರೆ. ಆರೋಪಿಗಳು ಧಾರ್ಮಿಕ ಗುರುಗಳ ಸೋಗಿನಲ್ಲಿ ಅಪ್ರಾಪ್ತ ವಯಸ್ಕ ಮತ್ತು ಇನ್ನೋರ್ವ ಯುವಕನ ಮೇಲೆ ಹಲವಾರು ಸಂದರ್ಭಗಳಲ್ಲಿ ಪದೇ ಪದೇ ಲೈಂಗಿಕ ದೌರ್ಜನ್ಯಗಳನ್ನು ಎಸಗಿದ್ದಾರೆ ಎಂದು ಆರೋಪಿಸಲಾಗಿದೆ. ಮೌನಿ ಅಮವಾಸ್ಯೆಯಂದು ತಾನು ಪವಿತ್ರ ಸ್ನಾನ ಮಾಡುವುದನ್ನು ತಡೆದಿದ್ದಾರೆ ಎಂದು ಆರೋಪಿಸಿ ಮಾಘ ಮೇಳದ ಸಂಘಟಕರೊಂದಿಗೆ ತನ್ನ ಸಂಘರ್ಷದಿಂದಾಗಿ ಸರಸ್ವತಿ ಇತ್ತೀಚಿಗೆ ಸುದ್ದಿಯಾಗಿದ್ದರು. ಕಾಶಿಯಲ್ಲಿನ ತನ್ನ ವಿದ್ಯಾಮಠದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸರಸ್ವತಿ, ತನಗೆ ಕಾನೂನು ನೆರವು ನೀಡುವುದಾಗಿ ಕೆಲವು ವಕೀಲರು ತನ್ನನ್ನು ಸಂಪರ್ಕಿಸಿದ್ದರು. ಆದರೆ ಅವರು ತೆಗೆದುಕೊಂಡಿರಬಹುದಾದ ಯಾವುದೇ ಕ್ರಮದ ಕುರಿತು ತನಗೆ ಮಾಹಿತಿಯಿಲ್ಲ ಎಂದು ತಿಳಿಸಿದರು. ಫೋಟೊವೊಂದನ್ನೂ ತೋರಿಸಿದ ಅವರು ಪ್ರಯಾಗ್ರಾಜ್ನ ಪೊಲೀಸ್ ಅಧಿಕಾರಿಯೋರ್ವರು ತನ್ನ ವಿರುದ್ಧದ ‘ಪಿತೂರಿ’ಯ ಕೇಂದ್ರಬಿಂದುವಾಗಿದ್ದಾರೆ ಎಂದು ಪ್ರತಿಪಾದಿಸಿದರು. ಚಿತ್ರವು ಪೊಲೀಸ್ ಅಧಿಕಾರಿಯು ದೂರುದಾರರಾದ ಅಶುತೋಷ ಬ್ರಹ್ಮಚಾರಿಯ ಜೊತೆ ಕೇಕ್ ಕತ್ತರಿಸುತ್ತಿರುವುದನ್ನು ತೋರಿಸಿದೆ.
ಟಿ-20 ವಿಶ್ವಕಪ್ | ಟೀಮ್ ಇಂಡಿಯಾದ ಸೆಮಿ ಫೈನಲ್ ವಿಶ್ವಾಸ ವೃದ್ಧಿಗೆ ಬೃಹತ್ ಗೆಲುವು ಅಗತ್ಯ
ಹೊಸದಿಲ್ಲಿ, ಫೆ.24: ಪ್ರಸಕ್ತ ನಡೆಯುತ್ತಿರುವ ಟಿ-20 ವಿಶ್ವಕಪ್ ಟೂರ್ನಿಯಲ್ಲಿ ಟೀಮ್ ಇಂಡಿಯಾದ ಸೆಮಿ ಫೈನಲ್ ವಿಶ್ವಾಸ ವೃದ್ಧಿಸಲು ಬಾಕಿ ಉಳಿದಿರುವ ಎರಡೂ ಪಂದ್ಯಗಳನ್ನು ಬೃಹತ್ ಅಂತರದಿಂದ ಗೆಲ್ಲುವ ಅಗತ್ಯವಿದೆ. ಗ್ರೂಪ್ ಹಂತದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತಂಡ ಸಹಿತ ಎಲ್ಲ ನಾಲ್ಕು ಪಂದ್ಯಗಳನ್ನು ಜಯಿಸಿ ಅಜೇಯವಾಗುಳಿದಿದ್ದ ಭಾರತ ತಂಡವು ಸೂಪರ್-8ರ ಆರಂಭಿಕ ಪಂದ್ಯದಲ್ಲಿ ಭಾರೀ ಹಿನ್ನಡೆ ಅನುಭವಿಸಿದೆ. ಮೊದಲ ಸೂಪರ್-8 ಪಂದ್ಯದಲ್ಲಿ ದಕ್ಷಿಣ ಆಫ್ರಿಕಾದ ವಿರುದ್ಧ 76 ರನ್ಗಳ ಅಂತರದಿಂದ ಸೋತಿರುವ ಸೂರ್ಯಕುಮಾರ್ ಬಳಗವು ಗ್ರೂಪ್-1ರಲ್ಲಿ ತೀವ್ರ ಒತ್ತಡಕ್ಕೆ ಸಿಲುಕಿದೆ. ಭಾರತ ತಂಡವು -3.800 ನೆಟ್ ರನ್ ರೇಟ್ ನೊಂದಿಗೆ ಅಂಕಪಟ್ಟಿಯಲ್ಲಿ ವೆಸ್ಟ್ಇಂಡೀಸ್(+5.350)ಹಾಗೂ ದಕ್ಷಿಣ ಆಫ್ರಿಕಾ(+3.800)ಕ್ಕಿಂತ ಹಿಂದಿದೆ. ಭಾರತ ತಂಡವು ಉಳಿದಿರುವ ಎರಡು ಪಂದ್ಯಗಳನ್ನು ಗೆದ್ದ ಮಾತ್ರಕ್ಕೆ ಸೆಮಿ ಫೈನಲ್ಗೆ ಅರ್ಹತೆ ಪಡೆಯುವುದು ಖಚಿತವಾಗುವುದಿಲ್ಲ. ದಕ್ಷಿಣ ಆಫ್ರಿಕಾ ವಿರುದ್ಧ ಹೀನಾಯವಾಗಿ ಸೋತಿರುವ ಭಾರತ ತಂಡವು ಮಾರ್ಚ್ 1ರಂದು ಕೋಲ್ಕತಾದಲ್ಲಿ ವೆಸ್ಟ್ಇಂಡೀಸ್ ತಂಡವನ್ನು ಎದುರಿಸುವ ಮೊದಲು ಫೆ.26ರಂದು ಚೆನ್ನೈನಲ್ಲಿ ಝಿಂಬಾಬ್ವೆ ತಂಡವನ್ನು ಮುಖಾಮುಖಿಯಾಗಲಿದೆ. ಸೆಮಿ ಫೈನಲ್ ಸ್ಪರ್ಧೆಯಲ್ಲಿ ಉಳಿಯಬೇಕಾದರೆ ಭಾರತ ತಂಡ ಮೊದಲಿಗೆ ಝಿಂಬಾಬ್ವೆ ವಿರುದ್ಧ ದೊಡ್ಡ ಅಂತರದ ಗೆಲುವು ಸಾಧಿಸುವ ಅಗತ್ಯವಿದೆ. ಸುಮಾರು 100 ರನ್ ಅಂತರದಿಂದ ಗೆಲುವು ದಾಖಲಿಸಿದರೆ ನೆಟ್ ರನ್ರೇಟ್ನಲ್ಲಿ ಆಗಿರುವ ಹಾನಿಯನ್ನು ಸರಿಪಡಿಸಬಹುದು. ಒಂದು ವೇಳೆ ಭಾರತ, ದಕ್ಷಿಣ ಆಫ್ರಿಕಾ ಹಾಗೂ ವೆಸ್ಟ್ಇಂಡೀಸ್ ತಂಡಗಳು ತಲಾ ನಾಲ್ಕು ಅಂಕಗಳನ್ನು ಗಳಿಸಿದರೆ, ಸಹಜವಾಗಿಯೇ ನೆಟ್ ರನ್ ರೇಟ್ ಮೂಲಕ ಸೆಮಿ ಫೈನಲ್ಗೇರುವ ತಂಡವನ್ನು ನಿರ್ಧರಿಸಲಾಗುತ್ತದೆ. ಸದ್ಯ ಭಾರತವು ರನ್ ರೇಟ್ ವಿಚಾರದಲ್ಲಿ ಬಹಳಷ್ಟು ಹಿಂದುಳಿದಿದ್ದು, ಈ ಅಂತರವನ್ನು ತಕ್ಷಣವೇ ಭರ್ತಿ ಮಾಡಬೇಕಾಗಿದೆ. ಒಂದು ವೇಳೆ ಭಾರತ ತಂಡವು ಮೊದಲು ಬ್ಯಾಟಿಂಗ್ ಮಾಡಿ 220 ರನ್ ಗಳಿಸಿದರೆ, ಝಿಂಬಾಬ್ವೆ ತಂಡವನ್ನು ಸುಮಾರು 120 ಅಥವಾ ಅದಕ್ಕಿಂತ ಕಡಿಮೆ ಮೊತ್ತಕ್ಕೆ ನಿಯಂತ್ರಿಸಬೇಕಾಗಿದೆ. ಹೀಗಾದಲ್ಲಿ ಭಾರತದ ನೆಟ್ ರನ್ ರೇಟ್ ಹೆಚ್ಚಾಗಲಿದೆ. ಕಡಿಮೆ ಅಂತರದಿಂದ ಗೆಲುವು ದಾಖಲಿಸಿದರೆ ಇತರ ಫಲಿತಾಂಶವನ್ನು ಅವಲಂಬಿಸಬೇಕಾಗುತ್ತದೆ. ಟೂರ್ನಿಯಲ್ಲಿ ಬಲಿಷ್ಠ ತಂಡವಾಗಿರುವ ದಕ್ಷಿಣ ಆಫ್ರಿಕಾವು ವೆಸ್ಟ್ಇಂಡೀಸ್ ತಂಡವನ್ನು ಮಣಿಸಬೇಕು. ಹಾಗೆ ಮಾಡಿದಾಗ ಮಾತ್ರ ಭಾರತ ತಂಡ ಸೆಮಿ ಫೈನಲ್ಗೆ ತಲುಪಬಹುದು. ಟಿ-20 ವಿಶ್ವಕಪ್ ಆರಂಭಕ್ಕೆ ಮೊದಲು ಸಾಮಾನ್ಯ ತಂಡ ಎನಿಸಿಕೊಂಡಿದ್ದ ವೆಸ್ಟ್ಇಂಡೀಸ್, ಈ ಬಾರಿಯ ವಿಶ್ವಕಪ್ನಲ್ಲಿ ಅಮೋಘ ಪ್ರದರ್ಶನ ನೀಡಿ ಎಲ್ಲರನ್ನು ಅಚ್ಚರಿಗೊಳಿಸಿದೆ. ಬಲಿಷ್ಠ ತಂಡಗಳನ್ನು ಮಣಿಸಿ ಸೂಪರ್-8ರ ಹಂತ ಪ್ರವೇಶಿಸಿದೆ. ಒಂದು ವೇಳೆ ದಕ್ಷಿಣ ಆಫ್ರಿಕಾ ತಂಡ ವಿಂಡೀಸ್ ತಂಡವನ್ನು ಸೋಲಿಸಲು ವಿಫಲವಾದರೆ ಭಾರತ ತಂಡ ಇನ್ನುಳಿದ ಎರಡೂ ಪಂದ್ಯಗಳನ್ನು 100 ರನ್ಗಳಿಗೂ ಅಧಿಕ ಅಂತರದಿಂದ ಮಣಿಸಬೇಕಾಗುತ್ತದೆ. ಝಿಂಬಾಬ್ವೆ ತಂಡವನ್ನು ದೊಡ್ಡ ಅಂತರದಿಂದ ಸೋಲಿಸಿದರೂ, ವಿಂಡೀಸ್ ತಂಡವನ್ನು ದೊಡ್ಡ ಅಂತರದಲ್ಲಿ ಸೋಲಿಸುವುದು ಅಷ್ಟು ಸುಲಭವಲ್ಲ. ದಕ್ಷಿಣ ಆಫ್ರಿಕಾ ವಿರುದ್ಧ ಸೋತಿರುವ ಭಾರತ ತಂಡವು ಸೆಮಿ ಫೈನಲ್ ತಲುಪಲು ಅನೇಕ ಸವಾಲುಗಳನ್ನು ಮೆಟ್ಟಿನಿಲ್ಲಬೇಕಾಗಿದೆ. ಅದೃಷ್ಟ ಕೂಡ ಕೈಹಿಡಿಯಬೇಕು. ► ಭಾರತ ಎರಡೂ ಪಂದ್ಯಗಳನ್ನು ಗೆದ್ದರೆ... ಒಂದೊಮ್ಮೆ ಭಾರತ ತಂಡವು ಸೂಪರ್-8ರ ಗ್ರೂಪ್-1ರಲ್ಲಿ ವೆಸ್ಟ್ಇಂಡೀಸ್ ಹಾಗೂ ಝಿಂಬಾಬ್ವೆ ವಿರುದ್ಧದ ಎರಡೂ ಪಂದ್ಯಗಳನ್ನು ಗೆದ್ದುಕೊಂಡರೆ, ಒಟ್ಟು ನಾಲ್ಕು ಅಂಕವನ್ನು ಗಳಿಸುತ್ತದೆ. ಒಂದು ವೇಳೆ ದಕ್ಷಿಣ ಆಫ್ರಿಕಾ ತಂಡವು ತನ್ನೆಲ್ಲಾ ಪಂದ್ಯಗಳನ್ನು ಜಯಿಸಿದರೆ, ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡಗಳು ಸೆಮಿ ಫೈನಲ್ಗೆ ಅರ್ಹತೆ ಪಡೆಯುತ್ತವೆ. ಒಂದು ವೇಳೆ ಭಾರತ ಎರಡೂ ಪಂದ್ಯಗಳನ್ನು ಗೆದ್ದುಕೊಂಡರೆ, ದಕ್ಷಿಣ ಆಫ್ರಿಕಾ ಒಂದು ಪಂದ್ಯವನ್ನು ಸೋತರೆ, ಮೂರು ತಂಡಗಳು ನಾಲ್ಕು ಅಂಕಗಳನ್ನು ಗಳಿಸಿ ಟೈ ಸಾಧಿಸಬಹುದು. ಅಂತಹ ಸಂದರ್ಭದಲ್ಲಿ ನೆಟ್ ರನ್ರೇಟ್ ಮೂಲಕ ಸೆಮಿ ಫೈನಲಿಸ್ಟ್ ತಂಡವನ್ನು ನಿರ್ಧರಿಸಲಾಗುತ್ತದೆ. ಒಂದು ವೇಳೆ ಭಾರತ ತಂಡವು ಎರಡೂ ಪಂದ್ಯಗಳನ್ನು ಗೆದ್ದುಕೊಂಡರೆ ಹಾಗೂ ದಕ್ಷಿಣ ಆಫ್ರಿಕಾ ತಂಡವು ತನ್ನ ಎರಡೂ ಪಂದ್ಯಗಳನ್ನು ಸೋತರೆ, ಭಾರತ ಹಾಗೂ ವೆಸ್ಟ್ಇಂಡೀಸ್ ತಂಡಗಳು ಸೆಮಿ ಫೈನಲ್ಗೆ ಅರ್ಹತೆ ಪಡೆದುಕೊಳ್ಳುತ್ತವೆ. ► ಭಾರತ ತಂಡ ಕೇವಲ ಒಂದು ಪಂದ್ಯ ಗೆದ್ದರೆ.. ಒಂದು ವೇಳೆ ಭಾರತ ತಂಡವು ಇನ್ನುಳಿದ ಎರಡು ಸೂಪರ್-8 ಪಂದ್ಯಗಳ ಪೈಕಿ ಒಂದರಲ್ಲಿ ಗೆದ್ದರೆ ಟೂರ್ನಿಯಿಂದ ನಿರ್ಗಮಿಸಲಿದೆ. ಆಗ ಇತರ ಗುಂಪುಗಳ ಫಲಿತಾಂಶ ಇಲ್ಲಿ ಯಾವುದೇ ಪರಿಣಾಮ ಬೀರುವುದಿಲ್ಲ. ಹಾಲಿ ಚಾಂಪಿಯನ್ ಭಾರತ ತಂಡ ಸಣ್ಣ ತಪ್ಪುಗಳಿಗೆ ದೊಡ್ಡ ಬೆಲೆ ತೆರಬೇಕಾಗುತ್ತದೆ. ಸೆಮಿ ಫೈನಲ್ ಹಾದಿ ಸುಗಮವಾಗಬೇಕಾದರೆ ಕೇವಲ ಗೆಲುವು ಮಾತ್ರ ಸಾಲದು, ಸಂಪೂರ್ಣ ಪ್ರಾಬಲ್ಯ ಸಾಧಿಸುವ ಅಗತ್ಯವಿದೆ.
ಪಹಣಿ ಜೊತೆಗೆ ಆಧಾರ್ ಜೋಡಿಸಿ: ಸಚಿವ ಕೃಷ್ಣ ಭೈರೇಗೌಡ
ಬೆಂಗಳೂರು: ನಕಲಿ ವಹಿವಾಟು ತಪ್ಪಿಸಿ ಆಸ್ತಿ ಮಾಲಕತ್ವವನ್ನು ಮತ್ತಷ್ಟು ಸುಭದ್ರಗೊಳಿಸಲು ಸಾರ್ವಜನಿಕರು ತಮ್ಮ ಪಹಣಿಯ ಜೊತೆಗೆ ಆಧಾರ್ ಜೋಡಣೆಗೊಳಿಸಬೇಕು ಎಂದು ಕಂದಾಯ ಸಚಿವ ಕೃಷ್ಣ ಭೈರೇಗೌಡ ಕರೆ ನೀಡಿದ್ದಾರೆ. ಮಂಗಳವಾರ ವಿಕಾಸಸೌಧದಲ್ಲಿ ನಡೆದ ಕಾರ್ಯಕ್ರಮದಲ್ಲಿ ನೂತನ ಆಟೋ ಮ್ಯುಟೇಶನ್ ತಂತ್ರಾಂಶಕ್ಕೆ ಚಾಲನೆ ನೀಡಿದ ಅವರು, ಪಹಣಿಯ ಜೊತೆಗೆ ಆಧಾರ್ ಜೋಡಣೆಯಾದರೆ ಪಹಣಿಯಲ್ಲಿ ಏನೇ ಬದಲಾವಣೆ ಆದರೂ ಆ ಸಂದೇಶವನ್ನು ಆಸ್ತಿ ಮಾಲಕರ ಮೊಬೈಲ್ಗೆ ಕಳುಹಿಸಲಾಗುತ್ತದೆ. ಆಗ ಆಸ್ತಿ ಮಾಲಕರ ಗಮನಕ್ಕೆ ಬಾರದೆ ನಡೆಯುವ ಖಾತೆ ಬದಲಾವಣೆ ಅಥವಾ ಮಾರಾಟವನ್ನು ತಡೆಯಬಹುದು ಎಂದರು. ಇದಲ್ಲದೆ, ನ್ಯಾಯಾಲಯ ಆದೇಶ ನಮೂದಿಸಿದರೆ ಅಥವಾ ಪಹಣಿಯಲ್ಲಿ ಬೇರೆಯವರ ಹೆಸರು ಸೇರಿಸಿದರೂ ಸಹ ಎಸ್ಎಂಎಸ್ ಮೂಲಕ ಮಾಹಿತಿ ಬರಲಿದೆ. ಆಧಾರ್ ಜೋಡಣೆ ಮಾಡದಿದ್ದರೆ ಆಸ್ತಿ ಮಾಲಕರ ಗಮನಕ್ಕೆ ಬಾರದೆ ಖಾತೆ ಬದಲಾವಣೆ ಆಗುವಂತಹ ಅಪರೂಪದ ಸಾಧ್ಯತೆಗಳಿವೆ. ಹೀಗಾಗಿ ಮಾಲಕತ್ವ ಸುಭದ್ರವಾಗಿರಬೇಕಾದರೆ ಮೊದಲು ಪಹಣಿ ಜೊತೆಗೆ ಆಧಾರ್ ಜೋಡಿಸಿ ಎಂದು ಸಚಿವರು ಕರೆ ನೀಡಿದರು.
ಕ್ಯಾಲಿಫೋರ್ನಿಯಾ: ಸಿಖ್ ವ್ಯಕ್ತಿಯನ್ನು ಅಪಹರಿಸಿ ಹತ್ಯೆ
ನ್ಯೂಯಾರ್ಕ್, ಫೆ.24: ಕ್ಯಾಲಿಫೋರ್ನಿಯಾದಲ್ಲಿ ಭಾರತೀಯ ಮೂಲದ ಸಿಖ್ ವ್ಯಕ್ತಿಯನ್ನು ಅಪಹರಿಸಿ ಹತ್ಯೆಗೈದಿರುವ ಘಟನೆ ವರದಿಯಾಗಿದೆ. ಮೃತ ವ್ಯಕ್ತಿಯನ್ನು 57 ವರ್ಷದ ಅವತಾರ್ ಸಿಂಗ್ ಎಂದು ಗುರುತಿಸಲಾಗಿದೆ. ಫೆಬ್ರವರಿ 17ರಂದು ಕ್ಯಾಲಿಫೋರ್ನಿಯಾದ ಟ್ರೇಸಿ ನಗರದ ಗುರುದ್ವಾರದ ಹೊರಗಡೆ ಕುಳಿತಿದ್ದ ಸಿಂಗ್ನನ್ನು ಹಾಡುಹಗಲೇ ಮೂವರು ಶಂಕಿತರು ಕಾರಿನಲ್ಲಿ ಅಪಹರಿಸಿದ್ದರು. ಮೂರು ದಿನಗಳ ಬಳಿಕ ಸಿಂಗ್ನ ಮೃತದೇಹ ಹತ್ತಿರದ ಕೆರೆಯ ಬಳಿ ಪತ್ತೆಯಾಗಿತ್ತು. ದುಷ್ಕರ್ಮಿಗಳು ಬೇರೆ ಯಾರನ್ನೂ ಅಪಹರಿಸಲು ಉದ್ದೇಶಿಸಿದ್ದು ತಪ್ಪು ತಿಳುವಳಿಕೆಯಿಂದ ಸಿಂಗ್ನನ್ನು ಅಪಹರಿಸಿರುವುದು ದೃಢಪಟ್ಟಿದೆ ಎಂದು ಪೊಲೀಸರು ಹೇಳಿದ್ದು ಆರೋಪಿಗಳ ಪತ್ತೆ ಕಾರ್ಯ ಮುಂದುವರಿದಿದೆ ಎಂದು ಹೇಳಿದ್ದಾರೆ.
ಇಂಗ್ಲೆಂಡ್ ಅನ್ನು ಸೆಮಿಫೈನಲ್ ಗೆ ತಲುಪಿಸಿದ ಹ್ಯಾರಿ ಬ್ರೂಕ್; ಗೆಲ್ಲಬಹುದಾಗಿದ್ದ ಪಂದ್ಯವನ್ನು ಕಳಕೊಂಡ ಪಾಕ್
England Vs Pakistan- ಐಸಿಸಿ ಟಿ20 ವಿಶ್ವಕಪ್ ನ ಪ್ರತಿಯೊಂದು ಪಂದ್ಯವೂ ಒಂದಕ್ಕಿಂತ ಒಂದು ರೋಚಕವಾಗಿ ಸಾಗುತ್ತಿವೆ. ಇದೀಗ ಸೂಪರ್ 8 ಹಂತದ ಥ್ರಿಲ್ಲಿಂಗ್ ಮ್ಯಾಚ್ ನಲ್ಲಿ ಪಾಕಿಸ್ತಾನವನ್ನು 2 ವಿಕೆಟ್ ಗಳಿಂದ ಸೋಲಿಸಿದ ಇಂಗ್ಲೆಂಡ್ ತಂಡ ಮೊದಲ ತಂಡವಾಗಿ ಸೆಮಿಫೈನಲ್ ಪ್ರವೇಶಿಸಿದೆ. ಇಂಗ್ಲೆಂಡ್ ನಾಯಕ ಹ್ಯಾರಿ ಬ್ರೂಕ್ ಅವರು ಅಮೋಘ ಶತಕ ಬಾರಿಸುವ ಮೂಲಕ ಪಾಕಿಸ್ತಾನದ ಕೈಯಿಂದ ಪಂದ್ಯವನ್ನು ಕಿತ್ತುಕೊಂಡರು. ಇದೇವೇಳೆ ಮೊದಲನೇ ಪಂದ್ಯವನ್ನು ಮಳೆಯಿಂದಾಗಿ ಕಳೆದುಕೊಂಡಿದ್ದ ಪಾಕ್, ಎರಡನೇ ಪಂದ್ಯವನ್ನೂ ಸೋತಿರುವುದರಿಂದ ಅದರ ಸೆಮಿಫೈನಲ್ ಹಾದಿ ಕಠಿಣವಾಗಿದೆ.
ಇರಾನ್ ಬತ್ತಳಿಕೆಗೆ ಚೀನಾದ ಸೂಪರ್ಸಾನಿಕ್ ಕ್ಷಿಪಣಿ, ರಶ್ಯದ ಹಾವೋಕ್ ಹೆಲಿಕಾಪ್ಟರ್ ಸೇರ್ಪಡೆ
ಟೆಹ್ರಾನ್, ಫೆ.24: ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಪಡೆಗಳನ್ನು ಜಮಾವಣೆಗೊಳಿಸುತ್ತಿರುವಂತೆಯೇ ಇರಾನ್ ಕೂಡಾ ತನ್ನ ಮಿಲಿಟರಿ ಬಲವನ್ನು ಹೆಚ್ಚಿಸುತ್ತಿದ್ದು ಚೀನಾದಿಂದ ಎರಡು ಅತ್ಯಾಧುನಿಕ ಸೂಪರ್ಸಾನಿಕ್ ಕ್ಷಿಪಣಿಗಳನ್ನು ಖರೀದಿಸುವ ಒಪ್ಪಂದ ಬಹುತೇಕ ಪೂರ್ಣಗೊಂಡಿರುವುದಾಗಿ ವರದಿಯಾಗಿದೆ. ಚೀನಾದ ಸಿಎಂ-302 ಬ್ಯಾಲಿಸ್ಟಿಕ್ ಕ್ಷಿಪಣಿಯು ವಿಶ್ವದ ಅತ್ಯುತ್ತಮ ಹಡಗು ನಾಶಕ ಕ್ರೂಸ್ ಕ್ಷಿಪಣಿಯಾಗಿದೆ. ಇದು ಕೆಳಮಟ್ಟದಲ್ಲಿ ಕ್ಷಿಪ್ರವಾಗಿ ಮತ್ತು ಶಬ್ದಾತೀತ ವೇಗದಲ್ಲಿ ಹಾರುತ್ತದೆ. ಶತ್ರುಗಳು ಪತ್ತೆಹಚ್ಚುವ ಮೊದಲೇ ಸುಮಾರು 290 ಕಿ.ಮೀ ದೂರದ ಗುರಿಗೆ ಅಪ್ಪಳಿಸುವ ಸಾಮರ್ಥ್ಯ ಹೊಂದಿದೆ. ಹಡಗು, ಯುದ್ದವಿಮಾನ ಅಥವಾ ನೆಲದ ಮೇಲಿನ ಲಾಂಚರ್ಗಳಿಗೂ ಜೋಡಿಸಬಹುದು ಮತ್ತು ಭೂಮಿಯ ಮೇಲಿನ ಗುರಿಗಳನ್ನೂ ಹೊಡೆಯುವ ಸಾಮರ್ಥ್ಯ ಹೊಂದಿದೆ. ವಿಮಾನವಾಹಕ ನೌಕೆಯನ್ನು ಸಂಪೂರ್ಣವಾಗಿ ಮುಳುಗಿಸುವ ಸಾಮರ್ಥ್ಯವನ್ನು ಇದು ಹೊಂದಿದೆ. ಇದರ ಜೊತೆಗೆ, ರಶ್ಯದ ಹ್ಯಾವೋಕ್ ದಾಳಿ ಹೆಲಿಕಾಪ್ಟರ್ಗಳು ಈಗಾಗಲೇ ಇರಾನ್ ತಲುಪಿದ್ದು ಇದನ್ನು ಕ್ರಿಜಾಂಟೆಮಾ-ಎಂ ಸೂಪರ್ಸಾನಿಕ್ ಟ್ಯಾಂಕ್ ವಿರೋಧಿ ಕ್ಷಿಪಣಿಯೊಂದಿಗೆ ಅಳವಡಿಸಿರುವುದಾಗಿ ವರದಿಯಾಗಿದೆ.
ಬೆಂಗಳೂರು: ರಾಜ್ಯದಲ್ಲಿ ಸ್ವಯಂ ಚಾಲಿತ ಮ್ಯುಟೇಶನ್ ಪ್ರಕ್ರಿಯೆಗೆ ಚಾಲನೆ ನೀಡಲಾಗಿದ್ದು, 8 ದಿನದಲ್ಲಿಯೇ ಸ್ವಯಂ ಚಾಲಿತವಾಗಿ ಖಾತೆ ಬದಲಾವಣೆಯಾಗುತ್ತದೆ ಎಂದು ಕಂದಾಯ ಸಚಿವ ಕೃಷ್ಣ ಭೈರೇಗೌಡ ಹೇಳಿದ್ದಾರೆ. ಮಂಗಳವಾರ ವಿಕಾಸಸೌಧದಲ್ಲಿ ನಡೆದ ಕಾರ್ಯಕ್ರಮದಲ್ಲಿ ನೂತನ ಆಟೋ ಮ್ಯುಟೇಶನ್ ತಂತ್ರಾಂಶಕ್ಕೆ ಚಾಲನೆ ನೀಡಿದ ಅವರು, ಆನ್ಲೈನ್ ಮೂಲಕ ಖಾತೆ ಬದಲಾವಣೆಗೆ ಮನವಿ ಸಲ್ಲಿಸಿದರೆ 7 ದಿನ ನೊಟೀಸ್ ಅವಧಿ ಇರುತ್ತದೆ. ಈ ಅವಧಿಯಲ್ಲಿ ಯಾರು ಬೇಕಾದರೂ ಭೂಮಿ ತಂತ್ರಾಂಶದ ಮೂಲಕ ತಕರಾರು ಸಲ್ಲಿಸಬಹುದು. ಯಾರೂ ತಕರಾರು ಸಲ್ಲಿಸದಿದ್ದರೆ ಎಂಟನೆ ದಿನ ಸ್ವಯಂ ಚಾಲಿತವಾಗಿ ಖಾತೆ ಬದಲಾವಣೆಯಾಗುತ್ತದೆ. ನೋಂದಣಿಯೇತರವಾಗಿ ಖಾತೆ ಬದಲಾವಣೆಗೆ ಮನವಿ ಬಂದಂತಹ ಪ್ರಕರಣಗಳಿಗೆ 15 ದಿನ ನೊಟೀಸ್ ಅವಧಿ ಇದ್ದು, ತಕರಾರು ಸಲ್ಲಿಸಬಹುದಾಗಿದೆ. ತಕರಾರು ಇಲ್ಲದಿದ್ದರೆ 16ನೆ ದಿನ ಸ್ವಯಂ ಚಾಲಿತವಾಗಿ ಖಾತೆ ಬದಲಾವಣೆಯಾಗಲಿದೆ ಎಂದು ತಿಳಿಸಿದರು. 2024ನೆ ಸಾಲಿನ ಎಪ್ರಿಲ್ 1 ರಿಂದ 2026 ಫೆ.20ರವರೆಗಿನ ಅವಧಿಯಲ್ಲಿ 35,11,987 ಖಾತೆ ಬದಲಾವಣೆಯನ್ನು ಸ್ವಯಂ ಚಾಲಿತವಾಗಿ ಮಾಡಿದ್ದರೆ, ಕೇವಲ 5207 ಪ್ರಕರಣಗಳಲ್ಲಿ ಮಾತ್ರ ತಕರಾರು ದಾಖಲಾಗಿವೆ. ಅಂದರೆ ನಾವು ಒಟ್ಟು ಮ್ಯುಟೇಶನ್ ಶೇ.98 ರಷ್ಟು ಸ್ವಯಂ ಚಾಲಿತವಾಗಿ ಖಾತೆ ಬದಲಾವಣೆ ಮಾಡಿದಂತಾಗಿದೆ. ತಕರಾರು ದಾಖಲಿಸಿದ ಪ್ರಕರಣಗಳನ್ನೂ 60 ದಿನಗಳಲ್ಲಿ ಇತ್ಯರ್ಥಗೊಳಿಸಿ ಆದೇಶ ಹೊರಡಿಸುತ್ತಿದ್ದೇವೆ ಎಂದು ಅವರು ವಿವರಿಸಿದರು. ಸ್ವಯಂ ಚಾಲಿತ ಮ್ಯುಟೇಶನ್ಗೆ ಚಾಲನೆ ನೀಡುವ ಮೂಲಕ ಜನಪರ ಮತ್ತು ಸರಳ ಆಡಳಿತವನ್ನು ಸಾರ್ವಜನಿಕರ ಮನೆಬಾಗಿಲಿಗೇ ತಲುಪಿಸಬೇಕು ಎಂಬ ಸರಕಾರದ ಉದ್ದೇಶ ಈಡೇರಿದೆ ಎಂದ ಅವರು, ಕಂದಾಯ ಇಲಾಖೆಯನ್ನು ಜನಪರಗೊಳಿಸಬೇಕು, ಆಡಳಿತದಲ್ಲಿ ಸುಧಾರಣೆ ಮತ್ತು ಸರಳೀಕರಣಗೊಳಿಸಬೇಕು ಎಂಬ ನಿಟ್ಟಿನಲ್ಲಿ ಕಳೆದ ಎರಡೂವರೆ ವರ್ಷದಿಂದ ಹೆಜ್ಜೆ ಹೆಜ್ಜೆಗೂ ಹಲವಾರು ಬದಲಾವಣೆಗಳನ್ನು ತರಲಾಗುತ್ತಿದೆ. ಆ ಬದಲಾವಣಾ ಪರ್ವದ ಮತ್ತೊಂದು ಮಹತ್ವದ ಹೆಜ್ಜೆಯೇ ಸ್ವಯಂ ಚಾಲಿತ ಮ್ಯುಟೇಶನ್ಗೆ ಚಾಲನೆ ಎಂದು ಸಚಿವರು ಉಲ್ಲೇಖಿಸಿದರು. ಈ ಸೇವೆಯನ್ನು ಒಂದು ತಿಂಗಳಿನಿಂದ ಮಂಡ್ಯದಲ್ಲಿ ಅನುಷ್ಠಾನಗೊಳಿಸಿ ಸಾಧಕ ಪರಿಶೀಲಿಸಿ ಇಂದಿನಿಂದ ಶೇ.98 ರಷ್ಟು ಎಲ್ಲಾ ಖಾತೆ ಬದಲಾವಣೆಗಳೂ ಸ್ವಯಂ ಚಾಲಿತಗೊಳ್ಳಲು ಮುನ್ನುಡಿ ಇಟ್ಟಿದ್ದೇವೆ. ಅಲ್ಲದೆ, ಖಾತೆ ಬದಲಾವಣೆ ಕಂದಾಯ ಇಲಾಖೆಯ ಮೂಲ ಜವಾಬ್ದಾರಿಗಳಲ್ಲೊಂದು. ಇನ್ನೂ ಜನ ಸಾಮಾನ್ಯರು ಖಾತೆ ಬದಲಾವಣೆಗಾಗಿ ಸರಕಾರಿ ಕಚೇರಿಗೆ ಅಲೆಯುವಂತಿಲ್ಲ. ಮನೆಯಲ್ಲೇ ಕುಳಿತು ಮೊಬೈಲ್ ಮೂಲಕ ಆನ್ಲೈನ್ನಲ್ಲಿಯೇ ತಮ್ಮ ಖಾತೆ ಬದಲಾವಣೆ ಕೆಲಸಗಳನ್ನು ನಿರ್ವಹಿಸಬಹುದು ಎಂದು ಅವರು ವಿವರಿಸಿದರು. ಖಾತೆ ಬದಲಾವಣೆಗೆ ಸಂಬಂಧಿಸಿದಂತೆ ಯಾವ್ಯಾವ ಸೇವೆಗಳಿಗೆ ನೊಟೀಸ್ ನೀಡುವ ಅಗತ್ಯ ಇರುವುದಿಲ್ಲವೋ ಅವುಗಳನ್ನು 2024ರ ಎಪ್ರಿಲ್ ತಿಂಗಳಿನಿಂದಲೇ ಸ್ವಯಂ ಚಾಲಿತವಾಗಿ ವರ್ಗಾವಣೆಯಾಗುವಂತೆ ಮಾಡಲಾಗಿತ್ತು. ಹಕ್ಕು-ಬಾಧ್ಯತೆ ದಾಖಲಾತಿ, ಋಣ ತೆಗೆಯುವುದು, ಭೂ ಪರಿವರ್ತನೆ, ಪೋಡಿ, ಭೂಸ್ವಾಧೀನ, ನ್ಯಾಯಾಲಯ ಆದೇಶ, ನ್ಯಾಯಾಲಯ ತಡೆಯಾಜ್ಞೆ, ಸರಕಾರದ ಆದೇಶ, ಸಾಗುವಳಿ ಚೀಟಿ ನಮೂದು, ಪಹಣಿ ವರ್ಗಾವಣೆ ಸೇವೆಗಳನ್ನು ಈಗಾಗಲೇ ಸ್ವಯಂ ಚಾಲಿತಗೊಳಿಸಲಾಗಿತ್ತು. ಇಂತಹ ಪ್ರಕರಣಗಳು ತಿಂಗಳಿಗೆ ಸರಾಸರಿ 2.47 ಲಕ್ಷ ಖಾತೆ ಬದಲಾವಣೆಗಾಗಿ ಬರುತ್ತವೆ. ಈ ಪೈಕಿ 1.75 ಲಕ್ಷ ಖಾತೆ ಬದಲಾವಣೆಯನ್ನು ಈಗಾಗಲೇ ಸ್ಚಯಂ ಚಾಲಿತವಾಗಿ ನೆರವೇರಿಸಲಾಗಿದೆ. ಅಂದರೆ ಶೇ.65 ರಿಂದ ಶೇ.71 ರಷ್ಟು ಖಾತೆ ಬದಲಾವಣೆಯನ್ನು ಸ್ವಯಂ ಚಾಲಿತಗೊಳಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಟಾರಿಯಾ, ಕಂದಾಯ ಆಯುಕ್ತ ಮೀನಾ ನಾಗರಾಜ್ ಸೇರಿದಂತೆ ಪ್ರಮುಖರಿದ್ದರು. ‘ಶಾನುಭೋಗರ ಕೆಲಸ ಭೂಮಿ ತಂತ್ರಾಂಶ ಮಾಡುತ್ತಿದೆ’: ‘ಈ ಹಿಂದೆ ಶಾನುಭೋಗರು ಮಾಡುತ್ತಿದ್ದ ಕೆಲಸವನ್ನು ಈಗ ಭೂಮಿ ತಂತ್ರಾಂಶದ ಮೂಲಕ ಮಾಡಲಾಗುತ್ತಿದೆ. ಆದರೆ, ಇದಕ್ಕಾಗಿ ಜನ ಸಾಮಾನ್ಯರು ದಿನನಿತ್ಯ ಸರಕಾರಿ ಕಚೇರಿಗಳಿಗೆ ಅಲೆಯುವುದು ಸಾಮಾನ್ಯವಾಗಿತ್ತು. ಕೆಲ ಅಧಿಕಾರಿಗಳ ಸ್ವೇಚ್ಛಾಚಾರದಿಂದ, ಅವ್ಯವಸ್ಥೆ ಮತ್ತು ಮಧ್ಯವರ್ತಿಗಳ ಕಿರುಕುಳದಿಂದ ಸಾರ್ವಜನಿಕರು ಶೋಷಣೆಗೆ ಒಳಗಾಗುತ್ತಿದ್ದರು. ಇದರಿಂದ ಸರಕಾರಕ್ಕೂ ಕೆಟ್ಟ ಹೆಸರು ಉಂಟಾಗುತ್ತಿತ್ತು. ಪ್ರಸ್ತುತ ಸ್ವಯಂ ಚಾಲಿತ ಮ್ಯುಟೇಶನ್ಗೆ ಚಾಲನೆ ನೀಡಲಾಗಿದ್ದು, ಈ ಎಲ್ಲ ಸಮಸ್ಯೆಗಳಿಗೂ ಶಾಶ್ವತ ಪರಿಹಾರ ನೀಡಿದಂತಾಗಿದೆ’ -ಕೃಷ್ಣ ಭೈರೇಗೌಡ, ಕಂದಾಯ ಸಚಿವ
ಆಸ್ಟ್ರೇಲಿಯಾ ಮಹಿಳಾ ಕ್ರಿಕೆಟ್ ತಂಡದ ವಿರುದ್ಧದ ODI | ಮಂಡಿ ಗಾಯಕ್ಕೊಳಗಾದ ಹರ್ಮನ್ಪ್ರೀತ್ ಕೌರ್
ಹೊಸದಿಲ್ಲಿ, ಫೆ.24: ಬ್ರಿಸ್ಬೇನ್ನಲ್ಲಿ ನಡೆದ ಆತಿಥೇಯ ಆಸ್ಟ್ರೇಲಿಯಾ ಮಹಿಳಾ ಕ್ರಿಕೆಟ್ ತಂಡದ ವಿರುದ್ಧದ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಭಾರತೀಯ ಮಹಿಳಾ ತಂಡದ ನಾಯಕಿ ಹರ್ಮನ್ಪ್ರೀತ್ ಕೌರ್ ಮಂಡಿ ಗಾಯಕ್ಕೆ ಒಳಗಾಗಿದ್ದಾರೆ. ಎರಡನೇ ಇನಿಂಗ್ಸ್ನಲ್ಲಿ ಫೀಲ್ಡಿಂಗ್ ಮಾಡಲು ಅವರು ಮೈದಾನಕ್ಕಿಳಿಯಲಿಲ್ಲ. ಅವರ ಅನುಪಸ್ಥಿತಿಯಲ್ಲಿ ಉಪನಾಯಕಿ ಸ್ಮತಿ ಮಂಧಾನ ತಂಡವನ್ನು ಮುನ್ನಡೆಸಿದರು. ಭಾರತೀಯ ಇನಿಂಗ್ಸ್ನಲ್ಲಿ ಹರ್ಮನ್ಪ್ರೀತ್ 83 ಎಸೆತಗಳಲ್ಲಿ 53 ರನ್ ಗಳಿಸಿದರು.
Ranji Trophy Final | ಶುಭಮನ್ ಶತಕ; ಕರ್ನಾಟಕದ ವಿರುದ್ಧ ಜಮ್ಮು-ಕಾಶ್ಮೀರ 284/2
ಹುಬ್ಬಳ್ಳಿ, ಫೆ.24: ಶುಭಮನ್ ಪುಂಡಿರ್ ಅಜೇಯ ಶತಕ (117 ರನ್, 221 ಎಸೆತ, 12 ಬೌಂಡರಿ, 2 ಸಿಕ್ಸರ್) ಹಾಗೂ ಯುವ ಆಟಗಾರ ಯಾವರ್ ಹಸನ್ (88 ರನ್, 150 ಎಸೆತ, 13 ಬೌಂಡರಿ) ಮತ್ತು ಅಬ್ದುಲ್ ಸಮದ್ (ಔಟಾಗದೆ 52, 67 ಎಸೆತ, 5 ಬೌಂಡರಿ, 1 ಸಿಕ್ಸರ್) ಅರ್ಧಶತಕಗಳ ನೆರವಿನಿಂದ ಜಮ್ಮು-ಕಾಶ್ಮೀರ ಕ್ರಿಕೆಟ್ ತಂಡವು ರಣಜಿ ಟ್ರೋಫಿ ಟೂರ್ನಿಯ ಫೈನಲ್ ಪಂದ್ಯದ ಮೊದಲ ದಿನದಾಟದ ಅಂತ್ಯಕ್ಕೆ ಆತಿಥೇಯ ಕರ್ನಾಟಕ ತಂಡದ ವಿರುದ್ಧ 2 ವಿಕೆಟ್ ನಷ್ಟಕ್ಕೆ 284 ರನ್ ಗಳಿಸಿದೆ. ಮಂಗಳವಾರ ಮೊದಲ ದಿನದಾಟದ ಅಂತ್ಯಕ್ಕೆ 27ರ ವಯಸ್ಸಿನ ಎಡಗೈ ಬ್ಯಾಟರ್ ಶುಭಮ್ ಔಟಾಗದೆ 117 ರನ್ ಗಳಿಸಿದ್ದಾರೆ. 52 ರನ್ ಗಳಿಸಿದ ಅಬ್ದುಲ್ ಸಮದ್ ಅವರು ಶುಭಮ್ಗೆ ಉತ್ತಮ ಸಾಥ್ ನೀಡುತ್ತಿದ್ದಾರೆ. ನಾಯಕ ಪರಾಸ್ ಡೋಗ್ರಾ ಗಾಯಗೊಂಡು ನಿವೃತ್ತರಾದಾಗ ಶುಭಮ್ ಹಾಗೂ ಸಮದ್ ಜೋಡಿ ಮೂರನೇ ವಿಕೆಟ್ಗೆ 105 ರನ್ ಸೇರಿಸಿ ತಂಡವನ್ನು ಆಧರಿಸಿದರು. ಕೆಎಸ್ಸಿಎ ಹುಬ್ಬಳ್ಳಿ ಕ್ರಿಕೆಟ್ ಮೈದಾನ ಸಾಂಪ್ರದಾಯಿಕವಾಗಿ ಬ್ಯಾಟರ್ಗಳಿಗೆ ಸ್ನೇಹಿಯಾಗಿದ್ದು, ಟಾಸ್ ಜಯಿಸಿದ ಜಮ್ಮು-ಕಾಶ್ಮೀರ ತಂಡ ಮೊದಲು ಬ್ಯಾಟಿಂಗ್ ಆಯ್ದುಕೊಂಡಿತು. ಶುಭಮ್ ಹಾಗೂ ಹಸನ್ ಎಂಟು ಬಾರಿ ಚಾಂಪಿಯನ್ ಕರ್ನಾಟಕ ತಂಡದ ವಿರುದ್ಧ ಎರಡನೇ ವಿಕೆಟ್ಗೆ ನಿರ್ಣಾಯಕ 139 ರನ್ ಜೊತೆಯಾಟ ನಡೆಸಿದರು. ಶಿಖರ್ ಶೆಟ್ಟಿ ಬೌಲಿಂಗ್ನಲ್ಲಿ ಮಿಡ್ವಿಕೆಟ್ನತ್ತ ಸಿಕ್ಸರ್ ಸಿಡಿಸಿದ ಶುಭಮ್ ತನ್ನದೇ ಶೈಲಿಯಲ್ಲಿ ಶತಕ ಪೂರೈಸಿದರು. ತನ್ನ ಹೆಲ್ಮೆಟ್ ತೆಗೆದು, ಎರಡೂ ಕೈಗಳನ್ನು ಎತ್ತಿ ಶತಕದ ಸಂಭ್ರಮ ಆಚರಿಸಿದರು. ಪಂದ್ಯ ಮುಂದುವರಿದಂತೆ ಪಿಚ್ ವಿರೂಪಗೊಳ್ಳುವ ಸಾಧ್ಯತೆಯಿದೆ. ಹೀಗಾಗಿ ಟಾಸ್ ಜಯಿಸಿದ ಕಾಶ್ಮೀರ ತಂಡದ ನಾಯಕ ಪರಾಸ್ ಡೋಗ್ರಾ ಮೊದಲು ಬ್ಯಾಟಿಂಗ್ ಮಾಡುವ ಸೂಕ್ತ ನಿರ್ಧಾರ ತೆಗೆದುಕೊಂಡಿದ್ದರು. ಇದೇ ಮೊದಲ ಬಾರಿ ರಣಜಿ ಟೂರ್ನಿಯಲ್ಲಿ ಫೈನಲ್ ಪಂದ್ಯ ಆಡುತ್ತಿರುವ ಜಮ್ಮು-ಕಾಶ್ಮೀರ ತಂಡವು ಇಂದು ಕಾಮ್ರಾನ್ ಇಕ್ಬಾಲ್ (6 ರನ್) ವಿಕೆಟ್ ಬೇಗನೆ ಕಳೆದುಕೊಂಡಿತು. ಆರಂಭಿಕ ಆಟಗಾರ ಇಕ್ಬಾಲ್ ಅವರು ಪ್ರಸಿದ್ಧ ಕೃಷ್ಣ ಬೌಲಿಂಗ್ನಲ್ಲಿ ಸ್ಲಿಪ್ನಲ್ಲಿ ನಿಂತಿದ್ದ ಕೆ.ಎಲ್. ರಾಹುಲ್ಗೆ ಕ್ಯಾಚ್ ನೀಡಿ ನಿರ್ಗಮಿಸಿದರು. ಭೋಜನ ವಿರಾಮದ ವೇಳೆಗೆ ಜಮ್ಮು-ಕಾಶ್ಮೀರ ತಂಡವು ಒಂದು ವಿಕೆಟ್ ನಷ್ಟಕ್ಕೆ 104 ರನ್ ಗಳಿಸಿತು. ಹಸನ್ ಹಾಗೂ ಶುಭಮ್ ಮೊದಲು ಬ್ಯಾಟಿಂಗ್ ಮಾಡುವ ತಮ್ಮ ನಾಯಕನ ನಿರ್ಧಾರವನ್ನು ಸಮರ್ಥಿಸಿದರು. ಸವಾಲಿನ ವಾತಾವರಣದಲ್ಲಿ ಹಸನ್ ಹಾಗೂ ಶುಭಮ್ ಹೊಸ ಚೆಂಡನ್ನು ಸಮರ್ಥವಾಗಿ ಎದುರಿಸಿದರು. ಪ್ರತೀ ಓವರ್ಗೆ ಮೂರು ರನ್ ಗಳಿಸುತ್ತಾ ಸ್ಟ್ರೈಕ್ ಬದಲಿಸುತ್ತಾ ಜೊತೆಯಾಟವನ್ನು ವಿಸ್ತರಿಸಿದರು. ಮೂವರು ವೇಗಿಗಳಾದ ಪ್ರಸಿದ್ಧ ಕೃಷ್ಣ, ವಿಜಯಕುಮಾರ್, ವಿದ್ಯಾಧರ ಪಾಟೀಲ್ ಹಾಗೂ ಲೆಗ್ ಸ್ಪಿನ್ನರ್ ಶ್ರೇಯಸ್ ಗೋಪಾಲ್ ಶಿಸ್ತುಬದ್ಧ ಲೈನ್ ಹಾಗೂ ಲೆಂಗ್ತ್ನಲ್ಲಿ ಬೌಲಿಂಗ್ ಮಾಡಿದರು. ಈ ವರ್ಷದ ರಣಜಿ ಋತುವಿನಲ್ಲಿ ಗರಿಷ್ಠ ವಿಕೆಟ್ಗಳು (55) ಪಡೆದ ಸಾಧನೆಯೊಂದಿಗೆ ಫೈನಲ್ಗೆ ಪ್ರವೇಶಿಸಿದ್ದ ಗೋಪಾಲ್ ಎದುರಾಳಿ ಬ್ಯಾಟರ್ಗಳನ್ನು ಪದೇ ಪದೇ ಕಾಡಿದರು. 2025ರಲ್ಲಿ ಪ್ರಥಮ ದರ್ಜೆ ಕ್ರಿಕೆಟ್ಗೆ ಕಾಲಿಟ್ಟಿರುವ 22ರ ವಯಸ್ಸಿನ ಹಸನ್ ಅವರು ಅರ್ಧಶತಕ ಗಳಿಸದೆ 9 ಪಂದ್ಯಗಳನ್ನು ಕಳೆದಿದ್ದರು. ಫೈನಲ್ ಪಂದ್ಯದಲ್ಲಿ 150 ಎಸೆತಗಳಲ್ಲಿ 13 ಬೌಂಡರಿಗಳ ಸಹಿತ 88 ರನ್ ಗಳಿಸಿ ತಂಡಕ್ಕೆ ಆಸರೆಯಾಗಿದ್ದಾರೆ. ಪ್ರಸಿದ್ಧ ಕೃಷ್ಣಗೆ ವಿಕೆಟ್ ಒಪ್ಪಿಸಿದ ಹಸನ್ ಚೊಚ್ಚಲ ಶತಕದಿಂದ ವಂಚಿತರಾದರು. ಪ್ರಸಿದ್ಧ ಕೃಷ್ಣ ಎಸೆದ ಬೌನ್ಸರ್ ಒಂದು ಪರಾಸ್ ಡೋಗ್ರಾ ಅವರ ಕುತ್ತಿಗೆಗೆ ಅಪ್ಪಳಿಸಿತು. ಆಗ ಫಿಜಿಯೊರಿಂದ ಡೋಗ್ರಾ ಚಿಕಿತ್ಸೆ ಪಡೆದರು. ತಂಡದ ಸಿಬ್ಬಂದಿಯಿಂದ ಮತ್ತೊಮ್ಮೆ ತಪಾಸಣೆಗೆ ಒಳಗಾದ ಡೋಗ್ರಾ ಕೋಚ್ ಅಜಯ್ ಶರ್ಮಾ ಅವರ ಸೂಚನೆಯ ಮೇರೆಗೆ ಗಾಯಾಳು ನಿವೃತ್ತಿಯಾದರು. ಆಗ ಸಮದ್ ಅವರು ಶುಭಮ್ ಜೊತೆ ಕೈಜೋಡಿಸಿ ತಂಡದ ಮೊತ್ತವನ್ನು 284ಕ್ಕೆ ತಲುಪಿಸಿದರು. ಸಂಕ್ಷಿಪ್ತ ಸ್ಕೋರ್ ಜಮ್ಮು-ಕಾಶ್ಮೀರ: 87 ಓವರ್ಗಳಲ್ಲಿ 284/2 (ಶುಭಮ್ ಪುಂಡಿರ್ ಔಟಾಗದೆ 117, ಯಾವರ್ ಹಸನ್ 88, ಅಬ್ದುಲ್ ಸಮದ್ ಔಟಾಗದೆ 52, ಪ್ರಸಿದ್ಧ ಕೃಷ್ಣ 2-36)
ಬೆಂಗಳೂರು: ವಿವಿಧ ಕೈಗಾರಿಕಾ ವಲಯಗಳ ಭವಿಷ್ಯದ ಹಾದಿ ಹೇಗಿರಬೇಕು ಮತ್ತು ಸರಕಾರವು ಈ ನಿಟ್ಟಿನಲ್ಲಿ ತೆಗೆದುಕೊಳ್ಳಬೇಕಿರುವ ಕ್ರಮಗಳ ಸ್ವರೂಪ ಯಾವುದಾಗಿರಬೇಕು ಎಂದು ತಿಳಿದುಕೊಳ್ಳುವ ಉದ್ದೇಶದಿಂದ ಬೃಹತ್ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಏರೋಸ್ಪೇಸ್ ಮತ್ತು ರಕ್ಷಣೆ, ಮಶೀನ್ ಟೂಲ್ಸ್, ಆಟೋ/ಇ.ವಿ, ಮತ್ತು ಪರಿಸರಸ್ನೇಹಿ ಇಂಧನ ವಲಯಗಳ ವಿಷನ್ ಗ್ರೂಪ್ಗಳ ಸಭೆ ನಡೆಸಿದರು. ಮಂಗಳವಾರ ನಗರದ ಖನಿಜ ಭವನದಲ್ಲಿ ನಡೆದ ಸಭೆಗಳಲ್ಲಿ ಉದ್ಯಮಿಗಳು ಹಾಗೂ ಅವರ ಪ್ರತಿನಿಧಿಗಳು ಭಾಗವಹಿಸಿದ್ದರು. ಕೆಲವರು ವರ್ಚುವಲ್ ಮೂಲಕ ಭಾಗವಹಿಸಿದ್ದರು. ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್, ಆಯುಕ್ತೆ ಗುಂಜನ್ ಕೃಷ್ಣ, ಐಕೆಎಫ್ ಸಿಇಒ ಜೋತ್ಸ್ನಾ, ಉದ್ಯೋಗ ಮಿತ್ರ ವ್ಯವಸ್ಥಾಪಕ ನಿರ್ದೆಶಕ ದೊಡ್ಡ ಬಸವರಾಜು ಸೇರಿದಂತೆ ಮತ್ತಿತರರು ಪಾಲ್ಗೊಂಡಿದ್ದರು. ಈ ಬಗ್ಗೆ ಮಾತನಾಡಿದ ಸಚಿವ ಪಾಟೀಲ್, ಇಡೀ ದೇಶದ ವೈಮಾಂತರಿಕ್ಷ ಮತ್ತು ರಕ್ಷಣಾ ಉದ್ಯಮಗಳ ಕ್ಷೇತ್ರದಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ. ಜಪಾನಿನಲ್ಲಿ 2028ರ ಹೊತ್ತಿಗೆ ಸುಝುಕಿ ಮತ್ತು ಟೊಯೊಟಾ ಕಂಪನಿಗಳು ಏರಿಯಲ್ ಟ್ಯಾಕ್ಸಿ ಸೇವೆ ಆರಂಭಿಸುತ್ತಿವೆ. ಅದಕ್ಕೆ ಬೆಂಗಳೂರಿನ ಸಾಸ್ಮೋಸ್ ಕಂಪನಿಯೇ ವಿದ್ಯುತ್ ಸಾಧನ-ಸಲಕರಣೆಗಳನ್ನು ಪೂರೈಸುತ್ತಿದೆ. ನಮ್ಮಲ್ಲೂ `ಫ್ಲೈ-ಟ್ಯಾಕ್ಸಿ’ ಸೇವೆಗೆ ಸಂಬಂಧಿಸಿದಂತೆ ಸಮರ್ಪಕ ನೀತಿ ರೂಪಿಸಿ, ಇಲ್ಲೂ ಅಂತಹ ಸೇವೆಯನ್ನು ಆರಂಭಿಸಬಹುದು ಎಂದು ಉದ್ಯಮಿಗಳು ಹೇಳಿದ್ದಾರೆ. ಇದನ್ನು ಗಂಭೀರವಾಗಿ ಪರಿಶೀಲಿಸಲಾಗುವುದು’ ಎಂದರು. ವೈಮಾಂತರಿಕ್ಷ ಮತ್ತು ರಕ್ಷಣಾ ಕ್ಷೇತ್ರದ ಕೈಗಾರಿಕೆಗಳಿಗೆ ಅಗತ್ಯವಾದ ಪರೀಕ್ಷಾ ಕೇಂದ್ರ ಮತ್ತು ಕಾಮನ್ ಫೆಸಿಲಿಟಿ ಸೆಂಟರ್ ಸ್ಥಾಪಿಸಬೇಕೆಂಬ ವಿಚಾರವೂ ಸಭೆಯಲ್ಲಿ ಚರ್ಚೆಗೆ ಬಂತು. ಈ ಸೌಲಭ್ಯಗಳನ್ನು ಒದಗಿಸಲಾಗುವುದು. ನಾವು ಈ ಕ್ಷೇತ್ರಗಳ ಬೆಳವಣಿಗೆಗೆ ಅಗತ್ಯವಾದ ನೀಲನಕ್ಷೆ ತಯಾರಿಸಬೇಕೆಂಬ ಸಲಹೆ ಕೇಳಿಬಂದಿದೆ. ನಾವು ಈಗಾಗಲೇ ಬೆಂಗಳೂರು ಉತ್ತರ-ಕೋಲಾರ-ಚಿಕ್ಕಬಳ್ಳಾಪುರ ಮತ್ತು ಧಾರವಾಡ-ವಿಜಯಪುರ-ಬೆಳಗಾವಿ ರಕ್ಷಣಾ ಕಾರಿಡಾರ್ ಯೋಜನೆಗಳನ್ನು ಮಂಜೂರು ಮಾಡಬೇಕೆಂದು ಕೇಂದ್ರ ಸರಕಾರದ ಬಳಿ ಕೇಳಿದ್ದೇವೆ. ಇವುಗಳ ಜೊತೆಗೆ ಬೆಂಗಳೂರು ಮತ್ತು ಮೈಸೂರು ನಡುವೆ ಕೂಡ ಇಂತಹ ಕಾರಿಡಾರ್ ಬೆಳವಣಿಗೆಗೆ ಸದವಕಾಶ ಇದೆ ಎಂದು ಉದ್ಯಮಿಗಳು ಗಮನಕ್ಕೆ ತಂದಿದ್ದಾರೆ ಎಂದು ಅವರು ಹೇಳಿದರು. ಕರ್ನಾಟಕವು ರಕ್ಷಣಾ ಎಲೆಕ್ಟ್ರಾನಿಕ್ ಉತ್ಪನ್ನಗಳ ಉತ್ಪಾದನೆಯ ರಾಜಧಾನಿಯಾಗಬೇಕು. ಇದಕ್ಕಾಗಿ 200 ಎಕರೆಯಲ್ಲಿ ಪ್ರತ್ಯೇಕ ಪಾರ್ಕ್ ಸ್ಥಾಪಿಸಬೇಕು. ಇದೇ ರೀತಿಯಲ್ಲಿ 100 ಎಕರೆಯಲ್ಲಿ ಏವಿಯಾನಿಕ್ಸ್ ಮತ್ತು ಸೆನ್ಸರ್ ಪಾರ್ಕ್ ಆರಂಭಿಸಬೇಕು ಎಂಬ ಚಿಂತನೆಗಳ ಪ್ರಸ್ತಾಪವಾಗಿದೆ. ವಿಶೇಷ ಹೂಡಿಕೆ ವಲಯ ಅಸ್ತಿತ್ವಕ್ಕೆ ಬಂದಮೇಲೆ ಇವುಗಳನ್ನು ಜಾರಿಗೊಳಿಸಲಾಗುವುದು. ಇದಕ್ಕೆ ಬೇಕಾದ ಭೂಮಿಗೆ ಯಾವ ತೊಂದರೆಯೂ ಇಲ್ಲ ಎಂದು ಅವರು ನುಡಿದರು. ರಾಜ್ಯದಲ್ಲಿ ಮಶೀನ್ ಟೂಲ್ಸ್ ಕ್ಷೇತ್ರದಲ್ಲಿ ವಾರ್ಷಿಕ 36,500 ಕೋಟಿ ರೂ. ವಹಿವಾಟು ನಡೆದಿದ್ದು, ಒಳ್ಳೆಯ ಬೆಳವಣಿಗೆ ಇದೆ. ಇದರ ಉತ್ತೇಜನಕ್ಕೆಂದೇ ನಾವು ಬೃಹತ್ ಪ್ರಮಾಣದ ಪ್ರದರ್ಶನಮೇಳಗಳನ್ನು ನಡೆಸಿದ್ದೇವೆ. ಇದಾದ ಮೇಲೆ ಈ ಕ್ಷೇತ್ರದಲ್ಲಿ ವಿಪರೀತ ಬೇಡಿಕೆ ಕಂಡುಬರುತ್ತಿದೆ. ಬೃಹತ್ ಯಂತ್ರಗಳಿಗೆ ಬೇಕಾದ ಕಂಟ್ರೋಲ್ ಸಿಸ್ಟಂ ನಮ್ಮಲ್ಲೇ ಇರುವಂತೆ ನಾವು ಸುಧಾರಿಸಿಕೊಳ್ಳಬೇಕಿದೆ. ಇದಕ್ಕೆ ಬೇಕಾದ ಒಂದು ಪರೀಕ್ಷಾರ್ಥ ಘಟಕ ಈಗ ಬೆಂಗಳೂರಿನಲ್ಲಿದೆ. ಮತ್ತೊಂದು ಘಟಕವನ್ನು ತುಮಕೂರಿನಲ್ಲಿ ತೆರೆಯಲಾಗುವುದು. ಕೈಗಾರಿಕಾ ಪ್ರದೇಶಗಳಲ್ಲಿ ವೃತ್ತಿ ತರಬೇತಿ ಸಂಸ್ಥೆಗಳನ್ನು ಹೆಚ್ಚು ಮಾಡುವ ಆಲೋಚನೆ ಇದೆ ಎಂದು ಪಾಟೀಲ ತಿಳಿಸಿದರು. ಆಟೋ ಮತ್ತು ಇ.ವಿ. ವಲಯದಲ್ಲಿ ಡ್ರೈಪೋರ್ಟ್ ಜಾಲದ ಅಗತ್ಯವಿದೆ ಎಂದು ವಿಷನ್ ಗ್ರೂಪ್ ಸದಸ್ಯರು ಗಮನಕ್ಕೆ ತಂದಿದ್ದಾರೆ. ಇ.ವಿ.ವಾಹನಗಳ ಚಾರ್ಜಿಂಗ್ ಕೇಂದ್ರಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ತೆರೆಯಲಾಗುವುದು. ಈಗ ಟಾಟಾ ಸಮೂಹದವರು ಧಾರವಾಡದಲ್ಲಿ ಇ.ವಿ. ಬಸ್ಗಳನ್ನು ತಯಾರಿಸುತ್ತಿದ್ದು, ಇಲ್ಲಿಂದಲೇ ದೇಶದಾದ್ಯಂತ ಪೂರೈಸುತ್ತಿದ್ದಾರೆ. ಈಗ ಅದೇ ಸಮೂಹವು ಮಿನಿ ಎಸ್ಕವೇಟರ್ ಉತ್ಪಾದನೆಗೆ ಸಜ್ಜಾಗಿದೆ. ಇದರ ರಫ್ತಿಗೆ ಸೂಕ್ತ ವ್ಯವಸ್ಥೆ ಅಭಿವೃದ್ಧಿಪಡಿಸಲಾಗುವುದು ಎಂದು ಅವರು ಭರವಸೆ ನೀಡಿದ್ದಾರೆ. ಜತೆಗೆ ದ್ವಿಚಕ್ರ ಇ.ವಿ. ವಾಹನಗಳ ಪರೀಕ್ಷಾ ಘಟಕ ಅಗತ್ಯವೆಂದು ಹೇಳಿದ್ದು, ಇವುಗಳನ್ನು ಪರಿಶೀಲಿಸಲಾಗುವುದು ಎಂದು ಅವರು ವಿವರಿಸಿದರು. ಹಸಿರು ಇಂಧನ ಕ್ಷೇತ್ರದಲ್ಲಿ ಬ್ಯಾಟರಿಗಳಲ್ಲಿ ವಿದ್ಯುತ್ ಸಂಗ್ರಹಕ್ಕೆ ಸಮರ್ಪಕ ನೀತಿ ಬೇಕೆಂದು ಹೇಳಿದ್ದಾರೆ. ಡೇಟಾ ಸೆಂಟರುಗಳ ಸ್ಥಾಪನೆಯ ಅಗತ್ಯದ ಬಗ್ಗೆಯೂ ಪ್ರಸ್ತಾಪಿಸಿದ್ದಾರೆ. ಇವೆಲ್ಲವನ್ನೂ ಕುರಿತು ಸರಕಾರ ಗಂಭೀರವಾಗಿ ಆಲೋಚಿಸಿ, ಸಕಾರಾತ್ಮಕವಾಗಿ ಸ್ಪಂದಿಸಲಿದೆ ಎಂದು ಅವರು ಹೇಳಿದರು.
ಅಮೆರಿಕ ವಿರುದ್ಧ ಪರೋಕ್ಷವಾಗಿ ಗುಡುಗಿದ ಇರಾನ್, ಕೆಲವೇ ದಿನಗಳಲ್ಲಿ ಯುದ್ಧ ಶುರುವಾಗುವ ಭೀತಿ | US Military
ಮಧ್ಯಪ್ರಾಚ್ಯ ಭಾಗದಲ್ಲಿ ಯಾವುದೇ ಕಾರಣಕ್ಕೂ ನೆಮ್ಮದಿ ನೆಲೆಸುವ ಸಾಧ್ಯತೆ ಈಗಿನ ವಾತಾವರಣಕ್ಕೆ ಕಾಣುತ್ತಿಲ್ಲ. ಒಂದು ಕಡೆ ಅಮೆರಿಕ ಸಂಧಾನ ಪ್ರಕ್ರಿಯೆ ನಡೆಸಲು ಸಂಪೂರ್ಣವಾಗಿ ಸಿದ್ಧವಿಲ್ಲ, ಆ ಕಡೆ ಇರಾನ್ ಕೂಡ ತಲೆಬಾಗಿ ನಡೆಯಲು ಸಿದ್ಧವಿಲ್ಲ. ಇಬ್ಬರೂ ಹೀಗೆ ಬಡಿದಾಡುವ ಸಮಯದಲ್ಲೇ ಮತ್ತೆ ಮತ್ತೆ ಯುದ್ಧದ ಆತಂಕ ಮನೆ ಮಾಡುತ್ತಲೇ ಇದೆ. ಇನ್ನೊಂದು ಕಡೆ ಇರಾನ್ ನೆಲದಲ್ಲಿ ಯಾರೂ
ಇರಾನ್–ಅಮೆರಿಕ ಯುದ್ಧದಲ್ಲಿ ಹಿಜ್ಬುಲ್ಲಾ ಪ್ರವೇಶಿಸಿದರೆ ದಾಳಿ: ಲೆಬನಾನ್ ಗೆ ಇಸ್ರೇಲ್ ಎಚ್ಚರಿಕೆ
ಟೆಲ್ ಅವೀವ್, ಫೆ.24: ಇರಾನ್ ಮತ್ತು ಅಮೆರಿಕ ನಡುವೆ ನಡೆಯುವ ಯಾವುದೇ ಯುದ್ಧದಲ್ಲಿ ಹಿಜ್ಬುಲ್ಲಾ ತೊಡಗಿಸಿಕೊಂಡರೆ, ವಿಮಾನ ನಿಲ್ದಾಣ ಸೇರಿದಂತೆ ಲೆಬನಾನ್ ನ ನಾಗರಿಕ ಮೂಲಸೌಕರ್ಯಗಳನ್ನು ಗುರಿಯಾಗಿಸಿ ದಾಳಿ ನಡೆಸುವುದಾಗಿ ಇಸ್ರೇಲ್ ಲೆಬನಾನ್ಗೆ ಮಂಗಳವಾರ ಎಚ್ಚರಿಕೆ ನೀಡಿರುವುದಾಗಿ ವರದಿಯಾಗಿದೆ. ಈ ಮಧ್ಯೆ, ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಲೆಬನಾನ್ ಪ್ರಧಾನಿ ನವಾಫ್ ಸಲಾಮ್, ‘ಗಾಝಾದ ಸಂಘರ್ಷ ಲೆಬನಾನ್ ಮೇಲೆ ದೊಡ್ಡ ವೆಚ್ಚವನ್ನು ವಿಧಿಸಿದೆ. ನಮ್ಮನ್ನು ಮತ್ತೊಂದು ಸಾಹಸಕ್ಕೆ ಎಳೆಯಬಾರದು’ ಎಂದು ಹೇಳಿದ್ದಾರೆ.
ವಾಷಿಂಗ್ಟನ್, ಫೆ.24: ಅಮೆರಿಕದ ಸುಂಕ ಮತ್ತು ಗಡಿರಕ್ಷಣಾ ಇಲಾಖೆ ಹೊಸ 10% ಜಾಗತಿಕ ಸುಂಕವನ್ನು ಜಾರಿಗೊಳಿಸಿದ್ದು, ಈ ದರವು ಅಮೆರಿಕ ಅಧ್ಯಕ್ಷ ಟ್ರಂಪ್ ಈ ಹಿಂದೆ ಘೋಷಿಸಿದ್ದ 15%ಕ್ಕಿಂತ ಕಡಿಮೆಯಾಗಿದೆ. ಮಂಗಳವಾರ ಬೆಳಿಗ್ಗೆಯಿಂದ ಐಇಇಪಿಎ ಕಾಯ್ದೆಯಡಿ ತೆರಿಗೆ ಸಂಗ್ರಹಿಸುವುದನ್ನು ಟ್ರಂಪ್ ಆಡಳಿತ ನಿಲ್ಲಿಸಿದೆ. ಇದೇ ಸಮಯದಲ್ಲಿ, ವ್ಯಾಪಾರ ಕಾಯ್ದೆಯ ಸೆಕ್ಷನ್ 122ರಡಿ ಹೊಸ 10% ಜಾಗತಿಕ ಸುಂಕವನ್ನು ವಿಧಿಸಲಾಗಿದೆ. ಈ ಕ್ರಮವು 150 ದಿನಗಳವರೆಗೆ ಜಾರಿಯಲ್ಲಿರಲು ಸೆಕ್ಷನ್ 122ರಡಿ ಅವಕಾಶವಿದೆ ಎಂದು ಇಲಾಖೆಯ ಹೇಳಿಕೆ ತಿಳಿಸಿದೆ. 15% ಸುಂಕ ಮುಂದಿನ ದಿನಗಳಲ್ಲಿ ಜಾರಿಗೆ ಬರಲಿದೆ ಎಂದು ಶ್ವೇತಭವನದ ಅಧಿಕಾರಿಗಳನ್ನು ಉಲ್ಲೇಖಿಸಿ ‘ದಿ ಫೈನಾನ್ಶಿಯಲ್ ಟೈಮ್ಸ್’ ವರದಿ ಮಾಡಿದೆ.
ಪಾಕಿಸ್ತಾನ ಬುಡಕ್ಕೆ ಬೆಂಕಿ ಇಟ್ಟ ಗಡಿಭಾಗ, ಮುಂದೆ ಇದೆ ಮಾರಿಹಬ್ಬ ಅಂತಿದ್ದಾರೆ ತಜ್ಞರು | Pakistan Military
ಪಾಕಿಸ್ತಾನ ತಾನು ಮಾಡಿರುವ ತಪ್ಪಿಗೆ ಏನು ಎದುರಿಸಬೇಕೋ ಅದನ್ನೇ ಈಗ ಎದುರಿಸುತ್ತಿದ್ದು, ಸಾಲು ಸಾಲು ಸಮಸ್ಯೆಗಳು ಇದೀಗ ಪಾಕಿಸ್ತಾನಕ್ಕೆ ಎದುರಾಗುತ್ತಿದೆ. ಅದರಲ್ಲೂ ಗಡಿ ಭಾಗದಲ್ಲಿ ಪಾಕಿಸ್ತಾನ ಸೇನೆಗೆ ಈಗ ದೊಡ್ಡ ಸವಾಲು ಎದುರಾಗಿದೆ. ಗಡಿ ಭಾಗದಲ್ಲಿ ಪಾಕಿಸ್ತಾನಕ್ಕೆ ಉಗ್ರರು ದೊಡ್ಡ ಸಮಸ್ಯೆ ಉಂಟುಮಾಡುತ್ತಾ ಇದ್ದಾರೆ. ಈ ಕಾರಣಕ್ಕೆ ಕಾರ್ಯಾಚರಣೆ ನೆಪದಲ್ಲಿ ಅಫ್ಘಾನಿಸ್ತಾನ ನೆಲದ ಮೇಲೆ ಪಾಕ್ ಸೇನೆ
ಕಾರು ಹರಿಸಿ ವ್ಯಕ್ತಿಯೋರ್ವನ ಹತ್ಯೆ ಆರೋಪ: ಡಿಎಂಕೆ ನಾಯಕನ ಪುತ್ರನ ಬಂಧನ
ಗುವಾಹಟಿ, ಫೆ. 24: ರಸ್ತೆಯಲ್ಲಿ ದ್ವಿಚಕ್ರ ವಾಹನ ನಿಲ್ಲಿಸಿದ ಕುರಿತ ವಾಗ್ವಾದದ ಹಿನ್ನೆಲೆಯಲ್ಲಿ ಒಂದೇ ಕುಟುಂಬದ ನಾಲ್ವರ ಮೇಲೆ ಕಾರು ಹರಿಸಿ, ಒಬ್ಬರನ್ನು ಹತ್ಯೆಗೈದ ಆರೋಪದಲ್ಲಿ ತಮಿಳುನಾಡಿನ ಡಿಎಂಕೆ ನಾಯಕರೊಬ್ಬರ ಪುತ್ರನನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಆದಿತ್ಯ (20)ಎಂದು ಗುರುತಿಸಲಾಗಿದೆ. ಘಟನೆಯ ಸಂದರ್ಭ ಕಾರಿನಲ್ಲಿದ್ದ ಆತನ ಗೆಳೆಯರಾದ ಋತಿಕ್ ಕುಮಾರ್ ಹಾಗೂ ಹರೀಶ್ನನ್ನು ಕೂಡ ಬಂಧಿಸಲಾಗಿದೆ. ಘಟನೆಯಲ್ಲಿ ಮೃತಪಟ್ಟ ವ್ಯಕ್ತಿಯನ್ನು ಶಿವಮೂರ್ತಿ ಎಂದು ಗುರುತಿಸಲಾಗಿದೆ. ಇವರು ಕೃಷ್ಣ ಗಿರಿ ಜಿಲ್ಲೆಯ ನಿವಾಸಿ ಹಾಗೂ ಲೇಬರ್ ಇನ್ಸ್ಪೆಕ್ಟರ್. ಪೊಲೀಸರ ಪ್ರಕಾರ, ಆದಿತ್ಯ ಕಾರು ಚಲಾಯಿಸಿಕೊಂಡು ಹೋಗುತ್ತಿದ್ದ ಸಂದರ್ಭ ಶಿವಮೂರ್ತಿ ಅವರ ಮನೆ ಎದುರು ದ್ವಿಚಕ್ರ ವಾಹನ ನಿಲ್ಲಿಸಿರುವುದು ಕಂಡು ಬಂದಿದೆ. ಇದು ಆದಿತ್ಯನಿಗೆ ಸಂಚರಿಸುವುದಕ್ಕೆ ಅಡ್ಡಿ ಉಂಟು ಮಾಡಿದೆ. ಈ ಹಿನ್ನೆಲೆಯಲ್ಲಿ ಆತ ದ್ವಿಚಕ್ರ ವಾಹನಕ್ಕೆ ಢಿಕ್ಕಿ ಹೊಡೆದಿದ್ದಾನೆ. ಇದರಿಂದ ದ್ವಿಚಕ್ರ ವಾಹನಕ್ಕೆ ಹಾನಿ ಉಂಟಾಗಿದೆ. ಈ ಕುರಿತು ವಾಗ್ವಾದ ಆರಂಭವಾದಾಗ ಆದಿತ್ಯ ಕಾರನ್ನು ಶಿವಮೂರ್ತಿ, ಅವರ ಪುತ್ರ ಕಿರುಬಾಕರನ್, ಸೊಸೆ ಅಮ್ಸವಲ್ಲಿ ಹಾಗೂ ಮೊಮ್ಮಗಳು ನಿಲಾನಿ ಮೇಲೆ ಹರಿಸಿದ್ದಾನೆ. ಇದರಿಂದ ಶಿವಮೂರ್ತಿ ಅವರು ಗಂಭೀರ ಗಾಯಗೊಂಡು ಮೃತಪಟ್ಟರು. ಈ ಘಟನೆಗೆ ಸಂಬಂಧಿಸಿ ಹತ್ಯೆ ಪ್ರಕರಣ ದಾಖಲಿಸಲಾಗಿದೆ ಹಾಗೂ ಮೂವರನ್ನು ಬಂಧಿಸಲಾಗಿದೆ. ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬೀದರ್ ನ ಕೂಲಿ ಕಾರ್ಮಿಕನ ಮಗನಿಗೆ 9 ಚಿನ್ನದ ಪದಕ
ಬೀದರ್ : ತಾಲೂಕಿನ ಮರಕುಂದಾ ಗ್ರಾಮದ ಕೂಲಿ ಕಾರ್ಮಿಕರಾದ ವಿಜಯಕುಮಾರ್ ಹಾಗೂ ಪ್ರಭಾವತಿ ದಂಪತಿಗಳ ಮಗ ರಾಹುಲ್ ಅವರು ಮಂಗಳವಾರ ನಡೆದ ಗುಲ್ಬರ್ಗಾ ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ 9 ಚಿನ್ನದ ಪದಕ ಗಳಿಸಿದ್ದಾರೆ. ರಾಹುಲ್ ಗುಲ್ಬರ್ಗಾ ವಿಶ್ವವಿದ್ಯಾಲಯದಲ್ಲಿ ಪ್ರಾಣಿಶಾಸ್ತ್ರ ವಿಭಾಗದಲ್ಲಿ ಎಂ.ಎಸ್ಸಿ ಸ್ನಾತಕೋತ್ತರ ಪದವಿ ಮಾಡಿದ್ದರು. ಇವರು ಎಂ.ಎಸ್ಸಿ ಸ್ನಾತಕೋತ್ತರ ಪದವಿಯಲ್ಲಿ ಶೇ. 87 ರಷ್ಟು ಅಂಕ ಪಡೆದು, 9 ಚಿನ್ನದ ಪದಕ ತನ್ನದಾಗಿಸಿಕೊಂಡಿದ್ದು, ಗುಲ್ಬರ್ಗಾ ವಿಶ್ವವಿದ್ಯಾಲಯಕ್ಕೆ ಎರಡನೇ ಸ್ಥಾನ ಪಡೆದಿದ್ದಾರೆ. ಸದ್ಯಕ್ಕೆ ರಾಹುಲ್ ಬೀದರ್ ನ ಖಾಸಗಿ ಪಿಯುಸಿ ಕಾಲೇಜಿನಲ್ಲಿ ತಾತ್ಕಾಲಿಕವಾಗಿ ಲೆಕ್ಚರರ್ ಆಗಿ ವಿದ್ಯಾರ್ಥಿಗಳಿಗೆ ಪಾಠ ಮಾಡುತ್ತಿದ್ದಾರೆ. 9 ಚಿನ್ನದ ಪದಕ ಬಂದುದ್ದರಿಂದ ಅತೀವ ಸಂತೋಷವಾಗಿದೆ. ಓದಿನಿಂದ ಎಲ್ಲವನ್ನು ಸಾಧಿಸಬಹುದು ಎಂದು ಹೇಳುವ ರಾಹುಲ್, ಮುಂದಿನ ದಿನಗಳಲ್ಲಿ ಪಿಎಚ್ಡಿ ಮಾಡುತ್ತೇನೆ ಎನ್ನುತ್ತಾರೆ. ರಾಹುಲ್ ಅವರ ತಂದೆ ವಿಜಯಕುಮಾರ್ ಅವರು ತಮ್ಮ ಸ್ವಂತ ಊರಲ್ಲಿಯೇ ಕೂಲಿ ಕೆಲಸ ಮಾಡಿಕೊಂಡಿದ್ದು, ಮಕ್ಕಳಿಗೆ ಒಳ್ಳೆಯ ಶಿಕ್ಷಣ ಕೊಡಿಸುತ್ತಿದ್ದಾರೆ. ರಾಹುಲ್ ನಿಗೆ ಚಿನ್ನದ ಪದಕ ಬಂದಿದಕ್ಕಾಗಿ ಆತನ ಪೋಷಕರು ಹರ್ಷ ವ್ಯಕ್ತಪಡಿಸಿದ್ದಾರೆ.
ಅಫ್ಘಾನಿಸ್ತಾನದ ಮೇಲೆ ಪಾಕ್ ವೈಮಾನಿಕ ದಾಳಿ | ನಾಗರಿಕರ ಪ್ರಾಣಹಾನಿ ಬಗ್ಗೆ ವಿಶ್ವಸಂಸ್ಥೆ ಕಳವಳ
ಇಸ್ಲಮಾಬಾದ್, ಫೆ.24: ತೆಹ್ರೀಕೆ ತಾಲಿಬಾನ್ ಪಾಕಿಸ್ತಾನ್(ಟಿಟಿಪಿ) ಗುಂಪನ್ನು ಉದ್ದೇಶಿಸಿ ಅಫ್ಘಾನಿಸ್ತಾನದ ಗಡಿಪ್ರದೇಶದಲ್ಲಿ ಪಾಕಿಸ್ತಾನ ನಡೆಸಿದ್ದ ವೈಮಾನಿಕ ದಾಳಿ ಗುಪ್ತಚರ ವೈಫಲ್ಯದಿಂದ ಗುರಿತಪ್ಪಿ ನಾಗರಿಕರ ಸಾವು-ನೋವಿಗೆ ಕಾರಣವಾಗಿದೆ ಎಂದು ಉನ್ನತ ಮೂಲಗಳನ್ನು ಉಲ್ಲೇಖಿಸಿ ಸಿಎನ್ಎನ್-ನ್ಯೂಸ್ 18 ವರದಿ ಮಾಡಿದೆ. ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಪ್ರತಿನಿಧಿ ಸಹಿತ ಅಂತಾರಾಷ್ಟ್ರೀಯ ಸಂಘಟನೆಗಳು ಘಟನೆಯ ಬಗ್ಗೆ ಕಳವಳ ವ್ಯಕ್ತಪಡಿಸಿವೆ. ದಾಳಿಯಲ್ಲಿ ಟಿಟಿಪಿಯ ಯಾವುದೇ ಉನ್ನತ ಕಮಾಂಡರ್ ಅಥವಾ `ಮೋಸ್ಟ್ ವಾಂಟೆಡ್' ವ್ಯಕ್ತಿ ಮೃತಪಟ್ಟಿಲ್ಲ. ಈ ದಾಳಿಯಲ್ಲಿ ಯಾವುದೇ ವಸ್ತುನಿಷ್ಠ ಗುರಿಯನ್ನು ಸಾಧಿಸಲು ಪಾಕಿಸ್ತಾನ ವಿಫಲವಾಗಿದ್ದು ಕಾರ್ಯಾಚರಣೆಯು ಸಂಪೂರ್ಣ ಗುಪ್ತಚರ ವೈಫಲ್ಯವಾಗಿದೆ. ಗಡಿಯಾಚೆಗಿನ ಕಾರ್ಯಾಚರಣೆಯಲ್ಲಿ ಟಿಟಿಪಿಯ ಉನ್ನತ ನಾಯಕತ್ವವನ್ನು ತೊಡೆದುಹಾಕುವಲ್ಲಿ ಇದು ಪಾಕಿಸ್ತಾನದ ಎರಡನೇ ವೈಫಲ್ಯವಾಗಿದೆ ಎಂದು ಮೂಲಗಳು ಹೇಳಿವೆ. ಟಿಟಿಪಿ ಮುಖ್ಯಸ್ಥ ನೂರ್ ವಾಲಿ ಮೆಷುದ್ನನ್ನು ಗುರಿಯಾಗಿಸಿ ದಾಳಿ ನಡೆಸಿರುವುದಾಗಿ ಪಾಕ್ ಹೇಳಿದೆ, ಆದರೆ ಮೆಷುದ್ ಹತನಾಗಿಲ್ಲ. ಆದರೆ ಮಹಿಳೆಯರು, ಮಕ್ಕಳು ಸೇರಿದಂತೆ ವ್ಯಾಪಕ ಸಂಖ್ಯೆಯಲ್ಲಿ ನಾಗರಿಕರ ಸಾವು-ನೋವು ಸಂಭವಿಸಿರುವುದಾಗಿ ವರದಿಯಾಗಿದೆ. ಈ ಬಗ್ಗೆ ಅಫ್ಘಾನಿಸ್ತಾನದಲ್ಲಿ ವಿಶ್ವಸಂಸ್ಥೆಯ ವಿಶೇಷ ಮಾನವ ಹಕ್ಕುಗಳ ಪ್ರತಿನಿಧಿ ರಿಚರ್ಡ್ ಬೆನ್ನೆಟ್ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. `ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನ ನಡುವೆ ಸಂಘರ್ಷ ಮರುಕಳಿಸಿದ ಬಳಿಕ ನಡೆದ ವೈಮಾನಿಕ ದಾಳಿಯಲ್ಲಿ ಮಕ್ಕಳು ಸೇರಿದಂತೆ ಅಪಾರ ಸಂಖ್ಯೆಯ ನಾಗರಿಕರ ಸಾವು-ನೋವಿನ ಬಗ್ಗೆ ಕಳವಳಗೊಂಡಿದ್ದೇನೆ. ಸಂಯಮ ವಹಿಸಿ ನಾಗರಿಕರ ರಕ್ಷಣೆಗೆ ಆದ್ಯತೆ ನೀಡುವಂತೆ ಎರಡೂ ಕಡೆಯವರನ್ನು ಆಗ್ರಹಿಸುತ್ತೇವೆ' ಎಂದವರು `ಎಕ್ಸ್'ನಲ್ಲಿ ಪೋಸ್ಟ್ ಮಾಡಿದ್ದಾರೆ.
Raichur | ದೈಹಿಕ, ಮಾನಸಿಕ ಸದೃಢತೆಗೆ ನೌಕರರಿಗೆ ಕ್ರೀಡೆಗಳು ಅತ್ಯಗತ್ಯ: ಸಿಇಓ ಈಶ್ವರ ಕುಮಾರ್ ಕಾಂದೂ
ಕ್ರೀಡಾ, ಸಾಂಸ್ಕೃತಿಕ ಉತ್ಸವಕ್ಕೆ ಚಾಲನೆ
ಯಾವುದೇ ಸಂಭಾವ್ಯ ದಾಳಿ ಎದುರಿಸಲು ಸಶಸ್ತ್ರ ಪಡೆಗಳು ಸನ್ನದ್ದವಾಗಿವೆ : ಇರಾನ್
ಟೆಹ್ರಾನ್, ಫೆ.24: ಜಿನೆವಾದಲ್ಲಿ ಫೆಬ್ರವರಿ 26ರಂದು ಇರಾನ್ ಮತ್ತು ಅಮೆರಿಕ ನಡುವೆ ಮೂರನೇ ಸುತ್ತಿನ ಪರಮಾಣು ಮಾತುಕತೆ ನಿಗದಿಯಾಗಿರುವಂತೆಯೇ, ಯಾವುದೇ ಸಂಭಾವ್ಯ ಸನ್ನಿವೇಶಕ್ಕೆ ಸಿದ್ದವಾಗಿರುವುದಾಗಿ ಇರಾನ್ ಹೇಳಿದೆ. ಅಮೆರಿಕದ ಕೃತ್ಯಗಳನ್ನು ನಿಕಟವಾಗಿ ಗಮನಿಸುವುದನ್ನು ಮುಂದುವರಿಸುತ್ತೇವೆ ಮತ್ತು ಯಾವುದೇ ಸಂಭಾವ್ಯ ಸನ್ನಿವೇಶಕ್ಕೆ ಎಲ್ಲಾ ಅಗತ್ಯದ ಸಿದ್ದತೆಗಳನ್ನು ನಡೆಸಿದ್ದೇವೆ ಎಂದು ಇರಾನ್ ಅಧ್ಯಕ್ಷ ಮಸೂದ್ ಪೆಝೆಷ್ಕಿಯಾನ್ ಹೇಳಿದ್ದಾರೆ. ಸಂಘರ್ಷವನ್ನು ತಡೆಗಟ್ಟಲು ಇರಾನ್ ಯುದ್ದಕ್ಕೆ ಸಂಪೂರ್ಣವಾಗಿ ಸಿದ್ದವಾಗಿರಬೇಕು ಎಂದು ಇರಾನ್ ವಿದೇಶಾಂಗ ಸಚಿವಾಲಯದ ಮಾಜಿ ವಕ್ತಾರ ರಮಿನ್ ಮೆಹ್ಮನ್ಪರಾಸ್ಟ್ ಹೇಳಿದ್ದಾರೆ. ಗೌರವಾನ್ವಿತ ಮತ್ತು ನ್ಯಾಯಯುತ ಒಪ್ಪಂದಕ್ಕೆ ಇರಾನ್ ಮುಕ್ತವಾಗಿದೆ. ಚೆಂಡು ಅಮೆರಿಕನ್ನರ ಅಂಗಳದಲ್ಲಿದೆ. ಆದರೆ ಮಿಲಿಟರಿ ಬೆದರಿಕೆಗಳ ಮೂಲಕ ಟೆಹ್ರಾನ್ ಅನ್ನು ರಿಯಾಯಿತಿಗೆ ಒಪ್ಪಿಸಬಹುದು ಎಂಬ ಕಲ್ಪನೆ ಸರಿಯಲ್ಲ. ಯುದ್ದ ನಡೆಯಬಾರದು ಎಂದು ನಾವು ಬಯಸಿದರೂ, ಯುದ್ದಕ್ಕೆ 100% ಸಿದ್ಧವಾಗಿರಬೇಕು. ದೇಶದ ಸಶಸ್ತ್ರ ಪಡೆಗಳು ಅತ್ಯುನ್ನತ ಮಟ್ಟದಲ್ಲಿ ಸನ್ನದ್ದವಾಗಿವೆ ಎಂದವರು ಹೇಳಿರುವುದಾಗಿ ಇರಾನ್ನ ಮಾಧ್ಯಮಗಳು ವರದಿ ಮಾಡಿವೆ. ಈ ಮಧ್ಯೆ, ಇರಾನ್ ಮತ್ತು ಅಮೆರಿಕ ನಡುವಿನ ಉದ್ವಿಗ್ನತೆ ಉಲ್ಬಣಿಸುತ್ತಿರುವ ಹಿನ್ನೆಲೆಯಲ್ಲಿ ಲೆಬನಾನ್ನಲ್ಲಿರುವ ಅಮೆರಿಕ ರಾಯಭಾರಿ ಕಚೇರಿಯ `ತುರ್ತು ಅಗತ್ಯವಿಲ್ಲದ ಸಿಬ್ಬಂದಿ'ಗಳನ್ನು ತಕ್ಷಣ ತೆರವುಗೊಳಿಸಲು ಅಮೆರಿಕಾದ ವಿದೇಶಾಂಗ ಇಲಾಖೆ ಸೂಚಿಸಿರುವುದಾಗಿ ವರದಿಯಾಗಿದೆ. ಇರಾನ್ ಮೇಲೆ ದಾಳಿ ವಿರುದ್ದ ಉನ್ನತ ಕಮಾಂಡರ್ ಸಲಹೆ ನೀಡಿದ್ದಾರೆ ಎಂಬ ವರದಿ ತಿರಸ್ಕರಿಸಿದ ಟ್ರಂಪ್ ಇರಾನ್ನೊಂದಿಗೆ ಯುದ್ದದ ವಿರುದ್ದ ಅಮೆರಿಕದ ಉನ್ನತ ಕಮಾಂಡರ್ ಜ. ಡೇನಿಯಲ್ ಕೈನ್ ಎಚ್ಚರಿಕೆ ನೀಡಿದ್ದಾರೆ ಎಂಬ ವರದಿಯನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿರಸ್ಕರಿಸಿದ್ದಾರೆ. `ಈ ವರದಿಗಳು 100% ತಪ್ಪು ಮತ್ತು ಜ. ಕೈನ್ ಅವರ ಅಗಾಧ ಜ್ಞಾನ ಸಂಪತ್ತಿಗೆ ಅಗೌರವ ತೋರುತ್ತವೆ. ಅಮೆರಿಕ ಯುದ್ದವನ್ನು ಸುಲಭದಲ್ಲಿ ಗೆಲ್ಲಬಹುದು. ಆದರೆ ನಮ್ಮೆಲ್ಲರಂತೆಯೇ ಜ. ಕೈನ್ ಕೂಡಾ ಯುದ್ದವನ್ನು ಬಯಸುವುದಿಲ್ಲ. ಆದರೆ ಒಂದು ವೇಳೆ ಇರಾನ್ ವಿರುದ್ದ ಮಿಲಿಟರಿ ಕಾರ್ಯಾಚರಣೆಯ ನಿರ್ಧಾರ ಕೈಗೊಂಡರೆ ಯುದ್ದವನ್ನು ಸುಲಭದಲ್ಲಿ ಗೆಲ್ಲಬಹುದು ಎಂಬುದು ಜ. ಕೈನ್ ಅವರ ಅಭಿಪ್ರಾಯವಾಗಿದೆ' ಎಂದು ಟ್ರಂಪ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ. ಜ. ಕೈನ್ ಅವರು ಇರಾನ್ ವಿರುದ್ದ ಏನು ಮಾಡಬಾರದು ಎಂಬ ಬಗ್ಗೆ ಮಾತನಾಡುವುದಿಲ್ಲ. ಹೇಗೆ ಗೆಲ್ಲಬೇಕು ಎಂಬುದಷ್ಟೇ ಅವರಿಗೆ ಗೊತ್ತಿರುವುದು. ಅದನ್ನು ಮಾಡಲು(ಗೆಲುವು ಸಾಧಿಸಲು) ಅವರಿಗೆ ಸೂಚಿಸಿದೊಡನೆ ಬ್ಯಾಗ್ ಪ್ಯಾಕ್ ಮಾಡಿ ಹೊರಡುವವರಲ್ಲಿ ಅವರು ಮುಂಚೂಣಿಯಲ್ಲಿ ಇರುತ್ತಾರೆ. ಆದ್ದರಿಂದ ಇರಾನ್ನೊಂದಿಗಿನ ಸಂಭಾವ್ಯ ಯುದ್ದದ ಬಗ್ಗೆ ಬರೆಯಲಾದ ಎಲ್ಲವನ್ನೂ ತಪ್ಪಾಗಿ ಮತ್ತು ಉದ್ದೇಶಪೂರ್ವಕವಾಗಿ ಬರೆಯಲಾಗಿದೆ ಎಂದು ಟ್ರಂಪ್ ಹೇಳಿದ್ದು ಪರಮಾಣು ಒಪ್ಪಂದಕ್ಕೆ ಮುಂದಾಗಿದ್ದರೆ ಅದು ಇರಾನ್ ದೇಶಕ್ಕೆ ಮತ್ತು ಅದರ ಜನತೆಗೆ ಕೆಟ್ಟ ದಿನವಾಗಲಿದೆ ಎಂದು ಎಚ್ಚರಿಕೆ ನೀಡಿರುವುದಾಗಿ ವರದಿಯಾಗಿದೆ.
ರಾಯಚೂರು | ಶಿಕ್ಷಣವೇ ಅಭಿವೃದ್ಧಿಗೆ ಮೂಲ: ಎಂ. ರಾಮಪ್ಪ
ಭೋವಿ ನಿಗಮದ ವಿವಿಧ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ
ರಾಯಚೂರು | ದೈಹಿಕ ಶಿಕ್ಷಣ ಪಠ್ಯಪುಸ್ತಕ ಮುದ್ರಣಕ್ಕೆ ಒತ್ತಾಯಿಸಿ ಮನವಿ
ರಾಯಚೂರು : ಕರ್ನಾಟಕ ರಾಜ್ಯ ಸರ್ಕಾರಿ ಗ್ರೇಡ್-1 ಮತ್ತು ಗ್ರೇಡ್-2 ದೈಹಿಕ ಶಿಕ್ಷಣ ಶಿಕ್ಷಕರ ಸಂಘ ವತಿಯಿಂದ ಶಾಲಾ ಶಿಕ್ಷಣ ಇಲಾಖೆಯ ಪತ್ರಾಂಕಿತ ವ್ಯವಸ್ಥಾಪಕರಾದ ಜಗದೀಶ್ ಚಂದ್ರ ಅವರಿಗೆ ದೈಹಿಕ ಶಿಕ್ಷಣ ಪಠ್ಯಪುಸ್ತಕಗಳನ್ನು ಮುದ್ರಣ ಮಾಡದೇ ಮೌಲ್ಯ ಶಿಕ್ಷಣ ಪುಸ್ತಕದಲ್ಲಿ ವಿಲೀನಗೊಳಿಸಿರುವ ಕ್ರಮವನ್ನು ಖಂಡಿಸಿ ಮನವಿ ಸಲ್ಲಿಸಲಾಯಿತು. ದೈಹಿಕ ಶಿಕ್ಷಣ ವಿಷಯವನ್ನು ಪ್ರತ್ಯೇಕವಾಗಿ ಬೋಧಿಸಲು ಅಗತ್ಯವಾದ ಪಠ್ಯಪುಸ್ತಕಗಳ ಕೊರತೆಯಿಂದ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ತೊಂದರೆ ಅನುಭವಿಸುತ್ತಿದ್ದಾರೆ. ದೈಹಿಕ ಶಿಕ್ಷಣವು ವಿದ್ಯಾರ್ಥಿಗಳ ಸಮಗ್ರ ವ್ಯಕ್ತಿತ್ವ ವಿಕಾಸಕ್ಕೆ ಪ್ರಮುಖವಾಗಿರುವುದರಿಂದ ಪ್ರತ್ಯೇಕ ಪಠ್ಯಪುಸ್ತಕಗಳನ್ನು ತಕ್ಷಣ ಮುದ್ರಿಸಿ ಶಾಲೆಗಳಿಗೆ ವಿತರಣೆ ಮಾಡುವಂತೆ ಮನವಿಯಲ್ಲಿ ಒತ್ತಾಯಿಸಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾ ದೈಹಿಕ ಶಿಕ್ಷಣ ಅಧಿಕಾರಿಗಳಾದ ಕೆ. ರಂಗಸ್ವಾಮಿ, ತಾಲ್ಲೂಕು ದೈಹಿಕ ಶಿಕ್ಷಣ ಪರಿವೀಕ್ಷಕರಾದ ಪರಶುರಾಮ ಹುಜರಾತಿ , ಗ್ರೇಡ್-1 ಜಿಲ್ಲಾಧ್ಯಕ್ಷ ಯಂಕಪ್ಪ ಪಿರಂಗಿ, ಗ್ರೇಡ್-2 ಜಿಲ್ಲಾಧ್ಯಕ್ಷ ಶಂಕರಪ್ಪ, ಕಾರ್ಯದರ್ಶಿ ಮಲ್ಲಿಕಾರ್ಜುನ ಸೇರಿದಂತೆ ಹಿರಿಯ ದೈಹಿಕ ಶಿಕ್ಷಣ ಶಿಕ್ಷಕರಾದ ಉಮೇಶ್ ಎಸ್., ಹುಸೇನ್ ಬಾಷ, ವಿಜಯ ಜ್ಯೋಶಿ, ಗಂಗಾಧರ, ನರಹರಿ ದೇವರು, ಗುರುರಾಜ್, ಪರಿಮಳ ಭಂಡಾರಿ, ಜಯಲಕ್ಷ್ಮಿ, ವೀಣ, ನಾಗಭೂಷಣ, ಶಕುಂತಲಾ, ಪ್ರವೀಣ್, ಸುಜಾತ, ಮಮತ, ಶಂಷಾದ್, ಅಂಬಾದೇವಿ ಹಾಗೂ ವೆಂಕಟೇಶ ಉಪಸ್ಥಿತರಿದ್ದರು. ಸಂಘದ ಪದಾಧಿಕಾರಿಗಳು ದೈಹಿಕ ಶಿಕ್ಷಣದ ಮಹತ್ವವನ್ನು ವಿವರಿಸಿ, ವಿಷಯಕ್ಕೆ ಅಗತ್ಯ ಆದ್ಯತೆ ನೀಡುವಂತೆ ಅಧಿಕಾರಿಗಳಿಗೆ ಮನವಿ ಮಾಡಿದರು.
Kalaburagi | ಮದುವೆ ಮೆರವಣಿಗೆಯಲ್ಲಿ ಮಾರಕಾಸ್ತ್ರಗಳ ಪ್ರದರ್ಶನ ಪ್ರಕರಣ: ಮೂವರ ಬಂಧನ
ಕಲಬುರಗಿ: ಅಶೋಕ ನಗರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿರುವ ಶಕ್ತಿ ನಗರದ ಮದುವೆ ಮೆರವಣಿಗೆಯಲ್ಲಿ ಬಹಿರಂಗವಾಗಿ ಮಾರಕಾಸ್ತ್ರಗಳನ್ನು ಪ್ರದರ್ಶಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇಲ್ಲಿನ ಬಸವನಗರದ ಹನುಮಾನ್ ದೇವರ ಗುಡಿ ಹತ್ತಿರದ ನಿವಾಸಿ ರಾಜವರ್ಧನ್ ಮಹಾದೇವಪ್ಪ ಸಂಗವಾರ (31), ಶಕ್ತಿನಗರದ ನಿವಾಸಿ ಸಂಜಯ ರಾಜೇಶ್ ಗಾಯಕವಾಡ್ (23) ಹಾಗೂ ಶಕ್ತಿ ನಗರದ ಮತ್ತೋರ್ವ ಆರೋಪಿ ತುಷಾರ್ ರಾಜೇಶ್ ಗಾಯಕವಾಡ್ (24) ಬಂಧಿತ ಆರೋಪಿಗಳಾಗಿದ್ದಾರೆ. ಕಳೆದ ಫೆ.22 ರಂದು ನಗರದ ಎಂ.ಜಿ ರಸ್ತೆಯಲ್ಲಿರುವ ಆದರ್ಶ ಕಲ್ಯಾಣ ಮಂಟಪದಲ್ಲಿ ಬಂಧಿತ ಆರೋಪಿಯಾಗಿರುವ ತುಷಾರ್ ಗಾಯಕವಾಡ ಮದುವೆಯಾಗಿತ್ತು. ಬಳಿಕ ಅದೇ ದಿನ ಸಂಜೆ 7 ಗಂಟೆಗೆ ಶಕ್ತಿ ನಗರದಲ್ಲಿ ಆತನ ಮನೆ ಎದುರು ಮದುವೆಯ ಮೆರವಣಿಗೆಯಲ್ಲಿ ಡಿಜೆ ಡ್ಯಾನ್ಸ್ ಮಾಡುತ್ತಿದ್ದಾಗ ತುಷಾರನು ಸಂಜಯ್ ಎಂಬಾತನಿಗೆ ಚಾಕು ಹಾಗೂ ರಾಜವರ್ಧನಿಗೆ ಮಚ್ಚು ಹಿಡಿದು ಡ್ಯಾನ್ಸ್ ಮಾಡಲು ಪ್ರಚೋದನೆ ನೀಡಿದ್ದಾನೆ ಎನ್ನಲಾಗಿದೆ. ಡ್ಯಾನ್ಸ್ ಮಾಡಿದ್ದಲ್ಲದೆ ಮಾರಕಾಸ್ತ್ರಗಳನ್ನು ಹಿಡಿದುಕೊಂಡು ಸಾರ್ವಜನಿಕರಿಗೆ ಭಯ ಹುಟ್ಟಿಸುವಂತಹ ಕೃತ್ಯ ಎಸಗಿದ ಆರೋಪದ ಮೇರೆಗೆ ಮೂವರು ಸೇರಿದಂತೆ ಇತರರ ವಿರುದ್ಧ ಅಶೋಕ ನಗರ ಪೊಲೀಸ್ ಠಾಣೆಯಲ್ಲಿ FIR No. 23/2026 ಕಲಂ 54, 351(2) r/w 3(5) BNS-2023 ಮತ್ತು 25(1)(A) ಆಯುಧ ಕಾಯ್ದೆ ಅಡಿಯಲ್ಲಿ (SUO-Moto) ಪ್ರಕರಣ ದಾಖಲಾಗಿದೆ.
ಅವ್ಯವಸ್ಥೆ, ರೋಬೋಡಾಗ್ ವಿವಾದ ಮತ್ತು ಪ್ರತಿಭಟನೆ: ಭಾರತದ AI ಶೃಂಗಸಭೆಯಲ್ಲಿ ಏನೇನು ನಡೆಯಿತು?
AI ಶೃಂಗಸಭೆಗಳ ಗುರಿ ಕಾಲಾನಂತರದಲ್ಲಿ ಸಂಪೂರ್ಣವಾಗಿ ಬದಲಾಗಿದೆ. 2023 ರಲ್ಲಿ UK ಬ್ಲೆಚ್ಲಿ ಪಾರ್ಕ್ನಲ್ಲಿ ಮೊದಲ ಶೃಂಗಸಭೆಯನ್ನು ಆಯೋಜಿಸಿದಾಗ, AI ನ ಅಪಾಯಗಳ ಬಗ್ಗೆ ಮತ್ತು ಅದು ಹಾನಿಯನ್ನುಂಟುಮಾಡುವುದನ್ನು ಹೇಗೆ ತಡೆಯುವುದು ಎಂಬುದರ ಕುರಿತು ಮಾತನಾಡಲು ವಿಶ್ವ ನಾಯಕರು ಭೇಟಿಯಾಗಿದ್ದರು. ಸಿಯೋಲ್ನಲ್ಲಿ (2024) ನಡೆದ ಎರಡನೇ ಸಭೆಯೂ ಅದೇ ಮಾರ್ಗವನ್ನು ಅನುಸರಿಸಿತು. ಆದರೆ, ಪ್ಯಾರಿಸ್ನಲ್ಲಿ (2025) ನಡೆದ ಮೂರನೇ ಶೃಂಗಸಭೆಯ ಹೊತ್ತಿಗೆ, ದೇಶಗಳು ಸುರಕ್ಷತೆಯ ಬಗ್ಗೆ ಹೆಚ್ಚು ಚಿಂತಿಸುವುದನ್ನು ನಿಲ್ಲಿಸಿ, ತಮ್ಮದೇ ಆದ AI ಕೈಗಾರಿಕೆಗಳನ್ನು ಹೇಗೆ ಬೆಳೆಸುವುದು ಎಂಬುದರ ಕಡೆಗೆ ಹೆಚ್ಚಿನ ಗಮನ ಹರಿಸಲು ಪ್ರಾರಂಭಿಸಿದವು. ಹೊಸದಿಲ್ಲಿಯಲ್ಲಿನ AI ಇಂಪ್ಯಾಕ್ಟ್ ಶೃಂಗಸಭೆಯಲ್ಲಿ ಭಾರತ ಈ ಬದಲಾವಣೆಯನ್ನು ಇನ್ನಷ್ಟು ಮುಂದಕ್ಕೆ ತೆಗೆದುಕೊಂಡಿತು. ನಿಯಮಗಳು ಮತ್ತು ಸುರಕ್ಷತೆಯನ್ನು ಹೈಲೈಟ್ ಮಾಡಬೇಕಿದ್ದ ಈ ಕಾರ್ಯಕ್ರಮವು ಬೃಹತ್ ವ್ಯಾಪಾರ ಪ್ರದರ್ಶನದಂತೆ ಕಾಣಿಸಿತು. ವೇಳಾಪಟ್ಟಿಯಲ್ಲಿ ಹಣಕಾಸು ವ್ಯವಹಾರಗಳು, ಹೊಸ ಉತ್ಪನ್ನಗಳ ಅನಾವರಣ, CEOಗಳ ಭಾಷಣಗಳು ಮತ್ತು ಪ್ರದರ್ಶನಗಳು ತುಂಬಿಕೊಂಡಿದ್ದವು. ಸಂಕ್ಷಿಪ್ತವಾಗಿ ಹೇಳುವುದಾದರೆ, ಶೃಂಗಸಭೆಗಳ ಮೂಲ ಗುರಿಯಾದ ಸುರಕ್ಷತಾ ಮಾನದಂಡಗಳನ್ನು ರಚಿಸುವುದು ಮತ್ತು ಅಪಾಯಗಳನ್ನು ಮೇಲ್ವಿಚಾರಣೆ ಮಾಡುವುದನ್ನು ನಿರ್ಲಕ್ಷಿಸಲಾಯಿತು. ದಿಲ್ಲಿಯಲ್ಲಿ ನಡೆದ ಶೃಂಗಸಭೆ ವ್ಯವಹಾರದ ಬಗ್ಗೆ—AI ಅನ್ನು ಯಾರು ನಿರ್ಮಿಸುತ್ತಾರೆ, ಯಾರು ಅದನ್ನು ಬಳಸುತ್ತಾರೆ ಮತ್ತು ಅದರಿಂದ ಯಾರು ಹೆಚ್ಚು ಹಣ ಗಳಿಸುತ್ತಾರೆ ಎಂಬುದರ ಬಗ್ಗೆ—ಕೇಂದ್ರೀಕೃತವಾಗಿತ್ತು. ಶೃಂಗಸಭೆಯಲ್ಲಿನ ಅವ್ಯವಸ್ಥೆ, ಎಡವಟ್ಟು ಪ್ರಮುಖ ಕಾರ್ಯಕ್ರಮವಾಗಿ ಗಮನ ಸೆಳೆದಿದ್ದರೂ, ಕಳಪೆ ಸಂಘಟನೆ ಮತ್ತು ಲಾಜಿಸ್ಟಿಕ್ಸ್ ಕುರಿತು ತೀವ್ರ ಟೀಕೆ ವ್ಯಕ್ತವಾಯಿತು. ಕಟ್ಟುನಿಟ್ಟಾದ ಭದ್ರತಾ ತಪಾಸಣೆ ವ್ಯವಸ್ಥೆಯಿಂದಾಗಿ ಅನೇಕ ಪ್ರತಿನಿಧಿಗಳು ಆಹಾರ ಅಥವಾ ನೀರು ಲಭ್ಯವಿಲ್ಲದೆ ಗಂಟೆಗಳ ಕಾಲ ಸಿಲುಕಿಕೊಂಡರು. ದೆಹಲಿಯ ಮಧ್ಯಭಾಗ ಮತ್ತು ಅದರಾಚೆಗೆ ವಿಐಪಿ ಸಂಚಾರಕ್ಕೆ ಅನುಕೂಲವಾಗುವಂತೆ ರಸ್ತೆ ಸಂಚಾರ ನಿರ್ಬಂಧಿಸಿದ್ದರಿಂದ ದೀರ್ಘಾವಧಿಯ ಸಂಚಾರ ದಟ್ಟಣೆ ಉಂಟಾಯಿತು. ಇದರ ಪರಿಣಾಮವಾಗಿ ಸಭೆಯಲ್ಲಿ ಭಾಗವಹಿಸುವವರು, ಪ್ರತಿನಿಧಿಗಳು ಹಾಗೂ ಕಾರ್ಯಕ್ರಮದಲ್ಲಿ ಭಾಷಣ ಮಾಡುವವರೂ ಸಹ ಸಮಯಕ್ಕೆ ಸರಿಯಾಗಿ ಸ್ಥಳಕ್ಕೆ ತಲುಪಲು ಸಾಧ್ಯವಾಗಲಿಲ್ಲ. ಸ್ಥಳದಲ್ಲಿದ್ದವರು ತಮ್ಮ ವಾಹನಗಳಿಗೆ ತಲುಪಲು ಹಲವಾರು ಕಿಲೋಮೀಟರ್ ನಡೆದು ಹೋಗಬೇಕಾಯಿತು. ಶೃಂಗಸಭೆ ಆಕರ್ಷಿಸಿದ ಹಾಜರಾತಿಯ ಪ್ರಮಾಣಕ್ಕೆ ನಗರ ಸಿದ್ಧವಾಗಿರಲಿಲ್ಲ. ಏತನ್ಮಧ್ಯೆ, ಶೃಂಗಸಭೆಯಲ್ಲಿ ಮುಜುಗರ ತಂದ ವಿಷಯ ರೋಬೋಡಾಗ್ ವಿವಾದವಾಗಿತ್ತು. ವಾಣಿಜ್ಯವಾಗಿ ಲಭ್ಯವಿರುವ ಚೀನಾ ನಿರ್ಮಿತ ರೋಬೋಟ್ ನಾಯಿಯನ್ನು ತಾವೇ ಅಭಿವೃದ್ಧಿಪಡಿಸಿದ್ದಾಗಿ ಗಲ್ಗೋಟಿಯಾಸ್ ವಿಶ್ವವಿದ್ಯಾಲಯ ಹೇಳಿಕೊಂಡಿತ್ತು. ಗಲ್ಗೋಟಿಯಾಸ್ನ ಪ್ರಾಧ್ಯಾಪಕಿ ನೇಹಾ ಸಿಂಗ್ ಅವರು ವಿಶ್ವವಿದ್ಯಾಲಯದ ಸೆಂಟರ್ ಆಫ್ ಎಕ್ಸಲೆನ್ಸ್ನ 350 ಕೋಟಿ ರೂ.ಗಳ AI ಉಪಕ್ರಮದ ಅಡಿಯಲ್ಲಿ “ಓರಿಯನ್” ಅನ್ನು ಅಭಿವೃದ್ಧಿಪಡಿಸಿದ್ದಾಗಿ ಹೇಳಿಕೊಂಡ ವಿಡಿಯೊ ವೈರಲ್ ಆಗಿತ್ತು. ಸಾಮಾಜಿಕ ಜಾಲತಾಣ ಬಳಕೆದಾರರು ಇದು ಚೀನಾದ Unitree Go2 ರೋಬೋಡಾಗ್ ಎಂದು ಗುರುತಿಸಿ, ವಿವಿ ವಿದೇಶಿ ತಂತ್ರಜ್ಞಾನವನ್ನು ತಮ್ಮದೇಂದು ಹೇಳಿಕೊಳ್ಳುತ್ತಿದೆ ಎಂದು ಆರೋಪಿಸಿದರು. ಇದಕ್ಕೆ ಗಲ್ಗೋಟಿಯಾಸ್ ವಿವಿಯಿಂದ ಸಮರ್ಪಕ ಉತ್ತರ ಸಿಗಲಿಲ್ಲ. ತಮ್ಮ ತಪ್ಪುಗಳಿಂದ ನುಣುಚಿಕೊಳ್ಳುವ ಪ್ರಯತ್ನ ಮಾಡಿದರೂ ಅದು ಫಲಿಸಲಿಲ್ಲ. ಕೊನೆಗೆ ಗಲ್ಗೋಟಿಯಾಸ್ ವಿವಿಯನ್ನು ಎಕ್ಸ್ಪೋದಿಂದ ಹೊರಹಾಕಲಾಯಿತು. ದಿಲ್ಲಿಯಲ್ಲಿ 2023 ರಲ್ಲಿ G20 ಶೃಂಗಸಭೆಯನ್ನು ಯಶಸ್ವಿಯಾಗಿ ಆಯೋಜಿಸಿದ್ದರೂ, ಈ AI ಕಾರ್ಯಕ್ರಮದೊಂದಿಗೆ ಸರ್ಕಾರವು ಆ ಯಶಸ್ಸನ್ನು ಪುನರಾವರ್ತಿಸಲು ಹೆಣಗಾಡಿತು. G20 ಹಲವು ತಿಂಗಳುಗಳ ಕಾಲ ನಡೆದಿದ್ದರಿಂದ ನಿರ್ವಹಣೆಗೆ ಅನುಕೂಲವಾಗಿತ್ತು. ಆದರೆ AI ಶೃಂಗಸಭೆಯು ಏಕಕಾಲದಲ್ಲಿ ಹೆಚ್ಚಿನದನ್ನು ಸಾಧಿಸಲು ಪ್ರಯತ್ನಿಸಿತು. ವಿಶ್ವ ನಾಯಕರ ಉನ್ನತ ಮಟ್ಟದ ಸಭೆಯನ್ನು ಬೃಹತ್ ಸಾರ್ವಜನಿಕ ವ್ಯಾಪಾರ ಪ್ರದರ್ಶನದೊಂದಿಗೆ ಸಂಯೋಜಿಸಿದ ಪರಿಣಾಮ ಸಂಘಟಕರು ಅಸ್ತವ್ಯಸ್ತ ವಾತಾವರಣವನ್ನು ಸೃಷ್ಟಿಸಿದರು. ಈ ಕಳಪೆ ಯೋಜನೆ ವಿಶೇಷವಾಗಿ ಸಣ್ಣ ತಂತ್ರಜ್ಞಾನ ಉದ್ಯಮಿಗಳಿಗೆ ನೋವುಂಟುಮಾಡಿತು. ಕಾರ್ಯಕ್ರಮದ ವೇಳೆ ಅವರನ್ನು ಸಮರ್ಪಕವಾಗಿ ನಿರ್ವಹಿಸಲಿಲ್ಲ. ಈ ವೈಫಲ್ಯಗಳು ಸರ್ಕಾರವು ಹೊಸ ಮತ್ತು ಅತ್ಯಾಧುನಿಕ ಕೈಗಾರಿಕೆಗಳಲ್ಲಿ ದೊಡ್ಡ ಪ್ರಮಾಣದ ಯೋಜನೆಗಳನ್ನು ಸಮರ್ಥವಾಗಿ ನಿರ್ವಹಿಸಿ ಬೆಂಬಲಿಸಲು ಸಾಮರ್ಥ್ಯ ಹೊಂದಿದೆಯೇ ಎಂಬ ಗಂಭೀರ ಪ್ರಶ್ನೆಗಳನ್ನು ಎಬ್ಬಿಸುತ್ತವೆ. ತಂತ್ರಜ್ಞಾನ ದಿಗ್ಗಜರ ಸಮಾಗಮ ಮತ್ತು ಹೂಡಿಕೆ ಈ ಶೃಂಗಸಭೆ ವಿಶ್ವದ ಪ್ರಮುಖ ನಾಯಕರನ್ನು ಒಟ್ಟುಗೂಡಿಸಿತು. ಆಲ್ಫಾಬೆಟ್ ಸಿಇಒ ಸುಂದರ್ ಪಿಚೈ, ಓಪನ್ಎಐನ ಸ್ಯಾಮ್ ಆಲ್ಟ್ಮನ್, ಆಂಥ್ರೊಪಿಕ್ನ ಡೇರಿಯೊ ಅಮೋಡೆ, ಗೂಗಲ್ ಡೀಪ್ಮೈಂಡ್ ಸಿಇಒ ಡೆಮಿಸ್ ಹಸ್ಸಾಬಿಸ್, ಮೈಕ್ರೋಸಾಫ್ಟ್ ಅಧ್ಯಕ್ಷ ಬ್ರಾಡ್ ಸ್ಮಿತ್, ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್, ಯುಎನ್ ಸೆಕ್ರೆಟರಿ ಜನರಲ್ ಆಂಟೋನಿಯೊ ಗುಟೆರೆಸ್ ಸೇರಿದಂತೆ ಇತರ ರಾಷ್ಟ್ರಗಳ ಮುಖ್ಯಸ್ಥರು ಭಾಗವಹಿಸಿದ್ದರು. ಈ “ದಿಗ್ಗಜರ ಸಮಾಗಮ” ಬೃಹತ್ ಆರ್ಥಿಕ ಪರಿಣಾಮಗಳಿಗೆ ಕಾರಣವಾಯಿತು. ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ AI ಮೂಲಸೌಕರ್ಯಕ್ಕಾಗಿ 250 ಶತಕೋಟಿ ಡಾಲರ್ಗಿಂತ ಹೆಚ್ಚು ಬದ್ಧತೆಗಳು ಹಾಗೂ ಡೀಪ್-ಟೆಕ್ ವೆಂಚರ್ ಕ್ಯಾಪಿಟಲ್ಗೆ 20 ಶತಕೋಟಿ ಡಾಲರ್ಗಿಂತ ಹೆಚ್ಚು ಬದ್ಧತೆಗಳನ್ನು ಘೋಷಿಸಿದರು. ಟಾಟಾ ಗ್ರೂಪ್ ಮತ್ತು ಓಪನ್ಎಐ ಹಾಗೂ ಎಎಮ್ಡಿ ನಡುವಿನ ಪಾಲುದಾರಿಕೆ ಸೇರಿದಂತೆ ಮಹತ್ವದ ಒಪ್ಪಂದಗಳು ಕೂಡ ನಡೆದವು. ಆದಾಗ್ಯೂ, ಈ ಅಂಕಿಅಂಶಗಳು ದೊಡ್ಡದಾಗಿದ್ದರೂ, ಅಂತರರಾಷ್ಟ್ರೀಯ ಹೂಡಿಕೆಯ ಈ ಮಟ್ಟವನ್ನು ಸಮಾನವಾಗಿ ಹೊಂದಿಸಲು ಭಾರತ ಇನ್ನೂ ತನ್ನದೇ ಆದ ಸ್ಥಳೀಯ ಖಾಸಗಿ ಸಂಪತ್ತಿನ ಕೊರತೆಯನ್ನು ಎದುರಿಸುತ್ತಿದೆ ಎಂಬುದು ವಾಸ್ತವ. ಭಾರತದ ದೇಶೀಯ AI ಉತ್ತೇಜನ ಶೃಂಗಸಭೆಯಲ್ಲಿ ಗಮನ ಸೆಳೆದ ಮತ್ತೊಂದು ವಿಷಯ ಭಾರತೀಯ ನವೋದ್ಯಮ ‘ಸರ್ವಂ AI’ ಆಗಿತ್ತು. ಸರ್ವಂ AI ಮಾದರಿಯು ಚಿತ್ರ ಶೀರ್ಷಿಕೆ ರಚನೆ, ದೃಶ್ಯ ಪಠ್ಯ ಗುರುತಿಸುವಿಕೆ, ಚಾರ್ಟ್ ವ್ಯಾಖ್ಯಾನ ಮತ್ತು ಸಂಕೀರ್ಣ ಟೇಬಲ್ ಪಾರ್ಸಿಂಗ್ ಸೇರಿದಂತೆ ಹಲವು ದೃಶ್ಯ ತಿಳುವಳಿಕೆ ಕಾರ್ಯಗಳನ್ನು ನಿರ್ವಹಿಸುವ ಸಾಮರ್ಥ್ಯ ಹೊಂದಿದೆ. ಚಾಟ್ಜಿಪಿಟಿ ಮತ್ತು Gemini ಗಿಂತ ಭಿನ್ನವಾಗಿ, ಇದು ಅನೇಕ ಭಾರತೀಯ ಭಾಷೆಗಳನ್ನು ಅರ್ಥಮಾಡಿಕೊಳ್ಳುವ ಸಾಮರ್ಥ್ಯ ಹೊಂದಿದೆ. ಈ ಮಾದರಿಗಳು ಚೀನಾದ ಡೀಪ್ಸೀಕ್ ಇತ್ತೀಚೆಗೆ ಮಾಡಿದಂತೆ ಜಗತ್ತನ್ನು ಸಂಪೂರ್ಣವಾಗಿ ಬದಲಾಯಿಸದಿದ್ದರೂ, ಭಾರತವು ಗಂಭೀರ AI ತಂತ್ರಜ್ಞಾನವನ್ನು ನಿರ್ಮಿಸುವ ಸಾಮರ್ಥ್ಯ ಹೊಂದಿದೆ ಎಂಬುದನ್ನು ತೋರಿಸಿವೆ. ಶರ್ಟ್ ಬಿಚ್ಚಿ ಪ್ರತಿಭಟನೆ ಶುಕ್ರವಾರ (ಫೆಬ್ರವರಿ 20), ಭಾರತ್ ಮಂಟಪದಲ್ಲಿ ನಡೆದ AI ಇಂಪ್ಯಾಕ್ಟ್ ಶೃಂಗಸಭೆಯ ಸಂದರ್ಭದಲ್ಲಿ ಭಾರತೀಯ ಯುವ ಕಾಂಗ್ರೆಸ್ (IYC) ಕಾರ್ಯಕರ್ತರ ಗುಂಪೊಂದು ಪ್ರದರ್ಶನ ಸಭಾಂಗಣದಲ್ಲಿ ಶರ್ಟ್ ಬಿಚ್ಚಿ ಪ್ರತಿಭಟನೆ ನಡೆಸಿತು. ಸರ್ಕಾರ ಮತ್ತು ಭಾರತ-ಯುಎಸ್ ವ್ಯಾಪಾರ ಒಪ್ಪಂದದ ವಿರುದ್ಧ ಘೋಷಣೆಗಳನ್ನು ಹೊಂದಿರುವ ಟಿ-ಶರ್ಟ್ಗಳನ್ನು ಪ್ರದರ್ಶಿಸಿ ಇವರು ಆಕ್ರೋಶ ವ್ಯಕ್ತಪಡಿಸಿದರು. ಯುವ ಕಾಂಗ್ರೆಸ್ ಕಾರ್ಯಕರ್ತರು ಹಾಲ್ ಸಂಖ್ಯೆ 5 ರ ಲಾಬಿ ಪ್ರದೇಶವನ್ನು ಪ್ರವೇಶಿಸಿ “ಪ್ರಧಾನಿ ರಾಜಿ ಮಾಡಿಕೊಂಡಿದ್ದಾರೆ”, “ಭಾರತ-ಯುಎಸ್ ವ್ಯಾಪಾರ ಒಪ್ಪಂದ” ಮತ್ತು “ಎಪ್ಸ್ಟೀನ್ ಫೈಲ್ಸ್” ಎಂದು ಮುದ್ರಿತ ಟಿ-ಶರ್ಟ್ಗಳನ್ನು ತೋರಿಸಿ ಪ್ರತಿಭಟನೆ ನಡೆಸಿದರು. ಪ್ರತಿಭಟನೆ ನಡೆಸಿದ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದು, ಪ್ರಕರಣದ ತನಿಖೆ ಮುಂದುವರಿದಿದೆ.
ಜನರು ಕರುಣೆ, ಗೌರವ ತೋರದೆ ನಿಷ್ಕಾರುಣ್ಯವಾಗಿ ಸೋಲಿಸಿ ಬಿಟ್ಟರು: ಮಾಜಿ ಸಚಿವ ರಮೇಶ್ ಕುಮಾರ್ ಬೇಸರ
ಕೋಲಾರ: ಹೆಂಡತಿ ಮಕ್ಕಳಿಗಿಂತಲೂ ಹೆಚ್ಚಾಗಿ ಪ್ರೀತಿಸುತ್ತಿದ್ದ ನನ್ನ ಶ್ರೀನಿವಾಸಪುರ ಕ್ಷೇತ್ರದ ಜನರು ಕರುಣೆ, ಪ್ರೀತಿ ಮತ್ತು ಗೌರವ ತೋರದೆ ನಿಷ್ಕಾರುಣ್ಯವಾಗಿ ಸೋಲಿಸಿ ಬಿಟ್ಟರು ಎಂದು ಮಾಜಿ ಸಚಿವ ಹಾಗೂ ಶ್ರೀನಿವಾಸಪುರ ಮಾಜಿ ಶಾಸಕ ಕೆ.ಆರ್. ರಮೇಶ್ ಕುಮಾರ್ ಬೇಸರ ವ್ಯಕ್ತಪಡಿಸಿದ್ದಾರೆ. ಅವರು ಯೂಟ್ಯೂಬ್ ಚಾನೆಲ್ ವೊಂದರಲ್ಲಿ ಮಾತನಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪತ್ನಿ, ಮಕ್ಕಳು, ಕುಟುಂಬಕ್ಕೂ ಹೆಚ್ಚಾಗಿ ನಾನು ಕ್ಷೇತ್ರದ ಜನರನ್ನು ನೋಡಿಕೊಂಡಿದ್ದೆ. ನಾನು ಯಾವುದೇ ತಪ್ಪು ಮಾಡಿಲ್ಲ, ಆದರೂ ನನ್ನ ಮನಸ್ಥಿತಿ ಮತ್ತು ಕೆಲಸವನ್ನು ನೋಡದೆ ನಿಷ್ಕಾರುಣ್ಯವಾಗಿ ಸೋಲಿಸಿ ಬಿಟ್ಟರು. ನನ್ನನ್ನು ಏಕಾಂಗಿಯಾಗಿ ಮಾಡಿದರು. ನಾನು ಕೂಡ ಉಪ್ಪು ಕಾರ ತಿನ್ನುವ ಮನುಷ್ಯನೇ. ನಾನು ಸಿಮೆಂಟ್, ಸ್ಟೀಲ್ ನಿಂದ ಮಾಡಿದ ಗೊಂಬೆ ಅಲ್ಲ. ಹಾಗಾಗಿ ನನಗೂ ದುಃಖ, ನೋವು, ಬೇಸರ ಆಗುತ್ತದೆ. ಅದಕ್ಕೆ ಸ್ವಲ್ಪ ದಿನ ಅಜ್ಞಾತ ವಾಸದಲ್ಲಿದ್ದೆ ಎಂದು ಹೇಳಿದ್ದಾರೆ. ಜನರನ್ನೇ ಕುಟುಂಬ ಎಂದುಕೊಂಡಿದ್ದ ನಾನು ಸೋತು ಏಕಾಂಗಿಯಾದಾಗ ಈ ಸಮಾಜಕ್ಕೆ ಏಕೆ ಮುಖ ತೋರಿಸಬೇಕು ಎಂಬ ಭಾವನೆ ನನ್ನಲ್ಲಿ ಬಂದಿತ್ತು. ಅದಕ್ಕೆ ಅಜ್ಞಾತ ವಾಸಕ್ಕೆ ಹೋಗುವ ನಿರ್ಧಾರ ತೆಗೆದುಕೊಂಡೆ ಎಂದು ತಿಳಿಸಿದ್ದಾರೆ. ನನಗೆ ಜಾತಿ,ಹಣ, ಅಧಿಕಾರದ ಆಸೆ ಇಲ್ಲ. ಯಾವುದಕ್ಕೂ ಆಸೆಪಡದ ಇವನು ಈ ಪಾಳು ಬಿದ್ದಿರುವ ಭೂಮಿಗೆ ಹೋಗ್ತಾನಾ?, ಆಸೆಪಡ್ತಾನಾ? ಆ ತಪ್ಪು ಮಾಡ್ತಾನಾ ಅನ್ನೋ ಕರುಣೆಯೇ ಇಲ್ಲದೆ ಕೆಲವರು ಆರೋಪ ಮಾಡಿಬಿಟ್ಟರು. ಏನೆಲ್ಲಾ ಮಾತನಾಡಿದರು, ತೇಜೋವಧೆ ಮಾಡಿದರು, ಸಾರ್ವಜನಿಕ ಜೀವನದಲ್ಲಿ ಪ್ರಾಮಾಣಿಕವಾಗಿರುವುದು, ಅಧಿಕಾರದ ಅಪೇಕ್ಷೆ ಇಲ್ಲದೆ ಅಧಿಕಾರದಲ್ಲಿರುವುದು ತುಂಬಾ ಕಷ್ಟ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ನನ್ನ ಪತ್ನಿ 47 ವರ್ಷ ನನ್ನ ಜೊತೆ ಇದ್ದಳು, ಒಂದು ಸೀರೆ ಕೊಡಿಸಿ ಎನ್ನಲಿಲ್ಲ, ನನ್ನನ್ನು ಸಿನಿಮಾಗೆ ಕರೆದುಕೊಂಡು ಹೋಗಿ ಎಂದು ಕೇಳಿಲ್ಲ, ಸರ್ಕಾರಿ ಕಾರಿನಲ್ಲಿ ಕೂರಲಿಲ್ಲ. ಯಾವುದಕ್ಕೂ ಆಸೆ ಪಡದೆ ಕಷ್ಟದಲ್ಲಿ ಭಾಗಿಯಾದಳು. ನಾನು ಗೌರವದಿಂದ, ಧೈರ್ಯದಿಂದ ಹಾಗೂ ಪ್ರಾಮಾಣಿಕವಾಗಿ ಬದುಕಲು ಕಾರಣವಾದಳು, ಸರ್ಕಾರಿ ಬಂಗಲೆಯಲ್ಲೂ ಇರಲು ಆಕೆ ಒಪ್ಪಲಿಲ್ಲ , ಅಂಥವರು ದೂರವಾದಾಗ ಮನಸ್ಸಿಗೆ ಕಷ್ಟವಾಗುತ್ತದೆ ಎಂದು ಭಾವುಕರಾಗಿದ್ದರು. ನನಗೆ ಹೊಸದಾಗಿ ಕನಸು, ಆಸೆ ಏನೂ ಇಲ್ಲ. 50 ವರ್ಷಗಳಿಂದ ರಾಜಕೀಯದಲ್ಲಿ ಇದ್ದೇನೆ. ಹಲವು ಏಳು ಬೀಳು ನೋಡಿದ್ದೇನೆ. 1970ರಲ್ಲಿ ಬೆಂಗಳೂರು ಕಾರ್ಪೊರೇಷನ್ ಚುನಾವಣೆಗೆ ಮಲ್ಲೇಶ್ವರಂನ ಕಾಂಗ್ರೆಸ್ ಅಧಿಕೃತ ಅಭ್ಯರ್ಥಿಯಾಗಿದ್ದೆ. ಆಗ ನಾನು ದ್ವಿತೀಯ ಬಿ.ಎಸ್ಸಿ. ವಿದ್ಯಾರ್ಥಿಯಾಗಿದ್ದೆ. ಆಮೇಲೆ 1978 ರಲ್ಲಿ ಮೊದಲ ಬಾರಿಗೆ ವಿಧಾನಸಭೆ ಪ್ರವೇಶ ಮಾಡಿದೆ. ಆಗ ನನಗೆ 28 ವರ್ಷ, ಮೊದಲ ಚುನಾವಣೆಗೆ 15 ಸಾವಿರ ರೂಪಾಯಿ ಖರ್ಚು ಮಾಡಿದ್ದೆ. 1983ರಲ್ಲಿ ಸ್ವತಂತ್ರವಾಗಿ ಸ್ಪರ್ಧೆ ಮಾಡಿದೆ. ಆಗ ಅವರಿವರು ನೀಡಿದ 45 ಸಾವಿರ ರೂಪಾಯಿ ಖರ್ಚಾಗಿತ್ತು ಎಂದು ನೆನಪಿಸಿಕೊಂಡಿದ್ದಾರೆ.
ದಿಲ್ಲಿ| ಮನೆ ಮುಂದೆಯೇ ವ್ಯಕ್ತಿಯನ್ನು ಗುಂಡಿಕ್ಕಿ ಹತ್ಯೆ
ಹೊಸದಿಲ್ಲಿ, ಫೆ. 24: ರಾಷ್ಟ್ರ ರಾಜಧಾನಿ ವಲಯದಲ್ಲಿರುವ ಗ್ರೇಟರ್ ನೋಯ್ಡಾದಲ್ಲಿ ಮಂಗಳವಾರ ಮೂವರು ಹಂತಕರು ವ್ಯಕ್ತಿಯೊಬ್ಬರನ್ನು ಅವರ ಮನೆಯ ಹೊರಗಡೆ ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿದೆ. ಗುಂಡಿನ ಗಾಯಗಳಿಂದ ಗಂಭೀರವಾಗಿದ್ದ ನಿತಿನ್ರನ್ನು ಆಸ್ಪತ್ರೆಗೆ ದಾಖಲಾಯಿಸಿತಾದರೂ, ಅವರು ಬಳಿಕ ಕೊನೆಯುಸಿರೆಳೆದರು. ಹಲವಾರು ವ್ಯಕ್ತಿಗಳು ನಿತಿನ್ರನ್ನು ಎಳೆದುಕೊಂಡು ಹೋಗಿ ನೆಲಕ್ಕೆ ಕೆಡವಿ ಅವರ ಮೇಲೆ ಹಲವು ಬಾರಿ ಗುಂಡು ಹಾರಿಸುವುದು ಸಿಸಿಟಿವಿಯಲ್ಲಿ ದಾಖಲಾಗಿದೆ. ದೀರ್ಘಕಾಲೀನ ವೈಷಮ್ಯದ ಹಿನ್ನೆಲೆಯಲ್ಲಿ ಕೊಲೆ ನಡೆದಿದೆ ಎಂದು ಗ್ರೇಟರ್ ನೋಯ್ಡಾದ ಸಹಾಯಕ ಉಪ ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ಹೇಳಿದ್ದಾರೆ. ‘‘ಇಂದು ಹಳೆಯ ವೈಷಮ್ಯದ ಹಿನ್ನೆಲೆಯಲ್ಲಿ, ಸಚಿನ್ ಮತ್ತು ಅವನ ಸಂಗಡಿಗರು ಲುಕ್ಸರ್ ಗ್ರಾಮದ ನಿವಾಸಿ ನಿತಿನ್ ಮೇಲೆ ಗುಂಡು ಹಾರಿಸಿದ್ದಾರೆ. ತೀವ್ರವಾಗಿ ಗಾಯಗೊಂಡ ನಿತಿನ್ರನ್ನು ಚಿಕಿತ್ಸೆಗಾಗಿ ಆಸ್ಪತ್ರೆಯೊಂದಕ್ಕೆ ದಾಖಲಿಸಲಾಯಿತು. ಪರಿಸ್ಥಿತಿ ನಿಯಂತ್ರಣದಲ್ಲಿದೆ’’ ಎಂದು ಎಎನ್ಐ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಅವರು ಹೇಳಿದರು.
Uttar Pradesh | ನಾಗಾಲ್ಯಾಂಡ್ ಮೂಲದ ವೈದ್ಯೆಗೆ ಲೈಂಗಿಕ ಕಿರುಕುಳ, ಜನಾಂಗೀಯ ನಿಂದನೆ
ಲಕ್ನೋ, ಫೆ. 24: ಉತ್ತರಪ್ರದೇಶದ ಗೋರಖ್ಪುರದಲ್ಲಿ ರವಿವಾರ ನಾಗಾಲ್ಯಾಂಡ್ನ 25 ವರ್ಷದ ವೈದ್ಯೆಯೊಬ್ಬರನ್ನು ದುಷ್ಕರ್ಮಿಗಳು ಸುಮಾರು 1.5 ಕಿ.ಮೀ. ದೂರ ಹಿಂಬಾಲಿಸಿಕೊಂಡು ಬಂದು ಲೈಂಗಿಕ ಕಿರುಕುಳ ನೀಡಿದ್ದಾರೆ ಹಾಗೂ ಅವರಿಗೆ ಜನಾಂಗೀಯವಾಗಿ ನಿಂದಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಗೋರಖ್ಪುರದ ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ಮೂರನೇ ವರ್ಷದ ವಿದ್ಯಾರ್ಥಿನಿಯಾಗಿರುವ ಅವರು ರಾತ್ರಿ ಎಂಟು ಗಂಟೆಯ ಸುಮಾರಿಗೆ ಮಾಲ್ ಒಂದರಿಂದ ಕಾಲೇಜು ಆವರಣಕ್ಕೆ ವಾಪಸಾಗುತ್ತಿದ್ದಾಗ ಈ ಘಟನೆ ನಡೆದಿದೆ. ಅವರನ್ನು ಮೂವರು ವ್ಯಕ್ತಿಗಳು ಹಿಂಬಾಲಿಸಿಕೊಂಡು ಬಂದು ಬಳಿಕ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಲಾಗಿದೆ. ಆರೋಪಿಗಳ ಪೈಕಿ ಇಬ್ಬರನ್ನು ಬಂಧಿಸಲಾಗಿದೆ ಹಾಗೂ ಮೂರನೇ ಆರೋಪಿಗಾಗಿ ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಗೋರಖ್ಪುರ ಪೊಲೀಸ್ ಸೂಪರಿಂಟೆಂಡೆಂಟ್ ಅಭಿನವ್ ತ್ಯಾಗಿ ಹೇಳಿದರು. ವೈದ್ಯೆಯು ತನ್ನ ಕಾಲೇಜಿಗೆ ಹಿಂದಿರುಗುತ್ತಿದ್ದಾಗ ದುಷ್ಕರ್ಮಿಗಳು ಬೈಕ್ನಲ್ಲಿ ಅವರನ್ನು ಬೆಂಬಲಿಸಿದರು ಹಾಗೂ ಅವರನ್ನು ಜನಾಂಗೀಯವಾಗಿ ನಿಂದಿಸಿದರು. ಒಬ್ಬ ವ್ಯಕ್ತಿಯು ತನ್ನ ಅಂಗಿ ಕಳಚಿದನು ಮತ್ತು ಇನ್ನೊಬ್ಬ ತನ್ನನ್ನು ಅನುಚಿತವಾಗಿ ಸ್ಪರ್ಶಿಸಿದನು ಎಂದು ಅವರು ತನ್ನ ದೂರಿನಲ್ಲಿ ಹೇಳಿದ್ದಾರೆ.
ಅಜೀಂ ಪ್ರೇಮ್ ಜೀ ವಿವಿ ವಿರುದ್ಧ ಎಬಿವಿಪಿ ಪ್ರತಿಭಟನೆ; ನಾಮಫಲಕಕ್ಕೆ ಮಸಿ ಬಳಿದು ಆಕ್ರೋಶ
ಬೆಂಗಳೂರು: ಸರ್ಜಾಪುರ ಸಮೀಪದ ಬೂರಗುಂಟೆ ಗ್ರಾಮದಲ್ಲಿ ಅಜೀಂ ಪ್ರೇಮ್ ಜೀ ವಿಶ್ವವಿದ್ಯಾಲಯದಲ್ಲಿ ಭಾರತೀಯ ಸೈನ್ಯದ ವಿರುದ್ಧ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ ಎಂದು ಆರೋಪಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್(ಎಬಿವಿಪಿ)ನ ಪದಾಧಿಕಾರಿಗಳು ಸರ್ಜಾಪುರದ ವಿಶ್ವವಿದ್ಯಾಲಯದ ಮುಂದೆ ಮಂಗಳವಾರ ಪ್ರತಿಭಟನೆ ನಡೆಸಿದರು. ಎಬಿವಿಪಿ ಪ್ರತಿಭಟನೆಯಿಂದಾಗಿ ವಿಶ್ವವಿದ್ಯಾಲಯದ ಮುಂಭಾಗದಲ್ಲಿ ಕೆಲ ಕಾಲ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು. ವಿಶ್ವವಿದ್ಯಾಲಯದ ಆವರಣದಲ್ಲಿ 50ಕ್ಕೂ ಹೆಚ್ಚು ಎಬಿವಿಪಿ ಕಾರ್ಯಕರ್ತರು ʼಭಾರತ್ ಮಾತಾ ಕೀ ಜೈʼ ಎಂದು ಘೋಷಣೆಗಳನ್ನು ಕೂಗುತ್ತಾ ಒಳನುಗ್ಗಲು ಪ್ರಯತ್ನಿಸಿದರು. ವಿಶ್ವವಿದ್ಯಾಲಯದ ನಾಮಫಲಕಕ್ಕೆ ಮಸಿ ಬಳಿಯುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು. ಅಜೀಂ ಪ್ರೇಮ್ ಜೀ ವಿಶ್ವವಿದ್ಯಾಲಯವು ದೇಶ ವಿರೋಧಿ ಕಾರ್ಯಕ್ರಮಗಳನ್ನು ರೂಪಿಸುತ್ತಿದೆ ಎಂಬ ಮಾಹಿತಿ ದೊರೆತ ಹಿನ್ನೆಲೆಯಲ್ಲಿ ಎಬಿವಿಪಿಯ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಪ್ರತಿಭಟನಾ ನಿರತರನ್ನು ಸರ್ಜಾಪುರ ಪೊಲೀಸರು ವಶಕ್ಕೆ ಪಡೆದರು.
ಪತ್ಯೇಕ ಪ್ರಕರಣ: ಮಾದಕ ವಸ್ತು ಸೇವಿಸಿದ ಆರೋಪ: 5 ಮಂದಿ ಸೆರೆ
ಮಂಗಳೂರು, ಫೆ.24: ಮಂಗಳೂರು ನಗರದ ವಿವಿಧ ಠಾಣೆಗಳ ವ್ಯಾಪ್ತಿಯಲ್ಲಿ ಪೊಲೀಸರು ನಡೆಸಿದ ಕಾರ್ಯಾ ಚರಣೆಯಲ್ಲಿ ಮಾದಕ ವಸ್ತು ಸೇವಿಸಿದ ಆರೋಪದಲ್ಲಿ 5 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಉಳ್ಳಾಲದ ನಾರ್ಲ ಪಡೀಲ್ ನಿವಾಸಿಗಳಾದ ಸುಹಾನ್ ಪೂಜಾರಿ (21) ಮತ್ತು ಬಿ ಸುದೇಶ್ (19) ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ. ಉಳ್ಳಾಲದ ಸಹಾಯಕ ಪೊಲೀಸ್ ಉಪ-ನಿರೀಕ್ಷಕ ಮೋಹನ್ ಕೆ.ವಿ ರೌಂಡ್ಸ್ ನಲ್ಲಿರುವಾಗ ಉಳ್ಳಾಲ ತಾಲೂಕು ಕೋಟೆಕಾರ್ ಗ್ರಾಮದ ಬೀರಿ ರಸ್ತೆಯ ಬದಿಯಲ್ಲಿ ಆರೋಪಿಗಳಾದ ಸುಹಾನ್ ಪೂಜಾರಿ ಮತ್ತು ಬಿ ಸುದೇಶ್ ಎಂಬವರು ಮಾದಕ ವಸ್ತುವನ್ನು ಸೇವಿಸಿಕೊಂಡು ಸಾರ್ವಜನಿಕರಿಗೆ ತೊಂದರೆಯಾಗುವ ರೀತಿಯಲ್ಲಿ ವರ್ತಿಸುತ್ತಿದ್ದರು ಎನ್ನಲಾಗಿದೆ. ಆರೋಪಿಗಳನ್ನು ವಶಕ್ಕೆ ಪಡೆದು ಆಸ್ಪತ್ರೆಯಲ್ಲಿ ಪರೀಕ್ಷೆಗೊಳಪಡಿಸಿದಾಗ ಆರೋಪಿಗಳು ಮಾದಕ ವಸ್ತು ಸೇವಿಸಿರುವುದು ದೃಢಪಟ್ಟಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮಂಗಳೂರು ತಾಲೂಕು ಕಸಬಾ ಬೆಂಗ್ರೆ ಸಮೀಪ ಗಾಂಜಾ ಸೇವಿಸಿರುವ ಆರೋಪದಲ್ಲಿ ಅಶ್ರಫ್ ಎಂಬಾತನನ್ನು ಪಣಂಬೂರು ಪೊಲೀಸ್ ಠಾಣಾ ಉಪ-ನಿರೀಕ್ಷಕಿ ಶ್ರೀಕಲಾ ಕೆ.ಟಿ ಅವರು ಫೆ.23ರಂದು ಬಂಧಿಸಿದ್ದಾರೆ. ಮಂಗಳೂರು ನಗರದ ಪಂಜಿಮೊಗರು ಬಸ್ ನಿಲ್ದಾಣದ ಬಳಿ ಮಾದಕ ವಸ್ತು ಸೇವನೆ ಮಾಡಿರುವ ಆರೋಪದಲ್ಲಿ ಉರುಂದಾಡಿ ಗುಡ್ಡೆ ನಿವಾಸಿ ಚಂದನ್ ( 19 ) ಮತ್ತು ಸಿದ್ದಾಪುರ ಕಾನಕೇರಿ ನಿವಾಸಿ ಕಿರಣ್ ರವಿ ನಾಯ್ಕ ( 24 ) ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ.
ಕಲ್ಯಾಣ ಕಾರ್ಯಕ್ರಮಗಳ ಬಗ್ಗೆ ಮನೆ ಸಮೀಕ್ಷೆ ನಡೆಸಲು ಕೇರಳ ಸರಕಾರಕ್ಕೆ ಸುಪ್ರೀಂ ಕೋರ್ಟ್ ಅನುಮೋದನೆ
ಹೊಸದಿಲ್ಲಿ, ಫೆ. 24: ತನ್ನ ‘‘ನವ ಕೇರಳ ನಾಗರಿಕ ಸ್ಪಂದನೆ ಕಾರ್ಯಕ್ರಮ’’ವನ್ನು ಜಾರಿಗೊಳಿಸಲು ಕೇರಳ ಸರಕಾರಕ್ಕೆ ಸುಪ್ರೀಂ ಕೋರ್ಟ್ ಮಂಗಳವಾರ ಅನುಮೋದನೆ ನೀಡಿದೆ. ಈ ಕಾರ್ಯಕ್ರಮದ ಮೂಲಕ, ರಾಜ್ಯ ಸರಕಾರವು ತನ್ನ ಕಲ್ಯಾಣ ಕಾರ್ಯಕ್ರಮಗಳ ಬಗ್ಗೆ ಮನೆ ಮನೆಗಳಿಂದ ಜನರ ಅಭಿಪ್ರಾಯವನ್ನು ಸಮಿತಿಗಳು ಮತ್ತು ಸ್ವಯಂಸೇವಕರ ಮೂಲಕ ಸಂಗ್ರಹಿಸಲು ಉದ್ದೇಶಿಸಿದೆ. ರಾಜ್ಯದಲ್ಲಿ ಏಪ್ರಿಲ್ನಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ಈ ಕಾರ್ಯಕ್ರಮವನ್ನು ಇತ್ತೀಚೆಗೆ ಕೇರಳ ಹೈಕೋರ್ಟ್ ರದ್ದುಪಡಿಸಿತ್ತು. ಹೈಕೋರ್ಟ್ ಆದೇಶಕ್ಕೆ ತಡೆಯಾಜ್ಞೆ ನೀಡಿದ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶ ಸೂರ್ಯ ಕಾಂತ್ ಮತ್ತು ನ್ಯಾಯಮೂರ್ತಿ ಜಯಮಲ್ಯ ಬಾಗ್ಚಿ ಅವರನ್ನು ಒಳಗೊಂಡ ನ್ಯಾಯಪೀಠವು ಈ ಮಧ್ಯಂತರ ಆದೇಶವನ್ನು ನೀಡಿತು. ಆದರೆ, ಈ ಕಾರ್ಯಕ್ರಮಕ್ಕೆ ತಗಲಿದ ವೆಚ್ಚದ ವಿವರಗಳನ್ನು ಒಳಗೊಂಡ ವರದಿಯೊಂದನ್ನು ಸೂಕ್ತ ಸಮಯದಲ್ಲಿ ಸಲ್ಲಿಸುವಂತೆ ಸರ್ವೋಚ್ಛ ನ್ಯಾಯಾಲಯವು ಕೇರಳ ಸರಕಾರಕ್ಕೆ ನಿರ್ದೇಶನ ನೀಡಿತು. ವಿಚಾರಣೆಯ ವೇಳೆ, ಸುಪ್ರೀಂ ಕೋರ್ಟ್ ನ್ಯಾಯಪೀಠವು ಹೈಕೋರ್ಟ್ ಹಸ್ತಕ್ಷೇಪದ ಆಧಾರವನ್ನು ಪ್ರಶ್ನಿಸಿತು. ‘‘ತನ್ನ ಕಾರ್ಯಕ್ರಮಗಳ ಪರಿಣಾಮಗಳೇನು ಮತ್ತು ಅದನ್ನು ಹೇಗೆ ಸುಧಾರಿಸಬಹುದು ಎನ್ನುವುದನ್ನು ರಾಜ್ಯವೊಂದು ಯಾಕೆ ತಿಳಿಯಬಾರದು? ಅದರಲ್ಲಿ ಏನು ತಪ್ಪಿದೆ?’’ ಎಂದು ಸುಪ್ರೀಂ ಕೋರ್ಟ್ ಪ್ರಶ್ನಿಸಿತು. ಸಾರ್ವಜನಿಕ ಹಣವನ್ನು ದುರುಪಯೋಗಪಡಿಸಲಾಗುತ್ತಿದೆ ಎಂಬ ಆರೋಪವನ್ನು ನಿರಾಕರಿಸಿದ ಕೇರಳ ಸರಕಾರದ ಪರ ವಕೀಲ ಕಪಿಲ್ ಸಿಬಲ್, ಈ ಕಸರತ್ತಿನಲ್ಲಿ ತೊಡಗಿರುವ ಸ್ವಯಂಸೇವಕರಿಗೆ ಒಂದು ಪೈಸೆಯನ್ನೂ ಕೊಡಲಾಗಿಲ್ಲ ಎಂದು ಹೇಳಿದರು. ಹೈಕೋರ್ಟ್ನಲ್ಲಿ ಅರ್ಜಿದಾರರ ಪರವಾಗಿ ವಾದಿಸಿದ್ದ ಹಿರಿಯ ವಕೀಲ ನರೇಂದ್ರ ಹೂಡ, ಈ ಕಾರ್ಯಕ್ರಮವು ವಾಸ್ತವಿಕವಾಗಿ, ಚುನಾವಣೆಗೆ ಮುಂಚಿತವಾಗಿ ಸರಕಾರದ ವೆಚ್ಚದಲ್ಲಿ ನಡೆಸಲಾಗುತ್ತಿರುವ ರಾಜಕೀಯ ಸಾರ್ವಜನಿಕ ಸಂಪರ್ಕ ಅಭಿಯಾನವಾಗಿದೆ ಎಂದು ಆರೋಪಿಸಿದ್ದರು.
ಪಶ್ಚಿಮ ಬಂಗಾಳದ 6 ನ್ಯಾಯಾಲಯಗಳಿಗೆ ಬಾಂಬ್ ಬೆದರಿಕೆ|ಪೊಲೀಸರಿಂದ ಶೋಧ
ಕೋಲ್ಕತ, ಫೆ. 24: ಬಾಂಬ್ ಇಡಲಾಗಿದೆ ಎಂಬ ಇಮೇಲ್ ಬೆದರಿಕೆಗಳ ಹಿನ್ನೆಲೆಯಲ್ಲಿ, ಕೋಲ್ಕತಾದ ಎರಡು ಸೇರಿದಂತೆ ಪಶ್ಚಿಮ ಬಂಗಾಳದ ಕನಿಷ್ಠ ಆರು ಜಿಲ್ಲಾ ನ್ಯಾಯಾಲಯಗಳಲ್ಲಿ ಪೊಲೀಸರು ಮಂಗಳವಾರ ಶೋಧ ನಡೆಸಿದರು. ನ್ಯಾಯಾಲಯಗಳಲ್ಲಿ ಬಾಂಬ್ಗಳನ್ನು ಇಡಲಾಗಿದೆ ಎಂಬ ಬೆದರಿಕೆಯನ್ನು ಹೊತ್ತ ಇಮೇಲ್ ಸಂದೇಶ ಬಂದ ಬಳಿಕ, ಮಧ್ಯ ಕೋಲ್ಕತದ ಸಿಟಿ ಸಿವಿಲ್ ಮತ್ತು ಸೆಶನ್ಸ್ ನ್ಯಾಯಾಲಯ ಹಾಗೂ ಬ್ಯಾಂಕ್ಸ್ಹಾಲ್ ನ್ಯಾಯಾಲಯಕ್ಕೆ ಬಾಂಬ್ ಪತ್ತೆ ಮಾಡುವ ನಾಯಿಗಳು ಮತ್ತು ಬಾಂಬ್ ನಿಷ್ಕ್ರಿಯ ತಂಡಗಳನ್ನು ಕಳುಹಿಸಲಾಗಿದೆ. ಆದರೆ, ಶೋಧ ಕಾರ್ಯಾಚರಣೆಯ ವೇಳೆ, ಯಾವುದೇ ಬಾಂಬ್ ಪತ್ತೆಯಾಗಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಹೂಗ್ಲಿ ಜಿಲ್ಲೆಯ ಚಿನ್ಸುರಾ, ಪಶ್ಚಿಮ ಬರ್ದ್ವಾನ್ ಜಿಲ್ಲೆಯ ಅಸನ್ಸೋಲ್ ಮತ್ತು ದುರ್ಗಾಪುರ ಹಾಗೂ ಮುರ್ಶಿದಾಬಾದ್ ಜಿಲ್ಲೆಯ ಬರ್ಹಾಂಪುರ ನ್ಯಾಯಾಲಯಗಳಲ್ಲೂ ಇಂಥದೇ ಘಟನೆಗಳು ನಡೆದಿವೆ. ಪ್ರಸಕ್ತ ಚಾಲ್ತಿಯಲ್ಲಿರುವ ಪಶ್ಚಿಮ ಬಂಗಾಳ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್ಐಆರ್)ಯ ವೇಳೆ, ತಮ್ಮ ಹೆಸರುಗಳನ್ನು ಕೈಬಿಟ್ಟಿರುವುದನ್ನು ಪ್ರಶ್ನಿಸಿ ಸುಮಾರು 60 ಲಕ್ಷ ಮತದಾರರು ತಕರಾರು ಅರ್ಜಿಗಳನ್ನು ಸಲ್ಲಿಸಿದ್ದಾರೆ. ಈ ಬೃಹತ್ ಪ್ರಮಾಣದ ಅರ್ಜಿಗಳನ್ನು ಇತ್ಯರ್ಥಪಡಿಸುವುದಕ್ಕಾಗಿ ಪಶ್ಚಿಮ ಬಂಗಾಳದ ಜಿಲ್ಲಾ ನ್ಯಾಯಾಲಯಗಳ 250 ಹಾಲಿ ಮತ್ತು ನಿವೃತ್ತ ನ್ಯಾಯಾಧೀಶರ ಜೊತೆಗೆ, ಒಡಿಶಾ ಮತ್ತು ಜಾರ್ಖಂಡ್ ರಾಜ್ಯಗಳ ನ್ಯಾಯಾಧೀಶರನ್ನೂ ನಿಯೋಜಿಸಬಹುದು ಎಂಬುದಾಗಿ ಮಂಗಳವಾರ ಬೆಳಗ್ಗೆ ಸುಪ್ರೀಂ ಕೋರ್ಟ್ ತೀರ್ಪು ನೀಡಿದ ಬಳಿಕ ನ್ಯಾಯಾಲಯಗಳಿಗೆ ಬಾಂಬ್ ಬೆದರಿಕೆ ಸಂದೇಶಗಳು ಬಂದಿವೆ.
ದಿಲ್ಲಿಯಲ್ಲಿ ಈಶಾನ್ಯ ಮಹಿಳೆಯರಿಗೆ ಜನಾಂಗೀಯ ನಿಂದನೆ: ಕ್ರಮಕ್ಕೆ ಈಶಾನ್ಯ ಮುಖ್ಯಮಂತ್ರಿಗಳ ತೀವ್ರ ಆಗ್ರಹ
ಗುವಾಹಟಿ/ಹೊಸದಿಲ್ಲಿ: ದಿಲ್ಲಿಯ ಮಾಳವೀಯ ನಗರ ಪ್ರದೇಶದಲ್ಲಿ ಅರುಣಾಚಲ ಪ್ರದೇಶದ ಮೂವರು ಮಹಿಳೆಯರಿಗೆ ಜನಾಂಗೀಯ ನಿಂದನೆ ಎಸಗಿದ ಘಟನೆಗೆ ಈಶಾನ್ಯ ಭಾರತದ ರಾಜ್ಯಗಳ ಮುಖ್ಯಮಂತ್ರಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರಕರಣದಲ್ಲಿ ಭಾಗಿಯಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಅವರು ಆಗ್ರಹಿಸಿದ್ದಾರೆ. ಅರುಣಾಚಲ ಪ್ರದೇಶ ಮುಖ್ಯಮಂತ್ರಿ ಪೆಮಾ ಖಂಡು, ಇಂತಹ ವರ್ತನೆಗಳನ್ನು ಯಾವುದೇ ರೀತಿಯಲ್ಲೂ ಸಹಿಸಲಾಗುವುದಿಲ್ಲ ಎಂದು ಖಂಡಿಸಿದರು. ಸಮಾಜದಲ್ಲಿ ಜನಾಂಗೀಯ ದ್ವೇಷಕ್ಕೆ ಅವಕಾಶವಿಲ್ಲ ಎಂದು ಸ್ಪಷ್ಟಪಡಿಸಿದ ಅವರು, ವಿಷಯ ತಿಳಿದ ತಕ್ಷಣ ದಿಲ್ಲಿ ಪೊಲೀಸ್ ಆಯುಕ್ತರೊಂದಿಗೆ ಮಾತನಾಡಿ, ತ್ವರಿತ ಹಾಗೂ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದೇನೆ ಎಂದರು. ಸಿಕ್ಕಿಂ ಮುಖ್ಯಮಂತ್ರಿ ಪ್ರೇಮ್ ಸಿಂಗ್ ತಮಾಂಗ್, ಈ ಘಟನೆ ಕಳವಳಕಾರಿ ಮತ್ತು ದುರದೃಷ್ಟಕರ ಎಂದು ಅಭಿಪ್ರಾಯಪಟ್ಟರು. “ಈಶಾನ್ಯ ಭಾರತ ದೇಶದ ಅವಿಭಾಜ್ಯ ಅಂಗ. ಪ್ರತಿಯೊಬ್ಬ ನಾಗರಿಕರೂ ಸಮಾನತೆ, ಘನತೆ ಮತ್ತು ಗೌರವಕ್ಕೆ ಅರ್ಹರು. ಇಂತಹ ಘಟನೆಗಳು ಪರಸ್ಪರ ಗೌರವದ ಮಹತ್ವವನ್ನು ನೆನಪಿಸುತ್ತವೆ,” ಎಂದು ಹೇಳಿದರು. ಮೇಘಾಲಯ ಮುಖ್ಯಮಂತ್ರಿ ಕಾನ್ರಾಡ್ ಕೆ. ಸಂಗ್ಮಾ ಕೂಡಾ ಪ್ರಕರಣವನ್ನು ಖಂಡಿಸಿ, ಈಶಾನ್ಯ ರಾಜ್ಯಗಳ ಜನರ ವಿರುದ್ಧ ನಡೆಯುವ ತಾರತಮ್ಯ ತಕ್ಷಣ ನಿಲ್ಲಬೇಕು ಎಂದು ಆಗ್ರಹಿಸಿದರು. ಜನಾಂಗೀಯ ಹಾಗೂ ಲೈಂಗಿಕ ದೌರ್ಜನ್ಯಗಳ ಪ್ರಕರಣಗಳು ಸಮಾಜಕ್ಕೆ ನಾಚಿಕೆಗೇಡು ಎಂದರು. ವರದಿಗಳ ಪ್ರಕಾರ, ಮಾಳವೀಯ ನಗರದಲ್ಲಿರುವ ನಾಲ್ಕನೇ ಅಂತಸ್ತಿನ ಫ್ಲ್ಯಾಟ್ನಲ್ಲಿ ವಾಸಿಸುತ್ತಿರುವ ಅರುಣಾಚಲ ಪ್ರದೇಶದ ಮೂವರು ಮಹಿಳೆಯರು ಹವಾನಿಯಂತ್ರಕ (ಎಸಿ) ಅಳವಡಿಸಲು ಎಲೆಕ್ಟ್ರಿಷಿಯನ್ ನನ್ನು ಕರೆಸಿಕೊಂಡಿದ್ದರು. ಗೋಡೆ ಕೊರೆಯುವ ವೇಳೆ ಧೂಳು ಹಾಗೂ ಅವಶೇಷಗಳು ಕೆಳಂತಸ್ತಿಗೆ ಬೀಳುತ್ತಿವೆ ಎಂಬ ಕಾರಣಕ್ಕೆ ನೆರೆಯವರು ಆಕ್ಷೇಪ ವ್ಯಕ್ತಪಡಿಸಿದ್ದು, ಇದೇ ವೇಳೆ ಮಹಿಳೆಯರ ವಿರುದ್ಧ ಜನಾಂಗೀಯ ನಿಂದನೆ ಎಸಗಲಾಗಿದೆ ಎಂದು ಆರೋಪಿಸಲಾಗಿದೆ. ಘಟನೆ ಕುರಿತು ದಿಲ್ಲಿ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಗ್ರಾಮೀಣ ಭಾಗಗಳಲ್ಲಿ ಆರೋಗ್ಯ ಸೇವಾ ಕೇಂದ್ರಗಳ ಅಗತ್ಯತೆಯಿದೆ : ಡಾ. ಎಚ್ ಆರ್ ತಿಮ್ಮಯ್ಯ
ಉಳ್ಳಾಲ: ಗ್ರಾಮೀಣ ಪ್ರದೇಶಗಳಲ್ಲಿ ಇಂತಹ ಆರೋಗ್ಯ ಸೇವಾ ಕೇಂದ್ರಗಳ ಅಗತ್ಯತೆಯಿದ್ದು, ಸಮಾಜಮುಖಿ ಆರೋಗ್ಯ ಯೋಜನೆಗಳು ಸಾರ್ವಜನಿಕ ಆರೋಗ್ಯದ ಬೆಳವಣಿಗೆಗೆ ನೆರವಾಗುತ್ತವೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಹೆಚ್ ಆರ್ ತಿಮ್ಮಯ್ಯ ಅಭಿಪ್ರಾಯಪಟ್ಟರು. ಅವರು ಗ್ರಾಮೀಣ ಭಾಗದ ಜನರಿಗೆ ಹಾಗೂ ದೇಶದಾದ್ಯಂತ ಬರುವ ಭಕ್ತಾಧಿಗಳಿಗೆ ಸಮೀಪದಲ್ಲೇ ಆರೋಗ್ಯ ಸೇವೆ ಒದಗಿಸುವ ಉದ್ದೇಶದಿಂದ ಜಸ್ಟೀಸ್ ಕೆ.ಎಸ್ ಹೆಗ್ಡೆ ಚಾರಿಟೇಬಲ್ ಆಸ್ಪತ್ರೆ ವತಿಯಿಂದ, ನಿಟ್ಟೆ ಪರಿಗಣಿಸಲ್ಪಟ್ಟ ವಿಶ್ವವಿದ್ಯಾಲಯದ ಸಹಯೋಗದಲ್ಲಿ ಹಾಗೂ ಶ್ರೀ ಪಂಜಂದಾಯ ಬಂಟ ವೈದ್ಯನಾಥ ಮತ್ತುಆದಿ ಕೊರಗತನಿಯ ದೈವಸ್ಥಾನದ ಸಹಕಾರದಲ್ಲಿ ಸ್ಥಾಪಿಸಲಾಗಿದ ದೆಕ್ಕಾಡು, ಕುತ್ತಾರಿನ ಆದಿಸ್ಥಳ ಸ್ವಾಮಿ ಕೊರಗಜ್ಜ ದೇವಸ್ಥಾನ ಪರಿಸರದಲ್ಲಿ ಆದಿಸ್ಥಳ ಕೊರಗಜ್ಜ ಸೇವಾ ಕ್ಲಿನಿಕ್ ನ ಉದ್ಘಾಟನೆ ನಡೆಸಿ ಮಾತನಾಡಿದರು. ಕೆ.ಎಸ್ ಹೆಗ್ಡೆ ವೈದ್ಯಕೀಯ ಅಕಾಡೆಮಿಯ ಡೀನ್ ಡಾ. ಬಿ. ಸಂದೀಪ್ ರೈ ಅವರು, ಉನ್ನತ ಮಟ್ಟದ ವೈದ್ಯಕೀಯ ಸಂಸ್ಥೆಗಳು ಮತ್ತು ಗ್ರಾಮೀಣ ಸಮುದಾಯಗಳ ನಡುವಿನ ಅಂತರವನ್ನು ಕಡಿಮೆ ಮಾಡುವ ಸೇತುವೆಯಾಗಿ ಈ ಕ್ಲಿನಿಕ್ ಕಾರ್ಯನಿರ್ವಹಿಸಲಿದೆ. ಸಂಜೆ ೪ ರಿಂದ ೬ ಗಂಟೆಯವರೆಗೆ ಕಾರ್ಯಾಚರಿಸಲಿದ್ದು, ಚಿಕಿತ್ಸೆ ಜೊತೆಗೆ ಔಷಧಿಯನ್ನು ಉಚಿತವಾಗಿ ಕ್ಲಿನಿಕ್ ನಲ್ಲಿ ಒದಗಿಸಲಾಗುವುದು ಎಂದರು. ಈ ಸಂದರ್ಭ ರಾಜ್ಯ ಧಾರ್ಮಿಕ ಪರಿಷತ್ ಸದಸ್ಯೆ ಮಲ್ಲಿಕಾ ಪಕಳ, ಜಸ್ಟಿಸ್ ಕೆ. ಎಸ್. ಹೆಗ್ಡೆ ಚಾರಿಟೆಬಲ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕಿ ಡಾ. ಸುಮಲತಾ ಆರ್. ಶೆಟ್ಟಿ , ಸೇವಾ ಕ್ಲಿನಿಕ್ ನಲ್ಲಿ ವೈದ್ಯರಾಗಿರುವ ಡಾ. ಪ್ರಕಾಶ್, ಡೆಪ್ಯುಟಿ ವೈದ್ಯಕೀಯ ಅಧೀಕ್ಷಕ ಡಾ. ಶಿರಾಲ್ ಹೆಗ್ಡೆ, ಡಾ.ಅನಿಲ್ ಸನಿಲ್, ಅರುಣ್ ಪೂಂಜ, ಸಾರ್ವಜನಿಕ ಸಂಪರ್ಕ ಅಧಿಕಾರಿ ಡಾ. ಹೇಮಂತ್ ಶೆಟ್ಟಿ , ಶ್ರೀಪಂಜಂದಾಯ ಬಂಟ ವೈದ್ಯನಾಥ ಆದಿ ಕೊರಗತನಿಯ ದೈವಸ್ಥಾನದ ಮಹಾಬಲ ಹೆಗ್ಡೆ, ವಿನೋದ್ ಶೆಟ್ಟಿ ಬೊಳ್ಯ, ಮುನ್ನೂರು ಗ್ರಾ.ಪಂ ಉಪಾಧ್ಯಕ್ಷ ಮಹಾಬಲ್ ದೆಪ್ಪೆಲಿಮಾರ್, ಸತೀಶ್ ಮಿತ್ತಗೆಲ , ಮೂಲ್ಯಣ್ಣ ಬಾಲಕೃಷ್ಣ ಮೂಲ್ಯ, ಹರೀಶ್ ಭಂಡಾರಬೈಲ್, ದೈವ ನರ್ತಕ ಮಾಯಿಲ, ಗಣೇಶ್ ಪೂಜಾರಿ, ಮೋನಪ್ಪ ಗೌಡ, ಲಕ್ಷ್ಮಣ್ ಗೌಡ ಹಾಗೂ ದೈವದ ಚಾಕರಿ ವರ್ಗದವರು ಉಪಸ್ಥಿತರಿದ್ದರು.
ಮಣಿಪಾಲ| ಬೈಕ್ ಕಳವು ಪ್ರಕರಣ: 11ಗಂಟೆಯೊಳಗೆ ಇಬ್ಬರು ಆರೋಪಿಗಳ ಬಂಧನ
ಮಣಿಪಾಲ: ಬೈಕ್ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಮಣಿಪಾಲ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. 80 ಬಡಗಬೆಟ್ಟು ಗ್ರಾಮದ ನೇತಾಜಿನಗರ ನಿವಾಸಿ ಶರತ್ (26) ಹಾಗೂ ಗಣೇಶ್ (31) ಬಂಧಿತ ಆರೋಪಿಗಳು. 80 ಬಡಗುಬೆಟ್ಟು ಗ್ರಾಮದ ರಾಹುಲ್ನಗರದ ವೀರ ಮಾರುತಿ ಭಜನಾ ಮಂದಿರ ಬಳಿ ಸುದರ್ಶನ್ ಎಂಬವರು ಫೆ.21ರಂದು ನಿಲ್ಲಿಸಿದ್ದ ಬೈಕ್ ಕಳವಾಗಿರುವ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಬಗ್ಗೆ ತನಿಖೆ ನಡೆಸಿದ ಪೊಲೀಸರು ಪ್ರಕರಣ ದಾಖಲಿಸಿದ 11 ಗಂಟೆಯಲ್ಲಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಗಳ ವಶದಲ್ಲಿದ್ದ ಬೈಕ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಬಂಧಿತರ ವಿರುದ್ಧ ಮಣಿಪಾಲ, ಉಡುಪಿ ನಗರ, ಭದ್ರಾವತಿ, ಕೊಪ್ಪ, ತೀರ್ಥಹಳ್ಳಿ, ಮಡಿಕೇರಿ ಹಾಗೂ ತುಮಕೂರು ಪೊಲೀಸ್ ಠಾಣೆಗಳಲ್ಲಿ 11ಕ್ಕೂ ಅಧಿಕ ಕಳವು ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ವಿಜಯನಗರ | ಫೆ.29ರಿಂದ ಬೆಂಬಲ ಬೆಲೆಯಲ್ಲಿ ಕಡಲೆಕಾಳು ಖರೀದಿ
ವಿಜಯನಗರ (ಹೊಸಪೇಟೆ) : ಜಿಲ್ಲೆಯಲ್ಲಿ ಬೆಂಬಲ ಬೆಲೆ ಯೋಜನೆಯಡಿ ಪ್ರಸಕ್ತ ಹಿಂಗಾರು ಹಂಗಾಮಿನ ಎಫ್.ಎ.ಕ್ಯೂ ಗುಣಮಟ್ಟದ ಕಡಲೆಕಾಳು ಖರೀದಿ ಫೆಬ್ರವರಿ 29ರಿಂದ ಆರಂಭವಾಗಲಿದೆ. ಒಟ್ಟು 4 ಖರೀದಿ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, ಸಹಕಾರ ಮಾರಾಟ ಮಹಾಮಂಡಳಿ ವತಿಯಿಂದ ಪ್ರತಿ ಕ್ವಿಂಟಾಲ್ಗೆ 5,875 ರೂ. ರಂತೆ ಖರೀದಿ ನಡೆಯಲಿದೆ. ಪ್ರತಿ ರೈತನಿಂದ ಎಕರೆಗೆ 4 ಕ್ವಿಂಟಾಲ್ ಮಿತಿಯಲ್ಲಿ ಗರಿಷ್ಠ 40 ಕ್ವಿಂಟಾಲ್ ಉತ್ಪನ್ನವನ್ನು ಖರೀದಿಸಲಾಗುತ್ತದೆ. ಮಾರ್ಚ್ 1ರಿಂದ ನೋಂದಣಿ ಪ್ರಕ್ರಿಯೆ ಆರಂಭವಾಗಿ 80 ದಿನಗಳ ಒಳಗಾಗಿ ನೋಂದಾಯಿಸಿಕೊಳ್ಳಬೇಕು. ಬಳಿಕ ಪ್ರತಿದಿನ ಬೆಳಿಗ್ಗೆ 9ರಿಂದ ಸಂಜೆ 5ರವರೆಗೆ 90 ದಿನಗಳವರೆಗೆ ಖರೀದಿ ನಡೆಯಲಿದೆ. ಬೆಂಬಲ ಬೆಲೆ ಯೋಜನೆಯಡಿ ಕಡಲೆಕಾಳು ಖರೀದಿಗಾಗಿ ಕೋಗಳಿ, ಹರಪನಹಳ್ಳಿ, ಹಿರೇಹಡಗಲಿ, ಹಗರಿಬೊಮ್ಮನಹಳ್ಳಿಯಲ್ಲಿ ಕೇಂದ್ರಗಳನ್ನು ತೆರೆಯಲಾಗಿದೆ ರೈತರು ಪ್ರಸಕ್ತ ಸಾಲಿನ ಪಹಣಿ, ಆಧಾರ್ ಕಾರ್ಡ್, ಬ್ಯಾಂಕ್ ಖಾತೆ ಪುಸ್ತಕ ಹಾಗೂ ಎಫ್ಐಡಿ ದಾಖಲೆಗಳೊಂದಿಗೆ ಫ್ರೂಟ್ಸ್ ತಂತ್ರಾಂಶದಲ್ಲಿ ನೋಂದಾಯಿಸಿಕೊಳ್ಳಬೇಕು. ತಾಂತ್ರಿಕ ತೊಂದರೆಗಳಿದ್ದಲ್ಲಿ ಸಮೀಪದ ಕೃಷಿ ಇಲಾಖೆಯನ್ನು ಸಂಪರ್ಕಿಸಬಹುದು.
ಹಾವೇರಿ ಜಿಲ್ಲೆಗೆ ಪ್ರತ್ಯೇಕ ಡಿಸಿಸಿ ಬ್ಯಾಂಕ್ ಹಾಗೂ ಹಾಲು ಒಕ್ಕೂಟ ಸ್ಥಾಪನೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರವು ಗುಡ್ನ್ಯೂಸ್ ಕೊಟ್ಟಿದೆ. ಈ ಸಂಬಂಧ ಟ್ವೀಟ್ ಮಾಡಿರುವ ಸಂಸದ ಬಸವರಾಜ ಬೊಮ್ಮಾಯಿ ಅವರು, ಡಿಸಿಸಿ ಬ್ಯಾಂಕ್ ಕನಸು ನನಸು ಮಾಡಲು ಸಹಕಾರ ನೀಡಿದ ಕೇಂದ್ರ ಸಚಿವ ಅಮಿತ್ ಶಾ ಅವರಿಗೆ ಅಭಿನಂದನೆಗಳು ಎಂದಿದ್ದಾರೆ. ಕಳೆದ ಒಂದು ದಶಕದಿಂದ ನಮ್ಮ ಹೋರಾಟವಾಗಿದ್ದ
ಹೊಸಪೇಟೆ | ಹಂಪಿ ಕನ್ನಡ ವಿಶ್ವವಿದ್ಯಾಲಯಲ್ಲಿ 34ನೇ ಘಟಿಕೋತ್ಸವ
ಮೂವರಿಗೆ ನಾಡೋಜ ಪ್ರಶಸ್ತಿ ಪ್ರದಾನ
ನೆಲಮಂಗಲ ನಗರಸಭೆಯಲ್ಲಿ ವಿಪ್ ಉಲ್ಲಂಘನೆ: ಕಾಂಗ್ರೆಸ್ ಗೆ ಮತ ಚಲಾಯಿಸಿದ ಜೆಡಿಎಸ್ ನ 7 ಸದಸ್ಯರು ಅನರ್ಹ
ನೆಲಮಂಗಲ: ನಗರಸಭೆ ಅಧ್ಯಕ್ಷರು, ಉಪಾಧ್ಯಕ್ಷರ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಮತ ಚಲಾಯಿಸಿದ್ದ ಜೆಡಿಎಸ್ ಪಕ್ಷದ 7 ಸದಸ್ಯರನ್ನು ವಿಪ್ ಉಲ್ಲಂಘನೆ ದೂರಿನ ಅನ್ವಯ ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಬಸವರಾಜು ಅವರು ಅವರನ್ನು ಸದಸ್ಯ ಸ್ಥಾನದಿಂದ ಅನರ್ಹಗೊಳಿಸಿ ಆದೇಶ ಮಾಡಿದ್ದಾರೆ.ಆನಂದ್ ಜಿ, ಶಾರದ ಉಮೇಶ್, ದಾಕ್ಷಾಯಣಿ ರವಿಕುಮಾರ್, ಬಿ.ಪದ್ಮನಾಭ, ಭಾರತಿಬಾಯಿ, ನರಸಿಂಹಮೂರ್ತಿ ಮತ್ತು ಲತಾ ಹೇಮಂತ್ಕುಮಾರ್ ಅವರು ಅನರ್ಹಗೊಂಡ ನಗರಸಭೆ ಸದಸ್ಯರು. ಇವರು ಜೆಡಿಎಸ್ ಪಕ್ಷದ ಬಿ ಫಾರಂ ಪಡೆದು ಚುನಾವಣೆ ಗೆದ್ದಿದ್ದು, ಅನಂತರ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದರು. 2025 ರ ಫೆ.13ರಂದು ನಡೆದ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆಯಲ್ಲಿ ವಿಪ್ ಜಾರಿಯಾಗಿತ್ತು. ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಪರ 18 ಮತಗಳು ಚಲಾವಣೆಯಾಗಿ ಗೆಲುವು ಪಡೆದರೆ, ಜೆಡಿಎಸ್ ಪಕ್ಷದ ಅಭ್ಯರ್ಥಿ 10 ಮತಗಳನ್ನು ಪಡೆದು ಪರಾಭವಗೊಂಡಿದ್ದರು. ಡಿಸಿಗೆ ಜೆಡಿಎಸ್ ಜಿಲ್ಲಾಧ್ಯಕ್ಷ ದೂರು ಆದರೆ, ಕಾಂಗ್ರೆಸ್ ಅಭ್ಯರ್ಥಿಗೆ ಜೆಡಿಎಸ್ ಪಕ್ಷದಿಂದ ಗೆದ್ದ 7 ಸದಸ್ಯರು ಮತ ಚಲಾವಣೆ ಮಾಡಿದ ಹಿನ್ನೆಲೆ ವಿಪ್ ಉಲ್ಲಂಘನೆಯಾಗಿ ಚುನಾವಣಾ ಅಕ್ರಮ ಮಾಡಿದ್ದಾರೆ ಎಂದು ಜಿಲ್ಲಾಧಿಕಾರಿಗಳಿಗೆ ಜೆಡಿಎಸ್ ಪಕ್ಷದ ಜಿಲ್ಲಾಧ್ಯಕ್ಷ ಮುನೇಗೌಡ ದೂರು ಸಲ್ಲಿಸಿದ್ದರು. ಈ ಪ್ರಕರಣ ದಾಖಲಿಸಿಕೊಂಡಿದ್ದ ಜಿಲ್ಲಾಧಿಕಾರಿಗಳು ಅರ್ಜಿದಾರರು ಹಾಗೂ ಎದುರುದಾರರನ್ನು ವಿಚಾರಣೆ ಮಾಡಿ 7 ಸದಸ್ಯರನ್ನು ಅನರ್ಹಗೊಳಿಸುವ ಮೂಲಕ ಅಂತಿಮ ಆದೇಶವನ್ನು ನೀಡಿದ್ದಾರೆ.ಸಮಬಲ: ನಗರಸಭೆಯ 7 ಸದಸ್ಯರು ಅನರ್ಹವಾದ ಹಿನ್ನೆಲೆ ಕಾಂಗ್ರೆಸ್ ಹಾಗೂ ಮೈತ್ರಿ ಪಕ್ಷಗಳ ಸದಸ್ಯ ಬಲ ಸಮಬಲವಾಗಿದ್ದು, ಮುಂದಿನ ರಾಜಕೀಯ ಲೆಕ್ಕಾಚಾರ ಬೂದಿಮುಚ್ಚಿದ ಕೆಂಡದಂತಾಗಿದೆ. ಅನರ್ಹಗೊಂಡ ಸದಸ್ಯರು ಮುಂದಿನ ಕಾನೂನು ಹೋರಾಟ ಮಾಡುತ್ತೇವೆ ಎಂದರೆ, ಕಾನೂನು ಅನ್ವಯವೇ ಅನರ್ಹವಾಗಿದ್ದಾರೆ. ಇದೇ ಅಂತಿಮ ಎಂದು ಜೆಡಿಎಸ್ನ ಮುಖಂಡರು ಹೇಳಿದ್ದಾರೆ. ಕಾಂಗ್ರೆಸ್ ಶಾಸಕರಿದ್ದರೂ ಅನರ್ಹತೆಯ ಸುಳಿಯಲ್ಲಿ ಮತದಾನ ಮಾಡಿದ ಸದಸ್ಯರು ಸಿಲುಕಿದಂತಾಗಿದೆ.ಈ ಬಗ್ಗೆ ವಿಕ ಜೊತೆ ಮಾತನಾಡಿದ ಜೆಡಿಎಸ್ ಜಿಲ್ಲಾಧ್ಯಕ್ಷ ಮುನೇಗೌಡ, ತಾಯಿದ್ರೋಹ ಮಾಡುವವರಿಗೆ ಶಿಕ್ಷೆ ನಿಶ್ಚಿತ. ಜೆಡಿಎಸ್ನಿಂದ ಬಿ ಫಾರಂ ಪಡೆದು ಪಕ್ಷದಿಂದ ಗೆದ್ದು ಹೆಸರು ಮಾಡಿಕೊಂಡು, ದುರಾಸೆಯಿಂದ ಕಾಂಗ್ರೆಸ್ ಜತೆ ಹೋಗಿ ಪಕ್ಷಕ್ಕೆ ದ್ರೋಹ ಮಾಡಿದ್ದರು. ಎಚ್.ಡಿ. ಕುಮಾರಸ್ವಾಮಿಯವರ ಮಾರ್ಗದರ್ಶನದಲ್ಲಿ ಪಕ್ಷಕ್ಕೆ ಮೋಸ ಮಾಡಿದವರನ್ನು ಪಕ್ಷದಿಂದ ಹೊರಗೆ ಹಾಕಲು ವಿಪ್ ಉಲ್ಲಂಘನೆ ವಿರುದ್ಧ ಜಿಲ್ಲಾಧಿಕಾರಿಗೆ ದೂರು ನೀಡಲಾಗಿತ್ತು. ನಮಗೀಗ ಜಯವಾಗಿದೆ. ಪಕ್ಷದ ಒಳಗೆಯಿದ್ದು ಬೇರೆ ಪಕ್ಷಕ್ಕೆ ಮತದಾನ ಮಾಡಲು ಪ್ರೇರಣೆ ಮಾಡುವವರಿಗೂ ಇದು ತಕ್ಕ ಪಾಠವಾಗಿದೆ ಎಂದು ತಿಳಿಸಿದ್ದಾರೆ.
ಹರಪನಹಳ್ಳಿ | ಸಾಲಬಾಧೆ ತಾಳಲಾರದೆ ರೈತ ಆತ್ಮಹತ್ಯೆ
ಹರಪನಹಳ್ಳಿ : ತಾಲೂಕಿನ ಜಂಗಮ ತುಂಬಿಗೆರೆ ಗ್ರಾಮದ ರೈತ ಗುಡಾಳ್ ಸಿದ್ದಯ್ಯ (53) ಸಾಲಬಾಧೆ ತಾಳಲಾರದೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ವರದಿಯಾಗಿದೆ. ಕೈಗಡ ಸಾಲದಿಂದ ಕಂಗೆಟ್ಟಿದ್ದ ಅವರು ಸೋಮವಾರ ಸಂಜೆ ಗಡಿ ಗುಡಾಳ್ ಗ್ರಾಮಕ್ಕೆ ರಥೋತ್ಸವಕ್ಕೆ ಹೋಗಿ ಬರುತ್ತೇನೆಂದು ತಿಳಿಸಿ, ತಮ್ಮ ಹೊಲದಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಮೃತರ ಪತ್ನಿ ಗೌರಮ್ಮ ನೀಡಿದ ದೂರಿನಲ್ಲಿ, “ಕೈಗಡ ಸಾಲವನ್ನು ತೀರಿಸಲು ಸಾಧ್ಯವಾಗದೆ ಪತಿ ಜಿಗುಪ್ಸೆಗೊಂಡಿದ್ದರು. ಕುಟುಂಬದವರು ಸಮಾಧಾನಪಡಿಸಿದರೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ” ಎಂದು ತಿಳಿಸಿದ್ದಾರೆ. ಈ ಕುರಿತು ಅರಸೀಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆತ್ಮಹತ್ಯೆಯ ಯೋಚನೆ ಬಂದಾಗ ಅದನ್ನು ನಿಗ್ರಹಿಸಲು ರಾಜ್ಯ ಸರಕಾರದ ಅರೋಗ್ಯ ಇಲಾಖೆಯ ಹೆಲ್ಪ್ ಲೈನ್ 104 ಸಹಾಯ ಮಾಡುತ್ತದೆ. ಅದರ ಜೊತೆಗೆ Tele-MANAS ನ 14416 ಅನ್ನೂ ಸಂಪರ್ಕಿಸಬಹುದು.
ವಿಜಯನಗರ | ನಿಚ್ಚಾಪುರ ಶಾಲೆಯಲ್ಲಿ ಅಗ್ನಿ ಅವಘಡ ಪ್ರಾತ್ಯಕ್ಷಿಕೆ
ವಿಜಯನಗರ / ಹರಪನಹಳ್ಳಿ : ತಾಲೂಕಿನ ನಿಚ್ಚಾಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅಗ್ನಿ ಶಾಮಕ ದಳದ ಸಿಬ್ಬಂದಿಗಳು ಶಾಲಾ ಮಕ್ಕಳಿಗೆ ಬೆಂಕಿ ಅವಘಡಗಳ ಕುರಿತು ಪ್ರಾತ್ಯಕ್ಷಿಕೆ ನೀಡಿದರು. ಮನೆಯಲ್ಲಿ ನಿತ್ಯ ಬಳಕೆಯಾಗುವ ಎಲ್ಪಿಜಿ ಗ್ಯಾಸ್ ಸಿಲಿಂಡರ್ನಿಂದ ಸಂಭವಿಸಬಹುದಾದ ಅಗ್ನಿ ಅವಘಡಗಳಿಗೆ ತೆಗೆದುಕೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ವಿದ್ಯಾರ್ಥಿಗಳಿಗೆ ವಿವರಿಸಿದರು. ಸರ್ಕಾರಿ ನೌಕರರ ಸಂಘದ ರಾಜ್ಯ ಪರಿಷತ್ ಸದಸ್ಯ ಷರೀಫ್ ಮಕರಬ್ಬಿ ಮಾತನಾಡಿ, ಬೇಸಿಗೆ ಕಾಲದಲ್ಲಿ ಎಲ್ಲೆಂದರಲ್ಲಿ ಬೆಂಕಿ ಹಚ್ಚಬಾರದು. ಗ್ರಾಮದಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡರೆ ತಕ್ಷಣ ಅಗ್ನಿ ಶಾಮಕ ದಳಕ್ಕೆ ಕರೆ ಮಾಡಿ ದೊಡ್ಡ ಅನಾಹುತಗಳನ್ನು ತಪ್ಪಿಸಬೇಕು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಅಗ್ನಿ ಶಾಮಕ ಠಾಣಾಧಿಕಾರಿ ಕೆ. ಚಂದ್ರಶೇಖರ, ಪ್ರಮುಖ ಅಗ್ನಿ ಶಾಮಕ ಅಧಿಕಾರಿ ಎ. ಬಸವರಾಜ, ಸಿಬ್ಬಂದಿ ಎಲ್.ಆರ್. ಶ್ರೀನಿವಾಸ, ದಿಲೀಪ್ ಭೋಯಿ, ರಫೀಕ್, ಶಿಕ್ಷಕಿ ರತ್ನ ಪತ್ತಾರ್ ಸೇರಿದಂತೆ ಶಾಲಾ ಮಕ್ಕಳು ಉಪಸ್ಥಿತರಿದ್ದರು.
ಮಂಗಳೂರು ಅಂತರ್ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಜಾಗತಿಕ ಪ್ರಶಸ್ತಿ
ಮಂಗಳೂರು, ಫೆ.24: ಏರ್ಪೋರ್ಟ್ಸ್ ಕೌನ್ಸಿಲ್ ಇಂಟರ್ನ್ಯಾಷನಲ್ (ಎಸಿಐ ) ವರ್ಲ್ಡ್ ಮಂಗಳೂರು ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣವನ್ನು 2025ರ ಅತ್ಯುತ್ತಮ ವಿಮಾನ ನಿಲ್ದಾಣಕ್ಕಾಗಿ ವಿಮಾನ ನಿಲ್ದಾಣ ಸೇವಾ ಗುಣಮಟ್ಟ ಪ್ರಶಸ್ತಿ ವಿಜೇತ ಎಂದು ಹೆಸರಿಸಿದೆ. ಜಾಗತಿಕವಾಗಿ, ಪ್ರಯಾಣಿಕರ ಅನುಭವಕ್ಕಾಗಿ ವಿಶ್ವದಾದ್ಯಂತ ಪ್ರಮುಖ ವಿಮಾನ ನಿಲ್ದಾಣಗಳಲ್ಲಿ ಅದರ ಸ್ಥಾನವನ್ನು ಪುನರುಚ್ಚರಿಸುತ್ತದೆ. ಎಎಸ್ಕ್ಯೂ ಪ್ರಶಸ್ತಿಗಳನ್ನು ವಾಯುಯಾನ ಉದ್ಯಮದ ಗ್ರಾಹಕ ತೃಪ್ತಿಯ ಅತ್ಯಂತ ವಿಶ್ವಾಸಾರ್ಹ ಅಳತೆ ಎಂದು ಪರಿಗಣಿಸಲಾಗಿದೆ, ಇದು ಎಸಿಐ ಯ ಸ್ವತಂತ್ರವಾಗಿ ನಿರ್ವಹಿಸಲ್ಪಟ್ಟ ಸಮೀಕ್ಷೆ ಕಾರ್ಯಕ್ರಮದ ಮೂಲಕ ಸಂಗ್ರಹಿಸಿದ ನೈಜ-ಸಮಯದ ಪ್ರಯಾಣಿಕರ ಪ್ರತಿಕ್ರಿಯೆಯನ್ನು ಸಂಪೂರ್ಣವಾಗಿ ಆಧರಿಸಿದೆ. ಆಗಮನ ವಿಭಾಗವು ವಲಸೆ ಪ್ರಕ್ರಿಯೆಗಳು, ಸಾಮಾನು ವಿತರಣೆ, ಟರ್ಮಿನಲ್ ವಾತಾವರಣ, ಸ್ವಚ್ಛತೆ, ಮಾರ್ಗಶೋಧನೆ ಮತ್ತು ಒಟ್ಟಾರೆ ಸೌಕರ್ಯ ಸೇರಿದಂತೆ ಸಂಪೂರ್ಣ ಒಳಬರುವ ಪ್ರಯಾಣವನ್ನು ಮೌಲ್ಯಮಾಪನ ಮಾಡುತ್ತದೆ. ಮಂಗಳೂರು ಅಂತರ್ರಾಷ್ಟ್ರೀಯ ವಿಮಾನ ನಿಲ್ದಾಣವು ಜಾಗತಿಕ ಆಗಮನದ ಪ್ರಶಸ್ತಿಯನ್ನು ಪಡೆದುಕೊಂಡಿದ್ದು, 2024ರಲ್ಲಿ ಪ್ರಶಸ್ತಿಯನ್ನು ಗೆದ್ದುಕೊಂಡಿದೆ. 2025ರಲ್ಲಿ, ವಿಶ್ವಾದ್ಯಂತ ಕೇವಲ ಆರು ವಿಮಾನ ನಿಲ್ದಾಣಗಳು ಆಗಮನದಲ್ಲಿ ಅತ್ಯುತ್ತಮ ವಿಮಾನ ನಿಲ್ದಾಣ - ಜಾಗತಿಕವಾಗಿ ವಿಭಾಗದಲ್ಲಿ ಆಯ್ಕೆಯಾಗಿತ್ತು. ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಭಾರತದ ಅತಿದೊಡ್ಡ ಖಾಸಗಿ ವಿಮಾನ ನಿಲ್ದಾಣ ನಿರ್ವಾಹಕ ಅದಾನಿ ಏರ್ಪೋರ್ಟ್ ಹೋಲ್ಡಿಂಗ್ಸ್ ಲಿಮಿಟೆಡ್ (ಎಎಎಚ್ಎಲ್) ನಿರ್ವಹಿಸುತ್ತದೆ. ಆಗಸ್ಟ್ 31 ರಿಂದ ಸೆಪ್ಟೆಂಬರ್ 4 ರವರೆಗೆ ನಡೆಯಲಿರುವ ಎಸಿಐ ವರ್ಲ್ಡ್ನ ವಿಮಾನ ನಿಲ್ದಾಣ ಅನುಭವ ಶೃಂಗಸಭೆಯ ಭಾಗವಾಗಿ, ಟರ್ಕಿಯ ಇಸ್ತಾನ್ಬುಲ್ನಲ್ಲಿ ಸೆಪ್ಟೆಂಬರ್ 2, 2026 ರಂದು ನಡೆಯಲಿರುವ ಎಎಸ್ಕ್ಯೂ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿಗಳನ್ನು ಔಪಚಾರಿಕವಾಗಿ ಪ್ರದಾನ ಮಾಡಲಾಗುತ್ತದೆ. ಈ ವರ್ಷ ವಿಶ್ವಾದ್ಯಂತ 100 ವಿಮಾನ ನಿಲ್ದಾಣಗಳನ್ನು ವಿಭಾಗಗಳಲ್ಲಿ ಗುರುತಿಸಲಾಗಿದೆ ಮತ್ತು ಒಟ್ಟು 195 ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುತ್ತದೆ.
ಖೇಲೋ ಇಂಡಿಯಾ ವಿಂಟರ್ ಗೇಮ್ಸ್ನಲ್ಲಿ ಕರ್ನಾಟಕದ ಬಾಲೆಗೆ 2 ಕಂಚಿನ ಪದಕ
KIWG 2026: ಕರ್ನಾಟಕದ 17 ವರ್ಷದ ಆಲ್ಪೈನ್ ಸ್ಕೀಯರ್ ಜಿಯಾ ಆರ್ಯನ್, ಖೇಲೋ ಇಂಡಿಯಾ ವಿಂಟರ್ ಗೇಮ್ಸ್ 2026ರಲ್ಲಿ ತಮ್ಮ ಎರಡನೇ ಭಾಗವಹಿಸುವಿಕೆಯನ್ನು ಸ್ಮರಣೀಯವಾಗಿಸಿಕೊಂಡಿದ್ದಾರೆ. ಸವಾಲಿನಿಂದ ಕೂಡಿದ್ದ ಕೊಂಗ್ಡೂರಿ ಇಳಿಜಾರುಗಳಲ್ಲಿ ಸತತ ಎರಡು ದಿನಗಳಲ್ಲಿ ಎರಡು ಕಂಚಿನ ಪದಕಗಳನ್ನು ಗೆಲ್ಲುವ ಮೂಲಕ ಅವರು ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ. ಈ ಮೂಲಕ ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ. ಜಿಯಾ ಆರ್ಯನ್
ವಿಜಯನಗರ | ಕೊಟ್ಟೂರು ಬಸ್ ನಿಲ್ದಾಣದಲ್ಲಿ ಕುಡಿಯುವ ನೀರಿನ ಸಮಸ್ಯೆ
ವಿಜಯನಗರ : ಜಿಲ್ಲೆಯ ಕೊಟ್ಟೂರು ತಾಲೂಕು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಾರ್ವಜನಿಕ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಇಲ್ಲದೆ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ಸಾರಿಗೆ ಇಲಾಖೆಯ ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಬಸ್ ತಂಗುದಾಣದಲ್ಲಿ ಕುಡಿಯುವ ನೀರಿನ ಘಟಕವೇ ಇಲ್ಲದ ಕಾರಣ, ನಿತ್ಯವೂ ಪ್ರಯಾಣಿಕರು ಸಂಕಷ್ಟ ಅನುಭವಿಸುತ್ತಿದ್ದಾರೆ. ಸ್ಥಿತಿವಂತರು ಹಾಗೂ ಮಧ್ಯಮ ವರ್ಗದವರು ಹಣ ನೀಡಿ ಅಂಗಡಿಗಳಲ್ಲಿ ದೊರೆಯುವ ಬಾಟಲಿ ನೀರನ್ನು ಖರೀದಿಸಿ ಧಾಹ ತೀರಿಸಿಕೊಳ್ಳುತ್ತಿದ್ದಾರೆ. ಆದರೆ ಬಡವರು ಹಾಗೂ ಹಳ್ಳಿಯಿಂದ ಕೂಲಿ ಕೆಲಸಕ್ಕಾಗಿ ಪಟ್ಟಣಕ್ಕೆ ಬಂದವರು ದುಡ್ಡು ಕೊಟ್ಟು ನೀರು ಖರೀದಿಸಲು ಸಾಧ್ಯವಾಗದೆ, ಸಣ್ಣ ಹೋಟೆಲ್ಗಳನ್ನೇ ಅವಲಂಬಿಸಬೇಕಾದ ಅನಿವಾರ್ಯತೆ ಎದುರಿಸುತ್ತಿದ್ದಾರೆ. ಹಲವಾರು ವರ್ಷಗಳಿಂದ ಈ ಸಮಸ್ಯೆ ಮುಂದುವರಿದಿರುವುದರಿಂದ, ಸಾರಿಗೆ ಇಲಾಖೆ ಅಧಿಕಾರಿಗಳು ತಕ್ಷಣ ಎಚ್ಚೆತ್ತುಕೊಂಡು ಬಸ್ ನಿಲ್ದಾಣದಲ್ಲಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.

29 C