ಬ್ಲಡ್ ಡೋನರ್ಸ್ ಮಂಗಳೂರು: 13ನೇ ವರ್ಷದ ಅಂಗವಾಗಿ 13 ಕಡೆಗಳಲ್ಲಿ ರಕ್ತದಾನ ಶಿಬಿರ
ಉಳ್ಳಾಲ: ಬ್ಲಡ್ ಡೋನರ್ಸ್ ಮಂಗಳೂರು ಸಂಸ್ಥೆಯ ಹದಿಮೂರನೇ ವರ್ಷದ ಅಂಗವಾಗಿ ವಿವಿಧ ಕಡೆಗಳಲ್ಲಿ ಒಟ್ಟು ಹದಿಮೂರು ರಕ್ತದಾನ ಶಿಬಿರಗಳನ್ನು ನಡೆಸುತ್ತಿದ್ದು, ರಕ್ತದ ಕೊರತೆಯನ್ನು ನೀಗಿಸಲು ಅಗತ್ಯವಿರುವ ಎಲ್ಲಾ ವ್ಯವಸ್ಥೆಯನ್ನು ಸಂಸ್ಥೆಯ ತಂಡದಿಂದ ಕೈಗೊಳ್ಳಲಾಗಿದೆ. ಕಳೆದ ರಂಝಾನ್ ತಿಂಗಳಲ್ಲಿ ಹಗಲಿನಲ್ಲಿ ರಕ್ತದಾನ ಶಿಬಿರಗಳು ನಡೆಯದ ಪರಿಸ್ಥಿತಿಯಲ್ಲಿಯೂ, ನಮ್ಮ ತಂಡ ರಾತ್ರಿ ಸಮಯದಲ್ಲಿ ರಕ್ತದಾನಿಗಳನ್ನು ನೇರವಾಗಿ ಬ್ಲಡ್ ಬ್ಯಾಂಕ್ಗೆ ಕರೆದುಕೊಂಡು ಹೋಗಿ ರಕ್ತದಾನ ಮಾಡಿಸುವ ಮೂಲಕ ಮಾನವೀಯ ಸೇವೆಯನ್ನು ಮುಂದುವರಿಸಿದೆ ಎಂದು ಸಂಸ್ಥೆಯ ಅಧ್ಯಕ್ಷ ನವಾಝ್ ನರಿಂಗಾನ ಹೇಳಿದರು. ಉಳ್ಳಾಲ ಪ್ರೆಸ್ ಕ್ಲಬ್ನಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಸ್ಥೆಯ ವತಿಯಿಂದ ಇದುವರೆಗೆ 550ಕ್ಕೂ ಹೆಚ್ಚು ರಕ್ತದಾನ ಶಿಬಿರಗಳನ್ನು ಯಶಸ್ವಿಯಾಗಿ ಆಯೋಜಿಸಿ 1,20,000 ಯೂನಿಟ್ ರಕ್ತ ಸಂಗ್ರಹಣೆ ಮಾಡಿದ್ದೇವೆ. ಆ ಹಿನ್ನೆಲೆಯಲ್ಲಿ ರಕ್ತದಾನ ಶಿಬಿರಗಳನ್ನು ಏರ್ಪಡಿಸಲು ಸಹಕರಿಸಿದ ಎಲ್ಲಾ ಸಂಘಟನೆಗಳು ಮತ್ತು ಸಂಯೋಜಕರನ್ನು ಗುರುತಿಸಿ ಸನ್ಮಾನಿಸುವುದು ಹಾಗೂ 50ಕ್ಕಿಂತ ಹೆಚ್ಚು ಬಾರಿ ರಕ್ತದಾನ ಮಾಡಿದ ದಾನಿಗಳನ್ನು ಗೌರವಿಸುವುದು ನಮ್ಮ ಮುಖ್ಯ ಉದ್ದೇಶವಾಗಿದೆ ಎಂದರು. ಈಗಾಗಲೇ ಕೊಕ್ಕಡ, ಮಾಡವು, ಚಾರ್ಮಾಡಿಯಲ್ಲಿ ಶಿಬಿರಗಳನ್ನು ನಡೆಸಲಾಗಿದ್ದು, ಏಪ್ರಿಲ್ 5ರಂದು ಮದನಿ ನಗರ, ಬೋಳೂರು, ಅಂಗರಗುಂಡಿ ಹಾಗೂ ಕಳಸದಲ್ಲಿ, ಏಪ್ರಿಲ್ 7ರಂದು ವಿಟ್ಲದಲ್ಲಿ, ಏಪ್ರಿಲ್ 8ರಂದು ಮಾಚಾರ್ನಲ್ಲಿ, ಏಪ್ರಿಲ್ 10ರಂದು ದುಬೈನಲ್ಲಿ, ಏಪ್ರಿಲ್ 12ರಂದು ಕುಶಾಲನಗರ ಹಾಗೂ ಹೊನ್ನಾವರದಲ್ಲಿ ಶಿಬಿರಗಳು ನಡೆಯಲಿವೆ. ಜೂನ್ 13ರಂದು ನಗರದ ಪುರಭವನದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಐವತ್ತಕ್ಕಿಂತ ಹೆಚ್ಚು ಬಾರಿ ರಕ್ತದಾನ ಮಾಡಿದ ವ್ಯಕ್ತಿಗಳನ್ನು ಗುರುತಿಸಿ “ರಕ್ತ ಯೋಧ ಪ್ರಶಸ್ತಿ” ನೀಡಲು ತೀರ್ಮಾನಿಸಲಾಗಿದೆ. ಅಂತಹ ವ್ಯಕ್ತಿಗಳನ್ನು ಗುರುತಿಸಲು ಈಗಾಗಲೇ ಎಲ್ಲಾ ಬ್ಲಡ್ ಬ್ಯಾಂಕ್ಗಳು ಹಾಗೂ ಸಂಬಂಧಪಟ್ಟ ಸಂಸ್ಥೆಗಳಿಗೆ ಮಾಹಿತಿ ನೀಡಲಾಗಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಉಪಾಧ್ಯಕ್ಷ ಅಶ್ರಫ್ ಸಿ.ಎಂ. ಉಪ್ಪಿನಂಗಡಿ, ಪ್ರಧಾನ ಕಾರ್ಯದರ್ಶಿ ಶಾಹುಲ್ ಹಮೀದ್ ಕಾಶಿಪಟ್ನ, ಶಿಬಿರ ಆಯೋಜಕ ಫರ್ಝಾನ್ ಅಹ್ಮದ್, ಕಾರ್ಯದರ್ಶಿ ನಿಸಾರ್ ಉಳ್ಳಾಲ ಹಾಗೂ ಸಂಘಟನಾ ಕಾರ್ಯದರ್ಶಿ ಅಬ್ದುಸ್ಸಲಾಂ ಚೆಂಬುಗುಡ್ಡೆ ಉಪಸ್ಥಿತರಿದ್ದರು.
ಗುರುಪುರ : ಮೂಳೂರು–ಅಡ್ಡೂರು ಜೋಡುಕರೆ ಕಂಬಳಕ್ಕೆ ಚಾಲನೆ
ಗುರುಪುರ: ಮೂಳೂರು–ಅಡ್ಡೂರು ಜೋಡುಕರೆ ಕಂಬಳ ಸಮಿತಿ ಅಧ್ಯಕ್ಷ ಹಾಗೂ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ ಅವರ ಅಧ್ಯಕ್ಷತೆಯಲ್ಲಿ 3ನೇ ವರ್ಷದ ಮೂಳೂರು–ಅಡ್ಡೂರು ಜೋಡುಕರೆ ಗುರುಪುರ ಕಂಬಳವು ಶನಿವಾರ ಗುರುಪುರ ಮಾಣಿಬೆಟ್ಟು ಗುತ್ತಿನಲ್ಲಿ ಆರಂಭಗೊಂಡಿತು. ಕಂಬಳವನ್ನು ಉದ್ಘಾಟಿಸಿ ಮಾತನಾಡಿದ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಅರ್ಚಕರಾದ ಅನಂತ ಪದ್ಮನಾಭ ಅಸ್ರಣ್ಣ ಅವರು, ಕಂಬಳದಲ್ಲಿ ಕೋಣಗಳಿಗೆ ಮಹತ್ವ ಇರುವಂತೆಯೇ ಪ್ರೇಕ್ಷಕರಿಗೂ ಇದೆ. ಹಾಗಾಗಿ ಎಲ್ಲರೂ ಒಂದುಗೂಡಿ ತುಳುನಾಡಿನ ಅಸ್ಮಿತೆಯಾಗಿರುವ ಕಂಬಳವನ್ನು ಪ್ರೋತ್ಸಾಹಿಸಬೇಕೆಂದರು. ಇನಾಯತ್ ಅಲಿ ಅವರು ಗುಣವಂತರು, ಎಲ್ಲಾ ಸಮಾಜಗಳನ್ನು ಪ್ರೀತಿಯಿಂದ ನಡೆಸಿಕೊಳ್ಳುವ ಹೃದಯ ಶ್ರೀಮಂತರು. ಅವರು ಕಂಬಳದ ಮೂಲಕ ದಕ್ಷಿಣ ಕನ್ನಡ ಜಿಲ್ಲೆಯ ಸಂಸ್ಕೃತಿಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳಗಿಸುತ್ತಿದ್ದಾರೆ ಎಂದು ಶುಭಹಾರೈಸಿದರು. ಉದ್ಘಾಟನಾ ಸಮಾರಂಭದಲ್ಲಿ ದೀಪಬೆಳಗಿ ಮಾತನಾಡಿದ ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಅಜಿತ್ ರೈ ಮಾಲಾಡಿ ಅವರು, ಇನಾಯತ್ ಅಲಿ ಅವರ ನೇತೃತ್ವದಲ್ಲಿ ನಡೆಯುತ್ತಿರುವ 3ನೇ ವರ್ಷದ ಕಂಬಳವು ಎಲ್ಲಾ ಕಂಬಳಗಳಿಗಿಂತಲೂ ವಿಭಿನ್ನವಾಗಿ, ವಿಶಿಷ್ಟವಾಗಿ ನಡೆಯುತ್ತಿದೆ ಎಂದರು. ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮೂಳೂರು–ಅಡ್ಡೂರು ಜೋಡುಕೆರೆ ಕಂಬಳ ಸಮಿತಿ ಅಧ್ಯಕ್ಷ ಹಾಗೂ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ ವಹಿಸಿದ್ದರು. ಇದೇ ವೇಳೆ ಅಶಕ್ತ ಕುಟುಂಬಗಳಿಗೆ ವಿವಾಹ, ಮನೆ ನಿರ್ಮಾಣ ಸೇರಿದಂತೆ ಸಮಾಜಮುಖಿ ಕೆಲಸಗಳಿಗಾಗಿ 25 ಲಕ್ಷ ರೂ. ಮೊತ್ತದ ಸಹಾಯಧನವನ್ನು ಹಸ್ತಾಂತರಿಸಲಾಯಿತು. ಈ ಸಂದರ್ಭ ಮೂಳೂರು ಮುಂಡಿತ್ತಾಯ ದೈವಸ್ಥಾನದ ತಂತ್ರಿಗಳಾದ ಜಿ.ಟಿ. ವಾಸುದೇವ ಭಟ್, ಜಿಲ್ಲಾ ಕಂಬಳ ಸಮಿತಿಯ ಕಾರ್ಯಾಧ್ಯಕ್ಷ ಗುಣಪಾಲ ಕಡಂಬ, ಮಾಣೂರು ಸುಬ್ರಾಯ ದೇವಸ್ಥಾನದ ಅಧ್ಯಕ್ಷ ಶಶಿಧರ್ ಭಟ್ ಬೊಳ್ಮಾರುಗುತ್ತು, ಗೋಳಿದಡಿ ಗುತ್ತು ಗಡಿಕಾರರಾದ ವರ್ಧಮಾನ್ ಶೆಟ್ಟಿ, ಕೊಡೆತ್ತೂರು ಗುತ್ತಿನ ಗುತ್ತಿನಾರ್ ನಿತಿನ್ ಶೆಟ್ಟಿ, ಪದ್ಮರಾಜ್ ಆರ್. ಪೂಜಾರಿ, ರವೀಶ್ ಶೆಟ್ಟಿ ನಿಟ್ಟೆಗುತ್ತು, ಗುರುಪುರ ವೆಂಕಟರಮಣ ದೇವಳದ ಆಡಳಿತ ಮೊಕ್ತೇಸರರಾದ ಪಾಂಡುರಂಗ ಕಾಮತ್, ಅದ್ಯಪಾಡಿ ದೈವಲಂಗಲಗುಡ್ಡೆ ನೀಲಕಂಠ ಉಮಾಮಹೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಮಂಜುನಾಥ ಭಂಡಾರಿ, ದೋಣಿಂಜೆ ಗುತ್ತು ಗಡಿಪ್ರಧಾನರಾದ ಪ್ರಮೋದ್ ಕುಮಾರ್ ರೈ, ಚಂದ್ರಹಾಸ ಪೂಜಾರಿ, ತನಿಯಪ್ಪ ಪೂಜಾರಿ, ಜತ್ತಿ ಪೂಜಾರಿ, ರಾಜ್ಯ ಧಾರ್ಮಿಕ ಪರಿಷತ್ ಸದಸ್ಯೆ ಮಲ್ಲಿಕಾ ಪಕ್ಕಳ, ಪುರುಷೋತ್ತಮ ಚಿತ್ರಾಪುರ, ಎಂ.ಜೆ. ಹೆಗಡೆ, ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಲಕ್ಷ್ಮೀಶ ಗಬಲಡ್ಕ, ಶಿವರಾಮ ಮಲ್ಲಿ, ಶಾಲೆಟ್ ಪಿಂಟೊ, ಕಂಬಳ ಸಮಿತಿಯ ಗೌರವಾಧ್ಯಕ್ಷ ಪದ್ಮನಾಭ ಕೋಟ್ಯಾನ್, ಕಾರ್ಯಾಧ್ಯಕ್ಷ ಜಗದೀಶ ಶೆಟ್ಟಿ ಮಾಣಿಬೆಟ್ಟುಗುತ್ತು, ಪ್ರಧಾನ ಕಾರ್ಯದರ್ಶಿ ಯಶವಂತ ಕುಮಾರ್ ಶೆಟ್ಟಿ ಬೆಳ್ಳೂರುಗುತ್ತು ಮೊದಲಾದವರು ಉಪಸ್ಥಿತರಿದ್ದರು. ಗುರುಪುರ ಕಂಬಳ ಸಮಿತಿಯ ಸ್ಥಾಪಕಾಧ್ಯಕ್ಷ ರಾಜ್ ಕುಮಾರ್ ಶೆಟ್ಟಿ ತಿರುವೈಲುಗುತ್ತು ಸ್ವಾಗತಿಸಿದರು. ವಿಜೇತ್ ಶೆಟ್ಟಿ ಮಂಜನಾಡಿ ಮತ್ತು ಮನೋಜ್ ವಾಮಂಜೂರು ಕಾರ್ಯಕ್ರಮ ನಿರೂಪಿಸಿದರು.
ಅಪ್ರಾಪ್ತ ಬಾಲಕಿಯರ ಗರ್ಭಧಾರಣೆ ಮುಚ್ಚಿಟ್ಟರೆ ಜೈಲುಪಾಲು: ಖಾಸಗಿ ಆಸ್ಪತ್ರೆಗಳಿಗೆ ಆರೋಗ್ಯ ಇಲಾಖೆ ಖಡಕ್ ಎಚ್ಚರಿಕೆ
ಬೆಂಗಳೂರು: ರಾಜ್ಯದಲ್ಲಿ ಅಪ್ರಾಪ್ತ ಬಾಲಕಿಯರ ಮೇಲಿನ ದೌರ್ಜನ್ಯ ಮತ್ತು ಅಪರಾಧ ಕೃತ್ಯಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ಆರೋಗ್ಯ ಇಲಾಖೆ ಅತ್ಯಂತ ಕಠಿಣ ಹೆಜ್ಜೆಯೊಂದನ್ನು ಇಟ್ಟಿದೆ. ಅಪ್ರಾಪ್ತ ಬಾಲಕಿಯರ ಗರ್ಭಧಾರಣೆ ಪ್ರಕರಣಗಳು ಕಂಡುಬಂದರೆ, ಖಾಸಗಿ ಆಸ್ಪತ್ರೆಗಳು ಕಡ್ಡಾಯವಾಗಿ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ (ಪೋಕ್ಸೊ - POCSO) ಕಾಯ್ದೆಯಡಿ ಪೊಲೀಸರಿಗೆ ವರದಿ ಮಾಡಲೇಬೇಕು ಎಂದು ಇಲಾಖೆ
ಮೊಹ್ಸಿನ್ ನಖ್ವಿ ನಶೆ ಇಳಿದ ಮೇಲೆ ಎಚ್ಚೆತ್ತ ಬಾಂಗ್ಲಾ ಕ್ರಿಕೆಟ್; ದ್ವಿಪಕ್ಷೀಯ ಸರಣಿಗಾಗಿ ಬಿಸಿಸಿಐ ಮುಂದೆ ಶರಣು!
Bangla appeals to BCCI : ತಾನೇ ಮಾಡಿಕೊಂಡ ತಪ್ಪಿನ ನಿರ್ಧಾರಕ್ಕೆ ಬಾಂಗ್ಲಾದೇಶದ ಕ್ರಿಕೆಟ್ ಬೋರ್ಡ್ ಈಗ ಮರಗುತ್ತಿದೆ. ಭಾರತದಲ್ಲಿ ಭದ್ರತೆಯ ನೆಪವನ್ನು ಇಟ್ಟುಕೊಂಡು ಪಂದ್ಯವಾಡುವುದಿಲ್ಲ ಎಂದಿದ್ದ ಬಿಸಿಬಿ (Bangladesh Cricket Board), ಈಗ ದ್ವಿಪಕ್ಷೀಯ ಸರಣಿ ಆಡುವಂತೆ, ಬಿಸಿಸಿಐ ಹಿಂದೆ ಬಿದ್ದಿದೆ. ನಾವು ಕ್ರಿಕೆಟ್ ಆಡುವುದು, ಬಿಡುವುದು ಕೇಂದ್ರ ಸರ್ಕಾರದ ನಿರ್ಧಾರದ ಮೇಲೆ ನಿಂತಿದೆ ಎಂದು ಬಿಸಿಸಿಐ ಹೇಳಿದೆ.
ಕಣ್ಣು ಸಮಸ್ಯೆಗಳು ಹೆಚ್ಚುತ್ತಿವೆಯೇ? ಈ ಆಹಾರಗಳು ನಿಮ್ಮ ದೃಷ್ಟಿಯನ್ನು ರಕ್ಷಿಸುತ್ತವೆ
ನಮ್ಮ ಇಂದಿನ ಜೀವನದ ಶೈಲಿಯಲ್ಲಿ ಕಣ್ಣಿನ ಸಮಸ್ಯೆಗಳು ದಿನೇ ದಿನೇ ಹೆಚ್ಚಾಗುತ್ತಿವೆ. ದೀರ್ಘ ಸಮಯ ಮೊಬೈಲ್, ಲ್ಯಾಪ್ಟಾಪ್ ಬಳಕೆ, ಪರಿಸರ ಮಾಲಿನ್ಯ ಮತ್ತು ನಮ್ಮ ಆಹಾರ ಪದ್ಧತಿಗಳು ಇದಕ್ಕೆ ಪ್ರಮುಖ ಕಾರಣಗಳಾಗಿವೆ ಎಂದು ವೈದ್ಯರು ಸೂಚಿಸುತ್ತಾರೆ. ಈ ಹಿನ್ನೆಲೆಯಲ್ಲಿ ನಾವು ಕಣ್ಣಿನ ಆರೋಗ್ಯವನ್ನು ಕಾಪಾಡಿಕೊಳ್ಳಲು ಸರಿಯಾದ ಪೌಷ್ಟಿಕ ಆಹಾರ ಸೇವನೆ ಮಾಡುವುದು ಅತ್ಯಗತ್ಯವೆಂದು ಸಲಹೆ ನೀಡುತ್ತಾರೆ. ಕಣ್ಣುಗಳ
ಜೈಪುರ | ಕಲುಷಿತ ನೀರು ಕುಡಿದು 1,000ಕ್ಕೂ ಹೆಚ್ಚು ಜನರು ಅಸ್ವಸ್ಥ
ಜೈಪುರ: ಸುಶೀಲಪುರದ 45ನೇ ವಾರ್ಡ್ನಲ್ಲಿ ಕಳೆದ ಒಂದು ವಾರದಿಂದ ನಳ್ಳಿ ನೀರು ಕುಡಿದ ಬಳಿಕ ಮಕ್ಕಳು ವೃದ್ಧರು ಸಹಿತ 1,000ಕ್ಕೂ ಹೆಚ್ಚು ಜನರು ಅಸ್ವಸ್ಥರಾಗಿದ್ದಾರೆ. ಸ್ಥಳೀಯ ವರದಿಗಳ ಪ್ರಕಾರ, ಕಲುಷಿತ ನೀರು ಕುಡಿದ ಬಳಿಕ ಬಹುತೇಕ ಎಲ್ಲಾ ಮನೆಗಳ ಜನರಲ್ಲಿ ಹೊಟ್ಟೆ ನೋವು, ವಾಂತಿ, ಅತಿಸಾರ ಮತ್ತು ಜ್ವರದ ಲಕ್ಷಣಗಳು ಕಂಡು ಬಂದಿದೆ. ಹಲವು ದಿನಗಳಿಂದ ನಳ್ಳಿಗಳ ಮೂಲಕ ದುರ್ವಾಸನೆಯುಕ್ತ, ಕಲುಷಿತ ನೀರು ಬರುತ್ತಿದೆ. ಕಳೆದ ಎರಡು ದಿನಗಳಲ್ಲಿ ಟ್ಯಾಂಕರ್ಗಳ ಮೂಲಕ ನೀರು ಸರಬರಾಜು ಮಾಡುವುದಾಗಿ ನಮಗೆ ಭರವಸೆ ನೀಡಲಾಗಿತ್ತು. ಆದರೆ ನೀರು ಬಂದಿಲ್ಲ ಎಂದು ಸ್ಥಳೀಯ ನಿವಾಸಿಗಳು ಆರೋಪಿಸಿದ್ದಾರೆ.
ಅಮೆರಿಕಾದ ವಾಷಿಂಗ್ಟನ್ ಡಿಸಿಯಲ್ಲಿ ನಡೆಯಲಿರುವ ಮೇಯರ್ ಚುನಾವಣೆಗೆ ಭಾರತೀಯ ಮೂಲದ ರಿನಿ ಸಂಪತ್ ಎಂಬವರು ಡೆಮಕ್ರಾಟಿಕ್ ಪಕ್ಷದ ಮೇಯರ್ ಆಗಿ ಆಯ್ಕೆಯಾಗಿದ್ದು, ಡಿಸಿಯಲ್ಲಿ ಮೇಯರ್ ಅಭ್ಯರ್ಥಿಯಾಗಿ ಆಯ್ಕೆಯಾದ ಮೊದಲ ದಕ್ಷಿಣ ಏಷ್ಯಾದ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ. ವಾಷಿಂಗ್ಟನ್ ಡಿಸಿಮೇಯರ್ ರೇಸ್ ನಲ್ಲಿ ಈ ರಿನಿ ಸಂಪತ್ ಯಾರು? ಈ ಚುನಾವಣೆಯಲ್ಲಿ ಅವರ ಭರವಸೆಗಳೇನು? ಇವರಿಗೆ ಪೈಪೋಟಿ ನೀಡುತ್ತಿರುವವರು ಯಾರು ಎಂಬ ಮಾಹಿತಿ ಇಲ್ಲಿದೆ..
ಚೆನ್ನೈ: ಮುಂಬರುವ ತಮಿಳುನಾಡು ವಿಧಾನಸಭಾ ಚುನಾವಣೆಗಾಗಿ ಪ್ರಕಟವಾಗಿರುವ ಬಿಜೆಪಿಯ ಅಭ್ಯರ್ಥಿಗಳ ಪಟ್ಟಿಯಿಂದ ತಮ್ಮ ಹೆಸರು ಕಾಣೆಯಾಗಿರುವ ಕುರಿತು ಮೌನ ಮುರಿದಿರುವ ತಮಿಳುನಾಡಿನ ಮಾಜಿ ಬಿಜೆಪಿ ಮುಖ್ಯಸ್ಥ ಕೆ.ಅಣ್ಣಾಮಲೈ, ಚುನಾವಣಾ ಕಣದಿಂದ ಹೊರಗುಳಿಯುವ ನಿರ್ಧಾರ ಸಂಪೂರ್ಣವಾಗಿ ನನ್ನದೇ ಆಗಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಕೊಯಂಬತ್ತೂರಿನಿಂದ ಆಗಮಿಸಿದ ಬಳಿಕ ಚೆನ್ನೈ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕೆ.ಅಣ್ಣಾಮಲೈ, “ನಾನು ಮುಂಚಿತವಾಗಿಯೇ ಚುನಾವಣಾ ಸ್ಪರ್ಧೆಯಿಂದ ಹೊರಗುಳಿಯುವ ಬಗ್ಗೆ ಪಕ್ಷದ ನಾಯಕತ್ವಕ್ಕೆ ಅಧಿಕೃತ ಮಾಹಿತಿ ನೀಡಿದ್ದೆ. ನಾನು ಯಾವುದೇ ಕ್ಷೇತ್ರದಿಂದ ಸ್ಪರ್ಧಿಸುವುದಿಲ್ಲ ಎಂದು ನಾನು ಈಗಾಗಲೇ ಕೋರ್ ಸಮಿತಿಗೆ ತಿಳಿಸಿದ್ದೇನೆ. ಹೀಗಾಗಿ, ನನಗೆ ಟಿಕೆಟ್ ನಿರಾಕರಿಸಲಾಗಿಲ್ಲ. ಸತ್ಯವೆಂದರೆ, ನನಗೆ ಸ್ಪರ್ಧಿಸುವ ಬಯಕೆ ಇರಲಿಲ್ಲ” ಎಂದು ಹೇಳಿದ್ದಾರೆ. ತಮಗೆ ಟಿಕೆಟ್ ನಿರಾಕರಣೆಯಾಗಿರುವ ಕುರಿತು ಉದ್ಭವಿಸಿರುವ ಊಹಾಪೋಹಗಳ ಕುರಿತು ಪ್ರತಿಕ್ರಿಯಿಸಿದ ಅವರು, ನಾನೇ ಚುನಾವಣಾ ಕಣಕ್ಕಿಳಿಯಲು ನಿರಾಕರಿಸಿದ ಬಳಿಕ, ಪಕ್ಷದ ನಾಯಕತ್ವವು ನನಗೆ ಟಿಕೆಟ್ ನಿರಾಕರಿಸಲು ಹೇಗೆ ಸಾಧ್ಯ? ಎಂದು ಪ್ರಶ್ನಿ ಸಿದ್ದಾರೆ. ಈ ವಿಷಯ ಮಾಧ್ಯಮಗಳ ಚರ್ಚೆಯ ವಿಷಯವಾಗಿ ಬದಲಾಗಿರುವುದರಿಂದ ನಾನು ಈ ಸ್ಪಷ್ಟೀಕರಣ ನೀಡುತ್ತಿದ್ದೇನೆ ಎಂದೂ ಅವರು ಹೇಳಿದ್ದಾರೆ. “ನನ್ನ ನಿರ್ಧಾರವನ್ನು ಗೌರವಿಸಿದ ಹಾಗೂ ಎನ್ಡಿಎ ಮೈತ್ರಿಕೂಟದ ಅಭ್ಯರ್ಥಿಗಳ ಪರ ಪ್ರಚಾರ ನಡೆಸಲು ಅವಕಾಶ ನೀಡಿದ ಕೇಂದ್ರ ನಾಯಕತ್ವಕ್ಕೆ ಧನ್ಯವಾದ ಸಲ್ಲಿಸುತ್ತೇನೆ.” ಎಂದು ಅವರು ಘೋಷಿಸಿದ್ದಾರೆ.
ರಾಜ್ಯದಲ್ಲಿ ಎಲ್ ಪಿ ಜಿ ಬಿಕ್ಕಟ್ಟು ತಲೆಧೋರಿದೆ. ಇದರ ನೇರ ಪರಿಣಾಮ ಆಟೋ ಚಾಲಕರ ಮೇಲಾಗಿದೆ. ಆಟೋ ಚಾಲಕರು ಎಲ್ ಪಿ ಜಿ ಕೊರತೆಯಿಂದ ಸಂಕಷ್ಟಕ್ಕೆ ಸಿಕ್ಕಿದ್ದಾರೆ. ಎಲ್ ಜಿ ಪಿ ಪೂರೈಕೆ ಇಲ್ಲದೆ ಬೆಂಗಳೂರಿನ ಹಲವು ಗ್ಯಾಸ್ ಸ್ಟೇಷನ್ಗಳು ಬಂದ್ ಆಗಿವೆ. ಇದು ಹೀಗೆ ಮುಂದುವರಿದರೆ ಮುಂದಿನ ದಿನಗಳಲ್ಲಿ ಸಂಕಷ್ಟ ಮತ್ತಷ್ಟು ವೃದ್ದಿ ಆಗುವ ಸಾಧ್ಯತೆ ಇದೆ. ಮತ್ತೊಂದು ಕಡೆಯಲ್ಲಿ ಎಲ್ ಪಿ ಜಿ ದರದಲ್ಲೂ ಏರಿಕೆ ಆಗುತ್ತಿದೆ.
ಬಜೆಟ್ ನಲ್ಲಿ ಮುಸ್ಲಿಂರ ಓಲೈಕೆ ; ಸಿಟಿ ರವಿ ಹೇಳಿಕೆಗೆ ಸಿಎಂ ಸಿದ್ದರಾಮಯ್ಯ ತಿರುಗೇಟು ನೀಡಿದ್ದು ಹೀಗೆ
ಸಿಟಿ ರವಿ ಅವರ 'ಬಜೆಟ್ನಲ್ಲಿ ಮುಸ್ಲಿಮರ ಓಲೈಕೆ' ಎಂಬ ಆರೋಪಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. ಮುಸ್ಲಿಮರ ಜನಸಂಖ್ಯೆ ಶೇ. 40 ರಷ್ಟಿದ್ದು, ಆ ಪ್ರಮಾಣಕ್ಕೆ ಹೋಲಿಸಿದರೆ ಬಜೆಟ್ನಲ್ಲಿ ಅವರಿಗೆ ನೀಡಿದ ಅನುದಾನ ಕಡಿಮೆಯೇ ಹೊರತು ಹೆಚ್ಚಲ್ಲ ಎಂದು ಸಮರ್ಥಿಸಿಕೊಂಡಿದ್ದಾರೆ. ವಿರೋಧ ಪಕ್ಷದ ನಾಯಕರಾದ ಆರ್. ಅಶೋಕ್, ಸಿ.ಟಿ. ರವಿ ಅಥವಾ ವಿಜಯೇಂದ್ರ ಅವರು ಬಜೆಟ್ ಪ್ರತಿಗಳನ್ನು ಸರಿಯಾಗಿ ಓದಿಕೊಂಡಿಲ್ಲ ಎಂದು ಟೀಕಿಸಿದರು. ನಾಲ್ಕುವರೆ ಗಂಟೆಗಳ ಕಾಲ ಬಜೆಟ್ ಮಂಡಿಸಿದ ತಮಗೆ ಅದರ ಸಂಪೂರ್ಣ ಅರಿವಿದೆ ಎಂದಿದ್ದಾರೆ.
ಶಿಕ್ಷಣ ಕ್ಷೇತ್ರದಲ್ಲಿ ಮಹತ್ವದ ಬದಲಾವಣೆ: NCERTಗೆ 'ಡೀಮ್ಡ್ ಯೂನಿವರ್ಸಿಟಿ' ಸ್ಥಾನಮಾನ
ನವದೆಹಲಿ: ಭಾರತದ ಶಾಲಾ ಶಿಕ್ಷಣ ವ್ಯವಸ್ಥೆಯ ಅತ್ಯುನ್ನತ ಸಂಸ್ಥೆಯಾಗಿರುವ ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿಗೆ (ಎನ್ಸಿಇಆರ್ಟಿ) ಕೇಂದ್ರ ಸರ್ಕಾರವು ಅಧಿಕೃತವಾಗಿ 'ಡೀಮ್ಡ್ ಯೂನಿವರ್ಸಿಟಿ' ಸ್ಥಾನಮಾನವನ್ನು ನೀಡಿದೆ. ಇದು ದೇಶದ ಶಿಕ್ಷಣ ಕ್ಷೇತ್ರದಲ್ಲಿ, ವಿಶೇಷವಾಗಿ ಉನ್ನತ ಶಿಕ್ಷಣ ಮತ್ತು ಶಿಕ್ಷಕರ ತರಬೇತಿ ವಿಭಾಗದಲ್ಲಿ ಒಂದು ಬೃಹತ್ ಮತ್ತು ಐತಿಹಾಸಿಕ ಬದಲಾವಣೆಗೆ ನಾಂದಿ ಹಾಡಿದೆ. ವಿಶ್ವವಿದ್ಯಾಲಯ ಧನಸಹಾಯ
ಒಂದೇ ದಿನದಲ್ಲಿ ಅಮೆರಿಕದ ಎರಡು ಯುದ್ಧವಿಮಾನವನ್ನು ಹೊಡೆದುರುಳಿಸಿದ ಇರಾನ್; ವರದಿ
ಎರಡು ಬ್ಲ್ಯಾಕ್ ಹಾಕ್ ಹೆಲಿಕಾಪ್ಟರ್ಗಳಿಗೆ ಹಾನಿ
ಇಸ್ಲಾಮಾಬಾದ್ ನಲ್ಲಿ US ಅಧಿಕಾರಿಗಳ ಭೇಟಿಗೆ ಇರಾನ್ ನಕಾರ: ಸಂಧಾನ ಮಾತುಕತೆ ಫೇಲ್, ಪಾಕಿಸ್ತಾನಕ್ಕೆ ಭಾರಿ ಮುಖಭಂಗ!
ಮಧ್ಯಪ್ರಾಚ್ಯದ ಸಂಘರ್ಷವನ್ನು ಶಮನಗೊಳಿಸುವಲ್ಲಿ ಅಮೆರಿಕಾ ಹಾಗೂ ಇರಾನ್ ನಡುವೆ ರಾಜತಾಂತ್ರಿಕ ಮಾತುಕತೆಗೆ ಮಧ್ಯಸ್ಥಿಕೆ ವಹಿಸಿ ಜಾಗತಿಕವಾಗಿ ತನ್ನ ಸಾಮರ್ಥ್ಯವನ್ನು ತೋರ್ಪಡಿಸಿಕೊಳ್ಳಲು ಪ್ರಯತ್ನಿಸಿದ್ದ ಪಾಕ್ ಭಾರಿ ಮುಖಭಂಗವಾಗಿದ್ದು, ಇಸ್ಲಾಮಾಬಾದ್ ನಲ್ಲಿ ಅಮೆರಿಕಾದ ಅಧಿಕಾರಿಗಳನ್ನು ಭೇಟಿಯಾಗಲು ತಿರಸ್ಕರಿಸಿದ್ದು, ರಾಜತಾಂತ್ರಿಕ ಮಾತುಕತೆಗಳಲ್ಲಿ ಅಮೆರಿಕಾದ ನೀತಿಯ ಮೇಲೆ ಪ್ರಭಾವ ಬೀರುವಲ್ಲಿ ಪಾಕ್ ಗಿರುವ ಸಾಮರ್ಥ್ಯದ ಬಗ್ಗೆ ಅಪನಂಬಿಕೆಯೇ ಇದಕ್ಕೆ ಕಾರಣ ಎಂದು ವರದಿಯಾಗಿದೆ. ಈ ಕುರಿತು ಮಾಹಿತಿ ಇಲ್ಲಿದೆ..
Koppal | ಯಲಬುರ್ಗಾದಲ್ಲಿ ನೂತನ ನ್ಯಾಯಾಲಯ ಕಟ್ಟಡ ಲೋಕಾರ್ಪಣೆ
ಕೊಪ್ಪಳ : ಏಕಕಾಲಕ್ಕೆ ನಾಲ್ಕು ನ್ಯಾಯಾಲಯಗಳು ನಡೆಯುವ ಸಾಮರ್ಥ್ಯ ಹೊಂದಿರುವ ಯಲಬುರ್ಗಾ ತಾಲೂಕಿನ ನೂತನ ನ್ಯಾಯಾಲಯ ಕಟ್ಟಡವನ್ನು ಎ.4ರಂದು ಲೋಕಾರ್ಪಣೆ ಮಾಡಲಾಯಿತು. ಈ ಕಾರ್ಯಕ್ರಮದ ಅಂಗವಾಗಿ ಕೊಪ್ಪಳ, ಕುಷ್ಟಗಿ, ಕುಕನೂರ, ರೋಣ ಹಾಗೂ ಗಜೇಂದ್ರಗಡ ಭಾಗಗಳಿಂದ ವಕೀಲರು ಹಾಗೂ ನಿವೃತ್ತ ವಕೀಲರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ನ್ಯಾಯಮೂರ್ತಿಗಳೊಂದಿಗೆ ಗ್ರೂಪ್ ಫೋಟೋ ತೆಗೆದುಕೊಂಡು ಸಂಭ್ರಮಿಸಿದರು. ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರರು ಹಾಗೂ ಯಲಬುರ್ಗಾ ಕ್ಷೇತ್ರದ ಶಾಸಕರಾದ ಬಸವರಾಜ ರಾಯರೆಡ್ಡಿ ಮತ್ತು ಹೈಕೋರ್ಟ್ ನ್ಯಾಯಮೂರ್ತಿಗಳಾದ ಸಂಜೀವ್ ಕುಮಾರ್ ಅವರೊಂದಿಗೆ, ಕುಕನೂರ ಮಾರ್ಗವಾಗಿ ಯಲಬುರ್ಗಾ ಪಟ್ಟಣಕ್ಕೆ ಆಗಮಿಸಿದ ಹೈಕೋರ್ಟ್ ನ್ಯಾಯಮೂರ್ತಿಗಳು ಹಾಗೂ ಕೊಪ್ಪಳ ಜಿಲ್ಲಾ ಆಡಳಿತ ನ್ಯಾಯಾಧೀಶರಾದ ಸಿ.ಎಂ. ಪೂಣಚ್ಚ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಕಾರ್ಯಕ್ರಮದ ಆರಂಭದಲ್ಲಿ ನ್ಯಾಯಾಲಯ ಆವರಣದಲ್ಲಿ ಸಸಿ ನೆಟ್ಟು, ಬಳಿಕ ರಿಬ್ಬನ್ ಕತ್ತರಿಸುವ ಮೂಲಕ ನೂತನ ಕಟ್ಟಡವನ್ನು ಲೋಕಾರ್ಪಣೆ ಮಾಡಲಾಯಿತು. ಈ ಮೂಲಕ ಯಲಬುರ್ಗಾ ತಾಲೂಕಿನ ನ್ಯಾಯಾಂಗ ವ್ಯವಸ್ಥೆಗೆ ಹೊಸ ಗರಿ ಮೂಡಿದಂತಾಯಿತು. ಈ ಸಂದರ್ಭದಲ್ಲಿ ನ್ಯಾಯಮೂರ್ತಿಗಳಾದ ಸಿ.ಎಂ. ಪೂಣಚ್ಚ ಅವರು ವಕೀಲರೊಂದಿಗೆ ನ್ಯಾಯಾಲಯದ ಸಭಾಂಗಣ ಹಾಗೂ ದ್ವಾರಬಾಗಿಲ ಬಳಿ ಗ್ರೂಪ್ ಫೋಟೋದಲ್ಲಿ ಭಾಗಿಯಾದರು. ಗೌರವಾನ್ವಿತ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಚಂದ್ರಶೇಖರ್ ಸಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಯಲಬುರ್ಗಾ ಪಟ್ಟಣದ ಐತಿಹಾಸಿಕ ಹಿನ್ನೆಲೆ ವಿವರಿಸಿ, ಎ.4 ಅನ್ನು ತಾಲೂಕಿಗೆ ಮಹತ್ವದ ದಿನವೆಂದು ವಿವರಿಸಿದರು. ನೂತನ ನ್ಯಾಯಾಲಯ ಕಟ್ಟಡ ಲೋಕಾರ್ಪಣೆಯ ಬಗ್ಗೆ ಅವರು ಸಂತೋಷ ವ್ಯಕ್ತಪಡಿಸಿದರು. ಜಿಲ್ಲಾ ನ್ಯಾಯಾಂಗ ಇಲಾಖೆ, ಲೋಕೋಪಯೋಗಿ ಇಲಾಖೆ ಕೊಪ್ಪಳ ಹಾಗೂ ಬಾರ್ ಅಸೋಸಿಯೇಷನ್ ಯಲಬುರ್ಗಾ ಇವರ ಸಂಯುಕ್ತಾಶ್ರಯದಲ್ಲಿ ನಡೆದ ಸಮಾರಂಭದಲ್ಲಿ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾದ ಎ.ವಿ.ಕಣವಿ, ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಯಲಬುರ್ಗಾ ಜೆ.ಎಂ.ಎಫ್.ಸಿ ಸಂಜಯ್ ಕುಮಾರ್ ಪಾಚಾಪೂರ, ನ್ಯಾಯಾಧೀಶರಾದ ರಂಗಸ್ವಾಮಿ ಜೆ., ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಡಾ.ರಾಮ್ ಎಲ್.ಅರಸಿದ್ದಿ, ಅಪರ ಜಿಲ್ಲಾಧಿಕಾರಿಗಳಾದ ಸಿದ್ರಾಮೇಶ್ವರ, ಉಪವಿಭಾಗಾಧಿಕಾರಿ ಕ್ಯಾಪ್ಟನ್ ಮಹೇಶ್ ಮಾಲಗಿತ್ತಿ, ಯಲಬುರ್ಗಾ ವಕೀಲರ ಸಂಘದ ಅಧ್ಯಕ್ಷರಾದ ಸುಭಾಷಚಂದ್ರ ಎಸ್. ಹೊಂಬಳ, ಪ್ರಧಾನ ಕಾರ್ಯದರ್ಶಿ ಇ.ಟಿ. ಮಹಾಂತೇಶ ಹಾಗೂ ಉಪಾಧ್ಯಕ್ಷರಾದ ಎಂ.ಎಸ್. ನಾಯ್ಕರ್, ಲೋಕೋಪಯೋಗಿ ಇಲಾಖೆ ಕೊಪ್ಪಳ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ಹೇಮಂತ್ ರಾಜ್ ಸೇರಿದಂತೆ ಕೊಪ್ಪಳ ಜಿಲ್ಲೆಯ ಎಲ್ಲಾ ಹಿರಿಯ ಹಾಗೂ ಕಿರಿಯ ವಕೀಲರು, ಕಾರ್ಯಕಾರಿ ಸಮಿತಿ ಸದಸ್ಯರು ಮತ್ತು ಯಲಬುರ್ಗಾ ಬಾರ್ ಅಸೋಸಿಯೇಷನ್ನ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು.
ಶಾಲಂ ಸೋಲಿಗೆ ರವಿ ಬೋಸರಾಜು ಕಾರಣ : ಕಾಂಗ್ರೆಸ್ ಮುಖಂಡ ಬಷೀರುದ್ದೀನ್ ಆರೋಪ
ರಾಯಚೂರು, ಎ.3: ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮೊಹಮ್ಮದ್ ಶಾಲಂ ಅವರ ಸೋಲಿಗೆ ರವಿ ಬೋಸರಾಜು ಕಾರಣರಾಗಿದ್ದಾರೆ ಎಂದು ಕಾಂಗ್ರೆಸ್ ಮುಖಂಡ, ಜಿಪಂ ಮಾಜಿ ಸದಸ್ಯ ಬಷೀರುದ್ದೀನ್ ಗಂಭೀರ ಆರೋಪ ಮಾಡಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮೊಹಮ್ಮದ್ ಶಾಲಂ ಅವರನ್ನು ಗೆಲ್ಲಿಸುವ ಜವಾಬ್ದಾರಿಯನ್ನು ಹೊತ್ತ ರವಿ ಬೋಸರಾಜು ತೆರೆಮರೆಯಲ್ಲಿ ಮಸಲತ್ತು ನಡೆಸಿದ್ದಾರೆ. ಅವರನ್ನು ಸೋಲಿಸಿ ಅಲ್ಪಸಂಖ್ಯಾತರಿಗೆ ಟಿಕೆಟ್ ಕೊಡಿಸದ ಹಾಗೆ ಹುನ್ನಾರ ನಡೆಸಿದ್ದಾರೆ ಎಂದು ಬಷೀರುದ್ದೀನ್ ಇತ್ತೀಚೆಗೆ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ. ದಾವಣಗೆರೆ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅಲ್ಪಸಂಖ್ಯಾತರಿಗೆ ಮಣೆ ಹಾಕಿಲ್ಲ ಎಂಬ ಆರೋಪದ ನಡುವೆ ಬಷೀರುದ್ದೀನ್ ಹೇಳಿಕೆ ಚರ್ಚೆಗೆ ಕಾರಣವಾಗಿದೆ. ಈ ನಡುವೆ ಯುವ ಮುಖಂಡ ರವಿ ಭೋಸರಾಜ್ ವಿರುದ್ಧ ಬಷೀರುದ್ದೀನ್ ಸಮರ ಸಾರಿದ್ದು, ಬಣಬಡಿದಾಟಕ್ಕೆ ಮತ್ತೊಮ್ಮೆ ವೇದಿಕೆ ಸಜ್ಜುಗೊಳ್ಳುವ ಸೂಚನೆ ಕಾಣುತ್ತಿದೆ ಎಂದು ಕಾಂಗ್ರೆಸ್ ಕಾರ್ಯಕರ್ತರು ಹೇಳುತ್ತಿದ್ದಾರೆ. ಬಷೀರುದ್ದೀನ್ ಹೇಳಿಕೆಗೆ ಬ್ರೇಕ್ ಹಾಕಲು ಕಾಂಗ್ರೆಸ್ ಪರಾಜಿತ ಅಭ್ಯರ್ಥಿ ಮೊಹಮ್ಮದ್ ಶಾಲಂ, ಕಾಂಗ್ರೆಸ್ ಮುಖಂಡ ನರಸಿಂಹಲು ಮಾಡಗಿರಿ ಅವರು ಮುಂದಾಗಿದ್ದು, ಬಷೀರುದ್ದೀನ್ ಹೇಳಿಕೆಯನ್ನು ಖಂಡಿಸಿದ್ದಾರೆ. ಇಬ್ಬರು ಅಲ್ಪಸಂಖ್ಯಾತರ ನಾಯಕರು ಆರೋಪ-ಪ್ರತ್ಯಾರೋಪದಲ್ಲಿ ತೊಡಗಿದ್ದು, ರವಿ ಬೋಸರಾಜ್ ವಿರುದ್ಧ ಬಷೀರುದ್ದೀನ್ ಕೆಂಡ ಕಾರುತ್ತಿದ್ದರೆ, ಇತ್ತ ಶಾಲಂ, ಬೋಸರಾಜ್ ಪರ ಬ್ಯಾಟಿಂಗ್ ಮಾಡಿ, ಅವರ ಕಾರ್ಯಕ್ಷಮತೆಯ ಬಗ್ಗೆ ಸಮರ್ಥನೆಗಿಳಿದಿದ್ದು, ಕಾಂಗ್ರೆಸ್ ಕಾರ್ಯಕರ್ತರಲ್ಲಿ ಗೊಂದಲ ಮೂಡಿಸಿದೆ. ಸಚಿವ ಎನ್.ಎಸ್.ಬೊಸರಾಜು ಹಾಗೂ ಅವರ ಪುತ್ರ ರವಿ ಬೋಸರಾಜು ಅವರು ಅಲ್ಪಸಂಖ್ಯಾತರ ವಿರೋಧಿಯಲ್ಲ, ಎಲ್ಲಾ ಸಮುದಾಯಗಳೊಂದಿಗೆ ಉತ್ತಮ ಬಾಂಧ್ಯವ ಹೊಂದಿದ್ದಾರೆ. ಅನೇಕ ಅಲ್ಪಸಂಖ್ಯಾತರನ್ನೂ ರಾಜಕೀಯವಾಗಿ ಬೆಳೆಸಿದ್ದಾರೆ ಎಂದು ಪಾಲಿಕೆಯ ಮಾಜಿ ಮೇಯರ್ ಜೆ.ಸಾಜೀದ್ ಸಮೀರ್ ಸಮರ್ಥಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿಯೂ ರವಿ ಬೋಸರಾಜು ಪರ ‘ವಿ ಸ್ಟ್ಯಾಂಡ್ವಿತ್ ರವಿ ಬೋಸರಾಜು’ ಎಂಬ ಪೋಸ್ಟರ್ ಹರಿದಾಡುತ್ತಿದೆ. ಇತ್ತ ಬಷೀರುದ್ದೀನ್ ಅವರ ಅಭಿಮಾನಿಗಳು ‘ವಿ ಸ್ಟ್ಯಾಂಡ್ ಬಷೀರುದ್ದೀನ್’ ಎಂದು ಪೋಸ್ಟರ್ ಶೇರ್ ಮಾಡುತ್ತಿದ್ದಾರೆ. ವಿಧಾನಸಭೆ ಚುನಾವಣೆ ಮುಗಿದು ಮೂರು ವರ್ಷ ಸಮೀಪಿಸುತ್ತಿದ್ದು, ಬಷೀರುದ್ದೀನ್ ಈಗ ಯಾಕೆ ಮೊಹಮ್ಮದ್ ಶಾಲಂ ಅವರ ಸೋಲಿನ ಕುರಿತು ಪರಮಾರ್ಶೆ ಮಾಡಿದ್ದಾರೆ ಎಂದು ಅನೇಕರಲ್ಲಿ ಪ್ರಶ್ನೆ ಕಾಡುತ್ತಿದೆ. ಇಬ್ಬರು ಕಾಂಗ್ರೆಸ್ ನಾಯಕರ ನಡುವಿನ ಭಿನ್ನಾಭಿಪ್ರಾಯ ಏನೇ ಇದ್ದರೂ ಸಾಮಾನ್ಯ ಕಾರ್ಯಕರ್ತರಿಗೆ ಗೊಂದಲ ಉಂಟಾಗಿದ್ದು ಪಕ್ಷದ ಹೈಕಮಾಂಡ್ ಹಾಗೂ ಹಿರಿಯ ಮುಖಂಡರು ಹೇಗೆ ಅಸಮಾಧಾನಶಮನ ಮಾಡುತ್ತಾರೆ ಎನ್ನುವುದು ಕಾದು ನೋಡಬೇಕಿದೆ. ರವಿ ಬೋಸರಾಜ್ ಅವರಿಂದಲೇ ರಾಯಚೂರು ನಗರದಲ್ಲಿ ಮುಸ್ಲಿಮ್ ಅಭ್ಯರ್ಥಿ ಗೆಲುವು ಸಾಧಿಸಲು ಸಾಧ್ಯವಾಗುತ್ತಿಲ್ಲ. ಮುಸ್ಲಿಮರಲ್ಲೇ ಗೊಂದಲ ಸೃಷ್ಟಿಸಿ, ಕೊನೆಯಲ್ಲಿ ಒಬ್ಬರಿಗೆ ಟಿಕೆಟ್ ಕೊಟ್ಟು ಅವರನ್ನು ಸೋಲಿಸುವ ಕೆಲಸ ರವಿ ಬೋಸರಾಜ್ ಮಾಡುತ್ತಿದ್ದಾರೆ. -ಬಷೀರುದ್ದೀನ್, ಕಾಂಗ್ರೆಸ್ ಮುಖಂಡ ಪಕ್ಷದವರೇ ಕುತ್ತಿಗೆ ಕೊಯ್ದರು, ಹೆಸರೇಳಲು ಸಾಕ್ಷಿ ಇಲ್ಲ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕೆಲವರು ಪಕ್ಷದ್ರೋಹ ಮಾಡಿ, ನನ್ನ ಕುತ್ತಿಗೆ ಕೊಯ್ದರು. ಅವರಹೆಸರೇಳಲು ನನ್ನ ಬಳಿ ಸಾಕ್ಷಿ ಇಲ್ಲ. ಇದು ಬಷೀರ್ ಅವರಿಗೂ ತಿಳಿದಿದೆ.ಮುಸ್ಲಿಮ್ ಮತಗಳು ಹರಿದು ಹಂಚಿಹೋಗಬಾರದೆಂದು ನಾನು ಹೆಚ್ಚು ಮುಸ್ಲಿಂ ಸಮಾಜದ ಬಡಾವಣೆಗಳಲ್ಲಿ ಪ್ರಚಾರ ನಡೆಸಿದೆ. ಬೇರೆ ಕಡೆ ರವಿ ಬೋಸರಾಜ್ ಪ್ರಚಾರ ನಡೆಸಿದ್ದರು. ನಗರ ವ್ಯಾಪ್ತಿಯ ಎಲ್ಲಾ ಕಡೆ ನನಗೆ ಹೆಚ್ಚಿನ ಮತಗಳು ಬಂದಿದ್ದು, ಅಲ್ಪಮತಗಳಿಂದ ಸೋತಿದ್ದೇನೆ. -ಶಾಲಂ, ಪರಾಜಿತ ಅಭ್ಯರ್ಥಿ (ಸುದ್ದಿಗೋಷ್ಠಿಯ ಹೇಳಿಕೆ)
ಆಟೋ ಚಾಲಕರಿಗೆ 6ನೇ ಗ್ಯಾರಂಟಿ ಕೊಡಿ ; ರಾಜ್ಯ ಸರಕಾರಕ್ಕೆ ಕೇಂದ್ರ ಸಚಿವ ಎಚ್ ಡಿಕೆ ಆಗ್ರಹ
ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಆಟೋ ಚಾಲಕರ ಹಿತದೃಷ್ಟಿಯಿಂದ ರಾಜ್ಯ ಸರ್ಕಾರಕ್ಕೆ 6ನೇ ಗ್ಯಾರಂಟಿ ಘೋಷಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಆಗ್ರಹಿಸಿದ್ದಾರೆ. ರಾಜ್ಯ ಸರ್ಕಾರವು ಇಂಧನದ ಮೇಲೆ ವಿಧಿಸಿರುವ ಹೆಚ್ಚಿನ ತೆರಿಗೆಯಿಂದ ಆಟೋ ಚಾಲಕರು ಸಂಕಷ್ಟಕ್ಕೆ ಸಿಲುಕಿದ್ದು, ಕೂಡಲೇ ಆ ತೆರಿಗೆಯನ್ನು ಹಿಂಪಡೆಯಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಬಂಟ್ವಾಳ : ತುಂಬೆ ನಿವಾಸಿ ಮುನೀರ್ (55) ಅವರು ಹೃದಯಾಘಾತದಿಂದ ಶನಿವಾರ ರಾತ್ರಿ ಸ್ವಗೃಹದಲ್ಲಿ ನಿಧನರಾದರು. ರಾತ್ರಿ11 ಘಂಟೆಯ ತನಕ ತನ್ನ ಅಂಗಡಿಯಲ್ಲಿ ವ್ಯಾಪಾರ ಮುಗಿಸಿ ಮನೆಗೆ ಬಂದಿದ್ದ ಅವರು ಮೃತಪಟ್ಟಿದ್ದಾರೆ ಎನ್ನಲಾಗಿದೆ. ಮೃತರು ಪತ್ನಿ, ಮೂವರು ಪುತ್ರರು, ತಂದೆ, ಸಹೋದರ ಹಾಗೂ ಸಹೋದರಿಯನ್ನು ಅಗಲಿದ್ದಾರೆ.
ರಾಜ್ಯದಲ್ಲಿ ದ್ವೇಷದ ರಾಜಕಾರಣ ನಡೆಯುತ್ತಿದೆ ಎಂಬುವುದು ಬಿಜೆಪಿ ಆರೋಪವಾಗಿದೆ. ಆದರೆ ಕಾಂಗ್ರೆಸ್ ಸರ್ಕಾರ ಆಡಳಿತದಲ್ಲಿ ಉದ್ದೇಶಪೂರ್ವಕ ದ್ವೇಷದ ರಾಜಕಾರಣ ಮಾಡುತ್ತಿಲ್ಲ ಎಂಬುವುದು ಕಾಂಗ್ರೆಸ್ ವಾದವಾಗಿದೆ. ಈ ನಡುವೆ ವಿರೋಧ ಪಕ್ಷಗಳ ಕಾರ್ಯಕರ್ತರ ವಿರುದ್ಧ ಕಳೆದ 3 ವರ್ಷಗಳಲ್ಲಿ 59 ಪ್ರಕರಣ ದಾಖಲಾಗಿದೆ. ಕುತೂಹಲವೆಂದರೆ ಚಿಕ್ಕಮಗಳೂರಿನಲ್ಲೇ ಅತ್ಯಧಿಕ ಪ್ರಕರಣ ದಾಖಲು ಮಾಡಲಾಗಿದೆ. ಕೆಲವು ಪ್ರಕರಣಗಳಲ್ಲಿ ನ್ಯಾಯಾಲಯದ ತಡೆಯಾಜ್ಞೆ ಸಿಕ್ಕಿದೆ. ಇನ್ನು ಕೆಲವು ಪ್ರಕರಣಗಳನ್ನು ಸರ್ಕಾರ ಹಿಂಪಡೆದುಕೊಂಡಿದೆ. ಈ ಕುರಿತಾದ ಮಾಹಿತಿ ಇಲ್ಲಿದೆ.
ಮಂಜೇಶ್ವರ : ಎಪಿ ಉಸ್ತಾದರನ್ನು ಭೇಟಿಯಾದ LDF ಅಭ್ಯರ್ಥಿ ಕೆ ಆರ್ ಜಯಾನಂದ
ಕಲ್ಲಿಕೋಟೆ : ಮಂಜೇಶ್ವರ ವಿಧಾನಸಭಾ ಕ್ಷೇತ್ರದ ಎಲ್ಡಿಎಫ್ ಅಭ್ಯರ್ಥಿ ಕೆ.ಆರ್. ಜಯಾನಂದ ಅವರು ಇಂಡಿಯನ್ ಗ್ರಾಂಡ್ ಮುಫ್ತಿ ಎಪಿ ಉಸ್ತಾದರನ್ನು ಭೇಟಿಯಾಗಿ ಆಶೀರ್ವಾದ ಹಾಗೂ ಬೆಂಬಲ ಕೋರಿದರು. ಈ ಸಂದರ್ಭದಲ್ಲಿ ಅಭ್ಯರ್ಥಿ ಕೆ.ಆರ್. ಜಯಾನಂದ ಅವರು ಪವಿತ್ರ ಖುರ್ಆನಿನ ಕನ್ನಡಾನುವಾದ ಗ್ರಂಥವನ್ನು ಉಸ್ತಾದರಿಗೆ ನೀಡಿದರು.
ಕಲ್ಲಿಕೋಟೆ: ಎಪಿ ಉಸ್ತಾದರನ್ನು ಭೇಟಿಯಾದ ಮಂಜೇಶ್ವರದ LDF ಅಭ್ಯರ್ಥಿ
ಕಲ್ಲಿಕೋಟೆ : ಮಂಜೇಶ್ವರ ವಿಧಾನಸಭಾ ಕ್ಷೇತ್ರದ ಎಲ್ಡಿಎಫ್ ಅಭ್ಯರ್ಥಿ ಕೆ.ಆರ್. ಜಯಾನಂದ ಅವರು ಇಂಡಿಯನ್ ಗ್ರಾಂಡ್ ಮುಫ್ತಿ ಎಪಿ ಉಸ್ತಾದರನ್ನು ಭೇಟಿಯಾಗಿ ಆಶೀರ್ವಾದ ಹಾಗೂ ಬೆಂಬಲ ಕೋರಿದರು. ಈ ಸಂದರ್ಭದಲ್ಲಿ ಅಭ್ಯರ್ಥಿ ಕೆ.ಆರ್. ಜಯಾನಂದ ಅವರು ಪವಿತ್ರ ಖುರ್ಆನಿನ ಕನ್ನಡಾನುವಾದ ಗ್ರಂಥವನ್ನು ಉಸ್ತಾದರಿಗೆ ನೀಡಿದರು.
Tumkur | ಬೈಕ್ಗೆ ಕಾರು ಢಿಕ್ಕಿ : ಸವಾರ ಸ್ಥಳದಲ್ಲೇ ಮೃತ್ಯು
ತಿಪಟೂರು: ಬೈಕ್ಗೆ ಕಾರು ಢಿಕ್ಕಿಯಾಗಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ತಾಲ್ಲೂಕಿನ ಕಸಬಾ ಹೋಬಳಿ ಬಿದಿರೆಗುಡಿ ಬಳಿ ನಡೆದಿದೆ. ಮೃತರನ್ನು ಅರಸೀಕೆರೆ ತಾಲ್ಲೂಕಿನ ಕಸಬಾ ಹೋಬಳಿ ಬಿ.ಎಲ್.ಕೊಪ್ಪಲು ಬಸವೇಶ್ವರ ನಗರ ನಿವಾಸಿ ವಿಜಯ್ ಕುಮಾರ್ (24) ಎಂದು ಗುರುತಿಸಲಾಗಿದೆ. ತಿಪಟೂರು ನಗರದ ಟಿ.ಎಂ.ಮಂಜುನಾಥ ನಗರ ಗೇಟ್ ಸಮೀಪದ ವೆಲ್ಡಿಂಗ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ವಿಜಯ್ ಕುಮಾರ್ ಅವರು ಕೆಲಸ ಮುಗಿಸಿ ಮನೆಗೆ ವಾಪಸ್ಸಾಗುವಾಗ ಬಿದಿರೆಗುಡಿ ಬಳಿ ಎದುರುಗಡೆಯಿಂದ ಬಂದ ಕಾರು ಢಿಕ್ಕಿ ಹೊಡೆದ ಪರಿಣಾಮ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಈ ಪ್ರದೇಶದಲ್ಲಿ ನಿರ್ಮಾಣ ಹಂತದಲ್ಲಿರುವ ರಾಷ್ಟ್ರೀಯ ಚತುಷ್ಪಥ ಹೆದ್ದಾರಿಯಲ್ಲಿ ಸರಿಯಾದ ಸೂಚನಾ ಫಲಕಗಳಿಲ್ಲದೇ ಇರುವುದೇ ಅಪಘಾತಕ್ಕೆ ಕಾರಣ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಿದಿರೆಗುಡಿ ಮತ್ತು ಕೊನೆಹಳ್ಳಿ ಭಾಗಗಳಲ್ಲಿ ರಸ್ತೆ ಕಾಮಗಾರಿ ನಡೆಯುತ್ತಿದ್ದು, ಹೆದ್ದಾರಿ ಅಧಿಕಾರಿಗಳು ಸೂಕ್ತ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದೇ ಇರುವುದರಿಂದ ದಿನನಿತ್ಯ ಅಪಘಾತಗಳು ಸಂಭವಿಸುತ್ತಿವೆ ಎಂದು ಆರೋಪಿಸಲಾಗಿದೆ. ಈ ಸಂಬಂಧ ಶಾಸಕರ ಅಧ್ಯಕ್ಷತೆಯಲ್ಲಿ ಪೊಲೀಸ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆ ನಡೆದಿದ್ದರೂ, ಹೆದ್ದಾರಿ ಅಧಿಕಾರಿಗಳು ಸಭೆಗೆ ಗೈರುಹಾಜರಾಗಿರುವುದಾಗಿ ತಿಳಿದುಬಂದಿದೆ. ಆದರೂ ಕೂಡ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದೇ ನಿರ್ಲಕ್ಷ್ಯ ತೋರಿರುವುದರಿಂದ ಅಪಘಾತಗಳ ಪ್ರಮಾಣ ಹೆಚ್ಚಾಗಿದೆ. ಸಂಬಂಧಿತ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಬೇಸಿಗೆ ರಜೆ ಆರಂಭ; ಮಕ್ಕಳಿಗೆ ಶಿಬಿರಗಳು ಶುರು, ಕೃಷಿ ಪಾಠಕ್ಕೆ ಹೆಚ್ಚಿನ ಒತ್ತು
ಬೇಸಿಗೆ ರಜೆ ಹಿನ್ನೆಲೆಯಲ್ಲಿ ಈ ಬಾರಿ ಬೇಸಿಗೆ ಶಿಬಿರಗಳ ಆಯೋಜನೆಯಲ್ಲಿ ಗಮನಾರ್ಹ ಏರಿಕೆ ಕಂಡುಬಂದಿದೆ. ವಿಶೇಷವಾಗಿ ನಗರ ಪ್ರದೇಶಗಳಲ್ಲಿ ಇಂತಹ ಶಿಬಿರಗಳ ಸಂಖ್ಯೆ ಶೇಕಡಾ 25 ರಷ್ಟು ಹೆಚ್ಚಾಗಿದ್ದು, ಅಲ್ಲಿ ಡ್ಯಾನ್ಸ್, ಮ್ಯೂಸಿಕ್, ಕೋಡಿಂಗ್ ಮತ್ತು ರೋಬೋಟಿಕ್ಸ್ನಂತಹ ಆಧುನಿಕ ತರಬೇತಿಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಆದರೆ ಗ್ರಾಮೀಣ ಭಾಗದಲ್ಲಿ ಶಿಬಿರಗಳ ಸಂಖ್ಯೆಯಲ್ಲಿ ಹೆಚ್ಚಿನ ಬದಲಾವಣೆಯಾಗಿಲ್ಲದಿದ್ದರೂ, ಅಲ್ಲಿ ಕ್ರೀಡೆ, ಯೋಗ ಮತ್ತು ಕೃಷಿ ಆಧಾರಿತ ಚಟುವಟಿಕೆಗಳ ಪರಿಚಯಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ.
ಚಿನ್ನದ ಬೆಲೆ ಏರಿಕೆಯಿಂದ 'ಗೋಲ್ಡ್ ಲೋನ್'ಗೆ ಭಾರಿ ಡಿಮ್ಯಾಂಡ್: ಬೆಲೆ ಹೆಚ್ಚಾದಂತೆ ಸಾಲದ ಮೊತ್ತವೂ ಜಂಪ್!
ಇತ್ತೀಚಿಗೆ ಚಿನ್ನದ ಬೆಲೆಯಲ್ಲಿ ಕಂಡುಬರುತ್ತಿರುವ ಏರಿಕೆಯಿಂದಾಗ ಚಿನ್ನವಿಟ್ಟು ಸಾಲ ಪಡೆದುಕೊಳ್ಳುವವರ ಸಂಖ್ಯೆಯಲ್ಲಿ ಏರುಗತಿಯಲ್ಲಿ ಸಾಗುತ್ತಿದೆ. ಸಾಲದ ಮಾರುಕಟ್ಟೆಯು 2026ರ ಹಣಕಾಸು ವರ್ಷದ 3ನೇ ತ್ರೈ ಮಾಸಿಕದಲ್ಲಿ ಸುಧಾರಣೆ ಕಂಡಿದೆ. ಜಿಎಸ್ಟಿ 2.0 ದಿಂದ ನೂರಾರು ಉತ್ನನ್ನಗಳ ಧಾರಣೆಯಾಗಿದ್ದು, ಇದರಿಂದಾಗಿ ಹಬ್ಬದ ಹಂಗಾಮದಲ್ಲಿ ಸಾಲದ ಬೇಡಿಕೆ ಹೆಚ್ಚಿದೆ. ಈ ಕುರಿತ ವಿವರ ಇಲ್ಲಿದೆ..
ಯಡ್ರಾಮಿ: ದಶಕಗಳಿಂದ ಡಾಂಬರು ಕಾಣದ ರಸ್ತೆ
ಕಾಚಾಪುರ-ಮಳ್ಳಿ ಮಾರ್ಗ ದುರಸ್ತಿಗೆ ಗ್ರಾಮಸ್ಥರ ಆಗ್ರಹ
ಮೈಸೂರಲ್ಲಿ ವಂದೇ ಭಾರತ್ ರೈಲ್ವೆ ಹಬ್: 400 ಕೋಟಿ ರೂ ವೆಚ್ಚದಲ್ಲಿ ಹೈಟೆಕ್ ನಿರ್ವಹಣಾ ಕೇಂದ್ರ
Vande Bharat Express: ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಭಾರತೀಯ ರೈಲ್ವೆಯಲ್ಲಿ ಹೊಸ ಕ್ರಾಂತಿ ತಂದಿದೆ. ಇದೀಗ ಈ ಸ್ಪೀಡರ್ ರೈಲುಗಳಿಗೆ ಸಂಬಂಧಿಸಿದಂತೆ ಅವುಗಳ ನಿರ್ವಹಣೆಗಳನ್ನು ಮೈಸೂರಿನಲ್ಲಿ ಮಾಡಲು ಚಿಂತನೆ ನಡೆದಿದೆ. ಅದಕ್ಕಾಗಿ ಬರೋಬ್ಬರಿ 400 ಕೋಟಿ ರೂಪಾಯಿ ವೆಚ್ಚದಲ್ಲಿ ನಗರದಲ್ಲಿ 'ಆಧುನಿಕ ವಂದೇ ಭಾರತ್ ನಿರ್ವಹಣಾ ಕೇಂದ್ರ' ಸ್ಥಾಪನೆಗೆ ನೈಋತ್ಯ ರೈಲ್ವೆ (SWR) ನಿರ್ಧರಿಸಿದೆ. ನೈಋತ್ಯ
ವಾಶಿಂಗ್ಟನ್: ಪಶ್ಚಿಮ ಏಶ್ಯಾ ಸಂಘರ್ಷ ಮುಂದುವರಿದಿದೆ. ಇರಾನ್ ಅಮೆರಿಕದ ಯುದ್ಧ ವಿಮಾನವನ್ನು ಹೊಡೆದುರುಳಿಸಿದ ಬೆನ್ನಲ್ಲೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರತಿಕ್ರಿಯಿಸಿದ್ದಾರೆ. ಅಮೆರಿಕದ ಫೈಟರ್ ಜೆಟ್ ಅನ್ನು ಇರಾನ್ ಹೊಡೆದುರುಳಿಸಿದರೂ ಮಾತುಕತೆ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಟ್ರಂಪ್ ಹೇಳಿರುವ ಬಗ್ಗೆ NBC ನ್ಯೂಸ್ ವರದಿ ಮಾಡಿದೆ. ಇತ್ತೀಚಿನ ಘಟನೆಗೂ ಇರಾನ್ ಮಧ್ಯೆ ನಡೆಯುತ್ತಿರುವ ಮಾತುಕತೆಗೂ ಏನಾದರೂ ಸಂಬಂಧವಿದೆಯೇ ಎಂದು ಪ್ರಶ್ನಿಸಿದಾಗ, ಇಲ್ಲ, ಯಾವ ಸಂಬಂಧವೂ ಇಲ್ಲ. ಇದು ಯುದ್ಧ. ನಾವು ಯುದ್ಧದಲ್ಲಿದ್ದೇವೆ” ಎಂದು ಟ್ರಂಪ್ ಹೇಳಿದ್ದಾರೆ. ಜೆಟ್ ಹೊಡೆದುರುಳಿಸಿದ ಬಳಿಕ ಅಮೆರಿಕದ ವಿಶೇಷ ಪಡೆಗಳಿಂದ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ ಎಂದು ಅಮೆರಿಕದ ಮಾಧ್ಯಮಗಳು ವರದಿ ಮಾಡಿದ್ದವು. ಆದರೆ, ಅದಕ್ಕೆ ಸಂಬಂಧಿಸಿದಂತೆ ಯಾವುದೇ ವಿವರಗಳನ್ನು ನೀಡಲು ಟ್ರಂಪ್ ನಿರಾಕರಿಸಿದ್ದಾರೆ. ಪಶ್ಚಿಮ ಇರಾನ್ನಲ್ಲಿ ಶುಕ್ರವಾರ ಇಸ್ಲಾಮಿಕ್ ರೆವೊಲ್ಯೂಷನರಿ ಗಾರ್ಡ್ ಕಾರ್ಪ್ಸ್ (ಐಆರ್ಜಿಸಿ) ವಾಯುಪಡೆಯು ಅಮೆರಿಕದ ಎಫ್-35 ಯುದ್ಧವಿಮಾನವನ್ನು ಹೊಡೆದುರುಳಿಸಿದ್ದು, ಅದರ ಪೈಲಟ್ ಐಆರ್ಜಿಸಿಯ ವಶದಲ್ಲಿರುವ ಸಾಧ್ಯತೆಯಿದೆ ಎಂದು ಇರಾನ್ ನ ತಸ್ನಿಮ್ ಸುದ್ದಿಸಂಸ್ಥೆ ವರದಿ ಮಾಡಿತ್ತು.
ಚಾಮರಾಜನಗರ ಗಡಿಯಲ್ಲಿ ಕಾಡಾನೆ ಸಂಚಾರ : ಗ್ರಾಮಸ್ಥರಲ್ಲಿ ಆತಂಕ
ಚಾಮರಾಜನಗರ: ಕರ್ನಾಟಕ–ತಮಿಳುನಾಡು ಗಡಿಗೆ ಹೊಂದಿಕೊಂಡಿರುವ ತಮಿಳುನಾಡಿನ ತಾಳವಾಡಿ ತಾಲ್ಲೂಕಿನ ಆನಂದಪುರಂ ಬಳಿ ಕಾಡಾನೆಯೊಂದು ಹಾಡು ಹಗಲೇ ಸಂಚರಿಸಿದ ಘಟನೆ ನಡೆದಿದೆ. ಚಾಮರಾಜನಗರ ಜಿಲ್ಲೆಗೆ ಹೊಂದಿಕೊಂಡಿರುವ ತಾಳವಾಡಿ ಸಮೀಪದ ಆನಂದಪುರಂ ಗ್ರಾಮದೊಳಗೆ ಹಾದುಹೋಗುವ ರಸ್ತೆಯಲ್ಲಿ ಕಾಡಾನೆ ಸಂಚರಿಸುತ್ತಿರುವುದನ್ನು ಕಂಡ ಗ್ರಾಮಸ್ಥರು ಆತಂಕಗೊಂಡಿದ್ದಾರೆ.
ನಿರ್ವಹಣೆ ಇಲ್ಲದೆ ಪಾಳು ಬಿದ್ದ ಬಸವ ವನ ಕಸದ ಗೂಡಾಗಿ ಪರಿವರ್ತನೆ; ಅಭಿವೃದ್ಧಿಗೆ ಸಾರ್ವಜನಿಕರ ಒತ್ತಾಯ
ಬಸವಕಲ್ಯಾಣ: ನಗರದ ಹೃದಯ ಭಾಗದಲ್ಲಿ 58 ವರ್ಷಗಳ ಹಿಂದೆ ಬಸವಣ್ಣನವರ ಅಷ್ಠ ಜನ್ಮಶತಮಾನೋತ್ಸವ ಸವಿನೆನಪಿಗಾಗಿ ಬಸವ ವನವನ್ನು ನಿರ್ಮಾಣ ಮಾಡಲಾಗಿತ್ತು. ಈ ಬಸವ ವನ ಇಂದು ಮೂಲಭೂತ ಸೌಕರ್ಯವಿಲ್ಲದೆ ಪಾಳು ಬಿದ್ದಿದ್ದು, ವನದ ತುಂಬೆಲ್ಲ ಕಸದಿಂದ ನಾರುತ್ತಿದೆ. ಬಸವಕಲ್ಯಾಣ ಅಭಿವೃದ್ಧಿ ಮಂಡಳಿಯಿಂದ ಸುತ್ತಲಿನಲ್ಲಿ ಕಾಂಪೌಂಡ್ ಹಾಗೂ ಪ್ರವೇಶದ್ವಾರ ಕಟ್ಟಲಾಗಿದೆ. ಆದರೆ ಅದು ಸಾರ್ವಜನಿಕರ ಮೂತ್ರ ವಿಸರ್ಜನೆಗೆ ಆಸರೆಯಾಗಿದೆ. ಬಸವ ವನವನ್ನು 26ನೇ ಡಿಸೆಂಬರ್ 1967ರಲ್ಲಿ ಅಂದಿನ ಮೈಸೂರು ರಾಜ್ಯದ ಮುಖ್ಯಮಂತ್ರಿಯಾಗಿದ್ದ ಎಸ್.ನಿಜಲಿಂಗಪ್ಪ ಅವರು ಉದ್ಘಾಟಿಸಿದ್ದರು. ಅಂದು ಇಲ್ಲಿ ಪ್ರತಿಷ್ಠಾಪಿಸಿದ್ದ ಆಕರ್ಷಕ ನಂದಿ ಮೂರ್ತಿ ಸುಸ್ಥಿತಿಯಲ್ಲಿದೆ. ಆದರೆ ಅದರ ಸುತ್ತಲೂ ಸ್ವಚ್ಛತೆ ಇಲ್ಲ. ವನದಲ್ಲಿರುವ ಎಲ್ಲ ವಸ್ತುಗಳು ಹಾಳಾಗಿವೆ. ವನದಲ್ಲಿ ಬೆಳೆದ ಹುಲ್ಲು ಒಣಗಿದ್ದು, ಹಾವು, ಚೇಳಿನಂಥ ವಿಷಜಂತುಗಳಿಗೆ ಆಶ್ರಯವಾಗಿದೆ. ಆದ್ದರಿಂದ ಇಲ್ಲಿಗೆ ಸಾರ್ವಜನಿಕರು ಹೋಗದಂತಾಗಿದೆ. ಈ ಬಸವ ವನ ಮೂರು ಎಕರೆ ಭೂಪ್ರದೇಶದಲ್ಲಿದೆ. ಇದು ಉದ್ಘಾಟನೆ ಮಾಡುವಾಗ ಬಸವಣ್ಣನವರ ಕಾಲದ 770 ಅಮರ ಗಣಂಗಳ (ಶರಣರ) ಹೆಸರಲ್ಲಿ ಅಷ್ಟೇ ಸಂಖ್ಯೆಯ ಮರಗಳು ನೆಟ್ಟು ಬೆಳೆಸಲಾಗಿತ್ತು. ಕೆಲ ವರ್ಷಗಳ ಹಿಂದೆ ಈ ಬಸವ ವನದಲ್ಲಿ ಹಸಿರು ಕಂಗೋಳಿಸುತಿತ್ತು. ದೂರದ ಪ್ರವಾಸಿಗರು ಸಹ ಇಲ್ಲಿಗೆ ಬಂದು ಕುಳಿತು ಆಯಾಸ ಪರಿಹರಿಸಿಕೊಳ್ಳುತ್ತಿದ್ದರು. ವಿದ್ಯಾರ್ಥಿಗಳು ಈ ವನದಲ್ಲಿ ಕುಳಿತು ಅಭ್ಯಾಸ ಮಾಡುತ್ತಿದ್ದರು. ಸಾರ್ವಜನಿಕರು ವಾಯುವಿಹಾರ ಮಾಡುತ್ತಿದ್ದರು. ಬಹಳಷ್ಟು ವರ್ಷಗಳವರೆಗೆ ನಗರದಲ್ಲಿ ಇದೊಂದೇ ವನ ಇದ್ದುದರಿಂದ ಆಕರ್ಷಣೀಯ ಕೇಂದ್ರವಾಗಿತ್ತು. ಆದರೆ ಇದೀಗ ಅಲ್ಲಿನ ಬಹುತೇಕ ಎಲ್ಲ ಮರಗಳು ಒಣಗುತ್ತಿವೆ. ವನದ ಸಮೀಪವೇ ಮಿನಿ ಬಸ್ ನಿಲ್ದಾಣವಿದೆ. ದಿನಾಲೂ ಹಳ್ಳಿಯಿಂದ ಬರುವ ಸಾವಿರಾರು ಸಾರ್ವಜನಿಕರು, ವಿದ್ಯಾರ್ಥಿಗಳು ಇಲ್ಲಿಗೆ ಬಂದು ಸುಡು ಬಿಸಿಲಲ್ಲಿಯೇ ಕುಳಿತುಕೊಳ್ಳುತ್ತಿದ್ದಾರೆ. ಇದರ ಪಕ್ಕವೇ ನ್ಯಾಯಾಲಯದ ಕಟ್ಟಡ ನಿರ್ಮಾಣಗುತ್ತಿದ್ದು, ಮುಂದಿನ ದಿನಗಳಲ್ಲಿ ಇಲ್ಲಿಗೆ ಬರುವವರ ಸಂಖ್ಯೆ ಹೆಚ್ಚಾಲಿದೆ. ಈ ಎಲ್ಲ ಕಾರಣದಿಂದಾಗಿ ಬಸವ ವನದಲ್ಲಿ ಮೂಲಭೂತ ಸೌಕರ್ಯ ಒದಗಿಸಿ ಅಭಿವೃದ್ಧಿಗೊಳಿಸಿದರೆ ಸಾರ್ವಜನಿಕರು, ವಿದ್ಯಾರ್ಥಿಗಳು, ಪ್ರಯಾಣಿಕರು ವಿಶ್ರಾಂತಿಸಬಹುದು. ಅನುದಾನದ ಕೊರತೆ ಇದೆ. ತೋಟಗಾರಿಕೆ ಇಲಾಖೆಯಿಂದ ಈಗಾಗಲೇ ರಾಜ್ಯ ಸರಕಾರಕ್ಕೆ ಹಾಗೂ ಕೆಕೆಆರ್ಡಿಬಿಗೆ 2ಕೋಟಿ ರೂ. ನೀಡುವಂತೆ ಮನವಿ ಸಲ್ಲಿಸಲಾಗಿದೆ. ಹಾಗೆಯೇ ಶಾಸಕರ ಗಮನಕ್ಕೂ ಕೂಡ ತರಲಾಗಿದೆ. ಆದರೆ ಬಜೆಟ್ ಸಿಗದ ಕಾರಣ ಯಾವುದೇ ಕೆಲಸ ಆಗುತ್ತಿಲ್ಲ. -ಸುನಿಲ್ ಗಂಗೋತ್ರಿ ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೆಶಕರು ಬಸವ ವನ ನಗರದ ಹೃದಯ ಭಾಗದಲ್ಲಿದೆ. ತೋಟಗಾರಿಕೆ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಅಲ್ಲಿ ಅಸ್ವಚ್ಛತೆ ತಾಂಡವವಾಡುತ್ತಿದೆ. ಬಸವ ವನದ ಮಹಾದ್ವಾರದ ಮುಂದೆಯೇ ಜನರು ಮೂತ್ರ ವಿಸರ್ಜನೆ ಮಾಡುತ್ತಿದ್ದು, ಅಲ್ಲಿ ಸಿಸಿ ಕ್ಯಾಮೆರಾದ ವ್ಯವಸ್ಥೆಯಾಗಬೇಕಿದೆ. - ಆಕಾಶ್ ಖಂಡಾಳೆ, ಸ್ಥಳೀಯ ನಿವಾಸಿ ವನದಲ್ಲಿಯೇ ತೋಟಗಾರಿಕೆ ಇಲಾಖೆಯ ಕಚೇರಿ ಬಸವ ವನದಲ್ಲಿಯೇ ತೋಟಗಾರಿಕೆಯ ತಾಲೂಕು ಅಧಿಕಾರಿಗಳ ಕಚೇರಿ ಇದೆ. ದಿನನಿತ್ಯ ಅವರು ಆ ವನವನ್ನು ಕಣ್ಣಾರೆ ನೋಡುತ್ತಾರೆ. ಆದರೂ ಕೂಡ ನಿರ್ಲಕ್ಷ್ಯ ವಹಿಸಿದ್ದಾರೆ ಎನ್ನುವುದು ಶೋಚನಿಯ ಸಂಗತಿ.
Sakleshpura | ಕುಶಾಲನಗರ ಬಡಾವಣೆಯಲ್ಲಿ ಬೆಂಕಿ ಅವಘಡ : ಬೈಕ್ ಸುಟ್ಟು ಭಸ್ಮ
ಸಕಲೇಶಪುರ : ಪಟ್ಟಣದ ಕುಶಾಲನಗರ ಬಡಾವಣೆಯಲ್ಲಿ ಸಂಭವಿಸಿದ ಆಕಸ್ಮಿಕ ಬೆಂಕಿ ಅವಘಡದಲ್ಲಿ ಬೈಕ್ ಒಂದು ಸಂಪೂರ್ಣ ಸುಟ್ಟು ಕರಕಲಾದ ಘಟನೆ ಜರುಗಿದೆ. ಸ್ಥಳೀಯ ನಿವಾಸಿ ಚೋಟು ಎಂಬುವರಿಗೆ ಸೇರಿದ ಯಮಹಾ ಆರ್-15 (R15) ಬೈಕ್ ಬೆಂಕಿಗೆ ಆಹುತಿಯಾಗಿದೆ. ಚೋಟು ಅವರು ರಾತ್ರಿ ಮನೆಗೆ ತೆರಳುತ್ತಿದ್ದ ವೇಳೆ ಬೈಕಿನ ಇಂಜಿನ್ ಭಾಗದಲ್ಲಿ ಅಲ್ಪ ಪ್ರಮಾಣದ ಹೊಗೆ ಕಾಣಿಸಿಕೊಂಡಿದೆ. ಕ್ಷಣಾರ್ಧದಲ್ಲಿ ಬೆಂಕಿ ಇಡೀ ವಾಹನವನ್ನು ಆವರಿಸಿಕೊಂಡಿದ್ದು, ಸ್ಥಳೀಯರು ತಕ್ಷಣ ಬೆಂಕಿ ನಂದಿಸಲು ಪ್ರಯತ್ನಿಸಿದರೂ, ಅಷ್ಟರಲ್ಲಿ ಬೈಕ್ ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿದೆ. ಅದೃಷ್ಟವಶಾತ್ ಚಾಲಕ ಯಾವುದೇ ಪ್ರಾಣಾಪಾಯವಿಲ್ಲದೆ ಪಾರಾಗಿದ್ದಾರೆ. ಶಾರ್ಟ್ ಸರ್ಕ್ಯೂಟ್ ಕಾರಣದಿಂದ ಈ ಅವಘಡ ಸಂಭವಿಸಿರಬಹುದು ಎಂದು ಶಂಕಿಸಲಾಗಿದೆ.
ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ನಡುವೆ ಅಮೆರಿಕಾದ 2 ಫೈಟರ್ ಜೆಟ್ ಗಳನ್ನು ಇರಾನ್ ಹೊಡೆದುರುಳಿಸಿದ್ದು, ಈ ಕುರಿತು ಪ್ರತಿಕ್ರಿಯೆ ನೀಡಿರುವ ಟ್ರಂಪ್ ನಾವು ಯುದ್ಧದಲ್ಲಿದ್ದು, ಈ ದಾಳಿಗಳು ನಡೆಯುತ್ತಿರುವ ರಾಜತಾಂತ್ರಿಕ ಮಾತುಕತೆಗಳ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ತಿಳಿಸಿದ್ದಾರೆ. ಆದಾಗ್ಯೂ, ಇತ್ತ ಇರಾನ್ ನಡೆಸಿದ ದಾಳಿಯಲ್ಲಿ ಅಮೆರಿಕಾದ F-15E ಫೈಟರ್ ಜೆಟ್ ಹಾಗೂ A-10 ಜೆಟ್ ಅನ್ನು ಪತನಗೊಳಿಸಿದ್ದು, ಇದರಲ್ಲಿ ನಾಪತ್ತೆಯಾಗಿರುವ ಒಬ್ಬ ಪೈಲಟ್ ಶೋಧ ಕಾರ್ಯ ನಡೆಯುತ್ತಿದೆ.
ಮಂಜೇಶ್ವರದಲ್ಲಿ ಹೈವೋಲ್ಟೇಜ್ ಕದನ ; ರಾಷ್ಟ್ರೀಯ ಗಮನ ಸೆಳೆಯುತ್ತಿದೆ ಕ್ಷೇತ್ರ
ಕಳೆದ ಎರಡು ಚುನಾವಣೆಗಳಲ್ಲಿ ತೀವ್ರ ಪೈಪೋಟಿಗೆ ಸಾಕ್ಷಿಯಾಗಿದ್ದ ಮಂಜೇಶ್ವರ ವಿಧಾನಸಭಾ ಕ್ಷೇತ್ರದಲ್ಲಿ ಈ ಬಾರಿಯೂ ಜಿದ್ದಾಜಿದ್ದಿನ ಹೋರಾಟದ ವೇದಿಕೆ ಸಿದ್ಧವಾಗಿದೆ. ಕಾಸರಗೋಡು ಜಿಲ್ಲೆಯಲ್ಲೇ ಅತೀ ಹೆಚ್ಚು ಅಂದರೆ ಒಟ್ಟು 11 ಮಂದಿ ಅಭ್ಯರ್ಥಿಗಳು ಇಲ್ಲಿ ಕಣದಲ್ಲಿದ್ದು, ಪ್ರಮುಖ ಪಕ್ಷಗಳ ನಡುವೆ ಭಾರಿ ಪೈಪೋಟಿ ನಿರೀಕ್ಷಿಸಲಾಗಿದೆ. ಅಷ್ಟೇ ಅಲ್ಲದೆ, ಜಿಲ್ಲೆಯಲ್ಲೇ ಅತಿ ಹೆಚ್ಚು ಮತದಾರರನ್ನು ಹೊಂದಿರುವ ಕ್ಷೇತ್ರ ಎಂಬ ಹೆಗ್ಗಳಿಕೆಯೂ ಮಂಜೇಶ್ವರಕ್ಕಿದೆ.
ಕಲಬುರಗಿ ಸಂಪುಟ ಸಭೆಯಲ್ಲಿ 2.13 ಕೋ.ರೂ. ದುಂದುವೆಚ್ಚ?: ಆರ್ಟಿಐ ವರದಿ ಬಹಿರಂಗ
ಕಾರಿನ ಇಂಧನಕ್ಕೆ ಲಕ್ಷಾಂತರ ರೂ. ಬಿಲ್!
ʼತಿಂದ ಮನೆಗೆ ಕನ್ನ ಹಾಕಬೇಡಿ, ಗಂಟು ಮೂಟೆ ಕಟ್ಟಿಹೊರಡಿʼ : ರಾಜ್ಯಪಾಲರ ವಿರುದ್ಧ ಕರವೇ ಆಕ್ರೋಶ
ತೃತೀಯ ಭಾಷೆಗೆ ಗ್ರೇಡ್ ನೀಡುವ ವ್ಯವಸ್ಥೆ ಕುರಿತು ತೀರ್ಮಾನ ಪರಿಶೀಲಿಸಲು ಕಾರ್ಯದರ್ಶಿಗೆ ಪತ್ರ ಬರೆದಿದ್ದ ರಾಜ್ಯಪಾಲರು
ಕಾಸರಗೋಡು: ಡಾ. ಚೇತನಾಗೆ ಜಾಗತಿಕ ಗೌರವ; Hallett Prize Medal ಪ್ರಶಸ್ತಿ
ಕಾಸರಗೋಡು: ಕಾಸರಗೋಡು ಸಮೀಪದ ಮೇಲ್ಪರಂಬ ನಿವಾಸಿ ಡಾ. ಚೇತನಾ ಸಿ.ಎಸ್. ಅವರು ಎಂ.ಆರ್.ಸಿ.ಎಸ್. (ಇ.ಎನ್.ಟಿ) ಪರೀಕ್ಷೆಯಲ್ಲಿ ಶೇ. 92 ಅಂಕಗಳನ್ನು ಗಳಿಸಿ ಜಾಗತಿಕ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು ಇಂಗ್ಲೆಂಡಿನ ರಾಯಲ್ ಕಾಲೇಜ್ ಆಫ್ ಸರ್ಜನ್ಸ್ ವತಿಯಿಂದ ಪ್ರದಾನವಾಗುವ ಹ್ಯಾಲೆಟ್ ಪ್ರೈಜ್ ಮೆಡಲ್ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಮಾರ್ಚ್ 26ರಂದು ಲಂಡನ್ನಲ್ಲಿ ನಡೆದ ಸಮಾರಂಭದಲ್ಲಿ ಈ ಗೌರವವನ್ನು ಪ್ರದಾನ ಮಾಡಲಾಯಿತು. ಸರ್ಜನ್ಗಳಿಗೆ ಜಾಗತಿಕ ಮಟ್ಟದಲ್ಲಿ ನೀಡಲಾಗುವ ಅತ್ಯುನ್ನತ ಗೌರವಗಳಲ್ಲಿ ಒಂದಾದ ಈ ಪ್ರಶಸ್ತಿ, ಎಂ.ಆರ್.ಸಿ.ಎಸ್. ಪರೀಕ್ಷೆಯಲ್ಲಿ ಪ್ರಥಮ ಪ್ರಯತ್ನದಲ್ಲೇ ಶೇ. 90ಕ್ಕಿಂತ ಹೆಚ್ಚು ಅಂಕಗಳನ್ನು ಗಳಿಸಿದ ಅಗ್ರ ಪ್ರತಿಭಾವಂತರಿಗೆ ಮಾತ್ರವೇ ನೀಡಲಾಗುತ್ತದೆ. ಈ ಬಾರಿ ಡಾ. ಚೇತನಾ ಅವರು ಶೇ. 92 ಅಂಕಗಳೊಂದಿಗೆ ವಿಶಿಷ್ಟ ಸಾಧನೆ ಮಾಡಿರುವುದು ಗಮನಾರ್ಹ. ಭಾರತದಲ್ಲಿ ಈ ಗೌರವಕ್ಕೆ ಪಾತ್ರರಾದ ವೈದ್ಯರ ಸಂಖ್ಯೆ ಅತ್ಯಲ್ಪವಾಗಿದೆ. ಪ್ರಸ್ತುತ ಮಂಗಳೂರಿನ ಎ.ಜೆ. ಮೆಡಿಕಲ್ ಕಾಲೇಜಿನಲ್ಲಿ ಇ.ಎನ್.ಟಿ ತಜ್ಞೆಯಾಗಿ ಸೇವೆ ಸಲ್ಲಿಸುತ್ತಿರುವ ಅವರು, ಯೆನೆಪೋಯ ಮೆಡಿಕಲ್ ಕಾಲೇಜಿನ ಅಸೋಸಿಯೇಟ್ ಪ್ರೊಫೆಸರ್ ಹಾಗೂ ಮನೋವೈದ್ಯರಾದ ಡಾ. ಶಾಶ್ವತ್ ಸತ್ಯನಾಥ್ ಅವರ ಧರ್ಮಪತ್ನಿ. ದಂಪತಿಗೆ ಅನುಷ್ಕಾ ಎಂಬ ಪುತ್ರಿ ಇದ್ದಾಳೆ. ಡಾ. ಚೇತನಾ ಅವರು ಕಾಸರಗೋಡಿನ ಕಳನಾಡು ನರ್ಸಿಂಗ್ ಹೋಮ್ನ ಡಾ. ಎಂ. ಸತ್ಯನಾಥ್ ಮತ್ತು ಡಾ. ಗೀತಾ ಸತ್ಯನಾಥ್ ಅವರ ಸೊಸೆಯಾಗಿದ್ದು, ಉಜಿರೆಯ ಪ್ರೊ. ಶಿವರಾವ್ ಹಾಗೂ ಜಾಹ್ನವಿ ದಂಪತಿಯ ಪುತ್ರಿಯಾಗಿದ್ದಾರೆ. ವೈದ್ಯಕೀಯ ಕ್ಷೇತ್ರದಲ್ಲಿ ತಮ್ಮ ಅಪ್ರತಿಮ ಸಾಧನೆಯ ಮೂಲಕ ಡಾ. ಚೇತನಾ ಅವರು ಕಾಸರಗೋಡು ಹಾಗೂ ಕರ್ನಾಟಕಕ್ಕೆ ಹೆಮ್ಮೆ ತಂದಿದ್ದಾರೆ. ಇವರ ಈ ಅತ್ಯುನ್ನತ ಸಾಧನೆಗೆ ಕಾಸರಗೋಡು ಹಾಗೂ ಮಂಗಳೂರಿನ ಐಎಂಎ ಸಹಿತ ನೂರಾರು ಸಂಘಟನೆಗಳು ಅಭಿನಂದನೆ ಸಲ್ಲಿಸಿವೆ.
ಖೇಲೋ ಇಂಡಿಯಾ ಬುಡಕಟ್ಟು ಕ್ರೀಡಾಕೂಟ: 23 ಚಿನ್ನದ ಪದಕ ಗೆದ್ದು ಸಮಗ್ರ ಚಾಂಪಿಯನ್ ಪಟ್ಟ ಅಲಂಕರಿಸಿದ ಕರ್ನಾಟಕ
ಛತ್ತೀಸ್ಗಢ: ದೇಶದ ಬುಡಕಟ್ಟು ಸಮುದಾಯದ ಕ್ರೀಡಾ ಪ್ರತಿಭೆಗಳನ್ನು ರಾಷ್ಟ್ರಮಟ್ಟದಲ್ಲಿ ಗುರುತಿಸುವ ಮತ್ತು ಪ್ರೋತ್ಸಾಹಿಸುವ ಉದ್ದೇಶದಿಂದ ಛತ್ತೀಸ್ಗಢದಲ್ಲಿ ಆಯೋಜಿಸಲಾಗಿದ್ದ ಚೊಚ್ಚಲ 'ಖೇಲೋ ಇಂಡಿಯಾ ಬುಡಕಟ್ಟು ಕ್ರೀಡಾಕೂಟ 2026' (Khelo India Tribal Games) ಅದ್ಧೂರಿಯಾಗಿ ಸಂಪನ್ನಗೊಂಡಿದೆ. ಈ ಐತಿಹಾಸಿಕ ಕ್ರೀಡಾಕೂಟದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ನಮ್ಮ ಕರ್ನಾಟಕ ರಾಜ್ಯವು ಅತಿ ಹೆಚ್ಚು ಚಿನ್ನದ ಪದಕಗಳನ್ನು ಬೇಟೆಯಾಡುವ ಮೂಲಕ 'ಸಮಗ್ರ
HPV ಲಸಿಕೆ ಆಗ ಬೇಡ ಆದದ್ದೇಕೆ? ಈಗ ಬೇಕಾದದ್ದೇಕೆ?
ಭಾರತೀಯ ಲಸಿಕೆಗೆ ಅಗತ್ಯ ಅನುಮತಿ ಪಡೆಯುವ ಚಟುವಟಿಕೆಗೆ ವೇಗ ನೀಡುವ ಬದಲು, ಭಾರತ ಸರಕಾರವು ಅದೇ ಹಳೆಯ ವಿವಾದಕ್ಕೀಡಾದ Gardasil ಲಸಿಕೆಯೊಂದಿಗೆ ಮುಂದುವರಿಯಲು ತೀರ್ಮಾನಿಸಿರುವುದು, ಈಗಾಗಲೇ ಕೋವಿಡ್ ಲಸಿಕೆಯ ಕಾಲದ ವಿಶ್ವಾಸಾರ್ಹತೆ ಕೊರತೆಯಿಂದ ಬಳಲುತ್ತಿರುವ ದೇಶದಲ್ಲಿ, ವಾದ-ವಿವಾದಗಳಿಗೆ ಹಾದಿ ತೆರೆದಿರುವುದು ಸಹಜ. ಭಾರತದಲ್ಲಿ ಸ್ತನ ಹಾಗೂ ಗರ್ಭಕೋಶದ ಕತ್ತಿನ ಕ್ಯಾನ್ಸರ್ಗಳು ಮಹಿಳೆಯರಲ್ಲಿ ಅತಿ ಹೆಚ್ಚು ಕಾಣಿಸಿಕೊಳ್ಳುವ ಕ್ಯಾನ್ಸರ್ಗಳಾಗಿದ್ದು, ಅವುಗಳ ಪೈಕಿ ಗರ್ಭಕೋಶದ ಕತ್ತಿನ ಕ್ಯಾನ್ಸರ್ಬೆಳೆಯುವಲ್ಲಿ ಗಮನಾರ್ಹ ಪಾಲು ಇರುವುದು ಹ್ಯೂಮನ್ ಪ್ಯಾಪಿಲೋಮಾ ವೈರಸ್ (HPV)ನದು. ಹೆಚ್ಚಾಗಿ ಲೈಂಗಿಕ ಸಂಪರ್ಕ- ಚರ್ಮ ಸಂಪರ್ಕದ - ಗಾಯಗಳ ಮೂಲಕ ಹರಡುವ ಈ ವೈರಲ್ ಮೂಲದ ಕ್ಯಾನ್ಸರ್, ಭಾರತದಲ್ಲಿ ಪ್ರತೀ ವರ್ಷ ಅಂದಾಜು 1.20 ಲಕ್ಷ ಜನರಿಗೆ ಕಾಣಿಸಿಕೊಳ್ಳುತ್ತಿದ್ದು; ವಾರ್ಷಿಕ ಅಂದಾಜು 80,000 ಜನರ ಜೀವಕ್ಕೆ ಎರವಾಗುತ್ತಿದೆ. ಈ ವೈರಸ್ಗೆ ಲಸಿಕೆ ಲಭ್ಯವಿದ್ದು, ಭಾರತ ಸರಕಾರವು 14 ವರ್ಷ ಪ್ರಾಯದ 1.15 ಕೋಟಿ ಹುಡುಗಿಯರಿಗೆ ಈ ವರ್ಷ ಸಾರ್ವತ್ರಿಕವಾಗಿ ಲಸಿಕೆ ನೀಡುವ ಅಭಿಯಾನ ಆರಂಭಿಸಿದೆ. ಫೆಬ್ರವರಿ 27ರಂದು ಪ್ರಧಾನಿಯವರು ರಾಜಸ್ಥಾನದ ಅಜ್ಮೀರ್ನಲ್ಲಿ ಈ ಅಭಿಯಾನಕ್ಕೆ ಚಾಲನೆ ನೀಡಿದರು. 2022ರ ಜೂನ್ನಲ್ಲಿ WHOದ ಪರಿಣತ ಸಲಹಾ ತಂಡವು (SAGE) ಈ ಲಸಿಕೆಯ ಸಾಂಪ್ರದಾಯಿಕ ಎರಡು ಡೋಸ್ಗಳ ಬದಲಿಗೆ ಒಂದು ಡೋಸ್ ಸಾಕಾಗುತ್ತದೆ ಎಂದಿರುವುದನ್ನು ಭಾರತದ ಲಸಿಕಾ ಪರಿಣತರ ತಂಡ (NTAGI) ಕೂಡ ಅನುಮೋದಿಸಿದೆ. ಜಗತ್ತಿನಾದ್ಯಂತ 160 ದೇಶಗಳಲ್ಲಿ, 50 ಕೋಟಿ ಮಂದಿಗೆ ಈ ತನಕ ಈ ಲಸಿಕೆ ನೀಡಲಾಗಿದ್ದು, ಅದು ಶೇ. 93-100 ಪರಿಣಾಮಕಾರಿ ಎಂದು ಕಂಡುಕೊಳ್ಳಲಾಗಿದೆ ಎಂದು ಅಧಿಕೃತ ದಾಖಲೆಗಳು ಹೇಳುತ್ತಿವೆ (PIB Release ID: 2233632). ಈಗಿನ್ನೂ ಸಾರ್ವತ್ರಿಕೆ ಲಸಿಕೆ ಕಾರ್ಯಕ್ರಮದ (UIP) ಭಾಗವಾಗಿರದ ಈ HPV ಲಸಿಕೆಯನ್ನು, ಭಾರತ ಸರಕಾರ ತನ್ನ ಮೂಗಿನ ನೇರಕ್ಕೆ ತೀರ್ಮಾನಿಸಿ, ಬಾಲಕಿಯರಿಗೆ ಸಾರ್ವತ್ರಿಕವಾಗಿ ನೀಡಲಾರಂಭಿಸಿರುವ ಕುರಿತು ಹಲವು ಪ್ರಶ್ನೆಗಳು ಏಳತೊಡಗಿವೆ. ಮುಟ್ಟಿನ ಅವಧಿಯಲ್ಲಿ ನೈರ್ಮಲ್ಯ ಕಾಪಾಡುವಿಕೆಯಂತಹ ಮೂಲಭೂತ ಅಂಶಗಳಿಗೆ ಮತ್ತು ಆರಂಭಿಕ ಹಂತದಲ್ಲೇ ಎಲ್ಲ ವಿಧದ ಕ್ಯಾನ್ಸರ್ಗಳ ಸ್ಕ್ರೀನಿಂಗ್ ಮಾಡುವುದಕ್ಕೆ ಆದ್ಯತೆ ನೀಡುವ ಬದಲು, ಹೆಚ್ಚಾಗಿ ಲೈಂಗಿಕ ಸಂಪರ್ಕದಿಂದ ಹರಡುವ ಈ HPV ವೈರಸ್ ನಿಯಂತ್ರಣಕ್ಕೆ ಸರಕಾರ ಆದ್ಯತೆ ನೀಡಿ ಮುಂದೆ ನಿಂತಿರುವುದರ ಹಿನ್ನೆಲೆಯ ಬಗ್ಗೆ ಗುಮಾನಿಗಳಿವೆ. ಈ ಲಸಿಕೆಯನ್ನು ಸಾರ್ವತ್ರಿಕವಾಗಿ ನೀಡುವ ಅವಶ್ಯಕತೆ, ಲಸಿಕೆಯ ಪರಿಣಾಮಗಳು, ಸರಕಾರದ ಈ ನಿಲುವಿನಿಂದ ಹೆತ್ತವರ ಹಕ್ಕುಗಳ ಮೇಲೆ ಆಗಲಿರುವ ಹಸ್ತಕ್ಷೇಪ, ಎಳೆಯರ ಲೈಂಗಿಕ ವರ್ತನೆಗಳ ಕುರಿತು ಸರಕಾರದ ಏಕಮುಖಿ ತೀರ್ಮಾನದ ಬಗ್ಗೆ ಕಳವಳಗಳು, ಈ ಇಡೀ ಪ್ರಕರಣದಲ್ಲಿ ಮೈಕ್ರೊಸಾಫ್ಟ್ ಸ್ಥಾಪಕ ಬಿಲ್ಗೇಟ್ಸ್ ಅವರ GAVI ಲಸಿಕೆ ಒಕ್ಕೂಟದ ಪಾತ್ರದ ಕುರಿತು ಇರುವ ವದಂತಿ ಪ್ರೇರಿತ ಆತಂಕಗಳು... ಇವೆಲ್ಲ ಸಾರ್ವಜನಿಕವಾಗಿ ಚರ್ಚೆ ಆಗತೊಡಗಿವೆ. ಒಂದು ಹಳೆಯ ಕಥೆ ಈ ಲಸಿಕೆಗೆ ಸಂಬಂಧಿಸಿದಂತೆ ಒಂದು ಹಳೆಯ ಕುತೂಹಲಕರ ಕಥೆ ಇದೆ. ಜೂನ್ 2006ರಿಂದ ಮೇ 2011ರ ನಡುವೆ, ನಾಲ್ಕು ದೇಶಗಳಲ್ಲಿ (ಉಗಾಂಡಾ, ಪೆರು, ವಿಯೆಟ್ನಾಂ, ಭಾರತ) ಇದೇ HPV ಲಸಿಕೆಯನ್ನು ಸಾರ್ವಜನಿಕರ ಮೇಲೆ ಪ್ರಯೋಗಿಸಲು ಅಮೆರಿಕ ಮೂಲದ Programme for Appropriate Technology for Health - PATH ಸಂಸ್ಥೆಯು ಕಾರ್ಯಕ್ರಮವೊಂದನ್ನು ರೂಪಿಸಿತ್ತು. ಗುಜರಾತ್ (ಬರೋಡಾ) ಮತ್ತು ಆಂಧ್ರಪ್ರದೇಶ (ಖಮ್ಮಮ್)ಗಳಲ್ಲಿ ಈ ಪ್ರಯೋಗ ನಡೆದು, 23,000 ಬಾಲಕಿಯರಿಗೆ HPV ಲಸಿಕೆ ನೀಡಲಾಗಿತ್ತು. ಅವರಲ್ಲಿ, ಏಳು ಮಂದಿ ಬಡ ಆದಿವಾಸಿ ಮಕ್ಕಳು ಸಾವಿಗೀಡಾಗಿದ್ದಾರೆ ಎಂಬ ವದಂತಿಗಳ ಹಿನ್ನೆಲೆಯಲ್ಲಿ ಸಂಸತ್ತಿನಲ್ಲಿ ಗದ್ದಲವಾಗಿ, ಒಂದು ಸಂಸದೀಯ ಸ್ಥಾಯೀ ಸಮಿತಿ ರಚನೆಗೊಂಡು, ಆ ಸಮಿತಿಯು ಪ್ರಕರಣದ ತನಿಖೆ ನಡೆಸಿ, ತನ್ನ ವರದಿಯಲ್ಲಿ, ಸದ್ರಿ ಪ್ರಯೋಗವು ನಿಯಂತ್ರಕ ನಿಯಮಗಳ, ನೈತಿಕ ನಿಯಮಗಳ ಸಾರಾಸಗಟು ಉಲ್ಲಂಘನೆ ಹಾಗೂ ಕಾರ್ಯಕ್ರಮದ ಮೇಲ್ವಿಚಾರಣೆಯಲ್ಲಿ ಗಂಭೀರ ಸ್ವರೂಪದ ಲೋಪಗಳಿಂದ ಕೂಡಿತ್ತೆಂದು ಅಭಿಪ್ರಾಯಪಟ್ಟಿತ್ತು. ಈ ಪ್ರಕರಣದಲ್ಲಿ ICMR ಹಾಗೂ DCGI ನಡವಳಿಕೆಗಳ ಬಗ್ಗೆ ಸಂಸದೀಯ ಸಮಿತಿ ಕಟುವಾದ ಆಕ್ಷೇಪಗಳನ್ನು ದಾಖಲಿಸಿತ್ತು. ಇಂದು ಉತ್ತರಪ್ರದೇಶದಲ್ಲಿ ಉಪಮುಖ್ಯಮಂತ್ರಿಯೂ, ಆರೋಗ್ಯ ಸಚಿವರೂ ಆಗಿರುವ ಅಂದಿನ ಸಂಸದ ಬೃಜೇಶ್ ಪಾಠಕ್ ಈ ಸಂಸದೀಯ ಸಮಿತಿಯ ಅಧ್ಯಕ್ಷರಾಗಿದ್ದರು ಹಾಗೂ ಇಂದು ಭಾರತ ಸರಕಾರದ ಆರೋಗ್ಯ ಸಚಿವರಾಗಿರುವ ಡಾ. ಜಗತ್ ಪ್ರಸಾದ್ ನಡ್ಡಾ ಆ ಸಂಸದೀಯ ಸಮಿತಿಯ ಸದಸ್ಯರಾಗಿದ್ದರು ಎಂಬುದು ಗಮನಿಸಬೇಕಾದ ಅಂಶ. 2013ರಲ್ಲಿ ಈ ಸಮಿತಿ ತನ್ನ ವರದಿಯನ್ನು ಸಂಸತ್ತಿಗೆ ಸಲ್ಲಿಸಿತ್ತು. (ಆಧಾರ: Parliament of India, 72nd report on Alleged irregularities in the conduct of studies using HPV vaccine by PATH India.) ಮುಂದೆ ಸರಕಾರದ್ದೇ ಇನ್ನೊಂದು ಸಮಿತಿ, ಆ ಸಾವುಗಳಿಗೆ ಲಸಿಕೆ ಕಾರಣ ಅಲ್ಲ ಎಂದು ಷರಾ ಬರೆಯಿತು; ಲಸಿಕೆ ಉದ್ದಾನುದ್ದಕ್ಕೂ ಭಾರತೀಯ ಮಾರುಕಟ್ಟೆಯಲ್ಲಿ ಲಭ್ಯವಿತ್ತು. ಅಂದು ನೀಡಲಾದದ್ದು ಮರ್ಕ್ ಸಂಸ್ಥೆಯ Gardasil ಮತ್ತು ಗ್ಲಾಕ್ಸೊ ಸ್ಮಿತ್ಕ್ಲೈನ್ ಸಂಸ್ಥೆಯ Ceravix ಲಸಿಕೆಗಳನ್ನು. ಅಂದು ಕೂಡ ಆ ಲಸಿಕೆಗಳನ್ನು ನೀಡಲು ಆರ್ಥಿಕ ಸಹಾಯ ಮಾಡಿದ್ದು, ಇಂದಿನ GAVI ಮುಖ್ಯಸ್ಥರಾಗಿರುವ ಬಿಲ್ ಗೇಟ್ಸ್ ಅವರ ಬಿಲ್ ಆಂಡ್ ಮೆಲಿಂಡಾ ಗೇಟ್ಸ್ ಫೌಂಡೇಷನ್. ಅಂದು ಮಾನವರ ಮೇಲೆ ಈ ವೈದ್ಯಕೀಯ ಪ್ರಯೋಗವನ್ನು ‘ಡೆಮಾನ್ಸ್ಟ್ರೇಷನ್ ಪ್ರಾಜೆಕ್ಟ್’ ಎಂಬ ಮುಸುಕಿನಲ್ಲಿ ಮಾಡಲಾಗಿತ್ತು. ಸಂಸದೀಯ ಸಮಿತಿ ತನ್ನ ವರದಿಯಲ್ಲಿ ಈ ಕಾರ್ಯಕ್ರಮದ ಕುರಿತು ಮಾಡಿರುವ ಆಬ್ಸರ್ವೇಶನ್ಗಳಲ್ಲಿ ಒಂದು ಹೀಗಿದೆ: ‘‘ಈ ಇಡಿಯ ಪ್ರಕರಣವು ಕುತೂಹಲಕರ ಮತ್ತು ಅನುಮಾನಾಸ್ಪದ. ಪ್ರಯೋಗಕ್ಕೆ ದೇಶ ಮತ್ತು ಜನಸಮುದಾಯಗಳ ಆಯ್ಕೆ; ಉತ್ಪನ್ನವನ್ನು ಮಾರುಕಟ್ಟೆಗೆ ದೂಡುವ ಸನ್ನಿವೇಶದಲ್ಲಿ ಅದರ ಏಕಸ್ವಾಮ್ಯತೆಯ ಸ್ವರೂಪ; ಆಯಾ ದೇಶಗಳ ಸಾರ್ವತ್ರಿಕ ಲಸಿಕೆ ಕಾರ್ಯಕ್ರಮಗಳಲ್ಲಿ ಅಳವಡಿಕೆಯಾದರೆ ಅದರಿಂದ ಸಿಗುವ ಅಪರಿಮಿತ ಮಾರುಕಟ್ಟೆ ಮತ್ತು ಅವಕಾಶಗಳೆಲ್ಲವೂ ಬೊಟ್ಟು ಮಾಡುತ್ತಿರುವುದು - ಇದೆಲ್ಲ ಸನ್ನಿವೇಶದ ಭರಪೂರ ಲಾಭ ಪಡೆಯಲು ಮಾಡಿರುವ ಸುಯೋಜಿತ ತಂತ್ರ ಎಂದು. ಸಂಬಂಧಿಸಿದ ದೇಶಗಳಲ್ಲಿನ ಸಾರ್ವತ್ರಿಕ ಲಸಿಕೆ ಕಾರ್ಯಕ್ರಮಗಳಲ್ಲಿ ಈ HPV ಲಸಿಕೆಯನ್ನು ಸೇರ್ಪಡೆಗೊಳಿಸುವಲ್ಲಿ PATH ಯಶಸ್ವಿಯಾಗುತ್ತಿದ್ದರೆ, ಯಾವುದೇ ಪ್ರಚಾರ, ಖರ್ಚು ಇಲ್ಲದೆ ಪ್ರತೀವರ್ಷ ಆಟೊಮ್ಯಾಟಿಕ್ ಮಾರುಕಟ್ಟೆ ಲಭ್ಯವಾಗುತ್ತಿತ್ತು; ಉತ್ಪಾದಕರಿಗೆ ಲಾಭದ ಸುರಿಮಳೆಯಾಗುತ್ತಿತ್ತು. ಒಮ್ಮೆ ಸಾರ್ವತ್ರಿಕ ಲಸಿಕೆ ಕಾರ್ಯಕ್ರಮದಲ್ಲಿ ಸೇರಿಕೊಂಡರೆ ಯಾವುದೇ ಲಸಿಕೆಯನ್ನು ಆ ಬಳಿಕ ಹಿಂದೆಗೆದುಕೊಳ್ಳುವುದು ರಾಜಕೀಯವಾಗಿ ಅಸಾಧ್ಯ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. PATH ಸಂಸ್ಥೆಯು ಈ ಗುರಿಯನ್ನು ಸಾಧಿಸಲು, ಕಟ್ಟುನಿಟ್ಟಿನ ನಿಯಂತ್ರಣಗಳಿರುವ ಕಠಿಣ ನಿಯಮಬದ್ಧ ಹಾದಿಯನ್ನು ಬಿಟ್ಟು, ಕ್ಲಿನಿಕಲ್ ಟ್ರಯಲ್ಗಳನ್ನು ‘ನಿಗಾ ಅಧ್ಯಯನ’ ಅಥವಾ ‘ಪ್ರದರ್ಶನ ಯೋಜನೆ’ ಎಂಬಿತರ ಹೆಸರುಗಳಲ್ಲಿ ಚಾಲ್ತಿಗೆ ತಂದು, ಕುತಂತ್ರದ ಸುಲಭ ಹಾದಿ ಹಿಡಿದಿದೆ.’’ ಇಂತಹದೊಂದು ವರದಿ ನೀಡಿದ ಸಮಿತಿಯ ಭಾಗ ಆಗಿದ್ದ ಆರೋಗ್ಯ ಸಚಿವ ಡಾ. ನಡ್ಡಾ ಅವರೇ ಈಗ ಇದೇ ಲಸಿಕೆಗಳಲ್ಲಿ ಒಂದನ್ನು ದೇಶದ ಒಳಗೆ ಬಳಕೆಗೆ ಮುಂದಾಗಿದ್ದಾರೆ ಎಂದಾಗ, ಸಹಜವಾಗಿಯೇ ಹುಬ್ಬುಗಳು ಏರುತ್ತವೆ. GAVI ಈಗ ಭಾರತಕ್ಕೆ 2.6 ಕೋಟಿ HPV ಲಸಿಕೆ ಡೋಸ್ಗಳನ್ನು ಒದಗಿಸುತ್ತಿದ್ದು, ಅದನ್ನು ಪ್ರತೀ ವರ್ಷ 14 ವರ್ಷ ಪ್ರಾಯ ತಲುಪುವ ಬಾಲಕಿಯರಿಗೆ ನೀಡುವ ಉದ್ದೇಶ ಸರಕಾರಕ್ಕೆ ಇದ್ದಂತಿದೆ. ಭಾರತೀಯ ಲಸಿಕೆ ಇದ್ದೂ... ಮೇಲೆ ವಿವರಿಸಲಾದ ವಿವಾದಗಳ ಕಾರಣದಿಂದ, ಭಾರತದಲ್ಲಿ HPV ಲಸಿಕೆಯು ಒಂದು ದಶಕದಷ್ಟು ವಿಳಂಬವಾಗಿ, ಈಗಷ್ಟೇ ಬಳಕೆಗೆ ಬರುತ್ತಿದೆ. ಈಗ ಭಾರತದಲ್ಲಿ ಸರಕಾರ ತನ್ನ ಅಭಿಯಾನಕ್ಕೆ ಬಳಸುತ್ತಿರುವುದು ಬಿಲ್ ಗೇಟ್ಸ್ ಅವರ GAVI ಸಹಾಯಹಸ್ತದೊಂದಿಗೆ ದೊರೆತಿರುವ Gardasil ಲಸಿಕೆಯ ಏಕ ಡೋಸ್ಅನ್ನು. ಭಾರತದ್ದೇ ಸಂಸ್ಥೆ ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ (SII) ಈಗಾಗಲೇ Cervavac ಎಂಬ ಲಸಿಕೆಯನ್ನು ಸಿದ್ಧಪಡಿಸಿದ್ದು (2022), ಅದಕ್ಕೆ ಇನ್ನೂ WHOದಿಂದ ಏಕ ಡೋಸ್ ಬಳಕೆಯ ಅನುಮತಿ ಸಿಕ್ಕಿಲ್ಲ. ಭಾರತೀಯ ಲಸಿಕೆಗೆ ಅಗತ್ಯ ಅನುಮತಿ ಪಡೆಯುವ ಚಟುವಟಿಕೆಗೆ ವೇಗ ನೀಡುವ ಬದಲು, ಭಾರತ ಸರಕಾರವು ಅದೇ ಹಳೆಯ ವಿವಾದಕ್ಕೀಡಾದ Gardasil ಲಸಿಕೆಯೊಂದಿಗೆ ಮುಂದುವರಿಯಲು ತೀರ್ಮಾನಿಸಿರುವುದು, ಈಗಾಗಲೇ ಕೋವಿಡ್ ಲಸಿಕೆಯ ಕಾಲದ ವಿಶ್ವಾಸಾರ್ಹತೆ ಕೊರತೆಯಿಂದ ಬಳಲುತ್ತಿರುವ ದೇಶದಲ್ಲಿ, ವಾದ-ವಿವಾದಗಳಿಗೆ ಹಾದಿ ತೆರೆದಿರುವುದು ಸಹಜ. ಗಮನಿಸಬೇಕಾದ ಸಂಗತಿ ಎಂದರೆ, ಬಜೆಟ್ನಲ್ಲಿ ಹಣಕಾಸು ಸಚಿವರು ಈ ಬಗ್ಗೆ ಪ್ರಕಟಿಸಿರುವುದನ್ನು ವಿವರಿಸಿರುವ ಭಾರತ ಸರಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಅಧಿಕೃತ ವೆಬ್ಸೈಟ್, ಭಾರತವು ಇಲ್ಲೇ ಸಿದ್ಧಗೊಂಡು SII ಮಾರುಕಟ್ಟೆ ಮಾಡುತ್ತಿರುವ Cervavac ಲಸಿಕೆಯನ್ನೇ ಅಭಿಯಾನಕ್ಕೆ ಬಳಸಲಿದೆ. ಅದು ಹಾಲಿ ಖಾಸಗಿ ಆಸ್ಪತ್ರೆಗಳಲ್ಲಿ ಡೋಸೊಂದರ 4000ರೂ.ಗಳಿಗೆ ಲಭ್ಯ ಎಂದು ಹೇಳುತ್ತಿದೆ! ಈ ರೀತಿಯ ಗೊಂದಲದ ಬೆಳವಣಿಗೆಗಳೆಲ್ಲ ಅಂತಿಮವಾಗಿ, ಈಗಾಗಲೇ ವಾಣಿಜ್ಯೀಕರಣದ ಬಿರುಗಾಳಿಗೆ ತುತ್ತಾಗಿರುವ ದೇಶದ ಆರೋಗ್ಯ ವ್ಯವಸ್ಥೆಯ ಮೇಲೆ ಜನಸಾಮಾನ್ಯರಿಗೆ ಬಾಕಿ ಉಳಿದಿರುವ ಕಿಂಚಿತ್ ಭರವಸೆ, ವಿಶ್ವಾಸಗಳಿಗೆ ಧಕ್ಕೆ ಮಾಡುತ್ತಿವೆ ಎಂಬುದನ್ನು ಅಲ್ಲಗಳೆಯುವಂತಿಲ್ಲ. ಸರಕಾರಕ್ಕೆ ಕ್ಯಾನ್ಸರ್ಗಳ ಕುರಿತು ಕಾಳಜಿ ಇದ್ದರೆ, ಆರಂಭಿಕ ಹಂತದಲ್ಲೇ ಕ್ಯಾನ್ಸರ್ಗಳನ್ನು ಗುರುತಿಸುವ ಸ್ಕ್ರೀನಿಂಗ್ ವ್ಯವಸ್ಥೆಯನ್ನು ದೇಶದಾದ್ಯಂತ ಬಲಪಡಿಸುವ, ಅಭಿಯಾನದೋಪಾದಿಯಲ್ಲಿ ಅದನ್ನು ಆಚರಣೆಗೆ ತರುವ ಕೆಲಸಕ್ಕೆ ಮುಂದಾಗಬೇಕಿತ್ತು. ಅದರ ಬದಲು ಒಂದು ನಿರ್ದಿಷ್ಟ ಕ್ಯಾನ್ಸರ್ ಬೆನ್ನು ಹತ್ತಿ ಹೊರಟಿರುವುದು ಯಾಕೋ ತಾರ್ಕಿಕ ಅನ್ನಿಸುತ್ತಿಲ್ಲ. ಬೆಂಕಿ ಇಲ್ಲದೇ ವಿವಾದಗಳು ಹೊಗೆಯಾಡುವುದಿಲ್ಲ.
Maharashtra| ಬಾವಿಗೆ ಬಿದ್ದ ಕಾರು: ಒಂದೇ ಕುಟುಂಬದ 9 ಮಂದಿ ಮೃತ್ಯು
ಮುಂಬೈ: ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ದಿನ್ಡೋರಿ ತಾಲೂಕಿನಲ್ಲಿ ಕಾರು ಬಾವಿಗೆ ಬಿದ್ದ ಪರಿಣಾಮ ಒಂದೇ ಕುಟುಂಬದ 9 ಮಂದಿ ಮೃತಪಟ್ಟಿದ್ದಾರೆ. ಸ್ಥಳೀಯ ಪೊಲೀಸರು ಮತ್ತು ತುರ್ತು ಸೇವಾ ಸಿಬ್ಬಂದಿ ಸ್ಥಳಕ್ಕೆ ತೆರಳಿ ಮಧ್ಯರಾತ್ರಿಯ ಸುಮಾರಿಗೆ ಕ್ರೇನ್ಗಳು ಮತ್ತು ಈಜುಗಾರರ ಸಹಾಯದಿಂದ ಕಾರನ್ನು ಹೊರತೆಗೆದಿದ್ದಾರೆ. ಮೃತರನ್ನು ಸುನಿಲ್ ದತ್ತು ದರ್ಗುಡೆ (32), ಅವರ ಪತ್ನಿ ರೇಷ್ಮಾ, ಆಶಾ ಅನಿಲ್ ದರ್ಗುಡೆ (32) ಎಂದು ಗುರುತಿಸಲಾಗಿದೆ. ಇದಲ್ಲದೆ ಅವರ ಕುಟುಂಬದ ಆರು ಮಕ್ಕಳು ಮೃತಪಟ್ಟಿದ್ದಾರೆ. ಮೃತದೇಹವನ್ನು ದಿಂಡೋರಿಯ ಸರಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಅಪಘಾತದ ಕುರಿತು ಪ್ರಕರಣ ದಾಖಲಾಗಿದ್ದು, ಈ ಕುರಿತು ಪೊಲೀಸರು ತನಿಖೆಯನ್ನು ನಡೆಸುತ್ತಿದ್ದಾರೆ.
ಯುದ್ಧದ ಬಿಸಿಗೆ ಹೈರಾಣಾದ ಬದುಕು: ಹೋಟೆಲ್ ನಲ್ಲಿ ತಿಂಡಿ-ತಿನಿಸು ದರ ಏರಿಕೆ, ಗ್ಯಾಸ್ ಸಿಗದೆ ಆಟೋ ಚಾಲಕರ ಪರದಾಟ
ಮಧ್ಯಪ್ರಾಚ್ಯದಲ್ಲಿನ ಯುದ್ದದ ಪರಿಣಾಮ ರಾಜ್ಯದ ಜನರ ಮೇಲೂ ಬೀಳುತ್ತಿದ್ದು, ಇಂಧನ ಅನಿಶ್ಚಿತತೆಯಿಂದಾಗಿ ತಿಂಡಿ-ತಿನಿಸು ಸೇರಿದಂತೆ ಆಟೋ ಹಾಗೂ ವಾಹನಗಳ ಅನಿಲ ಪೂರೈಕೆಯಲ್ಲಿ ವ್ಯತ್ಯಯವುಂಟಾಗುತ್ತಿದೆ. ಇದರಿಂದಾಗಿ ಹೋಟೇಲ್ ಗಳನ್ನು LPG ಪೂರೈಕೆಯಾಗದೆ, ತಿಂಡಿ, ತಿನಿಸು, ಊಟದ ದರದ ಹೆಚ್ಚಳವಾಗಿದ್ದು, ಚಪಾತಿ, ಪೂರಿ, ದೋಸೆ ಸಹಿತ ಕರಿದ ತಿಂಡಿಗಳನ್ನು ನಿಲ್ಲಿಸಲಾಗಿದೆ. ಅಲ್ಲದೆ, ಆಟೋ ರಿಕ್ಷಾಗಳಿಗೂ ಗ್ಯಾಸ್ ಸಿಗದೆ ಪರದಾಡುವ ಪರಿಸ್ಥಿತಿ ಎದುರಾಗಿದೆ.
Kerala| ಕಾಂಗ್ರೆಸ್ ಸಂಸದ ಶಶಿ ತರೂರ್ ಅವರ ಬೆಂಗಾವಲು ವಾಹನ ತಡೆದು ಭದ್ರತಾ ಸಿಬ್ಬಂದಿ ಮೇಲೆ ಹಲ್ಲೆ
ಮಲಪ್ಪುರಂ: ಕೇರಳದ ಮಲಪ್ಪುರಂ ಜಿಲ್ಲೆಯಲ್ಲಿ ಶುಕ್ರವಾರ ಕಾಂಗ್ರೆಸ್ ಸಂಸದ ಶಶಿ ತರೂರ್ ಅವರ ಬೆಂಗಾವಲು ಪಡೆಯ ವಾಹನ ತಡೆದು ಭದ್ರತಾ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿರುವ ಆರೋಪ ಕೇಳಿ ಬಂದಿದೆ. ವಂಡೂರಿನಲ್ಲಿ ಚುನಾವಣಾ ಪ್ರಚಾರ ಕಾರ್ಯಕ್ರಮಕ್ಕೆ ತೆರಳುತ್ತಿದ್ದಾಗ ತಿರುವಳ್ಳಿ ಚೆಲ್ಲಿತೋಡು ಸೇತುವೆ ಬಳಿ ಘಟನೆ ನಡೆದಿದೆ. “ನಾವು ಎರಡು ವಾಹನಗಳಲ್ಲಿ ಪ್ರಯಾಣಿಸುತ್ತಿದ್ದಾಗ ಸುಮಾರು ಎಂಟು ಮಂದಿಯಿದ್ದ ಗುಂಪು ವಾಹನವನ್ನು ತಡೆದಿದೆ. ಈ ಸಂದರ್ಭದಲ್ಲಿ ಮಧ್ಯಪ್ರವೇಶಿಸಲು ಭದ್ರತಾ ಸಿಬ್ಬಂದಿಯೋರ್ವರು ಮುಂದಾಗಿದ್ದಾರೆ. ಈ ವೇಳೆ ಅವರ ಮೇಲೆ ಹಲ್ಲೆ ನಡೆಸಲಾಗಿದೆʼ ಎಂದು ಆರೋಪಿಸಲಾಗಿದೆ. ಸ್ಥಳೀಯ ಪೊಲೀಸ್ ಅಧಿಕಾರಿಗಳು ಈ ಕುರಿತು ಪ್ರಕರಣವನ್ನು ದಾಖಲಿಸಿ ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ.
ಮಧ್ಯಪ್ರಾಚ್ಯ ಸಂಘರ್ಷದ ಪರಿಣಾಮ ಗಲ್ಫ್ ಭಾಗದ ರಫ್ತು ಕುಸಿತ ; ಸ್ಥಳೀಯರ ತಟ್ಟೆಗೆ ಭರಪೂರ ಮೊಟ್ಟೆ !
ಮಧ್ಯ ಪ್ರಾಚ್ಯದ ಸಂಘರ್ಷವು ದಕ್ಷಿಣ ಭಾರತದ ಕೋಳಿ ಸಾಕಾಣಿಕೆ ವಲಯದ ಮೇಲೆ ಗಂಭೀರ ಪರಿಣಾಮ ಬೀರಿದೆ. ಭಾರತದ 'ಮೊಟ್ಟೆಯ ತೊಟ್ಟಿಲು' ಎನಿಸಿಕೊಂಡಿರುವ ತಮಿಳುನಾಡಿನ ನಾಮಕ್ಕಲ್ ಮತ್ತು ಕರ್ನಾಟಕದ ಭಾಗಗಳಿಂದ ಗಲ್ಫ್ ರಾಷ್ಟ್ರಗಳಿಗೆ ತಿಂಗಳಿಗೆ ರಫ್ತಾಗುತ್ತಿದ್ದ ಕೋಟ್ಯಂತರ ಮೊಟ್ಟೆಗಳ ವ್ಯಾಪಾರಕ್ಕೆ ಯುದ್ಧದ ಕಾರಣದಿಂದ ಅಡ್ಡಿಯಾಗಿದೆ.
ಖೇಲೋ ಇಂಡಿಯಾದಲ್ಲಿ ಚಿನ್ನ ಗೆದ್ದು ಇತಿಹಾಸ ಬರೆದ ಲಕ್ಷದ್ವೀಪದ ಮೀನುಗಾರ ಯುವಕ ಅಬ್ದುಲ್ ಫತ್ತಾ
ಜಗದಾಲ್ಪುರ (ಛತ್ತೀಸ್ಗಢ): ರಾತ್ರಿಯಿಡೀ ಸಮುದ್ರದಲ್ಲಿ ಮೀನುಗಾರಿಕೆ ಮಾಡಿ ಕುಟುಂಬಕ್ಕೆ ಆಧಾರವಾಗಿರುವ ಯುವಕನೊಬ್ಬ, ಹಗಲಿನಲ್ಲಿ ಕ್ರೀಡಾ ಮೈದಾನದಲ್ಲಿ ಬೆವರು ಸುರಿಸಿ ಇದೀಗ ಇಡೀ ದೇಶವೇ ತಿರುಗಿ ನೋಡುವಂತಹ ಐತಿಹಾಸಿಕ ಸಾಧನೆ ಮಾಡಿದ್ದಾನೆ. ಛತ್ತೀಸ್ಗಢದ ಜಗದಾಲ್ಪುರದಲ್ಲಿ ನಡೆಯುತ್ತಿರುವ 'ಖೇಲೋ ಇಂಡಿಯಾ ಬುಡಕಟ್ಟು ಕ್ರೀಡಾಕೂಟ'ದಲ್ಲಿ (KITG - 2026) ಲಕ್ಷದ್ವೀಪದ 18 ವರ್ಷದ ಯುವಕ ಅಬ್ದುಲ್ ಫತ್ತಾ ಉದ್ದ ಜಿಗಿತ ಸ್ಪರ್ಧೆಯಲ್ಲಿ
ದಾವಣಗೆರೆ: ಏಪ್ರಿಲ್ 10 ರ ನಂತರ ತಾಪಮಾನದಲ್ಲಿ ಇನ್ನಷ್ಟು ಹೆಚ್ಚಳ; ಎರಡು ದಿನ 42 ಡಿಗ್ರಿ ಉಷ್ಣಾಂಶ ಸಾಧ್ಯತೆ
ಜಗಳೂರು ತಾಲೂಕಿನಲ್ಲಿ ತಾಪಮಾನವು 38 ಡಿಗ್ರಿ ಸೆಲ್ಸಿಯಸ್ಗೆ ತಲುಪಿದ್ದು, ಮುಂದಿನ ದಿನಗಳಲ್ಲಿ ಇದು 42 ಡಿಗ್ರಿಯವರೆಗೆ ಏರಿಕೆಯಾಗುವ ಮುನ್ಸೂಚನೆ ಇರುವುದರಿಂದ ಸಾರ್ವಜನಿಕರ ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀರತೊಡಗಿದೆ. ವಿಶೇಷವಾಗಿ ಮಹಿಳೆಯರು ಮತ್ತು ಮಕ್ಕಳಲ್ಲಿ ನಿರ್ಜಲೀಕರಣದ ಸಮಸ್ಯೆ ಹೆಚ್ಚಾಗುತ್ತಿದ್ದು, ಸರ್ಕಾರಿ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ದಿನೇ ದಿನೆ ಏರುತ್ತಿದೆ.
ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ನಡುವೆ ಹೊರ್ಮುಜ್ ಜಲಸಂಧಿಯನ್ನು ಸುರಕ್ಷಿತಗೊಳಿಸಲು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಮಂಡಿಸಲಾಗಿದ್ದ ನಿರ್ಣಯದ ಮತದಾನ ಮುಂದಿನ ವಾರಕ್ಕೆ ಮುಂದೂಡಲಾಗಿದೆ. ಇನ್ನು, ಹೊರ್ಮುಜ್ ಜಲಸಂಧಿಯ ಸುರಕ್ಷತೆಗೆ ಮಿಲಿಟರಿ ಕ್ರಮ ಸೇರಿದಂತೆ ಸಾಧ್ಯವಿರುವ ಎಲ್ಲಾ ಕ್ರಮ ಕೈಗೊಳ್ಳಲು ದೇಶಗಳಿಗೆ ಅವಕಾಶ ನೀಡುವ ನಿರ್ಣಯದಲ್ಲಿ ಮಿಲಿಟರಿ ದಾಳಿ ಅಂಶಕ್ಕೆ ರಷ್ಯಾ ಚೀನಾದಿಂದ ವಿರೋಧ ಕೇಳಿ ಬಂದಿದೆ. ಇನ್ನು, ಇತ್ತ ಪ್ರಾದೇಶಿಕವಾಗಿ ಯುದ್ಧ ಉಲ್ಬಣಗೊಳುತ್ತಿದ್ದು, ಇಸ್ರೇಲ್ ಮೇಲೆ ಇರಾನ್ ದಾಳಿ ಮುಂದುವರೆಸಿದೆ.
ಕೇಜ್ರಿವಾಲ್ ’blue-eyed boy’ ರಾಘವ್ ಚಡ್ಡಾ ವಜಾ : ಇದರ ಹಿಂದಿದೆ ಚಡ್ಡಾ ಬಿಜೆಪಿ ಸೇರ್ಪಡೆಯ ಘಮಲು?
Raghav Chadha Joining BJP : ದೆಹಲಿಯ ಮಾಜಿ ಮುಖ್ಯಮಂತ್ರಿ ಮತ್ತು ಆಮ್ ಆದ್ಮಿ ಪಾರ್ಟಿಯ ಸಂಚಾಲಕರೂ ಆಗಿರುವ ಅರವಿಂದ್ ಕೇಜ್ರಿವಾಲ್ ಅವರ ಅತ್ಯಂತ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ರಾಜ್ಯಸಭಾ ಸದಸ್ಯ ರಾಘವ್ ಚಡ್ಡಾ ಅವರನ್ನು ಉಪನಾಯಕನ ಸ್ಥಾನದಿಂದ ತೆಗೆದು ಹಾಕಲಾಗಿದೆ. ಇದರ ಬೆನ್ನಲ್ಲೇ, ಅವರು ಬಿಜೆಪಿಗೆ ಹತ್ತಿರವಾಗುತ್ತಿದ್ದಾರೆ ಎನ್ನುವ ಬಲವಾದ ಸುದ್ದಿ ಹರಿದಾಡುತ್ತಿದೆ.
ರಾಜ್ಯದ ರಾಷ್ಟ್ರೀಕೃತ, ಖಾಸಗಿ ಬ್ಯಾಂಕ್ಗಳಲ್ಲಿ 1.16 ಕೋಟಿ ಖಾತೆಗಳು ಅನಾಥ
ಸಾಂದರ್ಭಿಕ ಚಿತ್ರ PC: freepik ಬೆಂಗಳೂರು, ಎ.3: ಸರಕಾರಿ ಸೌಲಭ್ಯ ಪಡೆಯಲು ರಾಜ್ಯದ ರಾಷ್ಟ್ರೀಕೃತ ಮತ್ತಿತರ ಖಾಸಗಿ ಬ್ಯಾಂಕ್ಗಳಲ್ಲಿ, ವಿವಿಧ ಬ್ಯಾಂಕ್ಗಳಲ್ಲಿ ತೆರೆದಿದ್ದ ಖಾತೆಗಳು ವಾರಸುದಾರರಿಲ್ಲದೇ 1.16 ಕೋಟಿಯಷ್ಟು ಖಾತೆಗಳು ಅನಾಥವಾಗಿ ನಿಷ್ಕ್ರೀಯವಾಗಿವೆ. ಈ ಖಾತೆಗಳಲ್ಲಿ 2025ರ ಅಕ್ಟೋಬರ್ ಅಂತ್ಯಕ್ಕೆ 3,403 ಕೋಟಿ ಹಣವಿತ್ತು. ಈ ಹಣವನ್ನು ಮರಳಿಸದ ಕಾರಣ ನಿಷ್ಕ್ರೀಯ ಖಾತೆಗಳಲ್ಲಿ ಉಳಿದಿದೆ. 2025ರ ನವೆಂಬರ್ನಲ್ಲಿ ನಡೆದಿದ್ದ ರಾಜ್ಯಮಟ್ಟದ ಬ್ಯಾಂಕರ್ಗಳ ಸಮಾಲೋಚನ ಸಭೆಯ ನಡವಳಿಯಲ್ಲಿ ಈ ಮಾಹಿತಿ ಇದೆ. ಈ ಸಭೆಯ ನಡವಳಿಗಳು ‘the-file.in’ಗೆ ಲಭ್ಯವಾಗಿವೆ. ಹೀಗಾಗಿ ಇಂತಹ ಖಾತೆಗಳ ಕುರಿತು ಅಭಿಯಾನವನ್ನು ಪರಿಣಾಮಕಾರಿಯಾಗಿ ನಡೆಸಬೇಕು. ಈ ಅವಧಿಯಲ್ಲಿ ಗರಿಷ್ಠ ಕ್ಲೈಮ್ ಇತ್ಯರ್ಥವನ್ನು ಖಚಿತಪಡಿಸಿಕೊಳ್ಳಬೇಕು. ವಾರಸುದಾರರಿಲ್ಲದೇ ನಿಷ್ಕ್ರೀಯವಾಗಿರುವ ಠೇವಣಿಗಳನ್ನು ಠೇವಣಿದಾರರು ಮತ್ತು ಹಕ್ಕುದಾರರಿಗೆ ವರ್ಗಾಯಿಸಲು ಬ್ಯಾಂಕ್ಗಳು ಪೂರ್ವಭಾವಿಯಾಗಿ ಸಂಪರ್ಕ ಕಲ್ಪಿಸಬೇಕು ಎಂದು ಸಭೆಯಲ್ಲಿ ನಿರ್ಣಯ ಕೈಗೊಂಡಿರುವುದು ತಿಳಿದು ಬಂದಿದೆ. ಕರ್ನಾಟಕ ರಾಜ್ಯಕ್ಕೆ ಸಂಬಂಧಿಸಿದಂತೆ ಆರ್ಬಿಐ ಹದಿನೈದು ದಿನಗಳ ಆಧಾರದ ಮೇಲೆ ಪ್ರಗತಿಯನ್ನು ಮೇಲ್ವಿಚಾರಣೆ ಮಾಡುತ್ತದೆ. ಹೀಗಾಗಿ ಇಂತಹ ನಿಷ್ಕ್ರೀಯ ಖಾತೆಗಳ ಕುರಿತು ಎಲ್ಲಾ ಬ್ಯಾಂಕುಗಳು ತಮ್ಮ ಪ್ರಗತಿ ಅಂಕಿ ಅಂಶಗಳನ್ನು ಎಸ್ಎಲ್ಬಿಸಿಗೆ ತಕ್ಷಣವೇ ಸಲ್ಲಿಸಬೇಕು ಎಂದು ಸೂಚಿಸಿದೆ. ಬ್ಯಾಂಕ್ಗಳು ರಾಜ್ಯ ಸರಕಾರಕ್ಕೆ ಸಂಬಂಧಿಸಿದ ನಿಷ್ಕ್ರೀಯ ಖಾತೆಗಳ ವಿವರಗಳನ್ನು ಸಂಬಂಧಪಟ್ಟ ಸರಕಾರಿ ಇಲಾಖೆಗಳೊಂದಿಗೆ ನೇರವಾಗಿ ಹಂಚಿಕೊಳ್ಳಬೇಕು. ಮತ್ತು ಅಂತಹ ಪ್ರಕರಣಗಳ ಸುಗಮ ಇತ್ಯರ್ಥಕ್ಕಾಗಿ ಅವರೊಂದಿಗೆ ನಿಕಟ ಸಮನ್ವಯದಲ್ಲಿ ಕೆಲಸ ಮಾಡಬೇಕು. ಶಾಖೆ ಮಟ್ಟದ ಸೂಚನೆಗಳು, ಔಟ್ ರೀಚ್ ಕಾರ್ಯಕ್ರಮಗಳು ಮತ್ತು ಡಿಜಿಟಲ್ ಚಾನೆಲ್ಗಳ ಮೂಲಕ ಬ್ಯಾಂಕುಗಳು ಕ್ಲೈಮ್ ಮಾಡದ ಠೇವಣಿಗಳ ಲಭ್ಯತೆ ಮತ್ತು ಇತ್ಯರ್ಥ ಪ್ರಕ್ರಿಯೆಯ ಬಗ್ಗೆ ವ್ಯಾಪಕ ಸಾರ್ವಜನಿಕ ಜಾಗೃತಿ ಮೂಡಿಸಬೇಕು ಎಂದು ಸಭೆಯು ಸಲಹೆ ನೀಡಿದೆ. ಸರಕಾರದ ವಿವಿಧ ಯೋಜನೆಗಳ ಸೌಲಭ್ಯ ಪಡೆಯಲು ರಾಷ್ಟ್ರೀಕೃತ ಮತ್ತು ಖಾಸಗಿ ಬ್ಯಾಂಕ್ಗಳಲ್ಲಿ ಖಾತೆ ತೆರೆದಿದ್ದಾರೆ. ಇಂತಹ ಖಾತೆಗಳಿಗೆ ವಿವಿಧ ಸೌಲಭ್ಯಗಳ ಹಣವು ಜಮೆಯಾಗುತ್ತದೆ. ಆದರೆ ಬಹುತೇಕರು ಈ ಹಣವನ್ನು ಪಡೆಯದೇ ಅಲ್ಲಿಯೇ ಇಟ್ಟಿರುತ್ತಾರೆ. ಹಲವು ಫಲಾನುಭವಿಗಳು ಮರಣ ಹೊಂದಿರುತ್ತಾರೆ. ಹೀಗಾಗಿ ಕೆಲವು ಖಾತೆಗಳಲ್ಲಿ ಅವಲಂಬಿತರ ಹೆಸರು ಕೂಡ ಇರುವುದಿಲ್ಲ. ಹೀಗಾಗಿ ಸರಕಾರದ ಹಣವು ಅನೇಕ ವರ್ಷಗಳಿಂದ ಅಲ್ಲಿಯೇ ಕೊಳೆಯುತ್ತಿದೆ. ವೃದ್ಧಾಪ್ಯ ವೇತನ, ವಿಧವಾ ವೇತನ, ಅಂಗವಿಕಲರ ವೇತನ, ಶಿಷ್ಯ ವೇತನ ಸೇರಿ ಇತರ ಸೌಲಭ್ಯಗಳಿಗೆ ತೆರೆದಿರುವ ಖಾತೆಗಳ ಪಟ್ಟಿಯನ್ನು 10 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ಅವಧಿಗೆ ನಿಷ್ಕ್ರೀಯಗೊಳಿಸಿದ ಪಟ್ಟಿಯನ್ನು ಬ್ಯಾಂಕ್ಗಳು ವೆಬ್ಸೈಟ್ಗಳಲ್ಲಿ ಪ್ರದರ್ಶಿಸಲು ಅಥವಾ ನವೀಕರಿಸಲು ಭಾರತೀಯ ರಿಸರ್ವ್ ಬ್ಯಾಂಕ್ ತನ್ನ ಎಲ್ಲಾ ಬ್ಯಾಂಕ್ಗಳಿಗೆ ಸಲಹೆ ನೀಡುತ್ತದೆ. 2025ರ ಫೆಬ್ರವರಿ ಅಂತ್ಯಕ್ಕೆ 3,305 ನಿಷ್ಕ್ರೀಯ ಖಾತೆಗಳಿದ್ದವು. ಇದರಲ್ಲಿ 55.78 ಕೋಟಿ ರೂ. ಇತ್ತು. ಸಾರ್ವಜನಿಕ ವಲಯದ ಬ್ಯಾಂಕ್ಗಳಲ್ಲಿ 45.14 ಕೋಟಿ ರೂ.ಮತ್ತು ಖಾಸಗಿ ವಲಯದ ಬ್ಯಾಂಕ್ಗಳಲ್ಲಿ 7.03 ಕೋಟಿ ರೂ. ರಾಜ್ಯ ಸರಕಾರವು ಠೇವಣಿ ಇರಿಸಿತ್ತು. ಈ ಹಣವು ಯಾರ ಬಳಕೆಗೂ ಬಾರದೇ ಅಲ್ಲಿಯೇ ಉಳಿದುಕೊಂಡಿತ್ತು. ಆದರೆ 2025ರ ನವೆಂಬರ್ ಅಂತ್ಯಕ್ಕೆ ಇಂತಹ ನಿಷ್ಕ್ರೀಯ ಖಾತೆಗಳ ಸಂಖ್ಯೆಯು 1.13 ಕೋಟಿಯಷ್ಟಾಗಿವೆ. ಮೊತ್ತವೂ 3,403 ಕೋಟಿ ರೂ.ಇದೆ. ತುಮಕೂರು ಜಿಲ್ಲೆಯಲ್ಲಿ ಡಿಸೆಂಬರ್ 2025ರ ಅಂತ್ಯಕ್ಕೆ 26 ಬ್ಯಾಂಕ್ಗಳ 373 ಶಾಖೆಗಳಲ್ಲಿ ಒಟ್ಟಾರೆ 4,11,477 ಖಾತೆಗಳು ನಿಷ್ಕ್ರೀಯಗೊಂಡಿದ್ದವು. ಈ ಖಾತೆಗಳಲ್ಲಿ ಒಟ್ಟು 110.45 ಕೋಟಿ ಹಣವಿತ್ತು. ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 2025ರ ಡಿಸೆಂಬರ್ ಅಂತ್ಯಕ್ಕೆ ಒಟ್ಟಾರೆ 2,15,344 ಸಂಖ್ಯೆಯ ನಿಷ್ಕ್ರೀಯ ಖಾತೆಗಳಿದ್ದವು. ಈ ಖಾತೆಗಳಲ್ಲಿ 46.79 ಕೋಟಿ ಹಣವಿತ್ತು. ಕರ್ನಾಟಕ ಗ್ರಾಮೀಣ ಬ್ಯಾಂಕ್, ಕೆನರಾ ಬ್ಯಾಂಕ್ ಮತ್ತು ಎಸ್ಬಿಐನಲ್ಲಿಯೇ ಅತೀ ಹೆಚ್ಚು ನಿಷ್ಕ್ರೀಯ ಖಾತೆಗಳಿದ್ದವು. ಕರ್ನಾಟಕ ಗ್ರಾಮೀಣ ಬ್ಯಾಂಕ್ನ ವಿವಿಧ ಶಾಖೆಗಳಲ್ಲಿ 83,727 ನಿಷ್ಕ್ರೀಯ ಖಾತೆಗಳಲ್ಲಿ 16.77 ಕೋಟಿ ರೂ.ಇತ್ತು. ಮೈಸೂರು ಜಿಲ್ಲೆಯಲ್ಲಿ ವಾರಸುದಾರರಿಲ್ಲದ ಇಂತಹ ಖಾತೆಗಳಲ್ಲಿ 5.17 ಕೋಟಿ ರೂ.ಠೇವಣಿ ಸಂಗ್ರಹವಾಗಿತ್ತು. ಬೆಂಗಳೂರು ನಗರ ಜಿಲ್ಲೆಯಲ್ಲಿ 120 ಖಾತೆಗಳಿದ್ದವು. ಇದರಲ್ಲಿ 6.38 ಕೋಟಿ ಇತ್ತು. ಅತೀ ಕಡಿಮೆ ಖಾತೆಗಳು ಬಾಗಲಕೋಟೆ ಜಿಲ್ಲೆಯಲ್ಲಿದ್ದವು. ಇದರಲ್ಲಿ 1.04 ಕೋಟಿ ರೂ.ಇತ್ತು. ಕೊಡಗು ಜಿಲ್ಲೆಯಲ್ಲಿ ಅತೀ ಕಡಿಮೆ ಎಂದರೇ 99 ಖಾತೆಗಳಲ್ಲಿ 3.37 ಲಕ್ಷ ರೂ.ಠೇವಣಿ ಇತ್ತು. ಉಳಿದಂತೆ ಬಳ್ಳಾರಿಯಲ್ಲಿ 41 ಖಾತೆಗಳಲ್ಲಿ 2.68 ಕೋಟಿ, ಕಲಬುರಗಿಯಲ್ಲಿ 122 ಖಾತೆಗಳಲ್ಲಿ 2.57 ಕೋಟಿ ರೂ., ರಾಯಚೂರಿನಲ್ಲಿ 171 ಖಾತೆಗಳಲ್ಲಿ 2.31 ಕೋಟಿ ರೂ., ಕೋಲಾರದಲ್ಲಿ 135 ಖಾತೆಗಳಲ್ಲಿ 2.19 ಕೋಟಿ ರೂ., ಚಿತ್ರದುರ್ಗದಲ್ಲಿ 130 ಖಾತೆಗಳಲ್ಲಿ 2.10 ಕೋಟಿ ರೂ., ಹಾಸನದಲ್ಲಿ 157 ಖಾತೆಗಳಲ್ಲಿ 1.93 ಕೋಟಿ ರೂ.ಇತ್ತು. ಗದಗದಲ್ಲಿ 80 ಖಾತೆಗಳಲ್ಲಿ 1.71 ಕೋಟಿ ರೂ.ಇತ್ತು. ಎರಡು ವರ್ಷ ಯಾವುದೇ ವಹಿವಾಟು ನಡೆಸದೇ ಇದ್ದರೆ ಆ ಖಾತೆ ನಿಷ್ಕ್ರೀಯವಾಗುತ್ತದೆ. ಇಂತಹ ಖಾತೆಗಳು ಆ ಬ್ಯಾಂಕ್ನಲ್ಲಿಯೇ ಇರುತ್ತವೆ. ಆದರೆ 10 ವರ್ಷ ವಹಿವಾಟು ನಡೆಸದೇ ಇದ್ದಲ್ಲಿ ಅಂತಹ ನಿಷ್ಕ್ರೀಯ ಖಾತೆಗಳನ್ನು ಆರ್ಬಿಐಗೆ ವರದಿ ಮಾಡಲಾಗುತ್ತದೆ. 2022-23ರನೇ ಆರ್ಥಿಕ ವರ್ಷದ ಅಂತ್ಯಕ್ಕೆ ಬ್ಯಾಂಕ್ಗಳು ಹೀಗೆ ಡಿಇಎ ನಿಧಿಗೆ ವರ್ಗಾಯಿಸಿದ ಠೇವಣಿ ಮೊತ್ತವೇ 42 ಸಾವಿರ ಕೋಟಿ ರೂ.ಗೂ ಹೆಚ್ಚಿತ್ತು. ಈ ಠೇವಣಿಗಳಿಗೆ ಲಭ್ಯವಾಗಿದ್ದ ಬಡ್ಡಿ ಮತ್ತು ಆದಾಯದ ಮೊತ್ತವೂ 20 ಸಾವಿರ ಕೋಟಿ ರೂ.ದಾಟಿತ್ತು. ಹೀಗೆ 10 ವರ್ಷಗಳ ಅವಧಿಯವರೆಗೆ ವಾರಸುದಾರರಿಲ್ಲದ ಮತ್ತು ನಿಷ್ಕ್ರೀಯ ಖಾತೆಗಳಲ್ಲಿನ ಠೇವಣಿಗಳ ಮೊತ್ತವೇ 62 ಸಾವಿರ ಕೋಟಿ ರೂ.ಗೂ ಹೆಚ್ಚಿತ್ತು. 2018-19ನೇ ಆರ್ಥಿಕ ವರ್ಷದಿಂದ 2022-23ನೇ ಆರ್ಥಿಕ ವರ್ಷದಲ್ಲಿ ಡಿಇಎ ನಿಧಿಯಿಂದ 5,279 ಕೋಟಿ ರೂ.ಗಳನ್ನಷ್ಟೇ ವಾಪಸ್ ಪಡೆದಿತ್ತು. ನಿಷ್ಕ್ರೀಯ ಖಾತೆಗಳ ವಾರಸುದಾರರನ್ನು ಹುಡುಕಿ ಠೇವಣಿಯನ್ನು ಹಿಂತಿರುಗಿಸುವ ಕೆಲಸವನ್ನು ಬ್ಯಾಂಕ್ಗಳು ಮಾಡುತ್ತಿವೆಯಾದರೂ ಆ ಅವಧಿಯಲ್ಲಿ 62 ಸಾವಿರ ಕೋಟಿ ರೂ.ಗೂ ಅಧಿಕ ಮೊತ್ತ ಡಿಇಎ ನಿಧಿಯಲ್ಲಿಯೇ ಉಳಿದಿತ್ತು. ಬ್ಯಾಂಕ್ಗಳು ಕ್ಲೈಮ್ ಮಾಡದ ಠೇವಣಿಗಳ ಇತ್ಯರ್ಥಕ್ಕಾಗಿ ಪ್ರಮಾಣಿತ ಕಾರ್ಯಾಚರಣಾ ಕಾರ್ಯವಿಧಾನವನ್ನು (ಖ) ಎಲ್ಲಾ ಶಾಖೆ ಮಟ್ಟದ ಅಧಿಕಾರಿಗಳಿಗೆ ತಿಳಿಸಬೇಕು. ಮತ್ತು ಶಾಖೆ ಮಟ್ಟದಲ್ಲಿ ಸುಗಮ ಮತ್ತು ಗ್ರಾಹಕ ಸ್ನೇಹಿ ಕ್ಲೈಮ್ ಇತ್ಯರ್ಥವನ್ನು ಖಚಿತಪಡಿಸಿಕೊಳ್ಳಬೇಕು ಎಂದು ಸೂಚಿಸಿದೆ. ದೇಶದಲ್ಲಿ ಬ್ಯಾಂಕ್ಗಳು ಮತ್ತು ಇತರ ಹಣಕಾಸು ಸಂಸ್ಥೆಗಳ ಬಳಿ ವಾರಸುದಾರರಿಲ್ಲದೇ 1.84 ಲಕ್ಷ ಕೋಟಿ ಮೊತ್ತದಷ್ಟು ಅಸ್ತಿ ಇತ್ತು ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಹೇಳಿಕೆ ನೀಡಿದ್ದರು. ದೇಶದ ಎಲ್ಲಾ ಬ್ಯಾಂಕ್ಗಳಲ್ಲಿ ತೆರೆಯಲಾಗಿದ್ದ ಖಾತೆಗಳಲ್ಲಿ ಶೇ.20ರಷ್ಟು ಖಾತೆಗಳು ನಿಷ್ಕ್ರಿಯವಾಗಿದ್ದವು. 10 ವರ್ಷಗಳಿಗೂ ಹೆಚ್ಚು ಅವಧಿ ನಿಷ್ಕ್ರೀಯವಾಗಿರುವ ಖಾತೆಗಳಲ್ಲಿ ಇರುವ ಠೇವಣಿಯನ್ನು ಆಯಾ ಬ್ಯಾಂಕ್ಗಳು ರಿಸರ್ವ್ ಬ್ಯಾಂಕ್ನ ಠೇವಣಿದಾರರಿಗೆ ಬ್ಯಾಂಕಿಂಗ್ ಸಾಕ್ಷರತೆ ಮತ್ತು ಜಾಗೃತಿ ನಿಧಿ ಡಿಐಎ ನಿಧಿಗೆ ವರ್ಗಾಯಿಸಬೇಕು ಎಂದು ಕೇಂದ್ರ ಹಣಕಾಸು ಸಚಿವಾಲಯವು ರಾಜ್ಯಸಭೆಗೆ ಮಾಹಿತಿ ಒದಗಿಸಿತ್ತು.
ಮಂಡ್ಯ: ಇಲ್ಲಿ ಕಾವೇರಿ ಹರಿದರೂ ನೀರಿಗೆ ಮಾತ್ರ ವರಿ!
ಮಂಡ್ಯ ನಗರಕ್ಕೆ ಹೊಂದಿಕೊಂಡಂತೆ ನೂತನವಾಗಿ ತಲೆ ಎತ್ತಿರುವ ಸುಮಾರು 15 ರಿಂದ 20 ಬಡಾವಣೆಗಳು ಮೂಲ ಸೌಕರ್ಯಗಳಿಲ್ಲದೆ ಸಂಕಷ್ಟಕ್ಕೆ ಸಿಲುಕಿವೆ. ಸುಮಾರು 30,000ಕ್ಕೂ ಹೆಚ್ಚು ಜನಸಂಖ್ಯೆ ಹೊಂದಿರುವ ಈ ಪ್ರದೇಶಗಳಲ್ಲಿ ವಿಶೇಷವಾಗಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದ್ದು, ಸಂಬಂಧಪಟ್ಟ ಗ್ರಾಮ ಪಂಚಾಯಿತಿಗಳು ಅಗತ್ಯ ಸೌಲಭ್ಯ ಒದಗಿಸುವಲ್ಲಿ ವಿಫಲವಾಗಿವೆ. ಇದರಿಂದಾಗಿ ಇಲ್ಲಿನ ನಿವಾಸಿಗಳು ದಿನನಿತ್ಯದ ಬದುಕಿಗಾಗಿ ಪರದಾಡುವಂತಾಗಿದೆ.
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು?
ಬೆಂಗಳೂರು: ಆಭರಣ ಪ್ರಿಯರಿಗೆ ಮತ್ತು ಹೂಡಿಕೆದಾರರಿಗೆ ಚಿನ್ನ ಹಾಗೂ ಬೆಳ್ಳಿಯ ದರ ಪ್ರತಿದಿನದ ಪ್ರಮುಖ ಸುದ್ದಿಯಾಗಿರುತ್ತದೆ. ಜಾಗತಿಕ ಮಾರುಕಟ್ಟೆಯ ಏರಿಳಿತಗಳು ಹಾಗೂ ಭಾರತೀಯ ಎಂಸಿಎಕ್ಸ್ (MCX) ಮಾರುಕಟ್ಟೆಯ ವಹಿವಾಟುಗಳು ಪ್ರತಿನಿತ್ಯ ಈ ಬೆಲೆಬಾಳುವ ಲೋಹಗಳ ಬೆಲೆಯ ಮೇಲೆ ನೇರ ಪರಿಣಾಮ ಬೀರುತ್ತವೆ. ಇಂದು (ಏಪ್ರಿಲ್ 4) ರಾಜ್ಯ ರಾಜಧಾನಿ ಹಾಗೂ ದೇಶದ ಪ್ರಮುಖ ನಗರಗಳಲ್ಲಿ ಚಿನ್ನ ಮತ್ತು
ಶೀಘ್ರವೇ ಪಾಕ್ ಆಕ್ರಮಿತ ಕಾಶ್ಮೀರ ಭಾರತದೊಂದಿಗೆ ವಿಲೀನವಾಗಲಿದೆ. ಅಲ್ಲಿನ ಜನರು ಕಾಶ್ಮೀರದ ಪ್ರಗತಿಯಿಂದ ಸಂತಸವಾಗಿದ್ದು, ಜನಾಭಿಪ್ರಾಯ ಸಂಗ್ರಹಕ್ಕೆ ಇಚ್ಚಿಸುತ್ತಾರೆ.ಹಾಗಾಗಿ ದೇವರ ಇಚ್ಛೆಯಿದ್ದರೆ, ಅವರು ಘರ್ ವಾಪ್ಸಿ ನಡೆಯಲಿದೆ ಎಂದು ಆಲ್ ಇಂಡಿಯಾ ಇಮಾಮ್ ಆರ್ಗನೈಸೇಶನ್ನ ಮುಖ್ಯ ಇಮಾಮ್ ಉಮರ್ ಅಹ್ಮದ್ ಇಲ್ಯಾಸಿ ತಿಳಿಸಿದ್ದಾರೆ. ಅಲ್ಲದೆ, 370ವಿಧಿಯ ಬಳಿಕ ಕಾಶ್ಮೀರದಲ್ಲಿ ಆದ ಬೆಳವಣಿಗೆಯ ಕುರಿತು ಅಂದು ಕಲ್ಲು ಹಿಡಿಯುತ್ತಿದ್ದ ಕೈಗಳು ಇಂದು ಪೆನ್ನು ಹಿಡಿಯುತ್ತಿದೆ ಸಂತಸ ವ್ಯಕ್ತಪಡಿಸಿದ್ದಾರೆ.
ಸಂಘರ್ಷ ತೀವ್ರ: ಹಾರ್ಮುಝ್ ಜಲಸಂಧಿ ಕುರಿತ ಮತದಾನ ಮುಂದಕ್ಕೆ ಹಾಕಿದ ಭದ್ರತಾ ಮಂಡಳಿ
ನ್ಯೂಯಾರ್ಕ್: ಹಾರ್ಮುಝ್ ಜಲಸಂಧಿ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ವಾಣಿಜ್ಯ ಶಿಪ್ಪಿಂಗ್ ಸಂರಕ್ಷಿಸುವ ಕುರಿತಂತೆ ಬಹರೈನ್ ಪ್ರಾಯೋಜಿತ ನಿರ್ಣಯದ ಮೇಲಿನ ಮತದಾನವನ್ನು ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಮುಂದಿನ ವಾರಕ್ಕೆ ಮುಂದೂಡಿದೆ. ಶುಕ್ರವಾರ ಈ ಸಂಬಂಧ ಚರ್ಚಿಸಲು ನಿರ್ಧರಿಸಲಾಗಿತ್ತು. ಬಳಿಕ ಶನಿವಾರಕ್ಕೆ ಅದನ್ನು ಮುಂದೂಡಲಾಗಿತ್ತು. ಇದೀಗ ಮತ್ತೆ ಮುಂದಕ್ಕೆ ಹಾಕಲಾಗಿದ್ದು, ದಿನಾಂಕವನ್ನು ಇನ್ನೂ ಪ್ರಕಟಿಸಿಲ್ಲ. ಮಂಡಳಿಯ ಅಧ್ಯಕ್ಷ ಸ್ಥಾನ ಹೊಂದಿರುವ ಬಹರೈನ್ ಗುರುವಾರ ಇದರ ಕರಡು ಸಿದ್ಧಪಡಿಸಿತ್ತು. ಈ ಆಯಕಟ್ಟಿನ ಪ್ರದೇಶಗಳಲ್ಲಿ ಕನಿಷ್ಠ ಮುಂದಿನ ಆರು ತಿಂಗಳ ಕಾಲ ಹಡಗುಗಳ ಸರಾಗ ಸಂಚಾರವನ್ನು ಖಾತರಿಪಡಿಸಲು ಅಗತ್ಯ ಸುರಕ್ಷಾ ಕ್ರಮಗಳನ್ನು ಕೈಗೊಳ್ಳಲು ಅಧಿಕಾರ ನೀಡುವ ನಿರ್ಣಯ ಇದಾಗಿರುತ್ತದೆ. ಈ ಮಾರ್ಗದ ಮೂಲಕ ಜಾಗತಿಕ ತೈಲ ಸಾಗಾಣಿಕೆಯ ಶೇಕಡ ಐದನೇ ಒಂದರಷ್ಟು ಪಾಲು ಸಾಗಾಟವಾಗುತ್ತದೆ. ಅಮೆರಿಕ ಹಾಗೂ ಇಸ್ರೇಲ್ ಫೆಬ್ರುವರಿ 28ರಂದು ದಾಳಿ ಆರಂಭಿಸಿದ ಬಳಿಕ ಇರಾನ್ ಈ ಜಲಸಂಧಿಯನ್ನು ಮುಚ್ಚಿತ್ತು. ಇದು ತೈಲ ಬೆಲೆ ಏರಿಕೆಗೆ ಕಾರಣವಾಗಿರುವುದು ಮಾತ್ರವಲ್ಲದೇ ಪ್ರಾದೇಶಿಕ ಭದ್ರತೆ ಕುರಿತ ಕಳವಳಕ್ಕೂ ಕಾರಣವಾಗಿತ್ತು. ಏತನ್ಮಧ್ಯೆ ದಕ್ಷಿಣ ಹಾಗೂ ಕೇಂದ್ರ ಇಸ್ರೇಲ್ ಮೇಲೆ ಕ್ಷಿಪಣಿ ದಾಳಿ ನಡೆಸಲಾಗಿದೆ ಎಂದು ಇರಾನ್ ಹೇಳಿಕೊಂಡಿದೆ. ಅಮೆರಿಕದ ಯುದ್ಧವಿಮಾನವನ್ನು ವಶಪಡಿಸಿಕೊಂಡು ಸಿಬ್ಬಂದಿಯನ್ನು ವಶಕ್ಕೆ ಪಡೆಯಲಾಗಿದೆ ಎಂಬ ವರದಿಗಳ ಬಗ್ಗೆ ವಿವರವಾದ ಹೇಳಿಕೆ ನೀಡಲು ಟ್ರಂಪ್ ನಿರಾಕರಿಸಿದ್ದಾರೆ. ಇದರಿಂದ ಮಧ್ಯಪ್ರಾಚ್ಯ ಯುದ್ಧದಲ್ಲಿ ಒತ್ತೆಯಾಳುಗಳನ್ನು ಇರಿಸಿಕೊಳ್ಳುವ ಹಂತಕ್ಕೆ ಸಂಘರ್ಷ ಉಲ್ಬಣಿಸಿದೆ. ಇರಾನ್ ನ ಪ್ರತಿದಾಳಿ ಕ್ಷಿಪಣಿಗಳನ್ನು ಯಶಸ್ವಿಯಾಗಿ ಛೇದಿಸಲಾಗಿದೆ ಎಂದು ಇಸ್ರೇಲ್ ಹೇಳಿಕೊಂಡಿದೆ. ಅಂತೆಯೇ ದಕ್ಷಿಣ ಲೆಬನಾನ್ ನಲ್ಲಿ ಇಸ್ರೇಲಿ ಸೈನಿಕರು ಮತ್ತು ಸೇನಾ ವಾಹನಗಳನ್ನು ಗುರಿ ಮಾಡಿ ಸರಣಿ ಕ್ಷಿಪಣಿ ದಾಳಿ ನಡೆಸಲಾಗಿದೆ ಎಂದು ಹಿಝ್ಬುಲ್ಲಾ ಪ್ರಕಟಿಸಿದೆ. ಇಸ್ರೇಲ್ ಗಡಿಗೆ ಹೊಂದಿಕೊಂಡಿರುವ ಅಲ್ ಸರ್ ಪ್ರದೇಶದಲ್ಲಿ ಈ ದಾಳಿ ನಡೆದಿದೆ ಎಂದು ಹೇಳಿಕೆ ನೀಡಿದೆ.
ಕದನ ವಿರಾಮ ಮಾತುಕತೆಗೆ ಹಿನ್ನಡೆ: ಅಮೆರಿಕ ಅಧಿಕಾರಿಗಳ ಭೇಟಿಗೆ ಇರಾನ್ ನಕಾರ
ಟೆಹರಾನ್: ಮಧ್ಯಪ್ರಾಚ್ಯ ಸಂಘರ್ಷವನ್ನು ಕೊನೆಗೊಳಿಸುವ ಪ್ರಯತ್ನವಾಗಿ ನಡೆಯುತ್ತಿರುವ ಪ್ರಾದೇಶಿಕ ಮಧ್ಯಸ್ಥಿಕೆ ಪ್ರಯತ್ನಗಳು ಕೊನೆಗೊಂಡಿವೆ ಎಂದು ಸಂಧಾನಕಾರರು ಶುಕ್ರವಾರ ಪ್ರಕಟಿಸಿದ್ದಾಗಿ ವಾಲ್ ಸ್ಟ್ರೀಟ್ ಜರ್ನಲ್ ವರದಿ ಮಾಡಿದೆ. ಸಂಘರ್ಷನಿರತ ಅಮೆರಿಕ-ಇಸ್ರೇಲ್-ಇರಾನ್ ನಡುವೆ ಕದನ ವಿರಾಮ ಒಪ್ಪಂದ ಏರ್ಪಡಿಸುವ ನಿಟ್ಟಿನಲ್ಲಿ ಪಾಕಿಸ್ತಾನದ ಮುಂದಾಳುತ್ವದಲ್ಲಿ ನಡೆದ ಪ್ರಯತ್ನ ಫಲ ನೀಡಿಲ್ಲ ಎಂದು ಟೆಹರಾನ್ ಅಧಿಕೃತವಾಗಿ ಪ್ರಕಟಿಸಿದೆ. ಮುಂದಿನ ದಿನಗಳಲ್ಲಿ ಇಸ್ಲಾಮಾಬಾದ್ ಗೆ ಮಾತುಕತೆಗಾಗಿ ಯಾವುದೇ ಅಧಿಕಾರಿಗಳನ್ನು ಕಳುಹಿಸುವುದಿಲ್ಲ ಎಂದು ಇರಾನ್ ಸ್ಪಷ್ಟಪಡಿಸಿದೆ. ಅಮೆರಿಕದ ಬೇಡಿಕೆಗಳು ಸ್ವೀಕಾರಾರ್ಹವಲ್ಲ; ಆದ್ದರಿಂದ ಪ್ರಸ್ತುತ ಸಂಧಾನ ಮಾತುಕತೆ ಚೌಕಟ್ಟನ್ನು ರದ್ದುಪಡಿಸಲಾಗುವುದು ಎಂದು ಹೇಳಿದೆ. ಈ ಮಾತುಕತೆ ಯತ್ನ ವಿಫಲವಾಗಿರುವುದರಿಂದ ಟರ್ಕಿ ಹಾಗೂ ಈಜಿಪ್ಟ್ ಸಮಸ್ಯೆ ನಿವಾರಣೆಯ ಪ್ರಯತ್ನ ಆರಂಭಿಸಿವೆ. ಉಭಯ ದೇಶಗಳ ನಡುವೆ ಮಾತುಕತೆಯ ಪ್ರಕ್ರಿಯೆ ಆರಂಭಿಸಲು ಆತಿಥ್ಯ ವಹಿಸಲು ಹೊಸ ತಾಣಗಳನ್ನು ಪ್ರಸ್ತಾಪಿಸಲು ಈ ದೇಶಗಳು ಮುಂದಾಗಿವೆ. ಕದನ ವಿರಾಮ ಮಾತುಕತೆಗೆ ವೇದಿಕೆಯಾಗಲು ಖತರ್ ಹಾಗೂ ಇಸ್ತಾಂಬುಲ್ ಉತ್ಸುಕತೆ ತೋರಿವೆ.
ರಾಜ್ಯದಲ್ಲಿ ಸಂಚಾರ ನಿಯಮ ಉಲ್ಲಂಘಿಸುವವರ ವಿರುದ್ದ ಸಂಚಾರಿ ಪೊಲೀಸರು ನಿರ್ದಾಕ್ಷಿಣ್ಯವಾಗಿ ದಂಡ ಪ್ರಯೋಗ ಮಾಡುತ್ತಿದ್ದರೂ ಸಹ ಅದನ್ನು ವಸೂಲಿ ಮಾಡುವಲ್ಲಿ ಯಶಸ್ವಿಯಾಗಿಲ್ಲ.ರಾಜ್ಯದಲ್ಲಿ ಕಳೆದ 3 ವರ್ಷಗಳಲ್ಲಿ 4.51 ಕೋಟಿ ಪ್ರಕರಣಗಳು ದಾಖಲಾಗಿದ್ದು, 2,522 ಕೋಟಿ ರೂ. ದಂಡ ವಿಧಿಸಲಾಗಿದೆ. ಆದಾಗ್ಯೂ, ಈವರೆಗೂ ವಸೂಲಿಯಾಗಿರುವ ದಂಡ ಕೇವಲ ಶೇ.44ರಷ್ಟು ಮಾತ್ರ. ಈ ಕುರಿತು ಮಾಹಿತಿ ಇಲ್ಲಿದೆ..
ಬೆಂಗಳೂರು: ರಾಜ್ಯದಲ್ಲಿ ಏಪ್ರಿಲ್ ತಿಂಗಳ ಆರಂಭದಲ್ಲಿಯೇ ತಾಪಮಾನದಲ್ಲಿ ಗಣನೀಯ ಏರಿಳಿತಗಳು ಕಂಡುಬರುತ್ತಿದ್ದು, ಬೇಸಿಗೆಯ ಸುಡುವ ಬಿಸಿಲಿನ ಝಳದ ನಡುವೆಯೂ ಮುಂಗಾರು ಪೂರ್ವ ಮಳೆಯ ಆಗಮನವಾಗಿದೆ. ಇಂದು (ಏಪ್ರಿಲ್ 4, 2026) ಕರ್ನಾಟಕದ ಹವಾಮಾನದಲ್ಲಿ ಬದಲಾವಣೆ ಕಂಡುಬರಲಿದ್ದು, ಭಾರತೀಯ ಹವಾಮಾನ ಇಲಾಖೆ ರಾಜ್ಯದ ಹಲವು ಭಾಗಗಳಲ್ಲಿ ಗುಡುಗು, ಮಿಂಚು ಮತ್ತು ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ ನೀಡಿದೆ. ಈ
ಆಟೋ ಚಾಲಕನ ಮೇಲೆ ಹಲ್ಲೆ ನಡೆಸಿ ಸುಲಿಗೆ ಮಾಡಿದ್ದ ಡ್ರಗ್ಸ್ ವ್ಯಸನಿ ಬಂಧನ: ಮೊಬೈಲ್ ನಿಂದ ಸೆರೆಸಿಕ್ಕ ಆರೋಪಿ
ಪುನರ್ವಸತಿ ಕೇಂದ್ರದಿಂದ ತಪ್ಪಿಸಿಕೊಂಡ ಆಟೋ ಚಾಲಕನ ಮೇಲೆ ಹಲ್ಲೆ ನಡೆಸಿ ಸುಲಿಗೆ ಮಾಡಿ ಪರಾರಿಯಾಗಿದ್ದ ಮಾದಕ ವ್ಯಸನಿಯನ್ನು ಬಾಗಲೂರು ಪೊಲೀಸರು ಬಂಧಿಸಿದ್ದಾರೆ. ಮಾದಕ ಚಟದಿಂದ ಹೊರಬರಲುಮೇಲೆ ಪುನರ್ವಸತಿ ಕೇಂದ್ರದಿಂದ ತಪ್ಪಿಸಿಕೊಂಡು ಅಲ್ಲಿನ ಭದ್ರತಾ ಸಿಬ್ಬಂದಿ ಮೇಲೆ ಹಲ್ಲೆ ಮಾಡಿ ಮೊಬೈಲ್ ಕಸಿದುಕೊಂಡು ಅದರಿಂದ ರ್ಯಾಪಿಡೋ ಬುಕ್ ಮಾಡಿ ಬಳಿಕ ಆಟೋ ಚಾಲಕನ ಮೇಲೂ ಹಲ್ಲೆ ಮಾಡಿ, ಆಟೋ ಸಮೇತ ಪರಾರಿಯಾಗಿದ್ದ ಆರೋಪಿಯನ್ನು ಪೊಲೀಸರು ಅದೇ ಫೋನ್ನ ಜಾಡು ಹಿಡಿದು ಬಂಧಿಸಿದ್ದಾರೆ.
ಜಿಲ್ಲಾ ನ್ಯಾಯಾಧೀಶರ ಸೇವಾಹಿರಿತನ ಪಟ್ಟಿ ಎತ್ತಿಹಿಡಿದ ಹೈಕೋರ್ಟ್ ಪೂರ್ಣಪೀಠ: ಅಧಿಕಾರಿಗಳ ಬಡ್ತಿಗೆ 4 ಅಂಶಗಳ ರೋಸ್ಟರ್
2016ರಲ್ಲಿ ಬಡ್ತಿಯ ಆಧಾರದ ಮೇಲೆ ನೀಡಲಾಗಿದ್ದ ಜಿಲ್ಲಾ ನ್ಯಾಯಾಧೀಶರ ಸೇವಾ ಹಿರಿತನ ಪಟ್ಟಿ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿರುವ ಹೈಕೋರ್ಟ್ ಪೂರ್ಣಪೀಠ ಈ ಸೇವಾ ಹಿರಿತನದ ಅಂತಿಮ ಪಟ್ಟಿಯನ್ನು ಎತ್ತಿ ಹಿಡಿದಿದೆ. ಅಲ್ಲದೆ, ಅರ್ಜಿದಾರರ ನ್ಯಾಯಾಂಗ ಅಧಿಕಾರಿಗಳಿಗೆ ಭವಿಷ್ಯದಲ್ಲಿ ಬಡ್ತಿ ನೀಡಲು 4 ಅಂಶಗಳ ರೋಸ್ಟರ್ ಪದ್ದತಿಯನ್ನು ಜಾರಿಗೆ ತರುವಂತೆ ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿದೆ. ಈ ಕುರಿತ ಮಾಹಿತಿ ಇಲ್ಲಿದೆ...
ಬಿಟ್ ಕಾಯಿನ್ ಹಗರಣ : ವಂಚನೆ, ನಂಬಿಕೆ ದ್ರೋಹ ಪ್ರಕರಣ ರದ್ದು ಕೋರಿ ಹೈಕೋರ್ಟ್ ಮೆಟ್ಟಿಲೇರಿದ ಶ್ರೀಕಿ, ರಾಬಿನ್
ಬೆಂಗಳೂರು: ವಂಚನೆ ಹಾಗೂ ನಂಬಿಕೆ ದ್ರೋಹ ಆರೋಪದಲ್ಲಿ ದಾಖಲಾಗಿರುವ ಪ್ರಕರಣ ರದ್ದು ಕೋರಿ ಬಿಟ್ ಕಾಯಿನ್ ಹಗರಣದ ಪ್ರಮುಖ ಆರೋಪಿ ಶ್ರೀಕೃಷ್ಣ ಅಲಿಯಾಸ್ ಶ್ರೀಕಿ ಮತ್ತವರ ಸ್ನೇಹಿತ ರಾಬಿನ್ ಖಂಡೇಲವಾಲ್ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ. ಬೆಂಗಳೂರಿನ ಜಯನಗರದ ಶ್ರೀಕೃಷ್ಣ ಹಾಗೂ ಪಶ್ಚಿಮ ಬಂಗಾಳದ ಮೂಲದ ಬಿಟ್ ಕಾಯಿನ್ ಟ್ರೇಡರ್ ರಾಬಿನ್ ಖಂಡೇಲವಾಲ್ ಸಲ್ಲಿಸಿರುವ ಪ್ರತ್ಯೇಕ ರಿಟ್ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ, ದಾಖಲೆಗಳನ್ನು ಪರಿಶೀಲಿಸಿ ವಾದ ಮಂಡಿಸುವಂತೆ ವಿಶೇಷ ಸರ್ಕಾರಿ ಅಭಿಯೋಜಕ ಪಿ.ಪ್ರಸನ್ನಕುಮಾರ್ ಅವರಿಗೆ ಸೂಚಿಸಿ ವಿಚಾರಣೆಯನ್ನು ಏಪ್ರಿಲ್ 6ಕ್ಕೆ ಮುಂದೂಡಿದೆ. ಪ್ರಕರಣವೇನು? : ಬೆಂಗಳೂರಿನ ಇಂದಿರಾನಗರದ ಯಶೋಧಾ ದೇವಿ ಎಂಬುವರು ಅಶೋಕನಗರ ಪೊಲೀಸ್ ಠಾಣೆಗೆ ದೂರು ನೀಡಿ, ಶ್ರೀಕೃಷ್ಣ ಹಾಗೂ ರಾಬಿನ್ ಖಂಡೇಲವಾಲ್ ಅವರು 2019ರಲ್ಲಿ ಭೇಟಿಯಾಗಿ 28 ಲಕ್ಷ ರೂ. ನೀಡಿದರೆ ಬಿಟ್ ಕಾಯಿನ್ನಲ್ಲಿ ಹೂಡಿಕೆ ಮಾಡಿ 28 ಲಕ್ಷ ರೂ. ಜತೆ 17 ಲಕ್ಷ ರೂ. ಸೇರಿಸಿ ಒಟ್ಟು 45 ಲಕ್ಷ ರೂ. ನೀಡುತ್ತೇವೆ ಎಂದು ಖಾತೆ ನಂಬರ್ ಒಂದನ್ನು ನೀಡಿದ್ದರು. ಅದಕ್ಕೆ ತಾಂತ್ರಿಕ ತೊಂದರೆಯಿಂದಾಗಿ ಹಣ ಹೋಗಿರಲಿಲ್ಲ. ಆನಂತರ, ಅಜಿತ್ ಖಂಡೇಲವಾಲ್ ಎಂಬಾತನ ಖಾತೆಗೆ ಹಣ ಹಾಕುವಂತೆ ಆರೋಪಿಗಳು ಸೂಚಿಸಿದ್ದರು. ಅದರಂತೆಯೇ ಅಜಿತ್ ಖಾತೆಗೆ ಹಣ ವರ್ಗಾಯಿಸಲಾಗಿತ್ತು. ಒಂದು ತಿಂಗಳ ನಂತರ ಹಣ ಕೇಳಿದಾಗ ಸ್ವಲ್ಪ ದಿನಗಳಲ್ಲೇ ಹಿಂದಿರುಗಿಸುವುದಾಗಿ ಹೇಳಿದ್ದ ಆರೋಪಿಗಳು ನಂತರ ಸಂಪರ್ಕಕ್ಕೆ ಸಿಕ್ಕಿಲ್ಲ. ಆದ್ದರಿಂದ, ಅವರ ವಿರುದ್ಧ ಕ್ರಮಕೈಗೊಳ್ಳುವಂತೆ ಮನವಿ ಮಾಡಿದ್ದರು. ದೂರು ಆಧರಿಸಿ ಶ್ರೀಕೃಷ್ಣ ಅಲಿಯಾಸ್ ಶ್ರೀಕಿ, ರುಬಿಟ್ ಆನ್ಲೈನ್ ಸರ್ವೀಸಸ್ ಪ್ರೈವೇಟ್ ಲಿಮಿಟೆಡ್ನ ರಾಬಿನ್ ಖಂಡೇವಾಲ್ ಮತ್ತು ಅಜಿತ್ ಖಂಡೇಲವಾಲ್ ವಿರುದ್ಧ ಪೊಲೀಸರು 2020ರ ನ.19ರಂದು ಐಪಿಸಿ ಸೆಕ್ಷನ್ 406 ಹಾಗೂ 420ರ ಅಡಿ ಪ್ರಕರಣ ದಾಖಲಿಸಿದ್ದರು. ಈ ಎಫ್ಐಆರ್ ಮತ್ತದರ ಸಂಬಂಧ 2021ರ ಫೆ.10ರಂದು ಸಕ್ಷಮ ನ್ಯಾಯಾಲಯಕ್ಕೆ ಸಲ್ಲಿಸಲಾಗಿರುವ ಆರೋಪ ಪಟ್ಟಿಯನ್ನು ರದ್ದುಪಡಿಸುವಂತೆ ಕೋರಿ ಆರೋಪಿಗಳು ಹೈಕೋರ್ಟ್ ಮೊರೆ ಹೋಗಿದ್ದಾರೆ.
ಭಾರತದ ಸೆನ್ಸಾರ್ ಶಿಪ್ ಸಮಸ್ಯೆ ಅಂತರರಾಷ್ಟ್ರೀಯ ಮಟ್ಟಕ್ಕೆ ತಲುಪಿದೆ : ಸಚಿವ ಪ್ರಿಯಾಂಕ್ ಖರ್ಗೆ
ಬೆಂಗಳೂರು : ಅಮೆರಿಕದ ವ್ಯಾಪಾರ ಪ್ರತಿನಿಧಿಯ 2026ರ ರಾಷ್ಟ್ರೀಯ ವ್ಯಾಪಾರ ಅಂದಾಜು ವರದಿಯು ಭಾರತದ ಯೂಸರ್ ಖಾತೆಗಳಿಂದ ಕಂಟೆಂಟ್ ತೆಗೆದುಹಾಕುವ ಅಭ್ಯಾಸವನ್ನು ಔಪಚಾರಿಕವಾಗಿ ಖಂಡಿಸಿದೆ, ರಾಜಕೀಯ ಪ್ರೇರಿತವೆಂದು ತೋರುವ ವಿಷಯಗಳನ್ನು ಬಳಕೆದಾರ ಖಾತೆಗಳಿಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ತೆಗೆದುಹಾಕುತ್ತಿರುವ ವಿನಂತಿಗಳನ್ನು ಯುಎಸ್ ಸಂಸ್ಥೆಗಳು ಎದುರಿಸುತ್ತಿವೆ ಎಂದು ಅದು ಹೇಳಿದೆ ಎಂದು ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ. ಶುಕ್ರವಾರ ಎಕ್ಸ್ ನಲ್ಲಿ ಪೋಸ್ಟ್ ಹಾಕಿರುವ ಅವರು, ಐಟಿ ನಿಯಮಗಳ ಅಡಿಯಲ್ಲಿ ಕಂಟೆಂಟ್ ತೆಗೆದುಹಾಕುವಿಕೆಯನ್ನು, ಆಗಾಗ್ಗೆ ಇಂಟರ್ನೆಟ್ ಸ್ಥಗಿತಗೊಳಿಸುವಿಕೆಗಳ ಜೊತೆಗೆ ಸುಂಕ ರಹಿತ ವ್ಯಾಪಾರ ಅಡೆತಡೆಗಳಾಗಿ ವರ್ಗೀಕರಿಸಲಾಗಿದೆ. ವಿಶ್ವಗುರು ಮೋದಿ ಒಮ್ಮೆ ‘ಟೀಕೆ ಪ್ರಜಾಪ್ರಭುತ್ವದ ಆತ್ಮ' ಎಂದು ಹೇಳಿದರು. ಆದರೂ ಈ ಆಡಳಿತವು ಹಿಂಜರಿಕೆಯಿಲ್ಲದೆ ಟೀಕೆಗಳನ್ನು ಹೂತುಹಾಕುವುದನ್ನು ಸಾಮಾನ್ಯಗೊಳಿಸಿದೆ ಎಂದು ದೂರಿದ್ದಾರೆ. ವಾಸ್ತವವಾಗಿ ಇತ್ತೀಚೆಗೆ, ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಪ್ರಕಾಶಕರಲ್ಲದವರು ಸಹ ಪೋಸ್ಟ್ ಮಾಡಿದ ಸುದ್ದಿ ವಿಷಯಕ್ಕಾಗಿ ನಿರ್ಬಂಧಿಸುವ ಆದೇಶಗಳನ್ನು ಹೊರಡಿಸಲು ಅವಕಾಶ ನೀಡುವ ಮೂಲಕ 2021ರ ಐಟಿ ನಿಯಮಗಳಿಗೆ ತಿದ್ದುಪಡಿಗಳನ್ನು ಪ್ರಸ್ತಾಪಿಸಿದೆ. ಇದು ಪರಿಣಾಮಕಾರಿಯಾಗಿ ಸ್ವತಂತ್ರ ಧ್ವನಿಗಳನ್ನು ನೇರ ನಿಯಂತ್ರಣಕ್ಕೆ ತರುತ್ತದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ. ಏತನ್ಮಧ್ಯೆ, ಬಿಜೆಪಿ ಐಟಿ ಕೋಶವು ಪರಿಶೀಲನೆಯಿಲ್ಲದೆ ಕಾರ್ಯನಿರ್ವಹಿಸುವುದನ್ನು ಮುಂದುವರೆಸಿದೆ. ಇದೆಲ್ಲವೂ ಒಂದೇ ಒಂದು ವಿಷಯವನ್ನು ಅರ್ಥೈಸಬಲ್ಲದು. ಭಿನ್ನಾಭಿಪ್ರಾಯದ ಧ್ವನಿ ಜೋರಾಗಿ ಬೆಳೆಯುತ್ತಿದೆ ಮತ್ತು ಬಿಜೆಪಿ ತುಂಬಾ ಭಯಭೀತವಾಗಿದೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಸುರಪುರ | ಗುಜರಿ ಅಂಗಡಿಯಲ್ಲಿ ಕಳ್ಳತನ : ಲಕ್ಷಾಂತರ ರೂ. ಮೌಲ್ಯದ ವಸ್ತುಗಳು ಕಳವು
ಸುರಪುರ : ಪಟ್ಟಣದ ಹಸನಾಪುರ ಕ್ಯಾಂಪ್ ಪ್ರದೇಶದಲ್ಲಿರುವ ಗುಜರಿ ಅಂಗಡಿಯಲ್ಲಿ ಕಳ್ಳತನ ನಡೆದಿರುವ ಘಟನೆ ವರದಿಯಾಗಿದೆ. ಶೌಕತ್ ಅಲಿ ಎಂಬವರಿಗೆ ಸೇರಿದ ಗುಜುರಿ ಅಂಗಡಿಯಲ್ಲಿ ರಾತ್ರಿ ವೇಳೆ ಲಕ್ಷಾಂತರ ರೂ. ಮೌಲ್ಯದ ವಸ್ತುಗಳು ಕಳವು ನಡೆದಿದೆ ಎಂದು ತಿಳಿದು ಬಂದಿದೆ. ಎ.1ರಂದು ರಾತ್ರಿ ಅಂಗಡಿ ಮುಚ್ಚಿ ಮನೆಗೆ ತೆರಳಿದ್ದ ಶೌಕತ್ ಅಲಿ ಎ.2ರಂದು ಬೆಳಗ್ಗೆ ಅಂಗಡಿಗೆ ಬಂದಾಗ ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿದೆ. ಅಂಗಡಿಯೊಳಗಿದ್ದ ಸುಮಾರು 1.20 ಲಕ್ಷ ರೂ. ಮೌಲ್ಯದ ಹಳೆಯ ವಸ್ತುಗಳನ್ನು ಕಳವು ಗೈದಿರುವುದಾಗಿ ತಿಳಿದು ಬಂದಿದೆ . ಕಳ್ಳತನದ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಈ ಸಂಬಂಧ ಅಂಗಡಿ ಮಾಲಕ ಶೌಕತ್ ಅಲಿ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ದೂರು ದಾಖಲಿಸಿಕೊಂಡಿರುವ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪಿಎಸ್ಐ ಸಿದ್ದಣ್ಣ ಯಡ್ರಾಮಿ ಅವರ ನೇತೃತ್ವದಲ್ಲಿ ತಂಡ ರಚಿಸಿ ಕಳ್ಳರ ಪತ್ತೆಗೆ ಶೋಧ ಕಾರ್ಯ ಆರಂಭಿಸಲಾಗಿದೆ.
ಬಿಕೆ ಹರಿಪ್ರಸಾದ್ ಸೇರಿ ಕರ್ನಾಟಕದ 12 ಎಂಎಲ್ಸಿಗಳು ಶೀಘ್ರ ನಿವೃತ್ತಿ; ಯಾರೆಲ್ಲಾ? ನೂರಾರು ಆಕಾಂಕ್ಷಿಗಳು!
ಕರ್ನಾಟಕ ವಿಧಾನ ಪರಿಷತ್ತಿನ 12 ಮಂದಿ ಎಂಎಲ್ಸಿಗಳು ಶೀಘ್ರ ನಿವೃತ್ತಿಯಾಗಲಿದ್ದಾರೆ. ಅವರ ಸ್ಥಾನಗಳಿಗೆ ಬಿಜೆಪಿ ಕಾಂಗ್ರೆಸ್ನಿಂದ ನೂರಾರು ಆಕಾಂಕ್ಷಿಗಳು ಕಣ್ಣಿಟ್ಟಿದ್ದಾರೆ. ವಿಧಾನಸಭೆಯಿಂದ 4 ಸ್ಥಾನಗಳು ಕಾಂಗ್ರೆಸ್ಗೆ ಖಚಿತವಾಗಿ ಸಿಗಲಿದೆ. ಇನ್ನು ಸಾಮಾಜಿಕ ನ್ಯಾಯದ ಲೆಕ್ಕಾಚಾರದಲ್ಲಿ ಅಭ್ಯರ್ಥಿಗಳ ಆಯ್ಕೆ ಮಾಡುವ ಸಾಧ್ಯತೆ ಇದೆ. ನಿವೃತ್ತಿಯಾಗುತ್ತಿರುವವರು ಯಾರು? ಸಂಪೂರ್ಣ ವಿವರ ಇಲ್ಲಿದೆ.
Ballari |ಇಂಜಿನಿಯರ್ ಮೇಲೆ ಹಲ್ಲೆ ಆರೋಪ : ಆರೋಪಿಗಳ ಬಂಧನಕ್ಕೆ ಬಿಜೆಪಿ ಆಗ್ರಹ
ಬಳ್ಳಾರಿ : ಬಳ್ಳಾರಿ ಮಹಾನಗರ ಪಾಲಿಕೆಯ ಇಂಜಿನಿಯರ್ ಜಿ.ಎಂ.ವೀರೇಶ್ ಅವರ ಮೇಲಿನ ಹಲ್ಲೆ ಪ್ರಕರಣವನ್ನು ಖಂಡಿಸಿ ಪಾಲಿಕೆ ಸಿಬ್ಬಂದಿ ಹಾಗೂ ಅಧಿಕಾರಿಗಳು ಆರಂಭಿಸಿದ ಪ್ರತಿಭಟನೆಗೆ ಬೆಂಬಲ ಸೂಚಿಸಿದ ವಿಧಾನಪರಿಷತ್ ಸದಸ್ಯ ವೈ.ಎಂ. ಸತೀಶ್, ಸರ್ಕಾರಿ ನೌಕರರು ಆತ್ಮಸ್ಥೈರ್ಯ ಕಳೆದುಕೊಳ್ಳದೇ ಕರ್ತವ್ಯ ನಿರ್ವಹಿಸಬೇಕು ಎಂದು ಹೇಳಿದರು. ಪಾಲಿಕೆ ಕಚೇರಿ ಮುಂದೆ ಶುಕ್ರವಾರ ಸಂಜೆ ಆರಂಭವಾದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ನಗರದಲ್ಲಿ ಪದೇ ಪದೇ ಗಲಭೆಗಳು ಮತ್ತು ವಿವಾದಗಳು ನಡೆಯುತ್ತಿರುವುದು ವಿಷಾದನೀಯ. ಇಂತಹ ಘಟನೆಗಳು ಬಳ್ಳಾರಿ ನಗರದ ಮಾನಕ್ಕೆ ಧಕ್ಕೆಯಾಗುತ್ತಿವೆ. ಮುಂದಿನ ದಿನಗಳಲ್ಲಿ ಇಂತಹ ಘಟನೆಗಳನ್ನು ಆಡಳಿತ ಪಕ್ಷದ ಜನಪ್ರತಿನಿಧಿಗಳು ತಡೆಗಟ್ಟಬೇಕು ಎಂದು ಹೇಳಿದರು. ಇಂಜಿನಿಯರ್ ಜಿ.ಎಂ. ವೀರೇಶ್ ಮೇಲೆ ಹಲ್ಲೆ ನಡೆಸಿದ ಆರೋಪದಡಿ ಕಾಂಗ್ರೆಸ್ ಕಾರ್ಪೊರೇಟರ್ ವಿ.ಕುಬೇರ ಅವರನ್ನು ತಕ್ಷಣ ಬಂಧಿಸಬೇಕು. ಇಲ್ಲವಾದರೆ ಬಿಜೆಪಿ ಹಂತ ಹಂತವಾಗಿ ಪ್ರತಿಭಟನೆ ಕೈಗೊಳ್ಳಲಿದೆ ಎಂದು ಎಚ್ಚರಿಸಿದರು. ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಸಿಬ್ಬಂದಿ, ಅಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.
IPL 2026 | ಶ್ರೇಯಸ್ ಅಯ್ಯರ್ ಅರ್ಧಶತಕ; CSK ವಿರುದ್ಧ ಪಂಜಾಬ್ ಗೆ ಜಯ
ಚೆನ್ನೈ, ಎ.3: ನಾಯಕ ಶ್ರೇಯಸ್ ಅಯ್ಯರ್ ಅವರ ಅರ್ಧಶತಕದ (50 ರನ್, 29 ಎಸೆತ, 4 ಬೌಂಡರಿ, 3 ಸಿಕ್ಸರ್) ನೆರವಿನಿಂದ ಶುಕ್ರವಾರ ನಡೆದ ಏಳನೇ ಐಪಿಎಲ್ ಲೀಗ್ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡ ಆತಿಥೇಯ ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡವನ್ನು ಐದು ವಿಕೆಟ್ ಗಳ ಅಂತರದಿಂದ ಮಣಿಸಿತು. ಪಂದ್ಯಾವಳಿಯಲ್ಲಿ ಸತತ ಎರಡನೇ ಗೆಲುವು ದಾಖಲಿಸಿದೆ. ಟಾಸ್ ಸೋತು ಮೊದಲು ಬ್ಯಾಟಿಂಗ್ ಗೆ ಇಳಿಸಲ್ಪಟ್ಟ CSK ತಂಡವು ಅಗ್ರ ಕ್ರಮಾಂಕದ ಬ್ಯಾಟರ್ ಆಯುಷ್ ಮ್ಹಾತ್ರೆ ಅವರ ಆಕರ್ಷಕ ಅರ್ಧಶತಕದ (73 ರನ್, 43 ಎಸೆತ, 6 ಬೌಂಡರಿ, 5 ಸಿಕ್ಸರ್) ನೆರವಿನಿಂದ ನಿಗದಿತ 20 ಓವರ್ ಗಳಲ್ಲಿ ಐದು ವಿಕೆಟ್ ನಷ್ಟಕ್ಕೆ 209 ರನ್ ಗಳಿಸಿತು. ಗೆಲ್ಲಲು 210 ರನ್ ಗುರಿ ಬೆನ್ನಟ್ಟಿದ ಪಂಜಾಬ್ ಕಿಂಗ್ಸ್ ತಂಡವು 18.4 ಓವರ್ ಗಳಲ್ಲಿ ಐದು ವಿಕೆಟ್ ನಷ್ಟಕ್ಕೆ 210 ರನ್ ಗಳಿಸಿತು. ಐದು ಬಾರಿಯ ಚಾಂಪಿಯನ್ ಚೆನ್ನೈ ತಂಡ ಸತತ ಎರಡನೇ ಸೋಲಿನೊಂದಿಗೆ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲೇ ಉಳಿದಿದೆ. ಪಂಜಾಬ್ ಇನಿಂಗ್ಸ್ ಆರಂಭಿಸಿದ ಪ್ರಭ್ಸಿಮ್ರಾನ್ ಸಿಂಗ್ (43 ರನ್, 34 ಎಸೆತ) ಹಾಗೂ ಪ್ರಿಯಾಂಶ್ ಆರ್ಯ (39 ರನ್, 11 ಎಸೆತ) ಕೇವಲ 26 ಎಸೆತಗಳಲ್ಲಿ 61 ರನ್ ಸೇರಿಸಿ ಬಿರುಸಿನ ಆರಂಭ ಒದಗಿಸಿದರು. ಮ್ಯಾಟ್ ಹೆನ್ರಿ ಈ ಜೋಡಿಯನ್ನು ಬೇರ್ಪಡಿಸಿದರು. ಪ್ರಭ್ಸಿಮ್ರಾನ್ 43 ರನ್ ಗಳಿಸಿ ಔಟಾದರು. ಕಳೆದ ಪಂದ್ಯದಲ್ಲಿ ಮಿಂಚಿದ್ದ ಕೂಪರ್ 36 ರನ್ ಗೆ ವಿಕೆಟ್ ಒಪ್ಪಿಸಿದರು. ಆಗ ಪಂಜಾಬ್ 127 ರನ್ ಗೆ ಮೂರನೇ ವಿಕೆಟ್ ಕಳೆದುಕೊಂಡಿತು. ನಾಲ್ಕನೇ ವಿಕೆಟ್ ಗೆ 32 ಎಸೆತಗಳಲ್ಲಿ 59 ರನ್ ಸೇರಿಸಿದ ಶ್ರೇಯಸ್ ಮತ್ತು ವಧೇರ ತಂಡವನ್ನು ಗೆಲುವಿನತ್ತ ಮುನ್ನಡೆಸಿದರು. ಶ್ರೇಯಸ್ ಅರ್ಧಶತಕ ಗಳಿಸಿದ ಬೆನ್ನಲ್ಲೇ ಕಾಂಬೋಜ್ಗೆ ವಿಕೆಟ್ ಒಪ್ಪಿಸಿದರು. ಶಶಾಂಕ್ ಸಿಂಗ್ (ಔಟಾಗದೆ 14) ಹಾಗೂ ಮಾರ್ಕಸ್ ಸ್ಟೋಯಿನಿಸ್ (ಔಟಾಗದೆ 9) ಪಂಜಾಬ್ ಗೆ ಇನ್ನೂ ಎಂಟು ಎಸೆತಗಳು ಬಾಕಿ ಇರುವಾಗಲೇ ಗೆಲುವು ತಂದುಕೊಟ್ಟರು. CSK ಪರವಾಗಿ ಮ್ಯಾಟ್ ಹೆನ್ರಿ (2-54) ಹಾಗೂ ಅನ್ಶುಲ್ ಕಾಂಬೋಜ್ (2-35) ತಲಾ ಎರಡು ವಿಕೆಟ್ ಪಡೆದರು. ಇದಕ್ಕೂ ಮೊದಲು CSK ಆರಂಭಿಕ ಆಟಗಾರ ಸಂಜು ಸ್ಯಾಮ್ಸನ್ ಕೇವಲ 7 ರನ್ ಗೆ ವಿಕೆಟ್ ಒಪ್ಪಿಸಿ ಮತ್ತೊಮ್ಮೆ ವಿಫಲರಾದರು. ಆಗ ಜೊತೆಯಾದ ನಾಯಕ ಋತುರಾಜ್ ಗಾಯಕ್ವಾಡ್ (28 ರನ್, 22 ಎಸೆತ) ಎರಡನೇ ವಿಕೆಟ್ಗೆ 96 ರನ್ಗಳ ಜೊತೆಯಾಟ ನಡೆಸಿ ತಂಡದ ಮೊತ್ತವನ್ನು 100ರ ಗಡಿ ದಾಟಿಸಿದರು. ಋತುರಾಜ್, ಆಯುಷ್ ಹಾಗೂ ಕಾರ್ತಿಕ್ ಶರ್ಮಾ (1 ರನ್) ಔಟಾದಾಗ CSK 130 ರನ್ ಗೆ ನಾಲ್ಕು ವಿಕೆಟ್ ಕಳೆದುಕೊಂಡಿತು. ಸರ್ಫರಾಝ್ ಖಾನ್ (32 ರನ್, 12 ಎಸೆತ, 6 ಬೌಂಡರಿ, 1 ಸಿಕ್ಸರ್) ಹಾಗೂ ಶಿವಂ ದುಬೆ (ಔಟಾಗದೆ 45, 27 ಎಸೆತ, 5 ಬೌಂಡರಿ, 1 ಸಿಕ್ಸರ್) ಐದನೇ ವಿಕೆಟ್ಗೆ 38 ರನ್ ಸೇರಿಸಿ ತಂಡದ ಮೊತ್ತ ಹೆಚ್ಚಿಸಿದರು. ► ಸಂಕ್ಷಿಪ್ತ ಸ್ಕೋರ್ ಚೆನ್ನೈ ಸೂಪರ್ ಕಿಂಗ್ಸ್: 20 ಓವರ್ ಗಳಲ್ಲಿ 209/5 (ಆಯುಷ್ ಮ್ಹಾತ್ರೆ 73, ಶಿವಂ ದುಬೆ ಔಟಾಗದೆ 45, ಸರ್ಫರಾಝ್ ಖಾನ್ 32, ಋತುರಾಜ್ ಗಾಯಕ್ವಾಡ್ 28, ವಿ. ವೈಶಾಕ್ 2-38) ಪಂಜಾಬ್ ಕಿಂಗ್ಸ್: 18.4 ಓವರ್ ಗಳಲ್ಲಿ 210/5 (ಶ್ರೇಯಸ್ ಅಯ್ಯರ್ 50, ಪ್ರಭ್ಸಿಮ್ರಾನ್ ಸಿಂಗ್ 43, ಪ್ರಿಯಾಂಶ್ ಆರ್ಯ 39, ಕೂಪರ್ 36, ಅನ್ಶುಲ್ ಕಾಂಬೋಜ್ 2-43, ಮ್ಯಾಟ್ ಹೆನ್ರಿ 2-54)
ಬೆಂಗಳೂರು ನಗರ ವಿವಿಯ ಘಟಿಕೋತ್ಸವ | ಮೋಹನ್ ಆಳ್ವ ಸಹಿತ ಆರು ಮಂದಿಗೆ ಗೌರವ ಡಾಕ್ಟರೇಟ್
ಬೆಂಗಳೂರು : ಡಾ.ಮನಮೋಹನ್ ಸಿಂಗ್ ಬೆಂಗಳೂರು ನಗರ ವಿಶ್ವ ವಿದ್ಯಾನಿಲಯದ 5ನೇ ವಾರ್ಷಿಕ ಘಟಿಕೋತ್ಸವವನ್ನು ನಾಳೆ ಬೆಳಗ್ಗೆ 11:30ಕ್ಕೆ ನಗರದ ಅರಮನೆ ರಸ್ತೆಯಲ್ಲಿರುವ ಜ್ಞಾನಜ್ಯೋತಿ ಸೆಂಟ್ರಲ್ ಕಾಲೇಜು ಆವರಣದಲ್ಲಿರುವ ಜ್ಞಾನ ಜ್ಯೋತಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಕುಲಪತಿ ಪ್ರೊ.ರಮೇಶ್ ಬಿ. ತಿಳಿಸಿದ್ದಾರೆ. ಶುಕ್ರವಾರ ಬೆಂ.ನ.ವಿವಿ ಆವರಣದಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಶ್ವ ವಿದ್ಯಾನಿಲಯದ ಕುಲಾಧಿಪತಿ ಥಾವರ್ ಚಂದ್ ಗೆಹ್ಲೋಟ್ ಘಟಿಕೋತ್ಸವದ ಅಧ್ಯಕ್ಷತೆ ವಹಿಸಲಿದ್ದು, ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ ಮಹಾನಿರ್ದೇಶಕ ಡಾ.ಬಿನಯ್ ಕುಮಾರ್ ದಾಸ್ ಮುಖ್ಯ ಅತಿಥಿಯಾಗಿ ಆಗಮಿಸಿ ಘಟಿಕೋತ್ಸವದ ಭಾಷಣ ಮಾಡಲಿದ್ದಾರೆ. ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಸೇರಿದಂತೆ ಹಲವರು ಉಪಸ್ಥಿತಲಿರಲಿದ್ದಾರೆ ಎಂದರು. ಘಟಿಕೋತ್ಸವದಲ್ಲಿ ಸ್ನಾತಕ ಮತ್ತು ಸ್ನಾತಕೋತ್ತರ ಪದವಿಗಳನ್ನು ಒಳಗೊಡಂತೆ ಒಟ್ಟು 37,393 ವಿದ್ಯಾರ್ಥಿಗಳು ವಿವಿಧ ಪದವಿಗಳನ್ನು ಪಡೆದುಕೊಳ್ಳಲು ಅರ್ಹರಾಗಿರುತ್ತಾರೆ. ಆ ಪೈಕಿ 21,912 (ಶೇ.58.63) ಮಹಿಳೆಯರು ಮತ್ತು 15,458 (ಶೇ.47.31) ಪುರುಷ ವಿದ್ಯಾರ್ಥಿಗಳಾಗಿರುತ್ತಾರೆ. 23 ಸಂಶೋಧನಾ ವಿದ್ಯಾರ್ಥಿಗಳು ಪಿಎಚ್ಡಿ ಪದವಿ ಪಡೆಯಲು ಅರ್ಹರಾಗಿರುತ್ತಾರೆ. ಒಟ್ಟು 71 ವಿದ್ಯಾರ್ಥಿಗಳು ಪ್ರಥಮ ರ್ಯಾಂಕ್ ಪ್ರಮಾಣ ಪತ್ರಗಳನ್ನು, 73 ಚಿನ್ನದ ಪದಕ ಮತ್ತು ನಗದು ಬಹುಮಾನವನ್ನು ಸ್ವೀಕರಿಸಲಿದ್ದಾರೆ ಎಂದು ರಮೇಶ್ ಮಾಹಿತಿ ನೀಡಿದರು. 71 ರ್ಯಾಂಕ್ ವಿಜೇತರಲ್ಲಿ 42 ವಿದ್ಯಾರ್ಥಿಗಳು ಸ್ನಾತಕೋತ್ತರ ವ್ಯಾಸಂಗಗಳಿಗೆ ಸಂಬಂಧಿಸಿದವರಾಗಿದ್ದು, ಅವರಲ್ಲಿ 5 ಪುರುಷ ಮತ್ತು 37 ಮಹಿಳಾ ವಿದ್ಯಾರ್ಥಿಗಳಾಗಿರುತ್ತಾರೆ. 29 ವಿದ್ಯಾರ್ಥಿಗಳು ಸ್ನಾತಕ ವ್ಯಾಸಂಗಗಳಿಗೆ ಸಂಬಂಧಿಸಿದವರಾಗಿದ್ದು, ಅವರಲ್ಲಿ 9 ಪುರುಷ ಮತ್ತು 37 ಮಹಿಳಾ ವಿದ್ಯಾರ್ಥಿಗಳಾಗಿರುತ್ತಾರೆ ಎಂದು ಅವರು ಮಾಹಿತಿ ನೀಡಿದರು. ಆರು ಮಂದಿಗೆ ಗೌರವ ಡಾಕ್ಟರೇಟ್: ಡಾ.ಮನಮೋಹನ್ ಸಿಂಗ್ ಬೆಂ.ನ.ವಿವಿ 5ನೇ ವಾರ್ಷಿಕ ಘಟಿಕೋತ್ಸವದ ಪ್ರಯುಕ್ತ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಆರು ಮಂದಿ ಗಣ್ಯರಿಗೆ ಗೌರವ ಡಾಕ್ಟರೇಟ್ ನೀಡಲಾಗುತ್ತಿದೆ. ಕ್ರೀಡಾ ಕ್ಷೇತ್ರದಿಂದ ಬಿ.ಕೆ.ವೆಂಕಟೇಶ್ ಪ್ರಸಾದ್, ಡಾ.ಕೆ.ಗೋವಿಂದರಾಜ್, ಸಂಗೀತ ಕ್ಷೇತ್ರದಿಂದ ಅರ್ಜುನ್ ಜನ್ಯ, ಶಿಕ್ಷಣ ಕ್ಷೇತ್ರದಿಂದ ತಜ್ಞರಾದ ಟಿ.ಕೆ.ನಾರಾಯಣಪ್ಪ, ಮೋಹನ್ ಆಳ್ವ ಹಾಗೂ ಕೈಗಾರಿಕೋದ್ಯಮ ಕ್ಷೇತ್ರದಿಂದ ಬಿ.ಎಂ.ಫಾರೂಖ್ ಅವರಿಗೆ ಡಿ.ಲಿಟ್ ಪದವಿ ಪ್ರದಾನ ಮಾಡಲಾಗುವುದು ಎಂದು ರಮೇಶ್ ಮಾಹಿತಿ ನೀಡಿದರು. ಸುದ್ದಿಗೋಷ್ಠಿಯಲ್ಲಿ ಕುಲಸಚಿವ ನವೀನ್ ಜೋಸೆಫ್ ಎ., ಕುಲಸಚಿವ(ಮೌಲ್ಯಮಾಪನ)ಪ್ರೊ.ರಮೇಶ ಬಿ.ಕುಡೇನಟ್ಟಿ, ವಿತ್ತಾಧಿಕಾರಿ ಎಂ.ವಿ.ವಿಜಯಲಕ್ಷ್ಮಿ, ಸಿಂಡಿಕೇಟ್ ಸದಸ್ಯರಾದ ಪ್ರೊ.ಬಿ.ಆರ್.ಸುಪ್ರೀತ್, ಶಿಲ್ಪಶ್ರೀ ಮತ್ತು ವಿದ್ಯಾವಿಷಯಕ ಪರಿಷತ್ತಿನ ಸದಸ್ಯ ಅಬ್ದುಲ್ ಖಾದರ್ ಉಪಸ್ಥಿತರಿದ್ದರು.
Hubballi | ಯುವತಿಯ ರಕ್ಷಣೆ, ಜಿಮ್ ಟ್ರೈನರ್ ವಿರುದ್ಧ ಕ್ರಮಕ್ಕೆ ಸೂಚನೆ : ಗೃಹ ಸಚಿವ ಜಿ.ಪರಮೇಶ್ವರ್
ದಾವಣಗೆರೆ : ಹುಬ್ಬಳ್ಳಿಯ ಜಿಮ್ ಟ್ರೈನರ್ ಸಮೀರ್ ಎಂಬಾತನ ವಿರುದ್ಧ ಕೇಳಿ ಬಂದಿರುವ ಅತ್ಯಾಚಾರ ಆರೋಪ ಪ್ರಕರಣವನ್ನು ಸರಕಾರ ಗಂಭೀರವಾಗಿ ಪರಿಗಣಿಸಿದ್ದು, ಕ್ರಮ ಕೈಗೊಳ್ಳುವಂತೆ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ತಿಳಿಸಿದ್ದಾರೆ. ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಕರಣದ ಕುರಿತು ಸಂಪೂರ್ಣ ಮಾಹಿತಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಕಾನೂನು ಬಾಹಿರ ಕೃತ್ಯ ಎಸಗುವವರು ಯಾರೇ ಆಗಿದ್ದರೂ ಅವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು. ನಾನು ಈಗ ಹುಬ್ಬಳ್ಳಿಗೆ ತೆರಳುತ್ತಿದ್ದೇನೆ. ಅಲ್ಲಿಗೆ ತಲುಪುವಷ್ಟರಲ್ಲಿ ಪ್ರಕರಣದ ಸಮಗ್ರ ವರದಿಯನ್ನು ಸಿದ್ಧಪಡಿಸಿ ನೀಡಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದ್ದೇನೆ. ಇಂತಹ ಸೂಕ್ಷ್ಮ ಪ್ರಕರಣಗಳಲ್ಲಿ ವಿಳಂಬ ಧೋರಣೆ ಸಹಿಸುವುದಿಲ್ಲ ಎಂದು ಅವರು ಹೇಳಿದರು. ಅತ್ಯಾಚಾರಕ್ಕೆ ಒಳಗಾಗಿದ್ದಾರೆ ಎನ್ನಲಾದ ಯುವತಿಯನ್ನು ಈಗಾಗಲೇ ರಕ್ಷಿಸಲಾಗಿದೆ. ಜ್ಯೂಸ್ನಲ್ಲಿ ಮತ್ತಿನ ಔಷಧ ಬೆರೆಸಿಕೊಟ್ಟು ಅತ್ಯಾಚಾರ ಎಸಗಲಾಗಿದೆ ಎಂಬ ಸಂತ್ರಸ್ತೆಯ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸಲು ಜಿಮ್ ಟ್ರೈನರ್ ಮೇಲೆ ಕ್ರಮಕ್ಕೆ ಸೂಚಿಸಲಾಗಿದೆ ಎಂದು ಸಚಿವರು ಸ್ಪಷ್ಟಪಡಿಸಿದರು.
Siddaramaiah: ತಲಾ ಆದಾಯದಲ್ಲಿ ಕರ್ನಾಟಕದ ದೇಶದಲ್ಲೇ ನಂಬರ್ ಒನ್; ದೇಶಕ್ಕೆ ಕಾಂಗ್ರೆಸ್ ಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ. ಏಪ್ರಿಲ್ 3ರ ಶುಕ್ರವಾರ ಬಾಗಲಕೋಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬೇವಿನಮಟ್ಟಿ ಗ್ರಾಮದಲ್ಲಿ ನಡೆದ ಉಪಚುನಾವಣೆ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.ತೆರಿಗೆ ಸಂಗ್ರಹದಲ್ಲಿ ರಾಜ್ಯ ಎರಡನೇ ಸ್ಥಾನದಲ್ಲಿದೆ. ಇದಕ್ಕಾಗಿ ನೀವು ಕರ್ನಾಟಕದಲ್ಲಿ ಕಾಂಗ್ರೆಸ್ ಗೆಲ್ಲಿಸಬೇಕು.
Madikeri | ತಡಿಯಂಡಮೋಳ್ ಬೆಟ್ಟದಲ್ಲಿ ಕೇರಳದ ಮಹಿಳೆ ನಾಪತ್ತೆ
ಮಡಿಕೇರಿ : ಕೊಡಗಿನ ಅತ್ಯಂತ ಎತ್ತರದ ತಡಿಯಂಡಮೋಳ್ ಬೆಟ್ಟಕ್ಕೆ ಚಾರಣ ತೆರಳಿದ ತಂಡದಲ್ಲಿದ್ದ ಕೇರಳ ಮೂಲದ ಮಹಿಳೆಯೊಬ್ಬರು ನಾಪತ್ತೆಯಾಗಿರುವ ಘಟನೆ ವರದಿಯಾಗಿದೆ. ತಡಿಯಂಡಮೋಳ್ ಬೆಟ್ಟದ ತಪ್ಪಲಿನ ಯವಕಪಾಡಿ ಗ್ರಾಮದ ಹೋಂಸ್ಟೇಯಲ್ಲಿ ವಾಸ್ತವ್ಯ ಹೂಡಿ, ಚಾರಣಕ್ಕೆ ತೆರಳಿದ್ದ ಕೇರಳ ಮೂಲದ ಶರಣ್ಯ(36) ನಾಪತ್ತೆಯಾಗಿರುವ ಮಹಿಳೆ. ಅರಣ್ಯ ಇಲಾಖೆ ಹಾಗೂ ಪೊಲೀಸ್ ಸಿಬ್ಬಂದಿಯ ಒಟ್ಟು ನಾಲ್ಕು ತಂಡಗಳು ಪತ್ತೆ ಕಾರ್ಯಾಚರಣೆಯಲ್ಲಿ ತೊಡಗಿವೆ. ನಾಪೊಕ್ಲು ಸಮೀಪದ ಯವಕಪಾಡಿ ಕಕ್ಕಬ್ಬೆಯಿಂದ ಸುಮಾರು ಐದು ಕಿಲೋ ಮೀಟರ್ ದೂರ ಕಡಿದಾದ ಹಾದಿಯ ಚಾರಣ ನಡೆಸಿದಲ್ಲಿ, ತಡಿಯಂಡಮೋಳ್ ಶಿಖರವನ್ನು ತಲುಪಬಹುದು. ಗುರುವಾರ ಚಾರಣಕ್ಕೆ ಹೊರಟ ಶರಣ್ಯ ಅವರು ಒಬ್ಬಂಟಿಯಾಗಿದ್ದ ಹಿನ್ನೆಲೆಯಲ್ಲಿ, ಇತರ ಚಾರಣಿಗರ ಜೊತೆಗೆ ಕಳುಹಿಸಲಾಗಿತ್ತು ಎಂದು ತಿಳಿದು ಬಂದಿದೆ. ಚಾರಣ ತೆರಳಿದವರು ಮರಳಿ ಬಂದಿದ್ದರಾದರೂ, ಶರಣ್ಯ ಮಾತ್ರ ಹಿಂದಿರುಗಿರಲಿಲ್ಲ. ಈ ಬಗ್ಗೆ ಅಲ್ಲಿನ ಅರಣ್ಯ ಸಿಬ್ಬಂದಿಗೆ ಮಾಹಿತಿ ನೀಡಿದ ಮೇಲೆ ಸ್ಥಳೀಯರು, ಪೊಲೀಸರು ಹಾಗೂ ಗ್ರಾಮಸ್ಥರು ತಡಿಯಂಡಮೋಳ್ ಬೆಟ್ಟ ಪ್ರದೇಶದಲ್ಲಿ ಸಾಕಷ್ಟು ಹುಡುಕಾಟ ನಡೆಸಿದರಾದರೂ ಶರಣ್ಯ ಅವರು ಪತ್ತೆಯಾಗಿರಲಿಲ್ಲ. ತೀವ್ರ ಶೋಧ: ಅರಣ್ಯ ಸಿಬ್ಬಂದಿ ಹಾಗೂ ಪೊಲೀಸರ ನಾಲ್ಕು ತಂಡಗಳು ಶ್ವಾನದಳದ ಸಹಕಾರದೊಂದಿಗೆ ಶರಣ್ಯ ಅವರ ಪತ್ತೆ ಕಾರ್ಯವನ್ನು ತೀವ್ರಗೊಳಿಸಿದ್ದಾರೆ.
ಈಜಿಪ್ಟ್ ವಿರುದ್ಧದ ಫುಟ್ಬಾಲ್ ಪಂದ್ಯದಲ್ಲಿ ‘‘ಮುಸ್ಲಿಮ್-ವಿರೋಧಿ’’ ಘೋಷಣೆಗೆ ಲಮಿನ್ ಯಮಲ್ ಟೀಕೆ
ಬಾರ್ಸಿಲೋನ, ಎ. 3: ಸ್ಪೇನ್ ಮತ್ತು ಈಜಿಪ್ಟ್ ನಡುವಿನ ಸೌಹಾರ್ದ ಫುಟ್ಬಾಲ್ ಪಂದ್ಯದ ವೇಳೆ ಮುಸ್ಲಿಮ್ ವಿರೋಧಿ ಘೋಷಣೆಗಳನ್ನು ಕೂಗಿರುವುದಕ್ಕಾಗಿ ಸ್ಪೇನ್ ಪ್ರೇಕ್ಷಕರ ಒಂದು ವರ್ಗವನ್ನು ದೇಶದ ಸ್ಟಾರ್ ಆಟಗಾರ ಲಮಿನ್ ಯಮಲ್ ಟೀಕಿಸಿದ್ದಾರೆ. ಫುಟ್ಬಾಲ್ ನಲ್ಲಿ ಇಂತಹ ವರ್ತನೆಯನ್ನು ಸಹಿಸಬಾರದು ಎಂದು ಅವರು ಹೇಳಿದ್ದಾರೆ. ಬಾರ್ಸಿಲೋನದ RCDE ಸ್ಟೇಡಿಯಮ್ ನಲ್ಲಿ ಮಂಗಳವಾರ ಘಟನೆ ನಡೆದಿದೆ. ಪ್ರೇಕ್ಷಕರ ಒಂದು ವರ್ಗವು ‘‘ಬೋಟೆ, ಬೋಟೆ, ಬೋಟೆ ಮುಸಲ್ಮಾನ್ ಎಲ್ ಕ್ಯೂ ನೋ ಬೋಟೆ (ಜಿಗಿ, ಜಿಗಿ, ಜಿಗಿ, ಯಾರು ಜಿಗಿಯುವುದಿಲ್ಲವೋ ಅವರು ಮುಸ್ಲಿಮ್)’’ ಎಂಬ ಘೋಷಣೆಯನ್ನು ಕೂಗಿತ್ತು. ಪಂದ್ಯದ ವೇಳೆ ಹಲವು ಬಾರಿ ಈ ಘೋಷಣೆಯನ್ನು ಕೂಗಲಾಗಿತ್ತು. ಆಗ ಸ್ಟೇಡಿಮ್ ನಲ್ಲಿ, ಘೋಷಣೆಯೊಂದನ್ನು ಹೊರಡಿಸಿ, ಜನಾಂಗೀಯವಾದಿ ಭಾಷೆಯನ್ನು ಬಳಸದಂತೆ ಪ್ರೇಕ್ಷಕರಿಗೆ ಮನವಿ ಮಾಡಲಾಯಿತು. ಅದೇ ಸಂದೇಶವನ್ನು ದೊಡ್ಡ ಪರದೆಯಲ್ಲೂ ಪ್ರದರ್ಶಿಸಲಾಯಿತು. ಈ ಘೋಷಣೆಯನ್ನು ಪ್ರೇಕ್ಷಕರ ಒಂದು ವರ್ಗವು ಶಿಳ್ಳೆಗಳ ಮೂಲಕ ಸ್ವಾಗತಿಸಿತು. ಈಜಿಪ್ಟ್ ಮುಖ್ಯವಾಗಿ ಮುಸ್ಲಿಮ್ ಬಾಹುಳ್ಯದ ದೇಶ. 18 ವರ್ಷದ ಸ್ಪೇನ್ ಆಟಗಾರ ಲಮಿನ್ ಯಮಲ್ ಕೂಡ ಮುಸ್ಲಿಮ್. ಅವರು ಇದಕ್ಕೆ ಮೊದಲು ಕೂಡ ತನ್ನ ಧರ್ಮದ ಬಗ್ಗೆ ಮಾತನಾಡಿದ್ದಾರೆ. ‘‘ನಾನೊಬ್ಬ ಮುಸ್ಲಿಮ್, ಧನ್ಯವಾದಗಳು ದೇವರೇ’’ ಎಂಬುದಾಗಿ ಅವರು ಇನ್ಸ್ಟಾಗ್ರಾಮ್ ನಲ್ಲಿ ಬರೆದಿದ್ದಾರೆ. ‘‘ನಿನ್ನೆ ಸ್ಟೇಡಿಯಮ್ ನಲ್ಲಿ, ‘ಯಾರು ಜಿಗಿಯುವುದಿಲ್ಲವೋ ಅವರು ಮುಸ್ಲಿಮ್’ ಎಂಬ ಘೋಷಣೆಯನ್ನು ನಾವು ಕೇಳಿದೆವು. ಅದನ್ನು ಎದುರಾಳಿ ತಂಡವನ್ನು ಉದ್ದೇಶಿಸಿ ಹೇಳಿರುವುದು ಎಂದು ನನಗೆ ಗೊತ್ತಿದೆ. ವೈಯಕ್ತಿಕವಾಗಿ ಅದು ನನ್ನ ಬಗ್ಗೆ ಹೇಳಿದ್ದಲ್ಲ. ಆದರೆ, ಸ್ವತಃ ಮುಸ್ಲಿಮ್ ಆಗಿರುವ ನನಗೂ ಈ ಘೋಷಣೆಯು ಅಗೌರವಯುತವಾಗಿದೆ. ಇದನ್ನು ನಾವು ಸಹಿಸಲು ಸಾಧ್ಯವಿಲ್ಲ’’ ಎಂದು ಅವರು ಹೇಳಿದ್ದಾರೆ. ‘‘ಎಲ್ಲಾ ಅಭಿಮಾನಿಗಳು ಹಾಗಿಲ್ಲ ಎನ್ನುವುದೂ ನನಗೆ ಗೊತ್ತು. ಆದರೆ, ಫುಟ್ಬಾಲ್ ಸ್ಟೇಡಿಯಮ್ ನಲ್ಲಿ ಜನರನ್ನು ಹೀಯಾಳಿಸಲು ಧರ್ಮವನ್ನು ಬಳಸಿದರೆ, ನೀವು ಅಜ್ಞಾನಿಗಳು ಮತ್ತು ಜನಾಂಗೀಯವಾದಿಗಳಾಗುತ್ತೀರಿ. ಫುಟ್ಬಾಲ್ ಇರುವುದು ಆನಂದಿಸಲು ಮತ್ತು ಬೆಂಬಲಿಸುವುದಕ್ಕಾಗಿಯೇ ಹೊರತು, ಜನರು ಏನಾಗಿದ್ದಾರೋ ಮತ್ತು ಏನನ್ನು ನಂಬುತ್ತಾರೋ ಅದರ ಮೂಲಕ ಅವರನ್ನು ನೋಯಿಸಲು ಅಲ್ಲ’’ ಎಂದು ಅವರು ಬರೆದಿದ್ದಾರೆ. ‘‘ಆದರೂ, ಬೆಂಬಲಿಸಲು ಮೈದಾನಕ್ಕೆ ಬಂದ ಅಭಿಮಾನಿಗಳಿಗೆ ಧನ್ಯವಾದಗಳು’’ ಎಂದು ಅವರು ಹೇಳಿದ್ದಾರೆ.
ತಾಪಮಾನ ಹೆಚ್ಚಳ; ಕಲಬುರಗಿ ಕೋರ್ಟ್ ಕಾರ್ಯಕಲಾಪದ ಸಮಯದಲ್ಲಿ ಬದಲಾವಣೆ
ಬೆಂಗಳೂರು: ಬೇಸಿಗೆಯ ಬಿಸಿಲಿನ ತಾಪ ಹೆಚ್ಚಿರುವ ಹಿನ್ನೆಲೆಯಲ್ಲಿ ಎಪ್ರಿಲ್ 6 ರಿಂದ ಮೇ ಅಂತ್ಯದವರಗೆ ಅನ್ವಯವಾಗುವಂತೆ ಹೈಕೋರ್ಟ್ ಕಲಬುರಗಿ ಪೀಠಗಳ ಕಾರ್ಯಕಲಾಪದ ಸಮಯ ಬದಲಾವಣೆ ಮಾಡಲಾಗಿದೆ. ಮುಖ್ಯ ನ್ಯಾಯಮೂರ್ತಿಗಳ ಆದೇಶಾನುಸಾರ ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ಕೆ.ಎಸ್. ಭರತ್ ಕುಮಾರ್ ಅವರು ಈ ಕುರಿತು ಅಧಿಸೂಚನೆ ಹೊರಡಿಸಿದ್ದಾರೆ. ಕಲಬುರಗಿ ಹೈಕೋರ್ಟ್ ಪೀಠದ ಕಲಾಪವು ಏಪ್ರಿಲ್ 6ರಿಂದ ಮೇ ಅಂತ್ಯದವರೆಗೆ ಪ್ರತಿದಿನ ಬೆಳಗ್ಗೆ 8ರಿಂದ 11 ಗಂಟೆ ಹಾಗೂ 11.3ರಿಂದ ಮಧ್ಯಾಹ್ನ 1.30ರವರೆಗೆ ನಡೆಯಲಿದ್ದು, 11ರಿಂದ 11.30ರವರೆಗೆ ವಿರಾಮ ಇರಲಿದೆ. ಕಚೇರಿ ಸಮಯವು ಶನಿವಾರ ಹೊರತುಪಡಿಸಿ ಬೆಳಗ್ಗೆ 7.30ರಿಂದ ಮಧ್ಯಾಹ್ನ 2ಗಂಟೆಯವರಿಗೆ ಇರಲಿದೆ. ಶನಿವಾರ ಬೆಳಗ್ಗೆ 7.30ರಿಂದ 11 ಗಂಟೆಯವರೆಗೆ ಕಚೇರಿ ಕಾರ್ಯ ನಿರ್ವಹಿಸಲಿದೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ವಿಚಾರಣಾ ಕೋರ್ಟ್ಗಳ ಸಮಯದಲ್ಲೂ ಬದಲಾವಣೆ: ಕಲಬುರಗಿ ವಿಭಾಗದಡಿ ಬರುವ ಬಳ್ಳಾರಿ, ಬೀದರ್, ಕೊಪ್ಪಳ, ರಾಯಚೂರು, ಕಲಬುರಗಿ, ವಿಜಯನಗರ, ಯಾದಗಿರಿ ಮತ್ತು ಬೆಳಗಾವಿ ವಿಭಾಗದಕ್ಕೆ ಬರುವ ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಗಳ ಸಿವಿಲ್ ಮತ್ತು ಕ್ರಿಮಿನಲ್, ಕೌಟುಂಬಿಕ ಮತ್ತು ಕಾರ್ಮಿಕ ನ್ಯಾಯಾಲಯ ಕಾರ್ಯ ಕಲಾಪದ ಸಮಯವನ್ನೂ ಸಹ ಎಪ್ರಿಲ್ 4ರಿಂದ ಮೇ ಅಂತ್ಯದವರೆಗೆ ಬದಲಿಸಲಾಗಿದೆ. ಈ ನ್ಯಾಯಾಲಯಗಳಲ್ಲಿ ಬೆಳಗ್ಗೆ 8ರಿಂದ 11 ಮತ್ತು 11.30ರಿಂದ ಮಧ್ಯಾಹ್ನ 1.30ರವರೆಗೆ ಕಲಾಪ ನಡೆಯಲಿದೆ. ಮಧ್ಯಾಹ್ನ 11ರಿಂದ 11.30ರವರೆಗೆ ವಿರಾಮ ಇರಲಿದೆ. ಕಚೇರಿ ಸಮಯವು ಬೆಳಗ್ಗೆ 7.30ಕ್ಕೆ ಆರಂಭವಾಗಿ ಮಧ್ಯಾಹ್ನ 2ಕ್ಕೆ ಕೊನೆಯಾಗಲಿದೆ. ಏಪ್ರಿಲ್ 24ರಂದು ನಾಲ್ಕನೇ ಶನಿವಾರ ಬೆಳಗ್ಗೆ 7.30ರಿಂದ ಮಧ್ಯಾಹ್ನ 2 ಗಂಟೆಯವರೆಗೆ ನ್ಯಾಯಾಲಯ ಕಾರ್ಯ ನಿರ್ವಹಿಸಲಿದೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ಜಿಲ್ಲಾ ನ್ಯಾಯಾಧೀಶರ ಸೇವಾ ಹಿರಿತನದ ಅಂತಿಮ ಪಟ್ಟಿ ಎತ್ತಿ ಹಿಡಿದ ಹೈಕೋರ್ಟ್ ಪೂರ್ಣಪೀಠ
ಬೆಂಗಳೂರು : ಜಿಲ್ಲಾ ನ್ಯಾಯಾಧೀಶರ ಸೇವಾ ಹಿರಿತನದ ಅಂತಿಮ ಪಟ್ಟಿಯನ್ನು ಎತ್ತಿಹಿಡಿದಿರುವ ಹೈಕೋರ್ಟ್ ಪೂರ್ಣಪೀಠ, ಭವಿಷ್ಯದಲ್ಲಿ ನ್ಯಾಯಾಂಗ ಅಧಿಕಾರಿಗಳ ಬಡ್ತಿಗೆ ನಾಲ್ಕು ಬಿಂದು ರೋಸ್ಟರ್ ಅನ್ನು ಜಾರಿಗೆ ತರುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿದೆ. ಸೇವಾ ಹಿರಿತನದ ಪಟ್ಟಿಯನ್ನು ಹೊಸದಾಗಿ ಮಾಡುವಂತೆ ನಿರ್ದೇಶಿಸಿ ಏಕಸದಸ್ಯ ನ್ಯಾಯಪೀಠ ನೀಡಿದ್ದ ಆದೇಶ ಪ್ರಶ್ನಿಸಿ ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ಹಾಗೂ ಬಡ್ತಿ ಪಡೆದ ನ್ಯಾಯಾಧೀಶರು ಸಲ್ಲಿಸಿದ್ದ ಮೇಲ್ಮನವಿಯನ್ನು ಪುರಸ್ಕರಿಸಿರುವ ನ್ಯಾಯಮೂರ್ತಿಗಳಾದ ಸುನೀಲ್ ದತ್ ಯಾದವ್, ಲಲಿತಾ ಕನ್ನೆಗಂಟಿ ಹಾಗೂ ವಿಜಯಕುಮಾರ್ ಪಾಟೀಲ್ ಅವರಿದ್ದ ಪೂರ್ಣಪೀಠ ಈ ತೀರ್ಪು ನೀಡಿದೆ. ಸುಪ್ರೀಂಕೋರ್ಟ್ನ ಇತ್ತೀಚಿನ ತೀರ್ಪು ಉಲ್ಲೇಖಿಸಿರುವ ನ್ಯಾಯಾಲಯ, ಅರ್ಜಿದಾರರಿಗೆ ಯಾವುದೇ ರೀತಿಯ ಪರಿಹಾರ ನಿರಾಕರಿಸಲಾಗಿದ್ದರೂ ಕಾನೂನು ಚೌಕಟ್ಟಿನಲ್ಲಿ ಅವರಿಗೆ ಭವಿಷ್ಯದಲ್ಲಿ ಅನುಕೂಲ ದೊರಕಿಸಿಕೊಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರಕ್ಕೆ ಹಲವು ನಿರ್ದೇಶನಗಳನ್ನು ನೀಡಲಾಗುವುದು. ಹೈಕೋರ್ಟ್ ಮತ್ತು ರಾಜ್ಯ ಸರ್ಕಾರ '4 ಅಂಶಗಳ ರೋಸ್ಟರ್' ಅನ್ನು ಅಳವಡಿಸಿಕೊಳ್ಳಬೇಕು ಎಂದು ಅದೇಶಿಸಿರುವ ನ್ಯಾಯಪೀಠ, ಈ ವಿಚಾರದಲ್ಲಿ ಹಲವು ನಿರ್ದೇಶನಗಳನ್ನೂ ನೀಡಿದೆ. ಪೂರ್ಣಪೀಠದ ನಿರ್ದೇಶನಗಳು: * ಹೈಕೋರ್ಟ್ ಎಲ್ಲ ಅಗತ್ಯ ವಿವರಗಳೊಂದಿಗೆ ನಿಗದಿತ ಸಮಯದೊಳಗೆ ನ್ಯಾಯಾಂಗ ಅಧಿಕಾರಿಗಳ ವೃಂದ ಬಲವನ್ನು ಅಧಿಕೃತವಾಗಿ ಅಧಿಸೂಚನೆ ಹೊರಡಿಸುವಂತೆ ರಾಜ್ಯ ಸರ್ಕಾರಕ್ಕೆ ಮನವಿ ಮಾಡಬೇಕು. ಆ ವೃಂದ ಬಲದ ಅಧಿಸೂಚನೆ ಆಧರಿಸಿ '4 ಅಂಶಗಳ ರೋಸ್ಟರ್' ಅನ್ನು ಜಾರಿಗೊಳಿಸಬೇಕು. * 4 ಅಂಶಗಳ ರೋಸ್ಟರ್ ಅನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ರಾಜ್ಯ ಸರ್ಕಾರ ಒಂದು ತಿಂಗಳೊಳಗೆ ವೃಂದ ಬಲದ ಅಧಿಸೂಚನೆ ಹೊರಡಿಸಬೇಕು. ಬಡ್ತಿ ಕೋಟಾದಲ್ಲಿ ಬದಲಾವಣೆಯಾಗಿ ಶೇ.50 ಬಡ್ತಿ, ಶೇ.25 ಸ್ಪರ್ಧಾತ್ಮಕ ಪರೀಕ್ಷೆ ಮತ್ತು ಶೇ.25 ನೇರವಾಗಿ ನೇಮಕಗೊಂಡ ಜಿಲ್ಲಾನ್ಯಾಯಾಧೀಶರ ಕೋಟಾ ಪರಿಗಣಿಸಿ ಹೊಸ ಕೋಟಾ ಪದ್ಧತಿಯನ್ನು ಮುಂದಿನ ದಿನಗಳಲ್ಲಿ ಜಾರಿಗೊಳಿಸಬೇಕು. * ಹಾಲಿ ಪ್ರತ್ಯೇಕ ಸೇವಾಹಿರಿತನ ನಿಯಮಗಳು ಜಾರಿಯಲ್ಲಿಲ್ಲದ ಕಾರಣ, ಹೈಕೋರ್ಟ್ ಜತೆ ಸಮಾಲೋಚನೆ ನಡೆಸಿ ರಾಜ್ಯ ಸರ್ಕಾರ ಹೊಸ ಸೇವಾ ಹಿರಿತನ ನಿಯಮ ರೂಪಿಸಬೇಕು. ಹೈಕೋರ್ಟ್ ಜಿಲ್ಲಾ ನ್ಯಾಯಾಧೀಶರ ಹಿರಿತನ ಮತ್ತು ವೃಂದವನ್ನು ನಿಯಂತ್ರಿಸುವ ಕಾನೂನು ಚೌಕಟ್ಟನ್ನು ರೂಪಿಸಲು ಕ್ರಮಗಳನ್ನು ಕೈಗೊಳ್ಳಬೇಕು. ಪ್ರಕರಣವೇನು? ಹೈಕೋರ್ಟ್ 2016ರಲ್ಲಿ ಜಿಲ್ಲಾ ನ್ಯಾಯಾಧೀಶರ ಸೇವಾ ಹಿರಿತನ ಪಟ್ಟಿ ಪ್ರಕಟಿಸಿತ್ತು. ಅದರಲ್ಲಿ 2015ರಲ್ಲಿ ಎರಡು ಬಾರಿ ಪದೋನ್ನತಿ ನೀಡಲಾದ ಅಧಿಕಾರಿಗಳನ್ನು ಸೇವಾ ಹಿರಿತನ ಪಟ್ಟಿಯಲ್ಲಿ ನೇರ ನೇಮಕಾತಿ ಆಗಿರುವ ನ್ಯಾಯಾಧೀಶರಿಗಿಂತ ಮೇಲೆ ಇಡಲಾಗಿತ್ತು. ಇದನ್ನು ನೇರ ನೇಮಕಾತಿಯಾಗಿದ್ದ ನ್ಯಾಯಾಧೀಶರು ಪ್ರಶ್ನಿಸಿದ್ದರು. ಆ ಅರ್ಜಿ ಆಲಿಸಿದ್ದ ಏಕಸದಸ್ಯ ನ್ಯಾಯಪೀಠ, ಸೇವಾ ಹಿರಿತನ ಪಟ್ಟಿಯನ್ನು ಹೊಸದಾಗಿ ಮಾಡುವಂತೆ ಆದೇಶ ನೀಡಿತ್ತು. ಆ ಆದೇಶ ಪ್ರಶ್ನಿಸಿ ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ಮತ್ತು ಬಡ್ತಿ ಪಡೆದು ಜಿಲ್ಲಾ ನ್ಯಾಯಾಧೀಶರು ಮೇಲ್ಮನವಿ ಸಲ್ಲಿಸಿದ್ದರು. ಇದರ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ಅನು ಸಿವರಾಮನ್ ಹಾಗೂ ನ್ಯಾಯಮೂರ್ತಿ ಕೆ. ರಾಜೇಶ್ ರೈ ಅವರಿದ್ದ ವಿಭಾಗೀಯ ನ್ಯಾಯಪೀಠ ಭಿನ್ನ ತೀರ್ಪು ನೀಡಿತ್ತು. ನ್ಯಾಯಮೂರ್ತಿ ಅನು ಶಿವರಾಮನ್ ಅವರು ಏಕಸದಸ್ಯ ನ್ಯಾಯಪೀಠದ ಆದೇಶ ರದ್ದುಗೊಳಿಸಬೇಕೆಂದು ತೀರ್ಪು ನೀಡಿದ್ದರೆ, ನ್ಯಾಯಮೂರ್ತಿ ರಾಜೇಶ್ ರೈ ಅವರು ಏಕಸದಸ್ಯ ನ್ಯಾಯಪೀಠದ ಆದೇಶದಂತೆ ಹೊಸದಾಗಿ ಸೇವಾ ಹಿರಿತನ ಪಟ್ಟಿ ಮಾಡಬೇಕೆಂದು ತೀರ್ಪು ನೀಡಿದ್ದರು. ಭಿನ್ನ ತೀರ್ಪು ಹಿನ್ನೆಲೆಯಲ್ಲಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳು ಮೇಲ್ಮನವಿಗಳ ಇತ್ಯರ್ಥಕ್ಕೆ ಮೂವರು ನ್ಯಾಯಮೂರ್ತಿಗಳ ಪೂರ್ಣಪೀಠವನ್ನು ರಚನೆ ಮಾಡಿದ್ದರು. ಇದೀಗ ಮೇಲ್ಮನವಿಯ ಸಮಗ್ರ ವಿಚಾರಣೆ ನಡೆಸಿರುವ ಪೂರ್ಣಪೀಠ 142 ಪುಟಗಳ ತೀರ್ಪು ಪ್ರಕಟಿಸಿದ್ದು, ಏಕಸದಸ್ಯ ನ್ಯಾಯಪೀಠದ ಆದೇಶವನ್ನು ಅನೂರ್ಜಿತಗೊಳಿಸಿದೆ.
ಬೆಂಗಳೂರು ಸೇರಿ ಎಲ್ಲೆಡೆ ʼಗುಡ್ಫ್ರೈಡೆ ಆಚರಣೆʼ
ಬೆಂಗಳೂರು : ಕ್ರೈಸ್ತ ಸಮುದಾಯದ ಪವಿತ್ರ ದಿನವಾದ ಶುಭ ಶುಕ್ರವಾರವನ್ನು(ಗುಡ್ಫ್ರೈಡೆ) ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಉಪವಾಸ, ಧ್ಯಾನ ಹಾಗೂ ಪ್ರಾರ್ಥನೆಯೊಂದಿಗೆ ಆಚರಿಸಲಾಯಿತು. ಶುಕ್ರವಾರ ಬೆಳಗ್ಗೆ 7.30ರಿಂದಲೇ ಆಚರಣೆಗಳು ಆರಂಭಗೊಂಡವು. ಚರ್ಚ್ಗಳಲ್ಲಿ ಪ್ರಾರ್ಥನೆ, ಧ್ಯಾನ, ಯೇಸುವಿನ ಶಿಲುಬೆಯ ಹಾದಿಯ ವಾಚನ ನಡೆಯಿತು. ಬೆಂಗಳೂರಿನ ಎಂ.ಜಿ.ರಸ್ತೆಯ ಈಸ್ಟ್ ಪರೇಡ್ ಮಲಯಾಳಂ ಚರ್ಚ್ನಲ್ಲಿ ನೂರಾರು ಭಕ್ತರು ಭಾಗಿಯಾಗಿದ್ದರು. ಚಾಮರಾಜಪೇಟೆಯ ಸೇಂಟ್ ಲೂಕ್ಸ್ ಚರ್ಚ್ನಲ್ಲೂ ಗುಡ್ಫ್ರೈಡೆ ಆಚರಣೆ ನಡೆಯಿತು. ಅದೇ ರೀತಿ, ಎಟಿಯನ್ ಸ್ಮಾರಕ ಚರ್ಚ್, ತಿಲಕನಗರ ಸೇಂಟ್ ಮೇರಿ ಚರ್ಚ್, ಶಿವಜಿಂಗಾರ್ ಫ್ರಾಂಚೈಸ್ ಕ್ಸೇವಿಯರ್ ಚರ್ಚ್, ಸೇಂಟ್ ಜೋಹಾನ್ಸ್ ರಸ್ತೆ, ಶಿಶು ಜೀಸಸ್ ಚರ್ಚ್ ವಿವೇಕನಗರ ಸೇರಿದಂತೆ ಹಲವೆಡೆ ವಿಶೇಷ ಪ್ರಾರ್ಥನೆ ಜರುಗಿತು. ಕೆಲವು ಚರ್ಚ್ಗಳಲ್ಲಿ ಯೇಸು ಕ್ರಿಸ್ತರ ಬಂಧನ, ಶಿಲುಬೆಯ ಮೇಲೆ ಮರಣವನ್ನಪ್ಪುವ ಘಟನಾವಳಿಗಳನ್ನು ಪ್ರಸ್ತುತಪಡಿಸಲಾಯಿತು. ಧರ್ಮಗುರುಗಳು ರಕ್ತವರ್ಣದ ಪೂಜಾ ಬಟ್ಟೆ ಧರಿಸಿ ಯೇಸು ಕ್ರಿಸ್ತನ ಕೊನೆಯ ಘಳಿಗೆಗಳ ವೃತ್ತಾಂತ ಓದಿದರು. ಬಳಿಕ ಶಿಲುಬೆಯನ್ನು ಎತ್ತಿಕೊಂಡು ಮೆರವಣಿಗೆ ಸಾಗಿದ ದೃಶ್ಯ ಕಂಡುಬಂದಿತು.
ಅಮೆರಿಕದ ಯುದ್ಧ ವಿಮಾನವನ್ನು ಹೊಡೆದುರುಳಿಸಲಾಗಿದೆ ಎಂಬ ವರದಿಗಳು ಕಳವಳಕಾರಿ: ಶ್ವೇತ ಭವನ
ಟೆಹರಾನ್/ವಾಷಿಂಗ್ಟನ್: ಅಮೆರಿಕದ ಎಫ್-35 ಯುದ್ಧ ವಿಮಾನವನ್ನು ಹೊಡೆದುರುಳಿಸಲಾಗಿದೆ ಎಂಬ ವರದಿಗಳು ಕಳವಳಕಾರಿಯಾಗಿವೆ ಎಂದು ಶ್ವೇತ ಭವನ ಪ್ರತಿಕ್ರಿಯಿಸಿದೆ. ಎಫ್-35 ಯುದ್ಧ ವಿಮಾನವನ್ನು ಹೊಡೆದುರುಳಿಸಿರುವುದು ಇನ್ನೂ ದೃಢಪಟ್ಟಿಲ್ಲದಿದ್ದರೂ, ಪ್ಯಾರಾಶೂಟ್ ಒಂದು ಪತ್ತೆಯಾಗಿದೆ ಎಂದು ಇರಾನ್ ನ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಇರಾನ್ ನ ಮಧ್ಯ ಭಾಗದಲ್ಲಿ ಅಮೆರಿಕ ಯುದ್ಧ ವಿಮಾನವು ಬಾಂಬ್ ಹಾಕುವ ವೇಳೆ ಈ ಘಟನೆ ನಡೆದಿದೆ ಎನ್ನಲಾಗಿದ್ದು, ಅಲ್ಲಿ ಹೆಲಿಕಾಪ್ಟರ್ ಗಳು ಹಾಗೂ ಮರು ಇಂಧನ ಭರ್ತಿ ವಿಮಾನಗಳು ಕಂಡು ಬಂದಿರುವುದರಿಂದ ರಕ್ಷಣಾ ಕಾರ್ಯಾಚರಣೆಗಳು ನಡೆಯುತ್ತಿವೆ ಎಂಬ ಸೂಚನೆ ದೊರೆತಿದೆ. ಹೊಡೆದುರುಳಿಸಲಾದ ಯುದ್ಧ ವಿಮಾನದ ಸಿಬ್ಬಂದಿಗಾಗಿ ಶೋಧ ಕಾರ್ಯಾಚರಣೆ ಪ್ರಗತಿಯಲ್ಲಿದ್ದು, ಇರಾನ್ ಮಾಧ್ಯಮಗಳಲ್ಲಿನ ವರದಿಯನ್ನು ದೃಢಪಡಿಸುವಂತಿವೆ ಎಂದು ಅಮೆರಿಕದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಆದರೆ, ಈ ಕುರಿತು ಹೆಚ್ಚಿನ ವಿವರಗಳನ್ನು ನೀಡಲು ಹೆಸರೇಳಲು ಇಚ್ಛಿಸದ ಅಮೆರಿಕ ಅಧಿಕಾರಿ ನಿರಾಕರಿಸಿದ್ದಾರೆ ಎಂದು ರಾಯಿಟರ್ಸ್ ಸುದ್ದಿ ಸಂಸ್ಥೆ ವರದಿ ಮಾಡಿದೆ. ಅಮೆರಿಕ ಪೈಲಟ್ ಗಳನ್ನು ಇರಾನ್ ಸೇನಾಪಡೆ ವಶಕ್ಕೆ ಪಡೆದಿರುವುದು ಇರಾನ್-ಅಮೆರಿಕ ಯುದ್ಧದಲ್ಲಿ ಒಂದು ತಿರುವಾಗಬಹುದು ಎಂದು ಅಂದಾಜಿಸಲಾಗಿದೆ. ಎಫ್-55 ಯುದ್ಧ ವಿಮಾನವನ್ನು ಹೊಡೆದುರುಳಿಸಲಾಗಿದೆ ಎಂದು ಇರಾನ್ ಮಾಧ್ಯಮಗಳು ವರದಿ ಮಾಡಿದ್ದರೂ, ಅದು ಇನ್ನೂ ದೃಢಪಟ್ಟಿಲ್ಲ. ಆದರೆ, ಇಬ್ಬರು ಅಮೆರಿಕ ಪೈಲಟ್ ಗಳು ಇರಾನ್ ಪ್ರಾಂತ್ಯದಲ್ಲಿ ನಾಪತ್ತೆಯಾಗಿದ್ದಾರೆ ಎನ್ನಲಾಗಿದೆ. ಆಕಾಶದಿಂದ ಯೋಧರನ್ನು ಕೆಳಕ್ಕಿಳಿಸುವ ಕಾರ್ಯಾಚರಣೆ ಪ್ರಗತಿಯಲ್ಲಿದ್ದು, ಇರಾನ್ ಹಾಗೂ ಅಮೆರಿಕ ಭೂಸೇನಾ ಪಡೆಗಳ ನಡುವೆ ತೀವ್ರ ಸಂಘರ್ಷ ನಡೆಯುತ್ತಿದೆ. ಇದರಿಂದ ಆಕ್ರಮಣಕ್ಕೆ ಮುಂದಾಗಿರುವ ಅಮೆರಿಕ ಸೇನಾಪಡೆಯಲ್ಲಿ ಸಾವು-ನೋವುಗಳು ಸಂಭವಿಸುತ್ತಿವೆ ಎಂದು ಇರಾನ್ ಹೇಳಿದೆ. ಅಮೆರಿಕ ಪೈಲಟ್ ಗಳನ್ನು ಪತ್ತೆ ಮಾಡಿದವರಿಗೆ 10 ಶತಕೋಟಿ ತೊಮನ್ಸ್ (64,102 ಡಾಲರ್) ಬಹುಮಾನವಾಗಿ ನೀಡಲಾಗುವುದು ಎಂದು ಇರಾನ್ ಟಿವಿ ಪ್ರಕಟಿಸಿದೆ. ಹೀಗಾಗಿ, ಈ ಶೋಧ ಕಾರ್ಯಾಚರಣೆಯಲ್ಲಿ ಪಾಲ್ಗೊಳ್ಳುವಂತೆ ಇರಾನ್ ಜನತೆಗೆ ಮನವಿ ಮಾಡಲಾಗಿದೆ. ಒಂದು ವೇಳೆ ಅಮೆರಿಕ ಪೈಲಟ್ ಗಳು ಇರಾನ್ ಸೇನಾಪಡೆಗಳಿಗೆ ಸೆರೆ ಸಿಕ್ಕರೆ, ಅದು ಈ ಯುದ್ಧದಲ್ಲಿ ಒಂದು ತಿರುವಾಗಲಿದೆ. ಇದೇ ಮೊದಲ ಬಾರಿಗೆ ಇರಾನ್ ಸೇನಾಪಡೆ ಅಮೆರಿಕ ಪೈಲಟ್ ಗಳನ್ನು ಸೆರೆ ಹಿಡಿದಂತಾಗಲಿದ್ದು, ಇದರಿಂದ ಈ ಯುದ್ಧದ ಅವಧಿಯಲ್ಲಿ ಅಮೆರಿಕ ಖೈದಿಗಳು ಇರಾನ್ ನ ಕಾರಾಗೃಹದಲ್ಲಿರುವಂತಾಗಲಿದೆ ಎಂದು Aljazeera ವರದಿ ಮಾಡಿದೆ.
ಡಿಸಿಇಟಿ: ಅರ್ಜಿ ಸಲ್ಲಿಸಲು ದಿನಾಂಕ ವಿಸ್ತರಣೆ
ಬೆಂಗಳೂರು : ಡಿಪ್ಲೊಮಾ ವಿದ್ಯಾರ್ಥಿಗಳಿಗೆ ಲ್ಯಾಟರಲ್ ಎಂಟ್ರಿ ಮೂಲಕ ಎಂಜಿನಿಯರಿಂಗ್ 2ನೇ ವರ್ಷ ಅಥವಾ 3ನೇ ಸೆಮಿಸ್ಟರ್ ಪ್ರವೇಶಕ್ಕೆ ಅರ್ಜಿ ಸಲ್ಲಿಸಲು ಎ.10ರವರೆಗೆ ದಿನಾಂಕ ವಿಸ್ತರಿಸಲಾಗಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ ತಿಳಿಸಿದ್ದಾರೆ. ಶುಕ್ರವಾರ ಪ್ರಕಟನೆ ಹೊರಡಿಸಿರುವ ಅವರು, ವಿದ್ಯಾರ್ಥಿಗಳ ಕೋರಿಕೆ ಮೇರೆಗೆ ದಿನಾಂಕ ವಿಸ್ತರಿಸಿದ್ದು, ಶುಲ್ಕ ಪಾವತಿಗೂ ಎ.10 ಕೊನೆ ದಿನವಾಗಿದೆ. ಅಭ್ಯರ್ಥಿಗಳು ನಿಗದಿತ ದಿನಾಂಕದೊಳಗೆ ಅರ್ಜಿ ಸಲ್ಲಿಸಬೇಕು. ಹೆಚ್ಚಿನ ವಿವರಗಳಿಗೆ https://cetonline.karnataka.gov.in/kea/ ವೆಬ್ ಸೈಟ್ ಸಂಪರ್ಕಿಸಬಹುದು ಎಂದು ತಿಳಿಸಿದ್ದಾರೆ.
Bengaluru | ಕಬ್ಬನ್ಪಾರ್ಕಿನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ
ಬೆಂಗಳೂರು : ವ್ಯಕ್ತಿಯೊಬ್ಬರು ನಗರದ ಕಬ್ಬನ್ ಪಾರ್ಕಿನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳಕಿಗೆ ಬಂದಿದ್ದು, ಈ ಸಂಬಂಧ ಕಬ್ಬನ್ ಪಾರ್ಕ್ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಮೃತ ವ್ಯಕ್ತಿಯನ್ನು ಪಶ್ಚಿಮ ಬಂಗಾಳ ಮೂಲದ ಸುರೇಶ್ ಎಂದು ಗುರುತಿಸಲಾಗಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ರವಾನೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಗುರುವಾರದಿಂದಲೇ ಕಾಣೆಯಾಗಿದ್ದ ಸುರೇಶ್, ಮನೆಗೆ ಮರಳಿರಲಿಲ್ಲ. ಈ ಬಗ್ಗೆ ಎಚ್ಎಸ್ಆರ್ ಪೊಲೀಸ್ ಠಾಣೆಗೆ ಆತನ ಕುಟುಂಬಸ್ಥರು ದೂರು ನೀಡಿದ್ದರು. ಶುಕ್ರವಾರ ಬೆಳಗ್ಗೆ ಪಾರ್ಕ್ನ ಮರೊಂದಕ್ಕೆ ನೇಣು ಹಾಕಿಕೊಂಡ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ. ತಕ್ಷಣ ಸ್ಥಳಕ್ಕೆ ಭೇಟಿ ನೀಡಿದ ಕಬ್ಬನ್ ಪಾರ್ಕ್ ಪೊಲೀಸರು, ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಮೃತನ ಜೇಬಿನಲ್ಲಿ ಗುರುತಿನ ಚೀಟಿ ಪತ್ತೆಯಾಗಿದ್ದು, ಆತ ಬೆಂಗಳೂರಿನ ಎಸ್ಪಿ ರೋಡ್ನಲ್ಲಿರುವ ಮೊಬೈಲ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಎನ್ನುವ ಮಾಹಿತಿ ಗೊತ್ತಾಗಿದೆ. ನಂತರ ಆತನ ಕುಟುಂಬಕ್ಕೆ ಮಾಹಿತಿ ತಿಳಿಸಿದ ಅಧಿಕಾರಿಗಳು, ತನಿಖೆ ಕೈಗೊಂಡಿದ್ದಾರೆ.
ಅದಾನಿ ಬಂದರುಗಳು ಮತ್ತು ವಿಶೇಷ ಆರ್ಥಿಕ ವಲಯವು 500 ಮಿಲಿಯನ್ ಟನ್ ಸರಕು ಸಾಮರ್ಥ್ಯದೊಂದಿಗೆ ಮಹತ್ವದ ಮೈಲಿಗಲ್ಲನ್ನು ಹೊಂದಿದೆ. ಇದು ಮುಂಚೂಣಿಯ ಕೆಲಸಗಾರರ ಪಾತ್ರ, ಕಾರ್ಯತಂತ್ರದ ಪಾಲುದಾರಿಕೆಗಳು ಮತ್ತು ಭಾರತ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಬೆಳವಣಿಗೆಗೆ ಸಿದ್ಧವಾಗಿರುವ ಲಾಜಿಸ್ಟಿಕ್ಸ್ ಜಾಲವನ್ನು ಎತ್ತಿ ತೋರಿಸುತ್ತದೆ. ಭಾರತದ ಅತಿದೊಡ್ಡ ಖಾಸಗಿ ಬಂದರು ನಿರ್ವಾಹಕರಾದ ಅದಾನಿ ಬಂದರುಗಳು ಮತ್ತು ವಿಶೇಷ ಆರ್ಥಿಕ
ಬೆಂಗಳೂರಿನ 49 ಪ್ರವಾಹ ಪೀಡಿತ ಪ್ರದೇಶಗಳಿಗೆ ಶಾಶ್ವತ ಪರಿಹಾರ ಕ್ರಮಗಳ ವರದಿ ಸಲ್ಲಿಸಲು ನಿರ್ದೇಶನ
ಬೆಂಗಳೂರು : ಜಿಬಿಎ ವ್ಯಾಪ್ತಿಯಲ್ಲಿ 2025ನೆ ಸಾಲಿನಲ್ಲಿ 49 ಪ್ರದೇಶಗಳು ಪ್ರವಾಹ ಪೀಡಿತ ಪ್ರದೇಶಗಳಾಗಿ ಗುರುತಿಸಲಾಗಿದ್ದು, ಈ ಪ್ರದೇಶಗಳಿಗೆ ಶಾಶ್ವತ ಪರಿಹಾರವನ್ನು ಕಲ್ಪಿಸಬೇಕು. ಇದಕ್ಕಾಗಿ ಕೈಗೊಂಡ ಕ್ರಮಗಳ ಕುರಿತು ವರದಿ ಸಲ್ಲಿಸಬೇಕು ಎಂದು ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಐದು ನಗರ ಪಾಲಿಕೆಗಳಿಗೆ ನಿರ್ದೇಶನ ನೀಡಿದ್ದಾರೆ. ಈ ಸಂಬಂಧ ಸುತ್ತೋಲೆ ಹೊರಡಿಸಿರುವ ಅವರು, ಶಾಶ್ವತ ಪರಿಹಾರ ಒದಗಿಸದ ಪ್ರದೇಶಗಳಲ್ಲಿ, ನಗರ ಪಾಲಿಕೆಗಳ ಮುಖ್ಯ ಅಭಿಯಂತರರು, ಜಿಬಿಎ ಯೋಜನಾ ಅನುಷ್ಠಾನ ಘಟಕದ ಮುಖ್ಯ ಅಭಿಯಂತರರೊಂದಿಗೆ ಸಮನ್ವಯ ಸಾಧಿಸಿ ಮಳೆಯ ಸಮಯದಲ್ಲಿ ಯಾವುದೇ ತೊಂದರೆ ಅಥವಾ ಪ್ರವಾಹ ಉಂಟಾಗದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ಈ ನಿಟ್ಟಿನಲ್ಲಿ ಎಲ್ಲ ನಗರ ಪಾಲಿಕೆಗಳ ಅಪರ ಆಯುಕ್ತರು ಮೇಲ್ವಿಚಾರಣೆ ವಹಿಸಬೇಕು ಎಂದಿದ್ದಾರೆ. ಎಲ್ಲ ರಸ್ತೆಗಳ ಮಳೆ ನೀರು ಚರಂಡಿಗಳಲ್ಲಿ ಎಪ್ರಿಲ್ ಅಂತ್ಯದೊಳಗೆ ಹೂಳು ತೆಗೆದು ಸ್ವಚ್ಛಗೊಳಿಸಬೇಕು. ಪ್ರಸ್ತುತ ಅನುಮೋದನೆಗೊಂಡ ಟೆಂಡರ್ಗಳಡಿ ಆರಂಭಗೊಂಡ ಕಾಮಗಾರಿಗಳಲ್ಲಿ ಆದ್ಯತೆಯ ಮೇರೆಗೆ ಹೂಳು ತೆಗೆಯುವ ಕಾರ್ಯವನ್ನು ನಿರ್ವಹಿಸಿ, ಶೋಲ್ಡರ್ ಡ್ರೈನ್ಗಳ ನಿರ್ಮಾಣವನ್ನು ಪೂರ್ಣಗೊಳಿಸಬೇಕು ಎಂದು ಅವರು ಹೇಳಿದ್ದಾರೆ. ಯೋಜನಾ ಅನುಷ್ಠಾನ ಘಟಕದ ಅಧಿಕಾರಿಗಳು ನಗರ ಪಾಲಿಕೆಗಳೊಂದಿಗೆ ಸಮನ್ವಯ ಸಾಧಿಸಿ, ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಆದ್ಯತೆಯ ಮೇರೆಗೆ ರಾಜಕಾಲುವೆ ಅಭಿವೃದ್ಧಿ ಕಾಮಗಾರಿಗಳನ್ನು ಶೀಘ್ರ ಪೂರ್ಣಗೊಳಿಸಬೇಕು. ಚರಂಡಿಗಳಲ್ಲಿ ಹೂಳು ತೆಗೆಯುವಾಗ ಹತ್ತಿರದ ರಾಜಕಾಲುವೆವರೆಗೆ ಸಂಪರ್ಕ ಕಲ್ಪಿಸಿ ಮಳೆ ನೀರು ಸರಾಗವಾಗಿ ಹರಿದು ಹೋಗುವಂತೆ ಕ್ರಮವಹಿಸಬೇಕು. ಹೂಳು ತೆಗೆಯುವ ಸಂದರ್ಭದಲ್ಲಿ ರಾಜಕಾಲುವೆಗೆ ಸಂಪರ್ಕ ಕಲ್ಪಿಸದೇ ಲೋಪ ಕಂಡುಬಂದಲ್ಲಿ ಸಂಬಂಧಪಟ್ಟ ಉಸ್ತುವಾರಿ ಅಭಿಯಂತರರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಎಚ್ಚರಿಕೆ ನೀಡಿದ್ದಾರೆ. ಅಗ್ನಿಶಾಮಕ ತಂಡಗಳೊಂದಿಗೆ ಸಮನ್ವಯ ಸಾಧಿಸಿ: ನಗರ ಪಾಲಿಕೆಗಳು ತಮ್ಮ ವ್ಯಾಪ್ತಿಯ ಅಗ್ನಿಶಾಮಕ ಠಾಣೆಗಳು ಹಾಗೂ ಎಸ್ಡಿಆರ್ಎಫ್ ತಂಡಗಳೊಂದಿಗೆ ಸಮನ್ವಯ ಸಾಧಿಸಿ, ಅಧಿಕಾರಿಗಳು/ಸಿಬ್ಬಂದಿಗಳ ಪಟ್ಟಿಯನ್ನು ಸಂಗ್ರಹಿಸಿ ತುರ್ತು ಸಂದರ್ಭಗಳಲ್ಲಿ ನೆರವು ದೊರೆಯುವಂತೆ ಕ್ರಮವಹಿಸಬೇಕು ಎಂದು ಅವರು ತಿಳಿಸಿದ್ದಾರೆ. ಮರ ತೆರವು ತಂಡಗಳನ್ನು ರಚಿಸಿ: ಮಳೆಯಿಂದಾಗಿ ಧರೆಗುರುಳುವ ಮರಗಳು ಹಾಗೂ ರೆಂಬೆ-ಕೊಂಬೆಗಳನ್ನು ತ್ವರಿತವಾಗಿ ತೆರವುಗೊಳಿಸಲು ನಗರ ಪಾಲಿಕೆ ಮಟ್ಟದಲ್ಲಿ ವಿಶೇಷ ತಂಡಗಳನ್ನು ರಚಿಸಬೇಕು. ನಾಗರಿಕರಿಂದ ಬರುವ ದೂರುಗಳಿಗೆ ತಕ್ಷಣ ಸ್ಪಂದಿಸುವ ವ್ಯವಸ್ಥೆಯನ್ನು ಕಲ್ಪಿಸಬೇಕು. ಮುನ್ನೆಚ್ಚರಿಕೆಯಾಗಿ ಬಾಗಿರುವ ಅಥವಾ ಬೀಳುವ ಸ್ಥಿತಿಯಲ್ಲಿರುವ ಕೊಂಬೆಗಳನ್ನು ಮುಂಚಿತವಾಗಿ ತೆರವುಗೊಳಿಸಬೇಕು ಎಂದು ಮಹೇಶ್ವರ್ ರಾವ್ ಹೇಳಿದ್ದಾರೆ.
ಕಾಂಗ್ರೆಸ್ ಪಕ್ಷ ಎಲ್ಲ ವರ್ಗಗಳ ಅಭಿವೃದ್ಧಿಗಾಗಿ ಕಾರ್ಯಕ್ರಮಗಳನ್ನು ನೀಡಿದೆ : ಕೆ.ಎಚ್.ಮುನಿಯಪ್ಪ
ಬಾಗಲಕೋಟೆ : ಕಾಂಗ್ರೆಸ್ ಪಕ್ಷ ಬಡವರು, ಕೂಲಿ ಕಾರ್ಮಿಕರು, ದೀನ ದಲಿತರು, ಹಿಂದುಳಿದವರ ಅಭಿವೃದ್ಧಿಗಾಗಿ ಹಲವಾರು ಕಾರ್ಯಕ್ರಮಗಳನ್ನು ನೀಡಿದೆ. ಈ ಭಾಗದ ಜನರು ಕಾಂಗ್ರೆಸ್ ಅಭ್ಯರ್ಥಿ ಉಮೇಶ್ ಮೇಟಿ ಅವರಿಗೆ ಆಶೀರ್ವಾದ ಮಾಡುವ ಮೂಲಕ ಮತ್ತೊಮ್ಮೆ ಕಾಂಗ್ರೆಸ್ ಬೆಂಬಲಿಸಬೇಕು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್.ಮುನಿಯಪ್ಪ ಕರೆ ನೀಡಿದರು. ಶುಕ್ರವಾರ ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ಶಿರೂರು ಚನ್ನಯ್ಯನಗರದಲ್ಲಿ ನಡೆದ ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಉಮೇಶ್ ಮೇಟಿ ಅವರಿಗೆ ಬಹುಮತದ ಗೆಲುವು ದೊರಕಿಸುವಂತೆ ಸಾರ್ವಜನಿಕರಿಗೆ ಮನವಿ ಮಾಡಿದರು. ಕಾಂಗ್ರೆಸ್ ಪಕ್ಷ ಬಡವರ ಬದುಕಿಗೆ ಭದ್ರತೆ ನೀಡುವ ನಿಟ್ಟಿನಲ್ಲಿ ಹಲವು ಮಹತ್ವದ ಯೋಜನೆಗಳನ್ನು ಜಾರಿಗೆ ತಂದಿದೆ. ಬಡವರಿಗೆ ಅಕ್ಕಿ ದೊರೆಯಬೇಕು, ಅವರು ನೆಮ್ಮದಿಯಾಗಿ ಊಟ ಮಾಡಬೇಕು ಮತ್ತು ಗೌರವಯುತ ಜೀವನ ನಡೆಸಬೇಕು ಎಂಬ ಉದ್ದೇಶದಿಂದಲೆ ಕಾಂಗ್ರೆಸ್ ಪಕ್ಷ ಕಾರ್ಯಕ್ರಮಗಳನ್ನು ರೂಪಿಸಿದೆ ಎಂದು ಅವರು ಹೇಳಿದರು. ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ನಾಯಕತ್ವದಲ್ಲಿ ಕಡುಬಡವರಿಗಾಗಿ ಆಹಾರ ಭದ್ರತೆ ಕಾಯ್ದೆ ಜಾರಿಗೆ ತರಲಾಯಿತು. ದೇಶದಲ್ಲಿ ಯಾವುದೇ ಸರಕಾರ ಇದ್ದರೂ ಬಡವರಿಗೆ ಅಕ್ಕಿ ನೀಡಲೇಬೇಕು ಎಂಬ ದೃಷ್ಟಿಯಿಂದ ಈ ಕಾನೂನು ರೂಪಿಸಲಾಗಿದೆ ಎಂದು ಮುನಿಯಪ್ಪ ತಿಳಿಸಿದರು. 2013ರಲ್ಲಿ ಮುಖ್ಯಮಂತ್ರಿ ಆಗಿ ಅಧಿಕಾರ ಸ್ವೀಕರಿಸಿದ ಸಿದ್ದರಾಮಯ್ಯ ಪ್ರಮಾಣ ವಚನ ಸ್ವೀಕರಿಸಿದ ಕೂಡಲೆ ಬಡವರಿಗೆ ಉಚಿತ ಅಕ್ಕಿ ವಿತರಣೆ ಮಾಡುವ ಅನ್ನಭಾಗ್ಯ ಯೋಜನೆಯನ್ನು ಜಾರಿಗೆ ತಂದು, ಜನರಿಗೆ ನೆಮ್ಮದಿಯ ಜೀವನವನ್ನು ಕಲ್ಪಿಸಿದರು. ಬಳಿಕವೂ ಈ ಯೋಜನೆಯನ್ನು ಮತ್ತಷ್ಟು ಬಲಪಡಿಸಿ, ಅಕ್ಕಿಯ ಜೊತೆಗೆ ಹಣ ಸಹಾಯ ನೀಡುವ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ವಿವರಿಸಿದರು. ಇದೊಂದೇ ಅಲ್ಲ, ರಾಜ್ಯ ಸರಕಾರ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದೆ. ಮಹಿಳೆಯರಿಗೆ ಮಾಸಿಕ 2 ಸಾವಿರ ರೂ.ಆರ್ಥಿಕ ನೆರವು, 200 ಯೂನಿಟ್ ವರೆಗೆ ಉಚಿತ ವಿದ್ಯುತ್, ಉದ್ಯೋಗಕ್ಕಾಗಿ ತರಬೇತಿ, ಮಕ್ಕಳಿಗೆ ಶಿಕ್ಷಣ ಸೌಲಭ್ಯ-ಇವೆಲ್ಲವೂ ಬಡವರ ಬದುಕು ಸುಧಾರಿಸುವ ಕಾಂಗ್ರೆಸ್ ಪಕ್ಷದ ಬದ್ಧತೆಯನ್ನು ತೋರಿಸುತ್ತವೆ ಎಂದು ಮುನಿಯಪ್ಪ ಹೇಳಿದರು. ಈ ಸಂದರ್ಭದಲ್ಲಿ ಮಾಜಿ ಸಚಿವ ಎಚ್.ಆಂಜನೇಯ, ಮಾಜಿ ಸಂಸದ ಚಂದ್ರಪ್ಪ ಹಾಗೂ ಇತರ ಮುಖಂಡರು ಉಪಸ್ಥಿತರಿದ್ದರು.
POK ಭಾರತದೊಂದಿಗೆ ವಿಲೀನಗೊಳ್ಳಲಿದೆ: ಅಖಿಲ ಭಾರತ ಇಮಾಮ್ ಸಂಘಟನೆಯ ಮುಖ್ಯಸ್ಥ
ಶ್ರೀನಗರ, ಎ. 3: ಪಾಕಿಸ್ತಾನ ಆಕ್ರಮಿತ ಕಾಶ್ಮೀರ (ಪಿಒಕೆ) ಶೀಘ್ರದಲ್ಲೇ ಭಾರತದೊಂದಿಗೆ ವಿಲೀನಗೊಳ್ಳಲಿದೆ ಎಂದು ಅಖಿಲ ಭಾರತ ಇಮಾಮ್ ಸಂಘಟನೆಯ ಮುಖ್ಯ ಇಮಾಮ್ ಉಮರ್ ಅಹ್ಮದ್ ಇಲ್ಯಾಸಿ ಶುಕ್ರವಾರ ಹೇಳಿದ್ದಾರೆ. ‘‘ಕಾಶ್ಮೀರದಲ್ಲಿ ನಿಂತುಕೊಂಡು ನಮ್ಮ ನೆರೆಯ ದೇಶಕ್ಕೆ ನಾನು ಒಂದು ಮಾತು ಹೇಳಲು ಬಯಸುತ್ತೇನೆ. ಭಾರತದ ಅವಿಭಾಜ್ಯ ಅಂಗವಾಗಿರುವ ಪಿಒಕೆ ಖಂಡಿತವಾಗಿ ಭಾರತದೊಂದಿಗೆ ವಿಲೀನಗೊಳ್ಳಲಿದೆ. ಏಕೆಂದರೆ ಪಿಒಕೆ ಜನರು ಜನಾಭಿಪ್ರಾಯ ಸಂಗ್ರಹಿಸಲು ಬಯಸಿದ್ದಾರೆ’’ ಎಂದರು. ‘‘ದೇವರು ಬಯಸಿದರೆ, ಅವರ ಘರ್ ವಾಪಸಿ ಶೀಘ್ರದಲ್ಲಿ ನಡೆಯಲಿದೆ. ಅಲ್ಲಿನ ಜನರು ಇದನ್ನು ಬಯಸುತ್ತಾರೆ. ಅವರು ಕಾಶ್ಮೀರದ ಅಭಿವೃದ್ಧಿಯನ್ನು ನೋಡಿ ಸಂತೋಷಪಡುತ್ತಾರೆ. ಕಾಶ್ಮೀರ ಇಂದು ಹೇಗೆ ಪ್ರಗತಿ ಸಾಧಿಸುತ್ತಿದೆ ಎಂಬುದನ್ನು ನೋಡಿದರೆ, ಪಿಒಕೆ ಶೀಘ್ರದಲ್ಲೇ ಭಾರತದೊಂದಿಗೆ ವಿಲೀನಗೊಳ್ಳಲಿದೆ’’ ಎಂದು ಅವರು ಹೇಳಿದರು. 370ನೇ ವಿಧಿ ರದ್ದತಿಯ ಬಳಿಕ ಕಾಶ್ಮೀರದಲ್ಲಿ ಉಂಟಾದ ಪರಿವರ್ತನೆಯನ್ನು ನೋಡಿ ತನಗೆ ತುಂಬಾ ಸಂತೋಷವಾಗಿದೆ ಎಂದು ಅವರು ತಿಳಿಸಿದ್ದಾರೆ.
ಬಂಗಾಳ, ತಮಿಳು ನಾಡು ಚುನಾವಣೆಗಳಲ್ಲಿ ರಾಜಕೀಯ ಲಾಭಕ್ಕಾಗಿ ನೀತಿ ಸಂಹಿತೆ ಉಲ್ಲಂಘಿಸಿ ‘ವಿಶೇಷ ಅಧಿವೇಶನ’: ಕಾಂಗ್ರೆಸ್
ಹೊಸದಿಲ್ಲಿ, ಎ. 3: ಪಶ್ಚಿಮ ಬಂಗಾಳ ಮತ್ತು ತಮಿಳುನಾಡು ಚುನಾವಣೆಗಳಲ್ಲಿ ರಾಜಕೀಯ ಲಾಭ ಪಡೆಯಲು ಸರ್ಕಾರವು ಮಹಿಳಾ ಮೀಸಲಾತಿ ಕಾನೂನು ತಿದ್ದುಪಡಿ ಮತ್ತು ಕ್ಷೇತ್ರ ಪುನರ್ವಿಂಗಡಣೆಗೆ ಸಂಬಂಧಿಸಿದ ಮಸೂದೆಗಳನ್ನು ಅಂಗೀಕರಿಸಲು ವಿಶೇಷ ಅಧಿವೇಶನವನ್ನು ಕರೆದಿದ್ದು, ಇದು ಮಾದರಿ ನೀತಿ ಸಂಹಿತೆಯ ಸಂಪೂರ್ಣ ಉಲ್ಲಂಘನೆಯಾಗಿದೆ ಎಂದು ಕಾಂಗ್ರೆಸ್ ಶುಕ್ರವಾರ ಆರೋಪಿಸಿದೆ. ‘ಸರ್ಕಾರವು ಅವಸರದಿಂದ ಕ್ಷೇತ್ರ ಪುನರ್ವಿಂಗಡಣೆಗೆ ಮುಂದಾದರೆ ಗಂಭೀರ ಪರಿಣಾಮಗಳು ಉಂಟಾಗಲಿವೆ. ಪ್ರಸ್ತುತ ಸ್ಥಿತಿಗೆ ಯಾವುದೇ ವ್ಯತ್ಯಯವನ್ನು ನಾವು ಬಯಸುವುದಿಲ್ಲ’ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಸುದ್ದಿಗೋಷ್ಠಿಯಲ್ಲಿ ಹೇಳಿದರು. 2023ರ ನಾರಿ ಶಕ್ತಿ ವಂದನ ಅಧಿನಿಯಮ (ಮಹಿಳಾ ಮೀಸಲಾತಿ ಕಾಯ್ದೆ) ಅಂಗೀಕಾರಗೊಂಡ ಬಳಿಕ 30 ತಿಂಗಳುಗಳ ಕಾಲ ಸರ್ಕಾರವು ನಿದ್ರೆಗೆ ಜಾರಿತ್ತು. ಈಗ ಚುನಾವಣಾ ಸಮಯದಲ್ಲಿ ‘ದುಪ್ಪಟ್ಟು ಶ್ರೇಯ’ ಪಡೆಯುವ ಉದ್ದೇಶದಿಂದ ತಿದ್ದುಪಡಿ ತರಲು ಮುಂದಾಗಿದೆ ಎಂದು ಹೇಳಿದ ರಮೇಶ್, ಕ್ಷೇತ್ರ ಪುನರ್ವಿಂಗಡಣೆ ಕುರಿತು ಸರ್ಕಾರದಿಂದ ಯಾವುದೇ ಅಧಿಕೃತ ಮಾಹಿತಿ ಅಥವಾ ಪ್ರಸ್ತಾವ ಹೊರಬಿದ್ದಿಲ್ಲ ಎಂದು ಬೆಟ್ಟು ಮಾಡಿದರು. ‘ಆದಾಗ್ಯೂ ಲೋಕಸಭಾ ಸ್ಥಾನಗಳಲ್ಲಿ ಪ್ರಮಾಣಾನುಪಾತದಲ್ಲಿ ಹೆಚ್ಚಳವಾಗಲಿದೆ ಎಂಬುದು ನಮಗೆ ತಿಳಿದುಬಂದಿದೆ. ಆದರೆ ವಾಸ್ತವದಲ್ಲಿ ಸಣ್ಣ ರಾಜ್ಯಗಳು ಹಾಗೂ ದಕ್ಷಿಣ, ಈಶಾನ್ಯ ಮತ್ತು ಪಶ್ಚಿಮದ ರಾಜ್ಯಗಳು ತೀವ್ರ ತೊಂದರೆ ಎದುರಿಸಲಿವೆ. ಪ್ರಸ್ತಾವಿತ ಮಸೂದೆಯೊಂದಿಗೆ ಉತ್ತರ ಪ್ರದೇಶದ ಸಂಸದರ ಸಂಖ್ಯೆ 80ರಿಂದ 120ಕ್ಕೆ ಏರಿಕೆಯಾಗಲಿದ್ದು, ಕೇರಳದಲ್ಲಿ 20ರಿಂದ ಗರಿಷ್ಠ 30ಕ್ಕೆ ಹೆಚ್ಚಬಹುದು. ಹೀಗಾಗಿ ನಮಗೆ ಅನಧಿಕೃತವಾಗಿ ತಿಳಿದುಬಂದಿರುವ ಈ ಮಾಹಿತಿಯೂ ಹಲವಾರು ರಾಜ್ಯಗಳಿಗೆ ಅಪಾಯಕಾರಿಯಾಗಬಹುದು’ ಎಂದು ಹೇಳಿದರು. ತಮಿಳುನಾಡು ಮತ್ತು ಪಶ್ಚಿಮ ಬಂಗಾಳಗಳ ಮೇಲೆ ಪ್ರಭಾವ ಬೀರಲು ರಾಜಕೀಯ ಲಾಭ ಪಡೆಯುವುದು ಈ ವಿಶೇಷ ಅಧಿವೇಶನದ ಏಕೈಕ ಉದ್ದೇಶವಾಗಿದೆ ಎಂದ ಅವರು, 15 ದಿನಗಳ ಬಳಿಕ, ಅಂದರೆ ಕೇರಳ ಮತ್ತು ಪಶ್ಚಿಮ ಬಂಗಾಳ ಚುನಾವಣೆಗಳು ಮುಗಿದ ನಂತರ ಅಧಿವೇಶನವನ್ನು ಕರೆಯುವುದು ಸಾಧ್ಯವಿಲ್ಲವೇ ಎಂದು ಪ್ರಶ್ನಿಸಿದರು. ಈ ಕುರಿತು ಕಾರ್ಯತಂತ್ರ ರೂಪಿಸಲು ವಿಪಕ್ಷ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ ಗಾಂಧಿ ಅವರು ಎ. 16ರ ಮೊದಲು ಹಿರಿಯ ಕಾಂಗ್ರೆಸ್ ಸಂಸದರ ಮತ್ತು ನಂತರ ಪ್ರತಿಪಕ್ಷ ನಾಯಕರ ಸಭೆಗಳನ್ನು ಕರೆಯಲಿದ್ದಾರೆ ಎಂದು ರಮೇಶ್ ತಿಳಿಸಿದರು. ಮಹಿಳಾ ಮೀಸಲಾತಿ ಕಾನೂನನ್ನು ಆದಷ್ಟು ಶೀಘ್ರ ಜಾರಿಗೊಳಿಸಲು ಲೋಕಸಭಾ ಸ್ಥಾನಗಳ ಸಂಖ್ಯೆಯನ್ನು 543ರಿಂದ 816ಕ್ಕೆ ಹೆಚ್ಚಿಸಲು ಮಸೂದೆಗಳನ್ನು ಅಂಗೀಕರಿಸಲು ಸಂಸತ್ತಿನ ಬಜೆಟ್ ಅಧಿವೇಶನವು ಸಂಕ್ಷಿಪ್ತ ವಿರಾಮದ ಬಳಿಕ ಎ. 16ರಂದು ಮರುಸಮಾವೇಶಗೊಳ್ಳಲಿದೆ ಎಂದು ಬಲ್ಲ ಮೂಲಗಳು ತಿಳಿಸಿವೆ.
SSLC ಪರೀಕ್ಷೆಯಲ್ಲಿ ಹಿಂದಿಗೆ ಗ್ರೇಡ್ ವ್ಯವಸ್ಥೆ: ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಗರಂ; ಸರ್ಕಾರಕ್ಕೆ ಪತ್ರ
ರಾಜ್ಯ ಸರ್ಕಾರ ನಡೆಸುವ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಹಿಂದಿಗೆ ಗ್ರೇಡ್ ವ್ಯವಸ್ಥೆ ಜಾರಿ ಮಾಡಲಾಗಿದೆ. ಅಂಕದ ಬದಲು ಗ್ರೇಡ್ ನೀಡಲಾಗುತ್ತದೆ. ಈ ಬಗ್ಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಗರಂ ಆಗಿದ್ದಾರೆ. ರಾಜ್ಯ ಸರ್ಕಾಕ್ಕೆ ಸರ್ಕಾರಕ್ಕೆ ಪತ್ರ ಬರೆದಿದ್ದು, ತೀರ್ಮಾನ ಮರುಪರಿಶೀಲಿಸಲು ಉಲ್ಲೇಖಿಸಿದ್ದಾರೆ. ಈ ಬಗ್ಗೆ ಸಂಪೂರ್ಣ ವಿವರ ಇಲ್ಲಿದೆ.
ಚಂದಿರನ ಕಕ್ಷೆ ಸುತ್ತಲು ಹೊರಟಿರುವ ನಾಸಾದ ನಾಲ್ವರು ಗಗನಯಾತ್ರಿಗಳು, ಮಾರ್ಗ ಮಧ್ಯೆ ಭೂಮಿಯ ಸುಂದರ ಚಿತ್ರವನ್ನು ಕ್ಲಿಕ್ಕಿಸಿದ್ದು, ಇದೀಗ ಈ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡುತ್ತಿದೆ. ಆರ್ಟೆಮಿಸ್-2 ಗಗನಯಾತ್ರಿಗಳು ಬಾಹ್ಯಾಕಾಶದಿಂದ ಭೂಮಿ ಸುಂದರವಾಗಿ ಕಾಣುತ್ತದೆ ಎಂದು ತಿಳಿಸಿದ್ದು, ನಾಸಾ ಈ ಫೋಟೋಗಳನ್ನು ತನ್ನ ಅಧಿಕೃತ ಎಕ್ಸ್ ಅಕೌಂಟ್ನಲ್ಲಿ ಹಂಚಿಕೊಂಡಿದೆ. ಆರ್ಟೆಮಿಸ್-2ನ ಓರಾಯನ್ ನೌಕೆ ಈಗ ಎಲ್ಲಿದೆ? ಈ ಯೋಜನೆಯ ಅನುಸಾರ ಚಂದಿರ ಪ್ರದಕ್ಷಿಣೆ ಹೇಗೆ ನಡೆಯಲಿದೆ? ಇಲ್ಲಿದೆ ಮಾಹಿತಿ.
Annamalai: ಅಣ್ಣಾಮಲೈ ಮತ್ತು ರಾಜಕೀಯ ಉನ್ಮಾದ: ಶಿವಕುಮಾರ್ ಮೆಣಸಿನಕಾಯಿ ಬರಹ
Annamalai: ಅಣ್ಣಾಮಲೈ ಮತ್ತು ರಾಜಕೀಯ ಉನ್ಮಾದ ಹಿರಿಯ ಪತ್ರಕರ್ತ ಶಿವಕುಮಾರ್ ಮೆಣಸಿನಕಾಯಿ ಅವರ ಬರಹ ಇಲ್ಲಿದೆ. ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ನಿವೃತ್ತ ಐಪಿಎಸ್ ಅಧಿಕಾರ ಅಣ್ಣಾಮಲೈ ಅವರನ್ನು ಬಿಜೆಪಿ ಈ ಬಾರಿ ಕಣಕ್ಕೆ ಇಳಿಸಿಲ್ಲ. ಕರ್ನಾಟಕದಲ್ಲಿ ಸೇವೆಯಲ್ಲಿದ್ದಷ್ಟು ದಿನ ಮನೆಮಾತಾಗಿದ್ದ ಅಣ್ಣಾಮಲೈ ರಾಜಕೀಯ ಉನ್ಮಾದಕ್ಕೆ ಒಳಗಾಗಿ ಕಷ್ಟಪಟ್ಟು ಗಳಿಸಿದ್ದ ಹುದ್ದೆಯನ್ನು ಕೈಚೆಲ್ಲಿ ಹೋದರು. ಈಗ
ಫೆಲೆಸ್ತೀನಿಯನ್ನರಿಗೆ ಮಾತ್ರ ಅನ್ವಯವಾಗುವ ಇಸ್ರೇಲ್ ನ ಮರಣದಂಡನೆ ಕಾನೂನು; ಏನಿದು?
ಫೆಲೆಸ್ತೀನಿಯನ್ನರಿಗೆ ಮರಣದಂಡನೆ ವಿಧಿಸಲು ಇಸ್ರೇಲ್ ನಲ್ಲಿ ಹೊಸ ಕಾನೂನು ಜಾರಿಗೆ ಬಂದಿದ್ದು, ಇದು ಅಂತರರಾಷ್ಟ್ರೀಯ ಸಮುದಾಯ ಮತ್ತು ಮಾನವ ಹಕ್ಕುಗಳ ಗುಂಪುಗಳಿಂದ ತೀವ್ರ ಟೀಕೆಗೆ ಗುರಿಯಾಗಿದೆ. ಅವರು ಇದನ್ನು ವರ್ಣಭೇದ ನೀತಿಯ ವಿಸ್ತರಣೆ ಎಂದು ಹೇಳಿದ್ದಾರೆ. ಈ ಕಾನೂನು ನಿರ್ದಿಷ್ಟವಾಗಿ ಯಹೂದಿ ನಾಗರಿಕರನ್ನು ಅದರ ವ್ಯಾಪ್ತಿಯಿಂದ ಹೊರಗಿಡುವುದರಿಂದ, ಹಲವಾರು ಯುರೋಪಿಯನ್ ರಾಷ್ಟ್ರಗಳು ಇದನ್ನು 'ಬಹಿರಂಗವಾಗಿ ಜನಾಂಗೀಯ ಸ್ವರೂಪ' ಎಂದು ಹಣೆಪಟ್ಟಿ ಕಟ್ಟಿವೆ. ಇಸ್ರೇಲ್ ನಲ್ಲಿ ಬಲಪಂಥೀಯ ಬೆಂಬಲಿಗರು ಹರ್ಷೋದ್ಗಾರದೊಂದಿಗೆ ಅನುಮೋದನೆಯನ್ನು ಸ್ವಾಗತಿಸಿದರೆ, ಯುಕೆ, ಫ್ರಾನ್ಸ್, ಜರ್ಮನಿ ಮತ್ತು ಇಟಲಿಯ ನಾಯಕರು ಮಸೂದೆಯ ಉದ್ದೇಶಿತ ಸ್ವರೂಪ ಮತ್ತು ಪ್ರಾದೇಶಿಕ ಸ್ಥಿರತೆಗೆ ಅದರ ಪರಿಣಾಮಗಳ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಈ ಮಸೂದೆಯ ವಾಸ್ತವಿಕ ತಾರತಮ್ಯದ ಸ್ವರೂಪದ ಬಗ್ಗೆ ನಾವು ವಿಶೇಷವಾಗಿ ಚಿಂತಿತರಾಗಿದ್ದೇವೆ. ಈ ಮಸೂದೆಯನ್ನು ಅಂಗೀಕರಿಸುವುದರಿಂದ ಇಸ್ರೇಲ್ ನ ಪ್ರಜಾಪ್ರಭುತ್ವ ತತ್ವಗಳಿಗೆ ಸಂಬಂಧಿಸಿದ ಬದ್ಧತೆಗಳು ದುರ್ಬಲಗೊಳ್ಳುವ ಅಪಾಯವಿದೆ ಎಂದು ವಿದೇಶ ಸಚಿವಾಲಯಗಳು ರವಿವಾರ ಜಂಟಿ ಹೇಳಿಕೆಯಲ್ಲಿ ತಿಳಿಸಿವೆ. ಮಾನವ ಹಕ್ಕುಗಳ ಗುಂಪುಗಳು ಮಸೂದೆಯನ್ನು ಟೀಕಿಸಿವೆ. ಫೆಬ್ರವರಿಯಲ್ಲಿ ಅಮ್ನೆಸ್ಟಿ ಇಂಟರ್ನ್ಯಾಷನಲ್ ಈ ಶಾಸನವು ಮರಣದಂಡನೆಯನ್ನು ಇಸ್ರೇಲ್ ನ ವರ್ಣಭೇದ ನೀತಿಯ ವ್ಯವಸ್ಥೆಯಲ್ಲಿ ಮತ್ತೊಂದು ತಾರತಮ್ಯದ ಸಾಧನವನ್ನಾಗಿ ಮಾಡುತ್ತದೆ ಎಂದು ಹೇಳಿದೆ. ಹ್ಯೂಮನ್ ರೈಟ್ಸ್ ವಾಚ್ (HRW) ಮಂಗಳವಾರ ಕಾನೂನನ್ನು ತಾರತಮ್ಯ ಎಂದು ಕರೆದಿದೆ, ಏಕೆಂದರೆ ಇದು ಪ್ರಾಥಮಿಕವಾಗಿ, ಪ್ರತ್ಯೇಕವಾಗಿ ಅಲ್ಲದಿದ್ದರೂ, ಫೆಲೆಸ್ತೀನಿಯನ್ನರಿಗೆ ಅನ್ವಯಿಸುತ್ತದೆ. ಹ್ಯೂಮನ್ ರೈಟ್ಸ್ ವಾಚ್ನ ಆಡಮ್ ಕೂಗಲ್ ಅವರ ಪ್ರಕಾರ, ಮರಣದಂಡನೆಗೆ ಇಸ್ರೇಲ್ ನ ಒತ್ತಾಯವು ಭದ್ರತಾ ಕಾಳಜಿಗಳನ್ನು ಮೀರಿದೆ. ಈ ಕ್ರಮವು ದ್ವಂದ್ವ ನ್ಯಾಯ ವ್ಯವಸ್ಥೆ ಮತ್ತು ಬೇರೂರಿರುವ ತಾರತಮ್ಯವನ್ನು ಗಟ್ಟಿಗೊಳಿಸುತ್ತದೆ. ಈ ಕ್ರಮಗಳನ್ನು 'ವರ್ಣಭೇದ ನೀತಿಯ ಲಕ್ಷಣಗಳು' ಎಂದು ಅವರು ಹೇಳಿದ್ದಾರೆ. ಮರಣದಂಡನೆಯು ಬದಲಾಯಿಸಲಾಗದ್ದು ಮತ್ತು ಕ್ರೂರವಾದುದು. ಮೇಲ್ಮನವಿಗಳ ಮೇಲಿನ ಅದರ ಕಠಿಣ ನಿರ್ಬಂಧಗಳು ಮತ್ತು ಅದರ 90-ದಿನಗಳ ಮರಣದಂಡನೆ ಸಮಯದ ಜೊತೆಗೆ, ಈ ಮಸೂದೆಯು ಫೆಲೆಸ್ತೀನಿಯನ್ ಬಂಧಿತರನ್ನು ವೇಗವಾಗಿ ಮತ್ತು ಕಡಿಮೆ ಪರಿಶೀಲನೆಯೊಂದಿಗೆ ಕೊಲ್ಲುವ ಗುರಿಯನ್ನು ಹೊಂದಿದೆ ಎಂದು ಕೂಗಲ್ ಹೇಳಿದ್ದಾರೆ. ಅದೇನೇ ಇದ್ದರೂ, ಸಂಸತ್ತಿನಲ್ಲಿ ಯಶಸ್ವಿಯಾಗಿ ಅಂಗೀಕಾರವಾದಾಗ ಶಾಸನದ ಪ್ರಮುಖ ಪ್ರತಿಪಾದಕ, ತೀವ್ರ ಬಲಪಂಥೀಯ ರಾಷ್ಟ್ರೀಯ ಭದ್ರತಾ ಸಚಿವ ಇಟಮರ್ ಬೆನ್-ಗ್ವಿರ್ ಅವರು ಷಾಂಪೇನ್ ಬಾಟಲಿ ಹಿಡಿದು ►ಕಾನೂನು ಇಸ್ರೇಲಿಗಳನ್ನು ಗುರಿಯಾಗಿಸದೆ ಫೆಲೆಸ್ತೀನಿಯನ್ನರನ್ನು ಹೇಗೆ ಗುರಿಯಾಗಿಸುತ್ತದೆ? ಈ ಶಾಸನವು ಪ್ರಾಥಮಿಕವಾಗಿ ಮಿಲಿಟರಿ ನ್ಯಾಯಾಲಯಗಳಿಗೆ ಸೀಮಿತವಾಗಿದೆ, ಇವು ಆಕ್ರಮಿತ ಪ್ರದೇಶಗಳಲ್ಲಿ ಫೆಲೆಸ್ತೀನಿಯನ್ನರ ಮೇಲೆ ಮಾತ್ರ ನ್ಯಾಯವ್ಯಾಪ್ತಿಯನ್ನು ಹೊಂದಿವೆ. ಈ ಹೊಸ ನಿಬಂಧನೆಗಳ ಅಡಿಯಲ್ಲಿ, ಪಶ್ಚಿಮ ದಂಡೆಯೊಳಗೆ ಇಸ್ರೇಲಿ ನಾಗರಿಕನನ್ನು ಕೊಂದ ಆರೋಪದ ಮೇಲೆ ಮಿಲಿಟರಿ ನ್ಯಾಯಾಲಯದಿಂದ ಶಿಕ್ಷೆಗೊಳಗಾದ ಯಾವುದೇ ವ್ಯಕ್ತಿಗೆ ಕಡ್ಡಾಯ ಮರಣದಂಡನೆ ವಿಧಿಸಲಾಗುತ್ತದೆ. ನ್ಯಾಯಾಲಯಗಳು ನಿಯಮಿತವಾಗಿ ಶಿಕ್ಷೆಯ ಅಂಕಿಅಂಶಗಳನ್ನು ಪ್ರಕಟಿಸದಿದ್ದರೂ, 2010ರಲ್ಲಿ ಆಕ್ರಮಿತ ಪಶ್ಚಿಮ ದಂಡೆಯಲ್ಲಿ ಮಾಡಿದ ಅಪರಾಧಗಳಿಗಾಗಿ ವಿಚಾರಣೆಗೆ ಒಳಗಾದ ಫೆಲೆಸ್ತೀನಿಯನ್ನರಲ್ಲಿ 99.74 ಪ್ರತಿಶತದಷ್ಟು ಜನರು ತಪ್ಪಿತಸ್ಥರೆಂದು ಕಂಡುಬಂದಿದ್ದಾರೆ ಎಂದು ನ್ಯಾಯಾಲಯ ವ್ಯವಸ್ಥೆಯು ಒಪ್ಪಿಕೊಂಡಿದೆ. ಇದಕ್ಕೆ ವ್ಯತಿರಿಕ್ತವಾಗಿ, ಫೆಬ್ರವರಿ ಅಂತ್ಯದಲ್ಲಿ ತಮ್ಮ ದೇಶವು ಇರಾನ್ ವಿರುದ್ಧ ಯುದ್ಧ ಪ್ರಾರಂಭಿಸಿದ ಕೆಲವೇ ವಾರಗಳಲ್ಲಿ ಏಳು ಫೆಲೆಸ್ತೀನಿಯನ್ನರನ್ನು ಕೊಂದ ಇಸ್ರೇಲಿ ವಸಾಹತುಗಾರರನ್ನು ಇಸ್ರೇಲ್ ನ ನಾಗರಿಕ ನ್ಯಾಯಾಲಯಗಳಲ್ಲಿ ವಿಚಾರಣೆಗೆ ಒಳಪಡಿಸಲಾಗುತ್ತದೆ. ಮಾರ್ಚ್ ಅಂತ್ಯದಲ್ಲಿ ಯುಕೆಯ ಗಾರ್ಡಿಯನ್ ಪತ್ರಿಕೆಯ ವಿಶ್ಲೇಷಣೆಯ ಪ್ರಕಾರ, ಈ ದಶಕದ ಆರಂಭದಿಂದಲೂ ಇಸ್ರೇಲ್ ಆಕ್ರಮಿತ ಪಶ್ಚಿಮ ದಂಡೆಯಲ್ಲಿ ಫೆಲೆಸ್ತೀನಿಯನ್ನರನ್ನು ಕೊಂದಿದ್ದಕ್ಕಾಗಿ ತನ್ನ ಯಾವುದೇ ನಾಗರಿಕರ ವಿರುದ್ಧ ಇನ್ನೂ ಕಾನೂನು ಕ್ರಮ ಜರುಗಿಸಿಲ್ಲ. ಹೊಸ ಶಾಸನದ ಅಡಿಯಲ್ಲಿ, ಇಸ್ರೇಲ್ ನ ನಾಗರಿಕ ನ್ಯಾಯಾಲಯಗಳಿಗೆ ಆಕ್ರಮಿತ ಪಶ್ಚಿಮ ದಂಡೆಯಲ್ಲಿ ಫೆಲೆಸ್ತೀನಿಯನ್ನರನ್ನು ಕೊಂದ ತಪ್ಪಿತಸ್ಥರೆಂದು ಕಂಡುಬಂದ ಇಸ್ರೇಲಿಗಳಿಗೆ ಶಿಕ್ಷೆ ವಿಧಿಸುವಲ್ಲಿ ಹೆಚ್ಚುವರಿ ಮಟ್ಟದ ಸಡಿಲತೆಯನ್ನು ನೀಡಲಾಗುತ್ತದೆ. ನ್ಯಾಯಾಧೀಶರು ಮರಣದಂಡನೆ ಅಥವಾ ಜೀವಾವಧಿ ಶಿಕ್ಷೆಯ ನಡುವೆ ಆರಿಸುವ ಆಯ್ಕೆಯನ್ನು ಹೊಂದಿರುತ್ತಾರೆ. ಇದಕ್ಕೆ ವ್ಯತಿರಿಕ್ತವಾಗಿ, ಫೆಲೆಸ್ತೀನಿಯನ್ನರನ್ನು ವಿಚಾರಣೆ ನಡೆಸುವ ಮಿಲಿಟರಿ ನ್ಯಾಯಾಲಯಗಳಿಗೆ ಶಿಕ್ಷೆಗಳು ಸ್ವಯಂಚಾಲಿತ ಮರಣದಂಡನೆಯನ್ನು ಹೊಂದಿರುತ್ತವೆ; ತೀವ್ರ ಸಂದರ್ಭಗಳಲ್ಲಿ ಮಾತ್ರ ಜೀವಾವಧಿ ಶಿಕ್ಷೆ ಲಭ್ಯವಿದೆ. ಇಸ್ರೇಲಿ ಹಕ್ಕುಗಳ ಗುಂಪು ಯೆಶ್ ದಿನ್ ನಡೆಸಿದ ಅಧ್ಯಯನದ ಪ್ರಕಾರ, 2005 ಮತ್ತು 2024ರ ನಡುವೆ ಪಶ್ಚಿಮ ದಂಡೆಯಲ್ಲಿ (ಪೂರ್ವ ಜೆರುಸಲೆಮ್ ಹೊರತುಪಡಿಸಿ) ಫೆಲೆಸ್ತೀನಿಯನ್ನರ ವಿರುದ್ಧ ಅಪರಾಧಗಳನ್ನು ಎಸಗಿದ ನಾಗರಿಕ ನ್ಯಾಯಾಲಯಗಳು ತಪ್ಪಿತಸ್ಥರೆಂದು ಕಂಡುಕೊಂಡ ವಸಾಹತುಗಾರರ ಶಿಕ್ಷೆಯ ಪ್ರಮಾಣವು ಸುಮಾರು 3 ಪ್ರತಿಶತದಷ್ಟಿದೆ. ವಸಾಹತುಗಾರರ ಹಿಂಸಾಚಾರದ ಕುರಿತಾದ ಸುಮಾರು 93.8 ಪ್ರತಿಶತದಷ್ಟು ತನಿಖೆಗಳು ತನಿಖೆಯ ಕೊನೆಯಲ್ಲಿ ಯಾವುದೇ ದೋಷಾರೋಪಣೆಯನ್ನು ಸಲ್ಲಿಸದೆ ಮುಕ್ತಾಯಗೊಂಡಿವೆ ಎಂದು ಗುಂಪು ಗಮನಿಸಿದೆ. 2018ರ ರಾಷ್ಟ್ರ-ರಾಜ್ಯ ಕಾನೂನು ಈ ನೀತಿಗಳಿಗೆ ಅಡಿಪಾಯವಾಗಿ ಕಾರ್ಯನಿರ್ವಹಿಸುತ್ತದೆ. ಇದು ಎರಡು ಹಂತದ ಆಡಳಿತ ವ್ಯವಸ್ಥೆಯನ್ನು ಪರಿಣಾಮಕಾರಿಯಾಗಿ ಔಪಚಾರಿಕಗೊಳಿಸುತ್ತದೆ. ಕಾನೂನು ಇಸ್ರೇಲ್ ಅನ್ನು ಯಹೂದಿ ಜನರ ವಿಶೇಷ ತಾಯ್ನಾಡು ಎಂದು ಗುರುತಿಸುತ್ತದೆ ಮತ್ತು ಯಹೂದಿ ವಸಾಹತುವನ್ನು ರಾಷ್ಟ್ರೀಯ ಹಿತಾಸಕ್ತಿಯಾಗಿ ಆದ್ಯತೆ ನೀಡುತ್ತದೆ. ಇದು ಜನಸಂಖ್ಯೆಯ ಸುಮಾರು 20 ಪ್ರತಿಶತದಷ್ಟು ಇರುವ ಫೆಲೆಸ್ತೀನಿಯನ್ ನಾಗರಿಕರ ಸ್ಥಾನಮಾನವನ್ನು ಸಮಾನತೆಯ ಯಾವುದೇ ಖಾತರಿಯನ್ನು ಬಿಟ್ಟುಬಿಡುತ್ತದೆ ಎಂದು ವಿಮರ್ಶಕರು ವಾದಿಸುತ್ತಾರೆ. ►ಅದು ಹೇಗೆ ಕಾನೂನುಬದ್ಧವಾಗಿದೆ? ಹಲವರ ಪ್ರಕಾರ, ಇದು ಕಾನೂನುಬದ್ಧವಾಗಿಲ್ಲ. ಪ್ರಧಾನ ಮಂತ್ರಿ ನೆತನ್ಯಾಹು ಮತ್ತು ಆಕ್ರಮಿತ ಪಶ್ಚಿಮ ದಂಡೆಯ ಮೇಲೆ ಆಡಳಿತಾತ್ಮಕ ಅಧಿಕಾರ ಹೊಂದಿರುವ ಅವರ ಹಣಕಾಸು ಸಚಿವ ಬೆಜಲೆಲ್ ಸ್ಮೋಟ್ರಿಚ್ ಅವರು ಫೆಲೆಸ್ತೀನಿಯನ್ ಪ್ರದೇಶವನ್ನು ಸ್ವಾಧೀನಪಡಿಸಿಕೊಳ್ಳಲು ಅತ್ಯುತ್ತಮ ಪ್ರಯತ್ನಗಳನ್ನು ಮಾಡಿದರೂ, ಅದು ಮಿಲಿಟರಿ ಆಕ್ರಮಣದಲ್ಲಿರುವ ವಿದೇಶಿ ಪ್ರದೇಶವಾಗಿ ಉಳಿದಿದೆ. ಇಸ್ರೇಲ್ ಡೆಮಾಕ್ರಸಿ ಇನ್ಸ್ಟಿಟ್ಯೂಟ್ ನ ಭದ್ರತೆ ಮತ್ತು ಪ್ರಜಾಪ್ರಭುತ್ವ ಕೇಂದ್ರದ ಹಿರಿಯ ಸಹೋದ್ಯೋಗಿ ಅಮಿಚೈ ಕೊಹೆನ್ ಅವರ ಪ್ರಕಾರ, ಅಂತರರಾಷ್ಟ್ರೀಯ ಕಾನೂನು ಇಸ್ರೇಲ್ ನ ಸಂಸತ್ತು ಪಶ್ಚಿಮ ದಂಡೆಗೆ ಶಾಸನ ರಚಿಸಲು ಅನುಮತಿಸುವುದಿಲ್ಲ, ಏಕೆಂದರೆ ಈ ಪ್ರದೇಶವು ಕಾನೂನುಬದ್ಧವಾಗಿ ಇಸ್ರೇಲ್ ನ ಸಾರ್ವಭೌಮ ಪ್ರದೇಶದ ಭಾಗವಾಗಿಲ್ಲ. ಸೆಪ್ಟೆಂಬರ್ 2024ರಲ್ಲಿ, ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು ಒಂದು ವರ್ಷದೊಳಗೆ ಆಕ್ರಮಿತ ಪಶ್ಚಿಮ ದಂಡೆ ಮತ್ತು ಪೂರ್ವ ಜೆರುಸಲೆಮ್ನ ಇಸ್ರೇಲಿ ಆಕ್ರಮಣವನ್ನು ಕೊನೆಗೊಳಿಸಬೇಕೆಂದು ಕರೆ ನೀಡಿತು. ಯುಎನ್ಜಿಎ ನಿರ್ಣಯವು ಅಂತರರಾಷ್ಟ್ರೀಯ ನ್ಯಾಯಾಲಯದ ಸಲಹಾ ಅಭಿಪ್ರಾಯವನ್ನು ಬೆಂಬಲಿಸಿತು, ಅದು ಇಸ್ರೇಲಿ ಆಕ್ರಮಣವನ್ನು ಕಾನೂನುಬಾಹಿರ ಎಂದು ಕರೆದಿದೆ. ಅದೇ ರೀತಿ, ಇಸ್ರೇಲ್ ನಲ್ಲಿನ ನಾಗರಿಕ ಹಕ್ಕುಗಳ ಸಂಘವು ಮಸೂದೆಯನ್ನು ಅನುಮೋದಿಸಿದ ಕೆಲವೇ ನಿಮಿಷಗಳ ನಂತರ ಈ ವಿಷಯವನ್ನು ಇಸ್ರೇಲ್ ನ ಅತ್ಯುನ್ನತ ನ್ಯಾಯಾಲಯಕ್ಕೆ ಈಗಾಗಲೇ ಕೊಂಡೊಯ್ದಿದೆ ಎಂದು ಘೋಷಿಸಿತು. ಈ ಕ್ರಮವು ಯೋಜಿತವಾಗಿ ತಾರತಮ್ಯದಿಂದ ಕೂಡಿದೆ ಮತ್ತು ಆಕ್ರಮಿತ ಪಶ್ಚಿಮ ದಂಡೆಯಲ್ಲಿ ವಾಸಿಸುವ, ಇಸ್ರೇಲಿ ನಾಗರಿಕರಲ್ಲದ ಫೆಲೆಸ್ತೀನಿಯನ್ನರ ಮೇಲೆ ಅದನ್ನು ಹೇರಲು ಶಾಸಕರಿಗೆ ಯಾವುದೇ ಕಾನೂನು ಅಧಿಕಾರವಿಲ್ಲ ಎಂದು ಗುಂಪು ವಾದಿಸಿತು. ►ಫೆಲೆಸ್ತೀನಿಯನ್ನರನ್ನು ಗುರಿಯಾಗಿಸಲು ಇಸ್ರೇಲ್ ತನ್ನ ಕಾನೂನು ವ್ಯವಸ್ಥೆಯನ್ನು ಬಳಸುತ್ತಿದೆಯೇ? HRW ಮತ್ತು ಅಮ್ನೆಸ್ಟಿ ಇಂಟರ್ನ್ಯಾಷನಲ್ ಸೇರಿದಂತೆ ಮಾನವ ಹಕ್ಕುಗಳ ಗುಂಪುಗಳು ಫೆಲೆಸ್ತೀನಿಯನ್ನರು ಮತ್ತು ಪಶ್ಚಿಮ ದಂಡೆಯಲ್ಲಿರುವ ಇಸ್ರೇಲಿ ವಸಾಹತುಗಾರರಿಗೆ ಅನ್ವಯಿಸುವ ಕಾನೂನು ವ್ಯವಸ್ಥೆಗಳು ಮೂಲಭೂತವಾಗಿ ಅಸಮಾನತೆಯಿಂದ ಕೂಡಿವೆ ಎಂದು ಬಹಳ ಹಿಂದಿನಿಂದಲೂ ವಾದಿಸುತ್ತಿವೆ. ಅದೇ ಪ್ರದೇಶದಲ್ಲಿ, ಫೆಲೆಸ್ತೀನಿಯನ್ನರು ಮಿಲಿಟರಿ ಕಾನೂನಿಗೆ ಒಳಪಟ್ಟಿದ್ದರೆ, ಇಸ್ರೇಲಿ ವಸಾಹತುಗಾರರು ಇಸ್ರೇಲಿ ನಾಗರಿಕ ಕಾನೂನಿನಿಂದ ನಿಯಂತ್ರಿಸಲ್ಪಡುವ ದ್ವಿ-ಕಾನೂನು ವ್ಯವಸ್ಥೆ ಅಸ್ತಿತ್ವದಲ್ಲಿದೆ. ಈ ಸಮಾನಾಂತರ ರಚನೆಯು ಆಡಳಿತಾತ್ಮಕ ಬಂಧನ ಸೇರಿದಂತೆ ತಾರತಮ್ಯದ ಅಭ್ಯಾಸಗಳನ್ನು ಸುಗಮಗೊಳಿಸುತ್ತದೆ ಎಂದು ಮಾನವ ಹಕ್ಕುಗಳ ಸಂಘಟನೆಗಳು ವಾದಿಸುತ್ತವೆ. ಇವು ಆಡಳಿತಾತ್ಮಕ ಬಂಧನಕ್ಕೆ (ಜನರನ್ನು ಯಾವುದೇ ಆರೋಪವಿಲ್ಲದೆ ಅನಿರ್ದಿಷ್ಟವಾಗಿ ಬಂಧಿಸಬಹುದು) ಅನುವು ಮಾಡಿಕೊಡುತ್ತದೆ. ಕಾನೂನಿನ ಅಡಿಯಲ್ಲಿ ನಾಟಕೀಯವಾಗಿ ಅಸಮಾನ ರಕ್ಷಣೆಗಳು ಮತ್ತು ಆ ಕಾನೂನುಗಳ ಆಯ್ದ ಜಾರಿಯಂತಹ ತಾರತಮ್ಯದ ಬಂಧನ ಪ್ರಕ್ರಿಯೆಗಳನ್ನು ಸಕ್ರಿಯಗೊಳಿಸುತ್ತದೆ. ಇವೆಲ್ಲವೂ ವರ್ಣಭೇದ ನೀತಿಯ ವ್ಯಾಪಕ ಆರೋಪಗಳಿಗೆ ಆಧಾರವಾಗಿವೆ. ಮಾರ್ಚ್ 2026ರ ಹೊತ್ತಿಗೆ, ಸರಿಸುಮಾರು 9,500 ಫೆಲೆಸ್ತೀನಿಯನ್ನರನ್ನು ಇಸ್ರೇಲಿ ಜೈಲುಗಳಲ್ಲಿ ಕಠಿಣ ಪರಿಸ್ಥಿತಿಗಳಲ್ಲಿ ಬಂಧಿಸಲಾಗಿದೆ. ಸುಮಾರು ಅರ್ಧದಷ್ಟು ಜನರು ಆಡಳಿತಾತ್ಮಕ ಬಂಧನದಲ್ಲಿ ಅಥವಾ ಕಾನೂನುಬಾಹಿರ ಹೋರಾಟಗಾರರು ಎಂದು ಹಣೆಪಟ್ಟಿ ಕಟ್ಟಲಾಗಿದೆ. ಅವರಿಗೆ ವಿಚಾರಣೆಯನ್ನು ನಿರಾಕರಿಸಲಾಗಿದ್ದು, ಅವರಿಗೆ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಕಸ್ಟಡಿಯಲ್ಲಿರುವ ಮಕ್ಕಳಿಗೆ ಸಂಬಂಧಿಸಿದ ಕಾನೂನುಗಳು ಅನೇಕ ಅಂತರರಾಷ್ಟ್ರೀಯ ವೀಕ್ಷಕರು ಮತ್ತು ಹಕ್ಕುಗಳ ಗುಂಪುಗಳಲ್ಲಿ ಕಳವಳಕ್ಕೆ ಕಾರಣವಾಗಿವೆ. ಪೋಷಕರ ಉಪಸ್ಥಿತಿಯಿಲ್ಲದೆ ಫೆಲೆಸ್ತೀನಿಯನ್ ಅಪ್ರಾಪ್ತ ವಯಸ್ಕರನ್ನು ವಿಚಾರಣೆ ಮಾಡಬಹುದು ಮತ್ತು ಇಸ್ರೇಲ್ ನ ಸ್ವಂತ ಹಾಗೂ ಅಂತರರಾಷ್ಟ್ರೀಯ ಕಾನೂನನ್ನು ಧಿಕ್ಕರಿಸಿ ಕಾನೂನು ಸಲಹೆಗಾರರನ್ನು ಸಮಯೋಚಿತವಾಗಿ ಸಂಪರ್ಕಿಸಲು ಅವರಿಗೆ ಅವಕಾಶ ನಿರಾಕರಿಸಲಾಗುತ್ತದೆ ಎಂದು HRW ಗಮನಿಸಿದೆ. ಅಂತರರಾಷ್ಟ್ರೀಯ ಕಳವಳದ ಪ್ರಮುಖ ಅಂಶವೆಂದರೆ ನಿರ್ಮಾಣ ಪರವಾನಗಿಗಳ ಕೊರತೆಯ ಕಾರಣ ನೀಡಿ ಫೆಲೆಸ್ತೀನಿಯನ್ ಮನೆಗಳನ್ನು ವ್ಯವಸ್ಥಿತವಾಗಿ ಕೆಡವುವುದು. ಫೆಲೆಸ್ತೀನಿಯನ್ನರು ಪರವಾನಗಿ ಪಡೆಯುವುದೇ ಅಸಾಧ್ಯ. ಇದಕ್ಕೆ ವ್ಯತಿರಿಕ್ತವಾಗಿ, ಅನಧಿಕೃತ ವಸಾಹತುಗಾರರ ಹೊರಠಾಣೆಗಳು ವಿರಳವಾಗಿ ತೊಂದರೆಗೊಳಗಾಗುತ್ತವೆ ಮತ್ತು ಹಿಂದಿನಿಂದಲೂ ಕಾನೂನುಬದ್ಧಗೊಳಿಸಲ್ಪಡುತ್ತವೆ. ►ಕಾನೂನಿಗೆ ಖಂಡನೆ ವ್ಯಕ್ತಪಡಿಸಿದ ಎಂಟು ದೇಶಗಳು ಮಾರಣಾಂತಿಕ ದಾಳಿಗಳಿಗೆ ಶಿಕ್ಷೆಗೊಳಗಾದ ಫೆಲೆಸ್ತೀನಿಯನ್ನರಿಗೆ ಮರಣದಂಡನೆ ವಿಧಿಸುವ ಇಸ್ರೇಲ್ ನ ಏಕಪಕ್ಷೀಯ ಮಸೂದೆಯನ್ನು ಬಲವಾಗಿ ಖಂಡಿಸಿದ ಎಂಟು ಮುಸ್ಲಿಂ ಬಹುಸಂಖ್ಯಾತ ದೇಶಗಳು ಜಂಟಿ ಹೇಳಿಕೆಯನ್ನು ನೀಡಿವೆ. ಪಾಕಿಸ್ತಾನ, ಟರ್ಕಿ, ಈಜಿಪ್ಟ್, ಇಂಡೋನೇಷ್ಯಾ, ಜೋರ್ಡಾನ್, ಖತರ್, ಸೌದಿ ಅರೇಬಿಯಾ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ ವರ್ಣಭೇದ ನೀತಿಯನ್ನು ಬೇರೂರಿಸುವ, ಹೆಚ್ಚು ತಾರತಮ್ಯದ ಇಸ್ರೇಲಿ ಪದ್ಧತಿಗಳನ್ನು ಖಂಡಿಸಿವೆ ಎಂದು ಇಸ್ಲಾಮಾಬಾದ್ ಗುರುವಾರ ಬಿಡುಗಡೆ ಮಾಡಿದ ಜಂಟಿ ಹೇಳಿಕೆಯಲ್ಲಿ ತಿಳಿಸಿದೆ. ಎಂಟು ದೇಶಗಳು ಇಸ್ರೇಲ್ ಬಂಧನದಲ್ಲಿರುವ ಫೆಲೆಸ್ತೀನಿಯನ್ ಕೈದಿಗಳ ಪರಿಸ್ಥಿತಿಗಳ ಬಗ್ಗೆ ಗಂಭೀರ ಕಳವಳ ವ್ಯಕ್ತಪಡಿಸಿವೆ. ಚಿತ್ರಹಿಂಸೆ, ಅಮಾನವೀಯ ಮತ್ತು ಅವಮಾನಕರ ವರ್ತನೆ, ಹಸಿವು ಮತ್ತು ಮೂಲಭೂತ ಹಕ್ಕುಗಳ ನಿರಾಕರಣೆ ಸೇರಿದಂತೆ ನಡೆಯುತ್ತಿರುವ ದೌರ್ಜನ್ಯಗಳ ವರದಿಗಳ ನಡುವೆ ಹೆಚ್ಚುತ್ತಿರುವ ಅಪಾಯಗಳ ಬಗ್ಗೆ ಎಚ್ಚರಿಕೆ ನೀಡಿವೆ. ಈ ಕ್ರಮಗಳು ಫೆಲೆಸ್ತೀನಿಯನ್ ಜನರ ವಿರುದ್ಧ ಉಲ್ಲಂಘನೆಗಳ ವ್ಯಾಪಕ ಮಾದರಿಯನ್ನು ಪ್ರತಿಬಿಂಬಿಸುತ್ತವೆ ಎಂದು ಹೇಳಿಕೆಯಲ್ಲಿ ಹೇಳಲಾಗಿದೆ. ನೆಲದ ಮೇಲೆ ಮತ್ತಷ್ಟು ಉದ್ವಿಗ್ನತೆಯನ್ನು ಹೆಚ್ಚಿಸುವ ಅಪಾಯವನ್ನುಂಟುಮಾಡುವ ಇಸ್ರೇಲ್ ಕ್ರಮಗಳ ವಿರುದ್ಧವೂ ದೇಶಗಳು ಎಚ್ಚರಿಕೆ ನೀಡಿವೆ. ಈ ಕಾನೂನನ್ನು ವಿಶ್ವಸಂಸ್ಥೆ ಮತ್ತು ಯುರೋಪಿಯನ್ ಒಕ್ಕೂಟ ಕೂಡ ಟೀಕಿಸಿದೆ. ಆದಾಗ್ಯೂ, ಇಸ್ರೇಲ್ ನ ಮಿತ್ರ ರಾಷ್ಟ್ರವಾದ ಯುನೈಟೆಡ್ ಸ್ಟೇಟ್ಸ್ ಅದರದ್ದೇ ಆದ ಕಾನೂನುಗಳನ್ನು ನಿರ್ಧರಿಸುವ ಸಾರ್ವಭೌಮ ಹಕ್ಕನ್ನು ಬೆಂಬಲಿಸಿದೆ.
ಸೆಂಟ್ರಲ್ ವಿಸ್ಟಾ ಯೋಜನೆಗಾಗಿ ಸ್ಥಳಾಂತರಿತ ಮರಗಳಲ್ಲಿ ಶೇ.43ರಷ್ಟು ಸತ್ತಿವೆ: ಸರಕಾರ
ಹೊಸದಿಲ್ಲಿ, ಎ.3: ಸೆಂಟ್ರಲ್ ವಿಸ್ಟಾ ಯೋಜನೆಗಾಗಿ ಸ್ಥಳಾಂತರಿಸಲಾಗಿದ್ದ ಮರಗಳಲ್ಲಿ ಸುಮಾರು ಶೇ.43ರಷ್ಟು ಸತ್ತು ಹೋಗಿವೆ ಎಂದು ಕೇಂದ್ರ ಸರ್ಕಾರವು ಸಂಸತ್ತಿನಲ್ಲಿ ತಿಳಿಸಿದೆ. 2019ರಲ್ಲಿ ಆರಂಭಗೊಂಡಿರುವ ಈ ಯೋಜನೆಯು ಸೆಂಟ್ರಲ್ ದಿಲ್ಲಿಯ ಒಂದು ಭಾಗದ ಪುನರ್ ಅಭಿವೃದ್ಧಿಯನ್ನು ಗುರಿಯಾಗಿಸಿಕೊಂಡಿದೆ. ಈವರೆಗೆ ಹೊಸ ಸಂಸತ್ ಕಟ್ಟಡ, ಉಪರಾಷ್ಟ್ರಪತಿಯ ನಿವಾಸ ಮತ್ತು ನೂತನ ಪ್ರಧಾನಮಂತ್ರಿ ಕಚೇರಿ ಪೂರ್ಣಗೊಂಡಿವೆ. ಟೀಕಾಕಾರರು ಈ ಯೋಜನೆಯನ್ನು ಬಿಜೆಪಿ ಸರ್ಕಾರದ ‘ಆಡಂಬರದ ಯೋಜನೆ’ ಎಂದು ಬಣ್ಣಿಸಿದ್ದಾರೆ. ಗುರುವಾರ ಲೋಕಸಭೆಯಲ್ಲಿ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಅವರ ಪ್ರಶ್ನೆಗೆ ಉತ್ತರಿಸಿದ ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ರಾಜ್ಯ ಸಚಿವ ತೋಖನ್ ಸಾಹು ಅವರು, ಯೋಜನೆಗಾಗಿ 3,609 ಮರಗಳನ್ನು ಸ್ಥಳಾಂತರಿಸಲಾಗಿದ್ದು, ಈ ಪೈಕಿ 1,545 ಮರಗಳು ನಾಶಗೊಂಡಿವೆ ಎಂದು ತಿಳಿಸಿದರು. ಕಾನೂನುಬದ್ಧ ಅಗತ್ಯಗಳ ಪ್ರಕಾರ ಮರಗಳ ಕಡಿತಕ್ಕೆ ಬದಲಿಯಾಗಿ ದಿಲ್ಲಿಯ ಬದರ್ ಪುರ ಪ್ರದೇಶದ ಎನ್ಟಿಪಿಸಿ ಇಕೋ ಪಾರ್ಕ್ನಲ್ಲಿ 24,450 ಮತ್ತು ಘಿಟ್ರೋನಿಯಲ್ಲಿ 1,730 ಗಿಡಗಳನ್ನು ನೆಡಲಾಗಿದೆ ಎಂದು ಅವರು ಹೇಳಿದರು. 2023-24ರಿಂದ 2025-26ರ ಅವಧಿಯಲ್ಲಿ ಮರಗಳ ಸ್ಥಳಾಂತರ ಹಾಗೂ ಬದಲಿ ಗಿಡಗಳ ನೆಡುವಿಕೆಗೆ 5.2 ಕೋಟಿ ರೂಪಾಯಿ ವೆಚ್ಚ ಮಾಡಲಾಗಿದೆ ಎಂದೂ ಅವರು ತಿಳಿಸಿದ್ದಾರೆ. ಸೆಂಟ್ರಲ್ ವಿಸ್ಟಾ ಯೋಜನೆಯು ಹೊಸ ಸಂಸತ್ ಕಟ್ಟಡ, ಉಪರಾಷ್ಟ್ರಪತಿ ಮತ್ತು ಪ್ರಧಾನಿಯ ನೂತನ ಅಧಿಕೃತ ನಿವಾಸಗಳು, ನೂತನ ಪ್ರಧಾನಿ ಕಚೇರಿ ಹಾಗೂ ‘ಕರ್ತವ್ಯ ಭವನಗಳು’ ಎಂದು ಹೆಸರಿಸಲಾದ 10 ಸರ್ಕಾರಿ ಕಚೇರಿ ಕಟ್ಟಡಗಳ ನಿರ್ಮಾಣವನ್ನು ಒಳಗೊಂಡಿದೆ. ಅಸ್ತಿತ್ವದಲ್ಲಿರುವ ಸರ್ಕಾರಿ ಕಚೇರಿಗಳು ಮತ್ತು ಕಟ್ಟಡಗಳನ್ನು ನೆಲಸಮಗೊಳಿಸಿದ ಬಳಿಕ ಅಲ್ಲಿ ಹೊಸ ಕಟ್ಟಡಗಳನ್ನು ನಿರ್ಮಿಸಲಾಗುತ್ತಿದೆ. ನೂತನ ಪ್ರಧಾನಿಯ ನಿವಾಸ ಮತ್ತು ಉಳಿದ ಏಳು ಸಚಿವಾಲಯ ಕಟ್ಟಡಗಳ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ನಾರ್ಥ್ ಬ್ಲಾಕ್ ಮತ್ತು ಸೌತ್ ಬ್ಲಾಕ್ ಕಚೇರಿಗಳನ್ನು ಹೊಸ ರಾಷ್ಟ್ರೀಯ ವಸ್ತು ಸಂಗ್ರಹಾಲಯವಾಗಿ ಪರಿವರ್ತಿಸುವುದೂ ಯೋಜನೆಯಲ್ಲಿ ಸೇರಿದೆ.
ಅಬುಧಾಬಿಯ ಮೇಲೆ ಕ್ಷಿಪಣಿ ದಾಳಿ | ಐವರು ಭಾರತೀಯರು ಸೇರಿ 12 ಮಂದಿಗೆ ಗಾಯ
ಅಬುಧಾಬಿ, ಎ.3: ಶುಕ್ರವಾರ ಅಬುಧಾಬಿಯ ಮೇಲೆ ಇರಾನ್ ಪ್ರಯೋಗಿಸಿದ ಕ್ಷಿಪಣಿಯನ್ನು ವಾಯು ರಕ್ಷಣಾ ವ್ಯವಸ್ಥೆ ನಿರ್ಬಂಧಿಸಿದ ಬಳಿಕ, ಅದರ ಅವಶೇಷಗಳು ಅಜ್ಬಾನ್ ಪ್ರದೇಶದಲ್ಲಿ ಬಿದ್ದು ಐವರು ಭಾರತೀಯರು ಮತ್ತು 7 ನೇಪಾಳಿ ಪ್ರಜೆಗಳು ಗಾಯಗೊಂಡಿರುವುದಾಗಿ ವರದಿಯಾಗಿದೆ. ಇದಕ್ಕೂ ಮುನ್ನ ಮತ್ತೊಂದು ಕ್ಷಿಪಣಿಯ ಅವಶೇಷದಿಂದ ಹಬ್ಷಾನ್ ಗ್ಯಾಸ್ ಸೌಲಭ್ಯದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಅದರ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿದೆ ಎಂದು ಅಬುಧಾಬಿಯ ಅಧಿಕಾರಿಗಳು ತಿಳಿಸಿದ್ದಾರೆ. ಯುದ್ಧಕ್ಕೆ ಸಂಬಂಧಿಸಿದ ಪ್ರಮುಖ ಬೆಳವಣಿಗೆಗಳು: • ಇರಾನ್ ನಿಂದ ಪ್ರಯೋಗಿಸಲಾದ 18 ಬ್ಯಾಲಿಸ್ಟಿಕ್ ಕ್ಷಿಪಣಿಗಳು, 4 ಕ್ರೂಸ್ ಕ್ಷಿಪಣಿಗಳು ಮತ್ತು 47 ಡ್ರೋನ್ಗಳನ್ನು ನಿರ್ಬಂಧಿಸಿರುವುದಾಗಿ ಯುಎಇ ತಿಳಿಸಿದೆ. • ಇರಾನ್ ನ ಗಲ್ಫ್ ಬಂದರು ಚರಾಕ್ ಮೇಲೆ ಅಮೆರಿಕ–ಇಸ್ರೇಲ್ ದಾಳಿಯಲ್ಲಿ ಒಬ್ಬ ಸಾವನ್ನಪ್ಪಿದ್ದು, ಪ್ರಯಾಣಿಕರ ಟರ್ಮಿನಲ್ಗೆ ಹಾನಿಯಾಗಿದೆ. • ಉತ್ತರ ಇರಾನ್ ನ ಶಾಹಿದ್ ಬೆಹೆಶ್ತಿ ವಿಶ್ವವಿದ್ಯಾಲಯ ಮತ್ತು ಮೆಹರಾಬಾದ್ ವಿಮಾನ ನಿಲ್ದಾಣ ಪ್ರದೇಶಗಳ ಮೇಲೆ ಅಮೆರಿಕ ದಾಳಿ ನಡೆಸಿದೆ. • ದಕ್ಷಿಣ ಇರಾನ್ನಲ್ಲಿ ನೆರವು ವಿತರಣೆಗಾಗಿ ಬಳಸುತ್ತಿದ್ದ ಕಂಟೈನರ್ಗಳು ಮತ್ತು ತುರ್ತು ಸೇವಾ ವಾಹನಗಳಿದ್ದ ಗೋದಾಮಿನ ಮೇಲೆ ಡ್ರೋನ್ ದಾಳಿ ನಡೆದಿದ್ದು, 2 ಕಂಟೈನರ್ಗಳು, 2 ಬಸ್ಸುಗಳು ಹಾಗೂ ಹಲವು ಆಂಬ್ಯುಲೆನ್ಸ್ಗಳಿಗೆ ಹಾನಿಯಾಗಿದೆ ಎಂದು ರೆಡ್ಕ್ರಾಸ್ ತಿಳಿಸಿದೆ. • ಮಧ್ಯಪ್ರಾಚ್ಯದಾದ್ಯಂತ ಅಮೆರಿಕಕ್ಕೆ ಸಂಬಂಧಿಸಿದ ಸ್ವತ್ತುಗಳು, ಇಂಧನ ಹಾಗೂ ನಾಗರಿಕ ಮೂಲಸೌಕರ್ಯಗಳ ಮೇಲೆ ಇರಾನ್ ಕ್ಷಿಪಣಿ ದಾಳಿ ನಡೆಸಿದೆ. • ಗುರುವಾರ ತಡರಾತ್ರಿ ಇಸ್ರೇಲ್ನ ಟೆಲ್ ಅವೀವ್ ಮೇಲೆ ಇರಾನ್ ಕ್ಷಿಪಣಿಗಳ ದಾಳಿ ನಡೆದಿದ್ದು, 4 ಮಂದಿ ಗಾಯಗೊಂಡಿದ್ದಾರೆ.
ಮಧ್ಯಪ್ರಾಚ್ಯ ಸಂಘರ್ಷ | ಇರಾನ್ ‘ಹಿಟ್ಲಿಸ್ಟ್’ನಲ್ಲಿ ಗಲ್ಫ್ನ 8 ಸೇತುವೆಗಳು
ಟೆಹ್ರಾನ್, ಎ.3: ಕರಾಜ್ ನ B1 ಸೇತುವೆಯ ಮೇಲೆ ಗುರುವಾರ ನಡೆದ ವೈಮಾನಿಕ ದಾಳಿಗೆ ಪ್ರತೀಕಾರವಾಗಿ ಗಲ್ಫ್ ಪ್ರದೇಶದ ಪ್ರಮುಖ ಸೇತುವೆಗಳನ್ನು ‘ಹಿಟ್ಲಿಸ್ಟ್’ನಲ್ಲಿ ಸೇರಿಸಲಾಗಿದೆ ಎಂದು ಇರಾನ್ ಮಾಧ್ಯಮ ವರದಿ ಮಾಡಿದೆ. ಕುವೈತ್, ಬಹ್ರೇನ್, ಸೌದಿ ಅರೇಬಿಯಾ, ಯುಎಇ ಮತ್ತು ಜೋರ್ಡನ್ ದೇಶಗಳ ಸೇತುವೆಗಳನ್ನು ಇರಾನ್ ಗುರಿಯಾಗಿಸಿದೆ ಎಂದು ವರದಿ ತಿಳಿಸಿದೆ. ಗುರುವಾರ ಇರಾನ್ನ ಕರಾಜ್ ನಗರದಲ್ಲಿರುವ B1 ಸೇತುವೆಯ ಮೇಲೆ ಅಮೆರಿಕ ಮತ್ತು ಇಸ್ರೇಲ್ ವೈಮಾನಿಕ ದಾಳಿ ನಡೆಸಿದ್ದು, ನಿರ್ಮಾಣ ಹಂತದಲ್ಲಿದ್ದ ಸೇತುವೆಗೆ ಭಾರೀ ಹಾನಿಯಾಗಿದೆ. ದಾಳಿಯಲ್ಲಿ ಕನಿಷ್ಠ 8 ಮಂದಿ ಸಾವನ್ನಪ್ಪಿರುವುದಾಗಿ ವರದಿಯಾಗಿದೆ. ಈ ದಾಳಿಯನ್ನು ಖಂಡಿಸಿರುವ ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಾಘ್ಚಿ, “ಅಪೂರ್ಣ ಸೇತುವೆಗಳು ಸೇರಿದಂತೆ ನಾಗರಿಕ ಮೂಲಸೌಕರ್ಯಗಳ ಮೇಲೆ ದಾಳಿ ನಡೆಸುವುದರಿಂದ ಇರಾನಿಯನ್ನರನ್ನು ಶರಣಾಗತಿಗೆ ಒತ್ತಾಯಿಸಲು ಸಾಧ್ಯವಿಲ್ಲ” ಎಂದು ಹೇಳಿದ್ದಾರೆ.
Jammu and Kashmir | ಗಾಂದರ್ಬಲ್ ಎನ್ಕೌಂಟರ್; ನ್ಯಾಯಾಂಗ ತನಿಖೆಗೆ ಆದೇಶ
ಶ್ರೀನಗರ, ಎ.3: ಗಾಂದರ್ಬಲ್ ಜಿಲ್ಲೆಯ ಅರಹ್ಮಾ ಗ್ರಾಮದಲ್ಲಿ ನಡೆದ ಎನ್ಕೌಂಟರ್ ಪ್ರಕರಣಕ್ಕೆ ಸಂಬಂಧಿಸಿ ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ನ್ಯಾಯಾಂಗ ತನಿಖೆಗೆ ಆದೇಶ ನೀಡಿದ್ದಾರೆ. ಈ ಪ್ರಕರಣದ ಕುರಿತು ಕೂಲಂಕಷ ಹಾಗೂ ನಿಷ್ಪಕ್ಷಪಾತ ತನಿಖೆ ನಡೆಸಿ 7 ದಿನಗಳೊಳಗೆ ಗೃಹ ಇಲಾಖೆಗೆ ವರದಿ ಸಲ್ಲಿಸುವಂತೆ ಜಿಲ್ಲಾ ದಂಡಾಧಿಕಾರಿಗೆ ಸೂಚಿಸಲಾಗಿದೆ. ಬುಧವಾರ ನಡೆದ ಎನ್ಕೌಂಟರ್ನಲ್ಲಿ ಭಯೋತ್ಪಾದಕ ರಶೀದ್ ಅಹ್ಮದ್ ಮುಘಲ್ ಹತ್ಯೆಯಾಗಿದ್ದಾರೆ ಎಂಬ ಸೇನೆಯ ಹೇಳಿಕೆಯನ್ನು ಕುಟುಂಬ ಸದಸ್ಯರು ವಿರೋಧಿಸಿದ ಬಳಿಕ ಈ ಆದೇಶ ಹೊರಡಿಸಲಾಗಿದೆ. ರಶೀದ್ಗೆ ಭಯೋತ್ಪಾದನೆಯೊಂದಿಗೆ ಯಾವುದೇ ಸಂಬಂಧ ಇರಲಿಲ್ಲ ಎಂದು ಕುಟುಂಬ ಹೇಳಿದೆ. “ರಶೀದ್ ಮಾರ್ಚ್ 31ರಂದು ಬೆಳಗ್ಗೆ ಮನೆಯಿಂದ ತೆರಳಿದ್ದ. ಆದರೆ ಹಿಂದಿರುಗಲಿಲ್ಲ. ಕರೆ ಮಾಡಿದಾಗ ಮೊಬೈಲ್ ಸ್ವಿಚ್ ಆಫ್ ಆಗಿತ್ತು” ಎಂದು ಸಹೋದರ ಏಜಾಝ್ ಅಹ್ಮದ್ ಮುಘಲ್ ತಿಳಿಸಿದ್ದಾರೆ. “ನಂತರ ಶ್ರೀನಗರದಲ್ಲಿರುವ ಪೊಲೀಸ್ ನಿಯಂತ್ರಣ ಕೊಠಡಿಗೆ ಕರೆದೊಯ್ಯಲಾಯಿತು. ಅಲ್ಲಿ ಗುಂಡೇಟಿನಿಂದ ಗಾಯಗೊಂಡಿದ್ದ ರಶೀದ್ ನ ಮೃತದೇಹವನ್ನು ಗುರುತಿಸಿದೆ” ಎಂದೂ ಅವರು ಹೇಳಿದ್ದಾರೆ. ಮೃತದೇಹವನ್ನು ಕುಟುಂಬಕ್ಕೆ ಹಸ್ತಾಂತರಿಸದೇ ಉತ್ತರ ಕಾಶ್ಮೀರದಲ್ಲಿ ದಫನ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ಅಂತ್ಯಕ್ರಿಯೆಗೆ ಮೃತದೇಹ ನೀಡಬೇಕು ಹಾಗೂ ಪ್ರಕರಣಕ್ಕೆ ಸಂಬಂಧಿಸಿದವರ ವಿರುದ್ಧ ಎಫ್ಐಆರ್ ದಾಖಲಿಸಬೇಕು ಎಂದು ಕುಟುಂಬ ಆಗ್ರಹಿಸಿದೆ. ಕುಟುಂಬದ ಪ್ರಕಾರ, ರಶೀದ್ ವಿದ್ಯಾವಂತನಾಗಿದ್ದು ಎಂಕಾಂ ಪದವಿ ಪಡೆದಿದ್ದ. ಸ್ಥಳೀಯರಿಗೆ ದಾಖಲೆ ಸಂಬಂಧಿತ ಸಹಾಯ ಮಾಡುತ್ತಿದ್ದ ಎಂದು ತಿಳಿದು ಬಂದಿದೆ.
ಅಮೆರಿಕದ ಯುದ್ಧವಿಮಾನ ಹೊಡೆದುರುಳಿಸಿದ ಇರಾನ್, ಪೈಲಟ್ ವಶಕ್ಕೆ: ವರದಿ
ಟೆಹ್ರಾನ್, ಎ.3: ಪಶ್ಚಿಮ ಇರಾನ್ನಲ್ಲಿ ಶುಕ್ರವಾರ ಇಸ್ಲಾಮಿಕ್ ರೆವೊಲ್ಯೂಷನರಿ ಗಾರ್ಡ್ ಕಾರ್ಪ್ಸ್ (ಐಆರ್ಜಿಸಿ) ವಾಯುಪಡೆಯು ಅಮೆರಿಕದ ಎಫ್-35 ಯುದ್ಧವಿಮಾನವನ್ನು ಹೊಡೆದುರುಳಿಸಿದ್ದು, ಅದರ ಪೈಲಟ್ ಐಆರ್ಜಿಸಿಯ ವಶದಲ್ಲಿರುವ ಸಾಧ್ಯತೆಯಿದೆ ಎಂದು ಇರಾನ್ ನ ತಸ್ನಿಮ್ ಸುದ್ದಿಸಂಸ್ಥೆ ವರದಿ ಮಾಡಿದೆ. ಇರಾನ್ ಸರ್ಕಾರದ ಮೂಲಗಳು ಸಹ ಪೈಲಟ್ ಸೆರೆಹಿಡಿಯಲ್ಪಟ್ಟಿದ್ದಾನೆ ಎಂದು ಖಚಿತಪಡಿಸಿವೆ. ಈ ಮಧ್ಯೆ, ಅಮೆರಿಕದ ಪೈಲಟ್ ನ್ನು ಜೀವಂತವಾಗಿ ಸೆರೆಹಿಡಿದವರಿಗೆ ಅಮೂಲ್ಯ ಬಹುಮಾನ ನೀಡುವುದಾಗಿ ಇರಾನ್ನ ಸ್ಥಳೀಯ ಟಿವಿ ವಾಹಿನಿ ಘೋಷಿಸಿದೆ.
ಹುಬ್ಬಳ್ಳಿ : ಜಿಮ್ ತರಬೇತುದಾರನಿಗೆ ಹಲ್ಲೆ ನಡೆಸಿದ ಘಟನೆ ಹಳೆ ಹುಬ್ಬಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶುಕ್ರವಾರ ವರದಿಯಾಗಿದೆ. ಜಿಮ್ ನಲ್ಲಿ ಪರಿಚಯವಾಗಿದ್ದ ಯುವಕ-ಯುವತಿಯ ನಡುವಿನ ಸ್ನೇಹದ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಸಂಘ ಪರಿವಾರದ ಕಾರ್ಯಕರ್ತರು, ನಗರದ ವಿಜಯನಗರ ನಿವಾಸಿಯಾಗಿರುವ ಸಮೀರ್ ಎಂಬ ಯುವಕನನ್ನು ಹಳೆ ಹುಬ್ಬಳ್ಳಿ ಠಾಣೆ ಪೊಲೀಸರಿಗೆ ಒಪ್ಪಿಸಿದ್ದಾರೆ. ಯುವತಿ ಮತ್ತು ಸಮೀರ್ ನಡುವೆ ಜಿಮ್ ನಲ್ಲಿ ಪರಿಚಯವಾಗಿದ್ದು, ಅದನ್ನೇ ʼಲವ್ ಜಿಹಾದ್ʼ ಎಂದು ಆರೋಪಿಸಲಾಗಿದೆ. ಈ ಸಂಬಂಧ ಪ್ರತಿಕ್ರಿಯಿಸಿರುವ ಹುಬ್ಬಳ್ಳಿ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್, ಯುವಕನ ಮನೆ ಬಳಿ ಸುಮಾರು ಜನರು ಹೋಗಿ, ʼನಮ್ಮ ಹುಡುಗಿ ಜೊತೆ ಯಾಕೆ ನೀನು ಹೆಚ್ಚು ವಿಶ್ವಾಸದಿಂದ ಇದ್ದೀಯಾʼ ಎಂದು ಪ್ರಶ್ನೆ ಮಾಡಿದ ಸಂದರ್ಭದಲ್ಲಿ ಅಲ್ಲಿ ಸಂಘರ್ಷವಾಗಿದೆ. ಬಳಿಕ ಯುವಕನನ್ನು ಅಲ್ಲಿಂದ ಎಳೆದುಕೊಂಡು ಹೋಗಿದ್ದಾರೆ. ಈ ವೇಳೆ ಯುವಕನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಕಿಮ್ಸ್ ಗೆ ದಾಖಲಿಸಿದ್ದೇವೆ ಎಂದು ತಿಳಿಸಿದ್ದಾರೆ. ಯುವಕನನ್ನು ಎಳೆದುಕೊಂಡು ಹೋದ ಹಿನ್ನೆಲೆಯಲ್ಲಿ ಹುಡುಗನ ಕಡೆಯವರು ಹುಡುಗಿ ಮನೆ ಬಳಿ ಹೋಗಿದ್ದಾರೆ. ಅಲ್ಲಿಯೂ ಕೂಡ ಸಂಘರ್ಷ ನಡೆದಿದೆ. ಒಬ್ಬನಿಗೆ ಗಾಯಗಳಾಗಿದ್ದು, ಆತನನ್ನು ಆಸ್ಪತ್ರೆಗೆ ದಾಖಲು ಮಾಡಿದ್ದೇವೆ. ನಾವು ಈಗಾಗಲೇ ಕೆಲವರನ್ನು ವಶಕ್ಕೆ ಪಡೆದುಕೊಂಡಿದ್ದೇವೆ. ವೈಯಕ್ತಿಕ ಕಾರಣಗಳ ಹಿನ್ನೆಲೆಯಲ್ಲಿ ಈ ಸಂಘರ್ಷ ಆಗಿದೆ. ಹುಡುಗನ ಕಡೆಯವರು ಹೇಳುವ ಪ್ರಕಾರ ಹುಡುಗಿ ನಮಗೆ ಪರಿಚಯ ಎಲ್ಲ ಇತ್ತು, ಆದರೆ ಯಾಕೆ ಈ ರೀತಿ ಆಗಿದೆ ಅನ್ನೋದು ಗೊತ್ತಿಲ್ಲ ಎಂದು ಹೇಳಿದ್ದಾರೆ. ಮನೆಗಳ ಹತ್ತಿರ ಗುಂಪುಗಳಲ್ಲಿ ಹೋಗಿರುವುದು ತಪ್ಪು. ಅದಕ್ಕೆ ಅಗತ್ಯ ಕಾನೂನು ಕ್ರಮ ಕೈಗೊಳ್ಳುತ್ತೇವೆ. ಘಟನೆಗೆ ಸಂಬಂಧಿಸಿದಂತೆ ಬಣ್ಣ ಬೆಳೆಯುವಂತದ್ದು ಮಾಡಬಾರದು. ಅಲ್ಲಿ ಆಗಿರುವ ಘಟನೆಗೆ ಅನುಗುಣವಾಗಿ ಕಾನೂನು ಕ್ರಮವನ್ನು ಕೈಗೊಳ್ಳುತ್ತೇವೆ ಎಂದು ತಿಳಿಸಿದ್ದಾರೆ. ಈ ಸಂಬಂಧ ದೂರು ಪ್ರತಿದೂರು ದಾಖಲಾಗಿದ್ದು, ಸಮೀರ್ ನನ್ನು ಕರೆದುಕೊಂಡು ಹೋಗಿ ಥಳಿಸಿದ್ದಾರೆ ಎಂದು ಆರೋಪಿಸಿ ಯುವಕನ ಮನೆಯವರು ಅಶೋಕ್ ನಗರ ಠಾಣೆಗೆ ದೂರು ನೀಡಿದ್ದಾರೆ. ಇತ್ತ ಯುವತಿ ಮನೆಯವರು ವಿದ್ಯಾನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ ಎಂದು ತಿಳಿದು ಬಂದಿದೆ. ಎರಡೂ ಕುಟುಂಬಗಳು ಕಿಮ್ಸ್ಗೆ ದಾಖಲಾಗಿದ್ದು, ಆಸ್ಪತ್ರೆಗೆ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಭೇಟಿ ನೀಡಿ, ಎರಡು ಕುಟುಂಬಸ್ಥರಿಂದ ಮಾಹಿತಿ ಪಡೆದಿದ್ದಾರೆ. ►ಮತ್ತು ಬರುವ ಪಾನೀಯ ನೀಡಿ ಅತ್ಯಾಚಾರ: ಯುವತಿ ಆರೋಪ ಈ ಸಂಬಂಧ ವೀಡಿಯೊ ಹೇಳಿಕೆ ಬಿಡುಗಡೆ ಮಾಡಿರುವ ಸಂತ್ರಸ್ತ ಯುವತಿ, ಸಮೀರ್ನ ಅಕ್ಕ ನನ್ನ ಸ್ನೇಹಿತೆ. ಅವರಿಂದ ಸಮೀರ್ ಪರಿಚಯವಾಗಿತ್ತು. ಅವನ ಅಕ್ಕನ ಜೊತೆಗೆ ಹಲವಾರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದೇವೆ. ಬರ್ತ್ ಡೇ ಪಾರ್ಟಿ , ವೀಕೆಂಡ್ ಪಾರ್ಟಿಗೆ ಹೋಗಿದ್ದೆವು. ಆಗ ಸಮೀರ್ ಕೂಡ ಬಂದಿದ್ದ. ಇದಾದ ಮೇಲೆ ಸಮೀರ್ ಆತ್ಮೀಯನಾದ. ಒಂದು ದಿನ ಸಮೀರ್ ತನ್ನ ಮನೆಗೆ ಕರೆದುಕೊಂಡು ಹೋಗಿ ಅಲ್ಲಿ ಮತ್ತು ಬರುವ ಪಾನೀಯ ಕೊಟ್ಟು ನನ್ನ ಮೇಲೆ ಅತ್ಯಾಚಾರ ಮಾಡಿದ್ದಾನೆ. ಅಲ್ಲದೆ, ಅದನ್ನು ವೀಡಿಯೊ ಮಾಡಿದ್ದಾನೆ. ಇದು ನನಗೆ ಗೊತ್ತಿರಲಿಲ್ಲ. ವೀಡಿಯೊ ತೋರಿಸಿದ ಮೇಲೆ ನನಗೆ ಗೊತ್ತಾಯಿತು. ಆ ಮೇಲೆ ವೀಡಿಯೊ ಇಟ್ಟುಕೊಂಡು ಬ್ಲ್ಯಾಕ್ ಮೇಲ್ ಮಾಡಿ ನನಗೆ ಮೋಸ ಮಾಡಿದ್ದಾನೆ ಎಂದು ಯುವತಿ ಆರೋಪಿಸಿದ್ದಾಳೆ. ► ತಮ್ಮನ ಮೇಲೆ ಮಾರಣಾಂತಿಕ ಹಲ್ಲೆ : ಸಮೀರ್ ಸಹೋದರಿ ಈ ಕುರಿತು ಪ್ರತಿಕ್ರಿಯಿಸಿದ ಸಮೀರ್ ಸಹೋದರಿ, ಸಮೀರ್ ಜೊತೆಗೆ ಯುವತಿಗೆ ಸ್ನೇಹ ಇತ್ತು. ಇವರಿಬ್ಬರೂ ಮೂರು ವರ್ಷದಿಂದ ರಿಲೇಶನ್ ಶಿಪ್ ನಲ್ಲಿದ್ದಾರೆ. ಕೆಲವರು ನಮ್ಮ ಮನೆಗೆ ಬಂದು ನನ್ನ ತಮ್ಮನನ್ನು ಅಪಹರಣ ಮಾಡಿದ್ದಾರೆ. ಯುವತಿಯ ಕುಟುಂಬಸ್ಥರು ನಮ್ಮೊಂದಿಗೆ ಅನ್ಯೋನ್ಯವಾಗಿದ್ದರು. ನಾವೆಲ್ಲ ಸೇರಿಯೇ ಪ್ರವಾಸಕ್ಕೆ, ಶಾಪಿಂಗ್ ಗೆ ಹೋಗುತ್ತಿದ್ದೆವು. ನನ್ನ ತಮ್ಮನನ್ನು ಬೆಳಗ್ಗೆ 7 ಗಂಟೆಗೆ ಅಪಹರಣ ಮಾಡಿದ್ದಾರೆ. ತಮ್ಮನ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ. ಅವನಿಗಾಗಿ ಎಲ್ಲಾ ಕಡೆಗಳಲ್ಲೂ ಹುಡುಕಿದ್ದೇವೆ. ದನದ ಶೆಡ್ಡಿಗೆ ಕರೆದು ನೂರು ಜನರಿಂದ ಹಲ್ಲೆ ಮಾಡಲಾಗಿದೆ. ಅನಂತರ ನಾವು ಹುಡುಗಿಯ ಮನೆಗೆ ಸಹ ಹೋಗಿದ್ದೆವು. ಯುವತಿಯ ಮನೆ ಬಳಿ ಗಲಾಟೆ ಆಗಿದೆ. ಯುವತಿಯ ಮನೆಯವರು ಮೊದಲೆಲ್ಲ ನಮ್ಮ ಮನೆಗೆ ಬಂದು ಹೋಗಿದ್ದಾರೆ. ನಮ್ಮ ತಾಯಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಘಟನೆ ಹಿನ್ನೆಲೆ ಎಲ್ಲರೂ ಆತಂಕದಲ್ಲಿದ್ದಾರೆ. ತಮ್ಮನನ್ನು ಅಪಹರಿಸಿದ ಹಿನ್ನೆಲೆ ನಾವು ಈಗಾಗಲೇ ದೂರು ದಾಖಲಿಸಿದ್ದೇವೆ ಎಂದು ಹೇಳಿದ್ದಾರೆ.
ನಾನು ಹೇಳಿದರೆ ಇಸ್ರೇಲ್ ದಾಳಿ ನಿಲ್ಲಿಸುತ್ತದೆ: ಟ್ರಂಪ್
ವಾಶಿಂಗ್ಟನ್, ಎ.3: ಇರಾನ್ನೊಂದಿಗೆ ನಡೆಯುತ್ತಿರುವ ಸಂಘರ್ಷದ ಮೇಲೆ ತಾನು ಬಲವಾದ ನಿಯಂತ್ರಣ ಹೊಂದಿರುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಇಸ್ರೇಲ್ ತನ್ನ ನಿರ್ಧಾರಗಳಿಗೆ ಅನುಗುಣವಾಗಿ ಕಾರ್ಯನಿರ್ವಹಿಸುತ್ತದೆ ಎಂದು ಅವರು ಪ್ರತಿಪಾದಿಸಿದ್ದಾರೆ. ‘ನಾನು ಹೇಳಿದುದನ್ನೇ ಅವರು ಮಾಡುತ್ತಾರೆ. ಅವರು ಉತ್ತಮ ಟೀಮ್ ಪ್ಲೇಯರ್ ಗಳು. ನಾನು ನಿಲ್ಲಿಸಿದಾಗ ಅವರು ಕೂಡ ನಿಲ್ಲಿಸುತ್ತಾರೆ. ಅವರನ್ನು ಪ್ರಚೋದಿಸದಿದ್ದರೆ ಅವರು ನಿಲ್ಲುತ್ತಾರೆ. ಈ ಸಂದರ್ಭದಲ್ಲಿ ಅವರಿಗೆ ಬೇರೆ ಆಯ್ಕೆಗಳಿಲ್ಲ; ನಾನು ನಿಲ್ಲಿಸಿದಾಗ ಅವರು ಕೂಡ ನಿಲ್ಲಿಸಬೇಕು’ ಎಂದು ಟ್ರಂಪ್ ಹೇಳಿರುವುದಾಗಿ ವರದಿಯಾಗಿದೆ.
ಹಾರ್ಮುಝ್ ಜಲಸಂಧಿಯಲ್ಲಿ ವಿಶ್ವಸಂಸ್ಥೆ ಮಿಲಿಟರಿ ಕ್ರಮಕ್ಕೆ ರಷ್ಯ, ಚೀನಾ, ಫ್ರಾನ್ಸ್ ವಿರೋಧ
ವಿಶ್ವಸಂಸ್ಥೆ, ಎ.3: ಹಾರ್ಮುಝ್ ಜಲಸಂಧಿಯನ್ನು ಪುನಃ ತೆರೆಯಲು ಮಿಲಿಟರಿ ಕ್ರಮಕ್ಕಾಗಿ ಅಂತರರಾಷ್ಟ್ರೀಯ ಬೆಂಬಲವನ್ನು ಪಡೆಯುವ ಗುರಿಯನ್ನು ಹೊಂದಿರುವ ಅರಬ್ ಉಪಕ್ರಮವನ್ನು ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ರಷ್ಯ, ಚೀನಾ ಮತ್ತು ಫ್ರಾನ್ಸ್ ತಡೆಯಿವೆ ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ. ಹಾರ್ಮುಝ್ ಜಲಸಂಧಿಯಲ್ಲಿ ಭದ್ರತೆ ಖಾತರಿಪಡಿಸುವ ಪ್ರಸ್ತಾಪವನ್ನು ಒಳಗೊಂಡಿರುವ ಕರಡು ನಿರ್ಣಯದಲ್ಲಿನ ಕೆಲವು ಅಂಶಗಳ ಬಗ್ಗೆ ರಷ್ಯ ಮತ್ತು ಚೀನಾ ಆಕ್ಷೇಪ ಎತ್ತಿದ ಬಳಿಕ ಪರಿಷ್ಕರಣೆ ಮಾಡಲಾಗಿದೆ ಎಂದು ವರದಿ ಹೇಳಿದೆ. ಆರಂಭಿಕ ಕರಡು ನಿರ್ಣಯವು ಹಾರ್ಮುಝ್ ಜಲಸಂಧಿ, ಗಲ್ಫ್ ಮತ್ತು ಒಮಾನ್ ಕೊಲ್ಲಿಯಲ್ಲಿ ಮಾರ್ಗವನ್ನು ಸುರಕ್ಷಿತಗೊಳಿಸಲು ಮತ್ತು ಸಂಚಾರದಲ್ಲಿ ಹಸ್ತಕ್ಷೇಪದ ಪ್ರಯತ್ನಗಳನ್ನು ತಡೆಯಲು ಎಲ್ಲಾ ‘ಅಗತ್ಯ ವಿಧಾನಗಳನ್ನು ಬಳಸಲು’ (ಸಂಭಾವ್ಯ ಮಿಲಿಟರಿ ಕ್ರಮಗಳನ್ನು ಒಳಗೊಂಡಂತೆ) ದೇಶಗಳಿಗೆ ಅವಕಾಶ ನೀಡುತ್ತಿತ್ತು. ಆದರೆ ವೀಟೊ ಅಧಿಕಾರ ಹೊಂದಿರುವ ರಷ್ಯ, ಚೀನಾ ಮತ್ತು ಫ್ರಾನ್ಸ್ ‘ಬಲ ಪ್ರಯೋಗ’ದ ಉಲ್ಲೇಖವನ್ನು ವಿರೋಧಿಸಿವೆ. ಪರಿಷ್ಕರಿಸಿದ ಕರಡು ನಿರ್ಣಯದಲ್ಲಿ ‘ಆಕ್ರಮಣಕಾರಿ ಮಿಲಿಟರಿ ಕ್ರಮವನ್ನು ಅನುಮತಿಸುವ’ ಉಲ್ಲೇಖವನ್ನು ತೆಗೆದುಹಾಕಲಾಗಿದೆ. ಹಾರ್ಮುಝ್ ಜಲಸಂಧಿ ಹಾಗೂ ಪಕ್ಕದ ನೀರಿನಲ್ಲಿ ಸಂದರ್ಭಕ್ಕೆ ಅನುಗುಣವಾಗಿ ಎಲ್ಲಾ ರಕ್ಷಣಾತ್ಮಕ ವಿಧಾನಗಳನ್ನು ಬಳಸಲು ಮತ್ತು ಕನಿಷ್ಠ 6 ತಿಂಗಳ ಅವಧಿಗೆ ಅಂತಾರಾಷ್ಟ್ರೀಯ ಸಂಚಾರದಲ್ಲಿ ಹಸ್ತಕ್ಷೇಪಗಳನ್ನು ತಡೆಯಲು ಅವಕಾಶ ನೀಡಲಾಗಿದೆ.
ಅಮೆರಿಕದಲ್ಲಿ ʼತಲೆದಂಡʼ | ಮುಂದಿನ ಸರದಿ ಕಾಶ್ ಪಟೇಲ್, ತುಳಸಿ ಗ್ಯಾಬರ್ಡ್?
ವಾಶಿಂಗ್ಟನ್: ಟ್ರಂಪ್ ಆಡಳಿತದ ಉನ್ನತ ಸ್ತರದಲ್ಲಿ ಅನಿಶ್ಚಿತತೆ ತಾಂಡವವಾಡುತ್ತಿದ್ದು, ಮುಂದಿನ ಸುತ್ತಿನಲ್ಲಿ ಅಧ್ಯಕ್ಷ ಟ್ರಂಪ್ ಎಫ್ಬಿಐ ನಿರ್ದೇಶಕ ಕಾಶ್ ಪಟೇಲ್ ಮತ್ತು ನ್ಯಾಶನಲ್ ಇಂಟೆಲಿಜನ್ಸ್ ನಿರ್ದೇಶಕಿ ತುಳಸಿ ಗ್ಯಾಬರ್ಡ್ ಅವರನ್ನು ವಜಾಗೊಳಿಸುವ ಸಾಧ್ಯತೆ ಬಗ್ಗೆ ಊಹಾಪೋಹಗಳು ಹರಡಿವೆ. ಮುಂದಿನ ಸುತ್ತಿನಲ್ಲಿ ಕಾಶ್ ಪಟೇಲ್, ಸೇನಾ ಕಾರ್ಯದರ್ಶಿ ಡೇನಿಯಲ್ ಡ್ರಿಸ್ಕೋಲ್ ಮತ್ತು ಕಾರ್ಮಿಕ ಕಾರ್ಯದರ್ಶಿ ಲೋರಿ ಚವೇಝ್-ಡೆರೆಮರ್ ಅವರನ್ನು ವಜಾಗೊಳಿಸುವ ಸಾಧ್ಯತೆ ಕುರಿತು ಆಂತರಿಕ ವಲಯದಲ್ಲಿ ಮಾತುಕತೆಗಳು ನಡೆಯುತ್ತಿವೆ ಎಂದು ‘ದ ಅಟ್ಲಾಂಟಿಕ್’ ವರದಿ ತಿಳಿಸಿದೆ. ಆದರೆ ಇದು ಯಾವಾಗ ಸಂಭವಿಸುತ್ತದೆ ಎಂಬ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ. ಈ ವಿಷಯದಲ್ಲಿ ಅಧ್ಯಕ್ಷ ಟ್ರಂಪ್ ಇನ್ನೂ ಅಂತಿಮ ನಿರ್ಧಾರ ಕೈಗೊಂಡಿಲ್ಲ ಎಂದು ಮೂಲಗಳನ್ನು ಉಲ್ಲೇಖಿಸಿ ವರದಿ ಹೇಳಿದೆ. ಇವರ ಕಾರ್ಯನಿರ್ವಹಣೆಯ ಮೇಲೂ ಟ್ರಂಪ್ ಅತೃಪ್ತಿ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ‘‘ಸಂಪೂರ್ಣ ಪುನರ್ರಚನೆ’’ಯ ಭಾಗವಾಗಿ ಪಟೇಲ್ ಅವರನ್ನು ತಕ್ಷಣವೇ ವಜಾಗೊಳಿಸುವ ಸಾಧ್ಯತೆ ಇದೆ ಎಂದು ಕನ್ಸರ್ವೇಟಿವ್ ವೀಕ್ಷಕ ಕೈಲ್ ಸೆರಾಫಿನ್ ತಿಳಿಸಿದ್ದಾರೆ.

31 C