ಬಡತನ ಮತ್ತು ಅಜ್ಞಾನ ಇವೆರಡೂ ಪರಸ್ಪರ ಪೂರಕ. ಇವೆರಡೇ ಶೂದ್ರಾದಿ ದಲಿತರ ವೈರಿಗಳು. ಇವುಗಳನ್ನು ಶತಾಯಗತಾಯ ಖಾಯಂಗೊಳಿಸುವುದೇ ಸನಾತನಿ ಕಾರ್ಪೊರೇಟ್ಗಳ ಗುರಿ. ಇಂಥ ಗುರಿ ಸಾಧನೆಯ ಒಂದು ಕ್ಷುದ್ರ ನಮೂನೆಯೇ ಅಶ್ಲೀಲ ಪೋಸ್ಟ್. ದುರಂತವೆಂದರೆ ಈಗ ಶಿಕ್ಷೆ ಪೋಸ್ಟ್ ಮಾಡಿದ ವ್ಯಕ್ತಿಗೆ ಆಗಬಹುದು ಆಥವಾ ಆಗಲಿಕ್ಕಿಲ್ಲ. ಆದರೆ ಅದನ್ನು ಮಾಡಿಸಿದ ವ್ಯಕ್ತಿ-ಶಕ್ತಿಗಳು ಮಾತ್ರ ನಮ್ಮ ಕಾನೂನು ವ್ಯವಸ್ಥೆಯ ಕೈಗೆ ಸಿಗುವುದೇ ಇಲ್ಲ. ಇತ್ತೀಚೆಗೆ ಫೇಸ್ಬುಕ್ನಲ್ಲಿ ಅವಿವೇಕಿ ವ್ಯಕ್ತಿಯೊಬ್ಬ ಬಸವಣ್ಣನವರು ಮತ್ತು ಅಕ್ಕಮಹಾದೇವಿಯ ಕುರಿತು ತೀರ ಅಶ್ಲೀಲ ಭಾಷೆ ಬಳಸಿ ಬೈದು ಪೋಸ್ಟ್ ಹಾಕಿದ್ದಾನೆ. ಬಸವ ಆಭಿಮಾನಿಗಳು ದೂರು ದಾಖಲಿಸಿದ್ದಾರೆ. ಪೊಲೀಸರು ಪೋಸ್ಟ್ ಹಾಕಿದವರ ಜಾಡು ಅರಸಿ ಹೋದಾಗ ಸಿಕ್ಕಿದ್ದು ಎರಡೂ ಕಾಲಿಲ್ಲದ ತೀರ ಅಮಾಯಕ ಮೂರ್ಖನಂತೆ ಕಾಣುತ್ತಿರುವ ಒಬ್ಬ ಬಡ ಮನುಷ್ಯ. ಬಡತನವೇ ಮೈವೆತ್ತಂತಿರುವ ಆಕೃತಿ. ಸಾಮಾಜಿಕ ಎಚ್ಚರ ಅಥವಾ ಕನಿಷ್ಠ ಸಾಮಾನ್ಯ ಜ್ಞಾನವೂ ಇರದ ಅಬ್ಬೇಪಾರಿ ಎನಿಸದೆ ಇರದು. ಹೀಗಿರುವಾಗಲೂ ಆತ ಬಸವಣ್ಣ ಮತ್ತು ಅಕ್ಕಮಹಾದೇವಿಯಂಥ ಮಹಾನ್ ವ್ಯಕ್ತಿಗಳ ಕುರಿತು ಇಷ್ಟು ಬೇಜವಾಬ್ದಾರಿಯಾಗಿ ಮಾತಾಡುವ ಛಾತಿ ತೋರಿದ್ದು ಹೇಗೆ? ಬಸವಣ್ಣನವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ಘೋಷಿಸಿದ ಸಂದರ್ಭದಲ್ಲಿ, ಬಸವಾದಿ ಶರಣ ಸಂದೋಹ ಮತ್ತು ಅವರ ಕ್ರಾಂತಿಕಾರಿ ನಿಲುವುಗಳ ಬಗೆಗೆ ದೇಶವ್ಯಾಪಿ ಎಚ್ಚರ ಮೂಡುತ್ತಿರುವ ಹೊತ್ತಲ್ಲಿ ಯಾರೋ ಸಾಮಾನ್ಯ ವ್ಯಕ್ತಿಯೊಬ್ಬ ಇಷ್ಟು ಹಗುರವಾಗಿ ಮಾತಾಡುವುದು ಸಾಧ್ಯವೇ? ಇನ್ನೊಂದೆಡೆ ರಾಜ್ಯವ್ಯಾಪಿ ಬಸವ ಭಕ್ತರ ಚಟುವಟಿಕೆಗಳು ತೀವ್ರಗೊಂಡಿರುವಾಗ ಯಾರಿಗಾದರೂ ಬಸವಾದಿಗಳ ಕುರಿತು ಲಘುವಾಗಿ ಮಾತಾಡುವ ಧೈರ್ಯ ಬರಲು ಸಾಧ್ಯವಿಲ್ಲ. ಸಮಕಾಲೀನ ಸಂದರ್ಭದಲ್ಲಿ ಜನತೆಯ ಐಕಾನ್ಗಳಾಗಿರುವ ಬಸವ, ಬಾಬಾ ಸಾಹೇಬ, ಕನಕದಾಸ, ಶಿವಾಜಿ, ಮಹಾತ್ಮಾ ಫುಲೆ, ಸಾವಿತ್ರಿ ಫುಲೆ ಮುಂತಾದವರನ್ನು ಕುರಿತು ತೀರ ಲಘುವಾಗಿ ಮಾತಾಡುವ ವ್ಯಕ್ತಿ ಹುಚ್ಚನಿರಬಹುದು. ಇಲ್ಲವೇ ಆತನಿಗೆ ದೊಡ್ಡ ಹಿನ್ನೆಲೆ ಮತ್ತು ರಕ್ಷಣೆ ಇರಬಹುದು. ಇಷ್ಟಿಲ್ಲದೆ ಸಾಮಾನ್ಯ ವ್ಯಕ್ತಿಗಳು ಮಹಾನ್ ವ್ಯಕ್ತಿತ್ವಗಳ ಕುರಿತು ಬೇಕಾಬಿಟ್ಟಿ ಮಾತಾಡಲು ಸಾಧ್ಯವೇ ಇಲ್ಲ. ಬಸವಣ್ಣ ಮತ್ತು ಅಕ್ಕಮಹಾದೇವಿ ಕುರಿತು ಲಘುವಾಗಿ ಪೋಸ್ಟ್ ಹಾಕಿದ ವ್ಯಕ್ತಿ ಖಂಡಿತ ತನ್ನ ಸ್ವಯಂ ಬುದ್ಧಿಯಿಂದಾಗಲಿ, ತಾಕತ್ತಿನಿಂದಾಗಲಿ ಈ ಕೆಲಸ ಮಾಡಿರಲಿಕ್ಕಿಲ್ಲ. ಇಂಥವರ ಹಿಂದೆ ಬಹು ದೊಡ್ಡ ಕುತಂತ್ರಿಗಳು ಕೆಲಸ ಮಾಡುತ್ತಿರುತ್ತಾರೆ. ಈತ ಮೌತ್ಪೀಸ್ ಮಾತ್ರ. ಬಸವಾದಿ ಶರಣರ ತತ್ವ ಸಿದ್ಧಾಂತಗಳು ಯಾರಿಗೆ ನುಂಗಲಾರದ ತುತ್ತುಗಳಾಗಿವೆಯೋ ಅವರೇ ಈ ಕೆಲಸ ಮಾಡಲು ಹಚ್ಚಿರುತ್ತಾರೆ. ಸನಾತನಿ ಕುತಂತ್ರಿಗಳು ಯಾವತ್ತೂ ಮುಖ ಕೊಟ್ಟು ದಾಳಿ ಮಾಡಿದವರಲ್ಲ. ಅವರದೇನಿದ್ದರೂ ತೆರೆ ಮರೆಯ ತಂತ್ರ, ಮೋಸ. ಒಬಿಸಿ, ದಲಿತಾದಿ ಬಡ ಮುಗ್ಧರೇ ಅವರ ಕೈಯಲ್ಲಿನ ಲಾಠಿ. ಬಸವಾದಿಗಳ ಬಗೆಗೆ ಜನಮಾನಸದಲ್ಲಿ ಅಭಿಮಾನ ಹೆಚ್ಚುತ್ತಿರುವುದು ಕೆಲವರಿಗೆ ಸಹಿಸಿಕೊಳ್ಳಲಾಗುತ್ತಿಲ್ಲ. ವಿಶೇಷವಾಗಿ ಉಗ್ರ ಸನಾತನಿಗಳಿಗೆ 12ನೇ ಶತಮಾನದ ಕಾಯಕ ಜೀವಿಗಳ ಚಳವಳಿಯು ನುಂಗಲಾರದ ತುತ್ತಾಗಿದೆ. ಕಾರಣ ಶರಣರು ವರ್ಣಾಶ್ರಮ ವೈದಿಕ ಪಂಥದಲ್ಲಿನ ಹುಳುಕು-ಕೊಳಕುಗಳನ್ನು ಸಾಧಾರವಾಗಿ ಖಂಡಿಸಿದ್ದಾರೆ. ಈವರಗೆ ಸನಾತನಿಗಳು ಜನಸಾಮಾನ್ಯರಲ್ಲಿ ಧರ್ಮ ಮತ್ತು ದೇವರುಗಳ ಬಗೆಗೆ ಇನ್ನಿಲ್ಲದೆ ಭಯ ಮತ್ತು ಪಾಪಪ್ರಜ್ಞೆಯನ್ನು ತುಂಬಿ ಆಳುತ್ತಿದ್ದರಷ್ಟೆ. ಮನುಷ್ಯರಲ್ಲಿ ಇಲ್ಲದ ಭೇದಗಳನ್ನು ಸೃಷ್ಟಿಸಿ ಇತರರ ದುಡಿಮೆಯ ಮೇಲೆ ಕುಳಿತು ತಿನ್ನುವ ವರ್ಗವೊಂದು ತನ್ನ ಹಿತಾಸಕ್ತಿಯನ್ನು ಕಾಪಾಡಿಕೊಳ್ಳಲೆಂದು ಕರ್ಮಸಿದ್ಧಾಂತವೆಂಬ ಅತ್ಯಂತ ಅಮಾನವೀಯ ತತ್ವವೊಂದನ್ನು ಬಿತ್ತಿ ಬೆಳೆದಿತ್ತು. ಇದರನ್ವಯ ಭೂಮಿಯಲ್ಲಿ ಘಟಿಸುವ ಪ್ರತಿಯೊಂದು ವಿದ್ಯಮಾನಕ್ಕೆ ಕಾಣದ ಪಾಪ, ಪುಣ್ಯಗಳೇ ಕಾರಣ ಎಂಬ ಕಥೆ ಕಟ್ಟಿ ಶ್ರಮಿಕ ವರ್ಗ ಉಳ್ಳವರ ವಿರುದ್ಧ ತಲೆ ಎತ್ತದಂತೆ ಮಾಡಿತ್ತು. ವೈದಿಕರ ಈ ಸ್ವಕಪೋಲ ಕಲ್ಪಿತ ಕಥನಗಳನ್ನು ಬುದ್ಧ, ಮಹಾವೀರಾದಿಗಳು ನಿರಾಕರಿಸಿದ್ದರು. ಅವರು ದೇವರೆಂಬ ಕಲ್ಪಿತ ವಾಸ್ತವಗಳ ಹಿಂದಿನ ಪೊಳ್ಳುತನವನ್ನು ಎತ್ತಿ ತೋರಿಸಿ ಮನುಷ್ಯರು ತಮ್ಮ ಪ್ರಜ್ಞೆಯನ್ನು ಮಾತ್ರ ನೆಚ್ಚಬೇಕೆಂದು ಹೇಳಿದ್ದರು. ಇದು ವೈದಿಕ ಮತದ ಮೇಲಿನ ದಾಳಿಯಾಗಿತ್ತಾದರೂ ಪರಮ ಸ್ವಾರ್ಥಿಗಳಾದ ವೈದಿಕರು ತಮ್ಮ ದುಷ್ಟ ಕಾರ್ಯಾಚರಣೆ ಬಳಸಿ ಬೌದ್ಧಾದಿ, ಲೋಕಾಯತಗಳನ್ನು ಭಾರತದಿಂದಲೇ ಹೊಡೆದೋಡಿಸುವ ದುಷ್ಟತನ ಮೆರೆದಿದ್ದರು. ತರುವಾಯದಲ್ಲಿ ತಮನ್ನು ತಾತ್ವಿಕವಾಗಿ ಇದಿರಿಸುವವರೇ ಇಲ್ಲ ಎಂದು ಬೀಗುತ್ತಿರುವ ಸಂದರ್ಭದಲ್ಲಿ ಕನ್ನಡ ನಾಡಿನಲ್ಲಿ ಶರಣ ಚಳವಳಿ ತಲೆ ಎತ್ತಿ ವೈದಿಕ ತತ್ವ ಪ್ರಣಾಲಿಯಲ್ಲಿನ ಅಪಸವ್ಯಗಳನ್ನು ತೆರೆದು ತೋರಿ ಜನತೆ ಅವುಗಳ ಕಪಿಮುಷ್ಟಿಯಿಂದ ತಪ್ಪಿಸಿಕೊಳ್ಳುವಂತೆ ಮಾಡಿದರು. ವೈದಿಕರು ಕಾಲಕಾಲಕ್ಕೂ ನಡೆಸಿದ ಕುತಂತ್ರಗಳನ್ನು ಅರಿತಿದ್ದ ಬಸವಾದಿಗಳು ಅವರ ಮೂಗು ಹಿಡಿದೇ ನವೀನ ತತ್ವಪ್ರಣಾಲಿಯೊಂದನ್ನು ಆವಿಷ್ಕರಿಸಿದರು. ವೈದಿಕರ ಕರ್ಮ ಸಿದ್ಧಾಂತವು ದೇವರೆಂಬ ಕಲ್ಪಿತ ವಾಸ್ತವದ ಸುತ್ತಲೇ ಗಿರಿಕಿ ಹೊಡೆಯುತ್ತಿರುವುದನ್ನು ಗಮನಿಸಿಯೇ ಸಾಮಾನ್ಯ ಜನತೆಯಲ್ಲಿ ಮನೆ ಮಾಡಿಕೊಂಡಿದ್ದ ದೈವಭೀತಿ, ಬದುಕಿನ ಅನಿವಾರ್ಯತೆಗಳು, ನಿಸರ್ಗದ ಇದುರಿನ ಅಸಹಾಯಕತೆ ಮುಂತಾಗಿ ಎಲ್ಲವನ್ನು ಆಳವಾಗಿ ನಿರೀಕ್ಷಿಸಿದ ಅವರು ಜನತೆಯ ನಂಬುಗೆಗಳಿಗೆ ಘಾಸಿಯಾಗದಂತೆ ಆದರೆ ಅದರಲ್ಲಿನ ಪೊಳ್ಳುತನದ ಬಗೆಗೆ ಎಚ್ಚರ ಮೂಡುವಂತೆ ನೋಡಿಕೊಂಡರು. ದೇವರ ನಂಬಿಕೆಗಳನ್ನು ನಿರಾಕರಿಸದೆ ‘‘ದೇಹವೇ ದೇವಾಲಯ, ಒಳಗಿರುವ ಚೈತನ್ಯವೇ ದೇವರು. ಆದ್ದರಿಂದ ದೇವಸ್ಥಾನಗಳ ಅವಶ್ಯಕತೆ ಇಲ್ಲ’’ ಎಂದು ಸಾರಿದರು. ಶರಣರು ದೇವರಿಲ್ಲ ಎಂದು ಹೇಳಿ ಜನರನ್ನು ಸಂಭ್ರಾತಗೊಳಿಸುವ ಬದಲು ದೇವರು ದೇವಸ್ಥಾನಗಳಲ್ಲಿ ಇಲ್ಲ. ನಿಮ್ಮ ಅಂಗೈಯಲ್ಲಿನ ಇಷ್ಟಲಿಂಗವೆಂಬ ಸಂಕೇತದಲ್ಲಿಯೇ ದೇವರನ್ನು ಕಾಣಬಹುದು ಎಂದರು. ಏನೆಲ್ಲ ಜಪ, ತಪ, ಪ್ರಾರ್ಥನೆ, ಪೂಜೆ ಮಾಡಿದರೂ ದೇವಸ್ಥಾನಗಳಲ್ಲಿ ಪ್ರವೇಶವಿಲ್ಲದ ಅಸಂಖ್ಯಾತ ಶೂದ್ರ, ದಲಿತ ಮತ್ತು ಮಹಿಳೆಯರಿಗೆ ನೀಡಿದ ಈ ಧಾರ್ಮಿಕ ಸ್ವಾತಂತ್ರ್ಯ ಕನ್ನಡ ನಾಡವರ ಬದುಕಿನಲ್ಲಿ ಉತ್ಕ್ರಾಂತಿಯನ್ನೇ ಉಂಟು ಮಾಡಿತು. ಪ್ರವೇಶ ನಿಷಿದ್ಧವಾಗಿದ್ದ ದೇವಸ್ಥಾನಗಳ ಹಂಗು ಹರಿದುಕೊಂಡ ಜನತೆ ದೇವಾಲಯಗಳತ್ತ ಮುಖ ಮಾಡುವುದನ್ನು ಬಿಟ್ಟರು. ಇದು ಸನಾತನಿಗಳ ಆದಾಯಕ್ಕೆ ಕುತ್ತು ತಂದಿತು. ಇಷ್ಟು ಮಾತ್ರವಲ್ಲದೆ ಬಸವಾದಿಗಳು ವೈದಿಕರ ಇನ್ನೊಂದು ಆದಾಯ ಮೂಲವಾಗಿದ್ದ ಕರ್ಮ ಸಿದ್ಧಾಂತದ ಬೇರನ್ನೇ ಕಡಿದು ಹಾಕಿದರು. ‘ ‘ಸುಖ ಬಂದಡೆ ಪುಣ್ಯದ ಫಲವೆನ್ನೆನು ದುಃಖ ಬಂದಡೆ ಪಾಪದ ಫಲವೆನ್ನೆನು ನೀ ಮಾಡಿದಡಾಯಿತ್ತೆಂದೆನ್ನೆನು ಕರ್ಮಕ್ಕೆ ಕರ್ತುವೆ ಕಡೆಯೆಂದೆನ್ನೆನು. ಉದಾಸೀನವಿಡಿದು ಶರಣೆನ್ನೆನು. ಕೂಡಲಸಂಗಮದೇವಾ ನೀ ಮಾಡಿದುಪದೇಶವು ಎನಗೀ ಪರಿಯಲ್ಲಿ ಸಂಸಾರವ ಸವೆಯೆ ಬಳಸುವೆನು.’’ ಸುಖ, ದುಃಖಗಳೆಲ್ಲ ಪೂರ್ವ ನಿಯೋಜಿತ. ಇವೆಲ್ಲವು ಹಿಂದಿನ ಜನ್ಮದಲ್ಲಿ ಮಾಡಿದ ಕರ್ಮಗಳ ಫಲ. ಮನುಷ್ಯರು ಮಾಡುವುದು ಏನೂ ಇಲ್ಲ. ಅದೆಲ್ಲವೂ ದೈವೇಚ್ಛೆ. ‘‘ತೇ ನ ವಿನಾ ತೃಣಮಪಿ ನ ಚಲತಿ’’ ಅಂದರೆ ಅವನಿಚ್ಛೆ ಇಲ್ಲದೆ ಇಲ್ಲಿ ಹುಲ್ಲು ಕಡ್ಡಿಯೂ ಅಲುಗಾಡುವುದಿಲ್ಲ ಎಂಬ ಉಕ್ತಿಗಳೇ ಅನುಲಂಘನೀಯ ತತ್ವಗಳಾಗಿ ವೈದಿಕ ಸಾಹಿತ್ಯದಲ್ಲಿ ರಾರಾಜಿಸಿದ್ದವು. ವೇದಾಗಮಗಳಲ್ಲಿ ಉವಾಚಿಸಲಾಗಿದ್ದ ಇವುಗಳು ಪ್ರಶ್ನಾತೀತವೆಂದು, ಇವುಗಳಲ್ಲಿನ ಅತಾರ್ಕಿಕತೆಯನ್ನು ಪ್ರಶ್ನಿಸಿದವರನ್ನು ನಿರ್ದಯವಾಗಿ ದಂಡಿಸಲಾಗುತ್ತಿತ್ತು. ದೇವರ ಬಗೆಗೆ ಭಕ್ತಿಗಿಂತ ಭಯವೇ ಹೆಚ್ಚು ಕಾಡುತ್ತಿದ್ದ ಹೊತ್ತಲ್ಲಿ ಬಸವಣ್ಣನವರು ಜನರಲ್ಲಿ ಮನೆ ಮಾಡಿಸಲಾಗಿದ್ದ ಈ ಅಕಾರಣ ಭಯವನ್ನು ಮೂಲೋತ್ಪಾಟನೆ ಮಾಡಿದರು. ಸುಖ, ದುಃಖಗಳೆಲ್ಲ ಯಾವುದೋ ಕಾಣದ ಜನ್ಮದಲ್ಲಿನ ಕಾರ್ಯಗಳ ಫಲವಲ್ಲ. ಕಾಣದ ಕೈಗಳ ಭಿಕ್ಷೆಯೂ ಅಲ್ಲ ಎಂಬುದನ್ನು ಸ್ಪಷ್ಟ ಪಡಿಸಿದರು. ವಾಸ್ತವ ಬದುಕಿನಲ್ಲಿರುವ ಸಂಕಟ, ತರತಮಗಳಿಗೆ ವ್ಯವಸ್ಥೆಯಲ್ಲಿನ ದೋಷಗಳು ಮತ್ತು ಉಳ್ಳವರ ದರ್ಪ, ದಬ್ಬಾಳಿಕೆಗಳೇ ಕಾರಣ. ಕಾಣದ ದೈವಕ್ಕೆ ಹೆದರಬೇಕಿಲ್ಲ. ಕಾಣುವ ಮನುಷ್ಯರ ನೋವು ನಲಿವುಗಳನ್ನು ಅರ್ಥ ಮಾಡಿಕೊಳ್ಳಲು ದಯಾರ್ದತೆ ಬೇಕು. ಇದನ್ನೇ ತಥಾಗತ ಬುದ್ಧಗುರು ಕರುಣಾ ಮೈತ್ರಿ ಭಾವದಲ್ಲಿ ಬದುಕನ್ನು ಇದಿರುಗೊಳ್ಳಬೇಕು ಎಂದನು. ಹೀಗಾಗಿಯೇ ಬಸವ ಬುದ್ಧಾದಿಗಳು ದೈವ ಭಂಜಕ, ವೇದ ಭಂಜಕರೆಂಬ ಬಿರುದಿಗೆ ಪಾತ್ರರಾದರು. ಒಂದೆರಡು ಪುಸ್ತಕಗಳಿಂದಲೇ ಇಡೀ ಮಾನವ ಕುಲಕೋಟಿಯನ್ನು ಹೆದರಿಸುತ್ತಿದ್ದ ಸನಾತನಿಗಳ ಒಳಗುಟ್ಟನ್ನು ಬಯಲಿಗೆಳೆದ ಶರಣರು ಅವುಗಳ ಪೊಳ್ಳುತನವನ್ನು ಎಗ್ಗಿಲ್ಲದೆ ಖಂಡಿಸಿದರು. ‘‘ವೇದದಂತುಟಲ್ಲ, ಶಾಸ್ತ್ರದಂತುಟಲ್ಲ ಗೀತ ಮಾತಿನಂತುಟಲ್ಲ ಕೇಳಯಾ’ ಮಾತಿನ ಮಾತಿನ ಕವುಳಗೋಲ ಶ್ರವದಲ್ಲಿ ಸತ್ತವರೊಳರೆ ಅಯ್ಯಾ ದಿಟದಲಗಿನ ಕಾಳೆಗವಿತ್ತಲಿದ್ದುದೆ ಕೂಡಲಸಂಗನ ಶರಣರು ಬಂದಲ್ಲಿ’’. ಬದುಕು ವೇದ, ಶಾಸ್ತ್ರದಲ್ಲಿ ಅಥವಾ ಭಗವದ್ಗೀತೆಯಲ್ಲಿ ಹೇಳಿದಂತೆ ಇಲ್ಲ. ವಾಸ್ತವ ಜೀವನವೇ ಬೇರೆ. ವೇದಾದಿಗಳು ಬೋಧಿಸುತ್ತಿರುವ ಪೊಳ್ಳು ಭರವಸೆಗಳು, ಸುಳ್ಳು ಆಚರಣೆಗಳಲ್ಲಿ ಸತ್ಯಾಂಶವಿಲ್ಲ. ಅಲ್ಲಿರುವುದೆಲ್ಲ ತಥಾಕಥಿತ ಪ್ರಸಂಗಗಳೇ ಹೊರತು ನೈಜ ಜೀವನಾನುಭಾವಗಳಲ್ಲ. ಮಾತಿನಲ್ಲಿಯೇ ದೊಣ್ಣೆ ತಿರುವಿದರೆ ಯುದ್ಧದಲ್ಲಿ ಗೆಲ್ಲಲಾಗದು. ಮಾತಿನ ಮಂಟಪದಿಂದ ಏನನ್ನು ಕಟ್ಟಲಾಗದು. ನಿಜವಾದ ಖಡ್ಗ ಹಿಡಿದು ರಣರಂಗಕ್ಕೆ ಇಳಿಯುವ ಯೋಧನ ಅನುಭವವೇ ಬೇರೆ. ದಿಟದ ಕಾಳಗ ಮಾಡದ ಉತ್ತರ ಕುಮಾರ ಮಾತಿನಲ್ಲಿ ಶಸ್ತ್ರಾಸ್ತ್ರಗಳನ್ನು ತಿರುವಿ ತಾನು ಗೆದ್ದೆ ಎಂದು ಬೀಗಿದಂತೆ ಅದೊಂದು ಅಭಾಸ ಅಷ್ಟೆ. ಅನುಭಾವವೆಂಬ ಖಡ್ಗವನ್ನು ಹಿಡಿದು ನಡೆಸುವ ವಾಸ್ತವ ಬದುಕಿನ ಯುದ್ಧವಿದೆಯಲ್ಲ ಅದನ್ನು ಶರಣರು ಗೆದ್ದರು ಎನ್ನುತ್ತಾರೆ ಅಣ್ಣ. ಕೂದಲು ಸೀಳುವ ವಾಗ್ವಾದಗಳಿಂದ ಹೊಟ್ಟೆ ತುಂಬುವುದಿಲ್ಲ. ಹೊಟ್ಟೆ ತುಂಬಿದವರು ಗಳಹುವ ವೇದಾಂತಗಳಿಂದ ನಿಸರ್ಗಕ್ಕೂ ಸಮಾಜಕ್ಕೂ ಆಗಬೇಕಾದದ್ದು ಏನೂ ಇಲ್ಲ. ವೈದಿಕರು ಅಗ್ನಿಯನ್ನು ದೈವವೆಂದು ಪೂಜಿಸುತ್ತಾರಷ್ಟೆ. ಹೋಮ, ಹವನಗಳ ಮೂಲಕ ಉತ್ತಮಾದಿ ವಸ್ತುಗಳನ್ನೆಲ್ಲ ಬೆಂಕಿಗೆ ಆಹುತಿ ನೀಡಿ ದೇವರು ಸಂಪ್ರೀತನಾಗುತ್ತಾನೆಂದು ಭ್ರಮಿಸುವವರ ಕಂಡು ಬಸವಣ್ಣ ಹೇಳುವುದು: ‘‘ಕಿಚ್ಚು ದೈವವೆಂದು ಹವಿಯನ್ನಿಕ್ಕುವ ಹಾರುವರ ಮನೆಯಲ್ಲಿ ಕಿಚ್ಚೆದ್ದು ಸುಡುವಾಗ ಬಚ್ಚಲ ನೀರ, ಬೀದಿಯ ಧೂಳ ಹೊಯ್ದು ಬೊಬ್ಬಿಟ್ಟೆಲ್ಲರ ಕರೆವರಯ್ಯಾ ಕೂಡಲಸಂಗಮದೇವಾ, ವಂದನೆಯ ಮರೆತು ನಿಂದಿಸುತ್ತಿದ್ದರಯ್ಯಾ.’’ ಪ್ರಾಯಶಃ ವೈದಿಕರ ಯಾಗ ಯಜ್ಞಗಳನ್ನು ಇಷ್ಟು ಉಡಾಫೆಯಾಗಿ ಖಂಡಿಸಿದವರು ಇತಿಹಾಸದಲ್ಲಿ ಇನ್ನೊಬ್ಬರು ಇರಲಿಕ್ಕಿಲ್ಲ. ವೈದಿಕರ ಆಚರಣೆಗಳು ಅವರ ತಾತ್ವಿಕ ಭ್ರಷ್ಟತೆ, ಪೊಳ್ಳು ವಾಗ್ವಾಡಂಬರಗಳನ್ನು ಬಸವಾದಿಗಳಷ್ಟು ಉಗ್ರವಾಗಿ ಖಂಡಿಸಿದವರು ಕಾಣ ಸಿಗರು. ಸಹಜವಾಗಿಯೇ ವೈದಿಕರಿಗೆ ಇದು ಆಕ್ರೋಶ ಹುಟ್ಟಿಸುತ್ತದೆಯಷ್ಟೆ. ಈವರೆಗೆ ತಮ್ಮ ಜನವಿರೋಧಿ ಆಚರಣೆಗಳೇ ಸರ್ವ ಶ್ರೇಷ್ಠ ಎಂದು ನಂಬಿಸಿಕೊಂಡು ಬಂದಿದ್ದ ಸನಾತನಿಗಳಿಗೆ ಶರಣರ ಇಂಥ ವಚನಗಳು ಹೋಮದಲ್ಲಿನ ಬೆಂಕಿ ಮೈಗೆ ಹತ್ತಿದಂತೆ ನಖಶಿಖಾಂತ ಉರಿಯತೊಡಗಿತು. ಬಸವಣ್ಣನವರ ನೇತೃತ್ವದಲ್ಲಿ ಮೊದಲ ಬಾರಿಗೆ ದಲಿತಾದಿ ಶೂದ್ರರು ವೈದಿಕರ ವಿರುದ್ಧ ಎಗ್ಗಿಲ್ಲದೆ ತಿರುಗಿ ಬಿದ್ದು ಅವರ ಶಾಸ್ತ್ರ, ಪುರಾಣಗಳನ್ನು ಗೇಲಿಗೆಬ್ಬಿಸಿದ್ದು ಅವರನ್ನು ರೊಚ್ಚಿಗೆಬ್ಬಿಸಿತ್ತು. ವಚನ ಚಳವಳಿಯ ತರುವಾಯ ಕರ್ನಾಟಕದಲ್ಲಿ ವೈದಿಕರಿಗೆ ದೊಡ್ಡ ಮಟ್ಟದ ಹಿನ್ನೆಡೆಯುಂಟಾಯಿತು. ಹೀಗೆಂದೇ ಅವರು ಬಸವಾದಿಗಳ ವಿರುದ್ಧ ಆ ಕಾಲಘಟ್ಟದಲ್ಲಿ ದೊಂಬಿಗೈದರು. ಅವರು ರಚಿಸಿದ ವಚನ ಭಂಡಾರವನ್ನು ನಿರ್ನಾಮಿಸುವ ಎಲ್ಲ ಉಪದ್ವಾಪಗಳನ್ನು ಮಾಡಿದರು. ನೂರಾರು ಶರಣರ ಕಗ್ಗೊಲೆ ಮಾಡಿದ್ದು ಈಗ ಇತಿಹಾಸದ ಸಂಗತಿ. ಆದರೆ ಇಷ್ಟಕ್ಕೆ ವೈದಿಕರ ಕಾರ್ಯಾಚರಣೆ ನಿಲ್ಲಲಿಲ್ಲ. ಅವಕಾಶ ಸಿಕ್ಕಾಗಲೆಲ್ಲ ಬಸವಾದಿ ವಚನಕಾರರ ಕುರಿತು ಅವಹೇಳನ, ಆಪೋಷಣೆ, ಅನಾಚಾರ ಮಾಡುತ್ತಲೇ ಬಂದಿದ್ದಾರೆ. ಅನೇಕ ಬಸವತತ್ವ ವಿರೋಧಿ ಕಾವ್ಯಗಳನ್ನು ಬರೆದದ್ದೂ ಇದೆ. ಅದರ ಮುಂದುವರಿಕೆಯಾಗಿ ಈಗ ಬಸವಣ್ಣ ಮತ್ತು ಅವರ ಸಮಕಾಲೀನರನ್ನು ಹೀಗಳೆಯುವ ಕೆಲಸ ಮಾಡುತ್ತಿದ್ದಾರೆ. ವೈದಿಕರು ತಮಗಾಗದ ತತ್ವ-ಸಿದ್ಧಾಂತಗಳ ಮೇಲೆ ಎರಗುವುದು ಹೊಸದೇನೂ ಅಲ್ಲ. ಈಗ ಅವರು ಬಸವಾದಿ ಶರಣರ ಮೇಲೆ ಹಲವು ಮಗ್ಗಲುಗಳಿಂದ ಹಲ್ಲೆಗಿಳಿದಿದ್ದಾರೆ. ಒಂದೆಡೆ ‘‘ಸಂಶೋಧನೆ ಹೆಸರಲ್ಲಿ ಬಸವಾದಿಗಳು ಸಾಮಾಜಿಕ ಚಳವಳಿ ಮಾಡಲಿಲ್ಲ. ಅವರೊಬ್ಬ ಉನ್ನತ ದಾರ್ಶನಿಕರು. ಆತ್ಮ ಸಾಕ್ಷಾತ್ಕಾರ ಮಾಡಿಕೊಳ್ಳುವುದೇ ಅವರ ಮೂಲ ಗುರಿಯಾಗಿತ್ತು. ವೇದೋಪನಿಷತ್ತುಗಳಲ್ಲಿನ ತತ್ವಗಳನ್ನೇ ಅವರು ಕನ್ನಡದಲ್ಲಿ ವಚನಗಳಾಗಿ ಕಟ್ಟಿಕೊಟ್ಟಿದ್ದಾರೆ’’ ಎಂದು ವೈಭವೀಕರಿಸುತ್ತ ವಚನ ಸಿದ್ಧಾಂತದ ಮೂಲ ಆಶಯವಾಗಿದ್ದ ಕಾಯಕ-ದಾಸೋಹ-ಇಷ್ಟಲಿಂಗ ಇತ್ಯಾದಿ ವೈದಿಕ ವಿರೋಧಿ ನೆಲೆಗಳನ್ನು ಮರೆಯಾಗಿಸುತ್ತಾರೆ. ಇನ್ನೊಂದೆಡೆ ಸುಳ್ಳು ವಚನಗಳನ್ನು ಸೃಷ್ಟಿಸಿ ಅವರು ಹೇಳದೆ ಇರುವುದನ್ನು ಹೇಳಿರುವಂತೆ ಬಿಂಬಿಸುತ್ತಾರೆ. ಅವರದೇ ಇನ್ನೊಂದು ಗಾಂಪರ ಗುಂಪಿನಿಂದ ಬೈಗಳ ಸುರಿಮಳೆಯಾಗುತ್ತದೆ. ಬಯ್ದವನಿಗೆ ತಾನು ಯಾಕಾಗಿ ಇಂಥವರನ್ನು ಹೀಗಳೆಯುತ್ತಿದ್ದೇನೆ ಎಂಬ ಅರಿವು ಇರದಂತೆ ನೋಡಿಕೊಳ್ಳುತ್ತಾರೆ. ಎಂ.ಎಂ. ಕಲಬುರ್ಗಿ, ಗೌರಿ ಲಂಕೇಶರನ್ನು ಹತ್ಯೆಗೈದ ಮತಾಂಧರಿಗೆ ತಾವು ಯಾಕಾಗಿ ಇವರನ್ನು ಹೊಡೆಯುತ್ತಿದ್ದೇವೆ ಎಂಬ ಕನಿಷ್ಠ ಪರಿಜ್ಞಾನವೂ ಇರಲಿಲ್ಲ ಎಂಬುದು ಅವರ ಹೇಳಿಕೆಗಳಿಂದ ಕಂಡಿದ್ದೇವೆ. ಸನಾತನ ಧರ್ಮದ ಉಳಿವಿಗಾಗಿ ತಾವು ಧರ್ಮದ್ರೋಹಿಗಳನ್ನು ಹೊಡೆಯುತ್ತಿದ್ದೇವೆ ಎಂಬ ನಂಬಿಕೆ ಮಾತ್ರವಿರುತ್ತದೆ. ಅಸಲಿಗೆ ಅವರಿಗೆ ಸನಾತನ ಧರ್ಮ ಎಂದರೇನು? ಅಲ್ಲೇನಿದೆ? ಅದನ್ನು ಪ್ರಮೋಟ್ ಮಾಡುತ್ತಿರುವವರು ಯಾರು ಮತ್ತು ಯಾತಕ್ಕಾಗಿ? ಎಂಬ ಯಾವ ವಿಷಯಗಳು ತಿಳಿದಿರುವುದಿಲ್ಲ. ಇಂಥ ಮೂರ್ಖ ಚಟುವಟಿಕೆಗಳಲ್ಲಿ ಶೂದ್ರಾದಿಗಳನ್ನೇ ತೊಡಗಿಸಲಾಗುತ್ತದೆ. ಬಡತನ ಮತ್ತು ಅಜ್ಞಾನ ಇವೆರಡೂ ಪರಸ್ಪರ ಪೂರಕ. ಇವೆರಡೇ ಶೂದ್ರಾದಿ ದಲಿತರ ವೈರಿಗಳು. ಇವುಗಳನ್ನು ಶತಾಯಗತಾಯ ಖಾಯಂಗೊಳಿಸುವುದೇ ಸನಾತನಿ ಕಾರ್ಪೊರೇಟ್ಗಳ ಗುರಿ. ಇಂಥ ಗುರಿ ಸಾಧನೆಯ ಒಂದು ಕ್ಷುದ್ರ ನಮೂನೆಯೇ ಅಶ್ಲೀಲ ಪೋಸ್ಟ್. ದುರಂತವೆಂದರೆ ಈಗ ಶಿಕ್ಷೆ ಪೋಸ್ಟ್ ಮಾಡಿದ ವ್ಯಕ್ತಿಗೆ ಆಗಬಹುದು ಆಥವಾ ಆಗಲಿಕ್ಕಿಲ್ಲ. ಆದರೆ ಅದನ್ನು ಮಾಡಿಸಿದ ವ್ಯಕ್ತಿ-ಶಕ್ತಿಗಳು ಮಾತ್ರ ನಮ್ಮ ಕಾನೂನು ವ್ಯವಸ್ಥೆಯ ಕೈಗೆ ಸಿಗುವುದೇ ಇಲ್ಲ. ಬಸವಾದಿ ಶರಣರು ಕುರಿತು ಕೀಳು ಮಟ್ಟದ ಸಂವಾದವೊಂದು ಎಲ್ಲಿಯೋ ನಡೆಯುತ್ತಿದೆ ಎಂದೇ ಅರ್ಥ. ಬೆಂಕಿ ಇಲ್ಲದೆ ಹೊಗೆ ಏಳದು.
ಅಮೆರಿಕ ಮಿತ್ರ ದೇಶಗಳ ನೆರವು ಕೇಳಿದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಹಿನ್ನಡೆ | Donald Trump
ಅಮೆರಿಕ ಎಂಬ ದೊಡ್ಡ ದೇಶಕ್ಕೆ ಒಂದಾದ ನಂತರ ಒಂದು ದೊಡ್ಡ ಹಿನ್ನಡೆ ಎದುರಾಗುತ್ತಿದ್ದು, ಈ ಪೈಕಿ ಮಧ್ಯಪ್ರಾಚ್ಯ ಭಾಗದಲ್ಲಿ ದೊಡ್ಡ ಮಟ್ಟಿಗೆ ಸೇನಾ ಕಾರ್ಯಾಚರಣೆ ಶುರು ಮಾಡಿದ್ದ ಅಮೆರಿಕ ಈಗ ನರಳುವಂತೆ ಆಗಿದೆ. ಹೇಗಾದರೂ ಮಾಡಿ ಇರಾನ್ ಎಂಬ ದೇಶವನ್ನ ಸೋಲಿಸಿ, ಮಧ್ಯಪ್ರಾಚ್ಯ ಭಾಗದ ತಮ್ಮ ಶತ್ರುಗಳ ಹುಟ್ಟಡಗಿಸಿ ಪವರ್ ತಮ್ಮ ಕೈಗೆ ತೆಗೆದುಕೊಳ್ಳಬೇಕು ಎಂಬ ಅಮೆರಿಕ
Sindhanur | ಲಾರಿ-ಹಾಲಿನ ಟ್ಯಾಂಕರ್ ನಡುವೆ ಮುಖಾಮುಖಿ ಢಿಕ್ಕಿ; ಓರ್ವ ಮೃತ್ಯು, ಹಲವರಿಗೆ ಗಾಯ
ಸಿಂಧನೂರು : ತಾಲ್ಲೂಕಿನ ಹಂಚಿನಾಳ ಕ್ಯಾಂಪ್ ಬಳಿ ಮಂಗಳವಾರ ಬೆಳಗ್ಗೆ ಲಾರಿ ಮತ್ತು ಹಾಲಿನ ಟ್ಯಾಂಕರ್ ನಡುವೆ ಮುಖಾಮುಖಿ ಢಿಕ್ಕಿ ಸಂಭವಿಸಿದ್ದು, ಲಾರಿ ಚಾಲಕ ಸಾವನ್ನಪ್ಪಿದರೆ, ಹಾಲಿನ ಟ್ಯಾಂಕರ್ ಚಾಲಕನ ಸ್ಥಿತಿ ಗಂಭೀರವಾಗಿದ್ದು, ಹಲವರಿಗೆ ಗಾಯಗಳಾಗಿವೆ. ಗೊಬ್ಬರ ತುಂಬಿದ ಲಾರಿಯ ಚಾಲಕ ರಾಯಚೂರಿನ ಸಿಯಾತಲಾಬ್ ನ ನಿವಾಸಿ ಶೇಖ್ ಅಬ್ದುಲ್ಲಾ (23) ಮೃತ ವ್ಯಕ್ತಿ. ಹಾಲಿನ ಟ್ಯಾಂಕರ್ ಚಾಲಕ ಶ್ರೀಕಾಂತ ಎನ್ನುವವನ ಸ್ಥಿತಿ ಗಂಭೀರವಾಗಿದ್ದು, ಇಸಾಕ್ ಹಾಗೂ ರಾಜಾಸಾಬ್ ಎಂಬವರಿಗೆ ಗಾಯಗಳಾಗಿವೆ. ಗೊಬ್ಬರ ತುಂಬಿದ ಲಾರಿ ಸಿಂಧನೂರಿನಿಂದ ಕಾರಟಗಿ ಕಡೆಗೆ ಹೊರಟಿದ್ದು, ಹಾಲಿನ ಟ್ಯಾಂಕರ್ ಕಾರಟಗಿಯಿಂದ ಸಿಂಧನೂರಿನ ಕಡೆಗೆ ಬರುವಾಗ ಮುಖಾಮುಖಿ ಢಿಕ್ಕಿ ಸಂಭವಿಸಿದೆ. ಇದೇ ಸಂದರ್ಭದಲ್ಲಿ ಹಿಂಬದಿಯಿಂದ ಬಂದ ಬೈಕ್, ಲಾರಿಗೆ ಢಿಕ್ಕಿ ಹೊಡೆದಿದ್ದು, ಬೈಕ್ ನಲ್ಲಿದ್ದ ಕಾರಟಗಿ ತಾಲ್ಲೂಕಿನ ಗುಂಡೂರು ಗ್ರಾಮದ ಆಂಜನೇಯ, ವಿರೂಪಾಕ್ಷಿ ಮತ್ತು ಕರಿಬಸ್ಸಪ್ಪ ಎಂಬವರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ ಎನ್ನಲಾಗಿದೆ. ಘಟನೆಯ ತೀವ್ರತೆಗೆ ಲಾರಿ, ಹಾಲಿನ ಟ್ಯಾಂಕ್ ಮತ್ತು ಬೈಕ್ ನಜ್ಜುಗುಜ್ಜಾಗಿದ್ದು, ಗಾಯಾಳುಗಳನ್ನು ನಗರದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ಹಿನ್ನಲೆ ಕೆಲ ಕಾಲ ಸಂಚಾರಿ ಸಮಸ್ಯೆ ಎದುರಾಯಿತು. ಡಿವೈಎಸ್ಪಿ ಚಂದ್ರಶೇಖರ, ಗ್ರಾಮೀಣ ಸಿಪಿಐ ವಿನಾಯಕ, ಪಿಎಸ್ಐ ಮೌನೇಶ ಅವರು ಘಟನಾ ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದರು. ಈ ಕುರಿತು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ಕಾಂಗ್ರೆಸ್ ಪಕ್ಷದ ವಿರುದ್ಧ ಮಾನಹಾನಿ ಪ್ರಕರಣ | ಅರ್ನಾಬ್ ಗೋಸ್ವಾಮಿಗೆ ನೋಟಿಸ್ ಜಾರಿಗೊಳಿಸಿದ ದಿಲ್ಲಿ ಹೈಕೋರ್ಟ್
ಹೊಸದಿಲ್ಲಿ: ಕಾಂಗ್ರೆಸ್ ಪಕ್ಷಕ್ಕೆ ತುರ್ಕಿಯೆಯಲ್ಲಿ ಕಚೇರಿಯಿದೆ ಎಂಬ ಆರೋಪ ಮಾಡಿದ್ದ ರಿಪಬ್ಲಿಕ್ ಟಿವಿಯ ಸಂಪಾದಕ ಅರ್ನಾಬ್ ಗೋಸ್ವಾಮಿ ವಿರುದ್ಧ ಕಾಂಗ್ರೆಸ್ ಸಲ್ಲಿಸಿದ್ದ ಮಾನಹಾನಿ ಮೊಕದ್ದಮೆಗೆ ಸಂಬಂಧಿಸಿದಂತೆ ಮಂಗಳವಾರ ಅವರಿಗೆ ದಿಲ್ಲಿ ಹೈಕೋರ್ಟ್ ಸಮನ್ಸ್ ಜಾರಿಗೊಳಿಸಿದೆ. ಆದರೆ, ಈ ಆರೋಪವನ್ನು ಮೇ 2025ರಲ್ಲಿ ಪ್ರಸಾರ ಮಾಡಲಾಗಿತ್ತು ಎಂಬ ಸಂಗತಿಯನ್ನು ಗಣನೆಗೆ ತೆಗೆದುಕೊಂಡ ನ್ಯಾ. ಮಿನಿ ಪುಷ್ಕರ್ಣ, ಮಧ್ಯಂತರ ಆದೇಶ ಜಾರಿಗೊಳಿಸಲು ನಿರಾಕರಿಸಿದ್ದಾರೆ. ಕಾಂಗ್ರೆಸ್ ಪಕ್ಷದ ಕಚೇರಿ ತುರ್ಕಿಯೆಯಲ್ಲಿ ಕಾರ್ಯಾಚರಿಸುತ್ತಿತ್ತು ಎಂದು ಮೇ 2025ರಲ್ಲಿ ಅರ್ನಾಬ್ ಗೋಸ್ವಾಮಿ ಆರೋಪಿಸಿದ್ದರು. ಅವರ ಆರೋಪವು ರಿಪಬ್ಲಿಕ್ ಟಿವಿಯಲ್ಲಿ ಪ್ರಸಾರವಾಗಿತ್ತು ಹಾಗೂ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿತ್ತು. ಅವರು ಇಸ್ತಾನ್ ಬುಲ್ ನಲ್ಲಿ ಕಚೇರಿಯೊಂದನ್ನು ತೋರಿಸಿ, ಅದು ಕಾಂಗ್ರೆಸ್ ಪಕ್ಷದ ಕಚೇರಿ ಎಂದು ಆರೋಪಿಸಿದ್ದರು. ಆಪರೇಷನ್ ಸಿಂಧೂರ್ ಕಾರ್ಯಾಚರಣೆಯ ವೇಳೆ ತುರ್ಕಿಯೆ ಪಾಕಿಸ್ತಾನದ ಬೆಂಬಲಕ್ಕೆ ನಿಂತಿದ್ದ ಹಿನ್ನೆಲೆಯಲ್ಲಿ ಈ ಆರೋಪವನ್ನು ಮಾಡಲಾಗಿತ್ತು. ಬಳಿಕ ಫ್ಯಾಕ್ಟ್ ಚೆಕ್ ಹಾಗೂ ವರದಿಗಳು ಆ ಕಟ್ಟಡ ವಾಸ್ತವವಾಗಿ ಇಸ್ತಾನ್ ಬುಲ್ ಕಾಂಗ್ರೆಸ್ ಕೇಂದ್ರದ ಕಟ್ಟಡ ಎಂದು ಹೇಳಿದ್ದವು. ಅದೊಂದು ಸಮ್ಮೇಳನ ಸಭಾಂಗಣವಾಗಿದ್ದು, ಅದನ್ನು ಇಸ್ತಾನ್ ಬುಲ್ ನಗರ ಪಾಲಿಕೆ ನಿರ್ವಹಿಸುತ್ತಿದೆಯೇ ಹೊರತು, ಅದು ಯಾವುದೇ ರಾಜಕೀಯ ಪಕ್ಷದ ಕಚೇರಿಯಲ್ಲ ಎಂದು ಸ್ಪಷ್ಟಪಡಿಸಿದ್ದವು. ಬಳಿಕ, ಈ ಕುರಿತು ಸ್ಪಷ್ಟನೆಯೊಂದನ್ನು ಪ್ರಸಾರ ಮಾಡಿದ್ದ ರಿಪಬ್ಲಿಕ್ ಟಿವಿ, ಆ ಚಿತ್ರದ ಬಳಕೆಯು ಸಂಪಾದಕೀಯದ ಲೋಪ ಎಂದು ಕ್ಷಮೆ ಕೋರಿತ್ತು. ಕಾಂಗ್ರೆಸ್ ಪಕ್ಷದ ಪರವಾಗಿ ವಕೀಲರಾದ ಮುಹಮ್ಮದ್ ಅಲಿ ಖಾನ್, ಉಮರ್ ಹೊಡಾ, ಈಶಾ ಬಕ್ಷಿ, ಆಯೇಷಾ ಖಾನ್ ಹಾಗೂ ಸೂರ್ಯಕಿರಣ್ ನ್ಯಾಯಾಲಯದಲ್ಲಿ ಹಾಜರಿದ್ದರು.
ಅಕ್ರಮ ಮದ್ಯ ಮಾರಾಟವನ್ನು ಮಾದಕ ವಸ್ತು ನಿಯಂತ್ರಣ ಕಾಯ್ದೆಯಡಿ ಸೇರಿಸಲು ಕ್ರಮ : ಸಚಿವ ಆರ್.ಬಿ.ತಿಮ್ಮಾಪುರ
ಬೆಂಗಳೂರು : ರಾಜ್ಯಾದಾದ್ಯಂತ ಅಕ್ರಮವಾಗಿ ಮದ್ಯ ಮಾರಾಟ ಮಾಡುವುದನ್ನು ಹಾಗೂ ಅಕ್ರಮವಾಗಿ ಮದ್ಯ ತಯಾರಿಸಿ ಮಾರಾಟ ಮಾಡುತ್ತಿರುವುದು ಸರಕಾರದ ಗಮನಕ್ಕೆ ಬಂದಿರುತ್ತದೆ. ಅಕ್ರಮ ಮಾರಾಟ ತಡೆಗಟ್ಟಲು ಕರ್ನಾಟಕ ಅಬಕಾರಿ ಕಾಯ್ದೆಯನ್ನು ಪರಿಷ್ಕರಿಸಿ ಹೊಸ ಕಾಯ್ದೆ ತರುವುದಕ್ಕೆ ಸರಕಾರ ಚಿಂತನೆ ನಡೆಸುತ್ತಿದ್ದು, ಈ ಬಗ್ಗೆ ಚರ್ಚಿಸಿ ಕ್ರಮ ವಹಿಸಲಾಗುವುದು. ಅಲ್ಲದೆ, ಅಕ್ರಮ ಮದ್ಯ ಮಾರಾಟವನ್ನು ಮಾದಕ ವಸ್ತು ನಿಯಂತ್ರಣ ಕಾಯ್ದೆ ಅಡಿ ಸೇರಿಸಲು ಸರಕಾರ ಪರಿಶೀಲನೆ ನಡೆಸುತ್ತಿದೆ ಎಂದು ಸಚಿವ ಆರ್.ಬಿ.ತಿಮ್ಮಾಪುರ ತಿಳಿಸಿದರು. ಇಂದು ವಿಧಾನಸಭೆಯ ಪ್ರಶ್ನೋತ್ತರ ಕಲಾಪದ ವೇಳೆ ರಾಯಚೂರು ಗ್ರಾಮಾಂತರ ಶಾಸಕ ಬಸನಗೌಡ ದದ್ದಲ್ ಅವರು ರಾಯಚೂರು ಜಿಲ್ಲೆಯಲ್ಲಿ ಸ್ವಲಾಭಕ್ಕಾಗಿ ಅನಧಿಕೃತ ಸ್ಥಳಗಳಲ್ಲಿ , ಕಿರಾಣಿ ಅಂಗಡಿಗಳಲ್ಲೂ ಸಹ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದಾರೆ. ಕರ್ನಾಟಕ ಅಬಕಾರಿ ಕಾಯ್ದೆ 1965ರ ಕಾಯ್ದೆಗಳ ರೀತ್ಯಾ ಯಾವುದೇ ಕ್ರಮ ಆಗುತ್ತಿಲ್ಲ. ಈ ಬಗ್ಗೆ ಸರಕಾರ ರಾಯಚೂರು ಹಾಗೂ ಯಾದಗಿರಿ ಜಿಲ್ಲೆಗಳಲ್ಲಿ ವಿಶೇಷ ಪಡೆಗಳನ್ನು ರಚಿಸಬೇಕು ಎಂದರು. ಈ ಸಮಯದಲ್ಲಿ ಶಾಸಕರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಅಬಕಾರಿ ಅಕ್ರಮಗಳನ್ನು ನಿಯಂತ್ರಿಸಲು ಅಬಕಾರಿ ಇಲಾಖೆಯಿಂದ ವಲಯ ವ್ಯಾಪ್ತಿಯ ರೂಟ್ ಗಳಲ್ಲಿ ನಿರಂತರವಾಗಿ ಗಸ್ತು ನಡೆಸಲಾಗುತ್ತಿದೆ. ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳಲ್ಲಿ ನಿಯಮಿತವಾಗಿ ರಸ್ತೆ ಗಾವಲು ನಡೆಸಿ ಸಂಶಯಾಸ್ಪದ ವಾಹನಗಳನ್ನು ತಪಾಸಣೆಗೆ ಒಳಪಡಿಸಲಾಗುತ್ತಿದೆ. ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸ್ಥಾಯಿ ಸಮಿತಿ ಸಭೆಯನ್ನು ಏರ್ಪಡಿಸಿ ಅಕ್ರಮ ಹತ್ತಿಕ್ಕಲು ಕ್ರಮ ವಹಿಸಲಾಗುತ್ತಿದೆ. ಕರ್ನಾಟಕ ಅಬಕಾರಿ ಕಾಯ್ದೆ 1965ರ ಕಲಂ 50ರಂತೆ ಕಾರ್ಯವ್ಯಾಪ್ತಿಯಲ್ಲಿ ನಡೆಯುವ ಅಬಕಾರಿ ಅಕ್ರಮಗಳ ಕುರಿತು ನಿಯಮಗಳನುಸಾರ ಪ್ರಕರಣಗಳನ್ನು ದಾಖಲಿಸಲಾಗುತ್ತಿದೆ ಎಂದರು. ಕರ್ನಾಟಕ ಅಬಕಾರಿ ಕಾಯ್ದೆ 1965ರ ಕಾಯಿದೆಗಳ ರೀತ್ಯಾ ಯಾವುದೇ ಕ್ರಮವು ಹಳೆಯದಾಗಿದ್ದು, ಅಕ್ರಮ ಮದ್ಯ ಮಾರಾಟವನ್ನು ಮಾದಕ ವಸ್ತು ನಿಯಂತ್ರಣ ಕಾಯಿದೆ ಅಡಿ ಸೇರಿಸಲು ಸರಕಾರ ಪರಿಶೀಲನೆ ನಡೆಸುತ್ತಿದೆ. ರಾಯಚೂರು ಜಿಲ್ಲೆಯಲ್ಲಿ ಅಕ್ರಮವಾಗಿ ಕ್ಲೋರಲ್ ಹೈಡ್ರೇಟ್ ಪೌಡರ್ ನಿಂದ ಕೃತಕವಾಗಿ ಸೇಂದಿಯನ್ನು ತಯಾರಿಸಿ ಮಾರಾಟ ಮಾಡುತ್ತಿರುವುದು ಹಾಗೂ ಜಿಲ್ಲೆಯ ಗಡಿ ಭಾಗಗಳಿಗೆ ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳಿಂದ ಸೇಂದಿ/ಕೃತಕ ಸೇಂದಿಯ ರಸ್ತೆ ಹಾಗೂ ರೈಲು ಮಾರ್ಗವಾಗಿ ಕಳ್ಳಸಾಗಾಣಿಕೆಯಾಗುತ್ತಿದ್ದು, ಈ ರೀತಿ ಅಕ್ರಮವಾಗಿ ಸೇಂದಿ/ಕೃತಕ ಸೇಂದಿಯನ್ನು ತಯಾರಿಸುತ್ತಿರುವವರ ವಿರುದ್ಧ ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಸಚಿವರು ತಿಳಿಸಿದರು.
ಎಷ್ಟು ಗೋವುಗಳನ್ನು ದತ್ತು ಪಡೆದುಕೊಂಡಿದ್ದೀರಿ? ಬಿಜೆಪಿ ಶಾಸಕರಿಗೆ ಪ್ರಿಯಾಂಕ್ ಖರ್ಗೆ ಪ್ರಶ್ನೆ, ಸದನದಲ್ಲಿ ವಾಕ್ಸಮರ
ಮಂಗಳವಾರ ಬಜೆಟ್ ಮೇಲಿನ ಚರ್ಚೆಯಲ್ಲಿ ಬಿಜೆಪಿ ಸದಸ್ಯ ಶರಣು ಸಲಗಾರ್ ಮಾತನಾಡುತ್ತಿದ್ದರು. ಈ ವೇಳೆ ಗೋಹತ್ಯೆ ಕಸಾಯಿ ಖಾನೆಯಲ್ಲಿ ಅಕ್ರಮವಾಗಿ ನಡೆಯುತ್ತಿದೆ. ಗೋಹತ್ಯೆ ಹಾಡು ಹಗಲು ನಡೆಯುತ್ತಿದೆ. ಇದರ ಬಗ್ಗೆ ಮಾತನಾಡಲು ಭಯ ಪಡುವಂತಹ ಸ್ಥಿತಿ ಇದೆ ಎಂದರು. ಈ ವೇಳೆ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯಿಸಿ, ಗೋ ದತ್ತು ಯೋಜನೆ ಅಡಿಯಲ್ಲಿ ಎಷ್ಟು ಗೋವುಗಳನ್ನು ಬಿಜೆಪಿ ಶಾಸಕರು ದತ್ತು ಪಡೆದುಕೊಂಡಿದ್ದಾರೆ? ಎಂದು ಪ್ರಶ್ನಿಸಿದರು.
LPG ಇ - ಕೆವೈಸಿ ಎಲ್ಲರಿಗೂ ಕಡ್ಡಾಯವಲ್ಲ; 'ವದಂತಿಗೆ ಕಿವಿಗೊಡಬೇಡಿ' ಕೇಂದ್ರ ಸರ್ಕಾರದಿಂದ ಮಹತ್ವದ ಸ್ಪಷ್ಟನೆ
ಎಲ್ಪಿಜಿ ಗ್ಯಾಸ್ ಸಿಲಿಂಡರ್ ಗ್ರಾಹಕರಿಗೆ ಬಯೋಮೆಟ್ರಿಕ್ ಆಧಾರ್ ದೃಢೀಕರಣ ಕಡ್ಡಾಯ ಎಂಬ ವದಂತಿ ಹರಿದಾಡುತ್ತಿದೆ. ಆದರೆ, ಈ ಬಗ್ಗೆ ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದ್ದು, ಎಲ್ಲಾ ಗ್ರಾಹಕರಿಗೂ ಕಡ್ಡಾಯವಲ್ಲ ಎಂದು ತಿಳಿಸಿದೆ. ಪ್ರಧಾನ ಮಂತ್ರಿ ಉಜ್ವಲ ಯೋಜನೆಯಡಿ ಬರುವ ಗ್ರಾಹರು ಪ್ರತಿ ಹಣಕಾಸು ವರ್ಷದಲ್ಲಿ ಒಮ್ಮೆ ಕಡ್ಡಾಯವಾಗಿ ಮಾಡಬೇಕಷ್ಟೇ. ಇನ್ನು ಇ-ಕೆವೈಸಿ ಮಾಡಿಸದಿದ್ದರೆ ಸಿಲಿಂಡರ್ ಪೂರೈಕೆ ಯಾವುದೇ ಕಾರಣಕ್ಕೂ ಸ್ಥಗಿತ ಮಾಡಲಲ್ಲ ಎಂದು ಸರ್ಕಾರ ಹೇಳಿದೆ.
ರಾಯಚೂರು ಜಿಲ್ಲೆಯಲ್ಲಿ ಹೊಸ ಕೆ.ಎಸ್.ಆರ್.ಪಿ ಪಡೆ ಸ್ಥಾಪನೆ ಬಗ್ಗೆ ಪರಿಶೀಲನೆ : ಗೃಹ ಸಚಿವ ಜಿ.ಪರಮೇಶ್ವರ್
ಬೆಂಗಳೂರು : ರಾಯಚೂರು ಜಿಲ್ಲೆಯಲ್ಲಿ ಹೊಸದಾಗಿ ಕೆ.ಎಸ್.ಆರ್.ಪಿ ಪಡೆಯನ್ನು ಸ್ಥಾಪಿಸುವ ಪ್ರಸ್ತಾವನೆಯು ಸರಕಾರದ ಪರಿಶೀಲನೆಯಲ್ಲಿದೆ. ಅಗತ್ಯತೆ ಆಧಾರದ ಮೇಲೆ ರಾಯಚೂರು ಜಿಲ್ಲೆಯಲ್ಲಿ ಕೆ.ಎಸ್.ಆರ್.ಪಿ ಪಡೆ ಸ್ಥಾಪಿಸಲಾಗುವುದು ಎಂದು ಗೃಹ ಸಚಿವ ಜಿ.ಪರಮೇಶ್ವರ್ ಅವರು ತಿಳಿಸಿದರು. ಇಂದು ವಿಧಾನಸಭೆಯ ಕಲಾಪದ ವೇಳೆ ಮಸ್ಕಿ ಕ್ಷೇತ್ರದ ಶಾಸಕ ಬಸನಗೌಡ ತುರುವಿಹಾಳ್ ಇವರು ಕಲ್ಯಾಣ ಕರ್ನಾಟಕ ಭಾಗದಲ್ಲಿ ಕೆ.ಎಸ್.ಆರ್.ಪಿ ಪಡೆ ಅಗತ್ಯವಿದ್ದು, 175 ಎಕರೆ ಜಾಗವನ್ನು ಹಾಗೂ ಕೆ.ಕೆ.ಆರ್.ಡಿ.ಬಿ ಯ ಅನುದಾನವನ್ನು ಸಹ ನೀಡಲಾಗುವುದು ಎಂದು ತಿಳಿಸಿ ಕಲ್ಯಾಣ ಕರ್ನಾಟಕ ಭಾಗದ ಎಲ್ಲಾ ಶಾಸಕರು ಗೃಹ ಸಚಿವರಿಗೆ ಈಗಾಗಲೇ ಮನವಿ ಸಲ್ಲಿಸಲಾಗಿದೆ. ಈ ಸಂಬಂಧ ಕೆ.ಎಸ್.ಆರ್.ಪಿ ಪಡೆ ಸ್ಥಾಪಿಸುವ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ಸದನದಲ್ಲಿ ಕೋರಿದರು. ಈ ಸಮಯದಲ್ಲಿ ಉತ್ತರಿಸಿದ ಸಚಿವರು, ರಾಯಚೂರು ಭಾಗದ 30 ಶಾಸಕರು ಸಹಿ ಮಾಡಿ ರಾಯಚೂರು ಭಾಗಕ್ಕೆ ಕೆ.ಎಸ್.ಆರ್.ಪಿ ಪಡೆ ಸ್ಥಾಪಿಸುವಂತೆ ಮನವಿ ಸಲ್ಲಿಸಿರುತ್ತಾರೆ. ಈಗಾಗಲೇ ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ 12 ಕೆ.ಎಸ್.ಆರ್.ಪಿ ಪಡೆಗಳು ಕಾರ್ಯನಿರ್ವಹಿಸುತ್ತಿವೆ. ಎಂದು ತಿಳಿಸಿದರು. ರಾಯಚೂರು ಭಾಗದಲ್ಲಿ ವಿಶ್ವಪ್ರಸಿದ್ದ ಧಾರ್ಮಿಕ ಕ್ಷೇತ್ರಗಳು, ಅಣೆಕಟ್ಟುಗಳು, ಗಡಿಭಾಗಗಳು ಇರುವುದರಿಂದ ಈ ಕುರಿತು ಪರಿಶೀಲಿಸಿ, ಶಾಸಕರುಗಳ ಮನವಿಯನ್ನಾಧರಿಸಿ ಆರ್ಥಿಕ ಇಲಾಖೆಗೆ ಈಗಾಗಲೆ ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ. ಅಗತ್ಯತೆ ಅನುಸಾರ ಆರ್ಥಿಕ ಇಲಾಖೆ ಅನುಮೋದನೆ ಪಡೆದು ಕೆ.ಎಸ್.ಆರ್.ಪಿ ಪಡೆ ಸ್ಥಾಪನೆ ಬಗ್ಗೆ ಕ್ರಮ ವಹಿಸಲಾಗುವುದು ಎಂದು ಗೃಹಸಚಿವರು ತಿಳಿಸಿದರು.
ಸತತ ಕುಸಿತದ ನಂತರ ಏರಿದ ಚಿನ್ನ-ಬೆಳ್ಳಿ ಬೆಲೆ : ಇಂದಿನ ದರವೆಷ್ಟು?
ಸತತ ಕುಸಿತದ ಹಾದಿಯಲ್ಲಿದ್ದ ಚಿನ್ನ ಸೋಮವಾರದ ತೀವ್ರ ಕುಸಿತದಿಂದ ಸ್ವಲ್ಪ ಚೇತರಿಕೆ ಕಂಡಿದೆ. ಕಳೆದ ಜನವರಿಯಲ್ಲಿ ಅತ್ಯಧಿಕ ಪ್ರತಿ ಗ್ರಾಂಗೆ 18 ಸಾವಿರ ತಲುಪಿದ್ದ ಚಿನ್ನದ ಬೆಲೆ ನಂತರ ಕುಸಿತದ ಹಾದಿಯಲ್ಲೇ ಇದೆ. ಮಾರ್ಚ್ ಆರಂಭದಲ್ಲಿ ಚಿನ್ನದ ಬೆಲೆ ಪ್ರತಿ ಗ್ರಾಂಗೆ 17 ಸಾವಿರ ದಾಟಿತ್ತು. ಆದರೆ ನಂತರ ಮಾರ್ಚ್ 9 ಸೋಮವಾರ ಮತ್ತೆ ಕುಸಿದ ಶುದ್ಧ ಚಿನ್ನದ ಬೆಲೆ 16 ಸಾವಿರದ ಮಿತಿಯೊಳಗೆ ನಿಂತಿತ್ತು. ಕಳೆದ ಮಂಗಳವಾರ ಮತ್ತು ಬುಧವಾರ ಚಿನ್ನದ ಬೆಲೆಯಲ್ಲಿ ಅಲ್ಪ ಮಟ್ಟಿಗೆ ಸತತ ಏರಿಕೆಯಾಗಿದ್ದು, ಮತ್ತೆ 16 ಸಾವಿರದ ಮಿತಿ ಮೀರಿ ಬೆಳೆದಿತ್ತು. ಆದರೆ ನಂತರ ಗುರುವಾರ, ಶುಕ್ರವಾರ ಮತ್ತು ಶನಿವಾರ ಸತತ ಕುಸಿತದ ನಂತರ ಚಿನ್ನದ ಬೆಲೆಯು 15 ಸಾವಿರದ ಮಿತಿಯೊಳಗೆ ಬಂದು ನಿಂತಿದೆ. ಸೋಮವಾರವೂ ತೀವ್ರ ಕುಸಿತ ಕಂಡಿದ್ದ ಚಿನ್ನದ ಬೆಲೆ ಮಂಗಳವಾರ ಸ್ವಲ್ಪ ಚೇತರಿಕೆ ಕಂಡಿದೆ. ಅಮೆರಿಕ ಮತ್ತು ಇಸ್ರೇಲ್ ಜೊತೆಗೂಡಿ ಇರಾನ್ ಮೇಲೆ ದಾಳಿ ಮಾಡಿರುವುದು, ಜಾಗತಿಕ ಭೌಗೋಳಿಕ ರಾಜಕೀಯದ ಉದ್ವಿಗ್ನತೆ ಮತ್ತು ಪಶ್ಚಿಮ ಏಷ್ಯಾದಲ್ಲಿ ಸಂಘರ್ಷದ ವಾತಾವರಣದ ನಡುವೆಯೂ ಚಿನ್ನ ಮತ್ತು ಬೆಳ್ಳಿಯ ಬೆಲೆಗಳು ವಿಪರೀತ ಏರದೆ ಸ್ಥಿರವಾಗಿವೆ. ಈ ವಾರವೂ ಹೆಚ್ಚು ಏರಿಳಿತ ಕಾಣದೆ ಸ್ಥಿರವಾಗಿರುವ ಸಾಧ್ಯತೆಯಿದೆ. ಇಂದಿನ ಚಿನ್ನದ ದರ ಹೇಗಿದೆ? ಮಾರ್ಚ್ 17ರಂದು ಮಂಗಳವಾರ ಬೆಂಗಳೂರಿನ ಮಾರುಕಟ್ಟೆಗಳಲ್ಲಿ 24 ಕ್ಯಾರೆಟ್ ಶುದ್ಧ ಚಿನ್ನದ ಬೆಲೆ ಸೋಮವಾರ ಸಂಜೆಯ ಬೆಲೆಗೆ ಹೋಲಿಸಿದರೆ ಪ್ರತಿ ಗ್ರಾಂಗೆ 120ರೂ. ಏರಿಕೆ ಕಂಡು ಹತ್ತು ಗ್ರಾಂ ಬೆಲೆ 1,58,620ರೂ.ಗೆ ಬಂದು ನಿಂತಿದೆ. ಆಭರಣ ಚಿನ್ನವಾದ 22 ಕ್ಯಾರೆಟ್ ಬೆಲೆಯು ಪ್ರತಿ ಗ್ರಾಂಗೆ 110 ರೂ. ಏರಿಕೆಯಾಗಿ ಹತ್ತು ಗ್ರಾಂಗೆ 1,45,400 ರೂ. ಗೆ ತಲುಪಿದೆ. 18 ಕ್ಯಾರೆಟ್ ಚಿನ್ನವು ಪ್ರತಿ ಗ್ರಾಂಗೆ 90 ರೂ. ಏರಿಕೆ ಕಂಡು ಹತ್ತು ಗ್ರಾಂಗೆ 1,18,970 ರೂ. ಗೆ ತಲುಪಿದೆ. ಮಂಗಳೂರಿನಲ್ಲಿ ಚಿನ್ನದ ದರವೆಷ್ಟಿದೆ? ಮಾರ್ಚ್ 17ರಂದು ಮಂಗಳವಾರ ಬೆಳಗಿನ 11 ಗಂಟೆಯ ವಹಿವಾಟಿನಲ್ಲಿ ಮಂಗಳೂರಿನಲ್ಲಿ ಚಿನ್ನದ ಬೆಲೆ ಮತ್ತೆ ದಿಢೀರ್ ಏರಿಕೆ ಕಂಡುಬಂದಿದೆ. ಒಂದು ಗ್ರಾಂ 24 ಕ್ಯಾರೆಟ್ ಚಿನ್ನದ ದರ 15,862 (+120) ರೂ. ನಷ್ಟಿದೆ. ಒಂದು ಗ್ರಾಂ 22 ಕ್ಯಾರೆಟ್ ಚಿನ್ನದ 14,540 (+110) ರೂ. ಮತ್ತು ಒಂದು ಗ್ರಾಂ 18 ಕ್ಯಾರೆಟ್ ಚಿನ್ನದ ದರ 11,897 (+90) ರೂ. ಬೆಲೆಗೆ ತಲುಪಿದೆ. ಇಂದಿನ ಬೆಳ್ಳಿಯ ದರವೆಷ್ಟು? ಮಾರ್ಚ್ ಆರಂಭದಲ್ಲಿ ಹೆಚ್ಚು ಏರಿಳಿತ ಕಾಣದೆ ಸ್ಥಿರವಾಗಿದ್ದ ಬೆಳ್ಳಿ ದರ, ಮಾರ್ಚ್ 09ರಂದು ಸೋಮವಾರ ಮತ್ತೆ ಪ್ರತಿ ಗ್ರಾಂಗೆ 5ರೂ. ಕುಸಿದು ಪ್ರತಿ ಕೆಜಿಗೆ 2,80,000 ರೂ.ಗೆ ತಲುಪಿತ್ತು. ನಂತರ ಮಂಗಳವಾರ ಪ್ರತಿ ಗ್ರಾಂಗೆ 10 ರೂ. ಏರಿಕೆಯಾಗಿರುವ ಬೆಳ್ಳಿಯ ಬೆಲೆ ಪ್ರತಿ ಕೆಜಿಗೆ 2,90,000 ರೂ.ಗೆ ಆಗಿತ್ತು. ಬುಧವಾರ ಇದೇ ಬೆಲೆಯಲ್ಲಿ ಸ್ಥಿರವಾಗಿ ನಿಂತಿದ್ದ ಪ್ರತಿ ಗ್ರಾಂ ಬೆಳ್ಳಿಯ ಬೆಲೆ ಗುರುವಾರ 10 ರೂ. ಕುಸಿದು ಮತ್ತೆ ಪ್ರತಿ ಕೆಜಿಗೆ 2,80,000 ರೂ.ಗೆ ಬಂದು ತಲುಪಿದೆ. ಶುಕ್ರವಾರ ಇದೇ ಬೆಲೆಗೆ ಸ್ಥಿರವಾಗಿ ನಿಂತಿದೆ. ಆದರೆ ಶನಿವಾರ ಮತ್ತೆ ಪ್ರತಿ ಗ್ರಾಂಗೆ 5 ರೂ. ಕುಸಿದು ಪ್ರತಿ ಕೆಜಿಗೆ 2,75,000 ರೂ. ಗೆ ತಲುಪಿತ್ತು. ಸೋಮವಾರ ಮತ್ತೆ ಪ್ರತಿ ಗ್ರಾಂಗೆ 5 ರೂ. ಕುಸಿದು ಪ್ರತಿ ಕೆಜಿ ಬೆಳ್ಳಿಯ ಬೆಲೆ 2,70,000 ರೂ.ಗೆ ತಲುಪಿದರೆ, ಇಂದು ಮಂಗಳವಾರ ಪ್ರತಿ ಗ್ರಾಂಗೆ 5 ರೂ. ಏರಿಕೆಯಾಗಿ ಪ್ರತಿ ಕೆಜಿಗೆ ಮತ್ತೆ 2,75,000 ರೂ.ಗೆ ಬಂದು ನಿಂತಿದೆ. ವಿವಿಧ ನಗರಗಳಲ್ಲಿ 1 ಗ್ರಾಂ ಚಿನ್ನದ ದರ (ಬೆಳಗಿನ ವಹಿವಾಟು) ಹೇಗಿದೆ? ದಿಲ್ಲಿ: 24 ಕ್ಯಾರೆಟ್ ಚಿನ್ನದ ದರ 15,877 (+120) ರೂ., 22 ಕ್ಯಾರೆಟ್ ಚಿನ್ನದ ದರ 14,555 (+110) ರೂ. ಮುಂಬೈ: 24 ಕ್ಯಾರೆಟ್ ಚಿನ್ನದ ದರ 15,862 (+120) ರೂ., 22 ಕ್ಯಾರೆಟ್ ಚಿನ್ನದ ದರ 14,540 (+110) ರೂ. ಅಹಮದಾಬಾದ್: 24 ಕ್ಯಾರೆಟ್ ಚಿನ್ನದ ದರ 15,867 (+120) ರೂ., 22 ಕ್ಯಾರೆಟ್ ಚಿನ್ನದ ದರ 14,545 (+110) ರೂ. ಚೆನ್ನೈ: 24 ಕ್ಯಾರೆಟ್ ಚಿನ್ನದ ದರ 15,982 (-66) ರೂ., 22 ಕ್ಯಾರೆಟ್ ಚಿನ್ನದ ದರ 14,650 (-60) ರೂ. ಕೋಲ್ಕತ್ತಾ: 24 ಕ್ಯಾರೆಟ್ ಚಿನ್ನದ ದರ 15,862 (+120) ರೂ., 22 ಕ್ಯಾರೆಟ್ ಚಿನ್ನದ ದರ 14,540 (+110) ರೂ. ಹೈದರಾಬಾದ್: 24 ಕ್ಯಾರೆಟ್ ಚಿನ್ನದ ದರ 15,862 (+120) ರೂ., 22 ಕ್ಯಾರೆಟ್ ಚಿನ್ನದ ದರ 14,540 (+110) ರೂ. ಜೈಪುರ: 24 ಕ್ಯಾರೆಟ್ ಚಿನ್ನದ ದರ 15,877 (+120) ರೂ., 22 ಕ್ಯಾರೆಟ್ ಚಿನ್ನದ ದರ 14,555 (+110) ರೂ. ಚಂಡೀಗಢ: 24 ಕ್ಯಾರೆಟ್ ಚಿನ್ನದ ದರ 15,877 (+120) ರೂ., 22 ಕ್ಯಾರೆಟ್ ಚಿನ್ನದ ದರ 14,555 (+110) ರೂ. ಲಕ್ನೋ: 24 ಕ್ಯಾರೆಟ್ ಚಿನ್ನದ ದರ 15,877 (+120) ರೂ., 22 ಕ್ಯಾರೆಟ್ ಚಿನ್ನದ ದರ 14,555 (+110) ರೂ.
ಬೆಳಗಾವಿಯಲ್ಲಿ ಐ.ಟಿ ಪಾರ್ಕ್ /ಸೆಮಿ ಕಂಡಕ್ಟರ್ ಪಾರ್ಕ್ಗಳನ್ನು ಸ್ಥಾಪಿಸಲು ಕ್ರಮ : ಸಚಿವ ಪ್ರಿಯಾಂಕ್ ಖರ್ಗೆ
ಬೆಂಗಳೂರು : ಗಡಿ ಜಿಲ್ಲೆಯಾದ ಬೆಳಗಾವಿಯಲ್ಲಿ ಐ.ಟಿ ಪಾರ್ಕ್/ಸೆಮಿ ಕಂಡಕ್ಟರ್ ಪಾರ್ಕ್ ಗಳನ್ನು ನಿರ್ಮಿಸಿ ಅಭಿವೃದ್ಧಿ ಪರ ರಾಜ್ಯವನ್ನಾಗಿ ಮಾಡುವ ಹಾಗೂ ನಿರುದ್ಯೋಗಿಗಳಗೆ ಉದ್ಯೋಗ ಕಲ್ಪಿಸುವ ಉದ್ದೇಶ ಸರಕಾರಕ್ಕೆ ಇದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಅವರು ತಿಳಿಸಿದರು. ಇಂದು ವಿಧಾನಸಭೆಯ ಪ್ರಶ್ನೋತ್ತರ ಕಲಾಪದ ವೇಳೆಯಲ್ಲಿ ವಿಧಾನಸಭಾ ಸದಸ್ಯರಾದ ಅಭಯ ಪಾಟೀಲ್ ಅವರು ಬೆಳಗಾವಿಯಲ್ಲಿ ಐಟಿ ಪಾರ್ಕ್ ಮತ್ತು ಸೆಮಿಕಂಡಕ್ಟರ್ ಪಾರ್ಕ್ ಗಳನ್ನು ನಿರ್ಮಿಸಿ ಅಭಿವೃದ್ಧಿಪರ ರಾಜ್ಯವನ್ನಾಗಿ ಮಾಡಬೇಕು ಹಾಗೂ ವಿದ್ಯಾವಂತ ನಿರುದ್ಯೋಗಿಗಳಿಗೆ ಉದ್ಯೋಗ ಕಲ್ಪಿಸಬೇಕೆಂದು ಕೋರಿದ ಸಮಯದಲ್ಲಿ, ಉತ್ತರಿಸಿದ ಸಚಿವರು, ಬೆಳಗಾವಿಯಲ್ಲಿ ಐ.ಟಿ ಪಾರ್ಕ್/ಸೆಮಿ ಕಂಡಕ್ಟರ್ ಪಾರ್ಕ್ ಗಳನ್ನು ನಿರ್ಮಿಸಿ ಅಭಿವೃದ್ಧಿ ಪರ ರಾಜ್ಯವನ್ನಾಗಿ ಮಾಡುವ ಹಾಗೂ ನಿರುದ್ಯೋಗಿಗಳಗೆ ಉದ್ಯೋಗ ಕಲ್ಪಿಸುವ ಉದ್ದೇಶದಿಂದ ಸರಕಾರವು ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ. ಐ.ಟಿ ಪ್ಲಗ್ ಅಂಡ್ ಪ್ಲೇ ಮೂಲ ಸೌಕರ್ಯ ಸ್ಥಾಪನೆ, ಸ್ಟಾರ್ಟ್ ಅಪ್ ಮತ್ತು ನಾವೀನ್ಯತೆ ಪರಿಸರ ವ್ಯವಸ್ಥೆಯನ್ನು ಬಲಪಡಿಸುವುದು. ವೇಗವರ್ಧಕ ಜಾಲಗಳು ಮತ್ತು ಸೀಡ್ ಫಂಡ್ ಬೆಂಬಲ, ಟೆಕ್ಸಿಲರೇಷನ್, ಸಮಗ್ರ ಅಭಿವೃದ್ಧಿ ಹಾಗೂ ಭವಿಷ್ಯದ ತಂತ್ರಜ್ಞಾನ, ನಿಪುಣ ಕರ್ನಾಟಕ, ಐಡಿಯಾ2 ಪಿಓಸಿ ಎಲಿವೇಟ್ (ಗ್ರಾಂಟ್ ಇನ್ ಏಡ್), ರಾಜೀವ್ ಗಾಂಧಿ ಉದ್ಯಮ ಶೀಲತೆ ಕಾರ್ಯಕ್ರಮ, ಎಲಿವೇಟ್ ಮಹಿಳಾ ಉದ್ಯಮಶೀಲತೆ, ಗ್ರಾಸ್ ರೂಟ್ ಇನೋವೇಷನ್ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಚಿವರು ತಿಳಿಸಿದರು. ಬೆಳಗಾವಿಯ ತಿಲಕವಾಡಿಯಲ್ಲಿರುವ ಕಲಾಮಂದಿರ ಕಟ್ಟಡದಲ್ಲಿ ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ (KDEM) ಸಹಯೋಗದೊಂದಿಗೆ ಜಾಗತಿಕ ತಂತ್ರಜ್ಞಾನ ಕೇಂದ್ರ (GTD)ವನ್ನು ಸ್ಥಾಪಿಸಲು ಸದರಿ ಕಟ್ಟಡವನ್ನು ಇಲಾಖೆಗೆ ಹಸ್ತಾಂತರಿಸಿಕೊಳ್ಳಲು ಕ್ರಮ ವಹಿಸಲಾಗುತ್ತಿದೆ ಎಂದು ಸಚಿವರು ತಿಳಿಸಿದರು.
ಭಾರತದ ವಿರುದ್ದ ವಿಶ್ವಸಂಸ್ಥೆಯಲ್ಲಿ ನಿರಂತರವಾಗಿ ಇಸ್ಲಾಮೋಫೋಬಿಯಾದ ಆರೋಪಗಳನ್ನು ಮಾಡುವ ಪಾಕಿಸ್ತಾನದ ಹೆಸರನ್ನು ಉಲ್ಲೇಖಿಸದೆ ಭಾರತ UN ಕಾರ್ಯಕ್ರಮದಲ್ಲಿ ಅದನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಇದೇ ವೇಳೆ, ಭಾರತದ ಧಾರ್ಮಿಕ ವೈವಿಧ್ಯತೆಯನ್ನು ಎತ್ತಿ ಹಿಡಿದಿದ್ದು, ಇಸ್ಲಾಮೋಫೋಬಿಯಾದ ಕಥೆ ಕಟ್ಟುವ ಪಾಕ್ ತನ್ನ ನರೆರಾಷ್ಟ್ರ ಅಫ್ಘಾನ್ ಮೇಲೆ ರಂಜಾನ್ ತಿಂಗಳಿನಲ್ಲಿ ನಡೆಸಿದ ದಾಳಿಗಳನ್ನು ಖಂಡಿಸಿದ್ದಾರೆ.
ಉಪ ಚುನಾವಣೆ ರಣಕಣ: ದಾವಣಗೆರೆ ದಕ್ಷಿಣ ಸೇಫ್, ಬಾಗಲಕೋಟೆಯಲ್ಲಿ ಅಗ್ನಿಪರೀಕ್ಷೆ; ಕಾಂಗ್ರೆಸ್ ಲೆಕ್ಕಾಚಾರ ಏನು?
ದಾವಣಗೆರೆ ದಕ್ಷಿಣದಲ್ಲಿ ಶಾಮನೂರು ಶಿವಶಂಕರಪ್ಪ ನಿರಂತರವಾಗಿ ಗೆಲುವು ಸಾಧಿಸುತ್ತಾ ಬಂದಿದ್ದಾರೆ. ಕ್ಷೇತ್ರದ ಜನರು ಶಾಮನೂರು ಕೈ ಹಿಡಿದಿದ್ದಾರೆ. ಆದರೆ ಈ ಬಾರಿ ಜಿಲ್ಲೆಯ ಕಾಂಗ್ರೆಸ್ ಮುಖಂಡರು ಬದಲಾವಣೆ ಬಯಸುತ್ತಿದ್ದಾರೆ.ಶಾಮನೂರು ಕುಟುಂಬದ ಹೊರತಾಗಿ ಬೇರೆಯವರಿಗೆ ಟಿಕೆಟ್ ನೀಡಿ ಎಂಬುವುದು ಆಗ್ರಹವಾಗಿದೆ. ಹಾಗಾಗಿ ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆ ಭಿನ್ನಮತ ಸವಾಲಾಗಿದೆ.
400 ಜನರ ಜೀವ ತೆಗೆದ ಪಾಪಿ ಪಾಕಿಸ್ತಾನ, ಅಫ್ಘಾನಿಸ್ತಾನ ವಿರುದ್ಧ ದಾಳಿ | Pakistan And Afghanistan
ಪಾಕಿಸ್ತಾನ ಸೇನೆ ಮತ್ತೆ ಬಾಲ ಬಿಚ್ಚಿದೆ, ತನ್ನಲ್ಲೇ ನೂರಾರು ಹುಳುಕು ಇಟ್ಟುಕೊಂಡು ಅಕ್ಕಪಕ್ಕದಲ್ಲಿ ಇರುವ ದೇಶಗಳ ಜೊತೆಗೆ ಸದಾ ಕಿರಿಕ್ ಮಾಡುವ ಪಾಕಿಸ್ತಾನ ಮತ್ತೊಮ್ಮೆ ಈಗ ದೊಡ್ಡ ಎಡವಟ್ಟು ಮಾಡಿಕೊಂಡಿದೆ. ಅಂದಹಾಗೆ ಅಫ್ಘಾನಿಸ್ತಾನ ದೇಶದ ಆಡಳಿತ ನಡೆಸುತ್ತಿರುವ ತಾಲಿಬಾನ್ ವಿರುದ್ಧ ರೊಚ್ಚಿಗೆದ್ದು ವಾಯುದಾಳಿ ನಡೆಸಿರುವ ಪಾಕಿಸ್ತಾನ ಸೇನೆ 400 ಅಮಾಯಕರ ಜೀವ ತೆಗೆದ ಆರೋಪ ಕೇಳಿಬಂದಿದೆ. ಒಂದೇ
ಕನ್ನಡಿಗರ ಮುಕ್ತಜ್ಞಾನದ ತಾಣ ‘ಕಣಜ’ಕ್ಕೆ ಸಿಕ್ಕಿಬಿಟ್ಟಿತೆ ಮುಕ್ತಿ? 3 ತಿಂಗಳಿಂದ ಕಣ್ಮರೆಯಾದ ವೆಬ್ಸೈಟ್
ಬೆಂಗಳೂರು: 2009ರಲ್ಲಿ ಕನ್ನಡಿಗರಿಗಾಗಿ ಮುಕ್ತ ಮಾಹಿತಿ ಒದಗಿಸುವ ಸದುದ್ದೇಶದಿಂದ ಆರಂಭವಾಗಿದ್ದ ಹೆಮ್ಮೆಯ ಜ್ಞಾನಭಂಡಾರ 'ಕಣಜ' (www.kanaja.karnataka.gov.in) ಜಾಲತಾಣ ಇದೀಗ ಸರ್ಕಾರದ ನಿರ್ಲಕ್ಷ್ಯಕ್ಕೆ ಬಲಿಯಾಗುವ ಹಂತ ತಲುಪಿದೆ. ಕಳೆದ ಮೂರು ತಿಂಗಳುಗಳಿಂದ ಈ ವೆಬ್ಸೈಟ್ ಕಾರ್ಯನಿರ್ವಹಿಸುತ್ತಿಲ್ಲ. ಕೇವಲ ಒಂದು ಸಾಮಾನ್ಯ 'ಎಸ್ಎಸ್ಎಲ್ ಸರ್ಟಿಫಿಕೇಟ್' ನವೀಕರಣ ಮಾಡದ ಸಣ್ಣ ತಾಂತ್ರಿಕ ಕಾರಣಕ್ಕಾಗಿ ಇಡೀ ಜಾಲತಾಣವೇ ಅಂತರ್ಜಾಲದಿಂದ ಕಣ್ಮರೆಯಾಗಿದೆ. ಇದು ಕನ್ನಡಿಗರ
Gundlupete | ಅಕ್ರಮ ವಿದ್ಯುತ್ ತಂತಿ ಬೇಲಿಗೆ ಸಿಲುಕಿ ಹುಲಿ ಸಾವು
ಚಾಮರಾಜನಗರ : ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಪಡಗೂರಿನಲ್ಲಿ ಅಕ್ರಮ ವಿದ್ಯುತ್ ತಂತಿ ಬೇಲಿಗೆ ಸಿಲುಕಿದ ಹುಲಿ ಸಾವನ್ನಪ್ಪಿದ ಘಟನೆ ನಡೆದಿದೆ. ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲ್ಲೂಕಿನ ಪಡಗೂರು ಅಡವಿ ಮಠದ ಸಮೀಪದ ರವಿಚಂದ್ರ ಎಂಬುವರಿಗೆ ಸೇರಿದ ಜಮೀನಿಗೆ ಅಳವಡಿಸಿದ್ದ ಅಕ್ರಮ ವಿದ್ಯುತ್ ತಂತಿ ಸ್ಪರ್ಷಿಸಿದ ಎರಡು ವರ್ಷ ವಯಸ್ಸಿನ ಹುಲಿ ಸಾವನ್ನಪ್ಪಿದೆ. ಘಟನಾ ಸ್ಥಳಕ್ಕೆ ಪೊಲೀಸ್ ಅರಣ್ಯ ಹಾಗೂ ಸೆಸ್ಕ್ ಅಧಿಕಾರಿಗಳು ಭೇಟಿ ಪರಿಶೀಲನೆ ನಡೆಸುತ್ತಿದ್ದಾರೆ. ಹುಲಿ ಸಾವನ್ನಪ್ಪಿದ ರವಿಚಂದ್ರ ರವರ ಜಮೀನನ್ನು ಪರಮೇಶ ಎಂಬುವರು ಗುತ್ತಿಗೆ ಪಡೆದು ಕೃಷಿ ಮಾಡುತ್ತಿದ್ದಾರೆ ಎಂದು ತಿಳದು ಬಂದಿದೆ. ಈ ಭಾಗದಲ್ಲಿ ಹುಲಿಗಳ ಸಂಚಾರ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಬಫರ್ ವಲಯದ ಅಧಿಕಾರಿಗಳು ಥರ್ಮಲ್ ಡ್ರೋಣ್ ಹಾರಿಸುವಾಗ ಘಟನೆ ಬೆಳಕಿಗೆ ಬಂದಿದೆ.
ಜೆಡಿಎಸ್ ಭದ್ರಕೋಟೆ ಕೋಲಾರದಲ್ಲಿ ಶಕ್ತಿ ಕಳೆದುಕೊಳ್ಳುತ್ತಿರುವ ದಳಪತಿಗಳು, ಯುಗಾದಿ ಬಳಿಕ ಹೊಸ ಅಧ್ಯಕ್ಷರ ಘೋಷಣೆ
ಹಲವಾರು ವರ್ಷಗಳಿಂದ ಕೋಲಾರ ಜಿಲ್ಲಾಧ್ಯಕ್ಷ ಸ್ಥಾನ ಹೊರತುಪಡಿಸಿದರೆ, ಇತರೆ ಯಾವುದೇ ಘಟಕಗಳಿಗೆ ಪದಾಧಿಕಾರಿಗಳ ನೇಮಕವಾಗಿಲ್ಲ. ಇದು ಪಕ್ಷ ಸಂಘಟನೆಗೆ ಹಿನ್ನಡೆಯುಂಟು ಮಾಡಿದೆ. ಜಿಲ್ಲಾಮಟ್ಟದಲ್ಲಿ ಯುವ ಜೆಡಿಎಸ್ ಅಧ್ಯಕ್ಷ, ಕಾರ್ಯದರ್ಶಿಯಂತೆ ಸ್ಥಾನಗಳನ್ನು ತುಂಬದ ಪರಿಣಾಮ, ಬಹುತೇಕ ಕಾರ್ಯಕರ್ತರು ಪಕ್ಷದ ಚಟುವಟಿಕೆಗಳಿಗೆ ದೂರು ಉಳಿದಿದ್ದಾರೆ.
Belthangady: ಶ್ರೀರಾಮ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯಲ್ಲಿ ಕೋಟ್ಯಂತರ ರೂ. ವಂಚನೆ ಪ್ರಕರಣ: ಸಿಐಡಿ ತನಿಖೆ ಆರಂಭ
ಬೆಳ್ತಂಗಡಿ, ಮಾ.17: ಶ್ರೀ ರಾಮ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ(ರಿ) ಯಲ್ಲಿ ಗ್ರಾಹಕರು ಠೇವಣಿ ಇಟ್ಟಿದ್ದ ಸುಮಾರು 40 ಕೋಟಿ ರೂಪಾಯಿ ವಾಪಸ್ ನೀಡದೆ (ವಂಚನೆ) ಹಗರಣ ಮಾಡಿರುವ ಪ್ರಕರಣಕ್ಕೆ ಸಿಐಡಿ ತನಿಖೆ ಆರಂಭಗೊಂಡಿದೆ. ಇಂದು (ಮಾ.17) ಬೆಳಗ್ಗೆ ಸೊಸೈಟಿಗೆ ಬೆಂಗಳೂರಿನಿಂದ ಸಿಐಡಿ ತನಿಖಾ ತಂಡ ಆಗಮಿಸಿ ತನಿಖೆ ಕೈಗೆತ್ತಿಕೊಂಡಿದೆ. ಪ್ರಕರಣದ ವಿವರ: ಬೆಳ್ತಂಗಡಿ ನಗರದ ಜ್ಯೂನಿಯರ್ ಕಾಲೇಜ್ ರಸ್ತೆಯಲ್ಲಿರುವ ರಾಮನಗರದದಲ್ಲಿ ಸುಮಾರು 25 ವರ್ಷಗಳಿಂದ ಏಕೈಕ ಬ್ರಾಂಚ್ ಆಗಿ ಕಾರ್ಯಾಚರಿಸುತ್ತಿರುವ ಶ್ರೀ ರಾಮ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ(ರಿ)ಯಲ್ಲಿ ಆಡಳಿತ ಮಂಡಳಿಯವರು ಗ್ರಾಹಕರಿಗೆ ಸೇರಿದ ಠೇವಣಿ ಹಣ ಸುಮಾರು 40 ಕೋಟಿ ರೂ.ನ್ನು ಗ್ರಾಹಕರಿಗೆ ಹಿಂದಿರುಗಿಸದೆ ವಂಚಿಸಿರುವ ಆರೋಪ ಕೇಳಿಬಂದಿತ್ತು. ಈ ಸಂಬಂಧ ವಂಚನೆಗೊಳಗಾದ ಬೆಳ್ತಂಗಡಿ ನಿವಾಸಿ ದಯಾನಂದ ನಾಯಕ್ ಸೇರಿ ಒಟ್ಟು 13 ಮಂದಿ ಗ್ರಾಹಕರು ಸೊಸೈಟಿಯ 14 ಜನರ ವಿರುದ್ಧ 22-05-2025ರಂದು ಬೆಳ್ತಂಗಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ದೂರಿನನ್ವಯ 23-05-2025ರಂದು KARNATAKA PROTECTION OF INTEREST DEPOSITIONS EXORBITANT ACT 2004 (u/s -9) ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣ ಮಂಗಳೂರು ಸೆನ್ ಪೊಲೀಸ್ ಠಾಣೆಗೆ ಹೋಗಿ ಇದೀಗ ಸಿಐಡಿಗೆ ಹಸ್ತಾಂತರವಾಗಿದ್ದು, ತನಿಖೆ ಆರಂಭವಾಗಿದೆ 14 ಆರೋಪಿಗಳು: 40 ಕೋಟಿ ರೂ. ವಂಚನೆ ಆರೋಪಕ್ಕೆ ಸಂಬಂಧಿಸಿ 2021 ರಿಂದ 2024ರ ವರೆಗೆ ಶ್ರೀ ರಾಮ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯಲ್ಲಿ ಜವಾಬ್ದಾರಿಯಲ್ಲಿದ್ದ ಸೊಸೈಟಿಯ ಸಿಇಒ ಚಂದ್ರಕಾಂತ್, ಅಧ್ಯಕ್ಷ ಪ್ರಭಾಕರ ಸಿ.ಎಚ್., ಉಪಾಧ್ಯಕ್ಷ ಸದಾನಂದ ಎಂ. ಉಜಿರೆ, ನಿರ್ದೇಶಕರುಗಳಾದ ವಿಶ್ವನಾಥ ಆರ್. ನಾಯಕ್, ಪ್ರಮೋದ್ ಆರ್. ನಾಯಕ್, ವಿಶ್ವನಾಥ, ಜಗನ್ನಾಥ ಪಿ., ರತ್ನಾಕರ, ಸುಮಾ ದಿನೇಶ್ ಉಜಿರೆ, ನಯನಾ ಶಿವಪ್ರಸಾದ್, ಮೋಹನ್ ದಾಸ್ ಕೆ., ಕಿಶೋರ್ ಕುಮಾರ್ ಲಾಯಿಲ, ಬ್ಯಾಂಕ್ ಸಿಬ್ಬಂದಿ ಸರಿತಾ ಎಸ್. ಮತ್ತು ವಿನೋದ್ ಕುಮಾರ್ ಸಿ.ಎಚ್. ಸೇರಿ ಒಟ್ಟು 14 ಮಂದಿಯ ವಿರುದ್ಧ ಪ್ರಕರಣ ದಾಖಲಾಗಿತ್ತು. 13 ದೂರುದಾರರು: ದಯಾನಂದ ನಾಯಕ್, ನಿಧೀಶ್ ಡಿ. ನಾಯಕ್, ಶ್ರದ್ಧಾ ಬಿ., ಮಾಲಿನಿ ಟಿ. ರಾವ್, ತುಕರಾಮ್ ರಾವ್, ಅಕ್ಷಯಾ ಟಿ. ರಾವ್, ಅಕ್ಷತಾ ರಾವ್, ಚೈತ್ರಾ ಭಟ್, ಮೈತ್ರಿ ಭಟ್, ಸ್ವಾತಿ ಭಟ್, ನಂದಕುಮಾರ್, ಬಿ.ಗಣೇಶ್ ಭಟ್, ವಿದ್ಯಾ ಭಟ್ ಸೇರಿ 13 ಮಂದಿ ನೊಂದವರು ದೂರು ನೀಡಿದ್ದರು. ಸಿಐಡಿ ತನಿಖೆ ಆರಂಭ: 40 ಕೋಟಿ ರೂ. ವಂಚನೆ ಪ್ರಕರಣವಾಗಿರುವ ಕಾರಣ ಇದರ ತನಿಖೆಯನ್ನು ಬೆಳ್ತಂಗಡಿ ಪೊಲೀಸರು ಮಂಗಳೂರು ಸೆನ್ ಪೊಲೀಸ್ ಠಾಣೆಗೆ ಹಸ್ತಾಂತರಿಸಿದ್ದರು ಬಳಿಕ ದಕ್ಷಿಣ ಕನ್ನಡದ ಪೊಲೀಸ್ ವರಿಷ್ಠಾಧಿಕಾರಿ ಪ್ರಕರಣವನ್ನು ಸಿಐಡಿ( Crime Investigation Department)ಗೆ ಹಸ್ತಾಂತರಿಸಿದ್ದರು. ಅದರಂತೆ ಇದೀಗ ಅಧಿಕೃತವಾಗಿ ಬೆಂಗಳೂರು ಸಿಐಡಿ ಇನ್ ಸ್ಪೆಕ್ಟರ್ ಹರೀಶ್ ನೇತೃತ್ವದ ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ.
ಟೀಂ ಇಂಡಿಯಾಗೆ ನನ್ನದೊಂದು ಸಲಾಂ, ಐಪಿಎಲ್ ಬಗ್ಗೆ ಮನದಾಳದ ಮಾತು ಬಿಚ್ಚಿಟ್ಟ ಪಂಜಾಬ್ ಕಿಂಗ್ಸ್ ಕೋಚ್ ರಿಕಿ ಪಾಂಟಿಂಗ್
Ricky Ponting: ವಿಶ್ವದ ಅತ್ಯಂತ ದೊಡ್ಡ ಲೀಗ್ಗಳಲ್ಲಿ ಐಪಿಎಲ್ ಕೂಡ ಒಂದಾಗಿದೆ. ಇನ್ನೂ ಕೆಲವೇ ದಿನಗಳಲ್ಲಿ ಇದರ 19ನೇ ಆವೃತ್ತಿ ಆರಂಭವಾಗಲಿದೆ. ಇದಕ್ಕೂ ಮುನ್ನವೇ ಟಿ20 ಪ್ರತಿಭೆಗಳನ್ನು ಹೊರತರಲು ಇಂಡಿಯನ್ ಪ್ರೀಮಿಯರ್ ಲೀಗ್ ಎಷ್ಟು ಮಹತ್ವ ಎನ್ನುವ ಬಗ್ಗೆ ಮಾಹಿತಿ ರಿವೀಲ್ ಮಾಡಿದ್ದಾರೆ. ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ. ಟೀಮ್ ಇಂಡಿಯಾದ ಅದ್ಭುತ ಟಿ20 ಶಕ್ತಿಯನ್ನು ಬೆಳೆಸುವಲ್ಲಿ
ಡಿಕೆಶಿ ಸುಪರ್ದಿಯಲ್ಲಿದ್ದ ಒಡಿಶಾ ಶಾಸಕರ ಪಕ್ಷನಿಷ್ಠೆ - ಆದರೂ ಗೆದ್ದದ್ದು ಕ್ರಾಸ್ ವೋಟಿಂಗ್ : ಕಾಂಗ್ರೆಸ್ಸಿಗೆ ಮುಖಭಂಗ
ಒಡಿಶಾದಲ್ಲಿ ಕ್ರಾಸ್ ವೋಟಿಂಗ್ : ನಾಲ್ಕು ರಾಜ್ಯಸಭಾ ಸ್ಥಾನಗಳಿಗೆ ಒಡಿಶಾದಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿ ಒಟ್ಟು ಮೂರು ಸ್ಥಾನವನ್ನು ಗೆದ್ದಿದೆ. ಬಿಜೆಡಿ ಒಂದು ಸ್ಥಾನವನ್ನು ಗೆದ್ದರೂ, ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗೆ ಸೋಲಾಗಿದೆ. ಅಡ್ಡಮತದಾನದ ಭೀತಿಯಲ್ಲಿ ಶಾಸಕರನ್ನು ರಕ್ಷಿಸಲು ಅವರನ್ನು ಬೆಂಗಳೂರಿಗೆ ಡಿಕೆ ಶಿವಕುಮಾರ್ ಸುಪರ್ದಿಗೆ ಕಾಂಗ್ರೆಸ್ ಹೈಕಮಾಂಡ್ ಕಳುಹಿಸಿತ್ತು.
ತಿರುಪತಿ ಶ್ರೀ ವೆಂಕಟೇಶ್ವರ ಸ್ವಾಮಿ ಜೂನ್ 2026 ದರ್ಶನ ಟಿಕೆಟ್ ಬಿಡುಗಡೆ: ಇಲ್ಲಿದೆ ಸಂಪೂರ್ಣ ಮಾಹಿತಿ
ತಿರುಮಲ ತಿರುಪತಿಯ ದೇವಸ್ಥಾನಂ ಮಂಡಳಿಯು(ಟಿಟಿಡಿ) ಮುಂದಿನ ಜೂನ್ ತಿಂಗಳ ಶ್ರೀ ವೆಂಕಟೇಶ್ವರ ಸ್ವಾಮಿ ದರ್ಶನ ಟಿಕೆಟ್ಗಳನ್ನು ಮತ್ತು ಕೊಠಡಿಯ ಕೊಟಾಗಳ ಕುರಿತು ಪ್ರಮುಖ ವಿವರಗಳನ್ನು ಪ್ರಕಟಿಸಿದೆ. ವಿವಿದ ಸೇವೆಗಳು, ವಿಶೇಷ ಪೂಜೆಗಾಗಿ ಮತ್ತು ದರ್ಶನಕ್ಕಾಗಿಸಂಬಂಧಿಸಿದ ವಿಶೇಷ ಕೋಟಾಗಳ ದಿನಾಂಕಗಳನ್ನು ಟಿಟಿಡಿ ಪ್ರಕಟಿಸಿದೆ. ವಿಶೇಷ ಸೇವೆಗಳ ಕೋಟಾ ತಿರುಪತಿ ಶ್ರೀ ವೆಂಕಟೇಶ್ವರ ಸ್ವಾಮಿ ವಿಶೇಷ ಪೂಜೆ ಟಿಕೆಟ್ಗಳು ಮೊದಲ
ಮಧ್ಯಪ್ರಾಚ್ಯ ಬಿಕ್ಕಟ್ಟು ಹಿನ್ನೆಲೆ ಈದ್ ಆಚರಿಸದಂತೆ ಕರೆ : ಸಮಾಜವಾದಿ ಪಕ್ಷದ ನಾಯಕನ ವಿರುದ್ಧ ಪ್ರಕರಣ ದಾಖಲು
ಲಕ್ನೊ: ಇರಾನ್ ಮೇಲೆ ಇಸ್ರೇಲ್ ಮತ್ತು ಅಮೆರಿಕ ನಡೆಸುತ್ತಿರುವ ದಾಳಿಯ ಪ್ರತಿಭಟನಾರ್ಥವಾಗಿ ಈ ಬಾರಿ ಈದ್ ಆಚರಿಸದಂತೆ ಮುಸ್ಲಿಮರಿಗೆ ಕರೆ ನೀಡಿದ ಆರೋಪದ ಮೇಲೆ ಸಮಾಜವಾದಿ ಪಕ್ಷದ ನಾಯಕನೊಬ್ಬನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸದ್ಯ ಜೈಲಿನಲ್ಲಿರುವ ಅಝಂ ಖಾನ್ ಈ ಮನವಿ ಮಾಡಿದ್ದಾರೆ ಎಂದು ಆತ ತಿಳಿಸಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಮರಾದಾಬಾದ್ನ ಸಮಾಜವಾದಿ ಪಕ್ಷದ ನಾಯಕ ಯೂಸುಫ್ ಮಲಿಕ್ ಮಾರ್ಚ್ 14ರಂದು ಅಝಂ ಖಾನ್ರನ್ನು ರಾಮ್ಪುರ್ ಜೈಲಿನಲ್ಲಿ ಭೇಟಿ ಮಾಡಿದ್ದ ಎಂದು ಎಎಸ್ಪಿ ಅನುರಾಗ್ ಸಿಂಗ್ ತಿಳಿಸಿದ್ದಾರೆ. ಈ ಸಭೆಯಲ್ಲಿ ಅಝಂ ಖಾನ್ರ ಪತ್ನಿ ತಝೀನಾ ಫಾತಿಮಾ ಕೂಡಾ ಉಪಸ್ಥಿತರಿದ್ದರು ಎಂದು ಹೇಳಿದ್ದಾರೆ. ಬಳಿಕ, ಜೈಲಿನ ಹೊರಗೆ ಸುದ್ದಿಗಾರರೊಂದಿಗೆ ಮಾತನಾಡಿದ್ದ ಯೂಸುಫ್ ಮಲಿಕ್, ಇತ್ತೀಚೆಗೆ ಇರಾನ್ ನ ಶಾಲೆಯ ಮೇಲೆ ಅಮೆರಿಕದಿಂದ ನಡೆದ ಕ್ಷಿಪಣಿ ದಾಳಿಯಲ್ಲಿ 160ಕ್ಕೂ ಹೆಚ್ಚು ಬಾಲಕಿಯರು ಮೃತಪಟ್ಟಿರುವುದಕ್ಕೆ ಸಂತಾಪ ವ್ಯಕ್ತಪಡಿಸಲು ಹಾಗೂ ಪ್ರತಿಭಟನಾರ್ಥವಾಗಿ ಈ ಬಾರಿ ಕಪ್ಪು ಬಟ್ಟೆಯನ್ನು ಧರಿಸಬೇಕು ಹಾಗೂ ಈ ವರ್ಷ ಈದ್ ಆಚರಿಸಬಾರದು ಎಂದು ಮುಸ್ಲಿಮರಿಗೆ ಅಝಂ ಖಾನ್ ಕರೆ ನೀಡಿದ್ದಾರೆ ಎಂದು ಹೇಳಿದ್ದರು. ಈ ಸಂಬಂಧ ಯೂಸುಫ್ ಮಲಿಕ್ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ವಿವಿಧ ಸೆಕ್ಷನ್ ಗಳಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ತನಿಖೆಯಲ್ಲಿ ಪತ್ತೆಯಾಗುವ ಸಂಗತಿಗಳನ್ನು ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಎಎಸ್ಪಿ ಅನುರಾಗ್ ಸಿಂಗ್ ತಿಳಿಸಿದ್ದಾರೆ.
ಕಲಬುರಗಿ | ಧಾರ್ಮಿಕ ಭಾವನೆಗಳಿಗೆ ಧಕ್ಕೆ ಆರೋಪ: ಭೀಮ್ ಆರ್ಮಿ ಯುವ ಘಟಕದ ರಾಜ್ಯಾಧ್ಯಕ್ಷನ ವಿರುದ್ಧ ಎಫ್ಐಆರ್
ಕಲಬುರಗಿ: ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿರುವ ಆರೋಪದ ಮೇರೆಗೆ ಭೀಮ್ ಆರ್ಮಿಯ ಯುವ ಘಟಕದ ರಾಜ್ಯಾಧ್ಯಕ್ಷನ ವಿರುದ್ಧ ಇಲ್ಲಿನ ಅಶೋಕ ನಗರ ಪೊಲೀಸ್ ಠಾಣೆಯಲ್ಲಿ ಸ್ವಯಂಪ್ರೇರಿತ ಪ್ರಕರಣ ದಾಖಲಾಗಿದೆ. ಭೀಮ್ ಆರ್ಮಿಯ ಯುವ ಘಟಕದ ರಾಜ್ಯಾಧ್ಯಕ್ಷ ಸಂತೋಷ್ ಪಾಳಾ ವಿರುದ್ಧ ಠಾಣೆಯ ಪೊಲೀಸ್ ಸಿಬ್ಬಂದಿ ನೀಡಿರುವ ದೂರಿನ ಮೇರೆಗೆ ಎಫ್ಐಆರ್ ದಾಖಲಿಸಿಕೊಳ್ಳಲಾಗಿದೆ. ಲೇಖಕಿ ಬಾನು ಮುಷ್ತಾಕ್ ಅವರ ಫೇಸ್ ಬುಕ್ ಪೋಸ್ಟ್ ವೊಂದಕ್ಕೆ Bhim Puthra Santosh Pala ಎಂಬ ಹೆಸರಿನ ಫೇಸ್ ಬುಕ್ ಖಾತೆಯಿಂದ ಮುಸ್ಲಿಮರ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗುವಂತಹ ಕಮೆಂಟ್ ಮಾಡಲಾಗಿದೆ. ಇದೇ ವಿಚಾರವಾಗಿ ಭೀಮ್ ಆರ್ಮಿಯ ಯುವ ಘಟಕದ ರಾಜ್ಯಾಧ್ಯಕ್ಷ ಸಂತೋಷ್ ಪಾಳಾ ಅವರೆದ್ದನ್ನಲಾದ ವೀಡಿಯೊವೊಂದನ್ನೂ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು, ಅದರಲ್ಲೂ ಧಾರ್ಮಿಕ ನಿಂದನೆ, ಅವಾಚ್ಯ ಪದ ಬಳಕೆ ಮಾಡಿರುವುದು ಕಂಡುಬಂದಿದೆ. ಈ ಬಗ್ಗೆ ಅಶೋಕ ನಗರ ಪೊಲೀಸ್ ಠಾಣೆಯ ಸಾಮಾಜಿಕ ಜಾಲತಾಣದ ಮೇಲೆ ನಿಗಾ ವಹಿಸುವ ಸಿಬ್ಬಂದಿ ಸುಭಾಷ್ ಎಂಬವರು ಧಾರ್ಮಿಕ ಮತೀಯ ಭಾವನೆಗಳಿಗೆ ಧಕ್ಕೆ ಉಂಟು ಮಾಡಿರುವ ಆರೋಪದಲ್ಲಿ ಸಂತೋಷ್ ಪಾಳಾ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ದೂರಿನಲ್ಲಿ ತಿಳಿಸಿದ್ದಾರೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ ಎಂದು ತಿಳಿದುಬಂದಿದೆ.
ಶೀಘ್ರವೇ ಕ್ಯೂಬಾ ವಶಪಡಿಸಿಕೊಳ್ತೀವಿ ಎಂದು ಟ್ರಂಪ್ ಘೋಷಣೆ: US ಇಂಧನ ಪೂರೈಕೆ ಸ್ಥಗಿತ, ಕತ್ತಲೆಮಯವಾದ ದ್ವೀಪರಾಷ್ಟ್ರ!
ಅಮೆರಿಕ ವೆನಿಜುವೆಲಾದ ಬಳಿಕ ಸದ್ಯ ಇರಾನ್ ಮೇಲೆ ದಾಳಿ ಮಾಡುತ್ತಿದೆ. ಹೀಗೆ ಒಂದೆಡೆ ಯುದ್ದ ಮಾಡುತ್ತಲೇ, ಇದಾದ ಬಳಿಕ ತನ್ನ ಮುಂದಿನ ಗುರಿ ಯಾವ ದೇಶದ ಮೇಲಿದೆ ಎಂಬುದನ್ನು ತಿಳಿಸಿದ್ದು, ಕ್ಯೂಬಾವನ್ನು ಅತಿ ಶೀಘ್ರವೇ ವಶಪಡಿಸಿಕೊಳ್ಳುತ್ತೇವೆ ಎಂದು ಪುನರುಚ್ಚರಿಸಿದ್ದಾರೆ. ಅಲ್ಲದೆ, ಕ್ಯೂಬಾ ಸದ್ಯ ದುರ್ಬಲ ರಾಷ್ಟ್ರವಾಗಿದ್ದು, ಇದನ್ನು ವಶಪಡಿಸಿಕೊಂಡ ಗೌರವ ನನಗೆ ಸಿಗುತ್ತದೆ ಎಂದು ನಾನು ನಂಬುತ್ತೇನೆ ಎಂದು ತಿಳಿಸಿದ್ದಾರೆ.
ಸಂಪುಟ ಪುನಾರಚನೆ, ನಾಯಕತ್ವ ಬದಲಾವಣೆ ಚರ್ಚೆಯ ನಡುವೆ ಆಯ್ದ ಸಚಿವರಿಗೆ ಸಿದ್ದರಾಮಯ್ಯ ಔತಣಕೂಟ!
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೋಮವಾರ ರಾತ್ರಿ ಸಂಪುಟದ ಆಯ್ದ ಸಚಿವರೊಂದಿಗೆ ಮಹತ್ವದ ಸಮಾಲೋಚನಾ ಸಭೆ ನಡೆಸಿದರು. ಅಧಿಕೃತ ನಿವಾಸ ಕಾವೇರಿಯಲ್ಲಿ ನಡೆದ ಡಿನ್ನರ್ ಸಹಿತ ಸಭೆಯಲ್ಲಿ 14 ಸಚಿವರು ಪಾಲ್ಗೊಂಡಿದ್ದರು. ಕೇರಳ, ತಮಿಳುನಾಡು ಸೇರಿದಂತೆ ಪಂಚ ರಾಜ್ಯಗಳಲ್ಲಿ ಘೋಷಣೆಯಾಗಿರುವ ವಿಧಾನಸಭೆಗಳ ಚುನಾವಣೆ ಎದುರಿಸಲು ಪಕ್ಷಕ್ಕೆ ಅಗತ್ಯ ಸಹಕಾರ ನೀಡುವ ಕುರಿತಂತೆ ಚರ್ಚೆ ನಡೆಯಿತು ಎನ್ನಲಾಗಿದೆ.
ಅಬುಧಾಬಿ |ಭದ್ರತಾ ಪಡೆಗಳು ಹೊಡೆದುರುಳಿಸಿದ ಕ್ಷಿಪಣಿಯ ಅವಶೇಷಗಳು ಬಿದ್ದು ಒಬ್ಬ ಮೃತ್ಯು
ಅಬುಧಾಬಿ : ಮಧ್ಯಪ್ರಾಚ್ಯದಲ್ಲಿ ಸಂಘರ್ಷ ಮುಂದುವರಿದಿದ್ದು ಅಬುಧಾಬಿಯಲ್ಲಿ ಭದ್ರತಾ ಪಡೆಗಳು ಹೊಡೆದುರುಳಿಸಿದ ಕ್ಷಿಪಣಿಯ ಅವಶೇಷಗಳು ಬಿದ್ದ ಪರಿಣಾಮ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ ಎಂದು ಅಬುಧಾಬಿ ಮಾಧ್ಯಮ ಕಚೇರಿಯನ್ನು ಉಲ್ಲೇಖಿಸಿ Aljazeera ವರದಿ ಮಾಡಿದೆ. ಅಬುಧಾಬಿ ಬಾನಿ ಯಾಸ್ ಪ್ರದೇಶದಲ್ಲಿ ಘಟನೆ ನಡೆದಿದೆ. ಮೃತ ವ್ಯಕ್ತಿ ಪಾಕಿಸ್ತಾನದ ನಾಗರಿಕರಾಗಿದ್ದಾರೆ ಎಂದು ವರದಿಯಾಗಿದೆ. ಸೌದಿ ಅರೇಬಿಯಾದ ಮೇಲೂ ಡ್ರೋನ್ ದಾಳಿ ನಡೆದಿದೆ. ಎರಡು ಡ್ರೋನ್ಗಳನ್ನು ಹೊಡೆದುರುಳಿಸಿರುವ ಬಗ್ಗೆ ಸೌದಿ ಅರೇಬಿಯಾದ ರಕ್ಷಣಾ ಸಚಿವಾಲಯ ತಿಳಿಸಿದೆ.
Gold Rate Today: ಮತ್ತೆ ಏರಿಕೆ ಕಂಡ ಚಿನ್ನದ ದರ: ಇಂದು 10 ಗ್ರಾಂ ಬಂಗಾರದ ಬೆಲೆ 1,58,620 ರೂಪಾಯಿ
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಹಳದಿ ಲೋಹದ ಬೆಲೆ ಇಂದು ಮತ್ತೆ ಏರಿಕೆ ಕಂಡಿದೆ. ಜಾಗತಿಕ ಮಾರುಕಟ್ಟೆಯ ಏರಿಳಿತ ಹಾಗೂ ಸ್ಥಳೀಯವಾಗಿ ಚಿನ್ನಕ್ಕೆ ಹೆಚ್ಚುತ್ತಿರುವ ಬೇಡಿಕೆಯಿಂದಾಗಿ ಇಂದು ಚಿನ್ನದ ದರದಲ್ಲಿ ಗಮನಾರ್ಹ ಹೆಚ್ಚಳ ದಾಖಲಾಗಿದೆ. ಇಂದಿನ ಮಾರುಕಟ್ಟೆ ವರದಿಯ ಪ್ರಕಾರ, ಪ್ರತಿ ಗ್ರಾಂ ಅಪರಂಜಿ ಚಿನ್ನ (24 ಕ್ಯಾರೆಟ್) ಮತ್ತು ಆಭರಣ ಚಿನ್ನದ (22 ಕ್ಯಾರೆಟ್) ಬೆಲೆಗಳಲ್ಲಿ ಏರಿಕೆ
ಶೆಲ್ ಬಂಕ್ನಲ್ಲಿ ಪೆಟ್ರೋಲ್ ದರ ಏರಿಕೆ: ಬೆಂಗಳೂರಿನಲ್ಲಿ 10 ದಿನಗಳಲ್ಲಿ 4.50 ರೂಪಾಯಿ ಹೆಚ್ಚಳ; ಇಲ್ಲಿದೆ ದರಪಟ್ಟಿ
Petrol, Diesel Price: ಜಾಗತಿಕ ರಾಜಕೀಯ ವಿದ್ಯಮಾನಗಳು ಭಾರತದ ಇಂಧನ ಮಾರುಕಟ್ಟೆಯ ಮೇಲೆ ಪ್ರಭಾವ ಬೀರಲಾರಂಭಿಸಿವೆ. ಇರಾನ್ ಯುದ್ಧದ ಹಿನ್ನೆಲೆಯಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲದ ಬೆಲೆ ಏರಿಕೆ ಆಗುತ್ತಿದ್ದು, ಇದರ ನೇರ ಪರಿಣಾಮವಾಗಿ ಖಾಸಗಿ ತೈಲ ಕಂಪನಿಯಾದ ಶೆಲ್ ಭಾರತದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ಸತತವಾಗಿ ಏರಿಕೆ ಮಾಡುತ್ತಿದೆ ಎಂದು ವರದಿಯಾಗಿದೆ. ಕಳೆದ ಮೂರು
ಬೆಂಜಮಿನ್ ನೆತನ್ಯಾಹು ವಿಡಿಯೋದಲ್ಲಿ ಮತ್ತೆ AI ಕೈಚಳಕ? ಕಣ್ಮರೆಯಾಗುತ್ತೆ ಉಂಗುರ!
ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹಂಚಿಕೊಂಡಿರುವ ಹೊಸ ವಿಡಿಯೋದಲ್ಲಿ ಅವರ ಕೈಯಲ್ಲಿದ್ದ ಉಂಗುರ ಕ್ಷಣಿಕವಾಗಿ ಮಾಯವಾಗಿದೆ. ಅದು ಎಐ ಡೀಪ್ಫೇಕ್ ಆಗಿರಬಹುದೇ ಎಂಬ ಚರ್ಚೆಗೆ ಕಾರಣವಾಗಿದೆ. ಸಾವಿನ ವದಂತಿಗಳಿಗೆ ಅಂತ್ಯ ಹಾಡಲು ವಿಡಿಯೋ ಬಿಡುಗಡೆ ಮಾಡಲಾಗಿದ್ದರೂ, ವಿಡಿಯೋದ ನೈಜತೆ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ಮುಂದುವರಿದಿದೆ.
ಮನೆಯಿಂದ ಹೊರ ಹೊರಟರೆ ಬಿರು ಬಿಸಿಲು, ಕಲ್ಲಂಗಡಿ ದರ ಮಾತ್ರ ಕುಸಿತ
ಬೇಸಿಗೆ ತಾಪಮಾನ ಹೆಚ್ಚಾಗುತ್ತಿದೆ. ಮನೆಯಿಂದ ಹೊರಗೆ ಹೊರಟರೆ ನೆತ್ತಿ ಸುಡುವ ಬಿಸಿಲು, ತಣ್ಣಗೆ ಏನಾದರೂ ಕುಡಿಯುವ ಬಾಯಾರಿಕೆಯಾಗುತ್ತದೆ. ಸಾಮಾನ್ಯವಾಗಿ ಕಲ್ಲಂಗಡಿ ಹಣ್ಣಿನ ಮೊರೆ ಹೋಗುತ್ತೇವೆ. ಉತ್ತಮ ಬೆಲೆ, ಲಾಭದ ನಿರೀಕ್ಷೆಯಲ್ಲಿರುವ ಬೆಳೆಗಾರರಿಗೆ ದರ ಕುಸಿತ ಕಂಗಾಲು ಉಂಟು ಮಾಡಿದೆ.
ಕಲ್ಲಡ್ಕ ಅನುಗ್ರಹ ಮಹಿಳಾ ಪದವಿ ಕಾಲೇಜು ವಿದ್ಯಾರ್ಥಿನಿಯರಿಂದ ನ್ಯಾಯಾಲಯ ಭೇಟಿ
ಬಿ.ಸಿ.ರೋಡ್: ನ್ಯಾಯಾಂಗ ವ್ಯವಸ್ಥೆಯ ಕುರಿತು ಪ್ರಾಯೋಗಿಕ ಅರಿವು ನೀಡುವ ಉದ್ದೇಶದಿಂದ ಕಲ್ಲಡ್ಕದ ಅನುಗ್ರಹ ಮಹಿಳಾ ಕಾಲೇಜಿನ ಮಾನವ ಹಕ್ಕುಗಳ ರಕ್ಷಣಾ ಕ್ಲಬ್ ವತಿಯಿಂದ ದ್ವಿತೀಯ ಬಿ.ಎ.ಮತ್ತು ತೃತೀಯ ಬಿ.ಎ. ವಿದ್ಯಾರ್ಥಿನಿಯರಿಗೆ ಬಿ.ಸಿ.ರೋಡ್ ನಲ್ಲಿರುವ ಬಂಟ್ವಾಳದ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರು ಮತ್ತು ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿಯವರ ನ್ಯಾಯಾಲಯಕ್ಕೆ ಭೇಟಿ ಆಯೋಜಿಸಲಾಗಿತ್ತು. ನ್ಯಾಯಾಲಯಕ್ಕೆ ಭೇಟಿ ನೀಡಿದ ವೇಳೆ ವಿದ್ಯಾರ್ಥಿನಿಯರು ಸಿವಿಲ್ ಮತ್ತು ಕ್ರಿಮಿನಲ್ ನ್ಯಾಯಾಲಯಗಳ ಕಾರ್ಯವಿಧಾನ, ವಿಚಾರ ನಡೆಯುವ ರೀತಿ ಹಾಗೂ ನ್ಯಾಯಾಂಗ ವ್ಯವಸ್ಥೆಯ ಬಗ್ಗೆ ಮಾಹಿತಿ ಪಡೆದುಕೊಂಡರು. ಸುಮಾರು 20 ವರ್ಷಗಳಿಂದ ವಕೀಲರಾಗಿ ಸೇವೆ ಸಲ್ಲಿಸುತ್ತಿರುವ ಬೆಳ್ತಂಗಡಿಯ ವಕೀಲರಾದ ಶಿವಯ್ಯರಲ್ಲಿ ವಿದ್ಯಾರ್ಥಿನಿಯರು ಸಂವಾದ ನಡೆಸಿದರು. ವಕೀಲರಾದ ಉಮರ್ ಫಾರೂಕ್ ಹಾಗೂ ದಿಲ್ ನಾಝ್ ರಲ್ಲಿ ವಕೀಲ ವೃತ್ತಿಯ ಬಗ್ಗೆ ಮಾಹಿತಿ ಪಡೆದುಕೊಂಡರು. ವಕೀಲ ತುಳಸಿದಾಸ್ ವಿಟ್ಲ ಅವರ ಮಾರ್ಗದರ್ಶನದಲ್ಲಿ ಈ ಭೇಟಿ ಆಯೋಜಿಸಲಾಗಿತ್ತು. ವಿದ್ಯಾರ್ಥಿನಿಯರೊಂದಿಗೆ ಮಾರ್ಗದರ್ಶಕರಾಗಿ ಕಾಲೇಜಿನ ಉಪನ್ಯಾಸಕಿಯರಾದ ತಾರಾಕ್ಷಿ, ಬಬಿತಾ ಭಾಗವಹಿಸಿದ್ದರು.
ರಾಜ್ಯಾದ್ಯಂತ ನಾಳೆಯಿಂದ ಎಸ್ಎಸ್ಎಲ್ಸಿ (SSLC) ಪರೀಕ್ಷೆಗಳು ಆರಂಭವಾಗುತ್ತಿದ್ದು, ವಿದ್ಯಾರ್ಥಿಗಳಲ್ಲಿ ಹಾಗೂ ಪೋಷಕರಲ್ಲಿ ಸಹಜವಾಗಿಯೇ ಸ್ವಲ್ಪ ಮಟ್ಟಿನ ಆತಂಕ, ಕಾತರ ಮನೆಮಾಡಿರುತ್ತದೆ. ಪ್ರತಿಯೊಬ್ಬ ವಿದ್ಯಾರ್ಥಿಯ ಶೈಕ್ಷಣಿಕ ಜೀವನದಲ್ಲಿ ಎಸ್ಎಸ್ಎಲ್ಸಿ ಒಂದು ಪ್ರಮುಖ ಘಟ್ಟ. ವರ್ಷಪೂರ್ತಿ ಓದಿದ ಶ್ರಮ ಒಂದೆಡೆಯಾದರೆ, ಪರೀಕ್ಷೆಯ ಹಿಂದಿನ ದಿನ ಹಾಗೂ ಪರೀಕ್ಷಾ ದಿನದಂದು ನಾವು ನಮ್ಮ ಮನಸ್ಸು ಮತ್ತು ದೇಹವನ್ನು ಹೇಗೆ ಇರಿಸಿಕೊಳ್ಳುತ್ತೇವೆ ಎಂಬುದು
ಮೂಡುಬಿದಿರೆ ಠಾಣೆ ಇನ್ ಸ್ಪೆಕ್ಟರ್ ವಿರುದ್ಧ ಲೈಂಗಿಕ ಕಿರುಕುಳದ ಆರೋಪ: ತನಿಖೆಗೆ ಕಮಿಷನರ್ ಆದೇಶ
ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ರಾಜ್ಯ ಮಹಿಳಾ ಆಯೋಗ ಸೂಚನೆ
ಬಾಗ್ದಾದ್ನಲ್ಲಿರುವ ಅಮೆರಿಕದ ರಾಯಭಾರಿ ಕಚೇರಿ ಮೇಲೆ ಇರಾನ್ನಿಂದ ಕ್ಷಿಪಣಿ ದಾಳಿ : ವರದಿ
ಟೆಹರಾನ್: ಇರಾಕ್ನ ರಾಜಧಾನಿ ಬಾಗ್ದಾದ್ ವಿಮಾನ ನಿಲ್ದಾಣದ ಬಳಿ ಇರುವ ಅಮೆರಿಕದ ರಾಯಭಾರಿ ಕಚೇರಿಯನ್ನು ಗುರಿಯಾಗಿಸಿಕೊಂಡು ಇರಾನ್ ಕ್ಷಿಪಣಿ ದಾಳಿಯನ್ನು ನಡೆಸಿರುವ ಬಗ್ಗೆ ವರದಿಯಾಗಿದೆ. ದಾಳಿಯ ಬಳಿಕ ಈ ಪ್ರದೇಶದಲ್ಲಿ ಸೈರನ್ಗಳು ಮೊಳಗುತ್ತಿವೆ ಎಂದು ಭದ್ರತಾ ಮೂಲಗಳು ತಿಳಿಸಿವೆ ಎಂದು Reuters ಸುದ್ದಿ ಸಂಸ್ಥೆ ವರದಿ ಮಾಡಿದೆ. ಇದಕ್ಕೂ ಮೊದಲು, ಬಾಗ್ದಾದ್ ನಲ್ಲಿರುವ ಅಮೆರಿಕದ ರಾಯಭಾರಿ ಕಚೇರಿಯನ್ನು ಗುರಿಯಾಗಿಸಿಕೊಂಡು ಕ್ಷಿಪಣಿಗಳು ಮತ್ತು ಡ್ರೋನ್ ಗಳ ಮೂಲಕ ದಾಳಿ ನಡೆಸಲಾಗಿತ್ತು.
\ಕರ್ನಾಟಕದ ಇತಿಹಾಸದಲ್ಲೇ ಕಪ್ಪು ಚುಕ್ಕೆ, ಕಾಂಗ್ರೆಸ್ನಿಂದ ಪ್ರಜಾಪ್ರಭುತ್ವದ ಹತ್ಯೆ\: ಆರ್ ಅಶೋಕ್
ಬೆಂಗಳೂರು: ಸಭಾಧ್ಯಕ್ಷ ಯು.ಟಿ. ಖಾದರ್ ಅವರ ನೇತೃತ್ವದಲ್ಲಿ ಆರಂಭವಾದ ವಿಧಾನಸಭೆ ಅಧಿವೇಶನವು ತೀವ್ರ ಗದ್ದಲ ಹಾಗೂ ಗೊಂದಲಕ್ಕೆ ಸಾಕ್ಷಿಯಾಗಿದ್ದು, ರಾಜಕೀಯ ವಲಯದಲ್ಲಿ ದೊಡ್ಡ ಮಟ್ಟದ ಚರ್ಚೆಗೆ ಗ್ರಾಸವಾಗಿದೆ. ಶಾಸಕರು ಕೇಳಿದ ಪ್ರಶ್ನೆಗಳಿಗೆ ಸಂಬಂಧಪಟ್ಟ ಸಚಿವರಿಂದ ಸಮರ್ಪಕವಾದ ಉತ್ತರ ಸಿಗದ ಹಿನ್ನೆಲೆಯಲ್ಲಿ ಸದನದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಯಿತು. ಈ ಬೆಳವಣಿಗೆಯಿಂದಾಗಿ ಸಭಾಧ್ಯಕ್ಷರು ಸದನದಿಂದ ಹೊರನಡೆದು ಕಲಾಪವನ್ನು ಮುಂದೂಡಿದ್ದು, ಇದು
ಮಧ್ಯಪ್ರಾಚ್ಯದಲ್ಲಿ ಇರಾನ್ ಹಾಗೂ ಅಮೆರಿಕಾ ನಡುವಿನ ಯುದ್ದ ಉಲ್ಬಣಗೊಳ್ಳುತ್ತಿದ್ದು, ಹೊರ್ಮುಜ್ ಜಲಸಂಧಿಯಲ್ಲಿನ ನಿರ್ಬಂಧ ತೆರವಿಗೆ ಸಹಾಯ ಮಾಡಲು ನ್ಯಾಟೋ ರಾಷ್ಟ್ರಗಳಿಗೆ ಟ್ರಂಪ್ ಒತ್ತಾಯ ಮಾಡುತ್ತಿದ್ದಾರೆ. ಆದರೆ, ನ್ಯಾಟೋದ ಹಲವು ರಾಷ್ಟ್ರಗಳು ಟ್ರಂಪ್ ಒತ್ತಡಕ್ಕೆ ಮಣಿಯದೆ ನಾವು ಈ ಯುದ್ದದಲ್ಲಿ ಬೆಂಬಲಿಸುವುದಿಲ್ಲ ಎಂದು ನೇರಾನೇರವಾಗಿ ಹೇಳಿವೆ. ಆದರೆ, US ಸಹ ನ್ಯಾಟೋ ಭಾಗವಾಗಿದ್ದು, ಮಿತ್ರರಾಷ್ಟ್ರದ ಯುದ್ದದಲ್ಲಿ ನ್ಯಾಟೋ ಸಹಾಯಕ್ಕೆ ಬಾರದೆ ಇರಲು ಕಾರಣವೇನು? ಎಂಬುದರ ಕುರಿತ ಮಾಹಿತಿ ಇಲ್ಲಿದೆ..
ತಿರುವನಂತಪುರಂ ಮೆಡಿಕಲ್ ಕಾಲೇಜಿನ ICU ಘಟಕದಲ್ಲಿ ಅಗ್ನಿ ಅವಘಡ : ರೋಗಿಗಳ ತುರ್ತು ಸ್ಥಳಾಂತರ
ತಿರುವನಂತಪುರಂ: ಕೇರಳದ ತಿರುವನಂತಪುರಂ ಮೆಡಿಕಲ್ ಕಾಲೇಜಿನ ತೀವ್ರ ನಿಗಾ ಘಟಕದ ಬಳಿಯ ಮಲ್ಟಿ-ಸ್ಪೆಷಾಲಿಟಿ ಬ್ಲಾಕ್ನಲ್ಲಿ ಅಗ್ನಿ ಅವಘಡ ಸಂಭವಿಸಿದೆ. ಪ್ರಾಥಮಿಕ ವರದಿಗಳ ಪ್ರಕಾರ, ಮಲ್ಟಿ-ಸ್ಪೆಷಾಲಿಟಿ ಬ್ಲಾಕ್ನ ಶಸ್ತ್ರಚಿಕಿತ್ಸಾ ಐಸಿಯು (Surgery ICU) ಸಮೀಪದಲ್ಲಿ ಬೆಳಿಗ್ಗೆ 9.15ರ ಸುಮಾರಿಗೆ ಘಟನೆ ನಡೆದಿದೆ. ಈ ವಿಭಾಗದಲ್ಲಿ ಗಂಭೀರ ಸ್ಥಿತಿಯಲ್ಲಿದ್ದ ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದರು ಎಂದು ತಿಳಿದು ಬಂದಿದೆ. ಅಗ್ನಿ ಅವಘಡದ ಹಿನ್ನೆಲೆ ರೋಗಿಗಳನ್ನು ತುರ್ತಾಗಿ ಸ್ಥಳಾಂತರಿಸಲಾಗಿದೆ. ಅಗ್ನಿ ಅವಘಡಕ್ಕೆ ನಿಖರ ಕಾರಣ ದೃಢಪಟ್ಟಿಲ್ಲ. ಶಾರ್ಟ್ ಸರ್ಕ್ಯೂಟ್ ನಿಂದ ಅಗ್ನಿ ಅವಘಡ ಸಂಭವಿಸಿರುವ ಸಾಧ್ಯತೆ ಇದೆ. ಅಗ್ನಿಶಾಮಕ ದಳದವರು ತಕ್ಷಣ ಸ್ಥಳಕ್ಕೆ ಬಂದು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Viral Video: 'ಓಂಕಾರ' ಚಿತ್ರದ ಬೀಡಿ ಜಲೈಲೆ ಹಾಡಿಗೆ ಸಖತ್ ಸ್ಟೆಪ್ಸ್ ಹಾಕಿದ ಬ್ರೆಜಿಲ್ ಬೆಡಗಿಯರು
ಭಾರತೀಯ ಸಂಸ್ಕೃತಿ, ಬಾಲಿವುಡ್ ಹಾಡುಗಳು ಮತ್ತು ಇಲ್ಲಿನ ವಿಶಿಷ್ಟ ಕಲೆಗಳು ಕೇವಲ ಭಾರತಕ್ಕಷ್ಟೇ ಸೀಮಿತವಾಗಿಲ್ಲ ಎನ್ನುವುದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಇತ್ತೀಚೆಗೆ ವೈರಲ್ ಆಗುತ್ತಿರುವ ವಿಡಿಯೋವೊಂದು ಅತ್ಯುತ್ತಮ ಮತ್ತು ತಾಜಾ ಉದಾಹರಣೆಯಾಗಿದೆ. ಬ್ರೆಜಿಲ್ ಮೂಲದ ಯುವತಿಯೊಬ್ಬಳು ತನ್ನ ಭಾರತೀಯ ಗೆಳೆಯನನ್ನು ಮಹಾರಾಷ್ಟ್ರದ ಪ್ರಸಿದ್ಧ ಕರಾವಳಿ ತಾಣವಾದ ಅಲಿಬಾಗ್ನಲ್ಲಿ ಹಿಂದೂ ಸಂಪ್ರದಾಯದಂತೆ ವಿವಾಹವಾಗಿದ್ದಾಳೆ. ಈ ಅದ್ಧೂರಿ ಮದುವೆ ಸಮಾರಂಭದಲ್ಲಿ ವಧುವಿನ
Belthangady: ಮಹೇಶ್ ಶೆಟ್ಟಿ ತಿಮರೋಡಿ ವಿರುದ್ಧ ಮೂರನೇ ಬಾರಿ ಗಡಿಪಾರು ಆದೇಶ
ಬೆಳ್ತಂಗಡಿ: ಸೌಜನ್ಯಾ ಪರ ಹೊರಾಟಗಾರ ಮಹೇಶ್ ಶೆಟ್ಟಿ ತಿಮರೋಡಿಗೆ ಮೂರನೇ ಬಾರಿಗೆ ಗಡಿಪಾರು ಆದೇಶ ಹೊರಡಿಸಲಾಗಿದೆ. ಮಹೇಶ್ ಶೆಟ್ಟಿ ತಿಮರೋಡಿಯನ್ನು ಹೈಕೋರ್ಟ್ ಆದೇಶದಂತೆ ಆರು ತಿಂಗಳು ಕಾಲ ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿಗೆ ಗಡಿಪಾರು ಮಾಡಿ ಪುತ್ತೂರು ಸಹಾಯಕ ಆಯುಕ್ತೆ ಸ್ಟೆಲ್ಲಾ ವರ್ಗೀಸ್ ಅವರು ಮಾ.16ರಂದು ಆದೇಶ ಹೊರಡಿಸಿದ್ದಾರೆ. ಗಡಿಪಾರು ಅವಧಿಯು ಮಾ.16ರಿಂದ ಸೆಪ್ಟಂಬರ್ 16ರವರೆಗೆ ಆರು ತಿಂಗಳು ಕಾಲಾವಧಿಯನ್ನು ಹೊಂದಿದೆ. ಪುತ್ತೂರು ಎಸಿಯವರ ಗಡಿಪಾರು ಆದೇಶದಂತೆ ಬೆಳ್ತಂಗಡಿ ಉಪವಿಭಾಗ ಡಿವೈಎಸ್ಪಿ ರೋಹಿಣಿ ಸಿ.ಕೆ. ನೇತೃತ್ವದಲ್ಲಿ ಪೊಲೀಸರು ಗಡಿಪಾರು ಆದೇಶ ಪ್ರತಿಯನ್ನು ಜಾರಿ ಮಾಡುವುದಕ್ಕಾಗಿ ಉಜಿರೆಯ ಮಹೇಶ್ ಶೆಟ್ಟಿ ತಿಮರೋಡಿಯವರ ಮನೆಗೆ ಸೋಮವಾರ ಮಧ್ಯರಾತ್ರಿಯೇ ತೆರಳಿದ್ದರು. ಆದರೆ ಈ ವೇಳೆ ಮಹೇಶ್ ಶೆಟ್ಟಿ ತಿಮರೋಡಿ ಮನೆಯಲ್ಲಿರಲಿಲ್ಲ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ತಿಮರೋಡಿಯ ಮನೆಯ ಗೋಡೆಗೆ ನೋಟಿಸ್ ಅಂಟಿಸಿರುವುದಾಗಿ ತಿಳಿದು ಬಂದಿದೆ
ಇತಿಹಾಸದಲ್ಲೇ ಮೊದಲು ಇಂತಹ ಘಟನೆ, ಸಭಾಧ್ಯಕ್ಷರಿಂದಲೇ ದಿಢೀರ್ ಸಭಾತ್ಯಾಗ | Karnataka Assembly Speaker
ಕರ್ನಾಟಕ ನಮ್ಮ ದೇಶದಲ್ಲೇ ಅತ್ಯಂತ ಶ್ರೀಮಂತ ರಾಜ್ಯಗಳ ಪೈಕಿ ಒಂದಾಗಿದ್ದು, ಲಕ್ಷಾಂತರ ಕೋಟಿ ರೂಪಾಯಿ ಆದಾಯ ಸೃಷ್ಟಿಸುವ ರಾಜ್ಯವಾಗಿದೆ. ಇದೇ ಕಾರಣಕ್ಕೆ ಕರ್ನಾಟಕದ ರಾಜಕೀಯ ಹಾಗೂ ವಿಧಾಸಭೆ ಕಲಾಪಗಳ ಬಗ್ಗೆ ಇಡೀ ದೇಶ ಗಮನ ಇಡುತ್ತದೆ. ಹೀಗಿದ್ದಾಗ ಕರ್ನಾಟಕ ವಿಧಾನಸಭೆ ದೊಡ್ಡ ಇತಿಹಾಸ ಹೊಂದಿದ್ದು, ಹೀಗಿದ್ದಾಗ ಕರ್ನಾಟಕದ ವಿಧಾನಸಭೆ ಇತಿಹಾಸದಲ್ಲೇ ಮೊದಲ ಬಾರಿಗೆ ಒಂದು ಘಟನೆ ಸಂಭವಿಸಿದೆ.
ಆರ್ಎಸ್ಎಸ್, ರಾ ಮೇಲೆ ನಿರ್ದಿಷ್ಟ ನಿರ್ಬಂಧ ವಿಧಿಸಿ : ಟ್ರಂಪ್ಗೆ ಅಮೆರಿಕ ಧಾರ್ಮಿಕ ಸ್ವಾತಂತ್ರ್ಯ ಆಯೋಗ ಶಿಫಾರಸು
ರಾಷ್ಟ್ರೀಯ ಸ್ವಯಂಸೇವಕ ಸಂಘ ಮತ್ತು ಗುಪ್ತಚರ ಸಂಸ್ಥೆ ಸಂಶೋಧನೆ ಮತ್ತು ವಿಶ್ಲೇಷಣಾ ವಿಭಾಗದ ಮೇಲೆ ಡೊನಾಲ್ಡ್ ಟ್ರಂಪ್ ಸರ್ಕಾರ ನಿರ್ಬಂಧ ವಿಧಿಸಬೇಕು ಎಂದು ಅಂತಾರಾಷ್ಟ್ರೀಯ ಧಾರ್ಮಿಕ ಹಕ್ಕುಗಳ ಕುರಿತ ಅಮೆರಿಕದ ಆಯೋಗ (ಯುಎಸ್ಸಿಐಆರ್ಎಫ್) ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸರಕಾರಕ್ಕೆ ಶಿಫಾರಸು ಮಾಡಿದೆ. ಇದು ಸಾಕಷ್ಟು ಪ್ರಶ್ನೆಗಳನ್ನು ಹುಟ್ಟು ಹಾಕಿದೆ.
ಯಾದಗಿರಿ : ಮತ್ತೆ ದಾಳಿಗಿಳಿದ ಚಿರತೆ, ಹೆಚ್ಚಿದ ಭೀತಿ
ಕಾಡಿನಲ್ಲಿ ಇರಬೇಕಾದ ವ್ಯನ್ಯಜೀವಿಗಳು ಗ್ರಾಮೀಣ ಭಾಗದ ಜನವಸತಿ ಪ್ರದೇಶಗಳಲ್ಲೂ ಅಲೆದಾಡುತ್ತಿರುವುರಿಂದ ಕೆಲ ತಿಂಗಳುಗಳಲ್ಲಿ ಯಾದಗಿರಿ ಸುತ್ತಮುತ್ತ ನಡೆದಿರುವ ಚಿರತೆಯ ದಾಳಿಯಲ್ಲಿ ಹೆಚ್ಚಾಗಿ ಆಕಳು, ಎತ್ತು, ಮೇಕೆಗಳನ್ನು ಬಲಿಯಾಗಿವೆ. ಚಿರತೆ ಮಾತ್ರ ಆಗಾಗ ದಾಳಿ ಮಾಡಿ ಜಾನುವಾರುಗಳನ್ನು ಬಲಿ ಪಡೆಯುತ್ತಲೇ ಇದೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಭಾರತೀಯ ಕಚ್ಚಾತೈಲ ದರ ಬ್ಯಾರಲ್ಗೆ 137 ಡಾಲರ್ : ಮಧ್ಯಪ್ರಾಚ್ಯ ಸಂಘರ್ಷದ ಬಳಿಕ ಶೇ.93ರಷ್ಟು ಏರಿಕೆ
ಹೊಸದಿಲ್ಲಿ : ಕೊಲ್ಲಿ ಸಂಘರ್ಷ ಆರಂಭದ ಬಳಿಕ ಭಾರತೀಯ ಶುದ್ಧೀಕರಣ ಘಟಕಗಳ ಕಚ್ಚಾತೈಲದ ವೆಚ್ಚ ಶೇಕಡ 93ರಷ್ಟು ಏರಿಕೆಯಾಗಿದ್ದು, ಶುಕ್ರವಾರ ಪ್ರತಿ ಬ್ಯಾರಲ್ ದರ 136.56ಕ್ಕೆ ತಲುಪಿದೆ. ಇದರಿಂದಾಗಿ ಇಂಡಿಯನ್ ಆಯಿಲ್, ಎಚ್ಪಿಸಿಲ್ ಮತ್ತು ಬಿಪಿಸಿಎಲ್ನಂಥ ಸರ್ಕಾರಿ ತೈಲ ಮಾರಾಟ ಕಂಪನಿಗಳಿಂದ ಹಿಡಿದು ರಿಲಯನ್ಸ್ ಇಂಡಸ್ಟ್ರೀಸ್ನಂಥ ಖಾಸಗಿ ಕಂಪನಿಗಳವರೆಗೆ ಲಾಭ ಅಳಿಸಿಹೋಗಿದೆ. ಅಮೆರಿಕ ಸೇರಿದಂತೆ ಹಲವು ದೇಶಗಳು ಕಚ್ಚಾ ತೈಲ ಬೆಲೆ ಏರಿಕೆಗೆ ಅನುಗುಣವಾಗಿ ಚಿಲ್ಲರೆ ಬೆಲೆಯನ್ನು ಏರಿಸಿವೆ. ಆದರೆ ಭಾರತದಲ್ಲಿ ತೈಲ ಕಂಪನಿಗಳು ಪಂಪ್ ಬೆಲೆಯನ್ನು ಇದುವರೆಗೆ ಹಾಗೆಯೇ ಉಳಿಸಿಕೊಂಡಿವೆ. ಇದು ಹಲವು ತಿಂಗಳುಗಳಿಂದ ಕಂಪನಿಗಳು ಗಳಿಸುತ್ತಿದ್ದ ಲಾಭಕ್ಕೆ ತೀವ್ರ ಹೊಡೆತ ನೀಡಿದೆ. ಬಜೆಟ್ ಗುರಿಗಳಿಗೆ ಅನುಗುಣವಾಗಿ ತೆರಿಗೆ ಹಾಗೂ ಹಣಕಾಸು ಸಮತೋಲನ ಕಾಪಾಡುವ ಸಲುವಾಗಿ ಮಾ.31ರವರೆಗೆ ಸರ್ಕಾರ ಬೆಲೆಯನ್ನು ಬದಲಿಸುವ ಸಾಧ್ಯತೆ ಇಲ್ಲ. ಯುದ್ಧಪೀಡಿತ ಪ್ರದೇಶಗಳ ಮೂಲಕ ಹಾದುಹೋಗುವ ಹಡಗುಗಳ ಚಲನೆ ಸಹಜ ಸ್ಥಿತಿಗೆ ಬರುವವರೆಗೆ ಕಚ್ಚಾ ತೈಲ ಬೆಲೆಯಲ್ಲಿ ಚಂಚಲತೆ ಮುಂದುವರಿಯಲಿದೆ. ನಾಲ್ಕು ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶವಾದ ಪುದುಚೇರಿಯಲ್ಲಿ ವಿಧಾನಸಭಾ ಚುನಾವಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಏ.29ರಂದು ಕೊನೆಯ ಹಂತದ ಮತದಾನ ಮುಗಿಯುವವರೆಗೂ ಬೆಲೆ ಏರಿಕೆಗೆ ಹಸಿರು ನಿಶಾನೆ ಸಿಗುವುದು ಕಷ್ಟಸಾಧ್ಯ ಎಂದು ಹೇಳಲಾಗಿದೆ. ಅಮೆರಿಕದಲ್ಲಿ ಗ್ಯಾಲನ್ ಗ್ಯಾಸೋಲಿನ್ ದರ 3.7 ಡಾಲರ್ ಆಗಿದ್ದು, ಯುದ್ಧಾರಂಭದ ಬಳಿಕ ಬ್ರೆಂಟ್ ಕ್ರೂಡ್ ದರ ಶೇಕಡ 40ರಷ್ಟು ಹೆಚ್ಚಿದೆ. ರಷ್ಯನ್ ಉರಲ್ಸ್ ಕಚ್ಚಾತೈಲ ದರ ಈ ಅವಧಿಯಲ್ಲಿ ಶೇಕಡ 50ರಷ್ಟು ಹೆಚ್ಚಿದೆ. ಒಮನ್ ಮತ್ತು ದುಬೈ ಸೇರಿದಂತೆ ಹಲವು ದೇಶಗಳಿಂದ ತೈಲ ಆಮದು ಮಾಡಿಕೊಳ್ಳುತ್ತಿರುವ ಭಾರತಕ್ಕೆ ಫೆ.26ರಂದು ಇದ್ದ ದರ 70.9 ಡಾಲರ್ ನಿಂದ ಮಾ.12ಕ್ಕೆ 127.2 ಡಾಲರ್ ಗೆ ಹೆಚ್ಚಿತ್ತು. ಶುಕ್ರವಾರ ಮತ್ತೆ ಪ್ರತಿ ಬ್ಯಾರಲ್ ದರ 9.3 ಡಾಲರ್ ಅಥವಾ ಶೇಕಡ 7.3ರಷ್ಟು ಹೆಚ್ಚಿ 136.5 ಡಾಲರ್ ತಲುಪಿದೆ ಎಂದು ಅಧಿಕೃತ ಅಂಕಿ ಅಂಶಗಳಿಂದ ತಿಳಿದುಬರುತ್ತದೆ.
ರಾಜ್ಯಸಭಾ ಚುನಾವಣೆ : ಬಿಹಾರದ ಎಲ್ಲಾ ಐದು ಸ್ಥಾನ ಎನ್ಡಿಎ ಪಾಲು; ಒಡಿಶಾದಲ್ಲಿ ಮೂರು ಸ್ಥಾನಗಳಲ್ಲಿ ಗೆಲುವು
ಹೊಸದಿಲ್ಲಿ: ರಾಜ್ಯಸಭೆಯ 37 ಸ್ಥಾನಗಳಿಗೆ ಸೋಮವಾರ ನಡೆದ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್ಡಿಎ ತನ್ನ ಹಿಡಿತವನ್ನು ಮತ್ತಷ್ಟು ಬಿಗಿಗೊಳಿಸಿದೆ. ಈ ದ್ವೈವಾರ್ಷಿಕ ಚುನಾವಣೆಯಲ್ಲಿ ಬಿಹಾರದ ಎಲ್ಲ ಐದು ಸ್ಥಾನಗಳನ್ನು ಗೆದ್ದಿದ್ದು, ಒಡಿಶಾದ ನಾಲ್ಕು ಸ್ಥಾನಗಳ ಪೈಕಿ ಮೂರನ್ನು ಬಗಲಿಗೆ ಹಾಕಿಕೊಂಡಿದೆ. ಏತನ್ಮಧ್ಯೆ ಮತ ರಹಸ್ಯವನ್ನು ಉಲ್ಲಂಘಿಸಿದ ಆರೋಪದಲ್ಲಿ ಹರ್ಯಾಣದ ಎರಡು ಸ್ಥಾನಗಳ ಫಲಿತಾಂಶವನ್ನು ತಡೆಹಿಡಿಯಲಾಗಿದೆ. ಒಟ್ಟು 37 ಸ್ಥಾನಗಳ ಪೈಕಿ ಉಳಿದೆಲ್ಲ ಸ್ಥಾನಗಳು ಅವಿರೋಧವಾಗಿ ಭರ್ತಿಯಾಗಿದ್ದರಿಂದ ಬಿಹಾರ, ಒಡಿಶಾ ಹಾಗೂ ಹರ್ಯಾಣದ 11 ಸ್ಥಾನಗಳಿಗೆ ಮಾತ್ರವೇ ಮತದಾನ ನಡೆದಿತ್ತು. ಈ ಪೈಕಿ ಎನ್ಡಿಎ ಬೆಂಬಲಿತ ಸ್ವತಂತ್ರ ಅಭ್ಯರ್ಥಿ ಸೇರಿದಂತೆ ಎನ್ಡಿಎ ಒಟ್ಟು ಎಂಟು ಸ್ಥಾನಗಳನ್ನು ಗಳಿಸಿದೆ. ಬಿಜೆಡಿ ಒಡಿಶಾದಲ್ಲಿ ಒಂದು ಸ್ಥಾನ ಗೆದ್ದಿದೆ. ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳು ನೀಡಿದ ದೂರಿನ ಹಿನ್ನೆಲೆಯಲ್ಲಿ ಹರ್ಯಾಣದ ಎರಡು ಸ್ಥಾನಗಳ ಮತ ಎಣಿಕೆ ಸ್ಥಗಿತಗೊಳಿಸಲಾಗಿದೆ. ಬಿಹಾರದಲ್ಲಿ ಎನ್ಡಿಎ ಎಲ್ಲ ಐದು ಸ್ಥಾನಗಳನ್ನು ಬಾಚಿಕೊಂಡಿದೆ. ಜೆಡಿಯು ಮುಖ್ಯಸ್ಥ ನಿತೀಶ್ ಕುಮಾರ್, ಬಿಜೆಪಿಯ ಹೊಸ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬೀನ್, ಕೇಂದ್ರ ಸಚಿವ ರಾಮನಾಥ್ ಠಾಕೂರ್, ರಾಷ್ಟ್ರೀಯ ಲೋಕಮೋರ್ಚಾ ಮುಖ್ಯಸ್ಥ ಉಪೇಂದ್ರ ಕುಶ್ವಾಹ ಮತ್ತು ಬಿಜೆಪಿಯ ಶಿವೇಶ್ ಕುಮಾರ್ ಆಯ್ಕೆಯಾಗಿದ್ದಾರೆ. ಈ ಪೈಕಿ ಠಾಕೂರ್ ಹಾಗೂ ಕುಶ್ವಾಹ ಮರು ಆಯ್ಕೆಯಾಗಿದ್ದಾರೆ. ಎಐಎಂಐಎಂನ ಐವರು ಸದಸ್ಯರು ಹಾಗೂ ಬಿಎಸ್ಪಿ ಶಾಸಕನಿಂದ ಬೆಂಬಲ ಪಡೆದಿದ್ದಾರೆ ಎಂದು ಆರ್ಜೆಡಿ ನಾಯಕ ತೇಜಸ್ವಿ ಯಾದವ್ ಆಪಾದಿಸಿರುವ ನಿರ್ಗಮನ ಸಂಸದ ಅಮರೇಂದ್ರ ಧಾರಿ ಸಿಂಗ್ ಸೋಲು ಅನುಭವಿಸಿದ್ದಾರೆ. ಒಡಿಶಾದಲ್ಲಿ ಎನ್ಡಿಎ ಬೆಂಬಲಿತ ಸ್ವತಂತ್ರ ಅಭ್ಯರ್ಥಿ ದಿಲೀಪ್ ರೇ ಸೇರಿದಂತೆ ಎನ್ಡಿಎಯ ಮೂವರು ರಾಜ್ಯಸಭೆಗೆ ಅಯ್ಕೆಯಾಗಿದ್ದಾರೆ. ಬಿಜೆಪಿ ರಾಜ್ಯ ಘಕದ ಅಧ್ಯಕ್ಷ ಮನಮೋಹನ ಸಮಾಲ್, ಹಾಲಿ ಸಂಸದ ಸುಜೀತ್ ಕುಮಾರ್ ಮತ್ತು ಬಿಜೆಡಿಯ ಸಂತೃಪ್ತ ಮಿಶ್ರಾ ಗೆದ್ದ ಇತರ ಅಭ್ಯರ್ಥಿಗಳು. ಕಾಂಗ್ರೆಸ್, ಸಿಪಿಎಂ ಹಾಗೂ ಬಿಜೆಡಿ ಬೆಂಬಲಿತ ಅಭ್ಯರ್ಥಿ ಡಾ.ದತ್ತೇಶ್ವರ ಹೋತಾ ಸೋಲು ಅನುಭವಿಸಿದ್ದಾರೆ. ಕಾಂಗ್ರೆಸ್ನ ಮೂವರ ಹಾಗೂ ಬಿಜೆಡಿಯ ಇಬ್ಬರು ಸದಸ್ಯರು ಅಡ್ಡ ಮತದಾನ ಮಾಡಿದ ಪರಿಣಾಮ ಬಿಜೆಪಿಯ ಮೂರನೇ ಅಭ್ಯರ್ಥಿಯ ಗೆಲುವು ಸಾಧ್ಯವಾಗಿದೆ.
ಮಂಗಳೂರಿಗೆ ಬರಲಿದೆ 26,000 ಟನ್ LPG ತೈಲ ಹೊತ್ತ 'ಶಿವಾಲಿಕ್' ಹಡಗು
ಮಧ್ಯಪ್ರಾಚ್ಯದಲ್ಲಿ ಇಸ್ರೇಲ್, ಅಮೆರಿಕ ಮತ್ತು ಇರಾನ್ ನಡುವಿನ ಯುದ್ಧ ಹಾಗೂ ಉದ್ವಿಗ್ನತೆಯಿಂದಾಗಿ ಎದುರಾಗಿದ್ದ ಅಡುಗೆ ಅನಿಲ ಪೂರೈಕೆ ವ್ಯತ್ಯಯದ ಆತಂಕಕ್ಕೆ ಕೊಂಚ ಬ್ರೇಕ್ ಬಿದ್ದಿದೆ. ದ್ರವೀಕೃತ ಪೆಟ್ರೋಲಿಯಂ ಅನಿಲವನ್ನು (ಎಲ್ಪಿಜಿ) ಹೊತ್ತ 'ಶಿವಾಲಿಕ್' ಹಡಗು ಯುದ್ಧ ಪೀಡಿತ ಹೊರ್ಮುಜ್ ಜಲಸಂಧಿಯನ್ನು ಸುರಕ್ಷಿತವಾಗಿ ದಾಟಿ ಸೋಮವಾರ ಸಂಜೆ ಗುಜರಾತ್ನ ಮುಂದ್ರಾ ಬಂದರನ್ನು ತಲುಪಿದೆ. ಇದು ಕೇವಲ ಗುಜರಾತ್ಗೆ ಮಾತ್ರವಲ್ಲ,
100 ಶೇ. ಮತದಾನವಾದರೂ ಅಭಿವೃದ್ಧಿ ಕಾಣದ ಬಾಂಜಾರುಮಲೆ
► ಮಾತು ತಪ್ಪಿದ ಅಧಿಕಾರಿಗಳು ► ಮುಂದುವರಿದ ಮಲೆಕುಡಿಯ ಕಾಲನಿಗರ ಸಂಕಷ್ಟ
ದೇವಸ್ಥಾನಗಳಲ್ಲಿ ಬಾಲ್ಯವಿವಾಹ ನಿಷೇಧ ಫಲಕ ಕಡ್ಡಾಯ - ಹೈಕೋರ್ಟ್ ಆದೇಶ
ಬಾಲ್ಯವಿವಾಹ ತಡೆಯಲು ಹೈಕೋರ್ಟ್ ಮಹತ್ವದ ನಿರ್ದೇಶನ ನೀಡಿದ್ದು, ದೇವಸ್ಥಾನಗಳು ಮತ್ತು ಕಲ್ಯಾಣ ಮಂಟಪಗಳಲ್ಲಿ “ಕಾನೂನು ಪ್ರಕಾರ ಬಾಲ್ಯವಿವಾಹ ನಿಷೇಧಿಸಲಾಗಿದೆ” ಎಂಬ ಫಲಕಗಳನ್ನು ಕಡ್ಡಾಯವಾಗಿ ಪ್ರದರ್ಶಿಸಲು ಸೂಚಿಸಿದೆ. ಬಾಲ್ಯವಿವಾಹ ನಿರ್ಮೂಲನೆಗೆ ಸಮಾಜದಲ್ಲಿ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ನ್ಯಾಯಪೀಠ ತಿಳಿಸಿದೆ. ಬಾಲ್ಯವಿವಾಹ ನಡೆಸುವ ಪುರೋಹಿತರು, ಆಯೋಜಕರು ಹಾಗೂ ಸಂಬಂಧಿಕರೂ ಕಾನೂನು ಪ್ರಕಾರ ಶಿಕ್ಷಾರ್ಹರು ಎಂದು ನ್ಯಾಯಾಲಯ ಎಚ್ಚರಿಸಿದೆ.
West Bengal Opinion Poll : ದೀದಿಗೆ ಅಲ್ಪ ಮುನ್ನಡೆ, ಬೆನ್ನಟ್ಟಿ ಬರುತ್ತಿದೆ ಬಿಜೆಪಿ - ರೋಚಕ ಹಣಾಹಣಿ
West Bengal Assembly Election Opinion Poll : ಮುಂಬರುವ ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭಾ ಚುನಾವಣೆಗೆ, ಕೇಂದ್ರ ಚುನಾವಣಾ ಆಯೋಗ ದಿನಾಂಕವನ್ನು ಪ್ರಕಟಿಸಿದೆ. ಪಶ್ಚಿಮ ಬಂಗಾಳದಲ್ಲಿ ಎರಡು ಹಂತದಲ್ಲಿ ಚುನಾವಣೆ ನಡೆಯಲಿದೆ. ಮೆಟ್ರಿಜ್ - ಐಎಎನ್ಎಸ್ ನಡೆಸಿದ ಸಮೀಕ್ಷೆಯಲ್ಲಿ ಮಮತಾ ಬ್ಯಾನರ್ಜಿಗೆ ಲೀಡ್ ಸಿಗಲಿದೆ ಮತ್ತು ಬಿಜೆಪಿ ತನ್ನ ಬಲವನ್ನು ಇನ್ನಷ್ಟು ವೃದ್ದಿಸಿ ಕೊಳ್ಳಲಿದೆ.
ದೇವದುರ್ಗ: ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಇಲ್ಲವೇ?
ಪೊಲೀಸರ ವಿರುದ್ಧ ಸಾರ್ವಜನಿಕರ ಆರೋಪ
ಅದಾನಿ ಸಮೂಹದ ಎಸಿಸಿ ಸಿಮೆಂಟ್ಸ್ ಪ್ರೈವೇಟ್ ಲಿಮಿಟೆಡ್ ಅಕ್ರಮ ಗಣಿಗಾರಿಕೆ
ಬೆಂಗಳೂರು, ಮಾ.16: ಕಲಬುರಗಿಯ ವಾಡಿಯಲ್ಲಿ ಅದಾನಿ ಸಮೂಹದ ಎಸಿಸಿ ಸಿಮೆಂಟ್ಸ್ ಪ್ರೈವೇಟ್ ಲಿಮಿಟೆಡ್ ಅಕ್ರಮವಾಗಿ ಗಣಿಗಾರಿಕೆ ನಡೆಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಗಣಿ ಭೂ ವಿಜ್ಞಾನ ಇಲಾಖೆ ನಿರ್ದೇಶಕರು ಸೇರಿದಂತೆ ಅಕ್ರಮ ಗಣಿಗಾರಿಕೆ ತಡೆಗಟ್ಟಲು ವಿಫಲರಾದ ಅಧಿಕಾರಿಗಳ ವಿರುದ್ಧ ಲೋಕಾಯುಕ್ತ ತನಿಖೆಗೆ ವಹಿಸಬೇಕು ಎಂದು ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ (ಗಣಿ) ಯು ಮಾಡಿರುವ ಶಿಫಾರಸಿನ ಕಡತವು ಗಣಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಅವರ ಕಚೇರಿಯಲ್ಲಿ ಧೂಳಿಡಿದು ಕೂತಿದೆ. ಕಲಬುರಗಿಯ ವಾಡಿಯಲ್ಲಿ ಅಕ್ರಮ ಗಣಿಗಾರಿಕೆ ನಡೆಸಿರುವ ಅದಾನಿ ಸಮೂಹದ ಎಸಿಸಿ ಸಿಮೆಂಟ್ಸ್ ಪ್ರೈವೇಟ್ ಲಿಮಿಟೆಡ್ಗೆ ದಂಡ ಮತ್ತು ರಾಯಧನ ಸೇರಿ ಒಟ್ಟಾರೆ 850 ಕೋಟಿ ರೂ.ಗೂ ಅಧಿಕ ಮೊತ್ತವನ್ನು ವಸೂಲು ಮಾಡಬೇಕು. ಈ ಸಂಬಂಧ ಎಂಎಂಡಿಆರ್ ಕಾಯ್ದೆಯ ಸೆಕ್ಷನ್ 221(1) ಮತ್ತು 21(2) ಅಡಿಯಲ್ಲಿ ಕ್ರಿಮಿನಲ್ ಪ್ರಕರಣಗಳನ್ನು ದಾಖಲಿಸಬೇಕು ಎಂದು ಕಾನೂನು ಸಚಿವ ಎಚ್.ಕೆ.ಪಾಟೀಲ್ ಅವರು ಶಿಫಾರಸು ಮಾಡಿದ್ದರು. ಈ ಶಿಫಾರಸನ್ನು ಪರಿಶೀಲಿಸಿದ್ದ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ (ಗಣಿಶಾಖೆಯು) ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ನಿರ್ದೇಶಕರು ಸೇರಿದಂತೆ ಇದಕ್ಕೆ ಹೊಣೆಗಾರರಾದ ಅಧಿಕಾರಿ, ನೌಕರರ ವಿರುದ್ಧ ಇಲಾಖೆ ತನಿಖೆ ಅಥವಾ ಲೋಕಾಯುಕ್ತ ತನಿಖೆ ನಡೆಸುವುದು ಸೂಕ್ತ ಎಂದು ಅಭಿಪ್ರಾಯಿಸಿತ್ತು. ಈ ಅಭಿಪ್ರಾಯವಿದ್ದ ಕಡತವನ್ನು ಇಲಾಖೆಯು, ಗಣಿ ಸಚಿವ ಎಸ್.ಎಸ್ .ಮಲ್ಲಿಕಾರ್ಜುನ್ ಅವರ ಅನುಮೋದನೆಗೆ ಕಳಿಸಿತ್ತು. ಆದರೆ ಇದುವರೆಗೂ ಸಚಿವ ಎಸ್.ಎಸ್ .ಮಲ್ಲಿಕಾರ್ಜುನ್ ಅವರು ಈ ಶಿಫಾರಸಿಗೆ ಅನುಮೋದನೆ ನೀಡಿಲ್ಲ ಎಂದು ತಿಳಿದು ಬಂದಿದೆ. ಇದಕ್ಕೆ ಸಂಬಂಧಿಸಿದಂತೆ ಕಡತದ ಟಿಪ್ಪಣಿ ಹಾಳೆಗಳು he-file.inಗೆ ಲಭ್ಯವಾಗಿವೆ. ‘ಕಾನೂನು ಇಲಾಖೆಯ ಅಭಿಪ್ರಾಯದ ಪ್ರಕಾರ ಆಡಳಿತಾತ್ಮಕ ಇಲಾಖೆಗೆ ತಕ್ಷಣ ಕ್ರಮ ಕೈಗೊಳ್ಳುವಂತೆ ನಿರ್ದೇಶಿಸಬಹುದು. ಜೊತೆಗೆ ಇಲಾಖಾ ತನಿಖೆ ಆರಂಭಿಸುವುದು ಅಥವಾ ಪ್ರಕರಣವನ್ನು ಲೋಕಾ ಯುಕ್ತಕ್ಕೆ ತನಿಖೆಗೆ ಒಪ್ಪಿಸಲು ಪರಿಗಣಿಸಬಹುದು,’ ಎಂದು ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯು ಟಿಪ್ಪಣಿ ಹಾಳೆಯಲ್ಲಿ ವಿವರಿಸಿದೆ ಎಂದು ತಿಳಿದು ಬಂದಿದೆ. ಅಲ್ಲದೇ 2023ರ ಫೆ.18ರಿಂದ 2024ರ ಆಗಸ್ಟ್ 18ರವರೆಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಲ್ಲಿ ಕಾರ್ಯನಿರ್ವಹಿಸಿದ ನಿರ್ದೇಶಕರು, ಉಪ ನಿರ್ದೇಶಕರು, ಹಿರಿಯ ಭೂವಿಜ್ಞಾನಿಗಳು ಹಾಗೂ ಅಕ್ರಮ ಗಣಿಗಾರಿಕೆಯನ್ನು ತಡೆಗಟ್ಟಲು ವಿಫಲವಾಗಿರುವ ಮತ್ತು ನಡೆದಿರುವ ಗಂಭೀರ ಲೋಪಗಳ ಕುರಿತು ತನಿಖೆ ನಡೆಸಬೇಕು. ಹಾಗೆಯೇ ಕಾನೂನುಬದ್ಧ ಕರ್ತವ್ಯಗಳನ್ನು ನಿರ್ವಹಿಸದಿದ್ದಕ್ಕಾಗಿ ಅವರನ್ನು ಹೊಣೆಗಾರರನ್ನಾಗಿ ಮಾಡಬೇಕು. ಮತ್ತು ರಾಜ್ಯ ಖಜಾನೆಗೆ ಉಂಟಾಗಿರುವ ಭಾರೀ ನಷ್ಟ / ಹಾನಿಗೆ ಉತ್ತರದಾಯಕರನ್ನಾಗಿ ಮಾಡಬಹುದು ಎಂದು ಇಲಾಖೆಯು ಕಡತದ ಟಿಪ್ಪಣಿ ಹಾಳೆಯಲ್ಲಿ ವಿವರಿಸಿದೆ ಎಂದು ಗೊತ್ತಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ರಾಜ್ಯ ಅಡ್ವೋಕೇಟ್ ಜನರಲ್ ಮತ್ತು ಕಾನೂನು ಇಲಾಖೆಯು ಅಭಿಪ್ರಾಯ ನೀಡಿದೆ. ಈ ಪ್ರಕರಣದಲ್ಲಿ ಹಣಕಾಸು ಸಂಬಂಧಿತ ವಿಷಯಗಳ ಕುರಿತು ಅಭಿಪ್ರಾಯ ನೀಡಲು ಕಡತವನ್ನು ಹಣಕಾಸು ಇಲಾಖೆಗೆ ಕಳಿಸಿದೆ. ಕಾನೂನು ಇಲಾಖೆಯ ಅಭಿಪ್ರಾಯದ ಪ್ರಕಾರ ಕಾನೂನುಬದ್ಧ ಬಾಕಿಗಳು ಒಟ್ಟು 850.21 ಕೋಟಿ ರೂ. ಇದೆ. ಇದರಲ್ಲಿ ರಾಯಲ್ಟಿ / ಬಡ್ಡಿ 492.51 ಕೋಟಿ ರೂ.ಯಷ್ಟು ಇದೆ. ಕಂಪೆನಿಯು ಈಗಾಗಲೇ 125 ಕೋಟಿ ರೂ.ಪಾವತಿಸಿದೆ. ಇನ್ನೂ 367.51 ಕೋಟಿ ರೂ.ಬಾಕಿ ಉಳಿಸಿಕೊಂಡಿದೆ. ಎಂಎಂಡಿಆರ್ ಕಾಯ್ದೆ 1957 ರ ಸೆಕ್ಷನ್ 21(5) ಅಡಿಯಲ್ಲಿ, ಲೀಸ್ ಅವಧಿ ಮುಗಿದ ನಂತರ 2023ರ ಫೆ.18ರಿಂದ 2024ರ ಆಗಸ್ಟ್ 18ರವರೆಗೆ ಗುತ್ತಿಗೆಯ ಮಾನ್ಯತೆ ಇಲ್ಲದೆ ನಡೆಸಿದ ಅಕ್ರಮ ಗಣಿಗಾರಿಕೆ ನಡೆಸಿರುವ ಕಾರಣಕ್ಕೆ 482.59 ಕೋಟಿ ರೂ.ದಂಡ ವಿಧಿಸಲಾಗಿದೆ. ಟೆಂಡರ್ ದಾಖಲೆಗಳ ವಿಧಿ 10 ಉಲ್ಲಂಘಿಸಿ ದೊಡ್ಡ ಪ್ರಮಾಣದ ಕಾನೂನುಬದ್ಧ ಬಾಕಿಗಳನ್ನು ಪಾವತಿಸದಿರುವುದರಿಂದ ಯೋಜನೆ ಪ್ರಸ್ತಾಪಕರನ್ನು ಡೀಫಾಲ್ಟರ್ ಎಂದು ಪರಿಗಣಿಸಲಾಗಿದೆ. ಕಾನೂನು ಸ್ಥಿತಿ ಮತ್ತು ನ್ಯಾಯಾಲಯದಲ್ಲಿ ಬಾಕಿ ಇರುವ ಪ್ರಕರಣಗಳ ಕುರಿತು ಚರ್ಚಿಸಲಾಗಿದೆ ಎಂದು ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯು ಟಿಪ್ಪಣಿ ಹಾಳೆಯಲ್ಲಿ ವಿವರಿಸಿದೆ. ರಾಯಲ್ಟಿ ಪಾವತಿಗೆ ಸಂಬಂಧಿಸಿದಂತೆ ರಿಟ್ ಅರ್ಜಿ25298/2024, 36850/2025, ರಿವಿಷನಲ್ ಆದೇಶವನ್ನು ಪ್ರಶ್ನಿಸಿರುವ ಮತ್ತು ದಂಡಕ್ಕೆ ಸಂಬಂಧಿಸಿದಂತೆ ರಿಟ್ ಅರ್ಜಿ (W.P. No. 18655/2025 ಈ ಎಲ್ಲಾ ಪ್ರಕರಣಗಳು ಕರ್ನಾಟಕ ಹೈಕೋರ್ಟ್ ಮುಂದೆ ಬಾಕಿಯಿವೆ. ಎಸಿಸಿ ಲಿಮಿಟೆಡ್, ಗಣಿಗಾರಿಕೆ ಕಂಪನಿಯು ಎಂಎಂಡಿಆರ್ ಕಾಯ್ದೆ 1957 ಅಡಿಯಲ್ಲಿ ಪಾವತಿಸಬೇಕಾದ ಕಾನೂನುಬದ್ಧ ಬಾಕಿಗಳನ್ನು ಪಾವತಿಸದಿರುವ ಬಗ್ಗೆಯೂ ಉಲ್ಲೇಖಿಸಲಾಗಿದೆ. ಎಂಎಂಡಿಆರ್ ಕಾಯ್ದೆ ಸೆಕ್ಷನ್ 9 ಪ್ರಕಾರ, ಖನಿಜಗಳನ್ನು ತೆಗೆದುಕೊಳ್ಳುವಾಗ ಅಥವಾ ಉಪಯೋಗಿಸುವಾಗ ಕಡ್ಡಾಯವಾಗಿದೆ ರಾಯಲ್ಟಿ ಪಾವತಿಸಬೇಕು. ಇದು ಕಾನೂನುಬದ್ಧ ತೆರಿಗೆ ಆಗಿದ್ದು ಮಾತುಕತೆಯಿಂದ ಬದಲಾಯಿಸಲಾಗುವುದಿಲ್ಲ. ರಾಯಲ್ಟಿ ಪಾವತಿಸದಿದ್ದರೆ ಕಾನೂನುಬದ್ಧ ಬಡ್ಡಿ ಹಾಗೂ ದಂಡ ವಿಧಿಸಲಾಗುತ್ತದೆ ಮತ್ತು ಅವುಗಳನ್ನು ಭೂಮಿ ಹಣ ಬಾಕಿಗಳಂತೆ ವಸೂಲಿ ಮಾಡಬಹುದು ಎಂದೂ ಟಿಪ್ಪಣಿಯಲ್ಲಿ ವಿವರಿಸಿದೆ. ಎಂಎಂಡಿಆರ್ ಕಾಯ್ದೆ ಸೆಕ್ಷನ್ 21 (5) ಪ್ರಕಾರ, ರಾಜ್ಯ ಸರಕಾರಕ್ಕೆ ಅಕ್ರಮವಾಗಿ ತೆಗೆಯಲಾದ ಖನಿಜಗಳ ಮೌಲ್ಯದ ಶೇ.100ರಷ್ಟು ವಸೂಲಿ ಮಾಡುವ ಅಧಿಕಾರ ಇದೆ. ಇದು ರಾಯಲ್ಟಿ, ಬಾಡಿಗೆ ಹಾಗೂ ದಂಡದಿಂದ ಪ್ರತ್ಯೇಕವಾಗಿದ್ದು, ಕ್ರಿಮಿನಲ್ ಪ್ರಕರಣಗಳಿಂದ Common Cause vs Union of India, (2017) 9 SCC 499)ಸ್ವತಂತ್ರವಾಗಿದೆ ಎಂದು ಹೇಳಿರುವುದು ಗೊತ್ತಾಗಿದೆ. ’ಅಪರಾಧಗಳನ್ನು ಮನ್ನಿಸುವುದು ಅಥವಾ ದಂಡ ಪಾವತಿಸುವುದರಿಂದ ಕ್ರಿಮಿನಲ್ ಕ್ರಮವನ್ನು ತಡೆಯಲು ಸಾಧ್ಯವಿಲ್ಲ. ಆಡಳಿತಾತ್ಮಕ ದಂಡ ಮತ್ತು ಕ್ರಿಮಿನಲ್ ಕ್ರಮಗಳು ವಿಭಿನ್ನ ಕಾನೂನು ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತವೆ. (Citation: Jayant vs State of Madhya Pradesh (2020) 18 SCC 401) ಪುನರಾವರ್ತಿತ ಉಲ್ಲಂಘನೆಗಳ ಹಿನ್ನೆಲೆಯಲ್ಲಿ ಹಣದ ದಂಡ ಸೇರಿದಂತೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕಾಗಿದೆ,’ ಇಲಾಖೆಯು ಶಿಫಾರಸು ಮಾಡಿರುವುದು ತಿಳಿದು ಬಂದಿದೆ. ಆಡಳಿತಾತ್ಮಕ ಇಲಾಖೆಯು ತಕ್ಷಣವೇ ಅಕ್ರಮವಾಗಿ ತೆಗೆಯಲಾದ ಖನಿಜಗಳ ಮೌಲ್ಯದ 100% ವಸೂಲಿ ಮಾಡುವಂತೆ ಬೇಡಿಕೆ ಎತ್ತಿ ಜಾರಿಗೊಳಿಸಬೇಕು, ಹಾಗೂ ಕಾನೂನು ಪ್ರಕಾರ ರಾಯಲ್ಟಿ, ಬಡ್ಡಿ ಮತ್ತು ದಂಡ ವಸೂಲಿ ಮಾಡಬೇಕು. ಜೊತೆಗೆ ಎಂಎಂಡಿಆರ್ ಕಾಯ್ದೆ ಸೆಕ್ಷನ್ 221(1) ಮತ್ತು 21(2) ಅಡಿಯಲ್ಲಿ ಅಕ್ರಮ ಗಣಿಗಾರಿಕೆಗೆ ಕ್ರಿಮಿನಲ್ ಪ್ರಕರಣಗಳನ್ನು ದಾಖಲಿಸಬೇಕು ಎಂದು ಹೇಳಿದೆ. ‘ಈ ಮೇಲಿನ ವಿಚಾರಗಳನ್ನು ಪರಿಗಣಿಸಿದಾಗ, ಡೀಫಾಲ್ಟರ್ ಕಂಪೆನಿಯು ಅಕ್ರಮ ಗಣಿಗಾರಿಕೆ ಮತ್ತು ಇತರ ಕಾನೂನುಬದ್ಧ ಬಾಕಿಗಳ ಹಿನ್ನೆಲೆಯಲ್ಲಿ ರಾಜ್ಯ ಖಜಾನೆಗೆ ರಾಯಲ್ಟಿ / ಬಡ್ಡಿ / ದಂಡ ರೂಪದಲ್ಲಿ ದೊಡ್ಡ ಮೊತ್ತವನ್ನು ಪಾವತಿಸಬೇಕಾಗಿದೆ. ಕಾನೂನು ವಿಧಿಗಳ ಪುನರಾವರ್ತಿತ ಉಲ್ಲಂಘನೆಗಳನ್ನು ಗಂಭೀರವಾಗಿ ಪರಿಗಣಿಸಬೇಕಾಗಿದೆ,’ ಎಂದು ವಿವರಿಸಿದೆ. ರಾಜ್ಯದ ಹಣಕಾಸು ಹಿತಾಸಕ್ತಿಯನ್ನು ಕಾಪಾಡುವ ದೃಷ್ಟಿಯಿಂದ, ವರ್ಷಗಳಿಂದ ಆದಾಯ ಸಂಗ್ರಹಣೆಯಲ್ಲಿ ಉಂಟಾದ ಗಂಭೀರ ಲೋಪಗಳನ್ನು ಗಮನಿಸಬೇಕು. ಹಾಗೂ ಆಡಳಿತಾತ್ಮಕ ಇಲಾಖೆಯ ಈ ಗಂಭೀರ ತಪ್ಪುಗಳನ್ನು ಗಂಭೀರವಾಗಿ ಪರಿಗಣಿಸಿ, ಕಾನೂನುಬದ್ಧ ಬಾಕಿಗಳನ್ನು ವಸೂಲಿ ಮಾಡಲು ಅತ್ಯಂತ ಆದ್ಯತೆಯೊಂದಿಗೆ ಕ್ರಮ ಕೈಗೊಳ್ಳಬೇಕು ಎಂದು ವಿವರಿಸಿರುವುದು ತಿಳಿದು ಬಂದಿದೆ. 850.21 ಕೋಟಿ ರೂ.ಗಳಷ್ಟು ಬಾಕಿ ಉಳಿಸಿಕೊಂಡಿದ್ದರೂ ಅದಾನಿ ಸಮೂಹದ ಎಸಿಸಿ ಸಿಮೆಂಟ್ಸ್ ಪ್ರೈವೇಟ್ ಲಿಮಿಟೆಡ್ಗೆ ಲೆಟರ್ ಆಫ್ ಇಂಟೆಂಟ್ ವಿಸ್ತರಿಸಲು ನೇರವಾಗಿ ಕೇಂದ್ರ ಸರಕಾರದ ಮಾರ್ಗದರ್ಶನ ಕೋರಿ ಮುಜುಗರಕ್ಕೀಡಾಗಿದ್ದ ಬೆಳವಣಿಗೆ ನಡುವೆಯೇ ಇದೀಗ ರಾಜ್ಯಸರಕಾರವು ಗಣಿ ವಿಭಾಗದದಿಂದ ಕಾರ್ಯದರ್ಶಿ ರೋಹಿಣಿ ಸಿಂಧೂರಿ ಅವರನ್ನು ಎತ್ತಂಗಡಿ ಮಾಡಿರುವುದನ್ನು ಸ್ಮರಿಸಬಹುದು.
ಚಾಮರಾಜನಗರ: ಬಗೆಹರಿಯದ ವಾಣಿಜ್ಯ ಸಿಲಿಂಡರ್ ಸಮಸ್ಯೆ, ಕೆಲ ಹೋಟೆಲ್ ಗಳು ಬಂದ್
ವಾಣಿಜ್ಯ ಸಿಲಿಂಡರ್ ಬಂದ್ ಆಗಿರುವುದರಿಂದ ಕೆಲ ಹೋಟೆಲ್ನವರು ತಿಂಡಿ ಬೆಲೆ ಏರಿಕೆ ಮಾಡಿದ್ದಾರೆ. ಇನ್ನು ಕೆಲವರು ಇಡ್ಲಿ, ಪೂರಿಯಂತ ಐಟಮ್ ಬಿಟ್ಟು ಉಪ್ಪಿಟ್ಟು, ಒಗ್ಗರಣೆ, ಅವಲಕ್ಕಿ, ರೈಸ್ ಐಟಂಗಷ್ಟೇ ಸಿಮೀತ ಮಾಡಿದ್ದಾರೆ. ಕೆಲವು ಹೋಟೆಲ್ಗಳು ವಹಿವಾಟು ಬಂದ್ ಮಾಡುವ ಮೂಲಕ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.
SSLC Exam 2026 : ಮಾರ್ಚ್ 18ರಿಂದ ಪರೀಕ್ಷೆ; ವಿದ್ಯಾರ್ಥಿಗಳೇ, ನಿಮ್ಮ ಕೊನೆ ಕ್ಷಣದ ಸಿದ್ಧತೆಗೆ ಹೀಗಿರಲಿ
ಬೆಂಗಳೂರು: ರಾಜ್ಯದ ವಿದ್ಯಾರ್ಥಿಗಳ ಶೈಕ್ಷಣಿಕ ಜೀವನದ ಅತಿ ಮುಖ್ಯ ಘಟ್ಟವಾದ ಎಸ್ಎಸ್ಎಲ್ಸಿ ವಾರ್ಷಿಕ ಪರೀಕ್ಷೆಗಳು ಇದೇ ಮಾರ್ಚ್ 18ರಿಂದ ರಾಜ್ಯಾದ್ಯಂತ ಆರಂಭವಾಗಲಿವೆ. ವರ್ಷವಿಡೀ ಓದಿದರೂ ಪರೀಕ್ಷೆ ಹತ್ತಿರ ಬರುತ್ತಿದ್ದಂತೆ ವಿದ್ಯಾರ್ಥಿಗಳಲ್ಲಿ ಸಹಜವಾಗಿ ಆತಂಕ, ಭಯ ಮತ್ತು ಒತ್ತಡ ಮನೆಮಾಡುತ್ತದೆ. ಆದರೆ, ಈ ಕೊನೆಯ ಕ್ಷಣದ ಸಿದ್ಧತೆ ನಿಮ್ಮ ಒಟ್ಟು ಅಂಕಗಳ ಮೇಲೆ ಭಾರೀ ಪ್ರಭಾವ ಬೀರುತ್ತದೆ. ಪರೀಕ್ಷಾ
ವಸಾಹತುಶಾಹಿಯ ಈ ಪಳೆಯುಳಿಕೆ ತೊಲಗಲಿ
ಬ್ರಿಟಿಷರು ಭಾರತವನ್ನು ಬಿಟ್ಟು ಹೋಗಿ ಎಂಟು ದಶಕಗಳಾಗುತ್ತಾ ಬಂದರೂ ಅವರ ಆಡಳಿತದ ಕೆಲವು ಕೆಟ್ಟ ಪಳೆಯುಳಿಕೆಗಳು ಇಲ್ಲಿ ಹಾಗೆಯೇ ಉಳಿದುಕೊಂಡು ಬಂದಿವೆ. ಇದಕ್ಕೆ ಒಂದು ಉದಾಹರಣೆಯೆಂದರೆ ಪೊಲೀಸ್ ಇಲಾಖೆಯಲ್ಲಿ ಇರುವ ಆರ್ಡರ್ಲಿ ವ್ಯವಸ್ಥೆ. ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳ ಮನೆಯಲ್ಲಿ ಮನೆಯ ಚಾಕರಿಗಾಗಿ ಆರ್ಡರ್ಲಿಗಳನ್ನಾಗಿ ಪೊಲೀಸ್ ಸಿಬ್ಬಂದಿಯನ್ನು ನೇಮಕ ಮಾಡುವುದು ಬ್ರಿಟಿಷ್ ಕಾಲದ ಕೆಟ್ಟ ಪದ್ಧತಿ. ಕರ್ನಾಟಕದಲ್ಲಿ ಅಂದಾಜು ಮೂರು ಸಾವಿರ ಮಂದಿ ಪೊಲೀಸರನ್ನು ಹಿರಿಯ ಪೊಲೀಸ್ ಅಧಿಕಾರಿಗಳ ಮನೆ ಕೆಲಸಗಳಿಗಾಗಿ ನಿಯೋಜಿಸುತ್ತ ಬರಲಾಗಿದೆ. ಹೀಗೆ ಆರ್ಡರ್ಲಿಗಳಾಗಿ ನಿಯೋಜಿಸಲ್ಪಟ್ಟಿರುವ ಪೊಲೀಸ್ ಸಿಬ್ಬಂದಿಯನ್ನು ವಾಪಸು ಕರೆಸಿಕೊಳ್ಳುವುದಾಗಿ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಎಂ.ಎ. ಸಲೀಂ ತಿಳಿಸಿದ್ದಾರೆ. ಆರ್ಡರ್ಲಿಗಳಾಗಿರುವವರನ್ನು ಪೊಲೀಸ್ ಕೆಲಸಕ್ಕೆ ಮರು ನಿಯೋಜನೆ ಮಾಡಲು ಸಲೀಂ ಅವರು ಕೈಗೊಂಡ ಕ್ರಮ ಸ್ವಾಗತಾರ್ಹವಾಗಿದೆ. ಇದಕ್ಕೆ ಪೂರಕವಾಗಿ ರಾಜ್ಯ ಸರಕಾರ ಕೂಡಾ ಹಿರಿಯ ಪೊಲೀಸ್ ಅಧಿಕಾರಿಗಳು ಖಾಸಗಿಯಾಗಿ ಸಹಾಯಕರನ್ನಾಗಿ ನೇಮಕ ಮಾಡಿಕೊಳ್ಳಬಹುದು ಅಥವಾ ಗೃಹ ರಕ್ಷಕ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳಬಹುದು. ಅದಕ್ಕೆ ಸೂಕ್ತ ಭತ್ತೆಯನ್ನು ನೀಡುವುದಾಗಿ ಹೇಳಿದೆ. ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಎಂ.ಎ. ಸಲೀಂ ಅವರು ಈ ಬಗ್ಗೆ ನೀಡಿರುವ ಆದೇಶ ಹಾಗೂ ರಾಜ್ಯ ಸರಕಾರ ಅದಕ್ಕೆ ಸ್ಪಂದಿಸಿರುವುದು ಶ್ಲಾಘನೀಯ. ಆದರೆ ಇದು ಕಾರ್ಯಗತವಾಗುವುದು ಅಂದು ಕೊಂಡಷ್ಟು ಸುಲಭವೇ? ಎಂಬ ಪ್ರಶ್ನೆ ನಮ್ಮ ಮುಂದಿದೆ. ಈ ಆರ್ಡರ್ಲಿ ಪದ್ಧತಿಯನ್ನು ತೆಗೆದುಹಾಕಲು ಹಿಂದೆಯೂ ಸರಕಾರ ಕೆಲವು ಸಲ ಪ್ರಯತ್ನಿಸಿತ್ತು. ಪೊಲೀಸ್ ಇಲಾಖೆಯಲ್ಲಿ ಆಂತರಿಕವಾಗಿ ಮಾತ್ರವಲ್ಲ, ಸಾರ್ವಜನಿಕ ವಲಯದಲ್ಲಿ ಈ ಬಗ್ಗೆ ಟೀಕೆ, ಪ್ರತಿರೋಧಗಳು ಕಂಡು ಬಂದಾಗ 2017ರಲ್ಲಿ ಇದನ್ನು ನಿಷೇಧಿಸಲಾಗಿತ್ತು.ಆದರೆ ಇದು ಕಾಟಾಚಾರದ ಕ್ರಮವಾಗಿತ್ತು. ಈ ಬಗ್ಗೆ ಟೀಕೆ, ಪ್ರತಿರೋಧಗಳು ಕಡಿಮೆಯಾದ ನಂತರ ಪೊಲೀಸರು ಆರ್ಡರ್ಲಿಗಳಾಗಿ ಹಿರಿಯ ಪೊಲೀಸ್ ಅಧಿಕಾರಿಗಳ ಮನೆ ಕೆಲಸಕ್ಕೆ ವಾಪಸಾಗಬೇಕಾಯಿತು. ಪೊಲೀಸ್ ಇಲಾಖೆಯಲ್ಲಿ ಆರ್ಡರ್ಲಿ ಎಂಬುದು ಕರ್ನಾಟಕ ರಾಜ್ಯಕ್ಕೆ ಸೀಮಿತವಾದ ಸಮಸ್ಯೆ ಅಲ್ಲ. ದೇಶವ್ಯಾಪಿಯಾಗಿರುವ ಈ ಕೆಟ್ಟ ಪದ್ಧತಿಯ ಬಗ್ಗೆ ಟೀಕೆ, ವಿಮರ್ಶೆಗಳು ಬರುತ್ತಲೇ ಇವೆ. ವಸಾಹತುಶಾಹಿ ಕಾಲದ ಈ ಪದ್ಧತಿಯನ್ನು ರದ್ದುಗೊಳಿಸಬೇಕೆಂದು ರಾಷ್ಟ್ರೀಯ ಪೊಲೀಸ್ ಆಯೋಗವು ಐದಾರು ದಶಕಗಳ ಹಿಂದೆಯೇ ಶಿಫಾರಸು ಮಾಡಿದೆ. ಇದು ಪೊಲೀಸರ ನೈತಿಕ ಸ್ಥೈರ್ಯವನ್ನು ಕುಗ್ಗಿಸುತ್ತದೆ ಹಾಗೂ ಹೊಣೆಗಾರಿಕೆಯಿಂದ ಕೂಡಿದ ಪೊಲೀಸ್ ಕರ್ತವ್ಯವನ್ನು ನಿರ್ವಹಿಸಬೇಕಾದವರನ್ನು ಬೇರೆ ಉದ್ದೇಶಗಳಿಗಾಗಿ ಉಪಯೋಗಿಸಿಕೊಳ್ಳುವುದು ಸರಿಯಲ್ಲ ಎಂದು ರಾಷ್ಟ್ರೀಯ ಪೊಲೀಸ್ ಆಯೋಗ ಹಿಂದೆ ಹೇಳಿತ್ತು. ವಸಾಹತುಶಾಹಿ ಕಾಲದ ಈ ಆರ್ಡರ್ಲಿ ಪದ್ಧತಿಯ ಬಗ್ಗೆ ನ್ಯಾಯಾಲಯಗಳು ಕೂಡ ಅನೇಕ ಸಲ ಕಟುವಾದ ಶಬ್ದಗಳಲ್ಲಿ ಟೀಕಿಸಿವೆ. ಇದು ವಸಾಹತುಶಾಹಿ ಕಾಲದ ಗುಲಾಮಿತನದ ರೂಪ ಎಂದು ಮದ್ರಾಸ್ ಹೈಕೋರ್ಟ್ ಹೇಳಿರುವುದು ಸೂಕ್ತವಾಗಿದೆ. ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಕೂಡ ಆರ್ಡರ್ಲಿ ಪದ್ಧತಿ ಗುಲಾಮಿತನದ ಇನ್ನೊಂದು ರೂಪ ಹಾಗೂ ಮಾನವ ಹಕ್ಕುಗಳ ಉಲ್ಲಂಘನೆ ಎಂದು ಹೇಳಿದ್ದಾರೆ. ಅವರು ಮಾತ್ರವಲ್ಲ ಬಹುತೇಕ ರಾಜಕೀಯ ನಾಯಕರೂ ಈ ಬಗ್ಗೆ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.ಕೆಲವು ರಾಜ್ಯಗಳು ಆರ್ಡರ್ಲಿ ಪದ್ಧತಿಗೆ ಪರ್ಯಾಯವಾಗಿ ಬೇರೆ ವ್ಯವಸ್ಥೆಯನ್ನು ರೂಪಿಸುವ ಪ್ರಯತ್ನಗಳನ್ನು ನಡೆಸಿವೆ. ನಿಯಮಗಳ ಪಾಲನೆಯ ಮೇಲೆ ಕಣ್ಣಿಡಲು ತಮಿಳುನಾಡಿನಲ್ಲಿ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಜಿಲ್ಲಾ ಮಟ್ಟದ ಸಮಿತಿಗಳನ್ನು ರಚಿಸಲಾಗಿದೆ. ಆರ್ಡರ್ಲಿಗಳನ್ನು ವಾಪಸ್ ಪೊಲೀಸ್ ಕರ್ತವ್ಯ ನಿರ್ವಹಣೆಗೆ ಕರೆಸಿಕೊಳ್ಳುವುದನ್ನು ತೆಲಂಗಾಣದಲ್ಲಿ ಒಟ್ಟಾರೆ ಪೊಲೀಸ್ ಇಲಾಖೆಯ ಸುಧಾರಣೆಯ ಭಾಗವನ್ನಾಗಿ ಮಾಡಲಾಗಿದೆ. ಆದರೂ ಪ್ರಭಾವಿ ಪೊಲೀಸ್ ಅಧಿಕಾರಿಗಳ ಲಾಬಿಯ ಎದುರು ಸರಕಾರಗಳು ಹಾಗೂ ನ್ಯಾಯಾಲಯಗಳ ಪ್ರಯತ್ನ ಕೂಡ ವ್ಯರ್ಥ ಪ್ರಯತ್ನಗಳಾಗುತ್ತಿವೆ. ಅಪರಾಧ ಪ್ರಕರಣಗಳ ತನಿಖೆ ಹಾಗೂ ಕಾನೂನು ಸುವ್ಯವಸ್ಥೆಯ ಪಾಲನೆಗಾಗಿ ನೇಮಕ ಮಾಡಿಕೊಳ್ಳಲಾಗುವ ಪೊಲೀಸ್ ಸಿಬ್ಬಂದಿಗೆ ತರಬೇತಿ ನೀಡಲು ಸರಕಾರಗಳು ಲಕ್ಷಾಂತರ ರೂಪಾಯಿಗಳನ್ನು ವ್ಯಯಿಸುತ್ತವೆ. ಆದರೆ ಹೀಗೆ ತರಬೇತಿ ಪಡೆದ ಪೊಲೀಸ್ ಕಾನ್ಸ್ಟೇಬಲ್ಗಳನ್ನು ಹಿರಿಯ ಪೊಲೀಸ್ ಅಧಿಕಾರಿಗಳ ಮನೆಗಳಲ್ಲಿ ಚಾಕರಿ ಮಾಡಲು ಕಳಿಸುವುದು ಸರಿಯಲ್ಲ. ಇದು ಅವಮಾನಕರ ಮಾತ್ರವಲ್ಲ, ಸಂಪನ್ಮೂಲಗಳ ದುರುಪಯೋಗ. ಈ ಹಿನ್ನೆಲೆಯಲ್ಲಿ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಎಂ.ಎ. ಸಲೀಂ ಅವರು ಆರ್ಡರ್ಲಿಗಳನ್ನು ವಾಪಸು ಪೊಲೀಸ್ ಇಲಾಖೆಯ ಕೆಲಸಕ್ಕೆ ಕರೆಸಿಕೊಳ್ಳುವ ಕುರಿತು ಮಾಡಿರುವ ಆದೇಶ ಸೂಕ್ತವಾಗಿದೆ. ಆದರೆ ಇದು ಕಾಗದದಲ್ಲಿ ಮಾತ್ರ ಉಳಿಯಬಾರದು ಇದನ್ನು ಕಾರ್ಯಗತಗೊಳಿಸಲು ಅವಶ್ಯಕವಾದ ಕ್ರಮಗಳನ್ನು ಕೈಗೊಳ್ಳುವುದು ಅಗತ್ಯವಾಗಿದೆ. ಅನಿಷ್ಟವಾದ ಆರ್ಡರ್ಲಿ ವ್ಯವಸ್ಥೆಯನ್ನು ರದ್ದು ಮಾಡಬೇಕೆಂದರೆ ಮೊದಲು ಅದಕ್ಕೆ ಕಾರಣರಾದ ಹಿರಿಯ ಪೊಲೀಸ್ ಅಧಿಕಾರಿಗಳ ಮೇಲೆ ಶಿಸ್ತು ಕ್ರಮವನ್ನು ಕೈಗೊಳ್ಳಬೇಕು ಹಾಗೂ ಹೆಸರು ಬದಲಿಸಿಕೊಂಡು ಇದನ್ನು ಮುಂದುವರಿಸಲು ಅವಕಾಶ ನೀಡಬಾರದು. ಆರ್ಡರ್ಲಿ ಪದ್ಧತಿ ಎಂಬುದು ಆಡಳಿತಾತ್ಮಕ ಲೋಪ ಮಾತ್ರವಲ್ಲ, ಅದು ಪೊಲೀಸ್ ವ್ಯವಸ್ಥೆಯಲ್ಲಿನ ಊಳಿಗಮಾನ್ಯ ಪದ್ಧತಿಯ ಸಂಕೇತ ಎಂಬುದನ್ನು ಮರೆಯಬಾರದು. ಇದನ್ನು ಬುಡ ಸಮೇತ ಕಿತ್ತು ಹಾಕಬೇಕೆಂದರೆ ಅದು ಸುತ್ತೋಲೆಗಳಿಂದ ಮಾತ್ರ ನಿವಾರಣೆಯಾಗುವಂಥದಲ್ಲ, ಅದರ ಜೊತೆಗೆ ಇದನ್ನು ತೊಲಗಿಸಲು ಸರಕಾರದ ಜವಾಬ್ದಾರಿ ಸ್ಥಾನಗಳಲ್ಲಿ ಇರುವವರಲ್ಲಿ ಪ್ರಬಲ ಇಚ್ಛಾಶಕ್ತಿ ಬೇಕು. ತಾತ್ವಿಕ ಬದ್ಧತೆ ಮತ್ತು ಸಾಂಸ್ಥಿಕ ಎದೆಗಾರಿಕೆ ಬೇಕು.
ಕಾಬೂಲ್ ಪುನರ್ವಸತಿ ಕೇಂದ್ರದ ಮೇಲೆ ಪಾಕಿಸ್ತಾನ ಭೀಕರ ವೈಮಾನಿಕ ದಾಳಿ; 400 ಕ್ಕೂ ಹೆಚ್ಚು ಮಂದಿ ಸಾವು
ಪಾಕಿಸ್ತಾನವು ಕಾಬೂಲ್ನಲ್ಲಿರುವ ಮಾದಕ ವ್ಯಸನಿಗಳ ಚಿಕಿತ್ಸಾ ಆಸ್ಪತ್ರೆಯನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದೆ. ಈ ದಾಳಿಯಲ್ಲಿ 400 ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. 250 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎನ್ನಲಾಗುತ್ತಿದೆ. ಆದರೆ ಈ ದಾಳಿಯನ್ನು ಪಾಕಿಸ್ತಾನ ತಳ್ಳಿ ಹಾಕಿದೆ. ನಾವು ಯಾವುದೇ ದಾಳಿ ನಡೆಸಿಲ್ಲ ಎಂದಿದೆ.
ಕೊಟ್ಟೂರು | ರಾಗಿ ಖರೀದಿ ಕೇಂದ್ರದಲ್ಲಿ ಅವ್ಯವಸ್ಥೆ: ರೈತರ ಪರದಾಟ
ಕೊಟ್ಟೂರು: ಪಟ್ಟಣದ ಎಪಿಎಂಸಿಯಲ್ಲಿ ಕನಿಷ್ಠ ಬೆಂಬಲ ಬೆಲೆ (ಎಂಎಸ್ಪಿ) ಯೋಜನೆಯಡಿ ಆರಂಭಗೊಂಡಿರುವ ರಾಗಿ ಖರೀದಿ ಕೇಂದ್ರದಲ್ಲಿ ಅವ್ಯವಸ್ಥೆ ತಲೆದೋರಿದ್ದು, ರಾಗಿ ಮಾರಾಟಕ್ಕೆ ಬಂದಿರುವ ರೈತರು ಹಲವು ದಿನಗಳಿಂದ ಪರದಾಡುವಂತಾಗಿದೆ. ಈ ವರ್ಷ ಸರಕಾರ ರಾಗಿಗೆ ಉತ್ತಮ ಬೆಂಬಲ ಬೆಲೆ ಘೋಷಿಸಿರುವ ಹಿನ್ನೆಲೆಯಲ್ಲಿ ತಾಲೂಕಿನ ವಿವಿಧ ಭಾಗಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ರೈತರು ರಾಗಿ ಬೆಳೆದು ಮಾರಾಟಕ್ಕೆ ತರುತ್ತಿದ್ದಾರೆ. ಆದರೆ ಖರೀದಿ ಕೇಂದ್ರದಲ್ಲಿ ಸಮರ್ಪಕ ವ್ಯವಸ್ಥೆ ಇಲ್ಲದ ಕಾರಣ ಒಂದೇ ದಿನದಲ್ಲಿ ರಾಗಿ ನೋಂದಣಿ ಹಾಗೂ ಖರೀದಿ ಆಗದೆ ರೈತರು ಮೂರ್ನಾಲ್ಕು ದಿನಗಳವರೆಗೆ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಎಪಿಎಂಸಿ ಆವರಣದಲ್ಲಿ ಸಾಲು ಸಾಲಾಗಿ ಟ್ರ್ಯಾಕ್ಟರ್ ಗಳು ನಿಂತಿದ್ದು, ಕೆಲ ರೈತರು ರಾತ್ರಿ ವೇಳೆ ಅಲ್ಲಿಯೇ ತಂಗುವಂತಾಗಿದೆ. ಟ್ರ್ಯಾಕ್ಟರ್ ಬಾಡಿಗೆ ದಿನಕ್ಕೆ ಸುಮಾರು ಸಾವಿರ ರೂ. ಆಗುತ್ತಿರುವುದರಿಂದ ರೈತರಿಗೆ ಹೆಚ್ಚುವರಿ ಆರ್ಥಿಕ ಹೊರೆ ಬೀಳುತ್ತಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇನ್ನೊಂದೆಡೆ ಖರೀದಿ ಮಾಡಿದ ರಾಗಿಯನ್ನು ಸಂಗ್ರಹಿಸಲು ಸೂಕ್ತ ಗೋಡೌನ್ ವ್ಯವಸ್ಥೆ ಇಲ್ಲದಿರುವುದು ಮತ್ತೊಂದು ಸಮಸ್ಯೆಯಾಗಿದೆ. ಖರೀದಿಯಾದ ರಾಗಿಯನ್ನು ಕೊಪ್ಪಳದ ಏಜೆನ್ಸಿಗೆ ಒಪ್ಪಿಸಲಾಗಿದ್ದರೂ ಸಮರ್ಪಕವಾಗಿ ವಿಲೇವಾರಿ ಮಾಡದ ಕಾರಣ ದಾಸ್ತಾನು ಹೆಚ್ಚಾಗಿ ಸ್ಥಳಾವಕಾಶದ ಕೊರತೆ ಉಂಟಾಗಿದೆ ಎಂದು ತಿಳಿದುಬಂದಿದೆ. ರೈತರಿಗೆ ಅನುಕೂಲವಾಗಲೆಂದು ಟೋಕನ್ ವ್ಯವಸ್ಥೆ ಜಾರಿಗೆ ತಂದಿದ್ದರೂ ಮಾಹಿತಿ ಕೊರತೆ ಹಾಗೂ ಸಿಬ್ಬಂದಿಯ ಅವ್ಯವಸ್ಥೆಯಿಂದ ರೈತರು ಒಂದೇ ಬಾರಿ ಖರೀದಿ ಕೇಂದ್ರದತ್ತ ಧಾವಿಸುತ್ತಿದ್ದಾರೆ. ಇದರಿಂದ ಎಪಿಎಂಸಿಯ ವಿವಿಧ ಬ್ಲಾಕ್ಗಳಲ್ಲಿ ಟ್ರ್ಯಾಕ್ಟರ್ಗಳ ಉದ್ದವಾದ ಸಾಲುಗಳು ಕಂಡುಬರುತ್ತಿವೆ. ತಾಲೂಕಿನ ಪ್ರಮುಖ ಮಾರುಕಟ್ಟೆಯಾದ ಕೊಟ್ಟೂರು ಎಪಿಎಂಸಿಯಲ್ಲಿ ರೈತರಿಗೆ ಕನಿಷ್ಠ ಸೌಲಭ್ಯಗಳೇ ಇಲ್ಲದಿರುವುದು ವಿಷಾದನೀಯ. ವಾರದ ಕಾಲ ಟ್ರ್ಯಾಕ್ಟರ್ಗಳಲ್ಲಿ ರೈತರು ರಾತ್ರಿ ಕಳೆಯಬೇಕಾದ ಪರಿಸ್ಥಿತಿ ಉಂಟಾಗಿದೆ. ಸರಕಾರ ಕೂಡಲೇ ಎಚ್ಚೆತ್ತುಕೊಂಡು ರಾಗಿ ಖರೀದಿ ಕೇಂದ್ರದಲ್ಲಿ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು. - ಕೆ.ಎಸ್.ಜಯಪ್ರಕಾಶ್ ನಾಯ್ಕ, ರೈತ ಸಂಘ ಮುಖಂಡ
ಪಂಚ ರಾಜ್ಯಗಳ ಚುನಾವಣಾ ವೇಳಾಪಟ್ಟಿಗೆ ಕಾಂಗ್ರೆಸ್ ಕಿಡಿ; EC ನಡೆ ಪ್ರಶ್ನಿಸಿದ ಕೆ.ಸಿ.ವೇಣುಗೋಪಾಲ್
ಹೊಸದಿಲ್ಲಿ, ಮಾ.17: ಐದು ರಾಜ್ಯಗಳು ಹಾಗೂ ಒಂದು ಕೇಂದ್ರಾಡಳಿತ ಪ್ರದೇಶದ ಚುನಾವಣಾ ದಿನಾಂಕಗಳ ಘೋಷಣೆ ಕುರಿತು ಕಾಂಗ್ರೆಸ್ ಸಂಸದ, AICC ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರು ಚುನಾವಣಾ ಆಯೋಗದ ಕ್ರಮವನ್ನು ಪ್ರಶ್ನಿಸಿದ್ದಾರೆ. “ನಾವು ಸಂಪೂರ್ಣವಾಗಿ ಸಿದ್ಧರಾಗಿದ್ದೇವೆ. ಚುನಾವಣೆಯಲ್ಲಿ ಗೆಲ್ಲುತ್ತೇವೆ ಎಂಬ ವಿಶ್ವಾಸವೂ ನಮ್ಮಲ್ಲಿದೆ. ಆದರೆ ಚುನಾವಣಾ ಆಯೋಗವು ದಿನಾಂಕಗಳನ್ನು ನಿಗದಿಪಡಿಸಿರುವ ವಿಧಾನ ಗಮನಿಸಿದರೆ ಹಲವು ಅನುಮಾನಗಳು ಉದ್ಭವಿಸುತ್ತವೆ,” ಎಂದು ಅವರು ಹೇಳಿದ್ದಾರೆ. ಮೊದಲ ಹಂತದ ಮತದಾನ 9ರಂದು ನಡೆಯಲಿದ್ದು, ನಾಮಪತ್ರ ಸಲ್ಲಿಕೆಗೆ 23 ಅಂತಿಮ ದಿನಾಂಕವಾಗಿದೆ. 24ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, 26ರವರೆಗೆ ಹಿಂಪಡೆಯಲು ಅವಕಾಶವಿದೆ. ಇದರ ನಂತರ ಕೇವಲ 11 ದಿನಗಳ ಪ್ರಚಾರ ಅವಧಿ ಮಾತ್ರ ಉಳಿಯುತ್ತದೆ ಎಂದು ವೇಣುಗೋಪಾಲ್ ವಿವರಿಸಿದರು. ಕೇರಳದ ಬಗ್ಗೆ ಮಾತನಾಡಿದ ಅವರು, “ಮೊದಲ ವಾರದಲ್ಲೇ ಈಸ್ಟರ್ ಹಾಗೂ ಗುಡ್ ಫ್ರೈಡೇ ಇರುವ ಹಿನ್ನೆಲೆಯಲ್ಲಿ ಚುನಾವಣಾ ಆಯೋಗವು ದಿನಾಂಕಗಳನ್ನು ಇನ್ನಷ್ಟು ಮುಂಚಿತವಾಗಿ ಪ್ರಕಟಿಸಬಹುದಿತ್ತು. ಮೇ 4ರಂದು ಮತ ಎಣಿಕೆ ನಡೆಯಲಿರುವಾಗ ಕೇರಳದಲ್ಲಿ ಇಷ್ಟು ಬೇಗ ಮತದಾನ ನಡೆಸುವ ಉದ್ದೇಶವೇನು?” ಎಂದು ಅವರು ಪ್ರಶ್ನಿಸಿದರು. ಕೇರಳ, ಪುದುಚೇರಿ ಮತ್ತು ಅಸ್ಸಾಂ ರಾಜ್ಯಗಳಲ್ಲಿ ಒಂದೇ ದಿನ ಚುನಾವಣೆಯನ್ನು ನಡೆಸಲಿರುವ ಹಿಂದಿನ ಉದ್ದೇಶವೂ ಸ್ಪಷ್ಟವಾಗಿಲ್ಲ ಎಂದು ಅವರು ಹೇಳಿದ್ದಾರೆ. “ನಾವು ಗೆಲುವಿನ ಬಗ್ಗೆ ಆತ್ಮವಿಶ್ವಾಸ ಹೊಂದಿದ್ದೇವೆ. ಆದರೆ ದೇಶದ ಜನರು ಚುನಾವಣಾ ಆಯೋಗದ ಪಕ್ಷಪಾತದ ಮನೋಭಾವವನ್ನು ಗಮನಿಸುತ್ತಿದ್ದಾರೆ,” ಎಂದು ವೇಣುಗೋಪಾಲ್ ಆರೋಪಿಸಿದರು. #WATCH | Delhi | On the announcement of dates of polls in 5 states/UTs, Congress MP KC Venugopal says, We are fully prepared, we are going to win the elections... You can see how the Election Commission has set the dates. The first phase of elections is on the 9th, nominations… pic.twitter.com/WwgJraKpbW — ANI (@ANI) March 16, 2026
ಅಫ್ಘಾನಿಸ್ತಾನದ ಆಸ್ಪತ್ರೆ ಮೇಲೆ ಪಾಕ್ ವಾಯುದಾಳಿ; ಕನಿಷ್ಠ 400 ಮಂದಿ ಮೃತ್ಯು : ವರದಿ
ಕಾಬೂಲ್: ಮಾದಕ ವ್ಯಸನಿಗಳಿಗೆ ಚಿಕಿತ್ಸೆ ನೀಡುತ್ತಿದ್ದ ನಗರದ ಆಸ್ಪತ್ರೆಯೊಂದರ ಮೇಲೆ ಪಾಕಿಸ್ತಾನ ಪಡೆಗಳು ನಡೆಸಿದ ಮಿಂಚಿನ ವಾಯುದಾಳಿಯಲ್ಲಿ ಕನಿಷ್ಠ 400 ಮಂದಿ ಮೃತಪಟ್ಟು ಇತರ 250ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ತಾಲಿಬಾನ್ ಪ್ರಕಟಿಸಿದೆ. ಆದರೆ ಪಾಕಿಸ್ತಾನ ಈ ಆರೋಪವನ್ನು ನಿರಾಕರಿಸಿದ್ದು, ಪೂರ್ವ ಅಫ್ಘಾನಿಸ್ತಾನದಲ್ಲಿ ಸೇನೆ ಮತ್ತು ಭಯೋತ್ಪಾದನಾ ಕೇಂದ್ರಗಳನ್ನು ಗುರಿ ಮಾಡಿ ಮಾತ್ರವೇ ವಾಯುದಾಳಿ ನಡೆದಿದೆ ಎಂದು ಹೇಳಿಕೊಂಡಿದೆ. ಸ್ಥಳೀಯ ಮಾಧ್ಯಮದ ಜತೆಗಿನ ಟಿವಿ ಸಂದರ್ಶನದಲ್ಲಿ ಸಾವುನೋವಿನ ವಿವರ ನೀಡಿದ ಆರೋಗ್ಯ ಸಚಿವಾಲಯ ವಕ್ತಾರ ಶರಾಫತ್ ಝಮಾನ್, ಮಾದಕವ್ಯಸನಿಗಳ ಚಿಕಿತ್ಸಾ ಆಸ್ಪತ್ರೆ ಸಂಪೂರ್ಣ ಧ್ವಂಸವಾಗಿದೆ ಎಂದು ಹೇಳಿದ್ದಾರೆ. ಉಪ ಸರ್ಕಾರಿ ವಕ್ತಾರ ಹಮಾದುಲ್ ಫಿತ್ರಾತ್ ಅವರ ಪ್ರಕಾರ, ಸಾವಿನ ಸಂಖ್ಯೆ 400ನ್ನು ದಾಟಿದೆ ಹಾಗೂ 250 ಮಂದಿ ಗಾಯಗೊಂಡಿದ್ದಾರೆ. ಸೋಮವಾರ ರಾತ್ರಿ 9.00 ಗಂಟೆಯ ವೇಳೆಗೆ ಅಫ್ಘಾನ್ ರಾಜಧಾನಿಯಲ್ಲಿ ಭಾರಿ ಸ್ಫೋಟದ ಸದ್ದು ಕೇಳಿಬಂದಿದೆ ಹಾಗೂ ಶರ್ಹ್ ಇ-ನವ್ ಮತ್ತು ವಾಜೀರ್ ಅಕ್ಬರ್ ಖಾನ್ ಪ್ರದೇಶಗಳಿಂದ ದಟ್ಟ ಹೊಗೆ ಕಂಡುಬಂದಿದೆ. ಇಡೀ ಕಟ್ಟಡವನ್ನು ವ್ಯಾಪಿಸಿರುವ ಬೆಂಕಿ ಆರಿಸಲು ಅಗ್ನಿಶಾಮಕ ಸಿಬ್ಬಂದಿ ಹೆಣಗಾಡುತ್ತಿರುವ ದೃಶ್ಯಗಳು ಸ್ಥಳೀಯ ಟಿವಿ ಚಾನಲ್ಗಳಲ್ಲಿ ಪ್ರಸಾರವಾಗಿವೆ. ಪಾಕಿಸ್ತಾನ ಸೇನೆ ಮತ್ತೊಮ್ಮೆ ಅಫ್ಘಾನ್ ಪ್ರದೇಶವನ್ನು ಉಲ್ಲಂಘಿಸಿದೆ. ಇದು ಅಪರಾಧ ಕೃತ್ಯ ಹಾಗೂ ಅಮಾನವೀಯ ಕೃತ್ಯ ಎಂದು ತಾಲಿಬಾನ್ ಸರ್ಕಾರದ ವಕ್ತಾರ ಝಬೀದುಲ್ಲಾ ಮುಜಾಹಿದ್ ಎಕ್ಸ್ ಪೋಸ್ಟ್ ನಲ್ಲಿ ಹೇಳಿದ್ದಾರೆ. ಮೃತಪಟ್ಟ ಮತ್ತು ಗಾಯಗೊಂಡ ಬಹುತೇಕ ಮಂದಿ ಚಿಕಿತ್ಸೆ ಪಡೆಯುತ್ತಿದ್ದ ಮಾದಕವಸ್ತು ವ್ಯಸನಿಗಳು ಎಂದು ಸ್ಪಷ್ಟಪಡಿಸಿದ್ದಾರೆ. ಪಾಕಿಸ್ತಾನದ ಮಾಹಿತಿ ಸಚಿವಾಲಯ ಈ ಆರೋಪವನ್ನು ನಿರಾಕರಿಸಿದ್ದು, ಅಫ್ಘಾನ್ ತಾಲಿಬಾನ್ನ ತಾಂತ್ರಿಕ ಸಲಕರಣೆಗಳು ಮತ್ತು ಶಸ್ತ್ರಾಸ್ತ್ರಗಳ ದಾಸ್ತಾನು ವ್ಯವಸ್ಥೆಯೂ ಸೇರಿದಂತೆ ನಿಖರವಾಗಿ ಸೇನಾ ನೆಲೆಗಳು ಮತ್ತು ಭಯೋತ್ಪಾದನೆಗೆ ಬೆಂಬಲಿಸುವ ಮೂಲಸೌಕರ್ಯಗಳನ್ನು ಹಾಗೂ ಕಾಬಲ್ ಮತ್ತು ನಂಗ್ರಹಾರ್ ನಲ್ಲಿ ನೆಲೆ ನಿಂತಿರುವ ಅಫ್ಘಾನಿಸ್ತಾನದಲ್ಲಿರುವ ಪಾಕಿಸ್ತಾನ ಉಗ್ರರನ್ನು ಗುರಿ ಮಾಡಿ ದಾಳಿ ನಡೆಸಲಾಗಿದೆ ಎಂದು ಸ್ಪಷ್ಟನೆ ನೀಡಿದೆ.
ಬಸವಣ್ಣನ ಬದುಕಿನ ದರ್ಶನ ಭಾಗ್ಯ ಕರುಣಿಸುವ ಜನ್ಮ ಸ್ಮಾರಕ
ಕಲಾಕೃತಿಗಳಲ್ಲಿ ಅರಳಿದ ಸಾಂಸ್ಕೃತಿಕ ನಾಯಕನ ಜೀವನಯಾತ್ರೆ
ಇರಾನ್ ಗೆ ಅಪಾರ ಶಕ್ತಿಯಿದೆ, ಅವರು ಮಣಿಯಲಿಲ್ಲ ಎಂದ ಅಮೆರಿಕ ಅಧ್ಯಕ್ಷ
Karnataka Weather: ಬೆಂಗಳೂರು ಸೇರಿದಂತೆ ರಾಜ್ಯದ 17 ಜಿಲ್ಲೆಗಳಲ್ಲಿ ನಾಳೆವರೆಗೆ ಗುಡುಗು ಸಹಿತ ಮಳೆ ಸಾಧ್ಯತೆ
ಬೆಂಗಳೂರು: ರಾಜ್ಯದ ಜನತೆಗೆ ಹವಾಮಾನ ಇಲಾಖೆಯು ಮಳೆಯ ಮುನ್ಸೂಚನೆ ನೀಡಿದೆ. ಈ ವಾರವಿಡೀ ದಕ್ಷಿಣ ಒಳನಾಡು, ಉತ್ತರ ಒಳನಾಡು ಹಾಗೂ ಕರಾವಳಿ ಭಾಗದ ಹಲವು ಜಿಲ್ಲೆಗಳಲ್ಲಿ ಗುಡುಗು ಸಹಿತ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಎಂದು ಹೇಳಿದೆ. ಮಾರ್ಚ್ 17 ಹಾಗೂ 18ರಂದು ರಾಜಧಾನಿ ಬೆಂಗಳೂರು ಸೇರಿದಂತೆ 17 ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆ ಇದೆ. ಕಳೆದ 24
ಭದ್ರೆಗೆ ಕೇಂದ್ರ ಅನುದಾನಕ್ಕೆ ಮತ್ತೆ ಸರ್ಕಸ್ ; ಮಾರ್ಚ್ 17 ರಂದು ಡಿಸಿಎಂ ಡಿಕೆಶಿ ನೇತೃತ್ವದಲ್ಲಿ ಸಮಾಲೋಚನಾ ಸಭೆ
ಕೃಷ್ಣ ಮೇಲ್ದಂಡೆ ಯೋಜನೆ, ಕಳಸಾ ಬಂಡೂರಿ ಯೋಜನೆ, ಮೇಕೇದಾಟು, ಭದ್ರಾ ಮೇಲ್ದಂಡೆ ಕೆಲವು ಕ್ಲಿಯರೆನ್ಸ್, ಅನುದಾನದ ಸಹಾಯ ಕೇಳಿರುವ ಯೋಜನೆಗಳು ನನೆಗುದಿಯಲ್ಲಿವೆ. ಇವುಗಳನ್ನು ಆದಷ್ಟು ಶೀಘ್ರವಾಗಿ ಇತ್ಯರ್ಥಪಡಿಸಿ, ರಾಜ್ಯದ ನೀರಾವರಿ ಅಭಿವೃದ್ಧಿಗೆ ಪೂರಕವಾದ ಹೊಣೆಗಾರಿಕೆ ನಿರ್ವಹಿಸಲು ಸಂಸದರು, ಕೇಂದ್ರದ ಅಧಿಕಾರಿಗಳಿಗೆ ಮನವರಿಕೆ ಮಾಡಿಕೊಡಬೇಕಾಗಿದೆ.
ಮಧ್ಯಪ್ರಾಚ್ಯದಲ್ಲಿ ಅರಾಜಕತೆ ಸೃಷ್ಟಿಸಿದ ಟ್ರಂಪ್: ಅಮೆರಿಕದ ಸೆನೆಟರ್ ಆಕ್ರೋಶ
ವಾಷಿಂಗ್ಟನ್, ಮಾ. 17: ಇರಾನ್ ವಿರುದ್ಧ ಅಮೆರಿಕ–ಇಸ್ರೇಲ್ ಯುದ್ಧದ ನಡುವೆ ಹಾರ್ಮುಝ್ ಜಲಸಂಧಿಯಲ್ಲಿ ಹಡಗುಗಳ ಭದ್ರತೆ ವಿಚಾರವಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೀಡಿದ ಹೇಳಿಕೆಗೆ ಯುಎಸ್ ಸೆನೆಟ್ ಡೆಮೋಕ್ರಾಟ್ ನಾಯಕ ಚಕ್ ಶುಮರ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಹಾರ್ಮುಝ್ ಜಲಸಂಧಿಯಲ್ಲಿ ಹಡಗು ಸಂಚಾರ ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಚೀನಾ ಸಹಾಯ ಮಾಡಬೇಕು ಎಂದು ಟ್ರಂಪ್ ಸೂಚಿಸಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಶುಮರ್, “ಹಾರ್ಮುಝ್ ಜಲಸಂಧಿಯನ್ನು ತೆರವುಗೊಳಿಸಲು ಚೀನಾ ನಮಗೆ ಸಹಾಯ ಮಾಡುತ್ತದೆ ಎಂದು ಅವರು ಹೇಳುತ್ತಾರೆ. ಟ್ರಂಪ್ ತಮಾಷೆ ಮಾಡುತ್ತಿದ್ದೀರಾ?” ಎಂದು ಸಾಮಾಜಿಕ ಜಾಲತಾಣ X ನಲ್ಲಿ ಪೋಸ್ಟ್ ಮಾಡಿದ್ದಾರೆ. ಡೆಮೋಕ್ರಾಟ್ ಪಕ್ಷದ ಸೆನೆಟರ್ ಆಗಿರುವ ಅವರು, ಟ್ರಂಪ್ ಮಧ್ಯಪ್ರಾಚ್ಯದಲ್ಲಿ ‘ಅವ್ಯವಸ್ಥೆ’ ಸೃಷ್ಟಿಸುತ್ತಿದ್ದಾರೆ ಎಂದು ಆರೋಪಿಸಿದರು. “ಈ ಪರಿಸ್ಥಿತಿಯನ್ನು ಹೇಗೆ ಅಂತ್ಯಗೊಳಿಸಬೇಕು ಎಂಬುದರ ಕುರಿತು ಅವರಿಗೆ ಯಾವುದೇ ಸ್ಪಷ್ಟ ಯೋಜನೆ ಇಲ್ಲ” ಎಂದು ಅವರು ಕಿಡಿಕಾರಿದ್ದಾರೆ.
ಇರಾನಿನಿಂದ ದಾಳಿ | ವಾಯುಪ್ರದೇಶವನ್ನು ತಾತ್ಕಾಲಿಕವಾಗಿ ಮುಚ್ಚಿದ UAE; ವಿಮಾನ ಹಾರಾಟ ಬಂದ್
ಅಬುಧಾಬಿ, ಮಾ. 17: ಇರಾನಿನಿಂದ ಉಂಟಾದ ಕ್ಷಿಪಣಿ ಹಾಗೂ ಡ್ರೋನ್ ದಾಳಿಗಳ ಹಿನ್ನೆಲೆ ಯುನೈಟೆಡ್ ಅರಬ್ ಎಮಿರೇಟ್ಸ್ (UAE) ತನ್ನ ವಾಯುಪ್ರದೇಶವನ್ನು ತಾತ್ಕಾಲಿಕವಾಗಿ ಸಂಪೂರ್ಣವಾಗಿ ಮುಚ್ಚಿದೆ ಎಂದು ಯುಎಇಯ ಸಾಮಾನ್ಯ ನಾಗರಿಕ ವಿಮಾನಯಾನ ಪ್ರಾಧಿಕಾರ ತಿಳಿಸಿದೆ ಎಂದು Aljazeera ವರದಿ ಮಾಡಿದೆ. ವಿಮಾನಗಳ ಸಂಚಾರ ಮತ್ತು ವಾಯು ಸಿಬ್ಬಂದಿಗಳ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳುವ ಜೊತೆಗೆ ದೇಶದ ವಾಯುಪ್ರದೇಶದ ರಕ್ಷಣೆಯನ್ನು ಬಲಪಡಿಸುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಸರಕಾರಿ ಮಾಧ್ಯಮಗಳು ವರದಿ ಮಾಡಿವೆ. ಇದಕ್ಕೂ ಮೊದಲು, ಇರಾನಿನ ಕ್ಷಿಪಣಿ ಮತ್ತು ಡ್ರೋನ್ ದಾಳಿಗಳಿಗೆ ಪ್ರತಿಕ್ರಿಯಿಸುತ್ತಿರುವುದಾಗಿ ಯುಎಇ ರಕ್ಷಣಾ ಸಚಿವಾಲಯ ತಿಳಿಸಿತ್ತು. ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆಯ ನಡುವೆ ಈ ಕ್ರಮ ಕೈಗೊಳ್ಳಲಾಗಿದೆ.
ಬೆಂಗಳೂರು : ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (ಕೆಲವು ಭೂಮಿಗಳ ವರ್ಗಾವಣೆ ನಿಷೇಧ) (ಪಿಟಿಸಿಎಲ್) ಕಾಯ್ದೆಯಡಿ ಎಸ್ಸಿ-ಎಸ್ಟಿ ಸಮುದಾಯದವರಿಗೆ ಮಂಜೂರಾದ ಭೂಮಿಯ ಮೂಲ ಮಂಜೂರಾತಿ ಷರತ್ತುಗಳನ್ನು ಉಲ್ಲಂಘಿಸಿ ಮಾಡಿದ ಮೊದಲ ಮಾರಾಟವೇ ಅಸಿಂಧುಗೊಂಡ ಬಳಿಕ ನಡೆಯುವ ಎಲ್ಲ ಮಾರಾಟ ಪ್ರಕ್ರಿಯೆಗಳೂ ರದ್ದುಗೊಳ್ಳುತ್ತವೆ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ. ಎಸ್ಸಿ-ಎಸ್ಟಿ ಸಮುದಾಯದವರಿವೆ ಮಂಜೂರಾಗಿದ್ದ ಜಮೀನನ್ನು ಹಲವು ಸುತ್ತಿನ ಮಾರಾಟಗಳ ಬಳಿಕ ಖರೀದಿಸಿದ್ದ ಎಸ್.ಕೆ. ಜಯರಾಮ್ ಎಂಬುವರು ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿರುವ ನ್ಯಾಯಮೂರ್ತಿ ಆರ್. ದೇವದಾಸ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಆದೇಶ ಮಾಡಿದೆ. ಯಾರೂ ಸಹ ತಮಗಿಲ್ಲದ ಹಕ್ಕು ಅಥವಾ ಮಾಲೀಕತ್ವವನ್ನು ಮತ್ತೊಬ್ಬರಿಗೆ ವರ್ಗಾಯಿಸಲು ಸಾಧ್ಯವಿಲ್ಲ ಎಂಬ ಕಾನೂನು ತತ್ವವನ್ನು ಉಲ್ಲೇಖಿಸಿರುವ ನ್ಯಾಯಪೀಠ, ವಿವಾದಿತ ಜಮೀನಿನ 1956ರ ಮಾರಾಟ ಪ್ರಕ್ರಿಯೆಯ ಅನಧಿಕೃತ ಎಂದು ಘೋಷಿಸಲಾಗಿದೆ. ಇದರ ಆಧಾರದಲ್ಲಿ, ನಂತರ ನಡೆದ ಎಲ್ಲ ಮಾರಾಟ ಪ್ರಕ್ರಿಯೆಗಳೂ ಶೂನ್ಯವಾಗಲಿದೆ. ಆದ್ದರಿಂದ, ಜಮೀನು ಮಂಜೂರುದಾರರಿಂದ ಹಲವು ಮಾರಾಟಗಳ ಬಳಿಕ ಅರ್ಜಿದಾರ ಜಯರಾಮ್ 1988ರ ಖರೀದಿಸಿರುವ ಪ್ರಕ್ರಿಯೆಯೂ ಕಾನೂನಿನ ಪ್ರಕಾರ ರದ್ದಾಗಲಿದೆ ಎಂದು ಸ್ಪಷ್ಟಪಡಿಸಿದೆ. ಪಿಟಿಸಿಎಲ್ ಕಾಯ್ದೆಯ ಸೆಕ್ಷನ್ 4(1) ಪ್ರಕಾರ, ಅನುದಾನಿತ ಭೂಮಿಯ ಮಂಜೂರಾತಿ ಷರತ್ತು ಉಲ್ಲಂಘಿಸಿ ವರ್ಗಾವಣೆ ಮಾಡಿದರೆ ಅದು ಸ್ವಯಂ ಅಮಾನ್ಯವಾಗುತ್ತದೆ. ಮೊದಲ ಮಾರಾಟ ರದ್ದಾದ ಕೂಡಲೇ, ಆ ಜಮೀನಿಗೆ ಸಂಬಂಧಿಸಿದ ಎಲ್ಲ ಮುಂದಿನ ವ್ಯವಹಾರಗಳೂ ಕಾನೂನಿನ ದೃಷ್ಟಿಯಲ್ಲಿ ಅಸ್ತಿತ್ವ ಕಳೆದುಕೊಳ್ಳುತ್ತದೆ. ಆ ವ್ಯವಹಾರದಿಂದ ಯಾವುದೇ ಹಕ್ಕು ಅಥವಾ ಮಾಲೀಕತ್ವ ಉಂಟಾಗುವುದಿಲ್ಲ ಎಂದಿರುವ ನ್ಯಾಯಪೀಠ, ಅರ್ಜಿದಾರರ ಜಮೀನು ಮಾರಾಟ ಪ್ರಕ್ರಿಯೆ ರದ್ದುಪಡಿಸಿ ಉಪ ವಿಭಾಗಾಧಿಕಾರಿಗಳು ಹೊರಡಿಸಿರುವ ಆದೇಶದಲ್ಲಿ ಯಾವುದೇ ಕಾನೂನುಲೋಪ ಕಂಡುಬರುತ್ತಿಲ್ಲ ಎಂದು ತಿಳಿಸಿ, ಅರ್ಜಿ ವಜಾಗೊಳಿಸಿ ಆದೇಶಿಸಿದೆ. ಪ್ರಕರಣವೇನು? ಪರಿಶಿಷ್ಟ ಜಾತಿಗೆ ಸೇರಿದ ಟಿ. ಪೂಜಪ್ಪ ಎಂಬುವರಿಗೆ ಬೆಂಗಳೂರು ಪೂರ್ವ ತಾಲೂಕಿನ ಖಾಜಿ ಸೋನ್ನೆನಹಳ್ಳಿ ಗ್ರಾಮದ ಸರ್ವೆ ಸಂಖ್ಯೆ 143ರಲ್ಲಿ 6 ಎಕರೆ 15 ಗುಂಟೆ ಭೂಮಿಯನ್ನು ಸರ್ಕಾರ 1947ರಲ್ಲಿ ಮಂಜೂರು ಮಾಡಿತ್ತು. ಪೂಜಪ್ಪ ನಿಧನದ ನಂತರ ಆತನ ಪತ್ನಿ ಹಾಗೂ ಅಪ್ರಾಪ್ತ ಪುತ್ರರು 1956ರ ಅಕ್ಟೋಬರ್ 25ರಂದು ಪೂಜಪ್ಪನಿಗೆ ಮಂಜೂರಾಗಿದ್ದ ಜಮೀನಿನಲ್ಲಿ 3 ಎಕರೆ 26 ಗುಂಟೆ ಜಮೀನನ್ನು ಬಸಮ್ಮ ಎಂಬವರಿಗೆ ಮಾರಾಟ ಮಾಡಿದ್ದರು. ಈ ನಡುವೆ ಹಲವು ಸುತ್ತಿನ ಮಾರಾಟದ ಬಳಿಕ ಇದೇ ಜಮೀನನ್ನು ಪದ್ಮಾವತಿ ಎಂಬುವರು ಖರೀದಿಸಿದ್ದು, ಅದನ್ನು ಅರ್ಜಿದಾರ ಜಯರಾಮ್ 1988ರ ಸೆಪ್ಟೆಂಬರ್ 22ರಂದು ಪದ್ಮಾವತಿ ಅವರಿಂದ ಖರೀದಿಸಿದ್ದರು. ಆದರೆ, ಈ ಮಾರಾಟ ಪ್ರಕ್ರಿಯೆಯು (ಬಸಮ್ಮ ಎಂಬುವರಿಗೆ ಮಾರಾಟ) ಪಿಟಿಸಿಎಲ್ ಕಾಯ್ದೆಯ ಪ್ರಕಾರ ಜಮೀನು ಮಂಜೂರಾತಿ ಸಂದರ್ಭದಲ್ಲಿ ಸರ್ಕಾರ ವಿಧಿಸಿದ್ದ ಷರತ್ತುಗಳಿಗೆ ವಿರುದ್ಧವಾಗಿದೆ ಎಂದು ತಿಳಿಸಿದ್ದ ಸಕ್ಷಮ ಪ್ರಾಧಿಕಾರದ ಅಧಿಕಾರಿಗಳು, ಜಮೀನನ್ನು ಪೂಜಪ್ಪ ಅವರ ವಾರಸುದಾರರಿಗೆ ಹಿಂದಿರುಗಿಸುವಂತೆ ಆದೇಶಿಸಿದ್ದರು. ಈ ಸಂಬಂಧ ಉಪ ವಿಭಾಗಾಧಿಕಾರಿ, ವಿಶೇಷ ಜಿಲ್ಲಾಧಿಕಾರಿಗಳು ಹಾಗೂ ಹೈಕೋರ್ಟ್ನಲ್ಲಿ ಹಲವು ವರ್ಷಗಳ ವ್ಯಾಜ್ಯ ನಡೆದು ಅಂತಿಮವಾಗಿ ಮತ್ತೆ ಪ್ರಕರಣವನ್ನು ಹೊಸದಾಗಿ ಪರಿಗಣಿಸುವಂತೆ ಹೈಕೋರ್ಟ್, ಉಪ ವಿಭಾಗಾಧಿಕಾರಿಗಳಿಗೆ ವರ್ಗಾಯಿಸಿತ್ತು. ಪ್ರಕರಣವನ್ನು ಹೊಸದಾಗಿ ವಿಚಾರಣೆ ನಡೆಸಿದ್ದ ಉಪ ವಿಭಾಗಾಧಿಕಾರಿಗಳು, ಜಮೀನನ್ನು ಪೂಜಪ್ಪ ಅವರ ವಾರಸುದಾರರ ಹೆಸರಿಗೆ ಹಿಂದಿರುಗಿಸುವಂತೆ 1998ರ ಆದೇಶವನ್ನು 2024ರಲ್ಲಿ ಎತ್ತಿ ಹಿಡಿದಿದ್ದರಲ್ಲದೆ, 1988ರಲ್ಲಿ ಜಯರಾಮ್ ಅವರು ಮಾಡಿಕೊಂಡಿದ್ದ ಮಾರಾಟ ಕ್ರಯಪತ್ರವನ್ನೂ ರದ್ದುಪಡಿಸಿದ್ದರು. ಇದನ್ನು ಪ್ರಶ್ನಿಸಿ ಜಯರಾಮ್ ಸಲ್ಲಿಸಿದ ಮೇಲ್ಮನವಿಯನ್ನು ಜಿಲ್ಲಾಧಿಕಾರಿಗಳು 2025ರಲ್ಲಿ ತಿರಸ್ಕರಿಸಿದ್ದರು. ಇದರಿಂದ, ಉಪ ವಿಭಾಗಾಧಿಕಾರಿ ಹಾಗೂ ಜಿಲ್ಲಾಧಿಕಾರಿಗಳ ಆದೇಶ ರದ್ದುಕೋರಿ ಜಯರಾಮ್ ಹೈಕೋರ್ಟ್ ಮೆಟ್ಟಿಲೇರಿದ್ದರು.
Hanur | ರೋಸ್ಟರ್ ಬಿಂದುಗಳ ಹಂಚಿಕೆಯಲ್ಲಿ ಬಲಗೈ ಹೊಲೆಯ ಸಮುದಾಯಕ್ಕೆ ಅನ್ಯಾಯ : ಪ್ರತಿಭಟನೆ
ಹನೂರು : ಒಳಮೀಸಲಾತಿ ಕುರಿತಾಗಿ ನಾಗಮೋಹನ್ ದಾಸ್ ಸಮಿತಿ ನೀಡಿರುವ ವರದಿ ಅವೈಜ್ಞಾನಿಕವಾಗಿದ್ದು, ರೋಸ್ಟರ್ ಬಿಂದುಗಳ ಹಂಚಿಕೆಯಲ್ಲಿ ಬಲಗೈ ಹೊಲೆಯ ಸಮುದಾಯಕ್ಕೆ ಅನ್ಯಾಯವಾಗುತ್ತಿದೆ ಎಂದು ಆರೋಪಿಸಿ ಸೋಮವಾರ ಹನೂರು ಪಟ್ಟಣದಲ್ಲಿ ಬಲಗೈ ಸಮುದಾಯದ ವತಿಯಿಂದ ಬೃಹತ್ ಪ್ರತಿಭಟನೆ ನಡೆಸಿದ್ದಾರೆ. ಹನೂರು ತಾಲೂಕು ಹಾಗೂ ಚಾಮರಾಜನಗರ ಜಿಲ್ಲಾ ಬಲಗೈ ಸಮುದಾಯದ ಒಕ್ಕೂಟದ ವತಿಯಿಂದ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಹನೂರು ಮತ್ತು ಕೊಳ್ಳೇಗಾಲ ತಾಲೂಕಿನ ವಿವಿಧ ಗ್ರಾಮಗಳಿಂದ ಆಗಮಿಸಿದ ಸಮುದಾಯದ ಸಂಘಟನೆಗಳ ಮುಖಂಡರು ಹಾಗೂ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಪ್ರತಿಭಟನಾಕಾರರು ಮೊದಲು ಪಟ್ಟಣದ ಮಹದೇಶ್ವರ ಕ್ರೀಡಾಂಗಣದಲ್ಲಿ ಜಮಾಯಿಸಿ ಬಳಿಕ ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತ ಮೆರವಣಿಗೆ ಆರಂಭಿಸಿದರು. ಬೃಹತ್ ಪ್ರತಿಭಟನಾ ಮೆರವಣಿಗೆ ಮಹದೇಶ್ವರ ಕ್ರೀಡಾಂಗಣದಿಂದ ಆರಂಭವಾಗಿ ಪಟ್ಟಣದ ಕೆಂಪೇಗೌಡ ವೃತ್ತ, ಖಾಸಗಿ ಬಸ್ ನಿಲ್ದಾಣ, ಡಾ. ಬಿ.ಆರ್. ಅಂಬೇಡ್ಕರ್ ಸರ್ಕಲ್ ಮೂಲಕ ಸಾಗಿತು. ನಂತರ ತಹಶೀಲ್ದಾರ್ ಕಚೇರಿಗೆ ತೆರಳಿ ತಹಶೀಲ್ದಾರ್ ಚೈತ್ರ ಅವರಿಗೆ ಮನವಿ ಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಹೋರಾಟಗಾರರು, ನಾಗಮೋಹನ್ ದಾಸ್ ಸಮಿತಿ ನೀಡಿರುವ ಒಳಮೀಸಲಾತಿ ವರದಿ ಅವೈಜ್ಞಾನಿಕವಾಗಿದ್ದು, ರೋಸ್ಟರ್ ಬಿಂದುಗಳ ಹಂಚಿಕೆಯಲ್ಲಿ ಬಲಗೈ ಸಮುದಾಯಕ್ಕೆ ಅನ್ಯಾಯವಾಗುತ್ತಿದೆ ಎಂದು ಆರೋಪಿಸಿದರು. ಸರಕಾರ ಸಾಮಾಜಿಕ ನ್ಯಾಯದ ಹೆಸರಿನಲ್ಲಿ ಪರಿಶಿಷ್ಟ ಜಾತಿಯೊಳಗಿನ ಸಮುದಾಯಗಳ ನಡುವೆ ಭಿನ್ನತೆ ಉಂಟಾಗುವಂತೆ ತರಾತುರಿಯಲ್ಲಿ ಒಳಮೀಸಲಾತಿ ಜಾರಿಗೆ ಮುಂದಾಗಿರುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟರು. ಇದೇ ತಿಂಗಳ 25ರಂದು ಬೆಂಗಳೂರಿನಲ್ಲಿ ನಡೆಯಲಿರುವ ರಾಜ್ಯ ಮಟ್ಟದ ಬೃಹತ್ ಪ್ರತಿಭಟನೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಕರೆ ನೀಡಿದರು. ಪ್ರತಿಭಟನೆಯಲ್ಲಿ ಹನೂರು ಪಟ್ಟಣದ ಯಜಮಾನರು, ಉಪನ್ಯಾಸಕ ಮಹದೇವಸ್ವಾಮಿ, ಮಲ್ಲಿಕಾರ್ಜುನ, ಪಟ್ಟಣ ಪಂಚಾಯತ್ ಮಾಜಿ ಉಪಾದ್ಯಕ್ಷ, ಬಸವರಾಜು, ಮಾಜಿ ಸದಸ್ಯ ಮಹೇಶ್ ಸಿದ್ದರಾಜು ಮತ್ತಿತರರು ಭಾಗವಹಿಸಿದ್ದರು. ಹಕ್ಕೊತ್ತಾಯಗಳು ನ್ಯಾ.ನಾಗಮೋಹನ್ ದಾಸ್ ಸಮಿತಿ ನೀಡಿರುವ ಒಳಮೀಸಲಾತಿ ವರದಿಯನ್ನು ತಕ್ಷಣವೇ ರದ್ದುಪಡಿಸಬೇಕು. ಶೈಕ್ಷಣಿಕ ಪ್ರವೇಶ ಸಂದರ್ಭಗಳಲ್ಲಿ ಮೂರುಕ್ಕಿಂತ ಕಡಿಮೆ ಪ್ರವೇಶಾತಿಗಳು ಇದ್ದರೆ ಅವನ್ನು ಎಸ್.ಸಿ. ಸಾಮಾನ್ಯವೆಂದು ಪರಿಗಣಿಸಿ ಪರಿಶಿಷ್ಟ ಜಾತಿಯ ಎಲ್ಲಾ ವರ್ಗದವರು ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಬೇಕು. ಸರಕಾರಿಉದ್ಯೋಗ ನೇಮಕಾತಿಯಲ್ಲಿ ಮೂರಕ್ಕಿಂತ ಕಡಿಮೆ ಹುದ್ದೆಗಳು ಪರಿಶಿಷ್ಟ ಜಾತಿಗೆ ಮೀಸಲಾಗಿದ್ದರೆ ಅವನ್ನು ಎಸ್ಸಿ ಸಾಮಾನ್ಯವೆಂದು ಪರಿಗಣಿಸಿ ಪರಿಶಿಷ್ಟ ಜಾತಿಯ ಎಲ್ಲಾ 101 ಸಮುದಾಯಗಳಿಗೂ ಅರ್ಜಿ ಸಲ್ಲಿಸುವ ಅವಕಾಶ ನೀಡಬೇಕು. ಒಳಮೀಸಲಾತಿಯಲ್ಲಿ ಕಂಡುಬರುವ ವ್ಯತ್ಯಾಸಗಳನ್ನು ಸರಿಪಡಿಸುವ ತನಕ ಯಾವುದೇ ಸರಕಾರಿ ಹುದ್ದೆಗಳ ನೇಮಕಾತಿ ನಡೆಸಬಾರದು. ಪರಿಶಿಷ್ಟ ಜಾತಿಯಜಾತಿ ಪ್ರಮಾಣಪತ್ರವನ್ನು ಹಿಂದಿನಂತೆ ನೀಡುವ ವ್ಯವಸ್ಥೆ ಮುಂದುವರಿಸಬೇಕು.
Belagavi | ಹಣ ಡಬಲ್ ಮಾಡುವ ಆಮಿಷ; ಅಂತರ್ರಾಜ್ಯ ವಂಚಕರ ಜಾಲ: ಇಬ್ಬರು ಪೊಲೀಸ್ ಸಿಬ್ಬಂದಿ ಸಹಿತ 7 ಮಂದಿ ಬಂಧನ
ಬೆಳಗಾವಿ : ಸಾರ್ವಜನಿಕರಿಗೆ ಹಣವನ್ನು ಡಬಲ್ ಅಥವಾ ನಾಲ್ಕು ಪಟ್ಟು ಮಾಡಿಕೊಡುವುದಾಗಿ ಆಮಿಷವೊಡ್ಡಿ ವಂಚಿಸುತ್ತಿದ್ದ ಅಂತರ್ರಾಜ್ಯ ವಂಚಕರ ಜಾಲವನ್ನು ಪೊಲೀಸರು ಭೇದಿಸಿದ್ದು, ಈ ಪ್ರಕರಣದಲ್ಲಿ ಮಹಾರಾಷ್ಟ್ರದ ಇಬ್ಬರು ಪೊಲೀಸ್ ಸಿಬ್ಬಂದಿ ಸೇರಿ ಒಟ್ಟು ಏಳು ಮಂದಿಯನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕ (ಎಸ್ಪಿ) ಕೆ.ರಾಮರಾಜನ್ ತಿಳಿಸಿದ್ದಾರೆ. ಗೋಕಾಕ ತಾಲೂಕಿನ ಶ್ರೀನಗರದಲ್ಲಿರುವ ಮನೆಯೊಂದರಲ್ಲಿ ಹಣವನ್ನು ನಾಲ್ಕು ಪಟ್ಟು ಮಾಡಿಕೊಡುವುದಾಗಿ ನಂಬಿಸಿ ಸಾರ್ವಜನಿಕರಿಗೆ ವಂಚನೆ ನಡೆಸುತ್ತಿದ್ದ ಜಾಲದ ಮೇಲೆ ಗೋಕಾಕ ನಗರ ಪೊಲೀಸ್ ಠಾಣೆಯ ಪೊಲೀಸರು ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದರು. ಬಂಧಿತರನ್ನು ಪರಶುರಾಮ ಭೀಮಶಿ ಬಡಕರಿ, ಇಮ್ರಾನ್ ಬಾಬಾಜಾನ್ ಜುನೇದಿ, ಜಯಶ್ರೀ ಬಾಬು ಕಾಂಬಳೆ, ಮನೀಷಾ ರಾಜು ಗಾಯಕವಾಡ (ಮಾರ್ಗರೆಟ್ ಡೇವಿಡ್ ಗಾಯಕವಾಡ), ಉಜ್ವಲಾ ತುಳಸಿರಾಮ ಬಿಲಾನೆ, ಹಾಗೂ ಮಹಾರಾಷ್ಟ್ರ ಪೊಲೀಸ್ ಇಲಾಖೆಯ ಸಿಬ್ಬಂದಿಯಾದ ಅನಂತ ಪ್ರಕಾಶ ನರವಾಡೆ ಮತ್ತು ದಿಲ್ದಾರ್ ರಬ್ಬಾನಿ ಶೇಖ ಎಂದು ಗುರುತಿಸಲಾಗಿದೆ. ವಂಚಕರು ಬಿಳಿ ಕಾಗದದ ಹಾಳೆಗಳಿಗೆ ಕಪ್ಪು ಬಣ್ಣ ಹಚ್ಚಿ, ಅದನ್ನು ವಿಶೇಷ ರಾಸಾಯನಿಕ ಬಳಸಿ ಅಸಲಿ ನೋಟುಗಳಾಗಿ ಪರಿವರ್ತಿಸಬಹುದು ಎಂದು ನಂಬಿಸಿ ಸಾರ್ವಜನಿಕರಿಂದ ಹಣ ಪಡೆದು ವಂಚಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಈ ಅಂತರರಾಜ್ಯ ವಂಚನೆ ಜಾಲದಲ್ಲಿ ಭಾಗಿಯಾಗಿದ್ದ ಆರೋಪಿಗಳ ವಿರುದ್ಧ ಗೋಕಾಕ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಎಲ್ಲ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಎಸ್ಪಿ ಮಾಹಿತಿ ನೀಡಿದರು.
ತಮಿಳು ಕವಿ, ಗೀತರಚನೆಕಾರ ವೈರಮುತ್ತುಗೆ ಜ್ಞಾನಪೀಠ ಪ್ರಶಸ್ತಿ ನೀಡಿದ್ದಕ್ಕೆ ಆಕ್ರೋಶ ಯಾಕೆ? ಏನಿದು ವಿವಾದ?
ನಾಲ್ಕು ದಶಕಗಳಿಗೂ ಹೆಚ್ಚು ಕಾಲ ಜನಪ್ರಿಯ ಸಂಗೀತ ಮತ್ತು ಆಧುನಿಕ ತಮಿಳು ಕಾವ್ಯದ ಭಾಷೆಯನ್ನು ರೂಪಿಸಿದ ತಮಿಳು ಕವಿ ಮತ್ತು ಗೀತರಚನೆಕಾರ ರಾಮಸ್ವಾಮಿ ವೈರಮುತ್ತು 2025ನೇ ಸಾಲಿನ ಜ್ಞಾನಪೀಠ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಇದು ಭಾರತದ ಅತ್ಯುನ್ನತ ಸಾಹಿತ್ಯ ಗೌರವವಾಗಿದೆ. 60ನೇ ಜ್ಞಾನಪೀಠ ಪ್ರಶಸ್ತಿಯು ವೈರಮುತ್ತು ಅವರ ತಮಿಳು ಸಾಹಿತ್ಯಕ್ಕೆ ನೀಡಿದ ಕೊಡುಗೆಗಳನ್ನು ಮತ್ತು ಕವಿ ಹಾಗೂ ಗೀತರಚನೆಕಾರರಾಗಿ ಅವರ ಸಾಧನೆಯನ್ನು ಗುರುತಿಸಿದೆ ಎಂದು ಭಾರತೀಯ ಜ್ಞಾನಪೀಠ ಸಾಹಿತ್ಯ ಸಂಸ್ಥೆ ಹೇಳಿದೆ. 1964ರಿಂದ ಈ ಪ್ರಶಸ್ತಿಯನ್ನು ಭಾರತೀಯ ಭಾಷೆಗಳಲ್ಲಿನ ಬರಹಗಾರರಿಗೆ ಪ್ರತೀ ವರ್ಷ ನೀಡಲಾಗುತ್ತಿದೆ. ಇದು 11 ಲಕ್ಷ ರೂ. ನಗದು ಬಹುಮಾನ, ಸರಸ್ವತಿಯ ಕಂಚಿನ ಪ್ರತಿಮೆ ಮತ್ತು ಭಾರತದ ರಾಷ್ಟ್ರಪತಿಗಳು ನೀಡುವ ಪ್ರಶಸ್ತಿಯನ್ನು ಒಳಗೊಂಡಿದೆ. 1975ರಲ್ಲಿ ಅಕಿಲನ್ ಮತ್ತು 2002ರಲ್ಲಿ ಜಯಕಾಂತನ್ ನಂತರ ಈ ಪ್ರಶಸ್ತಿಯನ್ನು ಪಡೆದ ಮೂರನೇ ತಮಿಳು ಸಾಹಿತಿಯಾಗಿದ್ದಾರೆ 72 ವರ್ಷದ ವೈರಮುತ್ತು. ಇವರು ತಮಿಳು ಕಾವ್ಯಕ್ಕಾಗಿ ಗೌರವ ಪಡೆದ ಮೊದಲ ವ್ಯಕ್ತಿಯಾಗಿದ್ದಾರೆ. ಜ್ಞಾನಪೀಠ ಪ್ರಶಸ್ತಿ ಆಯ್ಕೆ ಮಂಡಳಿಯ ಪ್ರಕಾರ, ಈ ಪ್ರಶಸ್ತಿಯು ತಮಿಳು ಸಾಹಿತ್ಯ, ಸೃಜನಶೀಲ ಬರವಣಿಗೆ ಮತ್ತು ವಿಶಿಷ್ಟ ಕಾವ್ಯಾತ್ಮಕ ಅಭಿವ್ಯಕ್ತಿಗೆ ಅವರ ಮಹತ್ವದ ಕೊಡುಗೆಯನ್ನು ಗುರುತಿಸುತ್ತದೆ. ಸಂಸ್ಥೆಯ ಆಯ್ಕೆ ಸಮಿತಿಯ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಭಾರತೀಯ ಜ್ಞಾನಪೀಠ ನಿರ್ದೇಶಕ ಡಾ. ಆರ್.ಎನ್. ತಿವಾರಿ ಹೇಳಿಕೆಯಲ್ಲಿ ತಿಳಿಸಿದ್ದಾರೆ. “ನನಗೆ ಸಾಹಿತ್ಯವು ಮಾನವಕುಲವನ್ನು ಉನ್ನತೀಕರಿಸಬೇಕು. ನಾನು ಅವರ ಕನಸುಗಳು ಮತ್ತು ಭಾವನೆಗಳ ನಡುವೆ ಪ್ರಯಾಣಿಸುತ್ತೇನೆ. ನನಗೆ ಎರಡು ರೆಕ್ಕೆಗಳಿದ್ದವು. ಈ ಪ್ರಶಸ್ತಿಯೊಂದಿಗೆ ನನಗೆ ಇನ್ನೂ ಎರಡು ರೆಕ್ಕೆಗಳಿವೆ ಎಂದು ಭಾವಿಸುತ್ತೇನೆ. ನಾನು ಈ ಪ್ರಶಸ್ತಿಯನ್ನು ತಮಿಳು ಸಮಾಜ ಮತ್ತು ಅದರ ಜನರಿಗೆ ಕೃತಜ್ಞತೆಯಿಂದ ಅರ್ಪಿಸುತ್ತೇನೆ,” ಎಂದು ಪ್ರಶಸ್ತಿ ಘೋಷಣೆಯಾದ ಬಳಿಕ ವೈರಮುತ್ತು ಹೇಳಿದ್ದಾರೆ. 1953ರಲ್ಲಿ ಥೇಣಿ ಜಿಲ್ಲೆಯಲ್ಲಿ ಜನಿಸಿದ ವೈರಮುತ್ತು ತಮ್ಮ 18ನೇ ವಯಸ್ಸಿನಲ್ಲಿ ತಮ್ಮ ಮೊದಲ ಕವನ ಸಂಕಲನ ‘ವೈಗರೈ ಮೀಂಗಲ್’ ಅನ್ನು ಪ್ರಕಟಿಸಿದರು. 1980ರಲ್ಲಿ ‘ನಿಝಳ್ಗಳ್’ ಚಲನಚಿತ್ರದ ಮೂಲಕ ಗೀತರಚನೆಕಾರರಾಗಿ ತಮಿಳು ಚಲನಚಿತ್ರೋದ್ಯಮಕ್ಕೆ ಪ್ರವೇಶಿಸಿದರು. ನಿರ್ದೇಶಕ ಭಾರತಿರಾಜ ಮತ್ತು ಸಂಗೀತ ಸಂಯೋಜಕ ಇಳಯರಾಜ ಅವರೊಂದಿಗೆ ಕೆಲಸ ಮಾಡಿದ್ದಾರೆ. ನಾಲ್ಕು ದಶಕಗಳಲ್ಲಿ ಅವರು 8,000ಕ್ಕೂ ಹೆಚ್ಚು ಹಾಡುಗಳನ್ನು ಬರೆದಿದ್ದಾರೆ. ಸಿನಿಮಾ ಸಾಹಿತ್ಯಕ್ಕಾಗಿ ಏಳು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಪಡೆದಿದ್ದಾರೆ. “ಕವಿಪೆರರಸು” ಎಂಬ ಬಿರುದೂ ಇವರಿಗಿದೆ. ಚಲನಚಿತ್ರ ಗೀತೆಗಳು ಮಾತ್ರವಲ್ಲದೆ ಕಾವ್ಯ, ಕಾದಂಬರಿಗಳು ಮತ್ತು ಸಾಂಸ್ಕೃತಿಕ ಪ್ರಬಂಧಗಳನ್ನೂ ವೈರಮುತ್ತು ರಚಿಸಿದ್ದಾರೆ. ಸಮಕಾಲೀನ ತಮಿಳು ಸಾಹಿತ್ಯದ ಪ್ರಮುಖ ಸಾಹಿತಿ ಎಂದು ಇವರನ್ನು ಪರಿಗಣಿಸಲಾಗಿದೆ. ಅವರ ಕಾದಂಬರಿಗಳು ಹೆಚ್ಚಾಗಿ ಗ್ರಾಮೀಣ ಜೀವನ, ವಲಸೆ ಮತ್ತು ಜೀವನೋಪಾಯಗಳನ್ನು ಚಿತ್ರಿಸುತ್ತವೆ. ಕಾವ್ಯ ಮತ್ತು ಕಾದಂಬರಿಯಿಂದ ಹಿಡಿದು ವಿಜ್ಞಾನ, ಸಾಮಾಜಿಕ ಬದಲಾವಣೆ ಹಾಗೂ ಭೂಮಿ, ಜನರು ಮತ್ತು ತಮಿಳು ಗುರುತಿನ ನಡುವಿನ ಸಂಬಂಧದ ಕುರಿತ ಪ್ರಬಂಧಗಳವರೆಗೆ ಅವರು ಹಲವಾರು ಪ್ರಕಾರಗಳಲ್ಲಿ ಸುಮಾರು 39 ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ವೈರಮುತ್ತು ಅವರ ಬೆಂಬಲಿಗರು ಅವರ ಪುಸ್ತಕಗಳು ಸುಮಾರು ಮೂರು ಮಿಲಿಯನ್ ಪ್ರತಿಗಳು ಮಾರಾಟವಾಗಿವೆ ಎಂದು ಹೇಳುತ್ತಾರೆ. ಆದಾಗ್ಯೂ, ಈ ಪ್ರಶಸ್ತಿಯು ಕೆಲವು ಬರಹಗಾರರು, ಕಲಾವಿದರು ಮತ್ತು ಕಾರ್ಯಕರ್ತರಿಂದ ತೀವ್ರ ಟೀಕೆಗೆ ಗುರಿಯಾಗಿದೆ. ಭಾರತದಲ್ಲಿ #MeToo ಚಳವಳಿಯ ಸಮಯದಲ್ಲಿ ವೈರಮುತ್ತು ವಿರುದ್ಧ ಲೈಂಗಿಕ ಕಿರುಕುಳ ಆರೋಪಗಳು ಕೇಳಿಬಂದಿದ್ದವು. #MeToo ಆರೋಪ ಈ ಪ್ರಶಸ್ತಿಯು ಕವಿಯ ಸುತ್ತಲಿನ ವಿವಾದಗಳನ್ನು ಮತ್ತೆ ಮುಂದಕ್ಕೆ ತಂದಿದೆ. 2018ರಲ್ಲಿ #MeToo ಆಂದೋಲನದ ಸಮಯದಲ್ಲಿ ಹಿನ್ನೆಲೆ ಗಾಯಕಿ ಚಿನ್ಮಯಿ ಶ್ರೀಪಾದ ಅವರು ವೈರಮುತ್ತು ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ ಹೊರಿಸಿದ್ದರು. 2005ರಲ್ಲಿ ಅವರು ತನ್ನಲ್ಲಿ ಸಹಕರಿಸಲು ಕೇಳಿಕೊಂಡರು ಎಂದು ಗಾಯಕಿ ಆರೋಪಿಸಿದ್ದಾರೆ. ಅದೇ ಸಮಯದಲ್ಲಿ ಇನ್ನೂ ಹಲವಾರು ಮಹಿಳೆಯರು ಸಾಮಾಜಿಕ ಮಾಧ್ಯಮಗಳಲ್ಲಿ ಆರೋಪಗಳನ್ನು ಹಂಚಿಕೊಂಡಿದ್ದರು. ವೈರಮುತ್ತು ಈ ಆರೋಪಗಳನ್ನು ನಿರಾಕರಿಸಿದ್ದಾರೆ. ತಮಿಳು ಚಲನಚಿತ್ರೋದ್ಯಮದಲ್ಲಿನ ಈ ಸಮಸ್ಯೆ ಬಗ್ಗೆ ಮಾತನಾಡಿದ್ದ ಚಿನ್ಮಯಿ ವಿರುದ್ಧ ವೈರಮುತ್ತು ಬೆಂಬಲಿಗರು ಟೀಕೆ ಮತ್ತು ಟ್ರೋಲ್ ನಡೆಸಿದ್ದರು. ಇದಕ್ಕೆ ಹಿಂಜರಿಯದ ಚಿನ್ಮಯಿ, #MeToo ಆರೋಪವನ್ನು ಈಗ ಮತ್ತೆ ಚರ್ಚೆಗೆ ತಂದು, ವಿವಾದಿತ ವ್ಯಕ್ತಿಗೆ ಪ್ರಶಸ್ತಿ ಘೋಷಿಸಿರುವುದನ್ನು ಪ್ರಶ್ನಿಸಿದ್ದಾರೆ. ಹಿರಿಯ ಸಂಗೀತ ಸಂಯೋಜಕ ಗಂಗೈ ಅಮರನ್ ಇತ್ತೀಚೆಗೆ ಚಿನ್ಮಯಿಗೆ ಬೆಂಬಲ ವ್ಯಕ್ತಪಡಿಸಿ, ಜನರು ಇಂತಹ ದೂರುಗಳನ್ನು ನೀಡುವ ಮಹಿಳೆಯರ ಪರವಾಗಿ ನಿಲ್ಲಬೇಕು ಎಂದು ಹೇಳಿದ್ದಾರೆ. ವೈರಮುತ್ತು ಅವರನ್ನು ಉಲ್ಲೇಖಿಸಿ, “ಅವರು ಒಳ್ಳೆಯ ಕವಿ ಆದರೆ ಒಳ್ಳೆಯ ಮನುಷ್ಯನಲ್ಲ. ವೈರಮುತ್ತು ನನ್ನ ಸ್ನೇಹಿತ, ಆದರೆ ಚಿನ್ಮಯಿಯನ್ನು ಅವರ ಬಗ್ಗೆ ಮಾತನಾಡದಂತೆ ನಾನು ಕೇಳಲು ಸಾಧ್ಯವಿಲ್ಲ” ಎಂದಿದ್ದಾರೆ. ಖ್ಯಾತ ಬರಹಗಾರ ಬಿ. ಜಯಮೋಹನ್ ವೈರಮುತ್ತು ವಿರುದ್ಧ ತೀವ್ರ ವಾಗ್ದಾಳಿ ನಡೆಸಿ, “ವೈರಮುತ್ತು ಪ್ರಶಸ್ತಿಗಳಿಗಾಗಿ ಏನು ಬೇಕಾದರೂ ಮಾಡುತ್ತಾರೆ. ಅವರು ಯಾರ ಬೂಟುಗಳನ್ನು ಬೇಕಾದರೂ ನೆಕ್ಕುತ್ತಾರೆ. ಅವರು ಕರುಣಾನಿಧಿಯವರ ಸ್ನೇಹಿತರಾಗಿದ್ದರು. ಅವರು ಮೋದಿಯವರ ಕವಿತೆಗಳನ್ನು ಅನುವಾದಿಸುತ್ತಾರೆ. ಅವರು ಡಿಎಂಕೆಗೆ ಹತ್ತಿರವಾಗಿದ್ದಾರೆ ಮತ್ತು ಬಿಜೆಪಿಯೊಂದಿಗೆ ಇರುತ್ತಾರೆ. ಅವರಿಗೆ ಯಾವುದೇ ಹಿಂಜರಿಕೆ ಮತ್ತು ನಾಚಿಕೆ ಇಲ್ಲ” ಎಂದು ಆರೋಪಿಸಿದ್ದಾರೆ. ಘೋಷಣೆಯ ನಂತರ ಚಲನಚಿತ್ರ ಮತ್ತು ಸಾಹಿತ್ಯ ಜಗತ್ತಿನ ಹಲವಾರು ರಾಜಕೀಯ ನಾಯಕರು ಮತ್ತು ವ್ಯಕ್ತಿಗಳು ವೈರಮುತ್ತು ಅವರನ್ನು ಅಭಿನಂದಿಸಿದ್ದಾರೆ. ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್, ನಟ ರಜನಿಕಾಂತ್ ಮತ್ತು ನಟ-ರಾಜಕಾರಣಿ ಕಮಲ್ ಹಾಸನ್ ಅವರು ಪ್ರಕಟಣೆಯನ್ನು ಸ್ವಾಗತಿಸಿ ತಮಿಳು ಸಾಹಿತ್ಯ ಮತ್ತು ಕಾವ್ಯಕ್ಕೆ ವೈರಮುತ್ತು ಅವರ ಕೊಡುಗೆಯನ್ನು ಶ್ಲಾಘಿಸಿದ್ದಾರೆ. ಆದಾಗ್ಯೂ, ಈ ಘೋಷಣೆಯು ಹಲವಾರು ಸ್ತ್ರೀವಾದಿ ಕಾರ್ಯಕರ್ತರಿಂದ ಟೀಕೆಗೆ ಗುರಿಯಾಗಿದೆ. ಗಾಯಕಿ ಚಿನ್ಮಯಿ ಶ್ರೀಪಾದ ಮತ್ತು ಇತರರು ಈ ನಿರ್ಧಾರವನ್ನು ಪ್ರಶ್ನಿಸಿದ್ದು, 2018ರಲ್ಲಿ #MeToo ಚಳವಳಿಯ ಸಮಯದಲ್ಲಿ ಹಲವಾರು ಮಹಿಳೆಯರು ವೈರಮುತ್ತು ವಿರುದ್ಧ ಮಾಡಿದ ಲೈಂಗಿಕ ದೌರ್ಜನ್ಯ ಆರೋಪಗಳನ್ನು ಉಲ್ಲೇಖಿಸಿದ್ದಾರೆ. ವೈರಮುತ್ತುಗೆ ಅಭಿನಂದನೆ ಸಲ್ಲಿಸಿದವರ ವಿರುದ್ಧ ಚಿನ್ಮಯಿ ಟೀಕೆ 2018ರಲ್ಲಿ ವಿವಿಧ ವಯೋಮಾನದ ಅನೇಕ ಮಹಿಳೆಯರಿಗೆ ಒಬ್ಬ ಕವಿ-ಗೀತರಚನೆಕಾರ ಕಿರುಕುಳ ನೀಡಿದ್ದರು. ಇಂದು ಜ್ಞಾನಪೀಠ ಪ್ರಶಸ್ತಿಯನ್ನು ಆ ವ್ಯಕ್ತಿಗೆ ನೀಡಲಾಗಿದೆ. ಅವರ ಮೇಲೆ ಆರೋಪ ಮಾಡಿದ ಮಹಿಳೆಯರ ಸಾಮೂಹಿಕ ಧ್ವನಿಯನ್ನು ಮೌನಗೊಳಿಸಲಾಗಿದೆ ಎಂದು ಚಿನ್ಮಯಿ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ. ಜ್ಞಾನಪೀಠ ಪ್ರಶಸ್ತಿ ಘೋಷಣೆಯಾದ ಕೂಡಲೇ ವೈರಮುತ್ತುಗೆ ಅಭಿನಂದನೆ ಸಲ್ಲಿಸಿದವರನ್ನೂ ಚಿನ್ಮಯಿ ಪ್ರಶ್ನಿಸಿದ್ದಾರೆ. ನಟ ಕಮಲ್ ಹಾಸನ್ ಎಕ್ಸ್ ಪೋಸ್ಟ್ನಲ್ಲಿ ವೈರಮುತ್ತು ಅವರಿಗೆ ಅಭಿನಂದನೆ ಸಲ್ಲಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಚಿನ್ಮಯಿ, “For God’s sake… ಅವರ ವಲಯಗಳಲ್ಲಿ ನಡೆದ ಲೈಂಗಿಕ ದೌರ್ಜನ್ಯದ ದಾಖಲೆಗಳನ್ನು ನಿರ್ಲಕ್ಷಿಸುತ್ತಾ, ಪ್ರಭಾವಿ ಸಿನಿಮಾ ಕಲಾವಿದರು ರಾಜಕೀಯಕ್ಕೆ ಬರುತ್ತಿರುವುದು ಮಹಿಳಾ ಮತದಾರರಿಗೆ ಒಂದು ಎಚ್ಚರಿಕೆಯಾಗಿದೆ. ಪುರುಷರು ಎಂದಿಗೂ ನಮ್ಮ ಪರವಾಗಿರುವುದಿಲ್ಲ. ವಿಚಿತ್ರವಾದ ಸಂಗತಿ—ತಮ್ಮದೇ ಪಕ್ಷದ ಮಹಿಳೆಯರಲ್ಲಿ ಒಬ್ಬರು ಸಾರ್ವಜನಿಕವಾಗಿ ಕವಿಯನ್ನು ಹೆಸರಿಸಿದ್ದಾರೆ. ಅಂತೂ ಕೊನೆಗೂ ಪುರುಷರು ತಮ್ಮ ಸಹೋದರರು, ಮಾವ, ಅಪ್ಪ, ಸ್ನೇಹಿತರು, ಮಾರ್ಗದರ್ಶಕರ ಪರವಾಗಿ ನಿಲ್ಲುತ್ತಾರೆ. ಹೆಚ್ಚಿನ ಮಹಿಳೆಯರು ಆಘಾತಕ್ಕೊಳಗಾಗಿದ್ದರೆ ಯಾರು ಕಾಳಜಿ ವಹಿಸುತ್ತಾರೆ?” ಎಂದು ಪ್ರಶ್ನಿಸಿದ್ದಾರೆ. ವೈರಮುತ್ತು ಬಗ್ಗೆ ರಜನಿಕಾಂತ್ ಬರೆದ ಪೋಸ್ಟ್ಗೆ ಚಿನ್ಮಯಿ “ಅಯ್ಯೋ, ಇದೂ ಅರ್ಥವಾಗುತ್ತಿಲ್ಲವೇ?” ಎಂದು ಪ್ರತಿಕ್ರಿಯಿಸಿದ್ದಾರೆ. “ನಮ್ಮ ರಾಷ್ಟ್ರದ ಶ್ರೇಷ್ಠ ಜ್ಞಾನಪೀಠ ಪ್ರಶಸ್ತಿ ಪಡೆದ ನನ್ನ ಆತ್ಮೀಯ ಸ್ನೇಹಿತ, ಗೌರವಾನ್ವಿತ ಕವಿ ವೈರಮುತ್ತು ಅವರಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳು” ಎಂದು ರಜನಿಕಾಂತ್ ಹೇಳಿದ್ದಾರೆ. ವೈರಮುತ್ತು ಅವರನ್ನು ಟೀಕಿಸಿ ಮೇಲಿಂದ ಮೇಲೆ ಪೋಸ್ಟ್ ಮಾಡಿರುವ ಚಿನ್ಮಯಿ, ಜಯಕಾಂತನ್ ಅವರಂತಹ ಮಹನೀಯರ ನಂತರ ಈ ಗೌರವ ಸಿಗುತ್ತಿದೆ ಎಂದು ಹೇಳಲಾಗುತ್ತದೆ. ಆದರೆ ಜಯಕಾಂತನ್ ಅವರ ಪುತ್ರಿಯೇ ವೈರಮುತ್ತು ವಿರುದ್ಧ ಧ್ವನಿ ಎತ್ತಿದ್ದರು. ಜಯಕಾಂತನ್ ತಮ್ಮನ್ನು ಹೊಗಳಿದ್ದಾರೆ ಎಂಬಂತೆ ನಕಲಿ ಪತ್ರವೊಂದನ್ನು ವೈರಮುತ್ತು ಸೃಷ್ಟಿಸಿದ್ದರು ಎಂದು ಅವರು ಆರೋಪಿಸಿದ್ದಾರೆ. ಮತ್ತೊಂದು ಪೋಸ್ಟ್ನಲ್ಲಿ #MeToo ಆಂದೋಲನದ ಸಮಯದಲ್ಲಿ ಸಾರ್ವಜನಿಕವಾಗಿ ಮಾತನಾಡಿದ ನಂತರ ತಾನು ಎದುರಿಸಬೇಕಾದ ಪರಿಣಾಮಗಳ ಬಗ್ಗೆ ಚಿನ್ಮಯಿ ಹೇಳಿದ್ದಾರೆ. ಅವರ ವಿರುದ್ಧ ಆರೋಪ ಮಾಡಿದ ಮಹಿಳೆಯರ ಸಾಮೂಹಿಕ ಧ್ವನಿಯನ್ನು ಮೌನಗೊಳಿಸಲಾಯಿತು. ನಾನು ಭಾರೀ ಬೆಲೆ ತೆರಬೇಕಾಯಿತು. ತಮ್ಮ ಕನಸುಗಳನ್ನು ತ್ಯಜಿಸಿದ ಉಳಿದ ಮಹಿಳೆಯರು ನನ್ನಷ್ಟು ಅದೃಷ್ಟವಂತರಾಗಿರಲಿಲ್ಲ ಎಂದು ಅವರು ತಿಳಿಸಿದ್ದಾರೆ. ಹಿಂದಿನ ವಿವಾದ ಜ್ಞಾನಪೀಠ ಪ್ರಶಸ್ತಿಯ ಸುತ್ತಲಿನ ಚರ್ಚೆಯಂತೆ, 2021ರಲ್ಲಿ ಕೇರಳದಲ್ಲಿ ONV ಸಾಹಿತ್ಯ ಪ್ರಶಸ್ತಿಯ ಸಂದರ್ಭದಲ್ಲೂ ವಿವಾದ ಉಂಟಾಗಿತ್ತು. ಆ ವರ್ಷ ವೈರಮುತ್ತು ಅವರಿಗೆ ಪ್ರಶಸ್ತಿ ಘೋಷಿಸಿದಾಗ, ಅವರ ವಿರುದ್ಧದ ಲೈಂಗಿಕ ದೌರ್ಜನ್ಯ ಆರೋಪಗಳನ್ನು ಉಲ್ಲೇಖಿಸಿ ಸಾಂಸ್ಕೃತಿಕ ಸಮುದಾಯದ ಕೆಲವು ಭಾಗಗಳಿಂದ ಟೀಕೆ ವ್ಯಕ್ತವಾಯಿತು. ಪ್ರಸಿದ್ಧ ಮಲಯಾಳಂ ಕವಿ ONV ಕುರುಪ್ ಅವರ ಸ್ಮರಣಾರ್ಥ ಸ್ಥಾಪಿಸಲಾದ ಈ ಪ್ರಶಸ್ತಿಯು ಮಲಯಾಳಂ ಮತ್ತು ಇತರ ಭಾರತೀಯ ಭಾಷೆಗಳ ಕವಿಗಳನ್ನು ಗುರುತಿಸುತ್ತದೆ. ಕೇರಳದ ಪ್ರಮುಖ ಸಾಹಿತ್ಯ ವ್ಯಕ್ತಿಗಳಲ್ಲಿ ಒಬ್ಬರಾದ ONV 2016ರಲ್ಲಿ ನಿಧನರಾದರು. ವೈರಮುತ್ತು ಅವರನ್ನು ಆಯ್ಕೆ ಮಾಡಿದ ತೀರ್ಪುಗಾರರಲ್ಲಿ ತುಂಜತ್ತ್ ಎಝುತ್ತಚ್ಚನ್ ಮಲಯಾಳಂ ವಿಶ್ವವಿದ್ಯಾಲಯದ ಆಗಿನ ಉಪಕುಲಪತಿ ಅನಿಲ್ ವಲ್ಲತ್ತೋಳ್, ಕವಿಗಳಾದ ಆಲಂಕೋಡ್ ಲೀಲಾಕೃಷ್ಣನ್ ಮತ್ತು ಪ್ರಭಾ ವರ್ಮಾ ಇದ್ದರು. ಈ ಘೋಷಣೆಯು ಮಲಯಾಳಂ ಸಾಂಸ್ಕೃತಿಕ ಕ್ಷೇತ್ರದೊಳಗಿನಿಂದಲೇ ಟೀಕೆಗೆ ಗುರಿಯಾಯಿತು. ಲೈಂಗಿಕ ಕಿರುಕುಳದ ಆರೋಪ ಎದುರಿಸುತ್ತಿರುವ ವ್ಯಕ್ತಿಗೆ ಕುರುಪ್ ಅವರ ಹೆಸರಿನಲ್ಲಿ ಗೌರವ ನೀಡುವುದು ಕವಿಯ ಪರಂಪರೆಗೆ ಅವಮಾನವಾಗಿದೆ ಎಂದು ನಟಿ ಪಾರ್ವತಿ ತಿರುವೋತ್ತು ಹೇಳಿದ್ದಾರೆ. ಮಲಯಾಳಂ ಚಲನಚಿತ್ರೋದ್ಯಮದ ಮಹಿಳಾ ವೃತ್ತಿಪರರ ವೇದಿಕೆಯಾದ Women in Cinema Collective (WCC) ಕೂಡ ಈ ನಿರ್ಧಾರವನ್ನು ಖಂಡಿಸಿತು. ಕೆ.ಆರ್. ಮೀರಾ, ಗೀತು ಮೋಹನ್ ದಾಸ್ ಮತ್ತು ಅಂಜಲಿ ಮೆನನ್ ಸೇರಿದಂತೆ ಹಲವಾರು ಬರಹಗಾರರು ಮತ್ತು ಚಲನಚಿತ್ರ ನಿರ್ಮಾಪಕರು ಸಹ ಈ ಆಯ್ಕೆಯ ಬಗ್ಗೆ ಕಳವಳ ವ್ಯಕ್ತಪಡಿಸಿದರು. ಹೆಚ್ಚುತ್ತಿರುವ ಟೀಕೆಗಳ ನಡುವೆ ONV ಸಾಂಸ್ಕೃತಿಕ ಅಕಾಡೆಮಿ ತನ್ನ ನಿರ್ಧಾರವನ್ನು ಪರಿಶೀಲಿಸುವುದಾಗಿ ಹೇಳಿತು. ಇದಾದ ಬಳಿಕ ವೈರಮುತ್ತು ವಿವಾದದ ಮಧ್ಯೆ ಪ್ರಶಸ್ತಿಯನ್ನು ಸ್ವೀಕರಿಸಲು ಇಚ್ಛಿಸಿಲ್ಲ ಎಂದು ತಿಳಿಸಿದ್ದರು. 3 ಲಕ್ಷ ರೂ. ಬಹುಮಾನವನ್ನು ಕೇರಳ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಹಾಗೂ ತಮ್ಮ ವೈಯಕ್ತಿಕ ನಿಧಿಯಿಂದ ಹೆಚ್ಚುವರಿಯಾಗಿ 2 ಲಕ್ಷ ರೂ. ನೀಡುವುದಾಗಿ ಹೇಳಿದ್ದರು.
ರೈಲ್ವೆ ಇಲಾಖೆ ಪದೋನ್ನತಿ ಪರೀಕ್ಷೆಯಲ್ಲೂ ಕನ್ನಡಕ್ಕೆ ಕೊಕ್; ಇಂಗ್ಲಿಷ್- ಹಿಂದಿಗೆ ಮಾತ್ರ ಅವಕಾಶ! ಕರವೇ ಆಕ್ರೋಶ
Railway Department Exams- ನೈಋುತ್ಯ ರೈಲ್ವೆಯ ಮುಂಬಡ್ತಿ ಪರೀಕ್ಷೆಗಳಲ್ಲಿ ಕನ್ನಡವನ್ನು ಹೊರಗಿಟ್ಟು, ಕೇವಲ ಹಿಂದಿ ಮತ್ತು ಇಂಗ್ಲಿಷ್ಗೆ ಮಾತ್ರ ಅವಕಾಶ ನೀಡಿರುವುದಕ್ಕೆ ಇದೀಗ ಕನ್ನಡ ಸಂಘಟನೆಗಳು ತೀವ್ರ ವಿರೋಧ ವ್ಯಕ್ತಪಡಿಸಿವೆ. ಈ ಕ್ರಮವನ್ನು ಖಂಡಿಸಿರುವ ಕರವೇ ಅಧ್ಯಕ್ಷ ಟಿ.ಎ. ನಾರಾಯಣಗೌಡ ಅವರು ಮಾರ್ಚ್ 17ರಂದು ನಡೆಯುವ ಪರೀಕ್ಷೆಗಳನ್ನು ತಡೆಯುವುದಾಗಿ ಎಚ್ಚರಿಕೆ ನೀಡಿದ್ದಾರೆ. ಈ ಮೊದಲು ಕನ್ನಡಕ್ಕೆ ಅವಕಾಶ ನೀಡಿ ಈಗ ಕೈಬಿಟ್ಟಿರುವುದು ಅಭ್ಯರ್ಥಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಆದರೆ, ಕಂಪ್ಯೂಟರ್ ಆಧರಿತ ಪರೀಕ್ಷೆಯಲ್ಲಿ ಹಿಂದಿ, ಇಂಗ್ಲಿಷ್ಗೆ ಮಾತ್ರ ಅವಕಾಶವಿರುವುದಾಗಿ ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
Koppal | ಇಸ್ಲಾಂ–ಲಿಂಗಾಯತ ಧರ್ಮಗಳಲ್ಲಿ ಹಲವು ಸಾಮ್ಯತೆಗಳಿವೆ: ಲಾಲ್ ಹುಸೇನ್ ಕಂದಗಲ್
ಕೊಪ್ಪಳ: ಇಸ್ಲಾಂ ಹಾಗೂ ಲಿಂಗಾಯತ ಧರ್ಮಗಳಲ್ಲಿ ಹಲವು ವಿಚಾರಗಳಲ್ಲಿ ಹೊಂದಾಣಿಕೆ ಇರುವುದಾಗಿ ವಾಗ್ಮಿ ಲಾಲ್ ಹುಸೇನ್ ಕಂದಗಲ್ ಹೇಳಿದರು. ನಗರದಲ್ಲಿ ವಿಜನ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ಇಫ್ತಾರ್ ಸೌಹಾರ್ದ ಕೂಟದಲ್ಲಿ ಮಾತನಾಡಿದ ಅವರು, ಉಪವಾಸ ಎಂದರೆ ಕೇವಲ ಆಹಾರ ತ್ಯಜಿಸುವುದಲ್ಲ, ಪಂಚೇಂದ್ರಿಯಗಳ ಮೇಲೆ ನಿಯಂತ್ರಣ ಸಾಧಿಸುವುದಾಗಿದೆ ಎಂದು ಹೇಳಿದರು. ಉಪವಾಸದಲ್ಲಿದ್ದು ಸುಳ್ಳು ಹೇಳಿದರೆ ಅದರ ಅರ್ಥವೇ ಇಲ್ಲ. ಹಿಂದೂ ಧರ್ಮದಲ್ಲಿಯೂ ಉಪವಾಸದ ಕಲ್ಪನೆ ಇದೆ. ಬೈಬಲ್ ಹಾಗೂ ಬೌದ್ಧ ಧರ್ಮದಲ್ಲಿಯೂ ಉಪವಾಸದ ಉಲ್ಲೇಖ ಕಾಣಬಹುದು ಎಂದು ತಿಳಿಸಿದರು. ಉಪವಾಸದ ಕುರಿತು ಕುರಾನ್ನ ಕಲ್ಪನೆಗಳನ್ನು ವಿವರಿಸಿದ ಅವರು, ಒಬ್ಬ ವ್ಯಕ್ತಿ ಯಾರೂ ಇಲ್ಲದ ಸ್ಥಳದಲ್ಲಿ ಆಹಾರ ಸೇವಿಸಿ ಬಂದು ಉಪವಾಸ ಇದ್ದೇನೆ ಎಂದು ಹೇಳಬಹುದು. ಆದರೆ ದೇವರ ಭಯ ಮತ್ತು ದೇವರ ಆದೇಶ ಪಾಲಿಸುವ ನಂಬಿಕೆ ಇರುವುದರಿಂದ ಯಾರೂ ಆ ರೀತಿಯಲ್ಲಿ ವರ್ತಿಸುವುದಿಲ್ಲ ಎಂದರು. ಉಪವಾಸ ಬಿಡುವ ಸಂದರ್ಭದಲ್ಲಿ ಉಪವಾಸಿಗನೊಂದಿಗೆ ಸೇರಿ ಉಪವಾಸ ಇಲ್ಲದವರು ಆಹಾರ ಸೇವಿಸಿದರೂ ಉಪವಾಸಿಗನಿಗೆ ಸಿಗುವಷ್ಟು ಪುಣ್ಯ ಸಿಗುತ್ತದೆ ಎಂದು ಪ್ರವಾದಿಗಳು ಹೇಳಿದ್ದಾರೆ. ನಮಾಜ್, ಹಜ್ ಮತ್ತು ಉಪವಾಸ ಮಾಡುವುದಕ್ಕಿಂತಲೂ ನಾಲಿಗೆಯ ಮೇಲೆ ನಿಯಂತ್ರಣ ಸಾಧಿಸುವುದು ಮುಖ್ಯವಾಗಿದೆ. ನಮ್ಮ ನಾಲಿಗೆಯಿಂದ ಮತ್ತೊಬ್ಬರ ಜೀವಕ್ಕೂ ಅಪಾಯವಾಗಬಹುದು, ಜೀವನಕ್ಕೂ ಅರ್ಥ ಸಿಗಬಹುದು. ಆದ್ದರಿಂದ ಗೌರವಯುತ ಮಾತುಗಳನ್ನು ಬಳಕೆ ಮಾಡಬೇಕು ಎಂದು ಹೇಳಿದರು. ಯಾವ ದೇವರ ಭಯದಿಂದ ನಾವು ಉಪವಾಸ ಇದ್ದೇವೋ, ಅದೇ ದೇವರ ಭಯವನ್ನು ಭ್ರಷ್ಟಾಚಾರ, ಅನಾಚಾರ, ಕೊಲೆ ಹಾಗೂ ಕೋಮುವಾದಕ್ಕೆ ಪ್ರಚೋದನೆ ನೀಡುವ ಸಂದರ್ಭದಲ್ಲೂ ನೆನಪಿಸಿಕೊಳ್ಳಬೇಕು. ಧರ್ಮ ಹಾಗೂ ಜಾತಿಗಳ ಆಧಾರದಲ್ಲಿ ಸಮಾಜವನ್ನು ವಿಭಜಿಸುವ ಪ್ರಯತ್ನಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಪ್ರಚೋದನಕಾರಿ ಮಾತುಗಳಿಗೆ ಬಲಿಯಾಗಬಾರದು ಎಂದು ಅವರು ಕಿವಿಮಾತು ಹೇಳಿದರು. ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧ ಪರಿಸ್ಥಿತಿಯನ್ನು ಉಲ್ಲೇಖಿಸಿ ಮಾತನಾಡಿದ ಅವರು, ಅನ್ಯಾಯವಾಗಿ ಒಬ್ಬ ಮನುಷ್ಯನನ್ನು ಕೊಂದರೆ ಇಡೀ ಮಾನವೀಯತೆಯನ್ನು ಕೊಂದ ಪಾಪವಾಗುತ್ತದೆ ಎಂದು ಕುರಾನ್ ಹೇಳುತ್ತದೆ. ಯುದ್ಧಕ್ಕೆ ಅರ್ಥವಿಲ್ಲ ಎಂದು ಹೇಳಿದರು. ಲಿಂಗಾಯತ ಧರ್ಮದ ರಾಜ್ಯಾಧ್ಯಕ್ಷ ಈಶಣ್ಣ ಕೊರ್ಲಳ್ಳಿ ಮಾತನಾಡಿ, ಇಂತಹ ಸೌಹಾರ್ದ ಕೂಟಗಳಲ್ಲಿ ಸರ್ಕಾರಿ ಅಧಿಕಾರಿಗಳು ಸಹ ಭಾಗವಹಿಸಬೇಕು. ಈ ಕಾರ್ಯಕ್ರಮಗಳು ಕೇವಲ ಮುಸ್ಲಿಂ ಸಮುದಾಯಕ್ಕೆ ಸೀಮಿತವಾಗಿಲ್ಲ, ಎಲ್ಲಾ ಧರ್ಮಗಳ ಜನರು ಭಾಗವಹಿಸುವ ವೇದಿಕೆಗಳಾಗಿವೆ ಎಂದು ಹೇಳಿದರು. ಜಕಾತ್ ಸೇರಿದಂತೆ ಹಲವು ವಿಚಾರಗಳಲ್ಲಿ ಇಸ್ಲಾಂ ಮತ್ತು ಲಿಂಗಾಯತ ಧರ್ಮಗಳ ನಡುವೆ ಸಾಮ್ಯತೆಗಳಿವೆ. ರಂಜಾನ್ ಮಾಸದಲ್ಲಿ ಅಂತರಂಗ ಹಾಗೂ ಬಹಿರಂಗ ಶುದ್ಧಿಯನ್ನು ಒತ್ತಿ ಹೇಳಲಾಗುತ್ತದೆ. ಬಸವಣ್ಣನವರ ಉಪದೇಶದಲ್ಲಿಯೂ ಶುದ್ಧಿಯ ಮಹತ್ವವನ್ನು ವಿವರಿಸಲಾಗಿದೆ ಎಂದು ಹೇಳಿದರು. ಪ್ರವಾದಿ ಮುಹಮ್ಮದ್ ಅವರ ಜೀವನದಲ್ಲಿ ಕಂಡುಬರುವ ಸಹಿಷ್ಣುತೆ ಮತ್ತು ಉದಾರತೆಯ ಘಟನೆಗಳನ್ನು ನೆನಪಿಸಿದ ಅವರು, ಪ್ರವಾದಿಗಳ ಮೇಲೆ ಕಸ ಹಾಕುತ್ತಿದ್ದ ಮಹಿಳೆ ಒಂದು ದಿನ ಕಸ ಹಾಕದಿದ್ದಾಗ ಅವರ ಆರೋಗ್ಯ ವಿಚಾರಿಸಿದ ಉದಾಹರಣೆ ನಮಗೆ ಮಾದರಿಯಾಗಿದೆ. ಜ್ಞಾನ ಎಲ್ಲಿಂದ ಬಂದರೂ ಸ್ವೀಕರಿಸಬೇಕು ಎಂಬ ಸಂದೇಶವನ್ನು ಎಲ್ಲ ಧರ್ಮಗಳು ನೀಡುತ್ತವೆ ಎಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಹೀದ್ ತಹಶಿಲ್ದಾರ್ ವಹಿಸಿದ್ದರು. ಅತಿಥಿಗಳಾಗಿ ಆಗಮಿಸಿದ್ದ ಬಸವರಾಜ್ ಬಳೂಳ್ಳಿ ಹಾಗೂ ವೈದ್ಯ ಸುಶೀಲ್ ಕುಮಾರ್ ಕಲಾಲ್ ಸಹ ಮಾತನಾಡಿದರು.
Viral Video : ವೃದ್ಧೆಯನ್ನು ಬೆಚ್ಚಿಬೀಳಿಸಿದ ಯಂತ್ರ; ರಸ್ತೆಯಲ್ಲಿದ್ದ ರೋಬೋಟ್ ಅನ್ನು ವಶಕ್ಕೆ ಪಡೆದ ಪೊಲೀಸರು
ಮಕಾವು: ಸಾರ್ವಜನಿಕ ಸ್ಥಳಗಳಲ್ಲಿ ಯಾರಾದರೂ ಅಸಭ್ಯವಾಗಿ ವರ್ತಿಸಿದರೆ, ಅಥವಾ ಬೇರೆಯವರಿಗೆ ತೊಂದರೆ ನೀಡಿದರೆ ಪೊಲೀಸರು ಅವರನ್ನು ವಶಕ್ಕೆ ಪಡೆಯುವುದನ್ನು ನಾವು ನೋಡಿದ್ದೇವೆ. ಆದರೆ, ಚೀನಾದ ಮಕಾವು (Macau) ನಗರದಲ್ಲಿ ನಡೆದಿರುವ ಘಟನೆ ಮಾತ್ರ ಕೊಂಚ ವಿಭಿನ್ನವಾಗಿದೆ. ಇಲ್ಲಿ ಪೊಲೀಸರು ಯಾವುದೇ ಮನುಷ್ಯನನ್ನು ಬಂಧಿಸಿಲ್ಲ, ಬದಲಾಗಿ ವೃದ್ಧೆಯೊಬ್ಬರನ್ನು ಬೆಚ್ಚಿಬೀಳಿಸಿದ ಕಾರಣಕ್ಕಾಗಿ 'ಹ್ಯೂಮನಾಯ್ಡ್ ರೋಬೋಟ್' (Humanoid robot) ಒಂದನ್ನು ವಶಕ್ಕೆ
ವಿಜಯನಗರ | ಸಿಡಿಲು ಬಡಿದು ಹೊತ್ತಿ ಉರಿದ ಪವನ ವಿದ್ಯುತ್ ಯಂತ್ರ : ಸ್ಥಳೀಯರಲ್ಲಿ ಆತಂಕ
ವಿಜಯನಗರ: ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಯಂಬಳ್ಳಿ ಗ್ರಾಮದಲ್ಲಿ ಸಿಡಿಲು ಬಡಿದ ಪರಿಣಾಮ ಪವನ ವಿದ್ಯುತ್ ಉತ್ಪಾದನಾ ಯಂತ್ರ (ವಿಂಡ್ ಫ್ಯಾನ್) ಹೊತ್ತಿ ಉರಿದ ಘಟನೆ ಸಂಭವಿಸಿದ್ದು, ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಯಂತ್ರಕ್ಕೆ ಬೆಂಕಿ ಹೊತ್ತಿಕೊಂಡಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗಿವೆ. ಸೋಮವಾರ ಸಂಜೆ ವೇಳೆಯಲ್ಲಿ ಕೂಡ್ಲಿಗಿ ತಾಲೂಕಿನಾದ್ಯಂತ ಸಿಡಿಲು-ಗುಡುಗು ಸಹಿತ ಸಾಧಾರಣ ಮಳೆಯಾಗಿತ್ತು. ಇದೇ ವೇಳೆ ಯಂಬಳ್ಳಿ ಗ್ರಾಮದ ಸಮೀಪದಲ್ಲಿರುವ ಪವನ ವಿದ್ಯುತ್ ಉತ್ಪಾದನಾ ಯಂತ್ರಕ್ಕೆ ಸಿಡಿಲು ಬಡಿದ ಪರಿಣಾಮ ಯಂತ್ರದ ಮೇಲ್ಭಾಗದಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಕೆಲವೇ ಕ್ಷಣಗಳಲ್ಲಿ ಬೆಂಕಿ ಜ್ವಾಲೆಗಳು ಮೇಲಕ್ಕೆ ಎದ್ದಿರುವ ದೃಶ್ಯವನ್ನು ಗ್ರಾಮಸ್ಥರು ಮೊಬೈಲ್ನಲ್ಲಿ ಚಿತ್ರೀಕರಿಸಿದ್ದು, ಆ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಇನ್ನೊಂದೆಡೆ ಅಕಸ್ಮಾತ್ ಸುರಿದ ಮಳೆಯ ಪರಿಣಾಮ ರೈತಾಪಿ ವರ್ಗವೂ ಸಂಕಷ್ಟ ಅನುಭವಿಸಬೇಕಾಯಿತು. ಹೊಲಗಳಲ್ಲಿ ಕಟಾವು ಮಾಡಿ ಒಣಗಲು ಹಾಕಿದ್ದ ರಾಗಿ ಬೆಳೆ ಹಾಗೂ ಜಾನುವಾರುಗಳಿಗೆ ಸಂಗ್ರಹಿಸಿದ್ದ ಮೇವು ತೋಯದಂತೆ ಕಾಪಾಡಿಕೊಳ್ಳಲು ರೈತರು ಪರದಾಡಿದ ಘಟನೆಗಳು ಹಲವು ಕಡೆ ಕಂಡುಬಂದಿವೆ. ಈ ಘಟನೆ ಕಾನಾಹೊಸಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಸ್ಥಳೀಯರಿಂದ ಮಾಹಿತಿ ಪಡೆದ ನಂತರ ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿರುವುದಾಗಿ ತಿಳಿದುಬಂದಿದೆ. ಸಿಡಿಲು ಬಡಿದ ಪರಿಣಾಮ ಪವನ ವಿದ್ಯುತ್ ಯಂತ್ರಕ್ಕೆ ಹಾನಿಯಾಗಿರುವ ಬಗ್ಗೆ ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ. ಒಟ್ಟಿನಲ್ಲಿ ಮಳೆ ಮತ್ತು ಸಿಡಿಲಿನ ಪರಿಣಾಮ ಒಂದು ಕಡೆ ರೈತರಿಗೆ ಆತಂಕ ಉಂಟಾಗಿದ್ದರೆ, ಮತ್ತೊಂದು ಕಡೆ ಪವನ ವಿದ್ಯುತ್ ಯಂತ್ರ ಹೊತ್ತಿ ಉರಿದ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಜನರ ಗಮನ ಸೆಳೆಯುತ್ತಿವೆ.
ಮಹಿಳಾ ನೌಕರರಿಗೆ ಋತುಚಕ್ರ ರಜೆ: ಉದ್ಯೋಗದಾತರಿಗೆ ಶೋಕಾಸ್ ನೋಟಿಸ್ ನೀಡದಂತೆ ಸರ್ಕಾರಕ್ಕೆ ಹೈಕೋರ್ಟ್ ತಾಕೀತು
Menstrual Leave- ಮಹಿಳಾ ನೌಕರರಿಗೆ ಮಾಸಿಕ ಒಂದು ದಿನದ ವೇತನ ಸಹಿತ ಋತುಚಕ್ರದ ರಜೆ ನೀಡುವಂತೆ ರಾಜ್ಯ ಸರ್ಕಾರದ ನೀಡಿರುವ ಅಧಿಸೂಚನೆಯನ್ನು ಪ್ರಶ್ನಿಸಿ ಉದ್ಯೋಗದಾತರ ಸಂಘಗಳು ಸಲ್ಲಿಸಿದ ಅರ್ಜಿಯನ್ನು ಹೈಕೋರ್ಟ್ ವಿಚಾರಣೆ ನಡೆಸಿದೆ. ಪ್ರಕರಣ ನ್ಯಾಯಾಲಯದಲ್ಲಿ ಇರುವಾಗ ಉದ್ಯೋಗದಾತರಿಗೆ ಶೋಕಾಸ್ ನೋಟಿಸ್ ನೀಡುತ್ತಿರುವ ರಾಜ್ಯ ಸರ್ಕಾರದ ಕ್ರಮಕ್ಕೆ ಉಚ್ಚನ್ಯಾಯಾಲಯದ ಪೀಠ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಉದ್ಯೋಗದಾತರ ಮೇಲೆ ಯಾವುದೇ ಬಲವಂತದ ಕ್ರಮ ಕೈಗೊಳ್ಳದಂತೆ ಸೂಚಿಸಿ ವಿಚಾರಣೆಯನ್ನು ಮಾರ್ಚ್ 24ಕ್ಕೆ ಮುಂದೂಡಿದೆ.
ಮಹಿಳಾ ಶಿಕ್ಷಕರಿಗೆ ಶಿಶುಪಾಲನೆ ರಜೆ ಮಂಜೂರಾತಿಗೆ ಕ್ರಮ : ಸಚಿವ ಮಧುಬಂಗಾರಪ್ಪ
ಬೆಂಗಳೂರು : ರಾಜ್ಯದ ಶಾಲಾ ಶಿಕ್ಷಣ ಇಲಾಖೆಯ ಮಹಿಳಾ ಶಿಕ್ಷಕರಿಗೆ ಇನ್ನು ಮುಂದೆ ಶಿಶುಪಾಲನಾ ರಜೆ ಮಂಜೂರಾತಿಯನ್ನು ಸುಗಮಗೊಳಿಸಲು ಕ್ರಮಕೈಗೊಳ್ಳಲಾಗುವುದು ಎಂದು ಶಾಲಾ ಶಿಕ್ಷಣ ಸಚಿವ ಮಧುಬಂಗಾರಪ್ಪ ತಿಳಿಸಿದರು. ಸೋಮವಾರ ವಿಧಾನಪರಿಷತ್ನ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿ ಸದಸ್ಯ ವೈ.ಎಂ.ಸತೀಶ್ ಪ್ರಶ್ನೆಗೆ ಉತ್ತರಿಸಿದ ಸಚಿವರು, ಮಹಿಳಾ ಶಿಕ್ಷಕರಿಗೆ ಮಾತೃತ್ವ ರಜಾ ಮನವಿ ಸ್ವೀಕೃತಗೊಂಡ 15 ದಿನಗಳೊಳಗಾಗಿ ಸಕ್ಷಮ ಪ್ರಾಧಿಕಾರದಿಂದ ಮಾತೃತ್ವ ರಜೆಯನ್ನು ಮಂಜೂರು ಮಾಡುವುದು. ಅಲ್ಲದೆ, ಮಹಿಳಾ ಶಿಕ್ಷಕರು ಮಾತೃತ್ವ ರಜೆಯೊಂದಿಗೆ ಶಿಶುಪಾಲನಾ ರಜೆಯನ್ನು ಸಂಯೋಜಿಸಿ ಉಪಯೋಗಿಸಿಕೊಳ್ಳಲು ಇಚ್ಚಿಸಿದ್ದಲ್ಲಿ ಅಥವಾ ಶಿಶುಪಾಲನಾ ರಜೆಗೆ ಅರ್ಜಿ ಸಲ್ಲಿಸಿದ್ದಲ್ಲಿ, ಸಕ್ಷಮ ಪ್ರಾಧಿಕಾರದಿಂದ ರಜಾ ಮನವಿ ಸ್ವೀಕೃತವಾದ 15 ದಿನಗಳೊಳಗಾಗಿ ರಜೆಯನ್ನು ಮಂಜೂರು ಮಾಡಬೇಕು ಎಂದರು. ಮಾತೃತ್ವ ರಜೆಯ ನಂತರ ಮರಳಿ ಕರ್ತವ್ಯಕ್ಕೆ ಹಾಜರಾಗುವ ಮಹಿಳಾ ಶಿಕ್ಷಕರಿಗೆ ಮಗುವಿನ ವಯಸ್ಸು 5 ವರ್ಷ ಪೂರ್ಣಗೊಳ್ಳುವವರೆಗೂ ಮಗುವಿನ ಆರೈಕೆಗೆ ಅನುಕೂಲವಾಗುವ ರೀತಿಯಲ್ಲಿ ಸದರಿ ಮಹಿಳಾ ನೌಕರರು ಇಚ್ಛಿಸುವ ಸ್ಥಳಕ್ಕೆ ನಿಯುಕ್ತಿಗೊಳಿಸಲಾಗುವುದು. ಮಾತೃತ್ವ ರಜೆ ಹಾಗೂ ಶಿಶುಪಾಲನಾ ರಜೆಯ ಮೇಲೆ ತೆರಳುವ ಮಹಿಳಾ ಶಿಕ್ಷಕರ ರಜೆಯ ಅವಧಿಗೆ ಅತಿಥಿ ಶಿಕ್ಷಕರನ್ನು ನಿಯುಕ್ತಿಗೊಳಿಸಲಾಗುವುದು ಎಂದು ಮಧುಬಂಗಾರಪ್ಪ ತಿಳಿಸಿದರು.
ಬೆಂಗಳೂರು : ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಡಿಪ್ಲೊ ಮಾ ವಿದ್ಯಾರ್ಥಿಗಳಿಗೆ ಲ್ಯಾಟರಲ್ ಎಂಟ್ರಿ ಮೂಲಕ ಎಂಜನಿಯರಿಂಗ್ 2ನೇ ವರ್ಷ ಅಥವಾ 3ನೇ ಸೆಮಿಸ್ಟರ್ ಪ್ರವೇಶಕ್ಕೆ ನಡೆಸುವ ಡಿಸಿಇಟಿ-2026ಕ್ಕೆ ಅರ್ಜಿ ಆಹ್ವಾನಿಸಿದ್ದು, ಅರ್ಜಿ ಸಲ್ಲಿಸಲು ಎ.3 ಕೊನೆ ದಿನವಾಗಿದೆ. ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್. ಪ್ರಸನ್ನ ಪ್ರಕಟನೆ ಹೊರಡಿಸಿದ್ದು, ಶುಲ್ಕ ಪಾವತಿಗೆ ಎ.4ರವರೆಗೆ ಅವಕಾಶ ಇರುತ್ತದೆ. ಅರ್ಜಿ ಸಲ್ಲಿಸಿದವರಿಗೆ ಮೇ 23ರಂದು ಲಿಖಿತ ಪರೀಕ್ಷೆ ಇರುತ್ತದೆ ಎಂದು ಅವರು ತಿಳಿಸಿದ್ದಾರೆ.
ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ 39.37ಲಕ್ಷ ರೂ.ಮೌಲ್ಯದ ಗಾಂಜಾ ವಶ: ಪ್ರಯಾಣಿಕನ ಬಂಧನ
ಬೆಂಗಳೂರು : ದೇವನಹಳ್ಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 39.37 ಲಕ್ಷ ರೂ. ಮೌಲ್ಯದ ಹೈಡ್ರೋಪೋನಿಕ್ ಗಾಂಜಾ ಹೊಂದಿದ್ದ ಪ್ರಯಾಣಿಕನನ್ನು ಬಂಧಿಸಲಾಗಿದೆ ಎಂದು ಕಸ್ಟಮ್ಸ್ ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ. ಮಾ.14ರಂದು ಬ್ಯಾಂಕಾಕ್ನಿಂದ ಆಗಮಿಸಿದ ಪ್ರಯಾಣಿಕನನ್ನು ತಡೆದ ಕಸ್ಟಮ್ಸ್ ಅಧಿಕಾರಿಗಳು, ಚೆಕ್-ಇನ್ ಮಾಡಿದ ಬ್ಯಾಗೇಜ್ನಲ್ಲಿ ಫೋಟೋ ಫ್ರೇಮ್ನೊಳಗೆ ಮರೆಮಾಚಲಾಗಿದ್ದ 1.125 ಕೆ.ಜಿ. ಹೈಡ್ರೋಪೋನಿಕ್ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ. ಇದರ ಅಂದಾಜು ಮೌಲ್ಯ 39.37 ಲಕ್ಷ ರೂ. ಆಗಿದ್ದು, ಪ್ರಯಾಣಿಕನನ್ನು ಎನ್ಡಿಪಿಎಸ್ ಕಾಯ್ದೆಯಡಿಯಲ್ಲಿ ಬಂಧಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
Bengaluru | 50 ಸಾವಿರ ರೂ.ಹಫ್ತಾ ನೀಡದಿದ್ದಕ್ಕೆ ಮಕ್ಕಳ ಎದುರೇ ತಂದೆಯ ಹತ್ಯೆ: ಪ್ರಕರಣ ದಾಖಲು
ಬೆಂಗಳೂರು : 50 ಸಾವಿರ ರೂಪಾಯಿ ಹಫ್ತಾ ನೀಡದಿದ್ದಕ್ಕೆ ಮಕ್ಕಳ ಕಣ್ಣೆದುರೇ ತಂದೆಯನ್ನು ಹೊಡೆದು ಭೀಕರವಾಗಿ ಕೊಲೆಗೈದಿರುವ ಘಟನೆ ಇಲ್ಲಿನ ವಿಲ್ಸನ್ ಗಾರ್ಡನ್ ಠಾಣೆ ವ್ಯಾಪ್ತಿಯಲ್ಲಿ ರವಿವಾರ ತಡರಾತ್ರಿ ನಡೆದಿದೆ. ಮಾ.15ರ ರವಿವಾರ ತಡರಾತ್ರಿ ಬಡಾ ಮಖಾನ್ ರಸ್ತೆಯಲ್ಲಿ ಈ ಘಟನೆ ನಡೆದಿದ್ದು, ಮೆಕ್ಯಾನಿಕ್ ಆಗಿದ್ದ ರಶೀದ್ ಪಾಷಾ(45) ಕೊಲೆಗೀಡಾದ ವ್ಯಕ್ತಿ ಎಂದು ಗುರುತಿಸಲಾಗಿದೆ. ಈ ಸಂಬಂಧ ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೂವರು ಈ ಕೃತ್ಯ ನಡೆಸಿರುವುದಾಗಿ ತಿಳಿದುಬಂದಿದ್ದು, ಆರೋಪಿಗಳ ಪತ್ತೆಕಾರ್ಯ ಮುಂದುವರೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಅಂಗಡಿಗೆ ಹೊಸ ಮೋಲ್ಡ್ ಹಾಕಿಸಿದ್ದ ರಶೀದ್ ಬಳಿ ಸ್ಥಳೀಯ ಕೆಲ ಆರೋಪಿಗಳು ಮಾ.15ರ ರವಿವಾರ ಬೆಳಗ್ಗೆ ಬಂದು 50 ಸಾವಿರ ರೂಪಾಯಿ ಹಫ್ತಾ ಕೊಡುವಂತೆ ಪೀಡಿಸಿದ್ದರು. ಆದರೆ, ಹಣ ನೀಡಲು ರಶೀದ್ ನಿರಾಕರಿಸಿದಾಗ ಮಾತಿನ ಚಕಮಕಿ ನಡೆದಿದೆ. ಅದೇ ಜಿದ್ದಿನಲ್ಲಿ ರಾತ್ರಿ 8.30ರ ಸುಮಾರಿಗೆ ಮತ್ತೆ ಬಂದ ಮೂವರು ಆರೋಪಿಗಳ ಗುಂಪು, ರಶೀದ್ ಅವರ ಇಬ್ಬರು ಮಕ್ಕಳ ಮುಂದೆಯೇ ಬ್ಯಾಟ್ನಿಂದ ಹಲ್ಲೆ ನಡೆಸಿದ್ದಾರೆ. ಈ ಪರಿಣಾಮ ತೀವ್ರವಾಗಿ ಗಾಯಗೊಂಡಿದ್ದ ರಶೀದ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನಾ ಸ್ಥಳಕ್ಕೆ ಕೇಂದ್ರ ವಿಭಾಗದ ಡಿಸಿಪಿ ಅಕ್ಷಯ್ ಎಂ. ಹಕೇ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಸ್ಥಳದಲ್ಲಿ ಪರಿಸ್ಥಿತಿ ಉದ್ವಿಗ್ನಗೊಳ್ಳದಂತೆ ಒಂದು ಕೆಎಸ್ಆರ್ಪಿ ತುಕಡಿಯನ್ನು ನಿಯೋಜಿಸಲಾಗಿದೆ.
ಮಂಗಳೂರು| ಮುಂದ್ರಾ ಬಂದರಿಗೆ ಆಗಮಿಸಿದ ಎಲ್ಪಿಜಿ ಹಡಗು ʼಶಿವಾಲಿಕ್ʼ
ಮಂಗಳೂರು: ಹಾರ್ಮುಝ್ ಜಲಸಂಧಿಯ ಮೂಲಕ ಒಟ್ಟು 46,000 ಎಂಟಿ ಪ್ರಮಾಣದೊಂದಿಗೆ ಎಲ್ಪಿಜಿ ಹಡಗು ಶಿವಾಲಿಕ್ ಗುಜರಾತ್ನ ಮುಂದ್ರಾ ಬಂದರಿನ ಎಲ್ಪಿಜಿ ಟರ್ಮಿನಲ್ಗೆ ಸೋಮವಾರ ಆಗಮಿಸಿತು. 46,000 ಎಂಟಿ ಪ್ರಮಾಣ ಎಲ್ಪಿಜಿಯನ್ನು ಹಡಗು ಹೊತ್ತಿದೆ. ಈ ಪೈಕಿ 20,000 ಎಂಟಿಯಷ್ಟು ಗ್ಯಾಸ್ನ್ನು ಭಾರತದ ಅತಿದೊಡ್ಡ ಖಾಸಗಿ ಮತ್ತು ವಾಣಿಜ್ಯ ಬಂದರು ಮುಂದ್ರಾದಲ್ಲಿ ಒಟ್ಟು ಇಳಿಸಲಾಗುತ್ತದೆ ಮತ್ತು 26,000 ಎಂಟಿ ಗ್ಯಾಸ್ನ್ನು ನವ ಮಂಗಳೂರು ಬಂದರಿನ ಸಿಂಗಲ್ ಪಾಯಿಂಟ್ ಮೂರಿಂಗ್ ಸೌಲಭ್ಯದಲ್ಲಿ ಇಳಿಸಲಾಗುವುದು. ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ ಬುಕ್ ಮಾಡಿರುವ ಎಲ್ಪಿಜಿಯನ್ನು ಹಡಗು ಸಾಗಿಸುತ್ತಿದೆ ಎಂದು ಅಧಿಕೃತ ಮೂಲಗಳು ಪ್ರಕಟನೆಯಲ್ಲಿ ತಿಳಿಸಿವೆ.
ಉಪ್ಪಿನಂಗಡಿ: ರಸ್ತೆ ಅಪಘಾತ; 5 ವರ್ಷದ ಬಾಲಕಿ ಮೃತ್ಯು, ಇಬ್ಬರಿಗೆ ಗಾಯ
ಉಪ್ಪಿನಂಗಡಿ: ಕಲ್ಲೇರಿ ಎಂಬಲ್ಲಿ ದ್ವಿಚಕ್ರ ವಾಹನಕ್ಕೆ ಕಾರೊಂದು ಢಿಕ್ಕಿ ಹೊಡೆದ ಪರಿಣಾಮ 5 ವರ್ಷ ಪ್ರಾಯದ ಬಾಲಕಿ ಮೃತಪಟ್ಟು ಇತರ ಇಬ್ಬರು ಗಾಯಗೊಂಡ ಘಟನೆ ಸೋಮವಾರ ಸಂಭವಿಸಿದೆ. ತಣ್ಣಿರುಪಂತ ಗ್ರಾಮದ ಕೊಡಂಗೆ ಮನೆ ನಿವಾಸಿ ಇಸ್ಮಾಯಿಲ್ ಎಂಬವರು ತನ್ನ ಮಗಳು ಸಾಜಿರಾ ಮತ್ತು ಮೊಮ್ಮಗಳು ಸುಹೈರಾ ಳನ್ನು ಕುಳ್ಳಿರಿಸಿಕೊಂಡು ಕಲ್ಲೇರಿಯಿಂದ ಕುಪ್ಪೆಟ್ಟಿಗೆ ಹೋಗುತ್ತಿದ್ದಾಗ ಎದುರುಗಡೆಯಿಂದ ಬಂದ ವೇಣೂರು ಮೂಲದ ಶಿವಪ್ರಸಾದ್ ಎಂಬವರು ಚಲಾಯಿಸಿಕೊಂಡಿದ್ದ ಕಾರು ಢಿಕ್ಕಿ ಹೊಡೆಯಿತು ಎಂದು ತಿಳಿದುಬಂದಿದೆ. ಇದರಿಂದ ಗಂಭೀರವಾಗಿ ಗಾಯಗೊಂಡ ಸುಹೈರಾ ಮತ್ತಾಕೆಯ ತಾಯಿ ಸಾಜಿರಾ (33) , ದ್ವಿಚಕ್ರ ವಾಹನ ಸವಾರ ಬಾಲಕಿಯ ಅಜ್ಜ ಇಸ್ಮಾಯಿಲ್ (60) ಎಂಬವರು ಗಾಯಗೊಂಡು ಆಸ್ಪತ್ರೆಗೆ ದಾಖಲಿಸಲ್ಪಟ್ಟಿದ್ದರು. ಈ ಪೈಕಿ ಗಂಭೀರವಾಗಿ ಗಾಯಗೊಂಡ ಸುಹೈರಾ ಚಿಕಿತ್ಸೆಗೆ ಸ್ಪಂದಿಸದೆ ಸೋಮವಾರ ರಾತ್ರಿ ಸಾವನ್ನಪ್ಪಿದ್ದಾಳೆಂದು ಪೊಲೀಸ್ ಮೂಲಗಳು ತಿಳಿಸಿದೆ. ಪುತ್ತೂರು ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರೈಲ್ವೆ ಇಲಾಖೆಯಲ್ಲಿ ಕನ್ನಡಿಗರಿಗೆ ಅನ್ಯಾಯ: ಕೇಂದ್ರ ಸಚಿವರ ರಾಜೀನಾಮೆಗೆ ಟಿ.ಎ.ನಾರಾಯಣಗೌಡ ಆಗ್ರಹ
ಬೆಂಗಳೂರು : ‘ರೈಲ್ವೆ ಇಲಾಖೆಯಲ್ಲಿ ಕನ್ನಡಿಗರಿಗೆ ಆಗುತ್ತಿರುವ ಅನ್ಯಾಯಗಳ ಕುರಿತು ಸಂಪೂರ್ಣ ಮಾಹಿತಿ ಇದ್ದರೂ ಏನೂ ಮಾಡಲಾಗದ ಅಸಹಾಯಕತೆಗೆ ಸಿಲುಕಿರುವ ರಾಜ್ಯದಿಂದ ಆಯ್ಕೆಯಾದ ಕೇಂದ್ರ ಸಚಿವರು ಕೂಡಲೇ ರಾಜೀನಾಮೆ ನೀಡಿ ಹೊರಬರಬೇಕು’ ಎಂದು ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ಆಗ್ರಹಿಸಿದ್ದಾರೆ. ಸೋಮವಾರ ನಗರದ ಖಾಸಗಿ ಹೊಟೇಲ್ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕೇಂದ್ರ ರೈಲ್ವೆ ಇಲಾಖೆ ರಾಜ್ಯ ಸಚಿವ ವಿ.ಸೋಮಣ್ಣ, ಆಹಾರ ಸಚಿವ ಪ್ರಹ್ಲಾದ್ ಜೋಶಿ, ಕೈಗಾರಿಕಾ ಸಚಿವ ಎಚ್.ಡಿ.ಕುಮಾರಸ್ವಾಮಿಯವರು ದೊಡ್ಡ-ದೊಡ್ಡ ಹುದ್ದೆಗಳನ್ನು ನಿಭಾಯಿಸಿದ ಹಿರಿಯರು. ಸ್ವಾಭಿಮಾನಕ್ಕೆ ಧಕ್ಕೆಯಾದರೆ ಆ ಸ್ಥಾನದಲ್ಲಿ ಇರುವುದು ಒಳಿತಲ್ಲ. ನಿಮಗೆ ಅಧಿಕಾರ ಕೊಟ್ಟಿದ್ದು ಕನ್ನಡಿಗರು, ಅವರ ಋಣವನ್ನು ತೀರಿಸಿ ಎಂದು ಸಲಹೆ ನೀಡಿದರು. ಗಟ್ಟಿಯಾದ ತೀರ್ಮಾನ ತೆಗೆದುಕೊಂಡು ಸಾಮೂಹಿಕ ರಾಜೀನಾಮೆ ಕೊಟ್ಟು ಹೊರಬನ್ನಿ, ಆಗ ನಿಮ್ಮ ಮಾತುಗಳನ್ನು ಕೇಂದ್ರ ಸರಕಾರದ ಆಯಕಟ್ಟಿನ ಸ್ಥಳಗಳಲ್ಲಿ ಕುಳಿತುಕೊಂಡಿರುವ ಹಿಂದಿವಾಲಾಗಳು ಆಲಿಸುತ್ತಾರೆ. ಇಲ್ಲವಾದಲ್ಲಿ ನಿಮ್ಮ ಅಸಹಾಯಕತೆ ಮುಂದುವರಿಯುತ್ತದೆ. ಇದೇ ಅನ್ಯಾಯ ತಮಿಳುನಾಡಿನ ಜನರಿಗೆ ಆಗಿದ್ದರೆ ಅಲ್ಲಿನ ಸಂಸದರು ಸುಮ್ಮನೆ ಇರುತ್ತಿದ್ದರೇ ಎಂದು ಅವರು ಪ್ರಶ್ನಿಸಿದರು. ಮಾ.17ರಂದು ಬೆಂಗಳೂರು ಮತ್ತು ಹುಬ್ಬಳ್ಳಿಯಲ್ಲಿ ನಡೆಯಬೇಕಿರುವ ಪದೋನ್ನತಿ ಪರೀಕ್ಷೆಗಳನ್ನು ಯಾವುದೇ ಕಾರಣಕ್ಕೂ ನಡೆಯಲು ಬಿಡುವುದಿಲ್ಲ. ಬೆಂಗಳೂರಿನ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದ ಬಳಿ ರೈಲ್ವೆ ವಿಭಾಗೀಯ ಕಚೇರಿ ಮುಂದೆ ನಡೆಸಲು ಉದ್ದೇಶಿಸಿರುವ ಪ್ರತಿಭಟನೆ ನಿಗದಿಯಂತೆ ನಡೆಯುತ್ತದೆ. ಪ್ರತಿಭಟನೆ ನಡೆಸದಂತೆ ಕಾಟನ್ಪೇಟೆ ಪೊಲೀಸರು ನೀಡಿರುವ ನೋಟಿಸ್ಗೆ ನಾವು ಹೆದರುವುದಿಲ್ಲ ಎಂದು ತಿಳಿಸಿದರು. ಇನ್ನೂ ನೂರು ನೋಟೀಸ್ ಕೊಟ್ಟರೂ ನಮ್ಮ ಹೋರಾಟ ನಿಲ್ಲುವುದಿಲ್ಲ. ಕನ್ನಡದ ಮಕ್ಕಳ ಭವಿಷ್ಯ ಆತಂಕದಲ್ಲಿರುವಾಗ ನಾವು ಸುಮ್ಮನೆ ಕೂರುವುದಿಲ್ಲ. ನಮ್ಮನ್ನು ಜೈಲಿಗೆ ಕಳುಹಿಸಿದರೂ ಚಿಂತೆಯಿಲ್ಲ. ಈ ಬಾರಿ ಜೈಲಿನಲ್ಲೇ ಯುಗಾದಿ ಆಚರಿಸುತ್ತೇವೆ. ಸ್ವಾತಂತ್ರ್ಯ ಉದ್ಯಾನವನದಲ್ಲಿ ಪ್ರತಿಭಟನೆ ಮಾಡಿ ಎನ್ನುತ್ತಾರೆ. ಅಲ್ಲಿ ಪ್ರತಿಭಟನೆ ಮಾಡಿದರೆ, ಪೊಲೀಸರ ಮುಖವನ್ನು ನಾವು, ನಮ್ಮ ಮುಖವನ್ನು ಪೊಲೀಸರು ನೋಡಿಕೊಂಡು ಕುಳಿತಿರಬೇಕು. ದಪ್ಪ ಚರ್ಮದ ರೈಲ್ವೆ ಅಧಿಕಾರಿಗಳಿಗೆ ನಮ್ಮ ಕೂಗು ತಲುಪುತ್ತದೆಯೇ? ಎಲ್ಲಿ ಕಳೆದುಕೊಂಡಿದ್ದೇವೆಯೋ ಅಲ್ಲೇ ನಾವು ಹುಡುಕಬೇಕು. ಎಲ್ಲಿ ಅನ್ಯಾಯವಾಗಿದೆಯೋ ಅಲ್ಲೇ ಮಾತನಾಡಬೇಕು. ಹೀಗಾಗಿ ಅಲ್ಲೇ ಪ್ರತಿಭಟನೆ ನಡೆಸುತ್ತೇವೆ ಎಂದು ಹೇಳಿದರು. 2008ರಲ್ಲಿ 4000ಕ್ಕೂ ‘ಡಿ’ ದರ್ಜೆ ಹುದ್ದೆಗಳ ನೇಮಕಾತಿ ಸಂದರ್ಭದಲ್ಲಿ ಎಲ್ಲ ಹುದ್ದೆಗಳಿಗೆ ಬಿಹಾರಿಗಳನ್ನು ತುಂಬುವ ಹುನ್ನಾರ ನಡೆದಿತ್ತು. ಕರ್ನಾಟಕ ರಕ್ಷಣಾ ವೇದಿಕೆ ತೀವ್ರ ಸ್ವರೂಪದ ಪ್ರತಿಭಟನೆ ನಡೆಸಿ ಈ ಹುನ್ನಾರವನ್ನು ತಡೆದಿತ್ತು. ಕನ್ನಡದಲ್ಲೇ ಪರೀಕ್ಷೆ ಬರೆಯಲು ಅವಕಾಶ ದೊರೆತಿತ್ತು. ಆದರೆ ಮತ್ತೆ ಪರೀಕ್ಷೆಗಳಿಂದ ಕನ್ನಡವನ್ನು ಕೈಬಿಟ್ಟು ಹಿಂದಿ, ಇಂಗ್ಲಿಷ್ ನಲ್ಲಿ ನಡೆಸಲಾಗುತ್ತಿದೆ. ಹಿಂದಿವಾಲಾಗಳಿಗೆ, ಉತ್ತರ ಭಾರತೀಯರಿಗೆ ಅನುಕೂಲ ಮಾಡಿಕೊಡಲು ಯತ್ನಿಸಲಾಗುತ್ತಿದೆ. ಇದನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಎಂದು ಅವರು ಎಚ್ಚರಿಸಿದರು. ಮಾ.17ರಂದು ನಿಗದಿಯಾಗಿರುವ ಪರೀಕ್ಷೆಯ ಹುಬ್ಬಳ್ಳಿ ಮತ್ತು ಬೆಂಗಳೂರು ಪರೀಕ್ಷಾ ಕೇಂದ್ರಗಳ ಬಳಿ ಕರ್ನಾಟಕ ರಕ್ಷಣಾ ವೇದಿಕೆ ಸಾವಿರಾರು ಕಾರ್ಯಕರ್ತರು ಪ್ರತಿಭಟನೆ ನಡೆಸಲಿದ್ದಾರೆ. ನಂತರ ಆಗುವ ಎಲ್ಲ ಅನಾಹುತಗಳಿಗೆ ರೈಲ್ವೆ ಇಲಾಖೆಯೇ ಹೊಣೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟರೆ ಅದಕ್ಕೆ ನಮ್ಮನ್ನು ದೂರಬೇಡಿ ಎಂದು ಅವರು ಹೇಳಿದರು.
Rajya Sabha Elections- ಮೇಲ್ಮನೆಯಲ್ಲಿ ಬಿಜೆಪಿ ನೇತೃತ್ವದ ಎನ್ಡಿಎ ಸ್ಪಷ್ಟ ಮೇಲುಗೈ; ನಿತೀಶ್ ಸೇರಿ ಹಲವರ ಗೆಲುವು
NDA Vs INDI Alliance- ರಾಜ್ಯಸಭಾ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್ಡಿಎ ಮೈತ್ರಿಕೂಟ ದೊಡ್ಡ ಗೆಲುವು ಸಾಧಿಸಿದ್ದು, ಮೇಲ್ಮನೆಯಲ್ಲಿ ಅದರ ಬಲ 141ಕ್ಕೆ ಏರಿಕೆಯಾಗುವ ಸಾಧ್ಯತೆಯಿದೆ. ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಮೊದಲ ಬಾರಿಗೆ ರಾಜ್ಯಸಭೆಗೆ ಆಯ್ಕೆಯಾಗಿದ್ದು, ಶೀಘ್ರವೇ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ. ಬಿಹಾರ ಮತ್ತು ಒಡಿಶಾದಲ್ಲಿ ಕಾಂಗ್ರೆಸ್ ಶಾಸಕರ ಗೈರು ಹಾಗೂ ಅಡ್ಡ ಮತದಾನದಿಂದ ಎನ್ಡಿಎ ಅಭ್ಯರ್ಥಿಗಳು ಸುಲಭ ಜಯ ದಾಖಲಿಸಿದರು. ಒಟ್ಟು 37 ಸ್ಥಾನಗಳ ಪೈಕಿ 26 ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದಿದ್ದು, ವಿರೋಧ ಪಕ್ಷಗಳ ಬಲ ಕುಸಿದಿದೆ.
ಋತುಚಕ್ರದ ರಜೆ ಸಂಬಂಧ ಉದ್ಯೋಗದಾತರಿಗೆ ಶೋಕಾಸ್ ನೋಟಿಸ್ ನೀಡುವುದು ಸರಿಯಲ್ಲ: ಹೈಕೋರ್ಟ್
ಬೆಂಗಳೂರು : ರಾಜ್ಯದಲ್ಲಿ ವಿವಿಧ ಕಾರ್ಮಿಕ ಕಾಯ್ದೆಗಳಡಿ ನೋಂದಣಿಯಾಗಿರುವ ಉದ್ದಿಮೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಮಹಿಳಾ ನೌಕರರಿಗೆ ಅವರ ಋತುಚಕ್ರದ ಸಮಯದಲ್ಲಿ ಮಾಸಿಕ ಒಂದು ದಿನದ ವೇತನಸಹಿತ ರಜೆ ನೀಡುವ ಸಂಬಂಧ ಹೊರಡಿಸಿರುವ ಅಧಿಸೂಚನೆ ಭಾಗವಾಗಿ ಸರಕಾರವು ಉದ್ಯೋಗದಾತರಿಗೆ ಶೋಕಾಸ್ ನೋಟಿಸ್ ನೀಡುವುದು ಸರಿಯಲ್ಲ ಎಂದು ಹೈಕೋರ್ಟ್ ಹೇಳಿದೆ. ರಾಜ್ಯ ಕಾರ್ಮಿಕ ಇಲಾಖೆ 2025ರ ನವೆಂಬರ್ 20ರಂದು ಹೊರಡಿಸಿರುವ ಅಧಿಸೂಚನೆ ಪ್ರಶ್ನಿಸಿ ಕರ್ನಾಟಕ ಉದ್ಯೋಗದಾತರ ಸಂಘ, ಬೆಂಗಳೂರು ಹೋಟೆಲ್ಗಳ ಸಂಘ, ಅವಿರತ ಡಿಫೆನ್ಸ್ ಸಿಸ್ಟಮ್, ಫೆಸಿಲ್ ಏರೋಸ್ಪೇಸ್ ಟೆಕ್ನಾಲಜೀಸ್ ಲಿಮಿಟೆಡ್, ಸ್ಯಾಮೋಸ್ ಟೆಕ್ನಾಲಜೀಸ್ ಲಿಮಿಟೆಡ್ಗಳ ಆಡಳಿತ ಮಂಡಳಿಗಳು ಸಲ್ಲಿಸಿದ್ದ ಅರ್ಜಿಗಳನ್ನು ನ್ಯಾಯಮೂರ್ತಿ ಅನಂತ ರಾಮನಾಥ ಹೆಗಡೆ ಏಕಸದಸ್ಯ ನ್ಯಾಯಪೀಠ ಸೋಮವಾರ ವಿಚಾರಣೆ ನಡೆಸಿತು. ಅರ್ಜಿದಾರರ ಪರ ವಕೀಲರು, ಅಧಿಸೂಚನೆಯ ಮುಂದುವರಿದ ಭಾಗವಾಗಿ ಸರ್ಕಾರವು ಶೋಕಾಸ್ ನೋಟಿಸ್ ನೀಡುತ್ತಿದೆ. ಇದರಿಂದ, ಉದ್ಯೋಗದಾತ ಸಂಸ್ಥೆಗಳಿಗೆ ಸಮಸ್ಯೆಯಾಗುತ್ತಿದೆ ಎಂದು ನ್ಯಾಯಪೀಠಕ್ಕೆ ತಿಳಿಸಿದರು. ಅದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಪ್ರಕರಣ ನ್ಯಾಯಾಲಯದ ವಿಚಾರಣೆಯಲ್ಲಿದೆ. ಹೀಗಿರುವಾಗ, ಉದ್ಯೋಗದಾತರಿಗೆ ಶೋಕಾಸ್ ನೋಟಿಸ್ ನೀಡುತ್ತಿರುವುದೇಕೆ? ಶೋಕಾಸ್ ನೋಟಿಸ್ಗಳಿಗೆ ತಡೆ ನೀಡಬೇಕಾಗುತ್ತದೆ. ಅರ್ಜಿದಾರರ ವಿರುದ್ಧ ಯಾವುದೇ ಬಲವಂತದ ಕ್ರಮಕೈಗೊಳ್ಳಬಾರದು. ಒಂದೆಡೆ ಅರ್ಜಿ ಕುರಿತು ವಾದ ಮಂಡಿಸದೆ ಸರಕಾರ ವಿಚಾರಣೆ ಮುಂದೂಡಿಕೆ ಕೋರುತ್ತದೆ. ಮತ್ತೊಂದೆಡೆ ಶೋಕಾಸ್ ನೋಟಿಸ್ ಜಾರಿಗೊಳಿಸುತ್ತಿದೆ. ಇದು ಸರಿಯಾದ ಕ್ರಮವಲ್ಲ ಎಂದು ಹೇಳಿತು. ಬೆಂಗಳೂರು ಮಹಿಳಾ ವಕೀಲರ ಪರವಾಗಿ ಹಾಜರಾಗಿದ್ದ ಹಿರಿಯ ವಕೀಲ ಪ್ರೊ. ರವಿವರ್ಮ ಕುಮಾರ್ ಅವರು, ಸರಕಾರದ ಅಧಿಸೂಚನೆಯಲ್ಲಿ ಉದ್ಯೋಗದಾತರಿಗೆ ಸಮಸ್ಯೆಯಾಗುವಂಥ ಯಾವುದೇ ಅಂಶಗಳಿಲ್ಲ. ನಮಗೆ ಇರುವ ಮಾಹಿತಿಯ ಪ್ರಕಾರ ಯಾವುದೇ ಉದ್ಯೋಗದಾತರಿಗೆ ಶೋಕಾಸ್ ನೋಟಿಸ್ ಜಾರಿಯಾಗಿಲ್ಲ. ಒಂದೊಮ್ಮೆ ಅಂಥ ಯಾವುದೇ ದಾಖಲೆ ಇದ್ದರೆ ಅರ್ಜಿದಾರರು ನ್ಯಾಯಾಲಯದ ಮುಂದೆ ಇಡಬಹುದು. ಆನಂತರ, ನ್ಯಾಯಾಲಯ ನಿರ್ಧರಿಸಬಹುದು ಎಂದರು. ಇದಕ್ಕೂ ಮುನ್ನ, ಅರ್ಜಿದಾರರ ಪರ ವಕೀಲ ಬಿ.ಕೆ. ಪ್ರಶಾಂತ್ ವಾದ ಮಂಡಿಸಿ, ಋತುಚಕ್ರ ರಜೆಗೆ ಸಂಬಂಧಿಸಿದಂತೆ ಸರಕಾರ ಹೊರಡಿಸಿರುವ ಅಧಿಸೂಚನೆಯು ಹೋಟೆಲ್ ಉದ್ಯಮದಾತರನ್ನು ನಿರ್ಬಂಧಿಸುವಂತಿದೆ. ಇದರಿಂದ, ಗಂಭೀರವಾದ ಆರ್ಥಿಕ ಸಮಸ್ಯೆಗಳು ಎದುರಾಗುತ್ತಿರುವುದಲ್ಲದೆ, ಸರಕಾರದ ಆದೇಶದಿಂದ ನಾಗರಿಕ ಪರಿಣಾಮಗಳೂ ಉಂಟಾಗಿವೆ ಎಂದರು. ಮಹಿಳೆಯರಿಗೆ ರಕ್ಷಣೆ ನೀಡುವುದಕ್ಕೆ ಆಕ್ಷೇಪವಿಲ್ಲ. ಆದರೆ, ಉದ್ಯಮದ ಹಿತಾಸಕ್ತಿಯನ್ನು ಸರಕಾರ ಗಮನದಲ್ಲಿಟ್ಟುಕೊಳ್ಳದೇ ಅಧಿಸೂಚನೆ ಜಾರಿಗೊಳಿಸಲು ಮುಂದಾಗಿದೆ. ಕೆಲಸಗಾರರು ಮತ್ತು ಉದ್ಯೋಗದಾತರ ನಡುವೆ ಸಮಾನತೆ ಕಾಪಾಡುವಲ್ಲಿ ಸರಕಾರ ವಿಫಲವಾಗಿದೆ. ಪ್ರಾಥಮಿಕ ಅಧಿಸೂಚನೆ ಹೊರಡಿಸದೇ, ಮಾಧ್ಯಮ ಹೇಳಿಕೆ ಬಿಡುಗಡೆ ಮಾಡದೇ ನೇರವಾಗಿ ಅಧಿಸೂಚನೆ ಹೊರಡಿಸುವ ಮೂಲಕ ಉದ್ಯೋಗದಾತರ ವಿರುದ್ಧ ನಡೆದುಕೊಳ್ಳಲಾಗಿದೆ. ಹಲವು ರೀತಿಯಲ್ಲಿ ಋತುಚಕ್ರದ ರಜೆ ನೀತಿಯು ಹೋಟೆಲ್ ಉದ್ಯಮದಾರರ ಹಿತಾಸಕ್ತಿಗೆ ವಿರುದ್ಧವಾಗಿದೆ ಎಂದು ಆಕ್ಷೇಪಿಸಿದರು. ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ, ವಿಚಾರಣೆಯನ್ನು ಮಾರ್ಚ್ 24ಕ್ಕೆ ಮುಂದೂಡಿತು.
ವಕ್ಫ್ ಆಸ್ತಿ ಒತ್ತುವರಿಯಲ್ಲಿ ಮುಸ್ಲಿಮರೇ ಹೆಚ್ಚು : ಝಮೀರ್ ಅಹ್ಮದ್ ಖಾನ್
ಬೆಂಗಳೂರು : ರಾಜ್ಯದಾದ್ಯಂತ ಒತ್ತುವರಿಯಾಗಿರುವ 17,965 ಎಕರೆ ಜಮೀನನ್ನು ಯಾವುದೇ ದೇವಸ್ಥಾನ ಮಂಡಳಿ, ಶಾಲೆಗಳು ಒತ್ತುವರಿ ಮಾಡಿಕೊಂಡಿಲ್ಲ. ಬದಲಿಗೆ ಒತ್ತುವರಿ ಮಾಡಿಕೊಂಡಿರುವವರೆಲ್ಲರೂ ಹೆಚ್ಚಾಗಿ ಮುಸ್ಲಿಮ್ ಸಮುದಾಯದವರೇ ಎಂದು ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಝಮೀರ್ ಅಹ್ಮದ್ ಖಾನ್ ಹೇಳಿದ್ದಾರೆ. ಸೋಮವಾರ ವಿಧಾನಸಭೆಯ ಪ್ರಶ್ನೋತ್ತರ ವೇಳೆ ಸದಸ್ಯ ಪಾಟೀಲ್ ಎಂ.ವೈ ಪ್ರಸ್ತಾಪಿಸಿ, ತಮ್ಮ ಕ್ಷೇತ್ರದಲ್ಲಿ ವಕ್ಫ್ ಆಸ್ತಿಗಳು ವಕ್ಫ್ ಮಂಡಳಿ ಅಥವಾ ಸರಕಾರದ ನಿಯಂತ್ರಣದಲ್ಲಿ ಇಲ್ಲದ ಕಾರಣ ವಕ್ಫ್ ಆಸ್ತಿಗಳನ್ನು ಖಾಸಗಿಯವರು ಅತಿಕ್ರಮಣ ಮಾಡುತ್ತಿದ್ದಾರೆ ಎಂದರು. ಇದಕ್ಕೆ ಉತ್ತರಿಸಿದ ಸಚಿವರು, ವಿವಿಧ ಜಿಲ್ಲೆಗಳಿಗೆ ಹೋಲಿಕೆ ಮಾಡಿದರೆ ಇವರ ಕ್ಷೇತ್ರದಲ್ಲಿ ವಕ್ಫ್ ಆಸ್ತಿ ಒತ್ತುವರಿ ಪ್ರಕರಣ ಕಡಿಮೆ ಇದೆ. ಇವರ ಕ್ಷೇತ್ರದಲ್ಲಿ ಒತ್ತುವರಿಯಾಗಿರುವ 30 ಆಸ್ತಿಗಳನ್ನು ಕೂಡ ಮುಸ್ಲಿಮ್ ಅವರೇ ಒತ್ತುವರಿ ಮಾಡಿಕೊಂಡಿದ್ದಾರೆ. ಇದರಲ್ಲಿ 23 ಪ್ರಕರಣಗಳನ್ನು ಬಗೆಹರಿಸಲಾಗಿದ್ದು, ಇನ್ನು 7 ಪ್ರಕರಣಗಳು ನ್ಯಾಯಾಲಯದಲ್ಲಿದ್ದು, ಸಾಧ್ಯವಾದಷ್ಟು ಬೇಗ ಎಲ್ಲ ಪ್ರಕರಣಗಳನ್ನು ನಮ್ಮ ಪರವಾಗಿ ಮಾಡಿಕೊಳ್ಳಲಾಗುವುದು ಎಂದು ಉಲ್ಲೇಖಿಸಿದರು. ರಾಜ್ಯಾದಾದ್ಯಂತ 1,12,860 ಎಕರೆಯಷ್ಟು ವಕ್ಫ್ ಆಸ್ತಿಗಳಿವೆ. ಇದನ್ನು ಸರಕಾರ ನೀಡಿರುವುದಲ್ಲ. ಖಾಸಗಿ ಜನರು ಸಮುದಾಯಕ್ಕೆ ಒಳ್ಳೆಯದಾಗಲಿ ಎಂದು ದಾನ ಮಾಡಿರುವುದು. ಸದ್ಯ ಅದರಲ್ಲಿ 20,054 ಎಕರೆ ಮಾತ್ರ ನಮ್ಮ ಬಳಿ ಇದ್ದು, ಉಳಿದ ಜಮೀನುಗಳು ಒತ್ತುವರಿಯಾಗಿದೆ. ಆದ್ದರಿಂದಲೇ ನಮ್ಮ ಸರಕಾರ ಬಂದ ಮೇಲೆ ವಕ್ಫ್ ಆಸ್ತಿಗಳ ತೆರವು ಮಾಡುವ ಸಲುವಾಗಿ ವಕ್ಫ್ ಅದಾಲತ್ ಅನ್ನು ಜಾರಿಗೆ ಮಾಡಿತು. ಆದರೆ, ಇದಕ್ಕೆ ವಿರೋಧ ಪಕ್ಷ ಟೀಕೆ ಮಾಡಿತ್ತು ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ವಿರೋಧಪಕ್ಷದ ನಾಯಕ ಆರ್.ಅಶೋಕ್ ಅವರು, ಈ ವಕ್ಫ್ ಜಮೀನನ್ನು ಒತ್ತುವರಿ ಮಾಡಿಕೊಂಡು ಬಹಳಷ್ಟು ವರ್ಷಗಳಿಂದ ರೈತರು ವ್ಯವಸಾಯ ಮಾಡುತ್ತಿದ್ದಾರೆ. ಹೀಗಾಗಿ, ರೈತ ಯಾವುದೇ ಸಮುದಾಯದರಾವಗಲಿ ಆತನಿಗೇ ಜಮೀನನ್ನು ನೀಡಿ. ಪಾಪ ಬಡ ರೈತನಿಗಾದರೂ ಅನುಕೂಲವಾಗಲಿದೆ ಎಂದರು. ನಾವು ವಕ್ಫ್ ಆಸ್ತಿ ವಿಚಾರವಾಗಿ ನಾವು ಯಾವುದೇ ದೇವಸ್ಥಾನ ಅಥವಾ ಶಾಲೆಗಳಿಗೆ ತೊಂದರೆ ನೀಡುತ್ತಿಲ್ಲ. ಅದು ಖಾಸಗೀ ವ್ಯಕ್ತಿಯಿಂದ ಒತ್ತುವರಿಯಾಗಿದ್ದರೆ ಮಾತ್ರವೇ ಪರಿಶೀಲಿಸಲಾಗುತ್ತಿದೆ ಎಂದು ಸಚಿವರು ತಿಳಿಸಿದರು.
ಇರಾನ್ ನಿಂದ 550ಕ್ಕೂ ಅಧಿಕ ಭಾರತೀಯ ಪ್ರಜೆಗಳನ್ನು ಅರ್ಮೇನಿಯಾ ಮೂಲಕ ಸ್ಥಳಾಂತರ
ಹೊಸದಿಲ್ಲಿ, ಮಾ. 16: ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಸಂಘರ್ಷದ ನಡುವೆ ಭಾರತ ತನ್ನ ಪ್ರಜೆಗಳಿಗೆ ನೆರವು ನೀಡುವ ಪ್ರಯತ್ನವನ್ನು ತೀವ್ರಗೊಳಿಸಿರುವುದರಿಂದ ಇರಾನ್ ನಿಂದ 550ಕ್ಕೂ ಅಧಿಕ ಭಾರತೀಯ ಪ್ರಜೆಗಳನ್ನು ಅರ್ಮೇನಿಯಾ ಮೂಲಕ ಸ್ಥಳಾಂತರಿಸಲಾಗಿದೆ. ಭೂ ಗಡಿಯ ಮೂಲಕ ಹಾದು ಹೋಗಲು ನೆರವು ನೀಡಿದ ಅರ್ಮೇನಿಯಾದ ಸರ್ಕಾರ ಹಾಗೂ ಅಲ್ಲಿನ ಜನರಿಗೆ ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಸೋಮವಾರ ಕೃತಜ್ಞತೆ ಸಲ್ಲಿಸಿದ್ದಾರೆ. ‘‘ಇದುವರೆಗೆ ಇರಾನ್ನಿಂದ 550ಕ್ಕೂ ಅಧಿಕ ಭಾರತೀಯ ಪ್ರಜೆಗಳನ್ನು ಸುರಕ್ಷಿತವಾಗಿ ಸ್ಥಳಾಂತರಿಸಲು ಅನುಕೂಲ ಮಾಡಿಕೊಟ್ಟಿರುವುದಕ್ಕೆ ಅರ್ಮೇನಿಯಾ ಸರ್ಕಾರ ಹಾಗೂ ಅಲ್ಲಿನ ಜನರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಈ ಸವಾಲಿನ ಸಂದರ್ಭದಲ್ಲಿ ಅವರ ಬೆಂಬಲವನ್ನು ಪ್ರಶಂಸಿಸುತ್ತೇನೆ’’ ಎಂದು ಜೈಶಂಕರ್ ಸಾಮಾಜಿಕ ಮಾಧ್ಯಮದ ಪೋಸ್ಟ್ ನಲ್ಲಿ ಹೇಳಿದ್ದಾರೆ. ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಅವರ ಪ್ರಕಾರ, ಟೆಹ್ರಾನ್ ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಸ್ಥಳಾಂತರಿಸುವ ಕಾರ್ಯವನ್ನು ಸಂಘಟಿಸಿದೆ. ಅದು ಭೂಗಡಿಗಳಲ್ಲಿ ವೀಸಾ ಹಾಗೂ ವಲಸೆ ವಿಧಿವಿಧಾನಗಳನ್ನು ಪೂರೈಸಲು ಭಾರತೀಯ ಪ್ರಜೆಗಳಿಗೆ ನೆರವು ನೀಡಿದೆ. ಅರ್ಮೇನಿಯಾಕ್ಕೆ ಪ್ರವೇಶಿಸಿದವರಲ್ಲದೆ, ಸುಮಾರು 90 ಭಾರತೀಯ ಪ್ರಜೆಗಳು ಕೂಡ ರಾಯಭಾರಿ ಕಚೇರಿಯ ನೆರವಿನಿಂದ ಇರಾನ್ನಿಂದ ಅಝರ್ ಬೈಜಾನ್ ಪ್ರವೇಶಿಸಿದ್ದಾರೆ. ಅರ್ಮೇನಿಯಾಗೆ ದಾಟಿದ 550 ಸ್ಥಳಾಂತರಿತರಲ್ಲಿ 284 ಮಂದಿ ಧಾರ್ಮಿಕ ಉದ್ದೇಶಕ್ಕಾಗಿ ಇರಾನ್ಗೆ ಪ್ರಯಾಣಿಸಿದ್ದ ಯಾತ್ರಿಕರು ಎಂದು ಜೈಸ್ವಾಲ್ ತಿಳಿಸಿದ್ದಾರೆ. ಅವರಲ್ಲಿ ಕೆಲವರು ಈಗಾಗಲೇ ಭಾರತಕ್ಕೆ ಮರಳಿದ್ದಾರೆ. ಇನ್ನು ಕೆಲವರು ಮುಂದಿನ ದಿನಗಳಲ್ಲಿ ವಾಪಾಸ್ ಬರುವ ನಿರೀಕ್ಷೆ ಇದೆ ಎಂದು ಅವರು ಹೇಳಿದ್ದಾರೆ. ಕಠಿಣ ಪರಿಸ್ಥಿತಿಯ ನಡುವೆಯೂ ಟೆಹ್ರಾನ್ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಕಾರ್ಯನಿರ್ವಹಿಸುತ್ತಿದೆ ಹಾಗೂ ರಾಜಧಾನಿಯ ಹೊರಗಿನ ಪ್ರದೇಶಗಳಲ್ಲಿರುವ ಭಾರತೀಯ ವಿದ್ಯಾರ್ಥಿಗಳನ್ನು ಇರಾನ್ ನ ಸುರಕ್ಷಿತ ನಗರಗಳಿಗೆ ಸ್ಥಳಾಂತರಿಸಲು ನೆರವು ನೀಡುತ್ತಿದೆ ಎಂದು ರಣಧೀರ್ ಜೈಸ್ವಾಲ್ ತಿಳಿಸಿದ್ದಾರೆ.
ಗುಜರಾತ್ ಬಂದರಿಗೆ ಆಗಮಿಸಿದ ಶಿವಾಲಿಕ್ LPG ಟ್ಯಾಂಕರ್
ಹೊಸದಿಲ್ಲಿ, ಮಾ.16: ಸಂಘರ್ಷ ಪೀಡಿತ ಹಾರ್ಮುಝ್ ಜಲಸಂಧಿಯನ್ನು ಸುರಕ್ಷಿತವಾಗಿ ದಾಟಿದ ಶಿವಾಲಿಕ್ LPG ಟ್ಯಾಂಕರ್ ಸೋಮವಾರ ಗುಜರಾತಿನ ಮುಂದ್ರಾ ಬಂದರಿಗೆ ಆಗಮಿಸಿದೆ. ಇನ್ನೊಂದು ಟ್ಯಾಂಕರ್ ಮಂಗಳವಾರ ಕಾಂಡ್ಲಾ ಬಂದರು ತಲುಪುವ ನಿರೀಕ್ಷೆಯಿದೆ. LPG ಸಾಗಾಟದ ಭಾರತೀಯ ಧ್ವಜಗಳನ್ನು ಹೊತ್ತ ಶಿವಾಲಿಕ್ ಮತ್ತು ನಂದಾದೇವಿ ಟ್ಯಾಂಕರ್ಗಳು ಹಾರ್ಮುಝ್ ಜಲಸಂಧಿಯ ಮೂಲಕ ಸಾಗಲು ಇರಾನ್ ಅಧಿಕಾರಿಗಳು ಅನುಮತಿ ನೀಡಿದ್ದರು. ಶಿವಾಲಿಕ್ ಮತ್ತು ನಂದಾದೇವಿ ಹಡಗುಗಳು ಅನುಕ್ರಮವಾಗಿ ಮಾ.16 ಮತ್ತು ಮಾ.17ರಂದು ಭಾರತಕ್ಕೆ ಆಗಮಿಸುವ ನಿರೀಕ್ಷೆಯಿದೆ ಎಂದು ನೌಕಾ ಸಚಿವಾಲಯದ ವಿಶೇಷ ಕಾರ್ಯದರ್ಶಿ ರಾಜೇಶ್ ಕುಮಾರ್ ಸಿನ್ಹಾ ಅವರು ಶನಿವಾರ ತಿಳಿಸಿದ್ದರು. ಪರ್ಷಿಯನ್ ಕೊಲ್ಲಿ ಪ್ರದೇಶದಲ್ಲಿರುವ ಎಲ್ಲ ಭಾರತೀಯ ನಾವಿಕರು ಸುರಕ್ಷಿತವಾಗಿದ್ದಾರೆ. ಹಾರ್ಮುಝ್ ಜಲಸಂಧಿಯ ಪಶ್ಚಿಮದ ಪರ್ಷಿಯನ್ ಕೊಲ್ಲಿಯಲ್ಲಿ ಭಾರತದ ಧ್ವಜವನ್ನು ಹೊತ್ತ 24 ಹಡಗುಗಳಿದ್ದವು. ಈ ಪೈಕಿ ಒಟ್ಟು 92,700 ಮೆ.ಟನ್ LPG ಹೊತ್ತಿರುವ ಶಿವಾಲಿಕ್ ಮತ್ತು ನಂದಾದೇವಿ ಹಾರ್ಮುಝ್ ಜಲಸಂಧಿಯನ್ನು ಸುರಕ್ಷಿತವಾಗಿ ದಾಟಿದ್ದು, ಭಾರತದತ್ತ ಪ್ರಯಾಣಿಸುತ್ತಿವೆ ಎಂದೂ ಅವರು ಮಾಹಿತಿ ನೀಡಿದ್ದರು.
ಉಡುಪಿ| ‘ಸಮಾಧಾನ ಮಹೋತ್ಸವ’ಕ್ಕೆ ಅವಕಾಶ ನೀಡುವುದಿಲ್ಲ: ಹಿಂದೂ ಜಾಗರಣ ವೇದಿಕೆ ಎಚ್ಚರಿಕೆ
ಉಡುಪಿ, ಮಾ.16: ತಮಿಳುನಾಡಿನ ವಿವಾದಾತ್ಮಕ ಮಿಷನರಿ ಮೋಹನ್ ಸಿ.ಲಾಝರಸ್ ನೇತೃತ್ವದಲ್ಲಿ ಮಾ.20ರಿಂದ 22ರವರೆಗೆ ಉಡುಪಿಯ ಮಿಷನ್ ಕಾಂಪೌಂಡಿನಲ್ಲಿ ಆಯೋಜಿಸಿರುವ ‘ಸಮಾಧಾನ ಮಹೋತ್ಸವ’ ಕಾರ್ಯಕ್ರಮವನ್ನು ನಡೆಸಲು ಅವಕಾಶ ನೀಡುವುದಿಲ್ಲ ಎಂದು ಹಿಂದೂ ಜಾಗರಣ ವೇದಿಕೆಯ ದಕ್ಷಿಣ ಪ್ರಾಂತ ಪ್ರಮುಖ ಶ್ರೀಕಾಂತ್ ಶೆಟ್ಟಿ ಹೇಳಿದ್ದಾರೆ. ಉಡುಪಿಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಕಾರ್ಯಕ್ರಮ ಸಮಾಧಾನದ ಹೆಸರಿನಲ್ಲಿ ನಡೆಯುತ್ತಿರುವ ಮತಾಂತರದ ಷಡ್ಯಂತ್ರವಾಗಿದ್ದು, ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಇದಕ್ಕೆ ಕೂಡಲೇ ತಡೆ ನೀಡಬೇಕೆಂದು ವೇದಿಕೆ ಒತ್ತಾಯಿಸುತ್ತದೆ ಎಂದರು. ತಮಿಳುನಾಡಿನಲ್ಲಿ ಲಾಝರಸ್ ಅವರ ವಿರುದ್ಧ ಸಾಕಷ್ಟು ಕ್ರಿಮಿನಲ್ ಕೇಸುಗಳಿದ್ದು, ಹಲವು ಗಂಭೀರ ಆರೋಪಗಳೂ ಇವೆ ಎಂದ ಶ್ರೀಕಾಂತ್ ಶೆಟ್ಟಿ, ಅವರ ಹಿಂದು ವಿರೋಧಿ ಭಾಷಣ, ದ್ವೇಷಪೂರಿತ ಭಾಷಣ, ಹಿಂದುಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿರುವ ಕುರಿತಂತೆ ತಮಿಳುನಾಡಿನ ವಿವಿಧ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿವೆ ಎಂದರು. ಉಡುಪಿಯಂಥ ಶಾಂತ ನಗರದಲ್ಲಿ ಧಾರ್ಮಿಕ ಅಶಾಂತಿ ಮೂಡಿಸುವ ವಿವಾದಾತ್ಮಕ ವ್ಯಕ್ತಿಗಳ ಪ್ರವೇಶಕ್ಕೆ ಅವಕಾಶ ನೀಡಬಾರದು ಎಂದು ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆಗೆ ಮನವಿ ಮಾಡಿದ ಅವರು, ಒಂದು ವೇಳೆ ಅನುಮತಿ ನೀಡಿದ್ದಲ್ಲಿ, ವೇದಿಕೆಯು ಜಿಲ್ಲೆಯಾದ್ಯಂತ ತೀವ್ರ ಸ್ವರೂಪದ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು. ಪತ್ರಿಕಾಗೋಷ್ಠಿಯಲ್ಲಿ ಹಿಂಜಾವೇಯ ಜಿಲ್ಲಾ ಸಂಯೋಜಕ ರಾಜೇಶ್ ಉಚ್ಚಿಲ, ಜಿಲ್ಲಾ ಪ್ರಮುಖರಾದ ರತ್ನಾಕರ ಅಮೀನ್, ಗುರುಪ್ರಸಾದ್ ನಾರಾವಿ, ವಿಜಯಕೊಡವೂರು ಉಪಸ್ಥಿತರಿದ್ದರು.
‘ನೀವು ಯಾವ ಕಡೆ ಇದ್ದೀರಿ?’: ಮುಸ್ಲಿಂ ರಾಷ್ಟ್ರಗಳಿಗೆ ಲಾರಿಜಾನಿ ಪ್ರಶ್ನೆ
ಟೆಹ್ರಾನ್, ಮಾ.16: ಅಮೆರಿಕ ಮತ್ತು ಇಸ್ರೇಲ್ ವಿರುದ್ಧದ ಹೋರಾಟದಲ್ಲಿ ಇರಾನ್ ಸ್ಥಿರವಾಗಿದೆ ಎಂದು ಇರಾನ್ ನ ಭದ್ರತಾ ಮುಖ್ಯಸ್ಥ ಅಲಿ ಲಾರಿಜಾನಿ ತಿಳಿಸಿದ್ದಾರೆ. ಇರಾನ್ ಮೇಲೆ ದಾಳಿ ನಡೆದ ಸಂದರ್ಭಗಳಲ್ಲಿ ಮುಸ್ಲಿಂ ಬಹುಸಂಖ್ಯಾತ ರಾಷ್ಟ್ರಗಳಿಂದ ನಿರೀಕ್ಷಿತ ಮಟ್ಟದ ಬೆಂಬಲ ದೊರಕಿಲ್ಲವೆಂದು ಅವರು ನಿರಾಶೆ ವ್ಯಕ್ತಪಡಿಸಿದರು. “ಕೆಲವು ರಾಷ್ಟ್ರಗಳು ಇನ್ನೂ ಮುಂದೆ ಹೋಗಿ, ತಮ್ಮ ಪ್ರದೇಶದೊಳಗಿನ ಅಮೆರಿಕದ ಸೈನಿಕ ನೆಲೆಗಳು ಹಾಗೂ ಅಮೆರಿಕ ಮತ್ತು ಇಸ್ರೇಲ್ ಹಿತಾಸಕ್ತಿಗಳನ್ನು ಗುರಿಯಾಗಿಸಿಕೊಂಡಿರುವುದರಿಂದ ಇರಾನ್ ಅನ್ನು ತಮ್ಮ ಎದುರಾಳಿಯಾಗಿ ಘೋಷಿಸಿವೆ” ಎಂದು ಹೇಳಿದರು. ಇರಾನ್ ಮಧ್ಯಪ್ರಾಚ್ಯದಲ್ಲಿ ಅಮೆರಿಕದ ಹಿತಾಸಕ್ತಿಗಳನ್ನು ಮಾತ್ರ ಗುರಿಯಾಗಿಸಿಕೊಂಡಿದೆ ಎಂದು ಹೇಳುತ್ತಿದ್ದರೂ, ಅದರ ಡ್ರೋನ್ ಹಾಗೂ ಕ್ಷಿಪಣಿ ದಾಳಿಗಳು ಗಲ್ಫ್ ಪ್ರದೇಶದ ಹೋಟೆಲ್ಗಳು ಮತ್ತು ಇಂಧನ ಸೌಲಭ್ಯಗಳು ಸೇರಿದಂತೆ ನಾಗರಿಕ ತಾಣಗಳಿಗೂ ತಾಕಿರುವುದಾಗಿ ವರದಿಯಾಗಿದೆ. ನೆರೆಯ ರಾಷ್ಟ್ರಗಳಲ್ಲಿ ಅಮೆರಿಕದ ಸೈನಿಕ ನೆಲೆಗಳು ಇರುವ ಸಂದರ್ಭದಲ್ಲಿ ಇರಾನ್ “ತನ್ನ ಕೈಗಳನ್ನು ಕಟ್ಟಿ ಸುಮ್ಮನಿರುತ್ತದೆ ಎಂದು ನಿರೀಕ್ಷಿಸಲಾಗುವುದಿಲ್ಲ” ಎಂದು ಲಾರಿಜಾನಿ ಹೇಳಿದರು. “ಇಂದಿನ ದಾಳಿಯು ವಾಸ್ತವದಲ್ಲಿ ಒಂದು ಕಡೆ ಅಮೆರಿಕ ಮತ್ತು ಇಸ್ರೇಲ್, ಮತ್ತೊಂದು ಕಡೆ ಮುಸ್ಲಿಂ ರಾಷ್ಟ್ರ ಇರಾನ್ ಮತ್ತು ಪ್ರತಿರೋಧ ಶಕ್ತಿಗಳ ನಡುವೆ ಇದೆ. ಹಾಗಾದರೆ ನೀವು ಯಾವ ಕಡೆ ಇದ್ದೀರಿ?” ಎಂದು ಅವರು ಮುಸ್ಲಿಂ ರಾಷ್ಟ್ರಗಳನ್ನು ಪ್ರಶ್ನಿಸಿದರು. ಮುಸ್ಲಿಂ ರಾಷ್ಟ್ರಗಳ ಏಕತೆಗೆ ಕರೆ ನೀಡಿದ ಲಾರಿಜಾನಿ, ಇರಾನ್ ಈ ಪ್ರದೇಶದ ಮೇಲೆ ಪ್ರಾಬಲ್ಯ ಸಾಧಿಸಲು ಬಯಸುವುದಿಲ್ಲ ಎಂದು ಸ್ಪಷ್ಟಪಡಿಸಿದರು. “ಅಮೆರಿಕಕ್ಕೆ ಯಾವುದೇ ನಿಷ್ಠೆ ಇಲ್ಲ ಮತ್ತು ಇಸ್ರೇಲ್ ವಾಸ್ತವವಾಗಿ ನಿಮ್ಮ ಶತ್ರು ಎಂಬುದು ನಿಮಗೆ ತಿಳಿದಿದೆ” ಎಂದು ಅವರು ಹೇಳಿದರು.
ಮೋದಿ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ಆರೋಪ; ಮಣಿಶಂಕರ್ ಅಯ್ಯರ್ ವಿರುದ್ಧ ಜೈಪುರದಲ್ಲಿ ಮೊಕದ್ದಮೆ
ಜೈಪುರ, ಮಾ. 16: ಪ್ರಧಾನಿ ನರೇಂದ್ರ ಮೋದಿ ಬಗ್ಗೆ ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡಿದ್ದಾರೆ ಎಂಬ ಆರೋಪದಲ್ಲಿ ಹಿರಿಯ ಕಾಂಗ್ರೆಸ್ ನಾಯಕ ಹಾಗೂ ಮಾಜಿ ಕೇಂದ್ರ ಸಚಿವ ಮಣಿಶಂಕರ್ ಅಯ್ಯರ್ ವಿರುದ್ಧ ಜೈಪುರದಲ್ಲಿ ಮೊಕದ್ದಮೆಯೊಂದು ದಾಖಲಾಗಿದೆ. ಅಯ್ಯರ್ ಶನಿವಾರ ಜೈಪುರದ ಕಾಲೇಜೊಂದರಲ್ಲಿ ‘ಭಾರತದ ಭವಿಷ್ಯ: ನಕಲಿ-ಹಿಂದುತ್ವ ಅಥವಾ ಜಾತ್ಯತೀತ ಭಾರತ?’ ಎಂಬ ವಿಷಯದ ಕುರಿತು ಸಾರ್ವಜನಿಕ ಉಪನ್ಯಾಸ ನೀಡಿದ್ದರು. ಭಾಷಣದ ವೇಳೆ, ತಾನು 2017ರಲ್ಲಿ ಮೋದಿ ಬಗ್ಗೆ ನೀಡಿದ್ದ ವಿವಾದಾತ್ಮಕ ಹೇಳಿಕೆಗೆ ಸ್ಪಷ್ಟೀಕರಣ ನೀಡಲು ಪ್ರಯತ್ನಿಸಿದರು. ತನ್ನ ಆ ಹೇಳಿಕೆ ಮೋದಿಯ ಗುಣದ ಬಗ್ಗೆ ಆಗಿತ್ತೇ ಹೊರತು, ಅವರ ಜಾತಿ ಬಗ್ಗೆ ಆಗಿರಲಿಲ್ಲ ಎಂದು ಹೇಳಿದ ಅವರು, ಹೇಳಿಕೆಯನ್ನು ತಿರುಚಲಾಗಿತ್ತು ಎಂದರು. ಈ ವೀಡಿಯೊ ಆನ್ಲೈನ್ನಲ್ಲಿ ಪ್ರಸಾರಗೊಂಡ ಬಳಿಕ, ಹಳೆಯ ವಿವಾದ ಮತ್ತೆ ಮುನ್ನೆಲೆಗೆ ಬಂದಿದೆ. ಅದನ್ನು ವಿರೋಧಿಸಿ ಬಿಜೆಪಿ ಕಾರ್ಯಕರ್ತರು ಗಾಂಧಿ ವೃತ್ತದಲ್ಲಿ ಪ್ರತಿಭಟನೆ ನಡೆಸಿ, ಅಯ್ಯರ್ ವಿರುದ್ಧ ಘೋಷಣೆಗಳನ್ನು ಕೂಗಿದರು. ಪ್ರಧಾನಿ ವಿರುದ್ಧ ಅವಹೇಳನಕಾರಿ ಭಾಷೆ ಬಳಸುವುದು ರಾಷ್ಟ್ರದ ಘನತೆಗೆ ಮಾಡುವ ಅವಮಾನ ಎಂದು ಬಿಜೆಪಿ ನಾಯಕರು ಹೇಳಿ, ಸಾರ್ವಜನಿಕ ಕ್ಷಮಾಪಣೆ ನೀಡುವಂತೆ ಅಯ್ಯರ್ ಅವರನ್ನು ಒತ್ತಾಯಿಸಿದರು. ಈ ನಡುವೆ, ಬಾಬುಲಾಲ್ ತನ್ವರ್ ಎಂಬ ಸ್ಥಳೀಯ ನಿವಾಸಿಯೊಬ್ಬರು, ಅಯ್ಯರ್ ಪ್ರಧಾನಿ ಬಗ್ಗೆ ಮಾತನಾಡುವಾಗ ಅಸಭ್ಯ ಮತ್ತು ನಿಂದನಾತ್ಮಕ ಭಾಷೆ ಬಳಸಿದ್ದಾರೆ ಎಂದು ಆರೋಪಿಸಿ ಗಾಂಧಿನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಅದರ ಆಧಾರದಲ್ಲಿ ಪೊಲೀಸರು ಅಯ್ಯರ್ ವಿರುದ್ಧ ಮೊಕದ್ದಮೆ ದಾಖಲಿಸಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಬೇಡ್ತಿ-ಅಘನಾಶಿನಿ ನದಿ ಜೋಡಣೆ ಯೋಜನೆ ಕೈಬಿಡಲು ಒತ್ತಾಯಿಸಿ ಡಿಕೆ ಶಿವಕುಮಾರ್ಗೆ ಮನವಿ
ಬೆಂಗಳೂರು: ಉತ್ತರ ಕನ್ನಡ ಜಿಲ್ಲೆಯಲ್ಲಿ ಬೇಡ್ತಿ-ಹಿರೇವಡ್ಡಟ್ಟಿ (ಬೇಡ್ತಿ-ವರದಾ) ನದಿ ಜೋಡಣೆ ಹಾಗೂ ಅಘನಾಶಿನಿ-ವೇದಾವತಿ ನದಿ ಜೋಡಣೆ ಯೋಜನೆಗಳನ್ನು ಪರಿಸರ ಹಾಗೂ ಜನಸಾಮಾನ್ಯರ ಹಿತದೃಷ್ಟಿಯಿಂದ ತಕ್ಷಣವೇ ಕೈಬಿಡುವಂತೆ ಒತ್ತಾಯಿಸಿ ಉನ್ನತ ಮಟ್ಟದ ನಿಯೋಗವೊಂದು ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದೆ. ಸೋಮವಾರ ವಿಧಾನಸೌಧದಲ್ಲಿ ಉತ್ತರ ಕನ್ನಡದ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಅವರ ನೇತೃತ್ವದಲ್ಲಿ, ಬೇಡ್ತಿ-ಅಘನಾಶಿನಿ ಕೊಳ್ಳ ಸಂರಕ್ಷಣಾ
ಮಾದಕ ವಸ್ತು ಸೇವನೆ ಆರೋಪ: 6 ಮಂದಿಯ ವಿರುದ್ಧ ಪ್ರಕರಣ ದಾಖಲು
ಮಂಗಳೂರು: ಸಾರ್ವಜನಿಕ ಸ್ಥಳದಲ್ಲಿ ಮಾದಕ ವಸ್ತು ಸೇವನೆ ಮಾಡಿ ಸಾರ್ವಜನಿಕರಿಗೆ ತೊಂದರೆ ನೀಡುತ್ತಿದ್ದ ಆರೋಪದ ಮೇರೆಗೆ ಆರು ಮಂದಿ ಯುವಕರನ್ನು ಕಂಕನಾಡಿ ನಗರ ಹಾಗೂ ಕಾವೂರು ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಕಿರಣ ಪ್ರಸಾದ್ (22), ಸಲ್ಮಾನ್ (18), ಪ್ರಜ್ವಲ್ (23), ಕಾರ್ತಿಕ್ (24), ಪ್ರಜ್ವಲ್ ಅಶ್ವತ್ಥ್ ವೇಗಸ್ (25) ಮತ್ತು ಅನ್ಸಿಲ್ ಗ್ರಿಪ್ಥ್ ಅಲ್ಪ್ರೇಡ್ (24) ಬಂಧಿತ ಆರೋಪಿಗಳಾಗಿದ್ದಾರೆ. *ಅಡ್ಯಾರ್ ಪದವಿನ ಅಂಬೇಡ್ಕರ್ ಭವನದ ಮುಂದಿನ ಮೈದಾನದಲ್ಲಿ ಗಾಂಜಾ ಸೇವನೆ ಮಾಡಿ ಅನುಮಾನಾಸ್ಪದ ವಾಗಿ ವರ್ತಿಸುತ್ತಿದ್ದ ಕಿರಣ ಪ್ರಸಾದ್ ಹಾಗೂ ಮುಹಮ್ಮದ್ ಸಲ್ಮಾನ್ರನ್ನು ಕಂಕನಾಡಿ ನಗರ ಪೊಲೀಸರು ಬಂಧಿಸಿದ್ದಾರೆ. *ಮಾದಕ ವಸ್ತು ಸೇವಿಸಿ ಅಡ್ಯಾರ್ ಕಟ್ಟೆ ಬಳಿ ಸಾರ್ವಜನಿಕರಿಗೆ ತೊಂದರೆ ನೀಡುತ್ತಿದ್ದ ಕಾರ್ತಿಕ್ ಮತ್ತು ಪ್ರಜ್ವಲ್ರನ್ನು ಕಂಕನಾಡಿ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. *ಪಡುಶೆಡ್ಡೆ ರೈಲ್ವೆ ಬ್ರಿಡ್ಜ್ ಬಳಿ ಸಾರ್ವಜನಿಕ ಸ್ಥಳದಲ್ಲಿ ಮಾದಕ ವಸ್ತು ಸೇವಿಸಿದ್ದ ಪ್ರಜ್ವಲ್ ಅಶ್ವತ್ಥ್ ವೇಗಸ್ ಎಂಬಾತನನ್ನು ಕಾವೂರು ಪೊಲೀಸರು ಬಂಧಿಸಿದ್ದಾರೆ. *ಬೊಂದೇಲ್ ಜಂಕ್ಷನ್ ಬಳಿ ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಸೇವನೆ ಮಾಡಿದ ಅನ್ಸಿಲ್ ಗ್ರಿಪ್ಥ್ ಅಲ್ಪ್ರೇಡ್ ಎಂಬಾತನ್ನು ಕಾವೂರು ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ನೂತನ ಸುಂಕ ವ್ಯವಸ್ಥೆಯ ಬಳಿಕ ಭಾರತ-ಅಮೆರಿಕ ವ್ಯಾಪಾರ ಒಪ್ಪಂದಕ್ಕೆ ಸಹಿ: ವಾಣಿಜ್ಯ ಕಾರ್ಯದರ್ಶಿ
ಹೊಸದಿಲ್ಲಿ, ಮಾ. 16: ನೂತನ ಜಾಗತಿಕ ಸುಂಕ ವ್ಯವಸ್ಥೆ ಜಾರಿಗೆ ಬಂದ ಬಳಿಕ ಭಾರತ-ಅಮೆರಿಕ ವ್ಯಾಪಾರ ಒಪ್ಪಂದಕ್ಕೆ ಔಪಚಾರಿಕವಾಗಿ ಸಹಿ ಹಾಕಲಾಗುವುದು ಎಂದು ವಾಣಿಜ್ಯ ಕಾರ್ಯದರ್ಶಿ ರಾಜೇಶ್ ಅಗ್ರವಾಲ್ ಸೋಮವಾರ ತಿಳಿಸಿದ್ದಾರೆ. ‘‘ಈಗ ನಾವು ಒಪ್ಪಂದದ ವಿವರಗಳ ಬಗ್ಗೆ ಅಮೆರಿಕದೊಂದಿಗೆ ಮಾತುಕತೆ ನಡೆಸುತ್ತಿದ್ದೇವೆ’’ ಎಂದು ಅವರು ಹೇಳಿದರು. ಕಳೆದ ತಿಂಗಳು ವ್ಯಾಪಾರ ಒಪ್ಪಂದದ ಚೌಕಟ್ಟಿಗೆ ಅಮೆರಿಕ ಮತ್ತು ಭಾರತ ಒಪ್ಪಿಗೆ ನೀಡಿದ್ದವು. ಈ ನಡುವೆ ಅಮೆರಿಕದ ಸುಪ್ರೀಂ ಕೋರ್ಟ್ ಟ್ರಂಪ್ ಸರ್ಕಾರದ ಜಾಗತಿಕ ಸುಂಕಗಳನ್ನು ರದ್ದುಗೊಳಿಸಿದೆ. ನ್ಯಾಯಾಲಯದ ತೀರ್ಪಿಗೆ ಅನುಗುಣವಾಗಿ ಅಮೆರಿಕವು ತನ್ನ ಜಾಗತಿಕ ಸುಂಕ ದರಗಳನ್ನು ಪ್ರಕಟಿಸಿದ ಬಳಿಕ ಅದರೊಂದಿಗೆ ಇರುವ ವ್ಯಾಪಾರ ಒಪ್ಪಂದವನ್ನು ಅಂತಿಮಗೊಳಿಸಲಾಗುವುದು ಎಂದು ಅಗ್ರವಾಲ್ ತಿಳಿಸಿದರು. ತನ್ನ ವ್ಯಾಪಾರ ಭಾಗೀದಾರಿಕೆಗಳನ್ನು ವಿಸ್ತರಿಸುವ ಪ್ರಯತ್ನವಾಗಿ ಭಾರತವು ಅಮೆರಿಕವಲ್ಲದೆ ಇತರ ದೇಶಗಳು ಹಾಗೂ ಪ್ರಾದೇಶಿಕ ಗುಂಪುಗಳೊಂದಿಗೆ ಆರು ಮುಕ್ತ ವ್ಯಾಪಾರ ಒಪ್ಪಂದಗಳನ್ನು ಮಾಡಿಕೊಳ್ಳುವ ನಿಟ್ಟಿನಲ್ಲಿ ಮಾತುಕತೆಗಳನ್ನು ನಡೆಸುತ್ತಿದೆ ಎಂದು ಅವರು ಹೇಳಿದರು.
ದ.ಕ.ಜಿಲ್ಲಾ ಜೈಲು ಅಧೀಕ್ಷಕರಿಗೆ ಕೈದಿಗಳಿಂದ ಹಲ್ಲೆಗೆ ಯತ್ನ, ಸೊತ್ತುಗಳಿಗೆ ಹಾನಿ: ಪ್ರಕರಣ ದಾಖಲು
ಮಂಗಳೂರು: ನಗರದ ಜಿಲ್ಲಾ ಕಾರಾಗೃಹದ ಜೈಲು ಅಧೀಕ್ಷಕರು ಮತ್ತು ಸಿಬ್ಬಂದಿಗಳಿಗೆ ಮೂವರು ವಿಚಾರಣಾಧೀನ ಕೈದಿಗಳು ಕರ್ತವ್ಯಕ್ಕೆ ಅಡ್ಡಿಪಡಿಸಿ ಹಲ್ಲೆಗೆ ಯತ್ನಿಸಿರುವ ಬಗ್ಗೆ ಬರ್ಕೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವಿಚಾರಣಾಧೀನ ಕೈದಿಗಳಾದ ಇಕ್ಬಾಲ್, ಶೆಹರಾಜ್ ಯಾನೆ ಶಾರೂಕ್, ಅಫ್ರೀದ್ ಹಲ್ಲೆಗೆ ಯತ್ನಿಸಿದ ಆರೋಪಿಗಳಾಗಿದ್ದಾರೆ. ಮಾ.13ರ ರಾತ್ರಿ ವಿಚಾರಣಾ ಕೈದಿ ಇಕ್ಬಾಲ್ ಎಂಬಾತ ಕಚೇರಿಗೆ ಬಂದು ಕಾರಾಗೃಹಕ್ಕೆ ಹೊಸದಾಗಿ ದಾಖಲಾಗುವ ಕೈದಿಗಳನ್ನು ತನ್ನ ಕೊಠಡಿಗೆ ಸೇರಿಸಬೇಕು ಎಂದು ಜೋರಾಗಿ ಕೂಗಾಡಿ ಅವಾಚ್ಯವಾಗಿ ಬೈದು ಬೆದರಿಕೆ ಹಾಕಿದ್ದಾನೆ. ಆವಾಗ ತಾನು ಸಮಾಧಾನ ಪಡಿಸಿದರೂ ಸುಮ್ಮನಾಗದೆ ಹಲ್ಲೆಗೈದ. ಈ ಸಂದರ್ಭ ಆಫ್ರೀದ್ ಎಂಬ ಇನ್ನೊಬ್ಬ ವಿಚಾರಣಾಧೀನ ಕೈದಿ ಕೂಡ ತನಗೆ ಬೈದು ಪ್ಲಾಸ್ಟಿಕ್ ಕುರ್ಚಿಯಿಂದ ಹಲ್ಲೆಗೆ ಯತ್ನಿಸಿದ ಎಂದು ಜೈಲು ಅಧೀಕ್ಷಕ ಶರಣಪ್ಪದೂರು ನೀಡಿದ್ದಾರೆ. ಈ ಆರೋಪಿಗಳು ಜೈಲಿನೊಳಗೆ ಅಳವಡಿಸಿರುವ ನೀರು ಶುದ್ಧೀಕರಣ ಯಂತ್ರ ಮತ್ತು ಪೈಪ್ ಹಾಳು ಮಾಡಿದ್ದಾರೆ. ಇದರ ಮೌಲ್ಯ ಸುಮಾರು 12 ಸಾವಿರ ರೂ. ಎಂದು ಅಂದಾಜಿಸಲಾಗಿದೆ. ಇನ್ನೋರ್ವ ಕೈದಿ ಶೆಹರಾಜ್ ತಾನಿದ್ದ ಕೊಠಡಿಯೊಳಗಿನ ವಸ್ತುಗಳಿಗೆ ಹಾನಿ ಮಾಡಿದ್ದಾನೆ. ಕೇರಂ ಬೋರ್ಡ್ ಮುರಿದು ಅದರ ರೀಪುಗಳನ್ನು ಇಕ್ಬಾಲ್ ಮತ್ತು ಆಪ್ರೀದ್ಗೆ ನೀಡಿ ಹಲ್ಲೆ ಮಾಡಲು ಪ್ರಚೋದಿಸಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

30 C