ಅನನ್ಯಾ ಬಿರ್ಲಾ-ಶುಭ್ಮನ್ ಗಿಲ್ ಭೇಟಿ: ಆರ್ಸಿಬಿ ಹೊಸ ಮಾಲೀಕನ ಸಹೋದರಿಗೆ ಗುಜರಾತ್ ಜೆರ್ಸಿನಾ ಎಂದ ನೆಟ್ಟಿಗರು
Ananya Birla: ಆರ್ಯನ್ ಬಿರ್ಲಾ ಅವರು ಆರ್ಸಿಬಿ ಫ್ರಾಂಚೈಸಿಯನ್ನ ಖರೀದಿಸಿದ ಬೆನ್ನಲ್ಲೇ ಅವರ ಸಹೋದರಿ ಅನನ್ಯಾ ಬಿರ್ಲಾ ವೈಯಕ್ತಿಕ ವಿಚಾರಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ಸದ್ದು ಮಾಡುತ್ತಿದೆ. ಅದರಲ್ಲೂ ಗುಜರಾತ್ ಟೈಟಾನ್ಸ್ ತಂಡದ ನಾಯಕ ಶುಭ್ಮನ್ ಗಿಲ್ ಜೊತೆಗಿನ ಫೋಟೋ ಇದೀಗ ಭಾರೀ ವೈರಲ್ ಆಗಿದ್ದು, ತಮಾಷೆಯ ಚರ್ಚೆಗಳು ಕೂಡ ನಡೆಯುತ್ತಿವೆ. ಉದ್ಯಮಿ ಮತ್ತು ಗಾಯಕಿ ಅನನ್ಯಾ
ಬೆಂಗಳೂರು ಬಂಗಲೆ ವಿವಾದ: ರಾಜೀವ್ ಚಂದ್ರಶೇಖರ್ ನಾಮಪತ್ರ ಅಂಗೀಕರಿಸಿದ ಚುನಾವಣಾ ಆಯೋಗ
ತಿರುವನಂತಪುರಂ: ಕೇರಳ ವಿಧಾನಸಭೆ ಚುನಾವಣೆಯ ಬಿಜೆಪಿ ಅಭ್ಯರ್ಥಿ ರಾಜೀವ್ ಚಂದ್ರಶೇಖರ್ ಅವರ ನಾಮಪತ್ರದ ವಿರುದ್ಧ ಕಾಂಗ್ರೆಸ್ ಸಲ್ಲಿಸಿದ್ದ ಆಕ್ಷೇಪಣೆಯನ್ನು ಚುನಾವಣಾಧಿಕಾರಿಗಳು ಮಂಗಳವಾರ ತಿರಸ್ಕರಿಸಿದ್ದಾರೆ. ಇದರೊಂದಿಗೆ ತಿರುವನಂತಪುರಂನ ನೇಮಮ್ ವಿಧಾನಸಭಾ ಕ್ಷೇತ್ರದಿಂದ ಅವರ ಸ್ಪರ್ಧೆಗೆ ಇದ್ದ ಕಾನೂನು ಅಡಚಣೆ ದೂರವಾಗಿದೆ. ಏನಿದು ಆರೋಪ? ಬೆಂಗಳೂರಿನ ಕೋರಮಂಗಲದಲ್ಲಿರುವ ಸುಮಾರು 200 ಕೋಟಿ ರೂಪಾಯಿ ಮೌಲ್ಯದ, 49,000 ಚದರ ಅಡಿ ವಿಸ್ತೀರ್ಣದ
ಕರ್ನಾಟಕ ರಾಜ್ಯ ಮಾತ್ರ ಸಾಲದಲ್ಲಿದ್ಯಾ? ನೆರೆ ರಾಜ್ಯಗಳ ಸ್ಥಿತಿಗತಿ ಏನು, ಇಲ್ಲಿದೆ ಅಂಕಿ-ಅಂಶಗಳ ವಿವರ
ದಕ್ಷಿಣ ಭಾರತದ ನಮ್ಮ ಸುತ್ತ ಮುತ್ತಲ ಪ್ರಗತಿಶೀಲ ರಾಜ್ಯಗಳಿಗೆ ಹೋಲಿಕೆ ಮಾಡಿದರೂ ಸಹ ನಮ್ಮ ವಿತ್ತೀಯ ಕೊರತೆಯ ಪ್ರಮಾಣ ನಿಗಧಿತ ಮಟ್ಟದ ಒಳಗೇ ಇದೆ. 2025-26 ಪರಿಷ್ಕೃತ ಅಂದಾಜಿನಲ್ಲೂ ರಾಜ್ಯದ ವಿತ್ತೀಯ ಕೊರತೆ ಶೇ.2.95 ರಷ್ಟು ಇರಲಿದೆ. ಮಹಾರಾಷ್ಟದಲ್ಲಿ ಶೇ.3.0 ರಷ್ಟು, ಆಂಧ್ರಪ್ರದೇಶ ಶೇ.4.5, ಕೇರಳ ಶೇ.3.8, ತಮಿಳುನಾಡು ಶೇ.3.5 ರಷ್ಟು ಇದೆ. ಎಲ್ಲಾ ರಾಜ್ಯಗಳು ವಿತ್ತೀಯ ಕೊರತೆಯಿದೆ. ನಮ್ಮ ರಾಜ್ಯದ ವಿತ್ತೀಯ ಕೊರತೆ 0.7 ಇದೆ. ಕೇಂದ್ರ ಸರ್ಕಾರದ ವಿತ್ತೀಯ ಕೊರತೆ 1.5 ರಷ್ಟಿದೆ ಎಂದು ಸಿಎಂ ಸಿದ್ದರಾಮಯ್ಯ ಸಮರ್ಥಿಸಿಕೊಂಡರು.
ಉಡುಪಿ: ಮಾ.27ರಂದು ರಂಗಭೂಮಿಯಿಂದ ವಿಶ್ವ ರಂಗಭೂಮಿ ದಿನಾಚರಣೆ-2026
ಉಡುಪಿ, ಮಾ.25: ರಂಗಭೂಮಿ ಉಡುಪಿ ಸಂಸ್ಥೆಯ ವತಿಯಿಂದ ಮಾ.27ರಂದು ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪ ದಲ್ಲಿ ವಿಶ್ವ ರಂಗಭೂಮಿ ದಿನಾಚರಣೆ -2026ನ್ನು ಆಯೋಜಿಸಲಾಗಿದೆ. ಈ ಸಂದರ್ಭದಲ್ಲಿ ಖ್ಯಾತ ವೈದ್ಯರೂ ಆಗಿರುವ ರಂಗಭೂಮಿ ಸುವರ್ಣ ಮಹೋತ್ಸವ ಸಮಿತಿಯ ಕಾರ್ಯಾಧ್ಯಕ್ಷ ರಾಗಿದ್ದ ಡಾ. ಅಮ್ಮುಂಜೆ ಅರವಿಂದ ನಾಯಕ್ ಅವರಿಗೆ ‘ವಿಶ್ವ ರಂಗಭೂಮಿ ಸನ್ಮಾನ’ಕಾರ್ಯಕ್ರಮ ರಂಗೂಭೂಮಿ ವತಿಯಿಂದ ನಡೆಯಲಿದೆ. ಸಂಜೆ 6:00ಕ್ಕೆ ಪ್ರಾರಂಭಗೊಳ್ಳುವ ಕಾರ್ಯಕ್ರಮ ಸಭಾಧ್ಯಕ್ಷತೆಯನ್ನು ಮಣಿಪಾಲ ಮಾಹೆಯ ಸಹಕುಲಾಧಿಪತಿ ಡಾ. ಎಚ್. ಎಸ್. ಬಲ್ಲಾಳ್ ವಹಿಸಲಿದ್ದಾರೆ. ಕವಿ, ಕಥೆಗಾರ, ವಿಮರ್ಶಕ ಬೆಳಗೋಡು ರಮೇಶ್ ಭಟ್ ಅವರು ವಿಶ್ವ ರಂಗಭೂಮಿ ದಿನದ ಆಶಯ ನುಡಿಗಳನ್ನಾ ಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ನ್ಯಾಯವಾದಿ ಬೈಕಾಡಿ ಸುಪ್ರಸಾದ್ ಶೆಟ್ಟಿ, ಉದ್ಯಮಿ ಜಲಾಲುದ್ದೀನ್ ಅಬ್ಬಾಸ್ ಹಾಗೂ ಎಂಜಿಎಂ ಕಾಲೇಜಿನ ಪ್ರಾಂಶುಪಾಲರಾದ ಪ್ರೊ| ವನಿತಾ ಮಯ್ಯ ಭಾಗವಹಿಸಲಿದ್ದಾರೆ. ರಂಗಭೂಮಿ ಸಂಸ್ಥೆಯ ಅಧ್ಯಕ್ಷ ತಲ್ಲೂರು ಶಿವರಾಮ ಶೆಟ್ಟಿ ಅವರ ಉಪಸ್ಥಿತಿ ಯೊಂದಿಗೆ ನಡೆಯುವ ಸಭಾ ಕಾರ್ಯ ಕ್ರಮದ ಬಳಿಕ ಕುಂಜಿಬೆಟ್ಟು ಟಿ.ಎ. .ಪೈ ಆಂಗ್ಲ ಮಾಧ್ಯಮ ಪ್ರೌಢಶಾಲೆ ವಿದ್ಯಾರ್ಥಿ ತಂಡದಿಂದ ರಂಗಭೂಮಿ ರಂಗ ಶಿಕ್ಷಣ ಅಭಿಯಾನದ ನಾಟಕ ‘ತಾರೆ’ ಪ್ರದರ್ಶನಗೊಳ್ಳಲಿದೆ ಎಂದು ರಂಗಭೂಮಿಯ ಪ್ರಧಾನ ಕಾರ್ಯದರ್ಶಿ ಪ್ರದೀಪ್ಚಂದ್ರ ಕುತ್ಪಾಡಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಉಡುಪಿ ಜಿಲ್ಲೆಯಲ್ಲಿ ಮುಂಗಾರು ಪೂರ್ವ ಮಳೆಯ ಆರ್ಭಟ ಆರಂಭ
ಕಾರ್ಕಳ, ಹೆಬ್ರಿ ತಾಲೂಕಿನ ಅಲ್ಲಲ್ಲಿ ಗಾಳಿ-ಮಳೆಗೆ ಅಪಾರ ಹಾನಿ
ಪ್ರೊ.ಶಿವರಾಮಯ್ಯ, ಡಾ.ವಸುಂಧರಾ ಭೂಪತಿ ಸೇರಿ 5 ಮಂದಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ʼಗೌರವ ಪ್ರಶಸ್ತಿʼ
ಬೆಂಗಳೂರು : ಕರ್ನಾಟಕ ಸಾಹಿತ್ಯ ಅಕಾಡೆಮಿಯ 2025ನೇ ಸಾಲಿನ ʼವಾರ್ಷಿಕ ಗೌರವ ಪ್ರಶಸ್ತಿʼ ಮತ್ತು ʼಸಾಹಿತ್ಯಶ್ರೀ ಪ್ರಶಸ್ತಿʼಗಳು ಪ್ರಕಟಗೊಂಡಿದ್ದು, ಐವರು ವಾರ್ಷಿಕ ಗೌರವ ಪ್ರಶಸ್ತಿ, 10 ಮಂದಿ ಸಾಹಿತ್ಯಶ್ರೀ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಬುಧವಾರ ನಗರದ ಕನ್ನಡ ಭವನದಲ್ಲಿರುವ ಕರ್ನಾಟಕ ಸಾಹಿತ್ಯ ಅಕಾಡಮಿಯ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕರ್ನಾಟಕ ಸಾಹಿತ್ಯ ಅಕಾಡಮಿಯ ಅಧ್ಯಕ್ಷ ಎಲ್.ಎನ್.ಮುಕುಂದರಾಜ್ ಅವರು, ಹಿರಿಯ ಸಾಹಿತಿ ಪ್ರೊ.ಶಿವರಾಮಯ್ಯ, ಚಂದ್ರಶೇಖರ ತಾಳ್ಯ, ಡಾ.ಚಂದ್ರಕಾಂತ ಪೋಕಳೆ, ಲೇಖಕಿ ಡಾ.ವಸುಂಧರಾ ಭೂಪತಿ, ಡಾ.ಎಸ್.ತುಕಾರಾಂ ಅವರು 2025ನೇ ಸಾಲಿನ ವರ್ಷದ ಗೌರವ ಪ್ರಶಸ್ತಿಗೆ ಭಾಜನರಾಗಿದ್ದಾರೆ ಎಂದು ತಿಳಿಸಿದರು. ಡಾ.ನಿಷ್ಠಿ ರುದ್ರಪ್ಪ, ಡಾ.ವೀರೇಶ ಬಡಿಗೇರ, ಡಾ.ಸಿ.ಜಿ.ಲಕ್ಷ್ಮೀಪತಿ, ಕಂನಾಡಿಗ ನಾರಾಯಣ, ರೂಪ ಹಾಸನ, ಜಯರಾಮ್ ರಾಯಪುರ, ಕುಮುದಾ ಸುಶೀಲ್, ಡಾ.ಓ.ನಾಗರಾಜು, ಬಿ.ಎಂ.ಬಶೀರ್, ಡಾ.ಜ್ಯೋತಿ ಅವರಿಗೆ 2025ನೇ ಸಾಲಿನ ಸಾಹಿತ್ಯಶ್ರೀ ಪ್ರಶಸ್ತಿ ಲಭಿಸಿದೆ ಎಂದು ಹೇಳಿದರು.
Andre Russell Jersey Number 12- ರಾಯಲ್ ಚಾಲೆಂಜರ್ಸ್ ತಂಡವು ಎಬಿ ಡಿ ವಿಲಿಯರ್ಸ್ ಧರಿಸುತ್ತಿದ್ದ ಜೆರ್ಸಿ ನಂಬರ್ 17 ಮತ್ತು ಕ್ರಿಸ್ ಗೇಲ್ ಧರಿಸುತ್ತಿದ್ದ ಜೆರ್ಸಿ ನಂಬರ್ 333ನ್ನು ನಿವೃತ್ತಿ ಗೊಳಿಸಿ ಗೌರವ ಸಲ್ಲಿಸಿತ್ತು. ಈ ಮೂಲಕ ಇಂತಹ ಮಹತ್ವದ ನಿರ್ಧಾರ ಕೈಗೊಂಡಿದ್ದ ಮೊದಲ ಐಪಿಎಲ್ ತಂಡವಾಗಿ ಇತಿಹಾಸ ನಿರ್ಮಿಸಿತ್ತು. ಇದೀಗ ಕೋಲ್ಕತಾ ನೈಟ್ ರೈಟರ್ಸ್ ತಂಡ ಸಹ ಅಂಥಹದ್ದೇ ನಡೆ ಅನುಸರಸಿದೆ. ಕಳೆದ ಸೀಸನ್ ಬಳಿಕ ನಿವೃತ್ತರಾದ ವೆಸ್ಟ್ ಇಂಡೀಸ್ ನ ಆಂಡ್ರೆ ರಸೆಲ್ ಅವರು ಧರಿಸುತ್ತಿದ್ದ ಜೆರ್ಸಿ ನಂಬರ್ 12ನ್ನು ನಿವೃತ್ತಿಗೊಳಿಸಿದೆ.
ಕಲ್ಲಡ್ಕ| ಅನುಗ್ರಹ ಕಾಲೇಜಿನಲ್ಲಿ 'ಯುವ ಮನಸ್ಸುಗಳೊಂದಿಗೆ ಮುಕ್ತ ಸಂವಾದ' ಕಾರ್ಯಕ್ರಮ
ಬಂಟ್ವಾಳ: ಅನುಗ್ರಹ ಮಹಿಳಾ ಕಾಲೇಜು ಕಲ್ಲಡ್ಕದಲ್ಲಿ 'ಯುವ ಮನಸ್ಸುಗಳೊಂದಿಗೆ ಮುಕ್ತ ಸಂವಾದ' ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಕಾರ್ಯಕ್ರಮದಲ್ಲಿ ಅತಿಥಿಯಾಗಿ ಆಗಮಿಸಿದ ಕರ್ನಾಟಕ ರಾಜ್ಯ ಕರಾವಳಿ ಅಭಿವೃದ್ಧಿ ಮಂಡಳಿಯ ಅಧ್ಯಕ್ಷರಾದ ಎಂ.ಎ ಗಫೂರ್ ಅವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಶಿಸ್ತು, ಸಹನೆ, ಹಿರಿಯರೊಂದಿಗೆ ಗೌರವಯುತ ವಾಗಿ ವರ್ತಿಸುವುದು ವಿದ್ಯಾರ್ಥಿಗಳನ್ನು ಭವಿಷ್ಯದಲ್ಲಿ ಎತ್ತರಕ್ಕೆ ಬೆಳೆಸುವಲ್ಲಿ ಸಹಕಾರಿಯಾಗುತ್ತದೆ, ಇಂದಿನ ಆಧುನಿಕ, ತಾಂತ್ರಿಕ ಸಮಾಜದಲ್ಲಿ ಅಂತರ್ಜಾಲ, ಗ್ರಂಥಾಲಯ, ಶಿಕ್ಷಣ ಕ್ಷೇತ್ರ ಇವುಗಳನ್ನು ಸದುಪಯೋಗ ಪಡಿಸಿಕೊಂಡು ಸಮಾಜದಲ್ಲಿ ಮಹಿಳೆಯರು ಸ್ವಾವಲಂಬಿಗಳಾಗಿ ಬದುಕಬಹುದು. ಇಂದಿನ ಒತ್ತಡದ ಜೀವನದಲ್ಲಿ ನಾವು ಸವಾಲುಗಳನ್ನು ಹೇಗೆ ಎದುರಿಸಬೇಕು ಮತ್ತು ಆ ಸವಾಲುಗಳನ್ನು ಸ್ವೀಕರಿಸಿ ಹೇಗೆ ಬದುಕಬೇಕು ಎಂಬುದನ್ನು ವಿದ್ಯಾರ್ಥಿನಿಯರಿಗೆ ಮನವರಿಕೆ ಮಾಡಿದರು. ನಂತರ ವಿದ್ಯಾರ್ಥಿನಿಯರು ಕೇಳಿದ ಹಲವು ಪ್ರಶ್ನೆಗಳಿಗೆ ಉತ್ತರ ನೀಡುವ ಮೂಲಕ ಮುಕ್ತವಾಗಿ ಸಂವಾದ ನಡೆಸಿ, ಈ ಸಂಸ್ಥೆಯು ಇನ್ನಷ್ಟು ಶಕ್ತಿಯುತವಾಗಿ ಬೆಳೆಯಲಿ ಎಂದು ಹಾರೈಸಿದರು. ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ವಹಿಸಿದ್ದ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷರಾದ ಯಾಸಿನ್ ಬೇಗ್ ಮಾತನಾಡಿ, ಕಾಲೇಜು ಬೆಳೆದು ಬಂದ ಹಾದಿಯನ್ನು ವಿವರಿಸುತ್ತಾ ಕಾಲೇಜಿನ ಆಡಳಿತ ಮಂಡಳಿಯ ಸದಸ್ಯರನ್ನು ಪ್ರಶಂಶಿಸುತ್ತಾ, ಸರಕಾರದಿಂದ ಸಿಗುವ ಅವಕಾಶ, ಸೌಕರ್ಯಗಳು ಹಾಗೂ ಸಹಾಯ ನಿಧಿಯನ್ನು ದೊರಕಿಸಿಕೊಟ್ಟರೆ ನಾವು ಅದಕ್ಕೆ ಅಭಾರಿಯಾಗಿರುತ್ತೇವೆ ಎಂದು ಎಂ. ಎ ಗಫೂರ್ ಅವರಿಗೆ ಹೇಳಿದರು. ಕಾರ್ಯಕ್ರಮದ ಕೊನೆಯಲ್ಲಿ ಕಾಲೇಜಿನಲ್ಲಿ ನಡೆಸಿದ ರೀಲ್ಸ್ ಮೇಕಿಂಗ್ ಸ್ಪರ್ಧೆಯಲ್ಲಿ ವಿಜೇತರಾದ ತಂಡದವರಿಗೆ ಬಹುಮಾನ ವಿತರಿಸಲಾಯಿತು. ವೇದಿಕೆಯಲ್ಲಿ ಅನುಗ್ರಹ ವಿದ್ಯಾಸಂಸ್ಥೆಯ ಆಡಳಿತ ಮಂಡಳಿಯ ಖಜಾಂಜಿ ಹೈದರ್ ಅಲಿ, ಅನುಗ್ರಹ ಮಹಿಳಾ ಕಾಲೇಜಿನ ಪ್ರಾಂಶುಪಾಲೆ ಡಾ. ಹೇಮಲತ ಬಿ.ಡಿ , ಸಲಹಾ ಸಮಿತಿಯ ಕಾರ್ಯದರ್ಶಿ ತಾರಾಕ್ಷಿ , ಪದವಿ ವಿಭಾಗದ ಸಂಯೋಜಕಿ ಆಬಿದಾ. ಬಿ, ಸಲಹಾ ಸಮಿತಿಯ ಸದಸ್ಯರು ಹಾಗೂ ಮೌಲ್ಯ ಶಿಕ್ಷಣ ವಿಭಾಗದ ಮುಖ್ಯಸ್ಥೆ ಸಲೀಮಾ ಉಪಸ್ಥಿತರಿದ್ದರು. ಬೋಧಕ -ಬೋಧಕೇತರ ವೃಂದದವರು ಹಾಗೂ ವಿದ್ಯಾರ್ಥಿನಿಯರು ಕಾರ್ಯಕ್ರಮದ ಸದುಪಯೋಗಪಡಿಸಿ ಕೊಂಡರು. ದ್ವಿತೀಯ ಬಿ.ಕಾಂ ವಿಭಾಗದ ವಿದ್ಯಾರ್ಥಿನಿ ಆಯಿಶತ್ತುಲ್ ಸೆಮಿನ ಕಿರಾತ್ ಪಠಿಸಿದರು. ಪ್ರಥಮ ಬಿ.ಕಾಂ ವಿಭಾಗದ ವಿದ್ಯಾರ್ಥಿನಿ ಶೈಮಾ ಪರ್ವೀನ್ ಸ್ವಾಗತಿಸಿದರು. ಪ್ರಥಮ ಬಿ.ಕಾಂ ವಿಭಾಗದ ವಿದ್ಯಾರ್ಥಿನಿ ಆಶಿಕ ಶಿಯಾನ ಅತಿಥಿಗಳ ಪರಿಚಯ ಮಾಡಿದರು. ತೃತೀಯ ಬಿ.ಕಾಂ ವಿಭಾಗದ ವಿದ್ಯಾರ್ಥಿನಿ ಮಶಿದಾ ವಂದಿಸಿ, ಕಾರ್ಯಕ್ರಮ ನಿರೂಪಿಸಿದರು.
ಬಿ.ಎಂ.ಬಶೀರ್ ಅವರಿಗೆ 'ಸಾಹಿತ್ಯಶ್ರೀ' ಪ್ರಶಸ್ತಿ
BTS ತಮ್ಮ ಹೊಸ ಆಲ್ಬಂ Arirang ಮೂಲಕ 2.0 ಜರ್ನಿಯನ್ನು ಶುರು ಮಾಡಿದ್ದು, ವರ್ಲ್ಡ್ ಟೂರ್ ಗೂ ಮುನ್ನ ಅಮೆರಿಕಾದಲ್ಲಿ ಆಲ್ಬಂನ ಪ್ರಮೋಶನ್ ಕಾರ್ಯ ನಡೆಸುತ್ತಿದ್ದು, ಇದರ ಭಾಗವಾಗಿ ಸುಕಿ ವಾಟರ್ಹೌಸ್ ಆಯೋಜಿಸಿದ್ದ ಸ್ಪಾಟಿಫೈ ಸ್ವಿಮ್ ಸೈಡ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು, ಈ ವೇಳೆ ಹಲವು ಸ್ವಾರಸ್ಯಕರ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಈ ಕುರಿತ ವರದಿ ಇಲ್ಲಿದೆ..
ಜಾಗತಿಕ ಟೆಕ್ ಕಂಪನಿ ಮೆಟಾ ಭಾರೀ ಪ್ರಮಾಣದಲ್ಲಿ ಉದ್ಯೋಗ ಕಡಿತಕ್ಕೆ ಮುಂದಾಗಿದೆ ಎಂಬ ಅನುಮಾನ ಮೂಡಿದೆ. ಕಂಪನಿಯ ಎರಡು ನಿರ್ದಿಷ್ಟ ವಿಭಾಗದ ಉದ್ಯೋಗಿಗಳಿಗೆ ವರ್ಕ್ ಫ್ರಮ್ ಹೋಮ್ ಮಾಡುವಂತೆ ಹೆಚ್ಆರ್ ನಿರ್ದೇಶನ ನೀಡಿದ್ದು, ಇದು ಲೇಆಫ್ ಮುನ್ಸೂಚನೆ ಎಂದು ಅಮೆರಿಕದ ಸಿಲಿಕಾನ್ ವ್ಯಾಲಿ ಮಾತನಾಡಿಕೊಳ್ಳುತ್ತಿದೆ. ಕಂಪನಿ ಎಐ ತಂತ್ರಜ್ಞಾನದ ಮೇಲೆ ಹೆಚ್ಚು ಅವಲಂಬಿತವಾಗುವ ಸಾಧ್ಯತೆ ಇದ್ದು, ಈ ಹಿನ್ನೆಲೆಯಲ್ಲಿ ಸುಮಾರು 15 ಸಾವಿರಕ್ಕೂ ಹೆಚ್ಚು ಉದ್ಯೋಗಿಗಳಿಗೆ ಗೇಟ್ಪಾಸ್ ನೀಡಲಿದೆ ಎಂದು ಹೇಳಲಾಗುತ್ತಿದೆ. ಇದು ನಿಜವೇ ಆದರೆ, ಮೆಟಾ ಇತಿಹಸದಲ್ಲಿ ಅತಿದೊಡ್ಡ ಲೇಆಫ್ಗೆ ಜಗತ್ತು ಸಾಕ್ಷಿಯಾಗಲಿದೆ.
Summer Super Drink: ಪ್ರತಿದಿನ ಎರಡು ಗ್ಲಾಸ್ ಕಬ್ಬಿನ ರಸ: ಬೇಸಿಗೆಯ ಸೂಪರ್ ಡ್ರಿಂಕ್
ಬೇಸಿಗೆಯ ತೀವ್ರ ಬಿಸಿಯಿಂದ ಪರಿಹಾರ ನೀಡುವಲ್ಲಿ ಕಬ್ಬಿನ ರಸ ಪ್ರಮುಖ ಪಾತ್ರ ವಹಿಸುತ್ತದೆ. ನೈಸರ್ಗಿಕ ಸಿಹಿತನ ಹೊಂದಿರುವ ಈ ಪಾನೀಯವು ದೇಹವನ್ನು ತಂಪಾಗಿಡುವುದರ ಜೊತೆಗೆ ಹಲವು ಆರೋಗ್ಯ ಪ್ರಯೋಜನಗಳನ್ನು ಒದಗಿಸುತ್ತದೆ. ಐಸ್, ನಿಂಬೆ, ಪುದೀನ ಹಾಗೂ ಶುಂಠಿಯೊಂದಿಗೆ ಸೇವಿಸಿದರೆ ಇದು ಮತ್ತಷ್ಟು ತಾಜಾತನವನ್ನು ನೀಡುತ್ತದೆ. ಸಾಂಪ್ರದಾಯಿಕ ಭಾರತೀಯ ಚಿಕಿತ್ಸಾ ವಿಧಾನಗಳಲ್ಲಿ ಕೂಡ ಕಬ್ಬಿನ ರಸಕ್ಕೆ ವಿಶೇಷ ಸ್ಥಾನವಿದೆ.
ಸದನದಲ್ಲಿ ಬಜೆಟ್ ಚರ್ಚೆ: ಸಿಎಂ ಸಿದ್ದರಾಮಯ್ಯ ವಿರುದ್ಧ ಆರೋಪ
ಕರ್ನಾಟಕ ಬಜೆಟ್ ಕುರಿತ ಚರ್ಚೆ ಸದನದಲ್ಲಿ ತೀವ್ರವಾಗುತ್ತಿದ್ದಂತೆ ರಾಜಕೀಯ ವಾಗ್ವಾದಕ್ಕೂ ತಾರಕಕ್ಕೇರಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಜೆಟ್ ಕುರಿತು ನೀಡಿದ ಹೇಳಿಕೆಗಳ ವಿರುದ್ಧ ವಿರೋಧ ಪಕ್ಷ ತೀವ್ರ ಟೀಕೆ ವ್ಯಕ್ತಪಡಿಸಿದ್ದು, ಸಾಲದ ಬಳಕೆ ಮತ್ತು ಬಂಡವಾಳ ವೆಚ್ಚದ ವಿಚಾರದಲ್ಲಿ ಸರ್ಕಾರದ ನೀತಿಗಳ ಬಗ್ಗೆ ಪ್ರಶ್ನೆಗಳನ್ನು ಎತ್ತಿದೆ. ರಾಜ್ಯದ ಆರ್ಥಿಕ ಸ್ಥಿತಿ, ಸಾಲದ ಪ್ರಮಾಣ ಮತ್ತು ಅದರ ಬಳಕೆಯ
PNG ಲಭ್ಯವಿದ್ರೆ LPG ಸ್ಥಗಿತ! ಕೇಂದ್ರ ಸರ್ಕಾರ ನಿರ್ಧಾರ; ಬೆಂಗಳೂರಿನಲ್ಲಿ ಎಲ್ಲೆಲ್ಲಿ ಲಭ್ಯ? ಸಂಪರ್ಕ ಪಡೆಯೋದು ಹೇಗೆ?
ಕೇಂದ್ರ ಸರ್ಕಾರವು ಪಿಎನ್ಜಿ ಲಭ್ಯವಿರುವ ಕಡೆಯಗಳಲ್ಲಿ ಎಲ್ಪಿಜಿ ಪೂರೈಕೆ ಸ್ಥಗಿತಗೊಳಿಸಲು ಮುಂದಾಗಿದೆ. ಈ ಹಿನ್ನೆಲೆ ಪಿಎನ್ಜಿಗೆ ಭಾರೀ ಬೇಡಿಕೆ ವ್ಯಕ್ತವಾಗಿದ್ದು, ಬೆಂಗಳೂರಿನಲ್ಲಿ ಗೇಲ್ನಿಂದ ಸೌಲಭ್ಯ ನೀಡಲಾಗುತ್ತಿದೆ. 4,395 ಚದರ ಕಿ.ಮೀ ವ್ಯಾಪ್ತಿಯಲ್ಲಿ ಈ ನ್ಯಾಚುರಲ್ ಗ್ಯಾಸ್ ಲಭ್ಯವಿದೆ. ಯಾವೆಲ್ಲಾ ಬಡಾವಣೆಯಲ್ಲಿ ಲಭ್ಯ? ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವುದು ಹೇಗೆ? ಯಾವೆಲ್ಲಾ ದಾಖಲೆಗಳು ಬೇಕು? ಈ ಬಗ್ಗೆ ಸಂಪೂರ್ಣ ವಿವರ ಇಲ್ಲಿದೆ.
ಯುಎಇನಲ್ಲಿ ಮುಂದುವರಿದ ಭಾರೀ ಗಾಳಿ, ಮಳೆ; ಜನಜೀವನ ಅಸ್ತವ್ಯಸ್ತ
ದುಬೈ: ಯುಎಇಯ ವಿವಿಧ ಭಾಗಗಳಲ್ಲಿ ಭಾರೀ ಗಾಳಿ, ಮಳೆ ಮುಂದುವರಿದಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಉತ್ತರ ಎಮಿರೇಟ್ಸ್ ಪ್ರದೇಶಗಳಲ್ಲಿ ಆಲಿಕಲ್ಲು ಮಳೆಯೂ ದಾಖಲಾಗಿದೆ. ಮುಂದಿನ ಕೆಲವು ದಿನಗಳಲ್ಲಿ ಮಳೆ, ಗಾಳಿ ಇನ್ನಷ್ಟು ತೀವ್ರವಾಗುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಮಳೆ, ತನ್ನ ಆರ್ಭಟವನ್ನು ಮುಂದುವರಿಸಿದೆ. ಯುಎಇಯ ಹಲವು ಕಡೆ ಮಳೆಯಿಂದಾಗಿ ಕೃತಕ ನೆರೆ ಉಂಟಾಗಿದ್ದು, ರಸ್ತೆಗಳು ಜಲಾವೃತಗೊಂಡಿವೆ. ರಾಷ್ಟ್ರೀಯ ಹವಾಮಾನ ಕೇಂದ್ರ (NCM) ಪ್ರಕಾರ, ದೇಶದಾದ್ಯಂತ ಮಳೆ, ಗುಡುಗು, ಬಲವಾದ ಗಾಳಿಗಳು ಬೀಸುವ ಸಾಧ್ಯತೆ ಇದೆ. ಬುಧವಾರ ಅಬುಧಾಬಿ, ದುಬೈ, ಶಾರ್ಜಾ, ಫುಜೈರ, ಅಜ್ಮಾನ್ ಸೇರಿದಂತೆ ಹಲವು ಪ್ರದೇಶಗಳಲ್ಲಿ ಭಾರೀ ಗಾಳಿ- ಮಳೆ ಆಗಿದೆ. ಇದರಿಂದ ಕೃತಕ ಪ್ರವಾಹ ಉಂಟಾಗಿದ್ದು, ರಸ್ತೆಗಳಲ್ಲಿ ನೀರು ನಿಂತ ಪರಿಣಾಮ ವಾಹನ ಸವಾರರು ಪರದಾಟ ನಡೆಸುವಂತಾಗಿದೆ. ಜೊತೆಗೆ ಜನಜೀವನ ಕೂಡ ಅಸ್ತವ್ಯಸ್ತವಾಗಿದ್ದು, ಜನರು ದಾರಿಯಲ್ಲಿ ನಡೆದಾಡದಂತ ಪರಿಸ್ಥಿತಿ ಎದುರಾಗಿದೆ. ಮಳೆಯ ಹಿನ್ನಲೆಯಲ್ಲಿ ವಾಹನ ಚಾಲಕರು ಎಚ್ಚರಿಕೆಯಿಂದ ಚಾಲನೆ ಮಾಡಬೇಕು ಮತ್ತು ಎಲೆಕ್ಟ್ರಾನಿಕ್ ಫಲಕಗಳಲ್ಲಿ ತೋರಿಸುವ ವೇಗ ಮಿತಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಪೊಲೀಸರು ಸೂಚಿಸಿದ್ದಾರೆ. ಯುಎಇನಲ್ಲಿ ಮಾರ್ಚ್ 28ರವರೆಗೆ ಗಾಳಿ-ಮಳೆ ತೀವ್ರವಾಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಸಂಬಂಧಿತ ಇಲಾಖೆಗಳು ಹಲವು ಸಲಹೆಗಳನ್ನು, ಎಚ್ಚರಿಕೆಗಳು ಮತ್ತು ಸುರಕ್ಷತಾ ಸೂಚನೆಗಳನ್ನು ಹೊರಡಿಸಿವೆ. ಸಮುದ್ರ ಪ್ರದೇಶಗಳಲ್ಲಿ ಅಲೆಗಳು ಉಗ್ರವಾಗಿರುವುದರಿಂದ ಅತ್ತ ಯಾರು ಕೂಡ ತೆರಳದಂತೆ ಸೂಚಿಸಲಾಗಿದೆ. ಅನಾವಶ್ಯಕವಾಗಿ ಹೊರಗೆ ಹೋಗುವುದನ್ನು ತಪ್ಪಿಸಲು, ವಿಶೇಷವಾಗಿ ಮಳೆಯ ವೇಳೆ ವಾಹನ ಚಲಾಯಿಸುವಾಗ ಎಚ್ಚರಿಕೆ ವಹಿಸಲು ಸೂಚಿಸಿವೆ. ರಸ್ತೆಗಳಲ್ಲಿ ನೀರು ಸಂಗ್ರಹವಾಗುತ್ತಿರುವುದರಿಂದ ವಾಹನಗಳ ನಡುವೆ ಸುರಕ್ಷಿತ ಅಂತರವನ್ನು ಕಾಯ್ದುಕೊಳ್ಳಬೇಕು ಮತ್ತು ವೇಗವನ್ನು ಕಡಿಮೆ ಮಾಡಬೇಕು. ಜೊತೆಗೆ, ಕಣಿವೆ ಪ್ರದೇಶಗಳು (ವಾಡಿಗಳು) ಮತ್ತು ನೀರು ಹರಿಯುವ ಸ್ಥಳಗಳ ಬಳಿ ಹೋಗಬಾರದು ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ.
ರಾಜಸ್ಥಾನ ರಾಯಲ್ಸ್ ತಂಡದ ಮಾಜಿ ಆಟಗಾರ ಈಗ RCB ಹೊಸ ಅಧ್ಯಕ್ಷ; ಯಾರು ಈ ಆರ್ಯಮಾನ್ ಬಿರ್ಲಾ?
ಬಿರ್ಲಾ ಗ್ರೂಪ್ನ ಆರ್ಯಮನ್ ವಿಕ್ರಮ್ ಬಿರ್ಲಾ ಈಗ ಆರ್ಸಿಬಿ ಫ್ರಾಂಚೈಸಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಲಿದ್ದಾರೆ. ಆದರೆ ಆರ್ಯಮನ್ ಬಿರ್ಲಾ ಯಾರು? ಐಪಿಎಲ್ ಆಟಗಾರನಿಂದ ಆರ್ಸಿಬಿ ಅಧ್ಯಕ್ಷರಾಗಿರುವುದು ಹೇಗೆ? ಸುಮಾರು 1.78 ಶತಕೋಟಿ ಡಾಲರ್ (ಅಂದರೆ 16,706 ಕೋಟಿ ರೂ.) ವ್ಯವಹಾರದ ಒಪ್ಪಂದದಲ್ಲಿ ಆದಿತ್ಯ ಬಿರ್ಲಾ ಗ್ರೂಪ್, ದಿ ಟೈಮ್ಸ್ ಆಫ್ ಇಂಡಿಯಾ ಗ್ರೂಪ್, ಬೋಲ್ಟ್ ವೆಂಚರ್ಸ್ ಮತ್ತು ಬ್ಲಾಕ್ಸ್ಟೋನ್ನ ಪರ್ಪೆಚ್ಯುವಲ್ ಪ್ರೈವೇಟ್ ಈಕ್ವಿಟಿ ಆರ್ಮ್ (BXPE) ಜೊತೆಗೂಡಿದ ಒಕ್ಕೂಟವು ಹಾಲಿ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಮತ್ತು ಮಹಿಳಾ ಪ್ರೀಮಿಯರ್ ಲೀಗ್ (ಡಬ್ಲ್ಯುಪಿಎಲ್) ಚಾಂಪಿಯನ್ಗಳಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ಮಾಲಕತ್ವವನ್ನು ಪಡೆದುಕೊಂಡಿದೆ. ಇದೀಗ ಈ ವ್ಯವಹಾರದ ನಂತರ ಆರ್ಸಿಬಿಯ ಮಹಿಳಾ ಮತ್ತು ಪುರುಷರ ತಂಡಗಳ ಮಾಲಕತ್ವ ಬದಲಾಗಿದೆ. ಬಿರ್ಲಾ ಗ್ರೂಪ್ನ ಆರ್ಯಮನ್ ವಿಕ್ರಮ್ ಬಿರ್ಲಾ ಈಗ ಫ್ರಾಂಚೈಸಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಲಿದ್ದಾರೆ. ಆದರೆ ಆರ್ಯಮನ್ ಬಿರ್ಲಾ ಯಾರು? ಐಪಿಎಲ್ ಆಟಗಾರನಿಂದ ಆರ್ಸಿಬಿ ಅಧ್ಯಕ್ಷರಾಗಿರುವುದು ಹೇಗೆ? ಆರ್ಯಮನ್ ಬಿರ್ಲಾ ಯಾರು? ಆದಿತ್ಯ ಬಿರ್ಲಾ ಗ್ರೂಪ್ನ ಅಧ್ಯಕ್ಷ ಕುಮಾರ್ ಮಂಗಲಂ ಬಿರ್ಲಾ ಅವರ 28 ವರ್ಷ ವಯಸ್ಸಿನ ಪುತ್ರ ಆರ್ಯಮನ್ ಬಿರ್ಲಾ. ಕುಮಾರ್ ಮಂಗಲಂಗೆ ಇಬ್ಬರು ಹೆಣ್ಣುಮಕ್ಕಳು ಮತ್ತು ಒಬ್ಬ ಮಗ. 1997 ಜುಲೈ 09ರಂದು ಮುಂಬೈನಲ್ಲಿ ಜನಿಸಿದ ಆರ್ಯಮನ್ ತಮ್ಮ ಕುಟುಂಬದ ಉದ್ಯಮ ಪರಂಪರೆಯ ಹೊರತಾಗಿಯೂ ಕ್ರಿಕೆಟ್ ಮೇಲೆ ಹೆಚ್ಚು ಆಸಕ್ತಿ ಹೊಂದಿದ್ದರು. ಮಧ್ಯಪ್ರದೇಶದ ರೇವಾದಲ್ಲಿ ಉಳಿದುಕೊಂಡು ಆದಿತ್ಯ ಬಿರ್ಲಾ ಗ್ರೂಪ್ನ ಸಿಮೆಂಟ್ ಘಟಕದ ನೆಲೆಯಲ್ಲಿ ನಿಂತು ಕ್ರಿಕೆಟ್ ಅಭ್ಯಾಸ ಮುಂದುವರಿಸಿದ್ದರು. ರಾಷ್ಟ್ರೀಯ ಕ್ರಿಕೆಟ್ನಲ್ಲಿ ಅವರು ಮಧ್ಯ ಪ್ರದೇಶವನ್ನು ಪ್ರತಿನಿಧಿಸಿದ್ದಾರೆ. ಭರವಸೆಯ ಬ್ಯಾಟ್ಸ್ಮನ್ ಮತ್ತು ಆಲ್ರೌಂಡರ್ ಆಗಿದ್ದರು. ಕರ್ನಲ್ ಸಿಕೆ ನಾಯ್ಡು ಅಂಡರ್ 23 ಪಂದ್ಯಾವಳಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರನಾಗಿ ಹೊರಹೊಮ್ಮಿದ್ದಾರೆ. ಐಪಿಎಲ್ನಲ್ಲೂ ಆಡಿರುವ ಆರ್ಯಮನ್: ಆರ್ಯಮನ್ ಬಿರ್ಲಾ ಮಧ್ಯಪ್ರದೇಶದ ಜ್ಯೂನಿಯರ್ ಕ್ರಿಕೆಟ್ ವಲಯದಲ್ಲಿ ಚಿರಪರಿಚಿತರು. 2017ರಲ್ಲಿ ಒಡಿಶಾದ ವಿರುದ್ಧ ಚೊಚ್ಚಲ ರಣಜಿ ಕ್ರಿಕೆಟ್ ಆಡಿದ್ದಾರೆ. ಕಡಿಮೆ ರನ್ಗಳ ಹೊರತಾಗಿಯೂ ಭರವಸೆಯ ಆಟಗಾರನೆಂಬ ವಿಶ್ವಾಸ ಗಳಿಸಿದ್ದರು. 2018ರಲ್ಲಿ ರಣಜಿ ಋತುವಿನಲ್ಲಿ ಈಡನ್ ಗಾರ್ಡನ್ನಲ್ಲಿ ಪಶ್ಚಿಮ ಬಂಗಾಳದ ವಿರುದ್ಧ ಅಜೇಯ ಶತಕವನ್ನು ದಾಖಲಿಸಿದ್ದರು. ಹೀಗೆ ಉತ್ತಮ ಫಾರ್ಮ್ ಗಳಿಸಿದ ಕಾರಣದಿಂದಲೇ ಅವರು ಐಪಿಎಲ್ ವಲಯಕ್ಕೆ ಬಂದರು. 2018ರ ಹರಾಜಿನಲ್ಲಿ ಮೊದಲ ದಿನ ಮಾರಾಟವಾಗದೆ ಇದ್ದ ಅವರನ್ನು ಎರಡನೇ ದಿನದಂದು ರಾಜಸ್ಥಾನ ರಾಯಲ್ಸ್ 30 ಲಕ್ಷ ರೂ.ಗೆ ಖರೀದಿಸಿತ್ತು. ಬಲಗೈ ಆಲ್ರೌಂಡರ್ ಆಗಿರುವ ಅವರು 2028 ಮತ್ತು 2019ರ ಋತುವಿನಲ್ಲಿ ರಾಜಸ್ಥಾನ ರಾಯಲ್ಸ್ಗೆ ಆಡಿದ್ದಾರೆ. ಆದರೆ ಗಾಯಗಳು ಮತ್ತು ಸ್ಪರ್ಧೆಗಳ ಕಾರಣದಿಂದ ಮೈದಾನದಲ್ಲಿ ಆಡುವ ಅವಕಾಶ ಹೆಚ್ಚು ಗಳಿಸಲಿಲ್ಲ. ಪ್ಲೇಯಿಂಗ್ 11ರಲ್ಲಿ ಅವರು ಕಂಡುಬಂದಿದ್ದು ಅಪರೂಪ. ಕಡಿಮೆ ಅವಕಾಶಗಳ ಹೊರತಾಗಿಯೂ ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ 414 ರನ್ಗಳನ್ನು ಗಳಿಸಿರುವುದು ಅವರ ಆಯ್ಕೆಗೆ ಮಾನ್ಯತೆ ತಂದುಕೊಟ್ಟಿದೆ. 22ರ ವಯಸ್ಸಿನಲ್ಲಿ ಅವರು ಕ್ರಿಕೆಟ್ನಿಂದ ದೂರವಿರುವುದಾಗಿ ಘೋಷಿಸಿದರು. “ನನಗೆ ಒಂದೆಡೆ ಸಿಕ್ಕಿಹಾಕಿಕೊಂಡಿರುವ ಅನುಭವವಾಗುತ್ತಿದೆ. ನನ್ನ ಸಾಮರ್ಥ್ಯ ಮೀರಿ ಪ್ರಯತ್ನಿಸಿದ್ದೇನೆ. ಮಾನಸಿಕ ಆರೋಗ್ಯವನ್ನು ಎಲ್ಲಕ್ಕಿಂತ ಮಿಗಿಲಾಗಿಸುವ ಅಗತ್ಯವಿದೆ. ನನ್ನ ಬಗ್ಗೆ ಹೆಚ್ಚು ಚೆನ್ನಾಗಿ ಅರ್ಥಮಾಡಿಕೊಳ್ಳಲು ಬಯಸಿದ್ದೇನೆ. ನಮಗೆ ನಮ್ಮದೇ ಆದ ಪಯಣವಿರುತ್ತದೆ. ನನ್ನ ಮನಸ್ಸನ್ನು ಹೆಚ್ಚು ವಿಸ್ತಾರವಾದ ಮತ್ತು ಹೊಸ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಬಯಸುತ್ತೇನೆ” ಎಂದು ಅವರು ನಿವೃತ್ತಿಯ ಸಂದರ್ಭದಲ್ಲಿ ಹೇಳಿದ್ದರು. ಕ್ರಿಕೆಟ್ ನಂತರದ ವೃತ್ತಿಜೀವನ: 2019ರಲ್ಲಿ ಕ್ರಿಕೆಟ್ನಿಂದ ನಿವೃತ್ತಿ ಘೋಷಿಸಿದ ನಂತರ ಆರ್ಯಮನ್ ಬಿರ್ಲಾ ಆದಿತ್ಯ ಬಿರ್ಲಾ ಗ್ರೂಪ್ನಲ್ಲಿ ವೇಗವಾಗಿ ಬೆಳೆದರು. ಹಾರ್ವರ್ಡ್ ಬ್ಯುಸಿನೆಸ್ ಸ್ಕೂಲ್ನಿಂದ ಎಂಬಿಎ (ಹಾನರ್ಸ್) ಪದವಿ ಶಿಕ್ಷಣ ಪಡೆದಿರುವ ಅವರು ಬೇಯಸ್ ಬ್ಯುಸಿನೆಸ್ ಸ್ಕೂಲ್ನಿಂದ ಗ್ಲೋಬಲ್ ಫೈನಾನ್ಸ್ನಲ್ಲಿ ಸ್ನಾತಕೋತ್ತರ ಪದವಿ ಮತ್ತು ಮುಂಬೈ ವಿಶ್ವವಿದ್ಯಾಲಯದಲ್ಲಿ ಪದವಿ ಗಳಿಸಿದ್ದಾರೆ. ಆದಿತ್ಯ ಬಿರ್ಲಾ ಗ್ರೂಪ್ನ ಆಸ್ಪತ್ರೆ ಸಮುಚ್ಛಯವಾಗಿರುವ ಆದಿತ್ಯ ಬಿರ್ಲಾ ನ್ಯೂ ಏಜ್ ಹಾಸ್ಪಿಟಾಲಿಟಿ ಸಂಸ್ಥಾಪಕರಾಗಿದ್ದಾರೆ ಆರ್ಯಮನ್. ಅವರು ಆದಿತ್ಯ ಬಿರ್ಲಾ ವೆಂಚೂರ್ಸ್ನ ಸಂಸ್ಥಾಪಕರೂ ಹೌದು. ಅಧಿಕ ವೇಗವಾಗಿ ಬೆಳೆಯುವ ಸ್ಟಾರ್ಟಪ್ಗಳಲ್ಲಿ ಹೂಡಿಕೆ ಮಾಡುವುದು ಅವರ ಗುರಿಯಾಗಿತ್ತು. 2023ರಲ್ಲಿ ಅವರು ಆದಿತ್ಯ ಬಿರ್ಲಾ ಮ್ಯಾನೇಜ್ಮೆಂಟ್ ಕಾರ್ಪೋರೇಶನ್ ಪ್ರೈವೇಟ್ ಲಿಮಿಟೆಡ್ನ ನಿರ್ಧಾರ ಕೈಗೊಳ್ಳುವ ಮಂಡಳಿಯನ್ನು ಸೇರಿದರು. ಹಿಂಡಲ್ಕೊ ಇಂಡಸ್ಟ್ರೀಸ್, ಗ್ರಸೀಮ್ ಇಂಡಸ್ಟ್ರೀಸ್ ಮತ್ತು ಆದಿತ್ಯ ಬಿರ್ಲಾ ಫ್ಯಾಷನ್ ಮತ್ತು ರಿಟೇಲ್ಸ್ನಂತಹ (ABFRL) ಪ್ರಮುಖ ಕಂಪನಿಗಳ ಮಂಡಳಿಗಳನ್ನು ಸೇರಿದರು. ಒಕ್ಕೂಟದ ಅಧ್ಯಕ್ಷರಾಗಿ ಆಯ್ಕೆ: 2026 ಮಾರ್ಚ್ 24ರಂದು ಆರ್ಸಿಬಿಯನ್ನು ಸ್ವಾಧೀನ ಮಾಡಿಕೊಂಡ ಬಳಿಕ ಅವರನ್ನು ಒಕ್ಕೂಟದ ಅಧ್ಯಕ್ಷರನ್ನಾಗಿ ಘೋಷಿಸಲಾಗಿದೆ. ಬೆಂಗಳೂರು ರಾಯಲ್ ಚಾಲೆಂಜರ್ಸ್ನ ಮುಂದಿನ ಹಂತದ ಬೆಳವಣಿಗೆ ರೂಪಿಸಲು ಪಾಲುದಾರಿಕೆಯಲ್ಲಿ ಜೊತೆಗೂಡಿರುವುದು ಸೌಭಾಗ್ಯ ಎಂದು ಆರ್ಯಮನ್ ಬಿರ್ಲಾ ಹೇಳಿದ್ದಾರೆ. “ಈ ಸಹಯೋಗವು ಕ್ರೀಡೆ, ಮಾಧ್ಯಮ ಮತ್ತು ಗ್ರಾಹಕ ವ್ಯವಹಾರಗಳ ಆಳವಾದ ತಿಳುವಳಿಕೆಯನ್ನು ಜೊತೆಗೂಡಿಸಿರುವುದು ಫ್ರಾಂಚೈಸಿಯನ್ನು ಮುಂದಕ್ಕೆ ಕೊಂಡೊಯ್ಯುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ. ಒಕ್ಕೂಟದ ಸಾಮೂಹಿಕ ಪರಿಣತಿಯು ಆರ್ಸಿಬಿಯ ದೀರ್ಘಕಾಲೀನ ದೃಷ್ಟಿಕೋನವನ್ನು ಬಲಪಡಿಸಲು ನೆರವಾಗಲಿದೆ. ಮೈದಾನದಲ್ಲಿ ಯಶಸ್ಸು ಮತ್ತು ಜಾಗತಿಕ ಕ್ರೀಡಾ ಬ್ರ್ಯಾಂಡ್ ಆಗಿ ಆರ್ಸಿಬಿಯ ಉಪಸ್ಥಿತಿಯನ್ನು ವಿಸ್ತರಿಸಲು ನೆರವಾಗಲಿದೆ” ಎಂದು ಆರ್ಯಮನ್ ಹೇಳಿದ್ದಾರೆ.
ಸತತ ಎರಡನೇ ದಿನ ಹಸಿರು ಬಣ್ಣದಲ್ಲಿ ವಹಿವಾಟು ನಿಲ್ಲಿಸಿದ ಷೇರು ಮಾರುಕಟ್ಟೆ; ಹೆಚ್ಚಾಯ್ತು ಹೂಡಿಕೆದಾರರ ಆತ್ಮವಿಶ್ವಾಸ
ಮಧ್ಯಪ್ರಾಚ್ಯ ಸಂಘರ್ಷದ ಕಾವು ನಿಧಾನವಾಗಿ ಕಡಿಮೆಯಾಗುತ್ತಿದ್ದು, ಅಮೆರಿಕ ಮತ್ತು ಇರಾನ್ ನಡುವೆ ಮಾತುಕತೆ ಸಾಧ್ಯತೆಗಳು ಬಲವಾಗುತ್ತಿವೆ. ಈ ಬೆಳವಣಿಗೆ ಭಾರತೀಯ ಷೇರು ಮಾರುಕಟ್ಟೆಯನ್ನು ಚೇತರಿಕೆಯ ಹಾದಿಯಲ್ಲಿ ಮುನ್ನಡೆಸುತ್ತಿದೆ. ಸತತ ಎರಡನೇ ದಿನವೂ ಬಿಎಸ್ಇಯಲ್ಲಿ ಸೆನ್ಸೆಕ್ಸ್ ಮತ್ತು ನಿಫ್ಟಿ ಸೂಚ್ಯಂಕ ಹಸಿರು ಬಣ್ಣದಲ್ಲಿ ಮುಕ್ತಾಯ ಕಂಡಿರುವುದು, ಹೂಡಿಕೆದಾರರ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ. ಸೋಮವಾರದ ರಕ್ತಪಾತದ ಬಳಿಕ, ಮುಂಬೈ ಷೇರು ಮಾರುಕಟ್ಟೆ ಏರಿಕೆಯ ಹಾದಿಯಲ್ಲಿ ಸಾಗುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ. ಈ ಕುರಿತು ಇಲ್ಲಿದೆ ಮಾಹಿತಿ.
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ
Ananya Birla: ಆರ್ಸಿಬಿ ತಂಡವನ್ನು ಆದಿತ್ಯ ಬಿರ್ಲಾ ಗ್ರೂಪ್ ಮತ್ತು ಮಿತ್ರ ಸಂಸ್ಥೆಗಳ ಒಕ್ಕೂಟ ಖರೀದಿಸಿದ ಬೆನ್ನಲ್ಲೇ, ಉದ್ಯಮಿ ಮತ್ತು ಗಾಯಕಿ ಅನನ್ಯಾ ಬಿರ್ಲಾ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಪೋಸ್ಟ್ ಈಗ ವೈರಲ್ ಆಗಿದೆ. ಈ ಸಲ ಕಪ್ ನಮ್ದು ಎಂಬ ಘೋಷಣೆಯೊಂದಿಗೆ ಅವರು ಆರ್ಸಿಬಿ ಕುಟುಂಬಕ್ಕೆ ಪಾದಾರ್ಪಣೆ ಮಾಡಿದ್ದಾರೆ. ತಮ್ಮ ಪೋಸ್ಟ್ನಲ್ಲಿ ಆರ್ಸಿಬಿ ಅಭಿಮಾನಿಗಳಿಗೆ
Gold: ಚಿನ್ನ ಖರೀದಿ - ಮಾರಾಟಕ್ಕೆ ಇದು ಒಳ್ಳೆಯ ಸಮಯವೇ, ಇಲ್ಲಿದೆ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ ಪ್ರಮುಖ ಸಲಹೆ
Gold: ಇರಾನ್ - ಇಸ್ರೇಲ್, ಅಮೆರಿಕ ದೇಶಗಳ ನಡುವೆ ನಡೆಯುತ್ತಿರುವ ಯುದ್ಧವು ದಿನದಿಂದ ದಿನಕ್ಕೆ ತೀವ್ರ ಸ್ವರೂಪವನ್ನು ಪಡೆದುಕೊಳ್ಳುತ್ತಿದ್ದು, ಯುದ್ಧ ಪ್ರಾರಂಭವಾದಾಗಿನಿಂದಲೂ ಚಿನ್ನದ ಬೆಲೆಯು ಚಂಚಲವಾಗಿದೆ. ಚಿನ್ನದ ಬೆಲೆಯಲ್ಲಿ ಭಾರೀ ವ್ಯತ್ಯಾಸವಾಗುತ್ತಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ವ್ಯತ್ಯಾಸವಾಗುವ ಸಾಧ್ಯತೆ ಇದೆ. ಇನ್ನು ಚಿನ್ನದ ಬೆಲೆ ಏರಿಕೆಯಾಗಲಿದೆ ಎಂದು ಕೆಲವರು ಚಿನ್ನ ಖರೀದಿ ಮಾಡಿದ್ದರು, ಚಿನ್ನದ ಬೆಲೆ ಕಡಿಮೆಯಾಗುತ್ತಿದೆ
ಮಧ್ಯಪ್ರಾಚ್ಯದಲ್ಲಿ ಯುದ್ದ ಮುಂದುವರೆಯುತ್ತಿದ್ದು, ಇರಾನ್ ಹಾಗೂ ಅಮೆರಿಕಾ ನಡುವೆ ಮಾತುಕತೆಗಳು ನಡೆಯುತ್ತಿವೆ ಎಂದು ಟ್ರಂಪ್ ಹೇಳಿಕೊಂಡಿದ್ದಾರೆ. ಈ ಕುರಿತು ಇಸ್ರೇಲ್ ಪ್ರತಿಕ್ರಿಯೆ ನೀಡಿದ್ದು, ಈ ಮಾತುಕತೆಗಳಲ್ಲಿ ನಾವು ಭಾಗಿಯಾಗಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಅಲ್ಲದೆ, ಇರಾನ್ ಮೇಲಿನ ದಾಳಿಗಳನ್ನು ಮುಂದುವರೆಸಲಿದ್ದು, ಅವರ ಪರಮಾಣು ಹಾಗೂ ಕ್ಷಿಪಣಿ ಸಾಮರ್ಥ್ಯವನ್ನು ಸಂಪೂರ್ಣವಾಗಿ ನಾಶಪಡಿಸುವ ವರೆಗೂ ದಾಳಿಗಳನ್ನು ಮುಂದುವರೆಸುತ್ತದೆ ಎಂದು ತಿಳಿಸಿದ್ದಾರೆ. ಈ ಕುರಿತ ವರದಿ ಇಲ್ಲಿದೆ..
ಇರಾನ್ ಅಮೆರಿಕಕ್ಕೆ ಇಂಧನ ಸಂಬಂಧಿತ ದೊಡ್ಡ ಉಡುಗೊರೆ ನೀಡಿದೆ: ಡೊನಾಲ್ಡ್ ಟ್ರಂಪ್
ವಾಶಿಂಗ್ಟನ್: ಇರಾನ್ ಅಮೆರಿಕಕ್ಕೆ ಇಂಧನ ಸಂಬಂಧಿತ ದೊಡ್ಡ ಉಡುಗೊರೆ ನೀಡಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಇದನ್ನು ಸಕಾರಾತ್ಮಕ ಬೆಳವಣಿಗೆ ಎಂದು ಬಣ್ಣಿಸಿದ್ದಾರೆ. ಆದರೆ ಉಡುಗೊರೆ ಬಗ್ಗೆ ಅವರು ವಿವರಗಳನ್ನು ನೀಡಿಲ್ಲ. ಈ ಉಡುಗೊರೆ ಹಾರ್ಮುಝ್ ಜಲಸಂಧಿಗೆ ಸಂಬಂಧಿಸಿದೆ ಎಂದು ಟ್ರಂಪ್ ಹೇಳಿದ್ದಾರೆ. ಹಾರ್ಮುಝ್ ಜಲಸಂಧಿಯು ಅಮೆರಿಕ ಮುಕ್ತವಾಗಿಡಲು ಹೆಣಗಾಡುತ್ತಿರುವ ಜಲಮಾರ್ಗವಾಗಿದೆ. ಅವರು ನಮಗೆ ಉಡುಗೊರೆ ನೀಡಿದರು ಮತ್ತು ಇಂದು ಉಡುಗೊರೆ ಸಿಕ್ಕಿತು. ಅದು ಬಹಳ ದೊಡ್ಡ ಉಡುಗೊರೆಯಾಗಿತ್ತು, ಇದು ಅಪಾರ ಮೌಲ್ಯದ್ದಾಗಿದೆ ಎಂದು ಟ್ರಂಪ್ ಓವಲ್ ಕಚೇರಿಯಲ್ಲಿ ಸುದ್ದಿಗಾರರಿಗೆ ತಿಳಿಸಿದರು. ಇದು ಪರಮಾಣು ಅಲ್ಲ, ಇದು ತೈಲ ಮತ್ತು ಅನಿಲಕ್ಕೆ ಸಂಬಂಧಿಸಿದೆ ಮತ್ತು ಅವರು ತುಂಬಾ ಒಳ್ಳೆಯ ಕೆಲಸ ಮಾಡಿದ್ದಾರೆ. ಅಮೆರಿಕ ಈಗಾಗಲೇ ಯುದ್ಧವನ್ನು ಗೆದ್ದಿದೆ ಎಂದು ನಾನು ಭಾವಿಸಿದ್ದೇನೆ ಎಂದು ಟ್ರಂಪ್ ಹೇಳಿದ್ದಾರೆ.
ಫಿಲ್ ಸಾಲ್ಟ್ ಗೆ ಥ್ರೋ ಡೌನ್ ಮಾಡಿದ ವಿರಾಟ್ ಕೊಹ್ಲಿ; RCB ಅಭಿಮಾನಿಗಳು ಹಳೇ ದಿನಗಳನ್ನು ನೆನಪಿಸಿಕೊಂಡದ್ದೇಕೆ?
Virat Kohli Throw Down- ಆರ್ಸಿಬಿ ತಂಡ ತಾಲೀಮು ನಡೆಸುತ್ತಿದ್ದ ವೇಳೆ ವಿರಾಟ್ ಕೊಹ್ಲಿ ತಮ್ಮ ಆರಂಭಿಕ ಜೊತೆಗಾರ ಫಿಲ್ ಸಾಲ್ಟ್ಗೆ ಥ್ರೋ ಡೌನ್ ಮಾಡಿರುವ ವಿಡಿಯೋ ಇದೀಗ ವೈರಲ್ ಆಗಿದೆ. ತಮ್ಮ ವೃತ್ತಿ ಜೀವನದ ಆರಂಭದ ದಿನಗಳಲ್ಲಿ ಅರೆಕಾಲಿಕ ಬೌಲರ್ ಅಗಿದ್ದ ಅವರು ಕಳೆದ ಒಂದೂವರೆ ದಶಕದಿಂದ ಬೌಲಿಂಗ್ ಮಾಡಿಲ್ಲ. ಹೀಗಾಗಿ ಕೊಹ್ಲಿ ಅವರು ಥ್ರೋ ಡೌನ್ ಮಾಡಿದ್ದನ್ನು ನೋಡಿ ಅಭಿಮಾನಿಗಳು ಫುಲ್ ಖುಷಿಯಾಗಿದ್ದಾರೆ. ಹಳೇ ದಿನಗಳನ್ನು ಮತ್ತೆ ನೆನಪಿಸಿಕೊಂಡಿದ್ದಾರೆ.
35 ದಿನಗಳ ಕಾಲ ಭಾರತದ 2ನೇ ಅತಿದೊಡ್ಡ ತೈಲ ಸಂಸ್ಕರಣಾಗಾರ ಬಂದ್; ನಿರ್ವಹಣೆ ಕಾರಣ ಕೊಟ್ಟ ನಯಾರಾ! ಏನು ಪರಿಣಾಮ?
ಮಹತ್ವದ ಬೆಳವಣಿಗೆಯೊಂದರಲ್ಲಿ ಗುಜರಾತ್ನಲ್ಲಿರುವ ನಯಾರಾ ಎನರ್ಜಿ ಒಡೆತನದ ವಾಡಿನಾರ್ ರಿಫೈನರಿ ನಿರ್ವಹಣೆ ಕಾರಣಕ್ಕೆ ಬರೋಬ್ಬರಿ 35 ದಿನಗಳ ಕಾಲ ತನ್ನ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿದೆ. ಇದರಿಂದ ಭಾರತದ ತೈಲ ಸಂಸ್ಕರಣಾ ಸಾಮರ್ಥ್ಯವು ಶೇ. 8ರಷ್ಟು ಕುಸಿಯಲಿದೆ ಎಂದು ನಿರೀಕ್ಷಿಸಲಾಗಿದೆ. ಅಲ್ಲದೇ ದೇಶಾದ್ಯಂತ ಪೆಟ್ರೋಲ್ ಮತ್ತು ಡಿಸೇಲ್ ಪೂರೈಕೆ ಸರಪಳಿ ಮೇಲೆ ಕೊಂಚ ಪರಿಣಾಮ ಬೀರಲಿದೆ ಎಂದು ಹೇಳಲಾಗುತ್ತಿದೆ. ವಾಡಿನಾರ್ ರಿಫೈನರಿ ನಿರ್ವಹಣೆಯಿಂದ ಏನೆಲ್ಲಾ ಪರಿಣಾಮ ಬೀರಲಿದೆ? ಈ ಕುರಿತು ಇಲ್ಲಿದೆ ಮಾಹಿತಿ.
ಮಂಗಳೂರು, ಮಾ.25 : ನಗರದ ಪ್ರಮುಖ ಪ್ರದೇಶವಾಗಿರುವ ಮಣ್ಣಗುಡ್ಡದ ಮಠದಕಣಿಯಲ್ಲಿ ಅತ್ಯಾಧುನಿಕ ಸೌಕರ್ಯಗಳೊಂದಿಗೆ ನಿರ್ಮಾಣವಾಗಿರುವ ‘ಇನ್ಲ್ಯಾಂಡ್ ಎಲೋರಾ’ ವಸತಿ ಸಮುಚ್ಚಯವನ್ನು ಸರ್ವಧರ್ಮ ಪ್ರಾರ್ಥನೆಯ ಮೂಲಕ ಬುಧವಾರ ಉದ್ಘಾಟಿಸಲಾಯಿತು. ಫಾ. ಡಾ. ರೋಕಿ ಡಿಕುನ್ಹ, ಮೌಲಾನಾಪಿ.ಎಸ್. ಮುಹಮ್ಮದ್ ಕಾಮಿಲ್ ಸಖಾಫಿ ಮದನಿ ನಗರ, ಬಾಲಂಭಟ್ ಮಠದ ಗಿರಿಧರ್ ಭಟ್ರವರು ಧಾರ್ಮಿಕ ವಿಧಿ ವಿಧಾನಗಳ ಮೂಲಕ ವಸತಿ ಸಮುಚ್ಛಯವನ್ನು ಆಶೀರ್ವದಿಸಿದರು. ಬಳಿಕ ಮನಪಾ ಮಾಜಿ ಸದಸ್ಯ ಜಗದೀಶ್ ಶೆಟ್ಟಿ ರಿಬ್ಬನ್ ಕತ್ತರಿಸುವ ಮೂಲಕ ಎಲೋರಾ ವಸತಿ ಸಮುಚ್ಛಯವನ್ನು ಉದ್ಘಾಟಿಸಿ, ಶುಭ ಹಾರೈಸಿದರು. ಬಿಜೆಪಿ ಮುಖಂಡ ಜಗದೀಶ್ ಅಧಿಕಾರಿ, ಸುಬ್ರಾಯ ಬಾಳಿಗ, ಶಿವಾನಂದ ಆರ್ಯ, ಇನ್ಲ್ಯಾಂಡ್ ಬಿಲ್ಡರ್ಸ್ ಆ್ಯಂಡ್ ಡೆವಲಪರ್ಸ್ನ ವ್ಯವಸ್ಥಾಪಕ ನಿರ್ದೇಶಕ ಸಿರಾಜ್ ಅಹ್ಮದ್ ಹಾಗೂ ಮೇರಾಜ್ ಯೂಸುಫ್, ವಾಹಜ್ ಯೂಸುಫ್ ಉಪಸ್ಥಿತರಿದ್ದರು. ಆರೋಗ್ಯ, ಶಿಕ್ಷಣ, ಧಾರ್ಮಿಕ ಕ್ಷೇತ್ರಗಳು, ಶಾಂಪಿಂಗ್ ಮಾಲ್ಗಳ ಸಮೀಪದಲ್ಲೇ ನಿರ್ಮಾಣವಾಗಿರುವ ವಸತಿ ಸಮುಚ್ಚಯದಿಂದ ನಗರದ ವಿವಿಧ ಕಡೆಗೆ ತೆರಳಲು ಸಾರ್ವಜನಿಕ ಬಸ್ನೊಂದಿಗೆ ಬಹು ಮಾರ್ಗದ ಸಾರಿಗೆ ವ್ಯವಸ್ಥೆಯಿಂದ ಕೂಡಿದೆ. ಬಹುಮಹಡಿಯ ವಸತಿ ಸಮುಚ್ಛಯವು 20 ಅಪಾರ್ಟ್ಮೆಂಟ್ಗಳನ್ನು ಹೊಂದಿದ್ದು, 1,165 ಚದರ ಅಡಿ, 1,510 ಚದರ ಅಡಿ, 1630 ಚದರ ಅಡಿಯ 2 ಮತ್ತು 3 ಬೆಡ್ ರೂಂಗಳನ್ನು ಹೊಂದಿದೆ. ನಾಲ್ಕು ಮಹಡಿಗಳ ಕಟ್ಟಡವನ್ನು ಉನ್ನತ ಗುಣಮಟ್ಟದಿಂದ ನಿರ್ಮಿಸಲಾಗಿದೆ. ಸದ್ಯ 2 ಬೆಡ್ ರೂಂನ 1 ಹಾಗೂ 3 ಬೆಡ್ರೂಂನ ಎರಡು ಅಪಾರ್ಟ್ಮೆಂಟ್ಗಳು ಮಾತ್ರವೇ ಬಾಕಿ ಉಳಿದಿದೆ ಎಂದು ಇನ್ಲ್ಯಾಂಡ್ ಬಿಲ್ಡರ್ಸ್ ಆ್ಯಂಡ್ ಡೆವಲಪರ್ಸ್ನ ವ್ಯವಸ್ಥಾಪಕ ನಿರ್ದೇಶಕ ಸಿರಾಜ್ ಅಹ್ಮದ್ ತಿಳಿಸಿದರು. ಎಲೋರಾದ ವಿಶೇಷತೆ : ► ಸುಸಜ್ಜಿ ಜಿಮ್ನಾಶಿಯಂ, ► ಮಕ್ಕಳ ಆಟದ ಪ್ರದೇಶ, ► ರೆಟಿಕ್ಯುಲೇಟೆಡ್ ಗ್ಯಾಸ್ ಸಂಪರ್ಕ, ►ಸಿಸಿಟಿವಿ ಸಹಿತ 24 ಗಂಟೆಗಳ ಭದ್ರತಾ ವ್ಯವಸ್ಥೆ. ‘ಇದು ಚಿಕ್ಕದಾದ ಮತ್ತು ಅಂದವಾದ ಪ್ಲ್ಯಾಟ್ಗಳಿಂದ ಕೂಡಿದ ವಸತಿ ಸಮುಚ್ಚಯವಾಗಿದೆ. ಬಹಳಷ್ಟು ಮಂದಿ ಸಣ್ಣದಾ ಮತ್ತು ಚೊಕ್ಕವಾದ ಮನೆಗಳನ್ನು ಬಯಸುತ್ತಾರೆ. ಅಂತಹವರನ್ನು ಗಮನದಲ್ಲಿಸಿರಿ ಮಿತದರದಲ್ಲಿ ಅತ್ಯಾಧುನಿಕ ಸೌಲಭ್ಯಗಳೊಂದಿಗೆ ಈ ಯೋಜನೆ ರೂಪಿಸಲಾಗಿದೆ. ಅಗತ್ಯ ಮೂಲಭೂತ ಸೌಕರ್ಯಗಳನ್ನು ಈ ವಸತಿ ಸಮುಚ್ಛಯದಲ್ಲಿ ಒದಗಿಸಲಾಗಿದ್ದು, ಮೂರು ಧರ್ಮಗಳ ಗುರುಗಳಿಂದ ಧಾರ್ಮಿಕ ವಿಧಿ ವಿಧಾನಗಳನ್ನು ನಡೆಸಲಾಗಿದೆ.’ ಸಿರಾಜ್ ಅಹ್ಮದ್, ವ್ಯವಸ್ಥಾಪಕ ನಿರ್ದೇಶಕರು, ಇನ್ಲ್ಯಾಂಡ್ ಬಿಲ್ಡರ್ಸ್ ಆ್ಯಂಡ್ ಡೆವಲಪರ್ಸ್.
ರಾಮನವಮಿ: ಬೆಂಗಳೂರಿನಲ್ಲಿ ಮಾರ್ಚ್ 27 ಕ್ಕೆ ಮಾಂಸ ಮಾರಾಟ ನಿಷೇಧ - ಜಿಬಿಎ ಮಹತ್ವದ ಸುತ್ತೋಲೆ
ರಾಮನವಮಿ ಹಿನ್ನೆಲೆ ಬೆಂಗಳೂರಿನಲ್ಲಿ ಪ್ರಾಣಿ ವಧೆ, ಮಾಂಸ ಮಾರಾಟ ನಿಷೇಧ ಮಾಡಲಾಗಿದೆ. ಈ ಬಗ್ಗೆ ಜಿಬಿಎ ಮಹತ್ವದ ಸುತ್ತೋಲೆ ನಿಡಿದೆ. ಮಾರ್ಚ್ 27 ದಿನವಿಡೀ ನಿಷೇಧ ಜಾರಿಗೆ ತರಲಾಗಿದೆ. ಪ್ರತಿ ವರ್ಷದಂತೆ ಈ ಬಾರಿಯೂ ಈ ನಿಯಮ ಜಾರಿಯಾಗಿದೆ. ಇದಕ್ಕೆ ಸಂಪ್ರದಾಯ, ಆಡಳಿತಾತ್ಮಕ ಕಾರಣಗಳು ಇವೆ.
ಲೋಕಸಭೆಯಲ್ಲಿ ಹಣಕಾಸು ಮಸೂದೆ- 2026 ಅಂಗೀಕಾರ
ಹೊಸದಿಲ್ಲಿ: ಲೋಕಸಭೆಯಲ್ಲಿ ಬುಧವಾರ ಹಣಕಾಸು ಮಸೂದೆ 2026 ಅನ್ನು ಧ್ವನಿ ಮತದ ಮೂಲಕ ಅಂಗೀಕರಿಸಲಾಯಿತು. ಇದಕ್ಕೂ ಮೊದಲು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಲೋಕಸಭೆಯಲ್ಲಿ ಹಣಕಾಸು ಮಸೂದೆ 2026 ಕುರಿತು ಮಾತನಾಡಿದ್ದರು. ಕಾಂಗ್ರೆಸ್ ಸಂಸದ ಮನೀಶ್ ತಿವಾರಿ, ತೃಣಮೂಲ ಕಾಂಗ್ರೆಸ್ನ ಸೌಗತಾ ರೇ ಮತ್ತು ಡಿಎಂಕೆಯ ಟಿ ಸುಮತಿ ಸೇರಿದಂತೆ ವಿರೋಧ ಪಕ್ಷದ ಸಂಸದರು ವಿಧೇಯಕಕ್ಕೆ ವಿರೋಧವನ್ನು ವ್ಯಕ್ತಪಡಿಸಿದ್ದರು.
ಕುಕನೂರಿನಲ್ಲಿ ‘ಕೂಸಿನ ಮನೆ’ಗಳ ಕಾರ್ಯವೈಖರಿ ಅಧ್ಯಯನ : IIHS ತಂಡ ಭೇಟಿ
ಕುಕನೂರು : ಬೆಂಗಳೂರು ಮೂಲದ IIHS (Indian Institute for Human Settlements) ಸಂಸ್ಥೆಯ ಸಂಶೋಧನಾ ತಂಡ ಕುಕನೂರು ತಾಲ್ಲೂಕಿನ ಮಂಗಳೂರು ಗ್ರಾಮದಲ್ಲಿನ ಕೂಸಿನ ಮನೆಗಳಿಗೆ ಮಂಗಳವಾರ ಭೇಟಿ ನೀಡಿ ಕಾರ್ಯವೈಖರಿಯನ್ನು ಕುರಿತು ಅಧ್ಯಯನ ಮಾಡಿತು. ಸಂಸ್ಥೆಯ ಸಾಯಿರಾಮ್ ಹಾಗೂ ಸುಕನ್ಯಾ ಅವರನ್ನೊಳಗೊಂಡ ತಂಡ ಮಕ್ಕಳ ಹಾಜರಾತಿ, ಪೌಷ್ಟಿಕ ಆಹಾರ ವಿತರಣೆ ಮತ್ತು ಪೂರ್ವ ಪ್ರಾಥಮಿಕ ಕಲಿಕಾ ಚಟುವಟಿಕೆಗಳನ್ನು ಪರಿಶೀಲಿಸಿತು. ಈ ವೇಳೆ ಕೇರ್ಟೇಕರ್ಗಳ ಕಾರ್ಯನಿರ್ವಹಣೆ, ಮಾಸಿಕ ಪೋಷಕರ ಸಭೆಗಳು, ಮಕ್ಕಳ ಆರೋಗ್ಯ ತಪಾಸಣೆ, ವೇತನ ಪಾವತಿ ಹಾಗೂ ಹಣಕಾಸು ವ್ಯವಸ್ಥೆ ಕುರಿತು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಕೇರ್ಟೇಕರ್ಗಳು ಮತ್ತು ಪೋಷಕರೊಂದಿಗೆ ಚರ್ಚೆ ನಡೆಸಿತು. ಕೂಸಿನ ಮನೆಗಳಿಂದಾಗಿರುವ ಅನುಕೂಲಗಳ ಬಗ್ಗೆ ಪೋಷಕರು ಅಭಿಪ್ರಾಯ ವ್ಯಕ್ತಪಡಿಸಿದರು. ಕೂಸಿನ ಮನೆಗಳ ನಿರ್ವಹಣೆಗೆ ಸಂಬಂಧಿಸಿದಂತೆ ಕೆಲವು ಸಲಹೆಗಳನ್ನು ತಂಡ ನೀಡಿದ್ದು, ಕಾರ್ಯವೈಖರಿಗೆ ಮೆಚ್ಚುಗೆ ವ್ಯಕ್ತಪಡಿಸಿತು. ಈ ಸಂದರ್ಭದಲ್ಲಿ ತಾಲ್ಲೂಕು ಐಇಸಿ ಸಂಯೋಜಕ ಲಕ್ಷ್ಮಣ ಕೆರಳ್ಳಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಾದ ನೀಲಂ ಚಳಗೇರಿ, ಕಾರ್ಯದರ್ಶಿ ಜಂಬಣ್ಣ, ಕೇರ್ಟೇಕರ್ಗಳು ಹಾಗೂ ಗ್ರಾಮ ಪಂಚಾಯತ್ ಸಿಬ್ಬಂದಿ ಉಪಸ್ಥಿತರಿದ್ದರು.
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಈ ನಿರ್ಧಾರ ಎಲ್ಲರಿಗೂ ಮೇಲ್ಪಂಕ್ತಿಯಾಗಲಿ: ಪ್ರತಾಪ್ ಸಿಂಹ
Pratap Simha: ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರ ನಿರ್ಧಾರವೊಂದಕ್ಕೆ ಮಾಜಿ ಸಂಸದ ಹಾಗೂ ಬಿಜೆಪಿ ಮುಖಂಡ ಪ್ರತಾಪ್ ಸಿಂಹ ಅವರು ಮೆಚ್ಚುಗೆ ಸೂಚಿಸಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಪ್ರತಾಪ್ ಸಿಂಹ ಅವರು, ಜನ್ಮದಿನಕ್ಕೆ ಫ್ಲೆಕ್ಸ್ ಹಾಕಬೇಡಿ ಎಂದು ಮನವಿ ಮಾಡಿಕೊಂಡಿರುವ ಮಹಾರಾಜರ Yaduveerbjp ನಿರ್ಧಾರ ಎಲ್ಲರಿಗೂ ಮೇಲ್ಪಂಕ್ತಿಯಾಗಲಿ ಎಂದು ಹೇಳಿದ್ದಾರೆ. ಇದರೊಂದಿಗೆ ಸಂಸದ ಯದುವೀರ್ ಕೃಷ್ಣದತ್ತ
ಕಾರ್ಕಳ : ಭುವನೇಂದ್ರ ಕಾಲೇಜಿನಲ್ಲಿ ಬೃಹತ್ ರಕ್ತದಾನ ಶಿಬಿರ
ಕಾರ್ಕಳ : ಶ್ರೀ ಭುವನೇಂದ್ರ ಕಾಲೇಜು ಕಾರ್ಕಳದಲ್ಲಿ, ಇದರ ವಿದ್ಯಾರ್ಥಿ ಕ್ಷೇಮ ಪಾಲನಾ ಸಮಿತಿ, ಐಕ್ಯೂಎಸಿ ಹಾಗೂ ಟಿಎಂಎ ಪೈ ರೋಟರಿ ಹಾಸ್ಪಿಟಲ್ ಕಾರ್ಕಳ ಮತ್ತು ವಿವಿಧ ಸಂಘ ಸಂಸ್ಥೆಗಳ ಆಶ್ರಯದಲ್ಲಿ ಬೃಹತ್ ರಕ್ತದಾನ ಶಿಬಿರ ನಡೆಯಿತು. ಶಿಬಿರವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದ ಜಿಲ್ಲಾ ರಕ್ತ ನಿಧಿ ಕೇಂದ್ರ, ಅಜ್ಜರ ಕಾಡು ಉಡುಪಿ ಇಲ್ಲಿನ ವೈದ್ಯಾಧಿಕಾರಿಯಾಗಿರುವ ಡಾ.ವೀಣಾ ಇವರು ರಕ್ತದಾನದ ಮಹತ್ವದ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿದರು. ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯರಾದ ಡಾ. ಮಂಜುನಾಥ್ ಎ ಕೋಟ್ಯಾನ್ ಅವರು ಆಧುನಿಕ ಯುಗದಲ್ಲಿ ರಕ್ತದಾನದ ಅವಶ್ಯಕತೆಯ ಕುರಿತು ವಿದ್ಯಾರ್ಥಿಗಳಿಗೆ ತಿಳಿಹೇಳಿ ವಿದ್ಯಾರ್ಥಿಗಳು ಆದಷ್ಟು ಹೆಚ್ಚಿನ ಸಂಖ್ಯೆಯಲ್ಲಿ ರಕ್ತದಾನವನ್ನು ಮಾಡುವಂತೆ ಕರೆ ನೀಡಿದರು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ರೋಟರಿ ಕ್ಲಬ್ ಕಾರ್ಕಳದ ಅಧ್ಯಕ್ಷರಾದ ರೊ. ನವೀನ್ ಚಂದ್ರ ಶೆಟ್ಟಿ ಇವರು ಕಾರ್ಯಕ್ರಮದ ಯಶಸ್ವಿಗೆ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಕಾಲೇಜಿನ ವಿದ್ಯಾರ್ಥಿ ಕ್ಷೇಮ ಪಾಲನ ಅಧಿಕಾರಿ ಡಾ. ಈಶ್ವರ ಭಟ್ ಪಿ., ರೋಟರಿ ಕ್ಲಬ್ ಕಾರ್ಕಳ ರಾಕ್ ಸಿಟಿ ಇದರ ಅಧ್ಯಕ್ಷರಾದ ರೊ. ಸುರೇಂದ್ರ ನಾಯಕ್, ಜೆಸಿಐ ಕಾರ್ಕಳ ಇದರ ಅಧ್ಯಕ್ಷರಾದ ಅವಿನಾಶ್ ಶೆಟ್ಟಿ , ರೋಟರಾಕ್ಟ್ ಕ್ಲಬ್ ಕಾರ್ಕಳ ಇದರ ಅಧ್ಯಕ್ಷರಾದ ಸಂದೇಶ್ ಮತ್ತು ಟಿಎಂ ಎ ಪೈ ರೋಟರಿ ಹಾಸ್ಪಿಟಲ್ ಕಾರ್ಕಳ ಇದರ ಪರವಾಗಿ ಆಶ್ಲಾನ್ ಇವರು ಉಪಸ್ಥಿತರಿದ್ದರು. ರಾಷ್ಟ್ರೀಯ ಸೇವಾ ಯೋಜನೆ ಅಧಿಕಾರಿ ಶಂಕರ್ ಕುಡ್ವ ಇವರು ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
Summer Walking: ಬೇಸಿಗೆಯಲ್ಲಿ ವಾಕಿಂಗ್ ಮಾಡುವವರು ಈ ನಿಯಮ ತಪ್ಪದೇ ಪಾಲಿಸಿ..
ವಾಕಿಂಗ್ ಮಾಡುವುದು ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿ ಆಗಿದೆ ಹಾಗೂ ವ್ಯಾಯಾಮಗಳಲ್ಲಿ ಇದು ಒಂದು ಸರಳ ವಿಧಾನ ಕೂಡ ಹೌದು. ಆದರೆ ಬೇಸಿಗೆಯಲ್ಲಿ ತಾಪಮಾನ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ವಾಕಿಂಗ್ ಮಾಡುವಾಗ ಕೆಲವು ಮುನ್ನಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವುದು ಅನಿವಾರ್ಯವಾಗಿದೆ. ಬೇಸಿಗೆ ಪ್ರಾರಂಭ ಆಗಿರುವುದರಿಂದ ತಾಪಮಾನ ಸಾಮಾನ್ಯ ಮಟ್ಟಕ್ಕಿಂತ ದಿನೇದಿನೆ ಹೆಚ್ಚಾಗುತ್ತಲೇ ಇದೆ. ಯಾವ ಸಮಯದಲ್ಲಿ ವಾಕಿಂಗ್ ಮಾಡಬೇಕು ಯಾವ ಸಮಯದಲ್ಲಿ
ಫುಟ್ಪಾತ್ ಅತಿಕ್ರಮಣದಿಂದ ಸಂಚಾರ ಅಸ್ತವ್ಯಸ್ತ
ವಿಜಯಪುರ: ಸುರಕ್ಷಿತ ಸಂಚಾರ ವ್ಯವಸ್ಥೆಗೆ ಆಗ್ರಹ
ಬೆಂಗಳೂರು: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ (KSEAB) ನಡೆಸುತ್ತಿರುವ 2026ನೇ ಸಾಲಿನ ಎಸ್ಎಸ್ಎಲ್ಸಿ (SSLC) ವಾರ್ಷಿಕ ಪರೀಕ್ಷೆಗಳು ಬರದಿಂದ ಸಾಗುತ್ತಿವೆ. ಇಂದು (ಮಾರ್ಚ್ 25, 2026) ರಾಜ್ಯಾದ್ಯಂತ ಸಾವಿರಾರು ಪರೀಕ್ಷಾ ಕೇಂದ್ರಗಳಲ್ಲಿ 'ದ್ವಿತೀಯ ಭಾಷೆ ಇಂಗ್ಲೀಷ್' ಪರೀಕ್ಷೆ ಯಶಸ್ವಿಯಾಗಿ ಮುಕ್ತಾಯಗೊಂಡಿದೆ. ಬೆಳಗ್ಗೆ 10:00 ಗಂಟೆಗೆ ಆರಂಭವಾದ ಪರೀಕ್ಷೆ ಮಧ್ಯಾಹ್ನ 1:15ರವರೆಗೆ ನಡೆಯಿತು. ಹಾಗಾದರೆ ಈ
Bhatkal | ಸಮಾಜಸೇವಕ ಸೈಯದ್ ಹಸನ್ ಬರ್ಮವರ್ ನಿಧನ
ಭಟ್ಕಳ : ಪಟ್ಟಣದ ಹಿರಿಯ ಮುಖಂಡರು, ಸಮಾಜಸೇವಕ ಹಾಗೂ ಹಲವು ಸಂಘ–ಸಂಸ್ಥೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಸೈಯದ್ ಹಸನ್ ಬರ್ಮವರ್ (73) ಅವರು ಬುಧವಾರ ಮಧ್ಯಾಹ್ನ ನಿಧನರಾದರು. ಅವರು ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದು, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ಕುಟುಂಬ ಮೂಲಗಳು ತಿಳಿಸಿವೆ. ಸೈಯದ್ ಹಸನ್ ಬರ್ಮವರ್ ಅವರು ಭಟ್ಕಳ ಪುರಸಭೆಯ ಸದಸ್ಯರಾಗಿ ಸೇವೆ ಸಲ್ಲಿಸಿ ರಾಜಕೀಯ ಕ್ಷೇತ್ರದಲ್ಲಿಯೂ ಗುರುತಿಸಿಕೊಂಡಿದ್ದರು. ಜನತಾದಳ ಪಕ್ಷದ ಜಿಲ್ಲಾ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದರು. ಜನತಾ ಪರಿವಾರದ ಹಿನ್ನೆಲೆಯುಳ್ಳ ಇವರಿಗೆ ಆರ್.ವಿ.ದೇಶಪಾಂಡೆ, ಬಸವರಾಜ ಹೊರಟ್ಟಿ ಸೇರಿದಂತೆ ವಿವಿಧ ರಾಜಕೀಯ ಮುಖಂಡರೊಂದಿಗೆ ಸ್ನೇಹಪೂರ್ಣ ಸಂಬಂಧವಿತ್ತು. ಸಾಮಾಜಿಕ ಕ್ಷೇತ್ರದಲ್ಲಿ ಅವರು ಇಸ್ಲಾಮಿಕ್ ವೆಲ್ಫೇರ್ ಸೊಸೈಟಿ, ವೆಲ್ಫೇರ್ ಆಸ್ಪತ್ರೆ ಹಾಗೂ ಶಮ್ಸ್ ಸ್ಕೂಲ್ ಸಂಸ್ಥೆಗಳ ಸ್ಥಾಪಕ ಸದಸ್ಯರಾಗಿದ್ದರು. ಜಾಮಿಯಾಬಾದ್ನ ನ್ಯೂ ಶಮ್ಸ್ ಶಾಲೆಗೆ ಭೂಮಿ ಒದಗಿಸುವಲ್ಲಿ ಇವರ ಪಾತ್ರ ಮಹತ್ವದ್ದಾಗಿತ್ತು ಎನ್ನಲಾಗಿದೆ. ಜಮಾಅತೆ ಇಸ್ಲಾಮಿ ಹಿಂದ್ನ ಸಮಾಜಸೇವಾ ಚಟುವಟಿಕೆಗಳಲ್ಲಿ ಮುಂಚೂಣಿಯಲ್ಲಿದ್ದರು. ತಮ್ಮ ಜೀವನದ ಬಹುಪಾಲನ್ನು ಸಮಾಜಸೇವೆಗೆ ಮೀಸಲಿಟ್ಟಿದ್ದ ಅವರು ಅನೇಕ ಬಡ ಕುಟುಂಬಗಳಿಗೆ ಮನೆ ನಿರ್ಮಿಸಲು ಸಹಾಯ ಮಾಡಿದ್ದರು. ಸಹಾಯಕ್ಕಾಗಿ ಮನೆಗೆ ಬಂದವರನ್ನು ನಿರಾಶೆಗೊಳಿಸದ ವ್ಯಕ್ತಿಯಾಗಿ ಅವರು ಗುರುತಿಸಿಕೊಂಡಿದ್ದರು. ಇವರ ನಿಧನಕ್ಕೆ ಜಮಾಅತೆ ಇಸ್ಲಾಮಿ ಹಿಂದ್ ಭಟ್ಕಳ ಶಾಖೆಯ ಅಧ್ಯಕ್ಷ ಮೌಲಾನ ಸೈಯದ್ ಝುಬೇರ್ ಎಸ್.ಎಂ., ಇಸ್ಲಾಮಿಕ್ ವೆಲ್ಫೇರ್ ಸೊಸೈಟಿಯ ಸೈಯ್ಯದ್ ಶಕೀಲ್ ಎಸ್.ಎಂ., ಶಮ್ಸ್ ಸ್ಕೂಲ್ನ ನಝೀರ್ ಅಹಮದ್ ಖಾಝಿ, ತಂಝೀಮ್ ಅಧ್ಯಕ್ಷ ಇನಾಯತುಲ್ಲಾ ಶಾಬಂದ್ರಿ, ಭಟ್ಕಳ ನಾಗರಿಕ ಹೋರಾಟ ಸಮಿತಿಯ ಅಧ್ಯಕ್ಷ ಸತೀಶ್ ಕುಮಾರ್ ಹಾಗೂ ಭಟ್ಕಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಗೌರವಾಧ್ಯಕ್ಷ ಎಂ.ಆರ್. ಮಾನ್ವಿ ಸೇರಿದಂತೆ ಅನೇಕ ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್
ಬೆಂಗಳೂರು: ರಾಜ್ಯದಲ್ಲಿ ಪೂರ್ವ ಮುಂಗಾರು ಮಳೆ ಅಬ್ಬರ ಮತ್ತೆ ಶುರುವಾಗುವ ಮುನ್ಸೂಚನೆ ನೀಡಿದೆ. ಯುಗಾದಿಗೂ ಮುನ್ನ ಸುರಿದಿದ್ದ ಮಳೆ ನಂತರದ ದಿನಗಳಲ್ಲಿ ದುರ್ಬಲವಾಗಿತ್ತು. ಇದೀಗ ಬದಲಾದ ಹವಾಮಾನ ವೈಪರೀತ್ಯಗಳ ಪ್ರಭಾವದಿಂದ ರಾಜ್ಯದ ಒಳನಾಡು ಜಿಲ್ಲೆಗಳಲ್ಲಿ ಅತ್ಯಧಿಕ ಮಳೆ ಸುರಿಯಲಿದೆ. 07 ಜಿಲ್ಲೆಗಳಿಗೆ 'ಆರೆಂಜ್ ಅಲರ್ಟ್' ಮತ್ತು 15ಕ್ಕೂ ಅಧಿಕ ಜಿಲ್ಲೆಗಳಿಗೆ 'ಯೆಲ್ಲೋ ಅಲರ್ಟ್' ಘೋಷಿಸಲಾಗಿದೆ. ರಾಜ್ಯದ ವಿವಿಧ
ಹಣಕಾಸು ಕೊರತೆ ಇರುವ ಪಾಲಿಕೆಗಳಿಗೆ ರಾಜ್ಯ ಸರಕಾರದಿಂದ ನೆರವು : ಡಿಸಿಎಂ ಡಿ.ಕೆ.ಶಿವಕುಮಾರ್
ಬೆಂಗಳೂರು : ಬಜೆಟ್ ಮಂಡನೆಗೆ ಹಣಕಾಸಿನ ಕೊರತೆ ಇರುವ ಪಾಲಿಕೆಗಳಿಗೆ ರಾಜ್ಯ ಸರ್ಕಾರ ನೆರವು ನೀಡಲಿದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ತಿಳಿಸಿದರು. ವಿಧಾನಸೌಧದ ಆವರಣದಲ್ಲಿ ಮಾಧ್ಯಮಗಳ ಪ್ರಶ್ನೆಗೆ ಬುಧವಾರ ಪ್ರತಿಕ್ರಿಯೆ ನೀಡಿದರು. ಪಾಲಿಕೆ ಬಜೆಟ್ ವಿಚಾರವಾಗಿ ಕೇಳಿದಾಗ, “ಬೆಂಗಳೂರಿನ ಐದು ಪಾಲಿಕೆಗಳಿಗೆ ಪ್ರತ್ಯೇಕ ಬಜೆಟ್ ಮಂಡಿಸಲಿದ್ದು, ಉತ್ತಮ ಯೋಜನೆ ರೂಪಿಸಲಾಗಿದೆ. ಈ ಬಗ್ಗೆ ಶಾಸಕರ ಜತೆಗೂ ಚರ್ಚೆ ಮಾಡಲಾಗಿದೆ. ವಿಕೇಂದ್ರಿಕರಣದಿಂದಾಗಿ ಆಯಾ ಪಾಲಿಕೆಗಳ ಅನುದಾನ ಬೇರೆಡೆಗೆ ವರ್ಗಾವಣೆ ಆಗುವುದಿಲ್ಲ” ಎಂದು ಹೇಳಿದರು.
ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರು, ಉಪಾಧ್ಯಕ್ಷರಿಗೆ ವೇತನ ಬಹಿರಂಗ; ತಿಂಗಳಿಗೆ 6 ಲಕ್ಷ ರೂ. ಸಂಬಳ!
ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಖರ್ಚು ವೆಚ್ಚದ ಲೆಕ್ಕ ಬಹಿರಂಗಗೊಂಡಿದೆ. ಅಧ್ಯಕ್ಷರಿಗೆ ಮಾಸಿಕ 6 ಲಕ್ಷ, ಉಪಾಧ್ಯಕ್ಷರಿಗೆ 4.5 ಲಕ್ಷ ರೂ. ಸಂಬಳ ನೀಡಲಾಗುತ್ತಿದೆ. ಇನ್ನು ಕಚೇರಿ ಸಿಬ್ಬಂದಿ ವೆಚ್ಚ ಸೇರಿ ಮಾಸಿಕ 55 ಲಕ್ಷ ರೂ. ಖರ್ಚು ಮಾಡಲಾಗುತ್ತಿದೆ. ಇದಕ್ಕೆ ಬಿಜೆಪಿ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಸಾರ್ವಜನಿಕರ ಹಣ ಲೂಟಿ ಎಂದು ಕಿಡಿಕಾರಿದೆ.
ಎರಡು ತಾಲೂಕಿಗೆ ಒಂದೇ ಅಗ್ನಿಶಾಮಕ ವಾಹನ: ಗಣಿ ಪ್ರದೇಶದಲ್ಲೂ ಅಗ್ನಿಶಾಮಕ ಕೇಂದ್ರ ಇಲ್ಲ; ಭಾರೀ ಅನಾಹುತ ಭೀತಿ
ಲಿಂಗಸುಗೂರು: ತಾಲೂಕಿನಲ್ಲಿ ಅಗ್ನಿ ಅವಘಡಗಳು, ಪ್ರಕೃತಿ ವಿಕೋಪಗಳು ಹಾಗೂ ರಸ್ತೆ ಅಪಘಾತಗಳಂತಹ ತುರ್ತು ಸಂದರ್ಭಗಳಲ್ಲಿ ಸಾರ್ವಜನಿಕರ ಜೀವ-ಆಸ್ತಿ ರಕ್ಷಣೆಗಾಗಿ ಅಗ್ನಿಶಾಮಕ ಇಲಾಖೆಯ ಸಿದ್ಧತೆ ತೀವ್ರವಾಗಿ ಕೊರತೆಯಾಗಿದೆ. ಅಗ್ನಿಶಾಮಕ ಠಾಣೆಗಳ ಅಭಾವದ ಜೊತೆಗೆ ಜಲವಾಹನಗಳ ಕೊರತೆಯೂ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಒಂದೇ ವಾಹನದ ಮೇಲೆ ಅವಲಂಬನೆ: ಲಿಂಗಸುಗೂರು ಅಗ್ನಿಶಾಮಕ ಠಾಣೆಯ ವ್ಯಾಪ್ತಿಗೆ ಲಿಂಗಸುಗೂರು, ಹಟ್ಟಿ, ಮುದಗಲ್, ನಾಗರಹಾಳ, ಗುರುಗುಂಟಾ ಸೇರಿದಂತೆ ಮಸ್ಕಿ ತಾಲೂಕು ಹಾಗೂ ಸಿರವಾರ ತಾಲೂಕಿನ ಕವಿತಾಳ ಪಟ್ಟಣದವರೆಗೆ ವ್ಯಾಪಕ ಪ್ರದೇಶ ಒಳಪಡುತ್ತದೆ. ಇಷ್ಟು ವಿಶಾಲ ವ್ಯಾಪ್ತಿಗೆ ಒಂದೇ ಅಗ್ನಿಶಾಮಕ ವಾಹನದ ಮೇಲೆ ಅವಲಂಬಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಒಂದು ಕಡೆ ಬೆಂಕಿ ಅವಘಡಕ್ಕೆ ಸ್ಪಂದಿಸುತ್ತಿರುವಾಗ ಮತ್ತೊಂದು ಕಡೆ ಸಂಭವಿಸುವ ಅಪಾಯಗಳಿಗೆ ತಕ್ಷಣ ನೆರವು ಒದಗಿಸಲು ಸಾಧ್ಯವಾಗದಿರುವುದು ಜನರಲ್ಲಿ ಆತಂಕ ಮೂಡಿಸಿದೆ. ಹಟ್ಟಿ ಪಟ್ಟಣದಲ್ಲಿ ಚಿನ್ನದ ಗಣಿ ಇರುವ ಹಿನ್ನೆಲೆಯಲ್ಲಿ, ಅಲ್ಲಿ ಯಾವುದೇ ಅವಘಡ ಸಂಭವಿಸಿದರೆ ತಕ್ಷಣದ ಕ್ರಮ ಏನು ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಎದ್ದಿದೆ. ಗಣಿ ಪ್ರದೇಶದಲ್ಲಿ ಸಂಭವಿಸಬಹುದಾದ ಅಪಾಯಗಳನ್ನು ಗಮನಿಸಿದರೆ, ಪ್ರತ್ಯೇಕ ಅಗ್ನಿಶಾಮಕ ಕೇಂದ್ರದ ಅವಶ್ಯಕತೆ ಹೆಚ್ಚಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಗಂಭೀರ ಪರಿಸ್ಥಿತಿ: ಗ್ರಾಮೀಣ ಭಾಗಗಳಲ್ಲಿ ಸಮಸ್ಯೆ ಇನ್ನಷ್ಟು ತೀವ್ರವಾಗಿದೆ. ಹಳ್ಳಿಗಳಲ್ಲಿ ಬೆಂಕಿ ಅವಘಡ ಸಂಭವಿಸಿದಾಗ ಅಗ್ನಿ ಶಾಮಕ ವಾಹನ ತಲುಪಲುಹೆಚ್ಚಿನ ಸಮಯ ಬೇಕಾಗುತ್ತಿದೆ. ಅಷ್ಟರಲ್ಲೇ ಬೆಂಕಿ ವ್ಯಾಪಕವಾಗಿ ಹರಡಿ ಮನೆಗಳು, ಬೆಳೆಗಳು ಹಾಗೂ ಪಶುಸಂಪತ್ತು ಹಾನಿಗೊಳಗಾಗುತ್ತಿರುವ ಘಟನೆಗಳು ಹೆಚ್ಚಾಗುತ್ತಿವೆ. ಕೆಲವೆಡೆ ಗ್ರಾಮಸ್ಥರು ಸ್ವಯಂಪ್ರೇರಿತವಾಗಿ ಬೆಂಕಿ ನಂದಿಸಲು ಮುಂದಾಗುತ್ತಿರುವುದು ಪರಿಸ್ಥಿತಿಯ ಗಂಭೀರತೆಯನ್ನು ತೋರಿಸುತ್ತದೆ. ಹಟ್ಟಿ ಚಿನ್ನದ ಗಣಿಯಲ್ಲಿಯೂ ಅಗ್ನಿಶಾಮಕ ಠಾಣೆ ಇಲ್ಲ ಹಟ್ಟಿ ಪಟ್ಟಣಕ್ಕೆ ಅಗ್ನಿಶಾಮಕ ಠಾಣೆ ಸ್ಥಾಪಿಸಲು ದಶಕಗಳಿಂದ ಬೇಡಿಕೆ ಇದ್ದರೂ, ಇದುವರೆಗೆ ಸರಕಾರದಿಂದ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ. ಈ ಭಾಗದಲ್ಲಿ ಅಗ್ನಿಶಾಮಕ ಕೇಂದ್ರ ಸ್ಥಾಪಿಸುವುದು ತುರ್ತು ಅಗತ್ಯವಾಗಿದ್ದು, ಇಲ್ಲವಾದರೆ ಭವಿಷ್ಯದಲ್ಲಿ ಸಂಭವಿಸಬಹುದಾದ ಅವಘಡಗಳು ಭಾರೀ ನಷ್ಟಕ್ಕೆ ಕಾರಣವಾಗುವ ಸಾಧ್ಯತೆ ಇದೆ ಎಂದು ಸ್ಥಳೀಯರು ಎಚ್ಚರಿಸಿದ್ದಾರೆ. ಸರಕಾರ ತಕ್ಷಣ ಈ ಸಮಸ್ಯೆಯನ್ನು ಗಮನಿಸಿ ಅಗ್ನಿಶಾಮಕ ಸೌಲಭ್ಯಗಳನ್ನು ಹೆಚ್ಚಿಸಬೇಕು ಹಾಗೂ ಹಟ್ಟಿ ಭಾಗದಲ್ಲಿ ಪ್ರತ್ಯೇಕ ಅಗ್ನಿಶಾಮಕ ಕೇಂದ್ರ ಸ್ಥಾಪಿಸಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.
Goa | 25 ರಿಂದ 30 ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಆರೋಪ: ಬಿಜೆಪಿ ನಾಯಕನ ಪುತ್ರನ ಬಂಧನ
ಪಣಜಿ: 25 ರಿಂದ 30 ಅಪ್ರಾಪ್ತ ಬಾಲಕಿಯರಿಗೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪಕ್ಕೆ ಸಂಬಂಧಿಸಿ ದಕ್ಷಿಣ ಗೋವಾ ಪೊಲೀಸರು ಬಿಜೆಪಿ ನಾಯಕನೋರ್ವನ ಪುತ್ರನನ್ನು ಬಂಧಿಸಿದ್ದಾರೆ ಮಡೆಗಲ್-ಕಾಕೋರಾದ ನಿವಾಸಿ ಮತ್ತು ಕರ್ಚೋರೆಮ್ ಪುರಸಭೆಯ ಬಿಜೆಪಿ ಕೌನ್ಸಿಲರ್ ಪುತ್ರ ಸೋಹಮ್ ಸುಶಾಂತ್ ನಾಯಕ್ (20) ಬಂಧಿತ ಆರೋಪಿ. ಲೈಂಗಿಕ ದೌರ್ಜನ್ಯದ ಆರೋಪಕ್ಕೆ ಸಂಬಂಧಿಸಿ ವ್ಯಾಪಕ ಆಕ್ರೋಶ ವ್ಯಕ್ತವಾದ ಬೆನ್ನಲ್ಲೆ ಆರೋಪಿಯನ್ನು ಬಂಧಿಸಲಾಗಿದೆ. ತನಿಖೆಯ ವೇಳೆ ಆರೋಪಿ ಕಳೆದ ಮೂರು ವರ್ಷಗಳಿಂದ ಅಪ್ರಾಪ್ತ ಬಾಲಕಿಯರ ಮೇಲೆ ನಿರಂತರವಾಗಿ ಲೈಂಗಿಕ ದೌರ್ಜನ್ಯ ಎಸಗಿದ್ದ. ತನ್ನ ಕೃತ್ಯದ ವಿಡಿಯೋ ಮಾಡಿ ಬಳಿಕ ಬ್ಲಾಕ್ಮೇಲ್ ಮಾಡುತ್ತಿದ್ದ ಎನ್ನುವುದು ಬಹಿರಂಗವಾಗಿದೆ. ಈ ಕುರಿತು ಪ್ರತಿಕ್ರಿಯಿಸಿದ ಗೋವಾ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಅಮಿತ್ ಪಾಟ್ಕರ್, ಸರಕಾರ ಈ ಪ್ರಕರಣಲ್ಲಿ ಮಧ್ಯಪ್ರವೇಶಿಸಿ ನಿಷ್ಪಕ್ಷಪಾತ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ. ಕಳೆದ ವಾರ ಪಾರ್ಟಿಯೊಂದರಲ್ಲಿ ನಾಯಕ್ ತನ್ನ ಸ್ನೇಹಿತರಿಗೆ ಕೃತ್ಯದ ಬಗ್ಗೆ ಹೇಳುತ್ತಾ ವಿಡಿಯೋ ತೋರಿಸಿದ ಬಳಿಕ ದೌರ್ಜನ್ಯ ಘಟನೆ ಬಹಿರಂಗಗೊಂಡಿತ್ತು. ಆರೋಪಿ ವಿರುದ್ಧ ಸ್ವಯಂಪ್ರೇರಿತ ಎಫ್ಐಆರ್ ದಾಖಲಿಸುವಂತೆ ಒತ್ತಾಯಿಸಿ ರವಿವಾರ ಪ್ರತಿಭಟನೆ ನಡೆಯಿತು. 48 ಗಂಟೆಗಳ ಒಳಗೆ ಆರೋಪಿಯನ್ನು ಬಂಧಿಸದಿದ್ದರೆ ಬಂದ್ ಮಾಡುವುದಾಗಿ ಎಚ್ಚರಿಕೆ ನೀಡಲಾಗಿತ್ತು. ಪೊಲೀಸರು ಈ ಪ್ರಕರಣದ ಕುರಿತು ತನಿಖೆಯನ್ನು ನಡೆಸುತ್ತಿದ್ದಾರೆ. ಡಿಜಿಟಲ್ ಸಾಕ್ಷ್ಯಗಳನ್ನು ಸಂಗ್ರಹಿಸುತ್ತಿದ್ದಾರೆ ಎಂದು ವರದಿಯಾಗಿದೆ.
ಇ-ಸಿಗರೇಟ್ ಚಟ ಹಚ್ಚಿಕೊಂಡ ಅಳಿಲು; ಲಂಡನ್ ಪ್ರಾಣಿಗಳಲ್ಲಿ 'ವೇಪ್ ಕಲ್ಚರ್'? ವಿಡಿಯೋ ಬಿಚ್ಚಿಟ್ಟ ಕರಾಳ ಸತ್ಯ!
ಲಂಡನ್ನ ಪ್ರಾಣಿಗಳು ಮನುಷ್ಯರಂತೆ ಇ-ಸಿಗರೇಟ್ ಸೇದುವಷ್ಟು ಅಪ್ಗ್ರೇಡ್ ಆಗಿವೆಯಾ? ಲಂಡನ್ನ ದಕ್ಷಿಣ ಭಾಗದಲ್ಲಿರುವ ಬ್ರಿಕ್ಸ್ಟನ್ ಪ್ರದೇಶದಲ್ಲಿ ಅಳಿಲೊಂದು ಇ-ಸಿಗರೇಟ್ ಸೇದುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದ್ದು, ಇದು ಪ್ರಾಣಿಪ್ರಿಯರ ಆತಂಕವನ್ನು ಹೆಚ್ಚಿಸಿದೆ. ಅಸಲಿಗೆ ಅಳಿಲು ಇ-ಸಿಗರೇಟ್ ಸೇದುವುದನ್ನು ಕಲಿತಿದೆಯಾ? ಅಥವಾ ಈ ವರ್ತನೆಗೆ ಬೇರೆ ಯಾವುದೋ ಕಾರಣವಿದೆಯಾ? ಎಂಬ ಚರ್ಚೆ ಇದೀಗ ಶುರುವಾಗಿದೆ. ಹಾಗಿದ್ದರೆ ಅಳಿಲು ಇ-ಸಿಗರೇಟ್ ಸೇದಿದ್ದೇಕೆ? ಇದರ ಹಿಂದಿನ ಮರ್ಮವೇನು? ಇಲ್ಲಿದೆ ಸಂಪೂರ್ಣ ಮಾಹಿತಿ.
IPL - ರಾಜಸ್ಥಾನ ರಾಯಲ್ಸ್ ಮಾರಾಟ, ಶೇನ್ ವಾರ್ನ್ ಕುಟುಂಬಕ್ಕೆ 450 ಕೋಟಿ ಲಾಭ : ಹೇಗೆ, ಏನಿದು ಲೆಕ್ಕಾಚಾರ?
RR Sale and Shane Warne : ಇಂಡಿಯನ್ ಪ್ರೀಮಿಯರ್ ಲೀಗ್’ನ ಎರಡು ತಂಡಗಳ ಸೇಲ್ ಪ್ರಕ್ರಿಯೆ ಬಹುತೇಕ ಫೈನಲ್ ಆಗಿದೆ. ಆಗಿರುವ ಡೀಲ್ ಒಪ್ಪಂದಕ್ಕೆ ಬಿಸಿಸಿಐ ಅನುಮೋದನೆ ಸಿಕ್ಕರೆ, ಎಲ್ಲವೂ ಮುಗಿದಂತಾಗುತ್ತದೆ. ರಾಜಸ್ಥಾನ್ ರಾಯಲ್ಸ್ ತಂಡದ ಸೇಲ್ ನಿಂದಾಗಿ, ದಿವಂಗತ ಶೇನ್ ವಾರ್ನ್ ಅವರ ಕುಟುಂಬಕ್ಕೆ ಭಾರೀ ಮೊತ್ತದ ಶೇರ್ ಸಿಗಲಿದೆ, ಅದು ಹೇಗೆ?. ಬೆಂಗಳೂರು ತಂಡವೂ ಭಾರೀ ಮೊತ್ತಕ್ಕೆ ಸೇಲ್ ಆಗಿತ್ತು.
ಆಲಿಕಲ್ಲು ಮಳೆಯಿಂದ ಬೆಳೆ ಹಾನಿ : ಸಂಕಷ್ಟದಲ್ಲಿ ರೈತರು, ತಕ್ಷಣ ಪರಿಹಾರಕ್ಕೆ ಒತ್ತಾಯ
ಯಾದಗಿರಿ: ಜಿಲ್ಲೆಯ ವಡಗೇರಾ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಆಲಿಕಲ್ಲು ಮಳೆಯಿಂದ ಭಾರೀ ಪ್ರಮಾಣದಲ್ಲಿ ಬೆಳೆ ಹಾನಿಯಾಗಿದ್ದು, ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಚನ್ನೂರು ಜೆ, ಗೊಂಡೆನೂರು, ಕೊಂಕಲ್, ಕುರಿಹಾಳ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಭತ್ತ, ಜೋಳ, ಸಜ್ಜೆ ಹಾಗೂ ಹತ್ತಿ ಬೆಳೆಗಳು ಸಂಪೂರ್ಣ ಹಾನಿಗೊಳಗಾಗಿವೆ. ಕೊಯ್ಲಿಗೆ ಸಿದ್ಧವಾಗಿದ್ದ ಬೆಳೆಗಳು ಕ್ಷಣಾರ್ಧದಲ್ಲಿ ನಾಶವಾಗಿರುವುದರಿಂದ ರೈತರು ಕಂಗಾಲಾಗಿದ್ದಾರೆ. ಹಲವು ತಿಂಗಳುಗಳ ಪರಿಶ್ರಮ ಮಳೆಯ ನೀರಿನಲ್ಲಿ ಕರಗಿದಂತಾಗಿದೆ. ಈ ಭಾಗದಲ್ಲಿ ಭೀಮಾ ಮತ್ತು ಕೃಷ್ಣಾ ನದಿಗಳ ತೀರದಲ್ಲಿ ಕೃಷಿ ನಡೆಸುವ ರೈತರು ನೀರಾವರಿ ವ್ಯವಸ್ಥೆಗಾಗಿ ಬ್ಯಾಂಕ್ಗಳಿಂದ ಸಾಲ ಪಡೆದು ಕೃಷಿ ಮಾಡಿಕೊಂಡಿದ್ದಾರೆ. ಆದರೆ ಪ್ರತಿ ವರ್ಷ ಮಳೆಗಾಲದಲ್ಲಿ ಪ್ರವಾಹದ ಭೀತಿ ಎದುರಿಸುತ್ತಿದ್ದ ರೈತರಿಗೆ ಈ ಬಾರಿ ಆಲಿಕಲ್ಲು ಮಳೆ ಮತ್ತೊಂದು ಹೊಡೆತ ನೀಡಿದೆ. ಬೆಳೆ ಹಾನಿಗೆ ಸಂಬಂಧಿಸಿದ ವಿಮಾ ಸೌಲಭ್ಯ ಸಮರ್ಪಕವಾಗಿ ದೊರೆಯದಿರುವುದು ರೈತರ ನೋವನ್ನು ಹೆಚ್ಚಿಸಿದೆ. ಕೆಲವರು ವಿಮೆ ಮಾಡಿಸಿಕೊಂಡಿದ್ದರೂ ಪರಿಹಾರ ದೊರಕುವಲ್ಲಿ ವಿಳಂಬವಾಗುತ್ತಿದೆ. ಇನ್ನೂ ಹಲವರಿಗೆ ವಿಮಾ ಯೋಜನೆಗಳ ಬಗ್ಗೆ ಅರಿವು ಇಲ್ಲದ ಕಾರಣ ಯಾವುದೇ ರಕ್ಷಣೆಯಿಲ್ಲದೆ ನಷ್ಟವನ್ನು ಎದುರಿಸುತ್ತಿದ್ದಾರೆ. ಒಂದು ಏಕರೆಗೆ ಸಾವಿರಾರು ರೂಪಾಯಿ ವೆಚ್ಚ ಮಾಡಿ ಬೆಳೆ ಬೆಳೆದ ರೈತರಿಗೆ ಈಗ ಕೈಗೆ ಬಂದದ್ದು ಶೂನ್ಯ. ಸಾಲ ತೀರಿಸುವ ದಾರಿ ಕಾಣದೆ ಆತಂಕ ಹೆಚ್ಚಾಗಿದೆ. ಸರಕಾರ ತಕ್ಷಣ ಸ್ಪಂದಿಸದಿದ್ದರೆ ರೈತರು ಇನ್ನಷ್ಟು ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆ ಇದೆ ಎಂಬ ಆತಂಕ ವ್ಯಕ್ತವಾಗಿದೆ. ಕಷ್ಟಪಟ್ಟು, ಸಾಲ ಮಾಡಿ ಬೆಳೆದ ಬೆಳೆ ಕಣ್ಣು ಮುಂದೆ ನಾಶವಾಗಿದ್ದು ತುಂಬಾ ನೋವಾಗಿದೆ. ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ. ಈಗ ನಾವು ಏನು ಮಾಡಬೇಕು ಅನ್ನೋದೇ ಗೊತ್ತಾಗುತ್ತಿಲ್ಲ. ಸರಕಾರ ನಮ್ಮ ಪರಿಸ್ಥಿತಿಯನ್ನು ಗಮನಿಸಿ ತಕ್ಷಣ ನೆರವು ನೀಡಬೇಕು. -ಸಾಬಣ್ಣ ಕುರಿಹಾಳ್ ಶಾಂತಪ್ಪ ಗೊಂದೆನೋರ್ ರೈತ ರೈತರ ಸಂಕಷ್ಟದ ನಡುವೆಯೇ ಕೃಷಿ ಚಟುವಟಿಕೆಗಳನ್ನು ಮುಂದುವರೆಸಲು ಸರಕಾರದಿಂದ ತುರ್ತು ನೆರವು ಅಗತ್ಯವಾಗಿದೆ. ಸಾಲ ಮನ್ನಾ, ಇನ್ಪುಟ್ ಸಬ್ಸಿಡಿ ಹಾಗೂ ಬೆಳೆ ನಷ್ಟ ಪರಿಹಾರವನ್ನು ತಕ್ಷಣ ನೀಡಬೇಕು. ಇಲ್ಲವಾದರೆ ರೈತರು ಸಾಲದ ಬಾಧೆಯಿಂದ ಆತ್ಮಹತ್ಯೆ ಮಾಡುವ ಪರಿಸ್ಥಿತಿ ಎದುರಾಗಬಹುದು ಎಂಬ ಆತಂಕ ವ್ಯಕ್ತವಾಗಿದೆ. ಆಲಿಕಲ್ಲು ಮಳೆಯಿಂದ ಬಹಳಷ್ಟು ಪ್ರಮಾಣದಲ್ಲಿ ಬೆಳೆ ಹಾನಿಯಾಗಿದೆ. ರೈತರು ಸಂಕಷ್ಟದಲ್ಲಿದ್ದು, ಸರಕಾರ ಕೂಡಲೇ ಸೂಕ್ತ ಪರಿಹಾರ ನೀಡಬೇಕು. -ಶ್ರೀಧರ ಸಾಹುಕಾರ, ಜಿಲ್ಲಾಧ್ಯಕ್ಷ ಬಿಜೆಪಿ ಯುವ ಘಟಕ
ಉನ್ನತ ಶಿಕ್ಷಣಕ್ಕಾಗಿ 45 ಕಿ.ಮೀ. ದೂರ ಪ್ರಯಾಣ; ಬಡ ವಿದ್ಯಾರ್ಥಿಗಳಿಗೆ ಸಂಕಷ್ಟ
ನ್ಯಾಕ್ ‘ಎ’ ಶ್ರೇಣಿಯ ಕಾಳಗಿ ಕಾಲೇಜಿಗೆ ಪಿಜಿ ಭಾಗ್ಯವಿಲ್ಲ
Kalaburagi | ಯುವ ಕಲಾವಿದರಿಗೆ ಎಚ್ಚಿಂಗ್ ಕಾರ್ಯಗಾರ
ಕಲಬುರಗಿ : ಅನುಚಂದ್ರ ದೃಶ್ಯಕಲಾ ಹಾಗೂ ಸಾಂಸ್ಕೃತಿಕ ಸಂಸ್ಥೆಯ ವತಿಯಿಂದ ಮಾ.24ರಿಂದ 30ರವರೆಗೆ ಯುವ ಕಲಾವಿದರಿಗಾಗಿ ನಗರದಲ್ಲಿ 3ನೇ ಎಚ್ಚಿಂಗ್ ಕಾರ್ಯಗಾರವನ್ನು ಆಯೋಜಿಸಲಾಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕರ್ನಾಟಕ ರಾಜ್ಯ ಚಿತ್ರಕಲಾ ಶಿಕ್ಷಕರ ಸಂಘದ ಜಿಲ್ಲಾ ಅಧ್ಯಕ್ಷ ಶಾಂತಮಲ್ಲ ಶಿವಬೋ ಅವರು, ದೃಶ್ಯಕಲೆಗಳಲ್ಲಿ ಎಚ್ಚಿಂಗ್ ಮುದ್ರಣಕಲೆಗೂ ಮಹತ್ವದ ಸ್ಥಾನವಿದೆ ಎಂದು ಹೇಳಿದರು. “ಕಲಾಕೃತಿಯನ್ನು ಕಷ್ಟಪಟ್ಟು ಮಾಡುವುದಕ್ಕಿಂತ ಇಷ್ಟಪಟ್ಟು ಮಾಡಿದಾಗ ಅದು ಪರಿಪೂರ್ಣವಾಗುತ್ತದೆ. ನಾವು ರಚಿಸುವ ಕಲಾಕೃತಿ ನಮಗೆ ಖುಷಿ ನೀಡಿದರೆ ಅದು ಇಡೀ ಜಗತ್ತಿಗೂ ಖುಷಿ ನೀಡುತ್ತದೆ,” ಎಂದು ಅವರು ಅಭಿಪ್ರಾಯಪಟ್ಟರು. ಜೊತೆಗೆ, ಉತ್ತಮ ಕಲಾಕೃತಿಗೆ ನೂರಕ್ಕೆ ನೂರರಷ್ಟು ಶ್ರಮ ಅಗತ್ಯವಿದ್ದು, ಕಳಪೆ ಪ್ರದರ್ಶನಕ್ಕೆ ಅವಕಾಶವಿಲ್ಲ ಎಂದು ಶಿಬಿರಾರ್ಥಿಗಳಿಗೆ ಪ್ರೇರಣೆ ನೀಡಿದರು. ಸಂಸ್ಥೆಯ ಸಂಸ್ಥಾಪಕ ಹಾಗೂ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಚಂದ್ರಹಾಸ್ ಜಾಲಿಹಾಳ ಮಾತನಾಡಿ, ಈ ಕಾರ್ಯಗಾರದ ಉದ್ದೇಶ ಕಲಿಕಾರ್ಥಿಗಳಿಗೆ ಉತ್ತಮ ಕಲಿಕಾ ಅವಕಾಶ ಕಲ್ಪಿಸುವುದಾಗಿದೆ ಎಂದರು. ಕಾರ್ಯಗಾರದ ಬಳಿಕ ಕಲಿಕಾರ್ಥಿಗಳ ಕಲಾಕೃತಿಗಳ ಪ್ರದರ್ಶನವನ್ನು ಕೂಡ ಆಯೋಜಿಸಲಾಗುವುದು ಎಂದರು. ಕಾರ್ಯಕ್ರಮವನ್ನು ಡಾ. ಪರಶುರಾಮ ನಿರೂಪಿಸಿ ನಿರ್ವಹಿಸಿದರು. ಮಲ್ಲಿಕಾರ್ಜುನ್ ಕೊರಳ್ಳಿ ವಂದಿಸಿದರು. ಕಾವ್ಯ ಗದ್ದಿ, ಪ್ರಿಯದರ್ಶಿನಿ ಸಿಂದೆ ಅಬಂಗ, ಸಾರಾ ಫಾತಿಮಾ, ವಿಜಯಲಕ್ಷ್ಮಿ, ಸೋನಾ ವಿ., ಅರುಣ ಅಶೋಕ್ ಗಾಣಗಿ, ನಿಖಿಲ್ ವಾಗ್ಮರೆ, ಮಹೇಶ್ ಬಿ., ನಿಂಗನಗೌಡ ಎಂ ಪಾಟೀಲ್ ಹಾಗೂ ಸಂದೀಪ್ ಜಾಧವ್ ಮತ್ತಿತ್ತರ ಕಲಾವಿದರು ಇದ್ದರು.
ಜಾತಿ ವೈಷಮ್ಯದಿಂದ ಕೊಳಗಲ್ಲು ಗ್ರಾಮದಲ್ಲಿ ಇಬ್ಬಣ
ಕ್ಷೌರ, ಹೋಟೆಲ್, ಜಾತ್ರೆಯ ಮೇಲೂ ದುಷ್ಪರಿಣಾಮ!
RCB ಯನ್ನು ಖರೀದಿಸಿದ್ದು ಯಾರು? ಆರ್ಸಿಬಿಯನ್ನು ಖರೀದಿಸಿದ ಒಕ್ಕೂಟದ ವಿವರಗಳೇನು?
►RCB ಯನ್ನು ರೂ. 446.40 ಕೋಟಿಗೆ ಖರೀದಿಸಿದ್ದ ವಿಜಯ್ ಮಲ್ಯ
ಹನುಮ ಮಾಲಾಧಾರಿಗಳಿಗೆ ನೀರು ಸರಬರಾಜು ಮಾಡಲು ಪ.ಪಂ ಮುಖ್ಯಾಧಿಕಾರಿಗೆ ಮನವಿ
ಕನಕಗಿರಿ: ಪಟ್ಟಣದ ಪರಿಸರದಲ್ಲಿರುವ ತೊಂಡೆತೇವರಪ್ಪ ದೇವಸ್ಥಾನದಲ್ಲಿರುವ ಹನುಮ ಮಾಲಾಧಾರಿಗಳಿಗೆ ನೀರು ಸರಬರಾಜು ಮಾಡಬೇಕೆಂದು ತಾಲೂಕು ಹನುಮ ಮಾಲಾ ಸೇವಾ ಸಮಿತಿ ವತಿಯಿಂದ ಬುಧವಾರ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಲಕ್ಷ್ಮಣ ಕಟ್ಟಿಮನಿ ಅವರಿಗೆ ಮನವಿ ಸಲ್ಲಿಸಲಾಯಿತು. ಹನುಮ ಮಾಲಾಧಾರಿ ಪ್ರಲ್ಹಾದರೆಡ್ಡಿ ಮಾದಿನಾಳ ಮಾತನಾಡಿ, ಪಟ್ಟಣದ ಭಕ್ತರು ಹನುಮ ಜಯಂತಿ ನಿಮಿತ್ತ 70 ಕ್ಕೂ ಹೆಚ್ಚು ಜನರು ಮಾಲೆ ಧರಿಸಿದ್ದು, ಸಂಜೆ ಹಾಗೂ ಬೆಳಗಿನ ಜಾವ ಸ್ನಾನಕ್ಕೆ ಮತ್ತು ಕುಡಿಯುವ ನೀರಿನ ಸಮಸ್ಯೆ ಉಂಟಾಗಿದೆ. ಇದರಿಂದ ಭಕ್ತರಿಗೆ ತೊಂದರೆಯಾಗುತ್ತಿದೆ. ಆದ ಕಾರಣ ತಾವುಗಳು ತಕ್ಷಣ ಭಕ್ತರಿಗೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಬೇಕೆಂದು ಮನವಿ ಮಾಡಿದರು. ಹನುಮ ಮಾಲಾಧಾರಿ ಕನಕರೆಡ್ಡಿ, ವೆಂಕಟೇಶ, ನರಸಪ್ಪ, ಸಂಪತ್, ಚೇತನ್ ಬ್ಯಾಳಿ, ಶ್ರೀನಿವಾಸ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಪಾಕಿಸ್ತಾನದ ಹಡಗಿಗೆ ಹೊರ್ಮುಜ್ ನಲ್ಲಿ ನೋ ಎಂಟ್ರಿ ಎಂದ ಇರಾನ್: ಯುದ್ದ ನಿಲ್ಲಿಸೋ ಶಕ್ತಿ ಭಾರತಕ್ಕಿದೆ ಎಂದು ವಿಶ್ವಾಸ
ಮಧ್ಯಪ್ರಾಚ್ಯದಲ್ಲಿನ ಉದ್ವಿಗ್ನತೆ ಶಮನಗೊಳಿಸಲು US-ಇರಾನ್ ನಡುವಿನ ಮಾತುಕತೆಗೆ ಪಾಕಿಸ್ತಾನ ಮಧ್ಯಸ್ಥಿಕೆ ವಹಿಸಲಿದೆ ಎಂಬ ವರದಿಗಳ ಬೆನ್ನಲ್ಲೇ, ಪಾಕಿಸ್ತಾನ ಕ್ಕೆ ಇರಾನ್ ಶಾಕ್ ಕೊಟ್ಟಿದ್ದು, ಹೊರ್ಮುಜ್ ಜಲಸಂಧಿ ಹಾದುಹೋಗಲು ಪ್ರಯತ್ನಿಸುತ್ತಿದ್ದ ತನ್ನ ಹಡಗಿಗೆ ಅನುಮತಿ ಇಲ್ಲ ಎಂದು ಹೇಳಿ ತಡೆದಿದ್ದು, ಅಲ್ಲಿಂದ ಹಿಂದಕ್ಕೆ ಕಳುಹಿಸಿದೆ. ಅಲ್ಲದೆ, ಪಾಕ್ ಮಧ್ಯಸ್ಥಿಕೆ ಎಂಬ ವರದಿಗಳ ಬೆನ್ನಲ್ಲೇ, ಭಾರತದಲ್ಲಿನ ಇರಾನ್ ರಾಯಭಾರಿ ಉದ್ವಿಗ್ನತೆಯನ್ನು ಶಮನಗೊಳಿಸುವಲ್ಲಿ ಭಾರತ ಅತ್ಯಂತ ವಿಶ್ವಾಸಾರ್ಹ ಆಟಗಾರನಾಗಿಲಿದೆ ಎಂದು ವಿಶ್ವಾಸ ವ್ಯಕ್ತ ಪಡಿಸಿದ್ದಾರೆ.
ಕಾರ್ಕಳ ಮಹಾಮಸ್ತಕಾಭಿಷೇಕಕ್ಕೆ 1.59 ಕೋಟಿ ರೂ. ಅನುದಾನ: ಬ್ಲಾಕ್ ಕಾಂಗ್ರೆಸ್ ಕೃತಜ್ಞತೆ
ಕಾರ್ಕಳ: 2027ರಲ್ಲಿ ಕಾರ್ಕಳ ಭಗವಾನ್ ಬಾಹುಬಲಿ ಮೂರ್ತಿಗೆ ಮಹಾ ಮಸ್ತಕಾಭಿಷೇಕ ನಡೆಯಲಿದ್ದು, ಅದರ ಮೂಲಭೂತ ಸೌಕರ್ಯಗಳಿಗೆ ಅನುಕೂಲವಾಗುವಂತೆ ರಾಜ್ಯ ಸರ್ಕಾರವು ಅಲ್ಪಸಂಖ್ಯಾತರ ಇಲಾಖೆಯ ಮೂಲಕ ಮೊದಲ ಹಂತದಲ್ಲಿ 1.59 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದೆ. ಈ ಅನುದಾನದಲ್ಲಿ ಅಲ್ಪಸಂಖ್ಯಾತರ ವಿದ್ಯಾರ್ಥಿನಿಲಯ ನಿರ್ಮಾಣ, ಕಾರ್ಕಳ ಗ್ರಾಮೀಣ ಪ್ರದೇಶದಲ್ಲಿರುವ ಅಜೆಕಾರು, ರೆಂಜಾಳ, ಮುಂಡ್ಲಿ, ಶಿರ್ಲಾಲು, ಸೂಡಿ ಮತ್ತು ನಲ್ಲೂರು ಕುಷ್ಮಾಂಡಿನಿ ಬಸದಿಗಳ ಸಂಪರ್ಕ ರಸ್ತೆ ಅಭಿವೃದ್ಧಿ, ಜೊತೆಗೆ ಜೈನ ಮಠದ ತ್ಯಾಗಿ ಭವನ, ಮಾತಾಜಿ ಭವನ, ಸಭಾಂಗಣ ನವೀಕರಣ, ಬೆಟ್ಟಕ್ಕೆ ನೀರು ಸರಬರಾಜು ಹಾಗೂ ಕೊಳವೆಬಾವಿ ನಿರ್ಮಾಣ ಕಾರ್ಯಗಳನ್ನು ಕೈಗೊಳ್ಳಲು ಅನುದಾನ ಬಿಡುಗಡೆ ಮಾಡಲಾಗಿದೆ. ಮಹಾ ಮಸ್ತಕಾಭಿಷೇಕವು ಯಶಸ್ವಿಯಾಗಿ ನಡೆಯಲು ಇನ್ನೂ ಅನೇಕ ಇಲಾಖೆಗಳ ಮೂಲಕ ಅನುದಾನ ಬಿಡುಗಡೆಯಾಗುವ ನಿರೀಕ್ಷೆಯಿದ್ದು, ಮೊದಲ ಹಂತದ ಅನುದಾನ ಬಿಡುಗಡೆಗೊಳಿಸಿದ ಕರ್ನಾಟಕ ಸರ್ಕಾರಕ್ಕೆ ಕಾರ್ಕಳ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ಶುಭದ ರಾವ್ ಕೃತಜ್ಞತೆ ಸಲ್ಲಿಸಿದ್ದಾರೆ.
ಪಶ್ಚಿಮ ಏಷ್ಯಾ ಸಂಘರ್ಷ ಶಮನಕ್ಕೆ 15 ಪ್ರಸ್ತಾವನೆಗಳನ್ನು ಮುಂದಿಟ್ಟ ಅಮೆರಿಕ ಅಧ್ಯಕ್ಷ ಟ್ರಂಪ್; ಇರಾನ್ ನ ಬೇಡಿಕೆಗಳೇನು?
ಕದನ ವಿರಾಮ ಮಾತುಕತೆಗಳನ್ನು ಮತ್ತೆ ಪ್ರವೇಶಿಸಲು ಇರಾನ್ ತನ್ನ ಷರತ್ತುಗಳನ್ನು ಮುಂದಿಟ್ಟಿದ್ದು ಗಲ್ಫ್ ನಲ್ಲಿರುವ ಎಲ್ಲಾ ಅಮೆರಿಕದ ಮಿಲಿಟರಿ ನೆಲೆಗಳನ್ನು ಮುಚ್ಚಬೇಕೆಂದು ಒತ್ತಾಯಿಸಿದೆ. ಇದು ಅಮೆರಿಕದೊಂದಿಗಿನ ರಾಜತಾಂತ್ರಿಕತೆಗೆ ಹೆಚ್ಚಿನ ಅಡ್ಡಿಯನ್ನುಂಟುಮಾಡುತ್ತದೆ ಎಂದು ಈ ಬಗ್ಗೆ ತಿಳಿದಿರುವ ಜನರನ್ನು ಉಲ್ಲೇಖಿಸಿ ʼವಾಲ್ ಸ್ಟ್ರೀಟ್ ಜರ್ನಲ್ʼ ವರದಿ ತಿಳಿಸಿದೆ. ವಾರಗಳ ಸಂಘರ್ಷದ ನಂತರ ದೇಶದ ನಾಯಕತ್ವದೊಳಗೆ ಪ್ರಭಾವವನ್ನು ಕ್ರೋಢೀಕರಿಸಿರುವ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಇರಾನ್ನ ಮಾತುಕತೆಯ ಸ್ಥಾನವನ್ನು ರೂಪಿಸುತ್ತಿದೆ ಎಂದು ವರದಿ ಹೇಳಿದೆ. ಏತನ್ಮಧ್ಯೆ, ಟೆಹ್ರಾನ್ನ ಬೇಡಿಕೆಗಳ ಹೊರತಾಗಿ, ನಡೆಯುತ್ತಿರುವ ಸಂಘರ್ಷವನ್ನು ಕೊನೆಗೊಳಿಸುವ ಗುರಿಯನ್ನು ಹೊಂದಿರುವ 15 ಅಂಶಗಳ ಪ್ರಸ್ತಾಪವನ್ನು ಅಮೆರಿಕ ನೀಡಿದೆ. ► ಇರಾನ್ ನ ಬೇಡಿಕೆಗಳೇನು? ವರದಿಯ ಪ್ರಕಾರ, ಗಲ್ಫ್ ಪ್ರದೇಶದಲ್ಲಿರುವ ಎಲ್ಲಾ ಅಮೆರಿಕನ್ ನೆಲೆಗಳನ್ನು ಮುಚ್ಚುವಂತೆ ಮತ್ತು ಇರಾನ್ ಪ್ರದೇಶದ ಮೇಲಿನ ದಾಳಿಗಳಿಗೆ ಪರಿಹಾರವನ್ನು ನೀಡುವಂತೆ ಇರಾನ್ ಟ್ರಂಪ್ ಆಡಳಿತವನ್ನು ಕೇಳಿದೆ. • ಕೊಲ್ಲಿಯಲ್ಲಿರುವ ಎಲ್ಲಾ ಅಮೆರಿಕನ್ ಮಿಲಿಟರಿ ನೆಲೆಗಳನ್ನು ಮುಚ್ಚುವುದು • ಇರಾನ್ ಮೇಲಿನ ದಾಳಿಗಳಿಗೆ ಹಣಕಾಸಿನ ಪರಿಹಾರಗಳು • ಈಜಿಪ್ಟ್ನ ಸೂಯೆಝ್ ಕಾಲುವೆಯಂತೆಯೇ ಜಲಮಾರ್ಗದ ಮೂಲಕ ಹಾದುಹೋಗುವ ಹಡಗುಗಳಿಂದ ಇರಾನ್ ಶುಲ್ಕವನ್ನು ಸಂಗ್ರಹಿಸಲು ಅನುವು ಮಾಡಿಕೊಡುವ ಹಾರ್ಮುಝ್ ಜಲಸಂಧಿಯನ್ನು ನಿಯಂತ್ರಿಸುವ ಹೊಸ ಚೌಕಟ್ಟು • ಯುದ್ಧಗಳು ಪುನರಾರಂಭಗೊಳ್ಳುವುದಿಲ್ಲ ಎಂಬ ಖಾತರಿ • ಲೆಬನಾನ್ನಲ್ಲಿರುವ ಹಿಜ್ಬುಲ್ಲಾದಂತಹ ಇರಾನ್-ಸಂಯೋಜಿತ ಸಂಘಟನೆಗಳ ಮೇಲೆ ಇಸ್ರೇಲಿ ದಾಳಿಗಳಿಗೆ ಅಂತ್ಯ • ಇರಾನ್ ಮೇಲೆ ವಿಧಿಸಲಾದ ಎಲ್ಲಾ ನಿರ್ಬಂಧಗಳನ್ನು ತೆಗೆದುಹಾಕುವುದು • ಅದನ್ನು ಮಿತಿಗೊಳಿಸಲು ಮಾತುಕತೆಗಳಿಲ್ಲದೆ ತನ್ನ ಕ್ಷಿಪಣಿ ಕಾರ್ಯಕ್ರಮವನ್ನು ಉಳಿಸಿಕೊಳ್ಳಲು ಅನುಮತಿ ಅಮೆರಿಕದ ಅಧಿಕಾರಿಗಳು ಈ ಬೇಡಿಕೆಗಳನ್ನು ಹಾಸ್ಯಾಸ್ಪದ ಮತ್ತು ಅವಾಸ್ತವಿಕ ಎಂದು ಬಣ್ಣಿಸಿದ್ದಾರೆ, ಇದು ಪಶ್ಚಿಮ ಏಷ್ಯಾದಲ್ಲಿ ಮಧ್ಯವರ್ತಿಗಳ ಮೂಲಕ ರಾಜತಾಂತ್ರಿಕ ಪ್ರಯತ್ನಗಳು ಮುಂದುವರಿಯುತ್ತಿರುವುದರಿಂದ ಎರಡೂ ಕಡೆಯ ನಡುವಿನ ವಿಶಾಲ ಅಂತರವನ್ನು ಪ್ರತಿಬಿಂಬಿಸುತ್ತದೆ ಎಂದು ವರದಿ ತಿಳಿಸಿದೆ. ►ಇರಾನ್ಗೆ ಅಮೆರಿಕದಿಂದ 15 ಅಂಶಗಳ ಪ್ರಸ್ತಾವನೆ ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಸಂಘರ್ಷವನ್ನು ಕೊನೆಗೊಳಿಸುವ ಗುರಿಯನ್ನು ಹೊಂದಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್ನೊಂದಿಗೆ 15 ಅಂಶಗಳ ಪ್ರಸ್ತಾವನೆಯನ್ನು ಹಂಚಿಕೊಂಡಿದ್ದಾರೆ. ಪ್ರಸ್ತಾವಿತ ಯುಎಸ್ ಚೌಕಟ್ಟು ಇರಾನ್ನ ಪರಮಾಣು ಸಾಮರ್ಥ್ಯಗಳು ಮತ್ತು ಪ್ರಾದೇಶಿಕ ಪ್ರಭಾವವನ್ನು ತಡೆಯುವ ಗುರಿಯನ್ನು ಹೊಂದಿರುವ ವ್ಯಾಪಕ ಷರತ್ತುಗಳನ್ನು ವಿವರಿಸುತ್ತದೆ. • ಇರಾನ್ ತನ್ನ ಪರಮಾಣು ಕಾರ್ಯಕ್ರಮವನ್ನು ತೆಗೆದುಹಾಕಬೇಕು • ಇರಾನ್ ಪರಮಾಣು ಶಸ್ತ್ರಾಸ್ತ್ರಗಳನ್ನು ಎಂದಿಗೂ ಅನುಸರಿಸುವುದಿಲ್ಲ ಎಂದು ಬದ್ಧವಾಗಿರಬೇಕು • ಇರಾನ್ ಭೂಪ್ರದೇಶದಲ್ಲಿ ಯುರೇನಿಯಂ ಪುಷ್ಟೀಕರಣವನ್ನು ಅನುಮತಿಸಲಾಗುವುದಿಲ್ಲ • ಟೆಹ್ರಾನ್ ಸುಮಾರು 450 ಕಿಲೋಗ್ರಾಂಗಳಷ್ಟು ಯುರೇನಿಯಂ ಅನ್ನು 60 ಪ್ರತಿಶತಕ್ಕೆ ಸಮೃದ್ಧಗೊಳಿಸಬೇಕು ಮತ್ತು ಅದನ್ನು ಅಂತರರಾಷ್ಟ್ರೀಯ ಪರಮಾಣು ಶಕ್ತಿ ಸಂಸ್ಥೆಗೆ (IAEA) ವರ್ಗಾಯಿಸಬೇಕು. • ನಟಾಂಜ್, ಇಸ್ಫಹಾನ್ ಮತ್ತು ಫೋರ್ಡೋದಲ್ಲಿನ ಪರಮಾಣು ಸೌಲಭ್ಯಗಳನ್ನು ತೆಗೆದುಹಾಕಬೇಕು • ಅಂತರರಾಷ್ಟ್ರೀಯ ಪರಮಾಣು ಶಕ್ತಿ ಸಂಸ್ಥೆಗೆ ಪೂರ್ಣ ತಪಾಸಣಾ ಅಧಿಕಾರವನ್ನು ನೀಡಬೇಕು • ಇರಾನ್ ತನ್ನ ಪ್ರಾದೇಶಿಕ ಪ್ರಾಕ್ಸಿ ನೆಟ್ವರ್ಕ್ ಅನ್ನು ತ್ಯಜಿಸಬೇಕು • ಟೆಹ್ರಾನ್ ಪ್ರಾಕ್ಸಿ ಗುಂಪುಗಳಿಗೆ ಹಣಕಾಸು ಮತ್ತು ಶಸ್ತ್ರಾಸ್ತ್ರ ನೀಡುವುದನ್ನು ನಿಲ್ಲಿಸಬೇಕು • ಹಾರ್ಮುಝ್ ಜಲಸಂಧಿಯು ಮುಕ್ತ ಸಮುದ್ರ ಕಾರಿಡಾರ್ ಆಗಿ ತೆರೆದಿರಬೇಕು • ವ್ಯಾಪ್ತಿ ಮತ್ತು ಪ್ರಮಾಣದ ವಿಷಯದಲ್ಲಿ ಇರಾನ್ನ ಕ್ಷಿಪಣಿ ಕಾರ್ಯಕ್ರಮದ ಮೇಲೆ ಮಿತಿಗಳನ್ನು ವಿಧಿಸಲಾಗುವುದು ಮಾತುಕತೆಗಳು ಮುಂದುವರಿಯಲು ತಾತ್ಕಾಲಿಕ ಕದನ ವಿರಾಮದ ಅವಧಿಯ ಸಾಧ್ಯತೆಯನ್ನು ಪ್ರಸ್ತಾವನೆಯು ಒಳಗೊಂಡಿದೆ. ► ಟ್ರಂಪ್ ಹೇಳಿದ್ದೇನು ? ಇರಾನ್ನ ಕಠಿಣ ನಿಲುವಿನ ಹೊರತಾಗಿಯೂ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾತುಕತೆಗಳ ಸಾಧ್ಯತೆಗಳ ಬಗ್ಗೆ ಆಶಾವಾದ ವ್ಯಕ್ತಪಡಿಸಿದ್ದಾರೆ. ಅಮೆರಿಕ ಪ್ರಸ್ತುತ ಟೆಹ್ರಾನ್ನೊಂದಿಗೆ ಚರ್ಚೆಯಲ್ಲಿ ತೊಡಗಿದೆ ಎಂದು ಅವರು ಹೇಳಿದ್ದಾರೆ. ಜಾಗತಿಕ ತೈಲ ಪೂರೈಕೆಯ ಸರಿಸುಮಾರು ಐದನೇ ಒಂದು ಭಾಗದಷ್ಟು ಹಾದುಹೋಗುವ ನಿರ್ಣಾಯಕ ಕಡಲ ಮಾರ್ಗವಾದ ಹಾರ್ಮುಝ್ ಜಲಸಂಧಿಗೆ ಸಂಬಂಧಿಸಿದ ಮಹತ್ವದ ಸೂಚನೆಯನ್ನು ಅಮೆರಿಕ ಸ್ವೀಕರಿಸಿದೆ ಎಂದು ಟ್ರಂಪ್ ಹೇಳಿದರು. ಅಂತರರಾಷ್ಟ್ರೀಯ ಸಾಗರ ಸಂಸ್ಥೆಯ ಮೂಲಕ ಪ್ರಸಾರವಾದ ಸಂದೇಶದ ಪ್ರಕಾರ, ಇರಾನ್ ನಂತರ ಜಲಸಂಧಿಯ ಮೂಲಕ ಪ್ರತಿಕೂಲವಲ್ಲದ ಹಡಗುಗಳಿಗೆ ಸುರಕ್ಷಿತ ಮಾರ್ಗವನ್ನು ಅನುಮತಿಸುವುದಾಗಿ ಸೂಚಿಸಿದೆ ಎಂದು ಎಎಫ್ಪಿ ಹೇಳಿದೆ. ಸಂಘರ್ಷವು ಜಾಗತಿಕ ಇಂಧನ ಮಾರುಕಟ್ಟೆಗಳಲ್ಲಿ ಚಂಚಲತೆಯನ್ನು ಉಂಟುಮಾಡಿದ್ದರೂ ಸಹ, ಉಲ್ಬಣವನ್ನು ಕಡಿಮೆ ಮಾಡುವ ಭರವಸೆಯ ನಡುವೆಯೂ ಈ ಬೆಳವಣಿಗೆಯು ತೈಲ ಬೆಲೆಗಳಲ್ಲಿ ಸುಮಾರು ಆರು ಪ್ರತಿಶತದಷ್ಟು ಕುಸಿತಕ್ಕೆ ಕಾರಣವಾಯಿತು. ವಾಷಿಂಗ್ಟನ್ ಇರಾನ್ಗೆ ಶಾಂತಿ ಪ್ರಸ್ತಾವನೆಯನ್ನು ಕಳುಹಿಸಿದೆ. ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಸೇರಿದಂತೆ ಹಿರಿಯ ಅಧಿಕಾರಿಗಳನ್ನು ಒಳಗೊಂಡ ಚರ್ಚೆಗಳು ನಡೆಯುತ್ತಿವೆ ಎಂದಿದ್ದಾರೆ ಟ್ರಂಪ್. ಪಾಕಿಸ್ತಾನದ ಪ್ರಧಾನಿ ಮಾತುಕತೆಗಳನ್ನು ಆಯೋಜಿಸಲು ಮುಂದಾಗಿದ್ದಾರೆ ಎಂದು ಎಎಫ್ಪಿ ವರದಿ ಮಾಡಿದೆ. ಆದರೆ ಏಜೆನ್ಸಿ ಉಲ್ಲೇಖಿಸಿದ ವರದಿಗಳು ಪ್ರಸ್ತಾಪವನ್ನು ಮಧ್ಯವರ್ತಿಗಳ ಮೂಲಕ ರವಾನಿಸಲಾಗಿದೆ ಎಂದು ಸೂಚಿಸಿವೆ. ಅವರು ಪರಮಾಣು ಶಸ್ತ್ರಾಸ್ತ್ರವನ್ನು ಹೊಂದಲು ಸಾಧ್ಯವಿಲ್ಲ ಎಂಬುದರಿಂದಲೇ ಈ ಪ್ರಕ್ರಿಯೆಯು ಪ್ರಾರಂಭವಾಗುತ್ತದೆ ಎಂದು ಟ್ರಂಪ್ ಹೇಳಿದ್ದಾರೆ ಎಂದು ಎಎಫ್ಪಿ ವರದಿ ಮಾಡಿದೆ, ಇದು ಇರಾನ್ನ ಪರಮಾಣು ಕಾರ್ಯಕ್ರಮವನ್ನು ಸೀಮಿತಗೊಳಿಸುವ ಬಗ್ಗೆ ವಾಷಿಂಗ್ಟನ್ನ ಗಮನವನ್ನು ಒತ್ತಿಹೇಳುತ್ತದೆ. ►ನಿಮ್ಮ ಜತೆ ಎಂದಿಗೂ ಒಪ್ಪಂದ ಸಾಧ್ಯವಿಲ್ಲ ಎಂದ ಇರಾನ್ ಮಿಲಿಟರಿ ವಕ್ತಾರ ಇರಾನ್ ಮಿಲಿಟರಿ ವಕ್ತಾರರು ಬುಧವಾರ ಕದನ ವಿರಾಮ ಒಪ್ಪಂದಕ್ಕೆ ಅಮೆರಿಕದ ಪ್ರಯತ್ನಗಳನ್ನು ಅಣಕಿಸಿದ್ದು, ವಾಷಿಂಗ್ಟನ್ ಪ್ರಸ್ತಾಪಿಸಿದ 15 ಅಂಶಗಳ ಯೋಜನೆ ಯಶಸ್ವಿಯಾಗುವ ಅವಕಾಶವಿದೆಯೇ ಎಂಬ ಪ್ರಶ್ನೆ ಎತ್ತಿದ್ದಾರೆ. ಅಮೆರಿಕ ಪ್ರಸ್ತಾಪಗಳನ್ನು ಮಧ್ಯವರ್ತಿಗಳು ಇರಾನ್ಗೆ ತಲುಪಿಸಿದ ನಂತರ ಈ ಪ್ರತಿಕ್ರಿಯೆ ಬಂದಿದೆ. ಈ ಯೋಜನೆಯ ಕುರಿತು ಅಮೆರಿಕದ ಅಧಿಕಾರಿಗಳು ಇರಾನ್ನೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಇದಕ್ಕೆ ಇರಾನ್ನ ನಿಯಮಿತ ಮಿಲಿಟರಿ ಮತ್ತು ಪ್ಯಾರಾಮಿಲಿಟರಿ ಕ್ರಾಂತಿಕಾರಿ ಗಾರ್ಡ್ಗೆ ಜಂಟಿಯಾಗಿ ಆಜ್ಞಾಪಿಸುವ ಇರಾನ್ ಮಿಲಿಟರಿಯ ಖತಮ್ ಅಲ್-ಅನ್ಬಿಯಾ ಕೇಂದ್ರ ಪ್ರಧಾನ ಕಚೇರಿಯ ವಕ್ತಾರ ಲೆಫ್ಟಿನೆಂಟ್ ಕರ್ನಲ್ ಇಬ್ರಾಹಿಂ ಜೊಲ್ಫಾಘರಿ ಪ್ರತಿಕ್ರಿಯಿಸಿದ್ದಾರೆ. ರಾಜ್ಯ ದೂರದರ್ಶನದಲ್ಲಿ ಪ್ರಸಾರವಾದ ರೆಕಾರ್ಡ್ ಮಾಡಿದ ವಿಡಿಯೋ ಹೇಳಿಕೆಯಲ್ಲಿ ಜೊಲ್ಫಾಘರಿ ಅಂಥಾ ಯಾವುದೇ ಮಾತುಕತೆಗಳಿಲ್ಲ ಎಂದಿದ್ದಾರೆ. ನಿಮ್ಮ ಆಂತರಿಕ ಸಂಘರ್ಷಗಳು ನಿಮ್ಮೊಂದಿಗೆ ನೀವು ಮಾತುಕತೆ ನಡೆಸುವ ಹಂತಕ್ಕೆ ತಲುಪಿವೆಯೇ? ಎಂದು ಅವರು ಕೇಳಿದ್ದಾರೆ. ನಮ್ಮ ಮೊದಲ ಮತ್ತು ಕೊನೆಯ ಮಾತು ಮೊದಲ ದಿನದಿಂದಲೂ ಒಂದೇ ಆಗಿತ್ತು. ಅದು ಹಾಗೆಯೇ ಇರುತ್ತದೆ. ನಮ್ಮಂತಹವರು ನಿಮ್ಮಂತಹವರ ಜೊತೆ ಎಂದಿಗೂ ಒಪ್ಪಂದಕ್ಕೆ ಬರುವುದಿಲ್ಲ. ಈಗ ಮಾತ್ರ ಅಲ್ಲ, ಎಂದಿಗೂ ಇಲ್ಲ ಎಂದಿದ್ದಾರೆ ಜೋಲ್ಫಾಘರಿ. ಏತನ್ಮಧ್ಯೆ, ಇರಾನಿನ ಕ್ಷಿಪಣಿಗಳು ಮತ್ತು ಡ್ರೋನ್ಗಳು ಇಸ್ರೇಲ್ ಮತ್ತು ಪ್ರದೇಶದಾದ್ಯಂತದ ಸ್ಥಳಗಳನ್ನು ಗುರಿಯಾಗಿಸಿಕೊಂಡು ವಾಯುದಾಳಿ ನಡೆಸಿವೆ . ತೈಲ ಬೆಲೆಗಳು ಏರುತ್ತಿರುವುದರಿಂದ ಮತ್ತು ಗ್ರಾಹಕರು ಸಂಕಷ್ಟಕ್ಕೀಡಾಗಿದ್ದು ಯುದ್ಧವನ್ನು ಕೊನೆಗೊಳಿಸಲು ಟ್ರಂಪ್ ಸ್ವದೇಶದಲ್ಲಿ ಹೆಚ್ಚಿನ ಒತ್ತಡವನ್ನು ಎದುರಿಸುತ್ತಿದ್ದಾರೆ. ನಿರ್ಣಾಯಕ ಹಾರ್ಮುಝ್ ಜಲಸಂಧಿಯ ಮೇಲಿನ ಟೆಹ್ರಾನ್ನ ನಿರ್ಬಂಧ ಅಂತರರಾಷ್ಟ್ರೀಯ ಸಾಗಣೆಗೆ ಅಡಚಣೆಯನ್ನುಂಟುಮಾಡಿದೆ. ಈ ಅಡಚಣೆಯಿಂದಾಗಿ ಇಂಧನ ಬೆಲೆ ಏರಿಕೆಯಾಗಿದ್ದು ವಿಶ್ವ ಆರ್ಥಿಕತೆಗೆ ಬೆದರಿಕೆ ಹಾಕಿದೆ. ನೀವು ಮಾತನಾಡುತ್ತಿದ್ದ ಕಾರ್ಯತಂತ್ರದ ಶಕ್ತಿಯು ಕಾರ್ಯತಂತ್ರದ ವೈಫಲ್ಯವಾಗಿ ಮಾರ್ಪಟ್ಟಿದೆ. ಜಾಗತಿಕ ಸೂಪರ್ ಪವರ್ ಎಂದು ಹೇಳಿಕೊಳ್ಳುವವರು ಸಾಧ್ಯವಾದರೆ ಈಗಾಗಲೇ ಈ ಅವ್ಯವಸ್ಥೆಯಿಂದ ಹೊರಬರುತ್ತಿದ್ದರು. ನಿಮ್ಮ ಸೋಲನ್ನು ಒಪ್ಪಂದದಂತೆ ಬಿಂಬಿಸಬೇಡಿ. ನಿಮ್ಮ ಖಾಲಿ ಭರವಸೆಗಳ ಯುಗ ಕೊನೆಗೊಂಡಿದೆ ಎಂದು ಜೊಲ್ಫಾಘರಿ ಪ್ರತಿಕ್ರಿಯಿಸಿದ್ದಾರೆ
LPG ಸಿಲಿಂಡರ್ ನಿಯಮ ಬದಲಾವಣೆಯಾಗಿಲ್ಲ; ಸಿಟಿಯಲ್ಲಿ 25, ಹಳ್ಳಿಯಲ್ಲಿ 45 ದಿನಗಳಿಗೆ ರೀಫಿಲ್ ಲಭ್ಯ - ಕೇಂದ್ರ ಸರ್ಕಾರ
ಎಲ್ಪಿಜಿ ರೀಫಿಲ್ ಬುಕ್ಕಿಂಗ್ ಕಾಲಮಿತಿಯ ಬಗ್ಗೆ ಕೇಂದ್ರ ಸರ್ಕಾರವು ಸ್ಪಷ್ಟನೆ ನೀಡಿದೆ. ನಗರ ಭಾಗದಲ್ಲಿ 25 ದಿನಕ್ಕೆ, ಗ್ರಾಮೀಣ ಭಾಗದಲ್ಲಿ 45 ದಿನಕ್ಕೆ ರೀಫಿಲ್ ಬುಕ್ಕಿಂಗ್ ಮಾಡಲು ಅವಕಾಶ ನೀಡಲಾಗಿದೆ. ವದಂತಿಗಳನ್ನು ನಂಬಬೇಡಿ ಎಂದು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ ತಿಳಿಸಿದೆ. ಏನೆಲ್ಲಾ ವದಂತಿ ಹರಿದಾಡುತ್ತಿದೆ? ಈ ಬಗ್ಗೆ ಸಂಪೂರ್ಣ ವಿವರ ಇಲ್ಲಿದೆ.
'ಗ್ಯಾರಂಟಿ ಸಮಿತಿ' ಸಿಬ್ಬಂದಿ ಮಾಸಿಕ ವೇತನ ಸರ್ಕಾರದ ಮುಖ್ಯ ಕಾರ್ಯದರ್ಶಿಗಿಂತಲೂ ಹೆಚ್ಚು! ವರ್ಷಕ್ಕೆ ಕೋಟಿ ಕೋಟಿ..
ಬೆಂಗಳೂರು: ಕರ್ನಾಟಕ ರಾಜ್ಯ ಸರ್ಕಾರ ಜಾರಿಗೆ ತಂದ ಗ್ಯಾರಂಟಿ ಯೋಜನೆಗಳಿಂದ ಜನರಿಗೆ ಅನುಕೂಲವಾಗಿದೆ ಎಂದೆಲ್ಲ ಕಾಂಗ್ರೆಸ್ ನಾಯಕರು ಹೇಳಿಕೊಂಡಿದ್ದರು. ಈ 'ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ'ಯನ್ನು ಸರ್ಕಾರವೇ ರಚಿಸಿದೆ. ಈ ಸಮಿತಿ ಅಧ್ಯಕ್ಷರು, ಸಿಬ್ಬಂದಿಗೆ ನೀಡುತ್ತಿರುವ ಹಣ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳ ಮಾಸಿಕ ವೇತನಕ್ಕಿಗಿಂತಲೂ ಅಧಿಕವಾಗಿದೆ. ಈ ಮೂಲಕ ಜನರ ತೆರಿಗೆ ಹಣ ಸರ್ಕಾರದಲ್ಲಿ ಅತೃಪ್ತಗೊಂಡ
ಉತ್ತರ ಸಿಕ್ಕಿಂನಲ್ಲಿ ಭೂಕುಸಿತ: ಚುಂಗ್ ಥಾಂಗ್ ಪ್ರದೇಶದಲ್ಲಿ ಸಿಲುಕಿದ 200 ಕ್ಕೂ ಹೆಚ್ಚು ಪ್ರವಾಸಿಗರು
ಭಾರಿ ಪ್ರಮಾಣದ , ನಿರಂತರವಾಗಿ ಸುರಿಯುತ್ತಿರುವ ಮಳೆ, ಗಾಳಿ ಗುಡುಗಿನಿಂದ ಭೂಕುಸಿತ ಉಂಟಾಗಿ, ಪ್ರಮುಖ ರಸ್ತೆ ಸಂಪರ್ಕಗಳು ಕಡಿತಗೊಂಡಿವೆ. ಇದರಿಂದ ವಾಹನಗಳ ಓಡಾಟ ರದ್ದಾಗಿ 200 ಕ್ಕೂ ಹೆಚ್ಚು ಪ್ರವಾಸಿಗರು ಅತಂತ್ರರಾಗಿದ್ದಾರೆ.
ಸತತ ಕುಸಿತದ ನಂತರ ಏರಿದ ಚಿನ್ನ-ಬೆಳ್ಳಿ ದರ
ಅಮೆರಿಕ ಮತ್ತು ಇರಾನ್ ನಡುವೆ ಮಾತುಕತೆಯ ಸಾಧ್ಯತೆಯ ಹಿನ್ನೆಲೆಯಲ್ಲಿ ಡಾಲರ್ ಬೆಲೆ ದುರ್ಬಲವಾಗಿರುವುದು ಚಿನ್ನ ಮತ್ತು ಬೆಳ್ಳಿಯ ದರದಲ್ಲಿ ಏರಿಕೆಗೆ ಕಾರಣವಾಗಿದೆ. ಮಾರ್ಚ್ ತಿಂಗಳ ಆರಂಭದಿಂದಲೇ ಚಿನ್ನದ ದರ ಕುಸಿಯುತ್ತಲೇ ಬಂದಿದೆ. ಇದೇ ಸೋಮವಾರ ಬೆಳಗಿನ ವಹಿವಾಟಿನಲ್ಲಿ ಇನ್ನಷ್ಟು ಕುಸಿತ ಕಂಡು ಹತ್ತು ಗ್ರಾಂಗೆ 1,40,020 ರೂ.ಗೆ ಬಂದು ನಿಂತಿದೆ. ನಂತರ ಸಂಜೆ ಚೇತರಿಸಿಕೊಂಡ ಮೇಲೆ ಮಂಗಳವಾರ ಬೆಳಗಿನ ವಹಿವಾಟಿನಲ್ಲಿ ಶುದ್ಧ ಚಿನ್ನದ ಬೆಲೆ 1,40,350 ರೂ. ಮತ್ತು ಆಭರಣ ಚಿನ್ನದ ಬೆಲೆ ರೂ. 1,28,650 ಗೆ ಬಂದು ತಲುಪಿತ್ತು. ಆದರೆ, ಸತತ ಒಂಭತ್ತು ದಿನಗಳ ಕುಸಿತದ ನಂತರ ಬುಧವಾರ ಚಿನ್ನದ ದರದಲ್ಲಿ ಏರಿಕೆ ಕಂಡಿದೆ. ಅಮೆರಿಕ ಮತ್ತು ಇರಾನ್ ನಡುವೆ ಮಾತುಕತೆಯ ಸಾಧ್ಯತೆಯ ಹಿನ್ನೆಲೆಯಲ್ಲಿ ಡಾಲರ್ ಬೆಲೆ ದುರ್ಬಲವಾಗಿರುವುದು ಚಿನ್ನ ಮತ್ತು ಬೆಳ್ಳಿಯ ದರದಲ್ಲಿ ಏರಿಕೆಗೆ ಕಾರಣವಾಗಿದೆ. ಕರೆನ್ಸಿಗಳ ಗುಚ್ಛದಲ್ಲಿ ಅಮೆರಿಕನ್ ಡಾಲರ್ 99.21ರಲ್ಲಿ ವಹಿವಾಟು ನಡೆಸುತ್ತಿದೆ. ದುರ್ಬಲ ಡಾಲರ್ ನಿಂದಾಗಿ ಹೂಡಿಕೆದಾರರ ನಡುವೆ ಅಮೂಲ್ಯ ಲೋಹಗಳ ಆಕರ್ಷಣೆ ಹೆಚ್ಚಾಗುತ್ತದೆ. ಇರಾನ್ ಜೊತೆಗೆ ಮಾತುಕತೆ ನಡೆಸುತ್ತಿರುವುದಾಗಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿರುವುದು ಮತ್ತು 15 ಅಂಶಗಳ ಯೋಜನೆಯನ್ನು ಇರಾನ್ ಗೆ ಕಳುಹಿಸಿರುವ ಹಿನ್ನೆಲೆಯಲ್ಲಿ ತೈಲ ಬೆಲೆಗಳ ಏರಿಕೆಯ ಸಾಧ್ಯತೆ ಕಡಿಮೆಯಾಗಿದೆ. ಅಲ್ಲದೆ ಮಾತುಕತೆಯ ಹಿನ್ನೆಲೆಯಲ್ಲಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆಗಳು ಬ್ಯಾರೆಲ್ ಗೆ 100 ಡಾಲರ್ ನಿಂದ ಕುಸಿದು 95 ಡಾಲರ್ ಗೆ ತಲುಪಿವೆ. ಈ ಎಲ್ಲ ಬೆಳವಣಿಗೆಗಳು ಚಿನ್ನದ ಮೇಲೆ ಹೂಡಿಕೆದಾರರ ಆಸಕ್ತಿಯನ್ನು ಮರಳಿ ತಂದಿದೆ. ಇಂದಿನ ಚಿನ್ನದ ದರ ಹೇಗಿದೆ? ಮಾರ್ಚ್ 25ರಂದು ಬುಧವಾರ ಬೆಂಗಳೂರಿನ ಮಾರುಕಟ್ಟೆಗಳಲ್ಲಿ 24 ಕ್ಯಾರೆಟ್ ಶುದ್ಧ ಚಿನ್ನದ ಬೆಲೆ ಮಂಗಳವಾರ ಸಂಜೆಯ ಬೆಲೆಗೆ ಹೋಲಿಸಿದರೆ ಪ್ರತಿ ಗ್ರಾಂಗೆ 376 ರೂ. ಏರಿಕೆ ಕಂಡು ಹತ್ತು ಗ್ರಾಂ ಬೆಲೆ 1,46,670 ರೂ. ಗೆ ಬಂದು ನಿಂತಿದೆ. ಆಭರಣ ಚಿನ್ನವಾದ 22 ಕ್ಯಾರೆಟ್ ಬೆಲೆಯು ಪ್ರತಿ ಗ್ರಾಂಗೆ 345 ರೂ. ಏರಿಕೆ ಕಂಡು ಹತ್ತು ಗ್ರಾಂಗೆ 1,34,450 ರೂ. ಗೆ ತಲುಪಿದೆ. 18 ಕ್ಯಾರೆಟ್ ಚಿನ್ನವು ಪ್ರತಿ ಗ್ರಾಂಗೆ 282 ರೂ. ಏರಿಕೆಯಾಗಿ ಹತ್ತು ಗ್ರಾಂಗೆ 1,10,010 ರೂ. ಗೆ ತಲುಪಿದೆ. ಮಂಗಳೂರಿನಲ್ಲಿ ಚಿನ್ನದ ದರವೆಷ್ಟಿದೆ? ಮಾರ್ಚ್ 25ರಂದು ಬುಧವಾರ ಬೆಳಗಿನ 11 ಗಂಟೆಯ ವಹಿವಾಟಿನಲ್ಲಿ ಮಂಗಳೂರಿನಲ್ಲಿ ಚಿನ್ನದ ಬೆಲೆ ತುಸು ಏರಿಕೆಯಾಗಿದೆ. ಒಂದು ಗ್ರಾಂ 24 ಕ್ಯಾರೆಟ್ ಚಿನ್ನದ ದರ 14,667 (+376) ರೂ. ನಷ್ಟಿದೆ. ಒಂದು ಗ್ರಾಂ 22 ಕ್ಯಾರೆಟ್ ಚಿನ್ನದ 13,445 (+345) ರೂ. ಮತ್ತು ಒಂದು ಗ್ರಾಂ 18 ಕ್ಯಾರೆಟ್ ಚಿನ್ನದ ದರ 11,001 (+282) ರೂ. ಬೆಲೆಗೆ ತಲುಪಿದೆ. ಭಾರೀ ಏರಿಕೆ ಕಂಡ ಬೆಳ್ಳಿಯ ದರ ಮಾರ್ಚ್ ಆರಂಭದಲ್ಲಿ ಹೆಚ್ಚು ಏರಿಳಿತ ಕಾಣದೆ ಸ್ಥಿರವಾಗಿದ್ದ ಬೆಳ್ಳಿ ದರ, ಮಾರ್ಚ್ 09ರ ನಂತರ ಕುಸಿತದ ಹಾದಿಯಲ್ಲಿದೆ. ಸೋಮವಾರ ಪ್ರತಿ ಗ್ರಾಂಗೆ 15 ರೂ. ಕುಸಿತ ಕಂಡು ಪ್ರತಿ ಕೆಜಿಗೆ 2,30,000 ರೂ.ಗೆ ಬಂದಿರುವ ಬೆಳ್ಳಿಯ ಬೆಲೆ ಮಂಗಳವಾರ ಪ್ರತಿ ಗ್ರಾಂಗೆ 5 ರೂ. ಏರಿಕೆ ಕಂಡು ಪ್ರತಿ ಕೆಜಿಗೆ 2,35,000 ರೂ.ಗೆ ನಿಂತಿತ್ತು. ಇದೀಗ ಪ್ರತಿ ಗ್ರಾಂಗೆ 15 ರೂ. ಏರಿಕೆಯಾಗಿ ಪ್ರತಿ ಕೆಜಿ ಬೆಳ್ಳಿಯ ದರ 2,50,000 ರೂ.ಗೆ ಬಂದು ನಿಂತಿದೆ. ವಿವಿಧ ನಗರಗಳಲ್ಲಿ 1 ಗ್ರಾಮ್ ಚಿನ್ನದ ದರ (ಬೆಳಗಿನ ವಹಿವಾಟು) ಹೇಗಿದೆ? ದಿಲ್ಲಿ: 24 ಕ್ಯಾರೆಟ್ ಚಿನ್ನದ ದರ 14,682 (+376) ರೂ., 22 ಕ್ಯಾರೆಟ್ ಚಿನ್ನದ ದರ 13,460 (+345) ರೂ. ಮುಂಬೈ: 24 ಕ್ಯಾರೆಟ್ ಚಿನ್ನದ ದರ 14,667 (+376) ರೂ., 22 ಕ್ಯಾರೆಟ್ ಚಿನ್ನದ ದರ 13,445 (+345) ರೂ. ಅಹಮದಾಬಾದ್: 24 ಕ್ಯಾರೆಟ್ ಚಿನ್ನದ ದರ 14,672 (+376) ರೂ., 22 ಕ್ಯಾರೆಟ್ ಚಿನ್ನದ ದರ 13,450 (+345) ರೂ. ಚೆನ್ನೈ: 24 ಕ್ಯಾರೆಟ್ ಚಿನ್ನದ ದರ 14,837 (+381) ರೂ., 22 ಕ್ಯಾರೆಟ್ ಚಿನ್ನದ ದರ 13,600 (+350) ರೂ ಕೋಲ್ಕತ್ತಾ: 24 ಕ್ಯಾರೆಟ್ ಚಿನ್ನದ ದರ 14,667 (+376) ರೂ., 22 ಕ್ಯಾರೆಟ್ ಚಿನ್ನದ ದರ 13,445 (+345) ರೂ. ಹೈದರಾಬಾದ್: 24 ಕ್ಯಾರೆಟ್ ಚಿನ್ನದ ದರ 14,667 (+376) ರೂ., 22 ಕ್ಯಾರೆಟ್ ಚಿನ್ನದ ದರ 13,445 (+345) ರೂ. ಜೈಪುರ: 24 ಕ್ಯಾರೆಟ್ ಚಿನ್ನದ ದರ 14,682 (+376) ರೂ., 22 ಕ್ಯಾರೆಟ್ ಚಿನ್ನದ ದರ 13,460 (+345) ರೂ. ಚಂಡೀಗಢ: 24 ಕ್ಯಾರೆಟ್ ಚಿನ್ನದ ದರ 14,682 (+376) ರೂ., 22 ಕ್ಯಾರೆಟ್ ಚಿನ್ನದ ದರ 13,460 (+345) ರೂ. ಲಕ್ನೋ: 24 ಕ್ಯಾರೆಟ್ ಚಿನ್ನದ ದರ 14,682 (+376) ರೂ., 22 ಕ್ಯಾರೆಟ್ ಚಿನ್ನದ ದರ 13,460 (+345) ರೂ.
Non Veg: ಧಾರ್ಮಿಕ ವಿಚಾರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಧಾನಸಭೆಯಲ್ಲಿ ಮುಕ್ತವಾಗಿ ಹಾಗೂ ಸುದೀರ್ಘವಾಗಿ ಮಾತನಾಡಿದ್ದಾರೆ. ಮಾಂಸಾಹಾರ ಸೇವೆ, ಹಿಂದೂ ಧರ್ಮದ ಆಚರಣೆ, ಯಾವುದೇ ಸಮುದಾಯವಿದ್ದರೂ ಎಲ್ಲ ಸಮುದಾಯದವರೂ ಒಂದೇ ಹಾಗೂ ನಾನು ಯುಗಾದಿ ಹಾಗೂ ಶಿವರಾತ್ರಿಯ ಸಂದರ್ಭದಲ್ಲೂ ಮಾಂಸಾಹಾರ ಸೇವನೆ ಮಾಡಿದ್ದೇನೆ ಎಂದು ಅವರು ಹೇಳಿದ್ದಾರೆ. ವಿಧಾನಸಭೆಯಲ್ಲಿ ಅವರು ಯಾವೆಲ್ಲ ವಿಷಯಗಳ ಬಗ್ಗೆ ಮಾತನಾಡಿದ್ದಾರೆ. ಹಬ್ಬದ
ದಿಲ್ಲಿಯ ಅಕ್ಬರ್, ರೈಸಿನಾ ರಸ್ತೆಯಲ್ಲಿರುವ ಕಚೇರಿಗಳನ್ನು ಖಾಲಿ ಮಾಡುವಂತೆ ಕಾಂಗ್ರೆಸ್ಗೆ ಸೂಚನೆ
ಹೊಸದಿಲ್ಲಿ: ರಾಷ್ಟ್ರ ರಾಜಧಾನಿಯಲ್ಲಿರುವ ಕಾಂಗ್ರೆಸ್ ಪಕ್ಷದ ಎರಡು ಪ್ರಮುಖ ಕಚೇರಿಗಳನ್ನು ಖಾಲಿ ಮಾಡುವಂತೆ ಸೂಚಿಸಿದ್ದು, ಇದು ವಿರೋಧ ಪಕ್ಷ ಮತ್ತು ಸರಕಾರದ ನಡುವೆ ಹೊಸ ಜಟಾಪಟಿಗೆ ಕಾರಣವಾಗಿದೆ. 24 ಅಕ್ಬರ್ ರಸ್ತೆಯಲ್ಲಿರುವ ಪಕ್ಷದ ರಾಷ್ಟ್ರೀಯ ಪ್ರಧಾನ ಕಚೇರಿ ಮತ್ತು 5 ರೈಸಿನಾ ರಸ್ತೆಯಲ್ಲಿರುವ ಮತ್ತೊಂದು ಪ್ರಮುಖ ಕಚೇರಿಯನ್ನು ತೆರವು ಮಾಡಲು ಮಾರ್ಚ್ 28ರವರೆಗೆ ಅಂತಿಮ ಗುಡುವನ್ನು ನೀಡಲಾಗಿದೆ. ಕೆಲವು ದಿನಗಳ ಹಿಂದೆಯೇ ನೋಟಿಸ್ ನೀಡಲಾಗಿದೆ ಎಂದು ಹಿರಿಯ ಕಾಂಗ್ರೆಸ್ ನಾಯಕರೊಬ್ಬರು ದೃಢಪಡಿಸಿದ್ದಾರೆ. ನಮ್ಮ ಮುಂದೆ ಲಭ್ಯವಿರುವ ಕಾನೂನು ಆಯ್ಕೆಗಳನ್ನು ನಾವು ಪರಿಶೀಲಿಸುತ್ತಿದ್ದೇವೆ ಎಂದು ಹೇಳಿದ್ದಾರೆ.
ರಾಜಸ್ಥಾನ ರಾಯಲ್ಸ್ ಕೈಬಿಟ್ಟಿದ್ದ ಆಟಗಾರ ಈಗ ಆರ್ಸಿಬಿ ಬಾಸ್; ಆರ್ಯಮನ್ ಬಿರ್ಲಾ ಪ್ರೊಫೈಲ್
ಎಲ್ಲದಕ್ಕೂ ಕಾಲವೇ ಉತ್ತರಿಸುತ್ತದೆ ಅಂತಾರಲ್ಲ, ಅದು ಅಕ್ಷರಶಃ ಸತ್ಯ. ಹಿಂದೊಮ್ಮೆ ರಾಜಸ್ಥಾನ ರಾಯಲ್ಸ್ (ಆರ್ಆರ್) ತಂಡದ ಭಾಗವಾಗಿದ್ದ ಮತ್ತು ಒಮ್ಮೆಯೂ ತಂಡದ ವಿಶ್ವಾಸಕ್ಕೆ ಪಾತ್ರವಾಗದ ಆರ್ಯಮನ್ ಬಿರ್ಲಾ ಎಂಬ ಯುವಕ ಈಗ ಐಪಿಎಲ್ನ ಅತ್ಯಂತ ಜನಪ್ರಿಯ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ತಂಡದ ಹೊಸ ಮಾಲೀಕರಾಗಿದ್ದಾರೆ. ಓರ್ವ ಕ್ರಿಕೆಟ್ ಆಟಗಾರರಾಗಿಯೂ ಹೆಸರು ಮಾಡಿರುವ ಆರ್ಯಮನ್ ಬಿರ್ಲಾ, ಆರ್ಸಿಬಿಯಂತಹ ಭರ್ಜರಿ ಬ್ರ್ಯಾಂಡ್ ವ್ಯಾಲ್ಯೂ ಹೊಂದಿರುವ ಫ್ರಾಂಚೈಸಿಯ ನೇತೃತ್ವವಹಿಸಿದ್ದಾರೆ. ಹಾಗಾದರೆ ಆರ್ಯಮನ್ ಬಿರ್ಲಾ ಯಾರು? ಬನ್ನಿ ನೋಡೋಣ.
ದೇಶಾದ್ಯಂತ ಪೆಟ್ರೋಲ್ ಮತ್ತು ಡೀಸೆಲ್ ಅಭಾವ ಸೃಷ್ಟಿಯಾಗಿದೆ ಎಂಬ ವದಂತಿಗಳು ಸಾಮಾಜಿಕ ಜಾಲತಾಣಗಳಲ್ಲಿ ಎಲ್ಲೆಡೆ ಹರಡುತ್ತಿದ್ದು, ವಾಹನ ಸವಾರರನ್ನು ತೀವ್ರ ಆತಂಕಕ್ಕೀಡುಮಾಡಿದೆ. ಈ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರುವ ದೇಶದ ಅತಿದೊಡ್ಡ ತೈಲ ಮಾರಾಟ ಕಂಪನಿಯಾದ ಇಂಡಿಯನ್ ಆಯಿಲ್ ಕಾರ್ಪೊರೇಷನ್ (Indian Oil) ಮಹತ್ವದ ಸ್ಪಷ್ಟನೆಯೊಂದನ್ನು ನೀಡಿದೆ. ದೇಶದಲ್ಲಿ ಪೆಟ್ರೋಲ್ ಅಥವಾ ಡೀಸೆಲ್ನ ಯಾವುದೇ ಕೊರತೆ ಇಲ್ಲ, ಇಂಧನ ಪೂರೈಕೆ
ಮಧ್ಯಪ್ರಾಚ್ಯ ಸಂಘರ್ಷ| ಇಂಧನ ತುರ್ತು ಪರಿಸ್ಥಿತಿ ಘೋಷಿಸಿದ ಫಿಲಿಪೈನ್ಸ್
ಮನಿಲಾ: ಫಿಲಿಪೈನ್ಸ್ ರಾಷ್ಟ್ರೀಯ ಇಂಧನ ತುರ್ತು ಪರಿಸ್ಥಿತಿಯನ್ನು ಘೋಷಿಸಿದೆ. ಮಧ್ಯಪ್ರಾಚ್ಯದಲ್ಲಿ ಸಂಘರ್ಷ ಉಲ್ಭಣಗೊಳ್ಳುತ್ತಿದ್ದಂತೆ ಫಿಲಿಪೈನ್ಸ್ ಈ ನಿರ್ಧಾರವನ್ನು ತೆಗೆದುಕೊಂಡ ವಿಶ್ವದ ಮೊದಲ ರಾಷ್ಟ್ರವಾಗಿದೆ. ಫಿಲಿಪೈನ್ಸ್ ಅಧ್ಯಕ್ಷ ಫರ್ಡಿನಾಂಡ್ ಮಾರ್ಕೋಸ್ ಜೂನಿಯರ್ ಅವರು ಇಂಧನ ಭದ್ರತೆಯನ್ನು ಕಾಪಾಡುವ ಕಾರ್ಯಕಾರಿ ಆದೇಶಕ್ಕೆ ಸಹಿ ಹಾಕಿದ್ದಾರೆ. ಮಧ್ಯಪ್ರಾಚ್ಯ ಸಂಘರ್ಷದಿಂದ ದೇಶದ ಇಂಧನ ಪೂರೈಕೆಗೆ ಎದುರಾಗಿರುವ ಸನ್ನಿಹತ ಅಪಾಯಕ್ಕೆ ಪ್ರತಿಯಾಗಿ ತುರ್ತು ಪರಿಸ್ಥಿತಿಯನ್ನು ಘೋಷಿಸಿರುವುದಾಗಿ ಹೇಳಿದ್ದಾರೆ. ಇರಾನ್ ಜೊತೆಗಿನ ಅಮೆರಿಕ-ಇಸ್ರೇಲ್ ಯುದ್ಧ ಮತ್ತು ಹಾರ್ಮುಝ್ ಜಲಸಂಧಿ ಮೇಲಿನ ನಿರ್ಬಂಧ ಜಾಗತಿಕ ಇಂಧನ ಮಾರುಕಟ್ಟೆಯಲ್ಲಿ ತಲ್ಲಣವನ್ನು ಸೃಷ್ಟಿಸಿದೆ. ಇಂಧನದ ಕೊರತೆ ಮತ್ತು ಬೆಲೆ ಏರಿಕೆಗೆ ಕಾರಣವಾಗಿದೆ. ಫಿಲಿಪೈನ್ಸ್ ತನ್ನ ತೈಲದ 98% ರಷ್ಟು ಗಲ್ಫ್ ರಾಷ್ಟ್ರಗಳಿಂದ ಆಮದು ಮಾಡಿಕೊಳ್ಳುತ್ತದೆ ಮತ್ತು ಫೆಬ್ರವರಿ 28ರಂದು ಯುದ್ಧ ಪ್ರಾರಂಭವಾದಾಗಿನಿಂದ ದೇಶದಲ್ಲಿ ಡೀಸೆಲ್ ಮತ್ತು ಪೆಟ್ರೋಲ್ ಬೆಲೆ ದ್ವಿಗುಣಗೊಂಡಿದೆ.
ರಾಹುಕಾಲ ನೋಡಿಕೊಂಡು ಬಜೆಟ್ ಮಂಡನೆ, ಸದನದಲ್ಲಿ ಒಪ್ಪಿಕೊಂಡ ಸಿದ್ದರಾಮಯ್ಯ, ಕಾರಣ ಏನೆಂದು ವಿವರಣೆ
ವಿಧಾನಸಭೆಯ ಬಜೆಟ್ ಅಧಿವೇಶನ ಇಂದು ಸ್ವಾರಸ್ಯಕರ ಚರ್ಚೆಗೆ ಸಾಕ್ಷಿಯಾಯಿತು. ಬಜೆಟ್ ಒಳ್ಳೆ ಸಮಯ ನೋಡಿಕೊಂಡು ಓದಿದ್ದಾ ಎಂದು ವಿಪಕ್ಷದವರು ಕಿಚಾಯಿಸಿದರೆ, ಅದಕ್ಕೆ ಸಿದ್ದರಾಮಯ್ಯ ಸ್ಪ್ಟನೆ ಕೊಟ್ಟರು. ಇನ್ನು ದೇವರು, ನಂಬಿಕೆ ಬಗ್ಗೆ ಸಿಎಂ ಮಾತನಾಡಿದಾಗ, ವಿಪಕ್ಷದವರು ಡಿಸಿಎಂ ಡಿಕೆ ಶಿವಕುಮಾರ್ ಅವರ ಕಾಲೆಳೆಯುವ ಪ್ರಯತ್ನ ಕೂಡಾ ಮಾಡಿದರು.
ಮಾರ್ಚ್ 25ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ
Petrol, Diesel Price: ಶಕ್ತಿಯ ಮೂಲಗಳು ಎನಿಸಿಕೊಂಡಿರುವ ಪೆಟ್ರೋಲ್ ಮತ್ತು ಡೀಸೆಲ್ ಇಂಧನ ಅತ್ಯವಶ್ಯಕವಾಗಿ ಬೇಕಾಗುವ ಸಂಪನ್ಮೂಲಗಳಾಗಿವೆ. ಹಾಗಾದ್ರೆ, ಬೆಂಗಳೂರು ಸೇರಿದಂತೆ ಕರ್ನಾಟಕದ ಇತರ ಜಿಲ್ಲೆಗಳಲ್ಲಿ ಇಂದು (ಮಾರ್ಚ್ 25) ಲೀಟರ್ ಪೆಟ್ರೋಲ್, ಡೀಸೆಲ್ ಬೆಲೆ ಎಷ್ಟಿದೆ ಎಂದು ಇಲ್ಲಿ ತಿಳಿಯಿರಿ. ಇತ್ತೀಚಿನ ದಿನಗಳಲ್ಲಿ ಎಲೆಕ್ಟ್ರಿಕ್ ವಾಹನಗಳು ಹೆಚ್ಚಾಗುತ್ತಿವೆ. ಹಾಗಂತ ಇಂಧನದ ಬೇಡಿಕೆ ಏನು ಕಡಿಮೆ ಆಗಿಲ್ಲ.
ಉತ್ತರ ಸಿಕ್ಕಿಂನಲ್ಲಿ ಭೂಕುಸಿತ | ಚುಂಗ್ಥಾಂಗ್ನಲ್ಲಿ ಸಿಲುಕಿರುವ 200 ಪ್ರವಾಸಿಗರು
ಗ್ಯಾಂಗ್ಟಾಕ್: ಉತ್ತರ ಸಿಕ್ಕಿಂನ ಚುಂಗ್ಥಾಂಗ್ನಲ್ಲಿ ಭಾರೀ ಮಳೆಯಿಂದಾಗಿ ಭೂಕುಸಿತ ಸಂಭವಿಸಿ ರಸ್ತೆ ಸಂಪರ್ಕ ಕಡಿತಗೊಂಡಿದ್ದು, ಸುಮಾರು 200 ಪ್ರವಾಸಿಗರು ಸಿಲುಕಿಕೊಂಡಿದ್ದಾರೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ. ಮಂಗಳವಾರ ರಾತ್ರಿ ಚುಂಗ್ಥಾಂಗ್-ಲಾಚೆನ್ ಮಾರ್ಗದಲ್ಲಿ ಭೂಕುಸಿತ ಸಂಭವಿಸಿದೆ. ಲಾಚೆನ್ಗೆ ತೆರಳುತ್ತಿದ್ದ ಪ್ರವಾಸಿಗರು ದಾರಿ ಮಧ್ಯದಲ್ಲಿ ಸಿಲುಕಿಕೊಂಡಿದ್ದಾರೆ ಎಂದು ಮಂಗನ್ ಜಿಲ್ಲೆಯ ಜಿಲ್ಲಾಧಿಕಾರಿ ಅನಂತ್ ಜೈನ್ ಹೇಳಿದ್ದಾರೆ. ಅಧಿಕಾರಿಗಳು ಪರಿಸ್ಥಿತಿಯನ್ನು ಅವಲೋಕಿಸುತ್ತಿದ್ದಾರೆ ಮತ್ತು ಹವಾಮಾನ ಪರಿಸ್ಥಿತಿಗಳಿಗೆ ಅನುಗುಣವಾಗಿ ಮಾರ್ಗಗಳನ್ನು ಸುರಕ್ಷಿತವೆಂದು ಘೋಷಿಸಿದ ನಂತರ ಪ್ರಯಾಣಕ್ಕೆ ಅವಕಾಶ ನೀಡಬಹುದು. ಮಾರ್ಗಮಧ್ಯೆ ಸಿಲುಕಿಕೊಂಡ ಪ್ರವಾಸಿಗರಿಗೆ ಚುಂಗ್ಥಾಂಗ್ನ ಐಟಿಬಿಪಿ ಶಿಬಿರದಲ್ಲಿ ಮತ್ತು ಗುರುದ್ವಾರದಲ್ಲಿ ರಾತ್ರಿ ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ತಿಳಿಸಿದ್ದಾರೆ.
West Bengal Opinion Poll : ಹೆಚ್ಚುತ್ತಿರುವ ದೀದಿ ವಿರೋಧಿ ಅಲೆ, ತಾಜಾ ಸರ್ವೇಯಲ್ಲಿ ಬಿಜೆಪಿಗೆ ಎಷ್ಟು ಸ್ಥಾನ?
Mamata Banerjee Vs Suvendhu Adhikari : ದೇಶಾದ್ಯಂತ ಭಾರೀ ಕುತೂಹಲಕ್ಕೆ ಕಾರಣವಾಗಿರುವ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ಹೊತ್ತಿನಲ್ಲಿ ಒಪಿನಿಯನ್ ಪೋಲ್ ಒಂದು ಹೊರಬಿದ್ದಿದೆ. ಸೀಟು ಗಳಿಕೆಯ ವಿಚಾರದಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಮುನ್ನಡೆಯನ್ನು ಸಾಧಿಸಿದೆ. ಇನ್ನು, ಬಿಜೆಪಿಯು ನೂರರ ಗಡಿಯನ್ನು ದಾಟಲಿದೆ.
ತಮಿಳುನಾಡು ವಿಧಾನಸಭಾ ಚುನಾವಣೆ: ಡಿಎಂಡಿಕೆಗೆ 10 ಸ್ಥಾನ ಬಿಟ್ಟುಕೊಟ್ಟ DMK
ಚೆನ್ನೈ: ಎಪ್ರಿಲ್ 23ರಂದು ನಡೆಯಲಿರುವ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಆಡಳಿತಾರೂಢ ಡಿಎಂಕೆ ಪಕ್ಷವು ತನ್ನ ಮಿತ್ರ ಪಕ್ಷ ಡಿಎಂಡಿಕೆಗೆ 10 ಸ್ಥಾನಗಳನ್ನು ಬಿಟ್ಟುಕೊಟ್ಟಿದೆ. ಈ ಸ್ಥಾನ ಹಂಚಿಕೆ ಒಪ್ಪಂದಕ್ಕೆ ಡಿಎಂಕೆ ಅಧ್ಯಕ್ಷ ಎಂ.ಕೆ.ಸ್ಟಾಲಿನ್ ಹಾಗೂ ಡಿಎಂಡಿಕೆ ಪ್ರಧಾನ ಕಾರ್ಯದರ್ಶಿ ಪ್ರೇಮಲತಾ ವಿಜಯಕಾಂತ್ ಅವರು ಅಣ್ಣಾ ಅರಿವಾಲಯಂನಲ್ಲಿರುವ ಡಿಎಂಕೆ ಕೇಂದ್ರ ಕಚೇರಿಯಲ್ಲಿ ಸಹಿ ಹಾಕಿದರು. ಕಾಂಗ್ರೆಸ್ ಪಕ್ಷಕ್ಕೆ 28 ಸ್ಥಾನಗಳನ್ನು ಬಿಟ್ಟುಕೊಟ್ಟ ಬೆನ್ನಿಗೇ, ನಟ, ರಾಜಕಾರಣಿ ವಿಜಯಕಾಂತ್ ಸ್ಥಾಪಿಸಿದ್ದ ಡಿಎಂಡಿಕೆ ಪಕ್ಷಕ್ಕೂ ಡಿಎಂಕೆ ಸ್ಥಾನಗಳನ್ನು ಬಿಟ್ಟುಕೊಟ್ಟಿದೆ. ಈ ಕುರಿತು ಪ್ರತಿಕ್ರಿಯಿಸಿದ ಪ್ರೇಮಲತಾ ವಿಜಯಕಾಂತ್, “ಡಿಎಂಡಿಕೆ ಎಷ್ಟು ಸ್ಥಾನಗಳಲ್ಲಿ ಸ್ಪರ್ಧಿಸಲಿದೆ ಎಂದು ಮಾಧ್ಯಮದವರು ಹಲವು ದಿನಗಳಿಂದ ಪ್ರಶ್ನಿಸುತ್ತಿದ್ದರು. ಈಗ ಅದು ಅಂತಿಮಗೊಂಡಿದ್ದು, ಡಿಎಂಡಿಕೆಗೆ ಹತ್ತು ಸ್ಥಾನಗಳನ್ನು ಹಂಚಿಕೆ ಮಾಡಲಾಗಿದೆ” ಎಂದು ತಿಳಿಸಿದರು. ಇದೇ ವೇಳೆ ಡಿಎಂಕೆ ತಮ್ಮ ಪಕ್ಷಕ್ಕೆ ಒಂದು ರಾಜ್ಯಸಭಾ ಸ್ಥಾನವನ್ನು ನೀಡಿದೆ ಎಂದೂ ಅವರು ಹೇಳಿದರು. “ಈ ವಿಧಾನಸಭಾ ಚುನಾವಣೆಯಲ್ಲಿ ಡಿಎಂಕೆ ನೇತೃತ್ವದ ಜಾತ್ಯತೀತ ಪ್ರಗತಿಪರ ಮೈತ್ರಿಕೂಟ 200ಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ. ಅಣ್ಣ ಸ್ಟಾಲಿನ್ ಎರಡನೆ ಬಾರಿಗೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ” ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು. ತಮ್ಮ ಪಕ್ಷವು ಸ್ಪರ್ಧಿಸಲು ಉತ್ಸುಕವಾಗಿರುವ ಕ್ಷೇತ್ರಗಳ ಕುರಿತು ನಿರ್ಧರಿಸುವ ಬಗ್ಗೆ ಚರ್ಚಿಸಲು ಡಿಎಂಡಿಕೆ ಐದು ಸದಸ್ಯರನ್ನು ಒಳಗೊಂಡ ಸಮಿತಿಯನ್ನು ರಚಿಸಿದೆ. ಡಿಎಂಡಿಕೆ ಸ್ಪರ್ಧಿಸಲು ಉತ್ಸುಕವಾಗಿರುವ ಸುಮಾರು 25 ಕ್ಷೇತ್ರಗಳ ಹೆಸರುಗಳನ್ನು ಡಿಎಂಕೆಗೆ ಸಲ್ಲಿಸಲಾಗಿದೆ ಎಂದೂ ಅವರು ತಿಳಿಸಿದರು.
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ
Gold Price Forecast April: ಚಿನ್ನ-ಬೆಳ್ಳಿ ಲೋಹಗಳಲ್ಲಿ ನಿರಂತರ ಇಳಿಕೆ ಮುಂದುವರಿದು, ಇಂದು ಮಾರ್ಚ್ 25ರಂದು ಮತ್ತೆ ಹೆಚ್ಚಾಗಿದೆ. ಮುಂದಿನ ದಿನಗಳಲ್ಲಿ ಹಳದಿ ಲೋಹದ ದರ ಹೇಗಿರುತ್ತದೆ ಎಂಬ ಚಿಂತೆ ಗ್ರಾಹಕರಲ್ಲಿ ಹಾಗೂ ಹೂಡಿಕೆದಾರರಲ್ಲಿ ಕಾಡುತ್ತಿದೆ. ಇರಾನ್-ಯುಎಸ್ ಯುದ್ಧವು ಚಿನ್ನದ ಬೆಲೆಯ ಮೇಲೆ ಹಾನಿಕಾರಕ ಪರಿಣಾಮ ಬೀರುತ್ತದೆ. ಇರಾನ್ ಸಂಘರ್ಷವು ನಾಲ್ಕನೇ ವಾರಕ್ಕೆ ಕಾಲಿಟ್ಟಿದ್ದು, ಯುದ್ಧ ಆರಂಭವಾದಾಗಿನಿಂದ
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್
Kishore Kumar Huli: ಒಟ್ಟಿಗೆ ಒಂದು ರಾಷ್ಟ್ರದಂತೆ ?, ನಮ್ಮನ್ನು ದ್ವೇಷದ ವಿಷಕಾರಿ, ಹಿಂದೂ - ಮುಸ್ಲಿಂ - ಕ್ರಿಶ್ಚಿಯನ್ನರೆಂದು ಇನ್ನೆಂದೂ ಒಂದಾಗಲು ಸಾಧ್ಯವೇ ಇಲ್ಲದಂತೆ ಒಡೆದ ನಂತರ ನಿಮಗೆ ನಾಚಿಕೆಯೆಂಬುದೇನಾದರೂ ಇದೆಯೇ ಎಂದು ನಟ ಕಿಶೋರ್ ಕುಮಾರ್ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಚಿತ್ರವನ್ನು ಬಳಸಿ ಬರೆದಿರುವ ಬರಹವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಮ್ಯಾಗ್ನೆಟ್ ಶಾಲೆಗಳಿಂದಾಗಿ ಮಾಯವಾಗುತ್ತಿರುವ ಗ್ರಾಮೀಣ ಶಾಲೆಗಳು
ಖಾಸಗಿ ಶಿಕ್ಷಣ ವ್ಯಾಪಾರಿಗಳ ದಬ್ಬಾಳಿಕೆಯಿಂದ ಸೊರಗುತ್ತಿರುವ ಸರಕಾರಿ ಶಾಲೆಗಳ ಬಲವರ್ಧನೆಗಾಗಿ ಕರ್ನಾಟಕ ಸರಕಾರ ಅನುಷ್ಠಾನ ಮಾಡಲು ಹೊರಟಿರುವ ಕೆಪಿಎಸ್ ಯೋಜನೆಯ ಮ್ಯಾಗ್ನೆಟ್ ಮಾದರಿಯ ಶಾಲೆಗಳನ್ನು ಕರ್ನಾಟಕದ ಗ್ರಾಮೀಣ ಭಾಗದಲ್ಲಿ ಅಳವಡಿಸಲು ರಾಜ್ಯ ಶಿಕ್ಷಣ ಇಲಾಖೆ ಮುಂದಾಗಿದೆ. ಆಯ್ದ ಕೆಲವು ಆಕರ್ಷಣೀಯ ಶಾಲೆಗಳನ್ನು ಮಾತ್ರ ಉಳಿಸಿಕೊಂಡು ಉಳಿದೆಲ್ಲ ಸರಕಾರಿ ಶಾಲೆಗಳನ್ನು ವಿಲೀನಗೊಳಿಸುವುದಾಗಿದೆ. ಗ್ರಾಮೀಣ ಭಾಗದಲ್ಲಿರುವ ಸುಮಾರು 40 ಸಾವಿರ ಸರಕಾರಿ ಶಾಲೆಗಳ ಭವಿಷ್ಯ ತೂಗುಯ್ಯಾಲೆಯಲ್ಲಿದೆ. ಇದರಿಂದ ಎಲ್ಲಾ ಜನ ಸಮುದಾಯದ ಮಕ್ಕಳ ಶಿಕ್ಷಣದ ಹಕ್ಕನ್ನು ಕಿತ್ತುಕೊಳ್ಳಲಾಗುತ್ತಿದೆ. ಸರಕಾರಿ ಶಾಲೆಗಳ ಕಳಪೆ ಗುಣಮಟ್ಟ, ಭವಿಷ್ಯ ಕೇಂದ್ರಿತ ಶಿಕ್ಷಣವನ್ನು ನೀಡುವಲ್ಲಿ ವಿಫಲತೆ ಇತರ ಮೂಲಭೂತ ಸೌಲಭ್ಯಗಳ ಕೊರತೆಯ ನೆಪದಲ್ಲಿ ರಾಜ್ಯ ಸರಕಾರ ಗ್ರಾಮೀಣ ಸರಕಾರಿ ಶಾಲೆಗಳನ್ನು ಮುಚ್ಚಿ ಅಮೆರಿಕ ಶಿಕ್ಷಣ ಪರಿಕಲ್ಪನೆಯ ಮ್ಯಾಗ್ನೆಟ್ ಶಾಲೆಗಳನ್ನು ಆರಂಭಿಸುತ್ತಿರುವುದು ಜನರಲ್ಲಿ ಅಪನಂಬಿಕೆ ಉಂಟಾಗಿದೆ. ರಾಜ್ಯದ ಸಾರ್ವತ್ರಿಕ ಶಿಕ್ಷಣ ವ್ಯವಸ್ಥೆಯನ್ನು ಗುಣಾತ್ಮಕ ಸುಧಾರಣೆಯ ಉದ್ದೇಶದಿಂದ ಯಾರೊಬ್ಬರೂ ಪಬ್ಲಿಕ್ ಶಾಲೆಗಳನ್ನು ವಿರೋಧಿಸುತ್ತಿಲ್ಲ, ಆದರೆ ಕುಗ್ರಾಮ, ತಾಂಡಾ ಮತ್ತು ಹಟ್ಟಿಗಳಲ್ಲಿನ ಮಕ್ಕಳ ಕಲಿಕೆಗೆ ಸ್ಥಳೀಯ ಶಾಲೆ ಗ್ರಾಮದ ಅಸ್ಮಿತೆ ಮತ್ತು ಆಧಾರ. ಜೊತೆಗೆ ಭಾವನಾತ್ಮಕ ಸಂಬಂಧಕ್ಕೆ ಎಳ್ಳುನೀರು ಬಿಟ್ಟಂತಾಗುತ್ತದೆ. ಕೆಪಿಎಸ್ಗಳಲ್ಲಿ ವಿದ್ಯಾರ್ಥಿಗಳ ದಾಖಲಾತಿ ಪ್ರಮಾಣ ಗಣನೀಯವಾಗಿ ಚೇತರಿಸಿಕೊಂಡಿದೆ ಮತ್ತು ಕಲಿಕೆಯ ಗುಣಮಟ್ಟ ಹೆಚ್ಚಿರುವುದು 10ನೇ ತರಗತಿಯ ಫಲಿತಾಂಶದಿಂದ ಸಾಬೀತಾಗಿದೆ. ಆದರೆ ಈ ಮ್ಯಾಗ್ನೆಟ್ ಶಾಲೆಗಳು ರಾಜ್ಯದ ಪ್ರತೀ ಗ್ರಾಮ ಪಂಚಾಯತ್ ಕೇಂದ್ರಗಳಲ್ಲಿ ಎಲ್ಕೆಜಿಯಿಂದ ಮೊದಲ್ಗೊಂಡು ಪಿಯುವರೆಗಿನ ದ್ವಿ ಭಾಷಾ ಮಾಧ್ಯಮದಲ್ಲಿ ಶಿಕ್ಷಣವನ್ನು ನೀಡುವ ವ್ಯವಸ್ಥೆ ಒಂದೇ ಸೂರಿನಡಿ ಕಲ್ಪಿಸಲಾಗಿರುತ್ತದೆ. ಕನಿಷ್ಠ 1,200 ವಿದ್ಯಾರ್ಥಿಗಳಿಗೆ ಅಗತ್ಯವಿರುವ ಎಲ್ಲಾ ಮೂಲಭೂತ ಸೌಕರ್ಯಗಳನ್ನು 2ರಿಂದ 4 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುತ್ತದೆ. ಈ ಯೋಜನೆಗಾಗಿ ಏಶ್ಯನ್ ಡೆವೆಲಪ್ಮೆಟ್ ಬ್ಯಾಂಕ್ನಿಂದ ಸಾಲವಾಗಿ ಸಾವಿರಾರು ಕೋಟಿ ರೂ. ಪಡೆದಿರುತ್ತದೆ. ಕೆಕೆಆರ್ಡಿಬಿಯ ನಿಧಿ, ಸಿಇಪಿಎಂಐಝೆಡ್ಗಳ ಸಹಾಯದಿಂದ ಈ ಯೋಜನೆ ಅನುಷ್ಠಾನಗೊಳ್ಳುತ್ತಿದೆ. ಕೆಪಿಎಸ್ ಮ್ಯಾಗ್ನೆಟ್ ಮಾದರಿಯ ಬಗ್ಗೆ ಸಚಿವರ ಹೇಳಿಕೆ ಮತ್ತು ಸರಕಾರದ ನಿರ್ಧಾರ ಮೇಲ್ನೋಟಕ್ಕೆ ಬಹಳ ಸುಂದರವಾಗಿ ಕಾಣುತ್ತದೆ. ಜನರ ತೆರಿಗೆ ಹಣದಲ್ಲಿ ನಡೆಯಬೇಕಾದ ಸಾರ್ವಜನಿಕ ಶಿಕ್ಷಣವು ಕಾರ್ಪೊರೇಟ್ ಕಂಪೆನಿಗಳೊಂದಿಗೆ ವ್ಯಾಪಾರ ಮಾಡುವ ಮುನ್ಸೂಚನೆಯಾಗಿದೆ ಮತ್ತು ಸ್ಥಳೀಯ ಶಾಸಕರು ಈ ಉದ್ದೇಶಿತ ಶಾಲೆಗಳ ಎಸ್ಡಿಎಂಸಿಯ ಅಧ್ಯಕ್ಷರಾಗುವುದರಿಂದ ನೇರ ರಾಜಕೀಯ ಹಸ್ತಕ್ಷೇಪಕ್ಕೆ ದಿಡ್ಡಿ ಬಾಗಿಲು ತೆರೆದಂತಾಗುತ್ತದೆ. ಈ ಶಾಲೆಗಳ ಆರ್ಥಿಕ ಸಂಪನ್ಮೂಲವನ್ನು ಆಯಾ ಎಸ್ಡಿಎಂಸಿಗಳು ನೋಡಿಕೊಳ್ಳಬೇಕು. ಅಗತ್ಯವಿದ್ದರೆ ಶಾಲಾ ಕಾಂಪೌಂಡ್ಗೆ ಹೊಂದಿದ ಜಾಗವನ್ನು ಇತರ ಕೋಣೆಗಳನ್ನು ವಾಣಿಜ್ಯ ಮಳಿಗೆಗಳನ್ನಾಗಿ ತರೆಯಬಹುದಂತೆ, ಕಾಂಪೌಂಡ್ನ ಗೋಡೆಗಳನ್ನು ಜಾಹೀರಾತುದಾರರಿಗೆ ಬಾಡಿಗೆ ನೀಡಬಹುದು ಇತ್ಯಾದಿ. ಕುಗ್ರಾಮ, ತಾಂಡಾ ಮತ್ತು ಹಟ್ಟಿಗಳಲ್ಲಿನ ಸರಕಾರಿ ಶಾಲೆಗಳನ್ನು ಮುಚ್ಚಿದರೆ ಬಡವರ, ಶೋಷಿತರ, ಅಸ್ಪಶ್ಯರ ಮಕ್ಕಳು ಶಾಶ್ವತವಾಗಿ ಶಾಲೆಯ ಮುಖ ನೋಡುವುದಿಲ್ಲ ಮತ್ತು ಹೆಣ್ಣು ಮಕ್ಕಳು ಶಾಲೆಯಿಂದ ಹೊರಗುಳಿಯುತ್ತಾರೆ. ಬಡ ಕೂಲಿಕಾರ್ಮಿಕರು ತಮ್ಮ ಮಕ್ಕಳನ್ನು ದೂರದ ಮ್ಯಾಗ್ನೆಟ್ ಶಾಲೆಗಳಿಗೆ ಕಳುಹಿಸುವ ಬದಲು ಜೊತೆಗೆ ಕೆಲಸಕ್ಕೆ ಕರೆದುಕೊಂಡು ಹೋಗುವುದು ಅನಿವಾರ್ಯವಾಗುತ್ತದೆ. ಪರೋಕ್ಷವಾಗಿ ಸರಕಾರವೇ ಶಿಕ್ಷಣದಿಂದ ವಂಚಿತಗೊಳಿಸಿ ಬಾಲಕಾರ್ಮಿಕತೆಗೆ ಕಾರಣವಾಗುತ್ತದೆ. ಬಾಲ್ಯವಿವಾಹ, ಲೈಂಗಿಕ ದೌರ್ಜನ್ಯದಂತಹ ಸಾಮಾಜಿಕ ಸಮಸ್ಯೆಗಳು ಹೆಚ್ಚಾಗುತ್ತಾ ಹೋಗುತ್ತವೆ. ಸಂವಿಧಾನದ ಅನುಚ್ಛೇದ 21ರ ಪ್ರಕಾರ ಶಿಕ್ಷಣ ಮಗುವಿನ ಮೂಲಭೂತ ಹಕ್ಕು ಜೊತೆಗೆ ಬಾಲನ್ಯಾಯ(ಮಕ್ಕಳ ರಕ್ಷಣೆ ಮತ್ತು ಪೋಷಣೆ)ಕಾಯ್ದೆ 2015ನ್ನು ಕಿತ್ತುಕೊಂಡಂತಾಗುತ್ತದೆ. ಒಂದೆಡೆ ಶಿಕ್ಷಕರ ನೇಮಕಾತಿ ಮಾಡುತ್ತೇವೆ ಎನ್ನುತ್ತಾ ಇನ್ನೊಂದೆಡೆ ಶಿಕ್ಷಕರ ಹುದ್ಧೆಗಳನ್ನು ನಾಶಮಾಡುತ್ತಿರುವುದು ಈ ಮ್ಯಾಗ್ನೆಟ್ ಶಾಲೆಯ ವಿಶೇಷತೆ! ಮ್ಯಾಗ್ನೆಟ್ ಶಾಲೆ ಯೋಜನೆ ಜಾರಿಯಾದರೆ ಒಂದು ಅಂದಾಜಿನಂತೆ 80,000ಕ್ಕೂ ಹೆಚ್ಚು ಶಿಕ್ಷಕ ಹುದ್ದೆಗಳು ಕಡಿತವಾಗಲಿವೆ. ಸಚಿವ ಮಧು ಬಂಗಾರಪ್ಪರವರು ಆಯಾ ಹಳ್ಳಿಗಳಿಂದ ಮ್ಯಾಗ್ನೆಟ್ ಶಾಲೆಗೆ ಉಚಿತ ಬಸ್ ಸೌಕರ್ಯವಿದೆ ಎಂದು ಸಂದರ್ಶನವೊಂದರಲ್ಲಿ ಹೇಳುತ್ತಾರೆ. ಅತಿ ಚಿಕ್ಕ ಹಳ್ಳಿಗಳಿಂದ, ತಾಂಡಾಗಳಿಂದ, ಹಟ್ಟಿಗಳಿಂದ, ಹಾಡಿಗಳಿಂದ ಹಾಗೂ ತೋಟದ ಮನೆಯಿಂದ ವಿದ್ಯಾರ್ಥಿಗಳು ಬಂದು ಹೋಗಲು ಸುರಕ್ಷಿತ ರಸ್ತೆ ಸಂಚಾರ ಮಾಡುವಷ್ಟು ಯೋಗ್ಯವೇ ಎನ್ನುವುದು ಸ್ಥಳೀಯರಿಗೆ ಮಾತ್ರ ಗೊತ್ತು ವಿಧಾನಸೌಧದ ಕೋಣೆಯಲ್ಲಿ ಕೂತು ಹೇಳಿದರೆ ಸಾಲದು. ಮ್ಯಾಗ್ನೆಟ್ ಮಾದರಿ ಬಗ್ಗೆ ಜನರು ಜಾಗೃತರಾಗಬೇಕು. ಸರಕಾರವು ಈ ಯೋಜನೆಯ ರೂಪುರೇಷೆಗಳ ಕುರಿತು ಸಾರ್ವಜನಿಕರ ಆಕ್ಷೇಪಣೆಗೆ ಸಮಯ ನೀಡಬೇಕು. ತರಾತುರಿಯಲ್ಲಿ ಅನುಷ್ಠಾನ ಮಾಡಬಾರದು. ಸರಕಾರದ ಧೋರಣೆ ಮೇಲೊಂದು ಮತ್ತು ಒಳಗೊಂದು ಎಂದು ಕಂಡು ಬಂದಾಗ ಸಂಘಟಿತರಾಗಿ ಹೋರಾಟ ನಡೆಸಬೇಕು. ರಾಜ್ಯದ ನುರಿತ ಶಿಕ್ಷಣ ತಜ್ಞರ ಅಭಿಪ್ರಾಯ ಪಡೆದು ಎಲ್ಲರಿಗೂ ಒಳಿತಾಗುವ ಕಾರ್ಯದಲ್ಲಿ ಎಲ್ಲರೂ ಸಕ್ರಿಯವಾಗಿ ಈ ಚಳವಳಿಯಲ್ಲಿ ಭಾಗವಹಿಸಬೇಕು. ಜನಪರ ಸಂಘಟನೆಗಳು ಸೇರಿ ಪ್ರತಿಭಟಿಸಿದಾಗ ಮಾತ್ರ ಸರಕಾರದ ನೀತಿಗಳು ಬದಲಾಗಲು ಸಾಧ್ಯ.
ವಿಧಾನಸೌಧದಲ್ಲಿ ಶಾಸಕರ ಫೋಟೋ ಶೂಟ್: ನಾನಾ ವ್ಯಾಖ್ಯಾನಕ್ಕೆ ಕಾರಣವಾಗುತ್ತಿದೆ ಸ್ಪೀಕರ್ ನಡೆ, ಸಂಪುಟ ಪುನಾರಚನೆ ಸುಳಿವೇ?
ರಾಜ್ಯ ರಾಜಕಾರಣದಲ್ಲಿ ಸಂಪುಟ ಪುನಾರಚನೆಯ ಸುದ್ದಿ ಸದ್ದು ಮಾಡುತ್ತಿರುವಾಗಲೇ ವಿಧಾನಸಭೆ ಅವಧಿಯ ನಡುವಿನಲ್ಲಿ ಸ್ಪೀಕರ್ ಖಾದರ್ ಅವರು ವಿಧಾನಸೌಧದ ಗ್ರ್ಯಾಂಡ್ ಸ್ಟೆಪ್ ಮುಂಭಾಗದಲ್ಲಿ ಶಾಸಕರ ಫೋಟೋ ಶೂಟ್ ಮಾಡಿಸಿದ್ದಾರೆ. ಇದು ಸದ್ಯ ಭಾರಿ ವ್ಯಾಖ್ಯಾನಗಳಿಗೆ ಎಡೆ ಮಾಡಿಕೊಟ್ಟಿದ್ದು, ಶೀಘ್ರದಲ್ಲೇ ಸಂಪುಟಕ್ಕೆ ಸರ್ಜರಿಯಾಗಲಿದ್ದು, ಸ್ಪೀಕರ್ ಖಾದರ್ ಅವರು ಸಹ ಸಂಪುಟ ಸೇರುವ ಸಾಧ್ಯತೆಯಿದ್ದು, ಹೀಗಾಗಿಯೇ ವಿಧಾನಸಭೆ ಮುಕ್ತಾಯಕ್ಕೂ ಮೊದಲೇ ಫೋಟೋ ಶೂಟ್ ಮಾಡಿಸಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಈ ಕುರಿತು ವರದಿ ಇಲ್ಲಿದೆ...
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು?
Who Is Aryan Birla?: ಐಪಿಎಲ್ನ ರಾಯಲ್ ಚಾಲೆಂಜರ್ಸ್ ಬೆಂಗಳೂರು ಈಗ ಹೊಸ ಮಾಲೀಕತ್ವದ ಅಡಿಯಲ್ಲಿ ಹೊಸ ಪಯಣ ಆರಂಭಿಸಲು ಸಜ್ಜಾಗಿದೆ. ಆದಿತ್ಯ ಬಿರ್ಲಾ ಗ್ರೂಪ್ ನೇತೃತ್ವದ ಬಲಿಷ್ಠ ಒಕ್ಕೂಟವೊಂದು ಸುಮಾರು 1.78 ಬಿಲಿಯನ್ ಡಾಲರ್ (ಸುಮಾರು 16,600 ಕೋಟಿ ರೂಪಾಯಿಗೂ ಅಧಿಕ) ಭಾರಿ ಮೊತ್ತಕ್ಕೆ ಆರ್ಸಿಬಿ ಫ್ರಾಂಚೈಸಿಯನ್ನು ಖರೀದಿಸಿದೆ. ಈ ಬೃಹತ್ ಒಪ್ಪಂದದಲ್ಲಿ ಕೇವಲ ಆದಿತ್ಯ
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ..
ಬೆಂಗಳೂರು: ಮಾರುಕಟ್ಟೆಯಲ್ಲಿ ಚಿನ್ನದ ದರದಲ್ಲಿ ಏರಿಳಿತವಾಗುವುದು ಸಾಮಾನ್ಯ. ಕಳೆದ ಕೆಲ ದಿನಗಳಿಂದ ಇಳಿಕೆಯ ಹಾದಿಯಲ್ಲಿದ್ದ ಬಂಗಾರದ ದರ ಇದೀಗ ಮತ್ತೆ ಗ್ರಾಹಕರಿಗೆ ಅಚ್ಚರಿ ಮೂಡಿಸಿದೆ. ಹೌದು, ಮಾರ್ಚ್ 25ರಂದು ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಚಿನ್ನದ ಬೆಲೆಯಲ್ಲಿ ಭಾರಿ ಏರಿಕೆ ಕಂಡುಬಂದಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಆಗುತ್ತಿರುವ ಬೆಳವಣಿಗೆಗಳು, ಡಾಲರ್ ಮೌಲ್ಯದಲ್ಲಿನ ಬದಲಾವಣೆ ಹಾಗೂ ಭೌಗೋಳಿಕ ರಾಜಕೀಯ ಉದ್ವಗ್ನತೆಗಳ ನೇರ
ಕಾಂಗ್ರೆಸ್ಗೆ ಕೇಂದ್ರದ ಶಾಕ್; 48 ವರ್ಷಗಳ ಇತಿಹಾಸವಿರುವ 24 ಅಕ್ಬರ್ ರೋಡ್ ಕಚೇರಿ ಖಾಲಿ ಮಾಡಲು ಡೆಡ್ಲೈನ್!
ರಾಷ್ಟ್ರ ರಾಜಧಾನಿ ಹೊಸದಿಲ್ಲಿಯಲ್ಲಿರುವ 24 ಅಕ್ವರ್ ರೋಡ್ಗೂ ಕಾಂಗ್ರೆಸ್ ಪಕ್ಷಕ್ಕೂ ಭಾವನಾತ್ಮಕ ಸಂಬಂಧ. ಕಳೆದ 48 ವರ್ಷಗಳಿಂದ ಇದು ಕಾಂಗ್ರೆಸ್ ಪಕ್ಷದ ಕಚೇರಿಯ ವಿಳಾಸವಾಗಿದೆ. ಆದರೆ ಈಗ ಪಕ್ಷ ಅಕ್ಬರ್ ರಸ್ತೆಯಲ್ಲಿರುವ ತನ್ನ ಕಚೇರಿಯನ್ನು ತೆರವುಗೊಳಿಸಬೇಕಾದ ಸನ್ನಿವೇಶ ಸೃಷ್ಟಿಯಾಗಿದೆ. ಹೌದು,
Bagalkote | ದಾಖಲೆಗಳಿಲ್ಲದೆ ಕಾರಿನಲ್ಲಿ ಸಾಗಿಸುತ್ತಿದ್ದ 2.30 ಲಕ್ಷ ರೂ. ನಗದು ಜಪ್ತಿ
ಬಾಗಲಕೋಟೆ: ಜಿಲ್ಲೆಯ ಗುಗ್ಗಲಮರಿ ಚೆಕ್ಪೋಸ್ಟ್ನಲ್ಲಿ ತಪಾಸಣೆ ವೇಳೆ ಸೂಕ್ತ ದಾಖಲೆಗಳಿಲ್ಲದೆ ಸಾಗಿಸುತ್ತಿದ್ದ 2.30 ಲಕ್ಷ ರೂ. ನಗದು ಹಣವನ್ನು ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ಲೋಕೋಪಯೋಗಿ ಇಲಾಖೆಯ ಕಿರಿಯ ಅಭಿಯಂತರ ಎಂ.ಎಚ್.ಕೋತ್ತವಾಲ ಅವರ ನೇತೃತ್ವದ ಫ್ಲೈಯಿಂಗ್ ಸ್ಕ್ವಾಡ್ ತಂಡ (ಎಫ್ಎಸ್ಟಿ) ತಪಾಸಣೆ ನಡೆಸುತ್ತಿದ್ದ ಸಂದರ್ಭದಲ್ಲಿ, ಕಾರಿನಲ್ಲಿ ಸಾಗಿಸಲಾಗುತ್ತಿದ್ದ ನಗದು ಹಣವನ್ನು ವಶಪಡಿಸಿಕೊಂಡಿದ್ದಾರೆ. ಸೂಕ್ತ ದಾಖಲೆಗಳಿಲ್ಲದೆ ಹಣ ಸಾಗಿಸಲಾಗುತ್ತಿದ್ದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬಾಗಲಕೋಟೆ ವಿಧಾನಸಭಾ ಉಪಚುನಾವಣೆ ಹಿನ್ನೆಲೆಯಲ್ಲಿ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ, ಗಡಿ ಭಾಗದಲ್ಲಿರುವ ಇಲಕಲ್ ಪಟ್ಟಣದ ಸಮೀಪದ ಚೆಕ್ಪೋಸ್ಟ್ನಲ್ಲಿ ಕಟ್ಟುನಿಟ್ಟಿನ ತಪಾಸಣೆ ನಡೆಯುತ್ತಿದೆ. ದಾಖಲೆಗಳಿಲ್ಲದೆ ಸಾಗಿಸುತ್ತಿದ್ದ ಹಣವನ್ನು ವಶಪಡಿಸಿಕೊಂಡು ಮುಂದಿನ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿದುಬಂದಿದೆ.
ಉಳ್ಳಾಲ : ರಕ್ತದಾನ ಶಿಬಿರದ ಪೂರ್ವಭಾವಿ ಸಭೆ
ಉಳ್ಳಾಲ : ಎಪ್ರಿಲ್ 5ರಂದು, ಮುಹಿಯುದ್ದೀನ್ ಜುಮಾ ಮಸೀದಿ (ಹೊಸಪಳ್ಳಿ)ಮೇಲಂಗಡಿ ಮತ್ತು ಎಮರ್ಜೆನ್ಸಿ ಬ್ಲಡ್ ಹೆಲ್ಪ್ ಲೈನ್ ಸಹಭಾಗಿತ್ವದಲ್ಲಿ ಎಪ್ರಿಲ್ 5ರಂದು ರವಿವಾರ ಬೆಳಿಗ್ಗೆ 8.30ಕ್ಕೆ ಬೃಹತ್ ರಕ್ತದಾನ ಶಿಬಿರ ನಡೆಯಲಿದ್ದು, ಇದರ ಯಶಸ್ವಿಗಾಗಿ ಹೊಸಪಳ್ಳಿ ಆಡಳಿತ ಸಮಿತಿ ಮತ್ತು ಎಮರ್ಜೆನ್ಸಿ ಬ್ಲಡ್ ಹೆಲ್ಪ್ ಲೈನ್ ಸಂಸ್ಥೆಯ ಜಂಟಿ ಪೂರ್ವ ಭಾವಿ ಸಭೆ ಉಳ್ಳಾಲ ಮೇಲಂಗಡಿ ಮುಹಿಯುದ್ದೀನ್ ಜುಮ್ಮಾ ಮಸೀದಿ (ಹೊಸಪಳ್ಳಿ) ಯ ಆಡಳಿತ ಕಛೇರಿಯಲ್ಲಿ ನಡೆಯಿತು. ಆಡಳಿತ ಸಮಿತಿ ಅಧ್ಯಕ್ಷ ಮುಸ್ತಫಾ ಅಬ್ದುಲ್ಲಾ ಅಧ್ಯಕ್ಷತೆ ವಹಿಸಿದ್ದರು. ಹೊಸ ಪಳ್ಳಿಯ ಮಾಜಿ ಅಧ್ಯಕ್ಷ ಫಾರೂಕ್ ಉಳ್ಳಾಲ್, ಎಂ.ಜೆ.ಎಂ.ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಹಿಮಾನ್, ಜೊತೆ ಕಾರ್ಯದರ್ಶಿ ಮುಹಿಯುದ್ದೀನ್, ಪ್ರಮುಖರಾದ ಕಬೀರ್ ಬುಖಾರಿ, ಸಮಿತಿ ಸದಸ್ಯ ಶಬೀರ್ , ಎಮರ್ಜೆನ್ಸಿ ಹೆಲ್ಪ್ ಲೈನ್ ಸ್ಥಾಪಕಾಧ್ಯಕ್ಷ ಬದ್ರುದ್ದೀನ್ ಉಳ್ಳಾಲ, ಪದಾಧಿಕಾರಿಗಳಾದ ಜಲಾಲುದ್ದೀನ್ ಕಡಪರ, ನಿಸಾರ್, ಅಲ್ತಾಫ್ ಟಿಪ್ಪು ನಗರ, ಅಬೂಬಕ್ಕರ್ ಉಳ್ಳಾಲ ಈ ಸಭೆಯಲ್ಲಿ ಭಾಗವಹಿಸಿದ್ದರು.
ಯೆನೆಪೋಯ ಕಾಲೇಜಿನಲ್ಲಿ ವಿಶ್ವ ಮಾನವ ಮೌಲ್ಯಗಳ ಕೋಶ ಉದ್ಘಾಟನೆ
ಮಂಗಳೂರು: ಯೆನೆಪೋಯ (ಡೀಮ್ಡ್ ಟು ಬಿ ಯುನಿವರ್ಸಿಟಿ)ಯ ಘಟಕ ಸಂಸ್ಥೆಯಾಗಿರುವ ಯೆನೆಪೋಯ ಇನ್ಸ್ಟಿಟ್ಯೂಟ್ ಆಫ್ ಆರ್ಟ್ಸ್, ಸೈನ್ಸ್, ಕಾಮರ್ಸ್ & ಮ್ಯಾನೇಜ್ಮೆಂಟ್ (YIASCM), ಕುಳೂರು ಕ್ಯಾಂಪಸ್ನಲ್ಲಿ ವಿಶ್ವ ಮಾನವ ಮೌಲ್ಯಗಳ (UHV) ಕೋಶವನ್ನು ಮಾ. 23 ರಂದು ಭಾರತದ ಸುಪ್ರೀಂ ಕೋರ್ಟ್ನ ಮಾಜಿ ನ್ಯಾಯಮೂರ್ತಿ ಹಾಗೂ ಕರ್ನಾಟಕದ ಮಾಜಿ ಲೋಕಾಯುಕ್ತರಾದ ನ್ಯಾಯಮೂರ್ತಿ ಎನ್. ಸಂತೋಷ್ ಹೆಗ್ಡೆ ಅವರು ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, “ಸಾರ್ವಜನಿಕ ಜೀವನದಲ್ಲಿ ಪ್ರಾಮಾಣಿಕತೆ ಒಂದು ಆಯ್ಕೆ ಅಲ್ಲ, ಅದು ವಿಶ್ವಾಸ ನಿರ್ಮಾಣದ ಮೂಲಾಧಾರವಾಗಿದೆ” ಎಂದು ಹೇಳಿದರು. ನ್ಯಾಯವು ಕೇವಲ ನೀಡುವುದು ಮಾತ್ರವಲ್ಲ, ಅದನ್ನು ನ್ಯಾಯಸಮ್ಮತವಾಗಿ ಪಡೆಯುವುದೂ ಮುಖ್ಯ. ದೇಶದ ಅಭಿವೃದ್ಧಿಗೆ ಭ್ರಷ್ಟಾಚಾರದ ವಿರುದ್ಧ ನಾಗರಿಕರು ದೃಢವಾಗಿ ನಿಲ್ಲಬೇಕೆಂದರು. ಗೌರವ ಅತಿಥಿಯಾಗಿ ಭಾಗವಹಿಸಿದ ಯುನಿವರ್ಸಲ್ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ಸ್ನ ಅಧ್ಯಕ್ಷರಾದ ಆರ್. ಉಪೇಂದ್ರ ಶೆಟ್ಟಿ, ಜ್ಞಾನ ನೀಡುವುದರ ಜೊತೆಗೆ ವ್ಯಕ್ತಿತ್ವ ಮತ್ತು ಗುರಿಯನ್ನು ರೂಪಿಸುವುದರಲ್ಲಿ ಶಿಕ್ಷಣವು ಮಹತ್ವದ್ದಾಗಿದೆ. ಇತರರನ್ನು ಪ್ರೇರೇಪಿಸುವುದಲ್ಲದೆ, ಅವರ ಸಾಮರ್ಥ್ಯವನ್ನು ಅರಿಯಲು ಸಹಾಯ ಮಾಡುವುದಾಗಿದೆ ನಿಜವಾದ ನಾಯಕತ್ವ. ದೃಷ್ಟಿ ಮತ್ತು ಬದ್ಧತೆ ಒಂದಾದಾಗ ಸಂಸ್ಥೆಗಳು ಬೆಳೆಯುತ್ತವೆ ಎಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಯೆನೆಪೋಯ (ಡೀಮ್ಡ್ ಟು ಬಿ ಯುನಿವರ್ಸಿಟಿ)ಯ ಸಹ ಉಪಕುಲಪತಿಗಳಾಗಿರುವ ಡಾ. ಶ್ರೀಪತಿ ರಾವ್, YIASCM ಇತರೆ ಘಟಕ ಕಾಲೇಜುಗಳಿಗೆ ಮಾದರಿಯಾಗಿದೆ ಎಂದು ಅಭಿನಂದಿಸಿದರು. ಜ್ಞಾನವು ವಿವೇಕದೊಂದಿಗೆ ಬಳಸಿದಾಗ ಮಾತ್ರ ಅದರ ಮೌಲ್ಯ ಹೆಚ್ಚುತ್ತದೆ ಎಂದು ಅವರು ಹೇಳಿದರು. ಕಾಲೇಜಿನ ಪ್ರಭಾರ ಪ್ರಾಂಶುಪಾಲರಾಗಿರುವ ಪ್ರೊ. ಜೀವನ್ ರಾಜ್, ಶಿಕ್ಷಕರ ಪಾತ್ರದ ಬಗ್ಗೆ ಮಾತನಾಡಿ, “ಒಳ್ಳೆಯ ಶಿಕ್ಷಕರು ವಿಷಯವನ್ನು ಮಾತ್ರ ಬೋಧಿಸುವುದಿಲ್ಲ, ಜೀವನವನ್ನು ಪ್ರೇರೇಪಿಸುತ್ತಾರೆ” ಎಂದು ಹೇಳಿದರು. ಹಾಗೆಯೇ “ನಿರಂತರತೆ ಮತ್ತು ಶಿಸ್ತು ಯಶಸ್ಸಿನ ಮೌನ ಚಾಲಕಗಳು” ಎಂದು ಅಭಿಪ್ರಾಯಪಟ್ಟರು. ಪ್ರಾಸ್ತಾವಿಕ ಮಾತುಗಳನ್ನಾಡಿದ ವಾಣಿಜ್ಯ ಮತ್ತು ನಿರ್ವಹಣಾ ವಿಭಾಗದ ಡೀನ್, ಉಪ ಪ್ರಾಂಶುಪಾಲರು ಹಾಗೂ ಯುಎಚ್ವಿ ಕೋಶದ ಅಧ್ಯಕ್ಷರಾಗಿರುವ ಪ್ರೊ. ಶರೀನಾ ಪಿ, ಎಐಸಿಟಿಇ ಮಾರ್ಗಸೂಚಿಗಳನ್ವಯ ಮಾನವ ಮೌಲ್ಯಗಳನ್ನು ಜಾರಿಗೆ ತರುವ ಮಹತ್ವವನ್ನು ವಿವರಿಸಿದರು. ಈ ಸಂದರ್ಭದಲ್ಲಿ ಉಪ ಪ್ರಾಂಶುಪಾಲರಾದ ನಾರಾಯಣ ಸುಕುಮಾರ್ ಎ., ವಿಭಾಗ ಮುಖ್ಯಸ್ಥರು, ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಯುಎಚ್ವಿ ಕೋಶದ ಸಂಯೋಜಕಿ ಡಾ. ದೀಕ್ಷಿತಾ ಪ್ರಶಾಂತ್, ಸ್ವಾಗತಿಸಿದರು. ಸಂಚಾಲಕಿ ಹಾಗೂ ಭಾಷಾಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ. ಶಾಲಿನಿ ಸೆಕ್ವೇರಾ ವಂದನಾರ್ಪಣೆ ಸಲ್ಲಿಸಿದರು. ವಾಣಿಜ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಪಿನಾಕಿನಿ ಶೆಟ್ಟಿ, ಕಾರ್ಯಕ್ರಮವನ್ನು ನಿರೂಪಿಸಿದರು. ಎಐಸಿಟಿಇ ಮಾರ್ಗಸೂಚಿಗಳನ್ವಯ ಸ್ಥಾಪಿಸಲಾದ ಯುಎಚ್ವಿ ಕೋಶವು ವಿದ್ಯಾರ್ಥಿಗಳಲ್ಲಿ ಮೌಲ್ಯಾಧಾರಿತ ಶಿಕ್ಷಣ, ನೈತಿಕತೆ ಮತ್ತು ಸಮಗ್ರ ವ್ಯಕ್ತಿತ್ವ ಅಭಿವೃದ್ಧಿಯನ್ನು ಉತ್ತೇಜಿಸುವುದರ ಮೂಲಕ ಜವಾಬ್ದಾರಿಯುತ ನಾಗರಿಕರನ್ನು ರೂಪಿಸುವುದನ್ನು ಗುರಿಯಾಗಿಟ್ಟುಕೊಂಡಿದೆ.
ನಿಮ್ಮ ಸೋಲನ್ನು ಒಪ್ಪಂದವೆನ್ನ ಬೇಡಿ ಇರಾನ್ ಜೊತೆ ಶೀಘ್ರ ಒಪ್ಪಂದ ಎಂದ ಟ್ರಂಪ್ ಗೆ IRGC ಖಡಕ್ ತಿರುಗೇಟು
ಮಧ್ಯಪ್ರಾಚ್ಯದಲ್ಲಿ ಯುದ್ದದ ತೀವ್ರತೆ ಹೆಚ್ಚಾಗುತ್ತಿದೆ, ಈ ಮಧ್ಯೆ ಅಮೆರಿಕಾ ಇರಾನ್ ನೊಂದಿಗೆ ಶೀಘ್ರವೇ ಒಪ್ಪಂದ ಮಾಡಿಕೊಳ್ಳುತ್ತೇವೆ ಎಂದು ಹೇಳಿಕೆ ನೀಡಿದ್ದು, ಇದಕ್ಕೆ ತಿರುಗೇಟು ನೀಡಿರುವ ಇರಾನ್ ನಿಮ್ಮ ಸೋಲನ್ನು ಒಪ್ಪಂದ ಎಂದು ಕರೆಯಬೇಡಿ ಎಂದು ಕಟುವಾಗಿ ಟೀಕಿಸಿದೆ. ಅಲ್ಲದೆ ಈ ಪ್ರದೇಶದಲ್ಲಿ ನಿಮ್ಮ ಬೆಳೆ ಬೇಯಲು ಬಿಡುವುದಿಲ್ಲ ಎಂದು ಅಮೆರಿಕಾಗೆ ಎಚ್ಚರಿಸಿದ್ದು, ಗಲ್ಪ್ ರಾಷ್ಟ್ರಗಳಿಗೆ ಒಗ್ಗಟ್ಟಿನ ಕರೆ ನೀಡಿದೆ. ಇತ್ತ, ಇರಾನ್ ನಲ್ಲಿ ಯುದ್ದ ಆರಂಭವಾದಾಗಿನಿಂದ ಇಸ್ರೇಲ್ ಹಾಗೂ US ಪರವಾದ ಆನ್ ಲೈನ್ ಪೋಸ್ಟ್ ಗಳನ್ನು ಮಾಡಿದ ಆರೋಪದಡಿ 466 ನಾಗರಿಕರನ್ನು ಇರಾನ್ ಬಂಧಿಸಿದೆ.
ಚರ್ಚೆಗೆ ಗ್ರಾಸವಾದ 'ಒಂದು ಫೋಟೋಶೂಟ್' !
ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೇತೃತ್ವದಲ್ಲಿ ಹದಿನಾರನೇ ವಿಧಾನಸಭೆಯ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಸೇರಿದಂತೆ ಎಲ್ಲ ಸದಸ್ಯರು ಗ್ರೂಪ್ ಫೋಟೋವನ್ನು ತೆಗೆಸಿಕೊಂಡಿದ್ದಾರೆ. ಬುಧವಾರ ವಿಧಾನಸೌಧದ ವೈಭವ ಪೇತ ಮೆಟ್ಟಿಲುಗಳ ಬಳಿ ನಡೆದ ಗ್ರೂಪ್ ಪೋಟೋದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ವಿಧಾನಸಭೆ ಸ್ಪೀಕರ್ ಯು.ಟಿ.ಖಾದರ್, ವಿಪಕ್ಷ ನಾಯಕ ಆರ್. ಅಶೋಕ್ ಸೇರಿದಂತೆ ಆಡಳಿತ ಮತ್ತು ಪ್ರತಿಪಕ್ಷಗಳ ಎಲ್ಲ ಸದಸ್ಯರು ಭಾಗಿಯಾಗಿದ್ದರು. ವಿಧಾನಸಭೆ ಚುನಾವಣೆಗೆ ಮುನ್ನ ಸಾಮಾನ್ಯವಾಗಿ ಫೋಟೋಶೂಟ್ ತೆಗೆದುಕೊಳ್ಳಲಾಗುತ್ತದೆ. ಆದರೆ, ಅವಧಿಗೆ ಮೊದಲೇ ಗ್ರೂಪ್ ಫೋಟೋಟೋ ತೆಗೆಸುತ್ತಿರುವುದು ಹಲವು ರೀತಿಯ ವಿಶ್ಲೇಷಣೆಗೆ ಕಾರಣವಾಗಿದೆ. ನಾಯಕತ್ವ ಬದಲಾವಣೆ ಅಥವಾ ಸ್ಪೀಕರ್ ಖಾದರ್ ಅವರಿಗೆ ಸಚಿವ ಸ್ಥಾನ ಸಿಗುವ ಸಾಧ್ಯತೆಗಳಿವೆಯೇ ಎಂಬ ಚರ್ಚೆ ವಿಧಾನಸಭೆ ಮೊಗಸಾಲೆಯಿಂದಲೇ ಕೇಳಿಬರುತ್ತಿದೆ.
ಭಾರತದ ವಿದೇಶಾಂಗ ನೀತಿ ಯುನಿವರ್ಸಲ್ ಜೋಕ್ ಆಗಿದ್ದು, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಕಾರಣದಿಂದಾಗಿ ರಾಜಿಯಾಗಿದೆ ಎಂಬ ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಆರೋಪಿಸಿದ ದಿನದಂದೇ, ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ದೂರವಾಣಿ ಕರೆ ಮಾಡಿ ಮಧ್ಯಪ್ರಾಚ್ಯ ಬಿಕ್ಕಟ್ಟಿನ ಬಗ್ಗೆ ಚರ್ಚೆ ನಡೆಸಿದ್ದಾರೆ. ಹಾಗಿದ್ದರೆ ಭಾರತದ ವಿದೇಶಾಂಗ ನೀತಿ ನಿಜಕ್ಕೂ ದುರ್ಬಲವಾಗಿದೆಯೇ? ಅಥವಾ ಜಾಗತಿಕ ನಿರ್ಣಯಗಳನ್ನು ಕೈಗೊಳ್ಳುವಲ್ಲಿ ಪ್ರಮುಖ ಪಾತ್ರ ನಿರವವಹಿಸುತ್ತಿದೆಯೇ? ಇಲ್ಲಿದೆ ವಿಶ್ಲೇಷಣೆ.
ಕರ್ನಾಟಕದಲ್ಲಿ ಕುತೂಹಲದ ಕೇಂದ್ರಬಿಂದುವಾಗಿರುವ ದಾವಣಗೆರೆ ದಕ್ಷಿಣದ ಚುನಾವಣಾ ಕಣ, ಕಾಂಗ್ರೆಸ್ ಬಂಡಾಯದ ಕಾರಣಕ್ಕೆ ಭಾರಿ ಚರ್ಚೆಯಲ್ಲಿದೆ.
ಕಚ್ಚಾತೈಲ ಬೆಲೆ ಏರಿಕೆಯಾಗುತ್ತಿದ್ದರೂ ಭಾರತದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಸ್ಥಿರ ; ಏನಿದು ಸರ್ಕಾರದ ತಂತ್ರಗಾರಿಕೆ?
Petrol and Diesel Price Stable in India : ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆಯಲ್ಲಿ ಗಣನೀಯವಾಗಿ ಏರಿಕೆಯಾಗುತ್ತಿದ್ದರೂ, ಭಾರತದಲ್ಲಿ ಡೀಸೆಲ್ ಮತ್ತು ಪೆಟ್ರೋಲ್ ಬೆಲೆಯಲ್ಲಿ ಯಾವುದೇ ಏರಿಕೆಯಾಗಿಲ್ಲ. ಕೇಂದ್ರದ ಮೋದಿ ಸರ್ಕಾರ, ಬೆಲೆಯಲ್ಲಿ ಬದಲಾವಣೆ ಆಗದಂತೆ ತಡೆಯುವಲ್ಲಿ ವಹಿಸಿರುವ ಮುಂಜಾಗೃತಾ ಕ್ರಮವೇನು?
ಫ್ಯಾಶಿಸ್ಟ್ ಎಸ್ಐಆರ್ ಅನ್ನು ವ್ಯವಧಾನದಿಂದ, ಗ್ರಾಮಸಭೆಗಳಿಂದ ಬದಲಿಸಬಹುದೇ?
ಎಲ್ಲಿಯವರೆಗೆ ಎಸ್ಐಆರ್ ಪ್ರಕ್ರಿಯೆಯಲ್ಲಿ ಎನ್ಆರ್ಸಿಯ ರೀತಿ ನಾಗರಿಕತ್ವ ಪರಿಶೀಲನೆ ಮತ್ತು ಅದಕ್ಕೆ 11 ದಾಖಲೆಗಳಲ್ಲಿ ಒಂದನ್ನು ಹೊಂದಿರುವುದು ಕಡ್ಡಾಯವಾಗಿರುತ್ತದೋ ಅಲ್ಲಿಯವರಗೆ ವ್ಯವಧಾನದಿಂದ ಮಾಡಿದರೂ, ಗ್ರಾಮಸಭೆಗಳಲ್ಲಿ ಕರಡು ಮತಪಟ್ಟಿ ಓದುವ ಕ್ರಮಕ್ಕೆ ಒಪ್ಪಿದರೂ ಅವುಗಳು ದಾಖಲೆಗಳಿಲ್ಲದ ದಮನಿತ ಸಮುದಾಯಗಳನ್ನು ಬಚಾವು ಮಾಡುವುದಿಲ್ಲ. ಆದ್ದರಿಂದ ಎಸ್ಐಆರ್ ವಿರೋಧಿ ಹೋರಾಟ ಎಸ್ಐಆರ್ ರದ್ದಾಗಬೇಕು ಎಂಬ ಬಗ್ಗೆಯೇ ಕೇಂದ್ರೀಕರಣಗೊಳ್ಳಬೇಕು. ಆ ಕೇಂದ್ರೀಯ ಗಮನ ತಪ್ಪುವುದು ದೊಡ್ಡ ಪ್ರಮಾದ. ಕೆಲವು ಟಿಪ್ಪಣಿಗಳು 1.ಎಸ್ಐಆರ್ ಎಂಬುದು ಎನ್ಆರ್ಸಿ ರೀತಿ ಫ್ಯಾಶಿಸ್ಟ್ ಮೋದಿ ಸರಕಾರದ ಫ್ಯಾಶಿಸ್ಟ್ ಯೋಜನೆ. ಎನ್ಆರ್ಸಿಯಂತೆ ಎಸ್ಐಆರ್ ಕೂಡಾ ರದ್ದಾಗಬೇಕು. ಏಕೆಂದರೆ ಎನ್ಆರ್ಸಿಯ ರೀತಿ ಅದರ ಪ್ರಜಾತಾಂತ್ರೀಕರಣವಾಗಲೀ ಅಥವಾ ಅದು ರದ್ದಾಗದೆ ದಮನಿತ ಸಮುದಾಯಗಳ ಉಳಿವಾಗಲೀ ಸಾಧ್ಯವಿಲ್ಲ. ಎಸ್ಐಆರ್ ಅನ್ನು ಪರೋಕ್ಷ ಎನ್ಆರ್ಸಿಯೆಂದೇ ಗ್ರಹಿಸಿದ ಮೇಲೆ ಎನ್ಆರ್ಸಿಯಂತೆ ಎಸ್ಐಆರ್ ರದ್ದಾಗುವುದೇ ಅದಕ್ಕೆ ಪರಿಹಾರ. ಆದರೆ ಎಸ್ಐಆರ್ ಅನ್ನು ಎನ್ಆರ್ಸಿ ಎಂದು ಗ್ರಹಿಸಿದ ಮೇಲೂ ಎಸ್ಐಆರ್ ಅನ್ನು ತರಾತುರಿಯಿಂದ ಮಾಡದೆ ವ್ಯವಧಾನದಿಂದ ಮಾಡಬೇಕೆನ್ನುವ, ಪ್ರಜೆಗಳನ್ನು ಒಳಗೊಂಡು ಸೋಷಿಯಲ್ ಆಡಿಟ್ ಉಸ್ತುವಾರಿಯೊಂದಿಗೆ ಮಾಡಬೇಕೆನ್ನುವ ಬೇಡಿಕೆಗಳು, ಆಗ್ರಹಗಳು ಮತ್ತು ಅದಕ್ಕಾಗಿ ನಡೆಸುವ ಹೋರಾಟಗಳು ದೂರಗಾಮಿ ಸದಾಶಯವನ್ನೇ ಹೊಂದಿದ್ದರೂ ಸದ್ಯಕ್ಕೆ ಎಸ್ಐಆರ್ ಅನ್ನು ಜನಸ್ನೇಹಿ ಮಾಡಲು ಸಾಧ್ಯ ಎಂಬ ಮರೀಚಿಕೆಯ ಬೆನ್ನುಹತ್ತುವಂತೆ ಮಾಡುತ್ತದೆ. ಅದಕ್ಕೆ ಎಸ್ಐಆರ್ ನಡೆದ 13 ರಾಜ್ಯಗಳ ಅನುಭವಗಳೇ ಸಾಕ್ಷಿ. ಹೀಗಾಗಿ ಅಂತಹ ಸದಾಶಯದ ಪ್ರಾಮಾಣಿಕ ಪ್ರಯತ್ನಗಳು ಪರೋಕ್ಷವಾಗಿ ಎಸ್ಐಆರ್ ರದ್ದು ಮಾಡುವ ಹೋರಾಟವನ್ನು ಕಟ್ಟುವ ಬದಲು ಎಸ್ಐಆರ್ ಅನ್ನು ಯಶಸ್ವಿಗೊಳಿಸುವ ಪ್ರಯತ್ನಗಳಾಗಿಬಿಡುತ್ತವೆ. ಏಕೆಂದರೆ ಎಲ್ಲಿಯವರೆಗೆ ಎಸ್ಐಆರ್ ಪ್ರಕ್ರಿಯೆಯಲ್ಲಿ ಎನ್ಆರ್ಸಿಯ ರೀತಿ ನಾಗರಿಕತ್ವ ಪರಿಶೀಲನೆ ಮತ್ತು ಅದಕ್ಕೆ 11 ದಾಖಲೆಗಳಲ್ಲಿ ಒಂದನ್ನು ಹೊಂದಿರುವುದು ಕಡ್ಡಾಯವಾಗಿರುತ್ತದೋ ಅಲ್ಲಿಯವರಗೆ ವ್ಯವಧಾನದಿಂದ ಮಾಡಿದರೂ, ಗ್ರಾಮಸಭೆಗಳಲ್ಲಿ ಕರಡು ಮತಪಟ್ಟಿ ಓದುವ ಕ್ರಮಕ್ಕೆ ಒಪ್ಪಿದರೂ ಅವುಗಳು ದಾಖಲೆಗಳಿಲ್ಲದ ದಮನಿತ ಸಮುದಾಯಗಳನ್ನು ಬಚಾವು ಮಾಡುವುದಿಲ್ಲ. ಆದ್ದರಿಂದ ಎಸ್ಐಆರ್ ವಿರೋಧಿ ಹೋರಾಟ ಎಸ್ಐಆರ್ ರದ್ದಾಗಬೇಕು ಎಂಬ ಬಗ್ಗೆಯೇ ಕೇಂದ್ರೀಕರಣ ಗೊಳ್ಳಬೇಕು. ಆ ಕೇಂದ್ರೀಯ ಗಮನ ತಪ್ಪುವುದು ದೊಡ್ಡ ಪ್ರಮಾದ. Social Audit ಇತ್ಯಾದಿಗಳ ಸದಾಶಯಗಳ ಮರೀಚಿಕೆ 2. ಆದರೆ ಎಸ್ಐಆರ್ ಅಪಾಯವನ್ನು ಬಲ್ಲ ಹಲವು ಜನಪರ ಸಂಘಟನೆಗಳಿಗೆ ಮತ್ತು ಓಉಔಗಳಿಗೆ ಎಸ್ಐಆರ್ ಅನ್ನು ಜನಪರಗೊಳಿಸಬಹುದೆಂಬ ಉತ್ಪ್ರೇಕ್ಷಿತ ನಿರೀಕ್ಷೆಗಳಿವೆ. ಅದರಲ್ಲಿ ಬಹುಮುಖ್ಯವಾದದ್ದು Social Audit ಪ್ರಕ್ರಿಯೆ ಮೂಲಕ ಎಸ್ಐಆರ್ ಅನ್ನು ಪ್ರಜಾತಾಂತ್ರೀಕರಣಗೊಳಿಸಬಹುದೆಂಬ ಆಶಾವಾದ. 3. ಜನಪರ ಹೋರಾಟಗಾರರು, ಮಾಹಿತಿ ಹಕ್ಕು ಚಳವಳಿಯ ನಾಯಕರು ಆದ ನಿಖಿಲ್ ಡೇ ಮತ್ತು MKSS ಈ ಸಾಧ್ಯತೆಯನ್ನು ಪ್ರತಿಪಾದಿಸುತ್ತಿದ್ದಾರೆ. Social Audit ಬಗ್ಗೆ ಅವರು ಪ್ರಕಟಿಸಿರುವ ಸಾಹಿತ್ಯದಲ್ಲಿ: ‘‘This is a method by which any kind of Special Intensive Revision can be more participatory and is based on Voters feed back’’ ಎಂಬ ಅಸಾಧ್ಯ ಆಶಾವಾದವನ್ನು ವ್ಯಕ್ತಪಡಿಸುತ್ತಾರೆ. 4. ಅದಕ್ಕೆ ಅವರು 2023ರ ಆಯೋಗದ Manualನಲ್ಲಿ 11.2.4(VI) ಸೆಕ್ಷನ್ನಲ್ಲಿರುವ ಅಂಶವು ಬುನಾದಿಯಾಗಬಹುದು ಎಂದು ಹೇಳುತ್ತಾರೆ. ಅದು ಈಗಾಗಲೇ ‘‘ಸಿದ್ಧಪಡಿಸಿದ ಕರಡು ಮತಪಟ್ಟಿಯನ್ನು ಗ್ರಾಮಸಭೆಗಳಲ್ಲಿ ಸಂಬಂಧಪಟ್ಟ ಬಿಎಲ್ಒ ಓದಬೇಕು. ಆ ಮೂಲಕ ಮತಪಟ್ಟಿಯಲ್ಲಿ ಆದ ಸೇರ್ಪಡೆ ಬೇರ್ಪಡೆಗಳಲ್ಲಿ ಆಗಿರಬಹುದಾದ ತಪ್ಪುಗಳನ್ನು ತಿದ್ದುಪಡಿ ಖಾತರಿಗೊಳಿಸಿಕೊಳ್ಳಬಹುದು ಎಂದು ಹೇಳುತ್ತದೆ. 5. ಅಷ್ಟರ ಮಟ್ಟಿಗೆ ಅದು ಸಕಾರಾತ್ಮಕ. ಆದರೆ ಅದನ್ನು ಬಳಸಿಕೊಂಡು ಎಸ್ಐಆರ್ ಅನ್ನೂ ಪ್ರಜಾತಂತ್ರೀಕರಣಗೊಳಿಸಬಹುದೆಂಬುದು ತಪ್ಪು ಆಶಾವಾದ. 6.ಏಕೆಂದರೆ 2023ರ ಒManualನ ಸೆಕ್ಷನ್ 11.2.4(VI) ಸ್ಪಷ್ಟಪಡಿಸುವಂತೆ ಅದು ಕರಡು ಪ್ರತಿಯ ಓದನ್ನು ನಿಯಮವಾಗಿಸಿದೆಯೇ ವಿನಾ ಕರಡು ಪ್ರತಿಯ ಸಿದ್ಧತೆ ಮತ್ತು ಓದಿದ ನಂತರ ಸೇರ್ಪಡೆ ಮತ್ತು ಬೇರ್ಪಡೆಗಳ ಉಸ್ತುವಾರಿಯನ್ನಲ್ಲ. ಹೀಗಾಗಿ ಅದು ಮತಪಟ್ಟಿಯಲ್ಲಿ ಸೇರಿಕೊಳ್ಳಲು ಕಡ್ಡಾಯಗೊಳಿಸಿರುವ 11 ದಾಖಲೆಗಳ ಅಗ್ನಿ ಪರೀಕ್ಷೆಯಿಂದ ದಮನಿತ ಜನರನ್ನು ಬಚಾವು ಮಾಡುವುದಿಲ್ಲ. ಮೊದಲನೆಯದಾಗಿ ರಾಜಸ್ಥಾನದಲ್ಲಿ ಸೀಮಿತ ಸೋಷಿಯಲ್ ಆಡಿಟ್ ಮಾಡಲು ಸಾಧ್ಯವಾದದ್ದು ಮುಖ್ಯ ಚುನಾವಣಾ ಆಯುಕ್ತರಾದ ಲಿಂಗ್ ಡೊ ಅನುಮತಿ ನೀಡಿದ್ದಕ್ಕೆ. ಇಲ್ಲದಿದ್ದರೆ ಅದಕ್ಕೆ ಯಾವ ಮಾನ್ಯತೆಯೂ ಇರುತ್ತಿರಲಿಲ್ಲ. ಏಕೆಂದರೆ ಸಂವಿಧಾನದ ಆರ್ಟಿಕಲ್ 324ರ ಪ್ರಕಾರ ಚುನಾವಣಾ ಆಯೋಗ ಸ್ವಾಯತ್ತ ಸಾಂವಿಧಾನಿಕ ಸಂಸ್ಥೆಯಾಗಿದೆ. ಅದರಲ್ಲೂ ಲೋಕಸಭಾ ಮತ್ತು ಶಾಸನಸಭಾ ಚುನಾವಣೆಗಳ ಮತ್ತು ಮತಪಟ್ಟಿ ತಯಾರಿ ಮತ್ತು ಪರಿಷ್ಕರಣೆಗಳ ಪ್ರಕ್ರಿಯೆ ನಿರ್ವಹಣೆ, ಉಸ್ತುವಾರಿ ಮತ್ತು ಮಾರ್ಗದರ್ಶನಗಳೆಲ್ಲದರ ಪರಮಾಧಿಕಾರವನ್ನು ಸಂವಿಧಾನ ಚುನಾವಣಾ ಆಯೋಗಕ್ಕೆ ನೀಡಿದೆ. ಕಾಲಕಾಲಕ್ಕೆ ಸಂಸತ್ತು ಮಾಡುವ ಕಾನೂನುಗಳನ್ನು ಅದು ಅನುಸರಿಸಬೇಕು ಎಂಬ ಅವಕಾಶವಿದ್ದರೂ ಆ ಕಾನೂನಿನ ಅಡಿಯಲ್ಲಿ ಸಾಕಷ್ಟು ಪ್ರಕ್ರಿಯಾತ್ಮಕ ಸ್ವಾಯತ್ತತೆಯನ್ನು ಕೂಡ ಸಂವಿಧಾನವು ಆಯೋಗಕ್ಕೆ ಕೊಟ್ಟುಬಿಟ್ಟಿದೆ. ಸುಪ್ರೀಂ ಕೋರ್ಟ್ ಕೂಡ ಅದರ ಈ ಅಧಿಕಾರದಲ್ಲಿ ಮಧ್ಯಪ್ರವೇಶ ಸಾಧ್ಯವಿಲ್ಲ ಎಂದಿದೆ. ಹೀಗಾಗಿ ಎಸ್ಐಆರ್ ಪ್ರಕ್ರಿಯೆಯಲ್ಲಿ Social Audit ಪ್ರಕ್ರಿಯೆಯನ್ನು ಅಳವಡಿಸಬೇಕೆಂದರೆ ಕೇಂದ್ರ ಚುನಾವಣಾ ಆಯೋಗ ಅದಕ್ಕೆ ಒಪ್ಪಿಕೊಳ್ಳಬೇಕು ಅಥವಾ ಸಂಸತ್ತು ಅದರ ಬಗ್ಗೆ ಒಂದು ಕಾಯ್ದೆ ಮಾಡಬೇಕು. ಆದರೆ ಅವೆರಡೂ ಮೋದಿ ಬಹುಮತ ಇರುವ ಸಂಸತ್ತು ಮತ್ತು ಮೋದಿ ಕೈಗೊಂಬೆ ಚುನಾವಣಾ ಆಯೋಗದ ಮುಂದೆ ಸಾಧ್ಯವಿಲ್ಲ. ಸುಪ್ರೀಂ ಇದರಲ್ಲಿ ಮಧ್ಯಪ್ರವೇಶ ಮಾಡುವುದಿಲ್ಲ. ಹೀಗಾಗಿ Social Audit ಎನ್ನುವುದು ಸದ್ಯಕ್ಕೆ ಒಂದು ಪ್ರಜಾತಾಂತ್ರಿಕ ಆಶಯವಾಗಿ ಪ್ರಚಾರದ ವಿಷಯವಾಗಬಹುದೇ ವಿನಾ ಫ್ಯಾಶಿಸ್ಟ್ ಎಸ್ಐಆರ್ಗೆ ಅಂಕುಶ ಹಾಕುವ ಸಾಧನವಾಗುವುದಿಲ್ಲ. 7. ಅಷ್ಟು ಮಾತ್ರವಲ್ಲ. 1960ರ ಮತಪಟ್ಟಿ ಪರಿಷ್ಕರಣೆಯ ನಿಯಮದ ಪ್ರಕಾರ ಆಯೋಗ ಮಾಡಬೇಕಿದ್ದುದು ಜನರ ವಯಸ್ಸು ಮತ್ತು ಸಾಮಾನ್ಯ ವಸತಿಗಳ ವಿಚಾರಣೆ ಆಧರಿಸಿದ ಈ ಕೆಳಗಿನ ಪರಿಷ್ಕರಣೆಗಳನ್ನು ಮಾತ್ರ. ಅ) Summary Revision (ಸಮಗ್ರ ಪರಿಷ್ಕರಣೆ), ಆ) Intensive Revision (ತೀವ್ರ ಪರಿಷ್ಕರಣೆ), ಇ) Special Summary Revision (ವಿಶೇಷ ಪರಿಷ್ಕರಣೆ)ಮತ್ತು ಈ)Partly Summary and Partly Intensive Revision(ಅರೆ ಸಮಗ್ರ ಮತ್ತು ಅರೆ ತೀವ್ರ ಪರಿಷ್ಕರಣೆ). ಕರ್ನಾಟಕದಲ್ಲಿ 2002ರಲ್ಲಿ ನಡೆದಿರುವುದು ವಿಶೇಷ ಪರಿಷ್ಕರಣೆ. ಗ್ರಾಮಸಭೆಯಲ್ಲಿ ಕರಡು ಪಟ್ಟಿ ಓದಬೇಕೆಂಬ ಪ್ರಸ್ತಾವವಿರುವುದು ಮೇಲಿನ ಪರಿಷ್ಕರಣೆಗಳಲ್ಲಿ ಮಾತ್ರ. ಆದರೆ ಎಸ್ಐಆರ್ ಈವರೆಗೆ ಇರದ ಮೋದಿ ಸರಕಾರದ ಕೈಗೊಂಬೆ ಚುನಾವಣಾ ಆಯೋಗದ ಆವಿಷ್ಕಾರ. ಇದಕ್ಕೆ ಆಯೋಗ ಪ್ರತ್ಯೇಕವಾದ Manual ಬಿಡುಗಡೆ ಮಾಡಿದೆ. ಅದರಲ್ಲಿ ಆಡಿಟ್ ವಿಷಯ ಬಿಡಿ. ಗ್ರಾಮಸಭೆಯಲ್ಲಿ ಕರಡನ್ನು ಓದಬೇಕೆಂಬ ಪ್ರಸ್ತಾವವೂ ಇಲ್ಲ. 8. ಇನ್ನು ಸ್ಥಳೀಯ ಸಂಸ್ಥೆಗಳ ಚುನಾವಣೆಗಳ ಮತಪಟ್ಟಿಯನ್ನು ತಯಾರಿಸುವಲ್ಲಿ ರಾಜ್ಯ ಸರಕಾರಕ್ಕೆ ಪ್ರಮುಖ ಪಾತ್ರ ಇರುವುದರಿಂದ ಸ್ಥಳೀಯ ಸಂಸ್ಥೆಗಳ ಚುನಾವಣಾ ಮತಪಟ್ಟಿ ತಯಾರಿಸಲು Social Audit ನಡೆಸಲು ಸರಕಾರದ ಮೇಲೆ ಒತ್ತಡ ಹಾಕಿ ಆ ಮೂಲಕ ಎಸ್ಐಆರ್ ಪ್ರಕ್ರಿಯೆಯ ಮೋಸವನ್ನು ರೆಡ್ ಹ್ಯಾಂಡ್ ಆಗಿ ಹಿಡಿಯುವ ಬಗ್ಗೆ. ಇದು ಒಂದು ಪ್ರಜಾತಾಂತ್ರಿಕ ಪ್ರಕ್ರಿಯೆ. ಆದ್ದರಿಂದ ಇದನ್ನು ಮಾಡಲು ಯಾವ ವಿರೋಧವೂ ಇರಬಾರದು. ಆದರೆ ಅದರಿಂದ ಎಸ್ಐಆರ್ ಪ್ರಕ್ರಿಯೆಯ ಮೋಸವನ್ನು ರೆಡ್ ಹ್ಯಾಂಡ್ ಆಗಿ ಹಿಡಿಯಬಹುದು ಎನ್ನುವ ವಿಶ್ಲೇಷಣೆಯಲ್ಲಿ ಅತಿಯಾದ ನಿರೀಕ್ಷೆ ಇದೆ. 9. ಉ. ಪ್ರದೇಶದ ರೆಡ್ ಹ್ಯಾಂಡ್ ಉದಾಹರಣೆ: ಉತ್ತರ ಪ್ರದೇಶದಲ್ಲೂ ಇದೇ ರೀತಿ ಏಕಕಾಲಕ್ಕೆ ಎಸ್ಐಆರ್ ಇಲ್ಲದ ಸ್ಥಳೀಯ ಸಂಸ್ಥೆಗಳ ಮತಪಟ್ಟಿಯನ್ನು ಮತ್ತು ಎಸ್ಐಆರ್ ಅನ್ನು ಮಾಡಲಾಯಿತು. ರಾಜ್ಯದ ಚುನಾವಣಾ ಆಯೋಗ ಸ್ಥಳೀಯ ಸಂಸ್ಥೆಗಳ ಚುನಾವಣೆಗಾಗಿ ಎಸ್ಐಆರ್ ಇಲ್ಲದೆ ಮತಪಟ್ಟಿ ತಯಾರು ಮಾಡಿದಾಗ 16.1 ಕೋಟಿ ಮತದಾರರು ನೋಂದಾಯಿತರಾದರು. ಕೇಂದ್ರ ಚುನಾವಣಾ ಆಯೋಗ ಮತಪಟ್ಟಿ ಉ. ಪ್ರದೇಶದಲ್ಲಿ ಎಸ್ಐಆರ್ ಪ್ರಕ್ರಿಯೆಯಲ್ಲಿ ಘೋಷಿಸಲಾಗಿರುವ ಕರಡು ಪಟ್ಟಿಯಲ್ಲಿ ಮತಪಟ್ಟಿಯಲ್ಲಿ ಸೇರಿರುವರು ಕೇವಲ 12.6 ಕೋಟಿ. ಅಂದರೆ ಉತ್ತರ ಪ್ರದೇಶದಲ್ಲಿ ಎಸ್ಐಆರ್ ಪ್ರಕ್ರಿಯೆ 2.5 ಕೋಟಿಗೂ ಹೆಚ್ಚು ಮತದಾರರನ್ನು ಹೊರಗಿಟ್ಟಿರುವುದು ‘ರೆಡ್ ಹ್ಯಾಂಡ್’ ಆಗಿ ಸಾಬೀತಾಗಿದೆ. ಆದರೆ ಅದರಿಂದ ಎಸ್ಐಆರ್ ಪ್ರಕ್ರಿಯೆಯ ಮೇಲಾದ ಪರಿಣಾಮ ಶೂನ್ಯ. ಏಕೆಂದರೆ ಎಸ್ಐಆರ್ನಿಂದ ದಮನಿತ ಜನರು ಹೊರಗಿಡಲ್ಪಡುತ್ತಿದ್ದಾರೆ ಎಂಬುದನ್ನು ಹೊಸದಾಗಿ ಸಾಬೀತು ಮಾಡುವ ಅಗತ್ಯವಿಲ್ಲ. ಅದು ಸ್ಪಷ್ಟವಾಗಿದೆ. ಅದನ್ನು ಸುಪ್ರೀಂ ಮುಂದೆಯೂ ಸಾಧಾರವಾಗಿ ಮುಂದಿಡಲಾಗಿದೆ. ಆದರೆ ಅವರೆಲ್ಲರೂ ನಾಗರಿಕರಲ್ಲ ಅಥವಾ ವಿದೇಶಿಯರು ಎಂಬುದು ಮೋದಿ ಸರಕಾರದ ವಾದ. ಅದನ್ನು ಬೃಹತ್ ಜನಾಂದೋಲನದ ಮೂಲಕವೇ ಸೋಲಿಸಬೇಕು. ಮತ್ತೊಮ್ಮೆ ಮೋದಿ ಸುಳ್ಳನ್ನು ಸಾಬೀತು ಮಾಡಲು ಪ್ರತಿರೋಧವನ್ನು ಬಿಟ್ಟು ಆಯೋಗದ ಮಾನ್ಯತೆ ಇರದ ಆಡಿಟ್ ಅನ್ನು ಮಾಡಿಸುವ ಪ್ರಕ್ರಿಯೆಯ ಹಿಂದೆ ಸಮಯ ಕೊಡುವುದು ಸೂಕ್ತವೇ? 10. ಈ ಎಲ್ಲಾ ಕಾರಣಗಳಿಂದಾಗಿಯೇ MKSS ಇರುವ ರಾಜಸ್ಥಾನದಲ್ಲಾಗಲೀ, ಕಾಂಗ್ರೆಸ್ಗಿಂತ ಬುಡಮಟ್ಟದ ಸಂಘಟನೆಗಳು ಗಟ್ಟಿಯಾಗಿರುವ ಕಮ್ಯುನಿಸ್ಟರ ಕೇರಳ, ಡಿಎಂಕೆಯ ತಮಿಳುನಾಡು ಮತ್ತು ಟಿಎಂಸಿಯ ಪ. ಬಂಗಾಳದಲ್ಲೂ ಸೋಷಿಯಲ್ ಆಡಿಟ್ ಮಾಡಿಸಲಾಗಿಲ್ಲ. ಇವೆಲ್ಲದರ ನಡುವೆಯೂ ಎಸ್ಐಆರ್ ಮಾನದಂಡಗಳನ್ನು ಅನುಸರಿಸಿಯೇ ಎಸ್ಐಆರ್ನಲ್ಲಿ ಹೆಚ್ಚು ಜನರನ್ನು ಒಳಗೊಳ್ಳಲು ತಮಿಳುನಾಡಿನಲ್ಲಿ ಮತ್ತು ಪ. ಬಂಗಾಳದಲ್ಲಿ ಕೇರಳದಲ್ಲಿ ಕಾಂಗ್ರೆಸ್ಗಿಂತ ಗಟ್ಟಿಯಾಗಿ ಅಲ್ಲಿ ಅಧಿಕಾರದಲ್ಲಿರುವ ಪಕ್ಷಗಳು ಸಹಾಯ ಮಾಡಿದವು. ಆದರೂ ರಾಜಸ್ಥಾನದಲ್ಲಿ 45 ಲಕ್ಷ ಅರ್ಹ ಮತದಾರರನ್ನು ತಮಿಳುನಾಡಿನಲ್ಲಿ 98 ಲಕ್ಷ, ಪ.ಬಂಗಾಳದಲ್ಲಿ 58 ಲಕ್ಷ ಜನರನ್ನು ಮತಪಟ್ಟಿಗೆ ಸೇರಿಸಲು ಸಾಧ್ಯವಾಗಲಿಲ್ಲ. ಪ. ಬಂಗಾಳದಲ್ಲಂತೂ ಚುನಾವಣಾ ಆಯೋಗ Logical Discrepancy ಎಂಬ ಹೊಸ ಹೊಸ ನಿಯಮಗಳನ್ನು ರೂಪಿಸುತ್ತಿರುವುದರಿಂದ ಈಗ ಹೊರಗಿಡಲ್ಪಟ್ಟ 58 ಲಕ್ಷ ಜನರ ಜೊತೆಗೆ ಇನ್ನೂ 60 ಲಕ್ಷ ಜನರ ನಾಗರಿಕತ್ವ ವಿಚಾರಣೆ ಹಂತದಲ್ಲಿದೆ. ಕೇರಳದಲ್ಲಿ ಮಾತ್ರ ಐತಿಹಾಸಿಕ ಮತ್ತು ಆಡಳಿತಾತ್ಮಕ ಕಾರಣಗಳಿಂದಾಗಿ ಅಲ್ಲಿ ಚುನಾವಣಾ ಆಯೋಗ ನಿಗದಿ ಪಡಿಸಿದ ದಾಖಲೆಗಳನ್ನು ಬಹುಪಾಲು ಜನರು ಕೊಡಲು ಸಾಧ್ಯವಾಗಿದೆ. ಅದಕ್ಕೆ ಪ್ರಧಾನ ಕಾರಣ ಅಲ್ಲಿಯ ಸರಕಾರ ಹೊಸದಾಗಿ ದಾಖಲೆಗಳನ್ನು ಕೊಟ್ಟಿದ್ದಲ್ಲ. ಅಲ್ಲಿ ಐತಿಹಾಸಿಕವಾಗಿಯೇ ಆಡಳಿತದಲ್ಲಿ ಜನರ ಭಾಗೀದಾರಿಕೆ ತಳಹಂತದಿಂದ ಇರುವುದು. ಆದರೆ ಅಲ್ಲೂ 9 ಲಕ್ಷ ಅತ್ಯಂತ ದಮನಿತರನ್ನು ಎಸ್ಐಆರ್ ಷರತ್ತುಗಳಿಂದಾಗಿ ಮತಪಟ್ಟಿಗೆ ಸೇರಿಸಲು ಸಾಧ್ಯವಾಗಿಲ್ಲ. ಒಟ್ಟು 13 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಎಸ್ಐಆರ್ ಪ್ರಕ್ರಿಯೆ ಮುಗಿದ ನಂತರ 6.5 ಕೋಟಿಗೂ ಭಾರತೀಯರನ್ನು ವಿದೇಶೀಯರು ಎಂದು ಮತಪಟ್ಟಿಯಿಂದ ಹೊರಗಿಡಲಾಗುತ್ತಿದೆ. ಇವರಲ್ಲಿ ಶೇ. 60ರಷ್ಟು ಜನರು ಮಹಿಳೆಯರು ಹಾಗೂ ಮುಸ್ಲಿಮರು, ದಲಿತರು, ಆದಿವಾಸಿಗಳು ಮತ್ತು ನಗರದ ಬಡವರು. ಈ ಅತ್ಯಂತ ಅಲಕ್ಷಿತ ಜನರನ್ನು ಹೊರಗಿಡಲೆಂದೇ ಎಸ್ಐಆರ್ ಷರತ್ತುಗಳನ್ನು ಮತ್ತು ಪ್ರಕ್ರಿಯೆಗಳನ್ನು ರೂಪಿಸಲಾಗಿದೆ. ಹೀಗಾಗಿ ಎಸ್ಐಆರ್ ರದ್ದಾಗದೆ ಅವರನ್ನು ಉಳಿಸುವ ಸಾಧ್ಯತೆ ಇಲ್ಲವೇ ಇಲ್ಲ. ನಮ್ಮ ಹೋರಾಟ ಅದರ ಸುತ್ತ ಕೇಂದ್ರೀಕೃತಗೊಳ್ಳಬೇಕು. ಕಾಂಗ್ರೆಸ್ ಜೊತೆ ಸಮನ್ವಯವೆಂಬ ಅಪಾಯಕಾರಿ ಸುಳಿ 11. ಎಸ್ಐಆರ್ ವಿರೋಧಿ ಹೋರಾಟ ಅಥವಾ ಅದರ ಬಗೆಗಿನ ಯೋಜನೆಗಳು ಕಾಂಗ್ರೆಸ್ ಆಧಾರಿತವಾಗುವುದು ಅಥವಾ ಅವಲಂಬಿಸುವುದು ಅಥವಾ ಆಶ್ರಿತವಾಗುವುದು ಮಹಾ ಅಪಾಯಕಾರಿ. ಏಕೆಂದರೆ ಎಸ್ಐಆರ್ ಪ್ರಕ್ರಿಯೆ ಪ್ರಾರಂಭವಾದಾಗಿನಿಂದಲೂ ಕಾಂಗ್ರೆಸ್ ಎಲ್ಲಾ ರಾಜ್ಯಗಳಲ್ಲೂ ಮೌನ ಸಹಕಾರ ಅಥವಾ ನಿಷ್ಕ್ರಿಯತೆಯನ್ನೇ ತೋರುತ್ತಾ ಬಂದಿದೆ. ಅದಕ್ಕೆ ರಾಜಕೀಯ ಕಾರಣವಿದೆ. ಎಸ್ಐಆರ್ ವಿರೋಧಿಸಿದರೆ ಮುಸ್ಲಿಮ್ ತುಷ್ಟೀಕರಣ ನೀತಿ ಎಂದು ಲೇಬಲ್ ಮಾಡುತ್ತಾರೆ ಎಂಬ ಕಾಂಗ್ರೆಸ್ನ ಕ್ರೋನಿಕ್ ಮೃದು ಹಿಂದುತ್ವ ಕಾಯಿಲೆ. 12. ಮುಸ್ಲಿಮ್ ಪರ ಎಂಬ ಲೇಬಲ್ ಬಂದರೂ ಹಿಂಜರಿಯದೆ ಮಮತಾ ಬ್ಯಾನರ್ಜಿಯ ಟಿಎಂಸಿ ಅಲ್ಲಿ ಕೇಂದ್ರ ಸರಕಾರ ವಿರುದ್ಧ ಮತ್ತು ಚುನಾವಣಾ ಆಯೋಗವನ್ನು ಕಾಂಗ್ರೆಸ್ಗಿಂತ ತೀವ್ರವಾಗಿ ವಿರೋಧಿಸುತ್ತಿದೆ. ಅದಕ್ಕೆ ಒಂದು Existential ಕಾರಣವಿದೆ. ಏಕೆಂದರೆ ಅಲ್ಲಿ ಮುಸ್ಲಿಮರ ಜನಸಂಖ್ಯೆ ಶೇ. 34. ಮಮತಾ ಬ್ಯಾನರ್ಜಿ ಹೋದ ಚುನಾವಣೆಯಲ್ಲಿ ಪಡೆದುಕೊಂಡ ಶೇ. 48 ವೋಟು ಶೇರಿನಲ್ಲಿ ಮುಸ್ಲಿಮ್ ಮತಗಳ ಸಂಖ್ಯೆ ಶೇ. 60ಕ್ಕಿಂತಲೂ ಜಾಸ್ತಿ. ಹೀಗಾಗಿ ಮಮತಾ ಬ್ಯಾನರ್ಜಿ ಬಂಗಾಳದಲ್ಲಿ ಎಸ್ಐಆರ್ ಅನ್ನು ಸಾರ ಸಗಟು ವಿರೋಧಿಸದಿದ್ದರೂ ಚುನಾವಣಾ ಆಯೋಗದ ಮುಸ್ಲಿಮ್ ವಿರೋಧಿ ಕುತಂತ್ರಗಳನ್ನು ವಿಫಲಗೊಳಿಸಲು ನಿರಂತರವಾಗಿ ಪ್ರಯತ್ನಿಸುತ್ತಿದ್ದಾರೆ. ಆದರೂ ಅಲ್ಲಿ ಚುನಾವಣಾ ಆಯೋಗದ ಕುತಂತ್ರವೇ ಗೆಲ್ಲುತ್ತಿದೆ. ಸುಪ್ರೀಂ ಕೋರ್ಟ್ ನ ಸಹಕಾರದ ಕಾರಣಕ್ಕೆ. 13. ಕರ್ನಾಟಕದಲ್ಲಿ ಮುಸ್ಲಿಮರ ಜನಸಂಖ್ಯೆ ಶೇ. 13. ಹೋದ ಚುನಾವಣೆಯಲ್ಲಿ ಅವರಲ್ಲಿ ಶೇ. 80ಕ್ಕೂ ಹೆಚ್ಚು ಮತಗಳು ಕಾಂಗ್ರೆಸ್ಗೆ ಹಾಕಲಾಗಿದೆ. ಆದರೂ ಅದು ಕಾಂಗ್ರೆಸ್ ಪಡೆದ ಒಟ್ಟಾರೆ ಶೇ. 43ರಷ್ಟು ಮತಗಳಲ್ಲಿ ಕಾಲು ಭಾಗವಾಗಬಹುದಷ್ಟೆ. ಹೀಗಾಗಿ ಅಧಿಕಾರಕ್ಕೆ ಬಂದ ನಂತರವೂ ಯಾವುದೇ ವಿಷಯದಲ್ಲಿ ಮುಸ್ಲಿಮರ ಹಿತ ಕಾಯುವ ವಿಶೇಷ ಕ್ರಮಗಳನ್ನೇ ಕೈಗೊಂಡಿಲ್ಲ. ಇತ್ತೀಚಿನ ದಾವಣಗೆರೆ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಆಯ್ಕೆ ಈ ಮೃದು ಹಿಂದುತ್ವಕ್ಕೆ ಮತ್ತೊಂದು ತಾಜಾ ಉದಾಹರಣೆ. ಅಷ್ಟು ಮಾತ್ರವಲ್ಲದೆ ಕಾಂಗ್ರೆಸ್ನೊಳಗೆ ಅಂತರ್ಗತವಾಗಿ ಒಂದು ಮೃದು ಹಿಂದುತ್ವದ ಧಾರೆಯೂ ಹರಿಯುತ್ತಿರುವುದರಿಂದ ಎಸ್ಐಆರ್ ಬಗ್ಗೆ ಕರ್ನಾಟಕದಲ್ಲಿ ಮತ್ತು ದೇಶಾದ್ಯಂತ ಕಾಂಗ್ರೆಸ್ ಜಡತ್ವವನ್ನೇ ಪ್ರಜ್ಞಾಪೂರ್ವಕವಾಗಿ ಮೈಗೂಡಿಸಿಕೊಂಡಿದೆ. ಕಳೆದ ಎರಡೂವರೆ ವರ್ಷಗಳಲ್ಲಿ ಹಣಕಾಸು ಹಂಚಿಕೆಯ ವಿಷಯವೊಂದನ್ನು ಬಿಟ್ಟರೆ ಸಿದ್ದು ಸರಕಾರ ಮೋದಿ ಸರಕಾರದ ವಿರುದ್ಧವಾಗಲೀ, ಹಿಂದುತ್ವ ಮತ್ತು ಸಾಮಾಜಿಕ ಅನ್ಯಾಯದ ವಿಷಯಗಳಲ್ಲಾಗಲೀ ಮೋದಿ ಸರಕಾರಕ್ಕೆ ಔಪಚಾರಿಕ ವಿರೋಧವನ್ನು ಹೊರತುಪಡಿಸಿ ಬೇರೆ ಏನನ್ನೂ ಮಾಡಿಲ್ಲ. ಕರ್ನಾಟಕದಲ್ಲಿ ಸಿದ್ದು ಸರಕಾರ ಬಾಬಾಬುಡಾನ್ ದರ್ಗಾ, ಕೋಮುಶಕ್ತಿ ನಿಯಂತ್ರಣ, ಒಳಮೀಸಲಾತಿ, ಸಾಮಾಜಿಕ ಜನಗಣತಿ, ನಕ್ಸಲ್ ಶರಣಾಗತಿ, ಮೋದಿ NEPಯ ಪಡಿಯಯಚ್ಚಾದ KPS ಶಾಲೆಗಳು, ಒಂದು ಕೋಟಿ ಎಕರೆಗೂ ಹೆಚ್ಚು ಸರಕಾರಿ ಭೂಮಿ ಇದ್ದರೂ ಭೂಮಿ ಮತ್ತು ವಸತಿ ಹೀನರಿಗೆ ಭೂಮಿ ಹಂಚದಿರುವ ನೀತಿ, ಕಾರ್ಪೊರೇಟ್ ಲಾಭಕ್ಕೆ ರೈತ ಭೂಮಿ ವಶ, ಮೋದಿ ಸರಕಾರದ ನಕಲಿ ಆಗಿರುವ ಕಾರ್ಮಿಕ ಕೋಡುಗಳು ಇನ್ನಿತ್ಯಾದಿ 12ಕ್ಕೂ ಹೆಚ್ಚು ಸಾಮಾಜಿಕ ಅನ್ಯಾಯಗಳಲ್ಲಿ ಕೇಂದ್ರದ ನೀತಿಯನ್ನು ಅನುಸರಿಸುವ ಧೋರಣೆಯನ್ನು ತೋರಿದೆಯೇ ವಿನಾ ಅದರ ವಿರೋಧವನ್ನಲ್ಲ. ಮೇಲಿನ ಹಲವಾರು ಅನ್ಯಾಯಗಳನ್ನು ಜಾರಿ ಮಾಡುವ ಮುನ್ನ ಸಿದ್ದು ಸರಕಾರ ನಾಗರಿಕ ಸಮಾಜದೊಂದಿಗೆ ಸಮಾಲೋಚನೆ ಮಾಡುವ, ಒಳಗೊಳ್ಳುವ ನಾಟಕಗಳನ್ನು ಆಡಿದೆ. ಆದರೆ ಅಂತಿಮವಾಗಿ ಅದು ನಾಗರಿಕ ಸಮಾಜಕ್ಕೆ ದ್ರೋಹ ಬಗೆದಿದೆ. ಎಸ್ಐಆರ್ ವಿಷಯದಲ್ಲೂ ಕಾಂಗ್ರೆಸ್ಗೆ ತಿಳಿಯದೆ ಇರುವುದು ಏನಿಲ್ಲ. ಕಾಂಗ್ರೆಸ್ಗೆ ಅದರ ಪರಿಣಾಮಗಳು ಗೊತ್ತಿಲ್ಲ ಎಂದುಕೊಳ್ಳುವುದು ಅಥವಾ ಅವರ ಜೊತೆ ಸಮಾಲೋಚನೆ ಮಾಡಿ ತಿಳಿವಳಿಕೆ ಬದಲಿಸಬಹುದೆನ್ನುವುದು ನಮ್ಮ ಅಪಾಯಕಾರಿ ಅಮಾಯಕತೆ. ಒಂದಿಬ್ಬರು ನಾಯಕರು ಅಥವಾ ಮಂತ್ರಿಗಳು ಈ ವಿಷಯಗಳ ಬಗ್ಗೆ ಸಹಮತ ತೋರಿದರೂ ಒಂದು ಪಕ್ಷ ಅಥವಾ ಸರಕಾರದ ನಿಲುವು ಅದರ ವರ್ಗ ಹಾಗೂ ಅಧಿಕಾರ ಹಿತಾಸಕ್ತಿಯನ್ನು ಮೀರುವುದಿಲ್ಲ ಎಂಬುದನ್ನು ಅದು ಪದೇ ಪದೇ ರುಜುವಾತು ಮಾಡುತ್ತಲೇ ಇದೆ. ಆದ್ದರಿಂದಲೇ ಎಲ್ಲಾ ಗೊತ್ತಿದ್ದೇ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಎಸ್ಐಆರ್ ವಿಷಯದಲ್ಲಿ ರಾಜಕೀಯ ಮಾಡುವುದಿಲ್ಲ ಎಂದು ಘೋಷಿಸಿದ್ದು. ಹೀಗಾಗಿ ಜನಸಂಘಟನೆಗಳು ಕಾಂಗ್ರೆಸ್ನ ಜೊತೆ, ಸರಕಾರದ ಜೊತೆ ಸಮನ್ವಯ ಸಾಧಿಸಿ, ಕಾಮನ್ ವಾರ್ ರೂಮ್ ಮಾಡಿಕೊಂಡು ಎಸ್ಐಆರ್ ವಿರೋಧಿಸುವ ಕಾರ್ಯನೀತಿ ಎಡವಿದ ಕಡೆಯೇ ಎಡವುವ ಅಪಾಯಕಾರಿ ಮತ್ತು ಆತ್ಮಹತ್ಯಾತ್ಮಕ ಕಾರ್ಯ ನೀತಿಯಾಗುತ್ತದೆ. ಆದ್ದರಿಂದ: -ಎಸ್ಐಆರ್ನ್ನು ಸಾರಾಸಗಟು ವಿರೋಧಿಸುವ ಅಗತ್ಯದ ಬಗ್ಗೆ ರಾಜ್ಯಾದ್ಯಂತ ವಿಸ್ತೃತ ಅರಿವು, ಅಭಿಯಾನ ನಡೆಸಬೇಕು. -ಎಸ್ಐಆರ್ ಒಳಗೆ ದಾಖಲೆಗಳಿರುವವರು ಬಚಾವಾಗುವ ಅವಕಾಶವಿದೆ. ಅದು ಸಾಮಾನ್ಯವಾಗಿ ಮಧ್ಯಮವರ್ಗಗಳಿಗೆ ಸಾಧ್ಯವಾಗುತ್ತದೆ. ಆ ವರ್ಗಗಳಿಗೂ ಬೆಂಬಲವಾಗಿ ಚಳವಳಿಗಳು ನಿಲ್ಲುವುದರಲ್ಲಿ ತಪ್ಪಿಲ್ಲ. ಆದರೆ ಆ ಮಧ್ಯಮ ವರ್ಗದ ಆಸಕ್ತಿ ಮತ್ತು ಮಿತಿಗಳೇ ಚಳವಳಿಗಳ ಆಸಕ್ತಿ ಮತ್ತು ಮಿತಿಯೂ ಆಗಿಬಿಟ್ಟರೆ ದಮನಿತ ಸಮುದಾಯಗಳ ಕೋಟಿ ಕೋಟಿ ತಳವರ್ಗಗಳು ಅನಾಥವಾಗುತ್ತವೆ. -ಎಪ್ರಿಲ್ನಲ್ಲಿ ಮೊದಲ ಹಂತದ ಎಸ್ಐಆರ್ ಪ್ರಾರಂಭವಾಗಲಿದ್ದು ಆಗ ಸಮುದಾಯಗಳು ನೇರವಾಗಿ ಎಸ್ಐಆರ್ನ ಕ್ರೂರ ಷರತ್ತುಗಳ ಬಿಸಿಗೆ ಗುರಿಯಾಗುತ್ತಾರೆ. ಆಗ ಎಸ್ಐಆರ್ ರದ್ದಾಗಬೇಕೆಂಬ ಅಗತ್ಯದ ಅರಿವು ಸ್ಪಷ್ಟವಾಗಿ ಚಳವಳಿ ಕಟ್ಟಲು ಇನ್ನಷ್ಟು ಪೂರಕ ವಾತಾವರಣ ಸೃಷ್ಟಿಯಾಗುತ್ತದೆ. ಆ ಹಂತದಲ್ಲಿ ಆ ಅರಿವನ್ನು ಆಧರಿಸಿ ವಿಶಾಲವಾದ ಜನಹೋರಾಟವನ್ನು ಕಟ್ಟಬೇಕು. ಅಲ್ಲಿಯವರಗೆ ಅರಿವಿನ ಅಭಿಯಾನ ಹಾಗೂ ಸಾಧ್ಯವಿದ್ದ ಕಡೆ ಪ್ರತಿಭಟನೆಗಳನ್ನು ಆಯೋಜಿಸಬೇಕು. -ಕಾಂಗ್ರೆಸ್ ಪಕ್ಷ ಎಸ್ಐಆರ್ ಅನ್ನು ಬಹಿರಂಗವಾಗಿ ಮತ್ತು ಸಾರಸಗಟಾಗಿ ವಿರೋಧಿಸಬೇಕೆಂದು ಬಹಿರಂಗ ಆಗ್ರಹವನ್ನು ಮಾಡಬೇಕು ಹಾಗೂ ಕಾಂಗ್ರೆಸ್ ಪಕ್ಷವೂ ಅದಕ್ಕೆ ಬದ್ಧವಾಗಿ ಹೋರಾಟಗಳನ್ನು ಮಾಡಬೇಕೆಂದು ಆಗ್ರಹಿಸಬೇಕು. ಆದರೆ ಕಾಂಗ್ರೆಸ್ ಅದನ್ನು ಮಾಡುವುದಿಲ್ಲವೆಂಬ ಬಗ್ಗೆ ಸ್ಪಷ್ಟತೆಯನ್ನು ಇಟ್ಟುಕೊಳ್ಳಬೇಕು. ಆದರೆ ಜನಸಂಘಟನೆಗಳು ಎಸ್ಐಆರ್ ವಿರೋಧಿ ಹೋರಾಟವನ್ನು ಪ್ರತ್ಯೇಕವಾಗಿಯೇ ಕಟ್ಟಬೇಕು. ಅವರೊಂದಿಗೆ ಸಮನ್ವಯವೆಂದರೆ ಕಾಂಗ್ರೆಸ್ನ ಧೋರಣೆಗಳಿಗೆ ಜನಹೋರಾಟದ ನೈತಿಕ ಮುಖವಾಡವನ್ನು ಕೊಟ್ಟ ಹಾಗೇ. -ಕರ್ನಾಟಕದಲ್ಲಿ ಚುನಾವಣೆಗಳಿಗೆ ಇನ್ನೂ ಎರಡು ವರ್ಷ ಸಮಯವಿದೆ. ಹೀಗಾಗಿ ಕರ್ನಾಟಕದಲ್ಲಿ ತಮಿಳುನಾಡು, ಕೇರಳ ಮತ್ತು ಪ. ಬಂಗಾಳದಲ್ಲಿ ಮಾಡಿದಂತೆ ಅವಸರವಸರವಾಗಿ ಮತಪಟ್ಟಿ ಪರಿಷ್ಕರಣೆ ಮಾಡುವ ಅಗತ್ಯವಿಲ್ಲ. ಆದ್ದರಿಂದ ಕರ್ನಾಟಕ ಸರಕಾರ ಸುಪ್ರೀಂ ಕೋರ್ಟ್ನಲ್ಲಿ ಎಸ್ಐಆರ್ನ ಸಾಂವಿಧಾನಿಕ ಮಾನ್ಯತೆಯ ಬಗ್ಗೆ ಅಂತಿಮ ನಿರ್ಧಾರ ಮಾಡುವವರೆಗೆ ಎಸ್ಐಆರ್ ಮಾಡದಿರಲು ಆಗ್ರಹಿಸಬೇಕು.
\5 ತಿಂಗಳಾದ್ರೂ ಸಿಗದ ದಸರಾ ಲೆಕ್ಕ: ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಭ್ರಷ್ಟಾಚಾರದ ಆರೋಪ''
ಬೆಂಗಳೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ ಮುಗಿದು ಐದು ತಿಂಗಳು ಕಳೆಯಿತು. ಈ ಹಬ್ಬದ ಆಚರನೆಗಾಗಿ ಖರ್ಚು ಮಾಡಿದ 30 ಕೋಟಿ ರೂಪಾಯಿಗಳ ಲೆಕ್ಕ ನೀಡಲು ಈ ಕಾಂಗ್ರೆಸ್ ಸರ್ಕಾರಕ್ಕೆ ಸಾಧ್ಯವಾಗಿಲ್ಲ ಎಂದರೆ ಇದರರ್ಥವೇನು?. ಖರ್ಚು ವೆಚ್ಚದ ಲೆಕ್ಕ ಕೊಡಿ ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರು ಸಿಎಂ ಸಿದ್ದರಾಮಯ್ಯರನ್ನು ಪ್ರಶ್ನಿಸಿದ್ದಾರೆ. ಇನ್ನೈದಾರು ತಿಂಗಳು ಕಳೆದರೆ
ಚಿನ್ನದ ಬೆಲೆ ಸತತ ಇಳಿಕೆಯಾಗಿ, ಚಿನ್ನಾಭರಣ ಪ್ರಿಯರು ಕೊಳ್ಳುವ ಯೋಜನೆ ಹಾಕುತ್ತಿರುವಾಗಲೇ ಮತ್ತೆ ಝಾಗತಿಕ ಅನಿಶ್ಚಿತತೆಯಿಂದಾಗಿ ಚಿನ್ನದ ಬೆಲೆಯಲ್ಲಿ ಭಾರಿ ಹೆಚ್ಚಳ ಕಂಡಿದೆ. ಬೆಳ್ಳಿ ಬೆಲೆಯೂ ಏರಿಕೆ ಆಗಿದೆ. ಈಗ ಆಭರಣ ಚಿನ್ನದ ಬೆಲೆ 1.34 ಲಕ್ಷ ರೂ ಆಗಿದ್ದು, 24 ಕ್ಯಾರೆಟ್ ಬೆಲೆ ಹಾಗೂ ಬೆಳ್ಳಿ ಬೆಲೆ ಎಷ್ಟಾಗಿದೆ ನೋಡಿ..
ಗಂಜಿಗೌಡ ಎಂದು ಕರೆಯಲಾಗುವ ಮುಕ್ರಿಯರು
ಮುಕ್ರಿಯರು ನೋಡಲಿಕ್ಕೆ ಕಪ್ಪು ಬಣ್ಣದ ಕುಳ್ಳಗಿನ ದೇಹ ಆಕೃತಿ ಉಳ್ಳವರು. ನಿಲುವಿನಲ್ಲಿ ದ್ರಾವಿಡರ ಚಹರೆ ಎದ್ದು ಕಾಣುತ್ತದೆ. ಸ್ವಲ್ಪ ಮುಂಚಾಚಿತ ದವಡೆ ಇವರನ್ನು ಗುರುತಿಸುವ ಒಂದು ಲಕ್ಷಣ. ಇವರು ಅಷ್ಟೇನೂ ದೇಹದಾರ್ಢ್ಯ ಉಳ್ಳವರಲ್ಲ. ಪೀಚಲು ದೇಹ ಉಳ್ಳವರು, ಆದರೆ ಶ್ರಮವಹಿಸಿ ದುಡಿಯುವವರಾಗಿದ್ದಾರೆ. ಒಮ್ಮೊಮ್ಮೆ ಕೊಂಚ ಸಿದ್ದಿಗಳಂತೆ ಕಂಡರೂ ಸಿದ್ದಿಗಳಂತೆ ಪೂರ್ತಿ ಕಡುಕಪ್ಪು ಬಣ್ಣದ ನೀಗ್ರೋಗಳಂತೆ ಕಾಣುವುದಿಲ್ಲ. ಅತ್ಯಂತ ಸೌಮ್ಯ ಸ್ವಭಾವದವರಾದ ಮುಕ್ರಿಯರು ಸಹಜವಾಗಿ ನಾಚಿಕೆ ಸ್ವಭಾವದವರೂ ಆಗಿದ್ದಾರೆ. ಗುಡಿಯ ಭಟ್ಟರು, ಒಡೆಯ ಶೆಟ್ಟರು ಸ್ವಾರ್ಥಲೋಲುಪರು ಮುಕ್ರಿ, ಹಳ್ಳೇರು, ಅಗೇರು, ಹಾಲಕ್ಕಿ ಕುಣುಬಿಗಳೆಲ್ಲ ಉಸಿರುಗಟ್ಟಿ ಬದುಕಿಹರು ಇದ್ದು ಸತ್ತಂತೆ ಉತ್ತರಕನ್ನಡದಲ್ಲಿ ನಿತ್ಯ ನೆರೆಯುತಿರೆ ಖದೀಮರ ಸಂತೆ ಮುಕ್ರಿಯರು, ಹಳ್ಳೇರು, ಅಗೇರರು, ಹಾಲಕ್ಕಿಯರು, ಕುಣುಬಿಯರಂತಹವರು ನೆಲೆಸಿರುವ ಹೊನ್ನಾವರದಲ್ಲೇ ವಾಸವಿರುವ ಕನ್ನಡದ ಕವಿ, ಸಾಮಾಜಿಕ ಹೋರಾಟಗಾರರಾಗಿರುವ ಶ್ರೀಪಾದಶೆಟ್ಟರು ಅಲ್ಲಿ ಜಾತಿವರ್ಗಗಳ ಸ್ಥಿತಿಗತಿಯನ್ನು ತಮ್ಮ ಪದ್ಯವೊಂದರಲ್ಲಿ ಮೇಲಿನಂತೆ ವರ್ಣಿಸುತ್ತಾರೆ. ಮುಕ್ರಿ ಸಮುದಾಯದವರು ಬಹುತೇಕ ಕಾರವಾರ ಜಿಲ್ಲೆಯಲ್ಲೇ ನೆಲೆಸಿದ್ದಾರೆ. ಇವರು ಬಹುತೇಕ ನದಿಗಳು ಸಮುದ್ರ ಸೇರುವ ಪ್ರದೇಶಗಳಲ್ಲೇ ತಮ್ಮ ನೆಲೆಗಳನ್ನು ಕಟ್ಟಿಕೊಂಡಿದ್ದಾರೆ. ಹೊನ್ನಾವರ ತಾಲೂಕಿನ ಮುಗ್ವಾ, ಊರನಕೇರಿ, ಬಾಸ್ಕೇರಿ, ಹೊಸಾಕುಳಿ, ಸಾಲಕೋಡ, ಹೆಬ್ಬಾನಕೇರಿ, ಕಡತೋಕ, ಕಡ್ಲೆ ಕರ್ಕಿ, ಮಠದಕೇರಿ, ಹಳದಿಪುರ, ಅಗ್ರಹಾರ, ಮಾವಿನಕುರ್ವೆ, ರಾಮೇಶ್ವರ ಕಂಬಿಗಳಲ್ಲಿ ವಾಸಿಸುತಿದ್ದಾರೆ. ಕುಮಟಾದ ಧಾರೇಶ್ವರ, ಹಂದಿಗಾಣ, ಬಗ್ಗೋರ, ಚಂದಾವರ, ಮೂರೂರು ಹೆಗಡೆ, ಮಿರ್ಜಾನ, ಗೋಕರ್ಣ, ಹೊಲನಗದ್ದೆ ಮತ್ತು ಜಾಡಗಳಲ್ಲಿ ವಾಸಿಸುತಿದ್ದಾರೆ. ಮುಕ್ರಿಯರು ಸಹಜವಾಗಿ ಸ್ತ್ರೀದೈವಗಳನ್ನೇ ಪೂಜಿಸುತ್ತಾರೆ, ಮುಗ್ವಾದ ಬೆಳ್ಳಿಯಮ್ಮ, ಹಳದಿಪುರದ ದೇವಕಾನಮ್ಮ, ಶಿರಸಿಯ ಮಾರಮ್ಮ, ಮುಗ್ವಾದ ಜಟ್ಟಗಳು ಪ್ರಮುಖವಾದವು. ಉತ್ತರ ಕನ್ನಡ ಜಿಲ್ಲೆಯಲ್ಲಿ ಮುಕ್ರಿಯರು ಅಸ್ಪಶ್ಯರು, ಇವರ ಹೆಣ್ಣುಮಕ್ಕಳು ಬಹುತೇಕ ಹಾಲಕ್ಕಿ ಒಕ್ಕಲಿಗರನ್ನು ಹೋಲುತ್ತಾರೆ, ಹಾಲಕ್ಕಿಯರಂತೆಯೇ ಕೊರಳಲ್ಲಿ ಕರಿಮಣಿ ಸರಗಳನ್ನು ಧರಿಸಿರುತ್ತಾರೆ. ಒಂದು ಐತಿಹ್ಯದ ಪ್ರಕಾರ ಮುಕ್ರಿಯರು ಮೂಲತಃ ಹಾಲಕ್ಕಿ ಒಕ್ಕಲಿಗರಾಗಿದ್ದರಂತೆ. ಹಾಲಕ್ಕಿಯರಿಗೆ ನಿಷಿದ್ಧವಾಗಿದ್ದ ಸೇಂದಿಯನ್ನು ಇವರು ಹೇಗೋ ರೂಢಿಸಿಕೊಂಡಿದ್ದರಂತೆ. ಸೇಂದಿ ಕುಡಿಯುವುದು ಹಾಲಕ್ಕಿಯರ ಪ್ರಕಾರ ದುರ್ನಡತೆ. ಆಗ ಹಾಲಕ್ಕಿಯರ ಗೌಡರು, ಗುರುಗೌಡರ ಸಮ್ಮುಖದಲ್ಲಿ ವಿಚಾರಣೆ ಮಾಡುವಾಗ ಮುಕ್ರಿಯರು ಮೂಕರಂತೆ ನಿಂತುಬಿಟ್ಟರಂತೆ! ಆದ್ದರಿಂದ ಇವರನ್ನು ‘ಮೂಕರು’ ಎಂದು ಕರೆದು ಹಾಲಕ್ಕಿ ಸಮಾಜದಿಂದ ಹೊರಹಾಕಿದರಂತೆ. ಅಂದಿನಿಂದ ಇವರು ಮೂಕರು, ಮುಕರಿ, ಮುಕ್ರಿ ಆದರಂತೆ. ಇವರು ಹಾಲಕ್ಕಿ ಸಮುದಾಯದಿಂದ ಹೊರ ಹಾಕಲ್ಪಟ್ಟ ಮೇಲೆ ಅನ್ನಕ್ಕೆ ಆಧಾರವಿಲ್ಲದೆ ಒಪ್ಪತ್ತು ಗಂಜಿ ಉಂಡು ಮಲಗಿದರಂತೆ. ಇದರರ್ಥ ಇವರೂ ಗೌಡರೇ ಆದರೆ ಹಾಲಕ್ಕಿ ಒಕ್ಕಲಿಗರ ಹಾಗೆ ಹಾಲಕ್ಕಿಯೂ ಇಲ್ಲದೆ, ಗೌಡಿಕೆಯೂ ಇಲ್ಲದೆ ಬಡವರಾಗಿ ಬಾಳಿದ್ದರಿಂದ ಇವರನ್ನು ‘ಗಂಜಿಗೌಡರು’ ಎಂದು ಕರೆಯಲಾಯಿತಂತೆ. ಮುಕ್ರಿಯರ ಕುರಿತು ಇಂತಹ ಅನೇಕ ಪ್ರಸಂಗಗಳನ್ನು ಒಳಗೊಂಡಂತೆ ಮುಕ್ರಿ ಸಮುದಾಯದ ಜೀವನ ವಿಧಾನ ಕುರಿತು ಸಂಶೋಧನೆ ಮಾಡಿರುವ ಡಾ.ಎಚ್.ಎಸ್. ಮೋಹನ ಅವರು ಮುಕ್ರಿಯರ ಬದುಕನ್ನು ಸಮಗ್ರವಾಗಿ ಕಟ್ಟಿಕೊಟ್ಟಿದ್ದಾರೆ. ಇದನ್ನು ಡಾ.ಬಿ.ಆರ್.ಅಂಬೇಡ್ಕರ್ ಸಂಶೋಧನಾ ಸಂಸ್ಥೆ ಪ್ರಕಟಿಸಿದೆ. ಮುಕ್ರಿಯರು ನೋಡಲಿಕ್ಕೆ ಕಪ್ಪು ಬಣ್ಣದ ಕುಳ್ಳಗಿನ ದೇಹ ಆಕೃತಿ ಉಳ್ಳವರು. ನಿಲುವಿನಲ್ಲಿ ದ್ರಾವಿಡರ ಚಹರೆ ಎದ್ದು ಕಾಣುತ್ತದೆ. ಸ್ವಲ್ಪ ಮುಂಚಾಚಿತ ದವಡೆ ಇವರನ್ನು ಗುರುತಿಸುವ ಒಂದು ಲಕ್ಷಣ. ಇವರು ಅಷ್ಟೇನೂ ದೇಹದಾರ್ಢ್ಯ ಉಳ್ಳವರಲ್ಲ. ಪೀಚಲು ದೇಹ ಉಳ್ಳವರು, ಆದರೆ ಶ್ರಮವಹಿಸಿ ದುಡಿಯುವವರಾಗಿದ್ದಾರೆ. ಒಮ್ಮೊಮ್ಮೆ ಕೊಂಚ ಸಿದ್ದಿಗಳಂತೆ ಕಂಡರೂ ಸಿದ್ದಿಗಳಂತೆ ಪೂರ್ತಿ ಕಡುಕಪ್ಪು ಬಣ್ಣದ ನೀಗ್ರೋಗಳಂತೆ ಕಾಣುವುದಿಲ್ಲ. ಅತ್ಯಂತ ಸೌಮ್ಯ ಸ್ವಭಾವದವರಾದ ಮುಕ್ರಿಯರು ಸಹಜವಾಗಿ ನಾಚಿಕೆ ಸ್ವಭಾವದವರೂ ಆಗಿದ್ದಾರೆ. ಮುಕ್ರಿಯರ ಆರ್ಥಿಕ ಪರಿಸ್ಥಿತಿ ಅತ್ಯಂತ ದಾರುಣವಾಗಿದೆ. ಭೂರಹಿತರಾದ ಬಹುತೇಕ ಮುಕ್ರಿಯರು ಭೂಮಾಲಕ ಹವ್ಯಕರ ಬಳಿ ಸಾಲಸೋಲ ಮಾಡಿ ಅದನ್ನು ತೀರಿಸಲು ಉಳುವ, ಬಾವಿ ತೋಡುವ, ತೆಂಗಿನಕಾಯಿ ಕೀಳುವುದು ಅದರ ನಾರುತೆಗೆಯುವುದೇ ಮುಂತಾದ ಕೆಲಸ ಮಾಡುತ್ತಾರೆ. ಇದರೊಂದಿಗೆ ಜಂಬಿಟ್ಟಿಗೆ ಕಲ್ಲು ತೆಗೆಯುವುದು, ಮಣ್ಣು ಹೊರುವುದು, ತೋಟದ ಯಾವುದೇ ಕೆಲಸ ಇದ್ದರೂ ಶ್ರಮವಹಿಸಿ ಮಾಡುತ್ತಾರೆ. ಇಷ್ಟು ಶ್ರಮ ಪಡುವ ಇವರು ಗಂಜಿ, ರಾಗಿ ಅಂಬಲಿ ಕುಡಿದು ಜೀವಿಸುತ್ತಾರೆ. ಈಚೆಗೆ ಒಮ್ಮೆ ಮುಕ್ರಿಯರ ಜನಗಣತಿ ಮಾಡಲಾಗಿದ್ದು ಒಟ್ಟು ಗಣತಿಗೆ ಒಳಪಟ್ಟ 2,779 ಜನರಲ್ಲಿ 649 ಜನ ಪ್ರಾಥಮಿಕ ಶಿಕ್ಷಣ ಪಡೆದಿದ್ದಾರೆ. ಅಂದರೆ ಶೇ. 23.35ರಷ್ಟಿದೆ. ತಾಲೂಕುವಾರು ಪ್ರಮಾಣ ತೆಗೆದುಕೊಂಡರೆ ಕುಮಟಾದಲ್ಲಿ ಶೇ. 23.7, ಹೊನ್ನಾವರ ತಾಲೂಕಿನಲ್ಲಿ ಶೇ. 23.06. ಮಹಿಳಾ ಶೈಕ್ಷಣಿಕ ಪ್ರಗತಿ ಗಮನಿಸಿದರೆ ಕುಮಟಾ ಮತ್ತು ಹೊನ್ನಾವರದಲ್ಲಿ ಅನುಕ್ರಮವಾಗಿ ಶೇ. 48.87 ಮತ್ತು ಶೇ. 49.42 ಇದೆ. ಪ್ರಾಥಮಿಕ ಹಂತದಲ್ಲೇ ಮಹಿಳೆಯರ ಓದಿನ ಪ್ರಮಾಣ ಕಡಿಮೆಯಿದ್ದು ಈ ಮಧ್ಯೆ ಶಾಲೆ ಬಿಟ್ಟವರ ಸಂಖ್ಯೆ ಹೆಚ್ಚಾಗಿದೆ. ಇನ್ನು ಪ್ರೌಢ ಶಿಕ್ಷಣ ಮತ್ತು ಪದವಿ ಶಿಕ್ಷಣದ ಪ್ರಮಾಣ ನೋಡಿದರೆ ಅಘಾತವಾಗುತ್ತದೆ. ಶಿಕ್ಷಣದಿಂದ ವಂಚಿತರಾದ ಈ ಸಮುದಾಯ ಸರಕಾರಿ ಹುದ್ದೆಗಳಲ್ಲಿ ನಾಲ್ಕನೇ ದರ್ಜೆ ಹುದ್ದೆಗಳನ್ನೂ ಪಡೆದ ದಾಖಲೆಯಿಲ್ಲ. ಈ ಕಾರಣಕ್ಕೆ ಈ ಸಮುದಾಯ ಅತ್ಯಂತ ಕಡುಬಡತನದಲ್ಲಿ ನರಳುತ್ತಿದೆ. ಮುಕ್ರಿ ಸಮುದಾಯಕ್ಕೆ ಈವರೆಗೂ ಸರಕಾರದ ಯಾವುದೇ ಅಭಿವೃದ್ಧಿ ಯೋಜನೆಗಳೂ ತಲುಪಿಲ್ಲ. ಮುಕ್ರಿ ಸಮುದಾಯಕ್ಕೂ ತಮ್ಮಂತಹವರ ಅಭಿವೃದ್ಧಿಗೆಂದು ಸರಕಾರ ಎಂಬುದು ಒಂದಿದೆ ಎಂಬ ಕನಿಷ್ಠ ಅರಿವೂ ಇದ್ದಂತಿಲ್ಲ. ಇವರು ನೆಲೆಸಿರುವ ತಾಣಗಳು ಸುಂದರ ಬೆಟ್ಟಗುಡ್ಡಗಳಿಂದ ಆವರಿಸಿವೆ. ನೋಡುಗರಿಗೆ ಇಂತಹ ಅತಿಸೂಕ್ಷ್ಮ ಸಮುದಾಯಗಳು ಅತ್ಯಂತ ಸಮೃದ್ಧವಾಗಿವೆ ಎನಿಸುತ್ತದೆ. ದುರಂತವೆಂದರೆ ಇಂತಹ ಸುಂದರ ನೈಸರ್ಗಿಕ ತಾಣಗಳಲ್ಲಿ ಬದುಕುತ್ತಿರುವ ಇವರ ಬದುಕು ತೀರಾ ಬರ್ಬರವಾಗಿದೆ. ಆಧುನಿಕತೆ, ಶಿಕ್ಷಣ, ಉದ್ಯೋಗಗಳು ಇವರಿಗೆ ಮರೀಚಿಕೆಯಾಗಿವೆ. ಇಂತಹ ಸೂಕ್ಷ್ಮ ಮತ್ತು ಅತಿಸೂಕ್ಷ್ಮ ಸಮುದಾಯಗಳ ಕಡೆ ಸರಕಾರವೆಂಬುದು ನೋಡದಿದ್ದರೆ ಇಂತಹ ಸಮುದಾಯಗಳು ನಶಿಸಿಹೋಗುವ ದಿನಗಳು ದೂರವಿಲ್ಲ.
ಸೋನಿಯಾ ಗಾಂಧಿ ಆರೋಗ್ಯದಲ್ಲಿ ಏರುಪೇರು: ದೆಹಲಿಯಲ್ಲಿ ಆಸ್ಪತ್ರೆಗೆ ದಾಖಲು
ಸೋನಿಯಾ ಗಾಂಧಿ ಅಸ್ವಸ್ಥರಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಮಂಗಳವಾರ ಸಂಜೆ ನಂತರ ಈ ಬೆಳವಣಿಗೆ ನಡೆದಿದ್ದು, ಆತಂಕ ಪಡುವ ಅಗತ್ಯವಿಲ್ಲ ಎಂದಿದ್ದಾರೆ ವೈದ್ಯರು.
ನರೇಗಾ ಹೊರಗುತ್ತಿಗೆ ಒಪ್ಪಂದಗಳಲ್ಲಿ ನಡೆದಿದ್ದ ಅಕ್ರಮ ಸಿಎಜಿ ವರದಿಯಲ್ಲಿ ಬಯಲು
ಬೆಂಗಳೂರು : ನರೇಗಾ ಯೋಜನೆಯಡಿಯಲ್ಲಿ ಮಾನವ ಸಂಪನ್ಮೂಲ ಬಳಕೆಗಾಗಿ ಮಾಡಿಕೊಂಡಿದ್ದ ಹೊರಗುತ್ತಿಗೆ ಒಪ್ಪಂದಗಳಲ್ಲಿ ನಡೆದಿದ್ದ ಅಕ್ರಮ, ಅವ್ಯವಹಾರಗಳನ್ನು ಭಾರತದ ಲೆಕ್ಕ ನಿಯಂತ್ರಕರು ಮತ್ತು ಮಹಾಲೆಕ್ಕ ಪರಿಶೋಧಕರು ಬಯಲು ಮಾಡಿದ್ದಾರೆ. ವಿಧಾನ ಮಂಡಲದಲ್ಲಿ ಮಂಡನೆಯಾಗಿರುವ ಸಿಎಜಿ ವರದಿಯು ನರೇಗಾ ಯೋಜನೆಯಡಿಯಲ್ಲಿನ ಮಾನವ ಸಂಪನ್ಮೂಲ ಬಳಕೆಯ ಹಿಂದಿನ ಅಕ್ರಮ, ಅವ್ಯವಹಾರಗಳನ್ನು ತೆರೆದಿಟ್ಟಿದೆ. ಸರಕು ಸೇವೆಗಳ ಮೌಲ್ಯವು ಒಂದು ಲಕ್ಷ ರೂಪಾಯಿಗಿಂತಲೂ ಮೀರಿದಾಗ ಟೆಂಡರ್ ಪ್ರಕ್ರಿಯೆಯನ್ನು ಅನುಸರಿಸಬೇಕು ಎಂದು ಕೆಟಿಪಿಪಿ ಕಾಯ್ದೆಯ ಸೆಕ್ಷನ್ 4 (ಇ) ನಿಗದಿಪಡಿಸಿದೆ. ಈ ಸಂಬಂಧ ರಾಜ್ಯದ 29 ಜಿಲ್ಲೆಗಳಲ್ಲಿ 2,920 ಸಿಬ್ಬಂದಿಯ ಸೇವೆಗಳನ್ನು ಹೊರಗುತ್ತಿಗೆ ನೀಡಲು ಮಾನವ ಸಂಪನ್ಮೂಲ ಸಂಸ್ಥೆಗಳಿಂದ 2012ರಲ್ಲೇ ಟೆಂಡರ್ ಆಹ್ವಾನಿಸಿತ್ತು. ಈ ಟೆಂಡರ್ ಮೌಲ್ಯಮಾಪನ ನಂತರ 29 ಜಿಲ್ಲೆಗಳಲ್ಲಿ 14 ಏಜೆನ್ಸಿಗಳನ್ನು ನೇಮಿಸಿತ್ತು. 2013ರಲ್ಲಿ ಕಾರ್ಯಾದೇಶ ಪತ್ರ ನೀಡಲಾಗಿತ್ತು. ಇದರ ಪ್ರಕಾರ ಈ ಒಪ್ಪಂದವು 2016ರ ಜುಲೈ 31ರವರೆಗಿತ್ತು. ಆ ನಂತರ ಈ ಇವೇ ಸಂಸ್ಥೆಗಳಿಗೆ 2018ರ ಜೂನ್ 30ರವರೆಗೆ ಕಾಲಾವಕಾಶ ವಿಸ್ತರಿಸಲು ಸಚಿವ ಸಂಪುಟವು ಅನುಮೋದನೆ ನೀಡಿತ್ತು. ಅಲ್ಲದೇ ತಕ್ಷಣವೇ ಟೆಂಡರ್ ಕರೆಯಲು ಸೂಚಿಸಿತ್ತು. ಆದರೆ ಈ ನಿಟ್ಟಿನಲ್ಲಿ 2018ರ ಮೇ, 2019ರ ಜೂನ್ ಮತ್ತು 2021ರ ಡಿಸೆಂಬರ್ನಲ್ಲಿ ಜಾರಿಗೊಳಿಸಿದ್ದ ಟೆಂಡರ್ ಅಧಿಸೂಚನೆಗಳನ್ನು ರದ್ದುಗೊಳಿಸಿತ್ತು. ಇದಕ್ಕೆ ಆಡಳಿತಾತ್ಮಕ ಕಾರಣಗಳನ್ನು ಮುಂದೊಡ್ಡಲಾಗಿತ್ತು ಎಂಬುದನ್ನು ಸಿಎಜಿ ವರದಿಯು ಬಯಲು ಮಾಡಿದೆ. ಪರೀಕ್ಷಾ ತನಿಖೆ ನಡೆಸಿದ್ದ 5 ಜಿಲ್ಲೆಗಳಲ್ಲಿ ಮಾನವ ಸಂಪನ್ಮೂಲ ಸೇವೆಗಳನ್ನು ಈ ಏಜೆನ್ಸಿಗಳು ಮುಂದುವರಿಸಿದ್ದವು. 2019-20ರಿಂದ 2023-24ರವರೆಗೆ ಒಟ್ಟು 86.27 ಕೋಟಿ ರೂ.ಪಾವತಿಸಿತ್ತು. ಇದು ಅಕ್ರಮ ಮತ್ತು ಅನಧಿಕೃತವಾಗಿತ್ತು ಎಂದು ಸಿಎಜಿ ವರದಿಯು ವಿಶ್ಲೇಷಿಸಿದೆ. 86.67 ಕೋಟಿ ರೂ. ಅಕ್ರಮ, ಅನಧಿಕೃತ ಹೇಗೆ? ಆರ್ಎಫ್ಪಿ ಪ್ರಕಾರ ಒಪ್ಪಂದಗಳ ಅವಧಿಯನ್ನು 2016ರ ಜುಲೈ 31ರವರೆಗೆ ಮಾತ್ರ ವಿಸ್ತರಿಸಬಹುದು. ನಂತರ ಕೆಟಿಪಿಪಿ ಕಾಯ್ದೆ ನಿಬಂಧನೆಗಳ ಪ್ರಕಾರ ಹೊಸ ಟೆಂಡರ್ ಕರೆಯಬೇಕು. ಆದರೆ ಇಲಾಖೆಯು ಹೊಸ ಟೆಂಡರ್ ಕರೆಯಲಿಲ್ಲ. ಹೀಗಾಗಿ ಸ್ಪರ್ಧಾತ್ಮಕ ದರಗಳನ್ನು ಪಡೆಯುವ ಅವಕಾಶವನ್ನೂ ಇಲಾಖೆಯು ಕಳೆದುಕೊಂಡಿತು ಎಂದು ಸಿಎಜಿ ವರದಿಯಲ್ಲಿ ವಿವರಿಸಲಾಗಿದೆ. ಹಾಗೆಯೇ ಕರ್ನಾಟಕ ಸರಕಾರದ (ವ್ಯವಹಾರ ವಹಿವಾಟು) ನಿಯಮಗಳು 1977ರ ಪ್ರಕಾರ ಸರಕು ಮತ್ತು ಸೇವೆಗಳ ಖರೀದಿಯ ಪರಿಷ್ಕೃತ ಮೊತ್ತವು 10 ಕೋಟಿ ರೂ.ಮೀರಿದಲ್ಲಿ ಸಚಿವ ಸಂಪುಟದ ಅನುಮೋದನೆ ಕಡ್ಡಾಯವಾಗಿದೆ. ಇದಲ್ಲದೇ ಯಾವುದೇ ಪ್ರಾಧಿಕಾರವು ತನ್ನದೇ ಮಂಜೂರಾತಿ ಅಧಿಕಾರವನ್ನು ಮೀರಿ ವೆಚ್ಚ ಮಾಡುವ ಸಾಧ್ಯತೆ ಇದೆ. ಹೀಗಾಗಿ ಯಾವುದೇ ವೆಚ್ಚವನ್ನು ಮಂಜೂರು ಮಾಡಬಾರದು ಎಂದು ಕರ್ನಾಟಕ ಹಣಕಾಸು ಸಂಹಿತೆ 1958ರ ಕಂಡಿಕೆ 15(4)ರಲ್ಲಿ ಸ್ಪಷ್ವವಾಗಿ ಹೇಳಲಾಗಿದೆ. ಪಾಲನೆಯಾಗದ ಸಚಿವ ಸಂಪುಟದ ಸೂಚನೆ ಆದರೂ ಈ ಮಾನವ ಸಂಪನ್ಮೂಲ ಸೇವೆಗಳ ಏಜೆನ್ಸಿಗಳ ಮುಂದುವರಿಕೆಗೆ 2018ರ ಜೂನ್ 3ರ ನಂತರದ ಅವಧಿಗೆ ಸಚಿವ ಸಂಪುಟದಿಂದ ಯಾವುದೇ ಸಮಯ ವಿಸ್ತರಣೆ ಅನುಮೋದನೆಯೇ ಇರಲಿಲ್ಲ. ಅಲ್ಲದೇ ಹೊಸ ಟೆಂಡರ್ಗಳ ಮೂಲಕ ಏಜೆನ್ಸಿಗಳನ್ನು ನೇಮಕ ಮಾಡುವ ಸಚಿವ ಸಂಪುಟದ ಸೂಚನೆಗಳನ್ನೂ ಪಾಲಿಸಿರಲಿಲ್ಲ ಎಂದು ಸಿಎಜಿ ವರದಿಯಲ್ಲಿ ಹೇಳ ಲಾಗಿದೆ. ಒಪ್ಪಂದವನ್ನು ರದ್ದುಗೊಳಿಸಿದ ಸಂದರ್ಭದಲ್ಲಿ ಮತ್ತೊಂದು ಜಿಲ್ಲೆಯಲ್ಲಿ ಕೆಲಸ ಮಾಡುವ ಯಾವುದೇ ಮಾನವ ಸಂಪನ್ಮೂಲದ ಏಜೆನ್ಸಿಗೆ ಆ ಒಪ್ಪಂದವನ್ನು ನಿಯೋಜಿಸಲು ಆರ್ಎಫ್ಪಿ ಅವಕಾಶ ಕಲ್ಪಿಸಿದೆ. ಈ ನಿಯೋಜನೆಯು ರದ್ದುಗೊಂಡ ಒಪ್ಪಂದಕ್ಕೆ ಅನ್ವಯವಾಗುವ ಅದೇ ನಿಯಮಗಳು ಮತ್ತು ಷರತ್ತುಗಳ ಮೇಲೆಯೇ ಇರಬೇಕು. ಮತ್ತು ಗರಿಷ್ಠ 6 ತಿಂಗಳ ಅವಧಿಗೆ ಮಾತ್ರ ಮುಂದುವರಿಯಬೇಕು. ಈ ಅವಧಿಯಲ್ಲಿಯೇ ಇಲಾಖೆಯು ಹೊಸ ಟೆಂಡರ್ ಆಹ್ವಾನಿಸಬೇಕಾಗಿತ್ತು. ಆದರೆ ಕೊಪ್ಪಳ ಜಿಲ್ಲೆ ಹೊರತುಪಡಿಸಿ 2017ರ ನವೆಂಬರ್ನಿಂದ 2022ರ ಜನವರಿವರೆಗೆ ಗುತ್ತಿಗೆಗಳನ್ನು ಇತರ ಏಜೆನ್ಸಿಗಳಿಗೆ ಮರು ನಿಯೋಜಿಸಿತ್ತು. ನಿಗದಿತ 6 ತಿಂಗಳ ಅವಧಿಯ ಬದಲಿಗೆ ಮರು ನಿಯೋಜಿಸಿದ ಒಪ್ಪಂದಗಳು 2024ರ ಅಕ್ಟೋಬರ್ವರೆಗೂ ಮುಂದುವರಿದಿದ್ದವು. ಇದರಿಂದ ಆರ್ಎಫ್ಪಿಯ ಷರತ್ತು ಉಲ್ಲಂಘಿಸಿದಂತಾಗಿದೆ ಎಂದು ಸಿಎಜಿ ತನ್ನ ವರದಿಯಲ್ಲಿ ವಿವರಿಸಿದೆ. ‘ಈ ಮೇಲಿನ ಎಲ್ಲಾ ಅಂಶಗಳ ಹಿನ್ನೆಲೆಯಲ್ಲಿ ಹೊರಗುತ್ತಿಗೆ ಸಂಸ್ಥೆಗಳಿಗೆ ಪಾವತಿಸಿದ 86.67 ಕೋಟಿ ರೂ. ಅಕ್ರಮವಾಗಿತ್ತು. ಏಕೆಂದರೇ ಅವರ ಸೇವೆಗಳ ವಿಸ್ತರಣೆಯು ಸಚಿವ ಸಂಪುಟದ ನಿರ್ಧಾರಕ್ಕೆ ವಿರುದ್ಧವಾಗಿತ್ತು. ಮತ್ತು ಕೆಟಿಪಿಪಿ ಕಾಯ್ದೆಯ ನಿಬಂಧನೆಗಳನ್ನೂ ಉಲ್ಲಂಘಿಸಿದಂತಾಗಿತ್ತು,’ ಎಂದು ಸಿಎಜಿ ತನ್ನ ವರದಿಯಲ್ಲಿ ಹೇಳಿದೆ. ವರದಿಯಲ್ಲಿನ ಅವಲೋಕನಗಳನ್ನು ರಾಜ್ಯ ಸರಕಾರವು ಒಪ್ಪಿಕೊಂಡಿದೆ. ಸ್ಪರ್ಧಾತ್ಮಕ ದರ ಪಡೆಯುವಲ್ಲಿ ವಿಫಲ ಅದೇ ರೀತಿ ಇತರ ಜಿಲ್ಲೆಗಳಲ್ಲಿ ಸೇವೆಗಳನ್ನು ಒದಗಿಸುವ ಏಜೆನ್ಸಿಗಳಿಗೆ ಗುತ್ತಿಗೆಯನ್ನು ಮರು ನಿಯೋಜಿಸುವ ಸಂದರ್ಭದಲ್ಲಿ ಐದಕ್ಕಿಂತ ಹೆಚ್ಚು ಜಿಲ್ಲೆಗಳನ್ನು ಒಂದೇ ಮಾನವ ಸಂಪನ್ಮೂಲ ಏಜೆನ್ಸಿಗೆ ನಿರ್ಬಂಧಿಸುವ ಆರ್ಎಫ್ಪಿ ಷರತ್ತು ಅನ್ವಯಿಸುವುದಿಲ್ಲ ಎಂದು ಹೇಳಿದೆ. ಇಪಿಎಫ್ ಮತ್ತು ಇಎಸ್ಐ ದೇಣಿಗೆಯನ್ನು ಸಂಬಂಧಪಟ್ಟ ಖಾತೆ ಲೆಕ್ಕ ಶೀರ್ಷಿಕೆಗೆ ಪಾವತಿ ಮಾಡದ ಬಗ್ಗೆ ಟಿಡಿಎಸ್ ಮ್ಯಾನೇಜ್ಮೆಂಟ್ ಕನ್ಸ್ಲ್ಟೆಂಟ್ ಪ್ರೈವೈಟ್ ಲಿಮಿಟೆಡ್ ವಿರುದ್ಧ ತುಮಕೂರು ಜಿಲ್ಲಾ ಪಂಚಾಯತ್ಗೆ ದೂರು ಸಲ್ಲಿಕೆಯಾಗಿತ್ತು. ಈ ದೂರನ್ನೂ ಸಹ ಸಿಎಜಿಯು ಗಮನಿಸಿದೆ.
ಹೊಸ ಯಜಮಾನನ ತೆಕ್ಕೆಗೆ RCB : ತಂಡದಲ್ಲಾಗುವ ಬದಲಾವಣೆ ಏನು - ಕಿಂಗ್ ಕೊಹ್ಲಿ ಭವಿಷ್ಯವೇನು?
RCB Sold and New Owner : ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮಾರಾಟವಾಗಲಿದೆ ಎನ್ನುವ ಹಲವು ದಿನಗಳ ಸುದ್ದಿಗೆ ತೆರೆ ಬಿದ್ದಿದೆ. ಇದಕ್ಕೆ, ಅಧಿಕೃತವಾಗಿ ಬಿಸಿಸಿಐ ಅನುಮೋದನೆ ನೀಡುವುದಷ್ಟೇ ಬಾಕಿಯಿದೆ. ಸೆಪ್ಟಂಬರ್ - ಅಕ್ಟೋಬರ್ ತಿಂಗಳಲ್ಲಿ ಬಿಸಿಸಿಐ ವಾರ್ಷಿಕ ಸಭೆಯಲ್ಲಿ ಸೇಲ್ ಪ್ರಕ್ರಿಯೆಗೆ ಗ್ರೀನ್ ಸಿಗ್ನಲ್ ಸಿಗಬಹುದು. ಹೊಸ ಮಾಲೀಕತ್ವ ಬಂದ ನಂತರ ತಂಡದಲ್ಲಿ ಏನಾದ್ರೂ ಬದಲಾವಣೆಯಾಗಲಿದೆಯಾ? ಕೊಹ್ಲಿ ಭವಿಷ್ಯವೇನು ಎನ್ನುವುದು ಕ್ರಿಕೆಟ್ ಅಭಿಮಾನಿಗಳ ಪ್ರಶ್ನೆಯಾಗಿದೆ.
ಶತ್ರು ಸೈನಿಕರು ನಮ್ಮ ನೆಲಕ್ಕೆ ಕಾಲಿಡ್ತಾರೆ ಎಂದರೆ ಯಾರಾದರೂ ಸರಿ ಒಂದು ಕ್ಷಣ ಆತಂಕದಿಂಧ ಯೋಚಿಸುತ್ತಾರೆ. ಆದರೆ ಇರಾನ್ ಮಾತ್ರ ತನ್ನ ನೆಲಕ್ಕೆ ಬರಲು ಸಿದ್ಧವಾಗಿರುವ ಅಮೆರಿಕನ್ ಯೋಧರಿಗೆ ಸ್ವಾಗತ ಕೋರಿದೆ. ಅಲ್ಲದೇ ಬಹಿರಂಗ ಮೈದಾನದಲ್ಲಿ ಅಮೆರಿಕನ್ ಯೋಧರನ್ನು ಗುರಿಯಾಗಿಸಿಕೊಂಡು ದಾಳಿ ಮಾಡಲು ಉತ್ಸುಕವಾಗಿರುವುದಾಗಿಯೂ ಇರಾನ್ ಹೇಳಿಕೆ ನೀಡಿದೆ. ಅಮೆರಿಕದೊಂದಿಗೆ ನೇರ ಯುದ್ಧ ಮಾತ್ರವಲ್ಲದೇ, ಸೈಕಾಲಾಜಿಕಲ್ ವಾರ್ನಲ್ಲೂ ಇರಾನ್ ನಿರತವಾಗಿದೆ ಎಂಬುದಕ್ಕೆ ಇದು ಸಾಕ್ಷಿ. ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.
Gold Rate: ಸತತ ಕುಸಿತ ಕಾಣುತ್ತಿರುವ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟು ಗೊತ್ತಾ?
ಬೆಂಗಳೂರು: ದೇಶೀಯ ಮಾರುಕಟ್ಟೆಯಲ್ಲಿ ಹಾಗೂ ಜಾಗತಿಕ ಮಟ್ಟದಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ನಿರಂತರ ಏರಿಳಿತಗಳು ಕಂಡುಬರುತ್ತಿವೆ. ಮದುವೆ ಹಾಗೂ ಮುಂಬರುವ ಶುಭ ಸಮಾರಂಭಗಳ ಸೀಸನ್ನಲ್ಲಿ ಆಭರಣ ಖರೀದಿಸುವವರಿಗೆ ಬೆಲೆಗಳ ಏರಿಳಿತದ ಬಗ್ಗೆ ತಿಳಿದುಕೊಳ್ಳುವುದು ಅತಿ ಮುಖ್ಯವಾಗಿದೆ. ಅಂತರರಾಷ್ಟ್ರೀಯ ಮಾರುಕಟ್ಟೆಯ ಟ್ರೆಂಡ್ ಹಾಗೂ ಎಂಸಿಎಕ್ಸ್ (MCX) ಮಾರುಕಟ್ಟೆಯಲ್ಲಿನ ವಹಿವಾಟಿನ ಪ್ರಭಾವದಿಂದಾಗಿ ಮಾರ್ಚ್ 25, 2026 ರಂದು ಚಿನ್ನದ
ಕಾಂಗ್ರೆಸ್ ವಿರೋಧದ ನಡುವೆಯೂ UCC ಅಂಗೀಕರಿಸಿದ ಗುಜರಾತ್ ವಿಧಾನಸಭೆ
ಗಾಂಧಿನಗರ: ಏಳು ಗಂಟೆಗಳ ನಿರಂತರ ಚರ್ಚೆ ಬಳಿಕ ಗುಜರಾತ್ ವಿಧಾನಸಭೆ ಸಮಾನ ನಾಗರಿಕ ಸಂಹಿತೆ (UCC) ಮಸೂದೆಯನ್ನು ಮಂಗಳವಾರ ಅಂಗೀಕರಿಸಿದೆ. ಸಮಾನತೆ ತರುವ ನಿಟ್ಟಿನಲ್ಲಿ ಇದು ಐತಿಹಾಸಿಕ ಸುಧಾರಣೆ ಎಂದು ಬಿಜೆಪಿ ಬಣ್ಣಿಸಿದ್ದು, ಇದು ಮೂಲಭೂತ ಹಕ್ಕುಗಳ ಉಲ್ಲಂಘನೆ ಹಾಗೂ ಮುಸ್ಲಿಂ ವಿರೋಧಿ ಕ್ರಮ ಎಂದು ಕಾಂಗ್ರೆಸ್ ಕಟುವಾಗಿ ಟೀಕಿಸಿದೆ. ಹೊಸ ಮಸೂದೆಯು ವಿವಾಹ, ವಿಚ್ಛೇದನ, ಉತ್ತರಾಧಿಕಾರ ಮತ್ತು ಸಹಜೀವನಕ್ಕೆ ಸಂಬಂಧಿಸಿದಂತೆ ಯಾವುದೇ ಧರ್ಮದವರಿದ್ದರೂ ಒಂದೇ ಕಾನೂನು ಚೌಕಟ್ಟನ್ನು ಅನ್ವಯಿಸುವುದನ್ನು ಕಡ್ಡಾಯಪಡಿಸುತ್ತದೆ. ವಿರೋಧ ಪಕ್ಷಗಳಾದ ಕಾಂಗ್ರೆಸ್ ಮತ್ತು ಆಮ್ ಆದ್ಮಿ ಪಾರ್ಟಿ ಮಸೂದೆಗೆ ವಿರೋಧ ವ್ಯಕ್ತಪಡಿಸಿ, ಇದನ್ನು ಆಯ್ದ ಸಮಿತಿಗೆ ಕಳುಹಿಸಬೇಕು ಎಂದು ಆಗ್ರಹಿಸಿದವು. ಆದರೆ ಇದರ ನಡುವೆಯೂ ಮಸೂದೆಯನ್ನು ಧ್ವನಿಮತದಿಂದ ಅಂಗೀಕರಿಸಲಾಯಿತು. ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರು ಕಲಾಪ ಆರಂಭವಾಗುತ್ತಿದ್ದಂತೆಯೇ ಮಸೂದೆ ಮಂಡಿಸಿದರು. ಮಸೂದೆಯನ್ನು ಅಂತಿಮಪಡಿಸಲು ಮತ್ತು ಯುಸಿಸಿ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಸರ್ಕಾರ ನೇಮಿಸಿದ್ದ ಉನ್ನತ ಮಟ್ಟದ ಸಮಿತಿ ತನ್ನ ಅಂತಿಮ ವರದಿಯನ್ನು ಸಲ್ಲಿಸಿತ್ತು. ಈ ಮಸೂದೆಯ ಅಂಗೀಕಾರದೊಂದಿಗೆ ಗುಜರಾತ್ ಯುಸಿಸಿ ಮಸೂದೆಯನ್ನು ದೇಶದಲ್ಲಿ ಅಂಗೀಕರಿಸಿದ ಎರಡನೇ ರಾಜ್ಯ ಎನಿಸಿದೆ. ಉತ್ತರಾಖಂಡ ಸರ್ಕಾರ 2024ರ ಫೆಬ್ರವರಿಯಲ್ಲಿ ಮಸೂದೆ ಅಂಗೀಕರಿಸುವ ಮೂಲಕ ದೇಶದಲ್ಲೇ ಯುಸಿಸಿ ಜಾರಿಗೆ ತಂದ ಮೊದಲ ರಾಜ್ಯ ಎನಿಸಿಕೊಂಡಿತ್ತು. ಗುಜರಾತ್ ಸಮಾನ ನಾಗರಿಕ ಸಂಹಿತೆ-2026 ಎಂಬ ಪ್ರಸ್ತಾವಿತ ಕಾನೂನನ್ನು ಇಡೀ ರಾಜ್ಯಕ್ಕೆ ಅನ್ವಯಿಸಲಾಗುತ್ತದೆ ಹಾಗೂ ಗುಜರಾತ್ ಭೌಗೋಳಿಕ ಮಿತಿಯಿಂದಾಚೆ ವಾಸಿಸುವ ಗುಜರಾತ್ ಮೂಲದವರಿಗೂ ಅನ್ವಯಿಸಲಾಗುತ್ತದೆ. ಆದರೆ ಈ ಮಸೂದೆ ಪರಿಶಿಷ್ಟ ಪಂಗಡದವರಿಗೆ ಮತ್ತು ಸಂವಿಧಾನಾತ್ಮಕವಾಗಿ ಹಕ್ಕುಗಳು ಸಂರಕ್ಷಿಸಲ್ಪಟ್ಟ ಕೆಲ ಸಂಪ್ರದಾಯಗಳನ್ನು ಹೊಂದಿರುವ ಗುಂಪುಗಳಿಗೆ ಅನ್ವಯಿಸುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ. ರಾಜ್ಯದಲ್ಲಿ ಸಮಾನ ಕಾನೂನು ಚೌಕಟ್ಟು ಸೃಷ್ಟಿಸುವುದು ಮಸೂದೆಯ ಉದ್ದೇಶ ಎಂದು ಹೇಳಲಾಗಿದೆ.
ಬೇಸಿಗೆಯ ಕಡು ಬಿಸಿಲು ಮತ್ತು ಸೆಖೆಯಿಂದ ಹೈರಾಣಾಗಿದ್ದ ಕರ್ನಾಟಕದ ಜನತೆಗೆ ಭಾರತೀಯ ಹವಾಮಾನ ಇಲಾಖೆ ಕೊನೆಗೂ ತಂಪಾದ ಸುದ್ದಿಯೊಂದನ್ನು ನೀಡಿದೆ. ರಾಜ್ಯದ ಹವಾಮಾನದಲ್ಲಿ ಅನಿರೀಕ್ಷಿತ ಬದಲಾವಣೆಯಾಗುತ್ತಿದ್ದು, ಮುಂದಿನ ಐದು ದಿನಗಳ ಕಾಲ ಗುಡುಗು, ಮಿಂಚು ಹಾಗೂ ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆಯನ್ನು ನೀಡಲಾಗಿದೆ. ಈ ದಿಢೀರ್ ಹವಾಮಾನ ಬದಲಾವಣೆಯು ಬೇಸಿಗೆಯ ಬೇಗೆಯಿಂದ ಕಂಗೆಟ್ಟಿದ್ದ ಜನಸಾಮಾನ್ಯರಿಗೆ, ವಿಶೇಷವಾಗಿ ರೈತರಿಗೆ
ಮೋಡಿ ಮಾಡಿದ ಕಾಂತಾರ ಸಿನಿಮಾ: ಕರಾವಳಿಯಲ್ಲಿ ಹೆಚ್ಚಿದ ದೈವಾರಾಧನೆ, ಯುವಜನರಲ್ಲಿ ಮೂಡಿದ ಭಯ-ಭಕ್ತಿ
ಕರಾವಳಿ ಜಿಲ್ಲೆಗಳಲ್ಲಿ ದೈವಾರಾಧನೆ ಹೆಚ್ಚಳ ಕಂಡಿದೆ. ಯುವಜನರಲ್ಲಿ ಕಾಂತಾರಾ ಸಿನಿಮಾದ ಬಳಿಕ , ಭಕ್ತಿ ಭಾವ ಹೆಚ್ಚಾಗಿದ್ದು, ಹೆಚ್ಚೆಚ್ಚು ನೇಮೋತ್ಸವಗಳು ನಡೆಯುತ್ತಿವೆ.

31 C