ಮಂಗಳೂರು| ಕಂಬಳಕ್ಕೆ ಮೆರುಗು ತಂದ ವಿಶ್ವ ಬಾಕ್ಸಿಂಗ್ ಚಾಂಪಿಯನ್ ಮೇರಿ ಕೋಮ್: ಯಶಸ್ವಿಯಾಗಿ ಸಂಪನ್ನಗೊಂಡ ನವ ವರ್ಷದ ಕಂಬಳ
ಮಂಗಳೂರು: ವಿಶ್ವ ಬಾಕ್ಸಿಂಗ್ ಚಾಂಪಿಯನ್ ಮೇರಿ ಕೋಮ್ ಅವರು ಶನಿವಾರ ರಾತ್ರಿ ಮಂಗಳೂರು ಕಂಬಳದಲ್ಲಿ ಪಾಲ್ಗೊಂಡು ಕರಾವಳಿಯ ಈ ಜಾನಪದ ಕ್ರೀಡೆಯಾಗಿರುವ ಕಂಬಳವನ್ನು ಪ್ರೋತ್ಸಾಹಿಸಿದ್ದಾರೆ. ಮಂಗಳೂರು ಕಂಬಳ ಸಮಿತಿ ವತಿಯಿಂದ ಬಂಗ್ರಕೂಳೂರಿನ ಗೋಲ್ಡ್ ಫಿಂಚ್ ಸಿಟಿಯ ರಾಮ-ಲಕ್ಷ್ಮಣ ಜೋಡುಕರೆಯಲ್ಲಿ ರವಿವಾರ ಬೆಳಗ್ಗೆ ಮುಕ್ತಾಯಗೊಂಡ ಮಂಗಳೂರು ಕಂಬಳದಲ್ಲಿ ಮೇರಿ ಕೋಮ್ ಅವರಿಗೆ ದಕ್ಷಿಣ ಕನ್ನಡ ಸಂಸದ ಹಾಗೂ ಕಂಬಳ ಸಮಿತಿ ಅಧ್ಯಕ್ಷ ಕ್ಯಾ. ಬ್ರಿಜೇಶ್ ಚೌಟ ಅವರು ಕಂಬಳದ ಬೆತ್ತ ಹಾಗೂ ಕಂಬಳ ಕೋಣಗಳ ಸ್ಮರಣಿಕೆ ನೀಡಿ ಗೌರವಿಸಿದರು. ನಾನು ಇದೇ ಮೊದಲ ಬಾರಿಗೆ ನೇರವಾಗಿ ಕಂಬಳವನ್ನು ನೋಡುತ್ತಿದ್ದು, ಬಹಳ ಖುಷಿ ನೀಡಿದೆ. ನಿಜಕ್ಕೂ ಇದೊಂದು ಅಪರೂಪವಾದ ಕ್ರೀಡಾ ಸಂಭ್ರಮ ಎಂದು ಮಂಗಳೂರು ಕಂಬಳವನ್ನು ಬಣ್ಣಿಸಿದ್ದಾರೆ. ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರ ಅಧ್ಯಕ್ಷತೆಯಲ್ಲಿ ನವ ವರ್ಷದ-ನವ ವಿಧದ ಮಂಗಳೂರು ಕಂಬಳವು ನವರೂಪದಲ್ಲಿ ಅರ್ಥಪೂರ್ಣ ಕಾರ್ಯಕ್ರಮಗಳೊಂದಿಗೆ ಬಹಳ ಯಶಸ್ವಿಯಾಗಿ ಸಂಪನ್ನಗೊಂಡಿದೆ. ತುಳುನಾಡು ಅಸ್ಮಿತೆಯ 9ನೇ ವರ್ಷದ ಮಂಗಳೂರು ಕಂಬಳದಲ್ಲಿ ಸಂಸದ ಕ್ಯಾ. ಚೌಟ ಅವರ ‘ಬ್ಯಾಕ್ ಟು ಊರು. ಪರಿಕಲ್ಪನೆಗೆ ಪೂರಕವಾಗಿ ತಾಯ್ನಾಡಿಗೆ ವಾಪಾಸ್ಸಾಗಿ ಸ್ವಂತ ಉದ್ಯಮ ಕಟ್ಟಿ ಬೆಳೆಸಿ ಸ್ಥಳೀಯರಿಗೆ ಉದ್ಯೋಗಾವಕಾಶ ನೀಡಿರುವ 9 ಮಂದಿ ಉದ್ಯಮಿಗಳನ್ನು ಕಂಬಳ ವೇದಿಕೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಹಾಗೂ ಇತರೆ ನಾಯಕರ ಸಮ್ಮುಖದಲ್ಲಿ ಸನ್ಮಾನಿಸಲಾಗಿತ್ತು. ವಿನೂತನ ‘ವಂದೇ ಮಾತರಂ ಬೂತ್’: 1000ಕ್ಕೂ ಹೆಚ್ಚು ಮಂದಿಯಿಂದ ರಾಷ್ಟ್ರೀಯ ಗೀತೆ ರೆಕಾರ್ಡ್! ಈ ಬಾರಿಯ ಮಂಗಳೂರು ಕಂಬಳದಲ್ಲಿ ಸಂಸದ ಕ್ಯಾ. ಚೌಟ ಅವರ ಆಶಯದಂತೆ ನಮ್ಮ ತುಳುನಾಡಿನ ಜನರಲ್ಲಿ ದೇಶ ಭಕ್ತಿಯ ಚೈತನ್ಯವನ್ನು ಉದ್ದೀಪನಗೊಳಿಸಲು, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಕರೆಯಂತೆ ‘ವಂದೇ ಮಾತರಂ’ ಗೀತೆಯನ್ನು ಕೆರೋಕೆಯೊಂದಿಗೆ ಹಾಡಿ, ಅದರ ವಿಡಿಯೋವನ್ನು ವಂದೇ ಮಾತರಂ ವೆಬ್ ಸೈಟ್ನಲ್ಲಿ ಅಪ್ಲೋಡ್ ಮಾಡಲು ವಿಶೇಷ ಬೂತ್ ವ್ಯವಸ್ಥೆ ಕಲ್ಪಿಸಲಾಗಿತ್ತು. ಅದರಂತೆ, ಒಂದೆಡೆ ಕಂಬಳದ ಕೋಣಗಳ ಓಟ ಸ್ಪರ್ಧೆ ನಡೆಯುತ್ತಿದ್ದರೆ, ಮತ್ತೊಂದಡೆ ಮಕ್ಕಳು, ಯುವಕರು, ಮಹಿಳೆಯರು, ಹಿರಿಯರು,ಕಂಬಳ ಓಟಗಾರರು ಹೀಗೆ ಕಂಬಳಕ್ಕೆ ಬಂದಿದ್ದವರ ಪೈಕಿ ಸುಮಾರು 1000ಕ್ಕೂ ಹೆಚ್ಚು ಮಂದಿ ಬಂದು ವಂದೇ ಮಾತರಂ ಗೀತೆ ಹಾಡಿ ಹಾಡಿ ಡಿಜಿಟಲ್ ಸರ್ಟಿಫಿಕೇಟ್ ಪಡೆದುಕೊಂಡರು. ಈ ಮೂಲಕ ಇಡೀ ಮಂಗಳೂರು ಕಂಬಳದಲ್ಲಿ ದೇಶಪ್ರೇಮದ ಕಿಡಿ ಪಸರಿಸುವ ಬಹಳ ವಿನೂತನ ಪ್ರಯತ್ನವನ್ನು ಕ್ಯಾ.ಚೌಟ ಅವರು ಮಾಡಿದ್ದಾರೆ. ಕಂಬಳದಲ್ಲಿ ಹಿರಿಯ ಜೀವಗಳ ಸಮ್ಮಿಲನ ಹಾಗೆಯೇ ಈ ಬಾರಿಯ ಮಂಗಳೂರು ಕಂಬಳದಲ್ಲಿ ದಕ್ಷಿಣ ಕನ್ನಡದ ವೃದ್ಧಾಶ್ರಮದಲ್ಲಿರುವ ಹಿರಿಯ ಜೀವಗಳಿಗೂ ಭಾಗವಹಿಸುವ ಅವಕಾಶವನ್ನು ಕೂಡ ಕ್ಯಾ. ಚೌಟ ಅವರು ಕಲ್ಪಿಸಿದ್ದರು. ಅದರಂತೆ ಜಿಲ್ಲೆಯ ಹಲವಾರು ವೃದ್ಧಾಶ್ರಮಗಳಿಂದ ಹಿರಿಯ ಚೇತನಗಳು ಮಂಗಳೂರು ಕಂಬಳ ನೋಡುವುದಕ್ಕೆ ಆಗಮಿಸಿದ್ದು, ಅವರೆಲ್ಲರನ್ನು ಖುದ್ದು ಕ್ಯಾ. ಚೌಟ ಅವರೇ ಬಹಳ ಪ್ರೀತಿ-ಅಕ್ಕರೆಯಿಂದ ಕಂಬಳ ಕರೆಯತ್ತ ಕರೆದುಕೊಂಡು ಹೋಗಿ ಕಂಬಳದ ವೈಭವವನ್ನು ಕಣ್ಣುತುಂಬಿಕೊಳ್ಳುವುದಕ್ಕೆ ಜತೆಯಾಗಿದ್ದು ನಿಜಕ್ಕೂ ಭಾವಪರವಶಗೊಳಿಸುವಂತಿತ್ತು. ಕಂಬಳದ ಈ ಸಂಭ್ರಮದಲ್ಲಿ ಭಾಗಹಿಸುವುದಕ್ಕೆ ಹೀಗೊಂದು ಅಪರೂಪದ ಅವಕಾಶ ಲಭಿಸಿರುವುದರ ಧನ್ಯತೆ ಆ ಹಿರಿಜೀವಗಳ ಮುಖದಲ್ಲಿ ಕಾಣಿಸಿದ್ದು, ಇಂಥಹ ಅಪರೂಪದ ಕ್ಷಣ ಕ್ಯಾ. ಚೌಟ ಅವರಲ್ಲಿಯೂ ಸಾರ್ಥಕತೆಯ ಭಾವ ಮೂಡಿಸಿದೆ. 200ಕ್ಕೂ ಅಧಿಕ ಸಸಿಗಳ ವಿತರಣೆ: ಏಕ್ ಪೇಡ್ ಮಾ ಕೇ ನಾಮ್ ಅಭಿಯಾನದಂತೆ ಮಂಗಳೂರು ಕಂಬಳದಲ್ಲಿಯೂ 200ಕ್ಕೂ ಹೆಚ್ಚು ಸಸಿ ವಿತರಿಸುವ ಬಹಳ ವಿಭಿನ್ನ ವ್ಯವಸ್ಥೆ ಕಲ್ಪಿಸಲಾಗಿತ್ತು. ಜತೆಗೆ ಎಐ ಕ್ರಿಯೇಟಿವ್ ಯೋಧ, ಫೋಟೊಗ್ರಾಫಿ, ಸೋಷಿಯಲ್ ಮೀಡಿಯಾ ಆಸಕ್ತರ ರೀಲ್ಸ್ ಮೇಕಿಂಗ್ ಸ್ಪರ್ಧೆಯೂ ನವ ವರ್ಷದ ಕಂಬಳಕ್ಕೆ ವಿಶೇಷ ಕಳೆ ನೀಡಿತ್ತು. ಈ ನಡುವೆ ಡ್ರಾಯಿಂಗ್ ಸ್ಪರ್ಧೆಯಲ್ಲಿಯೂ ಸುಮಾರು 100 ಮಂದಿ ಭಾಗವಹಿಸಿ ಕಂಬಳವನ್ನು ಮತ್ತಷ್ಟು ಕಲರ್ಪುಲ್ ಮಾಡಿತ್ತು. ನವ ವಿಧದ-ನವ ವರ್ಷದ ಮಂಗಳೂರು ಕಂಬಳದ ಬಗ್ಗೆ ಪ್ರತಿಕ್ರಿಯಿಸಿರುವ ಸಂಸದ ಕ್ಯಾ. ಚೌಟ ಅವರು, ‘‘ಮಂಗಳೂರು ಕಂಬಳ ಸಮಿತಿಯ ಅವಿರತ ಪರಿಶ್ರಮ ಹಾಗೂ ಉತ್ಸಾಹದ ಫಲವಾಗಿ 9ನೇ ವರ್ಷದ ಮಂಗಳೂರು ಕಂಬಳವು ತುಳುನಾಡಿನ ಅಸ್ಮಿತೆಯನ್ನು ಮತ್ತಷ್ಟು ಗಟ್ಟಿಗೊಳಿಸಿ ಕಂಬಳದ ಸೊಬಗು ನೋಡಲು ಬಂದ ಜನರಲ್ಲಿ ದೇಶಭಕ್ತಿಯ ಭಾವ ಉದ್ದೀಪನಗೊಳಿಸುವುದಕ್ಕೆ ಸಾಕ್ಷಿಯಾಗಿದ್ದು ವೈಯಕ್ತಿಕವಾಗಿ ಬಹಳ ಖುಷಿ ಹಾಗೂ ಸಂತೃಪ್ತಿ ತಂದಿದೆ. ಇದು ಮುಂದಿನ 10ನೇ ವರ್ಷದ ಮಂಗಳೂರು ಕಂಬಳವನ್ನು ಮತ್ತಷ್ಟು ವೈಭವೋಪೇತವಾಗಿ ಆಯೋಜಿಸುವುದಕ್ಕೆ ಉತ್ತೇಜನವನ್ನು ನೀಡಿದೆ ಎಂದು ಹೇಳಿದರು.
ಉಡುಪಿ| ಓದುವಂತೆ ಬುದ್ದಿ ಹೇಳಿದಕ್ಕೆ ಮನನೊಂದು ಪಿಯುಸಿ ವಿದ್ಯಾರ್ಥಿನಿ ಆತ್ಮಹತ್ಯೆ
ಮಣಿಪಾಲ: ಓದುವಂತೆ ಬುದ್ದಿ ಹೇಳಿದಕ್ಕೆ ಮನನೊಂದು ವಿದ್ಯಾರ್ಥಿನಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಹಿರೇಬೆಟ್ಟು ಗ್ರಾಮದ ಬಾಲ್ಕಟ್ಟು ಎಂಬಲ್ಲಿ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡ ಬಾಲಕಿಯನ್ನು ಬಾಲ್ಕಟ್ಟು ನಿವಾಸಿ ಮಲ್ಲಿಕಾ ಎಂಬವರ ಮಗಳು ಸಮನ್ವಿ (12) ಎಂದು ಗುರುತಿಸಲಾಗಿದೆ. ಉಡುಪಿ ಸರಕಾರಿ ಮಹಿಳಾ ಪದವಿ ಪೂರ್ವ ಕಾಲೇಜಿನಲ್ಲಿ ಎರಡನೇ ವರ್ಷದ ಪಿಯುಸಿ ವಿಧ್ಯಾಬ್ಯಾಸ ಮಾಡುತ್ತಿದ್ದ ಸಮನ್ವಿಗೆ ಡಿ.26ರಂದು ಸಂಜೆ ವೇಳೆ ತಾಯಿ ಮುಂಬರುವ ಪರೀಕ್ಷೆಯ ಬಗ್ಗೆ ಓದಲು ಹೇಳಿದ್ದರು. ಆದರೂ ಸಮನ್ವಿ ಓದದೇ ಫೋನ್ನಲ್ಲಿ ಮಾತಾನಾಡುತ್ತಿದ್ದಳು. ಈ ವೇಳೆ ತಾಯಿ ಆಕೆಗೆ ಬುದ್ದಿವಾದದ ಮಾತು ಹೇಳಿದ್ದರು. ಇದೇ ಚಿಂತೆಯಲ್ಲಿ ಸಮನ್ವಿ ಮನೆಯ ಬೆಡ್ ರೂಂನಲ್ಲಿ ಫ್ಯಾನಿಗೆ ನೇಣು ಬಿಗಿದು ಆತ್ಮಹತ್ಯೆಗೆ ಯತ್ನಿಸಿದ್ದರು. ಕೂಡಲೇ ಮನೆಯವರು ಅವರನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಗಂಭೀರ ಸ್ಥಿತಿಯಲ್ಲಿದ್ದ ಸಮನ್ವಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕುಂದಾಪುರ| ಅನಾರೋಗ್ಯದಿಂದ ಬಳಲುತ್ತಿದ್ದ ವ್ಯಕ್ತಿ ಆತ್ಮಹತ್ಯೆ
ಕುಂದಾಪುರ: ಅನಾರೋಗ್ಯದಿಂದ ಬಳಲುತ್ತಿದ್ದ ವ್ಯಕ್ತಿಯೋರ್ವರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕಂದಾವರ ಗ್ರಾಮದಲ್ಲಿ ನಡೆದಿದೆ. ಬಸವ ಪೂಜಾರಿ(85) ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡವರು. ಡಿ.27ರಂದು ರಾತ್ರಿ ಬಸವ ಪೂಜಾರಿ ಮನೆಯಲ್ಲೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕುಂದಾಪುರ| ವ್ಯಕ್ತಿಯೋರ್ವ ಕುಸಿದು ಬಿದ್ದು ಮೃತ್ಯು
ಕುಂದಾಪುರ: ತೋಟದಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರೊಬ್ಬರು ಉಸಿರಾಟದ ತೊಂದರೆಯಿಂದ ಕುಸಿದು ಬಿದ್ದ ಮೃತಪಟ್ಟ ಘಟನೆ ನಡೆದಿದೆ. ಮೃತರನ್ನು ಕೊರ್ಗಿ ಗ್ರಾಮದ ಸಂದೀಪ(30) ಎಂದು ಗುರುತಿಸಲಾಗಿದೆ. ಇವರು 6 ತಿಂಗಳ ಹಿಂದೆ ವಿಷ ಪದಾರ್ಥ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದರು. ಆ ಬಳಿಕವೂ ಪ್ರತಿನಿತ್ಯ ಮದ್ಯ ಸೇವಿಸುತಿದ್ದ ಇವರು, ಡಿ.27ರಂದು ಸಂಜೆ ಕೆಲಸ ಮಾಡುತ್ತಿದ್ದ ತೋಟದಲ್ಲಿ ಕುಸಿದು ಬಿದ್ದು ಮೃತಪಟ್ಟಿದ್ದಾರೆ. ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕನ್ನಡ ಹೋರಾಟಗಾರರ ಮೇಲಿನ ಮೊಕದ್ದಮೆ ವಾಪಸ್ : ಸಿಎಂ ಸಿದ್ದರಾಮಯ್ಯ ಘೋಷಣೆ
ಜನರಾಜ್ಯೋತ್ಸವ-2025 ಕಾರ್ಯಕ್ರಮ
ಉಡುಪಿ| ರೈಲಿನಲ್ಲಿ ಮಹಿಳೆಯ ಬ್ಯಾಗ್ನಲ್ಲಿದ್ದ 45.80ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳ್ಳತನ
ಮಣಿಪಾಲ: ಮುಂಬೈಯಿಂದ ಉಡುಪಿಗೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬರ ಬ್ಯಾಗ್ನಲ್ಲಿದ್ದ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕಳ್ಳತನ ಆಗಿರುವ ಬಗ್ಗೆ ವರದಿಯಾಗಿದೆ. ಮುಂಬೈ ಚೆಂಬೂರಿನ ಹೆಲ್ಮೀನಾ ಸಾಲಿನ್ಸ್, ತಮ್ಮ ಮಗಳು, ಪತಿ ಮತ್ತು ಮೊಮ್ಮಗಳೊಂದಿಗೆ ಡಿ.26ರಂದು ಮಧ್ಯಾಹ್ನ ಮತ್ಸ್ಯಗಂಧ ರೈಲಿನಲ್ಲಿ ಒಡವೆಗಳಿದ್ದ ಒಂದು ವ್ಯಾನಿಟಿ ಬ್ಯಾಗ್, ಬಟ್ಟೆಗಳಿದ್ದ ಹ್ಯಾಂಡ್ ಬ್ಯಾಗ್ ಮತ್ತು ಸೂಟ್ಕೇಸ್ ಗಳೊಂದಿಗೆ ಉಡುಪಿಗೆ ಪ್ರಯಾಣಿಸುತಿದ್ದರು. ಹೆಲ್ಮೀನಾ ಸಾಲಿನ್ಸ್ ಒಡವೆಗಳಿದ್ದ ವ್ಯಾನಿಟಿ ಬ್ಯಾಗನ್ನು ತನ್ನ ತಲೆಯ ಬಳಿ ಇರಿಸಿ ರಾತ್ರಿ ಮಲಗಿದ್ದರು. ಡಿ.27ರಂದು ಬೆಳಗ್ಗೆ 6.10ರ ಸುಮಾರಿಗೆ ಮುರ್ಡೇಶ್ವರ ರೈಲು ನಿಲ್ದಾಣ ಬಳಿ ಹೆಲ್ಮೀನಾ ಅವರ ಮಗಳು ಬ್ಯಾಗ್ ನೋಡಿದಾಗ ಅದರಲ್ಲಿದ್ದ 45,80,000ರೂ. ಮೌಲ್ಯದ 408 ಗ್ರಾಂ ಚಿನ್ನದ ಆಭರಣಗಳು ಹಾಗೂ 15,000ರೂ. ನಗದು ಕಳವಾಗಿರುವುದು ಕಂಡುಬಂದಿದೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ʼಕಾಂಗ್ರೆಸ್ ಒಂದು ಸಿದ್ಧಾಂತʼ; ಸಿದ್ಧಾಂತಗಳು ಎಂದಿಗೂ ಸಾಯುವುದಿಲ್ಲ: ಮಲ್ಲಿಕಾರ್ಜುನ ಖರ್ಗೆ
ಹೊಸದಿಲ್ಲಿ,ಡಿ.28: ಕಾಂಗ್ರೆಸ್ ಒಂದು ಸಿದ್ಧಾಂತವಾಗಿದೆ ಮತ್ತು ಸಿದ್ಧಾಂತಗಳು ಎಂದಿಗೂ ಸಾಯುವುದಿಲ್ಲ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಪ್ರತಿಪಾದಿಸಿದ್ದಾರೆ. ಕಾಂಗ್ರೆಸ್ ನ 140ನೇ ಸಂಸ್ಥಾಪನಾ ದಿನವಾದ ರವಿವಾರ ಪಕ್ಷದ ಪ್ರಧಾನ ಕಚೇರಿ ಇಂದಿರಾ ಭವನದಲ್ಲಿ ನಾಯಕರು ಮತ್ತು ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಖರ್ಗೆ,‘‘ಸಂಸ್ಥಾಪನಾ ದಿನವಾದ ಇಂದು ‘ಕಾಂಗ್ರೆಸ್ ಅಂತ್ಯಗೊಂಡಿದೆ’ ಎಂದು ಹೇಳುವವರಿಗೆ ಒಂದು ವಿಷಯವನ್ನು ಸ್ಪಷ್ಟವಾಗಿ ಹೇಳಲು ನಾನು ಬಯಸುತ್ತೇನೆ. ನಮ್ಮ ಶಕ್ತಿ ಕಡಿಮೆಯಾಗಿರಬಹುದು, ಆದರೆ ನಮ್ಮ ಬೆನ್ನುಮೂಳೆ ಈಗಲೂ ನೇರವಾಗಿದೆ ಎಂದು ನಾನು ಅವರಿಗೆ ಹೇಳಬಯಸುತ್ತೇನೆ. ನಾವು ಸಂವಿಧಾನದೊಂದಿಗೆ, ಜಾತ್ಯತೀತತೆಯೊಂದಿಗೆ ಮತ್ತು ಬಡವರ ಹಕ್ಕುಗಳೊಂದಿಗೆ ರಾಜಿ ಮಾಡಿಕೊಂಡಿಲ್ಲ. ನಾವು ಅಧಿಕಾರದಲ್ಲಿ ಇಲ್ಲದಿರಬಹುದು, ಆದರೆ ನಾವು ಚೌಕಾಶಿಗಿಳಿಯುವುದಿಲ್ಲ’’ ಎಂದು ಹೇಳಿದರು. ಕಾಂಗ್ರೆಸ್ ಎಂದಿಗೂ ಧರ್ಮದ ಹೆಸರಿನಲ್ಲಿ ಮತಗಳನ್ನು ಕೇಳಿಲ್ಲ, ಪಕ್ಷವು ಮಂದಿರ-ಮಸೀದಿ ಹೆಸರಿನಲ್ಲಿ ಎಂದಿಗೂ ದ್ವೇಷವನ್ನು ಹರಡಲಿಲ್ಲ ಎಂದು ಅವರು ಪ್ರತಿಪಾದಿಸಿದರು. ಕಾಂಗ್ರೆಸ್ ಜನರನ್ನು ಒಗ್ಗೂಡಿಸುತ್ತದೆ, ಬಿಜೆಪಿ ವಿಭಜಿಸುತ್ತದೆ. ಕಾಂಗ್ರೆಸ್ ಧರ್ಮವನ್ನು ಕೇವಲ ನಂಬಿಕೆಯಾಗಿ ಉಳಿಸಿಕೊಂಡಿದೆ. ಆದರೆ ಕೆಲವರು ಧರ್ಮವನ್ನು ರಾಜಕೀಯವನ್ನಾಗಿ ಪರಿವರ್ತಿಸಿದ್ದಾರೆ. ಇಂದು ಬಿಜೆಪಿಯ ಬಳಿ ಅಧಿಕಾರವಿದೆ, ಆದರೆ ಅವರ ಬಳಿ ಸತ್ಯವಿಲ್ಲ. ಆದ್ದರಿಂದ ಕೆಲವೊಮ್ಮೆ ಮಾಹಿತಿಗಳನ್ನು ಮರೆಮಾಚಲಾಗುತ್ತದೆ,ಕೆಲವೊಮ್ಮೆ ಜನಗಣತಿಯನ್ನು ಸ್ಥಗಿತಗೊಳಿಸಲಾಗುತ್ತದೆ,ಕೆಲವೊಮ್ಮೆ ಸಂವಿಧಾನವನ್ನು ಬದಲಿಸುವ ಮತುಗಳನ್ನಾಡಲಾಗುತ್ತದೆ. ಇಂದು ಇತಿಹಾಸದ ಬಗ್ಗೆ ಭಾಷಣ ಬಿಗಿಯುತ್ತಿದ್ದವರ ಪೂರ್ವಜರು ಇತಿಹಾಸದಿಂದ ಪಲಾಯನ ಮಾಡುತ್ತಿದ್ದರು ಎಂದು ಖರ್ಗೆ ಹೇಳಿದರು. 2025 ಮಹಾತ್ಮಾ ಗಾಂಧಿಯವರ ಕಾಂಗ್ರೆಸ್ ಅಧ್ಯಕ್ಷತೆಯ ಶತಾಬ್ದಿ, ಸಂವಿಧಾನ ಅಂಗೀಕಾರದ 75ನೇ ವರ್ಷ ಮತ್ತು ವಂದೇ ಮಾತರಂ ಗೀತೆಯ 150ನೇ ವರ್ಷಾಚರಣೆಯಾಗಿದೆ. 2026 ದಾಧಾಭಾಯಿ ನವರೋಜಿಯವರ 200ನೇ ವರ್ಷಾಚರಣೆ, ಸರೋಜಿನಿ ನಾಯ್ಡು ಅವರ ಕಾಂಗ್ರೆಸ್ ಅಧ್ಯಕ್ಷತೆಯ ಶತಾಬ್ದಿ ಮತ್ತು 1925ರಲ್ಲಿ ಕಾನ್ಪುರ ಕಾಂಗ್ರೆಸ್ ಅಧಿವೇಶನದಲ್ಲಿ ಮೊದಲ ಸಲ ಹಾಡಲಾಗಿದ್ದ ‘ಝಂಡಾ ಉಂಚಾ ರಹೇ ಹಮಾರಾ’ ಗೀತೆಯ ಶತಮಾನೋತ್ಸವವೂ ಆಗಿದೆ ಎಂದು ಹೇಳಿದರು. ಭಾರತದಂತೆಯೇ ಅನೇಕ ದೇಶಗಳು ಸ್ವಾತಂತ್ರ ಗಳಿಸಿದ್ದವು. ಆದರೆ ಅವುಗಳಲ್ಲಿ ಕೆಲವು ವಿಫಲಗೊಂಡಿವೆ, ಇನ್ನು ಕೆಲವು ಸರ್ವಾಧಿಕಾರಿ ಆಳ್ವಿಕೆಗೆ ಒಳಪಟ್ಟಿವೆ. ಭಾರತದಲ್ಲಿ ಮಾತ್ರ ಪ್ರಜಾಪ್ರಭುತ್ವವು ಜ್ವಲಂತವಾಗಿದೆ. ಕಾಂಗ್ರೆಸ್ ನ ಮಹಾನ್ ನಾಯಕರಿಂದಾಗಿ ಭಾರತವು ವಿಶ್ವದ ಅತ್ಯಂತ ದೊಡ್ಡ ಪ್ರಜಾಪ್ರಭುತ್ವವಾಗಿದೆ ಎಂದು ಖರ್ಗೆ ಹೇಳಿದರು.
ಗೂಗಲ್ ನೋಡಿ ವೈದ್ಯರಾಗುವುದು ಬೇಡ: ಡಾ.ಪಿ.ವಿ.ಭಂಡಾರಿ
ಉಡುಪಿ: ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ತಾಲೂಕು ಘಟಕದ ಸಹಯೋಗದೊಂದಿಗೆ ವಾತ್ಸಲ್ಯ ಕ್ಲಿನಿಕ್ನ ವಿಂಶತಿ ಸಮಾರಂಭ ಮತ್ತು ಸ್ತ್ರೀ ಆರೋಗ್ಯ ವೈದ್ಯೆ ಡಾ.ರಾಜಲಕ್ಷ್ಮಿ ಬರೆದ ವಾತ್ಸಲ್ಯದ ಒಸಗೆ ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮ ಶನಿವಾರ ಯಕ್ಷಗಾನ ಕಲಾರಂಗ ಐವೈಸಿ ಸಭಾಂಗಣದಲ್ಲಿ ನಡೆಯಿತು. ಪುಸ್ತಕ ಲೋಕಾರ್ಪಣೆ ಮಾಡಿ ಮಾತನಾಡಿದ ಹಿರಿಯ ಮನೋವೈದ್ಯ ಡಾ.ಪಿ.ವಿ.ಭಂಡಾರಿ, ಕನ್ನಡ ಭಾಷೆಯಲ್ಲಿ ವೈದ್ಯರು ಬರೆದ ಆರೋಗ್ಯಕ್ಕೆ ಸಂಬಂಧಿಸಿದ ಪುಸ್ತಕಗಳ ಅವಶ್ಯಕತೆ ಬಹಳಷ್ಟು ಇದೆ. ಗೂಗಲ್ ಮುಂತಾದ ಸಾಮಾಜಿಕ ಜಾಲತಾಣಗಳನ್ನು ಬಳಕೆ ಮಾಡಿ ಎಷ್ಟೋ ಬಾರಿ ತಾವೇ ವೈದ್ಯರಾಗುವುದು ನಮ್ಮ ಸಮಾಜದಲ್ಲಿ ನಡೆಯುತ್ತಿದೆ. ಇದು ಸಲ್ಲದು. ಆಯಾ ಕ್ಷೇತ್ರದಲ್ಲಿ ಪರಿಣಿತಿ ಹೊಂದಿದ್ದ ವೈದ್ಯರು ಈ ವಿಚಾರದ ಕುರಿತು ಬರೆದಾಗ ಅದು ಜನರಿಗೆ ತಲುಪಲು ಸಾಧ್ಯ ಮತ್ತು ಆರೋಗ್ಯದ ಕುರಿತು ಇರುವ ಅಪನಂಬಿಕೆಗಳನ್ನು ಹೋಗಲಾಡಿಸಲು ಸಾಧ್ಯ ಎಂದರು. ಉಡುಪಿಯ ರನಿತಾ ಹೆಲ್ತ್ ಕೇರ್ ಮುಖ್ಯಸ್ಥ ಡಾ.ಆರ್.ಎನ್.ಭಟ್ ಮಾತನಾಡಿ, ನಾವು ವಿವಿಧ ರೀತಿಯ ಋಣಗಳನ್ನು ಹೊಂದಿ ಬದುಕುತ್ತಿದ್ದೇವೆ ಈ ಋಣವನ್ನು ತೀರಿಸಬೇಕಾದರೆ ನಾವು ಮಾಡುವ ಕ್ಷೇತ್ರದಲ್ಲಿ ಅತ್ಯುತ್ತಮ ಸಾಧನೆ ಅದೇ ರೀತಿ ಸಮಾಜಕ್ಕೆ ಅರ್ಪಣೆ, ಮನೋಭಾವವನ್ನು ಬೆಳೆಸಿಕೊಳ್ಳಬೇಕಾಗಿದೆ ಎಂದು ತಿಳಿಸಿದರು. ಅಧ್ಯಕ್ಷತೆಯನ್ನು ಕನ್ನಡ ಸಾಹಿತ್ಯ ಪರಿಷತ್ ಉಡುಪಿ ತಾಲೂಕು ಘಟಕದ ಅಧ್ಯಕ್ಷ ರವಿರಾಜ್ ಹೆಚ್.ಪಿ. ವಹಿಸಿದ್ದರು. ಭದ್ರಾವತಿ ನಯನ ಆಸ್ಪತ್ರೆಯ ಸ್ತ್ರೀರೋಗ ತಜ್ಞೆ ಡಾ.ವೀಣಾ ಭಟ್ ಪುಸ್ತಕ ಪರಿಚಯ ಮಾಡಿದರು. ನಿವೃತ್ತ ಕನ್ನಡ ಪ್ರಾಧ್ಯಾಪಕಿ ಮತ್ತು ಲೇಖಕಿ ಬಿ.ಮಹಾಲಕ್ಷ್ಮಿ ಆಶಯ ನುಡಿಗಳನ್ನಾಡಿದರು. ನಿವೃತ್ತ ಸರಕಾರಿ ನೌಕರ ಬಿ.ವಾಸುದೇವ ಮಯ್ಯ ಕಾರ್ಯಕ್ರಮ ಉದ್ಘಾಟಿಸಿ ಶುಭ ಹಾರೈಸಿದರು. ಕಾರ್ಯಕ್ರಮದ ಮೊದಲು ಸ್ನೇಹಾ ಆಚಾರ್ಯ ಇವರಿಂದ ನೃತ್ಯ ಸಿಂಚನ ಭರತನಾಟ್ಯ ಕಾರ್ಯಕ್ರಮ ನಡೆಯಿತು. ಪೂರ್ಣಿಮಾ ಜನಾರ್ದನ್ ಕಾರ್ಯಕ್ರಮ ನಿರೂಪಿಸಿದರು. ಕಸಾಪ ತಾಲೂಕು ಗೌರವ ಕಾರ್ಯದರ್ಶಿ ಜನಾರ್ದನ್ ಕೊಡವೂರು ವಂದಿಸಿದರು.
Mann Ki Baat: ದುಬೈನ ʼಕನ್ನಡ ಪಾಠ ಶಾಲೆʼಗೆ ಪ್ರಧಾನಿ ಮೋದಿ ಶ್ಲಾಘನೆ
ಹೊಸದಿಲ್ಲಿ: ʼಮನ್ ಕಿ ಬಾತ್ʼ ನಲ್ಲಿ ಪ್ರಧಾನಿ ಮೋದಿ ದುಬೈನಲ್ಲಿ ನೆಲೆಸಿರುವ ಕನ್ನಡಿಗರ ಮಾತೃಭಾಷಾ ಪ್ರೇಮವನ್ನು ವಿಶೇಷವಾಗಿ ಶ್ಲಾಘಿಸಿದರು. ದುಬೈನಲ್ಲಿ ವಾಸವಾಗಿರುವ ಕನ್ನಡ ಕುಟುಂಬಗಳು ‘ನಮ್ಮ ಮಕ್ಕಳು ತಂತ್ರಜ್ಞಾನ ಜಗತ್ತಿನಲ್ಲಿ ಬೆಳೆಯುತ್ತಿದ್ದಾರೆ, ಆದರೆ ಅವರು ತಮ್ಮ ಭಾಷೆಯಿಂದ ದೂರವಾಗುತ್ತಿದ್ದಾರೆಯೇ ಎಂಬ ಮಹತ್ವದ ಪ್ರಶ್ನೆಯನ್ನು ತಮಗೆ ತಾವೇ ಕೇಳಿಕೊಂಡಿದ್ದವು. ಈ ಚಿಂತನೆಯಿಂದ ಹುಟ್ಟಿದ್ದೇ ‘ಕನ್ನಡ ಪಾಠಶಾಲೆ’. ಇಲ್ಲಿ ಮಕ್ಕಳಿಗೆ ಕನ್ನಡದಲ್ಲಿ ಓದಲು, ತಿಳಿದುಕೊಳ್ಳಲು, ಬರೆಯಲು ಮತ್ತು ಮಾತನಾಡಲು ಕಲಿಸಲಾಗುತ್ತಿದೆ ಎಂದು ಅವರು ಹೇಳಿದರು. ಫಿಜಿಯಲ್ಲಿ ಭಾರತೀಯ ಭಾಷೆ ಮತ್ತು ಸಂಸ್ಕೃತಿಯನ್ನು ಉತ್ತೇಜಿಸಲು ಪ್ರಶಂಸನೀಯ ಕಾರ್ಯ ನಡೆಯುತ್ತಿದೆ. ಹೊಸ ಪೀಳಿಗೆಯನ್ನು ತಮ್ಮ ಮಾತೃಭಾಷೆ ತಮಿಳಿನೊಂದಿಗೆ ಸಂಪರ್ಕಿಸಲು ವಿವಿಧ ಮಟ್ಟಗಳಲ್ಲಿ ನಿರಂತರ ಪ್ರಯತ್ನಗಳು ನಡೆಯುತ್ತಿವೆ. ಕಳೆದ ತಿಂಗಳು ಫಿಜಿಯ ರಾಕಿರಾಕಿ ಪ್ರದೇಶದಲ್ಲಿಯ ಶಾಲೆಯೊಂದು ಮೊದಲ ಬಾರಿಗೆ ತಮಿಳು ದಿನವನ್ನು ಆಚರಿಸಿದೆ. ಇದು ಮಕ್ಕಳಿಗೆ ತಮ್ಮ ಹೆಮ್ಮೆಯನ್ನು ತಮ್ಮದೇ ಭಾಷೆಯಲ್ಲಿ ಬಹಿರಂಗವಾಗಿ ವ್ಯಕ್ತಪಡಿಸಲು ವೇದಿಕೆಯನ್ನು ಒದಗಿಸಿತ್ತು ಎಂದರು.
Kogilu Eviction Row | ಕೇರಳ ಚುಣಾವಣೆಗಾಗಿ ರಾಜ್ಯದ ಹಿತಾಸಕ್ತಿ ಬಲಿ ಕೊಡುತ್ತಿರುವ ಕಾಂಗ್ರೆಸ್: ವಿಜಯೇಂದ್ರ
ಬೆಂಗಳೂರು: ಯಲಹಂಕ ವಲಯದ ಕೋಗಿಲು ಬಡಾವಣೆಯ ಅಕ್ರಮ ನಿವಾಸಿಗಳ ತೆರವುಗೊಳಿಸಿದ ಗ್ರೇಟರ್ ಬೆಂಗಳೂರು ಪ್ರಾಧಿಕಾರದ (GBA) ಕ್ರಮವು ಅಂತಾರಾಜ್ಯ ಮಟ್ಟದಲ್ಲಿ ಚರ್ಚೆಯಾಗಿದೆ. ಈ ನಡೆಯನ್ನು ರಾಜ್ಯದ ಸಿಎಂ, ಡಿಸಿಎಂ ನಾಯಕರು ಸಮರ್ಥಿಸಿಕೊಂಡರು. ಅದರ ಬೆನ್ನಲ್ಲೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ಅವರು, ಹೈಕಮಾಂಡ್ ಇದನ್ನು ಗಂಭೀರವಾಗಿ ಪರಿಗಣಿಸಿದೆ ಎಂದಿದ್ದಾರೆ. ಈ ಮೂಲಕ ಕೇರಳ ಚುನಾವಣೆ ಪೂರ್ವದಲ್ಲಿ
ದೇವಾಡಿಗ ಸಮಾಜದ ಅಭಿವೃದ್ಧಿಗೆ ವಿಶೇಷ ಆದ್ಯತೆ: ಸಂಸದ ಬಿ.ವೈ.ರಾಘವೇಂದ್ರ
ಬೈಂದೂರು: ದೇವರಿಗೆ ತಲುಪುವ ಹಲವು ಯೋಜನೆಗಳು ದೇವರ ಸೇವೆ ಮಾಡುವ ದೇವಾಡಿಗ ಸಮಾಜಕ್ಕೆ ಸಿಗದಿದ್ದು ಮುಂದಿನ ದಿನಗಳಲ್ಲಿ ದೇವಾಡಿಗರ ಸಮಾಜ ಅಭಿವೃದ್ಧಿಗೆ ವಿಶೇಷ ಮಹತ್ವ ನೀಡ ಲಾಗುವುದು ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದ್ದಾರೆ. ಉಪ್ಪುಂದ ಮಾತ್ರಶ್ರೀ ಸಭಾಭವನದಲ್ಲಿ ರವಿವಾರ ನಡೆದ ಉಪ್ಪುಂದ ದೇವಾಡಿಗರ ಸಂಘದ ದಶಮ ಸಂಭ್ರಮ, ಸಾಮೂಹಿಕ ಸತ್ಯನಾರಾಯಣ ಪೂಜೆ, ಸಾಧಕರಿಗೆ ಸಮ್ಮಾನ ಹಾಗೂ ವಿದ್ಯಾರ್ಥಿ ವೇತನ ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡುತಿದ್ದರು. ಶಾಸಕ ಗುರುರಾಜ್ ಗಂಟಿಹೊಳೆ ಮಾತನಾಡಿ, ದೇವಾಡಿಗ ಸಮಾಜ ಬಾಂಧವರ ಭಾಂದವ್ಯ ಮರೆಯಲಾಗದು, ಸಮಾಜ ಅಭಿವೃದ್ಧಿಗೆ ಜೊತೆಯಾಗಿ ಇರುತ್ತೇನೆ ಎಂದು ತಿಳಿಸಿದರು. ವಿಶ್ವ ದೇವಾಡಿಗ ಮಹಾಮಂಡಲ ಅಧ್ಯಕ್ಷ ಧರ್ಮಪಾಲ ದೇವಾಡಿಗ ಮಾತನಾಡಿ, ಮುಂದಿನ ದಿನಗಳಲ್ಲಿ ದೇವಾಡಿಗರ ಅಭಿವೃದ್ಧಿಗೆ ನಿಗಮ ಮಂಡಳಿ ರಚನೆ ಆಗಬೇಕು. ಇದಕ್ಕಾಗಿ ಪ್ರಯತ್ನಗಳು ನಡೆಯುತ್ತಿವೆ ಎಂದು ತಿಳಿಸಿದರು. ಕಾರ್ಯಕ್ರಮವನ್ನು ಬಾರ್ಕೂರು ಶ್ರೀಏಕನಾಥೇಶ್ವರಿ ದೇವಸ್ಥಾನದ ವಿಶ್ವಸ್ಥ ಅಣ್ಣಯ್ಯ ಶೇರಿಗಾರ್ ಉದ್ಘಾಟಿಸಿದರು. ಇದೇ ಸಂದರ್ಭದಲ್ಲಿ ಕಟ್ಟಡದ ನಿಧಿ ಬಿಡುಗಡೆಗೊಳಿಸಲಾಯಿತು. ಬೈಂದೂರು ಮಾಜಿ ಶಾಸಕರಾದ ಕೆ.ಗೋಪಾಲ ಪೂಜಾರಿ, ಬಿ.ಎಂ.ಸುಕುಮಾರ್ ಶೆಟ್ಟಿ, ಬಾರ್ಕೂರು ಶ್ರೀಏಕನಾಥೇಶ್ವರಿ ದೇವಸ್ಥಾನದ ವಿಶ್ವಸ್ಥ ಎಚ್. ಮೋಹನದಾಸ್, ಮಂಗಳೂರು ಎಸ್.ಡಿ.ಎಂ. ಕಾಲೇಜು ನಿರ್ದೇಶಕ ಕಂಕನಾಡಿ ಡಾ.ದೇವರಾಜ್ ದೇವಾಡಿಗ, ಬೆಂಗಳೂರು ದೇವಾಡಿಗ ಸಂಘದ ಅಧ್ಯಕ್ಷ ರಮೇಶ ದೇವಾಡಿಗ ವಂಡ್ಸೆ, ಮಂಗಳೂರು ಕೆ.ಆರ್.ಡಿ.ಎಸ್., ಉಪಾಧ್ಯಕ್ಷ ಎಂ.ಎಚ್.ಕರುಣಾಕರ ದೇವಾಡಿಗ, ಕೊಲ್ಲೂರು ಶ್ರೀಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಸದಸ್ಯ ಆಲೂರು ರಘುರಾಮ ದೇವಾಡಿಗ, ಏಕನಾಥೇಶ್ವರಿ ದೇವಸ್ಥಾನದ ಕಾರ್ಯದರ್ಶಿ ಗಣೇಶ್ ದೇವಾಡಿಗ, ಮುಧೋಳ ಬಾಬು ದೇವಾಡಿಗ, ಉದ್ಯಮಿಗಳಾದ ನಾಗರಾಜ್ ಡಿ.ಪಡುಕೋಣೆ, ಹರೀಶ್ ದೇವಾಡಿಗ ಹಾಡಿಮನೆ, ಸಂಘದ ಗೌರವಾಧ್ಯಕ್ಷ ಬಿ.ಎ.ಮಂಜು ದೇವಾಡಿಗ, ಯು.ಎ. ಮಂಜು ದೇವಾಡಿಗ, ಇಂಜಿನಿಯರ್ ಮಂಜುನಾಥ ದೇವಾಡಿಗ, ಪ್ರಮೀಳಾ ದೇವಾಡಿಗ, ಕೃಷ್ಣ ದೇವಾಡಿಗ ಬೈಂದೂರು, ಸುಶೀಲಾ ದೇವಾಡಿಗ, ಗೌರಿ ದೇವಾಡಿಗ, ಪ್ರಿಯದರ್ಶಿನಿ ದೇವಾಡಿಗ, ಜಗದೀಶ ದೇವಾಡಿಗ ಉಪಸ್ಥಿತರಿದ್ದರು. ಸಂಘದ ಅಧ್ಯಕ್ಷ ರವೀಂದ್ರ ದೇವಾಡಿಗ ಅಧ್ಯಕ್ಷತೆ ವಹಿಸಿದ್ದರು. ವಿವಿಧ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಲಾಯಿತು. ವಿದ್ಯಾರ್ಥಿ ವೇತನ ವಿತರಿಸಲಾಯಿತು. ವಿವಿಧ ಆಟೋಟ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಸಂಘದ ಗೌರವಾಧ್ಯಕ್ಷ ಜನಾರ್ದನ ದೇವಾಡಿಗ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕ ರಾಮಕೃಷ್ಣ ದೇವಾಡಿಗ ಸ್ವಾಗತಿಸಿದರು. ಶಿಕ್ಷಕ ಮಂಜುನಾಥ ದೇವಾಡಿಗ ಮತ್ತು ಶ್ರೀಲತಾ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕ ಸುಧಾಕರ ದೇವಾಡಿಗ ವಂದಿಸಿದರು.
Mann Ki Baat: 2025ರ ಕೊನೆಯ ಸಂಚಿಕೆಯಲ್ಲಿ ಯುವಜನರ ಮೇಲೆ ಗಮನ ಕೇಂದ್ರೀಕರಿಸಿದ ಮೋದಿ; ವಾಯುಮಾಲಿನ್ಯದ ಮಾತೇ ಇಲ್ಲ!
ಹೊಸದಿಲ್ಲಿ,ಡಿ.28: ತಂತ್ರಜ್ಞಾನ ಚಾಲಿತ ಜಗತ್ತಿನಲ್ಲಿ ರಾಷ್ಟ್ರ ನಿರ್ಮಾಣದಲ್ಲಿ ಭಾರತದ ಯುವಕರ ಪಾತ್ರ ಪ್ರಮುಖವಾಗಿದೆ ಎಂದು ಒತ್ತಿ ಹೇಳುವ ಮೂಲಕ ಪ್ರಧಾನಿ ನರೇಂದ್ರ ಮೋದಿಯವರು ರವಿವಾರ 2025ನೇ ಸಾಲಿನ ‘ಮನ್ ಕಿ ಬಾತ್’ ಕಾರ್ಯಕ್ರಮಕ್ಕೆ ವಿದಾಯ ಹೇಳಿದರು. 129ನೇ ಸಂಚಿಕೆಯಲ್ಲಿ ಪ್ರಸಕ್ತ ವರ್ಷದ ಪ್ರಮುಖ ಬೆಳವಣಿಗೆಗಳನ್ನು ಪ್ರತಿಬಿಂಬಿಸಿದ ಅವರು ನವೀನತೆ, ಸಂಸ್ಕೃತಿ ಮತ್ತು ಸಾರ್ವಜನಿಕ ಆರೋಗ್ಯ ಇವು ಹೊಸವರ್ಷದಲ್ಲಿ ಗಮನ ಸೆಳೆಯುವ ಕ್ಷೇತ್ರಗಳಾಗಲಿವೆ ಎಂದರು. ತ್ವರಿತ ತಾಂತ್ರಿಕ ಬದಲಾವಣೆಯ ನಡುವೆ ಮಾನವೀಯ ವೌಲ್ಯಗಳನ್ನು ಕಳೆದುಕೊಳ್ಳುವುದರ ವಿರುದ್ಧ ಎಚ್ಚರಿಕೆ ನೀಡಿದ ಪ್ರಧಾನಿ, ‘ಇಂದಿನ ಜೀವನವು ತಂತ್ರಜ್ಞಾನ ಆಧಾರಿತವಾಗುತ್ತಿದೆ ಮತ್ತು ಶತಮಾನಗಳಲ್ಲಿ ಸಂಭವಿಸುತ್ತಿದ್ದ ಬದಲಾವಣೆಗಳು ಕೆಲವೇ ವರ್ಷಗಳಲ್ಲಿ ಸಂಭವಿಸುತ್ತಿರುವುದನ್ನು ನಾವು ನೋಡುತ್ತಿದ್ದೇವೆ. ಕೆಲವೊಮ್ಮೆ, ರೋಬಾಟ್ ಗಳು ಮನುಷ್ಯರ ಸ್ಥಾನವನ್ನು ಆಕ್ರಮಿಸಲಿವೆಯೇ ಎಂದು ಕೆಲವರು ಕಳವಳ ವ್ಯಕ್ತಪಡಿಸುತ್ತಿದ್ದಾರೆ ’ ಎಂದರು. ಸಾಂಸ್ಕೃತಿಕ ಬೇರುಗಳೊಂದಿಗೆ ಸಂಬಂಧವನ್ನು ಕಾಯ್ದುಕೊಳ್ಳುವುದು ಮಾನವ ಅಭಿವೃದ್ಧಿಗೆ ಅಗತ್ಯವಾಗಿದೆ ಎಂದು ಹೇಳಿದರು. ಭಾರತದ ಯುವ ಜನಸಂಖ್ಯೆ ದೇಶದ ಅತಿದೊಡ್ಡ ಭರವಸೆಯ ಮೂಲವಾಗಿದೆ ಎಂದು ಹೇಳಿದ ಅವರು,ರಾಷ್ಟ್ರೀಯ ಯುವದಿನ ಮತ್ತು ಸ್ವಾಮಿ ವಿವೇಕಾನಂದರ ಜನ್ಮ ದಿನಾಚರಣೆಯ ಅಂಗವಾಗಿ ಜ.12ರಂದು ವಿಕಸಿತ ಭಾರತ ಯುವ ನಾಯಕರ ಸಂವಾದದ ಎರಡನೇ ಆವೃತ್ತಿಯನ್ನು ನಡೆಸಲಾಗುವುದು ಎಂದು ಪ್ರಕಟಿಸಿದರು. ಸಾರ್ವಜನಿಕ ಆರೋಗ್ಯಕುರಿತಂತೆ, ನ್ಯುಮೋನಿಯಾ ಮತ್ತು ಮೂತ್ರನಾಳದ ಸೋಂಕುಗಳಂತಹ (ಯುಟಿಐ) ರೋಗಗಳ ವಿರುದ್ಧ ಆ್ಯಂಟಿಬಯಾಟಿಕ್ ಗಳ ಪರಿಣಾಮಕಾರಿತ್ವ ಕಡಿಮೆಯಾಗುತ್ತಿದೆ ಎಂದು ಎಚ್ಚರಿಕೆಯನ್ನು ನೀಡಿರುವ ಐಸಿಎಂಆರ್ ವರದಿಗಳನ್ನು ಬೆಟ್ಟು ಮಾಡಿದ ಮೋದಿ,ವೈದ್ಯರ ಸಲಹೆಯಿಲ್ಲದೆ ಆ್ಯಂಟಿಬಯಾಟಿಕ್ ಗಳನ್ನು ಬಳಸದಂತೆ ಜನರನ್ನು ಆಗ್ರಹಿಸಿದರು. ಆ್ಯಂಟಿಬಯಾಟಿಕ್ ಗಳ ವಿವೇಚನಾರಹಿತ ಬಳಕೆಯು ಅವುಗಳ ಪರಿಣಾಮಕಾರಿತ್ವವನ್ನು ದುರ್ಬಲಗೊಳಿಸುತ್ತದೆ ಎಂದು ಕಿವಿಮಾತನ್ನು ಹೇಳಿದರು. ಆದಾಗ್ಯೂ, ಅವರು ತನ್ನ 30 ನಿಮಿಷಗಳಿಗೂ ಹೆಚ್ಚು ಕಾಲದ ಭಾಷಣದಲ್ಲಿ ರಾಷ್ಟ್ರ ರಾಜಧಾನಿಯನ್ನು ಕಾಡುತ್ತಿರುವ ತೀವ್ರ ವಾಯುಮಾಲಿನ್ಯವನ್ನು ಉಲ್ಲೇಖಿಸುವ ಗೋಜಿಗೆ ಹೋಗಲಿಲ್ಲ. ‘ಮನ್ ಕಿ ಬಾತ್’ ಪ್ರಸಾರ ಆರಂಭಗೊಳ್ಳುತ್ತಿದ್ದಂತೆ ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರ ಇತ್ತೀಚಿನ ಭಾರತ ಭೇಟಿ ಮತ್ತು ಭಾರತೀಯ ಮಹಿಳಾ ಕ್ರಿಕೆಟ್ ತಂಡದ ವಿಶ್ವಕಪ್ ಗೆಲುವಿನ ಚಿತ್ರಗಳು ಸೇರಿದಂತೆ 2025ರ ಪ್ರಮುಖ ದೃಶ್ಯಾವಳಿಗಳು ಪರದೆಯ ಮೇಲೆ ಕಾಣಿಸಿಕೊಳ್ಳತೊಡಗಿದ್ದವು. ಮೋದಿ 2025ನ್ನು ವಿವಿಧ ಕ್ಷೇತ್ರಗಳಲ್ಲಿ ರಾಷ್ಟ್ರೀಯ ವಿಶ್ವಾಸವನ್ನು ಬಲಗೊಳಿಸಿದ ವರ್ಷ ಎಂದು ಬಣ್ಣಿಸಿದರು. ರಾಷ್ಟ್ರೀಯ ಭದ್ರತೆ ಕುರಿತಂತೆ ಮೋದಿ, ಈ ವರ್ಷ ‘ಆಪರೇಷನ್ ಸಿಂಧೂರ ’ ಪ್ರತಿಯೊಬ್ಬ ಭಾರತೀಯನ ಹೆಮ್ಮೆಯ ಸಂಕೇತವಾಯಿತು. ಇಂದಿನ ಭಾರತವು ತನ್ನ ಭದ್ರತೆಯೊಂದಿಗೆ ರಾಜಿ ಮಾಡಿಕೊಳ್ಳುವುದಿಲ್ಲ ಎನ್ನುವುದನ್ನು ಜಗತ್ತು ಸ್ಪಷ್ಟವಾಗಿ ನೋಡಿದೆ ಎಂದು ಹೇಳಿದರು. ಇತ್ತೀಚಿನ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ವಿಸ್ತೃತ ಚರ್ಚೆಗಳಿಗೆ ನಾಂದಿ ಹಾಡಿದ್ದ ‘ವಂದೇ ಮಾತರಂ’ ಗೀತೆ 150 ವರ್ಷಗಳನ್ನು ಪೂರೈಸಿದ್ದನ್ನೂ ಅವರು ಉಲ್ಲೇಖಿಸಿದರು. ಈ ವರ್ಷವು ಮಹಾಕುಂಭದೊಂದಿಗೆ ಆರಂಭಗೊಂಡು ಅಯೋಧ್ಯೆಯ ರಾಮ ಮಂದಿರದಲ್ಲಿ ಧ್ವಜಾರೋಹಣದೊಂದಿಗೆ ಸಂಪನ್ನಗೊಂಡಿದ್ದನ್ನು ಮೆಲುಕು ಹಾಕಿದ ಪ್ರಧಾನಿ, ಇವೆರಡೂ ನಂಬಿಕೆ, ಸಂಸ್ಕೃತಿ ಮತ್ತು ರಾಷ್ಟ್ರೀಯ ಅನನ್ಯತೆಯನ್ನು ಒಟ್ಟುಗೂಡಿಸಿದ ಕ್ಷಣಗಳಾಗಿದ್ದವು ಎಂದು ಬಣ್ಣಿಸಿದರು. ‘ಇದು 2025ರಲ್ಲಿ ಮನ್ ಕಿ ಬಾತ್ ನ ಕೊನೆಯ ಸಂಚಿಕೆ. 2026ರಲ್ಲಿ ನಾವು ಮತ್ತೆ ಭೇಟಿಯಾಗುತ್ತೇವೆ. ಹೊಸ ಸಂಚಿಕೆಗಳು,ಹೊಸ ವಿಷಯಗಳೊಂದಿಗೆ ನಾವು ಇದೇ ಉತ್ಸಾಹ,ಶಕ್ತಿ ಮತ್ತು ಒಗ್ಗಟ್ಟಿನ ಭಾವನೆಯೊಂದಿಗೆ ಮರಳುತ್ತೇವೆ’ ಎಂದು ಪ್ರಸಾರದ ಅಂತ್ಯದಲ್ಲಿ ಹೇಳಿದ ಮೋದಿ, ಚಳಿಗಾಲದಲ್ಲಿ ಆರೋಗ್ಯವನ್ನು ಕಾಯ್ದುಕೊಳ್ಳುವಂತೆ ಜನರನ್ನು ಆಗ್ರಹಿಸಿದರು.
ಜ.18ರಂದು 114 ಜೋಡಿಗಳ ಸಾಮೂಹಿಕ ವಿವಾಹ: ಮಾನ್ವಿಯಲ್ಲಿ ಪೂರ್ವ ಸಿದ್ಧತೆ ಸಭೆ
ಮಾನ್ವಿ: ಜನವರಿ 18 ರಂದು ಸಮಾಜ ಸೇವಕ, ಗುತ್ತೇದಾರ ಸೈಯದ್ ಅಕ್ಬರ್ ಪಾಶ ಹುಸೇನಿ ಅವರಿಂದ ನಡೆಯಲಿರುವ 114 ಜೋಡಿಗಳ ಸಾಮೂಹಿಕ ವಿವಾಹ ಕಾರ್ಯಕ್ರಮದ ನಿಮಿತ್ತ ಇಂದು ಪೂರ್ವಭಾವಿ ಸಭೆ ಮಾನ್ವಿ ನಗರದ ಕುಬಾ ಮಸೀದಿಯಲ್ಲಿ ನಡೆಯಿತು. ಸಭರಯಲ್ಲಿ ಸುಮಾರು 114 ವಧು, ವರ ಮತ್ತು ಅವರ ಕುಟುಂಬದ ಮುಖ್ಯಸ್ಥರು ಭಾಗವಹಿಸಿದ್ದರು. ವಧು ವರರಿಗೆ ಮದುವೆಯ ದಿನ ಧರಿಸಬಹುದಾದ ಹೊಸ ಬಟ್ಟೆಗಳನ್ನು ಮತ್ತು ಐಡಿ ಕಾರ್ಡ್ ಗಳನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಅಕ್ಬರ್ ಪಾಶ ಅವರು, ಮದುವೆ ಹೆಸರಲ್ಲಿ ಆಗುವ ಅನಗತ್ಯ ಖರ್ಚುಗಳನ್ನು ತಡೆಯುವುದು ಮತ್ತು ಸಾಮೂಹಿಕ ವಿವಾಹದ ಮೂಲಕ ಬಡವರ ಮದುವೆ ಹೊರೆಯನ್ನು ನೀಗಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ. ಇಂತಹ ಸಮಾಜಮುಖಿ ಕೆಲಸ ಮಾಡಲು ಯೋಚಿಸಿದಾಗ ಸಮಾಜದ ಮುಖಂಡರ ಹಾಗೂ ವಧು ವರರಿಂದ ಇಷ್ಟು ದೊಡ್ಡಮಟ್ಟದ ಬೆಂಬಲ ಸಿಗುತ್ತೆ ಎಂದು ಕೊಂಡಿರಲಿಲ್ಲ. 101 ಮದುವೆ ಮಾಡಬೇಕು ಎಂದು ಕೊಂಡಿದ್ದೆವು, ಇದೀಗ 118 ಜೋಡಿಗಳು ನೋಂದಣಿ ಮಾಡಿಕೊಂಡಿದ್ದನ್ನು ಕಂಡರೆ ಜನರಿಗೆ ಇಂತಹ ಕಾರ್ಯಕ್ರಮದ ತೀರಾ ಅವಶ್ಯಕತೆ ಇತ್ತು ಎಂದೆನಿಸುತ್ತಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಸಭೆಯಲ್ಲಿ ವಿವಿಧ ಧಾರ್ಮಿಕ ಗುರುಗಳು ಮತ್ತು ಮುಖಂಡರುಗಳು ವಿವಾಹದ ಮಹತ್ವ ಮತ್ತು ಸುಖಕರ ದಾಂಪತ್ಯದ ಜವಾಬ್ದಾರಿಗಳು ಮತ್ತು ದಂಪತಿಗಳ ಹಕ್ಕುಗಳ ಕುರಿತು ಮಾರ್ಗದರ್ಶನ ನೀಡಿದರು. ಜನವರಿ 18 ರಂದು ನಡೆಯುವ ಸಾಮೂಹಿಕ ವಿವಾಹ ಅಚ್ಚುಕ್ಕಟ್ಟಾಗಿ ನಿರ್ವಹಿಸಿ ಎಲ್ಲಾ ಜೋಡಿಗಳಿಗೂ ಶುಭ ಹಾರೈಸೋಣ ಎಂದರು. ಸಭೆಯಲ್ಲಿ ಮುಫ್ತಿ ಜೀಶಾನ್ ಸಾಬ್, ಸೈಯದಗ ಸಜ್ಜಾದೆ ನಶೀನ್ ಹುಸೇನಿ, ಶೇಕ್ ಫರೀದ್ ಉಮ್ರಿ, ಸೈಯ್ಯದ್ ಖಾಲಿದ್ ಖಾದ್ರಿ, ಎಂ ಎ ಎಚ್ ಮುಖೀಮ್, ಆಮಿರ್ ಸುಹೇಲ್ ಸಿದ್ದಿಖಿ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅಧಿಕಾರಿ ಬಾಗಯ್ಯ ನಾಯಕ, ಅಬ್ದುಲ್ ರೆಹ್ಮಾನ್ ಸಾಬ್, ಎಲ್ಲಾ ತಾಲೂಕುಗಳ ಖಾಜಿಗಳು, ಧಾರ್ಮಿಕ ಮುಖಂಡರು ಉಪಸ್ಥಿತರಿದ್ದರು.
ಭಾರತ-ಚೀನಾ ಗಡಿಯಲ್ಲಿ ನಾರಿ ಶಕ್ತಿ: ಕಾವಲಿಗೆ ITBP ಮಹಿಳಾ ಯೋಧರು ಸಜ್ಜು
ಹೊಸದಿಲ್ಲಿ,ಡಿ.28: ಭಾರತದ ಮಹಿಳಾ ಭದ್ರತಾ ಸಿಬ್ಬಂದಿ ಭಾರತ-ಚೀನಾ ಗಡಿಯಲ್ಲಿ ಮುಂಚೂಣಿಯ ಪಾತ್ರವನ್ನು ನಿರ್ವಹಿಸಲು ಸಜ್ಜಾಗಿದ್ದು,ಇಂಡೋ-ಟಿಬೆಟನ್ ಗಡಿ ಪೋಲಿಸ್ (ITBP ) ವಾಸ್ತವಿಕ ನಿಯಂತ್ರಣ ರೇಖೆಯ (LOC) ಬಳಿ 32 ಗಡಿ ಪೋಸ್ಟ್ ಗಳಲ್ಲಿ ವಿಶೇಷ ಮಹಿಳಾ ಬ್ಯಾರಕ್ ಗಳನ್ನು ನಿರ್ಮಿಸಲು ಯೋಜಿಸುತ್ತಿದೆ. ಇದು ಲಡಾಖ್, ಅರುಣಾಚಲ ಪ್ರದೇಶ, ಹಿಮಾಚಲ ಪ್ರದೇಶ, ಸಿಕ್ಕಿಂ ಮತ್ತು ಉತ್ತರಾಖಂಡದ ಮುಂಚೂಣಿ ಸ್ಥಳಗಳಲ್ಲಿ ಮಹಿಳಾ ಸಿಬ್ಬಂದಿಯನ್ನು ನಿಯೋಜಿಸಲು ಅವಕಾಶವನ್ನು ಒದಗಿಸುತ್ತದೆ. ITBP ಚೀನಾದೊಂದಿಗಿನ ಭಾರತದ ಗಡಿಯ ರಕ್ಷಣೆಯ ಹೊಣೆಗಾರಿಕೆಯನ್ನು ಹೊಂದಿರುವ ಸಶಸ್ತ್ರ ಪೋಲಿಸ್ ಪಡೆಯಾಗಿದೆ. ಸುದ್ದಿಸಂಸ್ಥೆಗೆ ಲಭ್ಯವಾಗಿರುವ ಅಧಿಕೃತ ದಾಖಲೆಗಳ ಪ್ರಕಾರ, ITBP ಇದೇ ಮೊದಲ ಬಾರಿಗೆ 32 ಬಾರ್ಡರ್ ಔಟ್-ಪೋಸ್ಟ್ ಗಳಲ್ಲಿ ಮಹಿಳಾ ಬ್ಯಾರಕ್ ಗಳನ್ನು ನಿರ್ಮಿಸಲಿದೆ. ಪ್ರತಿಯೊಂದು ಬ್ಯಾರಕ್ ಡಾರ್ಮಿಟರಿಗಳು ಹಾಗೂ ಇಬ್ಬರು ಮತ್ತು ಮೂವರು ಹಂಚಿಕೊಳ್ಳಬಹುದಾದ ರೂಮ್ಗಳನ್ನು ಹೊಂದಿರಲಿದ್ದು,ಸುಮಾರು 30 ಮಹಿಳಾ ಸಿಬ್ಬಂದಿಗಳಿಗೆ ವಸತಿ ಸೌಲಭ್ಯವನ್ನು ಒದಗಿಸಲಿವೆ. ಅಧಿಕಾರಿಗಳಿಗೆ ಪ್ರತ್ಯೇಕ ವಸತಿಗಳನ್ನು ಒದಗಿಸಲಾಗುವುದು. ಬ್ಯಾರಕ್ ಗಳು ಸಂಪೂರ್ಣ ಸುಸಜ್ಜಿತ ಅಡಿಗೆ ಮನೆ ಮತ್ತು ಆಧುನಿಕ ಶೌಚಾಲಯ ಸೌಲಭ್ಯಗಳೊಂದಿಗೆ ಕೇಂದ್ರ ಭೋಜನ ಸ್ಥಳವನ್ನು ಒಳಗೊಂಡಿರುತ್ತವೆ. ಬ್ಯಾರಕ್ ಗಳ ವಿನ್ಯಾಸವು ಎಲ್ಎಸಿಯಲ್ಲಿನ ಕಠಿಣ ಹವಾಮಾನ ಸ್ಥಿತಿಗಳನ್ನು ಗಮನದಲ್ಲಿಟ್ಟುಕೊಂಡು ಗರಿಷ್ಠ ಸೌರ ಶಾಖ ಬಳಕೆ ಮತ್ತು ಬಲವಾದ ಗಾಳಿಯ ವಿರುದ್ಧ ರಕ್ಷಣೆಯನ್ನು ಕೇಂದ್ರೀಕರಿಸಿದೆ. ಪ್ರಸ್ತುತ ITBP ಸುಮಾರು 4,000 ಮಹಿಳಾ ಸಿಬ್ಬಂದಿಗಳನ್ನು ಹೊಂದಿದ್ದು,ಈ ವಿತ್ತವರ್ಷದಲ್ಲಿ ಇನ್ನೂ 1,375 ಮಹಿಳಾ ಸಿಬ್ಬಂದಿಗಳನ್ನು ನೇಮಕಾತಿ ಮಾಡಿಕೊಳ್ಳಲು ಯೋಜಿಸಿದೆ.
ಸೆಂಗಾರ್ ಜೀವಾವಧಿ ಶಿಕ್ಷೆ ಅಮಾನತು; CBI ಸಲ್ಲಿಸಿದ ಅರ್ಜಿ ಸುಪ್ರೀಂನಿಂದ ಡಿ.29ಕ್ಕೆ ವಿಚಾರಣೆ
ಉನ್ನಾವೋ ಅತ್ಯಾಚಾರ ಪ್ರಕರಣ
ಉತ್ತರ ಭಾರತವನ್ನು ಆವರಿಸಿದ ದಟ್ಟ ಮಂಜು, ಶೀತ ಗಾಳಿ, ಹೊಗೆ
ಹೊಸದಿಲ್ಲಿ, ಡಿ. 28: ದಟ್ಟ ಮಂಜು ಹಾಗೂ ಶೀತ ಗಾಳಿಯಿಂದಾಗಿ ಉತ್ತರಭಾರತದಾದ್ಯಂತ ದೈನಂದಿನ ಜನಜೀವನ ರವಿವಾರ ಅಸ್ತವ್ಯಸ್ತಗೊಂಡಿದೆ. ದಿಲ್ಲಿಯಲ್ಲಿ ತಾಪಮಾನ 9 ಡಿಗ್ರಿ ಸೆಲ್ಸಿಯಸ್ ಗೆ ಇಳಿಕೆಯಾಗಿದ್ದು, ದಟ್ಟ ಹೊಗೆಯಿಂದಾಗಿ ದೃಗ್ಗೋಚರತೆ ಕಡಿಮೆಯಾಗಿದೆ. ಹವಾಮಾನ ವೈಪರಿತ್ಯದ ಹೊರತಾಗಿಯೂ ಇಂದಿರಾ ಗಾಂಧಿ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಶನಿವಾರ ರಾತ್ರಿ 8 ಗಂಟೆ ವರೆಗೆ ವಿಮಾನ ಯಾನ ಸೇವೆಗಳಿಗೆ ಯಾವುದೇ ಅಡಚಣೆ ಉಂಟಾಗಿಲ್ಲ. ಕರ್ನಾಲ್ (ಹರ್ಯಾಣ) ಹಾಗೂ ಮೊರದಾಬಾದ್ (ಉತ್ತರಪ್ರದೇಶ) ಸೇರಿದಂತೆ ಇತರ ನಗರಗಳಲ್ಲಿ ಇದೇ ರೀತಿಯ ಪರಿಸ್ಥಿತಿ ಕಂಡು ಬಂದಿದ್ದು, ತಾಪಮಾನ ಸುಮಾರು 9 ಡಿಗ್ರಿ ಸೆಲ್ಸಿಯಸ್ ಗೆ ಇಳಿಕೆಯಾಗಿದೆ. ಮೊರದಾಬಾದ್ನಲ್ಲಿ ಭಾರತದ ಹವಮಾನ ಇಲಾಖೆ (ಐಎಂಡಿ) ಆರೆಂಜ್ ಅಲರ್ಟ್ ಘೋಷಿಸಿದೆ. ಆಗ್ರಾದ ತಾಜ್ ಮಹಲ್ ನಲ್ಲಿ ದಟ್ಟ ಮಂಜು ಆವರಿಸಿದೆ. ಕಾನ್ಪುರದಲ್ಲಿ ಜನರು ಬೆಚ್ಚಗಿರಲು ಅಗ್ನಿಷ್ಟಿಕೆ ಮುಂದೆ ಒಟ್ಟು ಸೇರಿದರು. ಅಸ್ಸಾಂನ ಗುವಾಹಟಿಯಲ್ಲಿ ಕನಿಷ್ಠ ತಾಪಾಮಾನ 15 ಡಿಗ್ರಿ ಸೆಲ್ಸಿಯಸ್ ಗೆ ಇಳಿಕೆಯಾಗಿದೆ. ಅಲ್ಲಿ ಮಂಜು ಹಾಗೂ ಶೀತ ಗಾಳಿ ಪರಿಸ್ಥಿತಿ ಕಂಡು ಬಂದಿದೆ. ದಿಲ್ಲಿಯಲ್ಲಿ ವಾಯು ಗುಣಮಟ್ಟ ಹದಗೆಟ್ಟಿದೆ. ಅಲ್ಲಿ ವಾಯು ಗುಣಮಟ್ಟ ಸೂಚ್ಯಾಂಕ (AQI)391ಕ್ಕೆ ತಲುಪಿದ್ದು, ಗಂಭೀರ ವರ್ಗ ಪ್ರವೇಶಿಸಿದೆ. ಕೆಲವು ಪ್ರದೇಶಗಳಲ್ಲಿ ವಾಯು ಗುಣಮಟ್ಟ ಸೂಚ್ಯಾಂಕ (AQI) 400 ದಾಟಿದೆ. ವಾಯು ಗುಣಮಟ್ಟ ಸೂಚ್ಯಾಂಕ (AQI) ಆನಂದ್ ವಿಹಾರ್ನಲ್ಲಿ 445, ಪತ್ತರ್ ಗಂಜ್ ನಲ್ಲಿ 425, ನೆಹರೂ ನಗರದಲ್ಲಿ 433, ಶಾದಿಪುರದಲ್ಲಿ 445, ಮುಂಡ್ಕಾದಲ್ಲಿ 413 ಹಾಗೂ ಐಜಿಐ ವಿಮಾನ ನಿಲ್ದಾಣದಲ್ಲಿ 320 ದಾಖಲಾಗಿದೆ. ಅಧಿಕಾರಿಗಳು ಶ್ರೇಣೀಕೃತ ಸ್ಪಂದನಾ ಕ್ರಿಯಾ ಯೋಜನೆ ಅಡಿ ಹಂತ 4ರ ಕ್ರಮಗಳನ್ನು ಜಾರಿಗೊಳಿಸಿದ್ದಾರೆ. ಈ ಕ್ರಮಗಳು ನಿರ್ಮಾಣ ಹಾಗೂ ಕೈಗಾರಿಕಾ ಚಟುವಟಿಕೆಗಳಿಗೆ ನಿರ್ಬಂಧ, ‘‘ಪಿಯುಸಿ ಇಲ್ಲ’’, ‘‘ಇಂಧನ ಇಲ್ಲ’’ ನಿಯಮಗಳನ್ನು ಒಳಗೊಂಡಿವೆ.
ಜ. 2 ರಿಂದ 90 ದಿನಗಳ ಮಧ್ಯಸ್ಥಿಕೆ ಅಭಿಯಾನ : ನ್ಯಾ. ಪ್ರಕಾಶ್ ಅರ್ಜುನ್ ಬನಸೋಡೆ
ಬೀದರ್ : ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರ ಸಂಯುಕ್ತಾಶ್ರಯದಲ್ಲಿ ಬೀದರ್ ಜಿಲ್ಲಾದ್ಯಂತ ಜ.2 ರಿಂದ 90 ದಿನ ಮಧ್ಯಸ್ಥಿಕೆ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ ಎಂದು ಹಿರಿಯ ಸಿವಿಲ್ ನ್ಯಾಯಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಪ್ರಕಾಶ್ ಅರ್ಜುನ್ ಬನಸೋಡೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಜಿಲ್ಲೆಯ ಎಲ್ಲಾ ನ್ಯಾಯಾಲಯಗಳಲ್ಲಿ ಅಭಿಯಾನವು ಆರಂಭವಾಗಲಿದ್ದು, ಅದರಲ್ಲಿ ಬಾಕಿ ಇರುವ ವೈವಾಹಿಕ ಹಾಗೂ ಕೌಟುಂಬಿಕ ನ್ಯಾಯಲಯದ ಪ್ರಕರಣಗಳು ಮೋಟಾರ್ ಅಪಘಾತ, ಚೆಕ್ ಅಮಾನ್ಯ ಪ್ರಕರಣಗಳು, ವಾಣಿಜ್ಯ, ಸೇವಾ ಪ್ರಕರಣಗಳು ರಾಜಿಯಾಗಬಲ್ಲ ಅಪರಾಧಿಕ ಪ್ರಕರಣಗಳು, ಗ್ರಾಹಕರ ವ್ಯಾಜ್ಯ ಪ್ರಕರಣಗಳು, ಭೂ ಸ್ವಾಧಿನ ಪ್ರಕರಣಗಳು ಹಾಗೂ ಇತರೆ ಸಿವಿಲ್ ಪ್ರಕರಣಗಳನ್ನು ಮಧ್ಯಸ್ಥಿಕೆ ಮೂಲಕ ಇತ್ಯರ್ಥಪಡಿಸಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದ್ದಾರೆ. ಸಾರ್ವಜನಿಕರು ತಮ್ಮ ಪ್ರಕರಣಗಳನ್ನು ರಾಜಿ ಮೂಲಕ ಇತ್ಯರ್ಥಪಡಿಸಿಕೊಳ್ಳಲು ಇಚ್ಚಿಸಿದ್ದಲ್ಲಿ, ನ್ಯಾಯಾಲಯಗಳಿಂದ ಪ್ರಕರಣಗಳನ್ನು ವರ್ಗಾಯಿಸಿಕೊಂಡು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ತಾಲೂಕು ಮಧ್ಯಸ್ಥಿಕೆ ಕೇಂದ್ರಗಳಲ್ಲಿ ಇತ್ಯರ್ಥಪಡಿಸಿಕೊಳ್ಳಬಹುದು ಎಂದು ಅವರು ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಬೀದರ್ ಅಥವಾ ಎಲ್ಲಾ ತಾಲೂಕು ಕಾನೂನು ಸೇವಾ ಸಮಿತಿಯ ಸದಸ್ಯ ಕಾರ್ಯದರ್ಶಿಯವರನ್ನು ಸಂಪರ್ಕಿಸಿ 90 ದಿನಗಳ ಮಧ್ಯಸ್ಥಿಕೆ ಅಭಿಯಾನದ ಸದುಪಯೋಗ ಪಡೆದುಕೊಳ್ಳುವಂತೆ ಅವರು ಕೋರಿದ್ದಾರೆ.
ನನಗೆ ಎಲ್ಲವನ್ನೂ ನೀಡಿರುವ ಅಭಿಮಾನಿಗಳ ಪರವಾಗಿ ನಿಲ್ಲಲು ನಾನು ಸಿನಿಮಾ ತೊರೆದೆ: ಭಾವುಕರಾದ ನಟ ವಿಜಯ್
‘ಜನನಾಯಗನ್’ ಆಡಿಯೊ ಬಿಡುಗಡೆ ಸಮಾರಂಭ
ಕಲಬುರಗಿ: ಸಾಹಿತ್ಯ ಕ್ಷೇತ್ರದ ಸಾಧಕರಿಗೆ ರಾಷ್ಟ್ರಕವಿ ಕುವೆಂಪು ರತ್ನ ಪ್ರಶಸ್ತಿ ಪ್ರದಾನ
ಕಲಬುರಗಿ: ನಗರದ ಕನ್ನಡ ಭವನದಲ್ಲಿ ಜೈಕನ್ನಡಿಗರ ರಕ್ಷಣಾ ವೇದಿಕೆಯ ವತಿಯಿಂದ 121ನೇ ರಾಷ್ಟ್ರಕವಿ ಕುವೆಂಪು ರವರ ಜನ್ಮದಿನ ಆಚರಣೆ ಹಾಗೂ ರಾಷ್ಟ್ರಕವಿ ಕುವೆಂಪುರತ್ನ ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ನಡೆಯಿತು. ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಾದ ಡಾ. ಸಂಗೀತಾ ಎಮ್. ಹಿರೇಮಠ, ಮಂಗಳಾ ವಿ. ಕಪರೆ, ಅನಿತಾ ಬಡಿಗೇರ, ಅಂಬುಜಾ ಎಮ್.ಡಿ, ಎ.ಕೆ.ರಾಮೇಶ್ವರ, ಎಸ್.ಎಲ್. ಪಾಟೀಲ, ಅಮೃತ ಡಿ. ದೊಡ್ಡಮನಿ, ಪರೋಷೋತ್ತಮ ಕುಲಕರ್ಣಿ ಅವರುಗಳಿಗೆ ರಾಷ್ಟ್ರಕವಿ ಕುವೆಂಪುರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕಾರ್ಯಕ್ರಮದ ದಿವ್ಯಸಾನಿಧ್ಯವನ್ನು ಕಾರ್ಯಕ್ರಮದ ದಿವ್ಯಸಾನಿಧ್ಯವನ್ನು ಜೈ ಸುರೇಶ ಮಾಲಿಕ್, ಹಜರತ್ ಬಾಬುಶಾ ಸಾಹೇಬ್ ದಾದಾಪೀರ್ ಗೋಟುರ್, ಪೂಜ್ಯ ಗುರುರಾಜೇಂದ್ರ ಶಿವಯೋಗಿಗಳು ವಹಿಸಿದ್ದರು. ರಾಜ್ಯಾಧ್ಯಕ್ಷರಾದ ಸಚಿನ್ ಫರಹತಾಬಾದ, ಸಹಾರ ಪಬ್ಲಿಕ್ ಸ್ಕೂಲ್ ಅಧ್ಯಕ್ಷ ಎಂ.ಡಿ. ಸಿದ್ದಿಕ್, ಸುರೇಶ ಬಡಿಗೇರ, ದಕ್ಷಿಣ ಕಾಂಗ್ರೆಸ್ ಮುಖಂಡ ನೀಲಕಂಠರಾವ ಮುಲಗೆ, ಕಾಂಗ್ರೆಸ್ ಮುಖಂಡ ರಾಜೀವ ಜಾನೆ, ಧೂಳಪ್ಪ ದೊಡ್ಡಮನಿ, ಪಂಚ ಗ್ಯಾರೆಂಟಿಯ ಜಿಲ್ಲಾ ಉಪಾಧ್ಯಕ್ಷ ವಿಜಯಕುಮಾರ ಕಟ್ಟಿಮನಿ, ಕಲ್ಯಾಣ ಕರ್ನಾಟಕ ಅಧ್ಯಕ್ಷ ಅಭಿಷೆಕ್ ಬಾಲಾಜಿ, ಮುಖಂಡ ಗೀರಿಶ ಬೋರೆ, ಮಾಜಿ ತಾಲೂಕಾ ಪಂಚಾಯತಿ ಸದಸ್ಯ ಜೈಭೀಮ್ ಹುಡುಗಿ, ರಾಜಕುಮಾರ್ ಆರ್., ಡಾ. ಅಣ್ಣಪ್ಪಾ ಎಸ್.ಜಿ., ನ್ಯಾಯವಾದಿ ಶ್ರೀನಿವಾಸ ವಿಶ್ವಕರ್ಮ, ಸುರೇಶ ಹನಗುಡಿ, ಅಕ್ಷಯ, ಗುಡ್ಡು ಸಿಂಗ್, ಅಣವೀರ ಪಾಟೀಲ, ಶಿವಕುಮಾರ ಯಾದವ, ಪಿಂಟು ಜಮಾದಾರ, ಹುಲಿಕಂಠ, ಮಲ್ಲು, ದರ್ಶನ, ಶ್ರೀಮಂತ ಸೇರಿದಂತೆ ಇತರರು ಉಪಸ್ಥಿತರಿದ್ದರು.
Kerala | ಪರಿಶಿಷ್ಟ ಜಾತಿಯ ಮಹಿಳೆಯನ್ನು ಮಲಪ್ಪುರಂ ZP ಉಪಾಧ್ಯಕ್ಷೆಯನ್ನಾಗಿ ಆಯ್ಕೆ ಮಾಡಿದ ಮುಸ್ಲಿಂ ಲೀಗ್
ಮಲಪ್ಪುರಂ: ಮಲಪ್ಪುರಂ ಜಿಲ್ಲಾ ಪಂಚಾಯತಿಗೆ ಪರಿಶಿಷ್ಟ ಜಾತಿಯ ಮಹಿಳೆಯನ್ನು ಸಾಮಾನ್ಯ ಮಹಿಳೆಗೆ ಮೀಸಲಾಗಿದ್ದ ಉಪಾಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡುವ ಮೂಲಕ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ರಾಜಕೀಯ ಅಚ್ಚರಿಗೆ ಕಾರಣವಾಗಿದೆ. ಪರಿಶಿಷ್ಟ ಜಾತಿಗೆ ಸೇರಿದ ಎ.ಪಿ.ಸ್ಮಿಜಿ ಮಲಪ್ಪುರಂ ಜಿಲ್ಲಾ ಪಂಚಾಯತಿಯ ಉಪಾಧ್ಯಕ್ಷೆಯಾಗಿ ಆಯ್ಕೆಯಾಗಿದ್ದು, ಅವರು ಮಲಪ್ಪುರಂ ಜಿಲ್ಲಾ ಪಂಚಾಯತಿಯ ಮಾಜಿ ಅಧ್ಯಕ್ಷ ಎ.ಪಿ. ಉನ್ನಿಕೃಷ್ಣನ್ ಅವರ ಪುತ್ರಿಯಾಗಿದ್ದಾರೆ. ವೃತ್ತಿಯಲ್ಲಿ ವಕೀಲೆಯಾಗಿರುವ ಸ್ಮಿಜಿ ಅವರ ಹೆಸರನ್ನು ಜಿಲ್ಲಾ ಪಂಚಾಯತಿಯ ಉಪಾಧ್ಯಕ್ಷ ಸ್ಥಾನಕ್ಕೆ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ನ ರಾಜ್ಯಾಧ್ಯಕ್ಷ ಸೈಯದ್ ಸಾದಿಕಾಲಿ ಶಿಹಾಬ್ ತಂಙಳ್ ಪ್ರಕಟಿಸಿದರು. ಮಲಪ್ಪುರಂ ಜಿಲ್ಲಾ ಪಂಚಾಯತಿಯ ತನಲೂರ್ ವಿಭಾಗದಿಂದ ಸ್ಮಿಜಿ ಅವರು 6,852 ಮತಗಳ ಅಂತರದಿಂದ ಜಯಭೇರಿ ಬಾರಿಸಿದ್ದರು. ಮತ್ತೊಂದೆಡೆ ಎಲ್ಲ 35 ವಿಭಾಗಗಳಲ್ಲಿ ಗೆಲುವು ಸಾಧಿಸುವ ಮೂಲಕ, ಅವಿರೋಧವಾಗಿ ಮಲಪ್ಪುರಂ ಜಿಲ್ಲಾ ಪಂಚಾಯತಿಯ ಅಧಿಕಾರದ ಚುಕ್ಕಾಣಿ ಹಿಡಿದಿರುವ ಯುಡಿಎಫ್ ವತಿಯಿಂದ ಪಿ.ಎ.ಜಬ್ಬಾರ್ ಹಾಜಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಬೆಂಗಳೂರಿನಲ್ಲಿದೆ ಮೂರು ಡ್ರಗ್ಸ್ ಫ್ಯಾಕ್ಟರಿ; ಮಹಾರಾಷ್ಟ್ರ ಪೊಲೀಸರಿಂದ 55.88 ಕೋಟಿ ರೂ. ಬೆಲೆಯ MDMA ಜಪ್ತಿ
ಮಹಾರಾಷ್ಟ್ರ ಪೊಲೀಸರು ಬೆಂಗಳೂರಿನಲ್ಲಿ ಬೃಹತ್ ಮಾದಕ ವಸ್ತು ಜಾಲವನ್ನು ಭೇದಿಸಿದ್ದಾರೆ. 55.88 ಕೋಟಿ ರೂ. ಮೌಲ್ಯದ ಎಂಡಿಎಂಎ ವಶಪಡಿಸಿಕೊಳ್ಳಲಾಗಿದೆ. ರಾಜಸ್ತಾನ ಮೂಲದ ಕಿಂಗ್ಪಿನ್ಗಳು ಇಲ್ಲಿ ಕಾರ್ಖಾನೆ ನಡೆಸುತ್ತಿದ್ದರು. ಈ ವಿಚಾರ ರಾಜಕೀಯ ಕೆಸರೆರಚಾಟಕ್ಕೆ ಕಾರಣವಾಗಿದೆ. ಗೃಹ ಸಚಿವರು ಮಹಾರಾಷ್ಟ್ರ ಪೊಲೀಸರ ಹೇಳಿಕೆಯನ್ನು ತಳ್ಳಿಹಾಕಿದ್ದಾರೆ. ಬೆಂಗಳೂರು ಪೊಲೀಸರ ಸಹಕಾರದೊಂದಿಗೆ ಕಾರ್ಯಾಚರಣೆ ನಡೆದಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಕಳವಳಕಾರಿ ಹಂತಕ್ಕೆ ತಲುಪಿದ ದಿಲ್ಲಿ ವಾಯು ಮಾಲಿನ್ಯ: ಅಕುಮ್ಸ್ ಫಾರ್ಮಾ ಹಣಕಾಸು ಮುಖ್ಯಸ್ಥರಿಂದ ರಾಜೀನಾಮೆ
ಹೊಸದಿಲ್ಲಿ: ದಿಲ್ಲಿಯಲ್ಲಿನ ವಾಯು ಮಾಲಿನ್ಯ ಕಳವಳಕಾರಿ ಹಂತಕ್ಕೆ ತಲುಪಿರುವ ಹಿನ್ನೆಲೆಯಲ್ಲಿ ನನ್ನ ಹುದ್ದೆಯಿಂದ ಕೆಳಗಿಳಿಯುತ್ತಿದ್ದೇನೆ ಎಂದು ಅಕುಮ್ಸ್ ಡ್ರಗ್ಸ್ ಆ್ಯಂ ಡ್ ಫಾರ್ಮಾಸ್ಯೂಟಿಕಲ್ಸ್ ಲಿಮಿಟೆಡ್ ನ ಹಣಕಾಸು ವಿಭಾಗದ ಮುಖ್ಯಸ್ಥ ರಾಜ್ ಕುಮಾರ್ ಬಾಫ್ನಾ ಹೇಳಿದ್ದಾರೆ. ವೈಯಕ್ತಿಕ ಕಾರಣಗಳಿಗಾಗಿ ಸಂಸ್ಥೆಯ ಹಿರಿಯ ವ್ಯವಸ್ಥಾಪಕ ಸಿಬ್ಬಂದಿ ಹುದ್ದೆಗೆ ಡಿಸೆಂಬರ್ 31, 2025ರಿಂದ ಅನ್ವಯವಾಗುವಂತೆ ರಾಜ್ ಕುಮಾರ್ ಬಾಫ್ನಾ ರಾಜೀನಾಮೆ ಸಲ್ಲಿಸಿದ್ದಾರೆ ಎಂದು ತನ್ನ ಶಾಸನಾತ್ಮಕ ಫೈಲಿಂಗ್ ನಲ್ಲಿ ಅಕುಮ್ಸ್ ಡ್ರಗ್ಸ್ ಆ್ಯಂಡ್ ಫಾರ್ಮಾಸ್ಯೂಟಿಕಲ್ಸ್ ಲಿಮಿಟೆಡ್ ತಿಳಿಸಿದೆ. ಅವರ ರಾಜೀನಾಮೆ ಪತ್ರವನ್ನು ಅಂಗೀಕರಿಸಲಾಗಿದ್ದು, ಅದೇ ದಿನ ಅವರನ್ನು ಕರ್ತವ್ಯದಿಂದ ಬಿಡುಗಡೆಗೊಳಿಸಲಾಗಿದೆ ಎಂದೂ ಸಂಸ್ಥೆ ಹೇಳಿದೆ. ಇದಕ್ಕೂ ಮುನ್ನ, ಸಂಸ್ಥೆಯ ಮುಖ್ಯ ಹಣಕಾಸು ಅಧಿಕಾರಿ ಸುಮೀತ್ ಸೂದ್ ಅವರನ್ನುದ್ದೇಶಿಸಿ ಬರೆದಿರುವ ಪತ್ರದಲ್ಲಿ, “ದಿಲ್ಲಿಯಲ್ಲಿ ವಾಯು ಮಾಲಿನ್ಯದ ಮಟ್ಟದ ಕಾರಣಕ್ಕೆ ನನ್ನನ್ನು ಆದಷ್ಟು ಶೀಘ್ರವಾಗಿ ಕರ್ತವ್ಯದಿಂದ ಬಿಡುಗಡೆಗೊಳಿಸಬೇಕು. ಈ ಪ್ರಕ್ರಿಯೆಯಲ್ಲಿ ನನಗೇನಾದರೂ ನೆರವು ದೊರೆಯಬಹುದೇ ಎಂಬುದನ್ನು ದಯವಿಟ್ಟು ತಿಳಿಸಿ” ಎಂದು ರಾಜ್ ಕುಮಾರ್ ಬಾಫ್ನಾ ಮನವಿ ಮಾಡಿದ್ದಾರೆ. ಈ ಪತ್ರಕ್ಕೆ ಪ್ರತಿಯಾಗಿ ರಾಜ್ ಕುಮಾರ್ ಬಾಫ್ನಾರ ರಾಜೀನಾಮೆ ಪತ್ರವನ್ನು ಅನುಮೋದಿಸಿರುವ ಸುಮೀತ್ ಸೂದ್, “ಸಂಸ್ಥೆಯು ಡಿಸೆಂಬರ್ 31, 2025ರಂದು ರಾಜ್ ಕುಮಾರ್ ಬಾಫ್ನಾರನ್ನು ಔಪಚಾರಿಕವಾಗಿ ಕರ್ತವ್ಯದಿಂದ ಬಿಡುಗಡೆಗೊಳಿಸಲಿದೆ. ನಮಗೆ ನಿಮ್ಮ ನಿರ್ಧಾರದ ಬಗ್ಗೆ ವಿಷಾದವಿದ್ದರೂ, ನಿಮ್ಮ ಆರೋಗ್ಯ ಸಮಸ್ಯೆಯ ಕಾರಣಕ್ಕೆ ನಾವು ನಿಮ್ಮ ಮೇಲೆ ಒತ್ತಡ ಹೇರಲು ಸಾಧ್ಯವಿಲ್ಲ” ಎಂದು ತಿಳಿಸಿದ್ದಾರೆ. ಈ ನಡುವೆ, ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿನ ವಾಯು ಗುಣಮಟ್ಟ ಮತ್ತಷ್ಟು ವಿಷಮಿಸಿದ್ದು, ಅತಿಯಾದ ಚಳಿ ಹಾಗೂ ಉಸಿರುಗಟ್ಟಿಸುವ ವಾತಾವರಣದಿಂದ ದಿಲ್ಲಿ ನಿವಾಸಿಗಳು ತೀವ್ರ ಸಮಸ್ಯೆಗೊಳಗಾಗಿದ್ದಾರೆ.
ಕಲಬುರಗಿ: ಹಿರಿಯ ಸಾಹಿತಿ ಡಾ.ಲಕ್ಷ್ಮಣ ಕೌಂಟೆ ರಚಿತದ ʼನೀಲ ಗಂಗಾʼ ಪುಸ್ತಕ ಅವಲೋಕನ
ಕಲಬುರಗಿ: ಕನ್ನಡ ನಾಡು ಲೇಖಕರ ಮತ್ತು ಓದುಗರ ಸಹಕಾರ ಸಂಘದ ವತಿಯಿಂದ ಹಿರಿಯ ಸಾಹಿತಿ ಡಾ.ಲಕ್ಷ್ಮಣ ಕೌಂಟೆ ರಚಿಸಿದ ನೀಲಗಂಗಾ ಎಂಬ ಕಾದಂಬರಿ ಪುಸ್ತಕದ ಪರಿಚಯ ಕಾರ್ಯಕ್ರಮ ಶನಿವಾರ ಇಲ್ಲಿನ ಸಂಘದ ಕಚೇರಿಯಲ್ಲಿ ನಡೆಯಿತು. ನಗರದ ನೂತನ ಮಹಾವಿದ್ಯಾಲಯದ ಕನ್ನಡ ಪ್ರಾಧ್ಯಾಪಕರಾದ ಡಾ.ಮಲ್ಲಿನಾಥ ತಳವಾರ ಅವರು ಪುಸ್ತಕದ ಅವಲೋಕನ ಮಾಡುತ್ತ' 12ನೇ ಶತಮಾನದ ಶರಣರ ಜೀವನ ಆಧಾರಿತ ಕುರಿತು ಅನೇಕರು ಕಾದಂಬರಿಗಳು ರಚಿಸಿದ್ದಾರೆ, ಆದರೆ ಡಾ.ಲಕ್ಷ್ಮಣ ಕೌಂಟೆಯವರ ನೀಲಗಂಗಾ ಕಾದಂಬರಿಯು 12ನೇ ಶತಮಾನ ಮತ್ತು 21ನೇ ಶತಮಾನದ ವಿಚಾರ ಮತ್ತು ಆಚಾರಗಳು ಮುಖಾಮುಖಿಯಾಗಿವೆ. ಅಂದಿನ ಮಡಿವಂತಿಕೆ ಮತ್ತು ಮೌಢ್ಯದ ಕುರಿತು ಶರಣರ ಧೋರಣೆ ಇಂದಿಗೂ ಉಳಿದುಕೊಂಡಿವೆ. ನೀಲಾಂಬಿಕೆ ಗಂಗಾಂಬಿಕೆಯರ ಗೆಳತನ ಮತ್ತು ತ್ಯಾಗವು ಪ್ರಸ್ತುತವಾಗಿವೆ ಮತ್ತು ಆದರ್ಶವಾಗಿವೆ ಎಂದು ಹೇಳಿದರು.ಅವರು ಮುಂದುವರಿದು ಈ ಕೃತಿಯು ಮೌಲಿಕವಾಗಿದೆ,ಭಾಷೆ,ವಸ್ತು ಮತ್ತು ಶೈಲಿ ಕಾದಂಬರಿ ಹೆಣೆಯುವ ತಂತ್ರ ಚೆನ್ನಾಗಿ ಬಳಸಿಕೊಂಡಿದ್ದಾರೆ' ಎಂದರು. ಕೃತಿಯ ಲೇಖಕರಾದ ಡಾ.ಲಕ್ಷ್ಮಣ ಕೌಂಟೆಯವರು ಪುಸ್ತಕದ ಕುರಿತು ತಮ್ಮ ಅನಿಸಿಕೆ ಹಂಚಿಕೊಂಡರು. ಡಾ.ಗವಿಸಿದ್ದಪ್ಪ ಪಾಟೀಲ್ ಈ ಕಾದಂಬರಿ ಕುರಿತು ತಮ್ಮ ಪ್ರತಿಕ್ರಿಯೆ ವ್ಯಕ್ತಪಡಿಸಿದರು. ಅಪ್ಪಾರಾವ ಅಕ್ಕೋಣಿಯವರು ಅಧ್ಯಕ್ಷೀಯ ಮಾತನಾಡಿದರು. ವೇದಿಕೆ ಮೇಲೆ ಡಾ.ಸ್ವಾಮಿರಾವ ಕುಲಕರ್ಣಿ ಉಪಸ್ಥಿತರಿದ್ದರು. ಪ್ರೊ.ಶೋಭದೇವಿ ಚೆಕ್ಕಿ ಪ್ರಾರ್ಥನೆ ಗೀತೆ ಹಾಡಿದರು, ಡಾ.ವಿಜಯಕುಮಾರ ಪರುತೆಯವರು ಕಾರ್ಯಕ್ರಮದ ಸಂಚಾಲನೆ ಮಾಡಿದರು. ಬಿ.ಎಚ್.ನಿರಗುಡಿ, ವಿಜಯಕುಮಾರ ರೋಣದ್, ವೀರಭದ್ರಪ್ಪ ಗುರಮಿಠಕಲ್, ಸಿದ್ಧರಾಮ ಸರಸಂಬಿ, ಎಸ್.ವಿ.ಹತ್ತಿ,ಡಾ.ಜಯದೇವಿ ಗಾಯಕವಾಡ್, ಡಾ.ಚಿ.ಸಿ.ನಿಂಗಣ್ಣ,ಎಸ್.ಎಸ್.ಪಾಟೀಲ್, ಡಾ.ರಾಜಕುಮಾರ ಮಾಳಗೆ, ಡಾ.ಚಿದಾನಂದ ಕುಡ್ಡನ್, ಪ್ರೊ.ಲಿಂಗಪ್ಪ ಗೋನಾಲ ಮತ್ತು ಡಾ.ಸಿದ್ಧರಾಮಯ್ಯ ಮಠ ಇತರರು ಉಪಸ್ಥಿತರಿದ್ದರು.
ವಾಡಿ: ಸರ್ಕಾರಿ ಶಾಲೆಗಳನ್ನು ಉಳಿಸಲು ಎಐಡಿಎಸ್ಒ ಹೋರಾಟ
ವಾಡಿ: ವಿದ್ಯಾರ್ಥಿ ವಿರೋಧಿ ನೀತಿಗಳ ವಿರುದ್ಧ ದೇಶದಾದ್ಯಂತ ಬಲಿಷ್ಠ ವಿದ್ಯಾರ್ಥಿ ಚಳುವಳಿಗಳನ್ನು ಕಟ್ಟುತ್ತಿರುವ ಎಐಡಿಎಸ್ಒ ಸಂಘಟನೆಯ 72ನೇ ಸಂಸ್ಥಾಪನಾ ದಿನದ ಅಂಗವಾಗಿ ವಾಡಿ ಕಛೇರಿಯಲ್ಲಿ ಕಾರ್ಯಕ್ರಮ ಮಾಡಲಾಯಿತು. ಈ ಸಂದರ್ಭದಲ್ಲಿ ಎಐಡಿಎಸ್ಒ ಜಿಲ್ಲಾ ಕೌನ್ಸಿಲ್ ಉಪಾಧ್ಯಕ್ಷರಾದ ಗೋವಿಂದ ಯಳವಾರ ಮಾತನಾಡಿ, ಕಳೆದ 7 ದಶಕಗಳಿಂದ ಎಐಡಿಎಸ್ಒ ವಿದ್ಯಾರ್ಥಿ ಸಂಘಟನೆಯು ದೇಶದಾದ್ಯಂತ ಶೈಕ್ಷಣಿಕ ಸಮಸ್ಯೆಗಳ ವಿರುದ್ಧ ಬಲಿಷ್ಠವಾದ ವಿದ್ಯಾರ್ಥಿ ಚಳುವಳಿಗಳನ್ನು ಕಟ್ಟುತ್ತಾ ಬರುತ್ತಿದೆ. ವೈಜ್ಞಾನಿಕ, ಧರ್ಮನಿರಪೇಕ್ಷ, ಪ್ರಜಾಸತ್ತಾತ್ಮಕ ಹಾಗೂ ಸಾರ್ವತ್ರಿಕ ಶಿಕ್ಷಣ ನಮ್ಮದಾಗಬೇಕು ಎಂಬ ಧ್ಯೇಯದೊಂದಿಗೆ ಕೆಲಸ ಮಾಡುತ್ತಿರುವ ಎಐಡಿಎಸ್ಒ ಕರ್ನಾಟಕದಲ್ಲಿಯೂ ಸಹ ಬಹಳ ಸಕ್ರಿಯವಾಗಿ ಶಿಕ್ಷಣ ವಿರೋಧಿ ನೀತಿಗಳ ವಿರುದ್ಧ ಬಲಿಷ್ಠ ಚಳುವಳಿಗಳನ್ನು ಬೆಳೆಸುತ್ತಿದೆ ಎಂದರು. ನವೋದಯದ ಮಹಾನ್ ಚೇತನಗಳಾದ ಈಶ್ವರಚಂದ್ರ ವಿದ್ಯಾಸಾಗರ್, ಜ್ಯೋತಿಬಾ ಫುಲೆ, ಸಾವಿತ್ರಿಬಾಯಿ ಫುಲೆ ಹಾಗೂ ಕ್ರಾಂತಿಕಾರಿಗಳಾದ ಭಗತ್ ಸಿಂಗ್, ನೇತಾಜಿ ಹೀಗೆ ಅನೇಕರ ಮೂಲ ಆಶಯವಾದ ಸಾರ್ವಜನಿಕ ಶಿಕ್ಷಣವನ್ನು ಇಂದು ರಾಜ್ಯ ಕಾಂಗ್ರೆಸ್ ಸರ್ಕಾರ ಕೆಪಿಎಸ್ - ಮ್ಯಾಗ್ನೆಟ್ ಯೋಜನೆಯ ಹೆಸರಲ್ಲಿ ವ್ಯಾಪಾರಕ್ಕಿಟ್ಟಿದೆ. ದುಡಿಯುವ ವರ್ಗದ ಮಕ್ಕಳನ್ನು ಶಿಕ್ಷಣದಿಂದ ವಂಚಿತರನ್ನಾಗಿಸುವ ಹುನ್ನಾರದಿಂದ ಶಿಕ್ಷಣವನ್ನು ಖಾಸಗಿಯವರ ಮಡಿಲಿಗೆ ಹಾಕಲಾಗುತ್ತಿದೆ. ರಾಜ್ಯದಲ್ಲಿ 40,000 ಸರ್ಕಾರಿ ಶಾಲೆಗಳನ್ನು ಮುಚ್ಚುವುದರ ಮೂಲಕ ಶಾಶ್ವತವಾಗಿ ಬಡ ಮಕ್ಕಳಿಗಿರುವ ಜ್ಞಾನದ ಬಾಗಿಲನ್ನು ಮುಚ್ಚಿ, ಶಿಕ್ಷಣದಿಂದ ಸಂಪೂರ್ಣವಾಗಿ ಅವರನ್ನು ವಂಚಿತರನ್ನಾಗಿ ಮಾಡಲು ರಾಜ್ಯ ಸರ್ಕಾರ ಮುಂದಾಗಿದೆ ಎಂದು ಆರೋಪಿಸಿದರು. ನಮ್ಮ ದೇಶದ ನವೋದಯ ಚಿಂತಕರ, ಸ್ವಾತಂತ್ರ್ಯ ಹೋರಾಟಗಾರರ ಹಾಗೂ ಕ್ರಾಂತಿಕಾರಿಗಳ ಹೋರಾಟ ಹಾಗೂ ಸಂಘರ್ಷಗಳ ಫಲವಾಗಿ ನಮಗೆ ದೊರೆತ ಈ ಶಿಕ್ಷಣದ ಹಕ್ಕನ್ನು ಕಸಿದು, ಅವರೆಲ್ಲರ ಆಶಯಗಳನ್ನು ಗಾಳಿಗೆ ತೂರಿ ಶಿಕ್ಷಣವನ್ನು ಕೇವಲ ಕೆಲವೇ ಜನರ ಸ್ವತ್ತಾಗಿಸಲು ರಾಜ್ಯ ಸರ್ಕಾರ ಹುನ್ನಾರ ನಡೆಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಸಮಾಜದಲ್ಲಿ ಬೇರೂರಿರುವ ಜಾತಿ ಮನಸ್ಥಿತಿ ಹಾಗೂ ಮರ್ಯಾದೆ - ಹೀನ ಹತ್ಯೆಗಳು ಹೆಚ್ಚಾಗುತ್ತಿವೆ, ಹಿಂದೊಮ್ಮೆ ಎಲ್ಲಾ ರೀತಿಯ ಗುಲಾಮಗಿರಿಯ ವಿರುದ್ಧ ನಾವು ಸಿಡಿದೆದ್ದು ಜಾಗೃತರಾಗುವಂತೆ ಶಿಕ್ಷಣ ನಮ್ಮೆಲ್ಲರನ್ನು ಉಳಿಸಿತ್ತು, ನಾವೇ ಶಿಕ್ಷಣವನ್ನುಳಿಸಬೇಕಾದ ಸಂದರ್ಭ ಬಂದೊದಗಿದೆ. ಈ ಐತಿಹಾಸಿಕ ಜವಾಬ್ದಾರಿಯನ್ನು ಅರಿತು ಸಾರ್ವಜನಿಕ ಶಿಕ್ಷಣ ಉಳಿಸಲು ಸಂಕಲ್ಪ ತೊಡೋಣ. ಇಂತಹ ಪರಿಸ್ಥಿಯ ವಿರುದ್ಧ ಪ್ರಬಲವಾದ ಜನ ಹೋರಾಟಕ್ಕೆ ಮುಂದಾಗಬೇಕು ಎಂದು ಕರೆ ನೀಡಿದರು. ಈ ಸಂದರ್ಭದಲ್ಲಿ ಎಐಡಿಎಸ್ಒ ಜಿಲ್ಲಾ ಕೌನ್ಸಿಲ್ ಕಾರ್ಯದರ್ಶಿಗಳಾದ ಸಂಪತ್ ಗೌಂಡಿ ವಿದ್ಯಾರ್ಥಿಗಳಾದ ಅನಿಕೇತ್, ಪ್ರೀತಮ್, ಕಾರ್ತಿಕ್, ಬಾಗೇಶ್, ಶ್ರೀಧರ್, ರಿತ್ವಿಕ್ ವಿಶಾಲ ಸೇರಿದಂತೆ ಹಲವರರಿದ್ದರು.
ಮಂಗಳೂರು-ಬೆಂಗಳೂರು ರೈಲು ಮಾರ್ಗದ ಸಕಲೇಶಪುರ-ಸುಬ್ರಹ್ಮಣ್ಯ ರಸ್ತೆ ನಡುವಿನ 55 ಕಿಮೀ ಮಾರ್ಗದ ವಿದ್ಯುದೀಕರಣ ಪೂರ್ಣಗೊಂಡಿದೆ. ಭಾನುವಾರ ವಿದ್ಯುತ್ ಲೋಕೊಮೋಟಿವ್ನ ಯಶಸ್ವಿ ಪ್ರಯೋಗಾತ್ಮಕ ಚಾಲನೆಯು ವಂದೇ ಭಾರತ್ ರೈಲು ಸಂಚಾರಕ್ಕೆ ಅನುಕೂಲ ಕಲ್ಪಿಸಿದೆ. ಈ ತಾಂತ್ರಿಕವಾಗಿ ಸವಾಲಿನ ವಿಭಾಗದಲ್ಲಿ 57 ಸುರಂಗಗಳು ಮತ್ತು 258 ಸೇತುವೆಗಳಿದ್ದು, ₹93.55 ಕೋಟಿ ವೆಚ್ಚದಲ್ಲಿ ಕಾಮಗಾರಿ ಪೂರ್ಣಗೊಂಡಿದೆ.
ಶಿಕ್ಷಣವನ್ನು ಕೆಲವರ ಸ್ವತ್ತಾಗಿಸಲು ಸರ್ಕಾರ ಹುನ್ನಾರ ನಡೆಸಿದೆ: ತುಳಜಾರಾಮ
ಕಲಬುರಗಿ: ಈಶ್ವರಚಂದ್ರ ವಿದ್ಯಾಸಾಗರ್, ಜ್ಯೋತಿಬಾ ಫುಲೆ, ಸಾವಿತ್ರಿಬಾಯಿ ಫುಲೆ, ಕ್ರಾಂತಿಕಾರಿ ಭಗತ್ ಸಿಂಗ್, ನೇತಾಜಿಯಂತಹವರ ಆಶಯವಾದ ಸಾರ್ವಜನಿಕ ಶಿಕ್ಷಣವನ್ನು ರಾಜ್ಯ ಕಾಂಗ್ರೆಸ್ ಸರ್ಕಾರ ಕೆಪಿಎಸ್ - ಮ್ಯಾಗ್ನೆಟ್ ಯೋಜನೆಯ ಹೆಸರಲ್ಲಿ ವ್ಯಾಪಾರಕ್ಕಿಟ್ಟಿದೆ ಎಂದು ಎಐಡಿಎಸ್ಒ ಸಂಘಟನೆಯ ಜಿಲ್ಲಾ ಅಧ್ಯಕ್ಷ ತುಳಜಾರಾಮ ಅಭಿಪ್ರಾಯ ವ್ಯಕ್ತಪಡಿಸಿದರು. ಶಹಾಬಾದ್ ನ ಎಐಡಿಎಸ್ಒ ಕಚೇರಿಯಲ್ಲಿ ಸಂಘಟನೆಯ 72ನೇ ಸಂಸ್ಥಾಪನಾ ದಿನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೆಪಿಎಸ್ - ಮ್ಯಾಗ್ನೆಟ್ ಯೋಜನೆಯ ಮೂಲಕ ದುಡಿಯುವ ವರ್ಗದ ಮಕ್ಕಳನ್ನು ಶಿಕ್ಷಣದಿಂದ ವಂಚಿತರನ್ನಾಗಿಸುವ ಹುನ್ನಾರದಿಂದ ಶಿಕ್ಷಣವನ್ನು ಖಾಸಗಿಯವರ ಮಡಿಲಿಗೆ ಹಾಕಲಾಗುತ್ತಿದೆ. ರಾಜ್ಯದಲ್ಲಿ 40,000 ಸರ್ಕಾರಿ ಶಾಲೆಗಳನ್ನು ಮುಚ್ಚುವುದರ ಮೂಲಕ ಶಾಶ್ವತವಾಗಿ ಬಡ ಮಕ್ಕಳಿಗಿರುವ ಜ್ಞಾನದ ಬಾಗಿಲನ್ನು ಮುಚ್ಚಿ, ಶಿಕ್ಷಣದಿಂದ ಸಂಪೂರ್ಣವಾಗಿ ವಂಚಿತರನ್ನಾಗಿ ಮಾಡಲು ರಾಜ್ಯ ಸರ್ಕಾರ ಮುಂದಾಗಿದೆ ಎಂದರು. ಕ್ರಾಂತಿಕಾರಿಗಳ ಹೋರಾಟ, ಸಂಘರ್ಷಗಳ ಫಲವಾಗಿ ದೊರೆತ ಈ ಶಿಕ್ಷಣದ ಹಕ್ಕನ್ನು ಕಸಿದು, ಕೇವಲ ಕೆಲವೇ ಜನರ ಸ್ವತ್ತಾಗಿಸಲು ರಾಜ್ಯ ಸರ್ಕಾರ ಹುನ್ನಾರ ನಡೆಸಿದೆ. ಯಾವುದೇ ಕಾರಣಕ್ಕೂ ಸರಕಾರಿ ಶಾಲೆಗಳನ್ನು ಮುಚ್ಚಲು ಬಿಡುವುದಿಲ್ಲ ಎಂದು ಕೆಪಿಎಸ್ - ಮ್ಯಾಗ್ನೆಟ್ ಯೋಜನೆಯನ್ನು ಧಿಕ್ಕರಿಸುವಂತಾಗಿದೆ. ರಾಜ್ಯದ ವಿದ್ಯಾರ್ಥಿಗಳು ಹಾಗೂ ಪೋಷಕರು ಸಾರ್ವಜನಿಕ ಶಿಕ್ಷಣವನ್ನು ಉಳಿಸಲು ಮುಂಬರಬೇಕು ಎಂದು ಕೆರೆ ನೀಡಿದರು. ಸಂಘಟನೆಯ ಜಿಲ್ಲಾ ಖಜಾಂಚಿ ಸ್ಪೂರ್ತಿ ಗುರುಜಲಕರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಬಾಬು ಪವರ್ , ದೇವರಾಜ , ಅಜಯ್ ಗುರುಜಲಕರ ಹಾಗೂ ಜಿಲ್ಲಾ ಸಮಿತಿ ಸದಸ್ಯರಾದ ಸೃಷ್ಟಿ , ಬೃಂದಾ , ಬಿಂದು ಮತ್ತು ವಿದ್ಯಾರ್ಥಿಗಳಾದ ಅಂಬಿಕಾ, ಪ್ರಜ್ವಲ್, ಪ್ರಶಾಂತ್ , ಭೀಮಾಶಂಕರ ಸೇರಿದಂತೆ ಹಲವರು ಇದ್ದರು.
ಕಲಬುರಗಿ: ಹೊಸ ವರ್ಷದ ಪ್ರಯುಕ್ತ ಮುಂಬೈ– ಹೈದರಾಬಾದ್ ನಡುವೆ ವಿಶೇಷ ರೈಲು ಸಂಚಾರ
ಕಲಬುರಗಿ: ಹೊಸ ವರ್ಷದ ಪ್ರಯುಕ್ತ ಪ್ರಯಾಣಿಕರ ಹೆಚ್ಚುವರಿ ಸಂಚಾರವನ್ನು ಗಮನದಲ್ಲಿಟ್ಟುಕೊಂಡು ಭಾರತೀಯ ರೈಲ್ವೆಯು ಡಿ. 28 ಮತ್ತು 29 ರಂದು ಮುಂಬೈ ಮತ್ತು ಹೈದರಾಬಾದ್ ನಡುವೆ ವಿಶೇಷ ರೈಲುಗಳು ಸಂಚರಿಸಲಿವೆ ಎಂದು ಮಧ್ಯ ರೈಲ್ವೆ ಸೋಲಾಪುರ ವಿಭಾಗದ ಸಾರ್ವಜನಿಕ ಸಂಪರ್ಕ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ. ಎಲ್ಟಿಟಿ ಮುಂಬೈ–ಹೈದರಾಬಾದ್: ರೈಲು ಸಂಖ್ಯೆ 07458 ಹೈದರಾಬಾದ್–ಎಲ್ಟಿಟಿ ಮುಂಬೈ ಡಿ. 28 ರಂದು ಭಾನುವಾರ ಸಂಜೆ 5.30ಕ್ಕೆ ಹೈದರಾಬಾದ್ನಿಂದ ಹೊರಟು, ಮರುದಿನ ಬೆಳಗ್ಗೆ 10.40 ಗಂಟೆಗೆ ಎಲ್ಟಿಟಿ ಮುಂಬೈ ತಲುಪಲಿದೆ. ಎಲ್ಟಿಟಿ 07459 ಮುಂಬೈ–ಹೈದರಾಬಾದ್ ವಿಶೇಷ ರೈಲು ಸೋಮವಾರ 29 ರಂದು ಮಧ್ಯಾಹ್ನ 3.20 ಗಂಟೆಗೆ ಎಲ್ಟಿಟಿ ಮುಂಬೈಯಿಂದ ಹೊರಟು, ಮರುದಿನ ಬೆಳಗ್ಗೆ 9.00 ಗಂಟೆಗೆ ಹೈದರಾಬಾದ್ ತಲುಪಲಿದ್ದು, ಬೇಗಂಪೇಟೆ, ಲಿಂಗಂಪಳ್ಳಿ, ವಿಕಾರಾಬಾದ್, ತಂಡೂರು, ವಾಡಿ, ಕಲಬುರಗಿ, ಸೋಲಾಪುರ, ಕಲ್ಯಾಣ ಹಾಗೂ ಪುಣೆ ನಿಲ್ದಾಣಗಳಿಗೆ ತಲುಪಲಿದೆ ಎಂದು ತಿಳಿಸಲಾಗಿದೆ. ಟಿಕೆಟ್ ಬುಕ್ಕಿಂಗ್: ಹೊಸ ವರ್ಷದ ಪ್ರಯುಕ್ತ ವಿಶೇಷ ಶುಲ್ಕದೊಂದಿಗೆ ಈ ವಿಶೇಷ ರೈಲುಗಳ ಟಿಕೆಟ್ಗಳನ್ನು ಎಲ್ಲಾ ಕಂಪ್ಯೂಟರೈಸ್ಡ್ ಕಾಯ್ದಿರಿಕೆ ಕೇಂದ್ರಗಳು ಹಾಗೂ www.irctc.co.in ವೆಬ್ಸೈಟ್ ನಲ್ಲಿ ಪಡೆಯಬಹುದು. (Unreserved) ಕೋಚ್ಗಳ ಟಿಕೆಟ್ಗಳನ್ನು ರೈಲ್ವೆ ನಿಲ್ದಾಣದ ಬುಕ್ಕಿಂಗ್ ಕೌಂಟರ್ ಗಳು ಮತ್ತು UTS ಆಪ್ ಮೂಲಕ ಪಡೆಯಬಹುದಾಗಿದ್ದು, ಪ್ರಯಾಣಿಕರು ಟಿಕೆಟ್ಗಳೊಂದಿಗೆ ಪ್ರಯಾಣಿಸುವಂತೆ ರೈಲ್ವೆ ಇಲಾಖೆ ಮನವಿ ಮಾಡಿದೆ.
ಉಡುಪಿ ಎಸ್ಪಿ ಕಚೇರಿಯಲ್ಲಿ ದಲಿತರ ಕುಂದುಕೊರತೆ ಸಭೆ : ಡಿಸಿ ವರ್ಗಾವಣೆ ನಿರ್ಣಯಕ್ಕೆ ದಲಿತ ಮುಖಂಡರಿಂದ ಆಗ್ರಹ
ಉಡುಪಿ: ಉಡುಪಿ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ದಲಿತರ ಯಾವುದೇ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ. ದಲಿತ ದೌರ್ಜನ್ಯ ನಡೆದ ಸ್ಥಳಕ್ಕೆ ಭೇಟಿ ಕೊಡುತ್ತಿಲ್ಲ. ಹಾಗಾಗಿ ಅವರ ವರ್ಗಾವಣೆಗೆ ನಿರ್ಣಯ ಮಾಡುವಂತೆ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರ ಕಛೇರಿಯಲ್ಲಿ ಶನಿವಾರ ಕರೆಯಲಾದ ದಲಿತರ ಕುಂದು ಕೊರತೆಗಳ ಸಭೆಯಲ್ಲಿ ಆಗ್ರಹ ಕೇಳಿಬಂತು. ದಲಿತರ ಮನೆ ಬಿದ್ದು ಸೂರಿಲ್ಲದೆ ಹೆಬ್ರಿ ಅಂಬೇಡ್ಕರ್ ಭವನದಲ್ಲಿ ಕಳೆದ ಹಲವು ತಿಂಗಳುಗಳಿಂದ ಬದುಕು ಸಾಗಿಸುತ್ತಿದ್ದಾರೆ. ಜಿಲ್ಲಾಧಿಕಾರಿ ಈವರೆಗೆ ಬಡ ದಲಿತ ಕುಟುಂಬವನ್ನು ಭೇಟಿ ಮಾಡಿ, ಪುರ್ನವಸತಿ ಕಲ್ಪಿಸಿಲ್ಲ. ಸಾಕಷ್ಟು ಭೂಮಿ ಸಮಸ್ಯೆಗಳಿದ್ದರೂ ಪರಿಹರಿಸುತ್ತಿಲ್ಲ. ಜಿಲ್ಲಾಡಳಿತ ದಲಿತರ ಪಾಲಿಗೆ ಸಂಪೂರ್ಣ ನಿಷ್ಕ್ರೀಯವಾಗಿದೆಂದು ದಲಿತ ಮುಖಂಡರು ಆರೋಪಿಸಿದರು. ಜಿಲ್ಲಾಧಿಕಾರಿ ಕಚೇರಿಯಲ್ಲಿರುವ ವಿವಿಧ ಇಲಾಖೆಗಳ ಅಧಿಕಾರಿಗಳು ಕೂಡ ಯಾವುದೇ ಸಮಸ್ಯೆಗಳಿಗೆ ಸ್ಪಂಧಿಸುತ್ತಿಲ್ಲ. ಜಿಲ್ಲಾ ಸಹಕಾರ ಸಂಘದ ಅಧಿಕಾರಿ ತಮ್ಮನ್ನು ಭೇಟಿಯಾಗುವವರು ಸಂಜೆ 3.30 ರಿಂದ 5.30ರ ಒಳಗೆ ಭೇಟಿಯಾಗಬೇಕೆಂದು ನಾಮಫಲಕವನ್ನೇ ಹಾಕಿ ಬಿಟ್ಟಿದ್ದಾರೆ ಎಂದು ಮುಖಂಡರು ದೂರಿದರು. ದಲಿತ ದೌರ್ಜನ್ಯ ಪ್ರಕರಣಗಳಲ್ಲಿ ತನಿಖಾಧಿಕಾರಿ ತೀರಾ ನಿರ್ಲಕ್ಷ ವಹಿಸಿ ಬಿ ರಿಪೋರ್ಟ್ ಹಾಕುತ್ತಿದ್ದಾರೆ. ಕೊರಗ ಸಮೂದಾಯದವರು ತಮಗಾದ ಅನ್ಯಾಯಕ್ಕೆ ಹತ್ತು ದಿನಗಳಿಂದ ಜಿಲ್ಲಾಧಿಕಾರಿ ಕಛೇರಿ ಎದುರು ಅಹೋ ರಾತ್ರಿ ಧರಣಿ ನಡೆಸುತ್ತಿದ್ದರೂ ಅವರ ಸಮಸ್ಯೆ ಬಗೆಹರಿಸುವತ್ತ ಆಸಕ್ತಿ ತೋರಿಸುತ್ತಿಲ್ಲ ಎಂದು ದಲಿತ ಮುಖಂಡರು ಆರೋಪಿಸಿದರು. ದಲಿತರ ಮೇಲಿನ ದೌರ್ಜನ್ಯಕ್ಕಾಗಿ ಆರಂಭಿಸಲಾದ ವಿಶೇಷ ಪೊಲೀಸ್ ಠಾಣೆಯು ಸರಿಯಾಗಿ ಕಾರ್ಯಾಚರಿಸುತ್ತಿಲ್ಲ ಮತ್ತು ಅಲ್ಲಿ ಅವಶ್ಯಕ ಸಿಬ್ಬಂದಿಗಳ ನೇಮಕ ಇನ್ನೂ ಮಾಡಿಲ್ಲ. ಈ ಎಲ್ಲ ಕಾರಣಗಳಿಂದ ಜಿಲ್ಲಾಧಿಕಾರಿಯವರ ವರ್ಗಾವಣೆಗೆ ಈ ಸಭೆಯಲ್ಲಿ ನಿರ್ಣಯ ಕೈಗೊಂಡು ಸರಕಾರಕ್ಕೆ ಕಳುಹಿಸಬೇಕೆಂದು ದಲಿತ ಮುಖಂಡರು ಆಗ್ರಹಿಸಿದರು. ಸಭೆಯಲ್ಲಿ ದಸಂಸ ರಾಜ್ಯ ಸಂಘಟನಾ ಸಂಚಾಲಕ ಸುಂದರ ಮಾಸ್ತರ್, ದಸಂಸ ಮೈಸೂರು ವಿಭಾಗೀಯ ಸಂಘಟನಾ ಸಂಚಾಲಕ ಶ್ಯಾಮರಾಜ್ ಬಿರ್ತಿ, ಜಿಲ್ಲಾ ಪ್ರಧಾನ ಸಂಚಾಲಕ ಮಂಜುನಾಥ ಗಿಳಿಯಾರು, ದಲಿತ ಮುಖಂಡರಾದ ಉದಯ ಕುಮಾರ್ ತಲ್ಲೂರು, ಜಯನ್ ಮಲ್ಪೆ, ವಿಶ್ವನಾಥ್ ಪೇತ್ರಿ, ಸಂಜೀವ ಬಳ್ಕೂರು, ರಮೇಶ್ ಕೋಟ್ಯಾನ್, ಶ್ಯಾಮ ಸುಂದರ ತೆಕ್ಕಟ್ಟೆ, ಸುರೇಶ ಹಕ್ಲಾಡಿ, ಚಂದ್ರ ಆಲ್ತಾರು, ಮಂಜುನಾಥ ಬಾಳ್ಕುದ್ರು, ಸುರೇಶ ಬಾರ್ಕೂರು, ವಡ್ಡರ್ಸೆ ಶ್ರೀನಿವಾಸ್ ಮೊದಲಾದವರು ಉಪಸ್ಥಿತರಿದ್ದರು.
ಕಾರ್ಕಳ| ಶಗುನ್ ಎಸ್ ವರ್ಮಗೆ ಜೈನ ಸಮುದಾಯದಿಂದ ಸನ್ಮಾನ
ಕಾರ್ಕಳ : ವಿಶ್ವ ಶಾಲಾ ಮಕ್ಕಳ ವಾಲಿಬಾಲ್ ಚಾಂಪಿಯನ್ ಶಿಪ್ 15ರ ಭಾರತ ತಂಡದಲ್ಲಿ ಸ್ಥಾನ ಪಡೆದ ಕರ್ನಾಟಕದ ಏಕೈಕ ಆಟಗಾರ್ತಿ ಶಗುನ್ ಎಸ್ ವರ್ಮ ಹೆಗ್ಡೆಯವರನ್ನು ಕಾರ್ಕಳ ಜೈನ ಮಠದ ಪರವಾಗಿ ಆಡಳಿತ ಸಮಿತಿಯು ಸನ್ಮಾನಿಸಿ ಗೌರವಿಸಿತು. ಜೈನ ಸಮಾಜದ ಹಿರಿಯರು ಹಾಗೂ ರಾಜ್ಯ ಸಹಕಾರಿ ಮಾರುಕಟ್ಟೆ ಸಮಿತಿ ಮತ್ತು ಎಸ್. ಸಿ. ಡಿ. ಸಿ. ಸಿ. ಬ್ಯಾಂಕಿನ ಅಧ್ಯಕ್ಷರಾಗಿರುವ ಕಾರ್ಕಳದ ಡಾ. ಎಂ. ಎನ್. ರಾಜೇಂದ್ರ ಕುಮಾರ್ ಅವರ ನೇತೃತ್ವದಲ್ಲಿ ಕಾರ್ಕಳ ಜೈನ ಮಠದ ರಾಜಗುರು ಧ್ಯಾನಯೋಗಿ ಲಲಿತಕೀರ್ತಿ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಯವರ ಸಾನಿಧ್ಯದಲ್ಲಿ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಆಶೀರ್ವಚಿಸಿದ ಲಲಿತಕೀರ್ತಿ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿ, ಯುವ ಪ್ರತಿಭೆಗಳನ್ನು ಪ್ರೋತ್ಸಾಹ ಮಾಡುವ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮಗಳಿಂದ ಅವರನ್ನು ಮತ್ತಷ್ಟು ಉತ್ತೇಜಿಸಲು ಸಹಕಾರಿಯಾಗುತ್ತದೆ ಎಂದು ಹೇಳಿದರು. ಹಿರಿಯರಾದ ಅನಂತರಾಜ್ ಪೂವನಿ, ಮೋಹನ್ ಪಡಿವಾಳ್, ಅಂಡರ್ ಮಹಾವೀರ ಹೆಗ್ಡೆ, ಮಹಾವೀರ ಹೆಗ್ಡೆ, ಎನ್. ಪ್ರಭಾತ್, ಧನಕೀರ್ತಿ ಕಡಂಬ, ಹಿರಿಯ ನ್ಯಾಯವಾದಿ ಸನತ್ ಕುಮಾರ್ ಜೈನ್, ಅಶೋಕ್ ಎಚ್ ಎಮ್, ವಿನಯ ಅರಿಗ ಮತ್ತಿತರರು ಉಪಸ್ಥಿತರಿದ್ದರು. ವರ್ಧಮಾನ್ ಶಾಲೆಯ ಸಂಚಾಲಕಿ ಶಶಿಕಲಾ ಹೆಗ್ಡೆ ಕಾರ್ಯಕ್ರಮ ನಿರೂಪಿಸಿದರು.
ಕಾರಟಗಿ: 3ನೇ ಹಂತದ ಜಲಜಾಗೃತಿ - ಜನಜಾಗೃತಿ ಪಾದಯಾತ್ರೆ
ಕಲುಷಿತ ನೀರಿನಿಂದ ಆರೋಗ್ಯದ ಮೇಲೆ ವ್ಯತರಿಕ್ತ ಪರಿಣಾಮ: ರಾಜಶ್ರೀ ಚೌಧರಿ
ಕಲಾವಿದರ ಪ್ರತಿಭೆಗೆ ಹೆಚ್ಚು ಅವಕಾಶ ಲಭಿಸಲಿ: ಶಾಸಕ ವೇಣುಗೋಪಾಲ ನಾಯಕ
ಸುರಪುರ: ಈ ಭಾಗದ ಅನೇಕ ಜನ ಪ್ರತಿಭಾವಂತ ಕಲಾವಿದರಿಗೆ ಇನ್ನು ಹೆಚ್ಚು ಅವಕಾಶಗಳನ್ನ ಮುಂದಿನ ದಿನಗಳಲ್ಲಿ ನೀಡುವಲ್ಲಿ ಶ್ರಮಿಸುತ್ತೇನೆ ಎಂದು ಶಾಸಕ ರಾಜಾ ವೇಣುಗೋಪಾಲ ನಾಯಕ ಹೇಳಿದರು. ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿಗೆ ಭಾಜನರಾದ ಕಲಾವಿದ ಹನುಮಂತ ಈರಗೊಟ ಅವರಿಗೆ ಸನ್ಮಾನ ಸಮಾರಂಭ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಜಾನಪದ ಕಲೆ, ಸಂಸ್ಕೃತಿ ಮೇಲೆ ಜನರಿಗೆ ಹೆಚ್ಚು ಆಸಕ್ತಿ ಬರುತ್ತಿದ್ದು ಇಂತಹ ಕಲೆ ಸಂಸ್ಕೃತಿ ಪರಂಪರೆಯನ್ನು ಉಳಿಸಿ ಬೆಳೆಸುವಲ್ಲಿ ನಾನು ನಿರಂತರವಾಗಿ ಶ್ರಮಿಸುತ್ತೇನೆ. ನಮ್ಮ ಭಾಗದ ಮೂಲ ಕಲಾವಿದರಿಗೆ ಸರ್ಕಾರ ಮಟ್ಟದಲ್ಲಿ ಗುರುತಿಸಲು ಶ್ರಮ ವಹಿಸುತ್ತೇನೆ ಎಂದು ಶಾಸಕರು ಹೇಳಿದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರಾದ ಚನ್ನಬಸಪ್ಪ ಮುಧೋಳ ಮಾತನಾಡಿ, ನರಸಿಂಗಪೇಟ್ ಪರಿಸರಕ್ಕೆ ಜಾನಪದದ ಹಿನ್ನೆಲೆ ಇದೆ. ಇಲ್ಲಿ ಮೊಹರಂ ಸಂಭ್ರಮ, ಭಜನಾ ಸಂಭ್ರಮ,ಜಾನಪದ ಹಾಡುಗಳ ದೊಡ್ಡ ಸುಗ್ಗಿಯೇ ನಡೆಯುತ್ತದೆ. ಇಂತ ಒಬ್ಬ ಮೂಲ ದೇಶೀ ಪ್ರತಿಭೆ ಕಲಾವಿದನನ್ನು ಅಕಾಡೆಮಿ ಗುರುತಿಸಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಸಗರನಾಡು ಸೇವಾ ಪ್ರತಿಷ್ಠಾನ ಅಧ್ಯಕ್ಷ ಪ್ರಕಾಶ ಅಂಗಡಿ ಕನ್ನೆಳ್ಳಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ನಮ್ಮ ಸುರಪುರ ತಾಲೂಕಿನ ಅನೇಕ ಕಲಾವಿದರಿಗೆ ಸರಕಾರದ ವಿವಿಧ ಅಕಾಡೆಮಿಗಳ ವಾರ್ಷಿಕ ಮತ್ತು ಗೌರವ ಪ್ರಶಸ್ತಿಗಳು ಲಭಿಸುತ್ತಿರುವುದು ತುಂಬಾ ಉತ್ತಮ ಬೆಳವಣಿಗೆ ಮುಂದಿನ ದಿನಗಳಲ್ಲಿ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ವಿಶ್ವವಿದ್ಯಾಲಯದ ದತ್ತಿ ಗೌರವ ಪ್ರಶಸ್ತಿಗಳು ಕೂಡ ಈ ಭಾಗದ ಕಲಾವಿದರಿಗೆ ಲಭಿಸಲಿ. ಇಂತಹ ಮೂಲ ಕಲಾವಿದರನ್ನು ಪರಿಚಯಿಸುವ ಪುಸ್ತಕಗಳು ಅಕಾಡೆಮಿ ಮತ್ತು ಪ್ರಸಾರಂಗಗಳ ಮೂಲಕ ಎಂದು ಆಶಯ ವ್ಯಕ್ತಪಡಿಸಿದರು. ಕುಂಬಾರಪೇಟದ ಶರಣಯ್ಯ ಮುತ್ಯ ಸಾನಿದ್ಯ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಜಾನಪದ ಅಕಾಡೆಮಿ ಸದಸ್ಯ ಶಿವಮೂರ್ತಿ ತನಿಖೆದರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಿಂಗರಾಜ ಭಾಚಿಮಟ್ಟಿ ನಗರಸಭ ಸದಸ್ಯ ಜುಮ್ಮಣ್ಣ, ಮುಖಂಡರಾದ ಮಲ್ಲಣ್ಣ ಸಾಹುಕಾರ ಮುಧೋಳ, ಅಬ್ದುಲ ಗಫಾರಿ ನಗನೂರಿ, ರಂಗನಗೌಡ ದೇವಿಕೇರಿ,ಬೀರಲಿಂಗಪ್ಪ ಬಾದ್ಯಾಪೂರ, ಷಣ್ಮುಖಯ್ಯ ಸ್ವಾಮಿ,ಶರಣಪ್ಪ ಮುಧೋಳ, ದೇವಪ್ಪ ಮುಧೋಳ, ಸೂಗಪ್ಪ ಗೊಬ್ಬುರ, ಅಕ್ಷಯ ಶೆಠ, ಶರಣಪ್ಪ ಹಂಗರಗಿ, ಸೇರಿದಂತೆ ಇತರರಿದ್ದರು, ಇದೇ ಸಂದರ್ಭದಲ್ಲಿ ಅಕಾಡೆಮಿ ಪ್ರಶಸ್ತಿಗೆ ಭಾಜನರಾದ ಹನುಮಂತ ಈರಗೊಟ ದಂಪತಿಗಳಿಗೆ ವಿಶೇಷವಾಗಿ ಸನ್ಮಾನಿಸಲಾಯಿತು, ಬಸವರಾಜ ತನಿಕೆದಾರ ಪ್ರಾರ್ಥಿಸಿದರು ಕಾರ್ಯಕ್ರಮವನ್ನು ಬಸವಣ್ಣಪ್ಪ ಹಂಗರಗಿ ನಿರೂಪಿಸಿ ವಂದಿಸಿದರು,
ಮಂಗಳೂರು| ಬಜಾಲ್ ನಂತೂರು ಬದ್ರಿಯಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಾರ್ಷಿಕ ಕ್ರೀಡಾಕೂಟ
ಮಂಗಳೂರು: ಬಜಾಲ್ ನಂತೂರು ಬದ್ರಿಯಾ ಆಂಗ್ಲ ಮಾಧ್ಯಮ ಶಾಲೆಯ ವಾರ್ಷಿಕ ಕ್ರೀಡಾಕೂಟ ಶನಿವಾರ ಬಜಾಲ್ ನಂತೂರಿನ ಸಾಗರ್ ಕ್ರೀಡಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಬಜಾಲ್ ನಂತೂರು ಬದ್ರಿಯಾ ಆಂಗ್ಲ ಮಾಧ್ಯಮ ಶಾಲೆಯ ಅಧ್ಯಕ್ಷ, ಮ.ನ.ಪಾ ಮಾಜಿ ಸದಸ್ಯ ಅಬ್ದುಲ್ ರವೂಫ್, ವಿದ್ಯಾರ್ಥಿ ಜೀವನದಲ್ಲಿ ಕ್ರೀಡೆಯು ದೈಹಿಕ ಮತ್ತು ಮಾನಸಿಕ ಬೆಳವಣಿಗೆಗೆ ಅತ್ಯಗತ್ಯವಾಗಿದ್ದು, ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ದೈಹಿಕ ಚಟುವಟಿಕೆಗಳು ಸಹಕಾರಿಯಾಗಿದೆ ಎಂದರು. ಈ ಸಂದರ್ಭ ಜಿಲ್ಲಾ ಮಟ್ಟದ ವಿವಿಧ ಕ್ರೀಡೆಗಳಲ್ಲಿ ಸಾಧನೆಗೈದ ವಿದ್ಯಾರ್ಥಿಗಳು ಹಾಗೂ 2025ನೇ ಸಾಲಿನ ಎಸೆಸೆಲ್ಸಿ ಪರೀಕ್ಷೆಯಲ್ಲಿ ಗರಿಷ್ಠ ಅಂಕಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಶಾಲಾ ಉಪಾಧ್ಯಕ್ಷ, ಮ.ನ.ಪಾ ಮಾಜಿ ಸದಸ್ಯ ಕೆ.ಇ. ಅಶ್ರಫ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಬಜಾಲ್ ನಂತೂರ್ ಕ್ಲಸ್ಟರ್ ಸಿ.ಆರ್.ಪಿ ನಿರ್ಮಲ ವಿಲ್ಮಾ ರೋಡ್ರಿಗಸ್ ಪ್ರಾಸ್ತಾವಿಕ ಮಾತನಾಡಿದರು. ಮೊಯ್ದೀನ್ ಕುಂಞಿ ಧ್ವಜಾರೋಹಣ ನೇರವೇರಿಸಿದರು. ಈ ವೇಳೆ ಉಪಾಧ್ಯಕ್ಷ ಹನೀಫ್ ಎಚ್.ಎಸ್, ಪ್ರಧಾನ ಕಾರ್ಯದರ್ಶಿ ಅಬ್ದುಲ್ ಹಮೀದ್, ಸಂಚಾಲಕ ಬಿ.ಫಕ್ರುದ್ದೀನ್, ಕಾರ್ಯದರ್ಶಿಗಳಾದ ಎಂ.ಹನೀಫ್ ಕೆಳಗಿನ ಮನೆ, ಮುಹಮ್ಮದ್ ಅಶ್ರಫ್ ತೋಟ, ನಝೀರ್ ಬಜಾಲ್, ಇಕ್ಬಾಲ್ ಅಹ್ಸನಿ, ಶಾಲಾ ಮೇಲ್ವಿಚಾರಕಿ ಖೈರುನ್ನಿಸ, ದೈಹಿಕ ಶಿಕ್ಷಕ ಸುರೇಶ್ ಕುಮಾರ್, ಸಹಶಿಕ್ಷಕಿ ನೌಶೀನ್ ಹಾಗೂ ಶಾಲಾ ಶಿಕ್ಷಕ ವೃಂದ, ಆಡಳಿತ ಸಮಿತಿ ಸದಸ್ಯರು ಉಪಸ್ಥಿತರಿದ್ದರು. ಶರತ್ ಮಾಸ್ಟರ್ ಸ್ವಾಗತಿಸಿದರು. ಸಹಶಿಕ್ಷಕಿ ಗಾಯತ್ರಿ ವಂದಿಸಿದರು. ವಿದ್ಯಾರ್ಥಿನಿ ರಿನಾಝ್ ಕಾರ್ಯಕ್ರಮ ನಿರೂಪಿಸಿದರು.
Bengaluru | ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ಯುವತಿಯ ಹಿಂಬಾಲಿಸಿ ಕಿರುಕುಳ; ಮೂವರ ಬಂಧನ
ಬೆಂಗಳೂರು : ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ಯುವತಿಯನ್ನು ಹಿಂಬಾಲಿಸಿ ಕಿರುಕುಳ ನೀಡಿದ ಪ್ರಕರಣದಡಿ ಮೂವರನ್ನು ಇಲ್ಲಿನ ಸುದ್ದಗುಂಟೆಪಾಳ್ಯ ಠಾಣೆ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಲ್ಲಿ 18 ವರ್ಷದ ಓರ್ವ ಗ್ಯಾರೇಜ್ ಕೆಲಸ ಮಾಡುತ್ತಿದ್ದು, 19 ವರ್ಷದ ಇತರ ಇಬ್ಬರು ಕೋಳಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಡಿಸೆಂಬರ್ 24ರಂದು ದ್ವಿಚಕ್ರ ವಾಹನದಲ್ಲಿ ಜಯನಗರ ಮೆಟ್ರೋ ನಿಲ್ದಾಣದಿಂದ ಬಿಟಿಎಂ ಲೇಔಟ್ ಕಡೆಗೆ ಹೋಗುತ್ತಿದ್ದ ಯುವತಿಯನ್ನು ಹಿಂಬಾಲಿಸಿ ಆರೋಪಿಗಳು ಕಿರುಕುಳ ನೀಡಿದ್ದರು. ಘಟನೆಯ ವಿಡಿಯೋವನ್ನು ಪ್ರಯಾಣಿಕರೊಬ್ಬರು ತಮ್ಮ ಮೊಬೈಲ್ ಫೋನ್ನಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಬೆಂಗಳೂರು ಪೊಲೀಸರಿಗೆ ಟ್ಯಾಗ್ ಮಾಡಿದ್ದರು. ಯುವತಿಯನ್ನು ಪತ್ತೆ ಹಚ್ಚಿ ಆಕೆಯ ದೂರಿನ ಆಧಾರದ ಮೇಲೆ ಎಸ್.ಜಿ.ಪಾಳ್ಯ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆ(ಬಿಎನ್ಎಸ್)ಯ ಸಂಬಂಧಿತ ಸೆಕ್ಷನ್ಗಳ ಅಡಿಯಲ್ಲಿ ಎಫ್ಐಆರ್ ದಾಖಲಿಸಿಕೊಳ್ಳಲಾಗಿತ್ತು. ಸದ್ಯ, ಮೂವರು ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
MGNREGA ಯೋಜನೆ ಬದಲಾವಣೆ ವಿರೋಧಿಸಿ ರಾಜ್ಯದ ಪ್ರತಿ ಪಂಚಾಯಿತಿಯಿಂದಲೂ ಹೋರಾಟ ಆರಂಭ : ಡಿ.ಕೆ.ಶಿವಕುಮಾರ್
ಬೆಂಗಳೂರು : ಮ-ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿ ಹೆಸರು ಕೈಬಿಟ್ಟಿರುವುದು ಹಾಗೂ ಇತರೆ ಬದಲಾವಣೆ ಮಾಡಿರುವ ಕೇಂದ್ರ ಸರಕಾರದ ಕ್ರಮ ವಿರೋಧಿಸಿ ಜ.5ರಿಂದ ರಾಜ್ಯದ ಪ್ರತಿ ಪಂಚಾಯಿತಿಂದಲೂ ಬೃಹತ್ ಹೋರಾಟ ಆರಂಭಿಸಲಾಗುವುದು ಎಂದು ಕೆಪಿಸಿಸಿ ಅಧ್ಯಕ್ಷರೂ ಆದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ರವಿವಾರ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಭವನದಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ವತಿಯಿಂದ ಆಯೋಜಿಸಲಾಗಿದ್ದ ಕಾಂಗ್ರೆಸ್ ಸಂಸ್ಥಾಪನಾ ದಿನಾಚರಣೆ ಸಮಾರಂಭವನ್ನುದ್ದೇಶಿಸಿ ಮಾತನಾಡಿದ ಅವರು, ಮ-ನರೇಗಾ ಹೆಸರು ಬದಲಾವಣೆ ವಿರೋಧಿಸಿ ಜ.5ರಿಂದ ಪಂಚಾಯತಿ ಮಟ್ಟದಿಂದ ಈ ಹೋರಾಟ ಆರಂಭಿಸಲಾಗುವುದು ಎಂದು ತಿಳಿಸಿದರು. ಗ್ಯಾರಂಟಿ ಸಮಿತಿ ಸದಸ್ಯರು, ಬೆಸ್ಕಾಂ, ಆರೋಗ್ಯ ಸಮಿತಿ ಸೇರಿದಂತೆ ಇತರೇ ಇಲಾಖೆಗಳಿಂದ ನಾಮನಿರ್ದೇಶನ ಮಾಡಿರುವ ಸದಸ್ಯರ ಸಂಖ್ಯೆಯೇ 150ರಿಂದ200 ಇದ್ದು, ಇವರೆಲ್ಲರೂ ಹೋರಾಟದ ಜವಾಬ್ದಾರಿ ತೆಗೆದುಕೊಳ್ಳಬೇಕು. ಇದರ ಉಸ್ತುವಾರಿಗೆ ಜಿ.ಸಿ.ಚಂದ್ರಶೇಖರ್ ಅವರ ನೇತೃತ್ವದಲ್ಲಿ ವೀಕ್ಷಕರನ್ನು ನೇಮಿಸಲಾಗುತ್ತದೆ ಎಂದು ಅವರು ಹೇಳಿದರು. ಎರಡು ಮೂರು ತಿಂಗಳಿನಲ್ಲಿ ಜಿಲ್ಲಾ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿ ಚುನಾವಣೆಗಳನ್ನು ನಡೆಸಬೇಕಿದೆ. ಅದಕ್ಕೂ ಈಗಿನಿಂದಲೇ ತಯಾರಿ ಮಾಡಿಕೊಳ್ಳಬೇಕು ಎಂದು ಸೂಚನೆ ನೀಡಿದ್ದೇನೆ. ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೂ ಇದರ ಬಗ್ಗೆ ತಿಳಿಸಿದ್ದು, ಮೀಸಲಾತಿ ವಿಚಾರವಾಗಿ ನ್ಯಾಯಾಲಯಗಳಲ್ಲಿ ಇರುವ ಕಂಟಕಗಳನ್ನು ಬಗೆಹರಿಸಿ ಇನ್ನೆರಡು ತಿಂಗಳಲ್ಲಿ ಚುನಾವಣೆ ನಡೆಸಲು ಸಿದ್ಧತೆ ಮಾಡಿಕೊಳ್ಳಬೇಕು ಎಂದು ತಿಳಿಸಲಾಗಿದೆ ಎಂದರು. ಅಂದು ಮಹಾತ್ಮ ಗಾಂಧಿಯವರ ನೇತೃತ್ವದಲ್ಲಿ ಎಐಸಿಸಿ ಅಧಿವೇಶನ ಹೇಗೆ ನಡೆಯಿತು ಎನ್ನುವ ಕುರಿತಾದ ಗಾಂಧಿ ಭಾರತ ಪುಸ್ತಕವನ್ನು ರೂಪಿಸಿದ್ದೇನೆ. ಇಂಗ್ಲಿಷ್ ಹಾಗೂ ಕನ್ನಡದಲ್ಲಿ ಲಭ್ಯವಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರೇ ಇದನ್ನು ಶೀಘ್ರದಲ್ಲಿಯೇ ಬಿಡುಗಡೆ ಮಾಡಲಿದ್ದಾರೆ. ಜತೆಗೆ, ಇದರ ನೆನಪಿಗೆ 100 ಕಾಂಗ್ರೆಸ್ ಕಚೇರಿಗಳನ್ನು ನಿರ್ಮಾಣ ಮಾಡಬೇಕು ಎಂದು ಹೊರಟಿದ್ದೇವೆ. ಈಗಾಗಲೇ 70 ಕಾಂಗ್ರೆಸ್ ಕಚೇರಿಗಳು ನಿರ್ಮಾಣವಾಗಿವೆ. ಬೆಂಗಳೂರಿನಲ್ಲೂ ಎರಡು ಕಚೇರಿಗಳ ನಿರ್ಮಾಣ ಮಾಡಲಾಗುವುದು. ಒಂದಕ್ಕೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಇನ್ನೊಂದು ಕಚೇರಿ ಜವಾಬ್ದಾರಿಯನ್ನು ನಾನು ತೆಗೆದುಕೊಂಡಿದ್ದೇನೆ. ಒಂದು ಜಿಲ್ಲಾ ಕಚೇರಿ ಇನ್ನೊಂದು ರಾಜ್ಯ ಕಚೇರಿ. ಮೈಸೂರಿನಲ್ಲಿಯೂ ಸಹ ದೊಡ್ಡ ಕಚೇರಿ ನಿರ್ಮಾಣ ಮಾಡಲಾಗುವುದು. ಇದರ ಜವಾಬ್ದಾರಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ತೆಗೆದುಕೊಂಡಿದ್ದಾರೆ ಎಂದು ಮಾಹಿತಿ ನೀಡಿದರು. ಹೀಗೆ, ಎಲ್ಲ ಜಿಲ್ಲಾ ಹಾಗೂ ತಾಲೂಕು ಅಧ್ಯಕ್ಷರು ಅಡಿಪಾಯ ಹಾಕಲು ಕಾಯಲು ಹೋಗಬೇಡಿ. ಏಕೆಂದರೆ ಮಲ್ಲಿಕಾರ್ಜುನ ಖರ್ಗೆ, ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಬೆಂಗಳೂರಿನಲ್ಲಿ ವರ್ಚುಯಲ್ ಆಗಿ ಎಲ್ಲ ಕಾಂಗ್ರೆಸ್ ಭವನಗಳ ಅಡಿಪಾಯಗಳಿಗೆ ಚಾಲನೆ ನೀಡಲಿದ್ದಾರೆ. ಆದರೆ ಎಲ್ಲ ತಯಾರಿಗಳನ್ನು ಈಗಲೇ ಮಾಡಿಕೊಳ್ಳಬೇಕು ಎಂದು ಸೂಚನೆ ನೀಡಿದ್ದೇನೆ ಎಂದು ಅವರು ತಿಳಿಸಿದರು. ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವ ಕೆ.ಜೆ.ಜಾರ್ಜ್, ಎಐಸಿಸಿ ಕಾರ್ಯದರ್ಶಿ ಗೋಪಿನಾಥ್ ಪಳನಿಯಪ್ಪನ್, ಗ್ಯಾರಂಟಿ ಯೋಜನೆ ಅನುಷ್ಟಾ ನ ಸಮಿತಿ ರಾಜ್ಯಾಧ್ಯಕ್ಷ ಎಚ್.ಎಂ.ರೇವಣ್ಣ, ಕೆಪಿಸಿಸಿ ಕಾರ್ಯಾಧ್ಯಕ್ಷ ಜಿ.ಸಿ.ಚಂದ್ರಶೇಖರ್, ಎಐಸಿಸಿ ಕಾರ್ಯದರ್ಶಿ ನಿವೇದಿತಾ ಆಳ್ವಾ, ಎಐಸಿಸಿ ಜಂಟಿ ಕಾರ್ಯದರ್ಶಿ ಡಾ.ಪಾಲಕ್ ವರ್ಮಾ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್, ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಎಚ್.ಎಸ್.ಮಂಜುನಾಥ್ ಗೌಡ, ಮಾಜಿ ಸಂಸದ ಪ್ರೊ.ರಾಜೀವ್ ಗೌಡ ಸೇರಿದಂತೆ ಪ್ರಮುಖರಿದ್ದರು. ಬಿಜೆಪಿ ಆಡಳಿತ ರಾಜ್ಯಗಳಲ್ಲಿ ಜಿ ರಾಮ್ ಜಿ ಅಸಾಧ್ಯ..! ಕಾಂಗ್ರೆಸ್ ಸರಕಾರ ಗ್ರಾಮೀಣ ಭಾಗದಲ್ಲಿ ಬಡವರಿಗೆ ಉದ್ಯೋಗ ನೀಡುವ ಮ-ನರೇಗಾ ಯೋಜನೆ ತಂದಿತ್ತು. ಕೇಂದ್ರ ಬಿಜೆಪಿ ಸರಕಾರ ಈ ಯೋಜನೆಯನ್ನು ಹತ್ಯೆ ಮಾಡಲು ಮುಂದಾಗಿದೆ. ಈ ಯೋಜನೆಯಲ್ಲಿ 60:40 ಅನುಪಾತದಲ್ಲಿ ಅನುದಾನ ಹಂಚಿಕೆ ಮಾಡಿಕೊಳ್ಳುವ ಬದಲಾವಣೆ ತಂದಿದ್ದಾರೆ. ನೂತನ ತಿದ್ದುಪಡಿ ಯೋಜನೆಯನ್ನು ಬಿಜೆಪಿ ಆಡಳಿತ ರಾಜ್ಯಗಳಲ್ಲೂ ಅನುಷ್ಠಾನಕ್ಕೆ ತರಲು ಸಾಧ್ಯವಿಲ್ಲ. -ಡಿ.ಕೆ.ಶಿವಕುಮಾರ್, ಉಪಮುಖ್ಯಮಂತ್ರಿ. ಅಲೆಗ್ಸಾಂಡರ್ ಶಾಶ್ವತವಲ್ಲ, ಬಿಜೆಪಿ ಯಾವ ಲೆಕ್ಕ? : ಬಿಜೆಪಿ ಹಾಗೂ ಅವರ ಅಧಿಕಾರ ಯಾವುದೂ ಶಾಶ್ವತವಲ್ಲ. ಆ ಪಕ್ಷ ಇನ್ನೆಷ್ಟು ದಿನ ಇರುತ್ತದೆ? ಎಲ್ಲದಕ್ಕೂ ಕೊನೇ ಎಂಬುದು ಇರಲೇ ಬೇಕಲ್ಲವೇ?.ಅದು ಅಲ್ಲದೆ, ಎಂತೆಂಥಹ ಚಕ್ರವರ್ತಿಗಳೇ ಮೂಲೆಗುಂಪಾಗಿ ಹೋಗಿದ್ದಾರೆ. ಅಲೆಗ್ಸಾಂಡರ್ ದಿ ಗ್ರೇಟ್ ಇಡೀ ಪ್ರಪಂಚದ ಮುಕ್ಕಾಲು ಪಾಲು ಗೆದ್ದವರೇ ಶಾಶ್ವತವಲ್ಲ. ಸದ್ದಾಂ ಹುಸೇನ್ ಕೊನೆಗಾಲದಲ್ಲಿ ಅವಿತುಕೊಳ್ಳಬೇಕಾಯಿತು. ಇನ್ನು ಬೇರೆಯವರದು ಯಾವ ಲೆಕ್ಕ?. -ಡಿ.ಕೆ.ಶಿವಕುಮಾರ್, ಉಪಮುಖ್ಯಮಂತ್ರಿ.
ಹೊಸ ವರ್ಷಕ್ಕೆ ಸಜ್ಜಾದ ಕರಾವಳಿ ಪ್ರವಾಸಿ ತಾಣ; ದೇವಸ್ಥಾನ, ಬೀಚ್ಗಳಲ್ಲಿ ಜನ ಜಾತ್ರೆ, ಟ್ರಾಫಿಕ್ ಹೆಚ್ಚಳ
ಹೊಸ ವರ್ಷಕ್ಕೆ ಇನ್ನು ಮೂರು ದಿನ ಬಾಕಿ ಇರುವ ಮುನ್ನವೇ ಕರಾವಳಿ ಕರ್ನಾಟಕ ನೂತನ ವರ್ಷ ಬರಮಾಡಿಕೊಳ್ಳಲು ಸಜ್ಜಾಗಿದೆ. ಪ್ರವಾಸಿ ತಾಣಗಳು, ದೇವಸ್ಥಾನಗಳು, ಬೀಚ್ಗಳಲ್ಲಿ ಜನಸಾಗರವೇ ಹರಿದುಬಂದಿದೆ. ಕ್ರಿಸ್ಮಸ್ ರಜೆಯಲ್ಲಿದ್ದವರು ಹೊಸ ವರ್ಷವನ್ನು ಕರಾವಳಿಯಲ್ಲೇ ಆಚರಿಸಲು ಬಂದಿದ್ದಾರೆ. ಕರಾವಳಿ ಉತ್ಸವ, ಪಿಲಿಕುಳ ಪರ್ಬ, ಬೀಚ್ಗಳ ಕಾರ್ಯಕ್ರಮಗಳು ಜನರನ್ನು ಸೆಳೆಯುತ್ತಿವೆ. ನಗರದಲ್ಲಿ ವಿವಾಹ ಕಾರ್ಯಕ್ರಮಗಳಿಂದಾಗಿ ಟ್ರಾಫಿಕ್ ಜಾಮ್ ಕೂಡ ಕಂಡುಬಂದಿದೆ. ಬಸ್ಗಳಲ್ಲೂ ಪ್ರಯಾಣಿಕರ ಓಡಾಟ ಹೆಚ್ಚಾಗಿದೆ.
ಯಾದಗಿರಿಯಲ್ಲಿ ರಾಜ್ಯಮಟ್ಟದ 5ನೇ ವೈಜ್ಞಾನಿಕ ಸಮ್ಮೇಳನ
ಸಮ್ಮೇಳನಾಧ್ಯಕ್ಷ ವಿಶ್ವಾರಾಧ್ಯ ಸತ್ಯಂಪೇಟೆ ಅವರ ಮೆರವಣಿಗೆ
ಉಳ್ಳಾಲ| ಕೇರಳ ಯಾತ್ರೆ ಪ್ರಯುಕ್ತ ಪೂರ್ವ ಭಾವಿ ಸಭೆ
ಉಳ್ಳಾಲ : ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ಸಂಸ್ಥೆಯ ಶತಮಾನೋತ್ಸವದ ಅಂಗವಾಗಿ 'ಮನುಷ್ಯರೊಂದಿಗೆ' ಎಂಬ ಧ್ಯೇಯದಡಿ ಕೇರಳ ಮುಸ್ಲಿಮ್ ಜಮಾಅತ್ ವತಿಯಿಂದ ಉಳ್ಳಾಲ ಖಾಝಿ ಇಂಡಿಯನ್ ಗ್ರ್ಯಾಂಡ್ ಮುಫ್ತಿ ಎಪಿ ಅಬೂಬಕ್ಕರ್ ಮುಸ್ಲಿಯಾರ್ ಕಾಂತಪುರಂ ಹಾಗೂ ಇಬ್ರಾಹಿಮ್ ಖಲೀಲ್ ಅಲ್ ಬುಖಾರಿ ಕಡಲುಂಡಿ ತಂಙಳ್ ನೇತೃತ್ವದಲ್ಲಿ ಜ.1ರಂದು ಉಳ್ಳಾಲ ದರ್ಗಾ ಝಿಯಾರತ್ ನೊಂದಿಗೆ ಆರಂಭಗೊಳ್ಳಲಿರುವ ಕೇರಳ ಯಾತ್ರೆ ಪ್ರಯುಕ್ತ ಪೂರ್ವ ಭಾವಿ ಸಭೆ ಉಳ್ಳಾಲ ದರ್ಗಾ ಕಚೇರಿಯಲ್ಲಿ ರವಿವಾರ ನಡೆಯಿತು. ಈ ವೇಳೆ ಸ್ಪೀಕರ್ ಯುಟಿ ಖಾದರ್ ಮಾತನಾಡಿ, ಉಳ್ಳಾಲ ಝಿಯಾರತ್ ನೊಂದಿಗೆ ಈ ಕೇರಳ ಯಾತ್ರೆ ಆರಂಭಗೊಳ್ಳುವುದರಿಂದ ಸೂಕ್ತ ಬಂದೋಬಸ್ತ್ ಏರ್ಪಡಿಸಿ, ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡಿಕೊಡಬೇಕು ಎಂದು ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದರು. ದರ್ಗಾ ಅಧ್ಯಕ್ಷ ಹನೀಫ್ ಹಾಜಿ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಸಂಚಾರ ವಿಭಾಗದ ಎಸಿಪಿ ನಜ್ಮಾ ಫಾರೂಕಿ, ಉಳ್ಳಾಲ ಇನ್ಸ್ಪೆಕ್ಟರ್ ವಿರೂಪಾಕ್ಷ, ದರ್ಗಾ ಕೋಶಾಧಿಕಾರಿ ನಾಝೀಮ್ ಮುಕಚೇರಿ, ಕಾರ್ಯದರ್ಶಿ ಇಸಾಕ್, ಸದಸ್ಯರು ಉಪಸ್ಥಿತರಿದ್ದರು.
ಪೋಷಕರು ಮಕ್ಕಳಿಗೆ ಶಿಕ್ಷಣವನ್ನು ನೀಡಿ ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಬೇಕು: ಝಕರಿಯ ಜೋಕಟ್ಟೆ
ಕೊಣಾಜೆ: ಪೋಷಕರು ಮಕ್ಕಳಿಗೆ ಆಸ್ತಿ ಮಾಡಿಡುವ ಬದಲು ಅವರಿಗೆ ಸರಿಯಾದ ಶಿಕ್ಷಣವನ್ನು ನೀಡಬೇಕು. ಅವಾಗ ಮಕ್ಕಳು ನೈತಿಕತೆಯಲ್ಲಿ ಮುಂದೆ ಸಾಗುತ್ತಾರೆ ಮಾತ್ರವಲ್ಲದೇ ಸಮಾಜದಲ್ಲಿ ಉತ್ತಮ ಪ್ರಜೆಯಾಗಿ ಮೂಡಿ ಬರುತ್ತಾರೆ ಎಂದು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಝಕರಿಯ ಜೋಕಟ್ಟೆ ಅಭಿಪ್ರಾಯ ಪಟ್ಟರು. ಹರೇಕಳ ಶ್ರೀ ರಾಮಕೃಷ್ಣ ಅನುದಾನಿತ ಪ್ರೌಢಶಾಲೆ ಮತ್ತು ಪ್ರಾಥಮಿಕ ಶಾಲೆಯ ವತಿಯಿಂದ ನಡೆದ ಪ್ರತಿಭೋತ್ಸವದ ಪ್ರತಿಭಾ ಪುರಸ್ಕಾರದಲ್ಲಿ ಸಾಧಕರನ್ನು ಅಭಿನಂದಿಸಿ ಮಾತನಾಡಿದ ಝಕರಿಯ ಜೋಕಟ್ಟೆ, ಹಿಂದಿನ ಕಾಲದಲ್ಲಿ ವಿದ್ಯೆ ಇಲ್ಲದೆಯೂ ಸ್ವಂತ ಬುದ್ದಿವಂತಿಕೆಯಲ್ಲಿ ಎಂಟು ಸಾವಿರ ಮಂದಿಗೆ ಉದ್ಯೋಗ ಕೊಟ್ಟು ಅವರ ಮನೆಯನ್ನು ಬೆಳಗಿಸುವ ಕಾರ್ಯ ಆಗಿದೆ. ಆದರೆ ಇಂದು ವಿದ್ಯೆ ಇಲ್ಲದೇ ಯಾವುದೇ ಸಾಧನೆ ಅಸಾಧ್ಯ , ವಿದ್ಯೆ ವ್ಯಕ್ತಿಯನ್ನು ಸುಸಂಸ್ಕೃತರನ್ನಾಗಿ ಮಾಡುವುದಲ್ಲದೇ ಸಮಾಜದಲ್ಲಿ ನಾವು ಹೇಗೆ ಬದುಕಬೇಕು ಎಂಬುದನ್ನು ಕಲಿಸಿ ಕೊಡುತ್ತದೆ. ಹಾಗಾಗಿ ಪ್ರತಿಯೊಬ್ಬರೂ ಕೂಡ ವಿದ್ಯಾವಂತರಾಗಬೇಕು ಎಂದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಸಾಮಾಜಿಕ, ಧಾರ್ಮಿಕ ಮುಂದಾಳು ಪಿಲಿಕಳ ಗುತ್ತು ರವಿ ರೈ ಫಜೀರು ಇವರು ವಾರ್ಷಿಕೋತ್ಸವವು ಸಂಸ್ಥೆಗಳ ಇರುವಿಕೆಯನ್ನು ಗುರುತಿಸಿಕೊಳ್ಳುವುದರ ಜೊತೆಗೆ ಮಕ್ಕಳ ಪ್ರತಿಭೆಗಳನ್ನು ಅಭಿವ್ಯಕ್ತ ಗೊಳಿಸಲು ಸೂಕ್ತ ವೇದಿಕೆಯನ್ನು ಕಲ್ಪಿಸಿ ಕೊಡುತ್ತವೆ ಎಂದರು. ಅಧ್ಯಕ್ಷತೆಯನ್ನು ಶಾಲಾ ಸಂಚಾಲಕರು ಕಡೆಂಜ ಸೋಮಶೇಖರ್ ಚೌಟ ವಹಿಸಿದ್ದರು. ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಝಕರಿಯ ಜೋಕಟ್ಟೆ ಇವರನ್ನು ಸಂಸ್ಥೆಯ ವತಿಯಿಂದ ಅಭಿನಂದಿಸಲಾಯಿತು. ಅಥಿತಿಗಳಾಗಿ ಸಮಾಜ ಸೇವಕರಾದ ಕಡೆಂಜ ಅಶೋಕ್ ಕುಮಾರ್ ಚೌಟ , ಝಕರಿಯ ಮಲಾರ್, ಆಡಳಿತ ಮಂಡಳಿಯ ಸದಸ್ಯರು ಕಡೆಂಜ ಉದಯಕುಮಾರ್ ಚೌಟ, ಕಲ್ಲಾಯಿ ದುರ್ಗಾಪ್ರಸಾದ್ ರೈ , ನಿವೃತ್ತ ಮುಖ್ಯ ಶಿಕ್ಷಕರುಗಳಾದ ಯಶೋಧ, ನಥಾನಿಯಲ್ ಎಡ್ವರ್ಡ್ ಐಮನ್, ರಾಧಾಕೃಷ್ಣ ರೈ, ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರಾದ ಅಬ್ದುಲ್ ಮಜೀದ್, ರಾಜ್ಯ ಮಟ್ಟದ ತರಬೇತುದಾರರು ರಫೀಕ್ ಮಾಸ್ಟರ್, ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಮೋಹಿನಿ ಮುಂತಾದವರು ಉಪಸ್ಥಿತರಿದ್ದರು. ಅನುದಾನಿತ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ಪ್ರೇಮಲತಾ ಸ್ವಾಗತಿಸಿ, ಶಿಕ್ಷಕ ರವಿಶಂಕರ್ ವಂದಿಸಿದರು. ದೈಹಿಕ ಶಿಕ್ಷಣ ಶಿಕ್ಷಕರಾದ ತ್ಯಾಗಮ್ ಹರೇಕಳ ಕಾರ್ಯಕ್ರಮ ನಿರೂಪಿಸಿದರು.
Hunsuru | ಹಾಡಹಗಲೇ ಗನ್ ತೋರಿಸಿ ಚಿನ್ನದಂಗಡಿಯಲ್ಲಿ ಚಿನ್ನಾಭರಣ ದೋಚಿ ಪರಾರಿಯಾದ ಮುಸುಕುದಾರಿಗಳು!
ಮೈಸೂರು : ಹಾಡಹಗಲೇ ಗನ್ ತೋರಿಸಿ ಚಿನ್ನಾಭರಣ ದೋಚಿ ಪರಾರಿಯಾಗಿರುವ ಘಟನೆ ಹುಣಸೂರು ಟೌನ್ ನಲ್ಲಿ ರವಿವಾರ ಮಧ್ಯಾಹ್ನ ನಡೆದಿದೆ. ಹುಣಸೂರು ಟೌನ್ ಬಸ್ ನಿಲ್ದಾಣದ ಬಳಿ ಇರುವ ಸ್ಕೈ ಗೋಲ್ಡ್ ಅಂಡ್ ಡೈಮಂಡ್ಸ್ ಶೋರಂನಲ್ಲಿ ಈ ಘಟನೆ ನಡೆದಿದ್ದು, ಸುಮಾರು 5 ಕೆ.ಜಿ. ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ ಎನ್ನಲಾಗಿದೆ. ರವಿವಾರ ಮಧ್ಯಾಹ್ನ 1.30 ರ ಸಮಯದಲ್ಲಿ 5 ಜನ ಮುಸುಕುದಾರಿಗಳ ತಂಡ ಚಿನ್ನದ ಅಂಗಡಿಯ ಒಳಗೆ ನುಗ್ಗಿದೆ. ಏಕಾಏಕಿ ಒಬ್ಬ ಮುಸುಕುದಾರಿ ಗನ್ ತೋರಿಸಿ ಅಂಗಡಿ ಮಾಲೀಕ ಸೇರಿದಂತೆ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ 10 ಮಂದಿಗೂ ಹೆದರಿಸಿದ್ದಾನೆ. ಇನ್ನು ನಾಲ್ಕು ಮಂದಿ ಮುಸುಕುದಾರಿಗಳ ತಂಡ ತಮ್ಮ ಬ್ಯಾಗ್ ಗಳಿಗೆ ಚಿನ್ನಾಭರಣ ತುಂಬಿಕೊಂಡು ಸಿನಿಮೀಯ ರೀತಿಯಲ್ಲಿ ಪರಾರಿಯಾಗಿದ್ದಾರೆ ಎನ್ನಲಾಗಿದೆ. ಎರಡು ಬೈಕ್ ಗಳಲ್ಲಿ ಬಂದ ಗುಂಪು ಕೃತ್ಯ ಎಸಗಿದೆ. ದರೋಡೆಕೋರರನ್ನು ಸಿಬ್ಬಂದಿಗಳು ಹಿಂಬಾಲಿಸಿದ್ದಾರೆ. ಆದರೆ ದುಷ್ಕರ್ಮಿಗಳನ್ನ ಹಿಡಿಯಲು ಸಾಧ್ಯವಾಗಿಲ್ಲ. ದರೋಡೆ ನಡೆಸಿದ ಸಂಪೂರ್ಣ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಸುಮಾರು 5 ಕೆ.ಜಿ. ಚಿನ್ನಾಭರಣ ದೋಚಿರುವುದಾಗಿ ತಿಳಿದು ಬಂದಿದೆ. ಸ್ಥಳಕ್ಕೆ ಎಸ್ಪಿ ವಿಷ್ಣುವರ್ಧನ್ ಭೇಟಿ ನೀಡಿ ತನಿಖೆ ಚುರುಕು ಗೊಳಿಸಿದ್ದಾರೆ. ಈ ಸಂಬಂಧ ಹುಣಸೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಒಂದು ಕೈಯಲ್ಲಿ ಕ್ಯಾಚ್ ಹಿಡಿದ ಪ್ರೇಕ್ಷಕನಿಗೆ ಒಂದು ಕೋಟಿ ರೂಪಾಯಿ! SA20 ಉದ್ಘಾಟನಾ ಪಂದ್ಯದಲ್ಲಿ ಹೀಗೊಂದು ಅಚ್ಚರಿ
SA20 Fan Reward Catch- ಕ್ರಿಕೆಟ್ ಪಂದ್ಯವೊಂದರಲ್ಲಿ ಒಂದು ಕೈಯಲ್ಲಿ ಅದ್ಭುತ ಕ್ಯಾಚ್ ಹಿಡಿದ ಪ್ರೇಕ್ಷಕರೊಬ್ಬರು ಬರೋಬ್ಬರಿ 1 ಕೋಟಿಗೂ ಅಧಿಕ ರೂಪಾಯಿ ಬಹುಮಾನ ಗೆದ್ದುಕೊಂಡಿರುವ ಘಟನೆ ವರದಿಯಾಗಿದೆ. ಎಸ್ ಎ20 ಉದ್ಘಾಟನಾ ಪಂದ್ಯದಲ್ಲಿ ಡರ್ಬನ್ ಸೂಪರ್ ಜೈಂಟ್ಸ್ ವಿರುದ್ಧ ಎಂಐ ಕೇಪ್ ಟೌನ್ ತಂಡದ ಆಟಗಾರ ರಿಕೆಲ್ಟನ್ ಹೊಡೆದ ಸಿಕ್ಸರ್ ಅನ್ನು ಹಿಡಿದಿದ್ದರು. ಅದಕ್ಕಾಗಿ ಅವರಿಗೆ ದೊರೆತ ಮೊತ್ತ ಕ್ರಿಕೆಟ್ ಜಗತ್ತನ್ನು ಅಚ್ಚರಿಯಲ್ಲಿ ಕೆಡವಿದೆ. ಇಲ್ಲಿದೆ ಈ ಬಗ್ಗೆ ಮಾಹಿತಿ.
ಸಣ್ಣಪುಟ್ಟ ಭಾಷೆಗಳಿಗೆ ಇಂಗ್ಲಿಷ್, ಹಿಂದಿಯಿಂದ ಆತಂಕ: ಬಿ.ಎಂ.ಬಶೀರ್ ಕಳವಳ
ಕುಂದಾಪುರದಲ್ಲಿ ರಾಜ್ಯ ಮಟ್ಟದ ಬಹುಭಾಷಾ ಕವಿಗೋಷ್ಠಿ ಉದ್ಘಾಟನೆ
ದೇಶದ ರಕ್ಷಣೆ ಕುರಿತು ಬ್ಯಾರೀಸ್ ಸಂಸ್ಥೆಯ ಚಿಂತನೆ ಶ್ಲಾಘನೀಯ: ಜಯಪ್ರಕಾಶ್ ಹೆಗ್ಡೆ
ಬ್ಯಾರೀಸ್ ನಾಲೆಡ್ಜ್ ಕ್ಯಾಂಪಸ್ನಲ್ಲಿ ‘ರಕ್ಷಣಾ ವಲಯದಲ್ಲಿ ವೃತ್ತಿ ಅವಕಾಶಗಳು -ತಯಾರಿ’ ಕಾರ್ಯಾಗಾರ
ಬೆಂಗಳೂರಿನಲ್ಲಿ ಮಹಾರಾಷ್ಟ್ರ ಪೊಲೀಸರ ಕಾರ್ಯಾಚರಣೆ; ವಿವಿಧೆಡೆ ಸಂಗ್ರಹಿಸಲಾಗಿದ್ದ 1.20 ಕೋಟಿ ಮೌಲ್ಯದ ಮಾದಕ ವಸ್ತು ವಶ
58 ಕೋಟಿ ರೂ. ಮೌಲ್ಯದ ಡ್ರಗ್ಸ್ ಎಂಬುದು ಸತ್ಯಕ್ಕೆ ದೂರ : ಡಾ.ಜಿ.ಪರಮೇಶ್ವರ್ ಸ್ಪಷ್ಟನೆ
ಕಾವೇರಿ ನೀರಿನ ಬಿಲ್ ಬಾಕಿದಾರರಿಗೆ ಬಂಪರ್ ಆಫರ್ ನೀಡಲಾಗಿದ್ದು, ಬಡ್ಡಿ ಮತ್ತು ದಂಡವನ್ನು ಸಂಪೂರ್ಣ ಮನ್ನಾ ಮಾಡುವ 'ಒನ್ ಟೈಮ್ ಸೆಟಲ್ಮೆಂಟ್' ಯೋಜನೆಗೆ ಸರ್ಕಾರ ಹಸಿರು ನಿಶಾನೆ ತೋರಿದೆ. ಜನವರಿ, ಫೆಬ್ರವರಿ ಮತ್ತು ಮಾರ್ಚ್ ತಿಂಗಳಲ್ಲಿ ಅಸಲು ಮೊತ್ತವನ್ನು ಪಾವತಿಸಿದರೆ, ಬಾಕಿ ಮೊತ್ತವನ್ನು ಶೇ.100 ರಷ್ಟು ಮನ್ನಾ ಮಾಡಲಾಗುತ್ತದೆ.
ಕೃತಕ ಬುದ್ಧಿಮತ್ತೆ ಕೇಂದ್ರ ಉದ್ಘಾಟಿಸಿದ ಅದಾನಿ: ಯುವಕರಿಂದ ಎಐ ತಂತ್ರಜ್ಞಾನ ಅಭಿವೃದ್ಧಿಗೆ ಕರೆ
ಭಾರತವು ತನ್ನ ತಂತ್ರಜ್ಞಾನ ಪ್ರಯಾಣದಲ್ಲಿ ನಿರ್ಣಾಯಕ ಹಂತವನ್ನು ಪ್ರವೇಶಿಸುತ್ತಿದೆ. ಇಲ್ಲಿ ಕೃತಕ (Artificial Intelligence) ಬುದ್ಧಿಮತ್ತೆಯು ಆರ್ಥಿಕ ಬೆಳವಣಿಗೆ, ರಾಷ್ಟ್ರೀಯ ಸಾಮರ್ಥ್ಯ ಮತ್ತು ಕೆಲಸ ಸೃಷ್ಟಿ ಭವಿಷ್ಯವನ್ನು ರೂಪಿಸುತ್ತದೆ ಎಂದು ಅದಾನಿ ಗ್ರೂಪ್ ಅಧ್ಯಕ್ಷ ಗೌತಮ್ ಅದಾನಿ ಅವರು ಹೇಳಿದ್ದಾರೆ. ಮಹಾರಾಷ್ಟ್ರದ ಬಾರಾಮತಿಯಲ್ಲಿ ವಿದ್ಯಾ ಪ್ರತಿಷ್ಠಾನ ಶರದ್ಪವಾರ್ ಸೆಂಟರ್ ಆಫ್ ಎಕ್ಸಲೆನ್ಸ್ ಇನ್ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI
ಬೈಂದೂರಿನಲ್ಲಿ ಕಿಶೋರ ಯಕ್ಷಗಾನ ಕಾರ್ಯಕ್ರಮ ಉದ್ಘಾಟನೆ
ಬೈಂದೂರು: ಬೈಂದೂರಿನ ನಾಲ್ಕು ಶಾಲೆಗಳ ಕಿಶೋರ ಯಕ್ಷಗಾನ ಪ್ರದರ್ಶನ ಶನಿವಾರ ಬೈಂದೂರು ಸರಕಾರಿ ಪದವಿ ಪೂರ್ವ ಕಾಲೇಜಿನ ಮೊಗೇರಿ ಗೋಪಾಲಕೃಷ್ಣ ಅಡಿಗ ರಂಗಮಂಟಪದಲ್ಲಿ ಉದ್ಘಾಟನೆಗೊಂಡಿತು. ಹಿರಿಯರಾದ ವಿಶ್ವೇಶ್ವರ ಅಡಿಗರು ಮಾತನಾಡಿ, ಯಕ್ಷಗಾನ ಸುಂದರ ವೇಷಭೂಷಣ, ಕುಣಿತ, ಅಭಿನಯ, ಮಾತುಗಾರಿಕೆ ಎಲ್ಲವನ್ನೂ ಒಳಗೊಂಡ ಪರಿಪೂರ್ಣ ಕಲಾಪ್ರಕಾರ. ವಿದ್ಯಾರ್ಥಿಗಳು ಇದರಲ್ಲಿ ತರಬೇತಿ ಪಡೆಯುವದರಿಂದ ಅವರ ಸರ್ವಾಂಗೀಣ ಪ್ರಗತಿಯಾಗುತ್ತದೆ ಎಂದರು. ಕಾರ್ಯಕ್ರಮವನ್ನು ಜಗನ್ನಾಥ ಶೆಟ್ಟಿ ನಾಕಟ್ಟೆ ಉದ್ಘಾಟಿಸಿದರು. ಜಯಾನಂದ ಹೋಬಳಿದಾರ್ ಅಧ್ಯಕ್ಷತೆ ವಹಿಸಿದ್ದರು. ಉಮೇಶ ಬಿ., ಸತೀಶ ಶೆಟ್ಟಿ, ನಾಗೇಂದ್ರ ದೇವಾಡಿಗ, ಶಾಲಾ ಉಪ ಪ್ರಾಂಶುಪಾಲ ಪದ್ಮನಾಭ, ನಾರಾಯಣ ಎಂ.ಹೆಗಡೆ ಮುಖ್ಯ ಅತಿಥಿಗಳಾಗಿದ್ದರು. ಮುರಲಿ ಕಡೆಕಾರ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸುರೇಶ ಬಟವಾಡಿ ಸ್ವಾಗತಿಸಿದರು. ಪ್ರಭಾಕರ ಎಸ್. ವಂದಿಸಿದರು. ಅಧ್ಯಾಪಕ ರವೀಂದ್ರ ಕಾರ್ಯಕ್ರಮ ನಿರೂಪಿಸಿದರು. ಯಕ್ಷಗುರು ನರಸಿಂಹ ತುಂಗ ಉಪಸ್ಥಿತರಿದ್ದರು. ಸರಕಾರಿ ಪ್ರೌಢಶಾಲೆ ಕಂಬದಕೋಣೆ ಇಲ್ಲಿಯ ವಿದ್ಯಾರ್ಥಿಗಳಿಂದ ಪ್ರಶಾಂತ್ ಮಯ್ಯ ನಿರ್ದೇಶನದಲ್ಲಿ ’ಸುಧನ್ವಾರ್ಜುನ’, ಬೈಂದೂರಿನ ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳಿಂದ ಉಪ್ಪುಂದ ಗಣೇಶ್ ನಿರ್ದೇಶನದಲ್ಲಿ ’ರತ್ನಾವತಿ ಕಲ್ಯಾಣ’ ಪ್ರಸಂಗ ಪ್ರಸ್ತುತಗೊಂಡಿತು.
ಉಡುಪಿ| ಬಿಜೆಪಿ ಹಿರಿಯ ಮುಖಂಡ ದಿ.ಸೋಮಶೇಖರ್ ಭಟ್ ನಿವಾಸಕ್ಕೆ ಬಿ.ವೈ.ವಿಜಯೇಂದ್ರ ಭೇಟಿ
ಉಡುಪಿ: ಬಿಜೆಪಿ ಹಿರಿಯ ಮುಖಂಡ ದಿವಂಗತ ಎಂ. ಸೋಮಶೇಖರ್ ಭಟ್ ನಿವಾಸಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ರವಿವಾರ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ, ಮಂಗಳೂರು ವಿಭಾಗ ಪ್ರಭಾರಿ ಉದಯ ಕುಮಾರ್ ಶೆಟ್ಟಿ ಕಿದಿಯೂರು, ಸೋಮಶೇಖರ್ ಭಟ್ ರವರ ಧರ್ಮಪತ್ನಿ ಶಾರದಾ ಭಟ್, ಪುತ್ರರಾದ ಚಿತ್ತರಂಜನ್ ಭಟ್, ವಲ್ಲಭ ಭಟ್, ನಗರಸಭಾ ಸದಸ್ಯೆ ರಶ್ಮಿ ಸಿ.ಭಟ್ ಮೊದಲಾದವರು ಉಪಸ್ಥಿತರಿದ್ದರು.
ಕ್ರಿಸ್ಮಸ್ ಆಚರಣೆಗೆ ಅಡ್ಡಿ: ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟ ಖಂಡನೆ
ಉಡುಪಿ: ಕ್ರಿಸ್ಮಸ್ ಆಚರಣೆ ಸಂದರ್ಭದಲ್ಲಿ ಹಾಗೂ ಕ್ರೈಸ್ತ ಸಮುದಾಯದ ಸಂಸ್ಥೆಗಳ ಮೇಲೆ ನಡೆಸಲಾದ ದಾಳಿಗಳು ದೇಶದ ಸಂವಿಧಾನ ಮತ್ತು ನಾಗರಿಕ ವ್ಯವಸ್ಥೆಯ ಮೇಲೆ ನಡೆಸಿದ ದಾಳಿಗಳಾಗಿವೆ. ಈ ದ್ವೇಷದ ದಾಳಿಗಳನ್ನು ಖಂಡಿಸುವುದಾಗಿ ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟ ಹೇಳಿದೆ. ಈ ಕುರಿತು ಪ್ರಕಟಣೆ ಹೊರಡಿಸಿರುವ ಜಿಲ್ಲಾ ಮುಸ್ಲಿಮ್ ಒಕ್ಕೂಟದ ಮಾಧ್ಯಮ ವಕ್ತಾರ ಇಕ್ಬಾಲ್ ಮನ್ನಾ, ದೇಶದ ಸಂವಿಧಾನವು ದೇಶದ ಎಲ್ಲಾ ಪ್ರಜೆಗಳಿಗೆ ಅವರ ಧಾರ್ಮಿಕ ನಂಬಿಕೆಯಂತೆ ಬದುಕುವ, ಆಚರಣೆಗಳನ್ನು ಪಾಲಿಸುವ ಸ್ವಾತಂತ್ರ್ಯ ನೀಡಿದೆ. ಎಲ್ಲರನ್ನೂ ಒಳಗೊಳ್ಳುವ ಈ ಸ್ವಾತಂತ್ರ್ಯ ಯಾವುದೇ ದೇಶದ ಘನತೆ, ಗೌರವ ಮತ್ತು ನಾಗರಿಕ ಸಮಾಜವಾಗಿ ಆ ದೇಶ ಮುನ್ನಡೆಯುತ್ತಿರುವ ಸಂಕೇತವೂ ಆಗಿದೆ. ಆದರೆ ಇತ್ತೀಚೆಗೆ ನಡೆಯುತ್ತಿರುವ ಘಟನೆಗಳು ದೇಶದ ಘನತೆಗೆ ಮಸಿ ಬಳಿಯುತ್ತಿರುವುದಲ್ಲದೆ ಆಂತರಿಕವಾಗಿ ವಿಭಾಜಕ ಮಾನಸಿಕತೆಯನ್ನು ಬೆಳೆಸುತ್ತಿದೆ ಎಂದು ಹೇಳಿದ್ದಾರೆ.
ಜಿಲ್ಲಾ- ತಾಲ್ಲೂಕು ಪಂಚಾಯತಿ ಚುನಾವಣೆ ದಿನಾಂಕ: ಪ್ರಿಯಾಂಕ್ ಖರ್ಗೆಗೆ ಮಹತ್ವದ ಸೂಚನೆ ನೀಡಿದ ಡಿಕೆ ಶಿವಕುಮಾರ್
ಜಿಲ್ಲಾ ಮತ್ತು ತಾಲ್ಲೂಕು ಪಂಚಾಯತಿ ಚುನಾವಣೆಗಳು ಮುಂದಿನ 2 ರಿಂದ 3 ತಿಂಗಳೊಳಗೆ ನಡೆಯಲಿವೆ. ಈ ಬಗ್ಗೆ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಡಿಸಿಎಂ ಡಿಕೆ ಶಿವಕುಮಾರ್ ಅವರು ಸೂಚನೆ ನೀಡಿದ್ದಾರೆ. ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳಲು ಈಗಿನಿಂದಲೇ ತಯಾರಿ ಆರಂಭಿಸಬೇಕು. ಬೂತ್ ಮಟ್ಟದಲ್ಲಿ ಕೆಲಸ ಮಾಡುವವರಿಗೆ ಅವಕಾಶ ನೀಡಲಾಗುವುದು. ರಾಜ್ಯದಾದ್ಯಂತ 100 ಕಾಂಗ್ರೆಸ್ ಕಚೇರಿಗಳ ನಿರ್ಮಾಣ ಕಾರ್ಯವೂ ನಡೆಯುತ್ತಿದೆ.
ಮಂಗಳೂರು ಬೀಚ್ ಉತ್ಸವ: ಮಳಿಗೆ ತೆರೆಯಲು ಅರ್ಜಿ ಆಹ್ವಾನ
ಮಂಗಳೂರು(ಡಿ.28): ತಣ್ಣೀರುಬಾವಿ ಬೀಚ್ನಲ್ಲಿ ಕರಾವಳಿ ಉತ್ಸವದ ಪ್ರಯುಕ್ತ ಜನವರಿ 3 ಮತ್ತು 4ರಂದು ಬೀಚ್ ಉತ್ಸವ ನಡೆಯಲಿದ್ದು, ಈ ಉತ್ಸವದಲ್ಲಿ ಆಹಾರ ಮತ್ತು ಇತರ ಮಳಿಗೆಗಳಿಗೆ ಅವಕಾಶ ಕಲ್ಪಿಸಲಾಗಿದೆ. ಈ ಮಳಿಗೆಗಳಲ್ಲಿ ವ್ಯಾಪಾರ ನಡೆಸಲು ಆಸಕ್ತಿಯುಳ್ಳ ವ್ಯಕ್ತಿಗಳು ಅಥವಾ ಸಂಸ್ಥೆಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅರ್ಜಿಗಳನ್ನು ಸಲ್ಲಿಸಲು ಬಯಸುವರು ಡಿಸೆಂಬರ್ 31ರ ಸಂಜೆ 5 ಗಂಟೆಯೊಳಗೆ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರಿಗೆ ಅರ್ಜಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ 09644020343/ 9900924713 ಸಂಪರ್ಕಿಸಬಹುದು ಎಂದು ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮೂರು ವರ್ಷದಿಂದ ಪ್ರೀತಿಸಿ ಮದುವೆಯಾದ ಪುಣೆ ಜೋಡಿ; 24 ಗಂಟೆಯಲ್ಲೇ ಡಿವೋರ್ಸ್; ಅಸಲಿ ಕಾರಣ ಏನು?
ಪ್ರೇಮ ವಿವಾಹವಾದ ಜೋಡಿಯೊಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕೇವಲ 24 ಗಂಟೆಯೊಳಗೆ ವಿಚ್ಛೇದನ ಪಡೆದಿರುವ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ನಡೆದಿದೆ. ವಾಸದ ಸ್ಥಳ ಮತ್ತು ವೃತ್ತಿಜೀವನದ ಹೊಂದಾಣಿಕೆಯ ಕೊರತೆಯಿಂದಾಗಿ ಈ ವೈದ್ಯೆ ಮತ್ತು ಇಂಜಿನಿಯರ್ ಜೋಡಿ ಕಾನೂನುಬದ್ಧವಾಗಿ ಬೇರ್ಪಟ್ಟಿದ್ದಾರೆ. ಮೂರು ವರ್ಷ ಪ್ರೀತಿಸಿದರು ಸಹ ಇಬ್ಬರು ಪರಸ್ಪರ ಈ ಬಗ್ಗೆ ಮಾತನಾಡಿಕೊಳ್ಳದೆ ಇರುವುದು ಅಚ್ಚರಿಯನ್ನುಂಟು ಮಾಡಿದೆ ಎಂದು ವಕೀಲರು ಹೇಳಿದ್ದಾರೆ.
ಭಾರತೀಯ ಸಶಸ್ತ್ರ ಪಡೆಗಳ 'ಆಪರೇಷನ್ ಸಿಂದೂರ್' ಕಾರ್ಯಾಚರಣೆಯಿಂದ ಪಾಕಿಸ್ತಾನ ತತ್ತರಿಸಿದೆ. ತನ್ನ ಪ್ರಮುಖ ನೂರ್ ಖಾನ್ ವಾಯುನೆಲೆಯ ಮೇಲೂ ದಾಳಿ ನಡೆದಿರುವುದನ್ನು ಪಾಕಿಸ್ತಾನ ಇದೇ ಮೊದಲ ಬಾರಿಗೆ ಒಪ್ಪಿಕೊಂಡಿದೆ. ದಾಳಿಗೆ ಹೆದರಿ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿಗೆ ಬಂಕರ್ಗೆ ತೆರಳುವಂತೆ ಸಲಹೆ ನೀಡಲಾಗಿತ್ತು. ಭಾರತದ 80 ಡ್ರೋನ್ ದಾಳಿಗಳಿಂದ ಪಾಕಿಸ್ತಾನದ ಮಿಲಿಟರಿ ನೆಲೆಗಳಿಗೆ ಹಾನಿಯಾಗಿದೆ.
ವಿವಿಎಸ್ ಲಕ್ಷ್ಮಣ್ ರನ್ನು ಸಂಪರ್ಕಿಸಿದ್ದ ಬಿಸಿಸಿಐ! ಇದು ಗೌತಮ್ ಗಂಭೀರ್ ಸ್ಥಾನ ಅಲುಗಾಡುತ್ತಿರುವ ಸೂಚನೆಯೇ?
Team India Head Coach-ಭಾರತ ತಂಡದ ಪ್ರಧಾನ ಕೋಚ್ ಗೌತಮ್ ಗಂಭೀರ್ ಅವರ ಭವಿಷ್ಯ ಈಗ ಅನಿಶ್ಚಿತವಾಗಿದೆ. ಟೀಂ ಇಂಡಿಯಾ ಪೋಸ್ಟರ್ ಬಾಯ್ ಎಂದೇ ಬಿಂಬಿತರಾಗಿದ್ದ ಶುಭಮನ್ ಗಿಲ್ ಅವರನ್ನು ಟಿ20 ವಿಶ್ವಕಪ್ ತಂಡದಿಂದ ಕೈಬಿಟ್ಟ ನಿರ್ಧಾರ ತೀವ್ರ ಗೊಂದಲಕ್ಕೆ ಕಾರಣವಾಗಿದ್ದು. ಆಟಗಾರರು ತಮ್ಮ ಸ್ಥಾನದ ಬಗ್ಗೆ ಅಸುರಕ್ಷಿತ ಭಾವನೆ ಹೊಂದಿದ್ದಾರೆ. ಜೊತೆಗೆ ಟೆಸ್ಟ್ ಕ್ರಿಕೆಟ್ನಲ್ಲಿ ತಂಡದ ಕಳಪೆ ಪ್ರದರ್ಶನವೂ ಗಂಭೀರ್ ಅವರ ವಿರುದ್ಧ ಟೀಕೆಗೆ ಕಾರಣವಾಗಿದೆ. ಹೀಗಾಗಿ ಟಿ20 ವಿಶ್ವಕಪ್ ಬಳಿಕ ಬಿಸಿಸಿಐ ಗಂಭೀರ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.
ವಿಟ್ಲ: ವಿಟ್ಠಲ ಪ್ರೌಢಶಾಲೆಯಲ್ಲಿ ಅಮೃತ ಸೌಧದ ಶಿಲಾ ಪೂಜನ ಕಾರ್ಯಕ್ರಮ
ವಿಟ್ಲ: ವಿಟ್ಠಲ ಎಜುಕೇಶನ್ ಸೊಸೈಟಿ ಇದರ ಪ್ರೌಢಶಾಲಾ ವಿಭಾಗದ ಅಮೃತ ಮಹೋತ್ಸವದ ಯೋಜನೆಯ ಅಮೃತ ಸೌಧದ ಶಿಲಾ ಪೂಜನ ಕಾರ್ಯಕ್ರಮ ವಿಟ್ಠಲ ಪ್ರೌಢಶಾಲೆಯಲ್ಲಿ ರವಿವಾರ ನಡೆಯಿತು. ಅಮೃತ ಸೌಧದ ಶಿಲಾನ್ಯಾಸ ಕಾರ್ಯಕ್ರಮ ನಿವೃತ್ತ ಪ್ರಾಂಶುಪಾಲ ರಾಧಾಕೃಷ್ಣ ಭಟ್ ಇವರ ಪೌರೋಹಿತ್ಯದಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಂಗಳೂರು ಒಶಿಮಾ ಸಿಸ್ಟಮ್ಸ್ ಪ್ರೈವೇಟ್ ಲಿಮಿಟೆಡ್ ಇದರ ಅಧ್ಯಕ್ಷರು ಹಾಗೂ ವ್ಯವಸ್ಥಾಪಕ ನಿರ್ದೇಶಕ ಕೂಡೂರು ರಾಮಚಂದ್ರ ಭಟ್ ವಹಿಸಿದ್ದರು. ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ರಾಜೇಶ್ ರೈ ಕಲ್ಲಂಗಳ, ಮೈಸೂರು ಎಸ್ ಎಲ್ ವಿ ಬುಕ್ಸ್ ಇಂಡಿಯಾ ಮಾಲಕ ದಿವಾಕರ್ ದಾಸ್ ನೇರ್ಲಾಜೆ, ಬಂಟ್ವಾಳ ಪ್ರಭಾಕರ ರಾವ್ ಫೌಂಡೇಶನ್ ಪ್ರತಿನಿಧಿ ವಿಟ್ಲ ಮಂಗೇಶ್ ಭಟ್ ಇವರು ಭಾಗವಹಿಸಿದ್ದರು. ನ್ಯಾಯ ಮೂರ್ತಿ ರಾಜೇಶ್ ರೈ ಕಲ್ಲಂಗಳ ಅಮೃತ ಸೌಧದ ವಿಜ್ಞಾಪನಾ ಪತ್ರ ಅನಾವರಣಗೊಳಿಸಿದರು. ಈ ವೇಳೆ ವಿಟ್ಠಲ ಎಜುಕೇಶನ್ ಸೊಸೈಟಿ ಕಾರ್ಯದರ್ಶಿ ಶಂಕರನಾರಾಯಣ ಪ್ರಸಾದ್, ಉಪಾಧ್ಯಕ್ಷ ಸುಬ್ರಾಯ ಪೈ, ಕೋಶಾಧಿಕಾರಿ ಬಾಬು ಕೊಪ್ಪಳ, ಸದಸ್ಯ ರವಿಪ್ರಕಾಶ್, ಕೌನ್ಸಿಲ್ ಸದಸ್ಯರು, ಶಿಕ್ಷಕ ವೃಂದದವರು, ವಿದ್ಯಾರ್ಥಿಗಳು, ನಿವೃತ್ತ ಶಿಕ್ಷಕರು, ಹಿರಿಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ವಿಟ್ಠಲ ಎಜುಕೇಶನ್ ಸೊಸೈಟಿ ಸಂಚಾಲಕ ಸ್ವಾಗತಿಸಿದರು. ಉಪ ಪ್ರಾಂಶುಪಾಲ ಕಿರಣ್ ಕುಮಾರ್ ಬ್ರಹ್ಮಾವರ ವಂದಿಸಿದರು. ಅಧ್ಯಾಪಕ ರಾಜಶೇಖರ್ ನಿರೂಪಿಸಿದರು.
ಉಸ್ಮಾನ್ ಹಾದಿ ಹತ್ಯೆ ಕೇಸ್; ಮೇಘಲಾಯ ಗಡಿ ಮೂಲಕ ಭಾರತಕ್ಕೆ ನುಸುಳಿದ ಇಬ್ಬರು ಶಂಕಿತರು
ಬಾಂಗ್ಲಾದೇಶದ ಪ್ರಭಾವಿ ಹೋರಾಟಗಾರ ಮತ್ತು ಶೇಖ್ ಹಸೀನಾ ಅವರು ಸರ್ಕಾರ ಪತನಗೊಳ್ಳಲು ಕಾರಣರಾಗಿದ್ದ ಉಸ್ಮಾನ್ ಹಾದಿಯವರನ್ನು ಹತ್ಯೆ ಮಾಡಲಾಗಿತ್ತು. ಅವರ ತಲೆಗೆ ಗುಂಡು ಹಾರಿಸಿದ ಇಬ್ಬರು ಪ್ರಮುಖ ಶಂಕಿತರು ಮೇಘಾಲಯದ ಗಡಿಯ ಮೂಲಕ ಭಾರತಕ್ ಬಂದು ತಲೆ ಮರೆಸಿಕೊಂಡಿದ್ದಾರೆ ಎಂದು ಢಾಕಾ ಮೆಟ್ರೋಪಾಲಿಟನ್ ಪೊಲೀಸರು ಮಾಹಿತಿ ನೀಡಿದ್ದಾರೆ. ಅವರನ್ನು ಬಂಧಿಸಿ ಹಸ್ತಾಂತರಿಸುವಂತೆ ಬಾಂಗ್ಲಾ ಸರ್ಕಾರವು ಭಾರತೀಯ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ
ಕರ್ನಾಟಕ ಕಂದಾಯ ಇಲಾಖೆ ಭೂ ಆಡಳಿತದಲ್ಲಿ ಪಾರದರ್ಶಕತೆ ತರಲು ಸ್ವಯಂಚಾಲಿತ ಮ್ಯುಟೇಷನ್ ವ್ಯವಸ್ಥೆ ಜಾರಿಗೆ ತಂದಿದೆ. ಇದರಿಂದ ಸಬ್ರಿಜಿಸ್ಟ್ರಾರ್ ಕಚೇರಿಯಿಂದ ಜೆ-ಸ್ಲಿಪ್ ಬಂದ ನಂತರ ನಿಗದಿತ ಸಮಯದಲ್ಲಿ ಯಾವುದೇ ಆಕ್ಷೇಪಣೆ ಬರದಿದ್ದರೆ ಖಾತಾ ಬದಲಾವಣೆ ತಾನಾಗಿಯೇ ಆಗಲಿದೆ. ಅಧಿಕಾರಿಗಳ ಹಸ್ತಕ್ಷೇಪ ಮತ್ತು ವಿಳಂಬ ತಪ್ಪಲಿದೆ. ಬ್ಯಾಂಕ್ ಸಾಲ, ಭೂಸ್ವಾಧೀನ, ಅಡಮಾನ ಸಂಬಂಧಿತ ದಾಖಲೆಗಳ ವರ್ಗಾವಣೆ ನೇರವಾಗಿ ಸ್ವಯಂಚಾಲಿತವಾಗಲಿದೆ. ಇದು ಆಸ್ತಿ ಖರೀದಿದಾರರು ಮತ್ತು ರೈತರಿಗೆ ವೇಗವಾಗಿ ಹಕ್ಕು ವರ್ಗಾವಣೆ ದಾಖಲೆಗಳನ್ನು ಒದಗಿಸಲಿದೆ. ಈ ಕುರಿತ ವಿವರಗಳು ಇಲ್ಲಿವೆ.
ಛೂ ಬಾಣ – ಪಿ. ಮೊಹಮ್ಮದ್ ಕಾರ್ಟೂನ್
ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆಗೆ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಸಾಮಾನ್ಯ ಅಭ್ಯರ್ಥಿಗಳಿಗೆ 50 ಸಾವಿರ, ಪರಿಶಿಷ್ಟ ಅಭ್ಯರ್ಥಿಗಳಿಗೆ 25 ಸಾವಿರ ರೂ. ಅರ್ಜಿ ಶುಲ್ಕ ನಿಗದಿ ಮಾಡಲಾಗಿದ್ದು, ಮಹಿಳೆಯರಿಗೆ 25 ಸಾವಿರ ರೂ. ಶುಲ್ಕ ಇರಲಿದೆ. ವಿದ್ಯಾರ್ಥಿ ಚುನಾವಣೆ ನಡೆಸಲು ಹೊಸ ಸಮಿತಿ ರಚನೆ ಮಾಡಲಾಗಿದೆ.
ತನ್ನ ವಿಕೆಟ್ ಎಗರಿಸಿದ ವಿಶಾಲ್ ಜೈಸ್ವಾಲ್ ಗೆ ಚೆಂಡಿನ ಮೇಲೆ ಆಟೋಗ್ರಾಫ್ ನೀಡಿದ ವಿರಾಟ್ ಕೊಹ್ಲಿ ಹೇಳಿದ್ದೇನು?
Vishal Jayswal On Virat Kohli- ವಿಜಯ ಹಜಾರೆ ಟ್ರೋಫಿ 2025 ಟೂರ್ನಿಯಲ್ಲಿ ವಿಶ್ವವಿಖ್ಯಾತ ವಿರಾಟ್ ಕೊಹ್ಲಿ ಅವರನ್ನು ಔಟ್ ಮಾಡಿದ ಗುಜರಾತ್ನ ಯುವ ಬೌಲರ್ ವಿಶಾಲ್ ಜೈಸ್ವಾಲ್ಸಂ ಬಹಳ ಸಂಭ್ರಮದಲ್ಲಿದ್ದಾರೆ. ಪಂದ್ಯದ ಬಳಿಕ ವಿರಾಟ್ ಕೊಹ್ಲಿ ನೀಡಿದ ಪ್ರೋತ್ಸಾಹ ಮತ್ತು ಸಲಹೆಗಳು ವಿಶಾಲ್ ಜೈಸ್ವಾಲ್ ಅವರಿಗೆ ಸ್ಫೂರ್ತಿಯಾಗಿದೆ. ತಾಯಿಯ ಬೆಂಬಲದಿಂದ ಕಠಿಣ ಸವಾಲುಗಳನ್ನು ಎದುರಿಸಿ ಯಶಸ್ಸು ಕಂಡಿರುವ ಜೈಸ್ವಾಲ್ ತಮ್ಮ ರಾಜ್ಯದವರೇ ಆಗಿರುವ ಆಲ್ರೌಂಡರ್ ಅಕ್ಷರ್ ಪಟೇಲ್ ಅವರ ಮಾರ್ಗದರ್ಶನವನ್ನೂ ನೆನಪಿಸಿಕೊಂಡಿದ್ದಾರೆ.
BSNL: ದಿನಕ್ಕೆ 7 ರೂಪಾಯಿ ಸಾಕು: ದಿನಕ್ಕೆ 2GB ಡೇಟಾ + ವರ್ಷಪೂರ್ತಿ ಅನ್ಲಿಮಿಟೆಡ್ ಟಾಕ್ ಟೈಮ್
ಪ್ರಸ್ತುತ ದಿನಗಳಲ್ಲಿ ಸ್ಮಾರ್ಟ್ ಫೋನ್ ಬಳಕೆದಾರರಿಗೆ ಅತಿದೊಡ್ಡ ಚಿಂತೆಯೆಂದರೆ ಅದು ಮೊಬೈಲ್ ರೀಚಾರ್ಜ್ ದರ. ಖಾಸಗಿ ಟೆಲಿಕಾಂ ಕಂಪನಿಗಳು ತಮ್ಮ ಸುಂಕದ ದರಗಳನ್ನು ಹೆಚ್ಚಿಸಿದ ನಂತರ, ಸಾಮಾನ್ಯ ಜನರ ಜೇಬಿಗೆ ಕತ್ತರಿ ಬಿದ್ದಂತಾಗಿದೆ. ಪ್ರತಿ ತಿಂಗಳು ರೀಚಾರ್ಜ್ ಮಾಡಿಸುವುದು ಹಲವರಿಗೆ ಹೊರೆಯಾಗಿ ಪರಿಣಮಿಸಿದೆ. ಅನೇಕರು ಕಡಿಮೆ ಬೆಲೆಯಲ್ಲಿ ಹೆಚ್ಚಿನ ದಿನಗಳ ವ್ಯಾಲಿಡಿಟಿ (Validity) ಮತ್ತು ಇಂಟರ್ನೆಟ್ ಸೌಲಭ್ಯ ನೀಡುವ ಯೋಜನೆಯ ಹುಡುಕಾಟದಲ್ಲಿದ್ದಾರೆ. ಅಂತಹ ಗ್ರಾಹಕರಿಗೆ ಸರ್ಕಾರಿ ಸ್ವಾಮ್ಯದ ಬಿಎಸ್ಎನ್ಎಲ್ (BSNL) ಅಚ್ಚರಿಯ ಆಯ್ಕೆಯೊಂದನ್ನು ಮುಂದಿಟ್ಟಿದೆ. ಈ ಯೋಜನೆಯ ... Read more The post BSNL: ದಿನಕ್ಕೆ 7 ರೂಪಾಯಿ ಸಾಕು: ದಿನಕ್ಕೆ 2GB ಡೇಟಾ + ವರ್ಷಪೂರ್ತಿ ಅನ್ಲಿಮಿಟೆಡ್ ಟಾಕ್ ಟೈಮ್ appeared first on Karnataka Times .
ಜಾಗತಿಕ ಚರ್ಚೆಗೆ ಕಾರಣವಾದ ಸೊಮಾಲಿಲ್ಯಾಂಡ್ ಬಗ್ಗೆ ನಿಮಗೆಷ್ಟು ಗೊತ್ತು? ವಿಶ್ವಸಂಸ್ಥೆಯಿಂದ ತುರ್ತು ಸಭೆ
ಇಸ್ರೇಲ್ ನಿಂದ ನೂತನವಾಗಿ ಸ್ವತಂತ್ರ ದೇಶದ ಮಾನ್ಯತೆ ಪಡೆದ ಸೊಮಾಲಿಲ್ಯಾಂಡ್ ಜಾಗತಿಕವಾಗಿ ಕಳೆದ ಹಲವು ಘಂಟೆಗಳಿಂದ ಸುದ್ದಿಯಲ್ಲಿದೆ. ಇಸ್ರೇಲ್ ದೇಶದ ಈ ಕ್ರಮವನ್ನು ಕೆಲವು ದೇಶಗಳು ವಿರೋಧಿಸಿವೆ. ಚರ್ಚೆಯಲ್ಲಿರುವ ಈ ಸೊಮಾಲಿಲ್ಯಾಂಡ್ ಯಾವುದಿದು? ಎಲ್ಲಿಯ ದೇಶ, ಇಸ್ರೇಲ್ನ ಮನ್ನಣೆ ಜಾಗತಿಕ ಪ್ರತಿಕ್ರಿಯೆಯನ್ನು ಏಕೆ ಹುಟ್ಟುಹಾಕಿದೆ ಎಂಬುದರ ವಿವರ ಇಲ್ಲಿದೆ. ದಶಕಗಳ ಹಿಂದೆ 1991ರಂದು ಸೊಮಾಲಿಯಾದಿಂದ ಬೇರ್ಪಟ್ಟ ಪ್ರದೇಶವಾದ
ಶಿಕ್ಷಣವು ಅಂಕಗಳಿಗೆ ಸೀಮಿತವಾಗದೆ ಜೀವನ ಮೌಲ್ಯಗಳು ಸಿಗುವಂತಾಗಬೇಕು: ಪ್ರೊ.ಗಣೇಶ್ ಸಂಜೀವ್
ಕೊಣಾಜೆ: ಪ್ರತಿಯೊಬ್ಬರಲ್ಲೂ ಪ್ರತಿಭೆಗಳಿರುತ್ತವೆ. ಪ್ರತಿಭೆಗಳನ್ಬು ಅವಕಾಶಗಳನ್ನಾಗಿ ಮಾಡುವ ಚಾಕಚಕ್ಯತೆ ನಮ್ಮಲ್ಲಿರಬೇಕು. ಶಿಕ್ಷಣವು ಅಂಕಗಳಿಗೆ ಮಾತ್ರವಲ್ಲ ಜ್ಞಾನ ಹಾಗೂ ಜೀವನದ ಮೌಲ್ಯಗಳನ್ನು ಬೆಳೆಸಿ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಪೂರಕವಾಗಿರಬೇಕು ಎಂದು ಮಂಗಳೂರು ವಿವಿ ಕುಲಸಚಿವರಾದ ಪ್ರೊ.ಗಣೇಶ್ ಸಂಜೀವ್ ಅವರು ಹೇಳಿದರು. ಕೊಣಾಜೆ ವಿಶ್ವಮಂಗಳ ವಿದ್ಯಾಸಂಸ್ಥೆಯ ವಾರ್ಷಿಕೋತ್ಸವವನ್ನು ಉದ್ಘಾಟಿಸಿ ಮಾತನಾಡಿದ ಪ್ರೊ.ಗಣೇಶ್ ಸಂಜೀವ್, ಮಕ್ಕಳು ಸಾಧನೆ ಮಾಡಿದಾಗ ಪಾಲಕರು ಮಾತ್ರವಲ್ಲ ಶಿಕ್ಷಕರೂ ಸಂತಸಪಡುತ್ತಾರೆ. ವಿದ್ಯಾರ್ಥಿಗಳಲ್ಲಿ ಪ್ರಾಮಾಣಿಕತೆ, ಗೌರವ ನೀಡುವ ಮನೋಭಾವನೆ, ನಾಯಕತ್ವ ಗುಣವನ್ನು ಹಾಗೂ ಸಮಾಜದಲ್ಲಿ ಉತ್ತಮ ವ್ಯಕ್ತಿಯನ್ನಾಗಿ ರೂಪಿಸುವ ಜವಬ್ಧಾರಿ ಶಿಕ್ಷಕರದ್ದಾಗಿದೆ ಎಂದು ಹೇಳಿದರು. ಮಂಗಳೂರು ವಿವಿ ಸಿಂಡಿಕೇಟ್ ಸದಸ್ಯರಾದ ರಘುರಾಜ್ ಕದ್ರಿ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ, ಇಂದು ಎಷ್ಟೋ ಜನರು ಶಿಕ್ಷಣಕ್ಕೆ ಸೀಮಿತವಾಗಿ ಹೋಗುತ್ತಿರುವುದನ್ನು ಕಾಣುತ್ತೇವೆ. ಸಮಾನತೆ, ಸಾಮರಸ್ಯ, ಮಾನವೀಯತೆಯ ಮನೋಭಾವಗಳು ಶಿಕ್ಷಣದ ಮೂಲಕ ಸಿಗುವಂತಾಗಲಿ ಎಂದು ಹೇಳಿದರು. ವಿಶ್ವಮಂಗಳ ಆಡಳಿತ ಅಧ್ಯಕ್ಷರಾದ ಪ್ರೊ.ಜಗದೀಶ್ ಪ್ರಸಾದ್ ಅವರು ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ, ಮಕ್ಕಳ ವಿದ್ಯಾಭ್ಯಾಸದ ಜೊತೆಗೆ ನಾರಾಯಣ ಗುರು, ಬಸವಣ್ಣ ,ಗಾಂಧೀಜಿಯವರಂತಹ ಮಹಾತ್ಮರ ಆದರ್ಶ ತತ್ವಗಳನ್ನು ತಿಳಿಯಪಡಿಸುವ ಕಾರ್ಯ ಅಗತ್ಯವಾಗಿ ಆಗಬೇಕಿದೆ ಎಂದರು. ಇದೇ ಸಂದರ್ಭದಲ್ಲಿ ಹಳೆ ವಿದ್ಯಾರ್ಥಿಗಳಾದ ಚಿತ್ರನಟಿ ವಂಶಿ ರತ್ನಕುಮಾರ್, ತೃಷಾ ಹಾಗೂ ಫಾತಿಮತ್ ನಿಶಾ ಅವರನ್ನು ಶೈಕ್ಷಣಿಕ ಸಾಧನೆಗಾಗಿ ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ವಿವಿದ ವಿಭಾಗಗಳ ಮುಖ್ಯಸ್ಥರಾದ ಶೋಭಾವತಿ ಬಿ, ಪ್ರಿಯಾ ಎನ್, ಹಂಸಗೀತ ಅವರು ವಾರ್ಷಿಕ ವರದಿ ಮಂಡಿಸಿದರು. ಸಿಂಡಿಕೇಟ್ ಸದಸ್ಯರಾದ ಅಚ್ಯುತ ಗಟ್ಟಿ, ಕಾರ್ಯದರ್ಶಿ ಡಾ.ಗೋವಿಂದ ರಾಜು, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷರಾದ ರಾಜೀವ್ ನಾಯ್ಜ್ ಮೊದಲಾದವರು ಉಪಸ್ಥಿತರಿದ್ದರು. ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಪೂರ್ಣಿಮಾ ಡಿ ಶೆಟ್ಟಿ ಸ್ಬಾಗತಿಸಿದರು. ಕೋಶಾಧಿಕಾರಿ ಸುಬ್ಬ ನಾಯ್ಕ್ ಅವರು ವಂದಿಸಿದರು. ಮಾನ್ವಿ ಎಸ್ ಹಾಗೂ ಮಹಮ್ಮದ್ ಝಹೀದ್ ನಿರೂಪಿಸಿದರು.
ಸರ್ಕಾರದಿಂದ ಪಡೆದ 250 ಕೋಟಿ ರೂ. ಭೂಮಿ ಇನ್ಫೋಸಿಸ್ ಮಾರಾಟ ಆರೋಪ! ಅಂದಿನ CFO ಮೋಹನ್ ದಾಸ್ ಪೈ ಪ್ರತಿಕ್ರಿಯೆ
ಇನ್ಫೋಸಿಸ್ ಕರ್ನಾಟಕ ಸರ್ಕಾರದಿಂದ ರಿಯಾಯಿತಿ ದರದಲ್ಲಿ ಭೂಮಿ ಪಡೆದು ಖಾಸಗಿ ಸಂಸ್ಥೆಗೆ ದುಬಾರಿ ದರಕ್ಕೆ ಮಾರಾಟ ಮಾಡಿದೆ ಎಂಬ ಆರೋಪಕ್ಕೆ ಮೋಹನ್ ದಾಸ್ ಪೈ ಸ್ಪಷ್ಟನೆ ನೀಡಿದ್ದಾರೆ. ಈ ಭೂಮಿಯನ್ನು ಮಾರುಕಟ್ಟೆಯಿಂದಲೇ ಖರೀದಿಸಲಾಗಿತ್ತು, ಸರ್ಕಾರದಿಂದ ರಿಯಾಯಿತಿ ಪಡೆದಿಲ್ಲ ಎಂದು ಅವರು ತಿಳಿಸಿದ್ದಾರೆ. ಕಾಂಗ್ರೆಸ್ ಸಂಸದ ಕೆ.ವಿ.ಆರ್. ಕೃಷ್ಣಮೂರ್ತಿ ಅವರು ಈ ಮಾರಾಟದ ಬಗ್ಗೆ ಪ್ರಶ್ನಿಸಿ, ಹಣವನ್ನು ಸರ್ಕಾರಕ್ಕೆ ಹಿಂದಿರುಗಿಸಬೇಕು ಎಂದು ವಾದಿಸಿದ್ದಾರೆ.
ಹೊಸ ವರ್ಷದ ಸಂದೇಶದ ರೂಪದಲ್ಲಿ ಬರುತ್ತಿದೆ APK ಫೈಲ್, ತೆರೆಯುವಾಗ ಜಾಗ್ರತೆ!
ಈ ಹೊಸ ವರ್ಷದಲ್ಲಿ ದುರುದ್ದೇಶಪೂರಿತ Apk ಫೈಲ್ ನಿಂದ ಎಚ್ಚರವಾಗಿರಿ. ಹೊಸ ವರ್ಷದ ಸಂದೇಶ ಅಥವಾ ಫೋಟೋಗಳು ಇರುವ ಎಪಿಕೆ ಫೈಲ್ ಗಳನ್ನು ತೆರೆದಲ್ಲಿ ನಿಮ್ಮ ಫೋನ್ ಅನ್ನು ದುರುಳರ ಕೈಗೆ ಕೊಟ್ಟೀರಿ ಜೋಕೆ! ಹೊಸ ವರ್ಷದ ಸಂದೇಶ ಅಥವಾ ಫೋಟೋಗಳು ಇರುವ ಎಪಿಕೆ ಫೈಲ್ ಗಳನ್ನು ತೆರೆದಲ್ಲಿ ನಿಮ್ಮ ಫೋನ್ ಅನ್ನು ದುರುಳರ ಕೈಗೆ ಕೊಟ್ಟೀರಿ ಜೋಕೆ! ಸಂದೇಶದಲ್ಲಿ ಲಗತ್ತಿಸಿರಬಹುದಾದ ಎಪಿಕೆ ಫೈಲ್ ತೆರೆಯದಿರಿ. ನಿಮಗೆ ಮೇಲ್ನೋಟಕ್ಕೆ ಹೊಸ ವರ್ಷದ ಶುಭಾಶಯದ ವಾಟ್ಸ್ ಆ್ಯಪ್ ಸಂದೇಶವಾಗಿ ಕಾಣಬಹುದು. ಸಂದೇಶದಲ್ಲಿ ಒಂದು ಎಪಿಕೆ ಫೈಲ್ ಲಗತ್ತಿಸಲಾಗಿರುತ್ತದೆ ಮತ್ತು ಡೌನ್ಲೋಡ್ ಮಾಡುವಂತೆ ಆಮಿಷ ಒಡ್ಡಲಾಗಿರುತ್ತದೆ. ನಿಮಗಾಗೇ ಪ್ರತ್ಯೇಕವಾಗಿ ರೂಪಿಸಿದ ಶುಭಾಶಯಗಳನ್ನು ಸ್ನೇಹಿತರು ಮತ್ತು ಸಂಬಂಧಿಕರಿಂದ ಹಂಚಿಕೊಳ್ಳುವುದು ಸಾಮಾನ್ಯ ವಿಚಾರ. ಆದರೆ ಈ ಎಪಿಕೆ ಫೈಲ್ ಅನ್ನು ನೀವು ಡೌನ್ಲೋಡ್ ಮಾಡಿದರೆ ಗಂಟೆಗಳೊಳಗೆ, ಅನುಮಾನಾಸ್ಪದ ಚಟುವಟಿಕೆ ಫೋನ್ ನಲ್ಲಿ ಕಾಣಿಸಬಹುದು. ತಮ್ಮಷ್ಟಕ್ಕೆ ನಿಮ್ಮ ಮೊಬೈಲ್ ನಲ್ಲಿರುವ ಆ್ಯಪ್ ಗಳು ತೆರೆದುಕೊಳ್ಳಬಹುದು. ಸಂಪರ್ಕ ಸಂಖ್ಯೆಗಳಿಗೆ ದುರುಳರು ಪ್ರವೇಶ ಪಡೆಯುತ್ತಾರೆ. ಮತ್ತು ಕೆಲವು ಪ್ರಕರಣಗಳಲ್ಲಿ ಅನಧಿಕೃತ ಬ್ಯಾಂಕ್ ವ್ಯವಹಾರಗಳೂ ಸಂಭವಿಸಬಹುದು. ಹಬ್ಬದ ಸಂದರ್ಭದಲ್ಲಿ ಹೆಚ್ಚಾಗುವ APK ಫೈಲ್ಗಳು ಸೈಬರ್ ತಜ್ಞರು ಹೇಳುವ ಪ್ರಕಾರ ಈ ದುರುದ್ದೇಶಪೂರಿತ ಎಪಿಕೆ ಫೈಲ್ಗಳನ್ನು ಕಳುಹಿಸುವ ಮೂಲಕ ಸದ್ದೇ ಇಲ್ಲದೆ ನಿಮ್ಮ ಫೋನ್ ಅನ್ನು ದುರುಳರು ನಿಯಂತ್ರಿಸಲು ಆರಂಭಿಸುತ್ತಾರೆ. ಹಬ್ಬದ ಸಂದರ್ಭದಲ್ಲಿ ಇಂತಹ ಸಂದೇಶಗಳು ಹೆಚ್ಚಾಗುತ್ತವೆ. ಜನರು ಅಪರಿಚಿತ ಲಿಂಕ್ ಗಳನ್ನು ಕ್ಲಿಕ್ ಮಾಡುವುದು ಹೆಚ್ಚಾಗಿರುತ್ತದೆ. ಅಥವಾ ಫೈಲ್ಗಳನ್ನು ಗಮನಿಸದೆ ಡೌನ್ಲೋಡ್ ಮಾಡಿರುತ್ತಾರೆ. ಈ ಕುರಿತಂತೆ ಹೈದರಾಬಾದ್ ಪೊಲೀಸರು ಇತ್ತೀಚೆಗೆ ಎಚ್ಚರಿಕೆಯ ಸಲಹೆಯನ್ನು ನೀಡಿದ್ದಾರೆ.” ವಂಚಕರು ವಾಟ್ಸ್ಆ್ಯಪ್, ಎಸ್ಎಂಎಸ್ ಮತ್ತು ಇಮೇಲ್ಗಳ ಮೂಲಕ ಹಬ್ಬದ ಸಂದರ್ಭದಲ್ಲಿ ಜನರನ್ನು ಮರಳುಗೊಳಿಸಲು ಪ್ರಯತ್ನಿಸುತ್ತಾರೆ. ಅಮಾಯಕ ಆನ್ಲೈನ್ ಬಳಕೆದಾರರನ್ನು ಗುರಿಯಾಗಿಸಿ ಈ ಸಂದೇಶಗಳನ್ನು ಕಳುಹಿಸಲಾಗುತ್ತದೆ ಮತ್ತು ಹಣಕಾಸು ಮತ್ತು ವೈಯಕ್ತಿಕ ಡಾಟಾ ಕದಿಯಲಾಗುತ್ತಿದೆ” ಎಂದು ಪೊಲೀಸರು ಎಚ್ಚರಿಸಿದ್ದಾರೆ. APK ಫೈಲ್ ಎಂದರೇನು? ಒಂದು ಆಂಡ್ರ್ಯಾಡ್ ಪ್ಯಾಕೇಜ್ ಕಿಟ್ ಅಥವಾ ಎಪಿಕೆ ಫೈಲ್ ಅನ್ನು ನಿಮ್ಮ ಸ್ಮಾರ್ಟ್ ಫೋನ್ ಗಳು ಮುಖ್ಯವಾಗಿ ಆಂಡ್ರಾಯ್ಡ್ ಫೋನ್ಗಳಲ್ಲಿ ಅಪ್ಲಿಕೇಶನ್ ಗಳನ್ನು ಇನ್ ಸ್ಟಾಲ್ ಮಾಡಲು ಬಳಸಲಾಗುತ್ತದೆ. ಮುಖ್ಯವಾಗಿ ವಿಂಡೋಸ್ ಕಂಪ್ಯೂಟರ್ನಲ್ಲಿ ಬಳಸಲಾಗುವ .exe ಫೈಲ್ ನಂತೆಯೇ ಇರುತ್ತದೆ. ಅಪ್ಲಿಕೇಶನ್ ಕಾರ್ಯನಿರ್ವಹಿಸಲು ಬೇಕಾಗಿರುವುದೆಲ್ಲವೂ ಅದರಲ್ಲಿರುತ್ತದೆ. ಎಲ್ಲವನ್ನೂ ಒಂದೇ ಪ್ಯಾಕ್ ನಲ್ಲಿ ಕೊಡಲಾಗಿರುತ್ತದೆ. ಸಾಮಾನ್ಯವಾಗಿ ಆ್ಯಪ್ ಗಳನ್ನು ಗೂಗಲ್ ಪ್ಲೇ ಸ್ಟೋರ್ ನಿಂದ ಡೌನ್ಲೋಡ್ ಮಾಡಲಾಗುತ್ತದೆ. ಆದರೆ ಎಪಿಕೆ ಫೈಲ್ ಗಳನ್ನು ಇತರ ವೆಬ್ ತಾಣಗಳು ಅಥವಾ ಹಂಚಿಕೊಳ್ಳುವ ತಾಣಗಳಾದ ವಾಟ್ಸ್ಆ್ಯಪ್, ಎಸ್ಎಂಎಸ್ ಅಥವಾ ಇಮೇಲ್ ಮೂಲಕವೂ ಕಳುಹಿಸಬಹುದು. ಇದನ್ನು ಸೈಡ್ ಲೋಡಿಂಗ್ ಎಂದು ಕರೆಯುತ್ತಾರೆ. ಅಪಾಯಕಾರಿ ಸೈಡ್ ಲೋಡಿಂಗ್ ಸೈಡ್ಲೋಡಿಂಗ್ ಕೆಲವೊಮ್ಮೆ ಉತ್ತಮವಾಗಿದ್ದರೂ, ಅಪಾಯಕಾರಿ. ಎಪಿಕೆ ಫೈಲ್ಗಳು ಅಪರಿಚಿತ ಅಥವಾ ವಿಶ್ವಾಸಾರ್ಹವಲ್ಲದ ಮೂಲದಿಂದ ಬಂದಲ್ಲಿ ಅದರಲ್ಲಿ ಮಾಲ್ವರೆಗಳು ಇರಬಹುದು ಮತ್ತು ನಿಮ್ಮ ವೈಯಕ್ತಿಕ ಮಾಹಿತಿ ಕದಿಯಬಹುದು. ನಿಮ್ಮ ಫೋನಿಗೆ ಪ್ರವೇಶ ಪಡೆಯಬಹುದು ಮತ್ತು ಹಣಕಾಸು ನಷ್ಟವೂ ಸಂಭವಿಸಬಹುದು. ಹೀಗಾಗಿ ಎಪಿಕೆ ಫೈಲ್ ಗಳನ್ನು ಡೌನ್ಲೋಡ್ ಮಾಡುವಾಗ ಅವು ವಿಶ್ವಾಸಾರ್ಹ ಮೂಲವೇ ಎಂದು ಗಮನಿಸಬೇಕು. ಅಪರಿಚಿತ ಸಂದೇಶಗಳು ಅಥವಾ ಲಿಂಕ್ ಮೂಲಕ ಬಂದಲ್ಲಿ ಅದನ್ನು ಅಲಕ್ಷಿಸಬೇಕು. ಪರಿಚಿತರಿಂದಲೇ ಖೆಡ್ಡಾ ಬಹಳಷ್ಟು ಬಾರಿ ಎಪಿಕೆ ಫೈಲ್ ಗಳು ಪರಿಚಿತರಿಂದಲೇ ಬರಬಹುದು. ಆರಂಭದಲ್ಲಿ ಹ್ಯಾಪಿ ನ್ಯೂ ಇಯರ್ ಎನ್ನುವ ಸಂದೇಶ ಬರಬಹುದು. ನಂತರ ಕ್ಲಿಕ್ ಮಾಡಿದರೆ ನಿಮಗಾಗಿ ವಿಶೇಷ ಗ್ರೀಟಿಂಗ್ ಎಂದು ಇರಬಹುದು. ಕೆಲವೊಮ್ಮೆ ಸಹೋದ್ಯೋಗಿ, ದೂರದ ಸಂಬಂಧಿಕರು ಅಥವಾ ಸ್ನೇಹಿತರ ಕಡೆಯಿಂದಲೂ ಬರಬಹುದು. ಯಾವುದೇ ಪ್ರಕರಣಗಳಲ್ಲಿ ದಾಳಿಕೋರರು ಲಿಂಕ್ ಹರಡಲು ವಾಟ್ಸ್ಆ್ಯಪ್ ಬಳಸುವುದೇ ಹೆಚ್ಚು. ಹೀಗಾಗಿ ವಿಶ್ವಾಸಾರ್ಹ ಮೂಲವೆಂದು ತಿಳಿದು ಡೌನ್ಲೋಡ್ ಮಾಡುವ ಅಪಾಯ ಹೆಚ್ಚಾಗಿರುತ್ತದೆ. ಹೊಸ ವರ್ಷದ ಶುಭಾಶಯ ಎನ್ನುವ ಸಂದೇಶ ಬಂದ ನಂತರ ಅದರಲ್ಲಿ ಸಂದೇಶ ನೋಡಲು ಆ್ಯಪ್ ಇರುತ್ತದೆ. ಅದನ್ನು ಗೂಗಲ್ ಪ್ಲೇ ಸ್ಟೋರ್ನಿಂದ ಡೌನ್ಲೋಡ್ ಮಾಡುವುದಿಲ್ಲ. ಬದಲಾಗಿ ಎಪಿಕೆ ಫೈಲ್ ಆಗಿರುತ್ತದೆ. ಅದು ನಿಮ್ಮನ್ನು ಜಾಲಕ್ಕೆ ಬೀಳಿಸುವ ತಂತ್ರವಾಗಿದೆ. ಸರ್ಕಾರದ ಹೆಸರಿನಲ್ಲೂ ಎಪಿಕೆ ಇತ್ತೀಚೆಗೆ ವಾಟ್ಸ್ಆ್ಯಪ್ನಲ್ಲಿ ಪ್ರಸಾರ ಮಾಡಲಾಗುತ್ತಿರುವ ಎಪಿಕೆ ಫೈಲ್ಗಳನ್ನು ಸರ್ಕಾರದಿಂದ ಬಂದಿರುವ ರೀತಿಯಲ್ಲಿ ಕಳುಹಿಸಲಾಗುತ್ತಿದೆ. RTO ಚಲನ್.ಎಪಿಕೆ, SBI ಯೋಜನಾ.ಎಪಿಕೆ ಅಥವಾ ಕಿಸಾನ್ಯೋಜನಾ.ಎಪಿಕೆ ಎಂಬ ಹೆಸರಿನಲ್ಲಿ ಕಳುಹಿಸಲಾಗುತ್ತಿದೆ. ಜನರು ಭಯ ಅಥವಾ ಆಸೆಯಿಂದ ಟ್ರಾಫಿಕ್ ಚಲನ್ ಅಥವಾ ಸರ್ಕಾರದ ಯೋಜನೆಗಳ ಕುರಿತಾದ ಸಂದೇಶ ಎಂದುಕೊಂಡು ಎಪಿಕೆಯನ್ನು ಕ್ಲಿಕ್ ಮಾಡುತ್ತಾರೆ. ಆದರೆ ಕ್ರಿಸ್ಮಸ್ ಮತ್ತು ಹೊಸ ವರ್ಷಕ್ಕೆ ಕಳುಹಿಸಿರುವ ಸಂದೇಶ ಹೊಸದಾಗಿದೆ. ವಂಚಕರು ಹೊಸ ಕಾರ್ಯತಂತ್ರವನ್ನು ರೂಪಿಸಿದ್ದಾರೆ. ಅದರಲ್ಲಿ ಹೊಸ ವರ್ಷದ ಗಿಫ್ಟ್.ಎಪಿಕೆ, ಕ್ರಿಸ್ಮಸ್ ಗ್ರೀಟಿಂಗ್.ಎಪಿಕೆ ಅಥವಾ ಲಾಸ್ಟ್ ಇಯರ್ ನ್ಯೂಯಿರ್ ಪಾರ್ಟಿ ಪಿಕ್ಸ್.ಎಪಿಕೆ ಮೊದಲಾಗಿ ಕಳುಹಿಸುತ್ತಿದ್ದಾರೆ. ಫೈಲ್ ಹೆಸರುಗಳನ್ನು ಸ್ಮರಣೀಯ ವೀಡಿಯೋ ಅಥವಾ ಫೋಟೋ ಎನ್ನುವಂತೆ ಕಾಣುವ ರೀತಿಯಲ್ಲಿ ಕಳುಹಿಸಲಾಗುತ್ತಿದೆ. ಹೆಸರುಗಳು ಬದಲಾಗಿದ್ದರೂ ಅದರಲ್ಲಿರುವ ಮಾಲ್ವರೆ ಒಂದೇ ಆಗಿರುತ್ತದೆ. ಒಮ್ಮೆ ಇನ್ ಸ್ಟಾಲ್ ಮಾಡಿದರೆ ನಿಮ್ಮ ಫೋನ್ ನಿಯಂತ್ರಣ ದುರುಳರ ಕೈಗೆ ಹೊರಟು ಹೋಗಲಿದೆ. ವೈಯಕ್ತಿಕ ಡಾಟಾದಿಂದ ಹಣಕಾಸು ವಿವರಗಳವರೆಗೆ ಎಲ್ಲವೂ ಬಹಿರಂಗವಾಗಿಬಿಡುತ್ತದೆ.
ಹಳೇ ಪ್ರೀತಿಯೇ ಗಾನವಿ ಆತ್ಮಹ್ಮತ್ಯೆಗೆ ಕಾರಣವಾಯ್ತಾ?; ಸೂರಜ್ ಕುಟುಂಬಸ್ಥರು ಹೇಳಿದ್ದಿಷ್ಟು
ಬೆಂಗಳೂರಿನ ವಿದ್ಯಾರಣ್ಯಪುರದಲ್ಲಿ ಗಾನವಿ ಎಂಬ ಮಹಿಳೆ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳಕಿಗೆ ಬಂದಿತ್ತು. ಆಕೆಯ ಕುಟುಂಬಸ್ಥರು ಸೂರಜ್ ವರದಕ್ಷಿಣೆ ಕಿರುಕುಳ ನೀಡಿದ್ದರು. ವರದಕ್ಷಿಣೆ ಕಿರುಕುಳದ ಆರೋಪ ಎದುರಿಸುತ್ತಿದ್ದ ಗಾನವಿ ಪತಿ ಸೂರಜ್ ಮಹಾರಾಷ್ಟ್ರದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದು, ಈಗ ಗಾನವಿ ಕುಟುಂಬದ ವಿರುದ್ಧವೇ ದೂರು ದಾಖಲಾಗಿದೆ. ಗಾನವಿಗಿದ್ದ ಹಳೆಯ ಪ್ರೇಮ ಸಂಬಂಧವೇ ಈ ಎಲ್ಲಾ ದುರಂತಗಳಿಗೆ ಕಾರಣ ಎನ್ನುವುದು ಬಯಲಾಗಿದೆ.
ಪ್ರಧಾನಿ ಮೋದಿ ಸಂಪುಟದೊಂದಿಗೆ ಸಮಾಲೋಚಿಸದೆ ಮನರೇಗಾವನ್ನು ರದ್ದುಗೊಳಿಸಿದ್ದಾರೆ: ರಾಹುಲ್ ಗಾಂಧಿ ಆರೋಪ
ಹೊಸದಿಲ್ಲಿ,ಡಿ.28: ಪ್ರಧಾನಿ ನರೇಂದ್ರ ಮೋದಿ ಅವರು ಒಬ್ಬಂಟಿಯಾಗಿ ಮನರೇಗಾವನ್ನು ನಾಶಗೊಳಿಸುತ್ತಿದ್ದಾರೆ ಎಂದು ಆರೋಪಿಸಿರುವ ಲೋಕಸಭೆಯಲ್ಲಿ ವಿಪಕ್ಷ ನಾಯಕ ರಾಹುಲ್ ಗಾಂಧಿಯವರು, ಸಂಪುಟದೊಂದಿಗೆ ಸಮಾಲೋಚಿಸದೆ ಕಾಯ್ದೆಯನ್ನು ರದ್ದುಗೊಳಿಸಲಾಗಿದೆ ಎಂದು ಹೇಳಿದ್ದಾರೆ. ಶನಿವಾರ ಕಾಂಗ್ರೆಸ್ ಕಾರ್ಯಕಾರಿ ಸಮಿತಿ (ಸಿಡಬ್ಲ್ಯುಸಿ) ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಹುಲ್ ಗಾಂಧಿ, ಮನರೇಗಾ ಕೇವಲ ಒಂದು ಯೋಜನೆಯಾಗಿರಲಿಲ್ಲ, ಅದು ದುಡಿಯುವ ಹಕ್ಕನ್ನು ಆಧರಿಸಿದ್ದ ಪರಿಕಲ್ಪನೆಯಾಗಿತ್ತು. ಮನರೇಗಾ ಮೂಲಕ ದೇಶದ ಕೋಟ್ಯಂತರ ಜನರಿಗೆ ಕನಿಷ್ಠ ವೇತನವನ್ನು ಖಚಿತಗೊಳಿಸಲಾಗಿತ್ತು. ಪಂಚಾಯತ್ ರಾಜ್ನಲ್ಲಿ ನೇರ ರಾಜಕೀಯ ಸಹಭಾಗಿತ್ವ ಮತ್ತು ಹಣಕಾಸು ಬೆಂಬಲಕ್ಕೆ ಮನರೇಗಾ ಮಾರ್ಗವಾಗಿತ್ತು. ಪ್ರಧಾನಿಯವರು ತನ್ನ ಸಂಪುಟದೊಂದಿಗೆ ಸಮಾಲೋಚಿಸದೆ ಮತ್ತು ಈ ವಿಷಯವನ್ನು ಅಧ್ಯಯನ ಮಾಡದೆ ಏಕಾಂಗಿಯಾಗಿ ಅದನ್ನು ನಾಶಗೊಳಿಸುತ್ತಿದ್ದಾರೆ ಎಂದು ಹೇಳಿದರು. ಮನರೇಗಾವನ್ನು ರದ್ದುಗೊಳಿಸುವ ಮೂಲಕ ಮೋದಿ ಸರಕಾರವು ಹಕ್ಕುಗಳ ಪರಿಕಲ್ಪನೆ ಮತ್ತು ಒಕ್ಕೂಟ ರಚನೆಯ ಮೇಲೆ ದಾಳಿ ನಡೆಸುತ್ತಿದೆ. ಅದು ರಾಜ್ಯಗಳಿಂದ ಹಣವನ್ನು ಕಿತ್ತುಕೊಳ್ಳುತ್ತಿದೆ. ಇದು ಅಧಿಕಾರ ಮತ್ತು ಹಣಕಾಸಿನ ಕೇಂದ್ರೀಕರಣವಾಗಿದ್ದು, ದೇಶಕ್ಕೆ ಮತ್ತು ಬಡವರಿಗೆ ಹಾನಿಯನ್ನುಂಟು ಮಾಡುತ್ತದೆ. ಪ್ರಧಾನಿ ಕಚೇರಿಯು ಸಚಿವರು ಅಥವಾ ಸಂಪುಟದೊಂದಿಗೆ ಸಮಾಲೋಚಿಸದೇ ನೇರವಾಗಿ ಈ ನಿರ್ಧಾರವನ್ನು ತೆಗೆದುಕೊಂಡಿದೆ. ಇದು ದೇಶದಲ್ಲಿ ‘ಒನ್-ಮ್ಯಾನ್ ಶೋ’ ನಡೆಯುತ್ತಿದೆ ಎನ್ನುವುದನ್ನು ತೋರಿಸಿದೆ ಎಂದು ಹೇಳಿದರು. ಮನರೇಗಾ ರದ್ದತಿಯಿಂದ ಗೌತಮ್ ಅದಾನಿಯಂತಹ ಕೆಲವೇ ಬಂಡವಾಳಶಾಹಿಗಳಿಗೆ ಲಾಭವಾಗಲಿದೆ ಎಂದು ಹೇಳಿದ ರಾಹುಲ್ ಗಾಂಧಿ, ಬಡವರಿಂದ ಹಣವನ್ನು ಕಿತ್ತುಕೊಳ್ಳುವುದು ಮತ್ತು ಅದನ್ನು ಅದಾನಿಯಂತಹ ವ್ಯಕ್ತಿಗಳಿಗೆ ನೀಡುವುದು ಮನರೇಗಾ ರದ್ದತಿಯ ಉದ್ದೇಶವಾಗಿದೆ ಎಂದು ಹೇಳಿದರು.
ಕರುಳಿನ ಆರೋಗ್ಯಕ್ಕೆ ಉತ್ತಮ ಸಕ್ಕರೆ ಯಾವುದು?
ಎಲ್ಲಾ ಆರೋಗ್ಯ ತಜ್ಞರು ಸಕ್ಕರೆ ಸೇವನೆಯನ್ನು ಕಡಿಮೆಗೊಳಿಸಬೇಕು ಎಂದೇ ಸಲಹೆ ನೀಡಿದ್ದಾರೆ. ರುಚಿಗಾಗಿ ಬಳಸುವ ಸಕ್ಕರೆ ನಿಮ್ಮ ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ಏರಿಸಬಹುದು ಮತ್ತು ದೀರ್ಘಕಾಲೀನ ಆರೋಗ್ಯ ಸಮಸ್ಯೆಗೆ ಕಾರಣವಾಗಬಹುದು. ವಯಸ್ಕರು ಮತ್ತು ಮಕ್ಕಳು ಸಕ್ಕರೆ ಸೇವನೆ ಪ್ರಮಾಣವನ್ನು ಪ್ರತಿದಿನ 58 ಗ್ರಾಂಗಳಷ್ಟು ಅಥವಾ 14 ಚಮಚ ಅಥವಾ ಶೇ 5ರಿಂದ ಶೇ 10ರಷ್ಟು ಒಟ್ಟು ಕ್ಯಾಲರಿಗೆ ಸೀಮಿತಗೊಳಿಸಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಎಲ್ಲಾ ಆರೋಗ್ಯ ತಜ್ಞರು ಸಕ್ಕರೆ ಸೇವನೆಯನ್ನು ಕಡಿಮೆಗೊಳಿಸಬೇಕು ಎಂದೇ ಸಲಹೆ ನೀಡುತ್ತಾರೆ. ರುಚಿಗಾಗಿ ಬಳಸುವ ಸಕ್ಕರೆ ನಿಮ್ಮ ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ಏರಿಸಬಹುದು ಮತ್ತು ದೀರ್ಘಕಾಲೀನ ಆರೋಗ್ಯ ಸಮಸ್ಯೆಗೆ ಕಾರಣವಾಗಬಹುದು! ಆದರೆ ಸಂಸ್ಕರಿತ ಸಕ್ಕರೆಯ ಬಳಕೆ ಬದಲಿಸಿದಲ್ಲಿ ಸಿಹಿಯನ್ನು ತೊಡೆದು ಹಾಕಿದ್ದೀರಿ ಎಂದು ಅರ್ಥವಲ್ಲ. ನಿಮ್ಮ ಸಿಹಿಯ ಬಯಕೆಗೆ ನೈಸರ್ಗಿಕವಾಗಿ ಬೇಕಾದಷ್ಟು ಆರೋಗ್ಯಕರ ಬದಲಿಗಳು ಸಿಗುತ್ತವೆ. ಬೆಂಗಳೂರಿನ ಸಿಎಂಐ ಆಸ್ಪತ್ರೆಯಲ್ಲಿ ವೈದ್ಯಕೀಯ ಜಠರಕರುಳಿನಶಾಸ್ತ್ರ (ಗ್ಯಾಸ್ಟ್ರೋಎಂಟರಾಲಜಿ) ಸಲಹಾತಜ್ಞರಾದ ಡಾ ಅನುಪಮ ಎನ್ಕೆ ಹೇಳುವ ಪ್ರಕಾರ,” ಜಠರಕರುಳಿನತಜ್ಞರ ದೃಷ್ಟಿಕೋನದಲ್ಲಿ ಸಿಹಿ ಮುಖ್ಯವಾಗಿ ಜೀರ್ಣಕ್ರಿಯೆ, ಕರುಳಿನ ಆರೋಗ್ಯ, ಆಮ್ಲೀಯತೆ, ಹೊಟ್ಟೆ ಉಬ್ಬುವುದು ಮತ್ತು ದೀರ್ಘಕಾಲೀನ ಕರುಳಿನ ಸಮತೋಲನ ತಪ್ಪಿಸುವಲ್ಲಿ ಪರಿಣಾಮ ಬೀರುವುದು ಆಗಿರುತ್ತದೆ. ಯಾವುದೇ ಸಿಹಿ ಸಂಪೂರ್ಣ ಹಾನಿಕರವಲ್ಲ. ಆದರೆ ಮಧ್ಯಮ ಪ್ರಮಾಣದಲ್ಲಿ ಸೇವಿಸುವುದು ಮುಖ್ಯವಾಗುತ್ತದೆ.” ಜಠರಕರುಳಿಗೆ ಯಾವ ಸಿಹಿ ಉತ್ತಮ? ವೈಟ್ ಶುಗರ್ (ಬಿಳಿ ಸಕ್ಕರೆ) ಕರುಳಿನ ಆರೋಗ್ಯದ ಮೇಲೆ ಅತಿ ಕೆಟ್ಟ ಪರಿಣಾಮ ಬೀರುತ್ತದೆ. ಅದು ಬಹಳ ಸಂಸ್ಕರಿತ ಆಹಾರ ಮತ್ತು ಹಾನಿಕರ ಕರುಳಿನ ಬ್ಯಾಕ್ಟೀರಿಯಕ್ಕೆ ನೆಲೆ ನೀಡುತ್ತದೆ. ಅದರಿಂದ ಜೀರ್ಣಾಂಗ ವ್ಯವಸ್ಥೆಯಲ್ಲಿ ಅಸಿಡಿಟಿ, ಗ್ಯಾಸ್ ಮತ್ತು ಉರಿಯೂತ ಹೆಚ್ಚಾಗಬಹುದು. ನಿಯಮಿತವಾಗಿ ಸೇವಿಸುವುದಿಂದ ಆಸಿಡ್ ರಿಫ್ಲಕ್ಸ್ ಹೆಚ್ಚಾಗಬಹುದು, ಕರುಳಿನ ಉರಿಯೂತದ ಲಕ್ಷಣಗಳೂ ಮತ್ತು ಫ್ಯಾಟಿ ಲಿವರ್ ರೋಗಕ್ಕೆ ಕಾರಣವಾಗಬಹುದು. ಬ್ರೌನ್ ಶುಗರ್ (ಕಂದು ಸಕ್ಕರೆ)ಯು ವೈಟ್ ಶುಗರ್ನಿಂದ ಸ್ವಲ್ಪ ಮಟ್ಟಿಗೆ ಉತ್ತಮ. ಅದು ಕರುಳಿನಲ್ಲಿ ಸಂಸ್ಕರಿತ ಸಕ್ಕರೆಯಂತೆಯೇ ಪರಿಣಾಮ ಬೀರುತ್ತದೆ. ಹೊಟ್ಟೆ ಉಬ್ಬರಿಸುವಿಕೆ ಮತ್ತು ಆಮ್ಲೀಯತೆ ತರುತ್ತದೆ. ಸಣ್ಣ ಪ್ರಮಾಣದಲ್ಲಿರುವ ಖನಿಜಗಳಿಂದ ಜೀರ್ಣಾಂಗ ವ್ಯವಸ್ಥೆಯ ರಕ್ಷಣೆಯಾಗದು. ಬೆಲ್ಲ ಕಡಿಮೆ ಸಂಸ್ಕರಿತ ಆಹಾರ ಮತ್ತು ಸಕ್ಕರೆಗಿಂತ ಬೇಗನೆ ಜೀರ್ಣವಾಗುತ್ತದೆ. ಸಣ್ಣ ಪ್ರಮಾಣದಲ್ಲಿ ಬಳಸಿದರೆ ಕರುಳಿನ ಚಲನೆಗಳಿಗೆ ನೆರವಾಗಬಹುದು. ಆದರೆ ಅತಿಯಾಗಿ ಸೇವಿಸಿದರೆ ಗ್ಯಾಸ್, ಬೇಧಿ ಮತ್ತು ಆಮ್ಲೀಯತೆಗೆ ಕಾರಣವಾಗಬಹುದು. ಮುಖ್ಯವಾಗಿ ಸೂಕ್ಷ್ಮ ಹೊಟ್ಟೆಗಳಿದ್ದವರಿಗೆ ಸಮಸ್ಯೆ ಕಂಡುಬರಬಹುದು. ಜೇನುತುಪ್ಪವನ್ನು ಸಣ್ಣ ಪ್ರಮಾಣದಲ್ಲಿ ಸೇವಿಸಿದರೆ ಉತ್ತಮ. ಅದರಲ್ಲಿರುವ ಬ್ಯಾಕ್ಟೀರಿಯವಿರೋಧಿ ತತ್ವಗಳು ಕರುಳಿನ ಸಮಸ್ಯೆ ಗುಣಪಡಿಸಲು ನೆರವಾಗಬಹುದು. ಆದರೆ ಅತಿಯಾದರೆ ಅಧಿಕ ಫ್ರಕ್ಟೋಸ್ ಇರುವುದರಿಂದ ಹೊಟ್ಟೆ ಉಬ್ಬರಿಸುವಿಕೆ, ಬೇಧಿ, ರಿಫ್ಲಕ್ಸ್ ಕಂಡುಬರಬಹುದು. ಎರೊಥ್ರಿಟಾಲ್ ಅನ್ನು ಮುಖ್ಯವಾಗಿ ಸಣ್ಣ ಕರುಳಿನಲ್ಲಿ ಹೀರಿಕೊಳ್ಳುವುದರಿಂದ ಕರುಳಿನ ಆರೋಗ್ಯಕ್ಕೆ ಸುರಕ್ಷಿತ. ಸಕ್ಕರೆ ಆಲ್ಕೋಹಾಲ್ಗಿಂತ ಕಡಿಮೆ ಗ್ಯಾಸ್ ತರುತ್ತದೆ. ಹಾಗಿದ್ದರೂ ದೊಡ್ಡ ಪ್ರಮಾಣದಲ್ಲಿ ಸೇವಿಸಿದರೆ ಸೂಕ್ಷ್ಮ ಹೊಟ್ಟೆಯಿರುವವರಿಗೆ ಅಹಿತಕರ ಭಾವನೆ ತರಬಹುದು. ಸ್ಟೆವಿಯಾ (ಮಧುವಂತ) ರಕ್ತದ ಸಕ್ಕರೆ ಪ್ರಮಾಣದ ಮೇಲೆ ಹಾನಿ ತರದು. ಜೀರ್ಣಕ್ರಿಯೆಗೆ ಉತ್ತಮ. ಆದರೆ ಸಂಸ್ಕರಿತ ಸ್ಟೆವಿಯ ಉತ್ಪನ್ನಗಳಿಂದ ಹೊಟ್ಟೆ ಉಬ್ಬರಿಸಬಹುದು ಅಥವಾ ವಾಕರಿಕೆಯ ಅನುಭವವಾಗಬಹುದು. ಮಾಂಕ್ ಫ್ರುಟ್ ಅನ್ನು ಕರುಳಿನ ಆರೋಗ್ಯಕ್ಕೆ ಉತ್ತಮ ಎಂದು ಪರಿಗಣಿಸಲಾಗುತ್ತದೆ. ಅದು ಕರುಳಿನಲ್ಲಿ ಹುದುಗುವುದಿಲ್ಲ. ಹೊಟ್ಟೆ ಉಬ್ಬರಿಸುವುದಿಲ್ಲ. ಆಮ್ಲೀಯತೆ ಹೆಚ್ಚಿಸುವುದಿಲ್ಲ. ಐಬಿಎಸ್ ಇದ್ದ ಮಂದಿಗೂ ಉತ್ತಮವಾಗಿರುತ್ತದೆ.
ಡಿವೋರ್ಸ್ ಕೇಸ್: ಪತ್ನಿಗಿಲ್ಲ ಜೀವನಾಂಶ –ಹೈಕೋರ್ಟ್ ಮಹತ್ವದ ಆದೇಶ! ಯಾರಿಗೆ ಅನ್ವಯ?
ವಿಚ್ಛೇದನ (Divorce) ಪ್ರಕರಣಗಳಲ್ಲಿ ಬಹುಮುಖ್ಯವಾಗಿ ಕೇಳಿಬರುವ ವಿಷಯವೆಂದರೆ ಅದು ‘ಜೀವನಾಂಶ’ ಅಥವಾ ‘Alimony’. ಸಾಮಾನ್ಯವಾಗಿ ಡಿವೋರ್ಸ್ ಆದಾಗ ಪತಿಗೆ ಪತ್ನಿಯ ನಿರ್ವಹಣೆಗಾಗಿ ಹಣ ನೀಡುವಂತೆ ಕೋರ್ಟ್ ಆದೇಶಿಸುವುದನ್ನು ನಾವು ನೋಡಿದ್ದೇವೆ. “ಗಂಡನ ಆಸ್ತಿಯಲ್ಲಿ ಹೆಂಡತಿಗೆ ಪಾಲು ಸಿಗಲೇಬೇಕು” ಎಂಬುದು ಬಹುತೇಕರ ನಂಬಿಕೆ. ಆದರೆ, ದೆಹಲಿ ಹೈಕೋರ್ಟ್ (Delhi High Court) ನೀಡಿರುವ ಇತ್ತೀಚಿನ ಮಹತ್ವದ ತೀರ್ಪು ಈ ನಂಬಿಕೆಯನ್ನು ಬದಲಿಸಿದೆ. ಸುಶಿಕ್ಷಿತ ಹಾಗೂ ಸ್ವಂತ ಕಾಲಿನ ಮೇಲೆ ನಿಂತಿರುವ ಮಹಿಳೆಯರಿಗೆ ಜೀವನಾಂಶ ಪಡೆಯುವ ಹಕ್ಕು ಇದೆಯೇ? ಎಂಬ ... Read more The post ಡಿವೋರ್ಸ್ ಕೇಸ್: ಪತ್ನಿಗಿಲ್ಲ ಜೀವನಾಂಶ – ಹೈಕೋರ್ಟ್ ಮಹತ್ವದ ಆದೇಶ! ಯಾರಿಗೆ ಅನ್ವಯ? appeared first on Karnataka Times .
ಕಾಂಗ್ರೆಸ್ ಹಿರಿಯ ನಾಯಕ ದಿಗ್ವಿಜಯ್ ಸಿಂಗ್ ಅವರು ಬಿಜೆಪಿ ಮತ್ತು ಆರ್ಎಸ್ಎಸ್ ಸಂಘಟನಾ ಶಿಸ್ತನ್ನು ಹೊಗಳಿರುವುದು ಪಕ್ಷದಲ್ಲಿ ಹೊಸ ಬಿಕ್ಕಟ್ಟು ಸೃಷ್ಟಿಸಿದೆ. ಈ ಹೇಳಿಕೆ ಕಾಂಗ್ರೆಸ್ ನಾಯಕರ ನಡುವೆ ಭಿನ್ನಾಭಿಪ್ರಾಯ ಮೂಡಿಸಿದೆ. ಶಶಿ ತರೂರ್ ಬೆಂಬಲ ಸೂಚಿಸಿದರೆ, ಪವನ್ ಖೇರಾ ಮತ್ತು ಮಾಣಿಕ್ಯಂ ಟ್ಯಾಗೋರ್ ತೀವ್ರವಾಗಿ ಖಂಡಿಸಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ಮತ್ತು ಸಚಿನ್ ಪೈಲಟ್ ಪಕ್ಷದ ಒಗ್ಗಟ್ಟಿನ ಬಗ್ಗೆ ಮಾತನಾಡಿದ್ದಾರೆ. ದಿಗ್ವಿಜಯ್ ಸಿಂಗ್ ತಮ್ಮ ಹೇಳಿಕೆಗೆ ಸ್ಪಷ್ಟನೆ ನೀಡಿದ್ದಾರೆ.
ಉಸ್ಮಾನ್ ಹಾದಿ ಹಂತಕರ ಪೈಕಿ ಇಬ್ಬರು ಮೇಘಾಲಯ ಗಡಿ ಮೂಲಕ ಭಾರತಕ್ಕೆ ಪರಾರಿಯಾಗಿದ್ದಾರೆ: ಢಾಕಾ ಪೊಲೀಸರು
ಢಾಕಾ: ಬಾಂಗ್ಲಾದೇಶದ ರಾಜಕೀಯ ಹೋರಾಟಗಾರ ಉಸ್ಮಾನ್ ಹಾದಿ ಅವರನ್ನು ಗುಂಡಿಕ್ಕಿ ಹತ್ಯೆಗೈದಿದ್ದ ಹಂತಕರ ಪೈಕಿ ಇಬ್ಬರು ಹಂತಕರು ಹತ್ಯೆಯ ನಂತರ ಮೇಘಾಲಯ ಗಡಿಯ ಮೂಲಕ ಭಾರತಕ್ಕೆ ಪರಾರಿಯಾಗಿದ್ದಾರೆ ಎಂದು ಢಾಕಾ ಮಹಾನಗರ ಪೊಲೀಸರು ತಿಳಿಸಿದ್ದಾರೆ ಎಂದು ವರದಿಯಾಗಿದೆ. ಡಿಎಂಪಿ ಮಾಧ್ಯಮ ಕೇಂದ್ರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಹೆಚ್ಚುವರಿ ಪೊಲೀಸ್ ಆಯುಕ್ತ ಎಸ್.ಎನ್.ನಝ್ರುಲ್ ಮಸೂದ್, ಶಂಕಿತ ಹಂತಕರಾದ ಫೈಸಲ್ ಕರೀಮ್ ಮಸೂದ್ ಹಾಗೂ ಅಲಾಮ್ಗಿರ್ ಶೇಖ್ ತಮ್ಮ ಸ್ಥಳೀಯ ಸಹಚರರ ಮೂಲಕ ಮೈಮೆನ್ ಸಿಂಗ್ ನಲ್ಲಿರುವ ಹಾಲುವಘಾಟ್ ಗಡಿ ಮೂಲಕ ಭಾರತಕ್ಕೆ ಪರಾರಿಯಾಗಿದ್ದಾರೆ ಎಂದು ತಿಳಿಸಿದ್ದಾರೆ. “ನಮಗಿರುವ ಮಾಹಿತಿ ಪ್ರಕಾರ, ಶಂಕಿತ ಹಂತಕರು ಹಾಲುವಘಾಟ್ ಗಡಿ ಮೂಲಕ ಭಾರತಕ್ಕೆ ಪ್ರವೇಶಿಸಿದ್ದಾರೆ. ಅವರು ಗಡಿ ದಾಟಿದ ಬಳಿಕ ಪೂರ್ತಿ ಎಂಬ ವ್ಯಕ್ತಿ ಅವರನ್ನು ಬರಮಾಡಿಕೊಂಡಿದ್ದಾನೆ. ಇದಾದ ನಂತರ, ಸಾಮಿ ಎಂಬ ಟ್ಯಾಕ್ಸಿ ಚಾಲಕನು ಅವರನ್ನು ಮೇಘಾಲಯದ ತುರಾ ನಗರಕ್ಕೆ ಕರೆದೊಯ್ದಿದ್ದಾನೆ” ಎಂದು ಅವರು ಮಾಹಿತಿ ನೀಡಿದ್ದಾರೆ ಎಂದು The Daily Star ವರದಿ ಮಾಡಿದೆ. ಶಂಕಿತ ಆರೋಪಿಗಳಿಗೆ ನೆರವು ನೀಡಿದ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂಬ ಅನಧಿಕೃತ ಮಾಹಿತಿ ನಮಗೆ ದೊರೆತಿದೆ ಎಂದೂ ಅವರು ತಿಳಿಸಿದ್ದಾರೆ. ಬಾಂಗ್ಲಾದೇಶದ ಪ್ರಮುಖ ರಾಜಕೀಯ ಹೋರಾಟಗಾರರಾಗಿದ್ದ ಉಸ್ಮಾನ್ ಹಾದಿ ಭಾರತ ಮತ್ತು ಅವಾಮಿ ಲೀಗ್ ನ ಕಟು ಟೀಕಾಕಾರರಾಗಿದ್ದರು. ಕಳೆದ ಜುಲೈ ತಿಂಗಳಲ್ಲಿ ಶೇಖ್ ಹಸೀನಾ ಅವರ ಸರಕಾರ ಪತನಗೊಳ್ಳಲು ಕಾರಣವಾಗಿದ್ದ ವಿದ್ಯಾರ್ಥಿಗಳ ಹಿಂಸಾತ್ಮಕ ಹೋರಾಟದ ಮುಂದಾಳತ್ವವನ್ನು ವಹಿಸಿಕೊಂಡಿದ್ದ ನಾಯಕರಲ್ಲಿ ಅವರು ಕೂಡ ಒಬ್ಬರಾಗಿದ್ದರು.
ಕೆಲವು ಸಂದರ್ಭಗಳಲ್ಲಿ ಜಿಮ್ ಬಿಡುವುದು ಸೋಮಾರಿತನವಲ್ಲ,ಜಾಣತನ!: ಜಿಮ್ಗೆ ಹೋಗದಿರುವುದು ಯಾವಾಗ ಉತ್ತಮ?
ಕೆಲವೊಂದು ಸಂದರ್ಭಗಳಲ್ಲಿ ಜಿಮ್ ಬಿಡುವುದೇ ಉತ್ತಮ ಎಂದು ಜಿಮ್ ತರಬೇತುದಾರರು ಸಲಹೆ ನೀಡುತ್ತಾರೆ. ಹಾಗಿದ್ದರೆ ಆ ಸಂದರ್ಭಗಳು ಯಾವುವು? ಜಿಮ್ಗೆ ಹೋಗುವ ಅಭ್ಯಾಸ ಹೊಂದಿರುವವರು ಒಂದು ದಿನವೂ ತಪ್ಪಿಸುವುದಿಲ್ಲ. ಆದರೆ ನಿಮ್ಮ ದೇಹದಲ್ಲಿರುವ ಶಕ್ತಿಯ ಪ್ರತಿ ಬಿಂದುವನ್ನೂ ತೊಡೆದು ಹಾಕುವುದು ಎಲ್ಲ ಸಂದರ್ಭಗಳಲ್ಲೂ ಬದ್ಧತೆ ಎಂದು ಹೇಳಲಾಗದು. ಕೆಲವೊಂದು ಸಂದರ್ಭಗಳಲ್ಲಿ ಜಿಮ್ ಬಿಡುವುದೇ ಉತ್ತಮ ಎಂದು ಜಿಮ್ ತರಬೇತುದಾರರು ಸಲಹೆ ನೀಡುತ್ತಾರೆ. ಹಾಗಿದ್ದರೆ ಆ ಸಂದರ್ಭಗಳು ಯಾವುವು? ಕೆಲವೊಮ್ಮೆ ದೇಹ ಸುಸ್ತಿನಿಂದ ಜಡವಾಗುತ್ತದೆ ಮತ್ತು ಗಮನವಿಲ್ಲದೆ ಜಿಮ್ ಸಲಕರಣೆಗಳನ್ನು ಬಳಸಲು ಹೋಗಿ ಗಾಯಗಳೂ ಆಗಬಹುದು! ಅದೇ ಕಾರಣಕ್ಕೆ ಫಿಟ್ನೆಸ್ ತರಬೇತುದಾರರಾಗಿರುವ ಆದಿ ರ್ಯಾಡ್ ಅವರು ಇತ್ತೀಚೆಗೆ ಒಂದು ಪಟ್ಟಿಯನ್ನು ಮಾಡಿ ಯಾವ ಕ್ಷಣದಲ್ಲಿ ಜಿಮ್ಗೆ ಹೋಗುವುದನ್ನು ತಪ್ಪಿಸುವುದು ಸೋಮಾರಿತನವಲ್ಲ, ಬದಲಾಗಿ ಜಾಣತನ ಎಂದು ಹೇಳಿದ್ದಾರೆ. ಯಾವ ಸಂದರ್ಭದಲ್ಲಿ ಜಿಮ್ ಬಿಡಬೇಕು? ಇನ್ಸ್ಟಾಗ್ರಾಂ ಪೋಸ್ಟ್ನಲ್ಲಿ ಅವರು ಬರೆದಿರುವ ಪ್ರಕಾರ, “ವಾಸ್ತವದಲ್ಲಿ ಜಿಮ್ ಬಿಡಬೇಕಾದ ದಿನಗಳು” ಯಾವುವು ಎಂದು ಹೇಳಿದ್ದಾರೆ. ಅವರು ಕೆಲವು ಸನ್ನಿವೇಶಗಳನ್ನು ಮುಂದಿಟ್ಟಿದ್ದು, ಅಂತಹ ಸನ್ನಿವೇಶದಲ್ಲಿ ಜಿಮ್ಗೆ ಹೋದರೆ ವಿರುದ್ಧ ಪರಿಣಾಮವಾಗಬಹುದು ಎಂದು ಎಚ್ಚರಿಸಿದ್ದಾರೆ. ಅನಾರೋಗ್ಯವಿದ್ದರೆ ಜಿಮ್ ಬೇಡ ನಿಮಗೆ ಅನಾರೋಗ್ಯವಿದ್ದಾಗ ಜಿಮ್ಗೆ ಹೋಗಲೇಬಾರದು. ಅಂದರೆ ಜ್ವರ, ಸೋಂಕು, ಫ್ಲೂ ಇದ್ದಾಗ! ದೇಹ ಸ್ವಲ್ಪ ಸುಸ್ತಾಗಿದೆ ಜಿಮ್ಗೆ ಹೋಗದೆ ಇರುವುದು ಸರಿಯಲ್ಲ ಎಂದು ಅಂದುಕೊಳ್ಳುವುದೇ ತಪ್ಪು. ನಿಮ್ಮ ದೇಹ ಸ್ವಲ್ಪ ಸುಸ್ತಾಗಿರುವುದಿಲ್ಲ, ನಿಜವಾಗಿಯೂ ಆರೋಗ್ಯ ಕೆಟ್ಟಿರುತ್ತದೆ. ಗುಣಮುಖರಾಗಲು ನಿಮ್ಮ ದೇಹಕ್ಕೆ ಶಕ್ತಿಯ ಅಗತ್ಯವಿರುತ್ತದೆ. ಜಿಮ್ಗೆ ಹೋಗಿ ವ್ಯಾಯಾಮ ಮಾಡುವುದರಿಂದ ಸ್ಥಿತಿ ಹದಗೆಡಬಹುದು. ಜಿಮ್ ನಿಯಮ “ಕುತ್ತಿಗೆ ಮೇಲೆ/ ಕುತ್ತಿಗೆ ಕೆಳಗೆ” ಕಟ್ಟುನಿಟ್ಟಾಗಿ ಅನುಸರಿಸಬೇಕು. ಕುತ್ತಿಗೆಯ ಮೇಲೆ ಅಂದರೆ ನೆಗಡಿ ಅಥವಾ ಕೆಮ್ಮು ಇದ್ದರೆ ಸ್ವಲ್ಪ ವ್ಯಾಯಾಮ ಮಾಡಬಹುದು. ಆದರೆ ಕುತ್ತಿಗೆ ಕೆಳಗೆ ಅಂದರೆ ಜ್ವರದಿಂದ ದೇಹ ಸುಸ್ತಾಗಿದ್ದರೆ, ಎದೆ ನೋವು, ಹೊಟ್ಟೆನೋವು ಮೊದಲಾದ ಸಂದರ್ಭದಲ್ಲಿ ವಿಶ್ರಮಿಸಬೇಕು. ಹಸಿದಿದ್ದರೆ ಜಿಮ್ ಮಾಡಬಾರದು ಅಥವಾ ನೀವು ಇಡೀ ದಿನ ಏನೂ ತಿಂದಿರದೆ ಇದ್ದರೆ ವ್ಯಾಯಾಮ ಮಾಡಬಾರದು. ದೇಹದಲ್ಲಿ ಶಕ್ತಿ ಇಲ್ಲದಿದ್ದರೆ ಜಿಮ್ಗೆ ಹೋಗುವುದರಿಂದ ಗಾಯವಾಗುವ ಸಾಧ್ಯತೆ ಹೆಚ್ಚಿರುತ್ತದೆ. ಮೊದಲು ಪ್ರೊಟೀನ್ + ಕಾರ್ಬೋಹೈಡ್ರೇಟ್ ಇರುವ ಆಹಾರ ಸೇವಿಸಬೇಕು. ನಂತರ ಜಿಮ್ನಲ್ಲಿ ವ್ಯಾಯಾಮ ಮಾಡಬೇಕು. ನಿದ್ರೆ ಮಾಡದ ದಿನ ಜಿಮ್ ಮರೆಯಿರಿ ಹಿಂದಿನ ರಾತ್ರಿ ನಿದ್ರೆ ಸರಿಯಾಗಿ ಮಾಡದ ದಿನ ಮನೆಯಲ್ಲೇ ಇರುವುದು ಒಳಿತು. ಸರಿಯಾಗಿ ನಿದ್ರೆಯಾಗದೆ ಇದ್ದರೆ ಗಮನ ಕುಂದುತ್ತದೆ ಮತ್ತು ಗಾಯವಾಗುವ ಸಾಧ್ಯತೆ ಹೆಚ್ಚಿರುತ್ತದೆ. ಕೀಲು ನೋವು ಇದ್ದಾಗ ಜಿಮ್ ಬೇಡ ಕೀಲು ನೋವು ಅಥವಾ ಇತರ ಕಡೆಗೆ ನೋವು ಇದ್ದಾಗ ವ್ಯಾಯಾಮಕ್ಕೆ ಇಳಿಯಬಾರದು. ಚಲನೆ ಸಾಧ್ಯವಿದೆ. ಆದರೆ ನೋವುಂಟು ಮಾಡುವ ಸ್ನಾಯು ಇದ್ದರೆ ಜಿಮ್ ಕಸರತ್ತು ತೊರೆಯಬೇಕು. ಅಂತಹ ಸಂದರ್ಭದಲ್ಲಿ ನಡೆಯುವುದು, ವ್ಯಾಯಾಮ ಮಾಡುವುದು ಉತ್ತಮ. ಭಾವನಾತ್ಮಕ ಆರೋಗ್ಯ ಮುಖ್ಯ ಭಾವನಾತ್ಮಕವಾಗಿಯೂ ಆರೋಗ್ಯವಾಗಿರಬೇಕು. ತೀವ್ರ ಹತಾಶೆಯ ನಂತರ ತಕ್ಷಣ ಜಿಮ್ಗೆ ಹೋಗಿ ವ್ಯಾಯಾಮ ಮಾಡುವುದು ಸರಿಯಲ್ಲ. ಆಗ ನಡಿಗೆ, ಉಸಿರಾಟದ ವ್ಯಾಯಾಮ ಮತ್ತು ಶಾಂತ ಸ್ಥಿತಿಗೆ ಮರಳುವುದು ಮುಖ್ಯವಾಗುತ್ತದೆ. ಮನಸ್ಸು ಶಾಂತವಾದಾಗ ಅದ್ಭುತ ಅನುಭವ ಸಿಗುತ್ತದೆ. ಬದಲಾಗಿ ಹತಾಶೆಯನ್ನು ಮರೆತು ದೇಹ ದಂಡಿಸಿದರೆ ಸಾಮರ್ಥ್ಯ ಕಳೆದುಕೊಳ್ಳಬಹುದು. ಗುಣಮುಖರಾಗದೆ ಇದ್ದಾಗ, ಗಮನ ಕೇಂದ್ರೀಕೃತವಾಗದೆ ಇದ್ದಾಗ, ಹಸಿವೆಯಿಂದ ಇದ್ದಾಗ ದೇಹ ದಂಡಿಸಬಾರದು ಬದಲಾಗಿ ವಿಶ್ರಾಂತಿ ತೆಗೆದುಕೊಳ್ಳಬೇಕು. “ಕುತ್ತಿಗೆ ಮೇಲೆ/ ಕುತ್ತಿಗೆ ಕೆಳಗೆ” ನಿಯಮ ಸರಿಯೆ? ಹಿರಿಯ ಫಿಟ್ನೆಸ್ ಮತ್ತು ಲೈಫ್ಸ್ಟೈಲ್ ಸಲಹೆಗಾರರಾದ ಸಾಧನಾ ಸಿಂಗ್ ಹೇಳುವ ಪ್ರಕಾರ, “ಕುತ್ತಿಗೆ ಮೇಲಿನ ಅಸ್ವಸ್ಥತೆಯಲ್ಲಿ ಜಿಮ್ಗೆ ಹೋಗಬಹುದು ಎನ್ನುವುದು ಸಾಮಾನ್ಯ ನಿರ್ದೇಶನಗಳು. ಆದರೆ ಅದನ್ನು ವೈದ್ಯಕೀಯವಾಗಿ ಸರಿ ಎಂದು ಹೇಳಲಾಗದು. ಜ್ವರ ಅಥವಾ ದೇಹದಲ್ಲಿ ನೋವಿಲ್ಲದೆ ನೆಗಡಿಗೆ ಸೀಮಿತವಾದ ರೋಗವಾಗಿದ್ದರೆ ಲಘು ವ್ಯಾಯಾಮ ಮಾಡಬಹುದು. ಆದರೆ ಜ್ವರ ಬಂದಾಗ, ಚಳಿ ಜ್ವರ ಇದ್ದಾಗಲೂ ವ್ಯಾಯಾಮ ಮಾಡುವುದು ತಪ್ಪು. “ಜ್ವರ, ಶೀತ, ಏರಿದ ಹೃದಯಬಡಿತ, ಉಸಿರಾಟದ ತೊಂದರೆ, ಎದೆ ಬಿಗಿತ, ತಲೆ ತಿರುಗುವಿಕೆ ಅಥವಾ ತೀವ್ರ ಕೆಮ್ಮು ಇದ್ದರೆ ಜಿಮ್ನಲ್ಲಿ ಕಸರತ್ತು ಮಾಡಬಾರದು. ಅಂತಹ ಸಂದರ್ಭಗಳು ರೋಗ ನಿರೋಧಕ ವ್ಯವಸ್ಥೆ ಒತ್ತಡದಲ್ಲಿರುವುದರ ಸ್ಪಷ್ಟ ಚಿಹ್ನೆಯಾಗಿದೆ ಮತ್ತು ಕಸರತ್ತು ಮಾಡುವುದರಿಂದ ಗುಣಮುಖರಾಗಲು ತಡವಾಗಬಹುದು ಮತ್ತು ಹೃದಯಾಘಾತದ ಅಪಾಯ ಬರಬಹುದು” ಎನ್ನುತ್ತಾರೆ ಸಾಧನಾ ಸಿಂಗ್. ನಿದ್ರಾ ರಾಹಿತ್ಯ, ಆಹಾರದ ಕೊರತೆ ಮತ್ತು ಅತಿಯಾದ ಭಾವನಾತ್ಮಕ ಒತ್ತಡವು ಕಸರತ್ತಿನ ಕಡೆಗೆ ಸಂಪೂರ್ಣ ಗಮನ ಕೊಡಲು ಸಾಧ್ಯವಾಗದಂತೆ ಮಾಡುತ್ತದೆ. ಅದರಿಂದ ಅಪಾಯ ಸಂಭವಿಸಬಹುದು. ಒಟ್ಟು ಕಸರತ್ತಿನ ಸುರಕ್ಷೆಯ ಮೇಲೆ ಪರಿಣಾಮ ಬೀರಬಹುದು. ಮೆದುಳಿಗೆ ಸುಸ್ತಾಗಿದ್ದಾಗ ಚಲನೆಯ ನಿಯಂತ್ರಣ ನಿಖರವಾಗಿ ಇರುವುದಿಲ್ಲ. ಸಮತೋಲನ ತಪ್ಪುತ್ತದೆ. ಸಂಧಿಗಳ ಸ್ಥಿರತೆ ಕಡಿಮೆಯಾಗಬಹುದು. ಅದರಿಂದ ನೋವು, ಉಳುಕು ಉಂಟಾಗಬಹುದು. ಉಪವಾಸ ಅಥವಾ ಹಸಿವೆ ಇರುವಾಗ ಕಸರತ್ತು ಮಾಡಲು ಹೋದರೆ ತಲೆ ತಿರುಗಬಹುದು, ನರ ದೌರ್ಬಲ್ಯ ಕಂಡುಬರಬಹುದು ಮತ್ತು ಕಸರತ್ತಿನ ಸಂದರ್ಭದಲ್ಲಿ ನಿಖರವಾಗಿ ನಿರ್ಧಾರ ಕೈಗೊಳ್ಳಲು ಸಾಧ್ಯವಾಗದೆ ಇರಬಹುದು.
Year Ender 2025- ಹೀಗಿದೆ 2026ರ ಕ್ರೀಡಾಲೋಕದ ಮಹಾಸಂಭ್ರಮ; ವರ್ಷದುದ್ದಕ್ಕೂ ಕಾದಿದೆ ರಸದೌತಣ
2025ರ ಅಂತೂ ಭಾರತದ ಕ್ರೀಡಾಪ್ರೇಮಿಗಳ ಪಾಲಿಗೆ ಸಿಹಿಕಹಿಗಳ ಸಮ್ಮಿಳಿತವಾಗಿತ್ತು. ಇದೀಗ 2026 ಕ್ರೀಡಾ ಪ್ರೇಮಿಗಳ ಪಾಲಿಗೆ ಮಹಾಹಬ್ಬವಾಗಲಿದೆ. ಐಪಿಎಲ್, ಪ್ರೊ ಕಬಡ್ಡಿ ಜೊತೆಗೆ ಫಿಫಾ ವಿಶ್ವಕಪ್, ಐಸಿಸಿ ಟಿ20 ವಿಶ್ವಕಪ್, ಹಾಕಿ ವಿಶ್ವಕಪ್ಗಳು ಒಂದೇ ವರ್ಷದಲ್ಲಿ ನಡೆಯಲಿವೆ. ಭಾರತದಲ್ಲೇ ನಡೆಯಲಿರುವ ಟಿ20 ವಿಶ್ವಕಪ್ ನಂತೂ ಹಾಲಿ ಚಾಂಪಿಯನ್ ಭಾರತವವೇ ಫೇವರಿಟ್. ಇನ್ನು ಹಾಕಿ ವಿಶ್ವಕಪ್ನಲ್ಲೂ ಭಾರತದಿಂದ ಐತಿಹಾಸಿಕ ಸಾಧನೆ ನಿರೀಕ್ಷಿಸಲಾಗಿದೆ. ಉತ್ತರ ಅಮೆರಿಕದಲ್ಲಿ ಫುಟ್ಬಾಲ್ ವಿಶ್ವಕಪ್, ಟೆನಿಸ್ ಗ್ರಾನ್ ಸ್ಲಾಂಗಳು, ಕಾಮನ್ವೆಲ್ತ್ ಮತ್ತು ಏಷ್ಯನ್ ಗೇಮ್ಸ್ ಸಹ ನಡೆಯಲಿವೆ.
ಸಂಘಟನೆಯನ್ನು ಬಲಪಡಿಸಬೇಕು: ಆರೆಸ್ಸೆಸ್ಗೆ ಶ್ಲಾಘಿಸಿ ವಿವಾದಕ್ಕೀಡಾಗಿದ್ದ ದಿಗ್ವಿಜಯ ಸಿಂಗ್ಗೆ ಶಶಿ ತರೂರ್ ಬೆಂಬಲ
ಹೊಸದಿಲ್ಲಿ: RSS ಹಾಗೂ BJP ಸಂಘಟನಾ ಬಲವನ್ನು ಹೊಗಳಿದ ಹೇಳಿಕೆಗಳ ಹಿನ್ನೆಲೆಯಲ್ಲಿ ಉಂಟಾದ ವಿವಾದದ ನಡುವೆಯೇ, ಕಾಂಗ್ರೆಸ್ ಸಂಸದ ಶಶಿ ತರೂರ್ ಪಕ್ಷದ ಸಂಘಟನೆಯನ್ನು ಬಲಪಡಿಸುವ ಅಗತ್ಯವನ್ನು ಒತ್ತಿ ಹೇಳಿದ್ದಾರೆ. ಇದೇ ವೇಳೆ, ಹಿರಿಯ ನಾಯಕ ದಿಗ್ವಿಜಯ ಸಿಂಗ್ ಅವರನ್ನು ಅವರು ಪರೋಕ್ಷವಾಗಿ ಬೆಂಬಲಿಸಿದ್ದಾರೆ. ಕಾಂಗ್ರೆಸ್ನ 140ನೇ ಸಂಸ್ಥಾಪನಾ ದಿನದ ಹಿನ್ನೆಲೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಶಶಿ ತರೂರ್, ದಿಗ್ವಿಜಯ ಸಿಂಗ್ ಅವರೊಂದಿಗೆ ನಡೆದ ಸಂವಹನ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿ, “ನಾವು ಸ್ನೇಹಿತರು, ಪರಸ್ಪರ ಸಂಭಾಷಣೆ ಸಹಜ, ಸಂಘಟನೆಯನ್ನು ಬಲಪಡಿಸಬೇಕೆಂಬುದರಲ್ಲಿ ಯಾವುದೇ ಸಂದೇಹವಿಲ್ಲ” ಎಂದು ಹೇಳಿದರು. ಈ ದಿನವನ್ನು ಕಾಂಗ್ರೆಸ್ಗೆ ಮಹತ್ವದ ದಿನವೆಂದು ಬಣ್ಣಿಸಿದ ಶಶಿ ತರೂರ್, “ಪಕ್ಷದ ದೀರ್ಘ ಹಾಗೂ ಗಮನಾರ್ಹ ಇತಿಹಾಸವನ್ನು ಮತ್ತು ದೇಶಕ್ಕೆ ಕಾಂಗ್ರೆಸ್ ನೀಡಿರುವ ಕೊಡುಗೆಗಳನ್ನು ಹಿಂತಿರುಗಿ ನೋಡುವ ಸಂದರ್ಭ ಇದು” ಎಂದರು. ರಾಜ್ಯಸಭಾ ಸದಸ್ಯ ದಿಗ್ವಿಜಯ ಸಿಂಗ್ ಅವರು ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಹಳೆಯ ಛಾಯಾಚಿತ್ರದ ಬಳಿಕ ಈ ಚರ್ಚೆಗಳು ಆರಂಭವಾಗಿವೆ. ಆ ಚಿತ್ರದಲ್ಲಿ ನರೇಂದ್ರ ಮೋದಿ ಕಾರ್ಯಕರ್ತನಂತೆ ನೆಲದ ಮೇಲೆ ಕುಳಿತಿರುವುದು ಹಾಗೂ ಬಿಜೆಪಿ ಹಿರಿಯ ನಾಯಕ ಲಾಲ್ ಕೃಷ್ಣ ಅಡ್ವಾಣಿ ಕುರ್ಚಿಯಲ್ಲಿ ಕುಳಿತಿರುವುದು ಕಂಡು ಬರುತ್ತದೆ. ಈ ಚಿತ್ರವನ್ನು ‘ಪ್ರಭಾವಶಾಲಿ’ ಎಂದು ವರ್ಣಿಸಿದ್ದ ಸಿಂಗ್, ಗುಜರಾತ್ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಇದನ್ನು ತೆಗೆಯಲಾಗಿದೆ ಎಂದು ಹೇಳಿದ್ದಾರೆ. ಪೋಸ್ಟ್ ನಲ್ಲಿ ಬಿಜೆಪಿ ಮತ್ತು ಅದರ ಸೈದ್ಧಾಂತಿಕ ಪೋಷಕ RSSನ ಸಂಘಟನಾ ಬಲವನ್ನು ಉಲ್ಲೇಖಿಸಿರುವುದಾಗಿ ವ್ಯಾಖ್ಯಾನಿಸಲಾಗಿದ್ದು, ಇದರಿಂದ ಕಾಂಗ್ರೆಸ್ ಪಕ್ಷದ ಒಳಗೂ ಹೊರಗೂ ರಾಜಕೀಯ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಇದೇ ವೇಳೆ, ಕಾಂಗ್ರೆಸ್ ಕಾರ್ಯಕಾರಿ ಸಮಿತಿ (CWC) ಸಭೆಯ ಸಂದರ್ಭದಲ್ಲೇ ಈ ವಿಚಾರ ಪ್ರಸ್ತಾಪವಾಗಿರುವುದು ಗಮನಸೆಳೆಯಿತು. ಈ ಹೇಳಿಕೆಗಳ ಕುರಿತು ಬಿಜೆಪಿ, ಇದನ್ನು ಕಾಂಗ್ರೆಸ್ ನಾಯಕತ್ವದ ವಿರುದ್ಧದ “ಬಹಿರಂಗ ಭಿನ್ನಾಭಿಪ್ರಾಯ” ಎಂದು ಆರೋಪಿಸಿತು. ಆದರೆ, ಬಳಿಕ ಸ್ಪಷ್ಟನೆ ನೀಡಿದ ದಿಗ್ವಿಜಯ ಸಿಂಗ್, ನಾನು ಸಂಘಟನೆ ಮತ್ತು ಅದರ ಬಲದ ಬಗ್ಗೆ ಮಾತ್ರ ಮಾತನಾಡಿದ್ದು, ಬಿಜೆಪಿ ಅಥವಾ RSS ಕುರಿತು ಅಲ್ಲ ಎಂದು ತಿಳಿಸಿದರು. ಇಬ್ಬರ ವಿರುದ್ಧವೂ ತಮ್ಮ ನಿಲುವು ಅಚಲವಾಗಿದೆ ಎಂದು ಹೇಳಿದರು.
ಮಂಗಳೂರು: ಪ್ರವಾಸಿಗರ ಕಳೆದುಹೋದ ಮೊಬೈಲ್ ಮರಳಿಸಿದ ಟೂರಿಸ್ಟ್ ಪೊಲೀಸ್ ಸಿಬ್ಬಂದಿ
ಮಂಗಳೂರು: ತಣ್ಣೀರು ಬಾವಿ ಬೀಚ್ ನಲ್ಲಿ ಡಿ. 27ರಂದು ಶನಿವಾರ ಸಂಜೆ ಬೆಂಗಳೂರು ಮೂಲದ ಪ್ರವಾಸಿಗರ ಗುಂಪಿನ ಸದಸ್ಯರೊಬ್ಬರ ದುಬಾರಿ ಬೆಲೆಯ ಮೊಬೈಲ್ ಫೋನ್ ಕಳೆದುಹೋಗಿದ್ದ ಘಟನೆ ನಡೆದಿದೆ. ಈ ವಿಷಯ ತಿಳಿದ ತಕ್ಷಣ ಸ್ಥಳದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಟೂರಿಸ್ಟ್ ಪೊಲೀಸ್ ಸಿಬ್ಬಂದಿ ರಾಘವೇಂದ್ರ (ಪ್ರವಾಸಿ ಮಿತ್ರ) ಅವರು ತಕ್ಷಣವೇ ಕಾರ್ಯಪ್ರವೃತ್ತರಾಗಿ ತನಿಖೆ ನಡೆಸಿದರು. ಕೆಲವೇ ಸಮಯದಲ್ಲಿ ಮೊಬೈಲ್ ಮತ್ತೊಬ್ಬರ ಕೈ ಸೇರಿರುವುದನ್ನು ಪತ್ತೆಹಚ್ಚಿ, ಕಳೆದುಕೊಂಡ ಪ್ರವಾಸಿಗರ ಕೈಗೆ ಮೊಬೈಲ್ ಅನ್ನು ಸುರಕ್ಷಿತವಾಗಿ ಹಸ್ತಾಂತರಿಸಿದರು. ಸಮಯಪ್ರಜ್ಞೆ, ಕರ್ತವ್ಯ ನಿಷ್ಠೆಯಿಂದ ಪ್ರವಾಸಿಗರ ವಿಶ್ವಾಸ ಮತ್ತು ಪ್ರಶಂಸೆಗೆ ಟೂರಿಸ್ಟ್ ಪೊಲೀಸ್ ಸಿಬ್ಬಂದಿ ರಾಘವೇಂದ್ರ ಪಾತ್ರರಾಗಿದ್ದಾರೆ. ಪ್ರವಾಸೋದ್ಯಮ ಇಲಾಖೆಯ ಯೋಜನೆಯಡಿ ಕರ್ನಾಟಕ ರಾಜ್ಯದ ವಿವಿಧ ಪ್ರವಾಸಿ ತಾಣಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ‘ಪ್ರವಾಸಿ ಮಿತ್ರ’ ಸಿಬ್ಬಂದಿಗಳು ಪ್ರವಾಸಿಗರು ಎದುರಿಸುವ ವಿವಿಧ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಿ ನೆರವು ನೀಡುತ್ತಿರುವುದು ಶ್ಲಾಘನೀಯವಾಗಿದೆ. ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರ ರಕ್ಷಣೆ, ಸುರಕ್ಷತೆ ಹಾಗೂ ಆಸ್ತಿಯ ಭದ್ರತೆಗೆ ಅವರು ನೀಡುತ್ತಿರುವ ಸೇವೆ ರಾಜ್ಯಾದ್ಯಂತ ಗಮನ ಸೆಳೆಯುತ್ತಿದ್ದು, ಇದು ಪ್ರವಾಸೋದ್ಯಮ ಇಲಾಖೆಗೆ ಗೌರವ ತಂದಿದೆ ಎಂದು ಸ್ಥಳೀಯರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಯುಪಿಐ ಪಾವತಿ ವೇಳೆ ತಪ್ಪಿ ಬೇರೆಯವರ ಸಂಖ್ಯೆಗೆ ಹಣ ವರ್ಗಾವಣೆ ಆಗಿದೆಯೇ? ಇಲ್ಲಿದೆ ಪರಿಹಾರ
ತಪ್ಪು ಸಂಖ್ಯೆಗೆ ಹಣ ಕಳುಹಿಸಿರುವುದು, ವ್ಯವಹಾರ ವಿಫಲವಾಗಿರುವುದು, ಪಿನ್ ಸಮಸ್ಯೆಯಾದಾಗ ದೂರು ಸಲ್ಲಿಸಿದಲ್ಲಿ 3-5 ಕಾರ್ಯಕಾರಿ ದಿನಗಳಲ್ಲಿ ನಿಮ್ಮ ಸಮಸ್ಯೆ ಪರಿಹಾರವಾಗಿಬಿಡುತ್ತದೆ. ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಎರಡು ವಾರದ ಹಿಂದೆ ಒಂದು ದೂರು ದಾಖಲಾಗಿದೆ. ವೈದ್ಯಕೀಯ ತುರ್ತುಗಾಗಿ ಒಬ್ಬರು ರೂ. 19,000 ಫೋನ್ ಪೇ ಮಾಡಿದ್ದರು. ಆದರೆ ಆ ಹಣ ಅವರ ಸಂಬಂಧಿಕರಾದ ರಾಜಸ್ಥಾನದ ಲಕ್ಷ್ಮೀಚಂದ್ರಿಗೆ ಹೋಗುವ ಬದಲಾಗಿ ಉಜಿರೆಯ ಉದ್ಯಮಿಗೆ ಹೋಗಿತ್ತು. ಉದ್ಯಮಿ ಹಣ ಮರಳಿ ಕೊಡಲು ನಿರಾಕರಿಸಿದರು. ಹೀಗಾಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಇಂತಹ ಸಂದರ್ಭದಲ್ಲಿ ಏನು ಮಾಡಬೇಕು? ತ್ವರಿತ ವಿಧಾನವಾಗಿರುವ ಯುಪಿಐ ಪಾವತಿ ಡಿಜಿಟಲ್ ಪಾವತಿಯ ಬಳಕೆಗಳು ಹೆಚ್ಚಾಗುತ್ತಿರುವಾಗ ಯುಪಿಐ ಪಾವತಿ ಭಾರತದಲ್ಲಿ ಸರಳ ವ್ಯವಹಾರಗಳಿಗೆ ತ್ವರಿತ ವಿಧಾನವಾಗಿರುತ್ತದೆ. ಆದರೆ ಯುಪಿಐ ವ್ಯವಹಾರದಲ್ಲಿ ತಪ್ಪಿ ಬೇರೆಯವರ ಸಂಖ್ಯೆಗೆ ಹಣ ವರ್ಗಾವಣೆ ಮಾಡಿದಲ್ಲಿ ಏನಾಗುತ್ತದೆ? ಕಳುಹಿಸಿದವರಿಗೆ ಮತ್ತು ಸ್ವೀಕರಿಸುವವರಿಗೆ ದೊಡ್ಡ ನಷ್ಟವಾಗಿಬಿಡುತ್ತದೆ. ಈ ಸಮಸ್ಯೆಯನ್ನು ಪರಿಹರಿಸಲು ಕುಂದುಕೊರತೆ ಆಲಿಸುವ ಸಹಾಯವಾಣಿ ಸಂಖ್ಯೆಯನ್ನು ಸರಕಾರ ನೀಡಿದೆ. ಯುಪಿಐ ಮೂಲಕ ತಪ್ಪಿ ಇನ್ಯಾರಿಗೋ ಹಣ ಕಳುಹಿಸಿದ್ದೀರಾ? ಭಾರತೀಯ ರಾಷ್ಟ್ರೀಯ ಪಾವತಿ ನಿಗಮ (NPCI)ದ 24/7 ಸಹಾಯವಾಣಿಗೆ 48 ಗಂಟೆಗಳ ಒಳಗೆ ದೂರು ಸಲ್ಲಿಸಬೇಕು. ಯುಪಿಐ ಸಮಸ್ಯೆಗಳಿಗೆ NPCI ವೆಬ್ತಾಣದ ಮೂಲಕ ಆನ್ಲೈನ್ ಮೂಲಕ ದೂರು ಸಲ್ಲಿಕೆಯ ಅವಕಾಶವೂ ಇದೆ. ತಪ್ಪು ಸಂಖ್ಯೆಗೆ ಹಣ ಕಳುಹಿಸಿರುವುದು, ವ್ಯವಹಾರ ವಿಫಲವಾಗಿರುವುದು, ಪಿನ್ ಸಮಸ್ಯೆಯಾದಾಗ ದೂರು ಸಲ್ಲಿಸಿದಲ್ಲಿ 3-5 ಕಾರ್ಯಕಾರಿ ದಿನಗಳಲ್ಲಿ ನಿಮ್ಮ ಸಮಸ್ಯೆ ಪರಿಹಾರವಾಗಿಬಿಡುತ್ತದೆ. ತಪ್ಪು ಸಂಖ್ಯೆಗೆ ಯುಪಿಐ ಪಾವತಿಯೆ? ಇಲ್ಲಿದೆ ಪರಿಹಾರ ಸಂಖ್ಯೆ ಯಾರಾದರೂ ತಪ್ಪು ಸಂಖ್ಯೆಗೆ ಯುಪಿಐ ವ್ಯವಹಾರ ಮಾಡಿರುವುದು ಅಥವಾ ಪಾವತಿ ಸಮಸ್ಯೆಗಳನ್ನು ಎದುರಿಸಿದಲ್ಲಿ, ಅಧಿಕೃತ NPCI ನ ಯುಪಿಐ ದೂರು ಸಂಖ್ಯೆ 1800-120-1740 ಅನ್ನು ಸಂಪರ್ಕಿಸಬಹುದು. ಆದರೆ ಈ ದೂರನ್ನು ವ್ಯವಹಾರವಾದ 48 ಗಂಟೆಗಳ ಒಳಗೆ ಸಲ್ಲಿಸಬೇಕಾಗುತ್ತದೆ. ಈ ಸಹಾಯವಾಣಿ 24/7 ಲಭ್ಯವಿರುತ್ತದೆ. ಬಳಕೆದಾರರು ಯಾವಾಗ ಬೇಕಾದರೂ ಈ ಸಂಖ್ಯೆಗೆ ದೂರು ಸಲ್ಲಿಸಬಹುದು. ನಿಖರವಾಗಿ ವಿಷಯವನ್ನು ಬರೆದಲ್ಲಿ ದೂರನ್ನು ಸುಗಮವಾಗಿ ಮತ್ತು ಸಮರ್ಥವಾಗಿ ಪರಿಹರಿಸಬಹುದು. ವ್ಯವಹಾರ ವಿಫಲವಾದಾಗ, ಪಿನ್ ಸಮಸ್ಯೆಯಾದಾಗ ಅಥವಾ ಅಸಮರ್ಪಕ ಪಾವತಿ ಮಾಡಿದಾಗ ಬಳಕೆದಾರರು ಈ ಸಂಖ್ಯೆಗೆ ದೂರು ಸಲ್ಲಿಸಬಹುದು. ಆನ್ಲೈನ್ನಲ್ಲಿ ಯುಪಿಐ ವ್ಯವಹಾರದ ದೂರು ಸಲ್ಲಿಸುವುದು ಹೇಗೆ? NPCIಗೆ ಕರೆ ಮಾಡುವ ಹೊರತಾಗಿ ಅಧಿಕೃತ ವೆಬ್ತಾಣದ ಮೂಲಕ ಆನ್ಲೈನ್ನಲ್ಲಿ ದೂರು ಸಲ್ಲಿಸಬಹುದು. ಆನ್ಲೈನ್ನಲ್ಲಿ ವಿವರವಾಗಿ ದೂರು ಸಲ್ಲಿಸುವುದರಿಂದ ದೂರಿನ ಕುರಿತಾಗಿ ಕೈಗೊಂಡ ಕ್ರಮವನ್ನು ತಿಳಿದುಕೊಳ್ಳಲು ಸುಗಮವಾಗುತ್ತದೆ. ಅದಕ್ಕಾಗಿ ಎನ್ಪಿಸಿಐ ವೆಬ್ತಾಣದಲ್ಲಿ https://www.npci.org.in/upi-complaint ದೂರು ಸಲ್ಲಿಸಬಹುದು. NPCI ವೆಬ್ತಾಣಕ್ಕೆ ಹೋದರೆ ‘ಕಸ್ಟಮರ್’ ವಿಭಾಗಕ್ಕೆ ಹೋಗಿ ಅಲ್ಲಿ ‘ಗೆಟ್ ಹೆಲ್ಪ್’ ವಿಭಾಗಕ್ಕೆ ಹೋಗಬೇಕು. ಅದರಲ್ಲಿ ‘ಯುಪಿಐ ಕಂಪ್ಲೇಂಟ್’ ಅನ್ನು ಕ್ಲಿಕ್ ಮಾಡಿ ದೂರು ಸಲ್ಲಿಸಬಹುದು. ಅಲ್ಲಿ ‘ಕಂಪ್ಲೇಂಟ್ ವಿಧ’ ಕ್ಲಿಕ್ ಮಾಡಿ, ‘ವ್ಯವಹಾರ ಕುರಿತ ವಿವರ’ದಲ್ಲಿ ನಿಮ್ಮ ಆಯ್ಕೆಯನ್ನು ಸಲ್ಲಿಸಲು ಅವಕಾಶವಿದೆ.
ಜನವರಿ 1 ರಿಂದ ಕರ್ನಾಟಕದಲ್ಲಿ ಸಂಚರಿಸುವ 414 ರೈಲುಗಳ ವೇಳಾಪಟ್ಟಿ ಬದಲಾಗಲಿದೆ. ವಂದೇ ಭಾರತ್, ಇಂಟರ್ಸಿಟಿ, ಶತಾಬ್ದಿ ಸೇರಿದಂತೆ ಹಲವು ರೈಲುಗಳ ಸಮಯ ಪರಿಷ್ಕರಣೆಗೊಂಡಿದೆ. ಕೆಲ ರೈಲುಗಳು ನಿಗದಿತ ಸಮಯಕ್ಕಿಂತ ಮುಂಚಿತವಾಗಿ ಅಥವಾ ತಡವಾಗಿ ಆಗಮಿಸಲಿವೆ. ಪ್ರಯಾಣಿಕರು ತಮ್ಮ ರೈಲಿನ ಹೊಸ ಸಮಯವನ್ನು ರಾಷ್ಟ್ರೀಯ ರೈಲು ವಿಚಾರಣಾ ವ್ಯವಸ್ಥೆ ಅಥವಾ ನೈರುತ್ಯ ರೈಲ್ವೆಯ ಜಾಲತಾಣದಲ್ಲಿ ಪರಿಶೀಲಿಸಬಹುದು. ಇದು ಪ್ರಯಾಣಿಕರ ಅನುಕೂಲಕ್ಕಾಗಿ ಮಾಡಲಾದ ಬದಲಾವಣೆಯಾಗಿದೆ.
Kalaburagi | ದೆವ್ವ ಹಿಡಿದಿದೆ ಎಂದು ಬೇವಿನ ಕಟ್ಟಿಗೆಯಿಂದ ಹಲ್ಲೆ ಆರೋಪ; ಮಹಿಳೆ ಮೃತ್ಯು
ಕಲಬುರಗಿ : ದೆವ್ವ ಹಿಡಿದಿದೆ ಎಂಬ ಅಂಧವಿಶ್ವಾಸಕ್ಕೆ ಒಳಗಾದ ಗಂಡನ ಮನೆಯವರು, ಬೇವಿನ ಕಟ್ಟಿಗೆಯಿಂದ ಹಲ್ಲೆ ನಡೆಸಿದ ಪರಿಣಾಮ ಆಳಂದ ಮೂಲದ ಮುಕ್ತಾಬಾಯಿ ಎಂಬ ಗೃಹಿಣಿ ಚಿಕಿತ್ಸೆ ಫಲಕಾರಿಯಾಗದೆ ಇಲ್ಲಿನ ಜಿಮ್ಸ್ ಆಸ್ಪತ್ರೆಯಲ್ಲಿ ಮೃತಪಟ್ಟಿರುವುದಾಗಿ ವರದಿಯಾಗಿದೆ. ಆಳಂದ ಪಟ್ಟಣದ ವೆಂಕಟೇಶ್ವರ ನಗರದ ನಿವಾಸಿಯಾದ ಮುಕ್ತಾಬಾಯಿ ಅವರನ್ನು ಆರು ವರ್ಷಗಳ ಹಿಂದೆ ಮಹಾರಾಷ್ಟ್ರದ ಮುರುಮ್ ಗ್ರಾಮದ ಗಿಡ್ಡೆಪ್ಪ ಎಂಬಾತನ ಜೊತೆಗೆ ಮದುವೆ ಮಾಡಿಕೊಡಲಾಗಿತ್ತು. ಈ ದಂಪತಿಗೆ ಐದು ವರ್ಷದ ಮಗನಿದ್ದಾನೆ. ಆದರೆ, ಕಳೆದ ಕೆಲವು ದಿನಗಳಿಂದ ಮುಕ್ತಾಬಾಯಿಗೆ ದೆವ್ವ ಹಿಡಿದಿದೆ ಎಂದು ಗಂಡನ ಮನೆಯವರು ಕಿರುಕುಳ ನೀಡುತ್ತಿದ್ದರು ಎಂದು ಮೃತಳ ತಾಯಿ ತಿಪ್ಪವ್ವ ಆರೋಪಿಸಿದ್ದಾರೆ. ಇನ್ನೊಂದೆಡೆ ನನ್ನ ಅಕ್ಕನಿಗೆ ಯಾವುದೇ ದೆವ್ವ ಹಿಡಿದಿರಲಿಲ್ಲ. ಗಂಡನ ಮನೆಯವರೇ ದೆವ್ವದ ನಾಟಕವಾಡಿ ಹಲ್ಲೆ ನಡೆಸಿ, ಕೊಲೆ ಮಾಡಿದ್ದಾರೆ ಎಂದು ಮೃತಳ ಸಹೋದರಿ ಶ್ರೀದೇವಿ ಆರೋಪ ಮಾಡಿದ್ದಾರೆ. ಶುಕ್ರವಾರ ಮುಕ್ತಾಬಾಯಿ ಮನೆಯಲ್ಲಿ ಕುಸಿದು ಬಿದ್ದಾಗ, ದೆವ್ವದ ಅಬ್ಬರ ಎಂದು ಭಾವಿಸಿದ ಸಂಬಂಧಿಕರು ಐದು ವರ್ಷದ ಮಗನ ಎದುರಲ್ಲೇ ಬೇವಿನ ಕಟ್ಟಿಗೆಗಳಿಂದ ಆಕೆಗೆ ಮನಬಂದಂತೆ ಥಳಿಸಿ, ಹಲ್ಲೆಗೈದಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ತಲೆ ಮತ್ತು ದೇಹದ ಭಾಗಗಳಿಗೆ ತೀವ್ರ ಪೆಟ್ಟು ಬಿದ್ದಿದ್ದರೂ, ಆಕೆಯನ್ನು ಆಸ್ಪತ್ರೆಗೆ ಸೇರಿಸುವ ಬದಲು ಗಾಣಗಾಪುರದ ಸಂಗಮ ನದಿಯಲ್ಲಿ ಸ್ನಾನ ಮಾಡಿಸಿ ದತ್ತನ ಸನ್ನಿಧಿಯಲ್ಲಿ ಪೂಜೆ ಮಾಡಿಸಿದ್ದಾರೆ ಎನ್ನಲಾಗಿದೆ. ಅಲ್ಲಿಂದ ಗುರುಮಠಕಲ್ ಕಡೆಗೆ ಮತ್ತೊಂದು ಪೂಜೆಗಾಗಿ ಕರೆದೊಯ್ಯುವಾಗ ಮುಕ್ತಾಬಾಯಿ ತೀವ್ರ ಅಸ್ವಸ್ಥಗೊಂಡಿದ್ದಾರೆ . ಕೂಡಲೇ ಕಲಬುರಗಿಯ ಜಿಮ್ಸ್ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಈ ಘಟನೆಗೆ ಸಂಬಂಧಿಸಿದಂತೆ ಕಲಬುರಗಿ ನಗರದ ಬ್ರಹ್ಮಪುರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದ್ದು, ಮುಂದಿನ ಕಾನೂನು ಕ್ರಮ ಹಾಗೂ ತನಿಖೆಗಾಗಿ ಪ್ರಕರಣವನ್ನು ಮಹಾರಾಷ್ಟ್ರದ ಮುರುಮ್ ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಇನ್ನು, ಈ ಕುರಿತು ಪ್ರತಿಕ್ರಿಯಿಸಿದ ಆಳಂದ ಪೊಲೀಸ್ ಠಾಣೆಯ ಪಿಐ ಶರಣಬಸಪ್ಪ ಕೊಡ್ಲಾ ಅವರು, ಮೃತ ಮಹಿಳೆ ಆಳಂದ ಪಟ್ಟಣದವಳಾಗಿದ್ದಾಳೆ. ಆದರೆ ಕಲಬುರಗಿಯ ಜಿಮ್ಸ್ ಆಸ್ಪತ್ರೆಯಲ್ಲಿ ಮೃತಪಟ್ಟಿರುವ ಮಾಹಿತಿ ಗೊತ್ತಾಗಿದ್ದರಿಂದ ಪ್ರಕರಣವನ್ನು ಮಹಾರಾಷ್ಟ್ರದ ಮುರುಮ್ ಠಾಣೆಗೆ ವರ್ಗಾಯಿಸಲಾಗಿರುತ್ತದೆ. ಆಳಂದ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಕಾಲಿನ ಉಗುರು ಕಪ್ಪಾಗಿದೆಯೆ? ಈ ಬಗ್ಗೆ ವೈದ್ಯರು ಏನು ಹೇಳುತ್ತಾರೆ?
ಉಗುರಿನ ಬಣ್ಣ ಕಪ್ಪಾಗಲು ಮುಖ್ಯ ಕಾರಣವೇನು ಎಂದು ಗುರುತಿಸಬೇಕಾಗುತ್ತದೆ. ಅದು ಪದೇ ಪದೆ ಗಾಯವಾಗುವುದೆ? ಚಪ್ಪಲಿಯ ಸಮಸ್ಯೆಯೆ ಅಥವಾ ಉಗುರಿನ ಸಮಸ್ಯೆಯೆ ಎಂದು ತಿಳಿದುಕೊಳ್ಳುವುದು ಮುಖ್ಯವಾಗುತ್ತದೆ. ಆನ್ಲೈನ್ ವೇದಿಕೆಯಾದ ‘ಕ್ಯೂರಾ’ದಲ್ಲಿ ಮಹಿಳೆಯೊಬ್ಬರು ತಮ್ಮ ಕಾಲಿನ ಉಗುರು ಕಪ್ಪಾಗಿರುವ ಬಗ್ಗೆ ಪ್ರಶ್ನೆ ಕೇಳಿದ್ದರು. “ನನ್ನ ಕಾಲಿನ ಉಗುರಿನಲ್ಲಿ ಒಣಗಿದ ರಕ್ತವಿದೆ. ಏಳು ತಿಂಗಳಾದರೂ ಹೋಗಿಲ್ಲ. ಅದನ್ನು ಹೋಗಿಸುವುದು ಹೇಗೆ?” ಎಂದು ಪ್ರಶ್ನೆ ಹಾಕಿದ್ದರು. ‘ಕ್ಯೂರಾ’ದಲ್ಲಿ ಬರುವ ಉತ್ತರಗಳು ಸಮಂಜಸವಾಗಿರುತ್ತದೆಯೇ ಇಲ್ಲವೆ ಎಂದು ಹೇಳಲಾಗದು. ವೈದ್ಯರು ಈ ಬಗ್ಗೆ ಏನು ಹೇಳುತ್ತಾರೆ? ಆಸ್ಟರ್ ಆರ್ವಿ ಆಸ್ಪತ್ರೆಯ ಚರ್ಮತಜ್ಞರಾದ ಡಾ ಸುನೀಲ್ ಕುಮಾರ್ ಪ್ರಭು ಅವರನ್ನು ಸಂಪರ್ಕಿಸಿದರೆ “ಭಯಪಡುವ ಅಗತ್ಯವಿಲ್ಲ” ಎಂದು ಉತ್ತರಿಸಿದರು. ಉಗುರಿನಲ್ಲಿ ರಕ್ತ ಹೆಪ್ಪುಗಟ್ಟಿದ ಸ್ಥಿತಿ ಡಾ. ಪ್ರಭು ಅವರು ವಿವರಿಸುವ ಪ್ರಕಾರ ಉಗುರು ಕಪ್ಪಾಗುವುದನ್ನು ಸಬ್ಉನ್ಗ್ವಲ್ ಹೀಮಟೊಮ ಎಂದು ಕರೆಯಲಾಗುತ್ತದೆ. ಅಂದರೆ ಉಗುರಿನ ಒಳಗೆ ರಕ್ತ ಒಣಗಿರುವುದು. ಏನಾದರೂ ಗಾಯಗಳಾದರೆ ಹೀಗೆ ಉಗುರಿನೊಳಗೆ ರಕ್ತ ಹೆಪ್ಪುಗಟ್ಟುವ ಸಾಧ್ಯತೆಯಿರುತ್ತದೆ. ನೆನಪಿಲ್ಲದಂತಹ ಸಣ್ಣ-ಪುಟ್ಟ ಗಾಯಗಳಿಂದಲೂ ಇದು ಸಂಭವಿಸಬಹುದು. “ನಿಮ್ಮ ಉಗುರು ಎಲ್ಲಿಗಾದರೂ ಚುಚ್ಚಿ ಹೋಗಿರುವುದು ಅಥವಾ ಭಾರವಾದ ವಸ್ತು ಉಗುರಿನ ಮೇಲೆ ಬಿದ್ದಾಗ ಬಣ್ಣ ಬದಲಾಗುತ್ತದೆ. ಕೆಲವೊಮ್ಮೆ ಬಿಗಿಯಾದ ಚಪ್ಪಲಿಯನ್ನು ನಿತ್ಯವೂ ಧರಿಸುವುದರಿಂದ ಅಥವಾ ಸರಿಯಾಗಿ ಹೊಂದಿಕೆಯಾಗದ ಚಪ್ಪಲಿ ಧರಿಸಿದರೆ ಉಗುರು ಕಪ್ಪಾಗಬಹುದು. ದೀರ್ಘ ಸಮಯದವರೆಗೆ ಓಡಿದರೆ ಅಥವಾ ನಡೆದರೂ ರಕ್ತ ಹೆಪ್ಪುಗಟ್ಟಿ ಉಗುರಿನ ಬಣ್ಣ ಬದಲಾಗಬಹುದು. ಉಗುರು ಬೆಳೆದಾಗ ಬಣ್ಣ ಮರೆಯಾಗುತ್ತದೆ ಬಹಳಷ್ಟು ಸಂದರ್ಭದಲ್ಲಿ ಉಗುರಿನ ಗಾಯ ಸಣ್ಣದಾಗಿರಬಹುದು. ಅನೇಕರಿಗೆ ಯಾವಾಗ ಬಣ್ಣ ಬದಲಾಗಿದೆ ಎಂದು ತಿಳಿಯದೆ ಇರಬಹುದು. “ಬಹಳ ಸಂದರ್ಭದಲ್ಲಿ ಯಾವ ಗಾಯದಿಂದ ಬಣ್ಣ ಬದಲಾಗಿದೆ ಎಂದು ತಿಳಿದು ಬರುವುದಿಲ್ಲ. ಕೆಲವೊಮ್ಮೆ ಉಗುರು ಬೆಳೆದಂತೆ ಬಣ್ಣ ಬದಲಾಗಿರುವುದನ್ನು ಗಮನಿಸಿರಬಹುದು. ಮುಖ್ಯವಾಗಿ ವಯಸ್ಕರಲ್ಲಿ ಕಾಲಿನ ಉಗುರುಗಳು ನಿಧಾನವಾಗಿ ಬೆಳೆಯುತ್ತವೆ. ಹೀಗಾಗಿ ರಕ್ತ ಹೆಪ್ಪುಗಟ್ಟಿದಲ್ಲಿ ಅನೇಕ ತಿಂಗಳುಗಳವರೆಗೆ ಹಾಗೇ ಇರುತ್ತದೆ. ಉಗುರು ಬೆಳೆದಂತೆ ನಿಧಾನವಾಗಿ ಅದು ಹೋಗಬಹುದು.” ರಕ್ತ ಹೆಪ್ಪುಗಟ್ಟಲು ಕಾರಣ ತಿಳಿಯುವುದು ಹೇಗೆ? “ಒಣಗಿದ ರಕ್ತ ಸಾಮಾನ್ಯವಾಗಿ ಕೆಂಪು-ಕಂದು ಬಣ್ಣದಲ್ಲಿರುತ್ತದೆ. ಕೆಲವೊಮ್ಮೆ ಕಡು ನೇರಳೆ ಅಥವಾ ಕಪ್ಪು ಬಣ್ಣದಲ್ಲಿರುತ್ತವೆ. ಮುಖ್ಯವಾಗಿ ಉಗುರು ಬೆಳೆದಂತೆ ಅವು ಮುಂದಕ್ಕೆ ಸಾಗುತ್ತವೆ” ಎನ್ನುತ್ತಾರೆ ವೈದ್ಯರು. ಅದಕ್ಕೆ ಬದಲಾಗಿ ಉಗುರಿಗೆ ಶಿಲೀಂಧ್ರ ರೋಗ ಹಿಡಿದಲ್ಲಿ ಉಗುರು ಹಳದಿ ಬಣ್ಣಕ್ಕೆ ತಿರುಗುತ್ತದೆ. ಉಗುರು ದಪ್ಪವಾಗುತ್ತದೆ, ಉಗುರುಗಳ ಕೆಳಗೆ ಬಿರುಕು ಬಿಟ್ಟಿರುತ್ತದೆ ಮತ್ತು ಕಸ ತುಂಬಿರುತ್ತದೆ. ಕಪ್ಪಾಗಿರುವುದು ಬದಲಾಗದೆ ಮುಂದುವರಿದರೆ ಏನು ಮಾಡಬೇಕು? ವೈದ್ಯರ ಪ್ರಕಾರ, “ಮನೆಯಲ್ಲಿಯೇ ಉಗುರಿನ ಅಡಿಯಲ್ಲಿರುವ ಒಣಗಿದ ರಕ್ತವನ್ನು ತೆಗೆಯಲು ಪ್ರಯತ್ನಿಸುವುದು ಸರಿಯಲ್ಲ. ಕೆತ್ತುವುದು ಅಥವಾ ತುಂಡು ಮಾಡುವುದು ಅಥವಾ ಉಗುರು ಕತ್ತರಿಸುವ ಮೂಲಕ ಒಣರಕ್ತವನ್ನು ತೆಗೆಯಲು ಪ್ರಯತ್ನಿಸಿದಲ್ಲಿ ಸೋಂಕು ತಗಲಬಹುದು. ಉಗುರಿಗೆ ಹಾನಿಯಾಗಿ ಗುಣಮುಖರಾಗಲು ಬಹಳ ಸಮಯ ಹಿಡಿಯಬಹುದು. ಕೆಲವೊಮ್ಮೆ ಶಾಶ್ವತವಾಗಿ ಉಗುರು ವಿರೂಪಗೊಳ್ಳಬಹುದು.” ವೈದ್ಯರನ್ನು ಸಂಪರ್ಕಿಸುವುದು ಅಗತ್ಯವೆ? ಉಗುರಿನ ಬಣ್ಣ ಕಪ್ಪಾಗಲು ಮುಖ್ಯ ಕಾರಣವೇನು ಎಂದು ಗುರುತಿಸಬೇಕಾಗುತ್ತದೆ. ಅದು ಪದೇಪದೆ ಗಾಯವಾಗುವುದೆ? ಚಪ್ಪಲಿಯ ಸಮಸ್ಯೆಯೆ ಅಥವಾ ಉಗುರಿನ ಸಮಸ್ಯೆಯೆ ಎಂದು ತಿಳಿದುಕೊಳ್ಳುವುದು ಮುಖ್ಯವಾಗುತ್ತದೆ. ಬಹಳಷ್ಟು ಮಂದಿಗೆ ವೈದ್ಯರನ್ನು ಸಂಪರ್ಕಿಸುವ ಅಗತ್ಯ ಬರದೆ ಇರಬಹುದು. ಹಾಗೆಯೇ ಬಹುತೇಕ ಪ್ರಕರಣಗಳಲ್ಲಿ ಚಿಕಿತ್ಸೆಯ ಅಗತ್ಯವೇ ಇರದು. ಉಗುರು ಬೆಳೆದಂತೆ ಕಪ್ಪಾಗಿರುವುದೂ ಹೋಗಿಬಿಡಬಹುದು. ಕಾಲಿನ ಉಗುರುಗಳು ಉದ್ದವಾಗಲು/ 9ರಿಂದ 12 ತಿಂಗಳುಗಳ ಕಾಲ ಹಿಡಿಯುತ್ತದೆ. ಕೆಲವೊಮ್ಮೆ ಇನ್ನೂ ದೀರ್ಘ ಸಮಯ ಹಿಡಿಯಬಹುದು. ಉಗುರನ್ನು ಟ್ರಿಮ್ ಮಾಡುವುದು, ಹೊಂದಿಕೊಳ್ಳುವ ಚಪ್ಪಲಿ ಧರಿಸುವುದು, ಉಗುರಿಗೆ ಗಾಯವಾಗದಂತೆ ನೋಡಿಕೊಳ್ಳುವಂತಹ ಸರಳ ಕ್ರಮಗಳಿಂದ ಸಮಸ್ಯೆಯನ್ನು ನಿವಾರಿಸಬಹುದು. ಆದರೆ ಉಗುರು ಸಡಿಲವಾಗಿ, ನೋವು ಇದ್ದಲ್ಲಿ ಅಥವಾ ಸೌಂದರ್ಯದ ಬಗ್ಗೆ ಕಳವಳ ಇದ್ದರೆ ವೈದ್ಯರನ್ನು ಕಾಣಬಹುದು. ನೈರ್ಮಲ್ಯಯುತ ಸ್ಥಿತಿಯಲ್ಲಿ ವೈದ್ಯರು ಉಗುರು ಟ್ರಿಮ್ ಮಾಡಬಹುದು ಅಥವಾ ತೆಗೆಯಬಹುದು. ಕಾಲಾನುಸಾರದಲ್ಲಿ ಬಣ್ಣ ಮಾಸಿರುವುದು ಬದಲಾಗದೆ ಇದ್ದರೆ, ಉಗುರು ಕತ್ತರಿಸುವುದು, ಅರ್ಧ ಉಗುರು ತೆಗೆಸುವುದು ಮಾಡಬಹುದು. ವೈದ್ಯರು ಇನ್ನೇನಾದರೂ ಸಮಸ್ಯೆಯಿದೆಯೇ ಎಂದೂ ಪರಿಶೀಲಿಸಬಹುದು. ಕೃಪೆ: ಇಂಡಿಯನ್ ಎಕ್ಸ್ಪ್ರೆಸ್
ಶಿರ್ವ: ಡಿ.29ರಂದು ಫೈಝುಲ್ ಇಸ್ಲಾಂ ಪಬ್ಲಿಕ್ ಸ್ಕೂಲ್ ನಲ್ಲಿ ‘ತಿಬ್ಯಾನ್–ಬ್ರೈನ್ ರೈನ್ ಎಕ್ಸ್ಪೋ 2025–26’
ಉಡುಪಿ: ಶಿರ್ವದ ಫೈಝುಲ್ ಇಸ್ಲಾಂ ಪಬ್ಲಿಕ್ ಸ್ಕೂಲ್ (FIPS) ಆಶ್ರಯದಲ್ಲಿ ‘ತಿಬ್ಯಾನ್–ಬ್ರೈನ್ ರೈನ್ ಎಕ್ಸ್ಪೋ 2025–26’ ಕಾರ್ಯಕ್ರಮವು ಡಿ. 29ರಂದು ಶಾಲಾ ಕ್ಯಾಂಪಸ್ನಲ್ಲಿ ನಡೆಯಲಿದೆ. ಫೈಝುಲ್ ಇಸ್ಲಾಂ ಪಬ್ಲಿಕ್ ಸ್ಕೂಲ್ ಅಧ್ಯಕ್ಷ ಖಾಲಿದ್ ಮೊಹಮ್ಮದ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ಎಕ್ಸ್ಪರ್ಟೈಸ್ ಸಂಸ್ಥೆಯ ಸಿಒಒ ಕೆ.ಎಸ್. ಶೇಖ್ ಕರ್ನಿರೆ ಅವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಮಾಧ್ಯಮ ಕಮ್ಯುನಿಕೇಶನ್ಸ್ ಲಿಮಿಟೆಡ್, ಮಂಗಳೂರು ಇದರ ಅಧ್ಯಕ್ಷ ಎಚ್.ಎಂ. ಅಫ್ರೋಝ್ ಅಸ್ಸಾದಿ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಗೌರವ ಅತಿಥಿಗಳಾಗಿ ಕರ್ನಾಟಕ ಡೆವಲಪ್ಮೆಂಟ್ ಬೋರ್ಡ್ ಅಧ್ಯಕ್ಷ ಎಂ.ಎ. ಗಫೂರ್, ಉಡುಪಿ ಉದ್ಯಾವರದ ಹಲೀಮಾ ಸಾಬ್ಜು ಆಡಿಟೋರಿಯಂ ಮಾಲೀಕ ಹಾಜಿ ಅಬ್ದುಲ್ ಜಲೀಲ್ ಸಾಹೇಬ್, ಕಾರ್ಕಳದ ಸಿಟಿ ನರ್ಸಿಂಗ್ ಹೋಮ್ ನ ಅಸ್ಥಿ ತಜ್ಞ ವೈದ್ಯ ಡಾ. ರಿಝ್ವಾನ್ ಅಹಮದ್, ಉದ್ಯಮಿ ಹಾಗೂ ಸಮಾಜಸೇವಕ ಮೊಹ್ಸಿನ್ ಹೊನ್ನಾಳ, ಉದ್ಯಮಿ ಅಶ್ರಫ್ ಕೋಡಿಬೆಂಗ್ರೆ, ಉಡುಪಿ ಸಮಾಜಸೇವಕ ಇಕ್ಬಾಲ್ ಮನ್ನಾ ಹಾಗೂ ಫೈಝುಲ್ ಇಸ್ಲಾಂ ಎಜುಕೇಷನ್ ಟ್ರಸ್ಟ್ ಅಧ್ಯಕ್ಷ ಶಫಿ ಅಹಮದ್ ಖಾಝಿ, ಫಾತಿಮಾ ಅಝ್ಬಃ ಪಾಲ್ಗೊಳ್ಳಲಿದ್ದಾರೆ. FIPS ಉಪಾಧ್ಯಕ್ಷರಾದ ಉಮರ್ ಇಸ್ಮಾಯಿಲ್, ಹಸನಬ್ಬ ಶೇಖ್, ಪ್ರಧಾನ ಕಾರ್ಯದರ್ಶಿ ಮುಹಮ್ಮದ್, ಜಂಟಿ ಕಾರ್ಯದರ್ಶಿ ಮುಹಮ್ಮದ್ ಸಾದಿಕ್, ಮುಖ್ಯೋಪಾಧ್ಯಾಯಿನಿ ಖೈರುನ್ನಿಸಾ, ಶಾಲಾಪ್ರತಿನಿಧಿ ಮೊಹಮ್ಮದ್ ಯೂನುಸ್, ಕೋಶಾಧಿಕಾರಿ ಪರ್ವೇಝ್ ಸಲೀಮ್, ಅರಬಿಕ್ ದೀನಿಯಾತ್ ವಿಭಾಗದ ಮುಖ್ಯಸ್ಥ ಉಬೈದುರ್ರಹ್ಮಾನ್ ನದ್ವಿ ಉಪಸ್ಥಿತರಿರಲಿದ್ದಾರೆ. ಕಾರ್ಯಕ್ರಮಕ್ಕೆ ವಿದ್ಯಾರ್ಥಿಗಳ ಪೋಷಕರು, ಸಾರ್ವಜನಿಕರು ಹಾಗೂ ಶಿಕ್ಷಣ ಪ್ರೇಮಿಗಳು ಭಾಗವಹಿಸುವಂತೆ ಆಯೋಜಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಒಂದು ದಿನದಲ್ಲಿ ಈ ಲಿಮಿಟ್ ಗಿಂತ ಹೆಚ್ಚಿಗೆ ಕ್ಯಾಶ್ ವ್ಯವಹಾರ ಮಾಡುವವರಿಗೆ ಬರಲಿದೆ IT ನೋಟಿಸ್! ಹಾಗೂ ಭಾರಿ ದಂಡ
ನಮ್ಮ ದಿನನಿತ್ಯದ ಜೀವನದಲ್ಲಿ ಹಣದ ವ್ಯವಹಾರ (Cash Transaction) ತೀರಾ ಸಾಮಾನ್ಯ. “ನನ್ನದೇ ದುಡ್ಡು, ನಾನು ಹೇಗೆ ಬೇಕಾದರೂ ಖರ್ಚು ಮಾಡುತ್ತೇನೆ, ಯಾರಿಗೆ ಬೇಕಾದರೂ ಕೊಡುತ್ತೇನೆ” ಎಂದು ನೀವು ಅಂದುಕೊಂಡಿದ್ದರೆ, ಎಚ್ಚರ! ಸರ್ಕಾರ ಮತ್ತು ಆದಾಯ ತೆರಿಗೆ ಇಲಾಖೆ (Income Tax Department) ನಗದು ವ್ಯವಹಾರದ ಮೇಲೆ ಹದ್ದಿನ ಕಣ್ಣಿಟ್ಟಿದೆ. ಒಂದು ನಿರ್ದಿಷ್ಟ ಮಿತಿಗಿಂತ ಹೆಚ್ಚು ಹಣವನ್ನು ನೀವು ಒಂದೇ ದಿನದಲ್ಲಿ ಪಡೆದರೆ ಅಥವಾ ನೀಡಿದರೆ, ನಿಮಗೆ ಕೇವಲ ನೋಟಿಸ್ ಬರುವುದಲ್ಲ, ಬರೋಬ್ಬರಿ 100% ದಂಡ ಕೂಡ ... Read more The post ಒಂದು ದಿನದಲ್ಲಿ ಈ ಲಿಮಿಟ್ ಗಿಂತ ಹೆಚ್ಚಿಗೆ ಕ್ಯಾಶ್ ವ್ಯವಹಾರ ಮಾಡುವವರಿಗೆ ಬರಲಿದೆ IT ನೋಟಿಸ್! ಹಾಗೂ ಭಾರಿ ದಂಡ appeared first on Karnataka Times .
'ಗೋಡ್ಸೆ ಸಂಘಟನೆಯಿಂದ ಕಲಿಯಲು ಏನೂ ಇಲ್ಲ': ದಿಗ್ವಿಜಯ್ ಸಿಂಗ್ ಆರ್ಎಸ್ಎಸ್-ಬಿಜೆಪಿ ಹೊಗಳಿಕೆಗೆ ಕಾಂಗ್ರೆಸ್ ತಿರುಗೇಟು
ಕಾಂಗ್ರೆಸ್ ಹಿರಿಯ ನಾಯಕ ದಿಗ್ವಿಜಯ ಸಿಂಗ್ ಅವರು ಬಿಜೆಪಿ ಮತ್ತು ಆರ್ಎಸ್ಎಸ್ ಸಂಘಟನೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದು ಪಕ್ಷದಲ್ಲಿ ಭಿನ್ನಮತಕ್ಕೆ ಕಾರಣವಾಗಿದೆ. ಕಾಂಗ್ರೆಸ್ ವಕ್ತಾರ ಪವನ್ ಖೇರಾ ಅವರು ಆರ್ಎಸ್ಎಸ್ ಅನ್ನು ಗೋಡ್ಸೆಯೊಂದಿಗೆ ಗುರುತಿಸಿ, ಅದರಿಂದ ಕಲಿಯಲು ಏನೂ ಇಲ್ಲ ಎಂದು ಹೇಳಿದ್ದಾರೆ. ಸಲ್ಮಾನ್ ಖುರ್ಷಿದ್ ಕೂಡ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ಹೇಳಿಕೆಗಳು ಪಕ್ಷದೊಳಗಿನ ಆಂತರಿಕ ಕಲಹದ ಬಗ್ಗೆ ಊಹಾಪೋಹಗಳಿಗೆ ಕಾರಣವಾಗಿವೆ.
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಕಾರವಾರ ನೌಕಾ ನೆಲೆಯಲ್ಲಿ ಐಎನ್ಎಸ್ ವಾಗ್ಶೀರ್ ಜಲಾಂತರ್ಗಾಮಿಯಲ್ಲಿ ಸಂಚರಿಸಿ ಇತಿಹಾಸ ನಿರ್ಮಿಸಿದರು. ಅಡ್ಮಿರಲ್ ದಿನೇಶ್ ಕೆ. ತ್ರಿಪಾಠಿ ಅವರು ರಾಷ್ಟ್ರಪತಿಗಳಿಗೆ ಸಾಥ್ ನೀಡಿದರು. ಡಾ. ಎಪಿಜೆ ಅಬ್ದುಲ್ ಕಲಾಂ ನಂತರ ಜಲಾಂತರ್ಗಾಮಿಯಲ್ಲಿ ಪ್ರಯಾಣಿಸಿದ ಎರಡನೇ ರಾಷ್ಟ್ರಪತಿ ಇವರಾಗಿದ್ದಾರೆ. ಮುಂದಿನ ದಿನಗಳಲ್ಲಿ ಅವರು ಗೋವಾ, ಕರ್ನಾಟಕ ಮತ್ತು ಜಾರ್ಖಂಡ್ ರಾಜ್ಯಗಳಿಗೆ ಭೇಟಿ ನೀಡಲಿದ್ದಾರೆ. ಐಎನ್ಎಸ್ ವಾಗ್ಶೀರ್ ಸ್ವದೇಶಿ ತಂತ್ರಜ್ಞಾನದ ಹೆಮ್ಮೆಯಾಗಿದೆ.
ರಾಯಚೂರು ಬಿಜೆಪಿ ಪಕ್ಷದ ನೂತನ ಪದಾಧಿಕಾರಿಗಳ ನೇಮಕ
ರಾಯಚೂರು:ಭಾರತೀಯ ಜನತಾ ಪಕ್ಷದ ರಾಜ್ಯಾದ್ಯಂತ ನಡೆಯುತ್ತಿರುವ ಸಂಘಟನಾ ಪರ್ವದ ಭಾಗವಾಗಿ ರಾಯಚೂರು ಜಿಲ್ಲೆಯ ಬಿಜೆಪಿ ಪಕ್ಷದ ಜಿಲ್ಲಾಮಟ್ಟದ ನೂತನ ಪದಾಧಿಕಾರಿಗಳನ್ನು ನೇಮಕ ಮಾಡಿ ಜಿಲ್ಲಾ ಬಿಜೆಪಿ ಅಧ್ಯಕ್ಷ ವೀರನಗೌಡ ಬಿ. ಪಾಟೀಲ್ ಲೆಕ್ಕಿಹಾಳ ಆದೇಶ ಹೊರಡಿಸಿದ್ದಾರೆ. ಪಕ್ಷಕ್ಕಾಗಿ ಹಲವು ವರ್ಷಗಳಿಂದ ಶ್ರಮಿಸುತ್ತಿರುವ ಕಾರ್ಯಕರ್ತರನ್ನು ಗುರುತಿಸಿ ಅವರಿಗೆ ಜವಾಬ್ದಾರಿ ನೀಡಲಾಗಿದ್ದು, ಜೊತೆಗೆ ಹೊಸ ಕಾರ್ಯಕರ್ತರಿಗೂ ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿದುಬಂದಿದೆ. ಜಿಲ್ಲಾ ಬಿಜೆಪಿ ಉಪಾಧ್ಯಕ್ಷರಾಗಿ ಶಂಕರರೆಡ್ಡಿ, ಶರಣಪ್ಪಗೌಡ ನಕ್ಕುಂದಿ, ಚಂದ್ರಶೇಖರ ಪಾಟೀಲ್ ಗೂಗೆಬಾಳ, ವರಪ್ರಸಾದ ಗೌಡ, ಟಿ. ಶ್ರೀನಿವಾಸರೆಡ್ಡಿ, ಬಿ. ಗೋವಿಂದ, ಮಲ್ಲಿಕಾರ್ಜುನ ಜಕ್ಕಲದಿನ್ನಿ ಹಾಗೂ ಲಿಂಗರಾಜ ಹೂಗಾರ ಅವರನ್ನು ನೇಮಕ ಮಾಡಲಾಗಿದೆ. ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾಗಿ ರವೀಂದ್ರ ಜಲ್ದಾರ್, ಸಂತೋಷ ರಾಜಗುರು ಹಾಗೂ ಜಂಬಣ್ಣ ನಿಲೋಗಲ್ ಅವರನ್ನು ನೇಮಕಗೊಳಿಸಲಾಗಿದೆ. ಜಿಲ್ಲಾ ಕಾರ್ಯದರ್ಶಿಗಳಾಗಿ ಬಸ್ಸಮ್ಮ ಯಾದವ, ಶಾರದಾ ರಾಥೋಡ, ಶಿವರಾಜ ಪತ್ತೇಪುರ, ಕೆ. ನಾಗಲಿಂಗಸ್ವಾಮಿ, ಚಂದಪ್ಪ ಬುದ್ದಿನ್ನಿ, ವಾಣಿಶ್ರೀ, ಶೈಲಜಾ ಷಡಾಕ್ಷರಪ್ಪ ಹಾಗೂ ಟಿ. ಸುಬ್ಬಾರಾವ್ ಅವರನ್ನು ನೇಮಕ ಮಾಡಲಾಗಿದೆ. ಇದೇ ವೇಳೆ ಕೋಶಾಧ್ಯಕ್ಷರಾಗಿ ಅಯ್ಯಪ್ಪ ಮಾಳೂರು, ವಕ್ತಾರರಾಗಿ ಸಿದ್ದನಗೌಡ ನೆಲಹಾಳ ಹಾಗೂ ಕಾರ್ಯಾಲಯದ ಕಾರ್ಯದರ್ಶಿಯಾಗಿ ಮಂಜುನಾಥ ಅವರನ್ನು ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ.
ಬಾಂಗ್ಲಾದೇಶದ ಹಿಂದೂ ಹತ್ಯೆಗಳು ಪ್ರತ್ಯೇಕ ಅಪರಾಧಗಳಲ್ಲ, ಅವು ವೈಫಲ್ಯದ ಮಾದರಿ
2025ರ ಡಿಸೆಂಬರ್ನಲ್ಲಿ ಬಾಂಗ್ಲಾದೇಶದಾದ್ಯಂತ ನಡೆದ ಹಿಂದೂ ಪುರುಷರ ಹತ್ಯೆಗಳು ಪ್ರತ್ಯೇಕ ಅಪರಾಧಗಳಲ್ಲ, ಬದಲಾಗಿ ಹಿಂದೂ ಅಲ್ಪಸಂಖ್ಯಾತರು ಎದುರಿಸುತ್ತಿರುವ ದೀರ್ಘಕಾಲೀನ ಕಿರುಕುಳದ ಮಾದರಿಯ ಇತ್ತೀಚಿನ ಅಭಿವ್ಯಕ್ತಿಯಾಗಿದೆ. ಒಂದು ತಿಂಗಳೊಳಗೆ, ಕನಿಷ್ಠ ಹನ್ನೆರಡು ಹಿಂದೂಗಳು ಕೊಲ್ಲಲ್ಪಟ್ಟರು. ಅವರಲ್ಲಿ ಹಲವರು ಗುಂಪು ಹಿಂಸಾಚಾರ ಮತ್ತು ಕಾನೂನುಬಾಹಿರ ಶಿಕ್ಷೆಯ ಮೂಲಕ ಕೊಲ್ಲಲ್ಪಟ್ಟರು. ಇದು ರಾಜಕೀಯ ಅಶಾಂತಿ ಧಾರ್ಮಿಕ ಮೂಲಭೂತವಾದ ಮತ್ತು ಸಾಂಸ್ಥಿಕ ವೈಫಲ್ಯದೊಂದಿಗೆ
ಹಾಸನ: ಚನ್ನರಾಯಪಟ್ಟಣ ಬೈಪಾಸ್ನಲ್ಲಿ ಲಾರಿಗೆ ಬಸ್ ಢಿಕ್ಕಿ; 20ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯ
ಹಾಸನ: ಜಿಲ್ಲೆಯ ಚನ್ನರಾಯಪಟ್ಟಣ ತಾಲ್ಲೂಕಿನ ಬೈಪಾಸ್ ರಸ್ತೆಯಲ್ಲಿ ಶನಿವಾರ ರಾತ್ರಿ ಲಾರಿಗೆ ಹಿಂಬದಿಯಿಂದ ಖಾಸಗಿ ಬಸ್ ಢಿಕ್ಕಿ ಹೊಡೆದ ಪರಿಣಾಮ ಇಪ್ಪತ್ತಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡ ಘಟನೆ ನಡೆದಿದೆ. ಅಪಘಾತದಲ್ಲಿ ಬಸ್ ಚಾಲಕನ ಸ್ಥಿತಿ ಗಂಭೀರವಾಗಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಬೆಂಗಳೂರಿನಿಂದ ಹಾಸನದ ಕಡೆಗೆ ತೆರಳುತ್ತಿದ್ದ ಖಾಸಗಿ ಬಸ್ ಹಾಗೂ ಅದೇ ದಾರಿಯಲ್ಲಿ ಸಾಗುತ್ತಿದ್ದ ಲಾರಿಯ ನಡುವೆ ಈ ಅಪಘಾತ ಸಂಭವಿಸಿದೆ. ಖಾಸಗಿ ಬಸ್ನಲ್ಲಿ ಸುಮಾರು 40 ಕ್ಕೂ ಹೆಚ್ಚು ಪ್ರಯಾಣಿಕರು ಇದ್ದರು ಎಂದು ತಿಳಿದುಬಂದಿದೆ. ಅಪಘಾತದಲ್ಲಿ ಗಾಯಗೊಂಡ ಹದಿಮೂರು ಮಂದಿಯನ್ನು ಹಾಸನ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದ್ದು, ಉಳಿದ ಗಾಯಾಳುಗಳಿಗೆ ಚನ್ನರಾಯಪಟ್ಟಣ ತಾಲ್ಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಒದಗಿಸಲಾಗಿದೆ. ಘಟನೆಯ ಬಗ್ಗೆ ಮಾಹಿತಿ ತಿಳಿದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಚನ್ನರಾಯಪಟ್ಟಣ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಅಪಘಾತದ ನಿಖರ ಕಾರಣ ಕುರಿತು ತನಿಖೆ ಮುಂದುವರಿದಿದೆ.
ಯಾದಗಿರಿ: ಮಾಜಿ ಸಚಿವ ನರಸಿಂಹ ನಾಯಕ (ರಾಜುಗೌಡ) ಹುಟ್ಟು ಹಬ್ಬ ಆಚರಣೆ
ಕರವೇ ಜಿಲ್ಲಾಧ್ಯಕ್ಷ ಭೀಮು ನಾಯಕ್ ನೇತೃತ್ವದಲ್ಲಿ ಅನ್ನ ಸಂತರ್ಪಣೆ
ವಿದ್ಯಾರ್ಥಿ ಸಂಘ ಚುನಾವಣೆ: ಅಧ್ಯಯನ ಸಮಿತಿ ರಚಿಸಿದ ಕೆಪಿಸಿಸಿ
ಡಾ. ಶರಣಪ್ರಕಾಶ್ ಪಾಟೀಲ್ ಸಂಚಾಲಕರಾಗಿ ನೇಮಕ
Shivamogga | ಲಾರಿಯಡಿಗೆ ಸಿಲುಕಿ ಬೈಕ್ ಸವಾರ ಮೃತ್ಯು
ಶಿವಮೊಗ್ಗ : ಲಾರಿ ಮತ್ತು ಬೈಕ್ ನಡುವೆ ಅಪಘಾತ ಸಂಭವಿಸಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಶಿವಮೊಗ್ಗದ ವಿದ್ಯಾನಗರದ ಮೇಲ್ಸೇತುವೆಯ ತಿರುವಿನಲ್ಲಿ ಸಂಭವಿಸಿದೆ. ಚನ್ನಗಿರಿ ತಾಲೂಕಿನ ರಾಘವೇಂದ್ರ ಎಂಬುವವರು ಮೃತಪಟ್ಟಿದ್ದಾರೆ. ಲಾರಿ ಮತ್ತು ಬೈಕ್ ಮೇಲ್ಸೇತುವೆಯಿಂದ ಒಟ್ಟಿಗೆ ಕೆಳಗೆ ಬಂದಿವೆ. ವಿದ್ಯಾನಗರದ ಕಡೆಗೆ ತಿರುವು ಪಡೆಯುವಾಗ ಲಾರಿಯ ಹಿಂಬದಿ ಚಕ್ರಗಳ ಅಡಿಗೆ ಬೈಕ್ ಸವಾರ ಸಿಲುಕಿದ್ದಾನೆ. ಆತನ ಮೇಲೆ ಲಾರಿ ಚಕ್ರಗಳು ಹರಿದಿದ್ದು, ಸ್ಥಳದಲ್ಲೆ ಸಾವನ್ನಪ್ಪಿದ್ದಾನೆ ಎಂದು ತಿಳಿದು ಬಂದಿದೆ. ಘಟನೆಯ ಮಾಹಿತಿ ತಿಳಿಯುತ್ತಿದ್ದಂಗೆ ಪೂರ್ವ ಸಂಚಾರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಮೃತದೇಹವನ್ನು ಮೆಗ್ಗಾನ್ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ.
ವರ್ಷವಿಡೀ ಕಾಂಡೋಮ್ ಖರೀದಿಗೆ 1,00,000 ರೂಪಾಯಿ ಖರ್ಚು ಮಾಡಿದ ವ್ಯಕ್ತಿ: ಇಲ್ಲಿದೆ ಶಾಕಿಂಗ್ ವರದಿ
Condom News: ಇದೀಗ ಡಿಜಿಟಲ್ ಯುಗ ಆಗಿದ್ದು, ಕುಂತಲ್ಲಿಯೇ ಬೇಕಾದದ್ದನ್ನು ಆನ್ಲೈನ್ನಲ್ಲೇ ಆರ್ಡರ್ ಮಾಡಬಹುದಾಗಿದೆ. ಯುವಪೀಳಿಗೆಯಿಂದ ಹಿಡಿದು ಹಿರಿಯರವರೆಗೂ ಬಹುತೇಕ ಮಂದಿ ಇದೀಗ ಇದೇ ಮಾದರಿ ಅನುಸರಿಸುತ್ತಿದ್ದಾರೆ. ಆದರೆ, ಇಲ್ಲೊಬ್ಬ ವ್ಯಕ್ತಿ ಈ ವರ್ಷದಲ್ಲಿ ಇಲ್ಲಿಯವರೆಗೂ 1,00,000ಕ್ಕೂ ಅಧಿಕ ಹಣ ಖರ್ಚು ಮಾಡಿ ಕಾಂಡೋಮ್ ಖರೀದಿ ಮಾಡಿದ ಬಗ್ಗೆ ವರದಿಯಾಗಿದೆ. ಹಾಗಾದ್ರೆ, ಅವರು ಎಷ್ಟು ಬಾರಿ ಖರೀದಿಸಿದ್ದಾರೆ
ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆ 2026: ಟಿಎಂಸಿ ಘೋಷಣೆ, ಲೋಗೋ ಬಿಡುಗಡೆ
2026ರ ವಿಧಾನಸಭಾ ಚುನಾವಣೆಗೆ ಸಿದ್ಧತೆ ನಡೆಸುತ್ತಿರುವ ಪಶ್ಚಿಮ ಬಂಗಾಳದ ಆಡಳಿತಾರೂಢ ಟಿಎಂಸಿ, 'ಜೊತೋಯ್ ಕರೋ ಹಮ್ಲಾ, ಆಬಾರ್ ಜಿತ್ಬೆ ಬಾಂಗ್ಲಾ' ಎಂಬ ಹೊಸ ಘೋಷಣೆ ಮತ್ತು ಲೋಗೋ ಬಿಡುಗಡೆ ಮಾಡಿದೆ. ಬಿಜೆಪಿಯನ್ನು 'ಬಾಂಗ್ಲಾ-ವಿರೋಧಿ ಜಮೀನ್ದಾರರು' ಎಂದು ಟೀಕಿಸಿರುವ ಟಿಎಂಸಿ, ವಲಸೆ ಹೋದವರ ಮೇಲಿನ ದೌರ್ಜನ್ಯವನ್ನು ಪ್ರಸ್ತಾಪಿಸಿದೆ.

20 C