ಬೀದರ್ , ಏಪ್ರಿಲ್ 28: ಜಮ್ಮು-ಕಾಶ್ಮೀರದ ಪಹಲ್ಗಾಮ್ ನಲ್ಲಿ ಪ್ರವಾಸಿಗರ ಗುಂಡಿನ ದಾಳಿಯಲ್ಲಿ ಕರ್ನಾಟಕದ ಇಬ್ಬರು ಸೇರಿದಂತೆ 26 ಜನ ಬಲಿಯಾಗಿದ್ದಾರೆ. ಪಾಕಿಸ್ತಾನದ ಮೇಲೆ ಯುದ್ಧ ಅನಿವಾರ್ಯ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೇಳಿಕೆಗೆ ಬಿಜೆಪಿ ಉಚ್ಚಾಟಿತ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಕಾಶ್ಮೀರಕ್ಕೆ ಸಿದ್ದರಾಮಯ್ಯ ಮಗ, ಎಚ್ ಸಿ ಮಹಾದೇವಪ್ಪ ಮಗ, ಜಮೀರ
'ಕೆಟ್ಟ ಮೇಲಾದರೂ ಸಿಎಂಗೆ ಬುದ್ಧಿ ಬಂತಲ್ಲ, ಕನ್ನಡಿಗರು ತಲೆ ತಗ್ಗಿಸುವ ಹೇಳಿಕೆ ಕೊಡಬೇಡಿ'
ಪಾಕಿಸ್ತಾನದ ಜೊತೆ ಯುದ್ಧ ಮಾಡುವ ಅಗತ್ಯವಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದರು ಎನ್ನಲಾದ ಹೇಳಿಕೆಯು ಭಾರಿ ವಿವಾದ ಸೃಷ್ಟಿಸಿತ್ತು. ಬಳಿಕ ನಾನು ಆ ರೀತಿ ಹೇಳಲಿಲ್ಲ ಎಂದು ಸಿದ್ದರಾಮಯ್ಯ ಯೂಟರ್ನ್ ಹೊಡೆದಿದ್ದಾರೆ. ಈ ಬಗ್ಗೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರು ಲೇವಡಿ ಮಾಡಿದ್ದು, ಅಡಿಕೆಗೆ ಹೋದ ಮಾನ ಆನೆ ಕೊಟ್ಟರೂ ಬರುವುದಿಲ್ಲ ಸಿಎಂ ಸಿದ್ದರಾಮಯ್ಯನವರೇ ಎಂದು
ಕಲಬುರಗಿ | ಯುಪಿಎಸ್ಸಿ ಪರೀಕ್ಷೆಯಲ್ಲಿ 984ನೇ ರ್ಯಾಂಕ್ಗಳಿಸಿದ ಮೋಹನ ಪಾಟೀಲ್ಗೆ ಸನ್ಮಾನ
ಕಲಬುರಗಿ : ಇತ್ತೀಚೆಗೆ ಪ್ರಕಟವಾದ ಯುಪಿಎಸ್ಸಿ ಪರೀಕ್ಷೆಯಲ್ಲಿ 984ನೇ ರ್ಯಾಂಕ್ ಪಡೆದ ಕಮಲಾಪೂರ ತಾಲೂಕಿನ ಡೋರ ಜಂಬಗಾ ಗ್ರಾಮದ ಮೋಹನ ಸಂಗಣ್ಣಗೌಡ ಪಾಟೀಲ್ ಅವರಿಗೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ನಗರದ ಕನ್ನಡ ಭವನದಲ್ಲಿ ರವಿವಾರ ಹಮ್ಮಿಕೊಂಡ ಅಭಿನಂದನಾ ಸಮಾರಂಭದಲ್ಲಿ ಅದ್ಧೂರಿಯಾಗಿ ಸತ್ಕರಿಸಿ ಅಭಿನಂದಿಸಲಾಯಿತು. ನೇತೃತ್ವ ವಹಿಸಿ ಮಾತನಾಡಿದ ಕಸಾಪ ಜಿಲ್ಲಾಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ, ಕಲ್ಯಾಣ ಕರ್ನಾಟಕ ಭಾಗದ ಅಪ್ಪಟ ಗ್ರಾಮೀಣ ಪ್ರತಿಭೆ ಇಂದು ಯುಪಿಎಸ್ಸಿ ಪರೀಕ್ಷೆಯಲ್ಲಿ ಸಾಧನೆ ಮಾಡಿರುವುದು ಹೆಮ್ಮೆಯ ಸಂಗತಿ. ಸರಕಾರಿ ಶಾಲೆಯಲ್ಲಿ ಓದಿ ರಾಷ್ಟ್ರ ಮಟ್ಟದ ಸಾಧನೆ ಮಾಡಿ ಜಿಲ್ಲೆಗೆ ಕೀರ್ತಿ ತಂದಿರುವ ಮೋಹನ ಪಾಟೀಲ್ ಅವರ ಪರಿಶ್ರಮ ನಿಜಕ್ಕೂ ಅಭಿನಂದನಾರ್ಹರು. ಈ ಭಾಗದ ಅಭಿವೃದ್ಧಿ ಕನಸು ನನಸು ಮಾಡುವಲ್ಲಿ ಮೋಹನ ಪಾಟೀಲರು ಉತ್ತಮ ನಾಗರಿಕ ಸೇವೆ ಮಾಡಲಿ ಎಂದು ಶುಭ ಹಾರೈಸಿದರು. ಸನ್ಮಾನ ಸ್ವೀಕರಿಸಿ ಮಾತನಾಡಿದ ಸಾಧಕ ಮೋಹನ ಎಸ್.ಪಾಟೀಲ್, ಗ್ರಾಮೀಣ ಪ್ರದೇಶದಿಂದ ಬಂದ ನನಗೆ ಯುಪಿಎಸ್ಸಿ ಪರೀಕ್ಷೆ ನನ್ನ ಕನಸಾಗಿತ್ತು. ಅದನ್ನು ಸತತ ಅಧ್ಯಯನ ಮತ್ತು ಪರಿಶ್ರಮದ ಮೂಲಕ ಗುರಿ ಮುಟ್ಟಲು ಸಾಧ್ಯವಾಯಿತು. ನನ್ನ ಈ ಸಾಧನೆಗೆ ಗೌರವಿಸಿ ಪ್ರೋತ್ಸಾಹಿಸಿದ್ದಕ್ಕೆ ಕನ್ನಡ ಸಾಹಿತ್ಯ ಪರಿಷತ್ತಿಗೆ ಚಿರಋಣಿಯಾಗಿರುವೆ ಎಂದರು. ಇದೇ ಸಂದರ್ಭದಲ್ಲಿ ಮಗನ ಸಾಧನೆಗೆ ಸಂತಸ ವ್ಯಕ್ತಪಡಿಸಿ ಅವರ ತಂದೆಯವರಾದ ಸಂಗಣ್ಣಗೌಡ ಪಾಟೀಲ ರು ಕೂಡ ಮಾತನಾಡಿದರು. ಪರಿಷತ್ತಿನ ಗೌರವ ಕಾರ್ಯದರ್ಶಿಗಳಾದ ಶಿವರಾಜ ಅಂಡಗಿ, ಧರ್ಮಣ್ಣ ಎಚ್ ಧನ್ನಿ, ಧರ್ಮರಾಜ ಜವಳಿ, ನಂದಿನಿ ಸನಬಾಳ ಮಾತನಾಡಿದರು. ಪ್ರಮುಖರಾದ ಹಣಮಂತಪ್ರಭು, ಬಾಬುರಾವ ಪಾಟೀಲ, ರಾಜೇಂದ್ರ ಮಾಡಬೂಳ, ರವಿಕುಮಾರ ಶಹಾಪುರಕರ್, ಶಿವಲೀಲಾ ಕಲಗುರ್ಕಿ, ಸವಿತಾ ನಾಸಿ, ರಮೇಶ ಡಿ ಬಡಿಗೇರ, ಗಣೇಶ ಚಿನ್ನಾಕಾರ, ದಿನೇಶ ಮದಕರಿ, ಮಹೇಶ ಚಿಂತನಪಳ್ಳಿ, ಮಧೂಸೂಧನ ಚಿಂತನಪಳ್ಳಿ, ಪ್ರಭವ ಪಟ್ಟಣಕರ್, ಮಲ್ಲಿನಾಥ ಸಂಗಶೆಟ್ಟಿ, ಚಂದ್ರಕಾoತ ಸೂರನ್ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಿದಿದ್ದರು. ಪ್ರತಿನಿತ್ಯ ನಮ್ಮ ಕನ್ನಡ ಭಾಷೆಯ ಬಳಕೆ ಪ್ರೋತ್ಸಾಹಿಸಬೇಕು. ಪಾಲಕರೂ ಕೂಡ ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಸೇರಿಸುವಂತಾಗಲಿ. ಕನ್ನಡ ಕೇವಲ ಭಾಷೆಯಲ್ಲ. ನದು ನಮ್ಮ ಸ್ವಾಭಿಮಾನದ ಸಂಕೇತವೂ ಹೌದು. ನಮ್ಮ ಉಸಿರು ಕನ್ನಡವಾಗಬೇಕು. ಕನ್ನಡ ಭಾಷೆ ಮತ್ತು ಸಂಸ್ಕೃತಿ ಅತ್ಯಂತ ಶ್ರೀಮಂತವಾದುದು. ನಾನು ಕೂಡ ಕನ್ನಡ ಸಾಹಿತ್ಯ ನನ್ನ ವಿದ್ಯಾಭ್ಯಾಸದಲ್ಲಿ ಐಚ್ಛಿಕ ವಿಷಯವನ್ನಾಗಿ ತೆಗೆದುಕೊಂಡಿದ್ದೇನೆ. ಆದ್ಧರಿಂದಲೇ ಈ ಸಾಧನೆ ಮಾಡಲು ಸಾಧ್ಯವಾಯಿತು. ಮೋಹನ ಸಂಗಣ್ಣಗೌಡ ಪಾಟೀಲ, (ಯುಪಿಎಸ್ಸಿ ತೇರ್ಗಡೆಯಾದ ಅಭ್ಯರ್ಥಿ)
DCM DK Shivakumar: ಮಂಗಳಸೂತ್ರ, ಜನಿವಾರ ನಿಷೇಧ ಕೇಂದ್ರ ಹಿಂಪಡೆಯಲಿ: ಡಿಸಿಎಂ ಡಿ.ಕೆ.ಶಿವಕುಮಾರ್
ಬೆಂಗಳೂರು, ಏಪ್ರಿಲ್ 28: ಈ ಬಿಜೆಪಿಯವರು ಹೇಳುವುದು ಒಂದು ಮಾಡುವುದು ಇನ್ನೊಂದು. ಇದೇ ಅವರ ಮುಖವಾಡ. ರೈಲ್ವೆ ಪರೀಕ್ಷೆಯಲ್ಲಿ ಮಂಗಳಸೂತ್ರ, ಜನಿವಾರ ತೆಗೆಯಬೇಕು ಎಂದು ಹೇಳಿರುವುದು ಸರಿಯಲ್ಲ. ಇದನ್ನು ಹಿಂಪಡೆಯಬೇಕು ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಆಗ್ರಹಿಸಿದರು.ರೈಲ್ವೆ ಪರೀಕ್ಷೆಯಲ್ಲಿ ಜನಿವಾರ, ತಾಳಿ ಧರಿಸುವುದನ್ನು ನಿಷೇಧ ಮಾಡಿರುವ ಕುರಿತು ಸದಾಶಿವನಗರದ ನಿವಾಸದ ಬಳಿ ಸೋಮವಾರ ಮಾಧ್ಯಮ ಪ್ರತಿನಿಧಿಗಳ ಜೊತೆಗೆ
ಟಿಸಿಎಸ್ ವರ್ಲ್ಡ್ 10ಕೆ ಬೆಂಗಳೂರು-2025: 30 ಸಾವಿರ ಮಂದಿ ಭಾಗಿ
ವ್ಯಾಟಿಕನ್ನಲ್ಲಿ ಕೈಗೆ ಸಿಕ್ಕ ಕುರ್ಚಿ ಎಳೆದು ಮಾತಿಗೆ ಕುಳಿತ ಟ್ರಂಪ್-ಝೆಲೆನ್ಸ್ಸಿ; ಪುಟಿನ್ ಬಗ್ಗೆ ಗುಸುಗುಸು!
ವ್ಯಾಟಿಕನ್ ಸಿಟಿಯಲ್ಲಿ ಪೋಪ್ ಫ್ರಾನ್ಸಿಸ್ ಅವರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ ಟ್ರಂಪ್ ಮತ್ತು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ, ಕೆಲ ಸಮಯ ಖಾಸಗಿ ಮಾತುಕತೆ ನಡೆಸಿದ್ದಾರೆ. ಉಭಯ ನಾಯಕರು ಅಮೆರಿಕ ಮುಂದಿಟ್ಟಿರುವ ಶಾಂತಿ ಪ್ರಸ್ತಾವನೆಯನ್ನು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಪರಿಗಣಿಸುತ್ತಿರುವ ರೀತಿಯನ್ನು ಟೀಕಿಸಿದ್ದಾರೆ. ಪುಟಿನ್ ಅವರನ್ನು ಬೇರೆ ರೀತಿಯಲ್ಲಿ ನೋಡಿಕೊಳ್ಳಬೇಕಿದೆ ಎಂಬ ಟ್ರಂಪ್ ಹೇಳಿಕೆ ಇದೀಗ ಜಾಗತಿಕ ಮಟ್ಟದಲ್ಲಿ ಗಮನ ಸೆಳೆದಿದೆ. ಟ್ರಂಪ್-ಝೆಲೆನ್ಸ್ಕಿ ಭೇಟಿಯ ವಿವರ ಇಲ್ಲಿದೆ.
ಸಾಹಿತಿಗಳಾಗಲೀ, ಸಾಹಿತ್ಯದ ಅಧ್ಯಾಪಕ, ಅಧ್ಯಾಪಕಿಯರಾಗಲೀ ಎಐ ಸವಾಲನ್ನು ತೀರಾ ಹಗುರಾಗಿ ನೋಡಿ ಆರಾಮಾಗಿರಲಾಗದು! ಅನುಭವ ಶೋಧನೆಯನ್ನು, ಅನುಭವ ಮಂಡನೆಯನ್ನು, ಕೃತಿ ರಚನೆಯನ್ನು; ಕೃತಿಗಳ ಓದು, ವ್ಯಾಖ್ಯಾನಗಳನ್ನು ಇನ್ನಷ್ಟು ಸೂಕ್ಷ್ಮವಾಗಿಸುವುದು, ಆಳವಾಗಿಸುವುದು ಹಾಗೂ ಸೃಜನಶೀಲಗೊಳಿಸುವುದೇ ಎಲ್ಲ ಬಗೆಯ ಕೃತಕ ಜಾಣತನಕ್ಕೆ ಉತ್ತರವಾಗಬಲ್ಲದೇನೋ!
ಚೆನ್ನೈನಲ್ಲಿ, ಅರಣ್ಯ ಇಲಾಖೆಯು ನೂರಾರು ಆಲಿವ್ ರಿಡ್ಲಿ ಆಮೆ ಮರಿಗಳನ್ನು ಸಮುದ್ರಕ್ಕೆ ಬಿಟ್ಟಿದೆ. ದುರ್ಬಲ ಪ್ರಭೇದವಾದ ಈ ಆಮೆಗಳನ್ನು ಸಂರಕ್ಷಿಸಲು ತಮಿಳುನಾಡು ಸರ್ಕಾರವು ಹಲವು ಕ್ರಮಗಳನ್ನು ಕೈಗೊಂಡಿದೆ. ಮೀನುಗಾರರು ನಿಯಮಗಳನ್ನು ಪಾಲಿಸದ ಕಾರಣ ಅನೇಕ ಆಮೆಗಳು ಸತ್ತಿದ್ದು, ಅವುಗಳ ಸಂತಾನೋತ್ಪತ್ತಿ ಸಮಯದಲ್ಲಿ ವಿಶೇಷ ಕಾಳಜಿ ವಹಿಸಲಾಗುತ್ತಿದೆ. ಆಮೆಗಳ ಸಂರಕ್ಷಣೆಗಾಗಿ ಹೊಸ ಯೋಜನೆಗಳನ್ನು ರೂಪಿಸಲಾಗಿದೆ.
IAS: ಐಎಎಸ್ ಅಧಿಕಾರಿ ಸ್ಮಿತಾ ಸಭರ್ವಾಲ್ ವರ್ಗಾವಣೆ
ಹೈದರಾಬಾದ್, ಏಪ್ರಿಲ್ 28: ತೆಲಂಗಾಣದ ಸರ್ಕಾರ ಆಡಳಿತ ಯಂತ್ರದಲ್ಲಿ ಬದಲಾವಣೆಗಳನ್ನು ಮಾಡಿದೆ. ಭಾನುವಾರ 20 ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಸರ್ಕಾರ ಆದೇಶವನ್ನು ಹೊರಡಿಸಿದೆ. 2001ನೇ ಬ್ಯಾಚ್ನ ಐಎಎಸ್ ಅಧಿಕಾರಿ ಸ್ಮಿತಾ ಸಭರ್ವಾಲ್ ಸಹ ವರ್ಗಾವಣೆಗೊಂಡಿದ್ದಾರೆ. ಕೆಲವು ದಿನಗಳ ಹಿಂದೆ ಐಎಎಸ್ ಅಧಿಕಾರಿ ಸ್ಮಿತಾ ಸಭರ್ವಾಲ್ ಎಐ ಚಿತ್ರವನ್ನು ಶೇರ್ ಮಾಡುವ ಮೂಲಕ ಸೈಬರ್ ಕ್ರೈಂ ಪೊಲೀಸರ
ಗ್ರೇಟರ್ ಬೆಂಗಳೂರು ಆಡಳಿತ ಕಾಯ್ದೆ: ಸೆಟ್ಬ್ಯಾಕ್ ನಿಯಮ ಸಡಿಲಿಕೆ; ಕಟ್ಟಡ ನಿರ್ಮಾಣ ಸುರಕ್ಷತೆಗೆ ಧಕ್ಕೆ ಎಂದ ತಜ್ಞರು
ಗ್ರೇಟರ್ ಬೆಂಗಳೂರು ಆಡಳಿತ ಕಾಯ್ದೆ ಹೊಸ ಕಾಯ್ದೆಯು ಕಟ್ಟಡಗಳ ಗಾತ್ರ ಮತ್ತು ಎತ್ತರವನ್ನು ನಿರ್ಧರಿಸುವ ನಿಯಮಗಳನ್ನು ಸಡಿಲಗೊಳಿಸುತ್ತದೆ. ವಸತಿ ಕಟ್ಟಡಗಳಿಗೆ ಶೇ 50 ರಷ್ಟು ಮತ್ತು ವಾಣಿಜ್ಯ ಕಟ್ಟಡಗಳಿಗೆ ಶೇ 25 ರಷ್ಟು ಕಡಿತವಾಗಬಹುದು. ಈ ಬದಲಾವಣೆಗಳು ನೆರೆಹೊರೆಯ ಆಸ್ತಿಗಳ ಸುರಕ್ಷತೆಗೆ ಧಕ್ಕೆ ತರಬಹುದು. ನಿಯಮ ಉಲ್ಲಂಘಿಸಿದ ಕಟ್ಟಡಗಳನ್ನು ಸಕ್ರಮಗೊಳಿಸಲು ಆಯುಕ್ತರಿಗೆ ಅಧಿಕಾರವಿದೆ. ಸಂಗ್ರಹಿಸಿದ ಹಣವನ್ನು ಮೂಲಸೌಕರ್ಯ ಅಭಿವೃದ್ಧಿಗೆ ಬಳಸಲಾಗುತ್ತದೆ. ಈ ನಿಯಮಗಳನ್ನು ಸದ್ಯಕ್ಕೆ ಜಾರಿ ಮಾಡಲಾಗುವುದಿಲ್ಲ ಎಂದು ಬಿಬಿಎಂಪಿ ಸ್ಪಷ್ಟಪಡಿಸಿದೆ.
ಪಹಲ್ಗಾಮ್ ದಾಳಿ | ಪಾಕಿಸ್ತಾನಕ್ಕೆ ಬೆಂಬಲ ಸೂಚಿಸಿದ ಚೀನಾ; ತ್ವರಿತ ತನಿಖೆಗೆ ಭಾರತಕ್ಕೆ ಆಗ್ರಹ
ಬೀಜಿಂಗ್: ಪಹಲ್ಗಾಮ್ ನಲ್ಲಿ ನಡೆದ ಭಯೋತ್ಪಾದಕ ದಾಳಿಗೆ ಸಂಬಂಧಿಸಿದಂತೆ ಪಾಕಿಸ್ತಾನಕ್ಕೆ ಚೀನಾ ಬೆಂಬಲ ಸೂಚಿಸಿದೆ. ಈ ಕುರಿತು ತ್ವರಿತ ತನಿಖೆ ನಡೆಯಬೇಕು ಎಂದು ಭಾರತವನ್ನು ಆಗ್ರಹಿಸಿದೆ. ಪಾಕಿಸ್ತಾನದ ಉಪ ಪ್ರಧಾನಿ ಹಾಗೂ ವಿದೇಶಾಂಗ ಸಚಿವ ಇಶಾಕ್ ದರ್ ಅವರೊಂದಿಗೆ ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ರವಿವಾರ ದೂರವಾಣಿ ಸಂಭಾಷಣೆ ನಡೆಸಿದ್ದಾರೆ ಎಂದು ಚೀನಾದ ಸರ್ಕಾರಿ ಸ್ವಾಮ್ಯದ ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ. ಪಹಲ್ಗಾಮ್ ದಾಳಿಯ ಬಳಿಕ ಭಾರತ ಹಾಗೂ ಪಾಕಿಸ್ತಾನ ನಡುವೆ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿದೆ. ಉಂಟಾಗಿರುವ ಬಿಕ್ಕಟ್ಟಿನ ಕುರಿತು ಚೀನಾ ಕಮ್ಯುನಿಸ್ಟ್ ಪಕ್ಷದ (ಸಿಪಿಸಿ) ಕೇಂದ್ರ ಸಮಿತಿ ಪಾಲಿಟಿಕಲ್ ಬ್ಯೂರೋದ ಸದಸ್ಯರೂ ಆಗಿರುವ ವಾಂಗ್ ಅವರಿಗೆ ಇಶಾಕ್ ದರ್ ವಿವರಣೆ ನೀಡಿದ್ದಾರೆ ಎಂದು ತಿಳಿದು ಬಂದಿದೆ. ಸಾರ್ವಭೌಮತ್ವ ಮತ್ತು ಭದ್ರತಾ ಹಿತಾಸಕ್ತಿಗಳನ್ನು ಕಾಪಾಡುವಲ್ಲಿ ತನ್ನ ಮಿತ್ರ ರಾಷ್ಟ್ರ ಪಾಕಿಸ್ತಾನಕ್ಕೆ ಚೀನಾ ಬೆಂಬಲ ವ್ಯಕ್ತಪಡಿಸಿದೆ. ಈ ಎಲ್ಲ ಬೆಳವಣಿಗೆಗಳನ್ನು ಅತ್ಯಂತ ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ. ಭಯೋತ್ಪಾದನೆ ಎದುರಿಸುವುದು ಇಡೀ ಜಗತ್ತಿನ ಸಮಾನ ಜವಾಬ್ದಾರಿಯಾಗಿದೆ. ಪಾಕ್ನ ಈ ಪ್ರಯತ್ನಗಳಿಗೆ ಬೀಜಿಂಗ್ನ ನಿರಂತರ ಬೆಂಬಲವನ್ನು ವಾಂಗ್ ಪುನರುಚ್ಚರಿಸಿದ್ದಾರೆ.
ಚಿಕಾಗೊದ ಹೇ ಮಾರ್ಕೆಟ್ ಚೌಕದಲ್ಲಿ ತಮ್ಮ ಬೇಡಿಕೆಗಳಿಗಾಗಿ ಶಾಂತಿಯುತ ಸಭೆ ನಡೆಸುತ್ತಿದ್ದ ಶ್ರಮಜೀವಿಗಳ ಮೇಲೆ ಅಪ್ರಚೋದಿತವಾಗಿ ಪೊಲೀಸರು ಗುಂಡಿನ ದಾಳಿ ನಡೆಸಿದರು. ಇದರ ಪರಿಣಾಮವಾಗಿ ಅನೇಕ ಮಂದಿ ಅಸುನೀಗಿದರು. ಅಂದು ಅಲ್ಲಿ ನೆತ್ತರಿನ ಹೊಳೆ ಹರಿಯಿತು. ಹರಿದ ನೆತ್ತರಿನಲ್ಲಿ ಕಾರ್ಮಿಕರು ತಮ್ಮ ಅಂಗಿಗಳನ್ನು ಅದ್ದಿ ಅದನ್ನೇ ಕೆಂಬಾವುಟ ಮಾಡಿದರು. ಅಂದಿನಿಂದ ಕೆಂಬಣ್ಣದ ಬಾವುಟ ಜಗತ್ತಿನ ದುಡಿಯುವ ವರ್ಗದ ಹೆಮ್ಮೆಯ ಹೋರಾಟದ ಬಾವುಟವಾಯಿತು.
ಮಂಗಳಸೂತ್ರ, ಜನಿವಾರ ನಿಷೇಧ ಕೇಂದ್ರ ಹಿಂಪಡೆಯಲಿ : ಡಿಸಿಎಂ ಡಿ.ಕೆ.ಶಿವಕುಮಾರ್
ಬೆಂಗಳೂರು : ʼಬಿಜೆಪಿಯವರು ಹೇಳುವುದು ಒಂದು ಮಾಡುವುದು ಇನ್ನೊಂದು. ಇದೇ ಅವರ ಮುಖವಾಡ. ರೈಲ್ವೆ ಪರೀಕ್ಷೆಯಲ್ಲಿ ಮಂಗಳಸೂತ್ರ, ಜನಿವಾರ ತೆಗೆಯಬೇಕು ಎಂದು ಹೇಳಿರುವುದು ಸರಿಯಲ್ಲ. ಇದನ್ನು ಹಿಂಪಡೆಯಬೇಕುʼ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಆಗ್ರಹಿಸಿದ್ದಾರೆ. ಸದಾಶಿವನಗರದ ನಿವಾಸದ ಬಳಿ ಶಿವಕುಮಾರ್ ಅವರು ಮಾಧ್ಯಮಗಳ ಪ್ರಶ್ನೆಗಳಿಗೆ ಸೋಮವಾರ ಬೆಳಿಗ್ಗೆ ಪ್ರತಿಕ್ರಿಯೆ ನೀಡಿದರು. ರೈಲ್ವೆ ಪರೀಕ್ಷೆಯಲ್ಲಿ ಜನಿವಾರ, ತಾಳಿ ಧರಿಸುವುದನ್ನು ನಿಷೇಧ ಮಾಡಿರುವ ಬಗ್ಗೆ ಕೇಳಿದಾಗ, ಧಾರ್ಮಿಕ ಸಂಕೇತಗಳಾಗಿ ಕಿವಿಯಲ್ಲಿ ಓಲೆ, ಮೂಗೂತಿ, ಮಂಗಳಸೂತ್ರ, ಜನಿವಾರ, ಉಡುದಾರ, ಹಣೆಬೊಟ್ಟು ಇರುತ್ತದೆ. ಇವುಗಳನ್ನು ಪರಿಶೀಲನೆ ಮಾಡಲಿ. ಆದರೆ ಅದನ್ನು ತೆಗೆಸುವುದು ಸರಿಯಲ್ಲ. ಈ ಹಿಂದೆ ಸಣ್ಣ, ಸಣ್ಣ ಉಪಕರಣಗಳನ್ನು ಬಳಸಿ ಪರೀಕ್ಷಾ ಅಕ್ರಮ ಎಸೆದ ಉದಾಹರಣೆಗಳನ್ನು ನೋಡಿದ್ದೇವೆ. ಇದರ ವಿರುದ್ಧ ಜನರೇ ಆಕ್ರೋಶ ವ್ಯಕ್ತಪಡಿಸಬೇಕು ಎಂದರು. ಬೆಲೆ ಏರಿಕೆಗೆ ಕೇಂದ್ರವೇ ಕಾರಣ : ಕೇಂದ್ರ ಸರ್ಕಾರದ ಬೆಲೆ ಏರಿಕೆ ನೀತಿಯಿಂದ ಜನರಿಗೆ ಆಗುತ್ತಿರುವ ತೊಂದರೆಗಳ ಬಗ್ಗೆ ಜನಜಾಗೃತಿ ಮೂಡಿಸಲು ಹಾಗೂ ಸಂವಿಧಾನ ರಕ್ಷಣೆಗೆ ಬೆಳಗಾವಿಯಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಈ ಪ್ರತಿಭಟನೆಯಲ್ಲಿ ನಾನು, ಸಿಎಂ ಸಿದ್ದರಾಮಯ್ಯ, ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲ ಅವರು ಭಾಗವಹಿಸುತ್ತಿದ್ದೇವೆ. ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಈ ಹೋರಾಟ ಮಾಡಲಿದ್ದೇವೆ ಎಂದರು. ಬಿಜೆಪಿಯವರು ಕೇಂದ್ರದಲ್ಲಿ ಇರುವ ಅವರದೇ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡಿ ಆಕ್ರೋಶ ವ್ಯಕ್ತಪಡಿಸಬೇಕು. ಏಕೆಂದರೆ ಅವರಿಂದಲೇ ಎಲ್ಲಾ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿರುವುದು. ನಾವು ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಕೇಂದ್ರ ಸರ್ಕಾರದ ಬೆಲೆ ಏರಿಕೆ ನೀತಿ ವಿರುದ್ಧ ಪ್ರತಿಭಟನೆ ನಡೆಸುತ್ತೇವೆ ಎಂದು ಹೇಳಿದರು.
ನಾಗ್ಪುರದಲ್ಲಿ ಕೆಫೆ ಮಾಲಕನ ಕೊಲೆ; ಕುಖ್ಯಾತ ಗ್ಯಾಂಗ್ನ ಐವರ ಬಂಧನ
ನಾಗ್ಪುರ: ಮಹಾರಾಷ್ಟ್ರದ ನಾಗ್ಪುರದಲ್ಲಿ ಕೆಫೆ ಮಾಲಕನ ಮೇಲೆ ಗುಂಡಿಕ್ಕಿ ಕೊಲೆ ಮಾಡಿದ ಆರೋಪದಲ್ಲಿ ಗ್ಯಾಂಗ್ನ ಐವರು ಸದಸ್ಯರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ. ಹಿರನ್ವಾರ್ ಗ್ಯಾಂಗ್ಗೆ ಸೇರಿದ ಆರೋಪಿಗಳು ಎಪ್ರಿಲ್ 15 ರಂದು ಕೆಫೆ ಮಾಲಕ ಅವಿನಾಶ್ ಭೂಸಾರಿ ಅವರನ್ನು ಗುಂಡಿಕ್ಕಿ ಕೊಂದಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಎಪ್ರಿಲ್ 14 ರಂದು ಅಂಬೇಡ್ಕರ್ ಜಯಂತಿ ಮೆರವಣಿಗೆಯ ಸಂದರ್ಭದಲ್ಲಿ ಎದುರಾಳಿ ಗ್ಯಾಂಗ್ನ ಸದಸ್ಯನನ್ನು ಕೊಲ್ಲಲು ಗ್ಯಾಂಗ್ ಯೋಜಿಸಿತ್ತು. ಆದರೆ ಅವರ ಟಾರ್ಗೆಟ್ ಕಾರ್ಯಕ್ರಮದಲ್ಲಿ ಕಂಡು ಬಂದಿರಲಿಲ್ಲ ಎಂದು ಉಪ ಪೊಲೀಸ್ ಆಯುಕ್ತ (ಡಿಸಿಪಿ) ರಾಹುಲ್ ಮಕ್ನಿಕರ್ ಹೇಳಿದ್ದಾರೆ. ಮರುದಿನ ರಾತ್ರಿ ಗೋಕುಲ್ಪೇತ್ ಪ್ರದೇಶದಲ್ಲಿ ಅವಿನಾಶ್ ಭೂಸಾರಿ ಅವರ ಕೆಫೆಯ ಹೊರಗೆ ಗ್ಯಾಂಗ್ ದಾಳಿ ನಡೆಸಿತು. ತನ್ನ ಮ್ಯಾನೇಜರ್ ಜೊತೆ ಐಸ್ ಕ್ರೀಮ್ ತಿನ್ನುತ್ತಿದ್ದಾಗ ಭೂಸಾರಿ ಅವರ ಮೇಲೆ ಹತ್ತಿರದಿಂದ ಐದು ಬಾರಿ ಗುಂಡು ಹಾರಿಸಲಾಯಿತು ಎಂದು ರಾಹುಲ್ ಮಕ್ನಿಕರ್ ವಿವರಿಸಿದರು. ಪೋಲಿಸರು ವಿಶೇಷ ತಂಡಗಳನ್ನು ರಚಿಸಿ ಭೋಪಾಲ್, ಕೋಲ್ಕತ್ತಾ, ವಿಶಾಖಪಟ್ಟಣಂ, ತಿರುಪತಿ ಮತ್ತು ಗೊಂಡಿಯಾದಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಪತ್ತೆಹಚ್ಚಿದ್ದಾರೆ. ಗ್ಯಾಂಗ್ ಸದಸ್ಯರು ತಮ್ಮ ಸ್ಥಳವನ್ನು ಮರೆಮಾಡಲು ಆಗಾಗ್ಗೆ ಮೊಬೈಲ್ ಫೋನ್ಗಳು ಮತ್ತು ಸಿಮ್ ಕಾರ್ಡ್ಗಳನ್ನು ಬದಲಾಯಿಸುತ್ತಿದ್ದುದು ಪೊಲೀಸರಿಗೆ ತಲೆ ನೋವಾಗಿ ಪರಿಣಮಿಸಿತ್ತು. ಕೆಲವು ಆರೋಪಿಗಳನ್ನು ನವೇಗಾಂವ್ ಬಂದ್ ರೈಲ್ವೆ ನಿಲ್ದಾಣದಲ್ಲಿ ಮತ್ತು ಇತರರನ್ನು ಗೊಂಡಿಯಾ ಬಸ್ ನಿಲ್ದಾಣದಲ್ಲಿ ಬಂಧಿಸಿರುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಆರೋಪಿಗಳನ್ನು ಶೈಲೇಶ್ ಅಲಿಯಾಸ್ ಬಂಟಿ ಹಿರಣ್ವರ್ (31), ಅಂಕಿತ್ ಹಿರಣ್ವರ್ (22), ಆದರ್ಶ್ ಅಲಿಯಾಸ್ ಗೋಟ್ಯಾ ವಾಲ್ಕೆ (20), ಶಿಬ್ಬು ರಾಜೇಶ್ ಯಾದವ್ (20), ರೋಹಿತ್ ಅಲಿಯಾಸ್ ಭಿಕ್ಕು ಮೆಶ್ರಮ್ (20) ಎಂದು ಗುರುತಿಸಲಾಗಿದೆ. ಅವರೆಲ್ಲರೂ ನಾಗ್ಪುರದ ಕಾಚಿಪುರ ನಿವಾಸಿಗಳು ಎಂದು ಪೊಲೀಸರು ತಿಳಿಸಿದ್ದಾರೆ. ಇನ್ನೂ ಆರು ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.
9 ವರ್ಷಗಳ ನಂತರ ಜೆಎನ್ಯುನಲ್ಲಿ ಎಬಿವಿಪಿಗೆ ಗೆಲುವು, ಆದರೆ ಎಡಪಂಥೀಯರದ್ದೇ ರಾಜ್ಯಭಾರ!
ಜೆಎನ್ಯು ವಿದ್ಯಾರ್ಥಿ ಸಂಘದ ಚುನಾವಣೆಯಲ್ಲಿ ಎಡಪಂಥೀಯ ವಿದ್ಯಾರ್ಥಿಗಳು ನಾಲ್ಕು ಪ್ರಮುಖ ಹುದ್ದೆಗಳಲ್ಲಿ ಮೂರನ್ನು ಗೆದ್ದಿದ್ದಾರೆ. ಎಬಿವಿಪಿ ಒಂದು ಸ್ಥಾನವನ್ನು ಗೆಲ್ಲುವ ಮೂಲಕ 9 ವರ್ಷಗಳ ನಂತರ ಜಯ ಸಾಧಿಸಿದೆ. ಎಐಎಸ್ಎ ಅಧ್ಯಕ್ಷ ಸ್ಥಾನವನ್ನು ಪಡೆದರೆ, ಡಿಎಸ್ಎಫ್ ಉಪಾಧ್ಯಕ್ಷ ಮತ್ತು ಪ್ರಧಾನ ಕಾರ್ಯದರ್ಶಿ ಹುದ್ದೆಗಳನ್ನು ಗೆದ್ದಿದೆ. ಎಬಿವಿಪಿ ಜಂಟಿ ಕಾರ್ಯದರ್ಶಿ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ.
ಪಹಲ್ಗಾಮ್ ದಾಳಿ: ಪಾಕಿಸ್ತಾನದ ಯೂಟ್ಯೂಬ್ ಚಾನೆಲ್ ಗಳಿಗೆ ಭಾರತದಲ್ಲಿ ನಿರ್ಬಂಧ
ಹೊಸದಿಲ್ಲಿ: 26 ಜನರ ಸಾವಿಗೆ ಕಾರಣವಾದ ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ, ಭಾರತ ಸರ್ಕಾರ, ಸೇನೆಯ ವಿರುದ್ಧ ಪ್ರಚೋದನಕಾರಿ, ಕೋಮು ಸೂಕ್ಷ್ಮ ವಿಷಯ ಮತ್ತು ಸುಳ್ಳು ನಿರೂಪಣೆಗಳನ್ನು ಹರಡಿದ್ದಕ್ಕಾಗಿ ಭಾರತವು 16 ಪಾಕಿಸ್ತಾನಿ ಯೂಟ್ಯೂಬ್ ಚಾನೆಲ್ಗಳನ್ನು ನಿಷೇಧಿಸಿದೆ ಎಂದು ಮೂಲಗಳು ತಿಳಿಸಿವೆ. ಇದರ ಜೊತೆಗೆ, 3.5 ಮಿಲಿಯನ್ಗಿಂತಲೂ ಹೆಚ್ಚು ಚಂದಾದಾರರನ್ನು ಹೊಂದಿರುವ ಶುಐಬ್ ಅಖ್ತರ್ ಅವರ ಯೂಟ್ಯೂಬ್ ಚಾನೆಲ್ ಅನ್ನೂ ನಿಷೇಧಿಸಲಾಗಿದೆ. ನಿಷೇಧಿತ ಯೂಟ್ಯೂಬ್ ಚಾನೆಲ್ ಗಳು ಸುಮಾರು 63 ಮಿಲಿಯನ್ ಚಂದಾದಾರರನ್ನು ಹೊಂದಿತ್ತು. ಡಾನ್ ನ್ಯೂಸ್, ಸಮಾ ಟಿವಿ, ಎಆರ್ವೈ ನ್ಯೂಸ್, ಬೋಲ್ ನ್ಯೂಸ್, ರಫ್ತಾರ್, ಜಿಯೋ ನ್ಯೂಸ್ ಮತ್ತು ಸುನೋ ನ್ಯೂಸ್ನಂತಹ ಪ್ರಮುಖ ಪಾಕಿಸ್ತಾನಿ ಸುದ್ದಿ ಚಾನೆಲ್ಗಳು ನಿಷೇಧಿತ ಪಟ್ಟಿಯಲ್ಲಿ ಸೇರಿವೆ. ಇರ್ಷಾದ್ ಭಟ್ಟಿ, ಅಸ್ಮಾ ಶಿರಾಜಿ, ಉಮರ್ ಚೀಮಾ ಮತ್ತು ಮುನೀಬ್ ಫಾರೂಕ್ ರಂತಹ ಪತ್ರಕರ್ತರು ನಡೆಸುತ್ತಿರುವ ಯೂಟ್ಯೂಬ್ ಚಾನೆಲ್ಗಳನ್ನೂ ಭಾರತೀಯ ಬಳಕೆದಾರರಿಗಾಗಿ ನಿರ್ಬಂಧಿಸಲಾಗಿದೆ. ದಿ ಪಾಕಿಸ್ತಾನ್ ರೆಫರೆನ್ಸ್, ಸಮಾ ಸ್ಪೋರ್ಟ್ಸ್, ಉಜೈರ್ ಕ್ರಿಕೆಟ್ ಮತ್ತು ರಾಜಿ ನಾಮಾ ಚಾನೆಲ್ ಗಳನ್ನೂ ನಿಷೇಧಿಸಲಾಗಿದೆ. ಎಪ್ರಿಲ್ 22 ರಂದು 25 ಪ್ರವಾಸಿಗರು ಮತ್ತು ಸ್ಥಳೀಯ ಕಾಶ್ಮೀರಿಯೊಬ್ಬರು ಕ್ರೂರವಾಗಿ ಬಲಿಯಾದ ಪಹಲ್ಗಾಮ್ ದಾಳಿಯ ನಂತರ, ಈ ಚಾನೆಲ್ಗಳು ತಪ್ಪು ಮಾಹಿತಿ, ಸುಳ್ಳು ನಿರೂಪಣೆಗಳು ಮತ್ತು ಕೋಮು ಉದ್ವಿಗ್ನತೆಯನ್ನು ಪ್ರಚೋದಿಸುತ್ತಿವೆ ಎಂದು ಕಂಡುಬಂದ ನಂತರ ಗೃಹ ಸಚಿವಾಲಯದ ಶಿಫಾರಸುಗಳ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ.
ಸಮಸ್ಯೆಗಳ ಆಗರವಾದ ರಾಜ್ಯದ ‘ಕಾರಾಗೃಹಗಳು’
ಬೆಂಗಳೂರು : ರಾಜ್ಯದ ಕಾರಾಗೃಹಗಳು ಭದ್ರತಾ ಸಮಸ್ಯೆ, ಸಿಬ್ಬಂದಿ ಕೊರತೆ, ಅಧಿಕಾರಿಗಳ ಲಂಚಗುಳಿತನ, ಅವ್ಯವಸ್ಥಿತ ಬ್ಯಾರಕ್ಗಳು, ಕೈದಿಗಳಿಗೆ ಕಳಪೆ ಊಟವೂ ಸೇರಿದಂತೆ ಹತ್ತು ಹಲವು ಸಮಸ್ಯೆಗಳ ಆಗರವಾಗಿವೆ ಎನ್ನುವ ಆರೋಪಗಳು ಕೇಳಿಬಂದಿವೆ. ರಾಜ್ಯದಲ್ಲಿ ಕೇಂದ್ರ ಕಾರಾಗೃಹ, ಜಿಲ್ಲೆ, ತಾಲೂಕು, ಬಯಲು ಬಂದಿಖಾನೆ ಸೇರಿ ಒಟ್ಟು 50 ಜೈಲುಗಳಿವೆ. ಅವುಗಳಲ್ಲಿ ವಿಚಾರಣಾಬಂದಿ ಮತ್ತು ಶಿಕ್ಷಾಬಂದಿಗಳು ಸೇರಿ ಸುಮಾರು 16 ಸಾವಿರಕ್ಕೂ ಅಧಿಕ ಕೈದಿಗಳಿದ್ದಾರೆ. ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಂತೂ ಅಗತ್ಯ ಸಾಮರ್ಥ್ಯಕ್ಕಿಂತ ಎರಡು ಪಟ್ಟು ಹೆಚ್ಚು ಕೈದಿಗಳಿದ್ದಾರೆ. ಎಲ್ಲ ಕಾರಾಗೃಹಗಳಲ್ಲೂ ವರ್ಷದಿಂದ ವರ್ಷಕ್ಕೆ ಕೈದಿಗಳ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಇವರ ಮೇಲೆ ನಿಗಾ ವಹಿಸಲು ಒಂದು ಪಾಳಿಗೆ 1:6ರ ಆಧಾರದಲ್ಲಿ ರಾಜ್ಯದಲ್ಲಿ 7 ಸಾವಿರ ಸಿಬ್ಬಂದಿ ಕಾರಾಗೃಹ ಇಲಾಖೆಯಲ್ಲಿ ಇರಬೇಕಿತ್ತು. ಆದರೆ, ಸುಮಾರು 2,848 ಮಂದಿ ಮಾತ್ರ ಕಾರ್ಯನಿರ್ವಹಿಸುತ್ತಿದ್ದು, ಸಿಬ್ಬಂದಿಯ ಕೊರತೆ ಎದ್ದು ಕಾಣುತ್ತಿದೆ ಎಂದು ಕಾರಾಗೃಹ ಇಲಾಖಾ ಮೂಲಗಳು ತಿಳಿಸಿವೆ. ಕೈದಿಗಳಲ್ಲಿ ಅಪರಾಧಿ ಮನಃಸ್ಥಿತಿ ಮತ್ತು ಮಾನಸಿಕ ಒತ್ತಡಗಳು ಹೆಚ್ಚಾಗಿ ಅವರು ಜೈಲಿನಲ್ಲೂ ದುರ್ವರ್ತನೆಗಳನ್ನು ಪ್ರದರ್ಶಿಸುತ್ತಾರೆ. ಸಿಬ್ಬಂದಿಯ ಮೇಲೆ ದಾಳಿ ಮಾಡುತ್ತಾರೆ, ಹೊರ ಹೋಗಲು ಪ್ರಯತ್ನಿಸುತ್ತಾರೆ. ಬೇಕಿದ್ದನ್ನು ಪಡೆಯಲು ಅಕ್ರಮಗಳ ದಾರಿ ಹುಡುಕುತ್ತಾರೆ. ಈ ಸವಾಲುಗಳನ್ನು ಎದುರಿಸಲು ಸಿಬ್ಬಂದಿ ಕೊರತೆ ಕಾಡಲಾರಂಭಿಸಿದೆ ಎನ್ನುತ್ತಾರೆ ಕಾರಾಗೃಹ ಇಲಾಖೆಯ ಅಧಿಕಾರಿಗಳು. ಕೈದಿಗಳನ್ನು ಸಮಾಜಮುಖಿಯನ್ನಾಗಿ ಪರಿವರ್ತಿಸಲು ಮನೋವೈದ್ಯರು ಬೇಕಾಗುತ್ತದೆ. ಆಪ್ತ ಸಮಾಲೋಚನೆ, ಸಲಹೆಗಳ ಅಗತ್ಯವಿರುತ್ತದೆ. ಆದರೆ, ರಾಜ್ಯದ ಬಹುತೇಕ ಜೈಲುಗಳಲ್ಲಿ ಆಪ್ತ ಸಮಾಲೋಚಕರ ಕೊರತೆಯಿದೆ. ಆದ್ದರಿಂದ ಜೈಲಿನ ನಿಯಮಾವಳಿಗಳಲ್ಲಿ ಬದಲಾವಣೆಯಾಗಬೇಕು. ಕೈದಿಗಳಿಗೆ ಕುಟುಂಬದ ಸಂಪರ್ಕವನ್ನು ಹೆಚ್ಚಿಸಬೇಕು ಎಂಬುದು ಇಲಾಖೆಯಲ್ಲಿ ಆಂತರಿಕವಾಗಿ ಕೇಳಿಬರುತ್ತಿರುವ ಪ್ರಮುಖ ಅಂಶವಾಗಿದೆ. ನಿಯಮಗಳ ಅನುಸಾರವಾಗಿ ವಿಚಾರಣಾಧೀನ ಕೈದಿಗಳಿಗೆ ವಾರದಲ್ಲಿ ಎರಡು ಬಾರಿ ಫೋನ್ ಕರೆ, ವೀಡಿಯೊ ಕರೆ ಮಾಡಲು ಅವಕಾಶವಿದೆ. ಶಿಕ್ಷಾಬಂದಿಗೆ ಇವೆಲ್ಲವೂ 15 ದಿನಕ್ಕೆ ಎರಡು ಬಾರಿ ಮಾತ್ರ. ಈ ನಿಯಮಗಳನ್ನು ಸರಳಗೊಳಿಸಬೇಕು. ಕುಟುಂಬದೊಂದಿಗೆ ಮಾತನಾಡಲು ಹೆಚ್ಚು ಅವಕಾಶ ಸಿಕ್ಕಂತೆಲ್ಲ ಕೈದಿಗಳ ಮಾನಸಿಕ ಒತ್ತಡ ಕಡಿಮೆಯಾಗುತ್ತದೆ. ಜೈಲಿನಲ್ಲಿರುವ ಬಹುತೇಕ ಕೈದಿಗಳಿಗೆ ಹೊಟ್ಟೆ ನೋವು, ಕಿಡ್ನಿ ಸಮಸ್ಯೆ, ಹರ್ನಿಯಾ ಸೇರಿದಂತೆ ಮತ್ತಿತರ ರೋಗಗಳಿದ್ದು, ಅವರಿಗೆ ಸುವ್ಯವಸ್ಥಿತ ಚಿಕಿತ್ಸೆಯ ಅಗತ್ಯವಿದೆ. ವಯೋವೃದ್ಧ ಕೈದಿಗಳಿಗೆ ಸರಿಯಾದ ಊಟ, ವೈದ್ಯಕೀಯ ಉಪಚಾರ ಸಿಗುತ್ತಿಲ್ಲ. ಎನ್ನುತ್ತಾರೆ ಜೈಲು ವ್ಯವಸ್ಥೆಯನ್ನು ಬಲ್ಲವರು. ಹೀಗೆ ರಾಜ್ಯದಲ್ಲಿ ಕಾರಾಗೃಹಗಳ ಸುಧಾರಣೆ ಅನಿವಾರ್ಯವಾಗಿದ್ದು, ಕಾಲ ಕಾಲಕ್ಕೆ ಅವುಗಳ ಪರಿಶೀಲನೆಯೂ ಆಗಬೇಕಿದೆ. ಇದಕ್ಕಾಗಿ ಪ್ರತೀ ಜಿಲ್ಲಾ ಕಾರಾಗೃಹ ಹಂತದಲ್ಲಿ ‘ಬೋರ್ಡ್ ಆಫ್ ವಿಸಿಟರ್ಸ್’ ಎಂಬ ಸಮಿತಿಯಿದ್ದು, ಇದು ಮೂರು ತಿಂಗಳಿಗೊಮ್ಮೆ ತಮ್ಮ ವ್ಯಾಪ್ತಿಯ ಜೈಲುಗಳಿಗೆ ಭೇಟಿ ನೀಡಿ ಸರಕಾರಕ್ಕೆ ವರದಿ ನೀಡಬೇಕಿದೆ. ಈ ವ್ಯವಸ್ಥೆ ಬದಲಾಗಬೇಕಾದರೆ ಸರಕಾರ, ಇಲಾಖೆ ಹಾಗೂ ಸಮಿತಿಯು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಬೇಕಾಗಿದೆ. ಸವಲತ್ತುಗಳಿಲ್ಲದೇ ಸೊರಗುತ್ತಿವೆ : ‘ರಾಜ್ಯದ ಬಹುತೇಕ ಜೈಲುಗಳು ಬ್ರಿಟಿಷ್ ಕಾಲದವು. ಕೈದಿಗಳ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಎಲ್ಲರನ್ನೂ ಇರಿಸಲು ಸಾಧ್ಯವಾಗುತ್ತಿಲ್ಲ. ಸದ್ಯಕ್ಕಂತೂ ರಾಜ್ಯದ ಜೈಲುಗಳಲ್ಲಿ ಕೈದಿಗಳಿಗೆ ಮಲಗಲು ಸಾಧ್ಯವಾಗದ ಸ್ಥಿತಿ ಇದೆ. ನೆಮ್ಮದಿ ಇಲ್ಲದ ವಾತಾವರಣದಲ್ಲಿ ವ್ಯಕ್ತಿಯ ಮನಃಪರಿವರ್ತನೆ ಹೇಗೆ ಸಾಧ್ಯ? ಭದ್ರತೆಗಾಗಿ ಹೆಚ್ಚಿನ ಸಿಸಿಟಿವಿ, ಬಾಡಿವೋರ್ನ್ ಕ್ಯಾಮರಾಗಳು ಬೇಕು. ಕನಿಷ್ಠ ಕೇಂದ್ರ ಕಾರಾಗೃಹಗಳಲ್ಲಾದರೂ, ಅತ್ಯಾಧುನಿಕ ಜಾಮರ್ ವ್ಯವಸ್ಥೆ ಇರಬೇಕು. ಇವುಗಳತ್ತ ಸರಕಾರ ಗಮನ ಕೊಡಬೇಕು. ಬಜೆಟ್ನಲ್ಲಿ ಹೆಚ್ಚಿನ ಅನುದಾನಗಳನ್ನು ಒದಗಿಸಬೇಕು. ಜೈಲುಗಳು ಸವಲತ್ತುಗಳಿಲ್ಲದೇ ಸೊರಗುತ್ತಿವೆ’ ಎಂದು ಹೇಳುತ್ತಾರೆ ಅಧಿಕಾರಿಗಳು. ‘ಹಣವಿದ್ದವರಿಗೆ ಐಶಾರಾಮಿ ಜೀವನ, ಇಲ್ಲದವರಿಗೆ ಬರೀ ಅನ್ನ, ಗಂಜಿ’ : ಹಣವಿದ್ದವರಿಗೆ ಜೈಲಿನಲ್ಲಿ ಐಶಾರಾಮಿ ಜೀವನ, ಹಣವಿಲ್ಲದವರಿಗೆ ಬರೀ ಅನ್ನ, ಗಂಜಿ ಹಾಗೂ ವಾರಕ್ಕೊಮ್ಮೆ ಮಾತ್ರ ಮಾಂಸಾಹಾರದ ಊಟ ಸಿಗುತ್ತದೆ. ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ ಅವ್ಯವಸ್ಥೆ ತುಂಬಿಕೊಂಡಿದೆ. ಊಟದಲ್ಲಿ ಹುಳಗಳು, ಬೆಳಗ್ಗಿನ ಉಪಾಹಾರದಲ್ಲಿ ಕಲ್ಲುಗಳಿರುತ್ತವೆ. ಅದನ್ನು ತಿನ್ನಲೂ ಆಗದ, ಬಿಸಾಡಲೂ ಆಗದ ಸ್ಥಿತಿ ಕೈದಿಗಳದ್ದು. ಇನ್ನು ಮಲಗುವ ಬೆಡ್ಶೀಟ್ಗಳಂತೂ ದುರ್ವಾಸನೆ ಬರುತ್ತವೆ. ಇದರಿಂದ ನಿದ್ರೆಯೂ ಬರುವುದಿಲ್ಲ. ಸಾಮಾನ್ಯ ಕೈದಿಗಳ ಸ್ಥಿತಿಯಂತೂ ಹೇಳತೀರದು. ಜೈಲಧಿಕಾರಿಗಳು ಲಂಚ ಕೊಟ್ಟವರಿಗೆ ಒಳ್ಳೆಯ ಸವಲತ್ತು ಕೊಡುತ್ತಾರೆ. ಡ್ರಗ್ಸ್ ದಂಧೆಯೂ ನಡೆಯುತ್ತದೆ ಎನ್ನುತ್ತಾ ತಮ್ಮ ಜೈಲುವಾಸದ ಅನುಭವಗಳನ್ನು ಹಂಚಿಕೊಳ್ಳುತ್ತಾರೆ ಬೆಂಗಳೂರಿನ ಮುದ್ದುರಾಜು. ಮಹಿಳಾ ಸಿಬ್ಬಂದಿ ಮೇಲೆ ಲೈಂಗಿಕ ದೌರ್ಜನ್ಯ : ‘ರಾಜ್ಯದ ಜೈಲುಗಳಲ್ಲಿ ಮಹಿಳಾ ಕೈದಿಗಳಿಗಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳಾ ಸಿಬ್ಬಂದಿಯಿದ್ದಾರೆ. ಜೈಲು ವ್ಯವಸ್ಥೆಗೆ ಮಹಿಳಾ ಸಿಬ್ಬಂದಿ ಹೊಂದುವುದಿಲ್ಲ. ಬಹುತೇಕ ಸಮಯದಲ್ಲಿ ಕೈದಿಗಳನ್ನು ಮುಟ್ಟಿ ಪರೀಕ್ಷೆ ಮಾಡಬೇಕಾಗುತ್ತದೆ. ಕೊಠಡಿ ಗಳಿಗೆ ಒಬ್ಬೊಬ್ಬರೇ ಸಿಬ್ಬಂದಿ ಹೋಗಿ ಪರಿಶೀಲಿಸಬೇಕಾಗಿರುತ್ತದೆ. ಇದು ಮಹಿಳಾ ಸಿಬ್ಬಂದಿಯಿಂದ ಸಾಧ್ಯವಾಗುವುದಿಲ್ಲ. ಹಲವು ಸಂದರ್ಭಗಳಲ್ಲಿ ಪುರುಷ ಕೈದಿಗಳು, ಮಹಿಳಾ ಸಿಬ್ಬಂದಿ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ. ಇವು ಹೊರಗೆ ಬರುತ್ತಿಲ್ಲ’ ಎಂದು ಹೇಳುತ್ತಾರೆ ವಿವಿಧ ಜೈಲಿನ ಅಧಿಕಾರಿಗಳು. ದಿನದಲ್ಲಿ 14 ಗಂಟೆ ಹಸಿವಿನಿಂದಿರುವ ಕೈದಿಗಳು : ರಾಜ್ಯದ ಜೈಲುಗಳಲ್ಲಿ ಪ್ರತೀ ಒಬ್ಬ ಕೈದಿಗೆ ದಿನದ ಮೂರು ಹೊತ್ತಿನ ಊಟಕ್ಕೆ ಕೇವಲ 85 ರೂ.ಗಳನ್ನು ಮಾತ್ರ ಖರ್ಚು ಮಾಡಲಾಗುತ್ತಿದೆ. ಈ ವಿವರ ಕುರಿತಂತೆ ಸಾಮಾಜಿಕ ಕಾರ್ಯಕರ್ತ ನರಸಿಂಹಮೂರ್ತಿ ಎಂಬವರು ಹಾಕಿರುವ ಆರ್ಟಿಐಗೆ ಕೇಂದ್ರ ಕಾರಾಗೃಹ ಇಲಾಖೆ ಮಾಹಿತಿ ನೀಡಿದೆ. ಕೈದಿಗಳಿಗೆ ಪ್ರತಿದಿನ ಬೆಳಗ್ಗೆ 7:15ರಿಂದ 8:30ರ ವರೆಗೆ ಉಪಾಹಾರ. 11 ಗಂಟೆಯಿಂದ 11:30ರ ವರೆಗೆ ಮಧ್ಯಾಹ್ನ ಊಟ ಹಾಗೂ ಸಂಜೆ 5:15ರಿಂದ 5:45 ಗಂಟೆಯ ವರೆಗೆ ರಾತ್ರಿ ಊಟಕ್ಕೆ ಸಮಯ ನಿಗದಿ ಮಾಡಲಾಗಿದೆ. ಸಂಜೆ 5:45ರ ಬಳಿಕ ಯಾವುದೇ ಊಟೋಪಚಾರ ಇರುವುದಿಲ್ಲ. ಮರುದಿನ ಬೆಳಗ್ಗೆ ಮತ್ತೆ ಉಪಾಹಾರ ನೀಡಲಾಗುತ್ತದೆ. ಸುದೀರ್ಘ 14 ಗಂಟೆಗಳ ಕಾಲ ಊಟವಿಲ್ಲದಿರುವ ಬಗ್ಗೆ ಆಕ್ಷೇಪ ವ್ಯಕ್ತವಾಗಿದೆ. ಈ ಬಗ್ಗೆ ಮಾನವ ಹಕ್ಕುಗಳ ಆಯೋಗಕ್ಕೆ ದೂರು ನೀಡಿರುವ ಸಾಮಾಜಿಕ ಕಾರ್ಯಕರ್ತ ನರಸಿಂಹಮೂರ್ತಿ ಅವರು ಕೈದಿಗಳು ಎಲ್ಲರಂತೆ ಮನುಷ್ಯರೇ ಆಗಿರುವುದರಿಂದ ಅವರಿಗೂ ಉತ್ತಮ ಆಹಾರ ನೀಡುವಂತೆ ಕಾರಾಗೃಹ ಇಲಾಖೆಗೆ ಸೂಚಿಸುವಂತೆ ಮನವಿ ಮಾಡಿಕೊಂಡಿದ್ದಾರೆ.
ಕರ್ನಾಟಕದಲ್ಲಿದ್ದ ಪಾಕ್ ಪ್ರಜೆಗಳಿಗೆ ಗೇಟ್ಪಾಸ್, ಎಷ್ಟು ಮಂದಿಗೆ?
ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತಿಯಾಗಿ ಪಾಕಿಸ್ತಾನದ ವಿರುದ್ಧ ತೊಡೆ ತಟ್ಟಿರುವ ಭಾರತವು ಎಲ್ಲ ರಾಜ್ಯಗಳಲ್ಲಿರುವ ಪಾಕಿಸ್ತಾನಿ ಪ್ರಜೆಗಳ ಗಂಟುಮೂಟೆ ಕಟ್ಟಿಸಿ ಎಂದು ಖಡಕ್ ಸೂಚನೆ ನೀಡಿದೆ. ಕೇಂದ್ರ ಸರ್ಕಾರದ ಸೂಚನೆ ಹಿನ್ನೆಲೆ ಕರ್ನಾಟಕದಲ್ಲೂ ಇದ್ದ ಪಾಕ್ ಪ್ರಜೆಗಳನ್ನು ಗಡಿಪಾರು ಮಾಡಲು ಮಹತ್ವದ ಕ್ರಮ ತೆಗೆದುಕೊಳ್ಳಲಾಗಿದೆ. ವರದಿಗಳ ಪ್ರಕಾರ ಈಗಾಗಲೇ ಕೆಲವರನ್ನು ಕರ್ನಾಟಕದಿಂದ ಗಡಿಪಾರು ಮಾಡಲಾಗಿದೆ. ಇನ್ನೂ ಹಲವು
ಭಾರತದಿಂದ ‘ಸೈಬರ್ʼ ಸಮರ; ಪಾಕ್ನ YouTube ಚಾನೆಲ್ಗಳಿಗೆ ನಿರ್ಬಂಧ, ಶೋಯೆಬ್ ಅಖ್ತರ್ಗೂ ತಟ್ಟಿದ ಬಿಸಿ
Pahalgam Attack Updates: ಕಾಶ್ಮೀರದ ಪಹಲ್ಗಾಮ್ನಲ್ಲಾದ ಉಗ್ರ ದಾಳಿಯ ನಂತರ ಭಾರತ ಸರ್ಕಾರವು ಪಾಕಿಸ್ತಾನದ ವಿರುದ್ಧ ಮತ್ತೊಂದು ಕ್ರಮ ಕೈಗೊಂಡಿದೆ. ಭಾರತದಲ್ಲಿ ಪಾಕ್ ಮಾಜಿ ಕ್ರಿಕೆಟಿಗ ಶೋಯೆಬ್ ಅಖ್ತರ್ ಅವರ YouTube ಚಾನೆಲ್ ಸೇರಿದಂತೆ, ಹಲವು ಪಾಕಿಸ್ತಾನಿ YouTube ಚಾನೆಲ್ಗಳನ್ನು ನಿಷೇಧಿಸಿದೆ. ಏ.22 ರಂದು ನಡೆದ ಪಹಲ್ಗಾಮ್ ದಾಳಿಯಲ್ಲಿ 26 ಜನರು ಸಾವನ್ನಪ್ಪಿದ್ದರು. ಈ ಘಟನೆಯ ನಂತರ ಕೆಲ YouTube ವಾಹಿನಿಗಳು ಪ್ರಚೋದನಕಾರಿ ಮತ್ತು ಕೋಮು ಸೂಕ್ಷ್ಮ ವಿಷಯ, ಸುಳ್ಳು ಮತ್ತು ತಪ್ಪು ಮಾಹಿತಿಯನ್ನು ಹರಡುತ್ತಿವೆ ಎಂದು ಗೃಹ ಸಚಿವಾಲಯದ ಶಿಫಾರಸ್ಸಿನ ಮೇರೆಗೆ ಈ ಕ್ರಮ ತೆಗೆದುಕೊಳ್ಳಲಾಗಿದೆ.
ಸಿದ್ದರಾಮಯ್ಯ ತಾಯ್ತನದಿಂದ ತಬ್ಬಿಕೊಳ್ಳದಿದ್ದರೆ?
ಕರ್ನಾಟಕ ಹಿಂದುಳಿದ ವರ್ಗಗಳ ಶಾಶ್ವತ ಆಯೋಗ ಸರಕಾರಕ್ಕೆ ಸಲ್ಲಿಸಿರುವ ವರದಿ ಬಗ್ಗೆ ಅವೈಜ್ಞಾನಿಕ, ಅಪೂರ್ಣ ಎಂಬಿತ್ಯಾದಿ ಅಪಸ್ವರಗಳು ಕೇಳಿಬರುತ್ತಿವೆ. ಪ್ರಬಲ ಸಮುದಾಯಗಳು ಸಂಖ್ಯಾಬಲದ ಪಾರುಪತ್ಯಕ್ಕೆ ಪಟ್ಟು ಹಾಕುತ್ತಿದ್ದಾರೆ. ಕ್ಷೀಣ ದನಿಯ ಸಣ್ಣಪುಟ್ಟ ಜಾತಿಗಳು ಅಳಲಾಗದೆ, ಅಭಿವ್ಯಕ್ತಿಸಲಾಗದೆ ಹೊಸ ಆತಂಕದಲ್ಲಿ, ಅದಕ್ಕೂ ಮಿಗಿಲಾದ ಗೊಂದಲದಲ್ಲಿ ಸಿಲುಕಿವೆ. ಪ್ರಬಲರಿಗೆ ಪ್ರಥಮ ಪ್ರಾಶಸ್ತ್ಯ. ಅವರ ಬಗ್ಗೆ ಈಗಾಗಲೇ ಬಹಳಷ್ಟು ಚರ್ಚೆಯಾಗಿದೆ. ಅವರ ಆಗ್ರಹಗಳನ್ನು ಸರಕಾರಗಳು ಯಥಾವತ್ತು ಕೇಳಿವೆ. ಅವರ ಪರ ವಕಾಲತ್ತು ವಹಿಸಿವೆ. ಈಗಲಾದರೂ ಹಿಂದುಳಿದ ಜಾತಿಗಳ, ಅದರಲ್ಲೂ ಅತಿ ಹಿಂದುಳಿದ ಜಾತಿಗಳ, ಸಣ್ಣ ಪುಟ್ಟ ಜಾತಿಗಳ ಅಳಲನ್ನು ಆಲಿಸಬೇಕಿದೆ. ಹಿಂದೆ ಒಮ್ಮೆ ಮಾತ್ರ ಹಿಂದುಳಿದವರ ಧ್ವನಿಗೆ ಕಿವಿ ಕೊಟ್ಟು ಹೃದಯ ಮುಟ್ಟಿತ್ತು ಸರಕಾರ. ಅಂದು ಹುಟ್ಟಿದ ಭರವಸೆಗಳೇ ಇಂದು ಬೆಳೆದು ದೊಡ್ಡದಾಗಿವೆ. ಆಗ ಹಿಂದುಳಿದವರ ಕಲ್ಯಾಣ ರಥವನ್ನು ಶಕ್ತಿಮೀರಿ ಮುನ್ನಡೆಸಿದ್ದವರು ದೇವರಾಜ ಅರಸು ಎಂಬ ಧೀಮಂತ ನಾಯಕ. ಈಗ ಸಿದ್ದರಾಮಯ್ಯ ‘ಹೃದಯ ಶ್ರೀಮಂತ’ನಾಗಿ ಆ ರಥ ಇನ್ನಷ್ಟು ಮುಂದೆ ಸಾಗುವಂತೆ ಮಾಡಬೇಕಾಗಿದೆ. ‘ನಾನು ಸಾಮಾಜಿಕ ನ್ಯಾಯದ ರಥವನ್ನು ಇಲ್ಲಿಯವರೆಗೆ ಎಳತಂದಿದ್ದೇನೆ. ಸಾಧ್ಯವಾದರೆ ಮುಂದಕ್ಕೆ ತೆಗೆದುಕೊಂಡು ಹೋಗಿ. ಸಾಧ್ಯವಾಗದಿದ್ದರೆ ಬಿಟ್ಟುಬಿಡಿ. ಯಾವುದೇ ಕಾರಣಕ್ಕೂ ಹಿಂದಕ್ಕೆ ಕೊಂಡೊಯ್ಯುವಂತಹ ಕೆಲಸ ಮಾಡಬೇಡಿ’ ಎಂಬ ಬಾಬಾ ಸಾಹೇಬ್ ಡಾ. ಬಿ.ಆರ್. ಅಂಬೇಡ್ಕರ್ ಅವರ ಮಾತುಗಳನ್ನು ಸಿದ್ದರಾಮಯ್ಯ ಆಗಾಗ ಹೇಳುತ್ತಾರೆ. ಮೊನ್ನೆ ನಡೆದ ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲೂ ಉಲ್ಲೇಖಿಸಿದ್ದರು. ಈಗ ಅವರು ಹಿಂದುಳಿದವರ ಕಲ್ಯಾಣ ರಥವನ್ನು ಮುಂದೆ ಸಾಗಿಸಿ ತಾನು ನಿಜ ಅರ್ಥದ ಅಂಬೇಡ್ಕರ್ ವಾದಿ ಎಂಬುದನ್ನು ನಿರೂಪಿಸಬೇಕಾಗಿದೆ. ಸಿದ್ದರಾಮಯ್ಯ ಹಿಂದುಳಿದವರ ಕಲ್ಯಾಣ ರಥವನ್ನು ಮುಂದಕ್ಕೆ ಕೊಂಡೊಯ್ಯುವ ಮೂಲಕ ಸಾಮಾಜಿಕ ನ್ಯಾಯದ ರಥವನ್ನೂ ಇನ್ನೊಂದಷ್ಟು ದೂರ ಎಳೆಯಬಲ್ಲೆ ಎಂಬ ಭರವಸೆಯನ್ನು ಪರಿಶಿಷ್ಟ ಜಾತಿ, ಪಂಗಡ ಮತ್ತು ಅಲ್ಪಸಂಖ್ಯಾತರಲ್ಲೂ ಮೂಡಿಸಬಹುದು. ಇದರಿಂದ ಅವರೇ ಹುಟ್ಟುಹಾಕಿದ ಅಹಿಂದ ಹೆಸರಿನ ಅಲ್ಪಸಂಖ್ಯಾತರು, ಹಿಂದುಳಿದವರು ಮತ್ತು ಪರಿಶಿಷ್ಟ ಜಾತಿ, ಪಂಗಡದವರು ಬಹುಕಾಲ ಜೊತೆಜೊತೆಗೆ ಹೆಜ್ಜೆ ಹಾಕುವಂತಾಗಬಹುದು. ಸಾಮಾಜಿಕ ಮತ್ತು ಶೈಕ್ಷಣಿಕ ವರದಿ ಜಾರಿ ಆಗುವ ವಿಷಯದಲ್ಲಿ ಏನೇ ವಿವಾದವಾದರೂ, ಯಾರು ಏನೇ ಹೇಳಿದರೂ ಅಂತಿಮವಾಗಿ ಪರಿಹಾರ ಇರುವುದು ಸಿದ್ದರಾಮಯ್ಯ ಬಳಿ ಮಾತ್ರ. ಸುಲಭ ಅಲ್ಲದಿರಬಹುದು, ಆದರೆ ಸಿದ್ದರಾಮಯ್ಯ ಮನಸ್ಸು ಮಾಡಿದರೆ ವರದಿ ಜಾರಿಯಾಗುವುದರಲ್ಲಿ ಯಾವ ಅನುಮಾನವೂ ಇಲ್ಲ. ಹೀಗೆ ಸಿದ್ದರಾಮನ ಹುಂಡಿಯ ಸಾಮಾನ್ಯ ಕುಟುಂಬವೊಂದರ ಕುಡಿ ಇಂದು ‘ತನ್ನ ಮಾತೇ ಶಾಸನ’ ಎನ್ನುವ ಮಟ್ಟಕ್ಕೆ ಬೆಳೆಯಲು ಕುರುಬ ಸಮುದಾಯ ಮಾತ್ರ ಕಾರಣವಲ್ಲ. ಕುರುಬರು ಜಾತಿ ಕಾರಣಕ್ಕೆ ಪ್ರೀತಿಸಬಹುದು. ಸಿದ್ದರಾಮಯ್ಯ ಅವರನ್ನು ವ್ಯಕ್ತಿತ್ವ, ವೈಚಾರಿಕತೆ, ಸೈದ್ಧಾಂತಿಕ ಸ್ಪಷ್ಟತೆ, ಬಡವರ ಬಗೆಗಿನ ಬದ್ಧತೆಗಳ ಕಾರಣಕ್ಕೆ ಮೆಚ್ಚಿಕೊಂಡಿರುವುದು, ನೆಚ್ಚಿಕೊಂಡಿರುವುದು ಮತ್ತು ಬೆಂಬಲಿಸುತ್ತಿರುವುದು ಇತರೆ ಹಿಂದುಳಿದ ಜಾತಿಗಳು, ಪರಿಶಿಷ್ಟ ಜಾತಿ, ಪಂಗಡದವರು ಮತ್ತು ಅಲ್ಪಸಂಖ್ಯಾತರು. ಜಾತಿ ಜನಗಣತಿ ವರದಿಯಲ್ಲಿ ನೀಡಲಾಗಿರುವ ಹಿಂದುಳಿದವರ ಮೀಸಲಾತಿ ಮಿತಿಯನ್ನು ಶೇಕಡಾ 32ರಿಂದ ಶೇಕಡಾ 51ಕ್ಕೆ ಹೆಚ್ಚಳದ ಶಿಫಾರಸು ಜಾರಿಯಾದರೆ ಪ್ರಬಲ ಜಾತಿಗಳಾದ ಒಕ್ಕಲಿಗ, ಲಿಂಗಾಯತರಂತೆ ಕುರುಬ ಮತ್ತು ಈಡಿಗರಿಗೂ ಅಗ್ರ ಪಾಲು ಸಿಗುತ್ತವೆ. 3ಂ ಪ್ರವರ್ಗದಲ್ಲಿ ಹೆಗಡೆ, ಕೊಡಗರು, ಕೊಡವರು ಮತ್ತು ಬಲಿಜ ಸಮುದಾಯದ 35 ಉಪಜಾತಿಗಳು ಒಕ್ಕಲಿಗರ ಜೊತೆ ಸ್ಪರ್ಧೆ ಮಾಡಿ ಶಿಕ್ಷಣ ಹಾಗೂ ಉದ್ಯೋಗದಲ್ಲಿ ಮೀಸಲಾತಿ ಲಾಭ ಪಡೆಯುವುದು ತುಂಬಾ ಕಷ್ಟ. ರಾಜಕೀಯ ಪ್ರಾತಿನಿಧ್ಯ ಪಡೆಯುವುದಂತೂ ಇನ್ನೂ ಕಷ್ಟ. 3ಃ ಪ್ರವರ್ಗದಲ್ಲಿ ಕ್ರಿಶ್ಚಿಯನ್, ಬಂಟ್ಸ್, ಪರಿವಾರ ಬಂಟ್ಸ್, ಹರೆಯ, ಜೈನ ದಿಗಂಬರರು, ಜೈನ ಚತುರ್ಥ ಹಾಗೂ ಸಾತಾನಿ ಜಾತಿಗಳು ವೀರಶೈವ/ಲಿಂಗಾಯತರ ಜೊತೆ ಪೈಪೋಟಿ ಮಾಡುವುದು ಕೂಡ ಕಡುಕಷ್ಟವೇ. ಇದೇ ರೀತಿ 1ಃ ಪ್ರವರ್ಗದಲ್ಲಿ ಕುರುಬರ ಜೊತೆ 80 ಜಾತಿಗಳ 386 ಉಪ ಜಾತಿಗಳ 73,92,313 ಜನ ಇದ್ದಾರೆ. ಗಮನಾರ್ಹ ವಿಷಯವೇನೆಂದರೆ ಈ ಪೈಕಿ ಲಕ್ಷ ಜನಸಂಖ್ಯೆಗೂ ಹೆಚ್ಚಿರುವ ಸಮುದಾಯಗಳು ಕೇವಲ 6 (ಯಾದವ/ಗೊಲ್ಲ, ಅಗಸ/ಮಡಿವಾಳ, ಸವಿತಾ ಸಮಾಜ, ಕುಂಬಾರ, ಹೂವಾಡಿಗ ಮತ್ತು ಹಾಲಕ್ಕಿ ಒಕ್ಕಲ). ಉಳಿದವೆಲ್ಲಾ ಸಣ್ಣ ಮತ್ತು ಅತಿ ಸಣ್ಣ ಜಾತಿಗಳು. ಹೇಗೆಂದರೆ 5 ಸಾವಿರಕ್ಕಿಂತಲೂ ಕಮ್ಮಿ ಜನಸಂಖ್ಯೆ ಇರುವ ಜಾತಿಗಳು 305. 1 ಸಾವಿರಕ್ಕಿಂತ ಕಮ್ಮಿ ಜನಸಂಖ್ಯೆ ಇರುವ ಜಾತಿಗಳು 105. ಈ ಸಣ್ಣ ಮತ್ತು ಅತಿ ಸಣ್ಣ ಜಾತಿಗಳು 43,72,847 ಜನಸಂಖ್ಯೆ ಇರುವ ಕುರುಬ ಮತ್ತದರ 11 ಉಪಜಾತಿಗಳ (ಇಲ್ಲೂ 7 ಜಾತಿಗಳ ಜನಸಂಖ್ಯೆ 5 ಸಾವಿರಕ್ಕಿಂತ ಕಮ್ಮಿ ಇದೆ, 4 ಜಾತಿಗಳ ಜನಸಂಖ್ಯೆ 20 ಸಾವಿರಕ್ಕಿಂತ ಸ್ವಲ್ಪ ಜಾಸ್ತಿ ಇದೆ. ಕುರುಬ ಜಾತಿಯ 42,71,399 ಜನರ ಜೊತೆಗೆ ಅಂತಿಮ ಪೈಪೋಟಿ-ಆ ಉಪಜಾತಿಗಳಿಗೂ) ನಡುವೆ ಸ್ಪರ್ಧಿಸಿ ಮೀಸಲಾತಿ ಸೌಲಭ್ಯ ಪಡೆಯುವುದು ಬಹುತೇಕ ಸಾಧ್ಯವೇ ಇಲ್ಲ ಎನ್ನುವಂಥ ಪರಿಸ್ಥಿತಿ. ಪ್ರವರ್ಗ 2ಂಯಲ್ಲಿ 14 ಲಕ್ಷ ಜನಸಂಖ್ಯೆಗೂ ಹೆಚ್ಚಿರುವ ಈಡಿಗ ಮತ್ತು ಮರಾಠಾ ಜೊತೆಗೆ 94 ಪ್ರಮುಖ ಜಾತಿಗಳ 354 ಉಪ ಜಾತಿಗಳಿವೆ. ದೇವಾಡಿಗ, ದೇವಾಂಗ, ವಿಶ್ವಕರ್ಮ, ತಿಗಳ, ಗಾಣಿಗ, ಹಿಂದೂ ಸಾದರ, ಕ್ಷತ್ರೀಯ, ದರ್ಜಿ, ನೇಕಾರ ಮತ್ತು ರಜಪೂತ್ ಮತ್ತು ಅವುಗಳ ಉಪಜಾತಿಗಳು ಈ ಪ್ರವರ್ಗದಲ್ಲಿ ಪ್ರಬಲ ಎಂದು ಕಾಣುತ್ತವೆ. ಆದರೆ ಈವರೆಗೆ ರಾಜಕೀಯದಲ್ಲಿ ಅತಿ ಹೆಚ್ಚು ಪಾತಿನಿಧ್ಯ ಸಿಕ್ಕಿರುವುದು ಈಡಿಗರಿಗೆ ಮಾತ್ರ. ಈಡಿಗರ ಪೈಕಿ ಅತಿ ಹೆಚ್ಚು ಜನ ಕರಾವಳಿ ಭಾಗವೊಂದರಲ್ಲೇ ನೆಲೆಸಿರುವುದರಿಂದ ಶಾಸನಸಭೆಯಲ್ಲಿ ಯಾವತ್ತೂ ಅವರ ಪ್ರಾತಿನಿಧ್ಯ ಕಡಿಮೆಯಾಗೇ ಇಲ್ಲ. ಸದ್ಯೋಭವಿಷ್ಯದಲ್ಲೂ ಹಾಗೆ ಮುಂದುವರಿಯಲಿದೆ. ಅಂತಿಮವಾಗಿ ಎಲ್ಲಾ ಪ್ರವರ್ಗಗಳಲ್ಲೂ ಅನ್ಯಾಯ ಆಗುವುದು ಮಾತ್ರ ಸಣ್ಣ, ಅತಿ ಸಣ್ಣ ಅನಾಥ ಜಾತಿಗಳಿಗೆ. ಇದರಿಂದಾಗಿಯೇ ದುರ್ಬಲ ಜಾತಿಗಳಿಗೀಗ ಜಾತಿ ಜನಗಣತಿಯನ್ನು ಸಾರಾ ಸಗಟಾಗಿ ವಿರೋಧಿಸುತ್ತಿರುವ ಮುಂದುವರಿದ ಪ್ರಬಲ ಜಾತಿಗಳನ್ನು ದೂರಬೇಕೋ ಅಥವಾ ತಮ್ಮದೇ ಪಂಕ್ತಿಯಲ್ಲಿ ಕೂತು ತಮ್ಮ ಎಲೆಗೇ ಕೈ ಹಾಕುತ್ತಿರುವ ತಮ್ಮದೇ ಮನೆಯ ‘ಹಿರಿಯಣ್ಣರನ್ನು’ ವಿರೋಧಿಸಬೇಕೋ ಎನ್ನುವ ದೈನೇಸಿ ಗೊಂದಲ ಉಂಟಾಗಿದೆ. ಒಂದೆಡೆ ವರದಿ ಜಾರಿಯಾಗಿ ಮೀಸಲಾತಿ ಮಿತಿ ಹೆಚ್ಚಳವಾದರೆ ತಮ್ಮ ಪಾಲೂ ಹೆಚ್ಚಾಗಬಹುದು ಎನ್ನುವ ಆಸೆ. ಇನ್ನೊಂದೆಡೆ ಅದನ್ನೂ ಹಿರಿಯಣ್ಣನೇ ಕಬಳಿಸಿಬಿಟ್ಟರೆ ಎಂಬ ಆತಂಕ. ಇದೇ ಕಾರಣಕ್ಕೆ ಅಂಕಣದ ಆರಂಭದಲ್ಲಿ ಕ್ಷೀಣ ದನಿಯ ಸಣ್ಣಪುಟ್ಟ ಜಾತಿಗಳು ಅಳಲಾಗದೆ, ಅಭಿವ್ಯಕ್ತಿಸಲಾಗದೆ ಹೊಸ ಬಗೆಯ ಆತಂಕದಲ್ಲಿ, ಅದಕ್ಕೂ ಮಿಗಿಲಾದ ಗೊಂದಲದಲ್ಲಿ ಸಿಲುಕಿವೆ ಎಂದು ಹೇಳಿದ್ದು. ಅಬಲ ಜಾತಿಗಳು ಅಳುತ್ತಿಲ್ಲ ಎಂದ ಮಾತ್ರಕ್ಕೆ ನೋವೇ ಇಲ್ಲ ಎಂದು ಅರ್ಥವಲ್ಲ. ಅನಾಥ, ಅಲ್ಪಸಂಖ್ಯಾತ, ಅವಮಾನಿತರ ಅಳಲು ಯಾವತ್ತೂ ಕ್ಷೀಣವಾಗಿಯೇ ಇರುತ್ತದೆ. ‘ದೊಡ್ಡವರಿಗೆ’ ಕಿವಿ ಕೊಟ್ಟು ಆಲಿಸುವ ಹೃದಯ ವೈಶಾಲ್ಯ ಇರಬೇಕಷ್ಟೆ. ಈಗ ಕಿವಿ ಕೊಟ್ಟು ಹೃದಯ ಮುಟ್ಟಬೇಕಾದದ್ದು ಸಿದ್ದರಾಮಯ್ಯ ಅವರ ಆದ್ಯ ಕರ್ತವ್ಯವಾಗಬೇಕಿದೆ. ಸ್ವಜಾತಿಯ ಒತ್ತಡದ ನಡುವೆ ಅದು ಕಷ್ಟವಾಗಲಿದೆ ಎನ್ನುವುದನ್ನು ಮತ್ತು ಈ ವಿಷಯದಲ್ಲಿ ದಿವಂಗತ ದೇವರಾಜ ಅರಸು ಅವರಿಗಿದ್ದ ಅನುಕೂಲ ಸಿದ್ದರಾಮಯ್ಯ ಅವರಿಗಿಲ್ಲ ಎನ್ನುವುದನ್ನು ಒಪ್ಪಲೇಬೇಕು. ಆದರೆ ಈ ಒತ್ತಡ ಮೀರಿದರೆ ಮಾತ್ರ ಅವರು ನಿಜವಾದ ಅಹಿಂದ ನಾಯಕ ಎನಿಸಿಕೊಳ್ಳುವರು. ಅಲ್ಪಸಂಖ್ಯಾತರು, ಹಿಂದುಳಿದವರು ಹಾಗೂ ಪರಿಶಿಷ್ಟ ಜಾತಿ, ಪಂಗಡದವರು ‘ತಮ್ಮವರನ್ನೂ’ ಬಿಟ್ಟು ಸಿದ್ದರಾಮಯ್ಯನೇ ನಮ್ಮ ನಾಯಕ ಎಂದು ಒಪ್ಪಿ ಅಪ್ಪಿಕೊಂಡಿದ್ದಾರೆ. ಇದರಲ್ಲಿ ಔದಾರ್ಯವೂ ಇದೆ. ಅನಿವಾರ್ಯತೆ, ಅಸಹಾಯಕತೆಯೂ ಇದೆ. ಈಗ ಹಿರಿಯಣ್ಣನಂತೆ ಎನ್ನುವುದಕ್ಕೂ ಮಿಗಿಲಾಗಿ ಸಿದ್ದರಾಮಯ್ಯ ತಾಯ್ತನದಿಂದ ತಬ್ಬಿಕೊಳ್ಳದಿದ್ದರೆ ಅಬಲ ಜಾತಿಗಳ ಅತಂತ್ರ ಮತ್ತು ಆತಂಕದ ಪರಿಸ್ಥಿತಿ ದೂರವಾಗಲು ಇನ್ನೊಂದಷ್ಟು ದಶಕಗಳು ಕಾಯಬೇಕಾಗುತ್ತದೆ. ಮೀಸಲಾತಿ ಮಿತಿ ಹೆಚ್ಚಳ ಎಂಬ ಸರ್ವರ ಹಿತ ಕಾಪಾಡುವ ಸೂತ್ರವೊಂದು ಅಡಕವಾಗಿರುವುದರಿಂದ ಯಾವುದೇ ಜಾತಿಯ, ಯಾವುದೇ ಪಕ್ಷದ ನಾಯಕರು ಎಷ್ಟೇ ಉಗ್ರ ಭಾಷಣ ಮತ್ತು ಹೋರಾಟಗಳನ್ನು ಮಾಡಿದರೂ ಸಿದ್ದರಾಮಯ್ಯ ಮನಸ್ಸು ಮಾಡಿದರೆ ಜಾತಿಗಣತಿ ವರದಿಯನ್ನು ಜಾರಿಗೊಳಿಸಬಹುದು. ಇದಲ್ಲದೆ ವರದಿಯನ್ನು ಪೂರ್ತಿಯಾಗಿ ಒಪ್ಪಲೇಬೇಕು ಎಂಬ ಕಡ್ಡಾಯ ಇಲ್ಲದಿರುವುದರಿಂದ ಭಾಗಶಃ ಒಪ್ಪಿ ಆಕ್ಷೇಪಾರ್ಹ ಕೆಲವು ಅಂಶಗಳನ್ನು ಮಾರ್ಪಾಡು ಮಾಡಿಕೊಡುವಂತೆ ಹಿಂದುಳಿದ ವರ್ಗಗಳ ಆಯೋಗಕ್ಕೆ ಕೇಳಬಹುದು. ಅಂಥದೇ ಸಂದರ್ಭವನ್ನು ಬಳಸಿಕೊಂಡು ದಿಕ್ಕು-ದೆಸೆಯಿಲ್ಲದ ದುರ್ಬಲ ಜಾತಿಗಳಿಗಾಗಿರುವ ಅನ್ಯಾಯವನ್ನು ಸರಿಪಡಿಸುವ ಕೆಲಸವನ್ನೂ ಮಾಡಬಹುದು. ಇಷ್ಟಕ್ಕೂ ಮೀರಿ ತೀವ್ರ ಸ್ವರೂಪದ ವಿರೋಧ ವ್ಯಕ್ತವಾದರೆ, ಸಿದ್ದರಾಮಯ್ಯ ಆಗಲೂ ವರದಿ ಜಾರಿ ಮಾಡಲು ಮುಂದಾದರೆ ಅವರ ಸರಕಾರವೇ ಉರುಳಬಹುದು. ಆ ರೀತಿ ಆಗುವ ಸಾಧ್ಯತೆ ತುಂಬಾ ಕಮ್ಮಿ. ಒಂದೊಮ್ಮೆ ಆಗಿಬಿಟ್ಟರೆ ಸಿದ್ದರಾಮಯ್ಯ ರಾಜಕೀಯವಾಗಿ ಹೊಸ ಅವತಾರದಲ್ಲಿ ಉದ್ಭವಿಸುತ್ತಾರೆ. ಹುತಾತ್ಮನ ಪಟ್ಟ ಅವರ ಮುಡಿಗೇರಿರುತ್ತದೆ. ಹಿಂದೊಮ್ಮೆ ಇದೇ ಅಂಕಣದಲ್ಲಿ ಸಿದ್ದರಾಮಯ್ಯ ಮುಂದೆ ಇರುವುದೇ ಎರಡು ಆಯ್ಕೆ. ಒಂದು ಜಾತಿ ಜನಗಣತಿ ವರದಿಯನ್ನು ಜಾರಿ ಮಾಡಿ ಹೀರೋ ಆಗುವುದು. ಇನ್ನೊಂದು ವರದಿ ಜಾರಿ ಮಾಡದೆ ಖಳನಾಯಕ ಆಗುವುದು ಎಂದು ಬರೆದಿದ್ದೆ. ಈಗ ಸಿದ್ದರಾಮಯ್ಯ ಅವರಿಗೆ ಹುತಾತ್ಮರಾಗುವ ಆಯ್ಕೆಯೂ ತೆರೆದುಕೊಂಡಿದೆ. ಏನಾಗಬೇಕು ಎಂಬುದನ್ನು ಸಿದ್ದರಾಮಯ್ಯ ಅವರೇ ನಿರ್ಧರಿಸಬೇಕು. ಆಫ್ ದಿ ರೆಕಾರ್ಡ್... ಇತಿಹಾಸ ಸದಾ ಸಹೃದಯತೆಯಿಂದ ಸ್ಮರಿಸುವ ನಾಯಕರೆಲ್ಲರನ್ನೂ ವರ್ತಮಾನ ಅತ್ಯಂತ ಕ್ರೂರವಾಗಿ ನಡೆಸಿಕೊಂಡಿದೆ. ಬುದ್ಧ, ಬಸವಣ್ಣ, ಅಂಬೇಡ್ಕರ್, ಮಹಾತ್ಮಾ ಗಾಂಧಿ, ಜವಾಹರ ಲಾಲ್ ನೆಹರೂ, ದೇವರಾಜ ಅರಸು, ಡಾ. ಮನಮೋಹನ್ ಸಿಂಗ್... ಎಲ್ಲರೂ. ಸಿದ್ದರಾಮಯ್ಯ ಆಗಾಗ ಈ ಮಹನೀಯರ ಹೆಸರುಗಳನ್ನು ನೆನಪಿಸುತ್ತಿರುತ್ತಾರೆ. ಸಾಮಾಜಿಕ ಮತ್ತು ಶೈಕ್ಷಣಿಕ ವರದಿಯನ್ನು ಜಾರಿ ಮಾಡುವ ವಿಷಯ ಬಂದಾಗ ಈ ಮುತ್ಸದ್ದಿಗಳನ್ನೊಮ್ಮೆ ನೆನಪು ಮಾಡಿಕೊಳ್ಳಲಿ.
ರಕ್ತ ಹರಿಯುವುದೇ ನಿಜವಾದರೆ ಅದು ನಿಮ್ಮದು ಮಾತ್ರ; ಮೆದುಳು ಸುಟ್ಟ ಭುಟ್ಟೋಗೆ ಶಶಿ ತರೂರ್ ವಾರ್ನಿಂಗ್!
ಪಹಲ್ಗಾಮ್ ಭಯೋತ್ಪಾದಕ ದಾಳಿಯನ್ನು ತೀವ್ರವಾಗಿ ಖಂಡಿಸಿರುವ ಕಾಂಗ್ರೆಸ್ ಸಂಸದ ಶಶಿ ತರೂರ್ , ಪಾಕಿಸ್ತಾನಕ್ಕೆ ಗೋಚರ ಮಿಲಿಟರಿ ಪ್ರತಿಕ್ರಿಯೆ ಶತಸಿದ್ಧ ಎಂದು ಎಚ್ಚರಿಕೆ ನೀಡಿದ್ದಾರೆ. ಇದೇ ವೇಳೆ ಸಿಂಧು ನದಿ ಒಪ್ಪಂದದಿಂದ ಭಾರತ ಹಿಂದೆ ಸರಿದರೆ ರಕ್ತಪಾತವಾಗುತ್ತದೆ ಎಂದು ಹೇಳಿಕೆ ನೀಡಿದ ಪಾಕಿಸ್ತಾನದ ಪಿಪಿಪಿ ನಾಯಕ ಬಿಲಾವಲ್ ಭುಟ್ಟೋ ಅವರನ್ನು ತರಾಟೆಗೆ ತೆಗೆದುಕೊಂಡಿರುವ ಶಶಿ ತರೂರ್, ರಕ್ತ ಹರಿಯವುದೇ ನಿಜವಾದರೆ, ಅದು ಪಾಕಿಸ್ತಾನಿಯರದ್ದಾಗಲಿದೆ ಎಂದು ಎಚ್ಚರಿಸಿದ್ದಾರೆ. ಇಲ್ಲಿದೆ ಹೆಚ್ಚಿನ ಮಾಹಿತಿ.
ತಿಪಟೂರು | ನಿವೇಶನ ರಹಿತರಿಗೆ ವಸತಿ ನೀಡಲು ಡಿಎಸ್ಎಸ್ ಸಂಚಾಲಕ ಜಕ್ಕನಹಳ್ಳಿ ಮೋಹನ್ ಒತ್ತಾಯ
ತಿಪಟೂರು : ಸರಕಾರ ನಿವೇಶನ ರಹಿತರಿಗೆ ನಿವೇಶನ ನೀಡಿ, ಮನೆ ನಿರ್ಮಾಣ ಮಾಡಬೇಕು ಎಂದು ದಸಂಸ ತಾಲೂಕು ಸಮಿತಿ ಅಧ್ಯಕ್ಷ ಜಕ್ಕನಹಳ್ಳಿ ಮೋಹನ್ ಒತ್ತಾಯಿಸಿದ್ದಾರೆ. ನಗರದ ಪ್ರವಾಸಿ ಮಂದಿರದಲ್ಲಿ ನಿವೇಶನ ಹಾಗೂ ವಸತಿ ರಹಿತರ ಸಭೆ ನಡೆಸಿ ಮಾತನಾಡಿದ ಅವರು, ಹಲವಾರು ದಶಕಗಳಿಂದ ನಿವೇಶನ ಹಂಚಿಕೆ ಮಾಡದೆ ಸಾವಿರಾರು ಕುಟುಂಬಗಳು ಬೀದಿಗೆ ಬೀಳುವ ಸ್ಥಿತಿಯಲ್ಲಿವೆ, ಕೆಲವರಂತೂ ಬಾಡಿಗೆ ಮನೆಯಲ್ಲಿ ಜೀವನ ನಡೆಸುವಂತ್ತಾಗಿದೆ ಸರಕಾರ ಕೂಡಲೇ ಅರ್ಹ ಫಲಾನುಭವಿಗಳಿಗೆ ನಿವೇಶನ ನೀಡಿ, ಮನೆ ನಿರ್ಮಿಸಿ ಕೊಡಬೇಕು ಎಂದು ಒತ್ತಾಯಿಸಿದರು. ದಲಿತ ಮುಖಂಡ ಸತೀಶ್ ಮಾರನಗೆರೆ ಮಾತನಾಡಿ, ಸರಕಾರ ನಿವೇಶನ ರಹಿತರಿಗೆ ನಿವೇಶನ ನೀಡದೆ ಬಡವರು ನಿರ್ಗತಿಕರನ್ನು ತೀವ್ರತೊಂದರೆಗೆ ಸಿಲುಕಿಸಿದೆ. ಚುನಾವಣೆಯ ವೇಳೆಯಲ್ಲಿ ಸುಳ್ಳು ಭರವಸೆ ನೀಡುವ ಸರಕಾರಗಳು, ಚುನಾವಣೆಯ ನಂತರ ಕೊಟ್ಟಮಾತು ಮರೆಯುತ್ತವೆ. ಕೇವಲ ಅಲೊಂದು ಇಲ್ಲೊಂದು ನಿವೇಶನ ನೀಡಿ ಬಡವರ ಕಣ್ಣಿಗೆ ಮಣ್ಣೆರಚುವ ಕೆಲಸ ಮಾಡುತ್ತಿವೆ ಎಂದು ತಿಳಿಸಿದರು. ಸಭೆಯಲ್ಲಿ ಜಿಲ್ಲಾ ಸಂಘಟನಾ ಸಂಚಾಲಕರಾದ ಮತ್ತಿಹಳ್ಳಿ ಹರೀಶ್ ಗೌಡ, ತಾಲೂಕಿನ ಸಂಚಾಲಕರಾದ ಮೋಹನ್ ಜಕ್ಕನಹಳ್ಳಿ, ಡಿಎಸ್ಎಸ್ ಮುಖಂಡರಾದ ಸತೀಶ್ ಮಾರನಗೆರೆ, ಮುಖಂಡರಾದ ಕೀರ್ತಿ ಹತ್ಯಾಳ್, ಜಗದೀಶ್ ಗಿಣಿಕಿಕೆರೆ, ಪ್ರಭುಸ್ವಾಮಿ ಗಿಣಿಕಿಕೆರೆ, ಕೃಷ್ಣಮೂರ್ತಿ ಗಿಣಿಕಿಕೆರೆ, ಕುಮಾರ್ ಬೈರಾಪುರ, ಸಂಜಯ್ ಗಿಣಿಕಿಕೆರೆ, ಸತೀಶ್ ಪೆದ್ದಿಹಳ್ಳಿ, ತಿಪಟೂರು ನೆಹರು ನಗರ ರಘು, ಮಹಿಳಾ ನಗರ ಸಂಚಾಲಕರಾದ ಭವ್ಯ, ಮಹಿಳಾ ತಾಲೂಕು ಸಂಘಟನಾ ಸಂಚಾಲಕರಾದ ಅಶ್ವಿನಿ, ಹೇಮಾ ಮುಂತಾದವರು ಉಪಸ್ಥಿತರಿದರು
RCB: ದತ್ತು ಪುತ್ರ vs ಮನೆ ಮಗ... ಕೆ.ಎಲ್ ರಾಹುಲ್ - ವಿರಾಟ್ ಕೊಹ್ಲಿ, ವಾಗ್ವಾದ &ತಮಾಷೆ ವೈರಲ್ ವಿಡಿಯೋ ಇಲ್ಲಿದೆ!
ಆರ್ಸಿಬಿ ಹೊಸ ದಾಖಲೆ: ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನೆನ್ನೆ ನಡೆದ ಆರ್ಸಿಬಿ vs ಡೆಲ್ಲಿ ಕ್ಯಾಪಿಟಲ್ಸ್ ಮ್ಯಾಚ್ನಲ್ಲಿ ಆರ್ಸಿಬಿ ಭರ್ಜರಿ ಗೆಲುವು ದಾಖಲಿಸಿ ಪಾಯಿಂಟ್ ಟೇಬಲ್ನಲ್ಲಿ ಅಗ್ರಸ್ಥಾನದಲ್ಲಿದೆ. ಇದೇ ಸಂದರ್ಭದಲ್ಲಿ ದತ್ತು ಪುತ್ರ vs ಮನೆ ಮಗ ಅಂತನೇ ಕನ್ನಡಿಗರು ಕರೆಯುವ ಕೆ.ಎಲ್ ರಾಹುಲ್ ಹಾಗೂ ವಿರಾಟ್ ಕೊಹ್ಲಿ ಅವರ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ
ಮಂಜೇಶ್ವರ : ಯುವಕನಿಗೆ ಗುಂಡೇಟು; ಆಸ್ಪತ್ರೆಗೆ ದಾಖಲು
ಮಂಜೇಶ್ವರ : ದಾರಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಯುವಕನಿಗೆ ಗುಂಡೇಟು ತಗಲಿರುವ ಘಟನೆ ಕೇರಳದ ಮಂಜೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯ ಕರ್ನಾಟಕ ಗಡಿಭಾಗ ಮುಡಿಪು ಸಮೀಪದ ಕಜೆಪದವು ಎಂಬಲ್ಲಿ ರವಿವಾರ ನಡೆದಿದೆ. ಬಾಕ್ರಬೈಲ್ ನಡಿಬೈಲು ನಿವಾಸಿ ಸವಾದ್ (20) ಗಾಯಗೊಂಡ ಯುವಕ. ಯುವ ಅಡಿಕೆ ವ್ಯಾಪಾರಿಯಾಗಿರುವ ಸವಾದ್ ರವಿವಾರ ರಾತ್ರಿ ವೇಳೆ ಕಾಡಿನ ಮಧ್ಯೆ ಇರುವ ಕಾಲುದಾರಿಯಲ್ಲಿ ಮನೆಗೆ ತೆರಳುತ್ತಿರುವ ಸಂದರ್ಭ ಕಜೆಪದವು ತಿರುವಿನಲ್ಲಿ ಈ ಘಟನೆ ನಡೆದಿದೆ. ಬೇಟೆಗಾರರು ಕಾಡಿನಲ್ಲಿ ಹಂದಿ ಬೇಟೆಗೆ ಸಿಡಿಯುವ ವಸ್ತು ಇಟ್ಟಿದ್ದರು. ಇದನ್ನು ಗಮಿನಿಸದ ಸವಾದ್ ನಡಕೊಂಡು ಹೋಗುವ ವೇಳೆ ತುಳಿದ ಕಾರಣ ತಗುಲಿರುವ ಸಾಧ್ಯತೆ ಇದೆ ಎನ್ನಲಾಗಿದೆ. ಇದರಿಂದ ಕಾಲಿಗೆ ಗಂಭೀರ ಗಾಯಗೊಂಡ ಸಾವಾದ್ ನನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಂಜೇಶ್ವರ ಠಾಣಾ ಪೋಲೀಸರು ಸ್ಥಳದಲ್ಲಿ ಬೀಡುಬಿಟ್ಟಿದ್ದು ತನಿಖೆ ಕೈಗೆತ್ತಿಕೊಂಡಿದ್ದಾರೆ. ಗುಂಡಿಟ್ಟ ವ್ಯಕ್ತಿಯ ಪತ್ತೆ ಕಾರ್ಯಾಚರಣೆ ನಡೆಯುತ್ತಿದೆ ಎಂದು ಮಂಜೇಶ್ವರ ಪೊಲೀಸರು ತಿಳಿಸಿದ್ದಾರೆ. ಮಂಜೇಶ್ವರ ಶಾಸಕ ಎ.ಕೆ.ಎಂ. ಅಶ್ರಫ್, ಜಿಲ್ಲಾ ಪಂಚಾಯತ್ ಮಾಜಿ ಸ್ಥಾಯಿ ಸಮಿತಿ ಅಧ್ಯಕ್ಷ ಹರ್ಷಾದ್ ವರ್ಕಾಡಿ ಮತ್ತಿತರರು ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದಾರೆ.
ಬೀದರ್ : ಶಾಹೀನ್ ಶಿಕ್ಷಣ ಸಂಸ್ಥೆಗಳ ಸಮೂಹವು ಕಲ್ಯಾಣ ಕರ್ನಾಟಕ ಭಾಗದ ಸರ್ಕಾರಿ ಕನ್ನಡ ಹಾಗೂ ಉರ್ದು ಮಾಧ್ಯಮದ ವಿದ್ಯಾರ್ಥಿಗಳಿಗೆ ಪ್ರಸಕ್ತ ಶೈಕ್ಷಣಿಕ ವರ್ಷದಿಂದ 'ಶಾಹೀನ್ ಕಲ್ಯಾಣ ಕರ್ನಾಟಕ ವಿದ್ಯಾರ್ಥಿ ವೇತನ' ಯೋಜನೆಯನ್ನು ಜಾರಿಗೊಳಿಸಲು ನಿರ್ಧರಿಸಿದೆ ಎಂದು ಶಾಹೀನ್ ಶಿಕ್ಷಣ ಸಂಸ್ಥೆಗಳ ಸಮೂಹದ ಅಧ್ಯಕ್ಷ ಡಾ.ಅಬ್ದುಲ್ ಖಾದೀರ್ ಅವರು ತಿಳಿಸಿದ್ದಾರೆ. ಈ ವರ್ಷ ಸಮೂಹದ ಕಲ್ಯಾಣ ಕರ್ನಾಟಕ ಭಾಗದ ಒಂಬತ್ತು ಪದವಿಪೂರ್ವ ವಿಜ್ಞಾನ ಕಾಲೇಜುಗಳಲ್ಲಿ ಪ್ರವೇಶ ಪಡೆಯುವ ಒಟ್ಟು 250 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಲಾಗುವುದು ಎಂದು ಅವರು ಹೇಳಿದ್ದಾರೆ. ಬೀದರ್ ನ ಮುಖ್ಯ ಶಾಖೆಯಲ್ಲಿ 75, ಕಲಬುರಗಿ ಶಾಖೆಯಲ್ಲಿ 35, ರಾಯಚೂರು, ಬಳ್ಳಾರಿ, ಯಾದಗಿರಿ, ಔರಾದ್, ಬಸವಕಲ್ಯಾಣ, ಚಿಟಗುಪ್ಪ ಹಾಗೂ ಹುಮನಾಬಾದ್ ಶಾಖೆಗಳಲ್ಲಿ ತಲಾ 20 ವಿದ್ಯಾರ್ಥಿಗಳಿಗೆ ಶಿಷ್ಯವೇತನ ನೀಡಲಾಗುವುದು ಎಂದಿದ್ದಾರೆ. ಎಸೆಸೆಲ್ಸಿಯಲ್ಲಿ ಶೇ.90ಕ್ಕೂ ಅಧಿಕ ಅಂಕಗಳಿಸಿದ ಕಲ್ಯಾಣ ಕರ್ನಾಟಕ ಭಾಗದ ಸರ್ಕಾರಿ ಕನ್ನಡ ಹಾಗೂ ಉರ್ದು ಮಾಧ್ಯಮದ ವಿದ್ಯಾರ್ಥಿಗಳು ಶಿಷ್ಯವೇತನಕ್ಕೆ ಸಮೂಹದ ಆಯಾ ಶಾಖೆಗಳಲ್ಲಿ ಅಥವಾ ಆನ್ಲೈನ್ನಲ್ಲಿ ( www.shaheengroup.org ) ಮೇ 15 ರ ಒಳಗಾಗಿ ಅರ್ಜಿ ಸಲ್ಲಿಸಬಹುದು ಎಂದು ಅವರು ಮಾಹಿತಿ ನೀಡಿದ್ದಾರೆ. ಮೇ 18 ರಂದು ಆಯಾ ಶಾಖೆಗಳಲ್ಲಿ ಸಂದರ್ಶನ ನಡೆಯಲಿದೆ. ಅರ್ಹತೆ ಆಧಾರದಲ್ಲಿ ಆಯ್ಕೆ ಜರುಗಲಿದೆ. ಗ್ರಾಮೀಣ ಭಾಗದ, ಅಂಗವಿಕಲ ಹಾಗೂ ಅನಾಥ ಮಕ್ಕಳಿಗೆ ವಿಶೇಷ ಆದ್ಯತೆ ಕೊಡಲಾಗುವುದು. ಆಯ್ಕೆಯಾಗುವ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ರೂಪದಲ್ಲಿ ಕಾಲೇಜು ಶುಲ್ಕದಲ್ಲಿ ಶೇ.75 ರಷ್ಟು ರಿಯಾಯಿತಿ ಸಿಗಲಿದೆ ಎಂದು ಅವರು ಹೇಳಿದ್ದಾರೆ. ಶಾಹೀನ್ ಕಾಲೇಜಿನ 2024-25ನೇ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಕನ್ನಡ ಮಾಧ್ಯಮ ವಿದ್ಯಾರ್ಥಿಗಳ ತೇರ್ಗಡೆ ಹಾಗೂ ಸಾಧನೆ ಪ್ರಮಾಣ ಆಂಗ್ಲ ಮಾಧ್ಯಮ ವಿದ್ಯಾರ್ಥಿಗಳಿಗಿಂತ ಶೇ.13 ರಷ್ಟು ಹೆಚ್ಚಿದೆ. ಉರ್ದು ಮಾಧ್ಯಮ ವಿದ್ಯಾರ್ಥಿಗಳು ಮೂರನೇ ಸ್ಥಾನದಲ್ಲಿದ್ದಾರೆ. ಇತರ ವಿದ್ಯಾರ್ಥಿಗಳಿಗಿಂತ ಹಾಸ್ಟೆಲ್ ವಿದ್ಯಾರ್ಥಿಗಳ ಸಾಧನೆ ಹೆಚ್ಚಿದೆ ಎಂದು ಎಂದು ಅವರು ಹರ್ಷ ವ್ಯಕ್ತಪಡಿಸಿದ್ದಾರೆ. ಕಲ್ಯಾಣ ಕರ್ನಾಟಕ ಭಾಗದ ಸರ್ಕಾರಿ ಕನ್ನಡ ಹಾಗೂ ಉರ್ದು ಮಾಧ್ಯಮದ ವಿದ್ಯಾರ್ಥಿಗಳನ್ನು ಸಾಧನೆಗೆ ಪ್ರೇರೇಪಿಸಲು ವಿದ್ಯಾರ್ಥಿ ವೇತನ ಯೋಜನೆ ರೂಪಿಸಲಾಗಿದೆ. ಗ್ರಾಮೀಣ ಭಾಗದಲ್ಲಿ ಇನ್ನಷ್ಟು ಶೈಕ್ಷಣಿಕ ಜಾಗೃತಿ ಮೂಡಬೇಕಿದೆ. ಔರಾದ್ ತಾಲ್ಲೂಕಿನ ತೋರಣಾ ಗ್ರಾಮದ ಕೆಲ ಮಕ್ಕಳು ಸರ್ಕಾರಿ ವೈದ್ಯಕೀಯ ಸೀಟು ಪಡೆದಿದ್ದರಿಂದ ಆ ಊರಲ್ಲಿ ಶೈಕ್ಷಣಿಕ ಜಾಗೃತಿ ಮೂಡಿದ್ದು, ಇದೀಗ 50ಕ್ಕೂ ಹೆಚ್ಚು ವಿದ್ಯಾರ್ಥಿಗಳು ವಿವಿಧ ವೃತ್ತಿಪರ ಕೋರ್ಸ್ಗಳಲ್ಲಿ ಪ್ರವೇಶ ಪಡೆದಿದ್ದಾರೆ ಎಂದು ಅವರು ತಿಳಿಸಿದ್ದಾರೆ. ಸಾವಿರಾರು ವಿದ್ಯಾರ್ಥಿಗಳ ವೈದ್ಯಕೀಯ ಕೋರ್ಸ್ ಕನಸು ನನಸಾಗಿಸಿದ ಹೆಮ್ಮೆ ನಮ್ಮ ಶಾಹೀನ್ ಸಂಸ್ಥೆಗೆ ಇದೆ. ಶಾಹೀನ್ನಲ್ಲಿ ಓದಿದ 100 ಕುಟುಂಬಗಳ ಇಬ್ಬರು, ಮೂವರು ಮಕ್ಕಳು ವೈದ್ಯರಾದ ಉದಾಹರಣೆಗಳು ಇವೆ. ಕಲ್ಯಾಣ ಕರ್ನಾಟಕ ಭಾಗದ ವಿದ್ಯಾರ್ಥಿಗಳು ಈ ಶಿಷ್ಯವೇತನದ ಲಾಭ ಪಡೆಯಬೇಕು ಎಂದು ಅವರು ಮನವಿ ಮಾಡಿದ್ದಾರೆ. ಶಿಷ್ಯವೇತನದ ಕುರಿತು ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ 9964763018 (ಬೀದರ್ ಮುಖ್ಯ ಕಚೇರಿ), 7666048172 (ಕಲಬುರಗಿ ಶಾಖೆ), 9916149428 (ಔರಾದ್), 9845058018 (ಬಸವಕಲ್ಯಾಣ), 8971222784 (ಚಿಟಗುಪ್ಪ), 7026951056 (ಹುಮನಾಬಾದ್), 9880539999 (ರಾಯಚೂರು), 9986670286 (ಯಾದಗಿರಿ) ಹಾಗೂ 8553165562 (ಬಳ್ಳಾರಿ) ಶಾಖೆಗಳಿಗೆ ಸಂಪರ್ಕಿಸಬಹುದು ಎಂದು ತಿಳಿಸಿದ್ದಾರೆ.
ಅಫಜಲ್ಪುರ | ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ಶಿಬಿರ
ಕಲಬುರಗಿ : ಪ್ರಜೆಗಳಲ್ಲಿ ಮಾನವೀಯ ಮೌಲ್ಯಗಳನ್ನು ಬೆಳೆಸಿ ದೇಶವನ್ನು ಅಭಿವೃದ್ಧಿ ಮಾಡುವ ಮೂಲಕ ನಾಗರಿಕರಲ್ಲಿ ನೆಮ್ಮದಿ ಮೂಡಿಸುವುದೇ ಒಂದು ಪ್ರಜಾಪ್ರಭುತ್ವ ದೇಶದ ಗುರಿ ಎಂದು ಮಾತೋಶ್ರೀ ಮನೋರಮಾ ಮಧ್ವರಾಜ್ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯ ಬಸವರಾಜ ನಿಂಬರಗಿ ಹೇಳಿದರು. ಅವರು ಸರಕಾರಿ ಪ್ರಥಮ ದರ್ಜೆ ಕಾಲೇಜು ಅಫಜಲ್ಪುರ ದಲ್ಲಿ ಏರ್ಪಡಿಸಿದ್ದ 2025ನೇ ವರ್ಷದ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ಶಿಬಿರದ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು. ಇಂದಿನ ಯುವಕರು ಸಾಮಾಜಿಕ ಜಾಲತಾಣಗಳ ಮೂಲಕ ಸಾಕಷ್ಟು ಜ್ಞಾನ ಮತ್ತು ಕೌಶಲ್ಯಗಳನ್ನು ಪಡೆಯುತ್ತಿದ್ದಾರೆ. ಆದರೆ ಅದಕ್ಕಿಂತ ಹೆಚ್ಚು ಸಾಮಾಜಿಕ ಜಾಲತಾಣಗಳ ದುರುಪಯೋಗವನ್ನು ಕೂಡ ಮಾಡಿಕೊಳ್ಳುತ್ತಿದ್ದಾರೆ. ಇದರಿಂದಾಗಿ ಇಂದಿನ ಯುವಪೀಳಿಗೆ ದಾರಿ ತಪ್ಪಿರುವುದು ಕಂಡುಬರುತ್ತದೆ. ಇದಕ್ಕೆ ಮಾನವೀಯ ಮೌಲ್ಯಗಳ ಜಾಗೃತಿಯ ಮೂಲಕ ಪರಿಹಾರವನ್ನು ಕಂಡುಕೊಳ್ಳಬೇಕು ಎಂದು ಅವರು ಹೇಳಿದರು. ಸಿದ್ದರಾಮಪ್ಪ ತಾವರ್ ಖೇಡ ಅವರು ಮುಖ್ಯ ಅತಿಥಿಗಳಾಗಿದ್ದರು. ಕರ್ನಾಟಕ ಜಾನಪದ ಪರಿಷತ್ತಿನ ಅಧ್ಯಕ್ಷರಾದ ಸಂಗಣ್ಣ ಸಿಂಗೆ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಹಾಯಕ ಪ್ರಾಧ್ಯಾಪಕ ಡಾ.ರಾಘವೇಂದ್ರ ಮಾತನಾಡಿದರು. ಕಾಲೇಜಿನ ಗೋದಾವರಿ ತಂಡದ ವಿದ್ಯಾರ್ಥಿಗಳು ಮತ್ತು ವಿದ್ಯಾರ್ಥಿನಿಯರು ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿಕೊಟ್ಟರು.
ಪೂಂಚ್ ವಲಯದಲ್ಲಿ ಕದನ ವಿರಾಮ ಉಲ್ಲಂಘನೆ; ಪಾಕಿಸ್ತಾನದಿಂದ ಮತ್ತೆ ಗುಂಡಿನ ದಾಳಿ
ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ನಿಯಂತ್ರಣ ರೇಖೆ (ಎಲ್ಒಸಿ) ಉದ್ದಕ್ಕೂ ಪಾಕಿಸ್ತಾನಿ ಪಡೆಗಳು ಸತತ ನಾಲ್ಕನೇ ರಾತ್ರಿಯೂ ಅಪ್ರಚೋದಿತ ಗುಂಡಿನ ದಾಳಿ ನಡೆಸಿವೆ ಎಂದು ಅಧಿಕಾರಿಗಳು ಸೋಮವಾರ ಬೆಳಿಗ್ಗೆ ತಿಳಿಸಿದ್ದಾರೆ. ಕುಪ್ವಾರಾ ಮತ್ತು ಪೂಂಚ್ ಜಿಲ್ಲೆಗಳ ಎದುರಿನ ಪ್ರದೇಶಗಳಲ್ಲಿ ಪಾಕಿಸ್ತಾನಿ ಸೇನಾ ನೆಲೆಗಳು ನಿಯಂತ್ರಣ ರೇಖೆಯುದ್ದಕ್ಕೂ ಅಪ್ರಚೋದಿತ ಗುಂಡಿನ ದಾಳಿ ನಡೆಸಿವೆ. ಭಾರತೀಯ ಸೇನೆಯು ಅದಕ್ಕೆ ತಕ್ಷಣವೇ ಪರಿಣಾಮಕಾರಿಯಾಗಿ ಪ್ರತಿಕ್ರಿಯೆ ನೀಡಿದೆ, ಎಂದು ಭಾರತೀಯ ಸೇನೆಯು ಹೇಳಿಕೆಯಲ್ಲಿ ತಿಳಿಸಿದೆ. ಪೂಂಚ್ ವಲಯದಲ್ಲಿ ಪಾಕಿಸ್ತಾನ ಸೇನೆಯು ಕದನ ವಿರಾಮವನ್ನು ಉಲ್ಲಂಘಿಸಿದ್ದು ಇದೇ ಮೊದಲು. ಕಳೆದ ಮಂಗಳವಾರ ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 26 ಜನರು ಸಾವನ್ನಪ್ಪಿದ ನಂತರ ಭಾರತ ಮತ್ತು ಪಾಕಿಸ್ತಾನಿ ಪಡೆಗಳ ನಡುವೆ ಗುಂಡಿನ ಚಕಮಕಿ ಪ್ರಾರಂಭವಾಯಿತು.
ಸಮಯದಲ್ಲಿ ಅರ್ಧ ಗಂಟೆ ಹಿಂದೆ, ಯೋಗ್ಯತೆಯಲ್ಲಿ ಅರ್ಧ ಶತಮಾನ ಹಿಂದೆ; ಪಾಕಿಸ್ತಾನಕ್ಕೆ ಓವೈಸಿ ಮಾಂಜಾ!
ಪಹಲ್ಗಾಮ್ ದಾಳಿಯ ಬಳಿಕ ಭಾರತ-ಪಾಕಿಸ್ತಾನ ನಡುವೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣಗೊಂಡಿದ್ದು, ಉಭಯ ರಾಷ್ಟ್ರಗಳ ನಡುವೆ ಯುದ್ಧದ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಮಧ್ಯೆ ಪಾಕಿಸ್ತಾನಕ್ಕೆ ಅದರ ಯೋಗ್ಯತೆಯನ್ನು ಮನದಟ್ಟು ಮಾಡಿಕೊಟ್ಟಿರುವ ಹೈದರಾಬಾದ್ ಎಐಎಂಐಎಂ ಸಂಸದ ಅಸಾದುದ್ದೀನ್ ಒವೈಸಿ, ಪಾಕಿಸ್ತಾನವು ಸಮಯದಲ್ಲಿ ಭಾರತಕ್ಕಿಂತ ಅರ್ಧ ಗಂಟೆ ಹಿಂದಿದ್ದರೆ, ಯೋಗ್ಯತೆಯಲ್ಲಿ ಅರ್ಧ ಶತಮಾನಕ್ಕಿಂತ ಹಿಂದಿದೆ ಎಂದು ವ್ಯಂಗ್ಯವಾಡಿದ್ದಾರೆ. ಭಾರತದ ಮಿಲಿಟರಿ ಬಜೆಟ್ ಪಾಕಿಸ್ತಾನದ ಒಟ್ಟು ಬಜೆಟ್ಗೆ ಸಮ ಎಂದು ಓವೈಸಿ ಕಾಲೆಳೆದಿದ್ದಾರೆ. ಇಲ್ಲಿದೆ ಮಾಹಿತಿ.
35 ವರ್ಷಗಳಿಂದ ಭಾರತದಲ್ಲಿ ವಾಸಿಸುತ್ತಿರುವ ಪಾಕಿಸ್ತಾನಿ ಪ್ರಜೆಯಾದ ಶಾರದಾ ಬಾಯಿ ಅವರನ್ನು ತಕ್ಷಣವೇ ಭಾರತ ತೊರೆಯುವಂತೆ ಒಡಿಶಾ ಪೊಲೀಸರು ಸೂಚಿಸಿದ್ದಾರೆ. ಅವರ ವೀಸಾವನ್ನು ರದ್ದುಗೊಳಿಸಲಾಗಿದೆ. ಪಹಲ್ಗಾಮ್ ಹತ್ಯಾಕಾಂಡದ ನಂತರ ಈ ಕ್ರಮ ಕೈಗೊಳ್ಳಲಾಗಿದೆ. ಬೊಲಂಗಿರ್ನಲ್ಲಿ ಹಿಂದೂ ಕುಟುಂಬವನ್ನು ಮದುವೆಯಾಗಿದ್ದಾರೆ. ಭಾರತೀಯ ಪೌರತ್ವ ಸಿಕ್ಕಿಲ್ಲ. ಸರ್ಕಾರವು ತನ್ನನ್ನು ಕುಟುಂಬದಿಂದ ಬೇರ್ಪಡಿಸದಂತೆ ಮನವಿ ಮಾಡಿದ್ದಾರೆ. ಭಾರತದಲ್ಲಿ ವಾಸಿಸಲು ಅನುಮತಿ ನೀಡುವಂತೆ ಕೋರಿದ್ದಾರೆ. ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳುವುದಾಗಿ ಪೊಲೀಸರು ತಿಳಿಸಿದ್ದಾರೆ.
ರೈಲ್ವೆ ಇಲಾಖೆಯ ನೇಮಕಾತಿ ಪರೀಕ್ಷೆಯಲ್ಲೂ ಮಂಗಳಸೂತ್ರ, ತಿಲಕ, ಜನಿವಾರ ತೆಗೆಯಲು ಸೂಚನೆ!
ಸಿಇಟಿ ಪರೀಕ್ಷೆಯಲ್ಲಿ ಜನಿವಾರ ತೆಗೆಸಿದ ಕ್ರಮ ತೀವ್ರ ವಿವಾದಕ್ಕೆ ಒಳಗಾಗಿತ್ತು. ಇದೀಗ ಅಂತಹದ್ದೇ ಆದೇಶ ರೈಲ್ವೆ ಇಲಾಖೆಯ ನೇಮಕಾತಿ ಪರೀಕ್ಷೆಗೂ ನೀಡಿರುವುದು ಆಕ್ಷೇಪಕ್ಕೆ ಕಾರಣವಾಗಿದೆ. ಪ್ರವೇಶ ಪತ್ರದಲ್ಲಿ ಯಾವುದೇ ಧಾರ್ಮಿಕ ಸಂಕೇತಗಳನ್ನು ಅಭ್ಯರ್ಥಿಗಳು ಹೊಂದಿರಬಾರದು ಎಂದು ನಮೂದಿಸಲಾಗಿದೆ. ರೈಲ್ವೆ ಇಲಾಖೆಯ ನರ್ಸಿಂಗ್ ಸೂಪರಿಂಟೆಂಡೆಂಟ್ ಹುದ್ದೆಗೆ ಏ.29ರಂದು ಪರೀಕ್ಷೆ ನಡೆಯಲಿದ್ದು, ಮಂಗಳೂರಿನ ಬೋಂದೆಲ್ನ ಕಾಲೇಜೊಂದರಲ್ಲಿ ಪರೀಕ್ಷಾ ಕೇಂದ್ರ ಇದೆ. ಪರೀಕ್ಷೆ ಬರೆಯುವ ಮೊದಲು ಹಿಂದೂಗಳು ಅವರ ಧಾರ್ಮಿಕ ಚಿಹ್ನೆಗಳಾದ ಮಂಗಳಸೂತ್ರ, ಕಾಲುಂಗುರ, ತಿಲಕ, ಜನಿವಾರ, ಕೈಬಳೆ ಇನ್ನಿತರ ಎಲ್ಲವುಗಳನ್ನೂ ತೆಗೆದಿಟ್ಟು ಪರೀಕ್ಷಾ ಕೊಠಡಿ ಪ್ರವೇಶ ಮಾಡುವಂತೆ ಪ್ರವೇಶ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಪಾಕಿಸ್ತಾನದ ವಿರುದ್ಧ ಯುದ್ಧ ಬೇಡವೆಂದ ಸಿದ್ದರಾಮಯ್ಯ: ಕ್ಷಮೆ ಕೇಳಿ ಎಂದು ವಿಜಯೇಂದ್ರ ವಾಗ್ದಾಳಿ
ಬೆಂಗಳೂರು, ಏಪ್ರಿಲ್ 28: ಸಿದ್ದರಾಮಯ್ಯನವರು ಪಾಕಿಸ್ತಾನದ ವಿರುದ್ಧ ಯುದ್ಧ ಮಾಡಬಾರದು ಎಂಬ ದೃಷ್ಟಿಕೋನ ಖಂಡಿತ ಸರಿಯಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷರಾದ ಬಿ ವೈ ವಿಜಯೇಂದ್ರ ಅವರು ಆಕ್ಷೇಪ ವ್ಯಕ್ತಪಡಿಸಿದರು. ಇದು ಅಕ್ಷಮ್ಯ ಅಪರಾಧ. ಬಿ ಎಸ್ ಯಡಿಯೂರಪ್ಪ ಅವರ ಮಾತಿನಂತೆ ಸಿದ್ದರಾಮಯ್ಯನವರು ಈ ದೇಶದ ಜನರ ಕ್ಷಮೆ ಕೂಡ ಕೇಳಬೇಕು ಎಂದು ಆಗ್ರಹಿಸಿದರು. ಸಿದ್ದರಾಮಯ್ಯನವರಿಂದ ಈ ರೀತಿಯ
Pahalgam Attack: ಭಾರತ-ಪಾಕಿಸ್ತಾನ ಉದ್ವಿಗ್ನ; ದ್ವೇಷದ ನೋಟದ ಚೀನಾದಿಂದ ಸಂಯಮದ ಪಾಠ!
ಪಹಲ್ಗಾಮ್ ಭಯೋತ್ಪಾದಕ ದಾಳಿ ಬಳಿಕ ಉದ್ಭವವಾಗಿರುವ ಭಾರತ ಮತ್ತು ಪಾಕಿಸ್ತಾನ ನಡುವಿನ ಉದ್ವಿಗ್ನ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವುದಾಗಿ ಚೀನಾ ಹೇಳಿದೆ. ಉಭಯ ದೇಶಗಳು ಸಂಯಮದಿಂದ ವರ್ತಿಸಬೇಕು ಎಂದು ಮನವಿ ಮಾಡಿರುವ ಚೀನಾ, ಪರಿಸ್ಥಿತಿ ತಿಳಿಗೊಳಿಸಲು ಅಗತ್ಯ ನೆರವು ನೀಡಲು ಸಿದ್ಧ ಎಂದು ಹೇಳಿದೆ. ಪಹಲ್ಗಾಮ್ ದಾಳಿಯ ವಿಚಾರವಾಗಿ ಪಾಕಿಸ್ತಾನದ ವಿದೇಶಾಂಗ ಸಚಿವ ಮೊಹಮ್ಮದ್ ಇಶಾಕ್ ದಾರ್ ಮತ್ತು ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ನಡುವೆ ಏನು ಮಾತುಕತೆ ನಡೆದಿದೆ? ಇಲ್ಲಿದೆ ಮಾಹಿತಿ.
ಕಾಶ್ಮೀರ: ಉಗ್ರರು ತೋಡಿದ ಖೆಡ್ಡಾದ ಬಗ್ಗೆ ಎಚ್ಚರ ಅಗತ್ಯ
ಪೆಹಲ್ಗಾಮ್ನಲ್ಲಿ ಭಾರತೀಯ ಪ್ರವಾಸಿಗರ ಮೇಲೆ ಉಗ್ರರು ದಾಳಿ ನಡೆಸಿ ಐದು ದಿನಗಳು ಕಳೆದಿವೆ. ಪ್ರಧಾನಿ ಮೋದಿಯವರು ಚುನಾವಣೆ ನಡೆಯಲಿರುವ ಬಿಹಾರಕ್ಕೆ ತೆರಳಿ ಭಾಷಣಗಳ ಕ್ಷಿಪಣಿಗಳನ್ನು ಹಾರಿಸಿದ್ದಾರೆ. ಆದರೆ ಪ್ರಧಾನಿ ಮೋದಿಯ ಭಾಷಣಗಳಿಗೆ ಹೆದರಿ ಉಗ್ರಗಾಮಿಗಳು ತಮ್ಮ ಕುಕೃತ್ಯಗಳನ್ನು ನಿಲ್ಲಿಸುವುದಾಗಲಿ, ಅವರಿಗೆ ಬೆಂಬಲ ನೀಡುವ ಕೆಲಸದಿಂದ ಪಾಕಿಸ್ತಾನ ಹಿಂದೆ ಸರಿಯುತ್ತದೆ ಎಂದು ಭಾವಿಸುವುದಾಗಲಿ ನಮ್ಮ ಹುಂಬತನವಾಗುತ್ತದೆ. ‘‘ಉಗ್ರರ ಕೃತ್ಯದಿಂದ ಭಾರತೀಯರ ರಕ್ತ ಕುದಿಯುತ್ತಿದೆ’’ ಎಂದು ಪ್ರಧಾನಿ ಮೋದಿಯವರು ತಮ್ಮ ‘ಮನ್ ಕೀ ಬಾತ್’ನಲ್ಲಿ ಹೇಳಿದ್ದಾರೆ. ನಿಜ. ಆದರೆ ಅವರ ರಕ್ತ ಕುದಿಯುತ್ತಿರುವುದು ಬರೇ ಉಗ್ರರ ವಿರುದ್ಧ ಮಾತ್ರವಲ್ಲ. ‘ಉಗ್ರರನ್ನು ಸಂಪೂರ್ಣ ನಿಯಂತ್ರಿಸಿದ್ದೇವೆ’ ಎಂದು ಹೇಳುತ್ತಲೇ, ನಾಗರಿಕರನ್ನು ಉಗ್ರರ ಬಾಯಿಗೆ ಕೊಟ್ಟ ಕೇಂದ್ರ ಸರಕಾರದ ವೈಫಲ್ಯದ ಬಗ್ಗೆಯೂ ಅವರು ಆಕ್ರೋಷಿತರಾಗಿದ್ದಾರೆ. ಸರಕಾರದ ಮಾತುಗಳನ್ನು ನಂಬಿ ಕಾಶ್ಮೀರಕ್ಕೆ ಪ್ರವಾಸ ಹೋದ ಪ್ರವಾಸಿಗರಿಗೆ ಕನಿಷ್ಠ ಭದ್ರತೆಯನ್ನು ಒದಗಿಸದೆ ಅವರನ್ನು ಹಾಡಹಗಲೇ ಉಗ್ರರಿಗೆ ಬಲಿಕೊಟ್ಚ ಸರಕಾರದ ವಿರುದ್ಧ ಭಾರತೀಯರ ರಕ್ತ ಕುದಿಯುತ್ತಿರುವುದು ಸುಳ್ಳಲ್ಲ. ಈ ಆಕ್ರೋಶದಿಂದ ಪಾರಾಗುವ ಭಾಗವಾಗಿ ದಾಳಿಗೆ ‘ಹಿಂದೂ-ಮುಸ್ಲಿಮ್’ ಬಣ್ಣ ಕೊಡಲು ಸರಕಾರದ ನೇತೃತ್ವದಲ್ಲೇ ಗರಿಷ್ಠ ಪ್ರಯತ್ನ ನಡೆಯುತ್ತಿದೆಯಾದರೂ, ಸ್ಥಳೀಯ ಕಾಶ್ಮೀರಿಗಳು ಪ್ರವಾಸಿಗರನ್ನು ರಕ್ಷಿಸಲು ನೀಡಿದ ಕೊಡುಗೆ, ಕೋಮುವಾದಿ ಶಕ್ತಿಗಳ ಬಾಯಿ ಮುಚ್ಚಿಸುವಂತೆ ಮಾಡಿದೆ. ಮಾಧ್ಯಮಗಳ ಬಲದಿಂದ ಸಾಕಷ್ಟು ವದಂತಿಗಳನ್ನು ಹರಡಲು ದುಷ್ಕರ್ಮಿಗಳು ಯಶಸ್ವಿಯಾಗಿದ್ದಾರಾದರೂ, ಉಗ್ರರಿಂದ ಪ್ರಾಣ ಉಳಿಸಿಕೊಂಡು ಬಂದ ಪ್ರವಾಸಿಗರು ಕಾಶ್ಮೀರಿಗಳ ನೆರವಿನ ಬಗ್ಗೆ ಮುಕ್ತಕಂಠದಿಂದ ಶ್ಲಾಘಿಸುತ್ತಿರುವುದು ಅವರಿಗೆ ದೊಡ್ಡ ಹಿನ್ನಡೆಯನ್ನುಂಟು ಮಾಡಿದೆ. ಇದೇ ಸಂದರ್ಭದಲ್ಲಿ, ತನ್ನ ವಿರುದ್ಧ ಹರಿದು ಬರುತ್ತಿರುವ ಆಕ್ರೋಶಗಳಿಂದ ರಕ್ಷಿಸಿಕೊಳ್ಳಲು ಕೇಂದ್ರ ಸರಕಾರ ಗರಿಷ್ಠ ಪ್ರಯತ್ನಗಳನ್ನು ಮಾಡುತ್ತಿದೆ. ಉಗ್ರರನ್ನು ಹಿಡಿದು ಅವರಿಗೆ ಶಿಕ್ಷೆ ವಿಧಿಸುವುದಕ್ಕಿಂತಲೂ, ಸಂಕಟ, ನೋವು, ಹತಾಶೆಗಳಿಂದ ಜರ್ಜರಿತವಾಗಿರುವ ದೇಶದ ಜನತೆಯನ್ನು ತಕ್ಷಣಕ್ಕೆ ಸಮಾಧಾನ ಪಡಿಸುವ ದಾರಿಗಾಗಿ ಅದು ತಡಕಾಡುತ್ತಿದೆ. ಐದು ದಿನ ಕಳೆದರೂ, ಉಗ್ರರು ಎಲ್ಲಿದ್ದಾರೆ ಎನ್ನುವುದನ್ನು ಹುಡುಕಿ ತೆಗೆಯುವಲ್ಲಿ ಸೇನೆ ವಿಫಲವಾಗಿದೆ. ಅದು ಅಷ್ಟು ಸುಲಭವೂ ಅಲ್ಲ. ಇದೇ ಸಂದರ್ಭದಲ್ಲಿ ‘ಪಾಕಿಸ್ತಾನದ ಕೈವಾಡವಿದೆ’ ಎಂದು ಏಕಾಏಕಿ ಅದರ ಮೇಲೆ ಯುದ್ಧ ಸಾರುವುದಕ್ಕೂ ಸಾಧ್ಯವಿಲ್ಲ. ಈ ಕಾರಣದಿಂದ, ಜನರನ್ನು ತಕ್ಷಣ ಸಮಾಧಾನಿಸುವ ಭಾಗವಾಗಿ ಕೆಲವು ಕಠಿಣ ರಾಜತಾಂತ್ರಿಕ ಕ್ರಮಗಳನ್ನು ತೆಗೆದುಕೊಂಡಿದೆ. ಈ ಹಿನ್ನೆಲೆಯಲ್ಲಿ ಸಿಂಧೂ ಜಲ ಒಪ್ಪಂದವನ್ನು ಅಮಾನತುಗೊಳಿಸಿದ್ದೇವೆ ಎಂದು ಭಾರತ ಘೋಷಿಸಿದೆ. ಆದರೆ ಸರಕಾರದ ಈ ನಿರ್ಧಾರದ ಬಗ್ಗೆ ಸ್ವತಃ ಭಾರತದೊಳಗಿರುವ ರಾಜಕೀಯ ನಾಯಕರೇ ವಿಶ್ವಾಸವನ್ನು ಹೊಂದಿಲ್ಲ. ಇದೊಂದು ಕಣ್ಕಟ್ಟಿನ ನಿರ್ಧಾರ ಎಂದು ಹಲವರು ಈಗಾಗಲೇ ಟೀಕಿಸಿದ್ದಾರೆ. ಸಿಂಧೂ ನದಿ ನೀರನ್ನು ತಡೆ ಹಿಡಿದರೆ ಅದನ್ನು ಎಲ್ಲಿ ದಾಸ್ತಾನು ಮಾಡಬೇಕು ಎನ್ನುವ ಪ್ರಾಥಮಿಕ ಅರಿವೂ ಸರಕಾರಕ್ಕೆ ಇಲ್ಲ ಎಂದು ಹಲವರು ಹೇಳಿಕೆ ನೀಡಿದ್ದಾರೆ. ಉಳಿದಂತೆ ಭಾರತದ ನಿರ್ಧಾರಕ್ಕೆ ಪ್ರತಿಯಾಗಿ ಪಾಕಿಸ್ತಾನವೂ ಕ್ರಮಗಳನ್ನು ತೆಗೆದುಕೊಂಡಿದೆ. ಇದೇ ಸಂದರ್ಭದಲ್ಲಿ ‘ತನಿಖೆಗೆ ನಾನು ಸಿದ್ಧ’ ಎಂದು ಪಾಕಿಸ್ತಾನ ಘೋಷಿಸಿಕೊಂಡಿರುವುದು ಮತ್ತು ತನಿಖೆಯಲ್ಲಿ ರಶ್ಯ, ಚೀನಾ ಕೂಡ ಭಾಗಿಯಾಗಬೇಕು ಎಂದು ಬೇಡಿಕೆಯಿಟ್ಟಿರುವುದು ಭಾರತ ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಅತ್ತ ಪಾಕಿಸ್ತಾನವನ್ನು ಶಿಕ್ಷಿಸಲು ಸಾಧ್ಯವಿಲ್ಲ, ಇತ್ತ ಉಗ್ರರೂ ಕೈಗೆ ಸಿಕ್ಕದೆ ನುಣುಚಿಕೊಂಡಿದ್ದಾರೆ. ಹೀಗಿರುವಾಗ, ಬಲ ಪ್ರದರ್ಶಿಸಲು ಸರಕಾರದ ಮುಂದಿರುವುದು ಅಮಾಯಕ ಕಾಶ್ಮೀರಿಗಳು ಮಾತ್ರ. ಕೋಟೆ ಸೂರೆ ಹೋದ ಮೇಲೆ ದಿಡ್ಡಿ ಬಾಗಿಲು ಹಾಕಿದಂತೆ, ಉಗ್ರರು ಬಂದು ಹೋದ ಮೇಲೆ ಸೇನೆ ಎಚ್ಚರಗೊಂಡಿದೆ. ಸಾವಿರಾರು ಪ್ರವಾಸಿಗರ ರಕ್ಷಣೆಗೆ ನಾಲ್ಕೈದು ಯೋಧರನ್ನು ಇಟ್ಟಿದ್ದರೂ ಇಂದು ಉಗ್ರರನ್ನು ಹುಡುಕುತ್ತಾ ಕಾಶ್ಮೀರದ ಕಾಡು ಮೇಡುಗಳನ್ನು ಅಲೆಯುವ ಅಗತ್ಯವಿರಲಿಲ್ಲ. ಇದೀಗ ಉಗ್ರರ ತನಿಖೆಗೆ ಬಿರುಸಿನ ಕಾರ್ಯಾಚರಣೆ ನಡೆಯುತ್ತಿದೆ. ಆದರೆ ಈ ಕಾರ್ಯಾಚರಣೆಯ ಲಾಭವನ್ನು ಮತ್ತೆ ಉಗ್ರರೇ ತಮ್ಮದಾಗಿಸಿಕೊಳ್ಳುವ ಸಾಧ್ಯತೆಗಳನ್ನು ಕೂಡ ನಾವು ಅಲ್ಲಗಳೆಯುವಂತಿಲ್ಲ. ‘‘ಉಗ್ರರ ಕಾರ್ಯಾಚರಣೆಯ ಹೆಸರಿನಲ್ಲಿ ಕಾಶ್ಮೀರದ ಅಮಾಯಕರಿಗೆ, ನಾಗರಿಕರಿಗೆ ತೊಂದರೆಯಾಗಬಾರದು’’ ಎಂದು ಮುಖ್ಯಮಂತ್ರಿ ಉಮರ್ ಅಬ್ದುಲ್ಲಾ ಅವರು ಹೇಳಿಕೆಯನ್ನು ನೀಡಿದ್ದಾರೆ. ಈಗಾಗಲೇ ಶಂಕಿತ ಉಗ್ರರನ್ನು ಗುರಿ ಮಾಡಿ ಸೇನೆ ದಾಳಿ ನಡೆಸುತ್ತಿದೆ. ನಾಗರಿಕರ ಮನೆಬಾಗಿಲನ್ನು ತಟ್ಟುವ ಕಾರ್ಯ ಜಾರಿಯಲ್ಲಿದೆ. ಉಗ್ರರಿಗೆ ನೆರವು ನೀಡಿದ್ದಾರೆ ಎಂಬ ಅನುಮಾನವಿರುವ ಕಾಶ್ಮೀರಿಗಳ ನಿವಾಸಗಳನ್ನೇ ಯೋಧರು ಧ್ವಂಸಗೊಳಿಸಿದ್ದಾರೆ ಎಂದು ಮಾಧ್ಯಮಗಳು ಸಂಭ್ರಮಿಸಿ ವರದಿ ಮಾಡಿವೆ. ಅನುಮಾನಗಳ ಆಧಾರದಲ್ಲಿ, ಶಂಕೆಯ ಆಧಾರದಲ್ಲಿ ನಾಗರಿಕರಿಗೆ ಚಿತ್ರಹಿಂಸೆ ನೀಡುವುದು, ಅವರ ನಿವಾಸಗಳನ್ನು ಧ್ವಂಸಗೊಳಿಸುವುದರಿಂದ ಕಾಶ್ಮೀರದಲ್ಲಿ ಉಗ್ರವಾದ ದಮನಗೊಳ್ಳುವುದಿಲ್ಲ. ಬದಲಿಗೆ ಇನ್ನಷ್ಟು ಉಲ್ಬಣಿಸುತ್ತದೆ ಎನ್ನುವ ಎಚ್ಚರಿಕೆ ಕೇಂದ್ರ ಸರಕಾರಕ್ಕಿರಬೇಕು. ಕಾಶ್ಮೀರದಲ್ಲಿ ನಾಗರಿಕರು ಉಗ್ರರ ಜೊತೆಗಿಲ್ಲ ಎನ್ನುವುದು ಪೆಹಲ್ಗಾಮ್ ದಾಳಿಯ ಸಂದರ್ಭದಲ್ಲೇ ಸಾಬೀತಾಗಿದೆ. ಉಗ್ರರ ವಿರುದ್ಧ ಹೋರಾಡುತ್ತಾ ಅಲ್ಲಿನ ಶ್ರೀಸಾಮಾನ್ಯನೊಬ್ಬ ಪ್ರಾಣವನ್ನು ತೆತ್ತಿದ್ದಾನೆ. ಗಂಡಸರು, ಮಹಿಳೆಯರು ಎನ್ನದೆ ಕಾಶ್ಮೀರಿಗಳು ಭಾರತದ ಪ್ರವಾಸಿಗರ ರಕ್ಷಣೆಗೆ ಕೈಜೋಡಿಸಿದ್ದಾರೆ. ಜನರ ತಕ್ಷಣದ ಆಕ್ರೋಶಗಳಿಂದ ರಕ್ಷಣೆ ಪಡೆಯುವುದಕ್ಕಾಗಿ ಈ ಅಮಾಯಕ ಕಾಶ್ಮೀರಿಗಳನ್ನು ಸರಕಾರ ಗುರಾಣಿಯಾಗಿ ಬಳಸಿದರೆ ಅದರಿಂದ ಭವಿಷ್ಯದಲ್ಲಿ ನಷ್ಟವಿದೆ. ಉಗ್ರರು ದಾಳಿ ನಡೆಸಿರುವುದು ಅಲ್ಲಿರುವ ಹಿಂದೂಗಳ ವಿರುದ್ಧವಲ್ಲ. ಬದಲಿಗೆ ಕಾಶ್ಮೀರದ ಮೇಲೆ ನಿಯಂತ್ರಣ ಸಾಧಿಸಲು ಪ್ರಯತ್ನಿಸುತ್ತಿರುವ ಭಾರತದ ವಿರುದ್ಧ. ಅದಕ್ಕೆ ಬದಲಾಗಿ ಭಾರತದ ಸರಕಾರವು ಸ್ಥಳೀಯ ನಾಗರಿಕರ ಜೊತೆಗೆ ಅಮಾನವೀಯವಾಗಿ ವರ್ತಿಸಿದರೆ, ಪರೋಕ್ಷವಾಗಿ ಉಗ್ರರ ಕೃತ್ಯವನ್ನು ಸಮರ್ಥಿಸಿದಂತಾಗುತ್ತದೆ. ಸೇನೆಯ ದೌರ್ಜನ್ಯದಿಂದ ರೋಸಿದ ಯುವಕರು ಉಗ್ರವಾದಿಗಳ ಕುರಿತಂತೆ ಮೃದು ನಿಲುವನ್ನು ತಳೆಯುವ ಸಾಧ್ಯತೆಗಳಿವೆ. ಕಳೆದ ನಾಲ್ಕೈದು ವರ್ಷಗಳಿಂದ ಕಾಶ್ಮೀರಿ ನಾಗರಿಕರನ್ನು ನಮ್ಮವರನ್ನಾಗಿಸಲು ನಡೆಸಿದ ಪ್ರಯತ್ನಗಳಿಗೆ ಇದು ಭಾರೀ ಹಿನ್ನಡೆಯನ್ನುಂಟು ಮಾಡಬಹುದು. ಉಗ್ರರ ವಿರುದ್ಧದ ಕಾರ್ಯಾಚರಣೆ ನಡೆಯಲೇ ಬೇಕು. ಅವರ ದಮನವಾಗಲೇ ಬೇಕು. ಆದರೆ ಅದು ಕಾಶ್ಮೀರಿಗಳ ಬೆಂಬಲದ ಜೊತೆಗೇ ಆಗಬೇಕಾದ ಕೆಲಸ. ಕಾಶ್ಮೀರಿಗಳನ್ನು ನಮ್ಮವರನ್ನಾಗಿಸುವುದೇ ಉಗ್ರವಾದಿಗಳನ್ನು ಎದುರಿಸಲು ಸರಕಾರಕ್ಕಿರುವ ಅತ್ಯುತ್ತಮ ದಾರಿ. ಕಾಶ್ಮೀರಿಗಳು ಭಾರತದ ಜೊತೆಗೆ ಗಟ್ಟಿಯಾಗಿ ನಿಂತ ದಿನ, ಉಗ್ರವಾದಿಗಳು ಸಂಪೂರ್ಣ ಸೋಲುತ್ತಾರೆ. ಉಗ್ರವಾದಿಗಳು ತಮ್ಮ ಕೃತ್ಯಗಳ ಮೂಲಕ ಕಾಶ್ಮೀರಿಗಳನ್ನು ಭಾರತದ ವಿರುದ್ಧ ಎತ್ತಿಕಟ್ಟಲು ಪ್ರಯತ್ನಿಸುತ್ತಿರುವಾಗ, ಅವರು ತೋಡಿದ ಖೆಡ್ಡಾಕ್ಕೆ ನಾವು ಹೋಗಿ ಬೀಳಬಾರದು. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಉಮರ್ ಅಬ್ದುಲ್ಲಾ ಅವರ ಸಲಹೆಯನ್ನು ಕೇಂದ್ರ ಸರಕಾರ ಗಂಭೀರವಾಗಿ ತೆಗೆದುಕೊಳ್ಳಬೇಕು.
Pahalgam Terrorist Attack: ಅಟ್ಟಾರಿ ಗಡಿ ಮೂಲಕ 272 ಪಾಕಿಸ್ತಾನಿಯರು ವಾಪಸ್
ನವದೆಹಲಿ, ಏಪ್ರಿಲ್ 28: ಜಮ್ಮು ಮತ್ತು ಕಾಶ್ಮೀರದ ಅನಂತನಾಗ್ ಜಿಲ್ಲೆಯ ಪಹಲ್ಗಾಮ್ನಲ್ಲಿ ನಡೆದ ಉಗ್ರರ ದಾಳಿಯ ಬಳಿಕ ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಬಂಧ ಹದಗೆಟ್ಟಿದೆ. ಪಾಕಿಸ್ತಾನ ವಿರುದ್ಧ ಹಲವು ರಾಜತಾಂತ್ರಿಕ ಕ್ರಮಗಳನ್ನು ಭಾರತ ಘೋಷಣೆ ಮಾಡಿದೆ. ಇದರಲ್ಲಿ ಪ್ರಮುಖವಾಗಿ ಸಾರ್ಕ್ ವೀಸಾ ಅಡಿ ಭಾರತಕ್ಕೆ ಆಗಮಿಸಿರುವ ಪಾಕಿಸ್ತಾನದ ಪ್ರಜೆಗಳು ದೇಶ ಬಿಟ್ಟು ತೆರಳಲು ಗಡುವು ನೀಡಿದೆ.
ಕೆಎಲ್ ರಾಹುಲ್ ಮುಂದೆ ಮೈ ಹೋಮ್ ಗ್ರೌಂಡ್ ಕಾಪಿ ಮಾಡಿದ ವಿರಾಟ್ ಕೊಹ್ಲಿ; ಕೆಣಕಿದವರನ್ನು ಅಣಕಿಸದೇ ಬಿಡಲ್ಲ ಚೀಕೂ!
ಆರ್ಸಿಬಿಯ ವಿರಾಟ್ ಕೊಹ್ಲಿ ಮತ್ತು ಡಿಸಿಯ ಕೆಎಲ್ ರಾಹುಲ್ ನಡುವೆ ಇದೀಗ ಮೈ ಹೋಮ್ ಗ್ರೌಂಡ್ ಸೆಲೆಬ್ರೆಷನ್ ಸ್ಪರ್ಧೆ ಏರ್ಪಟ್ಟಿದೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್ಸಿಬಿಯನ್ನು ಮಣಿಸಿ ಈ ಐಕಾನಿಕ್ ಸೆಲೆಬ್ರೆಷನ್ ಮಾಡಿದ್ದ ಕೆಎಲ್ ರಾಹುಲ್ ಅವರಿಗೆ, ಹೊಸದಿಲ್ಲಿಯ ಅರುಣ್ ಜೇಟ್ಲಿ ಮೈದಾನದಲ್ಲಿ ಅದೇ ಸೆಲೆಬ್ರೆಷನ್ ಮಾಡಿ ವಿರಾಟ್ ಕೊಹ್ಲಿ ತಿರುಗೇಟು ನೀಡಿದ್ದಾರೆ. ಆದರೆ ವಿರಾಟ್ ಕೊಹ್ಲಿ ಅವರ ಸೆಲೆಬ್ರೆಷನ್ ಅಗ್ರೆಸ್ಸಿವ್ ಆಗಿರದೇ, ಕೇವಲ ಗೆಳೆಯರ ನಡುವಿನ ತಿಳಿ ಹಾಸ್ಯದಂತಿತ್ತು. ಇಲ್ಲಿದೆ ಮಾಹಿತಿ.
ಗೌತಮ್ ಗಂಭೀರ್ ಗೆ ಬೆದರಿಕೆ ಇ-ಮೇಲ್: ಎಂಜಿನಿಯರಿಂಗ್ ವಿದ್ಯಾರ್ಥಿ ಬಂಧನ
Engineering student arrested for threatening email to Gautam Gambhir
ಬೆಂಗಳೂರು-ಮಂಗಳೂರು ಪ್ರಮುಖ ಹೆದ್ದಾರಿ ಚಾರ್ಮಾಡಿ ಘಾಟಿ 1 ವರ್ಷ ಬಂದ್? ಕಾರಣ ಏನು? ಇಲ್ಲಿದೆ ವಿವರ
ಮಂಗಳೂರು-ವಿಲ್ಲುಪುರಂ ರಾಷ್ಟ್ರೀಯ ಹೆದ್ದಾರಿ ಭಾಗವಾದ ಚಾರ್ಮಾಡಿ ಘಾಟಿಯ ವಿಸ್ತರಣೆಗೆ ಅರಣ್ಯ ಇಲಾಖೆ ಅನುಮತಿ ನೀಡಿದೆ. ಮಳೆಗಾಲದ ನಂತರ ಕಾಮಗಾರಿ ಆರಂಭವಾಗಲಿದ್ದು, ರಸ್ತೆ ಅಗಲೀಕರಣಕ್ಕಾಗಿ ಮರಗಳನ್ನು ತೆರವುಗೊಳಿಸಲಾಗುವುದು. ಒಂದು ವರ್ಷದವರೆಗೆ ಹೆದ್ದಾರಿ ಬಂದ್ ಆಗುವ ಸಾಧ್ಯತೆಯಿದ್ದು, ತಡೆಗೋಡೆಗಳು ಮಣ್ಣುಪಾಲಾಗಲಿವೆ. ಎಸ್ಎಲ್ವಿ ಅಥ್ರ್ ಮೂವರ್ಸ್ ಸಂಸ್ಥೆ ಕಾಮಗಾರಿ ನಡೆಸಲಿದೆ.
2 ಲಕ್ಷಕ್ಕಿಂತ ಅಧಿಕ ಕ್ಯಾಶ್ ವಹಿವಾಟಿನ ಬಗ್ಗೆ ಕೇಂದ್ರ-ರಾಜ್ಯ ಸರ್ಕಾರ ಕಣ್ಣಿಡುವಂತೆ ಸುಪ್ರೀಂ ಆದೇಶ
ಬಿಆರ್ಎಎನ್ಎಂಎಸ್ ಶಿಕ್ಷಣ ಸಂಸ್ಥೆಯ ಪ್ರಕರಣದಲ್ಲಿ ಆಸ್ತಿ ಖರೀದಿಗೆ 75 ಲಕ್ಷ ರೂ. ನಗದು ನೀಡಿದ್ದನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ ಮಹತ್ವದ ಆದೇಶ ನೀಡಿದೆ. ಎರಡು ಲಕ್ಷಕ್ಕಿಂತ ಅಧಿಕ ನಗದು ವಹಿವಾಟಿನ ಬಗ್ಗೆ ನ್ಯಾಯಾಲಯಗಳು ಮತ್ತು ಸಬ್ ರಿಜಿಸ್ಟ್ರಾರ್ಗಳು ನಿಗಾ ವಹಿಸಬೇಕು. ಅಲ್ಲದೆ, ಇಂತಹ ವಹಿವಾಟುಗಳ ಬಗ್ಗೆ ಆದಾಯ ತೆರಿಗೆ ಇಲಾಖೆಗೆ ಮಾಹಿತಿ ನೀಡುವಂತೆ ಸೂಚಿಸಲಾಗಿದೆ.
ಬೇಕಿದ್ರೆಶೂಟ್ ಮಾಡಿ ಕೊಂದು ಬಿಡಿ, ಆದ್ರೆ ದೇಶ ಬಿಡು ಅನ್ಬೇಡಿ; ಅಮಿತ್ ಶಾ ಗೆ 72 ವರ್ಷದ ಒಡಿಶಾ ಅಜ್ಜಿಯ ಮನವಿ!
ಪಹಲ್ಗಾಮ್ ಭಯೋತ್ಪಾದಕ ದಾಳಿಯ ಬಳಿಕ ಭಾರತದಲ್ಲಿ ನೆಲೆಸಿರುವ ಪಾಕಿಸ್ತಾನಿ ಪ್ರಜೆಗಳನ್ನು ದೇಶದಿಂದ ಹೊರಹಾಕುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಸೂಚನೆ ಮೇರೆಗೆ ಎಲ್ಲಾ ರಾಜ್ಯ ಸರ್ಕಾರಗಳು, ತಮ್ಮ ರಾಜ್ಯಗಳಲ್ಲಿ ನೆಲೆಸಿರುವ ಪಾಕಿಸ್ತಾನಿ ಪ್ರಜೆಗಳ ಹುಡುಕಾಟ ಆರಂಭಿಸಿವೆ. ಅದರಂತೆ ಒಡಿಶಾದ ಬಾಲಸೋರ್ ಜಿಲ್ಲೆಯಲ್ಲಿ ನೆಲೆಸಿರುವ 72 ವರ್ಷದ ರೆಜಿಯಾ ಸುಲ್ತಾನಾ ಎಂಬ ವೃದ್ಧೆ ಕೂಡ ದೇಶ ಬಿಡುವಂತೆ ನೋಟಿಸ್ ಪಡೆದಿದ್ಧಾಳೆ. ಆದರೆ ಭಾರತ ಬಿಡಲು ನಿರಾಕರಿಸಿರುವ ರೆಜಿಯಾ ಸುಲ್ತಾನಾ ಹೇಳಿರುವುದೇನು? ಇಲ್ಲಿದೆ ಮಾಹಿತಿ.
Heavy Rain: ಕರ್ನಾಟಕದ 19 ಜಿಲ್ಲೆಗಳಲ್ಲಿ ರಣಭೀಕರ ಮಳೆ, ಯೆಲ್ಲೋ ಅಲರ್ಟ್!
Heavy Rain: ವಾಯುಭಾರ ಕುಸಿತದ ಪರಿಣಾಮವಾಗಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ಧಾರಾಕಾರ ಮಳೆ ಮುಂದುವರಿದಿದೆ. ಪಶ್ಚಿಮ ವಿದರ್ಭದಿಂದ ಮರಾಠವಾಡ, ಮನ್ನಾರ್ ಕೊಲ್ಲಿಯವರೆಗೆ ಕರ್ನಾಟಕದ ಒಳನಾಡು ಮತ್ತು ತಮಿಳುನಾಡಿನಾದ್ಯಂತ ಉತ್ತರ-ದಕ್ಷಿಣ ವಾಯುಭಾರವು ಸರಾಸರಿ ಸಮುದ್ರ ಮಟ್ಟದಿಂದ 1.5 ಕಿ.ಮೀ ವರೆಗೆ ವಿಸ್ತರಿಸಿದೆ. ಇದರ ಪರಿಣಾಮವಾಗಿ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಧಾರಾಕಾರ ಮಳೆ ಮುಂದುವರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆಯು
ಕಾಶ್ಮೀರ ಪಹಲ್ಗಾಮ್ ಉಗ್ರರ ದಾಳಿ ಬಳಿಕ 2007 ರಿಂದ ಕೇರಳದಲ್ಲಿ ನೆಲೆಸಿರುವ, ಪಾಕಿಸ್ತಾನಿ ಪಾಸ್ಪೋರ್ಟ್ ಹೊಂದಿರುವ ಹಂಝ ಎಂಬ ವ್ಯಕ್ತಿಗೆ ದೇಶ ಬಿಟ್ಟು ಹೋಗುವಂತೆ ನೋಟಿಸ್ ಅನ್ನು ಕೋಝಿಕ್ಕೋಡ್ ಪೊಲೀಸರು ಕೊಟ್ಟಿದ್ದರು. . ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿರುವ ಹಿನ್ನೆಲೆಯಲ್ಲಿ ಮತ್ತು ಕೇಂದ್ರದ ಆದೇಶದ ಮೇರೆಗೆ ಇದೀಗ ಹಂಝಗೆ ಹೊಸ ಆದೇಶ ಏನು.. ಇಲ್ಲಿದೆ ವಿವರ..
ಆಂಧ್ರದ ಅಬಕಾರಿ ನೀತಿಯಿಂದ 6 ಗಡಿ ಜಿಲ್ಲೆಗಳಲ್ಲಿ ಮದ್ಯ ಮಾರಾಟ ಕುಸಿತ : ಕರ್ನಾಟಕದ ಆದಾಯಕ್ಕೆ ಪೆಟ್ಟು
ಆಂಧ್ರಪ್ರದೇಶದ ನೂತನ ಅಬಕಾರಿ ನೀತಿಯಿಂದಾಗಿ ಕರ್ನಾಟಕದ ಆರು ಜಿಲ್ಲೆಗಳ ಮದ್ಯದಂಗಡಿಗಳ ವಹಿವಾಟು ಕುಸಿದಿದೆ. ಗಡಿ ಭಾಗದ ಮದ್ಯದಂಗಡಿಗಳಲ್ಲಿ ಮಾರಾಟವು ಶೇ.10ರಷ್ಟು ಕಡಿಮೆಯಾಗಿದ್ದು, ಆಂಧ್ರಪ್ರದೇಶದಲ್ಲಿ ಮದ್ಯದ ಬೆಲೆ ಇಳಿಕೆ ಮತ್ತು ಗುಣಮಟ್ಟ ಹೆಚ್ಚಳ ಇದಕ್ಕೆ ಕಾರಣವಾಗಿದೆ. ಇದರಿಂದ ರಾಜ್ಯದ ಆದಾಯಕ್ಕೆ ಹೊಡೆತ ಬಿದ್ದಿದ್ದು, ಸರ್ಕಾರವು ವರದಿ ತರಿಸಿಕೊಂಡಿದೆ.
RCB Vs DC - ಮೈದಾನದ ಮಧ್ಯೆಯೇ ವಾಗ್ವಾದ ಮಾಡಿದ ವಿರಾಟ್ ಕೊಹ್ಲಿ-ಕೆಎಲ್ ರಾಹುಲ್: ವಿಡಿಯೋ ವೈರಲ್
ದಿಲ್ಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಐಪಿಎಲ್ ಪಂದ್ಯ ಆರ್ ಸಿಬಿ Vs ದಿಲ್ಲಿ ಕ್ಯಾಪಿಟಲ್ಸ್ ನಡುವಿನ ಪಂದ್ಯಕ್ಕಿಂತಲೂ ಹೆಚ್ಚಾಗಿ ವಿರಾಟ್ ಕೊಹ್ಲಿ Vs ಕೆಎಲ್ ರಾಹುಲ್ ಅವರ ಪಂದ್ಯವಾಗಿ ಮಾರ್ಪಟ್ಟಿತ್ತು. ಇದಕ್ಕೆ ಕಾರಣ ಎಲ್ಲಿರಿಗೂ ತಿಳಿದೇ ಇದೆ. ಈ ಹಿಂದಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ದಿಲ್ಲಿ ತಂಡದಲ್ಲಿರುವ ಕನ್ನಡಿಗ ಕರ್ನಾಟಕದ ಕೆಎಲ್ ರಾಹುಲ್ ಅವರು ಅಜೇಯ ಅರ್ಧಶತಕ ಹೊಡೆದು ತಂಡವನ್ನು ವಿಜಯಶಾಲಿಯಾಗಿಸಿದರು. ಈ ಬಾರಿ ಗೆಲುವಿನ ಕೇಕೆ ಹಾಕುವ ಸರದಿ ವಿರಾಟ್ ಕೊಹ್ಲಿ ಅವರದ್ದಾಯಿತು. ಇವರಿಬ್ಬರು ಪಂದ್ಯದ ವೇಳೆ ಬಿಸಿಬಿಸಿ ಮಾತುಕತೆ ನಡೆಸಿದ ಮತ್ತು ಪಂದ್ಯ ಮುಗಿದ ಬಳಿಕ ನಗುನಗುತ್ತಾ ಮಾತನಾಡಿದ ಎರಡೂ ವಿಡಿಯೋಗಳು ಇದೀಗ ವೈರಲ್ ಆಗಿದೆ.
‘ಶಿವಶ್ರೀ ಪ್ರಶಸ್ತಿ ಪ್ರದಾನ’-‘ಸಂಜೆಗೊಂದು ನುಡಿಚಿಂತನ -365’ ಕೃತಿ ಲೋಕಾರ್ಪಣೆ
ಬೆಂಗಳೂರು: ರಾಯಚೂರಿನ ಶಿವರಾಜ್ ವಿ. ಪಾಟೀಲ್ ಎಂದರೆ ತಂದೆ ವ್ಯಕ್ತಿತ್ವದ ಸುಪ್ರಿಂ ಕೋರ್ಟಿನ ನ್ಯಾಯಮೂರ್ತಿ ಎಂದೇ ಹೇಳಬಹುದು. ಸಹಾಯ ಮಾಡುವ ಗುಣದಿಂದಲೇ ಅವರು ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬಣ್ಣಿಸಿದ್ದಾರೆ. ರವಿವಾರ ಆರ್ಟಿನಗರದ ತರಳಬಾಳು ಕೇಂದ್ರ ಸಭಾಂಗಣದಲ್ಲಿ ನಿವೃತ್ತ ನ್ಯಾಯಮೂರ್ತಿ ಶಿವರಾಜ ವಿ. ಪಾಟೀಲ ಪ್ರತಿಷ್ಠಾನ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ‘ಶಿವಶ್ರೀ ಪ್ರಶಸ್ತಿ ಪ್ರದಾನ’ ಮತ್ತು ನ್ಯಾಯಮೂರ್ತಿ ಶಿವರಾಜ ವಿ. ಪಾಟೀಲ ಅವರ ‘ಸಂಜೆಗೊಂದು ನುಡಿಚಿಂತನ -365’ ಕೃತಿ ಲೋಕಾರ್ಪಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಶಿವರಾಜ ಪಾಟೀಲ್ ಅವರು ಬಡವರಿಗೆ ಬಹಳಷ್ಟು ರೀತಿಯಲ್ಲಿ ಸಹಾಯವನ್ನು ಮಾಡಿದ್ದಾರೆ. ಅವರು ಮಾಡಿದಂತಹ ಸಮಾಜ ಕಾರ್ಯದಿಂದಲೇ ಇಂದು ಅವರು ಋಣಾತ್ಮಕವಾಗಿ ಮಾತನಾಡದಂತಹ ಜನರನ್ನು ಗಳಿಸಿದ್ದಾರೆ. ಹೀಗೆ ತಮ್ಮ ಜೀವನದುದ್ದಕ್ಕೂ ಜನಮೆಚ್ಚುಗೆಯನ್ನು ಗಳಿಸಿ ಸಮಾಜಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ ಎಂದು ಹೇಳಿದರು. ನಿ.ನ್ಯಾಯಮೂರ್ತಿ ಶಿವರಾಜ ವಿ.ಪಾಟೀಲ ಪ್ರತಿಷ್ಠಾನವೂ ರಾಜ್ಯದ ಎಲ್ಲೆಡೆ ಬಡ ಸಮುದಾಯಗಳ ಏಳಿಗೆಗೆ ಕಾರ್ಯ ನಿರ್ವಹಿಸುತ್ತಿದೆ. ಜತೆಗೆ, ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಿ ವಿದ್ಯಾರ್ಥಿಗಳ ಶೈಕ್ಷಣಿಕ ಚಟುವಟಿಕೆಗಳನ್ನು ಪ್ರೋತ್ಸಾಹಿಸುವ ಕಾರ್ಯವೂ ಪ್ರಧಾನವಾಗಿ ಇಟ್ಟುಕೊಂಡಿರುವುದು ಸಂತಸ ತಂದಿದೆ ಎಂದು ನುಡಿದರು. ಕರ್ನಾಟಕ ಗಡಿ ಹಾಗೂ ನದಿಗಳ ರಕ್ಷಣಾ ಆಯೋಗದ ಅಧ್ಯಕ್ಷ, ಸುಪ್ರೀಂ ಕೋರ್ಟಿನ ನಿವೃತ್ತ ಶಿವರಾಜ್ ವಿ. ಪಾಟೀಲ್ ಮಾತನಾಡಿ, ಪ್ರಸ್ತುತ ಸಾಲಿನ ‘ಶಿವಶ್ರೀ ಪ್ರಶಸ್ತಿ’ಯನ್ನು ಅಖಿಲ ಭಾರತ ವೀರಶೈವ-ಲಿಂಗಾಯತ ಮಹಾಸಭಾದ ಅಧ್ಯಕ್ಷ, ಮಾಜಿ ಸಚಿವ ಶಾಮನೂರು ಶಿವಶಂಕರಪ್ಪ ಅವರಿಗೆ ಪ್ರದಾನಿಸಿರುವುದು ಸಂತಸ ಮಾತ್ರವಲ್ಲದೆ, ಈ ಪ್ರಶಸ್ತಿಗೆ ಗೌರವ ಬಂದಿದೆ ಎಂದೇ ಹೇಳಬಹುದು. ಅವರು ಮುಂದಿನ ದಿನಗಳಲ್ಲಿ ಸಮಾಜಕ್ಕೆ ಶಾಮನೂರು ಶಿವಶಂಕರಪ್ಪ ಮತ್ತಷ್ಟು ಕೊಡುಗೆ ನೀಡಲಿ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಗಣಿ ಮತ್ತು ಭೂವಿಜ್ಞಾನ ಸಚಿವ ಎಸ್.ಎಸ್.ಮಲ್ಲಿಕಾರ್ಜುನ, ನಿ.ನ್ಯಾಯಮೂರ್ತಿ ಶಿವರಾಜ ವಿ.ಪಾಟೀಲ ಪ್ರತಿಷ್ಠಾನ ಅಧ್ಯಕ್ಷ ಎಸ್.ಎಂ.ರೆಡ್ಡಿ, ಕಾರ್ಯದರ್ಶಿ ಚನ್ನಾರೆಡ್ಡಿ ಎಂ ಪಾಟೀಲ್ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು. ಈ ಪುಣ್ಯಾತ್ಮ ಮತ್ತಷ್ಟು ಕಾಲ ಬದುಕಲಿ: ‘ಶಾಮನೂರು ಶಿವಶಂಕರಪ್ಪ ನನಗೆ ಆಪ್ತ ಸ್ನೇಹಿತರಾಗಿದ್ದು, ನನಗಿಂತ 11 ವರ್ಷ ಹಿರಿಯರು. ಶಿಕ್ಷಣ, ವ್ಯಾಪಾರ, ಮತ್ತು ರಾಜಕೀಯ ಕ್ಷೇತ್ರಗಳಲ್ಲಿ ಶಾಮನೂರು ಶಿವಶಂಕರಪ್ಪ ತಮ್ಮ ಹೆಜ್ಜೆಗುರುತು ಇಟ್ಟಿದ್ದಾರೆ. ಈಗಿನ ಕಾಲದಲ್ಲಿ ತಮ್ಮವರಿಗೆ ಸಹಾಯ ಮಾಡದಿದ್ದರೆ, ಬೇರೆಯವರ ಕಾಲೆಳೆಯುವವರೇ ಜಾಸ್ತಿ. ಆದರೆ, ನಮ್ಮ ಕಾಲದಲ್ಲಿ ಇಂತಹ ಮನಸ್ಥಿತಿ ಇರಲಿಲ್ಲ. ಇದಕ್ಕೆ ಶಾಮನೂರು ಶಿವಶಂಕರಪ್ಪ ಅವರೇ ಪ್ರಮುಖ ಉದಾಹರಣೆ ಆಗಿದ್ದು, ಈ ಪುಣಾತ್ಮ ಮತ್ತಷ್ಟು ಕಾಲ ಬದುಕಲಿ’ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನುಡಿದರು.
ಟಿಸಿಎಸ್ ವರ್ಲ್ಡ್ 10ಕೆ ಬೆಂಗಳೂರು-2025: ಜೋಶುವಾ ಚೆಪ್ಟೆಗೆಯ್, ಸಾರಾ ಚೆಲಂಗಾಟ್ಗೆ ಪ್ರಶಸ್ತಿ
ಬೆಂಗಳೂರು: ಉಗಾಂಡದ ಜೋಶುವಾ ಚೆಪ್ಟೆಗೆಯ್ ಹಾಗೂ ಸಾರಾ ಚೆಲಂಗಾಟ್ ರವಿವಾರ ನಡೆದ ವಿಶ್ವ ಅತ್ಲೆಟಿಕ್ಸ್ ಗೋಲ್ಡ್ ಲೇಬಲ್ ರೋಡ್ ರೇಸ್ ಟಿಸಿಎಸ್ ವರ್ಲ್ಡ್ ಕೆ ಬೆಂಗಳೂರು-2025ರಲ್ಲಿ ಕ್ರಮವಾಗಿ ಅಂತರ್ರಾಷ್ಟ್ರೀಯ ಪುರುಷರ ಹಾಗೂ ಮಹಿಳೆಯರ ವಿಭಾಗಗಳಲ್ಲಿ ಪ್ರಶಸ್ತಿ ಬಾಚಿಕೊಂಡರು. ಕಾಕತಾಳೀಯವಾಗಿ ಚೆಪ್ಟೆಗೆಯ್ ಹಾಗೂ ಸಾರಾ ತಲಾ 26,000 ಯುಎಸ್ ಡಾಲರ್ ಬಹುಮಾನದೊಂದಿಗೆ ಟಿಸಿಎಸ್ ವರ್ಲ್ಡ್ 10 ಕೆ ಪ್ರಶಸ್ತಿಗಳನ್ನು ಗೆದ್ದಿರುವ ಉಗಾಂಡದ ಮೊದಲ ಕ್ರೀಡಾಪಟುಗಳಾಗಿದ್ದಾರೆ. 10,000 ಮೀ. ಓಟದ ಹಾಲಿ ಒಲಿಂಪಿಕ್ಸ್ ಚಾಂಪಿಯನ್ ಚೆಪ್ಟೆಗೆಯ್ 27.53 ಸೆಕೆಂಡ್ನಲ್ಲಿ ಗುರಿ ತಲುಪಿ ಮೊದಲ ಸ್ಥಾನ ಪಡೆದರು. ಏರಿಟ್ರಿಯಾದ ಸೇಮನ್ ಟೆಸ್ಫಾಗಿಯೋರ್ಗಿಸ್(27.55 ಸೆಕೆಂಡ್)ಹಾಗೂ ಕೀನ್ಯದ ವಿನ್ಸೆಂಟ್ ಲಾಂಗಟ್(28.02 ಸೆ.)ಕ್ರಮವಾಗಿ 2ನೇ ಹಾಗೂ 3ನೇ ಸ್ಥಾನ ಪಡೆದರು. ಚೆಪ್ಟೆಗೆಯ್ 2014ರಲ್ಲಿ ಬೆಳ್ಳಿ ಪದಕ ಜಯಿಸಿದ್ದು ಈ ಬಾರಿ ಮೊದಲ ಸ್ಥಾನ ಪಡೆದಿದ್ದಾರೆ. ತ್ವರಿತ ಆರಂಭದ ಹೊರತಾಗಿಯೂ ನಿಕೋಲಸ್ ಕಿಮೆಲಿ(27.38 ಸೆ.)ನಿರ್ಮಿಸಿರುವ ಪುರುಷರ ದಾಖಲೆಯು ಹಾಗೆಯೇ ಉಳಿದಿದೆ. “ನಾನು 2014ರಲ್ಲಿ ಬಂದಾಗ, ಅದು ನನ್ನ ಮೊದಲ ಅಂತರ್ರಾಷ್ಟ್ರೀಯ ಓಟವಾಗಿದ್ದರಿಂದ ನನಗೆ ಯಾವುದೇ ಅನುಭವವಿರಲಿಲ್ಲ. ಈ ವರ್ಷ ಬೆಂಗಳೂರಿಗೆ ಹಿಂತಿರುಗಿ ಪ್ರಶಸ್ತಿ ಗೆದ್ದಿದ್ದಕ್ಕೆ ತುಂಬಾ ಖುಷಿಯಾಗಿದೆ. ಕಳೆದ ವರ್ಷ ನಾನು ದಿಲ್ಲಿ ಮ್ಯಾರಥಾನ್ ಗೆದ್ದಿದ್ದೆ. ಭಾರತವು ಕನಸುಗಳನ್ನು ಬೆನ್ನಟ್ಟಲು ಒಂದು ಸ್ಥಳ ಎಂದು ನಂಬುತ್ತೇನೆ” ಎಂದು ಚೆಪ್ಟೆಗೆಯ್ ಹೇಳಿದ್ದಾರೆ. ಮಹಿಳೆಯರ ಓಟದಲ್ಲಿ ಸಾರಾ 31.07 ಸೆಕೆಂಡ್ನಲ್ಲಿ ಗುರಿ ತಲುಪಿ ಮೊದಲ ಸ್ಥಾನ ಪಡೆದರು. ಸಾರಾ ಉಗಾಂಡದ ನ್ಯಾಶನಲ್ 10,000 ಮೀ. ದಾಖಲೆ ಹೊಂದಿದ್ದಾರೆ. ಸಿಂಟಿಯಾ ಚೆಪ್ಂಗೆನೊ(ಕೀನ್ಯ) ಹಾಗೂ ಗೆಟೆನಿ ಶಾಂಕೊ(ಇಥಿಯೋಪಿಯಾ)ಕ್ರಮವಾಗಿ 32.04 ಸೆಕೆಂಡ್ ಹಾಗೂ 32.06 ಸೆಕೆಂಡ್ನಲ್ಲಿ ಗುರಿ ತಲುಪಿ 2ನೇ ಹಾಗೂ 3ನೇ ಸ್ಥಾನ ಪಡೆದಿದ್ದಾರೆ. ► ಭಾರತೀಯರ ಪೈಕಿ ಅಭಿಷೇಕ್ ಹಾಗೂ ಸಂಜೀವನಿಗೆ ಅಗ್ರ ಸ್ಥಾನ ಅಭಿಷೇಕ್ ಪಾಲ್ಗೆ(29.12 ಸೆಕೆಂಡ್) ರವಿವಾರ ಸ್ಮರಣೀಯ ದಿನವಾಗಿದ್ದು, ಭಾರತೀಯ ಪುರುಷರ ವಿಭಾಗದ ಮ್ಯಾರಥಾನ್ನಲ್ಲಿ ಮೊದಲ ಸ್ಥಾನ ಪಡೆದಿದ್ದಾರೆ. ಕಿರಣ್ ಮ್ಹಾತ್ರೆ(29.32 ಸೆ.)ನಿರ್ಮಿಸಿದ್ದ ಭಾರತೀಯ ದಾಖಲೆಯನ್ನು ಮುರಿದಿದ್ದಾರೆ. 2023ರ ಏಶ್ಯನ್ ಅತ್ಲೆಟಿಕ್ಸ್ ಚಾಂಪಿಯನ್ಶಿಪ್ನ 10,000 ಮೀ. ಓಟದಲ್ಲಿ ಕಂಚಿನ ಪದಕ ವಿಜೇತ ಪಾಲ್ ಒಟ್ಟಾರೆ 7ನೇ ಸ್ಥಾನ ಪಡೆದು ನಾಲ್ವರು ಅಂತರ್ರಾಷ್ಟ್ರೀಯ ಅತ್ಲೀಟ್ಗಳನ್ನು ಹಿಂದಿಕ್ಕಿದರು. ಸವನ್ ಬಾರ್ವಲ್(29.45 ಸೆ.)ಹಾಗೂ ಕಿರಣ್ ಮ್ಹಾತ್ರೆ(30.01 ಸೆ.)ಅನುಕ್ರಮವಾಗಿ 2ನೇ ಹಾಗೂ 3ನೇ ಸ್ಥಾನ ಪಡೆದಿದ್ದಾರೆ. ಸಂಜೀವನಿ ಜಾಧವ್ ಸತತ 4ನೇ ಬಾರಿ ಭಾರತೀಯ ಮಹಿಳೆಯರ ವಿಭಾಗದಲ್ಲಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು. ಸಂಜೀವನಿ 34.16 ಸೆಕೆಂಡ್ನಲ್ಲಿ ಗುರಿ ತಲುಪಿದರು. ಆದರೆ 2018ರಲ್ಲಿ ನಿರ್ಮಿಸಿರುವ ತನ್ನದೇ ದಾಖಲೆ(33.38 ಸೆ.)ಮುರಿಯಲು ಸಾಧ್ಯವಾಗಲಿಲ್ಲ. ಭಾರತಿ ನೈನ್(35.36 ಸೆ.)ಹಾಗೂ ಪೂನಂ ಸೋನುನೆ(35.57 ಸೆ.)ಕ್ರಮವಾಗಿ 2ನೇ ಹಾಗೂ 3ನೇ ಸ್ಥಾನ ಪಡೆದಿದ್ದಾರೆ. ಸಂಜೀವನಿ ಇತ್ತೀಚೆಗೆ ನಡೆದಿರುವ ಫೆಡರೇಶನ್ ಕಪ್ನಲ್ಲಿ 5,000 ಮೀ. ಹಾಗೂ 10,000 ಮೀ. ಓಟದಲ್ಲಿ ಚಿನ್ನ ಪದಕ ಜಯಿಸಿದ್ದರು. ಅಭಿಷೇಕ್ ಹಾಗೂ ಸಂಜೀವನಿ ಕ್ರಮವಾಗಿ 3,00,000 ರೂ. ಬಹುಮಾನ ಗೆದ್ದಿದ್ದಾರೆ. ರಾಷ್ಟ್ರೀಯ ದಾಖಲೆ ನಿರ್ಮಿಸಿದ್ದಕ್ಕೆ ಅಭಿಷೇಕ್ ಹೆಚ್ಚುವರಿ 1 ಲಕ್ಷ ರೂ. ಬಹುಮಾನಕ್ಕೆ ಭಾಜನರಾದರು.
ಧರ್ಮ, ಭಾಷೆಗಿಂತ ದೇಶ ಮೊದಲು: ಮಲ್ಲಿಕಾರ್ಜುನ ಖರ್ಗೆ
ಬೆಂಗಳೂರು: ಧರ್ಮ, ಭಾಷೆಗಿಂತ ದೇಶ ಮೊದಲು. ದೇಶಕ್ಕಾಗಿ ನಾವು ಎಲ್ಲರೂ ಒಂದಾಗಬೇಕು. ಆದರೆ, ಸಮಾಜವನ್ನು ದಿಕ್ಕು ತಪ್ಪಿಸುವ ಕೆಲಸ ಮಾಡಬಾರದು ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ. ರವಿವಾರ ಆರ್ಟಿನಗರದ ತರಳಬಾಳು ಕೇಂದ್ರ ಸಭಾಂಗಣದಲ್ಲಿ ನ್ಯಾಯಮೂರ್ತಿ ಶಿವರಾಜ ವಿ. ಪಾಟೀಲ ಪ್ರತಿಷ್ಠಾನ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ‘ಶಿವಶ್ರೀ ಪ್ರಶಸ್ತಿ ಪ್ರದಾನ’ ಮತ್ತು ನ್ಯಾಯಮೂರ್ತಿ ಶಿವರಾಜ ವಿ. ಪಾಟೀಲ ಅವರ ‘ಸಂಜೆಗೊಂದು ನುಡಿಚಿಂತನ -365’ ಕೃತಿ ಲೋಕಾರ್ಪಣಾ ಕಾರ್ಯಕ್ರಮದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ನಾನು ಸೇರಿದಂತೆ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಇರುತ್ತಾರೆ, ಹೋಗುತ್ತಾರೆ.ಆದರೆ, ದೇಶ ಎಂದಿಗೂ ಇರುತ್ತದೆ. ಹೀಗಾಗಿ, ದೇಶದ ಹಿತಕ್ಕಾಗಿ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಬೇಕು. ಇದರಲ್ಲಿ ರಾಜಕೀಯ, ಟೀಕೆ ಮಾಡುವುದು ಒಳ್ಳೆಯ ಕ್ರಮವಲ್ಲ. ಸರ್ವಪಕ್ಷಗಳ ಸಭೆಯಲ್ಲಿಯೂ ಇದನ್ನೆ ಉಲ್ಲೇಖಿಸಿ ಸರಕಾರಕ್ಕೆ ತಿಳಿಸಲಾಗಿದೆ ಎಂದು ಅವರು ತಿಳಿಸಿದರು. ಸರ್ವ ಪಕ್ಷಗಳ ಸಭೆಗೆ ಪ್ರಧಾನಿ ನರೇಂದ್ರ ಮೋದಿ ಹಾಜರಾಗಬೇಕಿತ್ತು.ಆದರೆ, ಅವರು ಬಂದಿಲ್ಲ.ಇದನ್ನು ನಿತ್ಯ ಟೀಕೆ ಮಾಡಲು ನಾವು ಹೋಗುವುದಿಲ್ಲ. ಪಹಲ್ಗಾಮ್ ದಾಳಿ ಸಂಬಂಧ ಕೇಂದ್ರ ಸರಕಾರ ಯಾವುದೇ ಕ್ರಮ ಕೈಗೊಂಡರೂ ಬೆಂಬಲ ನೀಡುತ್ತೇವೆ. ಆದರೆ, ಕೇಂದ್ರ ಸೂಕ್ತ ಕ್ರಮಕ್ಕೆ ಮುಂದಾಗಲಿ ಮೊದಲು ಎಂದು ಅವರು ಹೇಳಿದರು.
ಮೇ 5ರಿಂದ ಪರಿಶಿಷ್ಟ ಜಾತಿ ಸಮೀಕ್ಷೆಯಲ್ಲಿ ಸಮುದಾಯದ ಜನರು ತಪ್ಪದೇ ಭಾಗವಹಿಸಬೇಕು: ಎಚ್.ಆಂಜನೇಯ
ಬೆಂಗಳೂರು: ಪರಿಶಿಷ್ಟ ಜಾತಿ ಒಳಮೀಸಲಾತಿ ಜಾರಿಗೊಳಿಸುವ ಉದ್ದೇಶದಿಂದ ಪರಿಶಿಷ್ಟ ಜಾತಿಯ ದತ್ತಾಂಶ ಸಂಗ್ರಹ ಕಾರ್ಯ ಮೇ 5ರಿಂದ 17ರ ವರೆಗೆ ನಡೆಯಲಿದ್ದು, ಈ ಸಮೀಕ್ಷೆಯಲ್ಲಿ ಮಾದಿಗ ಸಮುದಾಯದ ಎಲ್ಲ ಕುಟುಂಬಗಳು ತಪ್ಪದೇ ಭಾಗವಹಿಸಬೇಕು ಎಂದು ಮಾಜಿ ಸಚಿವ ಎಚ್. ಆಂಜನೇಯ ಕರೆ ನೀಡಿದ್ದಾರೆ. ರವಿವಾರ ನಗರದ ಅಂಬೇಡ್ಕರ್ ಭವನದಲ್ಲಿ ‘ಕರ್ನಾಟಕ ಮಾದಿಗ ಒಳಮೀಸಲಾತಿ ಹೋರಾಟ ಸಮಿತಿ’ ವತಿಯಿಂದ ಆಯೋಜಿಸಿದ್ದ ‘ಒಳಮೀಸಲಾತಿಗೆ ಸಮೀಕ್ಷೆಯ ಆರಂಭ ಮಾದಿಗ ಮುಖಂಡರ ಜಾಗೃತಿ ಸಭೆ’ಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮೇ 5ರಿಂದ 17ರ ವರೆಗೂ ನಡೆಯುವ ಸಮೀಕ್ಷೆಯಲ್ಲಿ ಭಾಗವಹಿಸಲು ಸಾಧ್ಯವಿಲ್ಲದವರು, ಮೇ 19ರಿಂದ 21ರ ವರೆಗೂ ತಮ್ಮ ಮತ ಕ್ಷೇತ್ರಗಳಲ್ಲಿರುವ ಸಮೀಕ್ಷಾ ಕೇಂದ್ರಕ್ಕೆ ಆಧಾರ್ ಮತ್ತು ರೇಷನ್ ಕಾರ್ಡ್ನೊಂದಿಗೆ ತೆರಳಿ ‘ಮಾದಿಗ’ ಎಂದು ನಮೂದಿಸಬೇಕು ಎಂದು ಹೇಳಿದರು. ನಗರಗಳಲ್ಲಿ ಮತ್ತು ಹೊರ ರಾಜ್ಯಗಳಲ್ಲಿರುವ ಕೆಲವು ಕರ್ನಾಟಕದ ಮಾದಿಗ ಸಮುದಾಯದವರು ಕೀಳರಿಮೆಯಿಂದ ಮಾದಿಗ ಎಂದು ಬರೆಸಲು ಹಿಂದೆ ಸರಿಯುತ್ತಾರೆ. ಅಂತಹವರು ತಮ್ಮ ಜಾತಿಯನ್ನು ಆನ್ಲೈನ್ ಮುಖಾಂತರವಾದರೂ ನಮೂದಿಸಬೇಕು. ಸಮುದಾಯದ ಮಕ್ಕಳ ಮುಂದಿನ ಭವಿಷ್ಯಕ್ಕಾಗಿ ಚಿಂತನೆ ಮಾಡುವರೆಲ್ಲರೂ ಸಮೀಕ್ಷೆ ವೇಳೆಯುಲ್ಲಿ ತಮ್ಮ ಊರುಗಳಲ್ಲಿರುವ ಮಾದಿಗ ಸಮುದಾಯದ ಜನ ಎಲ್ಲೂ ಹೋಗದಂತೆ ಮನೆಯಲ್ಲಿಯೇ ಇದ್ದು ಸಮೀಕ್ಷೆ ಕಾರ್ಯಕ್ಕೆ ಸ್ಪಂದಿಸುವಂತೆ ನೋಡಿಕೊಳ್ಳಬೇಕು ಎಂದು ಅವರು ಮನವಿ ಮಾಡಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಮಾದಿಗ ಸಮುದಾಯದ ಪರವಾಗಿದ್ದಾರೆ. ಅವರ ಮಾರ್ಗದರ್ಶನದಲ್ಲಿ ನಾವೆಲ್ಲರೂ ನಡೆದು ಒಳಮೀಸಲಾತಿಯನ್ನು ಪಡೆದುಕೊಳ್ಳಬೇಕು. ಅನಗತ್ಯವಾಗಿ ಅವರನ್ನು ಟೀಕೆ ಮಾಡುವ ಮತ್ತು ನಿಂಧಿಸುವ ಕೆಲಸ ಮಾಡಬಾರದು. ಒಳಮೀಸಲಾತಿಗೆ ಎಲ್ಲ ರಾಜಕೀಯ ಪಕ್ಷದವರೂ ಬೆಂಬಲ ನೀಡಿದ್ದಾರೆ. ಅವರನ್ನೂ ಗೌರವದಿಂದ ಕಾಣಬೇಕು ಎಂದು ಆಂಜನೇಯ ಹೇಳಿದರು. ನಾಡೋಜ ಗೋನಾಳ್ ಭೀಮಪ್ಪ ಮಾತನಾಡಿ, ಸಮುದಾಯದ ಜನರನ್ನು ಗಣತಿಗೆ ಒಳಪಡಿಸಬೇಕಾದ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಇದು ನಮಗೆ ಬಂದಿರುವ ಸದಾವಕಾಶ. ಆದಿ ಕರ್ನಾಟಕ, ಆದಿ ದ್ರಾವಿಡ, ಆದಿ ಆಂಧ್ರದ ಸಮಸ್ಯೆಗೆ ಅಂತ್ಯ ಹಾಡಬೇಕಿದೆ. ಮಾದಿಗ ಸಮುದಾಯಗಳು ಇರುವ ವಾರ್ಡ್ಗಳಿಗೆ ಹೋಗಿ ಜಾಗೃತಿ ಮೂಡಿಸಬೇಕಾಗಿದೆ. ಪರಿಶಿಷ್ಟ ಜಾತಿಯಲ್ಲಿನ ಇತರ ಸಮುದಾಯಗಳು ಈಗಾಗಲೇ ಜಾಗೃತಿ ಮೂಡಿಸುತ್ತಿವೆ. ಮಾದಿಗ ಸಮುದಾಯವು ಇದೇ ನಿಟ್ಟಿನಲ್ಲಿ ಹೆಚ್ಚಿನ ಕೆಲಸಗಳನ್ನು ಮಾಡಬೇಕಿದೆ. ಎ.ಕೆ., ಎ.ಡಿ. ಬೇಡ ಎಂದು ಹೇಳಬೇಕಿದೆ. ಸಮೀಕ್ಷೆಯ ಪಟ್ಟಿಯಲ್ಲಿನ ನಮ್ಮ ಕ್ರಮ ಸಂಖ್ಯೆ 61ರಲ್ಲಿ ಜಾತಿಯನ್ನು ತಪ್ಪದೇ ದಾಖಲಿಸಬೇಕಿದೆ ಎಂದು ಮನವಿ ಮಾಡಿದರು. ಕಾರ್ಯಕ್ರಮದಲ್ಲಿ ಮಾಜಿ ಸಂಸದ ಬಿ.ಎನ್.ಚಂದ್ರಪ್ಪ, ಮಾಜಿ ಪರಿಷತ್ ಸದಸ್ಯ ಆರ್.ಧರ್ಮಸೇನಾ, ನಿವೃತ್ತ ಅಪರ ಆಯುಕ್ತ ಎಚ್.ಆರ್.ತೆಗನೂರು, ನಿವೃತ್ತ ಅಧಿಕಾರಿ ಭೀಮಾಶಂಕರ್, ಮುಖಂಡರಾದ ಜಿ.ಎಸ್.ಮಂಜುನಾಥ, ಬಸವರಾಜ್ ಮಾಲಗತ್ತಿ, ಡಾ.ಬಾಬುರಾವ್ ಮುಡಬಿ, ಓ.ಶಂಕರ್, ಜಗದೀಶ ಬೆಟಗೆರೆ, ಎಂ.ಆರ್.ವೆಂಕಟೇಶ್ ಸೇರಿದಂತೆ ಹಲವರು ಭಾಗವಹಿಸಿದ್ದರು.
ಈ ವರ್ಷದ ಐಪಿಎಲ್ನಲ್ಲಿ ಮೊದಲ ಪಂದ್ಯ ಆಡಿದ ಮಯಾಂಕ್ ಯಾದವ್
ಹೊಸದಿಲ್ಲಿ: ಬೆನ್ನುನೋವಿನಿಂದಾಗಿ ಈ ವರ್ಷದ ಐಪಿಎಲ್ ಟೂರ್ನಿಯ ಮೊದಲಾರ್ಧದಲ್ಲಿ ಆಡದ ಮಯಾಂಕ್ ಯಾದವ್ ಇಂದು ಮೊದಲ ಪಂದ್ಯ ಆಡಿದ್ದಾರೆ. ರವಿವಾರ ಮುಂಬೈ ಇಂಡಿಯನ್ಸ್ ವಿರುದ್ಧ ಪಂದ್ಯದಲ್ಲಿ ಶಾರ್ದುಲ್ ಠಾಕೂರ್ ಬದಲಿಗೆ ಮಯಾಂಕ್ ಆಡಿದ್ದಾರೆ. ಶಾರ್ದುಲ್ ಹಿಂದಿನ 3 ಪಂದ್ಯಗಳಲ್ಲಿ ಕೇವಲ 1 ವಿಕೆಟ್ ಪಡೆದಿದ್ದಾರೆ. ಕಳೆದ ವರ್ಷ ಸತತವಾಗಿ ಗಂಟೆಗೆ 150 ಕಿ.ಮೀ.ವೇಗದಲ್ಲಿ ಬೌಲಿಂಗ್ ಮಾಡುವ ಸಾಮರ್ಥ್ಯದ ಮೂಲಕ ಮಯಾಂಕ್ ಸುದ್ದಿಯಾಗಿದ್ದರು. ಗಾಯಗೊಂಡು ಪಂದ್ಯಾವಳಿಯಿಂದ ಹೊರಗುಳಿಯುವ ಮೊದಲು 4 ಪಂದ್ಯಗಳಲ್ಲಿ ಆಡಿ 7 ವಿಕೆಟ್ಗಳನ್ನು ಪಡೆದಿದ್ದರು. ಸತತ 4 ಪಂದ್ಯಗಳಲ್ಲಿ ಗೆದ್ದಿರುವ ಹುಮ್ಮಸ್ಸಿನಲ್ಲಿರುವ ಮುಂಬೈ ತಂಡವು ಆಡುವ 11ರ ಬಳಗದಲ್ಲಿ 2 ಬದಲಾವಣೆಗಳನ್ನು ಮಾಡಿತ್ತು. ಮಿಚೆಲ್ ಸ್ಯಾಂಟ್ನರ್ ತನ್ನ ಬೆರಳಿನ ಗಾಯಕ್ಕೆ ಒಳಗಾದ ಕಾರಣ ಕಾರ್ಬಿನ್ ಬಾಷ್ರನ್ನು ಮೊದಲ ಬಾರಿ ಐಪಿಎಲ್ನಲ್ಲಿ ಆಡಿಸಿತ್ತು. ಮುಂಬೈ ತಂಡದ ಹಿಂದಿನ ಪಂದ್ಯದಲ್ಲಿ ಕೇವಲ 1 ಓವರ್ ಬೌಲಿಂಗ್ ಮಾಡಿದ್ದ ವಿಘ್ನೇಶ್ ಪುಥೂರ್ ಬದಲಿಗೆ ಕರ್ಣ್ ಶರ್ಮಾ ಆಡಿದರು.
ಬೆಂಗಳೂರು: ಕ್ಯಾಬ್ ಚಾಲಕನ ಅಪಹರಿಸಿ ಹತ್ಯೆ
ಬೆಂಗಳೂರು: ಕ್ಯಾಬ್ ಚಾಲಕನನ್ನು ಅಪಹರಿಸಿ ಕತ್ತುಕೊಯ್ದು ಆರೋಪಿಗಳು ಹತ್ಯೆಗೈದಿರುವ ಘಟನೆ ಇಲ್ಲಿನ ಸಾತನೂರು ಪೊಲೀಸ್ ಠಾಣಾ ವ್ಯಾಪ್ತಿಯ ಕಬ್ಬಾಳು ಸಮೀಪದ ಅರೆಕಟ್ಟೆದೊಡ್ಡಿ ಬಳಿ ವರದಿಯಾಗಿದೆ. ನಗರದ ಸೋಲದೇವನಹಳ್ಳಿ ಠಾಣಾ ವ್ಯಾಪ್ತಿಯ ಚಿಕ್ಕಬ್ಯಾಲಕೆರೆ ನಿವಾಸಿ ಚಂದ್ರಶೇಖರ್(39) ಹತ್ಯೆಯಾದ ಕ್ಯಾಬ್ ಚಾಲಕ ಎಂದು ಗುರುತಿಸಲಾಗಿದೆ. ಬೆಂಗಳೂರು ನಗರದಲ್ಲಿ ಕ್ಯಾಬ್ ಚಾಲನೆ ಮಾಡಿಕೊಂಡು ಜೀವನ ನಿರ್ವಹಿಸುತ್ತಿದ್ದ ಚಂದ್ರಶೇಖರ್ ಎಂಬಾತನನ್ನು ಆರೋಪಿಗಳು ಎ.26ರಂದು ವಾಹನವೊಂದರಲ್ಲಿ ನಗರದಿಂದ ಅಪಹರಿಸಿಕೊಂಡು ಹೋಗಿ ಕಬ್ಬಾಳು ಸಮೀಪದ ಖಾಸಗಿ ಶಾಲೆಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಚಾಕುವಿನಿಂದ ಕತ್ತು ಕೊಯ್ದು ನಂತರ ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಹತ್ಯೆಗೈದು ಪರಾರಿಯಾಗಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ರಸ್ತೆಯಲ್ಲಿ ಬಿದ್ದಿದ್ದ ಕ್ಯಾಬ್ ಚಾಲಕ ಚಂದ್ರಶೇಖರ್ ಮೃತದೇಹವನ್ನು ಗಮನಿಸಿದ ಸ್ಥಳೀಯರು ಸಾತನೂರು ಪೊಲೀಸ್ ಠಾಣೆಗೆ ಮಾಹಿತಿ ನೀಡಿದ ಬಳಿಕ ಸ್ಥಳಕ್ಕೆ ಧಾವಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ವೈಯಕ್ತಿಕ ದ್ವೇಷಕ್ಕಾಗಿ ಕೊಲೆ ಆಗಿದೆಯೋ ಅಥವಾ ಮಹಿಳೆಯ ವಿಚಾರದಲ್ಲಿ ಕೊಲೆ ನಡೆದಿದೆಯೋ ಎಂಬ ಬಗ್ಗೆ ತನಿಖೆ ಕೈಗೊಂಡಿದ್ದು, ಆರೋಪಿಗಳ ಪತ್ತೆಗೆ ಶೋಧ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ.
Krunal Pandya: ನಾನು ಗೆಲ್ಲಿಸುತ್ತೇನೆ! ಕೊಟ್ಟ ಮಾತು ಉಳಿಸಿಕೊಂಡು ಹೀರೊ ಆದ ಕೃನಾಲ್ ಪಾಂಡ್ಯ
ಐಪಿಎಲ್ 2025ರ ಆವೃತ್ತಿಯಲ್ಲಿ ತವರಿನ ಹೊರಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ಅಬ್ಬರ ಮುಂದುವರೆದಿದೆ. ತವರಿನ ಹೊರಗೆ ಆಡಿರುವ ಎಲ್ಲಾ ಐದು ಪಂದ್ಯಗಳನ್ನು ಗೆದ್ದಿದ್ದ ಆರ್ ಸಿಬಿ ಭಾನುವಾರ ಆರನೇ ಪಂದ್ಯವನ್ನೂ ಕೂಡ ಗೆದ್ದುಕೊಂಡಿದೆ. ದೆಹಲಿಯ ಅರುಣ್ ಜೈಟ್ಲಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಆರ್ ಸಿಬಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 6 ವಿಕೆಟ್ಗಳ ಭರ್ಜರಿ ಗೆಲುವು ಸಾಧಿಸಿದೆ.
ಅಲ್ಜೀರಿಯಾದಲ್ಲಿ ಭೂಕುಸಿತ: 4 ಮಂದಿ ಮೃತ್ಯು ; 13 ಮಂದಿಗೆ ಗಾಯ
ಅಲ್ಜಿಯರ್ಸ್: ಅಲ್ಜೀರಿಯಾದ ಪಶ್ಚಿಮ ಕರಾವಳಿ ನಗರ ಒರಾನ್ನಲ್ಲಿ ಸಂಭವಿಸಿದ ಭೂಕುಸಿತದಲ್ಲಿ 4 ಮಂದಿ ಸಾವನ್ನಪ್ಪಿದ್ದು ಇತರ 13 ಮಂದಿ ಗಾಯಗೊಂಡಿರುವುದಾಗಿ ಅಧಿಕಾರಿಗಳು ರವಿವಾರ ಹೇಳಿದ್ದಾರೆ. ಒರಾನ್ನ ಹೈಎಸಾನೌಬರ್ ಜಿಲ್ಲೆಯಲ್ಲಿ ಶನಿವಾರ ತಡರಾತ್ರಿ ಭೂಕುಸಿತ ಸಂಭವಿಸಿದ್ದು 5 ಮನೆಗಳು ಕುಸಿದು ಬಿದ್ದಿವೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಆಂತರಿಕ ಸಚಿವಾಲಯ ಮಾಹಿತಿ ನೀಡಿದೆ.
RCB vs DC: ಡೆಲ್ಲಿನ ಗಿಲ್ಲಿ ಮಾಡಿ, ಊರಾಚೆ ಬಿಸಾಡಿದ ಆರ್ಸಿಬಿ ಆಟಗಾರರು!
2025ರ ಐಪಿಎಲ್ ಕಪ್ ಆರ್ಸಿಬಿ ತಂಡಕ್ಕೆ ಅನ್ನೋದು ಭಗವಂತನ ಕೈಯಲ್ಲೇ ಫಿಕ್ಸ್ ಆಗಿದೆ ಅಂತಾ ಕಾಣ್ತಿದೆ. ಯಾಕಂದ್ರೆ ಆರ್ಸಿಬಿ ತಂಡ ಭರ್ಜರಿಯಾಗಿ ಸಾಲು ಸಾಲು ಗೆಲುವು ಕಂಡು ಮುಂದೆ ನುಗ್ಗುತ್ತಿದೆ. ಅದರಲ್ಲೂ ಬೆಂಗಳೂರಿಗೆ ಬಂದು ಜಾಸ್ತಿ ಕೊಬ್ಬು ತೋರಿಸಿ ಅಹಂಕಾರ ಮೆರೆದ ತಂಡಗಳ ಹೆಡಮುರಿ ಕಟ್ಟುತ್ತಿದ್ದಾರೆ ಬೆಂಗಳೂರು ಬಾಯ್ಸ್. ಹೀಗಿದ್ದಾಗಲೇ, ಡೆಲ್ಲಿನ ಗಿಲ್ಲಿ ಮಾಡಿ, ಊರಾಚೆ ಬಿಸಾಡಿದ ಆರ್ಸಿಬಿ ಆಟಗಾರರು!
ತಮ್ಮ ತವರು ಮೈದಾನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕೆಎಲ್ ರಾಹುಲ್ ಗೆಲುವಿನ ಇನ್ನಿಂಗ್ಸ್ ಆಡಿ ತಂಡವನ್ನು ಗೆಲ್ಲಿಸಿದ್ದರು. ಇದೀಗ ತಮ್ಮ ತವರು ಮೈದಾನ ದಿಲ್ಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ತಾಳ್ನೆಯ ಅರ್ಧಶತಕ ಬಾರಿಸಿದ ವಿರಾಟ್ ಕೊಹ್ಲಿ ಅವರು ರಾಯಲ್ ಚಾಲೆಂಜರ್ಸ್ ತಂಡದ ಗೆಲುವಿಗೆ ಕಾರಣರಾದರು. ಈ ಮೂಲಕ ಸೀಸನ್ ನಲ್ಲಿ ಅತಿ ಹೆಚ್ಚು ರನ್ ಗಳಿಸಿ ಆರೆಂಜ್ ಕ್ಯಾಪ್ ತಮ್ಮ ಮುಡಿಗೇರಿಸಿಕೊಂಡಿದ್ದಾರೆ. ಇದೇ ವೇಳೆ ಸೀಸನ್ ನಲ್ಲಿ ಅತಿ ಹೆಚ್ಚು 18 ವಿಕೆಟ್ ಕಬಳಿಸಿರುವ ಜೋಶ್ ಹೇಜಲ್ವುಡ್ ಅವರು ಪರ್ಪಲ್ ಕ್ಯಾಪ್ ಗೌರವ ಪಡೆದರು. ಇನ್ನು ಆಡಿರುವ 10 ಪಂದ್ಯಗಳಿಂದ 7 ಗೆಲುವಿನೊಂದಿಗೆ 14 ಅಂಕಗಳನ್ನು ಕಲೆ ಹಾಕಿರುವ ರಜತ್ ಪಾಟೀದಾರ್ ಬಳಗ ಇದೀಗ ಅಂಕಪಟ್ಟಿಯಲ್ಲೂ ಅಗ್ರಸ್ಥಾನಕ್ಕೇರಿದೆ.
ಪಹಲ್ಗಾಮ್ ದಾಳಿ ಘಟನೆ: ರಶ್ಯ, ಚೀನಾ ಸೇರಿದಂತೆ ಅಂತರಾಷ್ಟ್ರೀಯ ತನಿಖಾ ತಂಡ ರಚನೆಗೆ ಪಾಕ್ ಆಗ್ರಹ
ಇಸ್ಲಾಮಾಬಾದ್: ಜಮ್ಮು ಕಾಶ್ಮೀರದ ಪಹಲ್ಗಾಮ್ನಲ್ಲಿ ಇತ್ತೀಚೆಗೆ ನಡೆದ ಭಯೋತ್ಪಾದಕರ ದಾಳಿ ಘಟನೆಯ ಬಗ್ಗೆ ತನಿಖೆ ನಡೆಸಲು ರಶ್ಯ, ಚೀನಾ ಸೇರಿದಂತೆ ಅಂತರಾಷ್ಟ್ರೀಯ ಸಮಿತಿ ರಚನೆಯಾಗಬೇಕು ಎಂದು ಪಾಕಿಸ್ತಾನ ರವಿವಾರ ಆಗ್ರಹಿಸಿದೆ. ದಾಳಿಯಲ್ಲಿ ಪಾಕಿಸ್ತಾನದ ಕೈವಾಡವಿದೆ ಎಂದು ಭಾರತ ಆಧಾರರಹಿತ ಆರೋಪ ಮಾಡುತ್ತಿದೆ. ಈ ಬಿಕ್ಕಟ್ಟಿನಲ್ಲಿ ರಶ್ಯ, ಚೀನಾ ಮತ್ತು ಪಾಶ್ಚಿಮಾತ್ಯ ದೇಶಗಳು ಸಕಾರಾತ್ಮಕ ಪಾತ್ರ ವಹಿಸಬಹುದು. ಈ ದೇಶಗಳು ಅಂತರಾಷ್ಟ್ರೀಯ ತನಿಖಾ ತಂಡವನ್ನು ರಚಿಸಿ ಭಾರತ ಅಥವಾ ಮೋದಿ ಸತ್ಯ ಹೇಳುತ್ತಿದ್ದಾರೆಯೇ ಎಂಬುದನ್ನು ದೃಢಪಡಿಸಬಹುದು. ಅಂತರಾಷ್ಟ್ರೀಯ ಸಮಿತಿ ಸತ್ಯವನ್ನು ಹೊರತರಲಿ' ಎಂದು ಪಾಕಿಸ್ತಾನದ ರಕ್ಷಣಾ ಸಚಿವ ಖವಾಜ ಆಸಿಫ್ ಹೇಳಿರುವುದಾಗಿ ಪಿಟಿಐ ಸುದ್ದಿಸಂಸ್ಥೆ ವರದಿ ಮಾಡಿದೆ.
ಪಾಕಿಸ್ತಾನ: 54 ಉಗ್ರರ ಹತ್ಯೆಗೈದ ಭದ್ರತಾ ಪಡೆ
ಇಸ್ಲಾಮಾಬಾದ್: ಅಫ್ಘಾನಿಸ್ತಾನದ ಗಡಿದಾಟಿ ದೇಶದೊಳಗೆ ನುಸುಳಲು ಪ್ರಯತ್ನಿಸಿದ ತೆಹ್ರೀಕೆ ತಾಲಿಬಾನ್ ಗುಂಪಿನ 54 ಸದಸ್ಯರನ್ನು ಹತ್ಯೆ ನಡೆಸಿರುವುದಾಗಿ ಪಾಕಿಸ್ತಾನದ ಮಿಲಿಟರಿ ರವಿವಾರ ಹೇಳಿದೆ. ವಾಯವ್ಯ ಖೈಬರ್ಪಖ್ತೂಂಕ್ವಾ ಪ್ರಾಂತದ ಉತ್ತರ ವಝೀರಿಸ್ತಾನ ಜಿಲ್ಲೆಯ ಬಳಿ ಅಫ್ಘಾನ್ ಗಡಿಯುದ್ದಕ್ಕೂ ಈ ಘಟನೆ ನಡೆದಿದೆ. ಬಿಬಾಕ್ ಘರ್ ಪ್ರದೇಶದಲ್ಲಿ ಗಡಿಭಾಗದಿಂದ ಕೆಲವರು ಒಳಗೆ ನುಸುಳಲು ಪ್ರಯತ್ನಿಸುತ್ತಿರುವ ಬಗ್ಗೆ ಮಾಹಿತಿ ದೊರಕಿದ ಬಳಿಕ ಭದ್ರತಾ ಪಡೆ ಕಾರ್ಯಾಚರಣೆ ನಡೆಸಿ ಉಗ್ರರನ್ನು ಹತ್ಯೆ ಮಾಡಿದೆ. ಗುಂಡಿನ ಚಕಮಕಿಯ ಬಳಿಕ ಭದ್ರತಾ ಪಡೆಗಳು ಈ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆ ನಡೆಸಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಸಿರವಾರ: ಸಿಡಿಲು ಆಲಿಕಲ್ಲು ಮಳೆಗೆ ವ್ಯಕ್ತಿ ಬಲಿ
ರಾಯಚೂರು: ಜಿಲ್ಲೆಯ ಹಲವೆಡೆ ಗುಡುಗು ಸಿಡಿಲು, ಆಲಿಕಲ್ಲು ಸಹಿತ ಭಾರೀ ಮಳೆ ಸುರಿದಿದ್ದು ನಾನಾ ಅವಾಂತರ ಸೃಷ್ಟಿಸಿದೆ. ಸಿರವಾರ ತಾಲೂಕಿನ ಕೆ.ಗುಡದಿನ್ನಿ ಗ್ರಾಮದಲ್ಲಿ ಸಿಡಿಲು ಬಡಿದು ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದು, ತಾಯಿ ಗಂಭೀರವಾಗಿ ಗಾಯಗೊಂಡಿದ್ದಾರೆ. 55 ವರ್ಷದ ಸಾಯಣ್ಣ ಎಂಬವರು ಸಿಡಿಲು ಬಡಿದು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇಂದು ಅಮವಾಸ್ಯೆ ಹಿನ್ನೆಲೆ ತಾಯಿ ಹಾಗೂ ಪುತ್ರ ಜಮೀನಿನಲ್ಲಿನ ತಾಯಮ್ಮ ಗುಡಿಗೆ ಪೂಜೆ ಸಲ್ಲಿಸಲು ಹೋಗಿದ್ದ ವೇಳೆ ಸಿಡಿಲು ಬಡಿದಿದೆ. ಸಿಡಿಲಿನ ಆಘಾತಕ್ಕೆ ಸಾಯಣ್ಣ ಗುಡಿಯಲ್ಲೇ ಸಾವನ್ನಪ್ಪಿದ್ದಾರೆ. ತಾಯಿ 70 ವರ್ಷದ ಲಕ್ಷ್ಮಮ್ಮಗೆ ಗಂಭೀರವಾಗಿ ಗಾಯಗೊಂಡಿದ್ದು, ಮಾನ್ವಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಸಿರವಾರ , ಮಾನ್ವಿ ತಾಲೂಕಿನಲ್ಲಿ ಆಲಿಕಲ್ಲು ಸಹಿತ ಭಾರೀ ಮಳೆ ಸುರಿದ ಪರಿಣಾಮ ಭತ್ತ, ಮೆಣಸಿನಕಾಯಿ ಬೆಳೆ ಹಾಳಾಗಿದೆ. ಅಕಾಲಿಕ ಮಳೆಯಿಂದ ರೈತರು ಅಪಾರ ಪ್ರಮಾಣದ ನಷ್ಟ ಅನುಭವಿಸಿದ್ದಾರೆ.
ಹೃದಯ ಶುದ್ಧಿ ಇಲ್ಲವಾದರೆ ಬದುಕು ಯಶಸ್ಸು ಆಗದು: ಹಂಝ ಸಖಾಫಿ
ಉಳ್ಳಾಲ: ಆತ್ಮೀಯತೆ ಮತ್ತು ಪಂಡಿತರು ಇದಕ್ಕೆ ಸಮಾಜದಲ್ಲಿ ಪ್ರಾಧಾನ್ಯತೆ ಇದೆ. ನಾವು ಜೀವನ ದಲ್ಲಿ ಆತ್ಮೀಯತೆ ಕಳೆದುಕೊಳ್ಳುತ್ತಿದ್ದೇವೆ. ಇಸ್ಲಾಮಿನಲ್ಲಿ ಆತ್ಮೀಯತೆ, ಈಮಾನ್ ಬಗ್ಗೆ ಕಲಿಸಲಾಗಿದೆ ಎಂದು ಎಸ್ ಪಿ ಹಂಝ ಸಖಾಫಿ ಬಂಟ್ವಾಳ ಹೇಳಿದರು. ಅವರು ಉಳ್ಳಾಲ ದರ್ಗಾ ದ 22 ಪಂಚವಾರ್ಷಿಕ ಉರೂಸ್ ಪ್ರಯುಕ್ತ ರವಿವಾರ ದರ್ಗಾ ವಠಾರದಲ್ಲಿ ನಡೆದ ಧಾರ್ಮಿಕ ಉಪನ್ಯಾಸ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು. ಭೂಮಿಯಲ್ಲಿರುವ ವಿವಿಧ ಜೀವಿಗಳಲ್ಲೂ ಆತ್ಮೀಯತೆ ಎಂಬುದು ಇರುತ್ತದೆ.ಅದೇ ರೀತಿ ಮನುಷ್ಯರಲ್ಲೂ ಆತ್ಮೀಯತೆ ಇರಬೇಕು.ಆತ್ಮೀಯತೆ ಹೃದಯದಲ್ಲಿ ಇದ್ದರೆ ಜನರ ಬದುಕಿನಲ್ಲಿ ಯಾವುದೇ ತೊಂದರೆ ಬರುವುದಿಲ್ಲ. ಹೃದಯ ಶುದ್ಧಿ ಇಲ್ಲವಾದರೆ ಬದುಕು ಯಶಸ್ಸು ಕೂಡಾ ಆಗುವುದಿಲ್ಲ ಎಂದರು. ನಮ್ಮ ಬದುಕು ಸ್ವಾರ್ಥ ಆಗಿರಬಾರದು.ಇದನ್ನು ಇಸ್ಲಾಮ್ ಈ ಹಿಂದೆಯೇ ಸಾರಿದೆ. ಹೃದಯ ಶುದ್ಧಿ ಮಾಡಿ ನಿಸ್ವಾರ್ಥ ಬದುಕು ಸಾಧಿಸುವ ವ್ಯಕ್ತಿ ವಿಜಯಿಯಾಗುತ್ತಾನೆ ಎಂಬ ವಿಚಾರ ನಮಗೆ ತಿಳಿದಿರ ಬೇಕು.ಇದಕ್ಕಾಗಿ ನಾವು ಪ್ರಾರ್ಥನೆ ಗಳನ್ನು, ನಮಾಝ್ ಗಳನ್ನು ಜಾಸ್ತಿ ನಿರ್ವಹಿಸಬೇಕು ಎಂದರು. ಮುಹ್ ಯಿದ್ದೀನ್ ಕಾಮಿಲ್ ಸಖಾಫಿ ತೋಕೆ ಧಾರ್ಮಿಕ ಪ್ರವಚನ ನೀಡಿದರು. ಸಯ್ಯಿದ್ ಝೈನುಲ್ ಆಬಿದೀನ್ ತಂಙಳ್ ಅಲ್ ಅಹ್ದಲ್ ಕಣ್ಣವಂ ದುಆ ನೆರವೇರಿಸಿದರು. ದರ್ಗಾ ಅಧ್ಯಕ್ಷ ಹನೀಫ್ ಹಾಜಿ ಕಾರ್ಯಕ್ರಮ ದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ದರ್ಗಾ ಮಾಜಿ ಅಧ್ಯಕ್ಷ ಯು.ಎಸ್. ಹಂಝ,ಅಳೇಕಲ ಮಸೀದಿಯ ಸಹಾಯಕ ಖತೀಬ್ ಇರ್ಫಾನ್ ಸ ಅದಿ, ಒಂಬತ್ತು ಕೆರೆ ಮಸೀದಿ ಖತೀಬ್ ಹಬೀಬುರ್ರಹ್ಮಾನ್ ಅಲ್ ಫಾಳಿಲಿ, ದರ್ಗಾ ಉಪಾಧ್ಯಕ್ಷ ಅಶ್ರಫ್ ರೈಟ್ ವೇ, ಕಾರ್ಯದರ್ಶಿ ಮುಸ್ತಫಾ ಮದನಿಗರ, ಕೋಶಾಧಿಕಾರಿ ನಾಝೀಮ್ ಮುಕಚೇರಿ, ಸದಸ್ಯ ಝೈನುದ್ದೀನ್ ಮೇಲಂಗಡಿ, ಅರೆಬಿಕ್ ಕಾಲೇಜು ಪ್ರೊಫೆಸರ್ ಇಬ್ರಾಹಿಂ ಅಹ್ಸನಿ,ಅಹ್ಮದ್ ಬಾವ ಅಳೇಕಲ, ಜಲಾಲ್ ತಂಙಳ್, ಅಝಾದ್ ಇಸ್ಮಾಯಿಲ್ ಮತ್ತಿತರರು ಉಪಸ್ಥಿತರಿದ್ದರು. ದರ್ಗಾ ಪ್ರಧಾನ ಕಾರ್ಯದರ್ಶಿ ಶಿಹಾಬುದ್ದೀನ್ ಸಖಾಫಿ ಸ್ವಾಗತಿಸಿದರು.
ಇರಾನ್: ಸ್ಫೋಟದಲ್ಲಿ ಮೃತರ ಸಂಖ್ಯೆ 25ಕ್ಕೆ ಏರಿಕೆ; 800 ಮಂದಿಗೆ ಗಾಯ
ಟೆಹ್ರಾನ್: ದಕ್ಷಿಣ ಇರಾನ್ನ ಬಂದರ್ ಅಬ್ಬಾಸ್ ನಗರದ ಬಂದರಿನಲ್ಲಿ ಶನಿವಾರ ಬೆಳಿಗ್ಗೆ ಸಂಭವಿಸಿದ ಭಾರೀ ಸ್ಫೋಟದಲ್ಲಿ ಮೃತಪಟ್ಟವರ ಸಂಖ್ಯೆ 25ಕ್ಕೆ ಏರಿದ್ದು ಸುಮಾರು 800 ಮಂದಿ ಗಾಯಗೊಂಡಿರುವುದಾಗಿ ಸರ್ಕಾರಿ ಸ್ವಾಮ್ಯದ ಮಾಧ್ಯಮ ವರದಿ ಮಾಡಿದೆ. ಶನಿವಾರ ಬೆಳಿಗ್ಗೆ ಹೊರ್ಮುಝ್ ಕೊಲ್ಲಿಯ ಬಳಿಯಿರುವ ಶಾಹಿದ್ ರಾಜೈ ಬಂದರಿನಲ್ಲಿ ನಡೆದ ಪ್ರಬಲ ಸ್ಫೋಟದ ತೀವ್ರತೆಗೆ ಸಮೀಪದ ಕಚೇರಿ ಕಟ್ಟಡದ ಕಿಟಕಿ ಬಾಗಿಲುಗಳು ಹಾರಿ ಹೋಗಿದ್ದು ಹಲವು ಕಟ್ಟಡಗಳು ನೆಲಸಮಗೊಂಡಿವೆ. ಸ್ಫೋಟ ಸಂಭವಿಸಿದ ಬಳಿಕ ಬಂದರಿನಲ್ಲಿ ಹರಡಿದ್ದ ಬೆಂಕಿಯ ಜ್ವಾಲೆಯನ್ನು ಬಹುತೇಕ ನಿಯಂತ್ರಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಬಂದರಿನ ವಾರ್ಫ್(ಸರಕು ಕಟ್ಟೆ)ಯಲ್ಲಿ ಕಾಣಿಸಿಕೊಂಡ ಬೆಂಕಿ ಅಲ್ಲಿಯೇ ಸಮೀಪ ದಹನಕಾರೀ ವಸ್ತುಗಳನ್ನು ಸಂಗ್ರಹಿಸಿಟ್ಟಿದ್ದ ಟ್ಯಾಂಕ್ಗಳಿಗೆ ಹರಡಿ ಸ್ಫೋಟ ಸಂಭವಿಸಿದೆ. ರಾಸಾಯನಿಕ ವಸ್ತುಗಳನ್ನು ಇರಿಸಿದ್ದ ಹಲವು ಟ್ಯಾಂಕ್ಗಳು ಸ್ಫೋಟಗೊಂಡಿರುವುದಾಗಿ ಪ್ರತ್ಯಕ್ಷದರ್ಶಿಗಳನ್ನು ಉಲ್ಲೇಖಿಸಿ ಬಿಬಿಸಿ ವರದಿ ಹೇಳಿದೆ.
ಷರತ್ತುಗಳಿಲ್ಲದೆ ಉಕ್ರೇನ್ ಜೊತೆ ಮಾತುಕತೆ ಮುಂದುವರಿಸಲು ಸಿದ್ಧ: ಪುಟಿನ್
ಮಾಸ್ಕೋ: ಪೂರ್ವಭಾವಿ ಷರತ್ತುಗಳಿಲ್ಲದೆ ಉಕ್ರೇನ್ ಜೊತೆ ಮಾತುಕತೆ ನಡೆಸಲು ರಶ್ಯ ಸಿದ್ಧವಿದೆ ಎಂದು ಅಮೆರಿಕದ ರಾಯಭಾರಿ ಸ್ಟೀವ್ ವಿಟ್ಕಾಫ್ ಗೆ ಪುಟಿನ್ ತಿಳಿಸಿರುವುದಾಗಿ ರಶ್ಯ ಅಧ್ಯಕ್ಷರ ವಕ್ತಾರ ಡಿಮಿಟ್ರಿ ಪೆಸ್ಕೋವ್ ಹೇಳಿದ್ದಾರೆ. ಟ್ರಂಪ್ ಅವರ ಪ್ರತಿನಿಧಿ ವಿಟ್ಕಾಫ್ ಜತೆಗಿನ ಮಾತುಕತೆಯ ಸಂದರ್ಭ ಯಾವುದೇ ಪೂರ್ವಭಾವಿ ಷರತ್ತುಗಳಿಲ್ಲದೆ ಉಕ್ರೇನ್ ಜೊತೆಗಿನ ಮಾತುಕತೆಯನ್ನು ಪುನರಾರಂಭಿಸಲು ರಶ್ಯ ಸಿದ್ಧ ಎಂದು ಪುಟಿನ್ ಪುನರುಚ್ಚರಿಸಿದ್ದಾರೆ. ಇದನ್ನು ಈ ಹಿಂದೆಯೂ ಹಲವು ಬಾರಿ ಪುಟಿನ್ ಪುನರುಚ್ಚರಿಸಿದ್ದಾರೆ ಎಂದು ಪೆಸ್ಕೋವ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಮಧ್ಯೆ, ರೋಮ್ನಲ್ಲಿ ಪೋಪ್ ಫ್ರಾನ್ಸಿಸ್ ಅವರ ಅಂತ್ಯಸಂಸ್ಕಾರದಲ್ಲಿ ಪಾಲ್ಗೊಂಡಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಉಕ್ರೇನ್ ಅಧ್ಯಕ್ಷ ವೊಲೊದಿಮಿರ್ ಝೆಲೆನ್ಸ್ಕಿ ಉಕ್ರೇನ್ ಕದನ ವಿರಾಮದ ಬಗ್ಗೆ ಚರ್ಚೆ ನಡೆಸಿರುವುದಾಗಿ ವರದಿಯಾಗಿದೆ. ಮಾತುಕತೆಯ ಬಳಿಕ ಟ್ರಂಪ್ `ಪುಟಿನ್ ಜತೆ ವಿಭಿನ್ನವಾಗಿ ವ್ಯವಹರಿಸಬೇಕಿದೆ. ಬ್ಯಾಂಕಿಂಗ್ ಅಥವಾ ಎರಡನೆಯ ಸುತ್ತಿನ ನಿರ್ಬಂಧಗಳ ಮೂಲಕ' ಎಂದು ತನ್ನ ಸಾಮಾಜಿಕ ಮಾಧ್ಯಮ `ಟ್ರುಥ್ ಸೋಷಿಯಲ್'ನಲ್ಲಿ ಪೋಸ್ಟ್ ಮಾಡಿದ್ದಾರೆ.
ಬೀದರ್ | ಕಾರು ಢಿಕ್ಕಿ; ಬೈಕ್ ಗೆ ಸವಾರನಿಗೆ ಗಾಯ
ಬೀದರ್ : ರಸ್ತೆಯಲ್ಲಿ ಚಲಿಸುತಿದ್ದ ಬೈಕ್ ಗೆ ಕಾರೊಂದು ಢಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರನಿಗೆ ಗಾಯವಾದ ಘಟನೆ ಇಂದು ಭಾಲ್ಕಿ ತಾಲ್ಲೂಕಿನ ಹೊನ್ನಳ್ಳಿ ಗ್ರಾಮದ ಬಳಿ ನಡೆದಿದೆ. ಹುಲಸೂರ್ ತಾಲ್ಲೂಕಿನ ಗೋರ್ಟಾ ಗ್ರಾಮದ ನಿವಾಸಿ ದಯಾನಂದ್ ಹಂಸಂಗೆ ಘಟನೆಯಲ್ಲಿ ಗಾಯಗೊಂಡ ಬೈಕ್ ಸವಾರನಾಗಿದ್ದಾನೆ. ಸುದ್ದಿ ತಿಳಿದು ಸ್ಥಳಕ್ಕೆ ಧಾವಿಸಿದ ಖಟಕಚಿಂಚೋಳಿ ಪಿಎಸ್ಐ ಸುದರ್ಶನ ರೆಡ್ಡಿ ನೇತೃತ್ವದ ಪೊಲೀಸರ ತಂಡವು ಗಾಯಾಳು ವ್ಯಕ್ತಿಗೆ ತಮ್ಮ ಪೊಲೀಸ್ ಜೀಪನಲ್ಲಿಯೇ ಹತ್ತಿರದ ಮುಚಳಂಬ ಗ್ರಾಮದ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸಾಗಿಸಿದ್ದಾರೆ. ಆದರೆ ಆರೋಗ್ಯ ಕೇಂದ್ರದಲ್ಲಿ ವೈದ್ಯ, ಸಿಬ್ಬಂದಿ ಯಾರು ಇಲ್ಲದೆ ಆರೋಗ್ಯ ಕೇಂದ್ರಕ್ಕೆ ಬೀಗ ಹಾಕಲಾಗಿತ್ತು ಎನ್ನಲಾಗಿದೆ. ಇದರಿಂದಾಗಿ ವೈದ್ಯರ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ ಎಂದು ತಿಳಿದು ಬಂದಿದೆ.
ಇತಿಹಾಸ ನಿರ್ಮಿಸಿದ ಮುಂಬೈ ಇಂಡಿಯನ್ಸ್
ಹೊಸದಿಲ್ಲಿ: ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡವು ಐಪಿಎಲ್ ಟೂರ್ನಿಯ ಇತಿಹಾಸದಲ್ಲಿ 150ನೇ ಗೆಲುವು ದಾಖಲಿಸಿದ ಮೊದಲ ತಂಡ ಎನಿಸಿಕೊಂಡು ಇತಿಹಾಸ ನಿರ್ಮಿಸಿದೆ. ಹಾರ್ದಿಕ್ ಪಾಂಡ್ಯ ನಾಯಕತ್ವದಲ್ಲಿ ಮುಂಬೈ ತಂಡವು ರವಿವಾರ ಲಕ್ನೊ ತಂಡವನ್ನು 54 ರನ್ನಿಂದ ಮಣಿಸಿ ಈ ಸಾಧನೆ ಮಾಡಿದೆ. ಈ ಗೆಲುವಿನೊಂದಿಗೆ ಮುಂಬೈ ತಂಡವು ಇದೀಗ 271 ಪಂದ್ಯಗಳಲ್ಲಿ 150ರಲ್ಲಿ ಜಯ, 121 ಪಂದ್ಯಗಳಲ್ಲಿ ಸೋತಿದೆ. ಐಪಿಎಲ್ ಇತಿಹಾಸದಲ್ಲಿ ಅತ್ಯಂತ ಯಶಸ್ವಿ ತಂಡ ಎನಿಸಿಕೊಂಡಿದೆ. ಐಪಿಎಲ್ನಲ್ಲಿ ಗರಿಷ್ಠ ಗೆಲುವು ಪಡೆದ ತಂಡಗಳ ಪಟ್ಟಿಯಲ್ಲಿ ಸಿಎಸ್ಕೆ(140 ಜಯ,248 ಪಂದ್ಯ), ಕೆಕೆಆರ್(134 ಗೆಲುವು, 261 ಪಂದ್ಯ), ಆರ್ಸಿಬಿ(266 ಪಂದ್ಯ,129 ಗೆಲುವು) ಹಾಗೂ ಡೆಲ್ಲಿ ಕ್ಯಾಪಿಟಲ್ಸ್(261 ಪಂದ್ಯ,121 ಗೆಲುವು)ತಂಡಗಳಿವೆ.
'ಕಮಾಲ್' ಪಾಂಡ್ಯ; ಡೆಲ್ಲಿ ಗದ್ದುಗೆ RCB ಗೆ
ಹೊಸದಿಲ್ಲಿ: ಇಲ್ಲಿನ ಅರುಣ್ ಜೇಟ್ಲಿ ಸ್ಟೇಡಿಯಮ್ ನಲ್ಲಿ ರವಿವಾರ ರಾತ್ರಿ ನಡೆದ ಐಪಿಎಲ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರೋಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಭರ್ಜರಿ ಜಯ ಗಳಿಸುವ ಮೂಲಕ ಅಂಕ ಪಟ್ಟಿಯಲ್ಲಿ ಮೇಲಕ್ಕೇರಿದೆ.
ಈ ವರ್ಷದ ಐಪಿಎಲ್ ನಲ್ಲಿ ಕಳಪೆ ಪ್ರದರ್ಶನ ಮುಂದುವರಿಸಿದ ರಿಷಭ್ ಪಂತ್
ಹೊಸದಿಲ್ಲಿ: ಮುಂಬೈ ಇಂಡಿಯನ್ಸ್ ವಿರುದ್ಧ ರವಿವಾರ ವಾಂಖೆಡೆ ಸ್ಟೇಡಿಯಮ್ನಲ್ಲಿ ನಡೆದಿದ್ದ ಐಪಿಎಲ್ ಪಂದ್ಯದಲ್ಲಿ 2 ಎಸೆತದಲ್ಲಿ 4 ರನ್ ಗಳಿಸಿ ಔಟಾಗಿರುವ ಲಕ್ನೊ ಸೂಪರ್ ಜಯಂಟ್ಸ್ ತಂಡದ ವಿಕೆಟ್ಕೀಪರ್-ಬ್ಯಾಟರ್ ರಿಷಭ್ ಪಂತ್ ತನ್ನ ಕಳಪೆ ಪ್ರದರ್ಶನ ಮುಂದುವರಿಸಿದ್ದಾರೆ. ಪಂತ್ ಅವರು 7ನೇ ಓವರ್ನ 3ನೇ ಎಸೆತದಲ್ಲಿ ಜಾಕ್ಸ್ ಬೌಲಿಂಗ್ನಲ್ಲಿ ಶರ್ಮಾಗೆ ವಿಕೆಟ್ ಒಪ್ಪಿಸಿದರು. ಪಂತ್ ಈ ವರ್ಷದ ಐಪಿಎಲ್ನಲ್ಲಿ ಆಡಿರುವ 10 ಪಂದ್ಯಗಳ ಪೈಕಿ ಕೇವಲ 110 ರನ್ ಗಳಿಸಿದ್ದು, 63 ಗರಿಷ್ಠ ಸ್ಕೋರಾಗಿದೆ. ಪಂತ್ ತನ್ನ ಮೊದಲಿನ ಲಯವನ್ನು ಕಂಡುಕೊಳ್ಳುವಲ್ಲಿ ಸಂಪೂರ್ಣ ವಿಫಲವಾದರೆ 2016ರ ನಂತರ ಮೊದಲ ಬಾರಿ ಐಪಿಎಲ್ ಋತುವಿನಲ್ಲಿ 200ಕ್ಕಿಂತ ಕಡಿಮೆ ಸ್ಕೋರ್ ಗಳಿಸಿದ ಅಪಖ್ಯಾತಿಗೆ ಒಳಗಾಗಲಿದ್ದಾರೆ. ಕಳೆದ ವರ್ಷ ತನ್ನ ಐಪಿಎಲ್ ಪುನರಾಗಮನದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ 13 ಪಂದ್ಯಗಳಲ್ಲಿ 446 ರನ್ ಗಳಿಸಿದ್ದು, 3 ಅರ್ಧಶತಕಗಳನ್ನು ಗಳಿಸಿದ್ದರು. ಕಳೆದ ವರ್ಷ ನಡೆದಿದ್ದ ಹರಾಜಿನಲ್ಲಿ ಲಕ್ನೊ ತಂಡವು 27 ಕೋ.ರೂ. ನೀಡಿ ಪಂತ್ ಅವರನ್ನು ತನ್ನ ತೆಕ್ಕೆಗೆ ಸೇರಿಸಿಕೊಂಡಿತ್ತು. ಲೀಗ್ ನ ಇತಿಹಾಸದಲ್ಲಿ ಅತ್ಯಂತ ದುಬಾರಿ ಆಟಗಾರನಾಗಿದ್ದರು.
ಪತ್ರಕರ್ತರ ಕ್ರಿಕೆಟ್ ಪಂದ್ಯಾಟ: ಭಟ್ಕಳ ಪತ್ರಕರ್ತರ ತಂಡ ಚಾಂಪಿಯನ್
ಭಟ್ಕಳ: ಭಟ್ಕಳ ತಾಲೂಕು ಪತ್ರಕರ್ತರ ಕ್ಷೇಮಾಬಿವೃದ್ಧಿ ಸಂಘ ಇದರ ಆಶ್ರಯದಲ್ಲಿ ನಡೆದ ಅಂತರ್ ಜಿಲ್ಲಾ ಮಟ್ಟದ ಪತ್ರಕರ್ತರ ಕ್ರಿಕೆಟ್ ಪಂದ್ಯಾವಳಿಯಲ್ಲಿ ಭಟ್ಕಳ ಪತ್ರಕರ್ತರ ತಂಡವು ಅಂಕೋಲ ಪತ್ರಕರ್ತರ ತಂಡವನ್ನು 28 ರನ್ ಗಳಿಂದ ಸೋಲಿಸಿ ಮೀಡಿಯಾ ಕಪ್ 2025 ಯನ್ನು ತನ್ನದಾಗಿಸಿಕೊಂಡಿತು. ಪಂದ್ಯಾವಳಿಯಲ್ಲಿ ಭಟ್ಕಳ ತಂಡವು ಟಾಸ್ ಗೆದ್ದು ಬ್ಯಾಟಿಂಗ್ ನ್ನು ಆಯ್ದುಕೊಂಡು 6 ಓವರುಗಳಿಗೆ 80 ರನ್ನ ಗಳಿಸಿತು. ಇದಕ್ಕೆ ಉತ್ತರಿಸಿ ಅಂಕೋಲಾ ತಂಡವು 6 ಓವರುಗಳಲ್ಲಿ ಕೇವಲ 52 ರನ್ನು ಗಳಿಸಿ ಸೋಲನ್ನು ಒಪ್ಪಿಕೊಂಡಿತ್ತು. ಭಟ್ಕಳ ತಂಡದಲ್ಲಿ ರಾಘು ನಾಯ್ಕ 37 ರನ್ ಹಾಗೂ ಇಲಿಯಾಸ ಮೊಟಿಯಾ 18 ರನ್ನು ಗಳಿಸಿದರು. ಅಂಕೋಲಾ ತಂಡದಲ್ಲಿದ್ದ ರಾಜು ಗೌಡ 13 ರನ್ನು ಗಳಿಸಿದರು. ಪ್ರಥಮ ಬಹುಮಾನದ ಮೊತ್ತ 33,333 ರೂ ನಗದು ಬಹುಮಾನ ಮತ್ತುಟ್ರೋಪಿ ಭಟ್ಕಳ ತಂಡ ಪಡೆದುಕೊಂಡಿತು. ಅಂಕೋಲಾ ತಂಡ 22,222/- ರೂ ನಗದು ಬಹುಮಾನ ಮತ್ತುಟ್ರೋಪಿ ಪಡೆಯಿತು. ಸೆಮಿಪೈನಲ್ ಪಂದ್ಯದಲ್ಲಿ ಭಟ್ಕಳ ತಂಡ ಸಿರಸಿ ತಂಡವನ್ನು, ಅಂಕೋಲಾ ತಂಡ ಕಾರವಾರ ತಂಡವನ್ನು ಸೋಲಿಸಿ ಪೈನಲ್ ಗೆ ಪ್ರವೇಶಿಸಿದ್ದವು. ಪೈನಲ್ ಪಂದ್ಯದಲ್ಲಿ ಮ್ಯಾನ್ ಅಪ್ ದಿ ಮ್ಯಾಚ್ ಪ್ರಶಸ್ತಿಯನ್ನು ಭಟ್ಕಳದ ರಾಘು ನಾಯ್ಕ ಪಡೆದರು. ಪಂದ್ಯಾವಳಿಯಲ್ಲಿ ಮ್ಯಾನ್ ಆಫ್ ದ ಮ್ಯಾಚ್ ಪ್ರಶಸ್ತಿಯನ್ನು ಅಂಕೋಲಾದ ಕಾರ್ತಿಕ ಗೌಡ ಪಡೆದರು. ಬೆಸ್ಟ ಬ್ಯಾಟ್ಸಮನ್ ಪ್ರಶಸ್ತಿಯನ್ನು ಕಾರವಾರ ತಂಡದ ಸಂಕೇತ ಪಡೆದರು. ಪಂದ್ಯಾವಳಿಯ ಬೆಸ್ಟ ಬೌಲರ್ ಪ್ರಶಸ್ತಿಯನ್ನು ಭಟ್ಕಳದ ಸುಹೇಲ್ ಇಸ್ಬು ,. ಬೆಸ್ಟ ಫೀಲ್ಡರ್ ಪ್ರಶಸ್ತಿಯನ್ನು ಅಂಕೋಲಾದ ರಾಜು ಗೌಡ, ಪಡೆದರು. ಬಹುಮಾನ ವಿತರಣಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಭಟ್ಕಳ ನಗರ ಠಾಣೆಯ ಪಿ.ಎಸ್.ಐ. ನವೀನ್ ನಾಯ್ಕ ಬಹುಮಾನ ವಿತರಿಸಿ ಮಾತನಾಡಿ ಸದಾ ಒತ್ತಡದ ಬದುಕಿನಲ್ಲಿ ಕಾರ್ಯ ನಿರ್ವಹಿಸುವ ಪತ್ರಕರ್ತರು ಭಟ್ಕಳದಲ್ಲಿ ಅಂತರ ಜಿಲ್ಲಾ ಮಟ್ಟದ ಕ್ರಿಕೇಟ್ ಪಂದ್ಯಾವಳಿಯನ್ನು ಅಚು ಕಟ್ಟಾಗಿ ಆಯೋಜಿಸಿ ಎಲ್ಲರ ಮನ ಗೆದ್ದು ಭಟ್ಕಳದಲ್ಲಿ ಕ್ರಿಕೇಟ್ ಕ್ರೀಡೆಗೆ ವಿಶೇಷ ಮಹತ್ವ ನೀಡಿದೆ. ಈ ಪ್ರೋತ್ಸಾಹ ಸದಾ ಮುಂದುವರೆಯಲಿ ಎಂದು ಹಾರೈಸಿದರು. ಈ ಸಂದರ್ಭದಲ್ಲಿ ಪುರಸಭೆಯ ಉಪಾಧ್ಯಕ್ಷ ಅಲ್ತಾಫ್ ಖರೂರಿ, ಜಾಲಿ ಪಟ್ಟಣ ಪಂಚಾಯತ ಸ್ಥಾಯಿ ಸಮಿತಿ ಅಧ್ಯಕ್ಷ ಈಶ್ವರ ಮೊಗೇರ,ಭಟ್ಕಳ ಪತ್ರಕರ್ತ ಕ್ಷೇಮಾಬಿವೃದ್ದಿ ಸಂಘದ ಅಧ್ಯಕ್ಷ ರಾಘವೇಂದ್ರ ಹೆಬ್ಬಾರ, ಉಪಾಧ್ಯಕ್ಷ ವಿಷ್ಣು ದೇವಾಡಿಗ, ಸಂಘದ ಗೌರವಾಧ್ಯಕ್ಷ ರಾಧಾಕೃಷ್ಣ ಭಟ್, ಪತ್ರಕರ್ತರಾದ ಸತೀಶ ನಾಯ್ಕ, ಮನಮೋಹನ್ ನಾಯ್ಕ, ಮೋಹನ್ ನಾಯ್ಕ,ಭಾಸ್ಕರ ನಾಯ್ಕ, ನಸೀಮುಲ್ಲಾ ಘನಿ, ಫಯಾಜ್ ಮುಲ್ಲಾ, ರಿಝ್ವಾನ್ ಗಂಗಾವಳಿ, ಶೈಲೇಶ ವೈದ್ಯ, ಉದಯ್ ನಾಯ್ಕ, ಪ್ರಸನ್ನ ಭಟ್, ಮಂಜು ನಾಯ್ಕ, ರಾಘವೇಂದ್ರ ಮಲ್ಯ, ಈಶ್ವರ ನಾಯ್ಕ, ಮಾರುತಿ ನಾಯ್ಕ,ಮುಬಾಷಿರ್ ಹಲ್ಲಾರೆ, ದತ್ತ ಮೊಗೇರ, ಮತ್ತಿತರರು ಇದ್ದರು.
ಮಂಗಳೂರಿನಲ್ಲಿ ಯುವಕನ ಕೊಲೆ| ವದಂತಿಗಳಿಗೆ ಕಿವಿಗೊಡದಿರಿ: ಪೊಲೀಸ್ ಕಮಿಷನರ್ ಮನವಿ
ಮಂಗಳೂರು, ಎ.27: ನಗರ ಹೊರವಲಯದ ಕುಡುಪು ಸಮೀಪ ರವಿವಾರ ಸಂಜೆ ಅಪರಿಚಿತ ಯುವಕನ ಮೃತದೇಹ ಪತ್ತೆಯಾಗಿದ್ದು, ಕೊಲೆಶಂಕೆ ವ್ಯಕ್ತವಾಗಿದೆ. ಮೃತ ಯುವಕನ ಗುರುತು ಪತ್ತೆಯಾಗಿಲ್ಲ. ಸುಮಾರು 35ರಿಂದ 40 ವರ್ಷ ಪ್ರಾಯದ ಹೊರ ರಾಜ್ಯದ ಈ ಯುವಕನನ್ನು ಕಲ್ಲಿನಿಂದ ಜಜ್ಜಿ ಕೊಲೆಗೈಯಲಾಗಿದೆ ಎಂದು ಹೇಳಲಾಗುತ್ತಿದೆ. ನಗರದ ಕುಡುಪು ಕಟ್ಟೆ ಸಮೀಪದ ಗದ್ದೆಯಲ್ಲಿ ಯುವಕರ ಗುಂಪೊಂದು 6 ತಂಡಗಳ ಕ್ರಿಕೆಟ್ ಮ್ಯಾಚ್ ಆಯೋಜಿಸಿತ್ತು. ಸಂಜೆ ವೇಳೆ ಕ್ರಿಕೆಟ್ ಪಂದ್ಯಾಟ ನಡೆಯುತ್ತಿದ್ದ ಗದ್ದೆಗೆ ಅಪರಿಚಿತ ಯುವಕನೊಬ್ಬ ತೆರಳಿದ್ದು, ಯಾವುದೋ ಕಾರಣಕ್ಕೆ ಈ ಯುವಕ ಮತ್ತು ಕ್ರಿಕೆಟ್ ಆಟಗಾರರ ಮಧ್ಯೆ ಮಾತಿಗೆ ಮಾತು ಬೆಳೆದಿದೆ ಎನ್ನಲಾಗಿದೆ. ಆಕ್ರೋಶಗೊಂಡ ಯುವಕರ ತಂಡವು ಈ ಯುವಕನಿಗೆ ಹಲ್ಲೆಗೈದಿದ್ದು, ಗಂಭೀರ ಗಾಯಗೊಂಡ ಯುವಕ ಸ್ಥಳದಲ್ಲೇ ಮೃತಪಟ್ಟಿರುವುದಾಗಿ ವರದಿಯಾಗಿದೆ. ಘಟನಾ ಸ್ಥಳಕ್ಕೆ ನಗರ ಉಪ ಆಯುಕ್ತ ಸಿದ್ದಾರ್ಥ್ ಗೋಯಲ್, ನಗರ ದಕ್ಷಿಣ ಉಪವಿಭಾಗ ಸಹಾಯಕ ಪೊಲೀಸ್ ಆಯುಕ್ತೆ ಧನ್ಯಾ ನಾಯಕ್, ಮಂಗಳೂರು ಗ್ರಾಮಾಂತರ ಠಾಣಾ ಇನ್ಸ್ಪೆಕ್ಟರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈತ ಕೂಲಿ ಕಾರ್ಮಿಕ ಎಂದು ಹೇಳಲಾಗುತ್ತಿದೆ. ಘಟನೆಯ ಬಗ್ಗೆ ಮಂಗಳೂರು ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ. ಮೃತಪಟ್ಟ ಯುವಕನ ಗುರುತು ಇನ್ನೂ ಪತ್ತೆಯಾಗಿಲ್ಲ. ಪೊಲೀಸರು ಆತನ ಗುರುತು ಪತ್ತೆಗಾಗಿ ಪ್ರಯತ್ನ ಸಾಗಿಸಿದ್ದಾರೆ. ಪ್ರಾಥಮಿಕ ವರದಿಯ ಬಳಿಕ ಸಾವಿಗೆ ಕಾರಣ ಏನು ಎಂದು ತಿಳಿಯಬಹುದಾಗಿದೆ. ಈ ಬಗ್ಗೆ ಹರಡುತ್ತಿರುವ ವದಂತಿಗಳಿಗೆ ಕಿವಿಗೊಡದಿರಿ ಎಂದು ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ಮನವಿ ಮಾಡಿದ್ದಾರೆ.
ಐಪಿಎಲ್: ಮುಂಬೈ ಪರ ಗರಿಷ್ಠ ವಿಕೆಟ್ ಪಡೆದ ಬುಮ್ರಾ
ಮುಂಬೈ: ಐಪಿಎಲ್ ಟಿ20 ಲೀಗ್ ಇತಿಹಾಸದಲ್ಲಿ ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ಪರವಾಗಿ ಹಿರಿಯ ವೇಗದ ಬೌಲರ್ ಜಸ್ಪ್ರಿತ್ ಬುಮ್ರಾ ಗರಿಷ್ಠ ವಿಕೆಟ್ ಕಲೆ ಹಾಕಿದ ಕೀರ್ತಿಗೆ ಭಾಜನರಾದರು. ವಾಂಖೆಡೆ ಕ್ರೀಡಾಂಗಣದಲ್ಲಿ ರವಿವಾರ ನಡೆದ ಲಕ್ನೊ ಸೂಪರ್ ಜಯಂಟ್ಸ್ ವಿರುದ್ಧದ ಪಂದ್ಯದ ವೇಳೆ ಬುಮ್ರಾ ಈ ಸಾಧನೆ ಮಾಡಿದರು. 3ನೇ ಓವರ್ನಲ್ಲಿ ಬೌಲಿಂಗ್ಗೆ ಇಳಿದ ಬುಮ್ರಾ ದಕ್ಷಿಣ ಆಫ್ರಿಕಾದ ಬ್ಯಾಟರ್ ಮರ್ಕ್ರಮ್ ವಿಕೆಟನ್ನು ಉರುಳಿಸಿದರು. ಮುಂಬೈ ಪರ ಆಡಿರುವ 139 ಪಂದ್ಯಗಳಲ್ಲಿ 171ನೇ ವಿಕೆಟ್ ಪಡೆದರು. ಈ ವಿಕೆಟ್ನ ಮೂಲಕ ಬುಮ್ರಾ ಅವರು ಶ್ರೀಲಂಕಾದ ಲೆಜೆಂಡ್ ಲಸಿತ್ ಮಾಲಿಂಗ ಅವರ ದಾಖಲೆಯನ್ನು ಮುರಿದರು. ಮಾಲಿಂಗ ಈಹಿಂದೆ 122 ಪಂದ್ಯಗಳಲ್ಲಿ 170 ವಿಕೆಟ್ ಪಡೆದು ದಾಖಲೆ ನಿರ್ಮಿಸಿದ್ದರು. 2013ರಲ್ಲಿ ಐಪಿಎಲ್ಗೆ ಕಾಲಿಟ್ಟ ನಂತರ ಬುಮ್ರಾ ಎಲ್ಲ ಪಂದ್ಯಗಳನ್ನು ಮುಂಬೈ ತಂಡದ ಪರವಾಗಿಯೇ ಆಡಿದ್ದಾರೆ. ಮುಂಬೈ ತಂಡವು ಐದು ಬಾರಿ ಪ್ರಶಸ್ತಿ ಗೆಲ್ಲುವಲ್ಲಿ ತನ್ನದೇ ಆದ ಕೊಡುಗೆ ನೀಡಿದ್ದಾರೆ. ಒತ್ತಡದ ಪರಿಸ್ಥಿತಿಯಲ್ಲೂ ಸ್ಥಿರ ಪ್ರದರ್ಶನ ನೀಡುವ ಅವರ ಸಾಮರ್ಥ್ಯವು ಅವರನ್ನು ವಿಶ್ವ ಕ್ರಿಕೆಟ್ನ ಓರ್ವ ಅತ್ಯಂತ ಭಯಾನಕ ಬೌಲರ್ಗಳಲ್ಲಿ ಒಬ್ಬರನ್ನಾಗಿಸಿದೆ. ಮುಂಬೈ ತಂಡದ ಸಾರ್ವಕಾಲಿಕ ಶ್ರೇಷ್ಠ ಬೌಲರ್ಗಳ ಪಟ್ಟಿಯಲ್ಲಿ ಭಾರತದ ಮಾಜಿ ಆಫ್ ಸ್ಪಿನ್ನರ್ ಹರ್ಭಜನ್ ಸಿಂಗ್ 136 ಪಂದ್ಯಗಳಲ್ಲಿ 127 ವಿಕೆಟ್ಗಳನ್ನು ಪಡೆದು 3ನೇ ಸ್ಥಾನದಲ್ಲಿದ್ದಾರೆ. ಆನಂತರ ಮಿಚೆಲ್ ಮೆಕ್ಲಿನಘನ್(71)ಹಾಗೂ ಕಿರೊನ್ ಪೋಲಾರ್ಡ್(69)ಇದ್ದಾರೆ. ಹಾಲಿ ಮುಂಬೈ ನಾಯಕ ಹಾರ್ದಿಕ್ ಪಾಂಡ್ಯ 65 ವಿಕೆಟ್ಗಳೊಂದಿಗೆ 6ನೇ ಸ್ಥಾನದಲ್ಲಿದ್ದಾರೆ. ► ಐಪಿಎಲ್ನಲ್ಲಿ ಮುಂಬೈ ಇಂಡಿಯನ್ಸ್ ಪರ ಗರಿಷ್ಠ ವಿಕೆಟ್ ಪಡೆದ ಬೌಲರ್ಗಳು 171-ಜಸ್ಪ್ರಿತ್ ಬುಮ್ರಾ 170-ಲಸಿತ್ ಮಾಲಿಂಗ 127-ಹರ್ಭಜನ್ ಸಿಂಗ್ 71-ಮಿಚೆಲ್ ಮೆಕ್ಲಿನಘನ್ 69-ಕಿರೊನ್ ಪೋಲಾರ್ಡ್ 65-ಹಾರ್ದಿಕ್ ಪಾಂಡ್ಯ
ಭಾರತ ಲಾಹೋರ್ ವಶಪಡಿಸಿಕೊಂಡ್ರೂ ಅರ್ಧಗಂಟೆಯಲ್ಲೇ ಮರಳಿಸುತ್ತೆ - ತಮ್ಮದೇ ಸರ್ಕಾರವನ್ನು ಟ್ರೋಲ್ ಪಾಕಿಸ್ತಾನ ಜನ!
ಪಹಲ್ಗಾಮ್ ದಾಳಿಯ ನಂತರ ಭಾರತದ ರಾಜತಾಂತ್ರಿಕ ಕ್ರಮಗಳಿಂದ ಪಾಕಿಸ್ತಾನವು ಕಂಗಾಲಾಗಿದ್ದು, ಸ್ವದೇಶೀಯರಿಂದಲೇ ಟ್ರೋಲ್ಗೆ ಒಳಗಾಗಿದೆ. ವೀಸಾ ರದ್ದು ಮತ್ತು ಸಿಂಧೂ ನದಿ ಒಪ್ಪಂದ ರದ್ದುಪಡಿಸುವಂತಹ ಕ್ರಮಗಳನ್ನು ಟೀಕಿಸಲಾಗಿದೆ. ಆರ್ಥಿಕ ಬಿಕ್ಕಟ್ಟಿನಲ್ಲಿರುವಾಗ ನೆರೆಯ ರಾಷ್ಟ್ರದೊಂದಿಗೆ ಸಂಘರ್ಷದ ಅಗತ್ಯವಿದೆಯೇ ಎಂದು ಜನ ಪ್ರಶ್ನಿಸಿದ್ದಾರೆ. ಕುಡಿಯಲು ನೀರಿಲ್ಲದ ಪರಿಸ್ಥಿತಿಯಲ್ಲಿ ಯುದ್ಧದ ಬಗ್ಗೆ ವ್ಯಂಗ್ಯವಾಡಿದ್ದಾರೆ.
ಪುತ್ತೂರು ಸರಕಾರಿ ಆಸ್ಪತ್ರೆಯ ವೈದ್ಯೆಯ ನಡೆ ಖಂಡನೀಯ: ಮುನೀರ್ ಕಾಟಿಪಳ್ಳ
ಮಂಗಳೂರು, ಎ.27: ಪೆಹಲ್ಗಾಮ್ ಘಟನೆಯ ಬಳಿಕ ಮುಸ್ಲಿಮ್ ದ್ವೇಷವನ್ನು ಕೆರಳಿಸುವ ಪ್ರಯತ್ನವನ್ನು ಬಲಪಂಥೀಯ ಗುಂಪುಗಳು ದೇಶಾದ್ಯಂತ ಎಗ್ಗಿಲ್ಲದೆ ನಡೆಸುತ್ತಿರುವ ಮಧ್ಯೆ ಮುಸ್ಲಿಂ ದ್ವೇಷದ ಕ್ರೂರ ರಾಜಕಾರಣ ಸಮಾಜದ ಉನ್ನತ ಸ್ಥರದಲ್ಲಿರುವ ವೈದ್ಯರು, ಉದ್ಯಮಿಗಳು, ಇಂಜಿನಿಯರ್ಗಳನ್ನೂ ಬಿಟ್ಟಿಲ್ಲ ಎಂಬುದಕ್ಕೆ ಪುತ್ತೂರು ಸರಕಾರಿ ಆಸ್ಪತ್ರೆಯ ವೈದ್ಯೆಯ ನಡೆ ಸಾಕ್ಷಿಯಾಗಿದೆ. ವೈದ್ಯೆಯ ಈ ನಡೆ ಖಂಡನೀಯ ಎಂದು ಸಾಮಾಜಿಕ ಹೋರಾಟಗಾರ ಮುನೀರ್ ಕಾಟಿಪಳ್ಳ ಹೇಳಿಕೆಯಲ್ಲಿ ತಿಳಿಸಿದ್ದಾರೆ. ದೇಶದ ಹಲವೆಡೆ ಮುಸ್ಲಿಮರನ್ನು ನೇರ ಗುರಿಯಾಗಿಸಿ ನಾನಾ ಘಟನೆಗಳು ವರದಿಯಾಗುತ್ತಿರುವ ಸಂದರ್ಭದಲ್ಲೇ ಸಂಘಪರಿವಾರದ ಪ್ರಯೋಗ ಶಾಲೆ ಎಂಬಂತಿರುವ ಪುತ್ತೂರಿನಲ್ಲಿ ವೈದ್ಯರು, ಅವರ ಸಂಘವು ಕೋಮುವಾದಿ, ಬಲಪಂಥೀಯ ಶಕ್ತಿಗಳ ಜೊತೆ ಸೇರಿ ಮುಸ್ಲಿಮರ ಮೇಲೆ ಕ್ರಮ, ಬಂಧನಕ್ಕೆ ಒತ್ತಾಯಿಸಿ ಪೊಲೀಸ್ ಠಾಣೆಯ ಮುಂದೆ ಪ್ರತಿಭಟನೆ ನಡೆಸಿದ ನಿರ್ಲಜ್ಜ ಘಟನೆ ನಡೆದಿರುವುದು ಅಕ್ಷಮ್ಯ. ತಾಯಿ ಮತ್ತು ಮಗ ಪುತ್ತೂರು ಸರಕಾರಿ ಆಸ್ಪತ್ರೆಗೆ ತೆರಳಿದ ವೇಳೆ ರೌಂಡ್ಸ್ಗೆ ಬಂದ ವೈದ್ಯೆಯು ತಾಯಿ-ಮಗನನ್ನು ಅನ್ಪಡ್ ಎಂಬ ಪದ (ಮತೀಯ ಪೂರ್ವಾಗ್ರಹ ಹೊಂದಿದವರಿಗೆ ಮುಸ್ಲಿಮರು ಅಂದರೆ ಅನಾಗರಿಕರು) ಬಳಕೆ ಮಾಡಿದ್ದಾರೆ. ಇದರಿಂದ ಆಕ್ರೋಶಿತರಾದ ಅವರು ವೈದ್ಯೆ ಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಬಳಿಕ ಅದನ್ನು ವಿವಾದಗೊಳಿಸಲಾಗಿದೆ. ಈ ಘಟನೆಯನ್ನು ಪೊಲೀಸರು ನಿರ್ವಹಿಸಿದ ರೀತಿ ಸಮಾಧಾನ ತಂದಿರದಿದ್ದರೆ, ತಾಯಿ-ಮಗನ ನಡೆ ಅತಿರೇಕದ್ದು ಅಂತ ಅನಿಸಿದ್ದರೆ ಸರಕಾರಿ ವೈದ್ಯೆಯು ತನ್ನ ಇಲಾಖೆಯ ಮೇಲಾಧಿಕಾರಿ ಅಥವಾ ಜಿಲ್ಲಾಡಳಿತ ಅಥವಾ ವೈದ್ಯರ ಸಂಘಕ್ಕೆ ದೂರು ನೀಡಬಹುದಿತ್ತು. ವೈದ್ಯರ ಸಂಘವೂ ಈ ಕುರಿತು ತನ್ನದೇ ವಿಧಾನಗಳ ಮೂಲಕ ಘನತೆಯಿಂದ ಕ್ರಮಗಳನ್ನು ಜರುಗಿಸಬೇಕಿತ್ತು. ಈ ಹಿಂದೆ ವೈದ್ಯರು ಹಾಗೂ ಗ್ರಾಹಕರ ನಡುವೆ ಗಲಾಟೆಗಳು, ಸಮಸ್ಯೆಗಳು ನಡೆದಾಗ ಹೀಗೆಯೆ ನಡೆದಿತ್ತು. ಆದರೆ ಈ ಬಾರಿ ಅಸಮಾನ್ಯ ಪ್ರತಿಕ್ರಿಯೆ ವೈದ್ಯರ ಸಂಘ ತೆಗೆದುಕೊಂಡಿತು. ಕಾರಣ, ಜಗಳ ನಡೆದದ್ದು ಮುಸ್ಲಿಂ ಜೊತೆಗೆ. ಪೊಲೀಸ್ ಠಾಣೆಯಲ್ಲಿ ಪ್ರಕರಣ ಇತ್ಯರ್ಥವಾದ ಬಳಿಕ ವೈದ್ಯರು, ವೈದ್ಯರ ಸಂಘ ತುರ್ತು ಕಾರ್ಯಾಚರಣೆಗೆ ಇಳಿದಿದೆ. ಪುತ್ತೂರು ತಾಲೂಕಿನಾದ್ಯಂತ ಹೊರ ರೋಗಿ ಸೇವೆ ಸ್ಥಗಿತಗೊಳಿಸಿದೆ. ಕೋಮುವಾದಿ, ಮುಸ್ಲಿಂ ವಿರೋಧಿ ಸಂಘಟನೆಗಳು, ಪ್ರಮುಖರ ಜೊತೆ ಸೇರಿ ಪೊಲೀಸ್ ಠಾಣೆಯ ಮುಂಭಾಗ ಪ್ರತಿಭಟನೆ ನಡೆಸಿವೆ. ಮುಸ್ಲಿಂ ತಾಯಿ-ಮಗನ ಮೇಲೆ ಜಾಮೀನು ರಹಿತ ಮೊಕದ್ದಮೆ ದಾಖಲಿಸಬೇಕು ಎಂದು ಹಠಕ್ಕೆ ಬಿದ್ದಿದೆ. ಈ ಒತ್ತಡದಿಂದ ಪೊಲೀಸರು ಎಫ್ಐಆರ್ ಹಾಕಿದ್ದಾರೆ. ಇಷ್ಟು ಸಾಲದು ಎಂಬಂತೆ ತಾಯಿ-ಮಗನನ್ನು ತಕ್ಷಣ ಬಂಧಿಸಬೇಕು ಎಂದು ರಸ್ತೆ ತಡೆಯನ್ನೂ ಮಾಡಲಾಗಿದೆ. ಮುಸ್ಲಿಂ ದ್ವೇಷ, ಸಾಮಾನ್ಯ ಮುಸ್ಲಿಮರ ಕುರಿತು ಎಷ್ಟೊಂದು ಅಸಹನೆಯನ್ನು ವ್ಯವಸ್ಥಿತವಾಗಿ ಮೂಡಿಸಲಾಗುತ್ತಿದೆ ಎಂಬುದಕ್ಕೆ ಪುತ್ತೂರು ವೈದ್ಯರು, ಅವರ ಸಂಘ ಹಾಗೂ ಸಂಘ ಪರಿವಾರದ ಜಂಟಿ ಕಾರ್ಯಾಚರಣೆ ಒಂದು ಪ್ರಬಲ ಸಾಕ್ಷಿಯಾಗಿದೆ ಎಂದು ಮುನೀರ್ ಕಾಟಿಪಳ್ಳ ತಿಳಿಸಿದ್ದಾರೆ. ವಾಗ್ವಾದಕ್ಕೆ ವೈದ್ಯರು ದಿಢೀರ್ ಮುಷ್ಕರ ಹೂಡುವುದು, ವೈದ್ಯರ ಸಂಘ ನೇತೃತ್ವ ಕೊಡುವುದು, ಸಂಬಂಧ ಪಟ್ಟವರಿಗೆ ದೂರು, ಮನವಿ ಕೊಡುವ ಬದಲಿಗೆ ಸಂಘ ಪರಿವಾರಕ್ಕೆ ದೂರು ಕೊಡುವುದು, ಅವರೊಂದಿಗೆ ಜಂಟಿಯಾಗಿ ಪ್ರತಿಭಟನೆಗೆ ಇಳಿಯುವುದು ಅಂದರೆ ಏನರ್ಥ? ವೈದ್ಯರು, ನಾಗರಿಕರ ನಡುವಿನ ಸಾಮಾನ್ಯ ಏರುಮಾತನ್ನು ಹಿಂದು-ಮುಸ್ಲಿಂ ಎಂದು ಬಣ್ಣ ಬಲಿಯುವುದು ಎಷ್ಟು ಸರಿ? ಸರಕಾರಿ ವೈದ್ಯರೂ ಈ ರೀತಿ ನಡೆದುಕೊಳ್ಳಬಹುದೆ? ವೈದ್ಯರು, ವೈದ್ಯರ ಸಂಘಗಳಿಗೆ ಇಂತಹ ದಿಢೀರ್ ಮುಷ್ಕರ ಹೂಡುವ ಅವಕಾಶ ಇದೆಯೇ ಇತ್ಯಾದಿ ಪ್ರಶ್ನೆಗಳಿಗೆ ಸರಕಾರ ಉತ್ತರಿಸಬೇಕಿದೆ. ವೃತ್ತಿನಿಷ್ಟ, ಹಿರಿಯ ವೈದ್ಯರುಗಳ ಪ್ರತಿಕ್ರಿಯೆ ಏನು? ಮುಸ್ಲಿಮರು ಅಂದರೆ ಯಾರು, ಹೇಗೆ ಬೇಕಾದರು ನಡೆಸಿಕೊಳ್ಳಬಹುದೆ? ಇದು ಜನಾಂಗ ತಾರತಮ್ಯ ಅಲ್ಲವೆ ಎಂದು ಮುನೀರ್ ಕಾಟಿಪಳ್ಳ ಪ್ರಶ್ನಿಸಿದ್ದಾರೆ.
ಎ.27 ರಿಂದ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಒಂದು ವಾರದ ಕಾಲ ಮಳೆ ಸಾಧ್ಯತೆ
ಬೆಂಗಳೂರು: ರಾಜ್ಯದ ವಿವಿಧ ಜಿಲ್ಲೆಯಲ್ಲಿ ನಾಳೆಯಿಂದ(ಎ.27) ಒಂದು ವಾರದ ಕಾಲ ಮಳೆಯಾಗುವ ಸಾಧ್ಯತೆ ಇದ್ದು, ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಯ ಕೆಲವು ಸ್ಥಳಗಳಲ್ಲಿ ಗುಡುಗು ಸಹಿತ ಮಳೆ ಮುಂದುವರೆಯಲಿದೆ. ಉತ್ತರ ಒಳನಾಡಿನ ಬಾಗಲಕೋಟೆ, ಬೆಳಗಾವಿ, ಬೀದರ್, ಧಾರವಾಡ, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ, ಬಳ್ಳಾರಿ, ದಕ್ಷಿಣ ಒಳನಾಡಿನ ಚಾಮರಾಜನಗರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಹಾಸನ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ಶಿವಮೊಗ್ಗದಲ್ಲಿ ಮಳೆಯಾಗಲಿದೆ. ಬಾಗಲಕೋಟೆ, ಬೆಳಗಾವಿ ಹಾಗೂ ಗದಗ ಜಿಲ್ಲೆಯ ಒಂದು ಅಥವಾ ಎರಡು ಸ್ಥಳಗಳಲ್ಲಿ ಬಿರುಗಾಳಿಯೊಂದಿಗೆ (ಗಂಟೆಗೆ 50ರಿಂದ 60 ಕಿ.ಮೀ. ವೇಗ) ಮಳೆಯಾಗುವ ಸಾಧ್ಯತೆಯಿದೆ. ಇಲ್ಲಿ ಆಲಿಕಲ್ಲು ಬೀಳುವ ಸಂಭವವಿದೆ. ರವಿವಾರದಂದು ಕಲಬುರಗಿಯಲ್ಲಿ 41.5 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ ದಾಖಲಾಗಿದೆ. ಬೆಂಗಳೂರಿನ ಎಚ್ಎಎಲ್ನಲ್ಲಿ 34.9 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, ಹೊನ್ನಾವರದಲ್ಲಿ 34.8, ಕಾರವಾರದಲ್ಲಿ 37.6, ಪಣಂಬೂರಿನಲ್ಲಿ 34.5 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ ದಾಖಲಾಗಿದೆ. ಬೆಳಗಾವಿಯಲ್ಲಿ 35, ಬೀದರ್ ನಲ್ಲಿ 40.4, ವಿಜಯಪುರದಲ್ಲಿ 39, ಬಾಗಲಕೋಟೆಯಲ್ಲಿ 37.7, ಧಾರವಾಡದಲ್ಲಿ 35, ಗದಗದಲ್ಲಿ 37.2, ಕಲಬುರಗಿಯಲ್ಲಿ 41.5, ಹಾವೇರಿಯಲ್ಲಿ 35.6, ಕೊಪ್ಪಳದಲ್ಲಿ 36.3 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ ದಾಖಲಾಗಿದೆ.
130 ಅಣ್ವಸ್ತ್ರಗಳು ಪ್ರದರ್ಶನಕ್ಕಲ್ಲ: ಭಾರತಕ್ಕೆ ಬೆದರಿಕೆಯೊಡ್ಡಿದ ಪಾಕ್ ಸಚಿವ
ಕರಾಚಿ: ಪಹಲ್ಗಾಮ್ ಭಯೋತ್ಪಾದಕ ದಾಳಿಯ ಬಳಿಕ ಭಾರತ-ಪಾಕಿಸ್ತಾನ ಗಡಿ ಭಾಗದಲ್ಲಿ ಉದ್ವಿಗ್ನತೆ ಹೆಚ್ಚಿರುವ ನಡುವೆಯೇ ಪಾಕಿಸ್ತಾನದ ರೈಲ್ವೇ ಸಚಿವ ಹನೀಫ್ ಅಬ್ಬಾಸಿ ಭಾರತವನ್ನು ಪ್ರಚೋದಿಸಿದ್ದು ಸಿಂದು ನದಿ ನೀರಿಗೆ ತಡೆಯೊಡ್ಡಿದರೆ ಯುದ್ಧಕ್ಕೆ ಸಿದ್ಧವಾಗುವಂತೆ ಭಾರತಕ್ಕೆ ಎಚ್ಚರಿಕೆ ನೀಡಿದ್ದಾರೆ. `ಅವರು(ಭಾರತ) ನೀರನ್ನು ತಡೆದರೆ ಅವರು ಯುದ್ಧಕ್ಕೆ ಸಿದ್ಧವಾಗಬೇಕು. ಘೋರಿ, ಶಹೀನ್ ಮತ್ತು ಘಝ್ನಾವಿಗಳು(ಬ್ಯಾಲಿಸ್ಟಿಕ್ ಕ್ಷಿಪಣಿಗಳು) ಪ್ರದರ್ಶನಕ್ಕಲ್ಲ. ನಾವು ಅವುಗಳನ್ನು ಭಾರತಕ್ಕಾಗಿ ಇರಿಸಿಕೊಂಡಿದ್ದೇವೆ. 130 ಅಣ್ವಸ್ತ್ರಗಳನ್ನು ಪ್ರದರ್ಶನಕ್ಕೆ ಇಟ್ಟಿರುವುದಲ್ಲ. ನಾವು ದೇಶದಾದ್ಯಂತ ನಮ್ಮ ಪರಮಾಣು ಶಸ್ತ್ರಾಸ್ತ್ರಗಳನ್ನು ಎಲ್ಲಿ ಇರಿಸಿದ್ದೇವೆ ಎಂಬುದು ಯಾರಿಗೂ ತಿಳಿದಿಲ್ಲ. ನಾನು ಮತ್ತೊಮ್ಮೆ ಹೇಳುತ್ತೇನೆ, ಈ ಬ್ಯಾಲಿಸ್ಟಿಕ್ ಕ್ಷಿಪಣಿಗಳು ನಿಮ್ಮನ್ನೇ ಗುರಿಯಾಗಿಸಿಕೊಂಡಿವೆ' ಎಂದು ಅಬ್ಬಾಸಿ ಹೇಳಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ. ಇದಕ್ಕೂ ಮುನ್ನ ಪಾಕಿಸ್ತಾನ್ ಪೀಪಲ್ಸ್ ಪಕ್ಷದ ಅಧ್ಯಕ್ಷ, ಮಾಜಿ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೋ `ಸಿಂಧು ನಮ್ಮದು ಮತ್ತು ನಮ್ಮದಾಗಿಯೇ ಇರುತ್ತದೆ. ಅದರ ಮೂಲಕ ನಮ್ಮ ನೀರು ಅಥವಾ ಅವರ(ಭಾರತದ) ರಕ್ತ ಹರಿಯುತ್ತದೆ' ಎಂದು ಸಿಂಧ್ ಪ್ರಾಂತದಲ್ಲಿ ನಡೆದ ಸಾರ್ವಜನಿಕ ರ್ಯಾಲಿಯಲ್ಲಿ ನೀಡಿದ್ದ ಹೇಳಿಕೆ ವೈರಲ್ ಆಗಿತ್ತು. حنیف عباسی کا انڈیا کو منہ توڑ جواب! 8لاکھ فوجیوں کی موجودگی میں پہلگام واقعہ کیسے ہوا؟ حنیف عباسی کی اہم ترین نیوز کانفرنس #DunyaNews #DunyaVideos #HanifAbbasi pic.twitter.com/vjYCvaKvv2 — Dunya News (@DunyaNews) April 26, 2025
ರಾಜಕೀಯ ವಾಕ್ಸಮರಕ್ಕೆ ಪರಸ್ಪರರ ಕುಟುಂಬಗಳನ್ನು ಎಳೆದು ತಂದ ಹಿಮಂತ ಬಿಸ್ವ ಶರ್ಮ ಮತ್ತು ಗೌರವ್ ಗೊಗೊಯಿ!
► ತಾವೂ ಕೂಡಾ ಮೂರು ಪ್ರಶ್ನೆಗಳನ್ನು ಕೇಳಿ ತಿರುಗೇಟು ನೀಡಿದ ಕಾಂಗ್ರೆಸ್ ಸಂಸದ ಗೌರವ್ ಗೊಗೊಯಿ ಗುವಾಹಟಿ: ಕಾಂಗ್ರೆಸ್ ಪಕ್ಷದ ಸಂಸದ ಹಾಗೂ ಲೋಕಸಭಾ ಉಪ ನಾಯಕ ಗೌರವ್ ಗೊಗೊಯಿ ಅವರ ಪತ್ನಿಗೆ ಪಾಕಿಸ್ತಾನದೊಂದಿಗೆ ಸಂಪರ್ಕವಿದೆ ಎಂದು ಆರೋಪಿಸಿ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮ ಮಾಡಿದ್ದ ಪೋಸ್ಟ್, ಅವರಿಬ್ಬರ ನಡುವಿನ ವಾಕ್ಸಮರಕ್ಕೆ ಕಾರಣವಾಗಿದೆ. ಈ ವಿಷಯದ ಚರ್ಚೆಯ ನಡುವೆ ಇಬ್ಬರೂ ನಾಯಕರು ಪರಸ್ಪರರ ಕುಟುಂಬಗಳನ್ನು ಎಳೆದು ತಂದಿದ್ದಾರೆ. ಎಕ್ಸ್ ನಲ್ಲಿ ಗೌರವ್ ಗೊಗೊಯಿಗೆ ಮೂರು ಪ್ರಶ್ನೆಗಳನ್ನು ಎಸೆಯುವ ಮೂಲಕ, ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮ ಈ ಕೆಸರೆರಚಾಟಕ್ಕೆ ಚಾಲನೆ ನೀಡಿದ್ದಾರೆ. ಅದಕ್ಕೆ ಪ್ರತಿಯಾಗಿ, ಗೌರವ್ ಗೊಗೊಯಿ ಕೂಡಾ ಅದೇ ವೇದಿಕೆಯಲ್ಲಿ ಹಿಮಂತ ಬಿಸ್ವ ಶರ್ಮಗೆ ಮೂರು ಪ್ರಶ್ನೆಗಳನ್ನು ಎಸೆಯುವ ಮೂಲಕ ತಿರುಗೇಟು ನೀಡಿದ್ದಾರೆ. ತಮ್ಮ ಪ್ರಥಮ ಪೋಸ್ಟ್ ನಲ್ಲಿ ಯಾರೊಬ್ಬರ ಹೆಸರನ್ನೂ ಉಲ್ಲೇಖಿಸದೆ, “ನೀವೇನಾದರೂ ಸತತ 15 ದಿನಗಳ ಕಾಲ ಪಾಕಿಸ್ತಾನದಲ್ಲಿ ಉಳಿದುಕೊಂಡಿದ್ದಿರಾ? ಹಾಗೂ ನಿಮ್ಮ ಪತ್ನಿಯೇನಾದರೂ ನೆರೆಯ ದೇಶವಾದ ಪಾಕಿಸ್ತಾನದ ಸರಕಾರೇತರ ಸಂಸ್ಥೆಯೊಂದರಿಂದ ವೇತನ ಸ್ವೀಕರಿಸುತ್ತಿದ್ದಾರೆಯೆ?” ಎಂದು ಕಾಂಗ್ರೆಸ್ ಸಂಸದ ಗೌರವ್ ಗೊಗೊಯಿ ಅವರನ್ನು ಪರೋಕ್ಷವಾಗಿ ಪ್ರಶ್ನಿಸಿದ್ದರು. “ಭಾರತದಲ್ಲಿ ನೆಲೆಸಿ, ಇಲ್ಲಿಯೇ ಕೆಲಸ ಮಾಡುತ್ತಿದ್ದರೂ, ಕಾಂಗ್ರೆಸ್ ಸಂಸದರ ಪತ್ನಿಯೇನಾದರೂ ಪಾಕಿಸ್ತಾನ ಮೂಲದ ಸರಕಾರೇತರ ಸಂಸ್ಥೆಯೊಂದರಿಂದ ವೇತನ ಸ್ವೀಕರಿಸುವುದನ್ನು ಮುಂದುವರಿಸಿದ್ದಾರೆಯೆ?” ಎಂದು ಅವರು ಮೂರನೆಯ ಪ್ರಶ್ನೆ ಕೇಳಿದ್ದರು. “ಹೌದಾಗಿದ್ದರೆ, ಪಾಕಿಸ್ತಾನ ಮೂಲದ ಸಂಸ್ಥೆಯೊಂದು ಭಾರತದಲ್ಲಿ ನಡೆಸಲಾಗುತ್ತಿರುವ ಚಟುವಟಿಕೆಗಳಿಗೆ ಯಾಕೆ ವೇತನ ಪಾವತಿಸುತ್ತಿದೆ ಎಂದು ನಾವು ಕೇಳಬಹುದೆ?” ಎಂದೂ ಅವರು ಪ್ರಶ್ನಿಸಿದ್ದರು. ಅಲ್ಲದೆ, ಸಂಸದ ಗೌರವ್ ಗೊಗೊಯಿ ಅವರ ಪತ್ನಿ ಹಾಗೂ ಇಬ್ಬರು ಮಕ್ಕಳ ಪೌರತ್ವದ ಸ್ಥಿತಿಯ ಕುರಿತೂ ಅವರು ಪ್ರಶ್ನಿಸಿದ್ದರು. “ಅವರು ಭಾರತೀಯ ನಾಗರಿಕರೆ ಅಥವಾ ಬೇರಾವುದಾದರೂ ದೇಶದ ನಾಗರಿಕತ್ವ ಹೊಂದಿದ್ದಾರೆಯೆ? ಇನ್ನೂ ಹಲವಾರು ಪ್ರಶ್ನೆಗಳು ಹಿಂಬಾಲಿಸಲಿವೆ” ಎಂದೂ ಅವರು ಎಚ್ಚರಿಕೆ ನೀಡಿದ್ದರು. ಹಿಮಂತ ಬಿಸ್ವ ಶರ್ಮರ ಈ ಪೋಸ್ಟ್ ಅನ್ನು ಹಂಚಿಕೊಂಡಿರುವ ಗೌರವ್ ಗೊಗೊಯಿ, ತಾವೂ ಕೂಡಾ ಮೂರು ಪ್ರಶ್ನೆುಗಳನ್ನು ಕೇಳುವ ಮೂಲಕ ಅವರಿಗೆ ತಿರುಗೇಟು ನೀಡಿದ್ದಾರೆ. “ಗೌರವಾನ್ವಿತ ಅಸ್ಸಾಂ ಮುಖ್ಯಮಂತ್ರಿಗಳಿಗೆ ಮೂರು ಪ್ರಶ್ನೆಗಳು: 1) ನಾನು ಹಾಗೂ ನನ್ನ ಪತ್ನಿ ಯಾವುದೇ ಶತ್ರು ದೇಶದ ಏಜೆಂಟ್ ಗಳು ಎಂಬ ನಿಮ್ಮ ಆರೋಪಗಳನ್ನು ಸಾಬೀತು ಮಾಡಲು ನೀವು ವಿಫಲರಾದರೆ, ಅದಕ್ಕಾಗಿ ರಾಜೀನಾಮೆ ಸಲ್ಲಿಸುತ್ತೀರಾ? 2) ನೀವು ನಿಮ್ಮ ಸ್ವಂತ ಮಕ್ಕಳು ಹಾಗೂ ಪತ್ನಿಯ ಕುರಿತ ಪ್ರಶ್ನೆಗಳನ್ನೂ ಸ್ವೀಕರಿಸುತ್ತೀರಾ? 3) ಅಸ್ಸಾಂ ಬೆಟ್ಟಗಳನ್ನು ಅಗೆದು ಹಾಳು ಮಾಡುತ್ತಾ, ಕೋಟ್ಯಂತರ ರೂಪಾಯಿ ಅಘೋಷಿತ ಹಣವನ್ನು ಗಳಿಸುತ್ತಿರುವ ಕಲ್ಲಿದ್ದಲು ಮಾಫಿಯಾಗೆ ಸಂಬಂಧಿಸಿದ ವ್ಯಕ್ತಿಗಳನ್ನು ರಾಜ್ಯ ಪೊಲೀಸರು ಬಂಧಿಸುತ್ತಾರೆಯೆ?” ಎಂದು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. ಇದಕ್ಕೂ ಮುನ್ನ, ಶನಿವಾರದಂದು ಈ ಕುರಿತು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದ ಗೌರವ್ ಗೊಗೊಯಿ, “ಮೇಘಾಲಯದಲ್ಲಿ ಲಂಗುಲಗಾಮಿಲ್ಲದೆ ರ್ಯಾಟ್ ಹೋಲ್ ಗಣಿಗಾರಿಕೆಯನ್ನು ನಡೆಸಲಾಗುತ್ತಿದ್ದು, ಎರಡೂ ರಾಜ್ಯಗಳಿಗೆ ಸೇರಿದ ಜನರ ಸಿಂಡಿಕೇಟ್ ಒಂದು ಅಕ್ರಮ ಕಲ್ಲಿದ್ದಲು ಹೊತ್ತ ಟ್ರಕ್ ಗಳು ಮೇಘಾಲಯದ ಗಡಿಗಳನ್ನು ದಾಟಿ, ಅಸ್ಸಾಂ ಪ್ರವೇಶಿಸುವುದನ್ನು ಖಾತರಿಪಡಿಸುತ್ತಿವೆ ಎಂಬ ಸಂಗತಿ ಜಾರಿ ನಿರ್ದೇಶನಾಲಯದ ಶೋಧನೆಯಲ್ಲಿ ಪತ್ತೆಯಾಗಿದೆ” ಎಂದು ಆರೋಪಿಸಿದ್ದರು. ಈ ಆರೋಪಕ್ಕೆ ಸಂಬಂಧಿಸಿದಂತೆಯೆ ಅವರು ಮೇಲಿನ ಮೂರನೆಯ ಪ್ರಶ್ನೆ ಕೇಳಿದ್ದಾರೆ. ⸻ Questions for the Hon’ble Member of Parliament from the Congress Party: 1.Did you visit Pakistan for a continuous period of 15 days? If so, could you kindly clarify the purpose of your visit? https://t.co/a83u47Zq6L it true that your wife continues to receive a salary from a… — Himanta Biswa Sarma (@himantabiswa) April 27, 2025 ಈ ಮೂರು ಪ್ರಶ್ನೆೆಗಳೊಂದಿಗೆ, “ವಿಶೇಷ ತನಿಖಾ ತಂಡದ ವರದಿ ಸಲ್ಲಿಕೆಯಾಗುವುದನ್ನು ಕಾಯುತ್ತಿದ್ದೇನೆ” ಎಂದೂ ಗೌರವ್ ಗೊಗೊಯಿ ತಮ್ಮ ಪೋಸ್ಟ್ ನಲ್ಲಿ ಹೇಳಿದ್ದಾರೆ. ಆದರೆ, ತಾನು ಯಾವ ತನಿಖೆಯ ಬಗ್ಗೆ ಉಲ್ಲೇಖಿಸುತ್ತಿದ್ದೇನೆ ಎಂಬುದರ ಕುರಿತು ಅವರು ಸ್ಪಷ್ಟನೆ ನೀಡಿರಲಿಲ್ಲ. ಆದರೆ, ಗೌರವ್ ಗೊಗೊಯಿ ಅವರ ಬ್ರಿಟಿಷ್ ಪತ್ನಿ ಎಲಿಝಬೆತ್ ಕೋಲ್ಬರ್ನ್ ಅವರೊಂದಿಗೆ ಸಂಪರ್ಕ ಹೊಂದಿರುವ ಪಾಕಿಸ್ತಾನದ ಪ್ರಜೆ ಅಲಿ ತೌಕೀರ್ ಶೇಖ್ ಎಂಬ ವ್ಯಕ್ತಿ ಭಾರತದಲ್ಲಿನ ಆಂತರಿಕ ವ್ಯವಹಾರಗಳಲ್ಲಿ ಹಸ್ತಕ್ಷೇಪ ನಡೆಸುತ್ತಿದ್ದಾನೆ ಎಂಬ ಆರೋಪಗಳ ಕುರಿತು ತನಿಖೆ ನಡೆಸಲು ಅಸ್ಸಾಂ ಸರಕಾರ ಫೆಬ್ರವರಿ ತಿಂಗಳಲ್ಲಿ ವಿಶೇಷ ತನಿಖಾ ತಂಡವನ್ನು ರಚಿಸಿತ್ತು. ಗೌರವ್ ಗೊಗೊಯಿ ಅವರು ಈ ಪೋಸ್ಟ್ ಗೆ ಪ್ರತಿಕ್ರಿಯಿಸಿರುವ ಹಿಮಂತ ಬಿಸ್ವ ಶರ್ಮ, ನನಗಾಗಲಿ ಅಥವಾ ನನ್ನ ಕುಟುಂಬಕ್ಕಾಗಲಿ ಪಾಕಿಸ್ತಾನದೊಂದಿಗೆ ಯಾವುದೇ ಸಂಪರ್ಕವಿಲ್ಲ ಹಾಗೂ ನೆರೆಯ ದೇಶದೊಂದಿಗೆ ಕಾಂಗ್ರೆಸ್ ಸಂಸದರು ಹೊಂದಿರುವ ಸಂಪರ್ಕದ ಕುರಿತು ಸಾರ್ವಜನಿಕ ತಾಣದಲ್ಲಿ ಸೂಕ್ತ ಮಾಹಿತಿಗಳನ್ನು ಹಂಚಿಕೊಳ್ಳುವ ಮೂಲಕ, ಅದನ್ನು ಬಯಲುಗೊಳಿಸಲಾಗುವುದು ಎಂದು ಬೆದರಿಕೆ ಒಡ್ಡಿದ್ದಾರೆ. “ನಾನಾಗಲಿ, ನನ್ನ ಪುತ್ರ ಮತ್ತು ಪುತ್ರಿಯಾಗಲಿ ಯಾವತ್ತೂ ಪಾಕಿಸ್ತಾನಕ್ಕೆ ಭೇಟಿ ನೀಡಿಲ್ಲ ಎಂದು ಸ್ಪಷ್ಟಪಡಿಸುತ್ತೇನೆ. ಮುಂದುವರಿದು, ಪಾಕಿಸ್ತಾನದಿಂದ ವೇತನ ಅಥವಾ ಹಣಕಾಸು ನೆರವು ಪಡೆಯುವುದನ್ನು ನನ್ನ ಪತ್ನಿ ಹಾಗೂ ನನ್ನ ಇಡೀ ಕುಟುಂಬ ಎಂದೂ ಬಯಸುವುದಿಲ್ಲ” ಎಂದು ಅವರು ಛೇಡಿಸಿದ್ದಾರೆ. Questions for the Hon’ble Chief Minister of Assam 1) Will you resign if you fail to prove your allegations of me and my wife being agents of an enemy country ? 2) Will you take questions on your own children and wife ? 3) Will the state police arrest those linked to coal mafia… https://t.co/KEhs4h9M1R — Gaurav Gogoi (@GauravGogoiAsm) April 27, 2025 ನನ್ನ ಪತಿ, ನನ್ನ ಪುತ್ರ ಹಾಗೂ ಪುತ್ರಿ ಸೇರಿದಂತೆ ನನ್ನ ಕುಟುಂಬದ ಸದಸ್ಯರೆಲ್ಲರೂ ಭಾರತೀಯ ನಾಗರಿಕರಾಗಿದ್ದು, ನನ್ನ ಯಾವ ಮಕ್ಕಳೂ ಭಾರತೀಯ ನಾಗರಿಕತ್ವವನ್ನು ಶರಣಾಗಿಸಿಲ್ಲ ಅಥವಾ ತ್ಯಜಿಸಿಲ್ಲ ಎಂದೂ ಘೋಷಿಸಿದ್ದಾರೆ. ಈ ಕುರಿತು ಕಾಂಗ್ರೆಸ್ ಸಂಸದ ಹಾಗೂ ಲೋಕಸಭೆಯಲ್ಲಿ ಕಾಂಗ್ರೆಸ್ ಪಕ್ಷದ ಉಪ ನಾಯಕರಾಗಿರುವ ಗೌರವ್ ಗೊಗೊಯಿ ಅವರ ಪ್ರತಿಕ್ರಿಯೆಯನ್ನು ಕೋರಿರುವ ಹಿಮಂತ ಬಿಸ್ವ ಶರ್ಮ, “ಸಂಬಂಧಿಸಿದ ಲೋಕಸಭಾ ಸಂಸದ ಹಾಗೂ ಅವರು ಪಾಕಿಸ್ತಾನದೊಂದಿಗೆ ಹೊಂದಿರುವ ಸಂಪರ್ಕಗಳ ಸೂಕ್ತ ಮಾಹಿತಿಗಳನ್ನು ಸಾರ್ವಜನಿಕ ತಾಣಗಳಲ್ಲಿ ಪ್ರಕಟಿಸುವ ಮೂಲಕ ಬಯಲುಗೊಳಿಸಲಾಗುವುದು. ಸೆಪ್ಟೆಂಬರ್ 10, 2025ರವರೆಗೆ ಕಾಯಿರಿ” ಎಂದು ಅವರು ಮತ್ತೊಮ್ಮೆ ಎಚ್ಚರಿಸಿದ್ದಾರೆ. ಈ ಪೋಸ್ಟ್ ಗೆ ಮತ್ತೊಮ್ಮೆ ತಿರುಗೇಟು ನೀಡಿರುವ ಗೌರವ್ ಗೊಗೊಯಿ, “ನನ್ನ ಯಾವುದೇ ಪ್ರಶ್ನೆಗಳಿಗೂ ಉತ್ತರ ನೀಡಿಲ್ಲ” ಎಂದು ವ್ಯಂಗ್ಯವಾಡಿದ್ದು, ತಮ್ಮ ಹಿಂದಿನ ಮೂರು ಪ್ರಶ್ನೆಗಳನ್ನು ಮತ್ತೆ ಪುನರಾವರ್ತಿಸಿದ್ದಾರೆ. ತಮ್ಮ ಮೂರು ಪ್ರಶ್ನೆತಗಳ ಕೊನೆಯಲ್ಲಿ, “2026ರವರೆಗೂ ಕಾಯಿರಿ” ಎಂದು ಹೇಳುವ ಮೂಲಕ, ಮುಂದಿನ ವರ್ಷ ನಡೆಯಲಿರುವ ಅಸ್ಸಾಂ ವಿಧಾನಸಭಾ ಚುನಾವಣೆಯತ್ತ ಬೊಟ್ಟು ಮಾಡಿದ್ದಾರೆ.
ಪುತ್ತೂರು: ಮಹಿಳಾ ಪೊಲೀಸ್ ಠಾಣೆ ಬಳಿ ಮುಖ್ಯರಸ್ತೆಯ ಮಧ್ಯದಲ್ಲಿ ಕುಳಿತು ಪ್ರತಿಭಟನೆ
ಪುತ್ತೂರು: ಪುತ್ತೂರು ಸರಕಾರಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿಯ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪಿಯನ್ನು ಬಂಧಿಸುವಂತೆ ಒತ್ತಾಯಿಸಿ ಎ.26ರಂದು ಬೆಳಗ್ಗೆ ಪುತ್ತೂರು ಮಹಿಳಾ ಪೊಲೀಸ್ ಠಾಣೆಯ ಬಳಿ ಮುಖ್ಯರಸ್ತೆಯ ಮಧ್ಯದಲ್ಲಿ ಕುಳಿತು ಸುಗಮ ಸಂಚಾರಕ್ಕೆ ಮತ್ತು ಇತರ ವೈದ್ಯಕೀಯ ತುರ್ತು ಸೇವೆಗೆ ಅಡ್ಡಿ ಸಹಿತ ಪೊಲೀಸರ ಕರ್ತವ್ಯಕ್ಕೂ ಅಡ್ಡಿಪಡಿಸಿರುವ ಆರೋಪದಲ್ಲಿ ಪ್ರತಿಭಟನಾಕಾರರ ವಿರುದ್ಧ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಎ.25ರಂದು ಪುತ್ತೂರು ಸರಕಾರಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ಅಶಾಜ್ಯೋತಿ ಪುತ್ತೂರಾಯ ಅವರ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ ಎಂದು ನೀಡಿದ ದೂರಿನಂತೆ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆದರೆ ಪ್ರಕರಣದಲ್ಲಿ ಆರೋಪಿಯನ್ನು ಬಂಧಿಸಿಲ್ಲ ಎಂಬ ಕಾರಣವನ್ನು ಮುಂದಿಟ್ಟು ಎ.26ರಂದು ಪುತ್ತೂರಿನ ಮಹಿಳಾ ಪೊಲೀಸ್ ಠಾಣೆಯ ಮುಂಭಾಗ ವೈದ್ಯರ ಸಂಘ, ಬಿಜೆಪಿ ಮತ್ತು ಸಂಘ ಪರಿವಾರ ಸಂಘಟನೆಯ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದರು. ಪ್ರತಿಭಟನಾಕಾರರು ಮಹಿಳಾ ಪೊಲೀಸ್ ಠಾಣೆಯ ಮುಂಭಾಗದಿಂದ ಬೊಳುವಾರು- ದರ್ಬೆ ಮುಖ್ಯ ರಸ್ತೆಗೆ ಏಕಾಏಕಿ ಬಂದು ರಸ್ತೆಯ ಮಧ್ಯದಲ್ಲಿ ಕುಳಿತು ಸಾರ್ವಜನಿಕರ ಸುಗಮ ಸಂಚಾರಕ್ಕೆ ಹಾಗೂ ಇತರ ವೈದ್ಯಕೀಯ ತುರ್ತು ಸೇವೆಗೆ ಅಡ್ಡಿಪಡಿಸಿದ್ದಲ್ಲದೇ, ರಸ್ತೆಯಲ್ಲಿ ಕುಳಿತು ಪೊಲೀಸರಿಗೆ ದಿಕ್ಕಾರ ಘೋಷಣೆ ಕೂಗಿರುತ್ತಾರೆ. ಈ ಸಂದರ್ಭ ಇಲಾಖಾ ಅಧಿಕಾರಿಗಳು ರಸ್ತೆ ತಡೆಯಬೇಡಿ. ಆರೋಪಿಗಳನ್ನು ದಸ್ತಗಿರಿ ಮಾಡಿ ಸೂಕ್ತ ಕಾನೂನು ಕ್ರಮ ಜರುಗಿಸುವುದಾಗಿ ಭರವಸೆ ನೀಡಿದರೂ ಕೂಡ ಪೊಲೀಸರ ಮಾತನ್ನು ಕೇಳದ ಪ್ರತಿಭಟನಕಾರರು ಸಾರ್ವಜನಿಕ ಸುಗಮ ಸಂಚಾರಕ್ಕೆ ಅಡ್ಡಿಪಡಿಸಿ ಅಂದಾಜು ಒಂದು ಗಂಟೆಗಳ ಕಾಲ ರಸ್ತೆಯನ್ನು ತಡೆದು ಸಾರ್ವಜನಿಕರ ಸಂಚಾರಕ್ಕೆ ತೊಂದರೆ ಉಂಟು ಮಾಡಿದ್ದಾರೆ. ಅಲ್ಲದೆ ಪೊಲೀಸರ ಕರ್ತವ್ಯಕ್ಕೆಅಡ್ಡಿಪಡಿಸಿರುವ ಆರೋಪದ ಮೇಲೆ ಪ್ರತಿಭಟನಾಕಾರರ ವಿರುದ್ಧ ಪ್ರಕರಣ ದಾಖಲಾಗಿದೆ.
ಶಾಂತಿಗೆ ಆದ್ಯತೆಯನ್ನು ದೌರ್ಬಲ್ಯವೆಂದು ಪರಿಗಣಿಸಬಾರದು: ಪಾಕ್ ಪ್ರಧಾನಿ
ಇಸ್ಲಾಮಾಬಾದ್: ತಮ್ಮ ದೇಶವು ಯಾವತ್ತೂ ಶಾಂತಿಗೆ ಆದ್ಯತೆ ನೀಡುತ್ತದೆ. ಆದರೆ ಇದನ್ನು ದೌರ್ಬಲ್ಯವೆಂದು ಪರಿಗಣಿಸಬಾರದು ಎಂದು ಪಾಕಿಸ್ತಾನದ ಪ್ರಧಾನಿ ಶಹಬಾಝ್ ಷರೀಫ್ ಹೇಳಿದ್ದಾರೆ. ಪಾಕಿಸ್ತಾನದ ಪಡೆಗಳು ತಾಯ್ನಾಡಿನ ಪ್ರತೀ ಇಂಚನ್ನೂ ರಕ್ಷಿಸಲು ಸನ್ನದ್ಧವಾಗಿವೆ. ಸ್ವ-ನಿರ್ಣಯದ ಹಕ್ಕಿಗಾಗಿ ಕಾಶ್ಮೀರದ ಜನತೆ ನಡೆಸುತ್ತಿರುವ ಹೋರಾಟಕ್ಕೆ ಪಾಕಿಸ್ತಾನದ ಬೆಂಬಲ ಮುಂದುವರಿಯಲಿದೆ ಎಂದು ಷರೀಫ್ ಹೇಳಿರುವುದಾಗಿ ವರದಿಯಾಗಿದೆ. ಪಹಲ್ಗಾಮ್ ದಾಳಿಯ ಬಗ್ಗೆ ತಟಸ್ಥ ತನಿಖೆ ನಡೆಸಬೇಕೆಂದು ಆಗ್ರಹಿಸಿರುವ ಪಾಕ್ ಪ್ರಧಾನಿ, ತಟಸ್ಥ, ಪಾರದರ್ಶಕ ತನಿಖೆಯನ್ನು ತಮ್ಮ ದೇಶ ಸದಾ ಬೆಂಬಲಿಸುತ್ತದೆ ಎಂದಿದ್ದಾರೆ.
RR Vs GT - ಅಗ್ರಸ್ಥಾನಿ ಗುಜರಾತ್ ಟೈಟಾನ್ಸ್ಗೆ ರಾಜಸ್ಥಾನ ರಾಯಲ್ಸ್ ಸವಾಲು: ಜೈಪುರ ಪಿಚ್ ಯಾರಿಗೆ ಸಹಕಾರಿ?
ಜೈಪುರದಲ್ಲಿ ಸೋಮವಾರ ನಡೆಯಲಿರುವ ಪಂದ್ಯದಲ್ಲಿ ಯಶಸ್ಸಿನ ಅಲೆಯಲ್ಲಿ ತೇಲುತ್ತಿರುವ ಗುಜರಾತ್ ಟೈಟಾನ್ಸ್ ಮತ್ತು ಸೋಲಿನ ಸುಳಿಯಿಂದ ಹೊರಬರಲು ಒದ್ದಾಡುತ್ತಿರುವ ರಾಜಸ್ಥಾನ ರಾಯಲ್ಸ್ ತಂಡಗಳು ಮುಖಾಮುಖಿಯಾಗಲಿದೆ. ಅಂಕಪಟ್ಟಿಯಲ್ಲಿ ಅಗ್ರಸ್ಥಾನಿಯಾಗಿರುವ ಗುಜರಾತ್ ತಂಡ ಇನ್ನೆರಡು ಪುಂದ್ಯ ಗೆದ್ದಲ್ಲಿ ಪ್ಲೇಆಫ್ ನಲ್ಲಿ ಸ್ಥಾನ ಖಚಿತ ಪಡಿಸಿಕೊಳ್ಳಲಿದೆ. ಇದೇವೇಳೆ ರಾಜಸ್ಥಾನ ರಾಯಲ್ಸ್ ಆಡಿರುವ 9 ಪಂದ್ಯಗಳಲ್ಲಿ 7 ಪಂದ್ಯಗಳನ್ನು ಸೋತು ಟೂರ್ನಿಯಿಂದ ಹೊರಬಿದ್ದಿದೆ.ಉಭಯ ತಂಡಗಳು ಈ ಹಿಂದೆ 7 ಬಾರಿ ಮುಖಾಮುಖಿಯಾಗಿದ್ದು, ಗುಜರಾತ್ 6 ಬಾರಿ ಜಯಭೇರಿ ಬಾರಿಸಿದೆ. ಜೈಪುರ ಪಿಚ್ ನಲ್ಲಿ ಟಾಸ್ ಗೆದ್ದ ತಂಡ ಬೌಲಿಂಗ್ ಆಯ್ಕೆ ಮಾಡಿಕೊಳ್ಳುವ ಸಾಧ್ಯತೆ ಜಾಸ್ತಿ ಇದೆ.
ಮಂಗಳೂರು: ಕರ್ನಾಟಕದಲ್ಲಿ ಸಿಇಟಿ ಪರೀಕ್ಷೆಯ ವೇಳೆ ಜನಿವಾರ ಕಳಚುವಂತೆ ಪರೀಕ್ಷಾ ಕೇಂದ್ರಗಳಲ್ಲಿ ಹೇಳಿದ್ದರಿಂದ ಉಂಟಾಗಿದ್ದ ವಿವಾದದ ಕಿಡಿ ಆರುವ ಮುನ್ನವೇ, ರೈಲ್ವೆ ನೇಮಕಾತಿ ಮಂಡಳಿಯು ಇಲಾಖೆಯ ನರ್ಸಿಂಗ್ ಸೂಪರಿಂಟೆಂಡೆಂಟ್ ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳಿಗೆ ಹೊರಡಿಸಿರುವ ಮಾರ್ಗಸೂಚಿಯು ಸಂಘ ಪರಿವಾರದ ಕೆಂಗಣ್ಣಿಗೆ ಗುರಿಯಾಗಿದೆ. ರೈಲ್ವೆ ನೇಮಕಾತಿ ಮಂಡಳಿಯು ನರ್ಸಿಂಗ್ ಸೂಪರಿಂಟೆಂಡೆಂಟ್ ಪರೀಕ್ಷೆಯನ್ನು ಎ. 29ರಂದು ಹಮ್ಮಿಕೊಂಡಿದೆ. ಈ ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳು ಪರೀಕ್ಷಾ ಕೊಠಡಿಗೆ ತೆರಳುವಾಗ ಧಾರ್ಮಿಕ ಸಂಕೇತಗಳಾದ ಮಂಗಳಸೂತ್ರ, ಜನಿವಾರ ಮೊದಲಾವುಗಳನ್ನು ಧರಿಸುವಂತಿಲ್ಲ ಎಂದು ಪರೀಕ್ಷೆ ಪ್ರವೇಶಪತ್ರದಲ್ಲಿ ಉಲ್ಲೇಖಿಸಿರುವ ಮಾರ್ಗಸೂಚಿಯಲ್ಲಿ ಸೂಚನೆ ನೀಡಲಾಗಿದೆ. ಈ ಕುರಿತು ಸಾಮಾಜಿಕ ಜಾಲತಾಣ ಫೇಸ್ಬುಕ್ ನಲ್ಲಿ ಪೋಸ್ಟ್ ಮಾಡಿರುವ ವಿಶ್ವ ಹಿಂದೂ ಪರಿಷತ್ ಮುಖಂಡ ಶರಣ್ ಪಂಪ್ವೆಲ್, ರೈಲ್ವೇ ಇಲಾಖೆಯ ನರ್ಸಿಂಗ್ ಸುಪರಿಂಟೆಂಡೆಂಟ್ ಹುದ್ದೆಗೆ ಎ. 28, 29, 30 2025 ರಂದು ಬೆಸೆಂಟ್ ವಿದ್ಯಾಕೇಂದ್ರದಲ್ಲಿ ಪರೀಕ್ಷೆ ನಡೆಯಲಿದ್ದು, ಆ ಪರೀಕ್ಷೆ ಬರೆಯಬೇಕಾದರೆ ಹಿಂದೂಗಳು ಅವರ ಧಾರ್ಮಿಕ ಸಂಪ್ರದಾಯಗಳಾದ ಮಂಗಳಸೂತ್ರ, ಜನಿವಾರ ಗಳನ್ನೂ ತೆಗೆದು ಪರೀಕ್ಷೆ ಬರೆಯುವಂತೆ ಪ್ರವೇಶ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಈ ರೀತಿಯ ಧಾರ್ಮಿಕ ವಿರೋಧಿ ಧೋರಣೆ ಸಹಿಸಲು ಅಸಾಧ್ಯ, ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಾನ್ಯ ಜಿಲ್ಲಾಧಿಕಾರಿಗಳೇ, ಸಂಸದರೇ ಇಂತಹ ಆದೇಶವನ್ನು ಕೈಬಿಟ್ಟು ನಡೆಯಲಿರುವ ಪರೀಕ್ಷೆಯಲ್ಲಿ ಹಿಂದೂಗಳ ಭಾವನೆಗೆ ಧಕ್ಕೆ ಬಾರದ ರೀತಿಯಲ್ಲಿ ಪರೀಕ್ಷಾರ್ಥಿಗಳಿಗೆ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಡಿ, ಎಂದು ಶರಣ್ ಪಂಪ್ವೆಲ್ ಆಗ್ರಹಿಸಿದ್ದಾರೆ. ಶರಣ್ ಪಂಪ್ ವೆಲ್ ಅವರು ತಮ್ಮ ಪೋಸ್ಟ್ ಅನ್ನು ಜಿಲ್ಲಾಧಿಕಾರಿಗಳಿಗೆ, ಸಂಸದರಿಗೆ ಟ್ಯಾಗ್ ಮಾಡಿದ್ದಾರೆ. ‘ರೈಲ್ವೆ ನೇಮಕಾತಿ ಪರೀಕ್ಷೆ ಬರೆಯಬೇಕಾದರೆ ಹಿಂದೂಗಳು ಅವರ ಧಾರ್ಮಿಕ ಚಿಹ್ನೆಗಳಾದ ಮಂಗಳಸೂತ್ರ, ಜನಿವಾರ ಗಳನ್ನೂ ತೆಗೆಯಬೇಕೆಂದು ಸೂಚನೆ ನೀಡಿರುವುದು ಸರಿಯಲ್ಲ. ರಾಜ್ಯದಲ್ಲಿ ಇತ್ತೀಚಿಗೆ ನಡೆದ ಸಿಇಟಿ ಪರೀಕ್ಷೆ ಬರೆಯುವ ಹಿಂದೂ ಅಭ್ಯರ್ಥಿಗಳ ಜನಿವಾರವನ್ನು ಕಿತ್ತು ಹಾಕಿದ ಪ್ರಕರಣದಿಂದ ಹಿಂದೂಗಳ ಭಾವನೆಗೆ ಧಕ್ಕೆಯಾಗಿದೆ. ಇದು ಇಡೀ ದೇಶದ ಹಿಂದೂಗಳ ಆಕ್ರೋಶಕ್ಕೆ ಕಾರಣವಾಗಿತ್ತು. ಹೆಣ್ಣುಮಕ್ಕಳು ತಾಳಿ ಸರ ಕಳಚುವಂತೆ, ಸಿಂಧೂರ ಅಳಿಸುವಂತೆ ಮಾಡುವುದು, ಪವಿತ್ರ ಜನಿವಾರವನ್ನು ಕಿತ್ತುಹಾಕುವಂತೆ ಹೇಳುವುದರಿಂದ ಕೋಟ್ಯಂತರ ಹಿಂದೂಗಳ ಧಾರ್ಮಿಕ ಭಾವನೆಗೆ ನೋವುಂಟಾಗುತ್ತದೆ. ಹಿಂದೂ ಧಾರ್ಮಿಕ ಭಾವನೆಗೆ ಧಕ್ಕೆಯಾಗದ ರೀತಿಯಲ್ಲಿ ಪರೀಕ್ಷೆ ಬರೆಯಲು ಅವಕಾಶ ನೀಡುವಂತೆ ಕ್ರಮಕೈಗೊಳ್ಳಬೇಕು ಎಂದು ವಿಶ್ವ ಹಿಂದೂ ಪರಿಷತ್ ನ ಪ್ರಚಾರ ಪ್ರಮುಖ್ ಪ್ರದೀಪ್ ಸರಿಪಲ್ಲ ತಿಳಿಸಿದ್ದಾರೆ.
ಸ್ಪಷ್ಟ ಮಿಲಿಟರಿ ಕಾರ್ಯಾಚರಣೆ ಅನಿವಾರ್ಯ: ತರೂರ್
ತಿರುವನಂತಪುರ: ಜಮ್ಮುಕಾಶ್ಮೀರದಲ್ಲಿ 26 ಜನರ ಮಾರಣಹೋಮದ ಬಳಿಕ ಉಭಯ ದೇಶಗಳ ನಡುವೆ ಉದ್ನಿಗ್ನತೆಗಳು ಹೆಚ್ಚುತ್ತಿರುವಂತೆ ಕಾಂಗ್ರೆಸ್ ಸಂಸದ ಶಶಿ ತರೂರ್ ಅವರು, ಪಹಲ್ಗಾಮ್ ದಾಳಿಯ ಬಳಿಕ ದೇಶವು ಪಾಕಿಸ್ತಾನದ ವಿರುದ್ಧ ಮಿಲಿಟರಿ ಕ್ರಮಕ್ಕಾಗಿ ಒತ್ತಾಯಿಸುತ್ತಿದೆ ಮತ್ತು ಆ ದೇಶದ ವಿರುದ್ಧ ಏನಾದರೂ ಸ್ಪಷ್ಟ ಸೇನಾ ಕಾರ್ಯಾಚರಣೆಯು ಅನಿವಾರ್ಯವಾಗಿದೆ ಎಂದು ರವಿವಾರ ಇಲ್ಲಿ ಹೇಳಿದರು. ಪಾಕಿಸ್ತಾನವು ಗಡಿಯಾಚೆ ಜನರನ್ನು ಪ್ರಚೋದಿಸುತ್ತದೆ, ಭಯೋತ್ಪಾದಕರಿಗೆ ತರಬೇತಿ ಮತ್ತು ಶಸ್ತ್ರಾಸ್ತ್ರಗಳನ್ನು ಒದಗಿಸುತ್ತಿದೆ,ಗಡಿಯಾಚೆಯಿಂದ ಮಾರ್ಗದರ್ಶನ ನೀಡುತ್ತಿದೆ. ಆದರೂ ಭಾರತದಲ್ಲಿ ಭಯೋತ್ಪಾದಕ ದಾಳಿಗಳ ಹೊಣೆಗಾರಿಕೆಯನ್ನು ಯಾವಾಗಲೂ ನಿರಾಕರಿಸುತ್ತಲೇ ಬಂದಿದೆ. ಕಳೆದ ಕಾಲು ಶತಮಾನಕ್ಕೂ ಅಧಿಕ ಸಮಯದಿಂದಲೂ ಇದು ಅದರ ತಂತ್ರವಾಗಿದೆ. ಅಂತಿಮವಾಗಿ ವಿದೇಶಿ ಗುಪ್ತಚರ ಸಂಸ್ಥೆಗಳಿಂದಲೂ ಸೇರಿದಂತೆ ಅದರ ಹೊಣೆಗಾರಿಕೆಯು ಸಾಬೀತಾಗುತ್ತಿದೆ ಎಂದು ತರೂರ್ ಹೇಳಿದರು. 2016ರ ಉಡಿ ದಾಳಿಗಳು ಮತ್ತು 2019ರ ಪುಲ್ವಾಮಾ ದಾಳಿಯ ಬಳಿಕ ಭಾರತವು ಪ್ರತೀಕಾರ ಕ್ರಮಗಳನ್ನು ತೆಗೆದುಕೊಂಡಿತ್ತು ಎಂದು ಬೆಟ್ಟು ಮಾಡಿದ ತರೂರ್,ಪಾಕಿಸ್ಥಾನವು ಈ ಬಾರಿ ಭಾರತದಿಂದ ಹೆಚ್ಚು ಕಠಿಣ ಪ್ರತಿಕ್ರಿಯೆಯನ್ನು ಎದುರಿಸಬಹುದು ಎಂದರು. ಭಾರತದಿಂದ ಸಿಂಧು ಜಲ ಒಪ್ಪಂದ ಅಮಾನತು ಕುರಿತು ಪಾಕಿಸ್ತಾನ ಪೀಪಲ್ಸ್ ಪಾರ್ಟಿಯ ಮುಖ್ಯಸ್ಥ ಬಿಲಾವಲ್ ಭುಟ್ಟೋ ಅವರ,‘ನದಿಗಳಲ್ಲಿ ರಕ್ತ ಹರಿಯಲಿದೆ’ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿದ ತರೂರ್,‘ಅದು ಕೇವಲ ಉದ್ರೇಕದ ಮಾತು. ರಕ್ತ ಹರಿಯುವುದಾದರೆ ನಮಗಿಂತ ಅವರ ಕಡೆಯಿಂದ ಹೆಚ್ಚು ಹರಿಯುತ್ತದೆ ’ ಎಂದು ಹೇಳಿದರು.
ಭಯೋತ್ಪಾದಕರ ವಿರುದ್ಧ ಮುಂದುವರೆದ ಸಮರ; ಮತ್ತೆ ಮೂವರು ಶಂಕಿತ ಉಗ್ರರ ಮನೆ ಧ್ವಂಸ
ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಭದ್ರತಾ ಪಡೆಗಳು ಭಯೋತ್ಪಾದಕರಿಗೆ ಸಹಾಯ ಮಾಡುವವರ ವಿರುದ್ಧ ದಾಳಿಯನ್ನು ಮುಂದುವರೆಸಿದೆ. ಜಮ್ಮು ಮತ್ತು ಕಾಶ್ಮೀರದ ಬಂಡಿಪೋರಾ, ಪುಲ್ವಾಮಾ ಮತ್ತು ಶೋಪಿಯಾನ್ ಜಿಲ್ಲೆಗಳಲ್ಲಿ ಮೂವರು ಸಕ್ರಿಯ ಭಯೋತ್ಪಾದಕರ ಮನೆಗಳನ್ನು ಧ್ವಂಸಗೊಳಿಸಲಾಗಿದೆ. ಏಪ್ರಿಲ್ 22 ರಂದು ಬೈಸರನ್ನಲ್ಲಿ ನಡೆದ ದಾಳಿಯ ನಂತರ ಇಲ್ಲಿಯವರೆಗೆ ಶಂಕಿತ ಭಯೋತ್ಪಾದಕರು ಮತ್ತು ಭಯೋತ್ಪಾದಕ ಸಂಘಟನೆಗಳ ಕಾರ್ಯಕರ್ತರ ಒಂಬತ್ತು ಮನೆಗಳನ್ನು
ಮಂಗಳೂರು ನಗರದಲ್ಲಿ ಗುಡುಗು ಸಹಿತ ಮಳೆ
ಮಂಗಳೂರು : ನಗರದಲ್ಲಿ ರವಿವಾರ ರಾತ್ರಿ ಗುಡುಗು ಸಹಿತ ಮಳೆ ಸುರಿದಿದೆ. ಹಗಲು ಬಿಸಿಲು ಇತ್ತು. ಸಂಜೆ ಹೊತ್ತಿಗೆ ಮಳೆ ಸುರಿದಿದೆ. ದ.ಕ ಜಿಲ್ಲೆಯ ಅಲ್ಲಲ್ಲಿ ಮಳೆ ಸುರಿದ ಬಗ್ಗೆ ವರದಿಯಾಗಿದೆ. ಮಳೆಯೊಂದಿಗೆ ವಾತಾವರಣ ತಂಪಾಗಿದೆ. ಬಿಸಿ ವಾತಾವರಣ ನಿವಾರಣೆಯಾಗಿದೆ. ಕೆಲವು ದಿನಗಳಿಂದ ಜಿಲ್ಲೆಯ ಹಲವು ಕಡೆಗಳಲ್ಲಿ ಆಗಾಗ ಮಳೆ ಕಾಣಿಸಿಕೊಳ್ಳುತ್ತಿದೆ.
ಪಹಲ್ಗಾಮ್ ದಾಳಿಯ ಪಾತಕಿಗಳಿಗಾಗಿ ತೀವ್ರಗೊಂಡ ಶೋಧ
ಹೊಸದಿಲ್ಲಿ: 26 ಜೀವಗಳನ್ನು ಬಲಿ ತೆಗೆದುಕೊಂಡ ಪಹಲ್ಗಾಮ್ ಭಯೋತ್ಪಾದಕ ದಾಳಿಯ ಹಿನ್ನೆಲೆಯಲ್ಲಿ ಜಮ್ಮುಕಾಶ್ಮೀರದ ಮುಖ್ಯಮಂತ್ರಿ ಉಮರ್ ಅಬ್ದುಲ್ಲಾ ಅವರು ರವಿವಾರ ಭಯೋತ್ಪಾದನೆ ಮತ್ತು ಅದರ ಮೂಲದ ವಿರುದ್ಧ ನಿರ್ಣಾಯಕ ಹೋರಾಟಕ್ಕೆ ಕರೆ ನೀಡಿದ್ದಾರೆ. ತಪ್ಪಿತಸ್ಥರನ್ನು ಶಿಕ್ಷಿಸುವಾಗ ಅಮಾಯಕ ಜನರಿಗೆ ತೊಂದರೆಯಾಗದಂತೆ ಎಚ್ಚರಿಕೆ ವಹಿಸಬೇಕು ಎಂದು ಅಬ್ದುಲ್ಲಾ ಎಕ್ಸ್ ಪೋಸ್ಟ್ನಲ್ಲಿ ಆಗ್ರಹಿಸಿದ್ದಾರೆ. ಪಹಲ್ಗಾಮ್ ದಾಳಿಯ ಬಳಿಕ ಭಯೋತ್ಪಾದನೆ ಮತ್ತು ಅದರ ಮೂಲದ ವಿರುದ್ಧ ನಿರ್ಣಾಯಕ ಹೋರಾಟ ನಡೆಯಲೇಬೇಕಿದೆ. ಕಾಶ್ಮೀರದ ಜನರು ಭಯೋತ್ಪಾದನೆ ಮತ್ತು ಅಮಾಯಕ ಜನರ ಕಗ್ಗೊಲೆಯನ್ನು ಬಹಿರಂಗವಾಗಿ ಖಂಡಿಸಿದ್ದಾರೆ. ಇದನ್ನು ಅವರು ಮುಕ್ತವಾಗಿ ಮತ್ತು ಸ್ವಯಂಪ್ರೇರಿತರಾಗಿ ಮಾಡಿದ್ದಾರೆ. ಈ ಬೆಂಬಲವನ್ನು ಬಳಸಿಕೊಳ್ಳಲು ಮತ್ತು ಜನರನ್ನು ದೂರವಿಡುವ ಯಾವುದೇ ತಪ್ಪುಕ್ರಮಗಳನ್ನು ತಪ್ಪಿಸಲು ಇದು ಸಕಾಲವಾಗಿದೆ ಎಂದು ಉಮರ್ ತನ್ನ ಪೋಸ್ಟ್ನಲ್ಲಿ ಹೇಳಿದ್ದಾರೆ. ತಪ್ಪಿತಸ್ಥರನ್ನು ಶಿಕ್ಷಿಸಿ,ಅವರಿಗೆ ಯಾವುದೇ ಕರುಣೆಯನ್ನು ತೋರಿಸಬೇಡಿ. ಆದರೆ ಅಮಾಯಕರಿಗೆ ತೊಂದರೆಯಾಗಲು ಬಿಡಬೇಡಿ ಎಂದು ಅವರು ಆಗ್ರಹಿಸಿದ್ದಾರೆ. ದಾಳಿಯ ಬಳಿಕ ಅಬ್ದುಲ್ಲಾ ಕರೆದಿದ್ದ ಸರ್ವಪಕ್ಷ ಸಭೆಯಲ್ಲಿ ಪಹಲ್ಗಾಮ್ ಭಯೋತ್ಪಾದಕ ದಾಳಿಯನ್ನು ತೀವ್ರವಾಗಿ ಖಂಡಿಸುವ ಮೂಲಕ ವಿವಿಧ ಪಕ್ಷಗಳ ನಾಯಕರು ರಾಜಕೀಯ ಒಗ್ಗಟ್ಟನ್ನು ಪ್ರದರ್ಶಿಸಿದ್ದರು. ಪಹಲ್ಗಾಮ್ ದಾಳಿಯ ಕುರಿತು ಯಾವುದೇ ‘ತಟಸ್ಥ ಮತ್ತು ಪಾರರ್ಶಕ’ ತನಿಖೆಗೆ ಸಹಕರಿಸಲು ತಾನು ಸಿದ್ಧ ಎಂಬ ಪಾಕಿಸ್ತಾನದ ಹೇಳಿಕೆಯನ್ನು ಅಬ್ದುಲ್ಲಾ ಶನಿವಾರ ಪ್ರಶ್ನಿಸಿದ್ದರು. ರಂಬಾನ್ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅಬ್ದುಲ್ಲಾ,‘ಪಹಲ್ಗಾಮ್ನಲ್ಲಿ ದಾಳಿ ನಡೆದಿದ್ದನ್ನು ಅವರು(ಪಾಕ್) ಮೊದಲು ಒಪ್ಪಿಕೊಂಡಿರಲಿಲ್ಲ. ಬಳಿಕ,ಅದನ್ನು ಭಾರತವೇ ಮಾಡಿದೆ ಎಂದೂ ಅವರು ಹೇಳಿದ್ದರು. ಮೊದಲು ನಮ್ಮ ಮೇಲೆ ಆರೋಪ ಹೊರಿಸಿದವರೇ ಅವರು. ಹೀಗಾಗಿ ಅವರ ಬಗ್ಗೆ ಏನನ್ನಾದರೂ ಹೇಳುವುದು ಕಷ್ಟ. ಪಾಕ್ ನಾಯಕರ ಹೇಳಿಕೆಗಳಿಗೆ ಪ್ರತಿಕ್ರಿಯಿಸಲು ನಾನು ಬಯಸುವುದಿಲ್ಲ. ಘಟನೆಯು ನನಗೆ ವಿಷಾದವನ್ನುಂಟು ಮಾಡಿದೆ, ಅದು ನಡೆಯಬಾರದಿತ್ತು’ ಎಂದು ಹೇಳಿದ್ದರು. After the Pahalgam terror attack, there must be a decisive fight against terrorism and its origin. People of Kashmir have come out openly against terrorism and the murder of innocent people, they did this freely & spontaneously. It’s time to build on this support and avoid any… — Omar Abdullah (@OmarAbdullah) April 27, 2025
ಕಲಬುರಗಿ: ವಕ್ಪ್ ತಿದ್ದುಪಡಿ ಕಾಯ್ದೆ ಹಿಂಪಡೆಯುವಂತೆ ಆಗ್ರಹಿಸಿ ಬೃಹತ್ ಪ್ರತಿಭಟನೆ
ಕಲಬುರಗಿ: ಕೇಂದ್ರ ಸರಕಾರ ಜಾರಿಗೊಳಿಸುತ್ತಿರುವ ವಕ್ಫ್ ಕಾಯ್ದೆ 2025 ಅನ್ನು ಕೂಡಲೇ ಹಿಂಪಡೆಯದಿದ್ದರೆ ಮುಂದಿನ ದಿನಗಳಲ್ಲಿ ಸಿ.ಎ.ಎ - ಎನ್.ಆರ್.ಸಿ ತರಹ ಉಗ್ರ ಹೋರಾಟ ಕೈಗೊಳ್ಳಲಾಗುತ್ತದೆ ಎಂದು ಉತ್ತರ ಕ್ಷೇತ್ರದ ಶಾಸಕಿ ಹಾಗೂ ಕೆಎಸ್ಐಸಿ ಅಧ್ಯಕ್ಷೆ ಕನೀಝ್ ಫಾತಿಮಾ ಎಚ್ಚರಿಕೆ ನೀಡಿದ್ದಾರೆ. ಆಲ್ ಇಂಡಿಯಾ ಮುಸ್ಲಿಂ ಪರ್ಸನಲ್ ಲಾ ಬೋರ್ಡ್ ಅವರ ಮಾರ್ಗದರ್ಶನದಲ್ಲಿ ರವಿವಾರ ನಗರದ ನಗರೇಶ್ವರ ಶಾಲೆಯಿಂದ ಜಗತ್ ವೃತ್ತದ ವರೆಗೆ ಹಮ್ಮಿಕೊಂಡ ಬೃಹತ್ ರ್ಯಾಲಿ ಬಳಿಕ ಜಗತ್ ವೃತ್ತದಲ್ಲಿ ಆಯೋಜಿಸಿದ ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು, ದೇಶದಲ್ಲಿ ಜಾರಿಯಾಗುತ್ತಿರುವ ವಕ್ಫ್ ಕಾಯ್ದೆ ಅಸಂವಿಧಾನಿಕವಾಗಿದೆ. ಇದು ಡಾ.ಅಂಬೇಡ್ಕರ್ ಅವರು ರಚಿಸಿದ ಸಂವಿಧಾನದ ವಿರೋಧಿ ಕಾಯ್ದೆಯಾಗಿದೆ. ಒಂದು ವೇಳೆ ಕೇಂದ್ರ ಸರಕಾರ ಇದನ್ನು ಹಿಂಪಡೆಯದಿದ್ದರೆ ದೇಶದಾದ್ಯಂತ ದಿಲ್ಲಿಯ ಶಾಹೀನ್ ಭಾಗ್ ರೀತಿಯಲ್ಲಿ ಧರಣಿ ಸತ್ಯಾಗ್ರಹ ನಡೆಸಲಾಗುತ್ತದೆ ಎಂದು ಹೇಳಿದರು. ಖ್ವಾಜಾ ಬಂದಾ ನವಾಜ್ ದರ್ಗಾದ (ರ.ಹ) ಸಜ್ಜಾದಾನಶೀನ್ ಮತ್ತು ಕರ್ನಾಟಕ ರಾಜ್ಯ ವಕ್ಫ್ ಬೋರ್ಡ್ನ ಅಧ್ಯಕ್ಷರಾದ ಹಾಫಿಜ್ ಸಯ್ಯದ್ ಮುಹಮ್ಮದ್ ಅಲಿ ಅಲ್ ಹುಸೈನಿ ಸಾಬ್ ಮಾತನಾಡಿ, ವಿವಾದಿತ ವಕ್ಫ್ ಕಾಯ್ದೆಯನ್ನು ಕೇಂದ್ರ ಸರ್ಕಾರ ಶೀಘ್ರದಲ್ಲೇ ವಾಪಸ್ ಪಡೆಯಬೇಕು. ಹಿಂಪಡೆಯುವ ಮಾತುಗಳು ಕೇಳದಿದ್ದರೆ ಈ ತರಹದ ದೊಡ್ಡ ಗಾತ್ರದ ಹೋರಾಟಗಳು ನಿತ್ಯವೂ ನಡೆಯಲಿವೆ. ಕಾಯ್ದೆ ರದ್ದತಿ ಆಗುವವರೆಗೂ ಹೋರಾಟ ನಿಲ್ಲುವುದಿಲ್ಲ ಎಂದು ತಿಳಿಸಿದರು. ರ್ಯಾಲಿಯಲ್ಲಿ ಶೈಖ್ ಶಾ ಮುಹಮ್ಮದ್ ಅಫ್ಜಲುದ್ದೀನ್ ಜುನೈದಿ ಸಾಬ್, ಫರಾಜ್ ಉಲ್ ಇಸ್ಲಾಂ, ಡಾ. ಸಯ್ಯದ್ ಮುಸ್ತಫಾ ಅಲ್ ಹುಸೈನಿ ಸಾಬ್, ಸಯ್ಯದ್ ಅಖೀಬ್ ಹುಸೈನಿ ಸಾಬ್, ನಜಾರ್ ಮೊಹಮ್ಮದ್ ಬಾಬಾ ಖಾನ್, ಮಾಜಿ ಕೆಯುಡಿಎ ಅಧ್ಯಕ್ಷರಾದ ಮೊಹಮ್ಮದ್ ಅಸ್ಗರ್ ಚುಲ್ಬುಲ್, ಶರೀಫ್ ಮಝ್ಹರಿ ಸಾಬ್, ಅಹ್ಮರ್ ಉಲ್ ಇಸ್ಲಾಂ, ಅಡ್ವೊಕೇಟ್ ವಹಾಜ್ ಬಾಬಾ, ಪ್ರಸ್ತುತ ಕೆಯುಡಿಎ ಅಧ್ಯಕ್ಷರಾದ ಮಝ್ಹರ್ ಆಲಂ ಖಾನ್, ಆರಿಫ್ ಖಾನ್, ಕೆ.ನೀಲಾ, ಮೀನಾಕ್ಷಿ ಬಾಳಿ, ಮೌಲಾ ಮುಲ್ಲಾ, ಮುಬೀನ ಅಹ್ಮದ್ ಸೇರಿದಂತೆ ಧಾರ್ಮಿಕ ಪಂಡಿತರು, ಸೂಫಿ ಮಹಾನುಭಾವರು, ಉದ್ಯಮಿಗಳು ಮತ್ತು ಸಾವಿರಾರು ಸಾಮಾನ್ಯ ನಾಗರಿಕರು ಭಾಗವಹಿಸಿದ್ದರು. ಪ್ರತಿಭಟನೆಯಲ್ಲಿ ಪಾಲ್ಗೊಂಡ ಸಾವಿರಾರು ಜನ ವಕ್ಫ್ ತಿದ್ದುಪಡಿ ಕಾಯಿದೆ 2025 ರ ವಿರುದ್ಧ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಕಾಯ್ದೆಯನ್ನು ಹಿಂಪಡೆಯುವಂತೆ ಆಗ್ರಹಿಸಿದರು. ನಗರೇಶ್ವರ್ ಶಾಲೆಯಿಂದ ಪ್ರಾರಂಭವಾದ ರ್ಯಾಲಿಯು ನೆಹರುಗುಂಜ್, ಕಿರಾಣಾ ಬಜಾರ್, ಸೂಪರ್ ಮಾರ್ಕೆಟ್ ಮಾರ್ಗವಾಗಿ ಜಗತ ಸರ್ಕಲ್ನಲ್ಲಿ ಮುಕ್ತಾಯಗೊಂಡಿತು.
ಮಂಗಳೂರು ಮನಪಾ ವ್ಯಾಪ್ತಿಯಲ್ಲಿ ಹೂಳೆತ್ತುವ ಕಾಮಗಾರಿಗೆ ಸಿಗದ ವೇಗ!
ಮಂಗಳೂರು: ಕರಾವಳಿಯಲ್ಲಿ ಮುಂಗಾರು ಪೂರ್ವ ಮಳೆ ಸುರಿಯಲು ಆರಂಭಗೊಂಡಿದೆ. ಯಾವುದೇ ಕ್ಷಣ ಇದು ಬಿರುಸುಗೊಳ್ಳಬಹುದು ಎಂದು ಹವಾಮಾನ ಇಲಾಖೆಯು ತಿಳಿಸಿದೆ. ಆದರೆ ಮಳೆಗಾಲವನ್ನು ಎದುರಿಸಲು ಮಂಗಳೂರು ಮಹಾನಗರ ಪಾಲಿಕೆಯು ಎಚ್ಚೆತ್ತುಕೊಂಡಿಲ್ಲ ಎಂಬ ಮಾತು ಕೇಳಿಬರುತ್ತಿದೆ. ಅಂದರೆ ನಗರದ ಚರಂಡಿಗಳು, ರಾಜಕಾಲುವೆಗಳಲ್ಲಿ ತುಂಬಿರುವ ಹೂಳುಗಳನ್ನು ಮೇಲೆಕ್ಕೆತ್ತುವ ಕಾಮಗಾರಿಗೆ ವೇಗ ನೀಡಿಲ್ಲ. ಮಳೆಗಾಲದಲ್ಲಿ ಸರಾಗವಾಗಿ ನೀರು ಹರಿದು ಹೋಗಲು ವ್ಯವಸ್ಥೆ ಮಾಡದಿ ದ್ದರೆ ಕೃತಕ ನೆರೆ ಸೃಷ್ಟಿಯಾಗಿ ಅಂಗಡಿ, ಮನೆಗಳಿಗೆ ನುಗ್ಗುವ ಸಾಧ್ಯತೆ ಇದೆ ಎಂದು ಅಭಿಪ್ರಾಯ ವ್ಯಕ್ತವಾಗಿದೆ. ಅಂದಹಾಗೆ, ತುಂಬಿದ ಹೂಳನ್ನು ಮೇಲಕ್ಕೆ ಎತ್ತದ ಕಾರಣ ಪ್ರತೀ ಮಳೆಗಾಲದಲ್ಲಿ ಮಂಗಳೂರು ನಾನಾ ಸಮಸ್ಯೆಗಳನ್ನು ಎದುರಿಸುವುದು ಸಾಮಾನ್ಯ ಎಂಬಂತಾಗಿದೆ. ಈ ಹಿಂದಿನ ವರ್ಷಗಳಲ್ಲಿ ಮಳೆಗಾಲದಲ್ಲಿ ಸಂಭವಿಸಿರುವ ಘಟನೆಗಳನ್ನು ಆಡಳಿತ ವ್ಯವಸ್ಥೆಯು ಗಂಭೀರವಾಗಿ ಪರಿಗಣಿಸಬೇಕಿದೆ. ಇಲ್ಲದಿದ್ದಲ್ಲಿ ನಗರದ ನಿವಾಸಿಗಳು ಮತ್ತೆ ಸಂಕಷ್ಟ ಅನುಭವಿಸುವ ಸಾಧ್ಯತೆಯಿದೆ. ಮಂಗಳೂರು ಮಹಾನಗರ ಪಾಲಿಕೆಯ ಎಲ್ಲಾ ೬೦ ವಾರ್ಡ್ಗಳಲ್ಲಿ ಮೊದಲ ಹಂತದ ಕಾಮಗಾರಿಗಳನ್ನು ಮುಗಿಸಿದರೆ ಬಳಿಕದ ದಿನಗಳಿಗೆ ಸ್ವಲ್ಪ ಅನುಕೂಲವಾಗಲಿದೆ. ಹಾಗಾಗಿ ಅಪಾಯಕಾರಿ ಸ್ಥಳಗಳನ್ನು ಗುರುತಿಸಿ, ಮಳೆ ನೀರು ನಿಲ್ಲದಂತೆ ಯೋಜನೆ ರೂಪಿಸಬೇಕಾಗಿದೆ ಎಂದು ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ. ನಗರ ವ್ಯಾಪ್ತಿಯಲ್ಲಿ ರಾಜ ಕಾಲುವೆಗಳ, ಚರಂಡಿಗಳ ಹೂಳೆತ್ತುವ ಪ್ರಕ್ರಿಯೆ ಈಗಾಗಲೇ ಆರಂಭ ಗೊಂಡಿದೆ. ಆದರೆ ಕಾಮಗಾರಿ ಅರೆಬರೆ ಮಾಡದೆ ವ್ಯವಸ್ಥಿತವಾಗಿ ಹೂಳೆತ್ತುವಂತೆ ಪಾಲಿಕೆ ಅಧಿಕಾರಿ ಗಳು ಗಮನಿಸಬೇಕಾಗಿದೆ. ಈಗಾಗಲೆ ಹೂಳೆತ್ತಿ ದಂಡೆಯಲ್ಲಿ ಹಾಕಿರುವುದನ್ನು ಕೂಡಲೆ ತೆರವುಗೊಳಿಸ ಬೇಕು. ಇಲ್ಲದಿದ್ದರೆ ಮಳೆ ಸುರಿದರೆ ಅವು ಮತ್ತೆ ನೀರಿನೊಂದಿಗೆ ಕಾಲುವೆಗೆ ಇಳಿಯುವ ಸಾಧ್ಯತೆ ಇದೆ. ಇದರಿಂದ ಮಾಡಿದ ಕೆಲಸ ವ್ಯರ್ಥವಾಗಲಿದೆ ಎಂದು ಜನರು ಅಭಿಪ್ರಾಯಪಟ್ಟಿದ್ದಾರೆ. ಮಂಗಳೂರ ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಹಲವು ಕಾಮಗಾರಿಗಳು ಪ್ರಗತಿಯಲ್ಲಿವೆ. ಆದರೆ ಪೂರ್ಣಗೊಳ್ಳದ ಕಾರಣ ಮಳೆ ಬಿರುಸು ಪಡೆದರೆ ಸಮಸ್ಯೆ ತೀವ್ರಗೊಳ್ಳಲಿದೆ. ಪ್ರಮುಖ ರಸ್ತೆಯ ಹಲವು ಕಡೆಗಳಲ್ಲಿ ಕಾಣಿಸಿಕೊಂಡ ಗುಂಡಿಗಳನ್ನು ಇನ್ನೂ ಮುಚ್ಚಿಲ್ಲ, ನಗರದೊಳಗಡೆ ಯಾವುದೇ ಮುನ್ನೆಚ್ಚರಿಕೆ ಫಲಕ ಹಾಕದೆ ರಸ್ತೆ ಬದಿಗಳನ್ನು ಅಗೆದು ಅಲ್ಲೇ ಮಣ್ಣು ರಾಶಿ ಹಾಕಿರುವುದು ಕೂಡ ಕಂಡು ಬಂದಿವೆ. ಅಲ್ಲಲ್ಲಿ ಪೈಪ್ ಅಳವಡಿಸಲು ರಸ್ತೆ ಬದಿ ಮಣ್ಣು ಅಗೆಯುವ ಪ್ರಕ್ರಿಯೆ ಮುಂದುವರಿದಿದೆ. ನಗರದ ಹಂಪನ ಕಟ್ಟೆಯಲ್ಲಿ ಮಲ್ಟಿಲೆವೆಲ್ ಕಾರ್ ಪಾರ್ಕಿಂಗ್, ಮೋರ್ಗನ್ಸ್ಗೇಟ್ ಬಳಿ ರೈಲ್ವೆ ಅಂಡರ್ ಪಾಸ್ ಕಾಮಗಾರಿಗಳು ಪ್ರಗತಿಯಲ್ಲಿದೆ. ಬಿರುಸಿನ ಮಳೆಕ್ಕಿಂತ ಮುನ್ನ ಈ ಬಗ್ಗೆ ಎಚ್ಚರಿಕೆ ವಹಿಸದಿದ್ದರೆ ಇಲ್ಲಿ ಸಮಸ್ಯೆ ಎದುರಾಗುವ ಅಪಾಯವಿದೆ ಎಂಬ ಮಾತು ಸಾರ್ವಜನಿಕ ವಲಯದಿಂದ ಕೇಳಿ ಬಂದಿವೆ. *ಮಳೆಗಾಲಕ್ಕೆ ಸಮರ್ಪಕವಾಗಿ ಸಿದ್ಧತೆ ನಡೆಸದ ಕಾರಣ 2019ರ ಮೇ 29ರಂದು ಸುರಿದ ಮಹಾ ಮಳೆಗೆ ಮಂಗಳೂರು ನಗರದ ಬಹುತೇಕ ಪ್ರದೇಶಗಳಲ್ಲಿ ಕೃತಕ ನೆರೆಯುಂಟಾಗಿ ಜಲಾವೃತ ಗೊಂಡಿತ್ತು. ಕಳೆದ ಬಾರಿಯೂ ಪೂರ್ವ ಮುಂಗಾರು ವೇಳೆ ಸುರಿದ ಮಳೆಗೆ ನಗರದ ಕೊಟ್ಟಾರ ಚೌಕಿ, ಪಂಪ್ವೆಲ್ ಭಾಗದಲ್ಲಿ ನೀರು ಉಕ್ಕಿ ರಸ್ತೆಗಳು ಜಲಾವೃತಗೊಂಡಿತ್ತು. ಕೊಟ್ಟಾರ ಚೌಕಿಯಲ್ಲಿ ರಸ್ತೆಗೆ ಸಮನಾಗಿ ತೋಡಿನಲ್ಲಿ ಮಳೆ ನೀರು ಹರಿದ ಪರಿಣಾಮ ಆಟೊ ರಿಕ್ಷಾ ರಸ್ತೆಬಿಟ್ಟು ನೀರಿಗೆ ಬಿದ್ದ ಕಾರಣ ಚಾಲಕ ಮೃತಪಟ್ಟಿದ್ದರು. ಮಳೆಗಾಲದ ಸಿದ್ಧತೆಗೆ ಸಂಬಂಧಿಸಿ ರಾಜಕಾಲುವೆಗಳ ಹಾಗೂ ತೋಡುಗಳ ಹೂಳು ತೆಗೆಯಲು ಟೆಂಡರ್ ಪ್ರಕ್ರಿಯೆ ನಡೆದು ಕಾಮಗಾರಿ ಆರಂಭಗೊಂಡಿದೆ. ಕೆಲಸ ಕಾರ್ಯಗಳ ಬಗ್ಗೆ ಪಾಲಿಕೆ ಅಧಿಕಾರಿಗಳು ನಿಗಾ ವಹಿಸುತ್ತಿದ್ದಾರೆ. ಮಳೆಗಾಲದ ಮುಂಚಿತವಾಗಿ ಕಾಮಗಾರಿ ಪೂರ್ಣಗೊಳ್ಳಲಿದೆ -ರವಿಚಂದ್ರ ನಾಯಕ್, ಆಯುಕ್ತರು, ಮಂಗಳೂರು ಮನಪಾ
ವಾರಣಾಸಿ-ಬೆಂಗಳೂರು ವಿಮಾನಕ್ಕೆ ಬಾಂಬ್ ಬೆದರಿಕೆ: ಕೆನಡಾ ಪ್ರಜೆ ಬಂಧನ
ಲಕ್ನೊ: ಬೆಂಗಳೂರಿಗೆ ತೆರಳುತ್ತಿದ್ದ ಇಂಡಿಗೊ ವಿಮಾನದಲ್ಲಿದ್ದ ವಿದೇಶಿ ಪ್ರಜೆಯೋರ್ವ ತಾನು ಬಾಂಬ್ ಕೊಂಡೊಯ್ಯುತ್ತಿದ್ದೇನೆ ಎಂದು ಪ್ರತಿಪಾದಿಸಿದ ಬಳಿಕ ವಾರಣಾಸಿ ವಿಮಾನ ನಿಲ್ದಾಣದಲ್ಲಿ ಕೆಲ ಕಾಲ ಆತಂಕದ ವಾತಾವರಣ ನಿರ್ಮಾಣವಾಯಿತು ಎಂದು ಪೊಲೀಸರು ರವಿವಾರ ತಿಳಿಸಿದ್ದಾರೆ. ಈ ಘಟನೆ ಶನಿವಾರ ರಾತ್ರಿ ಸಂಭವಿಸಿದೆ. ಬೆದರಿಕೆ ಒಡ್ಡಿದ ಪ್ರಯಾಣಿಕ, ಕೆನಡಾ ಪ್ರಜೆಯನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ. ಬಾಂಬ್ ಬೆದರಿಕೆ ಹಿನ್ನೆಲೆಯಲ್ಲಿ ವಿಮಾನವನ್ನು ಕೂಲಂಕಷ ಪರಿಶೀಲನೆಗೆ ‘ಐಸೋಲೇಶನ್ ಬೇ’ಗೆ ಕೊಂಡೊಯ್ಯಲಾಯಿತು. ಆದರೆ, ಯಾವುದೇ ಸ್ಫೋಟಕ ಸಾಮಗ್ರಿಗಳು ಪತ್ತೆಯಾಗಿಲ್ಲ ಎಂದು ವಿಮಾನ ನಿಲ್ದಾಣದ ನಿರ್ದೇಶಕ ಪುನೀತ್ ಗುಪ್ತಾ ತಿಳಿಸಿದ್ದಾರೆ. ಕೆನಡಾ ಪ್ರಯಾಣಿಕನ ಹೇಳಿಕೆಯ ನಂತರ ಇಂಡಿಗೊ ಸಿಬ್ಬಂದಿ ತಕ್ಷಣವೇ ಬೆದರಿಕೆಯ ಬಗ್ಗೆ ಏರ್ ಟ್ರಾಫಿಕ್ ಕಂಟ್ರೋಲ್ (ಎಟಿಸಿ)ಗೆ ಮಾಹಿತಿ ನೀಡಿದರು ಎಂದು ಗುಪ್ತಾ ತಿಳಿಸಿದ್ದಾರೆ. ಭದ್ರತಾ ಏಜೆನ್ಸಿಗಳಿಂದ ಅನುಮತಿ ಪಡೆದ ಬಳಿಕ ವಿಮಾನ ರವಿವಾರ ಬೆಳಗ್ಗೆ ಬೆಂಗಳೂರಿಗೆ ತೆರಳಿತು. ಘಟನೆಯ ಕುರಿತು ವಿಸ್ತೃತ ತನಿಖೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಾಣಿ: ಅಂತರಾಷ್ಟ್ರೀಯ ಡಾಡ್ಜ್ಬಾಲ್ ಚಾಂಪಿಯನ್ಶಿಪ್ ಗೆ ಚಾಲನೆ
ಬಂಟ್ವಾಳ : ಭಾರತೀಯ ಡಾಡ್ಜ್ಬಾಲ್ ಫೆಡರೇಶನ್ನ ಆಶ್ರಯದಲ್ಲಿ ಕರ್ನಾಟಕ ರಾಜ್ಯ ಡಾಡ್ಜ್ಬಾಲ್ ಅಸೋಸಿಯೇಷನ್ ಹಾಗೂ ದಕ್ಷಿಣ ಕನ್ನಡ ಡಾಡ್ಜ್ಬಾಲ್ ಅಸೋಸಿಯೇಷನ್ನ ಸಹಯೋಗದೊಂದಿಗೆ ನಡೆದ ಅಂತರಾಷ್ಟ್ರೀಯ ಡಾಡ್ಜ್ಬಾಲ್ ಚಾಂಪಿಯನ್ಶಿಪ್ ಗೆ ಮಾಣಿ ಪೆರಾಜೆಯ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶನಿವಾರ ರಾತ್ರಿ ಚಾಲನೆ ದೊರೆಯಿತು. ಕಾಮನ್ ವೆಲ್ತ್ ಕ್ರೀಡಾಪಟು ಪುಷ್ಪರಾಜ್ ಹೆಗ್ಡೆಯವರು ಅಂತರಾಷ್ಟ್ರೀಯ ಪಂದ್ಯಾಟಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ಭಾರತದಲ್ಲಿ ಇದೇ ಮೊದಲಬಾರಿಗೆ ನಡೆಯುತ್ತಿರುವ ಅಂತ ರಾಷ್ಟ್ರೀಯ ಡಾಡ್ಜ್ಬಾಲ್ ಪಂದ್ಯಾಟವನ್ನು ಆಯೋಜಿಸಿದ ಬಾಲವಿಕಾಸ ವಿದ್ಯಾ ಸಂಸ್ಥೆಗೆ ಅಭಿನಂದನೆ ಸಲ್ಲಿಸಿದರು. ಕರ್ನಾಟಕದ ಪಾಲಿಗೆ ಇದೊಂದು ಅಪೂರ್ವ ಸನ್ನಿವೇಶ ಎಂದ ಅವರು, ಕ್ರೀಡೆಗೆ ಮತ್ತಷ್ಟು ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಸರ್ಕಾರಗಳು ಗಮನರಿಸಬೇಕು ಎಂದರು. ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯ ಸಂಚಾಲಕ ಪ್ರಹ್ಲಾದ್ ಜೆ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಅಂತರಾಷ್ಟ್ರೀಯ ಡಾಡ್ಜ್ ಬಾಲ್ ಚಾಂಪಿಯನ್ ಶಿಪ್ ಗೆ ಆಗಮಿಸಿದ ನೇಪಾಳ, ಮಲೇಶಿಯಾ, ಹಾಗೂ ಭಾರತ ತಂಡದ ಆಟಗಾರರನ್ನು ತುಳುನಾಡಿನ ಸಂಪ್ರದಾಯದಂತೆ ಮಂಗಳೂರು ಸಂಸದ ಬೃಜೇಶ್ ಚೌಟ ತಾಂಬೂಲ ನೀಡಿ ಸ್ವಾಗತಿಸಿದರು, ವಿವಿಧ ಅತಿಥಿಗಣ್ಯರ ಸಮ್ಮುಖದಲ್ಲಿ ಚೆಂಡೆ, ಕೊಂಬು ವಾದನದೊಂದಿಗೆ ಕ್ರೀಡಾಂಗಣಕ್ಕೆ ಆಟಗಾರರನ್ನು ಬರಮಾಡಿ ಕೊಳ್ಳಲಾಯಿತು. ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಗುತ್ತು, ಮಾಜಿ ಸಚಿವ ಬಿ.ರಮಾನಾಥ ರೈ, ಮಾಜಿ ಸಂಸದ ನಳಿನ್ ಕುಮಾರ್ ಕಟೀಲು ಮೊದಲಾದವರು ಆಗಮಿಸಿ ಕ್ರೀಡಾಪಟುಗಳಿಗೆ ಪ್ರೋತ್ಸಾಹ ನೀಡಿದರು. ಚಾಂಪಿಯನ್ ಶಿಪ್ ಆಯೋಜಕರಾದ ವಿಜೇತ್ ಕುಮಾರ್, ಸಚಿನ್ ಎ.ಎಸ್, ಬಾಲವಿಕಾಸ ಟ್ರಸ್ಟ್ ಕಾರ್ಯದರ್ಶಿ ಮಹೇಶ್ ಶೆಟ್ಟಿ , ದ.ಕ.ಜಿಲ್ಲಾ ಡಾಡ್ಜ್ ಬಾಲ್ ಅಸೋಸಿಯೇಶನ್ ಅಧ್ಯಕ್ಷ ವಿದ್ಯಾಧರ್ ಜೈನ್, ಮಾಣಿ ಗ್ರಾಮ ಪಂಚಾಯತ್ ಅಧ್ಯಕ್ಷ ಸುದೀಪ್ ಕುಮಾರ್ ಶೆಟ್ಟಿ, ಪೆರಾಜೆ ಗ್ರಾಮ ಪಂಚಾಯತ್ ಅಧ್ಯಕ್ಷ ಕುಶಲ ಎಂ.ಪೆರಾಜೆ, ಮಾಣಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಇಬ್ರಾಹಿಂ ಕೆ.ಮಾಣಿ, ಬಾಲಕೃಷ್ಣ ಆಳ್ವ, ಸ್ಥಳೀಯ ಪ್ರಮುಖರಾದ ಕೃಷ್ಣಪ್ಪ ಪೂಜಾರಿ, ನಿರಂಜನ್ ರೈ ಕುರ್ಲೆತ್ತಿಮಾರು, ಭಾರತೀಯ ಡಾಡ್ಜ್ಬಾಲ್ ಫೆಡರೇಶನ್ನ ದಸತರಣ್ ವಿ ಸುಬ್ರಹ್ಮಣ್ಯಂ ಮಲೇಶಿಯಾ, ಡಾ.ರಬಿ ಪುತ್ರನ್, ನರಸಿಂಹ ರೆಡ್ಡಿ, ನಾಗರಾಜ್, ವಿ.ಪಿ.ಪವಿತ್ರನ್ ಕೇರಳ , ಏಕ್ ನಾಥ್ ಸಾಲುಂಕೆ ಮಹರಾಷ್ಟ್ರ, ನಸೀಬ್ ಹರಿಯಾಣ , ಪಶಮ್ ಶ್ರೀನಿವಾಸ್ ತೆಲಂಗಾಣ, ಪಲಕ್ ಸೊಂದರ್ವ ಗುಜರಾತ್, ತಾಕೂರ್ ಮೋಹಿತ್ ಉತ್ತರ ಪ್ರದೇಶ, , ಕಿಚ್ನಾನೆ ಪಾಂಡಿಚೇರಿ, ಪ್ರಕಾಶ್ ತಮಿಳುನಾಡು, ನಿಹಾಲ್ ಜಮ್ಮುಕಾಶ್ಮೀರ, ದುಶ್ಯಂತ್ ಸಿಂಗ್ ರಾಣಾ ಉತ್ತರ ಖಂಡ, ಸಂತೋಶ್ ಕುಮಾರ್, ಪೂಜಾ ಕಶ್ಯಪ್, ಸಂಜಯ್ ಮಧ್ಯಪ್ರದೇಶ, ಪ್ರಹ್ಲಾದ್ ಯಾದವ್ ರಾಜಸ್ಥಾನ, ದಿಲ್ ಕುಶ್ ಬಿಹಾರ, ಗಗನ್ ಸಿಂಗ್ ಛತ್ತೀಸ್ಗಡ, ಚಿನ್ಮಯ್ ಒಡಿಶಾ. ಸಂಧ್ಯಾ ಗೋವಾ, ಪರ್ತ್ ಜಾನಿ ಡಮನ್ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಇದೇ ವೇಳೆ ಅಂತರಾಷ್ಟ್ರೀಯ ಡಾಡ್ಜ್ ಬಾಲ್ ಚಾಂಪಿಯನ್ ಶಿಪ್ ಅನ್ನು ಮಾಣಿ ಬಾಲವಿಕಾಸ ವಿದ್ಯಾ ಸಂಸ್ಥೆಯಲ್ಲಿ ಆಯೋಜಿಸಲು ಕಾರಣಕರ್ತರಾದ ಸಂಘಟನಾ ಕಾರ್ಯದರ್ಶಿ ವಿಜೇತ್ ಕುಮಾರ್ ರನ್ನು ಬಾಲವಿಕಾಸ ವಿದ್ಯಾ ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು. ಬಾಲವಿಕಾಸ ವಿದ್ಯಾ ಸಂಸ್ಥೆಯ ಮುಖ್ಯ ಶಿಕ್ಷಕಿ ಸುಪ್ರಿಯಾ ಡಿ. ಸನ್ಮಾನಪತ್ರ ವಾಚಿಸಿದರು. ಸಂಘಟನಾ ಕಾರ್ಯದರ್ಶಿ ವಿಜೇತ್ ಕುಮಾರ್ ಸ್ವಾಗತಿಸಿದರು. ಭಾರತೀಯ ಡಾಡ್ಜ್ಬಾಲ್ ಫೆಡರೇಶನ್ನ ಪ್ರಧಾನ ಕಾರ್ಯದರ್ಶಿ ನರಸಿಂಹ ರೆಡ್ಡಿ ವಂದಿಸಿದರು. ಶಿಕ್ಷಕಿಯರಾದ ರಶ್ಮಿ ಕೆ. ಫೆರ್ನಾಂಡೀಸ್ , ಶೋಭಾ ಎಂ.ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.
ಮಧ್ಯಪ್ರದೇಶ | ಬೈಕ್ಗೆ ಢಿಕ್ಕಿ ಹೊಡೆದು ಬಾವಿಗೆ ಬಿದ್ದ ವ್ಯಾನ್ : 11 ಮಂದಿ ಮೃತ್ಯು
ಭೋಪಾಲ್ : ಮಧ್ಯಪ್ರದೇಶದ ಮಂದಸೌರ್ ಜಿಲ್ಲೆಯಲ್ಲಿ ವೇಗವಾಗಿ ಬಂದ ವ್ಯಾನ್ ಬೈಕ್ಗೆ ಡಿಕ್ಕಿ ಹೊಡೆದ ಬಳಿಕ ನೀರು ತುಂಬಿದ ಬಾವಿಗೆ ಬಿದ್ದ ಪರಿಣಾಮ 11 ಮಂದಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಮಂದಸೌರ್ ಜಿಲ್ಲೆಯ ನಾರಾಯಣಗಢ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ವ್ಯಾನ್ನಲ್ಲಿ 13 ಮಂದಿ ಪ್ರಯಾಣಿಸುತ್ತಿದ್ದರು. ಅಪಘಾತದಲ್ಲಿ 9 ಮಂದಿ, ರಕ್ಷಣೆಗಾಗಿ ಬಾವಿಗೆ ಇಳಿದ ಮನೋಹರ್ ಮತ್ತು ಬೈಕ್ ಸವಾರ ಸೇರಿ ಒಟ್ಟು 11 ಮಂದಿ ಮೃತಪಟ್ಟಿದ್ದಾರೆ ಎಂದು ರತ್ಲಂ ರೇಂಜ್ ಡಿಐಜಿ ಮನೋಜ್ ಸಿಂಗ್ ಹೇಳಿದ್ದಾರೆ. ಮೃತದೇಹವನ್ನು ಬಾವಿಯಿಂದ ಹೊರತೆಗೆಯಬೇಕಾಗಿದೆ. ವ್ಯಾನ್ ಬೈಕ್ಗೆ ಡಿಕ್ಕಿ ಹೊಡೆದ ಬಳಿಕ ಚಾಲಕನ ನಿಯಂತ್ರಣ ತಪ್ಪಿ ಬಾವಿಗೆ ಬಿದ್ದಿದೆ. ಸ್ಥಳಕ್ಕೆ ಎನ್ಡಿಆರ್ಎಫ್ ತಂಡ ತೆರಳಿದ್ದು, ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದೆ.
ಬೆಳ್ತಂಗಡಿ| ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರಿಂದ ವಾಲಿಬಾಲ್ ತರಬೇತುದಾರನಿಗೆ ಮಾರಣಾಂತಿಕ ಹಲ್ಲೆ
ಬೆಳ್ತಂಗಡಿ: ಖಾಸಗಿ ಕಾಲೇಜ್ ವಿದ್ಯಾರ್ಥಿನಿಗೆ ವಾಲಿಬಾಲ್ ತರಬೇತುದಾರ ಮೆಸೇಜ್ ಕಳುಹಿಸಿದ ಆರೋಪದಲ್ಲಿ ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆಯ ಹತ್ತಕ್ಕೂ ಹೆಚ್ಚು ಕಾರ್ಯಕರ್ತರ ತಂಡ ಕಾರ್ಕಳದ ಸಯ್ಯದ್ (24)ಗೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ ಘಟನೆ ವರದಿಯಾಗಿದೆ. ಇದೀಗ ಬೆಳ್ತಂಗಡಿ ಠಾಣೆಯಲ್ಲಿ ವಿದ್ಯಾರ್ಥಿನಿಯ ದೂರಿನಂತೆ ಸಯ್ಯದ್ ವಿರುದ್ಧ ಪೋಕ್ಸೋ ಪ್ರಕರಣ ದಾಖಲಿಸಲಾಗಿದ್ದು, ಹಲ್ಲೆ ನಡೆಸಿದ ಆರೋಪಿಗಳ ವಿರುದ್ಧವೂ ಪ್ರಕರಣ ದಾಖಲಿಸಲಾಗಿದೆ. ಖಾಸಗಿ ಕಾಲೇಜಿನ 17ರ ಹರೆಯದ ವಿದ್ಯಾರ್ಥಿನಿಗೆ ಕಾರ್ಕಳ ನಿವಾಸಿ ಸಯ್ಯದ್ ಕಳೆದ ಕೆಲವು ದಿನಗಳಿಂದ ಮೆಸೇಜ್ ಕಳುಹಿಸುತ್ತಾ ಕಿರುಕುಳ ನೀಡುತ್ತಿದ್ದ ಎಂದು ಆರೋಪಿಸಿ ದೂರು ನೀಡಲಾಗಿದೆ. ಸಯ್ಯದ್ ಇಲ್ಲಿನ ಕಾಲೇಜೊಂದರಲ್ಲಿ ವಾಲಿಬಾಲ್ ಆಡಲು ಹಾಗೂ ತರಬೇತಿ ನೀಡಲು ಬರುತ್ತಿದ್ದ ಎನ್ನಲಾಗಿದೆ. ಈ ಬಗ್ಗೆ ಮಾಹಿತಿ ಪಡೆದ ಉಜಿರೆಯ ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರ ಗುಂಪೊಂದು ಎ.26 ರಂದು ಉಜಿರೆಯಲ್ಲಿ ಸಯ್ಯದ್ ಗೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ. ಇದಾದ ಬಳಿಕ ಪೊಲೀಸರು ಸಯ್ಯದ್ ನನ್ನು ವಶಕ್ಕೆ ಪಡೆದಿದ್ದರು. ವಿದ್ಯಾರ್ಥಿನಿ ಬೆಳ್ತಂಗಡಿ ಪೊಲೀಸ್ ಠಾಣೆಗೆ ದೂರು ನೀಡಿದ ಮೇರೆಗೆ ಎ.26 ರಂದು ಆರೋಪಿ ಸಯ್ಯದ್ ವಿರುದ್ಧ ಪೋಕ್ಸೋ ಪ್ರಕರಣ ದಾಖಲಿಸಿ ಆರೋಪಿಯನ್ನು ಬಂಧಿಸಿದ ಬೆಳ್ತಂಗಡಿ ಪೊಲೀಸರು ಮಂಗಳೂರು ಫೋಕ್ಸೋ ನ್ಯಾಯಾಲಯದ ನ್ಯಾಯಧೀಶರ ಮನೆಗೆ ರಾತ್ರಿ ಹಾಜರುಪಡಿಸಿದ್ದು, ನ್ಯಾಯಾಧೀಶರು ಆರೋಪಿಗೆ ಜಾಮೀನು ಮಂಜೂರು ಮಾಡಿದ್ದಾರೆ. ಇದೀಗ ಹಲ್ಲೆಗೆ ಒಳಗಾದ ಸಯ್ಯದ್ ಉಜಿರೆಯ ಪ್ರಜ್ವಲ್ ಹಾಗೂ ಇತರ ಹತ್ತಕ್ಕೂ ಹೆಚ್ಚು ಮಂದಿಯ ವಿರುದ್ಧ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಹಲ್ಲೆ ಪ್ರಕರಣ ದಾಖಲಿಸಿದ್ದಾನೆ. ಹಲ್ಲೆ ನಡೆಸಿರುವ ಆರೋಪಿಗಳಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.
ಉಡುಪಿ, ಎ.27: ಅಜ್ಜರಕಾಡು ನಿವಾಸಿ ಅನಿಲ್ ಕುಮಾರ್(31) ಇಂದು ಬೆಳಿಗ್ಗೆ ಹೃದಯಘಾತ ದಿಂದ ನಿಧನ ರಾದರು. ಇವರು ಕಾಡಬೆಟ್ಟು ಅಶೋಕ್ ರಾಜ್ ಅವರ ತಂದಡಲ್ಲಿ ಹುಲಿ ಕುಣಿತದಲ್ಲಿ ಕಲಾವಿದರಾಗಿ ಗುರುತಿಸಿ ಕೊಂಡಿದ್ದರು. ಪೈಂಟಿಂಗ್ ಗುತ್ತಿಗೆದಾರರಾಗಿ ಕೆಲಸ ನಿರ್ವಹಿಸುತ್ತಿದ್ದರು.
ಕಲಬುರಗಿ: ಕುಸಿದು ಬಿದ್ದು ಮಹಿಳೆ ಮೃತ್ಯು
ಕಲಬುರಗಿ: ಉದ್ಯೋಗ ಖಾತ್ರಿಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯೋರ್ವಳು ಸ್ಥಳದಲ್ಲೇ ಕುಸಿದು ಬಿದ್ದು ಮೃತಪಟ್ಟಿರುವ ಘಟನೆ ಸೇಡಂ ತಾಲೂಕಿನ ಮುಧೋಳ ಗ್ರಾಮದಲ್ಲಿ ನಡೆದಿದೆ. ರಾಮುಲಮ್ಮ ನಾಡೆಪಲ್ಲಿ (46) ಮೃತ ನರೇಗಾ ಕಾರ್ಮಿಕ ಮಹಿಳೆ ಎಂದು ಗುರುತಿಸಲಾಗಿದೆ. ರವಿವಾರ ಬೆಳಗ್ಗೆ 8 ಗಂಟೆಗೆ ಉದ್ಯೋಗ ಖಾತ್ರಿ ಕೂಲಿ ಕೆಲಸಕ್ಕೆ ಬಂದಿದ್ದ ರಾಮುಲಮ್ಮ, ಕೆಲಸ ಮಾಡುವ ವೇಳೆಯಲ್ಲಿ ಏಕಾಏಕಿ ಕುಸಿದು ಬಿದ್ದು ಮೃತಪಟ್ಟಿದ್ದಾರೆ. ಘಟನೆ ಮುಧೋಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.