ಕಾಂಗ್ರೆಸ್ ಹಿರಿಯ ನಾಯಕ, ಮಾಜಿ ಕೇಂದ್ರ ಗೃಹ ಸಚಿವ ಶಿವರಾಜ್ ಪಾಟೀಲ್ ನಿಧನ
ಹೊಸದಿಲ್ಲಿ: ಹಿರಿಯ ಕಾಂಗ್ರೆಸ್ ನಾಯಕ ಮತ್ತು ಮಾಜಿ ಕೇಂದ್ರ ಗೃಹ ಸಚಿವ ಶಿವರಾಜ್ ಪಾಟೀಲ್ ಮಹಾರಾಷ್ಟ್ರದ ಲಾತೂರ್ನಲ್ಲಿರುವ ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ. ಶಿವರಾಜ್ ಪಾಟೀಲ್ ಅವರು ಅಲ್ಪಕಾಲದ ಅನಾರೋಗ್ಯದ ನಂತರ ಶುಕ್ರವಾರ ನಿಧನರಾದರು ಎಂದು ಅವರ ಕುಟುಂಬ ಸದಸ್ಯರು ತಿಳಿಸಿದ್ದಾರೆ. ಶಿವರಾಜ್ ಪಾಟೀಲ್ ಅವರು ಪುತ್ರ ಶೈಲೇಶ್ ಪಾಟೀಲ್, ಸೊಸೆ ಅರ್ಚನಾ ಮತ್ತು ಇಬ್ಬರು ಮೊಮ್ಮಕ್ಕಳನ್ನು ಅಗಲಿದ್ದಾರೆ. ಪಾಟೀಲ್ ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದಾರೆ. ಶಿವರಾಜ್ ಪಾಟೀಲ್ ಅವರ ನಿಧನದಿಂದ ನಾನು ದುಃಖಿತನಾಗಿದ್ದೇನೆ. ಅವರು ಅನುಭವಿ ನಾಯಕರಾಗಿದ್ದರು. ಅವರು ಶಾಸಕ, ಸಂಸದ, ಕೇಂದ್ರ ಸಚಿವ, ಮಹಾರಾಷ್ಟ್ರ ವಿಧಾನಸಭೆಯ ಸ್ಪೀಕರ್ ಹಾಗೂ ಲೋಕಸಭೆಯ ಸ್ಪೀಕರ್ ಆಗಿ ಸುದೀರ್ಘಾವಧಿಗೆ ಸಾರ್ವಜನಿಕವಾಗಿ ಸೇವೆ ಸಲ್ಲಿಸಿದ್ದಾರೆ ಎಂದು ಪ್ರಧಾನಿ ಮೋದಿ ಎಕ್ಸ್ನಲ್ಲಿ ಬರೆದುಕೊಂಡಿದ್ದಾರೆ.
106 ವರ್ಷಗಳ ಸಂಭ್ರಮದಲ್ಲಿ ಅಂಜುಮನ್ ಹಾಮಿಯೇ ಮುಸ್ಲಿಮೀನ್
ನಾಳೆಯಿಂದ ಭಟ್ಕಳದಲ್ಲಿ ‘ಅಂಜುಮನ್ ದಿನ’
IPL 2026 RCB: ಆರ್ಸಿಬಿಗೆ ಇಬ್ಬರು ಸ್ಟಾರ್ ಆಲ್ರೌಂಡರ್ಗಳ ಎಂಟ್ರಿ..
IPL 2026 RCB: ಐಪಿಎಲ್ 2025 ಫೈನಲ್ ಪಂದ್ಯದಲ್ಲಿ ಆರ್ಸಿಬಿ ಪಂಜಾಗ್ ಕಿಂಗ್ಸ್ ಮಣಿಸಿ ಚೊಚ್ಚಲ ಟ್ರೋಫಿಗೆ ಮುತ್ತಿಟ್ಟಿತು. ಇದೀಗ ಎಲ್ಲರ ಗಮನ 19ನೇ ಸೀಸನ್ನತ್ತ ನೆಟ್ಟಿದ್ದು, ಮಿನಿ ಹರಾಜಿಗೂ ಮುನ್ನ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಇಬ್ಬರು ಸ್ಟಾರ್ ಆಲ್ರೌಡರ್ಗಳನ್ನು ಕೊಂಡುಕೊಳ್ಳಲು ಭರ್ಜರಿ ಸಿದ್ಧತೆ ನಡೆಸಿದೆ. ಹಾಗಾದ್ರೆ, ಅವರು ಯಾರು ಹಾಗೂ ಈ ಹಿಂದೆ ಯಾವ
ಆಂಧ್ರಪ್ರದೇಶ| ಕಣಿವೆಗೆ ಉರುಳಿಬಿದ್ದ ಬಸ್: 9 ಮಂದಿ ಮೃತ್ಯು, 22 ಜನರಿಗೆ ಗಾಯ
ಹೊಸದಿಲ್ಲಿ: ಆಂಧ್ರಪ್ರದೇಶದಲ್ಲಿ ಬಸ್ವೊಂದು ಕಣಿವೆಗೆ ಉರುಳಿಬಿದ್ದ ಪರಿಣಾಮ ಕನಿಷ್ಠ 9 ಮಂದಿ ಮೃತಪಟ್ಟಿದ್ದು, 22 ಜನರು ಗಾಯಗೊಂಡಿದ್ದಾರೆ. ಚಿತ್ತೂರಿನಿಂದ ತೆಲಂಗಾಣಕ್ಕೆ ತೆರಳುತ್ತಿದ್ದ ಬಸ್ ಮೋತುಗುಡೆಮ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ರಸ್ತೆಗೆ ಉರುಳಿಬಿದ್ದಿದೆ. ಬಸ್ನಲ್ಲಿ ಚಾಲಕ ಮತ್ತು ಕ್ಲೀನರ್ ಸೇರಿದಂತೆ 37 ಜನರು ಪ್ರಯಾಣಿಸುತ್ತಿದ್ದರು. ದಟ್ಟ ಮಂಜು ಆವರಿಸಿದ್ದರಿಂದ ಚಾಲಕನಿಗೆ ತಿರುವು ಕಾಣಿಸದೆ ಅಪಘಾತ ಸಂಭವಿಸಿರಬಹುದು ಎಂದು ಹೇಳಲಾಗಿದೆ. ಈ ಕುರಿತು ಪೊಲೀಸ್ ವರಿಷ್ಠಾಧಿಕಾರಿ ಅಮಿತ್ ಬರ್ದಾರ್ ಮಾಹಿತಿ ನೀಡಿದ್ದು, ಚಿಂತೂರು-ಮರೇಡುಮಿಲ್ಲಿ ಘಾಟ್ ರಸ್ತೆಯ ದುರ್ಗಾ ದೇವಸ್ಥಾನದ ಬಳಿ ಬೆಳಿಗ್ಗೆ 4:30ರ ಸುಮಾರಿಗೆ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಕನಿಷ್ಠ 9 ಜನರು ಮೃತಪಟ್ಟಿದ್ದಾರೆ ಮತ್ತು 22 ಜನರು ಗಾಯಗೊಂಡಿದ್ದಾರೆ. ಗಾಯಗೊಂಡವರಲ್ಲಿ ನಾಲ್ವರ ಸ್ಥಿತಿ ಗಂಭೀರವಾಗಿದೆ ಎಂದು ಹೇಳಿದ್ದಾರೆ. ಪ್ರಯಾಣಿಕರು ಚಿತ್ತೂರಿನಿಂದ ತೆಲಂಗಾಣದ ಭದ್ರಾಚಲಂನಲ್ಲಿರುವ ಶ್ರೀ ರಾಮ ದೇವಸ್ಥಾನಕ್ಕೆ ಹೋಗುತ್ತಿದ್ದರು ಎಂದು ಅಮಿತ್ ಬರ್ದಾರ್ ಹೇಳಿದ್ದಾರೆ.
ಇಂಡಿಗೊ ಪ್ರಕರಣ: ಏಕಸ್ವಾಮ್ಯ, ದ್ವಿಸ್ವಾಮ್ಯದ ವಿಪತ್ತಿನ ನಿದರ್ಶನ
ದ್ವಿಸ್ವಾಮ್ಯ(ಎರಡು ಕಂಪೆನಿಗಳ ಆಧಿಪತ್ಯ) ಇರುವ ಮಾರುಕಟ್ಟೆಯಲ್ಲಿ ಗ್ರಾಹಕರಿಗೆ ಬೇರೆ ಆಯ್ಕೆಗಳು ಇರುವುದಿಲ್ಲ. 2024ಕ್ಕೆ ಮುನ್ನ ವೈಮಾನಿಕ ಕ್ಷೇತ್ರದಲ್ಲಿ ಇಂಡಿಗೊ ಪಾಲು ಶೇ.27.3, ಜೆಟ್ ಏರ್ವೇಸ್ ಶೇ.21, ಏರ್ ಇಂಡಿಯಾ ಶೇ.18-19 ಮತ್ತು ಗೋಏರ್ ಶೇ.9 ಪಾಲು ಹೊಂದಿದ್ದವು. ಆದರೆ, ಈಗ ಇಂಡಿಗೊ ಶೇ.65 ಮತ್ತು ಏರ್ ಇಂಡಿಯಾ(ಏರ್ ಇಂಡಿಯಾ, ವಿಸ್ತಾರ ಮತ್ತು ಎಐಎಕ್ಸ್) ಶೇ. 25-30 ಪಾಲು ಹೊಂದಿವೆ; ಸ್ಪೈಸ್ ಜೆಟ್, ಅಕಾಸಾ ಏರ್ ಮತ್ತು ಇನ್ನಿತರರ ಪಾಲು ಕೇವಲ ಶೇ.5. ಇತ್ತೀಚೆಗೆ ಸ್ಯಾನ್ಫ್ರಾನಿಸ್ಕೋದಿಂದ ಬೆಂಗಳೂರಿಗೆ ಏರ್ ಇಂಡಿಯಾ(ಎ180)ದಲ್ಲಿ ಆಗಮಿಸಿದ ಸ್ನೇಹಿತರೊಬ್ಬರು ಆ ವಿಮಾನದ ದುರವಸ್ಥೆಯನ್ನು ವಿವರಿಸಿದ್ದರು. ಇಂಥ ನಿರ್ಲಕ್ಷ್ಯಕ್ಕೆ ಮಾರುಕಟ್ಟೆ ಮೇಲಿನ ಹಿಡಿತ ಕಾರಣ. ಇಂಡಿಗೊ ವಿಮಾನಗಳ ರದ್ದುಗೊಳಿಸುವಿಕೆಯಿಂದ ದೇಶದೆಲ್ಲೆಡೆ ಪ್ರಯಾಣಿಕರು ನರಳಿದರು ಮತ್ತು ನರಳುತ್ತಿದ್ದಾರೆ. ಟಿಕೆಟ್ ಮೊತ್ತ ಮರುಪಾವತಿಸುವುದಾಗಿ ಮತ್ತು 10ರಿಂದ 15 ದಿನಗಳಲ್ಲಿ ಸಂಚಾರ ಸಹಜ ಸ್ಥಿತಿಗೆ ಮರಳಲಿದೆ ಎಂದು ಇಂಡಿಗೊ ಹೇಳಿಕೊಂಡಿದೆ. ದೇಶದಲ್ಲಿ ವಿಮಾನದಲ್ಲಿ ಸಂಚರಿಸುವವರ ಪ್ರಮಾಣ ಶೇ.3-4. ಆದ್ದರಿಂದ, ಇದು ಜನಸಾಮಾನ್ಯರ ಸಮಸ್ಯೆಯಲ್ಲ; ನಾವು ತಲೆ ಕೆಡಿಸಿಕೊಳ್ಳಬೇಕಿಲ್ಲ ಎಂದುಕೊಳ್ಳಬಾರದು. ಏಕೆಂದರೆ, ಈ ಪ್ರಕರಣ ಯಾವುದೇ ಕ್ಷೇತ್ರದಲ್ಲಿ ಏಕಸ್ವಾಮ್ಯ-ದ್ವಿಸ್ವಾಮ್ಯದಿಂದ ಆಗಬಹುದಾದ ವಿಪತ್ತಿಗೆ ಹಿಡಿದ ಕನ್ನಡಿ. 2007ರಲ್ಲಿ ಹೈಕೋರ್ಟ್ ಆದೇಶದ ಮೇರೆಗೆ ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯ(ಡೈರೆಕ್ಟೊರೇಟ್ ಜನರಲ್ ಆಫ್ ಸಿವಿಲ್ ಏವಿಯೇಷನ್, ಡಿಜಿಸಿಎ) ವಿಮಾನದಲ್ಲಿ ಕರ್ತವ್ಯ ನಿರ್ವಹಣೆಗೆ ಸಮಯದ ಮಿತಿ(ಫ್ಲೈಟ್ ಡ್ಯೂಟಿ ಟೈಮ್ಸ್ ಲಿಮಿಟೇಷನ್ಸ್, ಎಫ್ಡಿಟಿಎಲ್) ಅಡಿಯಲ್ಲಿ ಸಿಬ್ಬಂದಿ ದಣಿವು ಹಾಗೂ ಪ್ರಯಾಣಿಕರ ಸುರಕ್ಷತೆಗೆ ಸಂಬಂಧಿಸಿದಂತೆ ಸಿಎಆರ್(ಸಿವಿಲ್ ಏವಿಯೇಷನ್ ರಿಕ್ವೈರ್ಮೆಂಟ್ಸ್, ನಾಗರಿಕ ವಿಮಾನಯಾನ ಅಗತ್ಯ)ಗಳನ್ನು ರೂಪಿಸಿತು. ವಿಮಾನ ಮಾಲಕರು ಸಚಿವರಿಗೆ ದೂರು ನೀಡಿ, ಸಿಎಆರ್ ವಾಪಸ್ ತೆಗೆದುಕೊಳ್ಳುವಂತೆ ಮಾಡುವಲ್ಲಿ ಯಶಸ್ವಿ ಯಾದರು. ಪೈಲಟ್ಗಳ ಸಂಘಟನೆ ಆದೇಶ ಹಿಂಪಡೆದಿದ್ದನ್ನು ಪ್ರಶ್ನಿಸಿ, ಬಾಂಬೆ ಹೈಕೋರ್ಟಿನಲ್ಲಿ ದಾವೆ ಹೂಡಿತು(ಡಬ್ಲ್ಯುಪಿ 1687, 2008). ನ್ಯಾಯಾಲಯ ತನ್ನ ಮಧ್ಯಂತರ ಆದೇಶದಲ್ಲಿ ಪ್ರಯಾಣಿಕರು-ಪೈಲಟ್ಗಳ ಜೀವವನ್ನು ಅಪಾಯಕ್ಕೆ ಸಿಲುಕಿಸಿದ್ದಕ್ಕೆ ಮಂತ್ರಾಲಯವನ್ನು ಟೀಕಿಸಿತು. ‘ಪೈಲಟ್ ಕೊರತೆ ನೀಗಿಸಲು ವಿಮಾನಗಳ ಸಂಖ್ಯೆ ಕಡಿಮೆಮಾಡಬೇಕೇ ಹೊರತು, ಅವರ ಕೆಲಸದ ಹೊರೆ ಯನ್ನು ಹೆಚ್ಚಿಸಬಾರದು. ಸರಕಾರವು ವಿಮಾನಯಾನ ಸಂಸ್ಥೆಯ ವಾಣಿಜ್ಯ ಹಿತಾಸಕ್ತಿಯನ್ನು ರಕ್ಷಿಸಲು ಸುರಕ್ಷತೆಯನ್ನು ಕಡೆಗಣಿಸುತ್ತಿದೆ’ ಎಂದು ಹೇಳಿತು. ವಿಚಿತ್ರವೆಂದರೆ, ಇದೇ ಹೈಕೋರ್ಟ್ ಆನಂತರ ಮಂತ್ರಾಲಯದ ಆದೇಶವನ್ನು ಎತ್ತಿಹಿಡಿಯಿತು. ಡಿಜಿಸಿಎ ನವೆಂಬರ್ 1, 2025ರಿಂದ ಜಾರಿಯಾಗುವಂತೆ ಹೊಸ ನಿಯಮ ಗಳನ್ನು ಘೋಷಿಸಿತು. ಪರಿಷ್ಕೃತ ನಿಯಮಗಳ ಬಗ್ಗೆ ವಿಮಾನಯಾನ ಸಂಸ್ಥೆಗಳಿಗೆ ಅಂದಾಜು ಎರಡು ವರ್ಷ ಹಿಂದೆಯೇ ಸೂಚನೆ ನೀಡಲಾಗಿದೆ ಎಂದು ಪೈಲಟ್ ಅಸೋಸಿಯೇಷನ್ಗಳು ಹೇಳಿವೆ. ಉಳಿದ ವಿಮಾನ ಸಂಸ್ಥೆಗಳು ಹೊಸ ನಿಯಮಗಳಿಗೆ ಅನುಸಾರವಾಗಿ ವಿಮಾನ ಸಂಚಾರ-ಪೈಲಟ್-ಸಿಬ್ಬಂದಿಯನ್ನು ಹೊಂದಿಸಿಕೊಂಡವು. ಆದರೆ, ಇಂಡಿಗೊ ಪೈಲಟ್-ಸಿಬ್ಬಂದಿ ತೀವ್ರ ಕೊರತೆ ನಡುವೆಯೂ ಚಳಿಗಾಲದ ಶೆಡ್ಯೂಲ್ ಇನ್ನಷ್ಟು ವಿಸ್ತರಿಸಿತು. ಭಾರತೀಯ ಏರ್ಲೈನ್ ಪೈಲಟ್ಸ್ ಅಸೋಸಿಯೇಷನ್ ‘ಇಂಡಿಗೊ ನಿಯಮಗಳಿಂದ ವಿನಾಯಿತಿ ಪಡೆಯಲು ಕೃತಕ ವಿಷಮ ಸ್ಥಿತಿಯನ್ನು ಸೃಷ್ಟಿಸಿತು’ ಎಂದು ದೂರಿದೆ. ವರದಿಗಳ ಪ್ರಕಾರ, ಇಂಡಿಗೊ ಲಭ್ಯವಿದ್ದ ಪೈಲಟ್ಗಳನ್ನು ಕೂಡ ಬಳಸಿಕೊಂಡಿಲ್ಲ. ಇದು ನಿಜವಾಗಿದ್ದರೆ, ಸಂಸ್ಥೆ ಸರಕಾರದ ಮೇಲೆ ಒತ್ತಡ ಹೇರಲು ಉದ್ದೇಶಪೂರ್ವಕವಾಗಿಯೇ ಸಮಸ್ಯೆಯನ್ನು ಹುಟ್ಟುಹಾಕಿದೆ ಮತ್ತು ಪರಿಸ್ಥಿತಿಯನ್ನು ತನ್ನ ಲಾಭಕ್ಕಾಗಿ ಬಳಸಿಕೊಳ್ಳಲು ಪ್ರಯತ್ನಿಸಿದೆ ಎಂದಾಗಲಿದೆ. ಘಟನೆ ಬಳಿಕ ಪ್ರಯಾಣಿಕರ ಸಂಕಷ್ಟವನ್ನು ಬಳಸಿಕೊಂಡು ಇನ್ನುಳಿದ ವಿಮಾನ ಕಂಪೆನಿಗಳು ಟಿಕೆಟ್ ದರವನ್ನು ಮನಸೋಇಚ್ಛೆ ಏರಿಸಿದವು. ಎಚ್ಚೆತ್ತ ಸಚಿವಾಲಯ ವಿಮಾನ ದರಕ್ಕೆ ಮಿತಿ ಹೇರಿ ಡಿಸೆಂಬರ್ 6, 2025ರಂದು ಆದೇಶ ಹೊರಡಿಸಿತು: 500 ಕಿ.ಮೀ.ವರೆಗೆ 7,500 ರೂ., 500-1,000 ಕಿ.ಮೀ. 12,000 ರೂ., 1,000-1,500 ಕಿ.ಮೀ. 15,000 ರೂ. ಹಾಗೂ 1,500 ಕಿ.ಮೀ.ಗಿಂತ ಹೆಚ್ಚು ದೂರಕ್ಕೆ 18,000 ರೂ.ಕ್ಕಿಂತ ಅಧಿಕ ದರ ವಿಧಿಸಬಾರದು ಎಂದು ಸೂಚಿಸಿತು. ಎಪ್ರಿಲ್ 19, 2022ರ ಡಿಜಿಸಿಎ ನಿಯಮದ ಪ್ರಕಾರ, ‘ಅರ್ಜಿದಾರರು ವಿಮಾನವೊಂದಕ್ಕೆ 3 ಜೊತೆ ಪೈಲಟ್-ಕ್ಯಾಬಿನ್ ಸಿಬ್ಬಂದಿಯನ್ನು ಹೊಂದಿರಬೇಕು’. ಚಾಲ್ತಿ ನಿಯಮಗಳ ಪ್ರಕಾರ, ದೇಶಿ ವಿಮಾನದಲ್ಲಿ ಇಬ್ಬರು ಹಾಗೂ ದೊಡ್ಡ, ದೀರ್ಘ ಕಾಲ ಸಂಚರಿಸುವ ವಿಮಾನವಾದಲ್ಲಿ ನಾಲ್ವರು ಪೈಲಟ್ಗಳು ಇರಬೇಕಾಗುತ್ತದೆ. ಇದನ್ನು ಹೆಚ್ಚಿನ ವಿಮಾನಯಾನ ಸಂಸ್ಥೆಗಳು ಪಾಲಿಸುತ್ತಿಲ್ಲ; ಇದರಲ್ಲಿ ಇಂಡಿಗೊಗೆ ಅಗ್ರ ಸ್ಥಾನ. ಇಂಡಿಗೊ ನಿಯಮ ಅಳವಡಿಕೆಗೆ ಸಿದ್ಧತೆ ನಡೆಸುತ್ತಿದೆಯೇ ಎಂದು ಡಿಜಿಸಿಎ ಮತ್ತು ನಾಗರಿಕ ವಿಮಾನಯಾನ ಸಚಿವಾಲಯ ಪರೀಕ್ಷಿಸಲಿಲ್ಲ. ಪೈಲಟ್ಗಳ ಸಂಖ್ಯೆ, ಸಿಬ್ಬಂದಿಗೆ ಅಗತ್ಯವಿರುವಷ್ಟು ವಿಶ್ರಾಂತಿ ಸಿಗುತ್ತಿದೆಯೇ ಎಂಬುದರ ಪರಿಶೀಲನೆಯೂ ನಡೆಯಲಿಲ್ಲ. ಚಳಿಗಾಲದಲ್ಲಿ ವಿಮಾನ ಪ್ರಯಾಣದ ಒತ್ತಡ ಹೆಚ್ಚಳದ ಬಗ್ಗೆ ಡಿಜಿಸಿಎಗೆ ಅರಿವು ಇರಲಿಲ್ಲವೇ? ಹೈಕೋರ್ಟ್ ಕಡ್ಡಾಯಗೊಳಿಸಿದ್ದ ಒಂದೇ ಒಂದು ನಿಯಮವನ್ನು ಕೂಡ ಇಂಡಿಗೊ ಪಾಲಿಸಿಲ್ಲ. ನಿಯಮ ಅಳವಡಿಕೆಗೆ ಅಂತಿಮ ದಿನವಾದ ಫೆ.10, 2026ರೊಳಗೆ ಅಗತ್ಯವಿರುವಷ್ಟು ಪೈಲಟ್, ತಾಂತ್ರಿಕ ಹಾಗೂ ಇನ್ನಿತರ ಸಿಬ್ಬಂದಿಯನ್ನು ಸಂಸ್ಥೆ ನೇಮಿಸಿಕೊಳ್ಳುತ್ತದೆ ಎಂದು ಯಾರೂ ನಂಬುವುದಿಲ್ಲ ಮತ್ತು ಅಷ್ಟು ಪ್ರಮಾಣದಲ್ಲಿ ತರಬೇತಿ ಪಡೆದ ಸಿಬ್ಬಂದಿ ಲಭ್ಯವಾಗುವುದು ಕಷ್ಟಕರ. ಹೀಗಾಗಿ, ಸರಕಾರ ಡೆಡ್ಲೈನ್ನ್ನು ಇನ್ನಷ್ಟು ಮುಂದಕ್ಕೆ ಹಾಕಬೇಕಾಗುತ್ತದೆ. ಒತ್ತಡಕ್ಕೆ ಮಣಿದ ಸರಕಾರ ದೇಶದೆಲ್ಲೆಡೆಯ ವಿಮಾನ ನಿಲ್ದಾಣಗಳಲ್ಲಿ ಪ್ರಯಾಣಿಕರು ಜಮಾಯಿಸಿ, ತೀವ್ರ ಖಂಡನೆ ವ್ಯಕ್ತವಾದ ಬಳಿಕ ಡಿಜಿಸಿಎ-ಮಂತ್ರಾಲಯ ಎಚ್ಚರಗೊಂಡಿತು. ಡಿಜಿಸಿಎ ಡಿಸೆಂಬರ್ 5ರಂದು ‘ಪೈಲಟ್ಗಳು ಮತ್ತು ಅವರ ಸಂಘಟನೆಗಳು ಸಹಕರಿಸಬೇಕು’ ಎಂದು ಮನವಿ ಮಾಡಿದ ಕೆಲವೇ ಗಂಟೆಗಳ ಬಳಿಕ ಎಫ್ಡಿಟಿಎಲ್ನ್ನು ಸದ್ಯಕ್ಕೆ ಅಮಾನತುಗೊಳಿಸಲಾಗಿದೆ ಎಂದು ವಿಮಾನ ಯಾನ ಸಚಿವ ಹೇಳಿದರು. ಇಂಡಿಗೊಕ್ಕೆ ಬೇಕಾಗಿದ್ದು ಇದೇ. ಪ್ರಯಾಣಿಕರಿಗೆ ಟಿಕೆಟ್ ಮೊತ್ತ ವಾಪಸಾಗುತ್ತದೆ ನಿಜ. ಆದರೆ, ವಿಮಾನ ನಿಲ್ದಾಣಕ್ಕೆ ಆಗಮಿಸಲು ತಗಲಿದ ವೆಚ್ಚ, ವಸತಿ ವೆಚ್ಚ ಹಾಗೂ ಅವರ ಸಮಯ-ಕೆಲಸ ವ್ಯರ್ಥವಾಗಿದ್ದಕ್ಕೆ ಯಾರು ದಂಡ ತೆರುತ್ತಾರೆ? ಇಂಡಿಗೊ ನಿರ್ಲಕ್ಷ್ಯವನ್ನು ಹೀಗೆ ವಿವರಿಸಬಹುದು; ಉದ್ಯಮದಲ್ಲಿ ಏಕಸ್ವಾಮ್ಯ ಹೊಂದಿರುವುದರಿಂದ ನಿಯಮಗಳ ಬಗ್ಗೆ ತಾತ್ಸಾರ, ಏನು ಮಾಡಿದರೂ ದಕ್ಕಿಸಿಕೊಳ್ಳುತ್ತೇವೆ ಎಂಬ ಅಹಂ ಮತ್ತು ಹೇಗಾದರೂ ಬೆಳೆಯಲೇಬೇಕು ಎಂಬ ದುರಾಸೆ. ಇದಕ್ಕೆ ನಿಯಂತ್ರಣ ವ್ಯವಸ್ಥೆಯಲ್ಲಿನ ರಾಚನಿಕ ದೌರ್ಬಲ್ಯ ಕಾರಣ. ದ್ವಿಸ್ವಾಮ್ಯ(ಎರಡು ಕಂಪೆನಿಗಳ ಆಧಿಪತ್ಯ) ಇರುವ ಮಾರುಕಟ್ಟೆಯಲ್ಲಿ ಗ್ರಾಹಕರಿಗೆ ಬೇರೆ ಆಯ್ಕೆಗಳು ಇರುವುದಿಲ್ಲ. 2024ಕ್ಕೆ ಮುನ್ನ ವೈಮಾನಿಕ ಕ್ಷೇತ್ರದಲ್ಲಿ ಇಂಡಿಗೊ ಪಾಲು ಶೇ.27.3, ಜೆಟ್ ಏರ್ವೇಸ್ ಶೇ.21, ಏರ್ ಇಂಡಿಯಾ ಶೇ.18-19 ಮತ್ತು ಗೋಏರ್ ಶೇ.9 ಪಾಲು ಹೊಂದಿದ್ದವು. ಆದರೆ, ಈಗ ಇಂಡಿಗೊ ಶೇ.65 ಮತ್ತು ಏರ್ ಇಂಡಿಯಾ(ಏರ್ ಇಂಡಿಯಾ, ವಿಸ್ತಾರ ಮತ್ತು ಎಐಎಕ್ಸ್) ಶೇ. 25-30 ಪಾಲು ಹೊಂದಿವೆ; ಸ್ಪೈಸ್ ಜೆಟ್, ಅಕಾಸಾ ಏರ್ ಮತ್ತು ಇನ್ನಿತರರ ಪಾಲು ಕೇವಲ ಶೇ.5. ಇತ್ತೀಚೆಗೆ ಸ್ಯಾನ್ಫ್ರಾನಿಸ್ಕೋದಿಂದ ಬೆಂಗಳೂರಿಗೆ ಏರ್ ಇಂಡಿಯಾ(ಎ180)ದಲ್ಲಿ ಆಗಮಿಸಿದ ಸ್ನೇಹಿತರೊಬ್ಬರು ಆ ವಿಮಾನದ ದುರವಸ್ಥೆಯನ್ನು ವಿವರಿಸಿದ್ದರು. ಇಂಥ ನಿರ್ಲಕ್ಷ್ಯಕ್ಕೆ ಮಾರುಕಟ್ಟೆ ಮೇಲಿನ ಹಿಡಿತ ಕಾರಣ. ನಮ್ಮ ದೇಶದಲ್ಲಿ ರಾಷ್ಟ್ರೀಯ ವಿಮಾನ ಸಂಸ್ಥೆ(ನ್ಯಾಶನಲ್ ಕ್ಯಾರಿಯರ್) ಎನ್ನುವುದೇ ಇಲ್ಲ. ಹೀಗಿದ್ದರೂ, ನಾಗರಿಕ ವಿಮಾನಯಾನ ಸಚಿವಾಲಯವಿದೆ; ಅದಕ್ಕೆ ಸಂಪುಟ ದರ್ಜೆಯ ಸಚಿವ, ರಾಜ್ಯ ಸಚಿವರಿದ್ದಾರೆ; ಡಿಜಿಸಿಎ, ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರ, ವಿಮಾನ ಅಪಘಾತ ತನಿಖೆ ಬ್ಯೂರೋ, ನಾಗರಿಕ ವಿಮಾನಯಾನ ಸುರಕ್ಷತಾ ಬ್ಯೂರೋ ಮತ್ತು ವಿಮಾನ ನಿಲ್ದಾಣಗಳ ಆರ್ಥಿಕ ನಿಯಂತ್ರಣ ಪ್ರಾಧಿಕಾರ ಇದೆ. ನಾಮನಿರ್ದೇಶನ ಸದಸ್ಯರು, ಅಧ್ಯಕ್ಷರು, ಐಎಎಸ್ ಅಧಿಕಾರಿಗಳು ಸೇರಿದಂತೆ ಅಸಂಖ್ಯ ಸಿಬ್ಬಂದಿ ಇದ್ದಾರೆ. ಇವರೆಲ್ಲರೂ ಏನು ಮಾಡುತ್ತಾರೆ? ಇಂಥ ಏಕಸ್ವಾಮ್ಯ-ದ್ವಿಸ್ವಾಮ್ಯ ಹಲವು ಕ್ಷೇತ್ರಗಳಲ್ಲಿ ಇದೆ. ಬಂದರು-ಅದಾನಿ, ಡಿಟಿಎಚ್-ಟಾಟಾ ಮತ್ತು ಏರ್ಟೆಲ್, ಟೆಲಿಕಾಂ-ಜಿಯೋ ಮತ್ತು ಏರ್ಟೆಲ್, ಮಾಧ್ಯಮ-ಅದಾನಿ ಮತ್ತು ಅಂಬಾನಿ, ವಿಮಾನ ನಿಲ್ದಾಣ-ಅದಾನಿ ಮತ್ತು ಜಿಎಂಆರ್, ಸಿಮೆಂಟ್-ಅದಾನಿ ಮತ್ತು ಅಲ್ಟ್ರಾಟೆಕ್, ಆ್ಯಪ್ ಆಧರಿತ ವಾಹನ ಸೇವೆ-ಉಬರ್ ಮತ್ತು ಓಲಾ, ಸಿನೆಮಾ ಸ್ಕ್ರೀನ್- ಪಿವಿಆರ್ ಮತ್ತು ಐನಾಕ್ಸ್, ಇ ವಾಣಿಜ್ಯ-ಅಮೆಝಾನ್ ಮತ್ತು ಫ್ಲಿಪ್ಕಾರ್ಟ್, ಆಹಾರ ವಿತರಣೆ- ಸ್ವಿಗ್ಗಿ ಮತ್ತು ರೊಮಾಟೋ, ಕ್ವಿಕ್ ಕಾಮರ್ಸ್-ಬ್ಲಿಂಕಿಟ್ ಮತ್ತು ಜೆಪ್ಟೋ, ಡಿಜಿಟಲ್ ಪಾವತಿ-ಜಿಪೇ ಮತ್ತು ಫೋನ್ಪೇ. ಈ ಕಂಪೆನಿಗಳು ಮಾತಾಡಿಕೊಂಡು ಒಟ್ಟಿಗೆ ಬೆಲೆ ಹೆಚ್ಚಿಸುತ್ತವೆ. ಗ್ರಾಹಕರು ಎರಡರಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳಬೇಕಾದ ಅನಿವಾರ್ಯ ಇದೆ. 2014ರಲ್ಲಿ 10 ರೂ.ಗೆ ಮೊಬೈಲ್ ರಿಚಾರ್ಜ್ ಮಾಡಿಸಬಹುದಿತ್ತು. ಈಗ 99-199 ರೂ. ತೆರಲೇಬೇಕು. ಒಂದುವೇಳೆ ಟೆಲಿಕಾಂ ಸಂಸ್ಥೆಯೊಂದು ಇಂಡಿಗೊ ಮಾಡಿದ್ದನ್ನೇ ಮಾಡಿದರೆ, ಸರಕಾರ-ಜನ ಏನು ಮಾಡುತ್ತಾರೆ? ತನಿಖೆಯಿಂದ ಪ್ರಯೋಜನ ಇದೆಯೇ? ಡಿಜಿಸಿಎ ಇಂಡಿಗೊ ಸಿಇಒ ಪೀಟರ್ ಎಲ್ಬರ್ಸ್ಗೆ ಕಾರಣ ಕೇಳಿ ನೋಟಿಸ್ ನೀಡಿದೆ. ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ವಾಯುಯಾನ ಸಚಿವರು ‘ಕಠಿಣ ಕ್ರಮ’ದ ಮಾತು ಆಡಿದ್ದಾರೆ. ಸಿಪಿಐ(ಎಂ) ಸಂಸದ ಜಾನ್ ಬ್ರಿಟ್ಟಾಸ್, ‘ಮಾರುಕಟ್ಟೆಯಲ್ಲಿ ಒಂದೇ ಸಂಸ್ಥೆಯ ಏಕಸ್ವಾಮ್ಯಕ್ಕೆ ಕಾರಣವಾದ ಕಾರ್ಯನೀತಿ ಚೌಕಟ್ಟುಗಳ ಬಗ್ಗೆ ತನಿಖೆ ನಡೆಸಲು ಜಂಟಿ ಸಂಸದೀಯ ಮಂಡಳಿ ಇಲ್ಲವೇ ನ್ಯಾಯಾಂಗ ತನಿಖೆ ನಡೆಸಬೇಕು’ ಎಂದು ಪ್ರಧಾನಿಗೆ ಪತ್ರ ಬರೆದಿದ್ದರು. ‘ಹವಾಯಿ ಚಪ್ಪಲಿ ಹಾಕುವವರು ಸಹ ವಿಮಾನದಲ್ಲಿ ಓಡಾಡುವಂತೆ ಮಾಡುತ್ತೇನೆ’ ಎಂದು ಪ್ರಧಾನಿ ಹೇಳಿದ್ದರು. ವಾಸ್ತವ ಏನೆಂದರೆ, ಇಂಡಿಗೊ ಗ್ರೂಪ್ 36 ಕೋಟಿ ರೂ. ಮತ್ತು ಅದರ ಪ್ರವರ್ತಕ ರಾಹುಲ್ ಭಾಟಿಯಾ 20 ಕೋಟಿ ರೂ. ಮೌಲ್ಯದ ಚುನಾವಣೆ ಬಾಂಡ್ ಖರೀದಿಸಿದ್ದರು; ಎರಡನ್ನೂ ಬಿಜೆಪಿ ನಗದು ಮಾಡಿಕೊಂಡಿದೆ. ವೈಮಾನಿಕ ಕ್ಷೇತ್ರದಲ್ಲಿ ಸಿಬ್ಬಂದಿ ಕೊರತೆ ತೀವ್ರವಾಗಿದೆ. ಸಚಿವಾಲಯದ ಪ್ರಕಾರ, 1,700 ಬೋಯಿಂಗ್ ಮತ್ತು ಏರ್ಬಸ್ ಖರೀದಿಗೆ ಆದೇಶ ನೀಡಲಾಗಿದೆ (ನವೆಂಬರ್ 15, 2025). ಇದಕ್ಕೆ 30,000 ಪೈಲಟ್ಗಳ ಅಗತ್ಯವಿದೆ. ಅದಾನಿ ಗ್ರೂಪ್ ಇತ್ತೀಚೆಗೆ ದೇಶದ ಅತ್ಯಂತ ದೊಡ್ಡ ವಿಮಾನ ತರಬೇತಿ ಸಂಸ್ಥೆಯಾದ ಫ್ಲೈಟ್ ಸೈಮ್ಯುಲೇಷನ್ ಟೆಕ್ನಿಕ್ ಸೆಂಟರ್(ಎಫ್ಎಸ್ಟಿಸಿ)ನ ಶೇ.72.8 ಶೇರುಗಳನ್ನು 820 ಕೋಟಿ ರೂ.ಗೆ ಕೊಂಡು ಕೊಂಡಿದೆ. ಅದಾನಿ ಡಿಫೆನ್ಸ್ ಮೂಲಕ ಪೈಲಟ್ ತರಬೇತಿ ಮತ್ತು ಇನ್ನಿತರ ವಿಮಾನ ಸಂಬಂಧಿ ಸೇವೆಗಳನ್ನು ವಿಸ್ತರಿಸುತ್ತಿದೆ. ಇದೆಲ್ಲವನ್ನೂ ಬಿಡಿಬಿಡಿಯಾಗಿ ನೋಡಲು ಆಗುವುದಿಲ್ಲ. ಇವೆಲ್ಲವೂ ಒಂದೇ ಚೌಕಟ್ಟಿನಲ್ಲಿ ಸೇರಲಿರುವ ಬಿಡಿ ಭಾಗಗಳು. ಏನು ಮಾಡಬೇಕು, ಮಾಡಬಹುದು? ಇಂಡಿಗೊ ವೈಫಲ್ಯಕ್ಕೆ ಡಿಜಿಸಿಎ ಮತ್ತು ಸರಕಾರವೇ ಹೊಣೆ. ಖಾಸಗಿ ವಿಮಾನ ಸಂಸ್ಥೆಯೊಂದು ದೇಶಿ ಮಾರುಕಟ್ಟೆಯಲ್ಲಿ ಶೇ. 60ರಷ್ಟು ಪಾಲು ಹೊಂದಿರುವುದು ಸಮರ್ಪಕವಲ್ಲ. ವೈಮಾನಿಕ ಕ್ಷೇತ್ರದಲ್ಲಿ ಹೆಚ್ಚು ಆಟಗಾರರನ್ನು ಸೃಷ್ಟಿಸುವಲ್ಲಿ ಸರಕಾರ ವಿಫಲವಾಗಿದೆ. ಡಿಜಿಸಿಎ ಎಫ್ಡಿಟಿಎಲ್ ವಾಪಸ್ ಪಡೆದಿರುವುದನ್ನು ವ್ಯವಸ್ಥೆಯ ವೈಫಲ್ಯ ಎಂದೇ ಪರಿಗಣಿಸಬೇಕು. ಪೈಲಟ್ಗಳ ಕೊರತೆ ಇರುವಾಗ, ಇಂಡಿಗೊ ಚಳಿಗಾಲದ ವೇಳಾಪಟ್ಟಿಯನ್ನು ವಿಸ್ತರಿಸಿತು. ಇಂಥ ಸನ್ನಿವೇಶದಲ್ಲಿ ಡಿಜಿಸಿಎ ವಿಮಾನ ಸಂಚಾರ ವೇಳಾಪಟ್ಟಿಗೆ ಏಕೆ ಅನುಮೋದನೆ ನೀಡಿತು? ವೇಳಾಪಟ್ಟಿಯನ್ನು ನಿರ್ವಹಿಸಲು ಅಗತ್ಯವಿರುವಷ್ಟು ಕಾಕ್ಪಿಟ್ ಮತ್ತು ಕ್ಯಾಬಿನ್ ಸಿಬ್ಬಂದಿ ಇದ್ದಾರೆ ಎಂದು ಸಾಬೀತುಪಡಿಸದ ಹೊರತು ಹೆಚ್ಚುವರಿ ಸಂಚಾರ ಮಾರ್ಗಕ್ಕೆ ಅನುಮತಿ ಅಥವಾ ವೇಳಾಪಟ್ಟಿಗೆ ಅನುಮೋದನೆ ನೀಡಬಾರದು. ಸುರಕ್ಷತೆ, ಸಾಮರ್ಥ್ಯದ ಅನುಮೋದನೆ, ಮಾರುಕಟ್ಟೆ ರಚನೆ ಹಾಗೂ ಪ್ರಯಾಣಿಕರ ಹಕ್ಕುಗಳ ರಕ್ಷಣೆಗೆ ನಿಯಂತ್ರಣ ವ್ಯವಸ್ಥೆಯನ್ನು ಸಬಲಗೊಳಿಸಬೇಕಿದೆ. 2002ರಲ್ಲಿ ಅಂತರ್ರಾಷ್ಟ್ರೀಯ ವಾಯುಯಾನ ಸಂಸ್ಥೆ(ಐಸಿಎಒ) ತನ್ನ ವರದಿಯಲ್ಲಿ ‘ಭಾರತ ಸ್ವತಂತ್ರ ನಾಗರಿಕ ವಿಮಾನಯಾನ ಪ್ರಾಧಿಕಾರವನ್ನು ಹೊಂದಿರಬೇಕು; ಸರಕಾರದ ನಿಯಂತ್ರಣದಲ್ಲಿರುವ ಕೈಬೊಂಬೆ ಸಂಸ್ಥೆಯನ್ನಲ್ಲ’ ಎಂದು ಹೇಳಿತ್ತು. ಅದು ಈವರೆಗೆ ಸಾಕಾರಗೊಂಡಿಲ್ಲ. ಪ್ರಯಾಣಿಕರ ಹಕ್ಕುಗಳ ಉಲ್ಲಂಘನೆ ವಿಮಾನ ರದ್ದುಗೊಂಡರೆ ಪ್ರಯಾಣಿಕರು ಕಾನೂನಿನ ಮೊರೆ ಹೋಗುವ ಸಾಧ್ಯತೆ ಕಡಿಮೆ. ವಿಮಾನ ವಿಳಂಬವಾದರೆ ಇಲ್ಲವೇ ರದ್ದುಗೊಂಡರೆ, ಪರಿಹಾರ ನೀಡುವ ಸ್ವಯಂಚಾಲಿತ ವ್ಯವಸ್ಥೆ ಇರಬೇಕು. ವಿಮಾನ ರದ್ದುಪಡಿಸುವ ಏರ್ಲೈನ್ಗಳು ಬೇರೆ ವಿಮಾನಗಳಲ್ಲಿ ಸೀಟು ದೊರಕಿಸಿಕೊಡಬೇಕು ಮತ್ತು ಟಿಕೆಟ್ ಬೆಲೆ ಮೊದಲಿನಷ್ಟೇ ಇರಬೇಕು. ಊಟ, ವಸತಿ ಒದಗಿಸಲು ವಿಫಲವಾದ ಏರ್ಲೈನ್-ವಿಮಾನ ನಿಲ್ದಾಣಕ್ಕೆ ದಂಡ ವಿಧಿಸಬೇಕು. ಇಂಡಿಗೊ ಕನಿಷ್ಠ ಹೆಚ್ಚುವರಿ ಸಿಬ್ಬಂದಿಯಿಂದ ದಿನಕ್ಕೆ 14 ಗಂಟೆ ಹಾರುವ ವಿಮಾನಗಳನ್ನು ನಿರ್ವಹಿಸುತ್ತಿದೆ. ಡಿಜಿಸಿಎ ಹೊಸ ನಿಯಮಗಳ ಪ್ರಕಾರ, ಮೂರಕ್ಕಿಂತ ಹೆಚ್ಚು ರಾತ್ರಿ ಪಾಳಿ ನಿರ್ವಹಿಸುವ ಪೈಲಟ್ಗಳಿಗೆ 60 ಗಂಟೆ ವಿಶ್ರಾಂತಿ ನೀಡಬೇಕಾಗುತ್ತದೆ. ಇದರಿಂದ ನವೆಂಬರ್ನಲ್ಲಿ 1,200ಕ್ಕೂ ಹೆಚ್ಚು ಮತ್ತು ಡಿಸೆಂಬರ್ 5ರಂದು 1,000ಕ್ಕೂ ಹೆಚ್ಚು ವಿಮಾನಗಳು ರದ್ದುಗೊಂಡವು. 2014ರಲ್ಲಿ ಅಮೆರಿಕದಲ್ಲಿ ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್(ಎಫ್ಎಎ) ಹೊಸ ನಿಯಮ ಪರಿಚಯಿಸಿದಾಗ, ಜೆಟ್ಬ್ಲೂ ಮತ್ತು ಸೌತ್ವೆಸ್ಟ್ ಮತ್ತಿತರ ವಿಮಾನ ಸಂಸ್ಥೆಗಳು ಇಂಥದ್ಧೇ ಸಮಸ್ಯೆ ಎದುರಿಸಿದ್ದವು. ಯುರೋಪಿಯನ್ ಯೂನಿಯನ್ ಏವಿಯೇಷನ್ ಸೇಫ್ಟಿ ಏಜೆನ್ಸಿ(ಇಎಎಸ್ಎ) ಮತ್ತು ಎಫ್ಎಎ ದಣಿವು ಮತ್ತು ಸಂಬಂಧಿಸಿದ ಸಮಸ್ಯೆಗಳನ್ನು ನಿರ್ವಹಿಸಲು ಬಯೋಮ್ಯಾಥಮೆಟಿಕಲ್ ಮಾಡೆಲಿಂಗ್, ಸಂಶೋಧನೆ ಮತ್ತು ಪಾರದರ್ಶಕ ಮೌಲ್ಯಮಾಪನಗಳನ್ನು ಆಧರಿಸುತ್ತವೆ. ನಮ್ಮಲ್ಲಿಯೂ ಇಂಥ ವ್ಯವಸ್ಥೆ ರೂಪಿಸಬೇಕಿದೆ. ಇಂಡಿಗೊ ಪ್ರಕರಣ ಒಂದು ಏರ್ಲೈನ್ ಅಥವಾ ಒಬ್ಬ ನಿಯಂತ್ರಕನ ವೈಫಲ್ಯದ ಕಥೆಯಲ್ಲ: ವ್ಯವಸ್ಥೆಯಲ್ಲಿನ ಲೋಪ ಮತ್ತು ಅದನ್ನು ಬಳಸಿಕೊಳ್ಳುವ ಬಂಡವಾಳಶಾಹಿಗಳ ಹೂಟದ ನಿದರ್ಶನ. ಕ್ಷಿಪ್ರ ಬೆಳವಣಿಗೆ, ಕೇಂದ್ರೀಕೃತ ಮಾರುಕಟ್ಟೆ ಬಲ ಮತ್ತು ದುರ್ಬಲ ನಿಯಂತ್ರಣ ವ್ಯವಸ್ಥೆಯಿಂದ ಏನಾಗುತ್ತದೆ ಎಂಬುದಕ್ಕೆ ಉದಾಹರಣೆ. ಈ ವ್ಯವಸ್ಥೆಯಲ್ಲಿ ಜನಸಾಮಾನ್ಯನೊಬ್ಬ 50 ಲಕ್ಷ ರೂ. ಗೃಹಸಾಲಕ್ಕೆ ಅವಧಿ ಮುಕ್ತಾಯವಾಗುವುದರೊಳಗೆ 1 ಕೋಟಿ ರೂ. ಕಟ್ಟಿರುತ್ತಾನೆ. ಆದರೆ, ಅನಿಲ್ ಅಂಬಾನಿಯ 47,000 ಕೋಟಿ ರೂ. ಸಾಲವನ್ನು 455 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಮಾರಿ ತೀರುವಳಿ ಮಾಡಲಾಗುತ್ತದೆ. ಸರಕಾರಿ ಸ್ವಾಮ್ಯದ ಬ್ಯಾಂಕುಗಳು ಕಳೆದ 5 ವರ್ಷದಲ್ಲಿ 6.15 ಕೋಟಿ ರೂ. ಸಾಲ ರೈಟ್ ಆಫ್ ಮಾಡಿವೆ ಎಂದು ಸಂಸತ್ತಿನಲ್ಲಿ ಸಚಿವ ಪಂಕಜ್ ಚೌಧರಿ ಹೇಳಿದ್ದಾರೆ (ಡಿಸೆಂಬರ್ 8, 2025); 11 ವರ್ಷದಲ್ಲಿ 16.35 ಲಕ್ಷ ಕೋಟಿ ರೂ. ರೈಟ್ಆಫ್ ಮಾಡಲಾಗಿದೆ. ಆದರೆ, ಇಂಥ ಒಂದು ಬ್ಯಾಂಕ್ ಆದಾಯ ತೆರಿಗೆ ವಿವರ ಸಲ್ಲಿಕೆಗೆ ವಾರ್ಷಿಕ ಹೇಳಿಕೆಯನ್ನು ಇಮೇಲ್ನಲ್ಲಿ ಕಳಿಸಲು ಗ್ರಾಹಕರಿಗೆ 130 ರೂ. ಶುಲ್ಕ ವಿಧಿಸುತ್ತದೆ! 2010ರ ನಂತರ ಮಂಗಳೂರು, ಕೋಝಿಕ್ಕೋಡ್ ಮತ್ತು ಅಹ್ಮದಾಬಾದ್ನಲ್ಲಿ ವಿಮಾನ ಅಪಘಾತ ಸಂಭವಿಸಿದೆ. ಅಹ್ಮದಾಬಾದಿನಲ್ಲಿ ಏರ್ಇಂಡಿಯಾ(ಎಐ 171) ದುರಂತದ ತನಿಖಾ ವರದಿ ಈವರೆಗೆ ಹೊರ ಬಂದಿಲ್ಲ. ಸುರಕ್ಷತೆ ವಾಯುಯಾನ ಸಂಸ್ಥೆಗಳ ಆದ್ಯತೆ ಆಗಿಲ್ಲ. ಉದ್ಯಮ ಯಾವುದೇ ಇರಲಿ, ಸ್ಪರ್ಧಾತ್ಮಕತೆಯಿಂದ ಸೇವೆಯ ಗುಣಮಟ್ಟ ಹೆಚ್ಚುತ್ತದೆ ಮತ್ತು ಕೈಗೆಟಕುವ ದರದಲ್ಲಿ ಲಭ್ಯವಾಗುತ್ತದೆ. ವಾಯುಯಾನ ಸಾರ್ವಜನಿಕರಿಗೋಸ್ಕರ ಇರುವಂಥದ್ದು ಮತ್ತು ಅದು ಒಂದೆರಡು ಕಂಪೆನಿಗಳ ಹಿಡಿತದಲ್ಲಿ ಇರಬಾರದು. ಇಂಡಿಗೊದ ದುಸ್ಸಾಹಸಕ್ಕೆ ಬೇರೆಯವರು ಮುಂದಾಗದಂತೆ ತಡೆಯಲು ಭಾರೀ ದಂಡ ಮತ್ತು ಕಠಿಣ ನಿರ್ಬಂಧ ವಿಧಿಸಬೇಕಿದೆ. ಸಮಸ್ಯೆ ಏನೆಂದರೆ, ಕೆಲ ದಿನಗಳ ಬಳಿಕ ಜನ ಇದನ್ನು ಮರೆಯುತ್ತಾರೆ; ಇಂಡಿಗೊದಂಥ ಸಂಸ್ಥೆಗಳು ಸರಕಾರವನ್ನು ಮಣಿಸಿ ಸುಲಿಗೆ ಮುಂದುವರಿಸುತ್ತವೆ.
ಗುಡ್ ನ್ಯೂಸ್; ಸರ್ಕಾರದಿಂದಲೇ ಪೌರಕಾರ್ಮಿಕರಿಗೆ ವೇತನ: ಮಹತ್ವ ಮಾಹಿತಿ ನೀಡಿದ ರಹೀಂ ಖಾನ್
ಬೆಳಗಾವಿ, ಡಿಸೆಂಬರ್ 12: ರಾಜ್ಯದ ನಗರಸಭೆ, ಪುರಸಭೆ ಸೇರಿದಂತೆ ನಗರ ಸ್ಥಳೀಯ ಸಂಸ್ಥೆಗಳಲ್ಲಿನ ಪೌರಕಾರ್ಮಿಕರಿಗೆ ಸರ್ಕಾರದಿಂದಲೇ ವೇತನ ಪಾವತಿಸುವ ಕುರಿತಂತೆ ಆರ್ಥಿಕ ಇಲಾಖೆಯೊಂದಿಗೆ ಚರ್ಚಿಸಿ, ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಪೌರಾಡಳಿತ ಮತ್ತು ಹಜ್ ಸಚಿವ ರಹೀಂ ಖಾನ್ ಹೇಳಿದರು. ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲದ ಅಧಿವೇಶನದಲ್ಲಿ ಗುರುವಾರ ವಿಧಾನಸಭೆಯಲ್ಲಿ ತೇರದಾಳ ಶಾಸಕ ಸಿದ್ದು
ಚಿನ್ನದ ಬೆಲೆ ಗಗನಕ್ಕೆ ಜಿಗಿದಿದೆ. ಇಂದು ಒಂದೇ ದಿನ ಭಾರಿ ಜಿಗಿತವಾಗಿದ್ದು, ಈ ವರ್ಷದ ದಾಖಲೆ ಬೆಲೆ ರೆಕಾರ್ಡ್ ಆಗಿದೆ. ಚಿನ್ನದ ಬೆಲೆ ಜನಸಾಮಾನ್ಯರ ಕೈಗೆ ನಿಲುಕದಷ್ಟು ಹೆಚ್ಚಳ ಕಂಡಿದೆ. ಗೋಲ್ಡ್ ಡಿಮ್ಯಾಂಡ್, ಹಾಗೂ ಹೂಡಿಕೆ ಹೆಚ್ಚಳದಿಂದ ಬೆಲೆ ಏರಿಕೆ ಆಗಿದೆ.
ಕಾರ್ತಿಕ ದೀಪಕ್ಕೆ ಜಡ್ಜ್ ಅನುಮತಿ : ವಾಗ್ದದಂಡನೆಗೆ ರಾಜ್ಯದ 3 ಸಂಸದರ ಸಹಿ - ಬಿಜೆಪಿಯಿಂದ ಹೆಸರು ಬಹಿರಂಗ
Impeachment Against Madras Justice : ಮದ್ರಾಸ್ ಹೈಕೋರ್ಟಿನ ಮಧುರೈ ಬೆಂಚ್ ನ್ಯಾಯಮೂರ್ತಿ ಅವರನ್ನು ಮಹಾಭಿಯೋಗಕ್ಕೆ ಒಳಪಡಿಸಬೇಕು ಎಂದು ವಿರೋಧ ಪಕ್ಷಗಳು, ಲೋಕಸಭೆಯ ಸ್ಪೀಕರ್ ಓಂ ಬಿರ್ಲಾಗೆ ನೂರಕ್ಕೂ ಹೆಚ್ಚು ಸಂಸದರ ಸಹಿ ಇರುವ ಮನವಿಯನ್ನು ಸಲ್ಲಿಸಿದ್ದರು. ಆ ಮನವಿಗೆ ರಾಜ್ಯದ ಮೂವರು ಸಂಸದರು ಸಹಿ ಹಾಕಿದ್ದಾರೆ ಎಂದು ಬಿಜೆಪಿ ದೂರಿದೆ.
ಬ್ರಿಸ್ಟಲ್ ಮ್ಯೂಸಿಯಂನಿಂದ ಭಾರತೀಯ ಕಲಾಕೃತಿ ಸೇರಿದಂತೆ 600ಕ್ಕೂ ಹೆಚ್ಚು ಅಪರೂಪದ ವಸ್ತುಗಳ ಕಳ್ಳತನ!
ಊರೆಲ್ಲಾ ಕೊಳ್ಳೆ ಹೊಡೆದ ಮೇಲೆ ಕೋಟೆ ಬಾಗಿಲು ಹಾಕಿದಂತೆ, ಯುಕೆಯ ಬ್ರಿಸ್ಟಲ್ನಲ್ಲಿರುವ ಐತಿಹಾಸಿಕ ವಸ್ತುಸಂಗ್ರಹಲಾಯದಲ್ಲಿ ಕಳ್ಳತನ ನಡೆದು ಎರಡು ತಿಂಗಳುಗಳ ಬಳಿಕ, ಪೊಲೀಸರು ಕಳ್ಳತನದ ಮಾಹಿತಿಯನ್ನು ಸಾರ್ವಜನಿಕಗೊಳಿಸಿದ್ದಾರೆ. ಕಳೆದ ಸೆಪ್ಟೆಂಬರ್ 25ರಂದು ತಡರಾತ್ರಿ ಮ್ಯೂಸಿಯಂ ಹೊಕ್ಕ ನಾಲ್ವರು ಖದೀಮರು, ಭಾರತೀಯ ಕಲಾಕೃತಿಗಳೂ ಸೇರಿದಂತೆ ಒಟ್ಟು 600ಕ್ಕೂ ಹೆಚ್ಚು ಅಪರೂಪದ ವಸ್ತುಗಳನ್ನು ಕದ್ದಿದ್ದಾರೆ. ಕಳ್ಳತನದಲ್ಲಿ ನಾಲ್ವರು ದುಷ್ಟರು ಭಾಗಿಯಾಗಿರುವುದು ಮ್ಯೂಸಿಯಂನ ಸಿಸಿಟಿವಿ ದೃಶ್ಯಾವಳಿಯಿಂದ ಸಾಬೀತಾಗಿದೆ. ಈ ಕುರಿತು ಇಲ್ಲಿದೆ ಹೆಚ್ಚಿನ ಮಾಹಿತಿ.
ಚಿತ್ರ ವಿಮರ್ಶಕರ ವಿರುದ್ಧ ಟೀಕೆ; ಚರ್ಚೆಗೆ ಗ್ರಾಸವಾದ ದುರಂಧರ
ಹೊಸದಿಲ್ಲಿ: ಇತ್ತೀಚೆಗೆ ಬಿಡುಗಡೆಯಾದ ಆದಿತ್ಯ ಧರ್ ಅವರ ಸಿನಿಮಾ 'ದುರಂಧರ' ಚಿತ್ರ ವಿಮರ್ಶಕರ ವಿರುದ್ಧದ ಟೀಕೆಯಿಂದಾಗಿ ಸುದ್ದಿಯಲ್ಲಿದೆ. ರಣವೀರ್ ಸಿಂಗ್ ಪಾಕಿಸ್ತಾನದಲ್ಲಿ ನಿಯೋಜಿಸಿರುವ ಭಾರತೀಯ ಗೂಢಚಾರಿಯಾಗಿ ಕಾಣಿಸಿಕೊಂಡಿರುವ ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಏತನ್ಮಧ್ಯೆ ಚಿತ್ರದಲ್ಲಿ ಬಿಂಬಿತವಾಗಿರುವ ತೀವ್ರ ಹಿಂಸೆ ಕೂಡಾ ಇದೀಗ ಪ್ರಧಾನ ಅಂಶವಾಗಿದ್ದು, ರಾಜಕೀಯ ಒಲವಿನ ಕಾರಣದಿಂದ ಗುರಿಯಾಗಿದೆ. ಖ್ಯಾತ ಚಿತ್ರ ವಿಮರ್ಶಕರಾದ ಸುಚಿತ್ರಾ ತ್ಯಾಗಿ ಹಾಗೂ ಅನುಪಮಾ ಚೋಪ್ರಾರಂಥವರ ವಿರುದ್ಧ ಆನ್ಲೈನ್ ನಲ್ಲಿ ದ್ವೇಷ ಪ್ರತಿಕ್ರಿಯೆಗಳು ವ್ಯಕ್ತವಾಗತ್ತಿವೆ. ಇದರಿಂದಾಗಿ ಚೋಪ್ರಾ ಅವರ ವಿಮರ್ಶೆಯನ್ನು 'ದ ಹಾಲಿವುಡ್ ರಿಪೋರ್ಟರ್ ಇಂಡಿಯಾ' ಯೂಟ್ಯೂಬ್ ಚಾನಲ್ ನಿಂದ ಕಿತ್ತುಹಾಕಲಾಗಿದೆ. ಇದೀಗ ಭಾರತೀಯ ಚಿತ್ರ ವಿಮರ್ಶಕರ ಗಿಲ್ಡ್ (ಎಫ್ಸಿಜಿ) ವಿಮರ್ಶಕ ವಿರುದ್ಧದ ದಾಳಿಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದೆ. ದುರಂಧರ್ ಚಿತ್ರ ವಿಮರ್ಶಕರ ವಿರುದ್ಧದ ಗುರಿನಿರ್ದೇಶಿತ ದಾಳಿ, ಕಿರುಕುಳ ಮತ್ತು ದ್ವೇಷವನ್ನು ತೀವ್ರವಾಗಿ ಖಂಡಿಸಿದೆ. ಅಭಿಪ್ರಾಯ ಬೇಧ ಕ್ರಮೇಣ ಸಂಯೋಜಿತ ನಿಂದನೆ, ವೈಯಕ್ತಿಕ ಟೀಕೆಯಾಗಿ ಮಾರ್ಪಟ್ಟಿದೆ. ಜತೆಗೆ ವಿಮರ್ಶಕರ ವೃತ್ತಿಪರ ಬದ್ಧತೆಯನ್ನು ಹಾಳುಮಾಡುವ ಪ್ರಯತ್ನ ನಡೆದಿದೆ ಎಂದು ಎಕ್ಸ್ ಮತ್ತು ಇನ್ಸ್ಟಾಗ್ರಾಂಗಳಲ್ಲಿ ಬಿಡುಗಡೆ ಮಾಡಲಾದ ಹೇಳಿಕೆಯಲ್ಲಿ ಟೀಕಿಸಲಾಗಿದೆ. ಎಫ್ಸಿಜಿ2018ರ ಏಪ್ರಿಲ್ ನಲ್ಲಿ ಆರಂಭವಾಗಿದ್ದು, ಪ್ರಸ್ತತ 13 ನಗರಗಳಲ್ಲಿ 57 ಸದಸ್ಯರನ್ನು ಹೊಂದಿದೆ. ಮುದ್ರಣ ಮಾಧ್ಯಮ, ಡಿಜಿಟಲ್ ಪ್ಲಾಟ್ಫಾರಂ ಹಾಗೂ ರೇಡಿಯೊದಲ್ಲಿ ಚಿತ್ರ ವಿಮರ್ಶೆ ಮಾಡುವ ಮಂದಿ ಇದರ ಸದಸ್ಯರಾಗಿದ್ದಾರೆ.
ಅಂತಾರಾಷ್ಟ್ರೀಯ ಸಂಸ್ಥೆಗಳು ಪ್ರಕಟಿಸುವ ವಾಯು ಗುಣಮಟ್ಟದ ಶ್ರೇಯಾಂಕಗಳಿಗೆ ಅಧಿಕೃತ ಮಾನ್ಯತೆ ಇಲ್ಲ: ಕೇಂದ್ರ ಸ್ಪಷ್ಟನೆ
ಭಾರತದ ವಾಯು ಗುಣಮಟ್ಟದ ಮಾನದಂಡಗಳಿಗೆ ಅಂತಾರಾಷ್ಟ್ರೀಯ ಶ್ರೇಯಾಂಕಗಳಿಗೆ ಅಧಿಕೃತ ಮಾನ್ಯತೆ ಇಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. ವಿಶ್ವ ಆರೋಗ್ಯ ಸಂಸ್ಥೆಯ ಮಾರ್ಗಸೂಚಿಗಳು ಕೇವಲ ಸಲಹೆಗಳಾಗಿದ್ದು, ಭಾರತಕ್ಕೆ ಕಡ್ಡಾಯವಲ್ಲ. ದೇಶವು ತನ್ನದೇ ಆದ ರಾಷ್ಟ್ರೀಯ ಮಾನದಂಡಗಳನ್ನು ರೂಪಿಸಿಕೊಂಡಿದ್ದು, ವಾರ್ಷಿಕ 'ಸ್ವಚ್ಛ ವಾಯು ಸರ್ವೇಕ್ಷಣ' ಮೂಲಕ ವಾಯು ಗುಣಮಟ್ಟವನ್ನು ಮೌಲ್ಯಮಾಪನ ಮಾಡುತ್ತದೆ.
ಅಮೆರಿಕಾಗೆ ಹೆರಿಗೆ ಸಮಯದಲ್ಲಿ ಪ್ರವಾಸಕ್ಕೆ ತೆರಳಿ ಮಗುವಿಗೆ ಪೌರತ್ವ ಗಿಟ್ಟಿಸಿಕೊಳ್ಳುವ ತಂತ್ರಗಳ ವಿರುದ್ಧ ಟ್ರಂಪ್ ಆಡಳಿತ ಕಠಿಣ ಕ್ರಮಕ್ಕೆ ಮುಂದಾಗಿದೆ. ಅರ್ಜಿದಾರರು ಗರ್ಭಿಣಿಯಾಗಿದ್ದು ಪ್ರವಾಸಿ ವೀಸಾಗಾಗಿ ಅರ್ಜಿಸಲ್ಲಿಸುವಾಗೇನಾದರೂ ಅಮೆಕಾದಲ್ಲಿ ಮಗುವಿಗೆ ಜನ್ಮ ನೀಡುವ ಪುರಾವೆಗಳು ಅಥವಾ ಅಂತಹ ಉದ್ದೇಶ ಕಂಡು ಬಂದಲ್ಲಿ ಅರ್ಜಿ ತಿರಸ್ಕರಿಸಲಾಗುವುದು ಎಂದು ಭಾರತದಲ್ಲಿನ ಅಮೆರಿಕಾ ರಾಯಭಾರ ಕಚೇರಿ ಎಚ್ಚರಿಕೆ ನೀಡಿದೆ. ಈ ಮೂಲಕ ಅಮೆರಿಕಾದ ವೀಸಾ ವ್ಯವಸ್ಥೆಯನ್ನು ದುರುಪಯೋಗಪಡಿಸಿಕೊಳ್ಳುವವರ ವಿರುದ್ದ ನಿರ್ಬಂಧ ಹೇರುತ್ತಿದೆ.
ಬೆಳಗಾವಿ ಅಧಿವೇಶನದಲ್ಲಿ ನಾಯಕತ್ವ ಗೊಂದಲ ತಣ್ಣಗಾಗುವ ಬದಲು ಬೂದಿಮುಚ್ಚಿದ ಕೆಂಡದಂತಿದೆ. ಡಿಸಿಎಂ ಡಿಕೆ ಶಿವಕುಮಾರ್ ಅವರು ಆಪ್ತ ಶಾಸಕರಿಗೆ ಪ್ರತ್ಯೇಕ ಡಿನ್ನರ್ ಮೀಟಿಂಗ್ ಹಮ್ಮಿಕೊಂಡಿದ್ದು, ನಾಯಕತ್ವ ಬದಲಾವಣೆ ಬಗ್ಗೆ ಗೊಂದಲ ಮುಂದುವರೆದಿದೆ. ಯತೀಂದ್ರ ಸಿದ್ದರಾಮಯ್ಯ ಅವರ ಹೇಳಿಕೆಗೆ ಡಿಕೆಶಿ ಬಣ ಪ್ರತ್ಯುತ್ತರ ನೀಡಿದೆ.
ದಕ್ಷಿಣ ಆಫ್ರಿಕಾ ವಿರುದ್ಧ ಟಿ20 ಸೋಲು: ಟೀಮ್ ಇಂಡಿಯಾ ಫಾರ್ಮ್ ಬಗ್ಗೆ ಕಳವಳ
ಹೊಸದಿಲ್ಲಿ: ಮುಲ್ಲನ್ಪುರದಲ್ಲಿ ಗುರುವಾರ ರಾತ್ರಿ ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಪಂದ್ಯದಲ್ಲಿ ಭಾರತ 51 ರನ್ ಗಳ ಸೋಲು ಅನುಭವಿಸಿದ ಬೆನ್ನಲ್ಲೇ ಶುಭಮನ್ ಗಿಲ್, ಸೂರ್ಯಕುಮಾರ್ ಯಾದವ್ ಅವರ ಫಾರ್ಮ್ ಬಗ್ಗೆ ಪ್ರಶ್ನೆಗಳು ಎದ್ದಿವೆ. ಜತೆಗೆ ಭಾರತದ ಬೌಲಿಂಗ್ ಶಿಸ್ತಿನ ಬಗ್ಗೆಯೂ ಟೀಕೆಗಳು ಕೇಳಿಬರುತ್ತಿವೆ. ಮಾಜಿ ಆಲ್ರೌಂಡರ್ ಇರ್ಫಾನ್ ಪಠಾಣ್ ಅವರು ಜಾಲತಾಣಗಳಲ್ಲಿ ಹೆಚ್ಚುತ್ತಿರುವ ಆತಂಕಕಾರಿ ಅಭಿಪ್ರಾಯಗಳ ಬಗ್ಗೆ ಎಕ್ಸ್ ಪೋಸ್ಟ್ ನಲ್ಲಿ ಪ್ರತಿಕ್ರಿಯಿಸಿದ್ದಾರೆ. ಶುಭಮನ್ ಗಿಲ್ & ಸೂರ್ಯಕುಮಾರ್ ಅವರ ಫಾರ್ಮ್? ಇಂದಿನ ಬೌಲಿಂಗ್ ನಲ್ಲಿ 13 ಫುಲ್ಟಾಸ್ ಗಳು. ಇದನ್ನು ಹೇಗೆ ಸಮರ್ಥಿಸುತ್ತೀರಿ? ಈ ಪ್ರಶ್ನೆಗಳಿಗೆ ಟೀಮ್ ಇಂಡಿಯಾ ಉತ್ತರಿಸಬೇಕಿದೆ. ಧನಾತ್ಮಕ ಪರಿಣಾಮದೊಂದಿಗೆ ಅವರು ಉತ್ತರಿಸಲಿ ಎಂದು ಕುಟುಕಿದ್ದಾರೆ. ಬ್ಯಾಟಿಂಗ್ ಪಿಚ್ ನಲ್ಲಿ ಗಿಲ್ ಹಾಗೂ ಯಾದವ್ ಮತ್ತೆ ನಿರಾಶಾದಾಯಕ ಪ್ರದರ್ಶನ ತೋರಿದ್ದಾರೆ. ದಕ್ಷಿಣ ಆಫ್ರಿಕಾ ಪರ ಕ್ವಿಂಟನ್ ಡಿಕಾಕ್ ಕೇವಲ 46 ಎಸೆತಗಳಲ್ಲಿ 90 ರನ್ ಸಿಡಿಸಿ 4 ವಿಕೆಟ್ ನಷ್ಟಕ್ಕೆ 213 ರನ್ ಕಲೆ ಹಾಕಲು ಸಾಧ್ಯವಾಯಿತು. ಭಾರತದ ಅಗ್ರಕ್ರಮಾಂಕದ ಕುಸಿತ ಅಭಿಷೇಕ್ ಶರ್ಮಾ (14) ಅವರನ್ನು ಕಳೆದುಕೊಂಡಲ್ಲಿಂದ ಆರಂಭವಾಯಿತು. ಮೊದಲ ಐದು ಓವರ್ ನಲ್ಲೇ ಗಿಲ್ ಹಾಗೂ ಯಾದವ್ ನಿರ್ಗಮಿಸಿದರು. ಅಭಿಮಾನಿಗಳು ಗಿಲ್ ಅವರಿಂದ ಉತ್ತಮ ಪ್ರದರ್ಶನ ನಿರೀಕ್ಷಿಸಿದ್ದರು. ಆದರೆ ಲುಂಗಿ ಗಿಡಿಯವರ ಮೊದಲ ಎಸೆತಕ್ಕೇ ವಿಕೆಟ್ ಒಪ್ಪಿಸಿದರು.
ಅಸಮಾನತೆಯ ಕಂದರದೊಳಗೆ ಭಾರತದ ಅಭಿವೃದ್ಧಿಯ ಕನಸು
ತನ್ನೊಳಗಿನ ಅಸಮಾನತೆಯ ಕಾರಣಕ್ಕಾಗಿ ಭಾರತ ಮತ್ತೆ ಸುದ್ದಿ ಮಾಡುತ್ತಿದೆ. ಬುಧವಾರ ಬಿಡುಗಡೆಗೊಂಡ 2026ರ ವಿಶ್ವ ಅಸಮಾನತೆ ವರದಿಯ ಪ್ರಕಾರ, ಭಾರತದ ಜನಸಂಖ್ಯೆಯ ಶೇ. 1ರಷ್ಟು ಜನರು ದೇಶದ ಶೇ. 40ರಷ್ಟು ಸಂಪತ್ತನ್ನು ಕೈವಶ ಮಾಡಿಕೊಂಡಿದ್ದಾರೆ. ಭಾರತವು ವಿಶ್ವದಲ್ಲೇ ಅತಿ ಹೆಚ್ಚಿನ ಅಸಮಾನತೆಯನ್ನು ಹೊಂದಿರುವ ದೇಶವೆಂದು ವರದಿ ಹೇಳುತ್ತಿದೆ. ಭಾರತವು ಆರ್ಥಿಕವಾಗಿ ಸದೃಢವಾಗುತ್ತಿದೆ, ವಿಶ್ವದಲ್ಲೇ ನಾಲ್ಕನೇ ಶ್ರೀಮಂತ ದೇಶ ಎಂದೆಲ್ಲ ಪ್ರಧಾನಿ ಮೋದಿಯವರು ಹೇಳಿಕೆ ನೀಡುತ್ತಾ ಬರುತ್ತಿದ್ದರೂ ಅಧ್ಯಯನ ವರದಿಗಳು ತೆರೆದಿಡುತ್ತಿರುವ ವಾಸ್ತವ ಮಾತ್ರ ಬೇರೆಯೇ ಆಗಿದೆ. ಅದಾನಿ, ಅಂಬಾನಿಗಳ ಕಡೆಗೆ ಬೆರಳು ತೋರಿಸಿ ಈ ದೇಶದ ಆರ್ಥಿಕತೆಯನ್ನು ವೈಭವೀಕರಿಸುವ ನಮ್ಮ ನಾಯಕರಿಗೆ ಈ ವರದಿಯ ಅಂಶಗಳು ತೀರಾ ಕಹಿಯಾಗಿವೆ. ‘ವರ್ಲ್ಡ್ ಇನ್ಇಕ್ವಾಲಿಟಿ ಲ್ಯಾಬ್’ ಪ್ರಕಟಿಸಿರುವ ಅಧ್ಯಯನ ವರದಿಯ ಪ್ರಕಾರ ಶೇ. 10ರಷ್ಟು ಅತಿ ಶ್ರೀಮಂತರು ದೇಶದ ಒಟ್ಟು ಸಂಪತ್ತಿನ ಶೇ. 65ರಷ್ಟನ್ನು ಹೊಂದಿದ್ದಾರೆ. ಇದೇ ಸಂದರ್ಭದಲ್ಲಿ ಜನಸಂಖ್ಯೆಯ ತಳಸ್ತರದ ಶೇ. 50ರಷ್ಟು ಜನರು ಕೇವಲ ಶೇ. 15ರಷ್ಟು ಆದಾಯವನ್ನು ಪಡೆಯುತ್ತಿದ್ದಾರೆ. ದೇಶದಲ್ಲಿ ಮಹಿಳಾ ಕಾರ್ಮಿಕರ ಪಾಲ್ಗೊಳ್ಳುವಿಕೆಯು ಶೇ. 15.7ರಷ್ಟಿದ್ದು ಇದು ಕಳಪೆ ಮಟ್ಟವಾಗಿದೆ. ಕಳೆದೊಂದು ದಶಕದಲ್ಲಿ ಮಹಿಳಾ ಕಾರ್ಮಿಕರ ಪಾಲ್ಗೊಳ್ಳುವಿಕೆಯಲ್ಲಿ ಯಾವುದೇ ಹೆಚ್ಚಳ ಕಂಡು ಬಂದಿಲ್ಲ ಎಂದು ವರದಿ ಹೇಳುತ್ತಿದೆ. ಇದು ಕೇವಲ ಭಾರತಕ್ಕೆ ಮಾತ್ರ ಸೀಮಿತವಲ್ಲ. ವಿಶ್ವದ 0.001ರಷ್ಟು ಶ್ರೀಮಂತರು ವಿಶ್ವ ಜನಸಂಖ್ಯೆಯ ಶೇ. 50ರಷ್ಟು ಜನರ ಒಟ್ಟು ಸಂಪತ್ತಿನ ಮೂರು ಪಟ್ಟನ್ನು ಹೊಂದಿದ್ದಾರೆ ಎಂದು ವರದಿ ಹೇಳುತ್ತಿದೆ. ಅಂದರೆ ಈ ವಿಶ್ವದಲ್ಲಿ ಬಡತನ ಎನ್ನುವುದು ಇಲ್ಲ. ಇದನ್ನು ಶ್ರೀಮಂತರಿಗಾಗಿಯೇ ಸೃಷ್ಟಿಸಲಾಗಿದೆ. ಇತ್ತೀಚೆಗೆ ಹೊರಬಿದ್ದ ಆಕ್ಸ್ಫಾಮ್ ವರದಿಯು ಈ ಅಸಮಾನತೆಯ ಭೀಕರತೆಯ ಇನ್ನಷ್ಟು ಮುಖಗಳನ್ನು ತೆರೆದಿಟ್ಟಿತ್ತು. ಭಾರತದಲ್ಲಿ 300ಕ್ಕೂ ಅಧಿಕ ಬಿಲಿಯಾಧಿಪತಿಗಳು ಇದ್ದಾರೆ. ವರ್ಷದಿಂದ ವರ್ಷಕ್ಕೆ ಇವರ ಸಂಖ್ಯೆ ಹೆಚ್ಚುತ್ತಿದೆ. ಇದೇ ಸಂದರ್ಭದಲ್ಲಿ ಇನ್ನೊಂದೆಡೆ ಭಾರತವು ಹಸಿವಿಗಾಗಿ ವಿಶ್ವದಲ್ಲೇ ನಂ. 1 ಎಂದು ಗುರುತಿಸಲ್ಪಡುತ್ತಿದೆ. ಈ ದೇಶದಲ್ಲಿ ಆರು ಕೋಟಿ ಜನರು ಪ್ರತಿ ವರ್ಷ ಆರೋಗ್ಯ ವೆಚ್ಚದ ಕಾರಣದಿಂದಾಗಿಯೇ ಬಡತನಕ್ಕೆ ತಳ್ಳಲ್ಪಡುತ್ತಿದ್ದಾರೆ. ಭಾರತದ ಅಸಮಾನತೆ ಎಷ್ಟು ಭೀಕರವಾಗಿದೆ ಎಂದರೆ ಇಲ್ಲಿನ ಪ್ರಮುಖ ಉಡುಪು ಕಂಪೆನಿಯ ಉನ್ನತ ವೇತನ ಪಡೆಯುವ ಕಾರ್ಯನಿರ್ವಾಹಕರು ಒಂದು ವರ್ಷದಲ್ಲಿ ಗಳಿಸುವ ಹಣವನ್ನು ಗ್ರಾಮೀಣ ಭಾರತದ ಕನಿಷ್ಠ ವೇತನದ ಕೆಲಸಗಾರ ಗಳಿಸಲು 941 ವರ್ಷಗಳು ಬೇಕಾಗುತ್ತದೆ. ಹಾಗೆಂದು ಇಲ್ಲಿ ಶ್ರೀಮಂತರಷ್ಟೇ ತೆರಿಗೆಯನ್ನು ಕಟ್ಟುತ್ತಾರೆ, ಬಡವರು ಶ್ರೀಮಂತರ ತೆರಿಗೆಯಿಂದ ಬದುಕುತ್ತಿದ್ದಾರೆ ಎಂದರೆ ಅದು ಸುಳ್ಳು. ಆಕ್ಸ್ ಫಾಮ್ ವರದಿಯ ಪ್ರಕಾರ, ಭಾರತದ ಜನಸಂಖ್ಯೆಯ ಶೇ. 50ರಷ್ಟು ಬಡವರ್ಗ ಅತಿ ಹೆಚ್ಚು ಪರೋಕ್ಷ ತೆರಿಗೆಯನ್ನು ಕಟ್ಟುತ್ತಿದೆ. 2021-22 ಆರ್ಥಿಕ ವರ್ಷದಲ್ಲಿ ಜಿಎಸ್ಟಿಯಿಂದ 14.83 ಲಕ್ಷ ಕೋಟಿ ರೂಪಾಯಿ ತೆರಿಗೆ ಸಂಗ್ರಹವಾಗಿದೆ. ಇದರಲ್ಲಿ ದೊಡ್ಡ ಪಾಲನ್ನು ಈ ದೇಶದ ಬಡ ಮತ್ತು ಮಧ್ಯಮ ವರ್ಗ ನೀಡಿದೆ. ದೇಶದ ಶೇ. 10ರಷ್ಟಿರುವ ಅತಿ ಶ್ರೀಮಂತರು ಜಿಎಸ್ಟಿ ರೂಪದಲ್ಲಿ ಪಾವತಿಸಿದ ತೆರಿಗೆ ಶೇ. 3ರಷ್ಟು ಮಾತ್ರ. ಭಾರತದಲ್ಲಿ ಕಾರ್ಪೊರೇಟ್ ತೆರಿಗೆಯನ್ನು ಭಾರೀ ಪ್ರಮಾಣದಲ್ಲಿ ಕಡಿಮೆ ಮಾಡಲಾಗಿದೆ ಮಾತ್ರವಲ್ಲ, ಅವರಿಗೆ ಭತ್ತೆ, ರಿಯಾಯಿತಿಗಳನ್ನು ಹೆಚ್ಚಿಸಿರುವ ಅಂಶವನ್ನು ಅಧ್ಯಯನ ವರದಿ ಬಹಿರಂಗ ಪಡಿಸಿವೆ. ಕೊರೋನ, ಲಾಕ್ಡೌನ್ ಕಾಲದಲ್ಲಿ ಸಾವಿರಾರು ಉದ್ಯಮಗಳು ಮುಚ್ಚಿದ್ದವು. ದೊಡ್ಡ ಪ್ರಮಾಣದಲ್ಲಿ ವ್ಯಾಪಾರ, ಉದ್ದಿಮೆಗಳು ನಷ್ಟ ಅನುಭವಿಸಿದವು. ಮಧ್ಯಮ ವರ್ಗ ಮತ್ತು ಬಡವರ್ಗ ಇದರ ನೇರ ಪರಿಣಾಮಗಳನ್ನು ಅನುಭವಿಸಿದವು. ಆದರೆ ಇದೇ ಸಂದರ್ಭದಲ್ಲಿ ಅದಾನಿ, ಅಂಬಾನಿಗಳು ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ರಾರಾಜಿಸುತ್ತಿದ್ದರು. ಲಾಕ್ಡೌನ್, ಕೊರೋನ ಅವರ ಮೇಲೆ ಯಾವ ಪರಿಣಾಮವನ್ನೂ ಬೀರಿರಲಿಲ್ಲ. ಲಸಿಕೆ ವ್ಯಾಪಾರದಿಂದಲೇ ಕೆಲವು ಕಾರ್ಪೊರೇಟ್ ಉದ್ಯಮಿಗಳು ತಮ್ಮ ಸಂಪತ್ತನ್ನು ಹೆಚ್ಚಿಸಿಕೊಂಡರು. ಈ ದೇಶದ ತೆರಿಗೆ ಹಣವನ್ನು ಸರಕಾರ ಲಸಿಕೆಯ ಮೇಲೆ ಸುರಿಯಿತು. ಅದರಿಂದ ದೇಶದ ಜನತೆಯ ಆರೋಗ್ಯಕ್ಕೆ ಎಷ್ಟರಮಟ್ಟಿಗೆ ಉಪಕಾರವಾಯಿತು ಎನ್ನುವುದು ಇನ್ನೂ ಸ್ಪಷ್ಟವಿಲ್ಲ. ಆದರೆ ಬೆರಳೆಣಿಕೆಯ ಕೆಲವು ಕಂಪೆನಿಗಳು ಅಪಾರ ಲಾಭ ಮಾಡಿಕೊಂಡವು. ಕೊರೋನ ಕಾಲದಲ್ಲಿ ಬಡವರು ಮತ್ತು ಶ್ರೀಮಂತರ ನಡುವಿನ ಅಂತರ ಹೆಚ್ಚಿತು. ಇದು ಕೇವಲ ಆರ್ಥಿಕ ಕ್ಷೇತ್ರದಲ್ಲಿ ಮಾತ್ರವಲ್ಲ, ಶೈಕ್ಷಣಿಕ ಕ್ಷೇತ್ರದಲ್ಲೂ ಉಳ್ಳವರು-ಇಲ್ಲದವರು ಎನ್ನುವ ವ್ಯತ್ಯಾಸ ಕಣ್ಣಿಗೆ ರಾಚುವಂತೆ ಕಾಣುತ್ತಿತ್ತು. ಉಳ್ಳವರಷ್ಟೇ ಶಿಕ್ಷಣ ಪಡೆಯಲು ಅರ್ಹರಾದರು. ಅಸಮಾನತೆ ಅಳಿಯದೆ ದೇಶದ ಆಮೂಲಾಗ್ರ ಅಭಿವೃದ್ಧಿ ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ಸಂಪತ್ತಿನ ಸಮಾನ ಹಂಚಿಕೆಗೆ ಸರಕಾರ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ. ಇಲ್ಲವಾದರೆ ಹೆಚ್ಚುತ್ತಿರುವ ಜನಸಂಖ್ಯೆಯ ಕಡೆಗೆ ಬೆರಳು ತೋರಿಸಿ, ಎಂದಿನಂತೆ ತನ್ನ ತಪ್ಪುಗಳನ್ನು ಮರೆಮಾಚಬೇಕಾಗುತ್ತದೆ. ಈ ದೇಶದ ಪ್ರಾಕೃತಿಕ ಸಂಪತ್ತಿಗೆ ಹೋಲಿಸಿದರೆ ಇಲ್ಲಿರುವ ಜನಸಂಖ್ಯೆ ಯಾವತ್ತೂ ಒಂದು ಹೊರೆಯಲ್ಲ. ಸಂಪನ್ಮೂಲವನ್ನು ಸಮಾನವಾಗಿ ಹಂಚುವ ಬಗ್ಗೆ ಸರಕಾರ ಕ್ರಮ ತೆಗೆದುಕೊಂಡರೆ ಜನಸಂಖ್ಯೆ ಭಾರತದ ಶಕ್ತಿಯಾಗಿ ಹೊರ ಹೊಮ್ಮ ಬಹುದು. ಈ ನಿಟ್ಟಿನಲ್ಲಿ ಈ ಹಿಂದೊಮ್ಮೆ ಆಕ್ಸ್ಫಾಮ್ ವರದಿಯೇ ಇದಕ್ಕೆ ಪರಿಹಾರವನ್ನೂ ಸೂಚಿಸಿತ್ತು. 2017ರಿಂದ 2021ರವರೆಗೆ ಗೌತಮ್ ಅದಾನಿ ಅವರಿಗೆ ದೊರೆತಿರುವ ವಿನಾಯಿತಿ ಮತ್ತು ನೆರವಿನ ಮೊತ್ತ 1.79 ಲಕ್ಷ ಕೋಟಿ ರೂಪಾಯಿಯಾಗುತ್ತದೆ. ಇಷ್ಟು ತೆರಿಗೆ ಹಣದಿಂದ ದೇಶದ ಪ್ರಾಥಮಿಕ ಶಾಲೆಗಳ 50 ಲಕ್ಷಕ್ಕೂ ಹೆಚ್ಚು ಶಿಕ್ಷಕರಿಗೆ ಒಂದು ವರ್ಷದವರೆಗೆ ವೇತನ ನೀಡಬಹುದಿತ್ತು. ದೇಶದ ಅತಿ ಶ್ರೀಮಂತ ಶೇ. 10 ಜನರ ಸಂಪತ್ತಿನ ಮೇಲೆ ಶೇ. 5ರಷ್ಟು ಒಂದು ಬಾರಿಯ ತೆರಿಗೆಯಿಂದ 1.37 ಲಕ್ಷ ಕೋಟಿ ರೂಪಾಯಿ ಸಂಗ್ರಹವಾಗುತ್ತದೆ. ದೇಶದ ಆರೋಗ್ಯ ಸಚಿವಾಲಯ ಮತ್ತು ಆಯುಷ್ ಬಜೆಟ್ನ್ನು ಈ ಹಣದಿಂದ ತುಂಬಬಹುದಾಗಿದೆ. ಉಳಿಕೆಯಾದ ಹಣದಿಂದ ಇನ್ನೂ ಆರು ತಿಂಗಳು ಆರೋಗ್ಯಕ್ಕಾಗಿ ಹೆಚ್ಚುವರಿ ವೆಚ್ಚ ಮಾಡಬಹುದಾಗಿದೆ. ದೇಶದ 100 ಅತಿ ಶ್ರೀಮಂತರ ಸಂಪತ್ತಿನ ಮೇಲೆ ಶೇ.2.5ರಷ್ಟು ತೆರಿಗೆ ವಿಧಿಸಿದರೆ ದೇಶದ ಸರ್ವಶಿಕ್ಷಣ ಅಭಿಯಾನಕ್ಕೆ ಅಗತ್ಯವಿರುವ ಒಂದು ವರ್ಷದ ವೆಚ್ಚವನ್ನು ಭರಿಸಬಹುದಾಗಿದೆ. ಭಾರತವೆಂದರೆ ಶೇ.1ರಷ್ಟಿರುವ ಬಿಲಿಯಾಧಿಪತಿಗಳಷ್ಟೇ ಅಲ್ಲ. ಈ ಭಾರತವನ್ನು ಕಟ್ಟಿರುವುದು ಶೇ. 50ಕ್ಕೂ ಅಧಿಕವಿರುವ ಬಡ ಮತ್ತು ಮಧ್ಯಮವರ್ಗವಾಗಿದೆ. ಅವರ ಹೆಗಲಿಗೇ ಇನ್ನಷ್ಟು ತೆರಿಗೆಗಳನ್ನು ಹೇರಿ ಅವರನ್ನು ಇನ್ನಷ್ಟು ದುರ್ಬಲಗೊಳಿಸಿ ಶೇ. 1ರಷ್ಟಿರುವ ಜನರನ್ನು ಇನ್ನಷ್ಟು ಶ್ರೀಮಂತಗೊಳಿಸುವುದನ್ನೇ ದೇಶದ ಅಭಿವೃದ್ಧಿ ಎಂದು ಭಾವಿಸುವುದನ್ನು ನಿಲ್ಲಿಸಬೇಕಾಗಿದೆ. ದೂರದೃಷ್ಟಿಯುಳ್ಳ ಅಭಿವೃದ್ಧಿಯು ಎಲ್ಲರನ್ನು ಒಳಗೊಳ್ಳುತ್ತದೆ. ಈ ನಿಟ್ಟಿನಲ್ಲಿ ಶೇ. 1ರಷ್ಟಿರುವ ಶ್ರೀಮಂತರ ಮೇಲೆ ತೆರಿಗೆ ವಿಧಿಸುವ ಮೂಲಕ ಅವರೊಳಗೆ ಶೇಖರವಾಗಿರುವ ಸಂಪತ್ತನ್ನು ಹಂಚುವ ಕೆಲಸ ಮಾಡಬೇಕು. ಅಸಮಾನತೆಯ ಅಂತರವನ್ನು ತುಂಬಿದಾಗ ಮಾತ್ರ ಭಾರತವು ಆಮೂಲಾಗ್ರ ಅಭಿವೃದ್ಧಿ ಹೊಂದಿದ ದೇಶವಾಗಿ ಭವಿಷ್ಯದಲ್ಲಿ ಹೊರಹೊಮ್ಮಲು ಸಾಧ್ಯ.
ಅರುಣಾಚಲ ಅಪಘಾತದಲ್ಲಿ 19 ಮಂದಿ ಮೃತ್ಯು: ಬದುಕುಳಿದ ವ್ಯಕ್ತಿಯಿಂದ ಎರಡು ದಿನಗಳ ಬಳಿಕ ಮಾಹಿತಿ ಬಹಿರಂಗ
ಗುವಾಹತಿ: ಅರುಣಾಚಲ ಪ್ರದೇಶದ ಗುಡ್ಡಗಾಡು ಪ್ರದೇಶದಲ್ಲಿ ಸೋಮವಾರ ರಾತ್ರಿ 22 ಮಂದಿಯನ್ನು ಹೊತ್ತಿದ್ದ ಟ್ರಕ್ ಕಂದಕಕ್ಕೆ ಬಿದ್ದು ಸಂಭವಿಸಿದ ದುರಂತದಲ್ಲಿ ಬಹುಶಃ ಉಳಿದ ಏಕೈಕ ವ್ಯಕ್ತಿ ಅವಶೇಷಗಳ ಅಡಿಯಿಂದ ಎದ್ದು ಗಾಯದ ನಡುವೆಯೂ 200 ಮೀಟರ್ ಅಳದ ಕಂದಕದಿಂದ ಹೊರಬಂದು 4 ಕಿಲೋಮೀಟರ್ ತೆವಳಿಕೊಂಡು ಬುಧವಾರ ರಾತ್ರಿ ಬಿಆರ್ಓ ಕ್ಯಾಂಪ್ ತಲುಪಿ, ಘಟನೆ ನಡೆದ 48 ಗಂಟೆ ಬಳಿಕ ದುರಂತದ ಬಗ್ಗೆ ಮಾಹಿತಿ ನೀಡಿದ ಅಪರೂಪದ ಪ್ರಕರಣ ವರದಿಯಾಗಿದೆ. ಗುರುವಾರ ಸಂಜೆವರೆಗೆ 19 ಮೃತದೇಹಗಳನ್ನು ಹೊರಕ್ಕೆ ತೆಗೆಯಲಾಗಿದ್ದು, ಇವರು ಚೀನಾ ಗಡಿ ಸಮೀಪದ ಅಂಜಾವ್ ಜಿಲ್ಲೆಯ ಕೆಲಸದ ಸ್ಥಳಕ್ಕೆ ಟ್ರಕ್ ನಲ್ಲಿ ಹೋಗುತ್ತಿದ್ದರು. ಹಯುಲಿಂಗ್- ಚಗ್ಲಗಮ್ ರಸ್ತೆಯಲ್ಲಿ ಅಪಘಾತಕ್ಕೀಡಾಯಿತು. ಉಳಿದ ಇಬ್ಬರು ಕಾರ್ಮಿಕರಿಗಾಗಿ ಸೇನಾ ತಂಡಗಳು ಶೋಧ ಕಾರ್ಯ ನಡೆಸುತ್ತಿವೆ. ಟ್ರಕ್ ನಲ್ಲಿದ್ದ 22 ಮಂದಿಯ ಪೈಕಿ ಟ್ರಕ್ ಚಾಲಕನೂ ಸೇರಿದ್ದಾನೆಯೇ ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ. ಉಳಿದುಕೊಂಡಿರುವ ವ್ಯಕ್ತಿ ತೀವ್ರ ಗಾಯವಾಗಿರುವುದರಿಂದ ಹೆಚ್ಚಿನ ವಿವರ ನೀಡುವ ಸ್ಥಿತಿಯಲ್ಲಿಲ್ಲ. ಗಾಯಾಳುವನ್ನು ಹಯುಲಿಯಾಂಗ್ ನಿಂದ 260 ಕಿಲೋಮೀಟರ್ ದೂರದ ದಿಬ್ರೂಗಢ ವೈದ್ಯಕೀಯ ಕಾಲೇಜು ಮತ್ತ ಆಸ್ಪತ್ರೆಗೆ ಸೇರಿಸಲಾಗಿದೆ. ಅಂಜವ್ ಜಿಲ್ಲಾ ವಿಕೋಪ ನಿರ್ವಹಣಾ ಇಲಾಖೆಯ ಮುಖ್ಯಸ್ಥ ನಂಗ್ ಚಿಂಗ್ನಿ ಚೌಪೂ ಅವರ ಪ್ರಕಾರ, ಸೇನಾ ತಂಡಗಳು 200 ಮೀಟರ್ ಆಳದ ಕಂದಕಕ್ಕೆ ಇಳಿಯಲು ರೋಪ್ ಬಳಸಬೇಕಾಯಿತು. ಪತ್ತೆಯಾಗಿರುವ 19 ದೇಹಗಳನ್ನು ಇನ್ನೂ ಮೇಲಕ್ಕೆ ತರಲು ಸಾಧ್ಯವಾಗಿಲ್ಲ. ದೇಹವನ್ನು ಮೇಲೆತ್ತಲು ಅಗತ್ಯವಾದ ಉಪಕರಣಗಳು ಸೇನಾ ಸಿಬ್ಬಂದಿ ಬಳಿ ಇಲ್ಲದ ಕಾರಣ ದಿಬ್ರೂಗಢದಿಂದ ಎನ್ಡಿಆರ್ಎಫ್ ತಂಡವನ್ನು ಅಗತ್ಯ ಸಲಕರಣೆಗಳೊಂದಿಗೆ ಕರೆಸಲಾಗಿದೆ ಎಂದು ಮೂಲಗಳು ಹೇಳಿವೆ.
ಆಂಧ್ರದಲ್ಲಿ ಚಾಲಕನ ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿದ ಬಸ್; 9 ಪ್ರಯಾಣಿಕರ ದುರ್ಮರಣ!
ಆಂಧ್ರಪ್ರದೇಶದಲ್ಲಿ ಬೆಳ್ಳಂಬೆಳಗ್ಗೆ ಭೀಕರ ಬಸ್ ಅಪಘಾತ ಸಂಭವಿಸಿದದ್ದು, ಅಲ್ಲೂರಿ ಜಿಲ್ಲೆಯ ತುಲಸಿಪಕಲು ಗ್ರಾಮದಲ್ಲಿ ಚಾಲಕನ ನಿಯಂತ್ರಣ ತಪ್ಪಿ ಖಾಸಿ ಬಸ್ ಕಂದಕಕ್ಕೆ ಉರುಳಿದೆ. ಈ ಅಪಘಾತದಲ್ಲಿ ಒಟ್ಟು 9 ಪ್ರಯಾಣಿಕರು ಸಾವನ್ನಪ್ಪಿದ್ದು, ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಸುದ್ದಿ ತಿಳಿಯುತ್ತಿದ್ದಂತೇ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಮತ್ತು ಜಿಲ್ಲಾಡಳಿತ, ರಕ್ಷಣಾ ಕಾರ್ಯಾಚರಣೆಗೆ ಚಾಲನೆ ನೀಡಿದೆ. ಸದ್ಯ ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲು ಮಾಡಲಾಗಿದೆ. ಅಪಘಾತ ಸಂಭವಿಸಿದ್ದೇಗೆ? ಈ ಕುರಿತು ಇಲ್ಲಿದೆ ಸಂಪೂರ್ಣ ಮಾಹಿತಿ.
ಕನಕಗಿರಿ | ಪ.ಪಂ ಅಧ್ಯಕ್ಷೆ ಸ್ಥಾನಕ್ಕೆ ಹುಸೇನಬೀ ಚಳ್ಳಮರದ ರಾಜೀನಾಮೆ
ಕೊಪ್ಪಳ: ಕನಕಗಿರಿ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಹುಸೇನಬೀ ಚಳ್ಳಮರದ ಅವರು ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಕೊಪ್ಪಳದ ಜಿಲ್ಲಾಡಳಿತ ಭವನದಲ್ಲಿ ಉಪ ವಿಭಾಗಾಧಿಕಾರಿ ಮಹೇಶ ಮಾಲಗಿತ್ತಿ ಅವರಿಗೆ ಗುರುವಾರ ರಾಜೀನಾಮೆ ಪತ್ರ ಸಲ್ಲಿಸಿದ್ದು, ರಾಜೀನಾಮೆ ಸ್ವೀಕೃತವಾಗಿದೆ ಎಂದು ಕಚೇರಿಯ ಮೂಲಗಳು ತಿಳಿಸಿವೆ. ಹಿಂದುಳಿದ ವರ್ಗದ ಮಹಿಳೆಗೆ ಮೀಸಲಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ನಲ್ಲಿ ಒಟ್ಟು ನಾಲ್ಕು ಜನ ಮಹಿಳಾ ಸದಸ್ಯೆಯರಿದ್ದು, ಬಿಜೆಪಿಯಲ್ಲಿ ಈ ವರ್ಗಕ್ಕೆ ಸೇರಿದ ಸದಸ್ಯರು ಯಾರು ಇಲ್ಲ. 2024ರ ಅ.1ರಂದು ನಿಗದಿಯಾಗಿದ್ದ ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ನಾಲ್ಕು ಜನ ಸ್ಪರ್ಧಾಳುಗಳ ಪೈಕಿ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಅವರ ಸೂಚನೆ ಮೇರೆಗೆ 13 ತಿಂಗಳ ಹುಸೇನಬೀ ಉಳಿದ ಅವಧಿಗೆ ತನುಶ್ರೀ ಟಿ.ಜೆ. ರಾಮಚಂದ್ರ ಅವರಿಗೆ ಬಿಟ್ಟು ಕೊಡಲು ಮಾತುಕತೆಯಾದ ಹಿನ್ನೆಲೆಯಲ್ಲಿ ಚಳ್ಳಮರದ ಅವರು ರಾಜೀನಾಮೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ರಾಜ್ಯದಲ್ಲಿ ಮುಸ್ಲಿಂ ಜನಸಂಖ್ಯೆ 50% ದಾಟಿದರೆ, ಇತರರು ಉಳಿಯುವುದಿಲ್ಲ: ಅಸ್ಸಾಂ ಸಿಎಂ
ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ರಾಜ್ಯದಲ್ಲಿ ಜನಸಂಖ್ಯಾ ಹೆಚ್ಚಳದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಮುಸ್ಲಿಂ ಜನಸಂಖ್ಯೆ 50% ತಲುಪಿದರೆ ಇತರ ಸಮುದಾಯಗಳು ಅಳಿವಿನಂಚಿಗೆ ತಲುಪಬಹುದು ಎಂದು ಎಚ್ಚರಿಸಿದ್ದಾರೆ. ಅಕ್ರಮ ವಲಸೆಯಿಂದ ಸ್ಥಳೀಯ ಅಸ್ಸಾಮಿ ಜನಸಂಖ್ಯೆ ಅಸ್ತಿತ್ವದ ಬಿಕ್ಕಟ್ಟು ಎದುರಿಸುತ್ತಿದೆ. ಇದು ರಾಜ್ಯದ ಭೂಮಿ, ಸಂಪನ್ಮೂಲಗಳು ಮತ್ತು ಸಂಸ್ಕೃತಿಗೆ ಬೆದರಿಕೆ ಒಡ್ಡುತ್ತಿದೆ ಎಂದು ತಿಳಿಸಿದ್ದಾರೆ.
ಗಲ್ಫ್ ಮೆಡಿಕಲ್ ಯುನಿವರ್ಸಿಟಿ | ಮಧ್ಯಪ್ರಾಚ್ಯದ ಮೊದಲ CCAT ಏರೋಮೆಡಿಕಲ್ ಟ್ರಾನ್ಸ್ಪೋರ್ಟ್ ಕೋರ್ಸ್ಗೆ ಚಾಲನೆ
ಅಜ್ಮಾನ್(ಯುಎಇ), ಡಿ. 12: ಮಧ್ಯಪ್ರಾಚ್ಯದ ಆರೋಗ್ಯ ಶಿಕ್ಷಣ ಕ್ಷೇತ್ರದಲ್ಲಿ ತನ್ನ ಹೆಜ್ಜೆ ಗುರುತು ಮೂಡಿಸಿರುವ ಗಲ್ಫ್ ಮೆಡಿಕಲ್ ಯುನಿವರ್ಸಿಟಿ (GMU), ಮೊದಲ CCAT ಏರೋಮೆಡಿಕಲ್ ಟ್ರಾನ್ಸ್ಪೋರ್ಟ್ – ಫೌಂಡೇಶನ್ ಲೆವೆಲ್ ಕೋರ್ಸ್ ಅನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಡಿ.4ರಿಂದ 9ರವರೆಗೆ ನಡೆದ ಈ ಆರು ದಿನಗಳ ತರಬೇತಿಗೆ ಭಾರೀ ಪ್ರತಿಕ್ರಿಯೆ ದೊರಕಿದ್ದು, ಮುಂದಿನ ಬ್ಯಾಚ್ ಅನ್ನು ಜೂನ್ 2026ರಲ್ಲಿ ಪ್ರಾರಂಭಿಸಲಿದ್ದೇವೆ ಎಂದು ಗಲ್ಫ್ ಮೆಡಿಕಲ್ ಯುನಿವರ್ಸಿಟಿ ತಿಳಿಸಿದೆ. ಅಂತರರಾಷ್ಟ್ರೀಯ ಮಾನದಂಡಗಳಿಗೆ ಅನುಗುಣವಾಗಿ ರೂಪುಗೊಂಡಿರುವ ಈ ಕೋರ್ಸ್ ವೈದ್ಯರು, ನರ್ಸ್ಗಳು, ಅರೆವೈದ್ಯರು ಹಾಗೂ ಏರ್ ಆಂಬ್ಯುಲೆನ್ಸ್ ಮತ್ತು ವೈದ್ಯಕೀಯ ಸ್ಥಳಾಂತರ ಸೇವೆಗಳಲ್ಲಿ ತೊಡಗಿರುವ ವೃತ್ತಿಪರರನ್ನು ಗಮನದಲ್ಲಿಟ್ಟುಕೊಂಡು ರೂಪಿಸಲಾಗಿದೆ. GMU ಯ ಅತ್ಯಾಧುನಿಕ ಕ್ಲಿನಿಕಲ್ ಸಿಮ್ಯುಲೇಶನ್ ಕೇಂದ್ರದಲ್ಲಿ ನೈಜ ವಿಮಾನ ಪರಿಸ್ಥಿತಿಗಳನ್ನೇ ಪ್ರತಿಬಿಂಬಿಸುವ ಕಾಕ್ ಪೀಟ್ ನಂತೆ ವಿನ್ಯಾಸ ಮಾಡಿರುವ ತರಬೇತಿ ಘಟಕಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದವರ ಗಮನ ಸೆಳೆದವು. ವೈದ್ಯಕೀಯ ಪ್ರವಾಸೋದ್ಯಮದ ಜಾಗತಿಕ ವಿಸ್ತರಣೆ, ಅಂತರರಾಷ್ಟ್ರೀಯ ಮಟ್ಟದಲ್ಲಿ ತುರ್ತು ರೋಗಿಗಳ ಸ್ಥಳಾಂತರಗಳಿಗೆ ಹೆಚ್ಚುತ್ತಿರುವ ಅವಶ್ಯಕತೆ ಮತ್ತು ಏರ್ ಆಂಬ್ಯುಲೆನ್ಸ್ ಸೇವೆಗಳ ಮೇಲಿನ ಹೂಡಿಕೆ ದೊಡ್ಡ ಪ್ರಮಾಣದಲ್ಲಿ ಏರಿದ ಪರಿಣಾಮ, ಏರೋಮೆಡಿಕಲ್ ಸೇವೆಗಳ ಬೇಡಿಕೆ ನಿರಂತರವಾಗಿ ಹೆಚ್ಚುತ್ತಿದೆ. ಉದ್ಯಮ ವಲಯದ ವರದಿ ಪ್ರಕಾರ, ಈ ವಲಯವು ಈಗ ಎರಡಂಕಿಯ ದರದಲ್ಲಿ ವೇಗವಾಗಿ ಬೆಳೆಯುತ್ತಿದ್ದು, ಉನ್ನತ ಮಟ್ಟದ, ಸಂರಚಿತ ಹಾಗೂ ಸಾಮರ್ಥ್ಯಾಧಾರಿತ ತರಬೇತಿ ಕಾರ್ಯಕ್ರಮಗಳಿಗೆ ಬೇಡಿಕೆ ಹೆಚ್ಚುತ್ತಿದೆ. ಯುಕೆಯ CCAT ತಜ್ಞರ ಸಹಯೋಗದಲ್ಲಿ ರೂಪುಗೊಂಡಿರುವ ಈ ಕಾರ್ಯಕ್ರಮವನ್ನು ಕೋರ್ಸ್ ನಿರ್ದೇಶಕ ಪ್ರೊ. ಡಾ. ಟೆರ್ರಿ ಮಾರ್ಟಿನ್ ನೇತೃತ್ವದಲ್ಲಿ ರೂಪಿಸಲಾಗಿದೆ. ಈ ಕುರಿತು ಪ್ರತಿಕ್ರಿಯಿಸಿದ ಪ್ರೊ. ಡಾ. ಟೆರ್ರಿ, “ಏರೋಮೆಡಿಕಲ್ ಸೇವೆ ಸಂಪೂರ್ಣ ವಿಭಿನ್ನ ಕಾರ್ಯಪರಿಣಾಮದ ಜಗತ್ತು. ಆಗಸದಲ್ಲಿ ರೋಗಿಯ ಆರೈಕೆ ಮಾಡಲು ನಿಖರ ಕೌಶಲ್ಯ ಮತ್ತು ತ್ವರಿತ ನಿರ್ಧಾರದ ಸಾಮರ್ಥ್ಯ ಬೇಕಾಗುತ್ತದೆ,” ಎಂದರು. “ತುರ್ತು ಸಂದರ್ಭಗಳಲ್ಲಿ ತ್ವರಿತವಾಗಿ ಹಾಗೂ ವಿಶ್ವಾಸಾರ್ಹ ಚಿಕಿತ್ಸೆ ನೀಡಬಲ್ಲ ಆರೋಗ್ಯ ವೃತ್ತಿಪರರನ್ನು ತಯಾರಿಸುವುದು ಗಲ್ಫ್ ಮೆಡಿಕಲ್ ಯುನಿವರ್ಸಿಟಿಯ ಗುರಿ. ಏರೋಮೆಡಿಕಲ್ ಆರೈಕೆ ಹೆಚ್ಚಿನ ಜವಾಬ್ದಾರಿಯ ಕ್ಷೇತ್ರ; ಇದಕ್ಕೆ ಬೇಕಾದ ಪರಿಣತಿಯನ್ನು ಈ ಕೋರ್ಸ್ ಒದಗಿಸುತ್ತದೆ”, ಎಂದು GMU ಕುಲಪತಿ ಪ್ರೊ. ಡಾ. ಮಂದಾ ವೆಂಕಟ್ರಮಣ ಹೇಳಿದರು. “ವಾಯು ವೈದ್ಯಕೀಯ ಸಾರಿಗೆ ಇಂದಿನ ಜಗತ್ತಿನಲ್ಲಿ ಅನಿವಾರ್ಯ. ಜಾಗತಿಕ ಆರೋಗ್ಯ ರಕ್ಷಣೆಯ ಬದಲಾದ ಅವಶ್ಯಕತೆಗಳನ್ನು ಗಮನಿಸಿದಾಗ, ಗಲ್ಫ್ ಮೆಡಿಕಲ್ ಯುನಿವರ್ಸಿಟಿಯ ತರಬೇತಿ ಕ್ರಮಗಳು ಭವಿಷ್ಯದಲ್ಲಿ ಬಹಳ ಮುಖ್ಯವಾದುದು. ಜಾಗತಿಕ ಅಗತ್ಯಗಳಿಗೆ ಅನುಗುಣವಾದ ಕೋರ್ಸ್ ಗಳಲ್ಲಿ ನಾವು ಹೂಡಿಕೆ ಮಾಡುತ್ತೇವೆ, ಎಂದು ತುಂಬೆ ಗ್ರೂಪ್ ಸ್ಥಾಪಕ ಅಧ್ಯಕ್ಷ ಡಾ. ತುಂಬೆ ಮೊಯ್ದೀನ್ ಹೇಳಿದರು. ಮಧ್ಯಪ್ರಾಚ್ಯ, ದಕ್ಷಿಣ ಏಷ್ಯಾ ಹಾಗೂ ಉತ್ತರ ಅಮೆರಿಕಾದಿಂದ ಭಾಗವಹಿಸಿದ ವಿವಿಧ ವೃತ್ತಿಪರರು CCAT–GMU ಸಂಯುಕ್ತ ಪ್ರಮಾಣಪತ್ರ ಪಡೆದಿದ್ದಾರೆ. ಮುಂದಿನ ವರ್ಷ ಜೂನ್ನಿಂದ ಸುಧಾರಿತ ಮಾಡ್ಯೂಲ್ಗಳು ಹಾಗೂ ಮುಂದುವರೆದ ಏರೋಮೆಡಿಕಲ್ ತರಬೇತಿಗಳನ್ನು ಗಲ್ಫ್ ಮೆಡಿಕಲ್ ಯುನಿವರ್ಸಿಟಿ ಪ್ರಾರಂಭಿಸಲಿದೆ. ಪ್ರಸಕ್ತ ಸೆಮಿಸ್ಟರ್ ಗೆ ಪ್ರವೇಶಾತಿ ಆರಂಭವಾಗಿದ್ದು, ಹೆಚ್ಚಿನ ಮಾಹಿತಿಗಾಗಿ www.gmu.ac.ae ಗೆ ಭೇಟಿ ನೀಡಬಹುದು.
ನಾವು ಏನಾದರೂ ಮಾಡಲೇಬೇಕು; ದಯಾಮರಣ ಅರ್ಜಿ ವಿಚಾರಣೆ ವೇಳೆ ಸುಪ್ರೀಂಕೋರ್ಟ್ ಮಹತ್ವದ ಹೇಳಿಕೆ
ದಯಮಾರಣ ಕೋರಿ ಸಲ್ಲಿಸುವ ಅರ್ಜಿಗಳ ವಿಚಾರಣೆ ನೆಡೆಸುವುದು ಸಪ್ರೀಂಕೋರ್ಟ್ಗೆ ಸವಾಲಿನ ಕೆಲಸವೇ ಸರಿ. ಅತ್ಯಂತ ದಯನೀಯ ಸ್ಥಿತಿಯಲ್ಲಿ ವೈದ್ಯಕೀಯ ಸಾಧನೆಗಳ ನೆರವಿನಿಂದ ಬದುಕುತ್ತಿರುವ ವ್ಯಕ್ತಿಯನ್ನು ಕೊನೆ ಕ್ಷಣದವರೆಗೂ ಜೀವಂತವಾಗಿರಿಸಬೇಕೆ ಅಥವಾ ಶಾಂತಿಯ ಸಾವನ್ನು ಕರುಣಿಸಬೇಕೆ ಎಂದು ನಿರ್ಧರಿಸುವುದು ಅಷ್ಟು ಸುಲಭಧ ಮಾತಲ್ಲ. ಆದರೆ ಕಳೆದ 13 ವರ್ಷಗಳಿಂದ ಕೋಮಾ ಸ್ಥಿತಿಯಲ್ಲಿರುವ ಹರೀಶ್ ರಾಣಾ ಅವರ ತಂದೆ ಸಲ್ಲಿಸಿರುವ ದಯಾಮರಣ ಅರ್ಜಿ ವಿಚಾರಣೆ ವೇಳೆ, ಸುಪ್ರೀಂಕೋರ್ಟ್ ಮಹತ್ವದ ಹೇಳಿಕೆಯೊಂದನ್ನು ನೀಡಿದೆ. ಇಲ್ಲಿದೆ ಮಾಹಿತಿ.
ಕಂಟೋನ್ಮೆಂಟ್ ರೈಲ್ವೆ ಕಾಲೊನಿ ಜೀವ ವೈವಿಧ್ಯತೆ ಪಾರಂಪರಿಕ ತಾಣವಲ್ಲ! 3 ತಿಂಗಳಲ್ಲಿ ನಿರ್ಧಾರ ಹಿಂಪಡೆದ ಸರ್ಕಾರ
ರಾಜ್ಯ ಸರ್ಕಾರವು ಕಂಟೋನ್ಮೆಂಟ್ ರೈಲ್ವೆ ಕಾಲೊನಿಯ 8.61 ಎಕರೆ ಪ್ರದೇಶವನ್ನು 'ಜೀವ ವೈವಿಧ್ಯತೆ ಪಾರಂಪರಿಕ ತಾಣ' ಎಂದು ಸೆಪ್ಟೆಂಬರ್ನಲ್ಲಿ ಘೋಷಿಸಿ, ಡಿಸೆಂಬರ್ನಲ್ಲಿ ಯಾವುದೇ ಕಾರಣ ನೀಡದೆ ಹಿಂಪಡೆದಿದೆ. ಈ ನಿರ್ಧಾರದಿಂದ ಪರಿಸರವಾದಿಗಳು ಮತ್ತು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದು, ಒತ್ತಡದಿಂದ ಈ ಕ್ರಮ ಕೈಗೊಂಡಿರಬಹುದು ಎಂಬ ಅನುಮಾನ ವ್ಯಕ್ತವಾಗಿದೆ.
ಆತ್ಮೀಯ ದೂರವಾಣಿ ಕರೆ; ಟ್ರಂಪ್ ಜತೆ ವ್ಯಾಪಾರ, ರಕ್ಷಣೆ ಬಗ್ಗೆ ಚರ್ಚಿಸಿದ ಮೋದಿ
ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೆರಿಕ ಅಧ್ಯಕ್ಷ ನರೇಂದ್ರ ಮೋದಿಯವರು ಗುರುವಾರ ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ವ್ಯಾಪಾರದ ವೇಗ ಕಾಯ್ದುಕೊಳ್ಳುವುದು ಸೇರಿದಂತೆ ಹಲವು ವಿಷಯಗಳ ಬಗ್ಗೆ ದೂರವಾಣಿ ಮೂಲಕ ಚರ್ಚಿಸಿದರು ಎಂದು ಉನ್ನತ ಮೂಲಗಳು ತಿಳಿಸಿವೆ. ಅಮೆರಿಕದ ವ್ಯಾಪಾರ ನೀತಿಯಿಂದಾಗಿ ಉಭಯ ದೇಶಗಳ ನಡುವಿನ ಸಂಬಂಧ ಕೆಲ ತಿಂಗಳುಗಳಿಂದ ಹದಗೆಟ್ಟಿರುವ ಹಿನ್ನೆಲೆಯಲ್ಲಿ ವ್ಯಾಪಾರ ಒಪ್ಪಂದಕ್ಕೆ ಬರುವ ನಿಟ್ಟಿನಲ್ಲೂ ಚರ್ಚೆ ನಡೆದಿದೆ ಎನ್ನಲಾಗಿದೆ. ಕಳೆದ ಅಕ್ಟೋಬರ್ನಲ್ಲಿ ಅಮೆರಿಕದ ಉಪ ವ್ಯಾಪಾರ ಪ್ರತಿನಿಧಿ ರಿಕ್ ಸ್ವಿಡ್ಜರ್ ಭಾರತಕ್ಕೆ ಎರಡು ದಿನಗಳ ಭೇಟಿ ನೀಡಿ ವಾಣಿಜ್ಯ ಕಾರ್ಯದರ್ಶಿ ರಾಜೇಶ್ ಅಗರ್ವಾಲ್ ಜತೆ ಚರ್ಚಿಸಿದ ಬಳಿಕ ಇದೇ ಮೊದಲ ಬಾರಿಗೆ ಉಭಯ ದೇಶಗಳ ಮುಖಂಡರು ದೂರವಾಣಿ ಸಂಭಾಷಣೆ ನಡೆಸಿದರು. ಡೊನಾಲ್ಡ್ ಟ್ರಂಪ್ ಅವರ ಜತೆ ಆತ್ಮೀಯ ಸಂಭಾಷಣೆ ನಡೆಯಿತು. ನಮ್ಮ ದ್ವಿಪಕ್ಷೀಯ ಸಂಬಂಧಗಳ ಪ್ರಗತಿಯನ್ನು ಪರಾಮರ್ಶಿಸಿದ್ದು, ಪ್ರಾದೇಶಿಕ ಹಾಗೂ ಅಂತರರಾಷ್ಟ್ರೀಯ ಬೆಳವಣಿಗೆಗಳ ಬಗ್ಗೆ ಚರ್ಚಿಸಿದ್ದೇವೆ. ಜಾಗತಿಕ ಶಾಂತಿ, ಸಮೃದ್ಧಿ ಮತ್ತು ಭದ್ರತೆಗಾಗಿ ಭಾರತ ಹಾಗೂ ಅಮೆರಿಕ ಜತೆಯಾಗಿ ಶ್ರಮಿಸಲಿವೆ ಎಂದು ಮೋದಿ ಫೋನ್ ಸಂಭಾಷಣೆ ಬಳಿಕ ಜಾಲತಾಣಗಳಲ್ಲಿ ಬಹಿರಂಗಪಡಿಸಿದ್ದಾರೆ. ದ್ವಿಪಕ್ಷೀಯ ವ್ಯಾಪಾರವನ್ನು ವಿಸ್ತರಿಸುವ ಮಹತ್ವದ ಬಗ್ಗೆ ಉಭಯ ದೇಶಗಳ ಮುಖಂಡರು ಒಲವು ತೋರಿದರು ಎನ್ನಲಾಗಿದೆ. ಪ್ರಮುಖ ತಂತ್ರಜ್ಞಾನಗಳು, ವಿದ್ಯುತ್, ರಕ್ಷಣೆ, ಭದ್ರತೆ ಮತ್ತಿತರ ಮಹತ್ವದ ವಿಷಯಗಳ ಬಗ್ಗೆಯೂ ಉಭಯ ಮುಖಂಡರು ಚರ್ಚಿಸಿದರು ಎಂದು ತಿಳಿದು ಬಂದಿದೆ.
Karnataka Weather: ರಾಜ್ಯದಲ್ಲಿ ಭೀಕರ ಚಳಿಗೆ ಬೆದರಿದ ಜನ: ಇಲ್ಲಿದೆ ಮುಂದಿನ ನಾಲ್ಕು ದಿನಗಳ ಮುನ್ಸೂಚನೆ
Karnataka Weather: ರಾಜ್ಯದ ಬಹುತೇಕ ಭಾಗಗಳಲ್ಲಿ ಭೀಕರ ಚಳಿ ಮುಂದುವರೆದಿದೆ. ಹಾಗೆಯೇ ಮುಂದಿನ ನಾಲ್ಕು ದಿನಗಳಲ್ಲಿ ರಾಜಧಾನಿ ಬೆಂಗಳೂರು ಸೇರಿ ಹಲವಾರು ಜಿಲ್ಲೆಗಳಲ್ಲಿ ಶೀತಗಾಳಿ ಪ್ರಮಾಣ ಹೆಚ್ಚಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಹಾಗಾದ್ರೆ ಎಲ್ಲೆಲ್ಲಿ ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ. ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಇಂದು (ಡಿಸೆಂಬರ್ 12) ಬೆಳಗ್ಗೆ ದಟ್ಟ
ತಮ್ಮ ಮಹತ್ವಾಕಾಂಕ್ಷಿ ಗೋಲ್ಡ್ ಕಾರ್ಡ್ ಯೋಜನೆ ಬಿಡುಗಡೆ ಮಾಡಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಶ್ರೀಮಂತ ವಲಸಿಗರಿಗೆ ಅಮೆರಿಕದ ಬಾಗಿಲುಗಳನ್ನು ತೆರೆದಿದ್ದಾರೆ. ಗೋಲ್ಡ್ ಕಾರ್ಡ್ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅವರು, ತಮ್ಮ ಭಾಷಣದಲ್ಲಿ ಭಾರತೀಯ ಪ್ರತಿಭೆಗಳ ಬಗ್ಗೆ ಉಲ್ಲೇಖಿಸಿರುವುದು ವಿಶೇಷವಾಗಿದೆ. ಅಮೆರಿಕನ್ ಕಂಪನಿಗಳಿಗೆ ಭಾಋತೀಯ ಪ್ರತಿಭೆಗಳನ್ನು ಉಳಿಸಿಕೊಳ್ಳಲು ಗೋಲ್ಡ್ ಕಾರ್ಡ್ ಯೋಜನೆ ಅವಕಾಶ ಮಾಡಿಕೊಡುತ್ತದೆ ಎಂದು ಟ್ರಂಪ್ ಹೇಳಿದ್ದಾರೆ. ಟ್ರಂಪ್ ಅವರ ಈ ಹೇಳಿಕೆ ಗ್ರೀನ್ ಕಾರ್ಡ್ ನಿವಾಸಿಗಳ ಮೇಲೆ ಗೋಲ್ಡ್ ಕಾರ್ಡ್ ಪರಿಣಾಮಗಳ ಬಗೆಗಿನ ಚರ್ಚೆಯನ್ನು ಮತ್ತಷ್ಟು ತೀವ್ರಗೊಳಿಸಿದೆ.
ಡಿಸೆಂಬರ್ 12ರಂದು ರಾಜ್ಯದಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ?: ಜಿಲ್ಲಾವರು ಅಂಕಿಅಂಶಗಳ ವಿವರ
Petrol, Diesel Price: ಪೆಟ್ರೋಲ್, ಡೀಸೆಲ್ ದರಲ್ಲಿ ಜಾಸ್ತಿ ಅಲ್ಲದಿದ್ದರೂ, ಸ್ವಲ್ಪ ಪ್ರಮಾಣದಲ್ಲಾದ್ರೂ ಏರಿಳಿತ ಆಗುತ್ತಿರುತ್ತದೆ. ಹಾಗಾದರೆ, ಇಂದು (ಡಿಸೆಂಬರ್ 12) ಬೆಂಗಳೂರು ಸೇರಿದಂತೆ ರಾಜ್ಯದ ಉಳಿದ ಜಿಲ್ಲೆಗಳಲ್ಲಿ ಲೀಟರ್ ಪೆಟ್ರೋಲ್, ಡೀಸೆಲ್ ಬೆಲೆ ಎಷ್ಟಿದೆ ಎನ್ನುವ ಅಂಕಿಅಂಶಗಳನ್ನು ಇಲ್ಲಿ ನೀಡಲಾಗಿದೆ ಕಣ್ಣಾಡಿಸಿ. ಶಕ್ತಿಯ ಮೂಲ ಎನಿಸಿಕೊಂಡಿರುವ ಪೆಟ್ರೋಲ್ ಮತ್ತು ಡೀಸೆಲ್ ಇಂಧನ ಅತ್ಯವಶ್ಯಕವಾಗಿ ಬೇಕಾಗುವ ಸಂಪನ್ಮೂಲಗಳಲ್ಲಿ
ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಭಾರತ ಪ್ರವಾಸ ಮತ್ತು ಮೋದಿ-ಪುಟಿನ್ ದೋಸ್ತಿ ಅಮೆರಿಕವನ್ನು ಇನ್ನಿಲ್ಲದಂತೆ ಕಾಡತೊಡಗಿದೆ. ಭಾರತದೊಂದಿಗಿನ ಸಂಬಂಧ ಸುಧಾರಣೆಗೆ ಶತಾಯಗತಾಯ ಪ್ರಯತ್ನ ಆರಂಭಿಸಿರುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ನಿನ್ನೆ (ಡಿ.11-ಗುರುವಾರ) ಪ್ರಧಾನಮಂತ್ರಿ ನರೇಂದ್ರ ಮೋದಿ ಅವರೊಂದಿಗ ದೂರವಾಣಿ ಕರೆಯಲ್ಲಿ ಮಾತನಾಡಿದ್ದಾರೆ. ವ್ಯಾಪಾರ, ಇಂಧನ ಮತ್ತು ರಕ್ಷಣಾ ಕ್ಷೇತ್ರಗಳಲ್ಲಿ ದ್ವಿಪಕ್ಷೀಯ ಸಹಕಾರವನ್ನು ವೃದ್ಧಿಸುವ ಕುರಿತು ಉಭಯ ನಾಯಕರು ಸುದೀರ್ಘ ಚರ್ಚೆ ನಡೆಸಿದ್ದಾರೆ. ಈ ಕುರಿತು ಇಲ್ಲಿದೆ ಹೆಚ್ಚಿನ ಮಾಹಿತಿ.
Gold Price on December 12: ಬಂಗಾರ ದರ ಎಷ್ಟಾಯ್ತು ಗೊತ್ತಾ? ಇಲ್ಲಿದೆ ಡಿಸೆಂಬರ್ 12ರ ಚಿನ್ನದ ದರಪಟ್ಟಿ
Gold Price on December 12: ಬಂಗಾರ ದರದಲ್ಲಿ ಹಾವು ಏಣಿ ಆಟದಂತೆ ಏರಿಳಿತ ಆಗುತ್ತಲೇ ಇರುತ್ತದೆ. ಹಾಗಾದ್ರೆ, ಇಂದು (ಡಿಸೆಂಬರ್ 12) ಕರ್ನಾಟಕ ರಾಜಧಾನಿ ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಬಂಗಾರ, ಬೆಳ್ಳಿ ದರ ಎಷ್ಟಿದೆ ಎನ್ನುವ ಸಂಪೂರ್ಣ ಅಂಕಿಅಂಶಗಳ ಸಹಿತ ವಿವರವನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ. ಬಂಗಾರ ದರಗಳ ವಿವರ: ನಿನ್ನೆ (ಡಿಸೆಂಬರ್
ವಾಯುವ್ಯ ಸಾರಿಗೆಗೆ ಎಲೆಕ್ಟ್ರಿಕ್ ಬಸ್ಗಳ ಬೇಡಿಕೆ: 507 ಕೋಟಿ ರೂ ವೆಚ್ಚದ ಸಾವಿರ ಬಸ್ಗಳಿಗೆ ಪ್ರಸ್ತಾವನೆ
ವಾಕರಸಾ ಸಂಸ್ಥೆಯು ಒಂದು ಸಾವಿರ ಎಲೆಕ್ಟ್ರಿಕ್ ಬಸ್ಗಳನ್ನು ಖರೀದಿಸಲು ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು, ಈ ಭಾಗದ ಜನರಿಗೆ ಸಿಹಿಸುದ್ದಿಯಾಗಿದೆ. ಮಹಿಳೆಯರ ಉಚಿತ ಪ್ರಯಾಣ ಯೋಜನೆಯಿಂದ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿರುವುದರಿಂದ ಬಸ್ ಬೇಡಿಕೆಯೂ ಏರಿದೆ. ವಿಶ್ವಬ್ಯಾಂಕ್ ನೆರವಿನೊಂದಿಗೆ ಈ ಯೋಜನೆಯನ್ನು ರಾಜ್ಯ ಸರ್ಕಾರ ಜಾರಿಗೊಳಿಸಲಿದೆ.
ದೇಶದ ಹಿಂದೂ-ಮುಸ್ಲಿಮರ ಮಧ್ಯೆ ಶಾಶ್ವತ ದ್ವೇಷ ಕಟ್ಟಲು ಸಂಘಪರಿವಾರದಿಂದ ಯತ್ನ: ಚಿಂತಕ ಶಿವಸುಂದರ್
ಸೋಲಿಡಾರಿಟಿ ಯೂತ್ ಮೂಮೆಂಟ್ನಿಂದ 'ವಕ್ಫ್: ಅಪಪ್ರಚಾರ ಮತ್ತು ವಾಸ್ತವ' ಪುಸ್ತಕ ಬಿಡುಗಡೆ
ಕಾರ್ಕಳ | ಕಾರು ಢಿಕ್ಕಿ : ಪಾದಚಾರಿ ಮೃತ್ಯು
ಕಾರ್ಕಳ, ಡಿ.11: ರಸ್ತೆ ಪಕ್ಕದಲ್ಲಿ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಯೊಬ್ಬರಿಗೆ ಕಾರು ಢಿಕ್ಕಿ ಹೊಡೆದ ಪರಿಣಾಮ ಅವರನ್ನು ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಮೃತಪಟ್ಟ ಘಟನೆ ಕಾರ್ಕಳದ ಕುಕ್ಕುಂದೂರಿನಲ್ಲಿ ಬುಧವಾರ ಸಂಜೆ ನಡೆದಿದೆ. ಮೃತರನ್ನು ದಿನಕರ ಪೂಜಾರಿ (50) ಎಂದು ಗುರುತಿಸಲಾಗಿದೆ. ಅವರು ಬುಧವಾರ ಸಂಜೆ ಜಾರ್ಕಳ ಕಡೆ ನಡೆದುಕೊಂಡು ಹೋಗುತ್ತಿದ್ದ ವೇಳೆ ಉಡುಪಿ ಕಡೆಗೆ ವೇಗವಾಗಿ ಬರುತ್ತಿದ್ದ ಕಾರು ಢಿಕ್ಕಿ ಹೊಡೆದಿತ್ತು. ತಲೆಗೆ ತೀವ್ರ ವಾಗಿ ಗಾಯಗೊಂಡ ದಿನಕರ ಪೂಜಾರಿ ಚಿಕಿತ್ಸೆಗೆ ಕಾರ್ಕಳ ಆಸ್ಪತ್ರೆಗೆ ಕರೆದೊಯ್ಯುವ ದಾರಿ ಮಧ್ಯೆ ಮೃತಪಟ್ಟರು. ಈ ಬಗ್ಗೆ ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೋಟ, ಡಿ.11: ಹೇರೂರು ಗ್ರಾಮದ ಮುತ್ತು (59) ಎಂಬವರು ಬುಧವಾರ ಬೆಳಗಿನ ವೇಳೆ ಮೊಳಹಳ್ಳಿ ಗ್ರಾಮದ ಹಾಡಿಯೊಂದರ ಮರದ ಕೊಂಬೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಕೋಟ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆತ್ಮಹತ್ಯೆಯ ಯೋಚನೆ ಬಂದಾಗ ಅದನ್ನು ನಿಗ್ರಹಿಸಲು ರಾಜ್ಯ ಸರಕಾರದ ಅರೋಗ್ಯ ಇಲಾಖೆಯ ಹೆಲ್ಪ್ ಲೈನ್ 104 ಸಹಾಯ ಮಾಡುತ್ತದೆ. ಅದರ ಜೊತೆಗೆ Tele-MANAS ನ 14416 ಅನ್ನೂ ಸಂಪರ್ಕಿಸಬಹುದು.
ಮಾಂಟ್ರಾಡಿ | ರಿಕ್ಷಾ ಅಡ್ಡಗಟ್ಟಿ ಹಣ್ಣಿನ ವ್ಯಾಪಾರಿಯಿಂದ ನಗದು ಲೂಟಿ
ಮೂಡುಬಿದಿರೆ, ಡಿ.11: ಮಾಂಟ್ರಾಡಿಯಲ್ಲಿ ಗುರುವಾರ ನಸುಕಿನ ಜಾವ ಕಾರಿನಲ್ಲಿ ಬಂದ ಅಪರಿಚಿತರು ರಿಕ್ಷಾವನ್ನು ಅಡ್ಡಗಟ್ಟಿ ಹಣ್ಣಿನ ವ್ಯಾಪಾರಿ ಬಳಿಯಿದ್ದ 19 ಸಾವಿರ ರೂ. ನಗದು ದೋಚಿ ಪರಾರಿಯಾಗಿದ್ದಾರೆ. ಈದು ಗ್ರಾಮದ ಮುಹಮ್ಮದ್ ಹಣ ಕಳಕೊಂಡವರು. ಮೂಡುಬಿದಿರೆ ಮಾರುಕಟ್ಟೆಯಲ್ಲಿ ಹಣ್ಣು ಹಂಪಲು ವ್ಯಾಪಾರಿಯಾಗಿರುವ ಮುಹಮ್ಮದ್ ಮಂಗಳೂರಿನಿಂದ ಹಣ್ಣು ಖರೀದಿಸಲು ಗುರುವಾರ ನಸುಕಿನ ಜಾವ ಈದುನಿಂದ ರಿಕ್ಷಾದಲ್ಲಿ ಹೊರಟಿದ್ದರು. ಮಾಂಟ್ರಾಡಿ ತಲುಪಿದಾಗ ಕಾರಿನಲ್ಲಿ ಬಂದ ಅಪರಿಚಿತರ ತಂಡ ಇವರ ರಿಕ್ಷಾವನ್ನು ಅಡ್ಡಗಟ್ಟಿ, ಬೆದರಿಸಿ, 19 ಸಾವಿರ ರೂ. ನಗದನ್ನು ಕಿತ್ತುಕೊಂಡು ಪರಾರಿಯಾಗಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಮೂಡುಬಿದಿರೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.
ಉಪ್ಪಿನಂಗಡಿ | ಬೆಳೆ ವಿಮೆಯಲ್ಲಿ ಕೃಷಿಕರಿಗೆ ಅನ್ಯಾಯ ಆರೋಪ: ಸಿಎ ಬ್ಯಾಂಕ್ನಿಂದ ಮನವಿ
ಉಪ್ಪಿನಂಗಡಿ, ಡಿ.11: ಹವಾಮಾನ ಆಧಾರಿತ ಬೆಳೆ ವಿಮೆಯ ಪರಿಹಾರ ಮೊತ್ತದಲ್ಲಿ ಕೃಷಿಕರಿಗೆ ಆಗಿರುವ ಅನ್ಯಾಯವನ್ನು ಸರಿಪಡಿಸಲು ಸರಕಾರಿ ಯಂತ್ರ ಮಧ್ಯ ಪ್ರವೇಶ ಮಾಡಬೇಕೆಂದು ಒತ್ತಾಯಿಸಿ ಉಪ್ಪಿನಂಗಡಿ ಸಹಕಾರಿ ವ್ಯವಸಾಯಿಕ ಸಂಘದ ವತಿಯಿಂದ ಪುತ್ತೂರು ಸಹಾಯಕ ಕಮಿಷನರ್ರಿಗೆ ಮನವಿ ಸಲ್ಲಿಸಲಾಯಿತು. ಈ ಸಂದರ್ಭ ಮಾತನಾಡಿದ ಉಪ್ಪಿನಂಗಡಿ ಸಹಕಾರಿ ವ್ಯವಸಾಯಿಕ ಸಂಘದ ಅಧ್ಯಕ್ಷ ಸುನೀಲ್ ಕುಮಾರ್ ದಡ್ಡು, ಅಡಿಕೆ ಕೃಷಿಕರ ವಿಚಾರದಲ್ಲಿ ಎಕರೆಯೊಂದಕ್ಕೆ 2,590 ರೂ. ವಿಮಾ ಕಂತು ಪಾವತಿಸಿದರೆ ಕೇಂದ್ರ ಸರಕಾರ 5,180 ರೂ. ಹಾಗೂ ರಾಜ್ಯ ಸರಕಾರ 10,360 ರೂ. ವಿಮಾ ಕಂತು ಪಾವತಿಸುತ್ತದೆ. ಒಟ್ಟು 18,130 ರೂ. ವಿಮಾ ಕಂತನ್ನು ಪಡೆದು ಎಕರೆಗೆ ಕೇವಲ 10,441 ರೂ. ಹಣವನ್ನು ವಿಮಾ ಪರಿಹಾರ ಧನವಾಗಿ ಬಿಡುಗಡೆ ಮಾಡಿರುವುದು ಅತಿ ವೃಷ್ಠಿಯಿಂದ ಹಾನಿಗೀಡಾದ ಕೃಷಿಕರಿಗೆ ಮಾಡಿರುವ ಅನ್ಯಾಯವಾಗಿದೆ. ಈ ಬಗ್ಗೆ ರಾಜ್ಯ ಸರಕಾರ ತ್ವರಿತಗತಿಯಲ್ಲಿ ಮಧ್ಯ ಪ್ರವೇಶಿಸಿ ಕೃಷಿಕರಿಗೆ ನ್ಯಾಯ ಒದಗಿಸಲು ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ಮನವಿ ಸಲ್ಲಿಸಿದ ನಿಯೋಗದಲ್ಲಿ ಉಪ್ಪಿನಂಗಡಿ ಸಹಕಾರಿ ವ್ಯವಸಾಯಿಕ ಸಂಘದ ಉಪಾಧ್ಯಕ್ಷ ದಯಾನಂದ ಸರೋಳಿ, ನಿರ್ದೇಶಕ ರಾಜೇಶ್, ವಸಂತ ಗೌಡ ಪಿಜಕ್ಕಳ, ಉಷಾ ಮುಳಿಯ, ಸಂಧ್ಯಾ, ಸುಂದರ ಎನ್., ಬಜತ್ತೂರು ಗ್ರಾಪಂ ಅಧ್ಯಕ್ಷ ಗಂಗಾಧರ ಪಿ.ಎನ್., ಸದಸ್ಯರಾದ ಸಂತೋಷ್ ಪರ್ದಾಂಜೆ, ಹಿರೆಬಂಡಾಡಿ ಗ್ರಾಪಂ ಸದಸ್ಯ ಸೌಕತ್ ಅಲಿ, ಉಪ್ಪಿನಂಗಡಿ ಗ್ರಾಪಂ ಸದಸ್ಯ ಸುರೇಶ್ ಅತ್ರಮಜಲು, ಪ್ರಮುಖರಾದ ಸದಾನಂದ ನೆಕ್ಕಿಲಾಡಿ, ಜನಾರ್ದನ ಹಿರೆಬಂಡಾಡಿ ಭಾಗವಹಿಸಿದ್ದರು.
ಭಟ್ಕಳ | ಉರ್ದು ಮಾಧ್ಯಮದ ವಿದ್ಯಾರ್ಥಿಗಳಿಗೆ ಎಸೆಸೆಲ್ಸಿ ಮಾದರಿ ಪ್ರಶ್ನೆಪತ್ರಿಕೆ ಪ್ರಕಟಿಸುವಂತೆ ಐಟಾ ಮನವಿ
ಭಟ್ಕಳ: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ (KSEAB) ತನ್ನ ಅಧಿಕೃತ ಜಾಲತಾಣದಲ್ಲಿ 2025–26ನೇ ಸಾಲಿನ ಎಸೆಸೆಲ್ಸಿ ಪರೀಕ್ಷೆಗೆ ಸಂಬಂಧಿಸಿದಂತೆ ಕನ್ನಡ ಮತ್ತು ಇಂಗ್ಲಿಷ್ ಮಾಧ್ಯಮಗಳಿಗಾಗಿ ಮಾತ್ರ ಮಾದರಿ ಪ್ರಶ್ನೆಪತ್ರಿಕೆ, ಬ್ಲೂಪ್ರಿಂಟ್ ಪ್ರಕಟಿಸಿದ್ದು, ಉರ್ದು ಮಾಧ್ಯಮದ ಸಾವಿರಾರು ವಿದ್ಯಾರ್ಥಿಗಳು ಈ ಸೌಲಭ್ಯದಿಂದ ಸಂಪೂರ್ಣ ವಂಚಿತರಾಗಿದ್ದು, ಉರ್ದು ಮಾಧ್ಯಮದ ವಿದ್ಯಾರ್ಥಿಗಳಿಗೆ ಎಸೆಸೆಲ್ಸಿ ಮಾದರಿ ಪ್ರಶ್ನೆಪತ್ರಿಕೆ ಪ್ರಕಟಿಸುವಂತೆ ಆಲ್ ಇಂಡಿಯಾ ಐಡಿಯಲ್ ಟೀಚರ್ಸ್ ಅಸೋಸಿಯೇಶನ್ (ರಿ.) AIITA ಕರ್ನಾಟಕ ರಾಜ್ಯ ಶಾಖೆ ಮನವಿ ಮಾಡಿದೆ. AIITA ಕರ್ನಾಟಕದ ಅಧ್ಯಕ್ಷ ಮುಹಮ್ಮದ್ ರಝಾ ಮಾನ್ವಿ ಅವರು ನಿರ್ದೇಶಕರಿಗೆ ಸಲ್ಲಿಸಿದ ಮನವಿಯಲ್ಲಿ, “ಕನ್ನಡ ಮತ್ತು ಇಂಗ್ಲಿಷ್ ಮಾಧ್ಯಮದ ವಿದ್ಯಾರ್ಥಿಗಳಿಗೆ ಲಭ್ಯವಾಗುತ್ತಿರುವ ಶೈಕ್ಷಣಿಕ ನೆರವು ಉರ್ದು ಮಾಧ್ಯಮಕ್ಕೆ ಲಭ್ಯವಾಗದೇ ಇರುವುದು ಶೈಕ್ಷಣಿಕ ಸಮಾನತೆಯ ಮೇಲೆ ಗಂಭೀರ ಪ್ರಭಾವ ಬೀರುತ್ತಿದೆ. ಅಲ್ಪಸಂಖ್ಯಾತ ವಿದ್ಯಾರ್ಥಿಗಳು ಅನ್ಯಾಯಕ್ಕೆ ಒಳಗಾಗುತ್ತಿದ್ದಾರೆ” ಎಂದು ತಿಳಿಸಿದ್ದಾರೆ. ಉರ್ದು ಮಾಧ್ಯಮದಲ್ಲಿ ಆಡಳಿತಾತ್ಮಕ ನಿರ್ಲಕ್ಷ್ಯ ಕಂಡುಬರುತ್ತಿರುವುದರಿಂದ ವಿದ್ಯಾರ್ಥಿಗಳು ಹಾಗೂ ಪಾಲಕರಲ್ಲಿ ಆತಂಕ ಮತ್ತು ಅಸಮಾಧಾನ ವ್ಯಕ್ತವಾಗುತ್ತಿದೆ. ರಾಜ್ಯದಲ್ಲಿ ಪ್ರತಿ ವರ್ಷ ಗಣನೀಯ ಸಂಖ್ಯೆಯಲ್ಲಿ ಉರ್ದು ಮಾಧ್ಯಮದ ವಿದ್ಯಾರ್ಥಿಗಳು ಎಸೆಸೆಲ್ಸಿ ಪರೀಕ್ಷೆಗೆ ಹಾಜರಾಗುತ್ತಿದ್ದು, ಸಮಾನ ಕಲಿಕಾ ಸಂಪನ್ಮೂಲಗಳ ಕೊರತೆಯಿಂದ ಇವರ ಸಿದ್ಧತೆಯ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ ಎಂದು ಆಲ್ ಇಂಡಿಯಾ ಐಡಿಯಲ್ ಟೀಚರ್ಸ್ ಅಸೋಸಿಯೇಶನ್ ಕರ್ನಾಟಕ ರಾಜ್ಯಾಧ್ಯಕ್ಷ ಮುಹಮ್ಮದ್ ರಝಾ ಮಾನ್ವಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಮಂಡಳಿಗೆ ಸಲ್ಲಿಸಿರುವ ಮುಖ್ಯ ಬೇಡಿಕೆಗಳು : ► ಉರ್ದು ಮಾಧ್ಯಮದ ವಿದ್ಯಾರ್ಥಿಗಳಿಗೆ ತಕ್ಷಣ ಮಾದರಿ ಪ್ರಶ್ನೆಪತ್ರಿಕೆ, ಬ್ಲೂಪ್ರಿಂಟ್, ಇವುಗಳನ್ನು KSEAB ಜಾಲತಾಣದಲ್ಲಿ ಪ್ರಕಟಿಸುವುದು. ►ಕನ್ನಡ ಮತ್ತು ಇಂಗ್ಲಿಷ್ ಮಾಧ್ಯಮದಂತೆ ಉರ್ದು ಮಾಧ್ಯಮಕ್ಕೂ ಸಮಾನ ಶೈಕ್ಷಣಿಕ ಸಂಪನ್ಮೂಲ ಲಭ್ಯವಾಗುವಂತೆ ಮಾರ್ಗಸೂಚಿಗಳನ್ನು ಜಾರಿಗೊಳಿಸುವುದು. ► ಈ ಕ್ರಮವನ್ನು ತುರ್ತಾಗಿ ಕೈಗೊಂಡು ರಾಜ್ಯದ ಉರ್ದು ಮಾಧ್ಯಮದ ವಿದ್ಯಾರ್ಥಿಗಳಿಗೆ ಸಮಾನ ಅವಕಾಶ ಕಲ್ಪಿಸುವುದು. ► AIITA ಕರ್ನಾಟಕ, ರಾಜ್ಯ ಶಿಕ್ಷಣ ಇಲಾಖೆ ಎಲ್ಲಾ ಭಾಷಾ ಮಾಧ್ಯಮಗಳಿಗೂ ಸಮಾನ ಶಿಕ್ಷಣ ಮತ್ತು ಸಮಾನ ಅವಕಾಶ ನೀಡಬೇಕೆಂದು ಸರ್ಕಾರವನ್ನು ಆಗ್ರಹಿಸಿದೆ.
ಕಾಸರಗೋಡು | ಕಚ್ಚಾ ಬಾಂಬ್ ಸ್ಫೋಟ: ಸಾಕುನಾಯಿ ಬಲಿ
ಕಾಸರಗೋಡು, ಡಿ.11: ಕಚ್ಚಾ ಬಾಂಬ್ ಸ್ಫೋಟಗೊಂಡು ಸಾಕು ನಾಯಿ ಬಲಿಯಾದ ಘಟನೆ ಬದಿಯಡ್ಕ ಠಾಣಾ ವ್ಯಾಪ್ತಿಯ ಕುಂಬ್ಡಾಜೆಯಲ್ಲಿ ಗುರುವಾರ ಬೆಳಿಗ್ಗೆ ನಡೆದಿದೆ. ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಮೂರು ಕಚ್ಚಾ ಬಾಂಬ್ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಸ್ಫೋಟದ ಶಬ್ದ ಕೇಳಿ ಗಮನಿಸಿದಾಗ ನಾಯಿ ಬಲಿಯಾಗಿರುವುದು ಕಂಡುಬಂದಿದೆ ಎಂದು ಮನೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಹಂದಿಯನ್ನು ಕೊಳ್ಳಲು ಸದ್ರಿ ಕಚ್ಚಾ ಬಾಂಬ್ ಇಟ್ಟಿರಬಹುದು ಎಂದು ಸಂಶಯಿಸಲಾಗಿದೆ. ಬದಿಯಡ್ಕ ಠಾಣಾ ಪೊಲೀಸರು ಈ ಬಗ್ಗೆ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
ಉಪ್ಪಿನಂಗಡಿ | ಕಾರು ಢಿಕ್ಕಿ: ಬೈಕ್ ಸವಾರ ಗಂಭೀರ
ಉಪ್ಪಿನಂಗಡಿ, ಡಿ.11: ಕಾರು ಮತ್ತು ಬೈಕ್ ನಡುವೆ ಮುಖಾಮುಖಿ ಢಿಕ್ಕಿಯಾದ ಪರಿಣಾಮ ಬೈಕ್ ಸವಾರ ಗಂಭೀರ ಗಾಯಗೊಂಡ ಘಟನೆ ಡಿ.11ರಂದು ರಾತ್ರಿ ನೆಕ್ಕಿಲಾಡಿಯಲ್ಲಿ ನಡೆದಿದೆ. ಮಠ ನಿವಾಸಿ ಬದ್ರುದ್ದೀನ್ ಗಾಯಗೊಂಡವರು. ಬದ್ರುದ್ದೀನ್ ಕೂಟೇಲಿನಲ್ಲಿರುವ ಹೋಟೆಲೊಂದರಲ್ಲಿ ಕೆಲಸಕ್ಕಿದ್ದರೆನ್ನಲಾಗಿದೆ. ಚತುಷ್ಪಥ ರಾಷ್ಟ್ರೀಯ ಹೆದ್ದಾರಿಯಲ್ಲಿ ಉಪ್ಪಿನಂಗಡಿಯಿಂದ ನೆಕ್ಕಿಲಾಡಿಗೆ ರಾಂಗ್ ಸೈಡ್ನಲ್ಲಿ ಸಾಗುತ್ತಿದ್ದಾಗ ಉಪ್ಪಿನಂಗಡಿ ಕಡೆಗೆ ಬರುತ್ತಿದ್ದ ಕಾರು ಢಿಕ್ಕಿಯಾಗಿದೆ. ಗಂಭೀರ ಗಾಯಗೊಂಡ ಬದ್ರುದ್ದೀನ್ರಿಗೆ ಪುತ್ತೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ಕರೆದೊಯ್ಯಲಾಗಿದೆ.
ಮೂಡುಬಿದಿರೆ | ತಂಡದಿಂದ ಪೆಟ್ರೋಲ್ ಬಂಕ್ ಸಿಬ್ಬಂದಿಗೆ ಹಲ್ಲೆ
ಮೂಡುಬಿದಿರೆ, ಡಿ.11: ಯುವಕರ ತಂಡವೊಂದು ಪೆಟ್ರೋಲ್ ಬಂಕ್ನ ಸಿಬ್ಬಂದಿಗೆ ಹಲ್ಲೆ ನಡೆಸಿದ ಘಟನೆ ಗುರುವಾರ ಸಂಜೆ ಮೂಡುಬಿದಿರೆಯಲ್ಲಿ ನಡೆದಿದೆ. ಹಲ್ಲೆಗೊಳಗಾದ ಸುರೇಶ್, ಮೌನೇಶ್ ಮತ್ತು ಪ್ರವೀಣ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಎರಡು ದ್ವಿಚಕ್ರ ವಾಹನದಲ್ಲಿ ಬಂದ ನಾಲ್ವರು ಯುವಕರ ತಂಡವು ಸಿಬ್ಬಂದಿ ಸುರೇಶ್ ಮತ್ತಿತರರಿಗೆ ಹಲ್ಲೆ ನಡೆಸಿದ್ದಾರೆ. ಗಾಯಗೊಂಡಿರುವ ಸಿಬ್ಬಂದಿ ಮತ್ತು ನಾಲ್ವರು ಯುವಕರು ಪರಿಚಿತರಾಗಿದ್ದು, ಹಳೆ ದ್ವೇಷದಿಂದ ಹಲ್ಲೆ ನಡೆಸಿರಬಹುದೆಂದು ಶಂಕಿಸಲಾಗಿದೆ. ಮೂಡುಬಿದಿರೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ತನಿಖೆ ಆರಂಭಿಸಿದ್ದಾರೆ.
ಗುತ್ತಿಗಾರು | ಅಸ್ವಸ್ಥಗೊಂಡು ಎರಡು ತಿಂಗಳ ಮಗು ಮೃತ್ಯು
ಸುಳ್ಯ, ಡಿ.11: ತೀವ್ರ ಅಸ್ವಸ್ಥಗೊಂಡು ವಾಂತಿ ಮಾಡಲು ಪ್ರಾರಂಭಿಸಿದ ಎರಡು ತಿಂಗಳ ಮಗು ಉಸಿರಾಟದ ಸಮಸ್ಯೆಯಿಂದ ಮೃತಪಟ್ಟ ಘಟನೆ ಕಮಿಲದಲ್ಲಿ ನಡೆದಿದೆ. ಗುತ್ತಿಗಾರು ಗ್ರಾಮದ ಕಮಿಲದ ಮಾಧವ-ವೀಣಾ ದಂಪತಿಯ ಗಂಡು ಮಗು ನಿಶ್ಚಿತ್ ಡಿ.8 ರಂದು ಮುಂಜಾನೆ ವಾಂತಿ ಮಾಡಲು ಆರಂಭಿಸಿದ್ದು, ಮನೆಯವರು ಮಗುವನ್ನು ಕುಂಬ್ರದ ಕ್ಲಿನಿಕ್ವೊಂದರಿಂದ ಔಷಧಿ ತಂದಿದ್ದರು. ರಾತ್ರಿ ಮಗುವಿಗೆ ಮತ್ತೆ ಉಸಿರಾಟದ ಸಮಸ್ಯೆ ಉಂಟಾದ ಕಾರಣ ಪುತ್ತೂರಿನ ವೈದ್ಯರ ಸೂಚನೆಯಂತೆ ಮಂಗಳೂರಿನ ಆಸ್ಪತ್ರೆಗಳಿಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೆ ಮಗು ಮೃತಪಟ್ಟಿದೆ. ಈ ಬಗ್ಗೆ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಂಗಳೂರು | ಡಿ.18: ಎಂಎಸ್ಎಂಇ ಕಾರ್ಯಾಗಾರ
ಮಂಗಳೂರು,ಡಿ.11ಎಂಎಸ್ಎಂಇ ಇದರ ಕಾರ್ಯಕ್ಷಮತೆಯನ್ನು ಹೆಚ್ಚಿಸಲು ಮತ್ತು ವೇಗಗೊಳಿಸುವ ಯೋಜನೆಯಡಿ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಜಿಲ್ಲಾ ಕೈಗಾರಿಕಾ ಕೇಂದ್ರ, ಕರ್ನಾಟಕ ತಾಂತ್ರಿಕ ಉನ್ನತೀಕರಣ ಪರಿಷತ್ ಬೆಂಗಳೂರು ಹಾಗೂ ಜಿಲ್ಲಾ ಸಣ್ಣ ಕೈಗಾರಿಕಾ ಸಂಘದ ಸಹಯೋಗದಲ್ಲಿ ಕೈಗಾರಿಕೋದ್ಯಮಿಗಳಲ್ಲಿ ಅರಿವು ಮೂಡಿಸುವ ಸಲುವಾಗಿ ಡಿ.18ರಂದು ಬೆಳಗ್ಗೆ 10ಕ್ಕೆ ಝೆಡ್ಇಡಿ ಮತ್ತು ಎಲ್ಇಎಎನ್ ಬಗ್ಗೆ ಮಾಹಿತಿ ಕಾರ್ಯಾಗಾರವನ್ನು ಯೆಯ್ಯಾಡಿ ಕೈಗಾರಿಕಾ ವಲಯದಲ್ಲಿರುವ ಜಿಲ್ಲಾ ಸಣ್ಣ ಕೈಗಾರಿಕಾ ಸಂಘದ ಸಭಾಭವನದಲ್ಲಿ ಆಯೋಜಿಸಲಾಗಿದೆ. ಜಿಲ್ಲೆಯ ನೋಂದಾಯಿತ ಎಂಎಸ್ಎಂಇ-ಗಳು ಇದರಲ್ಲಿ ಭಾಗವಹಿಸಬಹುದು. ಹೆಚ್ಚಿನ ಮಾಹಿತಿಗೆ ಜಿಲ್ಲಾ ಕೈಗಾರಿಕಾ ಕೇಂದ್ರ (ದೂ.ಸಂ: 0824-2214021)ವನ್ನು ಸಂಪರ್ಕಿಸಬಹುದು ಎಂದು ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಪಣಂಬೂರು ಪೊಲೀಸ್ ಠಾಣೆ ರಸ್ತೆಯಲ್ಲಿ ಪಾರ್ಕಿಂಗ್ ನಿಷೇಧ : ನಗರ ಪೊಲೀಸ್ ಆಯುಕ್ತರಿಂದ ಆದೇಶ
ಮಂಗಳೂರು,ಡಿ.11: ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯ ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿ ರಾ.ಹೆ. 66ರ ಸರ್ವಿಸ್ ರಸ್ತೆಯಿಂದ ಪಣಂಬೂರು ಪೊಲೀಸ್ ಠಾಣೆಯವರೆಗೆ ಪ್ರತಿ ದಿನ ಹೆಚ್ಚಿನ ಸಂಖ್ಯೆಯಲ್ಲಿ ಘನ ಸರಕು ವಾಹನಗಳು ಹಾಗೂ ಇತರ ವಾಹನಗಳು ಸಂಚರಿಸುತ್ತಿದೆ. ವಾಹನ ದಟ್ಟಣೆಯಿಂದ ಕೂಡಿದ ರಸ್ತೆಯಾದ ಕಾರಣ ಇಲ್ಲಿ ಪಾರ್ಕಿಂಗ್ ನಿಷೇಧಿಸಿ ನಗರ ಪೊಲೀಸ್ ಆಯುಕ್ತರು ಆದೇಶ ಹೊರಡಿಸಿದ್ದಾರೆ. ಬೈಕಂಪಾಡಿ ಇಂಡಸ್ಟ್ರಿಯಲ್ ಏರಿಯಾದಲ್ಲಿರುವ ಬೃಹತ್ ಕೈಗಾರಿಕಾ ಕಂಪೆನಿಗಳಿಗೆ ಸರಕು ವಸ್ತುಗಳನ್ನು ಸಾಗಾಟ ಮಾಡಲು ಬೃಹತ್ ಗಾತ್ರದ ಹೆಚ್ಚಿನ ಸಂಖ್ಯೆಯಲ್ಲಿ ಘನ ವಾಹನಗಳ ಓಡಾಟವಿರುತ್ತದೆ. ಈ ರಸ್ತೆಯ ಎರಡೂ ಬದಿಗಳಲ್ಲಿ ಎಲ್ಲಾ ರೀತಿಯ ವಾಹನಗಳನ್ನು ಪಾರ್ಕ್ ಮಾಡುವುದರಿಂದ ಪಾದಚಾರಿಗಳು ನಡೆದಾಡಲು ಹಾಗೂ ಇತರ ವಾಹನಗಳ ಸುಗಮ ಸಂಚಾರಕ್ಕೆ ಅಡಚಣೆಯಾಗುತ್ತಿದೆ. ಹಾಗಾಗಿ ಸಾರ್ವಜನಿಕರ ಹಿತದೃಷ್ಟಿಯಿಂದ ಹಾಗೂ ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವ ನಿಟ್ಟಿನಲ್ಲಿ ಬೈಕಂಪಾಡಿ ಕೈಗಾರಿಕಾ ಪ್ರದೇಶದ ರಾ.ಹೆ. 66ರ ಸರ್ವಿಸ್ ರಸ್ತೆಯಿಂದ ಪಣಂಬೂರು ಪೊಲೀಸ್ ಠಾಣೆಯವರೆಗೆ ರಸ್ತೆಯಲ್ಲಿ ವಾಹನಗಳ ನಿಲುಗಡೆ ನಿಷೇಧಿಸಿ ನೋ ಪಾರ್ಕಿಂಗ್ ವಲಯ ಎಂದು ಘೋಷಿಸಲಾಗಿದೆ ಪೊಲೀಸ್ ಆಯುಕ್ತರು ಆದೇಶದಲ್ಲಿ ತಿಳಿಸಿದ್ದಾರೆ.
ಪರಪ್ಪನ ಅಗ್ರಹಾರ ಜೈಲಿನಲ್ಲಿ ನಿಷೇಧಿತ ವಸ್ತುಗಳು ಪತ್ತೆ; ಆರು ಎಫ್ಐಆರ್ ದಾಖಲು
ಬೆಂಗಳೂರು: ಇಲ್ಲಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಮಂಗಳವಾರ ರಾತ್ರಿ ಜೈಲಾಧಿಕಾರಿಗಳು ತಪಾಸಣೆ ನಡೆಸಿದ್ದು, ನಿಷೇಧಿತ ವಸ್ತುಗಳು ಪತ್ತೆಯಾಗಿವೆ. ಈ ಸಂಬಂಧ ಒಟ್ಟು 6 ಎಫ್ಐಆರ್ ದಾಖಲಾಗಿವೆ ಎಂದು ವರದಿಯಾಗಿದೆ. ತಪಾಸಣೆ ವೇಳೆ ಒಂದೇ ದಿನದಲ್ಲಿ 14 ಮೊಬೈಲ್ ಫೋನ್ಗಳು, 9 ಸಿಮ್ ಕಾರ್ಡ್ಗಳು, 5 ಮೊಬೈಲ್ ಫೋನ್ ಚಾರ್ಜರ್, 2 ಇಯರ್ ಫೋನ್, ವಿವಿಧ ಬಗೆಯ ಚಾಕುಗಳು ಪತ್ತೆಯಾಗಿವೆ. ನ.26ರಿಂದ ಇದುವರೆಗೂ ಒಟ್ಟಾರೆ 67 ಮೊಬೈಲ್ ಫೋನ್ಗಳು, 14 ಚಾರ್ಜರ್ಸ್, 48 ಸಿಮ್ ಕಾರ್ಡ್ಗಳು, 10 ಇಯರ್ ಫೋನ್ಗಳು, 60,880 ರೂ. ನಗದು, 10 ಹರಿತವಾದ ಆಯುಧಗಳು ಪತ್ತೆಯಾಗಿವೆ.
ಮಂಗಳೂರಿನ ಬಲ್ಮಠ-ಫಳ್ನೀರ್ ರಸ್ತೆ ಬದಿ ಪಾರ್ಕಿಂಗ್ ನಿಷೇಧ : ನಗರ ಪೊಲೀಸ್ ಆಯುಕ್ತರಿಂದ ಆದೇಶ
ಮಂಗಳೂರು,ಡಿ.11: ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯ ಬೆಂದೂರು ವಾರ್ಡಿನ ಯುನಿಟಿ ಆಸ್ಪತ್ರೆಯಿಂದ ಬಲ್ಮಠ ರಸ್ತೆಗೆ ಸಂಪರ್ಕಿಸುವ ವಾಸ್ಲೇನ್ ರಸ್ತೆಯನ್ನು ಅಗಲೀಕರಣಗೊಳಿಸಿ ರಸ್ತೆ ಬದಿಗಳನ್ನು ಇಂಟರ್ಲಾಕ್ನಿಂದ ನಿರ್ಮಾಣ ಮಾಡಲಾಗಿದೆ. ಇಲ್ಲಿ ವಾಹನ ಮತ್ತು ಜನದಟ್ಟಣೆಯಿರುವುದರಿಂದ ಬಲ್ಮಠ-ಫಳ್ನೀರ್ ರಸ್ತೆ ಬದಿ ಪಾರ್ಕಿಂಗ್ ನಿಷೇಧಿಸಿ ನಗರ ಪೊಲೀಸ್ ಆಯುಕ್ತರು ಆದೇಶ ಹೊರಡಿಸಿದ್ದಾರೆ. ಪಳ್ನೀರು ಹಾಗೂ ಬಲ್ಮಠವನ್ನು ಸಂಪರ್ಕಿಸುವ ಮುಖ್ಯ ರಸ್ತೆ ಇದಾಗಿದ್ದು, ಪ್ರತಿ ದಿನ ಹೆಚ್ಚಿನ ಸಂಖ್ಯೆಯಲ್ಲಿ ಕಾರು, ದ್ವಿಚಕ್ರ ಇತ್ಯಾದಿ ವಾಹನಗಳು ಸಂಚರಿಸುತ್ತಿದೆ. ವಾಸ್ಲೇನ್ ರಸ್ತೆಯು ಹೆಚ್ಚಿನ ವಾಹನ ದಟ್ಟಣೆಯಿಂದ ಕೂಡಿದೆ. ಅಲ್ಲದೆ ಫಳ್ನೀರು ರಸ್ತೆಯಲ್ಲಿ ಯುನಿಟಿ, ಹೈಲ್ಯಾಂಡ್ ಆಸ್ಪತ್ರೆಗಳಿದ್ದು ಮತ್ತು ಬಲ್ಮಠ ರಸ್ತೆಯಲ್ಲಿ ಅನೇಕ ನಸಿರ್ಂಗ್ ಹೋಮ್ಗಳು ಇರುವುದರಿಂದ ತುರ್ತು ವಾಹನಗಳ ಹೆಚ್ಚಿನ ಸಂಚಾರ ಇರುತ್ತದೆ. ವಾಸ್ಲೇನ್ ರಸ್ತೆಯ ಎರಡೂ ಬದಿ ಹೆಚ್ಚಿನ ವಸತಿ ಸಮುಚ್ಚಯಗಳಿದ್ದು, ಫಳ್ನೀರು ರಸ್ತೆಯಲ್ಲಿ ಯುನಿಟಿ ಆಸ್ಪತ್ರೆ, ವಾಣಿಜ್ಯ ಕಟ್ಟಡಗಳು, ಅನೇಕ ವೈದ್ಯರ ಕ್ಲಿನಿಕ್ ಗಳಿದೆ. ಇಲ್ಲಿಗೆ ಬರುವ ಸಾರ್ವಜನಿಕರು ತಮ್ಮ ವಾಹನಗಳನ್ನು ರಸ್ತೆಯಲ್ಲಿ ವಾಹನ ಪಾರ್ಕ್ ಮಾಡುತ್ತಿರುವುದರ ಪರಿಣಾಮ ಮುಖ್ಯ ರಸ್ತೆಯಾದ ಫಳ್ನೀರು ಹಾಗೂ ಬಲ್ಮಠ ರಸ್ತೆಯಲ್ಲಿ ಹೆಚ್ಚಿನ ವಾಹನ ದಟ್ಟಣೆ ಉಂಟಾಗುತ್ತಿರುತ್ತದೆ. ವಾಸ್ಲೇನ್ ರಸ್ತೆಯಲ್ಲಿ ವಾಹನಗಳ ಸಂಚಾರಕ್ಕೆ ಅಡಚಣೆಯಾಗುತ್ತಿರುವ ಬಗ್ಗೆ ಸಾರ್ವಜನಿಕರಿಂದಲೂ ದೂರುಗಳು ಬಂದಿವೆ. ಹಾಗಾಗಿ ಸಾರ್ವಜನಿಕರ ಹಿತದೃಷ್ಟಿಯಿಂದ ಹಾಗೂ ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವ ನಿಟ್ಟಿನಲ್ಲಿ ನಗರದ ಯುನಿಟಿ ಆಸ್ಪತ್ರೆಯಿಂದ ಬಲ್ಮಠ ಸಂಪರ್ಕಿಸುವ ವಾಸ್ಲೇನ್ ರಸ್ತೆಯಲ್ಲಿ ವಾಸ್ಲೇನ್ ಒಂದನೇ ಅಡ್ಡ ರಸ್ತೆಯಿಂದ ಯುನಿಟಿ ಆಸ್ಪತ್ರೆಯವರೆಗೆ (ರಸ್ತೆಯ ಬಲಬದಿ-ಪಶ್ಚಿಮ ದಿಕ್ಕು) ವಾಹನಗಳ ನಿಲುಗಡೆಯನ್ನು ನಿಷೇಧಿಸಿ ನೋ ಪಾರ್ಕಿಂಗ್ ವಲಯ ಎಂದು ಘೋಷಿಸಲಾಗಿದೆ ಎಂದು ಆಯುಕ್ತರು ಆದೇಶದಲ್ಲಿ ತಿಳಿಸಿದ್ದಾರೆ.
ಮಂಗಳೂರು | ಕಾಣೆಯಾದವರ ಪತ್ತೆಗೆ ಮನವಿ
ಮಂಗಳೂರು,ಡಿ.11: ಪಣಂಬೂರು ಪೊಲೀಸ್ ಠಾಣಾ ವ್ಯಾಪ್ತಿಯ ಗುಡದಪ್ಪ ರೇಹಾಳ (64) ಎಂಬವರು ನ.25ರಂದು ತಿರುಗಾಡಲೆಂದು ಮನೆಯಿಂದ ಹೋದವರು ಈವರೆಗೂ ವಾಪಸ್ ಬಾರದೆ ಕಾಣೆಯಾಗಿರುವ ಬಗ್ಗೆ ಪ್ರಕರಣ ದಾಖಲಾಗಿದೆ. ಸುಮಾರು 5.5 ಅಡಿ ಎತ್ತರದ, ಸಾಧಾರಣ ಶರೀರದ, ಗೋಧಿ ಮೈಬಣ್ಣದ ಇವರು ಕಾಣೆಯಾದ ದಿನ ತಿಳಿ ನೀಲಿ ಬಣ್ಣದ ಉದ್ದ ತೋಳಿನ ಶರ್ಟ್ ಮತ್ತು ಕಪ್ಪುಬಣ್ಣದ ಪ್ಯಾಂಟ್ ಧರಿಸಿದ್ದರು. ಕನ್ನಡ, ತುಳು ಮತ್ತು ಹಿಂದಿ ಭಾಷೆ ಮಾತನಾಡುತ್ತಾರೆ ಎಂದು ಪ್ರಕಟನೆ ತಿಳಿಸಿದೆ.
ಬೆತ್ತಲೆ ಫೋಟೋ ವೈರಲ್ ಮಾಡುವ ಬೆದರಿಕೆ: ಬೆಂಗಳೂರಿನಲ್ಲಿ ಕೇರಳ ಮೂಲದ ವಿದ್ಯಾರ್ಥಿ ಆತ್ಮಹತ್ಯೆ
ಬೆಂಗಳೂರು: ಸಾಮಾಜಿಕ ಜಾಲತಾಣದಲ್ಲಿ ಬೆತ್ತಲೆ ಫೋಟೋ ವೈರಲ್ ಮಾಡುವ ಬೆದರಿಕೆಗೆ ಹೆದರಿದ ಕೇರಳ ಮೂಲದ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರು ಹೊರವಲಯದ ಹೆಸರುಘಟ್ಟ ರಸ್ತೆಯ ಶಾಂತಿನಗರದಲ್ಲಿ ನಡೆದಿದೆ. ಜಗನ್ ಮೋಹನ್(25) ಮೃತ ವಿದ್ಯಾರ್ಥಿಯಾಗಿದ್ದು, ಖಾಸಗಿ ಕಾಲೇಜಿನಲ್ಲಿ ಎಂಬಿಎ ದ್ವಿತೀಯ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದನು. ಕಾಲೇಜು ಸಮೀಪದಲ್ಲಿರುವ ಶಾಂತಿನಗರದಲ್ಲಿ ಮನೆ ಬಾಡಿಗೆ ಪಡೆದು ವಾಸವಿದ್ದು, ಅದೇ ಮನೆಯಲ್ಲಿ ಡೆತ್ನೋಟ್ ಬರೆದಿಟ್ಟು ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸ್ಥಳದಲ್ಲಿ ಪತ್ತೆಯಾದ ಡೆತ್ನೋಟ್ನಲ್ಲಿ ಮೃತ ವಿದ್ಯಾರ್ಥಿ ಮೂರು ನಂಬರ್ ದಾಖಲಿಸಿದ್ದಾನೆ. ಪರಿಶೀಲನೆ ನಡೆಸಿದಾಗ ಸುಳ್ಳು ವಿಡಿಯೋ ಕರೆಯಲ್ಲಿ ಹಣ ಕಳೆದುಕೊಂಡಿರುವ ಮಾಹಿತಿ ಪೊಲೀಸರಿಗೆ ಸಿಕ್ಕಿದೆ. 25,000 ರೂ. ವರ್ಗಾವಣೆ ಮಾಡಿರುವುದು ಗೊತ್ತಾಗಿದೆ. ಜೊತೆಗೆ ಬೆತ್ತಲೆ ಫೋಟೋ ಹಾಗೂ ವಿಡಿಯೋ ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದ್ದಕ್ಕೆ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದ್ದು, ಘಟನೆ ಸಂಬಂಧ ಬೆಂಗಳೂರು ವಾಯುವ್ಯ ವಿಭಾಗ ಸೋಲದೇವನಹಳ್ಳಿ ಠಾಣೆಯಲ್ಲಿ ಬಿಎನ್ಎಸ್ 106 ಅಡಿ ಪ್ರಕರಣ ದಾಖಲಾಗಿದೆ. ಆತ್ಮಹತ್ಯೆಯ ಯೋಚನೆ ಬಂದಾಗ ಅದನ್ನು ನಿಗ್ರಹಿಸಲು ರಾಜ್ಯ ಸರಕಾರದ ಅರೋಗ್ಯ ಇಲಾಖೆಯ ಹೆಲ್ಪ್ ಲೈನ್ 104 ಸಹಾಯ ಮಾಡುತ್ತದೆ. ಅದರ ಜೊತೆಗೆ Tele-MANAS ನ 14416 ಅನ್ನೂ ಸಂಪರ್ಕಿಸಬಹುದು.
ಮಂಗಳೂರು | ಡಿ.14: ಕೃತಿ ಬಿಡುಗಡೆ ಮತ್ತು ಕವಿಗೋಷ್ಠಿ
ಮಂಗಳೂರು,ಡಿ.11: ಬಹು ಓದು ಬಳಗ ಮಂಗಳೂರು ಹಾಗೂ ಆಕೃತಿ ಆಶಯ ಪಬ್ಲಿಕೇಷನ್ ಮಂಗಳೂರು ಸಹಯೋಗದಲ್ಲಿ ಡಾ. ಉಷಾ ಪ್ರಕಾಶ್ ಹಾಗೂ ಡಾ. ರಾಘವೇಂದ್ರ ಜಿಗಳೂರ ಸಂಪಾದಕತ್ವದ ಕೃತಿ ಕರಾವಳಿ ಕವನಗಳು’ ನಗರದ ಬಲ್ಮಠದ ಸಹೋದಯ ಸಭಾಂಗಣದಲ್ಲಿ ಡಿ.14ರಂದು ಬಿಡುಗಡೆಗೊಳ್ಳಲಿದೆ. ಮೈಸೂರು ವಿವಿಯ ಶಾಸ್ತ್ರೀಯ ಅಧ್ಯಯನ ಕೇಂದ್ರದ ಸಂಶೋಧಕ ಡಾ. ಚಲಪತಿ ಆರ್. ಕೃತಿ ಬಿಡುಗಡೆಗೊಳಿಸಲಿದ್ದಾರೆ. ಕಾಸರಗೋಡಿನ ಕವಿ, ಪತ್ರಕರ್ತ ರಾಧಾಕೃಷ್ಣ ಉಳಿಯತಡ್ಕ ಅಧ್ಯಕ್ಷತೆ ವಹಿಸಲಿದ್ದಾರೆ. ಪ್ರಾಧ್ಯಾಪಕಿ ಡಾ.ನಿಕೇತನ ಪುಸ್ತಕ ವಿಮರ್ಶೆ ಮಾಡಲಿದ್ದಾರೆ. ವಿಮರ್ಶಕ ಅರವಿಂದ ಚೊಕ್ಕಾಡಿ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಕವಿಗೋಷ್ಠಿಯಲ್ಲಿ ಉಪನ್ಯಾಸಕ ರಘು ಇಡ್ತಿದು ಆಶಯ ಭಾಷಣ ಮಾಡಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.
ಮಂಗಳೂರು | ಡಿ.18 : ಮನಪಾದಲ್ಲಿ ಡಿಸಿ ಫೋನ್ ಇನ್ ಕಾರ್ಯಕ್ರಮ
ಮಂಗಳೂರು, ಡಿ.11: ಮಂಗಳೂರು ಮಹಾನಗರಪಾಲಿಕೆಯಲ್ಲಿ ಆಡಳಿತಾಧಿಕಾರಿಯ ಕೊಠಡಿಯಲ್ಲಿ ಡಿ.18ರಂದು ಪೂ.11ರಿಂದ 12ಗಂಟೆಯವರೆಗೆ ಆಡಳಿತಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿಯು ಸಾರ್ವಜನಿಕರೊಂದಿಗೆ ನೇರ ಫೋನ್ ಇನ್ ಕಾರ್ಯಕ್ರಮದಲ್ಲಿ ಮಾತನಾಡಲಿದ್ದಾರೆ. ಸಾರ್ವಜನಿಕರು ದೂ.ಸಂ: 0824-2220301/2220318ಕ್ಕೆ ಕರೆ ಮಾಡಿ ಅಹವಾಲುಗಳನ್ನು ತಿಳಿಸಬಹುದು ಎಂದು ಮಂಗಳೂರು ಮಹಾನಗರಪಾಲಿಕೆಯ ಆಯುಕ್ತರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಚಿನ್ನಸ್ವಾಮಿಯಲ್ಲಿ ಕ್ರಿಕೆಟ್ ಗ್ರೀನ್ ಸಿಗ್ನಲ್, ಒಳಮೀಸಲಿಗೆ ವಿಧೇಯಕ ಸೇರಿ ಸಂಪುಟದಲ್ಲಿ ಹಲವು ಮಹತ್ವದ ತೀರ್ಮಾನ
ಬೆಳಗಾವಿಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕ್ರಿಕೆಟ್ ಪಂದ್ಯಗಳನ್ನು ಪುನರಾರಂಭಿಸಲು ಅನುಮತಿ ನೀಡಲಾಗಿದೆ. ಒಳಮೀಸಲಾತಿ ಜಾರಿಗಾಗಿ 'ಕರ್ನಾಟಕ ಪರಿಶಿಷ್ಟ ಜಾತಿಗಳು (ಉಪ ವರ್ಗೀಕರಣ) ವಿಧೇಯಕ -2025'ಕ್ಕೆ ಅನುಮೋದನೆ ದೊರೆತಿದೆ. ಅಲ್ಲದೆ, ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಟ್ಟಡಗಳಿಗೆ ಒ.ಸಿ ಮತ್ತು ಸಿ.ಸಿ ವಿನಾಯಿತಿ ನೀಡಲು ಕಾಯಿದೆ ತಿದ್ದುಪಡಿಗೆ ಒಪ್ಪಿಗೆ ನೀಡಲಾಗಿದೆ.
ಹೊಸ ಆರೋಗ್ಯ ಕೇಂದ್ರಗಳ ಸ್ಥಾಪನೆಗೆ ‘ಸಮಿತಿ ರಚನೆ’: ಸಚಿವ ದಿನೇಶ್ ಗುಂಡೂರಾವ್
ಬೆಳಗಾವಿ (ಸುವರ್ಣ ವಿಧಾನಸೌಧ): ಕಲ್ಯಾಣ ಕರ್ನಾಟಕ ಭಾಗವೂ ಸೇರಿದಂತೆ ರಾಜ್ಯಾದ್ಯಂತ ಹೊಸದಾಗಿ ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಸಮುದಾಯ ಆರೋಗ್ಯ ಕೇಂದ್ರಗಳನ್ನು ಎಲ್ಲೆಲ್ಲಿ ಸ್ಥಾಪಿಸಬೇಕೆಂಬುದರ ಕುರಿತು ರಾಷ್ಟ್ರೀಯ ಆರೋಗ್ಯ ನೀತಿ ಮಾನದಂಡಗಳ ಅನ್ವಯ ವೈಜ್ಞಾನಿಕವಾಗಿ ಅಧ್ಯಯನ ನಡೆಸಿ ವರದಿ ಸಲ್ಲಿಸಲು ಡಾ.ಹಿಮಾಂಶು ಭೂಷಣ್ ನೇತೃತ್ವದಲ್ಲಿ ಸಮಿತಿ ರಚಿಸಿದ್ದು, ವರದಿ ಬಂದ ಕೂಡಲೇ ಅಗತ್ಯ ಇರುವ ಕಡೆಗಳಲ್ಲಿ ಆರೋಗ್ಯ ಕೇಂದ್ರ ಸ್ಥಾಪಿಸಲು ಕ್ರಮ ವಹಿಸಲಾಗುವುದು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು. ಗುರುವಾರ ವಿಧಾನಸಭೆಯ ಪ್ರಶ್ನೋತ್ತರ ಅವಧಿಯಲ್ಲಿ ಬಿಜೆಪಿ ಸದಸ್ಯ ಡಾ.ಚಂದ್ರು ಲಮಾಣಿ ಕೇಳಿದ ಪ್ರಶ್ನೆಗೆ ಉತ್ತರ ನೀಡಿದ ಅವರು, ಈ ಸಮಿತಿಯ ವರದಿಯನ್ನು ಆಧರಿಸಿ ಮೊದಲ ಹಂತದಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶ ವಿಭಾಗದಲ್ಲಿ ಆಸ್ಪತ್ರೆಗಳನ್ನು ಮಂಜೂರು ಮಾಡಲು ಅಥವಾ ಮೇಲ್ದರ್ಜೆಗೇರಿಸಲು ಕ್ರಮ ಕೈಗೊಳ್ಳಲಾಗಿದೆ. ಉಳಿದಂತೆ ಸಮಿತಿಯ ವರದಿ ಆಧಾರದಲ್ಲಿ ಅಗತ್ಯ ಇರುವ ಕಡೆಗಳಲ್ಲಿ ಆರೋಗ್ಯ ಕೇಂದ್ರಗಳನ್ನು ಸ್ಥಾಪಿಸಲು ಕ್ರಮ ವಹಿಸಲಾಗುವುದು ಎಂದರು. 2022ರ ಮಾರ್ಗಸೂಚಿಯನ್ವಯ ಗ್ರಾಮೀಣ ಪ್ರದೇಶದಲ್ಲಿ ಸಮುದಾಯ ಆರೋಗ್ಯ ಕೇಂದ್ರಗಳನ್ನು ಜನಸಂಖ್ಯೆ ಆಧಾರದ ಮೇಲೆ ಸ್ಥಾಪಿಸಲಾಗುತ್ತಿದ್ದು, ಸಮತಟ್ಟು ಪ್ರದೇಶದಲ್ಲಿ 1.20ಲಕ್ಷ ಜನಸಂಖ್ಯೆಗೆ ಹಾಗೂ ಗುಡ್ಡಗಾಡು ಗಿರಿಜನ ಪ್ರದೇಶದಲ್ಲಿ 80 ಸಾವಿರ ಜನಸಂಖ್ಯೆಗೆ ಅನುಗುಣವಾಗಿ ಸ್ಥಾಪಿಸಲಾಗುತ್ತಿದೆ. ನಗರೀಕರಣದ ಕಾರಣದಿಂದ ನಗರ, ಪಟ್ಟಣ ಪ್ರದೇಶಗಳಲ್ಲಿ ಜನಸಂಖ್ಯೆಯಲ್ಲಿ ತೀವ್ರ ಹೆಚ್ಚಳವಾಗುತ್ತಿದ್ದು, ಗ್ರಾಮೀಣ ಭಾಗಗಳಲ್ಲಿ ಜನಸಂಖ್ಯೆ ಕುಸಿತ ಕಂಡುಬರುತ್ತಿದೆ. ಹೀಗಾಗಿ ಜನಸಂಖ್ಯೆಯನ್ನು ಪರಿಗಣಿಸುವ ವಿಷಯದಲ್ಲಿ ಚರ್ಚಿಸಿ, ಆರೋಗ್ಯ ಕೇಂದ್ರಗಳನ್ನು ಸ್ಥಾಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.
ಕೊಪ್ಪಳ | ತೋಳ ಸಂರಕ್ಷಿತ ಪ್ರದೇಶದಲ್ಲಿ ಮರಳು ಮಾಫಿಯಾ
ಕೊಪ್ಪಳ, ಡಿ.11: ಈಚೆಗೆ ಕರ್ನಾಟಕ ಸರಕಾರ ತೋಳಧಾಮ ಎಂದು ಸಂರಕ್ಷಿತ ಪ್ರದೇಶವಾದ ಬಂಕಾಪುರ, ಕರಡಿಗುಡ್ಡ, ಚಿಕ್ಕಮ್ಮದಿನಾಳ, ರಾಮದುರ್ಗ ಗ್ರಾಮದಲ್ಲಿ ರಾತ್ರಿವೇಳೆ ಆಕ್ರಮ ಮರುಳು ದಂದೆ ಎಗ್ಗಿಲದೇ ನಡೆಯುತ್ತಿದ್ದೂ, ರಾತ್ರಿವೇಳೆ ಪ್ರಾಣಿಪಕ್ಷಿಗಳಿಗೆ ತೊಂದರೆ ನೀಡುತ್ತಿದ್ದಾರೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಜಿಲ್ಲೆಯ ರಾಮದುರ್ಗ, ರಾಂಪುರ ಮತ್ತು ರಾಮದುರ್ಗ ಕೆರೆಯಲ್ಲಿರುವ ಮಣ್ಣನ್ನು ತಗೆದುಕೊಂಡು ಬಂದು ಅದನ್ನು ಪಿಲ್ಟರ್ ಮಾಡಿದ ನಂತರ ಮರಳನ್ನಾಗಿ ಪರಿವರ್ತಿಸಿ ದಂಧೆಕೋರರು ಮಾರಾಟ ಮಾಡುತ್ತಿದ್ದಾರೆ. ಆದರೆ ಯಾರು ಕೂಡ ಇದರ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ ಎಂದು ಜನರು ದೂರುತಿದ್ದಾರೆ. ಸಾರ್ವಜನಿಕರಿಗೆ ಕಷ್ಟ : ಮರಳಿನ ಬೆಲೆ ಏರಿಕೆ ಮಾತ್ರವಲ್ಲದೆ, ಸಾರ್ವಜನಿಕರಿಗೆ ಮರಳುಗಾರಿಕೆಯಿಂದ ಅನೇಕ ತೊಂದರೆಗಳೂ ಇವೆ. ಮಣ್ಣಿನ ರಸ್ತೆಯಲ್ಲಿ ಪಾದಚಾರಿಗಳು, ದ್ವಿಚಕ್ರ ವಾಹನ ಸವಾರರು ಧೂಳಿನಿಂದ ಮಿಂದೇಳುವ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಅನುಮತಿ ರಹಿತ ಮರಳು ಸಾಗಾಟವೇ ಅಧಿಕವಾಗಿರುವುದರಿಂದ ಪೊಲೀಸರ ಭಯದಲ್ಲಿ ಚಾಲಕರು ಅಧಿಕ ವೇಗದಲ್ಲಿ ಲಾರಿ ಚಲಾಯಿಸಿ, ಅಪಘಾತವಾಗುವ ಸಂಭವವೂ ಇದೆ.ಏನು ಮಾಡಬಹುದು: ಮರಳು ದಂಧೆ ನಿಯಂತ್ರಿಸಲು ಸರಕಾರ ಕಟ್ಟುನಿಟ್ಟಿನ ಕ್ರಮ ಕೈಗೊಂಡು ಹೊರ ಜಿಲ್ಲೆ, ರಾಜ್ಯಕ್ಕೆ ಮರಳು ಸಾಗಾಟವಾಗದಂತೆ ತಡೆಯುವುದು, ಹೊರ ಜಿಲ್ಲೆಗೆ ಮರಳು ಸಾಗಾಟ ಮಾಡುವ ಲಾರಿ ಮುಟ್ಟುಗೋಲು ಹಾಕಿ, ದಂಧೆಕೋರರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವುದು, ಅಲ್ಲಿನ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಕ್ರಮಕ್ಕೆ ಹಿಂದೇಟು ಹಾಕುತಿದ್ದಾರೆ. ಕನಕಗಿರಿಯಲ್ಲಿ ಚಿನ್ನದ ಬೆಲೆ : ಕನಕಗಿರಿಯಲ್ಲಿ ಮರಳು ಚಿನ್ನದ ಬೆಲೆಗೆ ಮಾರಾಟವಾಗುತ್ತಿದೆ. ನವಲಿಯಿಂದ ಕನಕಗಿರಿ, ಕೊಪ್ಪಳ, ರಾಯಚೂರು, ತಾವರಗೇರ, ಸಿಂಧನೂರು, ಕುಷ್ಟಗಿ, ತಲುಪುವಲ್ಲಿ ತನಕ ಲಂಚಬಾಕರೊಂದಿಗೆ ಹೊಂದಾಣಿಕೆ ಮಾಡಿಕೊಂಡು ಸಾಗಬೇಕಾಗಿದೆ. ಹೀಗಾಗಿ ಒಂದು ಟಿಪ್ಪರ್ ಮರಳು 25,000 ಸಾವಿರ ರೂ.ಗೆ ಮಾರಾಟ ಮಾಡಲಾಗುತ್ತಿದೆ. ಬೆಂಗಳೂರಿನಲ್ಲಿ ಹಿಂದಿನ ವರ್ಷ ಒಂದು ಲೋಡ್ ಮರಳಿನ ಬೆಲೆ 56,000 ರೂ.ಆಗಿತ್ತು. ಅರಣ್ಯ ಭೂಮಿಯಲ್ಲಿ ಯಾವುದೇ ಅಕ್ರಮ ಮರಳುಗಾರಿಕೆ ನಡೆಯುತ್ತಿಲ್ಲ. ಅದು ಕಂದಾಯ ಕೆರೆಯಲ್ಲಿ ನಡೆಯುತ್ತಿತ್ತು. ಈ ಕುರಿತು ಕನಕಗಿರಿ ತಹಶೀಲ್ದಾರ್ ದೂರು ನೀಡಿದ್ದಾರೆ, ನಾವು ಇಂತಹ ಚಟುವಟಿಕೆಗಳಿಗೆ ಯಾವುದೇ ಅವಕಾಶ ನೀಡುವುದಿಲ್ಲ. -ಸುಲೇಮಾನ್ ಅರಣ್ಯ ಇಲಾಖೆ ಅಧಿಕಾರಿಗಳು, ಗಂಗವಾತಿ ಎಲ್ಲೆಲ್ಲಿ ಮರಳು ಸಾಗಾಟ ನವಲಿ, ಉದ್ದಿಹಾಳ, ಸಂಕನಾಳ, ಮಲ್ಲಾಪುರ, ಯತ್ನಾಟ್ಟಿ, ಬುನ್ನಟ್ಟಿ, ರಾಂಪುರ ಗ್ರಾಮಗಳಲ್ಲಿ ಅತೀ ಹೆಚ್ಚು ಮರಳು ಮಾಫಿ ನಡೆಯುತ್ತಿದ್ದೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಪೊಲೀಸ್ ಇಲಾಖೆ ಮೌನಕ್ಕೆ ಶರಣಾಗಿದೆ. ಅಕ್ರಮ ಮರಳುಗಾರಿಕೆಗೆ ನಡೆಯುವ ದಾಳಿಗಳೂ ’ಮಾಮೂಲು’ ಆಗಿಬಿಟ್ಟಿವೆ. ದಾಳಿ ನಡೆದ ಒಂದೆರಡು ದಿನಗಳಲ್ಲೇ ಮತ್ತೆ ಮರಳುಗಾರಿಕೆ ಅವ್ಯಾಹತ ನಡೆಯುತ್ತಿದೆ. ಅಕ್ರಮ ಮರಳುಗಾರಿಕೆ ಅಡ್ಡೆಗೆ ದಾಳಿ ಎಂದು ಪ್ರಚಾರ ಗಿಟ್ಟಿಸಿಕೊಳ್ಳುವವರು, ಮರಳು ಉದ್ಯಮಿಗಳಿಗೆ ಮಾಹಿತಿ ನೀಡಿಯೇ ದಾಳಿ ನಡೆಸುತ್ತಾರೆ, ದಾಳಿಯಿಂದ ಕಾನೂನಾತ್ಮಕವಾಗಿ ತೆಗೆದುಕೊಂಡ ಕ್ರಮಗಳ ಕುರಿತು ಅಧಿಕಾರಿಗಳು ಮಾಹಿತಿ ನೀಡುವುದಿಲ್ಲ. -ಹನುಮಂತಪ್ಪ ಚಿಕ್ಕಮಾದಿನಾಳ ಗ್ರಾಮಸ್ಥ
ರಾಯಚೂರು | ಬಿ.ವೆಂಕಟಸಿಂಗ್ ತಾಯಿ ಯಮುನಾಬಾಯಿ ನಿಧನ
ರಾಯಚೂರು, ಡಿ.11: ಹಿರಿಯ ಪತ್ರಕರ್ತ ಹಾಗೂ ಪ್ರಸ್ತುತ ಕರ್ನಾಟಕ ಮಾಹಿತಿ ಆಯೋಗದ ಕಲಬುರಗಿ ಪೀಠದ ಆಯುಕ್ತ ಬಿ.ವೆಂಕಟಸಿಂಗ್ ಅವರ ತಾಯಿ ಯಮುನಾಬಾಯಿ ರಘುನಾಥಸಿಂಗ್(80) ಗುರುವಾರ ಬೆಳಗ್ಗೆ ನಿಧನರಾಗಿದ್ದಾರೆ. ಕಳೆದ ನಾಲ್ಕು ದಿನಗಳಿಂದ ಕಲಬುರ್ಗಿಯ ಜಯದೇವ ಆಸ್ಪತ್ರೆಯಲ್ಲಿ ಹೃದಯ ಸಂಬಂಧಿ ಚಿಕಿತ್ಸೆ ಪಡೆಯುತ್ತಿದ್ದ ಅವರು, ಚಿಕಿತ್ಸೆ ಫಲಕಾರಿಯಾಗದೆ ಬೆಳಗ್ಗೆ 10:30ರ ಸುಮಾರಿಗೆ ಕೊನೆಯುಸಿರೆಳೆದಿದ್ದಾರೆ. ಮೃತರಿಗೆ ಮಾಹಿತಿ ಆಯೋಗದ ಸದಸ್ಯ ಬಿ.ವೆಂಕಟಸಿಂಗ್, ಸತ್ಯನಾರಾಯಣ ಸಿಂಗ್, ಹನುಮಾನ್ ಸಿಂಗ್ ಮೂವರು ಪುತ್ರರು ಹಾಗೂ ನಾಲ್ವರು ಪುತ್ರಿಯರು, ಮೊಮ್ಮಕ್ಕಳ ಸಹಿತ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.
ರಾಯಚೂರು | ಬೆಂಕಿ ಆಕಸ್ಮಿಕ: 70 ಸಾವಿರ ರೂ. ಮೌಲ್ಯದ ಬಣವೆ ನಷ್ಟ
ರಾಯಚೂರು, ಡಿ.11: ಆಕಸ್ಮಿಕವಾಗಿ ಬೆಂಕಿ ತಗಲಿ 70 ಸಾವಿರ ರೂ. ಮೌಲ್ಯದ ಸಜ್ಜೆಯ ಸೊಪ್ಪಿ, ಶೇಂಗಾ ಹೊಟ್ಟು( ಸಿಪ್ಪೆ) ತೊಗರಿ ಹೊಟ್ಟಿನ ಬಣವೆ ಸುಟ್ಟು ಕರಕಲಾಗಿರುವ ಘಟನೆ ರಾಯಚೂರು ಜಿಲ್ಲೆ ಲಿಂಗಸೂಗೂರು ತಾಲೂಕಿನ ವೀರಾಪೂರು ಗ್ರಾಮದಲ್ಲಿ ನಡೆದಿದೆ. ಕುರಿಗಾಯಿ ದುರಗಮ್ಮ ಎಂಬವರಿಗೆ ಸೇರಿದ ಬಣವೆ ಬೆಂಕಿಗಾಹುತಿಯಾಗಿದೆ. ಬೇಸಿಗೆಯಲ್ಲಿ ಕುರಿ ಮರಿಗಳಿಗೆ ದನಕರುಗಳಿಗೆ ಮೇವಿನ ಅಭಾವ ಸೃಷ್ಟಿಯಾಗಬಾರದು ಎಂದು ದುರುಗಮ್ಮ 70 ಸಾವಿರ ರೂಪಾಯಿ ಮೌಲ್ಯದ ಸಜ್ಜೆ ಸೊಪ್ಪಿ, ಶೇಂಗಾ, ತೊಗರಿ ಹೊಟ್ಟು ಸಂಗ್ರಹಿಸಿಟ್ಟಿದ್ದರು. ಬೆಂಕಿ ಕಾಣಿಸಿಕೊಂಡ ತಕ್ಷಣವೇ ಅಗ್ನಿ ಶಾಮಕದಳಕ್ಕೆ ಕರೆ ಮಾಡಿದ ಸ್ವಲ್ಪ ಹೊತ್ತಿನಲ್ಲೇ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದರು. ಸಂತ್ರಸ್ತ ಕುಟುಂಬ ಕುರಿಮರಿಗಳನ್ನು ಕಾಯ್ದು ಬದುಕುವ ಕುಟುಂಬ ಆಗಿದ್ದು, ನಷ್ಟ ಪರಿಹಾರವಾಗಿ 1 ಲಕ್ಷ ರೂ. ಪರಿಹಾರ ನೀಡಬೇಕು ಎಂದು ಗ್ರಾಮ ಪಂಚಾಯತ್ ಸದಸ್ಯ ಹಾಗೂ ಸಿಪಿಎಂ ತಾಲೂಕು ಕಾರ್ಯದರ್ಶಿ ರಮೇಶ ವೀರಾಪೂರು ಆಗ್ರಹಿಸಿದ್ದಾರೆ.
ಆನ್ಲೈನ್ ಗೇಮ್ ಗೀಳು; ಬೆತ್ತಲೆ ಫೋಟೊ ಶೇರ್ ಬೆದರಿಕೆಗೆ ಹೆದರಿ ಯುವಕ ಆತ್ಮಹತ್ಯೆ
ಆನ್ಲೈನ್ ಗೇಮ್ ಗೀಳಿಗೆ ಒಳಗಾದ ಎಂಬಿಎ ವಿದ್ಯಾರ್ಥಿಯೊಬ್ಬ ಆ್ಯಪ್ ಮೂಲಕ ಸಾಲ ಪಡೆದು, ಬೆತ್ತಲೆ ಫೋಟೋ ಹಂಚುವ ಬೆದರಿಕೆ ಮತ್ತು ಹಣಕ್ಕಾಗಿ ಒತ್ತಡಕ್ಕೆ ಒಳಗಾಗಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ಮೂರು ಪುಟದ ಡೆತ್ ನೋಟ್ನಲ್ಲಿ ಮೂರು ಮೊಬೈಲ್ ನಂಬರ್ಗಳನ್ನು ಉಲ್ಲೇಖಿಸಿದ್ದು, ಅವುಗಳೇ ಸಾವಿಗೆ ಕಾರಣ ಎನ್ನಲಾಗಿದೆ
ಬೆಳಗಾವಿ (ಸುವರ್ಣ ವಿಧಾನಸೌಧ): ನಮಗೆ ತಲಾ 10 ಸಾವಿರ ಕೋಟಿ ರೂ. ಅನುದಾನ ಕೊಡಿ. ಇಲ್ಲವೇ, ಪ್ರತ್ಯೇಕ ರಾಜ್ಯಕ್ಕಾಗಿ ಹೋರಾಟ ಮುಂದುವರಿಸುವೆ ಎಂದು ಕಾಂಗ್ರೆಸ್ ಶಾಸಕ ರಾಜು ಕಾಗೆ ಪುನರುಚ್ಚರಿಸಿದ್ದಾರೆ. ಗುರುವಾರ ವಿಧಾನಸಭೆಯಲ್ಲಿ ಉತ್ತರ ಕರ್ನಾಟಕ ಸಮಸ್ಯೆಗಳ ಕುರಿತ ಚರ್ಚೆಯಲ್ಲಿ ಮಾತನಾಡಿದ ಅವರು, ಉತ್ತರ ಕರ್ನಾಟಕಕ್ಕೆ ಮಾಡುತ್ತಿರುವ ತಾರತಮ್ಯದ ಬಗ್ಗೆ ಬೇಸರಗೊಂಡು ರಾಷ್ಟ್ರಪತಿ, ಪ್ರಧಾನಿ ಮತ್ತು ಮುಖ್ಯಮಂತ್ರಿಗಳಿಗೆ ಪ್ರತ್ಯೇಕ ರಾಜ್ಯಕ್ಕಾಗಿ ಪತ್ರ ಬರೆದಿದ್ದೆ. ಅದೇ ರೀತಿ ಯಾರು ಏನೇ ಹೇಳಲಿ, ವಿರೋಧ ಮಾಡಲಿ ನನ್ನ ಹೋರಾಟ ಮುಂದುವರೆಯಲಿದೆ ಎಂದರು. ಪ್ರತ್ಯೇಕ ರಾಜ್ಯಕ್ಕಾಗಿ ನನ್ನ ಅನಸಿಕೆಗೆ ಕೆಲವು ಸಂಘಟನೆಗಳು ವಿರೋಧ ವ್ಯಕ್ತಪಡಿಸಿದ್ದವು, ಕೆಲವು ಸಂಘಟನೆಗಳು ಬೆಂಬಲ ನೀಡಿವೆ. ಪ್ರಜಾಸೌಧ ಕಟ್ಟಡ ನಿರ್ಮಾಣಕ್ಕೆ ಕಡೂರಿಗೆ 10 ಕೋಟಿ ರೂ. ನೀಡಿದರೆ, ನಮ್ಮ ತಾಲೂಕಿಗೆ 8 ಕೋಟಿ ರೂ. ನೀಡುತ್ತಾರೆ. ಈ ತಾರತಮ್ಯ ಪ್ರಶ್ನಿಸಿದರೆ ಸ್ವಪಕ್ಷೀಯ ಶಾಸಕನಿಂದಲೇ ಸರಕಾರದ ವಿರೋಧಿ ಎನ್ನುತ್ತಾರೆ. ಹೀಗೆ ಆದರೆ ಯಾರಿಗೆ ನಮ್ಮ ಗೋಳು ಹೇಳಬೇಕು ಎಂದು ಪ್ರಶ್ನಿಸಿದರು. ಪ್ರಜಾ ಸೌಧದ ಬಗ್ಗೆ ಮಾತನಾಡಲು ಹೋದರೆ ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ನನ್ನನ್ನು ಗಮನಿಸಲೇ ಇಲ್ಲ. ಈ ಸಂಬಂಧಿಸಿದಂತೆ ಅದರ ಹಕ್ಕುಚ್ಯುತಿ ಮಂಡಿಸಿದರೂ ಇದುವರೆಗೂ ಕ್ರಮ ಕೈಗೊಂಡಿಲ್ಲ ಬೇಸರ ವ್ಯಕ್ತಪಡಿಸಿದರು. ಇದಕ್ಕೆ ಧ್ವನಿಗೂಡಿಸಿದ ವಿಪಕ್ಷ ನಾಯಕರು, ಶಾಸಕರಿಗೆ ಮರ್ಯಾದೆ ಕೊಟ್ಟಿಲ್ಲ. ಇದು ಗಂಭೀರ ವಿಷಯವಾಗಿದೆ ಎಂದರು. ನಮ್ಮ ಕ್ಷೇತ್ರ ಮತ್ತು ಸುತ್ತಲಿನ ತಾಲೂಕುಗಳಲ್ಲಿ ಕೃಷಿ ಭೂಮಿ ಹಾಳಾಗಿದ್ದು, ಉಪ್ಪಿನ ಅಂಶ ಹೆಚ್ಚಾಗಿದೆ. ಈ ಭೂಮಿಯನ್ನು ಸವಳು-ಜವಳು ಮಾಡಲು ಪ್ರತಿ ಕ್ಷೇತ್ರಕ್ಕೆ 1 ಕೋಟಿ ನೀಡಬೇಕು. ನಮ್ಮ ಭಾಗದಲ್ಲಿ ಎಲ್ಲಾ ಕಾಮಗಾರಿಗಳು ವಿಳಂಬವಾಗುತ್ತಿವೆ. ನಾವು ಭೀಕ್ಷೆ ಬೇಡುವ ಪರಿಸ್ಥಿತಿ ಬಂದಿದೆ ಎಂದು ಬೇಸರ ವ್ಯಕ್ತಪಡಿಸಿದರು.
IND Vs SA- ಟಾಸ್ ಗೆದ್ದ ಭಾರತವನ್ನು ದಿಕ್ಕು ತಪ್ಪಿಸಿದ ಹರಿಣಗಳು; ಚಂಡೀಗಢದಲ್ಲಿ ನಡೆಯದ ಕಟಕ್ ಆಟ
India Vs South Africa 2nd t20i Match- ಕಟಕ್ನಲ್ಲಿ ಪ್ರಥಮ ಟಿ20 ಪಂದ್ಯದಲ್ಲಿ ಆದ ಮುಖಭಂಗಕ್ಕೆ ನ್ಯೂ ಚಂಡೀಗಢದಲ್ಲಿ ತಿರುಗೇಟು ನೀಡಿದ ದಕ್ಷಿಣ ಆಫ್ರಿಕಾ ದ್ವಿತೀಯ ಪಂದ್ಯದಲ್ಲಿ ಭಾರತದ ವಿರುದ್ಧ 51 ರನ್ಗಳ ಭರ್ಜರಿ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ 5 ಪಂದ್ಯಗಳ ಸರಣಿಯಲ್ಲಿ 1-1 ಸಮಬಲ ಸಾಧಿಸುವಲ್ಲಿ ಯಶಸ್ವಿಯಾಗಿದೆ. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ದಕ್ಷಿಣ ಆಫ್ರಿಕಾ 213 ರನ್ ಗಳಿಸಿದರೆ ಇದನ್ನು ಬೆಂಬತ್ತುವಲ್ಲಿ ಯಶಸ್ವಿಯಾಗದ ಭಾರತ 162 ರನ್ಗಳಿಗೆ ಆಲೌಟ್ ಆಯಿತು.
ಕಳ್ಳತನ ಆರೋಪಿ ಬಂಧನ ; ಲಕ್ಷಾಂತರ ರೂ. ಮೌಲ್ಯದ ಸ್ವತ್ತು ವಶ : ಡಾ.ಶರಣಪ್ಪ ಎಸ್.ಡಿ.
ಕಲಬುರಗಿ, ಡಿ.11: ಇಲ್ಲಿನ ಸ್ಟೇಷನ್ ಬಝಾರ್ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಮನೆಯೊಂದರಲ್ಲಿ ಕಳ್ಳತನ ಮಾಡಿ ಮಹಾರಾಷ್ಟ್ರದ ಪುಣೆಗೆ ಪರಾರಿಯಾಗಿದ್ದ ಆರೋಪಿಯೊಬ್ಬನನ್ನು ಹದಿನೈದು ದಿನಗಳಲ್ಲೇ ಬಂಧಿಸಿ, ಸುಮಾರು 20ರಿಂದ 40 ಲಕ್ಷ ರೂ.ಗಳ ಮೌಲ್ಯದ ಸ್ವತ್ತು ವಶಪಡಿಸಿಕೊಳ್ಳುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ ಎಂದು ನಗರ ಪೋಲಿಸ್ ಆಯುಕ್ತ ಡಾ. ಶರಣಪ್ಪ ಎಸ್.ಡಿ. ಹೇಳಿದ್ದಾರೆ. ಧಾರವಾಡದ ಎಮ್ಮೆಕೆರೆ ನಿವಾಸಿ, ಮಹಾರಾಷ್ಟ್ರದ ಪುಣೆಯ ಕಲವಾಡ ಬಸ್ತಿ ಲೋಗಂನ ಅಡಿಗೆ ಭಟ್ಟ ನವೀನ್ (49) ಬಂಧಿತ ಆರೋಪಿಯಾಗಿದ್ದಾನೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಕಾರ್ಯಾಚರಣೆ ಕೈಗೊಂಡ ಸ್ಟೇಷನ್ ಬಝಾರ್ ಠಾಣೆಯ ಪಿಐ ಗುರುಲಿಂಗಪ್ಪ ಪಾಟೀಲ್, ಸಿಬ್ಬಂದಿ ಸಿರಾಜ್ ಪಟೇಲ್, ಪ್ರಭಾಕರ್, ಮೋಸಿನ್, ಯಲ್ಲಪ್ಪ, ಶಿವಲಿಂಗ, ಮಲ್ಲಣ್ಣ, ಸಂಗಣ್ಣ, ಸುಮೀತ್ ಹಾಗೂ ಚನ್ನವೀರೇಶ್ ಅವರಿಗೆ ನಗರ ಪೋಲಿಸ್ ಆಯುಕ್ತರು ಪ್ರಶಂಸನಾ ಪತ್ರ ನೀಡಿ ಶ್ಲಾಘಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಉಪ ಪೋಲಿಸ್ ಆಯುಕ್ತ ಪ್ರವೀಣ್ ನಾಯಕ್, ಸಹಾಯಕ ಪೋಲಿಸ್ ಆಯುಕ್ತ ಶರಣಬಸಪ್ಪ ಸುಬೇದಾರ್ ಮುಂತಾದವರು ಉಪಸ್ಥಿತರಿದ್ದರು.
ಹೊಸದಿಲ್ಲಿ, ಡಿ. 11: ವಾಯು ಗುಣಮಟ್ಟ ಸುಧಾರಿಸುವ ವರೆಗೆ ಸಂಸತ್ತಿನ ಚಳಿಗಾಲದ ಅಧಿವೇಶನ ಹಾಗೂ ಬಜೆಟ್ ಅಧಿವೇಶನವನ್ನು ದಿಲ್ಲಿಯ ಹೊರಗೆ ಸ್ಥಳಾಂತರಿಸುವಂತೆ ಬಿಜೆಡಿಯ ರಾಜ್ಯ ಸಭಾ ಸದಸ್ಯ ಮಾನಸ್ ರಂಜನ್ ಮಂಗರಾಜ್ ಗುರುವಾರ ಸರಕಾರವನ್ನು ಆಗ್ರಹಿಸಿದ್ದಾರೆ. ದಿಲ್ಲಿಯ ವಾರ್ಷಿಕ ಮಾಲಿನ್ಯದ ಬಿಕ್ಕಟ್ಟನ್ನು ‘‘ಮಾನವ ನಿರ್ಮಿತ ವಿಪತ್ತು’’ ಎಂದು ಅವರು ಕರೆದರು. ಶೂನ್ಯ ವೇಳೆಯಲ್ಲಿ ಈ ವಿಷಯ ಪ್ರಸ್ತಾಪಿಸಿದ ಒಡಿಶಾದ ಮಂಗರಾಜ್, ದಿಲ್ಲಿಯ ವಾಯು ಮಾಲಿನ್ಯದ ಬಗ್ಗೆ ಮಾತನಾಡಿದರು. ನೈಸರ್ಗಿಕ ವಿಕೋಪಗಳಿಗೆ ತನ್ನ ರಾಜ್ಯದ ಪರಿಣಾಮಕಾರಿ ಪ್ರತಿಕ್ರಿಯೆ ಬಗ್ಗೆ ಅವರು ಮಾತನಾಡಿದರು. ದಿಲ್ಲಿಯಲ್ಲಿ ಮಾಲಿನ್ಯವನ್ನು ನಿಭಾಯಿಸಲು ಅದೇ ತುರ್ತು ಅಗತ್ಯವಿದೆ ಎಂದು ಅವರು ಹೇಳಿದರು. ನಾನು ಒಡಿಶಾದಿಂದ ಬಂದಿದ್ದೇನೆ. ಅದು ಚಂಡ ಮಾರುತ, ಪ್ರವಾಹ ಹಾಗೂ ಇತರ ನೈಸರ್ಗಿಕ ವಿಕೋಪಗಳನ್ನು ಬಹಳ ಶಿಸ್ತಿನಿಂದ ನಿರ್ವಹಿಸುವ ರಾಜ್ಯ. ನಿಜವಾದ ಬಿಕ್ಕಟ್ಟು ಹೇಗಿರುತ್ತದೆ ಎಂದು ನನಗೆ ತಿಳಿದಿದೆ. ಆದರೆ, ದಿಲ್ಲಿಯ ಬಗ್ಗೆ ನನಗೆ ಆತಂಕವಿದೆ ಎಂದು ಅವರು ಹೇಳಿದರು. ‘‘ಅವರು ತೊಂದರೆಗೆ ಒಳಗಾಗುತ್ತಿರುವುದನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ. ಇದು ಸಾಮಾನ್ಯ ಎಂಬಂತೆ ನಟಿಸಲು ಸಾಧ್ಯವಿಲ್ಲ. ಗರಿಷ್ಠ ಮಾಲಿನ್ಯ ತಿಂಗಳಲ್ಲಿ ಸಂಸತ್ತಿನ ನಿರ್ಣಾಯಕ ಅಧಿವೇಶನವನ್ನು ನಡೆಸುವ ಮೂಲಕ ಅನಗತ್ಯವಾಗಿ ಜೀವಗಳನ್ನು ಅಪಾಯಕ್ಕೆ ಒಡ್ಡುತ್ತೇವೆ’’ ಎಂದು ಮಂಗರಾಜ್ ಹೇಳಿದರು.
F16 ವಿಮಾನಗಳ ಆಧುನೀಕರಣ: Pakistan - US ಒಪ್ಪಂದ
ವಾಷಿಂಗ್ಟನ್, ಡಿ.11: ಪಾಕಿಸ್ತಾನದ ಬಳಿಯಿರುವ ಎಫ್-16 ಯುದ್ಧವಿಮಾನಗಳನ್ನು ಅತ್ಯಾಧುನಿಕಗೊಳಿಸುವ ನಿಟ್ಟಿನಲ್ಲಿ 686 ದಶಲಕ್ಷ ಡಾಲರ್ ಮೊತ್ತದ ತಂತ್ರಜ್ಞಾನ ನೆರವು ಒದಗಿಸುವ ಶಸ್ತ್ರಾಸ್ತ್ರ ಒಪ್ಪಂದಕ್ಕೆ ಅಮೆರಿಕ ಅನುಮೋದನೆ ನೀಡಿರುವುದಾಗಿ ವರದಿಯಾಗಿದೆ. ಈ ಪ್ಯಾಕೇಜ್ನಲ್ಲಿ ಲಿಂಕ್-16 ವ್ಯವಸ್ಥೆಗಳು, ಕ್ರಿಪ್ಟೋಗ್ರಾಫಿಕ್ ಉಪಕರಣಗಳು, ವಿಮಾನಯಾನ ಇಲೆಕ್ಟ್ರಾನಿಕ್ಸ್ ಮತ್ತು ವಿದ್ಯುತ್ ವ್ಯವಸ್ಥೆಗಳ ನವೀಕರಣ, ತರಬೇತಿ ಮತ್ತು ಸಮಗ್ರ ಲಾಜಿಸ್ಟಿಕ್ ಬೆಂಬಲವನ್ನು ಒಳಗೊಂಡಿದೆ ಎಂದು ಅಮೆರಿಕದ ಸಂಸತ್ತಿಗೆ ರಕ್ಷಣಾ ಭದ್ರತೆ ಸಹಕಾರ ಏಜೆನ್ಸಿ(ಡಿಎಸ್ಸಿಎ) ಬರೆದಿರುವ ಪತ್ರವನ್ನು ಉಲ್ಲೇಖಿಸಿ `ಡಾನ್' ವರದಿ ಮಾಡಿದೆ. ಒಪ್ಪಂದವು 30 ದಿನಗಳ ಪರಿಶೀಲನಾ ಅವಧಿಯನ್ನು ಒಳಗೊಂಡಿದ್ದು ಅಮೆರಿಕಾ ಸಂಸತ್ ಸದಸ್ಯರ ಸೂಕ್ಷ್ಮ ಪರಿಶೀಲನೆಗೆ ಒಳಪಡುವ ನಿರೀಕ್ಷೆಯಿದೆ. ಈ ಬೆಳವಣಿಗೆಗಳ ಮೇಲೆ ಭಾರತ ನಿಕಟ ನಿಗಾ ಇರಿಸಿದೆ. ಲಿಂಕ್-16 ಸುಧಾರಿತ ಆದೇಶ, ನಿಯಂತ್ರಣ, ಸಂವಹನ ಮತ್ತು ಗುಪ್ತಚರ ವ್ಯವಸ್ಥೆಯಾಗಿದೆ. ಇದು ಸುರಕ್ಷಿತ, ನೈಜ ಸಮಯದ ಸಂವಹನ ನೆಟ್ವರ್ಕ್ ಆಗಿದ್ದು ಅದು ಮಿತ್ರ ಪಡೆಗಳ ನಡುವೆ ಯುದ್ಧತಂತ್ರದ ಡೇಟಾವನ್ನು ಹಂಚಿಕೊಳ್ಳುತ್ತದೆ. ಶತ್ರುಗಳು ಗಾಳಿ ಮತ್ತು ನೆಲದ ವ್ಯವಸ್ಥೆಗಳಿಂದ ಇಲೆಕ್ಟ್ರಾನಿಕ್ ಜ್ಯಾಮಿಂಗ್ ನಡೆಸುವುದನ್ನು ಈ ವ್ಯವಸ್ಥೆ ತಡೆಯುತ್ತದೆ.
ಮಂಗಳೂರು | ಬ್ಯಾಟರಿ ಕಳವು : ಪ್ರಕರಣ ದಾಖಲು
ಮಂಗಳೂರು, ಡಿ.11: ಕಾರ್ಮಿಕ ಇಲಾಖೆಯ ಎರಡು ಸಂಚಾರಿ ಆರೋಗ್ಯ ಘಟಕ ಬಸ್ನಿಂದ ಸುಮಾರು 40 ಸಾವಿರ ರೂ. ಮೌಲ್ಯದ ಐದು ಬ್ಯಾಟರಿಗಳನ್ನು ಕಳವು ಮಾಡಿದ ಬಗ್ಗೆ ಕದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಎರಡೂ ಬಸ್ಸಿನ ಚಾಲಕರು ಬಸ್ಸನ್ನು ಡಿ.6ರಂದು ಸಂಜೆ 5 ಗಂಟೆಗೆ ಪದವು ಗ್ರಾಮದ ಭದ್ರಕಾಳಿ ದೇವಸ್ಥಾನ ರಸ್ತೆಯ ಕಾರ್ಮಿಕ ಕಚೇರಿ ಬಳಿ ನಿಲ್ಲಿಸಿದ್ದರು. ಡಿ.8ರಂದು ಬೆಳಗ್ಗೆ ಬಂದಾಗ ಒಂದು ಬಸ್ಸಿನಲ್ಲಿ ಅಳವಡಿಸಿದ್ದ ಬ್ಯಾಟರಿ ಮತ್ತು ಯುಪಿಎಸ್ ಬ್ಯಾಟರಿ ಹಾಗೂ ಇನ್ನೊಂದು ಬಸ್ಸಿನಿಂದ ಎರಡು ಯುಪಿಎಸ್ ಬ್ಯಾಟರಿಗಳನ್ನು ಕಳವು ಮಾಡಿರುವುದು ಕಂಡು ಬಂದಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಯಾವಾಗ ಚುನಾವಣೆ ನಡೆಸಲು ಬಯಸಿದ್ದೀರಿ: ಝೆಲೆನ್ಸ್ಕಿಗೆ ಟ್ರಂಪ್ ಪ್ರಶ್ನೆ
ವಾಷಿಂಗ್ಟನ್, ಡಿ.11: ಈಗ ನಡೆಯುತ್ತಿರುವ ಯುದ್ಧದ ವಾಸ್ತವಿಕತೆಯ ಬಗ್ಗೆ ಉಕ್ರೇನ್ ಅಧ್ಯಕ್ಷ ವೊಲೊದಿಮಿರ್ ಝೆಲೆನ್ಸ್ಕಿ ಅರಿತುಕೊಳ್ಳಬೇಕು ಎಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಗ್ರಹಿಸಿದ್ದು ಮುಂದಿನ ಚುನಾವಣೆಯನ್ನು ಯಾವಾಗ ನಡೆಸಲು ಬಯಸಿದ್ದೀರಿ ಎಂದು ಝೆಲೆನ್ಸ್ಕಿಯನ್ನು ಪ್ರಶ್ನಿಸಿದ್ದಾರೆ. ರಶ್ಯದೊಂದಿಗಿನ ಯುದ್ಧದಲ್ಲಿ ತನ್ನ ಸ್ಥಿತಿಯ ಬಗ್ಗೆ ಉಕ್ರೇನ್ ಮರುಪರಿಶೀಲನೆ ನಡೆಸಬೇಕು ಮತ್ತು ಅಧ್ಯಕ್ಷ ಝೆಲೆನ್ಸ್ಕಿ ವಾಸ್ತವಿಕತೆಯನ್ನು ಅರಿತುಕೊಳ್ಳಬೇಕು. ಅವರು ಚುನಾವಣೆಯನ್ನು ಯಾವಾಗ ನಡೆಸುತ್ತಾರೆ ಎಂದು ತಿಳಿಯಬೇಕಿದೆ. ಯುರೋಪಿಯನ್ ನಾಯಕರು ಈ ವಾರಾಂತ್ಯ ಅಮೆರಿಕಾ ಮತ್ತು ಉಕ್ರೇನ್ ಜೊತೆ ಪ್ರತ್ಯೇಕವಾಗಿ ಮಾತುಕತೆ ನಡೆಸಲು ಬಯಸಿದ್ದಾರೆ. ಉಕ್ರೇನ್ ನಾಯಕರ ಜೊತೆಗಿನ ಮಾತುಕತೆಯಲ್ಲಿ ತೆಗೆದುಕೊಳ್ಳುವ ನಿರ್ಣಯಗಳ ಬಗ್ಗೆ ನಾವು ಆಸಕ್ತರಾಗಿದ್ದೇವೆ' ಎಂದು ಟ್ರಂಪ್ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ರಿಕೆಟ್ ಪಂದ್ಯಕ್ಕೆ ಸಚಿವ ಸಂಪುಟ ಒಪ್ಪಿಗೆ?
ಬೆಳಗಾವಿ: ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ರಿಕೆಟ್ ಆಟವಾಡಲು ಕೆಲ ಷರತ್ತುಗಳ ಅನ್ವಯ ಅನುಮತಿಗೆ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಿದೆ ಎಂದು ತಿಳಿದು ಬಂದಿದೆ. ಗುರುವಾರ ಇಲ್ಲಿನ ಸುವರ್ಣ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮೇಲ್ಕಂಡ ತೀರ್ಮಾನ ಕೈಗೊಳ್ಳಲಾಗಿದೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ರಿಕೆಟ್ ಪಂದ್ಯ ನಡೆಸಲು ಜನಾಭಿಪ್ರಾಯ ಸಂಗ್ರಹದ ಜೊತೆಯಲ್ಲಿ ನಿಯಮಗಳನ್ನು ರೂಪಿಸಲು ಗೃಹ ಸಚಿವರಿಗೆ ಸೂಚಿಸಲಾಗಿದೆ ಎಂದು ಹೇಳಲಾಗಿದೆ. ಕಾಲ್ತುಳಿತ ಪ್ರಕರಣದ ಹಿನ್ನಲೆಯಲ್ಲಿ ನಿವೃತ್ತ ನ್ಯಾಯಮೂರ್ತಿ ಮೈಕಲ್ ಡಿ. ಕುನ್ಹಾ ಅವರ ವರದಿಯನ್ನೂ ಪರಿಗಣಿಸಿ ಷರತ್ತುಗಳ ಅನ್ವಯ ಕ್ರಿಕೆಟ್ ಪಂದ್ಯ ಏರ್ಪಡಿಸಲು ಸಂಪುಟ ಒಪ್ಪಿಗೆ ನೀಡಿದೆ ಎಂದು ತಿಳಿದು ಬಂದಿದೆ.
ಮಂಗಳೂರು | ಮಾದಕ ವಸ್ತು ಸೇವನೆ ಆರೋಪ: ನಾಲ್ವರ ಸೆರೆ
ಮಂಗಳೂರು, ಡಿ.11: ಮಾದಕ ವಸ್ತು ಸೇವನೆ ಮಾಡಿದ ಆರೋಪದ ಮೇರೆಗೆ ಪ್ರತ್ಯೇಕ ಪ್ರಕರಣದಲ್ಲಿ ನಾಲ್ಕು ಮಂದಿಯನ್ನು ಉರ್ವ, ಮಂಗಳೂರು ಗ್ರಾಮಾಂತರ ಮತ್ತು ಕಾವೂರು ಠಾಣೆ ಪೊಲೀಸರು ಬಂಧಿಸಿದ್ದಾರೆ. ನಗರದ ಕುಂಟಿಕಾನ ಫ್ಲೈ ಓವರ್ ಬಳಿ ಕಸಬಾ ಬೆಂಗ್ರೆಯ ಮುಹಮ್ಮದ್ ಸುಹೈಲ್ ಮತ್ತು ಮುಹಮ್ಮದ್ ಸಫ್ವಾನ್ ನನ್ನು ಉರ್ವ ಪೊಲೀಸರು ಬಂಧಿಸಿದ್ದಾರೆ. ಪದವು ಗ್ರಾಮದ ಶಕ್ತಿನಗರದ ನಾಲ್ಯಪದವು ಮೈದಾನದ ಬಳಿ ಅತ್ತಾವರ ಬಾಬುಗುಡ್ಡೆ ನಿವಾಸಿ ಚರಣ್ ಯಾನೆ ಚಲ್ಲು ಎಂಬಾತನನ್ನು ಮಂಗಳೂರು ಗ್ರಾಮಾಂತರ ಠಾಣೆಯ ಪೊಲೀಸರು ಬಂಧಿಸಿದ್ದಾರೆ. 2024ರಲ್ಲಿ ಕಾವೂರು ಠಾಣೆಯಲ್ಲಿ ದಾಖಲಾಗಿದ್ದ ಎನ್ಡಿಪಿಎಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇರಳದ ಕೋಯಿಕ್ಕೋಡ್ ಜಿಲ್ಲೆಯ ಆಯಿಂಜೆರಿ ಗ್ರಾಮದ ನಿವಾಸಿ, ಪ್ರಸಕ್ತ ದೇರಳಕಟ್ಟೆಯಲ್ಲಿ ವಾಸವಾಗಿರುವ ಮುಹಮ್ಮದ್ ಶಮ್ಮಾಸ್ ಎಂಬಾತನನ್ನು ಠಾಣೆಗೆ ಕರೆಸಿದಾಗ ಆತ ಮಾದಕ ವಸ್ತು ಸೇವಿಸಿದ್ದ ಕಾರಣ ಪೊಲೀಸರು ಮತ್ತೊಂದು ಎನ್ಡಿಪಿಎಸ್ ಪ್ರಕರಣ ದಾಖಲಿಸಿದ್ದಾರೆ.
ಮಂಗಳೂರು | ವಿಚಾರಾಧೀನ ಕೈದಿ ಮೃತ್ಯು: ಪ್ರಕರಣ ದಾಖಲು
ಮಂಗಳೂರು, ಡಿ.11: ಚಿಕಿತ್ಸೆಗೆಗಾಗಿ ನಗರದ ವೆನ್ಲಾಕ್ ಆಸ್ಪತ್ರೆಗೆ ದಾಖಲಾಗಿದ್ದ ವಿಚಾರಣಾದೀನ ಕೈದಿಯೊಬ್ಬ ಸಾವನ್ನಪ್ಪಿದ ಘಟನೆ ಗುರುವಾರ ನಡೆದಿದೆ. ಉಡುಪಿ ಪೆರ್ಡೂರು ಹೊಲಗದ್ದೆ ನಿವಾಸಿ ರಾಜೇಶ್ (38) ಮೃತಪಟ್ಟ ಕೈದಿ. ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣಾಧೀನ ಕೈದಿಯಾಗಿದ್ದ ಈತನಿಗೆ ಎದೆನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಬುಧವಾರ ಉಡುಪಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ಗುರುವಾರ ನಗರದ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವುದಾಗಿ ಪ್ರಕರಣ ದಾಖಲಿಸಿಕೊಂಡಿರುವ ಪಾಂಡೇಶ್ವರ ಠಾಣೆಯ ಪೊಲೀಸರು ತಿಳಿಸಿದ್ದಾರೆ.
ಗುರು-ಶಿಷ್ಯರ ಬಾಂಧವ್ಯಕ್ಕೆ ಸಾಕ್ಷಿ ತಿ ನರಸೀಪುರ ಸಾಕ್ಷಿಯಾಗಿದೆ. ತನ್ನ ನೆಚ್ಚಿನ ಶಿಕ್ಷಕ ಶ್ರೀನಿವಾಸಗೌಡ ಅವರು ನಿವೃತ್ತರಾದ ಹಿನ್ನೆಲೆಯಲ್ಲಿ, ಬೆಂಗಳೂರಿನಲ್ಲಿ ಎಂಜಿನಿಯರ್ ಆಗಿ ಸೇವೆ ಸಲ್ಲಿಸುತ್ತಿರುವ ಉಮಾಶಂಕರ್ ಅವರು 1.50 ಲಕ್ಷ ರೂ. ಮೌಲ್ಯದ ಎಲೆಕ್ಟ್ರಿಕಲ್ ಬೈಕ್ ಅನ್ನು ಉಡುಗೊರೆಯಾಗಿ ನೀಡಿದ್ದಾರೆ. ಶಿಕ್ಷಕರ ಮಾರ್ಗದರ್ಶನದಿಂದ ಜೀವನ ರೂಪಿಸಿಕೊಂಡ ವಿದ್ಯಾರ್ಥಿ, ತಮ್ಮ ಗುರುಗಳಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.
ಡ್ರಗ್ಸ್ ಮಾರಾಟವು ಮಾರಾಟಗಾರರಿಗೆ ಉದ್ಯಮವಾಗಿ ಬದಲಾಗಿದೆ: ಜಿ ಪರಮೇಶ್ವರ್
ಡ್ರಗ್ಸ್ ತಡೆಗಾಗಿ ರಾಜ್ಯ ಪೊಲೀಸ್ ಇಲಾಖೆಯಿಂದ ಸಮರ ಸಾರಲಾಗಿದೆ ಎಂದು ಗೃಹ ಸಚಿವ ಜಿ. ಪರಮೇಶ್ವರ್ ಅವರು ಹೇಳಿದ್ದಾರೆ. ಡ್ರಗ್ಸ್ ತಡೆಗೆ ಮತ್ತು ಅಂತಹ ದಂಧೆಗಳಿಗೆ ಸಂಪೂರ್ಣವಾಗಿ ಕಡಿವಾಣ ಹಾಕಲು ರಾಜ್ಯ ಸರ್ಕಾರವು ಕಠಿಣ ನಿರ್ಧಾರ ತೆಗೆದುಕೊಂಡಿದೆ. ಡ್ರಗ್ಸ್ ದಂಧೆ ಸಂಪೂರ್ಣ ನಿಯಂತ್ರಣಕ್ಕೆ ಬರುವವರೆಗೆ ದಂಧೆಕೋರರ ವಿರುದ್ಧ ಸಮರ ನಡೆಯಲಿದೆ ಎಂದೂ ಅವರು ಇದೇ ಸಂದರ್ಭದಲ್ಲಿ ಹೇಳಿದ್ದಾರೆ.
ಉಡುಪಿ | ಡಿ.13: ಕೃಷ್ಣಮಠದಲ್ಲಿ ಪುತ್ತಿಗೆ ಮಠದಿಂದ ವಿಶ್ವಶಾಂತಿ ಸಮಾವೇಶ
ಆಂಧ್ರ ರಾಜ್ಯಪಾಲ ನ್ಯಾ.ಅಬ್ದುಲ್ ನಝೀರ್ ಉಪಸ್ಥಿತಿ
ಹೊಸದಿಲ್ಲಿ,ಡಿ.11:ಸರಕಾರಿ ನಿಧಿಗಳನ್ನು ಬಳಸಿಕೊಂಡು ಜವಾಹರಲಾಲ್ ನೆಹರೂ ಅವರು ಬಾಬರಿ ಮಸೀದಿಯನ್ನು ಪುನರ್ನಿರ್ಮಿಸಲು ಬಯಸಿದ್ದರೆಂದು, ವಲ್ಲಭಬಾಯಿ ಪಟೇಲ್ ಅವರ ಪುತ್ರಿ ಮಣಿಬೆನ್ ಪಟೇಲ್ ಅವರ ಮೂಲ ಡೈರಿಯಲ್ಲಿ ಬರೆಯಲಾಗಿತ್ತೆಂಬ ರಕ್ಷಣಾ ಸಚಿವ ರಾಜ್ನಾಥ್ ಸಿಂಗ್ ಅವರ ಹೇಳಿಕೆಯನ್ನು ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ತಳ್ಳಿಹಾಕಿದ್ದಾರೆ. ಇದನ್ನು ದೃಢಪಡಿಸುವುದಕ್ಕಾಗಿ ಅವರು ಗುಜರಾತ್ ಭಾಷೆಯಲ್ಲಿರುವ ಆ ಡೈರಿಯ ಪ್ರತಿಯೊಂದನ್ನು ಗುರುವಾರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರಿಗೆ ಹಸ್ತಾಂತರಿಸಿದ್ದಾರೆ. ಜೈರಾಮ್ ರಮೇಶ್ ಅವರು ಸಂಸತ್ಭವನದ ಮಕರದ್ವಾರದ ಹೊರಗೆ ರಾಜ್ನಾಥ್ ಸಿಂಗ್ ಅವರನ್ನು ಭೇಟಿಯಾಗಿ, ಅವರಿಗೆ ಮಣಿಬೆನ್ ಅವರ ಗುಜರಾತಿ ಭಾಷೆಯ ಡೈರಿಯ ಪ್ರತಿಯನ್ನು ಹಿಂದಿ ಭಾಷಾ ಅನುವಾದದೊಂದಿಗೆ ನೀಡಿದ್ದಾರೆ. ಬಾಬರಿ ಮಸೀದಿಯ ಪುನರ್ನಿರ್ಮಾಣಕ್ಕಾಗಿ ಸರಕಾರಿ ಹಣವನ್ನು ಬಳಸುವ ಕುರಿತು ನೆಹರೂ ಪ್ರಸ್ತಾವಿಸಿದ್ದರು. ಆದರೆ ಅದನ್ನು ಸರ್ದಾರ್ ವಲ್ಲಭಬಾಯಿ ಪಟೇಲ್ ತಡೆದಿದ್ದರು ಎಂದು ರಾಜ್ನಾಥ್ ಸಿಂಗ್ ಅವರು ಕಳೆದ ವಾರ ಗುಜರಾತ್ನ ವಡೋದರ ಜಿಲ್ಲೆಯಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಹೇಳಿದ್ದರು. ಆದರೆ ಅವರ ಹೇಳಿಕೆಯನ್ನು ಕಾಂಗ್ರೆಸ್ ಪಕ್ಷವು ವಿರೋಧಿಸಿತ್ತು. ರಕ್ಷಣಾ ಸಚಿವರು ಸುಳ್ಳುಗಳನ್ನು ಹರಡುತ್ತಿದ್ದು, ಅವರು ಕ್ಷಮೆಯಾಚಿಸಬೇಕೆಂದು ಅದು ಆಗ್ರಹಿಸಿತ್ತು. ಮಣಿಬೆನ್ ಪಟೇಲ್ ಅವರ ಡೈರಿಯ ಬರಹಗಳನ್ನು 2025ರಲ್ಲಿ ಸಿ.ಎ.ಆರ್.ಎಸ್. ಪಟೇಲ್ ಅವರು ಸಮರ್ಪಿತ್ ಪದಚ್ಛಯೋ ಸರ್ದಾರ್ನೋ ಹೆಸರಿನಲ್ಲಿ ಪ್ರಕಟಿಸಿದ್ದರು. ‘‘ರಾಜ್ನಾಥ್ ಸಿಂಗ್ ಹಾಗೂ ಅವರ ಸಹ ಇತಿಹಾಸ ತಿರುಚುಗಾರರು ಪ್ರತಿಪಾದಿಸುತ್ತಿರುವುದಕ್ಕೂ , ಡೈರಿಯಲ್ಲಿನ ಉಲ್ಲೇಖಗಳಿಗೂ ಅಗಾಧವಾದ ವ್ಯತ್ಯಾಸವಿದೆ ’’ ಎಂದು ಜೈರಾಮ್ ರಮೇಶ್ ಅವರು ಡೈರಿಯ ಪುಟಗಳನ್ನು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಶೇರ್ ಮಾಡಿಕೊಂಡು ತಿಳಿಸಿದ್ದಾರೆ. ನೆಹರೂ ಅವರನ್ನು ಗುರಿಯಿರಿಸಿ ಹಾಗೂ ಐತಿಹಾಸಿಕ ದಾಖಲೆಗಳನ್ನು ತಿರುಚಲು ಬಿಜೆಪಿಯು ‘ವಾಟ್ಸಾಪ್ ವಿವಿ’ಯನ್ನು ಅವಲಂಭಿಸಿದೆಯೆಂದು ಕಾಂಗ್ರೆಸ್ ಆಪಾದಿಸಿದೆ. ಆದಾಗ್ಯೂ ಸಿಂಗ್ ಅವರ ಹೇಳಿಕೆಯನ್ನು ಬಿಜೆಪಿ ಸಮರ್ಥಿಸಿಕೊಂಡಿದೆ. ಪಕ್ಷದ ರಾಷ್ಟ್ರೀಯ ವಕ್ತಾರ ಹಾಗೂ ರಾಜ್ಯಸಭಾ ಸದಸ್ಯ ಸುಭಾಂಶು ತ್ರಿವೇದಿ ಅವರು ಇನ್ನೊಂದು ಪ್ರಕಾಶನದ ಪ್ರಕಟಣೆಯಾದ ‘ ಇನ್ಸೈಡ್ ಸ್ಟೋರಿ ಆಫ್ ಸರ್ದಾರ್ ಪಟೇಲ್, ದಿ ಡೈರಿ ಆಫ್ ಮಣಿಬೆನ್ ಪಟೇಲ್ ಕೃತಿಯನ್ನು ಉಲ್ಲೇಖಿಸಿದ್ದಾರೆೆ. ಅದರಲ್ಲಿ ನೆಹರೂ ಅವರು ಬಾಬರಿ ಮಸೀದಿ ವಿಷಯವನ್ನು ಪ್ರಸ್ತಾವಿಸಿದಾಗ,ಪಟೇಲ್ ಅವರು ಸರಕಾರಿ ಖರ್ಚಿನಲ್ಲಿ ಮಸೀದಿ ಮರುನಿರ್ಮಾಣವನ್ನು ವಿರೋಧಿಸಿದ್ದರು ಎಂದು ಉಲ್ಲೇಖಿಸಲಾಗಿದೆ ಎಂದವರು ಹೇಳಿದ್ದಾರೆ.
ಅಮಾನ್ಯಗೊಂಡ ನೋಟು ಮಾರಾಟ ಜಾಲ ಭೇದಿಸಿದ ದಿಲ್ಲಿ ಪೊಲೀಸರು
ಹೊಸದಿಲ್ಲಿ,ಡಿ.11: ನಗರದ ವಝೀರ್ಪುರ ಪ್ರದೇಶದಲ್ಲಿ ಅಮಾನ್ಯಗೊಂಡ ಕರೆನ್ಸಿನೋಟುಗಳ ಮಾರಾಟ ನಡೆಸುತ್ತಿದ್ದ ಅಕ್ರಮ ಜಾಲವೊಂದನ್ನು ದಿಲ್ಲಿ ಪೊಲೀಸರು ಗುರುವಾರ ಭೇದಿಸಿದ್ದಾರೆ. ಕಾರ್ಯಾಚರಣೆಯಲ್ಲಿ ದಿಲ್ಲಿ ಕ್ರೈಂ ಬ್ರಾಂಚ್ ಪೊಲೀಸರು ಒಟ್ಟು 3.5 ಕೋಟಿ ರೂ.ಮುಖಬೆಲೆ ಮೌಲ್ಯದ 500 ರೂ. ಹಾಗೂ 1 ಸಾವಿರ ರೂ. ಗಳ ನೋಟುಗಳನ್ನು ತುಂಬಿಸಿಟ್ಟಿದ್ದ ಹಲವಾರು ಬ್ಯಾಗ್ಗಳನ್ನು ವಶಪಡಿಸಿಕೊಂಡಿದ್ದಾರೆ. 2016ರ ನವೆಂಬರ್ನಲ್ಲಿ ಅಮಾನ್ಯೀಕರಣದ ಬಳಿಕ ಈ ನೋಟುಗಳು ಅಸಿಂಧುಗೊಂಡಿದ್ದರೂ, ಅವು ಈಗಲೂ ರಹಸ್ಯವಾಗಿ ಚಲಾವಣೆಯಲ್ಲಿದ್ದವು ಎಂದು ಪೊಲೀಸರು ತಿಳಿಸಿದ್ದಾರೆ. ಅಮಾನ್ಯಗೊಂಡ ಕರೆನ್ಸಿಗಳನ್ನು ಹೊಂದುವುದು ಸಂಪೂರ್ಣವಾಗಿ ಕಾನೂನುಬಾಹಿರವಾಗಿದ್ದರೂ, ಆರೋಪಿಗಳು ದಿಢೀರ್ ಹಣ ಸಂಪಾದಿಸಲು ಈ ಅಕ್ರಮ ವ್ಯವಹಾರಗಳಲ್ಲಿ ತೊಡಗಿದ್ದರೆಂದು ಪೊಲೀಸರು ತಿಳಿಸಿದ್ದಾರೆ. ಈ ಅಮಾನ್ಯಗೊಂಡ ನೋಟುಗಳನ್ನು ಆರೋಪಿಗಳು ಇತ್ತೀಚಿನ ತಿಂಗಳುಗಳಲ್ಲಿ ಅತ್ಯಂತ ಕಡಿಮೆ ಬೆಲೆಗೆ ಖರೀದಿಸುತ್ತಿದ್ದರು. ಈ ನೋಟುಗಳನ್ನು ಆರ್ಬಿಐ ಅಥವಾ ಕೆಲವು ನಿರ್ದಿಷ್ಟ ವಾಹಿನಿಗಳ ಮೂಲಕ ವಿನಿಮಯ ಮಾಡಿಕೊಳ್ಳಬಹುದೆಂದು ಸುಳ್ಳು ಆಶ್ವಾಸನೆಯನ್ನು ನೀಡಿ ಆರೋಪಿಗಳು ಅವುಗಳನ್ನು ಬೇರೆಯವರಿಗೆ ಮಾರಾಟ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಕಾರ್ಯಚರಣೆಯಲ್ಲಿ ನಾಲ್ವರನ್ನು ಬಂಧಿಸಲಾಗಿದೆ. ಬಂಧಿತರನ್ನು ದಿಲ್ಲಿ ನಿವಾಸಿಗಳಾದ ಹರ್ಷ್, ಟೀಕ್ಚಂದ್, ಲಕ್ಷ್ಯ ಎಂದುಗುರುತಿಸಲಾಗಿದೆ.ನಾಲ್ಕನೇ ಆರೋಪಿ ವಿಪಿನ್ ಕುಮಾರ್ ಹಿಮಾಚಲ ಪ್ರದೇಶದ ಜೋಗಿಂದರ್ ನಗರದ ನಿವಾಸಿಯಾಗಿದ್ದು, ಆತ ಶಾಲಿಮಾರ್ಭಾಗ್ ನಗರದ ಮೆಟ್ರೋ ನಿಲ್ದಾಣದ ಸಮೀಪದ ಮನೆಯೊಂದರಲ್ಲಿ ನೆಲೆಸಿದ್ದನು. ಈ ಜಾಲವು ವಿವಿಧ ಸ್ಥಳಗಳಲ್ಲಿ ಹರಡಿರುವುದಕ್ಕೆ ಇದೊಂದು ನಿದರ್ಶನವಾಗಿದೆ ಎಂದು ದಿಲ್ಲಿ ಪೊಲೀಸರು ತಿಳಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ದಿಲ್ಲಿ ಪೊಲೀಸರು ನಿರ್ದಿಷ್ಟಪಡಿಸಲಾದ ಬ್ಯಾಂಕ್ ನೋಟುಗಳ ಕಾಯ್ದೆಯಡಿ ಆರೋಪಿಗಳ ವಿರುದ್ಧ ವಂಚನೆ, ಕ್ರಿಮಿನಲ್ ಸಂಚು ಹಾಗೂ ಉಲ್ಲಂಘನೆಯ ಆರೋಪಗಳನ್ನು ಹೊರಿಸಲಾಗಿದೆ.
ಜಾಲಿವುಡ್ ಸ್ಟುಡಿಯೋ ಬೀಗ ತೆರವು, ಆದೇಶ ಹಿಂಪಡೆದ ಮಾಲಿನ್ಯ ನಿಯಂತ್ರಣ ಮಂಡಳಿ
ಮಾಲಿನ್ಯ ನಿಯಮ ಉಲ್ಲಂಘನೆ ಸಂಬಂಧ ಬೀಗ ಬಿದ್ದಿದ್ದ ಬಿಡದಿಯ ಜಾಲಿವುಡ್ ಸ್ಟುಡಿಯೋ ಮರು ಆರಂಭಗೊಂಡಿದೆ. ಬಿಗ್ಬಾಸ್ ಕಾರ್ಯಕ್ರಮಕ್ಕೆ ತೊಂದರೆಯಾಗಿದ್ದ ಈ ವಿಚಾರದಲ್ಲಿ, ಮಾಲೀಕರು ನಿಯಮ ಪಾಲನೆಗೆ ಅಗತ್ಯ ವ್ಯವಸ್ಥೆ ಮಾಡಿದ್ದರಿಂದ ಮಾಲಿನ್ಯ ನಿಯಂತ್ರಣ ಮಂಡಳಿ ಆದೇಶ ಹಿಂಪಡೆದಿದೆ. ಕಲ್ಮಶ ನೀರು ಸಂಸ್ಕರಣೆ, ತ್ಯಾಜ್ಯ ವಿಂಗಡಣೆ ಸೇರಿದಂತೆ ಸುಧಾರಣೆಗಳನ್ನು ಪರಿಶೀಲಿಸಿ ಮಂಡಳಿ ಈ ನಿರ್ಧಾರ ಕೈಗೊಂಡಿದೆ.
ರಾಜಸ್ಥಾನ: SIR ನಿಯೋಜಿಸಿದ್ದ BLO ಕುಸಿದು ಬಿದ್ದು ಮೃತ್ಯು
ಜೈಪುರ, ಡಿ. 11: ರಾಜಸ್ಥಾನದ ಕೋಟಪುತಲಿ-ಬಹ್ರೋರ್ ನಲ್ಲಿ ಮತದರಾರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್ಐಆರ್) ಗೆ ನಿಯೋಜಿಸಲಾಗಿದ್ದ ಬೂತ್ ಮಟ್ಟದ ಅಧಿಕಾರಿ (ಬಿಎಲ್ಒ) ಯೊಬ್ಬರು ಮನೆಗೆ ತೆರಳುತ್ತಿದ್ದಾಗ ದಾರಿ ಮಧ್ಯೆ ಕುಸಿದು ಬಿದ್ದು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ. ಮೃತಪಟ್ಟ ಬೂತ್ ಮಟ್ಟದ ಅಧಿಕಾರಿಯನ್ನು ವಿಜಯ್ ಗುರ್ಜರ್ (42) ಎಂದು ಗುರುತಿಸಲಾಗಿದೆ. ವಿಜಯ್ ಅವರು ಕೋಟಪುತಲಿಯ ಸರ್ದಾರ್ ಸೀನಿಯರ್ ಸೆಕೆಂಡರ್ ಶಾಲೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ಅವರನ್ನು ಬಿಎಲ್ಒ ಆಗಿ ನಿಯೋಜಿಸಲಾಗಿತ್ತು. ಅವರು ಬುಧವಾರ ಸಂಜೆ ಮನೆಗೆ ಹಿಂದಿರುಗುತ್ತಿದ್ದಾಗ ರಸ್ತೆಯಲ್ಲಿ ಇದ್ದಕ್ಕಿದ್ದಂತೆ ಕುಸಿದು ಬಿದ್ದರು. ಅವರನ್ನು ಕುಟುಂಬ ಕೂಡಲೇ ಸರಕಾರಿ ಬಿಡಿಎಂ ಜಿಲ್ಲಾಸ್ಪತ್ರೆಗೆ ಕರೆದೊಯ್ದಿತು. ಆದರೆ, ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದರು. ಘಟನೆ ಕುರಿತು ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ‘‘ವಿಜಯ್ ಕುಸಿದು ಬಿದ್ದು ಸಾವನ್ನಪ್ಪಲು ಕಾರಣ ಏನು ಎಂಬುದು ಸ್ಪಷ್ಟವಾಗಿಲ್ಲ. ವೈದ್ಯಕೀಯ ವರದಿ ಬಂದ ಬಳಿಕವಷ್ಟೇ ನಿರ್ಧರಿಸಲು ಸಾಧ್ಯ’’ ಎಂದು ಕೋಟಪುತಲಿಯ ಡಿಎಸ್ಪಿ ರಾಜೇಂದ್ರ ಕುಮಾರ್ ಹೇಳಿದ್ದಾರೆ. ‘‘ವಿಜಯ್ ಸಾರ್ ಅವರ ಎಸ್ಐಆರ್ ಕೆಲಸಗಳು ಡಿಸೆಂಬರ್ 4ರಂದು ಪೂರ್ಣಗೊಂಡಿದೆ. ಅವರ ಮೇಲೆ ಯಾವುದೇ ಒತ್ತಡ ಇರಲಿಲ್ಲ. ಅವರಿಗೆ ಯಾವುದೇ ನೋಟಿಸು ನೀಡಿರಲಿಲ್ಲ’’ ಎಂದು ಉಪ ವಿಭಾಗೀಯ ದಂಡಾಧಿಕಾರಿ (ಎಸ್ಡಿಎಂ) ರಾಮಾವತಾರ್ ಮೀನಾ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಮನೆ ಕಳ್ಳತನ ಮಾಡಿ ಓಡಿ ಹೋದ ಕೇರ್ ಟೇಕರ್; AMT ಹಣ ಡ್ರಾ ಮಾಡಿ ಸಿಕ್ಕಿಬಿದ್ದ ಬಿಹಾರಿ ಚಾಂದಿನಿ!
ಬಾಣಸವಾಡಿ ಪೊಲೀಸರು ಕೆಲಸ ಮಾಡುತ್ತಿದ್ದ ಮನೆಯಲ್ಲಿ ಆಭರಣ ಮತ್ತು ಎಟಿಎಂ ಕಾರ್ಡ್ ಕದ್ದು ಹಣ ಡ್ರಾ ಮಾಡಿದ್ದ ಮಹಿಳೆಯನ್ನು ಬಂಧಿಸಿದ್ದಾರೆ. ಬಿಹಾರ ಮೂಲದ ಚಾಂದಿನಿ ಕುಮಾರಿ ಎಂಬುವರು ಗೌಸಿಯಾ ಬೇಗಂ ಅವರ ಮನೆಯಲ್ಲಿ ಕೇರ್ಟೇಕರ್ ಆಗಿ ಕೆಲಸ ಮಾಡುತ್ತಿದ್ದರು. ವಿದೇಶಕ್ಕೆ ತೆರಳಿದ್ದ ಮನೆಯ ಮಾಲೀಕರ ಅನುಪಸ್ಥಿತಿಯಲ್ಲಿ ಈ ಕೃತ್ಯ ಎಸಗಿದ್ದಾರೆ. 31 ಲಕ್ಷ ರೂ. ಮೌಲ್ಯದ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ.
2026ರ ಟಿ-20 ವಿಶ್ವಕಪ್ ಟೂರ್ನಿ: ಟಿಕೆಟ್ ಗಳ ಮಾರಾಟ ಆರಂಭಿಸಿದ ICC; ಟಿಕೆಟ್ ಬೆಲೆ ಎಷ್ಟು ಗೊತ್ತಾ?
ಹೊಸದಿಲ್ಲಿ, ಡಿ.11: ಮುಂದಿನ ವರ್ಷ ನಡೆಯಲಿರುವ ಪುರುಷರ ಟಿ-20 ವಿಶ್ವಕಪ್ ಟೂರ್ನಿಗಾಗಿ ಟಿಕೆಟ್ ಗಳ ಮಾರಾಟ ಆರಂಭವಾಗಿದೆ ಎಂದು ಅಂತರ್ರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್(ಐಸಿಸಿ)ಗುರುವಾರ ಪ್ರಕಟಿಸಿದೆ. ಪಂದ್ಯಾವಳಿಗೆ ಹೆಚ್ಚಿನ ಜನರು ಆಗಮಿಸುವಂತಾಗಲು ಆರಂಭಿಕ ಹಂತದ ಟಿಕೆಟ್ ದರವನ್ನು ಕಡಿಮೆಗೊಳಿಸಲಾಗಿದೆ. ಟಿಕೆಟ್ ಮಾರಾಟವು ಗುರುವಾರ ಸಂಜೆ 6:45ರಿಂದ ಆರಂಭವಾಗಿದೆ. ಟಿಕೆಟ್ ದರಗಳು ಭಾರತದಲ್ಲಿ 100 ರೂ. ಹಾಗೂ ಶ್ರೀಲಂಕಾದಲ್ಲಿ 1,000 ಎಲ್ಕೆಆರ್ನಿಂದ ಆರಂಭವಾಗಲಿದೆ ಎಂದು ಐಸಿಸಿ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದೆ. 10ನೇ ಆವೃತ್ತಿಯ ಟಿ-20 ಪಂದ್ಯಾವಳಿಯು ಭಾರತ ಹಾಗೂ ಶ್ರೀಲಂಕಾದ ಜಂಟಿ ಆತಿಥ್ಯದಲ್ಲಿ ಫೆಬ್ರವರಿ 7ರಿಂದ ಮಾರ್ಚ್ 8ರ ತನಕ ಎಂಟು ತಾಣಗಳಲ್ಲಿ ನಡೆಯಲಿದೆ. ಕೊಲಂಬೊದಲ್ಲಿ ಫೆಬ್ರವರಿ 7ರಂದು ನೆದರ್ಲ್ಯಾಂಡ್ಸ್ ಹಾಗೂ ಪಾಕಿಸ್ತಾನ ತಂಡಗಳು ಸ್ಪರ್ಧಾವಳಿಯ ಆರಂಭಿಕ ಪಂದ್ಯವನ್ನು ಆಡಲಿವೆ. ಆ ನಂತರ ಬಾಂಗ್ಲಾದೇಶ ತಂಡವು ಕೋಲ್ಕತಾದಲ್ಲಿ ವೆಸ್ಟ್ಇಂಡೀಸ್ ವಿರುದ್ಧ ಹಾಗೂ ಸಹ ಆತಿಥ್ಯವಹಿಸಿರುವ ಭಾರತ ತಂಡವು ಅಮೆರಿಕ ಕ್ರಿಕೆಟ್ ತಂಡವನ್ನು ಮುಂಬೈನಲ್ಲಿ ಮುಖಾಮುಖಿಯಾಗಲಿದೆ. ಅಮೆರಿಕ ಹಾಗೂ ವೆಸ್ಟ್ಇಂಡೀಸ್ ನಲ್ಲಿ 2024ರಲ್ಲಿ ನಡೆದಿದ್ದ ವಿಶ್ವಕಪ್ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದಿರುವ ಭಾರತ ತಂಡವು ಸದ್ಯ ಹಾಲಿ ಚಾಂಪಿಯನ್ ಆಗಿದೆ. ‘‘ಟಿಕೆಟ್ ಮಾರಾಟದ ಮೊದಲ ಹಂತವು ಒಂದು ಪ್ರಮುಖ ಮೈಲಿಗಲ್ಲು. ಮೊದಲ ಹಂತದ ಟಿಕೆಟ್ ಬೆಲೆಗಳನ್ನು ಕಡಿಮೆ ಮಾಡಿದ್ದೇವೆ. 100 ರೂ. ಹಾಗೂ 1,000 ಎಲ್ಕೆಆರ್ನಿಂದ ಟಿಕೆಟ್ ದರ ಆರಂಭವಾಗಲಿದೆ. 2 ಮಿಲಿಯನ್ಗಿಂತಲೂ ಹೆಚ್ಚು ಟಿಕೆಟ್ಗಳು ಲಭ್ಯವಿದೆ. ಪ್ರೇಕ್ಷಕರಿಗೆ ಕ್ರೀಡಾಂಗಣದೊಳಗಿನ ಅನುಭವವನ್ನು ಹೆಚ್ಚಿಸುವ ಗುರಿಯನ್ನು ಹೊಂದಿದ್ದೇವೆ. 2026ರ ಐಸಿಸಿ ಪುರುಷರ ಟಿ20 ವಿಶ್ವಕಪ್ ಗಾಗಿ ನಮ್ಮ ದೃಷ್ಟಿಕೋನ ಸ್ಪಷ್ಟವಾಗಿದೆ’’ ಎಂದು ಐಸಿಸಿ ಸಿಇಒ ಸಂಜೋಗ್ ಗುಪ್ತಾ ತಿಳಿಸಿದ್ದಾರೆ. ವಿಶ್ವಕಪ್ ಟೂರ್ನಿಯಲ್ಲಿ 20 ತಂಡಗಳು ಭಾಗವಹಿಸಲಿದ್ದು, 55 ಪಂದ್ಯಗಳು ನಡೆಯಲಿದೆ. ಗ್ರೂಪ್ ಹಂತದ ಪಂದ್ಯಗಳ ಮೂಲಕ ಟೂರ್ನಿಯು ಆರಂಭವಾಗಲಿದೆ. ಅಹ್ಮದಾಬಾದ್ ನ ನರೇಂದ್ರ ಮೋದಿ ಸ್ಟೇಡಿಯಂ, ಚೆನ್ನೈನ ಎಂ.ಎ. ಚಿದಂಬರಂ ಕ್ರೀಡಾಂಗಣ, ಹೊಸದಿಲ್ಲಿಯ ಅರುಣ್ ಜೇಟ್ಲಿ ಸ್ಟೇಡಿಯಂ. ಮುಂಬೈನ ವಾಂಖೆಡೆ ಸ್ಟೇಡಿಯಂ, ಕೋಲ್ಕತಾದ ಈಡನ್ ಗಾರ್ಡನ್ಸ್, ಕೊಲಂಬೊದ ಆರ್. ಪ್ರೇಮದಾಸ ಸ್ಟೇಡಿಯಂ, ಕೊಲಂಬೊದ ಸಿಂಹಳೀಸ್ ಸ್ಪೋರ್ಟ್ಸ್ ಕ್ಲಬ್ ಕ್ರಿಕೆಟ್ ಗ್ರೌಂಡ್ ಹಾಗೂ ಕ್ಯಾಂಡಿಯ ಪಲ್ಲೆಕೆಲೆ ಇಂಟರ್ನ್ಯಾಶನಲ್ ಕ್ರಿಕೆಟ್ ಸ್ಟೇಡಿಯಂಗಳಲ್ಲಿ ವಿಶ್ವಕಪ್ ಪಂದ್ಯಗಳು ನಡೆಯಲಿವೆ.
ಬೆಂಗಳೂರಿನಿಂದ ಮತ್ತೆ 60 ವಿಮಾನಗಳ ಹಾರಾಟ ರದ್ದುಪಡಿಸಿದ ಇಂಡಿಗೊ
ಹೊಸದಿಲ್ಲಿ,ಡಿ.11: ಇಂಡಿಗೊ ವಿಮಾನ ಪ್ರಯಾಣಿಕರ ಗೋಳಾಟ ಮುಂದುವರಿದಿದ್ದು, ಗುರುವಾರ ಬೆಂಗಳೂರು ವಿಮಾನನಿಲ್ದಾಣದಲ್ಲಿ 60 ವಿಮಾನಗಳ ಹಾರಾಟವನ್ನು ಇಂಡಿಗೊ ವಾಯುಯಾನ ಸಂಸ್ಥೆ ರದ್ದುಗೊಳಿಸಿದೆ. ನೂತನ ಪೈಲಟ್ ಹಾಗೂ ಇತರ ಸಿಬ್ಬಂದಿಯ ಕರ್ತವ್ಯದ ನಿಯಮಾವಳಿಗಳ ಅನುಷ್ಠಾನಕ್ಕೆ ತರುವಲ್ಲಿ ವೈಫಲ್ಯ ಉಂಟಾಗಿರುವ ಹಿನ್ನೆಲೆಯಲ್ಲಿ ವ್ಯಾಪಕವಾಗಿ ಇಂಡಿಗೋ ಸಂಸ್ಥೆಯ ವಿಮಾನಗಳ ಸೇವೆಯಲ್ಲಿ ಅಡಚರಣೆ ಉಂಟಾಗಿದೆ. ನಾಗರಿಕ ವಾಯುಯಾನ ಮಹಾನಿರ್ದೇಶನಾಲಯ(ಡಿಜಿಸಿಎ)ವು ಗುರುವಾರ 1950 ವಿಮಾನಗಳ ಹಾರಾಟವನ್ನು ಪರಿಶೀಲನೆಗೊಳಿಪಡಿಸಿದರೂ, ಈ ವಿಮಾನಗಳ ಹಾರಾಟ ರದ್ದುಗೊಂಡಿದೆ. ಇಂಡಿಗೊ ವಾಯುಯಾನ ಸಂಸ್ಥೆಯು 60 ವಿಮಾನಗಳ ಹಾರಾಟವನ್ನು ರದ್ದುಪಡಿಸಿದೆ. ಬೆಂಗಳೂರಿನ ಆಗಮಿಸುವ 32 ವಿಮಾನಗಳು ಹಾಗೂ ನಿರ್ಗಮಿಸುವ 28 ವಿಮಾನಯಾನಗಳನ್ನು ರದ್ದುಪಡಿಸಲಾಗಿದೆ. ಈ ಮಧ್ಯೆ, ಇತ್ತೀಚೆಗೆ ವಿಮಾನಗಳ ನಿರ್ವಹಣೆಯಲ್ಲಿ ಉಂಟಾಗಿರುವ ಇಂಡಿಗೊ ಸಂಸ್ಥೆಯ ಸಿಇಓ ಪೀಟರ್ ಎಲ್ಬರ್ಸ್ ಅವರಿಗೆ ದತ್ತಾಂಶ ಸೇರಿದಂತೆ ಸಮಗ್ರ ವರದಿಯೊಂದನ್ನು ಸಲ್ಲಿಸುವಂತೆ ಹಾಗೂ ಗುರುವಾರ ಸಂಜೆ 3 ಗಂಟೆಯ ಒಳಗೆ ತನ್ನ ಮುಂದೆ ಹಾಜರಾಗುವಂತೆ ಸಮನ್ಸ್ ನೀಡಿದೆ. ಗುರುವಾರದಂದು ತನ್ನ 1950 ವಿಮಾನಗಳು ಕಾರ್ಯನಿರ್ವಹಿಸುವುದನ್ನು ನಿರೀಕ್ಷಿಸುವುದಾಗಿ ಇಂಡಿಗೋ ಸಂಸ್ಥೆ ಹೇಳಿಕೆಯೊಂದರಲ್ಲಿ ತಿಳಿಸಿತ್ತು. ಪ್ರಸಕ್ತ ಇಂಡಿಗೋ ಏರ್ಲೈನ್ಸ್ ದಿನಂಪ್ರತಿ, ಹಾಲಿ ಚಳಿಗಾಲದಲ್ಲಿ 2200 ವಿಮಾನಯಾನಗಳನ್ನು ನಿರ್ವಹಿಸಬೇಕಾಗಿತ್ತು. ಆದರೆ ಆ ಸಂಸ್ಥೆಯ ಕಾರ್ಯನಿರ್ವಹಣೆಯನ್ನು ಸುಸ್ಥಿರಗೊಳಿಸಲು ಹಾಗೂ ವಿಮಾನಯಾನಗಳ ರದ್ದತಿಯನ್ನು ಕನಿಷ್ಠಗೊಳಿಸುವುದಕ್ಕಾಗಿ ವಿಮಾನಹಾರಾಟವನ್ನು ಸರಕಾರವು ಶೇ.10ರಷ್ಟು ಕಡಿಮೆಗೊಳಿಸಿದೆ. ಬುಧವಾರದಂದು ಇಂಡಿಗೋ ದಿಲ್ಲಿ, ಬೆಂಗಳೂರು ಹಾಗೂ ಮುಂಬೈ ವಿಮಾನನಿಲ್ದಾಣಗಳಿಂದ 220 ವಿಮಾನಯಾನಗಳ ಹಾರಾಟವನ್ನು ರದ್ದುಪಡಿಸಿತ್ತು ದಿಲ್ಲಿಯಲ್ಲಿ ಅತ್ಯಧಿಕ 137 ವಿಮಾನಗಳ ಹಾರಾಟವು ರದ್ದುಗೊಂಡಿದ್ದವು.
ಮಂಗಳೂರು | ಹಣ ಹೂಡಿಕೆ ಹೆಸರಿನಲ್ಲಿ ವಂಚನೆ: ಪ್ರಕರಣ ದಾಖಲು
ಮಂಗಳೂರು,ಡಿ.11: ಹಣವನ್ನು ಹೂಡಿಕೆ ಮಾಡಿದರೆ ಹೆಚ್ಚಿನ ಲಾಭಾಂಶ ನೀಡುವುದಾಗಿ ಇನ್ಸ್ಟಾಗ್ರಾಂ ಮೂಲಕ ಪರಿಚಯವಾದ ವ್ಯಕ್ತಿ ಹೇಳಿದ್ದನ್ನು ನಂಬಿ ತಾನು 7.37 ಲಕ್ಷ ರೂ. ಕಳೆದುಕೊಂಡಿರುವುದಾಗಿ ವಂಚನೆಗೊಳಗಾದವರು ಸೆನ್ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. 2023ರಲ್ಲಿ ಇನ್ಸ್ಟಾಗ್ರಾಂ ಮೂಲಕ ಮುಹಮ್ಮದ್ ಫೈಝಾನ್ ಎಂಬಾತನ ಪರಿಚಯವಾಗಿತ್ತು. ಆತ ಆನ್ಲೈನ್ನಲ್ಲಿ ಹಣ ಹೂಡಿಕೆ ಮಾಡಿದರೆ 2-3 ವರ್ಷದಲ್ಲಿ ಹೂಡಿಕೆ ಮಾಡಿದ ಹಣದೊಂದಿಗೆ ಹೆಚ್ಚಿನ ಲಾಭಾಂಶ ನೀಡುವುದಾಗಿ ತಿಳಿಸಿದ್ದ. ಅದನ್ನು ನಂಬಿ ತಾನು ಮತ್ತು ತನ್ನ ತಂದೆಯ ಖಾತೆಯಿಂದ 2023ರ ಮಾ.3ರಿಂದ ಮೇ 15ರವರೆಗೆ ಹಂತ ಹಂತವಾಗಿ 5.30 ಲಕ್ಷ ರೂ. ವರ್ಗಾಯಿಸಿದ್ದೆವು. ಬಳಿಕ ತನ್ನ ಸ್ನೇಹಿತ ಕೂಡಾ 2023ರ ಫೆ.15ರಿಂದ 19ರವರೆಗೆ 2.07 ಲಕ್ಷ ರೂ. ವರ್ಗಾಯಿಸಿದ್ದ. 2026ಕ್ಕೆ ಹೂಡಿಕೆ ಮಾಡಿದ ಹಣದ ಮೆಚ್ಯೂರಿಟಿ ಹತ್ತಿರವಾಗುತ್ತಿರವ ಹಿನ್ನೆಲೆಯಲ್ಲಿ ಫೈಝಾನ್ ಗೆ ಕರೆ ಮಾಡಿದಾಗ ಆತನ ಮೊಬೈಲ್ ಸ್ವಿಚ್ ಆಫ್ ಆಗಿದೆ. ಇನ್ಸ್ಟಾಗ್ರಾಂ ಖಾತೆಯೂ ಬ್ಲಾಕ್ ಆಗಿರುವ ಕಾರಣ ಆತ ವಂಚಿಸಿರುವ ಬಗ್ಗೆ ಸಂಶಯವಾಗಿದೆ ಎಂದು ತಿಳಿಸಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
Pakistan | ISI ಮಾಜಿ ಮುಖ್ಯಸ್ಥ ಹಮೀದ್ ಗೆ 14 ವರ್ಷ ಜೈಲು ಶಿಕ್ಷೆ
ಇಸ್ಲಾಮಾಬಾದ್, ಡಿ.11: ಪಾಕಿಸ್ತಾನದ ಇಂಟರ್- ಸರ್ವಿಸಸ್ ಇಂಟೆಲಿಜೆನ್ಸ್(ಐಎಸ್ಐ) ಮಾಜಿ ಮುಖ್ಯಸ್ಥ ಫೈಜ್ ಹಮೀದ್ ಗೆ ಗುರುವಾರ ಮಿಲಿಟರಿ ನ್ಯಾಯಾಲಯ 14 ವರ್ಷ ಜೈಲುಶಿಕ್ಷೆ ವಿಧಿಸಿರುವುದಾಗಿ ಮೂಲಗಳನ್ನು ಉಲ್ಲೇಖಿಸಿ ಅಸೋಸಿಯೇಟೆಡ್ ಪ್ರೆಸ್ ವರದಿ ಮಾಡಿದೆ. ರಾಜಕೀಯ ಚಟುವಟಿಕೆಗಳಲ್ಲಿ ತೊಡಗಿರುವುದು ಮತ್ತು ಅಧಿಕೃತ ರಹಸ್ಯ ಕಾಯ್ದೆಯ ಉಲ್ಲಂಘನೆ ಸೇರಿದಂತೆ ಹಲವು ಆರೋಪಗಳಲ್ಲಿ ಹಮೀದ್ ಗೆ ಶಿಕ್ಷೆ ವಿಧಿಸಿರುವುದಾಗಿ ಫೀಲ್ಡ್ ಜನರಲ್ ಕೋರ್ಟ್ ಮಾರ್ಷಲ್ ನ ಹೇಳಿಕೆ ತಿಳಿಸಿದೆ. ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ನಿಕಟ ವಲಯದಲ್ಲಿ ಗುರುತಿಸಿಕೊಂಡಿದ್ದ ಹಮೀದ್ರನ್ನು ಕಳೆದ ವರ್ಷ `ಟಾಪ್ ಸಿಟಿ ಯೋಜನೆ'ಯ ಹಗರಣಕ್ಕೆ ಸಂಬಂಧಿಸಿ ಬಂಧಿಸಲಾಗಿತ್ತು. 2019ರಲ್ಲಿ ಆಸಿಮ್ ಮುನೀರ್ ರನ್ನು (ಪ್ರಸ್ತುತ ಪಾಕ್ ಸೇನಾ ಮುಖ್ಯಸ್ಥ) ಪದಚ್ಯುತಗೊಳಿಸಿ ಹಮೀದ್ರನ್ನು ನೇಮಕಗೊಳಿಸಿದ್ದು ಅವರು 2021ರವರೆಗೆ ಕಾರ್ಯ ನಿರ್ವಹಿಸಿದ್ದರು.
ಕೇವಲ ₹20 ಕೊಟ್ಟರೆ ನಿಮ್ಮ ಕುಟುಂಬಕ್ಕೆ ₹2 ಲಕ್ಷ ಭದ್ರತೆ – PMSBY ಯೋಜನೆಯ ಸಂಪೂರ್ಣ ವಿವರ.
ಸ್ನೇಹಿತರೆ ಇದೀಗ ಕೇಂದ್ರ ಸರ್ಕಾರ ಮಹತ್ವದ ಯೋಜನೆಯೊಂದನ್ನು(PMSBY – Pradhan Mantri Suraksha Bima Yojana) ಜಾರಿ ಮಾಡಿ ಹಲವು ದಿನಗಳಾಗಿದೆ. ಅಪಘಾತ ವಿಮೆಗಾಗಿ ಕೇಂದ್ರ ಸರಕಾರ ಎರಡು ಲಕ್ಷದ ವರೆಗೆ ವಿಮೆ ಪ್ರಯೋಜನ ನೀಡುತ್ತಿದೆ. ಬ್ಯಾಂಕ್ ಖಾತೆ ಹೊಂದಿರುವ ಪ್ರತಿಯೊಬ್ಬ ನಾಗರಿಕರೂ ಈ ಸೌಲಭ್ಯವನ್ನು ಪಡೆಯಬಹುದು. ಇದು ಯಾವುದೇ ಆದಾಯಕ್ಕೆ ಸೀಮಿತವಾದ ಯೋಜನೆ ಅಲ್ಲ. ಹಾಗಿದ್ರೆ ಯಾರು ಇದರ ಸದುಪಯೋಗ ಮಾಡಿಕೊಳ್ಳಬಹುದು? ಅರ್ಜಿ ಸಲ್ಲಿಸುವುದು ಹೇಗೆ? ಇದರ ಪ್ರಯೋಜನೆಗಳೇನು? ಎಲ್ಲ ಮಾಹಿತಿಯನ್ನು ತಿಳಿದುಕೊಳ್ಳಲು ಈ ಲೇಖನವನ್ನು ... Read more The post ಕೇವಲ ₹20 ಕೊಟ್ಟರೆ ನಿಮ್ಮ ಕುಟುಂಬಕ್ಕೆ ₹2 ಲಕ್ಷ ಭದ್ರತೆ – PMSBY ಯೋಜನೆಯ ಸಂಪೂರ್ಣ ವಿವರ. appeared first on Karnataka Times .
US Gold Card ಅನಾವರಣಗೊಳಿಸಿದ ಟ್ರಂಪ್
ವಾಷಿಂಗ್ಟನ್, ಡಿ.11: ಶ್ರೀಮಂತ ವಲಸಿಗರಿಗೆ ಅಮೆರಿಕಾದ ಪೌರತ್ವ ಒದಗಿಸುವ `ಯುಎಸ್ ಗೋಲ್ಡ್ ಕಾರ್ಡ್' ಅನ್ನು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅನಾವರಣಗೊಳಿಸಿದ್ದು ಗೋಲ್ಡ್ ಕಾರ್ಡ್ ಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆಗೆ ಶ್ವೇತಭವನದಲ್ಲಿ ಬುಧವಾರ ಅಧಿಕೃತವಾಗಿ ಚಾಲನೆ ನೀಡಿದ್ದಾರೆ. 1 ಮಿಲಿಯ ಅಮೆರಿಕನ್ ಡಾಲರ್ ಪಾವತಿಸಿದವರು ಗೋಲ್ಡ್ ಕಾರ್ಡ್ ಪಡೆದು ಅಮೆರಿಕಾದ ಪೌರತ್ವ ಗಳಿಸುವ ಯೋಜನೆಯಿದಾಗಿದೆ. `ಅಮೆರಿಕಾದಲ್ಲಿ ಪದವಿ ಪಡೆದ ಬಳಿಕ ಭಾರತ, ಚೀನಾ ಇತ್ಯಾದಿ ವಿದೇಶಗಳ ವಿದ್ಯಾರ್ಥಿಗಳು ಮನೆಗೆ ಮರಳಬೇಕಾಗುತ್ತದೆ. ಇದು ಬೇಸರದ ಮತ್ತು ನಾಚಿಕೆಗೇಡಿನ ಸಂಗತಿಯಾಗಿದೆ ಎಂದು ಈ ಸಂದರ್ಭ ಟ್ರಂಪ್ ಹೇಳಿದ್ದಾರೆ. ಅಮೆರಿಕಾಕ್ಕೆ ಗಣನೀಯ ಪ್ರಯೋಜನವನ್ನು ಒದಗಿಸುವ ವಲಸಿಗರಿಗೆ ರೂಪಿಸಲಾಗಿರುವ ಈ ವೀಸಾವು ಪೌರತ್ವಕ್ಕೆ ಹೊಸ ಮಾರ್ಗವನ್ನು ಸೃಷ್ಟಿಸುತ್ತದೆ. ಗೋಲ್ಡ್ ಕಾರ್ಡ್ ವೆಬ್ ಸೈಟ್ ಚಾಲನೆಯಲ್ಲಿದೆ ಮತ್ತು ಕಂಪೆನಿಗಳು ಅಮೆರಿಕಾದ ಉನ್ನತ ಕಂಪನಿಗಳಿಂದ ನೇಮಿಸಿಕೊಳ್ಳುವ ವಿದ್ಯಾರ್ಥಿಗಳನ್ನು ಗೋಲ್ಡ್ ಕಾರ್ಡ್ ಅನ್ನು ಖರೀದಿಸುವ ಮೂಲಕ ಅಮೆರಿಕಾದಲ್ಲೇ ಇರಿಸಿಕೊಳ್ಳಬಹುದು. ಇದು ಗ್ರೀನ್ ಕಾರ್ಡ್ ನ ಮತ್ತೊಂದು ರೂಪವಾಗಿದೆ. ಆದರೆ ಅದಕ್ಕಿಂತ ಉತ್ತಮ, ಹೆಚ್ಚು ಶಕ್ತಿಶಾಲಿ ಮತ್ತು ಮತ್ತು ಪೌರತ್ವಕ್ಕೆ ಬಲಿಷ್ಠ ಮಾರ್ಗ ಕಲ್ಪಿಸುವ ವ್ಯವಸ್ಥೆ. ನಮ್ಮ ದೇಶಕ್ಕೆ ಉತ್ತಮ ವ್ಯಕ್ತಿಗಳು ಬರುವುದು ಒಂದು ಕೊಡುಗೆಯಾಗಿದೆ, ಯಾಕೆಂದರೆ ಇವರು ಪ್ರಚಂಡ ವ್ಯಕ್ತಿಗಳಾಗಿರುತ್ತಾರೆ. ಕಂಪೆನಿಗಳು ಈಗ ಗೋಲ್ಡ್ ಕಾರ್ಡ್ ನ ಪ್ರಯೋಜನ ಪಡೆಯಬಹುದು. ಇದು ಅಮೆರಿಕಾದಲ್ಲಿ ಶಾಶ್ವತ ನಿವಾಸ ಕಲ್ಪಿಸುವ ಗ್ರೀನ್ ಕಾರ್ಡ್ ಗಿಂತಲೂ ಹೆಚ್ಚಿನ ಪ್ರಯೋಜನವನ್ನು ಹೊಂದಿರುತ್ತದೆ ಎಂದು ಟ್ರಂಪ್ ಹೇಳಿದ್ದಾರೆ.
Wd, Wd, Wd, Wd, Wd, Wd, Wd: ಒಂದೇ ಓವರ್ನಲ್ಲಿ 7 ವೈಡ್ ಎಸೆದ ಅರ್ಶದೀಪ್ ಸಿಂಗ್! ಲಯ ತಪ್ಪಿದ ಭಾರತದ ಬೌಲಿಂಗ್
India Vs South Africa- ಚುಟುಕು ಕ್ರಿಕೆಟ್ ನ ಸ್ಪೆಷಲಿಸ್ಟ್ ಬೌಲರ್ ಎಂದೇ ಹೆಸರಾಗಿರುವ ಅರ್ಶದೀಪ್ ಸಿಂಗ್ ಅವರು ಒಂದೇ ಓವರ್ ನಲ್ಲಿ 7 ವೈಡ ಎಸೆವ ಮೂಲಕ ಅನಗತ್ಯ ದಾಖಲೆಯನ್ನು ತಮ್ಮ ಹೆಸರಿಗೆ ಬರೆಸಿಕೊಂಡಿದ್ದಾರೆ. ಇನಿಂಗ್ಸ್ನ 11ನೇ ಓವರ್ ನಲ್ಲಿ ಒಟ್ಟು 18 ರನ್ ಬಿಟ್ಟುಕೊಟ್ಟ ಅವರು ಅದರಲ್ಲಿ 7 ರನ್ ಗಳನ್ನು ವೈಡ್ ನಲ್ಲೇ ಬಿಟ್ಟುಕೊಟ್ಟರು. ಒಟ್ಟಾರೆ ಭಾರತದ ಬೌಲರ್ ಗಳು 16 ವೈಡ್ ಗಳನ್ನು ಎಸೆದಿದ್ದಾರೆ.
ಮಂಗಳೂರು | ಗ್ರೀನ್ ವೀವ್ ವಿದ್ಯಾಸಂಸ್ಥೆಯಲ್ಲಿ ವಾರ್ಷಿಕ ಕ್ರೀಡಾಕೂಟ
ಮಂಗಳೂರು : ಜಮೀಯ್ಯತುಲ್ ಫಲಾಹ್ ಗ್ರೀನ್ ವೀವ್ ವಿದ್ಯಾಸಂಸ್ಥೆ ಅಡ್ಕರೆಪಡ್ಪುವಿನಲ್ಲಿ ವಾರ್ಷಿಕ ಕ್ರೀಡಾಕೂಟ 2025 ಕಾರ್ಯಕ್ರಮವನ್ನು ಮಂಗಳೂರು ನಗರ ಪೊಲೀಸ್ ಸಹಾಯಕ ಆಯುಕ್ತರಾದ ನಜ್ಮಾ ಫಾರೂಕಿ ಅವರು ಗಿಡಕ್ಕೆ ನೀರೆರೆಯುವ ಮೂಲಕ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ವಿದ್ಯಾರ್ಥಿಗಳಲ್ಲಿ ಶಿಸ್ತು, ಸಮಯ ಪಾಲನೆ ಹಾಗೂ ಸೋಲನ್ನು ಸವಾಲಾಗಿ ಸ್ವೀಕರಿಸುವ ಮನೋಭಾವ ಬೆಳೆಸಿದಲ್ಲಿ ನಮ್ಮ ಗುರಿಯನ್ನು ತಲುಪಲು ಸಹಕಾರಿಯಾಗುತ್ತದೆ. ಆ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಕಾನೂನನ್ನು ಅರಿತುಕೊಳ್ಳುವುದರ ಜೊತೆಗೆ ತಂದೆ, ತಾಯಿ ಮತ್ತು ಶಿಕ್ಷಕರೊಂದಿಗೆ ಗೌರವದಿಂದ ನಡೆದುಕೊಂಡಾಗ ಮಾತ್ರ ವಿದ್ಯಾರ್ಥಿಗಳಲ್ಲಿ ಉತ್ತಮ ವ್ಯಕ್ತಿತ್ವ ರೂಪುಗೊಳ್ಳುತ್ತದೆ ಎಂದು ಹೇಳಿದರು. ಕಾರ್ಯಕ್ರಮದ ಧ್ವಜಾರೋಹಣವನ್ನು ಕೊಣಾಜೆ ಪಂಚಾಯತ್ ಅಧ್ಯಕ್ಷೆಯಾದ ಗೀತಾ ಕುಂದರ್ ರವರು ನಿರ್ವಹಿಸಿದರು. ವಿದ್ಯಾರ್ಥಿಗಳ ಪಥಸಂಚಲನ ಗೌರವ ವಂದನೆಯನ್ನು ಜಮೀಯ್ಯತುಲ್ ಫಲಾಹ್ ಉಳ್ಳಾಲ ತಾಲೂಕು ಘಟಕದ ಅಧ್ಯಕ್ಷರಾದ ಅಬ್ದುರ್ರಹ್ಮಾನ್ ಕೋಡಿಜಾಲ್ ಸ್ವೀಕರಿಸಿದರು. ಕೋಶಾಧಿಕಾರಿ ವಿ.ಇಬ್ರಾಹೀಂ ನಡುಪದವು ಕ್ರೀಡಾ ಜ್ಯೋತಿಯನ್ನು ಸ್ವೀಕರಿಸಿದರು. ವೇದಿಕೆಯಲ್ಲಿ ಪಂಚಾಯತ್ ಮಾಜಿ ಅಧ್ಯಕ್ಷರಾದ ಚಂಚಲಾಕ್ಷಿ, ಸದಸ್ಯರಾದ ಹೈದರ್, ಝೊಹರಾ, ಮುಹಿಯುದ್ದೀನ್ ಜುಮಾ ಮಸೀದಿ ಅಧ್ಯಕ್ಷರಾದ ಜಾಫರ್, ಎಸ್.ಬಿ.ಸಿ ಅಧ್ಯಕ್ಷರಾದ ಅಸೈನಾರ್ ಎ.ಬಿ, ಉಪಾಧ್ಯಕ್ಷರಾದ ಮಾಲತಿ, ಪ್ರೌಢಶಾಲಾ ಮುಖ್ಯ ಶಿಕ್ಷಕಿಯಾದ ನಮಿತಾ ಬಿ.ಎನ್, ಪ್ರಾಥಮಿಕ ಶಾಲಾ ಶಿಕ್ಷಕಿಯಾದ ಸಿಂಧಿಯಾ ಲೂಸಿ ಮಸ್ಕರೇನಸ್ ಉಪಸ್ಥಿತರಿದ್ದರು. ಸಂಸ್ಥೆಯ ಸಂಚಾಲಕರಾದ ಪರ್ವೇಜ್ ಅಲಿಯವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಪ್ರಾಂಶುಪಾಲರಾದ ಅಬೂಬಕ್ಕರ್ ಕೆ. ವಂದಿಸಿದರು. ಗಣಿತ ಶಿಕ್ಷಕಿ ರಶ್ಮಿ ಎಸ್. ಕಾರ್ಯಕ್ರಮವನ್ನು ನಿರೂಪಿಸಿದರು.
ಮೌಖಿಕ ಸೂಚನೆ ನೀಡಿ ಠಾಣೆಗೆ ರೌಡಿಶೀಟರ್ ಕರೆಸಿಕೊಳ್ಳಲು ಬ್ರೇಕ್! ಪೊಲೀಸ್ ಇಲಾಖೆಗೆ ಹೈಕೋರ್ಟ್ ಮಹತ್ವದ ಸೂಚನೆ
ಮೌಖಿಕ ಆದೇಶದ ಮೂಲಕ ರೌಡಿಶೀಟರ್ಗಳನ್ನು ಪೊಲೀಸ್ ಠಾಣೆಗೆ ಕರೆಸುವುದಕ್ಕೆ ಹೈಕೋರ್ಟ್ ತಡೆ ನೀಡಿದೆ. ಸರಕಾರ ಸೂಕ್ತ ಪ್ರಕ್ರಿಯೆ ನಿಗದಿಪಡಿಸುವವರೆಗೆ, ಎಸ್ಎಂಎಸ್ ಅಥವಾ ವಾಟ್ಸ್ಆ್ಯಪ್ ಮೂಲಕ ಸೂಚನೆ ನೀಡಬಹುದು ಎಂದು ನ್ಯಾಯಾಲಯ ಆದೇಶಿಸಿದೆ. ಯಾವುದೇ ಅಪರಾಧದಲ್ಲಿ ಭಾಗಿಯಾಗದಿದ್ದರೆ, ಕೇವಲ ರೌಡಿಶೀಟ್ ಕಾರಣಕ್ಕೆ ಆಗಾಗ್ಗೆ ಕರೆಸುವಂತಿಲ್ಲ ಎಂದು ಸ್ಪಷ್ಟಪಡಿಸಿದೆ.
ಪ್ರವಾಹದಲ್ಲಿ ಮುಳುಗಿದ ಗಾಝಾದ ಡೇರೆ: ಶಿಶು ಮೃತ್ಯು
ಸಾವಿರಾರು ಮಂದಿ ಸ್ಥಳಾಂತರ: ವರದಿ
ಸುಲಿಗೆಕೋರರ ಹಾವಳಿ | ಹೆದ್ದಾರಿಗಳಲ್ಲಿ ಸಂಚರಿಸುವ ವೇಳೆ ಎಚ್ಚರ ವಹಿಸಿ ಎಂದ ಗೃಹ ಇಲಾಖೆ
ಬೆಳಗಾವಿ(ಸುವರ್ಣವಿಧಾನಸೌಧ): ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳಲ್ಲಿ ಸ್ವಂತ ವಾಹನಗಳಲ್ಲಿ ಪ್ರಯಾಣ ಮಾಡುವ ವೇಳೆ ಎಚ್ಚರಿಕೆಯಿಂದ ಇರಬೇಕು. ನಿರ್ಜನ ಪ್ರದೇಶಗಳಲ್ಲಿ ಯಾರಾದರೂ ಕಾರು ನಿಲ್ಲಿಸಲು ಕೋರಿದರೆ ಎಚ್ಚರ ವಹಿಸಬೇಕು. ಹೆದ್ದಾರಿಗಳಲ್ಲಿ ದರೋಡೆ ಮತ್ತು ಸುಲಿಗೆಕೋರರ ಹಾವಳಿ ಇದ್ದು, ಕಳೆದ ಮೂರು ವರ್ಷಗಳಲ್ಲಿ 403 ಹೆದ್ದಾರಿ ದರೋಡೆ ಪ್ರಕರಣಗಳು ವರದಿಯಾಗಿವೆ ಎಂದು ಗೃಹ ಇಲಾಖೆ ತಿಳಿಸಿದೆ. ಗುರುವಾರ ಸದಸ್ಯರೊಬ್ಬರು ಕೇಳಿದ ಚುಕ್ಕೆಗುರುತಿಲ್ಲದ ಪ್ರಶ್ನೆಗೆ ಉತ್ತರ ನೀಡಿರುವ ಗೃಹ ಇಲಾಖೆ, ‘2023ರಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ 81 ಸುಲಿಗೆ ಹಾಗೂ 23 ದರೋಡೆ ಪ್ರಕರಣ ವರದಿಯಾಗಿದೆ. 2024ರಲ್ಲಿ 66 ಸುಲಿಗೆ ಹಾಗೂ 16 ದರೋಡೆ ಪ್ರಕರಣ ನಡೆದಿದೆ. 2025ರ ನವೆಂಬರ್ 15ರ ವರೆಗಿನ ಮಾಹಿತಿಯ ಪ್ರಕಾರ 51 ಸುಲಿಗೆ ಮತ್ತು 14 ದರೋಡೆ ಪ್ರಕರಣಗಳು ವರದಿಯಾಗಿವೆ ಎಂದು ಉಲ್ಲೇಖಿಸಲಾಗಿದೆ. ರಾಜ್ಯ ಹೆದ್ದಾರಿಯಲ್ಲಿ 2023ರಲ್ಲಿ 39 ಸುಲಿಗೆ, 17 ದರೋಡೆ ನಡೆದರೆ, 2024ರಲ್ಲಿ 35 ಸುಲಿಗೆ, 22 ದರೋಡೆಗಳು ನಡೆದಿವೆ. 2025ರಲ್ಲಿ 20 ಸುಲಿಗೆ ಪ್ರಕರಣ ಮತ್ತು 19 ದರೋಡೆ ಪ್ರಕರಣ ನಡೆದಿವೆ. ದರೋಡೆ ಪ್ರಕರಣಗಳನ್ನು ನಿಯಂತ್ರಣ ಮಾಡುವುದು ಪೊಲೀಸರಿಗೆ ಸವಾಲಿನ ಸಂಗತಿಯಾಗಿದೆ ಎಂದು ತಿಳಿಸಲಾಗಿದೆ. ನಿಯಮಿತ ತಪಾಸಣೆ: ಪೊಲೀಸ್ ಠಾಣಾ ಸರಹದ್ದುಗಳಲ್ಲಿ ಹಾಯ್ದು ಹೋಗುವ ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳಲ್ಲಿ ನಿಯಮಿತವಾಗಿ ಚೆಕ್ ಪೋಸ್ಟ್ ಗಳನ್ನು ನಿರ್ಮಿಸಿ, ಸಂಶಯಾಸ್ಪದ ವ್ಯಕ್ತಿಗಳನ್ನು ಹಾಗೂ ವಾಹನಗಳನ್ನು ತಪಾಸಣೆ ಮಾಡಲಾಗುತ್ತಿದೆ. ಅಲ್ಲದೆ, ರಾತ್ರಿ ಗಸ್ತು ಕರ್ತವ್ಯಕ್ಕೆ ಪ್ರತಿ ಠಾಣೆಗಳಿಗೆ ದ್ವಿಚಕ್ರ ವಾಹನಗಳನ್ನು ಹಂಚಿಕೆ ಮಾಡಲಾಗಿರುತ್ತದೆ. ವಾಹನಗಳಿಗೆ ಅಳವಡಿಸಲಾದ ಸೈರನ್ ಹಾಗೂ ರೆಡ್ಲೈಟ್ಗಳನ್ನು ಹಾಕಿಕೊಂಡು ರಾತ್ರಿ ಗಸ್ತನ್ನು ಮಾಡಲು ಸೂಚಿಸಲಾಗಿದೆ.
‘ಒಂದು ದೇಶ, ಒಂದು ಚುನಾವಣೆ’ ಮಸೂದೆ | ಪರಿಶೀಲನಾ ಸಮಿತಿಯ ಅಧಿಕಾರಾವಧಿ ವಿಸ್ತರಣೆ
ಹೊಸದಿಲ್ಲಿ, ಡಿ. 11: ಲೋಕಸಭೆ ಹಾಗೂ ವಿಧಾನಸಭೆಗೆ ಏಕ ಕಾಲದಲ್ಲಿ ಚುನಾವಣೆ ನಡೆಸುವುದನ್ನು ಪರಿಚಯಿಸಲು ಕೋರುವ ಮಸೂದೆಯನ್ನು ಪರಿಶೀಲಿಸುವ ಸಂಸದೀಯ ಸಮಿತಿಯ ಅಧಿಕಾರಾವಧಿಯನ್ನು ಲೋಕಸಭೆ ಗುರುವಾರ ವಿಸ್ತರಿಸಿದೆ. 2026ರ ಬಜೆಟ್ ಅಧಿವೇಶನದ ಕೊನೆಯ ವಾರದ ಮೊದಲ ದಿನದ ವರೆಗೆ ಸಾಂವಿಧಾನಿಕ (129ನೇ ತಿದ್ದುಪಡಿ) ಮಸೂದೆ, 2024 ಹಾಗೂ ಕೇಂದ್ರಾಡಾಳಿತ ಪ್ರದೇಶಗಳ ಕಾನೂನುಗಳ (ತಿದ್ದುಪಡಿ) ಮಸೂದೆ ಕುರಿತ ಜಂಟಿ ಸಮಿತಿ ಅಧಿಕಾರಾವಧಿಯನ್ನು ವಿಸ್ತರಿಸುವಂತೆ ಕೋರುವ ನಿರ್ಣಯವನ್ನು ಸಮಿತಿಯ ಅಧ್ಯಕ್ಷರಾದ ಪಿ.ಪಿ. ಚೌಧರಿ ಮಂಡಿಸಿದರು. ಈ ನಿರ್ಣಯವನ್ನು ಲೋಕಸಭೆ ಧ್ವನಿ ಮತದ ಮೂಲಕ ಅಂಗೀಕರಿಸಿತು. ಕಳೆದ ಡಿಸೆಂಬರ್ನಲ್ಲಿ ರೂಪುಗೊಂಡ ಬಳಿಕ ಈ ಸಮಿತಿ ಸಂವಿಧಾನ ಪರಿಣತರು, ಅರ್ಥಶಾಸ್ತ್ರಜ್ಞರು, ಕಾನೂನು ಆಯೋಗದ ಅಧ್ಯಕ್ಷ ದಿನೇಶ್ ಮಹೇಶ್ವರಿ ಹಾಗೂ ಇತರರನ್ನು ಭೇಟಿಯಾಗಿದೆ.
1996ರ ಮಾದಕ ವಸ್ತು ಇರಿಸಿದ ಪ್ರಕರಣ | ಸಂಜೀವ್ ಭಟ್ ಅರ್ಜಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್
ಹೊಸದಿಲ್ಲಿ, ಡಿ. 11: 1996ರ ಮಾದಕ ವಸ್ತು ಇರಿಸಿದ ಪ್ರಕರಣದಲ್ಲಿ ಐಪಿಎಸ್ ಅಧಿಕಾರಿ ಸಂಜೀವ್ ಭಟ್ ಅವರಿಗೆ ವಿಧಿಸಲಾದ 20 ವರ್ಷಗಳ ಜೈಲು ಶಿಕ್ಷೆಯನ್ನು ಅಮಾನತಿನಲ್ಲಿರಿಸಲು ಸುಪ್ರೀಂ ಕೋರ್ಟ್ ಗುರುವಾರ ನಿರಾಕರಿಸಿದೆ. ಇದರಿಂದ ಸಂಜೀವ್ ಭಟ್ ಅವರಿಗೆ ತೀವ್ರ ಹಿನ್ನಡೆ ಉಂಟಾಗಿದೆ. ನ್ಯಾಯಮೂರ್ತಿಗಳಾದ ಜೆ.ಕೆ. ಮಹೇಶ್ವರಿ ಹಾಗೂ ವಿಜಯ್ ಬಿಷ್ಣೋಯಿ ನೇತೃತ್ವದ ಸುಪ್ರೀಂ ಕೋರ್ಟ್ನ ಇಬ್ಬರು ನ್ಯಾಯಾಧೀಶರ ಪೀಠ, ‘‘ಶಿಕ್ಷೆಯನ್ನು ಅಮಾನತುಗೊಳಿಸುವಂತೆ ಕೋರಿದ ಅವರ ಅರ್ಜಿಯನ್ನು ಪರಿಗಣಿಸಲು ನಾವು ಸಿದ್ಧರಿಲ್ಲ’’ ಎಂದು ಹೇಳಿತು. ಗುಜರಾತ್ ನ್ಯಾಯಾಲಯ ಕಳೆದ ವರ್ಷ ಎನ್ಡಿಪಿಎಸ್ ಕಾಯ್ದೆ ಹಾಗೂ ಭಾರತೀಯ ದಂಡ ಸಂಹಿತೆಯ ನಿಯಮಗಳ ಅಡಿಯಲ್ಲಿ ಶಿಕ್ಷೆ ವಿಧಿಸಿರುವುದನ್ನು ಪ್ರಶ್ನಿಸಿ ಸಂಜೀವ್ ಭಟ್ ಅವರು ಮೇಲ್ಮನವಿ ಸಲ್ಲಿಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿ ಅವರನ್ನು 2018ರಲ್ಲಿ ಬಂಧಿಸಲಾಗಿತ್ತು. 1990ರಲ್ಲಿ ನಡೆದ ಪ್ರಭುದಾಸ್ ವೈಷ್ಣನಿ ಎಂಬವರ ಕಸ್ಟಡಿ ಸಾವಿಗೆ ಸಂಬಂಧಿಸಿದ ಇನ್ನೊಂದು ಪ್ರಕರಣದಲ್ಲಿ ಸಂಜೀವ್ ಭಟ್ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದಾರೆ.
ಅಮೆರಿಕದ ಕೇಂದ್ರೀಯ ಬ್ಯಾಂಕ್ನಿಂದ ಬಡ್ಡಿ ದರ ಕಡಿತ, ಭಾರತದ ಮೇಲೆ ಏನು ಪರಿಣಾಮ?
ಅಮೆರಿಕದ ಫೆಡರಲ್ ರಿಸರ್ವ್ ಸತತ ಮೂರನೇ ಬಾರಿ ಬಡ್ಡಿದರವನ್ನು ಶೇಕಡಾ 0.25ರಷ್ಟು ಇಳಿಸಿದೆ. ಹಣದುಬ್ಬರ ನಿಯಂತ್ರಣಕ್ಕೆ ಬರುತ್ತಿರುವ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದ್ದು, ದೇಶದ ಆರ್ಥಿಕತೆಗೆ ಬೆಂಬಲ ನೀಡುವುದು ಮತ್ತು ಉದ್ಯೋಗ ಸೃಷ್ಟಿಗೆ ಒತ್ತು ನೀಡುವುದು ಇದರ ಉದ್ದೇಶವಾಗಿದೆ. ಮುಂದಿನ ವರ್ಷವೂ ಬಡ್ಡಿದರ ಕಡಿತವಾಗುವ ನಿರೀಕ್ಷೆಯಿದೆ.
2 ವರ್ಷಗಳಲ್ಲಿ ವಿಮಾನಗಳ GPS ಮೇಲೆ ಸೈಬರ್ ದಾಳಿಯ 1900ಕ್ಕೂ ಅಧಿಕ ಘಟನೆಗಳು ವರದಿ: ಲೋಕಸಭೆಗೆ ತಿಳಿಸಿದ ಕೇಂದ್ರ ಸರಕಾರ
ಹೊಸದಿಲ್ಲಿ, ಡಿ. 11: 2023 ನವೆಂಬರ್ನಿಂದ ಎರಡು ವರ್ಷಗಳ ಕಾಲ ದೇಶದ ವಿವಿಧ ವಿಮಾನ ನಿಲ್ದಾಣಗಳಲ್ಲಿ ವಿಮಾನಗಳ ಜಿಪಿಎಸ್ ಮೇಲೆ ಸೈಬರ್ ದಾಳಿ ನಡೆದ 1,951ಕ್ಕೂ ಅಧಿಕ ಘಟನೆಗಳು ವರದಿಯಾಗಿವೆ ಎಂದು ಸರಕಾರ ಗುರುವಾರ ತಿಳಿಸಿದೆ. ನಾಗರಿಕ ವಿಮಾನ ಯಾನ ಖಾತೆಯ ಸಹಾಯಕ ಸಚಿವ ಮುರಳೀಧರ ಮೊಹೋಲ್ ಲೋಕಸಭೆಗೆ ನೀಡಿದ ಲಿಖಿತ ಪ್ರತಿಕ್ರಿಯೆಯಲ್ಲಿ, ‘‘ಡಿಜಿಸಿಎ ಸುತ್ತೋಲೆ ಪ್ರಕಟಿಸಿದ ಬಳಿಕ ವರದಿಯಾದ (2023 ನವೆಂಬರ್ನಿಂದ 2025 ನವೆಂಬರ್)ಜಿಪಿಎಸ್ ಹಸ್ತಕ್ಷೇಪದ ಒಟ್ಟು ಪ್ರಕರಣಗಳು 1,951’’ ಎಂದು ಹೇಳಿದ್ದಾರೆ. ವಾಯು ಪ್ರದೇಶದಲ್ಲಿ ಜಿಎನ್ಎಸ್ಎಸ್ನ ಮೇಲೆ ಸೈಬರ್ ದಾಳಿಗೆ ಸಂಬಂಧಿಸಿ ನಾಗರಿಕ ವಿಮಾನ ಯಾನ ಪ್ರಧಾನ ನಿರ್ದೇಶನಾಲಯ (ಡಿಜಿಸಿಎ) 2023 ನವೆಂಬರ್ನಲ್ಲಿ ಸಲಹಾ ಸುತ್ತೋಲೆ ಪ್ರಕಟಿಸಿದ ಬಳಿಕ ಜಿಪಿಎಸ್ ಮೇಲೆ ಸೈಬರ್ ದಾಳಿಯ ಬಗ್ಗೆ ವರದಿಯಾಗಲು ಆರಂಭವಾಗಿದೆ ಎಂದು ಸಚಿವರು ತಿಳಿಸಿದ್ದಾರೆ. ಜಿಪಿಎಸ್ನ ಮೇಲೆ ದಾಳಿ ನಡೆಸಿದ ಘಟನೆಗಳು ದಿಲ್ಲಿ, ಮುಂಬೈ, ಕೋಲ್ಕತಾ, ಅಮೃತಸರ, ಹೈದರಾಬಾದ್, ಬೆಂಗಳೂರು ಹಾಗೂ ಚೆನ್ನೈ ವಿಮಾನ ನಿಲ್ದಾಣಗಳಲ್ಲಿ ವರದಿಯಾಗಿವೆ.
Maharashtra | 3 ತಿಂಗಳಲ್ಲಿ 766ಕ್ಕೂ ಅಧಿಕ ರೈತರು ಆತ್ಮಹತ್ಯೆ: ಎನ್ಸಿಪಿ-ಎಸ್ಸಿಪಿ ಸಂಸದೆ ಫೌಝಿಯಾ ಖಾನ್
ಹೊಸದಿಲ್ಲಿ, ಡಿ. 11: ಮಹಾರಾಷ್ಟ್ರದಲ್ಲಿ ಕಳೆದ ಮೂರು ತಿಂಗಳಲ್ಲಿ 766ಕ್ಕೂ ಅಧಿಕ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಎನ್ಸಿಪಿ-ಎಸ್ಸಿಪಿ ಸಂಸದೆ ಫೌಝಿಯಾ ಖಾನ್ ರಾಜ್ಯಸಭೆಯಲ್ಲಿ ಗುರುವಾರ ಹೇಳಿದ್ದಾರೆ. ಸರಕಾರ ರೈತರ ಬಗ್ಗೆ ಕಾಳಜಿ ವಹಿಸಲು ಆರಂಭಿಸುವುದು ಯಾವಾಗ? ಎಂದು ಅವರ ಪ್ರಶ್ನಿಸಿದ್ದಾರೆ. ರಾಜ್ಯಸಭೆಯಲ್ಲಿ ಶೂನ್ಯ ವೇಳೆಯಲ್ಲಿ ಈ ಬಗ್ಗೆ ಪ್ರಶ್ನಿಸಿದ ಖಾನ್, ರೈತರ ಆತ್ಮಹತ್ಯೆಯಲ್ಲಿ ಮಹಾರಾಷ್ಟ್ರ ದೇಶದಲ್ಲೇ ಮುಂಚೂಣಿಯಲ್ಲಿದೆ ಎಂದರು. ಕೇವಲ ಮೂರು ತಿಂಗಳಲ್ಲಿ 766 ಸಾವುಗಳು ಸಂಭವಿಸಿವೆ ಎಂದು ರಾಜ್ಯ ಸರಕಾರ ವಿಧಾನ ಸಭೆಗೆ ತಿಳಿಸಿದೆ ಎಂದು ಅವರು ಹೇಳಿದರು. ಇದರಲ್ಲಿ 676 ಕುಟುಂಬಗಳು ಸರಕಾರದ ಪರಿಹಾರ ಸ್ವೀಕರಿಸಿವೆ. 200 ಕುಟುಂಬಗಳು ಪರಿಹಾರ ನಿರಾಕರಿಸಿವೆ ಎಂದು ಅವರು ಹೇಳಿದರು. ಸರಕಾರ 31,628 ಕೋ. ರೂ. ಪರಿಹಾರ ಪ್ಯಾಕೇಜ್ ಘೋಷಿಸಿದೆ. ಈ ವರ್ಷ ಭಾರೀ ಮಳೆ ಹಾಗೂ ವ್ಯಾಪಕ ನೆರೆಯ ಹಿನ್ನೆಲೆಯಲ್ಲಿ ನೆರವು ನೀಡುವ ಉದ್ದೇಶವನ್ನು ಈ ಪ್ಯಾಕೇಜ್ ಹೊಂದಿತ್ತು. ಆದರೆ, ವಾಸ್ತವ ಭಿನ್ನವಾಗಿತ್ತು ಎಂದು ಅವರು ಹೇಳಿದ್ದಾರೆ. ಹೆಚ್ಚುವರಿ ನೆರವು ಕೋರಿದ ಮಹಾರಾಷ್ಟ್ರದ ಪ್ರಸ್ತಾವವನ್ನು ಸಚಿವಾಲಯ ಸ್ವೀಕರಿಸಿದೆ ಎಂದು ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರು ಲೋಕಸಭೆಗೆ ತಿಳಿಸಿದ್ದಾರೆ ಎಂದು ಅವರು ಗಮನ ಸೆಳೆದರು. ರಾಜ್ಯ ವಿಪತ್ತು ನಿರ್ವಹಣಾ ನಿಧಿ (ಎಸ್ಡಿಆರ್ಎಫ್) ಅಡಿಯಲ್ಲಿ ರೈತರಿಗೆ 4,176 ಕೋ.ರೂ. ಮಂಜೂರು ಮಾಡಲಾಗಿದೆ. ಇದರಲ್ಲಿ ಕೇಂದ್ರದ ಪಾಲು 3,180 ಕೋ.ರೂ. 1,13,455 ರೈತರ ಬ್ಯಾಂಕ್ ಖಾತೆಗಳಿಗೆ 82 ಕೋ. ರೂ. ಜಮೆ ಮಾಡಲಾಗಿದೆ ಎಂದು ಖಾನ್ ಅವರು ಚೌಹಾಣ್ ಅವರ ಪ್ರತಿಕ್ರಿಯೆ ಉಲ್ಲೇಖಿಸಿ ಹೇಳಿದರು.
ಅಮೆರಿಕ ಅಧ್ಯಕ್ಷ ಟ್ರಂಪ್ ಜೊತೆ ಮೋದಿ ಮಾತುಕತೆ; ಜಾಗತಿಕ ಶಾಂತಿ, ವ್ಯಾಪಾರ ಒಪ್ಪಂದಕ್ಕೆ ಆದ್ಯತೆ
ರಷ್ಯಾದಿಂದ ತೈಲ ಖರೀದಿ ಬೆನ್ನಲ್ಲೇ ಭಾರತದ ಮೇಲೆ ಅಮೆರಿಕದ ಟ್ರಂಪ್ ಸರ್ಕಾರ ಶೇ.50ಸುಂಕ ವಿಧಿಸಿತ್ತು. ಆ ಬಿಕ್ಕಟ್ಟಿನ ಮಧ್ಯೆ ಕೆಲ ದಿನಗಳ ಹಿಂದೆ ಪುಟಿನ್ ಭಾರತಕ್ಕೆ ಬಂದಿದ್ದರೂ ಈ ಗೊಂದಲಗಳ ಮಧ್ಯೆ ಪ್ರಧಾನಿ ಮೋದಿ ಅವರು ಅಮೆರಿಕ ಅಧ್ಯಕ್ಷರ ಜೊತೆ ಆತ್ಮೀಯ ಮಾತುಕತೆ ನಡೆಸಿದ್ದಾಗಿ ಎಕ್ಸ್ನಲ್ಲಿ ಟ್ವೀಟ್ ಹಂಚಿಕೊಂಡಿದ್ದಾರೆ. ಜಾಗತಿಕ ಶಾಂತಿ ಮತ್ತು ಪ್ರಾದೇಶಿಕ ಬೆಳವಣಿಗೆಗಳ ಚರ್ಚಿಸಲಾಗಿದೆ ಎನ್ನಲಾಗುತ್ತಿದೆ
2026ರ ಟಿ-20 ವಿಶ್ವಕಪ್ ಟೂರ್ನಿಯ ಟಿಕೆಟ್ ಗಳ ಮಾರಾಟ ಆರಂಭ
ಹೊಸದಿಲ್ಲಿ, ಡಿ.11: ಮುಂಬರುವ 2026ರ ಆವೃತ್ತಿಯ ಟಿ-20 ವಿಶ್ವಕಪ್ ಟೂರ್ನಿಗಾಗಿ ಟಿಕೆಟ್ಗಳ ಮಾರಾಟ ಆರಂಭವಾಗಿದೆ ಎಂದು ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್(ಐಸಿಸಿ)ಗುರುವಾರ ಪ್ರಕಟಿಸಿದೆ. ಕ್ರಿಕೆಟ್ ಅಭಿಮಾನಿಗಳು ಗುರುವಾರ ಸಂಜೆ 6:45ರಿಂದ ಪಂದ್ಯಗಳ ಟಿಕೆಟ್ಗಳನ್ನು ಖರೀದಿಸಲು ಆರಂಭಿಸಬಹುದು ಎಂದು ಐಸಿಸಿ ಸಾಮಾಜಿಕ ಮಾಧ್ಯಮದಲ್ಲಿ ನೀಡಿರುವ ಹೇಳಿಕೆಯೊಂದರಲ್ಲಿ ತಿಳಿಸಿದೆ. 10ನೇ ಆವೃತ್ತಿಯ ಟಿ-20 ಪಂದ್ಯಾವಳಿಯು ಭಾರತ ಹಾಗೂ ಶ್ರೀಲಂಕಾದ ಜಂಟಿ ಆತಿಥ್ಯದಲ್ಲಿ ಫೆಬ್ರವರಿ 7ರಿಂದ ಮಾರ್ಚ್ 8ರ ತನಕ ನಡೆಯಲಿದೆ. ಕೊಲಂಬೊದಲ್ಲಿ ಫೆಬ್ರವರಿ 7ರಂದು ನೆದರ್ಲ್ಯಾಂಡ್ಸ್ ಹಾಗೂ ಪಾಕಿಸ್ತಾನ ತಂಡಗಳು ಸ್ಪರ್ಧಾವಳಿಯ ಆರಂಭಿಕ ಪಂದ್ಯವನ್ನು ಆಡಲಿವೆ. ಆ ನಂತರ ಬಾಂಗ್ಲಾದೇಶ ತಂಡವು ವೆಸ್ಟ್ಇಂಡೀಸ್ ವಿರುದ್ಧ ಹಾಗೂ ಸಹ ಆತಿಥ್ಯವಹಿಸಿರುವ ಭಾರತ ತಂಡವು ಅಮೆರಿಕ ಕ್ರಿಕೆಟ್ ತಂಡವನ್ನು ಮುಖಾಮುಖಿಯಾಗಲಿದೆ. ಅಮೆರಿಕ ಹಾಗೂ ವೆಸ್ಟ್ಇಂಡೀಸ್ನಲ್ಲಿ 2024ರಲ್ಲಿ ನಡೆದಿದ್ದ ವಿಶ್ವಕಪ್ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದಿರುವ ಭಾರತ ತಂಡವು ಸದ್ಯ ಹಾಲಿ ಚಾಂಪಿಯನ್ ಆಗಿದೆ.

18 C