’ಅಡವಿಯಲ್ಲಿ ಕಂಡದ್ದು ಕೇಳದ್ದು ಕುರುಹೀನ ರಟ್ಟು’ : ಕೋಡಿಶ್ರೀಗಳ ಹೊಸ ಭವಿಷ್ಯ - ಏನಿದರ ಅರ್ಥ?
Kodi Mutt Swamiji Prediction : ಮಕರ ಸಂಕ್ರಾಂತಿ ಮತ್ತು ಯುಗಾದಿ ಹಬ್ಬದ ಆಸುಪಾಸಿನಲ್ಲಿ ಭವಿಷ್ಯವನ್ನು ನುಡಿಯುವ ಕೋಡಿಮಠ ಸಂಸ್ಥಾನದ ಡಾ.ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿಗಳು, ಮಂಡ್ಯ ಜಿಲ್ಲೆ ಕಿಕ್ಕೇರಿಯಲ್ಲಿ ಭವಿಷ್ಯವನ್ನು ನುಡಿದಿದ್ದಾರೆ. ಮಾನ್ಸೂನ್ ಸರಿಯಾದ ಸಮಯಕ್ಕೆ ಬರಲಿದೆ, ಅಣೆಕಟ್ಟುಗಳು ತುಂಬಲಿವೆ, ಆದರೆ ಅವಘಡ ತಪ್ಪಿದ್ದಲ್ಲ ಎಂದು ಕೋಡಿಶ್ರೀಗಳು ಹೇಳಿದ್ದಾರೆ.
ಬೇಸಿಗೆಯೆಂದರೆ, ಅದು ನೀರು ಆಹಾರ ಆರೋಗ್ಯ ಎಲ್ಲದರ ಮೇಲೆ ಪ್ರಭಾವ ಬೀರುತ್ತದೆ. ಹೆಚ್ಚು ಬ್ಯಾಕ್ಟೀರಿಯಾ ಚಟುವಟಿಕೆಗಳು ಆರೋಗ್ಯವನ್ನು ಕೆಡಿಸುವುದರಿಂದ ಸೇವಿಸುವ ಆಹಾರ, ನೀರಿನ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು.
ಕನಕಗಿರಿ ಉತ್ಸವಕ್ಕೆ ಕೊನೆಗೂ ಕಾಲ ಬಂತು , ಮೇ 9, 10 ಕ್ಕೆ ಉತ್ಸವ ನಿಗದಿ
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ಅವರ ಕನಕಗಿರಿ ವಿಧಾನಸಭಾ ಕ್ಷೇತ್ರದಲ್ಲಿ ಕೊನೆಗೂ 'ಕನಕಗಿರಿ ಉತ್ಸವ' ಆಚರಣೆಗೆ ದಿನಾಂಕ ನಿಗದಿಯಾಗಿದೆ. ಈ ಹಿಂದೆ ಸ್ಥಳೀಯವಾಗಿ ವ್ಯಕ್ತವಾದ ಪರ-ವಿರೋಧದ ಅಭಿಪ್ರಾಯಗಳಿಂದಾಗಿ ಉತ್ಸವವನ್ನು ಕೈಬಿಡಲಾಗಿತ್ತಾದರೂ, ಈಗ ಸಾರ್ವಜನಿಕರ ಒತ್ತಾಸೆಯಂತೆ ಮೇ 9 ಮತ್ತು 10 ರಂದು ಅದ್ಧೂರಿಯಾಗಿ ಆಯೋಜಿಸಲು ತೀರ್ಮಾನಿಸಲಾಗಿದೆ.
ಅಫಜಲಪುರ: ಈಜಲು ಹೋದ ಯುವಕನೋರ್ವ ನೀರಿನಲ್ಲಿ ಕಲ್ಲಿನ ಪದರಿನಲ್ಲಿ ಸಿಲುಕಿ ಮೃತಪಟ್ಟಿರುವ ಘಟನೆ ತಾಲ್ಲೂಕಿನ ಮಾಶಾಳ ಗ್ರಾಮದ ಹೊರವಲಯದ ಕಲ್ಲಿನ ಖಣಿಯಲ್ಲಿ ರವಿವಾರ ನಡೆದಿದೆ. ಕರಜಗಿ ಗ್ರಾಮದ ಕಿರಣ್ ರೇವೂರ(24) ಮೃತ ಯುವಕ ಎಂದು ತಿಳಿದುಬಂದಿದೆ. ಕಿರಣ್ ತನ್ನ ಗೆಳೆಯರೊಂದಿಗೆ ಮಾಶಾಳ ಗ್ರಾಮದ ಹೊರವಲಯದ ಕಲ್ಲಿನ ಖಣಿಯಲ್ಲಿ ಈಜಾಡಲು ತೆರಳಿದ್ದ ವೇಳೆ ಈ ಘಟನೆ ನಡೆದಿದೆ ಎಂದು ಮೂಲಗಳು ತಿಳಿಸಿವೆ. ಘಟನಾ ಸ್ಥಳಕ್ಕೆ ಅಗ್ನಿಶಾಮಕ ಠಾಣಾಧಿಕಾರಿ ವಿಶ್ವನಾಥ ಭೇಟಿ ನೀಡಿ, 'ಸುಮಾರು 3 ಗಂಟೆ ನಡೆಸಲಾದ ಕಾರ್ಯಾಚರಣೆ ನಂತರ ಮೃತದೇಹವನ್ನು ಹೊರ ತೆಗೆದಿದ್ದಾರೆ. ಪಿಎಸ್ಐ ಶಾಂತಪ್ಪ ಹಾಗೂ ವಿಶ್ವನಾಥ ಅವರು ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಈ ಕುರಿತು ಅಫಜಲಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Liquor: ಹೊಸ ಅಬಕಾರಿ ನೀತಿ: ಮತ್ತಷ್ಟು ಕೈಗೆಟುಕುವ ದರಕ್ಕೆ ಅಗ್ಗದ ಮದ್ಯ, ಪ್ರೀಮಿಯಂ ಬ್ರ್ಯಾಂಡ್ಗಳು ದುಬಾರಿ
ಬೆಂಗಳೂರು: ರಾಜ್ಯದ ಮದ್ಯ ಪ್ರಿಯರಿಗೆ ಸರ್ಕಾರವು ಸಿಹಿ ಮತ್ತು ಕಹಿ ಎರಡೂ ಸುದ್ದಿಯನ್ನು ನೀಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಬಜೆಟ್ನಲ್ಲಿ ಘೋಷಿಸಿದಂತೆ, ರಾಜ್ಯ ಅಬಕಾರಿ ಸುಂಕದ ನೀತಿಯಲ್ಲಿ ಮಹತ್ವದ ಬದಲಾವಣೆಗಳನ್ನು ತರಲಾಗಿದ್ದು, ಇದಕ್ಕಾಗಿ ಕರಡು ಮಸೂದೆಯನ್ನು ಪ್ರಕಟಿಸಲಾಗಿದೆ. ಹೊಸ ನಿಯಮದ ಪ್ರಕಾರ, ಕಡಿಮೆ ಬೆಲೆಯ ಮದ್ಯದ ದರದಲ್ಲಿ ಇಳಿಕೆಯಾಗಲಿದ್ದರೆ, ದುಬಾರಿ ಬೆಲೆಯ ಮದ್ಯದ ದರ ಮತ್ತಷ್ಟು
Salary Cut: ಹಿಮಾಚಲ ಪ್ರದೇಶದಲ್ಲಿ ಮುಂದುವರಿದ ವೇತನ ಕಡಿತದ ಬಿಸಿ: ಈಗ ಮುಖ್ಯ ಕಾರ್ಯದರ್ಶಿ, ಡಿಜಿಪಿ ಸರದಿ
ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ಸುಖ್ವಿಂದರ್ ಸಿಂಗ್ ಸುಖು ಮತ್ತು ಶಾಸಕರ ವೇತನ ಕಡಿತದ ಬೆನ್ನಲ್ಲೇ, ಈಗ ರಾಜ್ಯದ ಹಿರಿಯ ಅಧಿಕಾರಿಗಳಿಗೂ ಆರ್ಥಿಕ ಮಿತವ್ಯಯದ ಬಿಸಿ ತಟ್ಟಿದೆ. ರಾಜ್ಯದ ಆರ್ಥಿಕ ಸ್ಥಿತಿಯನ್ನು ಹಳಿಗೆ ತರುವ ನಿಟ್ಟಿನಲ್ಲಿ ಸರ್ಕಾರವು ಭಾನುವಾರ ಮಹತ್ವದ ಆದೇಶ ಹೊರಡಿಸಿದ್ದು, ಮುಖ್ಯ ಕಾರ್ಯದರ್ಶಿ ಸಂಜಯ್ ಗುಪ್ತಾ ಮತ್ತು ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಅಶೋಕ್ ತಿವಾರಿ ಸೇರಿದಂತೆ
ರಾಜ್ಯದ 19 ಉದ್ದಿಮೆಗಳು ನಷ್ಟದಲ್ಲಿ
►5 ವಿದ್ಯುತ್ ಸರಬರಾಜು ಕಂಪೆನಿಗಳು, 4 ಸಾರಿಗೆ ನಿಗಮಗಳು ಆರ್ಥಿಕ ಬಿಕ್ಕಟ್ಟಿನಲ್ಲಿ►16 ಉದ್ದಿಮೆಗಳು ಸ್ಥಗಿತ ►ಎಂಟು ಉದ್ದಿಮೆಗಳ ಲೆಕ್ಕ ಪರಿಶೋಧನೆಯೇ ಇಲ್ಲ
ಶ್ರೀನಗರ, ಎ.20: ಇಲ್ಲಿನ ದಿಲ್ಲಿ ಪಬ್ಲಿಕ್ ಸ್ಕೂಲ್ ನ ಲರ್ನಿಂಗ್ ರಿಸೋರ್ಸ್ ಸೆಂಟರ್ ನ ಅಂಧ ವಿದ್ಯಾರ್ಥಿನಿ ಝೈನಬ್ ಬಿಲಾಲ್ ಅವರು CBSE 10ನೇ ತರಗತಿ ಪರೀಕ್ಷೆಯಲ್ಲಿ ಶೇ. 95 ಅಂಕಗಳನ್ನು ಗಳಿಸಿ ಗಮನ ಸೆಳೆದಿದ್ದಾರೆ. ಝೈನಬ್ ಅವರು ಸ್ಕ್ರೈಬ್ ಸಹಾಯವಿಲ್ಲದೆ ಪರೀಕ್ಷೆ ಬರೆದಿರುವುದು ವಿಶೇಷ. 500 ಅಂಕಗಳಲ್ಲಿ 475 ಅಂಕಗಳನ್ನು ಪಡೆದಿರುವ ಆಕೆ, ಕಂಪ್ಯೂಟರ್ ಸೈನ್ಸ್ ವಿಷಯದಲ್ಲಿ ಪೂರ್ಣ 100 ಅಂಕಗಳನ್ನು ಗಳಿಸಿದ್ದಾರೆ. ಲ್ಯಾಪ್ ಟಾಪ್ ಬಳಸಿ ಬರಹಗಾರರಿಲ್ಲದೆ ಪರೀಕ್ಷೆ ಬರೆದ ಮೊದಲ ಅಂಧ ವಿದ್ಯಾರ್ಥಿಗಳಲ್ಲಿ ಒಬ್ಬರಾಗಿ ಝೈನಬ್ ಇತಿಹಾಸ ನಿರ್ಮಿಸಿದ್ದಾರೆ ಶ್ರೀನಗರದ ದೆಹಲಿ ಪಬ್ಲಿಕ್ ಶಾಲೆಯ ಲರ್ನಿಂಗ್ ರಿಸೋರ್ಸ್ ಸೆಂಟರ್ ನ ವಿದ್ಯಾರ್ಥಿನಿಯಾಗಿರುವ 16 ವರ್ಷದ ಝೈನಬ್, ತನ್ನ ಸಾಧನೆಗೆ ಶಾಲೆ, ಶಿಕ್ಷಕರು ಮತ್ತು ಪೋಷಕರ ಬೆಂಬಲ ಕಾರಣ ಎಂದು ಹೇಳಿದ್ದಾರೆ. ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ವೃತ್ತಿಜೀವನ ನಿರ್ಮಿಸಬೇಕೆಂಬ ಆಸೆ ಹೊಂದಿರುವ ಝೈನಬ್, ಕಂಪ್ಯೂಟರ್ ಅಪ್ಲಿಕೇಶನ್ ನಲ್ಲಿ ಸ್ನಾತಕೋತ್ತರ ಪದವಿ ಪಡೆಯುವ ಉದ್ದೇಶ ಹೊಂದಿದ್ದಾರೆ. ಶೈಕ್ಷಣಿಕ ಕ್ಷೇತ್ರದ ಹೊರತಾಗಿ ಆಕೆಯ ಆತ್ಮವಿಶ್ವಾಸ ಮತ್ತು ಸಂವಹನ ಕೌಶಲ್ಯ ಗಮನ ಸೆಳೆಯುವಂತಿದೆ. 12ನೇ ವಯಸ್ಸಿನಲ್ಲಿ ಶಾಲೆಯ ವಿದ್ಯಾರ್ಥಿಗಳೇ ನಡೆಸುವ ರೇಡಿಯೋ ಕೇಂದ್ರಕ್ಕಾಗಿ ಉಮರ್ ಅಬ್ದುಲ್ಲಾ ಮತ್ತು ಅಮಿರ್ ಖಾನ್ ಅವರನ್ನು ಝೈನಬ್ ಸಂದರ್ಶನ ಮಾಡಿದ್ದರು. ಝೈನಬ್ ಸಾಧನೆಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದ್ದು, ಆಕೆಯ ಆತ್ಮವಿಶ್ವಾಸ ಹಾಗೂ ಕುಟುಂಬದ ಬೆಂಬಲವನ್ನು ಅನೇಕರು ಶ್ಲಾಘಿಸಿದ್ದಾರೆ. ‘ಸರಿಯಾದ ಬೆಂಬಲ ಇದ್ದರೆ ಯಾವುದೂ ಅಸಾಧ್ಯವಲ್ಲ’ ಎಂದು ವಿಶೇಷ ವಿದ್ಯಾರ್ಥಿಗಳಿಗೆ ಝೈನಬ್ ಕಿವಿಮಾತು ಹೇಳುತ್ತಾರೆ.
ಬೆಂಗಳೂರು ಉಪನಗರ ರೈಲು : ಮೂರು ಪ್ಯಾಕೇಜ್ ಪೈಕಿ ಎರಡು ಫೈನಲ್
ಬೆಂಗಳೂರು ಉಪನಗರ ರೈಲು ಯೋಜನೆಯ (ಬಿಎಸ್ಆರ್ಪಿ) ‘ಮಲ್ಲಿಗೆ’ ಕಾರಿಡಾರ್ನ ಮೊದಲ ಪ್ಯಾಕೇಜ್ ಕಾಮಗಾರಿಗೆ ಹಿನ್ನಡೆಯಾಗಿದೆ. ಬೆನ್ನಿಗಾನಹಳ್ಳಿ ಮತ್ತು ಶೆಟ್ಟಿಹಳ್ಳಿ ನಡುವಿನ ಈ ಭಾಗಕ್ಕೆ ಕೆ-ರೈಡ್ ಸಂಸ್ಥೆಯು ಪುನಃ ಟೆಂಡರ್ ಕರೆಯಲು ನಿರ್ಧರಿಸಿದೆ. ಎಲ್ ಆ್ಯಂಡ್ ಟಿ ಕಂಪನಿ ಯೋಜನೆಯಿಂದ ಹಿಂದೆ ಸರಿದ ನಂತರ ಈ ಮಾರ್ಗವನ್ನು ಮೂರು ಪ್ಯಾಕೇಜ್ಗಳಾಗಿ ವಿಂಗಡಿಸಿ ಮರುಟೆಂಡರ್ ಕರೆಯಲಾಗಿತ್ತು. ಆದರೆ, 1,085 ಕೋಟಿ ರೂ. ಮೊತ್ತದ ಮೊದಲ ಪ್ಯಾಕೇಜ್ಗೆ ಎನ್ಸಿಸಿ ಕಂಪನಿ ಮಾತ್ರ ಬಿಡ್ ಸಲ್ಲಿಸಿದ್ದು, ಸ್ಪರ್ಧಾತ್ಮಕ ಬಿಡ್ಗಳಿಲ್ಲದ ಕಾರಣ ಈ ಪ್ರಕ್ರಿಯೆಯನ್ನು ರದ್ದುಗೊಳಿಸಿ ಹೊಸದಾಗಿ ಟೆಂಡರ್ ಆಹ್ವಾನಿಸಲು ಉದ್ದೇಶಿಸಲಾಗಿದೆ.
ಹಾರ್ಮುಝ್ ಜಲಸಂಧಿ ತಡೆದ ಇರಾನ್: ತೈಲ ಬೆಲೆ ಮತ್ತೆ ಗಗನಕ್ಕೆ
ಟೆಹರಾನ್: ಮಧ್ಯಪ್ರಾಚ್ಯದಲ್ಲಿ ಕದನ ವಿರಾಮದ ಗಡುವು ಸಮೀಪಿಸುತ್ತಿರುವಂತೆಯೇ ಮತ್ತೆ ಸಂಘರ್ಷದ ದಟ್ಟ ಕಾರ್ಮೋಡ ಕವಿದಿದ್ದು, ಅನಿಶ್ಚಿತ ಪರಿಸ್ಥಿತಿಯಲ್ಲಿ ತೈಲ ಬೆಲೆ ಮತ್ತೆ ಗಗನಕ್ಕೇರಿದೆ. ಹಾರ್ಮುಝ್ ಜಲಸಂಧಿಯನ್ನು ಇರಾನ್ ಮತ್ತೆ ತಡೆದಿದೆ ಎಂಬ ಸುದ್ದಿ ಹರಡುತ್ತಿದ್ದಂತೆಯೇ ಕಚ್ಚಾತೈಲದ ಬೆಲೆ ಶೇಕಡ 7ರಷ್ಟು ಏರಿಕೆ ಕಂಡಿದೆ. ಅಮೆರಿಕ ಮತ್ತು ಇರಾನ್ ನಡುವಿನ ಶಾಂತಿ ಮಾತುಕತೆಗೆ ಮಧ್ಯಸ್ಥಿಕೆ ವಹಿಸಿರುವ ಪಾಕಿಸ್ತಾನ ಇನ್ನೊಂದು ಸುತ್ತಿನ ಮಾತುಕತೆಗೆ ಸಜ್ಜಾಗುತ್ತಿದ್ದು, ಇರಾನ್ ಬಂದರುಗಳ ಮೇಲೆ ಅಮೆರಿಕ ನೌಕಾಪಡೆ ವಿಧಿಸಿರುವ ದಿಗ್ಬಂಧನ ತೆರವುಗೊಳಿಸಿದರೆ ಮಾತ್ರ ಮಾತುಕತೆ ಮುಂದುವರಿಸುವುದಾಗಿ ಇರಾನ್ ಸ್ಪಷ್ಟಪಡಿಸಿದೆ. ರವಿವಾರ ಬ್ರೆಂಟ್ ಕಚ್ಚಾತೈಲದ ಬೆಲೆ ಶೇಕಡ 7ರಷ್ಟು ಏರಿಕೆ ಕಂಡು ಪ್ರತಿ ಬ್ಯಾರೆಲ್ ಗೆ 96.88 ಡಾಲರ್ ಆಗಿದ್ದು, ಅಮೆರಿಕದ ಕಚ್ಚಾತೈಲ ಬೆಲೆ ಶೇಕಡ 7ರ ಹೆಚ್ಚಳ ದಾಖಲಿಸಿ 90.33 ಡಾಲರ್ ಗೆ ಏರಿದೆ. ಹಾರ್ಮುಝ್ ಜಲಸಂಧಿ ಸದ್ಯೋಭವಿಷ್ಯದಲ್ಲಿ ತೆರವುಗೊಳ್ಳುವ ಸಾಧ್ಯತೆ ಇಲ್ಲ ಎಂಬ ಭೀತಿಯಿಂದ ಕಚ್ಚಾತೈಲ ಬೆಲೆಯಲ್ಲಿ ಹೆಚ್ಚಳವಾಗಿದೆ. ಅಮೆರಿಕ ವಿಶ್ವಾಸದ್ರೋಹ ಎಸಗಿರುವ ಕಾರಣಕ್ಕೆ ಹಾರ್ಮುಝ್ ಜಲಸಂಧಿಯನ್ನು ಮುಚ್ಚಲಾಗಿದೆ ಎಂದು ಇರಾನ್ ಸ್ಪಷ್ಟಪಡಿಸಿದೆ. ಒಮಾನ್ ಕೊಲ್ಲಿಯಲ್ಲಿ ಇರಾನ್ ನ ಸರಕು ಸಾಗಾಣಿಕೆ ಹಡಗಿನ ಮೇಲೆ ಅಮೆರಿಕದ ನೌಕಾಪಡೆ ದಾಳಿ ನಡೆಸಿ ವಶಪಡಿಸಿಕೊಂಡ ಬಳಿಕ ಉಭಯ ದೇಶಗಳ ನಡುವಿನ ಸಂಘರ್ಷ ತಾರಕಕ್ಕೇರಿದೆ. ಈ ಹಿಂದೆ ಮಾಡಿಕೊಂಡ ಕದನ ವಿರಾಮ ಒಪ್ಪಂದ ಬುಧವಾರ ಕೊನೆಗೊಳ್ಳುತ್ತಿರುವುದು ಅನಿಶ್ಚಿತತೆ ಮತ್ತಷ್ಟು ಹೆಚ್ಚಲು ಕಾರಣವಾಗಿದೆ.
ಕಳೆದ 24 ಗಂಟೆಗಳಲ್ಲಿ ಒಳನಾಡಿನ ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಮಳೆಯಾಗಿರುವುದು ವರದಿಯಾಗಿದೆ. ಆದರೆ, ರಾಜ್ಯದ ಕರಾವಳಿ ಭಾಗದಲ್ಲಿ ಹವಾಮಾನವು ಸಂಪೂರ್ಣವಾಗಿ ಒಣಗಿದ್ದು, ಯಾವುದೇ ಮಳೆಯ ಮುನ್ಸೂಚನೆ ಅಥವಾ ಮಳೆ ದಾಖಲಾಗಿಲ್ಲ. ರಾಜ್ಯದ ಪ್ರಮುಖ ಮಳೆ ಪ್ರಮಾಣವನ್ನು ಗಮನಿಸಿದರೆ, ಕಲಬುರಗಿ ಜಿಲ್ಲೆಯ ಕಲಬುರಗಿ ವೀಕ್ಷಣಾಲಯದಲ್ಲಿ 1 ಸೆಂ.ಮೀ ಮಳೆಯಾಗಿದೆ. ಅದೇ ರೀತಿ, ಧಾರವಾಡ ಜಿಲ್ಲೆಯ ಧಾರವಾಡ ಪಿ.ಟಿ.ಒ ವ್ಯಾಪ್ತಿಯಲ್ಲಿಯೂ
ಮೈಸೂರು: ಟೂರಿಸ್ಟ್ ವಾಹನಗಳ ಮೇಲೆ ಆರ್ಟಿಒ ನಿಗಾ, ಮೊದಲ ದಿನವೇ 10 ವಾಹನಗಳ ವಿರುದ್ಧ ಕೇಸ್
ಮೈಸೂರಿನ ಪ್ರವಾಸಿ ತಾಣಗಳಾದ ಅರಮನೆ, ಮೃಗಾಲಯ ಹಾಗೂ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡುವ ಹೊರರಾಜ್ಯದ ಪ್ರವಾಸಿ ವಾಹನಗಳ ಮೇಲೆ ಸಾರಿಗೆ ಇಲಾಖೆ ಅಧಿಕಾರಿಗಳು ಕಟ್ಟುನಿಟ್ಟಿನ ನಿಗಾ ವಹಿಸಿದ್ದಾರೆ. ನಿಗದಿತ ಕಾಲಾವಧಿ ಮುಗಿದಿದ್ದರೂ ಅಕ್ರಮವಾಗಿ ನಗರದಲ್ಲಿ ಸಂಚರಿಸುತ್ತಿರುವ ವಾಹನಗಳನ್ನು ಪತ್ತೆಹಚ್ಚಲು ವಿಶೇಷ ತಪಾಸಣಾ ಕಾರ್ಯವನ್ನು ಕೈಗೊಳ್ಳಲಾಗುತ್ತಿದೆ.
ಜೆಡಿಎಸ್ಗೆ ಜಮೀರ್ ಅಹ್ಮದ್ ಬರೋದೆಲ್ಲ ಗಾಳಿ ಸುದ್ದಿ: ಊಹಪೋಹಕ್ಕೆ ತೆರೆ ಎಳೆದ ಕೇಂದ್ರ ಸಚಿವ ಎಚ್ಡಿ ಕುಮಾರಸ್ವಾಮಿ
ಕಾಂಗ್ರೆಸ್ ಬಿಟ್ಟು ಜೆಡಿಎಸ್ ಸೇರ್ಪಡೆ ಬಗ್ಗೆ ಕುತೂಹಲ ಹುಟ್ಟಿಸಿದ್ದ ಜಮೀರ್ ಅಹ್ಮದ್ ಅವರ ಸುದ್ದಿಯನ್ನು ಜೆಡಿಎಸ್ ಮುಖಂಡರಾದ ಕುಮಾರಸ್ವಾಮಿ ತಳ್ಳಿಹಾಕಿದ್ದಾರೆ.
ಚಿನ್ನದ ಬೆಲೆ ಎಷ್ಟೇ ಹೆಚ್ಚಾಗಿದ್ದರೂ ಭೇಡಿಕೆ ಕಡಿಮೆಯಾಗಿಲ್ಲ.
ಹ್ಯಾಟ್ರಿಕ್ ಗೆಲುವಿನ ಉತ್ಸಾಹದಿಂದ ಪುಟಿಯುತ್ತಿರುವ ಗುಜರಾತ್ ಜೈಂಟ್ಸ್ ಗೆ ಮುಂಬೈ ಇಂಡಿಯನ್ಸ್ ಸವಾಲು
IPL 2026 ಏಪ್ರಿಲ್ 20ರಂದು ಐಪಿಎಲ್ 2026ರ 30ನೇ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ಮತ್ತು ಮುಂಬೈ ಇಂಡಿಯನ್ಸ್ ಮುಖಾಮುಖಿಯಾಗುತ್ತಿವೆ. ಹ್ಯಾಟ್ರಿಕ್ ಗೆಲುವಿನಿಂದ ಗುಜರಾತ್ ಭರ್ಜರಿ ಫಾರ್ಮ್ನಲ್ಲಿದ್ದರೆ, ಸತತ ನಾಲ್ಕು ಸೋಲುಗಳಿಂದ ಮುಂಬೈ ಅಂಕಪಟ್ಟಿಯಲ್ಲಿ 9ನೇ ಸ್ಥಾನಕ್ಕೆ ಕುಸಿದಿದೆ. ಅಹಮದಾಬಾದ್ನ ಹೈ-ಸ್ಕೋರಿಂಗ್ ಪಿಚ್ನಲ್ಲಿ ಇಬ್ಬನಿ ಪ್ರಭಾವ ಇರುವುದರಿಂದ ಟಾಸ್ ನಿರ್ಣಾಯಕವಾಗಲಿದೆ. ಶುಭಮನ್ ಗಿಲ್ ನೇತೃತ್ವದ ಸಮತೋಲಿತ ಗುಜರಾತ್ ತಂಡಕ್ಕೆ ಸೂರ್ಯಕುಮಾರ್ ಹಾಗೂ ಬುಮ್ರಾ ಒಳಗೊಂಡ ಮುಂಬೈ ತಂಡ ಸವಾಲು ನೀಡಲಿದ್ದು, ರೋಚಕ ಪೈಪೋಟಿ ನಿರೀಕ್ಷಿಸಲಾಗಿದೆ.
ದೇವೇಗೌಡ ಮತ್ತು ಸಿದ್ದರಾಮಯ್ಯ ಏಕೆ ಹೀಗಾದರು?
ರಾಜಕಾರಣ ಮತ್ತು ಸಾಂಸ್ಕೃತಿಕ ರಾಜಕಾರಣಗಳನ್ನು ಮಾಡುವುದು ಹೇಗೆ? ನಮ್ಮ ಸಾಂಸ್ಕೃತಿಕ ನಾಯಕರನ್ನು ಸದುಪಯೋಗ ಮಾಡಿಕೊಳ್ಳುವುದು ಹೇಗೆ? ಎಂಬ ಬಗ್ಗೆ ತಮಿಳುನಾಡಿನ ರಾಜಕಾರಣಿಗಳಿಂದ ‘ನಮ್ಮವರು’ ಕಲಿಯಬೇಕಿರುವುದು ಬಹಳಷ್ಟಿದೆ. ಕೇಸರಿ ರಾಜಕಾರಣಕ್ಕೆ ಶರಣಾಗಿರುವ ಉತ್ತರದ ರಾಜ್ಯಗಳಿಗೆ ಬೆಣ್ಣೆಯೂಟ ಮತ್ತು ಕೇಸರಿ ರಾಜಕಾರಣವನ್ನು ಈಗಲೂ ಅನುಮಾನದಿಂದ ನೋಡುವ ದಕ್ಷಿಣದ ರಾಜ್ಯಗಳಿಗೆ ದೊಣ್ಣೆಯೇಟು ಕೊಡಲೆಂದೇ ಮಾಡಲುಹೊರಟಿದ್ದ ಕ್ಷೇತ್ರ ಪುನರ್ವಿಂಗಡಣೆಯನ್ನು ತಮಿಳುನಾಡು ಅತ್ಯಂತ ಪ್ರಬಲವಾಗಿ ಮತ್ತು ಪ್ರಬುದ್ಧವಾಗಿ ವಿರೋಧಿಸಿದೆ. ಹಳ್ಳಿಯಿಂದ ಸಂಸತ್ತಿನವರೆಗೆ ತಮಿಳು ಜನ ಮತ್ತು ರಾಜಕಾರಣಿಗಳು ಕಪ್ಪು ಬಟ್ಟೆ ಧರಿಸಿ ಪ್ರತಿರೋಧ ತೋರಿದರು. ಸದಾ ಬಿಳಿ ಅಂಗಿ ಬಿಳಿ ಪಂಚೆಯನ್ನೇ ತೊಡುವ ತಮಿಳುನಾಡಿನ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಕ್ಷೇತ್ರಪುನರ್ ವಿಂಗಡಣೆ ವಿರೋಧಿ ಪ್ರತಿಭಟನೆಗೆ ಬಂದದ್ದು ಕಪ್ಪು ಅಂಗಿ ಮತ್ತು ಕಪ್ಪು ಪ್ಯಾಂಟ್ ಧರಿಸಿ. ಸ್ಟಾಲಿನ್ ಮಾತ್ರವಲ್ಲ, ತಮಿಳುನಾಡಿನಾದ್ಯಂತ ಕಪ್ಪು ಬಟ್ಟೆ ತೊಟ್ಟು ಪ್ರತಿಭಟನೆ ನಡೆಸಲಾಯಿತು. ಡಿಎಂಕೆ ಸಚಿವರು, ಮುಖಂಡರು ಮತ್ತು ಕಾರ್ಯಕರ್ತರ ಮನೆ ಹಾಗೂ ಕಚೇರಿಗಳ ಮೇಲೆ ಕಪ್ಪು ಬಾವುಟಗಳನ್ನು ಹಾರಿಸಲಾಯಿತು. ಎಲ್ಲೆಡೆ ಕಪ್ಪು ಬಾವುಟಗಳು ಕಂಗೊಳಿಸಿದವು. ಡಿಎಂಕೆಯ ಮೈತ್ರಿಪಕ್ಷಗಳಾದ ಕಮಲ್ ಹಾಸನ್ ಅವರ ಎಂಎನ್ಎಂ ಮತ್ತು ವೈಕೋ ಅವರ ಎಂಡಿಎಂಕೆ ಕಚೇರಿಗಳಲ್ಲೂ ಕಪ್ಪು ಬಾವುಟ ಪಟಪಟಿಸಿದವು. ಡಿಎಂಕೆ ಸಂಸದರು ಸಂಸತ್ತಿನಲ್ಲಿಯೂ ಕಪ್ಪು ಬಟ್ಟೆಯಲ್ಲಿ ಕಾಣಿಸಿಕೊಂಡರು. ಕಪ್ಪು ಬಣ್ಣವನ್ನು ಈ ಪ್ರತಿಭಟನೆಗೆ ಆಯ್ದುಕೊಂಡದ್ದೇಕೆ ಎಂದು ಡಿಎಂಕೆ ಉಪ ಪ್ರಧಾನ ಕಾರ್ಯದರ್ಶಿಯೂ ಆದ ಸಂಸದೆ ಕನಿಮೊಳಿ ಸಂಸತ್ತಿನೆಲ್ಲೇ ಉತ್ತರ ನೀಡಿದರು. ಇದು ಮಹಿಳೆಯರ ಸ್ವಾಭಿಮಾನ ಮತ್ತು ಸನ್ಮಾನಗಳಿಗೆ ಹೋರಾಡಿದ ಕಾಳಿ ದೇವತೆ ಧರಿಸುತ್ತಿದ್ದ ಬಟ್ಟೆಯ ಬಣ್ಣ ಎಂದು ಬಣ್ಣಿಸಿದರು. ಅದೇ ವೇಳೆ ಅಂಬೇಡ್ಕರ್ ತಮ್ಮ ಪಕ್ಷದ ಧ್ವಜಕ್ಕೆ ನೀಲಿ ಬಣ್ಣ ಆಯ್ದುಕೊಂಡದ್ದನ್ನು ಉಲ್ಲೇಖಿಸಿದರು. ನಮ್ಮ ಬೌದ್ಧಿಕ ನಾಯಕ ಪೆರಿಯಾರ್ ಸ್ವಾಭಿಮಾನ ಮತ್ತು ಹೋರಾಟವನ್ನು ಕಲಿಸಿದ್ದಾರೆ. ನಾವು ಮಸೂದೆ ವಿರುದ್ಧ ಹೋರಾಡುತ್ತೇವೆ ಎಂದು ತಮಿಳರ ಹೋರಾಟದ ಕಿಚ್ಚಿನ ರುಚಿ ತೋರಿಸಿದರು. ಇನ್ನೊಂದೆಡೆ ಸ್ಟಾಲಿನ್ ಖುದ್ದಾಗಿ ಕ್ಷೇತ್ರ ಪುನರ್ ವಿಂಗಡಣೆ ಮಸೂದೆಯನ್ನು ಸುಟ್ಟರು. 1960ರಲ್ಲಿ ಹಿಂದಿ ಹೇರಿಕೆ ವಿರುದ್ಧ ತಮಿಳುನಾಡಿನಲ್ಲಿ ಹೊತ್ತಿದ ಬೆಂಕಿಯ ಬಿಸಿ ದಿಲ್ಲಿಗೆ ತಟ್ಟಿತ್ತು. ಈಗ ಕ್ಷೇತ್ರ ಪುನರ್ ವಿಂಗಡಣೆ ಮಸೂದೆ ಸುಡುವ ಮೂಲಕ ಮತ್ತೊಮ್ಮೆ ಅಂಥದ್ದೇ ಕಿಡಿ ಹೊತ್ತಿಸುತ್ತಿದ್ದೇನೆ ಎಂದು ಕೇಂದ್ರ ಸರಕಾರವನ್ನು ಎಚ್ಚರಿಸಿದರು. ಮುಂದಿನ 25 ವರ್ಷ 1971ರ ಜನಗಣತಿ ಆಧಾರದಲ್ಲೇ ಲೋಕಸಭಾ ಸ್ಥಾನಗಳನ್ನು ನಿಗದಿಪಡಿಸುವ ಬಗ್ಗೆ ಪ್ರಧಾನಿ ಲಿಖಿತ ಭರವಸೆ ನೀಡಬೇಕು ಎಂದು ಆಗ್ರಹಿಸಿದರು. ಎಲ್ಲಾ ಆಗಿ ಸಂಸತ್ತಿನಲ್ಲಿ ಸಂವಿಧಾನದ 131ನೇ ತಿದ್ದುಪಡಿಗಾಗಿ ಮಂಡಿಸಿದ್ದ ಮಸೂದೆ ಪಾಸ್ ಆಗದಿದ್ದಾಗ ‘ತಮಿಳುನಾಡು ದಿಲ್ಲಿಯನ್ನು ಮಣಿಸಿದೆ’ ಎಂದು ಗೆಲುವಿನ ಶ್ರೇಯವನ್ನು ತಮ್ಮದಾಗಿಸಿಕೊಳ್ಳುವ ಪ್ರಯತ್ನ ಮಾಡಿದರು. ಜೊತೆಜೊತೆಗೆ ತಮಿಳುನಾಡಿನ ವಿಧಾನಸಭಾ ಚುನಾವಣೆಯ ಗೆಲುವನ್ನು ಖಾತರಿಪಡಿಸಿಕೊಂಡರು. ಕರ್ನಾಟಕ ಒಂದು ರಾಜ್ಯವಾಗಿ ಇಷ್ಟು ತೀವ್ರವಾದ ವಿರೋಧ ಮಾಡಲಿಲ್ಲ. ರಾಜ್ಯದ ಒಬ್ಬನೇ ಒಬ್ಬ ರಾಜಕಾರಣಿ ಹೀಗೆ ಮಾತನಾಡಿಲ್ಲ. ತಮಿಳುನಾಡಿನ ರಾಜಕಾರಣಿಗಳಿಗೆ ಚುನಾವಣಾ ಮುನ್ನ ತಮ್ಮ ನಿಲುವನ್ನು ಬಲವಾಗಿ ಪ್ರದರ್ಶಿಸಬೇಕಾದ ದರ್ದಿತ್ತು. ಅದಕ್ಕಾಗಿಯೇ ಮಾಡಿದರು ಎಂದುಕೊಂಡರೂ ಅವೈಜ್ಞಾನಿಕ ಕ್ಷೇತ್ರ ಮರುವಿಂಗಡಣೆಯಿಂದ ಆಗಬಹುದಾದ ಅಪಾಯಗಳ ದೃಷ್ಟಿಯಿಂದಲಾದರೂ ಕರ್ನಾಟಕದ ನಾಯಕರು ದನಿ ಎತ್ತಬೇಕಾಗಿತ್ತು. ಆ ಕೆಲಸ ರಾಜ್ಯದ ಮುಂಚೂಣಿ ನಾಯಕರಿಂದ ಆಗಲಿಲ್ಲ. ಇಲ್ಲಿನ ಬಿಜೆಪಿ ಸಂಸದರಿಗೆ ರಾಜ್ಯಕ್ಕಿಂತ ಪಕ್ಷ ಮುಖ್ಯ, ಪಕ್ಷಕ್ಕಿಂತ ಮೋದಿ ಮುಖ್ಯ. ಮೋದಿಯನ್ನು ಮೆಚ್ಚಿಸಲು ತೇಜಸ್ವಿ ಸೂರ್ಯ ನಾಡದ್ರೋಹಿಯಾಗುವುದಕ್ಕೂ ಹಿಂಜರಿಯಲಿಲ್ಲ. ಕಾಂಗ್ರೆಸ್ ನಾಯಕರಿಗೆ ತಿರುಗೇಟು ನೀಡುವ ಛಾತಿ ಇಲ್ಲ. ಬೇರೆ ಎಲ್ಲರನ್ನು ಬಿಡಿ. ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ರಾಷ್ಟ್ರಮಟ್ಟದ ಮುಂಚೂಣಿ ನಾಯಕರಲ್ಲೊಬ್ಬರಾದ ಮಲ್ಲಿಕಾರ್ಜುನ ಖರ್ಗೆ ಅವರಾದರೂ ಕ್ಷೇತ್ರ ಪುನರ್ ವಿಂಗಡಣೆಯಿಂದ ರಾಜ್ಯಕ್ಕಾಗುವ ಅನ್ಯಾಯ ಮತ್ತು ಅಪಾಯಗಳ ಬಗ್ಗೆ ಮಾತನಾಡಬೇಕಿತ್ತು. ಈ ಪೈಕಿ ಮಲ್ಲಿಕಾರ್ಜುನ ಖರ್ಗೆ ಪರವಾಗಿಲ್ಲ. ಲೋಕಸಭೆಯಲ್ಲಿ ಮಸೂದೆಯನ್ನು ವಿರೋಧ ಪಕ್ಷಗಳು ಒಗ್ಗಟ್ಟಾಗಿ ಸೋಲಿಸತ್ತೇವೆ ಎಂದು ಮೊದಲೇ ಹೇಳಿದ್ದರು. ಸೋಲಿಸಲು ಇಂಡಿಯಾ ಮೈತ್ರಿಕೂಟದ ನಾಯಕರ ಮನವೊಲಿಸುವುದಕ್ಕೂ ಶ್ರಮಪಟ್ಟಿದ್ದರು. ಆದರೆ ದೇವೇಗೌಡ ಮತ್ತು ಸಿದ್ದರಾಮಯ್ಯ ಜನ ಇಟ್ಟಿದ್ದ ಬೆಟ್ಟದಷ್ಟು ನಿರೀಕ್ಷೆಗಳನ್ನು ನಿರ್ಲಜ್ಜವಾಗಿ ಹುಸಿಗೊಳಿಸಿದ್ದಾರೆ. ದೇವೇಗೌಡ ನೇತೃತ್ವ ವಹಿಸಬೇಕಿತ್ತು! ಕರ್ನಾಟಕದಿಂದ ಸಾಧ್ಯವಾಗದಿದ್ದರೆ ಮಹಾರಾಷ್ಟ್ರದಿಂದಲಾದರೂ ರಾಜ್ಯಸಭೆಗೆ ಹೋಗಬೇಕೆಂದು ಶತಪ್ರಯತ್ನ ಮಾಡುತ್ತಿರುವ ದೇವೇಗೌಡ ಅರೆಗಳಿಗೆಯಾದರೂ ನಾನು ಈ ನಾಡಿನ ಮಣ್ಣಿನ ಮಗ ಎಂದು ನೆನಪಿಸಿಕೊಳ್ಳಬೇಕಿತ್ತು. ಹೆಸರಿನಲ್ಲೇ ಜಾತ್ಯತೀತ ಎಂಬ ಪದವಿದ್ದರೂ ಕೋಮುವಾದಿ ಬಿಜೆಪಿ ಜೊತೆ ಕೈಜೋಡಿಸಿದ್ದಾರೆ. ಕುಮಾರಸ್ವಾಮಿಯನ್ನು ಮತ್ತೊಮ್ಮೆ ಮುಖ್ಯಮಂತ್ರಿ ಮಾಡಬೇಕೆಂದು ಕನಸು ಕಾಣುತ್ತಿದ್ದಾರೆ. ಮೂರು ಸಲ ಸೋತಿರುವ ಮೊಮ್ಮಗನಿಗೆ ಗೆಲುವಿನ ಸಿಹಿ ತಿನಿಸಬೇಕೆಂದು ಬಿಜೆಪಿ ಜೊತೆ ಇನ್ನಿಲ್ಲದಂತೆ ರಾಜಿ ಮಾಡಿಕೊಳ್ಳುತ್ತಿದ್ದಾರೆ. ಅದೇನಾದರೂ ಆಗಲಿ, ಕ್ಷೇತ್ರಪುನರ್ ವಿಂಗಡಣೆ ಬಗ್ಗೆ ತಳೆದ ಮೌನ ಮಾತ್ರ ಅವರಿಗವರೇ ಮಾಡಿಕೊಂಡ ಅಪಮಾನ. ಶಾಸನಸಭೆಯಲ್ಲಿ ಮಹಿಳೆಯರಿಗೆ ಮೀಸಲಾತಿ ಕೊಡಬೇಕೆಂಬ ಯೋಚನೆ ಮೊಳಕೆಯೊಡೆದದ್ದೇ ದೇವೇಗೌಡ ಪ್ರಧಾನ ಮಂತ್ರಿ ಆಗಿದ್ದಾಗ. ಆಗ ಲಾಲು ಪ್ರಸಾದ್ ಯಾದವ್ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ‘ಮಹಿಳಾ ಮೀಸಲಾತಿಯಲ್ಲಿ ಒಳ ಮೀಸಲಾತಿ ಅಳವಡಿಸಿ, ದಲಿತರು, ಹಿಂದುಳಿದವರು ಮತ್ತು ಅಲ್ಪಸಂಖ್ಯಾತ ಮಹಿಳೆಯರಿಗೆ ಪ್ರತ್ಯೇಕ ಕ್ಷೇತ್ರ ನಿಗದಿ ಮಾಡಬೇಕು. ಪ್ರತ್ಯೇಕ ಕ್ಷೇತ್ರ ನಿಗದಿಯಾಗದಿದ್ದರೆ ಮತ್ತೆ ಮೇಲ್ವರ್ಗದ ಮಹಿಳೆಯರೇ ಸಂಸದರಾಗುವ ಸಾಧ್ಯತೆ ಇರುತ್ತದೆ. ಅದು ಸಾಮಾಜಿಕ ನ್ಯಾಯಕ್ಕೆ ವಿರುದ್ಧವಾಗಿರುತ್ತದೆ’ ಎಂದು ಹೇಳಿದ್ದರು. ಇದನ್ನೇ ನೆಪ ಮಾಡಿಕೊಂಡು ದೇವೇಗೌಡ ಸರಕಾರ ಮಹಿಳಾ ಮೀಸಲಾತಿ ಮಸೂದೆಯನ್ನು ಮತ್ತೆ ಮುಟ್ಟಿ ನೋಡಲಿಲ್ಲ. ಈಗ ನೇರವಾಗಿ ಕ್ಷೇತ್ರ ಪುನರ್ ವಿಂಗಡಣೆ ಮಾಡಲುಹೊರಟರೆ ತೀವ್ರವಾದ ವಿರೋಧ ವ್ಯಕ್ತವಾಗುತ್ತದೆಂದು ಅರಿತಿದ್ದ ಮೋದಿ ಸರಕಾರ ಕ್ಷೇತ್ರ ಪುನರ್ ವಿಂಗಡಣೆ ಜೊತೆಗೆ ಮಹಿಳಾ ಮೀಸಲಾತಿ ವಿಷಯವನ್ನು ಜೋಡಿಸಿತ್ತು. ಮಹಿಳಾ ಮತದಾರರಿಗೆ ಹೆದರಿ ವಿರೋಧ ಪಕ್ಷಗಳು ಮಸೂದೆ ಪರ ನಿಲ್ಲುತ್ತವೆ ಎಂದು ಭ್ರಮಿಸಿತ್ತು. ದೇವೇಗೌಡ ಬಿಜೆಪಿಯ ಈ ಹುನ್ನಾರವನ್ನು ಅರ್ಥ ಮಾಡಿಕೊಳ್ಳಲಾರದಷ್ಟು ದಡ್ಡರಲ್ಲ. ಆದರೂ ಮೌನವಾಗಿ ಸಮ್ಮತಿ ಸೂಚಿಸಿದ್ದರು. ಸದ್ಯ ಮಸೂದೆ ಸಂಸತ್ನಲ್ಲಿ ಪಾಸ್ ಆಗಿಲ್ಲ. ಅದರಿಂದ ಸಮಸ್ಯೆ ಇಲ್ಲ. ಒಂದೊಮ್ಮೆ ಪಾಸ್ ಆಗಿದ್ದರೆ ದಕ್ಷಿಣದ ರಾಜ್ಯಗಳ ಪಾಲಿಗೆ ಅದು ಮರಣಶಾಸನವಾಗುತ್ತಿತ್ತು. ಇದರ ಬಗ್ಗೆ ದೇವೇಗೌಡ ಮಾತನಾಡಬೇಕಿತ್ತು. ಮಾತನಾಡುವುದಕ್ಕಿಂತ ಮಿಗಿಲಾಗಿ ಹಿಂದೆ ಕಾವೇರಿ ವಿಷಯದಲ್ಲಿ ಮಾಡಿದಂತೆ ರಾಜ್ಯ ಸರಕಾರದ ಜೊತೆ ಕೈಜೋಡಿಸಬೇಕಿತ್ತು. ಹೋರಾಟದ ಮುಂಚೂಣಿಗೆ ಬಂದು ನಿಲ್ಲಬೇಕಾಗಿತ್ತು. ದೇಶ 75 ವರ್ಷದಲ್ಲಿ 15 ಪ್ರಧಾನಿಗಳನ್ನು ಕಂಡಿದೆ. ಅದರಲ್ಲಿ ದೇವೇಗೌಡ ಮತ್ತು ಪಿ.ವಿ. ನರಸಿಂಹರಾವ್ ಮಾತ್ರ ದಕ್ಷಿಣದವರು. ಮೋದಿ ಸರಕಾರ ಬಯಸಿದಂತೆ ಕ್ಷೇತ್ರ ಪುನರ್ವಿಂಗಡಣೆ ಆಗಿದ್ದರೆ ಇನ್ನು 150 ವರ್ಷ ಕಳೆದರೂ ಮತ್ತು 30 ಮಂದಿ ಪ್ರಧಾನಿಯಾದರೂ ದಕ್ಷಿಣದಿಂದ ಒಬ್ಬನೇ ಒಬ್ಬನಿಗೂ ಅಂಥ ಅವಕಾಶ ಬರುತ್ತಿರಲಿಲ್ಲ. ಆದರೂ ದೇವೇಗೌಡ ಏಕೆ ಮಾತನಾಡಲಿಲ್ಲ? ಈ ಪರಿಸ್ಥಿತಿಯಲ್ಲಿ ದೇವೇಗೌಡರೇ ದಕ್ಷಿಣ ರಾಜ್ಯಗಳ ಪ್ರಾದೇಶಿಕ ಪಕ್ಷಗಳು, ಪ್ರಾದೇಶಿಕ ನಾಯಕರು ಮತ್ತು ಮುಖ್ಯಮಂತ್ರಿಗಳ ಸಭೆ ಕರೆಯಬೇಕಿತ್ತು. ದಕ್ಷಿಣ ರಾಜ್ಯಗಳ ಎಲ್ಲಾ ನಾಯಕರನ್ನು ಒಗ್ಗೂಡಿಸಿ, ಸಮಾಲೋಚಿಸಿ ಕ್ಷೇತ್ರ ಪುನರ್ವಿಂಗಡಣೆಯ ಮಸೂದೆ ರದ್ದುಪಡಿಸಲು ನೇತೃತ್ವ ವಹಿಸಬೇಕಿತ್ತು. ಸಂಸತ್ನಲ್ಲಿ ಕಡತಕ್ಕೆ ಹೋಗಲು ಭಾಷಣ ಮಾಡುವುದಲ್ಲ, ಸಮರ್ಥ ಹೋರಾಟವನ್ನು ರೂಪಿಸಿ ಕೇಂದ್ರ ಸರಕಾರವನ್ನು ಮಣಿಸಲು ಮುಂದಾಗಬೇಕಿತ್ತು. ಸೀಮಿತರಾದ ಸಿದ್ದರಾಮಯ್ಯ! ನಾಯಕತ್ವ ಬದಲಾವಣೆ ಚರ್ಚೆಯಿಂದ ಬಸವಳಿದಂತೆ ಕಾಣುತ್ತಿರುವ ಸಿದ್ದರಾಮಯ್ಯ ಕ್ಷೇತ್ರ ಪುನರ್ ವಿಂಗಡಣೆ ವಿಚಾರವನ್ನೇ ಸಂಜೀವಿನಿಯಂತೆ ಮಾಡಿಕೊಳ್ಳಬಹುದಿತ್ತು. ಬಿಜೆಪಿಯ ಕೇಸರಿ ರಾಜಕಾರಣಕ್ಕೆ ತಮಿಳುನಾಡು ಕಪ್ಪು ಬಣ್ಣದ ಹೊಡೆತ ಕೊಟ್ಟಂತೆ ಕರ್ನಾಟಕ ಹಳದಿ ಮತ್ತು ಕೆಂಪು ಬಣ್ಣಗಳಿಂದ ದೇಶದ ಗಮನ ಸೆಳೆಯುವಂತೆ ಮಾಡಬಹುದಿತ್ತು. ಸಿದ್ದರಾಮಯ್ಯ ಅವರನ್ನು ಕನ್ನಡರಾಮಯ್ಯ ಎಂದು ಕೂಡ ಕರೆಯಲಾಗುತ್ತದೆ. ಕನ್ನಡ ವ್ಯಾಕರಣದ ಭಾಷಣ ಮಾಡುವುದಲ್ಲ, ಕನ್ನಡ ನಾಡಿನ ಕೂಗನ್ನು ದಿಲ್ಲಿಗೆ ಮುಟ್ಟಿಸುವ ಮೂಲಕ ನಿಜವಾದ ಕರುನಾಡರಾಮಯ್ಯ ಎಂದು ಸಾಬೀತು ಪಡಿಸಬೇಕಾಗಿತ್ತು. ಸ್ಟಾಲಿನ್ ರೀತಿ ಮೈಕೊಡವಿ ನಿಂತಿದ್ದರೆ ಸಹಜವಾಗಿ ಸಿದ್ದರಾಮಯ್ಯ ಅವರಿಗೂ ಜನ ಬೆಂಬಲ ಸಿಕ್ಕಿರುತ್ತಿತ್ತು. ಸ್ಟಾಲಿನ್ ರೀತಿಯಲ್ಲೇ ‘ಕರ್ನಾಟಕದ ಎದುರು ದಿಲ್ಲಿ ಸೋತಿದೆ’ ಎಂದು ಸಿದ್ದರಾಮಯ್ಯ ಕೂಡ ಅಬ್ಬರಿಸಬಹುದಿತ್ತು. ಇದೇ ವಿಷಯ ಸ್ಟಾಲಿನ್ ಅವರಿಗೆ ಚುನಾವಣೆಯಲ್ಲಿ ಅನುಕೂಲವಾಗುತ್ತಿರುವಂತೆ ನಾಯಕತ್ವ ಬದಲಾವಣೆ ವಿಷಯದಲ್ಲಿ ಸಿದ್ದರಾಮಯ್ಯರಿಗೂ ಫಸಲು ಕೊಡುತ್ತಿತ್ತು. ದೇವೇಗೌಡ ಮಾಡಿಲ್ಲದಿದ್ದರೇನಂತೆ, ಸಿದ್ದರಾಮಯ್ಯನವರಾದರೂ ದಕ್ಷಿಣ ರಾಜ್ಯಗಳ ಮುಖ್ಯಮಂತ್ರಿಗಳು ಹಾಗೂ ಮತ್ತಿತರ ಸಾಂಸ್ಕೃತಿಕ ನಾಯಕರ ಸಭೆ ಕರೆಯಬೇಕಿತ್ತು. ದಕ್ಷಿಣ ರಾಜ್ಯಗಳ ಜನ ನಾಯಕರನ್ನು ಒಗ್ಗೂಡಿಸಲು ಮುಂದಾಗಬೇಕಿತ್ತು. ಕಾಂಗ್ರೆಸ್ ರಾಷ್ಟ್ರೀಯ ಪಕ್ಷವಾಗಿರುವುದರಿಂದ ಹೈಕಮಾಂಡಿನ ತಕರಾರು ಇರುತ್ತಿತ್ತಾದರೂ ರಾಹುಲ್ ಗಾಂಧಿ ತುಸು ಭಿನ್ನವಾಗಿ ಯೋಚನೆ ಮಾಡಿ ಸಿದ್ದರಾಮಯ್ಯನವರ ಬೆನ್ನುತಟ್ಟುವ ಸಾಧ್ಯತೆ ಇತ್ತು. ಸದ್ಯ ಕ್ಷೇತ್ರ ಪುನರ್ ವಿಂಗಡಣೆಗಿರುವ ಮಸೂದೆ ಪಾಸ್ ಆಗಿಲ್ಲ. ಅದರಿಂದ ತಕ್ಷಣಕ್ಕೆ ಯೋಚನೆ ಮಾಡುವ ಅಗತ್ಯ ಇಲ್ಲ. ಹಾಗಂತ ಸಿದ್ದರಾಮಯ್ಯ ವರ್ತನೆಯನ್ನು ಜನ ಮರೆಯುವುದಿಲ್ಲ. ಮೇಲೆ ಹೇಳಿದ ಹಲವು ಕೆಲಸಗಳನ್ನು, ಅದರಾಚೆಗೂ ಕೆಲವನ್ನು ಅವರು ಮಾಡಬೇಕಿತ್ತು. ಕಡೆಯ ಪಕ್ಷ ಕ್ಷೇತ್ರ ಪುನರ್ ವಿಂಗಡಣೆ ವಿಷಯಕ್ಕೆ ಸಂಬಂಧಿಸಿದಂತೆ ಒಂದೇ ಒಂದು ಪತ್ರಿಕಾಗೋಷ್ಠಿ ಕರೆದಿಲ್ಲ. ಮೋದಿ ಕರ್ನಾಟಕಕ್ಕೆ ಬಂದಿದ್ದಾಗ ಮನವಿ ಪತ್ರ ಕೊಟ್ಟಿದ್ದಾರೆ. ಟಿ.ವಿ. ಮಾಧ್ಯಮದವರು ಅವರಾಗಿಯೇ ಕೇಳಿದಾಗ ಒಂದು ಬೈಟ್ ಕೊಟ್ಟು, ಖಡಕ್ ಆದ ಒಂದು ಟ್ವೀಟ್ ಮಾಡಿದ್ದಾರೆ. ಹೆಚ್ಚೆಂದರೆ ಪತ್ರಿಕೆಗಳಿಗೆ ಲೇಖನ ಬರೆದಿದ್ದಾರೆ. ಇಷ್ಟಕ್ಕೇ ಅವರನ್ನವರು ಸೀಮಿತ ಮಾಡಿಕೊಂಡಿದ್ದಾರೆ. ದೇವೇಗೌಡ ಮತ್ತು ಸಿದ್ದರಾಮಯ್ಯ ಏಕೆ ಹೀಗಾದರು? ಆಫ್ ದಿ ರೆಕಾರ್ಡ್ ಬೆಂಗಳೂರಿನ ರಸ್ತೆ ಕಿತ್ತುಹೋದಾಗ ಆಕಾಶವೇ ಬಿದ್ದುಹೋಗಿದೆ ಎಂದು ಬಾಯಿಬಿಡುವ ಮೋಹನ್ ದಾಸ್ ಪೈ, ಕಿರಣ್ ಮಜುಮ್ದಾರ್-ಷಾ, ಪ್ರಭಾವಶಾಲಿಗಳು ಎಂದು ಬೀಗಿಕೊಳ್ಳುವ ಸುದೀಪ್, ಯಶ್ ಮತ್ತಿತರ ನಟರು ಕೂಡ ಕ್ಷೇತ್ರ ಮರುವಿಂಗಡಣೆ ವಿಷಯದಲ್ಲಿ ದನಿ ಎತ್ತಿಲ್ಲ ಎನ್ನುವುದು ನಿಜ. ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯಕ್ಕೆ ಆಗಬಾರದ ಅನ್ಯಾಯ ಆಗುತ್ತಿದ್ದರೂ ನೋಡಿಕೊಂಡು ಮೌನವಾಗಿರುವ ಇವರಿಗೆಲ್ಲಾ ಬುದ್ಧಿ ಕಲಿಸುವವರು ಯಾರು?
IPL 2026- ಮುಂದುವರಿದ ಪಂಜಾಬ್ ಕಿಂಗ್ಸ್ ಅಜೇಯ ಸವಾರಿ ; ಲಖನೌ ಸೂಪರ್ ಜೈಂಟ್ಸ್ ಗೆ ಹ್ಯಾಟ್ರಿಕ್ ಸೋಲಿನ ಬರೆ
ಐಪಿಎಲ್ 2026ರಲ್ಲಿ ಪಂಜಾಬ್ ಕಿಂಗ್ಸ್ ತಂಡದ ಅಜೇಯ ದಂಡಯಾತ್ರೆ ಮುಂದುವರಿದಿದೆ. ಪ್ರಿಯಾಂಶ್ ಆರ್ಯ ಮತ್ತು ಕೂಪರ್ ಕಾನಲ್ಲಿ ಅವರ ಹೊಡೆಬಡಿಯ ಅರ್ಧಶತಕ ಮತ್ತು ಮಾರ್ಕೋ ಯಾನ್ಸನ್ ಅವರ ಮಾರಕ ಬೌಲಿಂಗ್ ನೆರವಿನಿಂದ ಲಖನೌ ಸೂಪರ್ ಜೈಂಟ್ಸ್ ತಂಡವನ್ನು 54 ರನ್ ಗಳಿಂದ ಸೋಲಿಸಿದೆ. ಈ ಮೂಲಕ 6 ಪಂದ್ಯಗಳಲ್ಲಿ 5ನ್ನು ಗೆದ್ದು 10 ಅಂಕಗಳೊಂದಿಗೆ ಯಲ್ಲಿ ಅಗ್ರಸ್ಥಾನಿಯಾಗಿಯೇ ಮುಂದುವರಿದಿದೆ. ನವ ಚಂಡೀಗಢದಲ್ಲಿ ಏಪ್ರಿಲ್ 19 ಭಾನುವಾರದಂದು ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ ಕಿಂಗ್ಸ್ ತಂಡ 7 ವಿಕೆಟ್ ನಷ್ಟಕ್ಕೆ 20 ಓವರ್ ಗಳಲ್ಲಿ 254 ರನ್ ಗಳ ಬೃಹತ್ ಮೊತ್ತ ಪೇರಿಸಿತು. ಇದಕ್ಕೆ ಉತ್ತರವಾಗಿ ಲಖನೌ ಸೂಪರ್ ಜೈಂಟ್ಸ್ ಅವರು ಅಷ್ಟೇ ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ ಭರ್ತಿ 200 ರನ್ ಗಳಿಸಲಷ್ಟೇ ಸಾಧ್ಯವಾಯಿತು. ()
Women's Reservation - Delimitation: ಲೋಕಸಭಾ ಕ್ಷೇತ್ರಗಳ ಮರು ವಿಂಗಡಣೆ ಹಾಗೂ ಈ ಮರು ವಿಂಗಡಣೆಯ ಆಧಾರದ ಮೇಲೆ ಮಹಿಳಾ ಮೀಸಲಾತಿ ಮಂಡನೆ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ಮಂಡನೆ ಮಾಡಲಾಗಿರುವ ಮಸೂದೆಗಳಿಗೆ ಸೋಲಾಗಿದೆ. ಕೇಂದ್ರ ಬಿಜೆಪಿ ಸರ್ಕಾರವು ವಿರೋಧ ಪಕ್ಷಗಳ ವಿರುದ್ಧ ಕೆಂಡಕಾರಿದ್ದು, ಆಕ್ಷೇಪ ವ್ಯಕ್ತಪಡಿಸುತ್ತಿದೆ. ಇದರ ನಡುವೆ ಕರ್ನಾಟಕ ಬಿಜೆಪಿ ಸೋಷಿಯಲ್ ಮೀಡಿಯಾದಲ್ಲಿ ಸರಣಿ ಟ್ವೀಟ್
ಅಕ್ರಮವಾಗಿ ಐಪಿಎಲ್ ಟಿಕೆಟ್ಗಳ ಮಾರಾಟ ಪ್ರಕರಣ: ಡಿಎನ್ಎ ಸಂಸ್ಥೆಗೆ ಸಿಸಿಬಿ ನೋಟಿಸ್
ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅಕ್ರಮವಾಗಿ ಐಪಿಎಲ್ ಟಿಕೆಟ್ಗಳನ್ನು ಮಾರಾಟ ಮಾಡುತ್ತಿದ್ದ ಜಾಲವೊಂದನ್ನು ಸಿಸಿಬಿ ಪೊಲೀಸರು ಭೇದಿಸಿದ್ದು, ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ(ಕೆಎಸ್ಸಿಎ) ಸದಸ್ಯ ಗಣೇಶ್ ಹರಿಕೇಶ್ ವಿರುದ್ಧ ಎಫ್ಐಆರ್ ದಾಖಲಾದ ಬೆನ್ನಲ್ಲೇ, RCB ಟಿಕೆಟ್ ನಿರ್ವಹಣೆ ಮಾಡುವ ಡಿಎನ್ಎ ಎಂಟರ್ಟೈನ್ಮೆಂಟ್ ನೆಟ್ವರ್ಕ್ಸ್ ಸಂಸ್ಥೆಗೆ ಸಿಸಿಬಿ ಪೊಲೀಸರು ನೋಟಿಸ್ ಜಾರಿ ಮಾಡಿರುವುದಾಗಿ ವರದಿಯಾಗಿದೆ. ಕಾಳಸಂತೆಯಲ್ಲಿ ಐಪಿಎಲ್ ಟಿಕೆಟ್ಗಳನ್ನು ಮಾರಾಟ ಮಾಡುತ್ತಿದ್ದ ಚಂದ್ರಶೇಖರ್ ಎಂಬ ವ್ಯಕ್ತಿಯನ್ನು ಸಿಸಿಬಿ ಪೊಲೀಸರು ಬಂಧಿಸಿದಾಗ ವಿಚಾರಣೆ ವೇಳೆ ಆತ ಕೆಎಸ್ಸಿಎ ಸದಸ್ಯ ಹರಿಕೇಶ್ ಹೆಸರನ್ನು ಬಹಿರಂಗಪಡಿಸಿದ್ದ. ಆರೋಪಿ ಚಂದ್ರಶೇಖರ್ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ಯಾಂಟೀನ್ನಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯಾಗಿದ್ದು, ಅವನ ಮೂಲಕವೇ ಟಿಕೆಟ್ಗಳನ್ನು ಅಕ್ರಮವಾಗಿ ಮಾರಾಟ ಮಾಡಲಾಗುತ್ತಿತ್ತು ಎನ್ನಲಾಗಿದೆ. ಈ ಬಗ್ಗೆ ತನಿಖೆ ನಡೆಸಿದಾಗ ಗಣೇಶ್ ಹರಿಕೇಶ್ ಸ್ವಸ್ತಿಕ್ ಹೆವಿ ಇಂಜಿನಿಯರಿಂಗ್ ಆ್ಯಂಡ್ ಇಂಡಸ್ಟ್ರಿಯಲ್ ಆಟೋಮೋಟಿವ್ ಹಾಗೂ ಧರಣಿ ಕಂಪ್ಯೂಟರ್ಸ್ ಎಂಬ ಎರಡು ಖಾಸಗಿ ಕಂಪೆನಿಗಳ ಹೆಸರಿನಲ್ಲಿ ಆನ್ಲೈನ್ ಮೂಲಕ ದೊಡ್ಡ ಪ್ರಮಾಣದಲ್ಲಿ ಐಪಿಎಲ್ ಟಿಕೆಟ್ಗಳನ್ನು ಖರೀದಿಸುತ್ತಿದ್ದನು ಎಂದು ತಿಳಿದುಬಂದಿದೆ. ಈ ಕಂಪೆನಿಗಳ ಮೂಲಕ ಟಿಕೆಟ್ಗಳನ್ನು ಪಡೆಯುತ್ತಿದ್ದ ಗಣೇಶ್, ಬಳಿಕ ಅವುಗಳನ್ನು ಚಂದ್ರಶೇಖರ್ ನಿಂದ ಹೆಚ್ಚಿನ ಬೆಲೆಗೆ ಮಾರಾಟ ಮಾಡಿಸುತ್ತಿದ್ದ ಎಂದು ಮೂಲಗಳು ತಿಳಿಸಿವೆ. ಸದ್ಯ, ಇದೆಲ್ಲದರ ನಡುವೆ RCB ಟಿಕೆಟ್ ನಿರ್ವಹಣೆಯನ್ನು ಹೊತ್ತಿರುವ ಡಿಎನ್ಎ ಎಂಟರ್ಟೈನ್ಮೆಂಟ್ ನೆಟ್ವರ್ಕ್ಸ್ ಸಂಸ್ಥೆಯ ಮೇಲೂ ಸಿಸಿಬಿಗೆ ಅನುಮಾನ ವ್ಯಕ್ತವಾಗಿದ್ದು, ಸಂಸ್ಥೆಗೆ ನೋಟಿಸ್ ನೀಡಿ ತನಿಖೆಗೆ ಸಹಕರಿಸುವಂತೆ ತಿಳಿಸಲಾಗಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.
Ipl 2026 | ಲಕ್ನೋ ವಿರುದ್ಧ ಪಂಜಾಬ್ಗೆ 54 ರನ್ಗಳ ಭರ್ಜರಿ ಜಯ
ಪಂಜಾಬ್ : ಮಹಾರಾಜ ಯಾದವೀಂದ್ರ ಸಿಂಗ್ ಪಿಸಿಎ ಸ್ಟೇಡಿಯಂನಲ್ಲಿ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡದ ವಿರುದ್ಧ ಪಂಜಾಬ್ ತಂಡವು 54 ರನ್ಗಳ ಜಯ ಸಾಧಿಸಿದೆ.
Islamabad talks | ಎರಡನೇ ಸುತ್ತಿನ ಶಾಂತಿ ಮಾತುಕತೆಯಲ್ಲಿ ಭಾಗವಹಿಸುವುದಿಲ್ಲ: ಇರಾನ್ ಸ್ಪಷ್ಟನೆ
ಟೆಹರಾನ್, ಎ.19: ನಾಳೆ ನಡೆಯಲಿದೆ ಎಂದು ಅಮೆರಿಕ ಹೇಳಿರುವ ಎರಡನೇ ಸುತ್ತಿನ ಶಾಂತಿ ಮಾತುಕತೆ ಕುರಿತು ಇರಾನ್ ಗೊಂದಲ ನಿವಾರಣೆ ಮಾಡಿದ್ದು, ಆ ಮಾತುಕತೆಯಲ್ಲಿ ಭಾಗವಹಿಸುವುದಾಗಿ ಯಾವುದೇ ಒಪ್ಪಿಗೆ ನೀಡಿಲ್ಲ ಎಂದು ಸ್ಪಷ್ಟಪಡಿಸಿದೆ.ಅಮೆರಿಕದ ಅತಿಯಾದ ಬೇಡಿಕೆಗಳು ಮತ್ತು ಅವಾಸ್ತವಿಕ ನಿರೀಕ್ಷೆಗಳೇ ಈ ಪರಿಸ್ಥಿತಿಗೆ ಕಾರಣ ಎಂದು ಇರಾನ್ ಆರೋಪಿಸಿದೆ ಎಂದು Aljazeera ವರದಿ ಮಾಡಿದೆ. ಇರಾನಿನ ಅಧಿಕೃತ ಸುದ್ದಿ ಸಂಸ್ಥೆ IRNAದ ಪ್ರಕಾರ, ಅಮೆರಿಕ ತನ್ನ ನಿಲುವನ್ನು ಪದೇಪದೇ ಬದಲಾಯಿಸುತ್ತಿದ್ದು, ವಿರೋಧಾಭಾಸದ ಹೇಳಿಕೆಗಳನ್ನು ನೀಡುತ್ತಿದೆ. ಜೊತೆಗೆ ನೌಕಾ ದಿಗ್ಬಂಧನವನ್ನು ಮುಂದುವರಿಸುತ್ತಿರುವುದು ಕದನ ವಿರಾಮದ ಉಲ್ಲಂಘನೆ ಎಂದು ಇರಾನ್ ಟೀಕಿಸಿದೆ. ಇಸ್ಲಾಮಾಬಾದ್ ನಲ್ಲಿ ಎರಡನೇ ಸುತ್ತಿನ ಮಾತುಕತೆ ನಡೆಯಲಿದೆ ಎಂಬ ವರದಿಗಳನ್ನೂ IRNA ತಳ್ಳಿಹಾಕಿದೆ. ಅಮೆರಿಕ ನೀಡಿರುವ ಹೇಳಿಕೆಗಳು ಮಾಧ್ಯಮಗಳ ಮೂಲಕ ಒತ್ತಡ ಹೇರುವ ಪ್ರಯತ್ನವಾಗಿದ್ದು, ಇರಾನ್ ವಿರುದ್ಧ ಆರೋಪಗಳನ್ನು ಹರಡುವ ಯತ್ನವಾಗಿದೆ ಎಂದು ಆರೋಪಿಸಲಾಗಿದೆ.
Women's Reservation: ಮಹಿಳಾ ಮೀಸಲಾತಿ ಮಸೂದೆ ರಾಜ್ಯಸಭೆ ಮತ್ತು ಲೋಕಸಭೆಯಲ್ಲಿ 2023ರಲ್ಲಿಯೇ ಅಂಗೀಕಾರವಾಗಿದೆ. ಪ್ರಸ್ತುತ ಕ್ಷೇತ್ರ ಮರುವಿಂಗಡನೆಯನ್ನು ಸೇರಿಸಿ ಮಂಡಿಸಿದ್ದಾರೆ. ನಾವು ಮಹಿಳಾ ಮೀಸಲಾತಿಗೆ ವಿರೋಧಿಸಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ. ಹಾವೇರಿ ಜಿಲ್ಲೆಯ ರಾಣೇಬೆನ್ನೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗಳಿಗೆ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳಾ ಮೀಸಲಾತಿ
Karnataka Rain: ಕರ್ನಾಟಕದಲ್ಲಿ ಈ ಬಾರಿ ಮಳೆ ಕೊರತೆ ಮುನ್ಸೂಚನೆ: ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದೇನು
Karnataka Rain: ಈ ಬಾರಿ ಕರ್ನಾಟಕದಲ್ಲಿ ಮಳೆ ಕೊರತೆಯಾಗಲಿದೆ ಎಂಬ ಮುನ್ಸೂಚನೆ ಇದೆ. ಇದೀಗ ಈ ವಿಚಾರಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಹತ್ವದ ಮಾಹಿತಿಯೊಂದನ್ನು ಹಂಚಿಕೊಂಡಿದ್ದಾರೆ. ಹಾವೇರಿ ಜಿಲ್ಲೆಯ ರಾಣೇಬೆನ್ನೂರಿನ ನಿಟ್ಟೂರು ಗ್ರಾಮದಲ್ಲಿ ಆಯೋಜಿಸಿದ್ದ ಶ್ರೀ ಬೀರೇಶ್ವರ ಸ್ವಾಮಿ ದೇವಸ್ಥಾನದ 50ನೇ ವರ್ಷದ ಸುವರ್ಣ ಮಹೋತ್ಸವ ಹಾಗೂ ಶ್ರೀ ಭಕ್ತ ಕನಕದಾಸರ ಮಹಾದ್ವಾರದ ಉದ್ಘಾಟನೆ ಹಾಗೂ
ಈ ಬಾರಿ ಒಪ್ಪಂದ ಮೂಡದಿದ್ದರೆ ಇರಾನ್ ಧ್ವಂಸ: ಮೃದು ಧೋರಣೆ ತೋರಲ್ಲ ಎಂದು ಟ್ರಂಪ್ ಗುಡುಗು
ವಾಷಿಂಗ್ಟನ್/ಟೆಹ್ರಾನ್: ಮಧ್ಯಪ್ರಾಚ್ಯದಲ್ಲಿ ಜಾರಿಯಲ್ಲಿರುವ 10 ದಿನಗಳ ಕದನ ವಿರಾಮ ಅಂತ್ಯಗೊಳ್ಳಲು ಇನ್ನೆರೆಡು ದಿನ ಬಾಕಿ ಉಳಿದಿರುವಾಗಲೇ ಎರಡನೇ ಸುತ್ತಿಗೆ ಸಂಧಾನ ಮಾತುಕತೆಗೆ ಪಾಕಿಸ್ತಾನ ವೇದಿಕೆ ಸಿದ್ಧಪಡಿಸಿದೆ. ಇದರ ನಡುವೆಯೇ ಮತ್ತೆ ಗುಡುಗಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ''ಸಂಘರ್ಷ ಕೊನೆಗಾಣಿಸಲು ಸಮಂಜಸ ಒಪ್ಪಂದಕ್ಕೆ (ಫೇರ್ ಡೀಲ್) ಬಾರದಿದ್ದರೆ ಇರಾನ್ನ ಪ್ರತಿಯೊಂದು ವಿದ್ಯುತ್ ಸ್ಥಾವರ, ಸೇತುವೆಗಳು ಧ್ವಂಸಗೊಳ್ಳಲಿವೆ. ಇನ್ನು ಮೃದು ಧೋರಣೆ ತೋರುವ ಮಾತೇ ಇಲ್ಲ,'' ಎಂದು ಸಾಮಾಜಿಕ ಜಾಲತಾಣ ಟ್ರುಥ್ನಲ್ಲಿ ಎಚ್ಚರಿಕೆ ನೀಡಿದ್ದಾರೆ.''ಪಾಕಿಸ್ತಾನದಲ್ಲಿ ಎರಡನೇ ಹಂತದ ಮಾತುಕತೆಗೆ ವೇದಿಕೆ ಸಿದ್ಧಗೊಂಡಿದೆ. ನಮ್ಮ ಪ್ರತಿನಿಧಿಗಳು ಇಸ್ಲಾಮಾಬಾದ್ಗೆ ಪ್ರಯಾಣ ಬೆಳಸಲಿದ್ದಾರೆ. ಏಪ್ರಿಲ್ 20ರ ಸೋಮವಾರ ಸಂಜೆಯೊಳಗೆ ಇರಾನ್ ನಿಯೋಗ ಆಗಮಿಸಬೇಕು. ಅಮೆರಿಕ ತುಂಬ ಸಮಂಜಸ ಹಾಗೂ ನ್ಯಾಯಯುತ ಒಪ್ಪಂದದ ಆಹ್ವಾನ ನೀಡಿದೆ. ಯುದ್ಧ ಅಂತ್ಯಗೊಳಿಸುವ ಸಂಬಂಧ ಇರಾನ್ ಸೂಕ್ತ ಒಪ್ಪಂದಕ್ಕೆ ಬರಲೇಬೇಕು. ಶಾಂತಿ ಒಪ್ಪಂದ ಮೂಡದಿದ್ದರೆ ಇರಾನ್ ಧ್ವಂಸವಾಗಲಿದೆ,'' ಎಂದು ಟ್ರಂಪ್ ಗುಡುಗಿದ್ದಾರೆ. ಇದರ ನಡುವೆ ಇರಾನ್ ರಾಷ್ಟ್ರೀಯ ಭದ್ರತಾ ಮಂಡಳಿ, ದೇಶದ ಹಿತಾಸಕ್ತಿ ಕಡೆಗಣಿಸಿ ಯಾವುದೇ ಕಾರಣಕ್ಕೆ ವಾಷಿಂಗ್ಟನ್ ಜತೆ ಒಪ್ಪಂದ ಮಾಡಿಕೊಳ್ಳುವುದಿಲ್ಲ ಎಂದು ಹೇಳಿದೆ. ಹೀಗಾಗಿ ಎರಡನೇ ಸುತ್ತಿನ ಮಾತುಕತೆ ಮೇಲೆ ವಿಶ್ವದ ಗಮನ ನೆಟ್ಟಿದೆ.ವ್ಯಾನ್ಸ್ ಇಲ್ಲ: ಸಂಧಾನ ಮಾತುಕತೆಯಲ್ಲಿ ಅಮೆರಿಕ ಪ್ರತಿನಿಧಿಗಳಾಗಿ ಅಧ್ಯಕ್ಷರ ವಿಶೇಷ ರಾಯಭಾರಿ ಸ್ಟೀವ್ ವಿಟ್ಕಾಫ್, ಟ್ರಂಪ್ ಸಲಹೆಗಾರ ಹಾಗೂ ಅಳಿಯ ಜೇರೆಡ್ ಕುಶ್ನರ್ ಭಾಗಿಯಾಗಲಿದ್ದಾರೆ. ಮೊದಲ ಸುತ್ತಿನ ಮಾತುಕತೆ ನೇತೃತ್ವ ವಹಿಸಿದ್ದ ಉಪಧ್ಯಕ್ಷ ಜೆ.ಡಿ.ವ್ಯಾನ್ಸ್ ಎರಡನೇ ಸುತ್ತಿನ ಮಾತುಕತೆಯಲ್ಲಿ ಭಾಗಿಯಾಗುತ್ತಿಲ್ಲ ಎಂದು ಶ್ವೇತಭವನ ಸ್ಪಷ್ಟಪಡಿಸಿದೆ. ವ್ಯಾನ್ಸ್ ತೆರಳಲಿದ್ದಾರೆ ಎಂಬ ವರದಿಗಳು ಈ ಮೊದಲು ಮಾಧ್ಯಮಗಳಲ್ಲಿ ಹರಿದಾಡಿತ್ತು. ಇರಾನ್ ವಿನಾಶ ಖಚಿತ ಸಂಘರ್ಷ ಕೊನೆಗಾಣಿಸಲು ಅಮೆರಿಕ ನೀಡಿರುವ ಸಂಧಾನ ಸೂತ್ರವನ್ನು ಇರಾನ್ ಸ್ವೀಕರಿಸುವ ವಿಶ್ವಾಸವಿದೆ. ನಮ್ಮ ನಿರೀಕ್ಷೆಯಂತೆ ಒಪ್ಪಂದ ಮೂಡದಿದ್ದರೆ ಇರಾನ್ ವಿನಾಶಕ್ಕೆ ಮುಹೂರ್ತ ನಿಗದಿಯಾಗಲಿದೆ. ಕಳೆದ 47 ವರ್ಷಗಳಿಂದ ಯಾವ ಅಧ್ಯಕ್ಷರು ಮಾಡದ ಕೆಲಸವನ್ನು ನಾನು ಮಾಡುವೆ. 'ಇರಾನ್ನ ಕಿಲ್ಲಿಂಗ್ ಮಷಿನ್'ಗೆ ಅಂತ್ಯ ಹಾಡುವೆ.-ಡೊನಾಲ್ಡ್ ಟ್ರಂಪ್ ಅಮೆರಿಕ ಅಧ್ಯಕ್ಷ---------- ಹರ್ಮುಜ್ ದಾಟಿದ ಭಾರತದ ಟ್ಯಾಂಕರ್ ಶನಿವಾರದ ಗುಂಡಿನ ದಾಳಿ ಬಳಿಕ ಕಚ್ಚಾ ತೈಲ ಹೊತ್ತ ಭಾರತದ 'ದೇಶ್ ಗರೀಮಾ' ಟ್ಯಾಂಕರ್ ಶಿಪ್ ಹರ್ಮುಜ್ ಜಲಸಂಧಿ ದಾಟಿದೆ. ಭಾರತದ ತೀವ್ರ ಆಕ್ರೋಶದ ಬಳಿಕ ಸುರಕ್ಷಿತವಾಗಿ ತೈಲ ಹಡಗನ್ನು ಜಲಮಾರ್ಗ ದಾಟಿಸಲಾಗಿದೆ. ಶಿಪ್ಪಿಂಗ್ ಕಾರ್ಪೊರೇಷನ್ ಆಫ್ ಇಂಡಿಯಾ ಅಡಿಯಲ್ಲಿಕಾರ್ಯ ನಿರ್ವಹಿಸುವ 'ದೇಶ್ ಗರೀಮಾ' ತೈಲ ಟ್ಯಾಂಕರ್ ಏ.18ರ ರಾತ್ರಿ ಜಲಸಂಧಿ ದಾಟಿದೆ. ಏ.22 ರಂದು ಮುಂಬಯಿ ಬಂದರಿಗೆ ಆಗಮಿಸುವ ನಿರೀಕ್ಷೆ ಇದೆ. ಫೆ.28 ರಂದು ಸಂಘರ್ಷ ಆರಂಭದ ಬಳಿಕ ಭಾರತದ 10ನೇ ಹಡಗು ಜಲಮಾರ್ಗ ದಾಟಿ ಬಂದಿದೆ. ಕಚ್ಚಾ ತೈಲ ಹೊತ್ತ 'ದೇಶ್ ವೈಭವ್', 'ದೇಶ್ ವಿಭೋರ್' ಹಡಗುಗಳು ಪರ್ಶಿಯನ್ ಕೊಲ್ಲಿಯಲ್ಲಿದ್ದು, ಜಲಸಂಧಿ ದಾಟಲು ಗ್ರೀನ್ ಸಿಗ್ನಲ್ ನಿರೀಕ್ಷೆಯಲ್ಲಿವೆ. ಇನ್ನೂ 14 ಭಾರತೀಯ ಹಡಗುಗಳ ಜಲಮಾರ್ಗದಲ್ಲಿಉಳಿದುಕೊಂಡಿವೆ ಎಂದು ಕೇಂದ್ರ ಸರಕಾರ ಮಾಹಿತಿ ನೀಡಿದೆ. ಯುದ್ಧದಲ್ಲಿ ಗೆದ್ದಿದ್ದು ನಾವೇ: ಟೆಹ್ರಾನ್ ಎರಡ್ಮೂರು ದಿನಗಳಲ್ಲಿ ಇರಾನ್ನನ್ನು ಸೋಲಿಸುತ್ತೇವೆಂದು ಅಮೆರಿಕ ನಂಬಿತ್ತು. ಆದರೆ, 40 ದಿನಗಳ ಸಂಘರ್ಷ ನಂತರವೂ ಟೆಹ್ರಾನ್ ಅಚಲವಾಗಿ ಹೋರಾಡುತ್ತಿದೆ. ಎಫ್-35 ವಿಮಾನ ಹೊಡೆದುರುಳಿಸಿದ್ದು ಸಣ್ಣ ಸಂಗತಿಯಲ್ಲ. ಯುದ್ಧದಲ್ಲಿ ಗೆದ್ದಿದ್ದು ನಾವೇ ಎಂದು ಇರಾನ್ ಹೇಳಿದೆ.
ಹಾರ್ಮುಝ್ ಮೇಲೆ ನಿಯಂತ್ರಣ ಬಿಗಿಗೊಳಿಸಿದ IRGC; ಜಲಸಂಧಿಗೆ ಪ್ರವೇಶಿಸುವ ಹಡಗುಗಳಿಗೆ ದಾಳಿ ಎಚ್ಚರಿಕೆ
ಟೆಹರಾನ್, ಎ.10: ಹಾರ್ಮುಝ್ ಜಲಸಂಧಿಯ ಮೇಲೆ ತನ್ನ ನಿಯಂತ್ರಣವನ್ನು ಇರಾನ್ ಮತ್ತೆ ಬಿಗಿಗೊಳಿಸಿದೆ. ಮುಚ್ಚಲ್ಪಟ್ಟಿರುವ ಜಲಸಂಧಿ ಪ್ರದೇಶವನ್ನು ಪ್ರವೇಶಿಸಲು ಯತ್ನಿಸುವ ಯಾವುದೇ ಹಡಗನ್ನು ಶತ್ರುವೆಂದು ಪರಿಗಣಿಸಿ ದಾಳಿ ನಡೆಸಲಾಗುವುದೆಂದು ಇರಾನ್ ನ ಇಸ್ಲಾಮಿಕ್ ರೆವೆಲ್ಯೂಶನರಿ ಗಾರ್ಡ್ಸ್ (IRGC) ನೌಕಾದಳ ರವಿವಾರ ಎಚ್ಚರಿಕೆ ನೀಡಿದೆ. ಇರಾನ್ ಬಂದರುಗಳಿಗೆ ಪ್ರಯಾಣಿಸುವ ಅಥವಾ ಅಲ್ಲಿಂದ ನಿರ್ಗಮಿಸುವ ನೌಕೆಗಳಿಗೆ, ಅಮೆರಿಕದ ದಿಗ್ಬಂಧನ ತೆರವುಗೊಳ್ಳುವವರೆಗೆ ಹಾರ್ಮುಝ್ ಜಲಸಂಧಿಯನ್ನು ಮುಚ್ಚಲಾಗುವುದು ಎಂದು ಅದು ಹೇಳಿದೆ. ಹಾರ್ಮುಝ್ ಜಲಸಂಧಿ ಕುರಿತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೀಡಿದ ಹೇಳಿಕೆಗಳಿಗೆ ಯಾವುದೇ ಸಿಂಧುತ್ವವಿಲ್ಲ ಎಂದು IRGC ಹೇಳಿದೆ. ಹಡಗುಗಳ ಮಾಲಕರು IRGC ನೀಡುವ ಸೂಚನೆಗಳನ್ನು ಮಾತ್ರ ಅನುಸರಿಸುವಂತೆ ಸೂಚಿಸಲಾಗಿದೆ. ಭಾರತದ ತೈಲ ಸಾಗಾಟ ಟ್ಯಾಂಕರ್ ಹಡಗುಗಳಾದ ‘ಜಗ ಅರ್ನವ್’ ಹಾಗೂ ‘ಸನ್ಮಾರ್ ಹೆರಾಲ್ಡ್’ ಮೇಲೆ ಹಾರ್ಮುಝ್ ಜಲಸಂಧಿಯ ಸಮೀಪ ಇರಾನ್ ಪಡೆಗಳು ಶನಿವಾರ ಗುಂಡು ಹಾರಿಸಿದ ಬಳಿಕ ಈ ಎಚ್ಚರಿಕೆ ನೀಡಲಾಗಿದೆ.
Saudi Arabia ಮೃತಪಟ್ಟವರ ಹೆಸರಿನ ವಾಹನ ಓಡಿಸಿದರೆ 900 ರಿಯಾಲ್ ದಂಡ
ರಿಯಾದ್, ಎ.19: ಮೃತಪಟ್ಟ ವ್ಯಕ್ತಿಗಳ ಮಾಲಕತ್ವದ ವಾಹನಗಳನ್ನು ಕಾನೂನು ಅನುಮತಿಯಿಲ್ಲದೆ ಇತರರು ಚಾಲನೆ ಮಾಡುವುದನ್ನು ತಡೆಯಲು ಸೌದಿ ಅರೇಬಿಯಾದ ಸಾರ್ವಜನಿಕ ಭದ್ರತಾ ನಿರ್ದೇಶನಾಲಯವು ಕಠಿಣ ಕಾನೂನು ತಿದ್ದುಪಡಿ ಪ್ರಸ್ತಾಪಿಸಿದೆ. ಮೃತ ವ್ಯಕ್ತಿಯ ಹೆಸರಿನಲ್ಲಿರುವ ವಾಹನವನ್ನು ಕಾನೂನುಬದ್ಧವಾಗಿ ವರ್ಗಾಯಿಸದೆ ಅಥವಾ ಅದರ ಮೇಲೆ ಅಧಿಕಾರವಿಲ್ಲದೆ ಚಾಲನೆ ಮಾಡಿದರೆ 900 ರಿಯಾಲ್ ಗಳವರೆಗೆ (ಸುಮಾರು 21,000 ರೂ.) ದಂಡ ವಿಧಿಸುವ ಉದ್ದೇಶವನ್ನು ಈ ತಿದ್ದುಪಡಿ ಹೊಂದಿದೆ. ಈ ಪ್ರಸ್ತಾವನೆಯನ್ನು ಸಾರ್ವಜನಿಕರ ಅಭಿಪ್ರಾಯಕ್ಕಾಗಿ ‘ಇಸ್ತಿತ್ಲಾ’(Istitlaa) ವೆಬ್ ಪೋರ್ಟಲ್ ನಲ್ಲಿ ಪ್ರಕಟಿಸಲಾಗಿದೆ. ಅನುಮೋದನೆ ದೊರೆತರೆ, ಇದು ಹಾಲಿ ಸಂಚಾರ ಕಾನೂನಿನ ಭಾಗವಾಗಲಿದೆ. ಹೊಸ ತಿದ್ದುಪಡಿ ಸಂಚಾರ ಕಾನೂನಿನ 68ನೇ ಕಲಮಿನ ನಾಲ್ಕನೇ ಉಪವಿಧಿಯಲ್ಲಿ ಸೇರಿಸಲಾಗುತ್ತದೆ. ಕರಡು ಪ್ರಸ್ತಾವನೆಯ ಪ್ರಕಾರ ದಂಡದ ಮೊತ್ತ 500 ರಿಂದ 900 ರಿಯಾಲ್ ಗಳವರೆಗೆ ಇರಲಿದೆ. ಅಲ್ಲದೆ, ವಾಹನದ ಮಾಲಕತ್ವ ದಾಖಲೆಗಳನ್ನು ಸರಿಪಡಿಸುವವರೆಗೆ ವಾಹನವನ್ನು ವಶಕ್ಕೆ ತೆಗೆದುಕೊಳ್ಳಲಾಗುತ್ತದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ನೌಕಾ ದಿಗ್ಬಂಧನ ತೆರವುಗೊಳಿಸದಿದ್ದರೆ ಮಾತುಕತೆ ಇಲ್ಲ: ಇರಾನ್ ಪಟ್ಟು
ಟೆಹರಾನ್, ಎ.19: ಅಮೆರಿಕದೊಂದಿಗೆ ಎರಡನೇ ಹಂತದ ಶಾಂತಿ ಮಾತುಕತೆಗಾಗಿ ಪಾಕಿಸ್ತಾನಕ್ಕೆ ನಿಯೋಗ ಕಳುಹಿಸುವ ಬಗ್ಗೆ ಇನ್ನೂ ನಿರ್ಧಾರ ತೆಗೆದುಕೊಂಡಿಲ್ಲವೆಂದು ಇರಾನ್ ತಿಳಿಸಿದೆ. ಹಾರ್ಮುಝ್ ಜಲಸಂಧಿಯಲ್ಲಿ ತನ್ನ ನೌಕೆಗಳ ಸಂಚಾರಕ್ಕೆ ಅಮೆರಿಕ ವಿಧಿಸಿರುವ ದಿಗ್ಬಂಧನ ತೆರವುಗೊಳ್ಳುವವರೆಗೆ ಮಾತುಕತೆ ನಡೆಯುವುದಿಲ್ಲ ಎಂದು IRGC ಪರವಾದ ತಾಸ್ನಿಮ್ ಸುದ್ದಿ ಸಂಸ್ಥೆ ವರದಿ ಮಾಡಿದೆ. ಅಮೆರಿಕ–ಇರಾನ್ ಮೊದಲ ಹಂತದ ಮಾತುಕತೆ ಮುರಿದು ಬಿದ್ದ ನಂತರವೂ ಪಾಕಿಸ್ತಾನ ಸಂಧಾನಕಾರನ ಪಾತ್ರ ವಹಿಸುತ್ತಿದ್ದು, ಎರಡೂ ದೇಶಗಳ ನಡುವೆ ಸಂದೇಶ ವಿನಿಮಯ ನಡೆಯುತ್ತಿದೆ ಎಂದು ತಿಳಿದುಬಂದಿದೆ.
ಟೈಟಾನಿಕ್ ಜೀವರಕ್ಷಕ ಜಾಕೆಟ್ 8.39 ಕೋಟಿ ರೂ.ಗೆ ಹರಾಜು
ಲಂಡನ್, ಎ.19: ವಿಶ್ವ ಪ್ರಸಿದ್ಧ ನೌಕೆ RMS ಟೈಟಾನಿಕ್ ದುರಂತದ ವೇಳೆ ಪ್ರಯಾಣಿಕರೊಬ್ಬರು ಧರಿಸಿದ್ದ ಜೀವರಕ್ಷಕ ಜಾಕೆಟ್ ದಾಖಲೆ 6,70,000 ಪೌಂಡ್ ಗಳಿಗೆ (ಸುಮಾರು 8.39 ಕೋಟಿ ರೂ.) ಹರಾಜಾಗಿದೆ. ಈ ಜಾಕೆಟ್ ಮೊದಲ ದರ್ಜೆಯ ಪ್ರಯಾಣಿಕೆಯಾಗಿದ್ದ ಲಾರಾ ಮಾಬೆಲ್ ಫ್ರಾಂಕಾಟೆಲ್ಲಿ ಅವರಿಗೆ ಸೇರಿದ್ದು, ಟೈಟಾನಿಕ್ ಮುಳುಗಿದ ಸಂದರ್ಭದಲ್ಲಿ ಅವರು ಜೀವರಕ್ಷಕ ದೋಣಿಯಲ್ಲಿ ಪಾರಾಗಿದ್ದರು. ಜಾಕೆಟ್ ನಲ್ಲಿ ಅವರ ಹಾಗೂ ಇತರ ಬದುಕುಳಿದವರ ಸಹಿ ಇದೆ. ಬ್ರಿಟನ್ ನ ಡೆವೈಜಸ್ ನಲ್ಲಿ ನಡೆದ ಹರಾಜಿನಲ್ಲಿ ಇದು ಪ್ರಮುಖ ಆಕರ್ಷಣೆಯಾಗಿತ್ತು. ಮೊದಲಿಗೆ 2,50,000 ರಿಂದ 3,50,000 ಪೌಂಡ್ ಗಳ ನಡುವೆ ಬಿಡ್ ಆಗಬಹುದು ಎಂದು ಅಂದಾಜಿಸಲಾಗಿತ್ತು. ಆದರೆ ನಿರೀಕ್ಷೆ ಮೀರಿ ಬೆಲೆ ಏರಿಕೆಯಾಗಿದೆ. ಅನಾಮಧೇಯ ಬಿಡ್ಡರ್ ದೂರವಾಣಿ ಮೂಲಕ ಖರೀದಿಸಿದ್ದಾರೆ. ಇದೇ ಹರಾಜಿನಲ್ಲಿ ಟೈಟಾನಿಕ್ ಹಡಗಿನ ಜೀವರಕ್ಷಕ ದೋಣಿಯ ಆಸನದ ಕುಶನ್ ಅನ್ನು 3,90,000 ಪೌಂಡ್ ಗಳಿಗೆ ಮಾರಾಟ ಮಾಡಲಾಗಿದೆ.
ಭಟ್ಕಳ| ಗುಣಮಟ್ಟದ ಅಭಿವೃದ್ಧಿ ಕಾರ್ಯಗಳಿಗೆ ಆದ್ಯತೆ: ಸಚಿವ ಮಂಕಾಳ ಎಸ್
ಭಟ್ಕಳ: “ನಿಮ್ಮ ಸೇವಕನಾಗಿ ನಾನು ಮಾಡುವ ಅಭಿವೃದ್ಧಿ ಕಾರ್ಯಗಳು ಶಾಶ್ವತವಾಗಿ ಉಳಿಯಬೇಕು. ಜನರು ಸದಾ ನೆನಪಿಸಿಕೊಳ್ಳುವಂತಹ ಗುಣಮಟ್ಟದ ಕಾಮಗಾರಿಗಳನ್ನು ಕೈಗೊಳ್ಳುತ್ತೇನೆ,” ಎಂದು ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ಎಸ್ ಹೇಳಿದರು. ಅವರು ರವಿವಾರ ಮುರ್ಡೇಶ್ವರದ ಕಾಯ್ಕಿಣಿ ಪ್ರದೇಶದಲ್ಲಿ ಸಣ್ಣ ನೀರಾವರಿ ಹಾಗೂ ಅಂತರ್ಜಲ ಅಭಿವೃದ್ಧಿ ಇಲಾಖೆಯ 2024–25ನೇ ಸಾಲಿನ ‘4702 ಪಶ್ಚಿಮ ವಾಹಿನಿ ಯೋಜನೆ’ ಅಡಿಯಲ್ಲಿ ಮಂಜೂರಾದ ಒಟ್ಟು ರೂ.19 ಕೋಟಿ ವೆಚ್ಚದ ಎಡದಂಡೆ ಹಾಗೂ ಬಲದಂಡೆ ಖಾರಲ್ಯಾಂಡ್ ಕಾಮಗಾರಿಗಳ ಲೋಕಾರ್ಪಣೆ ಮತ್ತು ವಿವಿಧ ಕಾಮಗಾರಿಗಳ ಭೂಮಿಪೂಜೆ ನೆರವೇರಿಸಿ ಮಾತನಾಡಿದರು. “ಈ ಭಾಗದಿಂದ ಜಿಲ್ಲಾ ಪಂಚಾಯಿತಿ ಸದಸ್ಯನಾಗಿ ಆಯ್ಕೆಯಾಗಿದ್ದಾಗ ಕೈಗೊಂಡ ಅಭಿವೃದ್ಧಿ ಕಾರ್ಯಗಳನ್ನು ಜನರು ಇಂದಿಗೂ ನೆನಪಿಸಿಕೊಳ್ಳುತ್ತಿದ್ದಾರೆ. ಭಟ್ಕಳ ಬಸ್ ನಿಲ್ದಾಣ, ಮಿನಿ ವಿಧಾನಸೌಧ ಸೇರಿದಂತೆ ಅನೇಕ ಜನಪರ ಯೋಜನೆಗಳು ನನ್ನ ಅವಧಿಯಲ್ಲಿ ಜಾರಿಯಾಗಿವೆ. ಬಸ್ ನಿಲ್ದಾಣದ ಬಳಿಯ ಜಾಗವನ್ನು ಹಿಂದಿನ ಬಿಜೆಪಿ ಸರ್ಕಾರ ಖಾಸಗಿ ವ್ಯಕ್ತಿಗಳಿಗೆ ಮಾರಾಟ ಮಾಡದೇ ಇದ್ದಿದ್ದರೆ, ಅಲ್ಲಿ ಭವ್ಯ ಸೂಪರ್ ಮಾರ್ಕೆಟ್ ನಿರ್ಮಾಣವಾಗು ತ್ತಿತ್ತು,” ಎಂದು ಹೇಳಿದರು. ಚುನಾವಣಾ ವೇಳೆ ನೀಡಿದ ಭರವಸೆಗಳಂತೆ ಐದು ಗ್ಯಾರಂಟಿಗಳನ್ನು ಈಗಾಗಲೇ ಜಾರಿಗೆ ತಂದಿದ್ದೇವೆ. “ನಿಮ್ಮ ಮತದ ಬೆಂಬಲದಿಂದ ನಾನು ಆಯ್ಕೆಯಾಗಿದ್ದೇನೆ. ನೀವು ಕಟ್ಟುವ ತೆರಿಗೆಯಿಂದಲೇ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ,” ಎಂದು ಹೇಳಿದರು. ಖಾರಲ್ಯಾಂಡ್ ಯೋಜನೆ ಕುರಿತು ಮಾತನಾಡಿದ ಅವರು, “810 ಮೀಟರ್ ಉದ್ದದ ಈ ಯೋಜನೆಯನ್ನು ಗುಣ ಮಟ್ಟದಿಂದ ಪೂರ್ಣಗೊಳಿಸಲು ಹಠದಿಂದ ಮುಂದಾಗಿದ್ದೇವೆ. ಇದರ ಫಲವಾಗಿ ಈ ಭಾಗದ ರೈತರ ಮುಖದಲ್ಲಿ ಸಂತೋಷ ಕಾಣಿಸುತ್ತಿದೆ. ನಮ್ಮ ಸರ್ಕಾರದಲ್ಲಿ ಅಭಿವೃದ್ಧಿಗೆ ಅಗತ್ಯವಾದ ಹಣವಿದೆ. ಜನರಿಂದ ಬಂದ ಮನವಿ ಗಳನ್ನು ಈಡೇರಿಸಲು ಬದ್ಧನಾಗಿದ್ದೇನೆ,” ಎಂದರು. ರಸ್ತೆ, ಸೇತುವೆ, ಸಮುದಾಯ ಭವನ ಹಾಗೂ ಶಿಕ್ಷಣ ಕ್ಷೇತ್ರಗಳಿಗೆ ಆದ್ಯತೆ ನೀಡಲಾಗುತ್ತಿದೆ. ಕಾಯ್ಕಿಣಿ ಪಂಚಾಯತ್ ವ್ಯಾಪ್ತಿಯಲ್ಲಿ ಪಿಯು ಕಾಲೇಜು ಮಂಜೂರಾಗಿದೆ. “ಸಾಮಾಜಿಕ ಜಾಲತಾಣಗಳಲ್ಲಿ ತಪ್ಪು ಮಾಹಿತಿ ಹರಡುವವರು ಜನಸೇವೆಗೆ ಮುಂದಾಗಲಿ. ನನ್ನ ಬಗ್ಗೆ ನಿಂದನೆ ಮಾಡುವವರ ಮಾತನ್ನು ಜನರು ನಂಬುವುದಿಲ್ಲ,” ಎಂದು ಹೇಳಿದರು. ಕಾರ್ಯಕ್ರಮದಲ್ಲಿ ವಿವಿಧ ಸಂಘಟನೆಗಳ ಸದಸ್ಯರು ಹಾಗೂ ಗ್ರಾಮಸ್ಥರು ಸಚಿವರನ್ನು ಸನ್ಮಾನಿಸಿದರು. ವೆಂಕಟ್ರಮಣ ನಾಯ್ಕ ಸ್ವಾಗತಿಸಿದರು. ವೆಂಕಟೇಶ ನಾಯ್ಕ ದುಗ್ಗೆಮನೆ ಅಧ್ಯಕ್ಷತೆ ವಹಿಸಿದ್ದರು. ಕಾರ್ಯನಿರ್ವಾಹಕ ಅಭಿಯಂತರ ಎಂ. ನಾಗರಾಜ, ಮಾಸ್ತಪ್ಪ ಜಟ್ಟಾ ನಾಯ್ಕ, ಕೊಲ್ಕರ ಕುಪ್ಪಯ್ಯ ನಾಯ್ಕ, ಬ್ಲಾಕ್ ಅಧ್ಯಕ್ಷ ವೆಂಕಟೇಶ ನಾಯ್ಕ, ಮಾಜಿ ಅಧ್ಯಕ್ಷ ರಾಘವೇಂದ್ರ ಗೊಯ್ದಪ್ಪ ನಾಯ್ಕ, ಮಾಜಿ ಗ್ಯಾರಂಟಿ ಅಧ್ಯಕ್ಷ ರಾಜು ನಾಯ್ಕ, ಮಾವಳ್ಳಿ ಮಹೇಶ ನಾಯ್ಕ, ಸಿಂಧೂ ಭಾಸ್ಕರ ನಾಯ್ಕ, ಮಂಜುನಾಥ ನಾಯ್ಕ ಬಿದ್ರಮನೆ, ತಿಮ್ಮಪ್ಪ ನಾಯ್ಕ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಡಿಜಿಟಲ್ ಅರೆಸ್ಟ್ ಹಗರಣಗಳಲ್ಲಿ ನೋಟಿಸ್ ನ ಸತ್ಯಾಸತ್ಯತೆ ಪರಿಶೀಲಿಸಲು ಸಿಬಿಐಯಿಂದ AI ಚಾಟ್ ಬಾಟ್
ಹೊಸದಿಲ್ಲಿ, ಎ. 19: ಡಿಜಿಟಲ್ ಅರೆಸ್ಟ್ ಹಗರಣಗಳಲ್ಲಿ ಅಧಿಕೃತ ನೋಟಿಸ್ ಗಳ ಸತ್ಯಾಸತ್ಯತೆ ಪರಿಶೀಲಿಸಲು ಸಾರ್ವಜನಿಕರಿಗೆ ನೆರವಾಗಲು ಸಿಬಿಐ ಕೃತಕ ಬುದ್ಧಿಮತ್ತೆಯ ಚಾಟ್ ಬಾಟ್ ಅನ್ನು ಸೋಮವಾರ ಪ್ರಾರಂಭಿಸಲಿದೆ. ಸಿಬಿಐ ತನ್ನ ಸ್ಥಾಪಕ ನಿರ್ದೇಶಕರ ಗೌರವಾರ್ಥ ಆಯೋಜಿಸಿರುವ 22ನೇ ಡಿ.ಪಿ. ಕೊಹ್ಲಿ ಸ್ಮಾರಕ ಉಪನ್ಯಾಸ ಕಾರ್ಯಕ್ರಮದಲ್ಲಿ ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಸೂರ್ಯ ಕಾಂತ್ ಅವರು ‘ಅಭಯ್’ ಎಂಬ ಚಾಟ್ ಬಾಟ್ ಅನ್ನು ಬಿಡುಗಡೆ ಮಾಡಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಸಿಜೆಐ ‘‘ಸೈಬರ್ ಅಪರಾಧದ ಸವಾಲುಗಳು – ಪೊಲೀಸ್ ಹಾಗೂ ನ್ಯಾಯಾಂಗದ ಪಾತ್ರ’’ ಕುರಿತು ಉಪನ್ಯಾಸ ನೀಡಲಿದ್ದಾರೆ. ಅವರು ಶ್ರೇಷ್ಠ ಸೇವೆಗಾಗಿ 24 ಪದಕಗಳನ್ನು ಕೂಡ ಪ್ರಧಾನ ಮಾಡಲಿದ್ದಾರೆ. AI ಆಧಾರಿತ ನೋಟಿಸ್ ಪರಿಶೀಲನಾ ಚಾಟ್ ಬಾಟ್ ‘ಅಭಯ್’ ಸಿಬಿಐ ಜಾರಿಗೊಳಿಸಿದೆ ಎಂದು ಹೇಳಲಾದ ನೋಟಿಸ್ ನ ಸತ್ಯಾಸತ್ಯತೆ ಪರಿಶೀಲಿಸಲು ಸಾರ್ವಜನಿಕರಿಗೆ ಅನುವು ಮಾಡಿಕೊಡಲಿದೆ. ಡಿಜಿಟಲ್ ಅರೆಸ್ಟ್ ವಂಚನೆಗಳ ಸಂದರ್ಭ ಇದು ನಾಗರಿಕರಿಗೆ ಅತ್ಯಂತ ಅಗತ್ಯವಾದ ಸಾಧನವಾಗಲಿದೆ ಎಂದು ಸಿಬಿಐ ವಕ್ತಾರ ತಿಳಿಸಿದ್ದಾರೆ. ಹಲವು ಪ್ರಕರಣಗಳಲ್ಲಿ ವಂಚಕರು ಸಿಬಿಐ ಅಧಿಕಾರಿಗಳಂತೆ ನಟಿಸಿ, ಸಂಸ್ಥೆಯಿಂದ ನೀಡಿರುವುದೆಂದು ಹೇಳಲಾದ ಅಸ್ತಿತ್ವದಲ್ಲಿಲ್ಲದ ಪ್ರಕರಣಗಳಿಗೆ ಸಂಬಂಧಿಸಿದ ನಕಲಿ ನೋಟಿಸ್ ಗಳನ್ನು ತೋರಿಸಿದ್ದಾರೆ. ಡಿಜಿಟಲ್ ಅರೆಸ್ಟ್ ಹೆಸರಿನಲ್ಲಿ ಬೆದರಿಸಿ, ನಿಯಂತ್ರಣದಲ್ಲಿಟ್ಟುಕೊಂಡು ನಂತರ ಅವರಿಂದ ಕೋಟ್ಯಂತರ ರೂಪಾಯಿ ಸುಲಿಗೆ ಮಾಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.
“ನೀವು ಈರುಳ್ಳಿ ತಿನ್ನುತ್ತೀರಾ?” ಎಂದು ಪ್ರಶ್ನಿಸಿದ ವರ್ತಕ; ‘ಈರುಳ್ಳಿ ತಿನ್ನುತ್ತೇನೆ, ತಲೆ ತಿನ್ನಲ್ಲ’ ಎಂದ ಮೋದಿ!
ಮಂಗಳೂರು| ಮಾದಕ ವಸ್ತು ಮಾರಾಟ ಪ್ರಕರಣ: ಇಬ್ಬರು ಆರೋಪಿಗಳ ಬಂಧನ
ಮಂಗಳೂರು, ಎ.19: ನಗರದ ಜೆಪ್ಪಿನಮೊಗರು ಬಳಿ ಮಾದಕ ವಸ್ತು ಎಂಡಿಎಂಎ ಮಾರಾಟ ಮಾಡುತ್ತಿದ್ದ ಇಬ್ಬರನ್ನು ರವಿವಾರ ಕಂಕನಾಡಿ ನಗರ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಪೆರ್ಮನ್ನೂರು ಗ್ರಾಮದ ಪಿಲಾರು ಹೊಸಗದ್ದೆ ಮನೆಯ ಫರ್ವೇಝ್ ಯಾನೆ ದಾವೂದ್ ಫರ್ವೇಝ್ (40) ಮತ್ತು ಪಿಲಾರಿನ ನಝರತ್ ಅಲಿ (37) ಎಂದು ಗುರುತಿಸಲಾಗಿದೆ. ಆರೋಪಿಗಳು ಬೈಕ್ನಲ್ಲಿ ಭಾರೀ ಪ್ರಮಾಣದ ಎಂಡಿಎಂಎ ಮಾದಕ ವಸ್ತುವನ್ನು ಮಾರಾಟ ಮಾಡಲು ಬರುತ್ತಿರುವ ಬಗ್ಗೆ ಮಾಹಿತಿ ಪಡೆದ ಪೊಲೀಸರು ದಾಳಿ ನಡೆಸಿ 46,50,000 ರೂ. ಮೌಲ್ಯದ 465.8 ಗ್ರಾಂ ತೂಕದ ಎಂಡಿಎಂಎ ವಸ್ತುವನ್ನು ವಶಪಡಿಸಿಕೊಂಡರು ಎಂದು ತಿಳಿದುಬಂದಿದೆ. ಫರ್ವೇಝ್ ಎಂಬಾತನು ಯುವ ಸಮೂಹ ಮತ್ತು ಕಾಲೇಜು ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು ಜಿಲ್ಲೆಯ ಹೊರಗಿನಿಂದ ಎಂಡಿಎಂಎ ತಂದು ನಗರದಲ್ಲಿ ಮಾರಾಟ ಮತ್ತು ಸರಬರಾಜು ಮಾಡಲು ಪ್ರಯತ್ನಿಸುತ್ತಿರುವುದು ತನಿಖೆಯಲ್ಲಿ ತಿಳಿದುಬಂದಿದೆ. ಆರೋಪಿ ಫರ್ವೇಝ್ ವಿರುದ್ಧ ಪಾಂಡೇಶ್ವರ, ವಾಮಂಜೂರು, ಬಂದರು, ಬೆಂಗಳೂರಿನ ಅಮೃತಹಳ್ಳಿ, ಉಡುಪಿ ಸೆನ್ ಪೊಲೀಸ್ ಠಾಣೆಗಳಲ್ಲಿ ಮಾದಕ ವಸ್ತು ಮಾರಾಟ ಮಾಡಿದ ಬಗ್ಗೆ ಪ್ರಕರಣ ದಾಖಲಾಗಿದೆ. ಈತನು ಡ್ರಗ್ ಪೆಡ್ಲರ್ ಆಗಿದ್ದು, ಈತನ ಸ್ನೇಹಿತ ನಝರತ್ ಅಲಿ ಈತನೊಂದಿಗೆ ಡ್ರಗ್ ಪೆಡ್ಲಿಂಗ್ ವ್ಯವಹಾರಕ್ಕೆ ಸಹಕರಿಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಸಾಮರಸ್ಯದ ಬದುಕನ್ನು ಕಟ್ಟಿಕೊಳ್ಳುವುದು ಇಂದಿನ ತುರ್ತು ಅಗತ್ಯ: ಶೇಖ್ ಅಸ್ಗರ್ ಅಲಿ ಇಮಾಮ್ ಮೆಹ್ದಿ
ಅಹ್ಲೆ ಹದೀಸ್ ಸಮ್ಮೇಳನದ ಸಮಾರೋಪ
ಉಡುಪಿ| ಭಾರತ, ನೇಪಾಳದ ಅಪೊಸ್ತೊಲಿಕ್ ನುನ್ಸಿಯೋ ಡಾ. ಲಿಯೋ ಪೋಲ್ಡೊ ಗಿರೆಲ್ಲಿಗೆ ಸ್ವಾಗತ
ಉಡುಪಿ: ಧರ್ಮಕ್ಷೇತ್ರದ ದ್ವಿತೀಯ ಧರ್ಮಾಧ್ಯಕ್ಷರಾಗಿ ಅತಿ ಗೌರವಾನ್ವಿತ ಡಾ. ಲೆಸ್ಲಿ ಕ್ಲಿಫರ್ಡ್ ಡಿ’ಸೋಜಾ ಅವರ ಧರ್ಮಾಧ್ಯಕ್ಷರ ಅಭಿಷೇಕ ಹಾಗೂ ಪೀಠಾರೋಹಣ ಸಮಾರಂಭದಲ್ಲಿ ಭಾಗವಹಿಸಿಲು ಆಗಮಿಸಿದ ಭಾರತ ಮತ್ತು ನೇಪಾಳದ ಅಪೊಸ್ತೊಲಿಕ್ ನುನ್ಸಿಯೋ (ಪೋಪ್ ಅವರ ವ್ಯಾಟಿಕನ್ ರಾಯಭಾರಿ) ಡಾ. ಲಿಯೋ ಪೋಲ್ಡೊ ಗಿರೆಲ್ಲಿ ಅವರನ್ನು ಮಂಗಳೂರು ವಿಮಾನ ನಿಲ್ದಾಣದಲ್ಲಿ ಉಡುಪಿ ಧರ್ಮಪ್ರಾಂತ್ಯದ ಪರವಾಗಿ ಆತ್ಮೀಯ ಸ್ವಾಗತ ಕೋರಲಾಯಿತು. ಧರ್ಮಪ್ರಾಂತ್ಯದ ಪರವಾಗಿ ಕುಲಪತಿ ವಂ|ಸ್ಟೀಫನ್ ಡಿಸೋಜಾ ಡಾ. ಲಿಯೋ ಪೋಲ್ಡೊ ಗಿರೆಲ್ಲಿ ಅವರನ್ನು ಸ್ವಾಗತಿಸಿದರು. ಈ ವೇಳೆ ಧರ್ಮಪ್ರಾಂತ್ಯದ ಜುಡಿಶಿಯಲ್ ವಿಕಾರ್ ವಂ|ಡಾ|ರೋಶನ್ ಡಿಸೋಜಾ, ಧರ್ಮಗುರು ವಂ|ಜಾನ್ಸಿಲ್ ಆಳ್ವಾ, ವಿಮಾನ ನಿಲ್ಡಾಣದ ಕಸ್ಟಮ್ಸ್ ವಿಭಾಗದ ಸಹಾಯಕ ಕಮೀಷನರ್ ಶುಭ ರೊಡ್ರಿಗಸ್, ಹಾಗೂ ಓಸ್ವಲ್ಡ್ ರೊಡ್ರಿಗಸ್ ಉಪಸ್ಥಿತರಿದ್ದರು.
ಗಂಗೊಳ್ಳಿ| ಜಾತ್ರೆಯಲ್ಲಿ ದಲಿತ ಸಹೋದರರಿಗೆ ತಂಡದಿಂದ ಹಲ್ಲೆ: ಪ್ರಕರಣ ದಾಖಲು
ಗಂಗೊಳ್ಳಿ, ಎ.19: ದಲಿತ ಸಹೋದರರಿಬ್ಬರಿಗೆ ತಂಡವೊಂದು ಹಲ್ಲೆ ನಡೆಸಿರುವ ಘಟನೆ ಹಕ್ಲಾಡಿ ಗ್ರಾಮದ ಮಾಣಿಕೊಳಲು ಶ್ರೀಲಕ್ಷ್ಮಿಚೆನ್ನಕೇಶವ ದೇವಸ್ಥಾನದ ಮುಖಮಂಟಪದ ಬಳಿ ಎ.19ರಂದು ನಸುಕಿನ ವೇಳೆ ನಡೆದಿದೆ. ಪರಿಶಿಷ್ಟ ಜಾತಿಗೆ ಸೇರಿದ ಕುಂದಬಾರಂದಾಡಿ ಗ್ರಾಮದ ಕೋಳೂರು ಕ್ರಾಸ್ ನಿವಾಸಿ ಬಾನುಪ್ರಕಾಶ ಎಂಬವರು ಶ್ರೀಲಕ್ಷ್ಮಿಚೆನ್ನಕೇಶವ ದೇವಸ್ಥಾನದ ವಾರ್ಷಿಕ ರಥೋತ್ಸವ ಕಾರ್ಯಕ್ರಮಕ್ಕೆ ಹೋಗಿ ರಾತ್ರಿ ಯಕ್ಷಗಾನ ಕಾರ್ಯಕ್ರಮ ನೋಡಿಕೊಂಡು ಮನೆಗೆ ಬೈಕಿನಲ್ಲಿ ತನ್ನ ತಮ್ಮನೊಂದಿಗೆ ಹೊರಟಿದ್ದರು. ಈ ವೇಳೆ ಎರಡು ಬೈಕಿನಲ್ಲಿ ಬಂದ ದೀಪಕ್ ಪೂಜಾರಿ, ರಾಮ ಪೂಜಾರಿ ಮತ್ತು ಇಬ್ಬರು ಬಾನುಪ್ರಕಾಶ್ ಅವರ ಬೈಕ್ನ್ನು ತಡೆದು ನಿಲ್ಲಿಸಿ, ಜಾತಿನಿಂದನೆ ಮಾಡಿ ಅವಾಚ್ಯಶಬ್ದಗಳಿಂದ ಬೈದು, ಹಲ್ಲೆ ನಡೆಸಿದ್ದಾರೆ ಎಂದು ದೂರಲಾಗಿದೆ. ಇದನ್ನು ತಡೆಯಲು ಬಂದ ಬಾನುಪ್ರಕಾಶ್ ಅವರ ತಮ್ಮ ಸುದರ್ಶನ್ ಅವರಿಗೂ ಆರೋಪಿಗಳು ಹಲ್ಲೆ ಮಾಡಿರುವು ದಾಗಿ ದೂರಲಾಗಿದೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶತ್ರುಗಳು ಸೋಲಿನ ಕಹಿ ಅನುಭವಿಸಲಿದ್ದಾರೆ: ಮೊಜ್ತಾಬಾ ಖಾಮಿನೈ ಎಚ್ಚರಿಕೆ
ಟೆಹರಾನ್, ಎ.19: ಹಾರ್ಮುಝ್ ಜಲಸಂಧಿಯಲ್ಲಿ ಉದ್ವಿಗ್ನತೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಇರಾನ್ ನೌಕಾಪಡೆಯ ಎದುರು ಶತ್ರುಗಳು ಸೋಲಿನ ಕಹಿಯನ್ನು ಅನುಭವಿಸಲಿದ್ದಾರೆ ಎಂದು ಇರಾನ್ ನ ಸರ್ವೋಚ್ಚ ನಾಯಕ ಮೊಜ್ತಾಬಾ ಖಾಮಿನೈ ರವಿವಾರ ಅಮೆರಿಕ ಮತ್ತು ಇಸ್ರೇಲ್ ಗೆ ಎಚ್ಚರಿಕೆ ನೀಡಿದ್ದಾರೆ. ಇರಾನ್ ಸಶಸ್ತ್ರ ಪಡೆಗಳ ದಿನಾಚರಣೆಯ ಅಂಗವಾಗಿ ಅವರ ಸಂದೇಶವನ್ನು ಸರಕಾರಿ ಟಿವಿ ವಾಹಿನಿ ಪ್ರಸಾರ ಮಾಡಿದೆ. ಅಮೆರಿಕ ಮತ್ತು ಯೆಹೂದ್ಯುಪಾರಮ್ಯವಾದಿಗಳ ವಿರುದ್ಧ ಇರಾನ್ ಡ್ರೋನ್ ಗಳು ಮಿಂಚಿನ ದಾಳಿ ನಡೆಸಲಿವೆ. ಶತ್ರುಗಳಿಗೆ ಮತ್ತಷ್ಟು ಸೋಲಿನ ಕಹಿ ಉಣಿಸಲು ಇರಾನ್ ನೌಕಾಪಡೆ ಸಿದ್ಧವಾಗಿದೆ ಎಂದು ಅವರು ಹೇಳಿದ್ದಾರೆ. ಇರಾನ್ ಮತ್ತು ಅಮೆರಿಕ ನಡುವೆ ಏರ್ಪಟ್ಟಿರುವ ಎರಡು ವಾರಗಳ ಕದನ ವಿರಾಮ ಏಪ್ರಿಲ್ 22ರಂದು ಕೊನೆಗೊಳ್ಳಲಿದೆ. ಉಭಯ ದೇಶಗಳ ನಡುವಿನ ಬಿಕ್ಕಟ್ಟು ಇನ್ನೂ ಮುಂದುವರಿದಿದೆ. ಆಯತುಲ್ಲಾ ಅಲಿ ಖಾಮಿನೈ ಅವರು ಅಮೆರಿಕ-ಇಸ್ರೇಲ್ ದಾಳಿಯಲ್ಲಿ ಸಾವನ್ನಪ್ಪಿದ ನಂತರ ಮೊಜ್ತಾಬಾ ಖಾಮಿನೈ ಅವರು ಇರಾನ್ ನಾಯಕತ್ವವನ್ನು ವಹಿಸಿಕೊಂಡಿದ್ದಾರೆ. ಆದರೆ ಯುದ್ಧ ಆರಂಭವಾದ ಬಳಿಕ ಅವರು ಸಾರ್ವಜನಿಕವಾಗಿ ಕಾಣಿಸಿಕೊಂಡಿಲ್ಲ. ದಾಳಿಯ ಸಂದರ್ಭದಲ್ಲೇ ಅವರು ಗಂಭೀರವಾಗಿ ಗಾಯಗೊಂಡಿರಬಹುದೆಂದು ಶಂಕಿಸಲಾಗಿದೆ.
ಅಣುಶಕ್ತಿ ಒಪ್ಪಂದ ವಿಫಲವಾದಲ್ಲಿ‘ಸಜ್ಜನ’ನಾಗಿ ಇರಲಾರೆ: ಇರಾನ್ ಗೆ ಟ್ರಂಪ್ ಬೆದರಿಕೆ
ವಾಶಿಂಗ್ಟನ್, ಎ. 19: ಪಶ್ಚಿಮ ಏಶ್ಯದಲ್ಲಿ ಉದ್ವಿಗ್ನತೆ ಉಲ್ಬಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ, ಒಂದು ವೇಳೆ ಇರಾನ್ ತನ್ನೊಂದಿಗೆ ಅಣುಶಕ್ತಿ ಒಪ್ಪಂದಕ್ಕೆ ಬರದಿದ್ದಲ್ಲಿ, ಇರಾನ್ ನ ಪ್ರತಿಯೊಂದು ವಿದ್ಯುತ್ ಸ್ಥಾವರ ಹಾಗೂ ಸೇತುವೆಯನ್ನು ಧ್ವಂಸಗೊಳಿಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಕೆ ನೀಡಿದ್ದಾರೆ. ತಾನು ‘ಸಜ್ಜನ’ನಾಗಿ ಇರುವುದಿಲ್ಲವೆಂದೂ ಅವರು ಗುಡುಗಿದ್ದಾರೆ. ಈ ಬಗ್ಗೆ ಟ್ರೂತ್ ಸೋಶಿಯಲ್ ನಲ್ಲಿ ಪೋಸ್ಟ್ ಮಾಡಿರುವ ಅವರು, “ಹಾರ್ಮುಝ್ ಜಲಸಂಧಿಯಲ್ಲಿ ಗುಂಡುಗಳನ್ನು ಹಾರಿಸಲು ಇರಾನ್ ನಿನ್ನೆ ನಿರ್ಧರಿಸಿದೆ. ಇದು ಕದನವಿರಾಮ ಒಪ್ಪಂದದ ಸಂಪೂರ್ಣ ಉಲ್ಲಂಘನೆಯಾಗಿದೆ. ದಾಳಿ ಫ್ರೆಂಚ್ ಹಡಗು ಹಾಗೂ ಬ್ರಿಟನ್ ನ ಸರಕು ಸಾಗಣೆ ನೌಕೆಯನ್ನು ಗುರಿಯಾಗಿಸಿಕೊಂಡು ನಡೆಸಲಾಗಿದೆ. ಇದು ಸರಿಯೇ?” ಎಂದು ಪ್ರಶ್ನಿಸಿದ್ದಾರೆ. ►‘ಶಾಂತಿ ಮಾತುಕತೆಯಲ್ಲಿ ಅಮೆರಿಕ ಭಾಗವಹಿಸಲಿದೆ’ ಹಾರ್ಮುಝ್ ಜಲಸಂಧಿಯಲ್ಲಿ ಗುಂಡಿನ ದಾಳಿ ನಡೆಸುವ ಮೂಲಕ ಇರಾನ್ ಕದನವಿರಾಮವನ್ನು ಉಲ್ಲಂಘಿಸಿದರೂ, ಅಮೆರಿಕ ಇಸ್ಲಾಮಾಬಾದ್ ನಲ್ಲಿ ನಡೆಯಲಿರುವ ಶಾಂತಿ ಮಾತುಕತೆಯಲ್ಲಿ ಪಾಲ್ಗೊಳ್ಳಲಿದೆ ಎಂದು ಟ್ರಂಪ್ ತಿಳಿಸಿದ್ದಾರೆ. ಭದ್ರತಾ ಕಾರಣಗಳಿಂದ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ಭಾಗವಹಿಸುವುದಿಲ್ಲವೆಂದೂ ಅವರು ಹೇಳಿದ್ದಾರೆ. ಸೋಮವಾರ ಅಮೆರಿಕ ನಿಯೋಗ ಇಸ್ಲಾಮಾಬಾದ್ ತಲುಪಲಿದೆ ಎಂದು ಟ್ರಂಪ್ ತಿಳಿಸಿದ್ದಾರೆ.
BILL C-12 | 9,000ಕ್ಕೂ ಅಧಿಕ ಪಂಜಾಬಿಗಳು ಕೆನಡಾದಿಂದ ಗಡಿಪಾರುಗೊಳ್ಳುವ ಸಾಧ್ಯತೆ!
ಚಂಡಿಗಡ, ಎ. 19: ಕೆನಡಾದಲ್ಲಿ ನೂತನ ವಲಸೆ ಕಾನೂನು BILL C-12 ಜಾರಿಗೊಂಡ ಬಳಿಕ ಆ ದೇಶದಲ್ಲಿನ ಸುಮಾರು 30,000 ವಲಸಿಗರು ನೋಟಿಸ್ ಗಳನ್ನು ಪಡೆಯಲಿದ್ದು, ಗಡಿಪಾರುಗೊಳ್ಳುವ ಅಪಾಯವನ್ನು ಎದುರಿಸುವ ಸಾಧ್ಯತೆಯಿದೆ. ಈ 30,000 ವಲಸಿಗರ ಪೈಕಿ ಪಂಜಾಬಿನ 9,000 ಅಂತರರಾಷ್ಟ್ರೀಯ ವಿದ್ಯಾರ್ಥಿಗಳು ಮತ್ತು ಆಶ್ರಯ ಕೋರಿ ಅರ್ಜಿ ಸಲ್ಲಿಸಿದವರು ಸೇರಿದ್ದಾರೆ. ಕೆನಡಾದ ವಲಸೆ, ನಿರಾಶ್ರಿತರು ಮತ್ತು ಪೌರತ್ವ (IRCC) ಇಲಾಖೆಯು ಈ ಪೈಕಿ ಕೆಲವರಿಗೆ ತಕ್ಷಣವೇ ದೇಶವನ್ನು ತೊರೆಯುವಂತೆ ಸೂಚಿಸುತ್ತಿದೆ. ಕೆನಡಾ ಮಾಧ್ಯಮಗಳ ಪ್ರಕಾರ, IRCC ಆಶ್ರಯ ಕೋರಿ ಅರ್ಜಿ ಸಲ್ಲಿಸಿರುವ ಸುಮಾರು 30,000 ಜನರಿಗೆ ನೋಟಿಸ್ ಗಳನ್ನು ಹೊರಡಿಸಿದ್ದು, ಅವರ ಹಕ್ಕು ಕೋರಿಕೆಗಳು ಇನ್ನು ಮುಂದೆ ಅರ್ಹವಾಗದಿರಬಹುದು ಎಂದು ತಿಳಿಸಿದೆ. ಸ್ವಯಂ ಪ್ರೇರಿತರಾಗಿ ಕೆನಡಾ ತೊರೆಯುವಂತೆ ಅಥವಾ ಕಾನೂನು ಕ್ರಮವನ್ನು ಎದುರಿಸುವಂತೆ ಅವರಿಗೆ ಸೂಚಿಸಲಾಗಿದೆ. ಈ ನೋಟಿಸ್ ಗಳು ಅಂತಿಮ ಗಡಿಪಾರು ಆದೇಶಗಳಲ್ಲ ಎಂದು ಸ್ಪಷ್ಟಪಡಿಸಿರುವ IRCC, ಹೆಚ್ಚುವರಿ ಮಾಹಿತಿಗಳನ್ನು ಸಲ್ಲಿಸಲು ಅವರಿಗೆ ಸುಮಾರು 21 ದಿನಗಳ ಕಾಲಾವಕಾಶ ನೀಡಿದೆ. ಇದರಲ್ಲಿ ವಿಫಲವಾದರೆ ಗಡಿಪಾರು ಪ್ರಕ್ರಿಯೆಗೆ ಕಾರಣವಾಗಬಹುದು. ಒಂದು ವರ್ಷಕ್ಕೂ ಹೆಚ್ಚು ಕಾಲ ಕೆನಡಾದಲ್ಲಿ ವಾಸವಿದ್ದ ಬಳಿಕ ಆಶ್ರಯ ಕೋರಿ ಅರ್ಜಿ ಸಲ್ಲಿಸಿರುವ ಪಂಜಾಬಿನ ಹಲವಾರು ಮಾಜಿ ಅಂತರರಾಷ್ಟ್ರೀಯ ವಿದ್ಯಾರ್ಥಿಗಳ ಮೇಲೆ ಇದು ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆಯಿದೆ. ಇವರಲ್ಲಿ ಹೆಚ್ಚಿನವರು ತಮ್ಮ ವಾಸ್ತವ್ಯವನ್ನು ವಿಸ್ತರಿಸಿಕೊಳ್ಳಲು ಆಶ್ರಯ ಕೋರುವ ಮಾರ್ಗವನ್ನು ಅನುಸರಿಸಿದ್ದಾರೆ ಎನ್ನಲಾಗಿದೆ. ಕಟ್ಟುನಿಟ್ಟಿನ ಅಧ್ಯಯನ ಅನುಮತಿ ನಿಯಮಗಳು ಮತ್ತು ಶಾಶ್ವತ ವಾಸಕ್ಕೆ ಸೀಮಿತ ಮಾರ್ಗಗಳು ಇದಕ್ಕೆ ಕಾರಣವಾಗಿವೆ. ಗಮನಾರ್ಹವಾಗಿ, BILL C-12 ಜೂನ್ 24, 2020ರಿಂದ ಪೂರ್ವಾನ್ವಯವಾಗಿದ್ದು, ಜೂನ್ 3, 2025ರಂದು ಅಥವಾ ನಂತರ ಸಲ್ಲಿಸಲಾದ ಹಕ್ಕು ಕೋರಿಕೆಗಳಿಗೆ ಅನ್ವಯಿಸುತ್ತದೆ. ಈ ನೋಟಿಸ್ ಗಳು ಪೀಡಿತ ಸಮುದಾಯಗಳಲ್ಲಿ ಆತಂಕವನ್ನು ಸೃಷ್ಟಿಸಿವೆ. ಗಮನಾರ್ಹ ಸಂಖ್ಯೆಯ ಪಂಜಾಬಿಗಳು ಅಧ್ಯಯನ ಪರವಾನಿಗೆಯಡಿ ಕೆನಡಾಕ್ಕೆ ತೆರಳಿ, ತಮ್ಮ ವೀಸಾ ಅವಧಿ ಮುಕ್ತಾಯಗೊಂಡ ಬಳಿಕ ಆಶ್ರಯ ಕೋರಿ ಅರ್ಜಿಗಳನ್ನು ಸಲ್ಲಿಸಿದ್ದಾರೆ. ‘ಕೆನಡಾ ವಲಸೆ ವ್ಯವಸ್ಥೆ ಮತ್ತು ಗಡಿಗಳನ್ನು ಬಲಗೊಳಿಸುವ ಕಾಯ್ದೆ’ ಎಂದು ಔಪಚಾರಿಕವಾಗಿ ಕರೆಯಲಾಗುವ ಈ ಕಾನೂನು ಮಾ. 26ರಂದು ರಾಯಲ್ ಒಪ್ಪಿಗೆಯನ್ನು ಪಡೆದುಕೊಂಡಿದ್ದು, ತನ್ಮೂಲಕ ಆಶ್ರಯ ಕೋರುವ ನಿಯಮಗಳನ್ನು ಇನ್ನಷ್ಟು ಕಟ್ಟುನಿಟ್ಟುಗೊಳಿಸಲಾಗಿದೆ. ನೂತನ ನಿಬಂಧನೆಗಳಡಿ, ಕೆನಡಾಕ್ಕೆ ಬಂದ ಒಂದು ವರ್ಷಕ್ಕೂ ಅಧಿಕ ಸಮಯದ ಬಳಿಕ ಆಶ್ರಯ ಕೋರಿ ಅರ್ಜಿ ಸಲ್ಲಿಸುವ ವ್ಯಕ್ತಿಗಳನ್ನು ವಲಸೆ ಮತ್ತು ನಿರಾಶ್ರಿತರ ಮಂಡಳಿಯ ಮುಂದೆ ಪೂರ್ಣ ವಿಚಾರಣೆಗೆ ಅನರ್ಹರೆಂದು ಪರಿಗಣಿಸಲಾಗುತ್ತದೆ.
ಬೆಂಗಳೂರು: ಬಿಜೆಪಿ ಮುಖಂಡ ಯೋಗೇಶ್ ಗೌಡ ಕೊಲೆ ಪ್ರಕರಣದಲ್ಲಿ ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಶಾಸಕ ವಿನಯ್ ಕುಲಕರ್ಣಿ ಸೇರಿದಂತೆ 16 ಅಪರಾಧಿಗಳಿಗೆ ಸಜಾ ಬಂಧಿ ಖೈದಿ ಸಂಖ್ಯೆಯನ್ನು ನೀಡಲಾಗಿದೆ. ಶಾಸಕ ವಿನಯ್ ಕುಲಕರ್ಣಿ ಸೇರಿ 17 ಅಪರಾಧಿಗಳನ್ನು ಶುಕ್ರವಾರ(ಎ.17) ರಾತ್ರಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಕರೆತರಲಾಗಿತ್ತು. ಈ ವೇಳೆ ಜೈಲಾಧಿಕಾರಿಗಳು ತಾತ್ಕಾಲಿಕವಾಗಿ ಯುಟಿಪಿ ನಂಬರ್ (ವಿಚಾರಣಾಧೀನ ಖೈದಿ) ನೀಡಿದ್ದರು. ಆದರೆ, ಈಗ ಕೆಲವು ಕಾನೂನು ಪ್ರಕ್ರಿಯೆಗಳ ನಂತರ ವಿನಯ್ ಕುಲಕರ್ಣಿಗೆ ಸಜಾ ಬಂಧಿ ಖೈದಿ ಸಂಖ್ಯೆ 16110 ನೀಡಲಾಗಿದೆ. ಜೊತೆಗೆ ಎಲ್ಲ ಅಪರಾಧಿಗಳಿಗೆ ಸಜಾ ಬಂಧಿ ಖೈದಿ ಸಂಖ್ಯೆಗಳನ್ನು ಅಧಿಕೃತವಾಗಿ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ. ವಿನಯ್ ಕುಲಕರ್ಣಿ ಹಾಗೂ ಈ ಪ್ರಕರಣದ ಇತರ 17 ಅಪರಾಧಿಗಳನ್ನು ಪ್ರಸ್ತುತ ಡಿ ಬ್ಯಾರಕ್ನ ಕ್ವಾರಂಟೈನ್ ಸೆಲ್ಗೆ ಕಳುಹಿಸಲಾಗಿದೆ. ಅಲ್ಲಿ ವಿನಯ್ ಕುಲಕರ್ಣಿ ಜೊತೆಗೆ ಇತರ ಮೂವರು ಅಪರಾಧಿಗಳನ್ನು ಒಂದು ಬ್ಯಾರಕ್ನಲ್ಲಿ ಇರಿಸಿದರೆ, ಇತರ ಅಪರಾಧಿಗಳನ್ನು ಪಕ್ಕದ ಬ್ಯಾರಕ್ನಲ್ಲಿ ಇರಿಸಲಾಗಿದೆ. ಮುಂದಿನ 10 ದಿನಗಳ ಕಾಲ ಎಲ್ಲರೂ ಇಲ್ಲೇ ಇರಲಿದ್ದಾರೆ. ನಂತರ ಅವರನ್ನು ಬೇರೆಡೆಗೆ ಸ್ಥಳಾಂತರಿಸಲಾಗುತ್ತದೆ ಎಂದು ಮೂಲಗಳಿಂದ ತಿಳಿದು ಬಂದಿದೆ. 17 ಅಪರಾಧಿಗಳ ಸಜಾ ಬಂಧಿ ಖೈದಿ ಸಂಖ್ಯೆಗಳು..! 1) ವಿಕ್ರಂ ಬಳ್ಳಾರಿ - 16097 2) ಕೀರ್ತಿ ಕುಮಾರ್ ಬೆಳ್ಳಟ್ಟಿ - 16098 3) ಸಂದೀಪ್ ಸವದತ್ತಿ - 16099 4) ವಿನಾಯಕ ಕಟಗಿ - 16100 5) ಮಹಾಬಲೇಶ್ವರ ಹೊಂಗಳೇ - 16101 6) ಸಂತೋಷ ಸವದತ್ತಿ - 16102 7) ದಿನೇಶ್ -16103 8) ಅಶ್ವಥ್ - 16104 9) ಸುನಿಲ್ - 16105 10) ನಜೀರ್ ಅಹ್ಮದ್ - 16106 11) ಶನವಾಜ್ - 16107 12) ನೂತನ್ - 16108 13) ಹರ್ಷೀತ್ - 16109 14) ವಿನಯ್ ಕುಲಕರ್ಣಿ -16110 15) ಚಂದ್ರಶೇಖರ್ ಇಂಡಿ -16111 16) ವಿಕಾಸ್ ಕಲಬುರ್ಗಿ - 16112 17) ಚನ್ನಕೇಶವ ಟಿಂಗರಿಕರ್ - 16113
Tamil Nadu | ಪಟಾಕಿ ಕಾರ್ಖಾನೆಯಲ್ಲಿ ಭಾರೀ ಸ್ಫೋಟ; ಮೃತಪಟ್ಟವರ ಸಂಖ್ಯೆ 22ಕ್ಕೆ ಏರಿಕೆ
ಚೆನ್ನೈ, ಎ. 19: ತಮಿಳುನಾಡಿನ ವಿರುಧುನಗರ ಜಿಲ್ಲೆಯ ಕಟ್ಟನಾರ್ ಪಟ್ಟಿ ಗ್ರಾಮದ ಖಾಸಗಿ ಪಟಾಕಿ ಕಾರ್ಖಾನೆಯಲ್ಲಿ ರವಿವಾರ ಸಂಭವಿಸಿದ ಭಾರೀ ಸ್ಫೋಟದಲ್ಲಿ ಕನಿಷ್ಠ 22 ಕಾರ್ಮಿಕರು ಮೃತಪಟ್ಟಿದ್ದಾರೆ ಹಾಗೂ ಇತರ 6 ಮಂದಿ ಗಾಯಗೊಂಡಿದ್ದಾರೆ. ವಚಕರಪಟ್ಟಿ ಪೊಲೀಸ್ ಠಾಣಾ ವ್ಯಾಪ್ತಿಗೆ ಒಳಪಟ್ಟ ಕಟ್ಟನಾರ್ಪಟ್ಟಿಯಲ್ಲಿರುವ ಮುತ್ತುಮಾಣಿಕ್ಕಂ ಎಂಬವರ ಮಾಲಕತ್ವದ ‘ವನಜ’ ಪಟಾಕಿ ಕಾರ್ಖಾನೆಯಲ್ಲಿ ಈ ಸ್ಫೋಟ ಸಂಭವಿಸಿದೆ. ಸ್ಫೋಟ ಸಂಭವಿಸಿದ ಸಂದರ್ಭ ಕಾರ್ಖಾನೆಯಲ್ಲಿ ಸುಮಾರು 30 ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಗಾಯಗೊಂಡ ಆರು ಮಂದಿಯ ಪೈಕಿ ನಾಲ್ವರ ಸ್ಥಿತಿ ಚಿಂತಾಜನಕವಾಗಿದೆ. ಅವರನ್ನು ವಿರುಧುನಗರ ಸರಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ ಎಂದು ಪೊಲೀಸ್ ಹಾಗೂ ರಕ್ಷಣಾ ಅಧಿಕಾರಿಗಳು ತಿಳಿಸಿದ್ದಾರೆ. ಈ ಘಟಕ ನಾಗಪುರ ಪೆಟ್ರೋಲಿಯಂ ಹಾಗೂ ಸ್ಪೋಟಕ ಸುರಕ್ಷಾ ಸಂಘಟನೆ (ಪಿಇಎಸ್ಒ)ಯಿಂದ ಪರವಾನಿಗೆ ಪಡೆದುಕೊಂಡಿದೆ ಎಂದು ಪ್ರಾಥಮಿಕ ತನಿಖೆ ಸೂಚಿಸಿದೆ. ಕಾರ್ಖಾನೆ ರವಿವಾರ ಕೂಡ ಕಾರ್ಯಾಚರಣೆ ನಡೆಸಿ ನಿಯಮ ಉಲ್ಲಂಘಿಸಿದೆ ಎಂದು ಮೂಲಗಳು ತಿಳಿಸಿವೆ. ಕಾರ್ಮಿಕರು ಕಚ್ಚಾ ವಸ್ತುಗಳನ್ನು ನಿರ್ವಹಿಸುವ ಹಾಗೂ ಪಟಾಕಿ ತಯಾರಿಸುವ ಅಂತಿಮ ಕೆಲಸಗಳಲ್ಲಿ ತೊಡಗಿಕೊಂಡಿದ್ದ ಕಾರ್ಖಾನೆಯ ಮುಂಭಾಗದ ವರಾಂಡದಲ್ಲಿ ಸ್ಫೋಟ ಸಂಭವಿಸಿರಬಹುದು ಎಂದು ಶಂಕಿಸಲಾಗಿದೆ. ಸ್ಫೋಟದ ತೀವ್ರತೆಗೆ ಕಾರ್ಖಾನೆಯ ಕನಿಷ್ಠ ಮೂರು ಕೊಠಡಿಗಳು ಹಾಗೂ ಸಮೀಪದ ನಿರ್ಮಾಣಗಳು ಸಂಪೂರ್ಣ ನೆಲಸಮಗೊಂಡಿವೆ. ಸ್ಫೋಟದ ಸದ್ದು ಸುಮಾರು 10 ಕಿ.ಮೀ. ದೂರದವರೆಗೆ ಕೇಳಿಸಿದೆ ಎಂದು ವರದಿಯಾಗಿದೆ. ಅಗ್ನಿಶಾಮಕ ದಳ ಬೆಂಕಿಯನ್ನು ನಿಯಂತ್ರಣಕ್ಕೆ ತರಲು ಹಲವು ಗಂಟೆಗಳ ಕಾಲ ಸೆಣಸಾಡಿತು. ಆರಂಭಿಕ ಸ್ಫೋಟದ ನಂತರವೂ ಪಟಾಕಿಗಳು ಆಗಾಗ ಸಿಡಿಯುತ್ತಿದ್ದುದರಿಂದ ರಕ್ಷಣಾ ಕಾರ್ಯಾಚರಣೆಗೆ ಅಡ್ಡಿ ಉಂಟಾಯಿತು. ಅವಶೇಷಗಳ ಅಡಿಯಲ್ಲಿ ಇನ್ನಷ್ಟು ಕಾರ್ಮಿಕರ ಮೃತದೇಹಗಳು ಇರುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಭೀತಿ ವ್ಯಕ್ತಪಡಿಸಿದ್ದಾರೆ. ‘‘ನಾವು ಇದುವರೆಗೆ 19 ಮೃತದೇಹಗಳನ್ನು ಪತ್ತೆ ಹಚ್ಚಿದ್ದೇವೆ. ಅವರಲ್ಲಿ ಹಲವರ ಮೃತದೇಹಗಳು ಗುರುತು ಸಿಗಲಾರದಷ್ಟು ಸುಟ್ಟು ಕರಕಲಾಗಿದೆ’’ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ದುರಂತದಲ್ಲಿ ಮೃತಪಟ್ಟವರ ಕುಟುಂಬಕ್ಕೆ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಸಂತಾಪ ವ್ಯಕ್ತಪಡಿಸಿದ್ದಾರೆ. ಅವರು ‘ಎಕ್ಸ್’ನಲ್ಲಿ ಮಾಡಿದ ಪೋಸ್ಟ್ ನಲ್ಲಿ, ವಿರುಧುನಗರ ಜಿಲ್ಲೆಯ ಕಟ್ಟನಾರ್ ಪಟ್ಟಿಯ ಪಟಾಕಿ ಕಾರ್ಖಾನೆಯಲ್ಲಿ ಸಂಭವಿಸಿದ ಸ್ಫೋಟದಲ್ಲಿ ಹಲವರು ಜೀವ ಕಳೆದುಕೊಂಡ ಸುದ್ದಿ ಅಪಾರ ನೋವು ತಂದಿದೆ ಎಂದು ತಿಳಿಸಿದ್ದಾರೆ. ಮೃತಪಟ್ಟವರ ಕುಟುಂಬಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಸಂತ್ರಸ್ತರಿಗೆ ಕೂಡಲೇ ನೆರವು ನೀಡುವಂತೆ ಅವರು ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದಾರೆ. ರಾಷ್ಟ್ರಪತಿ ದ್ರೌಪದಿ ಮುರ್ಮು, ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ ಹಾಗೂ ಪ್ರಧಾನಿ ನರೇಂದ್ರ ಮೋದಿ ಕೂಡ ಸಂತಾಪ ವ್ಯಕ್ತಪಡಿಸಿದ್ದಾರೆ.
ಇಂಡೋ- ನಾರ್ಡಿಕ್ ಶೃಂಗಸಭೆಯ ಬಳಿಕ ಪ್ರಧಾನಿ ಮೋದಿಯಿಂದ ಇಟಲಿ ಭೇಟಿ: ಏನು ಉದ್ದೇಶ?
PM Modi Italy Visit- ಮುಂದಿನ ತಿಂಗಳು ಓಸ್ಲೋದಲ್ಲಿ ನಡೆಯಲಿರುವ ಇಂಡೋ-ನಾರ್ಡಿಕ್ ಶೃಂಗಸಭೆಯ ನಂತರ ಪ್ರಧಾನಿ ಮೋದಿ ರೋಮ್ಗೆ ಭೇಟಿ ನೀಡುವ ಸಾಧ್ಯತೆಯಿದೆ. ನಾರ್ಡಿಕ್ ನಾಯಕರೊಂದಿಗೆ ಹಸಿರು ತಂತ್ರಜ್ಞಾನದ ಕುರಿತು ಚರ್ಚಿಸಿದ ಬಳಿಕ, ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರೊಂದಿಗೆ ರಕ್ಷಣೆ ಮತ್ತು ಬಾಹ್ಯಾಕಾಶ ಕ್ಷೇತ್ರಗಳ ಸಹಕಾರದ ಬಗ್ಗೆ ಮಾತುಕತೆ ನಡೆಸಲಿದ್ದಾರೆ. ಅಲ್ಲದೆ, ಜೂನ್ನಲ್ಲಿ ನಡೆಯಲಿರುವ ಜಿ-7 ಶೃಂಗಸಭೆಯಲ್ಲಿ ಭಾಗವಹಿಸಲು ಅವರು ಫ್ರಾನ್ಸ್ಗೆ ಭೇಟಿ ನೀಡುವ ನಿರೀಕ್ಷೆಯಿದೆ. ಈ ಪ್ರವಾಸಗಳು ಭಾರತ ಮತ್ತು ಯುರೋಪಿಯನ್ ರಾಷ್ಟ್ರಗಳ ನಡುವಿನ ರಾಜತಾಂತ್ರಿಕ ಹಾಗೂ ವ್ಯಾಪಾರ ಸಂಬಂಧಗಳನ್ನು ಮತ್ತಷ್ಟು ಬಲಪಡಿಸಲಿವೆ.
ಮುಂಬೈ: ಮುಂಬೈನಲ್ಲಿ ಆಯೋಜನೆಗೊಂಡಿದ್ದ ಸಂಗೀತ ಗೋಷ್ಠಿಯಲ್ಲಿ ಓವರ್ ಡೋಸ್ ಮಾದಕ ದ್ರವ್ಯ ಸೇವಿಸಿ ಇಬ್ಬರು ಮೃತಪಟ್ಟಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ, ಟಿಕೆಟ್ ಇಲ್ಲದ ಪೆಡ್ಲರ್ ಗಳಿಗೆ ಸಂಗೀತ ಗೋಷ್ಠಿಗೆ ಪ್ರವೇಶಿಸಲು ಅವಕಾಶ ನೀಡಿ, ಅವರು ಮಾದಕ ದ್ರವ್ಯ ಹಂಚಲು ನೆರವಾದ ಬೌನ್ಸರ್ ಒಬ್ಬನನ್ನು ರವಿವಾರ ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಎಪ್ರಿಲ್ 11ರಂದು ಮೆಟ್ರೊಪೊಲಿಸ್ ನ ಭಾಗವಾದ ವಾಯುವ್ಯ ಗೋರೆಗಾಂವ್ ನಲ್ಲಿ ಆಯೋಜನೆಗೊಂಡಿದ್ದ ಸಂಗೀತ ಗೋಷ್ಠಿಯಲ್ಲಿ ಮದ್ಯ ಹಾಗೂ ಮತ್ತೇರಿಸುವ ಮಾತ್ರೆಗಳನ್ನು ಸೇವಿಸಿದ ಬಳಿಕ ಓವರ್ ಡೋಸ್ ನಿಂದ ಓರ್ವ ಎಂಬಿಎ ವಿದ್ಯಾರ್ಥಿ ಹಾಗೂ ಓರ್ವ ಮಹಿಳೆ ಮೃತಪಟ್ಟಿದ್ದಾರೆ ಎಂದು ಶಂಕಿಸಲಾಗಿದೆ. ಅವರಿಬ್ಬರೂ ಎಪ್ರಿಲ್ 12ರಂದು ಮೃತಪಟ್ಟಿದ್ದು, ಮತ್ತೊಬ್ಬ ವಿದ್ಯಾರ್ಥಿಗೆ ಬಾಂಬೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸಂಗೀತ ಗೋಷ್ಠಿಯ ಭದ್ರತಾ ತಂಡದ ಭಾಗವಾಗಿದ್ದ ಪ್ರದೀಪ್ ಅರವಿಂದ್ ಗುಪ್ತ ಎಂಬ ಬೌನ್ಸರ್, ಮಾದಕ ದ್ರವ್ಯದ ಪೆಡ್ಲರ್ ಗಳಾದ ಆಯುಷ್ ಸಾಹಿತ್ಯ ಮತ್ತು ವಿನೀತ್ ಗರ್ಲಾನಿ ಅವರಿಗೆ ಟಿಕೆಟ್ ಇಲ್ಲದಿದ್ದರೂ ಸಂಗೀತ ಗೋಷ್ಠಿ ಆವರಣಕ್ಕೆ ಪ್ರವೇಶಿಸಲು ಅವಕಾಶ ನೀಡಿದ್ದ ಎಂದು ವನ್ರಾಯಿ ಪೊಲೀಸ್ ಠಾಣೆಯ ಅಧಿಕಾರಿ ತಿಳಿಸಿದ್ದಾರೆ. “ಇಬ್ಬರಿಂದಲೂ ತಲಾ 1,000 ರೂ. ಪಡೆದಿದ್ದ ಪ್ರದೀಪ್ ಅರವಿಂದ್ ಗುಪ್ತ, ಅವರಿಗೆ ಒಳಗೆ ಹೋಗಲು ಅವಕಾಶ ನೀಡಿದ್ದ. ಆತನ ಬಂಧನದೊಂದಿಗೆ ಈ ಪ್ರಕರಣದಲ್ಲಿ ಈವರೆಗೆ ಬಂಧಿತರಾಗಿರುವವರ ಸಂಖ್ಯೆ 10ಕ್ಕೆ ತಲುಪಿದೆ. ಉಳಿದ ಒಂಭತ್ತು ಬಂಧಿತರ ಪೈಕಿ ಆರು ಮಂದಿ ಮಾದಕ ದ್ರವ್ಯ ಪೂರೈಕೆದಾರರಾಗಿದ್ದು, ಉಳಿದ ಮೂವರು ಸಂಗೀತ ಗೋಷ್ಠಿಯನ್ನು ಸಂಘಟಿಸಿದ್ದ ಸಂಸ್ಥೆಗೆ ಸೇರಿದವರಾಗಿದ್ದಾರೆ” ಎಂದು ಅವರು ಹೇಳಿದ್ದಾರೆ. ಆಯುಷ್ ಸಾಹಿತ್ಯ, ಪ್ರತೀಕ್ ಪಾಂಡ್ಯ, ರೌನಾಕ್ ಖಂಡೇಲ್ವಾಲ್, ಆನಂದ್ ಪಟೇಲ್, ವಿನೀತ್ ಗರ್ಲಾನಿ, ಶುಭ್ ಅಗರ್ವಾಲ್, ಆಕಾಶ್ ಸನಲ್, ಸನ್ನಿ ಜೈನ್, ಬಾಲಕೃಷ್ಣ ಕುರುಪ್ ಹಾಗೂ ಪ್ರದೀಪ್ ಗುಪ್ತ ಬಂಧಿತ 10 ಮಂದಿ ಆರೋಪಿಗಳಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತರು ಸಂಗೀತ ಗೋಷ್ಠಿಗೆ ಹಾಜರಾಗಿದ್ದ 20–22 ಮಂದಿ ವಿದ್ಯಾರ್ಥಿಗಳ ತಂಡದ ಭಾಗವಾಗಿದ್ದರು ಎಂದು ಅವರು ತಿಳಿಸಿದ್ದಾರೆ. ಈ ಸಂಬಂಧ ವನ್ರಾಯಿ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆಯ ವಿವಿಧ ಕಲಂಗಳಡಿ ಪ್ರಕರಣ ದಾಖಲಾಗಿದೆ.
Uttar Pradesh | ಘಾಝಿಯಾಬಾದ್ ನಲ್ಲಿ ಅಂಬೇಡ್ಕರ್ ಪ್ರತಿಮೆ ಭಗ್ನ: ಮುಖ್ಯ ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ
ಘಾಝಿಯಾಬಾದ್: ದುಷ್ಕರ್ಮಿಗಳು ಬಾಬಾಸಾಹೇಬ್ ಅಂಬೇಡ್ಕರ್ ಪ್ರತಿಮೆಯನ್ನು ಭಗ್ನಗೊಳಿಸಿರುವ ಘಟನೆ ರವಿವಾರ ಘಾಝಿಯಾಬಾದ್ ನ ಇಂದ್ರಪುರಿ ಕಾಲನಿಯಲ್ಲಿ ನಡೆದಿದ್ದು, ಈ ಕೃತ್ಯದ ವಿರುದ್ಧ ವ್ಯಾಪಕ ಪ್ರತಿಭಟನೆ ವ್ಯಕ್ತವಾಗಿದೆ. ಈ ಘಟನೆ ಬೆಳಕಿಗೆ ಬರುತ್ತಿದ್ದಂತೆಯೇ ಸಾವಿರಾರು ಸ್ಥಳೀಯರು ಹಾಗೂ ಅಂಬೇಡ್ಕರ್ ಬೆಂಬಲಿಗರು ಘಟನಾ ಸ್ಥಳದಲ್ಲಿ ಜಮಾಯಿಸಿ ಧರಣಿ ನಡೆಸಿದರು ಹಾಗೂ ದಿಲ್ಲಿ–ಸಹರಣ್ಪುರ್ ಹೆದ್ದಾರಿಯನ್ನು ಬಂದ್ ಮಾಡಿದರು. ಇದರಿಂದ ಈ ಭಾಗದಲ್ಲಿ ತೀವ್ರ ಸಂಚಾರ ವ್ಯತ್ಯಯ ಉಂಟಾಯಿತು. ಸುದ್ದಿ ತಿಳಿದು ಸ್ಥಳಕ್ಕೆ ಧಾವಿಸಿದ ಪೊಲೀಸರು ಮಧ್ಯಸ್ಥಿಕೆ ವಹಿಸಿ ಒಂದು ಪಥವನ್ನು ಸಂಚಾರಕ್ಕೆ ಮುಕ್ತಗೊಳಿಸುವಲ್ಲಿ ಯಶಸ್ವಿಯಾದರು. ಆದರೆ, ಪ್ರತಿಭಟನಾಕಾರರು ಮತ್ತೊಂದು ಪಥವನ್ನು ಆಕ್ರಮಿಸಿ ತಮ್ಮ ಪ್ರತಿಭಟನೆಯನ್ನು ಮುಂದುವರಿಸಿದರು. ದುಷ್ಕರ್ಮಿಗಳ ವಿರುದ್ಧ ತಕ್ಷಣವೇ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು. ಈ ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆಯೇ ಸ್ಥಳೀಯ ಪೊಲೀಸರ ತಂಡ ಘಟನಾ ಸ್ಥಳಕ್ಕೆ ಧಾವಿಸಿತು. ಪರಿಶೀಲನೆಯ ಬಳಿಕ ರಸ್ತೆ ಬದಿಯ ಪ್ರತಿಮೆ ಭಗ್ನಗೊಂಡಿರುವುದು ದೃಢಪಟ್ಟಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. “ಈ ಕೃತ್ಯದಲ್ಲಿ ಭಾಗಿಯಾಗಿರುವವರನ್ನು ಬಂಧಿಸಲು ತಂಡವೊಂದನ್ನು ರಚಿಸಲಾಗಿದ್ದು, ಪ್ರಕರಣವನ್ನು ದಾಖಲಿಸಲಾಗಿದೆ. ತನಿಖೆಯಲ್ಲಿ ವಿಶೇಷ ಶಸ್ತ್ರಾಸ್ತ್ರ ಹಾಗೂ ತಾಂತ್ರಿಕ ತಂಡಗಳನ್ನು ಕೂಡ ಸೇರಿಸಲಾಗಿದೆ. ಸಿಸಿಟಿವಿ ದೃಶ್ಯಾವಳಿಗಳು ಹಾಗೂ ಇತರ ಸಾಕ್ಷ್ಯಗಳನ್ನು ಪರಿಶೀಲಿಸಲಾಗುತ್ತಿದೆ. ಈ ಸಂಬಂಧ ಇದುವರೆಗೆ ಇಬ್ಬರು ಶಂಕಿತ ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ,” ಎಂದು ಅವರು ತಿಳಿಸಿದ್ದಾರೆ. ಈ ಘಟನೆಯನ್ನು ಸ್ಥಳೀಯ ನಾಯಕರು ತೀವ್ರವಾಗಿ ಖಂಡಿಸಿದ್ದಾರೆ. ಲೋನಿ ಶಾಸಕ ನಂದ್ ಕಿಶೋರ್ ಗುರ್ಜಾರ್ ಸ್ಥಳಕ್ಕೆ ಭೇಟಿ ನೀಡಿ, ದುಷ್ಕರ್ಮಿಗಳ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಲೋನಿ ನಗರ ಪಾಲಿಕೆ ಅಧ್ಯಕ್ಷೆ ರಂಜಿತಾ ಧಾಮಾ ಕೂಡ ಈ ಕೃತ್ಯವನ್ನು ಖಂಡಿಸಿದ್ದು, ಇದು ಈ ಪ್ರದೇಶದಲ್ಲಿ ಕೋಮು ಸಾಮರಸ್ಯವನ್ನು ಕದಡುವ ಪ್ರಯತ್ನವಾಗಿದೆ ಎಂದು ಹೇಳಿದ್ದಾರೆ. ಸ್ಥಳದಲ್ಲಿ ಪ್ರಕ್ಷುಬ್ಧತೆ ಮುಂದುವರಿದಿರುವ ಹಿನ್ನೆಲೆಯಲ್ಲಿ ಈ ಪ್ರದೇಶದಲ್ಲಿ ದೊಡ್ಡ ಪ್ರಮಾಣದ ಪೊಲೀಸ್ ಪಡೆ ನಿಯೋಜಿಸಲಾಗಿದೆ ಮತ್ತು ಅಧಿಕಾರಿಗಳು ಕಟ್ಟೆಚ್ಚರ ವಹಿಸಿದ್ದಾರೆ. ರಸ್ತೆ ಬಂದ್ ಮಾಡಿರುವ ಪ್ರತಿಭಟನಾಕಾರರನ್ನು ಅಲ್ಲಿಂದ ತೆರವುಗೊಳಿಸಲು ಅಧಿಕಾರಿಗಳು ಪ್ರಯತ್ನಿಸುತ್ತಿದ್ದಾರೆ. ಆದರೆ ದುಷ್ಕರ್ಮಿಗಳನ್ನು ಬಂಧಿಸುವವರೆಗೆ ಅಲ್ಲಿಂದ ಚದುರಲು ಪ್ರತಿಭಟನಾಕಾರರು ನಿರಾಕರಿಸಿದ್ದಾರೆ. ಸಹಜ ಸ್ಥಿತಿಯನ್ನು ಮರುಸ್ಥಾಪಿಸುವ ಪ್ರಯತ್ನಗಳು ಮುಂದುವರಿದಿದ್ದರೂ, ಸ್ಥಳದಲ್ಲಿ ಉದ್ವಿಗ್ನತೆ ಮನೆಮಾಡಿದೆ.
ಹಾರ್ಮುಝ್ ನಲ್ಲಿ ಮೈನ್ಸ್ ತೆರವಿಗೆ ಅಮೆರಿಕ ಸೇನೆಯಿಂದ ರೋಬೋಟ್ ಗಳ ನಿಯೋಜನೆ: ವರದಿ
ವಾಷಿಂಗ್ಟನ್, ಎ.19: ಹಾರ್ಮುಝ್ ಜಲಸಂಧಿಯಲ್ಲಿ ಇರಾನ್ ಹುದುಗಿಸಿರುವ ಸ್ಫೋಟಕ (ಮೈನ್ಸ್)ಗಳನ್ನು ತೆರವುಗೊಳಿಸುವ ಕಾರ್ಯಾಚರಣೆಗೆ ನೆರವಾಗುವುದಕ್ಕಾಗಿ ಅಮೆರಿಕ ಸೇನೆಯು ಸಾಗರ ಡ್ರೋನ್ ಹಾಗೂ ಇತರೆ ರೋಬೋಟಿಕ್ ವ್ಯವಸ್ಥೆಗಳನ್ನು ನಿಯೋಜಿಸಿದೆ. ಜಾಗತಿಕವಾಗಿ ಐದನೇ ಒಂದು ಭಾಗದಷ್ಟು ತೈಲ ಹಾಗೂ LPG ಪೂರೈಕೆಯಾಗುವ ಹಾರ್ಮುಝ್ ಜಲಸಂಧಿಯಲ್ಲಿ ಹುದುಗಿಸಲಾದ ಮೈನ್ಸ್ ಗಳನ್ನು ಪತ್ತೆಹಚ್ಚಲು ಅಮೆರಿಕದ ನೌಕಾಪಡೆಯು ಮಾನವ ಹಾಗೂ ಮಾನವರಹಿತ ಸಾಮರ್ಥ್ಯಗಳನ್ನು ಬಳಸಿಕೊಳ್ಳುತ್ತಿದೆ ಎಂದು ‘ವಾಲ್ ಸ್ಟ್ರೀಟ್ ಜರ್ನಲ್’ ವರದಿ ತಿಳಿಸಿದೆ. ಮಾನವರಹಿತ ಜಲಾಂತರ್ಗಾಮಿ ವಾಹನಗಳನ್ನು ಬಳಸಿಕೊಂಡು ಸಮುದ್ರ ತಳವನ್ನು ಪರಿಶೋಧಿಸಲು ಸಾಧ್ಯವಿದೆ ಎಂದು ಸೇನಾ ವಿಶ್ಲೇಷಕರು ತಿಳಿಸಿದ್ದಾರೆ. ಯಾವುದೇ ಮೈನ್ಸ್ ಗಳು ಪತ್ತೆಯಾದಲ್ಲಿ, ಅವುಗಳನ್ನು ನಾಶಪಡಿಸಲು ತಕ್ಷಣ ಸಾಗರ ರೋಬೋಟ್ ಗಳನ್ನು ಕಳುಹಿಸಬಹುದಾಗಿದೆ ಎಂದು ಅವರು ಹೇಳಿದ್ದಾರೆ. ಇಂತಹ ವ್ಯವಸ್ಥೆಗಳನ್ನು ಬಳಸಿಕೊಂಡು ಹಡಗುಗಳು ಸಂಚರಿಸುವ ಕಾಲುವೆಗಳ ಸರ್ವೇಕ್ಷಣೆಯನ್ನು ನಡೆಸಬಹುದಾಗಿದೆ ಎಂದು ಅಮೆರಿಕದ ನೌಕಾಪಡೆಯ ಮಾಜಿ ವೈಸ್ ಅಡ್ಮಿರಲ್ ಕೆವಿನ್ ಡೊನೆಗಾನ್ ತಿಳಿಸಿದ್ದಾರೆ.
ಐದು ದಿನಗಳ ವರೆಗೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ‘ಬಿಸಿ ಗಾಳಿ’; ಯೆಲ್ಲೋ ಅಲರ್ಟ್ ಘೋಷಣೆ
ಬೆಂಗಳೂರು: ರಾಜ್ಯದಲ್ಲಿ ತಾಪಮಾನ ಏರಿಕೆಯಾಗುತ್ತಿದ್ದು, ಎ.20ರಿಂದ ಐದು ದಿನಗಳ ಕಾಲ ರಾಜ್ಯದ ವಿವಿಧ ಜಿಲ್ಲೆಗಳಿಗೆ ಬಿಸಿ ಗಾಳಿಯ ಯೆಲ್ಲೋ ಅಲರ್ಟ್ ಅನ್ನು ಘೋಷಣೆ ಮಾಡಲಾಗಿದೆ ಎಂದು ಹವಾಮಾನ ಇಲಾಖೆಯು ಮಾಹಿತಿ ನೀಡಿದೆ. ಎ.20ರಂದು ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ, ಉತ್ತರ ಕರ್ನಾಟಕದ ಜಿಲ್ಲೆಗಳಾದ ಬೀದರ್, ಕಲಬುರಗಿ, ರಾಯಚೂರು, ಯಾದಗಿರಿ, ಬೆಳಗಾವಿ, ವಿಜಯಪುರ, ಬಾಗಲಕೋಟೆ, ಧಾರವಾಡ, ಗದಗ, ಕೊಪ್ಪಳ, ಮಲೆನಾಡು ಜಿಲ್ಲೆಗಳಾದ ಶಿವಮೊಗ್ಗ, ಹಾಸನ, ಚಿಕ್ಕಮಗಳೂರು, ಕೊಡಗು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಅನ್ನು ಘೋಷಣೆ ಮಾಡಿದೆ. ಎ.21ರಂದು ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಬೀದರ್, ಕಲಬುರಗಿ, ರಾಯಚೂರು, ಯಾದಗಿರಿ, ವಿಜಯಪುರ, ಕೊಪ್ಪಳ, ಬಳ್ಳಾರಿ, ವಿಜಯನಗರ, ದಕ್ಷಿಣ ಒಳನಾಡಿನ ದಾವಣಗೆರೆ, ಚಿತ್ರದುರ್ಗ, ತುಮಕೂರು, ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಅನ್ನು ಘೋಷಣೆ ಮಾಡಿದೆ. ಎ.22ರಂದು ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ, ಹಾಸನ, ಬೆಳಗಾವಿ, ಕಲಬುರಗಿ, ರಾಯಚೂರು, ಯಾದಗಿರಿ, ವಿಜಯಪುರ, ಕೊಪ್ಪಳ, ಬಳ್ಳಾರಿ, ವಿಜಯನಗರ, ಹಾವೇರಿ, ಗದಗ, ದಕ್ಷಿಣ ಒಳನಾಡಿನ ದಾವಣಗೆರೆ, ಮತ್ತು ಚಾಮರಾಜನಗರ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಅನ್ನು ಘೋಷಣೆ ಮಾಡಿದೆ. ಎ.23 ಮತ್ತು ಎ.24ರಂದು ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಬೆಳಗಾವಿ, ಗದಗ, ಹಾವೇರಿ, ಶಿವಮೊಗ್ಗ, ಹಾಸನ, ಚಿಕ್ಕಮಗಳೂರು, ಕೊಡಗು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಅನ್ನು ಘೋಷಣೆ ಮಾಡಿದೆ. ಉಷ್ಣಾಂಶ: ರವಿವಾರದಂದು ಕಲಬುರಗಿಯಲ್ಲಿ ಅತ್ಯಾಧಿಕ ಉಷ್ಣಾಂಶ ದಾಖಲಾಗಿದ್ದು, 42 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ನಮೂದಾಗಿದೆ. ವಿಜಯಪುರದಲ್ಲಿ 39.6, ರಾಯಚೂರು 41.1, ಕೊಪ್ಪಳ 39.9, ಬೀದರ್ 41.2, ಬಾಗಲಕೋಟೆ 39.2, ಗದಗ 39.2, ಬೆಂಗಳೂರು 36.4, ಮಂಗಳೂರು 34.7, ಕಾರವಾರ 34.6, ಹೊನ್ನಾವರ 33.7, ಚಿತ್ರದುರ್ಗ 38, ಹಾಸನ 34.3, ಮೈಸೂರು 37, ಬೆಳಗಾವಿ 37.6, ಧಾರವಾಡ 36.6, ಹಾವೇರಿ 38.2, ಮಂಡ್ಯ 36.1, ಚಿಂತಾಮಣಿ 37 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ.
ಅಣುಶಕ್ತಿಯನ್ನು ಹೊಂದುವ ಇರಾನ್ ಹಕ್ಕನ್ನು ಕಸಿಯಲು ಯಾರಿಗೂ ಸಾಧ್ಯವಿಲ್ಲ: ಪೆಝೆಶ್ಕಿಯಾನ್ ಘೋಷಣೆ
ಯುದ್ಧಕ್ಕೆ ಘನತೆಯ ಅಂತ್ಯ ಹಾಡಲು ಬಯಸುವುದಾಗಿ ಹೇಳಿಕೆ
Islamabad Talks | ಅಮೆರಿಕ–ಇರಾನ್ ಶಾಂತಿ ಮಾತುಕತೆ 2.0 ಸನ್ನಿಹಿತ?
ಇಸ್ಲಾಮಾಬಾದ್ ನಲ್ಲಿ ಬಿಗಿಭದ್ರತೆ
ಕಾರ್ಕಳದ ಗೊಮ್ಮಟನಿಗೆ 2027ರ ಫೆ.18ರಿಂದ ಮಹಾಮಜ್ಜನ: ಮಹಾಮಸ್ತಕಾಭಿಷೇಕ ಸಮಿತಿ
► ಕಾರ್ಯಾಲಯ ಉದ್ಘಾಟನೆ
ಸಂಸದ ಸುಧಾಕರ್ ಬಗ್ಗೆ ಬೇಕಾಬಿಟ್ಟಿ ಮಾತನಾಡಬೇಡಿ: ಬಿಜೆಪಿ ಜಿಲ್ಲಾಧ್ಯಕ್ಷರ ವಾರ್ನಿಂಗ್
ಬಿಜೆಪಿ ಜಿಲ್ಲಾಧ್ಯಕ್ಷ ಸೀಕಲ್ ರಾಮಚಂದ್ರಗೌಡ ಅವರು ಎನ್ಡಿಎ ಮೈತ್ರಿಯ ಬಗ್ಗೆ ಎಚ್ಚರಿಕೆಯ ಮಾತನ್ನಾಡಿದ್ದಾರೆ. ಮೈತ್ರಿಕೂಟವು ಒಂದು ಮನೆಯಿದ್ದಂತೆ ಇರಬೇಕು ಮತ್ತು ಏನೇ ಭಿನ್ನಾಭಿಪ್ರಾಯಗಳಿದ್ದರೂ ಅದನ್ನು ಆಂತರಿಕವಾಗಿ ಬಗೆಹರಿಸಿಕೊಳ್ಳಬೇಕೇ ಹೊರತು ಬಹಿರಂಗವಾಗಿ ಹೇಳಿಕೆ ನೀಡಬಾರದು ಎಂದು ಅವರು ಪ್ರತಿಪಾದಿಸಿದ್ದಾರೆ.
ಡಿಎಂಕೆ ಸ್ವಾರ್ಥಕ್ಕೆ ದಕ್ಷಿಣ ರಾಜ್ಯಗಳ ಹಿತ ಬಲಿ: ಎಚ್.ಡಿ. ಕುಮಾರಸ್ವಾಮಿ
‘ಕ್ಷೇತ್ರ ಮರುವಿಂಗಡಣೆಯಿಂದ ಐದು ರಾಜ್ಯಗಳಿಗೆ ಅನ್ಯಾಯವಾಗುತ್ತಿರಲಿಲ್ಲ’
Ameesha Patel: ಇತ್ತೀಚೆಗಷ್ಟೇ ವಿರಾಟ್ ಕೊಹ್ಲಿ ಅವರು ಇನ್ಸ್ಟಾಗ್ರಾಮ್ನಲ್ಲಿ ಇನ್ಫ್ಲುಯೆನ್ಸರ್ ಲಿಜ್ಲಾಜ್ ಹಾಕಿ ಪೋಸ್ಟ್ಗೆ ಲೈಕ್ ಮಾಡಿದ್ದರು. ಇದು ಸಾಮಾಜಿಕ ಜಾಲತಾಣದಲ್ಲಿ ಭಾರಿ ಸಂಚಲನ ಸೃಷ್ಟಿಸಿದ್ದು, ಚರ್ಚೆಗೆ ಗ್ರಾಸವಾಗಿದೆ. ನೆಟ್ಟಿಗರು ಇದನ್ನು ವಿವಿಧ ರೀತಿಯಲ್ಲಿ ವಿಶ್ಲೇಷಿಸಿ, ಮೀಮ್ಗಳನ್ನು ಹಂಚಿಕೊಳ್ಳುವ ಮೂಲಕ ಕೊಹ್ಲಿಯನ್ನು ಟ್ರೋಲ್ ಮಾಡಲು ಆರಂಭಿಸಿದರು. ಆದರೆ, ಇದೀಗ ಬಾಲಿವುಡ್ ನಟಿ ಅಮೀಷಾ ಪಟೇಲ್ ಅವರು ಕೊಹ್ಲಿ
ಹಿರೇಬೆಟ್ಟು: ವಿಜ್ಞಾಪನಾ ಪತ್ರ ಬಿಡುಗಡೆ
ಉಡುಪಿ: ಹಿರೇಬೆಟ್ಟು ಗ್ರಾಮದ ಭಟ್ರಕೋಡಿ ಶ್ರೀಮಹಾ ಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರದ ಅಂಗವಾಗಿ ಸಾರ್ವಜನಿಕರಿಗೆ ವಿಜ್ಞಾಪನಾ ಪತ್ರ ಬಿಡುಗಡೆ ಸಮಾರಂಭವು ರವಿವಾರ ನಡೆಯಿತು. ಮಾಹೆ ಮಣಿಪಾಲದ ಸಹಕುಲಾಧಿಪತಿ ಡಾ.ಎಚ್.ಎಸ್,ಬಲ್ಲಾಳ್ ವಿಜ್ಞಾಪನಾ ಪತ್ರವನ್ನು ಬಿಡುಗಡೆ ಮಾಡಿದರು. ಸಂಸದ ಕೋಟ ಶ್ರೀನಿವಾಸ ಪೂಜಾರಿ, ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಮಾಜಿ ಸಚಿವ ವಿನಯಕುಮಾರ್ ಸೊರಕೆ ಮಾತನಾಡಿದರು. ಮಣಿಪಾಲ ವೈಷ್ಣವಿದುರ್ಗಾ ದೇವಾಲಯದ ಅಧ್ಯಕ್ಷ ಜಯರಾಜ್ ಹೆಗ್ಡೆ ಮತ್ತು ದೇವಳದ ಅರ್ಚಕ ಕುಟುಂಬದ ಸೀತಾರಾಮ ಭಟ್ ವೇದಿಕೆಯಲ್ಲಿದ್ದರು, ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ಧ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಶ್ರೀನಿಧಿ ಹೆಗ್ಡೆ ಹಿರೇಬೆಟ್ಟು ಸ್ವಾಗತಿಸಿದರು, ಗೌರವಾಧ್ಯಕ್ಷ ಬೆಲ್ಪತ್ರೆ ಸಚ್ಚಿದಾನಂದ ನಾಯಕ್ ಪ್ರಾಸ್ತಾವಿಕ ಮಾತುಗಳನ್ನಾಡಿ ದರು, ದಿನೇಶ್ ನಾಯಕ್ ಕಾರ್ಯಕ್ರಮ ನಿರೂಪಿಸಿದರು, ಚಂದ್ರಶೇಖರ ನಾಯಕ್ ವಂದಿಸಿದರು.
Gold Good News: ಭಾರತೀಯರಿಗೆ ಚಿನ್ನ ಮತ್ತು ಬೆಳ್ಳಿಯ ವಿಚಾರದಲ್ಲಿ ಭರ್ಜರಿ ಗುಡ್ನ್ಯೂಸ್ ಸಿಕ್ಕಂತಾಗಿದೆ. ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ ಇಳಿಕೆ - ಏರಿಕೆಯ ಹಾವು - ಏಣಿ ಆಟವು ಮುಂದುವರಿದಿದೆ. ಅಮೆರಿಕ - ಇಸ್ರೇಲ್ Vs ಇರಾನ್ ದೇಶಗಳ ನಡುವೆ ಯುದ್ಧ ಪ್ರಾರಂಭವಾದ ಮೇಲೆ ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಹಲವು ಏರಿಳಿತ ವರದಿಯಾಗಿದೆ. ಆದರೆ
ಕಲಿಕೆ ನಿರಂತರ ಪ್ರಕ್ರಿಯೆ: ಗೋಕುಲ್ದಾಸ್ ನಾಯಕ್
ಉಡುಪಿ: ನಿಜವಾದ ಕಲಿಕೆ ಪದವಿಯೊಂದಿಗೆ ಅಂತ್ಯ ವಾಗುವುದಿಲ್ಲ. ಅದು ಜೀವನ ಪರ್ಯಂತರ ನಿರಂತರವಾಗಿ ನಡೆಯುವ ಪ್ರಕ್ರಿಯೆ. ಹಾಗಾಗಿ ಹೊಸತನ್ನು ಕಲಿಯಲು, ಸದಾ ಕಲಿಯುವ ಮನಸ್ಥಿತಿ ಹೊಂದಿರುವುದನ್ನು ರೂಢಿಸಿ ಕೊಳ್ಳಬೇಕು ಎಂದು ಮಂಗಳೂರು ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಜಂಟಿ ನಿರ್ದೇಶಕ ಗೋಕುಲ್ದಾಸ್ ನಾಯಕ್ ಹೇಳಿದ್ದಾರೆ. ಉಡುಪಿ ಎಂಜಿಎಂ ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾ ಸಮಿತಿ ದಿನಾಚರಣೆಯಲ್ಲಿ ಅವರು ಮುಖ್ಯ ಅತಿಥಿಯಾಗಿ ಆಗಮಿಸಿ ಮಾತನಾಡುತಿದ್ದರು. ಅಧ್ಯಕ್ಷತೆಯನ್ನು ಅಕಾಡೆಮಿ ಆಫ್ ಜನರಲ್ ಎಜ್ಯುಕೇಷನ್ನ ಆಡಳಿತಾಧಿಕಾರಿ ಡಾ.ಶ್ರೀಧರ ಆರ್.ಪೈ ವಹಿಸಿದ್ದರು. ಕಾಲೇಜಿನ ಪ್ರಾಂಶು ಪಾಲೆ ಪ್ರೊ.ವನಿತ ಮಯ್ಯ, ಉಪಪ್ರಾಂಶುಪಾಲ ಡಾ.ಎಂ.ವಿಶ್ವನಾಥ್ ಪೈ, ಸಂಧ್ಯಾ ಕಾಲೇಜಿನ ಪ್ರಾಂಶುಪಾಲ ಡಾ.ದೇವಿದಾಸ್ ಎಸ್.ನಾಯ್ಕ, ಪ.ಪೂ. ಕಾಲೇಜಿನ ಪ್ರಾಂಶುಪಾಲೆ ಪ್ರೊ.ಮಾಲತಿ ದೇವಿ, ಐಕ್ಯೂಎಸಿ ಸಂಯೋಜಕಿ ಪ್ರೊ.ಶೈಲಜಾ ಎಚ್., ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಪ್ರೊ.ವೀರಾ ಐಡಾ ಪಿಂಟೋ, ಸಹ ಕ್ಷೇಮಪಾಲನಾಧಿಕಾರಿ ಪ್ರೊ.ಅನಿಲ್ ಕುಮಾರ್, ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು. ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಸಾಧನೆಗೈದ ಕಾಲೇಜಿನ ವಿದ್ಯಾರ್ಥಿಗಳನ್ನು ಗುರುತಿಸಿ ಗೌರವಿಸಲಾ ಯಿತು. ವಿದ್ಯಾರ್ಥಿ ಕ್ಷೇಮ ಪಾಲನಾ ಸಮಿತಿ ಸಂಘದ ಅಧ್ಯಕ್ಷ ನಂದನ್ ಕುಂದರ್ ಸ್ವಾಗತಿಸಿದರು. ಎಂ.ಎಸ್ಸಿ ಪ್ರತಿನಿಧಿ ಆಶಿಶ್ ಶೆಟ್ಟಿಗಾರ್ ವಂದಿಸಿದರು. ವಿದ್ಯಾರ್ಥಿನಿಯರಾದ ಸಮ್ರಾ ಹಾಗೂ ದೃಶ್ಯ ಕಾರ್ಯಕ್ರಮ ನಿರೂಪಿಸಿದರು.
ಕಪೋಲಕಲ್ಪಿತ ಕಥೆಗಳಿಂದ ಸಮಾಜದ ದಾರಿ ತಪ್ಪಿಸುವ ನಡೆ ಆತಂಕಕಾರಿ: ಮಾಜಿ ಸಚಿವ ಕಿಮ್ಮನೆ ರತ್ನಾಕರ್
‘ಕರಾವಳಿ ಚರಿತ್ರೆಯಲ್ಲಿ ಹೈದರ್ ಅಲಿ ಮತ್ತು ಟಿಪ್ಪು ಸುಲ್ತಾನ್’ ಕೃತಿ ಬಿಡುಗಡೆ
ಇಂಧನ ಪರಿವರ್ತನೆಗೆ ಸಂಘಟಿತ ಪ್ರಯತ್ನಗಳು ಅನಿವಾರ್ಯ: ಸಚಿವ ಕೆ.ಜೆ.ಜಾರ್ಜ್
‘ಸುಸ್ಥಿರ ಇಂಧನ, ಭಾರತದ ಕಾರ್ಯಸೂಚಿ-2047 ಅಂತಾರಾಷ್ಟ್ರೀಯ ಸಮ್ಮೇಳನ ಯಶಸ್ವಿ’
ಕೇಂದ್ರ ಸರಕಾರದ ನೀತಿಯ ವಿರುದ್ಧ ಜನಂದೋಲನಕ್ಕೆ ಕಾರ್ಯಕರ್ತರು ಸಜ್ಜಾಗಬೇಕು: ಮಿಥುನ್ ರೈ
ಮುಲ್ಕಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ಮಾಸಿಕ ಸಭೆ
ಪಶ್ಚಿಮ ಬಂಗಾಳ ಚುನಾವಣಾ ಪ್ರಚಾರದ ನಡುವೆ ರಸ್ತೆ ಬದಿ ಮಂಡಕ್ಕಿ ಸವಿದ ಮೋದಿ; ವೈರಲ್ ಆಗಿದೆ ವಿಡಿಯೋ
ಪಶ್ಚಿಮ ಬಂಗಾಳದ 2026ರ ವಿಧಾನಸಭಾ ಚುನಾವಣೆ ಪ್ರಚಾರದ ವೇಳೆ ಪ್ರಧಾನಿ ಮೋದಿ ಅವರು ಜಾರ್ಗ್ರಾಮ್ನಲ್ಲಿ ರಸ್ತೆ ಬದಿಯ ಅಂಗಡಿಯೊಂದರಲ್ಲಿ 'ಜಾಲ್ಮುರಿ' ಸವಿಯುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಭದ್ರತಾ ಶಿಷ್ಟಾಚಾರಗಳನ್ನು ಮೀರಿ ಸಾಮಾನ್ಯರಂತೆ ವ್ಯಾಪಾರಿಯೊಂದಿಗೆ ಬೆರೆತು ತಿಂಡಿ ಸವಿದ ಅವರ ಸರಳತೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇದೇ ವೇಳೆ ಚುನಾವಣಾ ರ್ಯಾಲಿಗಳಲ್ಲಿ ಟಿಎಂಸಿ ಸರ್ಕಾರದ ವಿರುದ್ಧ ಭ್ರಷ್ಟಾಚಾರದ ಆರೋಪ ಹೊರಿಸಿದ ಅವರು ತೀಕ್ಷ್ಣ ವಾಗ್ದಾಳಿ ನಡೆಸಿದರು. ಬಂಗಾಳದಲ್ಲಿ ಏಪ್ರಿಲ್ 23 ಮತ್ತು 29 ರಂದು ಮತದಾನ ನಡೆಯಲಿದ್ದು, ಮೇ 4ಕ್ಕೆ ಫಲಿತಾಂಶ ಪ್ರಕಟವಾಗಲಿದೆ.
ಸಿ.ಜಿ.ಲಕ್ಷ್ಮೀಪತಿ ನಿವೃತ್ತರಾದ ಮೇಲೆ ರಾಜಕೀಯ ಪಕ್ಷ ಕಟ್ಟಲಿ: ಕೋಟಿಗಾನಹಳ್ಳಿ ರಾಮಯ್ಯ
‘ಕ್ಯಾಸ್ಟ್ ಪಾಲಿಟಿಕ್ಸ್’ ಕೃತಿ ಲೋಕಾರ್ಪಣೆ
ಶಾಂತಿ ಒಪ್ಪಂದ ಒಪ್ಪಿಕೊಳ್ಳಲು ಇರಾನ್ ಗೆ ಇದು ಕೊನೆಯ ಅವಕಾಶ: ಟ್ರಂಪ್ ಎಚ್ಚರಿಕೆ
“ಇರಾನ್ ಜೊತೆ ಎರಡನೇ ಸುತ್ತಿನ ಮಾತುಕತೆಗೆ ಅಮೆರಿಕದ ತಂಡ ಸೋಮವಾರ ಪಾಕಿಸ್ತಾನಕ್ಕೆ”
ಪ್ರೇರಣಾ ಶಾಲೆಯ ಶತಮಾನೋತ್ಸವ| ವಿದ್ಯಾಥಿ೯ಗಳು ಪ್ರಶ್ನಿಸುವ ಗುಣಗಳನ್ನು ಬೆಳೆಸಿಕೊಳ್ಳಿ: ರಾಜ್ಯಪಾಲ ಅಬ್ದುಲ್ ನಝೀರ್
ಮೂಡುಬಿದಿರೆ: ವಿದ್ಯೆ ಮನುಷ್ಯನ ಅತ್ಯುತ್ತಮ ಆಭರಣ, ಇದನ್ನು ಯಾರೂ ಕದಿಯಲಾರರು. ತಪ್ಪುಗಳು ನಿಮ್ಮ ಭವಿಷ್ಯವನ್ನು ನಿಧ೯ರಿಸುವುದಿಲ್ಲ ಆದ್ದರಿಂದ ನಿಮ್ಮಲ್ಲಿ ಮೂಡುವ ಸಂಶಯಗಳನ್ನು ಅಡಗಿಸಿಡುವ ಬದಲು ಪ್ರಶ್ನಿಸುವ ಗುಣವನ್ನು ಬೆಳೆಸಿಕೊಳ್ಳಿ ಎಂದು ಶಾಲೆಯ ಹಳೆಯ ವಿದ್ಯಾರ್ಥಿ, ಆಂಧ್ರಪ್ರದೇಶದ ರಾಜ್ಯಪಾಲ ಜಸ್ಟಿಸ್ ಅಬ್ದುಲ್ ನಜೀರ್ ವಿದ್ಯಾಥಿ೯ಗಳಿಗೆ ಕರೆಕೊಟ್ಟರು. ಅವರು ಸೇವಾಂಜಲಿ ಎಜ್ಯುಕೇಶನ್ ಟ್ರಸ್ಟ್ ನಡೆಸುತ್ತಿರುವ ವಿದ್ಯಾಭಾರತಿ ಸಂಯೋಜಿತ ಪ್ರೇರಣಾ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಶತಮಾನೋತ್ಸವ ಸಂಭ್ರಮ ಕಾಯ೯ಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಶಿಕ್ಷಣ ಎಲ್ಲಾ ಶಿಕ್ಷಕರ ಶಿಕ್ಷಕ. ಆದ್ದರಿಂದ ತಪ್ಪು ಮಾಡುವ ಬಗ್ಗೆ ಭಯಪಡಬೇಡಿ ಕಲಿಕೆ, ಅಭ್ಯಾಸ ಮತ್ತು ತಾಳ್ಮೆಯ ಮೂಲಕ ಬೆಳೆಯಿರಿ ನಾವು ಪ್ರಗತಿಯ ಬಗ್ಗೆ ಗಮನಕೊಡಬೇಕು ಹೊರತು ಪರಿಪೂಣ೯ತೆಯ ಬಗ್ಗೆ ಅಲ್ಲ ಎಂದ ಅವರು ದಾನಿಗಳ ಸಹಕಾರದಿಂದ ಆಥಿ೯ಕವಾಗಿ ಹಿಂದುಳಿದಿರುವ ವಿದ್ಯಾಥಿ೯ಗಳಿಗೆ ಶಿಕ್ಷಣ ನೀಡುತ್ತಿರುವ ಬಗ್ಗೆ ಹಾಗೂ ಸಂಸ್ಥೆಯ ಅಭಿವೃದ್ಧಿಯ ಬಗ್ಗೆ ಪ್ರಶಂಸೆ ವ್ಯಕ್ತ ಪಡಿಸಿದರು. ಕ್ಷೇತ್ರದ ಶಾಸಕ ಉಮಾನಾಥ ಎ. ಕೋಟ್ಯಾನ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ಸಂಸ್ಥೆಯು ನೂರರ ಸಂಭ್ರಮಾಚರಣೆ ನಡೆಯುತ್ತಿದ್ದರೂ ಆಥಿ೯ಕವಾಗಿ ನಿತ್ರಣದಲ್ಲಿದೆ. ಮಕ್ಕಳಿಗೆ ಸಂಸ್ಕಾರ ನೀಡಲು ಶಿಕ್ಷಣ ಸಂಸ್ಥೆಯನ್ನು ತೆರೆಯಲಾಗಿದೆ. ಸಮಾಜದ ಜನರಿಗೆ ಸಂಸ್ಕಾರ ನೀಡುವ ಉದ್ದೇಶದಿಂದ ಕಾಯಾ೯ಲಯವನ್ನು ತೆರೆಯಲು ಉದ್ದೇಶಿಸಲಾಗಿದ್ದು ಇದಕ್ಕೆ ಎಲ್ಲರ ಸಹಕಾರ ಅಗತ್ಯವಿದೆ ಎಂದರು. ಆರ್ಎಸ್ಎಸ್ನ ಪ್ರಾಂತಸಹಕಾರ್ಯವಾಹ ಪ್ರಕಾಶ್ ಪಿ. ಎಸ್ ಶುಭಾಸಂಸನೆಗೈದು ಜೀವನದ ಸವ೯ತೋಮುಖ ಬೆಳವಣಿಗೆಗೆ ಶಿಕ್ಷಣ ಮುಖ್ಯ. ದೇಶ ಸೇವೆ, ಸಮಾಜ ಸೇವೆ ಮತ್ತು ತಮ್ಮ ಏಳಿಗೆಗೆ ಸಮಸ್ಥಿತವಾದ ಚಿಂತನೆಯನ್ನು ಮಾಡಲು ಶಿಕ್ಷಣ ನೀಡಬೇಕಾದುದು ಸಮಾಜದ ಕತ೯ವ್ಯ. ಈ ನಿಟ್ಟಿನಲ್ಲಿ ಪ್ರೇರಣಾ ಸಂಸ್ಥೆ ಶಿಕ್ಷಣ ನೀಡುತ್ತಿದೆ ಎಂದರು. ಶಾಲಾ ಸಂಚಾಲಕ ಶಾಂತಾರಾಮ ಕುಡ್ವ ಅಧ್ಯಕ್ಷತೆ ವಹಿಸಲಿದ್ದರು. ಸನ್ಮಾನ : ಶಾಲೆಯ ಹಳೆಯ ವಿದ್ಯಾರ್ಥಿ, ಆಂಧ್ರಪ್ರದೇಶದ ರಾಜ್ಯಪಾಲ ಜಸ್ಟಿಸ್ ಅಬ್ದುಲ್ ನಜೀರ್ ಅವರನ್ನು, ಉದ್ಯಮ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಎಂಆರ್ಜಿ ಗ್ರೂಫ್ನ ಡಾ. ಪ್ರಕಾಶ್ ಶೆಟ್ಟಿ, ಉದ್ಯಮಿ, ಶಂಕರ್ ಎಲೆಕ್ಟ್ರಿಕಲ್ಸ್ ಕಂ ಪ್ರೈವೇಟ್ ಲಿ. ನ ರಾಜೇಶ್ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ಗೌರವ : ಶಾಲಾ ಸಂಸ್ಥಾಪಕರ ಪರವಾಗಿ ಮೇರಿ ಡಿ'ಸೋಜ, ನಿವೃತ್ತ ಮುಖ್ಯ ಶಿಕ್ಷಕರಾದ ಆಂಡ್ರೂ ಸೆರಾವೋ, ಜಯರಾಜ್ ಜೈನ್, ಜಯರಾಮ್ ರಾವ್ ಅವರನ್ನು ಗೌರವಿಸಲಾಯಿತು. ಸಾಧಕರಿಗೆ ಸನ್ಮಾನ : ರಾಷ್ಟ್ರೀಯ ಕ್ರೀಡಾಪಟು ಪ್ರೀತಿ, ಭಗವದ್ಗೀತೆ ಕಂಠಪಾಠದಲ್ಲಿ ರಾಜ್ಯಮಟ್ಟದಲ್ಲಿ ಸ್ಪಧಿ೯ಸಿರುವ ಪ್ರಧಾನ್ ಆರ್. ಭಂಡಾರಿ ಮತ್ತು ಮನಸ್ವಿ ಶಮ೯ ಅವರನ್ನು ಸನ್ಮಾನಿಸಲಾಯಿತು. ದಾನಿಗಳಿಗೆ ಸನ್ಮಾನ : ಉದ್ಯಮಿ, ಶ್ರೀ ವೆಂಕಟರಮಣ ಹನುಮಂತ ದೇವಳದ ಆಡಳಿತ ಮೊಕ್ತೇಸರ ಉಮೇಶ್ ಪೈ ಮತ್ತು ಗೀತಾ ವಿಜಯ ಕಾಮತ್ ಅವರನ್ನು ಸನ್ಮಾನಿಸಲಾಯಿತು. ಉಪಾಧ್ಯಕ್ಷ ಸೋಮನಾಥ ಕೋಟ್ಯಾನ್, ಕಾರ್ಯದರ್ಶಿ ಕೇಶವ ಹೆಗ್ಡೆ, ಕೋಶಾಧಿಕಾರಿ ಎಸ್ ಎನ್ ಬೋರ್ಕರ್ ಮತ್ತಿತರರು ಈ ಸಂದಭ೯ದಲ್ಲಿದ್ದರು. ಟ್ರಸ್ಟ್ ನ ಅಧ್ಯಕ್ಷ ರಾಜೇಶ್ ಎಂ. ಬಂಗೇರಾ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ರೋಹನ್ ಅತಿಕಾರಬೆಟ್ಟು ಕಾಯ೯ಕ್ರಮ ನಿರೂಪಿಸಿದರು.ಶಿಕ್ಷಕಿ ವತ್ಸಲಾ ರಾಜೇಶ್ ವಂದಿಸಿದರು.
ಉತ್ತಮ ಬದುಕಿಗೆ ಶಿಕ್ಷಣವೇ ಅಡಿಪಾಯ: ಸ್ಪೀಕರ್ ಯು.ಟಿ. ಖಾದರ್
ಶ್ರೀ ಮಹಾವೀರ ಕಾಲೇಜಿನ ವಜ್ರಮಹೋತ್ಸವ ಸಂಭ್ರಮಾಚರಣೆ
ಮಧ್ಯಪ್ರಾಚ್ಯ ಸಂಘರ್ಷ | ಇಸ್ರೇಲ್–ಲೆಬನಾನ್ ಕದನ ವಿರಾಮವು ಭರವಸೆ ಮೂಡಿಸಿದೆ: ಪೋಪ್ ಲಿಯೋ
ಲುವಾಂಡಾ, ಎ. 19: ಇಸ್ರೇಲ್ ಮತ್ತು ಲೆಬನಾನ್ ನಡುವಿನ ಕದನ ವಿರಾಮವು ಭರವಸೆ ಮೂಡಿಸಿದೆ ಎಂದು ಪೋಪ್ ಲಿಯೋ ಹೇಳಿದ್ದಾರೆ. ಅಂಗೋಲಾದ ರಾಜಧಾನಿ ಲುವಾಂಡಾದ ಹೊರವಲಯದಲ್ಲಿ ನಡೆದ ಬೃಹತ್ ಧಾರ್ಮಿಕ ಸಮಾರಂಭದ ನಂತರ ಅವರು ಈ ಹೇಳಿಕೆ ನೀಡಿದ್ದಾರೆ. ಈ ಸಮಾರಂಭದಲ್ಲಿ ಸುಮಾರು ಒಂದು ಲಕ್ಷಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು. ಗುರುವಾರದಿಂದ ಜಾರಿಗೆ ಬಂದಿರುವ 10 ದಿನಗಳ ಕದನ ವಿರಾಮವು ಪ್ರದೇಶದಲ್ಲಿ ಶಾಂತಿಯತ್ತ ಒಂದು ಮಹತ್ವದ ಹೆಜ್ಜೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಇದಕ್ಕೂ ಮುನ್ನ ಕಳೆದ ವಾರ ಪೋಪ್ ಲಿಯೋ ವಿಶ್ವ ನಾಯಕರಿಗೆ ಯುದ್ಧವನ್ನು ಭಿನ್ನಾಭಿಪ್ರಾಯಗಳನ್ನು ಪರಿಹರಿಸುವ ಸಾಧನವಾಗಿ ಬಳಸಬಾರದು ಎಂದು ಕರೆ ನೀಡಿದ್ದರು. ಜಾಗತಿಕ ಮಟ್ಟದಲ್ಲಿ ಶಾಂತಿಗೆ ಬದ್ಧತೆಯನ್ನು ತೋರಿಸುವ ಅಗತ್ಯವಿದೆ ಎಂದು ಅವರು ಆಗ್ರಹಿಸಿದ್ದರು.
Arunachal Pradesh | ಸಿಘಾಟ್ ನಗರವನ್ನು ಚೀನಾ ಪ್ರಾಂತ್ಯ ಎಂದು ತೋರಿಸಿದ ಜನಗಣತಿ ಪೋರ್ಟಲ್!
ಹೊಸದಿಲ್ಲಿ: ಜನಗಣತಿಯ ಪೋರ್ಟಲ್ ಅರುಣಾಚಲ ಪ್ರದೇಶದ ಪಸಿಘಾಟ್ ನಗರವನ್ನು ಚೀನಾದ ಮೆಡೋಗ್ ಪ್ರಾಂತ್ಯ ಎಂದು ತೋರಿಸುತ್ತಿದೆ ಎಂದು ಸ್ಥಳೀಯರೊಬ್ಬರು ಗಂಭೀರ ಲೋಪದತ್ತ ಗಮನ ಸೆಳೆದ ಬಳಿಕ, ಅಧಿಕಾರಿಗಳು ನಕ್ಷೆಯನ್ನು ಸರಿಪಡಿಸಿರುವ ಘಟನೆ ನಡೆದಿದೆ. ಈ ಘಟನೆ ಮುಂಬರುವ ಡಿಜಿಟಲ್ ಜನಗಣತಿಗೆ ಎದುರಾಗಲಿರುವ ಸವಾಲನ್ನು ಎತ್ತಿ ತೋರಿಸುತ್ತಿದೆ. ಪಸಿಘಾಟ್ ನಿವಾಸಿಯಾದ ನಿವೃತ್ತ ಕ್ಯಾಪ್ಟನ್ ಮೊಹೊಂತೊ ಪ್ಯಾಂಗಿಂಗ್ ಅವರು ಜನಗಣತಿಯ ಅಧಿಕೃತ ಪೋರ್ಟಲ್ ನಲ್ಲಿ ತಮ್ಮ ಹೆಸರು ನೋಂದಾಯಿಸಲು ಪ್ರಯತ್ನಿಸಿದಾಗ ಈ ತಾಂತ್ರಿಕ ಸಮಸ್ಯೆ ಬೆಳಕಿಗೆ ಬಂದಿದೆ. ಈ ಜಾಲತಾಣದ ಇಂಟರ್ ಫೇಸ್ ಪೂರ್ವ ಸಿಯಾಂಗ್ ಜಿಲ್ಲೆಯಲ್ಲಿರುವ ಅವರ ನಗರವನ್ನು ಚೀನಾ ಗಡಿಯಲ್ಲಿರುವ ಮೆಡೋಗ್ ಎಂದು ತಪ್ಪಾಗಿ ತೋರಿಸಿದೆ. ಈ ಲೋಪವನ್ನು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದ ಪ್ಯಾಂಗಿಂಗ್, “ಮೆಡೋಗ್ ಚೀನಾದಲ್ಲಿನ ಒಂದು ಪಟ್ಟಣವಾಗಿದೆ. ಗೂಗಲ್ ನ ಸಿಇಒ ಸುಂದರ್ ಪಿಚ್ಚೈ ಭಾರತೀಯರಾಗಿದ್ದಾರೆ! ಸರ್ಕಾರದ ಅಧಿಕೃತ ಪೋರ್ಟಲ್ ಗಳೂ ಕೂಡ ನಮ್ಮ ಪ್ರಾಂತ್ಯವನ್ನು ತಪ್ಪಾಗಿ ತೋರಿಸುತ್ತಿವೆ! ಈ ಬಗ್ಗೆ ಕ್ಷಿಪ್ರ ಕ್ರಮದ ಅಗತ್ಯವಿದೆ” ಎಂದು ಆಗ್ರಹಿಸಿದ್ದರು. ಇದರ ಬೆನ್ನಿಗೇ, ಜನಗಣತಿ ಪೋರ್ಟಲ್ ನಲ್ಲಿ ಕಂಡು ಬಂದಿದ್ದ ಲೋಪವನ್ನು ಅಧಿಕಾರಿಗಳು ಸರಿಪಡಿಸಿದ್ದಾರೆ.
Bidar | ಬಹುಜನರು ಆಳುವ ವರ್ಗವಾಗಬೇಕು ಎನ್ನುವುದೇ ಅಂಬೇಡ್ಕರ್ ಅವರ ಆಶಯವಾಗಿತ್ತು : ಮಹೇಶ್ ಗೋರನಾಳಕರ್
ಬೀದರ್: ಬಹುಜನರು ರಾಜಕೀಯವಾಗಿ ಸಬಲಗೊಂಡು ಆಳುವ ವರ್ಗವಾಗಬೇಕು ಎನ್ನುವುದೇ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಆಶಯವಾಗಿತ್ತು ಎಂದು ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ (ಅಂಬೇಡ್ಕರ್) ರಾಜ್ಯ ಸಂಯೋಜಕ ಮಹೇಶ್ ಗೋರನಾಳಕರ್ ಹೇಳಿದರು. ಭಾಲ್ಕಿ ತಾಲೂಕಿನ ಕಪಲಾಪೂರ್ (ಕೆ) ಗ್ರಾಮದಲ್ಲಿ ಶನಿವಾರ ನಡೆದ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ 135ನೇ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅಂಬೇಡ್ಕರ್ ಅವರ ಕನಸು ನನಸಾಗಬೇಕಾದರೆ ಬಹುಜನರು ರಾಜಕೀಯ ಅಧಿಕಾರ ಪಡೆದು ಆಡಳಿತದಲ್ಲಿ ಪಾಲ್ಗೊಳ್ಳಬೇಕು ಎಂದು ತಿಳಿಸಿದರು. ಜಯಂತಿ ಆಚರಣೆಗಳು ಕೇವಲ ಡಿಜೆ ಕಾರ್ಯಕ್ರಮಗಳಿಗೆ ಸೀಮಿತವಾಗಬಾರದು. ಅಂಬೇಡ್ಕರ್ ಅವರ ಆಶಯದಂತೆ ಧಾರ್ಮಿಕ, ರಾಜಕೀಯ, ಶೈಕ್ಷಣಿಕ ಹಾಗೂ ಆರ್ಥಿಕ ಅಭಿವೃದ್ಧಿಗೆ ಒತ್ತು ನೀಡಿದಾಗ ಮಾತ್ರ ಅವರ ಕನಸು ಸಾಕಾರವಾಗುತ್ತದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಭೀಮ್ ಆರ್ಮಿ ಜಿಲ್ಲಾ ಉಪಾಧ್ಯಕ್ಷ ಗೌತಮ್ ಬಗದಲ್ಕರ್, ದಸಂಸ ಹುಲಸೂರ ತಾಲೂಕಾಧ್ಯಕ್ಷ ದೇವಾನಂದ್ ತೊಳೆ, ಗ್ರಾಮ ಕ್ರಾಂತಿ ಸೇನೆಯ ರಾಜ್ಯಾಧ್ಯಕ್ಷ ಸಂದೀಪ್ ಮುಕಿಂದೆ, ಅಂಬೇಡ್ಕರ್ ಸೇವಾ ಸಮಿತಿಯ ಜಿಲ್ಲಾಧ್ಯಕ್ಷ ಲೋಕೇಶ್ ಕಾಂಬ್ಳೆ, ವೈಡಿಎಸ್ಎಸ್ ಸಂಘಟನೆಯ ಸಂಸ್ಥಾಪಕ ಪ್ರದೀಪ್ ಭಾವಿಕಟ್ಟಿ, ಭೀಮ್ ಆರ್ಮಿ ತಾಲೂಕಾಧ್ಯಕ್ಷ ಸಿದ್ದಾರ್ಥ ಪ್ಯಾಗೆ, ಸುವಾಸ್ ಶಿಂಧೆ, ಸುರೇಶ್ ಭಾವಿಕಟ್ಟಿ, ಅಜಯ್ ಮದಾಳೆ, ಲಖನ್ ಸಿಂಗಾರೆ, ಸಿದ್ಧಾರ್ಥ್ ಬೇಂದ್ರೆ, ರವಿ ಕಾಂಬ್ಳೆ, ಆಕಾಶ್ ಕಾಂಬ್ಳೆ ಹಾಗೂ ವಿಕಾಸ್ ಕಾಂಬ್ಳೆ ಸೇರಿದಂತೆ ಗ್ರಾಮಸ್ಥರು ಭಾಗವಹಿಸಿದರು.
ಬೀದರ್ ಜಿಲ್ಲೆಯಲ್ಲಿ ಗುಡುಗು ಸಹಿತ ಭಾರೀ ಮಳೆ
ಬೀದರ್: ಜಿಲ್ಲೆಯ ವಿವಿಧೆಡೆ ರವಿವಾರ ಸಾಯಂಕಾಲ ಗುಡುಗು, ಗಾಳಿ ಸಹಿತ ಭಾರೀ ಮಳೆಯಾಗಿದ್ದು, ಉಷ್ಣತೆಯಿಂದ ಕಾದಿದ್ದ ಭೂಮಿ ತಂಪಾಗಿದೆ. ದಿನಪೂರ್ತಿ ತೀವ್ರ ಬಿಸಿಲಿನಿಂದ ಬೇಸತ್ತಿದ್ದ ಜನರಿಗೆ ಮಳೆ ತಂಪೆರಗಿದೆ. ಮುಂಜಾನೆಯಿಂದಲೇ ಸುಮಾರು 40 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿತ್ತು. ಮಧ್ಯಾಹ್ನ ಬಳಿಕ ಮೋಡ ಕವಿದ ವಾತಾವರಣ ನಿರ್ಮಾಣವಾಗಿ, ಸಂಜೆ ವೇಳೆ ಮಳೆ ಆರಂಭವಾಯಿತು. ಬೀದರ್ ನಗರದಲ್ಲಿ ತುಸು ಮಳೆಯಾದರೆ, ಹುಲಸೂರ್ ತಾಲೂಕಿನ ಸೋಲದಾಬಕಾ, ಹಾಲಹಳ್ಳಿ, ತೋಗಲೂರ್, ಕೇಸರ ಜವಳಗಾ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಜೋರಾಗಿ ಮಳೆಯಾಯಿತು. ಬಸವಕಲ್ಯಾಣ ನಗರದಲ್ಲಿಯೂ ಸಾಧಾರಣ ಮಳೆಯಾಗಿದೆ. ಹುಮನಾಬಾದ್ ಪಟ್ಟಣದಲ್ಲಿ ಗುಡುಗು-ಗಾಳಿ ಸಹಿತ ಭಾರೀ ಮಳೆಯಾಗಿದ್ದು, ಕೆಲ ಮನೆಗಳಿಗೆ ಹಾನಿಯಾಗಿರುವ ಮಾಹಿತಿ ಲಭ್ಯವಾಗಿದೆ. ತಾಲೂಕಿನ ಮೊಳಕೇರಾ ಸೇರಿದಂತೆ ಹಲವು ಗ್ರಾಮಗಳಲ್ಲಿ ಸಹ ಮಳೆಯಾಗಿದೆ. ಈ ಮಳೆಯಿಂದ ಜನರಿಗೆ ತಾತ್ಕಾಲಿಕ ನೆಮ್ಮದಿ ದೊರೆತಿದ್ದರೂ, ಮಾವಿನ ಬೆಳೆಗಳಿಗೆ ಹಾನಿಯಾಗುವ ಭೀತಿಯಿಂದ ರೈತರು ಆತಂಕ ವ್ಯಕ್ತಪಡಿಸಿದ್ದಾರೆ.
ಇಸ್ರೇಲ್ ಜೊತೆಗಿನ ಒಪ್ಪಂದ ರದ್ದುಪಡಿಸಲು EU ಗೆ ಸ್ಪೇನ್ ಒತ್ತಾಯ
ಮ್ಯಾಡ್ರಿಡ್: ಇಸ್ರೇಲ್ ಅಂತರರಾಷ್ಟ್ರೀಯ ಕಾನೂನನ್ನು ಉಲ್ಲಂಘಿಸುತ್ತಿರುವ ಹಿನ್ನೆಲೆಯಲ್ಲಿ, ಇಸ್ರೇಲ್ ಜೊತೆಗಿನ ಸಂಬಂಧ ಒಪ್ಪಂದವನ್ನು ಕೊನೆಗೊಳಿಸುವಂತೆ ಯುರೋಪಿಯನ್ ಒಕ್ಕೂಟ (EU)ವನ್ನು ಸ್ಪೇನ್ ಒತ್ತಾಯಿಸಿದೆ ಎಂದು aljazeera ವರದಿ ಮಾಡಿದೆ. ಆಂಡಲೂಸಿಯಾದಲ್ಲಿ ನಡೆದ ರಾಜಕೀಯ ರ್ಯಾ ಲಿಯಲ್ಲಿ ಮಾತನಾಡಿದ ಸ್ಪೇನ್ ಪ್ರಧಾನಮಂತ್ರಿ ಪೆಡ್ರೊ ಸ್ಯಾಂಚೆಜ್, “ಮಂಗಳವಾರ ಸ್ಪೇನ್ ಸರ್ಕಾರವು ಇಸ್ರೇಲ್ ಜೊತೆಗಿನ ಸಂಬಂಧ ಒಪ್ಪಂದವನ್ನು ಮುರಿಯುವಂತೆ ಯುರೋಪಿಯನ್ ಒಕ್ಕೂಟಕ್ಕೆ ಪ್ರಸ್ತಾವನೆ ಸಲ್ಲಿಸಲಿದೆ” ಎಂದು ತಿಳಿಸಿದ್ದಾರೆ. ಇಸ್ರೇಲ್ ಅಂತರರಾಷ್ಟ್ರೀಯ ಕಾನೂನನ್ನು ಉಲ್ಲಂಘಿಸುತ್ತಿದ್ದು, “ಅಂತಹ ದೇಶವು ಯುರೋಪಿಯನ್ ಒಕ್ಕೂಟದ ಪಾಲುದಾರನಾಗಲು ಸಾಧ್ಯವಿಲ್ಲ... ಅದು ಅಷ್ಟು ಸರಳವಾಗಿದೆ” ಎಂದು ಅವರು ಹೇಳಿದ್ದಾರೆ. ಲೆಬನಾನ್ ಮೇಲಿನ ದಾಳಿಗಳನ್ನೂ ಸ್ಯಾಂಚೆಜ್ ಟೀಕಿಸಿದ್ದಾರೆ. ಇದಕ್ಕೂ ಮೊದಲು, ಸ್ಪೇನ್, ಐರ್ಲೆಂಡ್ ಮತ್ತು ಸ್ಲೊವೇನಿಯಾ ದೇಶಗಳು ಯುರೋಪಿಯನ್ ಆಯೋಗಕ್ಕೆ ಪತ್ರ ಬರೆದು, ಇಸ್ರೇಲ್ ಜೊತೆಗಿನ ಒಪ್ಪಂದವನ್ನು ಮುಂದಿನ ವಿದೇಶಾಂಗ ಮಂತ್ರಿಗಳ ಸಭೆಯಲ್ಲಿ ಚರ್ಚಿಸಲು ಒತ್ತಾಯಿಸಿವೆ. ಜೂನ್ 2000ರಲ್ಲಿ ಯುರೋಪಿಯನ್ ಒಕ್ಕೂಟ ಮತ್ತು ಇಸ್ರೇಲ್ ನಡುವಿನ ಸಂಬಂಧ ಒಪ್ಪಂದದಲ್ಲಿ ಮಾನವ ಹಕ್ಕುಗಳಿಗೆ ಗೌರವ ನೀಡುವ ಷರತ್ತು ಸೇರಿಸಲಾಗಿದೆ. ಗಾಝಾ ಮೇಲೆ ಇಸ್ರೇಲ್ ನಡೆಸಿದ ಯುದ್ಧದ ನಡುವೆಯೇ, ಸ್ಪೇನ್ ಮತ್ತು ಐರ್ಲೆಂಡ್ ದೇಶಗಳು 2024ರಲ್ಲಿ ಈ ಒಪ್ಪಂದದ ಮರುಪರಿಶೀಲನೆಗೆ ಮೊದಲ ಬಾರಿಗೆ ಕರೆ ನೀಡಿದ್ದವು. 2024ರಲ್ಲಿ ಸ್ಪೇನ್ ದೇಶವು ಫೆಲೆಸ್ತೀನ್ ರಾಷ್ಟ್ರಕ್ಕೆ ಮಾನ್ಯತೆ ನೀಡಿದ ಕ್ರಮಕ್ಕೆ ಇಸ್ರೇಲ್ ಅಸಮಾಧಾನ ವ್ಯಕ್ತಪಡಿಸಿತ್ತು. ಅದರ ನಂತರದಿಂದ ಸ್ಯಾಂಚೆಜ್, ಇಸ್ರೇಲ್ ಪ್ರಧಾನಮಂತ್ರಿ ಬೆಂಜಮಿನ್ ನೆತನ್ಯಾಹು ನೇತೃತ್ವದ ಸರ್ಕಾರದ ವಿರುದ್ಧ ತಮ್ಮ ಟೀಕೆಗಳನ್ನು ಮುಂದುವರೆಸಿದ್ದಾರೆ.
ಕುಂದಾಪುರ| ಅತ್ತಿಕೋಣೆಯಲ್ಲಿ ಕುಡಿಯುವ ನೀರಿಗೆ ತತ್ವಾರ; ಒಂದು ಕೊಡಪಾನ ನೀರು ತರಲು ದೋಣಿ ಅವಲಂಬನೆ
► 75 ಮನೆಗಳ 200ಕ್ಕೂ ಅಧಿಕ ನಿವಾಸಿಗಳಿಗೆ ಜೀವಜಲ ಸಮಸ್ಯೆ
TET 2026 | ಭೋಪಾಲ್ ನಲ್ಲಿ ಶಿಕ್ಷಕರ ಪ್ರತಿಭಟನೆ: ಪರೀಕ್ಷೆ ರದ್ದತಿಗೆ ಆಗ್ರಹ
ಭೋಪಾಲ್: ಶಿಕ್ಷಕರ ಅರ್ಹತಾ ಪರೀಕ್ಷೆ (TET) ಕಡ್ಡಾಯಗೊಳಿಸಿರುವುದನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿ ಶನಿವಾರ ಮಧ್ಯಪ್ರದೇಶದ ಸಾವಿರಾರು ಶಿಕ್ಷಕರು ಭೋಪಾಲ್ ನ BHEL ಮೈದಾನದಲ್ಲಿ ಪ್ರತಿಭಟನೆ ನಡೆಸಿದರು. ಎಲ್ಲ ಸೇವಾನಿರತ ಶಿಕ್ಷಕರು ತಮ್ಮ ಸೇವೆಯಲ್ಲಿ ಮುಂದುವರಿಯಲು ಹಾಗೂ ಭಡ್ತಿ ಪಡೆಯಲು ಶಿಕ್ಷಕರ ಅರ್ಹತಾ ಪರೀಕ್ಷೆಯಲ್ಲಿ ತೇರ್ಗಡೆಯಾಗುವುದನ್ನು ಸುಪ್ರೀಂ ಕೋರ್ಟ್ ಕಡ್ಡಾಯಗೊಳಿಸಿರುವ ಹಿನ್ನೆಲೆಯಲ್ಲಿ ಈ ಪ್ರತಿಭಟನೆ ನಡೆದಿದೆ. ಈ ನಿರ್ದೇಶನದ ಪ್ರಕಾರ, ಐದು ವರ್ಷಕ್ಕಿಂತ ಹೆಚ್ಚು ಸೇವಾವಧಿ ಹೊಂದಿರುವ ಶಿಕ್ಷಕರು ಶಿಕ್ಷಕರ ಅರ್ಹತಾ ಪರೀಕ್ಷೆಯಲ್ಲಿ ಕಡ್ಡಾಯವಾಗಿ ತೇರ್ಗಡೆಯಾಗಬೇಕು. ಆದರೆ, ಐದು ವರ್ಷಕ್ಕಿಂತ ಕಡಿಮೆ ಸೇವಾವಧಿ ಹೊಂದಿರುವ ಶಿಕ್ಷಕರಿಗೆ ಪರೀಕ್ಷೆಯಲ್ಲಿ ತೇರ್ಗಡೆಯಾಗುವುದರಿಂದ ವಿನಾಯಿತಿ ನೀಡಲಾಗಿದ್ದರೂ, ಅವರಿಗೆ ಭಡ್ತಿ ನೀಡುವುದನ್ನು ನಿರ್ಬಂಧಿಸಲಾಗಿದೆ. ಈ ಆದೇಶಕ್ಕೆ ಸೇವಾನಿರತ ಶಿಕ್ಷಕರಿಂದ ವ್ಯಾಪಕ ಕಳವಳ ವ್ಯಕ್ತವಾಗಿದ್ದು, ಈಗಾಗಲೇ ಸೇವೆಯಲ್ಲಿರುವ ಶಿಕ್ಷಕರಿಗೆ ಈ ನಿಯಮ ಅನ್ವಯಿಸಬಾರದು ಎಂದು ಒತ್ತಾಯಿಸಿದ್ದಾರೆ. ಸೇವಾನಿರತ ಶಿಕ್ಷಕರಿಗೆ ಶಿಕ್ಷಕರ ಅರ್ಹತಾ ಪರೀಕ್ಷೆಯಲ್ಲಿ ಕಡ್ಡಾಯವಾಗಿ ತೇರ್ಗಡೆಯಾಗುವುದರಿಂದ ವಿನಾಯಿತಿ ನೀಡಲು ಸರ್ಕಾರ ಕ್ರಮ ಕೈಗೊಳ್ಳಬೇಕೆಂದು ಅವರು ಆಗ್ರಹಿಸಿದ್ದಾರೆ.
ವೇದಾಂತ ವಿದ್ಯುತ್ ಘಟಕ ಸ್ಫೋಟ | ಮೃತರ ಸಂಖ್ಯೆ 24ಕ್ಕೆ ಏರಿಕೆ
ರಾಯಪುರ, ಎ. 19: ಛತ್ತೀಸ್ಗಢ ದ ಶಕ್ತಿಯಲ್ಲಿರುವ ವೇದಾಂತ ವಿದ್ಯುತ್ ಘಟಕದಲ್ಲಿ ಸಂಭವಿಸಿದ ಸ್ಫೋಟದಲ್ಲಿ ಗಾಯಗೊಂಡಿದ್ದ ಮತ್ತೊಬ್ಬ ಕಾರ್ಮಿಕ ಚಿಕಿತ್ಸೆ ವೇಳೆ ಸಾವನ್ನಪ್ಪಿದ್ದಾನೆ. ಇದರೊಂದಿಗೆ ಈ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 24ಕ್ಕೆ ಏರಿಕೆಯಾಗಿದೆ. ಮೃತ ಕಾರ್ಮಿಕ ಛತ್ತೀಸ್ಗಢದ ನಿವಾಸಿ. ದುರಂತದಲ್ಲಿ ಗಾಯಗೊಂಡ ಆರು ದಿನಗಳ ಬಳಿಕ ಈತ ರಾಜಗಢ ವೈದ್ಯಕೀಯ ಕಾಲೇಜಿನಲ್ಲಿ ರವಿವಾರ ಬೆಳಗ್ಗೆ ಮೃತಪಟ್ಟಿದ್ದಾನೆ. ಇತರ 12 ಮಂದಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರಲ್ಲಿ ಮೂವರ ಸ್ಥಿತಿ ಚಿಂತಾಜನಕವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇಬ್ಬರು ಕಾರ್ಮಿಕರು ಶನಿವಾರ ಚಿಕಿತ್ಸೆಯ ವೇಳೆ ಮೃತಪಟ್ಟಿದ್ದಾರೆ. ಅವರಲ್ಲಿ ಒಬ್ಬರನ್ನು ಸುಬ್ರತಾ ಕುಮಾರ್ ಜನ ಎಂದು ಗುರುತಿಸಲಾಗಿದೆ. ಈತ ರಾಯಗಢ ವೈದ್ಯಕೀಯ ಕಾಲೇಜಿನಲ್ಲಿ ದಾಖಲಾಗಿದ್ದ. ಇನ್ನೊಬ್ಬರನ್ನು ಉಪೇಂದ್ರ ಶಾ ಎಂದು ಗುರುತಿಸಲಾಗಿದೆ. ಈತ ರಾಯಪುರದ ಕಾಲ್ಡಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ. ಜನ ಪಶ್ಚಿಮ ಬಂಗಾಳದ ಮೇಧಿನಿಪುರ ಹಾಗೂ ಶಾ ಜಾರ್ಖಂಡ್ನ ಗರವಾ ನಿವಾಸಿಗಳು. ಘಟನೆಯಲ್ಲಿ ಇಬ್ಬರಿಗೂ ಸುಮಾರು ಶೇ. 90ರಷ್ಟು ಗಾಯಗಳಾಗಿದ್ದವು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Uttar Pradesh | ಕಾನ್ಪುರದಲ್ಲಿ ಅವಳಿ ಪುತ್ರಿಯರ ಕತ್ತು ಕೊಯ್ದು ಹತ್ಯೆಗೈದ ತಂದೆ
ಲಕ್ನೋ, ಎ. 19: ನೌಬಸ್ತಾ ಪೊಲೀಸ್ ಠಾಣಾ ವ್ಯಾಪ್ತಿಯ ಕಿದ್ವಾಯಿ ನಗರದಲ್ಲಿರುವ ತ್ರಿಮೂರ್ತಿ ಅಪಾರ್ಟ್ಮೆಂಟ್ನಲ್ಲಿ ವೈದ್ಯಕೀಯ ಪ್ರತಿನಿಧಿ ಶಶಿ ರಂಜನ್ ಮಿಶ್ರಾ ತನ್ನ 11 ವರ್ಷದ ಅವಳಿ ಹೆಣ್ಣು ಮಕ್ಕಳನ್ನು ಕತ್ತು ಕೊಯ್ದು ಹತ್ಯೆಗೈದಿದ್ದಾನೆ. ಆರೋಪಿ ಶಶಿ ರಂಜನ್ ಮಿಶ್ರಾ ತನ್ನ ಪತ್ನಿ ರೇಷ್ಮಾ ಕ್ಷೇತ್ರಿ ಹಾಗೂ ಮೂವರು ಮಕ್ಕಳಾದ 11 ವರ್ಷದ ಅವಳಿ ಪುತ್ರಿಯರಾದ ರಿದ್ಧಿ ಮತ್ತು ಸಿದ್ಧಿ, 6 ವರ್ಷದ ಪುತ್ರ ಗನ್ನುನೊಂದಿಗೆ ಇಲ್ಲಿ ವಾಸಿಸುತ್ತಿದ್ದರು ಎಂದು ದಕ್ಷಿಣ ಡಿಸಿಪಿ ದೀಪೇಂದ್ರ ನಾಥ್ ಚೌಧರಿ ತಿಳಿಸಿದ್ದಾರೆ. ಪೊಲೀಸರು ತುರ್ತು ಸಂಖ್ಯೆ 112ರಿಂದ ಕರೆ ಸ್ವೀಕರಿಸಿದ್ದರು. ಅವಳಿ ಮಕ್ಕಳನ್ನು ಹತ್ಯೆಗೈದ ಬಗ್ಗೆ ಸ್ವತಃ ಶಶಿ ರಂಜನ್ ಮಿಶ್ರಾ ಕರೆಯಲ್ಲಿ ಮಾಹಿತಿ ನೀಡಿದ್ದ. ಪೊಲೀಸರು ಫ್ಲ್ಯಾಟ್ ಗೆ ಧಾವಿಸಿದಾಗ ಇಬ್ಬರು ಬಾಲಕಿಯರ ಮೃತದೇಹಗಳು ನೆಲದ ಮೇಲೆ ಬಿದ್ದಿದ್ದವು. ಕೊಠಡಿ ರಕ್ತದಿಂದ ತುಂಬಿತ್ತು. ಸಮೀಪದಲ್ಲೇ ಚಾಕು ಬಿದ್ದಿತ್ತು. ಆರೋಪಿ ಮೃತದೇಹಗಳ ಪಕ್ಕದಲ್ಲೇ ಕುಳಿತಿದ್ದ. ಆತನನ್ನು ಸ್ಥಳದಲ್ಲೇ ಬಂಧಿಸಲಾಗಿದೆ. ಹತ್ಯೆಯ ಹಿಂದಿನ ಕಾರಣ ಇದುವರೆಗೆ ತಿಳಿದು ಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಮಿಶ್ರಾ ಕುಡಿದ ಮತ್ತಿನಲ್ಲಿ ತನಗೆ ದಿನನಿತ್ಯ ಹೊಡೆಯುತ್ತಿದ್ದ ಎಂದು ಪತ್ನಿ ರೇಷ್ಮಾ ಕ್ಷೇತ್ರಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆತ ಫ್ಲ್ಯಾಟ್ ನಲ್ಲಿ ಪ್ರವೇಶ ದ್ವಾರದಿಂದ ಹಿಡಿದು ಮಲಗುವ ಕೋಣೆವರೆಗೆ ಎಲ್ಲೆಡೆ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿದ್ದ ಎಂದು ಅವರು ತಿಳಿಸಿದ್ದಾರೆ. ರೇಷ್ಮಾ ಪಶ್ಚಿಮ ಬಂಗಾಳದ ಸಿಲಿಗುರಿಯ ನಿವಾಸಿ ಹಾಗೂ ಆರೋಪಿ ಶಶಿ ರಂಜನ್ ಮಿಶ್ರಾ ಬಿಹಾರದ ನಿವಾಸಿ. ಇವರು 2014ರಲ್ಲಿ ವಿವಾಹವಾಗಿದ್ದರು.
ಕಲಬುರಗಿಯಲ್ಲಿ ಬಸವ ಜಯಂತಿ ಅಂಗವಾಗಿ ಕಾರ್ ರ್ಯಾಲಿ
ಕಲಬುರಗಿ: ಬಸವ ಜಯಂತಿ ನಿಮಿತ್ತ ಬಸವ ಮಿತ್ರ ಮಂಡಲ ಹಮ್ಮಿಕೊಂಡಿದ್ದ 12ನೇ ವರ್ಷದ ಬೃಹತ್ ಕಾರ್ ರ್ಯಾಲಿ ನಗರದಲ್ಲಿ ವೈಭವದಿಂದ ಜರುಗಿತು. ಮಂಡಲದ ಜಗದೀಶ್ ದೇಶಮುಖ ಅವರ ನೇತೃತ್ವದಲ್ಲಿ ನಡೆದ ರ್ಯಾಲಿಗೆ ಶ್ರೀ ಶರಣಬಸವೇಶ್ವರ ಸಂಸ್ಥಾನದ 9ನೇ ಪೀಠಾಧಿಪತಿಗಳಾದ ಪೂಜ್ಯ ಡಾ. ದೊಡ್ಡಪ್ಪ ಅಪ್ಪ ಚಾಲನೆ ನೀಡಿ ಆಶೀರ್ವದಿಸಿದರು. ಶ್ರೀ ಶರಣಬಸವೇಶ್ವರ ದೇವಸ್ಥಾನದ ಆವರಣದಿಂದ ಆರಂಭವಾದ ಈ ಮೆರವಣಿಗೆ ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತ, ಅನ್ನಪೂರ್ಣ ಕ್ರಾಸ್ ಮೂಲಕ ಸಾಗುತ್ತಾ ಜಗತ್ ವೃತ್ತ ತಲುಪಿತು. ಬಳಿಕ ಬಸವಣ್ಣ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ರ್ಯಾಲಿ ಸಮಾಪ್ತಿಯಾಯಿತು. ಸುಮಾರು 1000ಕ್ಕೂ ಹೆಚ್ಚು ಕಾರುಗಳಲ್ಲಿ ಸಾವಿರಾರು ಬಸವ ಭಕ್ತರು ಭಾಗವಹಿಸಿ ನಗರಾದ್ಯಂತ ಬಸವಣ್ಣನವರ ಜಯಘೋಷ ಮೊಳಗಿಸಿದರು. ರ್ಯಾಲಿಯುದ್ದಕ್ಕೂ ಯುವ ಸಮೂಹದ ಉತ್ಸಾಹ ಗಮನಸೆಳೆಯಿತು. ಕಾರ್ಯಕ್ರಮದಲ್ಲಿ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ್ ಪಾಟೀಲ್, ಶಾಸಕರಾದ ಎಂ.ವೈ. ಪಾಟೀಲ್, ಡಾ. ಅಜಯ್ ಸಿಂಗ್, ದತ್ತಾತ್ರೇಯ ಪಾಟೀಲ್ ರೇವೂರ್, ಶಶೀಲ್ ನಮೋಶಿ, ಮಾಜಿ ಸಂಸದ ಡಾ. ಉಮೇಶ್ ಜಾಧವ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. ಇಷ್ಟಲಿಂಗ ಪೂಜೆ, ದೀಕ್ಷಾ ಸಮಾರಂಭ : ಬಸವ ಜಯಂತಿ ಅಂಗವಾಗಿ ಶ್ರೀ ಶರಣಬಸವೇಶ್ವರ ದೇವಸ್ಥಾನದಲ್ಲಿ ಜಿಲ್ಲಾ ಬಸವ ಜಯಂತಿ ಉತ್ಸವ ಸಮಿತಿ ವತಿಯಿಂದ ಸಾಮೂಹಿಕ ಇಷ್ಟಲಿಂಗ ಪೂಜೆ ಹಾಗೂ ದೀಕ್ಷಾ ಸಮಾರಂಭ ಭಕ್ತಿಭಾವದಿಂದ ನಡೆಯಿತು. ಇಳಕಲದ ಮಹಾಂತೇಶ್ವರ ಮಠದ ಗುರು ಮಹಾಂತ ಮಹಾಶಿವಯೋಗಿಗಳು ಹಾಗೂ ಪ್ರಭುಶ್ರೀ ಮಾತಾಜಿ ಅವರ ಮಾರ್ಗದರ್ಶನದಲ್ಲಿ ಪೂಜೆ ಕೈಂಕರ್ಯಗಳು ನಡೆದವು. ಈ ಸಂದರ್ಭದಲ್ಲಿ ಬಸವಣ್ಣ ಅವರ ಕಾಯಕ-ದಾಸೋಹ ತತ್ವಗಳು, ಸಾಮಾಜಿಕ ಸಮಾನತೆ ಮತ್ತು ಮಾನವೀಯ ಮೌಲ್ಯಗಳ ಬಗ್ಗೆ ಜಾಗೃತಿ ಮೂಡಿಸಲಾಯಿತು. ಸುಮಾರು 1000ಕ್ಕೂ ಅಧಿಕ ಭಕ್ತರು ಏಕಕಾಲದಲ್ಲಿ ಇಷ್ಟಲಿಂಗ ಪೂಜೆ ನೆರವೇರಿಸಿ ಶರಣ ಸಂಸ್ಕೃತಿಯ ಮಹತ್ವವನ್ನು ಮೆರೆದರು. ಸಮಾರಂಭದಲ್ಲಿ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ್ ಪಾಟೀಲ್, ಉತ್ಸವ ಸಮಿತಿ ಅಧ್ಯಕ್ಷ ಬಿ.ಆರ್. ಪಾಟೀಲ್, ಕಾರ್ಯಾಧ್ಯಕ್ಷ ಬಿ.ಜಿ. ಪಾಟೀಲ್ ಹಾಗೂ ಶಾಸಕ ಅಲ್ಲಮಪ್ರಭು ಪಾಟೀಲ್ ಪಾಲ್ಗೊಂಡಿದ್ದರು. ಅಲ್ಲದೆ, ಬಸವರಾಜ್ ದೇಶಮುಖ, ದೊಡ್ಡಪ್ಪಗೌಡ ಪಾಟೀಲ್ ನರಿಬೋಳ, ರವೀಂದ್ರ ಶಾಬಾದಿ, ಆರ್.ಜಿ. ಶೆಟ್ಗರ್, ಡಾ. ಭಾಗ್ಯಶ್ರೀ ಪಾಟೀಲ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ಪಶ್ಚಿಮ ಘಟ್ಟದಲ್ಲಿ ಮಾತ್ರ ಕಂಡುಬರುವ ಹತ್ತು ಪ್ರಾಣಿಗಳ ಬಗ್ಗೆ ಗೊತ್ತೇ?
ಕೆಲವು ಅಪರೂಪದ, ಅಳಿವಿನಂಚಿನಲ್ಲಿರುವ ಪ್ರಭೇದಗಳು ಪಶ್ಚಿಮ ಘಟ್ಟಗಳ ದಟ್ಟ ಅರಣ್ಯಗಳಲ್ಲಿ ಮಾತ್ರ ಕಂಡುಬರುತ್ತವೆ. ಪಶ್ಚಿಮ ಕರಾವಳಿಯುದ್ದಕ್ಕೂ ವ್ಯಾಪಿಸಿರುವ ಪಶ್ಚಿಮ ಘಟ್ಟಗಳು ವಿಶ್ವದ ಅತ್ಯಂತ ಶ್ರೀಮಂತ ಜೀವವೈವಿಧ್ಯ ತಾಣಗಳಲ್ಲಿ ಒಂದಾಗಿದೆ. ಹಿಮಾಲಯಕ್ಕಿಂತಲೂ ಹಳೆಯದಾದ ಈ ಕಾಡುಗಳು ಭೂಮಿಯ ಮೇಲೆ ಎಲ್ಲೂ ಸಿಗದ ಕೆಲವು ಪ್ರಭೇದಗಳನ್ನು ಹೊಂದಿವೆ. ಸೂರ್ಯನ ಬೆಳಕು ನೆಲಕ್ಕೆ ಬೀಳದಂತಹ ದಟ್ಟ ಕಾಡುಗಳು, ಮಂಜಿನ ಬೆಟ್ಟಗಳು ಮತ್ತು ನದಿ ಕಣಿವೆಗಳಲ್ಲಿ ಅಡಗಿರುವ ಪ್ರಾಣಿಗಳು ಅಲ್ಲಿನ ಪರಿಸರದಷ್ಟೇ ವಿಶಿಷ್ಟವಾಗಿವೆ. ಸಿಂಹ-ಬಾಲದ ಮಕಾಕ್ (Lion-tailed macaque) ಬೆಳ್ಳಿಯ ನೀಳಗಡ್ಡೆಯ ಮುಖದ ರೋಮಗಳು ಮತ್ತು ಕುಚ್ಚು ಕೂದಲಿನ ಬಾಲ ಹೊಂದಿರುವ ಈ ಪುರಾತನ ಜೀವಿ ಪಶ್ಚಿಮ ಘಟ್ಟಗಳಲ್ಲಿ ಮಾತ್ರ ಕಾಣಸಿಗುತ್ತದೆ. ಸಣ್ಣ ಗುಂಪುಗಳಲ್ಲಿ ಕಂಡುಬರುವ ಇವುಗಳು ತಮ್ಮ ಜೀವನದ ಬಹುಪಾಲನ್ನು ದಟ್ಟ ಕಾಡಿನ ಮರಗಳ ಮೇಲೆಯೇ ಕಳೆಯುತ್ತವೆ. ಅಪರೂಪಕ್ಕೆ ಮಾತ್ರ ನೆಲಕ್ಕೆ ಇಳಿಯುತ್ತವೆ. ನೀಲಗಿರಿ ತಹರ್ (Nilgiri tahr) ಎತ್ತರದ ಹುಲ್ಲುಗಾವಲುಗಳಲ್ಲಿ ಹೆಚ್ಚು ಕಂಡುಬರುವ ಈ ದೃಢ ಗೊರಸುಳ್ಳ ಪ್ರಾಣಿ ಸಾಮಾನ್ಯವಾಗಿ ಕಲ್ಲಿನ ಬಂಡೆಗಳ ಮೇಲ್ಭಾಗದಲ್ಲಿ ಕಾಣಸಿಗುತ್ತದೆ. ಒಮ್ಮೆ ಅಳಿವಿನಂಚಿನಲ್ಲಿದ್ದ ಈ ಪ್ರಾಣಿಗಳ ಸಂರಕ್ಷಣಾ ಪ್ರಯತ್ನಗಳು ಅದರ ಸಂಖ್ಯೆಯನ್ನು ಸ್ಥಿರಗೊಳಿಸಲು ಸಹಾಯ ಮಾಡಿವೆ. ಮಲಬಾರ್ ದೈತ್ಯ ಅಳಿಲು (Malabar giant squirrel) ಭಾರತೀಯ ದೈತ್ಯ ಅಳಿಲು ಎಂದೇ ಕರೆಯಲಾಗುವ ಈ ಬಹುಬಣ್ಣದ ಜೀವಿ ಮರಗಳ ಮೇಲೆ ಚುರುಕಾಗಿ ಜಿಗಿಯುತ್ತದೆ. ಬಣ್ಣಬಣ್ಣದ ಚರ್ಮವುಳ್ಳ ಈ ಅಳಿಲುಗಳು ಭಾರತದ ಅತ್ಯಂತ ಆಕರ್ಷಕ ಸಸ್ತನಿಗಳಲ್ಲಿ ಒಂದಾಗಿದೆ. ನೇರಳೆ ಕಪ್ಪೆ (Purple frog) ಭೂಮಿಯ ಅತ್ಯಂತ ವಿಚಿತ್ರ ಉಭಯಚರಗಳಲ್ಲಿ ಒಂದಾದ ಈ ನೇರಳೆ ಕಪ್ಪೆ ತನ್ನ ಜೀವನದ ಬಹುಪಾಲನ್ನು ನೆಲದಡಿಯಲ್ಲೇ ಕಳೆಯುತ್ತದೆ. ಮುಂಗಾರು ಸಮಯದಲ್ಲಿ ಸಂತಾನೋತ್ಪತ್ತಿಗಾಗಿ ಕೆಲಕಾಲ ಹೊರಗೆ ಬರುತ್ತದೆ. ಇದನ್ನು “ಲಿವಿಂಗ್ ಫಾಸಿಲ್” ಎಂದೂ ಕರೆಯಲಾಗುತ್ತದೆ. ನೀಲಗಿರಿ ಲಂಗೂರ್ (Nilgiri langur) ಹೊಳಪುಳ್ಳ ಕಪ್ಪು ಚರ್ಮ ಮತ್ತು ಚಿನ್ನದ-ಕಂದು ಬಣ್ಣದ ತಲೆಯಿಂದ ಗುರುತಿಸಬಹುದಾದ ಈ ನಾಚಿಕೆ ಸ್ವಭಾವದ ಸಸ್ತನಿ ಪ್ರಾಣಿ ಮುಖ್ಯವಾಗಿ ಎಲೆಗಳು, ಹಣ್ಣುಗಳು ಮತ್ತು ಹೂವುಗಳನ್ನು ತಿನ್ನುತ್ತದೆ. ಮಲಬಾರ್ ಸಿವೆಟ್ (Malabar civet) ಅತ್ಯಂತ ಅಪರೂಪದ ಈ ಸಸ್ತನಿ ಸಾಮಾನ್ಯವಾಗಿ ಕಾಣಿಸಿಕೊಳ್ಳುವುದಿಲ್ಲ. ಆವಾಸಸ್ಥಾನದ ನಷ್ಟದಿಂದಾಗಿ ಅಳಿವಿನಂಚಿಗೆ ತಳ್ಳಲ್ಪಟ್ಟಿದೆ. ಇದನ್ನು ಕಾಣುವುದು ಅತ್ಯಂತ ವಿರಳ. ಭಾರತೀಯ ಹಾರುವ ಹಲ್ಲಿ (Indian flying lizard) ಈ ಗಮನಾರ್ಹ ಸರೀಸೃಪವು ನಿಜವಾಗಿ ಹಾರುವುದಿಲ್ಲ. ಆದರೆ ರೆಕ್ಕೆಯಂತಿರುವ ಪೊರೆಗಳನ್ನು ಬಳಸಿಕೊಂಡು ಮರಗಳ ನಡುವೆ ಜಾರುತ್ತದೆ. ಮರದ ತೊಗಟೆಗಳ ಮೇಲೆ ಮರೆಯಾಗಿದ್ದರೆ ಕಾಣುವುದೇ ಕಷ್ಟ. ಮಲಬಾರ್ ಗ್ರೇ ಹಾರ್ನ್ಬಿಲ್ (Malabar grey hornbill) ಪಶ್ಚಿಮ ಘಟ್ಟಗಳಿಗೆ ಸ್ಥಳೀಯವಾಗಿರುವ ಈ ಹಣ್ಣು ತಿನ್ನುವ ಪಕ್ಷಿ ಬೀಜ ಪ್ರಸರಣದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ತನ್ನ ದೊಡ್ಡ ಬಾಗಿದ ಕೊಕ್ಕು ಮತ್ತು ಜೋರಾದ ಕೂಗಿನಿಂದ ಸುಲಭವಾಗಿ ಗುರುತಿಸಬಹುದು. ತಿರುವಾಂಕೂರು ಆಮೆ (Travancore tortoise) ಅರಣ್ಯದಲ್ಲಿ ವಾಸಿಸುವ ಈ ಅಪರೂಪದ ಆಮೆ ಎಲೆಗಳ ಕಸ ಮತ್ತು ದಟ್ಟ ಪೊದೆಗಳಲ್ಲಿ ಬದುಕುತ್ತದೆ. ಗಾತ್ರದ ಹೊರತಾಗಿಯೂ ಇದನ್ನು ಗುರುತಿಸುವುದು ಕಷ್ಟ. ನೀಲಗಿರಿ ಮಾರ್ಟೆನ್ (Nilgiri marten) ಭಾರತದ ಏಕೈಕ ಮಾರ್ಟೆನ್ ಪ್ರಭೇದವಾದ ಈ ಮಾಂಸಾಹಾರಿ ಪ್ರಾಣಿ ವಿರಳವಾಗಿ ಕಂಡುಬರುತ್ತದೆ. ದೇಶದಲ್ಲಿ ಅತಿ ಕಡಿಮೆ ಅಧ್ಯಯನಗೊಂಡ ಸಸ್ತನಿಗಳಲ್ಲಿ ಒಂದಾಗಿದೆ. ಕೃಪೆ: Indian Express
ಉಳ್ಳಾಲ: ಅಬ್ಬಕ್ಕ@500 ಉಪನ್ಯಾಸ ಕಾರ್ಯಕ್ರಮದ ಸಮಾರೋಪ
ಉಳ್ಳಾಲ: ಪೋರ್ಚುಗೀಸರನ್ನು ಕೆಚ್ಚೆದೆಯಿಂದ ಹಿಮ್ಮೆಟ್ಟಿಸಿದ್ದ ವೀರರಾಣಿ ಅಬ್ಬಕ್ಕಳು ಈಗಲೂ ನಮಗೆ ಅಪರಿಚಿತಲಾಗಿದ್ದು,ಇತಿಹಾಸದ ಪುಟಗಳಲ್ಲಿ ಆಕೆಗೆ ಸಿಗುವ ಸ್ಥಾನ ಮಾನ ಇನ್ನೂ ಸಿಕ್ಕಿಲ್ಲ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಖಿಲ ಭಾರತೀಯ ಸಹ ಬೌದ್ಧಿಕ್ ಪ್ರಮುಖ್ ಸುಧೀರ್ ಜಿ ವಿಷಾದ ವ್ಯಕ್ತಪಡಿಸಿದರು. ಕರ್ನಾಟಕ ರಾಜ್ಯ ಮಹಾವಿದ್ಯಾಲಯ ಶಿಕ್ಷಕ ಸಂಘ ಮಂಗಳೂರು ವಿಭಾಗ ಹಾಗೂ ನಿರ್ಮಲ ಭಾರತ್ ಚಾರಿಟೇಬಲ್ ಟ್ರಸ್ಟ್ ಮಂಗಳೂರು ಇದರ ಸಹಯೋಗದೊಂದಿಗೆ ಉಳ್ಳಾಲ ಶಾರದನಿಕೇತನ ಸಭಾಂಗಣದಲ್ಲಿ ನಡೆದ ಅಬ್ಬಕ್ಕ @500 ಪ್ರೇರಣಾದಾಯಿ ಉಪನ್ಯಾಸ ಸರಣಿ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಸಮಾರೋಪ ಭಾಷಣ ನೆರವೇರಿಸಿ ಅವರು ಮಾತನಾಡಿದರು. ಕಾರ್ಯಕ್ರಮ ಉದ್ಘಾಟಿಸಿದ ಧರ್ಮಸ್ಥಳದ ಅಬ್ಬಕ್ಕ ವಂಶಸ್ಥರಾದ ಅನಿತಾ ಸುರೇಂದ್ರ ಕುಮಾರ್ ಮಾತನಾಡಿ ಕಳೆದ ಒಂದು ವರುಷದಿಂದ ಅಬ್ಬಕ್ಕ@500 ಸರಣಿ ಕಾರ್ಯಕ್ರಮದಡಿ ಅಬ್ಬಕ್ಕಳ ನೆನಪುಗಳನ್ನ ಮೆಲುಕು ಹಾಕಿ ಅವಳ ಶೌರ್ಯ ಸಾಧನೆಯ ಬಗ್ಗೆ ಜಗತ್ತಿಗೆ ತಿಳಿಯಪಡಿಸುವ ಕಾರ್ಯವನ್ನು ನಡೆಸಿರುವುದು ಶ್ಲಾಘನೀಯ ಎಂದರು. ಇದೇ ವೇಳೆ ವೇದಿಕೆಯಲ್ಲಿ ಅಬ್ಬಕ್ಕ @500 ರ ಸಂಭ್ರಮದಲ್ಲಿ ನೆನಪಿನೈಸಿರಿ ಸಂಚಿಕೆಯನ್ನು ಲೋಕಾರ್ಪಣೆ ಮಾಡಲಾಯಿತು. ಬಂಟ್ವಾಳ ಸಂಚಯಗಿರಿ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ಸಂಸ್ಥಾಪಕ ಡಾ.ತುಕಾರಾಮ ಪೂಜಾರಿ ಮತ್ತು ಡಾ.ಆಶಾಲತಾ ಎಸ್. ಸುವರ್ಣ ದಂಪತಿಗೆ ಗೌರವ ಸಮರ್ಪಣೆ ಸಲ್ಲಿಸಲಾಯಿತು. ಕೊಲ್ಯ ನಾಟ್ಯನಿಕೇತನದ ರಾಜಶ್ರೀ ಉಳ್ಳಾಲ್ ಅವರ ಶಿಷ್ಯ ವೃಂದದಿಂದ ನೃತ್ಯ ಮೋಹನ ಹಾಗೂ ವೀರರಾಣಿ ಅಬ್ಬಕ್ಕ ಕಿರು ನೃತ್ಯ ರೂಪಕ ಪ್ರದರ್ಶನ ನಡೆಯಿತು. ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘ ಉಚ್ಚಿಲದ ಅಧ್ಯಕ್ಷರಾದ ಜಯ.ಸಿ ಕೋಟ್ಯಾನ್ ಅಧ್ಯಕ್ಷತೆ ವಹಿಸಿದ್ದರು. ವೇಣೂರು ಮಹಾಮಸ್ತಕಾಭಿಷೇಕ ಸಮಿತಿಯ ಕಾರ್ಯದರ್ಶಿ ಪ್ರವೀಣ್ ಕುಮಾರ್ ಇಂದ್ರ,ರಾಷ್ಟ್ರೀಯ ಸ್ವಯಂ ಸೇವಾ ಸಂಘ ಕರ್ನಾಟಕ ದಕ್ಷಿಣ ಪ್ರಾಂತ ಸಹ ಕಾರ್ಯವಾಹಕರಾದ ಪಿ.ಎಸ್.ಪ್ರಕಾಶ್, ಕರ್ನಾಟಕ ರಾಜ್ಯ ಮಹಾ ವಿದ್ಯಾಲಯ ಶಿಕ್ಷಕ ಸಂಘದ ರಾಜ್ಯಾಧ್ಯಕ್ಷರಾದ ಡಾ.ಗುರುನಾಥ ಬಡಿಗೇರ್,ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘದ ರಾಜ್ಯಾಧ್ಯಕ್ಷರಾದ ಸಂದೀಪ್ ಬೂದಿಹಾಳ್, ನಿರ್ಮಲ ಭಾರತ್ ಚಾರಿಟೇಬಲ್ ಟ್ರಸ್ಟ್ ವಿಶ್ವಸ್ಥರಾದ ಕೆ.ರಮೇಶ್ ಮತ್ತಿತರರು ಉಪಸ್ಥಿತರಿದ್ದರು.
Kalaburagi | ಎ.22ರಂದು ಸಿ.ಯು.ಕೆ 10ನೇ ಘಟಿಕೋತ್ಸವ; 769 ಅಭ್ಯರ್ಥಿಗಳಿಗೆ ಪದವಿ ಪ್ರದಾನ: ಪ್ರೊ.ಬಟ್ಟು ಸತ್ಯನಾರಾಯಣ
ಉಪರಾಷ್ಟ್ರಪತಿ ಸಿ.ಪಿ.ರಾಧಾಕೃಷ್ಣನ್, ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ಭಾಗಿ
ಆಳಂದದಲ್ಲಿ ಮೇ 6, 7ರಂದು ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ: ಶಿವುಪುತ್ರ ನಡಗೇರಿ
ಆಳಂದ: ಭಾರತ ರತ್ನ, ಸಂವಿಧಾನ ಶಿಲ್ಪಿ ಬಿ.ಆರ್.ಅಂಬೇಡ್ಕರ್ ಅವರ ಜಯಂತಿ ಅಂಗವಾಗಿ ಪಟ್ಟಣದಲ್ಲಿ ಮೇ 6 ಮತ್ತು 7ರಂದು ಎರಡು ದಿನಗಳ ಕಾಲ ವಿಶೇಷ ಹಾಗೂ ಅರ್ಥಪೂರ್ಣ ಉತ್ಸವವನ್ನು ಆಯೋಜಿಸಲಾಗಿದ್ದು, ಸಿದ್ಧತೆಗಳು ಭರದಿಂದ ಸಾಗಿವೆ ಎಂದು ಜಯಂತಿ ಪ್ರಚಾರ ಸಮಿತಿ ಅಧ್ಯಕ್ಷ ಶಿವುಪುತ್ರ ನಡಗೇರಿ ತಿಳಿಸಿದ್ದಾರೆ. ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಾರಿ ಮೊದಲ ಬಾರಿಗೆ ತಾಲೂಕು ಮಟ್ಟದ ಸಮಿತಿಯ ಆಶ್ರಯದಲ್ಲಿ ಸಂಯೋಜಿತವಾಗಿ ಉತ್ಸವ ಹಮ್ಮಿಕೊಳ್ಳಲಾಗುತ್ತಿದ್ದು, ಜನಸಾಮಾನ್ಯರ ಹೆಚ್ಚಿನ ಭಾಗವಹಿಸುವಿಕೆಗೆ ಒತ್ತು ನೀಡಲಾಗಿದೆ ಎಂದರು. ಮೇ 6ರಂದು ಸಂಜೆ 5 ಗಂಟೆಗೆ ಶ್ರೀರಾಮ ಮಾರುಕಟ್ಟೆಯಲ್ಲಿ ಬೃಹತ್ ವೇದಿಕೆ ಕಾರ್ಯಕ್ರಮ ನಡೆಯಲಿದೆ. ಈ ಸಮಾರಂಭದಲ್ಲಿ ಮೈಸೂರು ಉರಿಲಿಂಗ ಪೆದ್ದಿ ಮಠದ ಶ್ರೀ ಜ್ಞಾನ ಪ್ರಕಾಶ ಸ್ವಾಮೀಜಿ, ಖ್ಯಾತ ವಾಗ್ಮೀ ಸುಸ್ಮಾ ಅಂದಾರೆ, ರಾಜ್ಯಸಭಾ ಸದಸ್ಯೆ ಜ್ಯೋತಿ ವಾಘ್ಮೋರೆ, ಶಾಸಕ ಬಿ.ಆರ್. ಪಾಟೀಲ, ಮಾಜಿ ಶಾಸಕ ಸುಭಾಷ್ ಗುತ್ತೇದಾರ, ಜೆಡಿ(ಎಸ್) ಜಿಲ್ಲಾಧ್ಯಕ್ಷೆ ಮಹೇಶ್ವರಿ ಎಸ್. ವಾಲಿ ಹಾಗೂ ಎನ್. ಮಹೇಶ್ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಲಿದ್ದಾರೆ. ಸಮಾರಂಭದ ನಂತರ ಕಲಬುರಗಿಯ ಡಾ. ಅಂಬೇಡ್ಕರ್ ಕಲಾ ತಂಡದಿಂದ ಅಂಬೇಡ್ಕರ್ ಅವರ ಜೀವನ ಸಾಧನೆಗಳನ್ನು ಪ್ರತಿಬಿಂಬಿಸುವ ನಾಟಕ ಪ್ರದರ್ಶನವೂ ನಡೆಯಲಿದೆ. ಮೇ 7ರಂದು ಗೌತಮ ಬುದ್ಧ, ಬಸವಣ್ಣ ಹಾಗೂ ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರಗಳೊಂದಿಗೆ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ದಿನವಿಡೀ ಭವ್ಯ ಮೆರವಣಿಗೆ ನಡೆಯಲಿದೆ. ವಿವಿಧ ಸಾಂಸ್ಕೃತಿಕ ತಂಡಗಳ ಪ್ರದರ್ಶನಗಳು ಮೆರವಣಿಗೆಯ ಪ್ರಮುಖ ಆಕರ್ಷಣೆಯಾಗಲಿವೆ. ಈ ಬಾರಿ ಭೀಮನಗರದ ಆಶ್ರಯದಲ್ಲಿ ತಾಲೂಕು ಮಟ್ಟದ ಸಮಿತಿಯಿಂದ ವಿಶಿಷ್ಟ ರೀತಿಯಲ್ಲಿ ಆಚರಣೆ ನಡೆಯುತ್ತಿದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಶಿವುಪುತ್ರ ನಡಗೇರಿ ಮನವಿ ಮಾಡಿದ್ದಾರೆ. ಈ ಸಂದರ್ಭದಲ್ಲಿ ಉತ್ಸವ ಸಮಿತಿ ಅಧ್ಯಕ್ಷ ಸೂರ್ಯಕಾಂತ ಸಾಲೇಗಾಂವ, ಉಪಾಧ್ಯಕ್ಷ ಗಂಗಾರಾಮ ಮುದಗಲೆ, ಮುಖಂಡ ದಯಾನಂದ ಸಾಲೇಗಾಂವ, ಕಿಟ್ಟಿ ಸಾಲೇಗಾಂವ, ಮುತ್ತಣ್ಣಾ ಜಂಗಲೆ, ಲಕ್ಷ್ಮಣ ಝಳಕಿಕರ್, ಅಜೆಯ ಸಿ.ಎಂ. ನಾಗರಾಜ ದೇವನೂರ, ಸುಧಾಕರ್ ಮೊದಲೆ, ಕೆಂಚಣ್ಣಾ ಝಳಕಿಕರ್ ಅನೇಕರು ಭಾಗವಹಿಸಿದ್ದರು.
ಹೊಸದಾಗಿ ಗಿರಣಿಯಿಂದ ತಂದ ಬಾಸ್ಮತಿಗಿಂತ ಹಳೇ ಬಾಸ್ಮತಿ ಏಕೆ ಉತ್ತಮ?
ಸಾಮಾನ್ಯ ನಂಬಿಕೆಗಳ ಹೊರತಾಗಿಯೂ ಹಳೇ ಬಾಸ್ಮತಿ ಅಕ್ಕಿಯಲ್ಲಿ ಪೋಷಕಾಂಶಗಳು ಹೆಚ್ಚು ಇರುವುದಿಲ್ಲ! ಭಾರತೀಯ ಅಡುಗೆಮನೆಗಳಲ್ಲಿ ಹಳೆಯ ಬಾಸ್ಮತಿ ಅಕ್ಕಿಯನ್ನು ಬಹಳ ಹಿಂದಿನಿಂದಲೂ ಬಳಸಲಾಗುತ್ತಿದೆ. ಅಕ್ಕಿ ಹಳೆಯದಾದಷ್ಟು ಪೋಷಕಾಂಶ ಹೆಚ್ಚಿರುತ್ತದೆ ಎನ್ನುವ ಸಾಮಾನ್ಯ ನಂಬಿಕೆ ಇದೆ. ಅಕ್ಕಿಯ ಸುವಾಸನೆ ಮತ್ತು ನಯವಾದ ವಿನ್ಯಾಸಕ್ಕಾಗಿ ಮಾತ್ರವಲ್ಲದೆ, ಅದರ ಆರೋಗ್ಯ ಪ್ರಯೋಜನಗಳಿಗಾಗಿಯೂ ಬಾಸ್ಮತಿ ಬಹಳ ಆದ್ಯತೆಯ ಅಕ್ಕಿಯಾಗಿದೆ. ಆದರೆ ಹೊಸದಾಗಿ ಗಿರಣಿಗೆ ಕೊಟ್ಟು ತಂದ ಅಕ್ಕಿಗಿಂತ ಹಳೇ ಬಾಸ್ಮತಿ ಆರೋಗ್ಯಕರವೆ? ಆಕಾಶ್ ಹೆಲ್ತ್ ಕೇರ್ ನ ಪ್ರಮುಖ ಆಹಾರ ತಜ್ಞರಾಗಿರುವ ಗಿನ್ನಿ ಕಾರ್ಲಾ ಈ ಕುರಿತ ಗೊಂದಲವನ್ನು ನಿವಾರಿಸಿದ್ದಾರೆ. ►ಹಳೆಯ ಬಾಸ್ಮತಿ ಅಕ್ಕಿಯನ್ನು ಭಿನ್ನವಾಗಿಸುವುದೇನು? ಗಿನ್ನಿ ಕಾರ್ಲಾ ಪ್ರಕಾರ, “ಹೊಸ ಅಕ್ಕಿ ಮತ್ತು ಬಾಸ್ಮತಿ ಅಕ್ಕಿಯನ್ನು ಹೋಲಿಸಿದರೆ ಪ್ರಮುಖ ವ್ಯತ್ಯಾಸ ಅದರ ಹಳೆಯತನದಲ್ಲಿದೆ. ಬಾಸ್ಮತಿ ಅಕ್ಕಿ ಹಳೆಯದಾದಷ್ಟು ಅದರ ತೇವಾಂಶವು ಕಡಿಮೆಯಾಗುತ್ತದೆ ಮತ್ತು ಸ್ಟಾರ್ಚ್ ರಚನೆ ಬದಲಾಗುತ್ತದೆ. ಹೀಗಾಗಿ ಬೇಯಿಸಿದ ನಂತರ ಹೆಚ್ಚು ಜಿಗುಟಿಲ್ಲದ ಹಾಗೂ ಪ್ರತ್ಯೇಕ ಧಾನ್ಯಗಳಿಗೆ ಕಾರಣವಾಗುತ್ತದೆ. ಇದರಿಂದ ರಚನೆ ಮತ್ತು ಜೀರ್ಣಸಾಧ್ಯತೆ ಎರಡೂ ಸುಧಾರಿಸುತ್ತವೆ. ಈ ರಚನಾತ್ಮಕ ಬದಲಾವಣೆಯೇ ಹಳೆಯ ಬಾಸ್ಮತಿಯನ್ನು ಹೊಸದಾಗಿ ಅರೆದ ಅಕ್ಕಿಯಿಂದ ಪ್ರತ್ಯೇಕಿಸುತ್ತದೆ. ಇದು ಬೇಯಿಸಿದಾಗ ಮೃದುವಾಗುವುದರ ಜೊತೆಗೆ ಧಾನ್ಯಗಳು ಪ್ರತ್ಯೇಕವಾಗಿಯೇ ಇರುತ್ತವೆ.” ►ಹಳತಾದಂತೆ ಪೌಷ್ಠಿಕಾಂಶ ಬದಲಾಗುತ್ತದೆಯೆ? “ಸಾಮಾನ್ಯ ನಂಬಿಕೆಯ ಹೊರತಾಗಿಯೂ ಹಳತಾಗಿರುವುದರಿಂದ ಪೋಷಕಾಂಶಗಳ ಮೌಲ್ಯ ಹೆಚ್ಚಾಗುವುದಿಲ್ಲ. ಹಳತಾಗುವುದರಿಂದ ಅಕ್ಕಿಯಲ್ಲಿರುವ ಪ್ರಮುಖ ಪೋಷಕಾಂಶಗಳು ಬದಲಾಗುವುದಿಲ್ಲ. ಮುಖ್ಯವಾಗಿ ಕಡಿಮೆ ತೇವಾಂಶ ಮತ್ತು ಪುನರ್ರಚನೆಯಾದ ಪಿಷ್ಟದಿಂದ ದೇಹವು ಅದನ್ನು ಹೇಗೆ ಸಂಸ್ಕರಿಸುತ್ತದೆ ಎಂಬುದರಲ್ಲಿ ಬದಲಾವಣೆ ಕಂಡುಬರುತ್ತದೆ” ಎನ್ನುತ್ತಾರೆ ಗಿನ್ನಿ ಕಾರ್ಲಾ. “ಅಂದರೆ ಸೂಕ್ಷ್ಮ ಚಯಾಪಚಯ ಪ್ರಯೋಜನಗಳು ಇರಬಹುದು. ವಿಶೇಷವಾಗಿ ದೇಹವು ಕಾರ್ಬೋಹೈಡ್ರೇಟ್ ಗಳನ್ನು ಹೇಗೆ ಜೀರ್ಣಿಸಿಕೊಳ್ಳುತ್ತದೆ ಮತ್ತು ಹೀರಿಕೊಳ್ಳುತ್ತದೆ ಎಂಬುದರಲ್ಲಿ ಬದಲಾವಣೆ ಕಂಡುಬರುತ್ತದೆ” ಎಂದು ಅವರು ವಿವರಿಸುತ್ತಾರೆ. ►ಹಳೇ ಬಾಸ್ಮತಿಯನ್ನು ಜೀರ್ಣಿಸುವುದು ಸುಲಭವೆ? ಕಾರ್ಲಾ ಅವರ ಪ್ರಕಾರ, ಹೊಸದಾಗಿ ಅರೆದ ಅಕ್ಕಿಗೆ ಹೋಲಿಸಿದರೆ ವಯಸ್ಸಾದ ಬಾಸ್ಮತಿ ಅಕ್ಕಿಯನ್ನು ಜೀರ್ಣಿಸಿಕೊಳ್ಳುವುದು ಸುಲಭ. ಏಕೆಂದರೆ ಅದಕ್ಕೆ ಕಡಿಮೆ ಗ್ಲೈಸೆಮಿಕ್ ಸೂಚ್ಯಂಕ (GI) ಇರುತ್ತದೆ. ಇದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟ ನಿಧಾನವಾಗಿ ಏರಿಕೆಯಾಗುತ್ತದೆ. ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಲು ಬಯಸುವವರು ಅಥವಾ ಸೂಕ್ಷ್ಮ ಜೀರ್ಣಕ್ರಿಯೆ ಹೊಂದಿರುವವರಿಗೆ ಇದು ಉತ್ತಮ ಆಯ್ಕೆಯಾಗಬಹುದು. ಆದರೂ ಅದನ್ನು ಅತಿಯಾಗಿ ಸೇವಿಸುವುದು ಸೂಕ್ತವಲ್ಲ. ►ಬಾಸ್ಮತಿಯಿಂದ ಅನನುಕೂಲತೆ ಇದೆಯೆ? ಪ್ರಯೋಜನಗಳ ಹೊರತಾಗಿಯೂ ಹಳೆಯ ಬಾಸ್ಮತಿ ಅಕ್ಕಿಯ ಬಗ್ಗೆ ಜಾಗರೂಕತೆ ವಹಿಸಬೇಕು. ಎಷ್ಟೇ ಆದರೂ ಅದು ಸಂಸ್ಕರಿಸಿದ ಕಾರ್ಬೋಹೈಡ್ರೇಟ್ ಆಗಿರುತ್ತದೆ. “ಮಧುಮೇಹ ಇರುವವರು ಸೇವನೆಯ ಪ್ರಮಾಣದಲ್ಲಿ ನಿಯಂತ್ರಣ ವಹಿಸುವುದು ಅತ್ಯಗತ್ಯ. ಏಕೆಂದರೆ ಅತಿ ಸೇವನೆಯು ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ಹೆಚ್ಚಿಸಬಹುದು” ಎನ್ನುತ್ತಾರೆ ಕಾರ್ಲಾ. “ಆಹಾರದಲ್ಲಿ ಸಾಕಷ್ಟು ಧಾನ್ಯಗಳು, ತರಕಾರಿಗಳು ಮತ್ತು ನಾರಿನಂಶ ಇಲ್ಲದೆ ಪಾಲಿಶ್ ಮಾಡಿದ ಅಕ್ಕಿಯನ್ನು ಹೆಚ್ಚು ಅವಲಂಬಿಸಿದ್ದರೆ, ಅದು ಒಟ್ಟು ಪೋಷಕಾಂಶದ ಸಮತೋಲನದ ಮೇಲೆ ಪರಿಣಾಮ ಬೀರುತ್ತದೆ” ಎಂದು ಅವರು ಎಚ್ಚರಿಸಿದ್ದಾರೆ.
2027ರ ಫೆ.18ರಿಂದ ಕಾರ್ಕಳ ಬಾಹುಬಲಿ ಮಹಾಮಸ್ತಕಾಭಿಷೇಕ: ಡಾ.ರಾಜೇಂದ್ರ ಕುಮಾರ್
ಕಾರ್ಕಳ: ಕಾರ್ಕಳ ಬಾಹುಬಲಿ ಮಹಾಮಸ್ತಕಾಭಿಷೇಕವು ಸ್ವಸ್ತಿಶ್ರೀ ಲಲಿತಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿ ಸಾನಿಧ್ಯದಲ್ಲಿ ಹಾಗೂ ಮಹಾಮಸ್ತಕಾಭಿಷೇಕ ಸಮಿತಿಯ ಕಾರ್ಯಾಧ್ಯಕ್ಷರಾದ ಡಾ.ಎಂ. ಎನ್. ರಾಜೇಂದ್ರ ಕುಮಾರ್ 2027ರ ಫೆ.18 ರಿಂದ ಫೆ.28 ರವರಗೆ ಕಾರ್ಕಳ ಬಾಹುಬಲಿ ಮಹಾಮಸ್ತಕಾಭಿಷೇಕ ನಡೆಯಲಿರುವುದು ಎಂದು ಘೋಷಿಸಿದರು. ದಿನಾಂಕ ಘೋಷಿಸಿ ಮಾತನಾಡಿದ ಅವರು ಮಹಾಮಸ್ತಕಾಭಿಷೇಕ ಸಮಿತಿಯ ಕಾರ್ಯಾಧ್ಯಕ್ಷ ಡಾ. ಎಂ.ಎನ್. ರಾಜೇಂದ್ರ ಕುಮಾರ್ ಮಾತನಾಡಿ, ಮಸ್ತಕಾಭಿಷೇಕ ಕೇವಲ ಧಾರ್ಮಿಕ ಕಾರ್ಯಕ್ರಮ ಮಾತ್ರವಲ್ಲ ಇದೊಂದು ಅತ್ಯಮೋಘವಾದ ಕಾರ್ಕಳವಲ್ಲದೆ ನಾಡಿನ ಸಮಸ್ತ ಬಂದುಗಳು ಜಾತಿ ಮತ ಬೇದವಿಲ್ಲದೆ ನಡೆಸುವ ಮೂಲಕ ನಾವು ಮಾತ್ರ ಬೆಳೆಯುವುದಲ್ಲ, ಸಮಾಜ ಕೂಡ ಬೆಳೆಯಬೇಕು ಎಂದರು ಮಸ್ತಕಾಭಿಷೇಕಕ್ಕೆ ಇನ್ನು 305 ದಿನಗಳು ಬಾಕಿ ಇವೆ. ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ನಾವೆಲ್ಲರೂ ಒಗ್ಗಟ್ಟಿನಿಂದ ಶ್ರಮಿಸಬೇಕಿದೆ ಎಂದು ಆಶಯ ವ್ಯಕ್ತಪಡಿಸಿದರು. ಕಾರ್ಕಳ ಭಗವಾನ್ ಶ್ರೀ ಬಾಹುಬಲಿ ಸ್ವಾಮಿ ಮಹಾಮಸ್ತಕಾಭಿಷೇಕ ಸಮಿತಿ ವತಿಯಿಂದ ದಾನಶಾಲೆ, ಬಾಹುಬಲಿ ಪ್ರವಚನ ಮಂದಿರದಲ್ಲಿ ರವಿವಾರ ಮಹಾಮಸ್ತಕಾಭಿಷೇಕ ಕಾರ್ಯಾಲಯದ ಉದ್ಘಾಟನೆ ಹಾಗೂ ದಿನಾಂಕ ಘೋಷಣೆ ಕಾರ್ಯಕ್ರಮ ನಡೆಯಿತು. ಧರ್ಮಸ್ಥಳದ ಹರ್ಶೆಂದ್ರ ಕುಮಾರ್ ಹೆಗ್ಡೆ ಕಾರ್ಯಕ್ರಮ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ನಮ್ಮ ಜೀವಿತಾವಧಿಯಲ್ಲಿ ವೇಣೂರು, ಧರ್ಮಸ್ಥಳ ಹಾಗೂ ಕಾರ್ಕಳದ ಗೋಮಟೇಶ್ವರನ ಮಸ್ತಕಾಭಿಷೇಕವನ್ನು ಕಣ್ತುಂಬಿಕೊಳ್ಳುವ ಅವಕಾಶ ಸಿಗುತ್ತಿರುವುದು ನಮ್ಮ ಸೌಭಾಗ್ಯ, ಭಕ್ತಾದಿಗಳಿಗೆ ಯಾವುದೇ ತೊಂದರೆಯಾಗದಂತೆ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಬೇಕಾಗಿದೆ ಎಂದರು ಕಾರ್ಕಳ ಜೈನ ಮಠದ ಪೂಜ್ಯ ಸ್ವಸ್ತಿಶ್ರೀ ಲಲಿತಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಸ್ವಾಮೀಜಿ ಮಹಾಮಸ್ತಕಾಭಿಷೇಕ ಧಾರ್ಮಿಕ ವಿಧಿ ವಿಧಾನದ ಜತೆಗೆ ಜಗತ್ತಿಗೆ ಒಳಿತಾಗಲಿ ಎನ್ನುವ ಮಹೋನ್ನತ ದೃಷ್ಟಿಕೋನದ ಮಹೋತ್ಸವ ಆಗಿದೆ . ಈ ಪವಿತ್ರ ಕಾರ್ಯದ ಹಿಂದೆ ಭಾರತೀಯ ಸಂಸ್ಕೃತಿ, ಶ್ರದ್ದೆ, ಭಕ್ತಿಯ ಶಕ್ತಿಯ ಸಂದೇಶವಿದೆ ಭಕ್ತರ ಮನಸ್ಸು ಸದಾ ಭಗವಂತನ ಸಾನ್ನಿಧ್ಯದಲ್ಲಿ ನೆಲೆಸಿರಬೇಕು. ಭಗವಾನ್ ಬಾಹುಬಲಿಯ ತ್ಯಾಗ ಮತ್ತು ವೈರಾಗ್ಯದ ಜೀವನ ನಮ್ಮ ಜೀವನಕ್ಕೆ ದಾರಿದೀಪವಾಗಲಿ, ಎಂದರು. ಸಂಸದ ಕೋಟ ಶ್ರೀನಿವಾಸ ಪೂಜಾರಿ , ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ ಮೋಹನ್ ಆಳ್ವ, ಅಧಾನಿ ಗ್ರೂಫ್ ಕರ್ನಾಟಕ ಇದರ ಕಾರ್ಯನಿರ್ವಾಹಕ ನಿರ್ದೇಶಕರು ಮತ್ತು ಅಧ್ಯಕ್ಷರಾದ ಕಿಶೋರ್ ಅಳ್ವ, ಉಡುಪಿ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಮುನಿಯಾಲು ಉದಯ ಕೃಷ್ಣಯ್ಯ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ (ರಿ.) ಇದರ ಮ್ಯಾನೇಜಿಂಗ್ ಟ್ರಸ್ಟಿ ಉದಯ ಕುಮಾರ್ ಶೆಟ್ಟಿ ಮುನಿಯಾಲು, ಮಾಜಿ ಸಚಿವ ಅಭಯಚಂದ್ರ ಜೈನ್ ಶುಭ ಹಾರೈಸಿ ಮಹಾಮಸ್ತಕಾಭಿಷೇಕದ ಯಶಸ್ಸಿಗೆ ಪೂರ್ಣ ಪ್ರಮಾಣದ ಸಹಕಾರದ ಭರವಸೆ ನೀಡಿದರು ಸಮಿತಿಯ ಉಪಾಧ್ಯಕ್ಷ ಕೆ ಪಿ ಜಗದೀಶ್ ಅಧಿಕಾರಿ ಕಾರ್ಕಳ ಡಿ ವೈ ಎಸ್ ಪಿ ವಿಜಯ ಪ್ರಸಾದ್, ಎಸ್ ಸಿ ಡಿ ಸಿ ಸಿ ಬ್ಯಾಂಕ್ ನಿರ್ದೇಶಕ ಬೆಳಪು ದೇವಿಪ್ರಸಾದ್ ಶೆಟ್ಟಿ, ಮಸ್ತಕಾಭಿಷೇಕ ಸಮಿತಿ ಮುಖ್ಯಸ್ಥರುಗಳಾದ ಪ್ರಭಾತ್ ಕುಮಾರ್, ಅನಂತರಾಜ ಪೂವಣಿ, ಜಿ. ಪಂ. ಸಿಇಒ ಪ್ರತೀಕ್ ಬಯಾಲ್, ಹೆಚ್ಚುವರಿ ಎಸ್ಪಿ ಸುಧಾಕರ್ ನಾಯ್ಕ್, ಸಂಪತ್ ಸಾಮ್ರಾಜ್ಯ, ಸುಧೀರ್ ಪಡಿವಾಳ್, ಕೆ ಜಯಕೀರ್ತಿ ಕಡಂಬ, ಹೇಮಚಂದ್ರ ಜೈನ್, ಸುನಿಲ್ ಕುಮಾರ್ ಬಜಗೋಳಿ, ಮಹಾವೀರ ಹೆಗ್ಡೆ, ಭರತ್ ಕುಮಾರ್ ಜೈನ್, ಶೀತಲ್ ಜೈನ್, ಸುಭಾಶ್ಚಂದ್ರ ಚೌಟ, ಶಾಂತಿರಾಜ ಜೈನ್, ಮಹೇಂದ್ರ ವರ್ಮ ಜೈನ್, ಶಿಶುಪಾಲ ಜೈನ್ ಉಪಸ್ಥಿತರಿದ್ದರು. ಪುಷ್ಪರಾಜ್ ಜೈನ್ ಮಂಗಳೂರು ಸ್ವಾಗತಿಸಿ, ಮೋಹನ್ ಪಡಿವಾಳ್ ವಂದಿಸಿ ,ಅಜಿತ್ ಕೊಕ್ರಾಡಿ ನಿರೂಪಿಸಿದರು.
Uttar Pradesh | ಹಲ್ಲೆ, ಜಾತಿ ನಿಂದನೆ ಆರೋಪ: ತನಗೆ ತಾನೇ ಬೆಂಕಿ ಹಚ್ಚಿಕೊಂಡ ದಲಿತ ಯುವಕ
ಮುಝಫ್ಫರ್ ನಗರ: ಸ್ಥಳೀಯ ಪ್ರಭಾವಿ ವ್ಯಕ್ತಿಯೊಬ್ಬ ತನ್ನ ಮೇಲೆ ಹಲ್ಲೆ ನಡೆಸಿ ಜಾತಿ ನಿಂದನೆ ಮಾಡಿದ ಹಿನ್ನೆಲೆಯಲ್ಲಿ ಅವಮಾನಗೊಂಡ ದಲಿತ ಯುವಕನೊಬ್ಬ ತನಗೆ ತಾನೇ ಬೆಂಕಿ ಹಚ್ಚಿಕೊಂಡಿರುವ ಘಟನೆ ಮುಝಫ್ಫರ್ ನಗರ ಜಿಲ್ಲೆಯಲ್ಲಿ ನಡೆದಿದೆ ಎಂದು ರವಿವಾರ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಬೆಂಕಿ ಹಚ್ಚಿಕೊಂಡ ದಲಿತ ಯುವಕನನ್ನು ಹಿಮಾಂಶು (25) ಎಂದು ಗುರುತಿಸಲಾಗಿದ್ದು, ಆತ ಯಾವುದೋ ಕೆಲಸ ಮಾಡಲು ನಿರಾಕರಿಸಿದ್ದರಿಂದ ಟಿಂಕು ಅಲಿಯಾಸ್ ಗೌರವ್ (28) ಎಂಬ ವ್ಯಕ್ತಿ ಆತನ ಮೇಲೆ ಹಲ್ಲೆ ನಡೆಸಿ ಜಾತಿ ನಿಂದನೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ. ಈ ಘಟನೆ ಶನಿವಾರ ಮುಝಫ್ಫರ್ ನಗರ ಜಿಲ್ಲೆಯ ಖತೌಲಿ ತೆಹಸಿಲ್ ನ ಗಾಂಧಾರಿ ಗ್ರಾಮದಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಅವಮಾನದಿಂದ ಮನನೊಂದ ಹಿಮಾಂಶು, ಆತ್ಮಹತ್ಯೆ ಪ್ರಯತ್ನದ ಭಾಗವಾಗಿ ತನಗೆ ತಾನೇ ಬೆಂಕಿ ಹಚ್ಚಿಕೊಂಡಿದ್ದಾನೆ. ಆತನ ದೇಹದ ಶೇ. 30ರಷ್ಟು ಭಾಗ ಸುಟ್ಟು ಗಾಯಗೊಂಡಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಟಿಂಕು ಅಲಿಯಾಸ್ ಗೌರವ್ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ವಿವಿಧ ಸೆಕ್ಷನ್ ಗಳು ಹಾಗೂ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು, ಆತನನ್ನು ಬಂಧಿಸಲಾಗಿದೆ ಎಂದು ರವಿವಾರ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಸಂಜಯ್ ಕುಮಾರ್ ಸುದ್ದಿಗಾರರಿಗೆ ತಿಳಿಸಿದ್ದಾರೆ. ಹಿಮಾಂಶು ದೇಹದ ಶೇ. 30ರಷ್ಟು ಭಾಗದಲ್ಲಿ ಸುಟ್ಟ ಗಾಯಗಳಾಗಿದ್ದು, ಗಂಭೀರವಾಗಿ ಗಾಯಗೊಂಡಿರುವ ಆತನನ್ನು ಹೆಚ್ಚಿನ ಚಿಕಿತ್ಸೆಗಾಗಿ ದಿಲ್ಲಿಯ ಸಫ್ದರ್ ಜಂಗ್ ಆಸ್ಪತ್ರೆಗೆ ಸಾಗಿಸಲಾಗಿದೆ ಎಂದೂ ಅವರು ಹೇಳಿದ್ದಾರೆ. ಹಿಮಾಂಶು ಕೆಲಸ ಮಾಡಲು ನಿರಾಕರಿಸಿದ್ದರಿಂದ, ಆತನ ಕೆನ್ನೆಗೆ ಹೊಡೆದ ಟಿಂಕು ಅಲಿಯಾಸ್ ಗೌರವ್, ಆತನಿಗೆ ಜಾತಿ ನಿಂದನೆ ಮಾಡಿದನು ಎಂದು ಹಿಮಾಂಶು ಕುಟುಂಬದ ಸದಸ್ಯರು ಪೊಲೀಸರಿಗೆ ನೀಡಿರುವ ದೂರಿನಲ್ಲಿ ಆರೋಪಿಸಿದ್ದಾರೆ.
Good News: ಗುತ್ತಿಗೆದಾರರಿಗೆ ಸಿಹಿ ಸುದ್ದಿ: 300 ಕೋಟಿ ರೂಪಾಯಿ ಬಿಡುಗಡೆ ಮಾಡಿದ ರಾಜ್ಯ ಸರ್ಕಾರ
ಬೆಂಗಳೂರು, ಏಪ್ರಿಲ್ 19: ದೀರ್ಘಕಾಲದ ಹೋರಾಟ ಮತ್ತು ಸತತ ಪ್ರತಿಭಟನೆಗಳ ಫಲವಾಗಿ ರಾಜ್ಯದ ಸಣ್ಣ ಗುತ್ತಿಗೆದಾರರಿಗೆ ಗುಡ್ ನ್ಯೂಸ್ ಸಿಕ್ಕಿದೆ. ಸಣ್ಣ ಕಾಮಗಾರಿಗಳ ಬಾಕಿ ಬಿಲ್ ಪಾವತಿಗೆ ಆಗ್ರಹಿಸುತ್ತಿದ್ದ ಗುತ್ತಿಗೆದಾರರ ಬೇಡಿಕೆಗೆ ಸ್ಪಂದಿಸಿರುವ ರಾಜ್ಯ ಸರ್ಕಾರವು 300 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಿದೆ. ಈ ಹಿಂದೆ ಮಾರ್ಚ್ ತಿಂಗಳಲ್ಲಿ ಸರ್ಕಾರ 2,000 ಕೋಟಿ ರೂಪಾಯಿ ಬಿಡುಗಡೆ ಮಾಡಿತ್ತು.
ವರುಣ್ ಚಕ್ರವರ್ತಿ ಕೈಚಳಕದ ಬಳಿಕ ರಿಂಕು ಸಿಂಗ್ ಸಾಹಸ; ಕೊನೆಗೂ ಕೋಲ್ಕತಾ ತೆರೆಯಿತು ಗೆಲುವಿನ ಖಾತೆ!
ಆರು ಪಂದ್ಯಗಳನ್ನಾಡಿಯೂ ಈ ಸೀಸನ್ ನಲ್ಲಿ ಗೆಲುವು ಕಾಣದ ಕೋಲ್ಕತಾ ನೈಟ್ ರೈಡರ್ಸ್ ತಂಡ ಇದೀಗ ಮೊದಲ ಗೆಲುವಿನ ಸವಿಯುಂಡಿದೆ. ವರುಣ್ ಚಕ್ರವರ್ತಿ, ಕಾರ್ತಿಕ್ ತ್ಯಾಗಿ ಅವರ ಬಿಗು ಬೌಲಿಂಗ್ ದಾಳಿ ಮತ್ತು ರಿಂಕು ಸಿಂಗ್ ಅವರ ಸಮಯೋಚಿತ ಅಜೇಯ ಅರ್ಧಶತಕದ ನೆರವಿನಿಂದ ಬಲಿಷ್ಠ ರಾಜಸ್ಥಾನ ರಾಯಲ್ಸ್ ವಿರುದ್ಧ 4 ವಿಕೆಟ್ ಗಳ ಜಯ ಸಾಧಿಸಿದೆ. ಈ ಮೂಲಕ ಯಲ್ಲಿ ಕೊನೇ ಸ್ಥಾನದಿಂದ ಒಂದು ಸ್ಥಾನ ಮೇಲೇರಿದೆ. ಇದೇವೇಳೆ ರಾಜಸ್ಥಾನ ರಾಯಲ್ಸ್ ಈ ಪಂದ್ಯದ ಸೋಲಿನ ಬಳಿಕ 3ನೇ ಸ್ಥಾನದಲ್ಲಿದೆ. ()
ಅಫಜಲಪುರ | ಎ.22ರಂದು ಉಚಿತ ಸಾಮೂಹಿಕ ವಿವಾಹ, ಧಾರ್ಮಿಕ ಕಾರ್ಯಕ್ರಮ
ಅಫಜಲಪುರ: ಪಟ್ಟಣದಲ್ಲಿ ಎ.22ರಂದು ಉಚಿತ ಸಾಮೂಹಿಕ ವಿವಾಹ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಭವ್ಯವಾಗಿ ನಡೆಯಲಿವೆ ಎಂದು ಆಶ್ರಮದ ಪೀಠಾಧಿಪತಿ ಹಝರತ್ ಮಲ್ಲಿಕಾರ್ಜುನ ದಾವಲಮಲೀಕ ಮುತ್ಯಾ ತಿಳಿಸಿದ್ದಾರೆ. ಪಟ್ಟಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಾಗೀರದಾರ ಫಂಕ್ಷನ್ ಹಾಲ್ನಲ್ಲಿ ಸಾಮೂಹಿಕ ವಿವಾಹ ಕಾರ್ಯಕ್ರಮ ಆಯೋಜಿಸಲಾಗಿದ್ದು, ಹಲವಾರು ಜೋಡಿಗಳು ಇದರಲ್ಲಿ ವಿವಾಹವಾಗಲಿದ್ದಾರೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಕಾಶಿ ಪೀಠದ ಜಗದ್ಗುರು ಡಾ.ಮಲ್ಲಿಕಾರ್ಜುನ ವಿಶ್ವಾರಾಧ್ಯ ಶಿವಾಚಾರ್ಯ ಭಗವತ್ಪಾದಕರ ದಿವ್ಯ ಸಾನಿಧ್ಯವಿದ್ದು, ವಿವಿಧ ಹರಗುರು ಚರಮೂರ್ತಿಗಳು ಭಾಗವಹಿಸಲಿದ್ದಾರೆ. ಜೊತೆಗೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯರನ್ನು ಸನ್ಮಾನಿಸಲಾಗುವುದು. ಇದೇ ವೇಳೆ ಉಚಿತ ಆರೋಗ್ಯ ತಪಾಸಣಾ ಶಿಬಿರವೂ ನಡೆಯಲಿದೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಮ್ಮಲಿಂಗೇಶ್ವರ ಬೃಹನ್ಮಠ, ರೇವೂರ (ಬಿ) ಅವರ ಶ್ರೀಕಂಠ ಶಿವಾಚಾರ್ಯರು ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಶಾಸಕ ಎಂ.ವೈ. ಪಾಟೀಲ್, ಮಾಜಿ ಸಚಿವ ಮಾಲೀಕಯ್ಯಾ ಗುತ್ತೇದಾರ ಸೇರಿದಂತೆ ಅನೇಕ ಗಣ್ಯರು, ಸರ್ಕಾರಿ ಅಧಿಕಾರಿಗಳು, ನ್ಯಾಯವಾದಿಗಳು ಹಾಗೂ ವಿವಿಧ ಸಂಘಟನೆಗಳ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ತಾಲೂಕು ಹಾಗೂ ಜಿಲ್ಲೆಯ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಆಯೋಜಕರು ಮನವಿ ಮಾಡಿದ್ದಾರೆ. ಈ ಸಂದರ್ಭದಲ್ಲಿ ಎಂ.ಎಲ್.ಪಟೇಲ್ ಬಳೂಂಡಗಿ, ವಾಸಿಮ್ ಅಬ್ದುಲ್ ಜಾಗೀರದಾರ, ಬಾಬುಮಿಯಾ ಪುಲಾರಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಬೆಲೆ ಏರಿಕೆಯಿಂದಾಗಿ 6 ವರ್ಷಗಳಲ್ಲಿಯೇ ಕನಿಷ್ಠ ಮಟ್ಟಕ್ಕೆ ಕುಸಿದ ಭಾರತದ ಸ್ಮಾರ್ಟ್ಫೋನ್ ಮಾರಾಟ
80ಕ್ಕೂ ಹೆಚ್ಚು ಸ್ಮಾರ್ಟ್ಫೋನ್ ಮಾಡೆಲ್ಗಳು ಸರಾಸರಿ ಶೇ 15ರಷ್ಟು ಬೆಲೆ ಏರಿಕೆ ಕಂಡಿರುವುದು ಮಾರಾಟ ಕುಸಿತಕ್ಕೆ ಪ್ರಮುಖ ಕಾರಣವಾಗಿದೆ. ಕೌಂಟರ್ ಪಾಯಿಂಟ್ ರಿಸರ್ಚ್ ತಿಳಿಸಿರುವ ಪ್ರಕಾರ, ವರ್ಷದಿಂದ ವರ್ಷಕ್ಕೆ ಹೋಲಿಸಿದಾಗ 2026ರ ಮೊದಲ ತ್ರೈಮಾಸಿಕದಲ್ಲಿ ಭಾರತದ ಸ್ಮಾರ್ಟ್ಫೋನ್ ಸಾಗಣೆಗಳು ಶೇ 3ರಷ್ಟು ಕುಸಿದಿದ್ದು, ಆರು ವರ್ಷಗಳಲ್ಲಿ ಅತ್ಯಂತ ದುರ್ಬಲ ತ್ರೈಮಾಸಿಕ ಕಾರ್ಯಕ್ಷಮತೆಯನ್ನು ದಾಖಲಿಸಿದೆ. ವೆಚ್ಚದ ಒತ್ತಡಗಳು, ಬೆಲೆ ಏರಿಕೆ ಮತ್ತು ಬೇಡಿಕೆ ಕಡಿಮೆಯಾಗಿರುವುದು ಮಾರಾಟದ ಮೇಲೆ ಪರಿಣಾಮ ಬೀರಿವೆ. ಸ್ಮಾರ್ಟ್ಫೋನ್ ಗಳ ಮಾರಾಟ ಕುಸಿತ 80ಕ್ಕೂ ಹೆಚ್ಚು ಸ್ಮಾರ್ಟ್ಫೋನ್ ಮಾದರಿಗಳು ಸರಾಸರಿ ಶೇ 15ರಷ್ಟು ಬೆಲೆ ಏರಿಕೆ ಕಂಡಿವೆ. ಎರಡನೇ ತ್ರೈಮಾಸಿಕದಲ್ಲಿ ಇನ್ನೂ ಶೇ 15–20ರಷ್ಟು ಏರಿಕೆಯನ್ನು ನಿರೀಕ್ಷಿಸಲಾಗಿದೆ. “ಮಾರುಕಟ್ಟೆ ಸ್ಪಷ್ಟವಾದ ಕೈಗೆಟಕುವಿಕೆಯ ಒತ್ತಡವನ್ನು ಎದುರಿಸುತ್ತಿದೆ. ಮೆಮೊರಿ ಕೊರತೆಯಿಂದ ಉಂಟಾದ ವೆಚ್ಚ ಏರಿಕೆ ಹಾಗೂ ಕರೆನ್ಸಿ ಒತ್ತಡಗಳಿಂದ ಮೂಲ ಉಪಕರಣ ತಯಾರಿಕಾ ಕಂಪನಿಗಳು ಪ್ರಮುಖ ಮಾಡೆಲ್ಗಳ ಬೆಲೆಗಳನ್ನು ಏರಿಸಲು ಒತ್ತಡಕ್ಕೆ ಒಳಗಾಗಿವೆ,” ಎಂದು ಹಿರಿಯ ಮಾರುಕಟ್ಟೆ ತಜ್ಞ ಪ್ರಚೀರ್ ಸಿಂಗ್ ತಿಳಿಸಿದ್ದಾರೆ. ಮೆಮೊರಿ ಚಿಪ್ ಗಳ ಕೊರತೆ AI ಡೇಟಾ ಕೇಂದ್ರಗಳಿಗೆ ಮೆಮೊರಿಯ ಸ್ಫೋಟಕ ಬೇಡಿಕೆಯ ಪರಿಣಾಮವಾಗಿ ಜಾಗತಿಕವಾಗಿ ಮೆಮೊರಿ ಚಿಪ್ ಗಳ ತೀವ್ರ ಕೊರತೆ ಎದುರಾಗಿದೆ. ಇದು ತಂತ್ರಜ್ಞಾನ ಉದ್ಯಮದ ಮೇಲೆ ಭಾರಿ ಪರಿಣಾಮ ಬೀರುತ್ತಿದೆ. ಮೆಮೊರಿ ಚಿಪ್ಗಳ ಬೆಲೆ 2025ರ ಕೊನೆಯ ತ್ರೈಮಾಸಿಕದಲ್ಲಿ ಶೇ 50ರಷ್ಟು ಹೆಚ್ಚಾಗಿದೆ. 2026ರ ಮೊದಲ ತ್ರೈಮಾಸಿಕದ ಅಂತ್ಯದ ವೇಳೆಗೆ ಶೇ 40ರಿಂದ ಶೇ 50ರಷ್ಟು ಹೆಚ್ಚಾಗುವ ಸಾಧ್ಯತೆಯಿದೆ. ಮುಖ್ಯವಾಗಿ ಡೇಟಾ ಸೆಂಟರ್ ಗಳು, ಕೃತಕ ಬುದ್ಧಿಮತ್ತೆ ತಂತ್ರಜ್ಞಾನಗಳ ಬೇಡಿಕೆ ಹೆಚ್ಚಾಗಿರುವುದು ಮತ್ತು ಪೂರೈಕೆ ಸರಪಳಿಯಲ್ಲಿನ ಅಡೆತಡೆಗಳು ಈ ಕೊರತೆಗೆ ಕಾರಣವಾಗಿದೆ. ಇದರ ಪರಿಣಾಮವಾಗಿ ಸ್ಮಾರ್ಟ್ಫೋನ್ ಮಾರಾಟ ಹಾಗೂ ಉತ್ಪಾದನೆ ಮೇಲೆ ನೇರ ಪರಿಣಾಮ ಬೀರುತ್ತಿದೆ. ಎರಡನೇ ತ್ರೈಮಾಸಿಕದಲ್ಲೂ ಕುಸಿತ ಸಾಧ್ಯತೆ ಹೀಗಾಗಿ ಭಾರತದ ಸ್ಮಾರ್ಟ್ಫೋನ್ ಮಾರುಕಟ್ಟೆಯಲ್ಲಿ ಅಲ್ಪಾವಧಿಗೆ ಒತ್ತಡ ಮುಂದುವರಿಯುವ ನಿರೀಕ್ಷೆಯಿದೆ. 2026ರ ಎರಡನೇ ತ್ರೈಮಾಸಿಕದಲ್ಲಿ ಎರಡಂಕಿಯ ಕುಸಿತ ಕಾಣುವ ಸಾಧ್ಯತೆ ಇದೆ ಎಂದು ಸಂಶೋಧನಾ ನಿರ್ದೇಶಕ ತರುಣ್ ಪಾಠಕ್ ತಿಳಿಸಿದ್ದಾರೆ. ವಿವೋ ಶೇ 21ರಷ್ಟು ಪಾಲನ್ನು ಹೊಂದಿದ್ದು, ಭಾರತದ ಸ್ಮಾರ್ಟ್ ಫೋನ್ ಮಾರುಕಟ್ಟೆಯಲ್ಲಿ ಮುಂಚೂಣಿಯಲ್ಲಿದೆ. ನಂತರ ಸ್ಯಾಮ್ಸಂಗ್ ಮತ್ತು ಒಪ್ಪೋ ಬರುತ್ತವೆ. ಐಫೋನ್ 17 ಸರಣಿಗೆ ಇರುವ ನಿರಂತರ ಬೇಡಿಕೆಯ ಪರಿಣಾಮವಾಗಿ ಆಪಲ್ ಕಂಪನಿಯ ಮಾರುಕಟ್ಟೆ ಪಾಲು ಶೇ 9ರಷ್ಟಿದೆ. ಗೂಗಲ್ ವೇಗವಾಗಿ ಬೆಳೆಯುತ್ತಿರುವ ಪ್ರೀಮಿಯಂ ಬ್ರ್ಯಾಂಡ್ ಆಗಿದ್ದು, ವರ್ಷದಿಂದ ವರ್ಷಕ್ಕೆ ಅದರ ಮಾರಾಟ ಶೇ 39ರಷ್ಟು ಏರಿಕೆಯಾಗಿದೆ. AI ಸಂಬಂಧಿತ ಫೀಚರ್ ಗಳು ಗೂಗಲ್ ಮಾರುಕಟ್ಟೆ ಬೆಳವಣಿಗೆಗೆ ನೆರವಾಗಿವೆ.
ಸಚಿವ ಝಮೀರ್ ಅಹ್ಮದ್ ಜೆಡಿಎಸ್ ಸೇರ್ಪಡೆ ವದಂತಿಗೆ ಎಚ್.ಡಿ. ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದು ಹೀಗೆ...
ಬೆಂಗಳೂರು: ‘ಸಚಿವ ಝಮೀರ್ ಅಹ್ಮದ್ ಖಾನ್ ಸೇರಿದಂತೆ ಕಾಂಗ್ರೆಸ್ ಪಕ್ಷದ ಯಾರೊಬ್ಬರೂ ನನ್ನ ಸಂಪರ್ಕದಲ್ಲಿಲ್ಲ. ಹಾಗಿದ್ದ ಮೇಲೆ ಅವರು ಜೆಡಿಎಸ್ ಪಕ್ಷ ಸೇರುವ ಮಾತೆಲ್ಲಿಂದ ಬರಬೇಕು?. ಝಮೀರ್ ಅಹ್ಮದ್ ಜೆಡಿಎಸ್ ಸೇರ್ಪಡೆ ಎಂಬುದೆಲ್ಲವೂ ಗಾಳಿಸುದ್ದಿಯಷ್ಟೇ?’ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಈ ಕುರಿತ ವದಂತಿಗಳಿಗೆ ತೆರೆ ಎಳೆದರು. ರವಿವಾರ ದಿಲ್ಲಿಯಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಜೆಡಿಎಸ್ ಪಕ್ಷಕ್ಕೆ ಯಾರನ್ನು ಸೇರಿಸಿಕೊಳ್ಳಬೇಕೆಂಬ ಬಗ್ಗೆ ನಾನು ತಾನೇ ನಿರ್ಧಾರ ಕೈಗೊಳ್ಳಬೇಕು. ನನ್ನ ಸಂಪರ್ಕಕ್ಕೆ ಯಾರೂ ಬಂದಿಲ್ಲ ಎಂದ ಮೇಲೆ ಪಕ್ಷಕ್ಕೆ ಸೇರಿಸಿಕೊಳ್ಳುವ ಮಾತೇಕೆ ಬರುತ್ತದೆ. ದಾವಣಗೆರೆ ದಕ್ಷಿಣ, ಬಾಗಲಕೋಟೆ ಕ್ಷೇತ್ರಗಳ ಉಪಚುನಾವಣೆ ಫಲಿತಾಂಶ ಏನಾಗುತ್ತದೋ ನೋಡೋಣ. ಫಲಿತಾಂಶ ಬರುವ ಮುನ್ನವೇ ಯಾಕೆ ಅನುಮಾನ? ಅಲ್ಪಸಂಖ್ಯಾತರನ್ನು ನಾವೇ ರಕ್ಷಣೆ ಮಾಡುವವರು ಎನ್ನುವ ಕಾಂಗ್ರೆಸ್ ಏಕೆ ಗೊಂದಲ ಮಾಡುತ್ತಿದೆ. ಒಂದು ಸಮುದಾಯದ ಮೇಲೆ ಯಾಕೆ ಗದಾಪ್ರಹಾರ ನಡೆಸುತ್ತಿದ್ದಾರೆ? ಎಂದು ಪ್ರಶ್ನಿಸಿದರು. ಮತ್ತೆ ಅದೇ ತಪ್ಪು ಮಾಡುವುದಿಲ್ಲ: ನನಗೂ ನೀವು ಹೇಳಿದ ವ್ಯಕ್ತಿಗೂ ಯಾವುದೇ ಸಂಪರ್ಕ ಇಲ್ಲ. ಜೆಡಿಎಸ್ ಜತೆಗೆ ಯಾರೂ ಸಂಪರ್ಕ ಸಾಧಿಸಿಲ್ಲ. ನಾವು ಮಾಡಿದ ತಪ್ಪುಗಳನ್ನೇ ಮತ್ತೆ ಮಾಡುವುದಿಲ್ಲ. ಇನ್ನೊಂದು ಪಕ್ಷದಲ್ಲಿ ನಡೆಯುತ್ತಿರುವ ರಾಜಕೀಯ ಬಿಕ್ಕಟ್ಟುಗಳನ್ನು ಲಾಭ ಮಾಡಿಕೊಳ್ಳುವ ಮನಸ್ಥಿತಿ ನಮ್ಮದಲ್ಲ ಎಂದು ಕುಮಾರಸ್ವಾಮಿ ಸ್ಪಷ್ಟಪಡಿಸಿದರು.
ಎಲ್ಲದಕ್ಕೂ ಬಳಕೆಯಾಗುವ ಮೈದಾ ಬದಲಿಗೆ ಏನನ್ನು ಬಳಸಬಹುದು?
ಮೈದಾವನ್ನು ಎಲ್ಲಾ ರೀತಿಯ ಅಡುಗೆಯಲ್ಲಿ ಏಕೆ ಬಳಸಬೇಕು? ಅದರ ಬದಲಿಗೆ ಬೇರೆ ಯಾವುದೇ ವಸ್ತುವನ್ನು ಬಳಸಲಾಗುವುದಿಲ್ಲವೇ? ಎಲ್ಲಾ ಅಡುಗೆ ಮನೆಗಳಲ್ಲಿ ಮೈದಾ ಇದ್ದೇ ಇರುತ್ತದೆ. ಹುಟ್ಟುಹಬ್ಬದ ಕೇಕ್ಗಳಿಂದ ಹಿಡಿದು ಬೇಕರಿ ಶೈಲಿಯ ಬ್ರೆಡ್ ಗಳು, ಪೂರಿಗಳು ಮತ್ತು ಗರಿಗರಿಯಾದ ತಿಂಡಿಗಳವರೆಗೆ ಮೈದಾ ಉಪಯೋಗವಾಗುತ್ತದೆ. ಮೈದಾವನ್ನು ಅನೇಕ ರೀತಿಯ ಅಡುಗೆಗಳಲ್ಲಿ ಬಳಸಬಹುದಾದರೂ, ಇದು ಆರೋಗ್ಯಕರ ಆಯ್ಕೆಯಲ್ಲ. ಹಾಗಿದ್ದರೆ ಅದನ್ನು ಎಲ್ಲಾ ರೀತಿಯ ಅಡುಗೆಯಲ್ಲಿ ಏಕೆ ಬಳಸಬೇಕು? ಅದರ ಬದಲಿಗೆ ಬೇರೆ ಯಾವುದೇ ವಸ್ತುವನ್ನು ಬಳಸಲಾಗುವುದಿಲ್ಲವೇ? ಮೈದಾವನ್ನು ಸರ್ವ ಉದ್ದೇಶದ ಹಿಟ್ಟು ಎಂದು ಕರೆಯುವುದೇಕೆ? ಮೈದಾವನ್ನು ಗೋಧಿಯಿಂದಲೇ ತಯಾರಿಸಲಾಗುತ್ತದೆ. ಆದರೆ ಇದು ಗೋಧಿ ಧಾನ್ಯದ ಹೊರಗಿನ ಹೊಟ್ಟು ಮತ್ತು ಬೀಜಾಣುವನ್ನು ತೆಗೆದುಹಾಕಿ ತಯಾರಿಸಿದ ಸಂಸ್ಕರಿಸಿದ ಹಿಟ್ಟು. ಉಳಿಯುವುದು ಒಳಭಾಗ ಮಾತ್ರ, ಅದನ್ನು ನಯವಾದ ಮೃದುವಾದ ಪುಡಿಯಾಗಿ ಮಾಡಲಾಗುತ್ತದೆ. ಈ ಸಂಸ್ಕರಣಾ ಪ್ರಕ್ರಿಯೆ ಹಿಟ್ಟನ್ನು ಮೃದುವಾಗಿಸಿ, ಮಿಶ್ರಣ ಸುಗಮಗೊಳಿಸುತ್ತದೆ. ಎಣ್ಣೆ ಸಮೃದ್ಧವಾಗಿರುವ ಬೀಜಾಣುವನ್ನು ತೆಗೆದುಹಾಕಿರುವುದರಿಂದ ಮೈದಾವನ್ನು ಹೆಚ್ಚು ದಿನ ಸಂಗ್ರಹಿಸಬಹುದು. ಇದನ್ನು ಹೆಚ್ಚು ವೈವಿಧ್ಯಮಯವಾಗಿಸುವುದು ಅದರಲ್ಲಿರುವ ಗ್ಲುಟನ್ ಅಂಶ. ಇದು ಗಾಳಿಯನ್ನು ಹಿಡಿದಿಡಲು ಮತ್ತು ಹಿಟ್ಟಿಗೆ ಉಬ್ಬುವ ಗುಣ ನೀಡಲು ಸಹಾಯ ಮಾಡುತ್ತದೆ. ಈ ಸಮತೋಲನದಿಂದಲೇ ಇದನ್ನು ಸರ್ವ ಉದ್ದೇಶದ ಹಿಟ್ಟು ಎಂದು ಕರೆಯಲಾಗುತ್ತದೆ. ಹೀಗಾಗಿ ಇದು ಬ್ರೆಡ್ಗೂ ಹಾಗೂ ಸೂಕ್ಷ್ಮ ಕೇಕ್ಗೂ ಸೂಕ್ತವಾಗುತ್ತದೆ. ಕೇಕ್ ಬೇಯಿಸುವಾಗ ಮೈದಾ ಮೃದುವಾದ, ಹಗುರವಾದ ತುದಿಯನ್ನು ನೀಡುತ್ತದೆ. ಗಾಳಿಯ ಗುಳ್ಳೆಗಳನ್ನು ಹಿಡಿದಿಡುವ ಮೃದು ಗ್ಲುಟನ್ ಜಾಲವನ್ನು ರೂಪಿಸುತ್ತದೆ. ಬ್ರೆಡ್ಗಳಲ್ಲಿ ಮೈದಾ ಬಳಸಿದರೆ ಗ್ಲುಟನ್ ಇನ್ನಷ್ಟು ಬೆಳೆಯುತ್ತದೆ ಮತ್ತು ಉತ್ತಮ ರಚನೆ ಹಾಗೂ ಅಗಿಯುವ ಗುಣ ನೀಡುತ್ತದೆ. ಪೂರಿಗಳಲ್ಲಿ ಇದು ಹಿಟ್ಟನ್ನು ಉಬ್ಬುವಂತೆ ಮಾಡುತ್ತದೆ, ಬಿಸಿ ಎಣ್ಣೆಯಲ್ಲಿ ಸುಂದರವಾಗಿ ಉಬ್ಬಲು ಸಹಾಯ ಮಾಡುತ್ತದೆ. ಮೈದಾ ಆರೋಗ್ಯಕರ ಆಯ್ಕೆಯಲ್ಲವೇಕೆ? ಮೈದಾ ಅಡುಗೆಗೆ ಚೆನ್ನಾಗಿ ಹೊಂದಿಕೊಳ್ಳುತ್ತದೆ. ಆದರೆ ಪೌಷ್ಠಿಕಾಂಶದ ದೃಷ್ಟಿಯಿಂದ ಇದು ಕಡಿಮೆ. ಸಂಸ್ಕರಣಾ ಪ್ರಕ್ರಿಯೆಯಲ್ಲಿ ಫೈಬರ್, ಜೀವಸತ್ವಗಳು ಮತ್ತು ಖನಿಜಗಳು ಕಳೆದುಹೋಗುತ್ತವೆ. ಇದರಲ್ಲಿ ಮುಖ್ಯವಾಗಿ ಸರಳ ಕಾರ್ಬೋಹೈಡ್ರೇಟ್ಗಳು ಉಳಿಯುತ್ತವೆ. ಇದರಿಂದ ಇದು ಬೇಗ ಜೀರ್ಣವಾಗುತ್ತದೆ, ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸಬಹುದು ಮತ್ತು ಹೊಟ್ಟೆ ತುಂಬಿದ ಭಾವನೆಯನ್ನು ಹೆಚ್ಚು ಕಾಲ ನೀಡುವುದಿಲ್ಲ. ಮೈದಾವನ್ನು ಸಂಪೂರ್ಣವಾಗಿ ತೊರೆಯಲು ಸಾಧ್ಯವಿಲ್ಲದಿದ್ದರೂ, ಅದರ ಬದಲಿಗೆ ಆರೋಗ್ಯಕರ ಆಯ್ಕೆಗಳನ್ನು ಮಾಡಬಹುದು. ಮೈದಾದ ಬದಲಿಗೆ ಬಳಸಬಹುದಾದ ಕೆಲವು ಹಿಟ್ಟುಗಳು: ಕೇಕ್ಗಳಿಗೆ: ಮೃದುತ್ವ ಕಳೆದುಕೊಳ್ಳದ ಆರೋಗ್ಯಕರ ಕೇಕ್ಗಳಿಗೆ ಬಾದಾಮಿ ಹಿಟ್ಟು ಉತ್ತಮ ಆಯ್ಕೆ. ಇದು ಸಮೃದ್ಧ ರುಚಿ ಮತ್ತು ತೇವಾಂಶ ನೀಡುತ್ತದೆ. ಆದರೆ ಬಾದಾಮಿ ಹಿಟ್ಟು ಮಾತ್ರ ಬಳಸಿದರೆ ಕೇಕ್ ದಟ್ಟವಾಗಬಹುದು. ಹೀಗಾಗಿ ಸಂಪೂರ್ಣ ಗೋಧಿ ಹಿಟ್ಟಿನೊಂದಿಗೆ ಬೆರೆಸುವುದು ಉತ್ತಮ. ಓಟ್ ಹಿಟ್ಟು ಮತ್ತೊಂದು ಆಯ್ಕೆ; ಇದು ಸ್ವಾಭಾವಿಕವಾಗಿ ಸೌಮ್ಯ ಸಿಹಿತನ ಹೊಂದಿದ್ದು, ಚಹಾ ಕೇಕ್ಗಳಿಗೆ ಸೂಕ್ತವಾಗಿದೆ. ಬ್ರೆಡ್ಗಳಿಗೆ: ಬ್ರೆಡ್ಗೆ ರಚನೆ ಮುಖ್ಯ. ಸಂಪೂರ್ಣ ಗೋಧಿ ಹಿಟ್ಟು ಫೈಬರ್ ಸಮೃದ್ಧವಾಗಿದ್ದು, ದಟ್ಟ ಮತ್ತು ತುಂಬುವ ಬ್ರೆಡ್ ನೀಡುತ್ತದೆ. ಮೃದುವಾದ ತಳಿರು ಬಯಸಿದರೆ ಬಹುಧಾನ್ಯ ಹಿಟ್ಟು ಅಥವಾ ಸ್ವಲ್ಪ ಮೈದಾವನ್ನು ಬೆರೆಸಬಹುದು. ಹೆಚ್ಚು ರಚನೆಗಾಗಿ ಅಧಿಕ ಗ್ಲುಟನ್ ಇರುವ ಬ್ರೆಡ್ ಹಿಟ್ಟನ್ನು ಬಳಸಬಹುದು. ಪೂರಿಗಳಿಗೆ: ಪೂರಿಗಳನ್ನು ತಯಾರಿಸುವಾಗ ಮೈದಾವನ್ನು ಸಂಪೂರ್ಣವಾಗಿ ಬದಲಿಸುವುದು ಕಷ್ಟ. ಆದರೆ ಗೋಧಿ ಮತ್ತು ರವೆಯ ಮಿಶ್ರಣ ಉತ್ತಮ ರಚನೆ ನೀಡುತ್ತದೆ. ಮೊಸರು (ಯೋಗರ್ಟ್) ಸೇರಿಸಿದರೆ ಹಿಟ್ಟು ಮೃದುವಾಗುತ್ತದೆ ಮತ್ತು ಉಬ್ಬುವಿಕೆ ಉತ್ತಮವಾಗುತ್ತದೆ. ತಿನಿಸುಗಳು ಮತ್ತು ಕುಕೀಸ್ಗಳಿಗೆ: ಕಡಲೆ ಹಿಟ್ಟು ಖಾರದ ಬೇಕ್ಸ್ಗಳಲ್ಲಿ ಉತ್ತಮವಾಗಿ ಕೆಲಸ ಮಾಡುತ್ತದೆ ಮತ್ತು ವಿಶಿಷ್ಟ ರುಚಿ ನೀಡುತ್ತದೆ. ರಾಗಿ ಹಿಟ್ಟು ಪೌಷ್ಠಿಕಾಂಶ ಹೆಚ್ಚಿಸುತ್ತದೆ ಹಾಗೂ ಮಣ್ಣಿನ ಸುವಾಸನೆ ನೀಡುತ್ತದೆ. ಗರಿಗರಿಯಾದ ತಿಂಡಿಗಳಿಗೆ ಅಕ್ಕಿ ಹಿಟ್ಟು ಉತ್ತಮ ಆಯ್ಕೆ. ಹೀಗಾಗಿ ಮುಂದಿನ ಬಾರಿ ಕೇಕ್ ಬೇಯಿಸುವಾಗ, ಹಿಟ್ಟು ಬೆರೆಸುವಾಗ ಅಥವಾ ಪೂರಿ ಮಾಡುವಾಗ ಮೈದಾವಿನ ಬದಲಿಗೆ ಬೇರೆ ಆಯ್ಕೆಗಳನ್ನು ಪ್ರಯತ್ನಿಸಿ. ಮೈದಾ ಸರ್ವಉಪಯೋಗಿಯಾಗಿರಬಹುದು, ಆದರೆ ಆರೋಗ್ಯದ ದೃಷ್ಟಿಯಿಂದ ಉತ್ತಮ ಆಯ್ಕೆಯಲ್ಲ.
ಸಹ್ಯಾದ್ರಿ ಕಾಲೇಜಿನಲ್ಲಿ ರಸಪ್ರಶ್ನೆ ಸೇರಿದಂತೆ ವಿವಿಧ ಸ್ಪರ್ಧಾ ಕಾರ್ಯಕ್ರಮ
ಮಂಗಳೂರು: ಸಹ್ಯಾದ್ರಿ ಕಾಲೇಜ್ ಆಫ್ ಇಂಜಿನಿಯರಿಂಗ್ ಆ್ಯಂಡ್ ಮ್ಯಾನೇಜ್ಮೆಂಟ್ ಆಶ್ರಯದಲ್ಲಿ ಸಹ್ಯಾದ್ರಿ ಕಾರ್ನಿವಲ್ ವಿದ್ಯಾರ್ಥಿಗಳಿಗೆ ರಸಪ್ರಶ್ನೆ ಸ್ಪರ್ಧೆ ಸೇರಿದಂತೆ ವಿವಿಧ ಸ್ಪರ್ಧೆಗಳು ಶುಕ್ರವಾರ ಕಾಲೇಜಿನ ಕ್ಯಾಂಪಸ್ನಲ್ಲಿ ನಡೆಯಿತು. ಈ ಕಾರ್ಯಕ್ರಮವನ್ನು ಜೆವಿ ಗ್ರೂಪ್ ಆಫ್ ಕಂಪನಿಯ ನಿರ್ದೇಶಕಿ ಆತ್ಮಿಕಾ ಅಮೀನ್ ಉದ್ಘಾಟಿಸಿ ಮಾತನಾಡಿ ‘ವಿದ್ಯಾರ್ಥಿಗಳು ತಮ್ಮ ಸಮಸ್ಯೆ ಪರಿಹರಿಸುವ ಕೌಶಲ್ಯಗಳನ್ನು ಬೆಳೆಸಿಕೊಳ್ಳುವಂತೆ ಮತ್ತು ನೆಟ್ವರ್ಕಿಂಗ್ ಅವಕಾಶಗಳನ್ನು ಬಳಸಿಕೊಳ್ಳುವಂತೆ ಕರೆ ನೀಡಿದರು. ಮುಖ್ಯ ಅತಿಥಿ ಕಾಲೇಜಿನ ಹಿರಿಯ ವಿದ್ಯಾರ್ಥಿನಿ ರಕ್ಷಾ ಚಿಲಿಂಬಿ ಅವರು ಆತ್ಮವಿಶ್ವಾಸ, ಸಂವಹನ ಮತ್ತು ಅನುಭವದ ಕಲಿಕೆಯ ಮಹತ್ವವನ್ನು ಒತ್ತಿ ವಿವರಿಸಿದರು. ಕಾಲೇಜಿನ ಪ್ರಾಂಶುಪಾಲ ಡಾ.ಎಸ್.ಎಸ್.ಇಂಜಗನೇರಿ ಅವರು ಸಹ್ಯಾದ್ರಿಯ ಸಂಸ್ಥೆಯು ತ್ವರಿತವಾಗಿ ಬೆಳವಣಿಗೆ ಹೊಂದಿದ್ದು, ಪರಿಗಣಿತ ವಿಶ್ವವಿದ್ಯಾಲಯವಾಗುವ ಹಾದಿಯಲ್ಲಿದೆ. ಬಿಬಿಎ, ಬಿಸಿಎ ಮತ್ತು ಎಂಸಿಎ ನಂತಹ ಹೊಸ ಶೈಕ್ಷಣಿಕ ಪದವಿ ಶಿಕ್ಷಣ ಕೋರ್ಸ್ಗಳಿಗೆ ಬೆಂಗಳೂರಿನ ಕ್ರೈಸ್ಟ್ ವಿಶ್ವವಿದ್ಯಾಲಯದೊಂದಿಗೆ ಸಲಹಾ ಒಪ್ಪಂದವನ್ನು ಮಾಡಿಕೊಂಡಿದೆ ಎಂದು ಪ್ರಕಟಿಸಿದರು. ವಿಜ್ ಕ್ವಿಜ್, ಮಾರ್ಕೆಟ್ವರ್ಸ್ ಮತ್ತು ಸ್ಟೂಡೆಂಟ್ ಕಾರ್ನರ್ ಸ್ಪರ್ಧೆಯಲ್ಲಿ ಕರ್ನಾಟಕದ ವಿವಿಧ ಕಾಲೇಜುಗಳಿಂದ 600 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಗ್ರ್ಯಾಂಡ್ ಫಿನಾಲೆಗೆ ಅರ್ಹತೆ ಪಡೆದರು. ಸಹ್ಯಾದ್ರಿ ವಿಜ್ ರಸಪ್ರಶ್ನೆಯನ್ನು ಕ್ವಿಜ್ ಮಾಸ್ಟರ್ ರಕ್ಷಿತ್ ಶೆಟ್ಟಿ ನಡೆಸಿಕೊಟ್ಟರು. ಸಹ್ಯಾದ್ರಿ ವಿಜ್ ರಸಪ್ರಶ್ನೆಯ ಕೊನೆಯಲ್ಲಿ, ತಲಾ ಮೂವರು ಸದಸ್ಯರನ್ನು ಒಳಗೊಂಡ ಆರು ತಂಡಗಳು ಫೈನಲ್ಗೆ ಅರ್ಹತೆ ಪಡೆದವು. ಕಟ್ಪಾಡಿಯ ತ್ರಿಶ ವಿದ್ಯಾ ಕಾಲೇಜ್ ಆಫ್ ಕಾಮರ್ಸ್ ಆ್ಯಂಡ್ ಮ್ಯಾನೇಜ್ಮೆಂಟ್ ಪ್ರಥಮ ಸ್ಥಾನ, ಉಜಿರೆಯ ಎಸ್ಡಿಎಂ ಎರಡನೇ ಸ್ಥಾನ ಮತ್ತು ಮಂಗಳೂರಿನ ಎಂಎಪಿಎಸ್ ಕಾಲೇಜು ಮೂರನೇ ಸ್ಥಾನ ಪಡೆದು ಕ್ರಮವಾಗಿ ರೂ. 25,000, ರೂ. 15,000 ಮತ್ತು ರೂ. 10,000 ನಗದು ಬಹುಮಾನವನ್ನು ಹಂಚಿ ಕೊಂಡವು. ಉಳಿದ ಮೂರು ತಂಡಗಳಿಗೆ ತಲಾ ರೂ. 4,000 ಸಮಾಧಾನಕರ ಬಹುಮಾನಗಳನ್ನು ನೀಡಲಾ ಯಿತು. ವಿದ್ಯಾರ್ಥಿ ಕಾರ್ನರ್ ಬಹುಮಾನವನ್ನು ಜಸ್ಟ್ ಟೈಲ್ಸ್ - ನಿಟ್ಟೆ ಸ್ವರೂಪ್ ಕಾಲೇಜು ಗೆದ್ದುಕೊಂಡಿತು. ಟ್ರಸ್ಟಿ ದೇವದಾಸ್ ಹೆಗ್ಡೆ, ಉಪ ಪ್ರಾಂಶುಪಾಲ ಮತ್ತು ಸಿಒಇ ಡಾ. ಸುಧೀರ್ ಶೆಟ್ಟಿ, ಎಂಬಿಎ ವಿಭಾಗದ ನಿರ್ದೇಶಕ ಡಾ. ವಿಶಾಲ್ ಸಮರ್ಥ, ಡೀನ್ ಸ್ಟ್ರಾಟೆಜಿಕ್ ಪ್ಲಾನಿಂಗ್ ಪ್ರೊ. ರಮೇಶ್ ಕೆ. ಜಿ. ಉಪಸ್ಥಿತರಿದ್ದರು. ಡಾ. ವಿಶಾಲ್ ಸಮರ್ಥ ಸ್ವಾಗತಿಸಿದರು, ಕಾರ್ಯಕ್ರಮ ಸಂಯೋಜಕ ಪ್ರೊ. ಅನಿರುದ್ಧ್ ಭಟ್ ಕಾರ್ನಿವಲ್ನ ಅವಲೋಕನವನ್ನು ಪ್ರಸ್ತುತಪಡಿಸಿದರು. ವಿದ್ಯಾರ್ಥಿ ಸಂಯೋಜಕ ವಿಶಾಖ ಪೈ ವಂದಿಸಿದರು.
ಆಲ್ದೂರು | ಕೆರೆಯಲ್ಲಿ ಮೀನು ಹಿಡಿಯಲು ಹೋದ ಇಬ್ಬರು ಕಾರ್ಮಿಕರು ನೀರಿನಲ್ಲಿ ಮುಳುಗಿ ಮೃತ್ಯು
ಆಲ್ದೂರು: ಸಮೀಪದ ಬಿಳಿಗಿರಿ ಎಸ್ಟೇಟ್ ನಲ್ಲಿ ಕೆರೆಯಲ್ಲಿ ಮೀನು ಹಿಡಿಯಲು ಹೋದ ಇಬ್ಬರು ಕಾರ್ಮಿಕರು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ರವಿವಾರ ಸಂಭವಿಸಿದೆ. ರಮೇಶ್ (27) ಹಾಗೂ ಮಹೇಶ್ (39) ಮೃತಪಟ್ಟ ಕಾರ್ಮಿಕರು. ಕೊಪ್ಪ ತಾಲೂಕಿನ ಗಣಪತಿ ಕಟ್ಟೆ ಗ್ರಾಮದ ನಿವಾಸಿಯಾದ ರಮೇಶ್ ಅವರು ಬಿಳಿಗಿರಿ ಎಸ್ಟೇಟ್ ನಲ್ಲಿ ಎರಡುವರೆ ವರ್ಷಗಳಿಂದ ಕೂಲಿ ಕೆಲಸ ಮಾಡಿಕೊಂಡಿದ್ದರು. ಕಡವಂತಿ ಗ್ರಾಮದ ನಿವಾಸಿಯಾಗಿರುವ ಮಹೇಶ್ ಅವರು ಕುಟುಂಬದೊಂದಿಗೆ ಬಿಳಿಗಿರಿ ಎಸ್ಟೇಟ್ ನಲ್ಲಿ ಒಂದೂವರೆ ವರ್ಷದಿಂದ ಕೂಲಿ ಕೆಲಸ ಮಾಡಿಕೊಂಡಿದ್ದು, ಲೈನ್ ನಲ್ಲಿ ವಾಸವಿದ್ದಾರೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.
Yadgiri | ಬಂಜಾರ ಸಮಾಜ ಸಂಘಟನೆಗೆ ರಾಜ್ಯಾದ್ಯಂತ ಪ್ರವಾಸ : ದೇವರಾಜ್ ನಾಯಕ್
ಯಾದಗಿರಿ: ರಾಜ್ಯದ ಎಲ್ಲ ಜಿಲ್ಲೆಗಳಿಗೂ ಪ್ರವಾಸ ಮಾಡಿ ಸಂಘದ ಪದಾಧಿಕಾರಿಗಳನ್ನು ನೇಮಕ ಮಾಡುವ ಮೂಲಕ ಸಂಘಟನೆಗೆ ಹೆಚ್ಚಿನ ಒತ್ತು ನೀಡಲಾಗುವುದು ಎಂದು ಅಖಿಲ ಭಾರತ ಬಂಜಾರ ಸೇವಾ ಸಂಘದ ನೂತನ ರಾಜ್ಯಾಧ್ಯಕ್ಷ ಹಾಗೂ ಜಿಪಂ ಮಾಜಿ ಸದಸ್ಯ ದೇವರಾಜ್ ನಾಯಕ್ ತಿಳಿಸಿದ್ದಾರೆ. ನಗರದ ಪತ್ರಿಕಾ ಭವನದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಂಬಯಿಯಲ್ಲಿ ನಡೆದ ಸಭೆಯಲ್ಲಿ ಸಂಘದ ರಾಷ್ಟ್ರೀಯ ಅಧ್ಯಕ್ಷ ಡಾ.ಶಂಕರ ಪವಾರ ಅವರು ಹಿಂದಿನ ರಾಜ್ಯ ಘಟಕವನ್ನು ವಿಸರ್ಜಿಸಿ ತಮ್ಮನ್ನು ನೂತನ ರಾಜ್ಯಾಧ್ಯಕ್ಷರಾಗಿ ನೇಮಕ ಮಾಡಿದ್ದಾರೆ ಎಂದು ತಿಳಿಸಿದರು. ಶೈಕ್ಷಣಿಕ ಮತ್ತು ರಾಜಕೀಯವಾಗಿ ಹಿಂದುಳಿದಿರುವ ಬಂಜಾರ ಸಮಾಜವನ್ನು ಮುಖ್ಯವಾಹಿನಿಗೆ ತರುವ ಉದ್ದೇಶದಿಂದ ಕಾರ್ಯಯೋಜನೆ ರೂಪಿಸಲಾಗುವುದು. ಸುಮಾರು 60 ವರ್ಷಗಳ ಹಿಂದೆ ಆಗಿನ ಪ್ರಧಾನಿ ಪಂಡಿತ ಜವಾಹರಲಾಲ್ ನೆಹರು ಅವರಿಂದ ಉದ್ಘಾಟನೆಗೊಂಡ ಈ ಸಂಘವು ಸಮಾಜದ ಅಭಿವೃದ್ಧಿಗೆ ಕೆಲಸ ಮಾಡುತ್ತಿದೆ ಎಂದರು. ಸಂಘದ ವಿರುದ್ಧ ಕೆಲವರು ಮಾಡುತ್ತಿರುವ ಆರೋಪಗಳು ಆಧಾರರಹಿತವಾಗಿದ್ದು, ಸಂಘವೇ ಬಂಜಾರ ಸಮುದಾಯದ ಬೆನ್ನೆಲುಬಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಿದರು. ಯಾದಗಿರಿಯಲ್ಲಿಯೇ ಶೀಘ್ರದಲ್ಲೇ ರಾಜ್ಯಮಟ್ಟದ ಸಮಾವೇಶ ಆಯೋಜಿಸಲಾಗುವುದು. ಈ ಸಮಾವೇಶಕ್ಕೆ ರಾಷ್ಟ್ರೀಯ ಅಧ್ಯಕ್ಷ ಡಾ. ಶಂಕರ ಪವಾರ ಸೇರಿದಂತೆ ವಿವಿಧ ಗಣ್ಯರನ್ನು ಆಹ್ವಾನಿಸಲಾಗುವುದು ಎಂದರು. ಸುದ್ದಿಗೋಷ್ಠಿಯಲ್ಲಿ ರವಿ ರಾಠೋಡ್ ಮುದ್ನಾಳ್, ಬಂಗಾರು ರಾಠೋಡ್, ಮೇಘನಾಥ ಚವ್ಹಾಣ, ಆನಂದ ಚವ್ಹಾಣ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಬಾಕ್ಸ್: ಅಖಿಲ ಭಾರತ ಬಂಜಾರ ಸೇವಾ ಸಂಘದ ರಾಜ್ಯಾಧ್ಯಕ್ಷ ಹಾಗೂ ಯುವ ಘಟಕದ ರಾಜ್ಯಾಧ್ಯಕ್ಷ ಹುದ್ದೆಗಳು ಗಿರಿಜಿಲ್ಲೆಯ ಬಂಜಾರ ಸಮುದಾಯಕ್ಕೆ ಲಭಿಸಿರುವುದು ಸಂತೋಷದ ಸಂಗತಿ ಎಂದು ಹಿರಿಯ ಮುಖಂಡ ಜನಾರ್ಧನ ರಾಠೋಡ್ ಅಭಿನಂದನೆ ಸಲ್ಲಿಸಿದ್ದಾರೆ.
Mysuru | ಕಾವೇರಿ ನದಿಯಲ್ಲಿ ಈಜಲು ಹೋದ 6 ಮಂದಿ ನೀರಿನಲ್ಲಿ ಮುಳುಗಿ ಮೃತ್ಯು
ಮೈಸೂರು: ಕಾವೇರಿ ನದಿಗೆ ಈಜಲು ಹೋಗಿದ್ದ 6 ಮಂದಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಮೈಸೂರು ಜಿಲ್ಲೆ ಕೆ.ಆರ್.ನಗರ ತಾಲ್ಲೂಕು ಅರ್ಕೇಶ್ವರ ದೇಗುಲದ ಬಳಿ ನಡೆದಿದೆ. ಮೃತಪಟ್ಟವರನ್ನು ಯಾಸಿನ್ (23), ಫಾತಿಮ್ (30), ಹುಮಾಯೂನ್ (7), ನೇಹಾನ್(19), ಅಲೀಂ(13) ಎಂದು ತಿಳಿದು ಬಂದಿದ್ದು ಇನ್ನೊಬ್ಬರ ಗುರುತು ಪತ್ತೆಯಾಗಿಲ್ಲ. ಮೈಸೂರು ಜಿಲ್ಲೆಯ ಕೆ.ಆರ್.ನಗರದಲ್ಲಿ ರವಿವಾರ ಉರೂಸ್ ಹಿನ್ನೆಲೆ ದರ್ಗಾಕ್ಕೆ ಬೆಂಗಳೂರು ಮತ್ತು ಊಟಿಯಿಂದ ಸಾಕಷ್ಟು ಸಂಖ್ಯೆಯಲ್ಲಿ ಜನರು ಆಗಮಿಸಿದ್ದರು. ಈ ಸಂದರ್ಭದಲ್ಲಿ ಎಂಟು ಜನರ ತಂಡವೊಂದು ಅರ್ಕೇಶ್ವರ ದೇವಸ್ಥಾನದ ಸಮೀಪವಿರುವ ಕಾವೇರಿ ನದಿಗೆ ಈಜಲು ತೆರಳಿದ್ದಾರೆ. ಈ ವೇಳೆ ನದಿಯಲ್ಲಿ ಮುಳುಗಿದ್ದಾರೆ. ತಕ್ಷಣವೇ ಕಾರ್ಯಪ್ರವೃತ್ತರಾದ ಸ್ಥಳೀಯರು ಇಬ್ಬರನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಉಳಿದ ಆರು ಮಂದಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಈ ಸಂಬಂಧ ಕೆ.ಆರ್.ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. 5 ಲಕ್ಷ ರೂ. ಪರಿಹಾರ ಘೋಷಿಸಿದ ಸಿಎಂ ಸಿದ್ದರಾಮಯ್ಯ ಕಾವೇರಿ ನದಿಯಲ್ಲಿ ಮುಳುಗಿ ಆರು ಮಂದಿ ಮೃತಪಟ್ಟ ಘಟನೆಗೆ ಸಿಎಂ ಸಿದ್ದರಾಮಯ್ಯ ಸಂತಾಪ ಸೂಚಿಸಿದ್ದು, ಘಟನೆಯಲ್ಲಿ ಮೃತಪಟ್ಟವರ ಕುಟುಂಬಕ್ಕೆ ತಲಾ 5 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ. ಈ ಕುರಿತು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು, ಮೈಸೂರಿನ ಕೆ.ಆರ್.ನಗರದ ಅರ್ಕೇಶ್ವರ ದೇಗುಲದ ಬಳಿ ಕಾವೇರಿ ನದಿಯಲ್ಲಿ ಈಜಲು ತೆರಳಿದ್ದ 6 ಮಂದಿ ನೀರುಪಾಲಾದ ವಿಚಾರ ತಿಳಿದು ದುಃಖವಾಯಿತು. ಮೃತರ ಆತ್ಮಕ್ಕೆ ಚಿರಶಾಂತಿ ಸಿಗಲಿ, ಅವರ ಕುಟುಂಬ ಸದಸ್ಯರಿಗೆ ಅಗಲಿಕೆಯ ದುಃಖ ಭರಿಸುವ ಶಕ್ತಿ ಸಿಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ. ಕುಟುಂಬ ಸದಸ್ಯರನ್ನು ಕಳೆದುಕೊಂಡು ನೊಂದಿರುವ ಜೀವಗಳಿಗೆ ಆರ್ಥಿಕ ಸವಾಲುಗಳು ಮತ್ತಷ್ಟು ಬಾಧಿಸದಿರಲಿ ಎಂಬ ಮಾನವೀಯ ಕಾಳಜಿಯೊಂದಿಗೆ ಮೃತರ ಕುಟುಂಬಕ್ಕೆ ತಲಾ 5 ಲಕ್ಷ ರೂಪಾಯಿ ಪರಿಹಾರ ನೀಡಲಾಗುವುದು. ದುರ್ಘಟನೆಯಲ್ಲಿ ರಕ್ಷಿಸಲ್ಪಟ್ಟು, ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರು ಆದಷ್ಟು ಬೇಗ ಗುಣಮುಖರಾಗಿ ತಮ್ಮವರನ್ನು ಕೂಡಿಕೊಳ್ಳಲಿ ಎಂದು ಹಾರೈಸುತ್ತೇನೆ. ಎಂದು ಹೇಳಿದ್ದಾರೆ. ಮೈಸೂರಿನ ಕೆ.ಆರ್.ನಗರದ ಅರ್ಕೇಶ್ವರ ದೇಗುಲದ ಬಳಿ ಕಾವೇರಿ ನದಿಯಲ್ಲಿ ಈಜಲು ತೆರಳಿದ್ದ 6 ಮಂದಿ ನೀರುಪಾಲಾದ ವಿಚಾರ ತಿಳಿದು ದುಃಖವಾಯಿತು. ಮೃತರ ಆತ್ಮಕ್ಕೆ ಚಿರಶಾಂತಿ ಸಿಗಲಿ, ಅವರ ಕುಟುಂಬ ಸದಸ್ಯರಿಗೆ ಅಗಲಿಕೆಯ ದುಃಖ ಭರಿಸುವ ಶಕ್ತಿ ಸಿಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ. ಕುಟುಂಬ ಸದಸ್ಯರನ್ನು ಕಳೆದುಕೊಂಡು ನೊಂದಿರುವ ಜೀವಗಳಿಗೆ… — Siddaramaiah (@siddaramaiah) April 19, 2026
Cauvery River: ಕಾವೇರಿ ನದಿಯಲ್ಲಿ ಈಜಲು ತೆರಳಿದ್ದ 6 ಮಂದಿ ನೀರುಪಾಲು: 5 ಲಕ್ಷ ರೂ. ಪರಿಹಾರ ಘೋಷಿಸಿದ ಸಿದ್ದರಾಮಯ್ಯ
Cauvery River: ಮೈಸೂರಿನ ಕೆ.ಆರ್.ನಗರದ ಅರ್ಕೇಶ್ವರ ದೇಗುಲದ ಬಳಿ ಕಾವೇರಿ ನದಿಯಲ್ಲಿ ಈಜಲು ತೆರಳಿದ್ದ 6 ಮಂದಿ ನೀರುಪಾಲಾಗಿದ್ದು, ಮೃತರ ಕುಟುಂಬಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಲಾ 5 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ. ಈ ಸಂಬಂಧ ಸೋಷಿಯಲ್ ಮೀಡಿಯಾ ಎಕ್ಸ್ನಲ್ಲಿ ಬರೆದುಕೊಂಡಿರುವ ಅವರು, ಮೈಸೂರಿನ ಕೆ.ಆರ್.ನಗರದ ಅರ್ಕೇಶ್ವರ ದೇಗುಲದ ಬಳಿ ಕಾವೇರಿ ನದಿಯಲ್ಲಿ ಈಜಲು ತೆರಳಿದ್ದ

25 C