2026 ರ ವಿಧಾನಸಭಾ ಚುನಾವಣೆಯಲ್ಲಿ ಡಿಎಂಕೆ ಸ್ವಂತವಾಗಿ ಸರ್ಕಾರ ರಚಿಸುತ್ತದೆ: ಸಿಎಂ ಸ್ಟಾಲಿನ್
ತಮಿಳುನಾಡು ವಿಧಾನಸಭಾ ಚುನಾವಣೆ 2026 ರಲ್ಲಿ ಸ್ವತಂತ್ರವಾಗಿ ಸರ್ಕಾರ ರಚನೆ ಮಾಡಿ, ಆಡಳಿತ ನಡೆಸುವ ವಿಶ್ವಾಸವನ್ನು ಸಿಎಂ ಸ್ಟಾಲಿನ್ ವ್ಯಕ್ತಪಡಿಸಿದ್ದಾರೆ. 2026 ರ ಚುನಾವಣೆಯಲ್ಲಿ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡು ಸ್ಪರ್ಧಿಸುವುದಾಗಿ ಡಿಎಂಕೆ ಹೇಳಿದೆ. ಕಾಂಗ್ರೆಸ್ ಜೊತೆಗೆ ನಮಗೆ ಬಿರುಕುಗಳಿಲ್ಲ. ಬಾಂಧವ್ಯ ಚೆನ್ನಾಗಿದೆ ಎಂದು ಹೇಳಿದ್ದಾರೆ.
ಕೆನಡಾದ ಶಾಲೆಯಲ್ಲಿ ಗುಂಡಿನ ದಾಳಿ: 10 ಮಂದಿ ಮೃತ್ಯು, 25 ಜನರಿಗೆ ಗಾಯ
ಒಟ್ಟಾವಾ: ಕೆನಡಾದ ಬ್ರಿಟಿಷ್ ಕೊಲಂಬಿಯಾದ ಪ್ರೌಢಶಾಲೆಯೊಂದರಲ್ಲಿ ನಡೆದ ಗುಂಡಿನ ದಾಳಿಯಲ್ಲಿ 8 ಮಂದಿ ಮೃತಪಟ್ಟಿದ್ದು, 25 ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ರಾಯಲ್ ಕೆನಡಿಯನ್ ಮೌಂಟೆಡ್ ಪೊಲೀಸರು ತಿಳಿಸಿದ್ದಾರೆ. ಇದಲ್ಲದೆ ಘಟನೆ ನಡೆದ ಶಾಲೆಯ ಸಮೀಪದಲ್ಲಿದ್ದ ಮನೆಯಲ್ಲಿ ಇನ್ನಿಬ್ಬರ ಮೃತದೇಹಗಳು ಪತ್ತೆಯಾಗಿವೆ ಎಂದು ಕೆನಡಾದ ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ. ಇದರಿಂದ ಎರಡು ಪ್ರತ್ಯೇಕ ಘಟನೆಯಲ್ಲಿ 10 ಮಂದಿ ಮೃತಪಟ್ಟಿದ್ದಾರೆ. ಟಂಬ್ಲರ್ ರಿಡ್ಜ್ ಸೆಕೆಂಡರಿ ಶಾಲೆಯಲ್ಲಿ ಈ ಘಟನೆ ನಡೆದಿರುವುದಾಗಿ ಪೊಲೀಸರು ಹೇಳಿದ್ದಾರೆ. ಶಂಕಿತ ದಾಳಿಯನ್ನು ಮಹಿಳೆಯೋರ್ವಳು ನಡೆಸಿದ್ದಾಳೆ ಎಂದು ಪ್ರಾಥಮಿಕವಾಗಿ ಅಂದಾಜಿಸಲಾಗಿದೆ. ಈ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ.
ರಾಜಕೀಯ ಹಿತಾಸಕ್ತಿಯ ಹುಸಿ ಹೇಳಿಕೆಗಳು
ಭಾರತದಲ್ಲಿ ವಾಸಿಸುವವರು ಎಲ್ಲರೂ ಹಿಂದೂಗಳೇ, ‘ಹಿಂದೂ’ ಎನ್ನುವುದು ನಾಮಪದವಲ್ಲ ಅದೊಂದು ವಿಶೇಷಣ ಎನ್ನುವ ಅಭಿಪ್ರಾಯವನ್ನು ಮೊನ್ನೆ ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ಸಾರ್ವಜನಿಕವಾಗಿ ವ್ಯಕ್ತಪಡಿಸಿದ್ದಾರೆ. ಈ ಮಾತು ಕೇಳಿಸಿಕೊಳ್ಳುವಾಗ ಅದು Inclusive ಆಗಿಯೂ, ಸಹೋದರತ್ವದ ಸಂದೇಶ ಸಾರುವಂತೆ ಕಾಣುತ್ತದಾದರೂ ಮೋಹನ್ ಭಾಗವತ್ ಅಂಥವರ ಇಂತಹ ಹೇಳಿಕೆಗಳು ಕೆಲವು ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ. ಈ ದೇಶದಲ್ಲಿರುವವರೆಲ್ಲರೂ ಹಿಂದೂಗಳೇ ಅನ್ನುವುದಾದರೆ ಕೋಮುದ್ವೇಷ ಯಾರ ಮೇಲೆ? ಮಾಬ್ ಲಿಂಚಿಂಗ್ಗಳು ಯಾರ ಮೇಲೆ? ಧರ್ಮದ ಹೆಸರಿನಲ್ಲಿ ರಾಜಕಾರಣ ಯಾಕೆ? ಸಂವಿಧಾನ ಸಮಾನತೆಯನ್ನು ಘೋಷಿಸಿದ ಮೇಲೂ ಅಸ್ಪಶ್ಯತೆ, ಜಾತಿ ದೌರ್ಜನ್ಯಗಳು, ಶೋಷಣೆ, ‘ಮರ್ಯಾದಾ ಹತ್ಯೆ’ಗಳು ಯಾಕೆ? ಇದರ ಬಗ್ಗೆ ಯಾಕೆ ಭಾಗವತ್ ಹಾಗೂ ಸಂಘಪರಿವಾರದವರು ಮಾತಾಡುವುದಿಲ್ಲ..? ಇಲ್ಲಿ ಇವರು ಹೇಳುತ್ತಿರುವ ‘‘ಭಾರತದಲ್ಲಿರುವ ಎಲ್ಲರೂ ಹಿಂದೂಗಳೇ’’ ಎನ್ನುವ ಅಭಿಪ್ರಾಯವು ನಿಜಕ್ಕೂ ಭ್ರಾತೃತ್ವವನ್ನು ಸಾಧಿಸಲು ಬಳಕೆಯಾಗುತ್ತಿದೆಯೇ ಅಥವಾ ಯಾವುದಾದರೂ ಷಡ್ಯಂತ್ರವನ್ನು ಮುಚ್ಚಿಹಾಕುವ ರಾಜಕೀಯ ಉಪಕರಣವಾಗಿ ಬಳಸಲಾಗುತ್ತಿದೆಯೇ ಎನ್ನುವುದನ್ನು ಪ್ರಶ್ನಿಸಬೇಕಾಗುತ್ತದೆ. ‘‘ಹಿಂದೂ ನಾವೆಲ್ಲ ಒಂದು’’ ಎನ್ನುವ ಘೋಷಣೆ ಕೇವಲ ಇವರ ರಾಜಕೀಯ ಲಾಭಕ್ಕೆ ಬಲಸಲಾಗುತ್ತದೆಯೇ ಹೊರತು, ಆ ಘೋಷಣೆಗಳು ಹಿಂದೂ ಸಮಾಜದೊಳಗಿನ ಅಸಮಾನತೆ, ಅಸ್ಪಶ್ಯತೆ, ಜಾತಿಯ ಕಾರಣಕ್ಕೆ ಹಕ್ಕುಗಳ ನಿರಾಕರಣೆ, ದಲಿತ, ಆದಿವಾಸಿಗಳ ಮೂಲಭೂತ ಹಕ್ಕುಗಳು ಇದ್ಯಾವುದರ ಬಗ್ಗೆಯೂ ಅವರು ಮಾತನಾಡುವುದಿಲ್ಲ. ಹೀಗಿರುವಾಗ ‘‘ನಾವೆಲ್ಲರೂ ಹಿಂದುಗಳು’’ ಎನ್ನುವ ಮಾತು ಶೋಷಕರ ಕರಾಳ ಇತಿಹಾಸವನ್ನು ಮರೆಮಾಚುವ ಪ್ರಯತ್ನವಾಗುವುದಿಲ್ಲವೇ? ಇನ್ನೊಂದು ಕಡೆ ಮುಸ್ಲಿಮರು, ಕ್ರೈಸ್ತರು, ಸಿಖ್ಖರು, ಬೌದ್ಧರು ಇವರೆಲ್ಲರೂ ಈ ನೆಲದ ನಾಗರಿಕರು. ಆದರೆ ವಾಸ್ತವದಲ್ಲಿ ‘ಹಿಂದೂ’ ಎಂಬ ಪದವನ್ನು ರಾಜಕೀಯವಾಗಿ ಬಹುಸಂಖ್ಯಾತ ಅಸ್ತ್ರವನ್ನಾಗಿ ಬಳಸಲಾಗುತ್ತಿದೆ. ದ್ವೇಷ ಭಾಷಣಗಳು, ಗುಂಪು ಹಲ್ಲೆಗಳು, ಧರ್ಮದ ಹೆಸರಿನ ಹಿಂಸೆಗಳು ಹೆಚ್ಚುತ್ತಿರುವುದು ಎಲ್ಲರಿಗೂ ಗೊತ್ತಿರುವ ಸತ್ಯ. ಭಾರತೀಯರೆಲ್ಲರೂ ಹಿಂದೂಗಳೇ ಎನ್ನುವುದಾದರೆ ಈ ದ್ವೇಷ ಯಾರ ವಿರುದ್ಧ? ನಮ್ಮ ಧರ್ಮ ಅಪಾಯದಲ್ಲಿದೆ ಅನ್ನೋ ಭಯ ಯಾಕೆ? ಇಲ್ಲಿರುವ ಎಲ್ಲರೂ ಹಿಂದೂಗಳೇ ಎನ್ನುವ ಅಭಿಪ್ರಾಯಕ್ಕೆ ದೊಡ್ಡ ವಿರೋಧಾಭಾಸವು ಭಾರತದ ಸಂವಿಧಾನದಲ್ಲಿಯೇ ಇದೆ. ನಮ್ಮ ಸಂವಿಧಾನವು ಭಾರತವನ್ನು ಸ್ಪಷ್ಟವಾಗಿ ಧರ್ಮ ನಿರಪೇಕ್ಷ ಗಣರಾಜ್ಯ ಎಂದು ಘೋಷಿಸುತ್ತದೆ. ಇಲ್ಲಿ ನಾಗರಿಕನ ಗುರುತು ಧರ್ಮದ ಆಧಾರದ ಮೇಲಲ್ಲ, ಬದಲಾಗಿ ಅವರು ಯಾವುದೇ ಧರ್ಮದವರಾಗಿರಲಿ ಭಾರತೀಯ ಅಂದರೆ ‘ಭಾರತೀಯ ನಾಗರಿಕ’ ಎಂದು ಸಾಬೀತಾಗುತ್ತದೆ. ಸಮಾನತೆ, ಸ್ವಾತಂತ್ರ್ಯ, ಭ್ರಾತೃತ್ವ ಇವೇ ಈ ದೇಶದ ಮೂಲ ತತ್ವಗಳು. ಧರ್ಮದ ಹೆಸರಿನಲ್ಲಿ ನಡೆಯುವ ರಾಜಕಾರಣವು ಸಂವಿಧಾನದ ಆತ್ಮವನ್ನೇ ದುರ್ಬಲಗೊಳಿಸುತ್ತದೆ. ತಮಗಿಂತ ಕೆಳಜಾತಿಯಲ್ಲಿ ಪ್ರೀತಿಸಿ ಮದುವೆ ಆದ ಕಾರಣಕ್ಕೆ ಯುವಕ/ಯುವತಿಯರನ್ನು ಅಮಾನುಷವಾಗಿ ಮರ್ಯಾದೆಗೇಡು ಹತ್ಯೆ ಮಾಡಲಾಗುತ್ತಿದೆ. ಮಹಿಳೆಯರ ಮೇಲಿನ ದೌರ್ಜನ್ಯ, ಕಾರ್ಮಿಕರ ಶೋಷಣೆ, ಜಾತಿ ಆಧಾರಿತ ಅವಮಾನ ಇವೆಲ್ಲವೂ ಇನ್ನೂ ಜೀವಂತವಾಗಿವೆ. ಇದು ಯಾವ ರೀತಿಯ ‘ಸಾಂಸ್ಕೃತಿಕ ಏಕತೆ’? ಸಮಸ್ಯೆ ಇರುವುದು ಧರ್ಮದಲ್ಲಲ್ಲ, ಸಮಸ್ಯೆ ಇರುವುದು ಅಧಿಕಾರದ ಅಸಮಾನ ಹಂಚಿಕೆ ಮತ್ತು ಮಾನವೀಯ ಮೌಲ್ಯಗಳ ನಿರಾಕರಣೆಯಲ್ಲಿ. ಹೀಗಾಗಿ, ಮೋಹನ್ ಭಾಗವತ್ ಅವರು ಹೇಳುವ ‘‘ಭಾರತೀಯರೆಲ್ಲರೂ ಹಿಂದೂಗಳೇ’’ ಎನ್ನುವ ಮಾತು ನಿಜವಾಗಬೇಕಾದರೆ, ಅವರು ಮೊದಲು ಸಮಾನ ಹಕ್ಕು, ಸಮಾನ ಗೌರವ, ಸಮಾನ ನ್ಯಾಯವನ್ನು ಒಪ್ಪಿಕೊಳ್ಳುವ ದೊಡ್ಡತನ ತೋರಬೇಕು. ಇಲ್ಲದಿದ್ದರೆ, ಈ ರೀತಿಯ ಹೇಳಿಕೆಗಳು ಕೇವಲ ರಾಜಕೀಯ ಹಿತಾಸಕ್ತಿಯನಿಟ್ಟುಕೊಂಡು ಹೊರಡಿಸುವ ಹುಸಿ ಘೋಷಣೆ ಮತ್ತು ಬಹುಸಂಖ್ಯಾತ ತತ್ವವನ್ನು ಹೇರಲು ಬಳಸುವ ಮುಖವಾಡವಾಗಿ ಕಾಣುತ್ತದೆ. ಭಾರತದಲ್ಲಿ ಎಲ್ಲರೂ ಒಂದೇ ಧರ್ಮಕ್ಕೆ ಸೇರಿದವರಿಲ್ಲ. ಆದರೆ ಎಲ್ಲರೂ ಸಮಾನ ಹಕ್ಕುಗಳನ್ನು ಹೊಂದಿರುವ ನಾಗರಿಕರು. ಧರ್ಮ ಎನ್ನುವುದು ಆಯಾ ವ್ಯಕ್ತಿಯ ನಂಬಿಕೆ. ಆದರೆ ನಮ್ಮ ಸಂವಿಧಾನ ಒಂದು ಸಮೂಹ ಒಪ್ಪಂದ. ಸಂವಿಧಾನಕ್ಕಿಂತ ಮಿಗಿಲಾದುದು ಇಲ್ಲಿ ಯಾವುದೂ ಇಲ್ಲ. ಸಮಾನತೆ ಇಲ್ಲದ ಏಕತೆಯು ದಬ್ಬಾಳಿಕೆಯಿಂದ ಕೂಡಿರುತ್ತದೆ ಎನ್ನುವುದನ್ನು ನಾವು ಅರಿಯಬೇಕು. ಭಾರತ ಭಾರತವಾಗಿ ಉಳಿಯುವುದು ‘‘ಭಾರತೀಯರೆಲ್ಲರೂ ಹಿಂದೂಗಳು’’ ಎನ್ನುವ ಘೋಷಣೆಯಿಂದಲ್ಲ, ಬದಲಾಗಿ ‘‘ನಾವೆಲ್ಲರೂ ಸಮಾನ ನಾಗರಿಕರು’’ ಎನ್ನುವ ಸಂವಿಧಾನಾತ್ಮಕ ಚಿಂತನೆಯಿಂದ.
ಫೆ.13: ಜಾಮಿಅತುಲ್ ಅಶ್ರಫ್ ಅಲ್ ಇಸ್ಲಾಮಿಯ್ಯಾ ಸನದುದಾನ
ಉಳ್ಳಾಲ: ಮಜ್ಲಿಸ್ ಎಜ್ಯು ಪಾರ್ಕ್ ಮುಡಿಪು ಇದರ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ಜಾಮಿಅತುಲ್ ಅಶ್ರಫ್ ಅಲ್ ಇಸ್ಲಾಮಿಯ್ಯಾದ ಸನದುದಾನ ಸಮಾರಂಭ ಫೆ. 13ರಂದು ಶುಕ್ರವಾರ ನಡೆಯಲಿದೆ ಎಂದು ಸ್ವಾಗತ ಸಮಿತಿ ಕನ್ವಿನರ್ ಅಬೂಬಕರ್ ಸಿದ್ದೀಕ್ ಮೋಂಟುಗೋಳಿ ತಿಳಿಸಿದ್ದಾರೆ. ಅವರು ತೊಕ್ಕೊಟ್ಟು ಪ್ರೆಸ್ ಕ್ಲಬ್ನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಫೆ. 13ರಂದು ಬೆಳಿಗ್ಗೆ 10 ಗಂಟೆಯಿಂದ ಮುಂದಿನ ಅವಧಿಯ ಪ್ರವೇಶಾತಿ ಪ್ರಕ್ರಿಯೆ ನಡೆಯಲಿದೆ. ಅದೇ ದಿನ ಸಂಜೆ 6.30 ಗಂಟೆಗೆ ಸನದುದಾನ ಸಮಾರಂಭ ಜರುಗಲಿದೆ ಎಂದರು. ಮಜ್ಲಿಸ್ ಎಜ್ಯು ಪಾರ್ಕ್ ಅಧೀನದ ಜಾಮಿಅತುಲ್ ಅಶ್ರಫ್ ಅಲ್ ಇಸ್ಲಾಮಿಯ್ಯಾ ಸಂಸ್ಥೆಯ ಅಧ್ಯಕ್ಷ ಸಯ್ಯಿದ್ ಮುಹಮ್ಮದ್ ಅಶ್ರಫ್ ಅಸ್ಸಖಾಫ್ ಅಲ್ ಮದನಿ ತಂಙಳ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಸಮಸ್ತ ಕೇರಳ ಜಂಇಯತುಲ್ ಉಲಮಾ ಅಧ್ಯಕ್ಷ ಇ. ಸುಲೈಮಾನ್ ಉಸ್ತಾದ್ ಹಾಗೂ ಉಪಾಧ್ಯಕ್ಷ ಸಯ್ಯಿದ್ ಆಟ್ಟಕೋಯ ತಂಙಳ್ ಕುಂಬೋಳ್ ಸನದುದಾನ ಪ್ರದಾನ ಮಾಡಲಿದ್ದಾರೆ. ಕಾರ್ಯಕ್ರಮದಲ್ಲಿ ಹಲವು ಗಣ್ಯರು ಭಾಗವಹಿಸಲಿದ್ದಾರೆ ಎಂದರು. ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ಅಧ್ಯಕ್ಷ ಸಯ್ಯಿದ್ ಅಶ್ರಫ್ ಅಸ್ಸಖಾಫ್ ಅಲ್ ಮದನಿ ತಂಙಳ್, ಸ್ವಾಗತ ಸಮಿತಿ ಸದಸ್ಯರಾದ ಫಾಝಿಲ್ ಫಿರೋಝ್ ಹಾಗೂ ಮೊಹಮ್ಮದ್ ಹಾಜಿ ಪೊಯ್ಯತಬೈಲ್ ಉಪಸ್ಥಿತರಿದ್ದರು.
ಸಮಾಜದ ಯಾವುದೇ ಕ್ಷೇತ್ರದ ಗಣ್ಯ ವ್ಯಕ್ತಿಗಳ ರಾಜಕೀಯ ಚಟುವಟಿಕೆ ಅಥವಾ ಯಾವುದೇ ಸಂಘಟನೆ ಜೊತೆಗಿನ ಸೈದ್ಧಾಂತಿಕ ಸಾಮೀಪ್ಯ, ಸಹಜವಾಗಿ ಸಾರ್ವಜನಿಕವಾಗಿ ಚರ್ಚೆಗೆ ಒಳಪಡುತ್ತದೆ. ಅದರಂತೆ ಇತ್ತೀಚಿಗೆ ಮುಂಬೈನಲ್ಲಿ ನಡೆದ ಆರ್ಎಸ್ಎಸ್ ಶತಮಾನೋತ್ಸವ ಕಾರ್ಯಕ್ರಮದಲ್ಲಿ, ಬಾಲಿವುಡ್ ನಟ ಸಲ್ಮಾನ್ ಖಾನ್ ಭಾಗವಹಿಸಿದ್ದರು, ಹಾಗೆಯೇ ಖ್ಯಾತ ಗಾಯಕ ಅದ್ನಾನ್ ಸಾಮಿ ಅವರು ಸರಸಂಘಚಾಲಕ ಮೋಹನ್ ಭಾಗವತ್ ಅವರೊಂದಿಗೆ ಮಧ್ಯಾಹ್ನದ ಭೋಜನ ಸವಿದಿದ್ದರು. ಈ ಎರಡೂ ಸಂಗತಿಗಳ ಬಗ್ಗೆ ದೇಶಾದ್ಯಂತ ಪರ-ವಿರೋಧದ ಚರ್ಚೆ ಶುರುವಾಗಿದೆ.
ಯಾದರಿಗಿ ಜಿಲ್ಲೆಯಲ್ಲಿ ಅಕ್ರಮ ಅಕ್ರಮ ಮರಳಿನ ದಂಧೆ ಎಗ್ಗಿಲ್ಲದೆ ಸಾಗುತ್ತಿದ್ದು, ಪೊಲೀಸರು ಎಷ್ಟೇ ಕಡಿವಾಣ ಹಾಕಿದರೂ ನಿರಂತರವಾಗಿ ಮರಳು ದಂಧೆ ನಡೆಯುತ್ತಲೆ ಇದೆ. ಕಳೆದ ಒಂದು ವರ್ಷದಲ್ಲಿ ಪೊಲೀಸರು ಬರೋಬ್ಬರಿ 7 ಕೋಟಿ ರೂ.ಮೌಲ್ಯದ ಮರಳು ವಶಕ್ಕೆ ಪಡೆದುಕೊಂಡಿದ್ದು, ದಂಧೇಕೋರರ ವಿರುದ್ದ ಕೇಸ್ ದಾಖಲಿಸಿದರೂ ಯಾವುದಕ್ಕೂ ಕಿಮ್ಮತ್ತು ನೀಡದೆ ಮತ್ತೆ ಅದೇ ಅಕ್ರಮ ಚಟುವಟಿಕೆಗಳಲ್ಲಲಿ ಭಾಗಿಯಾಗುತ್ತಿರುವುದು ವಿಷಾದನೀಯ ಸಂಗತಿಯಾಗಿದೆ.
ಲೈಫ್ ಲೈನ್ ಫೌಂಡೇಶನ್ ವತಿಯಿಂದ ‘ಶೈಕ್ಷಣಿಕ ಕ್ಷೇತ್ರದಲ್ಲಿ ಸಮುದಾಯದ ಸಬಲೀಕರಣ’ ಯೋಜನೆಗೆ ಚಾಲನೆ
ಉಳ್ಳಾಲ: ಸಮುದಾಯದ ಯುವಕರನ್ನು ಪರಿವರ್ತಿಸಲು ಲೈಫ್ ಲೈನ್ ಫೌಂಡೇಶನ್ ಪಣ ತೊಟ್ಟಿರುವುದು ಶ್ಲಾಘನೀಯ. ಇಂದಿನ ಯುವಕರಿಗೆ ಮಾರ್ಗದರ್ಶನದ ಕೊರತೆ ಇದೆ. ಈ ಸಮಸ್ಯೆಯನ್ನು ಇತ್ಯರ್ಥಪಡಿಸುವ ಕೆಲಸ ನಮ್ಮಿಂದ ಆಗಬೇಕು ಎಂದು ಪಿಎ ಪ್ರಥಮ ದರ್ಜೆ ಕಾಲೇಜಿನ ಪ್ರಿನ್ಸಿಪಾಲ್ ಡಾ. ಸರ್ಫರಾಝ್ ಹಾಸಿಮ್ ಹೇಳಿದರು. ಅವರು ಲೈಫ್ ಲೈನ್ ಫೌಂಡೇಶನ್ ಉಚ್ಚಿಲ ಇದರ ಆಶ್ರಯದಲ್ಲಿ ಖಾಸಗಿ ಸಭಾಂಗಣದಲ್ಲಿ ನಡೆದ ‘ಶೈಕ್ಷಣಿಕ ಕ್ಷೇತ್ರದಲ್ಲಿ ಸಮುದಾಯದ ಸಬಲೀಕರಣ’ ಯೋಜನೆಗೆ ಚಾಲನೆ ನೀಡಿ ಮಾತನಾಡಿದರು. ಇಂದಿನ ಕಾಲದಲ್ಲಿ ಡ್ರಗ್ಸ್ ವ್ಯಸನ ಹಾಗೂ ಜಾಲತಾಣಗಳಲ್ಲಿ ಯುವಕರು ನಿರತರಾಗಿರುವುದು ಖೇದಕರ ಸಂಗತಿ. ಡ್ರಗ್ಸ್ ನಿರ್ಮೂಲನೆ ಮತ್ತು ಶೈಕ್ಷಣಿಕ ಅಭಿವೃದ್ಧಿ ಎಂಬ ಈ ಎರಡೂ ಕಾರ್ಯಗಳನ್ನು ಲೈಫ್ ಲೈನ್ ಫೌಂಡೇಶನ್ ಕೈಗೊಳ್ಳಬೇಕು ಎಂದು ಕರೆ ನೀಡಿದರು. ಹೈಕೋರ್ಟ್ ವಕೀಲ ಮುಝಾಫರ್ ಅಹ್ಮದ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಉಪಾಧ್ಯಕ್ಷ ಮಜೀದ್ ಹಾಜಿ ಉಚ್ಚಿಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಲೈಫ್ ಲೈನ್ ಫೌಂಡೇಶನ್ ಅಧ್ಯಕ್ಷ ಅಬ್ಬಾಸ್ ಪೊಕೊರು ಅಧ್ಯಕ್ಷತೆ ವಹಿಸಿ ಸಂಘದ ಧ್ಯೇಯೋದ್ದೇಶಗಳನ್ನು ವಿವರಿಸಿದರು. ರಹ್ಯಾನಿಯ ಮಸೀದಿ ಖತೀಬ್ ಅಕ್ಬರ್ ಸಅದಿ ದುಆ ನೆರವೇರಿಸಿದರು. ಯೂಸುಫ್ ಇಬ್ರಾಹೀಮ್ ಕಿರಾಅತ್ ಪಠಿಸಿದರು. ಪ್ರಧಾನ ಕಾರ್ಯದರ್ಶಿ ಅಬ್ದುಲ್ ಹಮೀದ್ ಯು., ಕೋಶಾಧಿಕಾರಿ ಎಂ.ಆರ್. ಅಬ್ದುಲ್ ರಝಾಕ್, ಕಾರ್ಯದರ್ಶಿಗಳಾದ ಯು.ಪಿ. ಇಲ್ಯಾಸ್, ಉಮರ್ ಪೆರಿಬೈಲ್, ಉಪಾಧ್ಯಕ್ಷ ಮಜೀದ್ ಹಾಜಿ ಉಚ್ಚಿಲ, ಗೌರವಾಧ್ಯಕ್ಷ ಅಬ್ಬಾಸ್ ಹಾಜಿ ಮಜಲ್, ಕನ್ವಿನರ್ ಅಬ್ದುಲ್ ಹಮೀದ್ ಕುಞಿಪ್ಪ, ಸದಸ್ಯರಾದ ಕುಂಞಿ ಅಹ್ಮದ್ ಹಾಜಿ, ಯು.ಪಿ. ಮೊಹಮ್ಮದ್, ಮೊಹಮ್ಮದ್ ಆಲಿ ಜಿ.ಐ., ಮೊಹಮ್ಮದ್ ಆಲಿ ಉಚ್ಚಿಲ (ಅಬುಧಾಬಿ), ಅಬ್ಬಾಸ್ ಉಚ್ಚಿಲ, ನಾಸೀರ್ ಖಾನ್, ಅಬ್ದುಲ್ ಲತೀಫ್, ಅಹ್ಮದ್ ಬಾವಾ (ತಾಜ್ ಗೋಲ್ಡ್), ಹುಸೈನ್ ಜಿ. ಮತ್ತಿತರರು ಉಪಸ್ಥಿತರಿದ್ದರು. ಉಪಾಧ್ಯಕ್ಷ ಸಲಾಮ್ ಉಚ್ಚಿಲ ಸ್ವಾಗತಿಸಿ ವಂದಿಸಿದರು. ನಾಸೀರ್ ಖಾನ್ ಕಾರ್ಯಕ್ರಮ ನಿರೂಪಿಸಿದರು.
ಶಾಲೆಗಳು, ಸರಕಾರಿ ಕಾರ್ಯಕ್ರಮಗಳಲ್ಲಿ ‘ವಂದೇ ಮಾತರಂ’ ಹಾಡುವುದು ಕಡ್ಡಾಯ: ಕೇಂದ್ರ ಸರಕಾರ ಆದೇಶ
ಹೊಸದಿಲ್ಲಿ: ಎಲ್ಲಾ ಶಾಲೆಗಳು ಸೇರಿದಂತೆ ಸರಕಾರಿ ಕಾರ್ಯಕ್ರಮಗಳಲ್ಲಿ ‘ವಂದೇ ಮಾತರಂ’ ಗೀತೆ ಹಾಡುವುದನ್ನು ಕಡ್ಡಾಯಗೊಳಿಸಿ ಕೇಂದ್ರ ಗೃಹ ಸಚಿವಾಲಯ ಬುಧವಾರ ಆದೇಶ ಹೊರಡಿಸಿದೆ. ಎಲ್ಲಾ ಸರಕಾರಿ ಕಾರ್ಯಕ್ರಮಗಳಲ್ಲಿ ಹಾಗೂ ಶಾಲೆಗಳಲ್ಲಿ ರಾಷ್ಟ್ರಗೀತೆಗೂ ಮೊದಲು ‘ವಂದೇ ಮಾತರಂ’ನ 6 ಚರಣಗಳನ್ನು ಹಾಡಬೇಕು. ಹಾಗೆಯೇ ಗೀತೆಯನ್ನು ನುಡಿಸುವಾಗ ಅಥವಾ ಹಾಡುವಾಗ ಎಲ್ಲರೂ ಕಡ್ಡಾಯವಾಗಿ ಎದ್ದು ನಿಲ್ಲಬೇಕು ಎಂದು ಗೃಹ ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ. 2025ರ ಡಿಸೆಂಬರ್ನಲ್ಲಿ ‘ವಂದೇ ಮಾತರಂ ಗೀತೆಗೆ 150 ವರ್ಷ ತುಂಬಿದ ಪ್ರಯುಕ್ತ ಪ್ರಧಾನಿ ನರೇಂದ್ರ ಮೋದಿ ಅವರು ಸಂಸತ್ನ ಎರಡೂ ಸದನಗಳನ್ನು ಉದ್ದೇಶಿಸಿ ಮಾತನಾಡಿದ್ದರು. ನೂತನ ಆದೇಶದ ಪ್ರಕಾರ ಪದ್ಮ ಪ್ರಶಸ್ತಿಗಳು ಸೇರಿದಂತೆ ನಾಗರಿಕ ಪ್ರಶಸ್ತಿ ಪ್ರದಾನ ಸಮಾರಂಭಗಳಲ್ಲಿ ಹಾಗೂ ರಾಷ್ಟ್ರಪತಿಗಳು ಭಾಗವಹಿಸುವ ಎಲ್ಲಾ ಪ್ರಶಸ್ತಿ ಪ್ರದಾನ ಸಮಾರಂಭಗಳಲ್ಲಿ ಮತ್ತು ಶಾಲಾ ಸಭೆಗಳಲ್ಲಿ ವಂದೇ ಮಾತರಂ ನುಡಿಸುವುದು ಕಡ್ಡಾಯವಾಗಿದೆ.
ಕಾಸರಗೋಡು: ಫೆ.14ರಂದು ಕನ್ನಡ ಶಾಲೆಗಳಿಗೆ ಉಚಿತ ಪುಸ್ತಕ ವಿತರಣೆ; ಎನ್. ಚನಿಯಪ್ಪ ನಾಯ್ಕರಿಗೆ ಅಭಿನಂದನೆ ಕಾರ್ಯಕ್ರಮ
ಕಾಸರಗೋಡು: ಕಾಸರಗೋಡು ಜಿಲ್ಲಾ ಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘ ಹಾಗೂ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಕಾಸರಗೋಡು ಜಿಲ್ಲಾ ಸಮಿತಿ ಆಶ್ರಯದಲ್ಲಿ, ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘ (ಕಾಸರಗೋಡು), ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ (ಕಾಸರಗೋಡು), ಕರ್ನಾಟಕ ಜಾನಪದ ಪರಿಷತ್ತು ಕೇರಳ ಗಡಿನಾಡ ಘಟಕದ ಸಹಕಾರದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಕಾಸರಗೋಡು ಜಿಲ್ಲೆಯ ಕನ್ನಡ ಶಾಲೆಗಳಿಗೆ ಉಚಿತ ಪುಸ್ತಕ ವಿತರಣೆ ಹಾಗೂ ಗಡಿನಾಡ ಚೇತನ ಪ್ರಶಸ್ತಿ ಪುರಸ್ಕೃತ ಎನ್. ಚನಿಯಪ್ಪ ನಾಯ್ಕ ಅವರಿಗೆ ಸಾರ್ವಜನಿಕ ಅಭಿನಂದನೆ ಕಾರ್ಯಕ್ರಮ ಫೆ. 14ರಂದು ಬೆಳಗ್ಗೆ 10 ಗಂಟೆಯಿಂದ ಕಾಸರಗೋಡು ಹೊಸ ಬಸ್ ನಿಲ್ದಾಣ ಬಳಿಯ ಕ್ಯಾಪಿಟಲ್ ಇನ್ ಸಭಾಂಗಣದಲ್ಲಿ ನಡೆಯಲಿದೆ. ಕರ್ನಾಟಕ ರಾಜ್ಯ ಪರಿಸರ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿ ಅಧ್ಯಕ್ಷೆ ಶಾಲೆಟ್ ಪಿಂಟೊ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಕಾಸರಗೋಡು ಜಿಲ್ಲಾ ಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ರವಿ ನಾಯ್ಕಾಪು ಅಧ್ಯಕ್ಷತೆ ವಹಿಸಲಿದ್ದಾರೆ. ಕಾಸರಗೋಡು ಶಾಸಕ ಎನ್.ಎ. ನೆಲ್ಲಿಕ್ಕುನ್ನು ಚನಿಯಪ್ಪ ನಾಯ್ಕರನ್ನು ಅಭಿನಂದಿಸಲಿದ್ದಾರೆ. ಪತ್ರಕರ್ತರ ಸಂಘದ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ರಾಧಾಕೃಷ್ಣ ಉಳಿಯತ್ತಡ್ಕ ಅಭಿನಂದನಾ ಭಾಷಣ ಮಾಡಲಿದ್ದಾರೆ. ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ ಕಾಸರಗೋಡು ಅಧ್ಯಕ್ಷ ಎಸ್. ಪ್ರದೀಪ್ ಕುಮಾರ್ ಕಲ್ಕೂರ, ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕದ ಅಧ್ಯಕ್ಷ ಡಾ. ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ, ಕರ್ನಾಟಕ ಸಮಿತಿ ಕಾಸರಗೋಡು ಅಧ್ಯಕ್ಷ ಹಾಗೂ ವಕೀಲ ಮುರಳೀಧರ ಬಳ್ಳಕ್ಕುರಾಯ, ಕೇರಳ ಪ್ರಾಂತ್ಯ ಕನ್ನಡ ಅಧ್ಯಾಪಕರ ಸಂಘದ ಅಧ್ಯಕ್ಷ ಸುಕೇಶ್ ಎ., ಕರ್ನಾಟಕ ಜಾನಪದ ಪರಿಷತ್ತು ಕೇರಳ ಗಡಿನಾಡ ಘಟಕದ ಅಧ್ಯಕ್ಷ ಡಾ. ಮಲ್ಲಿಕಾರ್ಜುನ ಎಸ್. ನಾಸಿ, ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ ಕಾಸರಗೋಡು ಪ್ರಧಾನ ಕಾರ್ಯದರ್ಶಿ ಅಖಿಲೇಶ್ ನಗುಮುಗಂ, ಗಮಕ ಕಲಾ ಪರಿಷತ್ತು ಕಾಸರಗೋಡು ಅಧ್ಯಕ್ಷ ತೆಕ್ಕೇಕೆರೆ ಶಂಕರನಾರಾಯಣ ಭಟ್ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಸದಸ್ಯ ಎ.ಆರ್. ಸುಬ್ಬಯಕಟ್ಟೆ, ಕಾಸರಗೋಡು ಜಿಲ್ಲಾ ಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘದ ಪ್ರಧಾನ ಕಾರ್ಯದರ್ಶಿ ಕೆ. ಗಂಗಾಧರ ತೆಕ್ಕೇಮೂಲೆ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಕಾಸರಗೋಡು ಘಟಕದ ಪ್ರಧಾನ ಕಾರ್ಯದರ್ಶಿ ಶ್ರೀಕಾಂತ್ ಕೆ.ಎಸ್., ಪತ್ರಕರ್ತ ವಿ.ಜಿ. ಕಾಸರಗೋಡು ಉಪಸ್ಥಿತರಿರಲಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿ, ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಸದಸ್ಯ ಅಶೋಕ್ ಚಂದರಗಿ (ಬೆಳಗಾವಿ), ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಭಗತ್ ರಾಜ್ ನಿಜಾಮಕರಿ (ರಾಯಚೂರು), ಕಜಾಪ್ ಓಮಾನ್ ಘಟಕದ ಅಧ್ಯಕ್ಷ ಶಿವಾನಂದ ಕೋಟ್ಯಾನ್ (ಕಟಪಾಡಿ, ಕಾಸರಗೋಡು) ಅವರು ಜಿಲ್ಲೆಯ ಕನ್ನಡ ಶಾಲೆಗಳಿಗೆ ವಿತರಿಸಲು ಪುಸ್ತಕಗಳನ್ನು ಕೊಡುಗೆಯಾಗಿ ನೀಡಿದ್ದಾರೆ.
ಮತ್ತೆ ವಿಜಯೇಂದ್ರ ಬದಲಾವಣೆಯ ವದಂತಿ : ಎಲ್ಲವೂ ಅವರಿಬ್ಬರ ಕೈಯಲ್ಲಿದೆ ಎಂದ್ರಾ ಶಿವರಾಜ್ ಸಿಂಗ್ ಚೌಹಾಣ್?
Change of BY Vijayendra : ರಾಜ್ಯ ಬಿಜೆಪಿ ಘಟಕದಲ್ಲಿ ಹಲವು ಬಾಗಿಲುಗಳಿವೆ ಎನ್ನುವ ಸುದ್ದಿ ಆಗಿಂದಾಗ್ಯೆ ಸುದ್ದಿಯಾಗುತ್ತಲೇ ಇರುತ್ತದೆ. ಆದರೆ, ಕಳೆದ ವಿಧಾನ ಮಂಡಲದ ಅಧಿವೇಶನದ ವೇಳೆ, ಬಿಜೆಪಿ ನಾಯಕರು ಮೈಚಳಿ ಬಿಟ್ಟು, ಸಿದ್ದರಾಮಯ್ಯನವರ ಸರ್ಕಾರದ ವಿರುದ್ದ ತಿರುಗಿಬಿದ್ದಿದ್ದರು. ಈಗ, ಅಧಿವೇಶನ ಮುಕ್ತಾಯಗೊಂಡಿದೆ. ಇದರ ಜೊತೆಗೆ, ವಿಜಯೇಂದ್ರ ಬದಲಾವಣೆ ಸುದ್ದಿ ಮುನ್ನಲೆಗೆ ಬಂದಿದೆ.
ಶಾಲೆ, ಸರ್ಕಾರಿ ಕಾರ್ಯಕ್ರಮಗಳಲ್ಲಿ 'ರಾಷ್ಟ್ರಗೀತೆ' ಮೊದಲು ಮೊಳಗುತ್ತೆ 'ವಂದೇ ಮಾತರಂ' ಗೀತೆ: ಕೇಂದ್ರದಿಂದ ಮಾರ್ಗಸೂಚಿ
ನವದೆಹಲಿ: ಐತಿಹಾಸಿಕ 'ವಂದೇ ಮಾತರಂ' ಗೀತೆಗೆ 150 ಪೂರ್ಣಗೊಂಡು ಅರ್ಥಪೂರ್ಣ ಆಚರಣೆ ಬೆನ್ನಲ್ಲೆ ಕೇಂಧ್ರ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಸರ್ಕಾರಿ ಕಾರ್ಯಕ್ರಮಗಳು, ಶಾಲೆಗಳಲ್ಲಿ ರಾಷ್ಟ್ರಗೀತೆಗೂ ಮುನ್ನ ರಾಷ್ಟ್ರೀಯ ಗೀತೆಯಾದ 'ವಂದೇ ಮಾತರಂ ಗೀತೆ'ಯನ್ನು ನುಡಿಸಬೇಕು ಅಥವಾ ಹಾಡಬೇಕು ಎಂದು ಸೂಚಿಸಿ ಇಂದು ಬುಧವಾರ (ಫೆಬ್ರವರಿ 11) ಕೇಂದ್ರ ಮಾರ್ಗಸೂಚಿ ಹೊರಡಿಸಿದೆ. ರಾಷ್ಟ್ರಗೀತೆ ಮೊದಲು 'ವಂದೇ ಮಾತರಂ'
ಡಿಕೆ ಶಿವಕುಮಾರ್ ನಿವಾಸಕ್ಕೆ ಬಂದ ಬ್ರ್ಯಾಂಡ್ ನ್ಯೂ ಐಶಾರಾಮಿ ಕಾರು: ಏನಿದರ ವಿಶೇಷತೆ
ಡಿಸಿಎಂ ಡಿಕೆ ಶಿವಕುಮಾರ್ ನಿವಾಸಕ್ಕೆ ಹೊಸ ಐಶಾರಾಮಿ ಕಾರಿನ ಆಗಮನವಾಗಿದೆ. ಕುಟುಂಬದ ಸದಸ್ಯರ ಪ್ರಯಾಣಕ್ಕೆ ಅನುಕೂಲ ಆಗುವ ನಿಟ್ಟಿನಲ್ಲಿ ಹೊಸ ಬ್ರ್ಯಾಂಡ್ ನ್ಯೂ ಕಾರನ್ನು ಖರೀದಿ ಮಾಡಲಾಗಿದೆ ಎಂಬ ಮಾಹಿತಿ ಇದೆ. ಡಿಕೆ ಶಿವಕುಮಾರ್ ಅವರು ಸರ್ಕಾರಿ ಕಾರನ್ನು ಬಳಕೆ ಮಾಡುತ್ತಾರೆ. ಆದರೆ ಇದೀಗ ಅವರ ಕುಟುಂಬದ ಸದಸ್ಯರ ಪ್ರಯಾಣಕ್ಕಾಗಿ ಐಶಾರಾಮಿ ಕಾರನ್ನು ಖರೀದಿ ಮಾಡಲಾಗಿದೆ. ಬುಧವಾರ ಸದಾಶಿವನಗರದಲ್ಲಿರುವ ಡಿಕೆ ಶಿವಕುಮಾರ್ ಅವರ ನಿವಾಸಕ್ಕೆ ಹೊಸ ಕಾರಿನ ಆಗಮನವಾಗಿದೆ. ಏನಿದರ ವಿಶೇಷತೆ?
ಅಡ್ಡೂರು : ಎಸೆಸೆಲ್ಸಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಪೂರ್ವ ಕಾರ್ಯಾಗಾರ
ಬಜ್ಪೆ: ಇಲ್ಲಿನ ಅಡ್ಡೂರು ಸೆಂಟ್ರಲ್ ಕಮಿಟಿ ವತಿಯಿಂದ ಅಡ್ಡೂರು ಬದ್ರಿಯಾ ಮದರಸಾ ಸಭಾಂಗಣದಲ್ಲಿ ಸೋಮವಾರ ಎಸೆಸೆಲ್ಸಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಪೂರ್ವ ತರಬೇತಿ ಕಾರ್ಯಕ್ರಮ ಆಯೋಜಿಸಲಾಯಿತು. ಕಾರ್ಯಕ್ರಮವನ್ನು ಮಹಮ್ಮದ್ ನಝೀರ್ ಹೊಸಮೊಗ್ರು ಉದ್ಘಾಟಿಸಿದರು. ಇಬ್ರಾಹಿಂ ಅಳಕೆ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಬ್ದುಲ್ ಖಾದರ್ ವಹಿಸಿದ್ದರು. ಕಾರ್ಯಾಗಾರದಲ್ಲಿ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಯಾಕೂಬ್ ಎಸ್. ಕೊಯ್ಯೂರು ಅವರು ಗಣಿತ ವಿಷಯವನ್ನು ಸರಳವಾಗಿ ಹೇಗೆ ಉತ್ತರಿಸಬೇಕು ಎಂಬುದರ ಕುರಿತು ವಿದ್ಯಾರ್ಥಿಗಳಿಗೆ ತರಬೇತಿ ನೀಡಿದರು. ಅಲ್ಲದೆ, ಹಲವಾರು ಸಾಧಕರ ಜೀವನದ ದೃಷ್ಟಾಂತಗಳ ಮೂಲಕ ಮಕ್ಕಳಲ್ಲಿ ಆತ್ಮಸ್ಥೈರ್ಯ ತುಂಬಿದರು. ಪ್ರತಿಯೊಬ್ಬರ ಬದುಕಿನಲ್ಲಿ ತಂದೆ, ತಾಯಿ ಹಾಗೂ ಗುರುಗಳ ಮಹತ್ವವನ್ನು ಅರ್ಥಪೂರ್ಣವಾಗಿ ವಿವರಿಸಿದರು. ಶಾಹಿನ್ ಸಂಸ್ಥೆಯ ಎಸ್.ಎಂ. ಫಾರೂಕ್ ಅವರು ವಿದ್ಯಾರ್ಥಿಗಳಿಗೆ ಕಲಿಕೆಯ ಮಹತ್ವವನ್ನು ತಿಳಿಸಿದರು. ಇದೇ ಸಂದರ್ಭದಲ್ಲಿ ಶಾಹಿನ್ ಕಾಲೇಜು ವತಿಯಿಂದ ಉಚಿತ ವಿದ್ಯಾರ್ಥಿವೇತನಕ್ಕಾಗಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲು ಲಿಖಿತ ಪರೀಕ್ಷೆ ನಡೆಸಲಾಯಿತು. ಜಮಾತ್ ಕಮಿಟಿಯ ಉಪಾಧ್ಯಕ್ಷ ಝೈನುದ್ದಿನ್, ನಿವೃತ್ತ ಶಿಕ್ಷಕ ಫಕ್ರುದ್ದೀನ್, ಅಡ್ಡೂರು ಸೆಂಟ್ರಲ್ ಕಮಿಟಿಯ ಪ್ರತಿನಿಧಿ ಶರೀಫ್ ಗೋಳಿಪಡ್ಪು ಹಾಗೂ ಸದಸ್ಯರು ಉಪಸ್ಥಿತರಿದ್ದರು. ಅಬ್ದುಲ್ ಖಾದರ್ ತೋಕೂರು ಧನ್ಯವಾದ ಸಲ್ಲಿಸಿದರು.
ಟ್ರಂಪ್ ಸಾಮ್ರಾಜ್ಯಕ್ಕೆ ಭಾರತವನ್ನು ಮಾರಿಬಿಟ್ಟ ಮೋದಿ ಸರಕಾರ!: ಅಸಲಿ ದೇಶಪ್ರೇಮಿಗಳಲ್ಲೊಂದು ಮನವಿ!
ಭಾರತ ಮತ್ತು ಅಮೆರಿಕದ ಜಂಟಿ ಹೇಳಿಕೆ ಪ್ರಕಾರ ಫೆ. 2ರಂದು ಒಪ್ಪಿತವಾಗಿರುವುದು ಪರಿಪೂರ್ಣ ದ್ವಿಪಕ್ಷೀಯ ವಾಣಿಜ್ಯ ಒಪ್ಪಂದ ಅಲ್ಲ. ಅಂಥ ಒಪ್ಪಂದಕ್ಕೆ ಪೂರ್ವಭಾವಿಯಾದ ಮಧ್ಯಂತರ ಒಪ್ಪಂದವೂ ಅಲ್ಲ. ಬದಲಿಗೆ ಮಧ್ಯಂತರ ಒಪ್ಪಂದದ ಒಂದು ಸಮ್ಮತ ಚೌಕಟ್ಟು-Framework ಅಷ್ಟೆ. ಆದರೆ ಅದರಲ್ಲೂ ಇಡೀ ಒಪ್ಪಂದ ಹೇಗೆ ಅಮೆರಿಕದ ಆರ್ಥಿಕ ಹಾಗೂ ಜಾಗತಿಕ ಹಿತಾಸಕ್ತಿಯ ಕಾವಲುಗಾರನಾಗಿ ಮೋದಿಯನ್ನು ಬಳಸಿಕೊಂಡಿದೆ ಎಂಬುದು ಪ್ರತಿವಾಕ್ಯದಲ್ಲೂ ಸ್ಪಷ್ಟವಾಗುತ್ತದೆ. ಭಾರತದ ಅಸಲಿ ದೇಶಪ್ರೇಮಿಗಳೇ, ಎರಡನೇ ಬಾರಿ ಟ್ರಂಪ್ ಅಧಿಕಾರಕ್ಕೆ ಬಂದಮೇಲೆ ಜಗತ್ತಿನ ಮೇಲೆ ನಡೆಸುತ್ತಿರುವ ಸಾಮ್ರಾಜ್ಯಶಾಹಿ ದುರಾಕ್ರಮಣಗಳನ್ನು ವೆನಿಝುವೆಲಾ, ಕ್ಯೂಬಾ, ಗ್ರೀನ್ ಲ್ಯಾಂಡ್, ಮೆಕ್ಸಿಕೋಗಳಂತಹ ಸಣ್ಣ ಪುಟ್ಟ ಸ್ವತಂತ್ರ, ಸ್ವಾಭಿಮಾನಿ ರಾಷ್ಟ್ರಗಳು ಪ್ರತಿರೋಧಿಸುತ್ತಿವೆ. ತಮ್ಮ ದೇಶಗಳ ಲಕ್ಷಾಂತರ ಜನರ ತ್ಯಾಗ ಬಲಿದಾನಗಳಿಂದ ಪಡೆದುಕೊಂಡ ಸ್ವಾತಂತ್ರ್ಯವನ್ನು ಉಳಿಸಿಕೊಳ್ಳಲು ಹೋರಾಡುತ್ತಿವೆ. ಆದರೆ ವಿಸ್ತೀರ್ಣದಲ್ಲಿ, ಜಿಡಿಪಿಯಲ್ಲಿ, ಜನಸಂಖ್ಯೆಯಲ್ಲಿ, ವಸಾಹತುಶಾಹಿ ವಿರೋಧಿ ಹೋರಾಟಗಳಲ್ಲಿ, ಸೈನಿಕ ಸಾಮರ್ಥ್ಯದಲ್ಲಿ ಅಂತಹ ಎಲ್ಲಾ ಸಣ್ಣ-ಬಡ ರಾಷ್ಟ್ರಗಳಿಗಿಂತ ಎಷ್ಟೋ ಮುಂದಿರುವ ಭಾರತವು ಮಾತ್ರ ಟ್ರಂಪ್ ಬೆದರಿಕೆಗೆ ಯಾವುದೇ ಪ್ರತಿರೋಧ ತೋರುತ್ತಿಲ್ಲ. ಬದಲಿಗೆ ಬ್ರಿಟಿಷರ ಕಾಲದಲ್ಲಿ ಹಲವು ಗುಲಾಮಿ ರಾಜಸಂಸ್ಥಾನಗಳು ಬ್ರಿಟಿಷರ ಆಳ್ವಿಕೆಯನ್ನು ಒಪ್ಪಿಕೊಂಡು ಮಾರಿಕೊಂಡಂತೆ ಮೋದಿ ಸರಕಾರ ಕೂಡ ಭಾರತವನ್ನು ಅಮೆರಿಕಕ್ಕೆ ಮಾರಿಕೊಂಡಿದೆ. ಏಕೆಂದರೆ, ಮೋದಿ ಸರಕಾರ ಇತ್ತೀಚೆಗೆ ಟ್ರಂಪ್ ಸರಕಾರದೊಂದಿಗೆ ಮಾಡಿಕೊಂಡಿರುವ ಭಾರತ-ಅಮೆರಿಕ ವಾಣಿಜ್ಯ ಒಪ್ಪಂದದ ವಿವರಗಳು ಈ ಹಿಂದೆ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪೆನಿಯು ವಿಧಿಸುತ್ತಿದ್ದ ಏಕಪಕ್ಷೀಯ ಷರತ್ತುಗಳಿಗಿಂತ, ಆ ನಂತರ ಬ್ರಿಟಿಷರು ರಾಜಸಂಸ್ಥಾನಗಳ ಮೇಲೆ ವಿಧಿಸುತ್ತಿದ್ದ ಅವಮಾನಕಾರಿ ಸಹಾಯಕ ಸೈನ್ಯ ಪದ್ಧತಿಯ ಷರತ್ತುಗಳಿಗಿಂತ ಅವಮಾನಕರವಾಗಿದೆ. ಪರಸ್ಪರ ಸಮಾಧಾನಕರ ಒಪ್ಪಂದ ಏರ್ಪಡದ ಕಾರಣ 2025ರ ಫೆಬ್ರವರಿಯಲ್ಲೇ ಪ್ರಾರಂಭವಾದರೂ ಮುಗಿಯದ ಸಮಾಲೋಚನೆಗಳು ದಿಢೀರನೆ ಭಾರತಕ್ಕೆ ಅವಮಾನಕಾರಿಯಾಗಿ ಮುಕ್ತಾಯವಾಗುವ ಹಿಂದೆ ಊಹಾಪೋಹಗಳೆಂದು ತಳ್ಳಿಹಾಕಲಾಗದ ಹಲವಾರು ತಾರ್ಕಿಕ ವಿಶ್ಲೇಷಣೆಗಳಿವೆ. ಎಪ್ಸ್ಟೀನ್ ಕಾಮಕಾಂಡದ ಫೈಲುಗಳಲ್ಲಿ ಮೋದಿ ಮತ್ತು ಇತರ ಮಂತ್ರಿಗಳ ಹೆಸರುಗಳಿರುವುದು ಮತ್ತು ಮೋದಿ ಆಪ್ತ ಅದಾನಿಗೆ ಅಮೆರಿಕ ನೋಟಿಸ್ ಕೊಟ್ಟು ಅದಾನಿ ಸಂಕಷ್ಟದಲ್ಲಿರುವುದು ಅದರಲ್ಲಿ ಪ್ರಮುಖವಾದವು. ಅವೆರಡನ್ನು ಬಳಸಿಕೊಂಡು ಟ್ರಂಪ್ ಭಾರತವನ್ನು ಮಣಿಸಲು ಬಳಸಿರಬಹುದೇ? ಇರಬಹುದು. ಇಲ್ಲದೆಯೂ ಇರಬಹುದು. ಇವೆರಡೂ ಕಾರಣಗಳಿಲ್ಲದಿದ್ದರೆ ಈ ಒಪ್ಪಂದದಲ್ಲಿ ಭಾರತಕ್ಕೆ ಪೂರಕವಾದ ಷರತ್ತುಗಳಿಗೆ ಮೋದಿ ಸರಕಾರ ಪಟ್ಟು ಹಿಡಿಯುತ್ತಿತ್ತು ಎಂಬುದಕ್ಕಾಗಲೀ, ಅದನ್ನು ಟ್ರಂಪ್ ಸರಕಾರ ಒಪ್ಪಿಕೊಂಡುಬಿಡುತ್ತಿತ್ತು ಎಂಬುದಕ್ಕಾಗಲಿ ಯಾವುದೇ ಪುರಾವೆಯಿಲ್ಲ. ಅದೇನೇ ಇರಲಿ ವ್ಯಕ್ತಿಗಿಂತ ದೇಶ ಮುಖ್ಯವಾಗಿರುವವರಿಗೆ, ಮೋದಿ ಭಕ್ತಿಗಿಂತ ದೇಶಭಕ್ತಿ ಹೆಚ್ಚಿರುವವರಿಗೆ ದೇಶಕ್ಕೆ ಮತ್ತು ದೇಶದ ಜನರಿಗೆ ಮೋದಿ-ಟ್ರಂಪ್ ಡೀಲ್ ಮಾಡಿರುವ ದ್ರೋಹ ಕಣ್ಣಿಗೆ ರಾಚುವಂತೆ ಕಂಡೇ ಕಾಣುತ್ತದೆ. ಕಾಣಲಾಗದವರು ಮೋದಿ ಕುರುಡರು. ಕಂಡರೂ ಒಪ್ಪದವರು ದೇಶದ್ರೋಹಿಗಳು. ದ್ವಿಪಕ್ಷೀಯವೂ ಅಲ್ಲ, ಒಪ್ಪಂದವೂ ಅಲ್ಲ ಇದೇ ಫೆಬ್ರವರಿ 2ರಂದು, ಭಾರತದ ಜನತೆಯ ಪ್ರಾತಿನಿಧಿಕ ಸಂಸ್ಥೆಯಾದ ಸಂಸತ್ತಿಗೆ ಯಾವುದೇ ಮಾಹಿತಿಯನ್ನೂ ಕೊಡದಂತೆ (ಒಪ್ಪಂದವಾದ ನಂತರ ಇಷ್ಟು ದಿನ ಕಳೆದರೂ ಕೊಡುತ್ತಿಲ್ಲ!) ಟ್ರಂಪ್ ಮತ್ತು ಮೋದಿಯವರ ವಾಣಿಜ್ಯ ಒಪ್ಪಂದವನ್ನು ಟ್ರಂಪ್ ತನ್ನ ‘ಘಿ’ ಖಾತೆಯಲ್ಲಿ ಜಗತ್ತಿಗೆ ಬಹಿರಂಗಪಡಿಸಿದರು. ಆ ಸಂಜೆಯೇ ಮೋದಿಯವರಿಗೆ ಬಿಜೆಪಿಗರು ತಮ್ಮದೇ ಕಚೇರಿಯಲ್ಲಿ ಯುದ್ಧ ಗೆದ್ದು ಬಂದ ಸೇನಾಧಿಕಾರಿಯನ್ನು ಸನ್ಮಾನಿಸುವಂತೆ ಭವ್ಯವಾಗಿ ಸನ್ಮಾನಿಸಿದರು. ಐತಿಹಾಸಿಕ ವಾಣಿಜ್ಯ ಒಪ್ಪಂದ ಆಗಿಹೋಗಿದೆ. ಇದರಿಂದ ದೇಶದ ಭವಿತವ್ಯ ಬೆಳಗಲಿದೆಯೆಂದು ಮೋದಿ-ಗೋದಿ ಮೀಡಿಯಾಗಳು ಬಹುಪರಾಕ್ ಹಾಕಿದವು. ಸಂಪೂರ್ಣಗೊಂಡಿರುವ ಈ ಒಪ್ಪಂದದಿಂದ ಭಾರತಕ್ಕೆ ಆಗುವ ಲಾಭಗಳ ಬಗ್ಗೆ ಊಹಾಪೋಹಗಳ ಭಜನೆ ಹೆಚ್ಚಾಗುತ್ತಿದ್ದಂತೆ ಅದಕ್ಕೆ ಬ್ರೇಕ್ ಹಾಕುವಂತೆ ಫೆ. 6ರಂದು ಈ ಬಗ್ಗೆ ಭಾರತ ಮತ್ತು ಅಮೆರಿಕ ಜಂಟಿ ಹೇಳಿಕೆ ಬಿಡುಗಡೆಯಾದವು. ಅದರ ಪೂರ್ಣಪಾಠವನ್ನು ಆಸಕ್ತರು ಇಲ್ಲಿ ಓದಬಹುದು: https://www.whitehouse.gov/briefings-statements/2026/02/united-states-india-joint-statement/ ಈ ಜಂಟಿ ಹೇಳಿಕೆ ಪ್ರಕಾರ ಫೆ. 2ರಂದು ಒಪ್ಪಿತವಾಗಿರುವುದು ಪರಿಪೂರ್ಣ ದ್ವಿಪಕ್ಷೀಯ ವಾಣಿಜ್ಯ ಒಪ್ಪಂದ ಅಲ್ಲ. ಅಂಥ ಒಪ್ಪಂದಕ್ಕೆ ಪೂರ್ವಭಾವಿಯಾದ ಮಧ್ಯಂತರ ಒಪ್ಪಂದವೂ ಅಲ್ಲ. ಬದಲಿಗೆ ಮಧ್ಯಂತರ ಒಪ್ಪಂದದ ಒಂದು ಸಮ್ಮತ ಚೌಕಟ್ಟು-Framework ಅಷ್ಟೆ. ಆದರೆ ಅದರಲ್ಲೂ ಇಡೀ ಒಪ್ಪಂದ ಹೇಗೆ ಅಮೆರಿಕದ ಆರ್ಥಿಕ ಹಾಗೂ ಜಾಗತಿಕ ಹಿತಾಸಕ್ತಿಯ ಕಾವಲುಗಾರನಾಗಿ ಮೋದಿಯನ್ನು ಬಳಸಿಕೊಂಡಿದೆ ಎಂಬುದು ಪ್ರತಿವಾಕ್ಯದಲ್ಲೂ ಸ್ಪಷ್ಟವಾಗುತ್ತದೆ. ಅದನ್ನು ವಿವರವಾಗಿ ನಂತರ ಪರಿಶೀಲಿಸೋಣ. ಇದಾದ ನಂತರ ಫೆ. 9ರಂದು ಟ್ರಂಪ್ ಸರಕಾರ ಈ ಒಪ್ಪಂದದ ಬಗ್ಗೆ ಈಚಿಛಿಣ Sheeಣ ಅನ್ನು ಬಿಡುಗಡೆ ಮಾಡಿದ್ದು ಅದು ಈ ಒಪ್ಪಂದ ಭಾರತದ ರೈತಾಪಿ ಮತ್ತು ಕಾರ್ಮಿಕರ ಹಿತಾಸಕ್ತಿಯನ್ನು ಹೇಗೆ ಅಮೆರಿಕದ ಉದ್ಯಮಿಗಳಿಗೆ ಮಾರಲ್ಪಟ್ಟಿದೆ ಎಂಬುದನ್ನು ಇನ್ನಷ್ಟು ಸ್ಪಷ್ಟಪಡಿಸಿತು. ( https://www.whitehouse.gov/fact-sheets/2026/02/fact-sheet-the-united-states-and-india-announce-historic-trade-deal/ ) ಈ Fact Sheet ಈ ಒಪ್ಪಂದದ ಅಸಲೀ ಹೂರಣವಾಗಿದ್ದು ಮೋದಿ ಸರಕಾರ ಭಾರತವನ್ನು ಹೇಗೆ ಬೇಷರತ್ತಾಗಿ ಮಾರಿಕೊಂಡಿದೆ ಎಂಬುದು ಸಾಬೀತಾಗುತ್ತದೆ. ಈ ಒಪಂದದ ವಿವರಗಳು ಅದನ್ನು ಸ್ಪಷ್ಟಪಡಿಸುತ್ತದೆ: 1.ಎಲ್ಲವನ್ನೂ ಕಸಿದುಕೊಂಡ ಅಮೆರಿಕ ಎಲ್ಲವನ್ನೂ ಕಳೆದುಕೊಂಡ ಭಾರ ಯಾವುದೇ ದ್ವಿಪಕ್ಷೀಯ ಒಪ್ಪಂದದಲ್ಲಿ ಎರಡೂ ಪಕ್ಷಗಳು ಕೆಲವನ್ನು ಕೊಟ್ಟು ಕೆಲವನ್ನು ಪಡೆದುಕೊಳ್ಳುತ್ತವೆ. ಈ ಒಪ್ಪಂದದಲ್ಲಿ ಭಾರತ ಮೇಲಿನ ಸುಂಕವನ್ನು ಅಮೆರಿಕ ಶೇ.25ರಿಂದ ಶೇ.18ಕ್ಕೆ ಇಳಿಸಿರುವುದನ್ನು ಮೋದಿ ಮುತ್ಸದ್ದಿತನ ಮತ್ತು ಭಾರತದ ಗೆಲುವು ಎಂದು ಗೋದಿಗಳು ಕೊಂಡಾಡುತ್ತಿವೆ. ಆದರೆ ಟ್ರಂಪ್ ಬರುವ ಮುನ್ನ ಭಾರತದ ಸರಕುಗಳ ಮೇಲೆ ಅಮೆರಿಕ ಹೇರುತ್ತಿದ್ದ ಸುಂಕ ಸರಾಸರಿ ಶೇ. 3 ಮಾತ್ರ. ಅದನ್ನು ರಶ್ಯದಿಂದ ಭಾರತ ತೈಲ ಖರೀದಿಸುವುದನ್ನು ನಿಲ್ಲಿಸಲು ಬ್ಲ್ಯಾಕ್ಮೇಲ್ ಮಾಡಲು ಕಳೆದ ಒಂದು ವರ್ಷದಿಂದ ಶೇ.25 ರಷ್ಟು ಸುಂಕವನ್ನು ಏರಿಸಿತ್ತು. ರಶ್ಯದಿಂದ ತೈಲ ಖರೀದಿ ಮಾಡುವುದಿಲ್ಲವೆಂದು ಮೋದಿ ಸರಕಾರ ಭಾರತದ ಹಿತವನ್ನು ನಿರ್ಲಕ್ಷಿಸಿ ಒಪ್ಪಿಕೊಂಡಿದೆ. ಅದರ ಬದಲಿಗೆ ಪಡೆದುಕೊಂಡಿದ್ದೇನು? ಕನಿಷ್ಠ ಅಮೆರಿಕದ ಸುಂಕ ಶೇ. 3ಕ್ಕೆ ಮರಳ ಬೇಕಲ್ಲವೇ? ಇಲ್ಲ. ಅದು ಶೇ.18ರ ಕೆಳಗಿಳಿದಿಲ್ಲ. ಅಂದರೆ ತಾತ್ಕಾಲಿಕವಾಗಿ ಏರಿಸಿದ್ದ ಶೇ. 25ಕ್ಕೆ ಹೋಲಿಸಿದಲ್ಲಿ ಶೇ. 7 ಎಂದು ಭಾವಿಸಿ ಹಿಗ್ಗಬೇಕೋ? ಅಮೆರಿಕ ಹೇಳಿದ್ದನ್ನೆಲ್ಲಾ ಕೇಳಿದರೂ ಶೇ. 3ಕ್ಕೆ ಮರಳದೆ ವಿಧಿಸಿರುವ ಶೇ. 18ರ ಸುಂಕ ಮೊದಲಿಗಿಂತ ಶೇ. 15ರಷ್ಟು ಏರಿಕೆ ಎಂದು ಭಾವಿಸಬೇಕೋ? ಈ ಗಣಿತವು ನಾವು ಮೋದಿ ಭಕ್ತರೋ? ದೇಶಭಕ್ತರೋ ಎಂಬುದನ್ನು ವಿವರಿಸುವ ಲೆಕ್ಕಾಚಾರವೂ ಆಗಿರುತ್ತದಲ್ಲವೇ? ಅಷ್ಟು ಮಾತ್ರವಲ್ಲ. ಅಮೆರಿಕದ Fact Sheet ಹೇಳುವಂತೆ ಭಾರತವು ಅಮೆರಿಕದ ಕೃಷಿ ಸರಕುಗಳ ಮೇಲೆ ಶೇ. 37 ಮತ್ತು ಕೆಲವು ಕೈಗಾರಿಕಾ ಸರಕುಗಳ ಮೇಲೆ ಶೇ.100ರಷ್ಟು ಸುಂಕ ವಿಧಿಸುತ್ತಿತ್ತು. ಆದರೆ ಹಾಗೆ ಅಮೆರಿಕದ ಸರಕುಗಳ ಮೇಲಿನ ಸುಂಕವನ್ನು ಹೆಚ್ಚಿಸಿ ಭಾರತದ ರೈತರ ಮತ್ತು ಕೈಗಾರಿಕೆಗಳ ಆಸಕ್ತಿಯನ್ನು ಆ ಮೂಲಕ ದೇಶದ ಆಸಕ್ತಿಯನ್ನು ಕಾಪಾಡಲಾಗುತ್ತಿತ್ತು. ಹಾಗೆ ನೋಡಿದರೆ ಮೋದಿ ಸರಕಾರ ಬರುವವರೆಗೆ ಭಾರತದ ಕೃಷಿ ಕ್ಷೇತ್ರದ ಮಾರುಕಟ್ಟೆಯನ್ನು ವಿದೇಶಿ ಮಾರುಕಟ್ಟೆಗೆ ಬಹುಪಾಲು ತೆರೆದಿರಲಿಲ್ಲ. ಈಗ ಭಾರತದ ಬಹುಪಾಲು ಕೃಷಿ ಕ್ಶೇತ್ರವನ್ನು ಅಮೆರಿಕಕ್ಕೆ ತೆರೆದಿರಿಸಲಾಗಿದೆ. ಮತ್ತು ಕೃಷಿ ಮತ್ತು ಕೈಗಾರಿಕಾ ಸರಕುಗಳ ಮೇಲಿನ ಸುಂಕವನ್ನು ಶೇ.37-100 ರಿಂದ ಸೊನ್ನೆ ಅಥವಾ ಒಂದಂಕಿಗೆ ಇಳಿಸಲಾಗುತ್ತಿದೆ. ಹಾಗಿದ್ದಲ್ಲಿ ಇದೊಂದು ದ್ವಿಪಕ್ಷೀಯ ಒಪ್ಪಂದವೇ? ಎರಡೂ ಪಕ್ಷಗಳು ಕೊಟ್ಟು ತೆಗೆದುಕೊಂಡಿವೆಯೇ? ಭಾರತ ಎಲ್ಲವನ್ನು ಕೊಟ್ಟಿದೆ. ಅಮೆರಿಕ ಎಲ್ಲವನ್ನೂ ಪಡೆದುಕೊಂಡಿದೆ. ಇಂತಹ ಒಪ್ಪಂದವನ್ನು ವಸಾಹತುಶಾಹಿ ವಾಣಿಜ್ಯ ಒಪ್ಪಂದ ಎನ್ನುತ್ತಾರೆ. ಹೀಗೆ ತನ್ನ ದೇಶವನ್ನು ಬಲಿಗೊಟ್ಟವರನ್ನು ದೇಶದ್ರೋಹಿ ಎನ್ನುತ್ತಾರೆ. ಅಲ್ಲವೇ? 2. ಅಮೆರಿಕ ಸಂಪನ್ನ- ಭಾರತದ ಬರ್ಬಾದಿ ಭಾರತ ಮತ್ತು ಅಮೆರಿಕ ವಾಣಿಜ್ಯವು ಹೆಚ್ಚೂ ಕಡಿಮೆ 130 ಬಿಲಿಯನ್ ಡಾಲರ್ಗಳಷ್ಟಿದ್ದು ಇದರಲ್ಲಿ ಭಾರತ ಅಮೆರಿಕಕ್ಕೆ 90-100 ಬಿಲಿಯನ್ ಡಾಲರ್ ಸರಕುಗಳನ್ನು ಮಾರಾಟ ಮಾಡುತ್ತಿದ್ದರೆ, ಅಮೆರಿಕದಿಂದ ಭಾರತ ಖರೀದಿಸುತ್ತಿದ್ದದ್ದು 30-40 ಬಿಲಿಯನ್ ಡಾಲರುಗಳಷ್ಟು ಮಾತ್ರ. ಅಂದರೆ ಈ ವಾಣಿಜ್ಯದಲ್ಲಿ ಅಮೆರಿಕಕ್ಕೆ ಅಂದಾಜು 40 ಬಿಲಿಯನ್ ಡಾಲರ್ಗಳಷ್ಟು ವಾಣಿಜ್ಯ ಕೊರತೆ ಉಂಟಾಗುತ್ತಿತ್ತು. ಏಕೆಂದರೆ ಭಾರತವು ತನ್ನ ತೈಲ, ಖನಿಜ, ಇನ್ನಿತರ ಅಗತ್ಯಗಳನ್ನು ಅಮೆರಿಕಕ್ಕಿಂತ ಅಗ್ಗದ ದರದಲ್ಲಿ ಸರಬರಾಜು ಮಾಡುವ ದೇಶಗಳಿಂದ ಖರೀದಿ ಮಾಡುವಷ್ಟು ವ್ಯೆಹಾತ್ಮಕ ಖರೀದಿ ಸ್ವಾತಂತ್ರ್ಯವನ್ನು ಇಲ್ಲಿಯವರೆಗೆ ಕಾಪಾಡಿಕೊಂಡು ಬಂದಿತ್ತು. ಆ ಮೂಲಕವೂ ಭಾರತೀಯರ ಅಲ್ಪಸ್ವಲ್ಪ ಹಿತಾಸಕ್ತಿ ರಕ್ಷಿಸಲ್ಪಡುತ್ತಿತ್ತು. ಆದರೆ ಹಾಲಿ ಟ್ರಂಪ್-ಮೋದಿ ವಾಣಿಜ್ಯ ಒಪ್ಪಂದದ ಪ್ರಕಾರ ಭಾರತಕ್ಕೆ ಬೇಕಿದ್ದರೂ, ಬೇಡಿದ್ದರೂ, ಅಮೆರಿಕದಿಂದ ಮುಂದಿನ ಐದು ವರ್ಷಗಳಲ್ಲಿ 500 ಬಿಲಿಯನ್ ಡಾಲರ್ ಸರಕುಗಳನ್ನು ಖರೀದಿಸುತ್ತೇವೆ ಎಂಬ ಒಪ್ಪಂದಕ್ಕೆ ಮೋದಿ ಸರಕಾರ ಸಹಿ ಹಾಕಿದೆ. ಅರ್ಥಾತ್ ಇಲ್ಲಿಯವರೆಗೆ ಖರೀದಿಸುತ್ತಿದ್ದ ಮೊತ್ತಕ್ಕಿಂತ ಹತ್ತುಪಟ್ಟು ಹೆಚ್ಚು ಸರಕುಗಳನ್ನು ಅಮೆರಿಕದಿಂದ ಖರೀದಿಸುವ ಒಪ್ಪಂದಕ್ಕೆ ಸಹಿ ಹಾಕಿದೆ. ಅಂದರೆ ಭಾರತಕ್ಕೆ ಅಗತ್ಯವಾಗಿರುವ ಸರಕುಗಳು ಇತರ ದೇಶಗಳಿಂದ ಸಿಗುತ್ತಿದ್ದರೂ ಅಮೆರಿಕದಿಂದಲೇ ಖರೀದಿಸುತ್ತೇವೆ ಎಂಬ ಗುಲಾಮಿ ಒಪ್ಪಂದ. ಇದಕ್ಕೆ ಪ್ರತಿಯಾಗಿ ಅಮೆರಿಕವೂ ಭಾರತದಿಂದ 500 ಬಿಲಿಯನ್ ಡಾಲರ್ ಖರೀದಿ ಮಾಡುತ್ತದೆಂಬ ಒಂದು ವಾಕ್ಯವಿರಲಿ ಪದವೂ ಈ ‘ದ್ವಿಪಕ್ಷೀಯ’ ಒಪ್ಪಂದದಲ್ಲಿ ಇಲ್ಲ. ಇದು ಗುಲಾಮಿ ಒಪ್ಪಂದವಲ್ಲದೇ ಮತ್ತಿನ್ನೇನು? 3. ಭಾರತದ ರೈತಾಪಿಯ ಮೇಲೆ ಅಮೆರಿಕನ್ನರ ಆಕ್ರಮಣ ಈ ಒಪ್ಪಂದದ ಮೂಲಕ ಮೋದಿ ಸರಕಾರ ಈಗಾಗಲೇ ಕಂಗೆಟ್ಟಿರುವ ಭಾರತದ ರೈತಾಪಿಯನ್ನು ಅಮೆರಿಕದ ಆಕ್ರಮಣಕ್ಕೆ ಗುರಿಮಾಡಿ ರೈತ ಬದುಕನ್ನು ಮತ್ತಷ್ಟು ಕಂಗಾಲಾಗಿಸಲಿದೆ. ವಾಣಿಜ್ಯ ಮಂತ್ರಿ ಪಿಯುಷ್ ಗೋಯಲ್ ಮತ್ತು ಮೋದಿ ಭಾರತದ ಕೃಷಿಯನ್ನು ರಕ್ಷಿಸಲಾಗಿದೆ ಎಂದು ಹೇಳುತ್ತಿದ್ದರೂ, ಅಮೆರಿಕದ Fact Sheet, ಅಮೆರಿಕದ ಕೃಷಿ ಕಾರ್ಯದರ್ಶಿ ಹೇಳಿಕೆ ಮತ್ತು ಗೋಯಲ್ ಅವರ ಪತ್ರಿಕಾ ಸಂದರ್ಶನಗಳೇ ಬಚ್ಚಿಟ್ಟ ಸತ್ಯಗಳನ್ನು ಒಂದೊಂದಾಗಿ ಹೊರಹಾಕುತ್ತಿವೆ. ಜಂಟಿ ಹೇಳಿಕೆಯ ಪ್ರಕಾರ ಭಾರತವು: ‘‘ಪಶು ಆಹಾರವಾಗಿ ಬಳಸುವ ಜೋಳ ಮೂಲದ DDG (Dried Distillers’ Grain), ಉಡಿಚಿiಟಿ), ಬಾದಾಮಿ, ಪಿಸ್ತಾದಂತಹ ಮರಬೀಜಗಳು, ಹಣ್ಣುಗಳು, ಸೋಯಾಬೀನ್ ಎಣ್ಣೆ, ವೈನ್, ಸಂಸ್ಕರಿತ ಆಹಾರ ಹಾಗೂ ಇನ್ನಿತರ ಕೃಷಿ ಸರಕುಗಳ ಮೇಲೆ ಈವರೆಗೆ ಹಾಕುತ್ತಿದ್ದ ಸುಂಕವನ್ನು ಶೇ. 37 ರಿಂದ ಸೊನ್ನೆ ಅಥವಾ ಒಂದಂಕಿಗೆ ಇಳಿಸಲಿದೆ. ಅರ್ಥಾತ್ ಈ ಎಲ್ಲಾ ಬಗೆಯ ಭಾರತೀಯ ಕೃಷಿ ಸರಕುಗಳು ಇನ್ನು ಮುಂದೆ ಅಮೆರಿಕದ ಇದೇ ಬಗೆಯ ಕೃಷಿ ಸರಕುಗಳ ಮುಂದೆ ದುಬಾರಿಯಾಗಲಿವೆ. ಈಗಾಗಲೇ ಮಾರುಕಟ್ಟೆಯಿಲ್ಲದೆ ಸೊರಗಿರುವ ರೈತಾಪಿಗೆ ಆತ್ಮಹತ್ಯೆ ಬಿಟ್ಟರೆ ಬೇರೆ ದಾರಿ ಇಲ್ಲವಾಗಲಿದೆ. ಉದಾಹರಣೆಗೆ: -DDG ರೂಪದಲ್ಲಿ ಪಶು ಆಹಾರವಾಗಿ ಬಳಕೆಯಾಗುವುದಕ್ಕೆ ಭಾರತದ(ಕರ್ನಾಟಕದ) ರೈತ ಮೆಕ್ಕೆ ಜೋಳವನ್ನು ಮತ್ತು ಮಧ್ಯಪ್ರದೇಶದ ಮತ್ತು ಮಹಾರಾಷ್ಟ್ರದ ರೈತಾಪಿ ಸೋಯಾ ಬೀಜಗಳನ್ನು ಬೆಳೆಯುತ್ತಿದ್ದರು. ರಫ್ತು ಕೂಡ ಮಾಡುತ್ತಿದ್ದರು. ಈಗ ಅಮೆರಿಕದ ಜೋಳ ಮೂಲದ DDG ಮತ್ತು ಸೋಯಾ ಎಣ್ಣೆ ನೇರವಾಗಿ ಶೂನ್ಯ ಸುಂಕ ದರದಲ್ಲಿ ಆಮದಾಗುವುದಾದರೆ ಯಾವ ಪಶು ಆಹಾರ ಉತ್ಪಾದಕ ಭಾರತದ ರೈತರಿಂದ ಜೋಳ ಅಥವಾ ಸೋಯಾ ಬೀಜ ಖರೀದಿಸಿಯಾರು? -ಇನ್ನು ಈ ಸಾರಿ ಬಜೆಟ್ನಲ್ಲಿ ಕೃಷಿ ಆದಾಯ ಹೆಚ್ಚಿಸಲು ರೈತರು ಮೌಲ್ಯವರ್ಧಿತ ಬೆಳೆಗಳನ್ನು ಬೆಳೆಯಬೇಕೆಂದು ಪ್ರಧಾನವಾಗಿ ಹಣ್ಣುಬೆಳೆಗಳಿಗೆ ಪ್ರೋತ್ಸಾಹ ಘೋಷಿಸುವ ನಾಟಕವನ್ನು ಆಡಿದ ಮೋದಿ ಸರಕಾರ ಈ ಒಪ್ಪಂದದಲ್ಲಿ ಅಮೆರಿಕದ ಹಣ್ಣು ಬೆಳೆಗಳಿಗೆ ಶೂನ್ಯ ಸುಂಕ ಘೋಷಿಸಿದೆ. ಅಮೆರಿಕದ ಸೇಬುಗಳು ಶೂನ್ಯ ಸುಂಕದಲ್ಲಿ ಭಾರತದಲ್ಲಿ ಮಾರಾಟವಾಗುವುದಾದರೆ ಕಾಶ್ಮೀರ ಹಾಗೂ ಹಿಮಾಚಲದ ಸೇಬುಗಳನ್ನು ಕೊಳ್ಳುವವರಾರು? ಹಾಗೆಯೇ ಅಮೆರಿಕದ ಬಾದಾಮಿ ಮತ್ತು ಪಿಸ್ತಾ ಅಗ್ಗದ ದರದಲ್ಲಿ ಸಿಗುವುದಾದರೆ ಕಾಶ್ಮೀರದ ಬಾದಾಮಿ ಕೊಳ್ಳುವವರಾರು? ಆ ರೈತರ ಪರಿಸ್ಥಿತಿಯೇನು? -ಹಾಗೆಯೇ ಮೌಲ್ಯ ವರ್ಧಿತ ಬೆಳೆಗಳ ಭಾಗವಾಗಿ ವೈನ್ ಉತ್ಪಾದನೆಗೆ ಪ್ರೋತ್ಸಾಹ ಎಂದು ಬಜೆಟ್ನಲ್ಲಿ ಹೇಳಲಾಗಿತ್ತಷ್ಟೆ. ಅದರ ಭಾಗವಾಗಿ ಕರ್ನಾಟಕ, ಮಹಾರಾಷ್ಟ್ರ ಮತ್ತು ಇನ್ನೂ ಹಲವು ಕಡೆ ವಿಸ್ತೃತವಾಗಿ ದ್ರಾಕ್ಷಿಯನ್ನು ರೈತರು ಬೆಳೆಯುತ್ತಿದ್ದರು. ಈಗ ಅಮೆರಿಕದ ವೈನ್ ಅನ್ನೇ ಶೂನ್ಯ ದರದಲ್ಲಿ ಆಮದು ಮಾಡಿಕೊಳ್ಳುವುದಾದರೆ ದ್ರಾಕ್ಷಿ ಉತ್ಪಾದಕರ ಗತಿಯೇನು? -ಇದಲ್ಲದೆ Fact Sheetನಲ್ಲಿ ಜಂಟಿ ಹೇಳಿಕೆಯಲ್ಲಿ ಇಲ್ಲದ ಒಂದು ಸರಕಿದೆ. ಅದು ಅಮೆರಿಕದಿಂದ ಶೂನ್ಯ ದರದಲ್ಲಿ ಆಮದು ಮಾಡಿಕೊಳ್ಳುವ ಬೇಳೆಕಾಳುಗಳು. ತೊಗರಿ, ಉದ್ದು, ಹೆಸರು ಇತ್ಯಾದಿ. ಭಾರತದ ವಾಣಿಜ್ಯ ಮತ್ತು ಕೃಷಿ ಮಂತ್ರಿಗಳು ಕೂಡ ಇದನ್ನು ಜನರಿಂದ ಮುಚ್ಚಿಟ್ಟಿದ್ದರು. ಈ ಕಾರಣಕ್ಕಾಗಿಯೇ ಇದಲ್ಲದೆ ಈ ಜಂಟಿ ಹೇಳಿಕೆಯಲ್ಲಿ ‘ಇನ್ನಿತರ ಕೃಷಿ ಸರಕುಗಳು’ ಎಂಬ ಅವಕಾಶವನ್ನು ಅಮೆರಿಕ ಸೇರಿಸಿದೆ. ಮೋದಿ ಸರಕಾರ ಒಪ್ಪಿಕೊಂಡು ಭಾರತೀಯರಿಗೆ ದ್ರೋಹ ಬಗೆದಿದೆ. 4. ಸುಂಕೇತರ ತಡೆಗೋಡೆಗಳ (Non-Tariff Barriers) ನಿರ್ನಾಮ ಭಾರತದ ಹಿತಾಸಕ್ತಿಯನ್ನು ಸುಂಕ ಶುಲ್ಕದ ಮೂಲಕ ಮಾತ್ರವಲ್ಲದೆ ಸುಂಕೇತರ ಷರತ್ತುಗಳನ್ನು ಹೇರುವ ಮೂಲಕ ರಕ್ಷಿಸುವ ಅವಕಾಶವಿತ್ತು. ಉದಾಹರಣೆಗೆ ಭಾರತದ ಮಾರುಕಟ್ಟೆಯಲ್ಲಿ ಕುಲಾಂತರಿ ಬೀಜಗಳಿಗೆ ಮತ್ತು ಉತ್ಪತ್ತಿಗಳಿಗೆ ಅವಕಾಶವಿರಲಿಲ್ಲ. ಹಾಗೆಯೇ ಮಾಂಸಾಹಾರದ ಪಶು ಆಹಾರವನ್ನು ಬಳಸಿ ಉತ್ಪಾದಿಸಿದ ಹೈನು ಉತ್ಪಾದನೆಗಳಿಗೆ ಭಾರತದಲ್ಲಿ ಅವಕಾಶವಿರಲಿಲ್ಲ. ಹಾಗೆಯೇ ಡಿಜಿಟಲ್ ಮಾರುಕಟ್ಟೆಯಲ್ಲಿ ದೈತ್ಯ ಬಹುರಾಷ್ಟ್ರೀಯ ಕಂಪೆನಿಗಳಿಗೆ ಭಾರತದ ಡೇಟಾ ಬಳಸುವ, ಸಂಗ್ರಹಿಸುವ ಅವಕಾಶವಿರಲಿಲ್ಲ. ಅಮೆರಿಕದ ಸರಕುಗಳು ಭಾರತದ ಮಾರುಕಟ್ಟೆ ಪಡೆಯಬೇಕೆಂದರೆ ಇವೆಲ್ಲವನ್ನು ಬಳಸಿಲ್ಲವೆಂದು ಪ್ರಮಾಣ ಪತ್ರ ಒದಗಿಸಬೇಕಿತ್ತು. ಹಾಗೆಯೇ ಕೆಲವು ಸರಕುಗಳ ಗುಣಮಟ್ಟ ನಿರ್ಧಾರಕ್ಕೆ ಭಾರತ ತನ್ನದೇ ಆದ ಮಾನದಂಡ ಮತ್ತು ಪ್ರಮಾಣವನ್ನು ಬಳಸುತ್ತಿತ್ತು. ಈಗ ಈ ಮೋದಿ-ಟ್ರಂಪ್ ಒಪ್ಪಂದದ ಪ್ರಕಾರ ಆ ಎಲ್ಲಾ ಅಡೆತಡೆಗಳನ್ನು ಸಂಪೂರ್ಣವಾಗಿ ತೆಗೆಯಲಾಗಿದೆ ಮತ್ತು ಭಾರತದ ನಿಯಂತ್ರಣ ಸಾರ್ವಭೌಮತೆಯನ್ನು ಅಮೆರಿಕಕ್ಕೆ ಮೋದಿ ಮಾರಿಕೊಂಡಿದ್ದಾರೆ. 5. ರಶ್ಯ ತೈಲ ನಿಲುಗಡೆ ಮಾತ್ರವಲ್ಲ, ಸಂಪೂರ್ಣ ಅಮೆರಿಕ ಗುಲಾಮಿ ಅಮೆರಿಕ ಬಿಡುಗಡೆ ಮಾಡಿರುವ Fact Sheetನಲ್ಲಿ ಸ್ಪಷ್ಟವಾಗಿರುವಂತೆ ಅಮೆರಿಕ ಸುಂಕವನ್ನು ಶೇ. 18ಕ್ಕಾದರೂ ಇಳಿಸಲು ಒಪ್ಪಿಕೊಳ್ಳಲು ಪ್ರಧಾನ ಕಾರಣವೇ ‘‘… India’s willingness to align with the United States…’’ (ಭಾರತವು ಅಮೆರಿಕದ ಆಸಕ್ತಿಗಳ ಜೊತೆಗೆ ನಿಲ್ಲಲು ಒಪ್ಪಿಕೊಂಡಿರುವುದು). to confront shared national security challenges (ಮತ್ತು ಪರಸ್ಪರ ರಾಷ್ಟ್ರೀಯ ಭದ್ರತಾ ಸವಾಲುಗಳನ್ನು ಅಮೆರಿಕದ ಜೊತೆಯಾಗಿ ಎದುರಿಸಲು) ಒಪ್ಪಿಕೊಂಡಿರುವುದು. ಅಮೆರಿಕದ ವಾಣಿಜ್ಯ, ಅಮೆರಿಕದ ಭದ್ರತೆಗೆ ಯಾರ್ಯಾರು ಶತ್ರುಗಳೋ ಅವರೆಲ್ಲರನ್ನೂ ಭಾರತವು ಶತ್ರುವೆಂದು ಭಾವಿಸುವುದು ಮತ್ತು ಭಾರತದ ಹಿತಾಸಕ್ತಿಯ ಪರವಾಗಿದ್ದರೂ ಅಮೆರಿಕದ ಒಪ್ಪಿಗೆ ಇಲ್ಲದಿದ್ದರೆ ಅವರ ಜೊತೆ ಒಪ್ಪಂದ ಮಾಡಿಕೊಳ್ಳದಿರುವುದು. ಅದಕ್ಕಾಗಿಯೇ ಅಮೆರಿಕ ಇದನ್ನು ಕೇವಲ ವಾಣಿಜ್ಯ ಒಪ್ಪಂದ ಎಂದು ಮಾತ್ರವಲ್ಲದೆ: ‘‘ಭಾರತ-ಅಮೆರಿಕ ಆರ್ಥಿಕ ಭದ್ರತಾ ಪಾಲುದಾರಿಕೆಯನ್ನು ಸಶಕ್ತಗೊಳಿಸುವ ಮತ್ತು ಅದಕ್ಕೆ ಅಡ್ಡಿಪಡಿಸುವ ಮೂರನೇ ರಾಷ್ಟ್ರಗಳ ಮೇಲೆ ಜಂಟಿಯಾಗಿ ಕ್ರಮ ತೆಗೆದುಕೊಳ್ಳುವ ಒಪ್ಪಂದ ಎಂದು ಬಣ್ಣಿಸುತ್ತದೆ’’ (United States and India agree to strengthen economic security alignment to enhance supply chain resilience and innovation through complementary actions to address non-market policies of third parties) ಈ ಹಿನ್ನೆಲೆಯಲ್ಲೇ ಅಮೆರಿಕದ ತೈಲಕ್ಕಿಂತ ಶೇ. 30ರಷ್ಟು ರಶ್ಯ ತೈಲ ಅಗ್ಗವಾಗಿದ್ದರೂ ಭಾರತ ಅದನ್ನು ಕೊಳ್ಳಬಾರದೆಂದು ತಾಕೀತು ಮಾಡಿದೆ. ಅದನ್ನು ಒಪ್ಪಿಕೊಂಡ ಮೇಲೆ ಒಪ್ಪಂದಕ್ಕೆ ಮುಂದಾಗಿದೆ. ಆದರೆ ಇದರ ಬಗ್ಗೆ ತಮಗೆ ಗೊತ್ತಿಲ್ಲ ಎಂದು ಭಾರತದ ವಾಣಿಜ್ಯ ಮಂತ್ರಿ ಮತ್ತು ವಿದೇಶಾಂಗ ಮಂತ್ರಿ ಒಬ್ಬರ ಮೇಲೆ ಒಬ್ಬರು ಜವಾಬ್ದಾರಿ ಎತ್ತಿ ಹಾಕುವ ನಾಟಕವಾಡುತ್ತಿದ್ದರೂ ಅಮೆರಿಕ ನಿನ್ನೆ ಬಿಡುಗಡೆ ಮಾಡಿರುವ ಈಚಿಛಿಣ Sheeಣನಲ್ಲಿ ಇದನ್ನು ಸ್ಪಷ್ಟವಾಗಿ ದಾಖಲಿಸಲಾಗಿದೆ. ಮಾತ್ರವಲ್ಲದೆ.. ‘‘...ಭಾರತ ರಶ್ಯದಿಂದ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ತೈಲ ಖರೀದಿ ಮಾಡದಂತೆ ನಿಗಾ ವಹಿಸಲಾಗುವುದು’’ ಎಂದು ಸ್ಪಷ್ಟಪಡಿಸಿದೆ. ಇಂತಹ ಅವಮಾನಕರ, ಏಕಪಕ್ಷೀಯ ಹೇರಿಕೆಯನ್ನು ದ್ವಿಪಕ್ಷೀಯ ಒಪ್ಪಂದ ಎಂದು ಕರೆಯುವರು ಕೇವಲ ಅಂಧಭಕ್ತರಲ್ಲ, ದೇಶದ್ರೋಹಿಗಳು. ಆದ್ದರಿಂದ ದೇಶದ ಬಗ್ಗೆ ಮತ್ತು ಜನರ ಬಗ್ಗೆ ಕಳಕಳಿಯಿರುವ ಎಲ್ಲಾ ನೈಜ ದೇಶಪ್ರೇಮಿಗಳು.... ಈ ದೇಶವಿರೋಧಿ, ರೈತವಿರೊಧಿ ಒಪ್ಪಂದ ಮತ್ತು ಮೋದಿ ಸರಕಾರದ ವಿರುದ್ಧ ಈ ದೇಶದ ರೈತಾಪಿ ಮತ್ತು ಜನಸಮುದಾಯ ಮತ್ತೊಂದು ಸ್ವಾತಂತ್ರ್ಯ ಹೋರಾಟ ಪ್ರಾರಂಭಿಸಬೇಕಿದೆ... ಅಲ್ಲವೇ?
ವನ್ಯಜೀವಿಗಳ ಆತಂಕದೊಂದಿಗೆ ಮಲೆ ಮಹದೇಶ್ವರ ಬೆಟ್ಟಕ್ಕೆ ಸಹಸ್ರಾರು ಭಕ್ತರ ಪಾದಯಾತ್ರೆ
ಮಲೆ ಮಹದೇಶ್ವರ ಬೆಟ್ಟಕ್ಕೆ ತನ್ನ ಕುಟುಂಬಸ್ಥರೊಂದಿಗೆ ಪಾದಯಾತ್ರೆ ಕೈಗೊಂಡಿದ್ದ ಬಾಲಕನ ಮೇಲೆ ಚಿರತೆ ದಾಳಿ ನಡೆಸಿದ್ದು, ಅದೃಷ್ಟವಶಾತ್ ಸಣ್ಣಪುಟ್ಟ ಗಾಯಗಳೊಡನೆ ಬಾಲಕ ಪಾರಾಗಿದ್ದಾನೆ. ಚನ್ನಪಟ್ಟಣ ತಾಲೂಕಿನ ಭುವಳ್ಳಿ ಗ್ರಾಮದ ಶ್ರೇಯಸ್ (8) ಎಂಬ ಬಾಲಕ ತನ್ನ ಕುಟುಂಬದೊಂದಿಗೆ ಪಾದಯಾತ್ರೆಗೆ ಆಗಮಿಸಿದ್ದ ವೇಳೆ ಈ ಘಟನೆ ನಡೆದಿದೆ. ಪೊನ್ನಾಚಿ ಕ್ರಾಸ್ ದಾಟಿ ಅರಣ್ಯ ಪ್ರದೇಶದಲ್ಲಿ ಪಾದಯಾತ್ರಿಕರು ಗುಂಪುಗುಂಪಾಗಿ ಸಾಗುತ್ತಿದ್ದ ಸಮಯದಲ್ಲಿ ಚಿರತೆ ಬಾಲಕನ ಮೇಲೆ ದಾಳಿ ನಡೆಸಲು ಯತ್ನಿಸಿದೆ.
ಭಾರತದ ಬ್ಯಾಟರ್ ಅಭಿಷೇಕ್ ಶರ್ಮಾ ಆಸ್ಪತ್ರೆಗೆ ದಾಖಲು
ನಮೀಬಿಯಾ ವಿರುದ್ಧ ಪಂದ್ಯಕ್ಕೆ ಅನುಮಾನ
ವೃದ್ಧ ವ್ಯಾಪಾರಿ ಪರ ನಿಂತ ‘ಮುಹಮ್ಮದ್ ದೀಪಕ್ʼ ಹತ್ಯೆಗೆ 2 ಲಕ್ಷ ರೂ. ಘೋಷಣೆ: ಪ್ರಕರಣ ದಾಖಲು
ಡೆಹ್ರಾಡೂನ್: ಉತ್ತರಾಖಂಡದ ಕೋಟ್ದ್ವಾರದಲ್ಲಿ ಸಂಘಪರಿವಾರದ ಕಾರ್ಯಕರ್ತರು ಕಿರುಕುಳ ನೀಡಿದಾಗ ವೃದ್ಧ ಮುಸ್ಲಿಂ ವ್ಯಾಪಾರಿಯ ಪರವಾಗಿ ನಿಂತ ಜಿಮ್ ಮಾಲಕ ದೀಪಕ್ ಕುಮಾರ್ ಅವರನ್ನು ಹತ್ಯೆ ಮಾಡಿದ ವ್ಯಕ್ತಿಗೆ 2 ಲಕ್ಷ ರೂ. ಬಹುಮಾನ ಘೋಷಿಸಿದ ಆರೋಪದ ಮೇಲೆ ಉತ್ತರಾಖಂಡ ಪೊಲೀಸರು ವ್ಯಕ್ತಿಯೋರ್ವನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ದೀಪಕ್ ಕುಮಾರ್ ಅವರ ದೂರಿನ ಮೇರೆಗೆ ರವಿವಾರ ತಡರಾತ್ರಿ ಬಿಎನ್ಎಸ್ ಸೆಕ್ಷನ್ 351 (3)ರಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ. ನಾನು ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೊವೊಂದನ್ನು ಗಮನಿಸಿದ್ದೇನೆ. ಅದರಲ್ಲಿ ಒಬ್ಬ ವ್ಯಕ್ತಿ ನನಗೆ ಬೆದರಿಕೆ ಹಾಕುತ್ತಿರುವುದು ಮತ್ತು ನನ್ನನ್ನು ಹತ್ಯೆ ಮಾಡುವವರಿಗೆ 2 ಲಕ್ಷ ರೂ. ಬಹುಮಾನ ಘೋಷಿಸುತ್ತಿರುವುದು ಕಂಡುಬಂದಿದೆ. ಕೊಲೆ ಬೆದರಿಕೆಯಿಂದಾಗಿ ನಾನು ಮತ್ತು ನನ್ನ ಕುಟುಂಬ ಭಯದಲ್ಲಿ ಜೀವನ ನಡೆಸುತ್ತಿದೆ. ಈ ವೀಡಿಯೊ ಫೇಸ್ಬುಕ್, ಎಕ್ಸ್ ಮತ್ತು ಇನ್ಸ್ಟಾಗ್ರಾಮ್ನಲ್ಲಿ ವೈರಲ್ ಆಗುತ್ತಿದೆ ಎಂದು ದೀಪಕ್ ಕುಮಾರ್ ಹೇಳಿದ್ದಾರೆ. ವೈರಲ್ ವೀಡಿಯೊದಲ್ಲಿ, ಹಣೆಯ ಮೇಲೆ ತಿಲಕ ಇಟ್ಟಿರುವ ವ್ಯಕ್ತಿ ಎಡಗೈಯಲ್ಲಿ 500 ಮುಖಬೆಲೆಯ ನೋಟುಗಳ ಬಂಡಲ್ ಹಿಡಿದಿರುವುದು ಕಂಡು ಬಂದಿದೆ. ಮುಹಮ್ಮದ್ ದೀಪಕ್ ನನ್ನು ಹತ್ಯೆ ಮಾಡಿ ಆತನಿಗೆ ಸನಾತನ ಧರ್ಮದ ಬಗ್ಗೆ ಶಿಕ್ಷಣ ನೀಡುವ ಕೆಲಸವನ್ನು ಮಾಡುವವರಿಗೆ 2 ಲಕ್ಷ ನೀಡಲಾಗುವುದು ಎಂದು ಆತ ವೀಡಿಯೊದಲ್ಲಿ ಹೇಳುವುದು ಕಂಡು ಬಂದಿದೆ. ದೀಪಕ್ ಕುಮಾರ್ ನೀಡಿದ ದೂರು ಆಧರಿಸಿ ನಾವು ಎಫ್ಐಆರ್ ದಾಖಲಿಸಿದ್ದೇವೆ. ವೀಡಿಯೊದಲ್ಲಿ ಬೆದರಿಕೆ ಹಾಕುತ್ತಿರುವ ವ್ಯಕ್ತಿಯನ್ನು ಬಿಹಾರದ ಪೂರ್ವ ಚಂಪಾರಣ್ ಜಿಲ್ಲೆಯ ನಿವಾಸಿ ಉತ್ಕರ್ಷ್ ಸಿಂಗ್ ಎಂದು ಗುರುತಿಸಲಾಗಿದೆ. ಈ ಕುರಿತು ನಾವು ಮುಂದಿನ ಕ್ರಮವನ್ನು ಕೈಗೊಳ್ಳುತ್ತಿದ್ದೇವೆ ಎಂದು ಸಹಾಯಕ ಪೊಲೀಸ್ ವರಿಷ್ಠಾಧಿಕಾರಿ ಚಂದ್ರ ಮೋಹನ್ ಸಿಂಗ್ ಹೇಳಿದ್ದಾರೆ. ಜನವರಿ 26ರಂದು ಪಾರ್ಕಿನ್ಸನ್ ಕಾಯಿಲೆಯಿಂದ ಬಳಲುತ್ತಿದ್ದ 70 ವರ್ಷದ ಮುಸ್ಲಿಂ ವ್ಯಾಪಾರಿಯ ಮಳಿಗೆಗೆ ಬಂದು ‘ಬಾಬಾ’ ಹೆಸರನ್ನು ಕೈಬಿಡುವಂತೆ ಕಿರುಕುಳ ನೀಡುತ್ತಿದ್ದ ಬಜರಂಗದಳದ ಕಾರ್ಯಕರ್ತರನ್ನು ದೀಪಕ್ ಒಬ್ಬಂಟಿಯಾಗಿ ಎದುರಿಸಿದ್ದರು. ಘರ್ಷಣೆಯ ವೇಳೆ ತನ್ನ ಹೆಸರು ಕೇಳಿದವರಿಗೆ “ಮುಹಮ್ಮದ್ ದೀಪಕ್” ಎಂದು ಅವರು ಹೇಳಿದ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.
ಮಹತ್ವದ ಬೆಳವಣಿಗೆಯೊಂದರಲ್ಲಿ ವಂದೇ ಮಾತರಂ ಗೀತೆಗೆ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿರುವ ಕೇಂದ್ರ ಸರ್ಕಾರ, ಸರ್ಕಾರಿ ಕಾರ್ಯಕ್ರಮಗಳಲ್ಲಿ ಮತ್ತು ಶಾಲೆಗಳಲ್ಲಿ ಗೀತೆ ನುಡಿಸುವಾಗ ಎದ್ದು ನಿಲ್ಲುವುದನ್ನು ಕಡ್ಡಾಯಗೊಳಿಸಿದೆ. ಆದರೆ ಚಿತ್ರಮಂದಿರಗಳಲ್ಲಿ ವಂದೇ ಮಾತರಂ ಗೀತೆ ನುಡಿಸುವುದನ್ನು ಕಡ್ಡಾಯಗೊಳಿಸಲಾಗಿಲ್ಲ. ರಾಷ್ಟ್ರಗೀತೆ ಜನ ಗಣ ಮನ ನುಡಿಸುವ ಮೊದಲು ವಂದೇ ಮಾತರಂ ಗೀತೆಗೆ ಪ್ರಾಶಸ್ತ್ಯ ನೀಡಲಾಗಿದೆ. ಇತ್ತೀಚಿಗೆ ವಂದೇ ಮಾತರಂ ಗೀತೆಯ 150ನೇ ವರ್ಷಾಚರಣೆಯನ್ನು ಕೇಂದ್ರ ಸರ್ಕಾರ ವಿಶಿಷ್ಟವಾಗಿ ಆಚರಿಸಿತ್ತು. ಇಲ್ಲಿದೆ ಹೆಚ್ಚಿನ ಮಾಹಿತಿ.
ಸಂಕಷ್ಟದಲ್ಲಿ ಬಿಜೆಪಿ ಶಾಸಕ ಬೈರತಿ ಬಸವರಾಜ, ಬಿಕ್ಲು ಶಿವು ಹತ್ಯೆ ತಂದಿಡುತ್ತಾ ಆಪತ್ತು? ಮುಂದೇನು
ಬಿಕ್ಲು ಶಿವು ಕೊಲೆ ಪ್ರಕರಣ ರಾಜಕೀಯವಾಗಿ ಇದೀಗ ಸದ್ದು ಮಾಡುತ್ತಿದೆ. ಕೊಲೆ ಪ್ರಕರಣದಲ್ಲಿ ಐದನೇ ಆರೋಪಿಯಾಗಿರುವ ಬಿಜೆಪಿ ಶಾಸಕ ಬೈರತಿ ಬಸವರಾಜ ಅವರಿಗೆ ಹೈಕೋರ್ಟ್ ನಿರೀಕ್ಷಣಾ ಜಾಮೀನು ನಿರಾಕರಿಸಿದೆ. ಪರಿಣಾಮವಾಗಿ ಈ ಕೊಲೆ ಪ್ರಕರಣದಲ್ಲಿ ಬೈರತಿ ಬಸವರಾಜ ಅವರು ಸಂಕಷ್ಟಕ್ಕೆ ಸಿಲುಕಿದ್ದಾರೆ. ನಿರೀಕ್ಷಣಾ ಜಾಮೀನು ರದ್ದುಗೊಂಡ ಹಿನ್ನೆಲೆಯಲ್ಲಿ ಅವರ ಬಂಧನ ಸಾಧ್ಯತೆಗಳನ್ನು ಅಲ್ಲಗಳೆಯುವ ಹಾಗಿಲ್ಲ. ಹಾಗಾಗಿ ಈ ಪ್ರಕರಣ ಮುಂದೆ ಯಾವ ಸ್ವರೂಪವನ್ನು ಪಡೆದುಕೊಳ್ಳಲಿದೆ ಎಂಬುವುದು ಕುತೂಹಲಕ್ಕೆ ಕಾರಣವಾಗಿದೆ. ಮತ್ತಷ್ಟು ವಿವರ ಇಲ್ಲಿದೆ.
ಅಮೆರಿಕಾದಲ್ಲಿ ಈಗಾಗಲೇ ಅಮೆರಿಕ ಫಸ್ಟ್ ಎಂಬ ಧ್ಯೇಯವಾಕ್ಯದೊಂದಿಗೆ ವಿದೇಶಿ ವಲಸಿಗರ ಮೇಲೆ ವಲಸೆ ವಿರೋಧಿ ನೀತಿಯನ್ನು ಬಿಗಿಗೊಳಿಸುತ್ತಿದ್ದು, ದಿನನಿತ್ಯವೂ ಒಂದಲ್ಲಾ ಒಂದು ನಿರ್ಬಂಧಗಳನ್ನು ಹೇರುತ್ತಾ H-1B ವೀಸಾದಲ್ಲಿ ಅಕ್ರಮ ನಡೆಯುತ್ತಿದ್ದು, ಇದರಿಂದ ಅಮೆರಿಕನ್ ಕಾರ್ಮಿಕರ ಉದ್ಯೋಗಗಳು ವಂಚನೆಗೊಳಗಾಗುತ್ತಿವೆ ಎಂಬ ಕೂಗು ಕೇಳಿ ಬರುತ್ತಿದೆ. ಈ ಮಧ್ಯೆ ರಿಪಬ್ಲಿಕನ್ ನಾಯಕರೊಬ್ಬರು H-1B ವೀಸಾ ಕಾರ್ಯಕ್ರಮವನ್ನೇ ರದ್ದುಗೊಳಿಸುವ ಎಕ್ಸೈಲ್ ಮಸೂದೆಯನ್ನು ಮಂಡಿಸಿದ್ದು, ಇದಕ್ಕೆ ಹಲವು ಕಾರಣಗಳನ್ನು ಹಾಗೂ ಪುರಾವೆಗಳನ್ನು ನೀಡಿದ್ದಾರೆ. ಈ ಮಸೂದೆ ಜಾರಿಯಾದರೆ, ಅಮೆರಿಕಾದಲ್ಲಿನ ವಲಸಿಗರಿಗೆ ಮತ್ತಷ್ಟು ಸಂಕಷ್ಟ ಎದುರಾಗಲಿದೆ. ಹಾಗಾದ್ರೆ ಏನಿದು ಎಕ್ಸೈಲ್ ಮಸೂದೆ ನೋಡೋಣ ಬನ್ನಿ..
ಮಹಾತ್ಮ ಗಾಂಧಿ ಕುರಿತ ಪ್ರಬಂಧ ಉಲ್ಲೇಖಿಸಿ ಅತ್ಯಾಚಾರ ಪ್ರಕರಣದ ಅಪರಾಧಿಯ ಶಿಕ್ಷಾವಧಿ ಕಡಿತಗೊಳಿಸಿದ ಮುಂಬೈ ನ್ಯಾಯಾಲಯ
ಮುಂಬೈ: ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಆರೋಪದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಅಪರಾಧಿಯ ಶಿಕ್ಷಾವಧಿಯನ್ನು ಬಾಂಬೆ ಹೈಕೋರ್ಟ್ 12 ವರ್ಷಗಳಿಗೆ ಕಡಿತಗೊಳಿಸಿದೆ. ಅಪರಾಧ ನಡೆದ ಸಂದರ್ಭದಲ್ಲಿ ಆರೋಪಿಯ ಕಿರಿಯ ವಯಸ್ಸು, ದೀರ್ಘಕಾಲದ ಜೈಲು ವಾಸ ಹಾಗೂ ಕಾರಾಗೃಹದಲ್ಲಿರುವ ಅವಧಿಯಲ್ಲಿ ತೋರಿದ ಸುಧಾರಣೆ, ಮಹಾತ್ಮ ಗಾಂಧಿಯ ಕುರಿತು ಪ್ರಬಂಧ ಕಾರ್ಯಕ್ರಮದಲ್ಲಿ ಭಾಗವಹಿಸಿರುವುದನ್ನು ಉಲ್ಲೇಖಿಸಿ ಈ ತೀರ್ಪನ್ನು ನೀಡಲಾಗಿದೆ. ಫೆಬ್ರವರಿ 2ರಂದು ಹೊರಡಿಸಿದ ಆದೇಶದಲ್ಲಿ ನ್ಯಾಯಮೂರ್ತಿಗಳಾದ ಸಾರಂಗ್ ಕೊತ್ವಾಲ್ ಮತ್ತು ಸಂದೇಶ್ ಪಾಟೀಲ್ ಅವರನ್ನೊಳಗೊಂಡ ವಿಭಾಗೀಯ ಪೀಠವು 2016ರ ದೋಷಾರೋಪಣೆಯನ್ನು ಎತ್ತಿ ಹಿಡಿದರೂ, ಶಿಕ್ಷೆ ಕಡಿತಗೊಳಿಸಲು ಅರ್ಹವಾಗಿದೆ ಎಂದು ಅಭಿಪ್ರಾಯಪಟ್ಟಿದೆ. ವಿಶೇಷ ಪೊಕ್ಸೊ ನ್ಯಾಯಾಲಯ ನೀಡಿದ್ದ ಜೀವಾವಧಿ ಶಿಕ್ಷೆಯನ್ನು ಪ್ರಶ್ನಿಸಿ ಅಪರಾಧಿ ಸಲ್ಲಿಸಿದ್ದ ಮೇಲ್ಮನವಿಯನ್ನು ವಿಚಾರಣೆ ನಡೆಸಿದ ನ್ಯಾಯಾಲಯ ಈ ತೀರ್ಪನ್ನು ನೀಡಿದೆ. ಅಪರಾಧದ ಸಮಯದಲ್ಲಿ ಅಪರಾಧಿಗೆ 20 ವರ್ಷ ವಯಸ್ಸಾಗಿತ್ತು. ಆತನಿಗೆ ಯಾವುದೇ ಕ್ರಿಮಿನಲ್ ಹಿನ್ನೆಲೆ ಇರಲಿಲ್ಲ. 2016ರ ಡಿಸೆಂಬರ್ ನಿಂದ ಬಂಧನದಲ್ಲಿದ್ದು, COVID-19 ಸಾಂಕ್ರಾಮಿಕ ಸಮಯದಲ್ಲಿಯೂ ಕೂಡ ಬಿಡುಗಡೆ ಮಾಡಲಾಗಿಲ್ಲ ಎಂದು ನ್ಯಾಯಾಲಯ ಗಮನಿಸಿದೆ. ಪ್ರಬಂಧ ಸ್ಪರ್ಧೆ ಮತ್ತು ಮಹಾತ್ಮ ಗಾಂಧಿಯವರ ಚಿಂತನೆಗಳನ್ನು ಅಧ್ಯಯನ ಮಾಡುವ ಕಾರ್ಯಕ್ರಮ ಸೇರಿದಂತೆ ಜೈಲಿನ ಶೈಕ್ಷಣಿಕ ಚಟುವಟಿಕೆಗಳಲ್ಲಿ ಅಪರಾಧಿ ಭಾಗವಹಿಸಿರುವ ಕುರಿತ ಪ್ರಮಾಣಪತ್ರಗಳನ್ನು ಕೂಡ ಪೀಠವು ಗಮನಿಸಿದೆ.
Gold Rate Fall : ಚಿನ್ನಾಭರಣ ಪ್ರಿಯರಿಗೆ ಗುಡ್ನ್ಯೂಸ್: ಇಳಿದ ಚಿನ್ನದ ಬೆಲೆ-ಬೆಳ್ಳಿ ಬೆಲೆ ತಟಸ್ಥ
ಕಳೆದ ಮೂರ್ನಾಲ್ಕು ದಿನಗಳಿಂದ ಏರಿಕೆ ದಾಖಲಿಸಿದ ಚಿನ್ನದ ಬೆಲೆ ಇಂದು ಇಳಿಕೆಯ ಹಾದಿ ಹಿಡಿದಿದೆ. ಬೆಳ್ಳಿ ಬೆಲೆ ಏರಿಕೆಯೂ ಆಗದೆ, ಇಳಿಕೆಯೂ ಆಗದೆ, ನಿನ್ನೆಯ ಬೆಲೆಯಲ್ಲೇ ಮುಂದುವರಿದಿದ್ದು, 3 ಲಕ್ಷದ ಆಸುಪಾಸಲ್ಲಿದೆ.
ಈ ಸಮುದಾಯ ಐಡೆಂಟಿಟಿ ಕ್ರೈಸಿಸ್ನಿಂದ ನರಳುತ್ತಿದೆ. ನಾಲ್ಕನೇ ದರ್ಜೆಯ ಸರಕಾರಿ ಹುದ್ದೆಗಳಲ್ಲೂ ಇವರ ಪ್ರಾತಿನಿಧ್ಯ ಇಲ್ಲ. ಅನಕ್ಷರತೆ, ಅಜ್ಞಾನ, ಜಾತಿ ಪ್ರಮಾಣ ಪತ್ರ ಪಡೆಯುವ ಸಮಸ್ಯೆಗಳಿಂದಾಗಿ ಇವರು ಮುಖ್ಯವಾಹಿನಿಯಿಂದ ದೂರವಾಗಿಯೇ ಉಳಿದುಬಿಟ್ಟಿದ್ದಾರೆ. ಅಗೇರರು ತಯಾರಿಸುವ ಉಪ್ಪು ಎಲ್ಲರಿಗೂ ಬೇಕು ಆದರೆ ಅಗೇರರು ಮಾತ್ರ ಯಾರಿಗೂ ಬೇಡವಾದವರು! ಉತ್ತರ ಕನ್ನಡ, ಸ್ವಲ್ಪ ಮಟ್ಟಿಗೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯವರಿಗೆ ಹೊರತುಪಡಿಸಿದರೆ ಮಿಕ್ಕಂತೆ ಕರ್ನಾಟಕದ ಯಾವ ಭಾಗದವರಿಗೂ ಅಗೇರರ ಪರಿಚಯವಿಲ್ಲ, ಅಗೇರರ ಕುರಿತು ಗೊತ್ತಿಲ್ಲ ಮತ್ತು ಮಾಹಿತಿ ಇಲ್ಲ. ಉತ್ತರ ಕನ್ನಡದ ಸಾಣೆಕಟ್ಟಾ ಬಳಿ ಇರುವ ನಾಗರಬೈಲ್ ಪ್ರದೇಶದಲ್ಲಿ ತಲೆತಲಾಂತರಗಳಿಂದಲೂ ಉಪ್ಪನ್ನು ಉತ್ಪಾದಿಸುವ ಅಗೇರ ಸಮುದಾಯದವರು ನೆಲೆಸಿದ್ದಾರೆ. ಉಪ್ಪಿನ ಗದ್ದೆಗಳಲ್ಲಿ ನೀರು ಹಾಯಿಸಿ, ಉಪ್ಪನ್ನು ಶೇಖರಿಸುವುದು ಇವರ ಕಾಯಕ. ಉಪ್ಪು ತಯಾರಿಸುವುದೆಂದರೆ ಸುಲಭದ ಮಾತಲ್ಲ, ಸುಡುಬಿಸಿಲಿದ್ದರೆ ಮಾತ್ರ ಉಪ್ಪು ಶೇಖರವಾಗುತ್ತೆ. ಈ ಕಾರಣಕ್ಕೆ ಅಗೇರ ಕುಟುಂಬದ ಪ್ರತಿಯೊಬ್ಬರೂ ಸುಡುಬಿಸಿಲಿನಲ್ಲಿ ಬೆವರು ಸುರಿಸಿ ದೇಹವನ್ನು ಕಡುಕಪ್ಪಾಗಿಸಿಕೊಂಡು ಬೆಳ್ಳನೆಯ, ಪಳಪಳ ಹೊಳೆಯುವ ಉಪ್ಪು ತಯಾರಿಸುತ್ತಾರೆ. ಉಪ್ಪಿಗೆ ತನ್ನದೇ ಆದ ನೈತಿಕ ಮೌಲ್ಯವಿದೆ. ‘ಉಪ್ಪು ತಿಂದವನು ದ್ರೋಹ ಬಗೆಯಲಾರ’ ಎಂಬ ನಾಣ್ಣುಡಿಯ ಮಾತುಗಳಿವೆ. ಗಾಂಧೀಜಿಯವರ ಉಪ್ಪಿನ ಸತ್ಯಾಗ್ರಹವಂತೂ ಈ ದೇಶದ ಸ್ವಾತಂತ್ರ್ಯ ಚಳವಳಿಯ ಅತ್ಯಂತ ಮೌಲಿಕ ಹೋರಾಟವೆಂದು ಚರಿತ್ರೆಯಲ್ಲಿ ದಾಖಲಾಗಿದೆ. ಉಪ್ಪಿನ ಮೇಲೆ ಬ್ರಿಟಿಷರು ಸುಂಕ ವಿಧಿಸಿದಾಗ ನಮ್ಮ ಕೋಲಾರದ ಕಡೆಯ ಗ್ರಾಮಗಳಲ್ಲಿ ರಾಗಿ ಬೀಸುವಾಗಲೂ ಗ್ರಾಮೀಣ ಹೆಣ್ಣುಮಕ್ಕಳು ‘‘ಉಪ್ಪು ಮೇಲೆ ಸುಂಕವಂತೆ ಗಾಂಧಿತಾತ.. ಇವರ ಅಪ್ಪನ ಮನೆ ಸ್ವತ್ತೇನು ಗಾಂಧಿತಾತ’’ ಎಂದು ಪ್ರತಿರೋಧದ ಹಾಡುಗಳನ್ನು ಹಾಡುತ್ತಿದ್ದರು ಎಂದು ನನ್ನ ದಿವಂಗತ ಆಪ್ತಮಿತ್ರ ಸೋಮಶೇಖರ ಗೌಡ ಹೇಳುತಿದ್ದದ್ದು ಈಗಲೂ ನೆನಪಿದೆ. ಉಪ್ಪಿಗೇ ಇಷ್ಟೆಲ್ಲಾ ಮೌಲ್ಯಗಳಿರುವಾಗ ಉಪ್ಪನ್ನು ತಯಾರಿಸುವ ಕಾಯಕಜೀವಿಗಳಿಗೆ ಎಂತಹ ಮೌಲ್ಯ ಇರಬೇಕಿತ್ತು..? ದುರಂತವೆಂದರೆ ಉಪ್ಪು ತಯಾರಿಸುವ ಅಗೇರರ ಬದುಕು ಮೂರಾಬಟ್ಟೆಯಾಗಿದೆ. ಇವರು ಅಲ್ಪಸಂಖ್ಯಾತರಲ್ಲಿ ಅಲ್ಪರು. ಉತ್ತರಕನ್ನಡದ ಗೋಕರ್ಣ, ಸಾಣೆಕಟ್ಟಾ ಮೊದಲಾದ ಭಾಗಗಳಲ್ಲಿ ಉಪ್ಪಿನ ಅಗರಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಅಗೇರ ಸಮುದಾಯದ ಸ್ತ್ರೀ ಪುರುಷರು ದುಡಿಯುತ್ತಾರೆ. ಜಾತಿ ತಾರತಮ್ಯದ ವ್ಯವಸ್ಥೆಯಿಂದಾಗಿ ಇಂದಿಗೂ ಈ ಸಮುದಾಯದವರು ಊರ ಹೊರಗಡೆ ಪ್ರತ್ಯೇಕ ಕಾಲನಿಗಳಲ್ಲಿ ಅಥವಾ ದೂರದ ಗುಡ್ಡಗಾಡುಗಳ ಇಳಿಜಾರಿನಲ್ಲಿ ವಾಸಿಸುತ್ತಿದ್ದಾರೆ. ಇವರು ವಾಸಿಸುವ ಕೇರಿ, ಕಾಲನಿಗಳಲ್ಲಿ ನಾಗರಿಕ ಸೌಲಭ್ಯಗಳು ಸುತರಾಂ ಇರುವುದಿಲ್ಲ. ಮಕ್ಕಳಿಗೆ ಶಿಕ್ಷಣದ ವ್ಯವಸ್ಥೆಯೂ ಇರುವುದಿಲ್ಲ. ತಂದೆತಾಯಿ ದುಡಿಮೆಗೆ ಹೋದಾಗ ಮಕ್ಕಳ ಶಿಕ್ಷಣ ಸಹಜವಾಗಿಯೇ ಕುಂಠಿತವಾಗುತ್ತದೆ. ಇವರಿಗೆ ಸ್ವಂತ ಜಮೀನಿಲ್ಲ, ಈ ಸಮುದಾಯ ಐಡೆಂಟಿಟಿ ಕ್ರೈಸಿಸ್ನಿಂದ ನರಳುತ್ತಿದೆ. ನಾಲ್ಕನೇ ದರ್ಜೆಯ ಸರಕಾರಿ ಹುದ್ದೆಗಳಲ್ಲೂ ಇವರ ಪ್ರಾತಿನಿಧ್ಯ ಇಲ್ಲ. ಅನಕ್ಷರತೆ, ಅಜ್ಞಾನ, ಜಾತಿ ಪ್ರಮಾಣ ಪತ್ರ ಪಡೆಯುವ ಸಮಸ್ಯೆಗಳಿಂದಾಗಿ ಇವರು ಮುಖ್ಯವಾಹಿನಿಯಿಂದ ದೂರವಾಗಿಯೇ ಉಳಿದುಬಿಟ್ಟಿದ್ದಾರೆ. ಅಗೇರರು ತಯಾರಿಸುವ ಉಪ್ಪು ಎಲ್ಲರಿಗೂ ಬೇಕು ಆದರೆ ಅಗೇರರು ಮಾತ್ರ ಯಾರಿಗೂ ಬೇಡವಾದವರು! ಪ್ರೊ. ನಾವಡ ಮತ್ತು ಗಾಯತ್ರಿ ನಾವಡ ಅವರು ಬರೆದಿರುವಂತೆ ಅಗೇರರು ಮೂಲತಃ ಉಪ್ಪಾರ ಸಮುದಾಯದವರೇ ಆಗಿದ್ದರು. ಕಾಲಾನಂತರದಲ್ಲಿ ಉಪ್ಪು ಬೆಳೆಯುವ ಅಗರಗಳು ನಿಂತು ಹೋದ ಬಳಿಕ ಉಪ್ಪಾರರ ಗುಂಪೊಂದು ಉತ್ತರಕನ್ನಡ ಜಿಲ್ಲೆಯ ಸಾಣೆಕಟ್ಟಾವಲಯದಲ್ಲಿರುವ ನಾಗರಬೈಲ್ ಪ್ರದೇಶದಲ್ಲಿಯ ಉಪ್ಪಿನಗದ್ದೆಗಳಲ್ಲಿ ಉಪ್ಪು ಉತ್ಪಾದಿಸುವ ಜಮೀನುಗಳಲ್ಲಿ ಕೂಲಿ ಕಾರ್ಮಿಕರಾಗಿ ದುಡಿಯುತ್ತಿದ್ದರಿಂದ ಇವರಿಗೆ ಅಗೇರರು ಎಂದು ಹೆಸರು ಬಂದಿರಬೇಕು ಎನ್ನುತ್ತಾರೆ. ಸುಡುವ ಸೂರ್ಯನಿಗೆ ತಲೆಯೊಡ್ಡಿ ಕುದಿವ ಉಪ್ಪು ನೀರಲ್ಲಿ ನಿಂತು ಹಬೆಗೆ ಬೀಸಿ ಬೀಸಿ ಉಪ್ಪು ರಾಶಿ ಮಾಡುವಾತನಿಗೆ ಉರಿವ ಬಿಸಿಲನ್ನು ತಾಳಿಕೊಳ್ಳುವ ಛಾತಿಯೊಡನೆ ಕರಕುಶಲತೆಯೂ ಅಗತ್ಯ. ಸ್ವಲ್ಪ ಏರುಪೇರಾದರೂ ಉಪ್ಪು ಕೆಸರಾಗಬಹುದು. ಹದ ತಪ್ಪಿ ಕಲ್ಲಾಗಬಹುದು. ಅಗೇರರಿಗೆ ತಮ್ಮದೇ ಸಾಂಸ್ಕೃತಿಕ ಹಿನ್ನೆಲೆಯಿದೆ. ಇವರು ವರ್ಷಕ್ಕೊಮ್ಮೆಯಾದರೂ ಯಕ್ಷಗಾನ, ಬಯಲಾಟ ಆಡುವ ರೂಢಿ ಇಟ್ಟುಕೊಂಡಿದ್ದಾರೆ. ಇವರು ನಿರಕ್ಷರಿಗಳಾದರೂ ಬಯಲಾಟದ ಸಂಭಾಷಣೆ, ಹಾಡು, ಪದಗಳನ್ನು ಕಂಠಪಾಠ ಮಾಡಿ ತಮ್ಮ ಪಾತ್ರವನ್ನು ಯಶಸ್ವಿಯಾಗಿ ನಿರ್ವಹಿಸುತ್ತಾರೆ. ಅಗೇರರು, ಹಳ್ಳೇರರು, ಮುಕ್ರಿಯರು ಒಂದೇ ಬುಡಕಟ್ಟಿನ ಜನಾಂಗ. ಈ ಮೂರೂ ಸಮುದಾಯಗಳ ದೈಹಿಕ ಚರ್ಯೆ, ವೇಷಭೂಷಣ, ಆಚಾರವಿಚಾರಗಳಲ್ಲಿ ಪರಸ್ಪರ ಹೋಲುತ್ತಾರೆ. ಇವರು ಬಳಸುವ ವಾದ್ಯಗಳಲ್ಲಿ ಅಗೇರರು ಬಳಸುವ ವಾದ್ಯಕ್ಕೆ ಸನಾಯಿ ವಾದ್ಯ, ಹಳ್ಳೇರರದು ಪಿಂಪಿವಾದ್ಯ ಮತ್ತು ಮುಕ್ರಿಯರದು ಪಂವಾದ್ಯ ಎನ್ನುತ್ತಾರೆ. ಅನೇಕರು ಭಜನೆಗಳಲ್ಲಿ ಭಕ್ತಿಪೂರ್ವಕವಾಗಿ ತೊಡಗಿಸಿಕೊಳ್ಳುತ್ತಾರೆ. ಅಗೇರರು ಶೈಕ್ಷಣಿಕವಾಗಿ, ಔದ್ಯೋಗಿಕವಾಗಿ, ಸಾಮಾಜಿಕವಾಗಿ ಹಾಗೂ ಆರ್ಥಿಕವಾಗಿ ಅತ್ಯಂತ ಹಿಂದುಳಿದಿದ್ದಾರೆ. ಡಾ. ಬಿ.ಆರ್. ಅಂಬೇಡ್ಕರ್ ಸಂಶೋಧನಾ ಸಂಸ್ಥೆಯಿಂದ ಡಾ. ಹರಿಲಾಲ ಪವಾರ ಅವರು ಅಗೇರರ ಕುರಿತು ಒಂದು ಸಂಶೋಧನಾ ಗ್ರಂಥವನ್ನೇ ಬರೆದು ಅದರ ಉಪಸಂಹಾರದಲ್ಲಿ ಈ ಸಮುದಾಯದ ಏಳಿಗೆಗೆ ಅನೇಕ ಪರಿಹಾರೋಪಾಯಗಳನ್ನು ಸೂಚಿಸಿದ್ದಾರೆ. ಈ ಯಾವುದನ್ನೂ ಸರಕಾರ ಎಂಬುದು ಕನಿಷ್ಠ ಕಣ್ಣು ತೆರೆದು ನೋಡಲಿಲ್ಲ! ಅಗೇರರಲ್ಲಿ ಸಂಘಟನೆಯಿಲ್ಲ, ಅರಿವು ಮತ್ತು ಜಾಗೃತಿಯೂ ಇಲ್ಲ. ಇವರು ಮೈಬಗ್ಗಿಸಿ ದುಡಿಯುತ್ತಾರೆ ಅಷ್ಟೇ. ಕಷ್ಟ ನೋವುಗಳನ್ನು ಮರೆಯಲು ಇವರಲ್ಲಿ ಅನೇಕರು ಕುಡಿಯುತ್ತಾರೆ. ಅಗೇರರಲ್ಲೇ ಒಂದು ಗಾದೆಯ ಮಾತಿದೆ: ‘‘ಅಗೇರ ಮಾಡಿದ್ದು ಹೆಂಡಕ’’ ಅಂತ. ಇವರನ್ನು ಮುಖ್ಯವಾಹಿನಿಗೆ ತರಲು ಸಮಾಜಕಲ್ಯಾಣ ಎಂಬ ಇಲಾಖೆಗೆ ಕಣ್ಣು, ಹೃದಯಗಳು ತುರ್ತಾಗಿ ಬೇಕಾಗುತ್ತವೆ.
ಬಸವಕಲ್ಯಾಣ : 10ನೇ ತರಗತಿ ವಿದ್ಯಾರ್ಥಿ ಹಾಸ್ಟೆಲ್ ನಲ್ಲಿ ಆತ್ಮಹತ್ಯೆ
ಬೀದರ್ : 10ನೇ ತರಗತಿಯ ವಿದ್ಯಾರ್ಥಿಯೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಬಸವಕಲ್ಯಾಣ ತಾಲೂಕಿನ ನಾರಾಯಣಪುರ ಗ್ರಾಮದ ನವೋದಯ ವಸತಿ ಶಾಲೆಯ ಹಾಸ್ಟೆಲ್ ನಲ್ಲಿ ಮಂಗಳವಾರ ತಡರಾತ್ರಿ ನಡೆದಿದೆ. ಮಂಠಾಳ್ ಗ್ರಾಮದ ನಿವಾಸಿ ಶರತ್ (16) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ. ಬಸವಕಲ್ಯಾಣ ತಾಲೂಕಿನ ನಾರಾಯಣಪುರ ಗ್ರಾಮದ ನವೋದಯ ವಸತಿ ಶಾಲೆಯಲ್ಲಿ 10ನೇ ತರಗತಿಯಲ್ಲಿ ಶರತ್ ವ್ಯಾಸಂಗ ಮಾಡುತ್ತಿದ್ದನು. ಅವನ ಹತ್ತಿರ SORRY ಮಮ್ಮಿ, ಪಪ್ಪಾ I LOVE YOU.. keep smile forever ಎಂದು ಬರೆದಿರುವ ಚೀಟಿ ಸಿಕ್ಕಿದೆ ಎಂದು ತಿಳಿದು ಬಂದಿದೆ. ಘಟನಾ ಸ್ಥಳಕ್ಕೆ ಬಸವಕಲ್ಯಾಣ ನಗರ ಪೊಲೀಸ್ ಠಾಣೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ತನಿಖೆ ಮುಂದುವರೆಸಿದ್ದಾರೆ ಎಂದು ತಿಳಿದು ಬಂದಿದೆ.
ಪಾಕ್ ಸೇನೆಯ ಜಂಘಾಬಲ ಅಲುಗಾಡಿಸಿದ BLA : ಪ್ರತ್ಯೇಕ 'ಗ್ರೇಟರ್ ಬಲೂಚಿಸ್ತಾನ್’ ರಾಷ್ಟ್ರ ನಿರ್ಮಾಣದ ಗುರಿ ಸಮೀಪ!
Greater Balochistan : ಬಲೂಚ್ ಪ್ರಾಂತ್ಯ ಪ್ರತ್ಯೇಕ ರಾಷ್ಟ್ರವಾಗಬೇಕು ಎನ್ನುವ ಹೋರಾಟ ತೀವ್ರಗೊಳ್ಳುತ್ತಿದೆ. ಕಳೆದ ಎರಡು ತಿಂಗಳಿನಿಂದ ಈ ಹೋರಾಟ ಹಿಂಸಾಚಾರದ ರೂಪ ಪಡೆಯುತ್ತಿದ್ದು, ಪಾಕಿಸ್ತಾನ ಸರ್ಕಾರ ಮತ್ತು ಮಿಲಿಟರಿಗೆ ನಿದ್ದೆಯಿಲ್ಲದ ರಾತ್ರಿಯಾಗುತ್ತಿದೆ. ಪರಿಸ್ಥಿತಿ ಇದೇ ರೀತಿ ಸಾಗಿದರೆ, ಪಾಕಿಸ್ತಾನ ವಿಭಜನೆಯತ್ತ ಸಾಗಬಹುದು ಎಂದು ವ್ಯಾಖ್ಯಾನಿಸಲಾಗುತ್ತಿದೆ. ತಾಲಿಬಾನ್ ವಿರೋಧವನ್ನು ಎದುರು ಹಾಕಿಕೊಂಡಿರುವ ಪಾಕಿಸ್ತಾನಕ್ಕೆ ಇದು ಆಂತರಿಕ ತಲ್ಲಣಕ್ಕೆ ಕಾರಣವಾಗಿದೆ.
ರೇಷ್ಮೆ ಗೂಡಿಗೂ ಬಂತು ಬಂಗಾರದ ಬೆಲೆ, 900ರ ಗಡಿ ದಾಟಿದ ಕೆ.ಜಿ ಗೂಡಿನ ದರ: ಉತ್ಪಾದನೆ ಕುಂಠಿತವಾದರೂ ರೈತರಿಗೆ ಲಾಭ!
ಇತ್ತೀಚಿನ ದಿನಗಳಲ್ಲಿ ರೇಷ್ಮೆ ಗೂಡಿಗೆ ಮಾರುಕಟ್ಟೆಯಲ್ಲಿ ಬಂಗಾರದ ಬೆಲೆ ಬಂದಿದ್ದು, ರೇಷ್ಮೆ ಕೃಷಿಯಲ್ಲಿ ತೊಡಗಿರುವ ರೈತರು ಲಾಭದ ಮುಖ ನೋಡುವಂತಾಗಿದೆ. ಪ್ರತಿಕೆ.ಬಿಳಿ ಗೂಡು 900ರೂಗಳವರೆಗೆ ಮಾರಾಟವಾದರೆ, ಸಾಮಾನ್ಯ ಗೂಡುಗಳು ಸಹ 700ರೂಗಳಿಗೆ ಮಾರಾಟವಾಗುತ್ತಿದೆ. ಇನ್ನು, ಈ ಬಾರಿ ರಾಜ್ಯದಲ್ಲಿ ಚಳಿಯ ಪ್ರಮಾಣದಿಂದ ಹಿಪ್ಪುನೇರಳೆ ಬೆಳವಣಿಗೆಯಿಲ್ಲದೆ ಗೂಡಿನ ಉತ್ಪಾದನೆ ಕುಂಠಿತವಾಗಿದ್ದರೂ ಸಹ ಗೂಡಿನ ಬೆಲೆ ಏರಿಕೆಯಿಂದಾಗಿ ರೈತರಿಗೆ ನಷ್ಟವಾಗದೆ ಇರುವುದು, ರೈತರು ಸಂತಸವನ್ನುಂಟುಮಾಡುವಂತಿದೆ.
ಮಂಗಳೂರು: ಹೋಪ್ ಫೌಂಡೇಶನ್ ನಿಂದ ಸಹರಿ ವ್ಯವಸ್ಥೆ
ಮಂಗಳೂರು: ರಮಝಾನ್ ತಿಂಗಳಲ್ಲಿ ಮಂಗಳೂರು ನಗರ ವ್ಯಾಪ್ತಿಯಲ್ಲಿ ಆಸ್ಪತ್ರೆಯಲ್ಲಿ ದಾಖಲಾಗಿರುವವರ ಜೊತೆ ಇರುವವರು ಹಾಗು ಜೊತೆಗೆ ಯಾರೂ ಇಲ್ಲದ ಹಿರಿಯ ನಾಗರೀಕರಿಗೆ ಸಹರಿ ಊಟ ತಲುಪಿಸುವ ವ್ಯವಸ್ಥೆಯಿದೆ ಎಂದು ಹೋಪ್ ಫೌಂಡೇಶನ್ ನ ಅಧ್ಯಕ್ಷ ಸೈಫ್ ಸುಲ್ತಾನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಅಗತ್ಯ ಇರುವವರು ಈ ಕೆಳಗಿನ ಮೊಬೈಲ್ ನಂಬರ್ ಗೆ ಸಂಪರ್ಕಿಸಿ ನೋಂದಾವಣೆ ಮಾಡಬೇಕು ಎಂದು ಅವರು ತಿಳಿಸಿದ್ದಾರೆ. NUMAN Contact:+91 8792244939 Munafil jeppu +91 9743434326 Saif Sulthan +91 9900260031
Mahakavi Film: ಬರಗೂರು ರಾಮಚಂದ್ರಪ್ಪ ನಿರ್ದೇಶನದ ಹೊಸ ಚಲನಚಿತ್ರ 'ಮಹಾಕವಿ': ಪುರುಷೋತ್ತಮ ಬಿಳಿಮಲೆ ಬರಹ
ಬೆಂಗಳೂರು: ಚಂಪೂ ಶೈಲಿಯಲ್ಲಿ ಕೃತಿಗಳನ್ನು ರಚಿಸಿ ರತ್ನತ್ರಯರಲ್ಲಿ ಒಬ್ಬರಾದ ಮಹಾಕವಿ 'ಪಂಪ' ಕನ್ನಡ ಸಾಹಿತ್ಯ ಅತ್ಯಂತ ಶ್ರೇಷ್ಠ ಕವಿಯೂ ಹೌದು. ಅವರ ಬಗ್ಗೆ ಕನ್ನಡದಲ್ಲಿ ಸಿನಿಮಾ ಮಾಡಲಾಗಿದೆ. ಚಿಂತಕ, ನಿರ್ದೇಶಕ ಬರಗೂರು ರಾಮಚಂದ್ರಪ್ಪ ಅವರ 25ನೇ ಸಿನಿಮಾ ಆಗಿ 'ಮಹಾಕವಿ' ಮೂಡಿ ಬಂದಿದೆ. ನಟ ಕಿಶೋರ್ ಅವರು ಇದರಲ್ಲಿ ಪಂಪನಾಗಿ ಬಣ್ಣ ಹಚ್ಚಿಸಿದ್ದಾರೆ. ಇದರ ಕುರಿತು ಕನ್ನಡ
ಕೆನಡಾ ಶಾಲೆಯಲ್ಲಿ ಗುಂಡಿನ ದಾಳಿ; 10 ಸಾವು, 25ಕ್ಕೂ ಹೆಚ್ಚು ಜನರಿಗೆ ಗಾಯ! ಅಮೆರಿಕದ ಬಂದೂಕು ಸಂಸ್ಕೃತಿ ವಿಸ್ತರಣೆ
ಆಘಾತಕಾರಿ ಬೆಳವಣಿಗೆಯೊಂದರಲ್ಲಿ ಕೆನಡಾದ ಶಾಲೆಯೊಂದರಲ್ಲಿ ಅಪರಿಚಿತನೋರ್ವ ಮನಬಂದಂತೆ ಗುಂಡು ಹಾರಿಸಿದ್ದು, ಸಾಮೂಹಿಕ ಗುಂಡಿನ ದಾಳಿಯಲ್ಲಿ ಬಂದೂಕುಧಾರಿಯೂ ಸೇರಿದಂತೆ 10 ಜನರು ಮೃತಪಟ್ಟಿದ್ದಾರೆ. ಈ ಘಟನೆಯಲ್ಲಿ 25ಕ್ಕೂ ಹೆಚ್ಚು ಜನರು ಗಂಭೀರವಾಗಿ ಗಾಯಗೊಂಡಿದ್ದು, ಶಾಲಾ ಆವರಣದಲ್ಲಿ ರಕ್ತದೋಕುಳಿ ಹರಿಸಿದ ಬಂದೂಕುಧಾರಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ಈ ದಾಳಿಗೆ ನಿಖರ ಕಾರಣ ತಿಳಿದುಬಂದಿಲ್ಲವಾದರೂ, ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಅಮೆರಿಕದಲ್ಲಿ ಹೆಚ್ಚಾಗಿ ಕಂಡುಬರುತ್ತಿದ್ದ ಸಾಮೂಹಿಕ ಗುಂಡಿನ ದಾಳಿ ಈಗ ಕೆನಡಾಗೂ ವಿಸ್ತರಿಸಿರುವುದು ಆತಂಕಕಾರಿಯಾಗಿದೆ.
Bengaluru Weather: ನಗರದಲ್ಲಿ 32°C ತಾಪಮಾನ ದಾಖಲು, ರಾಜ್ಯಾದ್ಯಂತ ಬಿಸಿಲು ಏರಿಕೆ ಮುನ್ಸೂಚನೆ
ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಬಿಸಿಲಿನ ತಾಪ ಹೆಚ್ಚಾಗುವ, ಅತ್ಯಧಿಕ ತಾಪಮಾನ ದಾಖಲಾಗುವ ಮುನ್ಸೂಚನೆ ಸಿಕ್ಕಿದೆ. ಈ ಮಾತಿಗೆ ಪೂರಕೆವೆಂಬಂತೆ ನೆನ್ನೆ ಸಂಜೆ ನಗರದಲ್ಲಿ ಗರಿಷ್ಠ ತಾಪಮಾನ 32 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಇದು ಈ ಬೇಸಿಗೆಯಲ್ಲಿ ಈವರೆಗಿನ ಗರಿಷ್ಠ ಉಷ್ಣಾಂಶ ಎನ್ನಲಾಗಿದೆ. ಫೆಬ್ರವರಿ ಅಂತ್ಯ ಅಥವಾ ಮಾರ್ಚ್ ನಲ್ಲಿ ಬೆಂಗಳೂರ ಸೇರಿ ರಾಜ್ಯದಲ್ಲಿ ಬಿಸಿಲು ಇನ್ನಷ್ಟು ಏರಿಕೆ
Bengaluru Second airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಭಾರೀ ಮುಖಭಂಗ, ಆಂಧ್ರಪ್ರದೇಶಕ್ಕೆ ಲಾಭ
Bengaluru Second airport: ಬೆಂಗಳೂರಿನ ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣದ ವಿಚಾರದಲ್ಲಿ ಭಾರೀ ಹಿನ್ನಡೆ ಆಗಿದೆ. ಅದೇ ರೀತಿ ಇದೀಗ ಬೆಂಗಳೂರಿನ ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣ ವಿಚಾರದಲ್ಲಿ ಹಾಗೂ ಕರ್ನಾಟಕಕ್ಕೆ ಪೈಪೋಟಿ ನೀಡುವುದಕ್ಕೆ ಮುಂದೆ ಬಂದಿದ್ದ ತಮಿಳುನಾಡಿಗೂ ಮುಖಭಂಗವಾಗಿದೆ. ಹೊಸೂರಿನಲ್ಲಿ ಗ್ರೀನ್ಫೀಲ್ಡ್ ವಿಮಾನ ನಿಲ್ದಾಣ ನಿರ್ಮಾಣ ಮಾಡಬೇಕು ಎಂದು ಕನಸು ಕಾಣುತ್ತಿದ್ದ ತಮಿಳುನಾಡು
ಎಸ್ಐಆರ್ ಪ್ರಕ್ರಿಯೆಗೆ ಅಡಚಣೆ ಯಾರಿಂದ?
‘ಎಸ್ಐಆರ್ ಪ್ರಕ್ರಿಯೆಗೆ ಯಾವುದೇ ರೀತಿಯ ಅಡಚಣೆಗೆ ಅವಕಾಶ ನೀಡುವುದಿಲ್ಲ’ ಎಂದು ಸುಪ್ರೀಂಕೋರ್ಟ್ ರಾಜ್ಯಗಳಿಗೆ ಎಚ್ಚರಿಕೆ ನೀಡಿದೆ. ಮಮತಾ ಬ್ಯಾನರ್ಜಿ ಅವರ ಅರ್ಜಿ ಸೇರಿದಂತೆ ಪಶ್ಚಿಮಬಂಗಾಳದ ಎಸ್ಐಆರ್ಗೆ ಸಂಬಂಧಿಸಿದ ಅರ್ಜಿಗಳನ್ನು ಸುಪ್ರೀಂಕೋರ್ಟ್ ಸೋಮವಾರ ವಿಚಾರಣೆ ನಡೆಸುವ ಸಂದರ್ಭದಲ್ಲಿ ಈ ಮಾತನ್ನು ಹೇಳಿದೆ. ‘‘ಯಾವುದೇ ಆದೇಶಗಳು ಅಥವಾ ಸ್ಪಷ್ಟನೆಗಳು ಅಗತ್ಯವಿದ್ದರೆ ನಾವು ಹೊರಡಿಸುತ್ತೇವೆ. ಆದರೆ ಎಸ್ಐಆರ್ ಪ್ರಕ್ರಿಯೆಗೆ ಯಾವುದೇ ರೀತಿಯ ಅಡಚಣೆಯಾಗುವುದನ್ನು ಸಹಿಸುವುದಿಲ್ಲ’’ ಎಂಬ ಅರ್ಥ ಬರುವ ಹೇಳಿಕೆಯನ್ನು ಅದು ನೀಡಿದೆ. ಇಂದು ಎಸ್ಐಆರ್ ವಿರುದ್ಧ ಕೆಲವು ರಾಜ್ಯಗಳು ವ್ಯಕ್ತ ಪಡಿಸುತ್ತಿರುವ ಆಕ್ಷೇಪಗಳೇ ಸುಪ್ರೀಂಕೋರ್ಟ್ ಪಾಲಿಗೆ ಅಡಚಣೆಗಳಾಗಿ ಕಂಡಿವೆ. ಆದರೆ ನಿಜಕ್ಕೂ ಎಸ್ಐಆರ್ ಪ್ರಕ್ರಿಯೆಗೆ ಅಡಚಣೆ ಉಂಟು ಮಾಡುತ್ತಿರುವವರು ಯಾರು? ಹೀಗೆ ಅಡಚಣೆ ಮಾಡುತ್ತಿರುವವರ ವಿರುದ್ಧ ಸುಪ್ರೀಂಕೋರ್ಟ್ ಏನು ಕ್ರಮ ಕೈಗೊಂಡಿದೆ? ಎನ್ನುವ ಪ್ರಶ್ನೆಗೆ ಸುಪ್ರೀಂಕೋರ್ಟ್ ಬಳಿ ಯಾವುದೇ ಉತ್ತರಗಳಿಲ್ಲ. ಅರ್ಹ ಮತದಾರರ ಪಟ್ಟಿಯ ಪರಿಷ್ಕರಣೆಯ ಅಗತ್ಯವಂತೂ ದೇಶಕ್ಕೆ ಇದೆ. ಇದನ್ನು ಯಾರೂ ನಿರಾಕರಿಸುತ್ತಿಲ್ಲ. ಆದರೆ ಇಂದು ಜನರು ಪ್ರಶ್ನಿಸುತ್ತಿರುವುದು ಈ ಪ್ರಕ್ರಿಯೆಯ ಹೆಸರಿನಲ್ಲಿ ಚುನಾವಣಾ ವ್ಯವಸ್ಥೆಯನ್ನೇ ಬುಡಮೇಲು ಮಾಡಲು ಹೊರಟಿರುವ ಕೆಲವು ಹಿತಾಸಕ್ತಿಗಳ ಬಗ್ಗೆ. ಚುನಾವಣಾ ಆಯೋಗವು ಆತುರಾತುರವಾಗಿ ಈ ಪ್ರಕ್ರಿಯೆಗೆ ಇಳಿದಿರುವುದರಿಂದ ಎಸ್ಐಆರ್ ಹಳಿ ತಪ್ಪಿದೆ. ಮುಖ್ಯವಾಗಿ, ಸಿಬ್ಬಂದಿಯು ತೀವ್ರ ಒತ್ತಡಗಳನ್ನು ಎದುರಿಸುತ್ತಿದ್ದಾರೆ ಮಾತ್ರವಲ್ಲ, ಅವರು ಈ ಒತ್ತಡ ಭರಿಸಲಾಗದೆ ಅನಾರೋಗ್ಯಕ್ಕೆ ಈಡಾಗುತ್ತಿದ್ದಾರೆ. ಕೆಲವರು ಆತ್ಮಹತ್ಯೆ ಮಾಡಿಕೊಂಡಿರುವ ಆರೋಪಗಳಿವೆ. ಹಾಗೆಯೇ ಕೆಲಸದ ಒತ್ತಡದಿಂದ ಕುಸಿದು ಬಿದ್ದು ಮೃತಪಡುತ್ತಿರುವವರ ಸಂಖ್ಯೆಯೂ ಹೆಚ್ಚುತ್ತಿದೆ. ಬಿಎಲ್ಒಗಳು ಅಧಿಕಾರಿಗಳ ಮತ್ತು ರಾಜಕಾರಣಿಗಳ ಒತ್ತಡಗಳ ನಡುವೆ ಕೆಲಸ ಮಾಡುವ ಸ್ಥಿತಿ ನಿರ್ಮಾಣವಾಗಿದೆ. ಗುರಿ ತಲುಪದ ಬಿಎಲ್ಒಗಳ ವಿರುದ್ಧ ಕೆಲವು ರಾಜ್ಯಗಳಲ್ಲಿ ಕಠಿಣ ಕ್ರಮ ತೆಗೆದುಕೊಳ್ಳಲಾಗುತ್ತಿದೆ. ಇವೆಲ್ಲವು ಪರಿಷ್ಕರಣೆಯ ಮೇಲೆ ಪರಿಣಾಮಗಳನ್ನು ಬೀರದೇ ಇರುವುದಿಲ್ಲ. ಇದೇ ಸಂದರ್ಭದಲ್ಲಿ, ಮತದಾರನ ಅರ್ಹತೆಗಾಗಿ ಚುನಾವಣಾ ಆಯೋಗ ಪರಿಗಣಿಸಿರುವ ಗುರುತು ಚೀಟಿಗಳೂ ಚರ್ಚೆಗೆ ಕಾರಣವಾಗಿವೆೆ. ಇಷ್ಟೆಲ್ಲ ದಾಖಲೆಗಳನ್ನು ಬಡ ಕೂಲಿ ಕಾರ್ಮಿಕರು, ವಲಸೆ ಕಾರ್ಮಿಕರು ಒದಗಿಸಲು ಸಾಧ್ಯವೇ ಎನ್ನುವ ಪ್ರಶ್ನೆಯೂ ಎದ್ದಿದೆ. ಒಂದು ವೇಳೆ ಇಷ್ಟೂ ದಾಖಲೆಗಳನ್ನು ಒದಗಿಸಲು ವಿಫಲರಾದರೆ ಇವರೆಲ್ಲರೂ ಮತದಾನದಿಂದ ವಂಚಿತರಾಗಬೇಕಾಗುತ್ತದೆ. ಮೂಲಭೂತವಾಗಿ ಅವರ ಪೌರತ್ವವೇ ಈ ಮೂಲಕ ಪ್ರಶ್ನಾರ್ಹವಾಗುತ್ತದೆ. ಭವಿಷ್ಯದಲ್ಲಿ ಈ ಎಸ್ಐಆರ್ ಇನ್ನಷ್ಟು ಅನಾಹುತಗಳಿಗೆ ಕಾರಣವಾಗಬಹುದು. ಈ ಭಯವೂ ಸ್ಥಳೀಯರನ್ನು ಕಾಡುತ್ತಿದೆ. ಈ ಎಲ್ಲ ಆತಂಕ, ಕಳವಳಗಳಿಗೆ ಸುಪ್ರೀಂಕೋರ್ಟ್ ಈವರೆಗೆ ಪರಿಹಾರವನ್ನು ನೀಡಿಲ್ಲ. ಎಸ್ಐಆರ್ ಯಶಸ್ವಿಯಾಗಿ ನಡೆಯಬೇಕು ಎನ್ನುವ ಏಕೈಕ ಗುರಿಯನ್ನು ಸುಪ್ರೀಂಕೋರ್ಟ್ ಕೂಡ ಹೊಂದಿದೆ. ‘ಎಸ್ಐಆರ್ ಯಶಸ್ವಿಯಾಗುವುದು’ ಎಂದರೆ ಏನು? ಈ ದೇಶದ ನಾಗರಿಕರಲ್ಲದವರನ್ನು ಗುರುತಿಸಿ ಮತದಾರರ ಪಟ್ಟಿಯಿಂದ ಹೊರ ಹಾಕುವುದು ಪ್ರಕ್ರಿಯೆಯ ಒಂದು ಮುಖ್ಯ ಉದ್ದೇಶ. ಹಾಗೆಯೇ ನಕಲಿ ಮತದಾರರನ್ನು ಗುರುತಿಸುವುದು ಕೂಡ. ಇದೇ ಸಂದರ್ಭದಲ್ಲಿ ಎಸ್ಐಆರ್ ಕಾರಣದಿಂದಾಗಿ ಒಬ್ಬನೇ ಒಬ್ಬ ಅರ್ಹ ಮತದಾರ ಪಟ್ಟಿಯಿಂದ ಹೊರಗುಳಿದರೆ ಅದು ಎಸ್ಐಆರ್ನ ವೈಫಲ್ಯವೇ ಆಗುತ್ತದೆ. ಇಂದು ಸೂಕ್ತ ದಾಖಲೆಗಳನ್ನು ಒದಗಿಸಲಾಗದೆ ಈ ದೇಶದ ನಾಗರಿಕರಾಗಿದ್ದೂ ಮತದಾರರ ಪಟ್ಟಿಯಲ್ಲಿ ಸೇರ್ಪಡೆಯಾಗಲು ಸಾಧ್ಯವಾಗದ ಲಕ್ಷಾಂತರ ಜನರಿದ್ದಾರೆ. ಇವರಲ್ಲಿ ವಲಸೆ ಕಾರ್ಮಿಕರು, ಕೂಲಿ ಕಾರ್ಮಿಕರು, ರೈತಾಪಿ ವರ್ಗದ ಜನರೇ ಜಾಸ್ತಿ. ಇವರನ್ನೆಲ್ಲ ಹೊರಗಿಟ್ಟು ನಡೆಸುವ ಚುನಾವಣೆಯು ಪ್ರಜಾಸತ್ತೆಯನ್ನು ಯಶಸ್ವಿಗೊಳಿಸಲಾರದು. ಇಂದು ರಾಜ್ಯಗಳಿಗೆ ಆದೇಶ ನೀಡುವಂತೆಯೇ ಚುನಾವಣಾ ಆಯೋಗಕ್ಕೂ ಸುಪ್ರೀಂಕೋರ್ಟ್ ಎಚ್ಚರಿಕೆಯನ್ನು ನೀಡುವ ಅಗತ್ಯವಿದೆ. ಒಬ್ಬನೇ ಒಬ್ಬ ಅರ್ಹ ಮತದಾರ ಚುನಾವಣಾ ಆಯೋಗದ ವೈಫಲ್ಯದ ಕಾರಣದಿಂದ ಚುನಾವಣೆಯಿಂದ ಹೊರದಬ್ಬಲ್ಪಟ್ಟರೆ ಅದಕ್ಕೆ ಚುನಾವಣಾ ಆಯುಕ್ತರು ಹೊಣೆಯಾಗಬೇಕಾಗುತ್ತದೆ. ಎಸ್ಐಆರ್ನ ಯಶಸ್ವಿಯು ನಕಲಿ ಮತದಾರರನ್ನು ಹೊರಗಿಡುವುದರಿಂದಷ್ಟೇ ಅಲ್ಲ, ಅರ್ಹ ಮತದಾರ ಮತದಾನದಿಂದ ವಂಚಿತನಾಗದಂತೆ ನೋಡಿಕೊಳ್ಳುವುದರಲ್ಲಿ ನಿಂತಿದೆ. ‘ನೂರು ಅಪರಾಧಿಗಳು ಶಿಕ್ಷೆಯಿಂದ ಪಾರಾದರೂ ಒಬ್ಬ ನಿರಪರಾಧಿ ಶಿಕ್ಷೆ ಅನುಭವಿಸುವಂತಾಗಬಾರದು’ ಎನ್ನುವ ಮಾತು ಎಸ್ಐಆರ್ಗೂ ಅನ್ವಯವಾಗುತ್ತದೆ. ದೇಹದ ರೋಗ ಬಾಧಿತ ಅಂಗವನ್ನು ಕಿತ್ತು ಹಾಕುವ ಸಂದರ್ಭದಲ್ಲಿ, ವೈದ್ಯರ ಅಚಾತುರ್ಯದಿಂದ ಆರೋಗ್ಯವಂತ ಅಂಗವೂ ಕತ್ತರಿಸಲ್ಪಟ್ಟರೆ ಅದು ದೇಹಕ್ಕೆ ಇನ್ನಷ್ಟು ಹಾನಿ ಉಂಟು ಮಾಡುವುದಿಲ್ಲವೆ? ಇಂದು ನಿಜಕ್ಕೂ ಎಸ್ಐಆರ್ ಪ್ರಕ್ರಿಯೆಗೆ ಅಡಚಣೆಯಾಗಿ ನಿಂತಿರುವುದು ಕೆಲವು ರಾಜಕೀಯ ಶಕ್ತಿಗಳು. ಬಿಜೆಪಿ, ಸಂಘಪರಿವಾರದ ಕಾರ್ಯಕರ್ತರು ಈ ಎಸ್ಐಆರ್ನ್ನು ತಮ್ಮ ರಾಜಕೀಯ ಉದ್ದೇಶಕ್ಕೆ, ದ್ವೇಷ ರಾಜಕಾರಣಕ್ಕೆ ದುರ್ಬಳಕೆ ಮಾಡಲು ಮುಂದಾಗಿರುವುದು ಎಸ್ಐಆರ್ ಮುಂದಿರುವ ಅತಿದೊಡ್ಡ ಅಡಣೆಯಾಗಿದೆ. ಬಿಜೆಪಿ ನಾಯಕರು ಕೆಲವು ಸಮುದಾಯದ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಕಿತ್ತು ಹಾಕಲು ಒತ್ತಡಗಳನ್ನು ಹಾಕುತ್ತಿದ್ದಾರೆ ಎಂಬ ಆರೋಪಗಳನ್ನು ಹಲವು ಬಿಎಲ್ಒ ಸಿಬ್ಬಂದಿಯೇ ಮಾಡಿದ್ದಾರೆ. ಹಲವೆಡೆ ಸಿಬ್ಬಂದಿಯಾಗಿ ಆರೆಸ್ಸೆಸ್, ಬಿಜೆಪಿ ಕಾರ್ಯಕರ್ತರನ್ನು ತುಂಬಲಾಗಿದೆ ಎನ್ನುವ ಆರೋಪಗಳಿವೆ. ತಮ್ಮ ಕಾರ್ಯಕರ್ತರ ಮೂಲಕ ಸುಳ್ಳು ದೂರುಗಳನ್ನು ರಾಜಕೀಯ ಪಕ್ಷಗಳು ನೀಡುತ್ತಿವೆ. ಅಸ್ಸಾಮಿನಲ್ಲಿ ನಡೆಯುತ್ತಿರುವುದನ್ನು ದೇಶ ಬೆಕ್ಕಸ ಬೆರಗಾಗಿ ನೋಡುತ್ತಿದೆ. ಎಸ್ಐಆರ್ ನಡೆಯುವ ಮೊದಲೇ ‘ಮುಸ್ಲಿಮ್ ಸಮುದಾಯದ ನಾಲ್ಕು ಲಕ್ಷಕ್ಕೂ ಅಧಿಕ ಮತದಾರರನ್ನು ಪಟ್ಟಿಯಿಂದ ಕಿತ್ತು ಹಾಕಲಾಗುವುದು’ ಎಂದು ಅಲ್ಲಿನ ಮುಖ್ಯಮಂತ್ರಿ ಹೇಳಿಕೆ ನೀಡಿದ್ದಾರೆ. ಇದರಿಂದಾಗಿ ಎಸ್ಐಆರ್ ತನ್ನ ವಿಶ್ವಾಸಾರ್ಹತೆಯನ್ನು ಕಳೆದುಕೊಂಡಿದೆ. ಅಸ್ಸಾಂ ಮುಖ್ಯಮಂತ್ರಿಯ ಈ ಹೇಳಿಕೆ ಎಸ್ಐಆರ್ ಪ್ರಕ್ರಿಯೆಗೆ ಅಡಚಣೆಯಾಗಿದೆ ಎನ್ನುವುದು ಇನ್ನೂ ಸುಪ್ರೀಂಕೋರ್ಟ್ಗೆ ಮನವರಿಕೆಯಾಗದೇ ಇರುವುದು ವಿಪರ್ಯಾಸವಾಗಿದೆ. ಅರ್ಹ ಮತದಾರರು ಪಟ್ಟಿಯಿಂದ ಹೊರಗುಳಿಯದಂತೆ ನೋಡಿಕೊಂಡಾಗ ಮಾತ್ರ ಎಸ್ಐಆರ್ ಉದ್ದೇಶ ಈಡೇರುತ್ತದೆ. ಚುನಾವಣಾ ಆಯೋಗ ಗೆಲ್ಲುತ್ತದೆ. ಆ ಗೆಲುವಿಗೆ ಅಡ್ಡಿಯಾಗುತ್ತಿರುವ ರಾಜಕಾರಣಿಗಳಿಗೆ ಛಡಿಯೇಟು ನೀಡುವ ಕೆಲಸವನ್ನು ಸುಪ್ರೀಂಕೋರ್ಟ್ ತುರ್ತಾಗಿ ಮಾಡಬೇಕಾಗಿದೆ.
ತಾಲ್ಲೂಕು ಮಟ್ಟದ ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್ ಪಾಸ್ ನೀಡಲು ಅರ್ಜಿ ಆಹ್ವಾನ
ಗ್ರಾಮೀಣ ಭಾಗದಲ್ಲಿ ಹಗಲಿರುಳು ಶ್ರಮಿಸುತ್ತಿರುವ, ಜನರ ಧ್ವನಿಯಾಗಿ ಕೆಲಸ ಮಾಡುತ್ತಿರುವ ತಾಲ್ಲೂಕು ಮಟ್ಟದ ಪತ್ರಕರ್ತರಿಗೆ ರಾಜ್ಯ ಸರ್ಕಾರ ಸಿಹಿ ಸುದ್ದಿಯೊಂದನ್ನು ನೀಡಿದೆ. ವೃತ್ತಿಪರ ಕೆಲಸಗಳಿಗಾಗಿ ಜಿಲ್ಲೆಯಾದ್ಯಂತ ಓಡಾಡುವ ಪತ್ರಕರ್ತರಿಗೆ ಅನುಕೂಲವಾಗುವಂತೆ, ಉಚಿತ ಬಸ್ ಪಾಸ್ ಸೌಲಭ್ಯವನ್ನು ಪಡೆಯಲು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಅಧಿಕೃತವಾಗಿ ಅರ್ಜಿಗಳನ್ನು ಆಹ್ವಾನಿಸಿದೆ. ಫೆಬ್ರವರಿ 10 ರಂದು ಹೊರಡಿಸಲಾದ ಪ್ರಕಟಣೆಯ ಪ್ರಕಾರ,
ಪುತ್ರನ ವಿವಾಹಕ್ಕೆ ಆಮಂತ್ರಿಸಲು ಪ್ರಧಾನಿ ಮೋದಿಯನ್ನು ಭೇಟಿಯಾದ ಸಚಿನ್ ತೆಂಡೂಲ್ಕರ್
ಹೊಸದಿಲ್ಲಿ: ಭಾರತೀಯ ಕ್ರಿಕೆಟ್ನ ದಂತಕಥೆ ಸಚಿನ್ ತೆಂಡೂಲ್ಕರ್ ಮಂಗಳವಾರ ಕುಟುಂಬ ಸಮೇತರಾಗಿ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿ ಪುತ್ರ ಅರ್ಜುನ್ ತೆಂಡೂಲ್ಕರ್ ಹಾಗೂ ಸಾನಿಯಾ ಚಂಧೋಕ್ ಅವರ ವಿವಾಹಕ್ಕೆ ಆಹ್ವಾನಿಸಿದರು. ಅರ್ಜುನ್, ಸಚಿನ್ ಪುತ್ರಿ ಸಾರಾ ಹಾಗೂ ಪತ್ನಿ ಅಂಜಲಿ ಅವರೂ ಜೊತೆಗಿದ್ದರು. “ಪ್ರಧಾನಿ ನರೇಂದ್ರ ಮೋದಿಯವರನ್ನು ಅರ್ಜುನ್–ಸಾನಿಯಾ ವಿವಾಹಕ್ಕೆ ಆಹ್ವಾನಿಸುವ ಗೌರವ ನಮ್ಮದು. ಯುವ ಜೋಡಿಗೆ ಆಶೀರ್ವಾದ ಮತ್ತು ಚಿಂತನಾ ಪೂರ್ವಕ ಸಲಹೆಗಳಿಗಾಗಿ ಮೋದಿಯವರಿಗೆ ಧನ್ಯವಾದಗಳು,” ಎಂದು ಸಚಿನ್ ತಮ್ಮ ಇನ್ಸ್ಟಾಗ್ರಾಂ ಪೋಸ್ಟ್ನಲ್ಲಿ ತಿಳಿಸಿದ್ದಾರೆ. ವಿವಾಹ ಕಾರ್ಯಕ್ರಮದ ಸಡಗರ ಮಾರ್ಚ್ 3ರಿಂದ ಆರಂಭವಾಗಲಿದ್ದು, ಮುಖ್ಯ ಸಮಾರಂಭ ಮಾರ್ಚ್ 5ರಂದು ನಡೆಯಲಿದೆ. ತೆಂಡೂಲ್ಕರ್ ಕುಟುಂಬ ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನೂ ಭೇಟಿ ಮಾಡಿ ಆಹ್ವಾನಿಸಿತು. ಇದನ್ನು ಎಕ್ಸ್ ಪೋಸ್ಟ್ನಲ್ಲಿ ಹಂಚಿಕೊಂಡಿರುವ ಸಚಿನ್, “ಕಳೆದ ಫೆಬ್ರವರಿಯಲ್ಲಿ ಘನ ರಾಷ್ಟ್ರಪತಿಗಳಾದ ದ್ರೌಪದಿ ಮುರ್ಮು ಅವರು ನಮಗೆ ರಾಷ್ಟ್ರಪತಿ ಭವನದಲ್ಲಿ ಔತಣ ನೀಡಿದ್ದರು. ಇಂದು ಅರ್ಜುನ್–ಸಾನಿಯಾ ವಿವಾಹಕ್ಕೆ ಆಹ್ವಾನಿಸಲು ರಾಷ್ಟ್ರಪತಿಗಳನ್ನು ಭೇಟಿಯಾದಾಗ ಆ ನೆನಪುಗಳು ಮರುಕಳಿಸಿದವು. ಆತ್ಮೀಯ ಶುಭಾಶಯಗಳಿಗಾಗಿ ಗೌರವಾನ್ವಿತ ರಾಷ್ಟ್ರಪತಿಗಳಿಗೆ ಧನ್ಯವಾದಗಳು,” ಎಂದು ಬಣ್ಣಿಸಿದ್ದಾರೆ.
Tirupati laddu: ತಿರುಪತಿ ಲಡ್ಡು ವಿತರಣೆಯಲ್ಲಿ ಹೊಸ ಬದಲಾವಣೆ: ಕೌಂಟರ್ಗಳಲ್ಲೇ QR ಕೋಡ್ ಮೂಲಕ UPI ಪಾವತಿ
Tirupati laddu: ತಿರುಪತಿಯ ಭಕ್ತಾದಿಗಳಿಗೆ ತಿರುಮಲ ತಿರುಪತಿ ದೇವಸ್ಥಾನಂ ಟ್ರಸ್ಟ್ನಿಂದ ಭರ್ಜರಿ ಗುಡ್ನ್ಯೂಸ್ ನೀಡಲಾಗಿದೆ. ಪ್ರಸಿದ್ಧ ತಿರುಮಲ ಲಡ್ಡು ಪ್ರಸಾದ ವಿತರಣೆಯಲ್ಲಿ ವಿನೂನ ಹೊಸ ವಿಧಾನವನ್ನು ಅಳವಡಿಸಿಕೊಳ್ಳುವುದಕ್ಕೆ ಟ್ರಸ್ಟ್ ಮುಂದಾಗಿದೆ. ಇದೇನು ಎನ್ನುವ ಸಂಪೂರ್ಣ ವಿವರ ಇಲ್ಲಿದೆ. ವಿಶ್ವ ಪ್ರಸಿದ್ಧ ತಿರುಪತಿಯ ದೇವಸ್ಥಾನದಲ್ಲಿ ನೀಡುವ ಲಡ್ಡುಗೆ ಭಾರೀ ಬೇಡಿಕೆ ಇದೆ. ಇದೀಗ ಲಡ್ಡು ವಿತರಣೆ ಪ್ರಕ್ರಿಯೆಯನ್ನು ಇನ್ನಷ್ಟು
12 ಸಾಮಾಜಿಕ ಭದ್ರತಾ ಯೋಜನೆಗಳಡಿ ವೆಚ್ಚವಾಗದೆ ಉಳಿದ 1,898.92 ಕೋ.ರೂ.
ಬೆಂಗಳೂರು : 2025-26ನೇ ಸಾಲಿಗೆ ಸಂಬಂಧಿಸಿದಂತೆ ವೃದ್ಧಾಪ್ಯ, ಸಂಧ್ಯಾ ಸುರಕ್ಷಾ, ವಿಧವಾ, ಅಂಗವಿಕಲ, ಸೇರಿದಂತೆ 12 ಸಾಮಾಜಿಕ ಭದ್ರತಾ ಯೋಜನೆಗಳಡಿಯಲ್ಲಿ ಫಲಾನುಭವಿಗಳಿಗೆ ವಿತರಿಸಲು ಆಯವ್ಯಯ ಅಂದಾಜಿನ ಪೈಕಿ ಇನ್ನೂ 1,898.92 ಕೋಟಿ ರೂ. ಇನ್ನೂ ವೆಚ್ಚವಾಗಿಲ್ಲ. 2026-27ನೇ ಸಾಲಿನ ಆಯವ್ಯಯಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ 2026 ಫೆ.10ರಂದು ನಡೆದ ಸಭೆಯಲ್ಲಿ ಕಂದಾಯ ಇಲಾಖೆಯ ಅಧಿಕಾರಿಗಳು ನೀಡಿರುವ ಪ್ರಾತ್ಯಕ್ಷಿಕೆಯಲ್ಲಿ ಈ ಮಾಹಿತಿ ಇದೆ. ಕಂದಾಯ ಇಲಾಖೆಯು ಮುಖ್ಯಮಂತ್ರಿ ಅಧ್ಯಕ್ಷತೆಯ ಸಭೆಗೆ ಪ್ರಸ್ತುತಪಡಿಸಿರುವ ಪ್ರಾತ್ಯಕ್ಷಿ ಕೆಯು he-file.inಗೆ ಲಭ್ಯವಾಗಿದೆ. ವೃದ್ಧಾಪ್ಯ ವೇತನ ಸೇರಿದಂತೆ ಒಟ್ಟು 12 ಸಾಮಾಜಿಕ ಭದ್ರತೆ ಯೋಜನೆಗಳಿಗೆ 2025-26ರಲ್ಲಿ ಒಟ್ಟು 10,706.92 ಕೋಟಿ ರೂ. ಅಂದಾಜಿಸಲಾಗಿತ್ತು. ಈ ಅಂದಾಜಿನ ಪೈಕಿ ಈವರೆಗೆ 8,808.53 ಕೋಟಿ ರೂ. ವೆಚ್ಚವಾಗಿದೆ. ವೆಚ್ಚಕ್ಕೆ 1,898.92 ಕೋಟಿ ರೂ. ಬಾಕಿ ಇರುವುದು ಗೊತ್ತಾಗಿದೆ. 2026-27ನೇ ಸಾಲಿಗೆ 12 ಸಾಮಾಜಿಕ ಭದ್ರತೆ ಯೋಜನೆಗಳಿಗೆ 12,157.31 ಕೋಟಿ ರೂ. ಬೇಡಿಕೆಯನ್ನು ಇರಿಸಿದೆ. ಕಳೆದ ವರ್ಷಕ್ಕೆ ಹೋಲಿಸಿದರೇ 20262-27ನೇ ಸಾಲಿಗೆ 1,457.12 ಕೋಟಿ ರೂ.ನಷ್ಟು ಹೆಚ್ಚುವರಿ ಅನುದಾನ ಕೋರಿರುವುದು ಪ್ರಾತ್ಯಕ್ಷಿಕೆಯಿಂದ ತಿಳಿದು ಬಂದಿದೆ. <2025-26ರ ಅಂದಾಜಿನಲ್ಲೇನಿತ್ತು?: ವೃದ್ಧಾಪ್ಯ ವೇತನಕ್ಕೆ 2,592.75 ಕೋಟಿ ರೂ. , ಸಂಧ್ಯಾ ಸುರಕ್ಷಾ ಯೋಜನೆಗೆ 4,363.32 ಕೋಟಿ ರೂ., ವಿಧವಾ ವೇತನಕ್ಕೆ 1,873.87 ಕೋಟಿ ರೂ., ಅಂಗವಿಕಲ ವೇತನಕ್ಕೆ 1,557.50 ರೂ., ಮೈತ್ರಿ ಯೋಜನೆಗೆ 2.54 ರೂ., ಮನಸ್ವಿನಿ ಯೋಜನೆಗೆ 159.67ರೂ., ಆ್ಯಸಿಡ್ ದಾಳಿಗೊಳಗಾದ ಮಹಿಳೆಯರಿಗೆ ಸಹಾಯ ಧನಕ್ಕೆಂದು 0.73 ರೂ., ರೈತ ವಿಧವಾ ಪಿಂಚಣಿಗೆಂದು 17. 09 ಕೋಟಿ ರೂ., ಎಂಡೋಸಲ್ಫಾನ್ ಸಂತ್ರಸ್ತರಿಗೆ ಮಿತ ವೇತನಕ್ಕೆ 29.79 ಕೋಟಿ ರೂ., ರಾಜ್ಯ ಸ್ವಾತಂತ್ರ್ಯ ಹೋರಾಟಗಾರರ ಪಿಂಚಣಿಗೆ 40.13 ಕೋಟಿ ರೂ., ಗೋವಾ ಸ್ವಾತಂತ್ರ್ಯ ಹೋರಾಟಗಾರರ ಪಿಂಚಣಿ 7.29 ಕೋಟಿ ರೂ., ಮಾಜಿ ದೇವದಾಸಿಯರ ಮಾಸಾಶನ ಯೋಜನೆಗೆ 62.24 ಕೋಟಿ ರೂ.ಸೇರಿ 10,706.92 ಕೋಟಿ ರೂ. ಅಂದಾಜಿಸಿತ್ತು. ಸಾಮಾಜಿಕ ಭದ್ರತೆ ಅಡಿಯಲ್ಲಿ ಮಾಸಾಶನ ಯೋಜನೆಗಳಿಗೆ ಹಂಚಿಕೆ ಮಾಡಿದ್ದ ಒಟ್ಟು ಅನುದಾನದಲ್ಲಿ 30,243.8 ಕೋಟಿ ರೂ. ಖರ್ಚಾಗಿದೆ. ಈ ಮೂರು ವರ್ಷದಲ್ಲಿ 244.81 ಕೋಟಿ ರೂ.ಗಳನ್ನು ಖರ್ಚು ಮಾಡದೇ ಉಳಿಕೆ ಮಾಡಿದೆ ಎಂದು ಉತ್ತರದಲ್ಲಿ ವಿವರ ಒದಗಿಸಿರುವುದು ತಿಳಿದು ಬಂದಿದೆ. ಯಾವ ಕಾರಣಕ್ಕಾಗಿ ಈ ಹಣವು ಖರ್ಚಾಗಿಲ್ಲ ಎಂಬ ಮಾಹಿತಿಯನ್ನು ಉತ್ತರದಲ್ಲಿ ಒದಗಿಸಿರಲಿಲ್ಲ. ವೃದ್ಧಾಪ್ಯ ವೇತನದಡಿಯಲ್ಲಿ 60ರಿಂದ 64 ವರ್ಷ ವಯಸ್ಸಿನವರಿಗೆ ತಿಂಗಳಿಗೆ 600 ರೂ. ಮತ್ತು 65 ವರ್ಷ ಮೇಲ್ಪಟ್ಟವರಿಗೆ 1,200 ರೂ. ಪಿಂಚಣಿ ನೀಡುತ್ತಿದೆ. ಕಳೆದ 3 ವರ್ಷಗಳಲ್ಲಿ ವೃದ್ಧಾಪ್ಯ ವೇತನಕ್ಕೆ 6,894.06 ಕೋಟಿ ರೂ. ಅನದಾನ ಹಂಚಿಕೆಯಾಗಿತ್ತು. ಈ ಪೈಕಿ 67.15 ಕೋಟಿ ರೂ.ಖರ್ಚಾಗದೇ ಬಾಕಿ ಉಳಿದಿತ್ತು. 2026-27ರ ಅಂದಾಜಿನಲ್ಲೆೇನಿದೆ? ವೃದ್ಧಾಪ್ಯ ವೇತನಕ್ಕೆ 3,015.81 ಕೋಟಿ ರೂ., ಸಂಧ್ಯಾ ಸುರಕ್ಷಾ ಯೋಜನೆಗೆ 4,990.41 ಕೋಟಿ ರೂ., ವಿಧವಾ ವೇತನಕ್ಕೆ 1,976.66 ಕೋಟಿ ರೂ., ಅಂಗವಿಕಲ ವೇತನಕ್ಕೆ 1759.73 ಕೋಟಿ ರೂ., ಮೈತ್ರಿ ಯೋಜನೆಗೆ 4.60 ಕೋಟಿ ರೂ., ಮನಸ್ವಿನಿ ಯೋಜನೆಗೆ 154.78 ಕೋಟಿ ರೂ., ಆ್ಯಸಿಡ್ ದಾಳಿಗೊಳಗಾದ ಮಹಿಳೆಯರಿಗೆ ಸಹಾಯ ಧನಕ್ಕೆಂದು 0.92 ಕೋಟಿ ರೂ., ರೈತ ವಿಧವಾ ಪಿಂಚಣಿಗೆಂದು 20.10 ಕೋಟಿ ರೂ., ಎಂಡೋಸಲ್ಫಾನ್ ಸಂತ್ರಸ್ತರಿಗೆ ಮಿತ ವೇತನಕ್ಕೆ 33.92 ಕೋಟಿ ರೂ., ರಾಜ್ಯ ಸ್ವಾತಂತ್ರ್ಯ ಹೋರಾಟಗಾರರ ಪಿಂಚಣಿಗೆ 39.02 ಕೋಟಿ ರೂ., ಗೋವಾ ಸ್ವಾತಂತ್ರ್ಯ ಹೋರಾಟಗಾರರ ಪಿಂಚಣಿ 6.56 ಕೋಟಿ ರೂ., ಮಾಜಿ ದೇವದಾಸಿಯರ ಮಾಸಾಶನ ಯೋಜನೆಗೆ 64.80 ಕೋಟಿ ರೂ.ಸೇರಿ 12,157.31 ಕೋಟಿ ರೂ. ಅಂದಾಜಿಸಿರುವುದು ಗೊತ್ತಾಗಿದೆ. ರಾಜ್ಯದಲ್ಲಿ ಸದ್ಯ 1,200 ರೂ. ವೃದ್ಧಾಪ್ಯ ವೇತನ ನೀಡಲಾಗುತ್ತಿದೆ. ಈ ಮೊತ್ತವನ್ನು ಹೆಚ್ಚಳ ಮಾಡಬೇಕು ಎಂಬ ಬೇಡಿಕೆಯಿತ್ತು. ಇದನ್ನು ಸರಕಾರವು ಗಂಭೀರವಾಗಿ ಪರಿಗಣಿಸಿಯೂ ಇತ್ತು. 2024-25ನೇ ಸಾಲಿನಿಂದಲೇ ಹೆಚ್ಚಳ ಮಾಡಲಾಗುವುದು ಎಂದು ಖುದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಕಾರ್ಯಕ್ರಮವೊಂದರಲ್ಲಿ ಹೇಳಿಕೆ ನೀಡಿದ್ದರು. ಆದರೀಗ ಈ ಮೊತ್ತವನ್ನು ಹೆಚ್ಚಳ ಮಾಡುವ ಪ್ರಸ್ತಾವವೇ ಸರಕಾರದ ಮುಂದಿಲ್ಲ ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ಅವರು ಸದನಕ್ಕೆ ಮಾಹಿತಿ ಒದಗಿಸಿದ್ದರು. 2025-26ನೇ ಸಾಲಿನಲ್ಲಿ ವೃದ್ಧಾಪ್ಯ ವೇತನಕ್ಕೆ 2,294.54 ಕೋಟಿ ರೂ. ಅನುದಾನವನ್ನು ಬಿಡುಗಡೆ ಮಾಡಿದೆ. ಈ ಪೈಕಿ ಜೂನ್ ಅಂತ್ಯಕ್ಕೆ 232.59 ಕೋಟಿ ರೂ. ವೆಚ್ಚ ಮಾಡಿದ್ದರು.
ದೆಹಲಿ: ತೆರೆದ ಚರಂಡಿಗೆ ಬಿದ್ದು ವ್ಯಕ್ತಿ ಮೃತ್ಯು; ನಾಲ್ಕು ದಿನಗಳಲ್ಲಿ ಎರಡನೇ ದುರಂತ
ಹೊಸದಿಲ್ಲಿ: ರಾಷ್ಟ್ರರಾಜಧಾನಿಯ ಜನಕಪುರಿ ಪ್ರದೇಶದಲ್ಲಿ ಮುಚ್ಚದ ಹೊಂಡಕ್ಕೆ ಬಿದ್ದು ಬೈಕ್ ಸವಾರ ಮೃತಪಟ್ಟ ನಾಲ್ಕು ದಿನಗಳಲ್ಲೇ, ತೆರೆದ ಚರಂಡಿಗೆ ಬಿದ್ದು ವ್ಯಕ್ತಿಯೊಬ್ಬ ಜೀವ ಕಳೆದುಕೊಂಡ ಘಟನೆ ರೋಹಿಣಿ ಪ್ರದೇಶದಲ್ಲಿ ಮಂಗಳವಾರ ವರದಿಯಾಗಿದೆ. ರೋಹಿಣಿ ಸೆಕ್ಟರ್ 32 ಪ್ರದೇಶದ ಮಹಾಶಕ್ತಿ ಕಾಳಿ ದೇವಸ್ಥಾನದ ಬಳಿ 32 ವರ್ಷದ ವ್ಯಕ್ತಿಯೊಬ್ಬ ತೆರೆದ ಚರಂಡಿಗೆ ಬಿದ್ದು ಮೃತಪಟ್ಟಿದ್ದಾನೆ. ಶವವನ್ನು ಚರಂಡಿ ಹೊಂಡದಿಂದ ಮೇಲೆತ್ತುವ ಕಾರ್ಯಾಚರಣೆ ನಡೆಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮಂಗಳವಾರ ರಾತ್ರಿ 7.45ರ ವೇಳೆಗೆ ಘಟನೆ ಕುರಿತು ಮಾಹಿತಿ ಬಂದಿದ್ದು, ಪರಿಹಾರ ತಂಡ ತಕ್ಷಣವೇ ಸ್ಥಳಕ್ಕೆ ಧಾವಿಸಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಸ್ಥಳೀಯರಾದ ಸುನೀಲ್ ಕುಮಾರ್ ಅವರ ಪ್ರಕಾರ, ಮೃತಪಟ್ಟ ವ್ಯಕ್ತಿಯನ್ನು ಬ್ರಿಜು ಕುಮಾರ್ ಎಂದು ಗುರುತಿಸಲಾಗಿದ್ದು, ಈತ ಬಿಹಾರದ ಸಮಸ್ತಿಪುರ ಮೂಲದವನು. ಘಟನೆ ಕುರಿತು 112 ಸಂಖ್ಯೆಗೆ ಕರೆ ಮಾಡಿದ ವ್ಯಕ್ತಿ, ಅಧಿಕಾರಿಗಳಿಂದ ಸಕಾಲಿಕ ನೆರವು ಸಿಗಲಿಲ್ಲ ಎಂದು ಆಪಾದಿಸಿದ್ದಾರೆ. “ವ್ಯಕ್ತಿಯೊಬ್ಬ ಹೊಂಡದಲ್ಲಿ ಬಿದ್ದಿದ್ದಾನೆ ಎಂದು ತಿಳಿದುಬಂತು. ಆದರೆ ಪೊಲೀಸರು ಯಾವುದೇ ಇಲಾಖೆಗೆ ಈ ಬಗ್ಗೆ ಮಾಹಿತಿ ನೀಡಿಲ್ಲ. ನಾನು ಇಲ್ಲಿ ಬಂದ ಬಳಿಕ 112ಕ್ಕೆ ಕರೆ ಮಾಡಿದೆ. ಆ ಬಳಿಕ ಇಡೀ ಇಲಾಖೆ ಬಂತು. ನಾನು ಇಲ್ಲಿಗೆ ಬರುವ ವೇಳೆಗೆ ಹಲವು ಅಧಿಕಾರಿಗಳು ಇದ್ದರು. ಈ ವ್ಯಕ್ತಿ ನಿನ್ನೆದಿಂದಲೇ ಹೊಂಡದಲ್ಲಿ ಬಿದ್ದಿದ್ದ. ಆತನ ಸ್ನೇಹಿತರು ಸಂಜೆ 4 ಗಂಟೆ ಸುಮಾರಿಗೆ ಪೊಲೀಸ್ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಆದರೆ ನಾನು ಮಾಹಿತಿ ನೀಡಿದ ಬಳಿಕವಷ್ಟೇ ಪೊಲೀಸರು ಕಾರ್ಯಾಚರಣೆ ಆರಂಭಿಸಿದರು,” ಎಂದು ತೇಜಪಾಲ್ ಯಾದವ್ ಹೇಳಿದ್ದಾರೆ. ಕಳೆದ ಶುಕ್ರವಾರ ಖಾಸಗಿ ಬ್ಯಾಂಕ್ನಲ್ಲಿ ಕೆಲಸ ಮಾಡುತ್ತಿದ್ದ 25 ವರ್ಷದ ಯುವಕ ದೆಹಲಿ ಜಲ ಮಂಡಳಿ ಪಶ್ಚಿಮ ದೆಹಲಿಯ ಜನಕಪುರಿ ಪ್ರದೇಶದ ಜೋಗಿಂದರ್ ಸಿಂಗ್ ಮಾರ್ಗ್ ಬಳಿ ತೋಡಿದ್ದ ತೆರೆದ ಹೊಂಡಕ್ಕೆ ಬಿದ್ದು ಮೃತಪಟ್ಟಿದ್ದರು.
ಲಂಡನ್ ಶಾಲೆಯಲ್ಲಿ ಇಬ್ಬರು ವಿದ್ಯಾರ್ಥಿಗಳಿಗೆ ಇರಿದ ಅಪ್ರಾಪ್ತ ಬಾಲಕ!
ಲಂಡನ್: ವಾಯವ್ಯ ಲಂಡನ್ ಶಾಲೆಯಲ್ಲಿ ಇಬ್ಬರು ವಿದ್ಯಾರ್ಥಿಗಳನ್ನು ಇರಿದು ಪರಾರಿಯಾಗಿದ್ದ ಅಪ್ರಾಪ್ತ ವಯಸ್ಸಿನ ಬಾಲಕನನ್ನು ಬಂಧಿಸಲಾಗಿದ್ದು, ದಾಳಿಯ ಘಟನಾವಳಿ ಬಗ್ಗೆ ಆತಂಕಗಳು ವ್ಯಕ್ತವಾದ ಹಿನ್ನೆಲೆಯಲ್ಲಿ ಭಯೋತ್ಪಾದಕ ವಿರೋಧಿ ಅಧಿಕಾರಿಗಳು ತನಿಖೆ ಕೈಗೆತ್ತಿಕೊಂಡಿದ್ದಾರೆ. ಸುಮಾರು 13 ವರ್ಷ ವಯಸ್ಸಿನ ಆರೋಪಿ ಬಾಲಕ ಕಿಂಗ್ಸ್ ಬರಿ ಹೈಸ್ಕೂಲ್ ನಲ್ಲಿ ತನ್ನದೇ ವಯಸ್ಸಿನ ಇಬ್ಬರು ವಿದ್ಯಾರ್ಥಿಗಳ ಮೇಲೆ ದಾಳಿ ಮಾಡಿ ಪರಾರಿಯಾಗಿದ್ದ. ಪೊಲೀಸರು ಕೆಲ ಘಂಟೆಗಳ ಕಾರ್ಯಾಚರಣೆ ಬಳಿಕ ಬಾಲಕನನ್ನು ಬಂಧಿಸಿದ್ದು, 12 ಮತ್ತು 13 ವರ್ಷ ವಯಸ್ಸಿನ ಸಂತ್ರಸ್ತ ಬಾಲಕರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇಬ್ಬರು ಸ್ಥಿತಿ ಗಂಭೀರವಾಗಿದೆ ಎನ್ನಲಾಗಿದ್ದು, ದಾಳಿಗೆ ಬಳಸಿದ ಆಯುಧ ವಶಪಡಿಸಿಕೊಳ್ಳಲಾಗಿದೆ. ಆರೋಪಿಯನ್ನು ಕೊಲೆ ಯತ್ನ ಆರೋಪದಲ್ಲಿ ಬಂಧಿಸಲಾಗಿದ್ದು, ವಿಚಾರಣೆಗೆ ಗುರಿಪಡಿಸಲಾಗಿದೆ ಎಂದು ಗುಪ್ತಚರ ವಿಭಾಗದ ಮುಖ್ಯ ಅಧೀಕ್ಷಕ ಲೂಕ್ ವಿಲಿಯಮ್ಸ್ ಹೇಳಿದ್ದಾರೆ. ದಾಳಿಯ ಉದ್ದೇಶದ ಬಗ್ಗೆ ಪೊಲೀಸರು ಮುಕ್ತ ವಿಚಾರಣೆನಡೆಸುತ್ತಿದ್ದು, ದಾಳಿಯನ್ನು ಉಗ್ರರ ಕೃತ್ಯ ಎಂದು ಘೋಷಿಸಿಲ್ಲ. ಭಯೋತ್ಪಾದನೆ ತಡೆ ಅಧಿಕಾರಿಗಳು ತನಿಖೆಯ ನೇತೃತ್ವ ವಹಿಸಿದ್ದು, ಇತರ ಶಂಕಿತರು ಇದ್ದಾರೆಯೇ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ಅವರು ವಿವರಿಸಿದ್ದಾರೆ. ಅಧಿಕಾರಿಗಳು ವಿದ್ಯಾರ್ಥಿಗಳನ್ನು ಭೇಟಿ ಮಾಡಿ ಮಾಹಿತಿ ಕಲೆ ಹಾಕುತ್ತಿದ್ದಾರೆ. ಈ ಘಟನೆ ಬಗ್ಗೆ ಶಾಲೆ ಮತ್ತು ಸ್ಥಳೀಯ ಅಧಿಕಾರಿಗಳ ಜತೆ ಸಂಪರ್ಕದಲ್ಲಿದ್ದು, ಎಲ್ಲ ನೆರವು ನೀಡಲಾಗುವುದು ಎಂದು ಶಿಕ್ಷಣ ಕಾರ್ಯದರ್ಶಿ ಬ್ರಿಡೆಟ್ ಫಿಲಿಪ್ಸನ್ ಹೇಳಿದ್ದಾರೆ.
KSDL: 57 ಹೊಸ ಉತ್ಪನ್ನಗಳ ಬಿಡುಗಡೆ, ಐಕಾನಿಕ್ ಉತ್ಪನ್ನಗಳಿಗೆ ಭಾರೀ ಬೇಡಿಕೆ, ರಫ್ತು ಹೆಚ್ಚಳದ ಗುರಿ, ಹೊಸ ಯುಗ ಶುರು
ಬೆಂಗಳೂರು: ಕರುನಾಡಿನ ಐಕಾನಿಕ್ ಮತ್ತು ಶತಮಾನಕ್ಕೂ ಹೆಚ್ಚಿನ ಇತಿಹಾಸ ಇರುವ ಉತ್ಪನ್ನ 'ಮೈಸೂರು ಸ್ಯಾಂಡಲ್ ಸೋಪ್' ಮತ್ತು ಕೆಎಸ್ಡಿಎಲ್ ಉತ್ಪನ್ನಗಳಿಗೆ ಬಹುಭಾಷಾ ನಟಿ ತಮನ್ನಾ ಭಾಟಿಯಾ ಬ್ರ್ಯಾಂಡ್ ಅಂಬಾಸಿಡರ್ ಆಗಿದ್ದಾರೆ. ಕರ್ನಾಟಕ ಸೋಪ್ಸ್ ಅಂಡ್ ಡಿಟರ್ಜೆಂಟ್ಸ್ ಲಿಮಿಟೆಡ್ (KSDL) ಸಂಸ್ಥೆಯ ಪ್ರಚಾರ ಕಾರ್ಯ ಆರಂಭಿಸಿದ್ದಾರೆ. ಅವರ ಅಧಿಕೃತ ಘೋಷಣೆ ಜೊತೆಗೆ ಕೆಎಸ್ಡಿಎಲ್ ಸಂಸ್ಥೆಯ ಹೊಸ ರೂಪದ 57
ಭಾರತ ದುಬಾರಿ ತೈಲ ಖರೀದಿಸುವಂತೆ ಅಮೆರಿಕ ಒತ್ತಾಯಿಸುತ್ತಿದೆ; ಜ್ವಾಲಾಮುಖಿಯಾಗಿ ಸ್ಪೋಟಗೊಂಡ ರಷ್ಯಾದ ಕೋಪ!
ಭಾರತದೊಂದಿಗೆ ದ್ವಿಪಕ್ಷೀಯ ವ್ಯಾಪಾರ ಒಪ್ಪಂದ ಘೋಷಿಸಿಕೊಂಡಿರುವ ಅಮೆರಕ, ಭಾರತವು ರಷ್ಯಾದಿಂದ ಕಚ್ಚಾತೈಲ ಆಮದು ನಿಲ್ಲಿಸಲಿದೆ ಎಂದ ಘೋಷಿಸಿದೆ. ಅಮೆರಿಕದ ಈ ಹೇಳಿಕೆ ರಷ್ಯಾವನ್ನು ಇನ್ನಿಲ್ಲದಂತೆ ರೊಚ್ಚಿಗೆಬ್ಬಿಸಿದ್ದು, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮೇಲಿನ ತನ್ನ ಕೋಪವನ್ನು ಹೊರಹಾಕಿದೆ. ಈ ಕುರಿತು ಮಾತನಾಡಿರುವ ರಷ್ಯಾದ ವಿದೇಶಾಂಗ ಸಚಿವ ಸೆರ್ಗೆಯ್ ಲಾವ್ರೊವ್, ಭಾರತ ದುಬಾರಿ ತೈಲ ಖರೀದಿಸುವಂತೆ ಅಮೆರಿಕ ಒತ್ತಾಯ ಮಾಡುತ್ತಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.
ಪರೀಕ್ಷಾ ದಿನ ಅನಾರೋಗ್ಯವಾಗಿ ಪರೀಕ್ಷೆ ಮಿಸ್ ಆದ್ರೆ ಮುಂದೇನು? CBSE ನಿಯಮದಲ್ಲೇನಿದೆ? ಇಲ್ಲಿದೆ ಉತ್ತರ
ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿಯ (ಸಿಬಿಎಸ್ಇ) 10 ಮತ್ತು 12ನೇ ತರಗತಿಯ ಬೋರ್ಡ್ ಪರೀಕ್ಷೆಗಳು ಸಮೀಪಿಸುತ್ತಿವೆ. ವಿದ್ಯಾರ್ಥಿಗಳು ಸಿಲಬಸ್, ರಿವಿಷನ್, ಪರೀಕ್ಷೆ ವೇಳಾಪಟ್ಟಿಯ ಬಗ್ಗೆ ತಲೆಕೆಡಿಸಿಕೊಳ್ಳುವುದು ಸಹಜ. ಆದರೆ, ಚರ್ಚೆಯಾಗದ ಒಂದು ಮಹತ್ವದ ವಿಷಯವೆಂದರೆ, ಒಂದು ವೇಳೆ ಪರೀಕ್ಷೆಯ ದಿನದಂದೇ ವಿದ್ಯಾರ್ಥಿ ತೀವ್ರ ಅನಾರೋಗ್ಯಕ್ಕೆ ಒಳಗಾದರೆ ಅಥವಾ ಅನಿವಾರ್ಯ ಕಾರಣಗಳಿಂದ ಪರೀಕ್ಷೆಗೆ ಹಾಜರಾಗಲು ಸಾಧ್ಯವಾಗದಿದ್ದರೆ ಏನಾಗುತ್ತದೆ? ಎಂಬುದು.
ದಕ್ಷಿಣ ರೈಲ್ವೆ ವಿಭಾಗದಲ್ಲಿ ಒಟ್ಟು 30 ಕಡೆಗಳಲ್ಲಿ ಈ ಅತ್ಯಾಧುನಿಕ ಲಗೇಜ್ ಲಾಕರ್ ವ್ಯವಸ್ಥೆ ಈಗ ಜಾರಿಯಾದಂತಾಗಿದೆ. ಈ ಪೈಕಿ ಕೇರಳ ಎರಡು ರೈಲು ನಿಲ್ದಾಣಗಳಲ್ಲಿ ಈ ಹೊಸ ವ್ಯವಸ್ಥೆ ಜಾರಿಯಾಗಿದ್ದು, ಪ್ರಯಾಣಿಕರಿಗೆ ಸಾಕಷ್ಟು ಅನುಕೂಲವಾಗಿದೆ. ಬೆಲೆಯೂ ಕೈಗೆಟಕುವ ದರದಲ್ಲಿದ್ದು, ಜನರಿಗೆ ಹೋಟಲ್ ಮಾಡುವ ಬವಣೆ ತಪ್ಪಲಿದೆ.
ರಷ್ಯಾದಿಂದ ತೈಲ ಆಮದು ನಿಲುಗಡೆಗೆ ಅಮೆರಿಕದ ಕೊಡುಗೆ ನಿರೀಕ್ಷೆ; ಭಾರತಕ್ಕೆ ವಾಪಸ್ ಬರಲಿದೆ 40 ಸಾವಿರ ಕೋಟಿ?
ಭಾರತ ಮತ್ತು ಅಮೆರಿಕ ನಡುವೆ ದ್ವಿಪಕ್ಷೀಯ ವ್ಯಾಪಾರ ಒಪ್ಪಂದ ಜಾರಿಯಾಗುತ್ತಿದ್ದಂತೇ ಅನೇಕ ರೀತಿಯ ನಿರೀಕ್ಷೆಗಳು ಗರಿಗೆದರಿವೆ. ರಷ್ಯಾದಿಂದ ಕಚ್ಚಾತೈಲ ಖರೀದಿಸುತ್ತಿರುವ ಕಾರಣಕ್ಕೆ ಅಮೆರಿಕ ವಿಧಿಸಿದ್ದ ಶೇ. 25ರಷ್ಟು ದಂಡ ರೂಪದ ಸುಂಕವನ್ನು, ತೈಲ ಆಮದು ನಿಲುಗಡೆ ಭರವಸೆ ಮೇಲೆ ಹಿಂಪಡೆಯಲಾಗಿದೆ. ಈ ಹಿನ್ನೆಲೆಯಲ್ಲಿ ಅಮೆರಿಕವು ಭಾರತಕ್ಕೆ 40 ಸಾವಿರ ಕೋಟಿ ರೂ.ಗಳನ್ನು ಮರುಪಾವತಿ ಮಾಡುವ ಸಾಧ್ಯತೆ ಇದೆ ಎಂಬ ಮಾತುಗಳು ಕೇಳಿಬರುತ್ತವೆ. ಏನಿದು? ಈ ಕುರಿತು ಇಲ್ಲಿದೆ ಸಂಪೂರ್ಣ ಮಾಹಿತಿ
ಬೆಂಗಳೂರು ದಕ್ಷಿಣ ಜಿಲ್ಲೆಯ 83 ಗ್ರಾಪಂ ಅಧ್ಯಕ್ಷರ ಅಧಿಕಾರಾವಧಿ ಅಂತ್ಯ; ಆಡಳಿತಾಧಿಕಾರಿ ನೇಮಿಸಿ ಆದೇಶ
ರಾಜ್ಯದೆಲ್ಲೆಡೆ ಈಗ ಗ್ರಾಮ ಪಂಚಾಯಿತಿ ಸದಸ್ಯರ ಅಧಿಕಾರಾವಧಿ ಮುಕ್ತಾಯವಾಗುತ್ತಿದ್ದು, ಚುನಾವಣೆಗೂ ಮೊದಲು ಅವಧಿ ಮುಕ್ತಾಯಗೊಂಡ ಗ್ರಾಮ ಪಂಚಾಯಿತಿಗಳಿಗೆ ಆಡಳಿತಾಧಿಕಾರಿಗಳನ್ನು ನೇಮಿಸುವ ಪ್ರಕ್ರಿಯೆ ಆರಂಭವಾಗಿದೆ. ಅದೇ ರೀತಿ ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ ಒಟ್ಟು 83 ಗ್ರಾಮ ಪಂಚಾಯಿತಿಗಳ ಅಧ್ಯಕ್ಷರ ಅವಧಿ ಮುಕ್ತಾಯಗೊಂಡಿದ್ದು, ಈ ಪಂಚಾಯಿತಿಗಳಿಗೆ ಆಡಳಿತಾಧಿಕಾರಿಗಳನ್ನು ನೇಮಿಸಿ ಜಿಲ್ಲಾಧಿಕಾರಿ ಯಶವಂತ್ ವಿ. ಗುರುಕರ್ ಆದೇಶ ಹೊರಡಿಸಿದ್ದಾರೆ. ಜಿಲ್ಲೆಯ ಯಾವೆಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ಆಡಳಿತಾಧಿಕಾರಿಗಳ ದರ್ಬಾರ್ ಆರಂಭವಾಗಲಿದೆ? ಈ ಕುರಿತು ಇಲ್ಲಿದೆ ಸಮಗ್ರ ಮಾಹಿತಿ.
ಬೆಂಗಳೂರು : ಕೆಂಪೇಗೌಡ ಅಂತರ್ರಾಷ್ಟ್ರೀಯ ವಿಮಾನ ನಿಲ್ದಾಣವನ್ನು ನಿರ್ವಹಿಸುವ ಬಿಐಎಎಲ್, ಜಾಗತಿಕ ನಿರ್ಧಾರ ವಿಜ್ಞಾನ ಕಂಪೆನಿಯಾದ ‘ಮ್ಯೂ ಸಿಗ್ಮಾ’ ಜೊತೆಗೆ ಮಹತ್ವದ ಕಾರ್ಯತಂತ್ರದ ಸಹಭಾಗಿತ್ವವನ್ನು ಮಾಡಿಕೊಂಡಿದೆ. ದತ್ತಾಂಶ ಆಧಾರಿತ ನಿರ್ಧಾರಗಳನ್ನು ಬಳಸಿಕೊಂಡು ವಿಮಾನ ನಿಲ್ದಾಣವನ್ನು ಗ್ರಾಹಕ ಸ್ನೇಹಿ ‘ವಿಮಾನ ನಿಲ್ದಾಣ’ವನ್ನಾಗಿ ಮರುರೂಪಿಸುವುದು ಈ ಸಹಭಾಗಿತ್ವದ ಉದ್ದೇಶ. ಇಲ್ಲಿ ಪ್ರತಿಯೊಂದು ಸಂವಹನವು ನೈಜ-ಸಮಯದ ಒಳನೋಟಗಳಿಂದ ರೂಪುಗೊಳ್ಳಲಿದ್ದು, ಪ್ರತಿ ಪ್ರಯಾಣಿಕರ ಅಗತ್ಯಗಳ ಸುತ್ತ ವಿನ್ಯಾಸಗೊಳಿಸಲಾಗುತ್ತದೆ ಎಂದು ತಿಳಿಸಲಾಗಿದೆ. ಸುಧಾರಿತ ವಿಶ್ಲೇಷಣಾ ಮಾದರಿಗಳನ್ನು ಬಳಸಿಕೊಂಡು, ವಿಮಾನ ನಿಲ್ದಾಣದ ಕಾರ್ಯಾಚರಣೆಯ ದತ್ತಾಂಶಗಳನ್ನು ಒಗ್ಗೂಡಿಸಿ ವಿಶ್ಲೇಷಿಸುವ ಮೂಲಕ ಮ್ಯೂ ಸಿಗ್ಮಾ ಸಂಸ್ಥೆಯ ನಿರ್ಧಾರ ಕೃತಕ ಬುದ್ಧಿಮತ್ತೆ (ಎಐ) ಪ್ರಯಾಣಿಕರ ಅನುಕೂಲತೆಗಳನ್ನು ಹೆಚ್ಚಿಸಲು ನೆರವಾಗಲಿದೆ. ವಿಶೇಷವೆಂದರೆ, ಇದು ಪ್ರಯಾಣಿಕರ ಪಾಲಿಗೆ ವಿಮಾನ ನಿಲ್ದಾಣವು ಕೇವಲ ಸಂಚಾರ ಕೇಂದ್ರವಷ್ಟೇ ಅಲ್ಲದೆ, ಸಮಗ್ರ ಅನುಭವ ಕೇಂದ್ರವನ್ನಾಗಿ ಮಾರ್ಪಡಿಸಲು ಸಹಕರಿಸಲಿದೆ. ಪ್ರಯಾಣಿಕರ ಹಿತಕ್ಕೆ ಆದ್ಯತೆ ನೀಡುವ ಗುರಿ ಹೊಂದಿರುವ ಈ ಉಪಕ್ರಮವು, ಅತಿಥಿಗಳ ಹಿತವೇ ಮೊದಲು ಎಂಬ ಉದ್ದೇಶದಡಿ, ವಿಮಾನ ನಿಲ್ದಾಣದಲ್ಲಿನ ಪ್ರತಿಯೊಂದು ಸಂವಹನ ಬಿಂದುವನ್ನು ಇನ್ನಷ್ಟು ಚುರುಕು ಮತ್ತು ಅರ್ಥಗರ್ಭಿತವನ್ನಾಗಿ ಪರಿವರ್ತಿಸುವ ಉದ್ದೇಶವನ್ನು ಹೊಂದಿವೆ. ಮುನ್ಸೂಚನೆಯ ವಿಶ್ಲೇಷಣೆಯು ಅಂಗಡಿಗಳು, ರೆಸ್ಟೋರೆಂಟ್ಗಳು ಮತ್ತು ಪಾರ್ಕಿಂಗ್ನಲ್ಲಿ ಸರತಿ ಸಾಲುಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಬೆಂಗಳೂರಿನಲ್ಲಿ ನಾವು ವಿಮಾನ ನಿಲ್ದಾಣದ ಅನುಭವವನ್ನು ಮರು ವ್ಯಾಖ್ಯಾನಿಸಲು ಬದ್ಧರಾಗಿದ್ದೇವೆ. ಮ್ಯೂ ಸಿಗ್ಮಾ ಜೊತೆಗಿನ ನಮ್ಮ ಸಹಯೋಗವು ಈ ಪ್ರಯಾಣದಲ್ಲಿ ಮಹತ್ವದ ಮೈಲಿಗಲ್ಲನ್ನು ಗುರುತಿಸುತ್ತದೆ. -ಜಾರ್ಜ್ ಫ್ಯಾಂಥಮ್, ಮುಖ್ಯ ತಾಂತ್ರಿಕ ಅಧಿಕಾರಿ, ಬಿಐಎಎಲ್
ಶೇ.100ರಷ್ಟು ಉದ್ಯೋಗ ನೀಡುತ್ತಿರುವ ಬೆಂಗಳೂರಿನ ʼಇನ್ಸ್ಟಿಟ್ಯೂಟ್ ಆಫ್ ಹೋಟೆಲ್ ಮ್ಯಾನೇಜ್ಮೆಂಟ್ʼ ಸಂಸ್ಥೆ
ಬೆಂಗಳೂರು : ಕೇಂದ್ರ ಸರಕಾರದ ಪ್ರವಾಸೋದ್ಯಮ ಸಚಿವಾಲಯದಡಿಯಲ್ಲಿ ಬರುವ ಬೆಂಗಳೂರಿನಲ್ಲಿರುವ ʼಇನ್ಸ್ಟಿಟ್ಯೂಟ್ ಆಫ್ ಹೋಟೆಲ್ ಮ್ಯಾನೇಜ್ಮೆಂಟ್ʼ ಸಂಸ್ಥೆಯಲ್ಲಿ (ಐಎಚ್ಎಂ) ಓದುವ ವಿದ್ಯಾರ್ಥಿಗಳಿಗೆ ಶೇ.100ರಷ್ಟು ಉದ್ಯೋಗ ಸಿಗುತ್ತಿದ್ದು, ದೇಶದ ಉನ್ನತ ಆತಿಥ್ಯ ಸಂಸ್ಥೆಗಳಲ್ಲಿ ಉನ್ನತ ಸ್ಥಾನ ಪಡೆದಿದೆ ಎಂದು ಭಾರತ ಪ್ರವಾಸೋದ್ಯಮದ ದಕ್ಷಿಣ ಪ್ರಾದೇಶಿಕ ನಿರ್ದೇಶಕ ಮತ್ತು ಐಎಚ್ಎಂನ ಪ್ರಾಂಶುಪಾಲ ಡಿ.ವೆಂಕಟೇಶನ್ ಹೇಳಿದ್ದಾರೆ. ಮಂಗಳವಾರ ಇಲ್ಲಿನ ಐಎಚ್ಎಂನಲ್ಲಿ ಆಯೋಜಿಸಿದ್ದ ಮಾಧ್ಯಮ ಸಂವಾದದಲ್ಲಿ ಮಾತನಾಡಿದ ಅವರು, ಸಂಸ್ಥೆಯು ರಾಷ್ಟ್ರೀಯ ಹೋಟೆಲ್ ಮ್ಯಾನೇಜ್ಮೆಂಟ್ ಮತ್ತು ಕ್ಯಾಟರಿಂಗ್ ತಂತ್ರಜ್ಞಾನ ಮಂಡಳಿಯೊಂದಿಗೆ(ಎನ್ಸಿಎಚ್ಎಂಸಿಟಿ) ಸಂಯೋಜನೆಗೊಂಡಿದ್ದು, ಆತಿಥ್ಯ ಮತ್ತು ಹೋಟೆಲ್ ನಿರ್ವಹಣೆಯಲ್ಲಿ ಸ್ನಾತಕೋತ್ತರ ಪದವಿ, ಡಿಪ್ಲೊಮಾ ಮತ್ತು ಅಲ್ಪಾವಧಿಯ ಪ್ರಮಾಣೀಕರಣ ಕೋರ್ಸ್ಗಳು ಸೇರಿ ವೈವಿಧ್ಯಮಯ ಕೋರ್ಸ್ಗಳನ್ನು ಒದಗಿಸುತ್ತದೆ ಎಂದರು. ಸಂಸ್ಥೆಯಲ್ಲಿ ಒದಗಿಸುವ ಕೋರ್ಸ್ಗಳ ಪಠ್ಯಕ್ರಮವು ಬಹುತೇಕ ಪ್ರಾಯೋಗಿಕ ತರಬೇತಿಯಾಗಿದೆ. ಇಲ್ಲಿನ ಪದವೀಧರರು ಆರಂಭದಿಂದಲೂ ಹೋಟೆಲ್ ಉದ್ಯಮಕ್ಕೆ ಸಿದ್ಧರಾಗಿರುತ್ತಾರೆ. ಹೀಗಾಗಿ ಇಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ಶೇ.100ರಷ್ಟು ಉದ್ಯೋಗ ಸಿಗುತ್ತದೆ ಎಂದು ಅವರು ಮಾಹಿತಿ ನೀಡಿದರು. 2002ರಿಂದ ಕಾರ್ಯನಿರ್ವಹಿಸುತ್ತಿರುವ ಈ ಸಂಸ್ಥೆಯಲ್ಲಿ ಉದ್ಯೋಗ ಕೋಶವು ಪ್ರಮುಖ ಪಾತ್ರವನ್ನು ವಹಿಸುತ್ತಿದೆ. ಇದು ಪ್ರಮುಖ ಹೋಟೆಲ್ ಸರಣಿಗಳು, ಕ್ರೂಸ್ ಲೈನರ್ಗಳು ಮತ್ತು ಆತಿಥ್ಯ ಉದ್ಯಮಗಳಲ್ಲಿ ಪ್ರತಿಷ್ಠಿತ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಉದ್ಯೋಗಗಳನ್ನು (ಪ್ಲೇಸ್ ಮೆಂಟ್) ನಿರಂತರವಾಗಿ ನೀಡುತ್ತಿದೆ. ಸಂಸ್ಥೆಯಲ್ಲಿ ಓದಿದ ವಿದ್ಯಾರ್ಥಿಗಳು ಆತಿಥ್ಯ, ಪಾಕಶಾಲೆಯ ಕಲೆಗಳು, ಉದ್ಯಮಶೀಲತೆ ಮತ್ತು ಐಷಾರಾಮಿ ಚಿಲ್ಲರೆ ವ್ಯಾಪಾರ ವಲಯಗಳಲ್ಲಿನ ಸಾಧನೆ ಮಾಡಿದ್ದಾರೆ ಎಂದು ಅವರು ಸಂತಸ ವ್ಯಕ್ತಪಡಿಸಿದರು. 1969ರಲ್ಲಿ ಫುಡ್ ಕ್ರಾಫ್ಟ್ ಇನ್ಸ್ಟ್ಟಿಟ್ಯೂಟ್ ಆಗಿ ಸ್ಥಾಪನೆಯಾದ ಐಎಚ್ಎಂ ಬೆಂಗಳೂರು ಭಾರತದ ಆತಿಥ್ಯ ಸಂಸ್ಥೆಗಳಲ್ಲಿ ಒಂದಾಗಿ ವಿಕಸನಗೊಂಡಿದೆ. ಆತಿಥ್ಯ ಶಿಕ್ಷಣದಲ್ಲಿನ ಶ್ರೇಷ್ಠತೆಗಾಗಿ ಹಲವು ಪ್ರತಿಷ್ಠಿತ ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದೆ. ಕಾರ್ಯಾಗಾರಗಳು, ವಿದ್ಯಾರ್ಥಿ ಕ್ಲಬ್ಗಳು, ಪರಂಪರೆಯ ವಾರದ ಆಚರಣೆಗಳು ಮತ್ತು ಶೈಕ್ಷಣಿಕ ಪ್ರವಾಸಗಳನ್ನು ನಡೆಸುವ ಮೂಲಕ ವಿದ್ಯಾರ್ಥಿಗಳ ಸಮಗ್ರ ಅಭಿವೃದ್ಧಿಗೆ ಪೂರಕವಾಗಿದೆ ಎಂದು ಅವರು ವಿವರಿಸಿದರು.
T20 World Cup- ಅಮೆರಿಕವನ್ನು ಸೋಲಿಸಿ ಅಗ್ರಸ್ಥಾನಕ್ಕೇರಿದ ಪಾಕ್ ; ಸತತ 2 ಗೆಲುವು ಸೂಪರ್ 8ಗೇರಲು ಸಾಕೇ?
Pakistan Vs USA- 2024ರ ವಿಶ್ವಕಪ್ ನಲ್ಲಿ ಅಮೆರಿಕ ತಂಡ ಪಾಕಿಸ್ತಾನವನ್ನು ಸೋಲಿಸಿ ಕ್ರಿಕೆಟ್ ಜಗತ್ತನ್ನೇ ನಿಬ್ಬೆರಗಾಗಿಸಿತ್ತು. ಈ ಸಲ ಉದ್ಘಾಟನಾ ಪಂದ್ಯದಲ್ಲೂ ಭಾರತಕ್ಕೆ ತೀವ್ರ ಪೈಪೋಟಿ ನೀಡಿತ್ತು. ಹೀಗಾಗಿ ಅಮೆರಿಕ ಮತ್ತು ಪಾಕಿಸ್ತಾನಗಳ ನಡುವೆ ಮಂಗಳವಾರ ನಡೆದ ಪಂದ್ಯದ ಬಗ್ಗೆ ಭಾರೀ ಕುತೂಹಲವಿತ್ತು. ಆದರೆ ಜಾಗರೂಕವಾಗಿ ಆಡಿದ ಪಾಕಿಸ್ತಾನ ತಂಡ ಪಂದ್ಯವನ್ನು 32 ರನ್ ಗಳಿಂದ ಗೆದ್ದುಕೊಂಡಿದೆ. ಮಾತ್ರವಲ್ಲದೆ ಸತತ 2ನೇ ಜಯದೊಂದಿಗೆ ಅಂಕಪಟ್ಟಿಯಲ್ಲೂ ಅಗ್ರಸ್ಥಾನಕ್ಕೇ ಏರಿ ಕುಳಿತಿದೆ.
‘ರೈಲ್ ಒನ್’ ಸೂಪರ್ ಆ್ಯಪ್ ನಲ್ಲಿ ರೈಲ್ವೆ ಸೇವೆಗಳೆಲ್ಲವೂ ಲಭ್ಯ
ಬೆಂಗಳೂರು : ಭಾರತೀಯ ರೈಲ್ವೆಯು ತನ್ನ ಅಧಿಕೃತ ‘ಆಲ್-ಇನ್-ಒನ್' ಸೂಪರ್ ಆ್ಯಪ್ ಆದ ‘ರೈಲ್ ಒನ್’ (RailOne) ಅನ್ನು ಬಿಡುಗಡೆ ಮಾಡಿದೆ. ಇದು ಪ್ರಯಾಣಿಕರಿಗೆ ಹಲವಾರು ರೈಲ್ವೆ ಸೇವೆಗಳನ್ನು ಪಡೆಯಲು ಸುಲಭ ಮತ್ತು ಅನುಕೂಲಕರ ಡಿಜಿಟಲ್ ವೇದಿಕೆಯನ್ನು ಒದಗಿಸುತ್ತದೆ. ಈ ಅಪ್ಲಿಕೇಶನ್ ನಲ್ಲಿ ಹಲವಾರು ಪ್ರಯಾಣಿಕ ಸೌಲಭ್ಯಗಳನ್ನು ಒಂದೇ ಕಡೆ ತರಲಾಗಿದ್ದು, ರೈಲ್ವೆ ಪ್ರಯಾಣವನ್ನು ಹೆಚ್ಚು ಸ್ಮಾರ್ಟ್, ವೇಗ ಮತ್ತು ತೊಂದರೆ ರಹಿತವಾಗಿಸುತ್ತದೆ. ರೈಲ್ ಒನ್ ಆ್ಯಪ್ ಮೂಲಕ ಪ್ರಯಾಣಿಕರು ಕಾಯ್ದಿರಿಸಿದ (Reserved) ಟಿಕೆಟ್ಗಳು, ಕಾಯ್ದಿರಿಸದ (Unreserved) ಟಿಕೆಟ್ಗಳು, ಪ್ಲಾಟ್ಫಾರ್ಮ್ ಟಿಕೆಟ್ಗಳು ಮತ್ತು ಸೀಸನ್ ಟಿಕೆಟ್ಗಳನ್ನು ಬುಕ್ ಮಾಡಬಹುದು. ಇದರೊಂದಿಗೆ ರೈಲುಗಳ ಹುಡುಕಾಟ, ಪಿಎನ್ಆರ್ (PNR) ಸ್ಥಿತಿ, ಕೋಚ್ ವಿವರ ಮತ್ತು ರೈಲು ಎಲ್ಲಿದೆ ಎಂಬ ನೈಜ ಸಮಯದ ಮಾಹಿತಿ (Real-time tracking) ಸೇರಿದಂತೆ ಹಲವು ಸುಧಾರಿತ ವೈಶಿಷ್ಟ್ಯಗಳನ್ನು ಈ ಆ್ಯಪ್ ಒದಗಿಸುತ್ತದೆ. ಡಿಜಿಟಲ್ ಟಿಕೆಟ್ ಬುಕಿಂಗ್ ಸೌಲಭ್ಯವು ಪ್ರಯಾಣಿಕರು ಟಿಕೆಟ್ ಕೌಂಟರ್ ಗಳಲ್ಲಿ ದೀರ್ಘ ಸರತಿ ಸಾಲಿನಲ್ಲಿ ನಿಲ್ಲುವುದನ್ನು ತಪ್ಪಿಸಲು ಸಹಾಯ ಮಾಡುತ್ತದೆ, ವಿಶೇಷವಾಗಿ ಪ್ರಯಾಣಿಕರ ಸಂಖ್ಯೆ ಹೆಚ್ಚಿರುವ ಸಮಯದಲ್ಲಿ ಇದು ಹೆಚ್ಚು ಸಹಕಾರಿಯಾಗಿದೆ. ರೈಲ್ ಒನ್ ಆ್ಯಪ್ ಮೂಲಕ ಕಾಯ್ದಿರಿಸದ ಟಿಕೆಟ್ಗಳನ್ನು ಬುಕ್ ಮಾಡುವ ಪ್ರಯಾಣಿಕರು ಎಲ್ಲ ಡಿಜಿಟಲ್ ಪಾವತಿ ವಿಧಾನಗಳಲ್ಲಿ ಶೇ.3ರಷ್ಟು ರಿಯಾಯಿತಿಯನ್ನು ಪಡೆಯುತ್ತಾರೆ. ರೈಲ್ ಒನ್ ವೇದಿಕೆಯಲ್ಲಿ ಯುಪಿಐ, ಡೆಬಿಟ್ ಕಾರ್ಡ್ಗಳು, ಕ್ರೆಡಿಟ್ ಕಾರ್ಡ್ಗಳು, ನೆಟ್ ಬ್ಯಾಂಕಿಂಗ್ ಮತ್ತು ಇತರ ಡಿಜಿಟಲ್ ಪಾವತಿ ಆಯ್ಕೆಗಳನ್ನು ಬಳಸಿ ಮಾಡುವ ಕಾಯ್ದಿರಿಸದ ಟಿಕೆಟ್ ಬುಕಿಂಗ್ ಗಳಿಗೆ ಈ ರಿಯಾಯಿತಿ ಅನ್ವಯಿಸುತ್ತದೆ. ಈ ಕೊಡುಗೆಯು ಜ.14ರಿಂದ ಜಾರಿಗೆ ಬಂದಿದ್ದು, ಪ್ರಯಾಣಿಕರು ಡಿಜಿಟಲ್ ಟಿಕೆಟಿಂಗ್ ಅಳವಡಿಸಿಕೊಳ್ಳಲು ಮತ್ತು ಸುಗಮ ಪ್ರಯಾಣದ ಅನುಭವವನ್ನು ಆನಂದಿಸಲು ಉತ್ತೇಜಿಸುತ್ತದೆ. ರೈಲ್ ಒನ್ ಆ್ಯಪ್ ಗೂಗಲ್ ಪ್ಲೇ ಸ್ಟೋರ್ ಮತ್ತು ಐಒಎಸ್ ಆ್ಯಪ್ ಸ್ಟೋರ್ ನಲ್ಲಿ ಉಚಿತವಾಗಿ ಲಭ್ಯವಿದೆ. ಪ್ರಯಾಣಿಕರು ಈ ಆ್ಯಪ್ ಅನ್ನು ಡೌನ್ ಲೋಡ್ ಮಾಡಲು ಮತ್ತು ಅದರ ಬಳಕೆದಾರ ಸ್ನೇಹಿ ವೈಶಿಷ್ಟ್ಯಗಳು ಹಾಗೂ ವಿಶೇಷ ಪ್ರಯೋಜನಗಳ ಲಾಭವನ್ನು ಪಡೆಯಲು ಪ್ರೋ ತ್ಸಾಹಿಸಲಾಗುತ್ತದೆ. ಭಾರತೀಯ ರೈಲ್ವೆಯು ತನ್ನ ಹಳೆಯ ‘ಯುಟಿಎಸ್ ಆನ್ ಮೊಬೈಲ್' (UTS on Mobile) ಆ್ಯಪ್ ಸೇವೆಗಳನ್ನು ಮಾ.1ರಿಂದ ಹಂತ ಹಂತವಾಗಿ ಸ್ಥಗಿತಗೊಳಿಸಲಿದೆ. ಸೀಸನ್ ಟಿಕೆಟ್ ಬುಕಿಂಗ್, ನವೀಕರಣ ಮತ್ತು ಹೊಸ ಬಳಕೆದಾರರ ನೋಂದಣಿಯನ್ನು ಈಗಾಗಲೇ ಸ್ಥಗಿತಗೊಳಿಸಲಾಗಿದೆ. ಪ್ಲಾಟ್ ಫಾರ್ಮ್ ಟಿಕೆಟ್ ಬುಕಿಂಗ್ ಮತ್ತು ಆರ್-ವ್ಯಾಲೆಟ್ ಟಾಪ್-ಅಪ್ ಸೌಲಭ್ಯಗಳನ್ನು ಸ್ಥಗಿತಗೊಳಿಸಲಾಗಿದೆ. ಆದರೂ ಅಪ್ಲಿಕೇಶನ್ ಸದ್ಯಕ್ಕೆ ಆಪ್ ಸ್ಟೋರ್ ನಲ್ಲಿ ಲಭ್ಯವಿರುತ್ತದೆ. ಯುಟಿಎಸ್ ಆ್ಯಪ್ ನ ಇತ್ತೀಚಿನ ಆವೃತ್ತಿಯನ್ನು ಅಪ್ಡೇಟ್ ಮಾಡುವ ಅಥವಾ ಡೌನ್ಲೋಡ್ ಮಾಡುವ ಬಳಕೆದಾರರಿಗೆ ಪ್ಲಾಟ್ ಫಾರ್ಮ್ ಟಿಕೆಟ್ ಬುಕ್ ಮಾಡಲು ಅಥವಾ ಆರ್-ವ್ಯಾಲೆಟ್ ರೀಚಾರ್ಜ್ ಮಾಡಲು ಅನುಮತಿ ಇರುವುದಿಲ್ಲ. ಕಾಯ್ದಿರಿಸದ ಟಿಕೆಟ್ ಗಳನ್ನು ಬುಕ್ ಮಾಡಲು ಮತ್ತು ಸಂಬಂಧಿತ ಪ್ರಯಾಣಿಕ ಸೇವೆಗಳನ್ನು ಪಡೆಯಲು ಪ್ರಯಾಣಿಕರು ರೈಲ್ ಒನ್ ಆ್ಯಪ್ ಗೆ ಬದಲಾಯಿಸಲು ಸೂಚಿಸಲಾಗಿದೆ. ಡಿಜಿಟಲ್ ಉಪಕ್ರಮಗಳು ಮತ್ತು ನವೀನ ತಂತ್ರಜ್ಞಾನ ಪರಿಹಾರಗಳ ಮೂಲಕ ಪ್ರಯಾಣಿಕರ ಅನುಕೂಲತೆಯನ್ನು ಹೆಚ್ಚಿಸಲು ಭಾರತೀಯ ರೈಲ್ವೆ ಸದಾ ಬದ್ಧವಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ಸ್ಪೀಕರ್ ಹುದ್ದೆಯಿಂದ ಓಂ ಬಿರ್ಲಾ ಅವರನ್ನು ಪದಚ್ಯುತಗೊಳಿಸಲು ವಿರೋಧ ಪಕ್ಷಗಳು ಮಂಗಳವಾರ ಅವಿಶ್ವಾಸ ನಿರ್ಣಯಕ್ಕೆ ನೋಟಿಸ್ ಸಲ್ಲಿಸಿವೆ. ಓಂ ಬಿರ್ಲಾ ಪದಚ್ಯುತಗೊಳಿಸುವ ನೋಟಿಸ್ಗೆ 119 ಸಂಸದರು ಸಹಿ ಹಾಕಿದ್ದು, ಟಿಎಂಸಿ ಸಂಸದರು ಇದರಿಂದ ದೂರ ಉಳಿದಿದ್ದಾರೆ. ಡಿಎಂಕೆ ಮತ್ತು ಸಮಾಜವಾದಿ ಪಕ್ಷವು ಕಾಂಗ್ರೆಸ್ ಜೊತೆ ಸೇರಿ ನೋಟಿಸ್ ನೀಡಿತು. ಆದಾಗ್ಯೂ ಸಂಸತ್ತಿನಲ್ಲಿ ಈ ಬಗ್ಗೆ ಚರ್ಚೆ ನಡೆದಾಗ ಬೆಂಬಲಿಸುವುದಾಗಿ ಟಿಎಂಸಿ ಮೂಲಗಳು ತಿಳಿಸಿವೆ. “ ಮಂಗಳವಾರ ಮಧ್ಯಾಹ್ನ 1.14ಕ್ಕೆ ಸ್ಪೀಕರ್ ವಿರುದ್ಧ ಅವಿಶ್ವಾಸ ನಿರ್ಣಯಕ್ಕೆ ನಾವು ಪ್ರಸ್ತಾವನೆಯನ್ನು ಸಲ್ಲಿಸಿದ್ದೇವೆ” ಎಂದು ಲೋಕಸಭೆಯಲ್ಲಿ ಕಾಂಗ್ರೆಸ್ ಉಪನಾಯಕ ಗೌರವ್ ಗೊಗೊಯ್ ಹೇಳಿದರು. ವಿರೋಧ ಪಕ್ಷದ ನಾಯಕರಿಗೆ ಮಾತನಾಡಲು ಅವಕಾಶ ನೀಡಲಾಗಿಲ್ಲ, ಅದು ಸಂಸತ್ತಿನಲ್ಲಿ ಅವರ ಮೂಲಭೂತ ಪ್ರಜಾಪ್ರಭುತ್ವ ಹಕ್ಕು ಎಂದು ನೋಟಿಸ್ನಲ್ಲಿ ಹೇಳಲಾಗಿದೆ. ಲೋಕಸಭೆಯ ಪ್ರಧಾನ ಕಾರ್ಯದರ್ಶಿ ಉತ್ಪಲ್ ಕುಮಾರ್ ಸಿಂಗ್ ಅವರಿಗೆ ನೋಟಿಸ್ ಸಲ್ಲಿಸಲಾಗಿದೆ. ವಿರೋಧ ಪಕ್ಷವು ಲೋಕಸಭಾ ಸ್ಪೀಕರ್ ವಿರುದ್ಧದ ನೋಟಿಸ್ ಅನ್ನು ಲೋಕಸಭೆಯ ಪ್ರಧಾನ ಕಾರ್ಯದರ್ಶಿಗೆ ಸಲ್ಲಿಸಿದೆ. ಇದನ್ನು ಪರಿಶೀಲಿಸಿ ನಿಯಮಗಳ ಪ್ರಕಾರ ಮುಂದುವರಿಯಲಾಗುವುದು ಎಂದು ಲೋಕಸಭಾ ಸಚಿವಾಲಯದ ಮೂಲ ತಿಳಿಸಿರುವುದಾಗಿ The Indian Express ವರದಿ ಮಾಡಿದೆ. ಸಂವಿಧಾನದ 94 (ಸಿ) ವಿಧಿ ಅಡಿಯಲ್ಲಿ ಸಂಸದರು ಸ್ಪೀಕರ್ ಪದಚ್ಯುತಿಗೆ ನಿರ್ಣಯ ಮಂಡಿಸುವ ಉದ್ದೇಶದ ಲಿಖಿತ ಸೂಚನೆಯನ್ನು ಪ್ರಧಾನ ಕಾರ್ಯದರ್ಶಿಗೆ ಕನಿಷ್ಠ 14 ದಿನಗಳ ಮುಂಚಿತವಾಗಿ ನೀಡಬಹುದು. ವಿರೋಧ ಪಕ್ಷವು ಸಾಂವಿಧಾನಿಕ ಔಚಿತ್ಯದ ಬಗ್ಗೆ ತನ್ನ ನಂಬಿಕೆ ಇರಿಸಿದೆ. ಗೌರವಾನ್ವಿತ ಸ್ಪೀಕರ್ ಅವರನ್ನು ವೈಯಕ್ತಿಕವಾಗಿ ಪರಿಗಣಿಸಿದರೂ ಸಾರ್ವಜನಿಕ ಪ್ರಾಮುಖ್ಯತೆಯ ವಿಷಯಗಳನ್ನು ಪ್ರಸ್ತಾಪಿಸಲು ವಿರೋಧ ಪಕ್ಷದ ಸಂಸದರಿಗೆ ನಿರಂತರವಾಗಿ ಅವಕಾಶಗಳನ್ನು ನಿರಾಕರಿಸಲಾಗುತ್ತಿರುವುದರಿಂದ ನಮಗೆ ನೋವಾಗಿದೆ. ಹಲವು ವರ್ಷಗಳ ನಂತರ ಸ್ಪೀಕರ್ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡಿಸಲಾಗಿದೆ ಎಂದು ಕಾಂಗ್ರೆಸ್ ಮುಖ್ಯ ಸಚೇತಕ ಮಾಣಿಕಂ ಟ್ಯಾಗೋರ್ ಹೇಳಿದ್ದಾರೆ. *ನೋಟಿಸ್ನಲ್ಲಿ ಏನಿದೆ? ನೋಟಿಸ್ನಲ್ಲಿ ವಿರೋಧ ಪಕ್ಷದ ನಾಯಕರು ನಾಲ್ಕು ಅಂಶಗಳನ್ನು ಉಲ್ಲೇಖಿಸಿದ್ದಾರೆ. ಫೆಬ್ರವರಿ 2 ರಂದು ರಾಷ್ಟ್ರಪತಿಗಳ ಭಾಷಣಕ್ಕೆ ವಂದನಾ ನಿರ್ಣಯದ ಮೇಲೆ ರಾಹುಲ್ ಗಾಂಧಿ ಅವರಿಗೆ ಭಾಷಣವನ್ನು ಪೂರ್ಣಗೊಳಿಸಲು ಅವಕಾಶ ನೀಡಲಿಲ್ಲ. ಇದೇನು ಹೊಸತಲ್ಲ. ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕನಿಗೆ ಮಾತನಾಡಲು ಹೆಚ್ಚಿನ ಬಾರಿ ಅವಕಾಶ ನೀಡಲಾಗುವುದಿಲ್ಲ ಎಂದು ಆರೋಪಿಸಲಾಗಿದೆ. ಫೆಬ್ರವರಿ 3 ರಂದು ಎಂಟು ವಿರೋಧ ಪಕ್ಷದ ಸಂಸದರನ್ನು ಇಡೀ ಬಜೆಟ್ ಅಧಿವೇಶನಕ್ಕೆ ಅನಿಯಂತ್ರಿತವಾಗಿ ಅಮಾನತುಗೊಳಿಸಲಾಗಿದೆ. ಅವರು ತಮ್ಮ ಪ್ರಜಾಪ್ರಭುತ್ವ ಹಕ್ಕುಗಳನ್ನು ಚಲಾಯಿಸಿದ್ದಕ್ಕಾಗಿ ಶಿಕ್ಷೆ ವಿಧಿಸಲಾಗಿದೆ ಎಂದು ಹೇಳಲಾಗಿದೆ. ಫೆಬ್ರವರಿ 4 ರಂದು ಬಿಜೆಪಿ ಸಂಸದರೊಬ್ಬರು ಸ್ಥಾಪಿತ ಸಂಪ್ರದಾಯಗಳು ಮತ್ತು ಔಚಿತ್ಯದ ಮಾನದಂಡಗಳನ್ನು ನಿರ್ಲಕ್ಷಿಸಿದ್ದರೂ ಅದನ್ನು ಖಂಡಿಸದೆ ಇಬ್ಬರು ಮಾಜಿ ಪ್ರಧಾನ ಮಂತ್ರಿಗಳ ಮೇಲೆ ಸಂಪೂರ್ಣ ಆಕ್ಷೇಪಾರ್ಹ ಮತ್ತು ವೈಯಕ್ತಿಕ ದಾಳಿ ನಡೆಸಲು ಅನುಮತಿ ನೀಡಲಾಗಿದೆ. ನಮ್ಮ ವಿನಂತಿಯ ಹೊರತಾಗಿಯೂ ಈ ನಿರ್ದಿಷ್ಟ ಸಂಸದರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ; ಅವರು ಪುನರಾವರ್ತಿತ ಅಪರಾಧಿ ಎಂದು ನೋಟಿಸ್ನಲ್ಲಿ ತಿಳಿಸಲಾಗಿದೆ. ಧನ್ಯವಾದ ನಿರ್ಣಯದ ಚರ್ಚೆಯ ಸಂದರ್ಭದಲ್ಲಿ ಬಿಜೆಪಿಯ ನಿಶಿಕಾಂತ್ ದುಬೆ ಅವರು ಮಾಜಿ ಪ್ರಧಾನಿಗಳಾದ ಜವಾಹರಲಾಲ್ ನೆಹರು ಮತ್ತು ಇಂದಿರಾ ಗಾಂಧಿಯವರ ಬಗ್ಗೆ ಮಾಡಿದ ಕೆಲವು ಹೇಳಿಕೆಗಳಿಗೆ ಪ್ರತಿಪಕ್ಷಗಳು ಭಾರೀ ಆಕ್ಷೇಪ ವ್ಯಕ್ತಪಡಿಸಿದವು. ಅವುಗಳಲ್ಲಿ ಕೆಲವನ್ನು ತೆಗೆದುಹಾಕಲಾಗಿದ್ದರೂ ದಾಖಲೆಗಳಿಂದ ಸಂಪೂರ್ಣವಾಗಿ ತೆಗೆದುಹಾಕಲಾಗಿಲ್ಲ ಎಂದು ಹೇಳಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಚರ್ಚೆಗೆ ಉತ್ತರಿಸಲು ಲೋಕಸಭೆಗೆ ಬರದಂತೆ ಸಲಹೆ ನೀಡಿದ ಸ್ಪೀಕರ್ ಬಿರ್ಲಾ ಅವರ ನಿರ್ಧಾರವನ್ನು ನೋಟಿಸ್ನಲ್ಲಿ ಉಲ್ಲೇಖಿಸಲಾಗಿದೆ. ಗುರುವಾರ ಪ್ರಧಾನಿ ಮೋದಿ ಅವರು ಧನ್ಯವಾದ ನಿರ್ಣಯದ ಚರ್ಚೆಗೆ ಸಾಂಪ್ರದಾಯಿಕ ಉತ್ತರ ನೀಡುವ ನಿರೀಕ್ಷೆಯಿತ್ತು. ಆದರೆ ರಾಹುಲ್ ಗಾಂಧಿಯವರನ್ನು ಮಾತನಾಡಲು ಅನುಮತಿಸದಿದ್ದಕ್ಕಾಗಿ ಪ್ರತಿಪಕ್ಷಗಳು ಪ್ರತಿಭಟನೆ ನಡೆಸಿದವು. ಪ್ರಧಾನಿಯವರು ಸದನಕ್ಕೆ ಬರುವುದು ಬೇಡ ಎಂದು ನಾನು ಹೇಳಿದ್ದೆ ಎಂದು ಸ್ಪೀಕರ್ ಬಿರ್ಲಾ ಹೇಳಿದ್ದರು. ಲೋಕಸಭೆಯಲ್ಲಿ ಕೆಲವು ಸಂಸದರು ಅನುಚಿತವಾಗಿ ವರ್ತಿಸಿದ್ದಾರೆ. ಕಾಂಗ್ರೆಸ್ ಪಕ್ಷದ ಕೆಲವು ಸದಸ್ಯರು ಪ್ರಧಾನಿಯವರ ಆಸನದ ಬಳಿಗೆ ಹೋಗಿ ಅನಿರೀಕ್ಷಿತ ಘಟನೆಗೆ ಕಾರಣರಾಗುವ ಸಾಧ್ಯತೆ ಇದೆ ಎಂಬ ವಿಶ್ವಾಸಾರ್ಹ ಮಾಹಿತಿ ನನಗೆ ಸಿಕ್ಕಿತ್ತು. ಅಂತಹ ಘಟನೆ ನಡೆದಿದ್ದರೆ ಅದು ರಾಷ್ಟ್ರದ ಘನತೆಗೆ ತೀವ್ರ ಹಾನಿ ಉಂಟುಮಾಡುತ್ತಿತ್ತು. ಅದಕ್ಕಾಗಿಯೇ ನಾನು ಪ್ರಧಾನಿಯವರಲ್ಲಿ ಸಂಸತ್ತಿಗೆ ಬರುವುದು ಬೇಡ ಎಂದು ಹೇಳಿದ್ದೆ ಎಂದಿದ್ದರು. ಕಳೆದ ಗುರುವಾರ ಅವರ ಹೇಳಿಕೆಗಳನ್ನು ಉಲ್ಲೇಖಿಸಿದ ನಂತರ ಅವರು ಕಾಂಗ್ರೆಸ್ ಸಂಸದರ ವಿರುದ್ಧ ಸ್ಪಷ್ಟವಾಗಿ ಸುಳ್ಳು ಆರೋಪಗಳನ್ನು ಹೊರಿಸಿದ್ದಾರೆ; ಅದು ಅವಹೇಳನಕಾರಿ ಸ್ವರೂಪದಲ್ಲಿತ್ತು ಎಂದು ನೋಟಿಸ್ನಲ್ಲಿ ತಿಳಿಸಲಾಗಿದೆ. “ಸದನದ ಕಾರ್ಯವಿಧಾನಗಳ ನಿಯಮಗಳು ಮತ್ತು ಸಂಸತ್ತಿನ ಶಿಷ್ಟಾಚಾರದ ಮಾನದಂಡಗಳ ಉಸ್ತುವಾರಿ ವಹಿಸಬೇಕಾದ ಸ್ಪೀಕರ್ ಅಂತಹ ಹೇಳಿಕೆಗಳನ್ನು ನೀಡಲು ಸದನವನ್ನು ಆಯ್ಕೆ ಮಾಡಿಕೊಂಡಿದ್ದಾರೆ; ಇದು ಈ ಸಾಂವಿಧಾನಿಕ ಹುದ್ದೆಯ ದುರುಪಯೋಗವನ್ನು ಸೂಚಿಸುತ್ತದೆ” ಎಂದು ನೋಟಿಸ್ನಲ್ಲಿ ಹೇಳಿದೆ. ಏತನ್ಮಧ್ಯೆ ಬಿಜೆಪಿಯ 11 ಮಹಿಳಾ ಸಂಸದರು ಸ್ಪೀಕರ್ಗೆ ಪತ್ರ ಬರೆದು ಕಾಂಗ್ರೆಸ್ ಪಕ್ಷದ ಮಹಿಳಾ ಸಂಸದರು ಈ ಹಿಂದೆ ಕಳುಹಿಸಿದ್ದ ಪತ್ರಕ್ಕೆ ಗಂಭೀರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಪತ್ರದಲ್ಲಿ ಬಿರ್ಲಾ ಅವರು ಲೋಕಸಭೆಯ ಸಭಾಧ್ಯಕ್ಷರಾಗಿ ಏಳು ವರ್ಷಗಳ ಅವಧಿಯಲ್ಲಿ ಅದರ ಘನತೆ ಮತ್ತು ಪರಿಣಾಮಕಾರಿತ್ವವನ್ನು ಹೆಚ್ಚಿಸಲು ನಿರಂತರವಾಗಿ ಶ್ರಮಿಸಿದ್ದಾರೆ ಎಂದು ಹೇಳಿದ್ದಾರೆ. *ಸ್ಪೀಕರ್ ಅನ್ನು ಹುದ್ದೆಯಿಂದ ತೆಗೆದುಹಾಕಬಹುದಾದ ವಿವಿಧ ಷರತ್ತುಗಳು ಯಾವುವು? ಸಂವಿಧಾನದ 94ನೇ ವಿಧಿ ಸ್ಪೀಕರ್ ಮತ್ತು ಡೆಪ್ಯೂಟಿ ಸ್ಪೀಕರ್ಗಾಗಿ ನಿರ್ಗಮನ ಷರತ್ತುಗಳನ್ನು ವಿವರಿಸುತ್ತದೆ. 94 (ಎ) ಪ್ರಕಾರ ಅವರು ಸಂಸತ್ತಿನಲ್ಲಿ ತಮ್ಮ ಸ್ಥಾನವನ್ನು ಕಳೆದುಕೊಂಡರೆ ಅಥವಾ ಅನರ್ಹಗೊಂಡರೆ ಸ್ಪೀಕರ್ ಆಗಿ ಮುಂದುವರಿಯಲು ಸಾಧ್ಯವಿಲ್ಲ. ಸದಸ್ಯರಲ್ಲದಿದ್ದರೆ ಸದನವನ್ನು ಮುನ್ನಡೆಸಲು ಸಾಧ್ಯವಿಲ್ಲ. 94 (ಬಿ) ಪ್ರಕಾರ ಯಾವುದೇ ಸಮಯದಲ್ಲಿ ಅವರು ಹುದ್ದೆಗೆ ರಾಜೀನಾಮೆ ನೀಡಬಹುದು. 94 (ಸಿ) ಪ್ರಕಾರ “ಸದನದ ಆಗಿನ ಬಹುಮತದ ಸದಸ್ಯರು ಅಂಗೀಕರಿಸಿದ ಸದನದ ನಿರ್ಣಯದ ಮೂಲಕ” ಅವರನ್ನು ತೆಗೆದುಹಾಕಬಹುದು. *ಲೋಕಸಭಾ ಸ್ಪೀಕರ್ ಅವರನ್ನು ಅವರ ಹುದ್ದೆಯಿಂದ ತೆಗೆದುಹಾಕಬಹುದೇ? ಹೌದು. ಈ ಪ್ರಕ್ರಿಯೆಯು ರಾಜ್ಯಸಭೆಗೆ ಅನ್ವಯಿಸುವುದಿಲ್ಲ. ಸದನದ ಆಗಿನ ಎಲ್ಲಾ ಸದಸ್ಯರ ಬಹುಮತದಿಂದ ಅಂಗೀಕರಿಸಲ್ಪಟ್ಟ ಲೋಕಸಭೆಯ ನಿರ್ಣಯದ ಮೂಲಕ ಸ್ಪೀಕರ್ ಅಥವಾ ಉಪಸಭಾಪತಿಯನ್ನು ಹುದ್ದೆಯಿಂದ ತೆಗೆದುಹಾಕಬಹುದು. ಸಂವಿಧಾನದ 94 (ಸಿ) ವಿಧಿಯ ಅಡಿಯಲ್ಲಿ ಇದು ಸಾಧ್ಯ. 94ನೇ ವಿಧಿಯು ಸ್ಪೀಕರ್ ಮತ್ತು ಉಪಸಭಾಪತಿಯ ರಾಜೀನಾಮೆ ಹಾಗೂ ತೆಗೆದುಹಾಕುವಿಕೆಯನ್ನು ಒದಗಿಸುತ್ತದೆ. ಆದರೆ ಈ ನಿಟ್ಟಿನಲ್ಲಿ ನಿಯಮಗಳು ಕಠಿಣವಾಗಿರುತ್ತವೆ. *ಲೋಕಸಭೆಯ ಸ್ಪೀಕರ್ ಅಥವಾ ಉಪ ಸ್ಪೀಕರ್ ಅವರನ್ನು ಪದಚ್ಯುತಗೊಳಿಸುವ ವಿಧಾನ ಏನು? ಸ್ಪೀಕರ್ ಅಥವಾ ಉಪ ಸ್ಪೀಕರ್ ಅವರನ್ನು ಪದಚ್ಯುತಗೊಳಿಸುವ ನಿರ್ಣಯದ ಸೂಚನೆ ನೀಡಲು ಬಯಸುವ ಸದಸ್ಯರು ಲೋಕಸಭೆಯ ಪ್ರಧಾನ ಕಾರ್ಯದರ್ಶಿಗೆ ಲಿಖಿತ ನೋಟಿಸ್ ನೀಡಬೇಕು. ಈ ಸೂಚನೆಯನ್ನು ಇಬ್ಬರು ಅಥವಾ ಹೆಚ್ಚಿನ ಸದಸ್ಯರು ಜಂಟಿಯಾಗಿ ನೀಡಬಹುದು. ಷರತ್ತು (ಸಿ) ಅಡಿಯಲ್ಲಿ ಮಂಡಿಸಲಾದ ಅಂತಹ ನಿರ್ಣಯವನ್ನು ಮಂಡಿಸುವ ಉದ್ದೇಶದ ಬಗ್ಗೆ ಕನಿಷ್ಠ 14 ದಿನಗಳ ಸೂಚನೆ ನೀಡದೇ ಮಂಡಿಸಲಾಗುವುದಿಲ್ಲ. ಅಂತಹ ಸೂಚನೆಯನ್ನು ಸ್ವೀಕರಿಸಿದ ನಂತರ ನಿರ್ಣಯವನ್ನು ಮಂಡಿಸಲು ಅನುಮತಿ ಕೋರುವ ಪ್ರಸ್ತಾವನೆಯನ್ನು ಸ್ಪೀಕರ್ ನಿಗದಿಪಡಿಸಿದ ದಿನದಂದು ಸಂಬಂಧಪಟ್ಟ ಸದಸ್ಯರ ಹೆಸರಿನಲ್ಲಿ ವ್ಯವಹಾರಗಳ ಪಟ್ಟಿಯಲ್ಲಿ ನಮೂದಿಸಲಾಗುತ್ತದೆ. ನಿರ್ಣಯಗಳ ಸೂಚನೆಯನ್ನು ಸ್ವೀಕರಿಸಿದ ದಿನಾಂಕದಿಂದ ಹದಿನಾಲ್ಕು ದಿನಗಳ ನಂತರದ ಯಾವುದೇ ದಿನ ಇದನ್ನು ಮಾಡಬಹುದು. *ಲೋಕಸಭೆಯ ಸ್ಪೀಕರ್ ವಿರುದ್ಧ ಈ ಹಿಂದೆಯೂ ಅವಿಶ್ವಾಸ ನಿರ್ಣಯ ಮಂಡಿಸಲಾಗಿತ್ತು ಈ ಹಿಂದೆಯೂ 1954, 1966 ಮತ್ತು 1987ರಲ್ಲಿ ಸ್ಪೀಕರ್ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲಾಗಿತ್ತು. ಅಂತಹ ನಿರ್ಣಯಕ್ಕೆ ಲೋಕಸಭೆಯ ಕನಿಷ್ಠ ಇಬ್ಬರು ಸದಸ್ಯರ ಬೆಂಬಲ ಇರಬೇಕು. ಅದರ ಪರವಾಗಿ “50 ಸದಸ್ಯರು ಎದ್ದು ನಿಲ್ಲಬೇಕು”, ಅಂದರೆ ಕಾರ್ಯವಿಧಾನ ನಡೆಯಲು ಸದನದ ಕೋರಂ ಪೂರೈಸಬೇಕು. ಈ ಪ್ರಕ್ರಿಯೆಯನ್ನು ಲೋಕಸಭೆಯಲ್ಲಿನ ಕಾರ್ಯವಿಧಾನ ಮತ್ತು ವ್ಯವಹಾರದ ನಿಯಮಗಳ 200ರಿಂದ 203ರವರೆಗಿನ ನಿಯಮಗಳು ನಿಯಂತ್ರಿಸುತ್ತವೆ. 1954ರಲ್ಲಿ ಲೋಕಸಭೆಯ ಮೊದಲ ಸ್ಪೀಕರ್ ಗಣೇಶ್ ವಾಸುದೇವ್ ಮಾವಲಂಕರ್ ಅವರು ಅವಿಶ್ವಾಸ ನಿರ್ಣಯವನ್ನು ಎದುರಿಸಿದ ಮೊದಲ ಸಭಾಧ್ಯಕ್ಷರಾಗಿದ್ದರು. ನವೆಂಬರ್ 1966ರಲ್ಲಿ ಹುಕಮ್ ಸಿಂಗ್ ವಿರುದ್ಧ ಮತ್ತು ಏಪ್ರಿಲ್ 1987ರಲ್ಲಿ ಬಲರಾಮ್ ಜಾಖರ್ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲಾಗಿದ್ದರೂ ಯಾರೂ ಸ್ಪೀಕರ್ ಹುದ್ದೆ ಕಳೆದುಕೊಳ್ಳಲಿಲ್ಲ. *ಅವಿಶ್ವಾಸ ನಿರ್ಣಯವು ಪಾಲಿಸಬೇಕಾದ ಮಾರ್ಗಸೂಚಿಗಳು ನಿಯಮ 200A ಪ್ರಕಾರ ಅಂತಹ ನಿರ್ಣಯವು “ಆರೋಪಗಳಿಗೆ ಸಂಬಂಧಿಸಿದಂತೆ ನಿರ್ದಿಷ್ಟವಾಗಿರಬೇಕು”. ಅವುಗಳನ್ನು ಸ್ಪಷ್ಟವಾಗಿ ಮತ್ತು ನಿಖರವಾಗಿ ವ್ಯಕ್ತಪಡಿಸಿರಬೇಕು. “ವಾದಗಳು, ತೀರ್ಮಾನಗಳು, ವ್ಯಂಗ್ಯಾತ್ಮಕ ಅಭಿವ್ಯಕ್ತಿಗಳು, ಆರೋಪಗಳು ಅಥವಾ ಮಾನನಷ್ಟ ಹೇಳಿಕೆಗಳನ್ನು ಹೊಂದಿರಬಾರದು.” ಅಂತಹ ನಿರ್ಣಯವನ್ನು ಚರ್ಚೆಗೆ ಅಂಗೀಕರಿಸಿದ ನಂತರ ಅದನ್ನು ಸಲ್ಲಿಸಿದ ಸದಸ್ಯರು ಭಾಷಣ ಮಾಡಬಾರದು. *ಅಂತಹ ಪ್ರಸ್ತಾವನೆಯನ್ನು ಅಂಗೀಕರಿಸಿದರೆ ಏನಾಗುತ್ತದೆ? ಅಂತಹ ಪ್ರಸ್ತಾವನೆಯನ್ನು ಅಂಗೀಕರಿಸಿದರೆ ಅದರ ಪರವಾಗಿ ಇರುವ ಸದಸ್ಯರು ಎದ್ದು ನಿಲ್ಲಬೇಕು. 50ಕ್ಕಿಂತ ಕಡಿಮೆಯಿಲ್ಲದ ಸದಸ್ಯರು ಎದ್ದು ನಿಂತರೆ ಸ್ಪೀಕರ್ ಅಥವಾ ಉಪಸಭಾಪತಿಗೆ ‘leave has been granted’ ಎಂದು ಹೇಳಲಾಗುತ್ತದೆ. ಅಂದರೆ ಮುಂದಿನ ಚರ್ಚೆ ಮತ್ತು ಮತದಾನಕ್ಕಾಗಿ ಪ್ರಸ್ತಾವನೆಯನ್ನು ಅಧಿಕೃತವಾಗಿ ಅಂಗೀಕರಿಸಲಾಗಿದೆ ಎಂದರ್ಥ. ನಂತರ ಚರ್ಚೆ ಮತ್ತು ಅಂತಿಮ ಮತದಾನವು 10 ದಿನಗಳೊಳಗೆ ನಡೆಯಬೇಕು. ಆ ಅವಧಿಯಲ್ಲಿ ನಿರ್ದಿಷ್ಟ ದಿನ ಮತ್ತು ಸಮಯವನ್ನು ಸಭಾಧ್ಯಕ್ಷರು ಆಯ್ಕೆ ಮಾಡುತ್ತಾರೆ. ನಿರ್ಣಯವನ್ನು ಕೈಗೆತ್ತಿಕೊಳ್ಳುವ ದಿನ ಅದನ್ನು ವ್ಯವಹಾರದ ಪಟ್ಟಿಯಲ್ಲಿ ಸೇರಿಸಿ ಚರ್ಚೆ ನಡೆಸಬೇಕು. ಈ ಸಂದರ್ಭದಲ್ಲಿ ಅಧ್ಯಕ್ಷತೆ ವಹಿಸುವವರು ಅನುಮತಿಸಿದರೆ ಪ್ರಸ್ತಾವನೆಯನ್ನು ಮಂಡಿಸಿದ ಸದಸ್ಯರಿಗೆ ಮಾತನಾಡಲು ಅವಕಾಶ ನೀಡಬಹುದು; ಆದರೆ ಭಾಷಣವು ಹದಿನೈದು ನಿಮಿಷಗಳನ್ನು ಮೀರಬಾರದು. ಚರ್ಚೆಯು ನಿರ್ಣಯದಲ್ಲಿ ಉಲ್ಲೇಖಿಸಿದ ಆರೋಪಗಳಿಗೆ ಕಟ್ಟುನಿಟ್ಟಾಗಿ ಸೀಮಿತವಾಗಿರುತ್ತದೆ. *ಅಗತ್ಯಕ್ಕಿಂತ ಕಡಿಮೆ ಸದಸ್ಯರು ಎದ್ದು ನಿಂತರೆ? 50ಕ್ಕಿಂತ ಕಡಿಮೆ ಸದಸ್ಯರು ಎದ್ದು ನಿಂತರೆ ಪ್ರಸ್ತಾವನೆಯನ್ನು ಸಲ್ಲಿಸಿದ ಸದಸ್ಯರಿಗೆ ‘not the leave of the House’ ಎಂದು ತಿಳಿಸಲಾಗುತ್ತದೆ. ಆ ಪ್ರಸ್ತಾವನೆಯನ್ನು ತಕ್ಷಣವೇ ರದ್ದುಗೊಳಿಸಲಾಗುತ್ತದೆ. ಸೂಕ್ತ ಸೂಚನೆ ಇಲ್ಲದೆ ಸ್ವೀಕರಿಸಿದ ನಿರ್ಣಯವನ್ನು ಮುಂದುವರಿಸಲಾಗುವುದಿಲ್ಲ. *ಸದನದ ಸದಸ್ಯರಾಗಿ ಸ್ಪೀಕರ್ ತಮ್ಮ ಪದಚ್ಯುತಿಯನ್ನು ಚರ್ಚಿಸುತ್ತಿರುವಾಗ ಏನು ಮಾಡುತ್ತಾರೆ? ನಿಯಮಗಳ ಪ್ರಕಾರ ಲೋಕಸಭೆಯ ಸದನವನ್ನು ವಿಸರ್ಜಿಸಿದಾಗ ಸ್ಪೀಕರ್ ತಮ್ಮ ಅಧಿಕೃತ ಸ್ಥಾನದಲ್ಲಿಯೇ ಇರುತ್ತಾರೆ. ಹೊಸದಾಗಿ ಆಯ್ಕೆಯಾದ ಲೋಕಸಭೆಯ ಮೊದಲ ಸಭೆ ಪ್ರಾರಂಭವಾಗುವ ಕೆಲವೇ ನಿಮಿಷಗಳ ಮೊದಲು ಅವರು ಅಧಿಕೃತವಾಗಿ ಹುದ್ದೆ ತೊರೆಯುತ್ತಾರೆ. ಅವರನ್ನು ಪದಚ್ಯುತಗೊಳಿಸುವ ಯಾವುದೇ ನಿರ್ಣಯವು ಸದನದಲ್ಲಿ ಪರಿಗಣನೆಯಲ್ಲಿರುವಾಗ ಸ್ಪೀಕರ್ಗೆ ಲೋಕಸಭಾ ಕಲಾಪಗಳಲ್ಲಿ ಮಾತನಾಡುವ ಮತ್ತು ಭಾಗವಹಿಸುವ ಹಕ್ಕು ಇರುತ್ತದೆ. ಅಂತಹ ಪ್ರಕ್ರಿಯೆಗಳ ಸಮಯದಲ್ಲಿ ಅವರು ಮೊದಲ ಹಂತದಲ್ಲಿ ಮಾತ್ರ ಮತ ಚಲಾಯಿಸಲು ಅರ್ಹರಾಗಿರುತ್ತಾರೆ; ಸಮಮತಗಳು ಬಂದಾಗ ತೀರ್ಮಾನಾತ್ಮಕ ಮತ ಚಲಾಯಿಸಲು ಅವರಿಗೆ ಅವಕಾಶ ಇರುವುದಿಲ್ಲ.
ವಿಫಲವಾದ ನಲಿ ಕಲಿ ಯೋಜನೆ : ಶಿಕ್ಷಣ ಸಚಿವರಿಗೆ ವರದಿ ಸಲ್ಲಿಸಿದ ಕನ್ನಡ ಅಭಿವೃದ್ಧಿ ಪ್ರಾಧಿಕಾರ
ಬೆಂಗಳೂರು : ರಾಜ್ಯ ಸರಕಾರದ ನಲಿ-ಕಲಿ ಯೋಜನೆಯ ಪರಿಕಲ್ಪನೆ ಚೆನ್ನಾಗಿದ್ದರೂ, ಅನುಷ್ಠಾನದಲ್ಲಿ ಅದು ಯಶಸ್ಸು ಸಾಧಿಸದೇ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರ ತಿಳಿಸಿದೆ. ಮಂಗಳವಾರ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಪುರುಷೋತ್ತಮ ಬಿಳಿಮಲೆ, ನಾಮನಿರ್ದೇಶಿತ ಸದಸ್ಯ ಡಾ.ರವಿಕುಮಾರ್ ನೀಹ, ಕಾರ್ಯದರ್ಶಿ ಡಾ.ಸಂತೋಷ ಹಾನಗಲ್ಲ, ಆಪ್ತ ಕಾರ್ಯದರ್ಶಿ ಟಿ. ಎಸ್.ಫಣಿಕುಮಾರ್ ಅವರು ವೈಫಲ್ಯಕ್ಕೆ ಸಂಬಂಧಿಸಿದಂತೆ ವರದಿಯನ್ನು ಶಿಕ್ಷಣ ಸಚಿವರಿಗೆ ಸಲ್ಲಿಸಿದ್ದಾರೆ. ನಲಿ-ಕಲಿ ಯೋಜನೆಯ 80 ನಿಮಿಷಗಳ ಒಂದು ಅವಧಿಯನ್ನು ಸೃಜನಾತ್ಮಕವಾಗಿ ಬಳಸಿಕೊಳ್ಳುವಲ್ಲಿ ಅಧ್ಯಾಪಕರು ವಿಫಲರಾಗಿದ್ದಾರೆ. ತರಬೇತಿ ಪಡೆದ ಅಧ್ಯಾಪಕರು ನಿವೃತ್ತರಾದಾಗ ಅವರ ಜಾಗದಲ್ಲಿ ನೇಮಕಗೊಂಡ ಅತಿಥಿ ಅಧ್ಯಾಪಕರಿಗೆ ಸೂಕ್ತವಾದ ತರಬೇತಿ ಸಿಗದ್ದರಿಂದ ನಿರೀಕ್ಷಿತ ಪರಿಣಾಮ ಲಭಿಸಲಿಲ್ಲ. ಒಂದರಿಂದ ಮೂರನೇ ತರಗತಿಯವರೆಗಿನ ಮಕ್ಕಳ ವಯಸ್ಸು, ಕಲಿಕಾ ಮಟ್ಟ ಮತ್ತು ಕಲಿಕಾ ಸಾಮಥ್ರ್ಯ ಒಂದೇ ರೀತಿ ಇರುವುದಿಲ್ಲ. ಇಂಥ ಸಂದರ್ಭದಲ್ಲಿ ಬಹುವರ್ಗಬೋಧನೆಯನ್ನು ಅರ್ಥಪೂರ್ಣಗೊಳಿಸಲು ಬೇಕಾದ ಗುಂಪು ರಚನೆ ಹಾಗೂ ನಿರ್ವಹಣೆಯ ವಿಷಯದಲ್ಲಿ ಅಧ್ಯಾಪಕರು ವಿಫಲರಾಗಿದ್ದಾರೆ ಎಂದು ನಿಯೋಗ ತಿಳಿಸಿದೆ. ಇದರಿಂದ ಭಾಷಾ ಕಲಿಕೆಗೆ ತೀವ್ರ ಹಿನ್ನಡೆಯಾಗಿದೆ. ಹೆಚ್ಚು ಸಂಖ್ಯೆಯ ವಿದ್ಯಾರ್ಥಿಗಳಿರುವ ತರಗತಿಗಳಲ್ಲಿ ಎಲ್ಲ ಮಕ್ಕಳ ಮೇಲೂ ಸಮಾನವಾಗಿ ಗಮನ ಹರಿಸಲು ಶಿಕ್ಷಕರಿಗೆ ಸಾಧ್ಯವಾಗಿಲ್ಲ. ತರಗತಿಗಳನ್ನು ಅರ್ಥಪೂರ್ಣವಾಗಿ ನಡೆಸಲು ಅಗತ್ಯವಿದ್ದ ಕಲಿಕಾ ಸಾಮಗ್ರಿಗಳು ಸಮರ್ಪಕವಾಗಿ ಹಲವು ಶಾಲೆಗಳಿಗೆ ಪೂರೈಕೆ ಆಗಿಲ್ಲ. ಅನೇಕ ಅಧ್ಯಾಪಕರಿಗೆ ನಲಿಕಲಿ ಯೋಜನೆಯ ಬಗ್ಗೆ ಸ್ಪಷ್ಟ ಕಲ್ಪನೆ ಇಲ್ಲ. ಕೆಲವರು ಯೋಜನೆಯನ್ನು ಸಂಸ್ಕೃತಿ ಆಧಾರಿತ ಪ್ರಕ್ರಿಯೆಯಾಗಿ ಬೆಳೆಸಲೂ ಇಲ್ಲ. ಹಲವರು ಯೋಜನೆಯನ್ನು ಸಾಕಾರಗೊಳಿಸಲು ಬೇಕಾದ ತಯಾರಿಗಳನ್ನೇ ಮಾಡಿಕೊಂಡು ಬಂದಿರಲಿಲ್ಲ ಎಂದು ವರದಿಯಲ್ಲಿ ತಿಳಿಸಲಾಗಿದೆ. ಸಹಜವಾಗಿ ಮಕ್ಕಳು ಆಟದಲ್ಲಿ ಹೆಚ್ಚು ಆಸಕ್ತಿ ತೋರುತ್ತಾರೆ. ಅಂಥ ಮಕ್ಕಳನ್ನು ಕಲಿಕೆಯ ಕಡೆ ತಿರುಗಿಸಲು ಶಿಕ್ಷಕರು ಹೆಚ್ಚು ಕೆಲಸ ಮಾಡಬೇಕಾಗುತ್ತದೆ. ಮೂರು ತರಗತಿಗೆ ಒಬ್ಬರಿಗೆ ಶಿಕ್ಷಕರಾ? ಎಂದು ಪೋಷಕರು ಸಾಮಾನ್ಯವಾಗಿ ಉದ್ಗರಿಸುತ್ತಾರೆ. ಅವರಿಗೆ ನಲಿಕಲಿ ಯೋಜನೆಯ ಮಹತ್ವ ತಿಳಿದಿರುವುದಿಲ್ಲ. ಅಂಥವರು ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಕಳಿಸಿದ್ದಾರೆ. ಇದರಿಂದಾಗಿ ಸರಕಾರಿ ಶಾಲೆಗಳಲ್ಲಿ ಪ್ರವೇಶ ಕಡಿಮೆಯಾಗಿದೆ. ವಿದ್ಯಾರ್ಥಿಗಳ ಪ್ರಗತಿಯನ್ನು ನಿರಂತರವಾಗಿ ದಾಖಲಿಸುವುದು, ಮೌಲ್ಯಮಾಪನ ಮಾಡುವುದು ಶ್ರಮದಾಯಕವಾದ ಕೆಲಸ. ಅನೇಕ ಕೆಲಸಗಳಲ್ಲಿ ಮಗ್ನರಾದ ಶಿಕ್ಷಕರಿಗೆ ಇದನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಸಾಧ್ಯವಾಗಿಲ್ಲ ಎಂದು ಹೇಳಿದ್ದಾರೆ. ಗ್ರಾಮೀಣ ಪರಿಸರದ ಸರಕಾರಿ ಶಾಲೆಗಳಲ್ಲಿ ಹಲವು ತರಗತಿ ಕೋಣೆಗಳು ಸಂಪೂರ್ಣ ಶಿಥಿಲಾವಸ್ಥೆಯಲ್ಲಿದ್ದು, ಅಲ್ಲಿ ಮಳೆಗಾಲದಲ್ಲಿ ನೆಲದಲ್ಲಿ ಕುಳಿತುಕೊಂಡೋ, ಓಡಾಡಿಕೊಂಡೋ ಕಲಿಯುವುದು ಮಕ್ಕಳಿಗೆ ಅಸಾಧ್ಯವಾಗಿದೆ. ಮೂರನೇ ತರಗತಿಯವರೆಗೆ ನಲಿಕಲಿ ಯೋಜನೆಯಲ್ಲಿ ಕಲಿತ ಮಕ್ಕಳು ನಾಲ್ಕನೇ ತರಗತಿಯಲ್ಲಿ ಇನ್ನೊಂದು ಬಗೆಯ ವ್ಯವಸ್ಥೆಗೆ ಹೊಂದಿಕೊಳ್ಳಲು ಕಷ್ಟ ಪಡುತ್ತಿದ್ದಾರೆ. ಯೋಜನೆಯು ಪ್ರಾಥಮಿಕ ಹಂತದ ಕಲಿಕೆಯಲ್ಲಿ ಭಾಷಾ ಕಲಿಕೆಯ ಗುಣಮಟ್ಟವನ್ನು ಎತ್ತರಿಸಿಲ್ಲ ಎಂದು ನಿಯೋಗ ವಿವರಿಸಿದೆ. ನಲಿಕಲಿ ಯೋಜನೆ ಅನುಷ್ಠಾನಕ್ಕೆ ಬಂದು 30 ವರ್ಷಗಳಾದರೂ ಶಿಕ್ಷಕರಿಗೆ ಈ ಯೋಜನೆಯನ್ನು ಸಮರ್ಪಕವಾಗಿ ಅಳವಡಿಸಿಕೊಳ್ಳಲು ಸಾಧ್ಯವಾಗಿಲ್ಲ. ಹೀಗಾಗಿ ಶಿಕ್ಷಕರು ಸಹಜವಾಗಿಯೇ ಯೋಜನೆಯ ಬಗ್ಗೆ ತಮ್ಮ ವಿರೋಧವನ್ನು ಪ್ರಕಟಿಸಿದ್ದಾರೆ. ಹೀಗಾಗಿ ನಲಿಕಲಿ ಯೋಜನೆಯನ್ನು ಮುಂದುವರಿಸುವ ಬಗ್ಗೆ ಶಿಕ್ಷಣ ಇಲಾಖೆ ಮರುಚಿಂತನೆ ನಡೆಸಬೇಕು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರ ತಿಳಿಸಿದೆ.
NIA ನ್ಯಾಯಾಲಯಗಳ ಸ್ಥಾಪನೆ: ರಾಜ್ಯಗಳಿಗೆ ಸುಪ್ರೀಂ ಕೋರ್ಟ್ ನೋಟಿಸ್
ಹೊಸದಿಲ್ಲಿ, ಫೆ. 10: ಭಯೋತ್ಪಾದಕ ನಿಗ್ರಹ ಕಾನೂನುಗಳ ಅಡಿಯಲ್ಲಿ 10 ಅಥವಾ ಅದಕ್ಕಿಂತ ಹೆಚ್ಚು ಸಂಖ್ಯೆಯ ಪ್ರಕರಣಗಳು ಬಾಕಿಯಿದ್ದರೆ ವಿಶೇಷ ಎನ್ಐಎ ನ್ಯಾಯಾಲಯಗಳನ್ನು ಸ್ಥಾಪಿಸುವಂತೆ ನಿರ್ದೇಶಿಸಿ ದಿಲ್ಲಿ, ಗುಜರಾತ್ ಮತ್ತು ಮಹಾರಾಷ್ಟ್ರ ಸೇರಿದಂತೆ 17 ರಾಜ್ಯಗಳಿಗೆ ಸುಪ್ರೀಂ ಕೋರ್ಟ್ ಮಂಗಳವಾರ ನೋಟಿಸ್ ಗಳನ್ನು ಜಾರಿಗೊಳಿಸಿದೆ. ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ತನಿಖೆ ನಡೆಸುತ್ತಿರುವ ಪ್ರಕರಣಗಳ ಸಂಖ್ಯೆ 10ಕ್ಕಿಂತ ಹೆಚ್ಚಿರುವ ರಾಜ್ಯಗಳಲ್ಲಿ ವಿಶೇಷ ನ್ಯಾಯಾಲಯಗಳನ್ನು ಸ್ಥಾಪಿಸುವ ಪ್ರಸ್ತಾವವನ್ನು ಇಟ್ಟಿರುವುದಾಗಿ ಕೇಂದ್ರ ಗೃಹ ಸಚಿವಾಲಯವು ತನ್ನ ಸಮಗ್ರ ಸ್ಥಿತಿಗತಿ ವರದಿಯಲ್ಲಿ ತಿಳಿಸಿದ ಬಳಿಕ, ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್, ನ್ಯಾಯಮೂರ್ತಿಗಳಾದ ಜಯಮಲ್ಯ ಬಾಗ್ಚಿ ಮತ್ತು ಎನ್.ವಿ. ಅಂಜಾರಿಯಾ ಅವರನ್ನು ಒಳಗೊಂಡ ನ್ಯಾಯಪೀಠವು ರಾಜ್ಯಗಳಿಂದ ಅಭಿಪ್ರಾಯ ಕೋರಿತು.
ಅಮೆರಿಕ–ಬಾಂಗ್ಲಾದೇಶ ದ್ವಿಪಕ್ಷೀಯ ವ್ಯಾಪಾರ ಒಪ್ಪಂದ ಮಹತ್ವ ಪಡೆದಿರುವುದೇಕೆ?
ಭಾರತದೊಂದಿಗೆ ಒಪ್ಪಂದ ಮಾಡಿಕೊಂಡ ಒಂದು ವಾರದ ನಂತರ ಅಮೆರಿಕವು ಬಾಂಗ್ಲಾದೇಶದೊಂದಿಗೆ ದ್ವಿಪಕ್ಷೀಯ ವ್ಯಾಪಾರ ಒಪ್ಪಂದ ಮಾಡಿಕೊಂಡಿದೆ. ಈ ಒಪ್ಪಂದದ ಮೂಲಕ ಅಮೆರಿಕವು ಬಾಂಗ್ಲಾದೇಶದ ಉತ್ಪನ್ನಗಳ ಮೇಲಿನ ಸುಂಕವನ್ನು ಶೇ. 19ಕ್ಕೆ ಇಳಿಸಿದೆ. ಇದೇ ಸಂದರ್ಭದಲ್ಲಿ ಅಮೆರಿಕದ ವಸ್ತುಗಳಿಂದ ತಯಾರಿಸಿದ ಕೆಲವು ಜವಳಿ ಮತ್ತು ಉಡುಪುಗಳ ಮೇಲಿನ ಸುಂಕಕ್ಕೂ ವಿನಾಯಿತಿ ನೀಡಿದೆ. ಇದಕ್ಕೂ ಮೊದಲು ಬಾಂಗ್ಲಾದೇಶಕ್ಕೆ ಶೇ. 37ರಷ್ಟು ಸುಂಕ ವಿಧಿಸಲಾಗಿತ್ತು. ನಂತರ 2025ರ ಆಗಸ್ಟ್ನಲ್ಲಿ ಅದನ್ನು ಶೇ. 20ಕ್ಕೆ ಇಳಿಸಲಾಗಿತ್ತು. ಇದೀಗ ಶೇ. 19ಕ್ಕೆ ಇಳಿಸಲಾಗಿದೆ. ಬಾಂಗ್ಲಾದೇಶದಿಂದ ಕೆಲವು ಜವಳಿ ಮತ್ತು ಉಡುಪು ಸರಕುಗಳಿಗೆ ಶೂನ್ಯ ಸುಂಕದ ದರವನ್ನು ಪಡೆಯಲು ಅನುವು ಮಾಡಿಕೊಡುವ ಕಾರ್ಯವಿಧಾನವನ್ನು ಸ್ಥಾಪಿಸಲು ಅಮೆರಿಕ ಬದ್ಧವಾಗಿದೆ. ಈ ಕಾರ್ಯವಿಧಾನವು ಬಾಂಗ್ಲಾದೇಶದಿಂದ ಉಡುಪು ಮತ್ತು ಜವಳಿ ಆಮದುಗಳ ನಿರ್ದಿಷ್ಟ ಪ್ರಮಾಣವನ್ನು ಈ ಕಡಿಮೆ ಸುಂಕದ ದರದಲ್ಲಿ ಅಮೆರಿಕಕ್ಕೆ ಪ್ರವೇಶಿಸಲು ಅನುವು ಮಾಡಿಕೊಡುತ್ತದೆ ಎಂದು ಬಾಂಗ್ಲಾದೇಶ–ಅಮೆರಿಕ ಜಂಟಿ ಹೇಳಿಕೆ ತಿಳಿಸಿದೆ. ಒಪ್ಪಂದದ ಅಡಿಯಲ್ಲಿ ಬಾಂಗ್ಲಾದೇಶವು ಅಮೆರಿಕದ ಕೈಗಾರಿಕಾ ಮತ್ತು ಕೃಷಿ ಸರಕುಗಳಿಗೆ ಗಮನಾರ್ಹ ಆದ್ಯತೆಯ ಮಾರುಕಟ್ಟೆ ಪ್ರವೇಶವನ್ನು ಒದಗಿಸಲು ಬದ್ಧವಾಗಿದೆ. ಢಾಕಾ 15 ವರ್ಷಗಳಲ್ಲಿ ಗೋಧಿ, ಸೋಯಾ, ಹತ್ತಿ ಮತ್ತು ಜೋಳದಂತಹ 3.5 ಬಿಲಿಯನ್ ಡಾಲರ್ ಮೌಲ್ಯದ ಅಮೆರಿಕದ ಕೃಷಿ ಉತ್ಪನ್ನಗಳನ್ನು ಹಾಗೂ 15 ಬಿಲಿಯನ್ ಡಾಲರ್ ಮೌಲ್ಯದ ಇಂಧನ ಉತ್ಪನ್ನಗಳನ್ನು ಖರೀದಿಸಲು ಬದ್ಧವಾಗಿದೆ. ಆದಾಗ್ಯೂ, ಸುಂಕಮುಕ್ತ ಪ್ರಯೋಜನವನ್ನು ಪಡೆಯಲು ಬಾಂಗ್ಲಾದೇಶವು ಬಟ್ಟೆಗಳನ್ನು ಅಮೆರಿಕದ ಕಚ್ಚಾ ವಸ್ತುಗಳನ್ನು ಬಳಸಿ ತಯಾರಿಸಲಾಗಿದೆ ಎಂದು ಸಾಬೀತುಪಡಿಸಬೇಕು. ಬಾಂಗ್ಲಾದೇಶವು ಅಮೆರಿಕಕ್ಕೆ ಸುಂಕಮುಕ್ತವಾಗಿ ಕಳುಹಿಸಬಹುದಾದ ಬಟ್ಟೆಗಳ ಪ್ರಮಾಣವು ಅಪರಿಮಿತವಾಗಿಲ್ಲ. ಇದು ಅಮೆರಿಕದಿಂದ ಅವರು ಎಷ್ಟು ಖರೀದಿಸುತ್ತಾರೆ ಎಂಬುದರ ಮೇಲೆ ನೇರವಾಗಿ ಅವಲಂಬಿತವಾಗಿದೆ. ಚೀನಾ ನಂತರ ಬಾಂಗ್ಲಾದೇಶ ಜವಳಿ ಮತ್ತು ಉಡುಪು ಸರಕುಗಳ ಎರಡನೇ ಅತಿದೊಡ್ಡ ರಫ್ತುದಾರವಾಗಿದೆ. ಭಾರತದ ಜವಳಿ ರಫ್ತಿಗೆ ಅಮೆರಿಕವು ಪ್ರಮುಖ ಮಾರುಕಟ್ಟೆಯಾಗಿದೆ. ಹೀಗಾಗಿ, ಟ್ರಂಪ್ ಭಾರತೀಯ ರಫ್ತಿನ ಮೇಲಿನ ಸುಂಕವನ್ನು 18%ಕ್ಕೆ ಇಳಿಸಿದಾಗ ಜವಳಿ ಉದ್ಯಮಕ್ಕೆ ಖುಷಿಯಾಯಿತು. ಇದು ಜವಳಿ ಮತ್ತು ಉಡುಪುಗಳಿಗೆ ಅಮೆರಿಕದ 118 ಬಿಲಿಯನ್ ಡಾಲರ್ ಮಾರುಕಟ್ಟೆಯನ್ನು ತೆರೆಯುವುದಲ್ಲದೆ ಜಾಗತಿಕ ಪೂರೈಕೆ ಸರಪಳಿಗಳಲ್ಲಿ ಭಾರತದ ಸ್ಥಾನವನ್ನು ಬಲಪಡಿಸಿತು. ಭಾರತದ ಜವಳಿ ರಫ್ತಿನಲ್ಲಿ ಅಮೆರಿಕ ಈಗಾಗಲೇ ಸುಮಾರು 10.5 ಬಿಲಿಯನ್ ಡಾಲರ್ ಪಾಲನ್ನು ಹೊಂದಿದೆ. ದೇಶದಿಂದ ಎಲ್ಲಾ ಜವಳಿ ಮತ್ತು ಉಡುಪು ಸಾಗಣೆಗಳಲ್ಲಿ ಶೇ. 30ರಷ್ಟು ಅಮೆರಿಕಕ್ಕೆ ಹೋಗುತ್ತದೆ. 50% ಸುಂಕಗಳನ್ನು ವಿಧಿಸಿದ ನಂತರ ಭಾರತದ GDPಗೆ 2.3% ಕೊಡುಗೆ ನೀಡುವ ಜವಳಿ ವಲಯವು ರಫ್ತಿನಲ್ಲಿ ಕುಸಿತವನ್ನು ದಾಖಲಿಸಿತ್ತು. ನವೆಂಬರ್ 2025ರಲ್ಲಿ ಅಮೆರಿಕಕ್ಕೆ ಜವಳಿ ರಫ್ತು ವರ್ಷದಿಂದ ವರ್ಷಕ್ಕೆ ಶೇ. 31ಕ್ಕಿಂತ ಹೆಚ್ಚು ಕುಸಿದಿದೆ ಎಂದು ದತ್ತಾಂಶ ತೋರಿಸುತ್ತದೆ. ಈ ಹಿನ್ನೆಲೆ, ನಿಧಾನಗತಿಯ ಸಾಗಣೆ ಮತ್ತು ಉದ್ಯೋಗ ನಷ್ಟದ ನಡುವೆ ಅಮೆರಿಕ–ಭಾರತ ವ್ಯಾಪಾರ ಒಪ್ಪಂದವು ಜವಳಿ ವಲಯಕ್ಕೆ ಬೆಂಬಲ ನೀಡುವ ರೀತಿಯಲ್ಲಿ ಬಂದಿತ್ತು. ಅಮೆರಿಕ–ಬಾಂಗ್ಲಾದೇಶ ವ್ಯಾಪಾರ ಒಪ್ಪಂದದಿಂದ ಭಾರತಕ್ಕೇನಾಗುತ್ತದೆ? ಅಮೆರಿಕ–ಬಾಂಗ್ಲಾದೇಶ ವ್ಯಾಪಾರ ಒಪ್ಪಂದವು ಭಾರತಕ್ಕೆ ಸವಾಲಿನ ಜೊತೆಗೆ ಕೆಲವು ಸಂದರ್ಭಗಳಲ್ಲಿ ಪ್ರಯೋಜನವನ್ನೂ ಹೆಚ್ಚಿಸಬಹುದು. ಭಾರತದ ಒಟ್ಟಾರೆ ಸುಂಕ ದರ ಬಾಂಗ್ಲಾದೇಶಕ್ಕಿಂತ ಕಡಿಮೆಯಿದ್ದರೂ, ಅಮೆರಿಕದ ಹತ್ತಿಯಿಂದ ತಯಾರಿಸಿದ ಬಾಂಗ್ಲಾದೇಶದ ಉಡುಪುಗಳಿಗೆ ಶೂನ್ಯ ಸುಂಕದ ನಿಬಂಧನೆಯು ಸ್ಪರ್ಧಾತ್ಮಕ ಸಮೀಕರಣವನ್ನು ಸಂಪೂರ್ಣವಾಗಿ ಬದಲಾಯಿಸುತ್ತದೆ. ಅಮೆರಿಕದ ಹತ್ತಿಯಿಂದ ತಯಾರಿಸಿದ ಬಾಂಗ್ಲಾದೇಶದ ಉಡುಪುಗಳಿಗೆ ತೆರಿಗೆ ಇರುವುದಿಲ್ಲ. ಮತ್ತೊಂದೆಡೆ ಭಾರತೀಯ ಜವಳಿಗಳಿಗೆ 18% ಸುಂಕ ವಿಧಿಸಲಾಗುತ್ತದೆ. ಇದರರ್ಥ ಬಾಂಗ್ಲಾದೇಶದ ಉಡುಪುಗಳು ಅಮೆರಿಕದಲ್ಲಿ ಭಾರತ ರಫ್ತು ಮಾಡುವುದಕ್ಕಿಂತ ಅಗ್ಗವಾಗಿರಬಹುದು. ಟ್ರಂಪ್ ಆಡಳಿತದೊಂದಿಗಿನ ಒಪ್ಪಂದದಲ್ಲಿ ಬಾಂಗ್ಲಾದೇಶ ಪಡೆದುಕೊಂಡಿರುವ ಹತ್ತಿ ಸಂಬಂಧಿತ ವಿನಾಯಿತಿಯೂ ಭಾರತದ ಕಳವಳಕ್ಕೆ ಕಾರಣವಾಗಿದೆ. ಹತ್ತಿ ಬಗ್ಗೆ ಕಳವಳ ಒಟ್ಟು ರಫ್ತಿನಲ್ಲಿ 80%ಕ್ಕಿಂತ ಹೆಚ್ಚು ಪಾಲು ಜವಳಿ ಆಗಿರುವುದರಿಂದ ಬಾಂಗ್ಲಾದೇಶವು ಬಹಳಷ್ಟು ಹತ್ತಿಯನ್ನು ಆಮದು ಮಾಡಿಕೊಳ್ಳುತ್ತದೆ. ವಾಸ್ತವವಾಗಿ ಇದು ವಿಶ್ವದ ಅತಿದೊಡ್ಡ ಹತ್ತಿ ಆಮದುದಾರ ಹಾಗೂ ಭಾರತೀಯ ಹತ್ತಿಯ ಅತಿದೊಡ್ಡ ಖರೀದಿದಾರವೂ ಆಗಿದೆ. ಕೆಲವು ವರ್ಷಗಳ ಹಿಂದಿನವರೆಗೆ ಭಾರತದ ಹತ್ತಿ ರಫ್ತಿನ 70% ಬಾಂಗ್ಲಾದೇಶಕ್ಕೆ ಹೋಗುತ್ತಿತ್ತು. 2024ರಲ್ಲಿ ಭಾರತ ಪರ ಶೇಖ್ ಹಸೀನಾ ಆಡಳಿತದ ಪತನದ ನಂತರ ಉಭಯ ರಾಷ್ಟ್ರಗಳ ನಡುವಿನ ಸಂಬಂಧಗಳು ಹದಗೆಟ್ಟಾಗ ಬಾಂಗ್ಲಾದೇಶ ಬ್ರೆಜಿಲ್ ಮತ್ತು ಪಶ್ಚಿಮ ಆಫ್ರಿಕಾದಂತಹ ದೇಶಗಳಿಂದ ಹತ್ತಿ ಖರೀದಿಸಲು ತೊಡಗಿತು. ಹೊಸ ಒಪ್ಪಂದವು ಅಮೆರಿಕದ ಹತ್ತಿಯನ್ನು ಬಳಸಿ ತಯಾರಿಸಿದ ಬಾಂಗ್ಲಾದೇಶದ ಉಡುಪುಗಳಿಗೆ ಅನುಕೂಲಕರವಾಗಿರುವುದರಿಂದ ಢಾಕಾ ಅಮೆರಿಕದ ಹತ್ತಿಯನ್ನೇ ಹೆಚ್ಚಾಗಿ ಆಶ್ರಯಿಸುವ ಸಾಧ್ಯತೆಯಿದೆ. ಇದು ಭಾರತೀಯ ಹತ್ತಿ ವ್ಯಾಪಾರಿಗಳ ಮೇಲೆ ಹೆಚ್ಚುವರಿ ಒತ್ತಡವನ್ನು ಬೀರುತ್ತದೆ. ಮಂಗಳವಾರವೇ ಇದರ ಪರಿಣಾಮ ಕಾಣಿಸತೊಡಗಿದೆ. ಭಾರತೀಯ ಜವಳಿ ಮತ್ತು ಸ್ಪಿನ್ನಿಂಗ್ ಷೇರುಗಳು ಒತ್ತಡಕ್ಕೆ ಒಳಗಾಗಿದ್ದು, ರಫ್ತುಕೇಂದ್ರಿತ ಹಲವಾರು ಜವಳಿ ಕಂಪನಿಗಳ ಷೇರುಗಳೂ ಕುಸಿದಿವೆ. ವ್ಯಾಪಾರ ಒಪ್ಪಂದದ ಕುರಿತು ನರೇಂದ್ರ ಮೋದಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಕಾಂಗ್ರೆಸ್, ಬಾಂಗ್ಲಾದೇಶದ ಜವಳಿ ರಫ್ತಿನ ಮೇಲಿನ ಶೂನ್ಯ ಸುಂಕ ಷರತ್ತು ಭಾರತೀಯ ಆರ್ಥಿಕತೆಗೆ ಎರಡು ಪಟ್ಟು ಹೊಡೆತವಾಗಿದೆ ಎಂದು ಟೀಕಿಸಿದೆ. ಈ ವ್ಯಾಪಾರ ಒಪ್ಪಂದವು ಭಾರತದ ಜವಳಿ ಉದ್ಯಮವನ್ನು ದುರ್ಬಲಗೊಳಿಸಿ ಲಕ್ಷಾಂತರ ಜೀವನೋಪಾಯವನ್ನು ಅಪಾಯಕ್ಕೆ ಸಿಲುಕಿಸುತ್ತದೆ ಎಂದು ಕಾಂಗ್ರೆಸ್ ಹೇಳಿದೆ. ಭಾರತಕ್ಕೆ ಹೊಸ ಸವಾಲು ಅಮೆರಿಕ–ಬಾಂಗ್ಲಾದೇಶ ಒಪ್ಪಂದವು ಭಾರತದ ಜವಳಿ ಮತ್ತು ಉಡುಪು ರಫ್ತುದಾರರಿಗೆ ಹೊಸ ಸವಾಲಾಗಲಿದೆ ಎಂದು ಭಾರತೀಯ ಜವಳಿ ಉದ್ಯಮ ಒಕ್ಕೂಟದ (CITI) ಅಧ್ಯಕ್ಷ ಅಶ್ವಿನ್ ಚಂದ್ರನ್ ಹೇಳಿದ್ದಾರೆ ಎಂದು ವರದಿಗಳು ಉಲ್ಲೇಖಿಸಿವೆ. ಮೊದಲನೆಯದಾಗಿ ಭಾರತ ಮತ್ತು ಬಾಂಗ್ಲಾದೇಶದ ನಡುವಿನ ಸುಂಕ ವ್ಯತ್ಯಾಸವು 2%ರಿಂದ 1%ಕ್ಕೆ ಅರ್ಧದಷ್ಟು ಕಡಿಮೆಯಾಗಿದೆ. ಭಾರತಕ್ಕೆ ಅಮೆರಿಕ 18% ಸುಂಕ ವಿಧಿಸಿದೆ. ಇದು ಕಿರಿದಾದ ಲಾಭ ಹೊಂದಿರುವ ವಲಯದಲ್ಲಿ ಕಳವಳಕಾರಿ ವಿಷಯವಾಗಿದೆ. ಎರಡನೆಯದಾಗಿ ಅಮೆರಿಕ–ಬಾಂಗ್ಲಾದೇಶ ಪರಸ್ಪರ ವ್ಯಾಪಾರ ಒಪ್ಪಂದವು ಬಾಂಗ್ಲಾದೇಶಕ್ಕೆ ಭಾರತದ ಹತ್ತಿ ನೂಲು ರಫ್ತಿನ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು ಎಂದು ಚಂದ್ರನ್ ಹೇಳಿದ್ದಾರೆ. ಬಾಂಗ್ಲಾದೇಶವು ಈಗಾಗಲೇ ಚೀನಾ, ವಿಯೆಟ್ನಾಂ ಮತ್ತು ಭಾರತದೊಂದಿಗೆ ಅಮೆರಿಕಕ್ಕೆ ಜವಳಿ ಮತ್ತು ಉಡುಪುಗಳನ್ನು ರಫ್ತು ಮಾಡುವ ಪ್ರಮುಖ ದೇಶಗಳಲ್ಲಿ ಒಂದಾಗಿದೆ. ಬಾಂಗ್ಲಾದೇಶಕ್ಕೆ ಯಾವುದೇ ಹೆಚ್ಚುವರಿ ಪ್ರಯೋಜನವು ಭಾರತೀಯ ರಫ್ತುದಾರರಿಗೆ ಸ್ಪರ್ಧೆಯನ್ನು ಮತ್ತಷ್ಟು ಹೆಚ್ಚಿಸಬಹುದು. ಭಾರತೀಯ ಒಪ್ಪಂದಗಳಿಗೆ ಪ್ರತಿಕ್ರಿಯೆಯಾಗಿ ಢಾಕಾದ ವ್ಯಾಪಾರ ನಡೆಗಳು ಭಾರತವು ಭಾರತೀಯ ಬಟ್ಟೆ ಮತ್ತು ಶೂ ಖರೀದಿಸಲು ಅಗ್ಗವಾಗಿಸುವ ಒಪ್ಪಂದಗಳನ್ನು ಮಾಡಿಕೊಳ್ಳುತ್ತಿರುವುದನ್ನು ಕಂಡ ಬಾಂಗ್ಲಾದೇಶವು ಅಮೆರಿಕದೊಂದಿಗೆ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಲು ಧಾವಿಸಿತು. ಬಾಂಗ್ಲಾದೇಶವು ವಿಶ್ವದ ಎರಡನೇ ಅತಿದೊಡ್ಡ ಬಟ್ಟೆ ಮಾರಾಟಗಾರ ರಾಷ್ಟ್ರವಾಗಿದ್ದು, ತನ್ನ ಆರ್ಥಿಕತೆಯನ್ನು ನಡೆಸಲು ಆ ಹಣವನ್ನು ಅವಲಂಬಿಸಿರುವುದರಿಂದ ಭಾರತವು ತಮ್ಮ ಅಮೆರಿಕನ್ ಗ್ರಾಹಕರನ್ನು ಕಸಿದುಕೊಳ್ಳಲು ಅವರು ಅವಕಾಶ ನೀಡಲಾರರು. ಬಾಂಗ್ಲಾದೇಶವು ಪ್ರಸ್ತುತ ಭಾರತಕ್ಕಿಂತ ಯುರೋಪ್ಗೆ ಹೆಚ್ಚಿನ ಬಟ್ಟೆಗಳನ್ನು ಮಾರಾಟ ಮಾಡುತ್ತದೆ. ಇದಕ್ಕೆ ಕಾರಣ ಬಾಂಗ್ಲಾದೇಶ ತೆರಿಗೆ ಪಾವತಿಸಬೇಕಾಗಿಲ್ಲ. ಆದರೆ ಈಗ ಭಾರತವು ಶೂನ್ಯ ತೆರಿಗೆ ಪಾವತಿಸಲು ಒಪ್ಪಂದಗಳಿಗೆ ಸಹಿ ಹಾಕಿರುವುದರಿಂದ ಬಾಂಗ್ಲಾದೇಶವು ತನ್ನ ಮುನ್ನಡೆಯನ್ನು ಕಳೆದುಕೊಳ್ಳುವ ಭಯದಲ್ಲಿದೆ. ಸ್ಪರ್ಧಾತ್ಮಕವಾಗಿ ಉಳಿಯಲು ಬಾಂಗ್ಲಾದೇಶ ಈಗ ಯುರೋಪಿಯನ್ ಒಕ್ಕೂಟದೊಂದಿಗೆ ಮುಕ್ತ ವ್ಯಾಪಾರ ಒಪ್ಪಂದ (ಎಫ್ಟಿಎ) ಸಹಿ ಹಾಕಲು ಆತುರಪಡುತ್ತಿದೆ. ಈ ಒಪ್ಪಂದ ಮಹತ್ವ ಪಡೆದಿರುವುದೇಕೆ? ಕಳೆದ ಕೆಲವು ತಿಂಗಳುಗಳಿಂದ ಭಾರತ ಮತ್ತು ಢಾಕಾ ನಡುವಿನ ಸಂಬಂಧಗಳು ಹದಗೆಟ್ಟಿರುವ ಹಿನ್ನೆಲೆಯಲ್ಲಿ ಬಾಂಗ್ಲಾದೇಶ ಮತ್ತು ಅಮೆರಿಕ ಸಹಿ ಮಾಡಿದ ವ್ಯಾಪಾರ ಒಪ್ಪಂದ ಮತ್ತಷ್ಟು ಮಹತ್ವ ಪಡೆದುಕೊಂಡಿದೆ. 2020ರಲ್ಲಿ ನೇಪಾಳ, ಭೂತಾನ್ ಮತ್ತು ಇತರ ದೇಶಗಳಿಗೆ ಉತ್ಪನ್ನಗಳನ್ನು ಮಾರಾಟ ಮಾಡಲು ‘ಶಾರ್ಟ್ಕಟ್’ ಆಗಿ ಭಾರತದ ಗಡಿಗಳು, ಬಂದರುಗಳು ಮತ್ತು ವಿಮಾನ ನಿಲ್ದಾಣಗಳನ್ನು ಬಳಸಲು ಭಾರತವು ಬಾಂಗ್ಲಾದೇಶಕ್ಕೆ ಅನುಮತಿಸಿತ್ತು. ಆದರೆ ಇತ್ತೀಚೆಗೆ ಭಾರತ ಈ ಸೌಲಭ್ಯವನ್ನು ನಿಲ್ಲಿಸಿದೆ. ಇದರಿಂದ ಭಾರತೀಯ ಬಂದರುಗಳು ಜನದಟ್ಟಣೆಯಾಗುತ್ತಿದ್ದು, ರಫ್ತುದಾರರಿಗೆ ವಿಳಂಬ ಉಂಟಾಗುತ್ತಿದೆ ಎಂಬ ಕಾರಣ ನೀಡಲಾಗಿದೆ. ಕಳೆದ ವರ್ಷ ಚೀನಾಕ್ಕೆ ಭೇಟಿ ನೀಡಿದ್ದ ಬಾಂಗ್ಲಾದೇಶದ ಮಧ್ಯಂತರ ಸರ್ಕಾರದ ಮುಖ್ಯ ಸಲಹೆಗಾರ, ಆರ್ಥಿಕ ತಜ್ಞ ಹಾಗೂ ನೊಬೆಲ್ ಪ್ರಶಸ್ತಿ ಪುರಸ್ಕೃತ ಮೊಹಮ್ಮದ್ ಯೂನುಸ್, ಭಾರತದ ಈಶಾನ್ಯ ರಾಜ್ಯಗಳಿಗೆ ಸಮುದ್ರದೊಂದಿಗೆ ನೇರ ಸಂಪರ್ಕ ಇಲ್ಲ; ನಾವೇ ಸಮುದ್ರದ ಮೇಲೆ ನಿಯಂತ್ರಣ ಹೊಂದಿದ್ದೇವೆ. ಇದು ವಿಪುಲ ಅವಕಾಶಗಳನ್ನು ಸೃಷ್ಟಿಸಿದೆ. ಚೀನಾ ಈ ಸಮುದ್ರ ಭಾಗವನ್ನು ತನ್ನ ಆರ್ಥಿಕ ಚಟುವಟಿಕೆಗಳ ವಿಸ್ತರಣೆಗೆ ಬಳಸಿಕೊಳ್ಳಬಹುದು ಎಂದು ಹೇಳಿದ್ದರು. ಈ ಹೇಳಿಕೆಗಳು ಭಾರತವನ್ನು ಕೆರಳಿಸಿತ್ತು. ಈಶಾನ್ಯ ರಾಜ್ಯಗಳಾದ ಅಸ್ಸಾಂ, ಅರುಣಾಚಲ ಪ್ರದೇಶ, ಮಣಿಪುರ, ಮೇಘಾಲಯ, ನಾಗಾಲ್ಯಾಂಡ್, ಮಿಜೋರಾಂ, ತ್ರಿಪುರ ಮತ್ತು ಸಿಕ್ಕಿಂಗಳು ಒಟ್ಟಾಗಿ ಬಾಂಗ್ಲಾದೇಶದೊಂದಿಗೆ 1,596 ಕಿಮೀ ಉದ್ದದ ಅಂತರರಾಷ್ಟ್ರೀಯ ಗಡಿಯನ್ನು ಹೊಂದಿವೆ. ಅದೇ ವೇಳೆ ಚೀನಾದೊಂದಿಗೆ 1,395 ಕಿಮೀ, ಮ್ಯಾನ್ಮಾರ್ನೊಂದಿಗೆ 1,640 ಕಿಮೀ, ಭೂತಾನ್ನೊಂದಿಗೆ 455 ಕಿಮೀ ಮತ್ತು ನೇಪಾಳದೊಂದಿಗೆ 97 ಕಿಮೀ ಗಡಿಯನ್ನು ಹೊಂದಿವೆ. ಆದರೆ ‘ಚಿಕನ್ ನೆಕ್’ ಕಾರಿಡಾರ್ ಎಂದು ಕರೆಯಲ್ಪಡುವ 22 ಕಿಮೀ ಭೂಪ್ರದೇಶದ ಮೂಲಕ ಮಾತ್ರ ಭಾರತದ ಉಳಿದ ಭಾಗಗಳೊಂದಿಗೆ ಸಂಪರ್ಕ ಹೊಂದಿವೆ. ಕಳೆದ ಒಂದೂವರೆ ದಶಕದಲ್ಲಿ ಬಾಂಗ್ಲಾದೇಶದ ಮೂಲಕ ಈಶಾನ್ಯಕ್ಕೆ ಮಾರ್ಗಗಳನ್ನು ತೆರೆಯಲು ಭಾರತವು ಢಾಕಾದಲ್ಲಿದ್ದ ಶೇಖ್ ಹಸೀನಾ ಸರ್ಕಾರದೊಂದಿಗೆ ಮಾತುಕತೆ ನಡೆಸಿತ್ತು. ಆದರೆ ಹಸೀನಾ ಅವರನ್ನು ಪದಚ್ಯುತಗೊಳಿಸಿ ಯೂನಸ್ ನೇತೃತ್ವದ ಮಧ್ಯಂತರ ಸರ್ಕಾರ ಬಂದ ನಂತರ ಈ ಯೋಜನೆಗಳು ವಿಫಲವಾದವು.
ರಾಯಚೂರು | ಫೆ.11ರಂದು ಜಿಲ್ಲಾದ್ಯಾಂತ ಲಾರಿ ಮುಷ್ಕರ
ರಾಯಚೂರು: ಕಾನೂನುಬಾಹಿರ ಲೋಡಿಂಗ್–ಅನ್ಲೋಡಿಂಗ್ ವಾರ್ನಿ, ಮಾಮೂಲಿ ಟಪಾಲ್, ವೇ ಬ್ರಿಡ್ಜ್ ಶುಲ್ಕ, ತೂಕದಲ್ಲಿ ಕಡಿತ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ನಾಳೆ (ಫೆ.11) ಜಿಲ್ಲಾದ್ಯಾಂತ ಬೃಹತ್ ಲಾರಿ ಮುಷ್ಕರ ನಡೆಸಲು ಲಾರಿ ಮಾಲೀಕರ ಸಂಘಟನೆಗಳು ಕರೆ ನೀಡಿವೆ. ಲಾರಿ ಮಾಲೀಕರಿಗೆ ಆಗುತ್ತಿರುವ ಅನ್ಯಾಯ ಕುರಿತು ಜ.14 ರಂದು ಮನವಿ ಸಲ್ಲಿಸಲಾಗಿತ್ತು. ನಂತರ ಜ.22 ರಂದು ಮುಷ್ಕರ ನಡೆಸಲು ನಿರ್ಧರಿಸಲಾಗಿದ್ದರೂ, ಜ.20 ರಂದು ಗಂಜ್ ಮರ್ಚೆಂಟ್ಸ್ ಅಸೋಸಿಯೇಷನ್ ಕಾರ್ಯಾಲಯದಲ್ಲಿ ಲಾರಿ ಓನರ್ಸ್ ವೆಲ್ಫೇರ್ ಅಸೋಸಿಯೇಷನ್, ರಾಯಚೂರು ಗೂಡ್ಸ್ ಟ್ರಾನ್ಸ್ಪೋರ್ಟ್ ಅಸೋಸಿಯೇಷನ್, ಕೈಗಾರಿಕೋದ್ಯಮಿಗಳು ಹಾಗೂ ವರ್ತಕರೊಂದಿಗೆ ಚರ್ಚೆ ನಡೆಸಿ ಗಣರಾಜ್ಯೋತ್ಸವ ಹಾಗೂ ರಾಯಚೂರು ಉತ್ಸವ ಹಿನ್ನೆಲೆಯಲ್ಲಿ ಮುಷ್ಕರ ಮುಂದೂಡಲಾಗಿತ್ತು. ಆದರೆ ಇಷ್ಟರವರೆಗೆ ಯಾವುದೇ ಸಮಸ್ಯೆ ಪರಿಹಾರವಾಗದ ಹಿನ್ನೆಲೆಯಲ್ಲಿ ಫೆ.11ರಂದು ನಗರದಲ್ಲಿ ಲೋಡಿಂಗ್–ಅನ್ಲೋಡಿಂಗ್ ಸಂಪೂರ್ಣ ಬಂದ್ ಮಾಡಿ ಜಿಲ್ಲಾದ್ಯಾಂತ ಲಾರಿ ಮುಷ್ಕರ ಹಮ್ಮಿಕೊಳ್ಳಲಾಗುವುದು ಎಂದು ಲಾರಿ ಓನರ್ಸ್ ವೆಲ್ಫೇರ್ ಅಸೋಸಿಯೇಷನ್ ಅಧ್ಯಕ್ಷ ಸೈಯದ್ ಹಸನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಲಾರಿ ಓನರ್ಸ್ ವೆಲ್ಫೇರ್ ಅಸೋಸಿಯೇಷನ್ ಗೌರವಾಧ್ಯಕ್ಷ ನಾಗರಾಜ ಬಾಲಚೇಡ, ಉಪಾಧ್ಯಕ್ಷರು ಅಜೀಂ ಪಾಷಾ ಹಾಗೂ ಮಹ್ಮದ್ ಎಜಾಜುದ್ದೀನ್, ಕಾರ್ಯಾಧ್ಯಕ್ಷರು ಮಹ್ಮದ್ ರೈಯಸ್ ಮತ್ತು ತಫೀಕ್ ಹುಸೇನಿ, ಜಂಟಿ ಕಾರ್ಯದರ್ಶಿ ಮಹ್ಮದ್ ಖತ್ತುಬುದ್ದೀನ್, ಖಜಾಂಚಿ ಸೈಯದ್ ಶರೀಫ್, ನಿರ್ದೇಶಕರು ಸೈಯದ್ ಯೂನಿಸ್ ಸಲೀಂ ಸೇರಿದಂತೆ ಪದಾಧಿಕಾರಿಗಳು ಈ ಕುರಿತು ಮಾಹಿತಿ ನೀಡಿದ್ದಾರೆ. ಅದೇ ರೀತಿ ರಾಯಚೂರು ಗೂಡ್ಸ್ ಟ್ರಾನ್ಸ್ಪೋರ್ಟ್ ಅಸೋಸಿಯೇಷನ್ ಅಧ್ಯಕ್ಷ ಶಿವಶರಣಪ್ಪ, ಉಪಾಧ್ಯಕ್ಷರು ಹೆಚ್.ಎಂ. ಶೇಖರ್ ಹಾಗೂ ಆರ್. ಚಂದ್ರಶೇಖರ್, ಕಾರ್ಯದರ್ಶಿ ಎಂ.ಡಿ. ಎಕ್ಸಾಲ್, ಸಹ ಕಾರ್ಯದರ್ಶಿ ಸತ್ಯರೆಡ್ಡಿ, ಖಜಾಂಚಿ ಮಹ್ಮದ್ ಜಾವೀದ್ ಹುಸೇನ್ ಸೇರಿದಂತೆ ಸಂಘದ ಪದಾಧಿಕಾರಿಗಳು ಮುಷ್ಕರಕ್ಕೆ ಬೆಂಬಲ ಸೂಚಿಸಿದ್ದಾರೆ.
ಅದಾನಿ ಮಾನನಷ್ಟ ಮೊಕದ್ದಮೆ: ಪತ್ರಕರ್ತ ರವಿ ನಾಯರ್ ಗೆ ಒಂದು ವರ್ಷ ಜೈಲು ಶಿಕ್ಷೆ
ಗಾಂಧಿನಗರ, ಫೆ. 10: ಕ್ರಿಮಿನಲ್ ಮಾನನಷ್ಟ ಪ್ರಕರಣದಲ್ಲಿ ಪತ್ರಕರ್ತ ರವಿ ನಾಯರ್ ಅವರನ್ನು ದೋಷಿ ಎಂದು ಘೋಷಿಸಿರುವ ಗಾಂಧಿನಗರ ಜಿಲ್ಲೆಯ ಮಾನ್ಸಾ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಅವರಿಗೆ ಒಂದು ವರ್ಷದ ಕಾರಾಗೃಹ ಶಿಕ್ಷೆ ಹಾಗೂ ದಂಡ ವಿಧಿಸಿದೆ. ಅದಾನಿ ಗ್ರೂಪ್ ನ ಪ್ರಮುಖ ಕಂಪೆನಿಯಾದ ಅದಾನಿ ಎಂಟರ್ಪ್ರೈಸಸ್ ಲಿಮಿಟೆಡ್ ಸಲ್ಲಿಸಿದ್ದ ದೂರಿನ ಮೇರೆಗೆ ಈ ಪ್ರಕರಣ ವಿಚಾರಣೆಗೆ ಬಂದಿತ್ತು. ಕಂಪೆನಿ ಹಾಗೂ ಅದಾನಿ ಗ್ರೂಪ್ ನ ಖ್ಯಾತಿಗೆ ಧಕ್ಕೆ ಉಂಟುಮಾಡುವ ಉದ್ದೇಶದಿಂದ ಸುಳ್ಳು ಹಾಗೂ ಮಾನನಷ್ಟ ಹೇಳಿಕೆಗಳನ್ನು ಒಳಗೊಂಡ ಹಲವು ಟ್ವೀಟ್ ಗಳನ್ನು ರವಿ ನಾಯರ್ ಪ್ರಕಟಿಸಿದ್ದಾರೆ ಎಂದು ದೂರು ಸಲ್ಲಿಸಲಾಗಿತ್ತು. ಈ ಟ್ವೀಟ್ಗಳು ಸಾರ್ವಜನಿಕರು ಹಾಗೂ ಹೂಡಿಕೆದಾರರ ದೃಷ್ಟಿಯಲ್ಲಿ ಕಂಪೆನಿಯ ವಿಶ್ವಾಸಾರ್ಹತೆಯನ್ನು ಹಾಳುಮಾಡುವ ಉದ್ದೇಶದಿಂದ ಮಾಡಲಾಗಿದೆ ಎಂದು ದೂರಿದಾರರ ಪರ ವಕೀಲರು ವಾದ ಮಂಡಿಸಿದ್ದರು. ಪೂರ್ಣ ವಿಚಾರಣೆಯ ಬಳಿಕ ಆರೋಪಗಳನ್ನು ದೂರುದಾರರು ಸಮರ್ಪಕವಾಗಿ ಸಾಬೀತುಪಡಿಸಿದ್ದಾರೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತು. ಅದರಂತೆ ರವಿ ನಾಯರ್ ಅವರನ್ನು ಕ್ರಿಮಿನಲ್ ಮಾನನಷ್ಟ ಆರೋಪದಲ್ಲಿ ತಪ್ಪಿತಸ್ಥರೆಂದು ಘೋಷಿಸಿ, ಒಂದು ವರ್ಷದ ಜೈಲು ಶಿಕ್ಷೆ ಹಾಗೂ ದಂಡ ವಿಧಿಸುವಂತೆ ತೀರ್ಪು ನೀಡಿತು.
ದುಬೈನಲ್ಲಿ ‘ತುಂಬೆ ಮೆಡಿಸಿಟಿ’ ಉದ್ಘಾಟನೆ| 3 ಸಾವಿರ ವಿದ್ಯಾರ್ಥಿಗಳಿಗೆ ಅವಕಾಶ, 1 ಸಾವಿರ ಉದ್ಯೋಗ ಸೃಷ್ಟಿ
ದುಬೈ: ಶಿಕ್ಷಣ, ಆರೋಗ್ಯ ರಕ್ಷಣೆ ಮತ್ತು ಸಂಶೋಧನೆಯನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸುವ ಉದ್ದೇಶದಿಂದ ‘ತುಂಬೆ ಮೆಡಿಸಿಟಿ ದುಬೈ’ ಯೋಜನೆಯನ್ನು ತುಂಬೆ ಗ್ರೂಪ್, ಅಲ್ ಕುಸೈಸ್ ಪ್ರದೇಶದಲ್ಲಿ ಆರಂಭಿಸಿದೆ. ಸಮಗ್ರ ಶೈಕ್ಷಣಿಕ ಮತ್ತು ಆರೋಗ್ಯ ನಗರವಾಗಿ ರೂಪುಗೊಂಡಿರುವ ಈ ತಾಣವು ಪ್ರಾರಂಭಿಕ ಹಂತದಲ್ಲೇ ಸುಮಾರು 3,000 ವಿದ್ಯಾರ್ಥಿಗಳಿಗೆ ಅವಕಾಶ, 1,000 ಉದ್ಯೋಗ ಸೃಷ್ಟಿ ಹಾಗೂ 6,000 ಜನರ ವಾಸ್ತವ್ಯ ಸಾಮರ್ಥ್ಯ ಹೊಂದಿರುವುದು ವಿಶೇಷ. ನಗರದೊಳಗಿನ ನಗರ ಪರಿಕಲ್ಪನೆಯಲ್ಲಿ ನಿರ್ಮಿಸಲಾದ ಈ ಮೆಡಿಸಿಟಿಯಲ್ಲಿ ಗಲ್ಫ್ ಮೆಡಿಕಲ್ ಯುನಿವರ್ಸಿಟಿಯ ಕ್ಯಾಂಪಸ್, ತುಂಬೆ ಯೂನಿವರ್ಸಿಟಿ ಹಾಸ್ಪಿಟಲ್ ದುಬೈ, ಸುಧಾರಿತ ಸಂಶೋಧನಾ ಕೇಂದ್ರಗಳು, ಸಿಮ್ಯುಲೇಶನ್ ಹಾಗೂ ಸ್ಕಿಲ್ ಸೆಂಟರ್ ಗಳು, ಪ್ರಯೋಗಾಲಯಗಳು, ಔಷಧಾಲಯಗಳು, ಕ್ಷೇಮ ಕೇಂದ್ರಗಳು ಮತ್ತು ಆತಿಥ್ಯ ಸೌಲಭ್ಯಗಳು ಒಳಗೊಂಡಿದೆ. ವಿದ್ಯಾರ್ಥಿಗಳಿಗೆ ನೈಜ ಕ್ಲಿನಿಕಲ್ ವಾತಾವರಣದಲ್ಲಿ ತರಬೇತಿ ಸಿಗುವಂತೆ ಹಾಗೂ ರೋಗಿಗಳಿಗೆ ಸಂಶೋಧನೆ ಆಧಾರಿತ ಚಿಕಿತ್ಸೆ ದೊರಕುವಂತೆ ಮೂಲಸೌಕರ್ಯ ರೂಪಿಸಲಾಗಿದೆ. ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ತುಂಬೆ ಗ್ರೂಪ್ ಸಂಸ್ಥಾಪಕ ಅಧ್ಯಕ್ಷ ಡಾ. ತುಂಬೆ ಮೊಯ್ದೀನ್, “ಇದು ಕೇವಲ ವಿಸ್ತರಣೆ ಅಲ್ಲ; ಶಿಕ್ಷಣ, ಆರೋಗ್ಯ ಮತ್ತು ಸಂಶೋಧನೆ ಒಂದಾಗಿ ಬೆಳೆಯಬೇಕೆಂಬ ನಂಬಿಕೆಯ ಪ್ರತಿಫಲ. ದುಬೈನ ದೂರದೃಷ್ಟಿಯೊಂದಿಗೆ ನಿರ್ಮಿತವಾದ ಈ ಸಮಗ್ರ ಶೈಕ್ಷಣಿಕ ವೈದ್ಯಕೀಯ ನಗರ ಭವಿಷ್ಯದ ವೃತ್ತಿಪರರನ್ನು ರೂಪಿಸುವ ಜೊತೆಗೆ ರೋಗಿಗಳ ಆರೈಕೆಯ ಗುಣಮಟ್ಟ ಹೆಚ್ಚಿಸಲಿದೆ” ಎಂದರು. ಶೈಕ್ಷಣಿಕ ವಿಭಾಗದಲ್ಲಿ ಗಲ್ಫ್ ಮೆಡಿಕಲ್ ಯುನಿವರ್ಸಿಟಿ ದುಬೈ ಕ್ಯಾಂಪಸ್ ಕಾರ್ಯನಿರ್ವಹಿಸಲಿದ್ದು, ಆರೋಗ್ಯ ರಕ್ಷಣೆಯಲ್ಲಿ ಕೃತಕ ಬುದ್ಧಿಮತ್ತೆ (AI) ಆಧಾರಿತ ಅಧ್ಯಯನ, ಸುಧಾರಿತ ಸಿಮ್ಯುಲೇಶನ್ ಲ್ಯಾಬ್ಗಳು, ಶಸ್ತ್ರಚಿಕಿತ್ಸಾ ಕೌಶಲ್ಯ ಕೇಂದ್ರಗಳು ಹಾಗೂ ಅಂತರರಾಷ್ಟ್ರೀಯ ಪ್ರಮಾಣಿತ ಪಠ್ಯಕ್ರಮಗಳನ್ನು ಒಳಗೊಂಡಿದೆ. ಗಲ್ಫ್ ಮೆಡಿಕಲ್ ಯುನಿವರ್ಸಿಟಿಯ ಕುಲಪತಿ ಪ್ರೊ. ಮಂದಾ ವೆಂಕಟ್ರಮಣ ಅವರು ಮಾತನಾಡಿ, “ವಿದ್ಯಾರ್ಥಿಗಳಿಗೆ ಜಾಗತಿಕ ಮಟ್ಟದ ಶಿಕ್ಷಣ ವಾತಾವರಣ ಕಲ್ಪಿಸುವ ದಿಕ್ಕಿನಲ್ಲಿ ಇದು ಮಹತ್ವದ ಹೆಜ್ಜೆ” ಎಂದರು. ಆರೋಗ್ಯ ರಕ್ಷಣಾ ವಿಭಾಗವು ತುಂಬೆ ಯೂನಿವರ್ಸಿಟಿ ಹಾಸ್ಪಿಟಲ್ ದುಬೈ ಸುತ್ತ ಕೇಂದ್ರೀಕೃತವಾಗಿದ್ದು, ಪ್ರಥಮ ಹಂತದಲ್ಲಿ ಡಯಾಲಿಸಿಸ್, ಹೃದ್ರೋಗ, ಮೂಳೆಚಿಕಿತ್ಸೆ ಮತ್ತು ಪುನರ್ವಸತಿ ಸೇವೆಗಳು ಆರಂಭಗೊಳ್ಳಲಿವೆ. ಮುಂದಿನ ಹಂತಗಳಲ್ಲಿ ಬಹು–ವಿಶೇಷ ಶೈಕ್ಷಣಿಕ ಆಸ್ಪತ್ರೆಯಾಗಿ ವಿಸ್ತರಣೆಗೊಳ್ಳುವ ಯೋಜನೆ ಹೊಂದಿದೆ. ದುಬೈ–ಶಾರ್ಜಾ ಗಡಿಭಾಗದ ಅಲ್ ಕುಸೈಸ್ ಪ್ರದೇಶದಲ್ಲಿರುವ ಈ ಮೆಡಿಸಿಟಿ, ಪ್ರಮುಖ ಪ್ರದೇಶಗಳಿಗೆ ಸುಲಭ ಸಂಪರ್ಕ ಮತ್ತು ಅಂತರರಾಷ್ಟ್ರೀಯ ಪ್ರಯಾಣ ಸೌಲಭ್ಯವನ್ನು ಒದಗಿಸುತ್ತದೆ ಎಂದು ಪ್ರಕಟನೆ ತಿಳಿಸಿದೆ.
ಸದೃಢ ರಾಷ್ಟ್ರ ನಿರ್ಮಾಣಕ್ಕೆ ಆರೋಗ್ಯ ಕ್ಷೇತ್ರಕ್ಕೆ ಆದ್ಯತೆ ನೀಡಬೇಕು : ಡಾ.ಶರಣಪ್ರಕಾಶ್ ಪಾಟೀಲ್
‘ದುಬೈ ಅಂತರ್ರಾಷ್ಟ್ರೀಯ ಪ್ರದರ್ಶನದಲ್ಲಿ ಕರ್ನಾಟಕದ ಆರೋಗ್ಯ ರಕ್ಷಣಾ ಪ್ರಗತಿ ಪ್ರಸ್ತಾವ’
ಬೆಂಗಳೂರು : ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ವ್ಯಾಪ್ತಿಯ ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಕೆಲ ವಾರ್ಡ್ಗಳ ಕೆಲ ಪ್ರದೇಶಗಳನ್ನು ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ವಾರ್ಡ್ಗಳ ಪ್ರದೇಶಗಳಿಗೆ ಸೇರಿಸಿರುವುದನ್ನು ಆಕ್ಷೇಪಿಸಿ ಹೈಕೋರ್ಟ್ಗೆ ರಿಟ್ ಅರ್ಜಿ ಸಲ್ಲಿಕೆಯಾಗಿದೆ. ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಎಂ. ಕೃಷ್ಣಪ್ಪ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು. ಕೆಲ ಕಾಲ ಅರ್ಜಿ ಆಲಿಸಿದ ನ್ಯಾಯಪೀಠ, ಪ್ರತಿವಾದಿಗಳಾದ ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಜಿಬಿಎ ಮುಖ್ಯ ಆಯುಕ್ತರು, ಬೆಂಗಳೂರು ದಕ್ಷಿಣ ನಗರ ಪಾಲಿಕೆ ಆಯುಕ್ತರು, ವಾರ್ಡ್ ಮರು ವಿಂಗಡಣೆ ಸಮಿತಿ ಮುಖ್ಯಸ್ಥರು, ರಾಜ್ಯ ಚುನಾವಣಾ ಆಯುಕ್ತರು ಹಾಗೂ ಮುಖ್ಯ ಚುನಾವಣಾಧಿಕಾರಿಗೆ ನೋಟಿಸ್ ಜಾರಿಗೊಳಿಸಿತು. ಜತೆಗೆ, ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ವಾರ್ಡ್ಗಳ ಕೆಲ ಪ್ರದೇಶಗಳನ್ನು ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ವಾರ್ಡ್ಗಳಿಗೆ ಸೇರಿಸಲಾಗಿದೆಯೇ ಎಂಬ ಬಗ್ಗೆ ಸ್ಪಷ್ಟನೆ ನೀಡುವಂತೆ ಸರ್ಕಾರದ ವಕೀಲರಿಗೆ ನಿರ್ದೇಶಿಸಿ, ವಿಚಾರಣೆಯನ್ನು ಫೆಬ್ರವರಿ 18ಕ್ಕೆ ಮುಂದೂಡಿತು. ಅರ್ಜಿದಾರರ ಆಕ್ಷೇಪವೇನು? ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಎಳ್ಳೇನಹಳ್ಳಿ ವಾರ್ಡ್ನ ಅಕ್ಷಯನಗರ ಹಾಗೂ ಅದರ ಸುತ್ತಲಿನ ಪ್ರದೇಶಗಳು ಹಾಗೂ ಕೊತ್ತನೂರು ವಾರ್ಡ್ನ ಕ್ಲಾಸಿಕ್ ಆರ್ಕಿರ್ಡ್ ಪ್ರದೇಶವನ್ನು ಕ್ರಮವಾಗಿ ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ವಿಜಯಾ ಬ್ಯಾಂಕ್ ಲೇಔಟ್ ವಾರ್ಡ್ ಮತ್ತು ದೊರೆಸಾನಿ ಪಾಳ್ಯ ವಾರ್ಡ್ಗೆ ಸೇರಿಸಿರುವುದನ್ನು ಅರ್ಜಿಯಲ್ಲಿ ಆಕ್ಷೇಪಿಸಲಾಗಿದೆ. ಒಂದು ವಾರ್ಡ್ ಅನ್ನು ಎರಡು ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಗೆ ಸೇರಿಸುವುದು ಜಿಬಿಎ ಕಾಯ್ದೆ ಮತ್ತು ವಾರ್ಡ್ ಮರುವಿಂಗಡಣೆ ಮಾರ್ಗಸೂಚಿಗಳಿಗೆ ವಿರುದ್ಧವಾಗಿದೆ. ಆದ್ದರಿಂದ, ಈ ಸಂಬಂಧ ಹೊರಡಿಸಲಾಗಿರುವ ಅಧಿಸೂಚನೆ ರದ್ದುಪಡಿಸಬೇಕು. ಬೊಮ್ಮನಳ್ಳಿ ವಿಧಾನಸಭಾ ಕ್ಷೇತ್ರದ ವಾರ್ಡ್ಗಳಿಗೆ ಸೇರಿಸಿರುವ ಪ್ರದೇಶಗಳನ್ನು ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ವಾರ್ಡ್ಗಳಿಗೆ ಮರು ಸೇರ್ಪಡೆಗೊಳಿಸಲು ಸೂಚಿಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.
ವಿಜಯನಗರ | ಫೆ.12ರಂದು ಕೊಟ್ಟೂರು ಜಾತ್ರೆ: ಮದ್ಯ ಮಾರಾಟ ನಿಷೇಧ
ವಿಜಯನಗರ (ಹೊಸಪೇಟೆ) : ಜಿಲ್ಲೆಯ ಕೊಟ್ಟೂರು ತಾಲ್ಲೂಕಿನಲ್ಲಿ ಫೆ.12ರಂದು ನಡೆಯಲಿರುವ ಕೊಟ್ಟೂರು ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಮದ್ಯ ಮಾರಾಟಕ್ಕೆ ತಾತ್ಕಾಲಿಕ ನಿಷೇಧ ಹೇರಲಾಗಿದೆ. ಕೊಟ್ಟೂರು ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಫೆ.11ರ ಸಂಜೆ 6 ಗಂಟೆಯಿಂದ ಫೆ.13ರ ಸಂಜೆ 6 ಗಂಟೆಯವರೆಗೆ ಮದ್ಯದಂಗಡಿಗಳು, ಬಾರ್ ಅಂಡ್ ರೆಸ್ಟೊರೆಂಟ್ಗಳು ಹಾಗೂ ಇತರೆ ಮದ್ಯ ಮಾರಾಟ ಕೇಂದ್ರಗಳಲ್ಲಿ ಮದ್ಯ ಮಾರಾಟ ಮತ್ತು ಸಾಗಣೆ ನಿಷೇಧಿಸಲಾಗಿದ್ದು, ಈ ಅವಧಿಯಲ್ಲಿ ಎಲ್ಲಾ ಮದ್ಯದಂಗಡಿಗಳನ್ನು ಮುಚ್ಚುವಂತೆ ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ ಆದೇಶಿಸಿದ್ದಾರೆ. ಜಾತ್ರೆ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಈ ಆದೇಶ ಜಾರಿಗೊಳಿಸಲಾಗಿದೆ ಎಂದು ತಿಳಿಸಲಾಗಿದೆ.
ಪೋಷಕರ ಅನಕ್ಷರತೆ ಬಾಲ್ಯ ವಿವಾಹ ಪ್ರಕರಣ ರದ್ದತಿಗೆ ಆಧಾರವಾಗದು : ಹೈಕೋರ್ಟ್
ಬೆಂಗಳೂರು : ಬಾಲ್ಯ ವಿವಾಹ ನೆರವೇರಿಸಿದ ಆರೋಪದಲ್ಲಿ ಪೋಷಕರ ವಿರುದ್ಧ ದಾಖಲಾಗಿರುವ ಪ್ರಕರಣ ರದ್ದುಪಡಿಸಲು ಅನಕ್ಷರತೆ ಆಧಾರವಾಗುವುದಿಲ್ಲ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ. ಅಪ್ರಾಪ್ತ ಬಾಲಕಿಗೆ ಮದುವೆ ಮಾಡಿಸಿದ ಹಿನ್ನೆಲೆಯಲ್ಲಿ ಪೋಕ್ಸೋ ಕಾಯ್ದೆ ಮತ್ತು ಬಾಲ್ಯ ವಿವಾಹ ತಡೆ ಕಾಯ್ದೆಯಡಿ ಗೌರಿಬಿದನೂರು ಗ್ರಾಮಾಂತರ ಠಾಣೆ ಪೊಲೀಸರು ದಾಖಲಿಸಿರುವ ಎಫ್ಐಆರ್ ರದ್ದು ಕೋರಿ ಅಶೋಕ (56), ಅಶ್ವತ್ಥ ನಾರಾಯಣ (55), ರಂಗಮ್ಮ (49) ರಾಮಾಂಜಿನಮ್ಮ (48) ಮತ್ತು ಶ್ರೀರಾಮಪ್ಪ (56) ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ವಿಚಾರಣೆ ನಡೆಸಿತು. ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಅರ್ಜಿದಾರರು ವಿವಾಹವಾಗಿರುವ ದಂಪತಿಯ ಪೋಷಕರಾಗಿದ್ದಾರೆ. ಮದುವೆ ನಡೆದಾಗ ಯುವತಿಗೆ 16 ವರ್ಷ, 9 ತಿಂಗಳಾಗಿತ್ತು. ಗಂಡು-ಹೆಣ್ಣು ಪರಸ್ಪರ ಪ್ರೀತಿಸುತ್ತಿದ್ದರು. ಅದಕ್ಕಾಗಿ ಮದುವೆ ಮಾಡಲಾಗಿದೆ. ದಂಪತಿಗೆ ಮಗು ಜನಿಸಿದೆ. ಅರ್ಜಿದಾರರು ಅನಕ್ಷರಸ್ಥರಾಗಿದ್ದು, ತಿಳಿವಳಿಕೆಯಿಲ್ಲದೆ ಅವರು ಬಾಲ್ಯ ವಿವಾಹ ನೆರವೇರಿಸಿದ್ದಾರೆ. ಆದ್ದರಿಂದ, ಅರ್ಜಿದಾರರ ವಿರುದ್ಧದ ಪ್ರಕರಣ ರದ್ದುಪಡಿಸಬೇಕು ಎಂದು ಕೋರಿದರು. ಇದನ್ನು ಒಪ್ಪದ ನ್ಯಾಯಪೀಠ, ಅನಕ್ಷರತೆ ಬಾಲ್ಯ ವಿವಾಹ ಪ್ರಕರಣ ರದ್ದುಪಡಿಸಲು ಆಧಾರವಾಗುವುದಿಲ್ಲ. ಯಾವುದೇ ಕಾರಣಕ್ಕೂ ಬಾಲ್ಯ ವಿವಾಹ ನೆರವೇರಿಸಿದ ಪೋಷಕರ ವಿರುದ್ಧ ಕ್ರಿಮಿನಲ್ ಪ್ರಕರಣವನ್ನು ರದ್ದುಪಡಿಸಲು ಸಾಧ್ಯವಿಲ್ಲ. ಅವರು ಪ್ರಕರಣವನ್ನು ಎದುರಿಸಲೇಬೇಕು. ಪೋಷಕರಿಗೆ ಕರುಣೆ ತೋರುವ ಪ್ರಶ್ನೆಯೇ ಇಲ್ಲ ಎಂದು ತೀಕ್ಷ್ಣವಾಗಿ ನುಡಿಯಿತು. ಬಾಲ್ಯ ವಿವಾಹ ಪದ್ಧತಿ ನಿಲ್ಲಬೇಕಿದೆ. ಎಲ್ಲರಿಗೂ ಎಚ್ಚರಿಕೆ ಮೂಡಬೇಕಾದರೆ ಬಾಲ್ಯ ವಿವಾಹ ನೆರವೇರಿಸಿದ ಪೋಷಕರ ವಿರುದ್ಧದ ಕ್ರಿಮಿನಲ್ ಪ್ರಕರಣವನ್ನು ರದ್ದುಪಡಿಸಬಾರದು. ಪೋಷಕರು ಏನೆಂದು ತಿಳಿದುಕೊಂಡಿದ್ದಾರೆ? ಅವರು ಏಕೆ ಬಾಲ್ಯ ವಿವಾಹ ಮಾಡಬೇಕು? ಪೋಷಕರು ಎಚ್ಚೆತ್ತುಕೊಳ್ಳುವುದು ಯಾವಾಗ ಎಂದು ನ್ಯಾಯಪೀಠ ಪ್ರಶ್ನಿಸಿತು. ಮುಂದುವರಿದು, ಮದುವೆಯಾಗಿರುವ ಯುವತಿಗೆ ಮಗುವಿದೆ. ಈ ಅಂಶ ಪರಿಗಣಿಸಿ ಪೋಕ್ಸೋ ಕಾಯ್ದೆ ರದ್ದುಪಡಿಸಬಹುದು. ಆದರೆ, ಪೋಷಕರ ವಿರುದ್ಧದ ಬಾಲ್ಯ ವಿವಾಹ ಪ್ರಕರಣ ಮುಂದುವರಿಯಬೇಕು. ಈ ವಿಚಾರದಲ್ಲಿ ದಯೆ ತೋರುವ ಅಗತ್ಯವಿಲ್ಲ ಎಂದ ನ್ಯಾಯಪೀಠ, ಅರ್ಜಿ ಕುರಿತ ತೀರ್ಪು ಕಾಯ್ದಿರಿಸಿತು. ಪ್ರಕರಣದ ಹಿನ್ನೆಲೆ: ಗೌರಿಬಿದನೂರು ಗ್ರಾಮಾಂತರ ಠಾಣೆ ಪೊಲೀಸರು, ಅರ್ಜಿದಾರರ ವಿರುದ್ಧದ ಬಾಲ್ಯ ವಿವಾಹ ಪ್ರಕರಣ ಸಂಬಂಧ 2023ರಲ್ಲಿ ಎಫ್ಐಆರ್ ದಾಖಲಿಸಿದ್ದರು. ಪ್ರಕರಣವು ಚಿಕ್ಕಬಳ್ಳಾಪುರದ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ (ಎಫ್ಟಿಎಸ್ಸಿ-1) ಕೋರ್ಟ್ನಲ್ಲಿ ವಿಚಾರಣೆ ಹಂತದಲ್ಲಿದೆ. ಇದರಿಂದ, ತಮ್ಮ ವಿರುದ್ದದ ಪ್ರಕರಣ ಮತ್ತದಕ್ಕೆ ಸಂಬಂಧಿಸಿದ ವಿಚಾರಣಾ ನ್ಯಾಯಾಲಯದ ಇಡೀ ವಿಚಾರಣಾ ಪ್ರಕ್ರಿಯೆ ರದ್ದುಪಡಿಸಬೇಕು ಎಂದು ಕೋರಿ ಅರ್ಜಿದಾರರು ಹೈಕೋರ್ಟ್ ಮೊರೆ ಹೋಗಿದ್ದರು.
ವಿಜಯನಗರ | ಜಿಲ್ಲೆಯಲ್ಲಿ 4.83 ಲಕ್ಷ ಮಕ್ಕಳಿಗೆ ಜಂತುಹುಳು ನಿವಾರಣೆ ಮಾತ್ರೆ ನೀಡುವ ಗುರಿ : ಡಾ. ಶಂಕರ್ ನಾಯ್ಕ್
ವಿಜಯನಗರ (ಹೊಸಪೇಟೆ) : ಜಿಲ್ಲೆಯಲ್ಲಿ 0-5 ವರ್ಷದ 1,36,787 ಮಕ್ಕಳು ಹಾಗೂ 6ರಿಂದ 19 ವರ್ಷದ 3,46,989 ಮಕ್ಕಳು ಸೇರಿ ಒಟ್ಟು 4,83,776 ಮಕ್ಕಳಿಗೆ ಜಂತುಹುಳು ನಿವಾರಣೆ ಮಾತ್ರೆ ನೀಡುವ ಗುರಿ ಹೊಂದಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಶಂಕರ್ ನಾಯ್ಕ್ ತಿಳಿಸಿದ್ದಾರೆ. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಮಂಗಳವಾರ ನಗರದ ಚಿತ್ತವಾಡಗಿ ಸರ್ಕಾರಿ ಪದವಿ ಪೂರ್ವ ಕಾಲೇಜು (ಪ್ರೌಢ ಶಾಲಾ ವಿಭಾಗ)ದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಜಂತುಹುಳು ನಿವಾರಣಾ ದಿನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಪ್ರತಿವರ್ಷ ಫೆ.10ರಂದು ರಾಜ್ಯಾದ್ಯಂತ ಜಂತುಹುಳು ನಿವಾರಣಾ ದಿನ ಆಚರಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯ ಎಲ್ಲಾ ಶಾಲೆಗಳು, ಕಾಲೇಜುಗಳು ಹಾಗೂ ಅಂಗನವಾಡಿಗಳಲ್ಲಿ ಮಕ್ಕಳಿಗೆ ಉಚಿತವಾಗಿ ಜಂತುಹುಳು ನಿವಾರಣಾ ಮಾತ್ರೆ ವಿತರಿಸಲಾಗುತ್ತಿದೆ. ಕಾರ್ಯಕ್ರಮದಿಂದ ಹೊರಗುಳಿದ ಮಕ್ಕಳಿಗೆ ಫೆ.16ರಂದು ‘ಮಾಪ್-ಅಪ್ ದಿನ’ದಂದು ಮಾತ್ರೆ ನೀಡಲಾಗುವುದು ಎಂದು ತಿಳಿಸಿದರು. ಈ ಮಾತ್ರೆ ನುಂಗುವದು ಅಲ್ಲ, ಚೀಪುವ ಮಾತ್ರೆಯಾಗಿದ್ದು, ಇದರಿಂದ ಮಕ್ಕಳಲ್ಲಿ ರೋಗನಿರೋಧಕ ಶಕ್ತಿ ಹೆಚ್ಚುವುದಲ್ಲದೇ ದೈಹಿಕ ಹಾಗೂ ಮಾನಸಿಕ ಸಾಮರ್ಥ್ಯ ವೃದ್ಧಿಯಾಗುತ್ತದೆ. ಏಕಾಗ್ರತೆ ಹೆಚ್ಚಲು ಸಹಕಾರಿಯಾಗುತ್ತದೆ ಎಂದು ಹೇಳಿದರು. 6ರಿಂದ 19 ವರ್ಷದೊಳಗಿನ ಎಲ್ಲಾ ಮಕ್ಕಳು ಈ ಮಾತ್ರೆ ಸೇವಿಸಬೇಕು ಎಂದು ಮನವಿ ಮಾಡಿ, ಜಿಲ್ಲೆಯನ್ನು ಜಂತುಹುಳು ಮುಕ್ತ ಜಿಲ್ಲೆಯಾಗಿಸುವ ಸಂಕಲ್ಪ ವ್ಯಕ್ತಪಡಿಸಿದರು. ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಆರ್ಸಿಹೆಚ್ ಅಧಿಕಾರಿ ಡಾ.ಜಂಬಯ್ಯ, ಪ್ರತಿ ಆರು ತಿಂಗಳಿಗೊಮ್ಮೆ ಈ ನಿವಾರಣಾ ಮಾತ್ರೆ ನೀಡಲಾಗುತ್ತದೆ. 1ರಿಂದ 19 ವರ್ಷದೊಳಗಿನ ಎಲ್ಲಾ ಮಕ್ಕಳಿಗೂ ಉಚಿತವಾಗಿ ವಿತರಿಸಲಾಗುತ್ತದೆ. ಇದರಿಂದ ರಕ್ತಹೀನತೆ ಕಡಿಮೆಯಾಗುವುದಲ್ಲದೇ ಬೌದ್ಧಿಕ ಹಾಗೂ ದೈಹಿಕ ಸಾಮರ್ಥ್ಯ ವೃದ್ಧಿಸುತ್ತದೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಟಿಹೆಚ್ಓ ಡಾ.ವಿನೋದ್, ಜಿಲ್ಲಾ ಮಕ್ಕಳ ಕುಟುಂಬ ಕಲ್ಯಾಣಾಧಿಕಾರಿ ಸಿಂಧು ಅಂಗಡಿ, ಆರೋಗ್ಯ ನಿರೀಕ್ಷಣಾಧಿಕಾರಿ ಡಾ.ಧರ್ಮನಗೌಡ, ಡಿಡಿಪಿಯು ನಾಗರಾಜ್ ಹವಾಲ್ದಾರ್, ಡಿಡಿಪಿಐ ವೆಂಕಟೇಶ್ ರಾಮಚಂದ್ರಪ್ಪ, ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಬಿ.ವಿ. ಶ್ರೀಧರ್ ಸೇರಿದಂತೆ ಆರೋಗ್ಯ ಇಲಾಖೆ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು ಹಾಗೂ ಇತರರು ಉಪಸ್ಥಿತರಿದ್ದರು.
BESCOMಗೆ ಕೇಂದ್ರದಿಂದ 'ರೆಡ್ ಕಾರ್ಡ್': ವಿದ್ಯುತ್ ವಿತರಣೆ ರ್ಯಾಕಿಂಗ್ ನಲ್ಲಿ '-C' ಶ್ರೇಣಿ
ಕರ್ನಾಟಕದ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಪ್ರಮುಖ ಜಿಲ್ಲೆಗಳಿಗೆ ಬೆಳಕು ನೀಡುವ 'ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ' (BESCOM) ಕೇಂದ್ರ ಸರ್ಕಾರದ ಮೌಲ್ಯಮಾಪನದಲ್ಲಿ ತೀವ್ರ ಹಿನ್ನಡೆ ಅನುಭವಿಸಿದೆ. ಕೇಂದ್ರ ವಿದ್ಯುತ್ ಸಚಿವಾಲಯ ಬಿಡುಗಡೆ ಮಾಡಿರುವ 14ನೇ ವಾರ್ಷಿಕ ಸಮಗ್ರ ರೇಟಿಂಗ್ ಮತ್ತು ರ್ಯಾಕಿಂಗ್ ವರದಿಯಲ್ಲಿ ಬೆಸ್ಕಾಂ 'C-' (ಸಿ ಮೈನಸ್) ಶ್ರೇಣಿಯನ್ನು ಪಡೆಯುವ ಮೂಲಕ 'ರೆಡ್ ಕಾರ್ಡ್'ಗೆ
ಫೆ.11ರಿಂದ ಮೂರು ದಿನ ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವರ ಪ್ರವಾಸ
ವಿಜಯನಗರ (ಹೊಸಪೇಟೆ) : ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಝಮೀರ್ ಅಹ್ಮದ್ ಖಾನ್ ಅವರು ಫೆ.11ರಿಂದ ವಿಜಯನಗರ ಜಿಲ್ಲೆಯಲ್ಲಿ ಮೂರು ದಿನಗಳ ಪ್ರವಾಸ ಕೈಗೊಳ್ಳಲಿದ್ದಾರೆ. ಫೆಬ್ರವರಿ 11ರಂದು ಬೆಳಗ್ಗೆ 10.30ಕ್ಕೆ ಹೊಸಪೇಟೆಗೆ ಆಗಮಿಸುವ ಅವರು, ಬಳಿಕ ಹಂಪಿಯಲ್ಲಿ ನಡೆಯಲಿರುವ ಉತ್ಸವದ ಸಿದ್ಧತೆಗಳನ್ನು ಪರಿಶೀಲಿಸಲಿದ್ದಾರೆ. ನಂತರ ಎಂ.ಪಿ. ಪ್ರಕಾಶ್ ಮುಖ್ಯ ವೇದಿಕೆಯಲ್ಲಿ ಹಂಪಿ ಉತ್ಸವ ಕುರಿತು ಆಯೋಜಿಸಲಾದ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಲಿದ್ದಾರೆ. ಮಧ್ಯಾಹ್ನ 12.30ಕ್ಕೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆಯುವ ಪ್ರಸಕ್ತ ಸಾಲಿನ ಜಿಲ್ಲಾ ಯೋಜನಾ ಸಮಿತಿ ಸಭೆಯಲ್ಲಿ ಪಾಲ್ಗೊಳ್ಳುವರು. ಸಂಜೆ 6ಕ್ಕೆ ಹಂಪಿಯ ವಿರೂಪಾಕ್ಷೇಶ್ವರ ದೇವಸ್ಥಾನದ ಸಮೀಪ ತುಂಗಾ ತಟದಲ್ಲಿ ಹಮ್ಮಿಕೊಳ್ಳಲಾಗಿರುವ ತುಂಗಾ ಆರತಿ ಕಾರ್ಯಕ್ರಮದಲ್ಲಿ ಭಾಗವಹಿಸಿ, ಹೊಸಪೇಟೆಯಲ್ಲಿ ವಾಸ್ತವ್ಯ ಹೂಡುವರು. ಫೆಬ್ರವರಿ 12ರಂದು ಬೆಳಗ್ಗೆ 10.30ಕ್ಕೆ ಕಮಲಾಪುರದ ಹೋಟೆಲ್ ಮಯೂರ ಭುವನೇಶ್ವರಿ ಆವರಣದಲ್ಲಿ ಆಯೋಜಿಸಲಾದ ‘ಹಂಪಿ ಬೈ ಸ್ಕೈ’ ಕಾರ್ಯಕ್ರಮಕ್ಕೆ ಚಾಲನೆ ನೀಡುವರು. ಬಳಿಕ ಬೆಳಗ್ಗೆ 11ಕ್ಕೆ ಬಳ್ಳಾರಿಗೆ ತೆರಳುವರು. ಮಧ್ಯಾಹ್ನ 3ಕ್ಕೆ ಮತ್ತೆ ಹೊಸಪೇಟೆಗೆ ಆಗಮಿಸಿ, ವಡಕರಾಯನ ದೇವಸ್ಥಾನ ರಥಬೀದಿಯಲ್ಲಿ ನಡೆಯುವ ವಿಜಯನಗರ ವಸಂತ ವೈಭವ ಕಾರ್ಯಕ್ರಮದಲ್ಲಿ ಭಾಗವಹಿಸಿ ವಾಸ್ತವ್ಯ ಹೂಡುವರು. ಫೆಬ್ರವರಿ 13ರಂದು ಬೆಳಗ್ಗೆ 10ಕ್ಕೆ ಹಂಪಿ ನಿರ್ವಹಣಾ ಪ್ರಾಧಿಕಾರ ಕಚೇರಿ ಹಿಂಭಾಗದಲ್ಲಿ ವಿವಿಧ ತಳಿಗಳ ಎತ್ತುಗಳ ಪ್ರದರ್ಶನದಲ್ಲಿ ಪಾಲ್ಗೊಳ್ಳುವರು. 11.30ಕ್ಕೆ ವಸ್ತುಪ್ರದರ್ಶನ ಹಾಗೂ 12.30ಕ್ಕೆ ಬೋಟಿಂಗ್ ಪ್ರದರ್ಶನ ವೀಕ್ಷಿಸಲಿದ್ದಾರೆ. ಸಂಜೆ 4ಕ್ಕೆ ಶ್ರೀಕೃಷ್ಣ ದೇವರಾಯ ವೇದಿಕೆಯಲ್ಲಿ ಸ್ಥಳೀಯ ಹಾಗೂ ಜಿಲ್ಲಾ ಕಲಾವಿದರಿಂದ ಆಯೋಜಿಸಲಾದ ಸಾಂಸ್ಕೃತಿಕ ಕಾರ್ಯಕ್ರಮ ವೀಕ್ಷಿಸಲಿದ್ದಾರೆ. ಸಂಜೆ 7ಕ್ಕೆ ಮಾನ್ಯ ಮುಖ್ಯಮಂತ್ರಿಗಳೊಂದಿಗೆ ಹಂಪಿ ಉತ್ಸವ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ, ಹೊಸಪೇಟೆಯಲ್ಲಿ ವಾಸ್ತವ್ಯ ಹೂಡುವರು.
ಪತ್ರಿಕೋದ್ಯಮದ ತಪಸ್ವಿ ಎಂದೇ ಖ್ಯಾತರಾಗಿದ್ದ ವಿಧಾನ ಪರಿಷತ್ ಮಾಜಿ ಸದಸ್ಯ ಪಿ ರಾಮಯ್ಯ ಇನ್ನಿಲ್ಲ
ಹಿರಿಯ ಪತ್ರಕರ್ತ ಹಾಗು ವಿಧಾನ ಪರಿಷತ್ತಿನ ಮಾಜಿ ಸದಸ್ಯ ಪಿ ರಾಮಯ್ಯ (93 )ಅವರು ನಿಧನರಾಗಿದ್ದಾರೆ. ಬೆಂಗಳೂರಿನ ಮಲ್ಲಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಬಹು ಅಂಗಾಂಗ ವೈಫಲ್ಯದಿಂದಾಗಿ ಮಂಗಳವಾರ ರಾತ್ರಿ 9 ಗಂಟೆಗೆ ಆಸ್ಪತ್ರೆಯಲ್ಲಿ ಅಸುನೀಗಿದರು ಎಂದು ಅವರ ಪುತ್ರ ಡಾ ಬಾಲಜಿ ತಿಳಿಸಿದ್ದಾರೆ. ಅವರ ಅಗಲುವಿಕೆಗೆ ಆದಿಚುಂಚನಗಿರಿ ಮಠಾಧ್ಯಕ್ಷರಾಗಿರುವ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ಕೇಂದ್ರ ಸಚಿವ ಎಚ್. ಡಿ. ಕುಮಾರಸ್ವಾಮಿ ಸೇರಿದಂತೆ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ. 1933 ಸೆಪ್ಟೆಂಬರ್ 12 ರಂದು ಜನಿಸಿದ ರಾಮಯ್ಯ ಅವರು ದಿ ಹಿಂದೂ ಪತ್ರಿಕೆಯಲ್ಲಿ ಐದು ದಶಕಗಳ ಕಾಲ ವಿವಿಧ ಹುದ್ದೆಗಳಲ್ಲಿ ಪತ್ರಕರ್ತರಾಗಿ ಕರ್ತವ್ಯ ನಿರ್ವಹಿಸಿದ್ದರು. ವಿಧಾನ ಪರಿಷತ್ತಿನ ಸದಸ್ಯರಾಗಿಯೂು ಸೇವೆ ಸಲ್ಲಿಸಿದ್ದರು. ಅವರಿಗೆ ಇಬ್ಬರು ಪುತ್ರರು , ಪುತ್ರಿ, ಸೊಸೆಯಂದಿರು, ಮೊಮ್ಮಕ್ಕಳು, ಅಪಾರ ಬಂಧು ಬಳಗ ಇದ್ದಾರೆ. ಅವರ ಪಾರ್ಥಿವ ಶರೀರವನ್ನು ಸಾರ್ವಜನಿಕ ದರ್ಶನಕ್ಕಾಗಿ ಬುಧವಾರ ಬೆಳಗ್ಗೆ 9 ಗಂಟೆಯಿಂದ ಸದಾಶಿವನಗರ ಕ್ಲಬ್ ಸಮೀಪದಲ್ಲಿ ವಾಸವಾಗಿದ್ದ ಮನೆ 295/12/1 7 ನೇ ಮೇನ್ 16 ನೇ ಕ್ರಾಸ್ ಇಡಲಾಗುವುದು ಎಂದು ಅವರ ಸೋದರಳಿಯ, ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕರಾಗಿರುವ ಗಿರೀಶ್ ಲಿಂಗಣ್ಣ ಅವರು ಮಾಹಿತಿ ನೀಡಿದ್ದಾರೆ. ಪತ್ರಿಕೋದ್ಯಮದ ತಪಸ್ವಿ ಪಿ. ರಾಮಯ್ಯ (ಹಿಂದೂ ರಾಮಯ್ಯ) ಅವರು ಕರ್ನಾಟಕದ ಪ್ರಸಿದ್ಧ ಹಿರಿಯ ಪತ್ರಕರ್ತರು, ಇವರು ಸುಮಾರು 45 ವರ್ಷಗಳ ಕಾಲ The Hindu ಪತ್ರಿಕೆಯ ಬ್ಯೂರೋ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿದ್ದರು. ಸತ್ಯ ಮತ್ತು ಪ್ರಾಮಾಣಿಕತೆಗೆ ಬದ್ಧರಾಗಿದ್ದ ಇವರನ್ನು 'ಪತ್ರಿಕೋದ್ಯಮದ ತಪಸ್ವಿ' ಎಂದು ಕರೆಯಲಾಗುತ್ತದೆ. ಇವರ ಅನುಭವ ಕಥನ ನಾನು ಹಿಂದೂ ರಾಮಯ್ಯ ಕೃತಿಯು ಇವರ ಬದ್ಧತೆಯನ್ನು ಎತ್ತಿಹಿಡಿಯುತ್ತದೆ. ಪಿ. ರಾಮಯ್ಯನವರು ತಮ್ಮ ವೃತ್ತಿ ಜೀವನದಲ್ಲಿ ರಾಜಕೀಯ ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಿನ ಸಂಪರ್ಕಗಳನ್ನು ಬಳಸಿ, ಸರ್ಕಾರದ ನೀತಿ ನಿರೂಪಣೆಗೆ ಕೊಡುಗೆ ನೀಡಿದ್ದರು. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ,ಮಾಧ್ಯಮ ಅಕಾಡೆಮಿ ಪ್ರಶಸ್ತಿ , ಕೆಂಪೇಗೌಡ ಪ್ರಶಸ್ತಿಗೆ ಪಾತ್ರರಾಗಿದ್ದ ರಾಮಯ್ಯ ಅವರು ಪತ್ರಿಕಾ ಅಕಾಡೆಮಿ ಹಾಗು ವಿವಿಧ ಪತ್ರಕರ್ತ ಕಲ್ಯಾಣ ಸಮಿತಿ ಸದಸ್ಯರಾಗಿದ್ದರು .ಸಣ್ಣ ಪತ್ರಿಕೆಗಳ ಸಮಸ್ಯೆಗಳ ಅಧ್ಯಯನಕ್ಕಾಗಿ ರಚಿಸಲಾಗಿದ್ದ ಸಮಿತಿಯ ಅಧ್ಯಕ್ಷರಾಗಿದ್ದ ರಾಮಯ್ಯ ಅವರು ಸಣ್ಣ ಪತ್ರಿಕೆಗಳ ಸಮಸ್ಯೆಗೆ ಪರಿಹಾರ ದೊರಕಿಸಿದ್ದರು . ಎಚ್ ಡಿ ಕುಮಾರಸ್ವಾಮಿ ಸಂತಾಪ ಹಿರಿಯರು, ವಿಧಾನ ಪರಿಷತ್ ಮಾಜಿ ಸದಸ್ಯರು, ಕರ್ನಾಟಕ ಪತ್ರಿಕೋದ್ಯಮದ ಮಹಾವೃಕ್ಷ ಎಂದೇ ಹೆಸರಾಗಿದ್ದ ನನ್ನ ಗುರು, ಪಿತೃ ಸಮಾನರೂ ಆಗಿದ್ದ ಶ್ರೀ ಪಿ. ರಾಮಯ್ಯನವರು ನಿಧನರಾದರೆಂಬ ವಾರ್ತೆ ಕೇಳಿ ಬಹಳ ದುಃಖವಾಯಿತು ಎಂದು ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಅವರು ತಿಳಿಸಿದ್ದಾರೆ. ತಮ್ಮ ಎಕ್ಸ್ ಖಾತೆಯಲ್ಲಿ ಈ ಬಗ್ಗೆ ಪೋಸ್ಟ್ ಮಾಡಿರುವ ಅವರು, ಮಾನವೀಯತೆ, ಪ್ರಾಮಾಣಿಕತೆ ಹಾಗೂ ಮೌಲ್ಯಾಧರಿತ ಪತ್ರಿಕಾ ಧರ್ಮದ ಶ್ರೇಷ್ಠ ಪತಿನಿಧಿಯಾಗಿದ್ದ ಅವರು, ಜನಮಾನಸದಲ್ಲಿ ಹಿಂದೂ ರಾಮಯ್ಯ ಎಂದೇ ಜನಪ್ರಿಯರಾಗಿದ್ದರು. ಸರಳತೆ ಸಜ್ಜನಿಕೆಯ ಸಾಕಾರಮೂರ್ತಿ ಆಗಿದ್ದರು. ವೈಯಕ್ತಿಕವಾಗಿ ಅವರು ನನಗೆ ಅತ್ಯಂತ ಆತ್ಮೀಯರು ಹಾಗೂ ಅವರ ಮೇಲೆ ಅಪಾರ ಗೌರವ ಹೊಂದಿದ್ದೆ. ಹಾಗೆಯೇ ನನ್ನ ಬಗ್ಗೆಯೂ ಅವರು ವಿಶೇಷ ಮಮತೆ, ವಾತ್ಸಲ್ಯ ಇಟ್ಟುಕೊಂಡಿದ್ದರು. ಅನೇಕ ಕಠಿಣ ಸಂದರ್ಭಗಳಲ್ಲಿ ಮಾರ್ಗದರ್ಶನ ಮಾಡಿದ್ದರು. ವಿಧಾನ ಪರಿಷತ್ ಸದಸ್ಯರಾಗಿಯೂ ಜನಸೇವೆ ಮಾಡಿ ಆ ಸದನದ ಕೀರ್ತಿ, ಹಿರಿಮೆಯನ್ನು ಹೆಚ್ಚಿಸಿದ್ದರು. ಅವರ ಅಗಲಿಕೆ ವೈಯಕ್ತಿಕವಾಗಿ ಬಹಳ ದುಃಖ ತಂದಿದೆ.ಭಗವಂತ ಅವರ ಆತ್ಮಕ್ಕೆ ಸದ್ಗತಿ ನೀಡಲಿ. ಈ ದುಃಖವನ್ನು ಭರಿಸುವ ಶಕ್ತಿಯನ್ನು ಅವರ ಕುಟುಂಬಕ್ಕೆ, ಅದರಲ್ಲಿಯೂ ವಿಶೇಷವಾಗಿ ಅವರ ಧರ್ಮಪತ್ನಿ ಶ್ರೀಮತಿ ರಾಮಯ್ಯ ಅವರಿಗೆ ಮತ್ತು ಶ್ರೀಯುತರ ಅಭಿಮಾನಿಗಳಿಗೆ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ತಿಳಿಸಿದ್ದಾರೆ.
‘ಕಾನೂನುಬಾಹಿರ’ ಎಐ ನಿರ್ಮಿತ ವಿಷಯ 3 ಗಂಟೆಯಲ್ಲಿ ತೆಗೆಯಬೇಕು: ಕೇಂದ್ರದಿಂದ ನೂತನ ಕಠಿಣ ನಿಯಮಾವಳಿಗಳು
ಹೊಸದಿಲ್ಲಿ, ಫೆ. 10: ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನದ ಮೂಲಕ ಸೃಷ್ಟಿಸಲಾದ ವಿಷಯಗಳಿಗೆ ಸಂಬಂಧಿಸಿದ ಆದೇಶಗಳ ಪಾಲನೆಯನ್ನು ಮತ್ತಷ್ಟು ಕಠಿಣಗೊಳಿಸಿ ಕೇಂದ್ರ ಸರ್ಕಾರ ಮಂಗಳವಾರ ನಿಯಮಾವಳಿಗಳನ್ನು ಹೊರಡಿಸಿದೆ. ಇನ್ನು ಮುಂದೆ, ಡೀಪ್ಫೇಕ್ಗಳು ಸೇರಿದಂತೆ ನ್ಯಾಯಾಲಯಗಳು ಅಥವಾ ಸಕ್ಷಮ ಪ್ರಾಧಿಕಾರಗಳು ಕಾನೂನುಬಾಹಿರ ಎಂದು ಗುರುತಿಸುವ ವಿಷಯಗಳನ್ನು ಸಾಮಾಜಿಕ ಮಾಧ್ಯಮಗಳು ಮತ್ತು ಆನ್ಲೈನ್ ವೇದಿಕೆಗಳು ಮೂರು ಗಂಟೆಗಳೊಳಗೆ ತೆಗೆದುಹಾಕಬೇಕಾಗಿದೆ. ಈ ಸಂಬಂಧ 2021ರ ಮಾಹಿತಿ ತಂತ್ರಜ್ಞಾನ (ಇಂಟರ್ಮೀಡಿಯರಿ ಮಾರ್ಗಸೂಚಿಗಳು ಮತ್ತು ಡಿಜಿಟಲ್ ಮಾಧ್ಯಮ ನೀತಿ ಸಂಹಿತೆ) ನಿಯಮಗಳಿಗೆ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ತಿದ್ದುಪಡಿಗಳನ್ನು ತಂದಿದೆ. ಪರಿಷ್ಕೃತ ನಿಯಮಾವಳಿಗಳು ಕೃತಕ ಬುದ್ಧಿಮತ್ತೆ ತಂತ್ರಜ್ಞಾನದ ಮೂಲಕ ಸೃಷ್ಟಿಸಲಾಗುವ ವಿಷಯಕ್ಕೆ ಮೊದಲ ಬಾರಿಗೆ ಔಪಚಾರಿಕ ವ್ಯಾಖ್ಯಾನ ನೀಡಿವೆ. ನೂತನ ನಿಯಮಾವಳಿಗಳು ಫೆಬ್ರವರಿ 20ರಂದು ಜಾರಿಗೆ ಬರಲಿವೆ. ನೂತನ ನಿಯಮಾವಳಿಗಳ ಪ್ರಕಾರ, ಕೃತಕ ಬುದ್ಧಿಮತ್ತೆಯನ್ನು ಬಳಸಿ ನೈಜವೆಂಬಂತೆ ಕಂಡುಬರುವಂತೆ ಸೃಷ್ಟಿಸಲಾಗುವ ದೃಶ್ಯ, ಶ್ರಾವ್ಯ ಅಥವಾ ದೃಶ್ಯ–ಶ್ರಾವ್ಯ ವಿಷಯಗಳನ್ನು ‘ಸಿಂಥೆಟಿಕ್’ (ಕೃತಕ ಬುದ್ಧಿಮತ್ತೆ ಆಧಾರಿತ, ಮನುಷ್ಯ ನಿರ್ಮಿತವಲ್ಲ) ಎಂದು ವರ್ಗೀಕರಿಸಲಾಗುವುದು. ನೂತನ ನಿಯಮಾವಳಿಗಳು ವಿಷಯಗಳನ್ನು ಆನ್ಲೈನ್ ವೇದಿಕೆಗಳಿಂದ ತೆಗೆಯುವ ಅವಧಿಯನ್ನು 36 ಗಂಟೆಗಳಿಂದ ಕೇವಲ ಮೂರು ಗಂಟೆಗಳಿಗೆ ಇಳಿಸಿವೆ. ಕೃತಕ ಬುದ್ಧಿಮತ್ತೆ ನಿರ್ಮಿತ ವಿಷಯಗಳ ನಿರ್ಮಾಣ ಅಥವಾ ಹಂಚಿಕೆಯಲ್ಲಿ ತೊಡಗಿರುವ ಮಾಧ್ಯಮಗಳು ಅದನ್ನು ಲೇಬಲ್ ಮೂಲಕ ಸ್ಪಷ್ಟವಾಗಿ ತಿಳಿಸಬೇಕು ಎಂದು ಅವು ಹೇಳುತ್ತವೆ.
ಯಾದಗಿರಿ | ವಿದ್ಯಾರ್ಥಿಗಳ ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸಬೇಕು: ಶಾಂತವೀರ ಮಹಾಸ್ವಾಮಿಜಿ
ಯಾದಗಿರಿ: ಶಾಲಾ ಹಂತದಲ್ಲೇ ವಿದ್ಯಾರ್ಥಿಗಳಲ್ಲಿ ಅನೇಕ ಪ್ರತಿಭೆಗಳು ಅಡಗಿರುತ್ತವೆ. ಶಿಕ್ಷಕರು ಮತ್ತು ಪೋಷಕರು ಮಕ್ಕಳ ಆಸಕ್ತಿ ಹಾಗೂ ಚಟುವಟಿಕೆಗಳನ್ನು ಸೂಕ್ಷ್ಮವಾಗಿ ಗಮನಿಸಿ, ಅವರಲ್ಲಿ ಸ್ಪರ್ಧಾಮನೋಭಾವನೆ ಬೆಳೆಸಿ ಪ್ರೋತ್ಸಾಹಿಸಿದಾಗ ಮಾತ್ರ ಅವರು ಪರಿಶ್ರಮದಿಂದ ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂದು ಗುರುಮಠಕಲ್ ಖಾಸಾ ಮಠದ ಪೀಠಾಧಿಪತಿ ಶಾಂತವೀರ ಮಹಾಸ್ವಾಮಿಜಿ ಹೇಳಿದರು. ನಗರದ ಗ್ರೀನ್ ಸಿಟಿಯಲ್ಲಿರುವ ಸೆಂಚುರಿಯನ್ ಅಂತರರಾಷ್ಟ್ರೀಯ ಶಾಲೆಯಲ್ಲಿ ಹಮ್ಮಿಕೊಂಡಿದ್ದ 9ನೇ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಆಶೀರ್ವಚನ ನೀಡಿದ ಅವರು, ಶಿಕ್ಷಣ ಕ್ಷೇತ್ರದ ಅಭಿವೃದ್ಧಿಯಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳ ಪಾತ್ರ ಮಹತ್ವದ್ದಾಗಿದೆ ಎಂದರು. ಶಿಕ್ಷಣ ಸಂಸ್ಥೆ ನಡೆಸುವುದು ಸವಾಲಿನ ಕೆಲಸವಾಗಿದ್ದು, ಹುಡೇದ್ ದಂಪತಿಗಳು ಅರ್ಪಣಾಭಾವದಿಂದ ವಿದ್ಯಾರ್ಥಿಗಳಿಗೆ ಅಗತ್ಯ ಮೂಲಸೌಕರ್ಯ ಒದಗಿಸಿ, ಗುಣಮಟ್ಟದ ಶಿಕ್ಷಣದ ಜೊತೆಗೆ ಉತ್ತಮ ಸಂಸ್ಕಾರ ನೀಡುತ್ತಿರುವುದು ಶ್ಲಾಘನೀಯ ಕಾರ್ಯವಾಗಿದೆ ಎಂದು ಪ್ರಶಂಸಿಸಿದರು. ವಿದ್ಯಾರ್ಥಿಗಳ ಶೈಕ್ಷಣಿಕ ಬೆಳವಣಿಗೆಯಲ್ಲಿ ಪೋಷಕರ ಪಾತ್ರವೂ ಅಷ್ಟೇ ಮಹತ್ವದ್ದಾಗಿದೆ. ಮಕ್ಕಳ ಚಟುವಟಿಕೆಗಳ ಮೇಲೆ ನಿಗಾ ವಹಿಸಿ, ಸಕಾರಾತ್ಮಕ ಚಿಂತನೆ ಬೆಳೆಸಿ, ಉನ್ನತ ಗುರಿ ಸಾಧಿಸಲು ಸಕಾಲದಲ್ಲಿ ಮಾರ್ಗದರ್ಶನ ನೀಡಬೇಕು ಎಂದು ಹೇಳಿದರು. ಶಾಲೆಯಲ್ಲಿ ಪರಿಸರ ರಕ್ಷಣೆಯ ಮಹತ್ವವನ್ನು ವಿದ್ಯಾರ್ಥಿಗಳಿಗೆ ತಿಳಿಸುವ ಜೊತೆಗೆ ಉತ್ತಮ ಪರಿಸರ ನಿರ್ಮಾಣ ಮಾಡಿರುವುದು ಶ್ಲಾಘನೀಯ. ಇದು ಮಕ್ಕಳ ಅಭ್ಯಾಸದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ ಎಂದರು. ಶಾಲೆಯ ಪ್ರಾಂಶುಪಾಲೆ ಸುಜಾತಾ ಎಸ್. ಹುಡೇದ್ ಮಾತನಾಡಿ, ಸ್ಪರ್ಧಾತ್ಮಕ ಯುಗದಲ್ಲಿ ಶಿಕ್ಷಣವೇ ಎಲ್ಲಾ ಸಮಸ್ಯೆಗಳ ಪರಿಹಾರಕ್ಕೆ ದಾರಿ ತೋರಿಸುತ್ತದೆ. ಪೋಷಕರು ಮಕ್ಕಳಿಗೆ ಅತಿಯಾದ ಮೊಬೈಲ್ ಬಳಕೆ ಅವಕಾಶ ನೀಡಬಾರದು, ಏಕೆಂದರೆ ಅದು ಅವರ ಏಕಾಗ್ರತೆಯನ್ನು ಹಾನಿಗೊಳಿಸುತ್ತದೆ ಎಂದು ಮನವಿ ಮಾಡಿದರು. ಕಾರ್ಯಕ್ರಮದ ಅಂಗವಾಗಿ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ಹಾಗೂ ಪ್ರಮಾಣಪತ್ರಗಳನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ಶಾಲೆಯ ಸಂಸ್ಥಾಪಕ ಶಿವರಾಜ ಹುಡೇದ್, ಜಿಲ್ಲಾ ಸಮಾಜ ಕಲ್ಯಾಣ ಉಪನಿರ್ದೇಶಕ ಚನ್ನಬಸಪ್ಪ, ಸೋಮಶೇಖರ ಮಣ್ಣೂರ, ಶಿಕ್ಷಕ ಮಡಿವಾಳಪ್ಪ, ಬಸ್ಸುಗೌಡ ಕಂಚನಕಾವಿ, ರಮೇಶ ಜಾದವ್ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಶಿಕ್ಷಕ ಅಮಾತೆಪ್ಪ ಸ್ವಾಗತಿಸಿ, ಶಿಕ್ಷಕಿ ಮಹಾಲಕ್ಷ್ಮಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
CIC ನೇಮಕಾತಿ| ಪ್ರತಿಪಕ್ಷ ನಾಯಕರ ಭಿನ್ನಮತ ಬಹಿರಂಗಪಡಿಸುವಂತೆ ಸೂಚಿಸುವುದಿಲ್ಲ: ಸುಪ್ರೀಂ ಕೋರ್ಟ್
ಹೊಸದಿಲ್ಲಿ,ಫೆ.10: ಕೇಂದ್ರ ಮಾಹಿತಿ ಆಯೋಗ (ಸಿಐಸಿ)ದ ಮುಖ್ಯ ಮಾಹಿತಿ ಆಯುಕ್ತರು ಮತ್ತು ಮಾಹಿತಿ ಆಯುಕ್ತರುಗಳ ನೇಮಕಾತಿಯ ವಿಷಯದಲ್ಲಿ, ಪ್ರತಿಪಕ್ಷ ನಾಯಕರ ಭಿನ್ನಮತವನ್ನು ಬಹಿರಂಗಪಡಿಸುವಂತೆ ತಾನು ಸರಕಾರಕ್ಕೆ ನಿರ್ದೇಶನ ನೀಡುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಮಂಗಳವಾರ ತಿಳಿಸಿತು. ಸಿಐಸಿಯಲ್ಲಿರುವ ಖಾಲಿ ಹುದ್ದೆಗಳನ್ನು ತಾನು ತುಂಬಿಸಿರುವುದಾಗಿ ಕೇಂದ್ರ ಸರಕಾರ ತಿಳಿಸಿದ ಬಳಿಕ, ಮುಖ್ಯ ನ್ಯಾಯಾಧೀಶ ಸೂರ್ಯ ಕಾಂತ್ ಹಾಗೂ ನ್ಯಾಯಮೂರ್ತಿಗಳಾದ ಜಯಮಲ್ಯ ಬಾಗ್ಚಿ ಮತ್ತು ಎನ್.ವಿ. ಅಂಜಾರಿಯ ಅವರನ್ನೊಳಗೊಂಡ ನ್ಯಾಯಪೀಠವು ಈ ತೀರ್ಪು ನೀಡಿತು
ವಿಧಾನ ಪರಿಷತ್ ಮಾಜಿ ಸದಸ್ಯ, ಹಿರಿಯ ಪತ್ರಕರ್ತ ಪಿ.ರಾಮಯ್ಯ ನಿಧನ
ಬೆಂಗಳೂರು, ಫೆ.10: ಹಿರಿಯ ಪತ್ರಕರ್ತ, ವಿಧಾನ ಪರಿಷತ್ತಿನ ಮಾಜಿ ಸದಸ್ಯ ಪಿ.ರಾಮಯ್ಯ(93) ಅವರು ನಿಧನರಾಗಿದ್ದಾರೆ. ಅನಾರೋಗ್ಯದ ಹಿನ್ನೆಲೆಯಲ್ಲಿ ಬೆಂಗಳೂರಿನ ಮಲ್ಲಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಪಿ.ರಾಮಯ್ಯ ಅಂಗಾಂಗ ವೈಫಲ್ಯದಿಂದಾಗಿ ರಾತ್ರಿ 9 ಗಂಟೆ ಸುಮಾರಿಗೆ ಆಸ್ಪತ್ರೆಯಲ್ಲಿ ಅಸುನೀಗಿದರು ಎಂದು ಅವರ ಪುತ್ರ ಡಾ.ಬಾಲಾಜಿ ತಿಳಿಸಿದ್ದಾರೆ . 1933ರ ಸೆ.12 ರಂದು ಜನಿಸಿದ ರಾಮಯ್ಯ ಅವರು, ಇಬ್ಬರು ಪುತ್ರರು, ಓರ್ವ ಪುತ್ರಿ, ಸೊಸೆಯಂದಿರು ಹಾಗೂ ಮೊಮ್ಮಕಳನ್ನು ಅಗಲಿದ್ದಾರೆ . 'ದಿ ಹಿಂದೂ' ಪತ್ರಿಕೆಯಲ್ಲಿ ಐದು ದಶಕಗಳ ಕಾಲ ವಿವಿಧ ಹುದ್ದೆಗಳಲ್ಲಿ ಪತ್ರಕರ್ತರಾಗಿ ಕರ್ತವ್ಯ ನಿರ್ವಹಿಸಿದ್ದ ರಾಮಯ್ಯ ಅವರು, ವಿಧಾನ ಪರಿಷತ್ತಿನ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು . ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಮಾಧ್ಯಮ ಅಕಾಡೆಮಿ ಪ್ರಶಸ್ತಿ , ಕೆಂಪೇಗೌಡ ಪ್ರಶಸ್ತಿಗೆ ಪಾತ್ರರಾಗಿದ್ದ ರಾಮಯ್ಯ ಅವರು, ಪತ್ರಿಕಾ ಅಕಾಡೆಮಿ ಹಾಗೂ ವಿವಿಧ ಪತ್ರಕರ್ತ ಕಲ್ಯಾಣ ಸಮಿತಿ ಸದಸ್ಯರಾಗಿದ್ದರು . ಸಣ್ಣ ಪತ್ರಿಕೆಗಳ ಸಮಸ್ಯೆಗಳ ಅಧ್ಯಯನಕ್ಕಾಗಿ ರಚಿಸಲಾಗಿದ್ದ ಸಮಿತಿಯ ಅಧ್ಯಕ್ಷರಾಗಿದ್ದ ರಾಮಯ್ಯ ಸಣ್ಣ ಪತ್ರಿಕೆಗಳ ಸಮಸ್ಯೆಗೆ ಪರಿಹಾರ ದೊರಕಿಸಿದ್ದರು . ಸಾರ್ವಜನಿಕ ದರ್ಶನಕ್ಕಾಗಿ ಪಾರ್ಥೀವ ಶರೀರವನ್ನು ನಾಳೆ ಬೆಳಗ್ಗೆ 9 ಗಂಟೆಯಿಂದ ಸದಾಶಿವನಗರ ಕ್ಲಬ್ ಸಮೀಪದಲ್ಲಿ ವಾಸವಾಗಿದ್ದ ಅವರ ಮನೆಯಲ್ಲಿ ಇಡಲಾಗುವುದು ಎಂದು ಡಾ.ಬಾಲಾಜಿ ತಿಳಿಸಿದ್ದಾರೆ .
ಮಂಗಳೂರು: ತೊಕ್ಕೊಟ್ಟಿನಿಂದ ಅಸೈಗೋಳಿವರೆಗಿನ ಪ್ರಮುಖ ರಸ್ತೆಯ ಇಕ್ಕಡೆಗಳಲ್ಲಿ ಬೀದಿ ಬದಿ ವ್ಯಾಪಾರಿಗಳ ಮೇಲೆ ಬುಲ್ದೊಜರ್ ಕಾರ್ಯಾಚರಣೆ ನಡೆಸಿರುವ ಕ್ರಮವನ್ನು ಖಂಡಿಸಿರುವ ಸಿಐಟಿಯು ನೇತೃತ್ವದ ದ.ಕ. ಜಿಲ್ಲಾ ಬೀದಿಬದಿ ವ್ಯಾಪಾರಸ್ಥರ ಸಂಘವು ಸಂತ್ರಸ್ತ ಬೀದಿಬದಿ ವ್ಯಾಪಾರಿಗಳನ್ನು ಭೇಟಿ ಮಾಡಿ ಕಾರ್ಯಾಚರಣೆ ಸ್ಥಗಿತಗೊಳಿಸಲು ಮತ್ತು ವ್ಯಾಪಾರಕ್ಕೆ ಅವಕಾಶ ಕಲ್ಪಿಸಲು ಆಗ್ರಹಿಸಿದೆ. ಇಲ್ಲದಿದ್ದರೆ ಹೋರಾಟ ಮಾಡುವುದಾಗಿ ಎಚ್ಚರಿಸಿದೆ. ಲೋಕೋಪಯೋಗಿ ಇಲಾಖೆಯು ಪೊಲೀಸ್ ಮತ್ತು ಕಂದಾಯ ಇಲಾಖೆಯ ಸಮ್ಮುಖ ಸೋಮವಾರ ಕಾರ್ಯಾ ಚರಣೆ ನಡೆಸಿದ ಬಗ್ಗೆ ಮಾಹಿತಿ ಪಡೆದ ಸಿಐಟಿಯು ನಿಯೋಗ ಮಂಗಳವಾರ ಸ್ಥಳಕ್ಕೆ ಭೇಟಿ ಸಂತ್ರಸ್ತ ಬೀದಿ ಬದಿ ವ್ಯಾಪಾರಿಗಳ ಜೊತೆ ಚರ್ಚೆ ನಡೆಸಿದೆ. ಲೋಕೋಪಯೋಗಿ ಇಲಾಖೆ ಮತ್ತು ಹೆದ್ದಾರಿ ಪ್ರಾಧಿಕಾರವು ದೌರ್ಜನ್ಯ ನಡೆಸುತ್ತಿದೆ ಎಂದು ಆಪಾದಿಸಿರುವ ಸಂಘದ ಮುಖಂಡರು ಬೀದಿ ವ್ಯಾಪಾರಿಗಳ ಜೊತೆಗೂಡಿ ಹೋರಾಟ ಮಾಡುವುದಾಗಿ ತಿಳಿಸಿದೆ. ಬೀದಿಬದಿ ವ್ಯಾಪಾರಸ್ಥರ ಸಂಘದ ಗೌರವಾಧ್ಯಕ್ಷ ಬಿ.ಕೆ. ಇಮ್ತಿಯಾಝ್, ಕಾರ್ಯಾಧ್ಯಕ್ಷ ಸುನಿಲ್ ಕುಮಾರ್ ಬಜಾಲ್, ಅಧ್ಯಕ್ಷ ಮುಝಫರ್ ಅಹ್ಮದ್, ಉಳ್ಳಾಲ ತಾಲೂಕು ಸಿಐಟಿಯು ಅಧ್ಯಕ್ಷ ಸುಂದರ ಕುಂಪಲ, ಡಿವೈಎಫ್ಐ ಉಳ್ಳಾಲ ತಾಲೂಕು ಕಾರ್ಯದರ್ಶಿ ರಿಝ್ವಾನ್ ಖಂಡಿಗ, ಮುಖಂಡರಾದ ಸಲೀಮ್ ಬೀರಿ, ನೌಶಾದ್, ಸದಾಶಿವ ವಿಶ್ವ, ದಿನೇಶ್ ನಿಯೋಗದಲ್ಲಿದ್ದರು. ಅದಕ್ಕೂ ಮುನ್ನ ನಿಯೋಗವು ಲೋಕೋಪಯೋಗಿ ಇಲಾಖೆಯ ಮುಖ್ಯ ಕಾರ್ಯನಿರ್ವಾಹಕ ಇಂಜಿನಿಯರ್ರನ್ನು ಭೇಟಿ ಮಾಡಿ ಕಾರ್ಯಾಚರಣೆ ನಿಲ್ಲಿಸುವಂತೆ ಮನವಿ ಮಾಡಿತು.
ಯಾದಗಿರಿ: ತಾಲ್ಲೂಕಿನ ಹಳಗೇರಾ ಗ್ರಾಮ ಪಂಚಾಯತ್ ವ್ಯಾಪ್ತಿಯ ಮಸ್ಕನಳ್ಳಿ ಗ್ರಾಮದಲ್ಲಿ ಮೂಲಭೂತ ಸೌಕರ್ಯಗಳ ಕೊರತೆ, ವಿಶೇಷವಾಗಿ ಕುಡಿಯುವ ನೀರಿನ ಸಮಸ್ಯೆ ಗಂಭೀರವಾಗಿದ್ದು, ಸಂಬಂಧಪಟ್ಟ ಅಧಿಕಾರಿಗಳ ನಿರ್ಲಕ್ಷ್ಯದ ವಿರುದ್ಧ ಅಖಿಲ ಭಾರತೀಯ ಕೋಲಿ ಸಮಾಜದ ರಾಜ್ಯ ಸಂಘಟನಾ ಕಾರ್ಯದರ್ಶಿ ಹಾಗೂ ಸಾಮಾಜಿಕ ಹೋರಾಟಗಾರ ಉಮೇಶ್ ಕೆ. ಮುದ್ನಾಳ ಅವರು ಜಿಲ್ಲಾಡಳಿತವನ್ನು ಪ್ರಶ್ನಿಸಿದ್ದಾರೆ. ಗ್ರಾಮಕ್ಕೆ ಭೇಟಿ ನೀಡಿದ ಅವರು ತಮಟೆ ಬಾರಿಸಿ ಸ್ಥಳದಲ್ಲೇ ದಿಢೀರ್ ಪ್ರತಿಭಟನೆ ನಡೆಸಿ ಜನರ ಸಮಸ್ಯೆಗಳತ್ತ ಗಮನ ಸೆಳೆದರು. ಗ್ರಾಮದಲ್ಲಿ ನಿರ್ಮಾಣಗೊಂಡಿರುವ ಎರಡು ನೀರಿನ ಮೇಲ್ತೊಟ್ಟಿಗಳನ್ನು ತಕ್ಷಣ ಸ್ವಚ್ಛಗೊಳಿಸಿ, ಶುದ್ಧ ಕುಡಿಯುವ ನೀರಿನ ಘಟಕ (ಆರೋ ಪ್ಲಾಂಟ್) ಅನ್ನು ಕೂಡಲೇ ಜನಬಳಕೆಗೆ ಆರಂಭಿಸಬೇಕು ಎಂದು ಆಗ್ರಹಿಸಿದರು. ಶುದ್ಧ ನೀರು ಸಿಗದೆ ಜನರು ಹಾಗೂ ಜಾನುವಾರುಗಳು ಸಂಕಷ್ಟ ಅನುಭವಿಸುತ್ತಿದ್ದಾರೆ ಎಂದು ತಿಳಿಸಿದರು. ಗ್ರಾಪಂ, ತಾಪಂ, ಜಿಪಂ ಹಾಗೂ ಜಿಲ್ಲಾಡಳಿತ ಮಟ್ಟದಲ್ಲಿ ಸಭೆಗಳು ನಡೆದರೂ ಈ ಸಮಸ್ಯೆ ಚರ್ಚೆಯಾಗದಿರುವುದು ದುರಂತ ಎಂದು ಆಕ್ರೋಶ ವ್ಯಕ್ತಪಡಿಸಿದರು. ಮೇಲ್ತೊಟ್ಟಿ ಮತ್ತು ಆರೋ ಪ್ಲಾಂಟ್ ನಿರ್ಮಾಣಕ್ಕೆ ಯಾರು ಮನವಿ ಸಲ್ಲಿಸಿದ್ದರು, ಎಷ್ಟು ಹಣ ಮಂಜೂರಾಗಿದೆ, ಎಷ್ಟು ವೆಚ್ಚವಾಗಿದೆ ಎಂಬ ವಿವರಗಳನ್ನು ಬಹಿರಂಗಪಡಿಸಬೇಕು ಎಂದು ಒತ್ತಾಯಿಸಿದರು. ಗ್ರಾಮದಲ್ಲಿ ಕುಡಿಯುವ ನೀರು ಹಲವು ಕಡೆ ಸೋರಿಕೆಯಾಗುತ್ತಿದ್ದು, ಕಲುಷಿತ ನೀರಿನ ಮಿಶ್ರಣದಿಂದ ಸಾಂಕ್ರಾಮಿಕ ರೋಗಗಳ ಭೀತಿ ಎದುರಾಗಿದೆ. ಚರಂಡಿ ವ್ಯವಸ್ಥೆಯ ಕೊರತೆಯಿಂದ ತಗ್ಗು ಪ್ರದೇಶಗಳಲ್ಲಿ ನೀರು ನಿಂತು ಸೊಳ್ಳೆಗಳ ಉತ್ಪತ್ತಿಗೆ ಕಾರಣವಾಗಿದೆ. ವಿದ್ಯುತ್ ಕಂಬಗಳು ಬಾಗಿ ನಿಂತಿದ್ದು, ಮನೆಯ ಮೇಲಿಂದ ತಂತಿಗಳು ಜೋತುಬಿದ್ದಿರುವುದರಿಂದ ಅನಾಹುತದ ಆತಂಕವೂ ವ್ಯಕ್ತವಾಗಿದೆ. ಗ್ರಾಮಕ್ಕೆ ಹೋಗುವ ರಸ್ತೆಯ ಎರಡೂ ಬದಿಯ ಜಾಲಿ ಕಂಟಿ ತೆರವು, ಚರಂಡಿ ಸ್ವಚ್ಛತೆ ಹಾಗೂ ಬ್ಲೀಚಿಂಗ್ ಪೌಡರ್ ಸಿಂಪಡಿಸುವಂತೆ ಆಗ್ರಹಿಸಿದರು. ತಕ್ಷಣ ಅಧಿಕಾರಿಗಳ ತಂಡ ರಚಿಸಿ ಸಮಗ್ರ ತನಿಖೆ ನಡೆಸಬೇಕು. ಮೇಲ್ತೊಟ್ಟಿ ಮತ್ತು ಶುದ್ಧ ಕುಡಿಯುವ ನೀರಿನ ಘಟಕವನ್ನು ಕೂಡಲೇ ಕಾರ್ಯಾರಂಭ ಮಾಡಬೇಕು. ಇಲ್ಲದಿದ್ದರೆ ಹಳಗೇರಾ ಗ್ರಾಮ ಪಂಚಾಯತ್ ಎದುರು ತೀವ್ರ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದರು. ಈ ಸಂದರ್ಭದಲ್ಲಿ ಭೀಮಾಶಂಕರ, ಪವನ್, ಮಲ್ಲಿಕಾರ್ಜುನ, ಮಲ್ಲಪ್ಪ, ರಫೀಕ್, ಯಲ್ಲಪ್ಪ, ಶಾಣಪ್ಪ, ಆಂಜನೇಯ, ಖಾಸಿಂಮ್, ಹಣಮಂತ, ಅಲ್ಲಿಸಾಬ, ಮಾಂತೇಶ್, ಜಗಪ್ಪ, ದೈದಪ್ಪ, ಬಸಪ್ಪ, ಚಂದ್ರಕಾಂತ್, ಕಾಶಪ್ಪ, ದೇವಪ್ಪ, ನಾಗಪ್ಪ, ಮಹ್ಮದ್, ಫಕೀರ್, ಶಬೀರ್, ಸುಫೀಸಾಬ್ ವಲ್ಲಿ, ಶೀವರಡ್ಡಿ, ಖಾಜಸಾಬ್, ಮೈಬುಸಾಬ್, ಚೀರಂಜೀವಿ ಸಾಬಯ್ಯ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.
ಎನ್ಐಟಿಕೆ ಸುರತ್ಕಲ್ನಲ್ಲಿ ಕೃಷಿಗಾಗಿ ಕೃತಕ ಬುದ್ಧಿಮತ್ತೆ ದುಂಡು ಮೇಜಿನ ಸಭೆ
ಮಂಗಳೂರು: ರಾಷ್ಟ್ರೀಯ ತಾಂತ್ರಿಕ ಸಂಸ್ಥೆ ಕರ್ನಾಟಕ (ಎನ್ಐಟಿಕೆ) ಸುರತ್ಕಲ್ ಹಾಗೂ ಕೇಂದ್ರ ಇಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ (ಇಆರ್ಎನ್ಇಟಿ ಇಂಡಿಯಾ), ಸ್ವಾಯತ್ತ ಸಂಸ್ಥೆಯಾದ ಎರ್ನೆಟ್ ಇಂಡಿಯಾ (ಎಂಇಐಟಿ) ಇವುಗಳ ಸಹಯೋಗದಲ್ಲಿ ಸುಸ್ಥಿರ ಮತ್ತು ಸ್ಮಾರ್ಟ್ ಕೃಷಿಯಲ್ಲಿ ಕೃತಕ ಬುದ್ಧಿಮತ್ತೆಯ (ಎಐ) ಬಳಕೆ ಬಗ್ಗೆ ವಿಶೇಷ ದುಂಡುಮೇಜಿನ ಸಭೆಯನ್ನು ಎನ್ಐಟಿಕೆ ಸುರತ್ಕಲ್ನಲ್ಲಿ ಆಯೋಜಿಸಲಾಗಿತ್ತು. ‘ಇಂಡಿಯಾ-ಎಐಂ ಇಂಪ್ಯಾಕ್ಟ್ ಸಮ್ಮಿತ್ 2026’ ರ ಪೂರ್ವಭಾವಿ ಯಾಗಿ ನಡೆದ ಈ ಸಭೆಯಲ್ಲಿ ಎರ್ನೆಟ್ ಇಂಡಿಯಾ, ಐಸಿಎಆರ್ - ದಾಳಿಂಬೆ ಸಂಶೋಧನಾ ಕೇಂದ್ರ, ವಿಟ್ಲದ ಕೇಂದ್ರಿಯ ಬೆಳೆಗಳ ಸಂಶೋಧನಾ ಸಂಸ್ಥೆ (ಸಿಪಿಸಿಆರ್ಐ), ಧಾರವಾಡದ ಕೃಷಿ ವಿಶ್ವವಿದ್ಯಾಲಯ, ಕ್ಯಾಲಿಕಟ್ನ ಮಸಾಲೆ ಬೆಳೆಗಳ ಸಂಶೋಧನಾ ಸಂಸ್ಥೆ, ಪುತ್ತೂರಿನ ಗೋಡಂಬಿ ಸಂಶೋಧನಾ ನಿರ್ದೇಶನಾಲಯ , ಕ್ಯಾಸ್ಪರ್ ಕೃಷಿ ವಿಜ್ಞಾನ ಬೆಂಗಳೂರು , ಐಐಐಟಿ ಧಾರವಾಡ ಸಂಸ್ಥೆಗಳ ತಜ್ಞರು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಎನ್ಐಟಿಕೆ ನಿರ್ದೇಶಕ ಪ್ರೊ. ಬಿ. ರವಿ ಅವರು ಕೃತಕ ಬುದ್ಧಿಮತ್ತೆಯ ತಂತ್ರಜ್ಞಾನ ಗಳು ಕೇವಲ ಪ್ರಯೋಗಾಲಯಕ್ಕೆ ಸೀಮಿತವಾಗದೆ, ಕರಾವಳಿ ಕರ್ನಾಟಕದಂತಹ ಪ್ರದೇಶಗಳ ರೈತರ ನಿಜವಾದ ಸಮಸ್ಯೆಗಳಿಗೆ ಪರಿಹಾರ ನೀಡಬೇಕು ಎಂದರು. ಎನ್ಐಟಿಕೆ ವತಿಯಿಂದ ಕೃಷಿ ಮತ್ತು ಸಮುದ್ರ ಉತ್ಪನ್ನಗಳ ಸಂಶೋಧನೆಗಾಗಿ ವಿಶೇಷ ‘ರಿಸರ್ಚ್ ಇನ್ನೋವೇಶನ್ ಪಾರ್ಕ್ ಸ್ಥಾಪಿಸುವ ಯೋಜನೆಯನ್ನು ಹಂಚಿಕೊಂಡರು. ಎರ್ನೆಟ್ ಇಂಡಿಯಾ ಮಹಾನಿರ್ದೇಶಕಿ ಪ್ರೀತಿ ನಾಥ್ ಮಾತನಾಡಿ, ಭಾರತದ ಆರ್ಥಿಕತೆಯಲ್ಲಿ ಕೃಷಿಯ ಪಾತ್ರ ದೊಡ್ಡದಿದೆ. ಕಡಿಮೆ ಇಂಟರ್ನೆಟ್ ಸೌಲಭ್ಯವಿರುವ ಪ್ರದೇಶಗಳಲ್ಲೂ ಕಾರ್ಯನಿರ್ವಹಿಸುವ ಅಗ್ಗದ ಮತ್ತು ರೈತರಿಗೆ ಸುಲಭವಾಗಿ ಲಭ್ಯವಾಗುವ ಎಐ ತಂತ್ರಜ್ಞಾನವನ್ನು ಗುರುತಿಸುವುದು ಈ ಸಭೆಯ ಮುಖ್ಯ ಉದ್ದೇಶ ಎಂದರು. ಸಮಾರೋಪದಲ್ಲಿ ಮಾತನಾಡಿದ ಎನ್ಟಿಕೆ ಡೀನ್ (ಸಂಶೋಧನೆ) ಪ್ರೊ. ಕೆ. ಉದಯ ಭಟ್ ಅವರು ವಿವಿಧ ಸಂಸ್ಥೆಗಳ ನಡುವಿನ ಸಂಶೋಧನೆಗೆ ಎನ್ಐಟಿಕೆ ಸಂಪೂರ್ಣ ಬೆಂಬಲ ನೀಡಲಿದೆ ಎಂದು ಭರವಸೆ ನೀಡಿದರು. ಈ ಕಾರ್ಯಕ್ರಮವನ್ನು ಎನ್ಐಟಿಕೆಯ ಡಾ.ಜೆ.ನಿ.ರಾಜನ್ ಮತ್ತು ಡಾ. ಸೌರವ್ ಕಾಂತಿ ಅಡ್ಯಾ ಹಾಗೂ ಎರ್ನೆಟ್ ಇಂಡಿಯಾದ ಡಾ. ಪವೆಂತನ್ ಕಾರ್ಯಕ್ರಮ ಸಂಯೋಜಿಸಿದ್ದರು.
ವಿಪಕ್ಷಗಳಿಂದ ಅವಿಶ್ವಾಸ ನೋಟಿಸ್| ಲೋಕಸಭೆ ಕಲಾಪಗಳ ಅಧ್ಯಕ್ಷತೆ ವಹಿಸದಿರಲು ಸ್ಪೀಕರ್ ಓಂ ಬಿರ್ಲಾ ನಿರ್ಧಾರ
ಹೊಸದಿಲ್ಲಿ, ಫೆ. 10: ಲೋಕಸಭೆ ಸ್ವೀಕರ್ ಒಂ ಬಿರ್ಲಾ ಅವರನ್ನು ಪದಚ್ಯುತಗೊಳಿಸುವಂತೆ ಕೋರಿ ಸಲ್ಲಿಸಲಾದ ನೋಟಿಸ್ ಇತ್ಯರ್ಥವಾಗುವವರೆಗೆ ಅವರು ಸದನದ ಕಲಾಪಗಳ ಅಧ್ಯಕ್ಷತೆ ವಹಿಸುವುದಿಲ್ಲ ಎಂದು ಮೂಲಗಳು ಮಂಗಳವಾರ ತಿಳಿಸಿವೆ. ರಾಷ್ಟ್ರಪತಿ ಅವರ ಭಾಷಣಕ್ಕೆ ವಂದನಾ ನಿರ್ಣಯದ ಸಂದರ್ಭ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ ಹಾಗೂ ಇತರ ಸದಸ್ಯರಿಗೆ ಮಾತನಾಡಲು ಅವಕಾಶ ನೀಡಿಲ್ಲ ಹಾಗೂ 8 ಮಂದಿ ಸದಸ್ಯರನ್ನು ಅಮಾನತುಗೊಳಿಸಲಾಗಿದೆ ಎಂದು ಆರೋಪಿಸಿ ಪ್ರತಿಪಕ್ಷಗಳು ಬಿರ್ಲಾ ಅವರ ಪದಚ್ಯುತಿಗೆ ನಿರ್ಣಯ ಮಂಡಿಸಲು ನೋಟಿಸ್ ಸಲ್ಲಿಸಿದ ಬಳಿಕ ಈ ಬೆಳವಣಿಗೆ ನಡೆದಿದೆ. ಪ್ರತಿಪಕ್ಷ ಸಲ್ಲಿಸಿದ ನೋಟಿಸ್ ಅನ್ನು ಪರಿಶೀಲಿಸುವಂತೆ ಹಾಗೂ ಸಂಸದೀಯ ನಿಯಮಗಳಿಗೆ ಅನುಗುಣವಾಗಿ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಓಂ ಬಿರ್ಲಾ ಅವರು ಲೋಕಸಭೆಯ ಪ್ರಧಾನ ಕಾರ್ಯದಶಿ ಉತ್ಪಲ್ ಕುಮಾರ್ ಸಿಂಗ್ ಅವರಿಗೆ ನಿರ್ದೇಶಿಸಿದ್ದಾರೆ.
ಶಹಾಪುರ | ಶಿಕ್ಷಣವೇ ವ್ಯಕ್ತಿಯ ವ್ಯಕ್ತಿತ್ವವನ್ನು ರೂಪಿಸುವ ಶಕ್ತಿ : ದೇವಿಂದ್ರಪ್ಪ ಮಡಿವಾಳಕರ
ಶಹಾಪುರ: ಶಿಕ್ಷಣವೇ ವ್ಯಕ್ತಿತ್ವವನ್ನು ರೂಪಿಸುವ ಶಕ್ತಿಯಾಗಿದ್ದು, ಗ್ರಾಮೀಣ ಪ್ರದೇಶದ ಮಕ್ಕಳಿಗೂ ಗುಣಮಟ್ಟದ ಶಿಕ್ಷಣದ ಅವಕಾಶ ದೊರಕುತ್ತಿರುವುದು ಸಂತಸದ ಸಂಗತಿ ಎಂದು ಭೀಮರಾಯನಗುಡಿಯ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ದೇವಿಂದ್ರಪ್ಪ ಮಡಿವಾಳಕರ ಹೇಳಿದರು. ದೋರನಹಳ್ಳಿ ಪಟ್ಟಣದ ಡಿ.ಡಿ.ಯು ಸಿ.ಬಿ.ಎಸ್.ಇ ಶಾಲೆಯ 6ನೇ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಇಂತಹ ಶಿಕ್ಷಣ ಸಂಸ್ಥೆಗಳು ಸಮಾಜದ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡುತ್ತಿವೆ ಎಂದು ಅಭಿಪ್ರಾಯಪಟ್ಟರು. ಶಹಾಪುರ ಪ್ರಥಮ ದರ್ಜೆ ಕಾಲೇಜಿನ ನಿರ್ವಹಣಾ ಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ಶಂಕ್ರಮ್ಮಾ ಪಾಟೀಲ್ ಮಾತನಾಡಿ, ಹೆಣ್ಣು ಮಕ್ಕಳ ಬಗ್ಗೆ ಯಾವುದೇ ಹಿಂಜರಿಕೆ ತೋರಬಾರದು. ಇಂದಿನ ಸಮಾಜದಲ್ಲಿ ಮಹಿಳೆಯರು ಶಿಕ್ಷಣದ ಮೂಲಕ ಎಲ್ಲಾ ಕ್ಷೇತ್ರಗಳಲ್ಲೂ ಸಾಧನೆ ಮಾಡುತ್ತಿದ್ದಾರೆ. ಆದ್ದರಿಂದ ಹೆಣ್ಣು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ಅವರ ಭವಿಷ್ಯವನ್ನು ಬೆಳಗಿಸುವುದು ಪ್ರತಿಯೊಬ್ಬ ಪಾಲಕರ ಕರ್ತವ್ಯವಾಗಿದೆ ಎಂದರು. ಸಂಸ್ಥಾಪಕ ಡಾ. ಭೀಮಣ್ಣ ಮೇಟಿ ಮಾತನಾಡಿ, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಗುಣಮಟ್ಟದ ಶಿಕ್ಷಣವೇ ಮಕ್ಕಳ ಭವಿಷ್ಯ ನಿರ್ಮಾಣದ ಪ್ರಮುಖ ಆಧಾರವಾಗಿದೆ. ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸುವುದರ ಜೊತೆಗೆ ಸಂಸ್ಕಾರ, ಶಿಸ್ತು ಮತ್ತು ನೈತಿಕ ಮೌಲ್ಯಗಳನ್ನು ರೂಢಿಸಬೇಕು ಎಂದು ಹೇಳಿದರು. ಪಾಲಕರು ಮಕ್ಕಳ ವಿದ್ಯಾಭ್ಯಾಸದ ಕಡೆ ವಿಶೇಷ ಗಮನ ಹರಿಸಿ, ಉತ್ತಮ ಹವ್ಯಾಸಗಳನ್ನು ಬೆಳೆಸಲು ಪ್ರೋತ್ಸಾಹಿಸಬೇಕು ಎಂದರು. ಶಾಲೆಯ ಮುಖ್ಯಗುರು ಪ್ರಕಾಶ ಅವರು ವಾರ್ಷಿಕ ವರದಿಯನ್ನು ಮಂಡಿಸಿ, ಕಳೆದ ವರ್ಷದಲ್ಲಿ ನಡೆದ ಶೈಕ್ಷಣಿಕ, ಸಾಂಸ್ಕೃತಿಕ ಮತ್ತು ಕ್ರೀಡಾ ಚಟುವಟಿಕೆಗಳ ವಿವರಗಳನ್ನು ನೀಡಿದರು. ಶಾಲೆಯ ಅಭಿವೃದ್ಧಿಗೆ ಶಿಕ್ಷಕರು, ಪಾಲಕರು ಮತ್ತು ಆಡಳಿತ ಮಂಡಳಿಯ ಸಹಕಾರ ಮಹತ್ವದ್ದಾಗಿದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಸಾಧನೆಗೈದ ಹಳೆಯ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ವಿದ್ಯಾರ್ಥಿಗಳು ದೇಶಭಕ್ತಿ ಗೀತೆಗಳು, ನೃತ್ಯಗಳು ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆತ್ಮವಿಶ್ವಾಸದಿಂದ ಪ್ರದರ್ಶಿಸಿ ಮೆಚ್ಚುಗೆ ಪಡೆದರು. ಶಾಲೆಯ ಆಡಳಿತ ಮಂಡಳಿಯ ಸದಸ್ಯರು, ಶಿಕ್ಷಕರು, ಪಾಲಕರು ಹಾಗೂ ಸ್ಥಳೀಯ ಗಣ್ಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ವಿದ್ಯಾರ್ಥಿಗಳು ಪ್ರಾರ್ಥನೆ ಸಲ್ಲಿಸಿದರು. ಶಿಕ್ಷಕಿ ಸಂಗಮ್ಮ ಸ್ವಾಗತಿಸಿದರು. ಶಿಕ್ಷಕಿ ಲಕ್ಷ್ಮಿ ಕಾರ್ಯಕ್ರಮ ನಿರೂಪಿಸಿದರು.
ಭಾರತ-ಅಮೆರಿಕ ಒಪ್ಪಂದ| ಪ್ರತಿಭಟನೆ ಏಕೈಕ ದಾರಿ: ರಾಕೇಶ್ ಟಿಕಾಯತ್
ಹೊಸದಿಲ್ಲಿ, ಫೆ. 10: ಭಾರತ ಹಾಗೂ ಆಮೆರಿಕ ವ್ಯಾಪಾರ ಒಪ್ಪಂದವನ್ನು ಮಂಗಳವಾರ ತರಾಟೆಗೆ ತೆಗೆದುಕೊಂಡಿರುವ ಭಾರತೀಯ ಕಿಸಾನ್ ಒಕ್ಕೂಟದ ನಾಯಕ ರಾಕೇಶ್ ಟಿಕಾಯತ್, ಈ ಒಪ್ಪಂದದ ವಿರುದ್ಧ ಗ್ರಾಮಗಳಾದ್ಯಂತ ಪ್ರತಿಭಟನೆ ನಡೆಸಲಾಗುವುದು ಎಂದು ಹೇಳಿದ್ದಾರೆ. ರೈತರ ಹಿತಾಸಕ್ತಿಯನ್ನು ರಕ್ಷಿಸುವುದಾಗಿ ಕೇಂದ್ರ ಸರಕಾರ ಸುಳ್ಳು ಹೇಳುತ್ತಿದೆ ಎಂದು ಅವರು ಆರೋಪಿಸಿದ್ದಾರೆ. ದಿಲ್ಲಿಯಲ್ಲಿ ನಡೆದ ಸಾರ್ವಜನಿಕ ಸಭೆಯ ನೇಪಥ್ಯದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 1992ರಲ್ಲಿ ಭಾರತ ಹೊಸ ಆರ್ಥಿಕತೆಗೆ ತೆರೆದುಕೊಂಡ ಆರಂಭಿಕ ದಿನಗಳ ಪರಿಸ್ಥಿತಿಯನ್ನು ಪ್ರಸಕ್ತ ಪರಿಸ್ಥಿತಿಗೆ ಹೋಲಿಸಿದರು. ‘‘ಭಾರತ-ಅಮೆರಿಕ ಒಪ್ಪಂದ ನಡೆದ ರೀತಿ, ಇದು ಭಾರತಕ್ಕೆ ಅಪಾಯಕಾರಿಯಾಗಲಿದೆ, ನಾವು ಮಾತನಾಡಲೇ ಬೇಕು’’ ಎಂದು ಅವರು ಹೇಳಿದ್ದಾರೆ. ‘‘ಇದು ಏಕಪಕ್ಷೀಯ ಒಪ್ಪಂದ, ಒತ್ತಡದಿಂದ ಆದ ಒಪ್ಪಂದ. ಇದು ಭಾರತೀಯ ರೈತರಿಗೆ ಸ್ವೀಕಾರಾರ್ಹವಲ್ಲ. ಅವರು ಸಬ್ಸಿಡಿ ಸರಕುಗಳನ್ನು ಇಲ್ಲಿ ಎಸೆಯುತ್ತಾರೆ, ನಮ್ಮ ರೈತರಿಗೆ ಅವರ ಉತ್ಪನ್ನಗಳನ್ನು ಮಾರಾಟ ಮಾಡಲು ಸಾಧ್ಯವಾಗುವುದಿಲ್ಲ’’ ಎಂದು ಟಿಕಾಯತ್ ಹೇಳಿದ್ದಾರೆ. ರೈತರನ್ನು ರಕ್ಷಿಸಲಾಗುವುದು ಎಂಬ ಸರಕಾರದ ಭರವಸೆಯ ಕುರಿತು ಪ್ರಶ್ನಿಸಿದಾಗ ಅವರು, ‘‘ಸರಕಾರ ಸುಳ್ಳು ಹೇಳುತ್ತಿದೆ. ಅವರು ಏನನ್ನು ಕೂಡ ಪ್ರತಿಪಾದಿಸಬಹುದು. ಪ್ರತಿಭಟನೆ ಏಕೈಕ ದಾರಿ’’ ಎಂದಿದ್ದಾರೆ.
ಗುರುಮಠಕಲ್ | ಹಬೀಬ್ ಅಬ್ದುಲ್ಲಾ ನಿಧನಕ್ಕೆ ಶಾಸಕ ಶರಣಗೌಡ ಕಂದಕೂರ್ ಸಂತಾಪ
ಗುರುಮಠಕಲ್: ಜೆಡಿಎಸ್ ಪಕ್ಷದ ಹಿರಿಯ ಮುಖಂಡರಾದ ಹಬೀಬ್ ಅಹಮ್ಮದ್ ಅವರ ಅಣ್ಣ ಹಬೀಬ್ ಅಬ್ದುಲ್ಲಾ ಅವರ ನಿಧನಕ್ಕೆ ಶಾಸಕ ಶರಣಗೌಡ ಕಂದಕೂರ್ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಕಳೆದ ಫೆ.6ರಂದು ವಯೋಸಹಜ ಕಾಯಿಲೆಯಿಂದ ಹಬೀಬ್ ಅಬ್ದುಲ್ಲಾ ಅವರು ನಿಧನರಾಗಿದ್ದರು. ಈ ಹಿನ್ನೆಲೆಯಲ್ಲಿ ಫೆ.9ರಂದು ಶಾಸಕ ಶರಣಗೌಡ ಕಂದಕೂರ್ ಅವರು ಮೃತರ ನಿವಾಸಕ್ಕೆ ಭೇಟಿ ನೀಡಿ, ಹಬೀಬ್ ಅಹಮ್ಮದ್ ಹಾಗೂ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದರು. ಈ ಸಂದರ್ಭದಲ್ಲಿ ಮೃತರ ಆತ್ಮಕ್ಕೆ ಶಾಂತಿ ಸಿಗಲೆಂದು ಹಾಗೂ ಅವರ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿಯನ್ನು ದೇವರು ಕುಟುಂಬಕ್ಕೆ ನೀಡಲೆಂದು ಪ್ರಾರ್ಥಿಸಿದರು. ಶಾಸಕರ ಭೇಟಿಯ ಸಂದರ್ಭದಲ್ಲಿ ಶರಣು ಅವಂಟಿ, ರವಿ, ಹಬೀಬ್ ಅಬೂಬಕ್ಕರ್, ಹಬೀಬ್ ಅಲಿ ಸೇರಿದಂತೆ ಪಕ್ಷದ ಕಾರ್ಯಕರ್ತರು ಮತ್ತು ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.
ಕಲಬುರಗಿ: ಗನ್ ತೋರಿಸಿ ಡ್ಯಾನ್ಸ್ ಮಾಡಿರುವ ವೀಡಿಯೋ ವೈರಲ್ ಆದ ಬೆನ್ನಲ್ಲೆ ಕಾಂಗ್ರೆಸ್ ಮುಖಂಡ ಮತೀನ್ ಪಟೇಲ್ ವಿರುದ್ಧ ಇಲ್ಲಿನ ಚೌಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಫಜಲಪುರ ಶಾಸಕ ಎಂ.ವೈ.ಪಾಟೀಲ್ ಅವರ ಆಪ್ತರಲ್ಲಿ ಗುರುತಿಸಿಕೊಂಡಿರುವ ಕಾಂಗ್ರೆಸ್ ಮುಖಂಡ ಮತೀನ್ ಪಟೇಲ್, ಇತ್ತೀಚೆಗೆ ಕಲಬುರಗಿ ನಗರದ ತಮ್ಮ ತಂಗಿಯ ಮಗಳ ಮದುವೆ ಪೂರ್ವದ ಕಾರ್ಯಕ್ರಮವೊಂದರಲ್ಲಿ ಗನ್ ತೋರಿಸಿ, ಡ್ಯಾನ್ಸ್ ಮಾಡಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ಕುರಿತಾಗಿ ಪರಿಶೀಲಿಸಿದ ನಗರ ಪೊಲೀಸರು, ಸಾಮಾಜಿಕ ಜಾಲತಾಣಗಳಲ್ಲಿ ಸಾರ್ವಜನಿಕವಾಗಿ ಶಸ್ತ್ರಾಸ್ತ್ರ ಪ್ರದರ್ಶಿಸಿದ್ದ ಮತೀನ್ ಪಟೇಲ್ ವಿರುದ್ಧ ಕಲಬುರಗಿ ನಗರದ ಚೌಕ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಿಕೊಂಡಿದ್ದಾರೆ. ಚೌಕ್ ಪೊಲೀಸ್ ಠಾಣೆಯಲ್ಲಿ ಗುನ್ನೆ ನಂಬರ್ 33/2026 ಕಲಂ 30 ಆರ್ಮ್ಸ್ ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಬಾಂಗ್ಲಾದೇಶದ ಉತ್ಪನ್ನಗಳಿಗೆ ಅಮೆರಿಕದಿಂದ ಶೇ.19ರಷ್ಟು ಸುಂಕ| ಉಭಯ ದೇಶಗಳ ನಡುವೆ ಮಹತ್ವದ ವ್ಯಾಪಾರ ಒಪ್ಪಂದ
ಢಾಕಾ,ಫೆ.10: ಪಾರಸ್ಪರಿಕ ಸುಂಕಕ್ಕೆ ಸಂಬಂಧಿಸಿದ ಅಮೆರಿಕ ಹಾಗೂ ಬಾಂಗ್ಲಾದೇಶ ನಡುವೆ ಸೋಮವಾರ ಒಪ್ಪಂದ ಏರ್ಪಟ್ಟಿದ್ದು, ದ್ವಿಪಕ್ಷೀಯ ಆರ್ಥಿಕ ಬಾಂಧವ್ಯವನ್ನು ಬಲಪಡಿಸಲು ಉಭಯರಾಷ್ಟ್ರಗಳು ಸಮ್ಮತಿಸಿವೆ. ನೂತನ ಒಪ್ಪಂದದಡಿ ಬಾಂಗ್ಲಾದೇಶವು ಅಮೆರಿಕದ ಮಾರುಕಟ್ಟೆಗೆ ರಫ್ತು ಮಾಡುವ ಉತ್ಪನ್ನಗಳಿಗೆ ಟ್ರಂಪ್ ಆಡಳಿತ ಶೇ.19ರಷ್ಟು ಸುಂಕವನ್ನು ವಿಧಿಸಲಿದೆ. ಈ ಹಿಂದೆ ಬಾಂಗ್ಲಾ ಉತ್ಪನ್ನಗಳಿಗೆ ಅಮೆರಿಕವು ಶೇ.20ರಷ್ಟು ಸುಂಕ ವಿಧಿಸುತ್ತಿದ್ದು, ಈಗ ತುಸು ಇಳಿಕೆಯಾಗಿದೆ. ಅಮೆರಿಕ ವ್ಯಾಪಾರ ಪ್ರತಿನಿಧಿ ಜೇಮಿಸನ್ ಗ್ರೀರ್ ಹಾಗೂ ಬಾಂಗ್ಲಾದೇಶದ ವಾಣಿಜ್ಯ, ಜವಳಿ ಹಾಗೂ ಸೆಣಬು, ನಾಗರಿಕಯಾನ ಹಾಗೂ ಪ್ರವಾಸೋದ್ಯಮ ಇಲಾಖೆಗಳ ಉಸ್ತುವಾರಿ ಶೇಖ್ ಬಶೀರುದ್ದೀನ್ ಒಪ್ಪಂದಕ್ಕೆ ಸಹಿಹಾಕಿದ್ದಾರೆ. ಬಾಂಗ್ಲಾದೇಶವು ರಫ್ತು ಮಾಡುವ ಉಡುಪುಗಳನ್ನು ಅಮೆರಿಕದಲ್ಲಿ ತಯಾರಾಗುವ ಸಿಂಥೆಟಿಕ್ ಫೈಬರ್ ಹಾಗೂ ಹತ್ತಿಯಿಂದ ತಯಾರಿಸಲಾಗುವುದೆಂದು ಬಾಂಗ್ಲಾದೇಶದ ವಾಣಿಜ್ಯ ಕಾರ್ಯದರ್ಶಿ ಮೆಹಬೂಬ್ ರಹ್ಮಾನ್ ತಿಳಿಸಿದ್ದಾರೆ ಈ ಉತ್ಪನ್ನಗಳಿಗೆ ಉಭಯದೇಶಗಳು ಶೂನ್ಯ ಸುಂಕವನ್ನು ವಿಧಿಸಲಿವೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಮಗುವಿಗೆ ಜನ್ಮನೀಡಿದ ಬಾಣಂತಿ ಮೃತ್ಯು
ಕೊಲ್ಲೂರು, ಫೆ.10: ಮಗುವಿಗೆ ಜನ್ಮ ನೀಡಿದ ಬಾಣಂತಿಯೊಬ್ಬರು ಹೃದಯ ಸಂಬಂಧಿ ಕಾಯಿಲೆ ಯಿಂದ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟ ಬಗ್ಗೆ ವರದಿಯಾಗಿದೆ. ಮೃತರನ್ನು ಕೆರಾಡಿಯ ವಿಷ್ಣುಮೂರ್ತಿ ನಾಯಕ್ ಎಂಬವರ ಮಗಳು ವಿನಯಾ (28) ಎಂದು ಗುರುತಿಸಲಾಗಿದೆ. ಇವರು ಜ.27ರಂದು ಕುಂದಾಪುರ ಸರಕಾರಿ ಆಸ್ಪತ್ರೆಯಲ್ಲಿ ಅವಧಿ ಪೂರ್ವ 8 ತಿಂಗಳಿಗೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಫೆ.5ರಂದು ವಿನಯಾ ಅವರಿಗೆ ಹೃದಯ ಸಂಬಂಧಿ ಸಮಸ್ಯೆ ಕಾಣಿಸಿಕೊಂಡಿದ್ದು, ವೈದ್ಯರ ಸೂಚನೆ ಯಂತೆ ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಫೆ.6ರಂದು ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಗಂಭೀರ ಸ್ಥಿತಿಯಲ್ಲಿದ್ದ ಅವರು ಫೆ.9ರಂದು ಮಧ್ಯಾಹ್ನ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟರು ಎಂದು ತಿಳಿದು ಬಂದಿದೆ. ಈ ಬಗ್ಗೆ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇಸ್ರೇಲ್ ಅಧ್ಯಕ್ಷರ ಭೇಟಿ ವಿರುದ್ಧ ಆಸ್ಟ್ರೇಲಿಯದಲ್ಲಿ ಹಿಂಸಾತ್ಮಕ ಪ್ರತಿಭಟನೆ: ಹಲವರಿಗೆ ಗಾಯ
ಮೆಲ್ಬೋರ್ನ್,ಫೆ.10: ಇಸ್ರೇಲ್ ಅಧ್ಯಕ್ಷ ಇಸಾಕ್ ಹೆರೆರ್ೂಗ್ ಅವರ ಆಸ್ಟ್ರೇಲಿಯ ಭೇಟಿಯನ್ನು ವಿರೋಧಿಸಿ ಮೆಲ್ಬೋರ್ನ್ ಹಾಗೂ ಸಿಡ್ನಿ ನಗರಗಳಲ್ಲಿ ಭುಗಿಲೆದ್ದಿರುವ ಪ್ರತಿಭಟನೆ ಮಂಗಳವಾರ ಹಿಂಸೆಗೆ ತಿರುಗಿದೆ. ಎರಡೂ ನಗರಗಳಲ್ಲಿ ಪ್ರತಿಭಟನಕಾರರು ಹಾಗೂ ಪೊಲೀಸರ ನಡುವೆ ಘರ್ಷಣೆ ಭುಗಿಲೆದ್ದಿದ್ದು, ಹಲವಾರು ಮಂದಿ ಗಾಯಗೊಂಡಿದ್ದಾರೆ. ಸಿಡ್ನಿಯಲ್ಲಿ ನಡೆದ ಹಿಂಸಾಚಾರದಲ್ಲಿ ನ್ಯೂಸೌತ್ವೇಲ್ಸ್ನ ಗ್ರೀನ್ಸ್ ಪಕ್ಷದ ಸಂಸದ ಅಬಿಗೈಲ್ ಸೇರಿದಂತೆ ಹಲವಾರು ಮಂದಿ ಗಾಯಗೊಂಡಿದ್ದಾರೆ. ಪ್ರತಿಭಟನಾ ಸ್ಥಳದಿಂದ ನಿರ್ಗಮಿಸುತ್ತಿದ್ದಾಗ ಪೊಲೀಸರು ತನಗೆ ಥಳಿಸಿದ್ದಾರೆಂದು ಅವರು ಆಪಾದಿಸಿದ್ದಾರೆ. ಸಿಡ್ನಿಯ ಬೊಂಡಿ ಬೀಚ್ನಲ್ಲಿ ಕಳೆದ ವರ್ಷದ ಡಿಸೆಂಬರ್ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಮೃತಪಟ್ಟ 15 ಮಂದಿಯ ಶ್ರದ್ದಾಂಜಲಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಹೆರೊರ್ಗ್ ಅವರನ್ನು ಆಸ್ಟ್ರೇಲಿಯ ಸರಕಾರ ಆಹ್ವಾನಿಸಿತ್ತು. ಸಿಡ್ನಿಯಲ್ಲಿ ಸೋಮವಾರ ಸಂಜೆ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿ 27 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಸಿಡ್ನಿಯ ಟೌನ್ ಹಾಲ್ ಎದುರು ಪ್ರತಿಭಟನೆ ನಡೆಸುತ್ತಿದ್ದ ಸಾವಿರಾರು ಮಂದಿಯನ್ನು ತೆರವುಗೊಳಿಸಲು ಪೊಲೀಸರು ಯತ್ನಿಸಿದಾಗ ಹಿಂಸಾಚಾರ ಭುಗಿಲೆದ್ದಿತ್ತು. ಬೊಂಡಿ ಬೀಚ್ ದಾಳಿಯಲ್ಲಿ ಮೃತರ ಕುಟಂಬಸ್ಥರನ್ನು ಇಸ್ರೇಲ್ ಅಧ್ಯಕ್ಷರು ಭೇಟಿಯಾಗಲಿದ್ದಾರೆ.
‘ಮಾರ್ಜಾಲ ಮೋಹಿನಿಯರು’ ಹಾಸ್ಯಪ್ರಬಂಧಗಳ ಸಂಕಲನಕ್ಕೆ ದಿ.ಮಾಣಿಕ ರಾವ್ ದತ್ತಿನಿಧಿ ಪುಸ್ತಕ ಪುರಸ್ಕಾರ
ಉಡುಪಿ : ಕನ್ನಡ ಖ್ಯಾತ ಕವಯಿತ್ರಿ ಹಾಗೂ ಸಾಹಿತಿ ಸುಕನ್ಯಾ ಕಳಸ ಅವರ ‘ಮಾರ್ಜಾಲ ಮೋಹಿನಿಯರು’ ಎಂಬ ಹಾಸ್ಯಪ್ರಬಂಧಗಳ ಸಂಕಲನಕ್ಕೆ ಕನ್ನಡ ಸಾಹಿತ್ಯ ಪರಿಷತ್ತಿನ 2024ನೇ ಸಾಲಿನ ದಿ.ಮಾಣಿಕ ರಾವ್ ದತ್ತಿನಿಧಿ ಪುಸ್ತಕ ಪುರಸ್ಕಾರ ಲಭಿಸಿದೆ. ಈ ಕೃತಿಯನ್ನು ನವಕರ್ನಾಟಕ ಪ್ರಕಾಶನ ಪ್ರಕಟಿಸಿದೆ.
ಇರಾನ್ ಆಡಳಿತದ ಜೊತೆ ಅಮೆರಿಕದ ಸಂಭಾವ್ಯ ಒಪ್ಪಂದ ವಿರೋಧಿಸಿ ಯುವಕ ಆತ್ಮಹತ್ಯೆ
ಟೆಹರಾನ್,ಫೆ.10: ಇರಾನ್ ಆಡಳಿತದ ಜೊತೆ ಒಪ್ಪಂದ ಮಾಡಿಕೊಳ್ಳದಂತೆ ಹಾಗೂ ಆ ದೇಶದ ಮೇಲೆ ದಾಳಿ ನಡೆಸುವಂತೆ ಆಗ್ರಹಿಸುವ ವೀಡಿಯೊವೊಂದನ್ನು ಪೋಸ್ಟ್ ಮಾಡಿದ ಬಳಿಕ ಇರಾನ್ನ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ಸೋಮವಾರ ವರದಿಯಾಗಿದೆ. ಆತ್ಮಹತ್ಯೆಗೆ ಶರಣಾದ ಯುವಕನನ್ನು ಇರಾನ್ನ ಬಂದರು ನಗರದ ಬುಶೇರ್ನ ನಿವಾಸಿ ಪೌರಿ ಹಾಮೀದಿ(28) ಎಂದು ಗುರುತಿಸಲಾಗಿದೆ. ಕಳೆದ ಗುರುವಾರ ಆತ ಈ 10 ನಿಮಿಷ ಹಾಗೂ 44 ಸೆಕೆಂಡುಗಳ ವೀಡಿಯೊವನ್ನು ಪೋಸ್ಟ್ ಮಾಡಿದ್ದ ಎನ್ನಲಾಗಿದೆ. ವೀಡಿಯೋವನ್ನು ವೀಕ್ಷಿಸುವ ಸಂದರ್ಭ ನಾನು ಜೀವಂತವಿರುವುದಿಲ್ಲವೆಂದೂ ಆತ ಹೇಳಿಕೊಂಡಿದ್ದಾನೆ. ಇರಾನ್ನಾದ್ಯಂತ ಕಳೆದ ತಿಂಗಳು ನಡೆದ ಸರಕಾರಿ ವಿರೋಧಿ ಪ್ರತಿಭಟನೆಯ ಸಂದರ್ಭ ಸರಕಾರವು ಪ್ರತಿಭಟನಕಾರರನ್ನು ಹಿಂಸಾತ್ಮಕವಾಗಿ ದಮನಿಸಿದೆಯೆಂದು ಆತ ವೀಡಿಯೋದಲ್ಲಿ ಆರೋಪಿಸಿದ್ದಾನೆ. ರಶ್ಯ-ಉಕ್ರೇನ್ ಯುದ್ಧ, ಇಸ್ರೇಲ್-ಫೆಲೆಸ್ತೀನ್ ಯುದ್ಧಕ್ಕಿಂತಲೂ ಹೆಚ್ಚಾಗಿ 40 ಸಾವಿರ ಮಂದಿ ಇರಾನ್ ಪ್ರತಿಭಟನಕಾರರನ್ನು ಹತ್ಯೆಗೈಯಲಾಗಿದೆ ’’ ಎಂದು ಈ ಯುವಕ ಹೇಳಿದ್ದಾನೆೆ. ‘‘ಪ್ರತಿಭಟನೆಗಳನ್ನು ಮುಂದುವರಿಸುವಂತೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್ ಜನತೆಗೆ ಕರೆ ನೀಡಿದ್ದರು. ನಾವು ಅವರ ಮಾತನ್ನು ನಂಬಿದ್ದೆವು. ಆದರೆ ಶಸ್ತ್ರಾಸ್ತ್ರಗಳಿಲ್ಲದೆ ಹೋರಾಟ ಸಾಧ್ಯವಿಲ್ಲ. ಬಾಹ್ಯ ಬೆಂಬಲವಿಲ್ಲದೆ ಇರಾನ್ನ ಆಡಳಿತದ ವಿರುದ್ಧ ಜಯಗಳಿಸಲು ಇರಾನಿಯನ್ನರಿಗೆ ಸಾಧ್ಯವಿಲ್ಲ. ಇರಾನ್ ಆಡಳಿತದ ಜೊತೆ ನಡೆಸುವ ಯಾವುದೇ ಒಪ್ಪಂದವು, ಪ್ರತಿಭಟನೆಯಲ್ಲಿ ಮೃತರಿಗೆ ಬಗೆಯುವ ದ್ರೋಹವಾಗಿದೆ. ಹೀಗಾಗಿ ಈ ಒಪ್ಪಂದ ಏರ್ಪಡದಂತೆ ಸಾಧ್ಯವಿರುವುದೆಲ್ಲವನ್ನೂ ಮಾಡಿ’’ ಎಂದು ಆತ ವೀಡಿಯೊದಲ್ಲಿ ಹೇಳಿಕೊಂಡಿದ್ದಾನೆ.
ಸೂಕ್ತ ಪ್ರಸ್ತಾವನೆ ಬಂದರೆ ನಂದಿಕೂರಿನಲ್ಲಿ ಗ್ರೀನ್ಫೀಲ್ಡ್ ಏರ್ಪೋರ್ಟ್ಗೆ ಅನುಮತಿ: ಸಚಿವ ರಾಮಮೋಹನ್ ನಾಯ್ಡು
ಉಡುಪಿ, ಫೆ.10: ರಾಜ್ಯ ಸರಕಾರವೂ ಸೇರಿದಂತೆ ಯಾವುದೇ ಏರ್ಪೋರ್ಟ್ ಡೆವಲಪರ್ರಿಂದ ಸೂಕ್ತವಾದ ಪ್ರಸ್ತಾವನೆ ಸಲ್ಲಿಕೆಯಾದರೆ ಕಾಪು ತಾಲೂಕಿನ ನಂದಿಕೂರಿನಲ್ಲಿ ಉಡಾನ್ ಯೋಜನೆಯಡಿ ಅಂತಾರಾಷ್ಟ್ರೀಯ ಸಬ್ ಏರ್ಪೋರ್ಟ್ನ್ನು ನಿರ್ಮಿಸಲು ಇಲಾಖೆ ಅನುಮೋದನೆ ನೀಡುವ ಬಗ್ಗೆ ಪರಿಶೀಲನೆ ನಡೆಸಲಾಗುವುದು ಎಂದು ಕೇಂದ್ರ ವಿಮಾನಯಾನ ಸಚಿವ ರಾಮ್ಮೋಹನ್ ನಾಯ್ದು ಭರವಸೆ ನೀಡಿದ್ದಾರೆ. ನಂದಿಕೂರಿನಲ್ಲಿ ವಿಮಾನನಿಲ್ದಾಣ ಸ್ಥಾಪನೆಯ ಕುರಿತಂತೆ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಅವರ ಕೋರಿಕೆ ಮೇರೆಗೆ ಉಡುಪಿ ಚಿಕ್ಕಮಗಳೂರು ಲೋಕಸಭಾ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಅವರು ಕಳೆದ ಅ.14ರಂದು ಇಲಾಖೆಗೆ ಬರೆದ ಪತ್ರಕ್ಕೆ ಜ.31ರಂದು ನೀಡಿದ ಉತ್ತರದಲ್ಲಿ ರಾಮ್ಮೋಹನ್ ನಾಯ್ದು ಈ ವಿಷಯ ತಿಳಿಸಿದ್ದಾರೆ. ಭಾರತ ಸರಕಾರ 2008ರಲ್ಲಿ ಗ್ರೀನ್ಫೀಲ್ಡ್ ಏರ್ಪೋರ್ಟ್(ಜಿಎಫ್ಎ) ಪಾಲಿಸಿಯನ್ನು ರೂಪಿಸಿದ್ದು, ಇದರ ಮಾರ್ಗ ಸೂಚಿಗಳು, ಕಾರ್ಯವಿಧಾನ ಹಾಗೂ ನಿಬಂಧನೆಗಳಂತೆ ದೇಶದಲ್ಲಿ ನೂತನ ಗ್ರೀನ್ಫೀಲ್ಡ್ ಏರ್ಪೋರ್ಟ್ ನಿರ್ಮಾಣಕ್ಕೆ ಕೇಂದ್ರ ಸರಕಾರ ಅನುಮತಿಯನ್ನು ನೀಡುತ್ತದೆ ಎಂದವರು ಹೇಳಿದ್ದಾರೆ. ಯೋಜನೆಯಂತೆ ರಾಜ್ಯ ಸರಕಾರವೂ ಸೇರಿದಂತೆ, ಯಾವುದೇ ಏರ್ಪೋರ್ಟ್ ಡೆವಲಪರ್ಗಳು ವಿಮಾನ ನಿಲ್ದಾಣವನ್ನು ನಿರ್ಮಿಸಲು ಬಯಸಿದರೆ, ಸೂಕ್ತವಾದ ಜಾಗವನ್ನು ಗುರುತಿಸಿ, ಆ ಜಾಗದಲ್ಲಿ ನಿಲ್ದಾಣ ಸ್ಥಾಪನೆಗೆ ಸಾಧ್ಯತಾ ಅಧ್ಯಯನ ನಡೆಸಿ ಪ್ರಸ್ತಾಪವನ್ನು ಕೇಂದ್ರ ಸರಕಾರಕ್ಕೆ ‘ಜಾಗದ ಕ್ಲಿಯರೆನ್ಸ್’ಗೆ ಕೇಂದ್ರ ಸರಕಾರಕ್ಕೆ ಸಲ್ಲಿಸಬೇಕು. ಆಗ ಸರಕಾರ ಅದನ್ನು ಪರಿಶೀಲಿಸಿ ಇನ್ಪ್ರಿನ್ಸಿಪಲ್ ಅನುಮೋದನೆ ನೀಡುತ್ತದೆ ಎಂದು ಸಚಿವರು ವಿವರಿಸಿದ್ದಾರೆ. ಕರ್ನಾಟಕದ ನಂದಿಕೂರಿಗೆ ಸಂಬಂಧಿಸಿದಂತೆ ಸದ್ಯಕ್ಕೆ ಗ್ರೀನ್ಫೀಲ್ಡ್ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಯಾವುದೇ ಪ್ರಸ್ತಾವನೆ ಸಲ್ಲಿಕೆಯಾಗಿಲ್ಲ. ಮುಂದೆ ರಾಜ್ಯ ಸರಕಾರ ಅಥವಾ ಏರ್ಪೋರ್ಟ್ ಡೆವಲಪರ್ರಿಂದ ಇದಕ್ಕೆ ಪ್ರಸ್ತಾಪ ಸಲ್ಲಿಕೆಯಾದರೆ ಗ್ರೀನ್ಫೀಲ್ಡ್ ಏರ್ಪೋರ್ಟ್ ಪಾಲಿಸಿ 2008ರ ನಿಬಂಧನೆಗಳಂತೆ ಅನುಮೋದನೆಗೆ ಪರಿಶೀಲನೆ ನಡೆಸಲಾಗುವುದು ಎಂದವರು ಹೇಳಿದ್ದಾರೆ. ಸದ್ಯ ದೇಶದಲ್ಲಿ 21 ಗ್ರೀನ್ಫೀಲ್ಡ್ ಏರ್ಪೋರ್ಟ್ಗಳಿದ್ದು, ಇವುಗಳಲ್ಲಿ ಕರ್ನಾಟಕದ ಕಲಬುರ್ಗಿ, ವಿಜಯಪುರ, ಹಾಸನ ಹಾಗೂ ಶಿವಮೊಗ್ಗ ವಿಮಾನ ನಿಲ್ದಾಣಗಳೂ ಸೇರಿವೆ. ಅಭಿವೃದ್ಧಿಯಾಗದ ಜಾಗದಲ್ಲಿ ಸಂಪೂರ್ಣ ಹೊಸದಾಗಿ ವಿಮಾನನಿಲ್ದಾಣವನ್ನು ನಿರ್ಮಿಸಿದರೆ ಅದನ್ನು ಗ್ರೀನ್ಫೀಲ್ಡ್ ಏರ್ಪೋರ್ಟ್ ಎಂದು ಕರೆಯಲಾಗುತ್ತದೆ. ನವಿಮುಂಬಯಿ ಇಂಟರ್ನೇಷನಲ್ ಏರ್ಪೋರ್ಟ್ ದೇಶದ ಅತ್ಯಂತ ವಿಶಾಲವಾದ ಗ್ರೀನ್ಫೀಲ್ಡ್ ಏರ್ಪೋರ್ಟ್ ಎನಿಸಿಕೊಂಡಿದೆ.
ರಶ್ಯದಿಂದ ತೈಲ ಖರೀದಿಗೆ ಭಾರತಕ್ಕೆ ನಿರ್ಬಂಧ| ಅಮೆರಿಕದ ವಿರುದ್ಧ ರಶ್ಯ ವಾಗ್ದಾಳಿ
ಮಾಸ್ಕೋ,ಫೆ.10: ರಶ್ಯದಿಂದ ತೈಲವನ್ನು ಖರೀದಿಸದಂತೆ ಭಾರತ ಮತ್ತಿತರ ದೇಶಗಳಿಗೆ ನಿರ್ಬಂಧ ವಿಧಿಸುತ್ತಿರುವುದಕ್ಕಾಗಿ ರಶ್ಯವು ಅಮೆರಿಕದ ಟ್ರಂಪ್ ಆಡಳಿತದ ವಿರುದ್ಧ ಮಂಗಳವಾರ ತೀವ್ರ ವಾಗ್ದಾಳಿ ನಡೆಸಿದೆ. ಟ್ರಂಪ್ ಬಳಗವು ಸುಂಕ ಹೇರಿಕೆ, ನಿರ್ಬಂದಗಳು ಹಾಗೂ ಆರ್ಥಿಕ ಪ್ರಾಬಲ್ಯವನ್ನು ಸಾಧಿಸಲು ನೇರವಾಗಿ ನಿಷೇಧ ಹೇರಿಕೆಯಂತಹ ಬೆದರಿಕೆಯ ಕ್ರಮಗಳನ್ನು ಈ ದೇಶಗಳ ವಿರುದ್ಧ ಅನುಸರಿಸುತ್ತಿದೆಯೆಂದು ರಶ್ಯದ ವಿದೇಶಾಂಗ ಸಚಿವ ಸೆರ್ಗೆಯಿ ಲ್ಯಾವ್ರೋವ್ ತಿಳಿಸಿದ್ದಾರೆ. ‘‘ಟ್ರಂಪ್ ಹಾಗೂ ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ನಡುವೆ ಕಳೆದ ವರ್ಷ ಆಲಾಸ್ಕದಲ್ಲಿ ನಡೆದ ಶೃಂಗಸಭೆಯಲ್ಲಿ, ಉಕ್ರೇನ್ ಸಂಘರ್ಷ ಕೊನೆಗೊಳಿಸುವ ಕುರಿತಾಗಿ ಅಮೆರಿಕ ಮಾಡಿದ್ದ ಪ್ರಸ್ತಾವನೆಯನ್ನು ಮಾಸ್ಕೋ ಸ್ವೀಕರಿಸಿತ್ತು. ಅಮೆರಿಕದ ನಿಬಂಧನೆಗಳನ್ನು ಒಪ್ಪಿಕೊಂಡ ಹೊರತಾಗಿಯೂ ವಾಶಿಂಗ್ಟನ್ ರಶ್ಯದ ವಿರುದ್ಧ ಹೊಸ ನಿರ್ಬಂಧಗಳನ್ನು ಹೇರಿದೆ ಹಾಗೂ ರಶ್ಯದಿಂದ ಇಂಧನ ಖರೀದಿಸದಂತೆ ಇತರ ದೇಶಗಳ ಮೇಲೆ ನಿರ್ಬಂಧ ಹೇರಿದೆ ಎಂದರು. ಸಾಗರ ಕಾನೂನಿನ ಕುರಿತಾದ ವಿಶ್ವಸಂಸ್ತೆಯ ಒಡಂಬಡಿಕೆಯನ್ನು ಉಲ್ಲೇಘಿಸಿ ಅಮೆರಿಕವು ಸಮುದ್ರದಲ್ಲಿ ಟ್ಯಾಂಕರ್ಗಳ ಮೇಲೆ ದಾಳಿ ನಡೆಸುತ್ತಿದೆ. ಭಾರತ ಹಾಗೂ ನಮ್ಮ ಇತರ ಪಾಲುದಾರರು ಕಡಿಮೆದರದ ಹಾಗೂ ಯೋಗ್ಯಬೆಲೆಯ ರಶ್ಯನ್ ಇಂಧನ ಸಂಪನ್ಮೂಲಗಳು ಖರೀದಿಸುವುದನ್ನು ನಿಷೇಧಿಸಲು ಅಮೆರಿಕವು ಯತ್ನಿಸುತ್ತಿದೆ ಮತ್ತು ಅಮೆರಿಕದ ದ್ರವೀಕೃತ ನೈಸರ್ಗಿಕ ಅನಿಲ (ಎಲ್ಎನ್ಜಿ)ವನ್ನು ದುಬಾರಿ ಬೆಲೆಗೆ ಖರೀದಿಸುವಂತೆ ಆ ದೇಶಗಳ ಮೇಲೆ ಒತ್ತಡ ಹೇರುತ್ತಿದೆ ಎಂದು ಲ್ಯಾವ್ರೋವ್ ತಿಳಿಸಿದ್ದಾರೆ. ಇಂಧನ ಮಾರ್ಗಗಳನ್ನು ನಿಯಂತ್ರಿಸುವ ಮೂಲಕ ಆರ್ಥಿಕ ಪ್ರಾಬಲ್ಯವನ್ನು ಸ್ಥಾಪಿಸುವುದು ವಾಶಿಂಗ್ಟನ್ನ ಉದ್ದೇಶವಾಗಿದೆ. ಇದಕ್ಕಾಗಿ ಅದು ಸುಂಕಗಳು, ನಿರ್ಬಂಧಗಳು, ಪ್ರತ್ಯಕ್ಷ ನಿಷೇಧಗಳು ಹೇರುತ್ತಿದೆ ಮತ್ತು ಇತರ ದೇಶಗಳ ಜೊತೆ ವ್ಯವಹಾರಗಳನ್ನು ನಡೆಸುವುದನ್ನು ತಡೆಗಟ್ಟುತ್ತಿದೆ ಎಂದರು. ನೂತನ ಭಾರತ-ಅಮೆರಿಕ ವ್ಯಾಪಾರ ಒಪ್ಪಂದದಡಿ, ಹೊಸದಿಲ್ಲಿಯು ರಶ್ಯದಿಂದ ತೈಲ ಖರೀದಿಯನ್ನು ನಿಲ್ಲಿಸಿದೆಯೆಂದು ಡೊನಾಲ್ಡ್ ಟ್ರಂಪ್ ಅವರು ಘೋಷಿಸಿದ ಬಳಿಕ ರಶ್ಯದಿಂದ ಈ ಮಹತ್ವದ ಪ್ರತಿಕ್ರಿಯೆ ಹೊರಬಿದ್ದಿದೆ.
ಅಂತಿಮ ಹಂತದಲ್ಲಿ ಭಾರತ-ಅಮೆರಿಕ ಮಧ್ಯಂತರ ವ್ಯಾಪಾರ ಒಪ್ಪಂದ: ವಾಸ್ತವಾಂಶ ಪತ್ರ ಬಿಡುಗಡೆಗೊಳಿಸಿದ ಶ್ವೇತಭವನ
ವಾಶಿಂಗ್ಟನ್,ಫೆ.10: ಮಹತ್ವದ ದ್ವಿಪಕ್ಷೀಯ ವ್ಯಾಪಾರ ಒಪ್ಪಂದ (ಬಿಟಿಎ) ವನ್ನು ಏರ್ಪಡಿಸಲು ಅಮೆರಿಕ ಹಾಗೂ ಭಾರತ ಶ್ರಮಿಸುತ್ತಿರುವಂತೆಯೇ, ಉಭಯದೇಶಗಳು ಮಧ್ಯಂತರ ವ್ಯಾಪಾರ ಒಪ್ಪಂದವೊಂದನ್ನು ಅಂತಿಮಗೊಳಿಸುವ ಹಂತದಲ್ಲಿರುವುದಾಗಿ ಶ್ವೇತಭವನವು ಸೋಮವಾರ ಬಿಡುಗಡೆಗೊಳಿಸಿರುವ ವಾಸ್ತವಾಂಶ ಪತ್ರ (ಫ್ಯಾಕ್ಟ್ಶೀಟ್) ತಿಳಿಸಿದೆ. ಸೇವೆಗಳು ಹಾಗೂ ಹೂಡಿಕೆ, ಕಾರ್ಮಿಕ ಮತ್ತು ಸರಕಾರದ ಮೂಲಕ ಉತ್ಪನ್ನಗಳ ಖರೀದಿ ಸೇರಿದಂತೆ ಇತ್ಯರ್ಥಕ್ಕೆ ಬಾಕಿಯುಳಿದಿರುವ ಕ್ಷೇತ್ರಗಳ ಬಗ್ಗೆ ಎರಡೂ ದೇಶಗಳು ಮಾತುಕತೆಯನ್ನು ಮುಂದುವರಿಸಲಿವೆ. ‘ಅಮೆರಿಕ ಹಾಗೂ ಭಾರತವು ಐತಿಹಾಸಿಕ ವ್ಯಾಪಾರ ಒಪ್ಪಂದ (ಮಧ್ಯಂತರ ಒಡಂಬಡಿಕೆ)ವನ್ನು ಘೋಷಿಸಿದೆ ’ ಎಂಬ ಶೀರ್ಷಿಕೆಯ ಈ ವಾಸ್ತವಾಂಶ ಪತ್ರದಲ್ಲಿ ಭಾರತವು ಅಮೆರಿಕದ ಎಲ್ಲಾ ಕೈಗಾರಿಕಾ ಉತ್ಪನ್ನಗಳು ಮತ್ತು ವಿವಿ ಆಹಾರ ಮತ್ತು ಕೃಷಿ ಉತ್ಪನ್ನಗಳ ಮೇಲಿನ ಸುಂಕವನ್ನು ರದ್ದುಪಡಿಸುವುದನ್ನು ಅಥವಾ ಕಡಿಮೆಗೊಳಿಸುವುದನ್ನು ಒಳಗೊಂಡಿದೆ. ಅಮೆರಿಕದ ಜನತೆಯ ಹಿತಾಸಕ್ತಿಗಳನ್ನು ಬಲಪಡಿಸಲು, ಅಮೆರಿಕದ ಆಹಾರ ಹಾಗೂ ಕೃಷಿ ಉತ್ಪನ್ನಗಳನ್ನು ಮೇಲಿನ ಸುಂಕವನ್ನು ಕಡಿಮೆಗೊಳಿಸುವ ನಿಟ್ಟಿನಲ್ಲಿ ಭಾರತದ ಬದ್ದತೆ ಸೇರಿದಂತೆ ಒಪ್ಪಂದದ ಮುಖ್ಯ ನಿಬಂಧನೆಗಳನ್ನು ಈ ವಾಸ್ತವಾಂಶ ಪತ್ರವು ಒಳಗೊಂಡಿದೆ. ಅಮೆರಿಕದಿಂದ ಇಂಧನ, ಮಾಹಿತಿ ಹಾಗೂ ಸಂಪರ್ಕ ತಂತ್ರಜ್ಞಾನ, ಕೃಷಿ, ಕಲ್ಲಿದ್ದಲು ಮತ್ತಿತರ ಉತ್ಪನ್ನಗಳು, ಒಣ ಸಂಸ್ಕರಿತ ಧಾನ್ಯಗಳು, ಕೆಂಪುಜೋಳ, ಬಾದಾಮಿ, ಗೋಡಂಬಿ, ವಾಲ್ನಟ್ ಮತ್ತಿತರ ಬೀಜಗಳು, ತಾಜಾ ಹಾಗೂ ಸಂಸ್ಕರಿತ ಹಣ್ಣುಗಳು, ಕೆಲವು ನಿರ್ದಿಷ್ಟ ದ್ವಿದಳ ಧಾನ್ಯಗಳು, ವೈನ್ ಹಾಗೂ ಸ್ಪಿರಿಟ್ ಉತ್ಪನ್ನ ಸೇರಿದಂತೆ 500 ಶತಕೋಟಿ ಡಾಲರ್ ಮೌಲ್ಯದ ಉತ್ಪನ್ನಗಳನ್ನು ಖರೀದಿಸುವ ಬದ್ಧತೆಯನ್ನು ಭಾರತ ವ್ಯಕ್ತಪಡಿಸಿದೆ ಎಂದು ಪತ್ರದಲ್ಲಿ ಹೇಳಲಾಗಿದೆ. ಜಗತ್ತಿನ ಯಾವುದೇ ಪ್ರಮುಖ ಆರ್ಥಿಕತೆಯ ರಾಷ್ಟ್ರಕಿಂತಲೂ ಅಧಿಕ ಸುಂಕಗಳನ್ನು ಭಾರತವು ಅಮೆರಿಕದ ಮೇಲೆ ಹೇರುತ್ತಾ ಬಂದಿದೆ. ಅಮೆರಿಕದ ಕೃಷಿ ಉತ್ಪನ್ನಗಳ ಮೇಲೆ ಶೇ.37 ಹಾಗೂ ಕೆಲವು ನಿರ್ದಿಷ್ಟ ವಾಹನಗಳ ಮೇಲೆ ಶೇ.100ರಷ್ಟು ಸುಂಕವನ್ನು ವಿಧಿಸುತ್ತಿದೆ.ಅಮೆರಿಕದ ಹಲವಾರು ಉತ್ಪನ್ನಗಳನ್ನು ಅತ್ಯಧಿಕ ಸಂರಕ್ಷಣಾತ್ಮಕ ಸುಂಕೇತರ ಅಡೆತಡೆಗಳನ್ನು ಹೇರಿದ ಇತಿಹಾಸವನ್ನು ಕೂಡಾ ಭಾರತ ಹೊಂದಿದೆ ಎಂದು ಶ್ವೇತಪತ್ರದಲ್ಲಿ ಹೇಳಿದೆ. ಮುಂಬರುವ ವಾರಗಳಲ್ಲಿ ಅಮೆರಿಕ ಹಾಗೂ ಭಾರತ ಸಮರ್ಪಕವಾಗಿ ಈ ಒಪ್ಪಂದದ ಕಾರ್ಯಚೌಕಟ್ಟನ್ನು ಸಮರ್ಪಕವಾಗಿ ಜಾರಿಗೊಳಿಸಲಿದೆ. ಅಮೆರಿಕದ ಉದ್ಯೋಗಿಗಳು ಹಾಗೂ ಉದ್ಯಮಿಗಳಿಗೆ ಲಾಭಕರವಾಗಿರುವ ದ್ವಿಪಕ್ಷೀಯ ವಾಣಿಜ್ಯ ಒಪ್ಪಂದವನ್ನು ಪೂರ್ಣಗೊಳಿಸುವ ಮುನ್ನ ಉಭಯದೇಶಗಳ ನಡುವೆ ಮಧ್ಯಂತರ ಒಪ್ಪಂದವನ್ನು ಅಂತಿಮಗೊಳಿಸುವ ನಿಟ್ಟಿನಲ್ಲಿ ಶ್ರಮಿಸಲಿವೆ ಎಂದು ವಾಸ್ತವಾಂಶ ಪತ್ರ ತಿಳಿಸಿದೆ.
ಚಳಿಗಾಲದ ಒಲಿಂಪಿಕ್ಸ್ ನಲ್ಲೂ ಬಿಸಿಯೇರಿಸಿದ `ಧುರಂಧರ್' ಹಾಡು!: ರಷ್ಯನ್- ಜಾರ್ಜಿಯನ್ ಫಿಗರ್ ಸ್ಕೇಟರ್ ವಿಡಿಯೋ ವೈರಲ್
Dhurandhar Song In Winter Olympics- ಬಾಲಿವುಡ್ ನ ಸೂಪರ್ ಡ್ಯೂಪಕರ್ ಹಿಟ್ ಸಿನಿಮಾ ಧುರಂಧರ್ ಸಿನಿಮಾ ಜಾಗತಿಕವಾಗಿ ಸೃಷ್ಟಿಸಿದ ಹವಾ ಅಷ್ಟಿಷ್ಟಲ್ಲ. ಪಾಕಿಸ್ತಾನದ ತಂಡದ ಯುವ ಆಟಗಾರರು ಅಂಡರ್ 19 ಏಷ್ಯಾ ಕಪ್ ನಲ್ಲಿ ಗೆದ್ದ ಬಳಿಕ ಧುರಂಧರ್ ಹಾಡಿಗೆ ಮೈದಾನದಲ್ಲಿ ನೃತ್ಯ ಮಾಡಿದ್ದು ವೈರಲ್ ಆಗಿತ್ತು. ಇದೀಗ ರಷ್ಯನ್- ಜಾರ್ಜಿಯನ್ ಫಿಗರ್ ಸ್ಕೇಟರ್ ಒಬ್ಬರು ಭಾರತೀಯ ಸಿನಿಮಾ ಹಾಡು ಅದರಲ್ಲೂ ಧುರಂಧರ್ ನ `ನಾ ದೇ ದಿಲ್ ಪರದೇಸಿ ನು’ ಪ್ರದರ್ಶನ ನೀಡಿರುವುದು ಫುಲ್ ವೈರಲ್ ಆಗಿದೆ.
UTS App ಸ್ಥಗಿತ, RailOne ಅಚಲ ಎಂದ ರೈಲ್ವೆ ಇಲಾಖೆ: ವ್ಯಾಲೆಟ್ ದುಡ್ಡು ಏನಾಗುತ್ತೆ? ಇಲ್ಲಿದೆ ಉತ್ತರ
ಭಾರತೀಯ ರೈಲ್ವೆ ಇಲಾಖೆ ತನ್ನ ಡಿಜಿಟಲ್ ಸೇವೆಗಳಲ್ಲಿ ಮಹತ್ತರ ಬದಲಾವಣೆಗಳನ್ನು ತರುತ್ತಿದ್ದು, ರೈಲ್ವೆ ಪ್ರಯಾಣಿಕರಿಗೆ ಅತಿ ಮುಖ್ಯವಾದ ಮಾಹಿತಿಯೊಂದನ್ನು ನೀಡಿದೆ. ನೀವು ಇಷ್ಟು ದಿನ ಜನರಲ್ ಟಿಕೆಟ್ ಅಥವಾ ಪ್ಲಾಟ್ಫಾರ್ಮ್ ಟಿಕೆಟ್ ಪಡೆಯಲು ಬಳಸುತ್ತಿದ್ದ 'UTSonMobile' (ಯುಟಿಎಸ್) 'ಆ್ಯಪ್' ಇನ್ನು ನೆನಪಿನ ಪುಟ ಸೇರಲಿದೆ. ಹೌದು, ಮಾರ್ಚ್ 1, 2026 ರಿಂದ ಹಂತ ಹಂತವಾಗಿ ಯುಟಿಎಸ್ ಆ್ಯಪ್
ಅಬಕಾರಿ ಇಲಾಖೆಯಲ್ಲಿ ಶೇ.83.43ರಷ್ಟು ಗುರಿ ಸಾಧನೆ ಮಾಡಲಾಗಿದೆ : ಆರ್.ಬಿ.ತಿಮ್ಮಾಪುರ
ಬೆಂಗಳೂರು : 2025-26ನೆ ಸಾಲಿನಲ್ಲಿ ಅಬಕಾರಿ ಇಲಾಖೆಗೆ 40 ಸಾವಿರ ಕೋಟಿ ರೂ., ಆದಾಯ ಸಂಗ್ರಹ ಗುರಿ ನೀಡಲಾಗಿತ್ತು. ಅದರಲ್ಲಿ ಈವರೆಗೆ 34,235 ಕೋಟಿ ರೂ., ಸಂಗ್ರಹವಾಗಿದ್ದು, ಶೇ.83.43ರಷ್ಟು ಗುರಿ ಸಾಧನೆ ಮಾಡಲಾಗಿದೆ ಎಂದು ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ ಹೇಳಿದ್ದಾರೆ. ಮಂಗಳವಾರ ವಿಧಾನಸೌಧದಲ್ಲಿ ಅಬಕಾರಿ ಇಲಾಖೆಯ ಪ್ರಗತಿ ಪರಿಶೀಲನೆ ನಡೆಸಿ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾರ್ಚ್ ಅಂತ್ಯಕ್ಕೆ ವಾರ್ಷಿಕ ಗುರಿಗಿಂತ ಹೆಚ್ಚಿನ ಆದಾಯ ಸಂಗ್ರಹವಾಗುವ ನಿರೀಕ್ಷೆಯಿದೆ ಎಂದು ತಿಳಿಸಿದರು. ಅಬಕಾರಿ ಇಲಾಖೆಯಲ್ಲಿ ಸುಧಾರಣೆಗೆ ಎಲ್ಲ ಕ್ರಮ ಕೈಗೊಳ್ಳಲಾಗಿದೆ. ಈ ಹಿಂದೆ ವಿವಿಧ ಪರವಾನಗಿಗೆ 16 ಹಂತಗಳಲ್ಲಿ ಅಧಿಕಾರಿಗಳ ಬಳಿ ಕಡತಗಳನ್ನು ಕಳುಹಿಸುವುದನ್ನು ತಪ್ಪಿಸಿ 7 ಅಧಿಕಾರಿಗಳಿಗೆ ಇಳಿಸಲಾಗಿದೆ. ಸೇಂದಿ ಹೇಗೆ ತಡೆಯಬೇಕು ಎಂಬುದನ್ನು ಚರ್ಚೆ ಮಾಡಲಾಗಿದೆ. 14,275 ಸನ್ನದ್ದನ್ನು 47 ಗಂಟೆಗಳಲ್ಲಿ ನವೀಕರಿಸಲಾಗಿದೆ ಎಂದು ಅವರು ಉಲ್ಲೇಖಿಸಿದರು. ಮದ್ಯ ಮಾರಾಟ ಸನ್ನದ್ಧು ನೀಡುವಲ್ಲಿ ಲಂಚ ಪಡೆಯುವ ಅಧಿಕಾರಿಗಳು ನನ್ನ ಹೆಸರು ದುರುಪಯೋಗ ಮಾಡಿಕೊಂಡಿದ್ದಾರೆ. ಅಕ್ರಮ ಎಸಗುವ ಅಧಿಕಾರಿಗಳು, ಸಿಬ್ಬಂದಿ ವಿರುದ್ಧ ಕ್ರಮ ತೆಗೆದುಕೊಳ್ಳುತ್ತಿದ್ದೇವೆ. ಅಬಕಾರಿ ಖಾತೆಯೇ ಅಂತಹದ್ದು. ಈ ಹಿಂದೆ ಅಬಕಾರಿ ಸಚಿವರಾಗಿದ್ದವರ ವಿರುದ್ಧವೂ ಆರೋಪಗಳು ಕೇಳಿಬಂದಿತ್ತು. ಈಗಲೂ ಬರುತ್ತಿದೆ. ಆದರೆ, ಆರೋಪಗಳೆಲ್ಲವೂ ಸುಳ್ಳು ಎಂದು ಅವರು ಸ್ಪಷ್ಟಪಡಿಸಿದರು. ಸಂಘಕ್ಕೆ ಮಾನ್ಯತೆಯೇ ಇಲ್ಲ: ನನ್ನ ಮತ್ತು ಇಲಾಖೆ ವಿರುದ್ಧ ಆರೋಪ ಮಾಡಿದ ಸಂಘಟನೆ ಮಾನ್ಯತೆ ಅವಧಿ ಮುಗಿದು ಹಲವು ವರ್ಷಗಳಾಗಿವೆ. ಆ ಸಂಘಕ್ಕೆ ಮಾನ್ಯತೆಯೇ ಇಲ್ಲ. ಇಲಾಖೆಯಲ್ಲಿ ಭ್ರಷ್ಟಾಚಾರ ಇಲ್ಲವೇ ಇಲ್ಲ ಎಂದಲ್ಲ. 158 ಅಧಿಕಾರಿಗಳ ವಿರುದ್ದ ಪ್ರಕರಣ ದಾಖಲಾಗಿದ್ದು, 19 ಮಂದಿ ವಿರುದ್ಧ ಇಲಾಖಾ ವಿಚಾರಣೆ ನಡೆಯುತ್ತಿದೆ. 85 ಅಧಿಕಾರಿಗಳ ವಿರುದ್ಧ ಪ್ರಕರಣವು ಸರಕಾರ ಹಂತದಲ್ಲಿದೆ 54 ಅಧಿಕಾರಿಗಳ ವಿರುದ್ಧ ಲೋಕಾಯುಕ್ತ ತನಿಖೆ ನಡೆಯುತ್ತಿದೆ ಎಂದು ಸಚಿವರು ಮಾಹಿತಿ ನೀಡಿದರು.
Kalaburagi | ಚಿತ್ತಾಪುರದಲ್ಲಿ ಸರಕಾರದ ಯೋಜನೆಗಳ ಮಾಹಿತಿ ಪ್ರದರ್ಶನ ಮಳಿಗೆ ಉದ್ಘಾಟನೆ
ಕಲಬುರಗಿ: ಸರ್ಕಾರದ ಯೋಜನೆಗಳ ಪ್ರಚಾರ ಹಾಗೂ ಸಾಧನೆಗಳನ್ನು ಜನರಿಗೆ ತಿಳಿಸುವ ಉದ್ದೇಶದಿಂದ ಮಂಗಳವಾರದಿಂದ ಮೂರು ದಿನಗಳ ಕಾಲ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗಾಗಿ ರೂಪಿಸಿರುವ ವಿವಿಧ ಯೋಜನೆಗಳ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಮಾಹಿತಿ ಪ್ರದರ್ಶನ ಮಳಿಗೆಯನ್ನು ತೆರೆಯಲಾಗಿದೆ ಎಂದು ಜಿಲ್ಲಾಧಿಕಾರಿ ಬಿ. ಫೌಝಿಯಾ ತರನ್ನುಮ್ ತಿಳಿಸಿದ್ದಾರೆ. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಚಿತ್ತಾಪುರ ಬಸ್ ನಿಲ್ದಾಣದಲ್ಲಿ ನಿರ್ಮಿಸಲಾದ ಮಾಹಿತಿ ಪ್ರದರ್ಶನ ಮಳಿಗೆಯನ್ನು ಮಂಗಳವಾರ ಉದ್ಘಾಟಿಸಿ ಮಾತನಾಡಿದ ಅವರು, ಜನರನ್ನು ನೇರವಾಗಿ ಸಂಪರ್ಕಿಸುವ ಈ ವಿನೂತನ ಪ್ರಚಾರ ಕಾರ್ಯದಿಂದ ಸರ್ಕಾರದ ಯೋಜನೆಗಳ ಕುರಿತು ಸಮಗ್ರ ಮಾಹಿತಿ ಜನಮಾನಸಕ್ಕೆ ತಲುಪಲಿದೆ ಎಂದರು. ರಾಜ್ಯ ಸರ್ಕಾರದ ಅನುಸೂಚಿತ ಜಾತಿ/ಅನುಸೂಚಿತ ಪಂಗಡಗಳ ಕ್ರಿಯಾಯೋಜನೆಯಡಿಯಲ್ಲಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಜನರಿಗಾಗಿ ರೂಪಿಸಿರುವ ವಿವಿಧ ಕಾರ್ಯಕ್ರಮಗಳ ಮಾಹಿತಿ ನೀಡಲು ಚಿತ್ತಾಪುರ ಸೇರಿದಂತೆ ರಾಜ್ಯದ ಇತರೆ ಆಯ್ದ ಮೀಸಲು ಕ್ಷೇತ್ರಗಳಲ್ಲಿ ಪ್ರದರ್ಶನ ಮಳಿಗೆಗಳನ್ನು ತೆರೆಯಲಾಗಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಗ್ಯಾರಂಟಿ ಯೋಜನೆಗಳ ಚಿತ್ತಾಪುರ ತಾಲ್ಲೂಕು ಅಧ್ಯಕ್ಷ ಮಲ್ಲಿಕಾರ್ಜುನ ಬೊಮ್ಮನಹಳ್ಳಿ, ಸೇಡಂ ವಿಭಾಗದ ಸಹಾಯಕ ಆಯುಕ್ತ ಪ್ರಭುರೆಡ್ಡಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಕಲಬುರಗಿ ಉಪನಿರ್ದೇಶಕ ಜಡಿಯಪ್ಪ ಗೆದ್ಲಗಟ್ಟಿ, ಚಿತ್ತಾಪುರ ತಹಶೀಲ್ದಾರ್ ನಾಗಯ್ಯ ಹಿರೇಮಠ, ಕೆಕೆಆರ್ಟಿಸಿ ಚಿತ್ತಾಪುರ ಡಿಪೊ ಮ್ಯಾನೇಜರ್ ಗೊಲ್ಲಾಳಪ್ಪ ಬಿರಾದರ್ ಸೇರಿದಂತೆ ತಾಲ್ಲೂಕು ಮಟ್ಟದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ಕೊಲ್ಲೂರು: ಉತ್ತಮ ಕರ್ತವ್ಯಕ್ಕೆ ಪ್ರಶಸ್ತಿ ಪಡೆದಿದ್ದ ಪೋಸ್ಟ್ಮೆನ್ ಆತ್ಮಹತ್ಯೆ
ಕೊಲ್ಲೂರು, ಫೆ.10: ಉತ್ತಮ ಕರ್ತವ್ಯ ನಿರ್ವಹಣೆಗೆ ಪ್ರಶಸ್ತಿ ಪಡೆದ ಪೋಸ್ಟ್ಮೆನೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಫೆ.9ರಂದು ಬೆಳಗ್ಗೆ ಕೊಲ್ಲೂರಿನಲ್ಲಿ ನಡೆದಿದೆ. ಮೃತರನ್ನು ಕೊಲ್ಲೂರಿನ ರವೀಂದ್ರ ಎಂಬವರ ಮಗ ಮಂಜುನಾಥ ಕೆ. ಆರ್.(31) ಎಂದು ಗುರುತಿಸಲಾಗಿದೆ. ಕೊಲ್ಲೂರಿನಲ್ಲಿ ಪೋಸ್ಟ್ಮೆನ್ ಆಗಿ ಕೆಲಸ ಮಾಡಿಕೊಂಡಿದ್ದ ಇವರಿಗೆ ಸುಮಾರು 4 ತಿಂಗಳ ಹಿಂದೆ ಉತ್ತಮ ಅಂಚೆ ಕರ್ತವ್ಯ ಮಾಡಿದ ಕಾರಣಕ್ಕೆ ಪ್ರಶಸ್ತಿ ದೊರೆತಿತ್ತು. ಬಳಿಕ ಕೊಲ್ಲೂರಿ ನಲ್ಲಿಯೂ ಈ ಬಗ್ಗೆ ಸನ್ಮಾನ ಮಾಡಲಾಗಿತ್ತು. ಇವರು ಇದೇ ವಿಚಾರದಲ್ಲಿ ಮಾನಸಿಕ ಸಮಸ್ಯೆಗೆ ಒಳಗಾಗಿದ್ದ ಇವರು, ಜೀವನದಲ್ಲಿ ಜಿಗುಪ್ಸೆಗೊಂಡು ಕೊಲ್ಲೂರಿನ ಮಹಾಲಕ್ಷ್ಮಿ ಹೊಟೇಲ್ ಹಿಂಬದಿಯ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕ್ಯಾಥೊಲಿಕ್ ಬಿಷಪ್ಗಳ ಸಮ್ಮೇಳನ | ಪ್ರತಿಯೊಬ್ಬರ ʼಸಮಾನತೆ ಹಕ್ಕುʼ ರಕ್ಷಣೆಗೆ ಸರಕಾರ ಮುಂದಾಗಬೇಕು : ಸಿಬಿಸಿಐ ಆಗ್ರಹ
ಬೆಂಗಳೂರು : ದೇಶದ ಪ್ರತಿಯೊಬ್ಬರಿಗೂ ಸಮಾನ ಹಕ್ಕು ನೀಡಲಾಗಿದೆ. ಆದರೆ, ಇತ್ತೀಚಿಗೆ ಈ ಹಕ್ಕು ಕಸಿಯುವ ಪ್ರಯತ್ನ ನಡೆಯುತ್ತಿದ್ದು, ಇದನ್ನು ಕೇಂದ್ರ ಸರಕಾರ ರಕ್ಷಣೆ ಮಾಡಲು ಮುಂದಾಗಬೇಕು ಎಂದು ‘ಭಾರತದ ಕ್ಯಾಥೊಲಿಕ್ ಬಿಷಪ್ಗಳ ಸಮ್ಮೇಳನ’(ಸಿಬಿಸಿಐ) ಆಗ್ರಹಿಸಿದೆ. ಬೆಂಗಳೂರಿನ ಸೇಂಟ್ ಜಾನ್ಸ್ ರಾಷ್ಟ್ರೀಯ ಆರೋಗ್ಯ ವಿಜ್ಞಾನ ಅಕಾಡೆಮಿಯಲ್ಲಿ ಕಳೆದ ಆರು ದಿನಗಳಿಂದ ಆಯೋಜಿಸಲಾಗಿದ್ದ ಭಾರತದ ಕ್ಯಾಥೊಲಿಕ್ ಬಿಷಪ್ಗಳ ಸಮ್ಮೇಳನದ (ಸಿಬಿಸಿಐ) 37ನೇ ಸಮಗ್ರ ಸಭೆ ಮಂಗಳವಾರ ಕೊನೆಗೊಂಡಿತು. ಬಳಿಕ, ಈ ಕುರಿತು ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಸಿಬಿಸಿಐ ನೂತನ ಅಧ್ಯಕ್ಷ ಕಾರ್ಡಿನಲ್ ಪೂಲಾ ಆಂಥೋನಿ, ʼದೇಶದಲ್ಲಿ ಸಾಂವಿಧಾನಿಕ ಮೌಲ್ಯಗಳನ್ನು ಕಾಪಾಡಬೇಕಾಗಿದೆ. ಮುಖ್ಯವಾಗಿ ದೇಶದ ಅಭಿವೃದ್ಧಿಗೆ ಅವಶ್ಯವಿರುವ ಎಲ್ಲ ವಿಷಯಗಳನ್ನು ಭಾರತದ ಸಂವಿಧಾನದಲ್ಲಿ ಅಳವಡಿಸಲಾಗಿದೆ. ಇಂತಹ ಸಂವಿಧಾನವನ್ನು ಧರ್ಮ, ಜಾತಿಯ ಹೆಸರಿನಲ್ಲಿ ಬುಡಮೇಲು ಮಾಡಲು ಕೆಲ ಶಕ್ತಿಗಳು ಪ್ರಯತ್ನಿಸುತ್ತಿದ್ದು, ಯಾರಿಂದಲೂ ಸಂವಿಧಾನ ಬುಡಮೇಲು ಮಾಡಲು ಸಾಧ್ಯವಿಲ್ಲ ಎಂದರು. ನಿಜವಾದ ಕ್ರಿಶ್ಚಿಯನ್ ಜೀವನವು ಶಾಂತಿಯನ್ನು ಉತ್ತೇಜಿಸುವ ಮತ್ತು ಮಾನವ ಹಕ್ಕುಗಳನ್ನು ರಕ್ಷಿಸುವ, ಕಾನೂನು ಪಾಲಿಸುವ ನಾಗರಿಕರಾಗಲು ನಮಗೆ ಸ್ಫೂರ್ತಿ ನೀಡುತ್ತದೆ. ಹೀಗಾಗಿ, ಸೌಹಾರ್ದತೆಗಾಗಿ ಶ್ರಮಿಸುವ ಪ್ರತಿಯೊಬ್ಬ ಕೂಡ ನಿಜವಾದ ದೇಶಭಕ್ತನಾಗಲು ಸಾಧ್ಯ. ಕ್ಷಮೆ, ಕರುಣೆ ಮತ್ತು ಪ್ರೀತಿಯ ಸಂದೇಶವನ್ನು ಜಗತ್ತಿನ ಪ್ರತಿಯೊಂದು ಧರ್ಮಗಳು ಸಾರುವುದರೊಂದಿಗೆ ಮಾನವೀಯತೆಯನ್ನು ಕಲಿಸುತ್ತವೆ ಎಂದು ಅವರು ಹೇಳಿದರು. ಪ್ರತಿಯೊಬ್ಬ ವ್ಯಕ್ತಿ ತನ್ನ ಧರ್ಮವನ್ನು ಪಾಲಿಸಿಕೊಂಡು ಇತರ ಧರ್ಮದ ಬಗ್ಗೆ ಅರಿತುಕೊಂಡು ಬಾಳಿದಾಗ ಸೌಹಾರ್ದ ಮೂಡಲು ಸಾಧ್ಯವಿದೆ. ಎಲ್ಲಾ ಹಬ್ಬಗಳ ಮೂಲ ತತ್ವ ಪ್ರೀತಿ ಮತ್ತು ಒಗ್ಗಟ್ಟಿನಿಂದ ಬಾಳುವುದಾಗಿದೆ ಎಂದ ಅವರು, ನಮ್ಮ ಭಾರತೀಯ ಸಂವಿಧಾನದಲ್ಲಿನ ಮೌಲ್ಯಗಳು ನಾಗರೀಕರ ಜೀವನದ ಮೌಲ್ಯಗಳಾಗಿ ಅಂತರ್ಗತವಾದಾಗ ಮಾತ್ರ ಉತ್ತಮ ಆಡಳಿತ ಸಾಧ್ಯ ಎಂದು ಅಭಿಪ್ರಾಯಪಟ್ಟರು. ದೇಶ ವ್ಯಾಪಿ ದಶಕಗಳಿಂದಲೂ ದಲಿತ ಕ್ರೈಸ್ತರನ್ನು ಗುರಿಯಾಗಿಸಿಕೊಂಡು ಅವರ ಹಕ್ಕುಗಳ ಬಗ್ಗೆ ನಿರ್ಲಕ್ಷ್ಯವಹಿಸಲಾಗುತ್ತಿದೆ. ಇನ್ನೊಂದೆಡೆ, ಜಾತಿ ಅಥವಾ ಭಾಷೆಯ ಆಧಾರದ ಮೇಲೆ ಚರ್ಚಿನ ಸಮುದಾಯಗಳಲ್ಲಿ ಇದೆ ಎನ್ನಲಾದ ಯಾವುದೇ ರೀತಿಯ ತಾರತಮ್ಯವನ್ನು ತೊಡೆದುಹಾಕಲು ನಾನು ಪ್ರಮಾಣಿಕವಾಗಿ ಪ್ರಯತ್ನ ಮಾಡುವೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು. ಧಾರ್ಮಿಕ ಮತಾಂತರ ಮಾಡಲಾಗುತ್ತಿದೆ ಎಂದು ಉದ್ದೇಶ ಪೂರಕವಾಗಿ ಆರೋಪಿಸಿ ಮುಗ್ಧ ವ್ಯಕ್ತಿಗಳನ್ನು ಜೈಲಿಗೆ ಹಾಕಲಾಗುತ್ತಿರುವುದರಿಂದ, ಧಾರ್ಮಿಕ ಸ್ವಾತಂತ್ರ್ಯ ಮತ್ತು ಹಕ್ಕುಗಳನ್ನು ಉಲ್ಲಂಘನೆ ಮಾಡಲಾಗುತ್ತಿದೆ. ಅಲ್ಲದೆ, ಸಂವಿಧಾನದ 25ನೆ ವಿಧಿಯು ಯಾವುದೇ ವ್ಯಕ್ತಿ ತನ್ನ ಇಚ್ಛೆಯಂತೆ ಧಾರ್ಮಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವ ಅವಕಾಶ ನೀಡಿದೆ. ಆದರೂ, ಸರಕಾರವೇ ಇದನ್ನು ಉಲ್ಲಂಘನೆ ಮಾಡುತ್ತಿರುವುದು ನೋವು ತಂದಿದೆ ಎಂದು ಕಾರ್ಡಿನಲ್ ಪೂಲಾ ಆಂಥೋನಿ ಬೇಸರ ವ್ಯಕ್ತಪಡಿಸಿದರು. ಸಮ್ಮೇಳನದ ಪ್ರಮುಖ ನಿರ್ಣಯಗಳು..! ► ಭಾರತೀಯತೆ ಮೌಲ್ಯಗಳನ್ನು ವೃದ್ಧಿಸಿ, ಪ್ರಚಾರ ಮಾಡುವುದು. ► ಸಾಂವಿಧಾನಿಕ ಮೌಲ್ಯಗಳನ್ನು ಕಾಪಾಡುವುದು ► ಯುವಕರಲ್ಲಿ ನಾಯಕತ್ವದ ಅಭಿವೃದ್ಧಿಗೆ ಒತ್ತು ► ಬಡವರ ಕಲ್ಯಾಣಕ್ಕಾಗಿ ಕಾರ್ಯಕ್ರಮ ರಚನೆ ► ಕ್ರೈಸ್ತ ಸಮುದಾಯ ಸಮಸ್ಯೆಗಳ ಪರಿಹಾರಕ್ಕೆ ಒತ್ತು ಸಿಬಿಸಿಐನ ಹೊಸ ಪದಾಧಿಕಾರಿಗಳು ► ಅಧ್ಯಕ್ಷರು: ಕಾರ್ಡಿನಲ್ ಪೂಲಾ ಆಂಥೋನಿ (ಹೈದರಾಬಾದ್ನ ಆರ್ಚ್ಬಿಷಪ್) ► ಉಪಾಧ್ಯಕ್ಷರು: ಥಾಮಸ್ ಮಾರ್ ಕುರಿಲೋಸ್ (ತಿರುವಳ್ಳದ ಆರ್ಚ್ಬಿಷಪ್) ► ಉಪಾಧ್ಯಕ್ಷರು: ಮ್ಯಾಥ್ಯೂ ಮೂಲಕ್ಕಟ್ (ಕೊಟ್ಟಾಯಂನ ಆರ್ಚ್ಬಿಷಪ್) ► ಪ್ರಧಾನ ಕಾರ್ಯದರ್ಶಿ: ಅನಿಲ್ ಕೌಟೊ, (ಹೊಸದಿಲ್ಲಿಯ ಆರ್ಚ್ಬಿಷಪ್) ಸಿಬಿಸಿಐ ವಿಭಾಗವಾರು ಅಧ್ಯಕ್ಷರು..! ► ಕಾರ್ಮಿಕ ಮತ್ತು ವಲಸಿಗರು ವಿಭಾಗದ ಅಧ್ಯಕ್ಷರಾಗಿ ಬಿಷಪ್ ವಿನ್ಸೆಂಟ್ ಪೌಲೋಸ್ ಆಯ್ಕೆ ► ಸಂವಾದ ವಿಭಾಗದ ಅಧ್ಯಕ್ಷರಾಗಿ ಬಿಷಪ್ ಜೋಸೆಫ್ ಕಲ್ಲರಂಗಟ್ ಆಯ್ಕೆ ► ಪಾದ್ರಿಗಳು, ಧಾರ್ಮಿಕ ಮತ್ತು ಎನ್ವಿಎಸ್ಸಿ ವಿಭಾಗದ ಅಧ್ಯಕ್ಷರಾಗಿ ಬಿಷಪ್ ಜೋಹಾನ್ಸ್ ಗೊರಾಂಟ್ಲಾ ಆಯ್ಕೆ ► ಶಿಕ್ಷಣ ಮತ್ತು ಸಂಸ್ಕೃತಿ ವಿಭಾಗದ ಅಧ್ಯಕ್ಷರಾಗಿ ಆರ್ಚ್ಬಿಷಪ್ ಎಲಿಯಾಸ್ ಗೊನ್ಸಾಲ್ವೆಸ್ ಆಯ್ಕೆ ► ಆರೋಗ್ಯ ಮತ್ತು ರಕ್ಷಣೆ ವಿಭಾಗದ ಅಧ್ಯಕ್ಷರಾಗಿ ಆರ್ಚ್ಬಿಷಪ್ ಥಾಮಸ್ ನೆಟ್ಟೊ ಆಯ್ಕೆ ► ಪರಿಶಿಷ್ಟ ಜಾತಿಗಳು ಮತ್ತು ಹಿಂದುಳಿದ ವರ್ಗಗಳು ವಿಭಾಗದ ಅಧ್ಯಕ್ಷರಾಗಿ ಬಿಷಪ್ ಜಯರಾವ್ ಪೊಲಿಮೆರಾ ಆಯ್ಕೆ ► ಬುಡಕಟ್ಟು ವ್ಯವಹಾರಗಳ ವಿಭಾಗದ ಅಧ್ಯಕ್ಷರಾಗಿ ಬಿಷಪ್ ಟೆಲಿಸ್ಫೋರ್ ಬಿಲುಂಗ್ ಆಯ್ಕೆ ► ಸಾಮಾಜಿಕ ಸಂವಹನ ವಿಭಾಗದ ಅಧ್ಯಕ್ಷರಾಗಿ ಬಿಷಪ್ ವಿಜಯ್ ಕುಮಾರ್ ರಾಯಲಾರ ಆಯ್ಕೆ ► ಸಿದ್ಧಾಂತ ವಿಭಾಗದ ಅಧ್ಯಕ್ಷರಾಗಿ ಆರ್ಚ್ಬಿಷಪ್ ರಾಫಿ ಮಂಜಲಿ ಆಯ್ಕೆ ► ಪರಿಸರ ಮತ್ತು ಹವಾಮಾನ ಬದಲಾವಣೆ ವಿಭಾಗದ ಅಧ್ಯಕ್ಷರಾಗಿ ಬಿಷಪ್ ಇವಾನ್ ಪೆರೇರಾ ಆಯ್ಕೆ ► ನ್ಯಾಯ ಶಾಂತಿ ಮತ್ತು ಅಭಿವೃದ್ಧಿ ವಿಭಾಗದ ಅಧ್ಯಕ್ಷರಾಗಿ ಆರ್ಚ್ಬಿಷಪ್ ಪೀಟರ್ ಮಚಾದೊ ಆಯ್ಕೆ ► ಕ್ಯಾರಿಟಾ ಇಂಡಿಯಾ ವಿಭಾಗದ ಅಧ್ಯಕ್ಷರಾಗಿ ಆರ್ಚ್ಬಿಷಪ್ ಲಿನಸ್ ನೆಲಿ ಆಯ್ಕೆ
ಪಣಂಬೂರು: ಜೂಜು ಆಡುತ್ತಿದ್ದ ಆರೋಪ; ಐದು ಮಂದಿ ಸೆರೆ
ಪಣಂಬೂರು: ಜೂಜು ಆಡುತ್ತಿದ್ದ ಐವರನ್ನು ಪಣಂಬೂರು ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ವಿಲ್ಪಿ ಯಾನೆ ವಿಲ್ಪ್ರೇಢ್ ಡಿಸೋಜಾ, ಸತೀಶ, ಬಾಲಕೃಷ್ಣ, ಪಿ.ಟಿ. ಜೋಸೆಫ್ ಮತ್ತು ಉಪೇಂದ್ರ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಪಣಂಬೂರು ಪೊಲೀಸ್ ಠಾಣಾ ವ್ಯಾಪ್ತಿಯ ಬೈಕಂಪಾಡಿ ರೈಲ್ವೇ ಬ್ರಿಡ್ಜ್ ನ ಬಳಿಯ ಸಾರ್ವಜನಿಕ ಸ್ಥಳದಲ್ಲಿ ಅಂದರ್ ಬಾಹರ್ ಜೂಜು ಆಡುತ್ತಿರುವ ಕುರಿತು ಕಚಿತ ಮಾಹಿತಿ ಆಧರಿಸಿ ದಾಳಿ ಮಾಡಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ 17,120 ರೂ. ಹಣ, 52 ಇಸ್ಪೀಟು ಎಲೆಗಳು, 2 ಸ್ವಲ್ಪ ಉರಿದ ಕ್ಯಾಂಡಲ್ , 4 ಮೊಬೈಲ್ ಮತ್ತು ನೆಲಕ್ಕೆ ಆಟಕ್ಕಾಗಿ ಹಾಸಿದ ನೀಲಿ ಬಣ್ಣದ ಟರ್ಪಾಲನ್ನು ಪೊಲೀಸರು ವಶಕ್ಕೆ ಪಡೆದು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಮುಂದಿನ ಕಾನೂನು ಕ್ರಮಕೈಗೊಂಡಿದ್ದಾರೆ.

25 C