SENSEX
NIFTY
GOLD
USD/INR

Weather

32    C
...

ಪ್ರಜ್ಞಾಹೀನ ಸ್ಥಿತಿಯಲ್ಲಿ ಇರಾನ್‌ನ ನೂತನ ಸರ್ವೋಚ್ಚ ನಾಯಕ ಮೊಜ್ತಬಾ ಖಾಮಿನೈ: The Times ವರದಿ

ಟೆಹ್ರಾನ್: ಇರಾನಿನ ನೂತನ ಸರ್ವೋಚ್ಚ ನಾಯಕ ಮೊಜ್ತಬಾ ಖಾಮಿನೈ ಅವರು ಪ್ರಜ್ಞಾಹೀನ ಸ್ಥಿತಿಯಲ್ಲಿ ಇರಾನ್‌ನ ಕೋಮ್‌ ಎಂಬಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು The Times ವರದಿ ಮಾಡಿದೆ. ಆದರೆ, ಈ ಬಗ್ಗೆ ಇರಾನ್‌ ಸರಕಾರ ಯಾವುದೇ ಅಧಿಕೃತ ಪ್ರಕಟಣೆ ನೀಡಿಲ್ಲ.     ಅಮೆರಿಕ ಮತ್ತು ಇಸ್ರೇಲ್ ಗುಪ್ತಚರ ಮಾಹಿತಿಯನ್ನು ಉಲ್ಲೇಖಿಸಿ ‘ದಿ ಟೈಮ್ಸ್’ ಮಂಗಳವಾರ ಈ ಮಾಹಿತಿ ಪ್ರಕಟಿಸಿದೆ. ಖಾಮಿನೈ ಗಂಭೀರ ಸ್ಥಿತಿಯಲ್ಲಿದ್ದು, ಪ್ರಜ್ಞಾಹೀನರಾಗಿದ್ದಾರೆ ಎನ್ನಲಾಗಿದೆ. ಈ ಮಾಹಿತಿಯನ್ನು ಗಲ್ಫ್ ಮಿತ್ರ ರಾಷ್ಟ್ರಗಳೊಂದಿಗೆ ಹಂಚಿಕೊಳ್ಳಲಾಗಿದೆ ಎಂದು ವರದಿ ಹೇಳಿದೆ. ಖಾಮಿನೈ ಅವರ ಸ್ಥಳವನ್ನು ಸ್ಪಷ್ಟವಾಗಿ ಉಲ್ಲೇಖಿಸಿರುವ ಮೊದಲ ದಾಖಲೆ ಇದಾಗಿರಬಹುದು ಎಂಬುದೂ ಉಲ್ಲೇಖವಾಗಿದೆ. ಫೆಬ್ರವರಿ 28ರಂದು ಇಸ್ರೇಲ್ ಮತ್ತು ಅಮೆರಿಕದ ದಾಳಿಗಳಲ್ಲಿ ಆಯತುಲ್ಲಾ ಅಲಿ ಖಾಮಿನೈ ಅವರು ಮೃತಪಟ್ಟ ಬಳಿಕ, ಅವರ ಉತ್ತರಾಧಿಕಾರಿಯಾಗಿ ಮೊಜ್ತಬಾ ಖಾಮಿನೈ ಅಧಿಕಾರ ವಹಿಸಿಕೊಂಡಿದ್ದರು. ಪ್ರಸಕ್ತ ಅವರ ಆರೋಗ್ಯದ ಬಗ್ಗೆ ಹೊರಬಂದಿರುವ ವರದಿಗಳು, ಯುದ್ಧದ ವೇಳೆಯಲ್ಲಿ ಆಡಳಿತದ ಸ್ಥಿರತೆ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿವೆ. ಇರಾನಿನ ಅಧಿಕಾರಿಗಳು ಖಾಮಿನೈ ಇನ್ನೂ ಅಧಿಕಾರದಲ್ಲೇ ಇದ್ದಾರೆ ಎಂದು ಹೇಳುತ್ತಿದ್ದರೂ, ಸಂಘರ್ಷ ಆರಂಭವಾದ ಬಳಿಕ ಅವರು ಸಾರ್ವಜನಿಕವಾಗಿ ಕಾಣಿಸಿಕೊಳ್ಳದಿರುವುದು ಊಹಾಪೋಹಗಳಿಗೆ ಕಾರಣವಾಗಿದೆ. ಹಲವಾರು ವಾರಗಳಿಂದ ಖಾಮಿನೈ ಆಡಳಿತ ನಡೆಸಲು ಅಸಮರ್ಥರಾಗಿದ್ದಾರೆ ಎಂಬ ಮಾಹಿತಿಯೂ ಹಂಚಿಕೆಯಾಗಿದೆ. ಈ ಪರಿಸ್ಥಿತಿ ಮುಂದುವರಿದರೆ, ಇಸ್ಲಾಮಿಕ್ ಕ್ರಾಂತಿಕಾರಿ ಗಾರ್ಡ್ ಕಾರ್ಪ್ಸ್ (ಐಆರ್‌ಜಿಸಿ) ವಾಸ್ತವಿಕ ನಿಯಂತ್ರಣ ವಹಿಸಿಕೊಂಡಿದೆಯೇ ಎಂಬ ಪ್ರಶ್ನೆಗಳು ಮತ್ತಷ್ಟು ಗಂಭೀರಗೊಳ್ಳುವ ಸಾಧ್ಯತೆ ಇದೆ. ಯುದ್ಧ ಆರಂಭವಾದ ಬಳಿಕ ಇರಾನಿನ ಸರಕಾರಿ ಟಿವಿಯಲ್ಲಿ ಖಾಮಿನೈ ಅವರ ಹೆಸರಿನಲ್ಲಿ ಎರಡು ಹೇಳಿಕೆಗಳನ್ನು ಪ್ರಸಾರ ಮಾಡಲಾಗಿದೆ. ಆದರೆ ಅವರ ನೇರ ಧ್ವನಿ ಅಥವಾ ವೀಡಿಯೊ ಯಾವುದೂ ಬಿಡುಗಡೆಯಾಗಿಲ್ಲ ಎಂದು ವರದಿ ಹೇಳಿದೆ.

ವಾರ್ತಾ ಭಾರತಿ 7 Apr 2026 12:15 pm

ಗ್ಯಾಸ್ ಇಲ್ಲದಿದ್ದರೆ ಪೆಟ್ರೋಲ್ ಹಾಕಿ ಓಡಿಸಿ - ಪ್ರಲ್ಹಾದ್ ಜೋಶಿ : ಕೇಂದ್ರ ಸಚಿವರಿಗೆ ಕಾಂಗ್ರೆಸ್ 3 ಪ್ರಶ್ನೆಗಳು

Use Petrol instead of Gas : ಆಟೋ ಚಾಲಕರು ಗ್ಯಾಸ್ ಸಮಸ್ಯೆ ಇದ್ದರೆ ಪೆಟ್ರೋಲ್ ಬಳಸಿಕೊಳ್ಳಿ ಎನ್ನುವ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿಕೆಗೆ ಕಾಂಗ್ರೆಸ್ ತಿರುಗೇಟು ನೀಡಿದೆ. ಮೂರು ಪ್ರಶ್ನೆಗಳನ್ನು ಕಾಂಗ್ರೆಸ್, ಸಚಿವರಿಗೆ ಕೇಳಿದೆ. ಬ್ರೆಡ್ ಇಲ್ಲದಿದ್ದರೆ, ಕೇಕ್ ತಿನ್ನಿ ಎನ್ನುವಂತಾಯಿತು ಸಚಿವರ ಅಭಿಪ್ರಾಯ ಎಂದು ಕಾಂಗ್ರೆಸ್ ವಕ್ತಾರರು ವ್ಯಂಗ್ಯವಾಡಿದ್ದಾರೆ.

ವಿಜಯ ಕರ್ನಾಟಕ 7 Apr 2026 11:56 am

ಮಧ್ಯಪ್ರಾಚ್ಯದ ಯುದ್ಧದ ಬೆಂಕಿ ತಣಿಯುವುದೆಂದು?

ಅಮೆರಿಕ ತನ್ನ ಆಧಿಪತ್ಯವನ್ನು ಉಳಿಸಿಕೊಳ್ಳಲು ನಡೆಸುತ್ತಿರುವ ಪ್ರಯತ್ನವು ಜಾಗತಿಕವಾಗಿ ಅನಿಶ್ಚಿತತೆಯನ್ನು ಸೃಷ್ಟಿಸಿದೆ. ಈ ಯುದ್ಧವು ಒಂದು ದೊಡ್ಡ ಪ್ರಮಾಣದ ವಿಶ್ವ ಸಮರಕ್ಕೆ ನಾಂದಿಯಾಗುವ ಮೊದಲು ರಾಜತಾಂತ್ರಿಕ ಮಾತುಕತೆಗಳ ಮೂಲಕ ಶಾಂತಿ ಸ್ಥಾಪನೆಯಾಗುವುದು ಇಂದಿನ ತುರ್ತು ಅಗತ್ಯವಾಗಿದೆ. ಅಧಿಕಾರದ ಹಪಾಹಪಿಯಲ್ಲಿ ಮುಗ್ಧ ಜೀವಗಳು ಮತ್ತು ರಾಷ್ಟ್ರದ ಸಂಪತ್ತು ಬಲಿಯಾಗುತ್ತಿರುವುದು ಈ ಹೊತ್ತಿನ ಮಹಾ ದುರಂತ. ಇರಾನ್ ಮತ್ತು ಇಸ್ರೇಲ್ ನಡುವಿನ ಸಂಘರ್ಷವು ಇಂದು ಕೇವಲ ಪ್ರಾದೇಶಿಕ ಯುದ್ಧವಾಗಿ ಉಳಿಯದೆ, ಜಾಗತಿಕ ರಾಜಕೀಯ ಮತ್ತು ಮಿಲಿಟರಿ ಶಕ್ತಿಯ ಸಮತೋಲನವನ್ನೇ ಅಲುಗಾಡಿಸುತ್ತಿದೆ. ಅಮೆರಿಕದ ಬೆಂಬಲದೊಂದಿಗೆ ಇಸ್ರೇಲ್ ನಡೆಸುತ್ತಿರುವ ದಾಳಿಗಳು ಇರಾನ್ ಅನ್ನು ಸಂಪೂರ್ಣವಾಗಿ ಹತ್ತಿಕ್ಕುವ ಗುರಿಯನ್ನು ಹೊಂದಿವೆಯೇ ಅಥವಾ ಇದು ಕೇವಲ ಮಧ್ಯಪ್ರಾಚ್ಯದಲ್ಲಿ ತನ್ನ ಅಧಿಪತ್ಯವನ್ನು ಸ್ಥಾಪಿಸುವ ಹಠಮಾರಿ ಧೋರಣೆಯೇ ಎಂಬ ಬಲವಾದ ಪ್ರಶ್ನೆಗಳು ಈಗ ಎದ್ದಿವೆ. ಯುದ್ಧವು ಐದನೇ ವಾರಕ್ಕೆ ಕಾಲಿಡುತ್ತಿರುವಾಗ, ಇರಾನ್‌ನ ವಾಯುಪಡೆ ಮತ್ತು ರಕ್ಷಣಾ ವ್ಯವಸ್ಥೆಯನ್ನು ಸಂಪೂರ್ಣವಾಗಿ ಧ್ವಂಸಗೊಳಿಸಿದ್ದೇವೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಅವರ ರಕ್ಷಣಾ ಕಾರ್ಯದರ್ಶಿಗಳು ಪದೇ ಪದೇ ಹೇಳುತ್ತಿರುವುದು ಎಷ್ಟು ನಿಜ? ಇರಾನ್‌ನ ಆಕಾಶ ಈಗ ಅಮೆರಿಕದ ನಿಯಂತ್ರಣದಲ್ಲಿದೆ ಎಂಬ ವಾದಕ್ಕೆ ಕಳೆದ ದಿನಗಳಲ್ಲಿ ನಡೆದ ಘಟನೆಗಳು ಸವಾಲೊಡ್ಡುತ್ತಿವೆಯೇ? ಇರಾನ್ ತನ್ನ ಭೂಗತ ಬಂಕರ್‌ಗಳು ಮತ್ತು ಮೊಬೈಲ್ ಮಿಸೈಲ್ ಲಾಂಚರ್‌ಗಳ ಮೂಲಕ ಅಮೆರಿಕದ ಅತ್ಯಾಧುನಿಕ ಯುದ್ಧ ವಿಮಾನಗಳನ್ನು ಹೊಡೆದುರುಳಿಸುತ್ತಿರುವುದು ಜಾಗತಿಕ ಮಿಲಿಟರಿ ತಂತ್ರಗಾರಿಕೆಯಲ್ಲಿ ದೊಡ್ಡ ಸಂಚಲನವನ್ನು ಮೂಡಿಸಿದೆ. ಇದು ಕೇವಲ ಶಸ್ತ್ರಾಸ್ತ್ರಗಳ ಹೋರಾಟವಲ್ಲ, ಬದಲಾಗಿ ಒಂದು ದೇಶದ ಅಸ್ತಿತ್ವ ಮತ್ತು ಹಠದ ಹೋರಾಟವಾಗಿ ಮಾರ್ಪಟ್ಟಿದೆ. ಅಮೆರಿಕ ಮತ್ತು ಇಸ್ರೇಲ್ ಈ ಯುದ್ಧದ ಆರಂಭದಲ್ಲಿ ಅಂದುಕೊಂಡಿದ್ದಕ್ಕಿಂತ ಹೆಚ್ಚಿನ ಹಾನಿಯನ್ನು ಅನುಭವಿಸುತ್ತಿವೆ ಎಂಬುದು ಈಗ ಸ್ಪಷ್ಟವಾಗುತ್ತಿದೆ. ಪೆಂಟಗಾನ್ ಮತ್ತು ಸೆಂಟ್ರಲ್ ಕಮಾಂಡ್ ಹೊರಹಾಕುತ್ತಿರುವ ಅಧಿಕೃತ ಅಂಕಿಅಂಶಗಳಿಗಿಂತಲೂ ವಾಸ್ತವ ಸ್ಥಿತಿ ಭೀಕರವಾಗಿದೆ ಎಂದು ಸ್ವತಂತ್ರ ಮಾಧ್ಯಮಗಳು ವರದಿ ಮಾಡುತ್ತಿವೆ. ಅಮೆರಿಕದ ಹೆಮ್ಮೆಯ ಎಫ್-15 ಇ ಮತ್ತು ಎಫ್-35 ಸ್ಟೆಲ್ತ್ ಜೆಟ್‌ಗಳು ಇರಾನ್‌ನ ದಾಳಿಗೆ ತುತ್ತಾಗಿರುವುದು ಜಾಗತಿಕ ರಕ್ಷಣಾ ವಲಯದಲ್ಲಿ ಆತಂಕ ಮೂಡಿಸಿದೆ. ಕುವೈತ್ ಏರ್ ಡಿಫೆನ್ಸ್‌ನ ಫ್ರೆಂಡ್ಲಿ ಫೈರ್‌ನಿಂದ ಕೆಲವು ವಿಮಾನಗಳು ನಾಶವಾದರೆ, ಇರಾನ್ ಗಡಿಯೊಳಗೆ ಇತ್ತೀಚೆಗೆ ಹೊಡೆದುರುಳಿಸಲಾದ ವಿಮಾನಗಳು ಇರಾನ್‌ನ ರಕ್ಷಣಾ ವ್ಯವಸ್ಥೆ ಇನ್ನೂ ಸಜೀವವಾಗಿದೆ ಎಂಬುದಕ್ಕೆ ಸಾಕ್ಷಿಯಾಗಿವೆ. ಸುಮಾರು ಎರಡು ಬಿಲಿಯನ್ ಡಾಲರ್‌ಗೂ ಅಧಿಕ ಮೌಲ್ಯದ ವಾಯುಯಾನ ಉಪಕರಣಗಳು ಈ ಯುದ್ಧದಲ್ಲಿ ಬಲಿಯಾಗಿವೆ. ಇದಲ್ಲದೆ, ಸೌದಿ ಅರೇಬಿಯ ಮತ್ತು ಗಲ್ಫ್ ಪ್ರದೇಶದ ಅಮೆರಿಕನ್ ಮಿಲಿಟರಿ ಬೇಸ್‌ಗಳ ಮೇಲೆ ನಡೆದ ದಾಳಿಗಳು ಅಲ್ಲಿನ ಮೂಲಸೌಕರ್ಯಗಳನ್ನು ಸಂಪೂರ್ಣವಾಗಿ ಅಸ್ತವ್ಯಸ್ತ ಮಾಡಿವೆ. ಸುಮಾರು 1.1 ಬಿಲಿಯನ್ ಡಾಲರ್ ಮೌಲ್ಯದ ರಾಡಾರ್ ವ್ಯವಸ್ಥೆಗಳು ಧ್ವಂಸಗೊಂಡಿರುವುದು ಅಮೆರಿಕದ ಕಣ್ಗಾವಲು ವ್ಯವಸ್ಥೆಗೆ ಬಿದ್ದ ದೊಡ್ಡ ಹೊಡೆತವಾಗಿದೆ. ಈ ಯುದ್ಧದಲ್ಲಿ ಅಮೆರಿಕ ಮತ್ತು ಇಸ್ರೇಲ್ ಅನುಭವಿಸಿರುವ ಆರ್ಥಿಕ ಹಾಗೂ ಮಿಲಿಟರಿ ನಷ್ಟದ ಅಂಕಿಅಂಶಗಳು ಬೆಚ್ಚಿಬೀಳಿಸುವಂತಿವೆ. ಪೆಂಟಗಾನ್ ವರದಿ ಮತ್ತು ಅಂತರ್‌ರಾಷ್ಟ್ರೀಯ ಮಾಧ್ಯಮಗಳ ಪ್ರಕಾರ, ಕಳೆದ ಐದು ವಾರಗಳಲ್ಲಿ ಕನಿಷ್ಠ 15 ಅಮೆರಿಕನ್ ಸೈನಿಕರು ಮೃತಪಟ್ಟಿದ್ದು, 140ರಿಂದ 520 ಕ್ಕೂ ಹೆಚ್ಚು ಸೈನಿಕರು ತೀವ್ರವಾಗಿ ಗಾಯಗೊಂಡಿದ್ದಾರೆ. ವಾಯುಪಡೆಯ ನಷ್ಟವನ್ನು ಗಮನಿಸಿದರೆ, ಸುಮಾರು 3 ಎಫ್-15 ಇ ಸ್ರ್ಟೈಕ್ ಈಗಲ್ ಯುದ್ಧ ವಿಮಾನಗಳು, ಒಂದು ಎಫ್-35 ಸ್ಟೆಲ್ತ್ ಜೆಟ್ ಮತ್ತು ಇಂಧನ ಪೂರೈಸುವ ಒಂದು ಕೆಸಿ-135 ಟ್ಯಾಂಕರ್ ಧ್ವಂಸಗೊಂಡಿವೆ. ಇರಾನ್‌ನ ಸತತ ದಾಳಿಯಿಂದಾಗಿ ಸುಮಾರು 15 ಎಂ. ಕ್ಯೂ-9 ರೀಪರ್ ಡ್ರೋನ್‌ಗಳು ಪತನಗೊಂಡಿದ್ದು, ಕೇವಲ ವಾಯುಯಾನ ಸಲಕರಣೆಗಳ ನಷ್ಟವೇ 2 ಬಿಲಿಯನ್ ಡಾಲರ್‌ಗಳನ್ನು ಮೀರಿದೆ. ಇದಲ್ಲದೆ, ಗಲ್ಫ್ ಪ್ರದೇಶದಲ್ಲಿನ ಅಮೆರಿಕದ ಮಿಲಿಟರಿ ಬೇಸ್‌ಗಳ ಮೂಲಸೌಕರ್ಯ ಹಾನಿಯು 800 ಮಿಲಿಯನ್ ಡಾಲರ್‌ಗಳಷ್ಟಾಗಿದ್ದು, ಅಲ್ಲಿನ ಅತ್ಯಾಧುನಿಕ 1.1 ಬಿಲಿಯನ್ ಡಾಲರ್ ಮೌಲ್ಯದ ರಾಡಾರ್ ವ್ಯವಸ್ಥೆಯು ಸಂಪೂರ್ಣವಾಗಿ ನಾಶವಾಗಿದೆ. ಈ ಯುದ್ಧದ ಒಟ್ಟಾರೆ ನಿರ್ವಹಣಾ ವೆಚ್ಚವು ಪ್ರತಿದಿನ 1 ರಿಂದ 2 ಬಿಲಿಯನ್ ಡಾಲರ್‌ಗಳಷ್ಟು ಅಮೆರಿಕದ ಬೊಕ್ಕಸಕ್ಕೆ ಹೊರೆಯಾಗುತ್ತಿದೆ ಎಂದು ಅಂದಾಜಿಸಲಾಗಿದೆ. ಇರಾನ್ ಈ ಯುದ್ಧದಲ್ಲಿ ತನ್ನದೇ ಆದ ವಿಶಿಷ್ಟ ತಂತ್ರಗಾರಿಕೆಯನ್ನು ಅಳವಡಿಸಿಕೊಂಡಿದೆ. ರಶ್ಯದ ತಾಂತ್ರಿಕ ನೆರವಿನೊಂದಿಗೆ ಇರಾನ್ ನೂರಾರು ಮಿಸೈಲ್ ಮತ್ತು ಡ್ರೋನ್‌ಗಳನ್ನು ಬಳಸಿ ನಡೆಸುತ್ತಿರುವ ಕಡಿಮೆ ಎತ್ತರದ ದಾಳಿಗಳು ಅಮೆರಿಕದ ಹೈ-ಟೆಕ್ ರಡಾರ್‌ಗಳನ್ನು ಕಣ್ತಪ್ಪಿಸುತ್ತಿವೆ. ಭೂಮಿಯ ಆಳದಲ್ಲಿ ನಿರ್ಮಿಸಲಾದ ಬಂಕರ್‌ಗಳಿಂದ ಹಠಾತ್ ದಾಳಿ ನಡೆಸಿ ಮತ್ತೆ ಮಾಯವಾಗುವ ಇರಾನ್‌ನ ಶೈಲಿಯು ಅಮೆರಿಕದ ವಾಯುಪಡೆಗೆ ಸಿಗದಂತಾಗಿದೆ. ಗಲ್ಫ್‌ನ 13ಕ್ಕೂ ಹೆಚ್ಚು ಮಿಲಿಟರಿ ಬೇಸ್‌ಗಳು ಈ ದಾಳಿಗೆ ಗುರಿಯಾಗಿದ್ದು, ಅಲ್ಲಿನ ರನ್‌ವೇಗಳು ಮತ್ತು ಸಂಪರ್ಕ ಸಾಧನಗಳು ತೀವ್ರವಾಗಿ ಹಾನಿಗೊಳಗಾಗಿವೆ. ಇದರಿಂದಾಗಿ ಅಮೆರಿಕ ಈಗ ತನ್ನ ವಿಮಾನಗಳಿಗೆ ಇಂಧನ ತುಂಬಿಸಲು ಗಲ್ಫ್ ಬೇಸ್‌ಗಳನ್ನು ಬಿಟ್ಟು ಇಸ್ರೇಲ್‌ನ ಟೆಲ್ ಅವೀವ್‌ನಂತಹ ಪ್ರದೇಶಗಳನ್ನು ಅವಲಂಬಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಈ ಹಣಕಾಸಿನ ಹೊರೆ ದಿನಕ್ಕೆ ಒಂದರಿಂದ ಎರಡು ಬಿಲಿಯನ್ ಡಾಲರ್‌ಗಳಷ್ಟಾಗುತ್ತಿದ್ದು, ಇದು ಅಮೆರಿಕದ ಆರ್ಥಿಕತೆಯ ಮೇಲೆ ಭಾರೀ ಹೊರೆಯಾಗುತ್ತಿದೆ. ಜೊತೆಗೆ ಅಲ್ಲಿನ ನಾಗರಿಕರಲ್ಲಿ ತೀವ್ರ ಅಸಮಾಧಾನವನ್ನು ಉಂಟುಮಾಡುತ್ತಿದೆ. ತಂತ್ರಜ್ಞಾನ ಎಷ್ಟೇ ಮುಂದುವರಿದಿದ್ದರೂ ಪ್ರಾದೇಶಿಕ ಭೌಗೋಳಿಕ ಜ್ಞಾನ ಮತ್ತು ಹಠಾತ್ ದಾಳಿ ತಂತ್ರಗಳು ದೊಡ್ಡ ಶಕ್ತಿಗಳನ್ನೇ ಹಣ್ಣುಗಾಯಿಯಾಗಿಸಬಲ್ಲವು ಎಂಬುದು ಸಾಬೀತಾಗುತ್ತಿದೆ. ಇರಾನ್‌ನ ವಾಯುಪ್ರದೇಶವನ್ನು ಸಂಪೂರ್ಣವಾಗಿ ಗೆದ್ದಿದ್ದೇವೆ ಎಂಬ ಟ್ರಂಪ್ ಅವರ ಹೇಳಿಕೆಗಳು ಈಗ ಕೇವಲ ಟೊಳ್ಳು ರಾಜಕೀಯ ಪ್ರಚಾರದಂತೆ ಕಾಣುತ್ತಿವೆ. ವಾಸ್ತವದಲ್ಲಿ, ಇರಾನ್ ತನ್ನ ಮೊಬೈಲ್ ಲಾಂಚರ್‌ಗಳ ಮೂಲಕ ಅಮೆರಿಕದ ವಿಮಾನಗಳನ್ನು ಗುರಿಯಾಗಿಸುತ್ತಲೇ ಇದೆ. ಇಸ್ರೇಲ್ ಈಗ ಗಲ್ಫ್‌ನಲ್ಲಿರುವ ಅಮೆರಿಕದ ಬೇಸ್‌ಗಳನ್ನು ತನ್ನ ದೇಶಕ್ಕೆ ಸ್ಥಳಾಂತರಿಸಲು ನೀಡುತ್ತಿರುವ ಸಲಹೆಯು, ಗಲ್ಫ್ ಪ್ರದೇಶದಲ್ಲಿ ಅಮೆರಿಕದ ಪ್ರಭಾವ ಕುಸಿಯುತ್ತಿರುವುದನ್ನು ಸೂಚಿಸುತ್ತದೆ. ಇದು ಕೇವಲ ಭೂಭಾಗಕ್ಕಾಗಿ ನಡೆಯುತ್ತಿರುವ ಯುದ್ಧವಲ್ಲ, ಬದಲಾಗಿ ತಂತ್ರಜ್ಞಾನ ಮತ್ತು ತಂತ್ರಗಾರಿಕೆಯ ನಡುವಿನ ಸಂಘರ್ಷವಾಗಿದೆ. ರಶ್ಯದಂತಹ ರಾಷ್ಟ್ರಗಳ ಬೆಂಬಲ ಇರಾನ್ ಅನ್ನು ಈ ಯುದ್ಧದಲ್ಲಿ ದೀರ್ಘಕಾಲದವರೆಗೆ ಹೋರಾಡುವಂತೆ ಮಾಡುತ್ತಿದೆ. ಇದಲ್ಲದೆ, ಆಧುನಿಕ ಯುದ್ಧತಂತ್ರದಲ್ಲಿ ‘ಪರೋಕ್ಷ ಯುದ್ಧ’ ಅಥವಾ ಪ್ರಾಕ್ಸಿ ವಾರ್ ಅತ್ಯಂತ ನಿರ್ಣಾಯಕವಾಗಿದೆ. ಇರಾನ್ ನೇರವಾಗಿ ಯುದ್ಧಭೂಮಿಯಲ್ಲಿ ಕಾಣಿಸಿಕೊಳ್ಳುವುದಕ್ಕಿಂತ ಹೆಚ್ಚಾಗಿ, ತನ್ನ ಮಿತ್ರ ಪಡೆಗಳಾದ ಹಿಜ್ಬುಲ್ಲಾ ಮತ್ತು ಹೌದಿ ಸಂಘಟನೆಗಳ ಮೂಲಕ ಇಸ್ರೇಲ್‌ನ ಗಡಿಗಳನ್ನು ಅಸ್ಥಿರಗೊಳಿಸುತ್ತಿದೆ. ಇದು ಇಸ್ರೇಲ್‌ನ ರಕ್ಷಣಾ ಬಜೆಟ್ ಮೇಲೆ ಭಾರೀ ಒತ್ತಡವನ್ನು ಹೇರುತ್ತಿದೆ. ಅಮೆರಿಕ ನೀಡುತ್ತಿರುವ ಬಿಲಿಯನ್ ಗಟ್ಟಲೆ ಡಾಲರ್ ನೆರವು ಎಷ್ಟು ದಿನಗಳ ಕಾಲ ಇಸ್ರೇಲ್ ಅನ್ನು ಸುಸ್ಥಿತಿಯಲ್ಲಿಡಬಲ್ಲದು ಎಂಬುದು ಈಗಿನ ದೊಡ್ಡ ಪ್ರಶ್ನೆ. ಯುದ್ಧದ ತೀವ್ರತೆ ಹೆಚ್ಚಾದಂತೆ, ರಶ್ಯ ಮತ್ತು ಚೀನಾದಂತಹ ಬಲಿಷ್ಠ ರಾಷ್ಟ್ರಗಳು ಇರಾನ್ ಪರವಾಗಿ ರಾಜತಾಂತ್ರಿಕವಾಗಿ ನಿಂತಿರುವುದು ಜಗತ್ತು ಮತ್ತೆ ಎರಡು ಧ್ರುವಗಳಾಗಿ ವಿಭಜನೆಯಾಗುವ ಮುನ್ಸೂಚನೆಯನ್ನು ನೀಡುತ್ತಿದೆ. ಯುದ್ಧವು ಎಂದಿಗೂ ಯಾರಿಗೂ ಶಾಂತಿಯನ್ನು ತರುವುದಿಲ್ಲ, ಬದಲಾಗಿ ವಿನಾಶವನ್ನಷ್ಟೇ ಉಂಟುಮಾಡುತ್ತದೆ. ಇರಾನ್ ಮತ್ತು ಇಸ್ರೇಲ್ ನಡುವಿನ ಈ ಬೆಂಕಿಯು ಇಡೀ ಮಧ್ಯಪ್ರಾಚ್ಯವನ್ನು ಸುಡುತ್ತಿದ್ದು, ಜಾಗತಿಕ ಆರ್ಥಿಕತೆಯ ಮೇಲೆ ಕರಿನೆರಳು ಬೀರಿದೆ. ಶಸ್ತ್ರಾಸ್ತ್ರಗಳ ನಷ್ಟಕ್ಕಿಂತಲೂ ಹೆಚ್ಚಾಗಿ ಸಂಭವಿಸುತ್ತಿರುವ ಮಾನವ ಹಾನಿ ಮತ್ತು ಸಾಮಾನ್ಯ ಜನರ ಬದುಕು ಅಯೋಮಯವಾಗುತ್ತಿರುವುದು ವಿಷಾದನೀಯ. ಅಮೆರಿಕ ತನ್ನ ಅಧಿಪತ್ಯವನ್ನು ಉಳಿಸಿಕೊಳ್ಳಲು ನಡೆಸುತ್ತಿರುವ ಈ ಪ್ರಯತ್ನವು ಜಾಗತಿಕವಾಗಿ ಅನಿಶ್ಚಿತತೆಯನ್ನು ಸೃಷ್ಟಿಸಿದೆ. ಈ ಯುದ್ಧವು ಒಂದು ದೊಡ್ಡ ಪ್ರಮಾಣದ ವಿಶ್ವ ಸಮರಕ್ಕೆ ನಾಂದಿಯಾಗುವ ಮೊದಲು ರಾಜತಾಂತ್ರಿಕ ಮಾತುಕತೆಗಳ ಮೂಲಕ ಶಾಂತಿ ಸ್ಥಾಪನೆಯಾಗುವುದು ಇಂದಿನ ತುರ್ತು ಅಗತ್ಯವಾಗಿದೆ. ಅಧಿಕಾರದ ಹಪಾಹಪಿಯಲ್ಲಿ ಮುಗ್ಧ ಜೀವಗಳು ಮತ್ತು ರಾಷ್ಟ್ರದ ಸಂಪತ್ತು ಬಲಿಯಾಗುತ್ತಿರುವುದು ಈ ಹೊತ್ತಿನ ಮಹಾ ದುರಂತ.

ವಾರ್ತಾ ಭಾರತಿ 7 Apr 2026 11:51 am

Manipur| ಮನೆಯೊಂದರ ಮೇಲೆ ಬಾಂಬ್‌ ದಾಳಿ: ಇಬ್ಬರು ಮಕ್ಕಳು ಮೃತ್ಯು

ಘಟನೆಯನ್ನು ಖಂಡಿಸಿದ ಸಿಎಂ

ವಾರ್ತಾ ಭಾರತಿ 7 Apr 2026 11:47 am

ಬಂಗಾಳದ ಮೇಲೆ ಕಣ್ಣಿಟ್ಟರೆ ಸುಮ್ಮನಿರಲ್ಲ, ಮನೆಗೇ ನುಗ್ಗಿ ಕೊಲ್ಲುತ್ತೇವೆ; ಪಾಕ್ ಸಚಿವನಿಗೆ ಅಭಿಷೇಕ್ ಬ್ಯಾನರ್ಜಿ ತಿರುಗೇಟು

ಭಾರತದೊಂದಿಗೆ ಸಂಘರ್ಷ ಉಂಟಾದರೆ ಕೋಲ್ಕತ್ತಾವನ್ನು ಗುರಿಯಾಗಿಸುವುದಾಗಿ ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಆಸಿಫ್ ನೀಡಿದ್ದ ಹೇಳಿಕೆಗೆ ಅಭಿಷೇಕ್ ಬ್ಯಾನರ್ಜಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೇಂದ್ರದಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ 'ಇಂಡಿಯಾ' ಮೈತ್ರಿಕೂಟ ಅಧಿಕಾರಕ್ಕೆ ಬಂದ ದಿನ, ನಾವು ಅವರ ಮನೆಗೇ ನುಗ್ಗಿ ಕೊಲ್ಲುತ್ತೇವೆ ಎಂದು ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದ್ದಾರೆ.

ವಿಜಯ ಕರ್ನಾಟಕ 7 Apr 2026 11:43 am

ಜಯಂತಿಗಳೆಂಬ ಪ್ರಸಕ್ತ ರಾಜಕಾರಣದ ಅಪಸವ್ಯಗಳು

ತೋರಿಕೆಗೆ ಜರೂರಿ ಸಂಗತಿಗಳೆಂಬಂತೆ ಕಾಣುತ್ತಿರುವ ಜಯಂತಿಗಳು, ನಮ್ಮ ಮಹಾನ್‌ಸಂಸ್ಕೃತಿಯ ಹೆಮ್ಮೆಗಳೆಂಬಂತೆ ಕಾಣಿಸಿಕೊಳ್ಳುತ್ತಿರುವ ಜಾತ್ರೆಗಳು, ಉತ್ಸವಗಳು, ಊರ ಹಬ್ಬಗಳು ಅಸಲಿಗೆ ಯಾರಿಗೆ ಲಾಭ ತರುತ್ತಿವೆ? ಯಾರ ಬೊಕ್ಕಸಕ್ಕೆ ಲಗ್ಗೆಯಿಕ್ಕುತ್ತಿವೆ? ಯಾರ ಮನೆ ಮುರಿಯುತ್ತಿವೆ? ಎಂಬ ಅಂಶಗಳು ಗಮನಕ್ಕೆ ಬರದಂತೆ ನೋಡಿಕೊಳ್ಳಲಾಗುತ್ತಿದೆ. ಈ ತರಹೇವಾರಿ ಜಯಂತಿಗಳು ನಿಜವಾಗಿಯೂ ಆಯಾ ಮಹಾಪುರುಷರ ಬಗೆಗಿನ ನಮ್ಮ ಪರಿಜ್ಞಾನ, ಪರಿಧಿಯನ್ನು ವಿಸ್ತರಿಸುತ್ತಿವೆಯೆ? ಜಯಂತಿಯ ಹೆಸರಿನಲ್ಲಿ ಕೂಗು ಹಾಕುತ್ತಿರುವ ರಾಜಕೀಯ ಪಕ್ಷಗಳ ಕೃಪಾಪೋಷಿತ ನಾಟಕ ಮಂಡಳಿಗಳು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ. ಒಂದೆರಡು ವರ್ಷಗಳ ಹಿಂದೆ ಇರಬಹುದೆಂದು ತೋರುತ್ತದೆ. ಜಿಲ್ಲಾಡಳಿತದ ವತಿಯಿಂದ ‘ವಚನ ಪಿತಾಮಹ’ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ಫ.ಗು. ಹಳಕಟ್ಟಿಯವರ ಜಯಂತಿ ಆಚರಿಸಲಾಗುತ್ತಿತ್ತು. ಹಳಕಟ್ಟಿಯವರ ಕುರಿತು ಮಾತಾಡಲು ಆಹ್ವಾನಿತಳಾಗಿದ್ದೆ. ಹಳಕಟ್ಟಿಯವರಂತಹ ಅಪರೂಪದ ವ್ಯಕ್ತಿಯನ್ನು ಕುರಿತು ಮಾತಾಡುವುದೆಂದರೆ ಯಾರಿಗಾದರೂ ಹೆಮ್ಮೆಯೇ. ನನಗೂ ಅತ್ಯಂತ ಹರುಷ ಮತ್ತು ಅಭಿಮಾನದ ಸಂಗತಿಯಾಗಿತ್ತು. ನಾನಾದರೋ ನನ್ನಲ್ಲಿದ್ದ ಪುಸ್ತಕ-ಪೋತಿಗಳನ್ನು ಜಾಲಾಡಿ ತಕ್ಕಮಟ್ಟಿನ ವಿಷಯ ಸಂಗ್ರಹ ಮಾಡಿಕೊಂಡು ಫಕಿರಪ್ಪ ಗುಂಡಪ್ಪ ಹಳಕಟ್ಟಿಯವರ ಕುರಿತು ಮಾತಾಡಲು ಉತ್ಸಾಹದಿಂದಲೇ ಸಭೆಗೆ ಹೋದೆ. ಕಾರ್ಯಕ್ರಮದ ಸಮಯವಾಯಿತಾದರೂ ಹೇಳಿಕೊಳ್ಳುವಷ್ಟು ಜನರೇನೂ ನೆರೆದಿರಲಿಲ್ಲ. ಸರಕಾರಿ ಕಾರ್ಯಕ್ರಮ ತಾನೆ. ಔಪಚಾರಿಕ ವಿಧಿ ವಿಧಾನಗಳಂತೆ ಆಮಂತ್ರಣ ಪತ್ರಿಕೆಯಲ್ಲಿ ಸ್ಥಳೀಯ ರಾಜಕಾರಣಿಗಳ ಹೆಸರು, ಅಧ್ಯಕ್ಷತೆ ವಹಿಸಲು ಅಷ್ಟೇನೂ ಪರಿಚಿತರಲ್ಲದ (ಹಳಕಟ್ಟಿಯವರ ಜಾತಿಯವರು ಎಂಬ ಕಾರಣಕ್ಕಾಗಿ) ಹಿರಿಯರೊಬ್ಬರ ಹೆಸರು ಇತ್ತು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಧಿಕಾರಿಗಳು ತರಾತುರಿಯಲ್ಲಿ ಒಂದೆರಡು ಸರಕಾರಿ ಶಾಲಾ ಮಕ್ಕಳನ್ನು ಹಿಡಿದು ತಂದರು. ಅಂತೂ ಕಾರ್ಯಕ್ರಮವೇನೋ ಪ್ರಾರಂಭವಾಯಿತು. ಕುಳಿತ ಸಭಿಕರನ್ನು ಗಮನಿಸಿದೆ. ಎಲ್ಲ ಹೊಸ ಮುಖಗಳು. ಎಂದೂ ಈ ಬಗೆಯ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳದ ತೀರ ಅಸಹಜ ಶ್ರೋತೃಗಳು. ಸಂಘಟಕರಿಗೆ ಕೇಳಿದೆ. ಇವರೆಲ್ಲ ಯಾರು? ಅದ್ಹೇಗೆ ಇವರಿಗೆ ಫ.ಗು. ಹಳಕಟ್ಟಿಯವರ ಬಗೆಗೆ ಅಭಿಮಾನ ಉಕ್ಕಿ ಬಂದಿದೆ? ಅದಕ್ಕೆ ಅಧಿಕಾರಿಗಳು ‘‘ಅರೇ ನಿಮಗ ಗೊತ್ತಿಲ್ಲೇನ್ರಿ ಮೇಡಂ, ಇವರೆಲ್ಲ ಹಳಕಟ್ಟಿ ಜಾತಿ ಮಂದಿ. ಅವ್ರ ಜಾತಿ ಮುಖಂಡರು ಅವರನ್ನು ಕರಕೊಂಡ ಬಂದಾರ್ರಿ. ಅದೇ ಜಾತಿ ಮಂದಿ ಬಂದಾರ ಅಂತ ಸಭಾ ಸ್ವಲ್ಪರೆ ತುಂಬದಂಗ್‌ಆಗ್ಯಾದ್ರಿ. ಇಲ್ಲಕಂದ್ರ ಭಾಳ ಸಪ್ಪಗ್ ಅನಸ್ತಿತ್ತರೀ’’ ಅಂತ ಸಮಜಾಯಿಸಿ ನೀಡಿದರು. ನಾನು ದಂಗಾದೆ. ಇಲ್ಲಿಯವರೆಗೆ ಹಳಕಟ್ಟಿಯವರು ಅಂದರೆ ಅಖಂಡ ಬಸವಾಭಿಮಾನಿಗಳ ಗೌರವ ಮತ್ತು ಹೆಮ್ಮೆ ಎಂದು ಪರಿಗಣಿಸಿಕೊಂಡು ಬರಲಾಗಿತ್ತಷ್ಟೆ. ಯಾರಿಗೂ ಹಳಕಟ್ಟಿಯವರ ಉಪಜಾತಿ ಗೊತ್ತೇ ಇರಲಿಲ್ಲ. ಅವರು ಲಿಂಗಾಯಿತರಲ್ಲೇ ನೇಕಾರ ಸಮುದಾಯಕ್ಕೆ ಸೇರಿದವರೆಂಬ ಜಾತಿಯ ಕಣ್ಣೋಟದಿಂದ ನೋಡಬೇಕೆಂಬ ದರ್ದು ಯಾರಲ್ಲಿಯೂ ಉದ್ಭವ ಆಗಿರಲಿಲ್ಲ. ಹಳಕಟ್ಟಿಯಂಥ ಮಹಾನ್‌ತ್ಯಾಗಿಯೊಬ್ಬ ಕನ್ನಡ ನಾಡಿನಲ್ಲಿ ಹುಟ್ಟಿ ಬರದಿದ್ದರೆ ಇಂದು ನಾವು ಕಾಣುತ್ತಿರುವ ವಚನ ಭಂಡಾರವನ್ನು ಈ ಪರಿಯಲ್ಲಿ ನೋಡಲು ಸಿಗುತ್ತಿರಲಿಲ್ಲ. ವಚನ ಸಂಗ್ರಹ, ಸಂಪಾದನೆ ಮತ್ತು ಪ್ರಕಟಣೆಗಾಗಿ ಅವರು ಮಾಡಿದ ತ್ಯಾಗ, ಹಾಕಿದ ಶ್ರಮ, ಪಟ್ಟ ಪಡಿಪಾಟಲು ಇವೆಲ್ಲ ಪದಗಳಲ್ಲಿ ಹಿಡಿದಿಡುವುದು ತುಂಬಾ ಔಪಚಾರಿಕತೆಯಾದೀತು. ಇಂಥ ಮಹಾತ್ಮನನ್ನು ಕುರಿತು ತಿಳಿದುಕೊಳ್ಳಬೇಕಾದುದು ಪ್ರತಿಯೊಬ್ಬ ಕನ್ನಡಿಗರ ಸಾಂಸ್ಕೃತಿಕ ಹೊಣೆಗಾರಿಕೆ. ಇಂಥ ಅಸಂಖ್ಯ ಘನವೆತ್ತ ವ್ಯಕ್ತಿತ್ವಗಳ ಕುರಿತು ಯಾವುದೋ ಒಂದು ದಿವಸ ಕಾಟಾಚಾರಕ್ಕೆ ಸ್ಮರಣೆ ಮಾಡುವುದರಿಂದ ಏನೂ ಆಗುವುದಿಲ್ಲ. ಅದಕ್ಕಿಂತ ದುರಂತದ ಅಂಶವೆಂದರೆ ಜಾತಿ ಚಹರೆಗಳಿಲ್ಲದೆ ಗುರುತಿಸಿಕೊಳ್ಳುತ್ತಿದ್ದ ಮಹಾನ್ ದಾರ್ಶನಿಕರನ್ನು, ಅಪರೂಪದ ಸಾಧಕರನ್ನು, ಸಮರಧೀರ ಹೋರಾಟಗಾರರನ್ನು ಪ್ರಸಕ್ತ ರಾಜಕಾರಣವು ತನ್ನ ತುಷ್ಟೀಕರಣದ ಗೀಳಿಗೆ ಬಿದ್ದು ಮೈಲಿಗೆಗೊಳಿಸಿಬಿಟ್ಟಿದೆ. ಜಾತಿಗೊಬ್ಬ ಸಾಧಕರನ್ನು ಹೆಕ್ಕಿ ಆಯಾ ಜಾತಿಗಳ ಜನರಲ್ಲಿ ಅಂಧಾಭಿಮಾನ ತುಂಬಿಸುವಲ್ಲಿಯೇ ಸರಕಾರಿ ಜಯಂತಿಗಳು ತೋಪೆದ್ದು ಹೋಗಿವೆ. ಚಿಕ್ಕವರಿದ್ದಾಗ ಅಕ್ಟೋಬರ್ 2 ಬಂತು ಅಂದರೆ ಖುಷಿಯೋ ಖುಷಿ. ಅದರೊಟ್ಟಿಗೆ ಎಪ್ರಿಲ್, ಮೇ ತಿಂಗಳು ಬಂದೊಡನೆ ಜಗಜ್ಯೋತಿ ಬಸವೇಶ್ವರ ಮತ್ತು ಬಾಬಾಸಾಹೇಬರ ಜಯಂತಿಗಳ ಭರಭರಾಟೆ. ಕಲ್ಯಾಣ ಕರ್ನಾಟಕ ಭಾಗದ ಮಂದಿ 43-44 ಡಿಗ್ರಿ ಬಿಸಿಲನ್ನು ಲೆಕ್ಕಿಸದೆ ಬಿರು ಬಿಸಿಲಿನಲ್ಲಿ ಜಯಘೋಷಗಳನ್ನು ಹಾಕುತ್ತ, ಇನ್ನೊಂದೆಡೆ ಲೇಜಿಮ್ ಕುಣಿತ, ಡೊಳ್ಳು ಕುಣಿತ, ಭಜನೆ, ವಚನ ಗಾಯನ ಮುಂತಾಗಿ ಭರ್ತಿ ಜೋಷ್‌ನೊಂದಿಗೆ ಮೆರವಣಿಗೆಗಳು ಹೊರಟರೆ ಕ್ಷಣ ಹೊತ್ತು ನಿಂತು ನೋಡುವ ಉಮೇದು ಬರುತ್ತಿತ್ತು. ಹಾಗೆ ನೋಡಿದರೆ ಎಲ್ಲ ಜಯಂತಿಗಳಲ್ಲಿ ಎಲ್ಲ ಸಮುದಾಯಗಳು ಬೆರೆತು ಆಚರಿಸುತ್ತಿದ್ದರಂತೇನೂ ಇರಲಿಲ್ಲ. ಆದರೂ ಬಸವಣ್ಣನವರ ಜಯಂತಿಯಲ್ಲಿ ಲಿಂಗಾಯತರಾದಿ ಎಲ್ಲ ಶೂದ್ರ ಸಮುದಾಯಗಳು ಒಟ್ಟಿಗೆ ಸೇರುವುದಿತ್ತು. ಇನ್ನೊಂದೆಡೆ ಭಾರತರತ್ನ ಬಾಬಾಸಾಹೇಬರ ಜಯಂತಿಗೆ ಎಲ್ಲ ಶೋಷಿತ ಸಮುದಾಯಗಳು ಒಟ್ಟಿಗೆ ಸೇರಿ ಸ್ವಾಭಿಮಾನದ ಹೆಜ್ಜೆ ಹಾಕುವುದಿತ್ತು. ‘ಜಯಂತಿ’ ಎಂಬ ವಿದ್ಯಮಾನಕ್ಕೆ ಸಾಂಸ್ಕೃತಿಕ ಮಹತ್ವವೂ ಆಚರಣಾ ಖದರೂ ಇತ್ತು. ಆದರೆ ಈಗ ಲೆಕ್ಕವಿಲ್ಲದಷ್ಟು ಜಯಂತಿಗಳು ಆಯಾ ಜಾತಿ, ಉಪಜಾತಿಗಳಲ್ಲಿನ ವ್ಯಕ್ತಿಗಳನ್ನು ಹುಡುಕಿ ಹುಡುಕಿ ಆಚರಿಸಲಾಗುತ್ತಿವೆ. ಇದು ಜಯಂತಿಗಳ ದುಷ್ಪರ್ವ ಕಾಲ. ಕಾಲಕಾಲಕ್ಕೂ ಆಳ್ವಿಕೆ ನಡೆಸಿಕೊಂಡು ಬರುತ್ತಿರುವ ಸರಕಾರಗಳು ಯಾವತ್ತೂ ಜನರ ಯೋಗಕ್ಷೇಮವನ್ನು ತನ್ನ ಆದ್ಯತೆಯಾಗಿ ಪರಿಗಣಿಸಿಯೇ ಇಲ್ಲ. ಪ್ರಜಾಪ್ರಭುತ್ವದ ಮೂಲ ಆಶಯಗಳನ್ನು ಮಣ್ಣು ಮುಕ್ಕಿಸಿದ ಚುನಾವಣಾ ಪ್ರಕ್ರಿಯೆಯೂ ಜನರ ಪ್ರಜ್ಞೆಯನ್ನು ರಾಜಕೀಯವಾಗಿ ಎತ್ತರಿಸುವ ಬದಲು ಅವರನ್ನು ಖರೀದಿಸಿಗೊಳಿಸಬಹುದಾದ ಅಥವಾ ಮರುಳು ಮಾಡಬಹುದಾದ ಮತಗಳೆಂದೇ ಪರಿಗಣಿಸಿಕೊಂಡು ಬರುತ್ತಿದೆ. ಜನರನ್ನು ಮತಬ್ಯಾಂಕುಗಳಾಗಿ ನಿರ್ವಹಿಸಿಕೊಂಡು ಬರುತ್ತಿರುವ ರಾಜಕೀಯ ಪಕ್ಷಗಳು ಜನರಲ್ಲಿ ಅಂಧಾಭಿಮಾನ ತುಂಬುವ ಮೂಲಕವೇ ತಮ್ಮ ಬೇಳೆ ಬೇಯಿಸಿಕೊಳ್ಳಬಹುದೆಂದು ಭಾವಿಸುತ್ತವೆ ಮತ್ತು ಆ ದಿಸೆಯಲ್ಲಿ ಕ್ರಿಯಾಶೀಲವಾಗುತ್ತವೆ. ಇದಕ್ಕೆ ಜ್ವಲಂತ ಉದಾಹರಣೆಯೇ ಇತ್ತೀಚಿನ ದಿನಗಳಲ್ಲಿ ರಾಜ್ಯದಲ್ಲಿ ಘೋಷಣೆಯಾದ ಪುಂಖಾನುಪುಂಖ ಜಯಂತಿ ಆಚರಣೆಗಳು. ಸರಾಸರಿ ವರ್ಷಕ್ಕೆ 30ಕ್ಕೂ ಹೆಚ್ಚು ಜಯಂತಿಗಳು ಆಚರಿಸಿಕೊಂಡು ಬರಲಾಗುತ್ತಿದೆ. ಈಗ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಜಯಂತಿ ಆಚರಣಾ ಇಲಾಖೆಯಾಗಿ ಪರಿವರ್ತನೆಗೊಂಡಂತಿದೆ. ಕನ್ನಡ ಭಾಷೆ, ಕನ್ನಡಿಗರ ಸಂಸ್ಕೃತಿ ಕನ್ನಡಿಗರ ಅಭ್ಯುದಯವು ಆದ್ಯತೆಯಾಗಿ ಉಳಿದಿಲ್ಲ. ಇಲಾಖೆಯ ಸಿಬ್ಬಂದಿಯು ಆಫ್‌ದಿ ರೆಕಾರ್ಡ್ ಹೇಳುವಂತೆ ಜಯಂತಿಗಳ ಆಚರಣಾ ಪ್ರಕ್ರಿಯೆಯಲ್ಲಿ ಜಾತಿ-ಧರ್ಮಗಳ ಮುಖಂಡರನ್ನು ಓಲೈಸುವುದು ಬಿಟ್ಟರೆ ಬೇರೆ ಕೆಲಸವಿಲ್ಲ. ಪ್ರತೀ ಜಯಂತಿಗೂ ಆಯಾ ಸಮುದಾಯದವನ್ನು ಅಣಿ ನೆರೆಸಿ ಮಿಟೀಂಗ್‌ಮಾಡುವುದು. ನಂತರ ಅವರು ಮನಬಂದಂತೆ ಕೊಡುವ ಸೂಚನೆಗಳನ್ನು ಅಧಿಕಾರಿಗಳು ಮೂಕ ಪ್ರೇಕ್ಷಕರಾಗಿ ಆಲಿಸುವುದು, ಅವರು ಹೇಳಿದ ಅತಿಥಿಗಳನ್ನೇ ಆಹ್ವಾನಿಸುವುದು. ನಂತರ ಮೆರವಣಿಗೆ. ಇದಕ್ಕಾಗಿಯಂತೂ ಸರಕಾರಿ ಶಾಲೆಯ ಬಡಮಕ್ಕಳನ್ನು ಪಾಠ, ಆಟೋಟಗಳಿಂದ ವಂಚಿಸಿ ಸಭೆಯಲ್ಲಿ ತಂದು ಕೂಡಿಸುವುದು. ಪ್ರೇಕ್ಷಕರ ಕೊರತೆಯನ್ನು ಭರಿಸಲು ಬಡಮಕ್ಕಳು ವಿದ್ಯೆಯಿಂದ ವಂಚಿತರಾಗಬೇಕು. ಇಂಥ ಅಪಸವ್ಯಗಳು ಪ್ರಜ್ಞಾವಂತ ಶಿಕ್ಷಕರಿಗೆ ಇರಿಸು ಮುರಿಸು ಉಂಟು ಮಾಡಿದರೆ, ಮೈಗಳ್ಳ ಮೇಷ್ಟ್ರುಗಳಿಗೆ ರಸದೌತಣವೂ ಆಗಬಲ್ಲವು. ಸಭೆಯಲ್ಲಿ ಕಾಟಾಚಾರದ ಪೂಜೆ. ಮಾಲಾರ್ಪಣೆ, ಒಂದು ಭೀಕರ ಭಾಷಣ. ಮರುದಿನ ಪತ್ರಿಕೆಯಲ್ಲಿ ಒಂದಷ್ಟು ಸುದ್ದಿ, ಫೋಟೊ ಇತ್ಯಾದಿ. ಇಷ್ಟು ಬಿಟ್ಟರೆ ಇಲ್ಲಿ ಸಾಧಿತವಾದುದು ಶೂನ್ಯ. ಅಸಲಿಗೆ ಈ ಜಯಂತಿಗಳು ಜನರಲ್ಲಿ ಅಸ್ಮಿತೆ ತುಂಬುವ ಬದಲು ಅಂಧಾಭಿಮಾನಕ್ಕೆ ದಾರಿ ಮಾಡಿಕೊಡುತ್ತಿವೆ. ದಿನ ಬೆಳಗಾದರೆ ಒಂದಿಲ್ಲೊಂದು ಜಯಂತಿಗಳು ಇದಿರಾಗುತ್ತವೆ. ಒತ್ತಡದ ಕಾರ್ಯಬಾಹುಳ್ಯದ ನಡುವೆ ಜಿಲ್ಲಾಧಿಕಾರಿಗಳು, ಉಸ್ತುವಾರಿ ಸಚಿವರು ಅಥವಾ ಆಯಾ ಕ್ಷೇತ್ರದ ಶಾಸಕರು ಕಾರ್ಯಕ್ರಮಕ್ಕೆ ಗೈರು ಹಾಜರಾದರೆ ಮುಗಿಯಿತು. ಸಮುದಾಯದ ಮರಿ ಕಿರಿ ನಿರುದ್ಯೋಗಿ ಪುಢಾರಿಗಳ ಹಾರಾಟ, ಚೀರಾಟ ಸುರುವಿಟ್ಟುಕೊಳ್ಳುತ್ತವೆ. ನಮ್ಮ ಸಮುದಾಯವನ್ನು ಕಡೆಗಣಿಸಲಾಗುತ್ತಿದೆ. ನಮ್ಮ ಮಹಾಪುರುಷರಿಗೆ ಅಪಮಾನ ಮಾಡಲಾಗಿದೆ ಅಥವಾ ಅವರು ಚಪ್ಪಲಿ ಹಾಕಿಕೊಂಡು ಮಾಲಾರ್ಪಣೆ ಮಾಡುವುದರ ಮೂಲಕ ಮಹಾಪುರುಷರಿಗೆ ಅಗೌರವ ತೋರಿದ್ದಾರೆ ಮುಂತಾಗಿ ಅನುಪಯೋಗಿ ಅರ್ಥಹೀನ ಆರೋಪಗಳ ಸುರಿಮಳೆಯಾಗುತ್ತದೆ. ನಮ್ಮ ನಾಯಕರಿಗೂ ಇಂಥ ಜನಮರುಳುಗೊಳ್ಳುವ ಜಾತ್ರೆಗಳೇ ಆಗಬೇಕು. ಈಗೀಗಲಂತೂ ಸರಕಾರಿ ಸಂಸ್ಥೆ, ಶಾಲಾ, ಕಾಲೇಜುಗಳಲ್ಲಿ ಎಲ್ಲ ಜಯಂತಿಗಳನ್ನು ಕಡ್ಡಾಯವಾಗಿ ಆಚರಿಸಬೇಕೆಂಬ ಆದೇಶವನ್ನು ಹೊರಡಿಸಲಾಗಿರುವುದರಿಂದ ದೊಡ್ಡ ಪೀಕಲಾಟಕ್ಕೆ ಇಟ್ಟುಕೊಂಡಿದೆ. ಮಜಕೂರವೆಂದರೆ ಸರಕಾರದ ಈ ಆದೇಶಗಳು ಸರಕಾರಿ, ಅರೆಸರಕಾರಿ ಶಾಲಾ, ಕಾಲೇಜು, ಹಾಸ್ಟೆಲ್‌ಗಳಿಗೆ ಮಾತ್ರ ಅನ್ವಯಿಸುತ್ತವೆ. ಕಾರ್ಪೊರೇಟ್‌ಸಂಸ್ಥೆಗಳು, ಭಾರೀ ಶುಲ್ಕ ವಸೂಲಿ ಮಾಡುವ ಖಾಸಗಿ ಶಿಕ್ಷಣ ಸಂಸ್ಥೆಗಳು ಸರಕಾರದ ಈ ಆದೇಶಗಳನ್ನು ಕಣ್ಣೆತ್ತಿಯೂ ನೋಡುವುದಿಲ್ಲ. ದುಬಾರಿ ಸಂಸ್ಥೆಗಳಲ್ಲಿ ಕಲಿಯುತ್ತಿರುವ ಶ್ರೀಮಂತರ ಮಕ್ಕಳು ವೃಥಾ ಕಾಲಹರಣ ಮಾಡದೆ ಸಮಕಾಲೀನ ತಂತ್ರಜ್ಞಾನದ ಮೂಲ-ಚೂಲಗಳನ್ನು ಅರೆದು ಕುಡಿದು ಅದರಲ್ಲಿ ಪರಿಣತಿ ಸಾಧಿಸಿ ದೊಡ್ಡ ದೊಡ್ಡ ಕಾರ್ಪೊರೇಟ್‌ಕಂಪೆನಿಗಳಲ್ಲಿ ಅಥವಾ ಸರಕಾರದ ಉನ್ನತ ಹುದ್ದೆಗಳಲ್ಲಿ ಕೆಲಸ ಪಡೆದು ಐಷಾರಾಮಿ ಜೀವನ ಕಳೆಯುತ್ತಿದ್ದರೆ ಬಡವರ ಮಕ್ಕಳು ಮಾತ್ರ ಇಂಥ ಅಪ್ರಾಸಂಗಿಕ ಕಾರ್ಯಕ್ರಮಗಳಲ್ಲಿ ಕಳೆದು ಹೋಗಬೇಕು. ಅದೂ ಸರಕಾರಿ ಅಧಿಕಾರಿಗಳ ಕರ್ತವ್ಯ ಯಜ್ಞಕ್ಕೆ ಹವಿಸ್ಸಾಗಿ ಬಳಕೆಯಾಗಬೇಕಷ್ಟೇ. ಎಲ್ಲ ಜನತೆ ತಮ್ಮ ಪರಂಪರೆಯಲ್ಲಿನ ಮಹಾನ್ ನಡೆ-ನುಡಿಗಳನ್ನು ಆದರ್ಶವಾಗಿ ಪಾಲಿಸಿಕೊಂಡು ಬರುವಂತೆ ಮಾಡಬೇಕಾದುದು ಪ್ರಜ್ಞಾವಂತ ಸರಕಾರದ ಹೊಣೆಗಾರಿಕೆ. ಜನಹಿತಕ್ಕಾಗಿ ದುಡಿದ ವ್ಯಕ್ತಿ-ಶಕ್ತಿಗಳನ್ನು ದೇಶದ ಅಭಿಮಾನವಾಗಿ ಮಾಡದೆ ಜಾತಿಗಳ ಐಕಾನ್‌ಗಳಾಗಿ ಮಾಡಿದ್ದು ಈ ದಶಮಾನದ ಬಹು ದೊಡ್ಡ ದುರಂತಗಳಲ್ಲೊಂದಾಗಿದೆ. ಪರಸ್ಪರ ಎಲ್ಲರೂ ಸೇರಿ ಮಹಾಪುರುಷರನ್ನು ಸಂದರ್ಭೋಚಿತವಾಗಿ ಅನುಸಂಧಾನಿಸಬೇಕಾದ ಸಾಂಸ್ಕೃತಿಕ ಆಯಾಮಗಳನ್ನು ಬೇಕೆಂದೇ ಜಾತಿ ಸಂಕೇತಗಳನ್ನಾಗಿ ಪರಿವರ್ತಿಸಲಾಗಿದೆ. ಜನತೆಯು ಎಂದೆಂದೂ ಒಂದಾಗದಂತೆ ತಮ್ಮ ತಮ್ಮಲ್ಲಿಯೇ ಹೊಡೆದಾಡುವಂತೆ ನೋಡಿಕೊಳ್ಳಲೆಂದೇ ಈ ಬಗೆಯ ಅಂಧಾಭಿಮಾನವನ್ನು ಹುಟ್ಟು ಹಾಕಲಾಗುತ್ತಿದೆ. ಇಂದು ನಾವು ಕಾಣುತ್ತಿರುವ ಸಾಂಸ್ಕೃತಿಕ ಅಪಸವ್ಯಗಳು ತಮ್ಮಷ್ಟಕ್ಕೆ ತಾವು ಸುಖಾಸುಮ್ಮನೆ ಸೃಷ್ಟಿಯಾದವುಗಳಲ್ಲ. ಅವುಗಳ ಹಿಂದೆ ಬೃಹತ್‌ಬಂಡವಾಳಶಾಹಿಗಳ ಲಾಭಕೋರ ಹುನ್ನಾರಗಳು ಅಡಗಿಕೊಂಡಿವೆ. ತನ್ನ ವಿರೋಧಿ ಮೌಲ್ಯಗಳನ್ನೇ ಜನತೆ ಸುಖಿಸುವಂತೆ ಮಾಡಲು ಬಂಡವಾಳವಾದ ಆಕರ್ಷಕ ನೇಟಿವಿಟಿ ಎಂಬ ವಾದ ಹರಿಬಿಡುತ್ತದೆ. ಇದಕ್ಕೆ ತಾತ್ವಿಕ ಒತ್ತಾಸೆ ನೀಡಲೆಂದೇ ಜಾಗತಿಕ ಮಟ್ಟದಲ್ಲಿ ‘ಆಧುನಿಕೋತ್ತರವಾದ’ವು ಹುರಿಗೊಂಡಿದೆ. ಆಧುನಿಕೋತ್ತರವಾದ ಮೊದಲು ಜನರನ್ನು ಅಸ್ಮಿತೆಯ ಹೆಸರಿನಲ್ಲಿ ತುಂಡು ತುಂಡಾಗಿ ಒಡೆಯುತ್ತದೆ. ಸಮುದಾಯಗಳೊಳಗಿನ ಉಪಸಮುದಾಯಗಳನ್ನು ಸ್ವಾಭಿಮಾನದ ಹೆಸರಿನಲ್ಲಿ ದ್ವೀಪಗಳನ್ನಾಗಿಸುತ್ತದೆ. ಗತದಲ್ಲಿ ಸಂಭವಿಸಿರಬಹುದಾದ ಎಲ್ಲ ಅಂಶಗಳನ್ನು ಮುನ್ನೆಲೆಗೆ ತಂದು ಅವಶ್ಯಕತೆಗಿಂತ ಹೆಚ್ಚಾಗಿ ಅವುಗಳನ್ನು ವೈಭವೀಕರಿಸಲಾಗುತ್ತದೆ. ಅಲ್ಲಿನ ಅಪಸವ್ಯಗಳನ್ನು ಕೂಡ ಸಮರ್ಥಿಸಿಕೊಂಡು ಕಳಚಿಕೊಳ್ಳಬೇಕಾದುದನ್ನು ಉಳಿಸಿಕೊಳ್ಳುವಂತೆ ಮೋಹಕಗೊಳಿಸುತ್ತದೆ. ಜನರು ಚಿಕ್ಕ ಸಮುದಾಯಗಳಲ್ಲಿ ಗುರುತಿಸಿಕೊಳ್ಳುವ ಮೂಲಕವೇ ಅಭಿವೃದ್ಧಿ ಸಾಧಿಸಬಹುದೆಂದು ನಂಬಿಸಲಾಗುತ್ತದೆ. ಪರರ ಚಿಂತೆ ನಿಮಗೇಕೆ? ನಿಮ್ಮ ಚಿಂತೆ ನಿಮಗೆ ಹಾಸಲುಂಟು. ಹೊದೆಯಲುಂಟು ಎಂದು ಹೇಳುತ್ತ ಜನಸಮುದಾಯಗಳು ತಮ್ಮೆಲ್ಲರಿಗೂ ಸಮಾನವಾಗಿರುವ ಅನ್ನ, ಆರೋಗ್ಯ, ಉದ್ಯೋಗ, ಶಿಕ್ಷಣ, ಕೂಲಿ ಇತ್ಯಾದಿ ಸಮಸ್ಯೆಗಳ ಬಗೆಗೆ ಗಮನ ಹರಿಸದಂತೆ ನೋಡಿಕೊಳ್ಳುತ್ತದೆ. ಉದಾಹರಣೆಗೆ ಸರ್ವಜ್ಞ ಕವಿಯ ಜಯಂತಿಯನ್ನೇ ನೋಡಬಹುದು. ಇಲ್ಲಿಯವರೆಗೆ ಸರ್ವಜ್ಞ ಕವಿಯ ಕುರಿತು ಇದಮಿತ್ಥಂ ಎನ್ನುವಂತಹ ಐತಿಹಾಸಿಕ ವಿವರಗಳು ದಕ್ಕಿಯೇ ಇಲ್ಲ. ಸರ್ವಜ್ಞ ಎಂಬುದು ಕೂಡ ಕವಿಯ ಮೂಲ ನಾಮವೆ? ಅಥವಾ ಕವಿಯ ಅಂಕಿತವೆ? ನಿಷ್ಕರ್ಷೆ ಮಾಡಲಾಗಿಲ್ಲ. ಆತನ ಕುರಿತು ಕೆಲವು ದಂತಕಥೆಗಳು, ಊಹೆಗಳು ಬಿಟ್ಟರೆ ಚಾರಿತ್ರಿಕ ಸಂಗತಿಗಳು ಸಿಕ್ಕಿದ್ದು ವಿರಳಾತಿವಿರಳ. ಹೀಗಿರುವಾಗಲೂ ಆತ ಕುಂಬಾರ ಜಾತಿಗೆ ಸೇರಿದವನೆಂದು ಅಂಕಿತಗೊಳಿಸಿ ಕುಂಬಾರರ ತುಷ್ಟೀಕರಣಕ್ಕಾಗಿಯೇ ಸರ್ವಜ್ಞ ಜಯಂತಿ ಆಚರಣೆಗೆ ಶುರುವಿಟ್ಟುಕೊಂಡದ್ದು ನೋಡುತ್ತಿದ್ದೇವೆ. ಇಷ್ಟರಿಂದಲೇ ಸಂಭ್ರಮಿತ, ಸಂಭ್ರಾಂತರಾದ ಕುಂಬಾರ ಸಮುದಾಯವು ತಮ್ಮ ವೃತ್ತಿಗೆ ಬಂದ ಸಂಚಕಾರ, ತಮ್ಮ ದೈನಂದಿನ ಸಮಸ್ಯೆಗಳ ಬಗೆಗೆ ಆಲೋಚಿಸುವುದನ್ನೇ ತೊರೆಯುವಂತೆ ಮಾಡಲಾಯಿತು. ಹೂಗಾರ, ಕಂಬಾರ, ಮಾಲಗಾರ, ಉಪ್ಪಾರ, ನಾವಿಂದ, ತಳವಾರ, ಮಡಿವಾಳ ಮುಂತಾದ ಚಿಕ್ಕದರಲ್ಲಿಯೇ ಚಿಕ್ಕ ವೃತ್ತಿ ಸಮುದಾಯಗಳು ಇಂಥ ಜಾತ್ರೆಗಳಲ್ಲಿ ಕಳೆದು ಹೋಗಿ ತಮ್ಮ ವೃತ್ತಿಗಳು ನೆಲಕಚ್ಚಿದ್ದು ತತ್ಕಾರಣವಾಗಿ ತಮ್ಮ ಆದಾಯದ ಮೂಲಗಳು ಕಳೆದು ಹೋದದ್ದು, ತಾವು ತಯಾರಿಸಿದ ವಸ್ತುಗಳಿಗೆ ಸಿಕ್ಕಾಪಟ್ಟೆ ಬೆಲೆ ಇದ್ದರೂ ತಾವು ವಿನಿಯೋಗಿಸಿದ ಶ್ರಮಕ್ಕೆ ಬೆಲೆ ಸಿಗದಂತೆ ಇರುವುದು. ತಮ್ಮ ವೃತ್ತಿ ಕೌಶಲ್ಯವು ಕ್ಲಾಸಿಕ್ ಕಲೆಯಾಗಿ ದೊಡ್ಡ ಕಂಪೆನಿಗಳು ಅದನ್ನೂ ಲಪಟಾಯಿಸಿದ್ದು ಇತ್ಯಾದಿ ಮೂಲದ ಸಮಸ್ಯೆಗಳನ್ನು ಅರಿಯದಂತೆ ಮಾಡಲಾಗುತ್ತಿದೆ. ಈ ಎಲ್ಲ ಸಮುದಾಯಗಳ ಹದಿ ಹರೆಯದ ಮಕ್ಕಳು ತಮ್ಮ ಪಾಲಕರ ನೋವು-ನಲಿವಿಗೂ ಸ್ಪಂದಿಸಲು ಆಸ್ಪದವಿಲ್ಲದಂತೆ ತರಹೇವಾರಿ ಜಯಂತಿಗಳಲ್ಲಿ ಕಳೆದು ಹೋಗಿದ್ದಾರೆ. ತಮ್ಮ ಸಮುದಾಯದ ಪುಢಾರಿಗಳ ಬಾಡಿಗೆ ಬಂಟರಾಗಿ, ಕೋಮುವಾದಿ ಹೋಮ-ಹವನಾದಿಗಳಿಗೆ ಆಜ್ಯವಾಗಿ ಉರಿದು ಹೋಗುತ್ತಿದ್ದಾರೆ. ಒಟ್ಟಾರೆ ತೋರಿಕೆಗೆ ಜರೂರಿ ಸಂಗತಿಗಳೆಂಬಂತೆ ಕಾಣುತ್ತಿರುವ ಜಯಂತಿಗಳು, ನಮ್ಮ ಮಹಾನ್‌ಸಂಸ್ಕೃತಿಯ ಹೆಮ್ಮೆಗಳೆಂಬಂತೆ ಕಾಣಿಸಿಕೊಳ್ಳುತ್ತಿರುವ ಜಾತ್ರೆಗಳು, ಉತ್ಸವಗಳು, ಊರ ಹಬ್ಬಗಳು ಅಸಲಿಗೆ ಯಾರಿಗೆ ಲಾಭ ತರುತ್ತಿವೆ? ಯಾರ ಬೊಕ್ಕಸಕ್ಕೆ ಲಗ್ಗೆಯಿಕ್ಕುತ್ತಿವೆ? ಯಾರ ಮನೆ ಮುರಿಯುತ್ತಿವೆ? ಎಂಬ ಅಂಶಗಳು ಗಮನಕ್ಕೆ ಬರದಂತೆ ನೋಡಿಕೊಳ್ಳಲಾಗುತ್ತಿದೆ. ಈ ತರಹೇವಾರಿ ಜಯಂತಿಗಳು ನಿಜವಾಗಿಯೂ ಆಯಾ ಮಹಾಪುರುಷರ ಬಗೆಗಿನ ನಮ್ಮ ಪರಿಜ್ಞಾನ, ಪರಿಧಿಯನ್ನು ವಿಸ್ತರಿಸುತ್ತಿವೆಯೆ? ಜಯಂತಿಯ ಹೆಸರಿನಲ್ಲಿ ಕೂಗು ಹಾಕುತ್ತಿರುವ ರಾಜಕೀಯ ಪಕ್ಷಗಳ ಕೃಪಾಪೋಷಿತ ನಾಟಕ ಮಂಡಳಿಗಳು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ.

ವಾರ್ತಾ ಭಾರತಿ 7 Apr 2026 11:42 am

ಬೆಂಗಳೂರು ರೈಲ್ವೆ ನಿಲ್ದಾಣದಲ್ಲಿ 7 ವರ್ಷ ಭಿಕ್ಷಾಟನೆಗೆ ಗುಡ್‌ಬೈ ಹೇಳಿ, ಸ್ವಂತ ಉದ್ಯಮದಿಂದ ಸ್ವಾವಲಂಬಿ ಬದುಕು ರೂಪಿಸಿಕೊಂಡ ಕೊಪ್ಪಳದ ಲಿಂಗತ್ವ ಅಲ್ಪಸಂಖ್ಯಾತ

ಸಮಾಜದ ಮುಕ್ಯ ವಾಹಿನಿಗೆ ಬರಬೇಕು, ಗೌರವಯುತವಾಗಿ ಬದುಕಬೇಕು, ಎಲ್ಲರಂತೆ ದುಡಿಯಬೇಕು ಎಂಬ ಆಸೆ ಲಿಂಗತ್ವ ಅಲ್ಪಸಂಖ್ಯಾತರಲ್ಲಿಯೂ ಇರುತ್ತದೆ. ಆದರೆ ಸಮಾಜ ಅವರನ್ನು ನೋಡುವ ದೃಷ್ಟಿ ಬದಲಾಗಬೇಕಿದೆ. ಅಲ್ಲದೆ ಸರಕಾರದಿಂದ ಪ್ರೋತ್ಸಾಹಗಳೂ ಹೆಚ್ಚಾಗಬೇಕಿದೆ ಎಂಬುದು ಅವರ ಮನವಿ.. ಎಲ್ಲ ಕಷ್ಟಗಳನ್ನೂ ಮೀರಿ ಕೊಪ್ಪಳದ ಮಂಜುನಾಥ್ ಎಂಬುವವರು ಜೀವನಕಟ್ಟಿಕೊಂಡ ಬಗೆ ಹೇಗಿದೆ ನೋಡಿ..

ವಿಜಯ ಕರ್ನಾಟಕ 7 Apr 2026 11:31 am

Gold Rate April 7: ಚಿನ್ನ - ಬೆಳ್ಳಿ ಬೆಲೆ ಸತತ 3ನೇ ದಿನವೂ ಇಳಿಕೆ; ಚಿನ್ನ ಪ್ರಿಯರಿಗೆ ಗುಡ್‌ನ್ಯೂಸ್

Gold Rate April 7: ಚಿನ್ನದ ಬೆಲೆಯು ನಿರಂತರವಾಗಿ ಇಳಿಕೆಯಾಗುತ್ತಿದ್ದು ಬಂಗಾರ ಪ್ರಿಯರಲ್ಲಿ ಸಂತೋಷವನ್ನುಂಟು ಮಾಡಿದೆ. ಕಳೆದ ಮೂರು ದಿನಗಳಿಂದಲೂ ಚಿನ್ನದ ಬೆಲೆಯು ಭರ್ಜರಿ ಇಳಿಕೆಯಾಗುತ್ತಿದ್ದು, ಏಪ್ರಿಲ್ 7ರಂದು ಸಹ ಚಿನ್ನದ ಬೆಲೆಯಲ್ಲಿ ಭರ್ಜರಿ ಇಳಿಕೆಯಾಗಿದೆ. ಏಪ್ರಿಲ್ 07ರಂದು ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಎಷ್ಟು ಇಳಿಕೆಯಾಗಿದೆ ಎನ್ನುವ ಸಂಪೂರ್ಣ ವಿವರ ಇಲ್ಲಿದೆ. 24 ಕ್ಯಾರೆಟ್ ಚಿನ್ನದ

ಒನ್ ಇ೦ಡಿಯ 7 Apr 2026 11:25 am

‘‘ಆರೋಗ್ಯಕ್ಕಾಗಿ ಒಟ್ಟಾಗಿ, ವಿಜ್ಞಾನದೊಂದಿಗೆ ನಿಲ್ಲೋಣ’’

ಇಂದು ವಿಶ್ವ ಆರೋಗ್ಯ ದಿನ

ವಾರ್ತಾ ಭಾರತಿ 7 Apr 2026 11:09 am

ಕಣಚೂರು ಸಂಸ್ಥೆಯಿಂದ ಅರ್ಹ ವಿದ್ಯಾರ್ಥಿಗಳಿಗೆ ನೂರು ಉಚಿತ ಸೀಟು, ಒಂದು ಕೋಟಿ ರೂ. ವಿದ್ಯಾರ್ಥಿ ವೇತನಕ್ಕೆ ಅರ್ಹತಾ ಪರೀಕ್ಷೆ

ಕೊಣಾಜೆ: ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ಪಿಯುಸಿ ಜೊತೆ ಆರಂಭವಾಗಲಿರುವ ಕಣಚೂರು ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರದಲ್ಲಿ 100 ವಿದ್ಯಾರ್ಥಿಗಳಿಗೆ ಉಚಿತ ದಾಖಲಾತಿ ಮತ್ತು ಕಣಚೂರು ಮೆಡಿಕಲ್ ಕಾಲೇಜಿನ ದಶಮಾನೋತ್ಸವ ಕೊಡುಗೆಯಾಗಿ ನೀಡುವ ಒಂದು ಕೋಟಿ ರೂಪಾಯಿ ಮೊತ್ತದ ವಿದ್ಯಾರ್ಥಿ ವೇತನಕ್ಕೆ ಅರ್ಹತಾ ಪರೀಕ್ಷೆಯು ಸೋಮವಾರ ಕಣಚೂರು ಹೆಲ್ತ್ ಸಿಟಿ ಕ್ಯಾಂಪಸ್ ನಲ್ಲಿ ನಡೆಯಿತು.  ಕಣಚೂರು ಸಂಸ್ಥೆಯು ಪಿಯುಸಿ ಇಂಟಿಗ್ರೇಟೆಡ್ NEET, JEE, NDA, CET, CA ಮಾಡಲು ಬಯಸುವ ಹತ್ತನೇ ತರಗತಿಯ ವಿದ್ಯಾರ್ಥಿಗಳಿಗೆ ಈ ಪರೀಕ್ಷೆಯನ್ನು ನಡೆಸಿತ್ತು. ಭಾರತದ ಖ್ಯಾತ ಸ್ಪರ್ಧಾತ್ಮಕ ಪರೀಕ್ಷೆ ತರಬೇತುದಾರರು ಮತ್ತು ಶ್ರೇಷ್ಠ ಮೌಲ್ಯಮಾಪನ ಪದ್ಧತಿಯನ್ನು ಅಳವಡಿಸಿ ಆರಂಭಿಸಿರುವ ಈ ಪರೀಕ್ಷಾ ತರಬೇತಿ ಕೇಂದ್ರದಲ್ಲಿ ಎಲ್ಲಾ ವರ್ಗದ ವಿದ್ಯಾರ್ಥಿಗಳಿಗೆ ಅವಕಾಶ ಸಿಗಲಿ ಎಂಬ ಉದ್ದೇಶದಿಂದ ಈ ಪರೀಕ್ಷೆ ಆಯೋಜಿಸಲಾಗಿದೆ. ಇದು ಹುಡುಗರಿಗೆ ಮತ್ತು ಹುಡುಗಿಯರಿಗೆ ಅವರ ಸಾಧನೆಗೆ ಅವಕಾಶ ಕಲ್ಪಿಸುವ ಪ್ರಯತ್ನವಾಗಿದೆ. ಗ್ರಾಮೀಣ ಮತ್ತು ಪ್ರತಿಭಾವಂತ ಆರ್ಥಿಕ ಹಿಂದುಳಿದ ಸಂಸಾರದ ಮಕ್ಕಳಿಗೆ ಪಿಯುಸಿ ಇಂಟಿಗ್ರೇಟೆಡ್ ಕಲಿಯಲು ಲಕ್ಷಾಂತರ ರೂಪಾಯಿ ನೀಡಬೇಕಿದೆ. ಈ ಪ್ರವೇಶ ಪರೀಕ್ಷೆ ಬರೆದು ಅರ್ಹತೆ ಪಡೆದ ವಿದ್ಯಾರ್ಥಿಗೆ ಇದು ಸಂಪೂರ್ಣ ಉಚಿತ ಆಗಲಿದೆ, ಸುಮಾರು ಎಂಟು ನೂರಕ್ಕಿಂತು ಹೆಚ್ಚು ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿದ್ದು, ಕೌನ್ಸಿಲಿಂಗ್ ನಂತರ ಮೊದಲ ಹಂತವಾಗಿ 380 ಮಕ್ಕಳನ್ನು ಆಯ್ಕೆ ಮಾಡಲಾಯಿತು. ಎರಡನೇ ಹಂತದ ಪರೀಕ್ಷೆ ನಡೆಸಲಾಗುವುದು ಎಂದು ಕಣಚೂರು ಸಂಸ್ಥೆಯ ನಿರ್ದೇಶಕ ಅಬ್ದುಲ್ ರಹ್ಮಾನ್ ಹೇಳಿದ್ದಾರೆ.  ಕಣಚೂರು ಸಂಸ್ಥೆಯ ಮೂಲಕ ನಾವು ಈ ಮೊದಲು ವಿವಿಧ ವೃತ್ತಿಪರ ಕೋರ್ಸ್ ಗೆ ಉಚಿತ ಸೀಟು, ವಿದ್ಯಾರ್ಥಿ ವೇತನ ನೀಡಿದ್ದೇವೆ. ಆದರೆ ಈ ಬಾರಿ ಸ್ಪರ್ಧಾತ್ಮಕ ಪರೀಕ್ಷೆ ತರಬೇತಿ ಕೇಂದ್ರಕ್ಕೆ ಅರ್ಹ ಮಕ್ಕಳಿಗೆ ಅವಕಾಶ ಸಿಗಲಿ ಎಂಬ ಉದ್ದೇಶದಿಂದ ಅಧಿಕೃತವಾಗಿ ನಾವು ಇದನ್ನು ಘೋಷಿಸಿದ್ದೇವೆ. ನೀವು ನಿಮಗೆ ಸಿಕ್ಕಿದ ಅವಕಾಶವನ್ನು ಸಮಾಜಕ್ಕೆ ಮರಳಿ ನೀಡಬೇಕು. ಆಗಲೇ ನಮ್ಮ ಪ್ರಯತ್ನ ನಿಮ್ಮ ಬದುಕು ಸಾರ್ಥಕ ಎಂದು ಕಣಚೂರು ಸಂಸ್ಥೆಯ ಸ್ಥಾಪಕ ಡಾಕ್ಟರ್ ಯು.ಕೆ.ಮೋನು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ಕಣಚೂರು ಮೆಡಿಕಲ್ ಕಾಲೇಜಿನ ದಶಮಾನೋತ್ಸವದ ಕೊಡುಗೆಯಾಗಿ ಒಂದು ಕೋಟಿ ರೂ. ವಿದ್ಯಾರ್ಥಿ ವೇತನವನ್ನು ನೀಡಲಾಗುತ್ತದೆ. ಇದು ಜಿಲ್ಲೆಯ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಮತ್ತು ಈ ಪರೀಕ್ಷೆ ಬರೆದು ಅವರ ಎಸೆಸೆಲ್ಸಿ ಅಂಕದ ಆಧಾರದಲ್ಲಿ ನೀಡಲಾಗುವುದು ಎಂದು ಸಂಸ್ಥೆಯ ಪ್ರಕಟನೆ ತಿಳಿಸಿದೆ.

ವಾರ್ತಾ ಭಾರತಿ 7 Apr 2026 11:09 am

ತಿಂಗಳೊಳಗೆ ಉದ್ಘಾಟನೆ ಎಂದಿದ್ದರು ಸಚಿವ ಸೋಮಣ್ಣ; ರಾಮನಗರ ರೈಲ್ವೆ ನಿಲ್ದಾಣ ಕಾಮಗಾರಿ ಆಮೆಗತಿ!

ರಾಮನಗರ ರೈಲು ನಿಲ್ದಾಣದ ಆಧುನೀಕರಣ ಕಾಮಗಾರಿ ನಡೆಯುತ್ತಿರುವುದರಿಂದ ನಿಲ್ದಾಣದ ಸುತ್ತಮುತ್ತ ತೋಡು-ತುಂಬುಗಳೇ ಕಾಣಿಸುತ್ತಿವೆ. ಇನ್ನೊಂದೆಡೆ ಇದರಿಂದಾಗಿ ಪ್ರಯಾಣಿಕರು ದಿನನಿತ್ಯ ಧೂಳಿನ ಮಜ್ಜನ ಮಾಡುವ ಸ್ಥಿತಿ ನಿರ್ಮಾಣವಾಗಿದೆ. ಪ್ಲಾಟ್‌ಫಾಮ್‌ರ್‍ಗಳಲ್ಲಿ ನಡೆಯುವ ಪ್ರ ಯಾಣಿಕರು ಧೂಳಿನ ನಡುವೆಯೇ ಸಂಚರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ರೈಲು ನಿಲ್ದಾಣದ ಪ್ರವೇಶ ದ್ವಾರ ಮತ್ತು ಪಾರ್ಕಿಂಗ್‌ಗಳಲ್ಲಿ ಮಾಸ್ಕ್‌ ಇಲ್ಲದೆ ನಿಲ್ಲುವುದೇ ಕಷ್ಟ ಎನ್ನುವ ಪರಿಸ್ಥಿತಿ ಇದೆ.

ವಿಜಯ ಕರ್ನಾಟಕ 7 Apr 2026 11:07 am

Shivamogga | ವಿವಿಧೆಡೆ ಲೋಕಾಯುಕ್ತ ದಾಳಿ

ಶಿವಮೊಗ್ಗ: ಜಿಲ್ಲೆಯ ವಿವಿಧೆಡೆ ಸರಕಾರಿ ಅಧಿಕಾರಿಗಳ ನಿವಾಸ, ಕಚೇರಿ ಮೇಲೆ ಮಂಗಳವಾರ ಬೆಳಗ್ಗೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಶೋಭಾ ಕೆ.ಆರ್. ಅವರಿಗೆ ಸೇರಿದ ವಿವಿಧ ಸ್ಥಳಗಳ ಮೇಲೆ ಏಕಕಾಲಕ್ಕೆ ದಾಳಿ ನಡೆಸಿ, ಪರಿಶೀಲನೆ ನಡೆಸಲಾಗುತ್ತಿದೆ. ಶಿವಮೊಗ್ಗ, ಶಿಕಾರಿಪುರ ಹಾಗೂ ಸಾಗರ ಸೇರಿದಂತೆ ಒಟ್ಟು ಐದು ಸ್ಥಳಗಳಲ್ಲಿ ಲೋಕಾಯುಕ್ತ ತಂಡಗಳು ಕಾರ್ಯಾಚರಣೆ ಕೈಗೊಂಡಿವೆ. ಶಿಕಾರಿಪುರ ಪಟ್ಟಣದ ಚೆನ್ನಕೇಶವ ನಗರದಲ್ಲಿರುವ ಶೋಭಾ ಅವರ ನಿವಾಸ ಹಾಗೂ ಸಾಗರ ತಾಲೂಕಿನ ಅಚಾಪುರ ಬಳಿ ಇರುವ ಅವರ ಮನೆಗಳ ಮೇಲೆ ಅಧಿಕಾರಿಗಳು ದಾಳಿ ನಡೆಸಿ ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ. ಶೋಭಾ ಅವರ ಆಪ್ತ ಸಹಾಯಕನ ಮನೆ ಮೇಲೆಯೂ ಲೋಕಾಯುಕ್ತ ದಾಳಿ ನಡೆದಿದೆ. ದಾವಣಗೆರೆ ಲೋಕಾಯುಕ್ತ ಎಸ್ಪಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಯುತ್ತಿದ್ದು, ದಾಳಿಯಲ್ಲಿ ಶಿವಮೊಗ್ಗ, ಹಾವೇರಿ ಹಾಗೂ ದಾವಣಗೆರೆ ಜಿಲ್ಲೆಗಳ ಲೋಕಾಯುಕ್ತ ಅಧಿಕಾರಿಗಳನ್ನೊಳಗೊಂಡ ಐದು ಪ್ರತ್ಯೇಕ ತಂಡಗಳು ಪಾಲ್ಗೊಂಡಿವೆ.

ವಾರ್ತಾ ಭಾರತಿ 7 Apr 2026 10:58 am

Uttar Pradesh | ‘ಅವಳನ್ನು ಸಂತೋಷವಾಗಿಡುವುದು ನನ್ನ ಕರ್ತವ್ಯ’: ವಿಚ್ಛೇದಿತ ಮಗಳಿಗೆ ಕುಟುಂಬದಿಂದ ಡೋಲು, ನೃತ್ಯದಿಂದ ಸಂಭ್ರಮದ ಸ್ವಾಗತ

ಮೀರತ್, ಎ. 6: ವಿಚ್ಛೇದನವನ್ನು ವಿಫಲತೆಯಾಗಿ ನೋಡುವ ಸಾಮಾಜಿಕ ಮನೋಭಾವದ ನಡುವೆ, ಉತ್ತರ ಪ್ರದೇಶದ ಮೀರತ್‌ ನಲ್ಲಿ ಒಂದು ಕುಟುಂಬವು ವಿಭಿನ್ನ ಸಂದೇಶ ನೀಡಿದೆ. ಮಗಳ ವೈವಾಹಿಕ ಬಂಧ ಕಾನೂನುಬದ್ಧವಾಗಿ ಅಂತ್ಯಗೊಂಡ ಸಂದರ್ಭವನ್ನು ದುಃಖವಾಗಿ ಕಾಣದೆ, ಸಂಭ್ರಮದಿಂದ ಆಚರಿಸಿರುವ ಘಟನೆ ನಡೆದಿದೆ. ಎಪ್ರಿಲ್ 4ರಂದು ಮೀರತ್ ಕೌಟುಂಬಿಕ ನ್ಯಾಯಾಲಯವು ಪ್ರಣೀತಾ ಅವರ ವಿಚ್ಛೇದನಕ್ಕೆ ಅನುಮತಿ ನೀಡಿದ ಬಳಿಕ, ಕುಟುಂಬಸ್ಥರು ಅವರನ್ನು ಮನೆಗೆ ಡೋಲ್‌-ನೃತ್ಯ, ಹೂಮಾಲೆ ಮತ್ತು ಸಿಹಿತಿಂಡಿಗಳೊಂದಿಗೆ ಬರಮಾಡಿಕೊಂಡರು. “ನನ್ನ ಮಗಳು ವೈವಾಹಿಕ ಜೀವನದಲ್ಲಿ ಸಂತೋಷವಾಗಿರಲಿಲ್ಲ. ಆ ಪರಿಸ್ಥಿತಿಯಿಂದ ಅವಳನ್ನು ಹೊರತರುವುದು ನನ್ನ ಕರ್ತವ್ಯ. ನಾವು ಯಾವುದೇ ಜೀವನಾಂಶವನ್ನು ಕೇಳಲಿಲ್ಲ. ಅವಳ ಸುರಕ್ಷತೆ ಮತ್ತು ಸಂತೋಷವೇ ನಮಗೆ ಮುಖ್ಯ,” ಎಂದು ನಿವೃತ್ತ ನ್ಯಾಯಾಧೀಶ ಜ್ಞಾನೇಂದ್ರ ಶರ್ಮಾ ತಿಳಿಸಿದ್ದಾರೆ. ನ್ಯಾಯಾಲಯದ ಹೊರಗೇ ಸಂಬಂಧಿಕರು ಡೋಲ್‌ ಬಾರಿಸುತ್ತಾ, ನೃತ್ಯ ಮಾಡುತ್ತಾ ಪ್ರಣೀತಾ ಅವರನ್ನು ಸ್ವಾಗತಿಸಿದ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. “I Love My Daughter” ಎಂಬ ಬರಹವಿದ್ದ ಟೀ-ಶರ್ಟ್‌ ಗಳನ್ನು ಧರಿಸಿದ್ದ ಕುಟುಂಬದವರು ಸಾರ್ವಜನಿಕವಾಗಿ ಬೆಂಬಲ ವ್ಯಕ್ತಪಡಿಸಿದರು. ತಂದೆ ಸ್ವತಃ ಹೂಮಾಲೆ ನೀಡಿ ಮಗಳನ್ನು ಬರಮಾಡಿಕೊಂಡರು. ಕುಟುಂಬಸ್ಥರು ನೀಡಿದ ವಿವರಗಳ ಪ್ರಕಾರ, ಪ್ರಣೀತಾ ಅವರು 2018ರ ಡಿಸೆಂಬರ್‌ ನಲ್ಲಿ ಸೇನಾ ಮೇಜರ್ ಗೌರವ್ ಅಗ್ನಿಹೋತ್ರಿ ಅವರನ್ನು ವಿವಾಹವಾಗಿದ್ದರು. ಆದರೆ ವೈವಾಹಿಕ ಜೀವನದಲ್ಲಿ ಅವರು ಮಾನಸಿಕ, ಭಾವನಾತ್ಮಕ ಮತ್ತು ದೈಹಿಕ ಕಿರುಕುಳವನ್ನು ಎದುರಿಸುತ್ತಿದ್ದರು ಎಂದು ಆರೋಪಿಸಲಾಗಿದೆ. ಹಲವು ವರ್ಷಗಳ ಪ್ರಯತ್ನದ ಬಳಿಕ ಅವರು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು. ಗಮನಾರ್ಹವಾಗಿ, ಕುಟುಂಬವು ಯಾವುದೇ ಆರ್ಥಿಕ ಪರಿಹಾರವನ್ನು ಕೇಳಲಿಲ್ಲ. ವಿಚ್ಛೇದನವನ್ನು ಕಳಂಕವಲ್ಲ, ಕಿರುಕುಳದಿಂದ ಮುಕ್ತಿ ಎಂದು ಕುಟುಂಬವು ವಿವರಿಸಿದೆ. ಮನೋವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಪ್ರಣೀತಾ ಪ್ರಸ್ತುತ ಹಣಕಾಸು ನಿರ್ದೇಶಕಿಯಾಗಿ ಕೆಲಸ ಮಾಡುತ್ತಿದ್ದಾರೆ. ವಿಚ್ಛೇದನದ ಬಳಿಕ ಮಾತನಾಡಿದ ಪ್ರಣೀತಾ, ಕಿರುಕುಳವನ್ನು ಎದುರಿಸುತ್ತಿರುವ ಮಹಿಳೆಯರು ಮೌನವಾಗಿರದೆ ಧೈರ್ಯವಾಗಿ ಸಹಾಯ ಪಡೆಯಬೇಕು ಎಂದು ಸಲಹೆ ನೀಡಿದ್ದಾರೆ. ಶಿಕ್ಷಣ, ಸ್ವಾವಲಂಬನೆ ಮತ್ತು ಭಾವನಾತ್ಮಕ ಶಕ್ತಿಗೆ ಆದ್ಯತೆ ನೀಡಬೇಕು ಎಂದು ಹೇಳಿದ್ದಾರೆ. Vineeta got married in 2018. The marriage soon turned bitter and didn't last long. After 7 years, divorce was formalized recently and Vineeta's parents celebrated it with Dhol, dance and sweets in the court premises in Meerut, Uttar Pradesh. Attendees were seen wearing T-shirts… pic.twitter.com/L4JAVH4jxx — Piyush Rai (@Benarasiyaa) April 5, 2026

ವಾರ್ತಾ ಭಾರತಿ 7 Apr 2026 10:57 am

ಟ್ರಂಪ್ ಡೆಡ್‌ಲೈನ್ ಬೆದರಿಕೆಗೆ ಟಕ್ಕರ್‌ ನೀಡಲು ವಿದ್ಯುತ್ ಸ್ಥಾವರಗಳ ಸುತ್ತ ʼಮಾನವ ಸರಪಳಿʼ ನಿರ್ಮಿಸಲು ದೇಶದ ಯುವಕರಿಗೆ ಇರಾನ್ ಕರೆ!

ಹೊರ್ಮುಜ್‌ ಜಲಸಂಧಿಯನ್ನು ಮುಕ್ತಗೊಳಿಸಿ ಒಪ್ಪಂದ ಮಾಡಿಕೊಳ್ಳದಿದ್ದರೆ, ಇರಾನ್‌ ಅನ್ನು ವಿದ್ಯುತ್‌ ಸ್ಥಾವರ ಸೇರಿದಂತೆ ವಿವಿಧ ಮೂಲಸೌಕರ್ಯಗಳನ್ನು ಸರ್ವನಾಶ ಮಾಡುತ್ತೇವೆ ಎಂದು ಏ.7ರ ರಾತ್ರಿ 8ಗಂಟೆ ETವರೆಗೂ ಗಡುವು ನೀಡಿದ್ದಾರೆ. ಈ ಗಡುವು ಮುಗಿಯಲು ಕೆಲವೇ ಗಂಟೆಗಳು ಬಾಕಿಯಿರುವಾಗಲೇ ಇರಾನ್‌ ತನ್ನ ದೇಶದ ಯುವಕರು ಒಗ್ಗಟ್ಟನ್ನು ಪ್ರದರ್ಶಿಸಲು ವಿದ್ಯುತ್‌ ಸ್ಥಾವರಗಳ ಮುಂದೆ ಮಾನವ ಸರಪಳಿ ನಿರ್ಮಿಸಿ ಅಮೆರಿಕಾದ ಬೆದರಿಕೆಗೆ ಸೆಡ್ಡುಹೊಡೆಯುವಂತೆ ಕರೆ ನೀಡಿದೆ. ಇತ್ತ ಮೊಜ್ತಬಾ ಖಮೇನಿಯವರ ಆರೋಗ್ಯದ ಕುರಿತು US-ಇಸ್ರೇಲಿ ಗುಪ್ತಚರ ಮೂಲಗಳು ತಿಳಿಸಿರುವ ವರದಿಯೊಂದು ಹೊರಬಿದ್ದಿದ್ದು, ಮೊಜ್ತಬಾ ಸದ್ಯ ಕೋಮಾದಲ್ಲಿದ್ದು, ಕೋಮ್‌ ನಗರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಕುರಿತು ವರದಿ ಇಲ್ಲಿದೆ..

ವಿಜಯ ಕರ್ನಾಟಕ 7 Apr 2026 10:53 am

ಸಮೀಪಿಸಿದ 'ಟ್ರಂಪ್ ಗಡುವು': ವಿದ್ಯುತ್ ಸ್ಥಾವರಗಳ ಸುತ್ತ ಮಾನವ ಸರಪಳಿ ರಚಿಸುವಂತೆ ನಾಗರಿಕರಿಗೆ ಇರಾನ್ ಕರೆ

ಟೆಹ್ರಾನ್: ಅಮೆರಿಕದ ಸಂಭವನೀಯ ದಾಳಿಯ ಎಚ್ಚರಿಕೆ ನಡುವೆಯೇ, ದೇಶದ ಮೂಲಸೌಕರ್ಯಗಳನ್ನು ರಕ್ಷಿಸಲು ಇರಾನ್ ಆಡಳಿತವು ದೇಶಾದ್ಯಂತ ಮಹತ್ವದ ಉಪಕ್ರಮಕ್ಕೆ ಚಾಲನೆ ನೀಡಿದೆ. ವಿದ್ಯುತ್ ಸ್ಥಾವರಗಳ ಸುತ್ತ ಮಾನವ ಸರಪಳಿಗಳನ್ನು ರಚಿಸುವಂತೆ ಯುವಕರು, ಕಲಾವಿದರು ಹಾಗೂ ಕ್ರೀಡಾಪಟುಗಳನ್ನು ಒಳಗೊಂಡು ನಾಗರಿಕರಿಗೆ ಕರೆ ನೀಡಲಾಗಿದೆ. ಹಾರ್ಮುಝ್ ಜಲಸಂಧಿ ಕುರಿತ ಉದ್ವಿಗ್ನತೆ ಹೆಚ್ಚುತ್ತಿರುವ ಸಂದರ್ಭದಲ್ಲಿ, ನಿಗದಿತ ಗಡುವಿನೊಳಗೆ ಜಲಸಂಧಿ ಸಂಪೂರ್ಣ ಕಾರ್ಯಾರಂಭವಾಗದಿದ್ದರೆ ವಿದ್ಯುತ್ ಸ್ಥಾವರಗಳು ಹಾಗೂ ಸೇತುವೆಗಳ ಮೇಲೆ ದಾಳಿ ನಡೆಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಕೆ ನೀಡಿದ್ದರಿಂದ ಈ ಬೆಳವಣಿಗೆ ನಡೆದಿದೆ. ಈ ಉಪಕ್ರಮವನ್ನು ಘೋಷಿಸಿದ ಇರಾನ್ ಯುವ ಮತ್ತು ಕ್ರೀಡಾ ಉಪ ಸಚಿವ ಅಲಿರೆಜಾ ರಹೀಮಿ, “ಸಾರ್ವಜನಿಕ ಮೂಲಸೌಕರ್ಯಗಳ ಮೇಲೆ ದಾಳಿ ಮಾಡುವುದು ಯುದ್ಧ ಅಪರಾಧ ಎಂಬ ಸಂದೇಶವನ್ನು ಜಗತ್ತಿಗೆ ತಲುಪಿಸಲು ನಾವು ಕೈಜೋಡಿಸುತ್ತಿದ್ದೇವೆ” ಎಂದು ಎಕ್ಸ್‌ನಲ್ಲಿ ತಿಳಿಸಿದ್ದಾರೆ. “ಉಜ್ವಲ ಭವಿಷ್ಯಕ್ಕಾಗಿ ಇರಾನ್ ಯುವ ಮಾನವ ಸರಪಳಿ” ಎಂಬ ಹೆಸರಿನ ಈ ಅಭಿಯಾನವು, ‘ಆಕ್ರಮಣಕಾರರ’ ವಿರುದ್ಧ ಸಶಸ್ತ್ರ ಪಡೆಗಳಿಗೆ ಒಗ್ಗಟ್ಟು ಮತ್ತು ಬೆಂಬಲ ವ್ಯಕ್ತಪಡಿಸುವ ಉದ್ದೇಶ ಹೊಂದಿದೆ ಎಂದು ಇರಾನ್ ಇಂಟರ್‌ನ್ಯಾಷನಲ್ ವರದಿ ತಿಳಿಸಿದೆ. ಎಪ್ರಿಲ್ 6ರಂದು ಟ್ರಂಪ್ ನೀಡಿದ ಹೇಳಿಕೆಗಳು ಉದ್ವಿಗ್ನತೆಯನ್ನು ಮತ್ತಷ್ಟು ಹೆಚ್ಚಿಸಿವೆ. ಟೆಹ್ರಾನ್‌ನ ವಿದ್ಯುತ್ ಸ್ಥಾವರಗಳು ಮತ್ತು ಪ್ರಮುಖ ಸೇತುವೆಗಳ ಮೇಲೆ ಸಂಘಟಿತ ದಾಳಿಗಳ ಸಾಧ್ಯತೆಯನ್ನು ಅವರು ಬಹಿರಂಗವಾಗಿ ಉಲ್ಲೇಖಿಸಿ, ಹಾರ್ಮುಝ್ ಜಲಸಂಧಿಯನ್ನು ತಕ್ಷಣ ತೆರೆಯುವಂತೆ ಒತ್ತಾಯಿಸಿದ್ದಾರೆ. ಟ್ರುತ್ ಸೋಶಿಯಲ್‌ನಲ್ಲಿ ಪ್ರಕಟಿಸಿದ ಸಂದೇಶದಲ್ಲಿ ಟ್ರಂಪ್ ಕಠಿಣ ಪದಗಳನ್ನು ಬಳಸಿದ್ದು, “ಜಲಸಂಧಿಯನ್ನು ತೆರೆಯಿರಿ, ಇಲ್ಲದಿದ್ದರೆ ಭೀಕರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ” ಎಂದು ಎಚ್ಚರಿಸಿದ್ದರು. ಇದರ ಮಧ್ಯೆ, ಟೆಹ್ರಾನ್ ಮತ್ತು ವಾಷಿಂಗ್ಟನ್ ನಡುವೆ ಸಂಭವನೀಯ ಒಪ್ಪಂದದ ಲಕ್ಷಣಗಳು ಗೋಚರಿಸುತ್ತಿರುವ ಹಿನ್ನೆಲೆಯಲ್ಲಿ, ಇರಾನ್‌ ನ ಸಾರ್ವಜನಿಕ ಮೂಲಸೌಕರ್ಯಗಳ ಮೇಲೆ ದಾಳಿ ಮಾಡುವ ಯೋಜನೆಯನ್ನು ಟ್ರಂಪ್ ಮುಂದೂಡುವ ಸಾಧ್ಯತೆ ಇದೆ ಎಂದು ಆಕ್ಸಿಯೋಸ್ ವರದಿ ತಿಳಿಸಿದೆ. ಅಮೆರಿಕದ ಹಿರಿಯ ಅಧಿಕಾರಿಯನ್ನು ಉಲ್ಲೇಖಿಸಿದ ವರದಿ, ಇರಾನ್ ಮೇಲೆ ದಾಳಿ ಮಾಡಲು ಅಂತಿಮ ನಿರ್ಧಾರ ಕೈಗೊಳ್ಳುವ ಅಧಿಕಾರ ಟ್ರಂಪ್‌ ಅವರಿಗೆ ಸೇರಿದ್ದು, ಪ್ರಸ್ತುತ ಪರಿಸ್ಥಿತಿಯನ್ನು ಅವಲಂಬಿಸಿ ಅವರು ಆ ಕ್ರಮ ಕೈಗೊಳ್ಳಬಹುದು ಅಥವಾ ಕೈಬಿಡಬಹುದು ಎಂದು ತಿಳಿಸಿದೆ.

ವಾರ್ತಾ ಭಾರತಿ 7 Apr 2026 10:38 am

ಕರ್ನಾಟಕ ದ್ವಿತೀಯ PUC ಫಲಿತಾಂಶಕ್ಕೆ ತಟ್ಟಿದ ಚುನಾವಣಾ ನೀತಿ ಸಂಹಿತೆ ಬಿಸಿ: ಏಪ್ರಿಲ್‌ 8ಕ್ಕೂ ರಿಸಲ್ಟ್ ಬರೋದು ಡೌಟ್‌?

ರಾಜ್ಯದಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ ಬರೆದು ಫಲಿತಾಂಶಕ್ಕಾಗಿ ಕಾತುರದಿಂದ ಕಾಯುತ್ತಿರುವ ಲಕ್ಷಾಂತರ ವಿದ್ಯಾರ್ಥಿಗಳಿಗೆ ಕೊಂಚ ನಿರಾಸೆಯಾಗಿದೆ. ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯು (KSEAB) ಈಗಾಗಲೇ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಕಾರ್ಯವನ್ನು ಪೂರ್ಣಗೊಳಿಸಿದ್ದು, ರಿಸಲ್ಟ್ ನೀಡಲು ಸಕಲ ಸಿದ್ಧತೆ ಮಾಡಿಕೊಂಡಿದೆ. ಆದರೆ ಕರ್ನಾಟಕ ದ್ವಿತೀಯ ಪಿಯುಸಿ ಫಲಿತಾಂಶಕ್ಕೆ ಇದೀಗ ಚುನಾವಣಾ ನೀತಿ ಸಂಹಿತೆಯ (Model Code

ಒನ್ ಇ೦ಡಿಯ 7 Apr 2026 10:33 am

ಕೊನೆಗೂ ಅಮರಾವತಿಯೇ ಆಂಧ್ರ ಪ್ರದೇಶದ ರಾಜಧಾನಿ : 12 ವರ್ಷಗಳ ಅನಿಶ್ಚಿತತೆಗೆ 3 ಕಾರಣಗಳು

Andhra Capital Amaravati : ಆಂಧ್ರ ಪ್ರದೇಶದ ರಾಜಧಾನಿಯಾಗಿ ಅಮರಾವತಿ ಎನ್ನುವ ಅಧಿಕೃತ ಘೋಷಣೆ ಹೊರಬಿದ್ದಿದೆ. ಅಖಂಡ ಆಂಧ್ರ ವಿಭಜನೆ ಆದಾಗಿನಿಂದಲೂ, ಆಂಧ್ರದ ರಾಜಧಾನಿಯ ಬಗ್ಗೆ ಹಲವು ಗೊಂದಲಗಳಿದ್ದವು. ವೈಎಸ್ ಜಗನ್ಮೋಹನ್ ರೆಡ್ಡಿ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಮೂರು ರಾಜಧಾನಿ ಎನ್ನುವ ವಿಷಯ ಪ್ರಸ್ತಾವನೆಯಿತ್ತು. ಆದರೆ, ಅದನ್ನು ಕೇಂದ್ರ ಸರ್ಕಾರ ತಿರಸ್ಕರಿಸಿತ್ತು.

ವಿಜಯ ಕರ್ನಾಟಕ 7 Apr 2026 10:16 am

Rich: 6ನೇ ತರಗತಿ ಓದಿರುವ ಲೀಮಾ ರೋಸ್ 1,000 ಕೋಟಿ ರೂ. ಒಡತಿ, ತಮಿಳುನಾಡು ಚುನಾವಣೆಯಲ್ಲಿ ಅತ್ಯಂತ ಶ್ರೀಮಂತ ಅಭ್ಯರ್ಥಿ

Rich: ತಮಿಳುನಾಡಿನ ವಿಧಾನಸಭೆ ಚುನಾವಣೆಗೆ ಕೆಲವೇ ದಿನಗಳು ಬಾಕಿ ಉಳಿದಿವೆ. ಈ ಬಾರಿ ತಮಿಳುನಾಡಿನ ವಿಧಾನಸಭೆ ಚುನಾವಣೆಯಲ್ಲಿ ಅತ್ಯಂತ ಶ್ರೀಮಂತರು ಸ್ಪರ್ಧೆ ಮಾಡುತ್ತಿದ್ದಾರೆ. ಕೋಟ್ಯಾಧಿಪತಿಗಳು ಚುನಾವಣಾ ಕಣದಲ್ಲಿ ಇರುವುದು ಗಮನ ಸೆಳೆಯುತ್ತಿದೆ. ಅದರಲ್ಲಿ ಲೀಮಾ ರೋಸ್ ಅವರು ಸಹ ಒಬ್ಬರು ಲಾಟರಿ ಕಿಂಗ್ ಮಾರ್ಟಿನ್ ಅವರ ಪತ್ನಿ ಆಗಿರುವ ಇವರು, ತಮಿಳುನಾಡಿನ ಅತ್ಯಂತ ಶ್ರೀಮಂತ ಅಭ್ಯರ್ಥಿಯಾಗಿದ್ದಾರೆ. ಇವರ

ಒನ್ ಇ೦ಡಿಯ 7 Apr 2026 10:10 am

ಮಂಗಳೂರು: ವ್ಯಾಪಾರಿ-ಗ್ರಾಹಕ ಸ್ನೇಹಿಯಾಗದ ಮಾರುಕಟ್ಟೆಗಳು!

ಹಲವು ವರ್ಷಗಳಿಂದ ತೆರಿಗೆ ಹಣಕ್ಕೆ ಸಿಗದ ನ್ಯಾಯ

ವಾರ್ತಾ ಭಾರತಿ 7 Apr 2026 9:58 am

Chikkamagaluru | ಸ್ನೇಹಿತನ ವಿವಾಹಕ್ಕೆ ಬಂದಿದ್ದ ಗದಗದ ಯುವಕ ಭದ್ರಾ ನದಿಯಲ್ಲಿ ಮುಳುಗಿ ಮೃತ್ಯು

ಚಿಕ್ಕಮಗಳೂರು: ಸ್ನೇಹಿತನ ಮದುವೆಗೆ ಬಂದಿದ್ದ ಗದಗ ಮೂಲದ ಯುವಕನೋರ್ವ ಭದ್ರಾ ನದಿಯಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಎನ್.ಆರ್.ಪುರ ತಾಲೂಕಿನ ಬನ್ನೂರು ಗ್ರಾಮದಲ್ಲಿ ನಡೆದಿದೆ. ಮೃತರನ್ನು ಗದಗ ಜಿಲ್ಲೆ ಮೂಲದ ಅಭಿಷೇಕ್ (27) ಎಂದು ಗುರುತಿಸಲಾಗಿದೆ. ತನ್ನ ಸ್ನೇಹಿತನ ಮದುವೆ ಕಾರ್ಯಕ್ರಮದಲ್ಲಿ ಭಾಗಿಯಾಗಲು ಬನ್ನೂರು ಗ್ರಾಮಕ್ಕೆ ಬಂದಿದ್ದ ಅಭಿಷೇಕ್, ಇಲ್ಲಿನ ಭದ್ರಾ ರೆಸಾರ್ಟ್ ನಲ್ಲಿ ತಂಗಿದ್ದರು. ರವಿವಾರ ಸಂಜೆ ಭದ್ರಾ ನದಿಗೆ ಈಜಲು ಅಥವಾ ನೀರಿಗಿಳಿದ ಅಭಿಷೇಕ್ ಆಕಸ್ಮಿಕವಾಗಿ ನದಿಯ ಸೆಳೆತಕ್ಕೆ ಸಿಲುಕಿ ನಾಪತ್ತೆಯಾಗಿದ್ದರು. ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ಬಾಳೆಹೊನ್ನೂರು ಪೊಲೀಸರು ಮತ್ತು ಸ್ಥಳೀಯರು ರವಿವಾರ ಸಂಜೆಯೇ ನದಿಯಲ್ಲಿ ಶೋಧ ನಡೆಸಿದ್ದರೂ ಅಭಿಷೇಕ್ ಪತ್ತೆಯಾಗಿರಲಿಲ್ಲ. ಸೋಮವಾರ ಮತ್ತೆ ಪೊಲೀಸ್ ಇಲಾಖೆ, ಅಗ್ನಿಶಾಮಕ ದಳ ಹಾಗೂ ಸ್ಥಳೀಯ ಈಜು ತಜ್ಞರು ಜಂಟಿಯಾಗಿ ಕಾರ್ಯಾಚರಣೆ ನಡೆಸಿ ಅಭಿಷೇಕ್ ಮೃತದೇಹವನ್ನು ಪತ್ತೆಹಚ್ಚಿದ್ದಾರೆ. ಈ ಬಗ್ಗೆ ಬಾಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಾರ್ತಾ ಭಾರತಿ 7 Apr 2026 9:55 am

ಕೊಡಗಿನಲ್ಲಿ ಶೇ.98.81ರಷ್ಟು ಗೃಹಲಕ್ಷ್ಮಿ ಯೋಜನೆ ಸಾಧನೆ

ಮಡಿಕೇರಿ : ರಾಜ್ಯ ಕಾಂಗ್ರೆಸ್ ಸರಕಾರ ಜಾರಿಗೆ ತಂದಿರುವ ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಪ್ರಮುಖವಾಗಿರುವ ಮನೆಯ ಯಜ ಮಾನಿಗೆ ಮಾಸಿಕ ಎರಡು ಸಾವಿರ ರೂ ನೀಡುವ ಯೋಜನೆ ಕೊಡಗು ಜಿಲ್ಲೆಯಲ್ಲಿ ಅಭೂತಪೂರ್ವ ಯಶಸ್ಸು ಕಂಡಿದೆ. ಕೊಡಗು ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮಾಹಿತಿಯ ಪ್ರಕಾರ ಕೊಡಗು ಜಿಲ್ಲೆಗೆ ಇದುವರೆಗೆ 582 ಕೋಟಿ ರೂ. ಗೃಹಲಕ್ಷ್ಮಿ ಹಣ ಬಿಡುಗಡೆಯಾಗಿದೆ. 2023ರ ಆಗಸ್ಟ್ ತಿಂಗಳಿನಿಂದ ಜಾರಿಗೆ ಬಂದಿರುವ ಗೃಹಲಕ್ಷ್ಮಿ ಯೋಜನೆಯಡಿ ಕೊಡಗು ಜಿಲ್ಲೆಗೆ 2025ರ ನವೆಂಬರ್ ತಿಂಗಳವರೆಗೆ 582.56 ಕೋಟಿ 10 ಸಾವಿರ ರೂ. ಬಿಡುಗಡೆಯಾಗಿದೆ. ಅಂತಿಮವಾಗಿ 2025ರ ನವೆಂಬರ್ ತಿಂಗಳಲ್ಲಿ 1,17,888 ಫಲಾನುಭವಿಗಳ ಖಾತೆಗೆ ಗೃಹಲಕ್ಷಿಹಣ ಜಮೆಯಾಗಿದ್ದು, ನವೆಂಬರ್ ತಿಂಗಳಲ್ಲಿ ಜಿಲ್ಲೆಗೆ 23.57 ಕೋಟಿ 76 ಸಾವಿರ ರೂ. ಬಿಡುಗಡೆ ಯಾಗಿದೆ. ಕೊಡಗು ಜಿಲ್ಲೆಯಲ್ಲಿ ಇದುವರೆಗೆ 245 ಗೃಹಲಕ್ಷ್ಮಿ ಫಲಾನುಭವಿಗಳು ಮರಣವೊಂದಿದ್ದಾರೆ.ಅದಲ್ಲದೇ ಗೃಹಲಕ್ಷ್ಮಿ ಯೋಜನೆ ಯಡಿ ನೋಂದಣಿಮಾಡಿಕೊಂಡಿರುವ 2,383 ಫಲಾನುಭವಿಗಳ ಐಟಿ ಮತ್ತು ಜಿಎಸ್‌ಟಿ ಪಾವತಿದಾರರಾಗಿದ್ದಾರೆ. ಅಲ್ಲದೇ ಓಅ ಈಚಿಟಡಿ ಮಾಡಿಸಲು 356 ಫಲಾನುಭವಿಗಳು ಬಾಕಿ ಉಳಿದಿದ್ದಾರೆ. ಕೊಡಗು ಜಿಲ್ಲೆಯಲ್ಲಿ 2025ರ ನವೆಂಬರ್ ಅಂತ್ಯಕ್ಕೆ 1,22,323 ಒಟ್ಟು ಗುರಿ ಹೊಂದಲಾಗಿತ್ತು. ಆದರೆ, 1,20,872 ಫಲಾನುಭವಿಗಳು ನೋಂದಣಿಯಾಗಿದ್ದು, ಇದರಲ್ಲಿ 1,17,888 ಫಲಾನುಭವಿಗಳ ಖಾತೆಗೆ 2025ರ ನವೆಂಬರ್ ಅಂತ್ಯಕ್ಕೆ ಒಟ್ಟು 23,57,76,000 ರೂ ಜಮೆಯಾಗಿದ್ದು,ಕೊಡಗು ಜಿಲ್ಲೆಯಲ್ಲಿ ಗೃಹಲಕ್ಮ್ಷಿ ಯೋಜನೆಯು ಶೇ.98.81ರಷ್ಟು ಗುರಿ ಸಾಧಿಸಿದೆ. ಪಂಚ ಗ್ಯಾರಂಟಿ ಯೋಜನೆಯ ಎಲ್ಲ ಪ್ರಯೋಜನಗಳು ಫಲಾನುಭವಿಗಳಿಗೆ ದೊರಕಬೇಕಾದರೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ತಮ್ಮ ಜವಾಬ್ದಾರಿಯನ್ನು ಅರಿತು ಕೆಲಸ ಮಾಡಬೇಕು. ಎಂ.ಜಿ. ಮೋಹನ್ ದಾಸ್,  ಗ್ಯಾರಂಟಿ ಯೋಜನಾ ಅನುಷ್ಠಾನ ತಾಲೂಕು ಸಮಿತಿ ಅಧ್ಯಕ್ಷ  

ವಾರ್ತಾ ಭಾರತಿ 7 Apr 2026 9:47 am

ಕಾಂಗ್ರೆಸ್‌ ಒಳಬಿಕ್ಕಟ್ಟಿನ ನಡುವೆ ಕೇರಳ ಸಿಎಂ ಸ್ಥಾನಕ್ಕೆ ನಾಯರ್‌ಗಳ ಪೈಪೋಟಿ; ತಿರುವು ಮುರುವಿನ ರಾಜಕಾರಣದಲ್ಲಿ ಯಾರಿಗೆ ಕೇರಳ?

ಕೇರಳದಲ್ಲಿ ಚುನಾವಣೆಯ ಕಣ ರಂಗೇರಿದ್ದು, ಕಾಂಗ್ರೆಸ್‌ ಪಕ್ಷ ತನ್ನ ಆಂತರಿಕ ಒಡಕಿನ ನಡುವೆಯೂ ಮುನ್ನುಗ್ಗುತ್ತಿದ್ದು, ಕಾಂಗ್ರೆಸ್‌ ನೇತೃತ್ವದ ಯುಡಿಎಫ್‌ ಮತ್ತು ಸಿಪಿಐಎಂ ಮುಂದಾಳತ್ವದ ಎಲ್‌ಡಿಎಫ್‌ ನಡುವೆ ಪೈಪೋಟಿ ಎದುರಾಗಿದೆ. ಅದರಲ್ಲೂ ಪ್ರಮುಖವಾಗಿ ಈ ಬಾರಿಯ ಎಲೆಕ್ಷನ್‌ ಗೆದ್ದರೆ ಸಿಎಂ ಸ್ಥಾನವನ್ನು ಯಾರು ಅಲಂಕರಿಸಲಿದ್ದಾರೆ ಎಂಬ ಚರ್ಚೆ ನಡೆಯುತ್ತಿದ್ದು, ಇತ್ತ, ಪ್ರಸ್ತುತ ಸಿಎಂ ಪಿಣರಾಯಿ ವಿಜಯನ್‌ ಕುಟುಂಬದ ಹಸ್ತಕ್ಷೇಪದ ಕುರಿತು ಹಲವು ಆರೋಪಗಳು ಕೇಳಿಬರುತ್ತಿವೆ. ಈ ನಡುವೆ ಪ್ರಬಲ ನಾಯರ್‌ ಸಮುದಾಯದ ನಾಯಕರ ನಡುವೆ ಪೈಪೋಟಿಯಿದೆ.ಈ ಕುರಿತ ವರದಿ ಇಲ್ಲಿದೆ..

ವಿಜಯ ಕರ್ನಾಟಕ 7 Apr 2026 9:34 am

ಬಂಜರು ನೆಲದಲ್ಲಿ ವಿದೇಶಿ ತಳಿಯ ಬೆಳೆ ಬೆಳೆದ ರೈತ ಮಹಿಳೆ , 1 ಕೆಜಿ ಮಾವು 1 ಲಕ್ಷ ರೂಗೆ ಮಾರಾಟ

ವಿಜಯಪುರ ಜಿಲ್ಲೆಯ ಇಂಡಿ ನಗರದ ಪ್ರಗತಿಪರ ರೈತ ಮಹಿಳೆ ರಾಜಶ್ರೀ ಅನಂತ ಜೈನ ಅವರು ವಿಶ್ವದ ಅತ್ಯಂತ ದುಬಾರಿ ತಳಿ ಎಂದೇ ಖ್ಯಾತಿಯಾದ ಜಪಾನ್ ಮೂಲದ 'ಮಿಯಾಝಕಿ' ಮಾವನ್ನು ಬೆಳೆಯುವ ಮೂಲಕ ಗಮನಸೆಳೆದಿದ್ದಾರೆ. ಕೇವಲ 10 ಗುಂಟೆ ಜಮೀನಿನಲ್ಲಿ ಆಂಧ್ರಪ್ರದೇಶದಿಂದ ತಂದ ಸಸಿಗಳನ್ನು ನಾಟಿ ಮಾಡಿರುವ ಇವರು, ಈಗ ಯಶಸ್ವಿಯಾಗಿ ಫಸಲು ಪಡೆಯುತ್ತಿದ್ದಾರೆ. ಮಾರುಕಟ್ಟೆಯಲ್ಲಿ ಈ ಹಣ್ಣಿಗೆ ವಿಪರೀತ ಬೇಡಿಕೆಯಿದ್ದು, ಸದ್ಯ ಪ್ರತಿ ಕೆಜಿಗೆ ಒಂದು ಲಕ್ಷ ರೂಪಾಯಿಯಂತೆ ಮಾರಾಟ ಮಾಡುತ್ತಾ ಭರಪೂರ ಆದಾಯ ಗಳಿಸುತ್ತಿದ್ದಾರೆ.

ವಿಜಯ ಕರ್ನಾಟಕ 7 Apr 2026 9:19 am

2,298 ಕೋಟಿ ರೂ.ಬಿಲ್ ಬಾಕಿಯಿರಿಸಿದ್ದರಿಂದ ರಾಜ್ಯ ಸರಕಾರದ 276 ಕಾಮಗಾರಿಗಳು ಅಪೂರ್ಣ

ನಿಷ್ಫಲಗೊಂಡ 5,066 ಕೋಟಿ ರೂ. ಬಂಡವಾಳ ವೆಚ್ಚ

ವಾರ್ತಾ ಭಾರತಿ 7 Apr 2026 9:10 am

ನೈಋುತ್ಯ ರೈಲ್ವೆಯಿಂದ ನಗರ ವ್ಯಾಪ್ತಿಯಲ್ಲಿ ರೈಲಿಗೆ ಶೀಘ್ರವೇ ʼಕವಚʼ ತಂತ್ರಜ್ಞಾನ; 2ನೇ ಹಂತದಲ್ಲಿ 456ಕಿ.ಮೀ ಮಾರ್ಗದಲ್ಲಿ ಕಾಮಗಾರಿ

ನೈಋತ್ಯ ರೈಲ್ವೆಯ ಬೆಂಗಳೂರು ವಿಭಾಗ ವ್ಯಾಪ್ತಿಯಲ್ಲಿ ಕವಚ ತಂತ್ರಜ್ಞಾನ ಅಳವಡಿಕೆಯ ಮುಂದುವರೆದ ಭಾಗವಾಗಿ 2ನೇ ಹಂತದಲ್ಲಿ ಸುಮಾರು 456 ಕಿ.ಮೀ ಉದ್ದದ ಮಾರ್ಗದಲ್ಲಿ ಕಾಮಗಾರಿಗೆ ಸಿದ್ದತೆ ನಡೆಯುತ್ತಿದೆ. ಇದರ ಸುರಕ್ಷತೆ ವ್ಯವಸ್ಥೆ ಹೇಗೆ? ಯಾವ ಮಾರ್ಗದಲ್ಲಿ ಕಾಮಗಾರಿ ನಡೆಯಲಿದೆ ಎಂಬ ಮಾಹಿತಿ ಇಲ್ಲಿದೆ..

ವಿಜಯ ಕರ್ನಾಟಕ 7 Apr 2026 8:51 am

’ಸನ್ ಟಿವಿ, BSNL ಸಂಸ್ಥೆಯ ಕೇಬಲ್ ಕಳ್ಳ ’ : ಪರೋಕ್ಷವಾಗಿ, ಡಿಎಂಕೆ ವಿರುದ್ದ ಅಣ್ಣಾಮಲೈ ವಾಗ್ದಾಳಿಯ ಪರಿಯಿದು

Annamalai Vs DMK : ವಿಧಾನಸಭಾ ಚುನಾವಣೆಯ ಹೊಸ್ತಿಲಲ್ಲಿರುವ ತಮಿಳುನಾಡಿನಲ್ಲಿ ಡಿಎಂಕೆ ಮತ್ತು ಬಿಜೆಪಿ - ಎಐಎಡಿಎಂಕೆ ಮೈತ್ರಿಕೂಟದ ಸದಸ್ಯ ಪಕ್ಷಗಳ ವಾಕ್ಸಮರ ತಾರಕಕ್ಕೇರುತ್ತಿದೆ. ತ್ರಿಭಾಷಾ ಸೂತ್ರದ ಬಗ್ಗೆ ತಗಾದೆ ತೆಗೆಯುತ್ತಿರುವ ಡಿಎಂಕೆ ಸರ್ಕಾರಕ್ಕೆ, ಕಠೋರವಾದ ಪದಗಳಿಂದ, ಬಿಜೆಪಿ ನಾಯಕ ಅಣ್ಣಾಮಲೈ ವಾಗ್ದಾಳಿ ನಡೆಸಿದ್ದಾರೆ. ಅಣ್ಣಾಮಲೈ ಹೇಳಿಕೆಗೆ, ಡಿಎಂಕೆ ನಾಯಕರು ಕೆಂಡ ಕಾರುತ್ತಿದ್ದಾರೆ.

ವಿಜಯ ಕರ್ನಾಟಕ 7 Apr 2026 8:47 am

ಆರ್‌ಸಿಬಿ ಪಾಲಿಗೆ ವರದಾನವಾದ ಒಂದೇ ಒಂದು ನೋ-ಬಾಲ್

ಐಪಿಎಲ್‌ 2026ರ ಸೀಸನ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಸೋಲಿನ ಹಾದಿ ಹಿಡಿದಿದೆ. ಭಾನುವಾರ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಸಿಎಸ್‌ಕೆ ವಿರುದ್ಧ 43 ರನ್‌ಗಳ ಭರ್ಜರಿ ಜಯ ಸಾಧಿಸಿದೆ. ಈ ಮೂಲಕ ಚೆನ್ನೈ ಸತತ ಮೂರು ಸೋಲುಗಳು ಕಂಡಿದ್ದು, ಅಂಕಪಟ್ಟಿಯಲ್ಲಿ ಕೊನೇ ಸ್ಥಾನ ಅಲಂಕರಿಸಿದೆ. ಟೀಮ್ ಡೇವಿಡ್

ಒನ್ ಇ೦ಡಿಯ 7 Apr 2026 8:45 am

ಸ್ಟೇಡಿಯಂ ಸಾಲುತ್ತಿಲ್ಲ, 1 ಲಕ್ಷ ಆಸನಗಳ ಸಾಮರ್ಥ್ಯದ ಮೈದಾನ ಬೇಕು: ಡಿಸಿಎಂಗೆ ಆರ್‌ಸಿಬಿ ಅಭಿಮಾನಿಗಳ ವಿಶೇಷ ಬೇಡಿಕೆ

RCB Fans Special Damands: ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಆರ್‌ಸಿಬಿ-ಸಿಎಸ್‌ಕೆ ನಡುವಿನ ಹೈವೋಲ್ಟೇಜ್ ಐಪಿಎಲ್ ಪಂದ್ಯ ವೀಕ್ಷಣೆ ಮಾಡಲು ಅಭಿಮಾನಿಗಳ ದಂಡೇ ನೆರೆದಿತ್ತು. ಈ ವೇಳೆ ಎರಡೂ ತಂಡಗಳ ಪರ ಘೋಷಣೆಗಳು ಕೇಳಿಬಂದಿದ್ದಲ್ಲದೆ, ವಿಶೇಷ ಬೇಡಿಕೆ ಕೂಡ ಕೇಳಿಬಂತು. ಇದೀಗ ಇದೇ ವಿಚಾರ ಎಲ್ಲೆಡೆ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಬೆಂಗಳೂರಿನ ಹೃದಯಭಾಗದಲ್ಲಿರುವ ಎಂ.ಚಿನ್ನಸ್ವಾಮಿ

ಒನ್ ಇ೦ಡಿಯ 7 Apr 2026 8:02 am

ಉದ್ಯೋಗದ ಆಸೆಯಿಂದ ರಷ್ಯಾಗೆ ತೆರಳಿ ಯುದ್ಧಕ್ಕೆ ನಿಯೋಜಿತನಾಗಿದ್ದ ಜಮ್ಮುವಿನ ಯುವಕ ಮೃತ್ಯು

ಜಮ್ಮು: ಉತ್ತಮ ಉದ್ಯೋಗ ಪಡೆಯವ ಕನಸಿನೊಂದಿಗೆ ರಷ್ಯಾಗೆ ತೆರಳಿದ ಒಂದೇ ತಿಂಗಳಲ್ಲಿ ತನ್ನನ್ನು ರಷ್ಯಾ-ಉಕ್ರೇನ್ ಯುದ್ಧರಂಗಕ್ಕೆ ನಿಯೋಜಿಸಲಾಗಿದೆ ಎಂದು ಕುಟುಂಬಕ್ಕೆ ವಾಟ್ಸಪ್ ಸಂದೇಶ ಕಳುಹಿಸಿದ್ದ 23 ವರ್ಷದ ಯುವಕ ಉಭಯ ದೇಶಗಳ ನಡುವಿನ ಸಂಘರ್ಷದ ವೇಳೆ ಮೃತಪಟ್ಟಿರುವುದು ದೃಢಪಟ್ಟಿದೆ. ಈ ಯುವಕ 2025ರ ಸೆಪ್ಟೆಂಬರ್ 13ರಂದು ರಷ್ಯಾಗೆ ತರಳಿದ್ದ ಹಾಗೂ ಮುಂದಿನ ತಿಂಗಳೇ ಕುಟುಂಬಕ್ಕೆ ಮಾಹಿತಿ ನೀಡಿ, ಸ್ವದೇಶಕ್ಕೆ ವಾಪಸ್ಸಾಗಲು ನೆರವಾಗುವಂತೆ ಕೋರಿದ್ದ. ಕಳೆದ ಸೆಪ್ಟೆಂಬರ್ ನಲ್ಲೇ ಈ ಸಚಿನ್ ಎಂಬ ಯುವಕ ಮೃತಪಟ್ಟಿರಬೇಕು ಎಂದು ಹೇಳಲಾಗಿದ್ದು, ರವಿವಾರ ಸ್ವಗ್ರಾಮ ಅಖನೂರಿನ ಪಹಾರಿವಾಲಾದಲ್ಲಿ ಅಂತಿಮ ಸಂಸ್ಕಾರ ನೆರವೇರಿಸಲಾಯಿತು. ರವಿವಾರ ಮುಂಜಾನೆ ಸಚಿನ್ ಪಾರ್ಥಿವ ಶರೀರವನ್ನು ಹುಟ್ಟೂರಿಗೆ ತರಲಾಗಿತ್ತು. ರಷ್ಯಾ- ಉಕ್ರೇನ್ ಯುದ್ಧದಲ್ಲಿ ಮೃತಪಟ್ಟ ಜಮ್ಮುವಿನ ಎರಡನೇ ವ್ಯಕ್ತಿ ಇವರಾಗಿದ್ದು, ಕಳೆದ ವರ್ಷದ ಫೆಬ್ರವರಿಯಲ್ಲಿ ಆರ್.ಎಸ್.ಪುರ ಸೆಕ್ಟರ್ ನ ಗೋವಾನಾ ಗ್ರಾಮದ 24 ವರ್ಷ ವಯಸ್ಸಿನ ಮಜೀಂದರ್ ಸಿಂಗ್ ಇಂಥದ್ದೇ ಸನ್ನಿವೇಶದಲ್ಲಿ ಜೀವ ಕಳೆದುಕೊಂಡಿದ್ದರು. 2024ರ ಡಿಸೆಂಬರ್ ನಲ್ಲಿ ಉನ್ನತ ಶಿಕ್ಷಣದ ಜತೆಗೆ ಉದ್ಯೋಗ ಮಾಡುವ ಮೂಲಕ ಕುಟುಂಬಕ್ಕೆ ಆರ್ಥಿಕ ನೆರವು ಒದಗಿಸುವ ಸಲುವಾಗಿ ವಿದ್ಯಾರ್ಥಿ ವೀಸಾದಲ್ಲಿ ಸಿಂಗ್ ರಷ್ಯಾಗೆ ತೆರಳಿದ್ದರು. ಸಚಿನ್ ಹಾಗೂ ಜಮ್ಮು ಜಿಲ್ಲೆಯ ಇತರ ಇಬ್ಬರು ಯುವಕರಾದ ಸುಮೀತ್ ಶರ್ಮಾ ಹಾಗೂ ಅತುಲ್ ಶರ್ಮಾ ನಿರ್ಮಾಣ ಕ್ಷೇತ್ರದ ಉದ್ಯೋಗಕ್ಕೆ ಆಫರ್ ಲೆಟರ್ ಗಳನ್ನು ಪಡೆದ ಬಳಿಕ ರಷ್ಯಾಗೆ ತೆರಳಿದ್ದರು. ಒಂದೇ ಕಂತಿನಲ್ಲಿ 20 ಲಕ್ಷ ಹಾಗೂ ಮಾಸಿಕ 2.5 ಲಕ್ಷ ರೂಪಾಯಿ ವೇತನ ಹಾಗೂ ಇತರ ಸೌಲಭ್ಯಗಳನ್ನು ನೀಡುವುದಾಗಿ ಆಮಿಷವೊಡ್ಡಲಾಗಿತ್ತು ಎಂದು ಕುಟುಂಬ ಸದಸ್ಯರು ಹೇಳಿದ್ದಾರೆ.

ವಾರ್ತಾ ಭಾರತಿ 7 Apr 2026 7:38 am

Karnataka Rain Updates: ಚಂಡಮಾರುತ ಪ್ರಸರಣ ಪ್ರಭಾವ: ಬೆಂಗಳೂರು ಸೇರಿ ಕರ್ನಾಟಕದ 8 ಜಿಲ್ಲೆಗಳಲ್ಲಿ 3ದಿನ ಮಳೆ

Karnataka Rain Updates: ಚಂಡಮಾರುತ ಪ್ರಸರಣದಿಂದಾಗಿ ಬೆಂಗಳೂರು ಸೇರಿದಂತೆ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಮುಂದಿನ ನಾಲ್ಕು ದಿನಗಳ ವರೆಗೆ ಮಳೆಯಾಗುವ ನಿರೀಕ್ಷೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆಯು ಮುನ್ಸೂಚನೆ ನೀಡಿದೆ. ಆಂಧ್ರಪ್ರದೇಶದ ದಕ್ಷಿಣ ಕರಾವಳಿಯ ಪಶ್ಚಿಮ ಮಧ್ಯ ಬಂಗಾಳಕೊಲ್ಲಿಯಲ್ಲಿ ಸರಾಸರಿ ಸಮುದ್ರ ಮಟ್ಟದಿಂದ 15 ಕಿ.ಮೀ ಎತ್ತರದಲ್ಲಿ ಮೇಲ್ಮಟ ವಾಯು ಸುಳಿಗಾಳಿ ಮುಂದುವರೆದಿದೆ. ರಾಯಲಸೀಮಾ ಮತ್ತು

ಒನ್ ಇ೦ಡಿಯ 7 Apr 2026 7:33 am

ಎಲ್‌ಪಿಜಿ ದುರ್ಬಳಕೆ ತಡೆಗೆ ನಿಗಾ, ಸದ್ಯವೇ ಏಜೆನ್ಸಿ ಮಾಲೀಕರು, ಅಧಿಕಾರಿಗಳ ಸಭೆಗೆ ನಿರ್ಧಾರ

ನಗರ ಪ್ರದೇಶದಲ್ಲಿ ಗೃಹಬಳಕೆಯ ಸಿಲಿಂಡರ್‌ ಬುಕ್‌ಮಾಡಿ 40 ರಿಂದ 50 ದಿನವಾದರೂ ಇನ್ನು ಬಂದಿಲ್ಲಎಂಬ ದೂರು ಯಥೇಚ್ಛವಾಗಿದೆ. ಈ ಕಾರಣದಿಂದಲೇ ಗ್ಯಾಸ್‌ ಏಜೆನ್ಸಿಗಳ ಎದುರು ಗ್ರಾಹಕರು ಸಾಲುಗಟ್ಟಿ ನಿಂತು ವಾಗ್ವಾದ ನಡೆಸುತ್ತಾ ಆಕ್ರೋಶ ವ್ಯಕ್ತಪಡಿಸುತ್ತಿರುವುದು ಸಾಮಾನ್ಯವಾಗಿದೆ.

ವಿಜಯ ಕರ್ನಾಟಕ 7 Apr 2026 7:29 am

ಹೆಚ್ಚುತ್ತಿರುವ ನಷ್ಟ: ಏರ್‌ಇಂಡಿಯಾ ಸಿಇಒ ಕ್ಯಾಂಪ್‌ಬೆಲ್ ರಾಜೀನಾಮೆ

ಹೊಸದಿಲ್ಲಿ: ನಾಲ್ಕು ವರ್ಷಗಳ ಹಿಂದೆ ಟಾಟಾ ಸಮೂಹ ಖರೀದಿಸಿದ ಬಳಿಕ ಏರ್‌ಇಂಡಿಯಾ ವಹಿವಾಟು ನಿರೀಕ್ಷಿತ ಮಟ್ಟಕ್ಕಿಂತ ನಿಧಾನವಾಗಿ ಪ್ರಗತಿಯಾಗುತ್ತಿರುವ ಮತ್ತು ನಷ್ಟ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಏರ್‌ಇಂಡಿಯಾ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕ್ಯಾಂಪ್‌ಬೆಲ್ ವಿಲ್ಸನ್ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಈ ರಾಜೀನಾಮೆಯನ್ನು ಏರ್‌ಲೈನ್ಸ್ ಕಳೆದ ವಾರ ಅಂಗೀಕರಿಸಿದ್ದು, ಉತ್ತರಾಧಿಕಾರಿಯನ್ನು ಸಂಸ್ಥೆ ನಿಯೋಜಿಸುವವರೆಗೆ ಮತ್ತು ನೋಟಿಸ್ ಅವಧಿ ಮುಗಿಯುವವರೆಗೆ ಅವರು ಆ ಹುದ್ದೆಯಲ್ಲಿ ಮುಂದುವರಿಯಲಿದ್ದಾರೆ. ಕಳೆದ ಜೂನ್ ನಲ್ಲಿ ಅಹ್ಮದಾಬಾದ್ ನಲ್ಲಿ ಸಂಭವಿಸಿದ ವಿಮಾನ ದುರಂತದ ಬಗ್ಗೆ ಅಂತಿಮ ವರದಿ ಬಹಿರಂಗವಾದ ಬಳಿಕ ವಿಲ್ಸನ್ ಹೊಣೆಗಾರಿಕೆಯಿಂದ ಮುಕ್ತರಾಗುವ ಸಾಧ್ಯತೆ ಇದೆ. ಏರ್‌ಇಂಡಿಯಾ ಸೇವೆಗೆ 2022ರ ಜುಲೈನಲ್ಲಿ ನಿಯೋಜಿತರಗಿದ್ದ ವಿಲ್ಸನ್ ಐದು ವರ್ಷಗಳ ಅಧಿಕಾರಾವಧಿ ಹೊಂದಿದ್ದರು. ಕಳೆದ ಕೆಲ ತಿಂಗಳ ಹಿಂದೆಯೇ ಏರ್‌ಇಂಡಿಯಾ ಅವರ ಉತ್ತರಾಧಿಕಾರಿಯ ಹುಡುಕಾಟ ಆರಂಭಿಸಿತ್ತು. 1953ರಲ್ಲಿ ರಾಷ್ಟ್ರೀಕರಣಗೊಂಡ ಬಳಿಕ 2022ರ ವರೆಗೂ ಏರ್‌ಇಂಡಿಯಾದ ಆರ್ಥಿಕ ಆರೋಗ್ಯ ಅಷ್ಟೇನೂ ಉತ್ತಮವಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ 2022ರಲ್ಲಿ ಅದನ್ನು ಏರ್‌ಇಂಡಿಯಾ ಎಕ್ಸ್‌ಪ್ರೆಸ್‌ ಜತೆಗೆ ಟಾಟಾ ಸಮೂಹಕ್ಕೆ ಮಾರಾಟ ಮಾಡಲಾಗಿತ್ತು. ಕೋವಿಡ್ ಪರಿಸ್ಥಿತಿಯ ಸಂದರ್ಭದಲ್ಲಿ ಪೂರೈಕೆ ಸರಣಿ ವ್ಯತ್ಯಯವಾದಾಗ, ಹಳೆ ವಿಮಾನಗಳ ಪರಿವರ್ತನೆ ಹಾಗೂ ಹೊಸ ವಿಮಾನಗಳ ನಿಯೋಜನೆ ವಿಳಂಬವಾಯಿತು. ಧೀರ್ಘಮಾರ್ಗಗಳ ವಾಯುಪ್ರದೇಶದ ನಿರ್ಬಂಧಗಳ ಕಾರಣದಿಂದ ವೆಚ್ಚಗಳು ಹೆಚ್ಚಿದವು. ಕಳೆದ ತಿಂಗಳು ಇಂಡಿಗೊ ಸಿಇಒ ಪೀಟರ್ ಎಂಬರ್ಸ್ ಕೂಡಾ ರಾಜೀನಾಮೆ ನೀಡಿದ್ದರು. ಇಂಡಿಗೋ ಈ ಹುದ್ದೆಯ ಉತ್ತರಾಧಿಕಾರಿಯನ್ನು ಆಯ್ಕೆ ಮಾಡಿದ್ದು, ಆಗಸ್ಟ್ ನಲ್ಲಿ ಅವರು ಅಧಿಕಾರ ವಹಿಸಿಕೊಳ್ಳುವ ಸಾಧ್ಯತೆ ಇದೆ. ಇದಕ್ಕೂ ಮುನ್ನವೇ ಸಿಇಒ ಹುಡುಕಾಟ ಆರಂಭಿಸಿದ್ದ ಏರ್‌ಇಂಡಿಯಾ ಇನ್ನೂ ತನ್ನ ಹೊಸ ನಾಯಕನ ನಿರೀಕ್ಷೆಯಲ್ಲಿದೆ.

ವಾರ್ತಾ ಭಾರತಿ 7 Apr 2026 7:22 am

ಬಾಳೆಹಣ್ಣಿಗೆ ಬಂಗಾರದಂತ ಬೆಲೆ, ರೈತರಿಗೆ ದಾಖಲೆಯೇ ಸರಿ!

ಮಳೆಯ ಕೊರತೆಯಿಂದಾಗಿ ಬೋರ್‌ವೆಲ್‌ಗಳು ಬತ್ತಿ ಹೋಗಿದ್ದು, ತೇವಾಂಶವಿಲ್ಲದೆ ಬಾಳೆ ಗಿಡಗಳು ಪೋಷಕಾಂಶಗಳ ಕೊರತೆ ಎದುರಿಸುತ್ತಿವೆ. ಫಸಲು ಬರುವ ಹಂತದಲ್ಲಿದ್ದ ಗೊನೆಗಳು ಗಾತ್ರದಲ್ಲಿಚಿಕ್ಕದಾಗಿದ್ದು, ಗುಣಮಟ್ಟದ ಮೇಲೆ ಪ್ರಭಾವ ಬೀರಿದೆ. ಹೀಗಾಗಿ ಮಾರುಕಟ್ಟೆಯಲ್ಲಿ ದರ ಏರಿಕೆಯ ಅಬ್ಬರ ಜೋರಾಗಿದೆ.

ವಿಜಯ ಕರ್ನಾಟಕ 7 Apr 2026 7:12 am

ಬೆಂಗಳೂರು ದಕ್ಷಿಣ ನಗರ ಪಾಲಿಕೆ | ಜನಗಣತಿ ಸಿಬ್ಬಂದಿಗೆ 25 ಸಾವಿರ ರೂ. ಗೌರವಧನ

ಬೆಂಗಳೂರು : ಗ್ರೇಟರ್ ಬೆಂಗಳೂರು ಪ್ರದೇಶದ ಬೆಂಗಳೂರು ದಕ್ಷಿಣ ನಗರ ಪಾಲಿಕೆ ವ್ಯಾಪ್ತಿಯಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಜನಗಣತಿ-2027 ಮನೆಪಟ್ಟಿ ಮತ್ತು ವಸತಿ ಗಣತಿ ಕಾರ್ಯವು ಎ.16 ರಿಂದ ಮೇ 15ರವರೆಗೆ ನಡೆಯಲಿದ್ದು, ಗಣತಿ ಕಾರ್ಯಕ್ಕೆ ನಿಯೋಜಿಸಲಾದ ಸಿಬ್ಬಂದಿಗೆ 25 ಸಾವಿರ ರೂ.ಗಳ ಗೌರವಧನವನ್ನು ಪಾವತಿ ಮಾಡಲಾಗುತ್ತದೆ ಎಂದು ಪಾಲಿಕೆ ಆಯುಕ್ತ ಕೆ.ಎನ್.ರಮೇಶ್ ಹೇಳಿದ್ದಾರೆ. ಸೋಮವಾರ ಪ್ರಕಟನೆ ಹೊರಡಿಸಿರುವ ಅವರು, ಈ ಸಮೀಕ್ಷಾ ಕಾರ್ಯಕ್ಕೆ 4678 ಗಣತಿದಾರರು, 798 ಮೇಲ್ವಿಚಾರಕರನ್ನು ನೇಮಕ ಮಾಡಲಾಗಿರುತ್ತದೆ. ಭಾರತ ಸರಕಾರದ ಆದೇಶದಂತೆ ಸಿಬ್ಬಂದಿಗಳಿಗೆ ಮನೆಪಟ್ಟಿ ಸಿದ್ಧತೆಗಾಗಿ 9 ಸಾವಿರ ರೂ. ಹಾಗೂ ಜನಗಣತಿ ಕಾರ್ಯಕ್ಕಾಗಿ 16 ಸಾವಿರ ರೂ. ಸೇರಿ ಒಟ್ಟು 25 ಸಾವಿರ ರೂ.ಗಳ ಗೌರವಧನವನ್ನು ನೀಡಲಾಗುತ್ತದೆ. ಅಲ್ಲದೆ ದಿನಕ್ಕೆ 400 ರೂ.ಗಳಂತೆ ತರಬೇತಿ ಭತ್ಯೆಯನ್ನು ನೀಡಲಾಗುತ್ತದೆ ಅವರು ತಿಳಿಸಿದರು.

ವಾರ್ತಾ ಭಾರತಿ 7 Apr 2026 12:45 am

ಪೊಲೀಸ್ ಇಲಾಖೆಯಲ್ಲಿನ ಆರ್ಡಲಿ ವ್ಯವಸ್ಥೆ ಪರಿಷ್ಕರಣೆ: ಹೊರಗುತ್ತಿಗೆ ಆಧಾರದ ಸಿಬ್ಬಂದಿ ನಿಯೋಜನೆಗೆ ಸರಕಾರ ಆದೇಶ

ಬೆಂಗಳೂರು : ಪೊಲೀಸ್ ಇಲಾಖೆಯು ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಆರ್ಡಲಿಗಳನ್ನು ಒದಗಿಸುವ ಬದಲಿಗೆ ಪರ್ಯಾಯ ವ್ಯವಸ್ಥೆ ರೂಪಿಸುವ ಕುರಿತು ಸರಕಾರ ಮಹತ್ವದ ಆದೇಶ ಹೊರಡಿಸಿದೆ. ರಾಜ್ಯ ಪೋಲೀಸ್ ಮಹಾನಿರ್ದೇಶಕ ಡಾ. ಎಂ.ಎ. ಸಲೀಂ ಅವರು ಹೊರಡಿಸಿದ ಈ ಆದೇಶದಲ್ಲಿ, ಪ್ರಸ್ತುತ ಚಾಲ್ತಿಯಲ್ಲಿರುವ ಆರ್ಡಲಿ ವ್ಯವಸ್ಥೆಯನ್ನು ಪರಿಷ್ಕರಿಸಲಾಗಿದೆ ಎಂದು ತಿಳಿಸಲಾಗಿದೆ. ಈ ಹಿನ್ನೆಲೆಯಲ್ಲಿ, 2026ರ ಫೆಬ್ರವರಿ 19ರಂದು ಹೊರಡಿಸಲಾದ ಆದೇಶದನ್ವಯ, ಪ್ರಸ್ತುತ ಆರ್ಡಲಿ ಕರ್ತವ್ಯಕ್ಕೆ ನಿಯೋಜಿಸಲ್ಪಟ್ಟಿರುವ ಪೊಲೀಸ್ ಸಿಬ್ಬಂದಿಯನ್ನು ಕರ್ತವ್ಯದಿಂದ ಬಿಡುಗಡೆಗೊಳಿಸಲು ಸೂಚಿಸಲಾಗಿದೆ. ಹೊಸ ವ್ಯವಸ್ಥೆಯ ಪ್ರಕಾರ, ಹೊರಗುತ್ತಿಗೆ ಆಧಾರದ ಮೇಲೆ ಸಿಬ್ಬಂದಿಯನ್ನು ಪಡೆದು, ನಿಗದಿತ ಆರ್ಡಲಿ ಭತ್ಯೆಯನ್ನು ಬಳಸಿಕೊಳ್ಳುವಂತೆ ನಿರ್ದೇಶನ ನೀಡಲಾಗಿದೆ. ಎಲ್ಲ ಘಟಕಾಧಿಕಾರಿಗಳಿಗೆ ಈ ಆದೇಶವನ್ನು ಪಾಲಿಸಲು ಸೂಚಿಸಲಾಗಿದ್ದು, ಅಗತ್ಯ ಕ್ರಮ ಕೈಗೊಂಡು 2026ರ ಎಪ್ರಿಲ್ 30ರೊಳಗೆ ಪಾಲನಾ ವರದಿ ಸಲ್ಲಿಸುವಂತೆ ಸೂಚಿಸಲಾಗಿದೆ. ಈ ಮೊದಲು ಹೊರಡಿಸಲಾಗಿದ್ದ ಆದೇಶಗಳಲ್ಲಿ ಇಲಾಖೆಯ ಆರ್ಡಲಿ ವ್ಯವಸ್ಥೆಯ ಕುರಿತು ಮೂಲಭೂತ ಮಾರ್ಗಸೂಚಿಗಳನ್ನು ನೀಡಲಾಗಿತ್ತು. ಹಿರಿಯ ಅಧಿಕಾರಿಗಳಿಗೆ ಆರ್ಡಲಿಗಳನ್ನು ಒದಗಿಸುವ ವಿಧಾನ ಮತ್ತು ಅದರ ನಿಯಮಾವಳಿಗಳನ್ನು ನಿರ್ಧರಿಸಲಾಗಿತ್ತು. ಹಿಂದಿನ ಆದೇಶವನ್ನು ಅನುಸರಿಸಿ, ಆರ್ಡಲಿ ಕರ್ತವ್ಯಕ್ಕೆ ನಿಯೋಜಿಸಲ್ಪಟ್ಟಿರುವ ಸಿಬ್ಬಂದಿಗಳ ಕಾರ್ಯವಿಧಾನವನ್ನು ಸ್ಪಷ್ಟಪಡಿಸಬೇಕು. ಇದೀಗ ಆರ್ಡಲಿ ಕರ್ತವ್ಯದಲ್ಲಿದ್ದ ಸಿಬ್ಬಂದಿಯನ್ನು ಬಿಡುಗಡೆ ಮಾಡುವ ಹಾಗೂ ಪರ್ಯಾಯ ವ್ಯವಸ್ಥೆ ರೂಪಿಸುವ ಸೂಚನೆ ನೀಡಲಾಗಿತ್ತು. ಇದೀಗ ಹೊರಗುತ್ತಿಗೆ ಆಧಾರದ ಮೇಲೆ ಸಿಬ್ಬಂದಿಯನ್ನು ಪಡೆಯುವಂತೆ ನಿರ್ದೇಶಿಸಲಾಗಿದೆ.

ವಾರ್ತಾ ಭಾರತಿ 7 Apr 2026 12:41 am

ಬಾಗಲಕೋಟೆ, ದಾವಣಗೆರೆ ದಕ್ಷಿಣ ಕ್ಷೇತ್ರಗಳಲ್ಲಿ ಬಿಜೆಪಿ ಸೋಲಿಸಿ: ಮಂಜುನಾಥ್ ಭಂಡಾರಿ ಕರೆ

ಬೆಂಗಳೂರು : ‘ಬೆಲೆ ಏರಿಕೆಯಿಂದ ಜನರು ತತ್ತರಿಸುತ್ತಿದ್ದು, ಎಲ್‍ಪಿಜಿ ಸಿಲಿಂಡರ್ ಸಿಗದೇ ಹೋಟೆಲ್‍ಗಳು ಬಂದ್ ಆಗುತ್ತಿವೆ. ಆಟೋರಿಕ್ಷಾದವರು ನೆಮ್ಮದಿಯಿಂದ ಜೀವನ ನಡೆಸಲು ಸಾಧ್ಯವಾಗದಂತಹ ಸ್ಥಿತಿಯನ್ನು ಬಿಜೆಪಿ ನಿರ್ಮಿಸಿದೆ. ಬಿಜೆಪಿ ಕಾರ್ಯಕರ್ತರು ಬೆಲೆ ಏರಿಕೆಗೆ ಬಸವಳಿದಿದ್ದು, ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ಕ್ಷೇತ್ರಗಳ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಸೋಲಿಸಬೇಕು’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಕರೆ ನೀಡಿದ್ದಾರೆ. ಸೋಮವಾರ ಈ ಸಂಬಂಧ ಪ್ರಕಟಣೆ ನೀಡಿರುವ ಅವರು, ‘2014ರಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬರುವ ಮುನ್ನ ಗ್ಯಾಸ್ ಬೆಲೆ 400ರೂ.ಆಸುಪಾಸಿನಲ್ಲಿತ್ತು. ಈಗ ಎಲ್‍ಪಿಜಿ ಸಿಲಿಂಡರ್ ಬೆಲೆ 950ರೂ. ದಾಟಿದೆ. ಲೀಟರ್‍ಗೆ 70ರೂ. ಇದ್ದ ಪೆಟ್ರೋಲ್ ಈಗ 102 ರೂ.ಗಳ ಗಡಿ ದಾಟಿದೆ. ಡೀಸೆಲ್ 56 ರೂ.ಗಳಿಂದ 96 ರೂ.ಗಳಿಗೆ ಜಿಗಿದಿದೆ. ಹೆದ್ದಾರಿ ಟೋಲ್ ದರ ಹೆಚ್ಚಳ ಮಾಡಲಾಗಿದೆ. ಗ್ಯಾಸ್ ಸಿಗದೆ ಹೋಟೆಲ್ ಉದ್ಯಮ ನೆಲ ಕಚ್ಚುವಂತೆ ಮಾಡಿರುವ ಹಾನಿಕಾರಕ ಪಕ್ಷ ಬಿಜೆಪಿಗೆ ಅವರದ್ದೆ ಪಕ್ಷದ ಕಾರ್ಯಕರ್ತರು ಈ ಉಪಚುನಾವಣೆಯಲ್ಲಿ ಸೋಲಿನ ರುಚಿ ತೋರಿಸಬೇಕು’ ಎಂದು ಕರೆ ನೀಡಿದ್ದಾರೆ. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮಾಧ್ಯಮಗಳ ಮುಂದೆ ಹೇಳಿಕೆ ನೀಡುವ ಬದಲು ಪ್ರಧಾನಿ ಮೋದಿ ಬಳಿ ಮಾತನಾಡಿ ಕರ್ನಾಟಕಕ್ಕೆ ಬರಬೇಕಿದ್ದ ತೆರಿಗೆ ಪಾಲು ಕೊಡಿಸುವ ಕೆಲಸವನ್ನು ಮೊದಲು ಮಾಡಲಿ. 5 ವರ್ಷಗಳಲ್ಲಿ 1.25ಲಕ್ಷ ಕೋಟಿ ರೂ.ತೆರಿಗೆ ಹಣ ಕರ್ನಾಟಕಕ್ಕೆ ಬರಬೇಕಿತ್ತು. 15ನೆ ಹಣಕಾಸು ಆಯೋಗದ ಅನುದಾನ ಬಾಕಿಯಿದೆ. ಜಲಜೀವನ್ ಮಿಷನ್, ಮಹಾದಾಯಿ ಯೋಜನೆಗೆಂದು ಘೋಷಣೆ ಮಾಡಿದ್ದ ಅನುದಾನ ಕೊಡಿಸುವ ಕೆಲಸವನ್ನು ಮಾಡಲಿ ಎಂದು ಅವರು ಸವಾಲು ಹಾಕಿದ್ದಾರೆ. ದಾವಣಗೆರೆ ಜಿಲ್ಲೆಯ ಅಭಿವೃದ್ಧಿಗೆ ಶಾಮನೂರು ಶಿವಶಂಕರಪ್ಪರ ಕೊಡುಗೆ ಅಪಾರ. ದಾವಣಗೆರೆ ನಗರವನ್ನು ವಿದ್ಯಾನಗರಿಯನ್ನಾಗಿ ಮಾಡಿದ ಗರಿಮೆ ಶಾಮನೂರು ಸಲ್ಲುತ್ತದೆ. ಕ್ಷೇತ್ರದ ಮತದಾರರು ಶಾಮನೂರು ಅವರ ಕಾರ್ಯವನ್ನು ಸದಾ ಸ್ಮರಿಸುತ್ತಾರೆ. ಈ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಮರ್ಥ ಶಾಮನೂರು ಗೆಲುವಿಗೆ ಬಿಜೆಪಿ ಕಾರ್ಯಕರ್ತರು ಕೈ ಹಿಡಿಯಲಿ ಎಂದು ಅವರು ಕೋರಿದ್ದಾರೆ. ‘ಕೊಟ್ಟ ಮಾತಿನಂತೆ ಐದು ಗ್ಯಾರಂಟಿಗಳನ್ನು ಜಾರಿ ಮಾಡುವ ಮೂಲಕ ಇಡೀ ದೇಶಕ್ಕೆ ಕರ್ನಾಟಕದ ಕಾಂಗ್ರೆಸ್ ಸರಕಾರ ಮಾದರಿ ಆಗಿದೆ. ನಮ್ಮದ್ದು ಜನಪರ ಪಕ್ಷವಾದರೆ, ಬಿಜೆಪಿಯವರದ್ದು ಕಾರ್ಪೊರೇಟ್‌ ಕಂಪೆನಿಗಳ ಪರವಾದ ಸರಕಾರ. ಅಂಬಾನಿ, ಅದಾನಿ ಹಿತಾಸಕ್ತಿಯೇ ಅವರಿಗೆ ಮುಖ್ಯವಾದರೆ, ಕಾಂಗ್ರೆಸ್ ಗೆ ಜನಸಾಮಾನ್ಯರ ಹಿತ ಮುಖ್ಯ’ ಎಂದು ಮಂಜುನಾಥ ಭಂಡಾರಿ ತಿಳಿಸಿದ್ದಾರೆ.   ‘ಕುಟುಂಬ ರಾಜಕಾರಣದ ಬಗ್ಗೆ ಮಾತನಾಡುವ ಜೋಶಿ ಮೊದಲು ಯಡಿಯೂರಪ್ಪ ಕುಟುಂಬ ರಾಜಕಾಣ ಹಾಗೂ ಮೈತ್ರಿ ಪಕ್ಷವಾದ ಜೆಡಿಎಸ್‍ನ ಕುಟುಂಬ ರಾಜಕಾರಣದ ಬಗ್ಗೆಯೂ ಜನರಿಗೆ ಹೇಳಬೇಕು. ಕುಟುಂಬ ರಾಜಕಾರಣದ ಬಗ್ಗೆ ಮಾತನಾಡುವ ನೈತಿಕತೆ ಜೋಶಿಯವರಿಗಿಲ್ಲ. ಬಿಜೆಪಿ ಅವರದ್ದು ಜನರನ್ನು ಲೂಟಿ ಮಾಡಲು ಪಕ್ಷವಾದರೆ ಕಾಂಗ್ರೆಸ್ ಜನರ ಕೈ ಹಿಡಿಯುವ, ನುಡಿದಂತೆ ನಡೆಯುವ ಪಕ್ಷ’ -ಮಂಜುನಾಥ್ ಭಂಡಾರಿ, ಕೆಪಿಸಿಸಿ ಕಾರ್ಯಾಧ್ಯಕ್ಷ

ವಾರ್ತಾ ಭಾರತಿ 7 Apr 2026 12:34 am

ಎ.21ಕ್ಕೆ ಸಾರಿಗೆ ನೌಕರರಿಂದ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ

ಬೆಂಗಳೂರು : ಸರಕಾರ ಚುನಾವಣಾ ಪೂರ್ವ ಸಾರಿಗೆ ನೌಕರರಿಗೆ ನೀಡಿರುವ ಪ್ರಣಾಳಿಕೆ ಭರವಸೆಗಳು ಹಾಗೂ ಇನ್ನಿತರೆ ಹಕ್ಕೊತ್ತಾಯಗಳನ್ನು ಕೂಡಲೇ ಈಡೇರಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಾಲ್ಕು ನಿಗಮಗಳ ಸಂಘಟನೆಗಳ ಒಕ್ಕೂಟದ ವತಿಯಿಂದ ಎ.8 ರಂದು ಚಿತ್ರದುರ್ಗದಿಂದ ರಾಜಧಾನಿಗೆ ಪಾದಯಾತ್ರೆ ನಡೆಸಿ, ಎ.21ರಿಂದ ಫ್ರೀಡಂ ಪಾರ್ಕ್‍ನಲ್ಲಿ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹವನ್ನು ಹಮ್ಮಿಕೊಳ್ಳಲಾಗಿದೆ ಎಂದು ಒಕ್ಕೂಟದ ಅಧ್ಯಕ್ಷ ಚಂದ್ರಶೇಖರ್ ತಿಳಿಸಿದ್ದಾರೆ. ಸೋಮವಾರ ನಗರದ ಪ್ರೆಸ್ ಕ್ಲಬ್‍ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನುಡಿದಂತೆ ನಡೆಯುವ ಸರಕಾರ ಎಂದು ಹೇಳುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರಕ್ಕೆ ಬಂದು 3 ವರ್ಷಗಳಾದರೂ ಇದುವರೆಗೂ ನಮ್ಮ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಿಲ್ಲ ಎಂದರು. ಸಾರಿಗೆ ಸಚಿವರು ಮತ್ತು ವ್ಯವಸ್ಥಾಪಕ ನಿರ್ದೇಶಕರ ಸಭೆಗಳು ನಡೆದಿವೆ ಹೊರತು, ಸಮಸ್ಯೆಗಳನ್ನು ಈಡೇರಿಸಲು ಯಾವುದೇ ಕ್ರಮಗಳನ್ನು ಕೈಗೊಳ್ಳದಿರುವುದು ಬೇಸರದ ಸಂಗತಿ. ಇದರಿಂದ ಸಾರಿಗೆ ನೌಕರರು ತಮ್ಮ ದಿನ ನಿತ್ಯದ ಅಗತ್ಯ ವಸ್ತುಗಳ ಖರೀದಿಗೆ, ಮಕ್ಕಳ ವಿದ್ಯಾಭ್ಯಾಸಕ್ಕೆ ಮತ್ತು ಇತರೆ ಅಗತ್ಯತೆಗಳನ್ನು ಪೂರೈಸಿಕೊಳ್ಳಲು ಸಾದ್ಯವಾಗದೆ, ಪರದಾಡುವಂತ ಸ್ಥಿತಿ ನಿರ್ಮಾಣವಾಗಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು. ಕೂಡಲೇ ಸರಕಾರ ಚುನಾವಣಾ ಪೂರ್ವ ನೀಡಿರುವ ಪ್ರಣಾಳಿಕೆ ಭರವಸೆಯಂತೆ ಸಾರಿಗೆ ನೌಕರರಿಗೂ, ಸರಕಾರಿ ನೌಕರರಂತೆ 7ನೇ ವೇತನ ಆಯೋಗದ ಮಾದರಿಯಲ್ಲಿ ಸಮಾನ ವೇತನವನ್ನು 2024ರ ಜ.1 ರಿಂದ ಅನ್ವಯವಾಗುವಂತೆ ನೀಡಬೇಕು. 2020ರ ಜ.1 ರಿಂದ ಅನ್ವಯವಾಗುವಂತೆ ವೇತನ ಪರಿಷ್ಕರಣೆ ಮಾಡಲಾಗಿದ್ದು, ಸದರಿ ವೇತನ ಪರಿಷ್ಕರಣೆಯ 38 ತಿಂಗಳ ಹಿಂಬಾಕಿಯನ್ನು ನೀಡಬೇಕು. ಸಾರಿಗೆ ಸಂಸ್ಥೆಗಳಲ್ಲಿ ಸಂಘಗಳ ಮಾನ್ಯತೆಗಾಗಿ, ಕಾರ್ಮಿಕ ಸಂಘಟನೆಗಳ ಚುನಾವಣೆಯನ್ನು ನಡೆಸಬೇಕು ಎಂದು ಚಂದ್ರಶೇಖರ್ ಆಗ್ರಹಿಸಿದರು. ಸುದ್ದಿಗೋಷ್ಠಿಯಲ್ಲಿ ಒಕ್ಕೂಟದ ಪದಾಧಿಕಾರಿಗಳಾದ ಸುರೇಶ್, ರಾಧಾಕೃಷ್ಣ, ತಿಪ್ಪೇಸ್ವಾಮಿ, ಎಸ್.ನಾಗರಾಜು ಉಪಸ್ಥಿತರಿದ್ದರು.  

ವಾರ್ತಾ ಭಾರತಿ 7 Apr 2026 12:19 am

ಎ.10ಕ್ಕೆ ಕೆಪಿಎಸ್ ಮ್ಯಾಗ್ನೆಟ್ ಯೋಜನೆ ವಿರುದ್ಧ ರಾಜ್ಯಮಟ್ಟದ ಬೃಹತ್ ಜನಸಮಾವೇಶ

ಬೆಂಗಳೂರು : ಕೆಪಿಎಸ್ ಮ್ಯಾಗ್ನೆಟ್ ಯೋಜನೆ ಹೆಸರಲ್ಲಿ 40 ಸಾವಿರ ಸರಕಾರಿ ಶಾಲೆಗಳನ್ನು ಮುಚ್ಚುತ್ತಿರುವುದನ್ನು ವಿರೋಧಿಸಿ ‘ಆಲ್ ಇಂಡಿಯಾ ಡೆಮಾಕ್ರಟಿಕ್ ಸ್ಟೂಡೆಂಟ್ಸ್ ಅಸೋಸಿಯೇಷನ್’ ವತಿಯಿಂದ ಎ.10ರಂದು ಫ್ರೀಡಂ ಪಾರ್ಕ್‍ನಲ್ಲಿ ರಾಜ್ಯಮಟ್ಟದ ಬೃಹತ್ ಜನಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ ಎಂದು ಪ್ರಧಾನ ಕಾರ್ಯದರ್ಶಿ ಅಜಯ್ ಕಾಮತ್ ತಿಳಿಸಿದ್ದಾರೆ. ಸೋಮವಾರ ಪ್ರೆಸ್‍ಕ್ಲಬ್‍ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಐಡಿಎಎಸ್‍ಒ ನೇತೃತ್ವದಲ್ಲಿ ರಾಜ್ಯಾದ್ಯಂತ ಹಳ್ಳಿ-ಹಳ್ಳಿಗಳಲ್ಲಿ ಪೋಷಕರು ಹಾಗೂ ಗ್ರಾಮಸ್ಥರು ಸಾರ್ವಜನಿಕ ಶಿಕ್ಷಣ ಉಳಿಸಿ ಹೋರಾಟ ಸಮಿತಿಗಳನ್ನು ರಚಿಸಿಕೊಂಡು ನಮ್ಮೂರ ಶಾಲೆ ಮುಚ್ಚಲು ಬಿಡುವುದಿಲ್ಲ ಎಂದು ಒಕ್ಕೊರಲಿನಿಂದ ಧ್ವನಿಯೆತ್ತಿದ್ದಾರೆ ಎಂದರು. ನಾಡಿನ ಸಾಹಿತಿಗಳು, ಶಿಕ್ಷಣ ತಜ್ಞರು ಹಾಗೂ ಶಿಕ್ಷಣ ಪ್ರೇಮಿಗಳು ಬಡಮಕ್ಕಳನ್ನು ಶಿಕ್ಷಣದಿಂದ ಶಾಶ್ವತವಾಗಿ ದೂರ ತಳ್ಳುವ ರಾಜ್ಯ ಕಾಂಗ್ರೆಸ್ ಸರಕಾರದ ನಿರ್ಧಾರವನ್ನು ಖಂಡಿಸಿದ್ದಾರೆ. ನಾಡಿನ ಜನತೆಯ ತೀವ್ರ ವಿರೋಧದ ನಡುವೆಯೂ ಸರಕಾರ ಶಾಲೆಗಳನ್ನು ಮುಚ್ಚುವ ಕೆಲಸವನ್ನು ಮುಂದುವರಿಸಿದೆ. ಈಗಾಗಲೇ ಯಾವಯಾವ ಶಾಲೆಗಳನ್ನು ವಿಲೀನಗೊಳಿಸಬೇಕೆಂದು ಮ್ಯಾಪಿಂಗ್ ನಡೆಸಿದೆ. ಅಧಿಕಾರಿಗಳಿಂದ ಮ್ಯಾಗ್ನೆಟ್ ಶಾಲೆಯ ಸಮೀಕ್ಷೆ ಮಾಡಿಸಲಾಗುತ್ತಿದೆ ಎಂದು ಅಜಯ್ ಕಾಮತ್ ತಿಳಿಸಿದರು. ವಿಲೀನಗೊಳ್ಳುವ ಶಾಲೆಗಳ ಮುಖ್ಯಶಿಕ್ಷಕರಿಗೆ ಮೌಖಿಕವಾಗಿ ಆದೇಶ ನೀಡಲಾಗಿದೆ. ಎ.8 ಮತ್ತು 9 ರಂದು ನಡೆಯಲಿರುವ ಪೋಷಕರ ಸಭೆಗಳಲ್ಲಿ, ಮುಂದಿನ ಶೈಕ್ಷಣಿಕ ವರ್ಷದಲ್ಲಿ ತಮ್ಮ ಮಕ್ಕಳನ್ನು ಕೆಪಿಎಸ್ ಶಾಲೆಗೆ ಕಳುಹಿಸುವಂತೆ ಒತ್ತಾಯಿಸಲು ಶಾಲೆಗಳಿಗೆ ನೋಟಿಸ್ ನೀಡಲಾಗಿದೆ ಎಂದು ಅವರು ಹೇಳಿದರು. ಸಮಾವೇಶದಲ್ಲಿ ಹಿರಿಯ ಸಾಹಿತಿಗಳಾದ ಡಾ.ಹಂಪ ನಾಗರಾಜಯ್ಯ, ಡಾ.ಕೆ.ಮರುಳಸಿದ್ದಪ್ಪ, ಪ್ರೊ.ಎಸ್.ಜಿ. ಸಿದ್ದರಾಮಯ್ಯ, ಡಾ.ಅಲ್ಲಮಪ್ರಭು ಬೆಟ್ಟದೂರು, ವಿಶ್ರಾಂತ ಕುಲಪತಿಗಳಾದ ಪ್ರೊ.ಎ.ಮುರಿಗೆಪ್ಪ, ಪ್ರೊ.ಸಬಿಹಾ ಭೂಮಿಗೌಡ, ಹಿರಿಯ ಹೋರಾಟಗಾರ ರಾಘವೇಂದ್ರ ಕುಷ್ಟಗಿ, ನ್ಯಾಯವಾದಿ ಹೇಮಲತಾ ಮಹಿಷಿ, ಶಿಕ್ಷಣ ತಜ್ಞ ನಿರಂಜನರಾಧ್ಯ ವಿ.ಪಿ., ದಸಂಸ ಮುಖಂಡರಾದ ಗುರುಪ್ರಸಾದ್ ಕೆರೆಗೋಡು, ಮಾವಳ್ಳಿ ಶಂಕರ್, ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ ಎಂದು ಅಜಯ್ ಕಾಮತ್ ಮಾಹಿತಿ ನೀಡಿದರು. ಸುದ್ದಿಗೋಷ್ಠಿಯಲ್ಲಿ ಪದಾಧಿಕಾರಿಗಳಾದ ಅಶ್ವಿನಿ ಕೆ.ಎಸ್, ಸುಭಾಷ್‌ ಬೆಟ್ಟದಕೊಪ್ಪ, ವಿನಯ್ ಚಂದ್ರ ಉಪಸ್ಥಿತರಿದ್ದರು.  

ವಾರ್ತಾ ಭಾರತಿ 7 Apr 2026 12:15 am

ಧರ್ಮ, ಜಾತಿಯ ಪೋಷಣೆ ದೇಶದ ಬೆಳವಣಿಗೆಗೆ ಮಾರಕ : ಎಚ್.ಸಿ.ಮಹದೇವಪ್ಪ

ಮೈಸೂರು : ಧರ್ಮ ಮತ್ತು ಜಾತಿಯ ಪೊಷಣೆ ದೇಶದ ಬೆಳವಣಿಗೆಗೆ ಮಾರಕ ಎಂದು ಸಮಾಜ ಕಲ್ಯಾಣ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಹೇಳಿದ್ದಾರೆ. ನಗರದ ಕಲಾಮಂದಿರದಲ್ಲಿ ಸೋಮವಾರ ಭಾರತ ರತ್ನ ಡಾ.ಬಿ.ಆರ್ ಅಂಬೇಡ್ಕರ್ ಅವರ 135 ನೇ ಜಯಂತಿ ಹಾಗೂ ಬಾಬು ಜಗಜೀವನ ಅವರ 119ನೇ ಜಯಂತಿ ಪ್ರಯುಕ್ತ ಸಮಾಜ ಕಲ್ಯಾಣ ಇಲಾಖೆ ನೌಕರರು ಅಭಿನಯಿಸಿರುವ, ಪಿ ಲಂಕೇಶ್ ಕಥೆ ಆಧಾರಿತ ಮುಟ್ಟಿಸಿಕೊಂಡವನು ನಾಟಕ ವೀಕ್ಷಣೆ ಮಾಡಿ ನಂತರ ಮಾತನಾಡಿದರು. ಜಾತಿ ವಿನಾಶದ ಕುರಿತು ಹಲವಾರು ಮಹಾನೀಯರು ಸಂದೇಶ ಸಾರಿದ್ದರು, ಜಾತಿ ಎಂಬುದು ಇನ್ನೂ ಹೋಗಿಲ್ಲ. ಇದೇ ರೀತಿ ಮುಂದುವರಿದರೆ ಸಮಾಜದಲ್ಲಿ ಮುಂದೆ ಆಗಬಹುದಾದ ಅನಾಹುತದ ಬಗ್ಗೆ ಈ ನಾಟಕ ಅದ್ಭುತವಾಗಿ ಮೂಡಿ ಬಂದಿದೆ ಎಂದರು. ಈ ನಾಟಕ ಒಂದು ನೈಜ ಘಟನೆಯ ಆಧಾರಿತವಾಗಿದ್ದು, ಸಮಾಜದಲ್ಲಿ ತಮಗಾದ ಅನುಭವವನ್ನು ಎಳೆ ಎಳೆಯಾಗಿ ತೋರಿಸಲಾಗಿದೆ. ಸಮ ಸಮಾಜ ನಿರ್ಮಾಣಕ್ಕೆ ಬುದ್ಧ, ಬಸವ, ಅಂಬೇಡ್ಕರ್, ನಾರಾಯಣ ಗುರು, ಕನಕದಾಸರು ಸೇರಿದಂತೆ ಅನೇಕ ಮಹಾನೀಯರು ಶ್ರಮಿಸಿದ್ದಾರೆ. ಅವರ ಮಾರ್ಗದರ್ಶನವನ್ನು ಅನುಸರಿಸಿದರೆ ಸಮ ಸಮಾಜ ನಿರ್ಮಾಣವಾಗಲಿದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ವಿಧಾನಪರಿಷತ್ ಸದಸ್ಯ ಡಾ.ಡಿ.ತಿಮ್ಮಯ್ಯ, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ರಂಗೇಗೌಡ , ಸಮಾಜ ಕಲ್ಯಾಣ ಇಲಾಖೆ ಸಲಹೆಗಾರರಾದ ತುಕಾರಾಂ, ದೇವನೂರು ಬಸವರಾಜು, ಮೈಸೂರು ವಿವಿ ಅಂಬೇಡ್ಕರ್ ಸಂಶೋಧನಾ ಸಂಸ್ಥೆ ನಿರ್ದೇಶಕ ಪ್ರೊ.ನರೇಂದ್ರ, ರಂಗಾಯಣದ ಮಾಜಿ ನಿರ್ದೇಶಕ ಜನಾರ್ದನ್ (ಜನ್ನಿ) ಸಹಿತ ಹಲವರು ಉಪಸ್ಥಿತರಿದ್ದರು.

ವಾರ್ತಾ ಭಾರತಿ 7 Apr 2026 12:07 am

ಇಂಡಿಯಾ ಸ್ಕಿಲ್ಸ್ 2025-26 ರಾಷ್ಟ್ರೀಯ ಸ್ಪರ್ಧೆ: ಕರ್ನಾಟಕಕ್ಕೆ 3ನೆ ಸ್ಥಾನ

ಬೆಂಗಳೂರು : ಕೌಶಲ್ಯ ಕ್ಷೇತ್ರದಲ್ಲಿ ಕರ್ನಾಟಕ ಈಗ ಇಡೀ ದೇಶದಲ್ಲಿ ಮುಂಚೂಣಿಯತ್ತ ಸಾಗುತ್ತಿದೆ. ಇತ್ತೀಚೆಗೆ ಗ್ರೇಟರ್ ನೋಯ್ಡಾದ ಇಂಡಿಯಾ ಎಕ್ಸ್‌ ಪೋ ಮಾರ್ಟ್‍ನಲ್ಲಿ ನಡೆದ ಇಂಡಿಯಾ ಸ್ಕಿಲ್ಸ್ 2025-26 ರಾಷ್ಟ್ರೀಯ ಸ್ಪರ್ಧೆಯಲ್ಲಿ ಕರ್ನಾಟಕ 3ನೇ ಸ್ಥಾನವನ್ನು ಪಡೆದುಕೊಂಡಿದೆ. 32 ಕೌಶಲ್ಯ ವಿಭಾಗದಲ್ಲಿ ನಡೆದ ಸ್ಪರ್ಧೆಗಳಲ್ಲಿ 48 ಮಂದಿ ಭಾಗವಹಿಸಿದ್ದರು. ಒಟ್ಟು 29 ವಿಭಾಗದಲ್ಲಿ ಕರ್ನಾಟಕ ತನ್ನ ಹಿರಿಮೆ ಮೆರೆದಿದೆ. ಕ್ಲೌಡ್ ಕಂಪ್ಯೂಟಿಂಗ್, ಸೈಬರ್ ಸೆಕ್ಯುರಿಟಿ, ಮೆಕಾಟ್ರಾನಿಕ್ಸ್, ಸಂಯೋಜಕ ಉತ್ಪಾದನೆ ಮತ್ತು ಬೇಕರಿ ಮತ್ತು ದೃಶ್ಯ ವ್ಯಾಪಾರೀಕರಣ ಸೇರಿದಂತೆ ಹೈಟೆಕ್ ಮತ್ತು ಸೃಜನಶೀಲ ಕ್ಷೇತ್ರಗಳಲ್ಲಿ ಕರ್ನಾಟಕ ಗಮನಾರ್ಹ ಸಾಧನೆ ಮಾಡಿದೆ. ಕರ್ನಾಟಕ ತಂಡದ ರಾಜ್ಯ ಅಧಿಕಾರಿ ಮತ್ತು ಮಾರ್ಗದರ್ಶಕ ಕ್ಯಾಪ್ಟನ್ ಕೌಸ್ತವ್ ನಾಥ್ ಈ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ. ಈ ಫಲಿತಾಂಶ ನಿಜಕ್ಕೂ ಗಮನಾರ್ಹ ಸಾಧನೆಯಾಗಿದೆ. ನಾವು ಅಪಾರ ಪ್ರತಿಭೆಯನ್ನು ತೋರಿಸಿದ್ದೇವೆ, ಮುಂದಿನ ಬಾರಿ ಅಗ್ರ ಸ್ಥಾನವನ್ನು ಪಡೆಯಲು ಉತ್ತಮ ರೀತಿಯಲ್ಲಿ ಪರಿಶ್ರಮ ಪಡುತ್ತೇವೆ ಎಂದು ಹೇಳಿದ್ದಾರೆ. ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ ಸಚಿವ ಡಾ.ಶರಣಪ್ರಕಾಶ್ ಪಾಟೀಲ್, ಹಿರಿಯ ಅಧಿಕಾರಿಗಳಾದ ಇ.ವಿ.ರಮಣ ರೆಡ್ಡಿ, ಮನೋಜ್ ಕುಮಾರ್ ಮೀನಾ, ಎಚ್.ಎನ್.ಗೋಪಾಲ ಕೃಷ್ಣ ಮತ್ತು ಬಿ.ಎಸ್. ಸುಮತಿ ಅವರ ಮಾರ್ಗದರ್ಶನ ಮತ್ತು ಬೆಂಬಲಕ್ಕಾಗಿ ಧನ್ಯವಾದಗಳನ್ನು ತಿಳಿಸುತ್ತೇನೆ ಎಂದು ಕೌಸ್ತವ್ ನಾಥ್ ತಿಳಿಸಿದ್ದಾರೆ. ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮದಿಂದ ತರಬೇತಿ ಪಡೆದ ಕರ್ನಾಟಕದ ವಿದ್ಯಾರ್ಥಿಗಳು 10 ಚಿನ್ನ, 6 ಬೆಳ್ಳಿ, 6 ಕಂಚು ಮತ್ತು 7 ಶ್ರೇಷ್ಠತೆ ಪದಕಗಳನ್ನು ಒಳಗೊಂಡಂತೆ ಒಟ್ಟು 29 ಪದಕಗಳನ್ನು ಪಡೆದುಕೊಂಡಿದ್ದಾರೆ. ಚಿನ್ನ, ಬೆಳ್ಳಿ ಮತ್ತು ಕಂಚಿನ ಪದಕ ವಿಜೇತರು ಈಗ ಚೀನಾದ ಶಾಂಘೈನಲ್ಲಿರುವ ವಲ್ರ್ಡ್ ಸ್ಕಿಲ್ಸ್ ಇಂಟರ್ ನ್ಯಾಷನಲ್‍ನಲ್ಲಿ ಭಾರತವನ್ನು ಪ್ರತಿನಿಧಿಸಲು ತರಬೇತಿ ಪಡೆಯಲಿದ್ದಾರೆ. ರಾಜ್ಯ ಸರಕಾರವು ವಿಶ್ವ ದರ್ಜೆಯ ಮೂಲಸೌಕರ್ಯ ಮತ್ತು ಮಾರ್ಗದರ್ಶನವನ್ನು ಒದಗಿಸಲು ಬದ್ಧವಾಗಿದೆ ಎಂದು ಹಿರಿಯ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ವಾರ್ತಾ ಭಾರತಿ 7 Apr 2026 12:00 am

ಅಮೆರಿಕ, ಐರೋಪ್ಯ ಒಕ್ಕೂಟಗಳ ಒಪ್ಪಂದಗಳ ಬಗ್ಗೆ ಚರ್ಚೆಗೆ ವಿಶೇಷ ಅಧಿವೇಶನ ಕರೆಯಲು ಒತ್ತಾಯ

ಬೆಂಗಳೂರು : ಕೇಂದ್ರ ಸರಕಾರವು ಅಮೆರಿಕ ಮತ್ತು ಐರೋಪ್ಯ ಒಕ್ಕೂಟದೊಂದಿಗೆ (ಇಯು) ಮಾಡಿಕೊಳ್ಳುತ್ತಿರುವ ಮುಕ್ತ ವಾಣಿಜ್ಯ ಒಪ್ಪಂದಗಳಿಂದ (ಎಫ್‌ಟಿಎ) ರಾಜ್ಯದ ರೈತರಿಗಾಗುವ ಮಾರಕ ಪರಿಣಾಮಗಳ ಕುರಿತು ಚರ್ಚಿಸಲು ಹಾಗೂ ರೈತರ ಹಿತರಕ್ಷಣೆಗಾಗಿ ತುರ್ತು ‘ವಿಶೇಷ ವಿಧಾನಸಭಾ ಅಧಿವೇಶನ’ ಕರೆಯಬೇಕು ಎಂದು ರಾಜ್ಯದ ವಿವಿಧ ರೈತ ಸಂಘಟನೆಗಳು, ಕೃಷಿ ತಜ್ಞರು ಮತ್ತು ಸಾಹಿತಿಗಳು ಒತ್ತಾಯಿಸಿದ್ದಾರೆ. ಸೋಮವಾರ ಈ ಸಂಬಂಧ ಕೃಷಿ ಆರ್ಥಿಕ ತಜ್ಞ ಡಾ.ಟಿ.ಎನ್.ಪ್ರಕಾಶ್ ಕಮ್ಮರಡಿ, ಡಾ.ಎ.ಎನ್. ಎಲ್ಲಪ್ಪರೆಡ್ಡಿ, ಮಾಜಿ ಭಾರತೀಯ ಅರಣ್ಯ ಸೇವಾ ಅಧಿಕಾರಿಗಳು, ಪರಿಸರವಾದಿಗಳು, ಬೆಂಗಳೂರು ರೈತ ಮುಖಂಡರಾದ ಕೆ.ಟಿ.ಗಂಗಾಧರ್, ಕುರುಬೂರು ಶಾಂತಕುಮಾರ್, ಬಡಗಲಪುರ ನಾಗೇಂದ್ರ, ಚಾಮರಸ ಮಾಲಿ ಪಾಟೀಲ್, ಸಾಹಿತಿ ಪ್ರೊ.ಎಸ್.ಜಿ.ಸಿದ್ದರಾಮಯ್ಯ ಮತ್ತು ಡಾ.ವಿಜಯಮ್ಮ, ಪರಿಸರವಾದಿ ನಾಗೇಶ ಹೆಗಡೆ ಸೇರಿದಂತೆ 30 ಮಂದಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದಾರೆ. ಅಮೆರಿಕ ಮತ್ತು ಐರೋಪ್ಯ ಒಕ್ಕೂಟ ರಾಷ್ಟ್ರಗಳೊಂದಿಗಿನ ಮುಕ್ತ ವಾಣಿಜ್ಯ ಒಪ್ಪಂದಗಳು ದೇಶದ ರೈತರ ಪಾಲಿಗೆ ಹಿಂದಿನ ‘ಮೂರು ಕೃಷಿ ಕಾಯ್ದೆಗಳಿಗಿಂತಲೂ’ ಹೆಚ್ಚು ಮಾರಕವಾಗಲಿವೆ ಎಂದು ತಜ್ಞರು ಎಚ್ಚರಿಸುತ್ತಿದ್ದಾರೆ. ಕರ್ನಾಟಕದ ಸುಮಾರು ಶೇ.68 ರೈತ ಕುಟುಂಬಗಳು ಸಾಲಬಾಧೆಯಲ್ಲಿರುವ ಈ ಸಂದರ್ಭದಲ್ಲಿ ಈ ಒಪ್ಪಂದಗಳು ಜಾರಿಯಾದರೆ ರಾಜ್ಯದಲ್ಲಿ ಕೃಷಿ ಬಿಕ್ಕಟ್ಟು ಉಲ್ಬಣಗೊಂಡು ರೈತರ ಆತ್ಮಹತ್ಯೆಗಳು ಹೆಚ್ಚಾಗುವ ಆತಂಕ ಉಂಟಾಗಿದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಭಾರತದ ಸಂವಿಧಾನದ ಪ್ರಕಾರ ‘ಕೃಷಿ’ ಎಂಬುದು ರಾಜ್ಯ ಪಟ್ಟಿಯಲ್ಲಿರುವ ವಿಷಯ. ಆದರೆ ರಾಜ್ಯ ಸರಕಾರಗಳೊಂದಿಗೆ ಯಾವುದೇ ಪೂರ್ವ ಸಮಾಲೋಚನೆ ನಡೆಸದೆ, ಕೇಂದ್ರ ಸರಕಾರವು ಏಕಪಕ್ಷೀಯವಾಗಿ ಕೃಷಿ ಉತ್ಪನ್ನಗಳ ಮೇಲೆ ಸುಂಕ ಇಳಿಸುವುದು ಅಥವಾ ಮಾರುಕಟ್ಟೆಯನ್ನು ವಿದೇಶಿ ಕಂಪನಿಗಳಿಗೆ ಮುಕ್ತಗೊಳಿಸುವುದು ಒಕ್ಕೂಟ ವ್ಯವಸ್ಥೆಯ ಆಶಯಕ್ಕೆ ವಿರುದ್ಧವಾಗಿದೆ. ಅಲ್ಲದೆ ಅಮೆರಿಕಾದ ಮೆಕ್ಕೆಜೋಳ, ಸೋಯಾಬೀನ್ ಸೇರಿದಂತೆ ಜೈವಿಕ ತಂತ್ರಜ್ಞಾನದಿಂದ ಮಾರ್ಪಡಿಸಿದ ಕೃಷಿ ಉತ್ಪನ್ನಗಳು ಮಾನವನ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತವೆ. ಈ ಒಪ್ಪಂದಗಳ ಮೂಲಕ ಅಂತಹ ಕೃಷಿ ಉತ್ಪನ್ನಗಳು ಅವ್ಯಾಹತವಾಗಿ ದೇಶದೊಳಗೆ ನುಗ್ಗಲಿವೆ. ಇದು ರಾಜ್ಯದ ಜನರ ಆಹಾರ ಸುರಕ್ಷತೆ ಮತ್ತು ಸಾರ್ವಜನಿಕ ಆರೋಗ್ಯಕ್ಕೆ ಎದುರಾಗಿರುವ ದೊಡ್ಡ ಬೆದರಿಕೆಯಾಗಲಿದೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ. ಯುರೋಪಿನ ಸಬ್ಸಿಡಿ ಯುಕ್ತ ಹಾಲಿನ ಪುಡಿ, ಚೀಸ್ ಇತರ ಹಾಲಿನ ಉತ್ಪನ್ನಗಳನ್ನು ಆಮದು ಮಾಡಿಕೊಂಡರೆ, ನಮ್ಮ ಕೆಎಂಎಫ್ (ನಂದಿನಿ) ವ್ಯವಸ್ಥೆ ಕುಸಿಯಲಿದೆ. ಹೀಗಾಗಿ ಪಂಜಾಬ್ ಮತ್ತು ಹಿಮಾಚಲ ಪ್ರದೇಶದ ಮಾದರಿಯಲ್ಲಿ ಕರ್ನಾಟಕ ಸರಕಾರವೂ ವಿಶೇಷ ಅಧಿವೇಶನ ಕರೆದು ಕೇಂದ್ರದ ಈ ಒಪ್ಪಂದಗಳ ವಿರುದ್ಧ ನಿರ್ಣಯ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ. 

ವಾರ್ತಾ ಭಾರತಿ 6 Apr 2026 11:57 pm

Mysuru | 448 ಎಕರೆ ಕೃಷಿ ಭೂಮಿ ಸ್ವಾಧೀನ ವಿರೋಧಿಸಿ ರೈತ ಸಂಘದಿಂದ ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ

ಮೈಸೂರು : ನಂಜನಗೂಡು ತಾಲೂಕಿನ ಮುದ್ದಹಳ್ಳಿ ಗ್ರಾಮದಲ್ಲಿ 448 ಎಕರೆ ಫಲವತ್ತಾದ ಕೃಷಿ ಭೂಮಿಯನ್ನು ಕೆ.ಐ.ಡಿ.ಬಿ ಕೈಗಾರಿಕರಣಕ್ಕೆ ವಶಪಡಿಸಿಕೊಳ್ಳುವುದನ್ನು ವಿರೋಧಿಸಿ ರೈತರು ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ ನಡೆಸಿದ್ದಾರೆ. ಸಾಮೂಹಿಕ ನಾಯಕತ್ವದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಸೋಮವಾರ ಕಡುಬನಕಟ್ಟೆ ಗೇಟ್ ಬಳಿ ನಂಜನಗೂಡು- ಊಟಿ ರಸ್ತೆ ರಾಷ್ಟ್ರೀಯ ಹೆದ್ದಾರಿಯನ್ನು ತಡೆದು ಯಾವುದೇ ಕಾರಣಕ್ಕೂ ಭೂಮಿಯನ್ನು ಕೊಡುವುದಿಲ್ಲ ಎಂಬ ಘೋಷಣೆ ಕೂಗಿ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಕೆಲವು ಸಮಯದ ನಂತರ ರೈತರು ಹೆದ್ದಾರಿಯಿಂದ ಮುದ್ದಹಳ್ಳಿ ಗ್ರಾಮದವರೆಗೂ ಕಾಲ್ನಡಿಗೆಯಲ್ಲಿ ತೆರಳಿ ಅನಿರ್ದಿಷ್ಟಾವಧಿ ಹೋರಾಟಕ್ಕೆ ಚಾಲನೆ ನೀಡಲಾಯಿತು. ಸ್ಥಳಕ್ಕೆ ಭೇಟಿ ನೀಡಿದ ನಂಜನಗೂಡಿನ ತಹಶೀಲ್ದಾರ್ ಅವರು ರೈತರ ಹಕ್ಕೊತ್ತಾಯ ಪತ್ರಗಳನ್ನು ಸ್ವೀಕರಿಸಿ ತ್ವರಿತವಾಗಿ ವಿಚಾರವನ್ನು ಸರಕಾರಕ್ಕೆ ತಲುಪಿಸುವ ಕೆಲಸವನ್ನು ಮಾಡುತ್ತೇನೆ ಎಂದು ಭರವಸೆ ನೀಡಿದರು. ಹೋರಾಟದಲ್ಲಿ ರೈತ ಮುಖಂಡರಾದ ಹೊನ್ನೂರು ಪ್ರಕಾಶ್, ಮಂಜು ಕಿರಣ್ , ಶಿರಮಳ್ಳಿ ಮಂಜುನಾಥ, ಮುದ್ದಳ್ಳಿ ಗ್ರಾಮದ ವಿಜಯಲಕ್ಷ್ಮೀ, ಗೌರಮ್ಮ, ಗುರುಸ್ವಾಮಿ, ಮಲ್ಲಿಕಾರ್ಜುನ್ , ಗ್ರಾಮಸ್ಥರು ಭಾಗವಹಿಸಿದ್ದರು. ಅಭಿವೃದ್ಧಿ ಹೆಸರಿನಲ್ಲಿ ರೈತರ ಫಲವತ್ತಾದ ಭೂಮಿಯನ್ನು ಕಿತ್ತುಕೊಂಡು ರೈತರನ್ನು ದಮನ ಮಾಡುವುದು ಯಾವ ನ್ಯಾಯ? ಈ ಭೂಮಿಯಲ್ಲಿ ರೈತರು ತರಕಾರಿ, ಕಬ್ಬು, ಬಾಳೆ, ಜೋಳ, ರಾಗಿ ಸೇರಿದಂತೆ ಹಲವಾರು ಬೆಳೆಗಳನ್ನು ಬೆಳೆದು ಬದುಕು ನಡೆಸುತ್ತಿದ್ದಾರೆ. ಇಂತಹ ಕೃಷಿಗೆ ಯೋಗ್ಯವಾದ ಭೂಮಿ ಕಬಳಿಸಿದರೆ ದೊಡ್ಡ ಹೋರಾಟವೇ ನಡೆಯುತ್ತದೆ. -ಮಂಜು ಕಿರಣ್, ರೈತ ಹೋರಾಟಗಾರ

ವಾರ್ತಾ ಭಾರತಿ 6 Apr 2026 11:54 pm

Belagavi | ಯುವತಿಗೆ ಲೈಂಗಿಕ ದೌರ್ಜನ್ಯವೆಸಗಿ ಚಿನ್ನ ದೋಚಿದ ಆರೋಪ: ಆರೋಪಿಯ ಬಂಧನ

ಬೆಳಗಾವಿ : ಮದುವೆಯಾಗುವುದಾಗಿ ನಂಬಿಸಿ ಯುವತಿಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿ ಹಣ ಹಾಗೂ ಚಿನ್ನ ದೋಚಿದ ಪ್ರಕರಣ ಬೆಳಗಾವಿಯಲ್ಲಿ ನಡೆದಿರುವುದಾಗಿ ವರದಿಯಾಗಿದೆ. ನಗರದ ಮಾಧವಾ ಕಾಲನಿ ನಿವಾಸಿ ಈಶ್ವರಸಿಂಗ್ ಪ್ರೇಮಸಿಂಗ್ ಬಡಗೂಜರ್ ಈ ಪ್ರಕರಣದ ಆರೋಪಿಯಾಗಿದ್ದು, ಆತನನ್ನು ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ. ಯುವತಿಯೊಂದಿಗೆ ಹೊಂದಿದ ಖಾಸಗಿ ಕ್ಷಣಗಳನ್ನು ವೀಡಿಯೊ ಮಾಡಿ, ಅವುಗಳನ್ನು ವೈರಲ್ ಮಾಡುವುದಾಗಿ ಬೆದರಿಸಿ ಲಕ್ಷಾಂತರ ರೂ. ವಸೂಲಿ ಮಾಡಿದ್ದಾನೆ. ಯುವತಿಯಿಂದ ಸುಮಾರು 19 ಲಕ್ಷ ರೂ. ಹಾಗೂ 1,500 ಗ್ರಾಂ ಚಿನ್ನಾಭರಣ ಪಡೆದುಕೊಂಡಿರುವುದಾಗಿ ಯುವತಿಯು ಶಹಾಪುರ ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ಉಲ್ಲೇಖಿಸಲಾಗಿದೆ.

ವಾರ್ತಾ ಭಾರತಿ 6 Apr 2026 11:50 pm

Belagavi | ಗೃಹಬಂಧನದಲ್ಲಿದ್ದ ಮಹಿಳೆ-ಮಕ್ಕಳ ರಕ್ಷಣೆ: ಪತಿ ವಶಕ್ಕೆ

ಬೆಳಗಾವಿ : ಟಿಳಕವಾಡಿ ಪ್ರದೇಶದ ಮನೆಯಲ್ಲಿ ಪತಿಯಿಂದಲೇ ಗೃಹಬಂಧನಕ್ಕೊಳಗಾಗಿ ಮಾನಸಿಕ ಹಾಗೂ ದೈಹಿಕ ಹಿಂಸೆ ಅನುಭವಿಸುತ್ತಿದ್ದ ಮಹಿಳೆ ಮತ್ತು ಇಬ್ಬರು ಮಕ್ಕಳನ್ನು ಅಕ್ಕ ಪಡೆ ರಕ್ಷಿಸಿದ ಘಟನೆ ಬೆಳಕಿಗೆ ಬಂದಿದೆ. ದಿಲ್ಲಿಯಿಂದ ಬಂದ ಮಾಹಿತಿಯ ಮೇರೆಗೆ ಪೊಲೀಸರು ಕಾರ್ಯಾಚರಣೆ ನಡೆಸಿದ್ದು, ನಗರ ಪೊಲೀಸ್ ಕಮಿಷನರ್ ಭೂಷಣ ಬೊರಸೆ ಅವರ ನಿರ್ದೇಶನದಂತೆ ಮಹಿಳಾ ಠಾಣೆಯ ಇನ್‌ಸ್ಪೆಕ್ಟರ್ ಡಿ.ಪಿ.ನಿಂಬಾಳ್ಕರ್ ತಂಡದೊಂದಿಗೆ ಅಕ್ಕ ಪಡೆಯವರು ಸ್ಥಳ ಪತ್ತೆಹಚ್ಚಿದರು. ಬಳಿಕ ಮನೆಯಲ್ಲಿ ಬಂಧನದಲ್ಲಿದ್ದ ಮಹಿಳೆ ಹಾಗೂ ಮಕ್ಕಳನ್ನು ಸುರಕ್ಷಿತವಾಗಿ ರಕ್ಷಿಸಲಾಯಿತು. ಸಂತ್ರಸ್ತೆ ನೀಡಿದ ದೂರಿನ ಆಧಾರದಲ್ಲಿ ಪತಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ರಕ್ಷಿಸಲ್ಪಟ್ಟ ಮಹಿಳೆಗೆ ವೈದ್ಯಕೀಯ ಚಿಕಿತ್ಸೆ ನೀಡಲಾಗಿದ್ದು, ನಂತರ ವಿಮಾನದ ಮೂಲಕ ತವರೂರಾದ ದಿಲ್ಲಿಗೆ ರವಾನಿಸಲಾಗಿದೆ ಎಂದು ಕಮಿಷನರ್ ತಿಳಿಸಿದ್ದಾರೆ.

ವಾರ್ತಾ ಭಾರತಿ 6 Apr 2026 11:46 pm

ಥಾವರ್‌ಚಂದ್ ಗೆಹ್ಲೋಟ್‍ಗೆ ರಾಜ್ಯಪಾಲರಾಗಿ ಉಳಿಯುವ ನೈತಿಕತೆ ಇಲ್ಲ : ಟಿ.ಎ.ನಾರಾಯಣಗೌಡ

ಬೆಂಗಳೂರು : ರಾಜ್ಯಪಾಲ ಥಾವರ್‌ ಚಂದ್ ಗೆಹ್ಲೋಟ್ ಅವರು ತಮ್ಮ ಕಾರ್ಯವ್ಯಾಪ್ತಿಯನ್ನು ಮೀರಿ ಕನ್ನಡಿಗರ ಆಶೋತ್ತರಗಳಿಗೆ ವಿರುದ್ಧವಾಗಿ ನಡೆದುಕೊಂಡಿದ್ದಾರೆ. ಹೀಗಾಗಿ ಅವರು ಕರ್ನಾಟಕದಲ್ಲಿ ಒಂದೇ ಒಂದು ನಿಮಿಷವೂ ರಾಜ್ಯಪಾಲರಾಗಿ ಉಳಿಯುವ ನೈತಿಕತೆಯನ್ನು ಕಳೆದುಕೊಂಡಿದ್ದಾರೆ ಎಂದು ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ಖಂಡಿಸಿದ್ದಾರೆ. ಸೋಮವಾರ ಇಲ್ಲಿನ ಫ್ರೀಡಂ ಪಾರ್ಕ್‍ನಲ್ಲಿ ಹಿಂದಿ ಹೇರಿಕೆ ವಿರುದ್ಧ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ರಾಜ್ಯ ಸರಕಾರವು ಎಸೆಸೆಲ್ಸಿ ಪರೀಕ್ಷೆಗಳಲ್ಲಿ ತೃತೀಯ ಭಾಷೆಗೆ ಗ್ರೇಡಿಂಗ್ ವ್ಯವಸ್ಥೆ ಜಾರಿ ಮಾಡಿದೆ. ಈ ನಿರ್ಧಾರವನ್ನು ಮರುಪರಿಶೀಲಿಸುವಂತೆ ರಾಜ್ಯಪಾಲರು ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದಿದ್ದಾರೆ. ಈ ಪತ್ರದ ಹಿಂದೆ ಕರ್ನಾಟಕದಲ್ಲಿ ಹಿಂದಿಹೇರಿಕೆಯನ್ನು ಶಾಶ್ವತವಾಗಿ ನಡೆಸುವ ಹುನ್ನಾರವಿದೆ. ಹೀಗಾಗಿ ಹಿಂದಿ ಸಾಮ್ರಾಜ್ಯಶಾಹಿಗಳ ಪರವಾಗಿ ವರ್ತಿಸುತ್ತ ಕರ್ನಾಟಕ ವಿರೋಧಿ ಧೋರಣೆ ಹೊಂದಿರುವ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರನ್ನು ಕೇಂದ್ರ ಸರಕಾರ ಕೂಡಲೇ ಹಿಂದಕ್ಕೆ ಕರೆಯಿಸಿಕೊಳ್ಳಬೇಕು ಎಂದು ಒತ್ತಾಯಿಸಿದರು. ರಾಜ್ಯಪಾಲರು ರಾಜ್ಯದ ದಿನನಿತ್ಯದ ಆಡಳಿತದಲ್ಲಿ ಮೂಗು ತೂರಿಸುವುದು ಅತ್ಯಂತ ಆಕ್ಷೇಪಾರ್ಹವಾದ ಬೆಳವಣಿಗೆಯಾಗಿದೆ. ರಾಜ್ಯ ಸರಕಾರವನ್ನು ಕರ್ನಾಟಕದ ಜನತೆ ಆಯ್ಕೆ ಮಾಡಿದ್ದಾರೆ. ನಾಡಿನ ಜನರ ಬೇಕು, ಬೇಡಗಳನ್ನು ರಾಜ್ಯ ಸರಕಾರ ತೀರ್ಮಾನಿಸುತ್ತದೆ. ಹೀಗಿರುವಾಗ ಸರಕಾರದ ಮುಖ್ಯಸ್ಥರಾಗಿ ನಾಡಪರ ಕಾಳಜಿಯ ನಿರ್ಧಾರಗಳನ್ನು ಬೆಂಬಲಿಸುವುದು ಅವರ ಕರ್ತವ್ಯವಾಗಿರುತ್ತದೆ. ಆದರೆ ಅವರು ಹಿಂದಿ ಮಾಫಿಯಾ ಪರವಾಗಿ ಕಾರ್ಯ ನಿರ್ವಹಿಸುತ್ತಿರುವಂತೆ ತೋರುತ್ತದೆ ಎಂದು ಹೇಳಿದರು. ‘ಬೆಂಗಳೂರು ಸ್ಥಳೀಯ ಭಾಷೆಗಳ ಸಂರಕ್ಷಣಾ ಸಂಘ’ ಎಂಬ ಅನಾಮಧೇಯ ಸಂಘಟನೆಯ ಮನವಿಗೆ ರಾಜ್ಯಪಾಲರು ತುರ್ತಾಗಿ ಪ್ರತಿಕ್ರಿಯಿಸಿ, ರಾಜ್ಯ ಸರಕಾರಕ್ಕೆ ಪತ್ರ ಬರೆದಿರುವುದೇ ಒಂದು ದೊಡ್ಡ ದುಷ್ಟ ಹುನ್ನಾರವಾಗಿದೆ. ಕರ್ನಾಟಕವನ್ನು ವಲಸೆ ಬರುತ್ತಿರುವ ಹಿಂದಿಭಾಷಿಕರಿಗಾಗಿ ‘ಸುರಕ್ಷಿತ ಸ್ವರ್ಗ’ವನ್ನಾಗಿಸುವ ದೂರಗಾಮಿ ಉದ್ದೇಶಗಳು ಹಿಂದಿ ಮಾಫಿಯಾಗೆ ಇದೆ. ಅದರ ಭಾಗವಾಗಿಯೇ ರಾಜ್ಯಪಾಲರು ಈ ಪತ್ರ ಬರೆದಿದ್ದಾರೆ ಎಂದು ಟಿ.ಎ.ನಾರಾಯಣಗೌಡ ಹೇಳಿದರು. ರಾಜ್ಯ ಸರಕಾರವು ಕರ್ನಾಟಕದ ಶಿಕ್ಷಣ ನೀತಿಯನ್ನು ತೀರ್ಮಾನಿಸುತ್ತದೆ. ರಾಜ್ಯ ಸರಕಾರವನ್ನು ಇದಕ್ಕಾಗಿಯೇ ನಾವು ಆಯ್ಕೆ ಮಾಡಿ ಕಳಿಸಿದ್ದೇವೆ. ಇದನ್ನು ಪ್ರಶ್ನಿಸಲು ರಾಜ್ಯಪಾಲರು ಯಾರು? ಸಂವಿಧಾನ ಅವರಿಗೆ ಈ ಅವಕಾಶ ನೀಡಿಲ್ಲ. ಹಿಂದಿ ಮಾಫಿಯಾ ಎಷ್ಟು ಬಲಶಾಲಿಯಾಗಿದೆ ಎಂಬುದು ಇದರಿಂದ ಗೊತ್ತಾಗುತ್ತಿದೆ. ಹುತ್ತದ ಒಳಗೆ ಇನ್ನೆಷ್ಟು ಹಾವುಗಳು ಇವೆಯೋ ಗೊತ್ತಿಲ್ಲ. ಎಲ್ಲವೂ ಹೊರಬರಲಿ ಎಂದು ನಾವು ಕಾಯುತ್ತಿದ್ದೇವೆ ಎಂದು ಅವರು ಹೇಳಿದರು. ರಾಜ್ಯಪಾಲರ ಈ ಪತ್ರವನ್ನು ರಾಜ್ಯ ಸರಕಾರ ಕಸದ ಬುಟ್ಟಿಗೆ ಎಸೆಯಬೇಕು. ಕನ್ನಡಿಗರ ಹಿತದೃಷ್ಟಿಗೆ ವಿರುದ್ಧವಾಗಿ ಯಾರೇ ಏನೇ ಹೇಳಿದರೂ ಅದನ್ನು ರಾಜ್ಯ ಸರಕಾರ ಪರಿಗಣಿಸಬೇಕಿಲ್ಲ. ನಾವು ಹಿಂದೆ ಬ್ರಿಟಿಷ್ ಸಾಮ್ರಾಜ್ಯಶಾಹಿಯ ವಿರುದ್ಧ ಹೋರಾಡಿದ್ದೆವು. ಈಗ ಹಿಂದಿ ಸಾಮ್ರಾಜ್ಯಶಾಹಿ ನಮ್ಮನ್ನು ಆಳಲು ಯತ್ನಿಸುತ್ತಿದೆ. ಇದಕ್ಕೆ ನಾವು ಅವಕಾಶ ಕೊಡುವುದಿಲ್ಲ. ನಮ್ಮ ಪ್ರಾಣ ಹೋದರೂ ನಮ್ಮ ನೆಲದ ಅಸ್ಮಿತೆಯನ್ನು ಉಳಿಸಿಕೊಳ್ಳುತ್ತೇವೆ ಎಂದು ಅವರು ತಿಳಿಸಿದರು. ಪ್ರತಿಭಟನೆಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು.   ‘ಸರಕಾರವು ತೃತೀಯ ಭಾಷೆಗೆ ಗ್ರೇಡಿಂಗ್ ವ್ಯವಸ್ಥೆ ನೀಡುವ ನಿರ್ಧಾರ ಕೈಗೊಂಡಿದ್ದು, ಯಾರೇ ಇದನ್ನು ಬದಲಿಸುವ ಪ್ರಯತ್ನ ಮಾಡಿದರೂ ರಕ್ತಕ್ರಾಂತಿಯಾಗುತ್ತದೆ. ರಾಜ್ಯಪಾಲ ಗೆಹ್ಲೋಟ್ ಹಿಂದಿ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಪತ್ರ ಬರೆದು ಅಲ್ಲೆಲ್ಲಾ ತೃತೀಯ ಭಾಷೆಯಾಗಿ ಕನ್ನಡ ಕಲಿಸಲು ತಾಕೀತು ಮಾಡಲಿ. ಅಷ್ಟೇಕೆ ಅವರ ಸ್ವಂತ ರಾಜ್ಯವಾದ ಮಧ್ಯಪ್ರದೇಶದಲ್ಲಿ ಈಗಲೂ ಎರಡೇ ಭಾಷೆಗಳನ್ನು ಕಲಿಸಲಾಗುತ್ತಿದೆ. ಮೂರನೇ ಭಾಷೆಯನ್ನಾಗಿ ಕಡ್ಡಾಯವಾಗಿ ಕನ್ನಡ ಕಲಿಸುವಂತೆ ಅಲ್ಲಿನ ಸರಕಾರದ ಮೇಲೆ ಅವರು ಒತ್ತಡ ಹೇರಲಿ. ಅದು ಸಾಧ್ಯವಿಲ್ಲದಿದ್ದರೆ ಕನ್ನಡಿಗರ ಮೇಲೆ ಯಾಕೆ ಹಿಂದಿ ಹೇರಲು ಯತ್ನಿಸುತ್ತಾರೆ. ಇಂಥ ನಾಡದ್ರೋಹಿ ರಾಜ್ಯಪಾಲ ಕರ್ನಾಟಕದಲ್ಲಿ ಇರಲು ಯೋಗ್ಯರಲ್ಲ’ -ಟಿ.ಎ.ನಾರಾಯಣಗೌಡ, ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ

ವಾರ್ತಾ ಭಾರತಿ 6 Apr 2026 11:36 pm

ದ್ವಿಚಕ್ರ ವಾಹನ ಕಳವು ಪ್ರಕರಣ: ಇಬ್ಬರು ಆರೋಪಿಗಳ ಬಂಧನ

ಬಂಟ್ವಾಳ : ಬಂಟ್ವಾಳ ನಗರ ಠಾಣಾ ವ್ಯಾಪ್ತಿಯ ಪರ್ಲಿಯಾ ಎಂಬಲ್ಲಿನ ವಸತಿ ಗೃಹದ ಶೆಡ್ಡಿನಲ್ಲಿ ನಿಲ್ಲಿಸಿದ್ದ ದ್ವಿಚಕ್ರ ವಾಹನ ಕಳವು ಪ್ರಕರಣ ಬೇಧಿಸಿರುವ ಪೊಲೀಸರು ಇಬ್ಬರು ಆರೋಪಿಗಳನ್ನು ಕಳವಾಗಿರುವ ದ್ವಿಚಕ್ರ ವಾಹನ ಸಹಿತ ಬಂಧಿಸುವಲ್ಲಿ ಸಫಲರಾಗಿದ್ದಾರೆ. ಬಂಧಿತ ಆರೋಪಿಗಳನ್ನು ಸಜಿಪಮುನ್ನೂರು ಗ್ರಾಮದ ನಿವಾಸಿ ಹಸನ್ ಬಾವಾ (55) ಹಾಗೂ ಬಿ ಮೂಡ ಗ್ರಾಮದ ನಿವಾಸಿ ಇರ್ಶಾದ್ (37) ಎಂದು ಗುರುತಿಸಲಾಗಿದೆ. ಮಾರ್ಚ್ 21 ರಂದು ಪರ್ಲಿಯಾ ಎಂಬಲ್ಲಿನ ವಸತಿ ಗೃಹದ ಶೆಡ್ಡಿನಲ್ಲಿ ನಿಲ್ಲಿಸಿದ್ದ ದ್ವಿಚಕ್ರ ವಾಹನದ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿದ ಬಂಟ್ವಾಳ ನಗರ ಠಾಣಾ ಪೊಲೀಸರು ಈ ಕಾರ್ಯಾಚರಣೆ ನಡೆಸಿದ್ದಾರೆ. ಪೊಲೀಸರು ವಶಪಡಿಸಿಕೊಂಡಿರುವ ಸ್ಕೂಟರ್ ಮೌಲ್ಯ 50 ಸಾವಿರ ರೂ. ಎಂದು ಅಂದಾಜಿಸಲಾಗಿದೆ.

ವಾರ್ತಾ ಭಾರತಿ 6 Apr 2026 11:30 pm

ಕೊಡಾಜೆ ಟರ್ಫ್ ಫ್ರೆಂಡ್ಸ್ ವತಿಯಿಂದ ರಕ್ತದಾನ ಶಿಬಿರ

ಬಂಟ್ವಾಳ : ಟರ್ಫ್ ಫ್ರೆಂಡ್ಸ್ ಕೊಡಾಜೆ ಇದರ ವತಿಯಿಂದ ಡಿಗ್ನಿಟಿ ಇಂಗ್ಲಿಷ್ ಮೀಡಿಯಂ ಸ್ಕೂಲ್ ಹಾಗೂ ಬ್ಲಡ್ ಡೋನರ್ಸ್ ಮಂಗಳೂರು, ಕೆಎಂಸಿ ಆಸ್ಪತ್ರೆ ಇದರ ಸಹಯೋಗದೊಂದಿಗೆ ನೇರಳಕಟ್ಟೆ ಸಮೀಪದ ಕೊಡಾಜೆ ಡಿಗ್ನಿಟಿ ಇಂಗ್ಲಿಷ್ ಮೀಡಿಯಂ ಶಾಲೆಯಲ್ಲಿ ರಕ್ತದಾನ ಶಿಬಿರ ನಡೆಯಿತು. ಕೊಡಾಜೆ ಟರ್ಫ್ ಫ್ರೆಂಡ್ಸ್ ಸಂಚಾಲಕ ಕುಂಞಿಮೋನು ಅವರ ಅಧ್ಯಕ್ಷತೆಯಲ್ಲಿ ನಡೆದ ಸಭಾ ಕಾರ್ಯಕ್ರಮವನ್ನು ಕೊಡಾಜೆ ಬದ್ರಿಯಾ ಜುಮಾ ಮಸೀದಿ ಖತೀಬ್ ಅಬ್ದುಲ್ ಅಝೀಝ್ ದಾರಿಮಿ ಪೊನ್ಮಲ ಉದ್ಘಾಟಿಸಿದರು. ಕೊಡಾಜೆ ಬದ್ರಿಯಾ ಜುಮಾ ಮಸೀದಿ ಕಾರ್ಯದರ್ಶಿ ಎಸ್.ಎಂ.ರಫೀಕ್ ಹಾಜಿ ನೇರಳಕಟ್ಟೆ, ಸಾಮಾಜಿಕ ಕಾರ್ಯಕರ್ತ ಹನೀಫ್ ಖಾನ್ ಕೊಡಾಜೆ, ಕೊಡಾಜೆ ಟ್ರೂ ಕೇರ್ ಕ್ಲಿನಿಕ್ ನ ಡಾ. ತೌಸೀನಾ, ಪತ್ರಕರ್ತ ಲತೀಫ್ ನೇರಳಕಟ್ಟೆ ಮಾತನಾಡಿ ಶುಭ ಹಾರೈಸಿದರು. ಕೊಡಾಜೆ ಬದ್ರಿಯಾ ಜುಮಾ ಮಸೀದಿ ಅಧ್ಯಕ್ಷ ಅಬ್ಬಾಸ್ ನೇರಳಕಟ್ಟೆ, ಪರ್ಲೊಟ್ಟು ಅಬೂಬಕರ್ ಸಿದ್ದೀಕ್ ಜುಮಾ ಮಸೀದಿ ಅಧ್ಯಕ್ಷ ಕೆ.ಬಿ.ಕಾಸಿಂ ಹಾಜಿ ಮಿತ್ತೂರು, ನೇರಳಕಟ್ಟೆ ಶಾಲಾ ಎಸ್ಡಿಎಂಸಿ ಅದ್ಯಕ್ಷ ಪಿ.ಕೆ.ರಶೀದ್ ಪರ್ಲೊಟ್ಟು, ಎಸ್ಡಿಪಿಐ ಕೊಡಾಜೆ ಯುನಿಟ್ ಅದ್ಯಕ್ಷ ಇಂಜಿನಿಯರ್ ಲತೀಫ್ ಕೊಡಾಜೆ, ಎಸ್ಕೆಎಸ್ಸೆಸ್ಸೆಫ್ ಕೊಡಾಜೆ ಯುನಿಟ್ ಅದ್ಯಕ್ಷ ಹನೀಫ್ ಅನಂತಾಡಿ, ಕೊಡಾಜೆ ತರ್ಬಿಯತುಲ್ ಇಸ್ಲಾಂ ಮದ್ರಸ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸಮೀರ್ ಹಂಝ, ಕೊಡಾಜೆ ಮದ್ರಸ ಮುಖ್ಯ ಶಿಕ್ಷಕ ಸಿರಾಜುದ್ದೀನ್ ಫೈಝಿ, ಪಂತಡ್ಕ ಮದ್ರಸ ಮುಖ್ಯ ಶಿಕ್ಷಕ ಜಾಫರ್ ಸಾದಿಕ್ ಅರ್ಶದಿ, ಪ್ರಮುಖರಾದ ಯೂಸುಫ್ ಸಹೀದ್, ಪಿ.ಕೆ.ಸಮದ್ ಪರ್ಲೊಟ್ಟು, ಅಬ್ಬಾಸ್ ಹಾಜಿ ನೆಡ್ಯಾಲು, ಬ್ಲಡ್ ಬ್ಲಡ್ ಡೋನರ್ಸ್ ಮಂಗಳೂರು ಇದರ ಕಾರ್ಯ ನಿರ್ವಾಹಕ ರವೂಫ್ ಪಾಲ್ತಾಡ್, ಮುಖ್ಯಸ್ಥರಾದ ಅಶ್ರಫ್ ಉಪ್ಪಿನಂಗಡಿ, ಜಮಾಲ್ ಕಲ್ಲಡ್ಕ, ಝಿಯಾದ್ ಆತೂರು, ಝಹೀರ್ ಶಾಂತಿನಗರ, ಸಲೀಂ ಉಪ್ಪಿನಂಗಡಿ ಅತಿಥಿಗಳಾಗಿ ಭಾಗವಹಿಸಿದ್ದರು. ಇದೇ ವೇಳೆ 36 ಬಾರಿ ರಕ್ತದಾನ ಮಾಡಿದ ಶೀತಲ್ ಗಣೇಶ ನಗರ, ಶಿಬಿರಕ್ಕೆ ವಿಶೇಷ ಸಹಕಾರ ನೀಡಿದ ಕೊಡಾಜೆ ಟರ್ಫ್ ಫ್ರೆಂಡ್ಸ್ ನ ಸಹ ಸಂಚಾಲಕರಾದ ನೌಫಳ್ ಕೊಡಾಜೆ, ನಝೀರ್ ರೆಡ್ ಹಿಲ್ ಅವರನ್ನು ಸನ್ಮಾನಿಸಲಾ ಯಿತು. ಶಿಬಿರದಲ್ಲಿ ಒಟ್ಟು 75 ಮಂದಿ ರಕ್ತದಾನ ಮಾಡುವ ಮೂಲಕ ಜೀವದಾನಿಗಳಾದರು. ಮಂಗಳೂರು ಕೆಎಂಸಿ ಆಸ್ಪತ್ರೆ ಬ್ಲಡ್ ಬ್ಯಾಂಕ್ ನ ಟೆಕ್ನಿಕಲ್ ಸೂಪರ್ ವೈಸರ್ ರಾಘವೇಂದ್ರ ಪ್ರಾಸ್ತಾವಿಕವಾಗಿ ಮಾತನಾಡಿದರು. ಫಾರೂಕ್ ಆರಂಗಳ ಸ್ವಾಗತಿಸಿ, ಕೊಡಾಜೆ ಡಿಗ್ನಿಟಿ ಆಂಗ್ಲ ಮಾಧ್ಯಮ ಶಾಲೆಯ ಕಾರ್ಯದರ್ಶಿ ಇಲ್ಯಾಸ್ ನೇರಳಕಟ್ಟೆ ವಂದಿಸಿದರು. ನಝೀರ್ ಕೆಂಪುಗುಡ್ಡೆ ಕಾರ್ಯಕ್ರಮ ನಿರೂಪಿಸಿದರು.

ವಾರ್ತಾ ಭಾರತಿ 6 Apr 2026 11:28 pm

ಭಟ್ಕಳ| ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಗೆ ವಿರೋಧ; ಹೋರಾಟ ಮುಂದುವರಿಸುವ ಎಚ್ಚರಿಕೆ

ಭಟ್ಕಳ: ಉತ್ತರ ಕನ್ನಡ ಜಿಲ್ಲೆಯಲ್ಲಿ ಭೂಕುಸಿತದಂತಹ ಸಮಸ್ಯೆಗಳು ಹೆಚ್ಚುತ್ತಿರುವ ಸಂದರ್ಭದಲ್ಲಿ ಅರಣ್ಯ ಮತ್ತು ವನ್ಯಜೀವಿ ಕಾಯ್ದೆಗಳನ್ನು ಉಲ್ಲಂಘಿಸುವ ರೀತಿಯಲ್ಲಿ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ಕೈಗೊಳ್ಳಲಾಗುತ್ತಿದೆ ಎಂದು ಖಂಡಿಸಿದ ಪರಿಸರವಾದಿ ಹಾಗೂ ಪಶ್ಚಿಮಘಟ್ಟ ಕಾರ್ಯಪಡೆಯ ಮಾಜಿ ಅಧ್ಯಕ್ಷ ಅನಂತ ಹೆಗಡೆ ಅಶೀಸರ, ಯೋಜನೆ ಹಿಂತೆಗೆದುಕೊಳ್ಳುವ ತನಕ ಹೋರಾಟ ಮುಂದುವರಿಯುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ. ಸುಬ್ರಹ್ಮಣ್ಯದ ಕುಮಾರದಾರಾ ಉಳಿಸಿ ಹೋರಾಟದಲ್ಲಿ ಭಾಗವಹಿಸಲು ಶಿರಸಿಯಿಂದ ತೆರಳುವ ವೇಳೆ ಸೋಮವಾರ ಭಟ್ಕಳದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಪಶ್ಚಿಮಘಟ್ಟ ಉಳಿಸುವ ಹೋರಾಟ ಹಲವು ವರ್ಷಗಳಿಂದ ನಡೆಯುತ್ತಿದ್ದು, ಈಗಾಗಲೇ ಹಲವು ಮಾರಕ ಯೋಜನೆ ಗಳ ವಿರುದ್ಧ ಜನಾಂದೋಲನಗಳು ನಡೆದಿವೆ. ಕೆಲವು ಹೋರಾಟಗಳಲ್ಲಿ ಯಶಸ್ಸು ಕೂಡಾ ದೊರೆತಿದೆ. ಇದೀಗ 21ನೇ ಶತಮಾನದಲ್ಲಿ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಯ ವಿರುದ್ಧ ಹೋರಾಟ ನಡೆಯುತ್ತಿದ್ದು, ಇದು ಶರಾವತಿ ಅಭಯಾರಣ್ಯಕ್ಕೆ ಧಕ್ಕೆಯುಂಟು ಮಾಡುವ ಬೃಹತ್ ಜಲವಿದ್ಯುತ್ ಯೋಜನೆಯಾಗಿದೆ ಎಂದು ಹೇಳಿದರು. ಜಿಲ್ಲೆ ಸೂಕ್ಷ್ಮ ಪರಿಸರ ಪ್ರದೇಶವಾಗಿದ್ದು, ಭೂಕುಸಿತ, ಅರಣ್ಯ ನಾಶ ಹಾಗೂ ವನ್ಯಜೀವಿ ಕಾಯ್ದೆಗಳ ಉಲ್ಲಂಘನೆಗೆ ಈ ಯೋಜನೆ ಕಾರಣವಾಗುವ ಸಾಧ್ಯತೆ ಇದೆ. ಆದ್ದರಿಂದ ಪಶ್ಚಿಮಘಟ್ಟ ಪ್ರದೇಶದ ಶಾಸಕರು, ಸಂಸದರು ಹಾಗೂ ಇತರೆ ಜನಪ್ರತಿನಿಧಿಗಳು ಒಗ್ಗೂಡಿ ಯೋಜನೆಯನ್ನು ವಿರೋಧಿಸಬೇಕು ಎಂದು ಅವರು ಒತ್ತಾಯಿಸಿದರು. ಈ ಕುರಿತು ಬೆಂಗಳೂರಿನಲ್ಲಿ ದೊಡ್ಡ ಮಟ್ಟದ ಸಭೆ ನಡೆಸಿ ಒಗ್ಗಟ್ಟಿನ ಧ್ವನಿಯನ್ನು ಎತ್ತುವ ಅಗತ್ಯವಿದೆ ಎಂದೂ ಅವರು ಹೇಳಿದರು. ಯೋಜನೆ ಸಂಪೂರ್ಣವಾಗಿ ನಿಲ್ಲುವ ತನಕ ಜಲಾಂದೋಲನ ಮುಂದುವರಿಯಲಿದೆ ಎಂದು ಸ್ಪಷ್ಟಪಡಿಸಿದರು. ಹೋರಾಟ ಹಲವು ಹಂತಗಳಲ್ಲಿ ನಡೆಯುತ್ತಿದ್ದು, ಸ್ವರ್ಣವಲ್ಲಿ ಸ್ವಾಮೀಜಿಯವರ ನೇತೃತ್ವದಲ್ಲಿ ಗಾಂಧೀಜಿಯವರ ಮಾದರಿಯಲ್ಲಿ ಜನಾಂದೋಲನ ನಡೆದಿರುವುದನ್ನು ಅವರು ಉಲ್ಲೇಖಿಸಿದರು. ಜಿಲ್ಲೆಯಲ್ಲಿ ರೈತರು, ಮೀನುಗಾರರು ಮತ್ತು ತೋಟಗಾರರು ಸಂಕಷ್ಟದಲ್ಲಿದ್ದು, ಸಾವಯವ ಕೃಷಿ, ಜೇನುಗಾರಿಕೆ ಉತ್ತೇಜನ ಹಾಗೂ ನಿರಾಶ್ರಿತರಿಗೆ ಪುನರ್ವಸತಿ ಅಗತ್ಯವಿದೆ ಎಂದು ಹೇಳಿದರು. ಇಂತಹ ಅಗತ್ಯಗಳನ್ನು ಕಡೆಗಣಿಸಿ ಮಾರಕ ಯೋಜನೆಗಳನ್ನು ಜಾರಿಗೆ ತರುವ ಪ್ರಯತ್ನವನ್ನು ಜಿಲ್ಲೆಯ ಜಾಗೃತ ನಾಗರಿಕರು ಒಪ್ಪುವುದಿಲ್ಲ ಎಂದು ಅವರು ತಿಳಿಸಿದರು.

ವಾರ್ತಾ ಭಾರತಿ 6 Apr 2026 11:23 pm

ಭಟ್ಕಳ: ನಕಲಿ ಕ್ಲಿನಿಕ್‌ಗಳ ಮೇಲೆ ಅಧಿಕಾರಿಗಳಿಂದ ದಾಳಿ; ಮೂರು ಕ್ಲಿನಿಕ್‌ಗಳಿಗೆ ಸೀಲ್

ಭಟ್ಕಳ: ಜಿಲ್ಲಾ ಆರೋಗ್ಯ ಇಲಾಖೆಯ ಮಾರ್ಗದರ್ಶನದಲ್ಲಿ ತಾಲೂಕು ಆರೋಗ್ಯಾಧಿಕಾರಿ (ಟಿಎಚ್‌ಒ) ಡಾ. ಸನಾ ನೇತೃತ್ವದ ತಂಡವು ಸೋಮವಾರ ಪಟ್ಟಣದ ವಿವಿಧ ಪ್ರದೇಶಗಳಲ್ಲಿ ನಕಲಿ ಕ್ಲಿನಿಕ್‌ಗಳ ವಿರುದ್ಧ ದಾಳಿ ನಡೆಸಿ, ನಿಯಮಬಾಹಿರವಾಗಿ ಕಾರ್ಯನಿರ್ವಹಿಸುತ್ತಿದ್ದ ಮೂರು ಕ್ಲಿನಿಕ್‌ಗಳನ್ನು ಸೀಲ್ ಮಾಡಿದೆ. ಟಿಎಚ್‌ಒ, ನೋಡಲ್ ಅಧಿಕಾರಿ, ಆಯುಷ್ ಅಧಿಕಾರಿ, ನಗರ ಠಾಣೆ ಪೊಲೀಸರು ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿಗಳಿಂದ ಕೂಡಿದ ತಂಡವು ಪಟ್ಟಣದ ನಾಲ್ಕು ಕ್ಲಿನಿಕ್‌ಗಳು ಹಾಗೂ ಶಿರಾಲಿಯೊಂದರಲ್ಲಿ ಪರಿಶೀಲನೆ ನಡೆಸಿತು. ಈ ವೇಳೆ ವೈದ್ಯರ ವಿದ್ಯಾರ್ಹತೆಗಳಿಗೆ ಸಂಬಂಧಿಸಿದ ಎಂ.ಬಿ.ಬಿ.ಎಸ್, ಬಿ.ಎ.ಎಂ.ಎಸ್, ಬಿ.ಎಚ್‌.ಎಂ.ಎಸ್ ಮತ್ತು ಯುನಾನಿ ಪದವಿಗಳ ಪ್ರಮಾಣಪತ್ರಗಳನ್ನು ಪರಿಶೀಲಿಸಲಾಯಿತು. ಪರಿಶೀಲನೆ ವೇಳೆ ನಿಯಮಗಳನ್ನು ಉಲ್ಲಂಘಿಸಿ ಕಾರ್ಯನಿರ್ವಹಿಸುತ್ತಿದ್ದ ಮೂರು ಕ್ಲಿನಿಕ್‌ಗಳನ್ನು ತಕ್ಷಣವೇ ಸೀಲ್ ಮಾಡಲಾಗಿದೆ. ಮದಿನಾ ಕಾಲನಿಯೊಂದರಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕ್ಲಿನಿಕ್ ಮಾಲಕರು ಸ್ವಯಂಪ್ರೇರಿತವಾಗಿ ಕ್ಲಿನಿಕ್‌ನ್ನು ಬಂದ್ ಮಾಡಿದ್ದು, ಅವರ ಬಾಗಿಲಿಗೆ ನೋಟಿಸ್ ಅಂಟಿಸಲಾಗಿದೆ. ಈ ಕುರಿತು ಮಾಹಿತಿಯನ್ನು ಸಂಗ್ರಹಿಸಿ ಜಿಲ್ಲಾ ಆರೋಗ್ಯ ಇಲಾಖೆಗೆ ರವಾನಿಸಲಾಗಿದ್ದು, ಸಮಗ್ರ ತನಿಖೆಯ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಡಾ. ಸನಾ ತಿಳಿಸಿದ್ದಾರೆ. ಪಟ್ಟಣ ಹಾಗೂ ತಾಲೂಕಿನ ಇತರೆ ಭಾಗಗಳಲ್ಲಿಯೂ ಇಂತಹ ತಪಾಸಣೆ ಮುಂದುವರಿಯಲಿದೆ. ಸಾರ್ವಜನಿಕರು ಅನಧಿಕೃತ ವೈದ್ಯರಿಂದ ಚಿಕಿತ್ಸೆ ಪಡೆಯದೆ, ಮಾನ್ಯತೆ ಪಡೆದ ನೋಂದಾಯಿತ ವೈದ್ಯರನ್ನು ಮಾತ್ರ ಸಂಪರ್ಕಿಸುವಂತೆ ಅವರು ಮನವಿ ಮಾಡಿದ್ದಾರೆ.

ವಾರ್ತಾ ಭಾರತಿ 6 Apr 2026 11:21 pm

ದಾವಣಗೆರೆ ದಕ್ಷಿಣ ಕ್ಷೇತ್ರದ ಉಪಚುನಾವಣೆ | ಕೋಮುವಾದಿ ಪಕ್ಷಗಳನ್ನು ತಿರಸ್ಕರಿಸುವಂತೆ ಸಿಪಿಎಂ ಕರೆ

ಬೆಂಗಳೂರು : ದಾವಣಗೆರೆ ದಕ್ಷಿಣ ಕ್ಷೇತ್ರಕ್ಕೆ ಎ.9ರಂದು ನಡೆಯಲಿರುವ ಉಪ ಚುನಾವಣೆಯಲ್ಲಿ ಕೋಮುವಾದಿ ಪಕ್ಷಗಳನ್ನು ತಿರಸ್ಕರಿಸುವಂತೆ ಭಾರತ ಕಮ್ಯೂನಿಸ್ಟ್ ಪಕ್ಷ(ಮಾರ್ಕ್ಸ್‌ ವಾದಿ) ರಾಜ್ಯ ಸಮಿತಿ ಮತದಾರರಿಗೆ ಕರೆ ನೀಡಿದೆ. ಸೋಮವಾರ ಈ ಸಂಬಂಧ ಜಂಟಿ ಪತ್ರಿಕಾ ಹೇಳಿಕೆ ನೀಡಿರುವ ರಾಜ್ಯ ಕಾರ್ಯದರ್ಶಿ ಡಾ.ಕೆ.ಪ್ರಕಾಶ್, ಕಾರ್ಯದರ್ಶಿ ಮಂಡಳಿ ಸದಸ್ಯ ಕೆ.ಮಹಾಂತೇಶ್ ಹಾಗೂ ದಾವಣಗೆರೆ ಜಿಲ್ಲಾ ಸಂಘಟನಾ ಸಮಿತಿ ಕಾರ್ಯದರ್ಶಿ ಕೆ.ಎಚ್.ಆನಂದರಾಜ್, ಒಂದು ಕಾಲದಲ್ಲಿ ದಾವಣಗೆರೆ ಕಾರ್ಮಿಕ ವರ್ಗದ ಸೌಹಾರ್ದ ಕೇಂದ್ರವಾಗಿತ್ತು. ಆದರೆ, ಹಿಂದುತ್ವ ಕೋಮುವಾದವು ಆರೆಸ್ಸೆಸ್, ಬಿಜೆಪಿ ನೇತೃತ್ವದಲ್ಲಿ ಕಾರ್ಮಿಕ ವರ್ಗವನ್ನು ವಿಭಜಿಸಿ ಜನರ ಐಕ್ಯತೆಯನ್ನು ಮುರಿಯುವ ವ್ಯವಸ್ಥಿತ ಸಂಚನ್ನು ಕಳೆದ ಮೂರು ದಶಕಗಳಿಂದ ಮಾಡುತ್ತಲೆ ಬಂದಿದೆ ಎಂದು ತಿಳಿಸಿದ್ದಾರೆ. ಅದರ ಪರಿಣಾಮ 1989 ಹಾಗೂ 1994ರಲ್ಲಿ ನಡೆದ ಕೋಮು ಸಂಘರ್ಷದಲ್ಲಿ ಹತ್ತಾರು ಬಡ ಜನರು ಜೀವ ಕಳೆದುಕೊಂಡಿದ್ದರು. ಮಾತ್ರವಲ್ಲ ನೂರಾರು ಕುಟುಂಬಗಳು ಕೋಮು ಸಂಘರ್ಷದ ಬೆಂಕಿಯಲ್ಲಿ ನಲುಗಿ ಹೋಗಿದ್ದವು. ತಮ್ಮ ಮತೀಯ ರಾಜಕೀಯಕ್ಕಾಗಿ ಇಂತಹ ಕೃತ್ಯಗಳನ್ನು ಆರೆಸ್ಸೆಸ್ ಹಾಗೂ ಬಿಜೆಪಿ ವ್ಯವಸ್ಥಿತವಾಗಿ ಅಲ್ಲಿನ ಅಮಾಯಕ ಹಾಗೂ ಮುಗ್ಧ ಜನರನ್ನು ಬಳಸಿಕೊಂಡಿದ್ದನ್ನು ದಾವಣಗೆರೆ ಜನರ ಮನಸ್ಸಿನಲ್ಲಿ ಇನ್ನೂ ಹಸಿ ಹಸಿಯಾಗಿದೆ ಎಂದು ಅವರು ತಿಳಿಸಿದ್ದಾರೆ. ಆದರೆ, ಇತಿಹಾಸದಿಂದ ಪಾಠ ಕಲಿತಿರುವ ದಾವಣಗೆರೆ ಪ್ರಜ್ಞಾವಂತ ಜನರು ಇಂತಹ ಕೋಮು ಶಕ್ತಿಗಳನ್ನು ಮೂಲೆಗುಂಪು ಮಾಡುತ್ತಾ ಬಂದಿದ್ದಾರೆ. ಆದರೂ, ಪ್ರತಿವರ್ಷ ವಿಜಯದಶಮಿ, ಗಣೇಶ ಹಬ್ಬಗಳ ಸಂದರ್ಭಗಳಲ್ಲಿ ಇಂತಹ ಉನ್ಮಾದಗಳನ್ನು ನಿರಂತರವಾಗಿ ಸೃಷ್ಟಿಸಲಾಗುತ್ತಿದೆ. ಮುಸ್ಲಿಮ್ ಹಾಗೂ ವಿವಿಧ ಜಾತಿ, ಉಪ ಜಾತಿಯ ಹಿಂದೂಗಳ ಸಮ್ಮೀಳಿತವಾಗಿರುವ ದಾವಣಗೆರೆ ದಕ್ಷಿಣ ಮತಕ್ಷೇತ್ರವು ಭವಿಷ್ಯದಲ್ಲಿ ಶಾಂತಿ ಸೌಹಾರ್ದತೆಯ ಕೇಂದ್ರವಾಗಿ ಉಳಿಯುವುದು ತೀರ ಅವಶ್ಯಕವಾಗಿದೆ ಎಂದು ಪ್ರಕಾಶ್ ಪ್ರತಿಪಾದಿಸಿದ್ದಾರೆ. ಆರೆಸ್ಸೆಸ್ ಮತ್ತು ಅದರ ಸಂಘಟನೆಗಳ ಹಿಂದುತ್ವ ಕೋಮುವಾದ ಮತ್ತು ಎಸ್‍ಡಿಪಿಐ, ಜಮಾಅತೆ ಇಸ್ಲಾಮಿ ಹಿಂದ್ ಪಕ್ಷಗಳ ಮುಸ್ಲಿಮ್ ಮೂಲಭೂತವಾದ ಎರಡೂ ಭವಿಷ್ಯದಲ್ಲಿ ಜನತೆಯ ಐಕ್ಯತೆಯನ್ನು ನಾಶ ಮಾಡುತ್ತವೆ. ಸಾಮಾನ್ಯ ಹಿಂದೂಗಳು ಮತ್ತು ಮುಸ್ಲಿಮರು ಕೋಮು ಸೌಹಾರ್ದತೆಯಿಂದ ಬದುಕುವುದು ಮುಖ್ಯವಾಗಿದೆ ಎಂದು ಅವರು ಹೇಳಿದ್ದಾರೆ. ಅಲ್ಪಸಂಖ್ಯಾತ ಸಮುದಾಯದಿಂದ ಅಭ್ಯರ್ಥಿಯನ್ನು ನಿಲ್ಲಿಸುವುದರಲ್ಲಿ ಕಾಂಗ್ರೆಸ್ ಪಕ್ಷದ ಗೊಂದಲದ ಧೋರಣೆಯನ್ನು ಅಲ್ಪಸಂಖ್ಯಾತ ಸಮುದಾಯ ಅರ್ಥ ಮಾಡಿಕೊಂಡಿದೆ. ಕಾಂಗ್ರೆಸ್ ಚಾರಿತ್ರಿಕವಾಗಿ ಇಂತಹ ಅನ್ಯಾಯಗಳನ್ನು ಮಾಡುತ್ತಲೆ ಬಂದಿದೆ. ಮುಂದಿನ ದಿನಗಳಲ್ಲಿ ಅಲ್ಪಸಂಖ್ಯಾತರೂ ಸೇರಿದಂತೆ ಜಾತ್ಯತೀತ ಜನತೆ ಎಡ-ಪ್ರಜಾಸತ್ತಾತ್ಮಕ ಪರ್ಯಾಗಳ ಜೊತೆ ಇರಬೇಕಾದ ಅಗತ್ಯವಿದೆ. ಕಾಂಗ್ರೆಸ್‍ನ ವಂಶಪಾರಂಪರ್ಯ, ಅವಕಾಶವಾದಿತನವನ್ನು ಭವಿಷ್ಯದಲ್ಲಿ ಎದುರಿಸಬೇಕಾಗಿದೆ ಎಂದು ಪ್ರಕಾಶ್ ತಿಳಿಸಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ದೇಶದ ಮತ್ತು ರಾಜ್ಯದ ಒಟ್ಟಾರೆ ಹಿನ್ನೆಲೆಯನ್ನು ಗಮನದಲ್ಲಿಟ್ಟುಕೊಂಡು, ಕೋಮುವಾದಿ ಮತ್ತು ಮೂಲಭೂತವಾದಿ ಶಕ್ತಿಗಳನ್ನು ಸೋಲಿಸಲು ಎಲ್ಲ ಜಾತ್ಯತೀತ, ಪ್ರಗತಿಪರ ಶಕ್ತಿಗಳು ಪ್ರಯತ್ನಿಸಬೇಕಾಗಿದೆ. ಈ ನಿಟ್ಟಿನಲ್ಲಿ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಜನತೆ ಯೋಚಿಸಿ ಮತ ನೀಡಬೇಕೆಂದು ಸಿಪಿಐ(ಎಂ) ಪಕ್ಷವು ಕರೆ ನೀಡುತ್ತದೆ ಎಂದು ಅವರು ತಿಳಿಸಿದ್ದಾರೆ.  

ವಾರ್ತಾ ಭಾರತಿ 6 Apr 2026 10:52 pm

Mandya | ಸಿಗರೇಟ್ ವಿಚಾರವಾಗಿ ಮಾತಿನ ಚಕಮಕಿ; ರೌಡಿಶೀಟರ್‌ ಹತ್ಯೆ, ಇಬ್ಬರ ಸ್ಥಿತಿ ಗಂಭೀರ

ಮಂಡ್ಯ : ಯುವಕರ ಜಗಳ ವಿಕೋಪಕ್ಕೆ ತಿರುಗಿ ರೌಡಿಶೀಟರ್ ಭೀಕರ ಹತ್ಯೆಯಾಗಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಮದ್ದೂರು ನಗರದಲ್ಲಿ ರವಿವಾರ ತಡರಾತ್ರಿ ನಡೆದಿರುವುದು ವರದಿಯಾಗಿದೆ. ಘಟನೆಯಲ್ಲಿ ಮೂಲತಃ ಮದ್ದೂರು ತಾಲೂಕು ಮರಳಿಗ ಗ್ರಾಮದ ಹಾಲಿ ಮದ್ದೂರಿನ ಸೋಮೇಗೌಡರ ಬೀದಿ ನಿವಾಸಿ ರೌಡಿಶೀಟರ್ ಯಶ್ವಂತ್ ಅಲಿಯಾಸ್ ಕಚ್ಚಿ(21) ಹತ್ಯೆಯಾಗಿದ್ದು, ಮದ್ದೂರು ತಾಲೂಕು ಗೊರವನಹಳ್ಳಿ ಗ್ರಾಮದ ದರ್ಶನ್ ಮತ್ತು ಸಚಿನ್ ಗಂಭೀರವಾಗಿ ಗಾಯಗೊಂಡಿದ್ದಾರೆ. ಮದ್ದೂರು ನಗರದ ಹೊಳೆ ಆಂಜನೇಯಸ್ವಾಮಿ ದೇವಾಲಯ ರಸ್ತೆಯ ಪಟೇಲ್ ಸಾಮಿಲ್ ಬಳಿ ಈ ಘಟನೆ ನಡೆದಿದೆ. ಸಿಗರೇಟ್ ಹಂಚಿಕೊಳ್ಳುವ ವಿಚಾರವಾಗಿ ಮಾತಿನ ಚಕಮಕಿ ನಡೆದು, ಅದು ವಿಕೋಪಕ್ಕೆ ತಿರುಗಿ ಸಾಮಿಲ್‍ನಲ್ಲಿದ್ದ ಮರದ ತುಂಡುಗಳಿಂದ ಪರಸ್ಪರ ಹಲ್ಲೆ ನಡೆಯಿತು ಎನ್ನಲಾಗಿದೆ. ರೌಡಿಶೀಟರ್ ಯಶ್ವಂತ್ ಸ್ಥಳದಲ್ಲೇ ಸಾವನ್ನಪ್ಪಿದ್ದು, ಗಂಭೀರವಾಗಿ ಗಾಯಗೊಂಡಿರುವ ದರ್ಶನ್ ಹಾಗೂ ಸಚಿನ್ ಅವರನ್ನು ಮದ್ದೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಮಿಮ್ಸ್ ಜಿಲ್ಲಾಸ್ಪತ್ರೆಗೆ ಸೇರಿಸಲಾಗಿದೆ. ಅವರ ಪರಿಸ್ಥಿತಿ ಚಿಂತಾಜನಕವಾಗಿ ಎಂದು ಪೊಲೀಸರು ತಿಳಿಸಿದ್ದಾರೆ. ಸುದ್ದಿ ತಿಳಿದ ತಕ್ಷಣ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಶೋಭಾರಾಣಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ತಿಮ್ಮಯ್ಯ, ಡಿವೈಎಸ್ಪಿ ಯಶವಂತ್‍ಕುಮಾರ್, ಇತರೆ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಮದ್ದೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮವಹಿಸಿದ್ದಾರೆ.

ವಾರ್ತಾ ಭಾರತಿ 6 Apr 2026 10:39 pm

Raichur | ಜಿಲ್ಲಾ ಗೃಹ ರಕ್ಷಕದಳದ ಸಮಾದೇಷ್ಟರಾಗಿ ದೀಪಾ ಗೊಡೆಪಾಡ್ ನೇಮಕ

ರಾಯಚೂರು: ಜಿಲ್ಲಾ ಗೃಹರಕ್ಷಕ ದಳದ ಸಮಾದೇಷ್ಟರನ್ನಾಗಿ (ಕಮಾಂಡೆಂಟ್) ಮಂಗಳವಾರಪೇಟೆಯ ದೀಪಾ ಗೊಡೆಪಾಡ್ ಅವರನ್ನು ನೇಮಕ ಮಾಡಲಾಗಿದೆ. ನಗರದ ಗೃಹರಕ್ಷಕ ದಳ ಕಚೇರಿಯಲ್ಲಿ ಅವರು ಹೆಚ್ಚುವರಿ ಪೊಲೀಸ್ ಅಧೀಕ್ಷಕ ಜಿ. ಹರೀಶ ಅವರಿಂದ ಅಧಿಕಾರ ಸ್ವೀಕರಿಸಿದರು. ಈ ವೇಳೆ ಮಾತನಾಡಿದ ದೀಪಾ ಗೊಡೆಪಾಡ್ ಅವರು, ಜಿಲ್ಲಾ ಗೃಹರಕ್ಷಕ ದಳದ ಕಮಾಂಡೆಂಟ್ ಹುದ್ದೆಯನ್ನು ವಹಿಸಿಕೊಂಡಿರುವುದು ಹೆಮ್ಮೆಯ ವಿಚಾರವಾಗಿದೆ. ಮೇಲಧಿಕಾರಿಗಳ ಆದೇಶಗಳನ್ನು ಪಾಲಿಸಿ ನಿಷ್ಠೆಯಿಂದ ಕಾರ್ಯನಿರ್ವಹಿಸುವುದಾಗಿ ಹಾಗೂ ಗೃಹರಕ್ಷಕ ದಳದ ಮೂಲಕ ಸಾರ್ವಜನಿಕರಿಗೆ ಉತ್ತಮ ಸೇವೆ ಮತ್ತು ಭದ್ರತೆ ಒದಗಿಸುವುದಾಗಿ ಹೇಳಿದರು. ನಂತರ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಜಿ.ಹರೀಶ ಅವರು ನೇಮಕಾತಿ ಆದೇಶ ನೀಡುತ್ತಾ ಶುಭಾಶಯ ಕೋರಿದರು ಹಾಗೂ ಉತ್ತಮವಾಗಿ ಕಾರ್ಯ ನಿರ್ವಹಿಸುವಂತೆ ಸೂಚಿಸಿದರು. ಈ ಸಂದರ್ಭದಲ್ಲಿ ಪ್ರಮುಖರಾದ ರವೀಂದ್ರನಾಥ ಪಟ್ಟಿ, ಮಲ್ಲೇಶ ಕೊಲಿಮಿ, ಸತ್ಯನಾರಾಯಣ, ವಿಶ್ವನಾಥ ಪಟ್ಟಿ, ಕೆ.ಇ.ಕುಮಾರ, ರಾಜು ಪಟ್ಟಿ, ಬಸವರಾಜ, ಭಾಸ್ಕರರಾಜ್, ಭೀಮಣ್ಣ ಮಂಚಾಲ, ಶೇಖರ ರಾಂಪೂರು, ಪ್ರಾಣೇಶಮಂಚಾಲ, ವಿನಯಕುಮಾರ,ಸೇರಿದಂತೆ, ಗೃಹ ರಕ್ಷಕ ದಳದ ಅಧಿಕಾರಿಗಳು, ಸಿಬ್ಬಂದಿ, ಸಮಾಜದ ಮುಖಂಡರು ಉಪಸ್ಥಿತರಿದ್ದರು.  

ವಾರ್ತಾ ಭಾರತಿ 6 Apr 2026 10:20 pm

ಇರಾನ್‌ ನಾದ್ಯಂತ ಇಸ್ರೇಲ್ ನಿಂದ ‘ದೊಡ್ಡ ಪ್ರಮಾಣದ’ ದಾಳಿ; 3 ವಿಮಾನ ನಿಲ್ದಾಣಗಳು ಗುರಿ

ಟೆಹ್ರಾನ್: ಇರಾನ್‌ ನಾದ್ಯಂತ ‘ದೊಡ್ಡ ಪ್ರಮಾಣದ’ ದಾಳಿಗಳನ್ನು ನಡೆಸಿರುವುದಾಗಿ ಇಸ್ರೇಲ್ ಸೇನೆ ಹೇಳಿಕೊಂಡಿದೆ. ಟೆಹ್ರಾನ್ ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ ಸರಣಿ ದಾಳಿಗಳನ್ನು ನಡೆಸಲಾಗಿದೆ ಎಂದು ತಿಳಿಸಿದೆ.   ವೈಮಾನಿಕ ದಾಳಿಗಳಲ್ಲಿ ಇರಾನ್‌ ನ ಮೂರು ಪ್ರಮುಖ ವಿಮಾನ ನಿಲ್ದಾಣಗಳನ್ನು ಗುರಿಯಾಗಿಸಿಕೊಂಡಿರುವುದಾಗಿ ಇಸ್ರೇಲಿ ಸೇನೆ ತಿಳಿಸಿದೆ. ಈ ದಾಳಿಗಳು ಮಿಲಿಟರಿ ನೆಇ ಉದ್ದೇಶಿಸಿಕೊಂಡಿದ್ದವು ಎಂದು ಅದು ಸ್ಪಷ್ಟಪಡಿಸಿದೆ. ಗುರಿಯಾಗಿದ್ದ ವಿಮಾನ ನಿಲ್ದಾಣಗಳನ್ನು “ಬಹ್ರಾಮ್ ವಿಮಾನ ನಿಲ್ದಾಣ, ಮೆಹ್ರಾಬಾದ್ ವಿಮಾನ ನಿಲ್ದಾಣ ಮತ್ತು ಅಜ್ಮಯೇಶ್ ವಿಮಾನ ನಿಲ್ದಾಣ” ಎಂದು ಗುರುತಿಸಲಾಗಿದೆ. ದಾಳಿಯಿಂದ ಸಂಭವಿಸಿದ ಹಾನಿ ಹಾಗೂ ಸಾವು-ನೋವುಗಳ ವಿವರಗಳು ತಕ್ಷಣಕ್ಕೆ ಲಭ್ಯವಾಗಿಲ್ಲ ಎಂದು Aljazeera ವರದಿ ಮಾಡಿದೆ. 

ವಾರ್ತಾ ಭಾರತಿ 6 Apr 2026 10:08 pm

ಇರಾನ್ ಯುದ್ಧವು ಇಲ್ಲಿಯವರೆಗೆ ಚೀನಾದ ಇಂಧನ ಭದ್ರತೆಯ ಮೇಲೆ ಪರಿಣಾಮ ಬೀರಲಿಲ್ಲ ಯಾಕೆ?

ಕ್ಸಿ ಜಿಂಪಿಂಗ್ | Photo Credit : PTI   ಇರಾನ್ ವಿರುದ್ಧದ ಇಸ್ರೇಲ್-ಅಮೆರಿಕ ಯುದ್ಧ ಮುಂದುವರೆದಂತೆ, ಭಾರತವು ಎಲ್‌ಪಿಜಿ ಕೊರತೆಯನ್ನು ಎದುರಿಸುತ್ತಿದ್ದು, ಪೆಟ್ರೋಲ್ ಮತ್ತು ಡೀಸೆಲ್‌ ನ ಸಂಭಾವ್ಯ ಕೊರತೆಯ ಬಗ್ಗೆ ಜನರು ಆತಂಕದಲ್ಲಿದ್ದಾರೆ. ಆದರೆ ಚೀನಾದ ದೊಡ್ಡ ಆರ್ಥಿಕತೆ, ದೊಡ್ಡ ಗ್ರಾಹಕ ಮಾರುಕಟ್ಟೆ ಮತ್ತು ಜಾಗತಿಕ ಮಾರುಕಟ್ಟೆಗಳಿಗೆ ಪೂರೈಕೆದಾರನ ಪಾತ್ರದ ಹೊರತಾಗಿಯೂ, ಚೀನಾದಿಂದ ಇದೇ ರೀತಿಯ ಸುದ್ದಿಗಳು ಯಾವುದೇ ಬಂದಿಲ್ಲ. ಚೀನಾ ಆರಂಭಿಕ ಪರಿಣಾಮಗಳಿಂದ ಹೇಗೆ ಪಾರಾಯಿತು? ಭವಿಷ್ಯದಲ್ಲಿ ಅದು ಹೇಗೆ ಮತ್ತು ಯಾವ ರೀತಿಯಲ್ಲಿ ಪರಿಣಾಮ ಬೀರಬಹುದು? ಎಂಬ ಪ್ರಶ್ನೆ ಸಹಜ. ಕಳೆದ ಎರಡು ದಶಕಗಳಲ್ಲಿ ಚೀನಾ ಏನು ಮಾಡಿದೆ? ಎಂಬುದನ್ನು ನೋಡಿದರೆ ಈ ಪ್ರಶ್ನೆಗಳಿಗೆ ಉತ್ತರ ಸಿಗಬಹುದು. ಚೀನಾ ಮಲಕ್ಕಾ ಸಂದಿಗ್ಧತೆಯನ್ನು ಹೇಗೆ ನಿಭಾಯಿಸಿತು? ಸುಮಾರು 15 ವರ್ಷಗಳ ಹಿಂದೆ, ವ್ಯಾಪಾರ ಮತ್ತು ಇಂಧನ ಸಾಗಣೆಗಾಗಿ ಮಲಕ್ಕಾ ಜಲಸಂಧಿಯ ಮೇಲಿನ ಅವಲಂಬನೆ ಮತ್ತು ಸುತ್ತಮುತ್ತಲಿನ ಶಾಶ್ವತ ಅಮೆರಿಕನ್ ಉಪಸ್ಥಿತಿಯ ಬಗ್ಗೆ ಚೀನಾದ ಕಳವಳ ಹೆಚ್ಚಾಗಿತ್ತು. ಅದಕ್ಕಾಗಿ ಚೀನಾ ಕಾರ್ಯತಂತ್ರದ ಪೆಟ್ರೋಲಿಯಂ ನಿಕ್ಷೇಪಗಳನ್ನು ರಚಿಸುವ ಸಾಮರ್ಥ್ಯವನ್ನು ನಿರ್ಮಿಸುವ ಮೂಲಕ ಇದನ್ನು ಪರಿಹರಿಸಲು ಪ್ರಯತ್ನಿಸಿತು. ಅವುಗಳನ್ನು ತುಂಬಲು ದೀರ್ಘಾವಧಿಯ ಒಪ್ಪಂದಗಳನ್ನು ಬಳಸಿತು. ಇಂದು ಚೀನಾ ಸುಮಾರು 120 ದಿನಗಳ ಕಾರ್ಯತಂತ್ರದ ಪೆಟ್ರೋಲಿಯಂ ನಿಕ್ಷೇಪಗಳನ್ನು ಹೊಂದಿದೆ. ಅದು ಅದರಲ್ಲಿ ಕೆಲವನ್ನು ಬಳಸಿಕೊಳ್ಳುತ್ತಿರಬಹುದು. ಚೀನಾದ ತೈಲ ನಿಕ್ಷೇಪಗಳು ಮತ್ತು ವೈವಿಧ್ಯೀಕರಣದ ಸಂಯೋಜನೆಯು ಹಾರ್ಮುಝ್ ಜಲಸಂಧಿಯಿಂದ ಆಮದುಗಳನ್ನು ಹಲವಾರು ತಿಂಗಳುಗಳ ಕಾಲ ನಿಭಾಯಿಸಲು ಅನುವು ಮಾಡಿಕೊಡುತ್ತದೆ ಎಂದು ಡೇಟಾ ಸೂಚಿಸುತ್ತದೆ. ಮಲಕ್ಕಾ ಜಲಸಂಧಿಯ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ಚೀನಾದ ಎರಡನೇ ವಿಧಾನವೆಂದರೆ ಮಧ್ಯ ಏಷ್ಯಾ ಮತ್ತು ರಷ್ಯಾದಿಂದ ತೈಲ ಮತ್ತು ಅನಿಲವನ್ನು ಆಮದು ಮಾಡಿಕೊಳ್ಳಲು ಪೈಪ್‌ಲೈನ್‌ಗಳನ್ನು ನಿರ್ಮಿಸುವುದು. ಜಲಸಂಧಿಗಳು ಭೌಗೋಳಿಕ ರಾಜಕೀಯ ಸವಾಲಾಗಿದ್ದರೆ, ಮಧ್ಯ ಏಷ್ಯಾದ ನೆರೆಹೊರೆಯವರೊಂದಿಗಿನ ಅದರ ಸ್ಥಿರ ಸಂಬಂಧಗಳು ಭೌಗೋಳಿಕತೆಯನ್ನು ಒಂದು ಅವಕಾಶವನ್ನಾಗಿ ಮಾಡಿಕೊಂಡವು. ಈಗ ಚೀನಾದ ಕಚ್ಚಾ ತೈಲ ಆಮದುಗಳಲ್ಲಿ ಸುಮಾರು 20 ಪ್ರತಿಶತವು ಈ ಪೈಪ್‌ ಲೈನ್‌ ಗಳ ಮೂಲಕವೇ ನಡೆಯುತ್ತದೆ. ಇದರಲ್ಲಿ ರಷ್ಯಾದಿಂದ ದಿನಕ್ಕೆ ಅಂದಾಜು 900,000 ಬ್ಯಾರೆಲ್‌ಗಳು ಸೇರಿವೆ. ಚೀನಾವು ಇರಾನ್-ಪಾಕಿಸ್ತಾನ-ಭಾರತ (IPI) ಮತ್ತು ತುರ್ಕಮೆನಿಸ್ತಾನ್-ಅಫ್ಘಾನಿಸ್ತಾನ್-ಪಾಕಿಸ್ತಾನ-ಭಾರತ (TAPI) ಪೈಪ್‌ಲೈನ್‌ಗಳನ್ನು ಕಾರ್ಯರೂಪಕ್ಕೆ ತರುವಲ್ಲಿ ಹೆಚ್ಚಾಗಿ ವಿಫಲವಾಗಿದೆ. ಈ ಪ್ರದೇಶಕ್ಕೆ ಅಂತರ್ಗತವಾಗಿರುವ ನಿರಂತರ ಭೌಗೋಳಿಕ ರಾಜಕೀಯ ಮತ್ತು ಭದ್ರತಾ ಸವಾಲುಗಳಿಂದಾಗಿ ಅವು ಸ್ಥಗಿತಗೊಂಡಿವೆ. ಇತರರು ಅಸ್ಥಿರತೆಯಿಂದ ಹಿಂದೆ ಸರಿಯುತ್ತಿದ್ದರೆ, ಚೀನಾದ ರಾಷ್ಟ್ರೀಯ ತೈಲ ಕಂಪನಿಗಳು ಅಂಗೋಲಾ ಮತ್ತು ಸುಡಾನ್‌ನಂತಹ ರಾಷ್ಟ್ರಗಳ ಇಂಧನ ವಲಯಗಳಲ್ಲಿ ತಮ್ಮನ್ನು ತಾವು ನೆಲೆಗೊಳಿಸಲು ತಮ್ಮ ಬೃಹತ್ ಬಂಡವಾಳವನ್ನು ಬಳಸುತ್ತವೆ. ಈ ಪೂರ್ವಭಾವಿ, ಅಪಾಯ ಸಹಿಷ್ಣು ಮಾತುಕತೆ ಶೈಲಿಯು ಚೀನಾಕ್ಕೆ ಸಾಂಪ್ರದಾಯಿಕ ಪೂರೈಕೆ ಮಾರ್ಗಗಳನ್ನು ಮೀರಿ ವ್ಯಾಪಕ ಶ್ರೇಣಿಯ ಆಮದು ಮೂಲಗಳನ್ನು ಬೆಳೆಸಲು ಅವಕಾಶ ಮಾಡಿಕೊಟ್ಟಿದೆ. ಚೀನಾದ ಹವಾಮಾನ ಮತ್ತು ಇಂಧನ ತಂತ್ರಗಳು ಯಾವುವು? ತನ್ನ ಪಾಲಿಗೆ, ಜಾಗತಿಕ ಹವಾಮಾನ ಬದಲಾವಣೆ ಮಾತುಕತೆಗಳ ಆರಂಭಿಕ ದಿನಗಳಲ್ಲಿ, ಚೀನಾ ತನ್ನ ಇಂಗಾಲದ ಜಾಗವನ್ನು ರಕ್ಷಿಸಲು ಭಾರತ, ದಕ್ಷಿಣ ಆಫ್ರಿಕಾ ಮತ್ತು ಬ್ರೆಜಿಲ್‌ನೊಂದಿಗೆ ಕೈಜೋಡಿಸಿ BASIC ಬ್ಲಾಕ್ ಅನ್ನು ರಚಿಸಿತು. ಅದು ವಿಶ್ವದ ಅತಿದೊಡ್ಡ ಮಾಲಿನ್ಯಕಾರಕ ಎಂಬ ತನ್ನ ಸ್ಥಾನಮಾನವನ್ನು ಬಳಸಿಕೊಂಡು, ಜೂನ್ 2008 ರಲ್ಲಿ, ಯುನೈಟೆಡ್ ನೇಷನ್ಸ್ ಫ್ರೇಮ್‌ವರ್ಕ್ ಕನ್ವೆನ್ಷನ್ ಆನ್ ಕ್ಲೈಮೇಟ್ ಚೇಂಜ್ (UNFCCC) ಅಡಿಯಲ್ಲಿ ಯಾವುದೇ ಬದ್ಧತೆಗಳಿಗೆ ಒಪ್ಪಿಕೊಳ್ಳುವ ಮೊದಲು, ಯುಎಸ್-ಚೀನಾ ಹತ್ತು ವರ್ಷಗಳ ಇಂಧನ ಮತ್ತು ಪರಿಸರದ ಚೌಕಟ್ಟು ಸಹಕಾರವನ್ನು ಪಡೆಯುವಲ್ಲಿ ಯಶಸ್ವಿಯಾಯಿತು. ಈ ಸಹಕಾರ ಮತ್ತು ನಂತರದ ಜ್ಞಾನ ಮತ್ತು ತಂತ್ರಜ್ಞಾನ ವರ್ಗಾವಣೆಯು ಪ್ಯಾರಿಸ್ ಹವಾಮಾನ ಒಪ್ಪಂದದ ಯಶಸ್ಸಿಗೆ ಕಾರಣವಾಯಿತು. ಇದು ಸೌರ ಫಲಕಗಳು, ಪವನ ಶಕ್ತಿ, ಇಂಧನ ದಕ್ಷತೆ ಮತ್ತು ನಿರ್ವಹಣೆ, ಇಂಗಾಲದ ಸಂಗ್ರಹಣೆ ಮತ್ತು ಸೀಕ್ವೆಸ್ಟ್ರೇಶನ್, ಕಾರುಗಳು ಮತ್ತು ಬಸ್‌ಗಳು ಸೇರಿದಂತೆ ವಿದ್ಯುತ್ ಚಲನಶೀಲತೆ ಮುಂತಾದ ಕ್ಷೇತ್ರಗಳಲ್ಲಿ ಪ್ರಗತಿಗೆ ಚೀನಾ ಅಡಿಪಾಯವನ್ನು ರಚಿಸಲು ಅವಕಾಶ ಮಾಡಿಕೊಟ್ಟಿತು. ಇದರೊಂದಿಗೆ, ವಿಶ್ವದ ಅತಿದೊಡ್ಡ ಕಲ್ಲಿದ್ದಲು ಬಳಕೆದಾರನಾಗಿರುವ ಚೀನಾ ಕೂಡ ಟೀಕೆಗಳನ್ನು ಎದುರಿಸಿದೆ. ಬೀಜಿಂಗ್ ಮತ್ತು ಇತರ ನಗರಗಳು ಎದುರಿಸಿದ ವಾಯು ಮಾಲಿನ್ಯದ ಸವಾಲನ್ನು ಪರಿಹರಿಸಲು ಮತ್ತು ಇಂಧನ ಪರಿವರ್ತನೆ ಯೋಜನೆಗಳನ್ನು ಕೈಗೊಳ್ಳಲು ಚೀನಾ ಸೀಮಿತ ಗುರಿಗಳ ಮೂಲಕ ಕೆಲಸ ಮಾಡಿದೆ. ತೈಲ ಬೇಡಿಕೆಯನ್ನು ಕಡಿಮೆ ಮಾಡಲು ವಿದ್ಯುತ್ ಚಾಲಿತ ವಾಹನಗಳು ಹೇಗೆ ಸಹಾಯ ಮಾಡಿದವು? ಮಧ್ಯಮ ವರ್ಗದ ಆರ್ಥಿಕತೆಯನ್ನು ಹೊಂದಿರುವ ಚೀನಾದ ಪಾತ್ರವೂ ಮುಖ್ಯವಾಗಿದೆ. ಚೀನಾ ವಿದ್ಯುತ್ ಚಾಲಿತ ವಾಹನಗಳ ಅತಿದೊಡ್ಡ ಗ್ರಾಹಕ. 2025 ರಲ್ಲಿ ಚೀನಾದಲ್ಲಿ ಮಾರಾಟವಾದ ಸುಮಾರು ಅರ್ಧದಷ್ಟು ಕಾರುಗಳು ವಿದ್ಯುತ್ ಚಾಲಿತ ವಾಹನಗಳಾಗಿದ್ದವು. ತೆರಿಗೆ ರಿಯಾಯಿತಿಗಳು, ಆದೇಶಗಳು ಮತ್ತು ಆದ್ಯತೆಯ ಲಾಟರಿ ಅವಕಾಶಗಳ ಮೂಲಕ ವಿದ್ಯುತ್ ಚಾಲಿತ ವಾಹನಗಳಿಗೆ ಅದರ ಆದ್ಯತೆಯ ನೀತಿಗಳು ಅನುಕೂಲಕರವಾಗಿವೆ. ಅದರ ಸ್ಕೇಲಿಂಗ್ ಸಾಮರ್ಥ್ಯಗಳು ಮತ್ತು ದೊಡ್ಡ ಗಾತ್ರದ ಗ್ರಾಹಕ ಮಾರುಕಟ್ಟೆಗಳು ಅವುಗಳ ಜನಪ್ರಿಯತೆಗೆ ಕಾರಣವಾಗಿವೆ. ಇದು 2025 ರಲ್ಲಿ ಚೀನಾ ತನ್ನ ಆಮದುಗಳನ್ನು ಗಣನೀಯವಾಗಿ ಕಡಿಮೆ ಮಾಡಲು ಅವಕಾಶ ಮಾಡಿಕೊಟ್ಟಿದೆ. ಮುಂಬರುವ ವರ್ಷಗಳಲ್ಲಿ ಈ ಸಂಖ್ಯೆ ಮತ್ತಷ್ಟು ಬೆಳೆಯಲಿದೆ. ಚೀನಾದ ಇಂಧನ ಬಳಕೆ ಕಡಿಮೆಯಾಗಿದೆ. 2026 ಕ್ಕೆ ಅದು 4.5% ರಷ್ಟು ಬೆಳವಣಿಗೆಯ ಸಾಧಾರಣ ಗುರಿಯನ್ನು ಹೊಂದಿದೆ. ಅದರ ನಿರ್ಮಾಣ ವಲಯವು ಬಹುತೇಕ ಸ್ಥಗಿತಗೊಂಡಿದೆ. ಇದರರ್ಥ ಸಿಮೆಂಟ್, ಕಬ್ಬಿಣ ಮತ್ತು ಉಕ್ಕು ಮತ್ತು ಇತರ ವಲಯಗಳು ಸಹ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿಲ್ಲ. ವಿಶ್ವದ ಕಾರ್ಖಾನೆಯಾಗಿ ಚೀನಾದ ಪಾತ್ರವು ಒಂದು ದಶಕದ ಹಿಂದೆ ಇದ್ದ ಸ್ಥಿತಿಗೆ ಹೋಲಿಸಿದರೆ ಕ್ರಮೇಣ ಬದಲಾಗುತ್ತಿದೆ. ಸಂಕ್ಷಿಪ್ತವಾಗಿ ಹೇಳುವುದಾದರೆ, ಅವಕಾಶಗಳು, ಪೂರ್ವಭಾವಿ ತಂತ್ರಗಳು, ಕಾರ್ಯತಂತ್ರ ಮತ್ತು ಸ್ಥಾನಮಾನದ ಕಾಳಜಿಗಳ ಸಂಯೋಜನೆಯು ಚೀನಾವು ಪ್ರಸ್ತುತ ಬಿಕ್ಕಟ್ಟನ್ನು ಎದುರಿಸಲು ಸಾಧ್ಯವಾಗುವಂತೆ ಮಾಡಿವೆ.

ವಾರ್ತಾ ಭಾರತಿ 6 Apr 2026 10:05 pm

Ballari | ಜನಸ್ನೇಹಿ ಪೊಲೀಸ್ ವ್ಯವಸ್ಥೆಗೆ ಒತ್ತು: ಡಿಜಿಪಿ ಎಂ.ಎ.ಸಲೀಮ್ ಸೂಚನೆ

ಬಳ್ಳಾರಿ: ರಾಜ್ಯದ ಪೊಲೀಸ್ ಮಹಾನಿರ್ದೇಶಕರು ಹಾಗೂ ಮಹಾನಿರೀಕ್ಷಕರಾದ ಡಾ. ಎಂ.ಎ. ಸಲೀಮ್ ಅವರು ಸೋಮವಾರ ಜಿಲ್ಲಾ ಪೊಲೀಸ್ ಕಚೇರಿಯ ಸಭಾಂಗಣದಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ವಿಮರ್ಶಾ ಸಭೆ ನಡೆಸಿದರು. ಸಭೆಯಲ್ಲಿ ಮಾತನಾಡಿದ ಅವರು, ಪೊಲೀಸ್ ಇಲಾಖೆ ಭ್ರಷ್ಟಾಚಾರಮುಕ್ತ, ನಿಷ್ಪಕ್ಷಪಾತ ಹಾಗೂ ಜನಸ್ನೇಹಿ ರೀತಿಯಲ್ಲಿ ಕಾರ್ಯನಿರ್ವಹಿಸಬೇಕು ಎಂದು ಸೂಚಿಸಿದರು. ಅನುಭವಿ ಅಧಿಕಾರಿಗಳು ತಮ್ಮ ಅನುಭವವನ್ನು ಕಿರಿಯ ಸಿಬ್ಬಂದಿಯೊಂದಿಗೆ ಹಂಚಿಕೊಂಡು, ಅವರ ನೈಪುಣ್ಯತೆಯನ್ನು ಹೆಚ್ಚಿಸಲು ಸಹಕರಿಸಬೇಕು ಎಂದು ತಿಳಿಸಿದರು. ಇತ್ತೀಚೆಗೆ ಪೊಲೀಸ್ ಇಲಾಖೆಯಲ್ಲಿ ಅಳವಡಿಸಲಾಗುತ್ತಿರುವ ಅತ್ಯಾಧುನಿಕ ತಂತ್ರಜ್ಞಾನಗಳ ಕುರಿತು ಅಧಿಕಾರಿಗಳು ಸಮರ್ಪಕ ತರಬೇತಿ ಪಡೆದು, ತನಿಖಾ ಕಾರ್ಯಗಳಲ್ಲಿ ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕು ಎಂದು ನಿರ್ದೇಶನ ನೀಡಿದರು. ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಕುರಿತು ಹಲವು ಸಲಹೆಗಳನ್ನು ನೀಡಿದರು. ಸಭೆಯ ನಂತರ ಡಿಎಆರ್ ಪೊಲೀಸ್ ವಸತಿ ಗೃಹ ಸಂಕೀರ್ಣಕ್ಕೆ ಭೇಟಿ ನೀಡಿ, ಅಲ್ಲಿರುವ ಅಧಿಕಾರಿ ಮತ್ತು ಸಿಬ್ಬಂದಿ ಕುಟುಂಬಗಳ ಸಮಸ್ಯೆಗಳು ಹಾಗೂ ಅಗತ್ಯಗಳನ್ನು ಆಲಿಸಿದರು. ಬಳಿಕ ಬಳ್ಳಾರಿ ನಗರದ ಬ್ರೂಸ್ ಪೇಟೆ ಪೊಲೀಸ್ ಠಾಣೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಡಿ. ಪೆನ್ನೇಕರ್, ಐಪಿಎಸ್ ಸೇರಿದಂತೆ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.

ವಾರ್ತಾ ಭಾರತಿ 6 Apr 2026 9:59 pm

ಬಿಕ್ಲು ಶಿವ ಕೊಲೆ ಪ್ರಕರಣ; ಬೈರತಿ ಬಸವರಾಜ್ ಜಾಮೀನು ರದ್ದು ಕೋರಿ ಹೈಕೋರ್ಟ್‌ಗೆ ಸಿಐಡಿ ಅರ್ಜಿ

ಬೆಂಗಳೂರು : ರೌಡಿ ಶೀಟರ್​ ಶಿವಪ್ರಕಾಶ್ ಅಲಿಯಾಸ್ ಬಿಕ್ಲು ಶಿವ ಹತ್ಯೆ ಪ್ರಕರಣದಲ್ಲಿ ಕೆ.ಆರ್‌. ಪುರ ಶಾಸಕ ಬೈರತಿ ಬಸವರಾಜ್‌ ಅವರಿಗೆ ಜಾಮೀನು ಮಂಜೂರು ಮಾಡಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಆದೇಶ ರದ್ದು ಕೋರಿ ರಾಜ್ಯ ಸರಕಾರ (ಸಿಐಡಿ) ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ. ಜಾಮೀನು ನೀಡಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ 2026ರ ಮಾರ್ಚ್ 12ರಂದು ಹೊರಡಿಸಿದ ಆದೇಶ ರದ್ದು ಕೋರಿ ಸಿಐಡಿ ತನಿಖಾಧಿಕಾರಿ ಕ್ರಿಮಿನಲ್‌ ಅರ್ಜಿ ಸಲ್ಲಿಸಿದ್ದು, ಅರ್ಜಿಯಲ್ಲಿ ಪ್ರಕರಣದಲ್ಲಿ 5ನೇ ಆರೋಪಿಯಾಗಿರುವ ಬಿ.ಎ. ಬಸವರಾಜ (ಬೈರತಿ ಬಸವರಾಜ್) ಅವರನ್ನು ಪ್ರತಿವಾದಿ ಮಾಡಲಾಗಿದೆ. ಅರ್ಜಿ ಇನ್ನಷ್ಟೇ ನ್ಯಾಯಪೀಠದ ಮುಂದೆ ವಿಚಾರಣೆಗೆ ನಿಗದಿಯಾಗಬೇಕಿದೆ. ಪ್ರಕರಣ ಸಂಬಂಧ ಅರ್ಜಿದಾರರನ್ನು ಈಗಾಗಲೇ ಪೊಲೀಸ್​ ವಶದಲ್ಲಿಟ್ಟುಕೊಂಡು ನಡೆಸಿರುವ ವಿಚಾರಣೆ ಪೂರ್ಣಗೊಂಡಿದ್ದು, ಮತ್ತೆ ಪೊಲೀಸ್​ ವಶದಲ್ಲಿಟ್ಟುಕೊಂಡು ವಿಚಾರಣೆ ನಡೆಸಬೇಕಾದ ಅಗತ್ಯವಿಲ್ಲ ಎಂಬ ಅಂಶ ಸಿಐಡಿ ತನಿಖಾಧಿಕಾರಿಗಳು ಸಲ್ಲಿಸಿರುವ ರಿಮ್ಯಾಂಡ್​ ಅರ್ಜಿಯಿಂದ ತಿಳಿಯಲಿದೆ. ಆದ್ದರಿಂದ, ಅರ್ಜಿದಾರರಿಗೆ ಕಠಿಣ ಷರತ್ತುಗಳನ್ನು ವಿಧಿಸಿ ಜಾಮೀನು ಮಂಜೂರು ಮಾಡಬಹುದಾಗಿದೆ ಎಂದು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಮಾರ್ಚ್ 12ರಂದು ಹೊರಡಿಸಿದ್ದ ಆದೇಶದಲ್ಲಿ ತಿಳಿಸಿತ್ತು.

ವಾರ್ತಾ ಭಾರತಿ 6 Apr 2026 9:56 pm

ಇರಾನ್ ವಿರುದ್ಧ ಅಮೆರಿಕ ಯುದ್ಧದಿಂದಾಗಿ 2026ರಲ್ಲಿ ಸ್ಟಾಗ್‌ ಫ್ಲೇಷನ್ ಸಾಧ್ಯತೆ ಇದೆಯೇ?

1970 ರ ದಶಕ ಮತ್ತು 1980 ರ ದಶಕದ ಆರಂಭದಲ್ಲಿ, ಹೆಚ್ಚಿನ ಪಾಶ್ಚಿಮಾತ್ಯ ದೇಶಗಳು ಸ್ಟಾಗ್‌ ಫ್ಲೇಷನ್ ಅನುಭವಿಸಿದವು. ಸ್ಟಾಗ್‌ ಫ್ಲೇಷನ್ ಅಂದರೆ ಹೆಚ್ಚಿನ ನಿರುದ್ಯೋಗ, ಹಣದುಬ್ಬರದ ಜತೆಗೆ ಆರ್ಥಿಕ ಬೆಳವಣಿಗೆ ನಿಧಾನಗತಿಯಾಗಿರುವುದು. ಯುನೈಟೆಡ್ ಸ್ಟೇಟ್ಸ್ ಮತ್ತು ಯುನೈಟೆಡ್ ಕಿಂಗ್‌ಡಮ್ 1974 ರಲ್ಲಿ ಕ್ರಮವಾಗಿ -0.5% ಮತ್ತು -1.7%, ಮತ್ತು 1975 ರಲ್ಲಿ -0.2% ಮತ್ತು -0.7% ವಾರ್ಷಿಕ ಜಿಡಿಪಿ ಬೆಳವಣಿಗೆ ದರ ದಾಖಲಿಸಿತು. ಇದರೊಂದಿಗೆ 1974 ರಲ್ಲಿ ಅಮೆರಿಕದಲ್ಲಿ 11.1% ಮತ್ತು ಯುಕೆಯಲ್ಲಿ 16%, 1975 ರಲ್ಲಿ ಅಮೆರಿಕದಲ್ಲಿ 9.1% ಮತ್ತು ಯುಕೆಯಲ್ಲಿ 24.2% ಗ್ರಾಹಕ ಬೆಲೆ ಹಣದುಬ್ಬರ ಸಂಭವಿಸಿತು. 1979, 1980, 1981 ಮತ್ತು 1982 ರಲ್ಲಿ ಇದೇ ರೀತಿಯ ವಿದ್ಯಮಾನವನ್ನು ದಾಖಲಿಸಲಾಯಿತು. ಈ ವರ್ಷಗಳಲ್ಲಿ ಅಮೆರಿಕ ಕ್ರಮವಾಗಿ 3.2%, -0.3%, 2.5% ಮತ್ತು -1.8% ಜಿಡಿಪಿ ಬೆಳವಣಿಗೆಯನ್ನು ಹಾಗೂ 11.3%, 13.5%, 10.3% ಮತ್ತು 6.1% ವಾರ್ಷಿಕ ಗ್ರಾಹಕ ಬೆಲೆ ಹಣದುಬ್ಬರ ದರಗಳನ್ನು ದಾಖಲಿಸಿತು. ಬ್ರಿಟಿಷ್ ಕನ್ಸರ್ವೇಟಿವ್ ಪಕ್ಷದ ರಾಜಕಾರಣಿ ಇಯಾನ್ ಮ್ಯಾಕ್ಲಿಯೋಡ್ ಸೃಷ್ಟಿಸಿದ ಸ್ಟಾಗ್‌ಫ್ಲೇಷನ್ ಎಂಬ ಪದವು ಎರಡೂ ಐತಿಹಾಸಿಕ ನಿದರ್ಶನಗಳಲ್ಲಿ ತೈಲ ಕೊರತೆಯ ವಿದ್ಯಮಾನವನ್ನು ಸೂಚಿಸುತ್ತದೆ. ಮೊದಲನೆಯದು ಅಕ್ಟೋಬರ್ 1973 ರಲ್ಲಿ ಇಸ್ರೇಲ್ ಮತ್ತು ಈಜಿಪ್ಟ್-ಸಿರಿಯಾ ನಡುವಿನ ಯೋಮ್ ಕಿಪ್ಪೂರ್ ಯುದ್ಧದ ನಂತರ ಬಂದಿತು. ಅರಬ್ ಪೆಟ್ರೋಲಿಯಂ ರಫ್ತು ಮಾಡುವ ದೇಶಗಳ ಸಂಘಟನೆಯು ಇಸ್ರೇಲ್ ಅನ್ನು ಬೆಂಬಲಿಸಿದ ಪಾಶ್ಚಿಮಾತ್ಯ ರಾಷ್ಟ್ರಗಳ ವಿರುದ್ಧ ಸಂಪೂರ್ಣ ತೈಲ ನಿರ್ಬಂಧವನ್ನು ಜಾರಿಗೆ ತಂದಿತು. ಎರಡನೇ ತೈಲ ಬಿಕ್ಕಟ್ಟು 1979 ರಲ್ಲಿ ಇರಾನ್‌ ನ ಇಸ್ಲಾಮಿಕ್ ಕ್ರಾಂತಿಯೊಂದಿಗೆ ಸಂಭವಿಸಿತು. ಒಂದು ವರ್ಷದ ನಂತರ ಇರಾಕ್ ಇರಾನ್ ಮೇಲೆ ಆಕ್ರಮಣ ಮಾಡಿತು. ಆ ಸಮಯದಿಂದ ಪ್ರಪಂಚವು 2008, 2022 ಮತ್ತು 2026 ರಲ್ಲಿ ಕನಿಷ್ಠ ಮೂರು ತೈಲ ಬಿಕ್ಕಟ್ಟುಗಳಿಗೆ ಸಾಕ್ಷಿಯಾಗಿದೆ. 2008 ರ ಬಿಕ್ಕಟ್ಟು ಸ್ಟಾಗ್‌ ಫ್ಲೇಷನ್‌ ಗೆ ಕಾರಣವಾಯಿತು, ಆದರೆ ಯಾವುದೇ ತೀವ್ರಗತಿಯ ಹಣದುಬ್ಬರವಿಲ್ಲ. 2022 ರ ರಷ್ಯಾ-ಉಕ್ರೇನ್ ಯುದ್ಧವು ಸ್ವಲ್ಪ ಹಣದುಬ್ಬರವನ್ನು ಉಂಟುಮಾಡಿತು, ಆದರೆ ದೊಡ್ಡ ಹಿಂಜರಿತವಾಗಲಿಲ್ಲ. 2026 ರಲ್ಲಿ ಸ್ಟಾಗ್‌ ಫ್ಲೇಷನ್ ಮತ್ತೆ ಬರುತ್ತದೆಯೇ? ಅದಕ್ಕೆ ಉತ್ತರಿಸುವ ಮೊದಲು, ಸ್ಟಾಗ್‌ ಫ್ಲೇಷನ್ ಎಂದರೇನು ಮತ್ತು ಅದು ಹೇಗೆ ಸಂಭವಿಸಬಹುದು ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ಅರ್ಥಶಾಸ್ತ್ರದ ಪಠ್ಯಪುಸ್ತಕದಲ್ಲಿ ಹೇಳುವಂತೆ ಪೂರೈಕೆ ಮತ್ತು ಬೇಡಿಕೆ ರೇಖೆಗಳಿವೆ. ಬೆಲೆಗಳು (P) ಲಂಬವಾಗಿ ಮತ್ತು ಪ್ರಮಾಣ (Q) ಸಮತಲ ಅಕ್ಷದಲ್ಲಿ ಇರುತ್ತವೆ. ಪೂರೈಕೆ ರೇಖೆಯು ಎಡದಿಂದ ಬಲಕ್ಕೆ ಮೇಲಕ್ಕೆ ಇಳಿಜಾರಾಗಿದ್ದು, ಸಕಾರಾತ್ಮಕ ಸಂಬಂಧವನ್ನು ಚಿತ್ರಿಸುತ್ತದೆ. ಬೆಲೆಗಳು ಹೆಚ್ಚಾದಂತೆ, ಉತ್ಪಾದಕರಿಗೆ ನಿರ್ದಿಷ್ಟ ವಸ್ತುವಿನ ಪೂರೈಕೆಯ ಪ್ರಮಾಣವನ್ನು ಹೆಚ್ಚಿಸಲು ಪ್ರೋತ್ಸಾಹಿಸಲಾಗುತ್ತದೆ. ಬೇಡಿಕೆ ರೇಖೆಯು ಇದಕ್ಕೆ ವಿರುದ್ಧವಾಗಿ ಕೆಳಮುಖವಾಗಿ ಇಳಿಜಾರಾಗಿರುತ್ತದೆ. ಗ್ರಾಹಕರು ಕಡಿಮೆ ಬೆಲೆಗೆ ಹೆಚ್ಚಿನ ಸರಕುಗಳನ್ನು ಮತ್ತು ಹೆಚ್ಚಿನ ದರದಲ್ಲಿ ಕಡಿಮೆ ಪ್ರಮಾಣವನ್ನು ಖರೀದಿಸುತ್ತಾರೆ. ಸ್ಟಾಗ್‌ಫ್ಲೇಷನ್ ಸಾಮಾನ್ಯವಾಗಿ ಋಣಾತ್ಮಕ ಪೂರೈಕೆ ಆಘಾತಗಳಿಂದ ಉಂಟಾಗುತ್ತದೆ. ಸಾಮಾನ್ಯವಾಗಿ, ಒಂದು ವಸ್ತುವಿನ ಪೂರೈಕೆಯಲ್ಲಿನ ಯಾವುದೇ ಹೆಚ್ಚಳ ಅಥವಾ ಇಳಿಕೆ ಅದರ ಬೆಲೆಯಲ್ಲಿನ ಬದಲಾವಣೆಗಳಿಂದ ಉಂಟಾಗುತ್ತದೆ. ಇಲ್ಲಿ ಇನ್‌ ಪುಟ್ ವೆಚ್ಚಗಳು, ಉತ್ಪಾದನಾ ಪರಿಸ್ಥಿತಿಗಳು ಮತ್ತು ತಂತ್ರಜ್ಞಾನ ಇತ್ಯಾದಿ ಅಂಶಗಳು ಸ್ಥಿರವಾಗಿರುತ್ತವೆ. ಇಲ್ಲಿ ಚಲನೆಯು ಒಂದೇ ಪೂರೈಕೆ ರೇಖೆಯ ಮೇಲೆ ಒಂದು ಹಂತದಿಂದ ಇನ್ನೊಂದು ಹಂತಕ್ಕೆ ಇರುತ್ತದೆ. ಪೂರೈಕೆ ಆಘಾತದ ಸಂದರ್ಭದಲ್ಲಿ, ಸಂಪೂರ್ಣ ಪೂರೈಕೆ ರೇಖೆಯು ಬಲಕ್ಕೆ ಅಥವಾ ಎಡಕ್ಕೆ ಬದಲಾಗುತ್ತದೆ. ಉತ್ಪಾದಕರು ಈಗ ಅದೇ ಬೆಲೆಗೆ ಹೆಚ್ಚು ಅಥವಾ ಕಡಿಮೆ ಸರಕುಗಳನ್ನು ಪೂರೈಸಲು ಮುಂದಾಗುತ್ತಾರೆ. ಸಕಾರಾತ್ಮಕ ಪೂರೈಕೆ ಆಘಾತವು ಸಾಮಾನ್ಯವಾಗಿ ಉತ್ಪಾದಕತೆಯನ್ನು ಹೆಚ್ಚಿಸುವ ತಂತ್ರಜ್ಞಾನ (ಉದಾ., AI) ಅಥವಾ ಕಡಿಮೆ ಇನ್‌ಪುಟ್ ವೆಚ್ಚಗಳಿಂದ ಉಂಟಾಗುತ್ತದೆ. ನಕಾರಾತ್ಮಕ ಪೂರೈಕೆ ಆಘಾತಗಳು ಸಾಮಾನ್ಯವಾಗಿ ಸಾಂಕ್ರಾಮಿಕ ರೋಗಗಳು, ನೈಸರ್ಗಿಕ ವಿಕೋಪಗಳು, ಸಶಸ್ತ್ರ ಸಂಘರ್ಷಗಳು ಅಥವಾ ಹಾರ್ಮುಝ್ ಜಲಸಂಧಿಯಂತಹ ನಿರ್ಣಾಯಕ ಕಡಲ ಕಾರಿಡಾರ್‌ಗಳ ದಿಗ್ಬಂಧನದಂತಹ ಜಾಗತಿಕ ಅಡ್ಡಿಪಡಿಗಳಿಂದ ಉಂಟಾಗುತ್ತವೆ. ಉತ್ಪಾದನೆ ಮತ್ತು ವ್ಯಾಪಾರಕ್ಕೆ ಉಂಟಾಗುವ ಅಡಚಣೆಗಳು ಪೂರೈಕೆ ರೇಖೆಯನ್ನು ಎಡಕ್ಕೆ ಬದಲಾಯಿಸುತ್ತವೆ. ಸಂಕ್ಷಿಪ್ತವಾಗಿ ಹೇಳುವುದಾದರೆ, ಅದೇ ಸ್ಟಾಗ್‌ ಫ್ಲೇಷನ್. ಸ್ಟಾಗ್‌ ಫ್ಲೇಷನ್ ಸಾಧ್ಯತೆ ಇದೆಯೇ? ಅದು ಪೂರೈಕೆ ಆಘಾತದ ಪ್ರಮಾಣ ಮತ್ತು ಅವಧಿಯನ್ನು ಅವಲಂಬಿಸಿರುತ್ತದೆ. ಜೆಪಿ ಮಾರ್ಗನ್‌ನ ಮುಖ್ಯ ಭಾರತೀಯ ಅರ್ಥಶಾಸ್ತ್ರಜ್ಞ ಸಜ್ಜಿದ್ ಝಡ್ ಚಿನೋಯ್ ಅವರ ಪ್ರಕಾರ, 2022 ರ ಬಿಕ್ಕಟ್ಟು ಹೆಚ್ಚಾಗಿ ತೈಲ ಬೆಲೆ ಆಘಾತವಾಗಿತ್ತು. ಪ್ರಸರಣ ಮಾರ್ಗವು ಬೆಲೆಗಳಾಗಿದ್ದು, 2022 ಮಾರ್ಚ್ 7 ರಂದು ಬ್ರೆಂಟ್ ಕಚ್ಚಾ ತೈಲವು ಬ್ಯಾರೆಲ್‌ ಗೆ 14 ವರ್ಷದ ಗರಿಷ್ಠ 139.13 ಡಾಲರ್ ಅನ್ನು ಮುಟ್ಟಿತು. ಪ್ರಸ್ತುತ ಬಿಕ್ಕಟ್ಟು ಬೆಲೆ ಮತ್ತು ಪೂರೈಕೆ ಕೊರತೆ ಎರಡನ್ನೂ ಒಳಗೊಂಡಿದ್ದು, ಇದು 2022 ಅಥವಾ 2008 ಕ್ಕಿಂತ ಹೆಚ್ಚು ಹಾನಿಕಾರಕವಾಗಿದೆ. ಬೆಲೆಗಳು ಮಾತ್ರವಲ್ಲ, ಇಂಧನ ಲಭ್ಯತೆಯೂ ಪ್ರಶ್ನಾರ್ಥಕ ಚಿಹ್ನೆಯಾಗಿದೆ. ಅನಿಲ ಅಥವಾ LPG ಲಭ್ಯವಿಲ್ಲದಿದ್ದಾಗ, ನೀವು ಕೈಗಾರಿಕಾ ಚಟುವಟಿಕೆಯಲ್ಲಿ ಹಠಾತ್ ನಿಲುಗಡೆಗೆ ಅಪಾಯವನ್ನುಂಟುಮಾಡುತ್ತೀರಿ. ಈ ಹಠಾತ್ ನಿಲುಗಡೆಗಳು ಆರ್ಥಿಕತೆಯನ್ನು ಬಾಧಿಸುತ್ತದೆ. ಕೋವಿಡ್ ಸಮಯದಲ್ಲಿ ನಾವು ಕಲಿತದ್ದೇನೆಂದರೆ, ಸಣ್ಣ ವ್ಯವಹಾರಗಳು ಸ್ಥಗಿತಗೊಂಡಾಗ ತಮ್ಮ ಹಳ್ಳಿಗಳಿಗೆ ತೆರಳಿರುವ ಕಾರ್ಮಿಕರನ್ನು ಮರಳಿ ಕರೆಯುವುದು ತುಂಬಾ ಕಷ್ಟ ಎಂದು ಚಿನೋಯ್ ಹೇಳಿದ್ದಾರೆ ಎಂದು ದಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ. 1970 ರ ದಶಕದಲ್ಲಿ, ಭಾರತೀಯ ರೈತರು ರಾಸಾಯನಿಕ ಗೊಬ್ಬರಗಳನ್ನು ಬಳಸಲು ಪ್ರಾರಂಭಿಸಿದ್ದರು, ಮನೆಗಳು ಅಡುಗೆಗಾಗಿ ಉರುವಲು ಮತ್ತು ಬೆರಣಿಯನ್ನು ಹೆಚ್ಚಾಗಿ ಅವಲಂಬಿಸಿದ್ದವು. ಜನರು ಪಾಲಿಯೆಸ್ಟರ್ ಮತ್ತು ನೈಲಾನ್ ಬಟ್ಟೆಗಳನ್ನು ಧರಿಸುತ್ತಿದ್ದರು. ಇಂದು ಹಾಗಿಲ್ಲ; ಯೂರಿಯಾ ಮತ್ತು ಡೈ-ಅಮೋನಿಯಂ ಫಾಸ್ಫೇಟ್ ತೋಟದ ಗೊಬ್ಬರವನ್ನು ಬದಲಾಯಿಸಿವೆ. ಎಲ್‌ಪಿಜಿ ಸಿಲಿಂಡರ್ ವ್ಯಾಪ್ತಿಯು ಸಾರ್ವತ್ರಿಕವಾಗಿದೆ. ಪ್ಲಾಸ್ಟಿಕ್ ಚೀಲಗಳು, ಬಾಟಲಿಗಳು ಮತ್ತು ಬಕೆಟ್‌ ಗಳಿಂದ ಪೈಪ್‌ ಗಳು ಮತ್ತು ಕೇಬಲ್‌ ಗಳವರೆಗೆ ಎಲ್ಲದರಲ್ಲೂ ಮಾನವ ನಿರ್ಮಿತ ಫೈಬರ್‌ಗಳಿವೆ. ಭಾರತೀಯ ಆರ್ಥಿಕತೆಯು ಈಗ ಪೂರ್ಣ ಪ್ರಮಾಣದ ಇಂಧನ ಬಿಕ್ಕಟ್ಟಿಗೆ ಹೆಚ್ಚು ದುರ್ಬಲವಾಗಿದೆ. ಇದು ಬೆಲೆಗಳು ಮಾತ್ರವಲ್ಲದೆ ತೈಲ, ಅನಿಲ ಮತ್ತು ಪೆಟ್ರೋಕೆಮಿಕಲ್ಸ್ ಹಾಗೂ ಅವುಗಳಿಂದ ಪಡೆದ ಉತ್ಪನ್ನಗಳ ಮೇಲೂ ಪರಿಣಾಮ ಬೀರುತ್ತದೆ. ಇಂಧನ ಅಡಚಣೆಗಳು ಸರಪಳಿ ಕ್ರಿಯೆಯನ್ನು ಪ್ರಚೋದಿಸಿದಾಗ, ಆರ್ಥಿಕ ಪರಿಣಾಮವು ಅನಿರೀಕ್ಷಿತವಾಗುತ್ತದೆ. ಸಣ್ಣ ಬದಲಾವಣೆಯು ಸಣ್ಣ ಫಲಿತಾಂಶಕ್ಕೆ ಕಾರಣವಾಗುವ ಸರಳ ಮಾದರಿಗಳಿಗಿಂತ ಭಿನ್ನವಾಗಿ, ಈ ಎರಡನೇ ಮತ್ತು ಮೂರನೇ ಕ್ರಮಾಂಕದ ಪರಿಣಾಮಗಳು ದೊಡ್ಡ ಪರಿಣಾಮಗಳನ್ನು ಸೃಷ್ಟಿಸುತ್ತವೆ. ಸ್ಟಾಗ್‌ ಫ್ಲೇಷನ್ ಎದುರಿಸುವುದು ಹೇಗೆ? ಈಗಾಗಲೇ ಗಮನಿಸಿದಂತೆ, ಹಣದುಬ್ಬರದ ವಿಷಯದಲ್ಲಿ ಪೂರೈಕೆ ಬಿಕ್ಕಟ್ಟಿನ ಅವಧಿಯು ಅದರ ಪ್ರಮಾಣದಷ್ಟೇ ಮುಖ್ಯವಾಗಿದೆ. ಇರಾನ್ ಯುದ್ಧ ಶೀಘ್ರದಲ್ಲೇ ಕೊನೆಗೊಳ್ಳುವುದಾದರೆ ಮತ್ತು ಪಶ್ಚಿಮ ಏಷ್ಯಾದ ತೈಲ ಸಂಸ್ಕರಣಾಗಾರಗಳು ಹಾಗೂ ನೈಸರ್ಗಿಕ ಅನಿಲ ಸಂಸ್ಕರಣಾ ಸೌಲಭ್ಯಗಳ ಮೇಲಿನ ದಾಳಿಗಳು ಉತ್ಪಾದನಾ ಪುನಃಸ್ಥಾಪನೆಗೆ ಮಹತ್ತರ ಹಾನಿ ಉಂಟುಮಾಡಿಲ್ಲವೆಂದು ಊಹಿಸಿದರೆ, 1970 ರ ಶೈಲಿಯ ಹಣದುಬ್ಬರವನ್ನು ತಪ್ಪಿಸಬಹುದು. ಹಿಂಜರಿತ ಅಥವಾ ಕಡಿಮೆ ಏಕ-ಅಂಕದ ಬೆಳವಣಿಗೆಯ ದರಗಳನ್ನು (ಭಾರತವು ಹಿಂದೆ ಎದುರಿಸಿದಂತೆ) ವಿಸ್ತರಣಾ ಹಣಕಾಸು (ಹೆಚ್ಚಿನ ಸರ್ಕಾರಿ ಖರ್ಚು ಮತ್ತು ಕಡಿಮೆ ತೆರಿಗೆ) ಮತ್ತು ವಿತ್ತೀಯ (ಬಡ್ಡಿದರಗಳನ್ನು ಕಡಿಮೆ ಮಾಡುವುದು) ನೀತಿಗಳ ಮೂಲಕ ಪರಿಹರಿಸಬಹುದು. ಹಣದುಬ್ಬರವನ್ನು ಹಣ ಪೂರೈಕೆಯನ್ನು ಬಿಗಿಗೊಳಿಸುವುದು ಮತ್ತು ಬಡ್ಡಿದರಗಳನ್ನು ಹೆಚ್ಚಿಸುವ ಮೂಲಕ ಮಾತ್ರ ನಿಭಾಯಿಸಬಹುದು. ಈ ಎರಡೂ ಸಾಧನಗಳು ಸ್ಟಾಗ್‌ಫ್ಲೇಷನ್ ಸಂದರ್ಭದಲ್ಲಿ ಸುಲಭವಾಗಿ ಕಾರ್ಯನಿರ್ವಹಿಸುವುದಿಲ್ಲ. ಒಂದು ಅಂಶವನ್ನು (ಹಣದುಬ್ಬರ) ನಿಯಂತ್ರಿಸಲು ಬಡ್ಡಿದರಗಳನ್ನು ಹೆಚ್ಚಿಸುವುದು ಇನ್ನೊಂದು ಅಂಶವನ್ನು (ನಿಧಾನಗತಿಯ ಬೆಳವಣಿಗೆ ಮತ್ತು ಹೆಚ್ಚಿನ ನಿರುದ್ಯೋಗ) ಹದಗೆಡಿಸಬಹುದು. ಪೂರೈಕೆ ನಿರ್ಬಂಧಿತವಾಗಿರುವಾಗ ಬೇಡಿಕೆಯನ್ನು ಉತ್ತೇಜಿಸಲು ಹಣಕಾಸು ಮತ್ತು ವಿತ್ತೀಯ ಸಡಿಲಗೊಳಿಸುವಿಕೆಯು ಹಣದುಬ್ಬರವನ್ನು ಮತ್ತಷ್ಟು ಹೆಚ್ಚಿಸುತ್ತದೆ. ಸಾಂಪ್ರದಾಯಿಕ ಹಣಕಾಸು ಮತ್ತು ವಿತ್ತೀಯ ಸಾಧನಗಳು ಬೇಡಿಕೆಯನ್ನು ನಿರ್ವಹಿಸಲು ವಿನ್ಯಾಸಗೊಳಿಸಲ್ಪಟ್ಟಿರುವುದರಿಂದ, ಅವು ಸ್ಟಾಗ್‌ಫ್ಲೇಷನ್ ವಿರುದ್ಧ ಪರಿಣಾಮಕಾರಿಯಾಗಿ ಕೆಲಸ ಮಾಡುವುದಿಲ್ಲ. ಏಕೆಂದರೆ ಸಮಸ್ಯೆ ಜನರು ಹೆಚ್ಚು ಖರೀದಿಸುತ್ತಿರುವುದಲ್ಲ, ಜಗತ್ತು ಸಾಕಷ್ಟು ಉತ್ಪಾದಿಸುತ್ತಿಲ್ಲ ಎಂಬುದಾಗಿದೆ. ಇದನ್ನು ಸರಿಪಡಿಸಲು, ಪೂರೈಕೆ ಸರಪಳಿಗಳನ್ನು ಸುಧಾರಿಸಬೇಕಾಗಿದೆ.

ವಾರ್ತಾ ಭಾರತಿ 6 Apr 2026 9:56 pm

ಮಣಿಪಾಲ ರಾಜೀವ ನಗರ ಕರ್ನಾಟಕ ಪಬ್ಲಿಕ್ ಶಾಲೆ: ಎ.8ರಂದು ಎರಡು ತರಗತಿ ಕೊಠಡಿಗಳ ಉದ್ಘಾಟನೆ

ಉಡುಪಿ, ಎ.6: ಲಯನ್ಸ್ ಕ್ಲಬ್ ಮಣಿಪಾಲ ವತಿಯಿಂದ ಮಣಿಪಾಲದ ರಾಜೀವ್ ನಗರದಲ್ಲಿರುವ ಕರ್ನಾಟಕ ಪಬ್ಲಿಕ್ ಶಾಲೆಗೆ ಸುಮಾರು 23 ಲಕ್ಷ ರೂ.ವೆಚ್ಚದಲ್ಲಿ ನಿರ್ಮಿಸಿದ ಸ್ಮಾರ್ಟ್ ಟಿವಿಗಳಿಂದ ಸಜ್ಜುಗೊಂಡ ಎರಡು ವಿಶಾಲ ಆಂಗ್ಲಮಾಧ್ಯಮ ತರಗತಿ ಕೊಠಡಿಗಳ ಉದ್ಘಾಟನೆ ಎ.8ರಂದು ಬುಧವಾರ ನಡೆಯಲಿದೆ ಎಂದು ಮಣಿಪಾಲ ಲಯನ್ಸ್ ಕ್ಲಬ್‌ನ ಕಾರ್ಯದರ್ಶಿ ಡಾ.ಎಚ್. ಗಣೇಶ ಪೈ ತಿಳಿಸಿದ್ದಾರೆ. ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎರಡು ಉದ್ಯಮ ಸಂಸ್ಥೆಗಳ ಸಿಎಸ್‌ಆರ್ ನಿಧಿಯ ಸಹಾಯದಿಂದ ಸಹಾಯ ಹಸ್ತ ಮಣಿಪಾಲ ಲಯನ್ಸ್ ಚಾರಿಟೇಬಲ್ ಫೌಂಡೇಷನ್ ಮೂಲಕ ಸುಸಜ್ಜಿತ ವಾದ ಈ ಎರಡು ವಿಶಾಲ ತರಗತಿ ಕೊಠಡಿಗಳನ್ನು ನಿರ್ಮಿಸಲಾಗಿದೆ ಎಂದರು. ಕಳೆದ ವರ್ಷ ಇದೇ ಶಾಲೆಗೆ ಸಭಾಂಗಣವೊಂದನ್ನು ನಿರ್ಮಿಸಿಕೊಟ್ಟಿದ್ದೇವೆ. ಅದೇ ರೀತಿ ಗ್ರಂಥಾಲಯಕ್ಕೆ ಹೊಸ ಪುಸ್ತಕಗಳೊಂದಿಗೆ ಶಾಲೆಗೆ 12 ಕಂಪ್ಯೂಟರ್‌ಗಳನ್ನು ಸಹ ನೀಡುವುದರೊಂದಿಗೆ ಮೂರು ಸ್ಮಾರ್ಟ್ ತರಗತಿ ಗಳನ್ನು ಸಹ ಒದಗಿಸಿದ್ದೇವೆ. ಮೊದಲು ಈ ಪ್ರೌಢ ಶಾಲೆಯಲ್ಲಿ 1ರಿಂದ 10ರವರೆಗೆ ಕನ್ನಡ ಮಾಧ್ಯಮ ಶಾಲೆ ಮಾತ್ರ ಇತ್ತು. ಈಗ ಆಂಗ್ಲ ಮಾಧ್ಯಮವನ್ನೂ ಪ್ರಾರಂಭಿಸಲಾಗಿದೆ. ಹೀಗಾಗಿ ಈಗ ಇಲ್ಲಿ 190ಕ್ಕೂ ಅಧಿಕ ಮಕ್ಕಳು ವಿದ್ಯಾಭ್ಯಾಸ ಮಾಡುತಿದ್ದಾರೆ ಎಂದು ಡಾ.ಗಣೇಶ್ ಪೈ ನುಡಿದರು. ಮಣಿಪಾಲ-ಅಲೆವೂರು ರಸ್ತೆಯಲ್ಲಿರುವ ರಾಜೀವನಗರದ ಕರ್ನಾಟಕ ಪಬ್ಲಿಕ್ ಸ್ಕೂಲ್‌ನ ಈ ಎರಡು ಹೊಸ ತರಗತಿ ಕೊಠಡಿಗಳನ್ನು ಎ.8ರಂದು ಬೆಳಗ್ಗೆ 9:30ಕ್ಕೆ ಲಯನ್ಸ್ ಜಿಲ್ಲೆ 317ರ ಜಿಲ್ಲಾ ಗವರ್ನರ್ ಸಪ್ನಾ ಸುರೇಶ್ ಉದ್ಘಾಟಿಸ ಲಿದ್ದಾರೆ.ಲಯನ್ ಸಂಸ್ಥೆಯ ವಿವಿಧ ಪದಾಧಿಕಾರಿಗಳು ಇದರಲ್ಲಿ ಭಾಗವಹಿಸಲಿದ್ದಾರೆ ಎಂದರು. ಮಣಿಪಾಲ ಲಯನ್ಸ್ ಕ್ಲಬ್ 34 ವರ್ಷಗಳ ತನ್ನ ಅಸ್ತಿತ್ವದಲ್ಲಿ ಮಣಿಪಾಲ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಮಾಜ ಸೇವೆಯನ್ನು ನಿರಂತರವಾಗಿ ಮಾಡಿಕೊಂಡು ಬರುತ್ತಿದೆ. 30ಕ್ಕೂ ಅಧಿಕ ಹೆಚ್ಚು ಕಣ್ಣು ತಪಾಸಣೆ ಮತ್ತು ಶಸ್ತ್ರಚಿಕಿತ್ಸಾ ಶಿಬಿರಗಳನ್ನು ನಡೆಸಿದ್ದು 2000ಕ್ಕೂ ಅಧಿಕ ಮಂದಿಗೆ ಕನ್ನಡಕಗಳನ್ನು ವಿತರಿಸಿದ್ದೇವೆ. ಕ್ಯಾನ್ಸರ್‌ನಿಂದ ಬಳಲುತ್ತಿರುವ ಮಕ್ಕಳಿಗಾಗಿ ಮಣಿಪಾಲ ಲಯನ್ಸ್ ಕ್ಲಬ್ ಮಕ್ಕಳ ವಾರ್ಡಿಗೆ ಮೈಕ್ರೋಸ್ಕೋಪ್‌ಗಳು, ಫ್ರಿಜ್‌ಗಳು, ಬಯೋ ಸೈರಿಲೈಸೇಶನ್ ಘಟಕಗಳನ್ನು ಒಳಗೊಂಡ ಆಧುನಿಕ ಸಾಧನಗಳನ್ನು ಒದಗಿಸಿದೆ. ಕ್ಯಾನ್ಸರ್ ಚಿಕಿತ್ಸೆಗೆ ಒಳಗಾಗಿರುವ ಮಕ್ಕಳಿಗಾಗಿ ವಾಸಸ್ಥಳವನ್ನು ನಿರ್ಮಿಸಿ, ಮಕ್ಕಳಿಗೆ ಮತ್ತು ಅವರ ಪಾಲಕರಿಗೆ ಉಚಿತ ವಸತಿ ಮತ್ತು ಆಹಾರ ಸೌಲಭ್ಯವನ್ನು ಒದಗಿಸಿದ್ದೇವೆ. ಮಣಿಪಾಲ ಲಯನ್ಸ್ ಕ್ಲಬ್ ಎ.18ರಿಂದ 25ರವರೆಗೆ ಜಾಗತಿಕ ಪರಿಸರ ಸಂರಕ್ಷಣಾ ವಾರವನ್ನು ಆಚರಿಸುತ್ತಿದೆ ಎಂದರು. ಸುದ್ದಿಗೋಷ್ಟಿಯಲ್ಲಿ ಲಯನ್ಸ್ ಕ್ಲಬ್ ಮಣಿಪಾಲ ಅಧ್ಯಕ್ಷ ರಮೇಶ್ ಕಿಣಿ ಹಾಗೂ ಅರ್ಚನ ಭಕ್ತ ಉಪಸ್ಥಿತರಿದ್ದರು.

ವಾರ್ತಾ ಭಾರತಿ 6 Apr 2026 9:55 pm

ಕಲಬುರಗಿ | 2 ಸಾವಿರ ರೂ. ಲಂಚ ಪಡೆಯುವ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಬಿಲ್ ಕಲೆಕ್ಟರ್‌

ಕಲಬುರಗಿ: ವ್ಯಕ್ತಿಯೊಬ್ಬರ ತಂದೆಯ ಹೆಸರಿನಲ್ಲಿರುವ ಜಾಗವನ್ನು ತಾಯಿಯ ಹೆಸರಿಗೆ ಮ್ಯುಟೇಶನ್ ಮಾಡಿಕೊಡುವ ಸಲುವಾಗಿ ಲಂಚ ಸ್ವೀಕರಿಸುತ್ತಿದ್ದ ಗ್ರಾಮ ಪಂಚಾಯತ್ ಬಿಲ್ ಕಲೆಕ್ಟರ್ ಒಬ್ಬರು ಲೋಕಾಯುಕ್ತ ಅಧಿಕಾರಿಗಳ ಬಲೆಗೆ ಬಿದ್ದಿರುವ ಘಟನೆ ಸೋಮವಾರ ನಡೆದಿದೆ. ಕಲಬುರಗಿ ತಾಲೂಕಿನ ಕುಮಸಿ ಗ್ರಾಮ ಪಂಚಾಯತ್‌ನ ಬಿಲ್ ಕಲೆಕ್ಟರ್ ಮಲ್ಲಿಕಾರ್ಜುನ ಬಂಧಿತ ವ್ಯಕ್ತಿಯಾಗಿದ್ದಾರೆ. ಗಣಜಲಖೇಡ ಗ್ರಾಮದ ಅನೀಲಕುಮಾರ್ ರಾಠೋಡ ಅವರು ತಮ್ಮ ತಂದೆಯ ಹೆಸರಿನಲ್ಲಿರುವ ಜಾಗವನ್ನು ತಾಯಿಯ ಹೆಸರಿಗೆ ಮ್ಯೂಟೇಶನ್ ಮಾಡಿಕೊಡುವ ಸಲುವಾಗಿ ಮಲ್ಲಿಕಾರ್ಜುನ ಅವರು 4,000 ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ. ಈ ಮೊತ್ತದಲ್ಲಿ ಈಗಾಗಲೇ ಫೋನ್‌ಪೇ ಮೂಲಕ 2,000 ರೂ. ಹಣವನ್ನು ಸ್ವೀಕರಿಸಿದ್ದು, ಉಳಿದ 2,000 ರೂ. ಹಣವನ್ನು ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಅವರನ್ನು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ. ಲೋಕಾಯುಕ್ತ ಎಸ್‌ಪಿ ಸಿದ್ಧರಾಜು ಸಿ. ಅವರ ಮಾರ್ಗದರ್ಶನದಲ್ಲಿ ನಡೆದ ಈ ಕಾರ್ಯಾಚರಣೆಯಲ್ಲಿ ಲೋಕಾಯುಕ್ತ ಪೊಲೀಸ್ ಇನ್ಸ್‌ಪೆಕ್ಟರ್-2 ರಾಜಶೇಖರ ಬಡದೆಸಾರ ಅವರ ನೇತೃತ್ವದಲ್ಲಿ ತನಿಖೆ ಕೈಗೊಳ್ಳಲಾಗಿದ್ದು, ಆರೋಪದ ಸತ್ಯಾಸತ್ಯತೆ ದೃಢಪಟ್ಟ ಹಿನ್ನೆಲೆಯಲ್ಲಿ ಮಲ್ಲಿಕಾರ್ಜುನರನ್ನು ಬಂಧಿಸಲಾಗಿದೆ.

ವಾರ್ತಾ ಭಾರತಿ 6 Apr 2026 9:54 pm

ಅಮೆರಿಕದ ಕದನ ವಿರಾಮ ಪ್ರಸ್ತಾವನೆ ತಿರಸ್ಕರಿಸಿದ ಇರಾನ್: ಶಾಶ್ವತ ಯುದ್ಧ ವಿರಾಮಕ್ಕೆ ಪಟ್ಟು

ಇರಾನ್ ಮತ್ತು ಅಮೆರಿಕ ನಡುವಿನ ಸಂಘರ್ಷ ತಾರಕಕ್ಕೇರಿರುವ ಬೆನ್ನಲ್ಲೇ, ಯುದ್ಧವನ್ನು ಕೊನೆಗಾಣಿಸುವ ನಿಟ್ಟಿನಲ್ಲಿ ಅಮೆರಿಕ ಮಂಡಿಸಿದ್ದ ತಾತ್ಕಾಲಿಕ ಕದನ ವಿರಾಮದ ಪ್ರಸ್ತಾವನೆಯನ್ನು ಇರಾನ್ ಅಧಿಕೃತವಾಗಿ ತಿರಸ್ಕರಿಸಿದೆ. ಯುದ್ಧಕ್ಕೆ ಶಾಶ್ವತ ಅಂತ್ಯ ಹಾಡಬೇಕೆಂದು ಇರಾನ್ ಪಟ್ಟು ಹಿಡಿದಿದೆ ಎಂದು ವರದಿಯಾಗಿದೆ. ಅಮೆರಿಕದ 15 ಅಂಶಗಳ ಪ್ರಸ್ತಾವನೆಗೆ ಪ್ರತಿಯಾಗಿ ಇರಾನ್ ತನ್ನದೇ ಆದ 10 ಅಂಶಗಳ ಪ್ರತಿ ಪ್ರಸ್ತಾವನೆಯನ್ನು ಪಾಕಿಸ್ತಾನದ

ಒನ್ ಇ೦ಡಿಯ 6 Apr 2026 9:52 pm

ಪೊಲೀಸ್ ಠಾಣೆಯಲ್ಲಿ ಸಿಸಿಟಿವಿ ಅನುಷ್ಠಾನ: ಕೇರಳ ರಾಜ್ಯವನ್ನು ಪ್ರಶಂಸಿಸಿದ ಸುಪ್ರೀಂ ಕೋರ್ಟ್

ಹೊಸದಿಲ್ಲಿ, ಎ. 6: ಕೇರಳಂ ತನ್ನ ಪೊಲೀಸ್ ಠಾಣೆಗಳಲ್ಲಿ ಬಲಿಷ್ಠ ಸಿಸಿಟಿವಿ ಕಣ್ಗಾವಲು ವ್ಯವಸ್ಥೆಯನ್ನು ಅನುಷ್ಠಾನಗೊಳಿಸಿರುವುದಕ್ಕೆ ಸುಪ್ರೀಂ ಕೋರ್ಟ್ ಶ್ಲಾಘಿಸಿದೆ. ಕೇರಳ ಮಾದರಿಯನ್ನು ರಾಷ್ಟ್ರವ್ಯಾಪಿ ಅನುಸರಿಸುವಂತೆ ಅದು ನಿರ್ದೇಶಿಸಿದೆ. 2025ರಲ್ಲಿ ಭಾರತದಾದ್ಯಂತ 11 ಕಸ್ಟಡಿ ಸಾವು ವರದಿಯಾದ ಹಿನ್ನೆಲೆಯಲ್ಲಿ ದಾಖಲಿಸಲಾಗಿರುವ ಸ್ವಯಂ ಪ್ರೇರಿತ ಪ್ರಕರಣವನ್ನು ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಹಾಗೂ ಸಂದೀಪ್ ಮೆಹ್ತಾ ಅವರನ್ನು ಒಳಗೊಂಡ ಪೀಠ ವಿಚಾರಣೆ ನಡೆಸಿತು. ಈ ಸಂದರ್ಭ ಅದು ಕೇರಳಂನ ಹಿರಿಯ ಅಧಿಕಾರಿಗಳು ಮೀಸಲಾದ ಮೊಬೈಲ್ ಅಪ್ಲಿಕೇಶನ್ ಮೂಲಕ ನೈಜ ಸಮಯದಲ್ಲಿ ಪೊಲೀಸ್ ಠಾಣೆಯ ದೃಶ್ಯಗಳನ್ನು ಗಮನಿಸಬಹುದು ಎಂಬುದನ್ನು ಗಮನಿಸಿತು. ಈ ವಿಚಾರವನ್ನು ಆ್ಯಮಿಕಸ್ ಕ್ಯೂರಿ ಸಿದ್ಧಾರ್ಥ್ ದವೆ ಅವರು ನ್ಯಾಯಾಲಯದ ಗಮನಕ್ಕೆ ತಂದರು. ಕೇರಳಂ ಜೊತೆಗೆ ಮಧ್ಯಪ್ರದೇಶ ಹಾಗೂ ರಾಜಸ್ಥಾನವನ್ನು ಕೂಡ ಪೀಠ ಪ್ರಶಂಸಿಸಿತು.

ವಾರ್ತಾ ಭಾರತಿ 6 Apr 2026 9:52 pm

LPG ಬಿಕ್ಕಟ್ಟು| ಕೇಂದ್ರ ಸರಕಾರಕ್ಕೆ ರಾಹುಲ್ ಗಾಂಧಿ ತರಾಟೆ

ಹೊಸದಿಲ್ಲಿ, ಎ. 6: ಎಲ್‌ಪಿಜಿ ಅನಿಲ ಬಿಕ್ಕಟ್ಟನ್ನು ನಿಭಾಯಿಸುತ್ತಿರುವ ರೀತಿ ಬಗ್ಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೋಮವಾರ ಕೇಂದ್ರ ಸರಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಅವರು ಇದನ್ನು ಕೋವಿಡ್-19 ಸಾಂಕ್ರಾಮಿಕ ರೋಗ ಹರಡಿದ ಸಂದರ್ಭ ಕೇಂದ್ರ ಸರಕಾರದ ನಿರ್ವಹಣೆಗೆ ಹೋಲಿಸಿದ್ದಾರೆ. ಈ ಬಿಕ್ಕಟ್ಟಿನ ಹೊರೆಯನ್ನು ಅದು ಬಡವರ ಮೇಲೆ ಹೇರುತ್ತಿದೆ ಎಂದು ಅವರು ಆರೋಪಿಸಿದರು. ಪ್ರಧಾನಿ ನರೇಂದ್ರ ಮೋದಿ ಅವರನ್ನು ಗುರಿಯಾಗಿರಿಸಿಕೊಂಡ ರಾಹುಲ್ ಗಾಂಧಿ ‘ಎಕ್ಸ್’ನ ತನ್ನ ಪೋಸ್ಟ್‌ನಲ್ಲಿ, ‘‘ನಾವು ಎಲ್‌ಪಿಜಿ ಬಿಕ್ಕಟ್ಟನ್ನು ಕೋವಿಡ್ ಅನ್ನು ನಿಭಾಯಿಸಿದ ರೀತಿಯಲ್ಲಿ ನಿಭಾಯಿಸುತ್ತೇವೆ ಎಂದು ಮೋದಿ ಜಿ ಹೇಳಿದ್ದಾರೆ. ನಿಜಕ್ಕೂ ಅವರು ಮಾಡಿದ್ದು ಅದನ್ನೇ. ಇಲ್ಲಿ ಕೂಡ ಕೋವಿಡ್‌ನಂತೆ ಸ್ಪಷ್ಟ ನೀತಿ ಇಲ್ಲ. ಭಾರೀ ಘೋಷಣೆಗಳನ್ನು ಮಾತ್ರ ಮಾಡಲಾಗಿದೆ. ಸಂಪೂರ್ಣ ಹೊರೆಯನ್ನು ಬಡವರ ಮೇಲೆ ಹೊರಿಸಲಾಗಿದೆ’’ ಎಂದಿದ್ದಾರೆ. ದಿನಗೂಲಿ ಕಾರ್ಮಿಕರ ಮೇಲೆ ಉಂಟಾಗಿರುವ ಪರಿಣಾಮಗಳ ಬಗ್ಗೆ ಗಮನ ಸೆಳೆದ ಅವರು, ಪ್ರತಿದಿನ 500-800 ಗಳಿಸುವ ವಲಸೆ ಕಾರ್ಮಿಕರಿಗೆ ಅಡುಗೆ ಅನಿಲ ಕೈಗೆಟಕುವುದಿಲ್ಲ. ಕಾರ್ಮಿಕನೊಬ್ಬ ರಾತ್ರಿ ಮನೆಗೆ ಮರಳಿದಾಗ ಸ್ಟೌ ಹೊತ್ತಿಸಲು ಕೂಡ ಆತನಲ್ಲಿ ಹಣ ಇರುವುದಿಲ್ಲ’’ ಎಂದು ಹೇಳಿದ್ದಾರೆ. ‘‘ಇದರ ಪರಿಣಾಮ ? ಜನರು ನಗರವನ್ನು ತೊರೆಯುತ್ತಿದ್ದಾರೆ. ಹಳ್ಳಿಗಳಿಗೆ ಹಿಂದಿರುಗುತ್ತಿದ್ದಾರೆ. ಜವಳಿ ಕಾರ್ಖಾನೆ ಹಾಗೂ ಇತರ ಕಾರ್ಖಾನೆಗಳ ಬೆನ್ನೆಲುಬಾಗಿರುವ ಈ ಕಾರ್ಮಿಕರು ಇಂದು ಸಂಕಷ್ಟದ ಪರಿಸ್ಥಿತಿಯಲ್ಲಿ ಇದ್ದಾರೆ’’ ಎಂದು ಅವರು ತಿಳಿಸಿದರು. ವ್ಯಾಪಕ ಆರ್ಥಿಕ ಸಂಕಷ್ಟದ ಬಗ್ಗೆ ಎಚ್ಚರಿಸಿದ ಅವರು, ‘‘ಜವಳಿ ವಲಯ ಈಗಾಗಲೆ ಐಸಿಯುನಲ್ಲಿದೆ. ಉತ್ಪಾದನಾ ವಲಯ ಉಸಿರಾಡಲು ಕಷ್ಟ ಪಡುತ್ತಿದೆ. ಈ ಬಿಕ್ಕಟ್ಟು ಎಲ್ಲಿಂದ ಹುಟ್ಟಿಕೊಂಡಿತು ? ಮಾತುಕತೆಯ ಸಂದರ್ಭದ ರಾಜತಾಂತ್ರಿಕ ಪ್ರಮಾದದಿಂದ. ಇಂದಿಗೂ ಸರಕಾರ ಅದನ್ನು ಒಪ್ಪಿಕೊಳ್ಳಲು ಸಿದ್ಧವಿಲ್ಲ’’ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

ವಾರ್ತಾ ಭಾರತಿ 6 Apr 2026 9:48 pm

ಕಾಂಗ್ರೆಸ್ ಪಾಕಿಸ್ತಾನದ ಭಾಷೆಯಲ್ಲಿ ಮಾತನಾಡುತ್ತಿದೆ: ಪ್ರಧಾನಿ ಮೋದಿ ಟೀಕೆ

ಗುವಾಹಟಿ, ಎ. 6: ಕಾಂಗ್ರೆಸ್ ಪಾಕಿಸ್ತಾನದ ಭಾಷೆಯಲ್ಲಿ ಮಾತನಾಡುತ್ತಿದೆ ಎಂದು ಸೋಮವಾರ ಆರೋಪಿಸಿರುವ ಪ್ರಧಾನಿ ನರೇಂದ್ರ ಮೋದಿ, ಇಂಥ ನಿಲುವು ರಾಷ್ಟ್ರೀಯ ಭದ್ರತೆಗೆ ಅಪಾಯಕಾರಿ ಎಂದು ಹೇಳಿದ್ದಾರೆ. ಅಸ್ಸಾಮ್‌ನ ಬರ್ಪೇಟ ಜಿಲ್ಲೆಯಲ್ಲಿ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ತನ್ನ ಸರಕಾರವು ಪಾಕಿಸ್ತಾನದ ಭಯೋತ್ಪಾದಕ ಶಿಬಿರಗಳನ್ನು ಗುರಿಯಾಗಿಸಿ ‘ಆಪರೇಶನ್ ಸಿಂಧೂರ’ ಕಾರ್ಯಾಚರಣೆಯನ್ನು ನಡೆಸಿದಾಗ, ಪ್ರತಿಪಕ್ಷವು ‘‘ನಿರಂತರವಾಗಿ ಪಾಕಿಸ್ತಾನದ ತಾಳಕ್ಕೆ ತಕ್ಕಂತೆ ಕುಣಿಯುತ್ತಿತ್ತು’’ ಎಂದು ಆರೋಪಿಸಿದರು. ‘‘ಈ ಪಾಕಿಸ್ತಾನಿ ಸಂಪರ್ಕವು ದೇಶದ ಭದ್ರತೆಯೊಂದಿಗೆ ರಾಜಿ ಮಾಡಿಕೊಳ್ಳುತ್ತದೆ. ಹಾಗೆ ಆಗಲು ನಾವು ಯಾವತ್ತೂ ಬಿಡುವುದಿಲ್ಲ’’ ಎಂದು ಮೋದಿ ಹೇಳಿದರು. ಅಭಿವೃದ್ಧಿಯ ಬಗ್ಗೆ ಮಾತನಾಡಿದ ಅವರು, ಈ ವಿಷಯದಲ್ಲಿ ಕಾಂಗ್ರೆಸ್ ಯಾವತ್ತೂ ದೂರದೃಷ್ಟಿಯಿಂದ ಕೆಲಸ ಮಾಡಿಲ್ಲ ಎಂದರು. ಆದರೆ, ಬಿಜೆಪಿಯು ದೇಶದ ದೀರ್ಘಾವಧಿ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ಕೆಲಸ ಮಾಡುತ್ತಿದೆ ಎಂದು ಹೇಳಿದರು. ‘‘ಕಾಂಗ್ರೆಸ್ ಪಕ್ಷವು ಭ್ರಷ್ಟಾಚಾರ ನಡೆಸಲು ಸಾಧ್ಯವಾಗುವಂತೆ ಯಾವಾಗಲೂ ಅಲ್ಪಾವಧಿಯ ಕ್ರಮಗಳನ್ನು ತೆಗೆದುಕೊಂಡಿತ್ತು. ಆದರೆ, ಬಿಜೆಪಿಯು ದೂರದೃಷ್ಟಿಯ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಹಾಗೂ ಸಮಾಜದ ಎಲ್ಲಾ ವರ್ಗಗಳ ಸರ್ವಾಂಗೀಣ ಅಭಿವೃದ್ಧಿಗಾಗಿ ನಿರ್ಧಾರಗಳನ್ನು ಕೈಗೊಳ್ಳುತ್ತಿದೆ’’ ಎಂದು ಮೋದಿ ಹೇಳಿದರು.

ವಾರ್ತಾ ಭಾರತಿ 6 Apr 2026 9:38 pm

ಬಿಜೆಪಿ ಮತ್ತು ಸಿಪಿಎಂ ನಡುವೆ ಹೊಂದಾಣಿಕೆ: ಕೇರಳದಲ್ಲಿ ರಾಹುಲ್ ಗಾಂಧಿ ಆರೋಪ

ತ್ರಿಶೂರ್, ಎ. 6: ಪ್ರಧಾನಿ ನರೇಂದ್ರ ಮೋದಿ ಮತ್ತು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ರನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೋಮವಾರ ‘‘ಅಹಂಕಾರಿಗಳು’’ ಎಂಬುದಾಗಿ ಕರೆದಿದ್ದಾರೆ. ಅವರಲ್ಲಿ ‘‘ಜನರೊಂದಿಗೆ ಕೆಲಸ ಮಾಡುವ’ ಮನೋಭಾವದ ಬದಲಿಗೆ ‘‘ಜನರನ್ನು ಆಳುವ’’ ಮನೋಭಾವವಿದೆ ಎಂದು ಹೇಳಿದ್ದಾರೆ. ತ್ರಿಶೂರ್‌ನ ಮಾಲದಲ್ಲಿ ಚುನಾವಣಾ ಸಭೆಯನ್ನುದ್ದೇಶಿಸಿ ಮಾತನಾಡಿದ ರಾಹುಲ್‌ ಗಾಂಧಿ, ಕೇರಳದಲ್ಲಿ ಮುಂದೆ ನಡೆಯಲಿರುವ ವಿಧಾನಸಭಾ ಚುನಾವಣೆಯು ಕಾಂಗ್ರೆಸ್ ನೇತೃತ್ವದ ಯುಡಿಎಫ್ ಮತ್ತು ಆಡಳಿತಾರೂಢ ಎಲ್‌ಡಿಎಫ್ ನಡುವಿನ ಕದನವಾಗಿದೆ ಎಂದು ಹೇಳಿದರು. ಎಲ್‌ಡಿಎಫ್‌ಗೆ ಬಿಜೆಪಿ ನೆರವು ನೀಡುತ್ತಿದೆ ಎಂಬುದಾಗಿಯೂ ರಾಹುಲ್ ಗಾಂಧಿ ಆರೋಪಿಸಿದರು. ‘‘ಅದೃಶ್ಯ ಕೈಯೊಂದು ಎಲ್‌ಡಿಎಫ್‌ಗೆ ಸಹಾಯ ಮಾಡುತ್ತಿದೆ’’. ಸರಕಾರವು ನೈಜ ಎಡಪಂಥೀಯ ಆಡಳಿತವಾಗಿ ಕಾರ್ಯನಿರ್ವಹಿಸುತ್ತಿಲ್ಲ ಎನ್ನುವುದನ್ನು ಆಡಳಿತಾರೂಢ ಸಿಪಿಎಂ ಕಾರ್ಯಕರ್ತರೇ ಒಪ್ಪಿಕೊಳ್ಳುತ್ತಾರೆ ಎಂದು ನುಡಿದರು. ಬಿಜೆಪಿಯು ಕಾಂಗ್ರೆಸ್ ಮತ್ತು ಅದರ ನೇತೃತ್ವದ ಯುಡಿಎಫ್‌ನ್ನು ಕೇರಳ ಮತ್ತು ದೇಶಾದ್ಯಂತ ತನ್ನ ಪ್ರಧಾನ ರಾಜಕೀಯ ಎದುರಾಳಿ ಎಂಬುದಾಗಿ ನೋಡುತ್ತಿದೆ ಎಂದು ಹೇಳಿದರು. ‘‘ಇದಕ್ಕೆ ಪುರಾವೆ ಇಲ್ಲಿದೆ. ಪ್ರಧಾನಿ ಮೋದಿಯವರು ಬೇರೆ ಕಡೆ ಮಾಡುವ ಭಾಷಣಗಳಲ್ಲಿ ದೇವರು, ದೇವಸ್ಥಾನಗಳು ಮತ್ತು ಧರ್ಮದ ಬಗ್ಗೆ ಮಾತನಾಡುತ್ತಾರೆ. ಆದರೆ, ಕೇರಳದಲ್ಲಿ ಅವರು ಸಿಪಿಎಂ ನಾಯಕರು ಶಾಮೀಲಾಗಿರುವ ಶಬರಿಮಲೆ ದೇವಸ್ಥಾನದ ಚಿನ್ನ ನಾಪತ್ತೆ ಪ್ರಕರಣದ ಬಗ್ಗೆ ಮಾತನಾಡುವುದಿಲ್ಲ. ಯಾಕೆಂದರೆ, ಅವರು ಮುಖ್ಯಮಂತ್ರಿ ಮತ್ತು ಸಿಪಿಎಂ ಪಕ್ಷವನ್ನು ರಕ್ಷಿಸಲು ಬಯಸಿದ್ದಾರೆ. ಅವರು ಇಲ್ಲಿ ಚಿನ್ನ, ಹಿಂದೂ ಧರ್ಮ ಮತ್ತು ದೇವಸ್ಥಾನಗಳನ್ನು ಮರೆತಿದ್ದಾರೆ. ಯಾಕೆಂದರೆ ಅವರು ಎಲ್‌ಡಿಎಫ್‌ನ್ನು ರಕ್ಷಿಸಲು ಬಯಸಿದ್ದಾರೆ’’ ಎಂದು ರಾಹುಲ್ ಗಾಂಧಿ ಆರೋಪಿಸಿದರು.

ವಾರ್ತಾ ಭಾರತಿ 6 Apr 2026 9:36 pm

ಕಿಡ್ನಿ ಕಸಿ ಇನ್ನು ಸುಲಭ: ದೇಶದಲ್ಲೇ ಮೊದಲ ಬಾರಿ ಈಗ ಕರ್ನಾಟಕದಲ್ಲಿ 'ಬಹು ಜೋಡಿ ಕಿಡ್ನಿ ವಿನಿಮಯ' ಕ್ರಾಂತಿ

Multiple Pair Kidney Exchange Transplant Guidelines 2026- ಮೂತ್ರಪಿಂಡ ವೈಫಲ್ಯದ ರೋಗಿಗಳ ನೆರವಿಗಾಗಿ ಇದೀಗ ಕರ್ನಾಟಕ ಸರ್ಕಾರ 'ಬಹು ಜೋಡಿ ಕಿಡ್ನಿ ವಿನಿಮಯ ಕಸಿ ಮಾರ್ಗಸೂಚಿ-2026' ಪ್ರಕಟಿಸಿದೆ. ರಕ್ತದ ಗುಂಪು ಹೊಂದಾಣಿಕೆಯಾಗದಿದ್ದರೂ, ದಾನಿ-ಸ್ವೀಕೃತಿದಾರರ ಮೂರ್ನಾಲ್ಕು ಜೋಡಿಗಳ ನಡುವೆ ಪರಸ್ಪರ ಕಿಡ್ನಿ ವಿನಿಮಯಕ್ಕೆ ಈ ಯೋಜನೆ ಅವಕಾಶ ನೀಡುತ್ತದೆ. ದೇಶದಲ್ಲೇ ಮೊದಲ ಬಾರಿಗೆ ಇಂತಹ ನಿರ್ದಿಷ್ಟ ಮಾರ್ಗಸೂಚಿ ರೂಪಿಸಲಾಗಿದ್ದು, 5,000ಕ್ಕೂ ಹೆಚ್ಚು ರೋಗಿಗಳಿಗೆ ಅನುಕೂಲವಾಗಲಿದೆ. ಇದು ಅಂಗಾಂಗ ದಾನದ ಕೊರತೆಗೆ ವೈಜ್ಞಾನಿಕ ಪರಿಹಾರ ನೀಡಲಿದೆ.

ವಿಜಯ ಕರ್ನಾಟಕ 6 Apr 2026 9:34 pm

ಕೇರಳ ವಿಧಾನಸಭಾ ಚುನಾವಣೆ 2026 | 2011 ರಿಂದ ಕೇರಳದ ಜನರು ಯಾರಿಗೆ ಮತ ಹಾಕಿದ್ದಾರೆ?

ಕೇರಳದ ರಾಜಕೀಯ ಪ್ರಯಾಣವು ಕಠಿಣ ಹೋರಾಟದ ಜನಾದೇಶಗಳಿಂದ ಹಿಡಿದು ರಾಜಕೀಯ ಪೈಪೋಟಿಯವರೆಗೆ ಆಕರ್ಷಕ ಇತಿಹಾಸವನ್ನು ಹೊಂದಿದೆ. ಹಲವು ವರ್ಷಗಳಿಂದ ಕೇರಳ ರಾಜಕೀಯದಲ್ಲಿ LDF ಮತ್ತು UDF ನಡುವಿನ ಅಧಿಕಾರದ ಲಯಬದ್ಧ ಪರಿವರ್ತನೆ ಕಾಣುತ್ತಿತ್ತು. ಆದರೆ, 2021 ರ ವಿಧಾನಸಭಾ ಚುನಾವಣೆಗಳು ಈ ಯಥಾಸ್ಥಿತಿಯನ್ನು ಬದಲಿಸಿವೆ. ಆ ವರ್ಷ LDF ಈ ಪ್ರವೃತ್ತಿಯನ್ನು ಹಿಮ್ಮೆಟ್ಟಿಸಿ ಮತ್ತೊಂದು ಅವಧಿಗೆ ಅಧಿಕಾರದ ಚುಕ್ಕಾಣಿ ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿಯಾಯಿತು. ಪ್ರಮುಖ ಚುನಾವಣೆಗಳ ಸಮಯದಲ್ಲಿ ಕೇರಳ ಆಗಾಗ್ಗೆ ಚರ್ಚೆಯ ಕೇಂದ್ರಬಿಂದುವಾಗಿದೆ. ಕೇರಳದಲ್ಲಿ ವಿಧಾನಸಭಾ ಚುನಾವಣೆಗಳು ಬಹುಶಃ ಎಡಪಕ್ಷಗಳಿಗೆ ಹೆಚ್ಚು ಅನುಕೂಲಕರವಾಗಿದ್ದರೂ, ಲೋಕಸಭಾ ಫಲಿತಾಂಶಗಳು ಕೇಂದ್ರಿತ ಒಕ್ಕೂಟಗಳಿಗೆ ಬಲವಾದ ಬೆಂಬಲವನ್ನು ಪ್ರತಿಬಿಂಬಿಸುತ್ತವೆ. 1957 ರಿಂದ ಸಾರ್ವತ್ರಿಕ ಚುನಾವಣೆಗಳಲ್ಲಿ ಈ ಪ್ರವೃತ್ತಿ ಸ್ಪಷ್ಟವಾಗಿದೆ. 2011 ರಿಂದ ಅಧಿಕಾರಕ್ಕೆ ಬಂದ ಪಕ್ಷಗಳಿಗೆ ಕೇರಳ ಹೇಗೆ ಮತ ಹಾಕಿತು? 2011 - ಕಾಂಗ್ರೆಸ್ ನೇತೃತ್ವದ UDF ಅಧಿಕಾರಕ್ಕೆ 2011 ರ ವಿಧಾನಸಭಾ ಚುನಾವಣೆಯಲ್ಲಿ ಕೇರಳದ ಎರಡು ಪ್ರಮುಖ ಪಕ್ಷಗಳು 4 ಸ್ಥಾನಗಳ ಅಂತರದಲ್ಲಿ ಅತ್ಯಂತ ಕಡಿಮೆ ಅಂತರವನ್ನು ಹೊಂದಿದ್ದವು. ಅಲ್ಲಿ ಯುಡಿಎಫ್ ಮೇಲುಗೈ ಸಾಧಿಸಿತು. ಆ ವರ್ಷ, ಕೇರಳವು 1977 ರಿಂದೀಚೆಗೆ ಐತಿಹಾಸಿಕ ಪ್ರವೃತ್ತಿಯ ಬಹುತೇಕ ಏರಿಕೆಗೆ ಸಾಕ್ಷಿಯಾಯಿತು. ಆ ವರ್ಷ LDF 68 ಸ್ಥಾನಗಳನ್ನು ಪಡೆದರೆ, UDF 72 ಸ್ಥಾನಗಳನ್ನು ಗಳಿಸಿತು. ಇತ್ತೀಚಿನ ಪ್ರವೃತ್ತಿಗಳು ಮೂರನೇ ರಾಜಕೀಯ ಶಕ್ತಿಯ ಸ್ಥಿರ ಆರೋಹಣವನ್ನು ಎತ್ತಿ ತೋರಿಸುತ್ತವೆ. ಈ ಅಂಶಗಳು ಒಂದು ಕಾಲದಲ್ಲಿ ಒಮ್ಮೆ ‘ಅವರು’ ಅಧಿಕಾರಕ್ಕೇರಿದರೆ ನಂತರದ ಚುನಾವಣೆಯಲ್ಲಿ ‘ಇವರು’ ಎಂಬ LDF - UDF ನಡುವಿನ ಪೈಪೋಟಿಯಲ್ಲಿ ‘ಮೂರನೆಯವರು’ ಇದ್ದಾರೆ ಎಂಬುದನ್ನು ತೋರಿಸುತ್ತವೆ. 2011ರಲ್ಲಿ ಕಾಂಗ್ರೆಸ್ ನೇತೃತ್ವದ UDF 46.03% ಮತ ಹಂಚಿಕೆಯೊಂದಿಗೆ ಅಧಿಕಾರಕ್ಕೆ ಬಂದಿತು. ಎರಡೂ ಮೈತ್ರಿಕೂಟಗಳ ನಡುವೆ ಕೇವಲ 1,68,520 ಮತಗಳ ಅಂತರವಿತ್ತು. UDF 8,002,854 ಮತಗಳನ್ನು ಪಡೆದರೆ, ಎಲ್‌ಡಿಎಫ್ 7,834,334 ಮತಗಳನ್ನು ಗಳಿಸಿತು. LDFನ ಮತ ಹಂಚಿಕೆ 45.06% ಆಗಿತ್ತು. ಕೇರಳದಲ್ಲಿ 13ನೇ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ ಒಟ್ಟು ಅಭ್ಯರ್ಥಿಗಳ ಸಂಖ್ಯೆ 971; ಅದರಲ್ಲಿ 456 ಅಭ್ಯರ್ಥಿಗಳು ಸಿಪಿಐ, ಸಿಪಿಐ(ಎಂ), ಬಿಜೆಪಿ, ಬಿಎಸ್‌ಪಿ, ಎನ್‌ಸಿಪಿ ಇತ್ಯಾದಿ ರಾಷ್ಟ್ರೀಯ ಪಕ್ಷಗಳ ಪ್ರತಿನಿಧಿಗಳಾಗಿದ್ದರು. ಏತನ್ಮಧ್ಯೆ, ಯುಡಿಎಫ್‌ನ ಯಶಸ್ಸಿಗೆ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (IUML) ಕೂಡ ಬೆಂಬಲ ನೀಡಿತು. ಅದು ಸ್ಪರ್ಧಿಸಿದ್ದ 24 ಸ್ಥಾನಗಳಲ್ಲಿ 20 ಸ್ಥಾನಗಳನ್ನು ಗೆಲ್ಲುವ ಮೂಲಕ ಅದ್ಭುತ ಪ್ರದರ್ಶನ ನೀಡಿತು. 2016 - LDF ಅಧಿಕಾರಕ್ಕೆ 2016 ರ ಹೊತ್ತಿಗೆ, ಕೇರಳದ ಮತದಾರರ ಊಹಿಸಬಹುದಾದ ಸ್ವರೂಪವು ಪೂರ್ಣ ಶಕ್ತಿಯೊಂದಿಗೆ ಮರಳಿತು. 2016 ರ ಫಲಿತಾಂಶಗಳು LDF 92 ಸ್ಥಾನಗಳನ್ನು ಗೆದ್ದು ಬಹುಮತದೊಂದಿಗೆ ಅಧಿಕಾರವನ್ನು ಮರಳಿ ಪಡೆದವು. UDFನ ಸ್ಥಾನಗಳು 47 ಕ್ಕೆ ಇಳಿದವು. ಮತ ಹಂಚಿಕೆಯ ದತ್ತಾಂಶವು UDFಗೆ ಕೇವಲ 38.6% ಮತಗಳೊಂದಿಗೆ ಕುಸಿತವನ್ನು ತೋರಿಸುತ್ತದೆ, ಆದರೆ ಎಲ್‌ಡಿಎಫ್ 42.58% ಮತ ಪಾಲನ್ನು ಪಡೆಯುವ ಮೂಲಕ ತನ್ನ ನೆಲೆಯನ್ನು ಸ್ಥಿರಗೊಳಿಸಿತು. LDF UDFಗಿಂತ 4% ಮತ ಪಾಲನ್ನು ಕಾಯ್ದುಕೊಂಡಿತು, ಇದು ಸ್ಥಾನಗಳ ವಿಷಯದಲ್ಲಿ ಗಮನಾರ್ಹ ಕುಸಿತಕ್ಕೆ ಕಾರಣವಾಯಿತು. 2016 ರ ಮತ್ತೊಂದು ಮಹತ್ವದ ದತ್ತಾಂಶವೆಂದರೆ ರಾಜ್ಯ ವಿಧಾನಸಭೆಯಲ್ಲಿ ಬಿಜೆಪಿ ಖಾತೆ ತೆರೆಯಿತು. ಹಿರಿಯ ನಾಯಕ ಓ. ರಾಜಗೋಪಾಲ್ ತಿರುವನಂತಪುರಂನ ನೇಮಂ ಸ್ಥಾನವನ್ನು ಗೆಲ್ಲುವ ಮೂಲಕ ಕೇರಳದ LDF - UDF ವ್ಯವಸ್ಥೆಯ ನಡುವೆ ಕಮಲ ಅರಳಿಸಿದರು. ಬಿಜೆಪಿಯ ಮತ ಹಂಚಿಕೆ 14.62% ಕ್ಕೆ ಏರಿತು. 2021 – ಮತ್ತೆ LDF 2011 ಮತ್ತು 2016 ರಲ್ಲಿ ಮತದಾರರು ಎಡಪಕ್ಷಗಳತ್ತ ಒಲವು ತೋರುವ ಪ್ರವೃತ್ತಿಯನ್ನು ತೋರಿಸಿದರೂ, 2021 ರಲ್ಲಿ ಕೇರಳದಲ್ಲಿ ಮೊದಲ ಬಾರಿಗೆ ಅಧಿಕಾರದಲ್ಲಿರುವ ಸರ್ಕಾರವನ್ನು ಮರು ಆಯ್ಕೆ ಮಾಡಲಾಯಿತು. ಪಿಣರಾಯಿ ವಿಜಯನ್ ನೇತೃತ್ವದ LDF 99 ಸ್ಥಾನಗಳನ್ನು ಗಳಿಸಿತು, ಇದು 2016 ರ ಫಲಿತಾಂಶಕ್ಕಿಂತ ಹೆಚ್ಚಾಗಿದೆ. ಆದರೆ ಯುಡಿಎಫ್ ಗಳಿಸಿದ್ದು ಕೇವಲ 41 ಸ್ಥಾನಗಳು. LDF 45.28% (94,07,662 ಮತಗಳು) ಮತ ಪಾಲನ್ನು ದಾಖಲಿಸಿತು, ಇದು 2016 ರ ವಿಧಾನಸಭಾ ಚುನಾವಣೆಯಲ್ಲಿ 43.35% ರಷ್ಟಿತ್ತು. ಇದಲ್ಲದೆ, ಎಡಪಕ್ಷವು 2019 ರ ಲೋಕಸಭಾ ಚುನಾವಣೆಯಲ್ಲಿ ಗಳಿಸಿದ ಮತಗಳಿಗಿಂತ 10.73% ಹೆಚ್ಚಿನ ಮತಗಳನ್ನು ಗಳಿಸಿದೆ. ಈ ಅಧಿಕಾರದ ಮುಂದುವರಿಕೆಯಲ್ಲಿ ಹಲವಾರು ಅಂಶಗಳು ಪಾತ್ರವಹಿಸಿವೆ. 2018 ರ ಪ್ರವಾಹ ಮತ್ತು COVID-19 ಸಾಂಕ್ರಾಮಿಕ ರೋಗವನ್ನು ನಿರ್ವಹಿಸುವ ಮೂಲಕ LDF ಸರ್ಕಾರವು ರಾಜಕೀಯ ಬಂಡವಾಳವನ್ನು ಗಳಿಸಿತು. ಇದಲ್ಲದೆ, ಕೇರಳ ಕಾಂಗ್ರೆಸ್‌ನ ಜೋಸ್ ಕೆ. ಮಣಿ ಬಣವನ್ನು ಮತ್ತೆ ತನ್ನ ತೆಕ್ಕೆಗೆ ತರಲು ಸಾಧ್ಯವಾಯಿತು, ಇದು ಕೇಂದ್ರ ಕೇರಳದ ಕ್ರಿಶ್ಚಿಯನ್ ಹೃದಯಭೂಮಿಯ ಮೇಲಿನ UDFನ ದೀರ್ಘ ಹಿಡಿತವನ್ನು ಮುರಿಯಿತು. 2026 - ಯಾರಿಗೆ ಮಣೆ? 2026 ರ ವಿಧಾನಸಭಾ ಚುನಾವಣೆಗಳು ಕೇರಳದ ಚುನಾವಣಾ ಇತಿಹಾಸದಲ್ಲಿ ಒಂದು ನಿರ್ಣಾಯಕ ಘಟ್ಟವಾಗಿದ್ದು, LDF ಐತಿಹಾಸಿಕ ಮೂರನೇ ಅವಧಿಗೆ ಅಧಿಕಾರ ವಹಿಸಿಕೊಳ್ಳಬಹುದೇ ಅಥವಾ UDF ಮತ್ತೆ ಅಧಿಕಾರಕ್ಕೆ ಬರಲು ಸಾಧ್ಯವೇ ಎಂಬುದನ್ನು ಇದು ನಿರ್ಧರಿಸುತ್ತದೆ. ಏತನ್ಮಧ್ಯೆ, ಬಿಜೆಪಿ ನೇತೃತ್ವದ NDA ತನ್ನ ಮತ ಪಾಲನ್ನು 12% ಮತ್ತು 15% ರ ನಡುವೆ ಸ್ಥಿರಗೊಳಿಸಿದೆ. 2026 ರಲ್ಲಿ, ಬಿಜೆಪಿ ಈ ಮತಗಳನ್ನು ಸ್ಥಾನಗಳಾಗಿ ಪರಿವರ್ತಿಸುತ್ತಿದ್ದರೆ, LDF ಅಥವಾ UDF ಎರಡೂ ಸ್ವಂತವಾಗಿ 71 ಸ್ಥಾನಗಳನ್ನು ತಲುಪುವ ಸಾಧ್ಯತೆಯಿಲ್ಲ. ಇತ್ತೀಚಿನ ಸ್ಥಳೀಯ ಸಂಸ್ಥೆಗಳ ಸಮೀಕ್ಷೆಗಳ ಫಲಿತಾಂಶಗಳು UDF ನಗರ ಪುರಸಭೆಗಳು ಮತ್ತು ನಿಗಮಗಳಲ್ಲಿ ತನ್ನ ಭದ್ರಕೋಟೆಯನ್ನು (ವಿಶೇಷವಾಗಿ ಮಲಬಾರ್ ಪ್ರದೇಶದಲ್ಲಿ) ಮರಳಿ ಪಡೆಯುತ್ತಿದೆ ಎಂದು ಸೂಚಿಸುತ್ತವೆ. 2026 ರಲ್ಲಿ ಪ್ರಮುಖ ಸ್ಪರ್ಧೆ ನಡೆಯುವ ಕ್ಷೇತ್ರಗಳು 2026 ರ ವಿಧಾನಸಭಾ ಚುನಾವಣೆಗಳು ನಿಕಟ ಸ್ಪರ್ಧೆಗೆ ಸಾಕ್ಷಿಯಾಗಲಿದ್ದು, ರಾಜ್ಯಾದ್ಯಂತ ಹಲವಾರು ಕ್ಷೇತ್ರಗಳಲ್ಲಿ ತೀವ್ರ ಪೈಪೋಟಿ ನಡೆಯಲಿದೆ. ಕೊಟ್ಟಾರಕ್ಕರದಲ್ಲಿ ಹಿರಿಯ ಸಿಪಿಐ(ಎಂ) ನಾಯಕಿ ಆಯಿಷಾ ಪೊಟ್ಟಿ ಕಾಂಗ್ರೆಸ್‌ಗೆ ಪಕ್ಷಾಂತರಗೊಂಡಿರುವುದು LDFನ ಹಣಕಾಸು ಸಚಿವ ಕೆ.ಎನ್. ಬಾಲಗೋಪಾಲ್ ಅವರಿಗೆ ಸವಾಲಾಗಿ ಪರಿಣಮಿಸಿದೆ. ನೇಮಂ ಕ್ಷೇತ್ರವು ಬಿಜೆಪಿ ರಾಜ್ಯ ಅಧ್ಯಕ್ಷ ರಾಜೀವ್ ಚಂದ್ರಶೇಖರ್ ಮತ್ತು ಹಾಲಿ ಶಾಸಕ ಹಾಗೂ ಸಚಿವ ವಿ. ಶಿವನ್‌ಕುಟ್ಟಿ ನಡುವಿನ ಪೈಪೋಟಿಗೆ ಸಜ್ಜಾಗಿದೆ. ವಟ್ಟಿಯೂರ್ ಕಾವು ತೀವ್ರ ಪೈಪೋಟಿಗೆ ಸಾಕ್ಷಿಯಾಗುವ ನಿರೀಕ್ಷೆಯಿದೆ. ಇಲ್ಲಿ LDFನ ವಿ.ಕೆ. ಪ್ರಶಾಂತ್, ಕಾಂಗ್ರೆಸ್‌ ನ ಕೆ. ಮುರಳೀಧರನ್ ಮತ್ತು ಎನ್‌ಡಿಎಯ ಆರ್. ಶ್ರೀಲೇಖಾ ವಿರುದ್ಧ ಸ್ಪರ್ಧಿಸುತ್ತಿದ್ದಾರೆ. ಪಾಲಾದಲ್ಲಿ, LDF ಮಿತ್ರಪಕ್ಷವಾದ ಕೇರಳ ಕಾಂಗ್ರೆಸ್ (ಮಣಿ) ಯ ಜೋಸ್ ಕೆ. ಮಣಿ ಸೋಲಿನಿಂದ ಚೇತರಿಸಿಕೊಳ್ಳಲು ಎದುರು ನೋಡುತ್ತಿದ್ದಾರೆ. ಮಂಜೇಶ್ವರದಲ್ಲಿ ತ್ರಿಕೋನ ಸ್ಪರ್ಧೆ ನಡೆಯಲಿದೆ. ಕೆ.ಕೆ. ಶೈಲಜಾ ಪೆರಾವೂರ್‌ ನಲ್ಲಿ ಕಣಕ್ಕಿಳಿದಿದ್ದು, ಅವರು ಕಾಂಗ್ರೆಸ್ ನಾಯಕ ಮತ್ತು ಕೆಪಿಸಿಸಿ ಅಧ್ಯಕ್ಷ ಸನ್ನಿ ಜೋಸೆಫ್ ವಿರುದ್ಧ ಸ್ಪರ್ಧಿಸಲಿದ್ದಾರೆ, ಇದು ಅವರ ಸಾರ್ವಜನಿಕ ಬೆಂಬಲವನ್ನು ಪರೀಕ್ಷಿಸುತ್ತಿದೆ. ವಿರೋಧ ಪಕ್ಷದ ನಾಯಕ ವಿ.ಡಿ. ಸತೀಶನ್ ಪರವೂರಿನಲ್ಲಿ ಒತ್ತಡವನ್ನು ಎದುರಿಸುವ ಸಾಧ್ಯತೆಯಿದೆ. ಅದೇ ವೇಳೆ, ಸಿಪಿಐ(ಎಂ) ನಾಯಕ ಕಡಕಂಪಳ್ಳಿ ಸುರೇಂದ್ರನ್ ಕಝಕ್ಕೂಟಂ ಕ್ಷೇತ್ರದಲ್ಲಿ ಕಠಿಣ ಸ್ಪರ್ಧೆಯನ್ನು ಎದುರಿಸುತ್ತಿರುವಂತೆ ತೋರುತ್ತಿದೆ. ಪತ್ತಾನಾಪುರಂನಲ್ಲಿ LDFನ ಕೆ.ಬಿ. ಗಣೇಶ್ ಕುಮಾರ್ ಯುಡಿಎಫ್‌ಗೆ ಹೆಚ್ಚಿನ ಪೈಪೋಟಿ ನೀಡಲಿದ್ದು, ಬಿಜೆಪಿಯ ಶೋಭಾ ಸುರೇಂದ್ರನ್ ಪಾಲಕ್ಕಾಡ್‌ ನಲ್ಲಿ ತಮ್ಮ ಪಕ್ಷಕ್ಕೆ ಶಕ್ತಿ ತುಂಬುವ ನಿರೀಕ್ಷೆಯಿದೆ. ಹಿರಿಯ ಕಾಂಗ್ರೆಸ್ ನಾಯಕ ರಮೇಶ್ ಚೆನ್ನಿತ್ತಲ ಹರಿಪಾಡ್‌ ನಲ್ಲಿ ತಮ್ಮ ತವರು ಕ್ಷೇತ್ರವನ್ನು ಉಳಿಸಿಕೊಳ್ಳಲು ನೋಡುತ್ತಿದ್ದಾರೆ. ಕೇರಳದಲ್ಲಿ ಬದಲಾವಣೆ ತರಲು ಮುಂದಾದ ಬಿಜೆಪಿ 2016 ರಲ್ಲಿ ಹಿರಿಯ ಬಿಜೆಪಿ ನಾಯಕ ಓ. ರಾಜಗೋಪಾಲ್ ಅವರು ಕೇರಳ ವಿಧಾನಸಭೆಯಲ್ಲಿ ಮೊದಲ ಸ್ಥಾನವನ್ನು ಗೆಲ್ಲುವ ಮೂಲಕ ಬಿಜೆಪಿಯ ನಿರೀಕ್ಷೆಯನ್ನು ಹೆಚ್ಚಿಸಿದರು. ಆದರೆ 2021ರ ಚುನಾವಣೆಯಲ್ಲಿ ಬಿಜೆಪಿಗೆ ಒಂದೇ ಒಂದು ಸ್ಥಾನ ಗೆಲ್ಲಲು ಸಾಧ್ಯವಾಗಲಿಲ್ಲ. ಬಿಜೆಪಿ ಗೆದ್ದಿದ್ದ ನೇಮಂ ಸೀಟು ಸಿಪಿಎಂ ಪಾಲಾಯಿತು. ಯಾವುದೇ ಸೀಟು ಗಳಿಸಲು ಬಿಜೆಪಿಗೆ ಸಾಧ್ಯವಾಗದೇ ಇದ್ದರೂ, ರಾಜ್ಯದಲ್ಲಿ ಪಕ್ಷವು ತನ್ನ ಮತ ಪಾಲನ್ನು ಹೆಚ್ಚಿಸಿಕೊಳ್ಳಲು ಸಾಧ್ಯವಾಗಿದೆ. ಚುನಾವಣಾ ಆಯೋಗದಲ್ಲಿ ಲಭ್ಯವಿರುವ ಮಾಹಿತಿಯ ಪ್ರಕಾರ, ಬಿಜೆಪಿಯ ಮತ ಪಾಲು 2016 ರಲ್ಲಿ 10.53% ರಿಂದ 2021 ರಲ್ಲಿ 11.3% ಕ್ಕೆ ಸ್ವಲ್ಪ ಹೆಚ್ಚಾಗಿದೆ. 2024 ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ಸುರೇಶ್ ಗೋಪಿ ತ್ರಿಶೂರ್ ಸ್ಥಾನದಿಂದ ಗೆದ್ದಾಗ ಅದು 16.8% ಕ್ಕೆ ತೀವ್ರ ಏರಿಕೆ ಕಂಡಿತು. 2025 ರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಈ ಮತ ಹಂಚಿಕೆ ಶೇ. 14.76 ಕ್ಕೆ ಇಳಿದಿದೆ. ಆದರೆ ತಿರುವನಂತಪುರಂ ಕಾರ್ಪೊರೇಷನ್, ತ್ರಿಪ್ಪೂಣಿತ್ತುರ ಮತ್ತು ಪಾಲಕ್ಕಾಡ್ ಪುರಸಭೆಗಳು ಸೇರಿದಂತೆ ಪ್ರಮುಖ ಸ್ಥಳೀಯ ಸಂಸ್ಥೆಗಳು ಬಿಜೆಪಿಗೆ ಹೋಯಿತು. ಈ ಅವಧಿಯಲ್ಲಿ, ಬಿಜೆಪಿ ಇತ್ತೀಚಿನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಉತ್ತಮ ಅಂಕ ಗಳಿಸಿದ ಸುಮಾರು 40 ಸ್ಥಾನಗಳ ಮೇಲೆ ಗಮನಹರಿಸಿದೆ. ಇವುಗಳಲ್ಲಿ ನೇಮಂ, ಪಾಲಕ್ಕಾಡ್, ಮಂಜೇಶ್ವರ, ಕಝಕ್ಕೂಟಂ ಮತ್ತು ತ್ರಿಶೂರ್‌ನಂತಹ ಸ್ಥಾನಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಈ ಕ್ಷೇತ್ರಗಳ ಹೊರತಾಗಿ, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಎರಡನೇ ಸ್ಥಾನ ಪಡೆದಿದ್ದ ಕಾಸರಗೋಡು, ಮಲಂಪುಳ, ಆಟ್ಟಿಂಗಲ್ ಮತ್ತು ಚಾತ್ತನ್ನೂರ್‌ನಲ್ಲಿ ಪಕ್ಷವು ಪ್ರಬಲ ಶಕ್ತಿಯಾಗಿ ಕಂಡುಬರುತ್ತದೆ. ನೇಮಂ ತಿರುವನಂತಪುರಂ ಜಿಲ್ಲೆಯ ನೇಮಂ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಘೋಷಿಸಿದ ಮೊದಲ ಅಭ್ಯರ್ಥಿಗಳಲ್ಲಿ ಅದರ ರಾಜ್ಯ ಅಧ್ಯಕ್ಷ ರಾಜೀವ್ ಚಂದ್ರಶೇಖರ್ ಕೂಡ ಒಬ್ಬರು. ಸಿ ವೋಟರ್ ಚುನಾವಣಾ ಪೂರ್ವ ಸಮೀಕ್ಷೆಯ ಪ್ರಕಾರ, ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (NDA) ಈ ಸ್ಥಾನವನ್ನು ಗೆಲ್ಲುವ ಹೆಚ್ಚಿನ ಅವಕಾಶವನ್ನು ಹೊಂದಿದೆ. ರಾಜೀವ್ ಅವರು ಸಿಪಿಐ(ಎಂ)ನ ಹಾಲಿ ಶಾಸಕ ವಿ. ಶಿವನ್‌ಕುಟ್ಟಿ ವಿರುದ್ಧ ಸ್ಪರ್ಧಿಸುತ್ತಿದ್ದಾರೆ. 2021 ರಲ್ಲಿ ವಿ. ಶಿವನ್‌ಕುಟ್ಟಿ ನೇಮಂ ಸೀಟು ಗೆದ್ದಾಗ ಕೇರಳದಲ್ಲಿ ಗಳಿಸಿದ್ದ ಏಕೈಕ ಖಾತೆಯನ್ನು ಬಿಜೆಪಿ ಕಳೆದುಕೊಂಡಿತ್ತು. ಕಾಂಗ್ರೆಸ್ ತನ್ನ ಮಾಜಿ ಶಾಸಕ ಕೆ.ಎಸ್. ಶಬರಿನಾಥನ್ ಅವರನ್ನು ಇಲ್ಲಿ ಕಣಕ್ಕಿಳಿಸಿದೆ. ಈ ಬಾರಿ ನೇಮಂನಲ್ಲಿ ಪ್ರಬಲ ತ್ರಿಕೋನ ಸ್ಪರ್ಧೆ ನಡೆಯಲಿದೆ. 2021 ರಲ್ಲಿ 3,949 ಮತಗಳ ಅಲ್ಪ ಅಂತರದಿಂದ ಗೆದ್ದ ಸಿಪಿಐ(ಎಂ), ಬಿಜೆಪಿಯ ತೀವ್ರ ಪ್ರಚಾರದ ಬಿಸಿಯನ್ನು ಅನುಭವಿಸುತ್ತಿದೆ. ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (SDPI) ಸಿಪಿಐ(ಎಂ) ಅಭ್ಯರ್ಥಿಗೆ ಬಹಿರಂಗವಾಗಿ ಬೆಂಬಲ ಘೋಷಿಸಿದ ನಂತರ ಈ ಬಾರಿಯೂ ನೇಮಂನಲ್ಲಿ ‘ಒಳ ಒಪ್ಪಂದ’ ಸುದ್ದಿಯಲ್ಲಿದೆ. ಶಿವನ್‌ಕುಟ್ಟಿಗೆ ಬೆಂಬಲ ಘೋಷಿಸಿದ SDPI, ಸಿಪಿಐ(ಎಂ) ಸ್ಥಳೀಯ ನಾಯಕತ್ವವು ತಮ್ಮ ಬೆಂಬಲವನ್ನು ಕೋರಿದೆ ಎಂದು ಹೇಳಿಕೊಂಡಿದೆ. ಪಾಲಕ್ಕಾಡ್ ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಸತತ ಗೆಲುವು ಸಾಧಿಸಿದೆ. ಬಿಜೆಪಿ ಅಭ್ಯರ್ಥಿ ಶೋಭಾ ಸುರೇಂದ್ರನ್ ಇಲ್ಲಿ ಕಣಕ್ಕಿಳಿದಿದ್ದಾರೆ. 2016 ರಲ್ಲಿ ಪಾಲಕ್ಕಾಡ್‌ ನಲ್ಲಿ ಸಿಪಿಐ(ಎಂ) ಅನ್ನು ಮೂರನೇ ಸ್ಥಾನಕ್ಕೆ ತಳ್ಳುವಲ್ಲಿ ಪ್ರಮುಖ ಪಾತ್ರ ವಹಿಸಿದವರು ಶೋಭಾ; ಅಲ್ಲಿ ಅವರು ಎರಡನೇ ಸ್ಥಾನ ಪಡೆದರು. ಅಂದಿನಿಂದ, ಸ್ಪರ್ಧೆ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಇದೆ. ಲೈಂಗಿಕ ಕಿರುಕುಳ ಪ್ರಕರಣಗಳ ಸರಣಿಯಿಂದಾಗಿ ಪಕ್ಷದಿಂದ ವಜಾಗೊಳಿಸಲಾದ ತನ್ನ ಮಾಜಿ ಶಾಸಕ ರಾಹುಲ್ ಮಾಂಕೂಟತ್ತಿಲ್ ಅವರ ಮೇಲಿನ ‘ಆರೋಪ’ದ ಭಾರದೊಂದಿಗೆ ಕಾಂಗ್ರೆಸ್ ಚುನಾವಣೆ ಎದುರಿಸುತ್ತಿದೆ. ಪಕ್ಷವು ಕಾಂಗ್ರೆಸ್‌ನ ದೀರ್ಘಕಾಲದ ಬೆಂಬಲಿಗ ನಟ-ನಿರ್ದೇಶಕ ರಮೇಶ್ ಪಿಶಾರಡಿ ಅವರನ್ನು ಕಣಕ್ಕಿಳಿಸಿದೆ. ಮತ್ತೊಂದೆಡೆ, ಎಡಪಂಥೀಯರು ಉದ್ಯಮಿ ಎನ್‌.ಎಂ.ಆರ್. ರಝಾಕ್ ಅವರನ್ನು ಕರೆತಂದಿದ್ದಾರೆ. ಪಾಲಕ್ಕಾಡ್, ಆಲಪ್ಪುಳ ಅಥವಾ ಕಝಕ್ಕೂಟಂ ಆಗಿರಲಿ, ಅವರು ಸ್ಪರ್ಧಿಸಿದಲ್ಲೆಲ್ಲಾ ಬಿಜೆಪಿಯ ಮತ ಪಾಲನ್ನು ನಿರಂತರವಾಗಿ ಹೆಚ್ಚಿಸಿಕೊಂಡಿರುವುದರಿಂದ ಶೋಭಾ ಅವರ ಗೆಲುವಿನ ವಿಶ್ವಾಸ ಮೂಡಿದೆ. ಈಳವ ಸಮುದಾಯದ ಕೆಲವು ವಿಭಾಗಗಳಿಂದ ಅವರು ಗಮನಾರ್ಹ ಬೆಂಬಲವನ್ನು ಕ್ರೋಢೀಕರಿಸುವಲ್ಲಿಯೂ ಯಶಸ್ವಿಯಾಗಿದ್ದಾರೆ. ಈ ಬೆಂಬಲ ಪಾಲಕ್ಕಾಡ್‌ ಗೂ ಮುಂದುವರಿಯುವ ಸಾಧ್ಯತೆಯಿದೆ. ಕಝಕ್ಕೂಟಂ ಬಿಜೆಪಿ ಹೆಚ್ಚಿನ ನಿರೀಕ್ಷೆಗಳನ್ನು ಹೊಂದಿರುವ ಮತ್ತೊಂದು ಪ್ರಮುಖ ಸ್ಥಾನ ಕಝಕ್ಕೂಟಂ. ಇಲ್ಲಿ ಮಾಜಿ ಕೇಂದ್ರ ಸಚಿವ ವಿ. ಮುರಳೀಧರನ್ ಅವರು ಮಾಜಿ ದೇವಸ್ವಂ ಸಚಿವ ಹಾಗೂ ಸಿಪಿಐ(ಎಂ)ನ ಹಾಲಿ ಶಾಸಕ ಕಡಕಂಪಳ್ಳಿ ಸುರೇಂದ್ರನ್ ಅವರಿಗೆ ಕಠಿಣ ಸ್ಪರ್ಧೆ ನೀಡುತ್ತಿದ್ದಾರೆ. ಟಿ. ಶರತ್ ಚಂದ್ರ ಪ್ರಸಾದ್ ಕಾಂಗ್ರೆಸ್ ಅಭ್ಯರ್ಥಿ. UDF ಮತ್ತು NDA ಎರಡೂ ತಮ್ಮ ಪ್ರಚಾರದಲ್ಲಿ ಎತ್ತಿ ತೋರಿಸಿರುವ ವಿಷಯವಾದ ಶಬರಿಮಲೆ ಚಿನ್ನ ಕಳ್ಳತನ ಪ್ರಕರಣವು ಇಲ್ಲಿ ಪ್ರಮುಖ ಚರ್ಚಾ ವಿಷಯವಾಗಿದೆ. ಮಾತೃಭೂಮಿ ನ್ಯೂಸ್ ನಡೆಸಿದ ಇತ್ತೀಚಿನ ಚುನಾವಣಾ ಪೂರ್ವ ಸಮೀಕ್ಷೆಯ ಪ್ರಕಾರ, ಸಿಪಿಐ(ಎಂ) ಮತ್ತು ಬಿಜೆಪಿ ನಡುವೆ ಸ್ಪರ್ಧೆ ಜೋರಾಗಲಿದ್ದು, ಬಿಜೆಪಿ ಸ್ವಲ್ಪ ಮುನ್ನಡೆಯನ್ನು ತೋರಿಸಿದೆ. ಮಂಜೇಶ್ವರ ಮಂಜೇಶ್ವರದಲ್ಲಿನ ಚುನಾವಣಾ ಚಿತ್ರಣವು ಕೇರಳದ ಉಳಿದ ಭಾಗಗಳಿಗಿಂತ ಸಂಪೂರ್ಣವಾಗಿ ಭಿನ್ನವಾಗಿದೆ. ಇಲ್ಲಿ, ಎಕೆಎಂ ಅಶ್ರಫ್ ಪ್ರತಿನಿಧಿಸುವ UDF ಘಟಕ ಪಕ್ಷ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ಮತ್ತು ಕೆ. ಸುರೇಂದ್ರನ್ ಪ್ರತಿನಿಧಿಸುವ ಬಿಜೆಪಿ ನಡುವೆ ಪೈಪೋಟಿ ಇದೆ. ಕರ್ನಾಟಕದೊಂದಿಗೆ ತನ್ನ ಗಡಿಯನ್ನು ಹಂಚಿಕೊಂಡಿರುವ ಮಂಜೇಶ್ವರದಲ್ಲಿ 2016 ರಿಂದ ತೀವ್ರ ಪೈಪೋಟಿ ನಡೆಯುತ್ತಿದೆ. ಆ ವರ್ಷ, ಬಿಜೆಪಿಯ ಆಗಿನ ರಾಜ್ಯ ಅಧ್ಯಕ್ಷ ಕೆ. ಸುರೇಂದ್ರನ್ IUML ಅಭ್ಯರ್ಥಿ ಪಿ.ಬಿ. ಅಬ್ದುಲ್ ರಝಾಕ್ ವಿರುದ್ಧ ಕೇವಲ 89 ಮತಗಳ ಅಂತರದಿಂದ ಸೋತರು. ಕೆ. ಸುರೇಂದ್ರನ್ ಅವರ ಹೆಸರನ್ನು ಹೋಲುವ BSP ಅಭ್ಯರ್ಥಿ ಕೆ. ಸುಂದರ ಅವರು 467 ಮತಗಳನ್ನು ಗಳಿಸುವ ಮೂಲಕ ಇಲ್ಲಿನ ಬಿಜೆಪಿ ಲೆಕ್ಕಾಚಾರಗಳನ್ನು ತಪ್ಪಿಸಿದರು ಎನ್ನಲಾಗುತ್ತಿದೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಸುರೇಂದ್ರನ್ ಮತ್ತೊಮ್ಮೆ ಸೋತರು. ಆಗ ಅಂತರ ಕೇವಲ 745 ಮತಗಳಷ್ಟಿತ್ತು. ಹಾಲಿ ಶಾಸಕ ಎಕೆಎಂ ಅಶ್ರಫ್ ಅವರು 2021 ರ ತಮ್ಮ ಗೆಲುವನ್ನು ಪುನರಾವರ್ತಿಸುವ ವಿಶ್ವಾಸ ಹೊಂದಿದ್ದಾರೆ. ಸಿಪಿಐ(ಎಂ) ತನ್ನ ಅಭ್ಯರ್ಥಿಯಾಗಿ ಕೆ.ಆರ್. ಜಯಾನಂದ ಅವರನ್ನು ಕಣಕ್ಕಿಳಿಸಿದೆ. ತ್ರಿಶೂರ್ 2016 ರಲ್ಲಿ ಸಿಪಿಐನ ವಿ.ಎಸ್. ಸುನಿಲ್ ಕುಮಾರ್ ತ್ರಿಶೂರ್ ಸ್ಥಾನವನ್ನು 42.19% ಮತಗಳೊಂದಿಗೆ ಗೆದ್ದರು. ಆಗ ಯುಡಿಎಫ್ ಪರವಾಗಿ ಸ್ಪರ್ಧಿಸಿದ್ದ ಮಾಜಿ ಕಾಂಗ್ರೆಸ್ ಮುಖ್ಯಮಂತ್ರಿ ಕೆ. ಕರುಣಾಕರನ್ ಅವರ ಪುತ್ರಿ ಪದ್ಮಜಾ ವೇಣುಗೋಪಾಲ್ 36.7% ಮತಗಳನ್ನು ಗಳಿಸಿದರು. 2021 ರಲ್ಲಿ ಸಿಪಿಐನ ಪಿ. ಬಾಲಚಂದ್ರನ್ ಕೇವಲ 946 ಮತಗಳ ಅಲ್ಪ ಅಂತರದಿಂದ ಈ ಸ್ಥಾನವನ್ನು ಗೆದ್ದಿದ್ದು, ಪದ್ಮಜಾ ಎರಡನೇ ಸ್ಥಾನ ಪಡೆದರು. ಈ ಬಾರಿ ಪದ್ಮಜಾ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ. 2024 ರಲ್ಲಿ ಬಿಜೆಪಿಯ ಸುರೇಶ್ ಗೋಪಿ ತ್ರಿಶೂರ್ ಲೋಕಸಭಾ ಸ್ಥಾನವನ್ನು ಗೆದ್ದಿದ್ದಾರೆ ಎಂಬ ಒಂದೇ ಒಂದು ಭರವಸೆಯಿಂದ ಪದ್ಮಜಾ ಗೆಲುವಿನ ವಿಶ್ವಾಸ ಹೊಂದಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ತ್ರಿಶೂರ್‌ನ ಮಾಜಿ ಮೇಯರ್ ರಾಜನ್ ಜೆ. ಪಲ್ಲನ್, ಸಿಪಿಐ ಪಕ್ಷದ ಕವಿ ಮತ್ತು ಬರಹಗಾರ ಅಲಂಕೋಡ್ ಲೀಲಾಕೃಷ್ಣನ್ ಅವರು ಕಣದಲ್ಲಿದ್ದಾರೆ.

ವಾರ್ತಾ ಭಾರತಿ 6 Apr 2026 9:29 pm

ಉಪಚುನಾವಣೆಯ ನಂತರ ಪಿಯುಸಿ ಫಲಿತಾಂಶ ಪ್ರಕಟ ಸಾಧ್ಯತೆ

ಬೆಂಗಳೂರು : ದ್ವಿತೀಯ ಪಿಯುಸಿ ಪರೀಕ್ಷೆಯ ಮೌಲ್ಯಮಾಪನ ಮುಗಿದಿದ್ದು, ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ಉಪಚುನಾವಣೆಯ ಮತದಾನದ (ಎ.9) ನಂತರ ಫಲಿತಾಂಶ ಪ್ರಕಟವಾಗುವ ಸಾಧ್ಯತೆಯಿದೆ. ಫೆ.28 ರಿಂದ ಮಾ.17ರವರೆಗೆ ನಡೆದಿದ್ದ ಪಿಯು ಪರೀಕ್ಷೆಗೆ ರಾಜ್ಯಾದ್ಯಂತ 7,10, 363 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದರು. ಈ ಮೊದಲು ಎ.7 ರಂದು ಫಲಿತಾಂಶ ಪ್ರಕಟಿಸುವುದಾಗಿ ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದ್ದರು. ಹೀಗಾಗಿ ಫಲಿತಾಂಶ ಪ್ರಕಟಿಸಲು ಮಂಡಳಿಯು, ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಿಕೊಂಡಿತ್ತು. ಆದರೆ ಫಲಿತಾಂಶ ಈ ಮೊದಲು ನಿಗದಿಯಾಗಿದ್ದಂತೆ ಎ.7 ರಂದು ಪ್ರಕಟವಾಗುತ್ತಿಲ್ಲ ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯ ಮೂಲಗಳು ತಿಳಿಸಿವೆ. ಬಾಗಲಕೋಟೆ ಮತ್ತು ದಾವಣಗೆರೆ ವಿಧಾನಸಭಾ ಉಪ ಚುನಾವಣೆಯ ನೀತಿ ಸಂಹಿತೆ ಜಾರಿ ಇರುವ ಹಿನ್ನೆಲೆಯಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವರ ಉಪಸ್ಥಿತಿಯಲ್ಲಿ ಫಲಿತಾಂಶ ಪ್ರಕಟಿಸಲು ಚುನಾವಣಾ ಆಯೋಗ ಈವರೆಗೆ ಒಪ್ಪಿಗೆ ನೀಡದಿರುವುದರಿಂದ ಫಲಿತಾಂಶ ಪ್ರಕಟ ವಿಳಂಬವಾಗುತ್ತಿದೆ ಎಂದು ತಿಳಿದು ಬಂದಿದೆ. ನೀತಿ ಸಂಹಿತೆ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ಫಲಿತಾಂಶ ಪ್ರಕಟಿಸಲು ಅನುಮತಿ ನೀಡುವಂತೆ ಪರೀಕ್ಷಾ ಮಂಡಳಿ ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದು, ಆಯೋಗವು ಇಲ್ಲಿಯವರೆಗೂ ಫಲಿತಾಂಶದ ಬಗ್ಗೆ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ. ಆಯೋಗ ಅಧಿಕೃತವಾಗಿ ಪ್ರತಿಕ್ರಿಯೆ ನೀಡಿದ ಬಳಿಕವಷ್ಟೇ ಫಲಿತಾಂಶ ಪ್ರಕಟಣೆಯ ದಿನಾಂಕದ ಕುರಿತು ಸ್ಪಷ್ಟತೆ ಸಿಗಲಿದೆ ಎಂದು ಮಂಡಳಿಯ ಹಿರಿಯ ಅಧಿಕಾರಿ ತಿಳಿಸಿದ್ದಾರೆ

ವಾರ್ತಾ ಭಾರತಿ 6 Apr 2026 9:23 pm

ರಾಜ್ಯದ 2 ಪ್ರತಿಷ್ಠಿತ ಖಾಸಗಿ ಆಸ್ಪತ್ರೆಗಳಿಗೆ ರೆಫರಲ್‌ ವಿನಾಯಿತಿ; ನೇರವಾಗಿ ತೆರಳಿದ್ರೆ ಉಚಿತ ಚಿಕಿತ್ಸೆ: ಸರ್ಕಾರ ಆದೇಶ

ರಾಜ್ಯದ ವಿಜಯಪುರ ಹಾಗೂ ಚಿಕ್ಕಬಳ್ಳಾಪುರದ 2 ಪ್ರತಿಷ್ಠಿತ ಆಸ್ಪತ್ರೆಗಳಿಗೆ ರೆಫರಲ್‌ನಿಂದ ವಿನಾಯಿತಿ ನೀಡಿ ಸರ್ಕಾರ ಆದೇಶ ಹೊರಡಿಸಿದೆ. ಚಿಕ್ಕಬಳ್ಳಾಪುರದ ಶ್ರೀ ಸತ್ಯಸಾಯಿ ಸರಳ ಮೆಮೋರಿಯಲ್‌ ಆಸ್ಪತ್ರೆ ಹಾಗೂ ವಿಜಯಪುರದ ಬಿಎಂ ಪಾಟೀಲ್‌ ವೈದ್ಯ ಕಾಲೇಜು ಆಸ್ಪತ್ರೆ ಮತ್ತು ಸಂಶೋಧಿಧನಾ ಕೇಂದ್ರಕ್ಕೆ ಎಬಿಎಆರ್‌ಕೆಯಡಿ ರೆಫರಲ್ ಇಲ್ಲದೆ ಚಿಕಿತ್ಸೆ ನೀಡಲು ಸೂಚನೆ ನೀಡಿದೆ.

ವಿಜಯ ಕರ್ನಾಟಕ 6 Apr 2026 9:21 pm

Kalaburagi | ಎಸ್ಐಆರ್ ಪ್ರಕ್ರಿಯೆ ಪಾರದರ್ಶಕವಾಗಿ ನಡೆಸುವಂತೆ ವೆಲ್ಫೇರ್ ಪಾರ್ಟಿ ಆಗ್ರಹ

ಕಲಬುರಗಿ : ಎಪ್ರಿಲ್–ಮೇ 2026ರಲ್ಲಿ ಕರ್ನಾಟಕದಲ್ಲಿ ಜಾರಿಗೊಳಿಸಲಾಗುತ್ತಿರುವ ಮತದಾರರ ವಿಶೇಷ ತೀವ್ರ ಪರಿಶೀಲನೆ (SIR) ಪ್ರಕ್ರಿಯೆಯನ್ನು ಕಾನೂನುಬದ್ಧ, ನ್ಯಾಯಸಮ್ಮತ ಹಾಗೂ ಪಾರದರ್ಶಕ ರೀತಿಯಲ್ಲಿ ಅನುಷ್ಠಾನಗೊಳಿಸುವಂತೆ ಒತ್ತಾಯಿಸಿ ವೆಲ್ಫೇರ್ ಪಾರ್ಟಿಯ ಕಲಬುರಗಿ ಜಿಲ್ಲಾ ಮುಖಂಡರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ. ಮನವಿಯಲ್ಲಿ, ಇತ್ತೀಚಿನ ವರ್ಷಗಳಲ್ಲಿ ಬಿಹಾರ, ಉತ್ತರ ಪ್ರದೇಶ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳಲ್ಲಿ ಜಾರಿಗೊಂಡ ಎಸ್‌ಐಆರ್ ಪ್ರಕ್ರಿಯೆಯಲ್ಲಿ ಕಂಡುಬಂದ ಅನಿಯಮಿತತೆಗಳು ಹಾಗೂ ಪ್ರಕ್ರಿಯಾತ್ಮಕ ವೈಫಲ್ಯಗಳನ್ನು ಉಲ್ಲೇಖಿಸಲಾಗಿದೆ. ಅಸಂಗತ ದಾಖಲೆಗಳ ಅವಶ್ಯಕತೆಯಿಂದ ಅನೇಕ ನೈಜ ಮತದಾರರು ತೊಂದರೆ ಅನುಭವಿಸಿದ್ದು, ಕೆಲವರು ಮತದಾನದ ಹಕ್ಕಿನಿಂದ ವಂಚಿತರಾಗಿರುವುದು ಗಂಭೀರ ವಿಷಯವಾಗಿದೆ ಎಂದು ತಿಳಿಸಿದ್ದಾರೆ. ಎಸ್‌ಐಆರ್ ಪ್ರಕ್ರಿಯೆಯ ಕಾನೂನುಬದ್ಧತೆ ಕುರಿತು ಸರ್ವೋಚ್ಚ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ, ಅಂತಿಮ ತೀರ್ಪು ಬಾಕಿಯಿರುವುದರಿಂದ ಕರ್ನಾಟಕದಲ್ಲಿ ಈ ಪ್ರಕ್ರಿಯೆ ಜಾರಿಗೊಳಿಸುವಾಗ ಹೆಚ್ಚಿನ ಜಾಗ್ರತೆ ವಹಿಸಬೇಕು ಎಂದು ಒತ್ತಾಯಿಸಲಾಗಿದೆ. ಬೂತ್ ಮಟ್ಟದ ಅಧಿಕಾರಿಗಳು (BLO) ಪ್ರತಿಯೊಂದು ಮನೆಗೂ ಕಡ್ಡಾಯವಾಗಿ ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ಅಗತ್ಯವಿದ್ದಲ್ಲಿ ಕನಿಷ್ಠ ಮೂರು ಬಾರಿ ಭೇಟಿ ನೀಡಬೇಕು. ವಾಸಸ್ಥಳ ಬದಲಾಯಿಸಿರುವ ಮತದಾರರ ವಿವರಗಳನ್ನು ಸಮಗ್ರವಾಗಿ ಪರಿಶೀಲಿಸಿ, ನೈಜ ಮತದಾರರನ್ನು ತಪ್ಪಾಗಿ “ಕಾಣೆಯಾದ ಮತದಾರರು” ಎಂದು ವರ್ಗೀಕರಿಸುವುದನ್ನು ತಪ್ಪಿಸಬೇಕು ಎಂದು ಮನವಿಯಲ್ಲಿ ತಿಳಿಸಿದ್ದಾರೆ. ಮತದಾರರ ಪಟ್ಟಿಯಿಂದ ಹೆಸರು ಕೈಬಿಡುವ ನಮೂನೆ–7 ಅರ್ಜಿಗಳನ್ನು ಎಲ್ಲಾ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಮ್ಮುಖದಲ್ಲಿ ಸ್ವೀಕರಿಸಬೇಕು. ಅವುಗಳ ಬಗ್ಗೆ ಕಠಿಣ ಪರಿಶೀಲನೆ ನಡೆಸಬೇಕು. ಹಳೆಯ ಪಟ್ಟಿಗಳಲ್ಲಿರುವ ಹೆಸರು ಅಥವಾ ಪಿತೃನಾಮದ ದೋಷಗಳಿಗೆ ಮತದಾರರನ್ನು ಹೊಣೆಗಾರರನ್ನಾಗಿಸಬಾರದು ಹಾಗೂ “ತಾರ್ಕಿಕ ವೈಷಮ್ಯ” ಎಂಬ ನೆಪದಲ್ಲಿ ಕಿರುಕುಳ ನೀಡುವುದನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದ್ದಾರೆ. ಈ ಸಂದರ್ಭದಲ್ಲಿ ವೆಲ್ಫೇರ್ ಪಾರ್ಟಿ ಜಿಲ್ಲಾ ಅಧ್ಯಕ್ಷ ಸಲೀಮ್ ಚಿತ್ತಾಪುರಿ, ರಾಜ್ಯ ಕಾರ್ಯದರ್ಶಿ ಮುಬೀನ್ ಅಹಮದ್, ನಾಸಿರುದ್ದೀನ್, ರಿಜ್ವಾನ್ ಸಿದ್ದಿಕಿ, ಸಾದಿಕ್ ಪಟೇಲ್, ಹೈದರ್ ಅಲಿ ಬಗ್ಬನ್, ಮೌಲಾನಾ ಅಬ್ದುಲ್ ಹಮೀದ್ ಬಕ್ವಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ವಾರ್ತಾ ಭಾರತಿ 6 Apr 2026 9:18 pm

Raichur | ಎ.7ರಂದು ‘ಶಾಂತರಸರ ನೆನಪು’ ಕಾರ್ಯಕ್ರಮ

ರಾಯಚೂರು: ರಂಗಸಿರಿ ಸಾಂಸ್ಕೃತಿಕ ಕಲಾ ಬಳಗ ಹಾಗೂ ಸಂಸ ಥೀಯೇಟರ್ ಬೆಂಗಳೂರುಗಳ ಸಹಯೋಗದಲ್ಲಿ ಹಿರಿಯ ಸಾಹಿತಿ ದಿ. ‘ಶಾಂತರಸರ ನೆನಪು’ ಕಾರ್ಯಕ್ರಮವನ್ನು ಏಪ್ರಿಲ್ 7ರಂದು ನಗರದ ನವಯುಗ ಪದವಿ ಮಹಾವಿದ್ಯಾಲಯದಲ್ಲಿ ಆಯೋಜಿಸಲಾಗಿದೆ ಎಂದು ಬಳಗದ ಅಧ್ಯಕ್ಷ ರಂಗಸ್ವಾಮಿ ತಿಳಿಸಿದ್ದಾರೆ. ಸೋಮವಾರ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಯಕ್ರಮವನ್ನು ಏಮ್ಸ್ ಹೋರಾಟಗಾರ ಡಾ. ಬಸವರಾಜ ಕಳಸ ಉದ್ಘಾಟಿಸಲಿದ್ದು, ನವಯುಗ ಪದವಿ ಮಹಾವಿದ್ಯಾಲಯದ ಪ್ರಾಂಶುಪಾಲ ಈರಣ್ಣ ಪೂಜಾರಿ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು. ಹಿರಿಯ ಸಾಹಿತಿ ಬಾಬು ಬಂಡಾರಿಗಲ್ ಉಪನ್ಯಾಸ ನೀಡಲಿದ್ದು, ಮುಖ್ಯ ಅತಿಥಿಗಳಾಗಿ ಎಎಂಇ ಕಾಲೇಜಿನ ಕೋಶಾಧ್ಯಕ್ಷ ಭೀಮನಗೌಡ ಇಟಗಿ, ಸಾಹಿತಿ ಡಾ. ರಾಜಶ್ರೀ ಕಲ್ಲೂರಕರ್ ಹಾಗೂ ಆಕಾಶವಾಣಿ ಮುಖ್ಯಸ್ಥ ವೆಂಕಟೇಶ ಬೇವಿನಬೆಂಚಿ ಭಾಗವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಮಹಾದೇವ ಪಾಟೀಲ್, ಯಲ್ಲಪ್ಪ ಮರ್ಚಡ್, ಮಲ್ಲೇಶ ಭೈರವ್, ಅಭಿಷೇಕ ಬಳೆ ಮಸರಕಲ್, ಶಂಕುಸುತ ಮಹಾದೇವ, ನರಸಿಂಹಲು ವಡವಾಟಿ ಹಾಗೂ ಪೃಥ್ವಿರಾಜ್ ಅವರು ಗಜಲ್ ವಾಚನ ನಡೆಸಲಿದ್ದಾರೆ. ಈ ಸಂದರ್ಭದಲ್ಲಿ ರಂಗಪ್ಪ ಹಾಗೂ ಚಂದ್ರಶೇಖರ ಏಗನೂರು ಉಪಸ್ಥಿತರಿದ್ದರು.

ವಾರ್ತಾ ಭಾರತಿ 6 Apr 2026 9:11 pm

ತಾತ್ಕಾಲಿಕ ಕದನವಿರಾಮ ತಿರಸ್ಕರಿಸಿದ ಇರಾನ್: 45 ದಿನಗಳ ಕದನ ವಿರಾಮ ಪ್ರಸ್ತಾವನೆ ಮುಂದಿಟ್ಟ ಅಮೆರಿಕ

ದುಬೈ, ಎ. 6: ಹಾರ್ಮುಝ್ ಜಲಸಂಧಿಯನ್ನು ತೆರೆಯಲು ಅಮೆರಿಕ ನೀಡಿರುವ ಗಡುವು ಮುಕ್ತಾಯಗೊಳ್ಳಲು ಒಂದು ದಿನ ಬಾಕಿಯಿರುವಂತೆಯೇ, ಅಮೆರಿಕ ಮತ್ತು ಇರಾನ್ ಸೋಮವಾರ ತಮ್ಮ ಐದು ವಾರಗಳ ಸಶಸ್ತ್ರ ಸಂಘರ್ಷವನ್ನು ಕೊನೆಗೊಳಿಸುವ ಒಪ್ಪಂದದ ರೂಪುರೇಷೆಗಳನ್ನು ಪರಿಶೀಲಿಸಿವೆ. ಆದರೆ, ಜಲಸಂಧಿಯನ್ನು ಕ್ಷಿಪ್ರವಾಗಿ ತೆರೆಯಬೇಕೆಂಬ ಅಮೆರಿಕದ ಒತ್ತಡಕ್ಕೆ ಮಣಿಯಲು ಇರಾನ್ ನಿರಾಕರಿಸಿದೆ. ಯುದ್ಧವನ್ನು ಕೊನೆಗೊಳಿಸುವ ಕುರಿತ ಅಮೆರಿಕದ ಪ್ರಸ್ತಾವನೆಗೆ ಸಂಬಂಧಿಸಿ ತನ್ನ 10 ಅಂಶಗಳ ಉತ್ತರವನ್ನು ಪಾಕಿಸ್ತಾನದ ಮೂಲಕ ವಾಶಿಂಗ್ಟನ್‌ಗೆ ಕಳುಹಿಸಿರುವುದಾಗಿ ಇರಾನ್ ತಿಳಿಸಿದೆ. ಈ ಉತ್ತರದಲ್ಲಿ ಇರಾನ್ ತಾತ್ಕಾಲಿಕ ಕದನವಿರಾಮವೇರ್ಪಡುವುದನ್ನು ತಳ್ಳಿಹಾಕಿದೆ ಮತ್ತು ತನ್ನದೇ ನಿಬಂಧನೆಗಳಿಗೆ ಅನುಗುಣವಾಗಿ ಯುದ್ಧ ಕೊನೆಗೊಳ್ಳಬೇಕೆಂದು ಶರತ್ತು ಹಾಕಿದೆ. ಅಮೆರಿಕ ಹಾಗೂ ಇರಾನ್ ನಡುವೆ 45 ದಿನಗಳ ಕದನವಿರಾಮವನ್ನು ಏರ್ಪಡಿಸುವ ಕರಡು ಪ್ರಸ್ತಾವನೆಯನ್ನು ರಚಿಸಲಾಗಿದೆ. ಆದರೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಅದಕ್ಕೆ ಇನ್ನಷ್ಟೇ ಅನುಮೋದನೆ ನೀಡಬೇಕಾಗಿದೆ. ಅಲ್ಲಿಯವರೆಗೆ ಇರಾನ್ ವಿರುದ್ಧ ಸೇನಾಕ್ರಮಣ ‘ಅಪರೇಶನ್ ಎಪಿಕ್ ಫ್ಯೂರಿ’ ಮುಂದುವರಿಯಲಿದೆ ಎಂದು ಶ್ವೇತಭವನ ತಿಳಿಸಿದೆ. ಇರಾನ್ ಜೊತೆ ಕದನ ವಿರಾಮವನ್ನು ಏರ್ಪಡಿಸುವ ಪ್ರಸ್ತಾವದ ಕುರಿತು ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಕೇಳಲಾದ ಪ್ರಶ್ನೆಗೆ ಶ್ವೇತಭವನದ ಅಧಿಕಾರಿಯೊಬ್ಬರು ಹೀಗೆ ಉತ್ತರಿಸಿದ್ದಾರೆ. ಇಂಧನ ಹೊತ್ತ ಹಡಗುಗಳು ಹಾರ್ಮುಝ್ ಜಲಸಂಧಿಯ ಮೂಲಕ ಹಾದು ಹೋಗಲು ಅವಕಾಶ ನೀಡುವ ಒಪ್ಪಂದಕ್ಕೆ ಮಂಗಳವಾರ ಸಂಜೆಯ ಒಳಗೆ ಇರಾನ್ ಸಹಿ ಹಾಕದಿದ್ದರೆ ಟೆಹ್ರಾನ್‌ಗೆ ‘‘ನರಕ ದರ್ಶನ’’ ಮಾಡಿಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬೆದರಿಕೆ ಹಾಕಿದ್ದರು. ರವಿವಾರ ರಾತ್ರಿ ನಿರಂತರ ಮಾತುಕತೆಗಳ ಮೂಲಕ ಪಾಕಿಸ್ತಾನದ ಮಧ್ಯಸ್ಥಿಕೆಯಲ್ಲಿ ಈ ಒಪ್ಪಂದ ರೂಪುಗೊಂಡಿದೆ. ಈ ಒಪ್ಪಂದವು ತಕ್ಷಣ ಯುದ್ಧವಿರಾಮ ಜಾರಿಗೆ ಬರಬೇಕೆಂಬ ಪ್ರಸ್ತಾವವನ್ನು ಹೊಂದಿದೆ. ಯುದ್ಧವಿರಾಮದ ಬಳಿಕ, ಶಾಂತಿ ಒಪ್ಪಂದವೊಂದರ ಬಗ್ಗೆ ಮಾತುಕತೆಗಳು ನಡೆಯಬೇಕು ಹಾಗೂ ಈ ಮಾತುಕತೆಗಳು ಮುಂದಿನ 15- 20 ದಿನಗಳಲ್ಲಿ ಕೊನೆಗೊಳ್ಳಬೇಕು ಎಂಬುದಾಗಿಯೂ ಹಾಲಿ ಕರಡು ಒಪ್ಪಂದ ಹೇಳುತ್ತದೆ ಎಂದು ಮೂಲವೊಂದು ತಿಳಿಸಿದೆ ಎಂದು ‘ರಾಯ್ಟರ್ಸ್’ ಸುದ್ದಿಸಂಸ್ಥೆ ವರದಿ ಮಾಡಿದೆ. ಪಾಕಿಸ್ತಾನಿ ಸೇನೆಯ ಮುಖ್ಯಸ್ಥ ಫೀಲ್ಡ್ ಮಾರ್ಶಲ್ ಅಸೀಮ್ ಮುನೀರ್ ರಾತ್ರಿಯಿಡೀ ಅಮೆರಿಕದ ಉಪಾಧ್ಯಕ್ಷ ಜೆ.ಡಿ. ವಾನ್ಸ್, ವಿಶೇಷ ಪ್ರತಿನಿಧಿ ಸ್ಟೀವ್ ವಿಟ್ಕಾಫ್ ಮತ್ತು ಇರಾನ್ ವಿದೇಶ ಸಚಿವ ಅಬ್ಬಾಸ್ ಅರಾಕ್ಚಿ ಜೊತೆ ಸಂಪರ್ಕದಲ್ಲಿದ್ದರು ಎಂದು ಮೂಲ ಹೇಳಿದೆ. ಹಾರ್ಮುಝ್ ಜಲಸಂಧಿಯನ್ನು ಮಂಗಳವಾರದ ಒಳಗೆ ತೆರೆಯುವ ಒಪ್ಪಂದವೊಂದಕ್ಕೆ ಇರಾನ್ ಸಹಿ ಹಾಕದಿದ್ದರೆ ಆ ದೇಶದ ಇಂಧನ ಮತ್ತು ಸಾರಿಗೆ ಮೂಲಸೌಕರ್ಯಗಳ ಮೇಲೆ ದೊಡ್ಡ ಪ್ರಮಾಣದಲ್ಲಿ ದಾಳಿ ನಡೆಸಲಾಗುವುದು ಎಂಬುದಾಗಿ ‘ಟ್ರುತ್ ಸೋಶಿಯಲ್’ನಲ್ಲಿ ರವಿವಾರ ಹಾಕಿದ ಸಂದೇಶವೊಂದರಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬೆದರಿಕೆ ಹಾಕಿದ್ದರು. ತಡ ರವಿವಾರ ಹಾಕಿದ ಇನ್ನೊಂದು ಸಂದೇಶದಲ್ಲಿ ಟ್ರಂಪ್ ನಿಖರವಾದ ಗಡುವು ನೀಡಿದ್ದರು- ‘‘ಮಂಗಳವಾರ ರಾತ್ರಿ 8 ಗಂಟೆ ಈಸ್ಟರ್ನ್ ಟೈಮ್! (ಬುಧವಾರ 0000 ಜಿಎಮ್‌ಟಿ)- (ಭಾರತೀಯ ಕಾಲಮಾನ ಬುಧವಾರ ಮುಂಜಾನೆ 5:30)’’. ಇರಾನ್ ಹಿತಾಸಕ್ತಿಗೆ ಪೂರಕವಾದ ಶರತ್ತುಗಳು: ವಿದೇಶಾಂಗ ಸಚಿವಾಲಯ ಯುದ್ಧವಿರಾಮ ಒಪ್ಪಂದದ ಬಗ್ಗೆ ಇರಾನ್ ತನ್ನ ಹಿತಾಸಕ್ತಿಗಳನ್ನು ಗಮನದಲ್ಲಿಟ್ಟುಕೊಂಡು ತನ್ನ ನಿಲುವುಗಳನ್ನು ಸಿದ್ಧಪಡಿಸಿದೆ ಹಾಗೂ ಅವುಗಳನ್ನು ಮಧ್ಯವರ್ತಿಗಳ ಮೂಲಕ ಕಳುಹಿಸಿಕೊಡಲಾಗಿದೆ ಎಂದು ಇರಾನ್ ವಿದೇಶಾಂಗ ಸಚಿವಾಲಯ ಸೋಮವಾರ ತಿಳಿಸಿದೆ. ಒಪ್ಪಂದಕ್ಕಾಗಿ ತಾನು ಸಿದ್ಧಪಡಿಸಿರುವ ಷರತ್ತುಗಳ ವಿವರಗಳನ್ನು ಸೂಕ್ತ ಸಮಯದಲ್ಲಿ ಘೋಷಿಸಲಾಗುವುದು ಎಂದು ಸಚಿವಾಲಯದ ವಕ್ತಾರ ಇಸ್ಮಾಯೀಲ್ ಬಾಗೇಯಿ ತಿಳಿಸಿದರು. ಆದರೆ, ತಾನು ಕಳುಹಿಸಿರುವ ಯುದ್ಧವಿರಾಮ ಅಂಶಗಳಿಗೂ, ಗಡುವುಗಳು ಮತ್ತು ಯುದ್ಧಾಪರಾಧಗಳನ್ನು ನಡೆಸುವ ಬೆದರಿಕೆಗಳಿಗೂ ಸಂಬಂಧವಿಲ್ಲ’’ ಎಂದು ಅವರು ನುಡಿದರು. ‘‘ನ್ಯಾಯಸಮ್ಮತ ಎಂಬುದಾಗಿ ತಾನು ಭಾವಿಸುವ ಬೇಡಿಕೆಗಳನ್ನು ಸ್ಪಷ್ಟವಾಗಿ ಮುಂದಿಡಲು ಇರಾನ್ ಹಿಂಜರಿಯುವುದಿಲ್ಲ ಹಾಗೂ ಹಾಗೆ ಮಾಡುವುದನ್ನು ರಾಜಿಯ ಲಕ್ಷಣ ಎಂಬುದಾಗಿ ವ್ಯಾಖ್ಯಾನಿಸಬಾರದು. ಬದಲಾಗಿ, ತನ್ನ ನಿಲುವುಗಳ ಬಗ್ಗೆ ಅದು ಹೊಂದಿರುವ ಆತ್ಮವಿಶ್ವಾಸದ ಅಭಿವ್ಯಕ್ತಿ ಅದು ಎಂಬುದಾಗಿ ಭಾವಿಸಬೇಕು’’ ಎಂದು ಪತ್ರಿಕಾಗೋಷ್ಠಿಯೊಂದರಲ್ಲಿ ಮಾತನಾಡಿದ ವಕ್ತಾರರು ತಿಳಿಸಿದರು. 15 ಅಂಶಗಳ ಯೋಜನೆ ಮುಂತಾದ ಅಮೆರಿಕದ ಮೊದಲಿನ ಬೇಡಿಕೆಗಳನ್ನು ತಿರಿಸ್ಕರಿಸಲಾಗಿದೆ ಎಂದು ಅವರು ಹೇಳಿದರು.

ವಾರ್ತಾ ಭಾರತಿ 6 Apr 2026 9:10 pm

Raichur | ಸಿಎಚ್ ಪೌಡರ್ ಮಿಶ್ರಿತ ಶೇಂದಿ ಮಾರಾಟ: ಆರೋಪಿ ಬಂಧನ

ರಾಯಚೂರು: ಸಿ.ಎಚ್ ಪೌಡರ್ ಮಿಶ್ರಿತ ಶೇಂದಿ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಮಾರ್ಕೆಟ್ ಯಾರ್ಡ್ ಪೊಲೀಸರು ಬಂಧಿಸಿದ್ದಾರೆ. ಎ.5 ರಂದು ಬೆಳಿಗ್ಗೆ 8 ಗಂಟೆಗೆ ಗದ್ವಾಲ್ ರಸ್ತೆಯ ಎ. ಪಾಪರೆಡ್ಡಿ ಮಿಲ್ ಸಮೀಪ ಪೆಟ್ರೋಲಿಂಗ್ ವೇಳೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು, ಕೆಂಚಪ್ಪ (40) ಎಂಬ ನವಾಬಗಡ್ಡ ನಿವಾಸಿಯನ್ನು ವಶಕ್ಕೆ ಪಡೆದಿದ್ದಾರೆ. ಆರೋಪಿಯು ಸಿ.ಎಚ್ ಪೌಡರ್ ಮಿಶ್ರಿತ ಶೇಂದಿಯನ್ನು ಮಾರಾಟ ಮಾಡುತ್ತಿದ್ದನೆಂಬುದು ತನಿಖೆಯಲ್ಲಿ ಬಹಿರಂಗವಾಗಿದೆ. ಈ ಸಂಬಂಧ ಮಾರ್ಕೆಟ್ ಯಾರ್ಡ್ ಪೊಲೀಸ್ ಠಾಣೆಯಲ್ಲಿ ಗುನ್ನೆ ನಂ. 30/2026 ಅಡಿ ಬಿ.ಎನ್.ಎಸ್-2023ರ 275, 286, 123 ಹಾಗೂ ಕೆ.ಇ ಕಾಯ್ದೆಯ 32, 34ರಡಿ ಪ್ರಕರಣ ದಾಖಲಾಗಿದೆ. ಬಂಧಿತ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ವಾರ್ತಾ ಭಾರತಿ 6 Apr 2026 9:08 pm

Sirwar | ಡಾ.ಬಾಬು ಜಗಜೀವನ ರಾಮ್‌ರವರ 119ನೇ ಜಯಂತಿ ಆಚರಣೆ

ಸಮಸಮಾಜ ನಿರ್ಮಾಣದಲ್ಲಿ ಬಾಬೂಜಿ ಅವರ ಕೊಡುಗೆ ಅನನ್ಯ : ಅಬ್ರಹಾಂ ಹೊನ್ನಟಿಗಿ

ವಾರ್ತಾ ಭಾರತಿ 6 Apr 2026 9:05 pm

ಮಾದಕ ವಸ್ತು ಸೇವನೆ ಆರೋಪ: ಯುವಕ ಸೆರೆ

ಮಂಗಳೂರು, ಎ.6: ಮಾದಕ ವಸ್ತು ಸೇವನೆ ಮಾಡಿದ ಆರೋಪದ ಮೇಲೆ ಯುವಕನ ವಿರುದ್ದ ಕಾವೂರು ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ನಗರದ ಕುಂಟಿಕಾನದಲ್ಲಿರುವ ಬಾರ್‌ವೊಂದರ ಬಳಿ ಶನಿವಾರ ರಾತ್ರಿ 9ಕ್ಕೆ ಕಾಪಿಗುಡ್ಡೆಯ ವೇಣುಗೋಪಾಲ (21) ಎಂಬಾತ ಮಾದಕ ವಸ್ತು ಸೇವನೆ ಮಾಡುತ್ತಿರುವ ಬಗ್ಗೆ ಮಾಹಿತಿ ಪಡೆದು ಸ್ಥಳಕ್ಕೆ ತೆರಳಿ ವಿಚಾರಿಸಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ ಮಾದಕ ವಸ್ತು ಸೇವನೆ ಮಾಡಿರುವುದು ದೃಢಪಟ್ಟಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ವಾರ್ತಾ ಭಾರತಿ 6 Apr 2026 9:04 pm

ಬೆಳ್ತಂಗಡಿ : ಕಾಂತಾರ ಖ್ಯಾತಿಯ ರಿಷಬ್ ಶೆಟ್ಟಿ ಧರ್ಮಸ್ಥಳಕ್ಕೆ ಭೇಟಿ

ಬೆಳ್ತಂಗಡಿ : ಕನ್ನಡ ಚಿತ್ರರಂಗದ ಖ್ಯಾತ ನಟ ಹಾಗೂ ಕಾಂತಾರ ಚಿತ್ರದ ಮೂಲಕ ಜನಪ್ರಿಯತೆ ಗಳಿಸಿರುವ ಡಿವೈನ್‌ಸ್ಟಾರ್ ರಿಷಬ್ ಶೆಟ್ಟಿ, ದಂಪತಿ ಸಮೇತ ಸೋಮವಾರ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿದರು. ಬಳಿಕ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರನ್ನು ಭೇಟಿ ಮಾಡಿದರು. ಈ ಸಂದರ್ಭದಲ್ಲಿ ಎಸ್.ಡಿ.ಎಮ್ ಶಿಕ್ಷಣ ಸಂಸ್ಥೆಗಳ ಉಪಾಧ್ಯಕ್ಷರಾದ ಡಿ. ಸುರೇಂದ್ರ ಕುಮಾರ್, ಬೆಂಗಳೂರು ಕ್ಷೇಮವನದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರದ್ಧಾ ಅಮಿತ್, ಆರ್ಯಮನ್ ಹಾಗೂ ಕಿಯಾಂಶ್ ಉಪಸ್ಥಿತರಿದ್ದರು. ನಂತರ ರಿಷಬ್ ಶೆಟ್ಟಿ ಹಾಗೂ ಅವರ ಕುಟುಂಬಸ್ಥರಿಂದ ರಂಗಪೂಜೆ ಸೇವೆ ನೆರವೇರಿತು.

ವಾರ್ತಾ ಭಾರತಿ 6 Apr 2026 9:02 pm

Bidar | ಕಲಾವಿದರನ್ನು ಸಲಹುವ ಹಾರಕೂಡ ಶ್ರೀಮಠ : ಸಿದ್ದಬಸವ ಕಬೀರ ಸ್ವಾಮಿ

ಬೀದರ್ : ಕವಿ, ಕಲಾವಿದ ಮತ್ತು ಸಾಹಿತಿಗಳಿಗೆ ಸೂಕ್ತ ಹಾಗೂ ಶ್ರೇಷ್ಠ ಅವಕಾಶಗಳನ್ನು ಕಲ್ಪಿಸುವ ಮೂಲಕ ಹಾರಕೂಡ ಶ್ರೀಮಠವು ವಿಶಿಷ್ಟ ಸೇವೆ ಸಲ್ಲಿಸುತ್ತಿದೆ ಎಂದು ಸಿದ್ದಬಸವ ಕಬೀರ ಸ್ವಾಮಿಗಳು ಹೇಳಿದರು. ಬಸವಕಲ್ಯಾಣ ತಾಲೂಕಿನ ಹಾರಕೂಡ ಶ್ರೀಮಠದಲ್ಲಿ ಸೋಮವಾರ ಬೆಳಗ್ಗೆ ನಡೆದ ಧಾರ್ಮಿಕ ಸಭೆಗೆ ನೇತೃತ್ವ ವಹಿಸಿ ಅವರು ಮಾತನಾಡಿದರು. ಹಾರಕೂಡ ಮಠವು ಅಭಿನವ ಅನುಭವ ಮಂಟಪದಂತಿದ್ದು, ಇಲ್ಲಿ ಎಲ್ಲಾ ಜಾತಿ–ಧರ್ಮಗಳ ಜನರು ಒಂದಾಗಿ ಬೆರೆತು ಸೌಹಾರ್ದದಿಂದ ಜೀವನ ನಡೆಸುವ ಮೌಲ್ಯಗಳು ಬೆಳೆಯುತ್ತಿವೆ. ಸರ್ವಧರ್ಮ ಸಮನ್ವಯದ ಸುಂದರ ತಾಣವಾಗಿ ಮಠವು ಬೆಳೆಯುತ್ತಿದೆ ಎಂದು ಅವರು ಅಭಿಪ್ರಾಯಪಟ್ಟರು. ಡಾ. ಚನ್ನವೀರ ಶಿವಾಚಾರ್ಯರು ಬಸವಣ್ಣ ಹಾಗೂ ಬಸವಾದಿ ಶರಣರ ಚಿಂತನೆಗಳನ್ನು ಅಂತರಂಗದಲ್ಲಿ ಅಳವಡಿಸಿಕೊಂಡು, ಬಸವ ತತ್ವವನ್ನು ಸಮಾಜಕ್ಕೆ ಪರಿಣಾಮಕಾರಿಯಾಗಿ ತಲುಪಿಸುತ್ತಿರುವ ಆದರ್ಶ ಶಿವಾಚಾರ್ಯರಾಗಿದ್ದಾರೆ. ಇಂತಹ ಮಹಾನ್ ಯತಿವರ್ಯರನ್ನು ಪಡೆದ ಈ ನೆಲ ಧನ್ಯವಾಗಿದೆ ಎಂದು ಅವರು ಹೇಳಿದರು. ಹಾರಕೂಡ ಮಠಕ್ಕೆ ಭೇಟಿ ನೀಡಿದ್ದು ಹಾಗೂ ಚನ್ನವೀರ ಶಿವಾಚಾರ್ಯರ ದರ್ಶನ ಆಶೀರ್ವಾದ ಪಡೆದಿದ್ದು ತನ್ನಲ್ಲಿ ಹೊಸ ಆಧ್ಯಾತ್ಮಿಕ ಚೈತನ್ಯ ಮೂಡಿಸಿದೆ ಎಂದು ಅವರು ಸಂತೋಷ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ಹಾರಕೂಡ ಶ್ರೀಮಠದ ಪೀಠಾಧಿಪತಿ ಡಾ. ಚನ್ನವೀರ ಶಿವಾಚಾರ್ಯರು ಸಾನಿಧ್ಯ ವಹಿಸಿದ್ದರು. ಬಸವಕಲ್ಯಾಣ ದೇವಸ್ಥಾನ ಪಂಚಕಮಿಟಿ (ಬಿಡಿಪಿಸಿ)ಯ ಆಡಳಿತ ಮಂಡಳಿಯ ಅಧ್ಯಕ್ಷ ಅನೀಲಕುಮಾರ್ ರಗಟೆ, ಉಪಾಧ್ಯಕ್ಷ ಮಲ್ಲಿಕಾರ್ಜುನ್ ಕುರಕೋಟೆ, ಕೋಶಾಧ್ಯಕ್ಷ ಜಗನ್ನಾಥ್ ಖೂಬಾ, ಕಾರ್ಯದರ್ಶಿಗಳಾದ ಅಶೋಕ್ ನಾಗರಾಳೆ, ಎಪಿಎಂಸಿ ಮಾಜಿ ಅಧ್ಯಕ್ಷ ಸಿದ್ರಾಮಪ್ಪ ಗುದಗೆ, ಬಿಡಿಪಿಸಿ ಸಹಕಾರದರ್ಶಿ ಬಸವರಾಜ್ ಬಾಲಕೀಲೆ, ಸುನೀಲ್ ರಾಯವಾಡೆ, ನಿರ್ದೇಶಕರಾದ ಬಸವರಾಜ್ ಕೋರಕೆ, ಇರಣ್ಣಾ ಹಲಶೆಟ್ಟೆ, ಭದ್ರಿನಾಥ್ ಪಾಟೀಲ್, ವಿವೇಕಾನಂದ್ ಹೊದಲೂರೆ, ಬಸವರಾಜ್ ತೊಂಡಾರೆ, ಮಲ್ಲಿಕಾರ್ಜುನ್ ಚಿರಡೆ, ಸುನೀಲಕುಮಾರ್ ಹೊಳಕುಂದೆ, ರಾಜಕುಮಾರ ಹೊಳಕುಂದೆ ಹಾಗೂ ಪುಷ್ಪಾವತಿ ಸೇರಿದಂತೆ ಅನೇಕರು ಭಾಗವಹಿಸಿದ್ದರು. ಮಲ್ಲಿನಾಥ್ ಹಿರೇಮಠ್ ಸ್ವಾಗತಿಸಿದರು. ಕಾರ್ತಿಕ್ ಸ್ವಾಮಿ ಯಲದಗುಂಡಿ, ಶರಣಪ್ಪ ಜಮಾದಾರ್ ಸಂಗೀತ ಸೇವೆ ಸಲ್ಲಿಸಿದರು. ಭಕ್ತ ಕುಂಬಾರ್ ನಿರೂಪಿಸಿದರು.

ವಾರ್ತಾ ಭಾರತಿ 6 Apr 2026 9:01 pm

ಯಡಿಯೂರಪ್ಪ ಭ್ರಷ್ಟಾಚಾರದ ಬಗ್ಗೆ ಯತ್ನಾಳ್-ವಿಶ್ವನಾಥ್ ಬಹಿರಂಗವಾಗಿ ಹೇಳಿದ್ದಾರೆ : ಸಿಎಂ ಸಿದ್ದರಾಮಯ್ಯ

ಬಾಗಲಕೋಟೆ : ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಭ್ರಷ್ಟಾಚಾರದ ಬಗ್ಗೆ ಅವರದೇ ಪಕ್ಷದ ಉಚ್ಛಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮತ್ತು ವಿಧಾನಪರಿಷತ್ ಸದಸ್ಯ ಎಚ್.ವಿಶ್ವನಾಥ್ ಬಹಿರಂಗವಾಗಿ ಹೇಳಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿರುಗೇಟು ನೀಡಿದರು. ಸಿದ್ದರಾಮಯ್ಯ ವಿಶ್ವಾಸದ್ರೋಹಿ ಎಂದು ಯಡಿಯೂರಪ್ಪ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಸೋಮವಾರ ನಗರದ ಹೆಲಿಪ್ಯಾಡ್‍ನಲ್ಲಿ ಮಾಧ್ಯಮ ಪ್ರತಿನಿಧಿಗಳು ಕೇಳಿದ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಅವರು, ನಾನು ಯಾರಿಗೆ ವಿಶ್ವಾಸದ್ರೋಹ ಮಾಡಿದ್ದೇನೆ ಎನ್ನುವುದನ್ನು ಉಲ್ಲೇಖಿಸಿ ಯಡಿಯೂರಪ್ಪ ಆರೋಪ ಮಾಡಬೇಕು. ಅರಳು ಮರಳು ಯಡಿಯೂರಪ್ಪ ಆಧಾರ ಸಹಿತವಾಗಿ ಮಾತನಾಡಬೇಕು ಎಂದರು. ತಮ್ಮ ಜಾತಿಯ ಅಭ್ಯರ್ಥಿ ಆದ ಕಾರಣ ಸಿದ್ದರಾಮಯ್ಯ ಬಾಗಲಕೋಟೆಯಲ್ಲಿ ಠಿಕಾಣಿ ಹೂಡಿದ್ದಾರೆ ಎನ್ನುವ ಯಡಿಯೂರಪ್ಪ ಆರೋಪದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿ, ದಾವಣಗೆರೆ ದಕ್ಷಿಣದಲ್ಲಿ ನಮ್ಮ ಅಭ್ಯರ್ಥಿ ಸಮರ್ಥ್ ಶಾಮನೂರು ಪರವಾಗಿ ಅಲ್ಲೆ ಠಿಕಾಣಿ ಹೂಡಿ ಪ್ರಚಾರ ಮಾಡಿದ್ದೇನೆ. ಅವರು ಯಾವ ಜಾತಿ ?. ನಾವು ಜಾತಿ ಕಾರಣಕ್ಕೆ ಪ್ರಚಾರ ಮಾಡುವುದಿಲ್ಲ. ಪಕ್ಷದ ಅಭ್ಯರ್ಥಿ ಪರವಾಗಿ ಪ್ರಚಾರ ಮಾಡುತ್ತೇವೆ ಎಂದರು. ಉಪ ಚುನಾವಣೆ ನಡೆಯುತ್ತಿರುವ ಬಾಗಲಕೋಟೆ ಹಾಗೂ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳಿಗೆ ನಮ್ಮ ನಿರೀಕ್ಷೆಗೂ ಮೀರಿ ಬೆಂಬಲ ವ್ಯಕ್ತವಾಗುತ್ತಿದೆ. ಎರಡೂ ಕ್ಷೇತ್ರಗಳಲ್ಲಿ ನಾವು ಗೆಲುವು ಸಾಧಿಸುತ್ತೇವೆ ಎಂದು ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದರು. ತಮ್ಮ ವಿರುದ್ಧ ಮಾಜಿ ಸಂಸದ ಪ್ರತಾಪ್ ಸಿಂಹ ಆಕ್ಷೇಪಾರ್ಹ ಪದ ಬಳಕೆ ಮಾಡಿರುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಅದು ಅವರ ಸಂಸ್ಕೃತಿಯನ್ನು ತೋರಿಸುತ್ತದೆ ಎಂದು ತಿರುಗೇಟು ನೀಡಿದರು.  

ವಾರ್ತಾ ಭಾರತಿ 6 Apr 2026 8:59 pm

Bidar | ಇಕೋ ವ್ಯಾನ್ ಹರಿದು 7 ವರ್ಷದ ಬಾಲಕ ಮೃತ್ಯು

ಬೀದರ್: ನಗರದ ಮಂಡಲ್ ಪ್ರದೇಶದ ಬಳಿ ಖಾಸಗಿ ಹೋಟೆಲ್‌ಗೆ ಸೇರಿದ ಇಕೋ ವ್ಯಾನ್‌ ಒಂದು ರಸ್ತೆ ದಾಟುತ್ತಿದ್ದ ಬಾಲಕನ ಮೇಲೆ ಹರಿದು 7 ವರ್ಷದ ಬಾಲಕ ಮೃತಪಟ್ಟರುವ ಘಟನೆ ನಡೆದಿದೆ. ಮೃತ ಬಾಲಕನನ್ನು ರುದ್ರಾ ಉಪಾಧ್ಯೆ (7) ಎಂದು ಗುರುತಿಸಲಾಗಿದೆ. ವಾಹನದ ಚಾಲಕ ಅತಿವೇಗದಲ್ಲಿ ವಾಹನ ಚಲಾಯಿಸಿ, ರಸ್ತೆ ದಾಟುತ್ತಿದ್ದ ಮಗುವಿನ ಮೇಲೆ ವ್ಯಾನ್ ಹತ್ತಿಸಿದ್ದಾನೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಮೃತ ಮಗುವಿನ ದೇಹವನ್ನು ಬ್ರಿಮ್ಸ್ ಆಸ್ಪತ್ರೆಗೆ ರವಾನಿಸಿಸಲಾಗಿದೆ. ಈ ಘಟನೆಗೆ ಆಕ್ರೋಶಗೊಂಡ ಮೃತ ಬಾಲಕನ ಸಂಬಂಧಿಕರು ಹಾಗೂ ಸ್ಥಳೀಯರು, ಸಂಬಂಧಿತ ಖಾಸಗಿ ಹೋಟೆಲ್ ಮುಂಭಾಗದಲ್ಲಿ ಜಮಾಯಿಸಿ ತೀವ್ರ ಪ್ರತಿಭಟನೆ ನಡೆಸಿದರು. ಪರಿಸ್ಥಿತಿ ಉದ್ವಿಗ್ನವಾಗುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಜನರನ್ನು ಚದುರಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದರು.

ವಾರ್ತಾ ಭಾರತಿ 6 Apr 2026 8:59 pm

Delimitation : 'ಉತ್ತರ ಭಾರತೀಯರು ವೋಟ್ ಹಾಕಲ್ಲಾಂತ ಕಾಂಗ್ರೆಸ್ ಒಪ್ಪಿಕೊಂಡಂತಿದೆ' - ಬಿಜೆಪಿ ವ್ಯಂಗ್ಯ

Union Government Delimitation Exercise : ಕ್ಷೇತ್ರ ಪುನರ್ ವಿಂಗಡಣೆ ವಿಚಾರದಲ್ಲಿ ಕಾಂಗ್ರೆಸ್ ವಿನಾ ಕಾರಣ ತಗಾದೆ ಎತ್ತುತ್ತಿದೆ. ಇವರ ಹೇಳಿಕೆಯನ್ನು ನೋಡಿದರೆ, ಉತ್ತರ ಭಾರತದಲ್ಲಿ ಇವರಿಗೆ ಗೆಲ್ಲಬೇಕೆಂದು ಇಲ್ಲವೇ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಪ್ರಶ್ನಿಸಿದ್ದಾರೆ. 2008ರಲ್ಲಿ ಕ್ಷೇತ್ರ ಪುನರ್ ವಿಂಗಡಣೆಯಾದಾಗ, ಕೇಂದ್ರದಲ್ಲಿ ಮನಮೋಹನ್ ಸಿಂಗ್ ಸರ್ಕಾರ ಇದ್ದಿದ್ದು, ಆ ವೇಳೆ, ಪ್ರಮಾದ ಆಗಿದ್ದರೆ, ಯಾಕೆ ಸರಿಪಡಿಸಲಿಲ್ಲ ಎಂದು ಜೋಶಿ ಪ್ರಶ್ನಿಸಿದ್ದಾರೆ.

ವಿಜಯ ಕರ್ನಾಟಕ 6 Apr 2026 8:58 pm

ಆರ್‌ಸಿಬಿ ಸ್ಟಾರ್ ಟಿಮ್ ಡೇವಿಡ್ ಅಬ್ಬರದ ಹಿಂದಿದೆ ದಿನೇಶ್ ಕಾರ್ತಿಕ್ ಕೈವಾಡ: ಸ್ಫೋಟಕ ಮಾಹಿತಿ ರಿವೀಲ್

IPL 2026 RCB: ಎಂ.ಚಿನ್ನಸ್ವಾಮಿಯಲ್ಲಿ ನಡೆದ ಸಿಎಸ್‌ಕೆ ವಿರುದ್ಧದ ಪಂದ್ಯದಲ್ಲಿ ಆರ್‌ಸಿಬಿ ಪರ ಟಿಮ್ ಡೇವಿಡ್ ಸ್ಫೋಟಕ ಇನ್ನಿಂಗ್ಸ್‌ ಆಡಿ ತಂಡದ ಗೆಲವಿಗೆ ಪ್ರಮುಖ ಪಾತ್ರವಹಿಸಿದರು. ಪಂದ್ಯದ ನಂತರ ಮಾತನಾಡಿದ ಅವರು ತಮ್ಮ ಅದ್ಭುತ ಬ್ಯಾಟಿಂಗ್ ಪ್ರದರ್ಶನಕ್ಕೆ ಕಾರಣ ಯಾರೆಂದು ಬಹಿರಂಗಬಪಡಿಸಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಕೇವಲ 25 ಎಸೆತಗಳಲ್ಲಿ 70 ರನ್ ಚಚ್ಚಿ

ಒನ್ ಇ೦ಡಿಯ 6 Apr 2026 8:57 pm

ಜೆಇಇ ಪರೀಕ್ಷೆಯಲ್ಲಿ ಪ್ರಶ್ನೆ ಪತ್ರಿಕೆಯ ಫೋಟೋ ತೆಗೆದ ವಿದ್ಯಾರ್ಥಿ: ಪ್ರಕರಣ ದಾಖಲು

ಮಣಿಪಾಲ, ಎ.6: ಜೆ.ಇ.ಇ ಮೈನ್ಸ್ ಪರೀಕ್ಷೆಯಲ್ಲಿ ವಿದ್ಯಾರ್ಥಿಯೊಬ್ಬ ಪ್ರಶ್ನೆ ಪತ್ರಿಕೆಯನ್ನು ಮೊಬೈಲ್‌ನಲ್ಲಿ ಫೋಟೋ ತೆಗೆದು ಪ್ರಸಾರ ಮಾಡಲು ಯತ್ನಿಸಿರುವುದಾಗಿ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಣಿಪಾಲ ಟಿಎಂಎ ಪೈ ಪಾಲಿಟೆಕ್ನಿಕ್ ಕಾಲೇಜಿನಲ್ಲಿರುವ ಪರೀಕ್ಷಾ ಕೇಂದ್ರದಲ್ಲಿ ಎ.5ರಂದು ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯಿಂದ ನಡೆಸುವ ಜೆ.ಇ.ಇ ಮೈನ್ಸ್ ಪರೀಕ್ಷೆ ನಡೆದಿದ್ದು, ಪರೀಕ್ಷೆಯನ್ನು ಬೆಳಿಗ್ಗೆ ಮತ್ತು ಮಧ್ಯಾಹ್ನ ಎರಡು ಅವಧಿಯಲ್ಲಿ ನಡೆಸಲಾಗಿತ್ತು. ಬೆಳಿಗ್ಗೆ ಸುಮಾರು 149 ಮಕ್ಕಳು ಮಧ್ಯಾಹ್ನ 133 ಮಕ್ಕಳು ಪರೀಕ್ಷೆಗೆ ಹಾಜರಾಗಿದ್ದರು. ಮಧ್ಯಾಹ್ನ 3 ಗಂಟೆಯಿಂದ ಪರೀಕ್ಷೆ ಪ್ರಾರಂಭವಾಗಿದ್ದು, ಪರೀಕ್ಷೆಗೆ ಒಳಗೆ ಬರುವ ವಿದ್ಯಾರ್ಥಿಗಳಿಗೆ ವಿಳಾಸದ ಮಾಹಿತಿ ಬಗ್ಗೆ ಮೂಲ ಆಧಾರ್ ಕಾರ್ಡ್ ಅಥವಾ ಪಾನ್ ಕಾರ್ಡ್ ಹಾಗೂ ಪರೀಕ್ಷೆಯ ಹಾಲ್ ಟಿಕೇಟ್ ತೆಗೆದುಕೊಂಡು ಬರಲು ಅನುಮತಿ ಇರುತ್ತದೆ. ಆದರೆ ಪರೀಕ್ಷಾ ಕೇಂದ್ರಕ್ಕೆ ಪರೀಕ್ಷೆ ಬರೆಯಲು ಬಂದ ಉತ್ತರಖಂಡದ ವಿದ್ಯಾರ್ಥಿ ಅರೀದಮಾನ್ ಸಿಂಗ್ ಸಾಂಗ್ ಪರೀಕ್ಷೆಯ ಸಮಯ ಪರೀಕ್ಷಾ ಹಾಲ್‌ನಲ್ಲಿ ಕಂಪ್ಯೂಟರ್ ಸಿಸ್ಟಮ್‌ನಲ್ಲಿರುವ ಪ್ರಶ್ನೆ ಪತ್ರಿಕೆಯನ್ನು ಆತನ ಮೊಬೈಲಿನಿಂದ ಸಂಪೂರ್ಣ ಪೋಟೋ ತೆಗೆದು ಅದನ್ನು ಹೊರಗಡೆ ಕಳುಹಿಸಿ ಪ್ರಸಾರ ಮಾಡಲು ಯತ್ನಿಸಿದ್ದಾನೆ ಎಂದು ಪರೀಕ್ಷಾ ಕೇಂದ್ರದ ಪರಿವೀಕ್ಷಕ ವಿ.ಕೆ ಮನೋಹರ್ ಕುಮಾರ್ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.

ವಾರ್ತಾ ಭಾರತಿ 6 Apr 2026 8:54 pm

ಇರಾನ್‍ನ ಅತಿ ದೊಡ್ಡ ಪೆಟ್ರೊಕೆಮಿಕಲ್ಸ್ ಸೌಲಭ್ಯದ ಮೇಲೆ ಇಸ್ರೇಲ್ ದಾಳಿ: ವರದಿ

ಜೆರುಸಲೇಂ, ಎ.6: ಇರಾನ್‍ನ ಅತೀ ದೊಡ್ಡ ಪೆಟ್ರೋಲಿಯಂ ಸಂಕೀರ್ಣದ ಮೇಲೆ ಬಲವಾದ ದಾಳಿ ನಡೆಸಿರುವುದಾಗಿ ಇಸ್ರೇಲ್‍ನ ರಕ್ಷಣಾ ಸಚಿವ ಇಸ್ರೇಲ್ ಕಾಟ್ಝ್‌ ಸೋಮವಾರ ಹೇಳಿದ್ದಾರೆ. ಪೆಟ್ರೋಲಿಯಂ ಸೌಲಭ್ಯದ ಬಳಿ ಹಲವು ಸ್ಫೋಟಗಳು ನಡೆದಿರುವುದಾಗಿ ಇರಾನ್‍ ಮಾಧ್ಯಮಗಳು ವರದಿ ಮಾಡಿವೆ. ಬುಶೆಹ್ರ್ ಪ್ರಾಂತದ ಅಸಲುಯೆಹ್ ನಗರದಲ್ಲಿರುವ, ಇರಾನ್‍ನ 50%ದಷ್ಟು ಪೆಟ್ರೋಕೆಮಿಕಲ್ಸ್ ಉತ್ಪಾದಿಸುವ ಅತೀ ದೊಡ್ಡ ಪೆಟ್ರೋಕೆಮಿಕಲ್ ಸೌಲಭ್ಯದ ಮೇಲೆ ದಾಳಿ ನಡೆಸಲಾಗಿದೆ. ಶನಿವಾರ ನೈಋತ್ಯ ಖುಜೆಸ್ತಾನ್ ಪ್ರಾಂತದ ಮಹಶಹರ್ ಪೆಟ್ರೋಕೆಮಿಕಲ್ ವಿಶೇಷ ವಲಯದ ಮೇಲೆ ಇಸ್ರೇಲ್ ಇದೇ ರೀತಿಯ ದಾಳಿಯನ್ನು ನಡೆಸಿತ್ತು. ಇರಾನ್‍ನ 85%ದಷ್ಟು ಪೆಟ್ರೊಕೆಮಿಕಲ್ ರಫ್ತುಗಳನ್ನು ಹೊಂದಿರುವ ಎರಡೂ ಸೌಲಭ್ಯಗಳನ್ನು ನಿಷ್ಕ್ರಿಯಗೊಳಿಸಲಾಗಿದ್ದು ಇರಾನ್‍ಗೆ ತೀವ್ರ ಆರ್ಥಿಕ ಆಘಾತ ನೀಡಲಾಗಿದೆ' ಎಂದು ಕಾಟ್ಝ್‌ ಪ್ರತಿಪಾದಿಸಿದ್ದಾರೆ.

ವಾರ್ತಾ ಭಾರತಿ 6 Apr 2026 8:54 pm

ವಾಯವ್ಯ ಪಾಕಿಸ್ತಾನದಲ್ಲಿ ಸರಕಾರಿ ಕಚೇರಿ ಮೇಲೆ ದಾಳಿ: ಇಬ್ಬರು ಮೃತ್ಯು

ಪೇಷಾವರ, ಎ.6: ವಾಯವ್ಯ ಪಾಕಿಸ್ತಾನದ ಖೈಬರ್ ಪಖ್ತೂಂಕ್ವ ಪ್ರಾಂತದಲ್ಲಿ ತೆಹ್ರೀಕೆ ತಾಲಿಬಾನ್ ಪಾಕಿಸ್ತಾನ್(ಟಿಟಿಪಿ)ಗೆ ಸಂಯೋಜನೆಗೊಂಡಿರುವ ಭಯೋತ್ಪಾದಕರು ಸರಕಾರಿ ಕಚೇರಿ ಮೇಲೆ ದಾಳಿ ನಡೆಸಿದ್ದು ಪೊಲೀಸ್ ಕಾನ್‍ಸ್ಟೆಬಲ್ ಮತ್ತು ಭದ್ರತಾ ಸಿಬ್ಬಂದಿ ಮೃತಪಟ್ಟಿದ್ದಾರೆ. ಇತರ ಹಲವರು ಗಾಯಗೊಂಡಿರುವುದಾಗಿ ವರದಿಯಾಗಿದೆ. ಬನ್ನು ಜಿಲ್ಲೆಯಲ್ಲಿರುವ ರಾಷ್ಟ್ರೀಯ ಅಂಕಿಅಂಶ ಮತ್ತು ನೋಂದಣಿ ಪ್ರಾಧಿಕಾರದ ಕಚೇರಿಯ ಮೇಲೆ ದಾಳಿ ನಡೆಸಲಾಗಿದೆ. ದಾಳಿಯ ಬಳಿಕ ಭಯೋತ್ಪಾದಕರು ಮತ್ತು ಭದ್ರತಾ ಸಿಬ್ಬಂದಿ ನಡುವೆ ಗುಂಡಿನ ಚಕಮಕಿ ನಡೆದಿದ್ದು ಪೊಲೀಸ್ ಕಾನ್‍ಸ್ಟೆಬಲ್ ಮತ್ತು ಭದ್ರತಾ ಸಿಬ್ಬಂದಿ ಮೃತಪಟ್ಟಿದ್ದಾರೆ. ಇತರ ಹಲವರು ಗಾಯಗೊಂಡಿದ್ದು ಸಾವಿನ ಸಂಖ್ಯೆ ಹೆಚ್ಚುವ ಸಾಧ್ಯತೆಯಿದೆ ಎಂದು ಉನ್ನತ ಗುಪ್ತಚರ ಮೂಲಗಳನ್ನು ಉಲ್ಲೇಖಿಸಿ ಸಿಎನ್‍ಎನ್ ವರದಿ ಮಾಡಿದೆ.

ವಾರ್ತಾ ಭಾರತಿ 6 Apr 2026 8:51 pm

ವಿದ್ಯುತ್ ಶಾರ್ಟ್ ಸಕ್ಯೂರ್ಟ್: ಮನೆ ಸಂಪೂರ್ಣ ಸುಟ್ಟು ಭಸ್ಮ

ಕುಂದಾಪುರ, ಎ.6: ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಹೊತ್ತಿಕೊಂಡು ಇಡೀ ಮನೆ ಸುಟ್ಟು ಕರಕಲಾದ ಘಟನೆ ಶನಿವಾರ ತಡರಾತ್ರಿ ಕರ್ಕುಂಜೆ ಗ್ರಾಮದ ನೇರಳಕಟ್ಟೆ ಸಮೀಪದ ಹಂದಕುಂದ ಎಂಬಲ್ಲಿ ನಡೆದಿದೆ. ಹಂದಕುಂದ ಅರೆಕಲ್ಲು ಮನೆಯ ಗಣಪು ಶೆಡ್ತಿ ಎಂಬವರು ತನ್ನ ಮೊಮ್ಮಗ ನೊಂದಿಗೆ ಮನೆಯ ಹತ್ತಿರದ ಭಜನಾ ಕಾರ್ಯಕ್ರಮಕ್ಕಾಗಿ ಮನೆಗೆ ಬೀಗ ಹಾಕಿ ತೆರಳಿದ್ದರು. ರಾತ್ರಿ 12 ಗಂಟೆ ನಂತರ ಮನೆಯಲ್ಲಿನ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಕಾಣಿಸಿಕೊಂಡಿದೆ ಎನ್ನಲಾಗಿದೆ. ನಸುಕಿನ ವೇಳೆ 2 ಗಂಟೆಯ ಸುಮಾರಿಗೆ ಮನೆಯ ಹತ್ತಿರದ ದಾರಿಯಲ್ಲಿ ಹೋಗುತ್ತಿದ್ದವ ವ್ಯಕ್ತಿಯೊಬ್ಬರು ಇದನ್ನು ಗಮನಿಸಿ, ಎಲ್ಲರಿಗೂ ಮಾಹಿತಿ ನೀಡಿದ್ದಾರೆ. ಆದರೆ ಅದಾಗಲೇ ಬೆಂಕಿಯ ಕೆನ್ನಾಲಿಗೆ ಇಡೀ ಮನೆಗೆ ವ್ಯಾಪ್ತಿದ್ದು, ಮನೆಯ ಮಾಡು, ಗೋಡೆಗಳಿಗೆ ಹಾನಿಯಾಗಿದೆ. ಮನೆ ಒಳಗಿದ್ದ ಚಿನ್ನಾಭರಣ, ನಗದು, ಟಿವಿ, ಇನ್ನಿತರ ಎಲೆಕ್ಟ್ರಾನಿಕ್ ವಸ್ತುಗಳು, ಬಟ್ಟೆ, ಬರೆ, ಪಾತ್ರೆಗಳೆಲ್ಲವೂ ಸುಟ್ಟು ಕರಕರಲಾಗಿದೆ. ಇದರಿಂದ ಸುಮಾರು 5 ಲಕ್ಷ ರೂ. ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ. ಬಳಿಕ ಕುಂದಾಪುರದ ಅಗ್ನಿ ಶಾಮಕ ದಳದ ತಂಡದವರು, ಸ್ಥಳೀಯರೆಲ್ಲ ಸೇರಿ, ಬೆಂಕಿ ನಂದಿಸುವ ಮೂಲಕ ಹತ್ತಿರದಲ್ಲಿದ್ದ ದನದ ಕೊಟ್ಟಿಗೆಗೆ ಬೆಂಕಿ ಹರಡವುದನ್ನು ತಪ್ಪಿಸಿದ್ದಾರೆ.

ವಾರ್ತಾ ಭಾರತಿ 6 Apr 2026 8:51 pm

Ballari | ಸಂಡೂರಿನಲ್ಲಿ EMTT ತರಬೇತಿ ಕಾರ್ಯಾಗಾರ ಆರಂಭ: ಶಿಕ್ಷಕರಿಗೆ ದ್ವಿಭಾಷಾ ಬೋಧನೆಗೆ ಕೌಶಲ್ಯಾಭಿವೃದ್ಧಿ

ಬಳ್ಳಾರಿ/ಸಂಡೂರು: ರಾಷ್ಟ್ರೀಯ ಶಿಕ್ಷಣ ಹಾಗೂ ಸಂಶೋಧನೆ ಇಲಾಖೆ ಬೆಂಗಳೂರು, ಜಿಲ್ಲಾ ಶಿಕ್ಷಣ ಹಾಗೂ ತರಬೇತಿ ಕೇಂದ್ರ ಬಳ್ಳಾರಿ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಹಾಗೂ ಸಮನ್ವಯಾಧಿಕಾರಿಗಳ ಕಾರ್ಯಾಲಯ ಸಂಡೂರು ಇವರ ಸಂಯುಕ್ತ ಆಶ್ರಯದಲ್ಲಿ ಒಂದರಿಂದ ಐದನೇ ತರಗತಿಯವರೆಗೆ ಬೋಧಿಸುವ ಸೇವಾನಿರತ ಶಿಕ್ಷಕರಿಗೆ EMTT (ಇಂಗ್ಲೀಷ್ ಮೀಡಿಯಂ ಟೀಚರ್ಸ್ ಟ್ರೈನಿಂಗ್) ತರಬೇತಿ ಕಾರ್ಯಾಗಾರವು ಸೋಮವಾರ ಸಂಡೂರಿನ ಗುರುಭವನದಲ್ಲಿ ಆರಂಭವಾಯಿತು. ಏಪ್ರಿಲ್ 6ರಿಂದ 11ರವರೆಗೆ ನಡೆಯಲಿರುವ ಈ ಐದು ದಿನಗಳ ತರಬೇತಿ ಕಾರ್ಯಾಗಾರದಲ್ಲಿ ತಾಲೂಕಿನ ವಿವಿಧ ಸರ್ಕಾರಿ ಶಾಲೆಗಳ ಶಿಕ್ಷಕರು ಭಾಗವಹಿಸುತ್ತಿದ್ದಾರೆ. ಕಾರ್ಯಕ್ರಮವನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಡಾ. ಐ.ಆರ್. ಅಕ್ಕಿ ಅವರು ಗಿಡಕ್ಕೆ ನೀರುಣಿಸುವ ಮೂಲಕ ಉದ್ಘಾಟಿಸಿ ಮಾತನಾಡಿ, ರಾಜ್ಯ ಸರ್ಕಾರದ ನಿರ್ದೇಶನದಂತೆ ಸರ್ಕಾರಿ ಶಾಲೆಗಳಲ್ಲಿ ದ್ವಿಭಾಷಾ ಮಾಧ್ಯಮವನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಿಗೆ ಪರಿಣಾಮಕಾರಿ ಬೋಧನೆ ನೀಡಲು ಶಿಕ್ಷಕರು ಅಗತ್ಯವಾದ ಕೌಶಲ್ಯ ಮತ್ತು ವಿಧಾನಗಳನ್ನು ಅರಿತುಕೊಳ್ಳುವುದು ಬಹಳ ಮುಖ್ಯವೆಂದು ಹೇಳಿದರು. ಇದೇ ಉದ್ದೇಶದಿಂದ ಇಲಾಖೆಯ ಮಾರ್ಗಸೂಚಿಗಳಂತೆ EMTT ತರಬೇತಿ ಆಯೋಜಿಸಲಾಗಿದ್ದು, ಶಿಕ್ಷಕರು ಇದರ ಸಂಪೂರ್ಣ ಪ್ರಯೋಜನ ಪಡೆದು ತಮ್ಮ ಬೋಧನಾ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ತರಬೇತಿ ಯಶಸ್ವಿಯಾಗಲಿ ಎಂದು ಹಾರೈಸಿದರು. ಈ ಸಂದರ್ಭದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ತಮ್ಮಯ್ಯ ಎಲ್.ಹೆಚ್., ಪರಶುರಾಮ್ ಚೌಗಲೆ, ಅನ್ನಪೂರ್ಣ, ಮಂಜುಶ್ರೀ, ರಘುನಂದನ್ ಸೇರಿದಂತೆ ತಾಲೂಕಿನ ಅನೇಕ ಶಿಕ್ಷಕರು ಉಪಸ್ಥಿತರಿದ್ದರು. ಈ ತರಬೇತಿ ಕಾರ್ಯಾಗಾರವು ದ್ವಿಭಾಷಾ ಬೋಧನಾ ವಿಧಾನಗಳನ್ನು ಪರಿಣಾಮಕಾರಿಯಾಗಿ ಅಳವಡಿಸಿಕೊಳ್ಳಲು ಶಿಕ್ಷಕರಿಗೆ ಮಾರ್ಗದರ್ಶನ ನೀಡಲಿದೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ.

ವಾರ್ತಾ ಭಾರತಿ 6 Apr 2026 8:51 pm

ಕಸ್ಟಡಿಯಲ್ಲಿದ್ದ ತಂದೆ- ಮಗನಿಗೆ ಚಿತ್ರಹಿಂಸೆ ನೀಡಿ ಕೊಲೆ ಪ್ರಕರಣ: ತಮಿಳುನಾಡಿನ 9 ಪೊಲೀಸರಿಗೆ ಮರಣದಂಡನೆ

ಸಾತಂಕುಲಂ ತಂದೆ-ಮಗನ ಕಸ್ಟಡಿ ಸಾವಿನ ಪ್ರಕರಣದಲ್ಲಿ ಶಿಕ್ಷೆಗೊಳಗಾದ ಒಂಬತ್ತು ಮಂದಿ ಪೊಲೀಸ್ ಸಿಬ್ಬಂದಿಗೆ ಮಧುರೈ ನ್ಯಾಯಾಲಯವು ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಿದ್ದು, ಎಲ್ಲಾ ಒಂಬತ್ತು ಆರೋಪಿಗಳಿಗೂ ಮರಣದಂಡನೆ ವಿಧಿಸಿದೆ.ವಾರದ ಹಿಂದೆ ಮಧುರೈನ ಮೊದಲ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು ಜೂನ್ 2020 ರಲ್ಲಿ ಪಿ ಜಯರಾಜ್ ಮತ್ತು ಅವರ ಮಗ ಜೆ ಬೆನ್ನಿಕ್ ಅವರ ಕಸ್ಟಡಿ ಚಿತ್ರಹಿಂಸೆ ಮತ್ತು ಸಾವಿನಲ್ಲಿ ಅವರ ಪಾತ್ರಕ್ಕಾಗಿ ಎಲ್ಲಾ ಒಂಬತ್ತು ಆರೋಪಿಗಳನ್ನು ತಪ್ಪಿತಸ್ಥರೆಂದು ಘೋಷಿಸಿತ್ತು. ಇದೀಗ ಏಪ್ರಿಲ್ 6ರ ಸೋಮವಾರದಂದು ಶಿಕ್ಷೆಯನ್ನು ವಿಧಿಸಲಾಗಿದೆ. ಸಾಮಾನ್ಯ ನಾಗರಿಕರು ಇದೇ ತಪ್ಪನ್ನು ಮಾಡಿದ್ದಿದ್ದರೆ ಸಾಮಾನ್ಯ ಶಿಕ್ಷೆಯನ್ನು ನೀಡಬಹುದಿತ್ತು, ಆದರೆ ಅಪರಾಧ ಮಾಡಿದವರು ಪೊಲೀಸರು ಎಂದು ನ್ಯಾಯಾಧೀಶ ಮುತ್ತುಕುಮಾರನ್ ಆದೇಶ ನೀಡುವ ವೇಳೆ ಹೇಳಿದರು. ಹಲ್ಲೆಗೆ ಇನ್ ಸ್ಪೆಕ್ಟರ್ ಪ್ರಚೋದನೆ ಈ ಪ್ರಕರಣವು ಕಸ್ಟಡಿ ಹಿಂಸಾಚಾರದ ಸ್ಪಷ್ಟ ನಿದರ್ಶನವಾಗಿದೆ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ. ಪೊಲೀಸ್ ಕಸ್ಟಡಿಯಲ್ಲಿದ್ದಾಗ ತಂದೆ ಮತ್ತು ಮಗನ ಮೇಲೆ ಕ್ರೂರವಾಗಿ ಹಲ್ಲೆ ನಡೆಸಲಾಗಿದೆ ಎಂಬುದಕ್ಕೆ ಸಾಕ್ಷಿಗಳಿವೆ. ಇನ್ಸ್‌ಪೆಕ್ಟರ್ ಎಸ್ ಶ್ರೀಧರ್ ಅವರು ಈ ಹಲ್ಲೆಗೆ ಪ್ರಚೋದನೆ ನೀಡಿದ್ದಾರೆ ಎಂದು ತನಿಖೆ ವೇಳೆ ತಿಳಿದು ಬಂದಿದೆ. ಇತರ ಸಿಬ್ಬಂದಿ ಸಹ ಹಿಂಸಾಚಾರದಲ್ಲಿ ಭಾಗವಹಿಸಿದ್ದು ಬಳಿಕ ಪ್ರಕರಣವನ್ನು ಮುಚ್ಚಿ ಹಾಕುವ ಪ್ರಯತ್ನ ಮಾಡಿದ್ದಾರೆ.

ವಿಜಯ ಕರ್ನಾಟಕ 6 Apr 2026 8:50 pm

ಭಕ್ತಿ ಮಾರ್ಗದಿಂದ ಮಾತ್ರ ದೇವರನ್ನು ಒಲಿಸಿಕೊಳ್ಳಲು ಸಾಧ್ಯ: ಕೃಷ್ಣಾಪುರ ಶ್ರೀ

ಉಡುಪಿ, ಎ.6: ಮಾನಸಿಕ ಶಾಂತಿ ಇಲ್ಲದೇ ಹೋದರೆ ಯಾವುದೇ ಸಾಧನೆ ಮಾಡುವುದಕ್ಕೆ ಸಾಧ್ಯವಿಲ್ಲ. ಹೀಗಾಗಿ ನಾವೆಲ್ಲರೂ ಇರುವುದರಲ್ಲೇ ಆತ್ಮತೃಪ್ತಿಯನ್ನು ಕಾಣಬೇಕು. ವ್ಯಾಘ್ರರಾಗಿ ಇರುವುದಕ್ಕಿಂತ ಶಾಂತ ಚಿತ್ತರಾಗಿ ದೇವರ ಕೃಪೆಗೆ ಪಾತ್ರರಾಗಬೇಕು. ಭಕ್ತಿ ಮಾರ್ಗವೊಂದೇ ದೇವರನ್ನು ಒಲಿಸಿಕೊಳ್ಳುವುದಕ್ಕೆ ಇರುವ ಮಾರ್ಗ. ಭಗವಂತನ ಚಿಂತನೆ, ಆರಾಧನೆ ಯನ್ನು ಮಾಡುತ್ತಾ ಸನ್ಮಾರ್ಗದಲ್ಲಿ ಸಾಗಬೇಕೆಂದು ಉಡುಪಿ ಕೃಷ್ಣಾಪುರ ಮಠದ ಶ್ರೀವಿದ್ಯಾಸಾಗರ ತೀರ್ಥ ಸ್ವಾಮೀಜಿ ಹೇಳಿದ್ದಾರೆ. ಇಂದ್ರಾಣಿ ಶ್ರೀಮುಖ್ಯಪ್ರಾಣ ದೇವರು ಹಾಗೂ ನಾಗದೇವರ ಗುಡಿಯ ಪುನಃ ಪ್ರತಿಷ್ಠೆ ಹಾಗೂ ಬ್ರಹ್ಮಕಲಶೋತ್ಸವದ ಅಂಗವಾಗಿ ಸೋಮವಾರ ನಡೆದ ಮೊಕ್ತೇಸರರ ಸಂಗಮದಲ್ಲಿ ಅವರು ಆಶೀರ್ವಚನ ನೀಡಿದರು. ವಿದ್ವಾನ್ ಕೆ.ಪಿ.ಕುಮಾರ ಗುರು ತಂತ್ರಿ ಕೊರಂಗ್ರಪಾಡಿ ಧಾರ್ಮಿಕ ಉಪನ್ಯಾಸ ನೀಡಿದರು. ಇಂದ್ರಾಣಿ ಶ್ರೀಪಂಚ ದುರ್ಗಾಪರಮೇಶ್ವರಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಿ.ಕುಶಲ್ ಶೆಟ್ಟಿ ಇಂದ್ರಾಳಿ ಅಧ್ಯಕ್ಷತೆ ವಹಿಸಿದ್ದರು. ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಭೂಪತಿ ಶೆಟ್ಟಿ, ಕಡಿಯಾಳಿ ಶ್ರೀಮಹಿಷ ಮರ್ದಿನಿ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ವಿಜಯ ರಾಘವ ರಾವ್, ಪಣಿಯಾಡಿ ಶ್ರೀಅನಂತ ಪದ್ಮನಾಭ ದೇವಸ್ಥಾನದ ಸಂಚಾಲಕ ನಾಗರಾಜ ಆಚಾರ್ಯ, ಬನ್ನಂಜೆ ಶ್ರೀಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮಾಧವ ಬನ್ನಂಜೆ, ಸಗ್ರಿ ಶ್ರೀಮಲೆಜುಮಾದಿ ದೇವಸ್ಥಾನದ ಜೀರ್ಣೋದ್ಧಾರ ಪುನಃ ಪ್ರತಿಷ್ಠೆ ಸಮಿತಿ ಅಧ್ಯಕ್ಷ ದೇವಿಚರಣ್ ಕಾವ, ಮಣಿಪಾಲ ಶ್ರೀಬಬ್ಬುಸ್ವಾಮಿ ದೈವಸ್ಥಾನದ ಶ್ರೀನಿವಾಸ ಪೂಜಾರಿ, ಇಂದ್ರಾಳಿ ಶ್ರೀಮಹಿಷಮರ್ದಿನಿ ಗದ್ದುಗೆ ಅಮ್ಮನವರ ದೇವಸ್ಥಾನ ಆಡಳಿತ ಮಂಡಳಿಯ ಅಧ್ಯಕ್ಷ ಅನಂತ್ ನಾಯ್ಕ್, ಮಂಚಿ ಗದ್ದುಗೆ ಶ್ರೀದುರ್ಗಾ ಪರಮೇಶ್ವರಿ ದೇವಸ್ಥಾನದ ದಯಾನಂದ ನಾಯ್ಕ್, ಬುಡ್ನಾರು ಬ್ರಹ್ಮಬೈದರ್ಕಳ ಗರಡಿಯ ಗೋಪಾಲ ಪೂಜಾರಿ, ಕೊಡವೂರು ಶಿರ್ಡಿ ಸಾಯಿಬಾಬಾ ಮಂದಿರದ ದಿವಾಕರ ಶೆಟ್ಟಿ ತೋಟದಮನೆ, ಮಾರ್ಪಳ್ಳಿ ಶ್ರೀಮಹಾಲಿಂಗೇಶ್ವರ ದೇವಸ್ಥಾನದ ದಿನೇಶ್ ಶೆಟ್ಟಿ, ಪ್ರಸನ್ನ ಗಣಪತಿ ದೇವಸ್ಥಾನದ ಉಪಾಧ್ಯಕ್ಷ ಪಿ.ಜಿ.ಪಂಡಿತ್, ನರಸಿಂಗೆ ದೇವಸ್ಥಾನದ ಆನಂದ ನಾಯಕ್, ಪ್ರಮುಖರಾದ ಉಮೇಶ್ ಪೂಜಾರಿ, ಹೇಮನಾಥ ಹೆಗ್ಡೆ, ರಾಜೇಶ್ ನಾಯಕ್, ಪಾಂಡುರಂಗ ನಾಯಕ್ ಉಪಸ್ಥಿತರಿದ್ದರು. ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಬಿ.ಜಯಕರ್ ಶೆಟ್ಟಿ ಇಂದ್ರಾಳಿ ಸ್ವಾಗತಿಸಿದರು. ಜೀರ್ಣೋದ್ಧಾರ ಸಮಿತಿ ಪ್ರಧಾನ ಕಾರ್ಯದರ್ಶಿ ರತ್ನಾಕರ್ ಇಂದ್ರಾಳಿ ಕಾರ್ಯಕ್ರಮ ನಿರೂಪಿಸಿದರು.

ವಾರ್ತಾ ಭಾರತಿ 6 Apr 2026 8:50 pm

ಹುಬ್ಬಳ್ಳಿ ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣ; ನಿರಂಜನ ಹಿರೇಮಠ್‌ ಹೇಳಿದ್ದೇನು?

ಹುಬ್ಬಳ್ಳಿ : ಹುಬ್ಬಳ್ಳಿಯಲ್ಲಿ ನಡೆದ ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣದಲ್ಲಿ ಜಿಮ್‌ ತರಬೇತುದಾರ, ಆರೋಪಿ ಸಮೀರ್‌ ನನ್ನು ಬಂಧಿಸಲಾಗಿದೆ ಎಂದು ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ತಿಳಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನೇಹಾ ಹಿರೇಮಠ್‌ ತಂದೆ ನಿರಂಜನ ಹಿರೇಮಠ್‌ ಪ್ರತಿಕ್ರಿಯಿಸಿದ್ದು, ʼನನ್ನ ಮಗಳ‌ ಹತ್ಯೆಯಲ್ಲೂ ಈ ಸಮೀರ್ ಹಾಗೂ ಅತನ ಸಹೋದರಿ, ತಂದೆಯ ಕೈವಾಡ ಇರಬಹುದುʼ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ. ಈ ಕುರಿತು ವಿಡಿಯೋ ಹೇಳಿಕೆ‌ ಬಿಡುಗಡೆ ಮಾಡಿರುವ ಅವರು, ʼನೇಹಾ ಹಿರೇಮಠ್‌ ರನ್ನು ಹತ್ಯೆಗೈದ ಫಯಾಝ್‌ ಕೂಡ ಇದೇ ಜಿಮ್‌ನಲ್ಲಿ ತರಬೇತಿ ಪಡೆಯುತ್ತಿದ್ದʼ ಎಂದು ಆರೋಪಿಸಿದ್ದಾರೆ. ಅಲ್ಲದೆ, ಸಮೀರ್ ತಂದೆ ಆಗಾಗ ಕಾಲ್ ಮಾಡುತ್ತಿದ್ದರು. ನಿಮ್ಮ ಏರಿಯಾದಲ್ಲಿ‌ ಬಾಡಿ ಬಿಲ್ಡಿಂಗ್ ಸ್ಪರ್ಧೆ ಏರ್ಪಡಿಸೋಣ, ಆರ್ಥಿಕ ನೆರವು ನೀಡುವಂತೆ ಒತ್ತಾಯಿಸುತ್ತಿದ್ದ. ಅಲ್ಲದೆ, ಆಗಾಗ್ಗೆ ತಮ್ಮ‌ ಮನೆಗೆ ಬರುವಂತೆ ಆಹ್ವಾನಿಸುತ್ತಿದ್ದರು. ನಾನು ಎಷ್ಟೇ ಕರೆದರು ಹೋಗಲಿಲ್ಲ. ಹೋಗಿದ್ರೆ ಟ್ರ್ಯಾಪ್ ಮಾಡುವ ಪ್ಲಾನ್ ಇದ್ದಿರಬಹುದು ಎಂದು ಸಂಶಯ ವ್ಯಕ್ತಪಡಿಸಿದರು.

ವಾರ್ತಾ ಭಾರತಿ 6 Apr 2026 8:48 pm

ಜೀವರಕ್ಷಕ ಸಿಬ್ಬಂದಿಗಳ ಹುದ್ದೆ: ಅರ್ಜಿ ಆಹ್ವಾನ

ಉಡುಪಿ, ಎ.6: ಜಿಲ್ಲೆಯ ಮಲ್ಪೆ ಬೀಚ್ ಹಾಗೂ ತ್ರಾಸಿ ಮರವಂತೆ ಬೀಚ್‌ಗಳಲ್ಲಿ ಜೀವರಕ್ಷಕ ಸಿಬ್ಬಂದಿಗಳನ್ನು ಪ್ರವಾಸೋದ್ಯಮ ಇಲಾಖೆ ವತಿಯಿಂದ ನಿಯೋಜಿಸಲು ಉದ್ದೇಶಿಸಿದ್ದು, ಜಿಲ್ಲೆಯಲ್ಲಿ ಜೀವರಕ್ಷಕ ತರಬೇತಿ ಹೊಂದಿರುವ ಸಿಬ್ಬಂದಿಗಳಿಂದ ಈ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ 14,958ರೂ. ವೇತನದೊಂದಿಗೆ ಪಿ.ಎಫ್ ಹಾಗೂ ಇ.ಎಸ್.ಐ ಸೌಕರ್ಯ ಕಲ್ಪಿಸಲಾಗುವುದು. ಬೀಚ್ ಜೀವರಕ್ಷಕ ತರಬೇತಿ ಪಡೆದು ಪ್ರಮಾಣ ಪತ್ರ ಹೊಂದಿರುವ ಕನಿಷ್ಟ 18 ರಿಂದ 40 ವರ್ಷದೊಳಗಿನ ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಎಪ್ರಿಲ್ 15 ಕೊನೆಯ ದಿನ. ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಸಹಾಯಕ ನಿರ್ದೇಶಕರ ಕಛೇರಿ, ಪ್ರವಾಸೋದ್ಯಮ ಇಲಾಖೆ, ಉಡುಪಿ ಜಿಲ್ಲಾಧಿಕಾರಿಗಳ ಕಛೇರಿ ಸಂಕೀರ್ಣ, ಎ ಬ್ಲಾಕ್, ಎರಡನೇ ಮಹಡಿ, ಕೊಠಡಿ ಸಂಖ್ಯೆ: 303, ಮಣಿಪಾಲ ದೂರವಾಣಿ ಸಂಖ್ಯೆ:0820-2574868ಅನ್ನು ಸಂಪರ್ಕಿಸ ಬಹುದು ಎಂದು ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕರ ಪ್ರಕಟಣೆ ತಿಳಿಸಿದೆ.

ವಾರ್ತಾ ಭಾರತಿ 6 Apr 2026 8:48 pm