SENSEX
NIFTY
GOLD
USD/INR

Weather

20    C
...

ಚುಮುಟಿ, ಗುಗ್ಗೆಕಡ್ಡಿ, ಬಳೆ, ಉಂಗುರ ತಯಾರಿಸುವ ಬೈಲ್ ಪತರ್

ಬೈಲ್ ಪತರ್ ಸಮುದಾಯದವರು ಬೀದಿಬದಿಯಲ್ಲಿ ಟೆಂಟ್ ಹಾಕಿಕೊಂಡು ತಾಮ್ರ ಅಥವಾ ಹಿತ್ತಾಳೆ ಲೋಹದಲ್ಲಿ ಚುಮುಟ, ಗುಗ್ಗೆಕಡ್ಡಿ, ಕೈಬಳೆ, ಉಂಗುರ, ಚೈನು ತಯಾರಿಸುತ್ತ, ತಾವು ತಯಾರಿಸಿದ್ದನ್ನು ಅಲ್ಲೇ ಟೆಂಟ್ ಮುಂದೆ ಹರಡಿಕೊಂಡು ಮಾರುತ್ತಿರುತ್ತಾರೆ. ಬಹುತೇಕ ಗ್ರಾಮಾಂತರ ಪ್ರದೇಶದ ಸಂತೆ, ಬಸ್ ಸ್ಟ್ಯಾಂಡ್, ಜಾತ್ರೆಗಳಲ್ಲಿ ಇವರು ಕಾಣಸಿಗುತ್ತಾರೆ. ಚಿನ್ನಬೆಳ್ಳಿ ಕೊಳ್ಳಲಾರದ ಬಳೆ, ಉಂಗುರ, ಒಡವೆ ಧರಿಸಲು ಆಸೆ ಪಡುವ ಕಡುಬಡವರೇ ಇವರ ಗ್ರಾಹಕರು. ಆಯೋಗದ ಕೆಲಸಕ್ಕೆಂದು ಹೊರಟು ಕೊಪ್ಪಳದ ‘ಬೈಲ್ ಪತರ್’ಗಳ ಕಾಲನಿಯಲ್ಲಿ ಅವರ ಬದುಕು, ಬವಣೆಗಳ ಕುರಿತು ಮಾತನಾಡುತ್ತಾ ಮಾಹಿತಿ ಸಂಗ್ರಹಿಸುತ್ತಿದ್ದಾಗ ಅಜ್ಜಿಯೊಂದು ನನ್ನ ಕೈಹಿಡಿದು ನನ್ನ ಉಂಗುರದ ಬೆರಳಿಗೆ ತಾಮ್ರದ ಉಂಗುರ ಹಾಕಿ ಹರಸಿದ್ದು ಇನ್ನೂ ನೆನಪಿದೆ. ನನ್ನ ಜೀವನದಲ್ಲೇ ಬಂಗಾರದ ಅಥವಾ ಬೆಳ್ಳಿ ಉಂಗುರ ಇಟ್ಟುಕೊಳ್ಳದ ನಾನು ಆ ಅಜ್ಜಿಯ ಪ್ರೀತಿಯ ಸಂಕೇತವಾಗಿ, ಆ ಅಜ್ಜಿಯೇ ತಯಾರಿಸಿದ ಆ ತಾಮ್ರದ ಉಂಗುರವನ್ನು ಬಹಳ ದಿನ ಇಟ್ಟುಕೊಂಡಿದ್ದೆ. ಆ ತಾಮ್ರದ ಉಂಗುರ ಕಿಲುಬು ಹಿಡಿದು ಕಪ್ಪಗಾದ ಮೇಲಷ್ಟೆ ಅದನ್ನು ತೆಗೆದಿದ್ದು. ಕರ್ನಾಟಕದ ಗೋಕಾಕ್, ಬಿಜಾಪುರ, ಬೆಳಗಾವಿ, ದಾವಣಗೆರೆ, ಹುಬ್ಬಳ್ಳಿ, ಧಾರವಾಡ, ಕೊಪ್ಪಳ, ರಾಯಚೂರು, ಗುಲ್ಬರ್ಗ, ಸುರಪುರ, ಶಾಪೂರ್, ಗಂಗಾವತಿ, ಹೊಸಪೇಟೆ ಮುಂತಾದೆಡೆ ಊರ ಹೊರಗೆ ಬೈಲ್ ಪತರ್ ಸಮುದಾಯದವರು ವಾಸಿಸುತ್ತಾರೆ. ಮಹಾರಾಷ್ಟ್ರ ಮತ್ತು ಆಂಧ್ರಪ್ರದೇಶದಲ್ಲೂ ಇವರ ಜನಸಂಖ್ಯೆ ಇದೆ. ಬೀದಿಬದಿಯಲ್ಲಿ ಟೆಂಟ್ ಹಾಕಿಕೊಂಡು ತಾಮ್ರ ಅಥವಾ ಹಿತ್ತಾಳೆ ಲೋಹದಲ್ಲಿ ಚುಮುಟ, ಗುಗ್ಗೆಕಡ್ಡಿ, ಕೈಬಳೆ, ಉಂಗುರ, ಚೈನು ತಯಾರಿಸುತ್ತ, ತಾವು ತಯಾರಿಸಿದ್ದನ್ನು ಅಲ್ಲೇ ಟೆಂಟ್ ಮುಂದೆ ಹರಡಿಕೊಂಡು ಮಾರುತ್ತಿರುತ್ತಾರೆ. ಬಹುತೇಕ ಗ್ರಾಮಾಂತರ ಪ್ರದೇಶದ ಸಂತೆ, ಬಸ್ ಸ್ಟ್ಯಾಂಡ್, ಜಾತ್ರೆಗಳಲ್ಲಿ ಇವರು ಕಾಣಸಿಗುತ್ತಾರೆ. ಚಿನ್ನಬೆಳ್ಳಿ ಕೊಳ್ಳಲಾರದ ಬಳೆ, ಉಂಗುರ, ಒಡವೆ ಧರಿಸಲು ಆಸೆ ಪಡುವ ಕಡುಬಡವರೇ ಇವರ ಗ್ರಾಹಕರು. ಬೈಲ್ ಪತರ್ ಸಮುದಾಯದವರು ಬಹುತೇಕ ಒಡಿಶಾದಿಂದ ಕರ್ನಾಟಕಕ್ಕೆ ವಲಸೆ ಬಂದವರೆಂದು ಮಾನವಶಾಸ್ತ್ರಜ್ಜರು ಅಭಿಪ್ರಾಯ ಪಡುತ್ತಾರೆ. ಇವರ ಮುಖಚರ್ಯೆ ಮತ್ತು ದೈಹಿಕ ಸ್ವರೂಪ ಒಡಿಶಾನ್ನರನ್ನು ಹೋಲುವಂತಿದೆ. ಇವರು ಮೂಲತಃ ಅಲೆಮಾರಿ ಸಮುದಾಯವಾಗಿದ್ದು, ಇವರು ಅಲೆಮಾರಿ ಜೀವನ ಮಾಡುವಾಗ ಇವರ ಬಳಿ ಬೆಕ್ಕು, ನಾಯಿ, ಕತ್ತೆಗಳು ಇದ್ದದ್ದರಿಂದ ಇವರನ್ನು ‘ಬೈಲ್ ಪತರ್’ ಎಂದು ಕರೆದರಂತೆ. ಮೇಲುನೋಟಕ್ಕೆ ಇವರ ವೃತ್ತಿಯಿಂದಾಗಿ ವಿಶ್ವಕರ್ಮ, ಕಮ್ಮಾರರಂತೆ ಕಾಣುವ ಈ ಸಮುದಾಯದಲ್ಲಿ ಇವರದೇ ಆದ ಏಳು ಪಂಗಡಗಳಿದ್ದು, ಅವನ್ನು ಗೌಡ್ರು(ಕಟ್ಟಿಮನಿ), ಸಮಂತ, ಪಚ್ಮೆ, ಪಡತ್ನೋಡ್, ಭಂಟೋಡು, ಮೂಕಲಜ್ಜಿ, ಕಬಸ್ತೋಡ್ ಎಂದು ಕರೆಯುತ್ತಾರೆ, ಇವರಾಡುವ ಭಾಷೆಯನ್ನು ‘ಸೂರ್ ಜಗನ್ನಾತಿ’ ಎನ್ನುತ್ತಾರೆ, ಒಡಿಶಾದಲ್ಲಿ ಹುಟ್ಟಿದ ಈ ಭಾಷೆಗೆ ಲಿಪಿ ಇಲ್ಲ. ಈ ಭಾಷೆಯಲ್ಲಿ ಕನ್ನಡ, ಮರಾಠಿ, ಒರಿಯ, ಹಿಂದಿ, ಉರ್ದು ಎಲ್ಲವೂ ಮಿಶ್ರಣವಾಗಿ ಒಳಗೊಂಡಿದೆ. ಹಿಂದೆ ಇವರು ವಿಶ್ವಕರ್ಮ ಅಥವಾ ಆಚಾರಿ ಸಮುದಾಯದಂತೆ ಚಿನ್ನ-ಬೆಳ್ಳಿ ಒಡವೆ ತಯಾರಿಸುತ್ತಾ ಅದೇ ವ್ಯಾಪಾರ ಮಾಡುತ್ತಿದ್ದರಂತೆ. ಚಿನ್ನ, ಬೆಳ್ಳಿಗಳು ಗಗನಕ್ಕೇರಿದ ಮೇಲೆ ಅವು ಇವರ ಕೈಗಟುಕದ ಕಾರಣ ಅದನ್ನು ಬಿಟ್ಟು ತಾಮ್ರ, ಹಿತ್ತಾಳೆ, ಅಲ್ಯುಮಿನಿಯಂ ಗಳಲ್ಲಿ ಒಡವೆ ತಯಾರಿಸಿ ಮಾರುತ್ತಾ ಊರೂರು ಅಲೆದಾಡತೊಡಗಿದರು. ಈ ಬಗ್ಗೆ ಕೇಳಿದಾಗ ‘‘ನಮ್ಮ ಜನಾಂಗದವರು ಒಂದು ಕಡೆ ಇರಲ್ಲ ಸರ್ ನಾವಿದ್ದ ಕಡೆ ಏನಾದರೂ ಕೊಲೆ, ಸುಲಿಗೆ, ಗಲಾಟೆಗಳು ಆದರೆ ಭಯದಿಂದ ಆ ಊರು ಬಿಟ್ಟು ಮುಂದೆ ಹೋಗ್ತೀವಿ..’’ ಎಂದು ಹೇಳುತ್ತಾರೆ. ಇದರಿಂದ ಈ ಅಸಹಾಯಕ ಸಮುದಾಯ ಅದೆಷ್ಟು ದುರ್ಬಲವಾಗಿದೆ, ಅದೆಷ್ಟು ಅಸಹಾಯಕವಾಗಿ ಭಯಭಕ್ತಿಯಿಂದ ಬದುಕುತ್ತಿದೆ ಎನ್ನುವುದು ಅರ್ಥವಾಗುತ್ತದೆ. ಗೋಕಾಕ್ ಡ್ಯಾಮ್ ಕಟ್ಟುವ ಮುಂಚೆ ಅದೇ ಜಾಗದಲ್ಲಿ ಇವರದು ಸುಮಾರು 130 ಕುಟುಂಬಗಳು ವಾಸವಾಗಿ ಇದ್ದವಂತೆ. ಡ್ಯಾಮ್ ಕಟ್ಟುವಾಗ ಇವರನ್ನು ಒಕ್ಕಲೆಬ್ಬಿಸಲಾಯಿತು ಆದರೆ ಅವರಿಗೆ ಸರಕಾರ ಪುನರ್ ವಸತಿ ಕಲ್ಪಿಸಲಿಲ್ಲ, ಅಲ್ಲಿಂದ ಆಚೆ ಅವರಿಗೆ ಸೂರು, ನೆಲೆಯಿಲ್ಲದೆ ಊರೂರು ಸುತ್ತುತ್ತಾ ತಮ್ಮ ಕುಶಲಕರ್ಮದಿಂದ ತಾಮ್ರ, ಹಿತ್ತಾಳೆಯ ಒಡವೆ ಮಾಡಿ ಮಾರುತ್ತಾ ಪಕ್ಕಾ ಅಲೆಮಾರಿಗಳಾದರು. ಇವರು ಎಲ್ಲೇ ಟೆಂಟ್ ಅಥವಾ ಗುಡಾರ ಹಾಕಿದರೆ ಪೊಲೀಸರು ಇವರನ್ನು ಎತ್ತಂಗಡಿ ಮಾಡಿಸುತ್ತಾ ತೊಂದರೆ ನೀಡುತ್ತಾರೆ. ಇವರು ಒಡವೆಗಳನ್ನು ಅಲ್ಲೇ ತಯಾರಿಸಿ ಅಲ್ಲೇ ಮಾರುವುದರಿಂದ ಜನ ಓಡಾಡುವ ಸ್ಥಳಗಳಲ್ಲೇ ಅವರು ನೆಲೆ ನಿಲ್ಲಬೇಕು. ಇಲ್ಲದಿದ್ದಲ್ಲಿ ಇವರ ಹೊಟ್ಟೆಪಾಡು ನಡೆಯಲ್ಲ, ಇವರ ಸಂಕಷ್ಟ ಪೊಲೀಸರಿಗೆ ಅರ್ಥವಾಗಲ್ಲ. ಇವರಲ್ಲಿ ಶಿಕ್ಷಣವಂತೂ ಇಲ್ಲವೇ ಇಲ್ಲ, ಇನ್ನು ಸರಕಾರಿ ಉದ್ಯೋಗ ಎಲ್ಲಿಂದ ಬರಬೇಕು? ಇವರಿಗೆ ಇರಲಿಕ್ಕೆ ನೆಲೆ ಇದ್ದರಲ್ಲವೆ ಮಕ್ಕಳು ಶಾಲೆ ಕಡೆ ಮುಖಮಾಡುವುದು? ಬೈಲ್ ಪತರ್ ಸಮುದಾಯವೇನೋ ಹಿಂದುಳಿದ ವರ್ಗದ ಪ್ರವರ್ಗ ಒಂದರಲ್ಲಿ ಕ್ರಮಸಂಖ್ಯೆ 59(ಎ)ರಲ್ಲಿದೆ. ಆದರೆ ಈ ಸಮುದಾಯದ ಬಗ್ಗೆ ಮಾಹಿತಿ ತಿಳಿಯದ ಅಧಿಕಾರಿಗಳು ಇವರಿಗೆ ಜಾತಿ ಪ್ರಮಾಣ ಪತ್ರ ನೀಡಲ್ಲ. ಈಗ ಇವರು ತಯಾರಿಸುವ ತಾಮ್ರ, ಹಿತ್ತಾಳೆ, ಅಲ್ಯೂಮಿನಿಯಂ ಒಡವೆಗಳನ್ನು ಕೊಳ್ಳುವವರು ಗ್ರಾಮಾಂತರ ಪ್ರದೇಶಗಳಲ್ಲೂ ಕಡಿಮೆಯಾಗಿದ್ದಾರೆ. ಆದ್ದರಿಂದ ಇವರಿಗೆ ಮಾಡಲು ಕೆಲಸವಿಲ್ಲ. ಹೊಟ್ಟೆಪಾಡಿಗಾಗಿ ಗಾರೆ ಕೆಲಸ, ಕೂಲಿ ಕೆಲಸಕ್ಕೆ ಹೋಗುತ್ತಾರೆ. ಕೇವಲ ಸಾವಿರಗಳಲ್ಲಿರುವ ಇಂತಹ ಸೂಕ್ಷ್ಮ ಸಮುದಾಯಗಳನ್ನು ಮೇಲೆತ್ತಲು ಲಕ್ಷಾಂತರ ಕೋಟಿ ಹಣ ಬಜೆಟ್ ನೀಡುವ ಸರಕಾರಗಳಿಗೆ ಕೇವಲ ಒಂದು ಗಂಟೆಯ ಕೆಲಸ ಅಷ್ಟೇ! ಆದರೆ ಸರಕಾರ ನಡೆಸುವವರಿಗೆ ಪಂಚೇಂದ್ರಿಯಗಳು ಇರಬೇಕು. ಬೈಲ್ ಪತ್ತರ್ ಸಮುದಾಯದ ಬಗ್ಗೆ ಸಾಮಾಜಿಕ, ಔದ್ಯೋಗಿಕ, ಆರ್ಥಿಕ ಹಿನ್ನೆಲೆಯಲ್ಲಿ ಅಧ್ಯಯನ ಮಾಡಿದ ನಮ್ಮ ಆಯೋಗ 2010ರಲ್ಲಿ ವಿಶೇಷ ಪ್ಯಾಕೇಜ್(ವಿಶೇಷ ವರದಿ 23/2010) ನೀಡಿ, ಈ ಸಮುದಾಯದ ಅಭಿವೃದ್ಧಿಗೆ ಒಂಭತ್ತು ಅಂಶಗಳನ್ನು ಪರಿಹಾರೋಪಾಯಗಳಾಗಿ ಸರಕಾರಕ್ಕೆ ಸಲಹೆ ನೀಡಿತ್ತು. ದುರಂತವೆಂದರೆ ಅಲ್ಲಿಂದ ಆಚೆ ಅಧಿಕಾರಕ್ಕೆ ಬಂದ ಯಾವುದೇ ಸರಕಾರಗಳು ತಮ್ಮ ಸರಕಾರದ ಹಿಂದುಳಿದ ವರ್ಗಗಳ ಆಯೋಗವೇ ನೀಡಿದ್ದ ವರದಿಯನ್ನು ತೆರೆದು ಕೂಡ ನೋಡಿಲ್ಲ! ಸೋ ಕಾಲ್ಡ್ ‘ಸಾಮಾಜಿಕ ನ್ಯಾಯ’ದ ಹರಿಕಾರ ಸಿದ್ದರಾಮಯ್ಯನವರು ಕೂಡ ಸದಾ ತಮ್ಮ ಜಾತಿಗೆ ಸೀಮಿತರಾಗಿ ಹೋದರೇ ಹೊರತು ತಮ್ಮ ಅಧಿಕಾರದ ಅವಧಿಯಲ್ಲಿ ಇಂತಹ ಸಣ್ಣ ಸಮುದಾಯಗಳಿಗೆ ಎಂದೂ ಸ್ಪಂದಿಸಲೇ ಇಲ್ಲ! ಅವರ ಅಕ್ಕಪಕ್ಕ ಇರುವ, ಸದಾ ‘ಸಾಮಾಜಿಕ ನ್ಯಾಯ’ದ ಭಾಷಣ ಒದರುವ ಬುದ್ಧಿಜೀವಿಗಳಿಗೂ ಇಂತಹ ಅಸಹಾಯಕ ಸಮುದಾಯಗಳು ಕಾಣಲೇ ಇಲ್ಲ. ಬದಲಿಗೆ ಈ ಬುದ್ಧಿಜೀವಿಗಳು ಸದಾ ಸಿದ್ದರಾಮಯ್ಯನವರನ್ನು ಹೊಗಳುತ್ತಾ ಹೊನ್ನ ಶೂಲಕ್ಕೆ ಏರಿಸುತ್ತಾ, ಸಿದ್ದರಾಮಯ್ಯನವರಿಗೆ ಗುರಾಣಿಗಳಾಗಿ ಇವರು ತಮ್ಮ ಬದುಕುಗಳನ್ನು ಮಾತ್ರ ಸಲೀಸಾಗಿ ಶ್ರೀಮಂತಗೊಳಿಸಿಕೊಳ್ಳುತ್ತಿದ್ದಾರೆ. ಇಂತಹ ಅಸಹಾಯಕ, ನೋವುಂಡ ಸಮುದಾಯಗಳ ನಿಟ್ಟುಸಿರು ಇವರಿಗೆ ತಾಕದೆ ಇರಲಾರದು.

ವಾರ್ತಾ ಭಾರತಿ 18 Feb 2026 10:54 am

HASSAN | ರಾಜನಹಳ್ಳಿಯಲ್ಲಿ ಪೆಟ್ರೋಲ್ ಸುರಿದು ಬೆಂಕಿಹಚ್ಚಿ ಸಾರಿಗೆ ಇಲಾಖೆ ನೌಕರನ ಹತ್ಯೆ

10 ಮಂದಿಯ ವಿರುದ್ಧ ಪ್ರಕರಣ ದಾಖಲು

ವಾರ್ತಾ ಭಾರತಿ 18 Feb 2026 10:26 am

ವಿದೇಶಕ್ಕೆ ಹಾರಿದ ಕೈ ಶಾಸಕರ ಮೇಲೆ ಹೈಕಮಾಂಡ್ ಹಾಗೂ ಡಿಕೆಶಿ ಬಣದ ಕಣ್ಣು! ಸುತ್ತಾಟಕ್ಕೆ ಹೋದರೂ ಇಲ್ಲ ನೆಮ್ಮದಿ

ರಾಜ್ಯ ಈಗಾಗಲೇ ನಾಯಕತ್ವ ಬದಲಾವಣೆ ಚರ್ಚೆ ನಡುವೆ ಕಾಂಗ್ರೆಸ್‌ ಶಾಸಕರು ವಿದೇಶ ಪ್ರಯಾಣ ಬೆಳೆಸಿದ್ದಾರೆ. ಇದು ಸದ್ಯ, ರಾಜಕೀಯ ವಲಯದಲ್ಲಿ ಭಾರಿ ಚರ್ಚೆಯನ್ನುಂಟು ಮಾಡಿದ್ದು, ಕೆಲ ಶಾಸಕರು ಇದು ಅವರ ವೈಯಕ್ತಿಕ ಪ್ರವಾಸ ಎಂದು ಹೇಳುತ್ತಿದ್ದಾರೆ. ಆದರೆ, ಈ ಪ್ರವಾಸದ ಕುರಿತು ಕೆಪಿಸಿಸಿಗೂ ತಿಳಿಸದೆ ಇರುವುದು ಸದ್ಯ ಭಾರಿ ಅನುಮಾನಗಳಿಗೆ ಎಡೆಮಾಡಿಕೊಟ್ಟಿದ್ದು, ಈ ವಿಚಾರ ನನಗೆ ತಿಳಿಸಿಲ್ಲ ಎಂದು ಡಿಸಿಎಂ ಡಿಕೆ ಶೀವಕುಮಾರ್‌ ಹೇಳಿಕೆ ನೀಡಿದ್ದು, ಸದ್ಯ ಈ ಶಾಸಕರ ವಿದೇಶ ಪ್ರವಾಸದ ಮೇಲೆ ಹದ್ದಿನ ಕಣ್ಣಿಟ್ಟು ಗಮನಿಸುತ್ತಿದ್ದಾರೆ. ಇವೆಲ್ಲಾದರ ನಡುವೆ ಈ ಪ್ರವಾಸಕ್ಕೆ ಪ್ರಾಯೋಜಕತ್ವ ನೀಡಿದ್ದು ಯಾರು ಎಂಬ ಕುರಿತು ಚರ್ಚೆಗಳು ಶುರುವಾಗಿದ್ದು, ಈ ಕುರಿತ ವರದಿ ಇಲ್ಲಿದೆ..

ವಿಜಯ ಕರ್ನಾಟಕ 18 Feb 2026 10:26 am

Gold: ಚಿನ್ನ - ಬೆಳ್ಳಿಗೆ ಪಿಂಕ್ ಕಾಗದ ದಶಕಗಳಿಂದ ಆಸರೆ: ಏನಿದರ ವಿಶೇಷತೆ, ಹಿನ್ನೆಲೆ ವಿವರ ಇಲ್ಲಿದೆ

Gold: ಚಿನ್ನ ಎಂದಿಗೂ ನಿದ್ರಿಸುವುದಿಲ್ಲ ಎನ್ನುವ ಮಾತಿದೆ. ಅಂದರೆ ಚಿನ್ನದ ಮೇಲೆ ಹೂಡಿಕೆ ಮಾಡಿದರೆ, ನಿಮಗೆ ಎಂದಿಗೂ ನಷ್ಟವಾಗುವುದಿಲ್ಲ. ಚಿನ್ನ ಇಂದಲ್ಲ ನಾಳೆ ಒಳ್ಳೆಯ ಲಾಭವನ್ನು ತರಲಿದೆ ಎನ್ನುವುದು ಇದರ ಅರ್ಥ. ಒಮ್ಮೆ ನೀವು ಯಾವುದಾದರೂ ನಿರ್ದಿಷ್ಟ ವಸ್ತುವಿನ ಮೇಲೆ ಹೂಡಿಕೆ ಮಾಡಿ, ಬಿಟ್ಟರೆ ಸಾಕು ಅದರ ಮೌಲ್ಯವು ಹೆಚ್ಚಾಗುತ್ತಿರುತ್ತದೆ ಎನ್ನುವುದು ಈ ಮಾತಿನ ಅರ್ಥ. ಆದರೆ

ಒನ್ ಇ೦ಡಿಯ 18 Feb 2026 10:21 am

ಇದಕ್ಕಿಂತ ಸ್ಪಷ್ಟವಾಗಿ ಹೇಳಲು ಬರಲ್ಲ; ಭಾರತದಿಂದ ಪಾಕಿಸ್ತಾನ ಪರಮಾಣು ಸೌಲಭ್ಯಕ್ಕೆ ಧಕ್ಕೆ ನಿಜ ಎಂದ ಟಾಮ್‌ ಕೂಪರ್‌!

ಶಂಖದಿಂದ ಬಂದರೆನೇ ತೀರ್ಥ ಎನ್ನುವ ಹಾಗೆ, ಪಾಕಿಸ್ತಾನಕ್ಕೆ ಪಶ್ಚಿಮದಿಂದ ಬರುವ ಆದೇಶಗಳು, ವರದಿಗಳೇ ವೇದವಾಕ್ಯ. ಆಪರೇಷನ್‌ ಸಿಂಧೂರ ಸೇನಾ ಕಾರ್ಯಾಚರಣೆ ಸಮಯದಲ್ಲಿ ಭಾರತವು ಕಿರಾನಾ ಹಿಲ್ಸ್‌ ಪರಮಾಣು ಸೌಲಭ್ಯಕ್ಕೆ ಧಕ್ಕೆ ತಂದಿರುವ ಬಗ್ಗೆ ಯಾರೂ ಏನೇ ಹೇಳಿದರೂ ಕೇಳದ ಪಾಕಿಸ್ತಾನ, ಈಗ ವಾಯುಯಾನ ವಿಶ್ಲೇಷಕ ಟಾಮ್‌ ಕೂಪರ್‌ ನೀಡಿರುವ ವರದಿಯಿಂದ ಮುಖ ಮುಚ್ಚಿಕೊಂಡಿದೆ. ಭಾರತೀಯ ವಾಯುಸೇನೆ, ಪಾಕಿಸ್ತಾನದ ಕಿರಾನಾ ಹಿಲ್ಸ್‌ ಮೇಲೆ ದಾಳಿ ಮಾಡಿರುವುದು ನಿಜ ಎಂದು ಟಾಮ್‌ ಕೂಪರ್‌ ಸ್ಪಷ್ಟಪಡಿಸಿದ್ದಾರೆ.

ವಿಜಯ ಕರ್ನಾಟಕ 18 Feb 2026 10:19 am

ಸೂರ್ಯಗ್ರಹಣ ಕಣ್ತುಂಬಿಕೊಂಡ ಜನರು, ಕಂಕಣ ಸೂರ್ಯಗ್ರಹಣದ ಬಗ್ಗೆ ಇಲ್ಲಿದೆ ಮಾಹಿತಿ... Solar Eclipse

ವರ್ಷದ ಮೊದಲ ಸೂರ್ಯಗ್ರಹಣ ಸಂಭವಿಸಿದ್ದು, ಕಂಕಣ ಸೂರ್ಯಗ್ರಹಣ ಕಣ್ತುಂಬಿಕೊಂಡ ಜನರು ಪುಳಕಿತರಾದರು. ಖಗೋಳ ಲೋಕದಲ್ಲಿ ಮತ್ತೊಂದು ಅದ್ಭುತ ಘಟನೆ ನಡೆದಿದ್ದು, ಫೆಬ್ರವರಿ ತಿಂಗಳಲ್ಲಿ ವರ್ಷದ ಮೊದಲ ಸೂರ್ಯಗ್ರಹಣ ಬಂದಿದೆ. ಬಾಹ್ಯಾಕಾಶ ಲೋಕದ ವಿಸ್ಮಯವನ್ನ ಇಡೀ ಪ್ರಪಂಚವೇ ಕಣ್ತುಂಬಿಕೊಂಡಿದೆ. 2026 ಫೆಬ್ರವರಿ 17 ಮಂಗಳವಾರ ಸಂಭವಿಸಿದ ಕಂಕಣ ಸೂರ್ಯಗ್ರಹಣ, ದಕ್ಷಿಣ ಆಫ್ರಿಕಾ ಸೇರಿ ಜಿಂಬಾಬ್ವೆ, ಬೋತ್ಸ್‌ವಾನಾ, ನಮೀಬಿಯಾ, ಮಾರಿಷಸ್,

ಒನ್ ಇ೦ಡಿಯ 18 Feb 2026 10:16 am

ಫೈರ್‌ ಮೆನ್‌ ಹುದ್ದೆಯನ್ನು ಫೈರ್‌ ಫೈಟರ್‌ ಎಂದು ಬದಲಿಸಿದ ಅಗ್ನಿಶಾಮಕ ಇಲಾಖೆ: ಮಹಿಳೆಯರಿಗೆ ಸಿಗಲಿದ್ಯಾ ಅವಕಾಶ?

ರಾಜ್ಯದಲ್ಲಿ ಅಗ್ನಿಶಾಮಕ ಇಲಾಖೆ ಆರಂಭವಾಗಿ ಸುಮಾರು 8 ದಶಕಗಳು ಕಳೆದಿದ್ದರೂ ರಾಜ್ಯದಲ್ಲಿ ಒಬ್ಬ ಮಹಿಳಾ ಫೈರ್‌ ಫೈಟರ್‌ ಸಹ ನೇಮಕವಾಗಿರಲಿಲ್ಲ. ಇದೀಗ ಈ ಪರಿಸ್ಥಿತಿ ಬದಲಾಗುವ ಸಮಯ ಬಂದಿದ್ದು, ಕೇಂದ್ರ ಸರ್ಕಾರದ ಸೂಚನೆಯಂತೆ ಅಗ್ನಿಶಾಮಕ ಇಲಾಖೆಯಲ್ಲಿನ ಫೈರ್ ಮೆನ್‌ ಹಾಗೂ ಲೀಡ್‌ ಫೈರ್‌ ಮೆನ್‌ ಹುದ್ದೆಯ ಹೆಸರುಗಳನ್ನು ಫೈರ್‌ ಫೈಟರ್‌ ಹಾಗೂ ಲೀಡ್‌ ಫೈರ್‌ ಫೈಟರ್‌ ಎಂದು ಬದಲಾಯಿಸಲಾಗುತ್ತಿದೆ. ಇದರಿಂದಾಗಿ ಮುಂಬರುವ ದಿನಗಳಲ್ಲಿ ಮಹಿಳೆಯರನ್ನು ಈ ಹುದ್ದೆಗೆ ನೇಮಿಸಿಕೊಳ್ಳಲು ಸುಲಭವಾಗಲಿದ್ದು, ರಾಜ್ಯದ ಅಗ್ನಿಶಾಮಕ ಇಲಾಖೆಯಲ್ಲಿ ಮಹಿಳಾ ಫೈರ್‌ ಫೈಟರ್‌ ಗಳನ್ನು ಕಾಣುವ ಭರವಸೆ ಮೂಡಿದೆ. ಇನ್ನು, ವಿಶೇಷವೆಂದರೆ, ಈ ಕುರಿತಂತೆ ವಿಕ 83 ವರ್ಷಗಳು ಕಳೆದರೂ ರಾಜ್ಯದಲ್ಲಿ ಒಬ್ಬ ಮಹಿಳಾ ಫೈರ್‌ ಫೈಟರ್‌ ಸಹ ನೇಮಕವಾಗಿಲ್ಲ ಎಂಬ ಕುರಿತ ವಿಸೃತ್ತ ವರದಿಯನ್ನು ಹಂಚಿಕೊಂಡ ಕೆಲ ದಿನಗಳಲ್ಲೇ ಅಗ್ನಿಶಾಮಕ ಇಲಾಖೆ ಈ ನಿರ್ಧಾರ ಕೈಗೊಂಡಿದೆ.

ವಿಜಯ ಕರ್ನಾಟಕ 18 Feb 2026 9:59 am

ಇರಾನ್ ವಿರುದ್ಧ ಅಮೆರಿಕ ಸೇನೆಯ ಅಂತಿಮ ಹಂತದ ಸಿದ್ಧತೆ, ಆತಂಕದ ವಾತಾವರಣ ನಿರ್ಮಾಣ | US Military

ಇರಾನ್ ಹೇಗಾದರೂ ಸರಿ ಅಮೆರಿಕ ಎದುರು ಮಂಡಿಯೂರಬೇಕು ಎಂಬುದು ಟ್ರಂಪ್ ಅವರ ನಿರ್ಧಾರ. ಹೀಗಾಗಿಯೇ ಡೊನಾಲ್ಡ್ ಟ್ರಂಪ್ ಅವರು ಎಲ್ಲಾ ರೀತಿಯ ಅಸ್ತ್ರ ಪ್ರಯೋಗ ಮಾಡುತ್ತಾ, ಎದುರಾಳಿ ಇರಾನ್ ಎದೆಯಲ್ಲಿ ಭಯ ಹುಟ್ಟಿಸುವ ಕೆಲಸ ಮಾಡುತ್ತಿದ್ದಾರೆ. ಅಮೆರಿಕ ಮತ್ತು ಇರಾನ್ ನಡುವಿನ ರಾಜತಾಂತ್ರಿಕ ಸಂಧಾನ ಯಶಸ್ವಿಯಾದರೆ ಯುದ್ಧವನ್ನ ತಪ್ಪಿಸುವ ಸಾಧ್ಯತೆ ಇದ್ರೂ, ಪರ್ಷಿಯನ್ ಗಲ್ಫ್ ಪ್ರದೇಶದಲ್ಲಿ ದೊಡ್ಡಣ್ಣ

ಒನ್ ಇ೦ಡಿಯ 18 Feb 2026 9:39 am

Explained: ಸಿಂಧೂ ಬಳಿಕ ಪಾಕಿಸ್ತಾನಕ್ಕೆ ರಾವಿ ನದಿಯ ಹೆಚ್ಚುವರಿ ನೀರಿನ ಹರಿವು ನಿಲ್ಲಿಸಲು ಭಾರತ ಸಜ್ಜು; ನಿಲ್ಲದು ಜಲಯುದ್ಧ!

ಪಹಲ್ಗಾಮ್‌ ಭಯೋತ್ಪಾದಕ ದಾಳಿ ಯೋಜನೆ ರೂಪಿಸಿ ಸಂಕಷ್ಟಕ್ಕೆ ಸಿಲುಕಿರುವ ಪಾಕಿಸ್ತಾನ, ಭಾರತ ನೀಡುತ್ತಿರುವ ವಾಟರ್‌ ಶಾಕ್‌ಗೆ ಅಕ್ಷರಶಃ ಬೆಚ್ಚಿಬಿದ್ದಿದೆ. ಈಗಾಗಲೇ ಪಾಕಿಸ್ತಾನದೊಂದಿಗಿನ ಸಿಂಧೂ ಜಲ ಒಪ್ಪಂದ ರದ್ದುಗೊಳಿಸಿರುವ ಭಾರತ, ಈಗ ಪಾಕಿಸ್ತಾನಕ್ಕೆ ಹರಿಯುವ ರಾವಿ ನದಿಯ ಹೆಚ್ಚುವರಿ ನೀರನ್ನು ತಡೆಯಲು ಮುಂದಾಗಿದೆ. ಒಂದು ವೇಳೆ ಭಾರತ ರಾವಿ ನದಿಯ ಹೆಚ್ಚುವರಿ ನೀರನ್ನು ತಡೆದಿದ್ದೇ ಆದಲ್ಲಿ, ಪಾಕಿಸ್ತಾನದ ಜಲಕಂಟಕ ತೀವ್ರ ಸ್ವರೂಪ ಪಡೆಯುವುದು ಖಚಿತ. ಈ ಕುರಿತು ಇಲ್ಲಿದೆ ಹೆಚ್ಚಿನ ಮಾಹಿತಿ.

ವಿಜಯ ಕರ್ನಾಟಕ 18 Feb 2026 9:35 am

ಸಿಎಂ ಬದಲಾವಣೆ : ಗುರುಗಳು ಜಪಕ್ಕೆ ಕೂತಿದ್ದಾರೆ, 3ನೇ ಡೇಟ್ ರಹಸ್ಯ ಬಿಚ್ಚಿಟ್ಟ- ಇಕ್ಬಾಲ್ ಹುಸೇನ್

Karnataka CM Race : ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಕೂಗು ಮತ್ತೆ ಜೋರಾಗಿ ಸಾಗುತ್ತಿದೆ. ಡಿಸಿಎಂ ಡಿಕೆ ಶಿವಕುಮಾರ್ ಅವರ ಆಪ್ತ ವಲಯದಲ್ಲಿ ಕಾಣಿಸಿಕೊಳ್ಳುವ ಇಕ್ಬಾಲ್ ಹುಸೇನ್, ಎರಡು ಡೇಟ್ ಮಿಸ್ ಆಗಿರಬಹುದು, ಮೂರನೇ ಡೇಟ್ ನಲ್ಲಿ ನಮ್ಮ ಸಾಹೇಬ್ರು ಮುಖ್ಯಮಂತ್ರಿ ಆಗುವುದು ಖಚಿತ ಎಂದು ಹೇಳಿದ್ದಾರೆ. ಇನ್ನೊಂದು ಕಡೆ, ಸುಮಾರು ಇಪ್ಪತ್ತು ಶಾಸಕರು ವಿದೇಶ ಪ್ರವಾಸಕ್ಕೆ ಹೊರಟಿದ್ದಾರೆ.

ವಿಜಯ ಕರ್ನಾಟಕ 18 Feb 2026 9:33 am

ಭಾರತ–ಫ್ರಾನ್ಸ್ ರಕ್ಷಣಾ ಮೈತ್ರಿಗೆ ಹೊಸ ಮೈಲಿಗಲ್ಲು: ಮೋದಿ – ಮ್ಯಾಕ್ರನ್ ಭೇಟಿ, ಕರ್ನಾಟಕದ ಹೆಲಿಕಾಪ್ಟರ್ ಘಟಕ ಉದ್ಘಾಟನೆ

ನವದೆಹಲಿ: ಫ್ರಾನ್ಸ್‌ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರು ಭಾರತಕ್ಕೆ ಭೇಟಿ ನೀಡಿದ್ದು, ರಕ್ಷಣಾ ಕ್ಷೇತ್ರದಲ್ಲಿ ಹಲವು ಮಹತ್ವದ ಚರ್ಚೆ ನಡೆದಿದೆ. ಭಾರತ ಹಾಗೂ ಫ್ರಾನ್ಸ್‌ ನಡುವೆ ಮಂಗಳವಾರ ಫೆಬ್ರವರಿ 17ರಂದು ನಡೆದ ದ್ವಿಪಕ್ಷೀಯ ಮಾತುಕತೆಯಲ್ಲಿ ರಕ್ಷಣಾ ಸಂಬಂಧಕ್ಕೆ ಉತ್ತೇಜನ ನೀಡಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಮುಂಬೈನಲ್ಲಿ ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರೊಂದಿಗೆ ದ್ವಿಪಕ್ಷೀಯ

ಒನ್ ಇ೦ಡಿಯ 18 Feb 2026 9:15 am

ಮಂಗಳೂರು : ಶ್ರೀನಿವಾಸ್ ಗ್ರೂಪ್ಸ್ ನ ಸ್ಥಾಪಕ ಡಾ.ಸಿಎ.ಎ ರಾಘವೇಂದ್ರ ರಾವ್ ನಿಧನ

ಮಂಗಳೂರು: ಖ್ಯಾತ ಶಿಕ್ಷಣ ತಜ್ಞ, ಉದ್ಯಮಿ ಡಾ. ಸಿ.ಎ. ಎ. ರಾಘವೇಂದ್ರ ರಾವ್ (88) ನಿಧನರಾದರು. 1988ರಲ್ಲಿ ಎ. ಶಾಮ್ ರಾವ್ ಪ್ರತಿಷ್ಠಾನವನ್ನು ಸ್ಥಾಪಿಸಿದ ಡಾ. ಸಿ.ಎ. ಎ. ರಾಘವೇಂದ್ರ ರಾವ್ ಅವರು, ಶ್ರೀನಿವಾಸ್ ಗ್ರೂಪ್ ಆಫ್ ಕಾಲೇಜುಗಳು ರಾಜ್ಯದ ಪ್ರಮುಖ ಶಿಕ್ಷಣ ಸಂಸ್ಥೆಗಳಾಗಿ ಬೆಳೆಯುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಏಳು ವಿದ್ಯಾರ್ಥಿಗಳೊಂದಿಗೆ ಆರಂಭವಾದ ಶ್ರೀನಿವಾಸ್ ಕಾಲೇಜ್ ಆಫ್ ಹೋಟೆಲ್ ಮ್ಯಾನೇಜ್ಮೆಂಟ್ ನಂತರ ಹಲವು ವೃತ್ತಿಪರ ಹಾಗೂ ಉನ್ನತ ಶಿಕ್ಷಣ ಸಂಸ್ಥೆಗಳಾಗಿ ವಿಸ್ತರಿಸಿತು. 1980ರಲ್ಲಿ ‘ಶ್ರೀನಿವಾಸ್’ ಎಂಬ ತ್ರಿ-ಸ್ಟಾರ್ ಸಸ್ಯಾಹಾರಿ ಹೋಟೆಲ್ ಸ್ಥಾಪಿಸಿದ್ದರು. ಶಿಕ್ಷಣ ಹಾಗೂ ಸಮಾಜಸೇವೆಯಲ್ಲಿ ನೀಡಿದ ಕೊಡುಗೆಗಾಗಿ ಅವರಿಗೆ ಕರ್ನಾಟಕ ರಾಜ್ಯೋತ್ಸವ ಜಿಲ್ಲಾ ಪ್ರಶಸ್ತಿ (2004) ಸೇರಿದಂತೆ ಅನೇಕ ಪ್ರಶಸ್ತಿಗಳು ಲಭಿಸಿವೆ. ಮೃತರು ಪತ್ನಿ ವಿಜಯಲಕ್ಷ್ಮಿ, ಮಗಳು ಪದ್ಮಿನಿ, ಮಗ ಶ್ರೀನಿವಾಸ್ ಹಾಗೂ ನಾಲ್ವರು ಮೊಮ್ಮಕ್ಕಳನ್ನು ಅಗಲಿದ್ದಾರೆ.

ವಾರ್ತಾ ಭಾರತಿ 18 Feb 2026 9:13 am

ವೃತ್ತಿಜೀವನದ ಮಹತ್ವದ ತಿರುವನ್ನು ನೆನಪಿಸಿಕೊಂಡ ಹಾರ್ದಿಕ್ ಪಾಂಡ್ಯ

ಹೊಸದಿಲ್ಲಿ: ಭಾರತ ಟಿ20 ಕ್ರಿಕೆಟ್ ತಂಡದ ಪ್ರಮುಖ ಆಲ್‌ರೌಂಡರ್‌ಗಳಲ್ಲೊಬ್ಬರಾದ ಹಾರ್ದಿಕ್ ಪಾಂಡ್ಯ ತಮ್ಮ ವೃತ್ತಿಜೀವನಕ್ಕೆ ಮಹತ್ವದ ತಿರುವು ನೀಡಿದ ಘಟನೆಯನ್ನು ನೆನಪಿಸಿಕೊಂಡಿದ್ದಾರೆ. 2016ರ ಐಸಿಸಿ ಪುರುಷರ ಟಿ20 ವಿಶ್ವಕಪ್ ಪಂದ್ಯಾವಳಿಯಲ್ಲಿ ಬಾಂಗ್ಲಾದೇಶ ವಿರುದ್ಧದ ನಾಟಕೀಯ ಕೊನೆಯ ಓವರ್ ಅವರನ್ನು ದೇಶದ ಕ್ರಿಕೆಟ್ ಕ್ಷೇತ್ರದಲ್ಲಿ ಐಕಾನ್ ಆಗಿ ರೂಪಿಸಿತು. ಕೊನೆಯ ಓವರ್‌ನಲ್ಲಿ 11ಕ್ಕಿಂತ ಹೆಚ್ಚು ರನ್ ನೀಡದಂತೆ ಮಿತವ್ಯಯ ಸಾಧಿಸುವ ಹೊಣೆ ಹೊತ್ತಿದ್ದ ಪಾಂಡ್ಯ, ಟೂರ್ನಿಯನ್ನು ಭಾರತದ ಪಾಲಿಗೆ ಅವಿಸ್ಮರಣೀಯ ಕ್ಷಣವನ್ನಾಗಿಸಿದರು. ಅದಾದ ಒಂದು ದಶಕದ ಬಳಿಕ ಭಾರತೀಯ ತಂಡ ಚಾಂಪಿಯನ್‌ಶಿಪ್ ಉಳಿಸಿಕೊಳ್ಳುವ ಅಭಿಯಾನವನ್ನು ಮುಂದುವರಿಸುತ್ತಿದೆ. ಆ ರಾತ್ರಿ ತಮ್ಮ ವೃತ್ತಿಜೀವನಕ್ಕೆ ಭದ್ರವಾದ ಅಡಿಪಾಯ ದೊರಕಿತು ಹಾಗೂ ಮುಂದಿನ ದಿನಗಳಲ್ಲಿ ಅನುಕೂಲಕರ ಘಟನೆಗಳು ವೃತ್ತಿಬದುಕನ್ನು ಕಟ್ಟಿಕೊಟ್ಟವು ಎಂದು ಅವರು ಹೇಳಿದ್ದಾರೆ. ನಾನು ಇಂದು ಈ ಮಟ್ಟದ ಆಟಗಾರನಾಗಿದ್ದರೆ ಇಂತಹ ಕ್ಷಣಗಳೇ ಕಾರಣ ಎಂದು ನಾನು ಭಾವಿಸುತ್ತೇನೆ. ಅಂತರರಾಷ್ಟ್ರೀಯ ವೃತ್ತಿಜೀವನದ ಆರಂಭಿಕ ಹಂತಗಳಲ್ಲಿ ಸವಾಲುಗಳು ಇದ್ದವು. ನಾನು ನನ್ನ ಸಾಮರ್ಥ್ಯವನ್ನು ಪ್ರದರ್ಶಿಸಬೇಕಿತ್ತು. ಮುಖ್ಯವಾಗಿ ವಿಶ್ವಾಸವನ್ನು ಬೆಳೆಸಿಕೊಳ್ಳಬೇಕಿತ್ತು. ಕ್ರಿಕೆಟ್‌ನಲ್ಲಿ ಶೇಕಡಾ 1ರಷ್ಟು ಅವಕಾಶವೂ ಮಹತ್ವದ್ದೇ. ಪಂದ್ಯದ ಕೊನೆಯ ಎಸೆತದವರೆಗೂ ಪಂದ್ಯ ಮುಗಿದಿರುವುದಿಲ್ಲ ಎಂದು ಜಿಯೊಸ್ಟಾರ್ ಜೊತೆಗಿನ ಸಂವಾದದಲ್ಲಿ ವಿವರಿಸಿದರು. ಬಾಂಗ್ಲಾದೇಶ ವಿರುದ್ಧದ ಪಂದ್ಯ ಇದಕ್ಕೆ ಉತ್ತಮ ಉದಾಹರಣೆ. ವಿಕೆಟ್ ಪಡೆಯುವ ಒಂದು ಎಸೆತದ ಮೊದಲು ಬ್ಯಾಟರ್ ನನ್ನ ಎದುರೇ ಪಂದ್ಯ ಮುಗಿದಂತೆ ಸಂಭ್ರಮಿಸಲು ಆರಂಭಿಸಿದ್ದರು. ಎಲ್ಲವೂ ನನ್ನ ಕಣ್ಣೆದುರೇ ನಡೆಯುತ್ತಿತ್ತು. ಇಂತಹ ಘಟನೆಗಳು ಮಧುರ ನೆನಪಿನ ಕ್ಷಣಗಳು. ಆರಂಭಿಕ ದಿನಗಳು ಹೇಗಿದ್ದವು ಎಂದು ನೆನಸಿಕೊಂಡಾಗ, ನನ್ನ ವೃತ್ತಿಜೀವನ ರೂಪಿಸುವಲ್ಲಿ ಅದು ಮಹತ್ವದ ಕ್ಷಣವಾಯಿತು ಎಂದು ಅವರು ಹೇಳಿದರು. ಭಾರತ ರೋಚಕವಾಗಿ ಈ ಪಂದ್ಯವನ್ನು ಒಂದು ರನ್ ಅಂತರದಿಂದ ಗೆದ್ದಿತ್ತು. ತಮ್ಮ ಬ್ಯಾಟಿಂಗ್ ಸಾಮರ್ಥ್ಯ ಇನ್ನೂ ಸಂಪೂರ್ಣವಾಗಿ ಅನಾವರಣಗೊಂಡಿಲ್ಲ ಎಂಬ ವಿಶ್ವಾಸವನ್ನು ಪಾಂಡ್ಯ ವ್ಯಕ್ತಪಡಿಸಿದರು. ಇತ್ತೀಚಿನ ಐಪಿಎಲ್ ಸೀಸನ್ ಬಳಿಕ ಬ್ಯಾಟ್ಸ್‌ಮನ್ ಆಗಿಯೂ ರೂಪುಗೊಳ್ಳಬೇಕು ಎಂಬ ನಿರ್ಧಾರಕ್ಕೆ ಬಂದಿರುವುದಾಗಿ ತಿಳಿಸಿದ ಅವರು, ಪ್ರೇಯಸಿ ಮೋಹಿಕಾ ಅವರ ಪಾತ್ರವನ್ನೂ ಸ್ಮರಿಸಿದರು.

ವಾರ್ತಾ ಭಾರತಿ 18 Feb 2026 8:42 am

IT - BT: ಕರಾವಳಿ ಅಭಿವೃದ್ಧಿ: ಸಚಿವ ಪ್ರಿಯಾಂಕ್ ಖರ್ಗೆ vs ಉದ್ಯಮಿ ಮೋಹನ್‌ದಾಸ್ ಪೈ ನಡುವೆ ಟ್ವೀಟ್ ಸಮರ

ಸಚಿವ ಪ್ರಿಯಾಂಕ್ ಖರ್ಗೆ vs ಉದ್ಯಮಿ ಮೋಹನ್‌ದಾಸ್ ಪೈ ನಡುವೆ ಟ್ವೀಟ್ ವಾರ್ ಶುರುವಾಗಿದೆ. ಕರ್ನಾಟಕದ ಕರಾವಳಿ ಅಭಿವೃದ್ಧಿ, ಕರಾವಳಿಗೆ ಐಟಿ - ಬಿಟಿ ಕಂಪನಿಗಳು ಬರುವ ವಿಚಾರ ಹಾಗೂ ಕರ್ನಾಟಕದ ಆದಾಯದಲ್ಲಿ ಕರಾವಳಿಯ ಪಾಲು ಸೇರಿದಂತೆ ಹಲವು ವಿಚಾರಗಳಿಗೆ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆ ನಡೆದಿದೆ. ಮುಖ್ಯವಾಗಿ ಕೋಮುಗಲಭೆಯ ಕಾರಣಕ್ಕೆ ಕರ್ನಾಟಕದ ಕರಾವಳಿಗೆ ಐಟಿ -

ಒನ್ ಇ೦ಡಿಯ 18 Feb 2026 8:25 am

ರೈತರ ಕೊರಳಿಗೆ ಉರುಳಾಗಿರುವ ಜಾನುವಾರು ಹತ್ಯೆ ಪ್ರತಿಬಂಧಕ ಕಾಯ್ದೆ

ಮಾರ್ಚ್ 6ಕ್ಕೆ ರಾಜ್ಯ ಬಜೆಟ್ ಮಂಡನೆಯಾಗಲಿದೆ. ಇದಕ್ಕೆ ಸಂಬಂಧಿಸಿ ಬಜೆಟ್ ಪೂರ್ವಭಾವಿ ಸಭೆಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ನಡೆಯುತ್ತಿವೆ. ವಿವಿಧ ವಲಯಗಳ ಮುಖಂಡರು ಅಭಿವೃದ್ಧಿಗೆ ಸಂಬಂಧಿಸಿ ತಮ್ಮ ಅಭಿಪ್ರಾಯಗಳನ್ನು, ಬೇಡಿಕೆಗಳನ್ನು ಸಭೆಯ ಮುಂದಿಡುತ್ತಿದ್ದಾರೆ. ಈ ಸಂದರ್ಭದಲ್ಲಿ ರಾಜ್ಯದ ರೈತ ಮುಖಂಡರು ಹಲವು ಬೇಡಿಕೆಗಳನ್ನು ಮಂಡಿಸಿದ್ದು, ಅವುಗಳನ್ನು ಈ ಬಾರಿಯ ಬಜೆಟ್‌ನಲ್ಲಿ ಈಡೇರಿಸಬೇಕು ಎಂದು ಒತ್ತಾಯಿಸಿದ್ದಾರೆ. ಬೇಡಿಕೆಗಳಲ್ಲಿ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಕಾಯ್ದೆಯನ್ನು ಹಿಂದೆಗೆಯಬೇಕು ಎನ್ನುವುದು ಒಂದು. ಅದರ ಜೊತೆಗೇ ಕೃಷಿ ಚಟುವಟಿಕೆಗಳಲ್ಲಿ ತೊಡಗಿರುವ ರೈತ ಯುವಕರನ್ನು ವಿವಾಹವಾಗುವ ಹೆಣ್ಣು ಮಕ್ಕಳಿಗೆ ಕನಿಷ್ಠ 10 ಲಕ್ಷ ರೂ. ಠೇವಣಿ ಇಡಬೇಕು, ಕೃಷಿ ಪೂರಕ ಸಣ್ಣ ಉದ್ದಿಮೆಗಳನ್ನು ಸ್ಥಾಪಿಸುವ ಜತೆಗೆ ಭದ್ರತೆ ನೀಡಿ ಬಡ್ಡಿ ರಹಿತ ಸಾಲಕ್ಕೆ ಉತ್ತೇಜನ ನೀಡಬೇಕು, ರೈತರಿಗೆ ನೇರ ತಲುಪುವಂತೆ ಪಿಡಿಎ ವ್ಯವಸ್ಥೆಯನ್ನು ಮಾಡಬೇಕು. ಕೇಂದ್ರ ಸರಕಾರ ಜಾರಿಗೆ ತರಲು ಹೊರಟಿರುವ ವಿದ್ಯುತ್ ಕಾಯ್ದೆ 2025, ಬೀಜ ಮಸೂದೆ 2025, ಕೃಷಿ ಉತ್ಪನ್ನಗಳ ಮಾರುಕಟ್ಟೆ ರಾಷ್ಟ್ರೀಯ ಚೌಕಟ್ಟು ನೀತಿಯನ್ನು ರಾಜ್ಯದಲ್ಲಿ ಜಾರಿಗೆ ತರುವುದಿಲ್ಲ ಎಂದು ಈ ಅಧಿವೇಶನದಲ್ಲಿ ಘೋಷಿಸಬೇಕು, ರೈತರಿಗೆ ಬೆಂಬಲ ಬೆಲೆ ಒದಗಿಸುವ ಸಲುವಾಗಿ ಕನಿಷ್ಠ 20 ಸಾವಿರ ಕೋಟಿ ಆವರ್ತ ನಿಧಿಯನ್ನು ಮೀಸಲಿಡಬೇಕು, ಸಮಗ್ರ ಪಡಿತರ ವ್ಯವಸ್ಥೆಯನ್ನು ರೂಪಿಸಿ ಭತ್ತ, ರಾಗಿ, ಜೋಳ, ತೊಗರಿಬೇಳೆ, ಎಣ್ಣೆಕಾಳು, ಸಿರಿಧಾನ್ಯ ಮುಂತಾದ ಅವಶ್ಯಕ ಉತ್ಪನ್ನಗಳನ್ನು ಎಂ.ಎಸ್.ಪಿ ದರದಲ್ಲಿ ರೈತರಿಂದಲೇ ನೇರವಾಗಿ ಕೊಳ್ಳುವ ವ್ಯವಸ್ಥೆಯನ್ನು ರೂಪಿಸಬೇಕು, ಬಗರ್ ಹುಕುಂ ಸಾಗುವಳಿದಾರರಿಗೆ ದರಖಾಸ್ತು ಮಂಜೂರು ಮಾಡಲು ತೊಡಕಾಗಿರುವ ತಾಂತ್ರಿಕ ತೊಂದರೆಗಳನ್ನು ನಿವಾರಿಸಲು ಕಂದಾಯ ಕಾಯ್ದೆಗೆ ತಿದ್ದುಪಡಿ ತಂದು ಹಕ್ಕುಪತ್ರ ನೀಡಲು ಘೋಷಿಸಬೇಕು, 2013ರ ಭೂ-ಸ್ವಾಧೀನ ಕಾಯ್ದೆಯನ್ನು ಕೈಗಾರಿಕೆ, ರಾಷ್ಟ್ರೀಯ ಹೆದ್ದಾರಿ, ನೀರಾವರಿ ಯೋಜನೆಗಳಿಗೆ ಭೂ ಸ್ವಾಧೀನ ಪಡಿಸಿಕೊಳ್ಳಲು ಅನ್ವಯ ಮಾಡಲಾಗಿದೆ. ಆದರೆ, ಗ್ರಾಮಾಂತರ ಪ್ರದೇಶದಲ್ಲಿ ವಸತಿ ಉದ್ದೇಶಕ್ಕೆ ಸ್ವಾಧೀನ ಪಡಿಸಿಕೊಳ್ಳುವ ಭೂಮಿಗೂ ಈ ಕಾಯ್ದೆಯನ್ನು ಅನ್ವಯಿಸಬೇಕು. ಕರ್ನಾಟಕದ ಕೃಷಿಯ ಹೆಚ್ಚು ಭೂಮಿ ಮರಳು ಭೂಮಿಯಾಗಿ ಪರಿವರ್ತನೆ ಆಗುತ್ತಿರುವುದು ತುಂಬಾ ಆತಂಕಕಾರಿಯಾಗಿದೆ. ಇದನ್ನು ತಡೆಗಟ್ಟಲು ವಿಶೇಷ ಕಾಳಜಿಯ ಕಾರ್ಯಕ್ರಮವನ್ನು ರೂಪಿಸಬೇಕು ಎಂದು ಸಭೆಯಲ್ಲಿ ಆಗ್ರಹಿಸಿದ್ದಾರೆ. ಸುಮಾರು 25 ಅಂಶಗಳ ಬೇಡಿಕೆಗಳನ್ನು ಮಂದಿಟ್ಟು, ಈ ಬಾರಿಯ ಬಜೆಟ್‌ನಲ್ಲಿ ಕೃಷಿಗೆ ಆದ್ಯತೆಯನ್ನು ನೀಡಬೇಕು ಎಂದು ಮುಖ್ಯಮಂತ್ರಿಯನ್ನು ಒತ್ತಾಯಿಸಿದ್ದಾರೆ. ಬೇಡಿಕೆಗಳಲ್ಲಿ ಜಾನುವಾರು ಹತ್ಯೆ ಪ್ರತಿಬಂಧಕ ಕಾಯ್ದೆ ಗೆ ಸಂಬಂಧಿಸಿ ರೈತರ ಬೇಡಿಕೆಗೆ ರಾಜಕೀಯ ಆಯಾಮವೂ ಇದೆ. ಈ ಕಾಯ್ದೆ ರೈತರ ಪಾಲಿಗೆ ಉರುಳಾಗಿ ಪರಿಣಮಿಸಿದೆ. ಜಾನುವಾರು ಸಾಕಣೆಯ ಮೂಲಕ ಬದುಕು ಕಟ್ಟಿಕೊಂಡಿರುವ ಗ್ರಾಮೀಣ ಪ್ರದೇಶದ ಸಾವಿರಾರು ರೈತರು ಈ ಕಾಯ್ದೆಯ ಕಾರಣದಿಂದಲೇ ಜಾನುವಾರು ಸಾಕಣೆಗೆ ಬೆನ್ನು ಹಾಕುವ ಪರಿಸ್ಥಿತಿನಿರ್ಮಾಣವಾಗಿದೆ. ಈ ಕಾಯ್ದೆಯನ್ನು ಜಾನುವಾರುಗಳನ್ನು ಸಾಕುವ ರೈತರ ಹಿತಾಸಕ್ತಿಗಾಗಿ ಜಾರಿಗೊಳಿಸಲಾಗಿದೆ ಎಂದು ನಂಬಿಸಿ ರೈತರ ಕೊರಳು ಕುಯ್ಯುವ ಕೆಲಸವನ್ನು ಹಿಂದಿನ ಬಿಜೆಪಿ ಸರಕಾರ ಮಾಡಿದೆ. ಇಂತಹದೊಂದು ಕಾಯ್ದೆಯ ಬೇಡಿಕೆ ರೈತರಿಂದ ಯಾವತ್ತೂ ಬಂದಿರಲಿಲ್ಲ. ಇದು ಕೃಷಿಯೊಂದಿಗೆ ಯಾವ ಸಂಬಂಧವನ್ನು ಹೊಂದಿರದ ಆರೆಸ್ಸೆಸ್ ಸಂಘಟನೆಯಿಂದ ಹೊರಹೊಮ್ಮಿದ ಆಗ್ರಹವಾಗಿತ್ತು. ರಾಜ್ಯದಲ್ಲಿ ದನಗಳ್ಳರ ಹಾವಳಿ ಹೆಚ್ಚಿದೆ, ಅಕ್ರಮವಾಗಿ ದನಸಾಗಾಟ ನಡೆಯುತ್ತಿದೆ, ಅಕ್ರಮವಾಗಿ ಜಾನುವಾರು ಹತ್ಯೆ ನಡೆಯುತ್ತಿದೆ ಎನ್ನುವ ರಾಜಕೀಯ ಗದ್ದಲಗಳನ್ನು ಕೃತಕವಾಗಿ ಸೃಷ್ಟಿಸಿ ಬಳಿಕ ಇಂತಹದೊಂದು ಕಾಯ್ದೆಯನ್ನು ರೈತರ ಹಿತಾಸಕ್ತಿಯನ್ನು ನೆಪ ಮಾಡಿ ಜಾರಿಮಾಡಲಾಯಿತು. ಆದರೆ ಇಲ್ಲಿಯವರೆಗೆ ಈ ಕಾಯ್ದೆಯಿಂದ ನಮಗೆ ಲಾಭವಾಗಿದೆ ಎಂದು ಎದೆಮುಟ್ಟಿ ಒಬ್ಬನೇ ಒಬ್ಬ ರೈತನಿಗೆ ಹೇಳಲು ಸಾಧ್ಯವಾಗಿಲ್ಲ. ಬದಲಿಗೆ ತಾನು ಸಾಕಿದ ಗೋವನ್ನು ಯಾರಿಗೆ, ಯಾವಾಗ ಮಾರಾಟ ಮಾಡಬೇಕು, ಮಾಡಬಾರದು ಎನ್ನುವ ಹಕ್ಕನ್ನು ರೈತ ಕಳೆದುಕೊಳ್ಳುವಂತಾಯಿತು. ರಾಜ್ಯದಲ್ಲಿ ಅಕ್ರಮ ದನಸಾಗಾಟ, ಅಕ್ರಮಕಸಾಯಿಖಾನೆ, ಅಕ್ರಮ ಗೋಹತ್ಯೆಗಳು ನಡೆಯುತ್ತಿತ್ತು ಎನ್ನುವುದರಲ್ಲಿ ಎರಡು ಮಾತಿಲ್ಲ. ಅಮಾನವೀಯವಾಗಿ ಗೋವುಗಳನ್ನು ಸಾಗಿಸುತ್ತಿದ್ದ ಪ್ರಕರಣಗಳು ವ್ಯಾಪಕವಾಗಿ ಬೆಳಕಿಗೆ ಬಂದಿವೆ. ಅಕ್ರಮ ಗೋಗಳ್ಳರು ಮತ್ತು ಅಕ್ರಮವಾಗಿ ಅಮಾನವೀಯರೀತಿಯಲ್ಲಿ ಗೋವುಗಳ ಸಾಗಾಟದಲ್ಲಿ ರೈತರ ತಪ್ಪಿರಲಿಲ್ಲ. ಆದರೆ ಇಂದು ಬಿಜೆಪಿ ತಂದ ಕಾನೂನು ಗೋಸಾಗಾಟಗಾರರನ್ನು ಶಿಕ್ಷಿಸುವುದಕ್ಕಿಂತಲೂ ಹೆಚ್ಚಾಗಿ ರೈತರನ್ನು ಶಿಕ್ಷಿಸುತ್ತಿದೆ. ತಮ್ಮ ಹಟ್ಟಿಯಲ್ಲಿರುವ ಅನುಪಯುಕ್ತ ಗೋವುಗಳನ್ನು ಹಿಂದೆಲ್ಲ ಉತ್ತಮ ದರಕ್ಕೆ ಮಾರಾಟ ಮಾಡಿ ಅದರಿಂದ ಆದಾಯಗಳನ್ನು ಪಡೆಯುತ್ತಿದ್ದರು. ಈ ಆದಾಯ ಹಟ್ಟಿಯಲ್ಲಿರುವ ಇತರ ಗೋವುಗಳ ಖರ್ಚುವೆಚ್ಚಗಳನ್ನು ಭರಿಸಲು ಸಹಾಯ ಮಾಡುತ್ತಿತ್ತು. ರೈತರ ಪಾಲಿಗೆ ತಮ್ಮ ಹಟ್ಟಿಯಲ್ಲಿದ್ದ ಗೋವುಗಳು ಒಂದು ರೀತಿಯ ಕರೆನ್ಸಿ ಆಗಿರುತ್ತಿದ್ದವು. ಅವರ ಕಷ್ಟ ಕಾಲಕ್ಕೆ ಅದು ನೆರವಾಗುತ್ತಿತ್ತು. ಆದರೆ ಇಂದು ಅನುಪಯುಕ್ತ ಜಾನುವಾರುಗಳನ್ನು ಮಾರುವ ಹಿಂದಿನ ಸ್ವಾತಂತ್ರ್ಯ ರೈತರಿಗೆ ಉಳಿದಿಲ್ಲ. ಈ ಕಾನೂನನ್ನು ದುರುಪಯೋಗ ಪಡಿಸಿಕೊಂಡು ಪೊಲೀಸರು ಮತ್ತು ನಕಲಿ ಗೋರಕ್ಷಕರು ರೈತರನ್ನು ಶೋಷಣೆ ಮಾಡುತ್ತಿದ್ದಾರೆ. ಇಂದು ರೈತರು ಸಾಕುವುದಕ್ಕೆ ದನ ಸಾಗಾಟ ಮಾಡುವುದು ಕೂಡ ಕಷ್ಟವಾಗುತ್ತಿದೆ. ಅನುಪಯುಕ್ತ ದನವನ್ನು ಗೋಶಾಲೆಗಳಿಗೆ ಸೇರಿಸಬೇಕು ಅಥವಾ ನಕಲಿ ಗೋರಕ್ಷಕರಿಗೆ ಕಮಿಶನ್ ನೀಡಿ ಅವರ ಮೂಲಕವೇ ಅದನ್ನು ಮಾರಾಟ ಮಾಡಬೇಕು ಎನ್ನುವ ಸ್ಥಿತಿ ನಿರ್ಮಾಣವಾಗಿದೆ. ಗೋವಿನ ಜೊತೆಗೆ ಯಾವುದೇ ಸಂಬಂಧವಿಲ್ಲದ ರೌಡಿ ಶೀಟರ್‌ಗಳು ಇಂದು ನಕಲಿ ಗೋರಕ್ಷರಾಗಿ ಓಡಾಡುತ್ತಿದ್ದಾರೆ. ಪ್ರಚೋದನಾತ್ಮಕವಾದ ದ್ವೇಷ ರಾಜಕೀಯಕ್ಕಷ್ಟೇ ಈ ಕಾಯ್ದೆ ದುರ್ಬಳಕೆಯಾಗುತ್ತಿದೆ. ಈ ಕಾಯ್ದೆಯಿಂದಾಗಿ ಗ್ರಾಮೀಣ ಪ್ರದೇಶಗಳಲ್ಲಿ ನಡೆಯುತ್ತಿರುವ ಜಾನುವಾರು ಸಂತೆಗಳು ಗಮನಾರ್ಹವಾಗಿ ಇಳಿಕೆಯಾಗಿದೆ. ಸಂತೆಗೆ ಜಾನುವಾರುಗಳನ್ನು ತಂದ ರೈತರು, ಗಿರಾಕಿಗಳಿಲ್ಲದೆ ಅದನ್ನು ಹಾಗೆಯೇ ವಾಪಸ್ ಕೊಂಡು ಹೋಗುತ್ತಿದ್ದಾರೆ. ಈ ಜಾನುವಾರುಗಳನ್ನು ಮಾರಾಟ ಮಾಡಲೂ ಆಗದೆ, ಇತ್ತ ಇಟ್ಟುಕೊಳ್ಳಲು ಆಗದೆ ರೈತರು ರಸ್ತೆಗೆ ಬಿಡುತ್ತಿದ್ದಾರೆ. ಇದೇ ಸಂದರ್ಭದಲ್ಲಿ ರೈತರ ಹೆಸರಿನಲ್ಲಿ ನಕಲಿ ಗೋರಕ್ಷಕರು ಮಾತ್ರವಲ್ಲ, ಅಕ್ರಮ ಗೋಶಾಲೆಗಳೂ ಹುಟ್ಟಿಕೊಂಡಿವೆ. ಈ ಗೋಶಾಲೆಗಳು ಅಕ್ರಮಗಳ ಬೀಡಾಗಿವೆ. ಸರಕಾರದಿಂದ ಬಿಡುಗಡೆಯಾಗುತ್ತಿರುವ ಕೋಟ್ಯಂತರ ಹಣ ಈ ಗೋಶಾಲೆಗಳ ಪಾಲಾಗುತ್ತಿದೆ. ಈ ಎಲ್ಲ ಶೋಷಣೆಗಳಿಂದ ರೈತರು ಮುಕ್ತಿ ಪಡೆಯಬೇಕಾದರೆ ಸರಕಾರ ಗೋಹತ್ಯೆ ನಿಷೇಧ ಕಾಯ್ದೆಯನ್ನು ಹಿಂದೆಗೆದು ಜಾನುವಾರು ಮಾರಾಟದ ಹಕ್ಕನ್ನು ರೈತರಿಗೆ ಮರಳಿಸಬೇಕು. ಇದೇ ಸಂದರ್ಭದಲ್ಲಿ ಗೋಕಳ್ಳರ, ಅಕ್ರಮ ಗೋಸಾಗಾಟಗಾರರ ವಿರುದ್ಧ ಕಠಿಣ ಕಾಯ್ದೆಯನ್ನು ಮಾಡಬೇಕು. ಅಕ್ರಮವಾಗಿ ಗೋಸಾಗಾಟ ಮಾಡಿದರೆ ಅಥವಾ ಅಮಾನವೀಯವಾಗಿ ಗೋವುಗಳನ್ನು ಸಾಗಿಸಿದ ಪ್ರಕರಣ ಕಂಡು ಬಂದರೆ ಕಠಿಣ ಶಿಕ್ಷೆ ವಿಧಿಸುವಂತಹ ಕಾಯ್ದೆಗಳನ್ನು ಜಾರಿಗೊಳಿಸಬೇಕು. ಹಾಗೆಯೇ ನಕಲಿ ಗೋರಕ್ಷಕರ ವಿರುದ್ಧವೂ ಕಠಿಣ ಕಾಯ್ದೆ ಜಾರಿಯಾಗಬೇಕು. ಅನುಪಯುಕ್ತ ಗೋವುಗಳನ್ನು ಸಾಕಲೆಂದೇ ಮಾಡಿರುವ ಎಲ್ಲ ಗೋಶಾಲೆಗಳನ್ನು ಮುಚ್ಚಿ ಸರಕಾರ ಅಧಿಕೃತವಾಗಿ ಗೋಶಾಲೆಗಳಿಗೆ ಬಿಡುಗಡೆ ಮಾಡುತ್ತಿರುವ ಹಣವನ್ನು ನಿಜವಾದ ಅರ್ಥದಲ್ಲಿ ಗೋವುಗಳನ್ನು ಸಾಕುವ ರೈತರಿಗೆ ತಲುಪಿಸುವ ಕೆಲಸ ಮಾಡಬೇಕು. ಈ ಮೂಲಕ ಗ್ರಾಮೀಣ ಪ್ರದೇಶದಲ್ಲಿ ಗೋವುಗಳನ್ನು ಸಾಕುವ ರೈತರು ಆರ್ಥಿಕವಾಗಿ ಚೇತರಿಕೆಯನ್ನು ಪಡೆಯಬಹುದು. ಗೋ ಹತ್ಯೆ ಕಾಯ್ದೆಯ ಹಿಂದಿರುವ ರಾಜಕೀಯದ ಬಗ್ಗೆ ಕಾಂಗ್ರೆಸ್ ಪಕ್ಷ ಹಲವು ಬಾರಿ ಮಾತನಾಡಿದೆ. ಇದೀಗ ಈ ಕಾಯ್ದೆಯನ್ನು ಹಿಂದೆಗೆಯಬೇಕು ಎಂದು ರೈತರೇ ಒತ್ತಾಯಿಸುತ್ತಿದ್ದಾರೆ. ಸರಕಾರ ಈ ಬಜೆಟ್ ಸಂದರ್ಭದಲ್ಲಿ ರೈತರ ಕೊರಳಿಗೆ ಉರುಳಾಗಿರುವ ಕಾಯ್ದೆಯನ್ನು ಹಿಂದೆಗೆದು ನಕಲಿ ಗೋರಕ್ಷಕರಿಂದ, ಗೋಕಳ್ಳರಿಂದ, ಅಕ್ರಮ ಗೋಸಾಗಾಟಗಾರರಿಂದ ರೈತರನ್ನು ರಕ್ಷಿಸಲು ಪರ್ಯಾಯ ಕಾನೂನೊಂದನ್ನು ಜಾರಿಗೊಳಿಸಬೇಕು. 

ವಾರ್ತಾ ಭಾರತಿ 18 Feb 2026 8:00 am

ನ್ಯೂಯಾರ್ಕ್ ಚರ್ಚ್ ನಲ್ಲಿ ಸ್ಫೋಟ: ಐವರಿಗೆ ಗಾಯ

ನ್ಯೂಯಾರ್ಕ್: ಇಲ್ಲಿನ ಬೂಮ್ವಿಲ್ಲೆ ಪಟ್ಟಣದ ಸ್ಟೇಟ್ ರೂಟ್ ನಂ. 12ರ ಅಬಂಡಂಟ್ ಲೈಫ್ ಫೆಲೋಶಿಪ್ ಚರ್ಚ್ ನಲ್ಲಿ ಸಂಭವಿಸಿದ ಭೀಕರ ಸ್ಫೋಟದಲ್ಲಿ ಕನಿಷ್ಠ ಐದು ಮಂದಿ ಗಾಯಗೊಂಡಿದ್ದಾರೆ. ನ್ಯೂಯಾರ್ಕ್ ಸ್ಟೇಟ್ ಪೊಲೀಸರು ಘಟನೆ ಬಗ್ಗೆ ತನಿಖೆ ಆರಂಭಿಸಿದ್ದಾರೆ. ಅಮೆರಿಕ ಕಾಲಮಾನದ ಪ್ರಕಾರ ಬೆಳಿಗ್ಗೆ 10.23ರ ವೇಳೆಗೆ ಘಟನೆ ಸಂಭವಿಸಿದ್ದು, ಚರ್ಚ್ ನ ಒಳಭಾಗದಲ್ಲಿ ಅನಿಲದ ವಾಸನೆ ಬರುತ್ತಿದೆ ಎಂದು ವರದಿಯಾದ ಸ್ವಲ್ಪ ಹೊತ್ತಿನಲ್ಲೇ ಸ್ಫೋಟ ಸಂಭವಿಸಿದೆ. ಸ್ಫೋಟಕ್ಕೆ ಮುನ್ನ ಅನಿಲದ ವಾಸನೆ ಬಂದಿದ್ದಾಗಿ ಪ್ರತ್ಯಕ್ಷದರ್ಶಿಗಳು ತನಿಖಾಧಿಕಾರಿಗಳಿಗೆ ಹೇಳಿದ್ದಾರೆ. ಘಟನೆ ಬಗ್ಗೆನ್ಯೂಸ್ ವೀಕ್ ಗೆ ಹೇಳಿಕೆ ನೀಡಿದ ಪೊಲೀಸರು, ಬೂನ್ವಿಲ್ಲೆ ಅಗ್ನಿಶಾಮಕ ದಳದ ಸಿಬ್ಬಂದಿ ಕಟ್ಟಡದ ಒಳಗೆ ಇದ್ದು, ನಾಲ್ವರು ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಒಬ್ಬ ನಾಗರಿಕ ಸೇರಿದಂತೆ ಐದು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಇಬ್ಬರ ಸ್ಥಿತಿ ಚಿಂತಾಜನಕವಾಗಿದ್ದು, ಉಳಿದ ಮೂವರಿಗೆ ಅಪಾಯ ಇಲ್ಲ ಎಂದು ಹೇಳಿದ್ದಾರೆ. ಚರ್ಚ್ ಕಟ್ಟಡ ಸಂಪೂರ್ಣ ನಾಶವಾಗಿದ್ದು, ಯಾವುದೇ ಅಪರಾಧ ಚಟುವಟಿಕೆಯ ಸೂಚನೆಗಳು ಕಾಣುತ್ತಿಲ್ಲ. ಪ್ರೊಪೇನ್ ಸಿಲಿಂಡರ್ ಗಳಿಂದ ಸ್ಫೋಟ ಸಂಭವಿಸಿರಬೇಕು ಎಂದು ಅಂದಾಜಿಸಿದ್ದಾಗಿ ಪೊಲೀಸರು ವಿವರಿಸಿದ್ದಾರೆ. ಚರ್ಚ್ ನ ಪಾಸ್ಟರ್ ಮತ್ತು ಇತರರು ಪ್ರೊಪೇನ್ ಕಂಪನಿಗೆ ಮನವಿ ಮಾಡಿಕೊಂಡಿದ್ದು, ಸ್ಫೋಟಕ್ಕೆ ಮುನ್ನ ಅನಿಲ ಸೋರಿಕೆ ಬಗ್ಗೆ ಮಾಹಿತಿ ನೀಡಿದ್ದರು ಎಂದು ಚರ್ಚ್ ಧರ್ಮಾಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ.

ವಾರ್ತಾ ಭಾರತಿ 18 Feb 2026 7:51 am

ಕರಾವಳಿ ಕರ್ನಾಟಕದ ಶಿಕ್ಷಣ ಮತ್ತು ಉದ್ಯೋಗಾವಕಾಶಗಳನ್ನು ಕೊಟ್ಟ ಸಿಎ ರಾಘವೇಂದ್ರ ರಾವ್ ನಿಧನ

ಕರಾವಳಿ ಕರ್ನಾಟಕದಲ್ಲಿ ಶ್ರೀನಿವಾಸ್ ಗ್ರೂಪ್ ಆಫ್ ಇನ್‌ಸ್ಟಿಟ್ಯೂಷನ್ಸ್‌ಗಳನ್ನು ತೆರೆದು 18 ಕ್ಕೂ ಹೆಚ್ಚು ವೃತ್ತಿಪರ ಕಾಲೇಜುಗಳನ್ನು ತೆರದು ಶಿಕ್ಷಣ ಕ್ಷೇತ್ರಕ್ಕೆ ಹಾಗೂ ವಿದ್ಯಾರ್ಥಿಗಳ ಭವಿಷ್ಯಕ್ಕೆ ನೆರವಾದ ಮಹಾನ್ ವ್ಯಕ್ತಿ ಸಿಎ, ಎ ರಾಘವೇಂದ್ರ ರಾವ್ ಅವರು ಮಂಗಳವಾರ ರಾತ್ರಿ ನಿಧನಹೊಂದಿದ್ದಾರೆ.

ವಿಜಯ ಕರ್ನಾಟಕ 18 Feb 2026 7:16 am

ಕರ್ನಾಟಕ ಬೆಂಗಳೂರಿನಲ್ಲಿ ಐದು ದಿನಗಳ ಕಾಲ ಶುಷ್ಕ ವಾತಾವರಣ ಮುನ್ಸೂಚನೆ ಮತ್ತು ಸ್ಥಿರತೆ,ಕರ್ನಾಟಕ ಬೆಂಗಳೂರು ಶುಷ್ಕ ಅವಧಿಯನ್ನು ಅನುಭವಿಸುತ್ತಿದ್ದಂತೆ ಸ್ಥಿರ ತಾಪಮಾನದ ನಿರೀಕ್ಷೆ,ಕರ್ನಾಟಕ ಹವಾಮಾನದ ಐದು ದಿನಗಳ ಮುನ್ನೋಟವು ಬೆಂಗಳೂರಿನಲ್ಲಿ ಶುಷ್ಕ ಪರಿಸ್ಥಿತಿಗಳನ್ನು ಎತ್ತಿ ತೋರಿಸುತ್ತದೆ,ಬೆಂಗಳೂರು ಪ್ರದೇಶದ ಹವಾಮಾನ ಯೋಜನೆಯು ದೀರ್ಘಕಾಲದ ಶುಷ್ಕ ಅವಧಿ ಮತ್ತು ಸಮ ತಾಪಮಾನವನ್ನು ತೋರಿಸುತ್ತದೆ,ಕರ್ನಾಟಕ ಪ್ರಾದೇಶಿಕ ಮುನ್ಸೂಚನೆಯು ಬೆಂಗಳೂ

Karnataka Weather Updates: ರಾಜಧಾನಿ ಬೆಂಗಳೂರು ಸೇರಿದಂತೆ ಕರ್ನಾಟಕದಾದ್ಯಂತ ಬಹುತೇಕ ಒಣಹವೆ ಮುಂದುವರಿದಿದೆ. ಉಳಿದಂತೆ ರಾಜ್ಯದ ವಿವಿಧ ಭಾಗದಲ್ಲಿ ಚಳಿ ಇದೆ. ಮುಂದಿನ ಐದು ದಿನಗಳ ವರೆಗೆ ಕರ್ನಾಟಕದಲ್ಲಿ ಹವಾಮಾನ ಹೇಗಿರಲಿದೆ ಎನ್ನುವ ಸಂಪೂರ್ಣ ವಿವರ ಇಲ್ಲಿದೆ. ಕರ್ನಾಟಕದಲ್ಲಿ ಮುಂದಿನ ಮೂರು ದಿನಗಳಿಂದ ಐದು ದಿನಗಳ ವರೆಗೆ ಕರ್ನಾಟಕದಲ್ಲಿ ಬಹುತೇಕ ಒಣಹವೆ ಮುಂದುವರಿಯಲಿದೆ. ಮುಂದಿನ ಐದು ದಿನಗಳಲ್ಲಿ

ಒನ್ ಇ೦ಡಿಯ 18 Feb 2026 7:14 am

ಕರ್ನಾಟಕದಲ್ಲಿ ಬೇಕು ಉದ್ಯೋಗ ಸಂಕಲ್ಪದ ಬಜೆಟ್‌! ಶಿಕ್ಷಣ ಹಾಗೂ ಪೊಲೀಸ್‌ ಇಲಾಖೆಯ ಖಾಲಿ ಹುದ್ದೆ ಭರ್ತಿ ಯಾವಾಗ?

ಕರ್ನಾಟಕದ ಸರಕಾರಿ ಸೇವೆಗಳಲ್ಲಿ ಬರೋಬ್ಬರಿ 2.76 ಲಕ್ಷ ಹುದ್ದೆಗಳು ಖಾಲಿ ಇವೆ. ಇದರ ಭರ್ತಿಗೆ ಕ್ರಮಗಳು ಮಾತ್ರ ಆಗುತ್ತಿಲ್ಲ . ಲಕ್ಷಾಂತರ ಯುವಜನ ಪರೀಕ್ಷೆಗಳನ್ನು ಬರೆದು ನೇಮಕಾತಿಗಳಿಗೆ ಕಾಯುತ್ತಿದ್ದರೆ ಇತ್ತ ಸರಕಾರ ಈ ಬಾರಿಯ ಬಜೆಟ್‌ನಲ್ಲಾದರೂ ನಿರುದ್ಯೋಗಿಗಳ ಸಂಕಷ್ಟಕ್ಕೆ ಸ್ಪಂದಿಸುತ್ತಾ ಎಂದು ಎದುರುನೋಡುತ್ತಿದ್ದಾರೆ. ಈ ಬಾರಿಯ ಬಜೆಟ್ ಲೆಕ್ಕಾಚಾರಗಳು ಹೇಗಿವೆ ನೋಡಿ.

ವಿಜಯ ಕರ್ನಾಟಕ 18 Feb 2026 6:47 am

ವೇಮಗಲ್‌ನಲ್ಲಿ ದೇಶದ ಮೊದಲ ಖಾಸಗಿ ಕಾಪ್ಟರ್‌ ಜೋಡಣಾ ಘಟಕ; ನರೇಂದ್ರ ಮೋದಿ-ಮ್ಯಾಕ್ರನ್‌ ವರ್ಚುವಲ್‌ ಉದ್ಘಾಟನೆ

ಕೋಲಾರ ಜಿಲ್ಲೆಯ ವೇಮಗಲ್‌ನಲ್ಲಿ ದೇಶದ ಮೊಟ್ಟ ಮೊದಲ ಖಾಸಗಿ ಚಲಯದ ಹೆಲಿಕಾಪ್ಟರ್‌ ಜೋಡಣೆ ಘಟಕವನ್ನು ಉದ್ಘಾಟಿಸಲಾಗಿದ್ದು, ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಫ್ರಾನ್ಸ್‌ ಅಧ್ಯಕ್ಷ ಇಮ್ಯಾನ್ಯುಯೆಲ್‌ ಮ್ಯಾಕ್ರನ್‌ ಅವರು ವರ್ಚುವಲ್‌ ಉದ್ಘಾಟನಾ ಸಮಾರಂಭ ನೆರವೇರಿಸಿದ್ದಾರೆ. ವೇಮಗಲ್‌ನಲ್ಲಿ ನಡೆದ ಸಮಾರಂಭದಲ್ಲಿ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಮತ್ತು ರಾಜ್ಯದ ಕೈಗಾರಿಕಾ ಸಚಿವ ಎಂಬಿ ಪಾಟೀಲ್‌ ಭಾಗವಹಿಸಿದ್ದರು. ಫ್ರಾನ್ಸ್‌ ಮೂಲದ ಏರ್‌ ಬಸ್‌ ಮತ್ತು ಭಾರತದ ಟಾಟಾ ಅಡ್ವಾನ್ಸಡ್‌ ಸಿಸ್ಟಮ್ಸ್ ಲಿಮಿಟೆಡ್‌ ಈ ಘಟಕವನ್ನು ಜಂಟಿಯಾಗಿ ಅಭಿವೃದ್ಧಿಪಡಿಸಿದೆ.

ವಿಜಯ ಕರ್ನಾಟಕ 18 Feb 2026 6:35 am

Gold Price: ಬಂಗಾರದ ಬೆಲೆ 80,000 ರೂ.ಗಿಂತಲೂ ಕಡಿಮೆ ಆಗಲಿದೆ: ತಜ್ಞರ ಮುನ್ಸೂಚನೆ, ಕಾರಣವೇನು?

Gold Price Forecast 2026: ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿ ವಹಿವಾಟಿನಲ್ಲಿ ನಿರಂತರ ಏರಿಳಿತ ಮುಂದುವರಿದಿದೆ. ಈ ಲೋಹಗಳ ದರವು ಇಳಿಮುಖವಾಗಿದೆ. ಹೊಸ ಮುನ್ಸೂಚನೆಗಳ ಪ್ರಕಾರ, ಚಿನ್ನದ ಬೆಲೆ 08 ಗ್ರಾಂಗೆ (ಒಂದು ಸವರನ್) 80,000 ರೂ.ಗಿಂತ ಕಡಿಮೆ ಆಗುವ ಸಾಧ್ಯತೆ ಇದೆ. ತಿಂಗಳುಗಳಲ್ಲಿ ಗರಿಷ್ಠ ಹಂತ ತಲುಪಿದ್ದ ಬೆಲೆಗಳು ದಾಖಲೆಯ ಹಂತಕ್ಕೆ ಇಳಿಯಬಹುದು ಎಂದು ವಿಶ್ಲೇಷಣೆ

ಒನ್ ಇ೦ಡಿಯ 18 Feb 2026 6:30 am

CBSE 10ನೇ ತರಗತಿ ಗಣಿತ ಪರೀಕ್ಷೆಗೆ ವಿದ್ಯಾರ್ಥಿಗಳ ಮಿಶ್ರ ಪ್ರತಿಕ್ರಿಯೆ: 'ಕೇಸ್ ಸ್ಟಡಿ' ವಿಭಾಗಕ್ಕೆ ಹೆಚ್ಚಿನ ಗಮನ ಅಗತ್ಯ

ನವದೆಹಲಿ: ಕೇಂದ್ರೀಯ ಪ್ರೌಢಶಿಕ್ಷಣ ಮಂಡಳಿ (CBSE) ಮಂಗಳವಾರ, ಫೆಬ್ರವರಿ 17, 2026 ರಂದು ನಡೆಸಿದ 10ನೇ ತರಗತಿಯ ಗಣಿತ (Mathematics Standard ಮತ್ತು Basic) ಬೋರ್ಡ್ ಪರೀಕ್ಷೆಯು ದೇಶಾದ್ಯಂತ ವಿದ್ಯಾರ್ಥಿಗಳಿಂದ ಮಿಶ್ರ ಪ್ರತಿಕ್ರಿಯೆಗೆ ಕಾರಣವಾಗಿದೆ. ಶಿಕ್ಷಕರು ಹಾಗೂ ಶೈಕ್ಷಣಿಕ ತಜ್ಞರ ಪ್ರಾಥಮಿಕ ವಿಶ್ಲೇಷಣೆಯ ಪ್ರಕಾರ, ಪ್ರಶ್ನೆಪತ್ರಿಕೆಯು ಬಹುಪಾಲು ಎನ್‌ಸಿಇಆರ್‌ಟಿ (NCERT) ಪಠ್ಯಕ್ರಮವನ್ನು ಆಧರಿಸಿದ್ದರೂ, ಪರೀಕ್ಷಾ ಕೊಠಡಿಯಲ್ಲಿ ಸಮಯ

ಒನ್ ಇ೦ಡಿಯ 18 Feb 2026 6:15 am

ಕ್ಯಾಬ್‌ನಲ್ಲಿ ಮಗು ಮರೆತು ಬಂದ ಪೋಷಕರು, ಬೆಂಗಳೂರಿನಲ್ಲಿ ಹೀಗೊಂದು ವಿಚಿತ್ರ ಘಟನೆ; ಸುಖಾಂತ್ಯ ಕಂಡಿದ್ದೇಗೆ?

ಇದು ಕೊಂಚ ವಚಿತ್ರವಾದರೂ ಸತ್ಯ ಘಟನೆ. ಕ್ಯಾಬ್‌ನಲ್ಲಿ ಮಲಗಿದ್ದ ಮಗುವನ್ನು ಮರೆತು ಮನೆಗೆ ಮರಳಿದ್ದ ಪೋಷಕರು, ಪೊಲೀಸರ ನೆರವಿನಿಂದ ತಮ್ಮ ಮಗುವನ್ನು ಮರಳಿ ಪಡೆದ ಘಟನೆ ರಾಜಧಾನಿ ಬೆಂಗಳೂರಿನಲ್ಲಿ ನಡೆದಿದೆ. ನಿದ್ದೆ ಮಾಡುತ್ತಿದ್ದ ಮಗುವನ್ನು ಕ್ಯಾಬ್‌ನಲ್ಲೇ ಮರೆತು ಬಂದಿದ್ದ ದಂಪತಿ, ಆ ಬಳಿಕ ಪೊಲೀಸ್‌ ಸಹಾಯವಾಣಿಗೆ ಕರೆ ಮಾಡಿ ವಿಷಯ ತಿಳಿಸಿದ್ದರು. ಕೂಡಲೇ ಸ್ಪಂದಿಸಿದ ಹೊಯ್ಸಳ ಪೊಲೀಸರು, ಕ್ಯಾಬ್‌ನ್ನು ಪತ್ತೆಹಚ್ಚಿ ಮಗುವನ್ನು ಪೋಷಕರಿಗೆ ಒಪ್ಪಿಸಿದ್ದಾರೆ. ಹಿಂಬದಿ ಸೀಟ್‌ನಲ್ಲಿ ಮಗು ಮಲಗಿದ್ದು ಚಾಲಕನಿಗೂ ತಿಳಿದಿರಲಿಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.

ವಿಜಯ ಕರ್ನಾಟಕ 18 Feb 2026 5:27 am

ಬರಲಿದೆ AI ಆಧಾರಿತ ಸ್ಮಾರ್ಟ್‌ ವಾಟರ್‌ ಮೀಟರ್‌; ನಿಖರ ನೀರಿನ ಬಿಲ್‌ ಗ್ಯಾರಂಟಿ ಘೋಷಿಸಿದ ಜಲಮಂಡಳಿ

ಕರ್ನಾಟಕ ರಾಜಧಾನಿ ಬೆಂಗಳೂರಿಗೆ ನೀರು ಸರಬರಾಜು ಹೊಣೆ ಹೊತ್ತಿರುವ ಜಲಮಂಡಳಿ, ಹಲವು ಜನಪರ ಕಾರ್ಯಕ್ರಮಗಳನ್ನು ಜಾರಿಗೆ ತರುತ್ತಿದೆ. ಅದೇ ರೀತಿ ರಾಷ್ಟ್ರ ರಾಜಧಾನಿ ಹೊಸದಿಲ್ಲಿಯಲ್ಲಿ ನಡೆದ ಎಐ ಇಂಪ್ಯಾಕ್ಟ್‌ ಶೃಂಗಸಭೆಯಲ್ಲಿ ಭಾಗವಹಿಸಿದ್ದ ಜಲಮಂಡಳಿ ಅಧ್ಯಕ್ಷ ಡಾ.ವಿ.ರಾಮ್‌ ಪ್ರಸಾತ್‌ ಮನೋಹರ್‌ ಬೆಂಗಳೂರಿನ ಬೃಹತ್‌ ನೀರು ಬಳಕೆದಾರರಿಗೆ ನಿಖರ ಬಿಲ್‌ ನೀಡಲು, ಶೀಘ್ರದಲ್ಲೇ ಕೃತಕ ಬುದ್ಧಿಮತ್ತೆ (AI) ಆಧಾರಿತ ಸ್ಮಾರ್ಟ್‌ ವಾಟರ್‌ ಮೀಟರ್‌ಗಳ ಅಳವಡಿಕೆ ಯೋಜನೆಯನ್ನು ಘೋಷಿಸಿದ್ದಾರೆ. ಈ ಕುರಿತು ಮಾಹಿತಿ ಇಲ್ಲಿದೆ.

ವಿಜಯ ಕರ್ನಾಟಕ 18 Feb 2026 5:02 am

Ranji Trophy-ಉತ್ತರಾಖಂಡ ವಿರುದ್ಧ ಸೆಮಿಫೈನಲ್ ಪಂದ್ಯದಲ್ಲಿ ಕರ್ನಾಟಕದ ಬಿಗಿ ಹಿಡಿತ; ಡ್ರಾಗೊಂಡರೂ ಫೈನಲ್ ಪ್ರವೇಶ ಖಚಿತ

ಲಖನೌ: ಕೆಎಲ್ ರಾಹುಲ್, ರವಿಚಂದ್ರನ್ ಸ್ಮರಣ್ ಶತಕ ಮತ್ತು ನಾಯಕ ದೇವದತ್ ಪಡಿಕ್ಕಲ್ ಅವರ ದ್ವಿಶತಕಗಳ ನೆರವಿನಿಂದ ಅದ್ಭುತ ಪ್ರದರ್ಶನದ ನೆರವಿನಿಂದ ಉತ್ತರಾಖಂಡದ ವಿರುದ್ಧ ರನ್ ಪರ್ವತವನ್ನೇ ನಿರ್ಮಿಸಿರುವ ಕರ್ನಾಟಕ ತಂಡ ರಣಜಿ ಟ್ರೋಫಿ ಫೈನಲ್ ಪ್ರವೇಶಿಸುವ ಹುಮ್ಮಸ್ಸಿನಲ್ಲಿದೆ. ಇಲ್ಲಿನ ವಾಜಪೇಯಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಸೆಮಿಫೈನಲ್ ಪಂದ್ಯದ 3ನೇ ದಿನವಾದ ಮಂಗಳವಾರ 6 ವಿಕೆಟ್‌ಗೆ 689 ರನ್‌ಗಳಿಂದ ಮೊದಲ ಇನಿಂಗ್ಸ್‌ ಮುಂದುವರಿಸಿದ ಕರ್ನಾಟಕ, 194.4 ಓವರ್‌ಗಳಲ್ಲಿ 736 ರನ್‌ಗಳಿಗೆ ಆಲೌಟ್ ಆಯಿತು. ಕರ್ನಾಟಕಕ್ಕೆ ಇನ್ನಿಂಗ್ಸ್ ಡಿಕ್ಲೇರ್ ಮಾಡಿ ಎದುರಾಳಿ ತಂಡವನ್ನು ಬ್ಯಾಟಿಂಗ್ ಗೆ ಇಳಿಸುವ ಅವಕಾಶ ಇಧ್ದರೂ ದೊಡ್ಡ ಮೊತ್ತ ಗಳಿಸಿ ಎದುರಾಳಿಯನ್ನು ಒತ್ತಡಕ್ಕೆ ಸಿಲುಕಿಸುವ ತಂತ್ರಕ್ಕೆ ಮೊರೆ ಹೊಕ್ಕಿತು. ಮೊದಲ ದಿನವೇವಾಡಿದಾಗ ಉತ್ತರಾಖಂಡ ದಿಕ್ಕು ತಪ್ಪಿತ್ತು. ಈಗಂತೂ ಎದುರಾಳಿ ತಂಡ ಸಂಪೂರ್ಣವಾಗಿ ಕರ್ನಾಟಕ ಬೀಸಿದ ಬಲೆಯಲ್ಲಿ ಸಿಲಕಿಕೊಂಡಿದೆ. ಇದೀಗ ಮೊದಲ ಇನ್ನಿಂಗ್ಸ್ ಪ್ರಾರಂಭಿಸಿರವ ಉತ್ತರಾಖಂಡ ಮೂರನೇ ದಿನಾಂತ್ಯಕ್ಕೆ 5 ವಿಕೆಟ್ ನಷ್ಟಕ್ಕೆ 149 ರನ್ ಗಳಿಸಿದ್ದು ಫಾಲೋ ಆನ್ ಭೀತಿಯಲ್ಲಿದೆ. ಲಕ್ಷ್ಯ ರಾಜೇಶ್‌(52*) ಮತ್ತು ಸೌರಭ್‌ ರಾವತ್‌(10*) ನಾಲ್ಕನೇ ದಿನದಾಟಕ್ಕೆ ಕ್ರೀಸ್‌ ಕಾಯ್ದುಕೊಂಡಿದ್ದಾರೆ. ಸದ್ಯಕ್ಕೆ ಇನ್ನು ಎರಡು ದಿನಗಳ ಆಟ ಬಾಕಿ ಉಳಿದಿದ್ದು ಇವರಿಬ್ಬರ ಆಟದ ಮೇಲೆ ಉತ್ತರಾಖಂಡದ ಪಂದ್ಯದ ಭವಿಷ್ಯ ನಿರ್ಧಾರವಾಗಲಿದೆ. ಮೊದಲ ಇನಿಂಗ್ಸ್‌ ಹಿನ್ನಡೆ ತಪ್ಪಿಸಲು ಉಳಿದ 5 ವಿಕೆಟ್‌ಗಳಲ್ಲಿ 587 ರನ್‌ ಗಳಿಸಬೇಕಿದೆ. ಬುಧವಾರ ಮೊದಲಿನ ಅವಧಿಯಲ್ಲೇ ಕರ್ನಾಟಕದ ಬೌಲರ್‌ಗಳು ಉತ್ತರಾಖಂಡವನ್ನು ಆಲೌಟ್ ಮಾಡಿದರೆ, ಫಾಲೋ ಆನ್‌ ವಿಧಿಸಿ ಪಂದ್ಯ ಗೆಲ್ಲುವ ಅವಕಾಶ ದೇವದತ್‌ ಪಡಿಕ್ಕಲ್‌ ಬಳಗದ ಮುಂದಿದೆ. ಒಂದು ವೇಳೆ ಉತ್ತರಾಖಂಡದ ಪ್ರಥಮ ಇನ್ನಿಂಗ್ಸ್ ಕೊಂಚ ದೀರ್ಘವಾಗಿ ಪಂದ್ಯ ಡ್ರಾ ಆದರೂ ಕರ್ನಾಟಕಕ್ಕೆ ಲಾಭವೇ. ಯಾಕೆಂದರೆ ಈ ಮೊತ್ತವನ್ನು ಉತ್ತರಾಖಂಡ ದಾಟುವುದು ಕಷ್ಟಸಾಧ್ಯ. ಪ್ರಥಮ ಇನ್ನಿಂಗ್ಸ್ ಆಧಾರದ ಮೇಲೆ ಕರ್ನಾಟಕಕ್ಕೆ ಫೈನಲ್‌ ಪ್ರವೇಶದ ಅವಕಾಶ ಸಿಗಲಿದೆ. ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಕರ್ನಾಟಕ ತಂಡ ಮಾಡಿ ಗೆದ್ದಿತ್ತು. ಸಂಕ್ಷಿಪ್ತ ಸ್ಕೋರ್ ಕರ್ನಾಟಕ ಪ್ರಥಮ ಇನ್ನಿಂಗ್ಸ್ 194.4 ಓವರ್ ಗಳಲ್ಲಿ 736ಕ್ಕೆ ಆಲೌಟ್, ಕೆಎಲ್ ರಾಹುಲ್ 141(211), ದೇವದತ್ ಪಡಿಕ್ಕಲ್ 232(330), ರವಿಚಂದ್ರನ್ ಸ್ಮರಣ್ 135(218), ಕೃತಿಕ್ ಕೃಷ್ಣ 60(103), ವಿದ್ಯಾಧರ್ ಪಾಟೀಲ್ 54(144), ಆದಿತ್ಯ ರಾವತ್ 154ಕ್ಕೆ 4, ಮಾಯಾಂಕ್ ಮಿಶ್ರಾ 173ಕ್ಕೆ 3. ಉತ್ತರಾಖಂಡ ಪ್ರಥಮ ಇನ್ನಿಂಗ್ಸ್ 69 ಓವರ್ ಗಳಲ್ಲಿ 149/5, ಲಕ್ಷ್ಯ ರಾಯ್ ಚಂದಾನಿ ಅಜೇಯ 52(148), ಸೌರಭ್ ರಾವತ್ ನಾಟೌಟ್ 10(37), ವಿದ್ಯಾಧರ್ ಪಾಟೀಲ್ 26ಕ್ಕೆ 2, ಶ್ರೇಯಸ್ ಗೋಪಾಲ್ 23ಕ್ಕೆ 1.

ವಿಜಯ ಕರ್ನಾಟಕ 18 Feb 2026 12:55 am

ಜೂನಿಯರ್ ಹಾಕಿ ಪ್ರಧಾನ ಕೋಚ್ ಹುದ್ದೆಗೆ ಮತ್ತೆ ಅರ್ಜಿ ಸಲ್ಲಿಸಿದ ಶ್ರೀಜೇಶ್

ಹೊಸದಿಲ್ಲಿ, ಫೆ. 17: ಭಾರತೀಯ ಹಾಕಿ ತಂಡದ ಮಾಜಿ ಗೋಲ್ಕೀಪರ್ ಪಿ.ಆರ್. ಶ್ರೀಜೇಶ್ ಭಾರತೀಯ ಜೂನಿಯರ್ ಪುರುಷರ ಹಾಕಿ ತಂಡದ ಪ್ರಧಾನ ಕೋಚ್ ಹುದ್ದೆಗೆ ಮತ್ತೊಮ್ಮೆ ಅರ್ಜಿ ಸಲ್ಲಿಸಿದ್ದಾರೆ. ಅವರ ಮೊದಲ ಗುತ್ತಿಗೆ ಅವಧಿ ಕಳೆದ ವರ್ಷದ ಡಿಸೆಂಬರ್ನಲ್ಲಿ ಮುಕ್ತಾಯಗೊಂಡಿತ್ತು. ಅವರ ಅರ್ಜಿಯು ಇನ್ನು 15 ದಿನಗಳಲ್ಲಿ ಇತ್ಯರ್ಥಗೊಳ್ಳುವ ನಿರೀಕ್ಷೆಯಿದೆ. ಎರಡು ಬಾರಿಯ ಒಲಿಂಪಿಕ್ ಕಂಚಿನ ಪದಕ ವಿಜೇತ ಶ್ರೀಜೇಶ್ ಅವರನ್ನು 2024ರ ಆಗಸ್ಟ್ನಲ್ಲಿ ಜೂನಿಯರ್ ಪುರುಷರ ಹಾಕಿ ತಂಡದ ಪ್ರಧಾನ ಕೋಚ್ ಆಗಿ ನೇಮಿಸಲಾಗಿತ್ತು. ಅವರ ಉಸ್ತುವಾರಿಯ ತಂಡವು ಕಳೆದ ವರ್ಷದ ಡಿಸೆಂಬರ್ನಲ್ಲಿ ಚೆನ್ನೈನಲ್ಲಿ ನಡೆದ ಎಫ್ಐಎಚ್ ಪುರುಷರ ಜೂನಿಯರ್ ವಿಶ್ವಕಪ್ನಲ್ಲಿ ಕಂಚಿನ ಪದಕ ಗೆದ್ದಿತ್ತು. ಇದರೊಂದಿಗೆ ಈ ಪಂದ್ಯಾವಳಿಯಲ್ಲಿ ಭಾರತದ ಒಂಭತ್ತು ವರ್ಷಗಳ ಪದಕ ಬರ ನೀಗಿತ್ತು. ಕಂಚಿನ ಪದಕದ ಪಂದ್ಯದಲ್ಲಿ ಭಾರತ ಆರಂಭಿಕ ಹಿನ್ನಡೆಯನ್ನು ನಿವಾರಿಸಿಕೊಂಡು ಅರ್ಜೆಂಟೀನಾ ತಂಡವನ್ನು 4–2 ಗೋಲುಗಳಿಂದ ಸೋಲಿಸಿತ್ತು.

ವಾರ್ತಾ ಭಾರತಿ 18 Feb 2026 12:47 am

T20 ವಿಶ್ವಕಪ್ | ಫೆ.18ರಂದು ಭಾರತಕ್ಕೆ ಎದುರಾಳಿ ನೆದರ್ಲ್ಯಾಂಡ್ಸ್

ದಕ್ಷಿಣ ಆಫ್ರಿಕದ ಮುನ್ನ ಆತಿಥೇಯರಿಗೆ ಅಭ್ಯಾಸ ಪಂದ್ಯ ಅಹ್ಮದಾಬಾದ್, ಫೆ. 17: ಪಾಕಿಸ್ತಾನ ವಿರುದ್ಧದ 61 ರನ್ ಗಳ ಭರ್ಜರಿ ಗೆಲುವಿನೊಂದಿಗೆ ಭಾರತ ಈಗಾಗಲೇ T20 ವಿಶ್ವಕಪ್ ನ ಸೂಪರ್ ಎಂಟು ಹಂತ ಪ್ರವೇಶಿಸಿದ್ದು, ಬುಧವಾರ ‘ಎ’ ಗುಂಪಿನ ತನ್ನ ಕೊನೆಯ ಲೀಗ್ ಪಂದ್ಯದಲ್ಲಿ ಅಹ್ಮದಾಬಾದ್ ನಲ್ಲಿ ನೆದರ್ಲ್ಯಾಂಡ್ಸ್ ತಂಡವನ್ನು ಎದುರಿಸಲಿದೆ. ಲೀಗ್ ಅಭಿಯಾನವನ್ನು ಅಜೇಯವಾಗಿ ಮುಕ್ತಾಯಗೊಳಿಸುವತ್ತ ತಂಡ ಸಾಗಿದೆ. ಈ ಪಂದ್ಯ ಯಾವ ತಂಡಕ್ಕೂ ಮಹತ್ವದ್ದಲ್ಲ. ಆದರೆ ಭಾರತ ಇದನ್ನು ದಕ್ಷಿಣ ಆಫ್ರಿಕ ವಿರುದ್ಧದ ಮುಂದಿನ ಪಂದ್ಯಕ್ಕೆ ಅಭ್ಯಾಸವಾಗಿ ಬಳಸಲಿದೆ. ನೆದರ್ಲ್ಯಾಂಡ್ಸ್ನ ಲೋಗನ್ ಫನ್ ಬೀಕ್ ಮತ್ತು ಬಸ್ ಡಿ ಲೀಡ್ ವೇಗ ಬದಲಾವಣೆಗಳಲ್ಲಿ ನಿಪುಣರು. ಫ್ರೆಡ್ ಕ್ಲಾಸನ್ ಎಡಗೈ ಸ್ಪಿನ್ ಅನುಭವ ನೀಡಲಿದ್ದಾರೆ. ಪವರ್ಪ್ಲೇಯಲ್ಲಿ ಆರ್ಯನ್ ದತ್ ಅವರ ಆಫ್ಸ್ಪಿನ್ ಮತ್ತು ರೋಲೊಫ್ ಫನ್ ಡರ್ ಮರ್ವ್ ಅವರ ಎಡಗೈ ಸ್ಪಿನ್ ದಾಳಿಯನ್ನು ಎದುರಿಸುವ ಅವಕಾಶ ಭಾರತೀಯರಿಗೆ ಸಿಗಲಿದೆ. ಈ ಅನುಭವ ದಕ್ಷಿಣ ಆಫ್ರಿಕ ವಿರುದ್ಧ ಉಪಯುಕ್ತವಾಗಬಹುದು. 2023ರ ಏಕದಿನ ವಿಶ್ವಕಪ್ ನಲ್ಲಿ ಇದೇ ನೆದರ್ಲ್ಯಾಂಡ್ಸ್ ತಂಡ ದಕ್ಷಿಣ ಆಫ್ರಿಕ ಮತ್ತು ಬಾಂಗ್ಲಾದೇಶಕ್ಕೆ ಆಘಾತಕಾರಿ ಸೋಲು ನೀಡಿತ್ತು. ಹೀಗಾಗಿ ತಂಡ ಸಾಮರ್ಥ್ಯ ಮೀರಿದ ಪ್ರದರ್ಶನ ನೀಡುವ ಶಕ್ತಿ ಹೊಂದಿದೆ. ಆರಂಭಿಕ ಬ್ಯಾಟರ್ ಅಭಿಷೇಕ್ ಶರ್ಮಾ ತಮ್ಮ ಚೊಚ್ಚಲ T20 ವಿಶ್ವಕಪ್ ನಲ್ಲಿ ಈಗಾಗಲೇ ಎರಡು ಬಾರಿ ಶೂನ್ಯಕ್ಕೆ ಔಟಾಗಿದ್ದಾರೆ. ಇಶಾನ್ ಕಿಶನ್ ಉತ್ತಮ ಫಾರ್ಮ್ನಲ್ಲಿದ್ದಾರೆ. ಇಲ್ಲಿನ ಪಿಚ್ ಸ್ಪಿನ್ನರ್ ಗಳಿಗೆ ಅನುಕೂಲಕರವಾಗಿದ್ದು, ಭಾರತೀಯ ಮಧ್ಯಮ ಕ್ರಮಾಂಕಕ್ಕೆ ನೆರವಾಗಲಿದೆ. ಭಾರತೀಯ ಬೌಲಿಂಗ್ ಘಟಕ ಬಲಿಷ್ಠವಾಗಿದ್ದು, ಈ ವಿಭಾಗದಲ್ಲಿ ಪ್ರಯೋಗಕ್ಕೆ ಅವಕಾಶವಿದೆ. ತಂಡಗಳು ಭಾರತ: ಸೂರ್ಯಕುಮಾರ್ ಯಾದವ್ (ನಾಯಕ), ಅಭಿಷೇಕ್ ಶರ್ಮಾ, ತಿಲಕ್ ವರ್ಮಾ, ಸಂಜು ಸ್ಯಾಮ್ಸನ್, ಶಿವಮ್ ದುಬೆ, ಇಶಾನ್ ಕಿಶನ್, ಹಾರ್ದಿಕ್ ಪಾಂಡ್ಯ, ಅರ್ಶದೀಪ್ ಸಿಂಗ್, ಜಸ್ಪ್ರೀತ್ ಬುಮ್ರಾ, ಮುಹಮ್ಮದ್ ಸಿರಾಜ್, ವರುಣ್ ಚಕ್ರವರ್ತಿ, ಕುಲದೀಪ್ ಯಾದವ್, ಅಕ್ಷರ್ ಪಟೇಲ್, ವಾಶಿಂಗ್ಟನ್ ಸುಂದರ್, ರಿಂಕು ಸಿಂಗ್. ನೆದರ್ಲ್ಯಾಂಡ್ಸ್: ಸ್ಕಾಟ್ ಎಡ್ವರ್ಡ್ಸ್ (ನಾಯಕ), ಕಾಲಿನ್ ಆ್ಯಕರ್ಮನ್, ನೋ ಕ್ರೋಸ್, ಬಸ್ ಡಿ ಲೀಡ್, ಆರ್ಯನ್ ದತ್, ಫ್ರೆಡ್ ಕ್ಲಾಸನ್, ಕೈಲ್ ಕ್ಲೇನ್, ಮೈಕಲ್ ಲೆವಿಟ್, ಝ್ಯಾಕ್ ಲಯನ್–ಕ್ಯಾಶೆ, ಮ್ಯಾಕ್ಸ್ ಒ’ಡೌಡ್, ಲೋಗನ್ ಫನ್ ಬೀಕ್, ಟಿಮ್ ಫನ್ ಡರ್ ಗುಗ್ಟನ್, ರೋಲೊಫ್ ಫನ್ ಡರ್ ಮರ್ವ್, ಪೌಲ್ ಫನ್ ಮೀಕರನ್, ಸಾಕಿಬ್ ಝುಲ್ಫೀಕರ್.

ವಾರ್ತಾ ಭಾರತಿ 18 Feb 2026 12:44 am

ಆಸ್ಟ್ರೇಲಿಯ ಮಹಿಳೆಯರ ವಿರುದ್ಧದ ಏಕದಿನ ಸರಣಿಗೆ ಪ್ರತೀಕಾ ರಾವಲ್ ಸೇರ್ಪಡೆ

ಮುಂಬೈ, ಫೆ. 17: ಆಸ್ಟ್ರೇಲಿಯ ಮಹಿಳಾ ಕ್ರಿಕೆಟ್ ತಂಡದ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಗೆ ಭಾರತೀಯ ಮಹಿಳಾ ತಂಡಕ್ಕೆ ಪ್ರತೀಕಾ ರಾವಲ್ ಅವರನ್ನು ಸೇರ್ಪಡೆಗೊಳಿಸಲಾಗಿದೆ. ಅಕ್ಟೋಬರ್ನಲ್ಲಿ ನಡೆದ ಐಸಿಸಿ ಮಹಿಳಾ ಕ್ರಿಕೆಟ್ ವಿಶ್ವಕಪ್ ವೇಳೆ ಪ್ರತೀಕಾ ಪಾದದ ಗಾಯಕ್ಕೆ ಒಳಗಾಗಿದ್ದರು. ಬಳಿಕ ಅವರು ಚೇತರಿಕೆಗಾಗಿ ಬೆಂಗಳೂರಿನಲ್ಲಿರುವ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಸೆಂಟರ್ ಆಫ್ ಎಕ್ಸಲೆನ್ಸ್ಗೆ ಸೇರ್ಪಡೆಗೊಂಡಿದ್ದರು. ಈಗ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದಾರೆ. ಆಲ್ರೌಂಡರ್ ಪ್ರತೀಕಾ ಮಹಿಳಾ ಪ್ರೀಮಿಯರ್ ಲೀಗ್ 2026ರಲ್ಲಿ ಯುಪಿ ವಾರಿಯರ್ಸ್ ತಂಡದ ಭಾಗವಾಗಿದ್ದರು. ಆದರೆ ಒಂದೇ ಒಂದು ಪಂದ್ಯದಲ್ಲೂ ಆಡಲಿಲ್ಲ. ಈಗ ಆಸ್ಟ್ರೇಲಿಯ ಪ್ರವಾಸದಲ್ಲಿರುವ ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಟೆಸ್ಟ್ ತಂಡದಲ್ಲೂ ಅವರಿದ್ದಾರೆ. ಆಸ್ಟ್ರೇಲಿಯ ವಿರುದ್ಧದ ಪರಿಷ್ಕೃತ ಏಕದಿನ ತಂಡ: ಹರ್ಮನ್ಪ್ರೀತ್ ಕೌರ್ (ನಾಯಕಿ), ಸ್ಮೃತಿ ಮಂದಾನ (ಉಪನಾಯಕಿ), ಶಫಾಲಿ ವರ್ಮಾ, ರೇಣುಕಾ ಠಾಕೂರ್, ಶ್ರೀ ಚರಣಿ, ವೈಷ್ಣವಿ ಶರ್ಮಾ, ಕ್ರಾಂತಿ ಗೌಡ, ಸ್ನೇಹ್ ರಾಣಾ, ದೀಪ್ತಿ ಶರ್ಮಾ, ರಿಚಾ ಘೋಷ್ (ವಿಕೆಟ್ಕೀಪರ್), ಉಮಾ ಛೇತ್ರಿ (ವಿಕೆಟ್ಕೀಪರ್), ಕಶ್ವೀ ಗೌತಮ್, ಅಮನ್ಜೋತ್ ಕೌರ್, ಜೆಮಿಮಾ ರೋಡ್ರಿಗ್ಸ್, ಹರ್ಲೀನ್ ದೇವಲ್, ಪ್ರತೀಕಾ ರಾವಲ್.

ವಾರ್ತಾ ಭಾರತಿ 18 Feb 2026 12:40 am

ಪತ್ರಕರ್ತರ ಜೊತೆ ಮಂತ್ರಿಗಳ ಸಂಬಂಧ ಇತಿಮಿತಿಯಲ್ಲಿದೆ: ಸಚಿವ ಚಲುವರಾಯಸ್ವಾಮಿ

ಬೆಂಗಳೂರು : ಇತ್ತೀಚಿನ ದಿನಗಳಲ್ಲಿ ಪತ್ರಕರ್ತರು ಮತ್ತು ಮಂತ್ರಿಗಳ ನಡುವೆ ಅಷ್ಟೊಂದು ಸಂಬಂಧ ಇಲ್ಲ ಎನ್ನುವುದಾಗಿ ಪತ್ರಕರ್ತ ವಿಠ್ಠಲಮೂರ್ತಿ ಹೇಳಿದ್ದು, ಹಾಗೇನೂ ಇಲ್ಲ. ಎಲ್ಲವೂ ಇತಿಮಿತಿಯಲ್ಲಿದೆ. ನಾವು ಎಲ್ಲೇ ಹೋದರೂ, ಎಚ್ಚರಿಕೆಯಿಂದ ಇದ್ದರೆ ನಾವು ಸುರಕ್ಷಿತವಾಗಿರಬಹುದು ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದ್ದಾರೆ. ಮಂಗಳವಾರ ಗಾಂಧಿ ಸ್ಮಾರಕ ನಿಧಿ, ಕರ್ನಾಟಕ ಮಾಧ್ಯಮ ಅಕಾಡಮಿ, ಕಾರ್ಯನಿರತ ಪತ್ರಕರ್ತರ ಸಂಘ, ಪ್ರೆಸ್‍ಕ್ಲಬ್ ಹಾಗೂ ಬೆಂಗಳೂರು ವರದಿಗಾರರ ಕೂಟದ ವತಿಯಿಂದ ನಗರದ ಗಾಂಧಿ ಭವನದಲ್ಲಿ ಆಯೋಜಿಸಲಾಗಿದ್ದ ಹಿರಿಯ ಪತ್ರಕರ್ತ, ಪರಿಷತ್ ಮಾಜಿ ಸದಸ್ಯ ಪಿ.ರಾಮಯ್ಯ ಅವರ ಶ್ರದ್ಧಾಂಜಲಿ, ‘ನಾನು ಹಿಂದೂ ರಾಮಯ್ಯ’ ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ರಾಷ್ಟ್ರಕವಿ ಕುವೆಂಪು ಅವರು ಶೂದ್ರ ಸಾಹಿತಿಗಳಾಗಿ ಏನೆಲ್ಲ ಕಷ್ಟಗಳನ್ನು ಎದುರಿಸಿದ್ದರು. ಅಂತಹ ಮೇರು ಸಾಹಿತಿಗಳೇ ಅಷ್ಟೊಂದು ಕಷ್ಟು ಅನುಭವಿಸಿದ್ದಾರೆಂದರೆ, ಪಿ.ರಾಮಯ್ಯ ಅವರು ಒಂದು ಇಂಗ್ಲಿಷ್ ಪತ್ರಿಕೆಯಲ್ಲಿ ಉನ್ನತ ಸ್ಥಾನವನ್ನು ಮುಟ್ಟಬೇಕಾದರೆ ಅವರು ಯಾವ ರೀತಿಯ ಶ್ರಮ, ಶ್ರದ್ಧೆ ವಹಿಸಿದ್ದರು ಎನ್ನುವುದನ್ನು ನಾವು ಅರ್ಥ ಮಾಡಿಕೊಳ್ಳಬೇಕು ಎಂದು ತಿಳಿಸಿದರು. ಹಿರಿಯ ಪತ್ರಕರ್ತ ಪಿ.ರಾಮಯ್ಯ ಅವರು ನನಗೆ ಅನೇಕ ಸಲಹೆಗಳನ್ನು ನೀಡಿದ್ದಾರೆ. ಅವರ ಬರವಣೆಗೆ ಬದಲಾವಣೆಗೆ ಪೂರಕವಾಗಿರುತ್ತಿದ್ದವು. ಅವರ ಮಾರ್ಗದರ್ಶನದಿಂದ ನಾನು ಅನೇಕ ವಿಷಯವನ್ನು ಕಲಿತಿದ್ದೇನೆ. ರಾಜಕೀಯ ಮತ್ತು ಮಾಧ್ಯಮ ಕ್ಷೇತ್ರದಲ್ಲಿ ಪಿ.ರಾಮಯ್ಯ ಅವರನ್ನು ಮಾದರಿಯನ್ನಾಗಿ ಇಟ್ಟುಕೊಳ್ಳಬಹುದು ಎಂದು ಅಭಿಪ್ರಾಯಪಟ್ಟರು. ಸಿಎಂ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ಮಾತನಾಡಿ, ಪತ್ರಕರ್ತರಾಗುವುದೆಂದರೆ ಒಂದು ರೀತಿಯಲ್ಲಿ ದೀಕ್ಷೆ ಪಡೆದಂತೆ. ಒಮ್ಮೆ ಪತ್ರಕರ್ತರಾದರೆ, ಮುಂದೆ ರಾಜಕಾರಣಿಯಾದರೂ, ಉದ್ಯಮಿಯಾದರೂ ಸರಿಯೇ. ಪತ್ರಕರ್ತರು ಕಾಲವನ್ನು ಒಪ್ಪಿಕೊಳ್ಳುತ್ತಲೇ ಸಮಾಜದಲ್ಲಿರುವ ಹುಳಕನ್ನು ನಯವಾಗಿ ತೋರಿಸಿ ತಿದ್ದಬಲ್ಲವರು ಮಾತ್ರ ಜನಮಾನಸದಲ್ಲಿ ಉಳಿಯಲು ಸಾಧ್ಯ ಎಂದು ಹೇಳಿದರು. ಸಾರ್ವಜನಿಕ ಜೀವನ ಕಲುಷಿತ ಹಾಗೂ ಪತ್ರಿಕೋದ್ಯಮ ಕಳಪೆಯಾಗುತ್ತಿರುವ ಹೊತ್ತಿನಲ್ಲಿ ಪಿ.ರಾಮಯ್ಯ ಎಂಬ ಅಪ್ಪಟ ಮಾದರಿ ನಮ್ಮನ್ನು ಅಗಲಿದೆ. ರಾಮಯ್ಯ ಅವರು ಪತ್ರಿಕಾ ವೃತ್ತಿಯ ಘನತೆ, ಮೌಲ್ಯ ಹಾಗೂ ನೈತಿಕ ಶಕ್ತಿ ಹೆಚ್ಚಳವಾಗಲು ಶ್ರಮವಹಿಸಿದ್ದರು ಎಂದು ಅವರು ನೆನಪು ಮಾಡಿಕೊಂಡರು. ವಿದ್ಯುನ್ಮಾನ ಮಾಧ್ಯಮಗಳು ಬಂದ ಮೇಲೆ ಪತ್ರಿಕೋದ್ಯಮದ ಉದ್ದೇಶ ಮತ್ತು ಸ್ವರೂಪ ಬದಲಾಗಿದೆ. ಇವತ್ತು ರಾಜಕಾರಣ ಎಲ್ಲ ಕಡೆ ರಾರಾಜಿಸುತ್ತಿದೆ. ದಿನನಿತ್ಯ ಪತ್ರಿಕೆ, ಟಿವಿ ನೋಡಿದರೆ ರಾಜಕಾರಣವೇ ಬಿಟ್ಟರೆ, ಜನರ ಬದುಕು ಮತ್ತು ಭಾವನೆಗೆ ಸಂಬಂಧಪಟ್ಟ ಯಾವುದೇ ವಿಷಯಗಳಿಗೆ ಆಸ್ಪದವೇ ಇಲ್ಲದಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು. ಇತ್ತೀಚಿಗೆ ಹಾವೇರಿಯಲ್ಲಿ ಒಂದು ಲಕ್ಷ ಜನರಿಗೆ ಹಕ್ಕು ಪತ್ರ ನೀಡುವ ಕಾರ್ಯಕ್ರಮ ಆಂಯೋಜಿಸಲಾಗಿತ್ತು. ಆದರೆ ಆ ಕಾರ್ಯಕ್ರಮದಲ್ಲಿ ಯಾವುದು ಮುಖ್ಯವಾದ ಸುದ್ದಿಯೋ ಅದನ್ನು ಬಿಟ್ಟು, ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳು ಕೈ ಕುಲಕಲಿಲ್ಲ ಎಂದು ಪತ್ರಕರ್ತರು ಕೇಳಿದ್ದರು. ಹೀಗಾಗಿ ಲಕ್ಷ ಜನರಿಗೆ ಹಕ್ಕು ಪತ್ರ ನೀಡಿರುವ ವಿಚಾರ ಮುನ್ನೆಲೆಗೆ ಬರದೇ, ಬೇರೆ ಬೇರೆ ವಿಚಾರಗಳು ಮುನ್ನೆಲಗೆ ಬಂದಿವೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ, ಮಾಧ್ಯಮ ಅಕಾಡಮಿಯ ಅಧ್ಯಕ್ಷೆ ಆಯೇಶಾ ಖಾನಂ, ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು, ಗಾಂಧಿ ಸ್ಮಾರಕ ನಿಧಿಯ ಅಧ್ಯಕ್ಷ ಡಾ.ವೂಡೇ ಪಿ.ಕೃಷ್ಣ, ಪ್ರೆಸ್‍ಕ್ಲಬ್ ಅಧ್ಯಕ್ಷ ಆರ್.ಶ್ರೀಧರ್, ವರದಿಗಾರರ ಕೂಟದ ಅಧ್ಯಕ್ಷ ಆರ್.ಟಿ.ವಿಠ್ಠಲಮೂರ್ತಿ, ಡಾ.ಬಾಲಾಜಿ ಮತ್ತಿತರರು ಉಪಸ್ಥಿತರಿದ್ದರು.

ವಾರ್ತಾ ಭಾರತಿ 18 Feb 2026 12:38 am

T20 ವಿಶ್ವಕಪ್ | ಸೂಪರ್ 8ಕ್ಕೇರಿದ ನ್ಯೂಝಿಲ್ಯಾಂಡ್

ಕೆನಡಕ್ಕೆ ಸೋಲುಣಿಸಿದ ಗ್ಲೆನ್ ಫಿಲಿಪ್ಸ್–ರಚಿನ್ ರವೀಂದ್ರ ಜೊತೆಯಾಟ ಚೆನ್ನೈ, ಫೆ. 17: ಐಸಿಸಿ T20 ವಿಶ್ವಕಪ್ ನಲ್ಲಿ ಮಂಗಳವಾರ ಗ್ಲೆನ್ ಫಿಲಿಪ್ಸ್ ಮತ್ತು ರಚಿನ್ ರವೀಂದ್ರ ಅವರ ಅರ್ಧಶತಕಗಳ ನೆರವಿನಿಂದ ನ್ಯೂಝಿಲ್ಯಾಂಡ್ ತಂಡವು ಕೆನಡವನ್ನು ಎಂಟು ವಿಕೆಟ್ಗಳ ಭರ್ಜರಿ ಅಂತರದಿಂದ ಸೋಲಿಸಿದೆ. ಇದರೊಂದಿಗೆ ನ್ಯೂಝಿಲ್ಯಾಂಡ್ ‘ಡಿ’ ಗುಂಪಿನಿಂದ ಸೂಪರ್ 8 ಹಂತವನ್ನು ಪ್ರವೇಶಿಸಿದೆ. ಕೆನಡದ ಯುವರಾಜ್ ಸಾಮ್ರಾ 65 ಎಸೆತಗಳಲ್ಲಿ 110 ರನ್ ಗಳನ್ನು ಬಾರಿಸಿದರೂ, ಆ ತಂಡದ ಬೌಲರ್ ಗಳಿಗೆ ಎದುರಾಳಿ ಬ್ಯಾಟರ್ ಗಳನ್ನು ನಿಯಂತ್ರಿಸಲು ಸಾಧ್ಯವಾಗಲಿಲ್ಲ. ಸಾಮ್ರಾ T20 ವಿಶ್ವಕಪ್ ಇತಿಹಾಸದಲ್ಲಿ ಶತಕ ಬಾರಿಸಿದ ಅತ್ಯಂತ ಕಿರಿಯ ಆಟಗಾರನಾದರು. ಗೆಲುವಿಗೆ 20 ಓವರ್ ಗಳಲ್ಲಿ 174 ರನ್ ಗಳ ಗುರಿಯನ್ನು ಪಡೆದ ನ್ಯೂಝಿಲ್ಯಾಂಡ್ ಇನ್ನೂ 29 ಎಸೆತಗಳು ಬಾಕಿಯಿರುವಂತೆಯೇ ಗೆಲುವು ದಾಖಲಿಸಿತು. ಅದು 15.1 ಓವರ್ ಗಳಲ್ಲಿ ಎರಡು ವಿಕೆಟ್ಗಳ ನಷ್ಟಕ್ಕೆ 176 ರನ್ ಗಳಿಸಿತು. ಫಿಲಿಪ್ಸ್ ಮತ್ತು ರಚಿನ್ ಮುರಿಯದ ಮೂರನೇ ವಿಕೆಟ್ಗೆ 146 ರನ್ ಗಳ ಭಾಗೀದಾರಿಕೆಯನ್ನು ನಿಭಾಯಿಸಿ ತಂಡವನ್ನು ಸುಲಭ ವಿಜಯದತ್ತ ಮುನ್ನಡೆಸಿದರು. ಫಿಲಿಪ್ಸ್ 36 ಎಸೆತಗಳಲ್ಲಿ 76 ರನ್ ಗಳನ್ನು ಸಿಡಿಸಿ ಅಜೇಯರಾಗಿದ್ದರು. ಅವರ ಇನಿಂಗ್ಸ್ನಲ್ಲಿ ಆರು ಸಿಕ್ಸರ್ ಗಳು ಮತ್ತು ನಾಲ್ಕು ಬೌಂಡರಿಗಳಿದ್ದವು. ರಚಿನ್ ರವೀಂದ್ರ 39 ಎಸೆತಗಳಲ್ಲಿ 59 ರನ್ ಗಳಿಸಿ ಔಟಾಗದೆ ಉಳಿದರು. ಅವರು ನಾಲ್ಕು ಬೌಂಡರಿಗಳು ಮತ್ತು ಮೂರು ಸಿಕ್ಸರ್ ಗಳನ್ನು ಬಾರಿಸಿದರು. ಉಳಿದಂತೆ, ಆರಂಭಿಕ ಬ್ಯಾಟರ್ ಫಿನ್ ಅಲನ್ 8 ಎಸೆತಗಳಲ್ಲಿ 21 ರನ್ ಗಳ ಕೊಡುಗೆ ನೀಡಿದರು. ಕಿವೀಸ್ ತಂಡವು ತನ್ನ ಲೀಗ್ ಹಂತದಲ್ಲಿ 1.227 ನೆಟ್ ರನ್‌ ರೇಟ್ ನೊಂದಿಗೆ ಆರು ಅಂಕಗಳನ್ನು ಗಳಿಸಿದೆ. ಇದೇ ಗುಂಪಿನಲ್ಲಿ ದಕ್ಷಿಣ ಆಫ್ರಿಕ ಈಗಾಗಲೇ ಸೂಪರ್ 8 ಹಂತ ತಲುಪಿದೆ. ಅದು ನೆಟ್ ರನ್‌ ರೇಟ್ ಆಧಾರದಲ್ಲಿ ಅಗ್ರ ಸ್ಥಾನದಲ್ಲಿದೆ. ಕೆನಡಕ್ಕೆ ಈವರೆಗೆ ಆಡಿದ ಮೂರು ಪಂದ್ಯಗಳಲ್ಲಿ ಜಯ ಸಾಧಿಸಲು ಸಾಧ್ಯವಾಗಿಲ್ಲ. ಅದು ತನ್ನ ಕೊನೆಯ ಲೀಗ್ ಪಂದ್ಯದಲ್ಲಿ ಅಫ್ಘಾನಿಸ್ತಾನವನ್ನು ಎದುರಿಸಲಿದೆ. ಇದಕ್ಕೂ ಮೊದಲು, ಎರಡೂ ತಂಡಗಳಿಗೆ ಗೆಲುವು ಅತ್ಯಗತ್ಯವಾಗಿದ್ದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಕೆನಡ, ಯುವರಾಜ್ ಸಾಮ್ರಾ ಅವರ ಶತಕದ ನೆರವಿನಿಂದ ನಾಲ್ಕು ವಿಕೆಟ್ಗಳ ನಷ್ಟಕ್ಕೆ 173 ರನ್ ಗಳಿಸಿತು. ಎಡಗೈ ಬ್ಯಾಟರ್ ಸಾಮ್ರಾ 58 ಎಸೆತಗಳಲ್ಲಿ ಶತಕ ಬಾರಿಸಿ ದಾಖಲೆ ನಿರ್ಮಿಸಿದರು. ಹತ್ತೊಂಬತ್ತು ವರ್ಷ 141 ದಿನ ವಯಸ್ಸಿನ ಸಾಮ್ರಾ ಐಸಿಸಿ T20 ವಿಶ್ವಕಪ್ ನಲ್ಲಿ ಶತಕ ಬಾರಿಸಿದ ಅತ್ಯಂತ ಕಿರಿಯ ಆಟಗಾರನಾದರು. ಅವರ ಇನಿಂಗ್ಸ್ನಲ್ಲಿ ಆರು ಸಿಕ್ಸರ್ ಗಳು ಮತ್ತು 11 ಬೌಂಡರಿಗಳಿದ್ದವು. ಅವರು ಲಾಕಿ ಫರ್ಗ್ಯೂಸನ್ ಮತ್ತು ಮಿಚೆಲ್ ಸ್ಯಾಂಟ್ನರ್ ಇಲ್ಲದ ನ್ಯೂಝಿಲ್ಯಾಂಡ್ ಬೌಲಿಂಗ್ ದಾಳಿಯ ಪೂರ್ಣ ಪ್ರಯೋಜನ ಪಡೆದರು. ನಾಯಕ ದಿಲ್ಪ್ರೀತ್ ಬಾಜ್ವಾ 39 ಎಸೆತಗಳಲ್ಲಿ 36 ರನ್ ಗಳಿಸಿದರು.

ವಾರ್ತಾ ಭಾರತಿ 18 Feb 2026 12:37 am

ಅಮೆರಿಕ| ಅಪ್ರಾಪ್ತ ವಯಸ್ಕಳ ಮೇಲೆ ಲೈಂಗಿಕ ದೌರ್ಜನ್ಯ ಆರೋಪ: ಭಾರತೀಯನ ಬಂಧನ

ವಾಶಿಂಗ್ಟನ್,ಫೆ.17: ಅಪ್ರಾಪ್ತ ವಯಸ್ಕಳ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಆರೋಪದಲ್ಲಿ ಅಕ್ರಮ ವಲಸಿಗ ಭಾರತೀಯನೊಬ್ಬನನ್ನು ಬಂಧಿಸಲಾಗಿದೆಯೆಂದು ಅಮೆರಿಕದ ವಲಸೆ ಹಾಗೂ ಕಸ್ಟಮ್ಸ್ ಜಾರಿ (ಐಸಿಇ) ಅಮೆರಿಕದ ಹಿರಿಯ ಮಾನವಹಕ್ಕುಗಳ ಅಧಿಕಾರಿಗಳು ತಿಳಿಸಿದ್ದಾರೆ. ಬಂಧಿತ ಆರೋಪಿಯನ್ನು ವೊಡೆಲಾ ಯಶಸ್ವಿ ಕೊಟ್ಟಪಲ್ಲಿ ಎಂದು ಗುರುತಿಸಲಾಗಿದೆ. ಈತ ಅಮೆರಿಕದಲ್ಲಿ ದಾಖಲೆರಹಿತ ವಲಸಿಗನಾಗಿದ್ದು, ವಲಸೆ ಕಾನೂನಿನಡಿ ಆತನನ್ನು ಗಡಿಪಾರುಗೊಳಿಸುವ ಕಾನೂನುಪ್ರಕ್ರಿಯೆ ಜಾರಿಯಲ್ಲಿದೆ ಎಂದು ಅವರು ಹೇಳಿದ್ದಾರೆ. ನ್ಯೂಜೆರ್ಸಿಯಲ್ಲಿ ಅಪ್ರಾಪ್ತ ವಯಸ್ಸಿನ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಆರೋಪವನ್ನು ಆತನ ಮೇಲೆ ಹೊರಿಸಲಾಗಿದೆ. ಅಂಗಡಿಯಿಂದ ಕಳವು ಹಾಗೂ ಸಾರ್ವಜನಿಕ ಶಾಂತಿಭಂಗದ ಆರೋಪವನ್ನು ಕೂಡಾ ಆತ ಎದುರಿಸುತ್ತಿದ್ದಾನೆ.

ವಾರ್ತಾ ಭಾರತಿ 18 Feb 2026 12:34 am

ರಶ್ಯದ ಲೆನಿನ್‌ಗಾರ್ಡ್ ಸೇನಾನೆಲೆಯಲ್ಲಿ ಸ್ಫೋಟ: ಕನಿಷ್ಠ ಇಬ್ಬರು ಮೃತ್ಯು

ಮಾಸ್ಕೋ,ಫೆ.17: ರಶ್ಯದ ಲೆನಿನ್‌ಗ್ರಾಡ್ ಪ್ರಾಂತದ ಸೆರ್ಟೊಲೊವೊ ಪಟ್ಟಣದಲ್ಲಿರುವ ಸೇನಾ ನೆಲೆಯಲ್ಲಿ ಸಂಭವಿಸಿದ ಸ್ಫೋಟದಲ್ಲಿ ಕನಿಷ್ಠ ಇಬ್ಬರು ಮೃತಪಟ್ಟಿದ್ದಾರೆ. ಮಿಲಿಟರಿ ಪೊಲೀಸ್ ಕಟ್ಟಡದಲ್ಲಿ ಈ ಸ್ಫೋಟ ಸಂಭವಿಸಿರುವುದಾಗಿ ಲೆನಿನ್‌ಗ್ರಾಡ್‌ನ ಗವರ್ನರ್ ಅಲೆಕ್ಸಾಂಡರ್ ಡೊಝ್‌ಡೆಂಕೊ ಹೇಳಿದ್ದಾರೆ. ಆದರೆ ಈ ಬಗ್ಗೆ ಅವರು ಹೆಚ್ಚಿನ ವಿವರಗಳನ್ನು ನೀಡಲು ನಿರಾಕರಿಸಿದ್ದಾರೆ. ಕುಸಿದುಬಿದ್ದಿರುವ ಮಿಲಿಟರಿ ಪೊಲೀಸ್ ಕಾರ್ಯಾಲಯದ ಕಟ್ಟಡದ ಅವಶೇಷಗಳನ್ನು ತೆರವುಗೊಳಿಸಲು ಹಾಗೂ ಗಾಯಾಳುಗಳನ್ನು ರಕ್ಷಿಸಲು ಭದ್ರತಾಪಡೆಗಳು ಕಾರ್ಯಾಚರಿಸುತ್ತಿವೆಯೆಂದು ಡ್ರೊಝೆಡೆಂಕೊ ತಿಳಿಸಿದ್ದಾರೆ.

ವಾರ್ತಾ ಭಾರತಿ 18 Feb 2026 12:30 am

ಬಿಇಎಲ್‌ಗೆ ಭೇಟಿ ನೀಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್; ಕ್ಷಿಪಣಿ ಸಂಯೋಜನಾ ಘಟಕದ ಉದ್ಘಾಟನೆ

ಬೆಂಗಳೂರು : ರಕ್ಷಣಾ ಸಚಿವ ರಾಜನಾಥ್ ಸಿಂಗ್ ಬೆಂಗಳೂರಿನ ನವರತ್ನ ಡಿಫೆನ್ಸ್ ಪಿಎಸ್‍ಯು ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್‍ಗೆ (ಬಿಇಎಲ್) ಭೇಟಿ ನೀಡಿ ಪುಣೆಯಲ್ಲಿರುವ ಕೃತಕ ಬುದ್ಧಿಮತ್ತೆ ಶ್ರೇಷ್ಠತಾ ಕೇಂದ್ರವನ್ನು ವರ್ಚುವಲ್ ಮೂಲಕ ಉದ್ಘಾಟಿಸಿದರು ಮತ್ತು ಕಂಪನಿಯ ಕೃತಕ ಬುದ್ಧಿಮತ್ತೆ ನೀತಿಯನ್ನು ಅಧಿಕೃತವಾಗಿ ಬಿಡುಗಡೆ ಮಾಡಿದರು. ಅಲ್ಲದೇ, ಬಿಇಎಲ್ ಅಭಿವೃದ್ಧಿಪಡಿಸಿದ ಮೌಂಟೇನ್ ಫೈರ್ ಕಂಟ್ರೋಲ್ ರಾಡಾರ್ ಅನ್ನು ಲೋಕಾರ್ಪಣೆ, ಕ್ಷಿಪಣಿ ಸಂಯೋಜನಾ ಘಟಕದ ಉದ್ಘಾಟನೆ, ಆಕಾಶ್ 3ನೇ ಮತ್ತು 4ನೇ ರೆಜಿಮೆಂಟ್ ಕಾಂಬ್ಯಾಟ್ ಸಿಸ್ಟಮ್‍ಗಳಿಗೆ ಇದೇ ಸಂದರ್ಭದಲ್ಲಿ ಅವರು ಚಾಲನೆ ನೀಡಿದರು. ಭಾರತೀಯ ಸ್ಟಾರ್ಟ್‍ಅಪ್‍ಗಳು ಅಭಿವೃದ್ಧಿಪಡಿಸಿದ ಕೃತಕ ಬುದ್ಧಿಮತ್ತೆ ಆಧಾರಿತ ಪರಿಹಾರಗಳು ಸೇರಿದಂತೆ ವಿವಿಧ ಸುಧಾರಿತ ದೇಶೀಯ ರಕ್ಷಣಾ ತಂತ್ರಜ್ಞಾನಗಳ ಬಗ್ಗೆ ಸಚಿವರಿಗೆ ಮಾಹಿತಿ ನೀಡಲಾಯಿತು. ಇದು ರಕ್ಷಣಾ ಪರಿಸರ ವ್ಯವಸ್ಥೆಯಲ್ಲಿ ನಾವೀನ್ಯತೆ ಮತ್ತು ಸ್ವದೇಶೀಕರಣಕ್ಕೆ ನೀಡಲಾಗುತ್ತಿರುವ ಪ್ರಾಮುಖ್ಯತೆಯನ್ನು ಎತ್ತಿ ತೋರಿಸಿತು. ಬಿಇಎಲ್ ಸಹಯೋಗದೊಂದಿಗೆ ಕ್ಷಿಪಣಿ ವ್ಯವಸ್ಥೆಗಳ ತಯಾರಿಕೆಯಲ್ಲಿ ತೊಡಗಿರುವ ಉದ್ಯಮ ಪಾಲುದಾರರಾದ ಬಿಇಎಂಎಲ್, ಬಿಡಿಎಲ್, ಎಲ್ ಅಂಡ್ ಟಿ, ಎಂ.ಎಸ್.ಎಂ.ಇಗಳು ಮತ್ತು ಸ್ಟಾರ್ಟ್ ಅಪ್‍ಗಳೊಂದಿಗೆ ರಾಜನಾಥ್ ಸಿಂಗ್ ಸಂವಾದ ನಡೆಸಿದರು. ಸುಧಾರಿತ ದೇಶೀಯ ತಂತ್ರಜ್ಞಾನಗಳ ಅಭಿವೃದ್ಧಿಗಾಗಿ ಶೈಕ್ಷಣಿಕ ಪಾಲುದಾರರಾದ ಐಐಟಿ-ಎಂ ಮತ್ತು ಐಐಎಸ್‍ಸಿ ಪ್ರತಿನಿಧಿಗಳೊಂದಿಗೂ ಚರ್ಚೆಗಳು ನಡೆದವು. ಮಾಹಿತಿ ವಿನಿಮಯದ ಸಂದರ್ಭದಲ್ಲಿ, ಬಿಇಎಲ್‍ನ ಕೇಂದ್ರ ಸಂಶೋಧನಾ ಪ್ರಯೋಗಾಲಯಗಳು, ಎಲೆಕ್ಟ್ರಾನಿಕ್ಸ್ ವಾರ್‍ಫೇರ್ ಮತ್ತು ಫೋಟೋನಿಕ್ಸ್ ಶ್ರೇಷ್ಠತಾ ಕೇಂದ್ರ, ಕಮ್ಯುನಿಕೇಶನ್ ಶ್ರೇಷ್ಠತಾ ಕೇಂದ್ರ, ರಾಡಾರ್ ಮತ್ತು ವೆಪನ್ ಸಿಸ್ಟಮ್ಸ್ ಹಾಗೂ ಉತ್ಪನ್ನ ಅಭಿವೃದ್ಧಿ ಮತ್ತು ನಾವೀನ್ಯತೆ ಕೇಂದ್ರ ಕೈಗೊಂಡಿರುವ ಸ್ವದೇಶೀಕರಣ ಉಪಕ್ರಮಗಳನ್ನು ಪ್ರದರ್ಶಿಸಲಾಯಿತು. ಸ್ಟಾರ್ಟ್‍ಅಪ್‍ಗಳು ಮತ್ತು ಉದ್ಯಮ ಪಾಲುದಾರರು ತಮ್ಮ ಉತ್ಪನ್ನಗಳನ್ನು ಪ್ರದರ್ಶಿಸಿದರು. ದೇಶೀಯ ರಕ್ಷಣಾ ಉತ್ಪಾದನೆ ಮತ್ತು ಸಂಶೋಧನಾ ಸಾಮಥ್ರ್ಯಗಳನ್ನು ಬಲಪಡಿಸುವಲ್ಲಿ ಬಿಇಎಲ್ ನೀಡುತ್ತಿರುವ ಮಹತ್ವದ ಕೊಡುಗೆಯನ್ನು ಸಚಿವರ ಗಮನಕ್ಕೆ ತರಲಾಯಿತು. ತ್ವರಿತ ಪ್ರತಿಕ್ರಿಯೆ ಮೇಲ್ಮೈಯಿಂದ ಗಾಳಿಗೆ ಚಿಮ್ಮುವ ಕ್ಷಿಪಣಿ ವ್ಯವಸ್ಥೆಗಳು, ಲಘು ಯುದ್ಧ ವಿಮಾನ ಮಾರ್ಕ್ II , ಸುಧಾರಿತ ಮಧ್ಯಮ ಯುದ್ಧ ವಿಮಾನ, ಪ್ರಾಜೆಕ್ಟ್ ಕುಶಾ, ಡ್ರೋನ್ ನಿರೋಧಕ ವ್ಯವಸ್ಥೆಗಳು ಮತ್ತು ನೌಕಾ ಶಸ್ತ್ರಾಸ್ತ್ರ ನಿಯಂತ್ರಣ ವ್ಯವಸ್ಥೆಗಳಂತಹ ಪ್ರಮುಖ ರಾಷ್ಟ್ರೀಯ ರಕ್ಷಣಾ ಕಾರ್ಯಕ್ರಮಗಳಿಗೆ ಪೂರಕವಾಗಿ ಬಿಇಎಲ್‍ನಲ್ಲಿ ನಡೆಯುತ್ತಿರುವ ಸಂಶೋಧನೆ ಮತ್ತು ಅಭಿವೃದ್ಧಿ ಚಟುವಟಿಕೆಗಳ ಬಗ್ಗೆಯೂ ಸಚಿವರಿಗೆ ವಿವರಿಸಲಾಯಿತು. ಕಾರ್ಯತಂತ್ರದ ಸೆಮಿಕಂಡಕ್ಟರ್ ಸಾಧನಗಳಾದ ಸೆಕ್ಯೂರ್ ಸಿಸ್ಟಮ್ ಆನ್ ಚಿಪ್ಸ್, ಮೊನೊಲಿಥಿಕ್ ಮೈಕ್ರೋವೇವ್ ಇಂಟಿಗ್ರೇಟೆಡ್ ಸಕ್ರ್ಯೂಟ್ಸ್ ಮತ್ತು ಅಪ್ಲಿಕೇಶನ್ ಸ್ಪೆಸಿಫಿಕ್ ಇಂಟಿಗ್ರೇಟೆಡ್ ಸಕ್ರ್ಯೂಟ್ಸ್ ಗಳ ಸ್ವದೇಶೀಕರಣದಲ್ಲಿ ಬಿಇಎಲ್ ಪಾತ್ರದ ಮೇಲೆ ವಿಶೇಷ ಗಮನ ಹರಿಸಲಾಯಿತು. ಇದು ‘ಇಂಡಿಯಾ ಸೆಮಿಕಂಡಕ್ಟರ್ ಮಿಷನ್' ಮತ್ತು ನಿರ್ಣಾಯಕ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಆತ್ಮನಿರ್ಭರ ಭಾರತದ ದೂರದೃಷ್ಟಿಗೆ ಅನುಗುಣವಾಗಿದೆ. ಸ್ವದೇಶಿ ಸಂಶೋಧನೆ ಮತ್ತು ಅಭಿವೃದ್ಧಿ ಉಪಕ್ರಮಗಳು ಭೂಮಿ, ವಾಯು, ನೌಕಾ ಮತ್ತು ಕಾರ್ಯತಂತ್ರದ ವಲಯಗಳಲ್ಲಿ ಕಾರ್ಯಾಚರಣೆಯ ಸನ್ನದ್ಧತೆಯನ್ನು ಹೆಚ್ಚಿಸುತ್ತಿವೆ ಹಾಗೂ ವಿದೇಶಿ ತಂತ್ರಜ್ಞಾನಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುತ್ತಿವೆ ಎಂದು ತಿಳಿಸಲಾಯಿತು. ರಕ್ಷಣಾ ಸಚಿವರು ಬಿಇಎಲ್‍ನ ಸಂಶೋಧನಾ ಸಮುದಾಯವನ್ನು ಉದ್ದೇಶಿಸಿ ಮಾತನಾಡುತ್ತಾ, ಎಐ ಮತ್ತು ಸ್ವಾಯತ್ತ ವ್ಯವಸ್ಥೆಗಳಲ್ಲಿನ ಇತ್ತೀಚಿನ ತಂತ್ರಜ್ಞಾನಗಳನ್ನು ಬಳಸಿಕೊಂಡು ಉತ್ಪನ್ನಗಳ ತ್ವರಿತ ಅಭಿವೃದ್ಧಿಗಾಗಿ ಸ್ಟಾರ್ಟ್‍ಅಪ್‍ಗಳು, ಉದ್ಯಮ ಮತ್ತು ಶಿಕ್ಷಣ ಸಂಸ್ಥೆಗಳೊಂದಿಗೆ ಸಹಕರಿಸಲು ಪ್ರೋತ್ಸಾಹಿಸಿದರು. ವಿಕಸಿತ ಭಾರತದ ಕನಸನ್ನು ನನಸಾಗಿಸಲು ಬಿಇಎಲ್ ವಿವಿಧ ವಿಭಾಗಗಳ ನಡುವಿನ ಸಹಯೋಗ, ನಾವೀನ್ಯತೆ ಮತ್ತು ಕ್ಷಿಪ್ರ ಮೂಲಮಾದರಿ ತಯಾರಿಕೆಗೆ ಆದ್ಯತೆ ನೀಡಬೇಕೆಂದು ಒತ್ತಿ ಹೇಳಿದರು.

ವಾರ್ತಾ ಭಾರತಿ 18 Feb 2026 12:30 am

ಪ್ರಧಾನಿ ಮೋದಿ- ಫ್ರೆಂಚ್ ಅಧ್ಯಕ್ಷ ಮ್ಯಾಕ್ರನ್ ದ್ವಿಪಕ್ಷೀಯ ಮಾತುಕತೆ| ಉಭಯ ದೇಶಗಳ ಸಂಬಂಧ ವಿಶೇಷ ಜಾಗತಿಕ

ಕಾರ್ಯತಂತ್ರ ಪಾಲುದಾರಿಕೆಗೆ ಹೆಚ್ಚಿಸಲು ನಿರ್ಧಾರ

ವಾರ್ತಾ ಭಾರತಿ 18 Feb 2026 12:28 am

ಇರಾನ್ ಸನಿಹಕ್ಕೆ ಧಾವಿಸುತ್ತಿರುವ ಅಮೆರಿಕದ ಯುದ್ಧ ನೌಕೆ ಯುಎಸ್‌ಎಸ್ ‘ಅಬ್ರಹಾಂ ಲಿಂಕನ್’

ಟೆಹರಾನ್,ಫೆ.17: ಇರಾನ್-ಅಮೆರಿಕ ನಡುವೆ ಸ್ವಿಝರ್‌ಲ್ಯಾಂಡ್‌ನ ಜಿನೇವಾದಲ್ಲಿ ಎರಡನೇ ಹಂತದ ಮಾತುಕತೆಗಳು ಮಂಗಳವಾರ ನಡೆಯುತ್ತಿವಂತೆಯೇ ಇರಾನ್ ಕರಾವಳಿಯ ಸನಿಹಕ್ಕೆ ಅಮೆರಿಕದ ಯುದ್ಧ ನೌಕೆ ಯುಎಸ್‌ಎಸ್ ಅಬ್ರಹಾಂಲಿಂಕನ್ ಧಾವಿಸುತ್ತಿದ್ದು, ಪ್ರದೇಶದಲ್ಲಿ ಮತ್ತೆ ಸಂಘರ್ಷದ ಭೀತಿಯನ್ನು ಹುಟ್ಟುಹಾಕಿದೆ. ಇರಾನ್ ಕರಾವಳಿಯಿಂದ 700 ಕಿ.ಮೀ. ದೂರದ ಒಮಾನ್ ಕರಾವಳಿಯಲ್ಲಿ ಅಮೆರಿಕದ ವಿಮಾನಸಾಗಣೆ ನೌಕೆ ಅಬ್ರಹಾಂ ಲಿಂಕನ್ ಲಂಗರು ಹಾಕಿರುವ ದೃಶ್ಯದ ಉಪಗ್ರಹ ಚಿತ್ರಗಳನ್ನು ಬಿಬಿಸಿ ಸುದ್ದಿಸಂಸ್ಥೆ ಹಂಚಿಕೊಂಡಿದೆ. ಈ ಯುದ್ಧ ನೌಕೆಯು ಎಫ್-35 ಯುದ್ಧವಿಮಾನಗಳು ಸೇರಿದಂತೆ 90 ಫೈಟರ್ ಜೆಟ್‌ಗಳು, 5683 ಯೋಧರನ್ನು ಒಳಗೊಂಡಿದೆ. ಐದು ದಿನಗಳ ಹಿಂದೆ ಅಮೆರಿಕದ ಇನ್ನೊಂದು ವಿಮಾನವಾಹಕ ನೌಕೆ ಯುಎಸ್‌ಎಸ್ ಜೆರಾಲ್ಡ್ ಆರ್.ಫೋರ್ಡ್ ಕೂಡಾ ಇರಾನ್‌ನೆಡೆಗೆ ಧಾವಿಸಲು ಆರಂಭಿಸಿದೆ. ಈ ನಡುವೆ ಇರಾನ್‌ನ ರೆವೆಲ್ಯೂಶನರಿ ಗಾರ್ಡ್ ಯೋಧರು ಹೊರ್ಮುಝ್ ಜಲಸಂಧಿಯಲ್ಲಿ ಸಮರಾಭ್ಯಾಸ ಕವಾಯತನ್ನು ಆರಂಭಿಸಿರುವುದು ಯುದ್ಧ ಭೀತಿಯನ್ನು ಇನ್ನಷ್ಟು ಹೆಚ್ಚಿಸಿದೆ.

ವಾರ್ತಾ ಭಾರತಿ 18 Feb 2026 12:23 am

ಮಹಾರಾಷ್ಟ್ರ| ವಿದ್ಯಾರ್ಥಿಗಳ ನಡುವೆ ಘರ್ಷಣೆ: ಓರ್ವ ಮೃತ್ಯು, ಮೂವರು ಗಂಭೀರ

ಲಾತೂರ್, ಫೆ. 17: ಮಹಾರಾಷ್ಟ್ರದ ಲಾತೂರ್‌ನ ಕಾಲೇಜೊಂದರಲ್ಲಿ ವಿದ್ಯಾರ್ಥಿಗಳ ಎರಡು ಗುಂಪುಗಳ ನಡುವೆ ನಡೆದ ಘರ್ಷಣೆಯ ಸಂದರ್ಭ ಓರ್ವ ವಿದ್ಯಾರ್ಥಿ ಮೃತಪಟ್ಟಿದ್ದಾನೆ. ಮೂವರು ಗಂಭೀರ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಔಸಾ ರಸ್ತೆಯಲ್ಲಿರುವ ಕಾಲೇಜಿನ ಆವರಣದಲ್ಲಿ ಸೋಮವಾರ ಸಂಜೆ ಈ ಘಟನೆ ನಡೆದಿದೆ. ಘರ್ಷಣೆಗೆ ಸಂಬಂಧಿಸಿ ನಾಲ್ವರು ವಿದ್ಯಾರ್ಥಿಗಳನ್ನು ಬಂಧಿಸಲಾಗಿದೆ. ‘‘ವೈಯುಕ್ತಿಕ ವಿವಾದದ ಹಿನ್ನೆಲೆಯಲ್ಲಿ ಮೂರನೇ ವರ್ಷದ ಡಿಪ್ಲೊಮಾ ಕೋರ್ಸ್‌ನ ವಿದ್ಯಾರ್ಥಿಗಳ ಎರಡು ಗುಂಪುಗಳ ನಡುವೆ ಘರ್ಷಣೆ ನಡೆಯಿತು. ಈ ಸಂದರ್ಭ ಆ ದಾರಿಯಾಗಿ ಸಾಗುತ್ತಿದ್ದ ನಾರಾಯಣ ಪಂಚಾಲ್ (20)ನನ್ನು ಇರಿದು ಹತ್ಯೆಗೈಯಲಾಗಿದೆ. ಇತರ ಮೂವರಿಗೆ ಗಂಭೀರ ಗಾಯಗಳಾಗಿವೆ. ಅವರನ್ನು ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ’’ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ವಾರ್ತಾ ಭಾರತಿ 18 Feb 2026 12:19 am

ಸಚಿವರ ಸಂಖ್ಯೆ ಶೇ.15 ಮೀರುವಂತಿಲ್ಲ : ಹೈಕೋರ್ಟ್

ಬೆಂಗಳೂರು : ಸಂವಿಧಾನದ ವಿಧಿಯ ಪ್ರಕಾರ ಸಚಿವರ ಸಂಖ್ಯೆಯು ಒಟ್ಟು ಶಾಸಕರ ಸಂಖ್ಯೆ ಶೇ.15 ಅನ್ನು ಮೀರುವಂತಿಲ್ಲ. ಇಷ್ಟೇ ಮಂದಿ ಸಚಿವರಾಗಬೇಕು ಎಂಬುದಕ್ಕೆ ಮಿತಿ ಇದೆ. ಅನುಮತಿಗಿಂತ ಹೆಚ್ಚು ಮಂದಿಗೆ ಸರಕಾರ ವೇತನ ನೀಡಲಾಗದು ಎಂದು ಹೈಕೋರ್ಟ್ ಮೌಖಿಕವಾಗಿ ಹೇಳಿದೆ. ಸಂಪುಟ ದರ್ಜೆ ಸ್ಥಾನಮಾನ ಹಾಗೂ ಸೌಲಭ್ಯಗಳೊಂದಿಗೆ 34 ಮಂದಿ ಶಾಸಕರನ್ನು ವಿವಿಧ ನಿಗಮ-ಮಂಡಳಿಗಳಿಗೆ ಅಧ್ಯಕ್ಷರನ್ನಾಗಿ ಹಾಗೂ ದಿಲ್ಲಿ ವಿಶೇಷ ಪ್ರತಿನಿಧಿ, ಸಿಎಂ ರಾಜಕೀಯ ಕಾರ್ಯದರ್ಶಿ ಸಹಿತ ಹಲವು ಶಾಸಕರಿಗೆ ವಿವಿಧ ಹುದ್ದೆಗಳಿಗೆ ನೇಮಕ ಮಾಡಿರುವುದು ಸಂವಿಧಾನಬಾಹಿರ ಎಂದು ಆಕ್ಷೇಪಿಸಿ ಬೆಂಗಳೂರು ನಿವಾಸಿ ಸೂರಿ ಪಾಯಲ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಹಾಗೂ ನ್ಯಾಯಮೂರ್ತಿ ಸಿ.ಎಂ. ಪೂಣಚ್ಚ ಅವರಿದ್ದ ವಿಭಾಗೀಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು. ಅರ್ಜಿದಾರರ ಪರ ವಕೀಲರು ವಾದ ಮಂಡಿಸಿ, ಹಾಲಿ ಅರ್ಜಿ ಸಲ್ಲಿಸಿದಾಗ 46 ಮಂದಿ ಲಾಭದಾಯಕ ಹುದ್ದೆಯಲ್ಲಿದ್ದರು. ಈಗ 129 ಮಂದಿ ಲಾಭದಾಯಕ ಹುದ್ದೆಯಲ್ಲಿದ್ದಾರೆ. ನಾವು ಸರಕಾರದ ಆದೇಶವನ್ನು ಮಾತ್ರ ಪ್ರಶ್ನಿಸುತ್ತೇವೆ. ಎಲ್ಲ ಪ್ರತಿವಾದಿಗಳನ್ನು ಡಿಲೀಟ್ ಮಾಡಬಹುದು. ಶಾಸಕರು ಫಲಾನುಭವಿಗಳಾಗಿದ್ದಾರೆ. ಸರಕಾರದ ಆದೇಶ ಕಾರ್ಯಕಾರಿ ಆದೇಶ ರೂಪದಲ್ಲಿದ್ದು, ಅದು ಮತ್ತೆ ಅಂಥ ಹುದ್ದೆಗಳನ್ನು ಸೃಷ್ಟಿಸುತ್ತಿದೆ. ರಾಜ್ಯ ಸರಕಾರವು ಹೊಸದಾಗಿ ಆಯೋಗ, ಸಮಿತಿ, ಪ್ರಾಧಿಕಾರ, ಮಿಷನ್, ಕಾರ್ಯಪಡೆಗಳನ್ನು ರೂಪಿಸಿ ಅದಕ್ಕೆ ಶಾಸಕರನ್ನು ನೇಮಿಸಿ ಅಧ್ಯಕ್ಷರನ್ನಾಗಿಸಿದೆ. ನಾವು ವೈಯಕ್ತಿಕವಾಗಿ ಶಾಸಕರು/ಸಚಿವರ ವಿರುದ್ಧವಿಲ್ಲ. ಸರಕಾರದ ಆದೇಶದ ವಿರುದ್ಧ ಮಾತ್ರ ಇದ್ದೇವೆ. ಅಧ್ಯಕ್ಷರು/ಮುಖ್ಯಸ್ಥರಿಗೆ ಕರ್ನಾಟಕ ಸಚಿವರು ವೇತನ, ಭತ್ತೆ ಕಾಯ್ದೆ 1956ರ ವೇತನ ಸಿಗಲಿದೆ. ಈಗ ಶಾಸಕರಿಗೆ ಸಚಿವರಿಗೆ ಸಂಪುಟ ದರ್ಜೆ ಸ್ಥಾನಮಾನ ನೀಡಲಾಗಿದೆ ಎಂದರು. ಆಗ ನ್ಯಾಯಪೀಠ, ಸಂವಿಧಾನದ 164(1ಎ) ವಿಧಿ ಪ್ರಕಾರ ಸಚಿವರ ಸಂಖ್ಯೆಯು ಶೇ. 15 ಅನ್ನು ಮೀರುವಂತಿಲ್ಲ. ಇಷ್ಟೇ ಮಂದಿ ಸಚಿವರಾಗಬೇಕು ಎಂಬುದಕ್ಕೆ ಮಿತಿ ಇದೆ. ಅನುಮತಿಸಿರುವ ಮಂದಿಗಿಂತ ಹೆಚ್ಚು ಮಂದಿಗೆ ನಿಮಗೆ ವೇತನ ನೀಡಲಾಗುವುದಿಲ್ಲ ಎಂದು ಹೇಳಿತು. ಅಂತಿಮವಾಗಿ, ಪ್ರತಿವಾದಿಗಳನ್ನಾಗಿಸಿರುವ ಶಾಸಕರ ವಿರುದ್ಧ ಯಾವುದೇ ಕೋರಿಕೆ ಇಲ್ಲವಾದ್ದರಿಂದ ಅವರನ್ನು ಪ್ರತಿವಾದಿಗಳ ಸ್ಥಾನದಿಂದ ತೆಗೆಯಬಹುದು. 2020ರ ಅಕ್ಟೋಬರ್ 7ರಂದು ರಾಜ್ಯ ಸರಕಾರ ಹೊರಡಿಸಿರುವ ಸರಕಾರದ ಆದೇಶವನ್ನು ಮಾತ್ರ ಅರ್ಜಿದಾರರು ಪ್ರಶ್ನಿಸಿದ್ದಾರೆ ಎಂದು ಆದೇಶಿಸಿದ ನ್ಯಾಯಪೀಠ, ವಿಚಾರಣೆಯನ್ನು ಮಾರ್ಚ್ 4ಕ್ಕೆ ಮುಂದೂಡಿತು.

ವಾರ್ತಾ ಭಾರತಿ 18 Feb 2026 12:14 am

ಗುಜರಾತ್‌ನ 6 ನ್ಯಾಯಾಲಯಗಳಿಗೆ ಬಾಂಬ್ ಬೆದರಿಕೆ: ಪೊಲೀಸರಿಂದ ಶೋಧ

ಅಹ್ಮದಾಬಾದ್, ಫೆ. 17: ಗುಜರಾತ್‌ನ 6 ನ್ಯಾಯಾಲಯಗಳು ಮಂಗಳವಾರ ಬಾಂಬ್ ಬೆದರಿಕೆಯ ಇಮೇಲ್‌ಗಳನ್ನು ಸ್ವೀಕರಿಸಿವೆ. ಈ ಹಿನ್ನೆಲೆಯಲ್ಲಿ ಈ ನ್ಯಾಯಾಲಯಗಳಲ್ಲಿ ಕೂಲಂಕಷ ಶೋಧ ಕಾರ್ಯಾಚರಣೆ ನಡೆಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಹ್ಮದಾಬಾದ್, ವಡೋದರಾ, ವಲಸಾಡ್, ರಾಜ್‌ಕೋಟ್, ಗಾಂಧಿನಗರ ಹಾಗೂ ಮಹೇಶಾನ ನ್ಯಾಯಾಲಯಗಳು ಬಾಂಬ್ ಬೆದರಿಕೆಯ ಇಮೇಲ್‌ಗಳನ್ನು ಸ್ವೀಕರಿಸಿವೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ವಡೋದರಾ ಜಿಲ್ಲಾ ನ್ಯಾಯಾಲಯಕ್ಕೆ ಕಳುಹಿಸಿದ ಇಮೇಲ್‌ನಲ್ಲಿ ನ್ಯಾಯಾಲಯದ ಆವರಣದಲ್ಲಿ 19 ಬಾಂಬ್‌ಗಳನ್ನು ಇರಿಸಲಾಗಿದೆ ಎಂದು ಪ್ರತಿಪಾದಿಸಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ‘‘ಮಧ್ಯಾಹ್ನದ ಊಟದ ಸಮಯದಲ್ಲಿ ನ್ಯಾಯಾಲಯದ ಮೇಲೆ ಬಾಂಬ್ ಹಾಕಲಾಗುವುದು ಎಂದು ಬೆದರಿಕೆ ಒಡ್ಡಲಾಗಿತ್ತು. ಇಮೇಲ್ ಕಳುಹಿಸಿದವರು ತಮಿಳುನಾಡು ನ್ಯಾಯಾಲಯದ ತೀರ್ಪನ್ನು ಟೀಕಿಸಿದ್ದಾರೆ. ವಡೋದರಾ ಎಸ್‌ಒಜಿ, ಬಾಂಬ್ ಪತ್ತೆ ಹಾಗೂ ನಿಷ್ಕ್ರಿಯ ದಳ (ಬಿಡಿಡಿಎಸ್), ಶ್ವಾನ ದಳ, ಸ್ಥಳೀಯ ಪೊಲೀಸರು ಹಾಗೂ ಸೈಬರ್ ತಜ್ಞರ ತಂಡ ಪೂರ್ವಾಹ್ನ ಸುಮಾರು 11 ಗಂಟೆಗೆ ಸ್ಥಳಕ್ಕೆ ತಲುಪಿತು. ನ್ಯಾಯಾಲಯದ ಆವರಣವನ್ನು ಸುತ್ತುವರಿಯಿತು. ಆದರೆ, ಯಾವುದೇ ಅನುಮಾನಾಸ್ಪದ ವಸ್ತು ಪತ್ತೆಯಾಗಿಲ್ಲ’’ ಎಂದು ವಲಯ 2 ಡಿಸಿಪಿ ಮಂಜಿತ್ ವಂಝಾರಾ ತಿಳಿಸಿದ್ದಾರೆ. ನ್ಯಾಯಾಲಯದ ಆವರಣದಲ್ಲಿ ಸುಧಾರಿತ ಸ್ಫೋಟಕಗಳನ್ನು ಇರಿಸಲಾಗಿದೆ. ಅದು ಅಪರಾಹ್ನದ ನಮಾಝ್‌ಗೆ ಮುನ್ನ ಸ್ಫೋಟಗೊಳ್ಳಲಿದೆ ಎಂದು ಇಮೇಲ್ ಬೆದರಿಕೆ ಒಡ್ಡಿತ್ತು. ಈ ಹಿನ್ನೆಲೆಯಲ್ಲಿ ವಲಸಾಡ್‌ನ ಜಿಲ್ಲಾ ನ್ಯಾಯಾಲಯದ 19 ನ್ಯಾಯಾಲಯಗಳನ್ನು ತೆರವುಗೊಳಿಸಲಾಯಿತು ಎಂದು ವಲಸಾಡ್‌ನ ಪೊಲೀಸ್ ವರಿಷ್ಠ ಯುವರಾಜ್ ಸಿಂಗ್ ಜಡೇಜಾ ತಿಳಿಸಿದ್ದಾರೆ. ಶೋಧ ಕಾರ್ಯಾಚರಣೆ ಸಂದರ್ಭ ಅನುಮಾನಾಸ್ಪದವಾದ ಯಾವುದೇ ವಸ್ತುಗಳು ಪತ್ತೆಯಾಗಿಲ್ಲ ಎಂದು ಅವರು ಹೇಳಿದ್ದಾರೆ. ಬಾಂಬ್ ಬೆದರಿಕೆ ಹಿನ್ನೆಲೆಯಲ್ಲಿ ರಾಜ್‌ಕೋಟ್, ಗಾಂಧಿನಗರ ಹಾಗೂ ಅಹ್ಮದಾನಗರ್‌ನ ಜಿಲ್ಲಾ ನ್ಯಾಯಾಲಯಗಳನ್ನು ಮಂಗಳವಾರ ಬೆಳಗ್ಗೆ ತೆರೆವುಗೊಳಿಸಲಾಯಿತು. ಆದರೆ ಯಾವುದೇ ರೀತಿಯ ಸಂದೇಹಾಸ್ಪದ ವಸ್ತುಗಳು ಪತ್ತೆಯಾಗಿಲ್ಲ ಎಂದು ಅಧಿಕಾರಿಗಳು ದೃಢಪಡಿಸಿದ್ದಾರೆ.

ವಾರ್ತಾ ಭಾರತಿ 18 Feb 2026 12:13 am

ನರೇಗಾದ ಮೂಲ ಸ್ವರೂಪ ಹಾಳು ಮಾಡಲಾಗುತ್ತಿದೆ: ಎಂ.ಪಿ.ಲತಾ ಮಲ್ಲಿಕಾರ್ಜುನ ಆರೋಪ

ವಿಜಯನಗರ / ಹರಪನಹಳ್ಳಿ, ಫೆ.17: ದೇಶದ ಬಡ ಕುಟುಂಬಗಳಿಗೆ ಜೀವನಾಧಾರವಾಗಿರುವ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಮೂಲ ಸ್ವರೂಪವನ್ನು ಕೇಂದ್ರ ಬಿಜೆಪಿ ಸರ್ಕಾರ ಹಾಳು ಮಾಡುತ್ತಿದೆ ಎಂದು ಶಾಸಕಿ ಎಂ.ಪಿ.ಲತಾ ಮಲ್ಲಿಕಾರ್ಜುನ ಆರೋಪಿಸಿದರು. ತಾಲೂಕಿನ ಕೆಸರಹಳ್ಳಿ ಗ್ರಾಮದಲ್ಲಿ ಮಂಗಳವಾರ ‘ನರೇಗಾ ಬಚಾವೋ ಸಂಗ್ರಾಮ’ ಪಾದಯಾತ್ರೆಗೆ ಚಾಲನೆ ನೀಡಿ ಅವರು ಮಾತನಾಡಿದರು. ನರೇಗಾ ಯೋಜನೆ ಗ್ರಾಮೀಣ ಜನತೆಗೆ ಉದ್ಯೋಗದ ಭರವಸೆಯ ಜೊತೆಗೆ “ಕೆಲಸ ಕೇಳುವ ಹಕ್ಕು” ಎಂಬ ಮನೋಭಾವ ನೀಡಿದ ಮಹತ್ವದ ಕಾಯ್ದೆಯಾಗಿದೆ. ಇಂತಹ ಯೋಜನೆಯ ಹೆಸರು ಬದಲಿಸುವ ಮೂಲಕ ಅದರ ಮೂಲ ತತ್ವವನ್ನು ಬದಲಿಸಲು ಯತ್ನಿಸಲಾಗುತ್ತಿದೆ ಎಂದು ಆರೋಪಿಸಿದರು. ರೈತರಿಗೆ ನೀರಾವರಿ, ಕೆರೆ-ಕಟ್ಟೆಗಳ ನಿರ್ಮಾಣ, ರಸ್ತೆ ಅಭಿವೃದ್ಧಿ ಸೇರಿದಂತೆ ಗ್ರಾಮಾಭಿವೃದ್ಧಿ ಕಾರ್ಯಗಳನ್ನು ಗ್ರಾಮಗಳೇ ನಿರ್ಧರಿಸುತ್ತಿದ್ದವು. ಆದರೆ ಹೊಸ ರೂಪದಲ್ಲಿ ಯೋಜನೆಯ ತತ್ವ ಹಾಳಾಗುತ್ತಿದೆ ಎಂದು ದೂರಿದರು. ನರೇಗಾ ಗ್ರಾಮೀಣ ಮಹಿಳೆಯರ ಸ್ವಾವಲಂಬನೆಗೆ ಆಶಾಕಿರಣವಾಗಿದ್ದು, ಬ್ಯಾಂಕ್ ಖಾತೆ ತೆರೆಯುವ ಅವಕಾಶ ಹಾಗೂ ಕುಟುಂಬ ನಿರ್ಧಾರಗಳಲ್ಲಿ ಪಾಲ್ಗೊಳ್ಳುವ ಶಕ್ತಿ ನೀಡಿದೆ. ಯೋಜನೆ ದುರ್ಬಲವಾದರೆ ಅದರ ಹೊಡೆತ ಮಹಿಳೆಯರು, ದಲಿತರು ಹಾಗೂ ಹಿಂದುಳಿದ ವರ್ಗಗಳಿಗೆ ತಗುಲುತ್ತದೆ ಎಂದು ಹೇಳಿದರು. 100 ದಿನಗಳ ಉದ್ಯೋಗ ಭರವಸೆ ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು. ಕೂಲಿ ಪಾವತಿಗಳನ್ನು ಸಮಯಕ್ಕೆ ಮಾಡಬೇಕು ಹಾಗೂ ಕಾರ್ಮಿಕರ ಹಕ್ಕುಗಳನ್ನು ಕಾಪಾಡಬೇಕು ಎಂದು ಒತ್ತಾಯಿಸಿದರು. ಕೆಸರಹಳ್ಳಿ, ಬಸವನಾಳು, ಗೌರಿಪುರ, ಬಳಿಗನೂರು, ಮೈದೂರು ಗ್ರಾಮಗಳವರೆಗೆ ಪಾದಯಾತ್ರೆ ನಡೆಯಿತು. ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು, ಕೂಲಿ ಕಾರ್ಮಿಕರು, ಮಹಿಳೆಯರು ಮತ್ತು ಯುವಕರು ಭಾಗವಹಿಸಿದರು.

ವಾರ್ತಾ ಭಾರತಿ 18 Feb 2026 12:09 am

ವಿಜಯನಗರ | ಮನೆ ನಿರ್ಮಾಣಕ್ಕೆ ಪರವಾನಗಿ ಸಿಗದ ಆರೋಪ : ಗ್ರಾಮ ಪಂಚಾಯತ್ ಕಚೇರಿಯಲ್ಲಿ ರೈತ ಆತ್ಮಹತ್ಯೆಗೆ ಯತ್ನ

ವಿಜಯನಗರ / ಹರಪನಹಳ್ಳಿ : ಮನೆ ನಿರ್ಮಾಣಕ್ಕೆ ಪರವಾನಗಿ ನೀಡದ ಹಿನ್ನೆಲೆಯಲ್ಲಿ ರೈತನೊಬ್ಬ ಗ್ರಾಮ ಪಂಚಾಯತ್ ಕಚೇರಿಯಲ್ಲೇ ಆತ್ಮಹತ್ಯೆಗೆ ಯತ್ನಿಸಿದ ಘಟನೆ ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಕಡಬಗೆರೆ ಗ್ರಾಮದಲ್ಲಿ ನಡೆದಿದೆ. ಕಡಬಗೆರೆ ಗ್ರಾ.ಪಂ. ವ್ಯಾಪ್ತಿಯ ಪಾವನಪುರ ಗ್ರಾಮದ ನಿವಾಸಿ ಕೆ. ಬಸವರಾಜ್ ಅವರು ಗ್ರಾ.ಪಂ. ಕಚೇರಿಯಲ್ಲಿ ಮೈ ಮೇಲೆ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಮನೆ ನಿರ್ಮಾಣಕ್ಕಾಗಿ ಇ-ಸೊತ್ತು ಹಾಗೂ ಪರವಾನಗಿ ನೀಡುವಂತೆ ಹಲವು ಬಾರಿ ಅರ್ಜಿ ಸಲ್ಲಿಸಿದ್ದರೂ ಅನುಮತಿ ಸಿಗಲಿಲ್ಲ ಎಂದು ರೈತ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪರವಾನಗಿ ಇಲ್ಲದೆ ಬ್ಯಾಂಕ್ ಸಾಲ ಸಿಗುತ್ತಿಲ್ಲ. ಕಳೆದ ಆರು ತಿಂಗಳಿಂದ ಕಚೇರಿಗೆ ಸುತ್ತಾಡುತ್ತಿದ್ದೇನೆ ಎಂದು ಅವರು ಆರೋಪಿಸಿದ್ದಾರೆ. ಈ ವೇಳೆ ಪಿಡಿಒ ಕೃಷ್ಣಪ್ಪ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿ ಕಚೇರಿಯಲ್ಲೇ ಅರ್ಧ ಲೀಟರ್ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಘಟನೆ ಗಮನಿಸಿದ ಪಿಡಿಒ ಹಾಗೂ ಸ್ಥಳೀಯರು ತಕ್ಷಣ ಮಧ್ಯಪ್ರವೇಶಿಸಿ ರೈತನನ್ನು ರಕ್ಷಿಸಿದ್ದಾರೆ. ಆತ್ಮಹತ್ಯೆಯ ಯೋಚನೆ ಬಂದಾಗ ಅದನ್ನು ನಿಗ್ರಹಿಸಲು ರಾಜ್ಯ ಸರಕಾರದ ಅರೋಗ್ಯ ಇಲಾಖೆಯ ಹೆಲ್ಪ್ ಲೈನ್ 104 ಸಹಾಯ ಮಾಡುತ್ತದೆ. ಅದರ ಜೊತೆಗೆ Tele-MANAS ನ 14416 ಅನ್ನೂ ಸಂಪರ್ಕಿಸಬಹುದು.

ವಾರ್ತಾ ಭಾರತಿ 18 Feb 2026 12:03 am

ಸಂಡೂರಿನಲ್ಲಿ ಪ್ರಗತಿ ಪರಿಶೀಲನಾ ಸಭೆ : ಕಾಮಗಾರಿಗಳಿಗೆ ವೇಗ ನೀಡಲು ಸಚಿವ ಸತೀಶ್ ಜಾರಕಿಹೊಳಿ ಸೂಚನೆ

ಸಂಡೂರು : ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ತೋರಣಗಲ್ಲು ವಿದ್ಯಾನಗರ ಟೌನ್‌ಶಿಪ್‌ನಲ್ಲಿ ಕರ್ನಾಟಕ ಸರ್ಕಾರದ ಲೋಕೋಪಯೋಗಿ ಇಲಾಖೆ ವತಿಯಿಂದ ಪ್ರಗತಿ ಪರಿಶೀಲನಾ ಸಭೆ ನಡೆಯಿತು. ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ತಾಲೂಕಿನ ಹಾಗೂ ಜಿಲ್ಲೆಯ ವಿವಿಧ ಅಭಿವೃದ್ಧಿ ಕಾಮಗಾರಿಗಳ ಪ್ರಗತಿಯನ್ನು ಸಮಗ್ರವಾಗಿ ಪರಿಶೀಲಿಸಲಾಯಿತು. ರಸ್ತೆ ಕಾಮಗಾರಿಗಳು, ಕುಡಿಯುವ ನೀರಿನ ಯೋಜನೆಗಳು, ಸಾರ್ವಜನಿಕ ಮೂಲಸೌಕರ್ಯ ಅಭಿವೃದ್ಧಿ ಸೇರಿದಂತೆ ವಿವಿಧ ಸರ್ಕಾರಿ ಯೋಜನೆಗಳ ಅನುಷ್ಠಾನ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದು, ಕಾಮಗಾರಿಗಳನ್ನು ಶೀಘ್ರ ಪೂರ್ಣಗೊಳಿಸುವಂತೆ ಸಚಿವರು ಸೂಚನೆ ನೀಡಿದರು. ಜನಪರ ಯೋಜನೆಗಳು ಸಮಯಕ್ಕೆ ಸರಿಯಾಗಿ ಪೂರ್ಣಗೊಳ್ಳಬೇಕು. ಇಲಾಖೆಗಳ ನಡುವೆ ಸಮನ್ವಯತೆ ಹೆಚ್ಚಿಸಿ, ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಒತ್ತು ನೀಡಬೇಕು ಎಂದು ಅವರು ಹೇಳಿದರು. ಸಭೆಯಲ್ಲಿ ಸ್ಥಳೀಯ ಶಾಸಕ ಅನ್ನಪೂರ್ಣಾ ತುಕಾರಾಮ್, ಜನಪ್ರತಿನಿಧಿಗಳು ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

ವಾರ್ತಾ ಭಾರತಿ 17 Feb 2026 11:55 pm

Gujarat SIR | ಅಂತಿಮ ಮತಪಟ್ಟಿಯಲ್ಲಿ 4.40 ಕೋಟಿ ಮತದಾರರು

ಗಾಂಧಿನಗರ: ಗುಜರಾತ್ ನಲ್ಲಿ ಭಾರತೀಯ ಚುನಾವಣಾ ಆಯೋಗ ಸುಮಾರು ಮೂರೂವರೆ ತಿಂಗಳ ಕಾಲ ನಡೆಸಿದ ವಿಶೇಷ ತೀವ್ರ ಮತಪಟ್ಟಿ ಪರಿಷ್ಕರಣೆಯ ಬಳಿಕ ಇಂದು (ಮಂಗಳವಾರ) ಗುಜರಾತ್ ರಾಜ್ಯ ಚುನಾವಣಾ ಆಯೋಗ ಅಂತಿಮ ಮತಪಟ್ಟಿ ಪ್ರಕಟಿಸಿದ್ದು, ಒಟ್ಟಾರೆಯಾಗಿ 4.40 ಕೋಟಿ ಮತದಾರರಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕಳೆದ ವರ್ಷದ ಡಿಸೆಂಬರ್ 19ರಂದು ಕರಡು ಮತಪಟ್ಟಿ ಪ್ರಕಟಿಸಿದ ಬಳಿಕ 5.60 ಲಕ್ಷ ಮಂದಿ ಹೆಚ್ಚುವರಿ ಮತದಾರರು ಸೇರ್ಪಡೆಯಾಗಿದ್ದು, ಇದೀಗ ಅಂತಿಮ ಮತಪಟ್ಟಿಯಲ್ಲಿ 4,40,30,725 ಮತದಾರರಿದ್ದಾರೆ ಎಂದು ಗುಜರಾತ್ ರಾಜ್ಯ ಮುಖ್ಯ ಚುನಾವಣಾಧಿಕಾರಿ ಹರೀತ್ ಶುಕ್ಲಾ ತಿಳಿಸಿದ್ದಾರೆ. ಇದಕ್ಕೂ ಮುನ್ನ ಅಂತಿಮ ಕರಡು ಮತಪಟ್ಟಿಯಿಂದ ಸುಮಾರು 74 ಲಕ್ಷ ಮತದಾರರನ್ನು ಕೈಬಿಡಲಾಗಿತ್ತು. ಹೀಗಾಗಿ 5.08 ಕೋಟಿಯಷ್ಟಿದ್ದ ಒಟ್ಟಾರೆ ಮತದಾರರ ಸಂಖ್ಯೆ 4.34 ಕೋಟಿಗೆ ಇಳಿಕೆಯಾಗಿತ್ತು. ಈ ಸಂಖ್ಯೆಗೆ ಅಂತಿಮ ಮತಪಟ್ಟಿಯಲ್ಲಿ 5.60 ಲಕ್ಷ ಮತದಾರರು ಹೆಚ್ಚುವರಿಯಾಗಿ ಸೇರ್ಪಡೆಯಾಗಿದ್ದಾರೆ ಎಂದು ಅವರು ಹೇಳಿದ್ದಾರೆ. ಯಾರದಾದರೂ ಮತದಾರರ ಹೆಸರು ಸೇರ್ಪಡೆ ಮಾಡಲು ಅಥವಾ ಕೈಬಿಡಲು ಹಕ್ಕುದಾರಿಕೆ ಅಥವಾ ಆಕ್ಷೇಪ ವ್ಯಕ್ತಪಡಿಸಲು ಡಿಸೆಂಬರ್ 19, 2025ರಿಂದ ಜನವರಿ 30, 2026ರವರೆಗೆ ಅರ್ಜಿಗಳನ್ನು ಸಲ್ಲಿಸಲು ಅವಕಾಶ ನೀಡಲಾಗಿತ್ತು. ಇದಾದ ಬಳಿಕ ಆಕ್ಷೇಪಣೆಗಳನ್ನು ಪರಿಶೀಲಿಸಿದ ಚುನಾವಣಾ ಅಧಿಕಾರಿಗಳು ಫೆಬ್ರವರಿ 10ರಂದು ಅವುಗಳನ್ನೆಲ್ಲ ವಿಲೇವಾರಿ ಮಾಡಿದ್ದರು. ಈ ಅಭಿಯಾನಕ್ಕೆ ಅಭೂತಪೂರ್ವ ಸಹಕಾರ ನೀಡಿದ ಗುಜರಾತ್ ನಾಗರಿಕರು ಕೃತಜ್ಞತೆ ಮತ್ತು ಅಭಿನಂದನೆಗಳಿಗೆ ಅರ್ಹರಾಗಿದ್ದಾರೆ ಎಂದು ಗುಜರಾತ್ ರಾಜ್ಯ ಮುಖ್ಯ ಚುನಾವಣಾಧಿಕಾರಿ ಹರೀತ್ ಶುಕ್ಲಾ ಧನ್ಯವಾದ ಸಲ್ಲಿಸಿದ್ದಾರೆ. ಈ ಅಭಿಯಾನವು 34 ಜಿಲ್ಲಾ ಚುನಾವಣಾಧಿಕಾರಿಗಳು, 182 ಮತದಾರರ ನೋಂದಣಾಧಿಕಾರಿಗಳು, 855 ಸಹಾಯಕ ಮತದಾರರ ನೋಂದಣಾಧಿಕಾರಿಗಳು, 50,963 ಮತಗಟ್ಟೆ ಅಧಿಕಾರಿಗಳು ಹಾಗೂ ದೊಡ್ಡ ಸಂಖ್ಯೆಯ ಸ್ವಯಂಸೇವಕರ ಸಕ್ರಿಯ ಪಾಲ್ಗೊಳ್ಳುವಿಕೆಯಿಂದ ನಿಗದಿತ ಅವಧಿಯೊಳಗೆ ಸಂಪೂರ್ಣಗೊಂಡಿದೆ ಎಂದು ಚುನಾವಣಾ ಆಯೋಗ ಬಿಡುಗಡೆ ಮಾಡಿರುವ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ವಾರ್ತಾ ಭಾರತಿ 17 Feb 2026 11:55 pm

ವಿಜಯನಗರ | ಕನ್ನಡ ಜಾತ್ಯತೀತ ಭಾಷೆ: ನಾಡೋಜ ಬರಗೂರು

ಪುಸ್ತಕಗಳ ಲೋಕಾರ್ಪಣೆ ಕಾರ್ಯಕ್ರಮ

ವಾರ್ತಾ ಭಾರತಿ 17 Feb 2026 11:50 pm

ಸಿಎಂ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಬಜೆಟ್ ಪೂರ್ವಭಾವಿ ಸಭೆ : ‘ಜಾನುವಾರು ಹತ್ಯೆ ಪ್ರತಿಬಂಧಕ ಕಾಯ್ದೆ’ ಹಿಂಪಡೆಯಲು ರೈತರ ಪಟ್ಟು

ಬೆಂಗಳೂರು : ಹಿಂದಿನ ಬಿಜೆಪಿ ಸರಕಾರದ ಅವಧಿಯಲ್ಲಿ ಜಾರಿಗೆ ತಂದಿರುವ ‘ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಕಾಯ್ದೆ-2020’ ಅನ್ನು ಹಿಂಪಡೆಯಬೇಕು. ಕೃಷಿ ಚಟುವಟಿಕೆಗಳಲ್ಲಿ ತೊಡಗಿರುವ ರೈತ ಯುವಕರನ್ನು ವಿವಾಹವಾಗುವ ಹೆಣ್ಣು ಮಕ್ಕಳಿಗೆ ಕನಿಷ್ಠ 10 ಲಕ್ಷ ರೂ.ಠೇವಣಿ ಇಡಬೇಕು. ಕೃಷಿ ಅಥವಾ ಕೃಷಿ ಪೂರಕ ಸಣ್ಣ ಉದ್ದಿಮೆಗಳನ್ನು ಸ್ಥಾಪಿಸುವ ಜತೆಗೆ ಭದ್ರತೆ ನೀಡಿ ಬಡ್ಡಿ ರಹಿತ ಸಾಲಕ್ಕೆ ಉತ್ತೇಜನ ನೀಡಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈ ಬಾರಿಯ ಬಜೆಟ್‍ನಲ್ಲ ಈಡೇರಿಸಬೇಕೆಂದು ರಾಜ್ಯ ಸರಕಾರಕ್ಕೆ ರೈತರು ಮನವಿ ಸಲ್ಲಿಕೆ ಮಾಡಿದ್ದಾರೆ. ಮಂಗಳವಾರ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ 2026-27ನೆ ಸಾಲಿನ ಆಯವ್ಯಯ ಪೂರ್ವಭಾವಿ ಸಭೆಯಲ್ಲಿ ರೈತ ಸಂಘಟನೆಯ ಮುಖಂಡರು, ಕೃಷಿ ಸಚಿವ ಚಲುವರಾಯಸ್ವಾಮಿ, ನೀತಿ ಆಯೋಗದ ಉಪಾಧ್ಯಕ್ಷ ಬಿ.ಆರ್.ಪಾಟೀಲ್, ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ, ಸರಕಾರದ ಮುಖ್ಯಕಾರ್ಯದರ್ಶಿ ಶಾಲಿನಿ ರಜನೀಶ್, ಅಪರ ಮುಖ್ಯ ಕಾರ್ಯದರ್ಶಿ ಅಂಜುಮ್ ಪರ್ವೇಝ್ ಸೇರಿದಂತೆ ಪ್ರಮುಖರು ಪಾಲ್ಗೊಂಡಿದ್ದರು. ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ರೈತ ಮುಖಂಡ ಕುರುಬೂರು ಶಾಂತಕುಮಾರ್, ಕರ್ನಾಟಕ ರಾಜ್ಯ ರೈತರ ಆತ್ಮಹತ್ಯೆಯಲ್ಲಿ 2ನೇ ಸ್ಥಾನದಲ್ಲಿದೆ. ಆತ್ಮಹತ್ಯೆ ತಡೆಗಟ್ಟುವ ಕ್ರಮ ಆಗಬೇಕು. ಬೆಳೆವಿಮೆ ಪದ್ದತಿಯಲ್ಲಿ ಬದಲಾವಣೆ ತರಬೇಕು. ಹೀಗೆ ಎಲ್ಲ ರೈತರ ಸಮಸ್ಯೆಗಳ ಬಗ್ಗೆ ಪ್ರಸ್ತಾಪ ಮಾಡಿದ್ದೇವೆ. ಜತೆಗೆ, ರೈತರ ಮುಖಂಡರೊಬ್ಬರು ಈ ಹಿಂದಿನ ಬಿಜೆಪಿ ಸರಕಾರ ಜಾರಿಗೆ ತಂದಿದ್ದ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಕಾಯ್ದೆ-2020 ಅನ್ನು ವಾಪಸ್ ಪಡೆಯಬೇಕು ಎಂದು ಸಿದ್ದರಾಮಯ್ಯ ಅವರಲ್ಲಿ ಮನವಿ ಸಲ್ಲಿಕೆ ಮಾಡಿದ್ದಾರೆ ಎಂದರು. ರೈತ ಮುಖಂಡ ಬಡಗಲಪುರ ನಾಗೇಂದ್ರ, ಈ ವರ್ಷದ ಬಜೆಟ್‍ನಲ್ಲಿ ಸಣ್ಣ ನೀರಾವರಿಗೆ ಒತ್ತು ಕೊಡಬೇಕು. ನೇರವಾಗಿ ರೈತರಿಗೆ ತಲುಪುವಂತೆ ಪಿಡಿಎ ವ್ಯವಸ್ಥೆ ಜಾರಿಗೊಳಿಸಬೇಕು. ಹೀಗೆ, ಸುಮಾರು 20-25 ಅಂಶಗಳನ್ನು ಮುಖ್ಯಮಂತ್ರಿ ಅವರ ಮುಂದೆ ಹೇಳಿದ್ದೇವೆ. ಈ ಸಾಲಿನ ಬಜೆಟ್ ಕೃಷಿಕರ ಪರವಾಗಿರಬೇಕು ಎಂದು ಒತ್ತಾಯ ಮಾಡಿದ್ದೇವೆ. ಅದಕ್ಕೆ ಪೂರಕವಾಗಿ ಸಿಎಂ ಸಿದ್ದರಾಮಯ್ಯ ಸ್ಪಂದಿಸಿದ್ದಾರೆ ಎಂದು ತಿಳಿಸಿದರು. ಬೇಡಿಕೆ ಸಲ್ಲಿಕೆ: ರೈತ ಯುವಕರು ಮದುವೆ ಆಗಲು ವಧು ಸಿಗದೇ ಇರುವುದು ಒಂದು ಸಾಮಾಜಿಕ ಪಿಡುಗಾಗಿರುವುದು ವಿಷಾದನೀಯ. ಈ ಸಮಸ್ಯೆಗೆ ಕಾರಣಗಳನ್ನು ಕಂಡುಹಿಡಿಯಬೇಕು. ರೈತ ಯುವಕರನ್ನು ವಿವಾಹವಾಗುವ ಹೆಣ್ಣುಮಕ್ಕಳಿಗೆ ಕನಿಷ್ಠ 10 ಲಕ್ಷ ರೂ. ಠೇವಣಿ, ಕೃಷಿ ಅಥವಾ ಕೃಷಿಪೂರಕ ಸಣ್ಣ ಉದ್ದಿಮೆಗಳನ್ನು ಸ್ಥಾಪಿಸಲು ಸರಕಾರವೇ ಭದ್ರತೆ ನೀಡಿ ಬಡ್ಡಿರಹಿತ ಸಾಲ ಒದಗಿಸಿ ಉತ್ತೇಜನ ನೀಡಬೇಕು ಎಂದು ಒತ್ತಾಯಿಸಿದ್ದಾರೆ. ಕೇಂದ್ರ ಸರಕಾರ ಜಾರಿಗೆ ತರಲು ಹೊರಟಿರುವ ವಿದ್ಯುತ್ ಕಾಯ್ದೆ 2025, ಬೀಜ ಮಸೂದೆ 2025, ಕೃಷಿ ಉತ್ಪನ್ನಗಳ ಮಾರುಕಟ್ಟೆ ರಾಷ್ಟ್ರೀಯ ಚೌಕಟ್ಟು ನೀತಿಯನ್ನು ರಾಜ್ಯದಲ್ಲಿ ಜಾರಿಗೆ ತರುವುದಿಲ್ಲ ಎಂದು ಈ ಅಧಿವೇಶನದಲ್ಲಿ ಘೋಷಿಸಬೇಕು. ರೈತರಿಗೆ ಬೆಂಬಲ ಬೆಲೆ ಒದಗಿಸುವ ಸಲುವಾಗಿ ಕನಿಷ್ಠ 20 ಸಾವಿರ ಕೋಟಿ ಆವರ್ತ ನಿಧಿಯನ್ನು ಮೀಸಲಿಡಬೇಕು. ಸಮಗ್ರ ಪಡಿತರ ವ್ಯವಸ್ಥೆಯನ್ನು ರೂಪಿಸಿ ಭತ್ತ, ರಾಗಿ, ಜೋಳ, ತೊಗರಿಬೇಳೆ, ಎಣ್ಣೆಕಾಳು, ಸಿರಿದಾನ್ಯ ಮುಂತಾದ ಅವಶ್ಯಕ ಉತ್ಪನ್ನಗಳನ್ನು ಎಂ.ಎಸ್.ಪಿ ದರದಲ್ಲಿ ರೈತರಿಂದಲೇ ನೇರವಾಗಿ ಕೊಳ್ಳುವ ವ್ಯವಸ್ಥೆಯನ್ನು ರೂಪಿಸಬೇಕು ಎಂದು ಮನವಿ ಸಲ್ಲಿಸಿದ್ದಾರೆ. ಬಗರ್ ಹುಕುಂ ಸಾಗುವಳಿದಾರರಿಗೆ ದರಖಾಸ್ತು ಮಂಜೂರು ಮಾಡಲು ತೊಡಕಾಗಿರುವ ತಾಂತ್ರಿಕ ತೊಂದರೆಗಳನ್ನು ನಿವಾರಿಸಲು ಕಂದಾಯ ಕಾಯ್ದೆಗೆ ತಿದ್ದುಪಡಿ ತಂದು ಹಕ್ಕುಪತ್ರ ನೀಡಲು ಘೋಷಿಸಬೇಕು. 2013ರ ಭೂ-ಸ್ವಾಧೀನ ಕಾಯ್ದೆಯನ್ನು ಕೈಗಾರಿಕೆ, ರಾಷ್ಟ್ರೀಯ ಹೆದ್ದಾರಿ, ನೀರಾವರಿ ಯೋಜನೆಗಳಿಗೆ ಭೂ ಸ್ವಾಧೀನ ಪಡಿಸಿಕೊಳ್ಳಲು ಅನ್ವಯ ಮಾಡಲಾಗಿದೆ. ಆದರೆ, ಗ್ರಾಮಾಂತರ ಪ್ರದೇಶದಲ್ಲಿ ವಸತಿ ಉದ್ದೇಶಕ್ಕೆ ಸ್ವಾಧೀನ ಪಡಿಸಿಕೊಳ್ಳುವ ಭೂಮಿಗೂ ಈ ಕಾಯ್ದೆಯನ್ನು ಅನ್ವಯಿಸಬೇಕು. ಕರ್ನಾಟಕದ ಕೃಷಿಯ ಹೆಚ್ಚು ಭೂಮಿ ಮರಳು ಭೂಮಿಯಾಗಿ ಪರಿವರ್ತನೆ ಆಗುತ್ತಿರುವುದು ತುಂಬಾ ಆತಂಕಕಾರಿಯಾಗಿದೆ. ಇದನ್ನು ತಡೆಗಟ್ಟಲು ವಿಶೇಷ ಕಾಳಜಿಯ ಕಾರ್ಯಕ್ರಮವನ್ನು ರೂಪಿಸಬೇಕು ಎಂದು ಸಭೆಯಲ್ಲಿ ಆಗ್ರಹಿಸಿದ್ದಾರೆ.

ವಾರ್ತಾ ಭಾರತಿ 17 Feb 2026 11:50 pm

ಆಹಾರ ಉತ್ಪನ್ನಗಳ ಲೇಬಲ್ ನಲ್ಲಿ ಹೇಳುವ ಪೌಷ್ಟಿಕಾಂಶದ ಮಾಹಿತಿ, ಆರೋಗ್ಯ ಪ್ರಯೋಜನದ ಹಕ್ಕುಗಳು ಎಷ್ಟು ನಿಜ? ಅಧ್ಯಯನ ಏನು ಹೇಳುತ್ತದೆ?

2026ರ ಆರಂಭದಲ್ಲಿ ಬಿಡುಗಡೆಯಾದ LabelBlind ಅಧ್ಯಯನ ವರದಿ ಭಾರತದ ಪ್ಯಾಕೇಜ್ಡ್ ಆಹಾರ ಉದ್ಯಮದಾದ್ಯಂತ ಆಹಾರ ಲೇಬಲಿಂಗ್ ಅನುಸರಣೆಯಲ್ಲಿ ಗಮನಾರ್ಹ ಅಂತರವನ್ನು ಎತ್ತಿ ತೋರಿಸಿದೆ. 18 ವಿಭಾಗಗಳು ಮತ್ತು 21 ಹಕ್ಕುಗಳ ಪ್ರಕಾರಗಳನ್ನು ಒಳಗೊಂಡ 227 ಬ್ರ್ಯಾಂಡ್ ಗಳ 586 ಉತ್ಪನ್ನಗಳಲ್ಲಿ 5,058 ಹಕ್ಕುಗಳನ್ನು ವಿಶ್ಲೇಷಿಸಿದಾಗ, ಈ ಹಕ್ಕುಗಳಲ್ಲಿ ಶೇ. 33.6 ರಷ್ಟು ಮಾನದಂಡಗಳನ್ನು ಪೂರೈಸುವಲ್ಲಿ ವಿಫಲವಾಗಿವೆ ಎಂದು ಫಲಿತಾಂಶಗಳು ತೋರಿಸಿವೆ. ನಿರ್ದಿಷ್ಟವಾಗಿ ಹೇಳುವುದಾದರೆ, ಸುಮಾರು ಶೇ. 21 ರಷ್ಟು ಉತ್ಪನ್ನಗಳು ಆಹಾರ ಸುರಕ್ಷತಾ ನಿಯಮಗಳನ್ನು ನೇರವಾಗಿ ಉಲ್ಲಂಘಿಸಿವೆ. ಅದೇ ವೇಳೆ ಶೇ. 12 ರಷ್ಟು ಉತ್ಪನ್ನಗಳು ವೈಜ್ಞಾನಿಕ ಪುರಾವೆಗಳೊಂದಿಗೆ ಸಾಬೀತುಪಡಿಸಲು ಸಾಧ್ಯವಾಗದ ಭರವಸೆಗಳನ್ನು ನೀಡಿವೆ. ಸರಳವಾಗಿ ಹೇಳುವುದಾದರೆ, ಪ್ಯಾಕೇಜ್ಡ್ ಆಹಾರಗಳ ಮೇಲಿನ ಸರಿಸುಮಾರು ಮೂರು ಹಕ್ಕುಗಳಲ್ಲಿ ಒಂದು ಹಕ್ಕು ಅಸ್ತಿತ್ವದಲ್ಲಿರುವ ಮಾನದಂಡಗಳೊಂದಿಗೆ ಸಂಪೂರ್ಣವಾಗಿ ಹೊಂದಿಕೆಯಾಗುವುದಿಲ್ಲ ಎಂದು ಲೇಬಲ್ಬ್ಲೈಂಡ್ನ ಸ್ಥಾಪಕಿ ಮತ್ತು ಸಿಇಒ ಡಾ. ರಶೀದಾ ವಾಪಿವಾಲಾ ಹೇಳುತ್ತಾರೆ. ಈ ಮಾನದಂಡಗಳು ಭಾರತದ ಆಹಾರ ಸುರಕ್ಷತೆ ಮತ್ತು ಮಾನದಂಡಗಳ ಪ್ರಾಧಿಕಾರ (FSSAI) ನಿಗದಿಪಡಿಸಿದ ನಿಯಮಗಳು, ಭಾರತೀಯ ಜಾಹೀರಾತು ಮಾನದಂಡಗಳ ಮಂಡಳಿ (ASCI) ಹೊರಡಿಸಿದ ಮಾರ್ಗಸೂಚಿಗಳು ಮತ್ತು ಗ್ರಾಹಕ ಸಂರಕ್ಷಣಾ ಕಾಯ್ದೆ–2019ರ ಅಡಿಯಲ್ಲಿ ಸಂಬಂಧಿತ ನಿಬಂಧನೆಗಳನ್ನು ಒಳಗೊಂಡಿವೆ. ►ಆಹಾರ ಲೇಬಲ್ ಹೇಗಿರಬೇಕು? ಆಹಾರ ಲೇಬಲ್ ಗಳು FSSAIನ ಜಾಹೀರಾತು ಮತ್ತು ಲೇಬಲಿಂಗ್ ನಿಯಮಗಳು, ASCI ಮಾನದಂಡಗಳು ಮತ್ತು ಗ್ರಾಹಕ ಸಂರಕ್ಷಣಾ ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ ನಿಗದಿಪಡಿಸಿದ ಮಾನದಂಡಗಳಿಗೆ ಬದ್ಧವಾಗಿರಬೇಕು. ಉದಾಹರಣೆಗೆ, ಒಂದು ಉತ್ಪನ್ನವು “ಹೆಚ್ಚಿನ ಕಬ್ಬಿಣದ ಅಂಶ” ಇದೆ ಎಂದು ಹೇಳಿಕೊಳ್ಳಬಹುದು. ಆದರೆ ಅದರ ಪೌಷ್ಟಿಕಾಂಶ ಟೇಬಲ್ ಅಗತ್ಯವಿರುವ 30 ಪ್ರತಿಶತ ಶಿಫಾರಸು ಮಾಡಿದ ಆಹಾರ ಅನುಮತಿ (RDA) ಪೂರೈಸದೇ ಇದ್ದರೆ ಅದು ದಾರಿತಪ್ಪಿಸುವ ಹಕ್ಕಾಗುತ್ತದೆ. ಲೇಬಲ್ ಬ್ಲೈಂಡ್ ಅಧ್ಯಯನದ ಪ್ರಕಾರ, ವಿಶ್ಲೇಷಿಸಲಾದ 5,058 ಹಕ್ಕುಗಳಲ್ಲಿ 21.3 ಪ್ರತಿಶತ ಸಂಪೂರ್ಣವಾಗಿ ನಿಯಮಗಳಿಗೆ ಬದ್ಧವಾಗಿಲ್ಲ. ಅಂದರೆ ಅವು ಕಡ್ಡಾಯ ನಿಯಂತ್ರಕ ಅವಶ್ಯಕತೆಗಳನ್ನು ಪೂರೈಸಲು ವಿಫಲವಾಗಿವೆ ಮತ್ತು ಗ್ರಾಹಕರನ್ನು ದಾರಿ ತಪ್ಪಿಸುವ ಸಾಧ್ಯತೆಯಿದೆ. 12.3 ಪ್ರತಿಶತ “ಬ್ರ್ಯಾಂಡ್ ಟು ವೆರಿಫೈ” ವರ್ಗದ ಅಡಿಯಲ್ಲಿ ಬಂದಿದೆ. ಅಲ್ಲಿ ಪ್ಯಾಕೇಜಿಂಗ್ನಲ್ಲಿ ಅಥವಾ ಬ್ರ್ಯಾಂಡ್ ಪ್ಲಾಟ್ಫಾರ್ಮ್ಗಳಲ್ಲಿ ಹಕ್ಕುಗಳನ್ನು ಸ್ವತಂತ್ರವಾಗಿ ಪರಿಶೀಲಿಸಲು ಸಾಕಷ್ಟು ಆಧಾರಗಳು ಲಭ್ಯವಿರಲಿಲ್ಲ. “ಬ್ರ್ಯಾಂಡ್ ಗಳು ತಮ್ಮ ಉತ್ಪನ್ನವು ಮಧುಮೇಹ ಸ್ನೇಹಿ ಅಥವಾ ಹೃದಯದ ಆರೋಗ್ಯಕ್ಕೆ ಒಳ್ಳೆಯದು ಎಂದು ಹೇಳಿದಾಗ, ಅವರು ಆ ಹಕ್ಕುಗಳನ್ನು ಬೆಂಬಲಿಸುವ ಸ್ಪಷ್ಟ ಪುರಾವೆಗಳನ್ನು ಒದಗಿಸಬೇಕು. ಉದಾಹರಣೆಗೆ, ಜೇನುತುಪ್ಪವು ಮೂಲತಃ ಸಕ್ಕರೆಯೇ ಆಗಿರುವುದರಿಂದ ಅಂತಹ ಹಕ್ಕುಗಳನ್ನು ಪುರಾವೆಗಳಿಲ್ಲದೆ ಹೇಗೆ ಸಮರ್ಥಿಸಬಹುದು?” ಎಂದು ಡಾ. ರಶೀದಾ ವಾಪಿವಾಲಾ ಹೇಳಿದ್ದಾರೆ. ಇತ್ತೀಚಿನ ಹೊಸ ವರ್ಗಗಳ ಉತ್ಪನ್ನಗಳಲ್ಲಿ ಲೇಬಲ್ ಗಳಲ್ಲಿ ಹೇಳಿರುವ ಹಕ್ಕುಗಳಿಗೆ ಬದ್ಧತೆ ಕಡಿಮೆ ಇದೆ ಎಂದು ವಿಶ್ಲೇಷಣೆಯು ಕಂಡುಹಿಡಿದಿದೆ. ಸಸ್ಯ ಆಧಾರಿತ ಪಾನೀಯಗಳ ಮೇಲಿನ ಹಕ್ಕುಗಳಲ್ಲಿ 29 ಪ್ರತಿಶತ, ರೆಡಿ ಟು ಈಟ್ ಆಹಾರಗಳ ಹಕ್ಕುಗಳಲ್ಲಿ 28.6 ಪ್ರತಿಶತ ಮತ್ತು ಪ್ಯಾಕೇಜ್ ಮಾಡಿದ ತಿಂಡಿಗಳ ಮೇಲಿನ ಹಕ್ಕುಗಳಲ್ಲಿ 27.3 ಪ್ರತಿಶತ ಹಕ್ಕುಗಳಿಗೆ ಬದ್ಧವಾಗಿಲ್ಲ ಎಂಬುದು ಅಧ್ಯಯನದಿಂದ ತಿಳಿದುಬಂದಿದೆ. ►ಗ್ರಾಹಕರನ್ನು ದಾರಿ ತಪ್ಪಿಸುವ ಆಹಾರ ಬ್ರಾಂಡ್ ಗಳು ಈ ಅಧ್ಯಯನವು ಆರೋಗ್ಯ, ಪೋಷಕಾಂಶದ ಅಂಶ ಮತ್ತು “no added sugar”, “no preservatives”, “no maida” ಮುಂತಾದ ಸೇರ್ಪಡೆಗಳಿಲ್ಲದ ಹಕ್ಕುಗಳನ್ನು ಒಳಗೊಂಡಂತೆ 21 ಪ್ರಕಾರಗಳ ಹಕ್ಕುಗಳನ್ನು ವರ್ಗೀಕರಿಸಿದೆ. ಎಲ್ಲಾ ಹಕ್ಕುಗಳಲ್ಲಿ ಸುಮಾರು 40 ಪ್ರತಿಶತ ಉತ್ಪನ್ನಗಳು ಆರೋಗ್ಯ ಅಥವಾ ಪೌಷ್ಟಿಕಾಂಶ ವರ್ಗಗಳ ಅಡಿಯಲ್ಲಿ ಬರುತ್ತವೆ. ಆಹಾರ ಪ್ಯಾಕೇಜಿಂಗ್ ಮೇಲಿನ ಆರೋಗ್ಯ ಹಕ್ಕುಗಳ ಕುರಿತು ಅಧ್ಯಯನವು ಪ್ರಮುಖ ಕಳವಳವನ್ನು ವ್ಯಕ್ತಪಡಿಸಿದೆ. ಈ ಹಕ್ಕುಗಳಲ್ಲಿ ಅರ್ಧಕ್ಕಿಂತ ಹೆಚ್ಚು (52.5%) ದಾರಿತಪ್ಪಿಸುವ ಅಥವಾ ಸಾಬೀತಾಗದವು. ದಿನನಿತ್ಯದ ಅಡುಗೆಮನೆಯಲ್ಲಿ ಬಳಸುವ ಪ್ರಧಾನ ವಸ್ತುಗಳಲ್ಲಿಯೂ ಈ ರೀತಿಯ ದಾರಿತಪ್ಪಿಸುವ ಹಕ್ಕುಗಳಿವೆ. 80% ಜೇನುತುಪ್ಪದ ಬ್ರ್ಯಾಂಡ್ ಗಳು ಕಾನೂನುಬಾಹಿರ ಆರೋಗ್ಯ ಹಕ್ಕುಗಳನ್ನು ನೀಡಿವೆ. ಸರಿಸುಮಾರು 65% ತುಪ್ಪ ಉತ್ಪನ್ನಗಳು ಮತ್ತು ಅರ್ಧಕ್ಕಿಂತ ಹೆಚ್ಚು ಚಹಾ, ಅಡುಗೆ ಎಣ್ಣೆಗಳಲ್ಲಿ ಇದೇ ರೀತಿಯ ದಾರಿತಪ್ಪಿಸುವ ಹಕ್ಕುಗಳು ಕಂಡುಬಂದಿವೆ. ಆರೋಗ್ಯ ಹಕ್ಕುಗಳು ಅತ್ಯುನ್ನತ ಮಟ್ಟದ ಕಾಳಜಿಯನ್ನು ತೋರಿಸಿದವು. ಇವುಗಳಲ್ಲಿ ಸುಮಾರು 52.5 ಪ್ರತಿಶತ ಉತ್ಪನ್ನಗಳು ಅನುಸರಣೆಯಿಲ್ಲದ ಅಥವಾ ಬ್ರ್ಯಾಂಡ್ ಪರಿಶೀಲನೆ ಅಗತ್ಯವಿರುವವು ಎಂದು ವರ್ಗೀಕರಿಸಲಾಗಿದೆ. ಉದಾಹರಣೆಗೆ, ಹೃದಯ ಆರೋಗ್ಯ ಪ್ರಯೋಜನಗಳನ್ನು ಹೇಳುವ ಜೇನುತುಪ್ಪದ ಉತ್ಪನ್ನಗಳು, ತುಪ್ಪವನ್ನು ಆಧಾರವಿಲ್ಲದೆ “ಪೌಷ್ಠಿಕಾಂಶದ ಪವರ್ ಹೌಸ್” ಎಂದು ಮಾರಾಟ ಮಾಡುವುದು, ಮಧುಮೇಹ ಸ್ನೇಹಿಯಾಗಿ ಇರಿಸಲಾಗಿರುವ ರೆಡಿ ಟು ಈಟ್ ಆಹಾರಗಳು ಇದರಲ್ಲಿ ಸೇರಿವೆ. ದೈನಂದಿನ ಆಹಾರ ವರ್ಗದಲ್ಲೇ ಆರೋಗ್ಯ ಹಕ್ಕುಗಳಲ್ಲಿ ಅತ್ಯಧಿಕ ಲೇಬಲ್ ಅನುಸರಣೆಯಿಲ್ಲದಿರುವುದು ಕಂಡುಬಂದಿದೆ. ಈ ಪೈಕಿ ಜೇನುತುಪ್ಪ 80 ಪ್ರತಿಶತ, ತುಪ್ಪ 65.5 ಪ್ರತಿಶತ, ಚಹಾ/ಹರ್ಬಲ್ ಇನ್ಫ್ಯೂಷನ್ಗಳು 54.3 ಪ್ರತಿಶತ ಮತ್ತು ಖಾದ್ಯ ಎಣ್ಣೆಗಳಲ್ಲಿ 52.9 ಪ್ರತಿಶತ ಲೇಬಲ್ ಅನುಸರಣೆಯಿಲ್ಲದಿವೆ. ಪೌಷ್ಟಿಕಾಂಶದ ವಿಷಯದ ಬಗ್ಗೆ ಶೇ. 27.1 ರಷ್ಟು ಅನುಸರಣೆಯ ಕೊರತೆ ಕಂಡುಬಂದಿದೆ. ಇದಕ್ಕೆ ಪ್ರಮುಖ ಕಾರಣ ಪೌಷ್ಟಿಕಾಂಶ ಮಾಹಿತಿ (NI) ಟೇಬಲ್ ನಲ್ಲಿನ ಪೋಷಕಾಂಶಗಳ ಘೋಷಣೆಗಳ ವ್ಯತ್ಯಾಸಗಳು. “ಪ್ರೋಟೀನ್ನ ಮೂಲ”, “ಕಬ್ಬಿಣದಿಂದ ಸಮೃದ್ಧ” ಅಥವಾ “ಹೆಚ್ಚಿನ ಫೈಬರ್” ಮುಂತಾದ ಹಕ್ಕುಗಳು ಅಗತ್ಯವಿರುವ ಪರಿಮಾಣಾತ್ಮಕ ಮಿತಿಗಳನ್ನು ಪೂರೈಸುವಲ್ಲಿ ವಿಫಲವಾಗಿವೆ. ►ನಾವು ಸೇವಿಸುವ ಆಹಾರಗಳು ಎಷ್ಟು ಸುರಕ್ಷಿತ? ಇತ್ತೀಚಿನ ಅಧ್ಯಯನದ ಪ್ರಕಾರ, ನಾವು ಪ್ರತಿದಿನ ಸೇವಿಸುವ ಆಹಾರಗಳಾದ ಹಿಟ್ಟು, ಎಣ್ಣೆ ಮತ್ತು ತಿಂಡಿಗಳು ದಾರಿತಪ್ಪಿಸುವ ಲೇಬಲ್ ಗಳನ್ನು ಹೊಂದಿರುವ ಸಾಧ್ಯತೆ ಹೆಚ್ಚು. ಗೋಧಿಹಿಟ್ಟು (25%), ತುಪ್ಪ (23%) ಮತ್ತು ಅಡುಗೆ ಎಣ್ಣೆ (22%) ನಂತಹ ದೈನಂದಿನ ವಸ್ತುಗಳ ಸುಮಾರು ನಾಲ್ಕನೇ ಒಂದು ಭಾಗವು ಸರಿಯಾದ ಲೇಬಲಿಂಗ್ ನಿಯಮಗಳನ್ನು ಪಾಲಿಸಲು ವಿಫಲವಾಗಿದೆ. “ಆರೋಗ್ಯಕರ” ಪರ್ಯಾಯಗಳೂ ಸಹ ಸುರಕ್ಷಿತವಾಗಿಲ್ಲ; ಸುಮಾರು 29% ಸಸ್ಯ ಆಧಾರಿತ ಹಾಲುಗಳು (ಸೋಯಾ ಅಥವಾ ಬಾದಾಮಿ ಹಾಲಿನಂತೆ) ಗಮನಾರ್ಹ ಸಮಸ್ಯೆಗಳನ್ನು ತೋರಿಸುತ್ತವೆ. “ಮಾಹಿತಿ ಓವರ್ಲೋಡ್” ಬಗ್ಗೆ ಅಧ್ಯಯನವು ಎಚ್ಚರಿಸಿದೆ. ಅಲ್ಲಿ ಬ್ರ್ಯಾಂಡ್ ಗಳು ಒಂದು ಪ್ಯಾಕೇಜ್ಗೆ ಹಲವಾರು ಭರವಸೆಗಳನ್ನು ತುಂಬುತ್ತವೆ. ಉದಾಹರಣೆಗೆ, ಪ್ರೋಟೀನ್ ಪೌಡರ್ಗಳು ಈಗ ಪ್ರತಿ ಲೇಬಲ್ಗೆ ಸರಾಸರಿ 17 ವಿಭಿನ್ನ ಹಕ್ಕುಗಳನ್ನು ಹೊಂದಿದ್ದರೆ, ಎನರ್ಜಿ ಬಾರ್ಗಳು ಸುಮಾರು 12 ಹಕ್ಕುಗಳನ್ನು ಹೊಂದಿವೆ. ಉತ್ತಮ ಆಯ್ಕೆಗಳನ್ನು ಮಾಡಲು ಸಹಾಯ ಮಾಡುವ ಬದಲು, ಈ ಹಕ್ಕುಗಳು ಗ್ರಾಹಕರನ್ನು ಗೊಂದಲಗೊಳಿಸುತ್ತವೆ. ನಿಜವಾಗಿಯೂ ಆರೋಗ್ಯಕರ ಉತ್ಪನ್ನ ಮತ್ತು ಬುದ್ಧಿವಂತ ಮಾರ್ಕೆಟಿಂಗ್ ಯಾವುದು ಎಂದು ತಿಳಿಯುವುದು ಕಷ್ಟಕರವಾಗಿದೆ ಎಂದು ತಜ್ಞರು ಅಭಿಪ್ರಾಯಪಡುತ್ತಾರೆ. ಮಕ್ಕಳಿಗಾಗಿ ತಯಾರಿಸಿದ ಆಹಾರಗಳು ನಿಜವಾಗಿಯೂ ಸುರಕ್ಷಿತ ಮತ್ತು ಆರೋಗ್ಯಕರವೇ ಎಂಬುದನ್ನೂ ಈ ಅಧ್ಯಯನ ವಿಶ್ಲೇಷಿಸಿದೆ. ದುರದೃಷ್ಟವಶಾತ್, ಅನೇಕ ಜನಪ್ರಿಯ ಮಕ್ಕಳ ತಿಂಡಿಗಳು ಮತ್ತು ಪಾನೀಯಗಳು ಪರೀಕ್ಷೆಯಲ್ಲಿ ವಿಫಲವಾಗಿವೆ. ಸುಮಾರು 27% ತಿಂಡಿಗಳು ಮತ್ತು ಸುವಾಸನೆಯ ಪಾನೀಯಗಳು (ಹಣ್ಣಿನ ಪಾನೀಯಗಳಂತೆ) ಲೇಬಲಿಂಗ್ ನಿಯಮಗಳನ್ನು ಪಾಲಿಸುತ್ತಿಲ್ಲ. ಸಕಾರಾತ್ಮಕವಾಗಿ, ಉಪಾಹಾರ ಧಾನ್ಯಗಳು (breakfast cereals) ಹೆಚ್ಚು ಉತ್ತಮವಾಗಿ ಕಾರ್ಯನಿರ್ವಹಿಸಿದವು. ಇವುಗಳಲ್ಲಿ ಸುಮಾರು 89% ಉತ್ಪನ್ನಗಳು ನಿಯಮಗಳನ್ನು ಸರಿಯಾಗಿ ಅನುಸರಿಸಿದವು. ಕೇಕ್ ಮತ್ತು ಪ್ಯಾನ್ಕೇಕ್ ಮಿಶ್ರಣಗಳಂತಹ ಆಹಾರಗಳು ಇತರ ಉತ್ಪನ್ನಗಳಷ್ಟು ಹೆಚ್ಚಿನ ಆರೋಗ್ಯ ಭರವಸೆಗಳನ್ನು ನೀಡದಿದ್ದರೂ, ಅವುಗಳ ಲೇಬಲಿಂಗ್ನಲ್ಲಿ ಕೆಲವೇ ಸಮಸ್ಯೆಗಳು ಕಂಡುಬಂದಿವೆ. ಕೆಲವು ವರ್ಗಗಳು ಸುಧಾರಿಸುತ್ತಿದ್ದರೂ, ಪೋಷಕರು ತಮ್ಮ ಮಕ್ಕಳಿಗೆ ತಿಂಡಿಗಳು ಮತ್ತು ಪಾನೀಯಗಳನ್ನು ಆಯ್ಕೆಮಾಡುವಾಗ ಇನ್ನೂ ಜಾಗರೂಕರಾಗಿರಬೇಕು ಎಂಬುದನ್ನು ಇದು ಸೂಚಿಸುತ್ತದೆ.

ವಾರ್ತಾ ಭಾರತಿ 17 Feb 2026 11:46 pm

ಲಿಂಗಸುಗೂರು | ಮುದಗಲ್ ತಾಲೂಕು ಘೋಷಣೆಗೆ ಆಗ್ರಹ: ಫೆ.18ರಂದು ಪಟ್ಟಣ ಬಂದ್‌ಗೆ ಕರೆ

ಲಿಂಗಸುಗೂರು: ಮುದಗಲ್ ಪಟ್ಟಣವನ್ನು ತಾಲೂಕು ಕೇಂದ್ರವನ್ನಾಗಿ ಘೋಷಿಸಬೇಕೆಂದು ಆಗ್ರಹಿಸಿ ಫೆ.18ರಂದು ಮುದಗಲ್ ಬಂದ್‌ಗೆ ಕರೆ ನೀಡಲಾಗಿದೆ ಎಂದು ತಾಲೂಕು ಹೋರಾಟ ಸಮಿತಿ ಪದಾಧಿಕಾರಿ ಶರಣಪ್ಪ ಕಟ್ಟಿಮನಿ ತಿಳಿಸಿದ್ದಾರೆ. ಪಟ್ಟಣದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2023ರ ಚುನಾವಣೆಯಲ್ಲಿ ವಿವಿಧ ರಾಜಕೀಯ ಪಕ್ಷಗಳು ಮುದಗಲ್ ತಾಲೂಕು ಘೋಷಣೆ, ಕೋಟೆ ಉತ್ಸವ ಹಾಗೂ ಕುಡಿಯುವ ನೀರಿನ ಯೋಜನೆಗಳ ಭರವಸೆ ನೀಡಿದ್ದರೂ ಅವು ಈಡೇರಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಬಂದ್‌ಗೆ ಪ್ರಗತಿಪರ, ಕನ್ನಡಪರ, ರೈತಪರ ಹಾಗೂ ದಲಿತಪರ ಸೇರಿ 19ಕ್ಕೂ ಹೆಚ್ಚು ಸಂಘಟನೆಗಳು ಬೆಂಬಲ ನೀಡಿದ್ದು, ಅಂಗಡಿ-ಮುಂಗಟ್ಟು ಮಾಲೀಕರು ಸ್ವಯಂ ಪ್ರೇರಿತರಾಗಿ ಸಹಕಾರ ನೀಡುತ್ತಿದ್ದಾರೆ. ಬಂದ್‌ನ್ನು ಶಾಂತಿಯುತವಾಗಿ ನಡೆಸಲಾಗುವುದು ಎಂದು ಹೇಳಿದರು. ಪಕ್ಷಾತೀತ ಹೋರಾಟಕ್ಕೆ ಹಾಲಿ ಶಾಸಕ ಮಾನಪ್ಪ ವಜ್ಜಲ್ ಹಾಗೂ ಮಾಜಿ ಶಾಸಕ ಡಿ.ಎಸ್. ಹುಲಗೇರಿ ಸೇರಿದಂತೆ ಹಿರಿಯರನ್ನು ಆಹ್ವಾನಿಸಲಾಗಿದೆ. ಕೆಲವು ಮಠಾಧೀಶರೂ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು. ಕರವೇ ಘಟಕಾಧ್ಯಕ್ಷ ಎಸ್.ಎ. ನಯೀಮ್ ಮಾತನಾಡಿ, ಬೇಡಿಕೆಗಳು ಈಡೇರದಿದ್ದರೆ ಮುಂದಿನ ದಿನಗಳಲ್ಲಿ ಕಠಿಣ ಹೋರಾಟ ಕೈಗೊಳ್ಳುವುದಾಗಿ ಎಚ್ಚರಿಸಿದರು. ಬಂದ್ ಹಿನ್ನೆಲೆಯಲ್ಲಿ ಬಸ್ ಸಂಚಾರ, ಶಾಲೆ-ಕಾಲೇಜುಗಳು, ಎಪಿಎಂಸಿ ಮಾರುಕಟ್ಟೆ, ಕಿರಾಣಿ ಮತ್ತು ಬಟ್ಟೆ ಅಂಗಡಿಗಳು ಮುಚ್ಚಲಿದ್ದು, ಅಗತ್ಯ ಸೇವೆಗಳು ಮಾತ್ರ ಲಭ್ಯವಿರಲಿವೆ ಎಂದು ಸಂಘಟಕರು ತಿಳಿಸಿದ್ದಾರೆ.

ವಾರ್ತಾ ಭಾರತಿ 17 Feb 2026 11:45 pm

Raichur | ತೀವ್ರಗೊಂಡ ನಾಯಕತ್ವ ಬದಲಾವಣೆ ಚರ್ಚೆ : ಆಸ್ಟ್ರೇಲಿಯಾಕ್ಕೆ ಪ್ರವಾಸ ಬೆಳೆಸಿದ ಎ.ವಸಂತ ಕುಮಾರ, ಹಂಪನಗೌಡ ಬಾದರ್ಲಿ, ಶರಣಗೌಡ ಬಯ್ಯಾಪುರ

ರಾಯಚೂರು: ರಾಜ್ಯ ಕಾಂಗ್ರೆಸ್‌ನಲ್ಲಿ ನಾಯಕತ್ವ ಬದಲಾವಣೆ ಚರ್ಚೆ ತೀವ್ರಗೊಂಡಿರುವ ಬೆನ್ನಲ್ಲೇ ರಾಯಚೂರಿನ ಕೆಲ ಜನಪ್ರತಿನಿಧಿಗಳು ವಿದೇಶ ಪ್ರವಾಸ ಕೈಗೊಂಡಿರುವುದು ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ರಾಯಚೂರಿನ ವಿಧಾನ ಪರಿಷತ್ ಸದಸ್ಯ ಎ.ವಸಂತ ಕುಮಾರ, ಸಿಂಧನೂರು ಶಾಸಕ ಹಂಪನಗೌಡ ಬಾದರ್ಲಿ ಹಾಗೂ ಲಿಂಗಸಗೂರಿನ ಶಾಸಕ ಶರಣೇಗೌಡ ಬಯ್ಯಾಪುರ ಅವರು ಮಂಗಳವಾರ ರಾತ್ರಿ 10 ಗಂಟೆ ಸುಮಾರಿಗೆ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಆಸ್ಟ್ರೇಲಿಯಾ ಪ್ರವಾಸಕ್ಕೆ ತೆರಳಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಇದೇ ವೇಳೆ ರಾಯಚೂರು ಗ್ರಾಮೀಣ ಶಾಸಕ ಬಸನಗೌಡ ದದ್ದಲ್ ಬುಧವಾರ ಆಸ್ಟ್ರೇಲಿಯಾ ಪ್ರವಾಸಕ್ಕೆ ಹೊರಡಲು ಸಿದ್ಧರಾಗಿದ್ದಾರೆ ಎನ್ನಲಾಗಿದೆ. ರಾಜ್ಯದ ಸುಮಾರು 27 ಮಂದಿ ಶಾಸಕರು ಈ ಪ್ರವಾಸದಲ್ಲಿ ಭಾಗಿಯಾಗುತ್ತಿರುವ ಹಿನ್ನೆಲೆ, ರಾಯಚೂರಿನ ಜನಪ್ರತಿನಿಧಿಗಳೂ ಸೇರಿರುವುದು ಕುತೂಹಲಕ್ಕೆ ಕಾರಣವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಣದಲ್ಲಿ ಗುರುತಿಸಿಕೊಂಡಿರುವ ಈ ಶಾಸಕರು ಒಟ್ಟಾಗಿ ಪ್ರವಾಸ ಕೈಗೊಂಡಿರುವುದು ನಾಯಕತ್ವ ಬದಲಾವಣೆಯ ಚರ್ಚೆಗೆ ಮತ್ತಷ್ಟು ಬಲ ನೀಡಿದೆ. ಇದೇ ವೇಳೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರ ಬಣದಲ್ಲಿ ಗುರುತಿಸಿಕೊಂಡವರಲ್ಲಿ ಕೆಲವರು ಪ್ರವಾಸದಲ್ಲಿಲ್ಲ ಎಂಬ ಮಾಹಿತಿ ತಿಳಿದುಬಂದಿದೆ. ಆಸ್ಟ್ರೇಲಿಯಾ ನಂತರ ನ್ಯೂಝಿಲೆಂಡ್ ಪ್ರವಾಸ ಮುಂದುವರಿಯಲಿದ್ದು, ಮಾ.5ರ ನಂತರ ವಾಪಸ್ಸಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಕೃಷಿ ಅಧ್ಯಯನ ಉದ್ದೇಶದಿಂದ ಈ ಪ್ರವಾಸ ಕೈಗೊಳ್ಳಲಾಗಿದೆ ಎಂದು ಶಾಸಕರು ಸಮರ್ಥಿಸಿಕೊಂಡಿದ್ದಾರೆ. ಪ್ರವಾಸದ ಹಿಂದೆ ಯಾವುದೇ ರಾಜಕೀಯ ಉದ್ದೇಶ ಇಲ್ಲ, ಇದು ಖಾಸಗಿ ಪ್ರವಾಸ ಎಂದು ಶಾಸಕ ಹಂಪನಗೌಡ ಬಾದರ್ಲಿ ತಿಳಿಸಿದ್ದಾರೆ ಎನ್ನಲಾಗಿದೆ. ನಾಯಕತ್ವ ಬದಲಾವಣೆ ಕುರಿತ ಚರ್ಚೆಗಳು ಜೋರಾಗಿರುವ ಸಂದರ್ಭದಲ್ಲಿ ವಿದೇಶ ಪ್ರವಾಸ ಕೈಗೊಂಡಿರುವುದು ರಾಜ್ಯ ರಾಜಕೀಯದಲ್ಲಿ ಚಟುವಟಿಕೆಗಳಿಗೆ ಹೊಸ ತಿರುವು ನೀಡಿದೆ.

ವಾರ್ತಾ ಭಾರತಿ 17 Feb 2026 11:41 pm

ಕೋಲಾರದ ವೇಮಗಲ್‌ನಲ್ಲಿ ಲಘು ಹೆಲಿಕಾಪ್ಟರ್ ಉತ್ಪಾದನಾ ಘಟಕಕ್ಕೆ ಪ್ರಧಾನಿ ಮೋದಿ, ಫ್ರಾನ್ಸ್ ಅಧ್ಯಕ್ಷ ಮ್ಯಾಕ್ರೋನ್ ಚಾಲನೆ

ಕೋಲಾರ : ತಾಲೂಕಿನ ವೇಮಗಲ್‌ನ ಕೈಗಾರಿಕಾ ಪ್ರದೇಶದಲ್ಲಿ ಟಾಟಾ ಅಡ್ವಾನ್ಸ್ಡ್‌ ಸಿಸ್ಟಮ್ಸ್ ಲಿಮಿಟೆಡ್ (ಟಿಎಎಸ್‌ಎಲ್) ಮತ್ತು ಫ್ರಾನ್ಸ್ ಮೂಲದ ಏರ್‌ಬಸ್ ನಿರ್ಮಿಸಿರುವ ಏರ್‌ಬಸ್ ಎಚ್‌125 ಲಘು ಹೆಲಿಕಾಪ್ಟರ್ ಉತ್ಪಾದನಾ ಘಟಕವನ್ನು ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಫ್ರಾನ್ಸ್ ಅಧ್ಯಕ್ಷ ಇಮ್ಯಾನುಯಲ್ ಮ್ಯಾಕ್ರೋನ್ ಅವರು ಮಹಾರಾಷ್ಟ್ರದ ಲೋಕಭವನದಿಂದ ವರ್ಚುವಲ್ ಮೂಲಕ ಉದ್ಘಾಟಿಸಿದ್ದಾರೆ. ವೇಮಗಲ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್, ನಾಗರಿಕ ವಿಮಾನಯಾನ ಸಚಿವ ಕಿಂಜರಾಪು ರಾಮಮೋಹನ್ ನಾಯ್ಡು, ಫ್ರೆಂಚ್ ರಕ್ಷಣಾ ಸಚಿವೆ ಕ್ಯಾಥರಿನ್ ವೌಟ್ರಿನ್, ಟಾಟಾ ಸನ್ಸ್ ಗ್ರೂಪ್ ಅಧ್ಯಕ್ಷ ಎನ್.ಚಂದ್ರಶೇಖರನ್, ಏರ್‌ಬಸ್ ಹೆಲಿಕಾಪ್ಟರ್ಸ್ ಸಿಇಒ, ಬ್ರೂನೋ ಈವನ್ ಸಹಿತ ಪ್ರಮುಖರು ಉಪಸ್ಥಿತರಿದ್ದರು. ಇಲ್ಲಿ ಉತ್ಪಾದನೆಯಾಗಲಿರುವ ‘ಏರ್‌ಬಸ್ ಎಚ್‌125’ ಹೆಲಿಕಾಪ್ಟರ್ ತುರ್ತು ವೈದ್ಯಕೀಯ ಸೇವೆ, ವಿಪತ್ತು ನಿರ್ವಹಣೆ ಹಾಗೂ ಸರಕಾರದ ‘ಉಡಾನ್’ ಯೋಜನೆಯಡಿ ಪ್ರಾದೇಶಿಕ ಸಂಪರ್ಕವನ್ನು ಬಲಪಡಿಸಲು ಪ್ರಮುಖ ಸಾಧನವಾಗಲಿದೆ. ಮೌಂಟ್ ಎವರೆಸ್ಟ್ ಶಿಖರದ ಮೇಲೆ ಇಳಿದ ಇತಿಹಾಸವಿರುವ ಎಚ್‌125 ಹೆಲಿಕಾಪ್ಟರ್ ಭಾರತದ ಸವಾಲಿನ ಹವಾಮಾನ ಮತ್ತು ಎತ್ತರದ ಪ್ರದೇಶಗಳಲ್ಲಿ ಕಾರ್ಯಾಚರಣೆ ನಡೆಸಲು ಅತ್ಯಂತ ಸಮರ್ಥವಾಗಿದೆ. ಈ ಘಟಕದಲ್ಲಿ ನಾಗರಿಕ ಆವೃತ್ತಿಯ ಜೊತೆಗೆ ಅದರ ಮಿಲಿಟರಿ ಆವೃತ್ತಿಯಾದ ಎಚ್‌125ಎಂ ಅನ್ನು ಸಹ ತಯಾರಿಸುವ ಸಾಧ್ಯತೆಯಿದೆ. ಇದು ಟಾಟಾ ಮತ್ತು ಏರ್‌ಬಸ್ ನಡುವಿನ ಎರಡನೇ ಅತಿದೊಡ್ಡ ಸಹಭಾಗಿತ್ವವಾಗಿದ್ದು, ಈ ಹಿಂದೆ ಸಿ295 (ಸಿ295) ಮಿಲಿಟರಿ ವಿಮಾನ ಉತ್ಪಾದನಾ ಘಟಕಕ್ಕಾಗಿ ಇವು ಕೈಜೋಡಿಸಿದ್ದವು. ಭಾರತದ ವಾಯುಯಾನ ಮತ್ತು  ರಕ್ಷಣಾ ಕ್ಷೇತ್ರದಲ್ಲಿ ಐತಿಹಾಸಿಕ ಮೈಲಿಗಲ್ಲು ಸ್ಥಾಪನೆಯಾಗಿದೆ. ಈ ಉತ್ಪಾದನಾ ಘಟಕವು ‘ಆತ್ಮನಿರ್ಭರ ಭಾರತ’ ಅಭಿಯಾನಕ್ಕೆ ದೊಡ್ಡ ಬಲ ನೀಡಲಿದ್ದು, ಭಾರತದ ಖಾಸಗಿ ವಲಯವು ಮೊದಲ ಬಾರಿಗೆ ಅತ್ಯಾಧುನಿಕ ಹೆಲಿಕಾಪ್ಟರ್‌ಗಳ ತಯಾರಿಕೆ, ಪರೀಕ್ಷೆ ಮತ್ತು ನಿರ್ವಹಣೆಯನ್ನು ಕೈಗೆತ್ತಿಕೊಂಡಿದೆ. ಇಲ್ಲಿ ಉತ್ಪಾದನೆಯಾಗಲಿರುವ ‘ಏರ್‌ಬಸ್ ಎಚ್‌125’ ಹೆಲಿಕಾಪ್ಟರ್ ತುರ್ತು ವೈದ್ಯಕೀಯ ಸೇವೆ, ವಿಪತ್ತು ನಿರ್ವಹಣೆ ಹಾಗೂ ಸರಕಾರದ ‘ಉಡಾನ್’ ಯೋಜನೆಯಡಿ ಪ್ರಾದೇಶಿಕ ಸಂಪರ್ಕವನ್ನು ಬಲಪಡಿಸಲು ಪ್ರಮುಖ ಸಾಧನವಾಗಲಿದೆ. ರಾಜನಾಥ್ ಸಿಂಗ್, ಕೇಂದ್ರ ರಕ್ಷಣಾ ಸಚಿವ

ವಾರ್ತಾ ಭಾರತಿ 17 Feb 2026 11:40 pm

ಬೆರಳ ತುದಿಯಲ್ಲೇ ಕೃಷಿ ಮಾಹಿತಿ, ಫೋನ್ ಕರೆ ಮೂಲಕವೂ ಪಡೆಯಬಹುದು ಸಲಹೆ; ರೈತರಿಗಾಗಿರುವ ಬಹುಭಾಷಾ AI ಟೂಲ್ ಭಾರತ್-ವಿಸ್ತಾರ್ ಬಳಕೆ ಹೇಗೆ?

ರೈತರಿಗೆ ಸಂಬಂಧಿತ ಮಾಹಿತಿಯನ್ನು ಒದಗಿಸಲು ವಿನ್ಯಾಸಗೊಳಿಸಲಾದ AI-ಚಾಲಿತ ಬಹುಭಾಷಾ ಟೂಲ್ ಭಾರತ್-ವಿಸ್ತಾರ್ (Virtually Integrated System to Access Agricultural Resources) ಅನ್ನು ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಮಂಗಳವಾರ ಬಿಡುಗಡೆ ಮಾಡಿದ್ದಾರೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕೇಂದ್ರ ಬಜೆಟ್ 2026-27ರಲ್ಲಿ ಈ ಹೊಸ AI ಟೂಲ್ ಅನ್ನು ಘೋಷಿಸಿದ್ದರು. ಭಾರತ್-ವಿಸ್ತಾರ್ ಬಹುಭಾಷಾ AI ಟೂಲ್ ಆಗಿದ್ದು, ಇದು ಅಗ್ರಿಸ್ಟ್ಯಾಕ್ ಪೋರ್ಟಲ್ಗಳು ಮತ್ತು ಕೃಷಿ ಪದ್ಧತಿಗಳ ಕುರಿತು ICAR ಪ್ಯಾಕೇಜ್ ಅನ್ನು AI ವ್ಯವಸ್ಥೆಗಳೊಂದಿಗೆ ಸಂಯೋಜಿಸುತ್ತದೆ. ಇದು ಕೃಷಿ ಉತ್ಪಾದಕತೆಯನ್ನು ಹೆಚ್ಚಿಸುತ್ತದೆ, ರೈತರಿಗೆ ಉತ್ತಮ ನಿರ್ಧಾರಗಳನ್ನು ಸಕ್ರಿಯಗೊಳಿಸುತ್ತದೆ ಮತ್ತು ಕಸ್ಟಮೈಸ್ ಮಾಡಿದ ಸಲಹಾ ಬೆಂಬಲವನ್ನು ಒದಗಿಸುವ ಮೂಲಕ ಅಪಾಯವನ್ನು ಕಡಿಮೆ ಮಾಡುತ್ತದೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಫೆಬ್ರವರಿ 1ರಂದು ತಮ್ಮ ಬಜೆಟ್ ಭಾಷಣದಲ್ಲಿ ಹೇಳಿದ್ದಾರೆ. ಮುಂದಿನ ಹಣಕಾಸು ವರ್ಷಕ್ಕೆ (2026-27) ಭಾರತ್-ವಿಸ್ತಾರ್ಗಾಗಿ ₹150 ಕೋಟಿ ಅನುದಾನ ನೀಡಲಾಗಿದೆ. ಭಾರತ್-ವಿಸ್ತಾರ್ ಎಂದರೇನು? ಭಾರತ್-ವಿಸ್ತಾರ್ ಎಂಬುದು AI-ಚಾಲಿತ ಬಹುಭಾಷಾ ಟೂಲ್ ಆಗಿದ್ದು, ಇದು ಭಾರತೀಯ ರೈತರಿಗೆ ಮೊಬೈಲ್ ಅಥವಾ ಫೋನ್ ಕರೆಗಳ ಮೂಲಕ ಅವರ ಮಾತೃಭಾಷೆಯಲ್ಲಿ ಕೃಷಿ ಸಂಬಂಧಿತ ಮಾಹಿತಿಯನ್ನು ಒದಗಿಸುತ್ತದೆ. ಈ ಸಾಧನವು ಬೆಳೆ ಯೋಜನೆ, ಕೃಷಿ ಪದ್ಧತಿಗಳು, ಕೀಟಗಳು, ಹವಾಮಾನ ಮುನ್ಸೂಚನೆಗಳು, ಮಾರುಕಟ್ಟೆ ದರಗಳು, ಯೋಜನೆಗಳ ಮಾಹಿತಿ, ಅರ್ಹತೆ, ಅನ್ವಯಿಕೆಗಳು ಮತ್ತು ಕುಂದುಕೊರತೆಗಳ ಕುರಿತು ಮಾರ್ಗದರ್ಶನ ನೀಡುತ್ತದೆ. ಇದು ರೈತರಿಗೆ ಅಗತ್ಯವಿರುವ ಮಾಹಿತಿಯನ್ನು ಪ್ರವೇಶಿಸಲು “ಡಿಜಿಟಲ್ ದ್ವಾರ”ವಾಗಿ ಕಾರ್ಯನಿರ್ವಹಿಸುತ್ತದೆ. ಇದು ಕೃಷಿಯಲ್ಲಿ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ (DPI) ಉಪಕ್ರಮವಾಗಿದ್ದು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮತ್ತು ಸಹಕಾರಿ ವ್ಯವಸ್ಥೆಗಳಾದ್ಯಂತ ವಿಶ್ವಾಸಾರ್ಹ ಮೂಲಗಳಿಂದ ಮಾಹಿತಿಯನ್ನು ಸಂಯೋಜಿಸುವ ಮೂಲಕ ಸಲಹೆಯನ್ನು ವೈಯಕ್ತೀಕರಿಸಲು ಕೃತಕ ಬುದ್ಧಿಮತ್ತೆ (AI) ಅನ್ನು ಬಳಸುತ್ತದೆ. ಇದರ ಅಗತ್ಯವೇನು? ರೈತರು ಯೋಜನೆಗಳಿಗೆ ತಮ್ಮ ಅರ್ಹತೆಯನ್ನು ನಿರ್ಧರಿಸಲು, ಅವುಗಳಿಗೆ ಅರ್ಜಿ ಸಲ್ಲಿಸಲು, ಪ್ರಯೋಜನಗಳ ಸ್ಥಿತಿಯನ್ನು ಪರಿಶೀಲಿಸಲು ಮತ್ತು ತಮ್ಮ ಕುಂದುಕೊರತೆಗಳನ್ನು ಸಮಯಕ್ಕೆ ಪರಿಹರಿಸಲು ಹೆಣಗಾಡುತ್ತಾರೆ. ಹವಾಮಾನ, ಮಂಡಿ ದರಗಳು, ವಿಮೆ ಮತ್ತು ಮಣ್ಣಿನ ಆರೋಗ್ಯದ ಬಗ್ಗೆ ಮಾಹಿತಿಯು ಒಂದೇ ಸ್ಥಳದಲ್ಲಿ ಲಭ್ಯವಿರುವುದಿಲ್ಲ. ಈ ಎಲ್ಲಾ ವಿವರಗಳನ್ನು ಸಂಗ್ರಹಿಸಲು ರೈತರು ಹಲವಾರು ಕಚೇರಿಗಳು ಹಾಗೂ ವೆಬ್ಸೈಟ್ಗಳಿಗೆ ಭೇಟಿ ನೀಡಬೇಕಾಗುತ್ತದೆ. ಆದ್ದರಿಂದ ರೈತರಿಗೆ ಅಗತ್ಯವಿರುವ ಎಲ್ಲಾ ಮಾಹಿತಿಯನ್ನು ಒಂದೇ ಸ್ಥಳದಲ್ಲಿ ಪ್ರವೇಶಿಸಬಹುದಾದ ವ್ಯವಸ್ಥೆಯನ್ನು ಈ ಮೂಲಕ ಕಲ್ಪಿಸಲಾಗಿದೆ. ಭಾರತ್-ವಿಸ್ತಾರ್ ಬಳಸುವುದರಿಂದ ರೈತರು ಇಂತಹ ಮಾಹಿತಿಗಾಗಿ ವಿಭಿನ್ನ ಕಚೇರಿಗಳು, ವೆಬ್ಸೈಟ್ಗಳು, ಅಪ್ಲಿಕೇಶನ್ಗಳು ಅಥವಾ ಮಧ್ಯವರ್ತಿಗಳನ್ನು ಅವಲಂಬಿಸಬೇಕಾಗಿಲ್ಲ. ಏಕೆಂದರೆ ಇದು ರೈತರಿಗೆ ಅವರ ಸ್ವಂತ ಭಾಷೆಯಲ್ಲಿ ಪಠ್ಯ ಮತ್ತು ಧ್ವನಿ ಆಧಾರಿತ ಸಂಭಾಷಣೆಯ ಮೂಲಕ ಎಲ್ಲಾ ಸಂಬಂಧಿತ ಮಾಹಿತಿಯನ್ನು ಒದಗಿಸುತ್ತದೆ ಎಂದು ಕೃಷಿ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ. ರೈತರು ಯಾವುದಕ್ಕೆ ಬಳಸಬಹುದು? ಬೆಳೆ ಋತುವಿನಲ್ಲಿ ರೈತರು ಎದುರಿಸುವ ದೈನಂದಿನ ಸಮಸ್ಯೆಗಳ ಪರಿಹಾರಕ್ಕಾಗಿ ಭಾರತ್-ವಿಸ್ತಾರ್ ಬಳಸಬಹುದು. ಉದಾಹರಣೆಗೆ: – ತಮ್ಮ ಪ್ರದೇಶದಲ್ಲಿ ಮಳೆ ನಿರೀಕ್ಷೆ ಯಾವಾಗ ಎಂಬ ಮಾಹಿತಿ – ಕೀಟಗಳು ಅಥವಾ ಬೆಳೆ ರೋಗಗಳ ಬಗ್ಗೆ ಮುಂಚಿತ ಎಚ್ಚರಿಕೆಗಳು – ಮಣ್ಣು ಮತ್ತು ಹವಾಮಾನದ ಆಧಾರದ ಮೇಲೆ ಬೆಳೆ-ನಿರ್ದಿಷ್ಟ ಶಿಫಾರಸುಗಳು – ಉತ್ಪನ್ನ ಮಾರಾಟಕ್ಕೂ ಮೊದಲು ಮಂಡಿ ಬೆಲೆಗಳ ನವೀಕರಣಗಳು – ಜಾನುವಾರು ಹಾಗೂ ಸಂಬಂಧಿತ ಕೃಷಿ ಮಾರ್ಗದರ್ಶನ ಟೂಲ್ ಬಳಸುವುದು ಹೇಗೆ? ರೈತರು ಯಾವುದೇ ದೂರವಾಣಿ ಅಥವಾ ಮೊಬೈಲ್ನಿಂದ ಮೀಸಲಾದ ಸಂಖ್ಯೆ 155261 ಅನ್ನು ಡಯಲ್ ಮಾಡಿ ‘ಭಾರತಿ’ ಎಂಬ AI ಸಹಾಯಕರೊಂದಿಗೆ ಮಾತನಾಡುವ ಮೂಲಕ ಭಾರತ್-ವಿಸ್ತಾರ್ ಬಳಸಬಹುದು. ಗೂಗಲ್ ಪ್ಲೇ ಸ್ಟೋರ್ನಲ್ಲಿ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಬಹುದು. ಇಲ್ಲವೇ ಅಪ್ಲಿಕೇಶನ್ನಂತೆಯೇ ಕಾರ್ಯನಿರ್ವಹಿಸುವ ವೆಬ್ ಇಂಟರ್ಫೇಸ್ ಲಿಂಕ್ (vistaar.da.gov.in) ಮೂಲಕ ಪ್ರವೇಶಿಸಬಹುದು. ಈ ಲಿಂಕ್ ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯದ ವೆಬ್ಸೈಟ್ಗಳಲ್ಲಿ ಹಾಗೂ PM-ಕಿಸಾನ್ ಮತ್ತು PMFBY ಮೊಬೈಲ್ ಅಪ್ಲಿಕೇಶನ್ಗಳಲ್ಲಿ ಲಭ್ಯವಿರುತ್ತದೆ. ದೂರವಾಣಿ ಕರೆಗಳ ಜೊತೆಗೆ ಚಾಟ್ ಮೂಲಕವೂ ಸಂವಾದ ನಡೆಸಬಹುದು. ಭಾರತ್-ವಿಸ್ತಾರ್ ದಿನದ 24 ಗಂಟೆಗಳ ಕಾಲ ‘ಡಿಜಿಟಲ್ ಕೃಷಿ ತಜ್ಞ’ರಾಗಿ ಲಭ್ಯವಿರುತ್ತದೆ. ಯಾವ ಮಾಹಿತಿ ಲಭ್ಯವಿರುತ್ತದೆ? ಅಧಿಕಾರಿಗಳ ಪ್ರಕಾರ, ರೈತರು ಪ್ರಾರಂಭದಲ್ಲಿ 10 ಪ್ರಮುಖ ಕೇಂದ್ರ ಯೋಜನೆಗಳ ಬಗ್ಗೆ ಮಾಹಿತಿಯನ್ನು ಪಡೆಯಬಹುದು — PM-KISAN, PM Fasal Bima Yojana (PMFBY), ಮಣ್ಣಿನ ಆರೋಗ್ಯ ಕಾರ್ಡ್ (SHC), ಮೋಡಿಫೈಡ್ ಇಂಟರೆಸ್ಟ್ ಸಬ್ವೆನ್ಷನ್ ಯೋಜನೆ, ಕೃಷಿ ಯಾಂತ್ರೀಕರಣದ ಉಪ-ಮಿಷನ್, ಪರ್ ಡ್ರಾಪ್ ಮೋರ್ ಕ್ರಾಪ್, ಪಿಎಂ ಕೃಷಿ ಸಿಂಚಾಯಿ ಯೋಜನೆ, ಪಿಎಂ ಅನ್ನದಾತ ಆಯ್ ಸಂರಕ್ಷಣಾ ಅಭಿಯಾನ, ಕೃಷಿ ಮೂಲಸೌಕರ್ಯ ನಿಧಿ ಮತ್ತು ಕಿಸಾನ್ ಕ್ರೆಡಿಟ್ ಕಾರ್ಡ್. ಇದಲ್ಲದೆ, ರೈತರು ಈ ಯೋಜನೆಗಳಿಗೆ ಸಂಬಂಧಿಸಿದ ತಮ್ಮ ಪ್ರಯೋಜನ ಸ್ಥಿತಿಯನ್ನು ಪರಿಶೀಲಿಸಬಹುದು. PM-KISAN ಕುಂದುಕೊರತೆಗಳನ್ನು ನೋಂದಾಯಿಸಿ ಟ್ರ್ಯಾಕ್ ಮಾಡಬಹುದು. ಹೆಚ್ಚುವರಿಯಾಗಿ, ICAR ನಿಂದ ವೈಜ್ಞಾನಿಕ ಅರಿವು, ಕೀಟ-ರೋಗ ಎಚ್ಚರಿಕೆಗಳು, ನೈಜ-ಸಮಯದ ಹವಾಮಾನ ಮಾಹಿತಿ, ಮಂಡಿ ಬೆಲೆಗಳು ಹಾಗೂ ಹವಾಮಾನ ಆಧಾರಿತ ಕೃಷಿ ವಿಜ್ಞಾನ ಸಲಹೆಯ ಆಧಾರದ ಮೇಲೆ ಬೆಳೆ ಮತ್ತು ಜಾನುವಾರು ಸಲಹೆಗಳನ್ನು ಪಡೆಯಬಹುದು. ಎಲ್ಲಾ ಕೇಂದ್ರ ಯೋಜನೆಗಳನ್ನು ಮೇ 2026ರೊಳಗೆ ಅರ್ಹತೆ, ಅರ್ಜಿಗಳು, ಪ್ರಯೋಜನ ಸ್ಥಿತಿ ಮತ್ತು ಕುಂದುಕೊರತೆ ಪರಿಹಾರಕ್ಕಾಗಿ ಸಂಯೋಜಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಭಾರತ್-ವಿಸ್ತಾರ್ ಯಾವ ಭಾಷೆಗಳನ್ನು ಬೆಂಬಲಿಸುತ್ತದೆ? ಪ್ರಾರಂಭದಲ್ಲಿ ಭಾರತ್-ವಿಸ್ತಾರ್ ಚಾಟ್ಬಾಟ್ (ಪಠ್ಯ ಆಧಾರಿತ ಸಂಭಾಷಣೆ) ಇಂಗ್ಲಿಷ್ ಮತ್ತು ಹಿಂದಿಯಲ್ಲಿ ಲಭ್ಯವಿರುತ್ತದೆ. ಧ್ವನಿ ಆಧಾರಿತ AI ಸಹಾಯಕ ‘ಭಾರತಿ’ ಕೂಡ ಆರಂಭದಲ್ಲಿ ಇಂಗ್ಲಿಷ್ ಮತ್ತು ಹಿಂದಿಯಲ್ಲಿ ಮಾತ್ರ ಲಭ್ಯವಿರುತ್ತದೆ. ಆದರೆ ಮಹಾರಾಷ್ಟ್ರದ ರೈತರು ‘ವಸುಧಾ’ (ಮರಾಠಿ) ಮೂಲಕ, ಗುಜರಾತ್ನ ರೈತರು ‘ಅಮುಲ್ಎಐ’ಯ ‘ಸರ್ಲಾಬೆನ್’ (ಗುಜರಾತಿ) ಮೂಲಕ ಮತ್ತು ಬಿಹಾರದ ರೈತರು ಬಿಹಾರ ಕೃಷಿ ಅಪ್ಲಿಕೇಶನ್ ಮೂಲಕ ಪ್ರವೇಶಿಸಬಹುದು. ಮುಂದಿನ ಮೂರು ತಿಂಗಳಲ್ಲಿ ತಮಿಳು, ಬಂಗಾಳಿ, ಅಸ್ಸಾಮಿ ಮತ್ತು ಕನ್ನಡದಲ್ಲಿ ರಾಜ್ಯ ಸರ್ಕಾರಗಳ ಯೋಜನೆಗಳೊಂದಿಗೆ ಲಭ್ಯವಾಗಲಿದೆ. ಮುಂದಿನ ಆರು ತಿಂಗಳಲ್ಲಿ ಒಟ್ಟು 11 ಭಾಷೆಗಳಲ್ಲಿ (ಇಂಗ್ಲಿಷ್, ಹಿಂದಿ ಮತ್ತು 9 ಪ್ರಾದೇಶಿಕ ಭಾಷೆಗಳು) ಲಭ್ಯವಾಗುವ ನಿರೀಕ್ಷೆಯಿದೆ.

ವಾರ್ತಾ ಭಾರತಿ 17 Feb 2026 11:38 pm

US And Iran: ಹೋರ್ಮುಜ್ ಜಲಸಂಧಿ ಟಾರ್ಗೆಟ್ ಮಾಡಿ ಮಿಸೈಲ್ ಹಾರಿಸಿದ ಇರಾನ್ ಸೇನೆ

ಅಮೆರಿಕ ಮತ್ತು ಇರಾನ್ ನಡುವೆ ಒಂದು ಕಡೆ ಜಿನೇವಾದಲ್ಲಿ ಮಾತುಕತೆ ಆರಂಭ ಆಗಿದೆ. ಇದೀಗ ಪರಮಾಣು ಕಾರ್ಯಕ್ರಮಗಳ ವಿಚಾರದಲ್ಲಿ ಎರಡೂ ದೇಶಗಳ ನಡುವೆ ಸಂಧಾನ ಮಾತುಕತೆ ಆಗಲಿ ಎಂಬುದೇ ಜಗತ್ತಿನ ಬಯಕೆ ಆಗಿತ್ತು. ಆದರೆ ಇಂತಹ ಸಮಯದಲ್ಲೇ ಇರಾನ್ ಘೋರ ತಪ್ಪು ಮಾಡಿದ ರೀತಿ ಕಾಣುತ್ತಿದೆ. ಏಕೆಂದರೆ ಒಂದು ಕಡೆ ಸಂಧಾನ ಮಾತುಕತೆ ನಡೆಯುತ್ತಿದ್ದರೆ ಇದೇ ಸಮಯದಲ್ಲಿ

ಒನ್ ಇ೦ಡಿಯ 17 Feb 2026 11:35 pm

DP World ನೂತನ ಸಿಇಒ ಆಗಿ ಭಾರತ ಮೂಲದ ಯುವರಾಜ್ ನಾರಾಯಣ್ ನೇಮಕ

ಡಿಪಿ ವರ್ಲ್ಡ್ ಏಷ್ಯಾದ ಪೂರೈಕೆ ಸರಪಳಿಯನ್ನು ಹೇಗೆ ಮರುವಿನ್ಯಾಸಗೊಳಿಸುತ್ತಿದೆ?

ವಾರ್ತಾ ಭಾರತಿ 17 Feb 2026 11:30 pm

ಮಾಜಿ ಕ್ರಿಕೆಟರ್ ಇಮ್ರಾನ್ ಖಾನ್ ಸ್ಥಿತಿ ಮತ್ತಷ್ಟು ಗಂಭೀರ, ಪಾಕಿಸ್ತಾನ ಸರ್ಕಾರದ ವಿರುದ್ಧ ಆಕ್ರೋಶ | Imran Khan

ಪಾಕಿಸ್ತಾನ ತನ್ನ ಯೋಗ್ಯತೆಯನ್ನ ಪದೇ ಪದೇ ಜಗತ್ತಿನ ಎದುರು ಬಿಚ್ಚಿಡುತ್ತಾ, ತನ್ನ ಬಂಡವಾಳವನ್ನ ಬಯಲು ಮಾಡಿಕೊಳ್ಳುತ್ತಿದೆ. ಭ್ರಷ್ಟ ರಾಜಕೀಯ ನಾಯಕರು ಹಾಗೂ ಭ್ರಷ್ಟ ಸೇನೆಯ ಹಿಡಿತದಲ್ಲಿ, ಇದೇ ಪಾಕಿಸ್ತಾನ ನಲುಗಿ ಹೋಗಿದೆ. ಪಾಕಿಸ್ತಾನದ ಪ್ರಜೆಗಳು ಕೂಡ ಅಲ್ಲಿನ ವ್ಯವಸ್ಥೆಯ ವಿರುದ್ಧ ಭಾರಿ ಆಕ್ರೋಶ ಹೊರಹಾಕಿ, ಈಗಾಗಲೇ ದೊಡ್ಡ ದೊಡ್ಡ ಪ್ರತಿಭಟನೆಗಳನ್ನೂ ಮಾಡಿದ್ದಾರೆ. ಇಷ್ಟಾದರೂ ಅದೆಲ್ಲಾ ಉಪಯೋಗಕ್ಕೆ ಬಂದಿಲ್ಲ.

ಒನ್ ಇ೦ಡಿಯ 17 Feb 2026 11:27 pm

Yadgiri | ಫೆ.22ರಂದು ಶ್ರೀ ವಿಶ್ವಾರಾಧ್ಯರ ಜಾತ್ರೆಗೆ ಅಬ್ಬೆತುಮಕೂರು ಸಜ್ಜು : ಡಾ. ಗಂಗಾಧರ ಶ್ರೀ

ಯಾದಗಿರಿ: ಅಣಿಮಾದಿ ಅಷ್ಟಸಿದ್ಧಿ ಪುರುಷ ಶ್ರೀ ವಿಶ್ವಾರಾಧ್ಯರ ಜಾತ್ರಾ ಮಹೋತ್ಸವಕ್ಕೆ ಅಬ್ಬೆತುಮಕೂರು ಸಜ್ಜಾಗುತ್ತಿದೆ ಎಂದು ಮಠದ ಪೀಠಾಧಿಪತಿ ಡಾ.ಗಂಗಾಧರ ಮಹಾಸ್ವಾಮಿಗಳು ತಿಳಿಸಿದರು. ಅಬ್ಬೆತುಮಕೂರಿನ ಅನುಗ್ರಹ ಕ್ಷೇತ್ರದಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಜಾತಿ–ಮತ ಭೇದ ಮೀರಿ ಬದುಕಿದ ಮಹಾನ್ ಸಂತ ಶ್ರೀ ವಿಶ್ವಾರಾಧ್ಯರ ಜಾತ್ರೆ ಫೆಬ್ರವರಿ 22ರಂದು ಜರುಗಲಿದೆ. ಜಾತ್ರೆಯ ಸಿದ್ಧತೆಗಳು ಭರದಿಂದ ಸಾಗುತ್ತಿದ್ದು, ಅನೇಕ ಸೇವಾಧಾರಿಗಳು ವಿವಿಧ ಸೇವೆಗಳಲ್ಲಿ ತೊಡಗಿಸಿಕೊಂಡಿದ್ದಾರೆ ಎಂದರು. ಈಗಾಗಲೇ ಶ್ರೀ ವಿಶ್ವಾರಾಧ್ಯರ ಪುರಾಣ ಪ್ರವಚನ ಆರಂಭವಾಗಿದ್ದು, ಮಲ್ಲಿಕಾರ್ಜುನ ಶಾಸ್ತ್ರಿ ಐನಾಪೂರ ಅವರ ಸಾಹಿತ್ಯ–ಸಂಗೀತ ಸಹಿತ 11 ದಿನಗಳ ಕಾಲ ನಡೆಯಲಿದೆ. ಫೆ.21ರಂದು ಮಹಾಮಂಗಳವಾಗಲಿದ್ದು, ಅಂದು ಬೆಳಿಗ್ಗೆ ರಥೋತ್ಸವ ಮಹಾಪೂಜೆ ಹಾಗೂ ರಥಾಂಗ ಹೋಮವನ್ನು ದುಧನಿಯ ಮೇತ್ರೆ ಕುಟುಂಬ ನೆರವೇರಿಸಲಿದೆ. ಫೆ.21ರಂದು ಸಂಜೆ ಕೈಲಾಸ ಕಟ್ಟೆ ಸಮೀಪ ದುನಿ ಪೂಜೆ ಜರುಗಲಿದ್ದು, ಆಗಮಿಸುವ ಸಾಧು–ಸಂತರಿಗೆ ಕಾವಿ ಕಪನಿಗಳನ್ನು ನೀಡಿ ಗೌರವಿಸಲಾಗುತ್ತದೆ. ಫೆ.22ರಂದು ಬೆಳಿಗ್ಗೆ ಗದ್ದುಗೆಗೆ ವಿಶೇಷ ರುದ್ರಾಭಿಷೇಕ ನೆರವೇರಿಸಿ, ಬಳಿಕ ರಥಕ್ಕೆ ಕಳಸಾರೋಹಣ ಮಾಡಲಾಗುತ್ತದೆ. ನಂತರ ಪಲ್ಲಕ್ಕಿ ಉತ್ಸವ ಗ್ರಾಮ ಬೀದಿಗಳಲ್ಲಿ ಮಂಗಲವಾದ್ಯಗಳೊಂದಿಗೆ ಸಾಗಲಿದೆ. ಸಂಜೆ 6.15ಕ್ಕೆ ವೈಭವದ ರಥೋತ್ಸವ ನಡೆಯಲಿದ್ದು, ರಾತ್ರಿ 8ಕ್ಕೆ ಮಾನವ ಧರ್ಮ ಸಮಾವೇಶ ಜರುಗಲಿದೆ. ಸಮಾವೇಶವನ್ನು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಹೆಚ್.ಕೆ. ಪಾಟೀಲ್ ಹಾಗೂ ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಉದ್ಘಾಟಿಸಲಿದ್ದಾರೆ. ಸಚಿವರಾದ ಈಶ್ವರ್‌ ಖಂಡ್ರೆ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಲಿದ್ದಾರೆ. ಜಾತ್ರಾ ಮಹೋತ್ಸವದ ಅಂಗವಾಗಿ ಪಾರಂಪರಿಕ ದಾಸೋಹ, ಶರಣ ಸಂಸ್ಕೃತಿ ಶಿಬಿರ, ಗುರು–ಶಿಷ್ಯ ಸಮಾಗಮ, ನಾಟಕ ಪ್ರದರ್ಶನ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಐದು ದಿನಗಳ ಕಾಲ ನಡೆಯಲಿವೆ. ಫೆ.26ರಂದು ಕಳಸ ಅವರೋಹಣದೊಂದಿಗೆ ಜಾತ್ರೆ ಸಂಪನ್ನಗೊಳ್ಳಲಿದೆ. ಮಾಧ್ಯಮಗೋಷ್ಠಿಯಲ್ಲಿ ಶಾಸಕ ಚನ್ನಾರೆಡ್ಡಿ ಪಾಟೀಲ್ ತುನ್ನೂರು ಸೇರಿದಂತೆ ಹಲವರು ಉಪಸ್ಥಿತರಿದ್ದರು.

ವಾರ್ತಾ ಭಾರತಿ 17 Feb 2026 11:24 pm

ಅಪ್ರಾಪ್ತರಿಗೆ ವಾಹನ ನೀಡುವ ಪೋಷಕರ ವಿರುದ್ಧ ಮುಲಾಜಿಲ್ಲದೆ ಕೇಸ್‌; ವ್ಹೀಲಿಂಗ್ ಮಾಡಿದ್ರೂ ಅಷ್ಟೇ!

Bengaluru City Police-ಅಪ್ರಾಪ್ತ ವಯಸ್ಸಿನ ಮಕ್ಕಳಿಗೆ ವಾಹನ ನೀಡುವ ಪೋಷಕರಿಗೆ ಇದೀಗ ಬೆಂಗಳೂರು ಪೊಲೀಸರು ಖಡಕ್ ಎಚ್ಚರಿಕೆಯನ್ನು ನೀಡಿದ್ದಾರೆ. ಈ ನಿಟ್ಟಿನಲ್ಲಿ ನಗರದಲ್ಲಿ ವಿಶೇಷ ಕಾರ್ಯಾಚರಣೆ ಹಮ್ಮಿಕೊಳ್ಳಲಾಗಿದ್ದು, ತಪಾಸಣೆ ವೇಳೆ ಸಿಕ್ಕಿಬಿದ್ದಲ್ಲಿ ವಾಹನವನ್ನು ಜಪ್ತಿ ಮಾಡಿ ಪೋಷಕರ ಮೇಲೆ ಪ್ರಕರಣ ದಾಖಲಿಸಲಾಗುತ್ತದೆ ಎಂದು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಅವರು ಎಚ್ಚರಿಕೆ ನೀಡಿದ್ದಾರೆ. ಅದೇ ರೀತಿ ವ್ಹೀಲಿಂಗ್ ಮಾಡಿದ 349 ಅಪ್ರಾಪ್ತರು ಹಾಗೂ ಅವರ ಪೋಷಕರ ವಿರುದ್ಧ ಪ್ರಕರಣ ದಾಖಲಿಸಿ ಕ್ರಮ ಜರುಗಿಸಿದ್ದಾರೆ.

ವಿಜಯ ಕರ್ನಾಟಕ 17 Feb 2026 11:22 pm

Yadgiri | ಸರಕಾರಿ ಜಾಗದಲ್ಲಿ ಬೌದ್ಧ ವಿಹಾರ ನಿರ್ಮಾಣಕ್ಕೆ ಡಿಎಸ್ಎಸ್ ಒತ್ತಾಯ

ಯಾದಗಿರಿ: ಜಿಲ್ಲೆಯ ವಡಿಗೇರಾ ತಾಲೂಕಿನ ಮಾಲಹಳ್ಳಿ ಗ್ರಾಮದ ಸರ್ವೇ ನಂ. 3/4ರಲ್ಲಿ ಲಭ್ಯವಿರುವ ಸರ್ಕಾರಿ ಜಮೀನನ್ನು ಬೌದ್ಧ ವಿಹಾರ ನಿರ್ಮಾಣಕ್ಕೆ ಮಂಜೂರು ಮಾಡುವಂತೆ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಡಿಎಸ್ಎಸ್) ಜಿಲ್ಲಾ ಘಟಕವು ವಡಿಗೇರಾ ತಹಶೀಲ್ದಾರ್ ಅವರಿಗೆ ಮನವಿ ಪತ್ರ ಸಲ್ಲಿಸಿತು. ಮನವಿ ಸಲ್ಲಿಸಿ ಮಾತನಾಡಿದ ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾ ಅಧ್ಯಕ್ಷ ಹತ್ತಿಗೂಡೂರು ಶರಣರೆಡ್ಡಿ, ಗ್ರಾಮದಲ್ಲಿ ಸುಮಾರು ನಾಲ್ಕು ಗುಂಟೆ ಸರ್ಕಾರಿ ಜಮೀನು ಲಭ್ಯವಿದ್ದು, ಇದೇ ಸ್ಥಳದಲ್ಲಿ ಬೌದ್ಧ ವಿಹಾರ ನಿರ್ಮಾಣದ ಉದ್ದೇಶದಿಂದ ಈಗಾಗಲೇ ನಾಮಫಲಕ ಅಳವಡಿಸಲಾಗಿದೆ. ಈ ಜಾಗ ವಿಹಾರ ನಿರ್ಮಾಣಕ್ಕೆ ಸೂಕ್ತವಾಗಿದೆ ಎಂದು ತಿಳಿಸಿದರು. ಗ್ರಾಮದಲ್ಲಿ ಬೇರೆ ಯಾವುದೇ ಸರ್ಕಾರಿ ಜಾಗ ಲಭ್ಯವಿಲ್ಲದ ಕಾರಣ, ದಲಿತ ಸಮುದಾಯದ ಧಾರ್ಮಿಕ, ಸಾಂಸ್ಕೃತಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳಿಗೆ ಬೌದ್ಧ ವಿಹಾರ ಅತ್ಯಗತ್ಯವಾಗಿದೆ. ಬೌದ್ಧ ಭಿಕ್ಷುಗಳ ಕಾರ್ಯಕ್ರಮಗಳು ಹಾಗೂ ಸಮುದಾಯ ಚಟುವಟಿಕೆಗಳಿಗೆ ಇದು ಸಹಕಾರಿಯಾಗಲಿದೆ ಎಂದು ಹೇಳಿದರು. ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಕ್ರಮ ಕೈಗೊಂಡು ಜಮೀನನ್ನು ಬೌದ್ಧ ವಿಹಾರ ನಿರ್ಮಾಣಕ್ಕೆ ಮಂಜೂರು ಮಾಡಬೇಕು ಎಂದು ಡಿಎಸ್ಎಸ್ ಮನವಿ ಮಾಡಿಕೊಂಡಿತು. ಈ ಸಂದರ್ಭದಲ್ಲಿ ಹನುಮಂತ, ಮರ್ಲಿಂಗಪ್ಪ ಶಾಖ, ಹೊನ್ನಯ್ಯ ಶಾಖ, ಮಲ್ಲಿಕಾರ್ಜುನ ಶಾಖ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ವಾರ್ತಾ ಭಾರತಿ 17 Feb 2026 11:17 pm

ಬಾರಾಮತಿ ವಿಮಾನ ದುರಂತ| ದತ್ತಾಂಶ ಮರು ಪಡೆಯಲು ಅಮೆರಿಕದ ನೆರವು ಕೋರಿದ ಎಎಐಬಿ

ಹೊಸದಿಲ್ಲಿ, ಫೆ. 17: ಕಳೆದ ತಿಂಗಳು ಬಾರಾಮತಿ ಸಮೀಪ ಅಪಘಾತಕ್ಕೀಡಾದ ಲಿಯರ್ ಜೆಟ್ 45 ವಿಮಾನದ ಕಾಕ್ ಪಿಟ್ ವಾಯ್ಸ್ ರೆಕಾರ್ಡರ್ (ಸಿವಿಆರ್)ನಿಂದ ದತ್ತಾಂಶ ಮರಳಿ ಪಡೆಯಲು ಅಮೆರಿಕದ ವಿಶೇಷ ನೆರವು ಕೋರಲಾಗಿದೆ ಎಂದು ವಿಮಾನ ಅಪಘಾತ ತನಿಖಾ ಬ್ಯೂರೊ (ಎಎಐಬಿ) ಮಂಗಳವಾರ ಹೇಳಿದೆ. ವಿಎಸ್‌ಆರ್ ವೆಂಚರ್ಸ್‌ ಮಾಲಕತ್ವದ ವಿಮಾನ ಜನವರಿ 28ರಂದು ದುರಂತಕ್ಕೀಡಾಗಿ ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಹಾಗೂ ಇತರ ನಾಲ್ವರು ಮೃತಪಟ್ಟಿದ್ದರು. ಅಪಘಾತಕ್ಕೀಡಾದ ವಿಮಾನದಲ್ಲಿ ಎರಡು ಪ್ರತ್ಯೇಕ ಪ್ಲೈಟ್ ರೆಕಾರ್ಡ್‌ರ್‌ಗಳು ಇದ್ದವು. ಅಪಘಾತದ ಸಂದರ್ಭ ಎರಡೂ ರೆಕಾರ್ಡ್‌ಗಳು ಬೆಂಕಿಯಿಂದಾಗಿ ತೀವ್ರ ಹಾನಿಗೀಡಾಗಿವೆ ಎಂದು ಎಐಐಬಿ ತಿಳಿಸಿದೆ. ಎಲ್-3 ಕಮ್ಯೂನಿಕೇಷನ್ಸ್ ತಯಾರಿಸಿದ ಡಿಡಿಟಲ್ ಪ್ಲೈಟ್ ಡಾಟಾ ರೆಕಾರ್ಡರ್ (ಪಿಎಫ್‌ಡಿಆರ್) ಅನ್ನು ಫ್ಲೈಟ್ ರೆಕಾರ್ಡರ್ ಪ್ರಯೋಗಾಲಯದಲ್ಲಿ ಯಶಸ್ವಿಯಾಗಿ ಡೌನ್‌ಲೋಡ್ ಮಾಡಲಾಗಿದೆ ಎಂದು ಎಎಐಬಿ ತಿಳಿಸಿದೆ. ‘‘ಹನಿವೆಲ್ ತಯಾರಿಸಿದ ಕಾಕ್‌ಪಿಟ್ ವಾಯ್ಸ್ ರೆಕಾರ್ಡರ್ (ಸಿವಿಆರ್) ಅನ್ನು ವಿವರವಾದ ತಾಂತ್ರಿಕ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ದತ್ತಾಂಶ ಮರು ಪಡೆಯಲು ವಿಮಾನ ತಯಾರಿಸಲಾದ ದೇಶದ ಮಾನ್ಯತೆ ಪಡೆದ ಪ್ರತಿನಿಧಿಯ ನೆರವು ಕೋರಲಾಗಿದೆ’’ ಎಂದು ತನಿಖಾ ಸಂಸ್ಥೆ ತಿಳಿಸಿದೆ.

ವಾರ್ತಾ ಭಾರತಿ 17 Feb 2026 11:14 pm

ಕೇರಳ| ತೆರೆದ ಚರಂಡಿಗೆ ಬಿದ್ದು ಯುವಕ ಮೃತ್ಯು

ಇಡುಕ್ಕಿ, ಫೆ. 17: ಲೋಕೋಪಯೋಗಿ ಇಲಾಖೆ (ಪಿಡಬ್ಲ್ಯುಡಿ)ಯ ಚರಂಡಿ ಯೋಜನೆಗೆ ತೋಡಿದ ಆಳದ ಗುಂಡಿಗೆ ಬೈಕ್‌ನೊಂದಿಗೆ ಬಿದ್ದ 27 ವರ್ಷದ ಯುವಕ ಮೃತಪಟ್ಟಿದ್ದಾನೆ. ತೊಡುಪುಝ ಸಮೀಪ ಮುತ್ತಲಕೋಡಂನಲ್ಲಿ ರಸ್ತೆಯುದ್ದಕ್ಕೂ ಚರಂಡಿ ನಿರ್ಮಿಸಲು ತೋಡಲಾದ ತೆರೆದ ಗುಂಡಿಗೆ ಯುವಕ ಸೋಮವಾರ ರಾತ್ರಿ 11 ಗಂಟೆಗೆ ಬಿದ್ದಿದ್ದಾನೆ. ಮೃತಪಟ್ಟ ಯುವಕನನ್ನು ಜೈಸ್ ಬೆನ್ನಿ ಎಂದು ಗುರುತಿಸಲಾಗಿದೆ. ಈತ ಮುತ್ತಲಕೋಡಂನ ನಿವಾಸಿ. ಒಂದು ತಿಂಗಳಿಗೂ ಹೆಚ್ಚು ಕಾಲ ಗುಂಡಿ ತೆರೆದೇ ಇತ್ತು ಎಂದು ನಿವಾಸಿಗಳು ಆರೋಪಿಸಿದ್ದಾರೆ. ಗುಂಡಿ ಮುಚ್ಚವಂತೆ ಅಧಿಕಾರಿಗಳಿಗೆ ಮತ್ತೆ ಮತ್ತೆ ದೂರು ನೀಡಿದರೂ ಅವರು ಯಾವುದೇ ರೀತಿಯ ಕ್ರಮ ಕೈಗೊಂಡಿಲ್ಲ ಎಂದು ನಿವಾಸಿಗಳು ಆರೋಪಿಸಿದ್ದಾರೆ. ನಿರ್ಮಾಣ ಸ್ಥಳದಲ್ಲಿ ಎಚ್ಚರಿಕೆಯ ಬೋರ್ಡ್ ಅಥವಾ ಪ್ರತಿಫಲಕ, ಬ್ಯಾರಿಕೇಡ್ ಸೇರಿದಂತೆ ಮೂಲಭೂತ ಸುರಕ್ಷಾ ಕ್ರಮಗಳನ್ನು ಕೈಗೊಂಡಿಲ್ಲ ಎಂದು ನಿವಾಸಿಗಳು ಪ್ರತಿಪಾದಿಸಿದ್ದಾರೆ. ‘‘ಸುರಕ್ಷತಾ ವ್ಯವಸ್ಥೆಗಳು ಹಾಗೂ ಎಚ್ಚರಿಕೆ ಫಲಕಗಳು ಇಲ್ಲದೇ ಇರುವುದು ಅಧಿಕಾರಿಗಳ ನಿರ್ಲಕ್ಷ್ಯವನ್ನು ಪ್ರತಿಬಂಬಿಸುತ್ತದೆ. ಇದು ಯುವಕನ ಸಾವಿಗೆ ಕಾರಣವಾಗಿದೆ’’ ಎಂದು ಸ್ಥಳೀಯ ವ್ಯಾಪಾರಿ ಸುಜೀಶ್ ಕುಮಾರ್ ತಿಳಿಸಿದ್ದಾರೆ.

ವಾರ್ತಾ ಭಾರತಿ 17 Feb 2026 11:08 pm

ಕೊಪ್ಪಳ | ರಾಜ್ಯ ಕಾಂಗ್ರೆಸ್ ಸರಕಾರ ಹಗರಣದಲ್ಲಿಯೇ ಮುಳುಗಿದೆ : ಮುಖ್ಯ ಸಚೇತಕ ದೊಡ್ಡನಗೌಡ ಪಾಟೀಲ್ ಆರೋಪ

ಕೊಪ್ಪಳ: ಸಿದ್ದರಾಮಯ್ಯ ಹಾಗೂ ಡಿಕೆಶಿ ಅವರ ನೇತೃತ್ವದ ರಾಜ್ಯ ಕಾಂಗ್ರೆಸ್ ಸರಕಾರ ಆಡಳಿತದ ಸಾವಿರ ದಿನಗಳ ಅವಧಿಯಲ್ಲಿ ಮಿತಿ ಮೀರಿದ ಭ್ರಷ್ಟಾಚಾರ, ಆಡಳಿತ ವೈಫಲ್ಯ ಹಾಗೂ ಕಾನೂನು ಸುವ್ಯವಸ್ಥೆ ಸಂಪೂರ್ಣ ಕುಸಿತ ಕಂಡಿದೆ ಎಂದು ವಿಧಾನಸಭೆ ವಿರೋಧ ಪಕ್ಷದ ಮುಖ್ಯ ಸಚೇತಕರಾಗಿರುವ ಕುಷ್ಟಗಿ ವಿಧಾನಸಭಾ ಕ್ಷೇತ್ರದ ಶಾಸಕ ದೊಡ್ಡನಗೌಡ ಪಾಟೀಲ್ ಆರೋಪಿಸಿದರು. ವಿಪ ಸದಸ್ಯೆ ಹೇಮಲತಾ ನಾಯಕ್, ಮಾಜಿ ಸಚಿವ ಹಾಲಪ್ಪ ಆಚಾರ, ಕೊಪ್ಪಳ ಲೋಕಸಭಾ ಕ್ಷೇತ್ರದ ನಿಕಟಪೂರ್ವ ಅಭ್ಯರ್ಥಿ ಬಸವರಾಜ ಕ್ಯಾವಟರ್ ಅವರೊಂದಿಗೆ ಜಂಟಿ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿ, ಸರಕಾರದ ಕಾರ್ಯ ವೈಖರಿ ಖಂಡಿಸಿದರು. ಅಬಕಾರಿ ಇಲಾಖೆಯಲ್ಲಿ ಲೈಸೆನ್ಸ್ ಮತ್ತು ವರ್ಗಾವಣೆಗಳಿಗೆ ಲಂಚ ಬೇಡಿಕೆ ಆರೋಪದ ಕುರಿತು ಸಾಕ್ಷ್ಯಾಧ್ಯರವಿದ್ದರೂ ಸಚಿವ ಆರ್.ಬಿ. ತಿಮ್ಮಾಪುರ ಅವರನ್ನು ಸಮರ್ಥಿಸಿಕೊಂಡ ಸರಕಾರವಿದು ಎಂದು ಟೀಕಿಸಿದರು. ಸರಕಾರದ ಗ್ಯಾರಂಟಿ ಯೋಜನೆಗಳಿಗೆ ಭಾರೀ ಪ್ರಮಾಣದ ಹಣ ವ್ಯಯವಾಗಿದ್ದು, ಅದರ ಅನುಷ್ಠಾನದಲ್ಲಿ ಪಾರದರ್ಶಕತೆ ಕೊರತೆ ಇದೆ. ಅನ್ನಭಾಗ್ಯ ಮತ್ತು ಗೃಹಲಕ್ಷ್ಮಿ ಯೋಜನೆಗಳಲ್ಲಿ ಮಧ್ಯವರ್ತಿಗಳ ಹಾವಳಿ ಹೆಚ್ಚಾಗಿದೆ ಎಂಬ ಆರೋಪಗಳು ಕೇಳಿ ಬಂದಿದ್ದು, ಬಿಪಿಎಲ್ ಕಾರ್ಡ್ಗಳನ್ನು ಎಪಿಎಲ್‌ಗೆ ವರ್ಗಾವಣೆ ಮಾಡುವ ಕ್ರಮವೂ ಸಾರ್ವಜನಿಕರಲ್ಲಿ ಚರ್ಚೆಗೆ ಕಾರಣವಾಗಿದೆ. ಕಾನೂನು ಸುವ್ಯವಸ್ಥೆ ವಿಚಾರದಲ್ಲಿಯೂ ಸಂಪೂರ್ಣ ವಿಫಲವಾಗಿದೆ. ರಾಜ್ಯದ ವಿವಿಧ ಭಾಗಗಳಲ್ಲಿ ಬ್ಯಾಂಕ್ ದರೋಡೆ, ಸೈಬರ್ ವಂಚನೆ, ಕೊಲೆ ಪ್ರಕರಣಗಳು ಹೆಚ್ಚಾಗಿವೆ ಎಂದು ಹೇಳಿದರು. ಇದೇ ವೇಳೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿಜಯೋತ್ಸವ ಸಂದರ್ಭದಲ್ಲಿ ಸಂಭವಿಸಿದ ಕಾಲ್ತುಳಿತ ಘಟನೆ ಕೂಡ ಆಡಳಿತದ ನಿರ್ಲಕ್ಷ್ಯಕ್ಕೆ ಉದಾಹರಣೆ. ಆದರೆ, ಆಡಳಿತ ಪಕ್ಷ ನಾಯಕರು ಈ ಆರೋಪಗಳಲ್ಲಿ ಹಲವನ್ನು ರಾಜಕೀಯ ಪ್ರೇರಿತ ಎಂದು ತಳ್ಳಿ ಹಾಕಿರುವುದು ದುರದೃಷ್ಟಕರ ಎಂದು ಅವರು ಆರೋಪಿಸಿದ್ದಾರೆ.

ವಾರ್ತಾ ಭಾರತಿ 17 Feb 2026 11:08 pm

ಕೊಪ್ಪಳ | ಪ್ರವಾಸಿಗರ ಅತ್ಯಾಚಾರಿಗಳಿಗೆ ಮರಣ ದಂಡನೆ ತೀರ್ಪು ಐತಿಹಾಸಿಕ : ಐಜಿಪಿ ಡಾ.ಹರ್ಷ

ಕೊಪ್ಪಳ : ಕಳೆದ ವರ್ಷ ಹಂಪಿಯ ಸಣಾಪುರ ಕಾಲುವೆ ದಂಡೆ ಬಳಿ ನಡೆದಿದ್ದ ವಿದೇಶಿ ಮಹಿಳೆ ಸೇರಿ ಇಬ್ಬರ ಮೇಲಿನ ಅತ್ಯಾಚಾರ ಹಾಗೂ ಪ್ರವಾಸಿಗನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳಿಗೆ ಗಂಗಾವತಿ ನ್ಯಾಯಾಲಯವು ಮರಣದಂಡನೆ ಶಿಕ್ಷೆ ವಿಧಿಸಿದ್ದು, ಇದೊಂದು ಐತಿಹಾಸಿಕ ತೀರ್ಪಾಗಿದೆ ಎಂದು ಬಳ್ಳಾರಿ ವಲಯದ ಐಜಿಪಿ ಡಾ.ಹರ್ಷ ಪಿ.ಎಸ್ ಅಭಿಪ್ರಾಯಪಟ್ಟಿದ್ದಾರೆ. ನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿದರು. ಕಳೆದ ವರ್ಷದ ಮಾರ್ಚ್ ತಿಂಗಳಿನಲ್ಲಿ ಐವರು ಪ್ರವಾಸಿಗರ ತಂಡ ಸಣಾಪುರ ಕೆರೆಗೆ ಭೇಟಿ ನೀಡಿದಾಗ ಮೂವರು ದುಷ್ಕರ್ಮಿಗಳು ಹಲ್ಲೆ ನಡೆಸಿದ್ದರು. ಈ ಸಂದರ್ಭದಲ್ಲಿ ಅಮೇರಿಕಾದ ಡೇನಿಯಲ್ ಸೇರಿದಂತೆ ಮೂವರು ಪ್ರವಾಸಿಗರನ್ನು ತುಂಗಭದ್ರಾ ಎಡದಂಡೆ ಕಾಲುವೆಗೆ ತಳ್ಳಲಾಗಿತ್ತು. ಓರ್ವ ಪ್ರವಾಸಿಗ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದ. ಆಗ ಇಸ್ರೇಲ್ ಮೂಲದ ಮಹಿಳೆ ಹಾಗೂ ಸ್ಥಳೀಯ ಮಹಿಳೆಯೊಬ್ಬರ ಮೇಲೆ ಅತ್ಯಾಚಾರ ಎಸಗಲಾಗಿತ್ತು ಎಂದು ಅವರು ವಿವರಿಸಿದರು. ಆರೋಪಿಗಳ ಪತ್ತೆಗಾಗಿ ಆರು ವಿಶೇಷ ತಂಡಗಳನ್ನು ರಚಿಸಿಲಾಗಿತ್ತು. ಪ್ರಕರಣ ದಾಖಲಾದ 24 ಗಂಟೆಯೊಳಗೆ ಮೂವರು ಆಪಾದಿತರನ್ನು ವಶಕ್ಕೆ ಪಡೆಯಲಾಗಿತ್ತು. 84 ವಸ್ತುಗಳನ್ನು ಜಪ್ತಿಪಡಿಸಿಕೊಂಡಿದ್ದೇವು. ಪೊಲೀಸರ ವಿಚಾರಣೆ ನಂತರ ನ್ಯಾಯಾಂಗ ಬಂಧನಕ್ಕೆ ವಹಿಸಲಾಗಿತ್ತು. ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯವು 6 ತಿಂಗಳಲ್ಲಿ ವಿಚಾರಣೆ ಪೂರ್ಣಗೊಳಿಸಿ ಗಂಗಾವತಿಯ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಮೂವರು ಆರೋಪಿತರಿಗೆ ಮರಣದಂಡನೆ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ ಎಂದು ಮಾಹಿತಿ ನೀಡಿದರು. ಎಸ್ಪಿ ಡಾ.ರಾಮ್ ಆರಸಿದ್ಧಿ ನೇತೃತ್ವದಲ್ಲಿ ಹೆಚ್ಚುವರಿ ಎಸ್ಪಿ ಹೇಮಂತ್ ಕುಮಾರ, ಆಗಿನ ಗಂಗಾವತಿ ಡಿಎಸ್‌ಪಿ ಸಿದ್ದಲಿಂಗಪುಗೌಡ ಪಾಟೀಲ್, ಸದ್ಯದ ಡಿಎಸ್‌ಪಿ ಬಿ.ಎಸ್. ನ್ಯಾಮಗೌಡ ತಂಡ ಈ ಪ್ರಕರಣದಲ್ಲಿ ಉತ್ತಮ ಕರ್ತವ್ಯ ನಿರ್ವಹಿಸಿದೆ ಎಂದು ಐಜಿಪಿ ಶ್ಲಾಘಿಸಿದರು.

ವಾರ್ತಾ ಭಾರತಿ 17 Feb 2026 11:02 pm

ರಾಜಸ್ಥಾನ| 900 ಕೋಟಿ ರೂ. ಜಲ ಜೀವನ್ ಮಿಷನ್ ಹಗರಣ: ದೇಶಾದ್ಯಂತ 15 ಸ್ಥಳಗಳಲ್ಲಿ ಎಸಿಬಿ ದಾಳಿ

ಜೈಪುರ, ಫೆ. 17: ಜಲಜೀವನ್ ಮಿಷನ್‌ನಲ್ಲಿ ನಡೆದಿದೆ ಎನ್ನಲಾದ 900 ಕೋ. ರೂ. ಅವ್ಯವಹಾರವು ರಾಜಸ್ಥಾನದಲ್ಲಿ ಭ್ರಷ್ಟಾಚಾರದ ವಿರುದ್ಧ ಕಠಿಣ ಕ್ರಮಕ್ಕೆ ಕಾರಣವಾಗಿದೆ. ಈ ಹಗರಣದ ಹಿನ್ನೆಲೆಯಲ್ಲಿ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ)ದೇಶಾದ್ಯಂತ ಮಂಗಳವಾರ ಏಕ ಕಾಲದಲ್ಲಿ 15 ಸ್ಥಳಗಳಲ್ಲಿ ದಾಳಿ ನಡೆಸಿದೆ. ಎಸಿಬಿ ತಂಡಗಳು ರಾಜಸ್ಥಾನದ ಜೈಪುರ, ಬಾಡ್ಮೆರ್, ಸಿಕಾರ್ ಹಾಗೂ ಜಾಲೋರೆಯಲ್ಲಿ ಶೋಧ ಕಾರ್ಯಾಚರಣೆ ನಡೆಸಿವೆ. ಜಲಜೀವನ್ ಮಿಷನ್ ಹಗರಣಕ್ಕೆ ಸಂಬಂಧಿಸಿದ ಸಂಸ್ಥೆಗಳ ಪರಿಶೀಲನೆ ನಡೆಸಲು ಬಿಹಾರ ಹಾಗೂ ಜಾರ್ಖಂಡ್‌ನಲ್ಲಿ ಕೂಡ ದಾಳಿ ನಡೆಸಲಾಗಿದೆ. ಈ ಯೋಜನೆ ಅಡಿಯಲ್ಲಿ ಮುಂಜೂರು ಮಾಡಲಾದ ಟೆಂಡರ್‌ಗಳಿಗೆ ಸಂಬಂಧಿಸಿದ ಹಣಕಾಸುವ ವಹಿವಾಟು, ದಾಖಲೆ ಹಾಗೂ ಎಲೆಕ್ಟ್ರಾನಿಕ್ಸ್ ದಾಖಲೆಗಳನ್ನು ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ನಿವೃತ್ತ ಐಎಎಸ್ ಅಧಿಕಾರಿ ಸುಬೋಧ್ ಅಗರ್ವಾಲ್ ಅವರನ್ನು ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಎಸಿಬಿ ಅಧಿಕಾರಿಗಳು ಅವರ ನಿವಾಸದಲ್ಲಿ ತಪಾಸಣೆ ನಡೆಸಿದ್ದಾರೆ. ಅವರ ಅಧಿಕಾರಾವಧಿಯಲ್ಲಿ ಗುತ್ತಿಗೆಗೆ ಅನುಮೋದನೆಗೆ ನೀಡಿರುವುದಕ್ಕೆ ಸಂಬಂಧಿಸಿ ಅವರನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಅವರು ನಕಲಿ ಅನುಭವದ ಪ್ರಮಾಣ ಪತ್ರಗಳ ಆಧಾರದಲ್ಲಿ ಆಯ್ದ ಕಂಪೆನಿಗಳಿಗೆ ಕೋಟ್ಯಂತರ ರೂ. ಮೌಲ್ಯದ ಟೆಂಡರ್‌ಗೆ ಅನುಕೂಲ ಮಾಡಿಕೊಟ್ಟಿದ್ದಾರೆ ಎಂದು ಶಂಕಿಸಲಾಗಿದೆ. ಅಗರ್ವಾಲ್ ಅವರಲ್ಲದೆ, ವಿಚಾರಣೆಗಾಗಿ 6ಕ್ಕೂ ಅಧಿಕ ಮಂದಿಯನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಈ ಕಾರ್ಯಾಚರಣೆಯನ್ನು ಎಸಿಬಿಯ ಪ್ರಧಾನ ನಿರ್ದೇಶಕ ಗೋವಿಂದ ಗುಪ್ತಾ ಹಾಗೂ ಹೆಚ್ಚುವರಿ ಪ್ರಧಾನ ನಿರ್ದೇಶಕ ಸ್ಮಿತಾ ಶ್ರೀವಾಸ್ತವ ಅವರು ಮೇಲ್ವಿಚಾರಣೆ ನಡೆಸುತ್ತಿದ್ದಾರೆ.

ವಾರ್ತಾ ಭಾರತಿ 17 Feb 2026 10:58 pm

Kalaburagi | ಸಾಹಿತ್ಯದಿಂದ ಸಾಮರಸ್ಯದ ಜೀವನ ಸಾಧ್ಯ : ಡಾ.ದಾಕ್ಷಾಯಣಿ ಎಸ್.ಅಪ್ಪಾ

ಎರಡು ದಿನದ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ತೆರೆ

ವಾರ್ತಾ ಭಾರತಿ 17 Feb 2026 10:54 pm

ಬಂಟ್ವಾಳ: ಮರಳು ಕಳ್ಳತನ ಪ್ರಕರಣ; ಮೂವರ ಬಂಧನ

ಬಂಟ್ವಾಳ : ತೋಡಿನಿಂದ ಮರಳು ಕಳ್ಳತನ ಮಾಡುತ್ತಿದ್ದ ಪ್ರಕರಣ ಬೇಧಿಸಿದ ಪೂಂಜಾಲಕಟ್ಟೆ ಪೊಲೀಸರು ಮೂವರನ್ನು ಬಂಧಿಸಿದ ಘಟನೆ ಮಚ್ಚಿನ ಗ್ರಾಮದ ಪುಂಚಪಾದೆ ಬಳಿಯ ಪೆರೂರು ಎಂಬಲ್ಲಿ ಫೆ 16 ರಂದು ನಡೆದಿದೆ. ಬಂಧಿತ ಆರೋಪಿಗಳನ್ನು ಪ್ರವೀಣ್ (38), ವಸಂತ (42) ಹಾಗೂ ದಿನೇಶ (48) ಎಂದು ಹೆಸರಿಸಲಾಗಿದೆ. ಪೂಂಜಾಲಕಟ್ಟೆ ಪೊಲೀಸ್ ಠಾಣಾ ಪಿಎಸ್ಸೈ ರಾಜೇಶ್ ಕೆ ವಿ ನೇತೃತ್ವದ ಪೊಲೀಸರು ಕಾರಿಂಜೇಶ್ವರ ದೇವಸ್ಥಾನದ ಮಹತೋಭಾರ ಜಾತ್ರಾ ಬಂದೋಬಸ್ತು ಕರ್ತವ್ಯದ ರೌಂಡ್ಸ್ ಕರ್ತವ್ಯದಲ್ಲಿದ್ದ ವೇಳೆ ಬಂದ ಖಚಿತ ಮಾಹಿತಿ ಮೇರೆಗೆ ಬೆಳ್ತಂಗಡಿ ತಾಲೂಕು ಮಚ್ಚಿನ ಗ್ರಾಮದ ಪುಂಚಪಾದೆ ಬಳಿಯ ಪೆರೂರು ಎಂಬಲ್ಲಿ ಪೆರೂರು ಕಡೆಯಿಂದ ಕುಪ್ಪೆಟ್ಟಿ ಕಡೆಗೆ ಹರಿಯುವ ನೀರಿನ ತೋಡಿನಿಂದ ಆರೋಪಿಗಳು ಯಾವುದೇ ಪರವಾನಿಗೆ ಇಲ್ಲದೆ ಮರಳನ್ನು ಕಳ್ಳತನ ಮಾಡಿ ಪಿಕಪ್ ವಾಹನದಲ್ಲಿ ಅಕ್ರಮವಾಗಿ ಸಾಗಾಟ ಮಾಡುತ್ತಿರುವುದು ಕಂಡುಬಂದಿದೆ. ಆರೋಪಿಗಳಿಂದ ಸುಮಾರು 4 ಲಕ್ಷ ರೂಪಾಯಿ ಮೌಲ್ಯದ ಪಿಕಪ್ ವಾಹನ, ಸುಮಾರು 6 ಸಾವಿರ ರೂಪಾಯಿ ಮೌಲ್ಯದ 50 ಬುಟ್ಟಿಯಷ್ಟು ಮರಳು ಹಾಗೂ ಸುಮಾರು 1 ಸಾವಿರ ರೂಪಾಯಿ ಮೌಲ್ಯದ ಇತರ ಸಾಮಾಗ್ರಿಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಬಗ್ಗೆ ಪೂಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಾರ್ತಾ ಭಾರತಿ 17 Feb 2026 10:54 pm

ಕಲಬುರಗಿಯಲ್ಲಿ ಕಣ್ಮನ ಸೆಳೆದ ‘ಕಲ್ಯಾಣ ಕರ್ನಾಟಕ ಚಿತ್ರಸಂತೆ’

ಕಲಬುರಗಿ ಕಲಾವಿದರ ಕೃತಿಗಳು ವಿಶ್ವದೆಲ್ಲೆಡೆ ತಲುಪಲಿ: ಡಾ.ದಾಕ್ಷಾಯಣಿ ಅಪ್ಪಾ

ವಾರ್ತಾ ಭಾರತಿ 17 Feb 2026 10:49 pm

ಜೆಪ್ಪಿನ ಮೊಗರಿನಲ್ಲಿ ರಮಝಾನ್ ಇಫ್ತಾರ್ ವ್ಯವಸ್ಥೆ

ಮಂಗಳೂರು: ರಾಷ್ಟ್ರೀಯ ಹೆದ್ದಾರಿ 66 ರ ಜೆಪ್ಪಿನ ಮೊಗರಿನಲ್ಲಿ ಇರುವ ಮಾಸೂನ್ ಟೈಲ್ಸ್ & ಗ್ರಾನೈಟ್ಸ್ (Masun Tiles and Granites, Jeppina Mogaru)ನಲ್ಲಿ ರಮಝಾನ್ ಉಪವಾಸದ ಅವಧಿಯಲ್ಲಿ ಪ್ರಯಾಣಿಕರಿಗೆ ಇಫ್ತಾರ್ ವ್ಯವಸ್ಥೆಯನ್ನು ಏರ್ಪಡಿಸಲಾಗಿದೆ. ಪಾರ್ಕಿಂಗ್ ವ್ಯವಸ್ಥೆಯೂ ಲಭ್ಯವಿದ್ದು, ಇಫ್ತಾರ್ ಸಮಯದಲ್ಲಿ ಆ ಭಾಗದಿಂದ ಪ್ರಯಾಣಿಸುವ ಯಾತ್ರಿಕರು ಇದರ ಸದುಪಯೋಗ ಪಡೆಯುವಂತೆ ಮಾಸೂನ್ ಟೈಲ್ಸ್ ನ ಮಾಲಕರು ವಿನಂತಿಸಿರುತ್ತಾರೆ. ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ 9738802666

ವಾರ್ತಾ ಭಾರತಿ 17 Feb 2026 10:48 pm

Kalaburagi | ವಿದ್ಯಾರ್ಥಿಗಳಲ್ಲಿ ಜ್ಞಾನದ ಹಸಿವು ಇರಬೇಕು: ಡಾ.ಸಿ.ಸೋಮಶೇಖರ

ಕಲಬುರಗಿ: ಓದು ನಿರಂತರವಾದರೆ ಜ್ಞಾನ ಮತ್ತು ಪರೀಕ್ಷೆ ಫಲಿತಾಂಶ ಉತ್ತಮವಾಗುತ್ತದೆ. ಸಾಧನೆಗೆ ಬಡತನ ಅಡ್ಡಿ ಬರಬಾರದು, ಜ್ಞಾನದ ಹಸಿವು ಮಕ್ಕಳಲ್ಲಿ ಇದ್ದಾಗ ಜೀವನ ಯಶಸ್ವಿಯಾಗುತ್ತದೆ ಎಂದು ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷರಾದ ಡಾ.ಸಿ.ಸೋಮಶೇಖರ ಹೇಳಿದರು. ಸೋಮವಾರ ನಗರದ ಸತ್ಯಂ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವಿದ್ಯಾರ್ಥಿಗಳ ವತಿಯಿಂದ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಬಿಳ್ಕೊಡುಗೆ ಸಮಾರಂಭದಲ್ಲಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಮಕ್ಕಳು ಓದಿನ ಕಡೆ ಗಮನ ಕೊಟ್ಟು ಹೆಚ್ಚು ಅಂಕಗಳನ್ನು ಪಡೆಯುವಲ್ಲಿ ಹಾಗೂ ಯಶಸ್ವಿಯಾಗಲು ಶಿಕ್ಷಕರ ಶ್ರಮ ಅವಶ್ಯಕತೆ ಇದೆ ಎಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲ ಬಿ.ಎಚ್. ನಿರಗುಡಿ, ವಿದ್ಯಾರ್ಥಿಗಳು ಸತತ ಅಭ್ಯಾಸ ಮಾಡಿ ಗುರಿ ಮುಟ್ಟುವ ಕಡೆ ಪ್ರಯತ್ನ ಮಾಡಬೇಕು, ಮೊಬೈಲ್ ನಿಂದ ದೂರವಿರಿ ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತುಗಳನ್ನು ಹೇಳಿದರು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಗುರೂಜಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಕಲ್ಯಾಣರಾವ ಶೀಲವಂತ ಅವರು ಮಾತನಾಡುತ್ತಾ, ಮಕ್ಕಳು ತರಗತಿಯಲ್ಲಿ ಉಪನ್ಯಾಸಕರು ಹೇಳಿದ ವಿಷಯಗಳನ್ನು ಸರಿಯಾಗಿ ಮನನ ಮಾಡಿಕೊಂಡು ಓದಿದಾಗ ನಮ್ಮ ಗುರಿ ಮುಟ್ಟಲು ಸಾಧ್ಯವಾಗುತ್ತದೆ ಎಂದರು. ದಿಶಾ ಪಿಯು ಕಾಲೇಜಿನ ಅಧ್ಯಕ್ಷರಾದ ಶಿವಾನಂದ ಖಜೂರಿ ವೇದಿಕೆ ಮೇಲೆ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಸಂಸ್ಥೆಯ ಉಪನ್ಯಾಸಕರಾದ ಮಹೇಶ್ ಗಡಗಿ, ಸಂತೋಷ ಪಿಳ್ಳೆ , ಕಾಶೀನಾಥ್ ಪಂಚಾಳ, ಸಚ್ಚಿದಾನಂದ ಪಾಟೀಲ್, ರೂಪಾ ಕುಲಕರ್ಣಿ, ರಾಜೇಶ್ವರಿ ಸಾಲಿಮಠ, ನಿರ್ಮಲಾ ಕಣ್ಮುಸೆ, ವಿಶ್ವಜೋತಿ ಮಠ, ಡಾ.ಸುಲೋಚನಾ ಅಂಕಲಗಿ ಇದ್ದರು. ಎಲ್ಲಾ ವಿದ್ಯಾರ್ಥಿಗಳಿಗೆ ಪರೀಕ್ಷಾ ಪ್ಯಾಡ್, ಫೈಲ್, ಪೆನ್ನು ನೀಡಲಾಯಿತು.

ವಾರ್ತಾ ಭಾರತಿ 17 Feb 2026 10:45 pm

ಮಾನ್ಯತೆ ನವೀಕರಣ ಆಗದ ಶಾಲೆಗಳ ವಿದ್ಯಾರ್ಥಿಗಳಿಗೆ ಸಮಸ್ಯೆ ಇಲ್ಲ : ಮಧು ಬಂಗಾರಪ್ಪ

ಬೆಂಗಳೂರು : ಈ ವರ್ಷ ರಾಜ್ಯದಲ್ಲಿ ಶಾಲೆಗಳ ಮಾನ್ಯತೆ ನವೀಕರಣಕ್ಕೆ ಸಂಬಂಧಿಸಿದಂತೆ ಮಾನ್ಯತೆ ನವೀಕರಣ ಆಗದ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಎಸೆಸೆಲ್ಸಿ ವಿದ್ಯಾರ್ಥಿಗಳಿಗೆ ಯಾವುದೇ ಸಮಸ್ಯೆಯಾಗುವುದಿಲ್ಲ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ ಮಧು ಬಂಗಾರಪ್ಪ ಸ್ಪಷ್ಟಪಡಿಸಿದ್ದಾರೆ. ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಖಾಸಗಿ ಅನುದಾನಿತ ಮತ್ತು ಅನುದಾನ ರಹಿತ ಶಾಲೆಗಳ ಪ್ರಥಮ ಮಾನ್ಯತೆ ಹಾಗೂ ಮಾನ್ಯತಾ ನವೀಕರಣಕ್ಕೆ ಅರ್ಜಿ ಸಲ್ಲಿಸುವ ಅವಧಿಯನ್ನು ಮಾ.31ರವರೆಗೆ ವಿಸ್ತರಣೆ ಆಗಿರುವುದರಿಂದ ಈ ಅವಧಿಯಲ್ಲಿ ಶಾಲೆಗೆ ಮಾನ್ಯತೆಯಿದೆ ಎಂದೇ ಭಾವಿಸಲಾಗುತ್ತದೆ ಎಂದರು. ಮಾನ್ಯತೆ ನವೀಕರಣಕ್ಕೆ ಸಂಬಂಧಿಸಿದಂತೆ ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣ ನೇತೃತ್ವದ ಸದನ ಸಮಿತಿ ಅಧ್ಯಯನ ನಡೆಸುತ್ತಿದ್ದು, ಈ ಸಮಿತಿಯಿಂದ ಅಂತಿಮವಾಗಿ ಕೊಡುವ ವರದಿಯನ್ನು ನಾವು ಸ್ವೀಕರಿಸುತ್ತೇವೆ ಎಂದು ಅವರು ಮಾಹಿತಿ ನೀಡಿದರು. ರಾಜ್ಯದಲ್ಲಿ 12 ಸಾವಿರಕ್ಕೂ ಅಧಿಕ ಖಾಸಗಿ ಶಾಲೆಗಳಿದ್ದರೂ, ಸುಮಾರು 7 ಸಾವಿರ ಶಾಲೆಗಳು ಮಾತ್ರ ಅರ್ಜಿ ಸಲ್ಲಿಸಿವೆ. ಉಳಿದಂತೆ ಶಾಲೆಗಳು ಪುಟ್ಟಣ್ಣ ಸಮಿತಿಯ ವರದಿ ಸಲ್ಲಿಕೆಯಾದ ಬಳಿಕವೇ ನವೀಕರಣಕ್ಕೆ ಅರ್ಜಿ ಸಲ್ಲಿಸುವ ಉದ್ದೇಶ ಹೊಂದಿದೆ ಎಂದು ಅವರು ಹೇಳಿದರು.

ವಾರ್ತಾ ಭಾರತಿ 17 Feb 2026 10:42 pm

Kalaburagi | ಕಳ್ಳತನ ಆರೋಪಿಗಳ ಬಂಧನ ; 26 ಲಕ್ಷ ರೂ. ಮೌಲ್ಯದ ಸ್ವತ್ತು ಜಪ್ತಿ : ಡಾ.ಶರಣಪ್ಪ ಎಸ್.ಡಿ.

ಕಲಬುರಗಿ: ನಗರದ ವಿಶ್ವವಿದ್ಯಾಲಯ ಪೊಲೀಸ್ ಠಾಣೆ ಮತ್ತು ಅಶೋಕ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸೇರಿದಂತೆ ಇತರೆ ಕಡೆಗಳಲ್ಲಿ ದಾಖಲಾಗಿದ್ದ ಸುಲಿಗೆ ಹಾಗೂ ಕಳ್ಳತನ ಪ್ರಕರಣಗಳಿಗೆ ಸಂಬಂಧಿಸಿದಂತೆ ಒಟ್ಟು ಏಳು ಆರೋಪಿಗಳನ್ನು ಬಂಧಿಸಿ ಅವರಿಂದ ಚಿನ್ನಾಭರಣ, ವಾಹನಗಳು ಸೇರಿದಂತೆ ಒಟ್ಟಾರೆ 26.11 ಲಕ್ಷ ರೂ. ಮೌಲ್ಯದ ಸ್ವತ್ತುಗಳನ್ನು ಜಪ್ತಿ ಮಾಡಲಾಗಿದೆ. ವಿಶ್ವವಿದ್ಯಾಲಯ ಠಾಣಾ ವ್ಯಾಪ್ತಿಯ ಮೊದಲ ಕಾರ್ಯಾಚರಣೆಯಲ್ಲಿ ಎಂ.ಎಸ್.ಕೆ ಮಿಲ್ ಜಿಲನಾಬಾದ್ ನಿವಾಸಿಗಳಾದ ಇಮ್ರಾನ್ ಶೇಖ್, ಮುಹಮ್ಮದ್ ಸಮೀರ್, ಮುಹಮ್ಮದ್ ಇಮ್ತಿಯಾಜ್ ಹಾಗೂ ರುಕ್ಮೋದ್ಧಿನ ಬಾಬಾ ಎಂಬಾತರನ್ನು ವಶಕ್ಕೆ ಪಡೆದು ಅವರಿಂದ 12.25 ಲಕ್ಷ ರೂ. ಮೌಲ್ಯದ 40 ಗ್ರಾಂ ಚಿನ್ನ, ಒಂದು ಪಲ್ಸರ್ ಬೈಕ್ ಹಾಗೂ ಕ್ರಿಟಾ ಕಾರನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಆಯುಕ್ತ ಡಾ.ಶರಣಪ್ಪ ಎಸ್.ಡಿ. ಅವರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಅದೇ ಠಾಣೆಯ ಮತ್ತೊಂದು ಮನೆಗಳ್ಳತನ ಪ್ರಕರಣದಲ್ಲಿ ಚುನ್ನಾಭಟ್ಟಿಯ ನಿವಾಸಿ ಮುಹಮ್ಮದ್ ಝಮೀರ್ ಬಸೀರಮಿಯಾ ಎಂಬಾತನನ್ನು ವಶಕ್ಕೆ ಪಡೆದು ಆತನಿಂದ 40 ಗ್ರಾಂ ಬಂಗಾರ, 40 ಗ್ರಾಂ ಬೆಳ್ಳಿಯ ಆಭರಣಗಳು ಹಾಗೂ 66 ಸಾವಿರ ರೂ. ನಗದು ಹೀಗೆ ಒಟ್ಟು 6.66 ಲಕ್ಷ ರೂ. ಮೌಲ್ಯದ ಸ್ವತ್ತು ಜಪ್ತಿ ಮಾಡಿಕೊಂಡು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದರು. ಅಶೋಕ ನಗರ ಠಾಣಾ ವ್ಯಾಪ್ತಿಯಲ್ಲಿ ನಡೆದ ಸರಗಳ್ಳತನ ಪ್ರಕರಣದಲ್ಲಿ ಕೆಸರಟಗಿ ನಿವಾಸಿಗಳಾದ ಆಕಾಶ ಬಾಳಿ ಹಾಗೂ ನಾಗರಾಜ್ ಪಾಟೀಲ್ ಎಂಬಾತರನ್ನು ವಶಕ್ಕೆ ಪಡೆದು ಅವರಿಂದ 7.20 ಲಕ್ಷ ರೂ. ಮೌಲ್ಯದ ಚಿನ್ನದ ಸರ ಮತ್ತು ಪಲ್ಸರ್ ಎನ್.ಎಸ್ ಬೈಕ್ ಸೇರಿ ಒಟ್ಟು 26,11,000 ರೂ. ಮೌಲ್ಯದ ಮಾಲು ಅನ್ನು ಜಪ್ತಿ ಮಾಡಲಾಗಿದೆ ಎಂದು ವಿವರಿಸಿದರು. ವಿಳಾಸ ಕೇಳುವ ನೆಪದಲ್ಲಿ ಸರಗಳ್ಳತನ : ಅಶೋಕ ನಗರದ ದತ್ತ ನಗರದ ನಿವಾಸಿ ಕೀರ್ತಮ್ಮ ಎಂಬ ವೃದ್ಧೆ ತರಕಾರಿ ತರಲು ಹೋದಾಗ, ಬೈಕ್ ಮೇಲೆ ಬಂದ ಇಬ್ಬರು ಅಪರಿಚಿತರು ಡಾಕ್ಟರ್ ಶ್ರೀನಿವಾಸ ಅವರ ಮನೆ ಎಲ್ಲಿದೆ? ಎಂದು ವಿಳಾಸ ಕೇಳುವ ನೆಪ ಮಾಡಿದ್ದರು. ಮೊಬೈಲ್‌ನಲ್ಲಿ ಫೋಟೋ ತೋರಿಸುವ ಸೋಗಿನಲ್ಲಿ ವೃದ್ಧೆಯ ಕೊರಳಲ್ಲಿದ್ದ 38 ಗ್ರಾಂ ಚಿನ್ನದ ಸರವನ್ನು ಕಿತ್ತು ಪರಾರಿಯಾಗಿದ್ದರು. ಈ ಸಂಬಂಧ ತನಿಖೆ ನಡೆಸಿದ ಅಶೋಕ ನಗರ ಪೊಲೀಸರು ಕೆಸರಟಗಿ ನಿವಾಸಿಗಳಾದ ಆಕಾಶ ಮತ್ತು ನಾಗರಾಜ ಎಂಬ ಇಬ್ಬರು ಯುವಕರನ್ನು ಬಂಧಿಸಿ, ಅವರಿಂದ 7.20 ಲಕ್ಷ ರೂ. ಮೌಲ್ಯದ ಸ್ವತ್ತು ಜಪ್ತಿ ಮಾಡಲಾಗಿದೆ ಎಂದರು. ಅಂತರರಾಜ್ಯ ಸುಲಿಗೆಕೋರರ ಮೇಲೆ 'ಕೋಕಾ' ಪ್ರಯೋಗ: ಬಂಧಿತ ಆರೋಪಿಗಳಾದ ಇಮ್ರಾನ್ ಶೇಖ್ (12 ಪ್ರಕರಣ), ಇಮ್ಮಿಯಾಜ್ (13), ಸಮೀರ್ (11) ಹಾಗೂ ರುಕ್ಕೋದ್ದಿನ್ ಮೇಲೆ ಕರ್ನಾಟಕ ಹಾಗೂ ತೆಲಂಗಾಣದ ಜಹೀರಾಬಾದ್ ಸೇರಿದಂತೆ ವಿವಿಧೆಡೆ ಹತ್ತಾರು ದರೋಡೆ ಪ್ರಕರಣಗಳಿವೆ. ಈ ಗ್ಯಾಂಗ್ ಸಿಸಿಟಿವಿ ಇಲ್ಲದ ಕಡೆಗಳಲ್ಲೇ ಕೃತ್ಯವೆಸಗುತ್ತಿತ್ತು. ಅಂತರರಾಜ್ಯ ಗ್ಯಾಂಗ್‌ನ ಸರಣಿ ಅಪರಾಧಗಳನ್ನು ಪರಿಗಣಿಸಿ, ಇವರ ಮೇಲೆ ಕಠಿಣ 'ಕೋಕಾ' ಕಾಯ್ದೆ ಅಳವಡಿಸಲು ಕಲಬುರಗಿ ಪೊಲೀಸರು ನಿರ್ಧರಿಸಿದ್ದಾರೆ. ಪೊಲೀಸ್ ತಂಡಕ್ಕೆ ಶ್ಲಾಘನೆ : ಕಲಬುರಗಿ ನಗರದ ವಿಶ್ವವಿದ್ಯಾಲಯ ಮತ್ತು ಅಶೋಕ ನಗರ ಠಾಣೆಯ ಜಂಟಿ ಕಾರ್ಯಾಚರಣೆಯಲ್ಲಿ ಕುಖ್ಯಾತ ಸುಲಿಗೆಕೋರರನ್ನು ಬಂಧಿಸಿದ ಡಿಸಿಪಿ ಪ್ರವೀಣ ನಾಯಕ್, ಎಸಿಪಿಗಳಾದ ಬಸವೇಶ್ವರ ಹೀರಾ, ಶರಣಬಸಪ್ಪ ಸುಬೇದಾರ ಮಾರ್ಗದರ್ಶನದಲ್ಲಿ ಪಿ.ಐ ಚಂದ್ರಶೇಖರ ತಿಗಡಿ ಹಾಗೂ ಸತೀಶ್ ಕಣಿಮೇಶ್ವರ್ ನೇತೃತ್ವದ ತಂಡ ಈ ಯಶಸ್ವಿ ಕಾರ್ಯಾಚರಣೆ ನಡೆಸಿದೆ. ಎಎಸ್ಐ ಸೈಯದ್ ಗೌಸ್ ಸೇರಿದಂತೆ ಇತರೆ ಸಿಬ್ಬಂದಿಗಳ ಕಾರ್ಯವನ್ನು ಶ್ಲಾಘಿಸಿದ ಪೊಲೀಸ್ ಆಯುಕ್ತ ಡಾ. ಶರಣಪ್ಪ ಎಸ್.ಡಿ ಪ್ರಶಂಸನಾ ಪತ್ರ ವಿತರಿಸಿದರು.

ವಾರ್ತಾ ಭಾರತಿ 17 Feb 2026 10:42 pm

ಆಟೋದಲ್ಲಿ ಬೆಂಗಳೂರು ಸುತ್ತಿ ಮಸಾಲೆ ದೋಸೆ ತಿಂದ ಅಮೆರಿಕ ರಾಯಭಾರಿ! ಗವಿಗಂಗಾಧರೇಶ್ವರ ದೇವಸ್ಥಾನಕ್ಕೂ ಭೇಟಿ

Indo American Relations- ಅಮೆರಿಕದ ರಾಯಭಾಯಿ ಸರ್ಜಿಯೊ ಗೋರ್ ಮತ್ತು ಸಂಸದ ತೇಜಸ್ವಿ ಬೆಂಗಳೂರಿನಲ್ಲಿ ಜನ ಸಾಮಾನ್ಯರಂತೆ ಆಟೋದಲ್ಲಿ ಪ್ರಯಾಣಿಸಿ ಮಸಾಲೆ ದೋಸೆ ತಿಂದ ಘಟನೆ ನಡೆದಿದೆ. ಸೋಮವಾರ ನಗರಕ್ಕೆ ಆಗಮಿಸಿದ್ದ ಗೋರ್ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. ಬಳಿಕ ತೇಜಸ್ವಿ ಸೂರ್ಯ ಅವರೊಂದಿಗೆ ನಗರ ಸುತ್ತಾಟ ನಡೆಸಿದರು. ಮಂಗಳವಾರ ಐಸಿಹಾಸಿಕ ಗವಿಗಂಗಾಧರೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದರು. ಈ ಪೋಟೋಗಳನ್ನು ಇಬ್ಬರೂ ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ವಿಜಯ ಕರ್ನಾಟಕ 17 Feb 2026 10:41 pm

Bengaluru | 21.50 ಕೋಟಿ ಮೌಲ್ಯದ ಗಾಂಜಾ ಜಪ್ತಿ : ಸೀಮಂತ್ ಕುಮಾರ್ ಸಿಂಗ್

ಬೆಂಗಳೂರು : ಸಿಲಿಕಾನ್ ಸಿಟಿ ಬೆಂಗಳೂರಿನ ವಿವಿಧ ಕಡೆಗಳಲ್ಲಿ ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ಮೂವರು ವಿದೇಶಿ ಪ್ರಜೆಗಳು ಸೇರಿದಂತೆ 15 ಜನರನ್ನು ಬಂಧಿಸಿ 21.50 ಕೋಟಿ ಮೌಲ್ಯದ ಗಾಂಜಾ ಸೇರಿದಂತೆ ವಿವಿಧ ಮಾದಕ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಸಿಸಿಬಿ ಪೊಲೀಸರು ಹಾಗೂ ಅಮೃತಹಳ್ಳಿ, ಹೆಬ್ಬಗೋಡಿ, ಜೆ.ಬಿ.ನಗರ, ಶೇಷಾದ್ರಿಪುರಂ, ಮಹಾಲಕ್ಷ್ಮೀಲೇಔಟ್ ಮತ್ತು ಗೋವಿಂದಪುರ ಠಾಣೆಗಳ ಪೊಲೀಸರು ಕಾರ್ಯಾಚರಣೆ ನಡೆಸಿದಾಗ ಈ ಪ್ರಕರಣ ಬೆಳಕಿಗೆ ಬಂದಿದೆ. ಬಂಧಿತ ಆರೋಪಿಗಳು ಮಾದಕ ವಸ್ತುಗಳಾದ ಹೈಡ್ರೋ ಗಾಂಜಾ, ಗಾಂಜಾ, ಎಂಡಿಎಂಎ, ಕೊಕೇನ್ ಸೇರಿ ವಿವಿಧ ಬಗೆಯ ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದರು. ಖಚಿತ ಮಾಹಿತಿಗಳನ್ನಾಧಾರಿಸಿ ಠಾಣೆಗಳಲ್ಲಿ ಎನ್‍ಡಿಪಿಎಸ್ ಕಾಯ್ದೆಯಡಿ ಪ್ರಕರಣಗಳನ್ನು ದಾಖಲಿಸಿಕೊಂಡು ಸ್ಥಳಗಳ ಮೇಲೆ ದಾಳಿ ಮಾಡಿ, ಮೂವರು ವಿದೇಶಿ ಪ್ರಜೆಗಳು ಹಾಗೂ 12 ಮಂದಿ ಹೊರರಾಜ್ಯದ ಮಾದಕ ವಸ್ತು ಮಾರಾಟಗಾರರು ಒಳಗೊಂಡಂತೆ ಒಟ್ಟು 15 ಮಂದಿಯನ್ನು ಬಂಧಿಸಲಾಗಿದೆ. ಆರೋಪಿಗಳಿಂದ ಮಾದಕ ವಸ್ತುಗಳಾದ 9 ಕೆಜಿ 460 ಗ್ರಾಂ ಹೈಡ್ರೋ ಗಾಂಜಾ, 30 ಕೆಜಿ ಗಾಂಜಾ, 5 ಕೆಜಿ 677 ಗ್ರಾಂ ಎಂಡಿಎಂಎ, 131 ಗ್ರಾಂ ಕೊಕೇನ್, 462 ಮಿಲಿ ಹ್ಯಾಶಿಷ್‌ ಆಯಿಲ್, 1 ಕಾರು, 1 ದ್ವಿಚಕ್ರ ವಾಹನ, 4 ಮೊಬೈಲ್ ಫೋನ್‍ಗಳು ಮತ್ತು 24,500 ರೂ. ನಗದನ್ನು ವಶಪಡಿಸಿಕೊಂಡಿದ್ದು, ಎನ್‍ಸಿಬಿ ಪ್ರಕಾರ, ಇವುಗಳ ಒಟ್ಟು ಮೌಲ್ಯ 10.59 ಕೋಟಿ ರೂ.ಗಳೆಂದು ಅಂದಾಜಿಸಲಾಗಿದ್ದು, ಮಾರುಕಟ್ಟೆ ಮೌಲ್ಯ 21.50 ಕೋಟಿ ರೂ.ಗಳಾಗಿವೆ ಎಂದು ಸಿಸಿಬಿ ಪೊಲೀಸರು ಮಾಹಿತಿ ನೀಡಿದ್ದಾರೆ. ಬಂಧಿತರಿಗೆ ಮಾದಕ ವಸ್ತುಗಳನ್ನು ಸರಬರಾಜು ಮಾಡುತ್ತಿದ್ದ ವಿದೇಶಿ ಮತ್ತು ಹೊರರಾಜ್ಯದ ಆರೋಪಿಗಳ ಪತ್ತೆ ಕಾರ್ಯ ಮುಂದುವರೆದಿದ್ದು, ಪ್ರಕರಣಗಳ ತನಿಖೆ ಪ್ರಗತಿಯಲ್ಲಿದೆ ಎಂದು ಪೊಲೀಸರು ಹೇಳಿದ್ದಾರೆ.

ವಾರ್ತಾ ಭಾರತಿ 17 Feb 2026 10:40 pm

Bengaluru | ಆಸ್ತಿ ವಿಚಾರವಾಗಿ ತಂದೆಯ ಹತ್ಯೆ

ಬೆಂಗಳೂರು : ಆಸ್ತಿ ವಿಚಾರವಾಗಿ ಪುತ್ರನೇ ತಂದೆಯ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿರುವ ಆರೋಪ ಕೇಳಿಬಂದಿದ್ದು, ಈ ಸಂಬಂಧ ಇಂದಿರಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದೂಪನಹಳ್ಳಿಯ ಮುತ್ತಿಯಾಲಮ ದೇವಾಲಯ ಸಮೀಪದ ನಿವಾಸಿ ಮುನಿಕೃಷ್ಣ(66) ಎಂಬುವರು ಕೊಲೆಯಾಗಿರುವ ತಂದೆ ಎಂದು ಗುರುತಿಸಲಾಗಿದ್ದು, ಪುತ್ರ ಮೋಹನ್ ಕುಮಾರ್ ಈ ಕೃತ್ಯವೆಸಗಿರುವುದಾಗಿ ಗೊತ್ತಾಗಿದೆ. ಮುನಿಕೃಷ್ಣ ಅವರು ಸ್ವಂತ ದುಡಿಮೆಯಿಂದ ಕೋಟ್ಯಾಂತರ ರೂ. ಮೌಲ್ಯದ ಆಸ್ತಿ ಮಾಡಿದ್ದು, ಬಾಡಿಗೆ ಬರುತ್ತಿದೆ. ಕೆಲವು ಆಸ್ತಿಯ ವಿಲ್ ಅನ್ನು ಮೊಮಕ್ಕಳ ಹೆಸರಿಗೆ ಮಾಡಿದ್ದಾರೆ. ಇದೇ ವಿಚಾರಕ್ಕೆ ಪುತ್ರ ಮೋಹನ್ ಕುಮಾರ್ ಕಳೆದ ಕೆಲವು ದಿನಗಳಿಂದ ತಂದೆ ಜೊತೆ ಜಗಳವಾಡುತ್ತಿದ್ದನು. ಆಸ್ತಿ ಹಂಚಿಕೆ ವಿಚಾರವಾಗಿ ಶನಿವಾರ ಮತ್ತೆ ತಂದೆ ಜೊತೆ ಮೋಹನ್‍ಕುಮಾರ್ ಜಗಳವಾಡಿದ್ದು, ಗಲಾಟೆ ವಿಕೋಪಕ್ಕೆ ತಿರುಗಿದಾಗ ರಾಡ್‍ನಿಂದ ತಂದೆಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದರಿಂದ ತಲೆಗೆ ಗಂಭೀರ ಪೆಟ್ಟಾಗಿದೆ. ತೀವ್ರವಾಗಿ ಗಾಯಗೊಂಡಿದ್ದ ಮುನಿಕಷ್ಣ ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಮಂಗಳವಾರ ಬೆಳಗ್ಗೆ ಮುನಿಕೃಷ್ಣಪ್ಪ ಅವರು ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ. ಘಟನೆ ಬಳಿಕ ಮಗ ತಲೆಮರೆಸಿಕೊಂಡಿದ್ದಾನೆ. ಘಟನೆಗೆ ಸಂಬಂಧಿಸಿದಂತೆ ಇಂದಿರಾನಗರ ಠಾಣೆ ಪೊಲೀಸರು ಕೊಲೆ ಪ್ರಕರಣದಾಖಲಿಸಿಕೊಂಡು ಆರೋಪಿ ಮೋಹನ್‍ಕುಮಾರ್‍ಗಾಗಿ ಶೋಧ ನಡೆಸುತ್ತಿದ್ದಾರೆ.

ವಾರ್ತಾ ಭಾರತಿ 17 Feb 2026 10:37 pm

ಪಾಕಿಸ್ತಾನದಲ್ಲಿ ಆತ್ಮಾಹುತಿ ದಾಳಿ : ಭದ್ರತಾ ಸಿಬ್ಬಂದಿ ಸಹಿತ 14 ಮಂದಿ ಮೃತ್ಯು

ಪೇಶಾವರ,ಫೆ.19: ವಾಯವ್ಯ ಪಾಕಿಸ್ತಾನದಲ್ಲಿ ಆತ್ಮಹತ್ಯಾ ದಾಳಿ ಹಾಗೂ ಪೊಲೀಸರು ಮತ್ತು ಭಯೋತ್ಪಾದಕರ ನಡುವೆ ನಡೆದ ಗುಂಡಿನ ಕಾಳಗದಲ್ಲಿ ಕನಿಷ್ಠ 11 ಮಂದಿ ಭದ್ರತಾ ಸಿಬ್ಬಂದಿ ಹಾಗೂ ಒಂದು ಮಗು ಸೇರಿದಂತೆ ಮೂವರು ನಾಗರಿಕರು ಮೃತಪಟ್ಟಿದ್ದಾರೆ ಎಂದು ಪಾಕ್ ಭದ್ರತಾ ಅಧಿಕಾರಿಗಳು ತಿಳಿಸಿದ್ದಾರೆ. ಖೈಬರ್ ಪಖ್ತೂನ್‌ಕ್ವಾ ಪ್ರಾಂತ್ಯದಲ್ಲಿ ನಡೆದ ಪ್ರತ್ಯೇಕ ಘಟನೆಗಳಲ್ಲಿ ಭದ್ರತಾ ಪಡೆಗಳು ಹಾಗೂ ಬಂಡುಕೋರರ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಕನಿಷ್ಠ 25 ಮಂದಿ ಗಾಯಗೊಂಡಿದ್ದಾರೆ. ಅಫ್ಘಾನಿಸ್ತಾನದ ಗಡಿಗೆ ತಾಗಿಕೊಂಡಿರುವ ದಕ್ಷಿಣ ಹಾಗೂ ಉತ್ತರ ಪ್ರಾಂತ್ಯಗಳಲ್ಲಿ ಬಂಡುಕೋರ ಚಟುವಟಿಕೆಗಳನ್ನು ನಿಗ್ರಹಿಸಲು ಪಾಕ್ ಭದ್ರತಾ ಪಡೆಗಳು ಕಾರ್ಯಾಚರಣೆ ನಡೆಸುತ್ತಿರುವ ಸಮಯದಲ್ಲೇ ಈ ಘರ್ಷಣೆ ನಡೆದಿದೆ. ಖೈಬರ್ ಪಖ್ತೂನ್‌ಖ್ವಾದ ಬುಡಕಟ್ಟು ಜಿಲ್ಲೆಯಾದ ಬಜೌರ್‌ನಲ್ಲಿ ನಡೆದ ಆತ್ಮಹತ್ಯಾ ದಾಳಿಯ ಘಟನೆಯೊಂದರಲ್ಲಿ, ಸ್ಫೋಟಕಗಳಿಂದ ತುಂಬಿದ ವಾಹನವೊಂದು ಧಾರ್ಮಿಕ ಶಿಕ್ಷ ಣಸಂಸ್ಥೆಯ ಗೋಡೆಗೆ ಢಿಕ್ಕಿ ಹೊಡೆದು ಸ್ಫೋಟ ನಡೆಸಲಾಗಿದೆ. ಈ ಘಟನೆಯಲ್ಲಿ ಕಟ್ಟಡದೊಳಗಿದ್ದ ಎಂಟು ಮಂದಿ ಗಡಿಮುಂಚೂಣಿ ದಳದ ಪೊಲೀಸರು ಮೃತಪಟ್ಟಿದ್ದಾರೆ ಹಾಗೂ ಇತರ 10 ಮಂದಿ ಗಾಯಗೊಂಡಿದ್ದಾರೆ ಎಂದು ಹೇಳಿದ್ದಾರೆ. ಈ ಸ್ಫೋಟದಿಂದಾಗಿ ಆಸುಪಾಸಿನ ಹಲವಾರು ಮನೆಗಳು ಕುಸಿದುಬಿದ್ದಿವೆ ಒಂದು ಮಗು ಮೃತಪಟ್ಟಿದೆ ಎಂದು ಅವರು ಹೇಳಿದ್ದಾರೆ. ಬನ್ನೂ ಪಟ್ಟಣದಲ್ಲಿ ನಡೆದ ಇನ್ನೊಂದು ದಾಳಿಯಲ್ಲಿ ರಿಕ್ಷಾವೊಂದರಲ್ಲಿ ಇರಿಸಿದ್ದ ಬಾಂಬ್ ಸ್ಫೋಟಿಸಿ ಇಬ್ಬರು ನಾಗರಿಕರು ಮೃತಪಟ್ಟಿದ್ದಾರೆ. ಹಾಗೂ ಇತರ 17 ಮಂದಿ ಗಾಯಗೊಂಡಿದ್ದಾರೆ.

ವಾರ್ತಾ ಭಾರತಿ 17 Feb 2026 10:35 pm

Bengaluru | ಕಸದ ರಾಶಿಯಲ್ಲಿ ನವಜಾತು ಶಿಶುವಿನ ಮೃತದೇಹ ಪತ್ತೆ

ಬೆಂಗಳೂರು : ಇಲ್ಲಿನ ಸುಬ್ರಹಣ್ಯಪುರ ಪೊಲೀಸ್ ಠಾಣೆ ವ್ಯಾಪ್ತಿಯ ಕಸದ ಗುಡ್ಡೆಯಲ್ಲಿ ನವಜಾತು ಶಿಶು ಮೃತಪಟ್ಟಿರುವ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ. ನಿನ್ನೆ ಸಂಜೆ 7.50 ರ ಸುಮಾರಿನಲ್ಲಿ ಉತ್ತರಹಳ್ಳಿ ಪೂರ್ಣಪ್ರಜ್ಞಾ ಲೇಔಟ್ ಅಪಾರ್ಟ್‍ಮೆಂಟ್ ಹಿಂಭಾಗದ ಖಾಲಿ ಜಾಗದ ಮೈದಾನದಲ್ಲಿ ಹುಡುಗರು ಆಟವಾಡುತ್ತಿದ್ದರು. ಆ ಸಂದರ್ಭದಲ್ಲಿ ಮೈದಾನಲ್ಲಿದ್ದ ಕಸದ ಗುಡ್ಡೆ ಬಳಿ ಮಗು ಮೃತಪಟ್ಟಿರುವ ಸ್ಥಿತಿಯನ್ನು ನೋಡಿ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ತಕ್ಷಣ ಪೊಲೀಸರು ಸ್ಥಳಕ್ಕೆ ಬಂದು ನೋಡಿದಾಗ ನವಜಾತ ಶಿಶು ಮೃತಪಟ್ಟಿರುವುದು ಕಂಡು ಬಂದಿದೆ. ನವಜಾತ ಶಿಶುವನ್ನು ಬಿಸಾಡಿ ಹೋಗಿರುವ ಪೋಷಕರನ್ನು ಪತ್ತೆ ಮಾಡಿ ಅವರುಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಯುವಕನೋರ್ವ ಸುಬ್ರಹಣ್ಯಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದಾನೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ನವಜಾತ ಶಿಶುವಿನ ಮೃತದೇಹವನ್ನು ಆಸ್ಪತ್ರೆಗೆ ರವಾನಿಸಿ ಘಟನಾ ಸ್ಥಳದ ಸುತ್ತಮುತ್ತಲಿನ ರಸ್ತೆಗಳಲ್ಲಿರುವ ಸಿಸಿ ಕ್ಯಾಮೆರಾಗಳನ್ನು ಪರಿಶೀಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

ವಾರ್ತಾ ಭಾರತಿ 17 Feb 2026 10:34 pm

Kalaburagi | ಕೇಂದ್ರ ಕಾರಾಗೃಹದಲ್ಲಿ ಯೋಗ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ

ಕಲಬುರಗಿ: ಕಲಬುರಗಿ ಕೇಂದ್ರ ಕಾರಾಗೃಹ ಹಾಗೂ ಆರ್ಟ್ ಆಫ್ ಲಿವಿಂಗ್ ಶಾಖೆ ಕಲಬುರಗಿ ಇವರುಗಳ ಸಹಯೋಗದೊಂದಿಗೆ “ಪ್ರಿಸನ್ ಸ್ಮಾರ್ಟಕೋರ್ಸ್ ಅಡಿ” ಒಂದು ವಾರದವರೆಗೆ ಬ್ಯಾರಕ್ ಸಂಖ್ಯೆ 5 ರಿಂದ 7ರ ವರೆಗಿನ ಒಟ್ಟು 116 ಬಂದಿಗಳಿಗೆ ಕಲಬುರಗಿ ಕೇಂದ್ರ ಕಾರಾಗೃಹದಲ್ಲಿ ಹಮ್ಮಿಕೊಳ್ಳಲಾಗಿದ್ದ 3ನೇ ತಂಡದ ಯೋಗ ತರಬೇತಿ ಕಾರ್ಯಕ್ರಮಕ್ಕೆ ಸಂಸ್ಥೆಯ ಅಧೀಕ್ಷಕರಾದ ರಾಕೇಶ್ ಕಾಂಬಳೆ ಅವರು ಸೋಮವಾರ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಕಲಬುರಗಿ ಆರ್ಟ ಆಫ್ ಲಿವಿಂಗ್ ವ್ಯವಸ್ಥಾಪಕ ಆಡಳಿತಾಧಿಕಾರಿ ದತ್ತಾತ್ರೇಯ ಚಿಂಚೂರ ಹಾಗೂ ಸಹಾಯಕ ಅಧೀಕ್ಷಕ ಚನ್ನಪ್ಪ ಅವರು ಮಾತನಾಡಿದರು. ಈ ಸಂದರ್ಭದಲ್ಲಿ ಸಂಸ್ಥೆಯ ಜೈಲರ್ ಗಳಾದ ಸಾಗರ ಪಾಟೀಲ್, ಶ್ರೀಮಂತಗೌಡ ಪಾಟೀಲ್, ಪುಂಡಲೀಕ ಟಿ.ಕೆ., ಶ್ಯಾಮ ಬಿದ್ರಿ ಹಾಗೂ ಕಾರಾಗೃಹದ ಅಧಿಕಾರಿ/ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ಶಿಕ್ಷಕ ನಾಗರಾಜ ಮುಲಗೆ ಕಾರ್ಯಕ್ರಮ ನಿರೂಪಿಸಿದರು.

ವಾರ್ತಾ ಭಾರತಿ 17 Feb 2026 10:32 pm

Kalaburagi | ಢೋಹರ ಕಕ್ಕಯ್ಯನವರ ಜಾತ್ರಾ ಮಹೋತ್ಸವ : ಸನ್ಮಾನ ಸಮಾರಂಭ

ಕಲಬುರಗಿ: ನಗರದ ಜಗತ್ ಬಡಾವಣೆಯ ಶರಣ ಢೋಹರ ಕಕ್ಕಯ್ಯನವರ 34ನೇ ಜಾತ್ರಾ ಮಹೋತ್ಸವ ಅಂಗವಾಗಿ ಪಲ್ಲಕ್ಕಿ ಉತ್ಸವ, ಭವ್ಯ ಮೆರವಣಿಗೆ, ಸರಕಾರಿ ಹಾಗೂ ಅರೆ ಸರಕಾರಿ, ನಿವೃತ್ತ ನೌಕರರಿಗೆ, ಹಿರಿಯ ನಾಗರಿಕರಿಕರಿಗೆ ಹಾಗೂ ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನ ಸಮಾರಂಭ ಜರುಗಿತು. ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡ ಅಭಿಷೇಕ್ ಅಲ್ಲಂಪ್ರಭು ಪಾಟೀಲ್, ಟ್ರಸ್ಟ್ ಅಧ್ಯಕ್ಷ ಸಾಯಬಣ್ಣ ಹೊಳ್ಕರ್, ಸುನೀತಾ ರಮೇಶ್ ಕಟಕೆ, ಶಂಕರ್ ಕೊಡ್ಲಾ, ಕಾಶಿರಾಯ ನಂದೂರಕರ್, ರುದ್ರಪ್ಪ ಹೋಳಕುಂದಾ, ರಮೇಶ ಹೋಸಮನಿ, ಶಿವಶರಣಪ್ಪ ಅಮೃತಪ್ಪ ಕೋಳಾರ್, ಸತೀಶ ಇಂಗಳೆ, ಗಣಪತಿ ಧರ್ಮಣ್ಣ ಜೋಗದ ನಾಕರ್, ಪ್ರೊ. ಭೀಮಣ್ಣ ಬೋನಾಳ, ಅನಿಲಕುಮಾರ ಸಾವಳಕರ್, ಲಿಂಗೋಜಿ ಗಾಜರೆ, ಮೋತಿಲಾಲ್ ಕಟಕೆ, ಡಾ. ಅಮೃತಾ ಕಟಕೆ, ರಮೇಶ ಗಾಯಧನಕರ್, ಮಾರುತಿ ಶೇರಖಾನೆ, ಧೋಂಡಿಬಾ ಜೋಗದ ನಾಕರ್, ಅಮೃತ ಹೋಟ್ಕರ್, ನಾರಾಯಣ ಗಾಯದನಕರ್, ವಿಜಯಕುಮಾರ್ ಗಾಜರೆ, ರಮೇಶ ಗಾಯದನಕರ್, ಶ್ರೀಮಂತ ಇಂಗಳೆ, ರಾಜಕುಮಾರ ಜೋಗಧನಕರ್, ಬಾಬುರಾವ ಕಟಕೆ, ಸುಭಾಷ ಗಾಯದನಕರ್, ಸಾಯಬಣ್ಣ ಗಾಜರೆ, ಕೃಷ್ಣ ಮಸಾಜಿ ಹೋಳಕರ್, ಸುಭಾಶಚಂದ್ರ ತ್ರಿಮುಖೆ, ಅನಿಲಕುಮಾರ ಸಾವಳಕರ, ಗಣಪತಿ ಕಾವಳೆ, ದೇವಿಂದ್ರ ಧಡಕೆ, ರಾಘವೇಂದ್ರ ಹೋಳಕರ್, ಮಲ್ಲಿಕಾರ್ಜುನ್ ಖರಟಮಲ್, ಅಮೃತ ಜಗದೆ, ಅರ್ಜುನ್ ಸೋನಕವಡೆ, ಸಂತೋಷ ಸೋನಾವಣೆ, ಡಾ.ಸಂತೋಷ ಕಟಕೆ, ನಾಗರಾಜ ಶೇರಖಾನೆ, ಸೂರ್ಯಕಾಂತ ಸಾವಳಕರ್, ಶಿವಾಜಿ ಜೋಗಧನಕರ್, ಕಮಲಾಬಾಯಿ ಹೋಳಕರ್, ಶೇಷಾಬಾಯಿ ಗಾಯದನಕರ್, ಸೀಮಾ ಗಾಜರೆ, ಸುಮಿತ್ರಾಬಾಯಿ ಹೊಟ್ಕರ್, ಪದ್ಮನಿ ಕಟಕೆ ಸೇರಿದಂತೆ ಟ್ರಸ್ಟ್ ನ ಸದಸ್ಯರು, ಪದಾಧಿಕಾರಿಗಳು, ಬಡಾವಣೆಯ ಮುಖoಡರು, ಮಹಿಳೆಯರು ಇದ್ದರು.

ವಾರ್ತಾ ಭಾರತಿ 17 Feb 2026 10:30 pm

ಬಾಂಗ್ಲಾದೇಶ| ವಿದಾಯ ಭಾಷಣದಲ್ಲಿ ‘ಈಶಾನ್ಯ ಭಾರತ’ದ ವಿವಾದ ಕೆದಕಿದ ಯೂನುಸ್

ಢಾಕಾ,ಫೆ.17: ತನ್ನ ನೇತೃತ್ವದ ಮಧ್ಯಂತರ ಸರಕಾರವು ದೇಶದ ಸಾರ್ವಭೌಮತೆಯನ್ನು ರಾಷ್ಟ್ರೀಯ ಹಿತಾಸಕ್ತಿಗಳನ್ನು ಹಾಗೂ ವಿದೇಶಾಂಗ ನೀತಿಯ ಘನತೆಯನ್ನು ಕೊನೆಗೂ ಮರುಸ್ಥಾಪಿಸುವಲ್ಲಿ ಸಫಲವಾಗಿದೆ ಎಂದು ಹೇಳಿದ್ದಾರೆ. ಬಾಂಗ್ಲಾದ ಮುಖ್ಯ ಸಲಹೆಗಾರರಾಗಿ ತನ್ನ ಅಧಿಕಾರಾವಧಿಯ ಕೊನೆಯ ದಿನವಾದ ಸೋಮವಾರ ಮೊಹಮ್ಮದ್ ಯೂನುಸ್ ಅವರು ಟಿವಿಯಲ್ಲಿ ರಾಷ್ಟ್ರವನ್ನುದ್ದೇಶಿಸಿ ಭಾಷಣ ಮಾಡಿದರು. ತನ್ನ 25 ನಿಮಿಷಗಳ ಭಾಷಣದಲ್ಲಿ ಯೂನಸ್ ಅವರು ಈಶಾನ್ಯ ಭಾರತವನ್ನು ಪ್ರಸ್ತಾಪಿಸುವ ಮೂಲಕ ವಿವಾದಕ್ಕೆ ಗ್ರಾಸವಾಗಿದ್ದಾರೆ. ಭಾರತದ ಏಳು ರಾಜ್ಯಗಳು. ನೇಪಾಳ ಹಾಗೂ ಭೂತಾನ್ ಸೇರಿದಂತೆ ಈಶಾನ್ಯ ಪ್ರಾಂತ್ಯಗಳಿಗೆ ಅಪಾರವಾದ ಆರ್ಥಿಕ ಸಮೃದ್ಧಿಯನ್ನು ಒದಗಿಸುವ ಅಗಾಧ ಸಾಮರ್ಥ್ಯವನ್ನು ಬಾಂಗ್ಲಾ ಹೊಂದಿದೆ ಎಂದರು. ‘‘ಆರ್ಥಿಕ ವಲಯಗಳು, ವ್ಯಾಪಾರ ಒಪ್ಪಂದಗಳು ಹಾಗೂ ಸುಂಕರಹಿತ ಮಾರುಕಟ್ಟೆಗಳ ಲಭ್ಯತೆಯ ಮೂಲಕ ಈ ಪ್ರಾಂತ್ಯವು ಜಾಗತಿಕ ಉತ್ಪಾದನಾ ಕೇಂದ್ರವಾಗುವ ನಿಟ್ಟಿನಲ್ಲಿ ಭದ್ರವಾದ ತಳಹದಿಯನ್ನು ಹಾಕಲಾಗುವುದು ಎಂದರು. ನಮ್ಮ ಮುಕ್ತ ಸಮುದ್ರವು ಕೇವಲ ಭೌಗೋಳಿಕ ಸೀಮಾ ರೇಖೆ ಮಾತ್ರವಲ್ಲ, ಜಾಗತಿಕ ಆರ್ಥಿಕತೆಯೊಂದಿಗೆ ಸಂಪರ್ಕಿಸಲು ಬಾಂಗ್ಲಾದೇಶವು ಮುಕ್ತದ್ವಾರವಾಗಿದೆ ಎಂದರು. ಭಾರತದೊಂದಿಗೆ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರು ಹೊಂದಿರುವ ನಿಕಟ ಬಾಂಧವ್ಯವನ್ನು ಪರೋಕ್ಷವಾಗಿ ಉಲ್ಲೇಖಿಸಿದ ಅವರು, ಇಂದಿನ ಬಾಂಗ್ಲಾವು ಆತ್ಮವಿಶ್ವಾಸದಿಂದ ಕೂಡಿದೆ, ಸಕ್ರಿಯವಾಗಿದೆ ಮತ್ತು ಸ್ವಾತಂತ್ರ್ಯ ಹಿತಾಸಕ್ತಿಗಳನ್ನು ರಕ್ಷಿಸುವಲ್ಲಿ ಜವಾಬ್ದಾರಿಯಿಂದ ವರ್ತಿಸಿದೆ ಎಂದರು. ಭಾಷಣಕ್ಕೆ ಮುನ್ನ ಯೂನಸ್ ಅವರು ತನ್ನ ಕಾರ್ಯಾಲಯದಲ್ಲಿ ಆಯೋಜಿಸಲಾದ ಸಂಕ್ಷಿಪ್ತ ವಿದಾಯಕೂಟದಲ್ಲಿ ಪಾಲ್ಗೊಂಡರು. ತನ್ನೊಂದಿಗೆ ಕೆಲಸ ಮಾಡಿದ ಅಧಿಕಾರಿಗಳ ಬಗ್ಗೆ ಹೆಚ್ಚೇನೂ ಪ್ರಸ್ತಾಪಿಸದ ಅವರು, ಕಾರ್ಯನಿರ್ವಹಣೆಯ ಸಂದರ್ಭದಲ್ಲಿ ಬೆಂಲ ನೀಡಿದವರೆಲ್ಲರಿಗೂ ಕೃತಜ್ಞತೆಯನ್ನು ಅರ್ಪಿಸಿದರು.

ವಾರ್ತಾ ಭಾರತಿ 17 Feb 2026 10:30 pm

ವಾಡಿ | ಸಂತ ಸೇವಾಲಾಲ್‌ ಮಹಾರಾಜರ ಆದರ್ಶಗಳನ್ನು ಅಳವಡಿಸಿಕೊಳ್ಳಿ: ವಿಠ್ಠಲ ಮಹಾರಾಜ

ಸಂತ ಸೇವಾಲಾಲ್‌ ಮಹಾರಾಜರ 287ನೇ ಜಯಂತಿ ಕಾರ್ಯಕ್ರಮ

ವಾರ್ತಾ ಭಾರತಿ 17 Feb 2026 10:28 pm

T20 World Cup 2026: ಟಿ20 ವಿಶ್ವಕಪ್‌ ಟೂರ್ನಿಯಿಂದ ಆಸ್ಟ್ರೇಲಿಯಾ ತಂಡ ಔಟ್

T20 World Cup 2026: ಐಸಿಸಿ ಪುರುಷರ ಟಿ20 ವಿಶ್ವಕಪ್ 2026 ಟೂರ್ನಿಯಲ್ಲಿ ಮಹತ್ವದ ಬೆಳವಣಿಗೆ ನಡೆದಿದ್ದು, ಜಿಂಬಾಬ್ವೆ ಮತ್ತು ಐರ್ಲೆಂಡ್ ನಡುವಿನ ಪಂದ್ಯ ಮಳೆಯಿಂದ ರದ್ದಾದ ಕಾರಣ ಆಸ್ಟ್ರೇಲಿಯಾ ತಂಡ ಟೂರ್ನಿಯಿಂದ ಹೊರಬಿದ್ದಿದೆ. ಶ್ರೀಲಂಕಾದ ಪಲ್ಲೆಕೆಲೆ ಕ್ರೀಡಾಂಗಣದಲ್ಲಿ ನಡೆಯಬೇಕಿದ್ದ ಈ ಪಂದ್ಯ ನಿರಂತರ ಮಳೆ ಹಿನ್ನೆಲೆ ರದ್ದುಗೊಂಡಿದ್ದು, ಎರಡೂ ತಂಡಗಳಿಗೆ ತಲಾ ಒಂದು ಅಂಕವನ್ನು ನೀಡಲಾಯಿತು.

ಒನ್ ಇ೦ಡಿಯ 17 Feb 2026 10:28 pm

ಇಂದೋರ್‌ ದುರಂತ| ಮಧ್ಯಪ್ರದೇಶ ವಿಧಾನಸಭೆ ಹೊರಗೆ ‘ಕಲುಷಿತ’ ನೀರಿನ ಬಾಟ್ಲಿಗಳೊಂದಿಗೆ ಕಾಂಗ್ರೆಸ್ ಶಾಸಕರಿಂದ ಪ್ರತಿಭಟನೆ

ಭೋಪಾಲ್‌,ಫೆ.17: ಕಾಂಗ್ರೆಸ್ ಶಾಸಕರು ಇಂದೋರಿನಲ್ಲಿ ಇತ್ತೀಚಿಗೆ ಕಲುಷಿತ ನೀರಿನ ಸೇವನೆಯಿಂದ ಸಂಭವಿಸಿದ್ದ ಸಾವುಗಳ ಕುರಿತು ಮಂಗಳವಾರ ಮಧ್ಯಪ್ರದೇಶ ವಿಧಾನಸಭಾ ಆವರಣದಲ್ಲಿ ‘ಕಲುಷಿತ’ ನೀರಿನ ಬಾಟ್ಲಿಗಳೊಂದಿಗೆ ಪ್ರತಿಭಟನೆ ನಡೆಸಿದರು. ವಿಪಕ್ಷ ನಾಯಕ ಉಮಂಗ್ ಸಿಂಘಾರ್ ಅವರ ನೇತೃತ್ವದಲ್ಲಿ ಕಲುಷಿತ ನೀರಿನ ಬಾಟ್ಲಿಗಳು ಮತ್ತು ಫಲಕಗಳನ್ನು ಹಿಡಿದುಕೊಂಡು ಮಹಾತ್ಮ ಗಾಂಧಿಯವರ ಪ್ರತಿಮೆಯ ಮುಂದೆ ಸಾಂಕೇತಿಕ ಪ್ರತಿಭಟನೆಯನ್ನು ನಡೆಸಿದ ಕಾಂಗ್ರೆಸ್ ಶಾಸಕರು ಘೋಷಣೆಗಳನ್ನು ಕೂಗಿ ಸಂತ್ರಸ್ತ ಕುಟುಂಬಗಳಿಗೆ ನ್ಯಾಯಕ್ಕಾಗಿ ಆಗ್ರಹಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಸಿಂಘಾರ್, ಇಂದೋರಿನ ಭಗೀರಥಪುರ ಪ್ರದೇಶದಲ್ಲಿ ಕಲುಷಿತ ನೀರಿನ ಸೇವನೆಯಿಂದ 35 ಜನರು ಮೃತಪಟ್ಟಿದ್ದಾರೆ. ಸರಕಾರವು ತನ್ನ ಹೊಣೆಗಾರಿಕೆಯಿಂದ ನುಣುಚಿಕೊಳ್ಳಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದರು. ಭಗೀರಥಪುರ ಪ್ರದೇಶವನ್ನು ಒಳಗೊಂಡಿರುವ ಇಂದೋರ್‌-1 ವಿಧಾನಸಭಾ ಕೇತ್ರದ ಶಾಸಕರಾಗಿರುವ ನಗರಾಭಿವೃದ್ಧಿ ಮತ್ತು ವಸತಿ ಸಚಿವ ಕೈಲಾಷ ವಿಜಯವರ್ಗೀಯ ಅವರು ನೈತಿಕ ಕಾರಣಗಳಿಂದ ತಕ್ಷಣವೇ ರಾಜೀನಾಮೆ ನೀಡಬೇಕು ಹಾಗೂ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು. ರಾಜ್ಯಾದ್ಯಂತ ಸಾರ್ವಜನಿಕರಿಗೆ ಕಲುಷಿತ ನೀರಿನ ಪೂರೈಕೆಯು ಗಂಭೀರ ಕಳವಳದ ವಿಷಯವಾಗಿದೆ ಎಂದ ಅವರು, ಜನರಿಗೆ ಶುದ್ಧ ಕುಡಿಯುವ ನೀರನ್ನು ಒದಗಿಸಲು ದೃಢವಾದ, ಪರಿಣಾಮಕಾರಿ ಕ್ರಮಗಳಿಗಾಗಿ ಆಗ್ರಹಿಸಿದರು.

ವಾರ್ತಾ ಭಾರತಿ 17 Feb 2026 10:25 pm

ತೆಲಂಗಾಣ ಸಿಎಂ ರೇವಂತ್‌ ರೆಡ್ಡಿ ವಿರುದ್ಧದ ಪ್ರಕರಣದ ರದ್ದು ಪ್ರಶ್ನಿಸಿದ್ದ ಅರ್ಜಿ ವಜಾಗೊಳಿಸಿದ ಸುಪ್ರೀಂ ಕೋರ್ಟ್‌

ಹೊಸದಿಲ್ಲಿ,ಫೆ.17: ತೆಲಂಗಾಣ ಮುಖ್ಯಮಂತ್ರಿ ರೇವಂತ ರೆಡ್ಡಿ ಅವರ ವಿರುದ್ಧ ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳ ಮೇಲಿನ ದೌರ್ಜನ್ಯ ತಡೆ ಕಾಯ್ದೆಯಡಿ ದಾಖಲಾಗಿದ್ದ 2016ರ ಪ್ರಕರಣವನ್ನು ರದ್ದುಗೊಳಿಸಿದ್ದ ತೆಲಂಗಾಣ ಉಚ್ಚ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಸರ್ವೋಚ್ಚ ನ್ಯಾಯಾಲಯ ಸೋಮವಾರ ವಜಾಗೊಳಿಸಿದೆ. ರಾಜೋಲ್ ಕ್ಷೇತ್ರದಲ್ಲಿಯ ಎಸ್‌ಸಿ ಪರಸ್ಪರ ನೆರವಿನ ಸಹಕಾರಿ ವಸತಿ ಸಂಘಕ್ಕೆ ನುಗ್ಗಿ ಬಲ್ಡೋಝರ್‌ನಿಂದ ಆವರಣವನ್ನು ಧ್ವಂಸಗೊಳಿಸಿ, ತಮ್ಮನ್ನು ತಡೆಯಲು ಪ್ರಯತ್ನಿಸಿದ್ದ ದೂರುದಾರರ ವಿರುದ್ಧ ಜಾತಿವಾದಿ ನಿಂದನೆಗಳನ್ನು ಕೂಗಿದ್ದ ದುಷ್ಕರ್ಮಿಗಳನ್ನು ರೆಡ್ಡಿ ಪ್ರಚೋದಿಸಿದ್ದರು ಎಂಬ ಆರೋಪಗಳಿಗೆ ಪ್ರಕರಣವು ಸಂಬಂಧಿಸಿದೆ. ರೆಡ್ಡಿ ವಿರುದ್ಧ ಮೇಲ್ನೋಟಕ್ಕೆ ಯಾವುದೇ ಪ್ರಕರಣ ಕಂಡು ಬಂದಿರಲಿಲ್ಲವಾದ್ದರಿಂದ ಹೈಕೋರ್ಟ್ ಪ್ರಕರಣವನ್ನು ರದ್ದುಗೊಳಿಸಿದ್ದು ಸರಿಯಾಗಿಯೇ ಇದೆ ಎಂದು ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್‌ ಹಾಗೂ ನ್ಯಾಯಮೂರ್ತಿಗಳಾದ ಜಾಯಮಾಲ್ಯ ಬಾಗ್ಚಿ ಮತ್ತು ವಿಪುಲ ಪಂಚೋಲಿ ಅವರ ಪೀಠವು ಹೇಳಿತು. ಇದು ರಾಜಕೀಯ ಹೋರಾಟಗಳಿಗೆ ನ್ಯಾಯಾಲಯಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವ ಪ್ರಕರಣದಂತೆ ಕಂಡುಬರುತ್ತಿದೆ ಎಂದು ಪೀಠವು ಅಭಿಪ್ರಾಯಿಸಿತು. ಅಪರಾಧಗಳಿಗೆ ಕುಮ್ಮಕ್ಕು ನೀಡುವುದನ್ನು ದಂಡಿಸುವ ಎಸ್‌ಸಿ/ಎಸ್‌ಟಿ ಕಾಯ್ದೆಯ ಕಲಂ 6ನ್ನು ಹೈಕೋರ್ಟ್ ಪರಿಗಣಿಸಿಲ್ಲ ಎಂದು ಅರ್ಜಿದಾರರ ಪರ ವಕೀಲರು ವಾದಿಸಿದಾಗ, ಕೇವಲ ರಾಜಕೀಯ ಲಾಭಕ್ಕಾಗಿ ಈ ವಿಷಯವನ್ನು ಎತ್ತಲಾಗಿದೆ ಎಂದು ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್‌ ಪ್ರತಿಕ್ರಿಯಿಸಿದರು. 2016ರಲ್ಲಿ ರೆಡ್ಡಿ ಟಿಡಿಪಿ ಸದಸ್ಯರಾಗಿದ್ದರು. ಕೇವಲ ಗಾಳಿಸುದ್ದಿಗಳನ್ನು ಬಿಟ್ಟರೆ ಘಟನೆಗೂ ರೆಡ್ಡಿಯವರಿಗೂ ಸಂಬಂಧ ಕಲ್ಪಿಸುವ ಯಾವುದೇ ಪುರಾವೆಯಿಲ್ಲ ಎಂದು ನ್ಯಾ.ಬಾಗ್ಚಿ ಹೇಳಿದರು.

ವಾರ್ತಾ ಭಾರತಿ 17 Feb 2026 10:22 pm

ಅವಧಿ ಮೀರಿ ಧ್ವನಿವರ್ಧಕ ಬಳಕೆ: ಪ್ರಕರಣ ದಾಖಲು

ಬ್ರಹ್ಮಾವರ, ಫೆ.17: ಹಂದಾಡಿ ಗ್ರಾಮದ ಗಾಂಧಿ ಮೈದಾನದಲ್ಲಿ ಜನಸೇವಾ ಟ್ರಸ್ಟ್ ವತಿಯಿಂದ ಫೆ.14ರಂದು ನಡೆದ ಅಭಿಮತ ಸಂಭ್ರಮ ಕಾರ್ಯಕ್ರಮದಲ್ಲಿ ಅವಧಿ ಮೀರಿ ಧ್ವನಿವರ್ಧಕವನ್ನು ಬಳಸಿರುವ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಕಾರ್ಯಕ್ರಮದಲ್ಲಿ ಸಂಜೆ 6ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ಮಾತ್ರ ಧ್ವನಿವರ್ಧಕವನ್ನು ಬಳಸುವಂತೆ ಷರತ್ತನ್ನು ವಿಧಿಸಲಾಗಿತ್ತು. ಆದರೂ ಕೂಡ ಕಾರ್ಯಕ್ರಮದಲ್ಲಿ ಅವಧಿ ಮೀರಿ ಧ್ವನಿವರ್ಧಕವನ್ನು ಬಳಸಿ ಪರವಾನಗಿ ಯಲ್ಲಿ ವಿಧಿಸಿದ ಷರತ್ತನ್ನು ಉಲ್ಲಂಘನೆ ಮಾಡಲಾಗಿದೆ ಎಂದು ದೂರಲಾಗಿದೆ. ಈ ಮೂಲಕ ಸಾರ್ವಜನಿಕರಿಗೆ ತೊಂದರೆಯಾಗುವ ರೀತಿಯಲ್ಲಿ ಕರ್ನಾಟಕ ಪೊಲೀಸ್ ಕಾಯ್ದೆಗೆ ವ್ಯತಿರಿಕ್ತವಾಗಿ ನಡೆದುಕೊಂಡು, ಕಾನೂನು ಉಲ್ಲಂಘಿಸಿರುವ ಸಂಸ್ಥೆಯ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ವಿರುದ್ದ ಸೂಕ್ತ ಕಾನೂನು ಕ್ರಮ ಜರಗಿಸುವಂತೆ ನೀಡಿದ ವರದಿಯಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವಾರ್ತಾ ಭಾರತಿ 17 Feb 2026 10:17 pm

ಪ್ರವಾಸಕ್ಕೆ ತೆರಳಿದ್ದ ಯುವಕ ಮೃತ್ಯು

ಉಡುಪಿ, ಫೆ.17: ಅಸ್ಸಾಂ ರಾಜ್ಯದ ಗುವಾಹಟಿಗೆ ಪ್ರವಾಸಕ್ಕೆ ತೆರಳಿದ್ದ ಉಡುಪಿಯ ತಂಡದಲ್ಲಿದ್ದ ಓರ್ವ ಯುವಕ ಅನಾರೋಗ್ಯದಿಂದ ಮೃತಪಟ್ಟ ಬಗ್ಗೆ ವರದಿಯಾಗಿದೆ. ಮೃತರನ್ನು ಕಾಪು ತಾಲೂಕು ಕಟಪಾಡಿ ಸಮೀಪದ ಸರಕಾರಿಗುಡ್ಡೆ ನಿವಾಸಿ ಅಶೋಕ್ ಆಚಾರ್ಯ(33) ಎಂದು ಗುರುತಿಸಲಾಗಿದೆ. ಪ್ರವಾಸದ ವೇಳೆ ಅಶೋಕ್ ಆಚಾರ್ಯ ಅವರಿಗೆ ತಲೆಯಲ್ಲಿ ರಕ್ತ ಹೆಪ್ಪುಗಟ್ಟಿದ ಕಾರಣ ಅಸ್ವಸ್ಥತೆ ಉಂಟಾಗಿ ತಕ್ಷಣ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಅವರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ವಾರ್ತಾ ಭಾರತಿ 17 Feb 2026 10:16 pm

ಹರ್ಯಾಣ| ವ್ಯಾಲೆಂಟೈನ್ ಡೇ ಭೋಜನದ ಬಳಿಕ ಪತ್ನಿಯ ಕತ್ತು ಸೀಳಿ ಹತ್ಯೆಗೈದ ಚಾರ್ಟರ್ಡ್ ಅಕೌಂಟಂಟ್

ಚಂಡಿಗಡ,ಫೆ.17: ಹರ್ಯಾಣದ ಜಝ್ಝರ್ ಜಿಲ್ಲೆಯ ಬಹದೂರ್‌ಗಡದಲ್ಲಿ ಯುವದಂಪತಿಯ ವ್ಯಾಲೆಂಟೈನ್ ದಿನದ ಸಂಜೆಯು ಆಘಾತಕಾರಿ ಮತ್ತು ಕ್ರೂರ ಹತ್ಯೆಯಲ್ಲಿ ಪರ್ಯವಸಾನಗೊಂಡಿದೆ. ಆ ಸಂಜೆ ಪತ್ನಿಯೊಂದಿಗೆ ಹಿಸಾರ್‌ನಲ್ಲಿ ವ್ಯಾಲೆಂಟೈನ್ ದಿನವನ್ನು ಆಚರಿಸಿದ್ದ ಅಂಶುಲ್ ಧವನ್ ನಂತರ ತಾವು ವಾಸವಾಗಿದ್ದ ಗುರುಗ್ರಾಮಕ್ಕೆ ಮರಳುತ್ತಿರುವಾಗ ದಾರಿ ಮಧ್ಯೆ ಜಝ್ಝರ್‌ನಲ್ಲಿ ಆಕೆಯನ್ನು ಕೊಲೆ ಮಾಡಿದ್ದು, ಪೋಲಿಸರನ್ನು ದಾರಿ ತಪ್ಪಿಸಲು ಢಕಾಯಿತಿಯ ಸುಳ್ಳು ಕಥೆಯನ್ನು ಹೆಣೆದಿದ್ದ. ಖಾಸಗಿ ಬ್ಯಾಂಕ್ ಉದ್ಯೋಗಿಯಾಗಿದ್ದ ಮೆಹಕ್ (27) ಕೊಲೆಯ ಹಿಂದಿನ ನಿಗೂಢತೆಯನ್ನು ಪೊಲೀಸರು ಕೇವಲ 18 ಗಂಟೆಗಳಲ್ಲಿ ಭೇದಿಸಿದ್ದಾರೆ. ಆರಂಭದಲ್ಲಿ ಢಕಾಯಿತಿ ಎಂಬಂತೆ ಕಂಡು ಬಂದಿದ್ದ ಪ್ರಕರಣ ಶೀಘ್ರವೇ ಚಾರ್ಟರ್ಡ್ ಅಕೌಂಟಂಟ್ ಆಗಿರುವ ಧವನ್ ನಡೆಸಿದ ಕ್ರೂರ ಹತ್ಯೆ ಎನ್ನುವುದು ಬೆಳಕಿಗೆ ಬಂದಿದ್ದು,ಆರೋಪಿಯನ್ನು ಪೋಲಿಸರು ಬಂಧಿಸಿದ್ದಾರೆ. ಹಂಸಿ ನಿವಾಸಿ ಮೆಹಕ್ ಮತ್ತು ಹಿಸಾರ್ ನಿವಾಸಿ ಧವನ್ ಮದುವೆ ಕಳೆದ ವರ್ಷದ ಸೆಪ್ಟಂಬರ್‌ನಲ್ಲಿ ನಡೆದಿದ್ದು, ಆಕೆ ಐದು ತಿಂಗಳ ಗರ್ಭಿಣಿಯಾಗಿದ್ದಳು. ಗುರುಗ್ರಾಮದಲ್ಲಿ ಕೆಲಸ ಮಾಡುತ್ತಿರುವ ಧವನ್ ರವಿವಾರ ರಾತ್ರಿ 11 ಗಂಟೆಯ ಸುಮಾರಿಗೆ ಪೊಲೀಸರಿಗೆ ಕರೆ ಮಾಡಿ ಅಪರಿಚಿತ ದುಷ್ಕರ್ಮಿಗಳು ತಮ್ಮನ್ನು ದೋಚಲು ಪ್ರಯತ್ನಿಸಿದ್ದರು ಮತ್ತು ತನ್ನ ಪತ್ನಿಯ ಕತ್ತು ಸೀಳಿ ಹತ್ಯೆ ಮಾಡಿದ್ದಾರೆ ಎಂದು ತಿಳಿಸಿದ್ದ. ತನಿಖೆಯನ್ನು ಆರಂಭಿಸಿದ ಅಧಿಕಾರಿಗಳು ಆತನ ಹೇಳಿಕೆಗಳು ಪರಸ್ಪರ ತಾಳೆಯಾಗುತ್ತಿಲ್ಲ ಎನ್ನುವುದನ್ನು ಗಮನಿಸಿದ್ದರು. ತನ್ನ ಕಥೆಯನ್ನು ಪದೇ ಪದೇ ಬದಲಿಸುತ್ತಿದ್ದ ಧವನ್ ದುಷ್ಕರ್ಮಿಗಳ ಬಗ್ಗೆ ವಿವರಿಸಲೂ ಸಾಧ್ಯವಾಗಿರಲಿಲ್ಲ. ಇದು ಪೊಲೀಸರ ಶಂಕೆಯನ್ನು ಇನ್ನಷ್ಟು ಹೆಚ್ಚಿಸಿತ್ತು. ತೀವ್ರ ವಿಚಾರಣೆ ನಡೆಸಿದಾಗ ಪತ್ನಿಯನ್ನು ಕೊಂದಿದ್ದು ತಾನೇ ಎಂದು ಧವನ್ ಒಪ್ಪಿಕೊಂಡಿದ್ದ. ಗುರುಗ್ರಾಮದ ಎಚ್‌ಡಿಎಫ್‌ಸಿ ಬ್ಯಾಂಕಿನಲ್ಲಿ ಕೆಲಸ ಮಾಡುತ್ತಿದ್ದ ಮೆಹಕ್‌ಳ ನೈತಿಕತೆಯನ್ನು ಧವನ್ ಶಂಕಿಸುತ್ತಿದ್ದು, ಇದು ಆಗಾಗ್ಗೆ ಅವರ ನಡುವೆ ಜಗಳಕ್ಕ ಕಾರಣವಾಗಿತ್ತು. ಮೆಹಕ್ ತಂದೆ ಕೃಷ್ಣ ಕಥುರಿಯಾ ಆರಂಭದಿಂದಲೇ ಅಳಿಯನ ಬಗ್ಗೆ ಶಂಕೆ ವ್ಯಕ್ತಪಡಿಸಿದ್ದರು. ಧವನ್ ಬೆರಳಚ್ಚುಗಳು ಮೂಡುವುದನ್ನು ತಪ್ಪಿಸಲು ಹತ್ಯೆಯ ಸಮಯದಲ್ಲಿ ಕೈಗವುಸುಗಳನ್ನು ಧರಿಸಿದ್ದ. ಮೊದಲು ಮೆಹಕ್‌ಳನ್ನು ಉಸಿರುಗಟ್ಟಿಸಿದ್ದ ಬಳಿಕ ಆತ ನಂತರ ಕತ್ತರಿಯಿಂದ ಆಕೆಯ ಕತ್ತನ್ನು ಸೀಳಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ವಾರ್ತಾ ಭಾರತಿ 17 Feb 2026 10:14 pm

ಉಳ್ಳಾಲ: ನುಸ್ರತುಲ್ ಮಸಾಕೀನ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಕಿಟ್ ವಿತರಣೆ

ಉಳ್ಳಾಲ: ನುಸ್ರತುಲ್ ಮಸಾಕೀನ್ ಚಾರಿಟೇಬಲ್ ಟ್ರಸ್ಟ್ ಅಳೇಕಲ ಉಳ್ಳಾಲ ಇದರ ಆಶ್ರಯದಲ್ಲಿ ರಂಝಾನ್ ಕಿಟ್ ವಿತರಣೆ ಕಾರ್ಯಕ್ರಮ ಅಳೇಕಲದಲ್ಲಿರುವ ಟ್ರಸ್ಟ್ ನ ಕಚೇರಿಯಲ್ಲಿ ನಡೆಯಿತು. ಕಾರ್ಯಕ್ರಮ ದ ಅಧ್ಯಕ್ಷತೆ ವಹಿಸಿದ್ದ ನುಸ್ರತುಲ್ ಮಸಾಕೀನ್ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಮುಹಮ್ಮದ್ ತ್ವಾಹಾ ಹಾಜಿ ಅವರು ಕಿಟ್ ವಿತರಣೆ ಅಗತ್ಯತೆ ಮತ್ತು ಟ್ರಸ್ಟ್ ನ ಕಾರ್ಯ ಯೋಜನೆ ಬಗ್ಗೆ ಮಾಹಿತಿ ನೀಡಿದರು. ಅಳೇಕಲ ಮದ್ರಸ ಮುಅಲ್ಲಿಂ ಅಶ್ರಫ್ ಅಹ್ಸನಿ ದುಆ ನೆರವೇರಿಸಿದರು. ಈ ಸಂದರ್ಭದಲ್ಲಿ ಉಳ್ಳಾಲ ನಗರ ವ್ಯಾಪ್ತಿಯ 468 ಅರ್ಹ ಕುಟುಂಬಗಳಿಗೆ ರಂಝಾನ್ ಕಿಟ್ ವಿತರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ನುಸ್ರತುಲ್ ಮಸಾಕೀನ್ ಚಾರಿಟೇಬಲ್ ಟ್ರಸ್ಟ್ ನ ಉಪಾಧ್ಯಕ್ಷ ಹನೀಫ್ ಹಾಜಿ, ಪ್ರಧಾನ ಕಾರ್ಯದರ್ಶಿ ಕೆ ಎನ್ ಮೊಹಮ್ಮದ್, ಜೊತೆ ಕಾರ್ಯದರ್ಶಿ ಹಮೀದ್, ಸದಸ್ಯ ಅಶ್ರಫ್, ಅಝೀಝ್, ಮಾಜಿ ಕೌನ್ಸಿಲರ್ ಯು .ಎ.ಇಸ್ಮಾಯಿಲ್ ಮತ್ತಿತರರು ಉಪಸ್ಥಿತರಿದ್ದರು.

ವಾರ್ತಾ ಭಾರತಿ 17 Feb 2026 10:14 pm

ಬೆಂಗಳೂರಿನ ಯಲಹಂಕದಲ್ಲಿ ದೇಶದಲ್ಲಿಅತಿ ದೊಡ್ಡ ರೈಲ್ವೆ ಮೆಗಾ ಕೋಚಿಂಗ್‌ ಟರ್ಮಿನಲ್‌ ಸ್ಥಾಪನೆ: ವಿ ಸೋಮಣ್ಣ

ಬೆಂಗಳೂರು ಯಲಹಂಕದಲ್ಲಿ ರೈಲ್ವೆ ಮೆಗಾ ಕೋಚಿಂಗ್‌ ಟರ್ಮಿನಲ್‌ ನಿರ್ಮಾಣ ಮಾಡುತ್ತಿದ್ದು, ಇದು ದೇಶದ ಅತಿ ದೊಡ್ಡದಾದ ಕೋಚಿಂಗ್‌ ಸೆಂಟರ್‌ ಆಗಲಿದೆ ಎಂದು ಕೇಂದ್ರ ಸಚಿವ ವಿ ಸೋಮಣ್ಣ ತಿಳಿಸಿದ್ದಾರೆ. ಜತೆಗೆ ಬೆಂಗಳೂರು ತುಮಕೂರು ನಡುವೆ 4 ಪಥದ ರೈಲು ಮಾರ್ಗಕ್ಕೆ ಡಿಪಿಆರ್ ಆಗಲಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.

ವಿಜಯ ಕರ್ನಾಟಕ 17 Feb 2026 10:11 pm

ಸರಕಾರಿ ಶಾಲೆಗಳ ಸೊತ್ತಿಗೆ ಕಿಡಿಗೇಡಿಗಳಿಂದ ಹಾನಿ: ಪ್ರಕರಣ ದಾಖಲು

ಕೋಟ, ಫೆ.17: ಕೆದೂರು ಸರಕಾರಿ ಫ್ರೌಡಶಾಲೆಗೆ ಫೆ.14ರಂದು ರಾತ್ರಿ ವೇಳೆ ನುಗ್ಗಿದ ಕಿಡಿಗೇಡಿಗಳು, ಶಾಲೆಗಳ ಸೊತ್ತುಗಳನ್ನು ಹಾನಿ ಎಸಗಿರುವ ಬಗ್ಗೆ ವರದಿಯಾಗಿದೆ. ಶಾಲಾ ಆವರಣಕ್ಕೆ ನುಗ್ಗಿದ ಕಿಡಿಗೇಡಿಗಳು ಶಾಲೆಯ ನೋಟೀಸ್ ಬೋರ್ಡ್‌ನ ಗಾಜು ಒಡೆದಿದ್ದು, ಒಂದು ತರಗತಿ ಕೋಣೆಗೆ ನುಗ್ಗಿ ಅಲ್ಲಿ ಗೋಡೆಗೆ ಅಳವಡಿಸಿರುವ ಬ್ಯಾನರ್‌ಗಳನ್ನು ಕೆಳಗೆ ಹಾಕಿದ್ದಾರೆನ್ನಲಾಗಿದೆ. ಅಲ್ಲದೆ ಆ ಕೋಣೆ ಯಲ್ಲಿ ಬೆಂಕಿ ಪೆಟ್ಟಿಗೆ ಹಾಗೂ ಟಿಶ್ಯೂ ಪೇಪರ್‌ಗಳು ಕೂಡ ಕಂಡುಬಂದಿದ್ದು, ಹುಡುಗರ ಶೌಚಾಲಯದಲ್ಲಿರುವ ನಳ್ಳಿಗಳನ್ನು ಕಿತ್ತು ಹಾಕಲಾಗಿದೆ. ಕೈ ತೊಳೆಯುವ ಸ್ಟೀಲ್ ಸಿಂಕನ್ನು ಕಿತ್ತು ಶಾಲೆಯ ಮಧ್ಯದ ಗ್ರೌಂಡ್ನಲ್ಲಿ ಬಿಸಾಡಿರುವುದಾಗಿ ಮುಖ್ಯೋಪಾಧ್ಯಾಯಿನಿ ಗೀತಾ ದೂರಿನಲ್ಲಿ ತಿಳಿಸಿದ್ದಾರೆ. ಅದರಂತೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಾರ್ತಾ ಭಾರತಿ 17 Feb 2026 10:07 pm

ಒಮಾನ್‌ ಹೊರತುಪಡಿಸಿ ಗಲ್ಫ್ ರಾಷ್ಟ್ರಗಳಲ್ಲಿ ಬುಧವಾರ(ಫೆ.18)ದಿಂದ ರಮಝಾನ್ ಉಪವಾಸ ಆರಂಭ

ಜಿದ್ದಾ,ಫೆ.17: ರಮಝಾನ್ ತಿಂಗಳ ಚಂದ್ರದರ್ಶನವಾದ ಹಿನ್ನೆಲೆಯಲ್ಲಿ ಒಮಾನ್ ಹೊರತುಪಡಿಸಿ ಗಲ್ಫ್ ರಾಷ್ಟ್ರಗಳಲ್ಲಿ ಬುಧವಾರ(ಫೆ.18)ದಿಂದ ರಮಝಾನ್ ಉಪವಾಸ ಆರಂಭವಾಗಲಿದೆ. ಸೌದಿ ಅರೇಬಿಯ, ಯುಎಇ, ಕುವೈತ್, ಬಹರೈನ್, ಖತರ್ ನಲ್ಲಿ ಚಂದ್ರದರ್ಶನವಾಗಿದ್ದು, ಅಲ್ಲಿ ಬುಧವಾರದಿಂದ ರಮಝಾನ್ ಉಪವಾಸ ಆರಂಭಗೊಳ್ಳಲಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಒಮಾನ್ ನಲ್ಲಿ ಮಾತ್ರ ಗುರುವಾರ(ಫೆ.19)ದಿಂದ ರಮಝಾನ್ ಉಪವಾಸ ಆರಂಭವಾಗಲಿದೆ.

ವಾರ್ತಾ ಭಾರತಿ 17 Feb 2026 10:06 pm

ಮಂಗಳೂರು: ಬಿಲ್ಲವ ಸಂಘಟನೆಗಳಿಂದ ಫೆ.21ಕ್ಕೆ ಕುದ್ರೋಳಿ ಕ್ಷೇತ್ರ ತೀರ್ಥಾಟನೆ

ಉಡುಪಿ: ಮಂಗಳೂರು ಕುದ್ರೋಳಿಯ ಶ್ರೀಗೋಕರ್ಣನಾಥ ಕ್ಷೇತ್ರದಲ್ಲಿ ಬ್ರಹ್ಮಶ್ರೀ ನಾರಾಯಣಗುರುಗಳು ಶಿವಲಿಂಗ ಪ್ರತಿಷ್ಠಾಪನೆ ಮಾಡಿ ಸಮಾನತೆ, ಆತ್ಮಗೌರವ ಹಾಗೂ ಮಾನವೀಯತೆಯನ್ನು ಜಗತ್ತಿಗೆ ಸಾರಿದ 1912 ಫೆ.21ರ ಕ್ಷಣವನ್ನು ನೆನಪಿಸಿಕೊಳ್ಳಲು ಇದೇ ಫೆ.21ರಂದು ಬಿಲ್ಲವ ಸಮುದಾಯದ ಎಲ್ಲಾ ಸಂಘಟನೆಗಳು ಸೇರಿಕೊಂಡು ಕುದ್ರೋಳಿ ಕ್ಷೇತ್ರ ತೀರ್ಥಾಟನೆಯನ್ನು ಹಮ್ಮಿಕೊಂಡಿದೆ ಎಂದು ಕುದ್ರೋಳಿ ಶ್ರೀಗೋಕಣನಾಥ ಕ್ಷೇತ್ರಾಡಳಿತ ಸಮಿತಿಯ ಜಯರಾಮ್ ತಿಳಿಸಿದ್ದಾರೆ. ಉಡುಪಿ ಪ್ರೆಸ್‌ಕ್ಲಬ್‌ನಲ್ಲಿ ಇಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇದೇ ಫೆ.21ರಂದು ನಮ್ಮ ನಡಿಗೆ-ಶ್ರೀಗುರುವಿನೆಡೆಗೆ ಎಂಬ ಸಂಕಲ್ಪದೊಂದಿಗೆ ಶ್ರೀಕುದ್ರೋಳಿ ಕ್ಷೇತ್ರ ತೀರ್ಥಾಟನೆಯನ್ನು ಹಮ್ಮಿಕೊಳ್ಳಲಾಗಿದೆ. ಗುರುಗಳ ಜ್ಞಾನದ ಸಂಕೇತವಾದ ಹಳದಿ ವಸ್ತ್ರಧಾರಣೆಯೊಂದಿಗೆ ಈ ಯಾತ್ರೆ ಸಮಾಜ ಜಾಗೃತಿಯ ಸಂಕಲ್ಪದೊಂದಿಗೆ ನಡೆಯಲಿದೆ ಎಂದರು. ಕುದ್ರೋಳಿ ಶ್ರೀಗೋಕರ್ಣನಾಥ ಕ್ಷೇತ್ರದ ನೇತೃತ್ವದಲ್ಲಿ ಶ್ರೀನಾರಾಯಣ ಗುರು ಸಂಘಗಳು ಹಾಗೂ ಬಿಲ್ಲವ ಸಮುದಾಯದ ವಿವಿಧ ಸಂಘಸಂಸ್ಥೆಗಳ ಸಹಭಾಗಿತ್ವದೊಂದಿಗೆ ತೀರ್ಥಾಟನೆ ನಡೆಯಲಿದೆ. ಗುರುಗಳು ಅಂದು ಶಿವಲಿಂಗವನ್ನು ರೈಲಿನ ಮೂಲಕ ಮಂಗಳೂರಿನ ರೈಲು ನಿಲ್ದಾಣಕ್ಕೆ ತಂದ ನೆನಪನ್ನು ಮಾಡಿಕೊಳ್ಳಲು ಫೆ.21ರ ಬೆಳಗ್ಗೆ 9ಗಂಟೆಗೆ ಮಂಗಳೂರು ರೈಲ್ವೆ ನಿಲ್ದಾಣದಿಂದ ತೀರ್ಥಾಟನೆಯನ್ನು ಟ್ಯಾಬ್ಲೋದೊಂದಿಗೆ ನೆಹರೂ ಮೈದಾನದವರೆಗೆ ನಡೆಸಲಾಗುವುದು. ಬಳಿಕ ಅಲ್ಲಿಂದ 9:30ಕ್ಕೆ ಶ್ರೀಕ್ಷೇತ್ರಕ್ಕೆ ಯಾತ್ರೆ ನಡೆಯಲಿದೆ ಎಂದು ವಿವರಿಸಿದರು. ಪತ್ರಿಕಾಗೋಷ್ಠಿಯಲ್ಲಿ ಹಿರಿಯ ತುಳು ವಿದ್ವಾಂಸ ಬನ್ನಂಜೆ ಬಾಬು ಅಮೀನ್, ಬಿಲ್ಲವ ಮುಖಂಡರಾದ ಬಿ.ಎಲ್.ಶಂಕರ ಪೂಜಾರಿ, ರಘುನಾಥ್ ಮಾಬೆಲ್, ಪ್ರತಾಪ್ ಕುಮಾರ್ ಉಪಸ್ಥಿತರಿದ್ದರು.

ವಾರ್ತಾ ಭಾರತಿ 17 Feb 2026 10:02 pm

ಹನೆಹಳ್ಳಿ ಕೃಷ್ಣ ಗುಂಡಿಕ್ಕಿ ಕೊಲೆ ಪ್ರಕರಣ: ಸಿಐಡಿ ತನಿಖೆಗೆ ಆಗ್ರಹಿಸಿ ಫೆ.19ರಂದು ಪ್ರತಿಭಟನೆ

ಉಡುಪಿ, ಫೆ.17: ಬ್ರಹ್ಮಾವರ ತಾಲೂಕು ಹನೆಹಳ್ಳಿ ಗ್ರಾಮದಲ್ಲಿ ದಿನಕೂಲಿ ಕಾರ್ಮಿಕ, ಪರಿಶಿಷ್ಟ ಜನಾಂಗದ ಕೃಷ್ಣ ಎಂಬವರನ್ನು ಗುಂಡಿಕ್ಕಿ ಬರ್ಬರ ಹತ್ಯೆ ಮಾಡಿ ಎರಡು ವರ್ಷ ಸಂದರೂ ಆರೋಪಿಗಳನ್ನು ಪತ್ತೆ ಮಾಡುವಲ್ಲಿ ಪೊಲೀಸ್ ಇಲಾಖೆ ವೈಫಲ್ಯ ಹಾಗೂ ಪ್ರಕರಣದ ತನಿಖೆಯನ್ನು ಸಿಐಡಿಗೆ ಒಪ್ಪಿಸಬೇಕೆಂದು ಒತ್ತಾಯಿಸಿ ಸಮತಾ ಸೈನಿಕ ದಳದ ಉಡುಪಿ ಜಿಲ್ಲಾ ಸಮಿತಿ ಫೆ.19ರಂದು ಪ್ರತಿಭಟನೆ ಹಮ್ಮಿಕೊಂಡಿದೆ ಎಂದು ಉಡುಪಿ ಜಿಲ್ಲಾಧ್ಯಕ್ಷ ವಿಶ್ವನಾಥ ಪೇತ್ರಿ ತಿಳಿಸಿದ್ದಾರೆ. ಅಂದು ಬೆಳಗ್ಗೆ 11 ಗಂಟೆಗೆ ಸಿಐಡಿ ತನಿಖೆಗೆ ಆಗ್ರಹವೂ ಸೇರಿದಂತೆ ವಿವಿಧ ವಿಷಯಗಳ ಮೇಲೆ ಸಮತಾ ಸೈನಿಕ ದಳದ ಕಾರ್ಯಕರ್ತರು ಕಪ್ಪುಪಟ್ಟಿ ಧರಿಸಿ ಉಡುಪಿ ಜಿಲ್ಲಾ ಕಾಂಗ್ರೆಸ್ ಕಚೇರಿ ಮುಂದೆ ಧರಣಿ ಪ್ರತಿಭಟನೆ ನಡೆಸಲಿದ್ದಾರೆ ಎಂದು ಅವರು ಹೇಳಿದರು. ಅಂಬೇಡ್ಕರ್ ಆವಾಜ್ ಯೋಜನೆಯಡಿ ಮನೆ ನಿರ್ಮಾಣಕ್ಕೆ ನೀಡುವ ಹಣವನ್ನು 9 ಲಕ್ಷ ರೂ.ಗಳಿಗೆ ಏರಿಸಬೇಕು, ಓಬಿಸಿ ಬಸವ ಇಂದಿರಾ ಆವಾಜ್ ಮನೆ ನಿರ್ಮಾಣಕ್ಕೆ ಕನಿಷ್ಠ 5 ಲಕ್ಷ ರೂ.ಸಹಾಯಧನವನ್ನು ನೀಡುವ ಬಗ್ಗೆ ಬಜೆಟ್‌ನಲ್ಲಿ ಘೋಷಣೆ ಮಾಡಬೇಕೆಂಬುದು ತಮ್ಮ ಇತರ ಬೇಡಿಕೆಗಳು ಎಂದು ವಿಶ್ವನಾಥ್ ಪೇತ್ರಿ ತಿಳಿಸಿದರು.

ವಾರ್ತಾ ಭಾರತಿ 17 Feb 2026 10:01 pm

ದಿಲ್ಲಿ ವಿವಿ ಕ್ಯಾಂಪಸ್‌ನಲ್ಲಿ ಪ್ರತಿಭಟನೆ, ಬಹಿರಂಗ ಸಭೆಗಳಿಗೆ ಒಂದು ತಿಂಗಳು ನಿಷೇಧ

ಹೊಸದಿಲ್ಲಿ,ಫೆ.17: ದಿಲ್ಲಿ ವಿವಿ ಕ್ಯಾಂಪಸ್‌ನಲ್ಲಿ ಬಹಿರಂಗ ಸಭೆಗಳು, ಮೆರವಣಿಗೆಗಳು ಮತ್ತು ಯಾವುದೇ ರೀತಿಯ ಪ್ರತಿಭಟನೆಗಳನ್ನು ನಡೆಸುವುದನ್ನು ಫೆ.17ರಿಂದ ಒಂದು ತಿಂಗಳು ಕಾಲ ನಿಷೇಧಿಸಲಾಗಿದೆ. ವಿವಿಯ ಶಿಸ್ತುಪಾಲನಾ ಅಧಿಕಾರಿ ಪ್ರೊ.ಮನೋಜಕುಮಾರ್ ಅವರು ಮಂಗಳವಾರ ಹೊರಡಿಸಿರುವ ಆದೇಶವು ವಿದ್ಯಾರ್ಥಿಗಳು,ಅಧ್ಯಾಪಕರು ಮತ್ತು ಸಿಬ್ಬಂದಿಗಳಿಗೆ ಅನ್ವಯಿಸುತ್ತದೆ. ಕ್ಯಾಂಪಸ್‌ನಲ್ಲಿ ಅನಿರ್ಬಂಧಿತ ಬಹಿರಂಗ ಸಮಾವೇಶಗಳು ಸಂಚಾರಕ್ಕೆ ಅಡ್ಡಿ,ಮಾನವ ಜೀವಕ್ಕೆ ಬೆದರಿಕೆ ಮತ್ತು ಸಾರ್ವಜನಿಕ ಶಾಂತಿಭಂಗಕ್ಕೆ ಕಾರಣವಾಗಬಹುದು ಎಂಬ ಮಾಹಿತಿಯ ಹಿನ್ನೆಲೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಕುಮಾರ್ ತನ್ನ ಆದೇಶದಲ್ಲಿ ತಿಳಿಸಿದ್ದಾರೆ. ಈ ಹಿಂದೆ ಹೆಚ್ಚಿನ ಸಂದರ್ಭಗಳಲ್ಲಿ ಪ್ರತಿಭಟನೆಗಳನ್ನು ನಿಯಂತ್ರಿಸಲು ಸಂಘಟಕರು ವಿಫಲಗೊಂಡಿದ್ದರು,ಪರಿಣಾಮವಾಗಿ ವಿವಿ ಕ್ಯಾಂಪಸ್‌ನಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಸ್ಥಿತಿಯು ಹದಗೆಟ್ಟಿತ್ತು ಎಂದು ಆದೇಶವು ಬೆಟ್ಟು ಮಾಡಿದೆ. ಕೇಂದ್ರ ಗೃಹ ಸಚಿವಾಲಯದ ಅಧಿಸೂಚನೆಯ ಆಧಾರದಲ್ಲಿ ಸಹಾಯಕ ಪೋಲಿಸ್ ಆಯುಕ್ತರು ಡಿ.26,2025ರಂದು ಹೊರಡಿಸಿದ್ದ ಆದೇಶವನ್ನೂ ಕುಮಾರ್ ಉಲ್ಲೇಖಿಸಿದ್ದಾರೆ. ಈ ಆದೇಶದ ಪ್ರಕಾರ ಸಾರ್ವಜನಿಕ ಶಾಂತಿಯನ್ನು ಕದಡುವ ಅಥವಾ ಸುಗಮ ಸಂಚಾರಕ್ಕೆ ಅಡ್ಡಿಯನ್ನುಂಟು ಮಾಡುವ ಯಾವುದೇ ಬಹಿರಂಗ ಸಭೆ,ರ್ಯಾಲಿ, ಧರಣಿ,ಪ್ರತಿಭಟನೆ ಅಥವಾ ಇತರ ಯಾವುದೇ ಚಟುವಟಿಕೆಯನ್ನು ವಿವಿ ಕ್ಯಾಂಪಸ್‌ನೊಳಗೆ ನಿಷೇಧಿಸಲಾಗಿದೆ. ಇದೀಗ ಶಿಸ್ತುಪಾಲನಾ ಅಧಿಕಾರಿಗಳು ಹೊರಡಿಸಿರುವ ಆದೇಶವು ಈ ನಿರ್ಬಂಧಗಳನ್ನು ಪುನರುಚ್ಚರಿಸಿದ್ದು,ಒಂದು ತಿಂಗಳು ಕಾಲ ಜಾರಿಯಲ್ಲಿರುತ್ತದೆ. ಫೆ.13ರಂದು ವಿವಿಯ ಉತ್ತರ ಕ್ಯಾಂಪಸ್‌ನಲ್ಲಿ ಪ್ರತಿಭಟನೆ ಸಂದರ್ಭದಲ್ಲಿ ಮಹಿಳಾ ಪತ್ರಕರ್ತೆ ಮತ್ತು ಕಂಟೆಂಟ್ ಕ್ರಿಯೇಟರ್ ಮೇಲೆ ನಡೆದಿದ್ದ ಹಲ್ಲೆಗೆ ಸಂಬಂಧಿಸಿದಂತೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವು (ಎನ್‌ಎಚ್‌ಆರ್‌ಸಿ) ಉತ್ತರ ದಿಲ್ಲಿ ಡಿಸಿಪಿ ಮತ್ತು ದಿಲ್ಲಿ ವಿವಿ ಕುಲಪತಿಗಳಿಗೆ ನೋಟಿಸ್‌ಗಳನ್ನು ಹೊರಡಿಸಿತ್ತು. ಅದರ ಬೆನ್ನಲ್ಲೇ ಈ ಆದೇಶ ಹೊರಬಿದ್ದಿದೆ. ಎನ್‌ಎಚ್‌ಆರ್‌ಸಿ ಪ್ರಕಾರ ವಿಶ್ವವಿದ್ಯಾಲಯ ಧನಸಹಾಯ ಆಯೋಗವನ್ನು ಬೆಂಬಲಿಸಿ ನಡೆದಿದ್ದ ಮತ ಪ್ರದರ್ಶನದ ವರದಿಗಾರಿಕೆಯನ್ನು ಮಾಡುತ್ತಿದ್ದಾಗ ಗುಂಪೊಂದು ಪತ್ರಕರ್ತೆಯ ಮೇಲೆ ಹಲ್ಲೆ ನಡೆಸಿತ್ತು. ಪತ್ರಕರ್ತೆಯ ಜಾತಿಯಿಂದಾಗಿ ಗುಂಪು ಆಕೆಯನ್ನು ಗುರಿಯಾಗಿಸಿಕೊಂಡಿತ್ತು, ನಿಂದಿಸಿತ್ತು ಮತ್ತು ದೈಹಿಕ ಹಲ್ಲೆಯನ್ನು ನಡೆಸಿತ್ತು. ಜೊತೆಗೆ ಇನ್ನಷ್ಟು ಹಾನಿಯನ್ನುಂಟು ಮಾಡುವ ಬೆದರಿಕೆಯನ್ನು ಒಡ್ಡಿತ್ತು. ಪತ್ರಕರ್ತೆಯ ಘನತೆಗೆ ಕುಂದನ್ನುಂಟು ಮಾಡುವ ಪ್ರಯತ್ನವೂ ನಡೆದಿತ್ತು ಎಂದು ದೂರಿನಲ್ಲಿ ಹೇಳಲಾಗಿದೆ. ಇದು ಜಾತಿ ಆಧಾರಿತ ಹಿಂಸಾಚಾರದ ಪ್ರಕರಣವಾಗಿದೆ ಮತ್ತು ಪತ್ರಿಕಾ ಸ್ವಾತಂತ್ರ್ಯದ ಮೇಲಿನ ನೇರ ದಾಳಿಯಾಗಿದೆ ಎಂದೂ ಅವರು ಆರೋಪಿಸಿದ್ದಾರೆ. ಆದಾಗ್ಯೂ ಬೋಧಕ ವೃಂದದ ಕೆಲವರು ನಿಷೇಧ ಆದೇಶವನ್ನು ತೀವ್ರವಾಗಿ ಟೀಕಿಸಿದ್ದು, ಅದನ್ನು ತಕ್ಷಣ ಹಿಂದೆಗೆದುಕೊಳ್ಳುವಂತೆ ಆಗ್ರಹಿಸಿದ್ದಾರೆ.

ವಾರ್ತಾ ಭಾರತಿ 17 Feb 2026 9:55 pm

ಉತ್ತರ ಕರ್ನಾಟಕದ ಎರಡು ಜಿಲ್ಲೆಗಳು ಸೇರಿದಂತೆ ರಾಜ್ಯದ ಒಂಬತ್ತು ಪ್ರಮುಖ ರಸ್ತೆಗಳ ಜವಾಬ್ದಾರಿ ಎನ್‌ಎಚ್‌ಎಐ ಹೆಗಲಿಗೆ

NHAI: ರಾಜ್ಯದ ಒಂಬತ್ತು ಪ್ರಮುಖ ರಸ್ತೆಗಳನ್ನು ರಾಜ್ಯ ಲೋಕೋಪಯೋಗಿ ಇಲಾಖೆಯ ವ್ಯಾಪ್ತಿಯಿಂದ ಹೊರತೆಗೆದು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI)ಕ್ಕೆ ಹಸ್ತಾಂತರಿಸಲು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಅನುಮತಿ ನೀಡಿದೆ. ಈ ಕ್ರಮದಿಂದ ರಾಜ್ಯದಲ್ಲಿ ರಸ್ತೆ ಅಭಿವೃದ್ಧಿ ಹಾಗೂ ನಿರ್ವಹಣಾ ವ್ಯವಸ್ಥೆಯನ್ನು ಇನ್ನಷ್ಟು ಸಮರ್ಥವಾಗಿ ನಡೆಸಲು ಸಾಧ್ಯವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ತಮಿಳುನಾಡು, ಕೇರಳ

ಒನ್ ಇ೦ಡಿಯ 17 Feb 2026 9:42 pm