ಕಲಬುರಗಿ : ನಗರದ ಹೊರವಲಯದಲ್ಲಿರುವ ಕೇಂದ್ರ ಕಾರಾಗೃಹದಲ್ಲಿ ಕೈದಿಗಳ ʼರಾಜಾತಿಥ್ಯʼ ವೀಡಿಯೊ ವೈರಲ್ ಪ್ರಕರಣದ ಬೆನ್ನಲ್ಲೇ ಇದೀಗ ಅಲ್ಲಿನ ಜೈಲು ಅಧೀಕ್ಷಕರನ್ನಾಗಿ ರಾಜೇಶ್ ಕಾಂಬಳೆ ಅವರನ್ನು ನೇಮಕ ಮಾಡಿ ಸರಕಾರ ಆದೇಶ ಹೊರಡಿಸಲಾಗಿದೆ. ಒಳಾಡಳಿತ(ಸೆರೆಮನೆ ಮತ್ತು ಸಿನಿಮಾ) ಇಲಾಖೆಯ ಅಧೀನ ಕಾರ್ಯದರ್ಶಿ ಬಿ.ಕೆ.ಭುವನೇಂದ್ರಕುಮಾರ್ ಅವರು ಅಧಿಸೂಚನೆ ಹೊರಡಿಸಿದ್ದು, ರಾಮನಗರ ಕಾರಾಗೃಹದಲ್ಲಿ ಸಹಾಯಕ ಅಧೀಕ್ಷಕರಾಗಿ ಕೆಲಸ ನಿರ್ವಹಿಸುತ್ತಿದ್ದ ರಾಜೇಶ್ ಕಾಂಬಳೆ ಅವರನ್ನು ಮುಂಬಡ್ತಿ ನೀಡಿ, ಕಲಬುರಗಿ ಕೇಂದ್ರ ಕಾರಾಗೃಹದ ಅಧೀಕ್ಷಕರನ್ನಾಗಿ ನಿಯೋಜಿಸಲಾಗಿದೆ ಎಂದು ತಿಳಿಸಿದ್ದಾರೆ. ಆದರೆ ಈಗಿರುವ ಅಧೀಕ್ಷಕಿ ಡಾ.ಅನಿತಾ ಅವರಿಗೆ ಸದ್ಯ ಸ್ಥಳ ನಿಯೋಜನೆ ಮಾಡಿಲ್ಲ, ಸರಕಾರದಿಂದ ಯಾವುದೇ ಪ್ರತ್ಯೇಕ ಆದೇಶ ಬಂದಿಲ್ಲ ಎಂದು ತಿಳಿದುಬಂದಿದೆ. ಕೆಲ ದಿನಗಳ ಹಿಂದಷ್ಟೇ ಕಲಬುರಗಿ ಕೇಂದ್ರ ಕಾರಾಗೃಹದಲ್ಲಿ ಜೂಜಾಟ, ಸಿಗರೇಟ್ ಹಾಗೂ ಮದ್ಯ ಸೇವಿಸುತ್ತಿರುವ ವೀಡಿಯೊ ಎಲ್ಲೆಡೆ ವೈರಲ್ ಆಗಿತ್ತು. ಅದಕ್ಕೂ ಮುನ್ನವೇ ಪಿಎಸ್ಐ ನೇಮಕಾತಿ ಅಕ್ರಮ ಪ್ರಕರಣದ ಆರೋಪಿ ಆರ್.ಡಿ ಪಾಟೀಲ್, ಅಧೀಕ್ಷಕಿ ಡಾ.ಅನಿತಾ ವಿರುದ್ಧ ಭ್ರಷ್ಟಾಚಾರ ಆರೋಪಿಸಿ ವೀಡಿಯೋ ವೈರಲ್ ಮಾಡಿರುವುದು ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಕೈದಿಗಳ ರಾಜಾತಿಥ್ಯ ವೀಡಿಯೊ ವೈರಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರಾಗೃಹ ಇಲಾಖೆಯ ಹೆಚ್ಚುವರಿ ಮಹಾನಿರೀಕ್ಷಕ ಪಿ.ವಿ.ಆನಂದ ರೆಡ್ಡಿ ಅವರ ನೇತೃತ್ವದಲ್ಲಿ ತನಿಖಾ ತಂಡ ರಚಿಸಿ, ಸಮಗ್ರ ತನಿಖೆಗೆ ಆದೇಶಿಸಲಾಗಿತ್ತು. ಸದ್ಯ ಪ್ರಕರಣ ತನಿಖೆಯ ಹಂತದಲ್ಲಿದೆ. ಇದರ ನಡುವೆಯೇ ಕಾರಾಗೃಹ ಮತ್ತು ಸುಧಾರಣಾ ಸೇವೆಗಳ ಪೊಲೀಸ್ ಮಹಾ ನಿರ್ದೇಶಕ(ಡಿಜಿಪಿ) ಅಲೋಕ್ ಕುಮಾರ್ ಅವರು ಶನಿವಾರ ಕಲಬುರಗಿ ಜೈಲಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಗುಣಮಟ್ಟದ ಆಹಾರಕ್ಕಾಗಿ ಪತ್ರ, ವೀಡಿಯೊ ವೈರಲ್: ಜೈಲಿನಲ್ಲಿ ಗುಣಮಟ್ಟದ ಆಹಾರ ನೀಡಬೇಕೆಂದು ಆಗ್ರಹಿಸಿ ಕೈದಿಗಳೇ ಸಾಮೂಹಿಕವಾಗಿ ಪ್ರತಿಭಟನೆ ನಡೆಸಿದ್ದರು. ಈ ಕುರಿತು ಉತ್ತಮ ಆಹಾರಕ್ಕಾಗಿ ನ್ಯಾಯಾಧೀಶರಿಗೂ ಪತ್ರ ಬರೆದಿರುವುದು ಬೆಳಕಿಗೆ ಬಂದಿತ್ತು.
ಇಂದೋರ್: ಇಂದೋರ್ ನಲ್ಲಿ ಕಲುಷಿತ ನೀರು ಕುಡಿದು ಕನಿಷ್ಠ 10 ಮಂದಿ ಮೃತಪಟ್ಟ ಘಟನೆ ಮಧ್ಯೆ ಸಚಿವ ಕೈಲಾಶ್ ವಿಜಯವರ್ಗಿಯ ನೀಡಿರುವ ವಿವಾದಾತ್ಮಕ ಹೇಳಿಕೆ ಮತ್ತು ಕಾಂಗ್ರೆಸ್ ಆರೋಪಗಳನ್ನು ಅಧಿಕೃತ ಸರಕಾರಿ ಆದೇಶದಲ್ಲಿ ಸೇರಿಸಿದ ಆರೋಪದಲ್ಲಿ ಮಧ್ಯಪ್ರದೇಶದ ದೇವಾಸ್ ಜಿಲ್ಲೆಯ ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್ ಅವರನ್ನು ಅಮಾನತುಗೊಳಿಸಲಾಗಿದೆ. ದೇವಾಸ್ನಲ್ಲಿ ರವಿವಾರ ಆಯೋಜಿಸಲಾದ ಕಾಂಗ್ರೆಸ್ ಪ್ರತಿಭಟನೆಗೆ ಸಂಬಂಧಿಸಿದಂತೆ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಲು ಸಿಬ್ಬಂದಿಯನ್ನು ನಿಯೋಜಿಸುವಂತೆ ನಿರ್ದೇಶಿಸಿ ಎಸ್ಡಿಎಂ ಆನಂದ್ ಮಾಳವೀಯ ಶನಿವಾರ ಹೊರಡಿಸಿದ ಆದೇಶವನ್ನು ಪರಿಶೀಲಿಸಿದ ನಂತರ ಈ ಕ್ರಮ ಕೈಗೊಳ್ಳಲಾಗಿದೆ. ಅಧಿಕೃತ ಕರ್ತವ್ಯ ನಿರ್ವಹಣೆಯಲ್ಲಿ ಗಂಭೀರ ನಿರ್ಲಕ್ಷ್ಯ, ಉದಾಸೀನತೆ ಆರೋಪದ ಮೇಲೆ ದೇವಾಸ್ ಜಿಲ್ಲೆಯ ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್ ಆನಂದ್ ಮಾಳವೀಯ ಅವರನ್ನು ಉಜ್ಜಯಿನಿ ವಿಭಾಗದ ಕಂದಾಯ ಆಯುಕ್ತ ಆಶಿಶ್ ಸಿಂಗ್ ಅವರು ಅಮಾನತುಗೊಳಿಸಿದ್ದಾರೆ. ಸಿಬ್ಬಂದಿಯನ್ನು ನಿಯೋಜಿಸುವಂತೆ ಸೂಚಿಸುವುದರಲ್ಲಿ ಸಮಸ್ಯೆಯಾಗಿಲ್ಲ. ಆದರೆ ಆದೇಶದಲ್ಲಿ ಬಳಸಿದ ಭಾಷೆ ಸರಿಯಾಗಿಲ್ಲ. ಪ್ರತಿಭಟನೆಗೆ ಮುಂಚಿತವಾಗಿ ಸಲ್ಲಿಸಿದ ಕಾಂಗ್ರೆಸ್ ಜ್ಞಾಪಕ ಪತ್ರದ ಒಂದು ಭಾಗವನ್ನು ಎಸ್ಡಿಎಂ ಅಧಿಕೃತ ಆದೇಶದಲ್ಲಿ ಉಲ್ಲೇಖಿಸಿದ್ದಾರೆ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ. ಆಡಳಿತಾತ್ಮಕ ಆದೇಶದಲ್ಲಿ ರಾಜಕೀಯ ಆರೋಪಗಳು ಮತ್ತು ಆಪಾದಿತ ಭಾಷೆಯನ್ನು ಸೇರಿಸುವುದನ್ನು ಗಂಭೀರ ಲೋಪ ಎಂದು ಪರಿಗಣಿಸಲಾಗಿದೆ. ಇಂದೋರ್ನ ಕೆಲವು ಭಾಗಗಳಲ್ಲಿ ಕುಡಿಯುವ ನೀರು ಕಲುಷಿತಗೊಂಡಿದ್ದು, ಅತಿಸಾರದಿಂದ ಹಲವಾರು ಜನರ ಪ್ರಾಣಹಾನಿಗೆ ಕಾರಣವಾಗಿದೆ ಎಂದು ಕಾಂಗ್ರೆಸ್ ಜ್ಞಾಪಕ ಪತ್ರವು ತೀವ್ರವಾಗಿ ಟೀಕಿಸಿತ್ತು. ಘಟನೆ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಉತ್ತರಿಸುವಾಗ ಘಂಟಾ ಪದವನ್ನು ಬಳಸಿದ್ದಕ್ಕಾಗಿ ನಗರಾಭಿವೃದ್ಧಿ ಮತ್ತು ವಸತಿ ಸಚಿವ ಕೈಲಾಶ್ ವಿಜಯವರ್ಗಿಯ ಅವರನ್ನು ಕೂಡ ಗುರಿಯಾಗಿಸಿಕೊಂಡಿತ್ತು. ಈ ಹೇಳಿಕೆ ಅಮಾನವೀಯ ಮತ್ತು ಸರ್ವಾಧಿಕಾರಿ ವರ್ತನೆಯನ್ನು ಪ್ರತಿಬಿಂಬಿಸುತ್ತದೆ” ಎಂದು ಕಾಂಗ್ರೆಸ್ ಹೇಳಿತ್ತು.
'ತಿಥಿ' ಸಿನಿಮಾದ ʼಸೆಂಚುರಿ ಗೌಡʼ ಖ್ಯಾತಿಯ ಸಿಂಗ್ರಿಗೌಡ ನಿಧನ
ಮಂಡ್ಯ: ಕನ್ನಡ ಚಲನಚಿತ್ರ ʼತಿಥಿʼ ಸಿನಿಮಾ ಖ್ಯಾತಿಯ ಸೆಂಚುರಿ ಗೌಡ ನಿಧನರಾಗಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಸಿಂಗ್ರೆಗೌಡ ಅವರು ರವಿವಾರ ರಾತ್ರಿ ಕೊನೆಯುಸಿರೆಳೆದಿದ್ದಾರೆ. ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಸಿಂಗ್ರೆಗೌಡನ ಕೊಪ್ಪಲು ಗ್ರಾಮದಲ್ಲಿ ನೆಲೆಸಿದ್ದ ಸಿಂಗ್ರೆಗೌಡ ʼತಿಥಿʼ ಸಿನಿಮಾದಲ್ಲಿ ಅಭಿನಯಿಸುವ ಮೂಲಕ ʼಸೆಂಚುರಿಗೌಡʼ ಎಂದೇ ಖ್ಯಾತಿ ಪಡೆದಿದ್ದರು. ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಇವರು ಕಳೆದ ರಾತ್ರಿ ಮೃತಪಟ್ಟಿದ್ದು, ಇಂದು ಗ್ರಾಮದಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ತಿಳಿದುಬಂದಿದೆ.
ಅಕ್ಕಿ ರಫ್ತುದಾರರ ಪ್ರಮುಖ ಬೇಡಿಕೆಗಳೇನು? ಕೇಂದ್ರ ಬಜೆಟ್ನಲ್ಲಿ ರೈತರಿಗೆ ಸಿಗಲಿದೆಯೇ ಬಂಪರ್ ಕೊಡುಗೆ?
2026ರ ಕೇಂದ್ರ ಬಜೆಟ್ನಲ್ಲಿ ಅಕ್ಕಿ ರಫ್ತು ಉದ್ಯಮಕ್ಕೆ ವಿಶೇಷ ಉತ್ತೇಜನ ನೀಡುವಂತೆ 'ಭಾರತೀಯ ಅಕ್ಕಿ ರಫ್ತುದಾರರ ಒಕ್ಕೂಟ' ಕೇಂದ್ರ ಹಣಕಾಸು ಸಚಿವರಿಗೆ ಮನವಿ ಮಾಡಿದೆ. ಸುಸ್ಥಿರ ಕೃಷಿ ಪದ್ಧತಿ, ಲಾಜಿಸ್ಟಿಕ್ಸ್ ವೆಚ್ಚ ಕಡಿತ ಮತ್ತು ಆರ್ಥಿಕ ನೆರವಿನ ಮೂಲಕ ಭಾರತದ ಅಕ್ಕಿ ರಫ್ತು ಸಾಮರ್ಥ್ಯವನ್ನು ಹೆಚ್ಚಿಸುವುದು ಈ ಮನವಿಯ ಪ್ರಮುಖ ಉದ್ದೇಶವಾಗಿದೆ.
ಆರೋಗ್ಯ ಸಮಸ್ಯೆ ಹೊಂದಿರುವ ಕೊರಗ ಸಮುದಾಯದ ಆಶಾಕಿರಣ 'ಆರೋಗ್ಯ ಸೇತು'
► ಕೊರಗರ 250ಕ್ಕೂ ಅಧಿಕ ಹಾಡಿಗಳ ಜನರಿಗೆ ಅಗತ್ಯ ಚಿಕಿತ್ಸೆಗೆ ಕ್ರಮ► ಪಿಎಂ-ಜನ್ಮನ್ನಲ್ಲಿ ಉಡುಪಿ ಜಿಲ್ಲೆಗೆ 4 ಸಂಚಾರಿ ಘಟಕ ಮಂಜೂರು
ಸಿದ್ದರಾಮಯ್ಯ ಪರ್ಯಾಯ ಕಷ್ಟಸಾಧ್ಯ, ಯಶಸ್ವಿ ನಾಯಕತ್ವಕ್ಕೆ ಅವರು ಪ್ರತಿಬಿಂಬ: ಹಾಡಿ ಹೊಗಳಿದ ಕೃಷ್ಣಾ ಬೈರೇಗೌಡ
ಜನವರಿ 6 ರಂದು ಸಿಎಂ ಸಿದ್ದರಾಮಯ್ಯ ಅವರು ರಾಜ್ಯದ ಸುದೀರ್ಘ ಅವಧಿಯ ಸಿಎಂ ಎಂಬ ದಾಖಲೆಯನ್ನು ಸರಿಗಟ್ಟುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಸಿಎಂ ಸಿದ್ದರಾಮಯ್ಯ ಅವರನ್ನು ಸಚಿವ ಕೃಷ್ಣ ಬೈರೇಗೌಡ ಅವರು ಹಾಡಿ ಹೊಗಳಿದ್ದಾರೆ. ಸಿದ್ದರಾಮಯ್ಯ ಅವರಂತಹ ಪರ್ಯಾಯ ನಾಯಕತ್ವ ಕಷ್ಟಸಾಧ್ಯ ಎಂದಿದ್ದಾರೆ. ಅಲ್ಲದೆ, ಯಶಸ್ವಿ ನಾಯಕತ್ವಕ್ಕೆ ಅವರು ಪ್ರತಿಬಿಂಬ ಎಂದು ಹೇಳಿದ್ದಾರೆ. ಈ ಮೂಲಕ ಸಿದ್ದರಾಮಯ್ಯ ಅವರನ್ನು ಕೃಷ್ಣಾ ಬೈರೇಗೌಡ ಹಾಡಿ ಹೊಗಳಿದ್ದಾರೆ. ಏನು ಹೇಳಿದ್ದಾರೆ ಎಂಬ ಕುರಿತಾದ ಮತ್ತಷ್ಟು ವಿವರ ಇಲ್ಲಿದೆ.
Ranjitha Murder: ರಂಜಿತಾ ಹತ್ಯೆ ಪ್ರಕರಣ; 50 ಲಕ್ಷ ಪರಿಹಾರ, 2 ಎಕರೆ ಜಮೀನು: ವಿಜಯೇಂದ್ರ ಆಗ್ರಹ
ಯಲ್ಲಾಪುರ: ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದಲ್ಲಿ ನಡೆದ ರಂಜಿತಾ ಬನಸೋಡೆ ಅವರ ಭೀಕರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಯಲ್ಲಾಪುರದಲ್ಲಿ ಪರಿಸ್ಥಿತಿ ಗಂಭೀರವಾಗಿದ್ದು, ಹಿಂದೂಪರ ಸಂಘಟನೆಗಳು ತೀವ್ರ ಪ್ರತಿಭಟನೆ ನಡೆಸಿವೆ. ಇದರ ನಡುವೆ ಬಿಜೆಪಿ ರಾಜ್ಯಾಧ್ಯಕ್ಷರಾದ ಬಿ ವೈ ವಿಜಯೇಂದ್ರ ಅವರು, ಮುಸ್ಲಿಂ ಯುವಕನ ಚಾಕು ಇರಿತದಿಂದ ಬರ್ಬರ ಹತ್ಯೆಗೊಳಗಾದ ದಲಿತ ಹಿಂದೂ ಯುವತಿ ರಂಜಿತಾ ಬನಸವಾಡೆ ಮನೆಗೆ
ದೇಶಾದ್ಯಂತ ಇನ್ಮೇಲೆ ಇನೋವಾ ಕಾರುಗಳು ಸ್ಥಗಿತ! ಸಂಪೂರ್ಣ ಬಂದ್?
ಭಾರತದ ರಸ್ತೆಗಳಲ್ಲಿ “ನಂಬಿಕೆ” ಎಂಬ ಪದಕ್ಕೆ ಮತ್ತೊಂದು ಹೆಸರಿದ್ದರೆ ಅದು ಟೊಯೋಟಾ ಇನ್ನೋವಾ (Toyota Innova). ಕಳೆದ ಎರಡು ದಶಕಗಳಿಂದ ಕೌಟುಂಬಿಕ ಪ್ರಯಾಣಿಕರ ಅಚ್ಚುಮೆಚ್ಚಿನ ವಾಹನವಾಗಿ, ಟ್ಯಾಕ್ಸಿ ಮಾಲೀಕರ ಪಾಲಿನ ‘ಅಕ್ಷಯ ಪಾತ್ರೆ’ಯಾಗಿ ಮೆರೆದ ವಾಹನವಿದು. ಆದರೆ, ಇದೀಗ ವಾಹನ ಮಾರುಕಟ್ಟೆಯಿಂದ ಕೇಳಿಬರುತ್ತಿರುವ ಸುದ್ದಿ ಇನ್ನೋವಾ ಅಭಿಮಾನಿಗಳಿಗೆ ಕೊಂಚ ಬೇಸರ ತರಿಸಬಹುದು. ಹೌದು, ಭಾರತದ ಎಂಪಿವಿ (MPV) ಮಾರುಕಟ್ಟೆಯ ದಿಕ್ಕನ್ನೇ ಬದಲಿಸಿದ ಈ ‘ಲೆಜೆಂಡ್’ ಕಾರಿನ ಕಥೆ ಶೀಘ್ರದಲ್ಲೇ ಮುಕ್ತಾಯವಾಗಲಿದೆಯೇ? ಎಂಬ ಪ್ರಶ್ನೆ ಈಗ ಎಲ್ಲೆಡೆ ಹರಿದಾಡುತ್ತಿದೆ. ... Read more The post ದೇಶಾದ್ಯಂತ ಇನ್ಮೇಲೆ ಇನೋವಾ ಕಾರುಗಳು ಸ್ಥಗಿತ! ಸಂಪೂರ್ಣ ಬಂದ್? appeared first on Karnataka Times .
ಕರ್ನಾಟಕ ಸರ್ಕಾರವು 2025-26ನೇ ಸಾಲಿನ ಖಾರಿಫ್ ಹಂಗಾಮಿನ ಮೆಕ್ಕೆಜೋಳ ಬೆಳೆಗಾರರಿಗಾಗಿ ಮಾರುಕಟ್ಟೆ ಮಧ್ಯಸ್ಥಿಕೆ ಯೋಜನೆಯನ್ನು ಜಾರಿಗೆ ತಂದಿದೆ. ದಾಖಲೆ ಪ್ರಮಾಣದ ಉತ್ಪಾದನೆಯಿಂದ ಬೆಲೆ ಕುಸಿತ ಎದುರಿಸುತ್ತಿರುವ ರೈತರಿಗೆ ಪ್ರತಿ ಕ್ವಿಂಟಾಲ್ಗೆ 2,150 ರೂ. ನಿಗದಿತ ದರ ನಿಗದಿಪಡಿಸಲಾಗಿದೆ. ಮಾರುಕಟ್ಟೆ ದರ 1,900 ರೂ.ಗಿಂತ ಕಡಿಮೆಯಾದರೆ 250 ರೂ.ವರೆಗೆ ಬೆಲೆ ವ್ಯತ್ಯಾಸ ಪರಿಹಾರ ಧನ ದೊರೆಯಲಿದೆ. ಈ ಯೋಜನೆಯಿಂದ 10 ಲಕ್ಷಕ್ಕೂ ಹೆಚ್ಚು ರೈತರು ಪ್ರಯೋಜನ ಪಡೆಯಲಿದ್ದಾರೆ. ಈ ಕುರಿತ ಮಾಹಿತಿ ಇಲ್ಲಿದೆ.
ರಾಜ್ಯ ರಾಜಕೀಯಕ್ಕೆ ಪ್ರತಾಪ್ ಸಿಂಹ ಎಂಟ್ರಿ; ʻಚಾಮರಾಜ ಕ್ಷೇತ್ರ ನನ್ನ ಆಯ್ಕೆʼ ಎಂದ ಮಾಜಿ ಸಂಸದ
ಕೇಂದ್ರ ರಾಜಕೀಯ ಆದ ನಂತರ ರಾಜ್ಯಕ್ಕೆ ಬರಬೇಕು ಅಲ್ವ. ರಾಜ್ಯ ರಾಜಕೀಯಕ್ಕೆ ಕಾಲಿಟ್ಟೇದ್ದೇನೆ ಎಂದು ಪ್ರತಾಪ್ ಸಿಂಹ ಅವರು ಮೈಸೂರಿನಲ್ಲಿ ಮಾತನಾಡಿರುವುದು ಸದ್ಯ ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಚಾಮರಾಜ ವಿಧಾನಸಭೆ ಕ್ಷೇತ್ರದ ಜನ ಹಣ ತಗೊಂಡು ವೋಟ್ ಹಾಕೋಲ್ಲ ಕೆಲಸ ಗಮನಿಸುತ್ತಾರೆ ಎಂದರು. ಇನ್ನು ಕೋಗಿಲು ಬಡಾವಣೆಯಲ್ಲಿರುವುದು ಅಕ್ರಮವಾಗಿ ಬಾಂಗ್ಲಾದಿಂದ ಬಂದವರು ಅವರಿಗೆ ನಿವೇಶನ ಕೊಡಬೇಡಿ ಎಂದು ಪ್ರತಾಪ್ ಸಿಂಹ ಪ್ರಸ್ತಾಪಿಸಿದರು.
ಹೊಸನಗರ: ವ್ಯಕ್ತಿಗೆ ಹಲ್ಲೆ; ಗಲಾಟೆ ವಿಡಿಯೋ ವೈರಲ್, ಪ್ರಕರಣ ದಾಖಲು
ಹೊಸನಗರ: ಹೊಸ ವರ್ಷದ ಸಂಭ್ರಮದ ದಿನದಂದೇ ನಡುವೆ ಪಟ್ಟಣದಲ್ಲಿ ನಡೆದ ಗಲಾಟೆಯ ವಿಡಿಯೋ ತುಣುಕೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಈ ಘಟನೆ ಸಂಬಂಧ ಹೊಸನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುವ ಬಗ್ಗೆ ವರದಿಯಾಗಿದೆ. ಈಡಿಗರ ಭವನದ ಬಳಿ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಲಾಗಿದೆ ಎನ್ನಲಾದ ದೃಶ್ಯಗಳು ವೈರಲ್ ವಿಡಿಯೋದಲ್ಲಿ ಸೆರೆಯಾಗಿವೆ. ಘಟನೆ ಸಂಬಂಧ ಸುರೇಂದ್ರ ಕೋಟ್ಯಾನ್, ಗೋಪಾಲ, ಸಂತೋಷ, ಶಶಾಂಕ, ಸುರೇಶ ಸ್ವಾಮಿರಾವ್ ಸೇರಿದಂತೆ ಐವರ ಮೇಲೆ ದೂರು ದಾಖಲಾಗಿದೆ ಎಂದು ತಿಳಿದು ಬಂದಿದೆ. ಜನವರಿ 1ರಂದು ತಡರಾತ್ರಿ ಸುಮಾರು 2 ಗಂಟೆ ಸುಮಾರಿಗೆ ಘಟನೆ ನಡೆದಿದೆ ಎನ್ನಲಾಗಿದ್ದು, ಬೆಂಗಳೂರಿಗೆ ತೆರಳುತ್ತಿದ್ದ ಮಾಧವಶೆಟ್ಟಿ ಎಂಬವರು ಪಟ್ಟಣದ ಪೇಟೆ ಸಮೀಪ ತಮ್ಮ ವಾಹನವನ್ನು ನಿಧಾನಗೊಳಿಸಿದಾಗ, ಅಲ್ಲಿದ್ದ ಆರೋಪಿಗಳು ಅವರನ್ನು ನಿಂದಿಸಿ ಹಲ್ಲೆ ನಡೆಸಿದ್ದಾರೆ ಎಂದು ಹೇಳಲಾಗಿದೆ. ಈ ವೇಳೆ ಮಾಧವಶೆಟ್ಟಿಯವರ 55 ಸಾವಿರ ರೂಪಾಯಿ ಮೌಲ್ಯದ ಮೊಬೈಲ್ ಫೋನ್ ಜಖಂಗೊಂಡಿದ್ದು, ಕುತ್ತಿಗೆಯಲ್ಲಿದ್ದ ಚಿನ್ನದ ಸರವೂ ಕಳೆದುಹೋಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಹಲ್ಲೆಗೊಳಗಾದ ಮಾಧವಶೆಟ್ಟಿ ಅವರು ತಮಗೆ ನ್ಯಾಯ ಒದಗಿಸುವಂತೆ ದೂರಿನಲ್ಲಿ ಆಗ್ರಹಿಸಿದ್ದಾರೆ.
SSLC Exam 2026: ಎಸ್ಎಸ್ಎಲ್ಸಿ, ಪಿಯುಸಿ ಪ್ರತಿ ವಿಷಯದಲ್ಲೂ ಗರಿಷ್ಠ ಅಂಕ ಗಳಿಕೆ ಸುಲಭ: ಶಿಕ್ಷಣ ಮಂಡಳಿ
ಬೆಂಗಳೂರು: ರಾಜ್ಯದಲ್ಲಿ ಎಸ್ಎಸ್ಎಲ್ಸಿ ವಾರ್ಷಿಕ ಪರೀಕ್ಷೆ 2026 ಮತ್ತು ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ 2026 ನಡೆಸುವ ತಯಾರಿಯಲ್ಲಿ ತೊಡಗಿರುವ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ (KSEAB) ವಿದ್ಯಾರ್ಥಿಗಳಿಗೆ ಅನುಕೂಲಕರ ವಾತಾವರಣ ನಿರ್ಮಿಸುತ್ತಿದೆ. ಇದೀಗ ವಿದ್ಯಾರ್ಥಿಗಳು ಹೆಚ್ಚಿನ ಅಂಕ ಗಳಿಸಲು ಸಹಾಯವಾಗುವಂತೆ ಹಳೆಯ ಟಾಪರ್ ಗಳ ಉತ್ತರ ಪತ್ರಿಕೆ ಲಭ್ಯವಾಗುವಂತೆ ಮಾಡಿದೆ. ಎಸ್ಎಸ್ಎಲ್ಸಿ ಹಾಗೂ
ಚಿನ್ನದ ಬೆಲೆಯಲ್ಲಿ ದಿಢೀರ್ ಏರಿಕೆ; ಇಂದು ಚಿನ್ನದ ದರವೆಷ್ಟು?
ಅಮೆರಿಕ- ಲ್ಯಾಟಿನ್ ಅಮೆರಿಕದ ಸಂಘರ್ಷದ ನಡುವೆ ಚಿನ್ನದ ಬೆಲೆ ಏರಿಕೆಯಾಗುತ್ತಿದೆ. ಸೋಮವಾರ ಚಿನ್ನದ ಬೆಲೆಯಲ್ಲಿ ಸಾರ್ವಕಾಲಿಕ ಏರಿಕೆ ಕಾಣುವ ನಿರೀಕ್ಷೆಯಿದೆ. ಶುಕ್ರವಾರ ತಡರಾತ್ರಿಯಲ್ಲಿ ವಿಶ್ವದಲ್ಲಿ ಮಹತ್ವದ ಬೆಳವಣಿಗೆಗಳು ನಡೆದಿವೆ. ಅಮೆರಿಕ ಮತ್ತು ಲ್ಯಾಟಿನ್ ಅಮೆರಿಕಗಳ ದೇಶಗಳ ನಡುವಿನ ಸಂಘರ್ಷದಿಂದಾಗಿ ಆರ್ಥಿಕ ವಲಯದಲ್ಲಿ ಭಾರೀ ಬದಲಾವಣೆಗಳ ನಿರೀಕ್ಷೆಯಿದೆ. ಅಮೆರಿಕ ಮತ್ತು ವೆನೆಜುವೆಲಾ ಸಂಘರ್ಷದ ಬೆನ್ನಲ್ಲೇ ಚಿನ್ನದ ಬೆಲೆ ಏರಿಕೆ ನಿರೀಕ್ಷಿಸಲಾಗಿತ್ತು. ಅದರಂತೆಯೇ ಬೆಂಗಳೂರು ಮತ್ತು ಭಾರತದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ ಭಾರೀ ಏರಿಕೆ ಕಂಡಿದೆ. ಷೇರುಮಾರುಕಟ್ಟೆ ಏರುಪೇರು ಬೆನ್ನಲ್ಲೇ ಚಿನ್ನದ ಬೆಲೆ ಏರಿಕೆಯಾಗಿದೆ. ಮಂಗಳೂರಿನಲ್ಲಿ ಇಂದು ಚಿನ್ನದ ದರವೆಷ್ಟು (ಬೆಳಿಗ್ಗೆ)? ಸೋಮವಾರ ಜನವರಿ 5 ರಂದು ಬೆಳಗಿನ 11 ಗಂಟೆಯ ವಹಿವಾಟಿನಲ್ಲಿ ಮಂಗಳೂರಿನಲ್ಲಿ ಚಿನ್ನದ ಬೆಲೆ ದಿಢೀರ್ ಏರಿಕೆ ಕಂಡಿದೆ. ಬೆಳಗಿನ ವಹಿವಾಟಿನಲ್ಲಿ ಒಂದು ಗ್ರಾಂ 24 ಕ್ಯಾರೆಟ್ ಚಿನ್ನಕ್ಕೆ 13,740 (+158) ರೂ., ಒಂದು ಗ್ರಾಂ 22 ಕ್ಯಾರೆಟ್ ಚಿನ್ನಕ್ಕೆ 12,595 (+145) ರೂ., ಮತ್ತು ಒಂದು ಗ್ರಾಂ 18 ಕ್ಯಾರೆಟ್ ಚಿನ್ನ 10,305 (+118) ರೂ. ಬೆಲೆಗೆ ತಲುಪಿದೆ. ದೇಶದಲ್ಲಿ ಚಿನ್ನದ ದರ ಏರಿಕೆ ಜನವರಿ 5ರಂದು ಸೋಮವಾರ 24 ಕ್ಯಾರೆಟ್ನ ಒಂದು ಗ್ರಾಂ ಚಿನ್ನದ ಬೆಲೆಯು 13,740 ರೂಪಾಯಿ ಆಗಿದೆ. ಜನವರಿ ಮೊದಲ ವಾರಾಂತ್ಯಕ್ಕೆ ಹೋಲಿಸಿದರೆ 24 ಕ್ಯಾರೆಟ್ನ ಚಿನ್ನದ ಬೆಲೆಯು ಒಂದು ಗ್ರಾಂಗೆ 158 ರೂಪಾಯಿ ಹೆಚ್ಚಳವಾಗಿದೆ. 22 ಕ್ಯಾರೆಟ್ನ ಒಂದು ಗ್ರಾಂ ಚಿನ್ನದ ಬೆಲೆಯು 12,595 ರೂಪಾಯಿ ಆಗಿದೆ. ರವಿವಾರಕ್ಕೆ ಹೋಲಿಸಿದರೆ 145 ರೂಪಾಯಿ ಹೆಚ್ಚಳವಾಗಿದೆ. 18 ಕ್ಯಾರೆಟ್ನ ಚಿನ್ನದ ಬೆಲೆಯು ಒಂದು ಗ್ರಾಂಗೆ 10,305 ರೂಪಾಯಿ ಆಗಿದ್ದು, ರವಿವಾರಕ್ಕೆ ಹೋಲಿಸಿದರೆ 118 ರೂಪಾಯಿ ಹೆಚ್ಚಳವಾಗಿದೆ. ಬೆಳ್ಳಿಯ ಬೆಲೆ ಹೇಗಿದೆ? ಬೆಳ್ಳಿಯ ಬೆಲೆಯು ಪ್ರತಿ ಗ್ರಾಂಗೆ 247 ರೂಪಾಯಿ ಆಗಿದೆ. ಬೆಳ್ಳಿ ಬೆಲೆಯು ವಾರಾಂತ್ಯಕ್ಕೆ ಹೋಲಿಸಿದರೆ ಪ್ರತಿ ಗ್ರಾಂಗೆ 6 ರೂ. ಏರಿದೆ. ಒಂದು ಕೆಜಿ ಬೆಳ್ಳಿ ಬೆಲೆ 2,47,000 ಸಾವಿರ ರೂ. ಆಗಿದೆ. ರವಿವಾರಕ್ಕೆ ಹೋಲಿಸಿದರೆ ಒಂದು ಕೆ.ಜಿ ಬೆಳ್ಳಿ ಬೆಲೆಯು 6,000 ಸಾವಿರ ರೂ. ಹೆಚ್ಚಳವಾಗಿದೆ.
ಕೆಆರ್ಎಸ್ ಜಲಾಶಯದ ವಿಶ್ವೇಶ್ವರಯ್ಯ ನಾಲೆಗಳಿಗೆ ಜ. 12 ರಿಂದ ನೀರು: ಕಟ್ಟು ಪದ್ಧತಿಯಡಿ ನೀರು ಪೂರೈಕೆ
ಕೃಷ್ಣರಾಜಸಾಗರ ಜಲಾಶಯದ ವಿಶ್ವೇಶ್ವರಯ್ಯ ನಾಲಾ ಜಾಲದ ಅಚ್ಚುಕಟ್ಟು ಪ್ರದೇಶಗಳಲ್ಲಿ ದೀರ್ಘಾವಧಿ ಬೆಳೆಗಳ ರಕ್ಷಣೆಗೆ ಜ. 12ರಿಂದ ಕಟ್ಟು ಪದ್ಧತಿಯಡಿ ನಾಲೆಗಳಿಗೆ ನೀರು ಹರಿಸಲು ನಿರ್ಧರಿಸಲಾಗಿದೆ. ಆದರೆ, ಲೈನಿಂಗ್ ಕಾಮಗಾರಿ ಹಿನ್ನೆಲೆಯಲ್ಲಿ ತುರುಗನೂರು, ಹೆಬ್ಬಕವಾಡಿ, ನಿಡಘಟ್ಟ ಶಾಖಾ ನಾಲೆಗಳಿಗೆ ನೀರು ಕೊಡದಿರಲು ತೀರ್ಮಾನಿಸಲಾಗಿದ್ದು, ರೈತರಿಗೆ ಅಗತ್ಯ ಸಲಹೆಗಳನ್ನು ಕೊಡಲಾಗಿದೆ.
ದಿಲ್ಲಿ ಗಲಭೆ ಕೇಸ್: ಮತ್ತೆ ಉಮರ್ ಖಾಲಿದ್, ಶಾರ್ಜೀಲ್ ಇಮಾಮ್ಗೆ ಜಾಮೀನು ನಿರಾಕರಿಸಿದ ಸುಪ್ರೀಂ; ಕಾರಣ ಏನು?
ದಿಲ್ಲಿ ಗಲಭೆಯ ಹಿಂದಿನ ಪಿತೂರಿ ಪ್ರಕರಣದಲ್ಲಿ ಸಿಲುಕಿರುವ ಉಮರ್ ಖಾಲಿದ್ ಮತ್ತು ಶಾರ್ಜೀಲ್ ಇಮಾಮ್ ಅವರಿಗೆ ಜಾಮೀನು ನೀಡಲು ಸುಪ್ರೀಂ ಕೋರ್ಟ್ ಮತ್ತೆ ನಿರಾಕರಿಸಿದೆ. ಪ್ರಾಸಿಕ್ಯೂಷನ್ ಒದಗಿಸಿದ ಸಾಕ್ಷ್ಯಗಳು ಇವರ ವಿರುದ್ಧದ ಕ್ರಿಮಿನಲ್ ಪಿತೂರಿಯನ್ನು ಸೂಚಿಸುತ್ತವೆ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ. ಇದೇ ವೇಳೆ, ದೀರ್ಘಕಾಲದ ಸೆರೆವಾಸ ಮತ್ತು ಅಪರಾಧದ ತೀವ್ರತೆಯನ್ನು ಪರಿಗಣಿಸಿ ಗುಲ್ಫಿಶಾ ಫಾತಿಮಾ ಸೇರಿದಂತೆ ಐವರಿಗೆ ಜಾಮೀನು ನೀಡಲಾಗಿದೆ.
ಗೂಂಡಾ ರಾಜ್ ಕಾಂಗ್ರೆಸ್ ಸರ್ಕಾರದ 6ನೇ ಗ್ಯಾರಂಟಿ: ಸಿದ್ದರಾಮಯ್ಯ ವಿರುದ್ಧ ಆರ್ ಅಶೋಕ್ ವಾಗ್ದಾಳಿ
ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ವಿಪಕ್ಷ ಬಿಜೆಪಿ ವಾಗ್ದಾಳಿ ನಡೆಸಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ ಎಂದು ಬಿಜೆಪಿ ವಾಗ್ದಾಳಿ ನಡೆಸಿದೆ. ಈ ಕುರಿತಾಗಿ ವಿಪಕ್ಷ ನಾಯಕ ಆರ್ ಅಶೋಕ್ ಟ್ವೀಟ್ ಮಾಡಿದ್ದು, ಗೂಂಡಾ ರಾಜ್ ಕಾಂಗ್ರೆಸ್ ಸರ್ಕಾರದ 6ನೇ ಗ್ಯಾರಂಟಿಯಾಗಿದೆ ಎಂದಿದ್ದಾರೆ. ಅಲ್ಲದೆ, ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ಆರ್ ಅಶೋಕ್ ವಾಗ್ದಾಳಿ ನಡೆಸಿದ್ದಾರೆ. ಇಷ್ಟಾದರೂ ಕಾಂಗ್ರೆಸ್ ಸರ್ಕಾರದ ಮೌನ ಮತ್ತು ನಿರ್ಲಕ್ಷ್ಯ ನಾಚಿಕೆಗೇಡು ಎಂದು ಅವರು ಟೀಕಿಸಿದ್ದಾರೆ.
ಬೈಕಂಪಾಡಿ : ಪ್ಲೈವುಡ್ ಫ್ಯಾಕ್ಟರಿಯಲ್ಲಿ ಬೆಂಕಿ ಆಕಸ್ಮಿಕ; ಅಪಾರ ನಷ್ಟ
ಪಣಂಬೂರು : ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿನ ಪ್ಲೈವುಡ್ ಫ್ಯಾಕ್ಟರಿಯೊಂದರಲ್ಲಿ ರವಿವಾರ ಬೆಳಗ್ಗೆ ಬೆಂಕಿ ಅವಘಡ ಸಂಭವಿಸಿ ಅಪಾರ ನಷ್ಟ ಸಂಭವಿಸಿರುವ ಬಗ್ಗೆ ವರದಿಯಾಗಿದೆ. ರಝಾಕ್ ಎಂಬವರಿಗೆ ಸೇರಿದ ಅಕೋಲೈಟ್ ಇಂಡಸ್ಟ್ರಿಯಲ್ ಸಿಸ್ಟಮ್ ಪ್ರೈವೇಟ್ ಲಿಮಿಟೆಡ್ ಎಂಬ ಪ್ಲೈವುಡ್ ಫ್ಯಾಕ್ಟರಿಯಲ್ಲಿ ಶಾರ್ಟ್ ಸರ್ಕ್ಯೂಟ್ ಉಂಟಾಗಿ ಬೆಂಕಿ ಹೊತ್ತಿಕೊಂಡಿದೆ ಎನ್ನಲಾಗಿದೆ. ಬೆಂಕಿಯ ಕೆನ್ನಾಲಿಗೆಗೆ ಕಂಪೆನಿಯಲ್ಲಿದ್ದ ಪ್ಲೈವುಡ್ಗಳು ಸುಟ್ಟು ಭಸ್ಮವಾಗಿದ್ದು, ಸುಮಾರು 1ಕೋ.ರೂ. ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ. ಘಟನೆ ಬೆಳಗ್ಗಿನ ಜಾವ ನಡೆದಿರುವ ಪರಿಣಾರ ಕೆಲಸಗಾರರು ಯಾರೂ ಇದ್ದಿರಲಿಲ್ಲ. ಹಾಗಾಗಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಘಟನೆಯ ಮಾಹಿತಿ ತಿಳಿದ ಕೂಡಲೇ ಪಣಂಬೂರು ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಸ್ಥಳಕ್ಕೆ ಎಂ.ಸಿ.ಎಫ್, ಎನ್ ಎಂ ಪಿ ಎ ಹಾಗೂ ಅಗ್ನಿಶಾಮಕದಳದ ನಾಲ್ಕು ಅಗ್ನಿ ಶಾಮಕ ವಾಹನಗಳು ಆಗಮಿಸಿ ಬೆಂಕಿ ನಂದಿಸಿವೆ ಎಂದು ತಿಳಿದು ಬಂದಿದೆ.
ವೆನೆಜುವೆಲಾ ತೈಲದ ಮೇಲೆ ಅಮೆರಿಕ ಕಣ್ಣು: ಭಾರತದ 2 ಕಂಪನಿಗಳಿಗೆ ಹೊಡೆಯಲಿದೆಯೇ ಜಾಕ್ಪಾಟ್?
ವೆನೆಜುವೆಲಾದ ತೈಲ ಉದ್ಯಮದಲ್ಲಿ ಅಮೆರಿಕದ ಹಸ್ತಕ್ಷೇಪ ಅಥವಾ ಸ್ವಾಧೀನ ಪ್ರಕ್ರಿಯೆಯು ಭಾರತದ ರಿಲಯನ್ಸ್ ಇಂಡಸ್ಟ್ರೀಸ್ ಮತ್ತು ಒಎನ್ಜಿಸಿ ಪಾಲಿಗೆ ವರದಾನವಾಗಲಿದೆ ಎಂದು ಜೆಫರೀಸ್ ವರದಿ ಮಾಡಿದೆ. ರಿಲಯನ್ಸ್ಗೆ ಕಡಿಮೆ ದರದಲ್ಲಿ ಕಚ್ಚಾ ತೈಲ ಸಿಗುವ ಸಾಧ್ಯತೆಯಿದ್ದರೆ, ಒಎನ್ಜಿಸಿಗೆ ವರ್ಷಗಳಿಂದ ಬಾಕಿಯಿರುವ ಸಾವಿರಾರು ಕೋಟಿ ರೂಪಾಯಿ ಲಾಭಾಂಶ ಕೈಸೇರುವ ನಿರೀಕ್ಷೆಯಿದೆ. ವೆನೆಜುವೆಲಾ ವಿಶ್ವದ ಅತಿದೊಡ್ಡ ತೈಲ ನಿಕ್ಷೇಪ ಹೊಂದಿದ್ದರೂ, ಸದ್ಯ ಉತ್ಪಾದನೆ ಕುಂಠಿತವಾಗಿದೆ. ಅಮೆರಿಕದ ಪ್ರವೇಶದಿಂದ ಉತ್ಪಾದನೆ ಹೆಚ್ಚಾದರೆ, ದೀರ್ಘಾವಧಿಯಲ್ಲಿ ತೈಲ ಬೆಲೆ ಇಳಿಕೆಯಾಗುವ ಸಾಧ್ಯತೆಯನ್ನೂ ವರದಿ ಉಲ್ಲೇಖಿಸಿದೆ.
2020ರ ಈಶಾನ್ಯ ದೆಹಲಿ ಗಲಭೆಗಳಿಗೆ ಸಂಬಂಧಿಸಿದ ಯುಎಪಿಎ ಪ್ರಕರಣದಲ್ಲಿ ಬಂಧಿತರಾಗಿರುವ ಉಮರ್ ಖಾಲಿದ್, ಶರ್ಜೀಲ್ ಇಮಾಮ್ ಸೇರಿದಂತೆ ಏಳು ಮಂದಿಯ ಜಾಮೀನು ಅರ್ಜಿಗಳ ಬಗ್ಗೆ ಸುಪ್ರೀಂ ಕೋರ್ಟ್ ಇಂದು ತೀರ್ಪು ನೀಡಲಿದೆ. ದೆಹಲಿ ಹೈಕೋರ್ಟ್ ಜಾಮೀನು ನಿರಾಕರಿಸಿದ್ದನ್ನು ಪ್ರಶ್ನಿಸಿ ಸುಪ್ರೀಂ ಮೆಟ್ಟಿಲೇರಿದ್ದ ಅರ್ಜಿಗಳ ವಿಚಾರಣೆ ನಡೆಯಲಿದೆ. ಈಗಾಗಲೇ ಜಾಗತಿಕವಾಗಿ ಸದ್ದುಮಾಡುತ್ತಿರುವ ಪ್ರಕರಣಕ್ಕೆ ಸಂಬಂಧಸಿದಂತೆ ಸುಪ್ರೀಂ ಇಂದು ಮಹತ್ವದ ತೀರ್ಪು ನೀಡುವ ಸಾಧ್ಯತೆಯಿದೆ.
ʻಮುಸ್ತಫಿಜುರ್ರಂತೆ, ಶೇಖ್ ಹಸೀನಾರನ್ನು ಬಾಂಗ್ಲಾಕ್ಕೆ ಕಳಿಸಿʼ: ಅಸಾದುದ್ದೀನ್ ಓವೈಸಿ ಆಗ್ರಹ
ಶೇಖ್ ಹಸೀನಾರನ್ನು ಬಾಂಗ್ಲಾಕ್ಕೆ ಒಪ್ಪಿಸುವಂತೆ ಭಾರತಕ್ಕೆ ಮನವಿ ಮಾಡಿಕೊಳ್ಳುತ್ತಿದ್ದರು ಸಹ ಅವರನ್ನು ಇಲ್ಲಿಯೇ ಇರಿಸಿಕೊಳ್ಳಲಾಗಿದೆ. ಆದರೆ, ಬಾಂಗ್ಲಾದಲ್ಲಿ ಹಿಂದೂಗಳಿಗೆ ಹಿಂಸಾಚಾರ ನೀಡಲಾಗುತ್ತಿದೆ ಎಂದು ಬಾಂಗ್ಲಾದೇಶದ ವೇಗದ ಬೌಲರ್ ಮುಸ್ತಫಿಜುರ್ ರೆಹಮಾನ್ ಅವರನ್ನು ಐಪಿಎಲ್ನಿಂದ ಬಿಡುಗಡೆ ಮಾಡಿ ವಾಪಸ್ ಕಳುಹಿಸಿರುವುದು ಎಷ್ಟು ಸರಿ ಎಂದು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಪ್ರಶ್ನಿಸಿದ್ದಾರೆ. ಪಹಲ್ಗಾಮ್ ನಲ್ಲಿ ಅಮಾಯಕ ಜನರನ್ನು ಕೊಂದವರ ಜೊತೆ ಏಷ್ಯಾ ಕಪ್ ಟೂರ್ನಿ ಆಡಿದ್ದು ಎಷ್ಟು ಸರಿ ಎಂದು ಹೇಳಿದರು.
ಮಾ.28, 29, 30 ರಂದು ಉಳ್ಳಾಲ ಶ್ರೀ ಮಲರಾಯ ದೈವಸ್ಥಾನದ ಬ್ರಹ್ಮಕಲಶೋತ್ಸವ; ಪೂರ್ವಭಾವಿ ಸಭೆ
ಉಳ್ಳಾಲ: ಉಳ್ಳಾಲ ಬಂಡಿಕೊಟ್ಯದ ಶ್ರೀ ಮಲರಾಯ ದೈವಸ್ಥಾನದ ಬ್ರಹ್ಮಕಲಶೋತ್ಸವವು ಇದೇ ಮಾರ್ಚ್ 28,29,30 ರಂದು ನಡೆಯಲಿದ್ದು, ಆ ಪ್ರಯುಕ್ತ ರವಿವಾರದಂದು ಕ್ಷೇತ್ರದಲ್ಲಿ ದೇವಸ್ಥಾನ, ದೈವಸ್ಥಾನ, ಮಠ, ಮಂದಿರ ಮತ್ತು ಸಂಘ ಸಂಸ್ಥೆಗಳ ಪ್ರಮುಖರ ಉಪಸ್ಥಿತಿಯಲ್ಲಿ ಪೂರ್ವಭಾವಿ ಸಭೆ ನಡೆಯಿತು. ಸಭೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷರಾದ ಸತೀಶ್ ಕುಂಪಲ ಅವರನ್ನು ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು. ಬಂಡಿಕೊಟ್ಯ ಶ್ರೀ ಮಲರಾಯ ದೈವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಸುಂದರ ಉಳ್ಳಾಲ್ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಮಲರಾಯ ದೈವಸ್ಥಾನದ ಅರ್ಚಕರಾದ ಲತೀಶ್ ಯಾನೆ ಮುಂಡ ಪೂಜಾರಿ, ಚೀರುಂಭ ಭಗವತೀ ಕ್ಷೇತ್ರದ ಪ್ರಧಾನ ಅರ್ಚಕರಾದ ಮಂಜಪ್ಪ ಕಾರ್ನವರ್, ಪ್ರಮುಖರಾದ ಬಾಲಕೃಷ್ಣ ಶೆಟ್ಟಿ ಉಳ್ಳಾಲಗುತ್ತು, ಉಳ್ಳಾಲ ಮೊಗವೀರ ಸಂಘದ ಮಾಜಿ ಅಧ್ಯಕ್ಷರಾದ ಸದಾನಂದ ಬಂಗೇರ, ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯರಾದ ಸುರೇಶ್ ಭಟ್ನಗರ, ತಲಪಾಡಿ ಅಲಂಕಾರಗುಡ್ಡೆ ಶ್ರೀ ಮಲರಾಯ ದೈವಸ್ಥಾನದ ಪ್ರಮುಖರಾದ ರವೀಂದ್ರನಾಥ ರೈ, ಬ್ರಹ್ಮಶ್ರೀ ಬಿಲ್ಲವ ವೇದಿಕೆಯ ಅಧ್ಯಕ್ಷರಾದ ಕೆ.ಟಿ.ಸುವರ್ಣ, ಮಂಗಳೂರು ವಿಶ್ವವಿದ್ಯಾಲಯದ ನಾರಾಯಣಗುರು ಅಧ್ಯಯನ ಪೀಠದ ಸದಸ್ಯರಾದ ಸತೀಶ್ ಕರ್ಕೇರ, ಉಳ್ಳಾಲ ಚೀರುಂಭ ಭಗವತೀ ಕ್ಷೇತ್ರದ ನಿಕಟಪೂರ್ವ ಅಧ್ಯಕ್ಷರಾದ ಚಂದ್ರಹಾಸ ಉಳ್ಳಾಲ್, ಸೋಮೇಶ್ವರ ಸೋಮನಾಥ ಕ್ಷೇತ್ರದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ದೀಪಕ್ ಪಿಲಾರು, ಗ್ಯಾರಂಟಿ ಅನುಷ್ಠಾನ ಜಿಲ್ಲಾ ಸಮಿತಿಯ ಉಪಾಧ್ಯಕ್ಷರಾದ ಸುರೇಖ ಚಂದ್ರಹಾಸ್, ಉಳ್ಳಾಲ ಬೈಲು ವೈದ್ಯನಾಥ ಕ್ಷೇತ್ರದ ಪ್ರಮುಖರಾದ ರವಿ ಸುವರ್ಣ,ಉಳ್ಳಾಲ ಲಕ್ಷ್ಮೀ ನರಸಿಂಹ ಕ್ಷೇತ್ರದ ಪ್ರಮುಖರಾದ ಶ್ರೀಕರ ಕಿಣಿ,ಪ್ರಮುಖರಾದ ನಿಶಾನ್ ಪೂಜಾರಿ ಬಂಡಿಕೊಟ್ಯ,ಉಳ್ಳಾಲ್ತಿ ಧರ್ಮಅರಸರ ಕ್ಷೇತ್ರದ ಪ್ರಮುಖರಾದ ಸುಂದರ ಉಳಿಯ,ಗೋಳಿಯಡಿ ಅಯ್ಯಪ್ಪ ಮಂದಿರದ ಪ್ರಮುಖರಾದ ದಿನೇಶ್ ಉಳಿಯ,ವಳಚಿಲತ್ತಾಯ ದೈವಸ್ಥಾನದ ಪ್ರಮುಖರಾದ ಶ್ರೀಕಾಂತ್ ಬಂಗೇರ,ಕೊಲ್ಯ ಬಿಲ್ಲವ ಸಮಾಜದ ಪ್ರಮುಖರಾದ ವೇಣುಗೋಪಾಲ ಕೊಲ್ಯ,ಕೋರ್ದಬ್ಬು ದೈವಸ್ಥಾನದ ಚಂದ್ರಹಾಸ ಗುರಿಕಾರ,ಉಳ್ಳಾಲ ಗೋಪಾಲಕೃಷ್ಣ ಮಠದ ಜಯಂತ್ ಭಟ್,ಉಳ್ಳಾಲ ವೀರಭಧ್ರ ಕ್ಷೇತ್ರದ ರಮೇಶ್ ಮೊದಲಾದವರು ಉಪಸ್ಥಿತರಿದ್ದರು. ಜೀವನ್ ಕುಮಾರ್ ತೊಕ್ಕೊಟ್ಟು ಸ್ವಾಗತಿಸಿದರು.ಮಧ್ವರಾಜ್ ತೊಕ್ಕೊಟ್ಟು ಪ್ರಾಸ್ತಾವಿಕ ಮಾತುಗಳನ್ನಾಡಿದರು.ಉದಯ ಆರ್.ಕೆ ಉಳ್ಳಾಲ್ ವಂದಿಸಿದರು.ನವನೀತ್ ಉಳ್ಳಾಲ್ ನಿರೂಪಿಸಿದರು.
ದಿಲ್ಲಿ ಗಲಭೆ ಪ್ರಕರಣ | ಉಮರ್ ಖಾಲಿದ್, ಶಾರ್ಜೀಲ್ ಇಮಾಮ್ಗೆ ಜಾಮೀನು ನಿರಾಕರಿಸಿದ ಸುಪ್ರೀಂ ಕೋರ್ಟ್
ಗುಲ್ಫಿಶಾ ಫಾತಿಮಾ, ಮೀರಾನ್ ಹೈದರ್, ಶಿಫಾ ಉರ್ ರೆಹಮಾನ್ಗೆ ಜಾಮೀನು ಮಂಜೂರು
ಭಾರತದ ಮೇಲೆ ಶೀಘ್ರವೇ ಮತ್ತಷ್ಟು ಸುಂಕ ವಿಧಿಸುತ್ತೇನೆ; ರಷ್ಯಾದಿಂದ ಭಾರತ ತೈಲ ಖರೀದಿ ವಿಚಾರಕ್ಕೆ ಟ್ರಂಪ್ ಎಚ್ಚರಿಕೆ
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಭಾರತವು ರಷ್ಯಾದಿಂದ ತೈಲ ಖರೀದಿಯನ್ನು ಮುಂದುವರಿಸಿದರೆ ಸುಂಕ ಹೆಚ್ಚಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ. ವೆನೆಜುವೆಲಾದ ತೈಲ ಪ್ರದೇಶವನ್ನು ವಶಪಡಿಸಿಕೊಂಡಿರುವ ಟ್ರಂಪ್, ಭಾರತದ ಪ್ರಧಾನಿ ಮೋದಿ ಅವರನ್ನು ಹೊಗಳುತ್ತಲೇ, ರಷ್ಯಾದಿಂದ ತೈಲ ಖರೀದಿ ಬಗ್ಗೆ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಬೆದರಿಕೆ ಭಾರತದ ತೈಲ ಆಮದು ನೀತಿಯ ಮೇಲೆ ಒತ್ತಡ ಹೇರುವ ತಂತ್ರಗಾರಿಕೆಯಾಗಿ ಎಂದು ಹೇಳಲಾಗುತ್ತಿದ್ದು, ಮತ್ತೊಮ್ಮೆ ಸುಂಕಾಸ್ರ ಪ್ರಯೋಗಿಸುವ ತವಕದಲ್ಲಿ ಟ್ರಂಪ್ ಇದ್ದಂತಿದೆ.
ಸಿದ್ದುಗೆ ಅರಸು ದಾಖಲೆ ಮುರಿಯಲು ಸಾಧ್ಯವೇ?
ದಿವಂಗತ ಡಿ. ದೇವರಾಜ ಅರಸು 7 ವರ್ಷ 239 ದಿನ ಮುಖ್ಯಮಂತ್ರಿಯಾಗಿದ್ದರು. ಇದೀಗ ಜನವರಿ 7ನೇ ತಾರೀಕು ಸಿದ್ದರಾಮಯ್ಯ 7 ವರ್ಷ 240 ದಿನ ಪೂರೈಸಿ ‘ರಾಜ್ಯದಲ್ಲಿ ಅತಿ ಹೆಚ್ಚು ದಿನ ಮುಖ್ಯಮಂತ್ರಿಯಾಗಿದ್ದ’ ಅರಸು ದಾಖಲೆಯನ್ನು ಮುರಿಯಲು ಹೊರಟಿದ್ದಾರೆ. ದಿನದ ಲೆಕ್ಕದಲ್ಲಿರುವ ದಾಖಲೆ ಮುರಿದ ರೀತಿ ಅರಸು ಅವರಂತೆ ಜನ ಮಾನಸದ ಎದೆಯಲ್ಲಿ ಶಾಶ್ವತವಾಗಿ ನೆಲಸುವರೇ ಸಿದ್ದರಾಮಯ್ಯ? ಅದಲ್ಲವೇ ನಿಜವಾದ ದಾಖಲೆ? ಅರಸು ದಿನದಿಂದ ದಿನಕ್ಕೆ ಹೆಚ್ಚೆಚ್ಚು ಪ್ರಸ್ತುತವಾಗುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಅರಸು ನೆನಪಿಸಿಕೊಳ್ಳುವವರು, ತಮ್ಮ ನೋವಿಗೆ ಅರಸು ಕಡೆ ನೋಡುವವರು, ಅರಸು ಅವರಲ್ಲಿ ತಮ್ಮ ಭವಿಷ್ಯ ಅರಸುವವರ ಸಂಖ್ಯೆ ಇನ್ನಷ್ಟು ಹೆಚ್ಚಾಗಲಿದೆ. ಅದು ಎರಡು ಕಾರಣಕ್ಕೆ. ಒಂದು ಅವರು ಮಾಡಿದ ಕೆಲಸಗಳಿಗಾಗಿ. ಇನ್ನೊಂದು ಅವರ ಸಾಮಾಜಿಕ ಬದ್ಧತೆಗಾಗಿ. ಜಮೀನ್ದಾರನ ಹೊಟ್ಟೆಯಲ್ಲಿ ಹುಟ್ಟಿ ಜೀತಕ್ಕಿರುವವರ ದೈನೇಸಿ ಸ್ಥಿತಿಗೆ ಮರುಗಿದ ಮಹಾ ಮಾನವತಾವಾದಿ ಅರಸು. ಅವರ ಕೆಲಸದ ಬಗ್ಗೆ ಹೇಳಲು ಭೂಸುಧಾರಣೆ ಎಂಬ ಒಂದೇ ಉದಾಹರಣೆ ಸಾಕು. ಭೂಸುಧಾರಣೆ ಕಾಯ್ದೆ ತರಲು ಭೂಮಿಯನ್ನು ಹೊಂದಿರುವ ಮುಂದುವರಿದ ಜಾತಿಗಳು ತೀವ್ರವಾಗಿ ವಿರೋಧಿಸುತ್ತವೆ ಎನ್ನುವುದು ಅವರಿಗೆ ಗೊತ್ತಿತ್ತು. ಅದಕ್ಕಾಗಿ ಹಿಂದುಳಿದವರು, ಅಲ್ಪಸಂಖ್ಯಾತರು ಮತ್ತು ದಲಿತರಿಗೆ ಹೆಚ್ಚಿನ ಸೀಟುಗಳನ್ನು ಕೊಟ್ಟು ಅವರನ್ನು ಗೆಲ್ಲಿಸಿಕೊಂಡಿದ್ದರು. ಪ್ರಬಲವಾಗಿ ವಿರೋಧಿಸುವ ಒಕ್ಕಲಿಗ ಸಮುದಾಯದ ಹುಚ್ಚುಮಾಸ್ತಿಗೌಡರಿಗೆ ಕಂದಾಯ ಖಾತೆ ಮತ್ತು ಬಂಟ ಸಮುದಾಯದ ಬಿ. ಸುಬ್ಬಯ್ಯ ಶೆಟ್ಟಿ ಅವರಿಗೆ ಭೂಸುಧಾರಣೆ ಮಾಡಲೆಂದೇ ರೂಪಿಸಲಾಗಿದ್ದ ಪ್ರತ್ಯೇಕ ಖಾತೆಯನ್ನು ಕೊಟ್ಟು, ಅವರನ್ನು ಮತ್ತು ಅವರ ಮೂಲಕ ಆ ಸಮುದಾಯಗಳನ್ನು ವಿಶ್ವಾಸಕ್ಕೆ ಪಡೆದು ಅಂದುಕೊಂಡಿದ್ದನ್ನು ಸಾಧಿಸಿ ತೋರಿಸಿದವರು ಅರಸು. ಅರಸು ಸಮುದಾಯ ಸಾಮಾಜಿಕವಾಗಿ ಅವಮಾನ ಎದುರಿಸಿರಲಿಲ್ಲ. ಅವರ ಕುಟುಂಬಕ್ಕೆ ತುಂಬಾ ಜಮೀನಿತ್ತು. ಆದರೂ ಬಡವರ-ಭೂಹೀನರ ಪರ ಒತ್ತಾಸೆಯಿಂದ ಭೂಸುಧಾರಣೆ ಕಾಯ್ದೆ ತಂದರು. ಅದಕ್ಕಾಗಿ ತಮ್ಮ ಅಧಿಕಾರವನ್ನು ಪಣಕ್ಕಿಟ್ಟಿದ್ದರು. ಚುನಾವಣೆಗೆ ಮುನ್ನವೂ ನಂತರವೂ. ಚುನಾವಣೆಗೆ ಮುನ್ನ ಹಿಂದುಳಿದವರು, ಅಲ್ಪಸಂಖ್ಯಾತರು ಮತ್ತು ದಲಿತರಿಗೆ ಹೆಚ್ಚಿನ ಸೀಟುಗಳನ್ನು ಕೊಡಬೇಕೆಂದು ಅಧ್ಯಯನ ಮಾಡಿ ಅದನ್ನು ಹೈಕಮಾಂಡ್ ನಾಯಕರ ಮುಂದಿಟ್ಟು ಮನವೊಲಿಸಿದ್ದರು. ಆಗ ಆ ಪ್ರಯೋಗ ಸೋತಿದ್ದರೆ ಅರಸು ಭೂಸುಧಾರಣೆ ಕಾಯ್ದೆ ತರುವುದಿರಲಿ, ಮುಖ್ಯಮಂತ್ರಿಯೇ ಆಗುತ್ತಿರಲಿಲ್ಲ. ಇದು ಅರಸು ಅವರಿಗೆ ಗೊತ್ತಿದ್ದರೂ ಪ್ರಯೋಗ ಮಾಡಿದರು. ಅಧಿಕಾರ ಬಂದ ನಂತರವೂ ಸ್ವಲ್ಪ ಯಾಮಾರಿದರೆ ಬಲಾಢ್ಯರೆಲ್ಲಾ ಸೇರಿ ನಮ್ಮನ್ನು ಬಲಿ ಹಾಕುತ್ತಾರೆ ಎಂಬ ಆತಂಕವಿದ್ದರೂ ಅಂದುಕೊಂಡಂತೆ ಬಹಳ ಎಚ್ಚರದಿಂದ ಕಾಯ್ದೆ ತಂದರು. ಇದು ನಿಜವಾದ ಕ್ರಾಂತಿಕಾರಕ ನಡೆ. ಬದ್ಧತೆ, ಬಡವರ-ಭೂಹೀನರ ಬಗೆಗಿನ ಕಾಳಜಿ, ಅಧಿಕಾರ ಪಣಕ್ಕಿಟ್ಟು ಅಂದುಕೊಂಡದ್ದನ್ನು ಮಾಡಿ ತೋರಿಸುವ ಧೈರ್ಯ. ಧೈರ್ಯ, ಬದ್ಧತೆ ಮತ್ತು ಕಾಳಜಿಗಳ ವಿಷಯದಲ್ಲಿ ಅರಸು ದಾಖಲೆ ಮುರಿಯುವುದು ಸಿದ್ದರಾಮಯ್ಯ ಅವರಿಗೆ ಸಾಧ್ಯವೇ? ಅರಸು ಮುಖ್ಯಮಂತ್ರಿಯಾಗುವ ಮುನ್ನ ಹೆಚ್ಚು ಮಾತನಾಡಿದವರಲ್ಲ, ಆದರೆ ಪರಿಣಾಮಕಾರಿ ಹೆಜ್ಜೆಗಳನ್ನು ಇಡಲು ಎಲ್ಲಾ ರೀತಿಯ ತಯಾರಿಗಳನ್ನು ಮೌನಿಯಾಗಿದ್ದುಕೊಂಡೇ ಮಾಡಿಕೊಂಡಿದ್ದರು. ಅದಕ್ಕೆ ಮೇಲೆ ಹೇಳಿರುವ ‘ಚುನಾವಣಾ ತಯಾರಿಯೇ’ ಸೂಕ್ತವಾದ ಉದಾಹರಣೆ. ಇಂಥ ಯೋಜನಾಬದ್ಧ ನಡೆ ಸಿದ್ದರಾಮಯ್ಯ ಅವರಿಂದ ಸಾಧ್ಯವೇ? ಸಾಮಾಜಿಕ ಬದ್ಧತೆ ವಿಷಯಕ್ಕೆ ಬರುವುದಾದರೆ ಹಾವನೂರು ಆಯೋಗ ರಚಿಸಿ, ಅದು 3 ವರ್ಷ 3 ತಿಂಗಳಲ್ಲಿ ಸಮೀಕ್ಷೆ ನಡೆಸಿ ಕೊಟ್ಟ ವರದಿಯನ್ನು 1 ವರ್ಷ 9 ತಿಂಗಳ ಅಂತರದಲ್ಲಿ ಜಾರಿಗೆ ತಂದು ಹಿಂದುಳಿದವರಿಗೆ ಮೀಸಲಾತಿ ನೀಡಿದ ನಡೆ ಒಂದೇ ಸಾಕು. ಆ ವರದಿ ಬಗ್ಗೆ ದೇಶದ ಸರ್ವೋಚ್ಚ ನ್ಯಾಯಾಲಯ ‘ಇದು ಹಿಂದುಳಿದ ವರ್ಗಗಳ ಸಮಗ್ರ ಅಧ್ಯಯನ’ ಎಂದು ಮೆಚ್ಚುಗೆ ವ್ಯಕ್ತಪಡಿಸಿತ್ತು. ಅರಸು ಅವರು ‘ಇದು ಹಿಂದುಳಿದ ವರ್ಗಗಳ ಬೈಬಲ್’ ಎಂದು ಬಣ್ಣಿಸಿದ್ದರು. 50 ವರ್ಷಗಳ ಬಳಿಕವೂ ಅದೇ ಬೈಬಲ್! ಅದು ಸಾಧ್ಯವಾಗಿದ್ದು ಅಂಚಿನ ಜನರ ಬಗ್ಗೆ ಅಂತಃಕರಣ ಹೊಂದಿದ್ದ ಅರಸು ಅವರಿಂದ. ಅರಸು ಅವರ ಯೋಜನಾಬದ್ಧ ನಡೆಯಿಂದ. ಇಂಥ ದಾಖಲೆ ಮುರಿಯಲು ಸಿದ್ದರಾಮಯ್ಯ ಅವರಿಂದ ಸಾಧ್ಯವೇ? ಸಿದ್ದರಾಮಯ್ಯ ಕೂಡ 2014ರಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ (ಜಾತಿಗಣತಿ) ಮಾಡಿಸಲು ಕಾಂತರಾಜು ಆಯೋಗ ರಚಿಸಿದರು. 2018ರವರೆಗೆ ಅವರೇ ಮುಖ್ಯಮಂತ್ರಿಯಾಗಿದ್ದರೂ ವರದಿ ತಯಾರಾಗಲಿಲ್ಲ. ಇದು ಆಯೋಗವನ್ನು ದೂರುವ ವಿಷಯವಲ್ಲ, ಆಯೋಗಕ್ಕೆ ಸರಕಾರ ಕಾಲಮಿತಿ ನಿಗದಿಮಾಡಬಹುದಿತ್ತು. ಹೋಗಲಿ, 2023ರಲ್ಲಿ ಮತ್ತೆ ಮುಖ್ಯಮಂತ್ರಿಯಾಗಿ 32 ತಿಂಗಳಾಗಿವೆ. ವರದಿ ಜಾರಿ ಮಾಡುವುದಿರಲಿ, ಅದನ್ನು ಕಸದ ಬುಟ್ಟಿಗೆ ಹಾಕಲು ಸ್ವತಃ ಸಿದ್ದರಾಮಯ್ಯ ‘ಇದು 10 ವರ್ಷ ಹಿಂದಿನ ವರದಿ’ ಎಂದು ಹೇಳಿದರು. ಅವರ ಮಾತಿನಿಂದ ವರದಿ ಜಾರಿಯಾಗುತ್ತೆ ಎಂದು ಬೆಟ್ಟದಷ್ಟು ನಿರೀಕ್ಷೆ ಇಟ್ಟುಕೊಂಡಿದ್ದ ಮತ್ತು ಅವರನ್ನೇ ನಂಬಿಕೊಂಡಿದ್ದ ಹಿಂದುಳಿದ, ಅದರಲ್ಲೂ ಸಣ್ಣಪುಟ್ಟ, ಹೇಳ ಹೆಸರಿಲ್ಲದ, ದನಿಯಿಲ್ಲದ ನೂರಾರು ಜಾತಿಗಳಿಗೆ ಬರಸಿಡಿಲು ಬಡಿದಂತಾಗಿತ್ತು. ಸಿದ್ದರಾಮಯ್ಯಗೆ ಉಳಿದಿರುವುದು 28 ತಿಂಗಳ ಅಧಿಕಾರ (ಅವರ ಪಕ್ಷ ಅವಕಾಶ ಕೊಟ್ಟರೆ). ಅಷ್ಟರಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ವರದಿ ಜಾರಿಯಾಗುವುದೇ? ಸಿದ್ದರಾಮಯ್ಯ ಈ ವಿಷಯದಲ್ಲಾದರೂ ಅರಸು ದಾಖಲೆ ಸರಿಗಟ್ಟುವರೇ? ದಿನದ ವಿಷಯಕ್ಕೆ ಬರುವುದಾದರೂ ಅರಸು ದಾಖಲೆ ಮುರಿಯಲು ಬರೋಬ್ಬರಿ ನಾಲ್ಕೂವರೆ ದಶಕ ಹಿಡಿಯಿತು. ಇದು ರಾಜ್ಯ ರಾಜಕೀಯ ಭೂಪಟದಲ್ಲಿ ಹಿಂದುಳಿದವರ ನಿರ್ವಾತ ಮತ್ತು ನಿತ್ರಾಣ ಸ್ಥಿತಿಗೆ ಹಿಡಿದ ಕನ್ನಡಿ. ನಡುವೆ ಬಂಗಾರಪ್ಪ ಹಿಂದುಳಿದವರಲ್ಲಿ ಮತ್ತು ಬಡವರಲ್ಲಿ ಭರವಸೆ ಮೂಡಿಸಿದರು. ಆದರವರು ಭೋರ್ಗರೆದು ಸುರಿದ ಮಳೆ. ಭೂಮಿಯಾಳಕ್ಕೆ ಇಳಿದ ನೀರು ಕಮ್ಮಿ. ಬಂಗಾರಪ್ಪ ಆವೇಶ, ಆಕ್ರೋಶಕ್ಕೆ ಬಲಿಯಾಗಿ ಕಳೆದು ಹೋದರು. ನಂತರ ಬಂದ ಹಿಂದುಳಿದ ಜಾತಿಯ ನಾಯಕ ವೀರಪ್ಪ ಮೊಯ್ಲಿ. ಅವರು ಯಾರನ್ನೂ ನಂಬಲಿಲ್ಲ, ಅವರನ್ನೂ ಯಾರೂ ನಂಬಲಿಲ್ಲ. ಪ್ರಕೃತಿಯೇ ಹಾಗಲ್ಲವೇ? ಸಿಇಟಿ, ಆಡಳಿತ ಸುಧಾರಣೆಗೆ ಸಂಬಂಧಿಸಿದಂತೆ ಅಧ್ಯಯನ, ಇಲೆಕ್ಟ್ರಾನಿಕ್ ಸಿಟಿ ನಿರ್ಮಾಣಕ್ಕೆ ಅಡಿಗಲ್ಲು ಸೇರಿದಂತೆ ಹಲವು ಒಳ್ಳೆಯ ಕೆಲಸ ಮಾಡಿಯೂ ಮೊಯ್ಲಿ ಮರೆಯಾದರು. ಅದಾದ ಮೇಲೆ ಧರಂ ಸಿಂಗ್ ಮುಖ್ಯಮಂತ್ರಿಯಾದರು. ಆದರೆ ಹೆಸರಿಗಷ್ಟೇ. ಈ ಮೂವರೂ ಮುಖ್ಯಮಂತ್ರಿಯಾಗಲು ಅಡಿಗಲ್ಲು ಹಾಕಿದ್ದು ಅರಸು. ಲೋಕೋಪಯೋಗಿ ಖಾತೆ ಕೊಟ್ಟು ಬಂಗಾರಪ್ಪ ಅವರನ್ನು ದಪ್ಪ ಮಾಡಿದ್ದು, ಕಾರ್ಕಳದಲ್ಲಿ ವಕೀಲಿಕೆ ಮಾಡಿಕೊಂಡು ಕಳೆದುಹೋಗುತ್ತಿದ್ದ ಮೊಯ್ಲಿಗೆ ಟಿಕೆಟ್ ಕೊಟ್ಟು, ಗೆಲ್ಲಿಸಿ, ಮಂತ್ರಿ ಸ್ಥಾನ ಕೊಟ್ಟು ನಾಯಕನನ್ನಾಗಿ ರೂಪಿಸಿದ್ದು, ಜೇವರ್ಗಿಯಲ್ಲಿ ಹೇಳ ಹೆಸರಿಲ್ಲದ ಜಾತಿಯ ಧರಂ ಸಿಂಗ್ ಅವರನ್ನು ಬೆಳೆಸಿದ್ದು ಅರಸು. ಕೆ.ಎಚ್. ರಂಗನಾಥ್ ಅವರಿಂದ ಹಿಡಿದು ಮಲ್ಲಿಕಾರ್ಜುನ ಖರ್ಗೆವರೆಗೆ ಹಲವು ಮುಖ್ಯಮಂತ್ರಿಗಳ ಅಭ್ಯರ್ಥಿಗಳನ್ನು ಹುಟ್ಟುಹಾಕಿದ್ದು ಅರಸು. ಅವರು ಬೆಳೆಸಿದ ನಾಯಕರು ಒಬ್ಬರಾ, ಇಬ್ಬರಾ? ಜನಾರ್ದನ ಪೂಜಾರಿ, ಬಸವಲಿಂಗಪ್ಪ, ಡಿ.ಕೆ. ನಾಯ್ಕರ್, ದೇವೇಂದ್ರಪ್ಪ ಗಾಳಪ್ಪ, ಎಚ್. ವಿಶ್ವನಾಥ್ ಇನ್ನೂ ಅನೇಕರು. ಅರಸು ಜನರ ಮಧ್ಯೆ ಹುಟ್ಟಿದ ನಾಯಕನಾಗಿರಲಿಲ್ಲ. ಅವರು ಜನರ ಬಳಿ ಹೋಗಿದ್ದೇ ನಾಯಕನಾಗಿ. ಹಾಗೆ ಜನರ ಬಳಿ ಹೋಗಿದ್ದ ಅರಸು ಗುಂಪಿನ ಆಚೆಗಿದ್ದವರನ್ನೂ, ಅಂಚಿನಲ್ಲಿರುವವರನ್ನೂ ಗುರುತಿಸುತ್ತಿದ್ದರು. ಅರಸು ಅವರ ಈ ಅಪರೂಪದ ದಾಖಲೆ ಮುರಿಯುವುದು ಸಿದ್ದರಾಮಯ್ಯ ಅವರಿಂದ ಸಾಧ್ಯವೇ? ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಮೊದಲ ಬಾರಿಗೆ ಕೃಷ್ಣಬೈರೇಗೌಡ, ದಿನೇಶ್ ಗುಂಡೂರಾವ್, ಯು.ಟಿ. ಖಾದರ್, ಸಂತೋಷ್ ಲಾಡ್, ಪ್ರಿಯಾಂಕ್ ಖರ್ಗೆ ಅವರಂಥವರನ್ನು ಮಂತ್ರಿ ಮಾಡಿದರು. ಈ ಸಲ ಬೈರತಿ ಸುರೇಶ್ಗೂ ಅವಕಾಶ ಕೊಟ್ಟರು. ಇವರೆಲ್ಲಾ ಸಾಮಾಜಿಕ ನ್ಯಾಯ, ಅಹಿಂದ ಬಗ್ಗೆ ಮಾತನಾಡುವ ವಿಚಾರ ಬಿಡಿ, ‘ಹಿಂದುಳಿದ ಜಾತಿಯ ನಾಯಕನನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಕೂಡದು’ ಎಂದು ಕೂಡ ಹೇಳುವುದಿಲ್ಲ. ಹಾಗೆ ಮಾತನಾಡುತ್ತಿದ್ದ ಕೆ.ಎನ್. ರಾಜಣ್ಣ ಅವರನ್ನು ಸಿದ್ದರಾಮಯ್ಯ ಅವರೇ ಉಳಿಸಿಕೊಳ್ಳಲಿಲ್ಲ. ಮಾತನಾಡುವ ಧೈರ್ಯ ತೋರಬಲ್ಲ ಬಿ.ಕೆ. ಹರಿಪ್ರಸಾದ್ ಅವರನ್ನು ಮಂತ್ರಿಯೇ ಮಾಡಲಿಲ್ಲ. ಇವತ್ತು ಸಿದ್ದರಾಮಯ್ಯ ಅಕ್ಕಪಕ್ಕದಲ್ಲಿ ಈಡಿಗ, ಗೊಲ್ಲ, ಬಿಲ್ಲವ, ಮಡಿವಾಳ ಮತ್ತಿತರ ಸಮುದಾಯದ ನಾಯಕರು ಕಾಣಿಸುವುದಿಲ್ಲ. ಇದು ಅರಸು ಕಾರ್ಯವೈಖರಿಯೇ? ಅರಸು ಅಂದು ಹಿಂದುಳಿದ ಜಾತಿಗಳಲ್ಲಿ ಬಿತ್ತಿದ್ದ ರಾಜಕೀಯ ಪ್ರಜ್ಞೆಯ ಬೀಜಗಳ ಕಾರಣಕ್ಕಾಗಿ 2013ರಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿಯಾದರು. ಸಿದ್ದರಾಮಯ್ಯ ಬಿತ್ತಿರುವ ಬೀಜ ಎಂಥದ್ದು? ಸಿದ್ದು-ಅರಸು ಅದೃಷ್ಟವಂತ ಯಾರು? ಅರಸು ಕಾಲದ ಪ್ರತಿಪಕ್ಷದ ನಾಯಕ ಎಚ್.ಡಿ. ದೇವೇಗೌಡ. ಸಿದ್ದರಾಮಯ್ಯ ಕಾಲದ ಪ್ರತಿಪಕ್ಷ ನಾಯಕರು ಎಚ್.ಡಿ. ಕುಮಾರಸ್ವಾಮಿ, ಜಗದೀಶ್ ಶೆಟ್ಟರ್ ಮತ್ತು ಆರ್. ಅಶೋಕ್. ಅರಸು ಮತ್ತು ಸಿದ್ದರಾಮಯ್ಯ ನಡುವೆ ಯಾರು ಅದೃಷ್ಟವಂತ ರಾಜಕಾರಣಿ ಎಂದು ನಿರ್ಧರಿಸಲು ಇದೇ ಸಾಕು. ಅರಸು ಅವರನ್ನು ಸ್ವಪಕ್ಷೀಯರೇನೂ ಕಮ್ಮಿ ಕಾಡಲಿಲ್ಲ. ಬಹುಶಃ ಅರಸು ಅಧಿಕಾರದಲ್ಲಿ ಇದ್ದ ಅಷ್ಟೂ ದಿನ ನೆಮ್ಮದಿಯಾಗಿರಲಿಲ್ಲ. ಚಿಕ್ಕಮಗಳೂರು ಉಪ ಚುನಾವಣೆಯಲ್ಲಿ ರಾಜಕೀಯವಾಗಿ ಮರುಜೀವ ನೀಡಿದರೂ ಕಡೆಕಡೆಗೆ ಇಂದಿರಾ ಗಾಂಧಿ ಕೃಪೆ ಕೂಡ ಸಿಗಲಿಲ್ಲ. ಸಿದ್ದರಾಮಯ್ಯ ಹೊರಗಿನಿಂದ ಬಂದಾಗಿನಿಂದಲೂ ಒಂದಿಲ್ಲೊಂದು ಅಧಿಕಾರದಲ್ಲಿದ್ದಾರೆ ಮತ್ತು ಅರಸುಗೆ ಹೋಲಿಸಿಕೊಂಡರೆ ನಿರಾಳರಾಗಿದ್ದಾರೆ. ನೋವುಂಡು ನಲಿವು ನೀಡಿದ ಅರಸು ದಾಖಲೆ ಮುರಿಯಲು ಸಿದ್ದರಾಮಯ್ಯ ಅವರಿಂದ ಸಾಧ್ಯವೇ? ಹಿಂದಿನ ರಾತ್ರಿ ಅರಸು ಜೊತೆಗಿದ್ದ ಬಂಗಾರಪ್ಪ ನಾನು ನಿಮ್ಮೊಂದಿಗಿರುವೆ ಎಂಬ ಮಾತುಕೊಟ್ಟಿದ್ದರು. ಬೆಳಗ್ಗೆ ಆಲ್ ಇಂಡಿಯಾ ರೇಡಿಯೊದಲ್ಲಿ ಬಂಗಾರಪ್ಪ ಕೆಪಿಸಿಸಿ ಅಧ್ಯಕ್ಷ ಎನ್ನುವ ಸುದ್ದಿ ಬಿತ್ತರವಾಯಿತು. ಅದನ್ನು ಕೇಳಿ ತತ್ತರಿಸಿಹೋದ ಅರಸು ‘ಇಷ್ಟು ಚಿಕ್ಕ ವಯಸ್ಸಿಗೆ ಇಷ್ಟು ದೊಡ್ಡ ಮೋಸ ಮಾಡಬಾರದಿತ್ತು’ ಎಂದು ಹೇಳಿದ್ದರಂತೆ. ಹೀಗೆ ಅರಸು ಬೆನ್ನಿಗೆ ಇರಿದವರು ಒಬ್ಬಿಬ್ಬರಲ್ಲ. ಸಿದ್ದರಾಮಯ್ಯ ವಿಷಯದಲ್ಲಿ ಇಷ್ಟೊಂದು ನಿರ್ದಯಿಯಾಗಿ ನಡೆದುಕೊಂಡ ವ್ಯಕ್ತಿ ಕಾಣಿಸುತ್ತಿಲ್ಲ. ತಾನು ಕಹಿ ತಿಂದು ಸಿಹಿ ನೀಡಿದ ಅರಸು ದಾಖಲೆ ಮುರಿಯಲು ಸಿದ್ದರಾಮಯ್ಯ ಅವರಿಂದ ಸಾಧ್ಯವೇ? ಅರಸು ಕಾಲದಲ್ಲಿ ಈಗಿನಂತ ಹಣದಿಂದ ಆಯ್ಕೆಯಾದ ಶಾಸಕರು ಹೆಚ್ಚಾಗಿರಲಿಲ್ಲ. ಉದ್ಯಮಿಗಳು, ಧಾರ್ಮಿಕ ಮತ್ತು ಶಿಕ್ಷಣ ಸಂಸ್ಥೆಗಳು ನೇರವಾಗಿ ರಾಜಕಾರಣವನ್ನು ನಿಯಂತ್ರಿಸುತ್ತಿರಲಿಲ್ಲ. ರಿಯಲ್ ಎಸ್ಟೇಟ್ ಉದ್ಯಮದವರಂತೂ ಇರಲೇ ಇಲ್ಲ. ಸಿದ್ದರಾಮಯ್ಯ ಕಾಲದಲ್ಲಿ ಪರಿಸ್ಥಿತಿ ಬದಲಾಗಿದೆ. ಅದರ ನಡುವೆಯೇ ಅವರು ಬಹುಕಾಲ ಉಳಿಯುವಂತಹ ಮಾಡಿದ ಕೆಲಸಗಳೆಂದರೆ SCSP-TSP ಕಾಯ್ದೆ, ಗುತ್ತಿಗೆಯಲ್ಲಿ ಮೀಸಲಾತಿ, ಭಡ್ತಿ ಮೀಸಲಾತಿ, ಅನ್ನಭಾಗ್ಯ ಹಾಗೂ ಗ್ಯಾರಂಟಿ ಯೋಜನೆಗಳು. ಈ ಪೈಕಿ ಗ್ಯಾರಂಟಿಗಳು ಹೈಕಮಾಂಡ್ ಯೋಜನೆಗಳು, ಜಾರಿಗೆ ತಂದದ್ದು ಸಿದ್ದರಾಮಯ್ಯ. ಇದೇ ಕಾರಣಕ್ಕೆ ಅವರ ಬಗ್ಗೆ ನಿರೀಕ್ಷೆ, ಅವರಲ್ಲಿ ಅರಸು ಅವರನ್ನು ಕಾಣುವ ಅಪೇಕ್ಷೆ. ಆದರೆ? ಎಂದೂ ಮುಖಾಮುಖಿಯಾಗದ ಅರಸು-ಸಿದ್ದು! ಅರಸು ಮತ್ತು ಸಿದ್ದರಾಮಯ್ಯ ಇಬ್ಬರೂ ಮೈಸೂರಿನವರು. ಸಿದ್ದರಾಮಯ್ಯ ವಕೀಲಿಕೆಯಿಂದ ರಾಜಕೀಯದ ಕಡೆ ವಾಲಿದ ಸಂದರ್ಭ ಅರಸು ಪ್ರಭಾವ ದಟ್ಟವಾಗಿದ್ದ ಕಾಲ. ಆದರೂ ಈ ಇಬ್ಬರು ಎಂದೂ ಮುಖಾಮುಖಿಯಾಗಲಿಲ್ಲ. ಪ್ರೊ. ನಂಜುಂಡಸ್ವಾಮಿ ಅವರಿಂದ ಪ್ರಭಾವಿತನಾಗಿ ರಾಜಕಾರಣಕ್ಕೆ ಬಂದೆ ಎಂದು ಸಿದ್ದರಾಮಯ್ಯ ಸಾವಿರ ಬಾರಿ ಹೇಳಿದ್ದಾರೆ. ನಂಜುಂಡಸ್ವಾಮಿ ಬಗ್ಗೆ, ಅದೇ ರೀತಿ ಇನ್ನಿತರ ಸಮಾಜ ಸುಧಾರಕರ ಬಗ್ಗೆ Passionate ಆಗಿ ಮಾತನಾಡುತ್ತಾರೆ. ಆದರೆ ಅರಸು ವಿಚಾರದಲ್ಲಿ, ಅವರ ಜಯಂತಿ ಮತ್ತಿತರ ಕಾರ್ಯಕ್ರಮಗಳಲ್ಲಿ ಮಾತನಾಡಿದ್ದಾರೆ ಎನ್ನುವುದನ್ನು ಬಿಟ್ಟರೆ ‘ಅರಸು ಬಗ್ಗೆ ಸಿದ್ದರಾಮಯ್ಯ ಬಾಯಲ್ಲಿ ಕೇಳಲೇಬೇಕು’ ಎನ್ನುವ ರೀತಿಯಲ್ಲಿ ಮಾತನಾಡಿಲ್ಲ ಎನ್ನುವುದು ಕೌತುಕದ ಸಂಗತಿ. ಆಫ್ ದಿ ರೆಕಾರ್ಡ್! ಅಹಿಂದ ಸಮಾವೇಶ, ಶೋಷಿತರ ಸಮಾವೇಶ, ಸಾವಿರದ ಸಮಾವೇಶ ಮಾಡುವುದು ಸುಲಭ. ಲಕ್ಷಾಂತರ ಜನರನ್ನು ಸೇರಿಸುವುದು ಸುಲಭ. ಆದರೆ ಅರಸು ಅವರಂತೆ ಅಹಿಂದ ಸಮುದಾಯಗಳ ಸಂಘಟನೆ ಮಾಡಿ ಅವರಿಗೆ ರಾಜಕೀಯ ಪ್ರಾತಿನಿಧ್ಯ ಮತ್ತು ಆ ಸಮುದಾಯಗಳ ಕಲ್ಯಾಣಕ್ಕಾಗಿ ಕಾರ್ಯಕ್ರಮಗಳನ್ನೂ ಕೊಡುವುದು??
ಬ್ಯಾನರ್ ವಾರ್ಗೆ ಕಾರ್ಯಕರ್ತನ ಬಲಿ: ಬಳ್ಳಾರಿ ಗಲಾಟೆಯಿಂದ ಕೈ ಸರ್ಕಾರದ ಇಮೇಜ್ಗೆ ಧಕ್ಕೆ?
ಬಳ್ಳಾರಿ ಬ್ಯಾನರ್ ವಾರ್ ತೀವ್ರ ಸ್ವರೂಪವನ್ನು ಪಡೆದುಕೊಂಡಿದೆ. ಬ್ಯಾನರ್ ವಾರ್ ಗೆ ಕಾಂಗ್ರೆಸ್ ಕಾರ್ಯಕರ್ತ ಬಲಿಯಾಗಿದ್ದಾನೆ. ಈ ಘಟನೆಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ಗನ್ ಮ್ಯಾನ್ ಸೇರಿ 26 ಮಂದಿಯನ್ನು ಬಂಧನಕ್ಕೆ ಒಳಪಡಿಸಲಾಗಿದೆ. ಒಟ್ಟು ವಿವಾದದಿಂದ ಕಾಂಗ್ರೆಸ್ ಸರ್ಕಾರಕ್ಕೆ ತೀವ್ರ ಹಿನ್ನಡೆ ಆಗಿದೆ. ಹೀಗಾಗಿ ಸರ್ಕಾರದ ವರ್ಚಸ್ಸಿಗೆ ಧಕ್ಕೆ ಉಂಟಾಗದಂತೆ ಎಚ್ಚರಿಕೆಯ ಕ್ರಮಗಳನ್ನು ಸರ್ಕಾರ ಕೈಗೊಳ್ಳುತ್ತಿದೆ. ಈಗಾಗಲೇ ಜಿಲ್ಲೆಯ ಸಂಸದರು ಹಾಗೂ ಬಹುತೇಕ ಶಾಸಕರು ಘಟನೆಯಿಂದ ಅಂತರ ಕಾಯ್ದುಕೊಂಡಿದ್ದಾರೆ. ಇದು ಕುತೂಹಲಕ್ಕೆ ಕಾರಣವಾಗಿದೆ.
ಸಿಇಒ ಕ್ಯಾಂಪ್ಬೆಲ್ ವಿಲ್ಸನ್ಗೆ ಅವಧಿಗೂ ಮುನ್ನವೇ 'ಟಾಟಾ' ಹೇಳಲು ಮುಂದಾದ ಏರ್ ಇಂಡಿಯಾ; ಕಾರಣ ಏನು?
ಟಾಟಾ ಒಡೆತನದ ಏರ್ ಇಂಡಿಯಾ ಸಂಸ್ಥೆಯು ತನ್ನ ನಾಯಕತ್ವದಲ್ಲಿ ಮಹತ್ವದ ಬದಲಾವಣೆ ಮಾಡಲು ಮುಂದಾಗಿದೆ. ಪ್ರಸ್ತುತ ಸಿಇಒ ಕ್ಯಾಂಪ್ಬೆಲ್ ವಿಲ್ಸನ್ ಅವರ ಅಧಿಕಾರಾವಧಿ 2027ರ ಜೂನ್ನಲ್ಲಿ ಮುಕ್ತಾಯಗೊಳ್ಳಲಿದ್ದರೂ, ಅದಕ್ಕೂ ಮೊದಲೇ ಅವರನ್ನು ಹುದ್ದೆಯಿಂದ ಕೆಳಗಿಳಿಸಿ ಹೊಸ ನಾಯಕನನ್ನು ನೇಮಿಸಲು ಟಾಟಾ ಸನ್ಸ್ ಅಧ್ಯಕ್ಷ ಎನ್ ಚಂದ್ರಶೇಖರನ್ ಚಿಂತನೆ ನಡೆಸಿದ್ದಾರೆ. ವಿಮಾನಯಾನ ಸೇವೆಯಲ್ಲಿನ ಸುಧಾರಣೆಗಳು ನಿಧಾನಗತಿಯಲ್ಲಿ ಸಾಗುತ್ತಿರುವುದು ಮತ್ತು ತಾಂತ್ರಿಕ ದೋಷಗಳಿಂದಾಗಿ ಪ್ರಯಾಣಿಕರಿಂದ ವ್ಯಕ್ತವಾಗುತ್ತಿರುವ ದೂರುಗಳು ಈ ನಿರ್ಧಾರಕ್ಕೆ ಪ್ರಮುಖ ಕಾರಣ ಎನ್ನಲಾಗಿದೆ. ಏರ್ ಇಂಡಿಯಾ ಎಕ್ಸ್ಪ್ರೆಸ್ನ ಮುಖ್ಯಸ್ಥ ಅಲೋಕ್ ಸಿಂಗ್ ಅವರ ಬದಲಾವಣೆಗೂ ಚರ್ಚೆಗಳು ನಡೆಯುತ್ತಿವೆ.
ಕನ್ನಡ ದಲಿತ ಸಾಹಿತ್ಯಕ್ಕೆ ಐವತ್ತು ವರ್ಷ ತುಂಬಿದ ನಿಟ್ಟಿನಲ್ಲಿ ಚರ್ಚೆಗಳು ನಡೆಯುತ್ತಿರುವಾಗ ಹ್ಯಾರ್ಲೆಮ್ ನವೋದಯ ಕೂಡ ನಮ್ಮ ಚಿಂತನೆಯಲ್ಲಿ ಸೇರುವ ಅಗತ್ಯವಿದೆ ಎನ್ನಿಸಿತು. ದಲಿತ ಚಳವಳಿ, ದಲಿತ ಸಾಹಿತ್ಯ ಕುರಿತ ಕ್ಲೀಷಾಮಯ ಸವಕಲು ಮಾತುಗಳನ್ನು ಬಿಟ್ಟು, ಭದ್ರಾವತಿ, ಮೈಸೂರು, ಕೋಲಾರ, ರಾಯಚೂರು ಮುಂತಾದೆಡೆ ನಡೆದ ಕನ್ನಡ ನೆಲದ ದಲಿತ್ ರೆನೈಸಾನ್ಸ್ ಅಥವಾ ದಲಿತ ನವೋದಯವನ್ನು ಅಧ್ಯಯನ ಮಾಡಿದರೆ ವಿಶ್ವದ ವಿಮೋಚನೆಯ ಹೋರಾಟಗಳ ಅಧ್ಯಯನಗಳು ಕನ್ನಡದತ್ತಲೂ ತಿರುಗತೊಡಗುತ್ತವೆ! ಯುರೋಪಿಗೊಂದು ರೆನೈಸಾನ್ಸ್ ಇದ್ದಂತೆ, ಅಮೆರಿಕದಲ್ಲಿ ನೆಲೆಸಿದ್ದ ಕರಿಯರ ಬದುಕಿನಲ್ಲೂ ಒಂದು ರೆನೈಸಾನ್ಸ್ ಅಥವಾ ನವೋದಯ ನಡೆಯಿತು. 1918-30ರ ನಡುವೆ ನಡೆದ ಈ ನವೋದಯದ ಭಾಗವಾಗಿ ಅಮೆರಿಕದಲ್ಲಿ ನೂರು ವರ್ಷಗಳ ಕೆಳಗೆ ಪ್ರಕಟವಾದ ಒಂದು ಪುಸ್ತಕದ ಹೆಸರು ‘ದ ನ್ಯೂ ನೀಗ್ರೊ’. ಆಫ್ರಿಕನ್ನರನ್ನು ಕಂಡು ಅಸಹ್ಯದಿಂದ ಯುರೋಪಿಯನ್ನರು ಬಳಸುತ್ತಿದ್ದ ‘ನೀಗ್ರೋ’, ‘ನಿಗ್ಗರ್’ ಎಂಬ ಪದಗಳು ಅವರನ್ನು ಹೀಗಳೆಯುವ ಅವಮಾನಕರ ಪದಗಳು. ಇವತ್ತು ಈ ಪದಗಳನ್ನು ಬಳಸಿದರೆ ಒದೆ ಬೀಳುತ್ತದೆ. ಇಂಡಿಯಾದಲ್ಲಿ ಅವಮಾನಕರವಾದ ಜಾತಿಸೂಚಕ ಪದಗಳನ್ನು ಹೀಗಳೆಯಲು ಬಳಸಿದರೆ ಎಂಥ ಪ್ರತಿಕ್ರಿಯೆ ಬರುತ್ತದೋ ಅಂಥ ಪ್ರತಿಕ್ರಿಯೆ ಅಮೆರಿಕದಲ್ಲೂ ಈಗ ಬರುತ್ತದೆ. ಆದರೆ 1925ರಲ್ಲಿ ಅಲೈನ್ ಲಾಕ್ ಸಂಪಾದಿಸಿದ ‘ದ ನ್ಯೂ ನೀಗ್ರೋ’ ಸಂಕಲನದಲ್ಲಿರುವ ಲೇಖಕ, ಲೇಖಕಿಯರು ‘ನೀಗ್ರೋ’ ಎಂಬ ಅವಮಾನದ ಪದವನ್ನೇ ಆತ್ಮವಿಶ್ವಾಸದ ಪದವನ್ನಾಗಿಸಿಕೊಂಡು, ಹೊಸ ವ್ಯಕ್ತಿತ್ವವನ್ನು ರೂಪಿಸಿಕೊಂಡರು. ಗುಲಾಮನಾಗಿದ್ದ ‘ಹಳೆಯ ನೀಗ್ರೋ’ನ ಕೀಳರಿಮೆ, ಅವಮಾನಗಳ ಎದುರು, ತನ್ನನ್ನು ತಾನು ಅರಿತ, ತನ್ನ ಸ್ಥಿತಿಯನ್ನು ಬದಲಾಯಿಸುವ, ಸ್ವಾಭಿಮಾನದ ‘ಹೊಸ ನೀಗ್ರೋ’ನ ಹುಟ್ಟನ್ನು ಈ ಸಂಕಲನದ ಬರಹಗಳು ಸಾರುತ್ತಿದ್ದವು. ಭಾರತದಲ್ಲೂ ದಲಿತ, ಆದಿವಾಸಿ ಸಾಹಿತ್ಯದಲ್ಲಿ ಕೆಲವು ಲೇಖಕರು ಜಾತಿಯ ಹೆಸರುಗಳನ್ನು ಸ್ವಾಭಿಮಾನದ ಸಂಕೇತವಾಗಿ ಇಟ್ಟುಕೊಂಡರು. ಕನ್ನಡದಲ್ಲಿ ಗಂಗಾರಾಂ ಚಂಡಾಳ, ಸುಬ್ಬು ಹೊಲೆಯಾರ್ ಥರದವರು ಕೂಡ ಇಂಥ ಬಂಡಾಯದ ವಿಶ್ವಪರಂಪರೆಯ ಭಾಗವಾಗಿದ್ದಾರೆನ್ನಬಹುದು. ಎಲಿನಾರ್ ಝೆಲಿಯಟ್ 1996ರಲ್ಲಿ ಪ್ರಕಟಿಸಿದ ‘ಫ್ರಂ ಅನ್ಟಚಬಲ್ ಟು ದಲಿತ್’ ಪುಸ್ತಕದಲ್ಲಿ ‘ಅಸ್ಪಶ್ಯ’ನೊಬ್ಬ ‘ದಲಿತ’ ಆಗಿ ಹೊಸ ವ್ಯಕ್ತಿತ್ವ, ಸ್ವಾಭಿಮಾನವನ್ನು ಗಳಿಸಿಕೊಳ್ಳುವ ಬೆಳವಣಿಗೆಯ ಹೆಜ್ಜೆಗಳನ್ನು ತೋರಿಸಿದ್ದರು. ಭಾರತದ ದಲಿತ ಚಳವಳಿ ಕುರಿತ ಈ ಥರದ ನೋಟಗಳುಳ್ಳ ಅಧ್ಯಯನಗಳ ಹಿನ್ನೆಲೆಯಲ್ಲಿ ‘ದ ನ್ಯೂ ನೀಗ್ರೋ’ ಪ್ರಕಟವಾದ ಕಾಲದ ಹ್ಯಾರ್ಲೆಮ್ ರೆನೈಸಾನ್ಸ್ ಥರದ ಮೈಲಿಗಲ್ಲುಗಳೂ ಇದ್ದಂತಿವೆ. ಈ ಹಿನ್ನೆಲೆಯಲ್ಲಿ, ಶತಮಾನ ದಾಟಿದ ಆಫ್ರೋ-ಅಮೆರಿಕನ್ನರ ‘ಹ್ಯಾರ್ಲೆಮ್ ರೆನೈಸಾನ್ಸ್’ ಕುರಿತು ಈ ಟಿಪ್ಪಣಿ: ಅಮೆರಿಕದಲ್ಲಿ ನಡೆದ ಈ ‘ಹ್ಯಾರ್ಲೆಮ್ ರೆನೈಸಾನ್ಸ್’ ಆಫ್ರೋ-ಅಮೆರಿಕನ್ನರ ಬದುಕಿನ ಮುಖ್ಯ ತಿರುವಾಯಿತು. ಅಮೆರಿಕದ ನ್ಯೂಯಾರ್ಕ್ ನಗರದ ಒಂದು ಭಾಗ ಹ್ಯಾರ್ಲೆಮ್. ಅಲ್ಲಿನ ರಂಗಭೂಮಿಯಲ್ಲಿ ಕಪ್ಪು ನಟರು ಹೊಸ ರೀತಿಯಲ್ಲಿ ರೂಪುಗೊಳ್ಳತೊಡಗಿದರು. ಕಲೆ, ಸಾಹಿತ್ಯ ಹಾಗೂ ರಂಗಭೂಮಿಗಳು ಸಮಾಜವನ್ನು ಬದಲಿಸಬಲ್ಲವೆಂಬ ನಂಬಿಕೆಯಿಂದ ಈ ನಟರು ಹೊರಟಿದ್ದರು. ಅದಕ್ಕೊಂದು ರಾಜಕೀಯ ಮುಖವೂ ಇತ್ತು. ಅಮೆರಿಕದ ದಕ್ಷಿಣ ಭಾಗ ಹಾಗೂ ಮಿಡ್ವೆಸ್ಟ್ ಭಾಗಗಳಲ್ಲಿ ವರ್ಣಗಲಭೆಗಳು ಶುರುವಾದಾಗ ಕರಿಯರಿಗೆ ಹ್ಯಾರ್ಲೆಮ್ ಒಂದು ಆಶ್ರಯತಾಣವಾಯಿತು. ಆಫ್ರೋ-ಅಮೆರಿಕನ್ ಸಮಾಜವಾದಿಗಳು ‘ಮೆಸೆಂಜರ್’ ಎಂಬ ವೈಚಾರಿಕ ಪತ್ರಿಕೆ ಹೊರಡಿಸಿದರು. ಜಮೈಕಾದ ಮಾರ್ಕಸ್ ಗಾರ್ವೇ ‘ಬ್ಯಾಕ್ ಟು ಆಫ್ರಿಕಾ’ ಚಳವಳಿಯನ್ನು ಶುರು ಮಾಡಿದರು; ಎಲ್ಲ ಕಪ್ಪು ಜನರೂ ಆಫ್ರಿಕಾಕ್ಕೆ ಮರಳಬೇಕು ಎಂದು ಕರೆ ಕೊಟ್ಟರು. ಹ್ಯಾರ್ಲೆಮ್ ಪ್ರದೇಶದಲ್ಲಿ ಸೇರತೊಡಗಿದ ಕರಿಯರ ಸಾಹಿತ್ಯ, ಸಂಗೀತ, ರಂಗಭೂಮಿ, ಚಿತ್ರಕಲೆ, ನೃತ್ಯ, ಫ್ಯಾಶನ್, ರಾಜಕಾರಣ, ಗಂಭೀರ ಅಧ್ಯಯನ ಹೀಗೆ ಹಲವು ವಲಯಗಳಲ್ಲಿ ನವೋದಯ ಆರಂಭವಾಯಿತು. ಜಾಝ್ ಸಂಗೀತಗಾರರು ಹ್ಯಾರ್ಲೆಮ್ ಕಡೆಗೆ ಬರತೊಡಗಿದರು. ಹ್ಯಾರ್ಲೆಮ್ ನವೋದಯದ ಫಲವಾಗಿ ಆಫ್ರೋ-ಅಮೆರಿಕನ್ ವಲಯದಿಂದ ಹೊಸ ಕಾದಂಬರಿಕಾರರು, ಕವಿಗಳು, ಸಮಾಜವಿಜ್ಞಾನಿಗಳು ಮೂಡಿ ಬಂದರು. ಅವರು ಕಪ್ಪುಜನರ ಅನನ್ಯ ಗುಣಗಳನ್ನು ಶೋಧಿಸತೊಡಗಿದರು. ಡುಬೈಸ್, ಕ್ಲಾಡ್ ಮೆಕೇ, ಲಾಂಗ್ಸ್ಟನ್ ಹ್ಯೂಸ್ ಮೊದಲಾದವರು ಕಪ್ಪು ಜನರ ಧ್ವನಿಗಳಷ್ಟೇ ಅಲ್ಲ, ಒಟ್ಟು ಅಮೆರಿಕನ್ ಸಾಹಿತ್ಯದ ಮುಖ್ಯ ಧ್ವನಿಗಳಾಗಿಯೂ ಹೊರ ಹೊಮ್ಮಿದರು. ಈ ಘಟ್ಟದಲ್ಲಿ ಬಿಳಿಯರ ಮನ ಬದಲಿಸುವಲ್ಲಿ ಕಾವ್ಯ ಹಾಗೂ ಆತ್ಮಚರಿತ್ರೆಗಳು ಮಹತ್ತರ ಕೆಲಸ ಮಾಡತೊಡಗಿದವು. ಅಮೆರಿಕದ ಬಿಳಿಯರಿಗಿಲ್ಲದ ವಿಶಿಷ್ಟ ಶಕ್ತಿ ಕರಿಯರಿಗೆ ಇದೆ; ಬಿಳಿಯರ ನಾಗರಿಕತೆ ಪತನಗೊಳ್ಳುತ್ತಿದೆ ಎಂದು ಹ್ಯಾರ್ಲೆಮ್ ಲೇಖಕ, ಲೇಖಕಿಯರು ಗಟ್ಟಿ ದನಿಯಲ್ಲಿ ಹೇಳಲಾರಂಭಿಸಿದರು. ಆದರೆ ಹ್ಯಾರ್ಲೆಮ್ ನವೋದಯ ಹೊಮ್ಮಿಸಿದ್ದ ಆಶಾವಾದ ಬಹುಕಾಲ ಉಳಿಯಲಿಲ್ಲ. 1929ರ ಹೊತ್ತಿಗೆ ಅಮೆರಿಕದಲ್ಲಿ ಆರ್ಥಿಕ ಕುಸಿತ ಶುರುವಾಯಿತು. ಈ ನೆವದಲ್ಲಿ ಕಪ್ಪು ಜನರನ್ನು ಕೊಲ್ಲುವ ಕ್ರೂರ ಘಟ್ಟ ಆರಂಭವಾಯಿತು. ಹ್ಯಾರ್ಲೆಮ್ ನವೋದಯ ಕರಿಯರಲ್ಲಿ ಹುಟ್ಟಿಸಿದ್ದ ಹೊಸ ಭರವಸೆ ಕುಸಿಯತೊಡಗಿತು. ಆದರೆ ಹ್ಯಾರ್ಲೆಮ್ ನವೋದಯ ಬಿತ್ತಿದ ಕಪ್ಪು ಸ್ಫೂರ್ತಿ ಆಫ್ರಿಕಾ ಖಂಡದ ದೇಶಗಳಲ್ಲೂ ಹಲವು ವರ್ಷ ಮುಂದುವರಿಯಿತು. ಫ್ರೆಂಚ್ ಭಾಷೆಯಲ್ಲಿ ಬರೆಯುತ್ತಿದ್ದ ಆಫ್ರಿಕನ್ ಕವಿ ಲೆಪಾಲ್ಡ್ ಸೆಂಘರ್ ಹ್ಯಾರ್ಲೆಮ್ ನವೋದಯದ ಪ್ರತಿಧ್ವನಿ ಎಂಬಂತೆ ಮುಂದೊಮ್ಮೆ ತನ್ನ ‘ನ್ಯೂಯಾರ್ಕ್’ ಪದ್ಯದಲ್ಲಿ ‘ಎಲೆ ನ್ಯೂಯಾರ್ಕ್, ಕಪ್ಪು ರಕ್ತ ಹರಿಯಲಿ ನಿನ್ನೊಳಗೆ’ ಎಂದು ಬರೆದ. ಕರಿಯರನ್ನು ‘ನೀಗ್ರೋ’ ಎಂಬ ಅವಹೇಳನದ ಪದ ಬಳಸಿ ಹೀಗಳೆಯುತ್ತಿದ್ದ ಬಿಳಿಯರ ಮುಖಕ್ಕೆ ರಾಚುವಂತೆ ಫ್ರೆಂಚ್ ಆಫ್ರಿಕಾದ ಲೇಖಕರು ‘ನೀಗ್ರೋತನ’ (ನೆಗ್ರಿಟ್ಯೂಡ್) ಎಂಬ ಚಳವಳಿಯನ್ನೇ ಹುಟ್ಟು ಹಾಕಿದರು. ‘ಅಮೆರಿಕದ ನೀಗ್ರೋಗಳ ಬದುಕಿನ ಭೀಕರ ಅನುಭವಗಳನ್ನು ಹೇಳಲು ಇನ್ನೂ ಭಾಷೆಯೇ ಸೃಷ್ಟಿಯಾಗಿಲ್ಲ’ ಎಂದು ಜೇಮ್ಸ್ ಬಾಲ್ಡ್ವಿನ್ಗೆ ಅನ್ನಿಸತೊಡಗಿತು. ಬಾಲ್ಡ್ವಿನ್ ಕಪ್ಪು ಜನರ ಆಳದ ಸಿಟ್ಟಿಗೆ ತಾತ್ವಿಕ ರೂಪ ಕೊಟ್ಟ. ಇದೆಲ್ಲದರ ನಡುವೆ, ಅಮೆರಿಕದ ಆಫ್ರಿಕನ್ನರು ಹಾಗೂ ಇನ್ನಿತರ ಕರಿಯರು ತಮ್ಮ ಚರ್ಮದ ಬಣ್ಣದ ಕೀಳರಿಮೆಯನ್ನು ಮೀರಲು ಹಾಗೂ ಕಪ್ಪು ಸಂಸ್ಕೃತಿಯ ಶಕ್ತಿ ಹಾಗೂ ವಿಶಿಷ್ಟ ಅಸ್ತಿತ್ವವನ್ನು ಪ್ರತಿಪಾದಿಸಲು 1960ರ ದಶಕದಲ್ಲಿ ‘ಬ್ಲ್ಯಾಕ್ ಈಸ್ ಬ್ಯೂಟಿಫುಲ್’ ಚಳವಳಿಯನ್ನು ಆರಂಭಿಸಿದರು. ಮುಂದೆ ಮಾಯಾ ಏಂಜೆಲೊ, ಆ್ಯಲಿಸ್ ವಾಕರ್, ಟೋನಿ ಮಾರಿಸನ್ ಅಮೆರಿಕದ ಬರವಣಿಗೆಯ ದಿಕ್ಕನ್ನೇ ಬದಲಿಸಿದರು. ಹಲವು ದಿಕ್ಕುಗಳಿಂದ ಶುರುವಾದ ತಮ್ಮ ಬಿಡುಗಡೆಗೆ ಹಿಂಸಾಮಾರ್ಗವನ್ನು ಹಿಡಿಯುವುದೋ ಅಥವಾ ಅಹಿಂಸಾ ಮಾರ್ಗವನ್ನು ಹಿಡಿಯುವುದೋ ಎಂಬ ಗೊಂದಲ ಕೂಡ ಇಪ್ಪತ್ತನೆಯ ಶತಮಾನದ ಮಧ್ಯಭಾಗದಲ್ಲಿ ಆಫ್ರೋ-ಅಮೆರಿಕನ್ನರಿಗೆ ಎದುರಾಯಿತು. ಇದೆಲ್ಲದರ ನಡುವೆ, ಕರಿಯರ ಮೇಲೆ ಬಿಳಿಯರ ಮಾರುಕಟ್ಟೆಯ ಹಿಡಿತ ಸಾಧಿಸುವ ಪ್ರಯತ್ನಗಳು ಶುರುವಾದವು. ಕರಿಯರು ನಡೆಸುತ್ತಿದ್ದ ಬಡ ಪ್ರದೇಶಗಳ ಮಾರುಕಟ್ಟೆಯ ವ್ಯಾಪಾರ ವಹಿವಾಟಿನ ಮೇಲೆ ಸರಕಾರ ನಿರ್ಬಂಧ ಹೇರಿತು. ಅಲಬಾಮಾ ರಾಜ್ಯದ ಬರ್ಮಿಂಗ್ ಹ್ಯಾಂ ಕಡೆ ಗಲಭೆಗಳಾದವು. ಆ ಕಾಲದಲ್ಲಿ ಗುಡ್ ಫ್ರೈಡೇಯ ದಿನ ಚರ್ಚೊಂದನ್ನು ಸುತ್ತುವರಿದ ಜನರನ್ನು ಬಂಧಿಸಲಾಯಿತು. ಅವತ್ತು ಬಂಧನಕ್ಕೊಳಗಾದವರಲ್ಲಿ ಕ್ರೈಸ್ತ ಬ್ಯಾಪ್ಟಿಸ್ಟ್ ಮಾರ್ಟಿನ್ ಲೂಥರ್ ಕಿಂಗ್ ಜೂನಿಯರ್ ಕೂಡ ಇದ್ದರು. ‘ನಾವು ಹಿಂಸೆಯನ್ನು ಅಹಿಂಸೆಯ ಮೂಲಕ ಎದುರಿಸಬೇಕು’ ಎಂದು ಘೋಷಿಸಿದ ಕಿಂಗ್ ಗಾಂಧೀಜಿಯಿಂದ ಸ್ಫೂರ್ತಿ ಪಡೆದಿದ್ದರು. ಬಂಧನದಲ್ಲಿದ್ದಾಗ ಜೈಲಿನಲ್ಲಿ ಸಿಕ್ಕ ಟಾಯ್ಲೆಟ್ ಪೇಪರ್ ಹಾಗೂ ದಿನಪತ್ರಿಕೆಗಳ ಮೇಲೆ ಹತ್ತೊಂಭತ್ತು ಪುಟಗಳ ಪತ್ರ ಬರೆದು ಕಪ್ಪು ಜನರ ಅಸಹನೆಯ ಕಾರಣಗಳನ್ನು ವಿವರಿಸಿದರು. ‘ಲೆಟರ್ ಫ್ರಂ ಎ ಬರ್ಮಿಂಗ್ಹ್ಯಾಮ್ ಜೈಲ್’ ಎಂಬ ಪ್ರಖ್ಯಾತ ಪತ್ರದ ಒಂದು ಭಾಗ: ‘ಬರ್ಮಿಂಗ್ಹ್ಯಾಮ್ನಲ್ಲಿ ನೀಗ್ರೋಗಳ ಮನೆಯ ಮೇಲೆ ಆದಷ್ಟು ಬಾಂಬ್ ದಾಳಿ ಇನ್ಯಾವ ನಗರದಲ್ಲೂ ಆಗಿಲ್ಲ. ಏಶ್ಯ ಹಾಗೂ ಆಫ್ರಿಕಾದ ದೇಶಗಳು ಸ್ವಾತಂತ್ರ್ಯ ಗಳಿಸಲು ಜೆಟ್ ವೇಗದಲ್ಲಿ ಚಲಿಸುತ್ತಿವೆ; ಆದರೆ ನಾವಿಲ್ಲಿ ಜಟಕಾ ಗಾಡಿಯ ವೇಗದಲ್ಲಿ ಲಂಚ್ ಕೌಂಟರಿನಲ್ಲಿ ಒಂದು ಕಪ್ ಕಾಫಿ ಪಡೆಯಲು ಹೋರಾಡುತ್ತಿದ್ದೇವೆ’ ಮಾರ್ಟಿನ್ ಲೂಥರ್ ಕಿಂಗ್ ಅಮೆರಿಕದ ಕರಿಯರ ನಾಯಕರಾದ ಇತಿಹಾಸ ಈಗ ಎಲ್ಲರಿಗೂ ಗೊತ್ತಿದೆ: ಅವರ ಪ್ರಖ್ಯಾತ ಭಾಷಣ ‘ಐ ಹ್ಯಾವ್ ಎ ಡ್ರೀಮ್’ನ ಸಾಲುಗಳಿವು: ‘‘ನನಗೊಂದು ಕನಸಿದೆ ‘ಒಂದು ದಿನ ಜಾರ್ಜಿಯಾದ ಕೆಂಪು ಬೆಟ್ಟಗಳ ಮೇಲೆ ಮಾಜಿ ಗುಲಾಮರ ಮಕ್ಕಳೂ, ಮಾಜಿ ಗುಲಾಮರ ಒಡೆಯರ ಮಕ್ಕಳೂ ಅಣ್ಣತಮ್ಮಂದಿರಂತೆ ಮೇಜಿನೆದುರು ಒಟ್ಟಾಗಿ ಕೂರಬಲ್ಲರು’ ಎಂದು ನನಗೊಂದು ಕನಸಿದೆ.’’ ‘ಐ ಹ್ಯಾವ್ ಎ ಡ್ರೀಮ್’ ಎಂಬ ಕಿಂಗ್ ಕನಸಿನ ಪಲ್ಲವಿ ಚರಿತ್ರೆಯಲ್ಲಿ ಪ್ರಬಲ ರೂಪಕವಾಯಿತು. ಎಲ್ಲ ಬಗೆಯ ಹೋರಾಟಗಳಲ್ಲಿ ಪ್ರತಿಧ್ವನಿಸುತ್ತಾ ಬಂತು. 1964ರಲ್ಲಿ ನೊಬೆಲ್ ಶಾಂತಿ ಪ್ರಶಸ್ತಿ ಪಡೆದ ಕಿಂಗ್ ನಾಲ್ಕು ವರ್ಷಗಳ ನಂತರ ಹತ್ಯೆಯಾದರು. ಇಷ್ಟೆಲ್ಲ ಬಲಿದಾನಗಳ ನಡುವೆ ಹ್ಯಾರ್ಲೆಮ್ ರೆನೈಸಾನ್ಸ್ ನಿಧಾನಕ್ಕೆ ಫಲ ಕೊಡತೊಡಗಿತು. ಆಫ್ರೋ ಅಮೆರಿಕನ್ ಬರಾಕ್ ಒಬಾಮ ಅಮೆರಿಕದ ಅಧ್ಯಕ್ಷರಾಗಿದ್ದರ ಹಿಂದೆ ನೂರು ವರ್ಷಗಳ ಕೆಳಗೆ ಶುರುವಾದ ‘ಹ್ಯಾರ್ಲೆಮ್ ನವೋದಯ’ವೂ ಇತ್ತು. ಕನ್ನಡ ದಲಿತ ಸಾಹಿತ್ಯಕ್ಕೆ ಐವತ್ತು ವರ್ಷ ತುಂಬಿದ ನಿಟ್ಟಿನಲ್ಲಿ ಚರ್ಚೆಗಳು ನಡೆಯುತ್ತಿರುವಾಗ ಹ್ಯಾರ್ಲೆಮ್ ನವೋದಯ ಕೂಡ ನಮ್ಮ ಚಿಂತನೆಯಲ್ಲಿ ಸೇರುವ ಅಗತ್ಯವಿದೆ ಎನ್ನಿಸಿತು. ದಲಿತ ಚಳವಳಿ, ದಲಿತ ಸಾಹಿತ್ಯ ಕುರಿತ ಕ್ಲೀಷಾಮಯ ಸವಕಲು ಮಾತುಗಳನ್ನು ಬಿಟ್ಟು, ಭದ್ರಾವತಿ, ಮೈಸೂರು, ಕೋಲಾರ, ರಾಯಚೂರು ಮುಂತಾದೆಡೆ ನಡೆದ ಕನ್ನಡ ನೆಲದ ದಲಿತ್ ರೆನೈಸಾನ್ಸ್ ಅಥವಾ ದಲಿತ ನವೋದಯವನ್ನು ಅಧ್ಯಯನ ಮಾಡಿದರೆ ವಿಶ್ವದ ವಿಮೋಚನೆಯ ಹೋರಾಟಗಳ ಅಧ್ಯಯನಗಳು ಕನ್ನಡದತ್ತಲೂ ತಿರುಗತೊಡಗುತ್ತವೆ!
ರಷ್ಯಾದಿಂದ ತೈಲ ಖರೀದಿ| ಭಾರತದ ಮೇಲೆ ಮತ್ತಷ್ಟು ಸುಂಕ ವಿಧಿಸುವ ಸುಳಿವು ನೀಡಿದ ಟ್ರಂಪ್
“ನಾನು ಸಂತೋಷವಾಗಿಲ್ಲ ಎಂದು ಪ್ರಧಾನಿ ಮೋದಿಗೆ ತಿಳಿದಿದೆ”
Gold Rate Rise: ಅಮೆರಿಕ ದಾಳಿ ಎಫೆಕ್ಟ್: 2026 ರ ಗರಿಷ್ಠ ಬೆಲೆ ಏರಿಕೆ ಕಂಡ ಚಿನ್ನ: ಒಂದೇ ದಿನಕ್ಕೆ 1580 ರೂ ಜಿಗಿತ!
ಚಿನ್ನದ ಬೆಲೆ 2026 ರಹೊಸವರ್ಷದಲ್ಲೂ ಭಾರಿ ಜಿಗಿತ ಕಂಡುಬರುತ್ತಿದೆ. ಚಿನ್ನದ ಬೆಲೆಯ ಜೊತೆ ಬೆಳ್ಳಿ ಬೆಲೆಯೂ ಹೆಚ್ಚಳ ಆಗಿದ್ದು, ಇದಕ್ಕೆ ಕಾರಣ ಇಲ್ಲಿ ವಿವರಿಸಲಾಗಿದೆ.
ಅಮೆರಿಕ ವೆನೆಜುವೆಲಾದ ಮೇಲೆ ದಾಳಿ ನಡೆಸಿದೆ. ಇದು ಜಾಗತಿಕ ಮಾರುಕಟ್ಟೆಯಲ್ಲಿ ದೊಡ್ಡ ಪರಿಣಾಮ ಬೀರಲಿದೆ. ಭಾರತೀಯ ಷೇರು ಮಾರುಕಟ್ಟೆ ಸ್ಥಿರವಾಗಿರಲಿದೆ. ಕಚ್ಚಾ ತೈಲ ಬೆಲೆ ಏರಿಕೆಯಾಗುವ ನಿರೀಕ್ಷೆಯಿದೆ. ಚಿನ್ನ, ಬೆಳ್ಳಿ ಮತ್ತು ತೈಲ ಬೆಲೆಗಳು ಏರಿಕೆಯಾಗಬಹುದು. ಒಪೆಕ್ ಸಭೆಯ ಸುದ್ದಿಗಳು ಮಾರುಕಟ್ಟೆಯ ದಿಕ್ಕನ್ನು ಬದಲಿಸಬಹುದು. ತೈಲ ಕಂಪನಿಗಳ ಷೇರುಗಳ ಮೇಲೆ ಪರಿಣಾಮ ಬೀರಬಹುದು.
ಬಿಜಾಪುರಕ್ಕೆ (ವಿಜಯಪುರ) ಸರಕಾರಿ ವೈದ್ಯಕೀಯ ಕಾಲೇಜು ಆಗಲೇಬೇಕೆಂದು ಅಲ್ಲಿನ ಜನರು ಕಳೆದ 107 ದಿನಗಳಿಂದ ನಡೆಸುತ್ತಿರುವ ಹೋರಾಟ ತಾರ್ಕಿಕ ಅಂತ್ಯ ಕಾಣಬೇಕಿತ್ತು. ಆದರೆ, ನಡೆಯಲೇಬಾರದ ಘಟನೆ ನಡೆದು ಅನಿರೀಕ್ಷಿತ ಸ್ಥಿತಿಗೆ ತಲುಪಿದೆ. ಇದು ಅತ್ಯಂತ ಕಳವಳಕಾರಿ ಸಂಗತಿ. ಕಳೆದ ಮೂರು ತಿಂಗಳಿಂದ ನಿರಂತರವಾಗಿ ಶಾಂತಿಯುತವಾಗಿ ನಡೆಯುತ್ತಿದ್ದ ಹೋರಾಟವನ್ನು ಸ್ಥಳೀಯ ಜನಪ್ರತಿನಿಗಳು ನಿಭಾಯಿಸಿದ ರೀತಿ ಸಮಾಧಾನಕರ ಆಗಿರಲಿಲ್ಲ. ಇಷ್ಟು ದಿನಗಳ ಕಾಲ ಜನರು ಬೀದಿಗೆ ಬಂದು ಜಿಲ್ಲಾಧಿಕಾರಿ ಕಚೇರಿಯ ಮುಂದೆ ಧರಣಿ ನಡೆಸುವುದು ಅಲ್ಲಿನ ಜನ ಪ್ರತಿ ನಿಧಿಗಳಿಗೆ ಶೋಭೆ ತರುವ ವಿಷಯವಲ್ಲ. ಈ ನಡುವೆ ಸತ್ಯಾಗ್ರಹಿಗಳು ಮೂರು ತಿಂಗಳು ಧರಣಿ ನಡೆಸಿ, ಬೇರೆ ದಾರಿ ಕಾಣದೇ ಜಿಲ್ಲಾ ಉಸ್ತುವಾರಿ ಮಂತ್ರಿಗಳ ಮನೆಯ ಮುಂದೆ ಧರಣಿಯನ್ನು ನಡೆಸಲು ಮುಂದಾದರು. ಇದನ್ನು ಪೊಲೀಸರು ನಿರ್ದಯವಾಗಿ ಹತ್ತಿಕ್ಕಿದರು. ಅಷ್ಟೇ ಅಲ್ಲ, ಚಳವಳಿಯ ನಾಯಕರಾದ ಅನಿಲ್ ಹೊಸಮನಿ, ಭಗವಾನ್ ರೆಡ್ಡಿ ಹಾಗೂ ಇತರ ನಾಲ್ವರನ್ನು ಬಂಧಿಸಿ ಸೆರೆಮನೆಗೆ ತಳ್ಳಿರುವುದು ರಾಜ್ಯದ ಕಾಂಗ್ರೆಸ್ ಸರಕಾರಕ್ಕೆ ಒಳ್ಳೆಯ ಹೆಸರನ್ನು ತರುವುದಿಲ್ಲ. ಬಿಜಾಪುರದ ಜನ ಸರಕಾರದಿಂದ ಇದನ್ನು ನಿರೀಕ್ಷಿಸಿರಲಿಲ್ಲ. ಹೋರಾಟಗಾರರು ಸ್ವಂತಕ್ಕಾಗಿ ಯಾವ ಬೇಡಿಕೆಯನ್ನು ಸರಕಾರದ ಮುಂದೆ ಇಟ್ಟಿರಲಿಲ್ಲ. ಸದಾ ಬರಗಾಲದಿಂದ ಬೆಂದು ಹೋಗುತ್ತಿರುವ ಜಿಲ್ಲೆಯ ಜನರಿಗೆ ಸರಕಾರಿ ಮೆಡಿಕಲ್ ಕಾಲೇಜು ಬೇಕೆಂದು ಬಾಬಾಸಾಹೇಬರ ಪ್ರತಿಮೆಯ ಆಸರೆಯಲ್ಲಿ ಜಿಲ್ಲಾಧಿಕಾರಿ ಕಚೇರಿಯ ಮುಂದೆ ಧರಣಿ ನಡೆಸಿದ್ದರು. 107 ದಿನ ಸತ್ಯಾಗ್ರಹ ನಡೆದರೂ ಒಂದೇ ಒಂದು ಅಹಿತಕಾರಿ ಘಟನೆ ಸಂಭವಿಸಿರಲಿಲ್ಲ. ಆದರೆ, ಚಳವಳಿಯ ಭಾಗವಾಗಿ ಸರಕಾರದ ಮೇಲೆ ಒತ್ತಡ ಹೇರಲು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲರ ಮನೆಯ ಮುಂದೆ ಪ್ರತಿಭಟನೆ ನಡೆಸಲು ಮುಂದಾದಾಗ ಈ ಅಹಿತಕರ ಘಟನೆ ನಡೆದು ಸರಕಾರಕ್ಕೆ ಕೆಟ್ಟ ಹೆಸರು ಬಂತು. ಈ ಸತ್ಯಾಗ್ರಹ 94 ದಿನ ತಲುಪಿದಾಗ ನಾವೂ ಸಿಪಿಐ ನಾಯಕ ಹಾಗೂ ‘ಹೊಸತು’ ಸಂಪಾದಕ ಡಾ. ಸಿದ್ಧನಗೌಡ ಪಾಟೀಲ, ಹಂಪಿ ಕನ್ನಡ ವಿಶ್ವವಿದ್ಯಾನಿಲಯದ ಹಿಂದಿನ ಉಪ ಕುಲಪತಿ ಡಾ.ಮಲ್ಲಿಕಾ ಘಂಟಿ, ವಾಲ್ಮೀ ನಿರ್ದೇಶಕರಾಗಿದ್ದ ರಾಜೇಂದ್ರ ಪೊದ್ದಾರ, ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಮತ್ತು ವಿದ್ಯಾರ್ಥಿ ಸುನಿಲ್ ಪಾಟೀಲ್ ಮೊದಲಾದವರು ಬಿಜಾಪುರಕ್ಕೆ ಹೋಗಿದ್ದೆವು. ಇಡೀ ದಿನ ಧರಣಿಯಲ್ಲಿ ಪಾಲ್ಗೊಂಡೆವು. ಹೋರಾಟದ ಮುಂದಿನ ದಾರಿಯ ಬಗ್ಗೆ ಸಮಾಲೋಚನೆ ಮಾಡಿದೆವು. ನಾವು ಹೋಗಿ ಬಂದ ನಂತರ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲರು ಕೂಡ ಸತ್ಯಾಗ್ರಹಿಗಳ ಬೇಡಿಕೆಗೆ ಸ್ಪಂದಿಸಿ ತಾನು ಕೂಡ ಸರಕಾರಿ ಮೆಡಿಕಲ್ ಕಾಲೇಜಿನ ಪರವಾಗಿ ಇರುವುದಾಗಿ ಹೇಳಿದ್ದರು. ಚಳವಳಿಕಾರರನ್ನು ಬೆಂಗಳೂರಿಗೆ ಕರೆದುಕೊಂಡು ಹೋಗಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿಸುವುದಾಗಿ ಬಹಿರಂಗವಾಗಿ ಭರವಸೆಯನ್ನು ನೀಡಿದ್ದರು. ಈ ಎಲ್ಲ ವಿದ್ಯಮಾನಗಳ ಹಿನ್ನೆಲೆಯಲ್ಲಿ ಇನ್ನೇನು ಎಲ್ಲವೂ ಸೌಹಾರ್ದಯುತವಾಗಿ ಇತ್ಯರ್ಥ ಆಗುತ್ತದೆ ಎಂದು ಆಶಾದಾಯಕ ನಿರೀಕ್ಷೆ ಇಟ್ಟುಕೊಂಡು ನಿಟ್ಟುಸಿರು ಬಿಟ್ಟಾಗ ಅನಿರೀಕ್ಷಿತವಾಗಿ ನಡೆಯಬಾರದ ಘಟನೆ ನಡೆಯಿತು. ಜಿಲ್ಲಾ ಉಸ್ತುವಾರಿ ಮಂತ್ರಿಗಳ ಮನೆಯ ಮುಂದೆ ಧರಣಿ ನಡೆಸುತ್ತಿದ್ದ ಜನರ ಮೇಲೆ ಪೊಲೀಸರು ಒಮ್ಮಿಂದೊಮ್ಮ್ಮೆಲೇ ಎರಗಿದರು. ಯಾಕೆ ಹೀಗಾಯಿತೋ ಗೊತ್ತಾಗುತ್ತಿಲ್ಲ. ಧರಣಿಯಲ್ಲಿ ಪಾಲ್ಗೊಂಡಿದ್ದ ಸಂಗನ ಬಸವ ಸ್ವಾಮಿಗಳನ್ನು ನೂಕಲು ಹೋದ ಮಪ್ತಿ ಉಡುಪಿನಲ್ಲಿ ಇದ್ದ ಪೊಲೀಸರು ಅವರ ಕೈಯಲ್ಲಿ ಇದ್ದ ಮೊಬೈಲನ್ನು ಕಸಿದುಕೊಂಡರು. ಆಗ ಕೋಪಗೊಂಡ ಸ್ವಾಮಿಗಳು ಮೊಬೈಲ್ ಕಸಿದುಕೊಂಡವನ ಕಪಾಳಕ್ಕೆ ಹೊಡೆದರೆಂದು ಮಾಧ್ಯಮಗಳಲ್ಲಿ ಬಂದ ವರದಿ. ನಂತರ ಉತ್ತರ ಕರ್ನಾಟಕದ ಹೆಸರಾಂತ ಅಂಬೇಡ್ಕರ್ವಾದಿ ಹಾಗೂ ಪತ್ರಕರ್ತ ಅನಿಲ್ ಹೊಸಮನಿ ಹಾಗೂ ಎಡಪಂಥೀಯ ನಾಯಕ ಭಗವಾನರೆಡ್ಡಿ ಸೇರಿ 6 ಮಂದಿಯನ್ನು ಬಂಧಿಸಿ ಜೈಲಿಗೆ ಹಾಕಲಾಗಿದೆ.ಇಷ್ಟೇ ಅಲ್ಲ ಮೂರು ತಿಂಗಳುಗಳ ಕಾಲ ಶಾಂತಿಯುತ ಧರಣಿ ನಡೆಸಿದ ಪೆಂಡಾಲನ್ನು ಪೊಲೀಸರು ರಾತ್ರೋರಾತ್ರಿ ಧ್ವಂಸಗೊಳಿಸಿದ್ದಾರೆ. ಇದು ಪ್ರಜಾಪ್ರಭುತ್ವ ಹಾಗೂ ಅಭಿವ್ಯಕ್ತಿ ಸ್ವಾ ತಂತ್ರ್ಯಕ್ಕೆ ಮಾಡಿದ ಅಪಚಾರವಲ್ಲವೇ ? ನಾವೆಲ್ಲ ಸಿದ್ದರಾಮಯ್ಯನವರ ನೇತೃತ್ವದ ರಾಜ್ಯ ಸರಕಾರದ ಬಗ್ಗೆ ವಿಶೇಷ ಅಭಿಮಾನವನ್ನು ಹೊಂದಿದವರು. ಅದರಲ್ಲೂ ಸಮಾಜವಾದಿ ಚಳವಳಿಯ ಹಿನ್ನೆಲೆಯಿಂದ ಬಂದ ಸಿದ್ದರಾಮಯ್ಯನವರು ನಮ್ಮವರು ಎಂದು ಅವರ ಬಗ್ಗೆ ಗೌರವವಿದೆ.ಅದರಂತೆ ಸಿದ್ದರಾಮಯ್ಯನವರು ಕೂಡ ಅಧಿಕಾರ ಬಂದ ನಂತರ ಉಳಿದವರಂತೆ ಬದಲಾಗಲಿಲ್ಲ. ಸಂಘ ಪರಿವಾರದ ಕೋಮುವಾದ ಮತ್ತು ಮನುವಾದಗಳ ಬಗ್ಗೆ ಹಾಗೂ ಅವರ ವಿಧ್ವಂಸಕ ಚಟುವಟಿಕೆಗಳ ಕುರಿತು ದಿಟ್ಟವಾದ ನಿಲುವನ್ನು ತಾಳುತ್ತ ಬಂದರು. ವೈಯಕ್ತಿಕವಾಗಿಯೂ ಅತ್ಯಂತ ಶುದ್ಧ ವ್ಯಕ್ತಿತ್ವವನ್ನು ಹೊಂದಿದವರು. ಅಂತಲೇ ಬಿಜಾಪುರದ ಚಳವಳಿಕಾರರೂ ಕೂಡ ಸಿಎಂ ಸಿದ್ದರಾಮಯ್ಯನವರ ಬಗ್ಗೆ ವಿಶೇಷ ಅಭಿಮಾನ ಮತ್ತು ಗೌರವವನ್ನು ಹೊಂದಿದವರು. ಆದರೆ ಇದೆಲ್ಲ ಭ್ರಮ ನಿರಸನವಾಗುವಂಥ ವಿದ್ಯಮಾನಗಳು ಬಿಜಾಪುರದಲ್ಲಿ ನಡೆದವು.ಇದು ಸಿದ್ದರಾಮಯ್ಯನವರ ಹೆಸರಿಗೆ ಕಳಂಕ ತರುವ ಹುನ್ನಾರವೇ ಎಂಬ ಸಂದೇಹ ಸಹಜವಾಗಿ ಮೂಡುತ್ತದೆ. ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲರು ಬಹಿರಂಗವಾಗಿ ಭರವಸೆಯನ್ನು ನೀಡಿದ ನಂತರ ಹೀಗೇಕಾಯಿತು? ಇದು ಪೊಲೀಸರ ಅತಿರೇಕದ ವರ್ತನೆಯೇ ? ಈ ಪ್ರಶ್ನೆಗೆ ನಮಗೆ ಉತ್ತರ ಬೇಕಾಗಿದೆ. ನಾನು ಬಿಜಾಪುರ ಜಿಲ್ಲೆಯಲ್ಲೇ ಹುಟ್ಟಿ ಬೆಳೆದವನು.ಅಲ್ಲಿ ಬಾಲ್ಯದಿಂದಲೂ ಹಲವಾರು ಹೋರಾಟಗಳನ್ನು ನೋಡುತ್ತಾ,ಅದರಲ್ಲಿ ಪಾಲ್ಗೊಳ್ಳುತ್ತ ಬಂದವನು. ಊರು ಬಿಟ್ಟು ಹುಬ್ಬಳ್ಳಿ ಮತ್ತು ಬೆಂಗಳೂರು ಸೇರಿದ ನಂತರ ಕೂಡ ಕಳೆದ ಐವತ್ತು ವರ್ಷಗಳ ಕಾಲದಿಂದಲೂ ಬಿಜಾಪುರದ ಸಂಪರ್ಕ ವನ್ನು ನಿರಂತರವಾಗಿ ಇಟ್ಟುಕೊಂಡವನು. ನಾನು ಕಂಡಂತೆ ಇತ್ತೀಚಿನ ದಿನಗಳಲ್ಲಿ ಜನರು ತಮ್ಮ ಬೇಡಿಕೆಗಾಗಿ ಇಷ್ಟೊಂದು ಸುದೀರ್ಘವಾದ ಆಂದೋಲನ ಜಿಲ್ಲೆಯಲ್ಲಿ ನಡೆಸಿರಲಿಲ್ಲ. ಹಿಂದೆ ಅರುವತ್ತರ ದಶಕದಲ್ಲಿ ಆಲಮಟ್ಟಿ ಅಣೆಕಟ್ಟೆಗಾಗಿ ಸುದೀರ್ಘ ಹೋರಾಟ ನಡೆದ ನೆನಪು ನನಗೆ ಇನ್ನೂ ಇದೆ. ಬಿಜಾಪುರ ಜಿಲ್ಲೆಯ ಜನ ಎಂಥವರೆಂದರೆ ಒಮ್ಮೆಲೇ ಅವರಿಗೆ ಸಿಟ್ಟು ಬರುವುದಿಲ್ಲ. ಅವರು ತಾಳ್ಮೆಗೆ ಹೆಸರಾದವರು. ಆದರೆ ತಾಳ್ಮೆ ತಪ್ಪಿದಾಗ ಬೀದಿಗಿಳಿಯುತ್ತಾರೆ. ಒಮ್ಮೆ ಬೀದಿಗೆ ಇಳಿದರೆ ಎಂಥ ಬೆಲೆಯನ್ನಾದರೂ ತೆತ್ತು ಗೆಲುವಿನ ಬಾವುಟವನ್ನು ಹಾರಿಸುತ್ತಾರೆ. ಐದು ನದಿಗಳು ಹರಿದರೂ ಬರದಿಂದ ತತ್ತರಿಸಿದ ಈ ಜಿಲ್ಲೆಯ ಜನ ಭಾರತ-ಚೀನಾ ಯುದ್ಧದ ಸಂದರ್ಭದಲ್ಲಿ ಇಂದಿರಾ ಗಾಂಧಿ ಅವರನ್ನು ಬಿಜಾಪುರಕ್ಕೆ ಕರೆಸಿ ಅವರ ತೂಕದಷ್ಟು ಬಂಗಾರದ ಆಭರಣಗಳನ್ನು ರಾಷ್ಟ್ರೀಯ ರಕ್ಷಣಾ ನಿಧಿಗೆ ನೀಡಿದವರು. ಬಿಜಾಪುರ ಒಂದು ವಿಶಿಷ್ಟ ಜಿಲ್ಲೆ,ಇಲ್ಲಿ ಕಡು ಬಡವರಿದ್ದಾರೆ.ದುಡಿಯಲು ದೂರದ ಊರುಗಳಿಗೆ ಗುಳೆ ಹೋಗುವವರು ಇಲ್ಲಿ ಸಾಕಷ್ಟಿದ್ದಾರೆ. ಅದೇ ರೀತಿ ಭಾರೀ ಭೂಮಾಲಕರ, ಗೌಡ, ಪಾಟೀಲರ ಜಿಲ್ಲೆ ಎಂದು ಹೆಸರಾಗಿದೆ.ಇಂಥ ನೆಲದಲ್ಲಿ ಬಡವರಿಗೆ ಸರಕಾರಿ ಆಸ್ಪತ್ರೆ ಆಸರೆಯಾಗಿದೆ. ಅಲ್ಲಿ ಸರಕಾರಿ ಮೆಡಿಕಲ್ ಕಾಲೇಜಿಗಾಗಿ ಆಸ್ಪತ್ರೆ ಪಕ್ಕದಲ್ಲಿ 150 ಎಕರೆ ಸರಕಾರಿ ಆಸ್ಪತ್ರೆಯ ಜಮೀನನ್ನು ಮೀಸಲು ಇಡಲಾಗಿದೆ. ಇದರ ಮೇಲೆ ಭೂ ಮಾಫಿಯಾದ ಕಣ್ಣು ಬಿದ್ದಿದೆ.ಇಲ್ಲಿ ಖಾಸಗಿ ಸಹಭಾಗಿತ್ವದ ‘ಪಿಪಿಪಿ’ ಮೆಡಿಕಲ್ ಕಾಲೇಜು ಮಾಡಲು ಅವರು ಒತ್ತಡ ಹೇರುತ್ತಿದ್ದಾರೆ. ಖಾಸಗಿ ಸಹಭಾಗಿತ್ವ ಎಂಬುದು ರಾಜ್ಯ ಸರಕಾರದ ಯೋಜನೆ ಅಲ್ಲ. ಇದು ಕೇಂದ್ರ ಸರಕಾರದ ಪ್ರಸ್ತಾವ.ಇದನ್ನು ಬಳಸಿಕೊಂಡು 150 ಎಕರೆ ನುಂಗಲು ಇಲ್ಲಿನ ಕೆಲವು ರಾಜಕಾರಣಿಗಳ ಲೆಕ್ಕಾಚಾರವಾಗಿದೆ. ಸಾರ್ವಜನಿಕ ಆಸ್ತಿ ( 150 ಎಕರೆ) ಯನ್ನು ರಕ್ಷಿಸಬೇಕೆಂದು ಇಲ್ಲಿನ ಕೆಲವು ನಾಗರಿಕರು ಶಾಂತಿಯುತವಾಗಿ ಧರಣಿ ಆರಂಭಿಸಿದ್ದಾರೆ. ಜಾಗತೀಕರಣದ ಶಕೆ ಬಂದ ನಂತರ ಸರಕಾರಿ ಜಮೀನು ನುಂಗುವ ಭೂ ಮಾಫಿಯಾಗಳು ‘ಉದ್ಯಮಿಗಳೆಂದು’ ಹೊಸ ಹೆಸರನ್ನು ಪಡೆದಿದ್ದಾರೆ. ಖಾಸಗಿ ಸಹಭಾಗಿತ್ವ ಅಂದರೆ ಅವರೇನೂ ಹಣ ಹೂಡಿಕೆ ಮಾಡುವುದಿಲ್ಲ. ಜುಜುಬಿ ಒಂದೆರಡು ಕೋಟಿ ರೂ. ಹಾಕಿ ಬಹುದೊಡ್ಡ ಆಸ್ತಿ ಹಾಗೂ ಒಂದು ಸಾವಿರ ಹಾಸಿಗೆಗಳ ಆಸ್ಪತ್ರೆ, ಕ್ಯಾನ್ಸರ್ ಹಾಗೂ ಹೃದಯ ಚಿಕಿತ್ಸಾ ಘಟಕಗಳು, ರೋಗ ಪತ್ತೆ ಹಚ್ಚುವ ಅತ್ಯಾಧುನಿಕ ಯಂತ್ರಗಳು, ನುರಿತ ವೈದ್ಯರು ಇವೆಲ್ಲ ಸೌಕರ್ಯಗಳನ್ನು ಪುಗಸಟ್ಟೆ ಹೊಡೆಯುವುದಕ್ಕೆ ಇರುವ ಇನ್ನೊಂದು ಹೆಸರು ಪಿಪಿಪಿ. ಅಂದರೆ ಖಾಸಗಿ ಸಹಭಾಗಿತ್ವ. ಇಂಥ ಆಸ್ಪತ್ರೆಗಳಿಂದ ಕಡು ಬಡವರಿಗೆ ಒಂದು ಪೈಸೆಯೂ ಪ್ರಯೋಜನವಿಲ್ಲ. ಇದು ಜನರಿಗೆ ಸೇರಿದ ಆಸ್ತಿ.ಇದನ್ನು ಕಂಡ ಕಂಡವರಿಗೆ ಮಾರಾಟ ಮಾಡುವ ಅಧಿಕಾರ ಯಾರಿಗೂ ಇಲ್ಲ. ನಾನು ಚಿಕ್ಕವನಾಗಿದ್ದಾಗಿಂದಲೇ ನೋಡುತ್ತಿರುವ ಬಿಜಾಪುರ ಜಿಲ್ಲೆಯ ರಾಜಕಾರಣವೇ ವಿಚಿತ್ರ. ಇದನ್ನೆಲ್ಲ ಬರೆಯಲು ಹೊರಟರೆ ಈ ಅಂಕಣದ ಜಾಗ ಸಾಲುವುದಿಲ್ಲ. ಅದೇನೇ ಇರಲಿ ಎಂ.ಬಿ.ಪಾಟೀಲರು ತಾವು ಗೆದ್ದ ಬಬಲೇಶ್ವರ ಮತಕ್ಷೇತ್ರ ಸೇರಿದಂತೆ ಜಿಲ್ಲೆಗೆ ಹಲವಾರು ಅಭಿವೃದ್ಧಿ ಯೋಜನೆಗಳನ್ನು ತಂದು ಬರದ ಜಿಲ್ಲೆಯನ್ನು ಹಸಿರು ಜಿಲ್ಲೆಯನ್ನಾಗಿ ಮಾಡಿದ್ದಾರೆ. ಕೆರೆಗಳನ್ನು ತುಂಬಿಸಿದ್ದಾರೆ. ಇಂಥ ಎಂ.ಬಿ.ಪಾಟೀಲರು ಈ ವಿಷಯದಲ್ಲಿ ಕೊಟ್ಟ ಮಾತನ್ನು ಉಳಿಸಿಕೊಳ್ಳಲಿ. ಬಂಧಿಸಲ್ಪಟ್ಟ ಎಲ್ಲರನ್ನೂ ಬಿಡುಗಡೆ ಮಾಡಿಸಲಿ.ಕೇಸುಗಳನ್ನು ವಾಪಸ್ ಪಡೆಯಲಿ. ಮುಖ್ಯ ಮಂತ್ರಿ ಸಿದ್ದರಾಮಯ್ಯನವರ ಮನವೊಲಿಸಿ ‘ಬಿಜಾಪುರದಲ್ಲಿ ಸಂಪೂರ್ಣ ಸರಕಾರಿ ಆಸ್ಪತ್ರೆ ಮಾಡುತ್ತೇವೆ’ ಎಂದು ಬಹಿರಂಗವಾಗಿ ಹೇಳಿಸಲಿ.ಇದನ್ನು ಬಿಟ್ಟು ಇನ್ಯಾವ ನಿರೀಕ್ಷೆಯೂ ಇಲ್ಲ.ಕೊನೆಯದಾಗಿ ಇನ್ನೊಂದು ಮಾತು.ಸರ್ಕಾರಿ ಮೆಡಿಕಲ್ ಕಾಲೇಜಿಗಾಗಿ ಬಿಜಾಪುರದಲ್ಲಿ ನಡೆದಿರುವ ಹೋರಾಟ ಮೊದಲೇ ಘೋಷಿಸಿದಂತೆ ಪಕ್ಷಾತೀತ ಮತ್ತು ಜಾತ್ಯತೀತವಾಗಿರಲಿ. ಬಿಜೆಪಿ ಸೇರಿದಂತೆ ಯಾವುದೇ ಪಕ್ಷ ಇದನ್ನು ರಾಜಕೀಯ ಸ್ವಾರ್ಥ ಸಾಧನೆಗೆ ಬಳಸಿಕೊಳ್ಳಲು ಅವಕಾಶ ನೀಡಬಾರದು.ಇದು ಸಚಿವ ಎಂ.ಬಿ.ಪಾಟೀಲರ ಪರ ಮತ್ತು ವಿರೋಧಿ ವೇದಿಕೆಯಾಗಬಾರದು. ಸಂಘಟಕರಿಗೆ ಈ ಎಚ್ಚರವಿರಲಿ.
Venezuela : ಜಗತ್ತೇ ತನ್ನ ಸಾಮಂತರಾಗಬೇಕು ಎನ್ನುವ ಮಹದಾಸೆ - ಅಮೆರಿಕಾ ಮುಂದೆ ಅಡಗಿದ ವಿಶ್ವಸಂಸ್ಥೆ ಧ್ವನಿ
Venezuela bombing - Illegal : ತೈಲ ಸಂಪತ್ ಬರಿತ ವೆನೆಜುವೆಲಾ ದೇಶದ ಮೇಲೆ ವೈಮಾನಿಕ ದಾಳಿ ಮತ್ತು ಅಲ್ಲಿನ ಅಧ್ಯಕ್ಷರನ್ನು ಸೆರೆಗೆ ತೆಗೆದುಕೊಂಡ ಅಮೆರಿಕಾದ ನಿರ್ಧಾರಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ. ವಿಶ್ವಕ್ಕೆ ಕಾನೂನು ರೂಪಿಸುವ ವಿಶ್ವಸಂಸ್ಥೆ ಮತ್ತು ಅಂತಾರಾಷ್ಟ್ರೀಯ ನ್ಯಾಯಾಲಯವನ್ನು ಬಕ್ವಾಸ್ ಮಾಡಿದ ಅಮೆರಿಕಾ, ವೆನೆಜುವೆಲಾ ದೇಶದಂತೆ ಇತರ ದೇಶಗಳ ವಿಚಾರದಲ್ಲೂ ಮೂಗು ತೂರಿಸಿದ ಉದಾಹರಣೆಗಳು ಕೆದಕಿದಷ್ಟು ಸಿಗುತ್ತದೆ.
Gold Rate Jan 5 ಚಿನ್ನ ಪ್ರಿಯರಿಗೆ ಶಾಕ್: ಚಿನ್ನ - ಬೆಳ್ಳಿ ಬೆಲೆಯಲ್ಲಿ ದಿಢೀರ್ ಏರಿಕೆ, ಎಷ್ಟಿದೆ ಇಂದಿನ ಬೆಲೆ ?
Gold Rate Jan 5: ಚಿನ್ನ ಪ್ರಿಯರಿಗೆ ಸೋಮವಾರ ಜನವರಿ 05ರ ಬೆಲೆಯು ಭಾರೀ ಶಾಕ್ ನೀಡಿದೆ. ಅಮೆರಿಕಾ ಹಾಗೂ ವೆನೆಜುವೆಲಾದ ಸಂಘರ್ಷದ ಬೆನ್ನಲ್ಲೇ ಚಿನ್ನದ ಬೆಲೆಯು ಭಾರೀ ಹೆಚ್ಚಳವಾಗುವ ಸಾಧ್ಯತೆ ಇದೆ ಎಂದು ಮೊದಲೇ ನಿರೀಕ್ಷೆ ಮಾಡಲಾಗಿತ್ತು. ಅದರಂತೆಯೇ ಬೆಂಗಳೂರು ಸೇರಿದಂತೆ ಭಾರತದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆಯು ಭಾರೀ ಏರಿಕೆ ಕಂಡಿದೆ. ಜನವರಿ 5ರ
ಅಮೆರಿಕದಲ್ಲಿ ಪ್ರೇಯಸಿ ಕೊಂದು ಭಾರತಕ್ಕೆ ಪರಾರಿಯಾದ ಮಾಜಿ ಪ್ರೇಮಿ; ಭೀಕರ ಕೊಲೆಗೆ ಕಾರಣವಿನ್ನು ನಿಗೂಢ
ಅಮೆರಿಕದ ಮೇರಿಲ್ಯಾಂಡ್ನಲ್ಲಿ ಭಾರತೀಯ ಯುವತಿಯೊಬ್ಬಳ ಹತ್ಯೆಯಾಗಿರುವ ಘಟನೆ ಬೆಳಕಿಗೆ ಬಂದಿದೆ. 26 ವರ್ಷದ ಅರ್ಜುನ್ ಶರ್ಮ ಎಂಬಾತ ತನ್ನ ಪ್ರಿಯತಮೆ ನಿಖಿತಾ ಗೋಡಿಶಾಲಾ (27)ಳನ್ನು ಕೊಂದು ಭಾರತಕ್ಕೆ ಪರಾರಿಯಾಗಿರುವುದು ತಿಳಿದುಬಂದಿದೆ. ಸದ್ಯ ಪೊಲೀಸರು ಆತನ ಬಂಧನಕ್ಕೆ ವಾರೆಂಟ್ ಜಾರಿ ಮಾಡಿದ್ದಾರೆ. ಆತನೇ ಆಕೆ ನಾಪತ್ತೆಯಾಗಿದ್ದಾಳೆ ಎಂದು ಕೊಟ್ಟ ದೂರಿನಿಂದಾಗಿ ವಿಚಾರ ಬೆಳಕಿಗೆ ಬಂದಿತ್ತು.
ರಾಜ್ಯದಲ್ಲಿ ಜನವರಿ/ಫೆಬ್ರವರಿಯಲ್ಲಿ ಎಸ್ಐಆರ್ ನಡೆಯುವ ಸಾಧ್ಯತೆ
ಮ್ಯಾಪಿಂಗ್ ಪ್ರಕ್ರಿಯೆ 2 ವಿಭಾಗಗಳಲ್ಲಿ ನಡೆಯುತ್ತಿದೆ. ಇಲ್ಲಿ 40 ವರ್ಷ ಮೇಲ್ಪಟ್ಟವರು ಹಾಗೂ 40 ವರ್ಷ ಕೆಳಗಿವರು ಎಂದು ಪ್ರತ್ಯೇಕಿಸಲಾಗಿದೆ. 4 ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 40 ವರ್ಷಕ್ಕಿಂತ ಮೇಲ್ಪಟ್ಟ 5,39,706 ಮತದಾರರು ಇದ್ದಾರೆ. ಇವರು 2002 ರ ವರ್ಷದಲ್ಲಿ ಮತಪಟ್ಟಿಗೆ ಸೇರಿದ್ದಾರೆ ಎಂದು ಅಂದಾಜಿಸಲಾಗಿದೆ. ಈ ಪೈಕಿ 71.05% ಅಂದರೆ 3,83,475 ಮತದಾರರು ತಮ್ಮ ತಂದೆ ತಾಯಿ, ಅಜ್ಜ ಅಜ್ಜಿಯ ಹೆಸರಿನ ಜತೆಗೆ, ಮತದಾರರ ಪಟ್ಟಿಯಲ್ಲಿ ಮ್ಯಾಪ್ ಆಗಿದೆ.
ಕೊಪ್ಪಳ: ದೇವಸ್ಥಾನದ ಹುಂಡಿ ಕಳ್ಳತನ
ಕನಕಗಿರಿ: ತಾಲೂಕಿನ ಬೆಳಕನಾಳ ಗ್ರಾಮದಲ್ಲಿರುವ ಶರಣ ಬಸವೇಶ್ವರ ದೇವಸ್ಥಾನದಲ್ಲಿ ಸೋಮವಾರ ಬೆಳಗಿನ ಜಾವ ಹುಂಡಿ ಹಣ ಕಳ್ಳತನ ವಾಗಿರುವ ಬಗ್ಗೆ ವರದಿಯಾಗಿದೆ. ಕಲಕೇರಿ ರಸ್ತೆಯಲ್ಲಿ ಹುಂಡಿಯನ್ನು ಎಸೆದು ಹೋದ ಕಿಡಿಗೇಡಿಗಳು, ಅದರಲ್ಲಿದ್ದ ಎರಡು ಲಕ್ಷ ರೂಪಾಯಿಯನ್ನು ತಗೆದು ಕೊಂಡು ಹೋಗಿದ್ದಾರೆ ಎನ್ನಲಾಗಿದೆ. ಕಲಕೇರಿ ರಸ್ತೆಯಲ್ಲಿರುವ ಡಾಬಾ ದಲ್ಲಿ ಬಿಯರ್ ಬಾಟಲ್ ಕೂಡ ಕಳ್ಳತನ ಮಾಡಿದ್ದಾರೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
’ಇವರು ಬರೀ ಕುಚುಕು ಸ್ನೇಹಿತರಲ್ಲ, ಜನಾರ್ದನ ರೆಡ್ಡಿ ಪಾಲಿಗೆ ಶ್ರೀರಾಮುಲು ಧರೆಗಿಳಿದ ಭಗವಂತನ ರೂಪ’
Ballari Incident : ಬಳ್ಳಾರಿಯಲ್ಲಿ ನಡೆದ ಶೂಟೌಟ್ ಪ್ರಕರಣದಲ್ಲಿ ಆರೋಪ ಪ್ರತ್ಯಾರೋಪ ಜೋರಾಗಿ ನಡೆಯುತ್ತಿದೆ. ಬಿಜೆಪಿ ಮತ್ತು ಕಾಂಗ್ರೆಸ್ಸಿನವರು ಒಬ್ಬರು ಇನ್ನೊಬ್ಬರನ್ನು ದೂರುವ ಕೆಲಸವನ್ನು ಮಾಡುತ್ತಿದ್ದಾರೆ. ಈ ನಡುವೆ, ಬಳ್ಳಾರಿಗೆ ಭೇಟಿ ನೀಡಿದ ಕೇಂದ್ರ ಸಚಿವ ವಿ.ಸೋಮಣ್ಣ, ಬಿಜೆಪಿ ನಾಯಕ ಶ್ರೀರಾಮುಲು ನಿಂದ ಜನಾರ್ದನ ರೆಡ್ಡಿ ಬದುಕಿಕೊಂಡಿದ್ದಾರೆ ಎಂದು ಹೇಳಿದ್ದಾರೆ.
ಹಾವೇರಿ ಜಿಲ್ಲೆಯ ಕಬ್ಬು ಬೆಳೆಗಾರರು ಲಕ್ಷಾಂತರ ಟನ್ ಕಬ್ಬನ್ನು ಸಕ್ಕರೆ ಕಾರ್ಖಾನೆಗಳಿಗೆ ಪೂರೈಸಿದ್ದಾರೆ. ಎರಡು ತಿಂಗಳು ಕಳೆದರೂ ಕಬ್ಬಿನ ಬಿಲ್ ಪಾವತಿಯಾಗಿಲ್ಲ. ಇದರಿಂದ ರೈತರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ಸಾಲಗಾರರ ಒತ್ತಡ ಮತ್ತು ಹಬ್ಬಗಳ ಸಂದರ್ಭದಲ್ಲಿ ಹಣದ ಕೊರತೆ ರೈತರನ್ನು ಚಿಂತೆಗೀಡಾಗಿಸಿದೆ. ಕಾರ್ಖಾನೆಗಳು ನಿಯಮ ಪಾಲಿಸದೆ ರೈತರನ್ನು ಕಂಗಾಲಾಗಿಸಿವೆ. ಕೂಡಲೇ ಬಿಲ್ ಪಾವತಿಸುವಂತೆ ರೈತರು ಒತ್ತಾಯಿಸಿದ್ದಾರೆ.
ಶಾಂತಿಯ ತೈಲ ನಿಕ್ಷೇಪಕ್ಕೆ ಕೊಳ್ಳಿ ಇಟ್ಟ ಅಮೆರಿಕ
ವೆನೆಝುವೆಲಾದ ಮೇಲೆ ಅಮೆರಿಕ ಶನಿವಾರ ಮುಂಜಾನೆ ನಡೆಸಿದ ದಾಳಿ ಅನಿರೀಕ್ಷಿತವಾಗಿರಲಿಲ್ಲ. ಕಳೆದ ಅಕ್ಟೋಬರ್ನಲ್ಲಿ ಶಾಂತಿ ನೊಬೆಲ್ಗೆ ವೆನೆಝುವೆಲಾದ ವಿರೋಧ ಪಕ್ಷದ ನಾಯಕಿ ಮರಿಯಾ ಕೊರಿನಾ ಮಚಾದೋ ಅವರ ಆಯ್ಕೆ ಮಾಡಿದ್ದೇ ಇಂತಹದೊಂದು ದಾಳಿಗೆ ಬೇಕಾದ ವಾತಾವರಣವನ್ನು ನಿರ್ಮಾಣ ಮಾಡಲು. ಕಳೆದ ಶಾಂತಿ ನೊಬೆಲ್ ಸ್ಪರ್ಧೆಯಲ್ಲಿ ಸ್ವತಃ ತನ್ನ ಹೆಸರನ್ನೇ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಘೋಷಿಸಿಕೊಂಡಿದ್ದರು. ಆದರೆ ಕೊನೆಯ ಕ್ಷಣದಲ್ಲಿ ಪ್ರಶಸ್ತಿ ವೆನೆಝುವೆಲಾದ ವಿರೋಧ ಪಕ್ಷದ ನಾಯಕಿ ಮರಿಯಾ ಅವರ ಪಾಲಾಯಿತು. ಆದರೆ ಮರಿಯಾ ಅವರು ತನಗೆ ಸಿಕ್ಕಿದ ಗೌರವವನ್ನು ಡೊನಾಲ್ಡ್ ಟ್ರಂಪ್ಗೆ ಅರ್ಪಿಸುವ ಮೂಲಕ, ತನ್ನ ಋಣವನ್ನು ತೀರಿಸಿಕೊಂಡರು. ಮರಿಯಾ ಅವರು ವೆನೆಝುವೆಲಾದ ಸರ್ವಾಧಿಕಾರದ ವಿರುದ್ಧ ಹೋರಾಟ ನಡೆಸುತ್ತಿದ್ದಾರೆ ಎನ್ನುವುದು ಶಾಂತಿ ನೊಬೆಲ್ ನೀಡುವುದಕ್ಕೆ ಕಾರಣವಾಗಿತ್ತು. ಆದರೆ ಅದೇ ಹೊತ್ತಿಗೆ ಗಾಝಾದಲ್ಲಿ ಮಕ್ಕಳು, ಮಹಿಳೆಯರ ಮಾರಣ ಹೋಮ ನಡೆಸುತ್ತಿದ್ದ ಸರ್ವಾಧಿಕಾರಿ ಇಸ್ರೇಲ್ನ ಜೊತೆಗೆ ಮರಿಯಾ ಮಚಾದೋ ಆತ್ಮೀಯ ಸಂಬಂಧ ಹೊಂದಿದ್ದರು. ಇಸ್ರೇಲ್-ಟ್ರಂಪ್ ಜೊತೆಗೆ ಕೈ ಜೋಡಿಸಿಕೊಂಡಿರುವ ಮರಿಯಾ ಈ ಜಗತ್ತಿಗೆ ನೀಡುವ ಶಾಂತಿಯ ಸ್ವರೂಪ ಏನು ಎನ್ನುವುದು ಶನಿವಾರ ಮುಂಜಾನೆಯ ಹೊತ್ತಿಗೆ ಜಗತ್ತಿಗೆ ಸ್ಪಷ್ಟವಾಗಿದೆ. ವೆನೆಝುವೆಲಾದ ರಾಜಧಾನಿ ಕ್ಯಾರಕಾಸ್ ಮೇಲೆ ಅಮೆರಿಕವು ಭಾರೀ ವಾಯುದಾಳಿಯನ್ನು ನಡೆಸಿದ್ದು ರಾತ್ರೋರಾತ್ರಿ ಅಲ್ಲಿನ ಅಧ್ಯಕ್ಷರನ್ನು ತನ್ನ ವಶಕ್ಕೆ ತೆಗೆದುಕೊಂಡಿದ್ದು, ವೆನೆಝುವೆಲಾವನ್ನೂ ಕೈ ವಶ ಮಾಡಿಕೊಂಡಿದೆ. ಅಷ್ಟೇ ಅಲ್ಲ, ‘ವೆನೆಝುವೆಲಾದ ಜನರ ಹಿತಾಸಕ್ತಿಗಳನ್ನು ರಕ್ಷಿಸದೆ ಯಾವುದೇ ನಾಯಕ ಅದನ್ನು ತನ್ನ ಕೈಗೆ ತೆಗೆದುಕೊಳ್ಳಲು ಅಮೆರಿಕ ಅವಕಾಶ ನೀಡುವುದಿಲ್ಲ’ ಎಂದು ಟ್ರಂಪ್ ತಿಳಿಸಿದ್ದಾರೆ. ಅಲ್ಲಿನ ತೈಲ ನಿಕ್ಷೇಪಗಳ ಮೇಲೆ ನಿಯಂತ್ರಣ ಸಾಧಿಸುವ ಅಮೆರಿಕದ ಮೂರು ದಶಕಗಳ ಪ್ರಯತ್ನ ಕೊನೆಗೂ ಯಶಸ್ವಿಯಾಗಿದೆ. ಹಿಂದೆ ಇರಾಕ್ನ ಮೇಲೆ ದಾಳಿ ನಡೆಸಲು ಅಮೆರಿಕವು ‘ರಾಸಾಯನಿಕ ಶಸ್ತ್ರಾಸ್ತ್ರ’ದ ನೆಪವನ್ನು ಮುಂದಿಟ್ಟಿತ್ತು. ಇರಾಕನ್ನು ಸರ್ವನಾಶ ಮಾಡಿದ ಬಳಿಕ ಗೊತ್ತಾಯಿತು, ಆ ದೇಶ ಯಾವುದೇ ರಾಸಾಯನಿಕ ಶಸ್ತ್ರಾಸ್ತ್ರವನ್ನು ಹೊಂದಿಲ್ಲ ಎನ್ನುವುದು. ಇದೀಗ ವೆನೆಝುವೆಲಾ ಮೇಲೆ ದಾಳಿ ನಡೆಸಲು ಅಮೆರಿಕವು ‘ಡ್ರಗ್ಸ್ ಭಯೋತ್ಪಾದನೆ’ಯನ್ನು ಮುಂದಿಟ್ಟಿದೆ. ಈ ಹಿಂದೆ ಇಂಥದೇ ಸೇನಾ ಕಾರ್ಯಾಚರಣೆಯ ಮೂಲಕ ಪನಾಮದ ಮಾಜಿ ಸೇನಾ ನಾಯಕ ಮ್ಯಾನುವೆಲ್ ನೊರೀಗಾ ಅವರನ್ನು ಪದಚ್ಯುತಗೊಳಿಸಿತ್ತು. ವೆನೆಝುವೆಲಾದಂತೆ ಲ್ಯಾಟಿನ್ ಅಮೆರಿಕದ ಭಾಗವೇ ಆಗಿರುವ ಪನಾಮದ ಮೇಲೆ ೧೯೮೯ರಲ್ಲಿ ಅಮೆರಿಕದ ಸೇನಾ ಪಡೆಗಳು ದಾಳಿ ನಡೆಸಿ ನೊರೀಗಾ ಅವರನ್ನು ಬಂಧಿಸಿತ್ತು. ಭ್ರಷ್ಟಾಚಾರ ಮತ್ತು ಮಾದಕದ್ರವ್ಯ ದಂಧೆಯನ್ನು ಈ ಕಾರ್ಯಾಚರಣೆಗೆ ನೆಪವಾಗಿ ಬಳಸಿಕೊಂಡಿತ್ತು. ಅಮೆರಿಕವು ವೆನೆಝುವೆಲಾದ ನಾಗರಿಕರ ಹಿತಾಸಕ್ತಿಯ ಬಗ್ಗೆ ಮಾತನಾಡುತ್ತಿದೆಯಾದರೂ, ವೆನೆಝುವೆಲಾದ ಮಧ್ಯಂತರ ಅಧ್ಯಕ್ಷೆಯಾಗಿ ಆಯ್ಕೆಯಾಗಿರುವ ಡೆಲ್ಸಿ ರೊಡ್ರಿಗೆಸ್ ಅವರು ಈ ಕಾರ್ಯಾಚರಣೆಯನ್ನು ವಿರೋಧಿಸಿದ್ದಾರೆ ಮಾತ್ರವಲ್ಲ, ಮಡುರೊ ದಂಪತಿಯನ್ನು ತಕ್ಷಣ ಬಿಡುಗಡೆಗೊಳಿಸುವಂತೆ ಆಗ್ರಹಿಸಿದ್ದಾರೆ. ದೂರದರ್ಶನದಲ್ಲಿ ಪ್ರಸಾರಗೊಂಡ ಭಾಷಣದಲ್ಲಿ ರೊಡ್ರಿಗೆಸ್, ಈ ದಾಳಿಯು ಅಂತರ್ರಾಷ್ಟ್ರೀಯ ಕಾನೂನು ಮತ್ತು ವೆನೆಝುವೆಲಾದ ಸಾರ್ವಭೌಮತೆಯನ್ನು ಉಲ್ಲಂಘಿಸಿದೆ ಎಂದು ಆರೋಪಿಸಿದ್ದಾರೆ. ‘‘ಈ ದೇಶದಲ್ಲಿ ಒಬ್ಬರೇ ಅಧ್ಯಕ್ಷರಿದ್ದಾರೆ. ಅವರ ಹೆಸರು ನಿಕೋಲಸ್ ಮಡುರೊ’’ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಅಮೆರಿಕ ಈ ವಿಶ್ವದ ಹಲವು ಸರ್ವಾಧಿಕಾರಿ ಪ್ರಭುತ್ವಗಳ ಜೊತೆಗೆ ಕೈ ಜೋಡಿಸಿದೆ. ಸರ್ವಾಧಿಕಾರಿಗಳು ತನ್ನ ಹಿತಾಸಕ್ತಿಗೆ ಪೂರಕವಾಗಿರುವುದು ಅಮೆರಿಕದ ಅಗತ್ಯವಾಗಿದೆ. ಆದುದರಿಂದ, ಅಮೆರಿಕವು ಸರ್ವಾಧಿಕಾರಿ ಅಧ್ಯಕ್ಷನನ್ನು ಕಿತ್ತೊಗೆಯಲು ಈ ಕಾರ್ಯಾಚರಣೆ ನಡೆಸಿತು ಎನ್ನುವುದು ಅಣಕದ ಮಾತು. ಮಾದಕ ದ್ರವ್ಯ ಮಾಫಿಯಾದ ಹಿನ್ನೆಲೆಯಲ್ಲಿ ಇಂತಹ ದಾಳಿ ಅಮೆರಿಕಕ್ಕೆ ಅನಿವಾರ್ಯವಾಯಿತು ಎನ್ನುವುದೂ ಇನ್ನೊಂದು ದೊಡ್ಡ ಸುಳ್ಳಾಗಿದೆ. ವೆನೆಝುವೆಲಾ ಜೊತೆಗೆ ಅಮೆರಿಕದ ಸಂಘರ್ಷ ಇಂದು ನಿನ್ನೆಯದಲ್ಲ. ಅಮೆರಿಕಕ್ಕೆ ಕಣ್ಣಿರುವುದು ವೆನೆಝುವೆಲಾದಲ್ಲಿರುವ ತೈಲ ನಿಕ್ಷೇಪದ ಮೇಲೆ. ವೆನೆಝುವೆಲಾದ ಈ ಹಿಂದಿನ ಅಧ್ಯಕ್ಷ ಹ್ಯೂಗೋ ಚಾವೆಝ್ರನ್ನು ಕಿತ್ತೊಗೆಯುವುದಕ್ಕೂ ಅಮೆರಿಕ ಸಾಕಷ್ಟು ಸಂಚುಗಳನ್ನು ನಡೆಸಿತ್ತು. ಕಳೆದ ವರ್ಷ ಶಾಂತಿ ನೊಬೆಲ್ ಪ್ರಶಸ್ತಿಯನ್ನು ಗಿಟ್ಟಿಸಿಕೊಂಡಿದ್ದ ಮರಿಯಾ ಮಚಾದೋ ಅವರನ್ನು ಮುಂದಿಟ್ಟು ಅಮೆರಿಕ ನಡೆಸಿದ್ದ ಎಲ್ಲ ಸಂಚುಗಳನ್ನು ಚಾವೆಝ್ ವಿಫಲಗೊಳಿಸಿದ್ದರು. ೨೦೦೧ರಲ್ಲಿ ಚಾವೆಝ್ ಸರಕಾರ ವೆನೆಝುವೆಲಾದಲ್ಲಿರುವ ತೈಲ ಮತ್ತು ಅನಿಲ ನಿಕ್ಷೇಪಗಳ ಮೇಲೆ ಸರಕಾರದ ಹಕ್ಕನ್ನು ಪ್ರತಿಪಾದಿಸಿದ್ದೇ ಅಮೆರಿಕದ ಸಿಟ್ಟಿಗೆ ಕಾರಣವಾಗಿದೆ. ಹೊಸ ನೀತಿಯಂತೆ ತೈಲ ಪರಿಶೋಧನೆ ಮತ್ತು ಹೊರತೆಗೆಯುವಂತಹ ಪ್ರಮುಖ ಕಾರ್ಯಗಳನ್ನು ಸರಕಾರಿ ಕಂಪೆನಿಗಳಿಗೇ ವಹಿಸಲಾಯಿತು. ಖಾಸಗಿ ಮತ್ತು ವಿದೇಶಿ ಕಂಪೆನಿಗಳಿಗೆ ಸಂಸ್ಕರಣೆ, ಮಾರಾಟದಂತಹ ಸೀಮಿತ ಅವಕಾಶಗಳು ಮೀಸಲಾಯಿತು. ೧೯೯೦ರಲ್ಲಿ ಜಾರಿಗೆ ಬಂದ ಉದಾರೀಕರಣವನ್ನು ಬಳಸಿಕೊಂಡು ವೆನೆಝುವೆಲಾದ ತೈಲ ನಿಕ್ಷೇಪಗಳನ್ನು ದೋಚಲು ತುದಿಗಾಲಲ್ಲಿ ನಿಂತಿದ್ದ ಖಾಸಗಿ ಕಂಪೆನಿಗಳಿಗೆ ಹ್ಯೂಗೋ ಚಾವೆಝ್ ಜಾರಿಗೆ ತಂದ ಹೊಸ ಕಾನೂನು ಗಂಟಲ ಮುಳ್ಳಾಯಿತು. ಪರಿಣಾಮವಾಗಿ ಅಮೆರಿಕದ ತೈಲ ಕಂಪೆನಿಗಳು ಚಾವೆಝ್ ಮೇಲೆ ಕ್ರಮ ಕೈಗೊಳ್ಳಲು ಅಮೆರಿಕದ ಮೇಲೆ ಒತ್ತಡ ಹೇರುತ್ತಲೇ ಬಂದಿವೆ. ೨೦೦೨ರಲ್ಲಿ ಅಮೆರಿಕದ ಕುಮ್ಮಕ್ಕಿನಿಂದ ನಡೆದ ದಂಗೆಯೂ ವಿಫಲಗೊಂಡಿತು. ಮರಿಯಾ ಮಚಾದೋ ಮೂಲಕ ನಡೆಸಿದ ಜನಾಂದೋಲನಕ್ಕೂ ಹಿನ್ನಡೆಯಾಯಿತು. ಹ್ಯೂಗೋ ಚಾವೆಝ್ ಅಮೆರಿಕದ ಮಸಲತ್ತುಗಳನ್ನು ಎದುರಿಸುತ್ತಲೇ ಸರಕಾರಿ ಸಂಪತ್ತನ್ನು ಪರಿಣಾಮಕಾರಿಯಾಗಿ ಸಮಾಜವಾದಿ ನೆಲೆಯಲ್ಲಿ ಸಾಮಾಜಿಕ ಅಭಿವೃದ್ಧಿಗೆ ಬಳಸಿದರು. ಆದರೆ ಚಾವೆಝ್ ಮರಣದ ಜೊತೆಗೆ ವೆನೆಝುವೆಲಾ ಬೇರೆ ಬೇರೆ ಅಡೆತಡೆಗಳನ್ನು ಎದುರಿಸುತ್ತಾ ಬಂತು. ೨೦೧೪ರಲ್ಲಿ ಕಚ್ಚಾ ತೈಲ ಬೆಲೆ ತಳಮಟ್ಟಕ್ಕೆ ತಲುಪಿತು. ಪ್ರತಿ ಬ್ಯಾರೆಲ್ಗೆ ೧೦೮ ಡಾಲರ್ ಇದ್ದ ಬೆಲೆ ೨೦೧೫ರ ಹೊತ್ತಿಗೆ ೩೦ ಡಾಲರ್ಗೆ ತಲುಪಿತು. ತೈಲ ಮಾರಾಟವನ್ನೇ ನೆಚ್ಚಿಕೊಂಡಿದ್ದ ವೆನೆಝುವೆಲಾ ಆರ್ಥಿಕತೆಗೆ ಇದು ಭಾರೀ ಆಘಾತವನ್ನು ನೀಡಿತ್ತು. ಈ ಸಂದರ್ಭವನ್ನು ಅಮೆರಿಕವೂ ತನಗೆ ಪೂರಕವಾಗಿ ಬಳಸಿಕೊಂಡಿತು. ಅಮೆರಿಕವು ಅದಾಗಲೇ ಹೇರಿದ್ದ ನಿರ್ಬಂಧಗಳು ವೆನೆಝುವೆಲಾವನ್ನು ತತ್ತರಿಸುವಂತೆ ಮಾಡಿತು. ಹಣಕಾಸಿನ ನಿರ್ಬಂಧ ಆಂತರಿಕ ವ್ಯಾಪಾರ, ಉದ್ಯಮಗಳ ಮೇಲೆ ಋಣಾತ್ಮಕ ಪರಿಣಾಮಗಳನ್ನು ಬೀರಿದವು. ಆರ್ಥಿಕ ಹಿನ್ನಡೆ ಸರಕಾರದ ಮೇಲೂ, ಜನರ ಮೇಲೂ ತೀವ್ರ ಪರಿಣಾಮಗಳನ್ನು ಬೀರಿದವು. ಸರಕಾರದ ವಿರುದ್ಧ ಜನರೇ ಅಸಂತೃಪ್ತಿಯನ್ನು ಹೊಂದಿದರು. ೯೦ರ ದಶಕಕ್ಕೆ ಮರಳುವುದೇ ವೆನೆಝುವೆಲಾ ಬಿಡುಗಡೆಗೆ ಇರುವ ದಾರಿ ಎಂದು ಮರಿಯಾ ಮಚಾದೋ ಜನರಿಗೆ ಕರೆ ನೀಡಿದರು. ಅಂದರೆ ತೈಲ ನಿಕ್ಷೇಪಗಳ ಮೇಲಿನ ನಿಯಂತ್ರಣಗಳನ್ನು ಹಂತಹಂತವಾಗಿ ಸರಕಾರ ಬಿಟ್ಟುಕೊಡುವುದೇ ವೆನೆಝುವೆಲಾಗೆ ಇರುವ ದಾರಿ ಎಂದು ನಂಬಿಸಲಾಯಿತು. ದೇಶದೊಳಗಿನ ಆರ್ಥಿಕ ಬಿಕ್ಕಟ್ಟು ಅಮೆರಿಕಕ್ಕೆ ವೆನೆಝುವೆಲಾ ಮೇಲೆ ನಿಯಂತ್ರಣ ಸಾಧಿಸುವುದಕ್ಕೆ ಇನ್ನಷ್ಟು ಅನುಕೂಲಗಳನ್ನು ಮಾಡಿತು. ಭ್ರಷ್ಟಾಚಾರ, ಮಾದಕ ದ್ರವ್ಯ ಸಾಗಾಟ ಇವೆಲ್ಲವುಗಳನ್ನು ಮುಂದಿಟ್ಟುಕೊಂಡು ಅಂತಿಮವಾಗಿ ವೆನೆಝುವೆಲಾವನ್ನು ಬಲಿ ಹಾಕುವಲ್ಲಿ ಕೊನೆಗೂ ಯಶಸ್ವಿಯಾಗಿದೆ. ಒಬ್ಬ ಜಾಗತಿಕ ಗೂಂಡಾನಂತೆ ವೆನೆಝುವೆಲಾ ಮೇಲೆ ಅಮೆರಿಕ ಎರಗಿದೆ. ವೆನೆಝುವೆಲಾದ ಜನರ ಹಿತಾಸಕ್ತಿಯನ್ನು ಅಮೆರಿಕದ ಈ ಕಾರ್ಯಾಚರಣೆ ಯಾವತ್ತೂ ಎತ್ತಿ ಹಿಡಿಯದು. ಮುಖ್ಯವಾಗಿ ಅಮೆರಿಕ ವೆನೆಝುವೆಲಾದ ಮೇಲೆ ಮಾತ್ರ ನಿಯಂತ್ರಣ ಸಾಧಿಸಲು ಮುಂದಾಗಿರುವುದಲ್ಲ, ತನಗೆ ಸೆಡ್ಡು ಹೊಡೆಯಲು ಪ್ರಯತ್ನಿಸುವ ಎಲ್ಲ ಸಣ್ಣ ಪುಟ್ಟ ಸಾರ್ವಭೌಮ ದೇಶಗಳಿಗೂ ಈ ಮೂಲಕ ಬೆದರಿಕೆಯನ್ನು ಒಡ್ಡಿದೆ. ಈ ಕಾರಣಕ್ಕೆ ಅಮೆರಿಕದ ಕಾರ್ಯಾಚರಣೆಯನ್ನು ಸ್ಪಷ್ಟ ಮಾತಿನಲ್ಲಿ ಖಂಡಿಸುವ ಮೂಲಕ ಭಾರತವು ತನ್ನ ಸಾರ್ವಭೌಮತೆಯನ್ನು ಎತ್ತಿ ಹಿಡಿಯಬೇಕಾಗಿದೆ.
ಮಂಗಳೂರು -ಬೆಂಗಳೂರು ರೈಲು ಮಾರ್ಗ ವಿದ್ಯುದೀಕರಣ ಪೂರ್ಣ; ಆರ್ಥಿಕತೆಗೆ ಉತ್ತೇಜನ ನಿರೀಕ್ಷೆ
ಸಕಲೇಶಪುರ-ಸುಬ್ರಹ್ಮಣ್ಯ ಘಾಟಿ ವಿಭಾಗದ 55 ಕಿ.ಮೀ. ರೈಲು ಮಾರ್ಗದ ವಿದ್ಯುದೀಕರಣ ಮುಕ್ತಾಯಗೊಂಡಿದೆ. ವ್ಯಾಪಾರ ಮತ್ತು ಪ್ರವಾಸೋದ್ಯಮಕ್ಕೆ ಉತ್ತೇಜನ ಸಿಗುವ ನಿರೀಕ್ಷೆ ಇದೆ. ಇದರಿಂದ ಸರಕು ಸಾಗಣೆ ಸುಗಮವಾಗಲಿದ್ದು, ಶಿರಾಡಿ ಘಾಟ್ ಸಂಕಷ್ಟಕ್ಕೂ ಪರಿಹಾರ ಸಿಗಲಿದೆ. ಈ ಭಾಗದ ಪ್ರವಾಸೋದ್ಯಮಕ್ಕೆ ಉತ್ತೇಜನ ಸಿಗಲಿದೆ ಎಂಬ ವಿಶ್ವಾಸವಿದೆ.
Z+ ಸೆಕ್ಯೂರಿಟಿ ಕೇಳಿದ ಜನಾರ್ದನ ರೆಡ್ಡಿ: ಇರಾನ್, ಅಮೇರಿಕಾದಿಂದ ಸೆಕ್ಯೂರಿಟಿ ತರಿಸಿಕೊಳ್ಳಲಿ ಎಂದ ಡಿ ಕೆ ಶಿವಕುಮಾರ್
ಬೆಂಗಳೂರು: ಬಳ್ಳಾರಿ ಬ್ಯಾನರ್ ಗಲಾಟೆ ಸದ್ಯ ರಾಜ್ಯ ರಾಜಕೀಯದಲ್ಲಿ ಭಾರೀ ಚರ್ಚೆಯಾಗುತ್ತಿದೆ. ಈ ನಡುವೆ ತಮಗೆ ಝಡ್ ಪ್ಲಸ್ ಭದ್ರತೆ ನೀಡಬೇಕು ಎಂದು ಮಾಜಿ ಸಚಿವ ಹಾಗೂ ಶಾಸಕ ಜನಾರ್ದನ ರೆಡ್ಡಿ ಮನವಿ ಮಾಡಿದ್ದಾರೆ. ಬಳ್ಳಾರಿಯಲ್ಲಿ ತಮ್ಮ ಮೇಲೆ ಪೂರ್ವ ಯೋಜಿತ ಹತ್ಯೆ ಯತ್ನ ನಡೆದಿದೆ, ಹೀಗಾಗಿ ತನಗೆ ಹಾಗೂ ತಮ್ಮ ಕುಟುಂಬಸ್ಥರಿಗೆ ಝಡ್ ಪ್ಲಸ್ ಭದ್ರತೆ
ಐಎಲ್ಟಿ 20 ಟೂರ್ನಿ: ಮೂರನೇ ಪ್ರಯತ್ನದಲ್ಲಿ ಪ್ರಶಸ್ತಿ ಗೆದ್ದ ಡೆಸರ್ಟ್ ವೈಪರ್ಸ್
ದುಬೈ: ದುಬೈ ಕ್ರಿಕೆಟ್ ಸ್ಟೇಡಿಯಂನಲ್ಲಿ ಭಾನುವಾರ ನಡೆದ ಐಎಲ್ಟಿ 20 ಟೂರ್ನಿಯಲ್ಲಿ ಡೆಸರ್ಟ್ ವೈಪರ್ಸ್ ತಂಡ ಎಂಐ ಎಮಿರೇಟ್ಸ್ ತಂಡವನ್ನು 46 ರನ್ಗಳ ಅಂತರದಿಂದ ಸೋಲಿಸಿ ಚೊಚ್ಚಲ ಪ್ರಶಸ್ತಿ ಗೆದ್ದಿದೆ. ಈ ಹಿಂದೆ ಎರಡೂ ಬಾರಿ ಫೈನಲ್ ನಲ್ಲಿ ಮುಗ್ಗರಿಸಿದ್ದ ಡೆಸರ್ಟ್ ವೈಪರ್ಸ್ ಈ ಬಾರಿ ಏಕಪಕ್ಷೀಯ ಫೈನಲ್ ನಲ್ಲಿ ಪ್ರಶಸ್ತಿ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಟೂರ್ನಿಯ 10 ಪಂದ್ಯಗಳ ಪೈಕಿ ಕೇವಲ ಎರಡು ಪಂದ್ಯಗಳನ್ನು ಸೋತಿದ್ದ ಡೆಸರ್ಟ್ ವೈಪರ್ಸ್ ನಾಕೌಟ್ ನಲ್ಲಿ ಎಂಐ ಎಮಿರೇಟ್ಸ್ ವಿರುದ್ಧ ಎರಡು ಬಾರಿಯೂ ಪ್ರಾಬಲ್ಯ ಸ್ಥಾಪಿಸಿತ್ತು. ಕ್ವಾಲಿಫೈಯರ್ 1ನಲ್ಲಿ 45 ರನ್ ಗಳಿಂದ ಗೆದ್ದ ಡೆಸರ್ಟ್, ಫೈನಲ್ ನಲ್ಲಿ ಮತ್ತೊಮ್ಮೆ ಅದ್ಭುತ ಪ್ರದರ್ಶನ ನೀಡಿತು. ಟಾಸ್ ಗೆದ್ದ ಎಂಐ ಎಮಿರೇಟ್ಸ್ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಕ್ವಾಲಿಫೈಯರ್ ನಲ್ಲಿ ಎಂಐಐ ವಿರುದ್ಧ ಅಜೇಯ 120 ರನ್ ಸಿಡಿಸಿದ್ದ ಆ್ಯಂಡ್ರೀಸ್ ಗೌಸ್ ಗಾಯದ ಕಾರಣದಿಂದ ಹೊರಗುಳಿದಿದ್ದರು. ಆದರೆ ಕರನ್ ಸ್ಯಾಮ್ 51 ರನ್ಗಳಲ್ಲಿ 74 ರನ್ ಸಿಡಿಸಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಅಂತಿಮವಾಗಿ 4 ವಿಕೆಟ್ ನಷ್ಟಕ್ಕೆ 182 ರನ್ಗಳ ಸ್ಪರ್ಧಾತ್ಮಕ ಮೊತ್ತ ಕಲೆಹಾಕಿತು. ಎಐಇ ಬೌಲಿಂಗ್ ನಲ್ಲಿ 12 ವೈಡ್ ಹಿನ್ನೆಲೆಯಲ್ಲಿ ಸುಮಾರು ಎರಡು ಓವರ್ ಹೆಚ್ಚುವರಿಯಾಗಿ ಲಭ್ಯವಾದಂತಾಯಿತು. ಡೇವಿಡ್ ಪೇನ್ (42ಕ್ಕೆ 3) ಮತ್ತು ನಸೀಮ್ ಶಾ (18ಕ್ಕೆ 3) ಹಾಗೂ ಉಸ್ಮಾನ್ ತಾರಿಕ್ (20ಕ್ಕೆ 2) ಅವರ ಶಿಸ್ತುಬದ್ಧ ಬೌಲಿಂಗ್ ನಿಂದ ಡೆಸರ್ಟ್ ತಂಡ ಸುಲಭ ಜಯ ಸಾಧಿಸಿತು.
ಜನವರಿ 5ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ
Petrol, Diesel Price: ಪೆಟ್ರೋಲ್, ಡೀಸೆಲ್ ದರದಲ್ಲಿ ಜಾಸ್ತಿ ಅಲ್ಲದಿದ್ದರೂ, ಸ್ವಲ್ಪ ಪ್ರಮಾಣದಲ್ಲಾದ್ರೂ ಏರಿಳಿತ ಆಗುತ್ತಿರುತ್ತದೆ. ಹಾಗಾದರೆ, ಇಂದು (ಜನವರಿ 5) ಬೆಂಗಳೂರು ಸೇರಿದಂತೆ ರಾಜ್ಯದ ಉಳಿದ ಜಿಲ್ಲೆಗಳಲ್ಲಿ ಲೀಟರ್ ಪೆಟ್ರೋಲ್, ಡೀಸೆಲ್ ಬೆಲೆ ಎಷ್ಟಿದೆ ಎನ್ನುವ ಅಂಕಿಅಂಶಗಳನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ. ಶಕ್ತಿಯ ಮೂಲಗಳು ಎನಿಸಿಕೊಂಡಿರುವ ಪೆಟ್ರೋಲ್ ಮತ್ತು ಡೀಸೆಲ್ ಇಂಧನ ಅತ್ಯವಶ್ಯಕವಾಗಿ ಬೇಕಾಗುವ ಸಂಪನ್ಮೂಲಗಳಾಗಿವೆ.
ಕೊಪ್ಪಳ : ಟಿಪ್ಪರ್ ಪಲ್ಟಿ; ಪ್ರಾಣಾಪಾಯದಿಂದ ಚಾಲಕ ಪಾರು
ಕನಕಗಿರಿ: ತಾಲೂಕಿನ ಸುಳೇಕಲ್ ಗ್ರಾಮದಲ್ಲಿ ಮರಳು ತುಂಬಿ ಕೊಂಡು ಬರುವಾಗ ಸೋಮವಾರ ಬೆಳಗಿನ ಜಾವ ಕೊಪ್ಪಳ ರಸ್ತೆಯಲ್ಲಿ ಟಿಪ್ಪರ್ ಪಲ್ಟಿ ಯಾಗಿರುವ ಘಟನೆ ನಡೆದಿದೆ. ಟಿಪ್ಪರ್ ಪಲ್ಟಿ ಆಗುತ್ತಿದಂತೆ ಚಾಲಕ ಟಿಪ್ಪರ್ ನಿಂದ ಜಿಗಿದು ಪ್ರಾಣ ಉಳಿಸಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ. ಪೊಲೀಸ್ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳ ನಿರ್ಲಕ್ಷತನ, ಸಾಮರ್ಥ ಮೀರಿ ಮರಳು ತುಂಬಿಕೊಂಡು ರಾಜರೋಷವಾಗಿ ಟಿಪ್ಪರ್ ಗಳು ಅಲೆದಾಡುತ್ತಿವೆ ಎಂದು ಪ್ರಗತಿಪರ ಚಿಂತಕ ಪಾಮಣ್ಣ ಅರಳಿಗನೂರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಈ ಬಗ್ಗೆ ಇಲ್ಲಿನ ಪೊಲೀಸ್ ಠಾಣೆಯಲ್ಲಿ ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದು ತಿಳಿದು ಬಂದಿದೆ.
ಮಾಗಡಿ: ಹೊಯ್ಸಳರ ಕಾಲದ ಐತಿಹಾಸಿಕ ನಾಗಿನಿ ಕೆರೆಯಲ್ಲಿ ನೀರು ಸೋರಿಕೆ
ಮಾಗಡಿ ತಾಲೂಕಿನ ಹೊಯ್ಸಳರ ಕಾಲದ ನಾಗಿನಿ ಕೆರೆ ಏರಿ ಬಿರುಕು ಬಿಡುತ್ತಿದ್ದು, ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಸಣ್ಣ ನೀರಾವರಿ ಇಲಾಖೆ ಮತ್ತು ಗ್ರಾಪಂ ಆಡಳಿತದ ಅಸಡ್ಡೆಯಿಂದ ಕೆರೆ ಅಪಾಯದಲ್ಲಿದೆ. ಹೇಮಾವತಿ ನೀರು ಹರಿಸುವ ಮುನ್ನ ಕೆರೆ ದುರಸ್ತಿಗೊಳಿಸಬೇಕೆಂಬುದು ರೈತರ ಆಗ್ರಹವಾಗಿದೆ.
ಪೊಲೀಸ್ ಇನ್ಸ್ಪೆಕ್ಟರ್ಗಳ ಬಳಿ ಹಣಕ್ಕೆ ಬೇಡಿಕೆ; ಬಂಧಿತ ಪತ್ರಕರ್ತನ ಧ್ವನಿ ಮಾದರಿ ಪರೀಕ್ಷೆಗೆ ನಿರ್ಧಾರ
ಪತ್ರಕರ್ತ ಶರತ್ ಶರ್ಮಾ ಎಂಬುವವರು ಮೂವರು ಪೊಲೀಸ್ ಇನ್ಸ್ಪೆಕ್ಟರ್ಗಳಿಗೆ 15 ಲಕ್ಷ ರೂ. ಸುಲಿಗೆಗೆ ಯತ್ನಿಸಿದ್ದ ಎಂಬ ಆರೋಪ ಕೇಳಿಬಂದಿತ್ತು. ಆ ಪ್ರಕರಣದಲ್ಲಿ ಸದ್ಯ ಅವರನ್ನು ಬಂಧಿಸಲಾಗಿದೆ. ಡ್ರಗ್ಸ್ ಫ್ಯಾಕ್ಟರಿ ಪ್ರಕರಣವನ್ನು ಮುಂದಿಟ್ಟುಕೊಂಡು ಸುಲಿಗೆಗೆ ಯತ್ನಿಸಿದ್ದ. ಪೊಲೀಸರು ಆತನ ಧ್ವನಿಮಾದರಿ ಪರೀಕ್ಷೆಗೆ ಸಿದ್ಧತೆ ನಡೆಸಿದ್ದಾರೆ.
ಬೆಂಗಳೂರು ವಾಹನ ಸವಾರರೇ ಎಚ್ಚರ; ನಿಯಮ ಉಲ್ಲಂಘಿಸಿದ್ರೆ ಪೊಲೀಸರಿಗೆ ದೂರು ಕೊಡುತ್ತೆ ಈ ಹೆಲ್ಮೆಟ್!
ಬೆಂಗಳೂರಿನಲ್ಲಿ ದ್ವಿಚಕ್ರ ವಾಹನ ಸವಾರರು ರಸ್ತೆಯಲ್ಲಿ ಸಂಚರಿಸುವಾಗ ಹೆಲ್ಮೆಟ್ ಧರಿಸುವುದು ಕಡ್ಡಾಯ. ಇಬ್ಬರಿದ್ದರೆ ಇಬ್ಬರೂ ಸಹ ಧರಿಸಬೇಕಾಗುತ್ತದೆ. ಆದರೆ, ಕೆಲವರು ಪೊಲೀಸರ ಕಣ್ತಪ್ಪಿಸಿ, ಸಂಚಾರ ಪೊಲೀಸ್ ಇಲಾಖೆಯ ನಿಯಮಕ್ಕೆ ಕ್ಯಾರೆ ಎನ್ನದೆ ಓಡಾಡುತ್ತಾರೆ. ಇದನ್ನು ಕಂಡ ಟೆಕ್ಕಿಯೊಬ್ಬ ಸಂಚಾರ ನಿಯಮಗಳನ್ನು ಗಾಳಿಗೆ ತೂರುವವರನ್ನು ಪತ್ತೆ ಹಚ್ಚಲು ತಮ್ಮ ಹೆಲ್ಮೆಟ್ ಅನ್ನು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಸಾಧನವಾಗಿ ಪರಿವರ್ತಿಸಿದ್ದಾರೆ.
ಅಮೆರಿಕ: ಭಾರತೀಯ ಮಹಿಳೆಯ ಶವ ಮಾಜಿ ಪ್ರಿಯಕರನ ಫ್ಲ್ಯಾಟ್ನಲ್ಲಿ ಪತ್ತೆ!
ಲಾಸ್ವೇಗಸ್: ಸುಮಾರು 27 ವರ್ಷ ವಯಸ್ಸಿನ ಭಾರತೀಯ ಮಹಿಳೆಯ ಶವ ಹೊಸವರ್ಷದ ಮುನ್ನಾದಿನ ಆಕೆಯ ಮಾಜಿ ಪ್ರಿಯಕರನ ಮೆರಿಲ್ಯಾಂಡ್ ಅಪಾರ್ಟ್ಮೆಂಟ್ನಲ್ಲಿ ಇರಿತದ ಗಾಯದೊಂದಿಗೆ ಪತ್ತೆಯಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಮೃತ ಮಹಿಳೆಯನ್ನು ನಿಕಿತಾ ಗೊಡಿಶಾಲಾ ಎಂದು ಗುರುತಿಸಲಾಗಿದ್ದು, ಈಕೆ ಎಲಿಕಾಟ್ ಸಿಟಿಯಲ್ಲಿ ಡಾಟಾ ಮತ್ತು ಕಾರ್ಯತಂತ್ರ ವಿಶ್ಲೇಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದರು ಎಂದು ಹಾವರ್ಡ್ ಕೌಂಟಿ ಪೊಲೀಸರು ಹೇಳಿದ್ದಾರೆ. ಮಹಿಳೆಯ ಮಾಜಿ ಪ್ರಿಯಕರ ಅರ್ಜುನ್ ಶರ್ಮಾ (26) ಎಂಬಾತನ ಅಪಾರ್ಟ್ಮೆಂಟ್ನಲ್ಲಿ ಶವ ಪತ್ತೆಯಾಗಿದೆ. ಮಾಜಿ ಪ್ರಿಯಕರನ ವಿರುದ್ಧ ಕೊಲೆ ಪ್ರಕರಣ ದಾಖಲಿಸಿ ಬಂಧನ ವಾರಂಟ್ ಹೊರಡಿಸಲಾಗಿದೆ ಎಂದು ತನಿಖಾಧಿಕಾರಿಗಳು ಹೇಳಿದ್ದಾರೆ. ಡಿಸೆಂಬರ್ 31ರಂದು ಗೊಡಿಶಾಲಾ ಜತೆ ಮೆರಿಲ್ಯಾಂಡ್ ಸಿಟಿ ಅಪಾರ್ಟ್ಮೆಂಟ್ನಲ್ಲಿ ಅರ್ಜುನ್ ಕೊನೆಯ ಬಾರಿ ಕಾಣಿಸಿಕೊಂಡಿದ್ದು, ಜನವರಿ 2ರಿಂದ ನಾಪತ್ತೆಯಾಗಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ. ಜನವರಿ 3ರಂದು ಪತ್ತೆದಾರರು ಶೋಧ ನಡೆಸಿದಾಗ ಅಪಾರ್ಟ್ಮೆಂಟ್ನಲ್ಲಿ ಗೊಡಿಶಾಲಾ ಮೃತದೇಹ ಪತ್ತೆಯಾಗಿದ್ದು, ಇರಿತದ ಗಾಯಗಳಿದ್ದವು ಎಂದು ಅಧಿಕಾರಿಗಳು ವಿವರಿಸಿದ್ದಾರೆ. ಗೊಡಿಶಾಲಾ ನಾಪತ್ತೆಯಾದ ಬಗ್ಗೆ ವರದಿಯಾದ ದಿನವೇ ಆರೋಪಿ ಭಾರತಕ್ಕೆ ಪಲಾಯನ ಮಾಡಿದ್ದಾನೆ. ಡಿಸೆಂಬರ್ 31ರ ರಾತ್ರಿ 7 ಗಂಟೆಯ ಸುಮಾರಿಗೆ ಆರೋಪಿ ಕೊಲೆ ಮಾಡಿರಬೇಕು ಎಂದು ಪೊಲೀಸರು ಶಂಕಿಸಿದ್ದಾರೆ. ಹತ್ಯೆಯ ಕಾರಣ ತಿಳಿದುಬಂದಿಲ್ಲ. ನಿಕಿತಾ ಕುಟುಂಬದ ಜತೆ ಭಾರತೀಯ ರಾಯಭಾರ ಕಚೇರಿ ಸಂಪರ್ಕದಲ್ಲಿದ್ದು, ಎಲ್ಲ ಅಗತ್ಯ ಸಹಾಯ ನೀಡಲಾಗುವುದು ಎಂದು ಭಾರತೀಯ ಅಧಿಕಾರಿಗಳು ಹೇಳಿದ್ದಾರೆ.
ಅಸ್ಸಾಂನ ಮೊರಿಗಾಂವ್ ಜಿಲ್ಲೆಯಲ್ಲಿ 5.1 ತೀವ್ರತೆಯ ಭೂಕಂಪನ
ಹೊಸದಿಲ್ಲಿ: ಅಸ್ಸಾಂನ ಮೊರಿಗಾಂವ್ ಜಿಲ್ಲೆಯಲ್ಲಿ ಸೋಮವಾರ ನಸುಕಿನಲ್ಲಿ 5.1 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪ ಮಾಪನ ಕೇಂದ್ರ (ಎನ್ಸಿಎಸ್) ಪ್ರಕಟಿಸಿದೆ. ಮಂಜಾನೆ 4 ಗಂಟೆ 17 ನಿಮಿಷಕ್ಕೆ ಭೂಕಂಪ ಸಂಭವಿಸಿದ್ದು, ಇದರ ಕೇಂದ್ರಬಿಂದು 50 ಕಿಲೋಮೀಟರ್ ಆಳದಲ್ಲಿತ್ತು. 26.37 ಡಿಗ್ರಿ ಉತ್ತರ ಅಕ್ಷಾಂಶ ಹಾಗೂ 92.29 ಡಿಗ್ರಿ ಪೂರ್ವ ರೇಖಾಂಶದಲ್ಲಿ ಕೇಂದ್ರ ಬಿಂದು ಇತ್ತು ಎಂದು ಎನ್ಸಿಎಸ್ ಸ್ಪಷ್ಟಪಡಿಸಿದೆ. ಯಾವುದೇ ಸಾವು ನೋವು ಅಥವಾ ಆಸ್ತಿ ಪಾಸ್ತಿಗಳಿಗೆ ಹಾನಿಯಾದ ವಿವರಗಳು ತಕ್ಷಣಕ್ಕೆ ಲಭ್ಯವಿಲ್ಲ. ಕೇಂದ್ರ ಅಸ್ಸಾಂನಲ್ಲಿ ಕೂಡಾ ನಿವಾಸಿಗಳಿಗೂ ಅಲ್ಪ ಅಥವಾ ಸಾಮಾನ್ಯ ಪ್ರಮಾಣದ ಕಂಪನದ ಅನುಭವವಾಗಿದೆ ಎಂದು ಮೂಲಗಳು ಹೇಳಿವೆ. ಅಧಿಕಾರಿಗಳು ಪರಿಸ್ಥಿತಿಯ ಮೇಲೆ ನಿಗಾ ಇರಿಸಿದ್ದಾರೆ.
ನಾನೂ ಹೋದೆ ಚಿತ್ರಸಂತೆಗೆ ! ಗಾಬರಿಯಾದೆ ಅಲ್ಲಿನ ಗದ್ದಲಕ್ಕೆ !
ವೃತ್ತಿಯಲ್ಲಿ ಪ್ರಾಧ್ಯಾಪಕಿ ಆಗಿರುವ ಡಾ.ಸಹನಾ ಪ್ರಸಾದ್ ಅವರು ಲೇಖಕಿಯೂ ಆಗಿದ್ದು, ಸಣ್ಣ ಕಥೆ, ಲೇಖನ, ಕಾದಂಬರಿಗಳನ್ನು, ಧಾರವಾಹಿಗಳನ್ನೂ ಬರೆದಿದ್ದಾರೆ. ಈವರೆಗೂ 15 ಸಾವಿರಕ್ಕೂ ಹೆಚ್ಚು ಲೇಖನಗಳು ಪ್ರಕಟಗೊಂಡಿವೆ. ಬೆಂಗಳೂರಿನ ಚಿತ್ರಸಂತೆಗೆ ಹೋದ ಅನುಭವದ ಕುರಿತು ಬರೆದ ಲೇಖನ ಇಲ್ಲಿದೆ.
ಅಸ್ಸಾಂನಲ್ಲಿ 5.1 ತೀವ್ರತೆಯ ಭೂಕಂಪ: ಮೊರಿಗಾಂವ್ ಜಿಲ್ಲೆಯಲ್ಲಿ ನಡುಗಿದ ಭೂಮಿ
ಹೊಸ ವರ್ಷದ ಆರಂಭದಲ್ಲಿ ಈಶಾನ್ಯ ಭಾರತದ ಅಸ್ಸಾಂ ರಾಜ್ಯದಲ್ಲಿ ಕಹಿ ಘಟನೆ ಸಂಭವಿಸಿದ್ದು, ಭೂಕಂಪಕ್ಕೆ ಭೂಮಿ ನಡುಗಿದೆ. ತಕ್ಷಣಕ್ಕೆ ಹಾನಿಗಳ ಮಾಹಿತಿ ಲಭ್ಯವಿಲ್ಲವಾದರೂ, ಬೆಳ್ಳಂಬೆಳಗ್ಗೆ ಭೂಮಿ ಕಂಪಿಸಿದ್ದರಿಂದ ಜನ ಭೀತಿಗೊಳಗಾಗಿದ್ದಾರೆ.
ಸಿದ್ದರಾಮಯ್ಯ ಕರ್ನಾಟಕದ ದೀರ್ಘಾವಧಿ ಮುಖ್ಯಮಂತ್ರಿ; ಜ.6ಕ್ಕೆ ದೇವರಾಜು ಅರಸರ ರೆಕಾರ್ಡ್ ಬ್ರೇಕ್!
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜನವರಿ 6ರಂದು ದೇವರಾಜ ಅರಸು ಅವರ ದಾಖಲೆಯನ್ನು ಸರಿಗಟ್ಟಲಿದ್ದು, ಅತಿ ಹೆಚ್ಚು ಅವಧಿಗೆ ರಾಜ್ಯದ ಚುಕ್ಕಾಣಿ ಹಿಡಿದ ಇತಿಹಾಸ ಸೃಷ್ಟಿಸಲಿದ್ದಾರೆ. ಅರಸು ಅವರು 2,792 ದಿನಗಳ ಕಾಲ ಅಧಿಕಾರದಲ್ಲಿದ್ದರು. ಸಿದ್ದರಾಮಯ್ಯ ಅವರು ತಮ್ಮ ಎರಡನೇ ಅವಧಿಯಲ್ಲಿ ಈ ದಾಖಲೆ ಮುರಿಯಲಿದ್ದಾರೆ.
ಹೊಸ ವರ್ಷಕ್ಕೆ ಕರೆಂಟ್ ಶಾಕ್! ಮೀಟರ್ ದರ ದುಪ್ಪಟ್ಟು ಏರಿಕೆ, ಹೊಸ ಗ್ರಾಹಕರಿಗೆ ಹೊರೆ
ಹೊಸ ವರ್ಷದಿಂದ ಮೆಸ್ಕಾಂ ಸ್ಮಾರ್ಟ್ ಮೀಟರ್ ಅಳವಡಿಕೆಗೆ ಮುಂದಾಗಿದೆ. ಕೃಷಿ ಪಂಪ್ಸೆಟ್ ಹೊರತುಪಡಿಸಿ ತಾತ್ಕಾಲಿಕ ಹಾಗೂ ಹೊಸ ಸಂಪರ್ಕ ಪಡೆಯುವ ಗ್ರಾಹಕರಿಗೆ ಇದು ಅನ್ವಯಿಸಲಿದೆ. ಆದರೆ ಹಿಂದಿನ ದರಕ್ಕೂ, ಹೊಸ ಶುಲ್ಕಕ್ಕೂ ಭಾರೀ ವ್ಯತ್ಯಾಸ ಇದ್ದು, ಗ್ರಾಹಕರನ್ನು ಕಂಗಾಲಾಗಿಸಿದೆ.
ಬೆಂಗಳೂರಿನಲ್ಲಿ ಓಂ ಶಕ್ತಿ ಮಾಲಾಧಾರಿಗಳ ಮೇಲೆ ಕಲ್ಲು ತೂರಾಟ; ಬಾಲಕಿ ತಲೆಗೆ ಗಾಯ
ಹೊಸ ವರ್ಷದ ಆರಂಭದ ದಿನಗಳಲ್ಲೇ ಕರ್ನಾಟಕದಲ್ಲಿ ಎರೆಡೆರಡು ಹಿಂಸಾಚಾರ ಪ್ರಕರಣಗಳು ದಾಖಲಾಗಿದೆ. ಬಳ್ಳಾರಿಯಲ್ಲಿ ಬ್ಯಾನರ್ ವಿಚಾರಕ್ಕೆ ನಡೆದ ರಾಜಕೀಯ ಸಂಘರ್ಷದಲ್ಲಿ ಕಾಂಗ್ರೆಸ್ ಕಾರ್ಯಕರ್ತನೊಬ್ಬ ಬಲಿಯಾಗಿದ್ದ. ಸದ್ಯ ಬೆಂಗಳೂರಿನ ಜೆಜೆ ನಗರದಲ್ಲಿ ಓಂ ಶಕ್ತಿ ಮಾಲಾಧಾರಿಗಳು ಮೆರವಣಿಗೆ ತೆರಳುತ್ತಿದ್ದ ಮೇಲೆ ಅವರ ಮೇಲೆ ಕಲ್ಲು ತೂರಾಟ ನಡೆದಿದೆ. ಈ ಕಲ್ಲೇಟಿನಿಂದ ಮಗುವೊಂದು ಗಾಯಗೊಂಡಿದ್ದು, ಪರಿಸ್ಥಿತಿ ಉದ್ವಿಗ್ನಗೊಂಡಿತ್ತು. ಪೊಲೀಸ್ ಠಾಣೆ ಮುಂದೆ ಮಾಲಾಧಾರಿಗಳು ಜಮಾಯಿಸಿ ಆರೋಪಿಗಳ ಬಂಧಿಸುವಂತೆ ಒತ್ತಾಯಿಸಿದರು.
ಸಿಂಗೇನ ಅಗ್ರಹಾರದಲ್ಲಿ ಬರಲಿದೆ ಎಪಿಎಂಸಿಯ ಮೆಗಾ ಮಾರುಕಟ್ಟೆ: ಕಲಾಸಿಪಾಳ್ಯ ಮಾರುಕಟ್ಟೆಯೂ ಸ್ಥಳಾಂತರ
ಬೆಂಗಳೂರು ಹೊರವಲಯದ ಸಿಂಗೇನ ಅಗ್ರಹಾರದಲ್ಲಿ ಹಣ್ಣು-ತರಕಾರಿ ಸಗಟು ಮಾರಾಟಕ್ಕಾಗಿ ಮೆಗಾ ಮಾರುಕಟ್ಟೆ ನಿರ್ಮಿಸಲು ಎಪಿಎಂಸಿ ಮುಂದಾಗಿದೆ. ಎರಡು ದಶಕಗಳ ವಿವಾದಿತ 42 ಎಕರೆ ಜಾಗ ಎಪಿಎಂಸಿ ಸುಪರ್ದಿಗೆ ಬಂದಿದ್ದು, ರೈತರಿಗೆ ಪರಿಹಾರ ನೀಡಲಾಗುವುದು. ಕಲಾಸಿಪಾಳ್ಯ ಮಾರುಕಟ್ಟೆಯನ್ನೂ ಇಲ್ಲಿಗೆ ಸ್ಥಳಾಂತರಿಸುವ ಚಿಂತನೆ ಇದೆ.
ವಿಜಯಪುರ ರೈಲು ನಿಲ್ದಾಣ: ಸಾಗಬೇಕಿದೆ ಅಭಿವೃದ್ಧಿ ಯಾನ, ತುರ್ತು ಅಗತ್ಯಗಳ ಪಟ್ಟಿ ಹೀಗಿದೆ..
ಸಂಪರ್ಕ ವ್ಯವಸ್ಥೆಯಲ್ಲಿ ರೈಲು ಸಾರಿಗೆಯೂ ಪ್ರಮುಖ. ಜತೆಗೆ ಅಭಿವೃದ್ಧಿಗೂ ಹೆಬ್ಬಾಗಿಲು ಇದ್ದಂತೆ. ಸಾಮಾನ್ಯನಿಂದ ಹಿಡಿದು ಶ್ರೀಮಂತರವರೆಗೆ ಎಲ್ಲರೂ ರೈಲು ಪ್ರಯಾಣ ಬಯಸುತ್ತಾರೆ. ಇತ್ತೀಚಿನ ವರ್ಷಗಳಲ್ಲಿ ರೈಲ್ವೆ ಜಾಲ ವಿಸ್ತಾರ, ಹಳಿ ಮತ್ತು ನಿಲ್ದಾಣಗಳ ಅಭಿವೃದ್ಧಿ ಕೆಲಸಗಳು ನಡೆದಿವೆ. ಜತೆಗೆ ಇನ್ನೂ ಪ್ರಯಾಣಿಕರಿಗೆ ಸೌಲಭ್ಯಗಳನ್ನು ಕಲ್ಪಿಸಬೇಕಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ರೈಲುಗಳು ಬಂದು ನಿಲ್ಲುವ ತಾಣಗಳ ಸ್ಥಿತಿಗತಿ ಕುರಿತು ಬೆಳಕು ಚೆಲ್ಲುವ 'ರೈಲು ನಿಲ್ದಾಣಗಳಲ್ಲಿ ವಿಕ ಪಯಣ' ಸರಣಿ ಇಂದಿನಿಂದ..
ಕೋಗಿಲು ಬಡಾವಣೆ ಅಕ್ರಮ ತೆರವು ವಿರೋಧಿಸಿ ಪ್ರತಿಭಟನೆ; ಸರಕಾರದ ಕ್ರಮವನ್ನು ಖಂಡಿಸಿದ ಎಸ್ಐಒ
ಬೆಂಗಳೂರು : ಕೋಗಿಲು ಬಡಾವಣೆ ಕೊಳೆಗೇರಿ ನಿವಾಸಿಗಳ ಹೋರಾಟ ಸಮಿತಿಯು ಇತ್ತೀಚೆಗೆ ತೆರವು ಕಾರ್ಯಾಚರಣೆ ನಡೆದ ಸ್ಥಳದಲ್ಲಿ ಬೃಹತ್ ಪ್ರತಿಭಟನೆಯನ್ನು ಆಯೋಜಿಸಿ, ನೆಲೆ ಕಳೆದುಕೊಂಡ ಕುಟುಂಬಗಳ ಸಂಕಷ್ಟದತ್ತ ತುರ್ತು ಗಮನ ಸೆಳೆಯಿತು. ಮನೆಗಳನ್ನು ಕಳೆದುಕೊಂಡ ಸಂತ್ರಸ್ತರಿಗೆ ಸರಕಾರವು ತಕ್ಷಣವೇ ಶಾಶ್ವತ ವಸತಿ ಕಲ್ಪಿಸಬೇಕು ಹಾಗೂ ಪುನರ್ವಸತಿ ಅವಧಿಯಲ್ಲಿ ಆರೋಗ್ಯ, ಆಹಾರ ಮತ್ತು ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕೆಂದು ಸಮಿತಿಯು ಒತ್ತಾಯಿಸಿದೆ. ಹೋರಾಟ ಸಮಿತಿಯ ಸದಸ್ಯ ಸಂಘಟನೆಯಾಗಿರುವ ಎಸ್ಐಒ (SIO) ಕರ್ನಾಟಕವು ಈ ನಿಲುವನ್ನು ಬೆಂಬಲಿಸುತ್ತದೆ. ನಿವಾಸಿಗಳಿಗೆ ಯಾವುದೇ ಪೂರ್ವ ಕಾನೂನು ನೋಟಿಸ್ ಅಥವಾ ಮುನ್ಸೂಚನೆ ನೀಡದೆ ಏಕಾಏಕಿ ತೆರವು ಕಾರ್ಯಾಚರಣೆ ನಡೆಸಿರುವುದು ಅತ್ಯಂತ ಖಂಡನೀಯ ಕೃತ್ಯ ಎಂದು ಎಸ್ಐಒ ಅಭಿಪ್ರಾಯಪಟ್ಟಿದೆ. ಪ್ರಜಾಪ್ರಭುತ್ವವು ಜನರಿಂದ, ಜನರಿಗಾಗಿ ಮತ್ತು ಜನರಿಗೋಸ್ಕರ ಅಸ್ತಿತ್ವದಲ್ಲಿದೆ ಎಂಬುದನ್ನು ಕಾಂಗ್ರೆಸ್ ನೇತೃತ್ವದ ಸರಕಾರಕ್ಕೆ ನೆನಪಿಸಲು ನಾವು ಬಯಸುತ್ತೇವೆ. ಆದ್ದರಿಂದ, ಸರಕಾರವು ತನ್ನ ನಾಗರಿಕರ ಹಿತಾಸಕ್ತಿ ಮತ್ತು ಕಲ್ಯಾಣಕ್ಕೆ ಸದಾ ಆದ್ಯತೆ ನೀಡಬೇಕಾಗಿದೆ. ಈ ತೆರವು ಕಾರ್ಯಾಚರಣೆಯು ಸಮುದಾಯದ ಯುವಜನರು ಮತ್ತು ಮಕ್ಕಳ ಮೇಲೆ ಗಂಭೀರವಾದ ಮಾನವೀಯ ಬಿಕ್ಕಟ್ಟನ್ನು ಉಂಟುಮಾಡಿದೆ. ನೂರಾರು ಮಕ್ಕಳು ಶಾಲಾ ಶಿಕ್ಷಣದಿಂದ ವಂಚಿತರಾಗಿದ್ದಾರೆ, ಇದು ಕಡ್ಡಾಯ ಶಿಕ್ಷಣವನ್ನು ಪ್ರತಿಪಾದಿಸುವ ‘ಶಿಕ್ಷಣ ಹಕ್ಕು ಕಾಯಿದೆ’ಗೆ (RTE) ನೇರ ವಿರುದ್ಧವಾಗಿದೆ. ವಾಸಸ್ಥಳವನ್ನು ಕೆಡವಿರುವುದರಿಂದ, ಈ ಮಕ್ಕಳು ಅಪಾಯಕಾರಿ ವಾತಾವರಣ ಮತ್ತು ಅನೈರ್ಮಲ್ಯದ ಪರಿಸ್ಥಿತಿಗೆ ತುತ್ತಾಗಿದ್ದು, ಅವರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುವ ಆತಂಕ ಎದುರಾಗಿದೆ ಎಂದು ತಿಳಿಸಿದೆ. ಫಕೀರ್ ಮತ್ತು ವಸೀಮ್ ಕಾಲೋನಿ ನಿವಾಸಿಗಳಿಗೆ ತಕ್ಷಣದ ಪರಿಹಾರ ಒದಗಿಸಲು ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗ, ಮಹಿಳಾ ಆಯೋಗ ಮತ್ತು ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು ಸರಕಾರದ ಮೇಲೆ ಒತ್ತಡ ಹೇರಬೇಕೆಂದು ನಾವು ಬಲವಾಗಿ ಆಗ್ರಹಿಸುತ್ತೇವೆ. ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಎಸ್ಐಒ ಕರ್ನಾಟಕದ ರಾಜ್ಯ ಕಾರ್ಯದರ್ಶಿ ಮುಹಮ್ಮದ್ ಹಯಾನ್ ಅವರು, ಪ್ರತಿಯೊಬ್ಬ ನಿವಾಸಿಗೂ ಸೂಕ್ತ ಪುನರ್ವಸತಿ ಸಿಗುವವರೆಗೂ ಈ ಹೋರಾಟ ನಿರಂತರವಾಗಿ ಮುಂದುವರಿಯಲಿದೆ, ಎಂದು ಎಚ್ಚರಿಸಿದರು. ಪ್ರತಿಭಟನೆಯಲ್ಲಿ ಎಸ್ಐಒ ಕರ್ನಾಟಕದ ಸದಸ್ಯರಾದ ವಸೀಮ್ ಮತ್ತು ನದೀಮ್ ಉಪಸ್ಥಿತರಿದ್ದು, ಸಂತ್ರಸ್ತ ಕುಟುಂಬಗಳಿಗೆ ಬೆಂಬಲ ಸೂಚಿಸಿದರು.
ಬೆಂಗಳೂರು ನಗರದ ಮೂಲಸೌಕರ್ಯ ಅಭಿವೃದ್ಧಿಗೆ 1.5 ಲಕ್ಷ ಕೋಟಿ ರೂ.ಹೂಡಿಕೆ : ಡಿ.ಕೆ.ಶಿವಕುಮಾರ್
ಬೆಂಗಳೂರು : ಬೆಂಗಳೂರು ನಗರದ ಜನಸಂಖ್ಯೆ ಮುಂದಿನ ಇಪ್ಪತ್ತರಿಂದ 25 ವರ್ಷಗಳಲ್ಲಿನ ದ್ವಿಗುಣಗೊಳ್ಳಲಿದ್ದು, ನಗರದ ಮೂಲಸೌಕರ್ಯ ಕೊರತೆ ನಿವಾರಿಸಲು 1.5ಲಕ್ಷ ಕೋಟಿ ರೂ.ವೆಚ್ಚ ಮಾಡಲು ತೀರ್ಮಾನಿಸಲಾಗಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ. ರವಿವಾರ ನಗರದ ಅರಮನೆ ಮೈದಾನದಲ್ಲಿ ಮಹಾವೀರ್ ಜೈನ್ ಶಿಕ್ಷಣ ಸಂಘದ ಬಿಬಿಯುಎಲ್ ಜೈನ ವಿದ್ಯಾಲಯ 40 ವರ್ಷ ಪೂರೈಸಿದ ಮತ್ತು ಸಿಬಿ ಭಂಡಾರಿ ಜೈನ್ ಕಾಲೇಜಿನ 25 ವರ್ಷಾಚರಣೆ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನಗರದ ಮೂಲಸೌಕರ್ಯದ ಸ್ವರೂಪವನ್ನು ಬದಲಿಸಬೇಕಿದೆ ಎಂದರು. ಇಲ್ಲಿರುವ ಎಲ್ಲರಿಗೂ ಸಂಚರಿಸಲು ಸ್ವಂತ ವಾಹನಗಳು ಬೇಕು. ಯಾರೂ ಸಾರ್ವಜನಿಕ ಸಾರಿಗೆ ವ್ಯವಸ್ಥೆಯಲ್ಲಿ ಓಡಾಡುವುದಿಲ್ಲ. 1.4ಕೋಟಿ ಜನಸಂಖ್ಯೆ ಇದ್ದರೆ 1.3ಕೋಟಿ ವಾಹನಗಳಿವೆ. ಹಾಗಾಗಿ ಸಂಚಾರಿ ಒತ್ತಡದ ಸಮಸ್ಯೆ ತೀವ್ರವಾಗಿದೆ. ನಗರದ ಜವಾಬ್ದಾರಿ ತೆಗೆದುಕೊಂಡ ನಂತರ ತಾವು ಸೌಕರ್ಯಕ್ಕೆ ಹೂಡಿಕೆಗೆ ಆದ್ಯತೆ ಕೊಡುತ್ತಿದ್ದೇನೆ. ಸಂಚಾರಿ ಒತ್ತಡ ಇದ್ದರೂ ಯಾರೂ ಬೆಂಗಳೂರು ಬಿಟ್ಟು ಹೋಗಲು ತಯಾರಿಲ್ಲ ಎಂದು ಅವರು ತಿಳಿಸಿದರು. ಬೆಂಗಳೂರು ಅತ್ಯಂತ ಪರಮೋಚ್ಚ ನಗರ. ಇಲ್ಲಿ ಉತ್ತಮ ಸಂಸ್ಕೃತಿ ಇದ್ದು, ಗುಣಮಟ್ಟದ ಶಿಕ್ಷಣಕ್ಕೆ ವಿಫುಲ ಅವಕಾಶಗಳಿವೆ. ಇಲ್ಲಿ ಅತಿಹೆಚ್ಚಿನ ಮಾನವ ಸಂಪನ್ಮೂಲವಿದೆ. ಕ್ಯಾಲಿಪೋರ್ನಿಯಾದಲ್ಲಿ 35ಲಕ್ಷ ಇಂಜಿನಿಯರ್ಗಳಿದ್ದು, ಬೆಂಗಳೂರು ಒಂದೇ ನಗರದಲ್ಲಿ 25ಲಕ್ಷ ಇಂಜಿನಿಯರ್ ಗಳಿದ್ದಾರೆ. ಇದು ಬೆಂಗಳೂರಿನ ಶಕ್ತಿಯಾಗಿದೆ. ವಾಜಪೇಯಿ ಪ್ರಧಾನಿಯಾಗಿದ್ದಾಗ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಶಂಕು ಸ್ಥಾಪನೆ ನೆರವೇರಿಸಲು ಆಗಮಿಸಿದ್ದಾಗ ವಿಶ್ವದ ನಾಯಕರು ಮೊದಲು ದಿಲ್ಲಿ ಬರುತ್ತಿದ್ದರು. ತರುವಾಯ ಮುಂಬೈ, ಚೆನ್ನೈ, ಬಾಂಬೆ, ಹೈದ್ರಾಬಾದ್ ನತ್ತ ತೆರಳುತ್ತಿದ್ದರು. ಆದರೆ ಇದೀಗ ಪರಿಸ್ಥಿತಿ ಬದಲಾಗಿದೆ. ಇದೀಗ ವಿಶ್ವದ ನಾಯಕರು ಮೊದಲು ಬೆಂಗಳೂರಿಗೆ ಬರುತ್ತಿದ್ದಾರೆ. ನಂತರ ಹೊಸದಿಲ್ಲಿಗೆ ತೆರಳುತ್ತಿದ್ದಾರೆ ಎಂದು ಮಾಜಿ ಪ್ರಧಾನಿ ಉದ್ಗರಿಸಿದ್ದರು. ಇದಕ್ಕೆ ಕಾರಣ ಗುಣಮಟ್ಟದ ಶಿಕ್ಷಣ ಎಂದು ಡಿ.ಕೆ.ಶಿವಕುಮಾರ್ ಪ್ರತಿಪಾದಿಸಿದರು. ರಾಜ್ಯಸಭಾ ಸದಸ್ಯ ಲೆಹರ್ ಸಿಂಗ್ ಮಾತನಾಡಿ, ಜೈನ ಸಮಾಜದ ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಮುಂದುವರೆಯಬೇಕಾದಲ್ಲಿ ಸಾಮಾಜಿಕ ಮಾಧ್ಯಮದಿಂದ ದೂರ ಇದ್ದು, ಕಠಿಣ ಪರಿಶ್ರಮದಿಂದ ಅಧ್ಯಯನ ಮಾಡಬೇಕು. ಜೈನ ಸಮುದಾಯ ಶೈಕ್ಷಣಿಕವಾಗಿ ಇನ್ನಷ್ಟು ಪ್ರಗತಿ ಸಾಧಿಸಲು ಪೋಷಕರು ಆದ್ಯತೆ ನೀಡಬೇಕು. ಮಕ್ಕಳನ್ನು ಸಾಮಾಜಿಕ ಮಾಧ್ಯಮದಿಂದ ದೂರ ಇಡಬೇಕು ಎಂದರು. ಸಂಸದ ಪಿ.ಸಿ.ಮೋಹನ್ ಮಾತನಾಡಿ, ಒಂದು ಕಾಲದಲ್ಲಿ ಲಕ್ಷ್ಮಿ ಪುತ್ರರಿಗೆ ಮನ್ನಣೆ ದೊರೆಯುತ್ತಿತ್ತು. ಹಣವಂತರು, ವ್ಯಾಪಾರಿಗಳಿಗೆ ಮಣೆ ಹಾಕುತ್ತಿದ್ದರು. ಆದರೆ ಇಂದು ಕಾಲ ಬದಲಾಗಿದ್ದು, ಉನ್ನತ ಶಿಕ್ಷಣ ಪಡೆದು ಉತ್ತಮ ಉದ್ಯೋಗದಲ್ಲಿರುವವರಿಗೆ ಆದ್ಯತೆ ದೊರೆಯುತ್ತಿದೆ. ಶಿಕ್ಷಣಕ್ಕೆ ಪ್ರಧಾನ್ಯತೆ ದೊರೆಯುತ್ತಿರುವುದನ್ನು ಮನಗಂಡು ಉತ್ತಮ ಶಿಕ್ಷಣ ನೀಡಲು ಪ್ರತಿಯೊಬ್ಬರು ಮುಂದಾಗಬೇಕು ಎಂದರು. ಸಂಘದ ಅಧ್ಯಕ್ಷ ಚಂಪಾಲಾಲ್ ಭಂಡಾರಿ, ಸ್ಮರಣ ಸಂಚಿಕೆ ಸಮಿತಿ ಅಧ್ಯಕ್ಷ ಹೇಮರಾಜ್, ಆಚರಣಾ ಸಮಿತಿಯ ಅಧ್ಯಕ್ಷ ಪ್ರಕಾಶ್ ಜಿ. ಪಿರ್ಗಲ್, ಕಾರ್ಯದರ್ಶಿ ಚಂಪಾಲಾಲ್, ಕಾರ್ಯಕಾರಿ ಸಮಿತಿ ಸದಸ್ಯರು ಮತ್ತು ಶ್ರೀ ಮಹಾವೀರ್ ಜೈನ್ ಶಿಕ್ಷಣ ಸಂಘದ ಸದಸ್ಯರು ಸೇರಿದಂತೆ 2,000ಕ್ಕೂ ಹೆಚ್ಚು ಜನರು ಈ ಸಮಾರಂಭಕ್ಕೆ ಸಾಕ್ಷಿಯಾದರು.
ಆರ್ಯ ಈಡಿಗ ಸಮುದಾಯದ ಎಲ್ಲ ಪಂಗಡಗಳು ಒಗ್ಗೂಡಬೇಕು : ಕೋಟ ಶ್ರೀನಿವಾಸ ಪೂಜಾರಿ
ಬೆಂಗಳೂರು : ಆರ್ಯ ಈಡಿಗ ಸಮುದಾಯದ ಎಲ್ಲ ಪಂಗಡಗಳ ಮಹಿಳೆಯರನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸುವ ಅವಶ್ಯಕತೆ ಇದೆ ಎಂದು ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದ ಕೋಟ ಶ್ರೀನಿವಾಸ ಪೂಜಾರಿ ಕರೆ ನೀಡಿದ್ದಾರೆ. ರವಿವಾರ ಇಲ್ಲಿನ ನಿಮ್ಹಾನ್ಸ್ ಸಭಾಂಗಣದಲ್ಲಿ ಆರ್ಯ ಈಡಿಗ ಮಹಿಳಾ ಸಂಘದಿಂದ ಆಯೋಜಿಸಲಾಗಿದ್ದ ‘ನಾರಿ ಶಕ್ತಿ ರಾಷ್ಟ್ರೀಯ’ ಈಡಿಗ ಮಹಿಳಾ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಈಡಿಗ ಸಮುದಾಯಗಳು ಮತ್ತಷ್ಟು ಸಂಘಟಿತರಾಗಬೇಕು. ಈಡಿಗ ಸಮುದಾಯದ ಮಹಿಳೆಯರು ರಾಜಕೀಯ ಕ್ಷೇತ್ರಕ್ಕೆ ಬರುವಂತಾಗಬೇಕು ಎಂದರು. ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಮಾತನಾಡಿ, ಚಿಕ್ಕವನಿದ್ದಾಗ ನನಗೂ ನಮ್ಮೂರಿನಲ್ಲಿ ಅಸ್ಪೃಶ್ಯತೆಯ ಅನುಭವವಾಗಿತ್ತು, ನಮ್ಮೂರಿನ ಪೂಜಾರಿಯನ್ನು ನಾವು ಮುಟ್ಟಿದರೆ ಆತ ಪುನಃ ಸ್ನಾನ ಮಾಡಿಕೊಂಡು ಬರುತ್ತಿದ್ದರು. ಆದರೆ, ಬ್ರಹ್ಮಶ್ರೀ ನಾರಾಯಣ ಗುರುಗಳು ಆಸ್ಪಶ್ಯತೆಯ ವಿರುದ್ದ ಹೋರಾಟ ನಡೆಸಿದರು ಎಂದು ಸ್ಮರಿಸಿದರು. ನಾರಾಯಣಗರುಗಳು ಹಿಂದುಳಿದ ವರ್ಗಗಳಿಗೆ ಶಿಕ್ಷಣ ನೀಡಿದರು. ಸಮ ಸಮಾಜ ನಿರ್ಮಾಣಕ್ಕೆ ಶ್ರಮಿಸಿದರು. ಈಡಿಗ ಸಮುದಾಯಗಳು ಮತ್ತಷ್ಟು ಸಂಘಟಿತರಾಗಬೇಕು ಎಂದು ರಾಮಲಿಂಗಾರೆಡ್ಡಿ ಹೇಳಿದರು. ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮೀ ಚೌದರಿ ಮಾತನಾಡಿ, ಈಡಿಗ ಸಮುದಾಯದ ಹೆಣ್ಣು ಮಕ್ಕಳು ಇತೀಚೆಗೆ ಶಿಕ್ಷಿತರಾಗಿ ಸಂಘಟಿತರಾಗುವುದು ಅತ್ಯಂತ ಸಂತಸ ತಂದಿದೆ. ರಾಜಕೀಯ, ಸಾಮಾಜಿಕ ಕ್ಷೇತ್ರದಲ್ಲಿ ಈಡಿಗ ಸಮುದಾಯದ ಮಹಿಳೆಯರು ಭಾಗವಹಿಸಿ ಮುಖ್ಯವಾಹಿನಿಗೆ ಬರಬೇಕು ಎಂದು ಹೇಳಿದರು. ತೆಲಂಗಾಣ ಮಾಜಿ ಸಚಿವ ವಿ.ಶ್ರೀನಿವಾಸ ಗೌಡ ಮಾತನಾಡಿ, ಆಂಧಪ್ರದೇಶ, ತಮಿಳುನಾಡು, ಕೇರಳದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಈಡಿಗ ಸಮುದಾಯದವರು ವಾಸವಾಗಿದ್ದಾರೆ. ಈಡಿಗ ಮಹಿಳೆಯರು ರಾಷ್ಟ್ರೀಯ ಮಟ್ಟದಲ್ಲಿ ಒಂದಾಗುವ ಅವಶ್ಯಕತೆ ಇದೆ ಎಂದು ಹೇಳಿದರು. ಸಂಘದ ಅಧ್ಯಕ್ಷೆ ಡಾ.ನಳಿನಾಕ್ಷಿ ಸಣ್ಣಪ್ಪ ಮಾತನಾಡಿ, ಮಹಿಳಾ ಶಕ್ತಿಯನ್ನು ಬಲಪಡಿಸಲು ಸಮ್ಮೇಳನದ ಪ್ರಧಾನ ಉದ್ದೇಶವಾಗಿದೆ. ಸಮುದಾಯದ ಪರವಾಗಿ ವಿವಿಧ ಸರಕಾರಿ ಇಲಾಖೆಗಳಲ್ಲಿ ಮಂಡಳಿಗಳಲ್ಲಿ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಸಮರ್ಪಕ ಪ್ರಾತಿನಿಧ್ಯವನ್ನು ಪಡೆಯಲು ನಮ್ಮ ಬೇಡಿಕೆಗಳನ್ನು ಒಗ್ಗಟ್ಟಿನ ಧ್ವನಿಯಲ್ಲಿ ಮಂಡಿಸುವುದು ಈ ಸಮಾವೇಶದ ಆಶಯವಾಗಿದೆ ಎಂದರು ನಾರಾಯಣ ಗುರುಪೀಠದ ವಿಖ್ಯಾತಾನಂದ ಸ್ವಾಮೀಜಿ, ನಿಟ್ಟೂರು ಶ್ರೀನಾರಾಯಣ ಗುರು ಮಹಾಸಂಸ್ಥಾನ ಅಧ್ಯಕ್ಷ ರೇಣುಕಾನಂದ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಇದೇ ವೇಳೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮಹಿಳೆಯರನ್ನು ಸನ್ಮಾನಿಸಲಾಯಿತು. ಹಿಂ.ವರ್ಗಗಳ ಆಯೋಗದ ಸದಸ್ಯೆ ಪ್ರತಿಭಾ ಕುಳಾಯಿ, ನಾರಾಯಣ ಅಭಿವೃದ್ಧಿ ನಿಗಮ ಅಧ್ಯಕ್ಷೆ ಮಂಜುನಾಥ ಪೂಜಾರಿ, ಆರ್ಯ ಈಡಿಗ ಸಂಘದ ಅಧ್ಯಕ್ಷ ಡಾ.ಎಂ.ತಿಮ್ಮೇಗೌಡ, ಜನತಾ ಏಜಕೇಶನ್ ಸೊಸೈಟಿಯ ಅಧ್ಯಕ್ಷೆ ಡಾ.ರಾಜನಂದಿನಿ ಕಾಗೋಡು, ಅಧ್ಯಕ್ಷೆ ಅಶಿತ ಆನಂದ್ ಹಾಜರಿದ್ದರು.
ಕೋಗಿಲು | ಎಲ್ಲರಿಗೂ ಪುನರ್ವಸತಿ ಕಲ್ಪಿಸುವವರೆಗೂ ಹೋರಾಟ : ಮನೋಹರ್ ಎಲವರ್ತಿ
ಬೆಂಗಳೂರು : ಕೋಗಿಲು ಪ್ರಕರಣದಲ್ಲಿ ಮನೆಗಳು ನೆಲಸಮವಾದ ಎಲ್ಲರಿಗೂ ಪುನರ್ವಸತಿ ಕಲ್ಪಿಸುವವರೆಗೆ ಹೋರಾಟವನ್ನು ಮುಂದುವರಿಸುತ್ತೇವೆ ಎಂದು ದುಡಿಯುವ ಜನರ ವೇದಿಕೆಯ ಮನೋಹರ್ ಎಲವರ್ತಿ ತಿಳಿಸಿದ್ದಾರೆ. ರವಿವಾರ ಕೋಗಿಲು ಬಡಾವಣೆ ಸ್ಲಂ ನಿವಾಸಿಗಳ ಹೋರಾಟ ಸಮಿತಿ ವತಿಯಿಂದ ಮನೆ ತೆರವುಗೊಳಿಸುವ ಕಾರ್ಯಾಚರಣೆಯಿಂದ ಬಾಧಿಸಲ್ಪಟ್ಟ ಸಮುದಾಯಕ್ಕೆ ಪುನರ್ವಸತಿ ಕಲ್ಪಿಸುವಂತೆ ಕೋರಿ ಹಮ್ಮಿಕೊಂಡಿದ್ದ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕೋಗಿಲು ಬಡವಾಣೆ ಸ್ಲಂ ನಿವಾಸಿಗಳ ಹೋರಾಟ ಸಮಿತಿಯು 10ಕ್ಕೂ ಹೆಚ್ಚು ಪ್ರಗತಿಪರ ಸಂಘಟನೆಗಳನ್ನು ಒಳಗೊಂಡಿದೆ. ನಾವು ಸಾಂವಿಧಾನಿಕ ಮೌಲ್ಯಗಳು ಮತ್ತು ಶಾಂತಿಯುತ ಹೋರಾಟಕ್ಕೆ ಬದ್ಧರಾಗಿದ್ದೇವೆ ಎಂದರು. ಜನವಾದಿ ಮಹಿಳಾ ಸಂಘಟನೆಯ ಗೌರಮ್ಮ ಮಾತನಾಡಿ, ಯಾವುದೇ ಪೂರ್ವ ಸೂಚನೆ ಇಲ್ಲದೇ ಮನೆಗಳನ್ನು ನೆಲಸಮಗೊಳಿಸಿದ್ದಾರೆ. ಇವರಿಗೆ ತಕ್ಷಣವೇ ಪುನರ್ವಸತಿ ಕಲ್ಪಿಸಬೇಕು. ರಾಜ್ಯ ಮಾನವ ಹಕ್ಕುಗಳ ಆಯೋಗ ಮಾಡಿರುವ ಶಿಫಾರಸುಗಳನ್ನು ಕೂಡಲೇ ಜಾರಿಗೆ ತರಬೇಕು ಎಂದು ಒತ್ತಾಯಿಸಿದರು. ಕರ್ನಾಟಕ ಜನಾಂದೋಲನ ಸಂಘಟನೆ ವತಿಯಿಂದ ಮರಿಯಪ್ಪ ಅವರು ಮಾತನಾಡುತ್ತಾ, ಇದುವರೆಗೂ ಸರಕಾರ ನೀಡಿದ ವಾಗ್ದಾನಗಳನ್ನು ಈಡೇರಿಸಿಲ್ಲ, ಹೋರಾಟ ಒಂದೇ ದಾರಿ, ನಮ್ಮ ಗುರಿ ಮುಟ್ಟುವವರೆಗೂ ನಾವು ಒಗ್ಗಟ್ಟಿನಿಂದ ಇರೋಣ ಎಂದು ತಿಳಿಸಿದರು. ಸಿಐಟಿಯು ಉಮೇಶ್ ಮಾತನಾಡಿ, ಆರ್ಟಿಕಲ್ 19ರ ಪ್ರಕಾರ ಜನರಿಗೆ ಸ್ವತಂತ್ರವಾಗಿ ಎಲ್ಲಿ ಬೇಕಾದರೂ ಬದುಕುವ ಹಕ್ಕಿದೆ. ಮುಸಲ್ಮಾನರೆನ್ನುವ ಕಾರಣಕ್ಕಾಗಿ ವಿದೇಶಿಯರೆಂದು ಹಣೆಪಟ್ಟಿ ಹಚ್ಚುವುದು ಅಪರಾಧ ಎಂದು ಹೇಳಿದರು. ಸಭೆಯಲ್ಲಿ ಸ್ಲಂ ಜನರ ಸಂಘಟನೆಯ ಐಸ್ಸಾಕ್ ಅಮೃತರಾಜ್, ವೇದಿಕೆಯ ನಂದಿನಿ ಸೇರಿದಂತೆ ಜನವಾದಿ ಮಹಿಳಾ ಸಂಘಟನೆ, ಸ್ಲಂ ಜನರ ಸಂಘಟನೆ, ಕರ್ನಾಟಕ ಜನಾಂದೋಲನ ಸಂಘಟನೆ, ಕರ್ನಾಟಕ ಜನಶಕ್ತಿ, ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಸೇಶನ್, ಎನ್ಎಫ್ಐಡಬ್ಲ್ಯೂಯ, ಸಿಐಟಿಯು ಹಾಗೂ ಇನ್ನಿತರ ಜನಪರ ಸಂಘಟನೆಗಳ ಪ್ರತಿನಿಧಿಗಳು ಭಾಗವಹಿಸಿದ್ದರು.
ಬೆಂಗಳೂರು : ವೆನೆಝುವೆಲಾ ದೇಶದ ಮೇಲೆ ಅಮೆರಿಕ ನಡೆಸಿರುವ ದಾಳಿಯನ್ನು ಖಂಡಿಸಿ ಮಾರ್ಕ್ಸ್ವಾದಿ ಕಮ್ಯುನಿಸ್ಟ್ ಪಕ್ಷ (ಸಿಪಿಎಂ) ಹಾಗೂ ಸೋಷಿಯಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ (ಎಸ್ಯುಸಿಐ) ಪಕ್ಷದ ಕಾರ್ಯಕರ್ತರು ಪ್ರತ್ಯೇಕವಾಗಿ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರವಿವಾರ ಮಹಾಲಕ್ಷ್ಮೀ ಲೇಔಟ್ನಲ್ಲಿರುವ ಸಿಪಿಎಂ ಕಚೇರಿ ಸಮೀಪ ಹಾಗೂ ಫ್ರೀಡಂ ಪಾರ್ಕ್ನಲ್ಲಿ ಉಭಯ ಪಕ್ಷಗಳ ಹಲವು ಮಂದಿ ಕಾರ್ಯಕರ್ತರು, ವೆನೆಝುವೆಲಾ ದೇಶದ ಮೇಲೆ ಅಮೆರಿಕ ದಾಳಿಯನ್ನು ಖಂಡಿಸಿ ಧಿಕ್ಕಾರದ ಘೋಷಣೆ ಕೂಗಿದರು. ಅಲ್ಲದೆ, ಬಂಧಿಸಿರುವ ವೆನೆಝುವೆಲಾ ದೇಶದ ಅಧ್ಯಕ್ಷರನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು. ಈ ವೇಳೆ ಮಾತನಾಡಿದ ಸಿಪಿಎಂ ರಾಜ್ಯ ಕಾರ್ಯದರ್ಶಿ ಕೆ. ಪ್ರಕಾಶ್, ವೆನೆಝುವೆಲಾ ದೇಶದ ನಡೆದಿರುವ ದಾಳಿಯನ್ನು ಭಾರತ ಸೇರಿದಂತೆ ಇಡೀ ಪ್ರಪಂಚದ ಎಲ್ಲ ಸಾರ್ವಭೌಮ ದೇಶಗಳ ಮೇಲೆ ನಡೆದಿರುವ ಆಕ್ರಮಣ. ವೆನೆಝುವೆಲಾ ಅಧ್ಯಕ್ಷರನ್ನು ಬಿಡುಗಡೆ ಮಾಡುವಂತೆ ಭಾರತ ಸರಕಾರ ಅಮೆರಿಕವನ್ನು ಒತ್ತಾಯಿಸಬೇಕು. ವಿಶ್ವಸಂಸ್ಥೆ ಭದ್ರತಾ ಮಂಡಳಿ ಕೂಡಲೇ ಅಮೆರಿಕದ ಪುಂಡಾಟಿಕೆ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ವೆನೆಝುವೆಲಾ ದೇಶದ ಮೇಲೆ ಅಮೆರಿಕವು, ಏಕಪಕ್ಷೀಯ ಮಿಲಿಟರಿ ಆಕ್ರಮಣ ನಡೆಸಿ ಅಧ್ಯಕ್ಷ ನಿಕೊಲಸ್ ಮಡುರೊ, ಪತ್ನಿ ಸಿಲಿಯಾ ಅವರನ್ನು ಅಪಹರಣ ಮಾಡಿರುವುದು ಸರಿಯಲ್ಲ. ಅಮೆರಿಕ ವೆನೆಝುವೆಲಾದ ತೈಲ ಸಂಪತ್ತನ್ನು ಕೊಳ್ಳೆ ಹೊಡೆಯುವ ದುರುದ್ದೇಶಕ್ಕೆ ಅಡ್ಡಿಯಾಗಿರುವುದ್ದಕ್ಕಾಗಿ ಮಡುರೋ ಅವರನ್ನು ಪದಚ್ಯುತಗೊಳಿಸುವ ಮಿಲಿಟರಿ ಕಾರ್ಯಾಚರಣೆಯನ್ನು ನಡೆಸಿದೆ ಎಂದು ದೂರಿದರು. ಪ್ರತಿಭಟನೆಯಲ್ಲಿ ಸಿಪಿಎಂ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಗೋಪಾಲಕೃಷ್ಣ ಹರಳಹಳ್ಳಿ, ಚಂದ್ರಪ್ಪ ಹೊಸ್ಕೇರಾ, ಕೆ.ಎಸ್.ವಿಮಲಾ, ಟಿ.ಯಶವಂತ, ಸೂರಜ್ ನಿಧಿಯಂಗ್, ಹಲವರು ಭಾಗವಹಿಸಿದ್ದರು. ಮಿಲಿಟರಿ ಕಾರ್ಯಾಚರಣೆ ನಿಲ್ಲಿಸಲಿ ವೆನುಝುವೆಲಾದಲ್ಲಿ ಅಮೆರಿಕದ ಮಿಲಿಟರಿ ಕಾರ್ಯಾಚರಣೆಗಳನ್ನು ತಕ್ಷಣವೇ ನಿಲ್ಲಿಸಬೇಕು ಎಂದು ಸೋಷಿಯಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ ಪಕ್ಷವು ಆಗ್ರಹಿಸಿದೆ ಎಂದು ಬೆಂಗಳೂರು ಉತ್ತರ ಜಿಲ್ಲಾ ಸಮಿತಿ ಕಾರ್ಯದರ್ಶಿ ವಿ.ಜ್ಞಾನಮೂರ್ತಿ ತಿಳಿಸಿದ್ದಾರೆ. ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾದ ವೆನುಝುವೆಲಾ ಅಧ್ಯಕ್ಷ ನಿಕೋಲಸ್ ಮಡುರೊ ಮತ್ತು ಅವರ ಪತ್ನಿಯನ್ನು ಅಪಹರಿಸಿರುವುದು ‘ಘೋರ ಅಪರಾಧ’ ಮತ್ತು ‘ಹೇಡಿತನದ ಕೃತ್ಯ’. ಇದು ಅಮೆರಿಕದ ಆಕ್ರಮಣಕಾರಿ ನೀತಿಯ ಹಿಂದಿರುವ ಉದಾರವಾದಿ ಮುಖವಾಡವನ್ನು ಕಳಚಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನೆಯಲ್ಲಿ ಪಕ್ಷದ ಎಂ.ಎನ್.ಶ್ರೀರಾಮ್, ಎನ್.ರವಿ, ಶೋಭಾ ಎಸ್., ಸೇರಿದಂತೆ ಇನ್ನಿತರರು ಭಾಗವಹಿಸಿದ್ದರು.
ಕೊಟ್ಟಾಯಂ: ಕ್ರೈಸ್ತ ಧರ್ಮ ಹಾಗೂ ಇಸ್ಲಾಂ ಧರ್ಮಗಳನ್ನು ‘ವಿದೇಶಿ ಧರ್ಮಗಳು’ ಎಂದು ಬಿಂಬಿಸುವ ಪ್ರವೃತ್ತಿಗೆ ಮಲಂಕರ ಆರ್ಥೋಡಾಕ್ಸ್ ಸಿರಿಯನ್ ಚರ್ಚ್ ಮುಖ್ಯಸ್ಥ ಬಸೆಲಿಯೋಸ್ ಮಾರ್ಥೋಮ ಮ್ಯಾಥ್ಯೂಸ್ III ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. “ಇತಿಹಾಸವನ್ನು ಗಮನಿಸಿದರೆ ಆರ್ಯರೂ ಕೂಡ ವಲಸಿಗರೇ” ಎಂದು ಅವರು ಹೇಳಿದ್ದಾರೆ. ಜ.2ರಂದು ಕೊಟ್ಟಾಯಂ ಜಿಲ್ಲೆಯ ಪನಯಂಪಾಲದಲ್ಲಿರುವ ಸೆಂಟ್ ಮೇರಿ ಚರ್ಚ್ ನಲ್ಲಿ ಹಬ್ಬದ ಸಂದೇಶ ನೀಡುವ ವೇಳೆ ಅವರು ಈ ಹೇಳಿಕೆ ನೀಡಿದರು. ಕ್ರೈಸ್ತ ಸಮುದಾಯವನ್ನು ಗುರಿಯಾಗಿಸಿಕೊಂಡು ಇತ್ತೀಚೆಗೆ ನಡೆದ ಹಿಂಸಾಚಾರಗಳ ಕುರಿತು ಮಾತನಾಡಿದ ಅವರು, ಈ ಸಂಬಂಧ ಕೇಂದ್ರ ಸರ್ಕಾರದ ಮೌನವನ್ನು ಪ್ರಶ್ನಿಸಿದರು. “ಇಂದು ಕ್ರೈಸ್ತ ಸಮುದಾಯದ ವಿರುದ್ಧ ದಾಳಿಗಳನ್ನು ನಾವು ಎದುರಿಸುತ್ತಿದ್ದೇವೆ. ಇದರ ಕುರಿತು ಸಮಾಜದಲ್ಲಿ ಸರಿಯಾದ ಜಾಗೃತಿ ಮೂಡಿಸುವುದು ಅತ್ಯಾವಶ್ಯಕ. ಅತ್ಯಂತ ತಪ್ಪು ವಿಧಾನದಲ್ಲಿ, ಬಜರಂಗದಳ ಮತ್ತು ವಿಶ್ವ ಹಿಂದೂ ಪರಿಷತ್ ನಂತಹ ಆರೆಸ್ಸೆಸ್ ಅಂಗಸಂಸ್ಥೆಗಳು ಕ್ರೈಸ್ತರು ಹಾಗೂ ಇತರ ಧಾರ್ಮಿಕ ಅಲ್ಪಸಂಖ್ಯಾತರ ಮೇಲೆ ದಾಳಿ ನಡೆಸುತ್ತಿವೆ. ಇದು ಸತ್ಯ” ಎಂದು ಅವರು ಹೇಳಿದರು. ಮಾಧ್ಯಮ ವರದಿಗಳನ್ನು ಉಲ್ಲೇಖಿಸಿದ ಅವರು, ಪರಿಸ್ಥಿತಿ ಇನ್ನಷ್ಟು ಉಲ್ಬಣಗೊಳ್ಳುವ ಸಾಧ್ಯತೆ ಇದೆ ಎಂದು ಎಚ್ಚರಿಸಿದರು. “ನನ್ ಗಳ ನಂತರ ಈಗ ಪಾದ್ರಿಗಳ ಸರದಿ ಎಂಬ ಮಾತು ಕೇಳಿಬರುತ್ತಿದೆ. ಚರ್ಚ್ ಹೊರಗೆ ಕ್ರಿಸ್ಮಸ್ ಆಚರಣೆ ಕೆಡಿಸಿದ ಬಳಿಕ, ಚರ್ಚ್ ಒಳಗೆ ಪ್ರವೇಶಿಸಲು ಹೆಚ್ಚಿನ ಸಮಯ ತೆಗೆದುಕೊಳ್ಳುವುದಿಲ್ಲ. ಮುಂದಿನ ದಾಳಿಗಳು ಚರ್ಚ್ ಒಳಗಿನ ಪೂಜೆಯ ಮೇಲೆಯೇ ಆಗಬಹುದೆಂದು ನಾವು ನಿರೀಕ್ಷಿಸಬೇಕಾಗಿದೆ” ಎಂದು ಹೇಳಿದರು. ಸಾಂವಿಧಾನಿಕ ಭರವಸೆಗಳನ್ನು ಒತ್ತಿ ಹೇಳಿದ ಅವರು, ತೀವ್ರಗಾಮಿ ಘಟಕಗಳನ್ನು ನಿಯಂತ್ರಿಸುವ ಹೊಣೆಗಾರಿಕೆ ಸರ್ಕಾರಗಳ ಮೇಲಿದೆ ಎಂದರು. “ಪ್ರತಿಯೊಂದು ಧರ್ಮವೂ ಸತ್ಯ, ನ್ಯಾಯ ಮತ್ತು ಪ್ರೀತಿಯ ಸಂದೇಶವನ್ನು ನೀಡುತ್ತದೆ. ಆದರೆ ಯಾವುದೇ ಧರ್ಮದಲ್ಲೂ ಮತಾಂಧರು ಇರಬಹುದು. ದೇಶವನ್ನು ಆಳುವವರು ತಮ್ಮ ಧರ್ಮ ಅಥವಾ ಸಮುದಾಯವನ್ನು ಲೆಕ್ಕಿಸದೆ ಮತಾಂಧರನ್ನು ನಿಯಂತ್ರಿಸುವ ಜವಾಬ್ದಾರಿಯನ್ನು ಹೊತ್ತಿರಬೇಕು. ನಮಗೆಲ್ಲರಿಗೂ ಧಾರ್ಮಿಕ ಸ್ವಾತಂತ್ರ್ಯ ಮತ್ತು ನಮ್ಮ ಆಚರಣೆಗಳನ್ನು ಪಾಲಿಸುವ ಹಕ್ಕಿದೆ” ಎಂದು ಅವರು ಹೇಳಿದರು. ►ಕ್ರೈಸ್ತರು–ಮುಸ್ಲಿಮರು ಇಲ್ಲಿಯವರೇ ಕ್ರಿಸ್ಮಸ್ ಪ್ರದರ್ಶನಗಳ ಮೇಲಿನ ದಾಳಿಗಳ ಸಂದರ್ಭದಲ್ಲಿನ ಘೋಷಣೆಗಳನ್ನು ಉಲ್ಲೇಖಿಸಿದ ಅವರು, ಕೆಲವು ಧರ್ಮಗಳನ್ನು ಭಾರತಕ್ಕೆ ‘ವಿದೇಶಿ’ ಎಂದು ಕರೆಯುವ ವಾದವನ್ನು ತಿರಸ್ಕರಿಸಿದರು. “ಇತಿಹಾಸವನ್ನು ತಿಳಿದಿರುವ ಯಾರಿಗೂ ಈ ವಾದ ತಪ್ಪು ಎಂಬುದು ಸ್ಪಷ್ಟ. ಭಾರತದಲ್ಲಿ ಮಾತ್ರ ಹುಟ್ಟಿದವರು ಆರ್ಯರು ಅಥವಾ ಹಿಂದೂಗಳು ಅಲ್ಲ; ಎಲ್ಲರೂ ಇರಾನಿನ ಪ್ರದೇಶಗಳಿಂದ ವಲಸೆ ಬಂದವರೇ” ಎಂದು ಹೇಳಿದರು. ವಲಸೆ ಮಾದರಿಗಳನ್ನು ವಿವರಿಸಿದ ಅವರು, ಯಾವುದೇ ಸಮುದಾಯಕ್ಕೂ ಈ ಭೂಮಿಯ ಮೇಲೆ ವಿಶೇಷ ಮಾಲೀಕತ್ವವನ್ನು ಹೇಳಿಕೊಳ್ಳಲು ಸಾಧ್ಯವಿಲ್ಲ ಎಂದರು. “ದ್ರಾವಿಡರೂ ಮೂಲತಃ ಇಲ್ಲಿಯವರಲ್ಲ; ಅವರು ಆಫ್ರಿಕಾದಿಂದ ಇರಾನ್ ಮೂಲಕ ಭಾರತಕ್ಕೆ ಬಂದರು. ಆರ್ಯರು ಕ್ರಿ.ಪೂ. 2000ರ ವೇಳೆಗೆ ಬಂದು ಪ್ರದೇಶಗಳನ್ನು ವಶಪಡಿಸಿಕೊಂಡು ದ್ರಾವಿಡರನ್ನು ದಕ್ಷಿಣಕ್ಕೆ ತಳ್ಳಿದರು. ಹೀಗೆ ವಲಸೆ ಬಂದ ದ್ರಾವಿಡರು ಇಂದು ದಕ್ಷಿಣ ಭಾರತದಲ್ಲಿ ವಾಸಿಸುತ್ತಿದ್ದಾರೆ” ಎಂದು ವಿವರಿಸಿದರು. ಈ ಕುರಿತು ನಡೆಯುತ್ತಿರುವ ಚರ್ಚೆಗಳನ್ನು ಪ್ರಶ್ನಿಸಿದ ಅವರು, “ಕ್ರಿ.ಪೂ. 2000ರಲ್ಲಿ ಬಂದವರು ಈಗ ಎಲ್ಲ ‘ವಿದೇಶಿಯರು’ ಹಿಂತಿರುಗಬೇಕು ಎನ್ನುತ್ತಿದ್ದಾರೆ. ಯಾರು ಹಿಂದಿರುಗಬೇಕು? ಆರ್ಯರು ಆರಂಭಿಕ ವಲಸಿಗರು; ಅವರಿಗಿಂತ ಮೊದಲು ದ್ರಾವಿಡರು” ಎಂದು ಮಾರ್ಮಿಕವಾಗಿ ನುಡಿದರು. ಕ್ರೈಸ್ತರು ಮತ್ತು ಮುಸ್ಲಿಮರು ‘ಹೊರಗಿನವರು’ ಎಂಬ ಹೇಳಿಕೆಗಳನ್ನು ತಿರಸ್ಕರಿಸಿದ ಅವರು, “ಇಲ್ಲಿನ ಕ್ರೈಸ್ತರು ಇಲ್ಲಿಯೇ ಹುಟ್ಟಿ ಬೆಳೆದವರು; ಕ್ರಿ.ಶ. 52ರಿಂದಲೇ ಕ್ರೈಸ್ತ ಧರ್ಮವನ್ನು ಸ್ವೀಕರಿಸಿದ್ದಾರೆ. ಅವರು ಈ ದೇಶದ ನಾಗರಿಕರು. ಇಲ್ಲಿನ ಮುಸ್ಲಿಮರೂ ಇಲ್ಲಿಯೇ ಹುಟ್ಟಿ ಬೆಳೆದವರು. ಆದ್ದರಿಂದ ಇಸ್ಲಾಂ ಧರ್ಮಕ್ಕೂ, ಕ್ರೈಸ್ತ ಧರ್ಮಕ್ಕೂ, ಹಿಂದೂ ಧರ್ಮಕ್ಕೂ ಇಲ್ಲಿ ಸಮಾನ ಅಸ್ತಿತ್ವದ ಹಕ್ಕಿದೆ” ಎಂದು ಹೇಳಿದರು. ಕ್ರೈಸ್ತರ ಮೇಲಿನ ದಾಳಿಗಳ ವಿರುದ್ಧ ಕೇಂದ್ರ ಸರ್ಕಾರ ತೋರಿಸುತ್ತಿರುವ ನಿಷ್ಕ್ರಿಯತೆಯ ಪರಿಣಾಮಗಳ ಬಗ್ಗೆ ಎಚ್ಚರಿಕೆ ನೀಡಿದ ಅವರು, “ಹಿಂಸಾಚಾರವನ್ನು ಖಂಡಿಸದೆ ಅಥವಾ ನಿಯಂತ್ರಿಸದೆ ಮೌನವಾಗಿರುವುದು, ಅಲ್ಪಸಂಖ್ಯಾತರು ಸುಮ್ಮನಿರುತ್ತಾರೆ ಎಂಬ ಭಾವನೆಯನ್ನು ಹುಟ್ಟಿಸುತ್ತದೆ. ಇದನ್ನು ಖಂಡಿಸದಿದ್ದರೆ ಅಥವಾ ನಿಯಂತ್ರಿಸದಿದ್ದರೆ, ಅದು ನಾವು ಅನುಮೋದಿಸಿದಂತಾಗುತ್ತದೆ ಎಂಬ ಸಂದೇಶ ಸಮಾಜಕ್ಕೆ ಹೋಗುತ್ತದೆ” ಎಂದು ಹೇಳಿದರು. ಈ ಭಾಷಣವು ಚರ್ಚ್ ಮುಖ್ಯಸ್ಥರ ನಿಲುವಿನಲ್ಲಿ ಗಮನಾರ್ಹ ಬದಲಾವಣೆಯನ್ನು ಸೂಚಿಸುತ್ತದೆ. ಈ ಹಿಂದೆ ಅವರು ಕೇಂದ್ರ ಸರ್ಕಾರದ ಅಭಿವೃದ್ಧಿ ಉಪಕ್ರಮಗಳ ಬಗ್ಗೆ ಸಾರ್ವಜನಿಕವಾಗಿ ಬೆಂಬಲ ವ್ಯಕ್ತಪಡಿಸಿದ್ದರು. ಏಪ್ರಿಲ್ 2023ರಲ್ಲಿ ಸಂಸತ್ತಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ನಡೆದ ಭೇಟಿಯ ವೇಳೆ, ಕೇಂದ್ರ ಸರ್ಕಾರದ ಅಭಿವೃದ್ಧಿ ಕಾರ್ಯಕ್ರಮಗಳನ್ನು ಅವರು ಸ್ವಾಗತಿಸಿದ್ದರು. ಕೆಲವು ಪ್ರದೇಶಗಳಲ್ಲಿ ಕ್ರೈಸ್ತ ಸಂಸ್ಥೆಗಳು ಎದುರಿಸುತ್ತಿರುವ ಸಮಸ್ಯೆಗಳು ಸೀಮಿತ ಹಾಗೂ ಸ್ಥಳೀಯವಾಗಿವೆ ಎಂದೂ ಅವರು ಹೇಳಿದ್ದರು. ಆ ಸಂದರ್ಭದಲ್ಲಿ ಸರ್ಕಾರದೊಂದಿಗೆ ಸಂವಾದದ ಮೂಲಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು ಎಂಬ ವಿಶ್ವಾಸವನ್ನೂ ಅವರು ವ್ಯಕ್ತಪಡಿಸಿದ್ದರು. ಸೌಜನ್ಯ: thenewsminute.com
ವೆನೆಜುವೆಲಾ ಮೇಲೆ ಅಮೆರಿಕ ದಾಳಿ: ಭಾರತದ ‘ನಯರಾ’ ಪೆಟ್ರೋಲ್ ಬಂಕುಗಳಿಗೆ ಅನುಕೂಲ! ಜೊತೆಗೆ ಬರಲಿದೆ 9 ಸಾವಿರ ಕೋಟಿ ರೂ.!
ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ವೆನೆಜುವೆಲಾದ ಅಧ್ಯಕ್ಷ ನಿಕೋಲಸ್ ಮದುರೊ ಅವರನ್ನು ಬಂಧಿಸಿದ್ದಾರೆ. ಈ ಕಾರ್ಯಾಚರಣೆಯ ಹಿಂದಿನ ಮುಖ್ಯ ಕಾರಣ ತೈಲ ಎಂದು ಟ್ರಂಪ್ ಹೇಳಿದ್ದಾರೆ. ವೆನೆಜುವೆಲಾದಲ್ಲಿ ಕೇವಲ ಶೇಕಡಾ 1 ರಷ್ಟು ತೈಲ ಹೊರತೆಗೆಯಲಾಗುತ್ತಿದೆ. ಅಮೆರಿಕಾದ ಹೂಡಿಕೆ ಉತ್ಪಾದನೆ ಹೆಚ್ಚಿಸಿದರೆ ಜಾಗತಿಕ ತೈಲ ಬೆಲೆಗಳ ಮೇಲೆ ಪರಿಣಾಮ ಬೀರಬಹುದು.
Arsikere | ಹಾರನಹಳ್ಳಿ ಮಸೀದಿ ಉದ್ಘಾಟಿಸಿದ ಕೋಡಿಮಠ ಸ್ವಾಮೀಜಿ
ಅರಸೀಕೆರೆ : ತಾಲೂಕಿನ ಹಾರನಹಳ್ಳಿ ಗ್ರಾಮದಲ್ಲಿ ಮಜ್ಜಿದ್ ಎ ಅಕ್ಸಾ ಉದ್ಘಾಟನೆಯನ್ನು ಕೋಡಿಮಠ ಕ್ಷೇತ್ರದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಉದ್ಘಾಟಿಸಿದ್ದಾರೆ. ಗ್ರಾಮದ ಸರ್ವ ಧರ್ಮದವರು ಮಸೀದಿ ದರ್ಶನವನ್ನು ಮಾಡಿ, ಸಹಭೋಜನ ಮಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಕೋಡಿಮಠ ಶ್ರೀ ಕ್ಷೇತ್ರದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ, ಮಸೀದಿ, ಮಂದಿರ, ಚರ್ಚ್ ಎಂಬವು ಕೇವಲ ಧಾರ್ಮಿಕ ಕಟ್ಟಡಗಳಲ್ಲ. ಅವು ಮಾನವೀಯತೆಯನ್ನು ಬೆಳೆಸುವ ಪವಿತ್ರ ಕೇಂದ್ರಗಳಾಗಿವೆ. ಧರ್ಮಗಳು ಬೇರೆಬೇರೆ ಇದ್ದರೂ ನಮ್ಮ ಗುರಿ ಒಂದೇ ಶಾಂತಿ, ಸಹಬಾಳ್ವೆ ಮತ್ತು ಮಾನವ ಕಲ್ಯಾಣ. ಹಾರನಹಳ್ಳಿ ಗ್ರಾಮದಲ್ಲಿ ಮಜ್ಜಿದ್ ಎ ಅಕ್ಸಾ ಉದ್ಘಾಟನೆ ಭಾವೈಕ್ಯತೆಗೆ ಹೊಸ ಸಂದೇಶ ನೀಡಿದೆ. ಎಲ್ಲ ಧರ್ಮದವರು ಪರಸ್ಪರ ಗೌರವದಿಂದ ಬದುಕಿದರೆ ಸಮಾಜ ಇನ್ನಷ್ಟು ಬಲಿಷ್ಠವಾಗುತ್ತದೆ’’ ಎಂದು ಹೇಳಿದರು. ಮಾಜಿ ಕೇಂದ್ರ ಸಚಿವ ಸಿ.ಎಂ. ಇಬ್ರಾಹಿಂ, ಶಾಸಕ ಹಾಗೂ ರಾಜ್ಯ ಗೃಹ ನಿರ್ಮಾಣ ಮಂಡಳಿ ಅಧ್ಯಕ್ಷ ಶಿವಲಿಂಗೇಗೌಡ, ಸಂಸದ ಶ್ರೇಯಸ್ ಪಟೇಲ್, ಅರಸೀಕೆರೆ ನಗರಸಭೆ ಮಾಜಿ ಅಧ್ಯಕ್ಷ ಸಮಿಉಲ್ಲಾ, ಗ್ರಾಮದ ಹಿರಿಯ ಕರೀಂ ಸಾಬ್ ಮಾತನಾಡಿದರು. ಮಸೀದಿ ಅಧ್ಯಕ್ಷ ಮುಹಮ್ಮದ್ ಅತಾವುಲ್ಲಾ ಕಾರ್ಯದರ್ಶಿ ಮುಬಾರಕ್ ಪಾಶ, ಜಂಟಿ ಕಾರ್ಯದರ್ಶಿ ನವಾಸ್, ಮತ್ತು ಪದಾಧಿಕಾರಿಗಳು, ತಾ ಪಂ ಮಾಜಿ ಅಧ್ಯಕ್ಷ ಶಿವಮೂರ್ತಿ, ತಾ ಪಂ ಮಾಜಿ ಸದಸ್ಯ ಧರ್ಮ ಶೇಖರ್, ಮಾಜಿ ಜಿ ಪಂ ಸದಸ್ಯ ಬಿಳಿ ಚೌಡಯ್ಯ, ಶುಂಟಿ ಉದ್ಯಮಿ ಮುನ್ನಾ ಪಿಜಿಡಿ , ಕಾಂಗ್ರೆಸ್ ಹಿರಿಯ ಮುಖಂಡರಾದ ಅಬ್ದುಲ್ ಹಾದಿ, ಖಡಕಡಿ ಪೀರ್ ಸಾಬ್, ಅಬ್ದುಲ್ ಸಮದ್, ಜಮಾಲುದ್ದೀನ್, ಮುಂತಾದವರು ಇದ್ದರು.
ಕೆಂಪುಕೋಟೆ ಸ್ಫೋಟ ಪ್ರಕರಣ | ಪಾಕಿಸ್ತಾನಿ ಏಜೆಂಟ್ ಗಳನ್ನು ಸಂಪರ್ಕಿಸಲು ʼghostʼ ಸಿಮ್ ಬಳಕೆ: ವರದಿ
ಹೊಸದಿಲ್ಲಿ, ಜ.4: ನ. 10ರಂದು ನಡೆದ ಕೆಂಪುಕೋಟೆ ಬಾಂಬ್ ಸ್ಫೋಟ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಿಗಳು ಪಾಕಿಸ್ತಾನದ ಗುಪ್ತಚರ ಏಜೆಂಟ್ಗಳನ್ನು ಸಂಪರ್ಕಿಸಲು ʼghostʼ ಸಿಮ್ ಕಾರ್ಡ್ಗಳು ಹಾಗೂ ಎನ್ಕ್ರಿಪ್ಟ್ ಮಾಡಲಾದ ಸಂವಹನ ಆ್ಯಪ್ ಗಳನ್ನು ಬಳಸಿದ್ದರೆಂದು ತನಿಖೆಯಿಂದ ತಿಳಿದುಬಂದಿದೆ ಎಂದು ಪೊಲೀಸ್ ಅಧಿಕಾರಿಗಳು ರವಿವಾರ ತಿಳಿಸಿದ್ದಾರೆ. ಉನ್ನತ ಶಿಕ್ಷಣ ಪಡೆದ ಸುಶಿಕ್ಷಿತ ವೈದ್ಯರೂ ಸೇರಿ ಹಲವು ಮಂದಿ ಈ ಪ್ರಕರಣದಲ್ಲಿ ಭಾಗಿಯಾಗಿದ್ದರು. ತನಿಖೆಯಲ್ಲಿ ಬೆಳಕಿಗೆ ಬಂದ ಮಾಹಿತಿಯ ಆಧಾರದಲ್ಲಿ, ದೂರಸಂಪರ್ಕ ಇಲಾಖೆಯು ಕಳೆದ ವರ್ಷದ ನವೆಂಬರ್ 28ರಂದು ಮಹತ್ವದ ನಿರ್ದೇಶನ ಹೊರಡಿಸಿದ್ದು, ವಾಟ್ಸ್ಆ್ಯಪ್, ಟೆಲಿಗ್ರಾಮ್ ಮತ್ತು ಸಿಗ್ನಲ್ನಂತಹ ಆ್ಯಪ್ ಆಧಾರಿತ ಸಂವಹನ ಸೇವೆಗಳು ಮೊಬೈಲ್ ಫೋನ್ನಲ್ಲಿರುವ ಭೌತಿಕ ಸಿಮ್ ಕಾರ್ಡ್ಗೆ ನಿರಂತರವಾಗಿ ಸಂಪರ್ಕ ಹೊಂದಿರಬೇಕು ಎಂದು ಸೂಚಿಸಿದೆ. ಭದ್ರತಾ ಸಂಸ್ಥೆಗಳ ಕಣ್ತಪ್ಪಿಸಲು ಮುಝಮ್ಮಿಲ್ ಗ್ಯಾನೀ, ಅದೀಲ್ ರಾಥರ್ ಸೇರಿದಂತೆ ಆರೋಪಿಗಳು ‘ಡ್ಯುಯಲ್ ಫೋನ್’ ತಂತ್ರವನ್ನು ಬಳಸಿಕೊಂಡಿದ್ದರು. ಇವರು ʼghostʼ ಸಿಮ್ ಕಾರ್ಡ್ಗಳನ್ನು ಅಂತರ್ಜಾಲ ತಾಣಗಳ ಮೂಲಕ ಪಡೆದುಕೊಂಡಿದ್ದರು ಎಂದು ತನಿಖೆಯ ವೇಳೆ ಗೊತ್ತಾಗಿದೆ. ಕೆಂಪುಕೋಟೆ ಸಮೀಪ ಸ್ಫೋಟಕ ಸಾಧನಗಳನ್ನು ಹೊತ್ತೊಯ್ಯುತ್ತಿದ್ದಾಗ ಮೃತಪಟ್ಟ ಡಾ. ಉಮರ್ ಉನ್ ನಬಿ ಸೇರಿದಂತೆ ಪ್ರತಿಯೊಬ್ಬ ಆರೋಪಿಯೂ ಎರಡು ಅಥವಾ ಮೂರು ಮೊಬೈಲ್ ಫೋನ್ಗಳನ್ನು ಹೊಂದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ತಮ್ಮ ದಿನನಿತ್ಯದ ಖಾಸಗಿ ಹಾಗೂ ವೃತ್ತಿಪರ ಬಳಕೆಗೆ ಸ್ವಂತ ಹೆಸರಿನಲ್ಲಿ ಖರೀದಿಸಿದ ಸಿಮ್ ಬಳಸುತ್ತಿದ್ದ ಆರೋಪಿಗಳು, ಮತ್ತೊಂದು ಸಿಮ್ ಅನ್ನು ‘ಉಕಾಸ’, ‘ಫೈಝಾನ್’, ‘ಹಶ್ಮಿ’ ಎಂಬ ನಾಮಧೇಯಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದ ಪಾಕಿಸ್ತಾನಿ ಏಜೆಂಟ್ಗಳನ್ನು ಸಂಪರ್ಕಿಸಲು ಬಳಸಿದ್ದರು. ಈ ʼghostʼ ಸಿಮ್ ಕಾರ್ಡ್ಗಳನ್ನು ಸಂಶಯಕ್ಕೆ ಒಳಗಾಗದ ನಾಗರಿಕರ ಆಧಾರ್ ವಿವರಗಳನ್ನು ದುರ್ಬಳಕೆ ಮಾಡಿಕೊಂಡು ಖರೀದಿಸಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದೇ ಪ್ರಕರಣಕ್ಕೆ ಸಂಬಂಧಿಸಿ, ನಕಲಿ ಆಧಾರ್ ಕಾರ್ಡ್ ಬಳಸಿ ಸಿಮ್ ವಿತರಿಸುತ್ತಿದ್ದ ಪ್ರತ್ಯೇಕ ಜಾಲವನ್ನೂ ಜಮ್ಮು–ಕಾಶ್ಮೀರ ಪೊಲೀಸರು ಭೇದಿಸಿದ್ದಾರೆ.
Hoskote | ನಿಧಿ ಆಸೆಗಾಗಿ ಮಗುವಿನ ಬಲಿಗೆ ಯತ್ನ?
ತಳ ಮಹಡಿಯಲ್ಲಿ ಅಗೆದು ಗುಂಡಿ ತೋಡಿರುವುದು ಪತ್ತೆ!
Venezuelaದ ಮೇಲೆ ಅಮೆರಿಕ ವಾಯುದಾಳಿ: ವಿದ್ಯುತ್ ಸ್ಥಗಿತದಿಂದ ಕ್ಯಾರಕಾಸ್ನಲ್ಲಿರುವ ಭಾರತೀಯರು ಸಂಕಷ್ಟದಲ್ಲಿ
ಕ್ಯಾರಕಾಸ್ (ವೆನೆಝುವೆಲಾ): ಕ್ಯಾರಕಾಸ್ ಹಾಗೂ ಅದರ ಸುತ್ತಮುತ್ತಲಿನ ನಗರಗಳ ಮೇಲೆ ಅಮೆರಿಕ ವಾಯು ದಾಳಿ ನಡೆಸಿದ ಹಿನ್ನೆಲೆಯಲ್ಲಿ, ಅಲ್ಲಿರುವ ಭಾರತೀಯರು ತೀವ್ರ ಆತಂಕದ ಸ್ಥಿತಿಯಲ್ಲಿ ದಿನ ಕಳೆಯುತ್ತಿದ್ದಾರೆ ಎಂದು India Today ವರದಿ ಮಾಡಿದೆ. ಕ್ಯಾರಕಾಸ್ ಮತ್ತು ಅಕ್ಕಪಕ್ಕದ ಪ್ರದೇಶಗಳ ಮೇಲೆ ಅಮೆರಿಕ ವಾಯುದಾಳಿ ನಡೆಸಿದ್ದು, ವೆನೆಝುವೆಲಾದ ಅಧ್ಯಕ್ಷ ನಿಕೊಲಾಸ್ ಮಡುರೊ ಅವರನ್ನು ವಶಕ್ಕೆ ಪಡೆದು ನ್ಯೂಯಾರ್ಕ್ಗೆ ಕರೆದೊಯ್ದಿದೆ. ಈ ದಾಳಿಯಿಂದ ಕ್ಯಾರಕಾಸ್ನ ಪ್ರಮುಖ ಮೂಲಸೌಕರ್ಯಗಳು ಹಾಗೂ ವಿದ್ಯುತ್ ಗ್ರಿಡ್ಗಳಿಗೆ ಗಂಭೀರ ಸ್ವರೂಪದ ಹಾನಿಯಾಗಿದೆ. ಪರಿಣಾಮವಾಗಿ ವೆನೆಝುವೆಲಾ ರಾಜಧಾನಿಯ ಬಹುತೇಕ ಭಾಗಗಳು ಸಂಪೂರ್ಣ ಕತ್ತಲಲ್ಲಿ ಮುಳುಗಿವೆ. ಸಂವಹನ ಜಾಲಗಳು ತೀವ್ರ ವ್ಯತ್ಯಯಕ್ಕೆ ಒಳಗಾಗಿದ್ದು, ಬೀದಿಗಳು ನಿರ್ಜನವಾಗಿವೆ. ಅಂಗಡಿ–ಮುಂಗಟ್ಟುಗಳನ್ನು ಮುಚ್ಚಲಾಗಿದ್ದು, ಸಾರ್ವಜನಿಕ ಚಟುವಟಿಕೆಗಳು ಸಂಪೂರ್ಣವಾಗಿ ಸ್ಥಗಿತಗೊಂಡಿವೆ. ದೇಶದ ಮುಖ್ಯಸ್ಥನಿಲ್ಲದ ಸ್ಥಿತಿಯಲ್ಲಿ ವೆನೆಝುವೆಲಾ ಅತಂತ್ರ ಪರಿಸ್ಥಿತಿಗೆ ತಲುಪಿದೆ. ಲ್ಯಾಟಿನ್ ಅಮೆರಿಕದ ಈ ದೇಶದಲ್ಲಿ ವ್ಯಾಪಕ ಪ್ರಮಾಣದಲ್ಲಿ ಮೂಲಭೂತ ಸೌಕರ್ಯಗಳಿಗೆ ಸಂಭವಿಸಿರುವ ಹಾನಿಯ ಕುರಿತು, ಕ್ಯಾರಕಾಸ್ನಲ್ಲಿ ನೆಲೆಸಿರುವ ಭಾರತೀಯ ಸಮುದಾಯದ ಸದಸ್ಯರಾದ ಸುನೀಲ್ ಮಲ್ಹೋತ್ರಾ ವಿವರಿಸಿದ್ದಾರೆ. ಅಮೆರಿಕದ ವಾಯು ದಾಳಿಯ ಪರಿಣಾಮವಾಗಿ ಆಹಾರಕ್ಕಾಗಿ ದೊಡ್ಡ ಪ್ರಮಾಣದ ಸರತಿ ಸಾಲುಗಳು ನಿರ್ಮಾಣವಾಗಿದ್ದು, ಜನರಲ್ಲಿ ಭಯ ಮತ್ತು ಅನಿಶ್ಚಿತತೆಯ ವಾತಾವರಣ ಮನೆ ಮಾಡಿದೆ ಎಂದು ಅವರು ತಿಳಿಸಿದ್ದಾರೆ. “ಇಲ್ಲಿ ಎಲ್ಲೆಡೆ ಸಂಪೂರ್ಣ ವಿನಾಶ ಸಂಭವಿಸಿಲ್ಲ. ಕ್ಯಾರಕಾಸ್ನಲ್ಲಿರುವ ವಾಯು ನಿಲ್ದಾಣದ ಮೇಲೆ ದಾಳಿ ನಡೆದಿದೆ. ಅಲ್ಲದೆ ನಗರದಿಂದ ಸುಮಾರು 100 ಕಿಲೋಮೀಟರ್ ದೂರದಲ್ಲಿರುವ ದೇಶದ ಅತ್ಯಂತ ಬೃಹತ್ ವಾಯು ನೆಲೆಯ ಮೇಲೂ ದಾಳಿ ನಡೆಸಲಾಗಿದೆ. ಪ್ಯೂರ್ಟೊ ತಿಯುನಾ ಪ್ರದೇಶದಲ್ಲಿ ಅತಿ ಹೆಚ್ಚು ಹಾನಿಯಾಗಿದೆ. ಅಲ್ಲಿಯೇ ದೊಡ್ಡ ಪ್ರಮಾಣದ ನಷ್ಟ ಉಂಟಾಗಿದೆ,” ಎಂದು ಅವರು ತಿಳಿಸಿದ್ದಾರೆ. ಈ ದಾಳಿಗಳ ಬೆನ್ನಲ್ಲೇ ಪ್ರಮುಖ ಸಂಸ್ಥೆಗಳು ಹಾಗೂ ಅಂಗಡಿ–ಮುಂಗಟ್ಟುಗಳನ್ನು ಮುಚ್ಚಲಾಗಿದೆ. ಸಾರ್ವಜನಿಕ ಸಾರಿಗೆ ಸೇವೆಗಳನ್ನು ಅಮಾನತುಗೊಳಿಸಲಾಗಿದೆ. ಇದರಿಂದ ಇಡೀ ನಗರ ಸ್ತಬ್ಧ ಸ್ಥಿತಿಗೆ ತಲುಪಿದೆ. ಜನರು ಮನೆಗಳೊಳಗೇ ಉಳಿಯುವಂತಾಗಿದ್ದು, ಎಲ್ಲೆಡೆಯೂ ಅನಿಶ್ಚಿತತೆ ಆವರಿಸಿದೆ.ಹಾಗೂ ಅನಿಶ್ಚಿತತೆ ಹೆಚ್ಚಾಗಿದೆ ಎಂದು ತಿಳಿಸಿದ್ದಾರೆ.
Venezuela ಕುರಿತು ಗಂಭೀರ ಕಳವಳ ವ್ಯಕ್ತಪಡಿಸಿದ ಕಾಂಗ್ರೆಸ್
ಎಡಪಕ್ಷಗಳಿಂದ ಅಮೆರಿಕದ ಆಕ್ರಮಣ ನಡೆಗೆ ಖಂಡನೆ
ಪ್ರತಿ ಜಿಲ್ಲೆಯಲ್ಲೂ ಸಾಧಕರ ವಸ್ತುಸಂಗ್ರಹಾಲಯ: ಸಿಎಂ ಸಿದ್ದರಾಮಯ್ಯ
ಬೆಂಗಳೂರಿನ ಕರ್ನಾಟಕ ಚಿತ್ರಕಲಾ ಪರಿಷತ್ ಆವರಣದಲ್ಲಿ ನಡೆದ 23ನೇ ಚಿತ್ರಸಂತೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಿಎಂ ಸಿದ್ದರಾಮಯ್ಯ ಅವರು ಮಹತ್ವದ ವಿಚಾರವನ್ನು ಹಂಚಿಕೊಂಡರು. ಪ್ರತಿ ಜಿಲ್ಲೆಯಲ್ಲಿಯೂ ಸಾಧಕರ ವಸ್ತುಸಂಗ್ರಹಾಲಯ ನಿರ್ಮಾಣ ಮಾಡಬೇಕು ಎನ್ನುವ ಬೇಡಿಕೆ ಇದೆ. ನಮ್ಮ ಸರ್ಕಾರ ಅದನ್ನು ಸಕಾರಾತ್ಮಕವಾಗಿ ಸ್ವೀಕಾರ ಮಾಡಲಿದೆ ಎಂದು ಸುಳಿವು ನೀಡಿದರು. ಮುಖ್ಯಮಂತ್ರಿಯಾಗಿ 8ನೇ ಬಾರಿಗೆ ಚಿತ್ರ ಸಂತೆಯಲ್ಲಿ ಭಾಗವಹಿಸುತ್ತಿದ್ದೇನೆ ಎನ್ನುವುದು
ಅಂಕಿತಾ ಭಂಡಾರಿ ಹತ್ಯೆ ಪ್ರಕರಣ | ʼVIPʼ ಆಯಾಮ ತಳ್ಳಿ ಹಾಕಿದ ಪೊಲೀಸರು; ಸಿಬಿಐ ತನಿಖೆಗೆ ವಿಪಕ್ಷಗಳಿಂದ ಪ್ರತಿಭಟನೆ
ಡೆಹ್ರಾಡೂನ್, ಜ.4: ಅಂಕಿತಾ ಭಂಡಾರಿ ಹತ್ಯೆ ಪ್ರಕರಣದಲ್ಲಿ ಯಾವುದೇ ವಿಐಪಿ ವ್ಯಕ್ತಿಗಳು ಭಾಗಿಯಾಗಿಲ್ಲ ಎಂದು ಪೊಲೀಸರು ಹೇಳಿಕೆ ನೀಡಿದ ಬೆನ್ನಿಗೇ, ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದು ಆಗ್ರಹಿಸಿ ಉತ್ತರಾಖಂಡದ ವಿಪಕ್ಷಗಳು ರವಿವಾರ ಪ್ರತಿಭಟನೆ ನಡೆಸಿದವು. ಪ್ರಕರಣದಲ್ಲಿ ಭಾಗಿಯಾಗಿರುವ ಪ್ರಭಾವಿ ವ್ಯಕ್ತಿಯ ಹೆಸರನ್ನು ಬಹಿರಂಗಪಡಿಸಬೇಕೆಂದು ಒತ್ತಾಯಿಸಿದ ಕಾಂಗ್ರೆಸ್, ಉತ್ತರಾಖಂಡ ಕ್ರಾಂತಿ ದಳ್, ಮಹಿಳಾ ಮಂಚ್, ಎಡಪಕ್ಷಗಳು ಹಾಗೂ ವಿವಿಧ ಸಾಮಾಜಿಕ ಸಂಘಟನೆಗಳು ಡೆಹ್ರಾಡೂನ್ನ ಪೆರೇಡ್ ಮೈದಾನದಲ್ಲಿ ಜಮಾಯಿಸಿ, ಮುಖ್ಯಮಂತ್ರಿ ನಿವಾಸದತ್ತ ಪಾದಯಾತ್ರೆ ನಡೆಸಿದವು. ಪ್ರತಿಭಟನಾಕಾರರು ‘ಅಂಕಿತಾಗೆ ನ್ಯಾಯ ನೀಡಿ’, ‘ಇನ್ನಷ್ಟು ವಿಳಂಬ ಬೇಡ’, ‘ಮುಖ್ಯಮಂತ್ರಿಗೆ ಘೇರಾವ್ ಮಾಡಿ’ ಹಾಗೂ ‘ನಿಜವಾದ ಅಪರಾಧಿ ಯಾರು?’ ಎಂಬ ಘೋಷಣೆಗಳಿರುವ ಬಿತ್ತಿ ಫಲಕಗಳನ್ನು ಪ್ರದರ್ಶಿಸಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ತಮ್ಮ ಬೇಡಿಕೆಗಳು ಈಡೇರುವವರೆಗೆ ಪ್ರತಿಭಟನೆ ಮುಂದುವರಿಸುವುದಾಗಿ ಅವರು ಹೇಳಿದರು. ಪೌರಿ ಜಿಲ್ಲೆಯ ಯಮಕೇಶ್ವರ್ನ ವನತಾರಾ ರೆಸಾರ್ಟ್ನಲ್ಲಿ ರಿಸಿಪ್ಷನಿಸ್ಟ್ ಆಗಿದ್ದ 19 ವರ್ಷದ ಅಂಕಿತಾ ಭಂಡಾರಿಯನ್ನು 2022ರ ಸೆಪ್ಟೆಂಬರ್ 18ರಂದು ಹತ್ಯೆ ಮಾಡಲಾಗಿತ್ತು. ಪ್ರಕರಣ ಬೆಳಕಿಗೆ ಬರುತ್ತಿದ್ದಂತೆಯೇ ರಾಜ್ಯದ ವಿವಿಧ ಭಾಗಗಳಲ್ಲಿ ವ್ಯಾಪಕ ಪ್ರತಿಭಟನೆಗಳು ನಡೆದಿದ್ದವು. ಬಳಿಕ ರಾಜ್ಯ ಸರ್ಕಾರ ಪ್ರಕರಣವನ್ನು ವಿಶೇಷ ತನಿಖಾ ತಂಡಕ್ಕೆ (SIT) ವಹಿಸಿತ್ತು.
Gonikoppa | ಚಾಲಕ ನವಾಝ್ ಸಾವು ಪ್ರಕರಣ; ಮಹಿಳೆ ಸೇರಿ ಐವರು ಆರೋಪಿಗಳ ಬಂಧನ
ಮಡಿಕೇರಿ : ಗೋಣಿಕೊಪ್ಪಲಿನ ಹರಿಶ್ಚಂದ್ರಪುರದ ನಿವಾಸಿ ಚಾಲಕ ವೃತ್ತಿಯ ನವಾಝ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಮಹಿಳೆ ಸೇರಿದಂತೆ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಪೂರ್ಣಚಂದ್ರ ತೇಜಸ್ವಿ, ಕಾವ್ಯಾ, ಅಶೋಕ್, ಕುಮಾರ್ ಹಾಗೂ ಮಹೇಂದ್ರ ಬಂಧಿತ ಆರೋಪಿಗಳು. ಡಿ.31ರಂದು ರಾತ್ರಿ ತನ್ನ ಕಾರಿನಲ್ಲಿ ಕುಂದಾ ಗ್ರಾಮಕ್ಕೆ ತೆರಳಿದ್ದ ನವಾಝ್ ಪ್ರಜ್ಞಾಹೀನ ಸ್ಥಿತಿಯಲ್ಲಿ ರಸ್ತೆಯಲ್ಲಿ ಪತ್ತೆಯಾಗಿದ್ದರು. ಆಸ್ಪತ್ರೆಗೆ ದಾಖಲಿಸಿದ ಸಂದರ್ಭ ನವಾಝ್ ಮೃತಪಟ್ಟಿರುವುದಾಗಿ ತಿಳಿದು ಬಂದಿತ್ತು. ಈ ಕುರಿತು ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡು ಐವರನ್ನು ಬಂಧಿಸಿದ್ದಾರೆ. ಕುಂದಾ ಗ್ರಾಮಕ್ಕೆ ನಡುರಾತ್ರಿಯ ವೇಳೆ ತೆರಳಿದ್ದ ನವಾಝ್ ಮತ್ತೊಬ್ಬ ಚಾಲಕ ಪೂರ್ಣಚಂದ್ರ ತೇಜಸ್ವಿಯ ಮನೆ ಬಾಗಿಲು ಬಡಿದು ಆತನ ಪತ್ನಿ ಕಾವ್ಯಾಳ ಹೆಸರು ಕರೆದಿದ್ದ ಎಂದು ಹೇಳಲಾಗಿದೆ. ಈ ಸಂದರ್ಭ ಮನೆಯಿಂದ ಹೊರ ಬಂದ ತೇಜಸ್ವಿ ನವಾಝ್ನ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದ ಎನ್ನಲಾಗಿದೆ. ಅಲ್ಲದೆ ಅಶೋಕ್, ಕುಮಾರ್ ಹಾಗೂ ಮಹೇಂದ್ರನ ಸಹಕಾರ ಪಡೆದು ಹಲ್ಲೆ ನಡೆಸಿದ್ದ. ಹಲ್ಲೆಯಿಂದ ಪ್ರಜ್ಞಾಹೀನ ಸ್ಥಿತಿಗೆ ತಲುಪಿದ ನವಾಝ್ನನ್ನು ರಸ್ತೆ ಬದಿ ಬಿಟ್ಟು, ಆತನ ಕಾರನ್ನು ರಸ್ತೆ ಬದಿಯ ಚರಂಡಿಗೆ ತಳ್ಳಿ ಪ್ರಕರಣವನ್ನು ಅಪಘಾತ ಎಂದು ಪ್ರತಿಬಿಂಬಿಸುವ ಪ್ರಯತ್ನ ಮಾಡಿದ್ದರು ಎಂದು ಆರೋಪಿಸಲಾಗಿದೆ. ವಿರಾಜಪೇಟೆ ಡಿವೈಎಸ್ಪಿ ಮಹೇಶ್ ಕುಮಾರ್ ಮಾರ್ಗ ದರ್ಶನದಲ್ಲಿ ಗೋಣಿಕೊಪ್ಪ ವೃತ್ತ ನಿರೀಕ್ಷಕ ಶಿವರಾಜ್ ಮುಧೋಳ್, ಗೋಣಿಕೊಪ್ಪ ಠಾಣಾಧಿಕಾರಿ ಪ್ರದೀಪ್ ಕುಮಾರ್, ಪೊನ್ನಂಪೇಟೆ ಠಾಣಾಧಿಕಾರಿ ನವೀನ್ ಕುಮಾರ್ ಹಾಗೂ ಸಿಬ್ಬಂದಿ ಕಾರ್ಯಾಚರಣೆ ನಡೆಸಿದರು.
NRI ಪ್ರವಾಸಿಗಳ್ ಕಲ್ಲೇಗ: ವಾರ್ಷಿಕ ಮಹಾಸಭೆ; ನೂತನ ಸಮಿತಿ ರಚನೆ
ಮಂಗಳೂರು: NRI ಪ್ರವಾಸಿಗಳ್ ಕಲ್ಲೇಗ ಜಮಾಅತ್ ಇದರ ವಾರ್ಷಿಕ ಮಹಾಸಭೆ ಇತ್ತೀಚೆಗೆ ನಡೆಯಿತು. ಕಲ್ಲೇಗ ಮಸೀದಿಯ ಖತೀಬರಾದ ಹಸನ್ ಹರ್ಷದಿ ದುಆ ನೆರವೇರಿಸಿದರು. ಸಭೆಯ ಅಧ್ಯಕ್ಷತೆಯನ್ನು ಮಮ್ಮುಚ್ಚ ಬೊಳ್ವಾರ್ ವಹಿಸಿದರು. ಸಮಿತಿಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಹಮೀದ್ ಕಬಕ ರವರು ವಾರ್ಷಿಕ ವರದಿ ವಾಚಿಸಿದರು. ಕೋಶಾಧಿಕಾರಿ ಬಾತಿಸ್ ಕಬಕ ರವರು ಲೆಕ್ಕಪತ್ರ ವನ್ನು ಮಂಡನೆ ಮಾಡಿದರು. ಬಳಿಕ ನೂತನ ಸಮಿತಿ ರಚನೆ ಮಾಡಲಾಯಿತು. ಅಧ್ಯಕ್ಷರಾಗಿ ಇಬ್ರಾಹಿಂ ಬಾತಿಶ್ ಕಬಕ, ಪ್ರಧಾನ ಕಾರ್ಯದರ್ಶಿಯಾಗಿ ಸಿದ್ದೀಕ್ ಕಲೆಂಬಿ, ಕೋಶಾಧಿಕಾರಿ ಅಕ್ಕೀ (ರಫೀಕ್ ಮುರ), ಉಪಾಧ್ಯಕ್ಷರುಗಳಾಗಿ ಅಶ್ರಫ್ ಬಿ. ಎಮ್ ಬೊಳ್ವಾರ್ ಮತ್ತು ಮುಸ್ತಫಾ ಬೊಳ್ವಾರ್, ಜೊತೆ ಕಾರ್ಯದರ್ಶಿಯಾಗಿ ರಶೀದ್ ಕಂಬಳ ಬೆಟ್ಟು , ಮತ್ತು ರಝಾಕ್ ಕಬಕ, ಸಂಘಟನಾ ಕಾರ್ಯ ದರ್ಶಿ ಅಬ್ದುಲ್ ಹಮೀದ್ ಕಬಕ ಆಯ್ಕೆಯಾದರು. ಕಾರ್ಯಕಾರಿ ಸಮಿತಿಯ ಸದಸ್ಯರಾಗಿಅದ್ದು ಪೊಳ್ಯ, ಅಝರ್ ಮುರ , ಅನ್ಸಾರ್ ಮುರ , ಶಾಫಿ ಮಂಜಲ್ಪಡ್ಪು , ಇಬ್ರಾಹಿಂ ಕಲ್ಲೇಗ , ಮೊಹಮ್ಮದ್ ಅಶ್ರಫ್ ಮುರ , ಮುಸ್ತಫಾ ಬೊಳ್ವಾರ್ , ಝುಬೈರ್ ಮುರ ಇವರನ್ನು ಆಯ್ಕೆ ಮಾಡಲಾಯಿತು. ಸಲಹೆ ಸಮಿತಿ ಸದಸ್ಯರಾಗಿ ಸುಲೈಮಾನ್ ಉಸ್ತಾದ್ , ಶಕೂರ್ ಹಾಜಿ , ಬಸೀರ್ ಹಾಜಿ , ಲತೀಫ್ ಹಾಜಿ , ಮಮ್ಮುಚ್ಚ ಬೊಳ್ವಾರ್ , ಹನೀಫ್ ಹಾಜಿ ಉದಯ , ಪಾರೂಕ್ ಮುರ , ಸಮದ್ ಕಲ್ಲೇಗ , ಮೊಹಿದುಚ್ಚ ಬೊಳ್ವಾರ್ , ಸಿದ್ದೀಕ್ ಕಲ್ಲೇಗ. ಇವರನ್ನು ಆಯ್ಕೆ ಮಾಡಲಾಯಿತು. ಇಕ್ಬಾಲ್ ನಗರ ವಂದಿಸಿದರು. ಕಾರ್ಯ ಕ್ರಮವನ್ನು ಹಮೀದ್ ಕಬಕ ರವರು ನಿರೂಪಿಸಿದರು. ಸುಲೈಮಾನ್ ಉಸ್ತಾದರು ಕಿರಾಆತ್ ಪಾರಾಯಣ ಮಾಡಿದರು.
ನಿಮಗೂ ಬಿಸಿ ಮುಟ್ಟಿಸುತ್ತೇವೆ: ಕೊಲಂಬಿಯಾ ಅಧ್ಯಕ್ಷರಿಗೆ ಟ್ರಂಪ್ ಎಚ್ಚರಿಕೆ
ವಾಷಿಂಗ್ಟನ್, ಜ.4: ವೆನೆಝುವೆಲಾ ಅಧ್ಯಕ್ಷ ನಿಕೋಲಾಸ್ ಮಡುರೊರನ್ನು ಸೆರೆಹಿಡಿದ ಕಾರ್ಯಾಚರಣೆಯ ಬೆನ್ನಲ್ಲೇ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೊಲಂಬಿಯಾ ಅಧ್ಯಕ್ಷ ಗುಸ್ತಾವೊ ಪೆಟ್ರೋಗೆ ಎಚ್ಚರಿಕೆ ಸಂದೇಶ ರವಾನಿಸಿರುವುದು ಲ್ಯಾಟಿನ್ ಅಮೆರಿಕಾದ್ಯಂತ ಉದ್ವಿಗ್ನತೆಯನ್ನು ಮತ್ತಷ್ಟು ಹೆಚ್ಚಿಸಿದೆ. ‘ಅವರು ಕೊಕೈನ್ ತಯಾರಿಸಿ ಅಮೆರಿಕಾಕ್ಕೆ ಕಳುಹಿಸುತ್ತಿದ್ದಾರೆ. ಆದ್ದರಿಂದ ಅವರು ನಮ್ಮ ಗುರಿಯಾಗಬಹುದು’ ಎಂದು ಪೆಟ್ರೋ ಅವರನ್ನು ಉಲ್ಲೇಖಿಸಿ ಸುದ್ದಿಗೋಷ್ಠಿಯಲ್ಲಿ ಟ್ರಂಪ್ ಹೇಳಿದ್ದಾರೆ. ಶನಿವಾರ ಬೆಳಗ್ಗೆ ನಡೆಸಿದ ಕಾರ್ಯಾಚರಣೆಯಲ್ಲಿ ಅಮೆರಿಕದ ಪಡೆ ವೆನೆಝುವೆಲಾದ ಮೇಲೆ ದಾಳಿ ನಡೆಸಿ ಅಧ್ಯಕ್ಷ ನಿಕೋಲಾಸ್ ಮಡುರೊ ಹಾಗೂ ಅವರ ಪತ್ನಿಯನ್ನು ಸೆರೆಹಿಡಿದಿದೆ. ಅಮೆರಿಕದ ಕಾರ್ಯಾಚರಣೆಯು ಲ್ಯಾಟಿನ್ ಅಮೆರಿಕಾದ ಸಾರ್ವಭೌಮತ್ವದ ಮೇಲಿನ ದಾಳಿಯಾಗಿದ್ದು ಇದು ಮಾನವೀಯ ಬಿಕ್ಕಟ್ಟಿಗೆ ಕಾರಣವಾಗಬಹುದು ಎಂದು ಪೆಟ್ರೋ ತೀವ್ರವಾಗಿ ಖಂಡಿಸಿದ್ದರು. ‘ಅಮೆರಿಕದ ಕಾರ್ಯಾಚರಣೆಯ ಬೆನ್ನಲ್ಲೇ ಸರಕಾರ ರಾಷ್ಟ್ರೀಯ ಭದ್ರತಾ ಸಭೆಯನ್ನು ನಡೆಸಿದ್ದು, ವೆನೆಝುವೆಲಾದಿಂದ ಬೃಹತ್ ಪ್ರಮಾಣದಲ್ಲಿ ನಿರಾಶ್ರಿತರು ದೇಶದೊಳಗೆ ನುಗ್ಗುವ ಸಾಧ್ಯತೆಯ ಹಿನ್ನೆಲೆಯಲ್ಲಿ ಕೊಲಂಬಿಯಾ–ವೆನೆಝುವೆಲಾ ಗಡಿಯುದ್ದಕ್ಕೂ ಹೆಚ್ಚುವರಿ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದೆ’ ಎಂದು ಅವರು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ. ಅಂತರಾಷ್ಟ್ರೀಯ ಮಧ್ಯಪ್ರವೇಶಕ್ಕೆ ಒತ್ತಾಯಿಸಿದ ಪೆಟ್ರೋ, ವೆನೆಝುವೆಲಾ ಹಾಗೂ ಈ ಪ್ರದೇಶದ ಮೇಲಿನ ಆಕ್ರಮಣವನ್ನು ವಿಶ್ವಸಂಸ್ಥೆ ಭದ್ರತಾ ಮಂಡಳಿ ಪರಿಹರಿಸಬೇಕು ಎಂದು ಆಗ್ರಹಿಸಿದ್ದಾರೆ.
ರಾಜಕೀಯ ಲಾಭಕ್ಕಾಗಿ ಪರ್ಯಾಯವನ್ನು ವಿವಾದವನ್ನಾಗಿಸುವ ಪ್ರಯತ್ನ ಅಪಾಯಕಾರಿ: ಸುನೀಲ್ ಬಂಗೇರ
ಉಡುಪಿ: ಪರ್ಯಾಯ ಶ್ರೀ ಕೃಷ್ಣ ಮಠದಂತಹ ಪವಿತ್ರ ಧಾರ್ಮಿಕ ಉತ್ಸವವನ್ನು ರಾಜಕೀಯ ಲಾಭಕ್ಕಾಗಿ ವಿವಾದದ ಕೇಂದ್ರ ಬಿಂದುಗೊಳಿಸುವ ಪ್ರಯತ್ನ ಅತ್ಯಂತ ಅಪಾಯಕಾರಿ ಹಾಗೂ ಖಂಡನೀಯ. ಪರ್ಯಾಯದಂತಹ ಪವಿತ್ರ ಉತ್ಸವಗಳನ್ನು ರಾಜಕೀಯ ಕಿತ್ತಾಟದ ಅಖಾಡವನ್ನಾಗಿ ಮಾಡುವ ಪ್ರಯತ್ನವನ್ನು ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ತಕ್ಷಣ ನಿಲ್ಲಿಸಬೇಕು ಎಂದು ಮಟ್ಟು ವಿಷ್ಣುಮೂರ್ತಿ ದೇವಸ್ಥಾನದ ಆಡಳಿತ ಮೊಕ್ತೇಸರ ಸುನಿಲ್ ಡಿ. ಬಂಗೇರ ತಿಳಿಸಿದ್ದಾರೆ. ಈ ಸಂಬಂಧ ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ನೀಡಿರುವ ಹೇಳಿಕೆ ಶಾಂತಿ ಕಾಪಾಡುವ ಜವಾಬ್ದಾರಿಯುತ ನಡೆಗಿಂತಲೂ, ಸಮಾಜದಲ್ಲಿ ಗೊಂದಲ ಮತ್ತು ಧ್ರುವೀಕರಣ ಉಂಟುಮಾಡುವ ರಾಜಕೀಯ ಉದ್ದೇಶವನ್ನು ಸ್ಪಷ್ಟಪಡಿಸುತ್ತದೆ. ಜನಪ್ರತಿನಿಧಿಯಾಗಿ ನಡೆದುಕೊಳ್ಳಬೇಕಾದ ವ್ಯಕ್ತಿಯೊಬ್ಬರು, ಧಾರ್ಮಿಕ ವಿಷಯಗಳನ್ನು ತಪ್ಪಾಗಿ ವ್ಯಾಖ್ಯಾನಿಸಿ, ನಿರ್ದಿಷ್ಟ ಸಮುದಾಯವನ್ನು ಗುರಿಯಾಗಿಸಿಕೊಂಡು ಮಾತನಾಡುವುದು ಅಸಹಿಷ್ಣು ರಾಜಕೀಯ ಮನಸ್ಥಿತಿಯ ಪ್ರತಿಬಿಂಬ. ಇದು ಧರ್ಮ ರಕ್ಷಣೆ ಅಲ್ಲ; ಇದು ಧರ್ಮವನ್ನು ಬಳಸಿಕೊಂಡು ರಾಜಕೀಯ ಬೇಳೆ ಬೇಯಿಸುವ ನಾಚಿಕೆಗೇಡಿತನ. ಯಶ್ ಪಾಲ್ ಸುವರ್ಣ ಪರ್ಯಾಯದಂತಹ ಸಂವೇದನಾಶೀಲ ಸಂದರ್ಭವನ್ನು ಆಯ್ಕೆ ಮಾಡಿಕೊಂಡು ಈ ರೀತಿಯ ಹೇಳಿಕೆ ನೀಡಿರುವುದು, ಉದ್ದೇಶಪೂರ್ವಕವಾಗಿ ಸಮಾಜದಲ್ಲಿ ಆತಂಕ ಮತ್ತು ಅನುಮಾನ ಬಿತ್ತುವ ತಂತ್ರದ ಭಾಗವೇ ಎಂಬ ಅನುಮಾನಕ್ಕೆ ಕಾರಣವಾಗುತ್ತದೆ. ಶಾಂತಿ ಮತ್ತು ಸೌಹಾರ್ದ ಕಾಪಾಡಬೇಕಾದ ಶಾಸಕರಿಂದ ಇಂತಹ ಪ್ರಚೋದನಾತ್ಮಕ ಭಾಷೆ ಹೊರಬರುವುದು ಅತೀವ ದುರದೃಷ್ಟಕರ ಎಂದು ಅವರು ಟೀಕಿಸಿದರು. ಸಮಾಜದಲ್ಲಿ ಅಶಾಂತಿ ಉಂಟಾದಲ್ಲಿ ಅದರ ಸಂಪೂರ್ಣ ನೈತಿಕ ಮತ್ತು ಸಾಮಾಜಿಕ ಹೊಣೆಗಾರಿಕೆಯಿಂದ ಯಶ್ ಪಾಲ್ ಸುವರ್ಣ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ನಂತರದ ದಿನಗಳಲ್ಲಿ ನೀಡುವ ಸ್ಪಷ್ಟೀಕರಣಗಳು ಅಥವಾ ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳುವ ಹೇಳಿಕೆಗಳಿಗೆ ಶಾಂತಿಪ್ರಿಯ ಜನತೆ ಮರುಳಾಗುವುದಿಲ್ಲ ಎಂಬುದನ್ನು ಸ್ಪಷ್ಟವಾಗಿ ಹೇಳಬೇಕು. ಧಾರ್ಮಿಕ ಭಾವನೆಗಳನ್ನು ಕೆರಳಿಸಿ ರಾಜಕೀಯ ಲಾಭ ಪಡೆಯುವ ಇಂತಹ ಪ್ರಯತ್ನಗಳು ಮುಂದುವರಿದಲ್ಲಿ, ಸಮಾಜದ ಸಹನೆ ಮಿತಿಯನ್ನು ಮೀರುವ ದಿನ ದೂರವಿಲ್ಲ. ಶಾಂತಿ, ಸಂಪ್ರದಾಯ ಮತ್ತು ಸಹಬಾಳ್ವೆಯನ್ನು ಗೌರವಿಸುವ ಜನರು ಮೌನವಾಗಿರುತ್ತಾರೆ ಎಂದು ಯಾರೂ ತಪ್ಪಾಗಿ ಅಂದಾಜು ಮಾಡಬಾರದು. ಇದು ಯಾವುದೇ ವೈಯಕ್ತಿಕ ದ್ವೇಷದ ಹೇಳಿಕೆ ಅಲ್ಲ, ಇದು ಸಮಾಜದ ಶಾಂತಿ ಮತ್ತು ಸೌಹಾರ್ದವನ್ನು ಕಾಪಾಡುವ ದೃಷ್ಟಿಯಿಂದ ನೀಡುವ ಕಠಿಣ ಮತ್ತು ಅಂತಿಮ ಎಚ್ಚರಿಕೆ ಎಂದು ಸುನಿಲ್ ಬಂಗೇರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಾಪು: ಕೈಗಾರಿಕೆಗಾಗಿ ಸಾವಿರಾರು ಎಕರೆ; ಬಡವರ ಮನೆ ನಿವೇಶನಕ್ಕಿಲ್ಲ ಜಾಗ
ಕಾಪು, ಜ.4: ಯುಪಿಸಿಎಲ್, ಸುಜ್ಲಾನ್, ಐಎಸ್ಪಿಆರ್ಎಲ್ ಸೇರಿದಂತೆ ದೊಡ್ಡ ದೊಡ್ಡ ಕೈಗಾರಿಕಾ ಘಟಕಗಳ ಸ್ಥಾಪನೆಗೆ, ವಿಸ್ತರಣೆಗೆ ಸಾವಿರಾರು ಎಕರೆ ಭೂಮಿಯನ್ನು ನೀಡಿರುವ ಕಾಪು ತಾಲೂಕಿನಲ್ಲಿ, ಬಡವನೊಬ್ಬ ಸ್ವಂತ ಮನೆ ಕಟ್ಟಿಕೊಳ್ಳಲು ಆಶೆಪಟ್ಟರೆ ಸರಕಾರದ ಬಳಿ ಜಾಗದ ಕೊರತೆ ಅಥವಾ ಇಚ್ಛಾಶಕ್ತಿಯ ಕೊರತೆ ಕಂಡುಬರುತ್ತಿದೆ. ಹೀಗಾಗಿ ಕಾಪು ತಾಲೂಕಿನಲ್ಲಿ ಬಡವರಿಗೆ ಸೂರು ಕಲ್ಪಿಸಲು ನಿವೇಶನ ಇಲ್ಲದೆ ಸಾವಿರಾರು ಮಂದಿ ಅರ್ಜಿ ಸಲ್ಲಿಸಿ ಚಾತಕಪಕ್ಷಿಯಂತೆ ತಲೆಯ ಮೇಲೊಂದು ಸ್ವಂತ ಸೂರಿನ ಕನಸು ಕಾಣುತ್ತಾ ಹಲವು ವರ್ಷಗಳಿಂದ ಕಾಯುತಿದ್ದಾರೆ. ಕಾಪು ಪುರಸಭೆ ಹಾಗೂ 16 ಗ್ರಾಮ ಪಂಚಾಯಿತಿಯನ್ನು ಹೊಂದಿರುವ ಕಾಪು ತಾಲೂಕಿನಲ್ಲಿ ಒಟ್ಟು 3825 ಮಂದಿ ನಿವೇಶನ ರಹಿತರ ಪಟ್ಟಿ ಇದೆ. ಆದರೆ ನಿವೇಶನ ಹಂಚಲು ಜಾಗದ ಕೊರತೆ ಹಾಗೂ ಕೆಲವೊಂದು ತಾಂತ್ರಿಕ ಕಾರಣಗಳಿಂದ ಜಾಗ ನೀಡಲು ಆಗದೆ ಬಾಕಿಯಾಗಿದೆ. ನಿವೇಶನ ರಹಿತರ ವಿವರ: ಕಾಪು ಪುರಸಭೆಯಲ್ಲಿ-113, ಉಚ್ಚಿಲ ಬಡಾ ಗ್ರಾಪಂ-227, ಬೆಳಪು- 171, ಬೆಳ್ಳೆ- 363, ಹೆಜಮಾಡಿ- 225, ಇನ್ನಂಜೆ- 62, ಕಟಪಾಡಿ- 113, ಕೋಟೆ- 148, ಕುರ್ಕಾಲು- 170, ಕುತ್ಯಾರು- 97, ಮಜೂರು- 240, ಮುದರಂಗಡಿ- 173, ಪಡುಬಿದ್ರಿ- 663, ಪಲಿಮಾರು- 337, ಶಿರ್ವ- 258, ಎರ್ಮಾಳು ತೆಂಕ- 218, ಎಲ್ಲೂರು- 247 ಸೇರಿ ಒಟ್ಟು 3825 ನಿವೇಶನ ರಹಿತರಿದ್ದಾರೆ. ಇವರೆಲ್ಲರೂ ಹಲವು ವರ್ಷಗಳಿಂದ ನಿವೇಶನಕ್ಕಾಗಿ ಅರ್ಜಿ ಸಲ್ಲಿಸಿದ್ದರೂ ನಿವೇಶನ ಸಿಗದೆ ಇಂದು ಸಿಗಬಹುದು ನಾಳೆ ಸಿಗಬಹುದು ಎಂಬ ನಿರೀಕ್ಷೆ ಯಲ್ಲಿದ್ದಾರೆ. ಇವರು ಸಲ್ಲಿಸಿದ ಅರ್ಜಿಗಳ ಪರಿಶೀಲನೆ ನಡೆಸಿದ ಬಳಿಕ ಸೂಕ್ತ ನಿವೇಶನ ರಹಿತರ ಪಟ್ಟಿ ಅಧಿಕಾರಿಗಳು ಸಿದ್ಧಪಡಿಸಲಿದ್ದಾರೆ. ಎಲ್ಲೆಲ್ಲಿ ಜಾಗ: ನಿವೇಶನ ರಹಿತರಿಗೆ ಜಾಗ ನೀಡಲು ಬೆಳ್ಳೆಯ ಕಟ್ಟಿಂಗೇರಿಯಲ್ಲಿ ಐದು ಎಕರೆ ಜಾಗವಿದೆ. ಪಲಿಮಾರಿನಲ್ಲಿ ಐದು ಎಕರೆಯ ಜಾಗವಿದ್ದರೂ, ಇದರಲ್ಲಿ ನಂದಿಕೂರಿನಿಂದ ವಿವಿಧ ಕಡೆಗಳಿಗೆ ವಿದ್ಯುತ್ ಟವರ್ ಹಾಗೂ ತಂತಿಗಳ ಸಂಪರ್ಕ ಇರುವುದರಿಂದ ಈ ಸ್ಥಳವನ್ನು ಹೊರತು ಪಡಿಸಿ ಎರಡು ಎಕ್ರೆ ಜಾಗವನ್ನು ಗುರುತಿಸಲಾಗಿದೆ. ಇದರ ಸರ್ವೇ ಕಾರ್ಯ ಇನ್ನಷ್ಟೆ ಅಗಬೇಕಾಗಿದೆ. ಮುದರಂಗಡಿಯಲ್ಲೂ ಐದು ಎಕರೆ ಜಾಗವನ್ನು ಗುರುತಿಸಲಾಗಿದ್ದು, ಸರ್ವೇ ಕಾರ್ಯ ಬಾಕಿ ಇವೆ. ಶಿರ್ವದಲ್ಲಿ ಕೆಲವೊಂದು ತಾಂತ್ರಿಕ ಕಾರಣಗಳಿಂದ ಜಾಗ ಗುರುತಿಸುವ ಪ್ರಕ್ರಿಯೆ ಬಾಕಿಯಾಗಿವೆ. ಕೈಗಾರಿಕಾ ವಲಯಗಳು: ಕಾಪು ತಾಲೂಕಿನಲ್ಲಿ ಬೃಹತ್ ಉದ್ದಿಮೆಗಳಾದ ಪಾದೂರು ಕಚ್ಚಾ ತೈಲ ಸಂಗ್ರಹಣಾ ಘಟಕ (ಐಎಸ್ಪಿಆರ್ಎಲ್), ಕಲ್ಲಿದ್ದಲು ಆಧಾರಿತ ಅದಾನಿ ಪವರ್ ಕಾರ್ಪೊರೇಷನ್, ಪಡುಬಿದ್ರಿಯಲ್ಲಿ ವಿಶೇಷ ಅರ್ಥಿಕ ವಲಯದೊಂದಿಗೆ ಮಧ್ಯಮ, ಸಣ್ಣ, ಭಾರಿ ಗಾತ್ರದ ಕೈಗಾರಿಕೆಗಳು, ನಂದಿಕೂರು, ಬೆಳಪುವಿನಲ್ಲಿ ಕೈಗಾರಿಕಾ ಪಾರ್ಕ್ ಕಾರ್ಯಾಚರಿಸುತ್ತಿವೆ. ಎಲ್ಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಾರ್ಯಾಚರಿಸುತ್ತಿರುವ ಅದಾನಿ ಪವರ್ ಲಿಮಿಟೆಡ್ ಎರಡನೇ ಹಂತದ ಉಷ್ಣ ವಿದ್ಯುತ್ ಸ್ಥಾವರ ಯೋಜನೆಯನ್ನು ಕೈಬಿಟ್ಟಿದ್ದು, ಇದರಿಂದ ಅದಾನಿ ಯೋಜನೆಯ ಎರಡನೇ ಹಂತದ ವಿಸ್ತರಣೆಗೆ ನೀಡಲಾದ 546 ಎಕರೆ ಭೂಮಿ ಈಗ ಮರಳಿ ಕೆಐಎಡಿಬಿ ಕೈವಶದಲ್ಲಿದೆ. ಯುಪಿಸಿಎಲ್ನಿಂದ ಮರಳಿ ಬಂದ ಜಮೀನಿಗಾಗಿ ಹಲವು ಯೋಜನೆಗಳು ಕಾದು ಕುಳಿತಿವೆ. ಅದನ್ನು ವಿಸ್ತರಿತ ಕೈಗಾರಿಕಾ ಪ್ರದೇಶವಾಗಿ ಮಾಡಲು ಜಿಲ್ಲಾಡಳಿತ ಉದ್ದೇಶಿಸಿದೆ. ವಿಮಾನ ನಿಲ್ದಾಣಕ್ಕೆ ಅಥವಾ ಕ್ರಿಕೆಟ್ ಸ್ಟೇಡಿಯಂಗೆ ಈ ಭೂಮಿಯನ್ನು ಪಡೆಯಲು ಪ್ರಯತ್ನಗಳು ಮೇಲ್ಮಟ್ಟದಲ್ಲಿ ನಡೆಯುತ್ತಿವೆ. ಕೊನೆಗೆ ಈ ಜಾಗವನ್ನು ಯಾವ ಯಾವ ಉದ್ದೇಶಗಳಿಗೆ ವಿಲೇವಾರಿ ಮಾಡಲು ಸರಕಾರ ನಿರ್ಧರಿಸುತ್ತದೆ ಎಂಬುದನ್ನು ಕಾದು ನೋಡಬೇಕಿದೆ. ‘ಕಾಪು ತಾಲೂಕು ಸೇರಿ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 9800 ನಿವೇಶನ ರಹಿತರ ಬೇಡಿಕೆ ಇದೆ. ಸರಕಾರ ತಲಾ 2.75 ಸೆಂಟ್ಸ್ ಜಾಗವನ್ನು ಬಡವರಿಗೆ, ನಿವೇಶನ ರಹಿತರಿಗೆ ನೀಡುತ್ತದೆ. ಆದರೆ ಈ ಬಗ್ಗೆ ಪ್ರತೀ ವಿಧಾನಸಭೆ ಯಲ್ಲೂ ಮಾತನಾಡಿದ್ದೇನೆ. ಈ ಬಗ್ಗೆ ಪ್ರಯತ್ನ ಮುಂದುವರಿದಿದೆ. ಡೀಮ್ಡ್ ಫಾರೆಸ್ಟ್, ಗೋಮಾಳ, ಹೊಳೆ ಬದಿ, ಕುಮ್ಕಿ ಜಾಗವನ್ನು ನೀಡದೆ ಇರಲು ಸರಕಾರದ ಆದೇಶವಿದೆ. ಬಡವರ ಪಾಲಿಗೆ ಸೂರು ಕಲ್ಪಿಸುವ ನಿಟ್ಟಿನಲ್ಲಿ ಕುಮ್ಕಿ ಜಾಗ ನೀಡಲು ಸರ್ಕಾರ ಆದೇಶದಲ್ಲಿ ಕೆಲವೊಂದು ಬದಲಾವಣೆ ಮಾಡಲು ಸರಕಾರ ಪೂರಕವಾಗಿ ಸ್ಪಂಧಿಸಬೇಕು. ಇದರಿಂದ ಬಡವರ ಸೂರಿನ ಕನಸು ನನಸಾಗಿಸಲು ಸಾಧ್ಯ. ಇದೊಂದು ಪುಣ್ಯದ ಕೆಲಸ. ಸಾವಿರಾರು ಜನ ಕಾಯುತಿದ್ದಾರೆ. ಮುಖ್ಯಮಂತ್ರಿಗಳು, ಅಧಿಕಾರಿಗಳು ಈ ಬೇಡಿಕೆಗೆ ಆದ್ಯತೆ ಮೇಲೆ ಸ್ಪಂದಿಸಬೇಕಿದೆ. -ಗುರ್ಮೆ ಸುರೇಶ್ ಶೆಟ್ಟಿ, ಕಾಪು ಶಾಸಕ.
ಬೀದರ್: ಡಾ. ಕೆ.ಎಲ್. ಕೃಷ್ಣಮೂರ್ತಿ ಸ್ಮರಣಾರ್ಥ ಉಚಿತ ವೈದ್ಯಕೀಯ ಶಿಬಿರ
ಬೀದರ್ : ಡಾ. ಕೃಷ್ಣಮೂರ್ತಿ ಆಸ್ಪತ್ರೆ ವತಿಯಿಂದ ದಿವಂಗತ ಡಾ. ಕೆ.ಎಲ್. ಕೃಷ್ಣಮೂರ್ತಿ ಅವರ ಸ್ಮರಣಾರ್ಥವಾಗಿ ರವಿವಾರ ನಗರದ ಜೆಪಿ ನಗರದಲ್ಲಿರುವ ಬ್ರಹ್ಮಕುಮಾರೀಸ್ ಸೆಂಟರ್ ಪಾವನ್ ಧಾಮ್ನಲ್ಲಿ ಉಚಿತ ವೈದ್ಯಕೀಯ ಶಿಬಿರವನ್ನು ಆಯೋಜಿಸಲಾಯಿತು. ಪಾವನ್ ಧಾಮ್ ಕೇಂದ್ರದ ಸಂಚಾಲಕಿ ಬಿ.ಕೆ. ಪ್ರತಿಮಾ ಬಹೆನಜಿ ಅವರು ಶಿಬಿರದ ಉದ್ಘಾಟನೆ ನೆರವೇರಿಸಿದರು. ಶಿಬಿರದಲ್ಲಿ ನಾಡಿ ಆಮ್ಲಜನಕದ ಶುದ್ಧತ್ವ, ರಕ್ತದೊತ್ತಡ, ರಕ್ತದ ಗ್ಲೂಕೋಸ್, ರಕ್ತದ ಗುಂಪು, ಮೂಳೆ ಖನಿಜ ಸಾಂದ್ರತೆ, ಮಧುಮೇಹ ನ್ಯೂರೋಪಥಿ ಪರೀಕ್ಷೆ, ತೂಕ ಹಾಗೂ ಬಿಎಂಐ ಸೇರಿದಂತೆ ವಿವಿಧ ಸಾಮಾನ್ಯ ಆರೋಗ್ಯ ತಪಾಸಣೆಗಳನ್ನು ತಜ್ಞ ವೈದ್ಯರ ಮೇಲ್ವಿಚಾರಣೆಯಲ್ಲಿ ಉಚಿತವಾಗಿ ನಡೆಸಲಾಯಿತು. ಶಿಬಿರಕ್ಕೆ ಆಗಮಿಸಿದ ರೋಗಿಗಳಿಗೆ ವೈದ್ಯರು ಅಗತ್ಯ ಆರೋಗ್ಯ ಸಲಹೆಗಳನ್ನು ನೀಡಿ, ಮಧುಮೇಹ, ರಕ್ತದೊತ್ತಡ ಸೇರಿದಂತೆ ಇತರ ದೀರ್ಘಕಾಲಿಕ ರೋಗಗಳ ಬಗ್ಗೆ ಜಾಗೃತಿ ಮೂಡಿಸಿದರು. ಸಾರ್ವಜನಿಕ ಆರೋಗ್ಯ ಕಾಪಾಡುವ ಉದ್ದೇಶದಿಂದ ಈ ಶಿಬಿರವನ್ನು ಹಮ್ಮಿಕೊಳ್ಳಲಾಗಿದ್ದು, ಮುಂದಿನ ದಿನಗಳಲ್ಲಿ ಸಹ ಇಂತಹ ಸೇವಾ ಕಾರ್ಯಕ್ರಮಗಳನ್ನು ಮುಂದುವರಿಸಲಾಗುವುದು ಎಂದು ಡಾ. ಕೆ.ಎಲ್. ಕೃಷ್ಣಮೂರ್ತಿ ಆಸ್ಪತ್ರೆಯ ಡಾ. ರಘು ಕೃಷ್ಣಮೂರ್ತಿ ಅವರು ತಿಳಿಸಿದರು. ಈ ಉಚಿತ ವೈದ್ಯಕೀಯ ಶಿಬಿರದಲ್ಲಿ ಜಿಲ್ಲೆಯ ಸುಮಾರು 200 ಜನರು ಸದುಪಯೋಗ ಪಡೆದುಕೊಂಡರು. ಕಾರ್ಯಕ್ರಮದ ನಿರೂಪಣೆಯನ್ನು ಬಿ.ಕೆ ಗುರುದೇವಿ ಬಹೆನಜಿ ಮಾಡಿದರು. ಬಿ.ಕೆ ಮಂಗಲಾ ಬಹೆನಜಿ ಅವರು ಸ್ವಾಗತ ಕೋರಿದರು.
ಗುರುಗ್ರಾಮ,ಜ.4: ಡಿ.30ರಂದು ಚಲಿಸುತ್ತಿದ್ದ ವಾಹನದಲ್ಲಿ ಸಾಮೂಹಿಕ ಅತ್ಯಾಚಾರಕ್ಕೊಳಗಾಗಿದ್ದ 25 ವರ್ಷದ ಸಂತ್ರಸ್ತೆಯ ಕುಟುಂಬವು, ಅಪರಾಧವು ಆ್ಯಂಬುಲೆನ್ಸ್ನೊಳಗೆ ನಡೆದಿತ್ತು ಎಂದು ಆರೋಪಿಸಿದೆ. ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ್ದ ಇಬ್ಬರು ದುಷ್ಕರ್ಮಿಗಳು ಆಕೆಯೊಂದಿಗೆ ಕ್ರೂರವಾಗಿ ವರ್ತಿಸಿ ಚಲಿಸುತ್ತಿದ್ದ ವಾಹನದಿಂದ ಹೊರಕ್ಕೆಸೆದಿದ್ದರು. ತಡರಾತ್ರಿ ದಟ್ಟವಾದ ಮಂಜಿನ ನಡುವೆ ತನ್ನ ಮನೆಗೆ ಮರಳುತ್ತಿದ್ದ ಮಹಿಳೆ, ಆ ದಾರಿಯಾಗಿ ಬರುತ್ತಿದ್ದ ಇಕೋ ವ್ಯಾನ್ ಆ್ಯಂಬುಲೆನ್ಸ್ ಆಗಿದ್ದರಿಂದ ಅದನ್ನು ನಂಬಿ ಲಿಫ್ಟ್ ಕೇಳಿದ್ದಳು ಎಂದು ಕುಟುಂಬ ಸದಸ್ಯರು ತಿಳಿಸಿದ್ದಾರೆ. ಪೋಲಿಸರು ವಶಕ್ಕೆ ತೆಗೆದುಕೊಂಡಿರುವ ಇಬ್ಬರು ವ್ಯಕ್ತಿಗಳು ನೋಯ್ಡಾ ಮತ್ತು ಫರೀದಾಬಾದ್ ನಲ್ಲಿ ಶಾಖೆಗಳನ್ನು ಹೊಂದಿರುವ ಖಾಸಗಿ ಆಸ್ಪತ್ರೆಯ ಆ್ಯಂಬುಲೆನ್ಸ್ ಸಿಬ್ಬಂದಿಯಾಗಿದ್ದಾರೆ ಎಂದು ಕುಟುಂಬವು ಆರೋಪಿಸಿದೆ. ಶಂಕಿತರನ್ನು ಬಂಧಿಸಿದ ಬಳಿಕ ಪೋಲಿಸರು ಇಕೋ ವ್ಯಾನ್ ಅನ್ನು ವಶಪಡಿಸಿಕೊಂಡಿದ್ದಾರೆ. ಆದರೆ ಅದನ್ನು ನಿಜಕ್ಕೂ ಆ್ಯಂಬುಲೆನ್ಸ್ ಆಗಿ ಬಳಸಲಾಗಿತ್ತೇ ಎಂಬ ಬಗ್ಗೆ ಯಾವುದೇ ಅಧಿಕೃತ ಮಾಹಿತಿಯಿಲ್ಲ. ಪೋಲಿಸರು ಗುರುತು ಪತ್ತೆ ಪರೇಡ್ ಗಾಗಿ ಕಾಯುತ್ತಿದ್ದು, ಸಂತ್ರಸ್ತೆ ಚೇತರಿಸಿಕೊಂಡ ಬಳಿಕವೇ ಅದು ಸಾಧ್ಯವಾಗಲಿದೆ. ಮುಖ, ಕಣ್ಣುಗಳು ಮತ್ತು ಭುಜಗಳಿಗೆ ತೀವ್ರ ಗಾಯಗೊಂಡಿರುವ ಆಕೆಗೆ ಪ್ರಸ್ತುತ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈ ನಡುವೆ, ಹೆಚ್ಚುತ್ತಿರುವ ಚಿಕಿತ್ಸಾ ವೆಚ್ಚವನ್ನು ಭರಿಸಲು ತಮಗೆ ಸಾಧ್ಯವಾಗುತ್ತಿಲ್ಲ ಎಂದು ಅಳಲು ತೋಡಿಕೊಂಡಿರುವ ಸಂತ್ರಸ್ತೆಯ ಅಕ್ಕ ನೆರವಿಗಾಗಿ ಕೋರಿದ್ದಾರೆ. ಕುಟುಂಬವು ಈಗಾಗಲೇ 45,000 ರೂ.ಗಳನ್ನು ಆಸ್ಪತ್ರೆಗೆ ಪಾವತಿಸಿದೆ. ಹಲವರು ಆಸ್ಪತ್ರೆಗೆ ಭೇಟಿ ನೀಡಿ ನೆರವಿನ ಭರವಸೆ ನೀಡಿದ್ದರೂ ಈವರೆಗೆ ಯಾರೂ ಹಣ ನೀಡಿಲ್ಲ ಎಂದು ಅವರು ಹೇಳಿದರು. ಆಸ್ಪತ್ರೆಯಲ್ಲಿರುವ ಸಂತ್ರಸ್ತೆಯನ್ನು ಭೇಟಿಯಾಗಲು ಕುಟುಂಬಕ್ಕೆ ಅವಕಾಶ ನೀಡುತ್ತಿಲ್ಲ ಎಂದು ಆಕೆ ಆರೋಪಿಸಿದರು. ಇದನ್ನು ಅಲ್ಲಗಳೆದ ಪೊಲೀಸ್ ಅಧಿಕಾರಿಯೋರ್ವರು, ವೈದ್ಯರ ಸಲಹೆಯ ಮೇರೆಗೆ ರೋಗಿ ಸೋಂಕಿಗೆ ತುತ್ತಾಗದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ ಎಂದರು. ಸಂತ್ರಸ್ತೆಯ ಇಬ್ಬರು ಪುಟ್ಟ ಮಕ್ಕಳು ಪ್ರಸ್ತುತ ತಮ್ಮ ಅಜ್ಜಿಯೊಂದಿಗೆ ವಾಸವಾಗಿದ್ದಾರೆ. ಮಹಿಳೆಗೆ ನಾಲ್ವರು ಸೋದರಿಯರು ಇದ್ದಾರೆ. ಆಕೆಯ ಪತಿ ದಿಲ್ಲಿಯಲ್ಲಿದ್ದು, ಇಬ್ಬರೂ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ.
Tamil Nadu | ಸರಕಾರಿ ನೌಕರರಿಗೆ ಶೇ.50ರ ಪಿಂಚಣಿ ಘೋಷಿಸಿದ ಎಂ.ಕೆ. ಸ್ಟಾಲಿನ್
ಚೆನ್ನೈ, ಜ.4: ಸರಕಾರಿ ನೌಕರರಿಗೆ ಅವರು ಕೊನೆಯದಾಗಿ ಪಡೆದ ವೇತನದ ಶೇ.50 ಅನ್ನು ಮಾಸಿಕ ಪಿಂಚಣಿಯಾಗಿ ನೀಡುವ ಹೊಸ ಪಿಂಚಣಿ ಯೋಜನೆಯನ್ನು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಘೋಷಿಸಿದ್ದಾರೆ. ಆಡಳಿತಾರೂಢ ಡಿಎಂಕೆ ಹಳೆಯ ಪಿಂಚಣಿ ಯೋಜನೆಯನ್ನು ಪುನಃ ಸ್ಥಾಪಿಸುವ ಭರವಸೆ ನೀಡಿತ್ತು. ಈ ಯೋಜನೆ ಹಳೆಯ ಯೋಜನೆ ಅಲ್ಲದಿದ್ದರೂ ಅದೇ ಸೌಲಭ್ಯಗಳನ್ನು ಹೊಂದಿದೆ ಎಂದು ಸರಕಾರ ಪ್ರತಿಪಾದಿಸಿದೆ. ನಿವೃತ್ತರಾಗುತ್ತಿರುವ ನೌಕರರಿಗೆ ಗರಿಷ್ಠ 25 ಲಕ್ಷ ರೂ. ಗ್ರ್ಯಾಚ್ಯುಟಿ ಸಿಗಲಿದೆ. ಸೇವೆ ಸಲ್ಲಿಸುತ್ತಿರುವ ಸರಕಾರಿ ನೌಕರರಂತೆ ನಿವೃತ್ತ ನೌಕರರು ಕೂಡ ವರ್ಷಕ್ಕೆ ಎರಡು ಬಾರಿ ತುಟ್ಟಿ ಭತ್ಯೆ ಪಡೆಯಲಿದ್ದಾರೆ. ಪಿಂಚಣಿದಾರರು ಮೃತಪಟ್ಟ ಸಂದರ್ಭದಲ್ಲಿ ಅವರ ಕುಟುಂಬವು ಪಿಂಚಣಿಯ ಶೇ.60ರಷ್ಟನ್ನು ಪಡೆಯುತ್ತದೆ.
ಭೂ ಒತ್ತುವರಿ ಆರೋಪ; ಹಾಸನದಲ್ಲಿ ನಟ ಯಶ್ ಮನೆ ಕಾಂಪೌಂಡ್ ಒತ್ತುವರಿ ತೆರವು
ಖ್ಯಾತ ಚಲನಚಿತ್ರನಟ ಯಶ್ ಅವರ ಹಾಸನ ವಿದ್ಯಾನಗರ ಬಡಾವಣೆಯ ಮನೆ ಮುಂದಿನ ಕಾಂಪೌಂಡ್ ಅನ್ನು ನ್ಯಾಯಾಲಯದ ಆದೇಸದ ಅನ್ವಯ ಭಾನುವಾರ ಜೆಸಿಬಿ ಮೂಲಕ ತೆರವುಗೊಳಿಸಲಾಯಿತು. ಯಶ್ ತಾಯಿ ಪುಷ್ಪ ಅವರ ಮನೆಯ ಕಾಂಪೌಂಡ್ ಒತ್ತುವರಿ ಮಾಡಿ ನಿರ್ಮಿಸಲಾಗಿದೆ ಎಂದು ದೇವೇಗೌಡ ಎಂಬುವರು ನ್ಯಾಯಾಲಯದ ಮೊರೆ ಹೋಗಿದ್ದರು.ವಿಚಾರಣೆ ಫೂರ್ಣಗೊಳಿಸಿದ ನ್ಯಾಯಾಲಯ ದೇವರಾಜೇಗೌಡ ಪರ ತೀರ್ಪು ನೀಡಿತ್ತು.
ಬಜ್ಪೆ, ಕಿನ್ನಿಗೋಳಿ ಪಟ್ಟಣ ಪಂಚಾಯತ್ ಬಿಜೆಪಿ ಗೆಲುವು ಕರ್ನಾಟಕದ ಮುಂದಿನ ಚುನಾವಣೆಗೆ ದಿಕ್ಸೂಚಿ: ಸಂಸದ ಬ್ರಿಜೇಶ್ ಚೌಟ
ಮಂಗಳೂರು,ಜ.4: ಕಿನ್ನಿಗೋಳಿ ಹಾಗೂ ಬಜ್ಪೆ ಪಟ್ಟಣ ಪಂಚಾಯತ್ ಚುನಾವಣೆ ಗೆಲುವು ಕರಾವಳಿ ಜನರ ಸ್ವಾಭಿಮಾನ ಕೆಣಕಿರುವ ಕಾಂಗ್ರೆಸ್ಗೆ ತಕ್ಕ ಉತ್ತರವಾಗಿದ್ದು, ಆ ಮೂಲಕ ಬಿಜೆಪಿಯ ಈ ವಿಜಯಯಾತ್ರೆಯು ಇದೀಗ ಕಟೀಲು ಶ್ರೀ ದುರ್ಗಾ ಪರಮೇಶ್ವರಿ ಕ್ಷೇತ್ರದಿಂದಲೇ ಆರಂಭವಾಗಿದೆ ಎಂದು ದಕ್ಷಿಣ ಕನ್ನಡ ಸಂಸದ ಬ್ರಿಜೇಶ್ ಚೌಟ ಹೇಳಿದ್ದಾರೆ. ಕಿನ್ನಿಗೋಳಿ ಹಾಗೂ ಬಜ್ಪೆ ಪಟ್ಟಣ ಪಂಚಾಯತ್ ಚುನಾಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿದ ಹಿನ್ನಲೆಯಲ್ಲಿ ರವಿವಾರ ಕ್ಷೇತ್ರ ವ್ಯಾಪ್ತಿಯಲ್ಲಿ ನಡೆದ ವಿಜಯೋತ್ಸವ ಹಾಗೂ ಗೆಲುವು ಸಾಧಿಸಿದ ಅಭ್ಯರ್ಥಿಗಳ ಅಭಿನಂದನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಬಜ್ಪೆ ಹಾಗೂ ಕಿನ್ನಿಗೋಳಿ ಪಟ್ಟಣ ಪಂಚಾಯತ್ನಲ್ಲಿನ ಬಿಜೆಪಿ ಅಭ್ಯರ್ಥಿಗಳ ಈ ಗೆಲುವು ಅತ್ಯಂತ ವಿಶಿಷ್ಟವಾದ ಗೆಲುವು. ಬಜ್ಪೆ ಅಥವಾ ಕಿನ್ನಿಗೋಳಿಗೆ ಸೀಮಿತವಾದ ಗೆಲುವು ಇದಲ್ಲ; ಬದಲಿಗೆ ಇಡೀ ಕರಾವಳಿ ಕರ್ನಾಟಕದ ಬಿಜೆಪಿ ಕಾರ್ಯಕರ್ತರು ಹಾಗೂ ಮತದಾರರ ಸ್ವಾಭಿಮಾನದ ಗೆಲುವು ಎಂದು ನುಡಿದರು. ಕರಾವಳಿ ಜನರು ಹಿಂದುತ್ವ, ರಾಷ್ಟ್ರೀಯತೆ ಪರ ಇರುವವರು. ಜಿಲ್ಲೆಯ ಜನರ ಸ್ವಾಭಿಮಾನ ಕೆಣಿಕಿಸುವುದಕ್ಕೆ ಅಥವಾ ಅವಮಾನಿಸುವ ಯತ್ನ ಮಾಡಿದರೆ ಮುಂದೆ ಯಾವುದೇ ಚುನಾವಣೆ ಬಂದರೂ ಕರಾವಳಿ ಮಾತ್ರವಲ್ಲ ರಾಜ್ಯದಲ್ಲೇ ಇದೇ ರೀತಿಯ ಉತ್ತರವನ್ನು ಮತದಾರರು ನೀಡುತ್ತಾರೆ ಎಂದು ಚೌಟ ಸವಾಲು ಹಾಕಿದ್ದಾರೆ. ರಾಜ್ಯದಲ್ಲಿ ಯಾವಾಗ ಚುನಾವಣೆ ಬರಬಹುದು ಎಂದು ಹೇಳುವುದಕ್ಕೆ ಸಾಧ್ಯವಿಲ್ಲ ಹಾಗೂ ಅದನ್ನು ಎದುರಿಸು ವುದಕ್ಕೆ ನಮ್ಮ ಕಾರ್ಯಕರ್ತರು ಸಿದ್ಧರಾಗಿರಬೇಕು. ಬಜಪೆ ಹಾಗೂ ಮುಲ್ಕಿ ಪಟ್ಟಣ ಪಂಚಾಯತ್ನಲ್ಲಿ ಬಿಜೆಪಿ ಗೆಲುವು ಸಾಧಿಸುವುದಕ್ಕೆ ಇಲ್ಲಿನ ಮತದಾರರು ಹಾಗೂ ಅಭಿವೃದ್ಧಿಯೇ ಮುಖ್ಯ ಕಾರಣ. ಶಾಸಕರಾದ ಉಮಾನಾಥ ಕೋಟ್ಯಾನ್ ಅವರು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಮಾದರಿಯಲ್ಲೇ ಮುಲ್ಕಿ ಕ್ಷೇತ್ರವನ್ನು ಅಭಿವೃದ್ಧಿಪಡಿ ಸುತ್ತಿದ್ದಾರೆ. ಅಭಿವೃದ್ಧಿಯಲ್ಲಿ ಯಾವುದೇ ರಾಜಕೀಯ ಮಾಡದೆ ಮತದಾರರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡುತ್ತಿದ್ದಾರೆ. ಬಜ್ಪೆ ಹಾಗೂ ಕಿನ್ನಿಗೋಳಿ ಪಟ್ಟಣ ಪಂಚಾಯತ್ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಬಿಜೆಪಿ ಅಭ್ಯರ್ಥಿಗಳನ್ನು ಅಭಿನಂದಿಸಲಾಯಿತು. ಇದಕ್ಕೂ ಮೊದಲು ಎರಡೂ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿರುವ ಅಭ್ಯರ್ಥಿಗಳು ಹಾಗೂ ಪಕ್ಷದ ಕಾರ್ಯಕರ್ತರು ಪುನರೂರು ದ್ವಾರದಿಂದ ಕಟೀಲು ದೇವಸ್ಥಾನದವರೆಗೆ ಹಾಗೂ ಮರವೂರಿನಿಂದ ಸ್ವಾಮಿಲಪದವು ಜಂಕ್ಷನ್ವರೆಗೂ ವಿಜಯೋತ್ಸವ ಮೆರವಣಿಗೆ ನಡೆಸಿದರು. ಶಾಸಕ ಉಮಾನಾಥ ಕೋಟ್ಯಾನ್, ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ , ಮೂಲ್ಕಿ ಮೂಡುಬಿದಿರೆ ಮಂಡಲ ಅಧ್ಯಕ್ಷ ದಿನೇಶ್ ಪುತ್ರನ್ ಸೇರಿದಂತೆ ಹಲವು ಮುಖಂಡರು, ಪದಾಧಿಕಾರಿಗಳು ಭಾಗವಹಿಸಿದ್ದರು.
Venezuela ತೈಲರಂಗದ ಮೇಲೆ ಅಮೆರಿಕ ಹಿಡಿತದಿಂದ ಭಾರತಕ್ಕೆ ಲಾಭ?
►ವೆನೆಝುವೆಲಾದಲ್ಲಿ ಭಾರತೀಯ ಕಂಪೆನಿಗಳಿಂದ ಕಚ್ಚಾ ತೈಲ ಉತ್ಪಾದನೆ ಪುನಾರಂಭ ಸಾಧ್ಯತೆ►ಮಡುರೊ ಸರಕಾರ ಬಾಕಿಯಿರಿಸಿದ್ದ 1 ಶತಕೋಟಿ ಡಾಲರ್ ಮರುಪಾವತಿಯ ನಿರೀಕ್ಷೆ
ದಸಂಸ ಪರ್ಯಾಯ ರಾಜಕಾರಣ ಕಟ್ಟುವುದು ಅನಿವಾರ್ಯ : ಎನ್.ವೆಂಕಟೇಶ್
ʼದಲಿತ ಸಾಹಿತ್ಯ ಮತ್ತು ಚಳವಳಿ-50 ಅಧ್ಯಯನʼ ಸಮಾರೋಪ ಸಮಾರಂಭ
ಬೀದರ್| ಸಾವಿತ್ರಿಬಾಯಿ ಫುಲೆ ಸಾಂಸ್ಕೃತಿಕ ಮಹಿಳಾ ಸಂಘದಿಂದ ಸಾವಿತ್ರಿಬಾಯಿ ಫುಲೆ ಜನ್ಮ ದಿನಾಚರಣೆ
ಭಾಲ್ಕಿ : ತಾಲೂಕಿನ ವಳಸಂಗ ಗ್ರಾಮದಲ್ಲಿ ಸಾವಿತ್ರಿಬಾಯಿ ಫುಲೆ ಸಾಂಸ್ಕೃತಿಕ ಮಹಿಳಾ ಸಂಘದ ವತಿಯಿಂದ ಸಾವಿತ್ರಿಬಾಯಿ ಫುಲೆ ಅವರ ಜನ್ಮ ದಿನಾಚರಣೆಯನ್ನು ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಸಾವಿತ್ರಿಬಾಯಿ ಫುಲೆ ಸಾಂಸ್ಕೃತಿಕ ಮಹಿಳಾ ಸಂಘದ ಸದಸ್ಯರು ಬುದ್ಧ, ಬಸವ, ಅಂಬೇಡ್ಕರ್ ಹಾಗೂ ಫುಲೆ ದಂಪತಿಗಳ ಬಗ್ಗೆ ಭಜನೆ ಹಾಡುವ ಮೂಲಕ ಮಹಾನ್ ವ್ಯಕ್ತಿಗಳ ತತ್ವ ಸಿದ್ಧಾಂತ ತಿಳಿಸಿದರು. ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷೆ ದ್ರೌಪತಿ ಗಾಯಕವಾಡ್, ಜನಾಬಾಯಿ, ಅಲ್ಲಿಕಾ, ಇಂದುಮತಿ, ವಿಮಲಾಬಾಯಿ, ಗೌರಮ್ಮ, ಮುತ್ತಮ್ಮ, ಉಮೇಶ್ ಗಾಯಕವಾಡ್, ಸಚಿನ್, ಭೀಮ್, ಧನರಾಜ್ ಸೇರಿದಂತೆ ಗ್ರಾಮದ ಇತರ ಮುಖಂಡರು ಉಪಸ್ಥಿತರಿದ್ದರು.
ಸುಳ್ಯ: ಕೆರೆಯಲ್ಲಿ ತಾಯಿ, ಮಗುವಿನ ಮೃತದೇಹ ಪತ್ತೆ; ಆತ್ಮಹತ್ಯೆ ಶಂಕೆ
ಸುಳ್ಯ: ತಾಯಿ ಮತ್ತು ಮೂರು ವರ್ಷದ ಮಗುವಿನ ಮೃತದೇಹ ಮನೆ ಸಮೀಪದ ಕೆರೆಯಲ್ಲಿ ಪತ್ತೆಯಾಗಿರುವ ಘಟನೆ ಬೆಳ್ಳಾರೆ ಪೊಲೀಸ್ ಠಾಣಾ ವ್ಯಾಪ್ತಿಯ ಕೊಡಿಯಾಲ ಗ್ರಾಮದಲ್ಲಿ ರವಿವಾರ ನಡೆದಿದೆ. ಸುಳ್ಯ ತಾಲೂಕಿನ ಕೊಡಿಯಾಲ ಗ್ರಾಮದ ಆರ್ವಾರ ಹರೀಶ್ ಎಂಬವರ ಪತ್ನಿ ಮಧುಶ್ರೀ (34) ಹಾಗೂ ಅವರ ಮೂರು ವರ್ಷದ ಮಗು ಧನ್ವಿ ಮೃತರು. ಹರೀಶ್ ಅವರು ತನ್ನ ತಂದೆ, ತಾಯಿ, ಪತ್ನಿ, ಮಗುವಿನೊಂದಿಗ ಆರ್ವಾರ ಮನೆಯಲ್ಲಿ ವಾಸಿಸುತ್ತಿದ್ದು, ಶನಿವಾರ ರಾತ್ರಿ ಮಲಗಿದ್ದ ತಾಯಿ, ಮಗು ರವಿವಾರ ಬೆಳಗ್ಗೆ ಕಾಣದೇ ಇದ್ದ ಸಂದರ್ಭ ಹುಡುಕಾಡಿದಾಗ ಮನೆ ಸಮೀಪದ ಇನ್ನೊಬ್ಬರ ಜಾಗದ ಕೆರೆಯಲ್ಲಿ ತಾಯಿ ಹಾಗೂ ಮಗುವಿನ ಮೃತದೇಹ ಪತ್ತೆಯಾಗಿದೆ. ಮಧುಶ್ರೀ ಅವರು ಮಗುವನ್ನು ಬಟ್ಟೆಯಲ್ಲಿ ತನ್ನ ಸೊಂಟಕ್ಕೆ ಕಟ್ಟಿಕೊಂಡು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ದೂರಲಾಗಿದೆ. ಪುತ್ತೂರು ಬೆಟಗೇರಿಯವರಾದ ಮಧುಶ್ರೀ ಅವರು ನಾಲ್ಕು ವರ್ಷದ ಹಿಂದೆ ಹರೀಶ್ ಅವರನ್ನು ವಿವಾಹ ಆಗಿದ್ದರು. ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಬೆಳ್ಳಾರೆ ಠಾಣಾ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕಲಬುರಗಿ| ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ಆರೋಪ: ಉಪನ್ಯಾಸಕನ ಬಂಧನ
ಕಲಬುರಗಿ(ಅಫಜಲಪುರ): ಹೊಸ ವರ್ಷದ ಗಿಫ್ಟ್ ಕೊಡುವುದಾಗಿ ಪುಸಲಾಯಿಸಿ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪದಲ್ಲಿ ಉಪನ್ಯಾಸಕನೋರ್ವನನ್ನು ಅಫಜಲಪುರ ಪೊಲೀಸರು ಬಂಧಿಸಿದ್ದಾರೆ. ಅಫಜಲಪುರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿರುವ ಪದವಿಪೂರ್ವ ಕಾಲೇಜೊಂದರಲ್ಲಿ ಅರ್ಥಶಾಸ್ತ್ರ ವಿಷಯದ ಬೋಧಕ ರಾಜಕುಮಾರ್ ಕುಂಬಾರ ಬಂಧಿತ ಆರೋಪಿ. ಜನವರಿ 1ರಂದು ವಿದ್ಯಾರ್ಥಿನಿಗೆ ಹೊಸ ವರ್ಷದ ಗಿಫ್ಟ್ ಕೊಡುವುದಾಗಿ ಪುಸಲಾಯಿಸಿ ಲೈಂಗಿಕ ಕಿರುಕುಳ ನೀಡಿರುವ ಆರೋಪ ರಾಜಕುಮಾರ್ ವಿರುದ್ಧ ವ್ಯಕ್ತವಾಗಿತ್ತು. ಈ ಕುರಿತು ಅಫಜಲಪುರದಲ್ಲಿ ಶನಿವಾರ ಪ್ರಕರಣವೂ ದಾಖಲಾಗಿತ್ತು. ಈ ಕುರಿತು ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಆರೋಪಿಯನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆಂದು ಪೊಲೀಸ್ ಮೂಲಗಳು ತಿಳಿಸಿವೆ.
ಪುಲೆ ಮಹಿಳೆಯರಿಗೆ ಶಾಲೆ ತೆರೆದ ದೇಶದ ಪ್ರಥಮ ಮಹಿಳಾ ಶಿಕ್ಷಕಿ: ಮಂಜುನಾಥ್ ಗಿಳಿಯಾರು
ಕುಂದಾಪುರ, ಜ.4: ಅಂದಿನ ಕಾಲದಲ್ಲಿ ಪುರುಷ ಪ್ರದಾನ ಸಮಾಜದಲ್ಲಿ ಮಹಿಳೆಯರಿಗೆ ವಿದ್ಯಾಬ್ಯಾಸಕ್ಕೆ ಅವಕಾಶ ಕಲ್ಪಿಸುವಲ್ಲಿ ಅವಮಾನಗಳನ್ನು ಸಹಿಸಿಕೊಂಡು ಕಷ್ಟ ನಷ್ಟಗಳನ್ನು ಅನುಭವಿಸಿದರೂ ಮಹಿಳೆಯರಿಗೆ ಶಾಲೆ ತೆರೆದ ಭಾರತದ ಮೊಟ್ಟಮೊದಲ ಮಹಿಳಾ ಶಿಕ್ಷಕಿ ಸಾವಿತ್ರಿ ಬಾಯಿಪುಲೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ಉಡುಪಿ ಜಿಲ್ಲಾ ಪ್ರದಾನ ಸಂಚಾಲಕ, ವಕೀಲ ಟಿ.ಮಂಜುನಾಥ ಗಿಳಿಯಾರು ಹೇಳಿದ್ದಾರೆ. ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ತಾಲೂಕು ಸಮಿತಿ ಹಾಗೂ ತಾಲೂಕು ಮಹಿಳಾ ಒಕ್ಕೂಟ ವತಿಯಿಂದ ಕೋಟೇಶ್ವರದ ದೇವರಾಜ ಅರಸು ಹಿಂದುಳಿದ ಮೆಟ್ರಿಕ್ ನಂತರದ ಪದವಿ ಪೂರ್ವ ವಿದ್ಯಾರ್ಥಿನಿಲಯ ದಲ್ಲಿ ಶನಿವಾರ ನಡೆದ ಅಕ್ಷರ ಮಾತೆ ಸಾವಿತ್ರಿ ಬಾಯಿಪುಲೆ 195ನೇ ಜನ್ಮಜಯಂತಿ ಆಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು. ಕುಂದಾಪುರ ಬಿಲ್ಲವ ಸಂಘದ ಅಧ್ಯಕ್ಷ ಅಶೋಕ ಪೂಜಾರಿ ಬೀಜಾಡಿ ಮಾತನಾಡಿ, ಮಹಿಳೆಯರು ಸಶಕ್ತರಾಗಲು ಸಾವಿತ್ರಿಬಾಯಿ ಪುಲೆ ಅವರ ಆದರ್ಶಗಳು ದಾರಿದೀಪವಾಗಿವೆ. ಭಾರತದ ಗೌರವಾನ್ವಿತ ದಿಟ್ಟ ಮಹಿಳೆ ಸಾವಿತ್ರಿ ಬಾಯಿ ಪುಲೆ ಅವರ ಜೀವನ ವಿದ್ಯಾರ್ಥಿಗಳು ಅನುಸರಿಸಬೇಕು ಎಂದು ಹೇಳಿದರು. ಜಿ.ಪಂ ಮಾಜಿ ಸದಸ್ಯೆ ಲತಾ ಎಸ್.ಶೆಟ್ಟಿ ಮಾತನಾಡಿ, ಸಾವಿತ್ರಿಬಾಯಿ ಪುಲೆ ಕೇವಲ ಹೆಣ್ಣಾಗಿ ಉಳಿಯದೆ ಭಾರತದ ಮಹಿಳೆಯರಿಗೆ ವಿದ್ಯೆಯ ಪರಿಕಲ್ಪನೆ ನೀಡುವ ಮೂಲಕ ಪ್ರತಿಯೊಬ್ಬ ಮಹಿಳೆಯರು ಸಮಾಜದಲ್ಲಿ ಗೌರವಾನ್ವಿತ ಸ್ವಾಭಿಮಾನಿ ಜೀವನವನ್ನು ಬಾಳುವಂತೆ ಪ್ರೇರಣೆಯಾಗಿದ್ದಾರೆ ಎಂದು ತಿಳಿಸಿದರು. ಜಿಲ್ಲಾ ಮಹಿಳಾ ಸಂಘಟನಾ ಸಂಚಾಲಕಿ ಗೀತಾ ಸುರೇಶ್, ಕುಂದಾಪುರ ಅಪರಾಧ ವಿಭಾಗದ ಉಪನಿರೀಕ್ಷಕಿ ಪುಷ್ಪ, ಕುಂದಾಪುರ ತಾಲೂಕು ಮುಖ್ಯ ವಿದ್ಯಾರ್ಥಿನಿಲಯ ಪಾಲಕಿ ಆಶಾ ದೇವಿ, ಜಿಲ್ಲಾ ಸಂಘಟನಾ ಸಂಚಾಲಕ ಸುರೇಶ್ ಹಕ್ಲಾಡಿ, ಜಿಲ್ಲಾ ಸಮಿತಿ ಸದಸ್ಯ ಸುರೇಶ್ ಬಾರಕೂರು, ದಸಂಸ ಬ್ರಹ್ಮಾವರ ತಾಲೂಕು ಸಂಚಾಲಕ ಶ್ಯಾಮ್ ಸುಂದರ್ ತೆಕ್ಕಟ್ಟೆ, ಸಂಘಟನಾ ಸಂಚಾಲಕ ವಿಜಯ ಗಿಳಿಯಾರು, ಕುಂದಾಪುರ ತಾಲೂಕು ಸಂಘಟನಾ ಸಂಚಾಲಕರುಗಳಾದ ಚಂದ್ರ ಊಳ್ಳೂರು, ಅಶೋಕ ಮೊಳಹಳ್ಳಿ, ಮಹೇಶ್ ಗಂಗೊಳ್ಳಿ, ಗೋಪಾಲ ಗಿಳಿಯಾರು ಮೊದಲಾದವರು ಉಪಸ್ಥಿತರಿದ್ದರು. ತಾಲೂಕು ಪ್ರಧಾನ ಸಂಚಾಲಕ ರಾಜು ಬೆಟ್ಟಿನಮನೆ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿದ್ಯಾರ್ಥಿ ನಿಲಯ ಪಾಲಕಿ ಆಶಲತಾ ವಂದಿಸಿದರು. ಚೈತ್ರ ಸತೀಶ್ ಕಾರ್ಯಕ್ರಮ ನಿರೂಪಿಸಿದರು.
Venezuela | ಬಂಧನದ ಬಳಿಕ ‘ಹ್ಯಾಪಿ ನ್ಯೂ ಇಯರ್’ ಎಂದ ಮಡುರೊ!
ವಾಷಿಂಗ್ಟನ್, ಜ.4: ಶನಿವಾರ ಮುಂಜಾನೆ ವೆನೆಝುವೆಲಾ ಅಧ್ಯಕ್ಷ ನಿಕೊಲಸ್ ಮಡುರೊ ಮತ್ತು ಅವರ ಪತ್ನಿ ಸಿಲಿಯಾ ಫ್ಲೋರ್ಸ್ ಅವರನ್ನು ಅಮೆರಿಕದ ಸೇನೆ ವೆನೆಝುವೆಲಾದ ರಾಜಧಾನಿಯಲ್ಲಿ ಸೆರೆಹಿಡಿದ ಬಳಿಕ ನಡೆದ ಕೆಲವು ವಿದ್ಯಮಾನಗಳು: ಮಡುರೊ ಮತ್ತು ಅವರ ಪತ್ನಿ ಮಲಗಿದ್ದಾಗಲೇ ಅಮೆರಿಕದ ಕಾರ್ಯಾಚರಣೆ ನಡೆದಿದೆ. ಮಡುರೊ ಹಾಗೂ ಪತ್ನಿಯನ್ನು ಬೆಡ್ರೂಂನಿಂದ ಹೊರಗೆ ಎಳೆದು ತರಲಾಗಿದೆ ಎಂದು ಮೂಲಗಳು ತಿಳಿಸಿವೆ. ನ್ಯೂಯಾರ್ಕ್ನ ಸ್ಟಿವರ್ಟ್ ‘ಏರ್ ನ್ಯಾಷನಲ್ ಗಾರ್ಡ್’ ಸೇನಾನೆಲೆಯಲ್ಲಿ ವಿಮಾನದಿಂದ ಮಡುರೊ ಕೆಳಗಿಳಿಯುತ್ತಿರುವುದು ಮತ್ತು ಹತ್ತಕ್ಕೂ ಹೆಚ್ಚು ಫೆಡರಲ್ ಭದ್ರತಾ ಸಿಬ್ಬಂದಿ ಅವರನ್ನು ಕರೆದೊಯ್ಯುವ ವೀಡಿಯೊವನ್ನು ಪ್ರಸಾರ ಮಾಡಲಾಗಿದೆ. ಅಲ್ಲಿಂದ ಮ್ಯಾನ್ಹ್ಯಾಟನ್ ಗೆ ಹೆಲಿಕಾಪ್ಟರ್ ಮೂಲಕ ಕರೆದೊಯ್ದು, ನಂತರ ಮತ್ತೊಂದು ಹೆಲಿಕಾಪ್ಟರ್ ನಲ್ಲಿ ಬ್ರೂಕ್ಲಿನ್ ಬಂಧನ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ. ಕೆಲ ಹೊತ್ತಿನ ಬಳಿಕ, ಪೊಲೀಸರ ಪೆರೇಡ್ ನಲ್ಲಿ ಮಡುರೊ ನಡೆದುಕೊಂಡು ಹೋಗುತ್ತಿರುವ ವೀಡಿಯೊವನ್ನು ಶ್ವೇತಭವನ ಪೋಸ್ಟ್ ಮಾಡಿದೆ. ಕೋಣೆಯಲ್ಲಿದ್ದವರಿಗೆ ಮಡುರೊ ‘ಗುಡ್ ನೈಟ್’ ಮತ್ತು ‘ಹ್ಯಾಪಿ ನ್ಯೂ ಇಯರ್’ ಎಂದು ಹೇಳುತ್ತಿರುವುದನ್ನೂ ವೀಡಿಯೊ ತೋರಿಸಿದೆ.
Venezuela | ಏನೆಲ್ಲಾ ಬೆಳವಣಿಗೆಗಳು ನಡೆಯಿತು?
ವಾಷಿಂಗ್ಟನ್: ಮಡುರೊರನ್ನು ಹೊತ್ತ ವಿಮಾನವು ಶನಿವಾರ ತಡರಾತ್ರಿ ನ್ಯೂಯಾರ್ಕ್ ನಗರದ ಬಳಿ ಲ್ಯಾಂಡ್ ಆಗಿದ್ದು, ಅಲ್ಲಿಂದ ಅವರನ್ನು ಹೆಲಿಕಾಪ್ಟರ್ ಮೂಲಕ ಬಿಗಿ ಪೊಲೀಸ್ ಭದ್ರತೆಯಲ್ಲಿ ನ್ಯೂಯಾರ್ಕ್ನ ಬ್ರೂಕ್ಲಿನ್ನಲ್ಲಿರುವ ಮೆಟ್ರೊಪಾಲಿಟನ್ ಬಂಧನ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ. ► ಮಡುರೊ ವಿರುದ್ಧ ಮಾದಕ ವಸ್ತು ಭಯೋತ್ಪಾದನೆ ಮತ್ತು ಶಸ್ತ್ರಾಸ್ತ್ರ ಪ್ರಕರಣ ದಾಖಲಿಸಲಾಗಿದೆ. ಸೋಮವಾರ ಮ್ಯಾನ್ಹ್ಯಾಟನ್ ಫೆಡರಲ್ ನ್ಯಾಯಾಲಯದಲ್ಲಿ ಪ್ರಾಥಮಿಕ ವಿಚಾರಣೆಗೆ ಹಾಜರಾಗುವ ನಿರೀಕ್ಷೆಯಿದೆ. ► ಮಧ್ಯಂತರ ಅಧ್ಯಕ್ಷೆಯಾಗಿ ಅಧಿಕಾರ ವಹಿಸಿಕೊಂಡು ಕರ್ತವ್ಯ ನಿರ್ವಹಿಸುವಂತೆ ಉಪಾಧ್ಯಕ್ಷೆ ಡೆಲ್ಸಿ ರಾಡ್ರಿಗಸ್ಗೆ ವೆನೆಝುವೆಲಾದ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದೆ. ► ವಿಪಕ್ಷದ ಅಭ್ಯರ್ಥಿಯೇ ಮಧ್ಯಂತರ ಅಧ್ಯಕ್ಷರಾಗಬೇಕು ಎಂದು ವಿರೋಧ ಪಕ್ಷದ ನಾಯಕಿ ಮರಿಯಾ ಕೊರಿನಾ ಮಚಾಡೊ ಆಗ್ರಹಿಸಿದ್ದಾರೆ. ► ಮಡುರೊ ಅವರನ್ನು ಅಪಹರಿಸಲಾಗಿದೆ ಎಂದು ವೆನೆಝುವೆಲಾದ ಕೆಲವರು ಖಂಡಿಸಿದ್ದರೆ, ಇನ್ನೂ ಕೆಲವರು ಸಂಭ್ರಮಾಚರಿಸಿರುವುದಾಗಿ ವರದಿಯಾಗಿದೆ. ► ಮಧ್ಯರಾತ್ರಿಯಿಂದ ಕೆರಿಬಿಯನ್ ವಾಯುಪ್ರದೇಶದ ಮೂಲಕ ವಿಮಾನ ಸಂಚಾರವನ್ನು ಪುನರಾರಂಭಿಸಲು ನಿರ್ಧರಿಸಲಾಗಿದೆ.
ಜಯಲಕ್ಷ್ಮಿ ಎಸ್. ಜೋಕಟ್ಟೆ ಅವರ ʼಕವಿತೆಗಳುʼ ಕೃತಿ ಬಿಡುಗಡೆ
ಮಂಗಳೂರು, ಜ.4: ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾನೂನು ಕಾಲೇಜು,ಮಂಗಳೂರು ಇವರ ಜಂಟಿ ಆಶ್ರಯದಲ್ಲಿ ಮುಂಬಯಿಯ ಕವಯಿತ್ರಿ ಜಯಲಕ್ಷ್ಮಿ ಎಸ್. ಜೋಕಟ್ಟೆಯವರ ಕವಿತೆಗಳು ಸಂಕಲನವು ಅವರ ಹುಟ್ಟುಹಬ್ಬದ ದಿನವಾದ ಜ.3ರಂದು ಎಸ್ ಡಿ ಎಂ ಲಾ ಕಾಲೇಜ್ ಸಭಾಗೃಹದಲ್ಲಿ ಬಿಡುಗಡೆಗೊಂಡಿತು. ಕವಿತಾಸಂಕಲನ ಬಿಡುಗಡೆ ಮಾಡಿದ ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಡಾ. ಎಂ. ಪಿ. ಶ್ರೀನಾಥ್ ಅವರು ಮಾತನಾಡಿ ಜಯಲಕ್ಷ್ಮೀ ಅವರ ಹುಟ್ಟುಹಬ್ಬದಂದೇ ಅವರ ಚೊಚ್ಚಲ ಕವಿತಾ ಸಂಕಲನ ಕನ್ನಡ ಸಾಹಿತ್ಯ ಪರಿಷತ್ತು ವೇದಿಕೆಯಿಂದ ಬಿಡುಗಡೆ ಯಾಗುತ್ತಿರುವುದು ಸಂತೋಷವಾದರೆ ಅವರು ಇಂದು ನಮ್ಮ ಜೊತೆಗಿಲ್ಲ ಅನ್ನುವುದಕ್ಕೆ ದು:ಖವೂ ಆಗುತ್ತಿದೆ ಎಂದು ನುಡಿದರು. ಮುಂಬಯಿಯಲ್ಲಿ ಪತ್ರಕರ್ತರಾಗಿರುವ ಅವರ ಲಕ್ಷ್ಮಿ ಅವರ ಪತಿ ಶ್ರೀನಿವಾಸ ಜೋಕಟ್ಟೆಯವರು ನನಗೆ ಮೂರು ದಶಕಗಳಿಂದ ಪರಿಚಿತರು. ಮುಂಬಯಿಯ ಸಾಹಿತ್ಯ ವಲಯವನ್ನು ನಾವು ಮರೆಯುವಂತಿಲ್ಲ ಎಂದರು. ಅಧ್ಯಕ್ಷತೆಯನ್ನು ವಹಿಸಿದ್ದ ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮಾಜಿ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ್ ಮಾತನಾಡಿ ಜಯಲಕ್ಷ್ಮಿ ಅವರು ಕವನ ಸಂಕಲನ ತರಬೇಕು ಎಂದು ಬರೆದವರಲ್ಲ. ಹಾಗಾಗಿ ಅವರ ಕವನಗಳು ಗಟ್ಟಿತನವನ್ನು ಉಳಿಸಿಕೊಂಡಿವೆ. ಅನುಭವದ ಮೂಸೆಯಿಂದ ಮೂಡಿಬಂದಂತಹ ಕವಿತಾ ರಚನೆಗಳು ಜನಮಾನಸವನ್ನು ತಲುಪುವಲ್ಲಿ ಯಶಸ್ವಿಯಾಗುತ್ತವೆ ಎಂದರು. ಮುಖ್ಯ ಅತಿಥಿ ಮಂಗಳೂರಿನ ಹಿರಿಯ ಸಾಹಿತಿ, ಉಪನ್ಯಾಸಕಿ ಡಾ. ಮೀನಾಕ್ಷಿ ರಾಮಚಂದ್ರ ಅವರು ಎರಡು ದಶಕಗಳ ನಂತರ ಮತ್ತೆ ಶ್ರೀನಿವಾಸ ಜೋಕಟ್ಟೆ ಅವರ ಜೊತೆ ವೇದಿಕೆಯಲ್ಲಿದ್ದೇನೆ. ಆದರೆ ಇಂದು ಖುಷಿ ನೋವು ಎರಡೂ ಜೊತೆಗಿದೆ. ನಾವು ಬದುಕಿನಲ್ಲಿನ ನೋವನ್ನು ಮರೆತು ದೃಢ ಮನಸ್ಸು ಕಾಪಾಡಿಕೊಂಡು ಮುಂದುವರಿಯಬೇಕಾದ ಅನಿವಾರ್ಯತೆ ನಮ್ಮ ಎದುರಿಗಿದೆ ಎಂದು ಹೇಳಿದರು. ಜಯಲಕ್ಷ್ಮಿ ಜೋಕಟ್ಟೆಯವರ ಕವಿತೆಗಳು’ ಕೃತಿಯ ಸಂಪಾದಕರಾದ ಅವರ ಪತಿ ಶ್ರೀನಿವಾಸ ಜೋಕಟ್ಟೆ ಮಾತನಾಡುತ್ತಾ ಏಳೆಂಟು ವರ್ಷ ಕವಿತಾ ಕ್ಷೇತ್ರದಲ್ಲಿ ಆಸಕ್ತಿ ಹೊಂದಿದ್ದ ಜಯಲಕ್ಷ್ಮಿ ಅವರು ಕನ್ನಡದ ಹಲವು ಪತ್ರಿಕೆಗಳಲ್ಲಿ ಕವನಗಳನ್ನು ಪ್ರಕಟಿಸಿದ್ದರು. ಅವರು ತಾವು ಬರೆದ ಕವಿತೆಗಳನ್ನು ವಿಮರ್ಶಕಿ ಸುನಂದಾ ಪ್ರಕಾಶ ಕಡಮೆ ಅವರಿಗೆ ಪ್ರತಿಕ್ರಿಯೆಗಾಗಿ ಕಳುಹಿಸುತ್ತಿದ್ದರು. ಸುನಂದಾ ಕಡಮೆ ಅವರು ಆ ಕವನಗಳನ್ನು ಕಂಪ್ಯೂಟರ್ನಲ್ಲಿ ಡಿಲೀಟ್ ಮಾಡದೆ ಹಾಗೆಯೇ ಉಳಿಸಿಕೊಂಡಿದ್ದರಿಂದಲೇ ಈ ಕವಿತಾ ಸಂಕಲನ ಹೊರಬರಲು ಸಾಧ್ಯವಾಯಿತು ಎನ್ನುತ್ತಾ, ನಂತರ ಜಯಲಕ್ಷ್ಮಿ ಯವರು ತಮ್ಮ ಕವಿತಾ ರಚನೆಯನ್ನು ನಿಲ್ಲಿಸಿ ನನ್ನ ಬರಹಗಳಿಗೇ ಹೆಚ್ಚಿನ ಮಹತ್ವ ನೀಡುತ್ತಾ ಬಂದರು ಎಂದು ನೆನಪಿಸಿಕೊಂಡರು. ಮಂಗಳೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಮಂಜುನಾಥ ಎಸ್.ರೇವಣಕರ್ ಅವರು ಚೊಚ್ಚಲ ಕವಿತಾಸಂಕಲನಕ್ಕೆ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಜಯಲಕ್ಷ್ಮಿ ಅವರ ಮಧುಬನ- ಮಳೆಗಾನ ಎಂಬ ಕವಿತೆಯನ್ನು ಹಳೆಮನೆ ರಾಜಶೇಖರ ಉಜಿರೆ ವಾಚಿಸಿದರು. ಪತ್ರಕರ್ತ ರೇಮಂಡ್ ಡಿ ಕುನ್ಹಾ ತಾಕೊಡೆ ಸ್ವಾಗತಿಸಿದರು.ಸಾಹಿತಿ ಅರುಣ ನಾಗರಾಜ ವಂದಿಸಿದರು. ವಿಮರ್ಶಕ ಹಳೆಮನೆ ರಾಜಶೇಖರ ಉಜಿರೆ ಕಾರ್ಯಕ್ರಮ ನಿರೂಪಿಸಿದರು.
ಇವರು 2024-25ನೇ ಸಾಲಿನಲ್ಲಿ 120 ಕೋಟಿ ರೂ. ತೆರಿಗೆ ಪಾವತಿಸಿ, ಕಳೆದ ವರ್ಷ ಅತಿ ಹೆಚ್ಚು ತೆರಿಗೆ ಪಾವತಿಸಿದ್ದ ಬಾಲಿವುಡ್ ನಟ ಶಾರೂಖ್ ಖಾನ್ ಅವರನ್ನು ಹಿಂದಿಕ್ಕಿದ್ದಾರೆ. ಆ ಮೂಲಕ, ದೇಶದ ಅತಿ ಹೆಚ್ಚು ತೆರಿಗೆ ಪಾವತಿಸಿದ ವೈಯಕ್ತಿಕ ವ್ಯಕ್ತಿಯಾಗಿ ಹೊರಹೊಮ್ಮಿದ್ದಾರೆ. ಸುಮಾರು 350 ಕೋಟಿ ರೂ. ಆದಾಯ ಗಳಿಸಿರುವ ಇವರ ತೆರಿಗೆ ಪಾವತಿ ಕಳೆದ ವರ್ಷಕ್ಕಿಂತ 69% ಹೆಚ್ಚಳ ಕಂಡಿದೆ. ಇವರು ಯಾರು? ಇಲ್ಲಿದೆ ವಿವರಣೆ.

25 C