ಅಪ್ರತಿಮ ವೀರಾಗ್ರಣಿ, ನಾಡಿನ ಹೆಮ್ಮೆಯ ಚೇತನ ಕಾರ್ಯಪ್ಪ
ಕಲಬುರಗಿ:ಜ.29: ಭಾರತೀಯ ಸೇನಾಪಡೆಯ ಪ್ರಥಮ ಮಹಾದಂಡನಾಯಕರಾಗಿ, ಅಪ್ರತಿಮ ಶೂರ, ಧೀರ ಕಾರ್ಯಪ್ಪನವರು ದೇಶಕ್ಕೆ ಅಮೂಲ್ಯವಾದ ಕೊಡುಗೆಯನ್ನು ನೀಡಿದ್ದಾರೆ. ಅವರು ನಮ್ಮ ನಾಡಿನ ಹೆಮ್ಮೆಯ ಮಹಾನ ಚೇತನವಾಗಿದ್ದು, ಸಮಸ್ಥ ಕನ್ನಡಿಗರೆಲ್ಲರೂ ಅಭಿಮಾನ ಪಡುವ ಸಂಗತಿಯಾಗಿದೆ ಎಂದು ಮಾಜಿ ಸೈನಿಕ ಶ್ರೀಮಂತ ಇಸ್ರಾಜಿ ಅಭಿಪ್ರಾಯಪಟ್ಟರು.ನಗರದ ಆಳಂದ ರಸ್ತೆಯ ದೇವಿ ನಗರದ ಬಿರಾದಾರ ಕಾಂಪೆಕ್ಸ್ ಆವರಣದಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಭಾನುವಾರ ಏರ್ಪಡಿಸಿದ್ದ ‘ಪ್ರಥಮ ಮಹಾದಂಡನಾಯಕ ಕೆ.ಎಂ.ಕಾರ್ಯಪ್ಪನವರ 124ನೇ ಜನ್ಮ ದಿನಾಚರಣೆ’ಯ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ನಮನಗಳನ್ನು ಸಲ್ಲಿಸಿ ಮಾತನಾಡುತ್ತಿದ್ದ […] The post ಅಪ್ರತಿಮ ವೀರಾಗ್ರಣಿ, ನಾಡಿನ ಹೆಮ್ಮೆಯ ಚೇತನ ಕಾರ್ಯಪ್ಪ appeared first on Sanjevani .
ಕೃತಕ ಬುದ್ಧಿಮತ್ತೆಯ ವಿಶ್ವಾತ್ಮಕತೆ
ಕಲಬುರಗಿ:ಜ.29: ದಿನೆ ದಿನೆ ತಂತ್ರಜ್ಞಾನ ಬೆಳೆದಂತೆ ಕೃತಿಕ ಬುದ್ಧಿಮತ್ತೆಯಿಂದ ಎಲ್ಲ ಕ್ಷೇತ್ರಗಳು ಬೆಳೆಯುತ್ತಿದೆ ಎಂದು ಶ್ರೀ ಮಾಧವರಾವ ಪಾಟೀಲ ಮಹಾವಿದ್ಯಾಲಯದ ಪ್ರಾಣಿಶಾಸ್ತ್ರ ವಿಭಾಗದ ಪ್ರಾಧ್ಯಾಪಕಿ ಡಾ.ಸಂಧ್ಯಾ ಸುಧಾಕರ ಡಾಂಗೆ ಅಭಿಪ್ರಾಯ ವ್ಯಕ್ತಪಡಿಸಿದರು.ನಗರದ ಗೋದುತಾಯಿ ದೊಡ್ಡಪ್ಪ ಅಪ್ಪ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಪದವಿ ಮಹಿಳಾ ಮಹಾವಿದ್ಯಾಲಯದಲ್ಲಿ ರವಿವಾರ ಹಮ್ಮಿಕೊಂಡ ಆರ್ಟಿಫೀಸಿಯಲ್ ಇಂಟಲಿಜೆನ್ಸ್ ಮತ್ತು ಗ್ಲೋಬಲ್ ರಿಸ್ಕ್ ಮತ್ತು ಕಂಪ್ಯೂಟರ್ ವಿಜನ್ ಮತ್ತು ಪರ್ಸೆಪ್ಷನ್ ಎಂಬ ವಿಷಯದ ಒಂದು ದಿನದ ರಾಷ್ಟ್ರೀಯ ವಿಚಾರಸಂಕಿರಣದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡುತ್ತಾ, ಕೃತಕ […] The post ಕೃತಕ ಬುದ್ಧಿಮತ್ತೆಯ ವಿಶ್ವಾತ್ಮಕತೆ appeared first on Sanjevani .
ಸಾರ್ವಜನಿಕರಲ್ಲಿ ದೀರ್ಘಕಾಲಿಕ ಸಾಂಕ್ರಾಮಿಕ ರೋಗವಾದ ಕುಷ್ಠರೋಗದ ಬಗ್ಗೆ ಜಾಗೃತಿ ಮೂಡಿಸಲು ಪ್ರತಿ ವರ್ಷ ಜನವರಿ ತಿಂಗಳ ಕೊನೆಯ ಭಾನುವಾರದಂದು ‘ವಿಶ್ವ ಕುಷ್ಠರೋಗ ದಿನ’ವನ್ನಾಗಿ ಆಚರಿಸಲಾಗುತ್ತದೆ.ಆದರೆ, ಭಾರತದಲ್ಲಿ ಯಾವಾಗಲೂ ಜನವರಿ 30ರಂದೇ ಕುಷ್ಠರೋಗ ದಿನವನ್ನು ಆಚರಿಸಲಾಗುತ್ತದೆ. ಏಕೆಂದರೆ, ಇದು ರಾಷ್ಟ್ರಪಿತ ಮಹಾತ್ಮ ಗಾಂಧಿಯವರ ಪುಣ್ಯತಿಥಿಯನ್ನು ಆಚರಿಸುವ ದಿನವಾಗಿದೆ.ವಿಶ್ವ ಕುಷ್ಠರೋಗ ದಿನವು ದೀರ್ಘಕಾಲದ ಸಾಂಕ್ರಾಮಿಕ ಚರ್ಮದ ಕಾಯಿಲೆಯಾದ ಕುಷ್ಠರೋಗದ ಬಗ್ಗೆ ಸಾರ್ವಜನಿಕ ಜಾಗೃತಿಯನ್ನು ಹೆಚ್ಚಿಸಲು ಪ್ರಯತ್ನಿಸುತ್ತದೆ. ಕುಷ್ಠರೋಗಕ್ಕೆ ಸಂಬಂಧಿಸಿದ ಸಾಮಾನ್ಯ ಪುರಾಣಗಳನ್ನು ಹೊರಹಾಕಲು ದಿನವು ಸಹಾಯ ಮಾಡುತ್ತದೆ. ಕುಷ್ಠರೋಗವನ್ನು 1873 […] The post ವಿಶ್ವ ಕುಷ್ಠರೋಗ ದಿನ appeared first on Sanjevani .
ಜಾನಪದ ವಾಹಿನಿ ಸೊಬಗಿನೊಂದಿಗೆ ಹಂಪಿ ಉತ್ಸವದ ಸಮಾರೋಪ
ಬಳ್ಳಾರಿ.ಜ29: ಮೂರು ದಿನಗಳ ಹಂಪಿ ಉತ್ಸವದ ಅಂತಿಮ ದಿನವಾದ ಇಂದು ಸಂಜೆ ಹಂಪಿಯ ಉದ್ದಾನ ವೀರಭದ್ರೇಶ್ವರ ದೇವಸ್ಥಾನದಿಂದ ವಿರೂಪಾಕ್ಷ ದೇವಾಲಯದವರೆಗೆ ಸಾಗಿ ಬಂದ 60 ಕ್ಕೂ ಹೆಚ್ಚು ಜನೊದ ಕಲಾ ತಂಡಗಳ ಜನಪದ ವಾಹಿನಿ ಆಕರ್ಷಕ ಮೆರವಣಿಗೆಯೊಂದಿಗೆ ಹಂಪಿ ಉತ್ಸವದ ಸಮಾರೋಪಕ್ಕೆ ನಾಂದಿಯಾಯ್ತು. ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ತಾಯಿ ಭುವನೇಶ್ವರ ದೇವಿಗೆ ಪೂಜೆ ನೆರವೇರಿಸುವುದರ ಮೂಲಕ ಜಾನಪದ ವಾಹಿನಿ ಮೆರವಣಿಗೆಗೆ ಚಾಲನೆ ನೀಡಿದರು. ಜಾನಪದ ವಾಹಿನಿ ಕಲಾ ತಂಡಗಳ ಮೆರವಣಿಗೆ ನಾಡಿನ ಗ್ರಾಮೀಣ ಭಾಗದ ಸಾಂಸ್ಕೃತಿಕ […] The post ಜಾನಪದ ವಾಹಿನಿ ಸೊಬಗಿನೊಂದಿಗೆ ಹಂಪಿ ಉತ್ಸವದ ಸಮಾರೋಪ appeared first on Sanjevani .
ವಿಷ್ಣುವರ್ಧನ್ ಸ್ಮಾರಕ ಲೋಕಾರ್ಪಣೆ: ಸಾಹಸಸಿಂಹ ಕರುನಾಡು ಮೆಚ್ಚಿದ ಹೃದಯವಂತ : ಸಿಎಂ
ಮೈಸೂರು:ಜ 29- ಸಾಹಸ ಸಿಂಹ ಡಾ ವಿಷ್ಣುವರ್ಧನ್ ಇಡೀ ಕರುನಾಡು ಮೆಚ್ಚಿದ ಹೃದಯವಂತ,ತಮ್ಮ ಅಭಿನಯದಿಂದಲೇ ಜನಮನ ಗೆದ್ದ ಅಪ್ರತಿಮ ನಟ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದಿಲ್ಲಿ ಹೇಳಿದ್ದಾರೆ. ಮೈಸೂರಿನ ಹಾಲಾಳು ಗ್ರಾಮದಲ್ಲಿ ನಿರ್ಮಿಸಿರುವ ಡಾ ವಿಷ್ಣುವರ್ಧನ್ ಸ್ಮಾರಕ ಭವನ ಉದ್ಘಾಟಿಸಿ ಮಾತನಾಡಿದ ಅವರು ನಾಗರಹಾವು ಸಿನೆಮಾದ ರಾಮಾಚಾರಿ ಪಾತ್ರದ ಮೂಲಕ ಎಲ್ಲರ ಮನೆ ಮಾತಾದ ಡಾ ವಿಷ್ಣುವರ್ಧನ್ ಯಾವುದೇ ಪಾತ್ರಕ್ಕೂ ಸೈ ಎನ್ನವಂತೆ ನೂರಾರು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಡಾ ವಿಷ್ಣುವರ್ಧನ್ ಅವರಿಗೆ […] The post ವಿಷ್ಣುವರ್ಧನ್ ಸ್ಮಾರಕ ಲೋಕಾರ್ಪಣೆ: ಸಾಹಸಸಿಂಹ ಕರುನಾಡು ಮೆಚ್ಚಿದ ಹೃದಯವಂತ : ಸಿಎಂ appeared first on Sanjevani .
ಮಧ್ಯ ನಿಷೇದ ಮರು ಪರಿಶೀಲನೆಗೆ ಮಾಂಝಿ ಮನವಿ
ಗಯಾ,ಜ.29- ರಾಜ್ಯದಲ್ಲಿ ಮದ್ಯ ನಿಷೇಧ ಹಿಂಪಡೆಯುವಂತೆ ಬಿಹಾರದ ಮಾಜಿ ಮುಖ್ಯಮಂತ್ರಿ ಜಿತನ್ ರಾಮ್ ಮಾಂಝಿ ಅವರು ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಮಧ್ಯ ನಿಷೇಧದಿಂದ ರಾಜ್ಯದಲ್ಲಿ ಪ್ರವಾಸೋದ್ಯಮ ಬೆಳವಣಿಗೆ ಮೇಲೆ ಪರಿಣಾಮ ಬೀರಲಿದೆ. ಹೀಗಾಗಿ ಮದ್ಯದ ನೀತಿಯನ್ನು ಪರಿಶೀಲಿಸುವಂತೆ ಮನವಿ ಮಾಡಿದ್ದಾರೆ . ಮಹಾಮೈತ್ರಿಕೂಟದ ಮಿತ್ರಪಕ್ಷವಾದ ಹಿಂದೂಸ್ತಾನಿ ಅವಾಮ್ ಮೋರ್ಚಾದ ಗಯಾದಲ್ಲಿ ಮೂರು ದಿನಗಳ ಕಾಲ ನಡೆದ ಬೋಧ ಮಹೋತ್ಸವದ ಸಭೆ ಉದ್ದೇಶಿಸಿ ಮಾತನಾಡಿದ ಜಿತನ್ ರಾಮ್ ಮಾಂಝಿ, “ರಾಜ್ಯದಲ್ಲಿ ಅಸ್ತಿತ್ವದಲ್ಲಿರುವ ಮದ್ಯ […] The post ಮಧ್ಯ ನಿಷೇದ ಮರು ಪರಿಶೀಲನೆಗೆ ಮಾಂಝಿ ಮನವಿ appeared first on Sanjevani .
ಮಂಡ್ಯದಿಂದ ಮದ್ದೂರಿಗೆ ಪ್ರಯಾಣಿಸಿದ ಪ್ರಯಾಣಿಕರೊಬ್ಬರಿಂದ 2 ರೂ. ಹೆಚ್ಚು ಪ್ರಯಾಣ ಶುಲ್ಕ ಪಡೆದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಇದೀಗ ಬರೋಬ್ಬರಿ 5 ಸಾವಿರ ರೂ. ದಂಡ ಕಟ್ಟುವಂತಾಗಿದೆ. ಮಂಡ್ಯದ ವಕೀಲ ಎನ್. ಚನ್ನಬಸಪ್ಪ 2022ರ ಜೂನ್ 21ರಂದು ಮಂಡ್ಯದಿಂದ ಮದ್ದೂರಿಗೆ ಹೋಗುವಾಗ 25 ರೂ. ಟಿಕೆಟ್ ನೀಡಲಾಗಿತ್ತು. ಅದೇ ಮದ್ದೂರಿಂದ ಮಂಡ್ಯಕ್ಕೆ ಹಿಂದಿರುಗುವಾಗ 23 ರೂ. ಟಿಕೆಟ್ ನೀಡಲಾಗಿತ್ತು. ಇದನ್ನು ಪ್ರಶ್ನಿಸಿ ಅವರು ಮಂಡ್ಯ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗಕ್ಕೆ ದೂರು ನೀಡಿದ್ದರು. ಆಯೋಗವು ಸಾರಿಗೆ ಸಂಸ್ಥೆಗೆ ದಂಡ ವಿಧಿಸಿದೆ. ಚನ್ನಬಸಪ್ಪ ಅವರು ಈ ಹಿಂದೆ ರೈಲು ತಡವಾಗಿ ಬಂದದ್ದಕ್ಕೂ ರೈಲ್ವೆ ಇಲಾಖೆಗೆ ವಿರುದ್ಧ ಕೇಸು ದಾಖಲಿಸಿದ್ದರು. ಆಯೋಗ ರೈಲ್ವೆ ಇಲಾಖೆಯ ಸೇವಾನೂನ್ಯತೆಗೆ ದಂಡ ವಿಧಿಸಿತ್ತು.
BS Yediyurappa in Belagavi: ಬಿ.ವೈ.ವಿಜಯೇಂದ್ರ ಅವರು ರಾಜ್ಯ ರಾಜಕೀಯದಲ್ಲಿ ಸಕ್ರಿಯರಾಗಿದ್ದಾರೆ. ರಾಘವೇಂದ್ರ ಸಂಸದರಾಗಿದ್ದಾರೆ. ಅವರು ಯುವಕರು, ರಾಜ್ಯದಾದ್ಯಂತ ಓಡಾಟ ನಡೆಸಿದ್ದಾರೆ. ಅವರಿಗೂ ಮುಂದೆ ಹೆಚ್ಚಿನ ಅವಕಾಶಗಳಿವೆ ಎಂದರು. ಬಿಜೆಪಿಯನ್ನು ಅಧಿಕಾರಕ್ಕೆ ತರಲು ಪಣ ತೊಟ್ಟಿರುವ ಅವರು, ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಹಾಗೇ ತಾನು ಸಕ್ರಿಯ ರಾಜಕೀಯದಿಂದ ನಿವೃತ್ತಿಯೂ ಆಗಿಲ್ಲ ಎಂಬುದನ್ನು ಒತ್ತಿ ಹೇಳಿದ್ದಾರೆ.
ಹಲಗೆ ಬಾರಿಸುವ ಮೂಲಕ ಕುಸ್ತಿ ಪಂದಾವಳಿಗೆ ಚಾಲನೆ ನೀಡಿದ ಸಚಿವಆನಂದ ಸಿಂಗ್
ವಿಜಯನಗರ,ಜ.29: ಮೊಲ ಕೂಡ ವೀರಾವೇಷದಿಂದ ಹೋರಾಡಿದ ವಿಜಯನಗರದ ಮಣ್ಣಿನಲ್ಲಿ ಕುಸ್ತಿ ಅಖಾಡರಂಗೇರಿದೆ. ಹಂಪಿ ಉತ್ಸವದ ಪ್ರಶಸ್ತಿಗಾಗಿ ಪೈಲ್ವಾನ್ಗಳ ಕಾದಾಟಆರಂಭವಾಗಿದೆ. ಎದುರಾಳಿಯನ್ನು ಚಿತ್ ಮಾಡಿ, ಮಣ್ಣು ಮುಕ್ಕಿಸಿ ಜಗಜಟ್ಟಿಗಳು ಎಂದೆನಿಸಿಕೊಳ್ಳಲು ಉರಿ ಬಿಸಿಲನ್ನು ಲೆಕ್ಕಿಸದೆ ಪೈಲ್ವಾನ್ಗಳು ಸಾಮು ತೆಗೆಯುತ್ತಿದ್ದಾರೆ. ಇದಕ್ಕೆ ಸ್ಪೂರ್ತಿತುಂಬುವ ನಿಟ್ಟಿನಲ್ಲಿ ಪ್ರವಾಸೋದ್ಯಮ, ಪರಿಸರ ಮತ್ತುಜೀವಶಾಸ್ತ್ರ ಸಚಿವ ಹಾಗೂ ಶಾಸಕ ಆನಂದ್ ಸಿಂಗ್ ಸ್ವತಃ ಹಲಗೆ ಬಾರಿಸುವ ಮೂಲಕ ಕುಸ್ತಿ ಪಂದ್ಯಾವಳಿಗೆ ಚಾಲನೆ ನೀಡಿದರು. ಈ ವಿಶೇಷ ದೃಶ್ಯಗಳಿಗೆ ಮಲಪನಗುಡಿಗ್ರಾಮದ ವಿಜಯ ವಿದ್ಯಾರಣ್ಯ ಶಾಲಾ ಆವರಣದ ಕುಸ್ತಿ […] The post ಹಲಗೆ ಬಾರಿಸುವ ಮೂಲಕ ಕುಸ್ತಿ ಪಂದಾವಳಿಗೆ ಚಾಲನೆ ನೀಡಿದ ಸಚಿವಆನಂದ ಸಿಂಗ್ appeared first on Sanjevani .
ಹಂಪಿ ಉತ್ಸವದಎರಡನೇ ದಿನ ಮೇಳೈಸಿದ ವಿಭಿನ್ನ ಸಂಗೀತ
ಹಂಪಿ ಜ 29 : ಉತ್ಸವದಎರಡನೇ ದಿನದಂದು ಪ್ರಧಾನ ವೇದಿಕೆ ಗಾಯಿತ್ರಿ ಪೀಠದಲ್ಲಿ ವಿವಿಧ ಸಂಗೀತಕಾರ್ಯಕ್ರಮ ಹಾಗೂ ನೃತ್ಯಕಾರ್ಯಕ್ರಮ ಪ್ರೇಕ್ಷಕರ ಮನರಂಜಿಸಿತು.ಕಾರ್ಯಕ್ರಮದಲ್ಲಿ ಮೊದಲಿಗೆಅಂಜಲಿ ಭರತನಾಟ್ಯತಂಡನಂತರ ನೃತ್ಯಾಂಜಲಿ ಸ್ಕೂಲ್ಆಫ್ ಭರತನಾಟ್ಯತಂಡದಿಂದಕೂಚಿಪುಡಿ ನೃತ್ಯ ಪ್ರದರ್ಶನದೊಡನೆಕಾರ್ಯಕ್ರಮಆರಂಭಗೊಂಡಿತು.ನಂತರಅರ್ಜುನ್ ವಟಾರಅವರಿಂದ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ, ಯದುಕುಮಾರ್ಅವರಿಂದ ಸ್ಯಾಕ್ಸೋಫೆೀನ್ ವಾದನ ಮುದನೀಡಿತು.ನಂತರ ಕೇರಳದ ವಯಾಲಿ ಫೋಕ್ತಂಡದಿಂದ ವಿಶಿಷ್ಟ ಬಂಬು ಫ್ಯೂಜನ್ ಮೂಲಕ, ಕಾಂತಾರ, ರಣಧೀರ ಚಿತ್ರಗಳ ಸಂಗೀತಎಲ್ಲರ ಗಮನ ಸೆಳೆಯಿತು. The post ಹಂಪಿ ಉತ್ಸವದಎರಡನೇ ದಿನ ಮೇಳೈಸಿದ ವಿಭಿನ್ನ ಸಂಗೀತ appeared first on Sanjevani .
ವಿಜಯನಗರಗತವೈಭವ ಮರಳಿಸಿದ ಸಾಂಸ್ಕೃತಿಕ ಕಾರ್ಯಕ್ರಮಗಳು
ಹೊಸಪೇಟೆ,ವಿಜಯನಗರ (ಕರ್ನಾಟಕ ವಾರ್ತೆ)ಜ.29: ಸೂರ್ಯಾಸ್ತ ಸಮೀಪಿಸತ್ತಿದ್ದಂತೆ ಐತಿಹಾಸಿ ವಿಜಯನಗರ ಸಾಮ್ರಾಜ್ಯದಗತ ವೈಭವಎದುರು ಬಸವಣ್ಣ ವೇದಿಕೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮದ ಮೂಲಕ ಮತ್ತೆ ಮರುಕಳಿಸಿತು.ಹಂಪಿ ಉತ್ಸವ ಎರಡನೇ ದಿನದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸ್ಥಳೀಯ ಹಾಗೂ ನಾಡಿನ ಮೂಲೆ ಮೂಲೆಗಳಿಂದ ಆಗಮಿಸಿದ ಕಲಾವಿದರುಗಂಧರ್ವಲೋಕವನ್ನು ಧರೆಗಿಳಿಸಿದರು.ಆರಂಭದಲ್ಲಿ ಹಗರಬೊಮ್ಮನಹಳ್ಳಿ ಮಹಾಂತೇಶ್ ಹಾಗೂ ಅವರತಂಡ ‘ಸಂಗೋಳ್ಳಿ ರಾಯಣ್ಣ’ ‘ಚಲ್ಲಿದರು ಮಲ್ಲಿಗೆಯ’ ಹಾಗೂ ರೈತಗೀತೆಯನ್ನು ಪ್ರಸ್ತುತ ಪಡಿಸಿದರು.ಉತ್ತರಕನ್ನಡಜಿಲ್ಲೆಯಅನ್ನಪೂರ್ಣೇಶ್ವರಿಅಂಧರಗೀತೆಗಾಯನ ಸಂಘದಕಲಾವಿದರು ‘ನಮ್ಮಮ್ಮ ಶಾರದೆ’ ಗಾನಯೋಗಿ ಪಂಚಾಕ್ಷರಿ ಗವಾಯಿಗಳ ಕುರಿತಗೀತೆ, ಹಾಗೂ ‘ಕಾಣದಕಡಲಿಗೆ’ ಗೀತೆಗಳನ್ನು ಹಾಡಿದರು.ಮೈಮರೆಸಿದ ಶಹನಾಯಿ ನಾದ; ಹಾವೇರಿಯ […] The post ವಿಜಯನಗರಗತವೈಭವ ಮರಳಿಸಿದ ಸಾಂಸ್ಕೃತಿಕ ಕಾರ್ಯಕ್ರಮಗಳು appeared first on Sanjevani .
ಉತ್ಸವದ 2ನೇ ದಿನಕ್ಕೆ ಜೀವಕಳೆ ತುಂಬಿದ ಜನತೆ
ಹೊಸಪೇಟೆ (ವಿಜಯನಗರ),ಜ.29: ಹಂಪಿ ಉತ್ಸವ ಆಚರಣೆಯ ಎರಡನೇ ದಿನವಾದ ಶನಿವಾರ ಅಧಿಕ ಸಂಖ್ಯೆಯಲ್ಲಿ ಸಾರ್ವಜನಿಕರು, ಪ್ರವಾಸಿಗರು ಆಗಮಿಸಿ ಜೀವಕಳೆ ತಂದರು.ವಾರಾಂತ್ಯವಾದ ಶನಿವಾರ ಮಧ್ಯಾಹ್ನ ಸಾರ್ವಜನಿಕರು, ಪ್ರವಾಸಿಗರ ದಂಡು ಹಂಪಿಯತ್ತ ಕಾಣಿಸಿತು. ವಿವಿಧ ಪ್ರದರ್ಶನ ಮಳಿಗೆಗಳಿಗೆ ಭೇಟಿ ನೀಡಿ ಪ್ರದರ್ಶನವನ್ನು ಕಂಡು ಮಾಹಿತಿ ಪಡೆದುಕೊಂಡರು.ಇಳಿ ಸಂಜೆ ವೇಳೆಯಲ್ಲಿ ಹಂಪಿಯ ಪರಿಸರು ಪ್ರವಾಸಿಗರಿಂದ, ಸಾರ್ವಜನಿಕರಿಂದ ತುಂಬಿತ್ತು. ವಿವಿಧ ವೇದಿಕೆಯತ್ತ ಜನರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ವೀಕ್ಷಿಸಲು ತೆರಳಿದರು.ಕತ್ತಲಾಗುತ್ತಿದ್ದಂತೆ ದೀಪದ ಬೆಳಕಿನಲ್ಲಿ ಮಿಂದೆದ್ದ ಸ್ಮಾರಕಗಳ ನಡುವೆಯ ವೇದಿಕೆಗಳಲ್ಲಿ ನಡೆದ ಕಾರ್ಯಕ್ರಮಗಳನ್ನು ಕಣ್ತುಂಬಿಕೊಂಡರು. The post ಉತ್ಸವದ 2ನೇ ದಿನಕ್ಕೆ ಜೀವಕಳೆ ತುಂಬಿದ ಜನತೆ appeared first on Sanjevani .
ಹಂಪಿ ಉತ್ಸವ ಕವಿಗೋಷ್ಠಿ: ಹೊರಹೊಮ್ಮಿದಒಡಲ ನೋವು, ಸಾಮಾಜಿಕ ಕಳಕಳಿಯ ಕವಿತೆಗಳು
ಹೊಸಪೇಟೆ, (ವಿಜಯನಗರ) ಜ.29: ಜಾತಿ-ಧರ್ಮದ ಸಂಘರ್ಷ, ಭ್ರಷ್ಠಾಚಾರ, ಅತ್ಯಾಚಾರ, ವ್ಯವಸ್ಥೆಯಲ್ಲಿನ ಲೋಪ, ತಾಯಿಯ ಮಹತ್ವ, ಮಾನವನ ಹೇಯಕೃತ್ಯ ಹೀಗೆ ವಿವಿಧ ಸಂಗತಿಗಳ ಬಗ್ಗೆ ಸಾಮಾಜಿಕ ಕಳಕಳಿಯ ಕವಿತೆಗಳು ಹೊರಹೊಮ್ಮಿದವು.ಕಲಬುರಗಿ ವಿವಿ ಕನ್ನಡ ವಿಭಾಗದ ಪ್ರೊ|| ಹೆಚ್.ಟಿ.ಪೋತೆ ಕವಿಗೋಷ್ಠಿಯಅಧ್ಯಕ್ಷತೆ ವಹಿಸಿದ್ದರು. ಸಿಕ್ಕ ಅಲ್ಪ ಸಮಯದಲ್ಲಿಯೇತಮ್ಮ ಕಳಕಳಿ, ಆಕ್ರೋಶವನ್ನುಕವಿತೆಯ ಮೂಲಕ ವ್ಯಕ್ತಪಡಿಸಿದರು.ವಿ.ಪರಶುರಾಮ್ಅವರಯಾವ ಕುಲ,ಯಾವ ಮತಕವಿತೆಯುಜಾತಿಯತಾರತಮ್ಯ ಹೋಗಲಾಡಿಸಿ, ಎಲ್ಲರೂ ಮುಕ್ತವಾಗಿ ಬಾಳೋಣ ಎಂದು ಸಂದೇಶ ಸಾರಿತು. ಡಾ.ಅನುರಾಧಕುರುಂಜಿಅವರು ವಾಸ್ತವ ಕವಿತೆ ವಾಚಿಸಿ, ಭಯೋತ್ಪಾದನೆ, ಭ್ರಷ್ಠಾಚಾರ ಹಾಗೂ ಅತ್ಯಾಚಾರ, ಮಾನವನ ಹೇಯಕೃತ್ಯದಕುರಿತು ಕಳಕಳ […] The post ಹಂಪಿ ಉತ್ಸವ ಕವಿಗೋಷ್ಠಿ: ಹೊರಹೊಮ್ಮಿದಒಡಲ ನೋವು, ಸಾಮಾಜಿಕ ಕಳಕಳಿಯ ಕವಿತೆಗಳು appeared first on Sanjevani .
ಕವಿಗೋಷ್ಠಿ ಉದ್ಘಾಟಿಸಿದ ವಿಶ್ರಾಂತ ಕುಲಪತಿಡಾ.ಮಲ್ಲಿಕಾಘಂಟಿ ಸಿನಿಮಾ ಹಾವಳಿಯಿಂದ ಹಿಂದೆ ಸರಿದ ಸಾಹಿತ್ಯ, ವೈಚಾರಿಕತೆ
ಹೊಸಪೇಟೆ, (ವಿಜಯನಗರ) ಜ.29: ಚಲನಚಿತ್ರ ನಟ- ನಟಿಯರು, ಗಾಯಕರು, ಕಲಾವಿದರಿಗೆ ಸಿಕ್ಕಷ್ಟು ಆದ್ಯತೆಪ್ರಸ್ತುತ ದಿನಗಳಲ್ಲಿ ಸಾಹಿತ್ಯ ಮತ್ತು ವೈಚಾರಿಕತೆಗೆ ಸಿಗದೆ ಇದರಿಂದ ಈ ಕ್ಷೇತ್ರಹಿಂದೆ ಸರಿಯುತ್ತಿದೆಎಂದು ವಿಶ್ರಾಂತ ಕುಲಪತಿಡಾ.ಮಲ್ಲಿಕಾಘಂಟೆ ಬೇಸರ ವ್ಯಕ್ತಪಡಿಸಿದರು.ಇಲ್ಲಿನ ವಿರೂಪಾಕ್ಷೇಶ್ವರ ವೇದಿಕೆಯಲ್ಲಿ ಹಂಪಿ ಉತ್ಸವದಎರಡನೇ ದಿನವಾದ ಶನಿವಾರಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಪ್ರವಾಸೋದ್ಯಮ ಇಲಾಖೆ, ವಿಜಯನಗರ ಜಿಲ್ಲಾಡಳಿತದ ವತಿಯಿಂದ ಹಂಪಿ ಉತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ಕವಿಗೋಷ್ಠಿ ಉದ್ಘಾಟಿಸಿ ಅವರು ಮಾತನಾಡಿದರು.ಈ ಹಿಂದೆ ಸಾವಿರಾರುಜನರು ಕವಿಗೋಷ್ಠಿ, ವಿಚಾರ ಸಂಕಿರಣಗಳಿಗೆ ಬಹಳ ಪ್ರೀತಿಯಿಂದ ಆಗಮಿಸಿ ವೈಚಾರಿಕತೆ, ಸಮಕಾಲೀನ […] The post ಕವಿಗೋಷ್ಠಿ ಉದ್ಘಾಟಿಸಿದ ವಿಶ್ರಾಂತ ಕುಲಪತಿಡಾ.ಮಲ್ಲಿಕಾಘಂಟಿ ಸಿನಿಮಾ ಹಾವಳಿಯಿಂದ ಹಿಂದೆ ಸರಿದ ಸಾಹಿತ್ಯ, ವೈಚಾರಿಕತೆ appeared first on Sanjevani .
ಅಂತರಾಷ್ಟ್ರೀಯರಾಕ್ಕ್ಲೈಂಬಿಂಗ್ ಸ್ಪರ್ಧೆನೋಡುಗರಿಗೆ ಮೈ ಜುಮ್ಎನ್ನುವಅನುಭವ
ವಿಜಯನಗರ(ಹೊಸಪೇಟೆ),ಜ.29: ಸಾಹಸಿ ಕ್ರೀಡೆಗಳೆಂದರೆ ಎಲ್ಲರಿಗೂ ಮೈಜುಮ್ಎನ್ನುವಅನುಭವವಾಗುತ್ತದೆ. ವಿಜಯನಗರ ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ ಸಂಯುಕ್ತಾಶ್ರಯದಲ್ಲಿ ಹಂಪಿ ಉತ್ಸವದ ಅಂಗವಾಗಿ ಹಂಪಿಯ ಹೇಮಕೂಟ ಬೆಟ್ಟಎದುರಿನಜೈನದೇವಾಲಯಆವರಣದಲ್ಲಿ ಶನಿವಾರ ನೋಪಾಸನಾ ಅಡ್ವೆಂಚರ್ಗೇಮ್ಸ್ ವತಿಯಿಂದಅಂತಾರಾಷ್ಟ್ರೀಯರಾಕ್ಕ್ಲೈಂಬಿಂಗ್ ಸ್ಪರ್ಧೆ ನಡೆಯಿತು.ಸ್ಪರ್ಧೆಯಲ್ಲಿ ಸುಮಾರು 46 ಜನ ವಿದೇಶಿಗರು ರಾಕ್ಕ್ಲೈಂಬಿಂಗ್ ಮಾಡುವುದನ್ನು ನೋಡುಗರಿಗೆ ಮೈ ಜುಮ್ಎನ್ನುವದೃಶ್ಯವಾದರೂ, ವಿದೇಶಿಗರು ಮಾತ್ರ ಹತ್ತಲುತಾ ಮುಂದು, ನಾ ಮುಂದುಎನ್ನುವಂತೆಅವರಲ್ಲಿಉತ್ಸಾಹಕಂಡುಬಂತು.ಈ ಸ್ಪರ್ಧೆಯಲ್ಲಿ ನೆದರ್ಲ್ಯಾಂಡ್, ಆಸ್ಟ್ರೀಯಾ, ಇಸ್ರೇಲ್, ರಯ, ಭಾರತ, ಇರಾನ್, ಯು.ಎಸ್.ಎ, ಟರ್ಕಿ, ನ್ಯೂಜಿಲ್ಯಾಂಡ್, ಜರ್ಮನಿ, ಫ್ರಾನ್ಸ್, ಚಿಕೋಸ್ ಲಾಗೋವ, ಸ್ಪೇನ್ ದೇಶಗಳಿಂದ ಸುಮಾರು 46 […] The post ಅಂತರಾಷ್ಟ್ರೀಯರಾಕ್ಕ್ಲೈಂಬಿಂಗ್ ಸ್ಪರ್ಧೆ ನೋಡುಗರಿಗೆ ಮೈ ಜುಮ್ಎನ್ನುವಅನುಭವ appeared first on Sanjevani .
ಹಂಪಿ ಬೈ ಸ್ಕೈನಲ್ಲಿ ಸ್ಮಾರಕಗಳ ದರ್ಶನ ಆಗಸದಿಂದ ಹಂಪಿ ಸ್ಮಾರಕಗಳ ಸೌಂದರ್ಯಕಣ್ತುಂಬಿಕೊಂಡ ಪ್ರವಾಸಿಗರು
ಹೊಸಪೇಟೆ (ವಿಜಯನಗರ),ಜ.29:ಆಗಸದಿಂದ ಹಂಪಿ ಸ್ಮಾರಕಗಳ ಸೌಂದರ್ಯಅನಾವರಣಗೊಂಡಿತು. ಹಂಪಿ ಉತ್ಸವದ ನಿಮಿತ್ತಆಯೋಜಿಸಲಾಗಿರುವ ಹಂಪಿ ಬೈ ಸ್ಕೈನಲ್ಲಿ ಪ್ರವಾಸಿಗರು ಹೆಲಿಕಾಪ್ಟರ್ ಮೂಲಕ ಐತಿಹಾಸಿಕ ಹಂಪಿಯ ಸ್ಮಾರಕಗಳ ಸೌಂದರ್ಯವನ್ನು ಸವಿದರು.ವಿಶ್ವವಿಖ್ಯಾತ ಹಂಪಿ ಉತ್ಸವದ ಅಂಗವಾಗಿ ಜಿಲ್ಲಾಡಳಿತ ಹಾಗೂ ಪ್ರವಾಸೋದ್ಯಮ ಇಲಾಖೆ ಸಹಯೋಗದೊಂದಿಗೆಆಯೋಜಿಸಲಾಗಿದ್ದ ಹಂಪಿ ಬೈ ಸ್ಕೈ(ಆಗಸದಿಂದ ಹಂಪಿ)ಯಲ್ಲಿ ಪ್ರವಾಸಿಗರು ಪಾಲ್ಗೊಂಡರು.ಕಮಲಾಪುರ ಹೋಟಲ್ ಮಯೂರ ಭುವನೇಶ್ವರಿಆವರಣದಲ್ಲಿ ನಿರ್ಮಿಸಲಾಗಿದ್ದತಾತ್ಕಾಲಿಕ ಹೆಲಿಪ್ಯಾಡ್ ಮೂಲಕ ಹಂಪಿ ಬೈ ಸ್ಕೈಆಯೋಜಿಸಲಾಗಿತ್ತು.ಹಂಪಿ ಉತ್ಸವಕ್ಕೆ ನಾನಾ ಜಿಲ್ಲೆಗಳಿಂದ ಆಗಮಿಸಿದ್ದ ಪ್ರವಾಸಿಗರು ಹಂಪಿ ಬೈ ಸ್ಕೈನರೋಚಕಅನುಭವವನ್ನು ಪಡೆದುಕೊಂಡರು.ಮೂರು ದಿನಗಳ ಕಾಲ ಹಂಪಿ ಬೈ […] The post ಹಂಪಿ ಬೈ ಸ್ಕೈನಲ್ಲಿ ಸ್ಮಾರಕಗಳ ದರ್ಶನ ಆಗಸದಿಂದ ಹಂಪಿ ಸ್ಮಾರಕಗಳ ಸೌಂದರ್ಯಕಣ್ತುಂಬಿಕೊಂಡ ಪ್ರವಾಸಿಗರು appeared first on Sanjevani .
ವಿ.ಎಸ್.ಕೆ. ವಿ.ವಿ.ಯಲ್ಲಿ ಒಂದು ದಿನದ ತರಬೇತಿ ಕಾರ್ಯಾಗಾರ
(ಸಂಜೆವಾಣಿ ಪ್ರತಿನಿಧಿಯಿಂದ)ಬಳ್ಳಾರಿ, ಜ.29: ವಿದ್ಯಾರ್ಥಿಗಳ ಶೈಕ್ಷಣಿಕ ದತ್ತಾಂಶಗಳನ್ನು ಕಾಯ್ದಿರಿಸಿಕೊಳ್ಳುವುದು ಅತ್ಯವಶ್ಯಕವಾಗಿದೆ. ಭವಿಷ್ಯದಲ್ಲಿ ತಮ್ಮ ದಾಖಲಾತಿಗಳನ್ನು ಒಂದೇ ಸೂರಿನಡಿಯಲ್ಲಿ ಪಡೆಯಲು ಸಮಗ್ರ ವಿಶ್ವ ವಿದ್ಯಾಲಯ ಮತ್ತು ಕಾಲೇಜು ನಿರ್ವಹಣಾ ವ್ಯವಸ್ಥೆಯು ಧ್ಯೇಯವಾಗಿದೆ ಎಂದು ಕರ್ನಾಟಕ ಸರ್ಕಾರದ ಉನ್ನತ ಶಿಕ್ಷಣ ಇಲಾಖೆಯ, ಇ-ಆಡಳಿತ, ವಿಶೇಷಾಧಿಕಾರಿ ಮತ್ತು ನೋಡಲ್ ಅಧಿಕಾರಿ, ಪಿಎಂಯು(ಯುಯುಸಿಎಮ್ಎಸ್) ಡಾ. ಭಾಗ್ಯವಾನ ಎಸ್. ಮುದಿಗೌಡ್ರ ಹೇಳಿದರು.ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಡಾ.ಬಿ.ಆರ್.ಅಂಬೇಡ್ಕರ್ ಸಭಾಂಗಣದಲ್ಲಿ ಪರೀಕ್ಷಾ ವಿಭಾಗ ಮತ್ತು ಕರ್ನಾಟಕ ಉನ್ನತ ಶಿಕ್ಷಣ ಇಲಾಖೆಯ ಸಹಯೋಗದಲ್ಲಿ ‘ಸಮಗ್ರ ವಿಶ್ವ ವಿದ್ಯಾಲಯ ಮತ್ತು […] The post ವಿ.ಎಸ್.ಕೆ. ವಿ.ವಿ.ಯಲ್ಲಿ ಒಂದು ದಿನದ ತರಬೇತಿ ಕಾರ್ಯಾಗಾರ appeared first on Sanjevani .
IND vs NZ: 'ಈತನನ್ನು ಅಗ್ರ ಕ್ರಮಾಂಕದಲ್ಲಿ ಆಡಿಸಿ', ಟೀಮ್ ಇಂಡಿಯಾಗೆ ದಿನೇಶ್ ಕಾರ್ತಿಕ್ ಮನವಿ!
India vs New Zealand T20I Series 2023: ಅಗ್ರ ಕ್ರಮಾಂಕದಲ್ಲಿ ಬ್ಯಾಟ್ ಮಾಡಿ ಟೀಮ್ ಇಂಡಿಯಾ ಪರ ಅಂತಾರಾಷ್ಟ್ರೀಯ ಟಿ20 ಶತಕ ಬಾರಿಸಿ ಅಬ್ಬರಿಸಿರುವ ಬ್ಯಾಟ್ಸ್ಮನ್ ದೀಪಕ್ ಹೂಡ ಅವರನ್ನು ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್ ಬಳಸಿಕೊಳ್ಳುತ್ತಿರುವ ಬಗ್ಗೆ ವಿಕೆಟ್ಕೀಪರ್ ಬ್ಯಾಟ್ಸ್ಮನ್ ದಿನೇಶ್ ಕಾರ್ತಿಕ್ ಅಸಮಾಧಾನ ಹೊರಹಾಕಿದ್ದಾರೆ. ಸ್ಪಿನ್ ಬೌಲಿಂಗ್ ಕೂಡ ಮಾಡುವ ಸಾಮರ್ಥ್ಯ ಹೊಂದಿರುವ ದೀಪಕ್ ಹೂಡ ಅವರನ್ನು ಪ್ರಸಕ್ತ ನ್ಯೂಜಿಲೆಂಡ್ ವಿರುದ್ಧದ ಸರಣಿಯಲ್ಲಿ ಭಾರತ ತಂಡ ಕೆಳ ಮಧ್ಯಮ ಕ್ರಮಾಂಕದಲ್ಲಿ ಬಳಕೆ ಮಾಡಿಕೊಳ್ಳುತ್ತಿದೆ.
ಸ್ವಾಸ್ಥ್ಯ ಸಮಾಜದ ನಿರ್ಮಾಣಕ್ಕೆ ಯೋಗ ಬಹು ಮುಖ್ಯ- ಈ.ತುಕರಾಂ
ಸಂಜೆವಾಣಿ ವಾರ್ತೆಸಂಡೂರು: ಜ:29: ಸ್ವಾಸ್ಥ್ಯ ಸಮಾಜ ನಿರ್ಮಾಣಕ್ಕೆ ಯೋಗ ಬಹು ಮುಖ್ಯ ಅಂತಹ ಯೋಗ ಸಂಸ್ಕೃತಿಯನ್ನು ಸ್ಕಂದಗಿರಿ ಯೋಗಕೇಂದ್ರ ಬಳಗದವರು ರಥಸಪ್ತಮಿ ಅಂಗವಾಗಿ 108 ಬಾರಿ ಸಾಮೂಹಿಕ ಸೂರ್ಯನಮಸ್ಕಾರ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಉತ್ತಮ ಸಮಾಜ ಮುಖಿ ಕಾರ್ಯಗಳನ್ನು ಮಾಡುತ್ತಿರುವುದು ಹೆಮ್ಮೆ ಸಂಗತಿ ಎಂದು ಶಾಸಕ ಈ.ತುಕರಾಂ ತಿಳಿಸಿದರು.ಅವರು ಇಂದು ಪಟ್ಟಣದ ಗುರುಭವನದ ಅವರಣದಲ್ಲಿ ರಥಸಪ್ತಮಿ ಅಂಗವಾಗಿ ಸ್ಕಂದಗಿರಿ ಯೋಗಕೇಂದ್ರದ ವತಿಯಿಂದ 108 ಬಾರಿ ಸಾಮೂಹಿಕ ಸೂರ್ಯನಮಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಯೋಗ ಸಂಸ್ಥೆಗೆ ಬೇಕಾದ ಸೌಲಭ್ಯಗಳನ್ನು […] The post ಸ್ವಾಸ್ಥ್ಯ ಸಮಾಜದ ನಿರ್ಮಾಣಕ್ಕೆ ಯೋಗ ಬಹು ಮುಖ್ಯ- ಈ.ತುಕರಾಂ appeared first on Sanjevani .
ಸವಿತಾ ಮಹರ್ಷಿಗಳ ಕೊಡುಗೆ ಅಪಾರ- ಗುರುಬಸವರಾಜ
ಸಂಜೆವಾಣಿ ವಾರ್ತೆಸಂಡೂರು:ಜ:29 ಸವಿತಾ ಮಹರ್ಷಿಗಳು ಸಮಾಜಕ್ಕೆ ಕೊಡುಗೆಯನ್ನು ಪ್ರತಿಯೊಬ್ಬರೂ ಸ್ಮರಿಸಬೇಕು, ಅದಕ್ಕಾಗಿ ಜಯಂತಿಯ ಮೂಲಕ ಅವರು ಸಮಾಜಕ್ಕೆ ಕೊಟ್ಟ ಕೊಡುಗೆಯನ್ನು ತಿಳಿದುಕೊಳ್ಳುವುದು ಅತಿ ಅಗತ್ಯವಾಗಿದೆ ಎಂದು ತಹಶೀಲ್ದಾರ್ ಗುರುಬಸವರಾಜ ತಿಳಿಸಿದರು.ಅವರು ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ತಾಲೂಕು ಆಡಳಿತ ಹಾಗೂ ಸವಿತಾ ಸಮಾಜದವತಿಯಿಂದ ಹಮ್ಮಿಕೊಂಡಿದ್ದ ಸವಿತಾ ಮಹರ್ಷಿಗಳ ಜಯಂತಿಯನ್ನು ಉದ್ಘಾಟಿಸಿ ಮಾತನಾಡಿ ಸವಿತ ಮಹರ್ಷಿಗಳು ಸಮಾಜದಲ್ಲಿ ಅತಿ ಕೆಳವರ್ಗದ ಏಳಿಗೆಗೆ ಶ್ರಮಿಸಿದರು, ಅದರಲ್ಲೂ ಸವಿತ ಮಹರ್ಷಿಗಳ ತತ್ವಗಳನ್ನು ತಿಳಿಯುವ ಮೂಲಕ ಅವುಗಳನ್ನು ಅನುಸರಿಸೋಣ ಎಂದರು.ಕಾರ್ಯಕ್ರಮದಲ್ಲಿ ಸವಿತಾ ಸಮಾಜದ ಗೌರವ […] The post ಸವಿತಾ ಮಹರ್ಷಿಗಳ ಕೊಡುಗೆ ಅಪಾರ- ಗುರುಬಸವರಾಜ appeared first on Sanjevani .
ಚುನಾವಣಾ ಸಿದ್ದತೆಗಳ ಪೂರ್ವಭಾವಿ ಸಭೆ
ಸಂಜೆವಾಣಿ ವಾರ್ತೆಸಂಡೂರು: ಜ: 29: ಈ ದಿನ ಸಂಡೂರು ವಿಧಾನಸಭಾ ಕ್ಷೇತ್ರದಲ್ಲಿ ಉಪಕಾರ್ಯದರ್ಶಿಗಳು ಶರಣಬಸವ ಜಿಲ್ಲಾ ಪಂಚಾಯತಿ, ಬಳ್ಳಾರಿ ರವರ ಅಧ್ಯಕ್ಷತೆಯಲ್ಲಿ ಹಾಗೂ ತಹಶೀಲ್ದಾರರು, ಕಾರ್ಯನಿರ್ವಾಹಕ ಅಧಿಕಾರಿಗಳು ತಾಲ್ಲೂಕು ಪಂಚಾಯತಿ ಸಂಡೂರು ಇವರ ಉಪಸ್ಥಿತಿಯಲ್ಲಿ ಫಾರಂ-6, ಫಾರಂ-7, ಫಾರಂ-8 ಗಳನ್ನು ಪರಿಶೀಲನೆ ನಡೆಸಿದರು, ಹಾಗೂ ಮತಗಟ್ಟೆಗಳ ಭೌತಿಕ ಪರಿಶೀಲನೆ ಕುರಿತು ಮತ್ತು ಮುಂಬರುವ ಚುನಾವಣೆಗೆ ಫೂರ್ವ ಸಿದ್ದತೆಗಳ ಕರಿತು ಸಭೆಯಲ್ಲಿ ಎಲ್ಲಾ ಬಿಎಲ್.ಓ ಹಾಗೂ ಬಿಎಲ್.ಓ , ಸೂಪರ್ ವೈಸರ್ ಗಳಿಗೆ ಪಿ.ಡಿ.ಓ ಗಳಿಗೆ ತಿಳಿಸಿದರು. The post ಚುನಾವಣಾ ಸಿದ್ದತೆಗಳ ಪೂರ್ವಭಾವಿ ಸಭೆ appeared first on Sanjevani .
ಖಾಸಗಿ ಶಾಲೆ ಶಿಕ್ಷಕರ ಆರ್ಥಿಕ ಸ್ಥಿತಿ ಶೋಚನೀಯ
ಸಂಜೆವಾಣಿ ವಾರ್ತೆಸಂಡೂರು: ಜ: 29: ಖಾಸಗಿ ಶಾಲೆಯ ಶಿಕ್ಷಕನಿಗೆ ಹೆಣ್ಣು ಕೊಡುವುದು ಸಹ ಕಷ್ಟವಾದಂತಹ ಸ್ಥಿತಿ ಕಾರಣ ಖಾಸಗಿ ಶಾಲೆಯ ಶಿಕ್ಷಕರ ಪರಿಸ್ಥಿತಿ ದಯಾನೀಯವಾಗಿದೆ ಎಂದು ಸಂಡೂರು ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಜಗದೀಶ್ ಬಸಾಪುರ ತಿಳಿಸಿದರು.ಅವರು ಪಟ್ಟಣದ ವಾಲ್ಮಿಕಿ ಭವನದಲ್ಲಿಕರ್ನಾಟಕ ರಾಜ್ಯ ಖಾಸಗಿ ಶಿಕ್ಷಕರ ಬಳಗ ತಾಲೂಕು ಘಟಕ ಸಂಡೂರು ವತಿಯಿಂದ ಶೈಕ್ಷಣಿಕ ಕಾರ್ಯಾಗಾರ ಹಾಗೂ ಸಂಡೂರು ಶಿಕ್ಷಣ ರತ್ನ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ವಿಶೇಷ ಉಪನ್ಯಾಸ ನೀಡಿ ಮಾತನಾಡಿ ಮೊದಲು ಬಡ ಮಕ್ಕಳಿಗೆ ಶಿಕ್ಷಣ ಕೊಟ್ಟಿದ್ದು […] The post ಖಾಸಗಿ ಶಾಲೆ ಶಿಕ್ಷಕರ ಆರ್ಥಿಕ ಸ್ಥಿತಿ ಶೋಚನೀಯ appeared first on Sanjevani .
ತರಳಬಾಳು ಹುಣ್ಣಿಮೆಯ ಕ್ರೀಡಾಕೂಟಕ್ಕೆ ಚಾಲನೆ
ಸಂಜೆ ವಾಣಿ ವಾರ್ತೆಕೊಟ್ಟೂರು, ಜ.29: ಪಟ್ಟಣದ ತರಳಬಾಳು ಹುಣ್ಣಿಮೆ ಮಹೋತ್ಸವದ ಪ್ರಯುಕ್ತ ಕ್ರೀಡಾಕೂಟವನ್ನು ಹಮ್ಮಿಕೊಳ್ಳಲಾಯಿತು ಈ ಕ್ರೀಡಾಕೂಟಕ್ಕೆ ತರಳಬಾಳು ವಿದ್ಯಾ ಸಂಸ್ಥೆಯ ಪ್ರಧಾನ ಕಾರ್ಯದರ್ಶಿಯಾದ ಎಸ್. ಬಿ ರಂಗನಾಥ್ ಮತ್ತು ಸ್ವಾಗತ ಸಮಿತಿಯ ಅಧ್ಯಕ್ಷರಾದ ಡಾ. ಮೂಗಪ್ಪ ಸೇರಿ ಕ್ರೀಡಾ ಜ್ಯೋತಿಯನ್ನು ಬೆಳಗಿಸುವುದರ ಮೂಲಕ ಕ್ರೀಡಾಕೂಟಕ್ಕೆ ಚಾಲನೆಯನ್ನು ನೀಡಿದರು.ಈ ಕ್ರೀಡಾಕೂಟದಲ್ಲಿ ಜಿಲ್ಲೆಯ ಆರು ತಾಲೂಕಿನ 6 ಕಾಲೇಜ್ ನ ವಿದ್ಯಾರ್ಥಿಗಳು ಮತ್ತು ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು. ಈ ಕ್ರೀಡಾಕೂಟದಲ್ಲಿ ವಾಲಿಬಾಲ್, ಬಾಲ್ ಬ್ಯಾಡ್ಮಿಂಟನ್, ಥ್ರೋ ಬಾಲ್, ಕಬ್ಬಡ್ಡಿ, ಖೋ […] The post ತರಳಬಾಳು ಹುಣ್ಣಿಮೆಯ ಕ್ರೀಡಾಕೂಟಕ್ಕೆ ಚಾಲನೆ appeared first on Sanjevani .
ಜಗತ್ತನ್ನು ಸುತ್ತುವರೆದ ಏಕೈಕ ಸ್ವಾಮೀಜಿ ತರಳಬಾಳು ಶ್ರೀಗಳು: ವಚನಾನಂದ ಶ್ರೀ
ಸಂಜೆ ವಾಣಿ ವಾರ್ತೆಕೊಟ್ಟೂರು, ಜ.29: ಜಗತ್ತನ್ನು ಸುತ್ತುವರೆದ ಯಾರಾದರೂ ಸ್ವಾಮಿಜಿ ಇದ್ದರೆ ಅವರೇ ನಮ್ಮ ತರಳಬಾಳು ಜಗದ್ಗುರು ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು ಎಂದು ವೀರಶೈವ ಲಿಂಗಾಯತ ಪಂಚಮಸಾಲಿಯ ಜಗದ್ಗುರು ಶ್ರೀ ವಚನಾನಂದ ಮಹಾಸ್ವಾಮಿಗಳು ತಿಳಿಸಿದರು. ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ತರಳಬಾಳು ಹುಣ್ಣಿಮೆ ಮಹೋತ್ಸವ ಕಾರ್ಯಕ್ರಮದ ಉದ್ಘಾಟನೆಯನ್ನು ಮಾಡಿ ಮಾತನಾಡಿದರು. ತರಳಬಾಳು ಹುಣ್ಣಿಮೆ ಮಹೋತ್ಸವವು 75 ವರ್ಷದ ಮಹೋತ್ಸವ ಕೊಟ್ಟೂರು ಸನ್ನಿಧಿ ಮೂಲದಲ್ಲಿ ನಡೆತ್ತಿರುವುದು ವಿಶೇಷವಾಗಿದೆ, ಜಗದ್ಗುರುಗಳ ವಿಶಾಲವಾದ ಚಿಂತನೆಯನ್ನು ಮೂಡಿಸುವ ಉದ್ದೇಶವಾಗಿದೆ ತರಳಬಾಳು ಹುಣ್ಣಿಮೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತದೆ, ಪೇಜಾವರ […] The post ಜಗತ್ತನ್ನು ಸುತ್ತುವರೆದ ಏಕೈಕ ಸ್ವಾಮೀಜಿ ತರಳಬಾಳು ಶ್ರೀಗಳು: ವಚನಾನಂದ ಶ್ರೀ appeared first on Sanjevani .
ನಂದಕಿಶೋರ್ ಜಿಲ್ಲೆಗೆ ಪ್ರಥಮ ಱ್ಯಾಂಕ್.
ಸಂಜೆವಾಣಿ ವಾರ್ತೆಕೂಡ್ಲಿಗಿ.ಜ. 29: ತಾಲೂಕಿನ ಗುಂಡಿನಹೊಳೆಯ ಜ್ಞಾನಾಮೃತ ಹಿರಿಯ ಪ್ರಾಥಮಿಕ ಶಾಲೆಯ ಎರಡನೇ ತರಗತಿ ವಿದ್ಯಾರ್ಥಿ ನಂದಕಿಶೋರ್, ಕರ್ನಾಟಕ ಅಕಾಡೆಮಿ ಆಫ್ ಮ್ಯಾಥಾಮ್ಯಾಟಿಕ್ಸ್ ನಡೆಸಿದ ಪರೀಕ್ಷೆಯಲ್ಲಿ ಜಿಲ್ಲಾ ಮಟ್ಟದ ಪ್ರಥಮ ಱ್ಯಾಂಕ್ ಪಡೆದಿದ್ದಾನೆ. ಈ ವಿದ್ಯಾರ್ಥಿ ಸಾಧನೆಗೆ ಪಾಲಕರು, ಪೋಷಕರು, ಶಾಲೆಯ ಆಡಳಿತ ಮಂಡಳಿ ಹಾಗೂ ಶಿಕ್ಷಕರು ಅಭಿನಂದನೆ ಸಲ್ಲಿಸಿದ್ದಾರೆ. The post ನಂದಕಿಶೋರ್ ಜಿಲ್ಲೆಗೆ ಪ್ರಥಮ ಱ್ಯಾಂಕ್. appeared first on Sanjevani .
ಅಕ್ರಮ ಮದ್ಯ ಮಾರಾಟ, ಅಬಕಾರಿ ಅಧಿಕಾರಿಗಳು ದಾಳಿ, ವ್ಯಕ್ತಿ ಬಂಧನ.
ಸಂಜೆವಾಣಿ ವಾರ್ತೆಕೂಡ್ಲಿಗಿ.ಜ.29 :- ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದ ವ್ಯಕ್ತಿ ಮೇಲೆ ಕೂಡ್ಲಿಗಿ ಅಬಕಾರಿ ಇಲಾಖೆ ಅಧಿಕಾರಿ ಸಿಬ್ಬಂದಿ ದಾಳಿ ನಡೆಸಿ ಓರ್ವ ವ್ಯಕ್ತಿಯನ್ನು ಬಂಧಿಸಿ ಆತನಿಂದ ಮದ್ಯ ವಶಪಡಿಸಿಕೊಂಡ ಘಟನೆ ತಾಲೂಕಿನ ಐಗಳ ಮಲ್ಲಾಪುರದಲ್ಲಿ ಶುಕ್ರವಾರ ಸಂಜೆ ಜರುಗಿದೆ.ಐಗಳ ಮಲ್ಲಾಪುರದ ಕುಮಾರಸ್ವಾಮಿ ಎಂಬಾತನೇ ಬಂಧಿತ ಆರೋಪಿಯಾಗಿದ್ದಾನೆ. ಈತನು ಅಕ್ರಮ ಮದ್ಯ ಮಾರಾಟದಲ್ಲಿ ತೊಡಗಿರುವ ಬಗ್ಗೆ ಖಚಿತ ಮಾಹಿತಿ ಆಧಾರಿಸಿ ಅಬಕಾರಿ ಇಲಾಖೆಯ ಮೇಲಧಿಕಾರಿಗಳ ಮಾರ್ಗದರ್ಶನ ಹಾಗೂ ನಿರ್ದೇಶನದಲ್ಲಿ ಶುಕ್ರವಾರ ಸಂಜೆ ಕೂಡ್ಲಿಗಿ ಅಬಕಾರಿ ಉಪನಿರೀಕ್ಷಕ ಬಸವರಾಜ […] The post ಅಕ್ರಮ ಮದ್ಯ ಮಾರಾಟ, ಅಬಕಾರಿ ಅಧಿಕಾರಿಗಳು ದಾಳಿ, ವ್ಯಕ್ತಿ ಬಂಧನ. appeared first on Sanjevani .
ರೈತ ಹೋರಾಟಗಾರ ಅಡಿವೆಪ್ಪನವರಿಗೆ ನುಡಿನಮನ
ಸಂಜೆವಾಣಿ ವಾರ್ತೆಹಗರಿಬೊಮ್ಮನಹಳ್ಳಿ, ಜ.29: ರೈತ ಹೋರಾಟಗಾರ ಅಡಿವೆಪ್ಪ ಚಳುವಳಿಯನ್ನು ಕಟ್ಟಿದವರು, ಚಳುವಳಿಯ ಹೆಸರಿನಲ್ಲಿ ಬದುಕನ್ನು ಕಟ್ಟಿಕೊಂಡವರಲ್ಲ. ಅವರಿಗೆ ಎಷ್ಟೇ ಬಡತನ, ಕಷ್ಟಗಳಿದ್ದರೂ ಚಳುವಳಿಗೆ ದ್ರೋಹ ಮಾಡದೇ ಬದ್ದತೆಯಿಂದ ಚಳುವಳಿ ಕಟ್ಟಿದರು. ಎಂದು ರೈತ ನಾಯಕ ಜೆ ಎಂ ವೀರ ಸಂಗಯ್ಯ ಹೇಳಿದರು.ಪಟ್ಟಣದ ಕೃಷಿಕ ಸಮಾಜ ಭವನದಲ್ಲಿ ನಾಗರಿಕ ವೇದಿಕೆಯಿಂದ ಶನಿವಾರ ನುಡಿ ನಮನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ ಎಷ್ಟೋ ಬಾರಿ ಹಸಿವಿನಲ್ಲೂ ಹೋರಾಟ ಮಾಡಿದ ಅಡಿವೆಪ್ಪ ಹೋರಾಟ ನಿಜಕ್ಕೂ ಶ್ಲಾಘನೀಯವಾದದ್ದು ಮತ್ತು ಅವರ ಹೋರಾಟಗಳಿಗೆ ಯಾವತ್ತೂ ಬೆಂಬಲಿಸಿದ […] The post ರೈತ ಹೋರಾಟಗಾರ ಅಡಿವೆಪ್ಪನವರಿಗೆ ನುಡಿನಮನ appeared first on Sanjevani .
ಸಂಜೆವಾಣಿ ವಾರ್ತೆಬಳ್ಳಾರಿ, ಜ.29: ರಕ್ತದಾನ ಎಲ್ಲಾ ದಾನಗಳಿಗಿಂತ ಶ್ರೇಷ್ಠ. ಏಕೆಂದರೆ ಇದು ಮಾನವನ ದೇಹದಲ್ಲಿ ಉತ್ಪತ್ತಿಯಾಗುವ ದ್ರವ ರೂಪದ ವಸ್ತು. ಬೇರೆ ವಸ್ತುಗಳ ರೀತಿ ಕೃತಕವಾಗಿ ಸೃಷ್ಟಿ ಮಾಡಲು ಸಾಧ್ಯವಿಲ್ಲ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು ಹೇಳಿದರು.ಅವರು ಇಂದು ರಾಷ್ಟ್ರೀಯ ವೈದ್ಯಕೀಯ ಸಂಘದಿಂದ ನೇತಾಜಿ ಸುಭಾಷ್ ಚಂದ್ರ ಅವರ ಜಯಂತಿ ಪ್ರಯುಕ್ತ ಹಮ್ಮಿಕೊಂಡಿದ್ದ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದರು.ಡಾಕ್ಟರ್ ರೇಣುಕಾ ಮಂಜುನಾಥ್,ಐ.ಎಂ.ಎ.ಅಧ್ಯಕ್ಷರು, ಡಾಕ್ಟರ್ ರಾಘವೇಂದ್ರ, ಗೋಪಿ.ಕೆ.ಶಿಕ್ಷಕರು, ಡಾಕ್ಟರ್ ಚಂದ್ರಶೇಖರ್ ಪಾಟೀಲ್, ಡಾಕ್ಟರ್ ನಿರ್ಮಲ್ […] The post ರಕ್ತದಾನ ಶ್ರೇಷ್ಠದಾನ appeared first on Sanjevani .
ಕರ್ನಾಟಕದಲ್ಲಿ ಬಿಜೆಪಿ ಅಲೆ ಎದ್ದಿದೆ ಬಸವರಾಜ ಬೊಮ್ಮಾಯಿ
ಹುಬ್ಬಳ್ಳಿ, ಜನವರಿ 29: ಕೇಂದ್ರ್ ಗೃಹ ಸಚಿವ ಅಮಿತ್ ಶಾ ಅವರ ಒಂದು ದಿನದ ಭೇಟಿ ಸಂಚಲನ ಉಂಟು ಮಾಡಿದ್ದು ಕರ್ನಾಟಕದಲ್ಲಿ ಬಿಜೆಪಿ ಅಲೆ ಎದ್ದಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.ಅವರು ಇಂದು ಹುಬ್ಬಳ್ಳಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು.ಕಿತ್ತೂರು ಕರ್ನಾಟಕದಲ್ಲಿ ಬಿಜೆಪಿ ಬಹಳ ಗಟ್ಟಿ ಹಾಗೂ ಪ್ರಬಲವಾಗಿದೆ. ಅದಕ್ಕೆ ಇನ್ನಷ್ಟು ಶಕ್ತಿ ಹುರುಪು ಹುಮ್ಮಸ್ಸನ್ನು ಅಮಿತ್ ಷಾ ನೀಡಿದ್ದಾರೆ. ಸಾರ್ವಜನಿಕರಲ್ಲಿ ಇರುವ ಭಾವನೆಗಳು ಎಲ್ಲಾ ಸಭೆಗಳಲ್ಲಿ ವ್ಯಕ್ತವಾಗಿದೆ ಎಂದರು.ಬಿಜೆಪಿ ಗೆಲವು ಖಂಡಿತಕಾಂಗ್ರೆಸ್ ನವರು ನಾವೇ ಅಧಿಕಾರಕ್ಕೆ ಬಂದೇಬಿಟ್ಟಿದ್ದೇವೆ […] The post ಕರ್ನಾಟಕದಲ್ಲಿ ಬಿಜೆಪಿ ಅಲೆ ಎದ್ದಿದೆ ಬಸವರಾಜ ಬೊಮ್ಮಾಯಿ appeared first on Sanjevani .
ಇಂದು ಸಂಜೆ ಹಂಪಿ ಉತ್ಸವಕ್ಕೆ ತೆರೆ
(ಸಂಜೆವಾಣಿ ಪ್ರತಿನಿಧಿಯಿಂದ)ಬಳ್ಳಾರಿ, ಜ.29: ವಿಜಯನಗರ ಸಾಮ್ರಾಜ್ಯದ ಗತ ವೈಭವವನ್ನು ಇಂದಿನ ಪೀಳಿಗೆಗೆ ಪರಿಚಯಿಸುವ ಉದ್ದೇಶದಿಂದ ವಿಶ್ವ ಪರಂಪರೆಯ ತಾಣ ಹಂಪಿಯಲ್ಲಿ ಮೂರು ದಿನಗಳ ಕಾಲ ಹಮ್ಮಿಕೊಂಡಿದ್ದ ಹಂಪಿ ಉತ್ಸವಕ್ಕೆ ಇಂದು ಸಂಜೆ ತೆರೆ ಬೀಳಲಿದೆ.ಹಂಪಿಯ ನಾಲ್ಕು ವೇದಿಕೆಗಳಲ್ಲಿ ಸಾವಿರಾರು ಕಲಾವಿದರಿಂದ ನೃತ್ಯ, ನಾಟಕ, ಹಾಡುಗಾರಿಕೆ, ಸುಗಮ ಸಂಗೀತ, ವಾದ್ಯಗೋಷ್ಟಿ ಮೊದಲಾದ ಸಾಂಸ್ಕೃತಿಕ ಕಾರ್ಯಕ್ರಮಗಳು, ವಸ್ತು, ಫಲ ಪುಷ್ಪ, ಮರಳು ಕಲಾಕೃತಿಗಳ ಪ್ರದರ್ಶನ, ಜಲ, ಸಾಹಸ ಕ್ರೀಡೆ, ಕುಸ್ತಿ ಪಂದ್ಯಾವಳಿ ಮೊದಲಾದವುಗಳ ಮೂಲಕ ಪ್ರವಾಸಿಗರ ಗಮನ ಸೆಳೆಯಿತು.ಇಂದು ಸಂಜೆ […] The post ಇಂದು ಸಂಜೆ ಹಂಪಿ ಉತ್ಸವಕ್ಕೆ ತೆರೆ appeared first on Sanjevani .
ಬೀದರ್ ಕೀರ್ತಿ ವಿಶ್ವಮಾನ್ಯವಾಗಲು ಬಿದ್ರಿ ಕಲೆ ಕಾರಣ: ಶಾ ರಶಿದ್ ಮಹಮ್ಮದ್ ಖಾದ್ರಿ
ಬೀದರ್:ಜ.29: ಬೀದರ್ ಜಿಲ್ಲೆಯ ಕೀರ್ತಿ 2011 ಹಾಗೂ 2023 ಎರಡು ಬಾರಿ ವಿಶ್ವಮಾನ್ಯವಾಗಲು 14ನೇ ಶತಮಾನದಿಂದ ಪ್ರಚಲಿತದಲ್ಲಿರುವ ಬಿದ್ರಿ ಕಲೆ ಮುಖ್ಯ ಕಾರಣವಾಗಿದೆ ಎಂದು ಪದ್ಮಶ್ರೀ ಪ್ರಶಸ್ತಿಗೆ ಭಾಜನರಾದ ಶಾ ರಶಿದ್ ಮಹಮ್ಮದ್ ಖಾದ್ರಿ: ತಿಳಿಸಿದರು.ನಗರದ ಹಳೆ ಸೀಟಿಯಲ್ಲಿರುವ ಗೋಲೆಖಾನಾ ಬಳಿಯ ಅವರ ನಿವಾಸದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಪದಾಧಿಕಾರಿಗಳಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಇದು ನನ್ನ ಪ್ರಶಸ್ತಿ ಅಲ್ಲ ಇಡೀ ಬೀದರ್ ಜಿಲ್ಲೆಯ ಜನತೆಗೆ ಸಂದ ಪ್ರಶಸ್ತಿಯಾಗಿದೆ ಎಂದು ಪುನರೂಚ್ಛರಿಸಿದ ಅವರು, ತನ್ನ […] The post ಬೀದರ್ ಕೀರ್ತಿ ವಿಶ್ವಮಾನ್ಯವಾಗಲು ಬಿದ್ರಿ ಕಲೆ ಕಾರಣ: ಶಾ ರಶಿದ್ ಮಹಮ್ಮದ್ ಖಾದ್ರಿ appeared first on Sanjevani .
ರಾಜ್ಯಮಟ್ಟದ ಜಾನಪದ ಪ್ರಶಸ್ತಿ ಪ್ರದಾನ
ಕಲಬುರಗಿ,ಜ.29-ಕನ್ನಡ ಜಾನಪದ ಪರಿಷತ್ ಬೆಂಗಳೂರು ಹಾಗೂ ಕನ್ನಡ ಜಾನಪದ ಪರಿಷತ್ ಜಿಲ್ಲಾ ಘಟಕ ಮೈಸೂರು ಇವರ ಸಂಯುಕ್ತಾಶ್ರಯದಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ಲಲಿತ ಕಲಾ ಕಾಜೇಜಿನ ಸಭಾಂಗಣದಲ್ಲಿ ರಾಜ್ಯ ಮಟ್ಟದ ಜಾನಪದ ಪ್ರಪಂಚ ಜಾನಪದ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಿತು.ಕಾರ್ಯಕ್ರಮವನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಉದ್ಘಾಟಿಸಿ ಕಲಬುರಗಿ ತಾಲ್ಲೂಕಿನ ಹಡಗಿಲ್ ಹಾರುತಿ ಗ್ರಾಮದ ಹಿರಿಯ ಜಾನಪದ ಕಲಾವಿದೆ ತಾರಾಬಾಯಿ ಬಸಣ್ಣಾ ಬಿಳಾಲಕರ ಅವರು ಸೇರಿದಂತೆ ಮತ್ತಿತರರ ಕಲಾವಿದರಿಗೆ ಪ್ರಶಸ್ತಿ ಪ್ರಧಾನ ಮಾಡಿದರು.ಕಾರ್ಯಕ್ರಮದಲ್ಲಿ ಮಾಜಿ ಸಚಿವ ಎಚ್.ಸಿ.ಮಹಾದೇವಪ್ಪ, ಸಫಾಯಿ ಕರ್ಮಚಾರಿ […] The post ರಾಜ್ಯಮಟ್ಟದ ಜಾನಪದ ಪ್ರಶಸ್ತಿ ಪ್ರದಾನ appeared first on Sanjevani .
ಹಂಪಿ ಉತ್ಸವದಲ್ಲಿ ಅರ್ಮಾನ್ ಮಲ್ಲಿಕ್ ಮೆನಿಯಾ
(ಸಂಜೆವಾಣಿ ವಾರ್ತೆ)ಹಂಪಿ(ವಿಜಯನಗರ)ಜ.29: ಹಂಪಿ ಉತ್ಸವದ ಎರಡನೇ ದಿನವಾದ ನಿನ್ನೆ ಸಂಜೆ ಗಾಯತ್ರಿ ವೇದಿಕೆಯಲ್ಲಿ ಬಾಲಿವುಡ್ ಗಾಯಕ ಅರ್ಮಾನ್ ಮಲ್ಲಿಕ್ ಮೇನಿಯಾ ಕಂಡುಬಂತು.ಅವರ ರಸಮಂಜರಿ ಕಾರ್ಯಕ್ರಮದಲ್ಲಿ 2022 ರಲ್ಲಿ ತೆರೆ ಕಂಡ ಹಿರೋ ಹಿಂದಿಚಿತ್ರ ‘ಮೈ ಹೂ ಹಿರೋ ತೇರಾ’ ಸನಮ್ ರೇ ಚಿತ್ರದ ‘ಉಹಾ ಹೇ ಪೆಹಲಿ ಬಾರ್’, ಇಮ್ರಾನ್ ಹಶ್ಮಿ ನಟನೆಯ ಜನ್ನತ್ -2 ಚಿತ್ರದ ‘ಮೈ ರಹೂ ಯಾ ನಾ ರಹ್ಞೂ’ ಅಜರ್ ಚಿತ್ರದ ‘ಬೋಲ್ ದೋ ನಾ ಜರಾ’ ಎಂ.ಎಸ್.ದೋನಿ ಅನ್ ಟೋಲ್ಡ್ […] The post ಹಂಪಿ ಉತ್ಸವದಲ್ಲಿ ಅರ್ಮಾನ್ ಮಲ್ಲಿಕ್ ಮೆನಿಯಾ appeared first on Sanjevani .
ರಥಸಪ್ತಮಿ, ಸೂರ್ಯಜಯಂತಿ, ವಧರ್ಂತಿ ಮಹೋತ್ಸವ
ಕಲಬುರಗಿ,ಜ.29-ಮಾಘ ಮಾಸದ ಶುಕ್ಲಪಕ್ಷದ ಸಪ್ತಮಿ ತಿಥಿಯಂದು ಭಗವಾನ್ ಸೂರ್ಯದೇವನ ಜನುಮದಿನ. ಅದೀತಿ ಕಾಶ್ಯಪ ಋಷಿ ದಂಪತಿಗಳ ಮಗನಾದ ಸೂರ್ಯನು ಕಳಿಂಗದೇಶದ ಅಧಿಪತ್ಯನಾಗಿ ಅರುಣನನ್ನು ಸಾರಥಿಯಾಗಿ ಮಾಡಿಕೊಂಡು ಸಪ್ತಾಶ್ವರೂಢನಾಗಿ ಏಕಚಕ್ರದ ರಥದಲ್ಲಿ ಉತ್ತರಕ್ಕೆ ಪಯಣಮಾಡುವನಾಗಿ ಬಿಸಿಲಿನ ಪ್ರಖರತೆಯನ್ನು ಹೆಚ್ಚಿಸಿ ಛಳಿಯ ತೀವ್ರತೆಯ ಕಡಿವಾಣಕ್ಕೆ ಕಾರಣನಾಗುವನು ಸಪ್ತಶ್ವರೂಢನಾದ ಸೂರ್ಯದೇವನು ಉತ್ತರ ದಿಕ್ಕಿನೆಡೆಗೆ ಪಯಣಿಸುತ್ತಾನೆ, ಸೂರ್ಯನಿಗೆ ಅತ್ಯಂತ ಪ್ರೀಯಕರವಾದ ಅರ್ಕ ಪತ್ರವನ್ನು ದೇಹಾಂಗದ ತಲೆಯಮೇಲೊಂದು, ಭುಜದ್ವಯಗಳಲ್ಲಿ ಎರೆಡು, ಎರಡು ತೊಡೆಯಮೇಲೆ, ಎರಡು ಪಾದಗಳ ಮೇಲೆ ಹೀಗೆ ಏಳು ಪತ್ರಗಳಿಂದ ಪ್ರಾಥಕ್ಕಾಲದಲ್ಲಿ ಸ್ನಾನ […] The post ರಥಸಪ್ತಮಿ, ಸೂರ್ಯಜಯಂತಿ, ವಧರ್ಂತಿ ಮಹೋತ್ಸವ appeared first on Sanjevani .
ಬಸ್ ಪ್ರವಾಸದ ಮೂಲಕ ಕ್ರಿಸ್ಮಸ್ & ಸಂಕ್ರಾಂತಿ ಹಬ್ಬ ಆಚರಿಸಿದ ದುಬೈ ಕನ್ನಡಿಗರು
ಹೆಮ್ಮೆಯ ದುಬೈ ಕನ್ನಡ ಸಂಘ ದುಬೈನಲ್ಲಿ ಸರ್ವ ಧರ್ಮ ಸ್ನೇಹಕೂಟ ಏರ್ಪಡಿಸಿತ್ತು. ಜನವರಿ 22 ರಂದು 3 ಬಸ್ಗಳಲ್ಲಿ ಪ್ರವಾಸ ಹೊರಟ ದುಬೈ ಕನ್ನಡಿಗರು, ದುಬೈನ ಹಲವೆಡೆ ಭೇಟಿ ನೀಡಿ ರಜೆಯ ಮಜಾ ಸವಿದರು. ಕ್ರಿಸ್ಮಸ್ ಹಾಗೂ ಸಂಕ್ರಾಂತಿ ಹಬ್ಬ ಆಚರಣೆ ಜೊತೆಗೆ ಕೆಲವರ ಹುಟ್ಟುಹಬ್ಬ ಕೂಡಾ ಆಚರಿಸಿಕೊಂಡರು.
ಹಂಪಿ ಉತ್ಸವ ವಿಚಾರ ಸಂಕಿರಣದಲ್ಲಿವಿಜಯನಗರ ಅಧ್ಯಯನದ ವಿಷಯ ಮಂಡನೆ
(ಸಂಜೆವಾಣಿ ವಾರ್ತೆ)ಬಳ್ಳಾರಿ: ಹಂಪಿ ಉತ್ಸವದ ಅಂಗವಾಗಿ ನಿನ್ನೆ ಹಂಪಿಯ ಕಮಲಮಹಲ್ ಬಳಿ ಜಿಲ್ಲಾಡಳಿತದ ಸಹಕಾರದಿಂದ ಪುರಾತತ್ವ ಇಲಾಖೆಯಿಂದ ವಿಜಯನಗರ ಅಧ್ಯಯನ ಕುರಿತ ವಿಚಾರ ಸಂಕಿರಣ ನಡೆಯಿತು.ಕರ್ನಾಟಕ ಇತಿಹಾದ ಅಕಾಡೆಮಿಯ ಜಿಲ್ಲಾ ಅಧ್ಯಕ್ಷ ಟಿ.ಹೆಚ್ಎಂ.ಬಸವರಾಜ್ ಅವರು ಇದರಲ್ಲಿ ಪೂರ್ವ ಕರ್ನಾಟಕದ ಗಡಿಗೆರೆಗಳ ಕೃತಿಯಲ್ಲಿ ವಿಜಯನಗರದ ಉಲ್ಲೇಖ ಕುರಿತು ವಿಷಯ ಮಂಡನೆ ಮಾಡಿದರು.ಪುರಾತತ್ವ ಇಲಾಖೆಯ ನಿರ್ದೇಶಕ ಡಾ.ಆರ್.ಗೋಪಾಲ್, ಉಪ ನಿರ್ದೇಶಕ ಮಂಜ್ಯಾನಾಯ್ಕ ಅಲ್ಲದೆ. ಸಿ.ಮಹದೇವ್, ಲಕ್ಷ್ಮಣ ತೆಲಗಾವಿ, ಆರ್.ಎಂ.ಷಡಾಕ್ಷರಯ್ಯ, ಕೇಶವ್, ಹರಿಹರ ಶ್ರೀನಿವಾಸ ಮೂರ್ತಿ, ಡಾ.ವಿ.ಸಂದ್ಯಾ ಡಾ.ಸ್ಮಿತಾರೆಡ್ಡಿ, ಡಾ.ಪದ್ಮಜಾ ದೇಸಾಯಿ, […] The post ಹಂಪಿ ಉತ್ಸವ ವಿಚಾರ ಸಂಕಿರಣದಲ್ಲಿ ವಿಜಯನಗರ ಅಧ್ಯಯನದ ವಿಷಯ ಮಂಡನೆ appeared first on Sanjevani .
12 ನೇ ವಾರ್ಡಿನಲ್ಲಿ ಬಿಜೆಪಿ ಅಭಿಯಾನ
(ಸಂಜೆವಾಣಿ ವಾರ್ತೆ)ಬಳ್ಳಾರಿ: ನಗರದ 15ನೇ ವಾರ್ಡಿನ 123ನೇ ಬೂತ್ ಮರಿಸ್ವಾಮಿ ಮಠ ಮಹಾಶಕ್ತಿ ಕೇಂದ್ರದಲ್ಲಿ ಬಿಜೆಪಿ ಮುಖಂಡರು, ಕಾರ್ಯಕರ್ತರು ಮನೆ ಮನೆಗೆ ತೆರಳಿ ಕೇಂದ್ರ ಮತ್ತು ರಾಜ್ಯ ಸರ್ಕಾರ ದೇಶದ ಮತ್ತು ಜನರ ಅಭ್ಯುದಯಕ್ಕೆ ಕೈಗೊಂಡ ಯೋಜನೆಗಲಕ ಮಾಹಿತಿಯ ಕರಪತ್ರ ಹಂಚುವುದು, ಅಲ್ಲದೆ ಮನೆ, ಕಾರ್, ಬೈಕ್ಗಳಿಗೆ ಸ್ಟಿಕರ್ ಅಂಟಿಸುವುದು ಮತ್ತು ಸದಸ್ಯತ್ವ ನೋಂದಣಿ ಮೂಲಕ “ವಿಜಯ ಸಂಕಲ್ಪ ಅಭಿಯಾನ ನಡೆಸಿದರು.ಈ ಸಂದರ್ಭದಲ್ಲಿ ಬಳ್ಳಾರಿ ಜಿಲ್ಲಾ ಬಿಜೆಪಿ ಮಾಧ್ಯಮ ಸಹ ಸಂಚಾಲಕರು.123 ನೇ ಬೂತ್ ಅಧ್ಯಕ್ಷರು ಹಾಗೂ […] The post 12 ನೇ ವಾರ್ಡಿನಲ್ಲಿ ಬಿಜೆಪಿ ಅಭಿಯಾನ appeared first on Sanjevani .
ಹಿರಿ ಕಿರಿಯ ಕಲಾವಿದರ ಸಮಾಗಮದ ಸಾಯದವನ ಸಮಾಧಿ
(ಸಂಜೆವಾಣಿ ಪ್ರತಿನಿಧಿಯಿಂದ)ಬಳ್ಳಾರಿ, ಜ 29: ಹಿರಿಯ ರಂಗ ಕಲಾವಿದ ಎಂಬತ್ತರ ಹರೆಯದ ರಮೇಶ್ ಗೌಡ ಪಾಟೀಲ್ ಮತ್ತು ಹತ್ತರ ಹರೆಯದ ಸುಯೋಗ್ ವಿ. ಗೌಡ ಅವರ ನಟನೆಯ. ಶಿವೇಶ್ವರಗೌಡ ಕಲ್ಕಂಬ ಅವರ ನಿರ್ದೇಶನದಲ್ಲಿ ಡಾ.ಜೋಳದರಾಶಿ ದೊಡ್ಡನಗೌಡ ರಚನೆಯ, “ಸಾಯದವನ ನಾಟಕ” ನಿನ್ನೆ ಸಂಜೆ ನಗರದ ರಾಘವ ಕಲಾ ಮಂದಿರದಲ್ಲಿ ಪ್ರದರ್ಶನಗೊಂಡು ನೆರೆದ ಪ್ರೇಕ್ಷಕರ ಮನಸೂರೆಗೊಂಡಿತು.ನಗರದ ರಾಘವ ಮೆಮೋರಿಯಲ್ ಅಸೋಸಿಯೇಷನ್ ತನ್ನ ಅಮೃತ ಮಹೋತ್ಸವದ ಅಂಗವಾಗಿ ಇದನ್ನು ಆಯೋಜಿಸಿತ್ತು.ರಮೇಶ್ ಗೌಡ ಅವರು ತಮ್ಮ ಹಲವು ದಶಕಗಳ ನಟನಾನುಭವದಿಂದ ಕವಿರಾಜ […] The post ಹಿರಿ ಕಿರಿಯ ಕಲಾವಿದರ ಸಮಾಗಮದ ಸಾಯದವನ ಸಮಾಧಿ appeared first on Sanjevani .
The post 29012023 Ballari appeared first on Sanjevani .
ಸಹಕಾರಿ ರಂಗದ ಕೊಡುಗೆಬಹಳ: ಡಾ.ನಾಗೇಶ ಪಾಟೀಲ
ಬೀದರ, ಜ 29: .ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಜನರಿಗೆ ಉತ್ತಮ ಸೌಲಭ್ಯಗಳನ್ನು ನೀಡುವಲ್ಲಿ ದೇಶದ ಆರ್ಥಿಕ ಪ್ರಗತಿಯಲ್ಲಿ ಸಹಕಾರಿ ರಂಗದ ಕೊಡುಗೆಬಹಳವಿದೆ. ಜನರಿಗೆಪ್ರಾಮಾಣಿಕ ಮತ್ತು ಸುಲಭ ಸೇವೆಗಳನ್ನು ನೀಡುವಲ್ಲಿ ಬೀದರ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕು ಮಾದರಿಯಾಗಿದೆ. ಇದರಿಂದಸಂಸ್ಥೆಯ ಇಮೇಜು ಹೆಚ್ಚಾಗುವುದಲ್ಲದೆ ಜನರಲ್ಲಿ ವಿಶ್ವಾಸ ಮೂಡಿಸುವ ಕೆಲಸವಾಗುತ್ತದೆ ಎಂದುಭಾರತೀಯ ಕುಟುಂಬ ಯೋಜನಾ ಸಂಘದ ಅಧ್ಯಕ್ಷ ಡಾನಾಗೇಶ ಪಾಟೀಲ ಅವರು ನುಡಿದರು.ಡಾ. ಗುರುಪಾದಪ್ಪಾ ನಾಗಮಾರಪಳ್ಳಿ ಸೌಹಾರ್ದ ತರಬೇತಿಸಂಸ್ಥೆಯಲ್ಲಿ ಕಲಬುರ್ಗಿಯ ಕರ್ನಾಟಕ ಇನಸ್ಟಿಟ್ಯೂಟ ಅಫಕೋಪರೇಟಿವ ಮ್ಯಾನೇಜಮೆಂಟ ಸಂಸ್ಥೆಯ ವತಿಯಿಂದ ಬ್ಯಾಂಕುಅಧಿಕಾರಿಗಳಿಗೆ […] The post ಸಹಕಾರಿ ರಂಗದ ಕೊಡುಗೆಬಹಳ: ಡಾ.ನಾಗೇಶ ಪಾಟೀಲ appeared first on Sanjevani .
ಮೂವರು ಮಕ್ಕಳೊಂದಿಗೆ ತಾಯಿ ಆತ್ಮಹತ್ಯೆ
ವಿಜಯಪುರ, ಜ 29: ಮೂರು ಮಕ್ಕಳೊಂದಿಗೆ ನೀರಿನ ಸಂಪ್ಗೆ ಹಾರಿ ಮಹಿಳೆ ಆತ್ಮಹತ್ಯೆ ಮಾಡಿಕೊಂಡ ಘಟನೆ ತಿಕೋಟಾ ತಾಲೂಕಿನ ವಿಠಲವಾಡಿ ತಾಂಡಾದಲ್ಲಿ ನಡೆದಿದೆ.ಜಾಲಗೇರಿ ಗ್ರಾಮದ ಬಳಿಯ ವಿಠಲವಾಡಿ ತಾಂಡಾ ನಿವಾಸಿಗೀತಾ ರಾಮು ಚೌವ್ಹಾಣ (32) ಸೃಷ್ಠಿ (6) ಸಮರ್ಥ (4) ಕಿಶನ್ (3) ಮೃತರು ಎಂದು ಗುರುತಿಸಲಾಗಿದೆ.ಕೌಟುಂಬಿಕ ಕಲಹವೇ ಆತ್ಮಹತ್ಯೆಗೆ ಕಾರಣ ಎಂದು ಗೊತ್ತಾಗಿದೆ.ನಿನ್ನೆ ರಾತ್ರಿ ಪತಿಯೊಂದಿಗೆ ಜಗಳ ಮಾಡಿದ್ದ ಪತ್ನಿ ಗೀತಾ,ಪತಿ ರಾಮು ಮಲಗಿದ್ದ ವೇಳೆ ಮೂವರು ಮಕ್ಕಳನ್ನು ನೀರಿನ ಸಂಪ್ಗೆ ಎಸೆದು ಬಳಿಕ ಸಂಪ್ […] The post ಮೂವರು ಮಕ್ಕಳೊಂದಿಗೆ ತಾಯಿ ಆತ್ಮಹತ್ಯೆ appeared first on Sanjevani .
The post 29012023 Davanagere appeared first on Sanjevani .
ಕಲಬುರಗಿ, ಜ 29: ಜಿಲ್ಲೆಯ ಯಡ್ರಾಮಿ ತಾಲೂಕಿನ ಸುಕ್ಷೇತ್ರ ದುಮ್ಮದ್ರಿ ಗ್ರಾಮದ ವರಹಳ್ಳೇರಾಯ ದೇವಸ್ಥಾನದಲ್ಲಿ ನಾಳೆ ( ಜ. 30 .ಸೋಮವಾರ )ಮಧ್ವನವಮಿ ಉತ್ಸವ ಜರುಗುವದು.ಉತ್ಸವದ ನಿಮಿತ್ತ ಪವಮಾನ ಹೋಮ, ಪಲ್ಲಕ್ಕಿ ಉತ್ಸವ,ರಥೋತ್ಸವ ನಡೆಯಲಿದೆ .ರಥಸಪ್ತಮಿ ಅಂಗವಾಗಿ ಶನಿವಾರ ವರಹಳ್ಳೇರಾಯ ದೇವಸ್ಥಾನದಲ್ಲಿ ವಿಶೇಷ ಪೂಜೆ, ಅಲಂಕಾರ ಹಮ್ಮಿಕೊಳ್ಳಲಾಯಿತು.ಅನೇಕ ಭಕ್ತರು ಆಗಮಿಸಿ ದೇವರ ದರ್ಶನ ಪಡೆದು ಪುನೀತರಾದರು.ಗುರಾಚಾರ್ಯ ಜೋಶಿ,ತಿರುಮಲಾಚಾರ್ಯ ಜೋಶಿ,ಪ್ರಾಣೇಶರಾವ ಕುಲಕರ್ಣಿ,ರಾಮರಾವ ದೇಶಪಾಂಡೆ,ರಾಘವೇಂದ್ರರಾವ ಕುಲಕರ್ಣಿ,ಶ್ರೀನಿವಾಸ ಕುಲಕರ್ಣಿ,ದೇವಾನಂದ ಕುಲಕರ್ಣಿ ಅವರು ಸೇರಿದಂತೆ ಅನೇಕರು ಪಾಲ್ಗೊಂಡರು ಎಂದು ಉತ್ಸವ ಸಮಿತಿ ತಿಳಿಸಿದೆ. The post ದುಮ್ಮದ್ರಿಯಲ್ಲಿ ಮಧ್ವನವಮಿ ನಾಳೆ appeared first on Sanjevani .
ನಾಳೆ ಕೃಷ್ಣಮಂದಿರದಲ್ಲಿ ಮಧ್ವನವಮಿ ಉತ್ಸವ
ಕಲಬುರಗಿ, ಜ 29: ಇಲ್ಲಿನ ವಿದ್ಯಾನಗರದ ಅಖಿಲ ಭಾರತ ಮಾಧ್ವ ಮಹಾ ಮಂಡಲ ಶ್ರೀ ಜಯತೀರ್ಥ ವಿದ್ಯಾರ್ಥಿ ನಿಲಯ ಶ್ರೀಕೃಷ್ಣ ಮಂದಿರ ಹಾಗೂ ಶ್ರೀ ಹನುಮ ಭೀಮ ಮಧ್ವ ದೇವಸ್ಥಾನದಲ್ಲಿ ನಾಳೆ ( ಜ 30) ಮಧ್ವ ನವಮಿ ಉತ್ಸವ ಆಚರಿಸಲಾಗುವುದು.ಈ ಪ್ರಯುಕ್ತ ಮಧು ಹಾಗು ಕಬ್ಬಿನ ಹಾಲಿನ ಅಭಿಷೇಕ, ವಾಯುಸ್ತುತಿ ಪುನಶ್ಚರಣ, ಭಜನೆ, ಪಂಡಿತರಾದ ಗುರು ಮಧ್ವಾಚಾರ್ಯ ನವಲಿ, ಪಂಡಿತ ಪ್ರಸನ್ನ ಆಚಾರ್ಯ ಅವರಿಂದ ಪ್ರವಚನ ಹಾಗೂ ವ್ಯಾಸರಾಜ ಸಂತೇಕೆಲ್ಲೂರ್ ಅವರಿಂದ ಶ್ರೀ ಮಧ್ವಾಚಾರ್ಯರ ಬಗ್ಗೆ […] The post ನಾಳೆ ಕೃಷ್ಣಮಂದಿರದಲ್ಲಿ ಮಧ್ವನವಮಿ ಉತ್ಸವ appeared first on Sanjevani .
ಜೆಡಿಎಸ್ ಪಾಳಯದಲ್ಲಿ ಕಿಡಿ ಹಚ್ಚಿದ್ರಾ ಎಸ್ ಆರ್ ರೆಡ್ಡಿ
ರಾಯಚೂರು.ಜ.- ಸಾಮಾನ್ಯರಿಗೆ ಮೀಸಲಾಗಿರುವ ನಗರ ಕ್ಷೇತ್ರವನ್ನು ಜೆಡಿಎಸ್ ಪಕ್ಷದ ಬೆಂಬಲದಿಂದ ಎಸ್ ಆರ್ ರೆಡ್ಡಿಯವರು ತಮ್ಮ ಹಿಡಿತಕ್ಕೆ ತೆಗೆದುಕೊಳ್ಳುವ ಸಾಹಸ ಮಾಡುತ್ತಿದ್ದಾರೆ ಎಂದು ಗೊತ್ತಾಗುತ್ತಿದಂತೆ ನಗರ ಕ್ಷೇತ್ರದ ಜೆಡಿಎಸ್ ಪಾಳಯದಲ್ಲಿ ಕಿಡಿ ಹಚ್ಚಿದ್ದಾರೆ ಎಂದು ತಿಳಿದು ಹಲವಾರು ಕಾರ್ಯಕರ್ತರ ಕೆಂಗಣ್ಣಿಗೆ ಎಸ್ ಆರ್ ರೆಡ್ಡಿ ಗುರಿಯಾಗಿದ್ದಾರೆ ಎನ್ನಲಾಗಿದೆ.ನಗರ ಕ್ಷೇತ್ರದಲ್ಲಿ ಎಸ್ ಆರ್ ರೆಡ್ಡಿ ಎಂಟ್ರಿಯಿಂದ ಜೆಡಿಎಸ್ ಪಕ್ಷದಲ್ಲಿ ಹಲವಾರು ಗೊಂದಲಗಳಿಗೆ ಕಾರಣವಾಗಿದ್ದು ಸತ್ಯ, ನಗರಸಭೆ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿ ಜೆಡಿಎಸ್ ಪಕ್ಷ ಸೇರ್ಪಡೆಯಾದ ವಿನಯ್ ಕುಮಾರ್ […] The post ಜೆಡಿಎಸ್ ಪಾಳಯದಲ್ಲಿ ಕಿಡಿ ಹಚ್ಚಿದ್ರಾ ಎಸ್ ಆರ್ ರೆಡ್ಡಿ appeared first on Sanjevani .
ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡದೇ ಇರುವುದು ಖಂಡನೀಯ
ರಾಯಚೂರು,ಜ.೨೯- ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಅವರು ಜನವರಿ ೨೭ ರಂದು ಪಂಚರತ್ನ ಯಾತ್ರೆ ಮೆರವಣಿಗೆ ಸಂದರ್ಭದಲ್ಲಿ ನಗರದ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ವೃತ್ತದಲ್ಲಿ ಬಂದು ಅದ್ದೂರಿಯಾಗಿ ಸ್ವಾಗತ ಮಾಡಿಕೊಂಡಿದ್ದಾರೆ. ಆದರೆ ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡದೇ ಅವಮಾನ ಮಾಡಿರುವುದು ಖಂಡನೀಯ ಎಂದು ರಾಯಚೂರು ಉಸ್ಮಾನಿಯಾ ತರಕಾರಿ ಮಾರಾಟಗಾರರ ಸಂಘದ ಅಧ್ಯಕ್ಷ ಎನ್ ಮಹಾವೀರ್ ಹೇಳಿದರು.ಅವರಿಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ, ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಕುಮಾರಸ್ವಾಮಿ ಅವರು ಪಂಚರತ್ನ ಯಾತ್ರೆಯು ಜನವರಿ ೨೭ ರಂದು […] The post ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡದೇ ಇರುವುದು ಖಂಡನೀಯ appeared first on Sanjevani .
ಕಲ್ಯಾಣ ಕರ್ನಾಟಕ ಭಾಗದಲ್ಲಿ ಗಜಲ್ ಪರಂಪರೆ ಅಪಾರ
ನಿದಿರೆ ಇರದ ಇರಳು ಕೃತಿ ಲೋಕಾರ್ಪಣೆರಾಯಚೂರು, ಜ.೨೯- ರಾಯಚೂರು ಸಾಹಿತ್ಯ ಕ್ಷೇತ್ರ ಅತ್ಯಂತ ಚಿಕ್ಕದು ಆದರೆ ಇಲ್ಲಿನ ಹಿರಿಯ ಸಾಹಿತ್ಯಗಳ ಪಾತ್ರ ಅಪಾರ ಕಲ್ಯಾಣ ಕರ್ನಾಟಕ ಭಾಗದಲ್ಲಿ ಗಜಲ್ ಪರಂಪರೆ ಹೆಚ್ಚು ಬೆಳೆದಿದೆ.ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಹಾಗೂ ಆಕಾಶವಾಣಿ ಕೇಂದ್ರದ ಮುಖ್ಯಸ್ಥ ಡಾ. ಎಂ. ಬಿ. ಶರಬೇಂದ್ರಯ್ಯ ಅವರು ಹೇಳಿದರು. ಅವರಿಂದು ನಗರದ ಕನ್ನಡ ಭವನದಲ್ಲಿ ಹಮ್ಮಿಕೊಂಡಿದ್ದ ಮಂಡಲಗಿರಿ ಪ್ರಸನ್ನ ಅವರ ನಿದಿರೆ ಇರದ ಇರಳು ಕೃತಿ ಲೋಕಾರ್ಪಣೆಗೊಳಿಸಿ ಮಾತನಾಡಿದರು. ಗಜಲ್ ಕಲ್ಯಾಣ ಕರ್ನಾಟಕ ಭಾಗದಲ್ಲಿ […] The post ಕಲ್ಯಾಣ ಕರ್ನಾಟಕ ಭಾಗದಲ್ಲಿ ಗಜಲ್ ಪರಂಪರೆ ಅಪಾರ appeared first on Sanjevani .
ಸವಿತಾ ಸಮಾಜ ಇತರೇ ಸಮಾಜದೊಂದಿಗೆ ಅನನ್ಯ
ರಾಯಚೂರು,ಜ.೨೮- ಸವಿತಾ ಸಮಾಜ ಇತರೇ ಸಮಾಜದ ಜೊತೆಯಲ್ಲಿ ಒಳ್ಳೆಯ ಅನನ್ಯತೆಯೊಂದಿಗೆ ಹೊಂದುಕೊಂಡು ಹೋಗುವ ಸಮಾಜವಾಗಿದೆ.ಸವಿತಾ ಮಹರ್ಷಿ ಅವರ ಇತಿಹಾಸವನ್ನು ಜನತೆಗೆ ತಿಳಿಸುವ, ಪರಿಚಯಿಸುವ ಕೆಲಸವಾಗಲಿ ಎಂದು ಶಾಸಕ ಡಾ.ಎಸ್.ಶಿವರಾಜ ಪಾಟೀಲ್ ಅವರು ಹೇಳಿದರು.ಜಿಲ್ಲಾಡಳಿತ, ಜಿಲ್ಲಾ ಪಂಚಾ ಯತ್, ನಗರಸಭೆ ಹಾಗೂ ಕನ್ನಡಮತ್ತು ಸಂಸ್ಕೃತಿ ಇಲಾಖೆಯ ವತಿ ಯಿಂದ ಹಮ್ಮಿಕೊಂಡಿದ್ದ ಶನಿವಾರ ನಗರದ ಕನ್ನಡಭವನದಲ್ಲಿ ಹಮ್ಮಿಕೊಂಡಿದ್ದ ಸವಿತಾ ಮಹರ್ಷಿ ಜಯಂತಿ ಕಾರ್ಯಮವನ್ನು ಉದ್ಘಾಟಿಸಿ ಅವರು ಮಾತನಾಡಿ, ಮಹರ್ಷಿ ಸವಿತಾ ಸಮಾಜವು ಬಹಳ ಚಿಕ್ಕ ಸಮಾಜ ವಾದರೂ ಬಹಳಸಮಾಜವಾಗಿದೆ.ಸವಿತಾ ಸಮಾಜದ […] The post ಸವಿತಾ ಸಮಾಜ ಇತರೇ ಸಮಾಜದೊಂದಿಗೆ ಅನನ್ಯ appeared first on Sanjevani .
ವಕೀಲ ರಂಗಪ್ಪ ಅವರಿಗೆ ಫಿಲಾಸಫಿ ಪ್ರಶಸ್ತಿ ಪ್ರದಾನ
ರಾಯಚೂರು,ಜ.೨೯- ಭಾರತೀಯ ದಲಿತ ಸಾಹಿತ್ಯ ಅಕಾಡೆಮಿ ವತಿಯಿಂದ ಭಾರತ ಆಹಾರ ನಿಗಮದ ಸದಸ್ಯರು ಹಾಗೂ ಲೋಕಜನಶಕ್ತಿ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ವಕೀಲ ಜಿ.ಎಲ್ ರಂಗಪ್ಪ ಅವರಿಗೆ ಡಾ.ಬಿ.ಆರ್.ಅಂಬೇಡ್ಕರ್ ಫಿಲಾಸಫಿ ರಾಷ್ಟ್ರೀಯ ಪ್ರಶಸ್ತಿ ನೀಡಲಾಯಿತು.ಸಮಾಜ ಸೇವೆಯನ್ನು ಗುರುತಿಸಿ ನವದೆಹಲಿಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಫಿಲಾಸಫಿ ರಾಷ್ಟ್ರೀಯ ಪ್ರಶಸ್ತಿಯನ್ನು ಭಾರತೀಯ ದಲಿತ ಸಾಹಿತ್ಯ ಅಕಾಡೆಮಿಯ ರಾಷ್ಟ್ರೀಯ ಅಧ್ಯಕ್ಷರಾದ ಸಮಾನಕ್ಷರಿ ಅವರ ನೇತೃತ್ವದಲ್ಲಿ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. The post ವಕೀಲ ರಂಗಪ್ಪ ಅವರಿಗೆ ಫಿಲಾಸಫಿ ಪ್ರಶಸ್ತಿ ಪ್ರದಾನ appeared first on Sanjevani .
ಕುಮಾರಣ್ಣನಿಗೆ ಭರ್ಜರಿ ರೋಡ್ ಶೋ ಸ್ವಾಗತ
ಸಿಂಧನೂರು ಜೆಡಿಎಸ್ ಹಸಿರುಮಯಸಿಂಧನೂರು,ಜ.೨೯-ಮಾಜಿ ಮುಖ್ಯಮಂತ್ರಿಗಳಾದ ಕುಮಾರ ಸ್ವಾಮಿಯವರ ಪಂಚರತ್ನ ಯೋಜನೆಯ ರಥ ಯಾತ್ರೆ ಗ್ರಾಮ ವಾಸ್ತವ್ಯ ಕಾರ್ಯಕ್ರಮ ತಾಲ್ಲೂಕಿನಲ್ಲಿ ಇಂದು ಹಮ್ಮಿಕೊಂಡಿದ್ದು ಕುಮಾರಣ್ಣನಿಗಾಗಿ ನಗರದಲ್ಲಿ ಭರ್ಜರಿ ಸ್ವಾಗತ ಮಾಡಲು ಜೆಡಿಎಸ್ ಪಕ್ಷ ಸಕಲ ಸಿದ್ಧತೆ ಮಾಡಿಕೊಂಡಿದ್ದು ಕಂಡುಬಂದಿದೆ.ಪಂಚರತ್ನ ಯಾತ್ರೆಯ ಮೂಲಕ ಇಡೀ ರಾಜ್ಯದಾದ್ಯಂತ ಜೆಡಿಎಸ್ ನಾಯಕರಾದ ಕುಮಾರ ಸ್ವಾಮಿ ಪಕ್ಷದ ರಾಜ್ಯ ಅಧ್ಯಕ್ಷರಾದ ಸಿ.ಎಂ,ಇಬ್ರಾಹಿಂ ಸೇರಿದಂತೆ ಪಕ್ಷದ ಇನ್ನಿತರ ಮುಖಂಡರ ಜೊತೆ ಗೂಡಿ ರಾಜ್ಯದಾದ್ಯಂತ ಪ್ರವಾಸ ಮಾಡಿ ಪಕ್ಷ ಅಧಿಕಾರಕ್ಕೆ ಬಂದರೆ ಪಂಚರತ್ನ ಯೋಜನೆಯ ಜಾರಿಗೊಳಿಸುವ ಸಂಬಂಧ […] The post ಕುಮಾರಣ್ಣನಿಗೆ ಭರ್ಜರಿ ರೋಡ್ ಶೋ ಸ್ವಾಗತ appeared first on Sanjevani .
The post 29012023 Vijayanagara appeared first on Sanjevani .
The post 23012023 Bangalore appeared first on Sanjevani .
ಸಿದ್ದೇಶ್ವರ ಶ್ರೀಗಳಿಗೆ ಚಿತ್ರನಮನ ಅರ್ಥಪೂರ್ಣ:ಡಾ ಕಲ್ಯಾಣರಾವ ಪಾಟೀಲ
ಕಲಬುರಗಿ:ಜ.29: ಶಿವೈಕ್ಯರಾದವಿಜಯಪುರ ಜಾನಯೋಗಾಶ್ರಮದ ಶ್ರೀ ಸಿದ್ದೇಶ್ವರ ಸ್ವಾಮೀಜಿ ಅವರಿಗೆಚಿತ್ರಕಲಾವಿದರು ಸ್ವಾಮೀಜಿ ಅವರ ಪ್ರವಚನ ಆಧಾರಿತ ಚಿತ್ರಗಳನ್ನು ರಚಿಸಿ ನಮನ ಸಲ್ಲಿಸಿರುವುದು ಅರ್ಥಪೂರ್ಣವಾಗಿದೆ ಎಂದು ಹಿರಿಯ ಸಾಹಿತಿ ಡಾ ಕಲ್ಯಾಣರಾವ ಪಾಟೀಲ ಹೇಳಿದರು. ನಗರದ ಚೈತನ್ಯಮಯಿ ಆರ್ಟ ಗ್ಯಾಲರಿಯಲ್ಲಿ ಹಿರಿಯ ಚಿತ್ರಕಲಾವಿದ ಡಾ.ಎ.ಎಸ್. ಪಾಟೀಲ್ ಅವರು ಸ್ವಾಮೀಜಿ ಪ್ರವಚನ ಆಧಾರಿತ ರಚಿಸಿ, ಚೈತನ್ಯಮಯಿ ಟ್ರಸ್ಟ್ ಹಾಗೂ ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ಸಹಯೋಗದೊಂದಿಗೆ ಜಾನಯೋಗಾಶ್ರಮ ವಿಜಯಪುರ ಶ್ರೀ ಸಿದ್ದೇಶ್ವರ ಶ್ರೀಗಳಿಗೆ ಚಿತ್ರನಮನ ಏರ್ಪಡಿಸಿದ ಚಿತ್ರನಮನ ಕಾರ್ಯಕ್ರಮದಲ್ಲಿ ಮಾತನಾಡಿದರು. ಅಗಾಧವಾದ […] The post ಸಿದ್ದೇಶ್ವರ ಶ್ರೀಗಳಿಗೆ ಚಿತ್ರನಮನ ಅರ್ಥಪೂರ್ಣ:ಡಾ ಕಲ್ಯಾಣರಾವ ಪಾಟೀಲ appeared first on Sanjevani .
ಸಮ್ಮೇಳನ ಉದ್ಘಾಟನೆಗೆ ಖಂಡಿತವಾಗಿ ಬರುವೆ : ಸಿಎಂ ಬೊಮ್ಮಾಯಿ
ವಿಜಯಪುರ :ಜ.29:ನಗರದಲ್ಲಿ ಫೆ.4 ಮತ್ತು 5 ರಂದು ನಡೆಯಲಿರುವ 37 ನೇ ರಾಜ್ಯ ಮಟ್ಟದ ಪತ್ರಕರ್ತರ ಸಮ್ಮೇಳನ ಉದ್ಘಾಟನೆಗೆ ಖಂಡಿತವಾಗಿಯೂ ಆಗಮಿಸುವುದಾಗಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಸ್ಪಷ್ಟ ಭರವಸೆ ನೀಡಿದರು.ಸಮ್ಮೇಳನದ ಆಮಂತ್ರಣ ಪತ್ರಿಕೆ ನೀಡಿ ಅಧಿಕೃತ ಆಮಂತ್ರಣ ನೀಡಲು ಭಾನುವಾರ ಇಲ್ಲಿನ ಆದರ್ಶನಗರದ ಸಿಎಂ ಅಧಿಕೃತ ನಿವಾಸದಲ್ಲಿ ಭೇಟಿ ಮಾಡಿದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಸಂಗಮೇಶ ಟಿ. ಚೂರಿ ನೇತೃತ್ವದ ನಿಯೋಗಕ್ಕೆ ಸಿಎಂ ಈ ಭರವಸೆ ನೀಡಿದರು. ವಿಜಯಪುರ ಜ್ಞಾನಯೋಗಾಶ್ರಮದ ಶ್ರೀ ಸಿದ್ದೇಶ್ವರ ಸ್ವಾಮೀಜಿಯವರು […] The post ಸಮ್ಮೇಳನ ಉದ್ಘಾಟನೆಗೆ ಖಂಡಿತವಾಗಿ ಬರುವೆ : ಸಿಎಂ ಬೊಮ್ಮಾಯಿ appeared first on Sanjevani .
ಮಕ್ಕಳಲ್ಲಿ ಮೌಲ್ಯಯುತ ಶಿಕ್ಷಣ ಬಿತ್ತುತ್ತಿರುವ ಸರ್ವಜ್ಞ ಶಿಕ್ಷಣ ಸಂಸ್ಥೆ: ಶಾಸಕ ರೇವೂರ ಶ್ಲಾಘನೆ
ಕಲಬುರಗಿ: ಜ.29:ನಗರದ ಸರ್ವಜ್ಞ ಚಿಣ್ಣರ ಲೋಕ ಪ್ರಾಥಮಿಕ ಮತ್ತು ಪ್ರೌಢಶಾಲೆಯ ವಾರ್ಷಿಕೋತ್ಸವ “ಚಿಣ್ಣರ ಚಿಲಿಪಿಲಿ” ವಾರ್ಷಿಕ ಸ್ನೇಹ ಸಮ್ಮೇಳನ 2023 ಕಾರ್ಯಕ್ರಮವನ್ನು ಶ್ರೀ ಎಸ್.ಎಂ.ರಡ್ಡಿ ಜಿಲ್ಲಾ ನ್ಯಾಯಾಧೀಶರು (ನಿವೃತ್ತ) ಹಾಗೂ ಅಧ್ಯಕ್ಷರು ಜಸ್ಟಿಸ್ ಶಿವರಾಜ ವಿ. ಪಾಟೀಲ ಪೌಂಢೇಶನ್ ಅವರು ಉದ್ಘಾಟಿಸಿದರು.ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಶ್ರೀ ದತ್ತಾತ್ರೇಯ ಪಾಟೀಲ ರೇವೂರ ಅಧ್ಯಕ್ಷರು ಕ.ಕ.ಪ್ರ.ಅ. ಮಂಡಳಿ ಹಾಗೂ ಶಾಸಕರು ಕಲಬುರಗಿ (ದಕ್ಷಿಣ) ಅವರು ಮಾತನಾಡುತ್ತ ಕಲಬುರಗಿ ನಗರದಲ್ಲಿ ಸರ್ವಜ್ಞ ಶಿಕ್ಷಣ ಸಂಸ್ಥೆ ಆರಂಭಿಸಿ ನ್ಯಾಯಮೂರ್ತಿ ಶಿವರಾಜ ವಿ ಪಾಟೀಲರ […] The post ಮಕ್ಕಳಲ್ಲಿ ಮೌಲ್ಯಯುತ ಶಿಕ್ಷಣ ಬಿತ್ತುತ್ತಿರುವ ಸರ್ವಜ್ಞ ಶಿಕ್ಷಣ ಸಂಸ್ಥೆ: ಶಾಸಕ ರೇವೂರ ಶ್ಲಾಘನೆ appeared first on Sanjevani .
ಕೆ.ಆರ್.ಪುರ,ಜ.೨೯-ಮಹದೇವಪುರ ಕ್ಷೇತ್ರದ ೧೮ಕ್ಕೂ ಹೆಚ್ಚು ಕೆರೆಗಳಿಗೆ ನೀರು ತುಂಬುವ ಮಹತ್ವ ಪೂರ್ಣ ಯೋಜನೆಗೆ ಶಾಸಕ ಅರವಿಂದ ಲಿಂಬಾವಳಿ ಚಾಲನೆ ನೀಡಿದರು.ಕ್ಷೇತ್ರದ ಗ್ರಾಮಾಂತರ ಪ್ರದೇಶದ ಚೀಮಸಂದ್ರ, ಮಂಡೂರು. ನಿಂಬೆಕಾಯಿಪುರ, ಕಿತ್ತಗನೂರು,ಕಾಟಂನಲ್ಲೂರು, ಕನ್ನಮಂಗಲ, ಕಣ್ಣೂರು, ಯರಪ್ಪನಹಳ್ಳಿ, ಜ್ಯೋತಿಪುರ ಕೆರೆ ಸೇರಿದಂತೆ ಬಿದರಹಳ್ಳಿ ಹೋಬಳಿಯ ೧೮ ಕ್ಕೂ ಹೆಚ್ಚು ಕೆರೆಗಳಿಗೆ ನೀರು ತುಂಬುವ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದರು. ಅಂತರ್ಜಲ ಮಟ್ಟವನ್ನು ಹೆಚ್ಚಿಸುವ ಸಲುವಾಗಿ ಶುದ್ದಿಕರಿಸಿದ ನೀರನ್ನು ಕೆರೆಗಳಿಗೆ ತುಂಬಿಸಲಾಗುತ್ತಿದೆ ಎಂದರು.ದಿನದಿಂದ ದಿನಕ್ಕೆ ಅಂತರ್ಜಲ ಮಟ್ಟವು ಕಡಿಮೆಯಾಗಿ ಹನಿಹನಿ ನೀರಿಗೂ […] The post ಕೆರೆಗಳಿಗೆ ನೀರು,ಲಿಂಬಾವಳಿ ಚಾಲನೆ appeared first on Sanjevani .
ತಿಮ್ಮಪ್ಪನ ಭಕ್ತರಿಗಾಗಿ ಹೊಸ ಆಪ್ ಪರಿಚಯಿಸಿದ ಟಿಟಿಡಿ
ಹೈದಾರಬಾದ್, ಜ ೨೯- ತಿರುಪತಿ ತಿರುಮಲ ದೇವಸ್ಥಾನದ ಆಡಳಿತ ಮಂಡಳಿ ತಿರುಪತಿ ತಿಮ್ಮಪ್ಪನ ಭಕ್ತರಿಗೆ ಹೊಸ ಮೊಬೈಲ್ ಅಪ್ಲಿಕೇಶನ್ ಶ್ರೀ ಟಿಟಿಡಿ ದೇವಸ್ಥಾನಮ್ ಬಿಡುಗಡೆ ಮಾಡಿದೆ.ಭಕ್ತರ ಅನುಕೂಲಕ್ಕಾಗಿ. ಟೆಕ್ನಾಲಜಿಯನ್ನು ಕೂಡ ಸಮರ್ಪಕವಾಗಿ ಬಳಸಿ ಕೊಳ್ಳುತ್ತಿರುವ ಟಿಟಿಡಿ ಇದೀಗ ತನ್ನ ಭಕ್ತರಿಗಾಗಿ ಹೊಸ ಮೊಬೈಲ್ ಅಪ್ಲಿಕೇಶನ್ ಬಿಡುಗಡೆ ಮಾಡಿದೆ.ಹೌದು, ತಿರುಪತಿ ತಿಮ್ಮಪ್ಪನ್ನ ಸನ್ನಿಧಿಗೆ ತೆರಳುವ ಭಕ್ತರಿಗಾಗಿ ಟಿಟಿಡಿ ಹೊಸ ಆಪ್ಅನ್ನು ಪರಿಚಯಿಸಿದೆ. ಈ ಆಪ್ ತಿರುಪತಿ ಯಾತ್ರೆಯ ಸಮಯದಲ್ಲಿ ನಿಮಗೆ ಉಪಯೋಗಕ್ಕೆ ಬರಲಿದೆ. ಇದು ತಿಮ್ಮಪ್ಪನ ಭಕ್ತರಿಗೆ ತಡೆರಹಿತ […] The post ತಿಮ್ಮಪ್ಪನ ಭಕ್ತರಿಗಾಗಿ ಹೊಸ ಆಪ್ ಪರಿಚಯಿಸಿದ ಟಿಟಿಡಿ appeared first on Sanjevani .
ಮಹಿಳೆಯರ ಸ್ವಾವಲಂಬಿ ಜೀವನಕ್ಕೆ ವಿಶ್ವೇಶ್ವರಯ್ಯ ಸಂಸ್ಥೆ ಜನತೆಗೆ ವರ
ಅಥಣಿ : ಜ.29:ಸ್ವಸಹಾಯ ಸಂಘಗಳ ಮಹಿಳಾ ಸದಸ್ಯರಿಗೆ ಗುಡಿ ಕೈಗಾರಿಕೆಯ ಅನೇಕ ತರಬೇತಿಗಳನ್ನು ನೀಡುವ ಮೂಲಕ ಅವರ ಸ್ವಾವಲಂಬಿ ಜೀವನಕ್ಕೆ ವಿಶ್ವೇಶ್ವರಯ್ಯ ಸಂಸ್ಥೆ ತಾಲೂಕಿನ ಜನತೆಗೆ ವರವಾಗಿದೆ. ಎಂದು ಮಾಜಿ ಶಾಸಕ ಶಹಾಜಹಾನ ಡೊಂಗರಗಾಂವ ಅವರು ಹೇಳಿದರು,ಅವರು ಅಥಣಿ ಪಟ್ಟಣದಲ್ಲಿ ಸರ್ ಎಂ ವಿಶ್ವೇಶ್ವರಯ್ಯ ಸಾಂಸ್ಕತಿಕ ಭವನದ ನೂತನ ಕಟ್ಟಡ ಉದ್ಘಾಟಿಸಿ ಮಾತನಾಡುತ್ತಿದ್ದರು ಅವರು ಮುಂದೆ ಮಾತನಾಡುತ್ತಾ ತರಬೇತಿಯ ಜೊತೆಗೆ ಅವರಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಾಲ ಸೌಲಭ್ಯವನ್ನು ಒದಗಿಸಿ ಆರ್ಥಿಕ ಭದ್ರತೆ ಒದಗಿಸಿರುವುದು ಉತ್ತಮವಾದ […] The post ಮಹಿಳೆಯರ ಸ್ವಾವಲಂಬಿ ಜೀವನಕ್ಕೆ ವಿಶ್ವೇಶ್ವರಯ್ಯ ಸಂಸ್ಥೆ ಜನತೆಗೆ ವರ appeared first on Sanjevani .
ವಿಧಿ ವಿಜ್ಞಾನ ಕೇತ್ರದಲ್ಲಿ ಗಮನಾರ್ಹ ಅಭಿವೃದ್ಧಿ
ಧಾರವಾಡ, ಜ.29: ದೇಶದಲ್ಲಿ ವಿಧಿ ವಿಜ್ಞಾನ ಕೇತ್ರದಲ್ಲಿ ಇತ್ತಿಚಿನ ದಿನಗಳಲ್ಲಿ ಗಮನಾರ್ಹ ಅಭಿವೃದ್ಧಿಯಾಗಿದೆ ಎಂದು ಕೇಂದ್ರ ಗೃಹ ಹಾಗೂ ಸಹಕಾರ ಸಚಿವರಾದ ಅಮಿತ್ ಶಾ ಅವರು ತಿಳಿಸಿದರು.ಅವರು ಕೃಷಿ ವಿಶ್ವವಿದ್ಯಾಲಯದ ಆವರಣಲ್ಲಿ ರಾಷ್ಟ್ರೀಯ ನ್ಯಾಯ ವಿಜ್ಞಾನ ವಿಶ್ವವಿದ್ಯಾಲಯದ 9ನೇ ಕ್ಯಾಂಪಸ್ಗೆ ಭೂಮಿ ಪೂಜೆ ಹಾಗೂ ಶಂಕುಸ್ಥಾಪನೆ ನೇರವೇರಿಸಿದ ನಂತರ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.ಅಪರಾಧ ಜಗತ್ತು ಬೆಳೆಯುತ್ತಿದೆ. ಅಪರಾಧಿಗಳು ಹೊಸ ಹೊಸ ಮಾರ್ಗಗಳನ್ನು ತಂತ್ರಜ್ಞಾನಗಳನ್ನು ಬಳಸುತ್ತಿದ್ದಾರೆ. ಅಪರಾಧವನ್ನು ನಿಯಂತ್ರಿಸಲು ಹಾಗೂ ಅಪರಾಧಿಗಳನ್ನು ಖಚಿತವಾಗಿ ಪತ್ತೆ ಹಚ್ಚುವಲ್ಲಿ ವಿಧಿ ವಿಜ್ಞಾನದ […] The post ವಿಧಿ ವಿಜ್ಞಾನ ಕೇತ್ರದಲ್ಲಿ ಗಮನಾರ್ಹ ಅಭಿವೃದ್ಧಿ appeared first on Sanjevani .
ರಥಸಪ್ತಮಿ: ಸೂರ್ಯ ನಮಸ್ಕಾರ ಸಲ್ಲಿಕೆ ಅಭಿಯಾನ
ಹುಬ್ಬಳ್ಳಿ, ಜ29: ಎಸ್.ಪಿ.ವಾಯ್.ಎಸ್.ಎಸ್. ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ( ರಿ) ಕರ್ನಾಟಕ ಹುಬ್ಬಳ್ಳಿ ಶಾಖೆ ಹಾಗೂ ಯೋಗ ಸ್ಪರ್ಶ ಪ್ರತಿಷ್ಠಾನ (ರಿ)ಹುಬ್ಬಳ್ಳಿ ವತಿಯಿಂದ ಹುಬ್ಬಳ್ಳಿಯ ಮೂರು ಸಾವಿರ ಮಠದ ಆವರಣದಲ್ಲಿ ಬೃಹತ್ ಸೂರ್ಯ ನಮಸ್ಕಾರ ಸಲ್ಲಿಕೆ ಅಭಿಯಾನ ವಿಜೃಂಭಣೆಯಿಂದ ಆಚರಿಸಲಾಯಿತು. ಬೆಳಗ್ಗೆ 5.30ಕ್ಕೆ ಅಗ್ನಿಹೋತ್ರ ಹೋಮದೊಂದಿಗೆ ಪ್ರಾರಂಭಿಸಿ. ಸರಿಯಾಗಿ 6 ಘಂಟೆಗೆ ಸಮಿತಿಯ ಎಲ್ಲ ಯೋಗ ಬಂಧುಗಳು ಹಾಗೂ ನಗರದ ಸಾರ್ವಜನಿಕರು 300ಕ್ಕೂ ಹೆಚ್ಚು ಜನ ಶಿಸ್ತಿನಿಂದ ಮಂತ್ರ ಪಠಣದೊಂದಿಗೆ ಸೂರ್ಯ ಭಗವಂತನಿಗೆ ಸಾಮೂಹಿಕವಾಗಿ 108 […] The post ರಥಸಪ್ತಮಿ: ಸೂರ್ಯ ನಮಸ್ಕಾರ ಸಲ್ಲಿಕೆ ಅಭಿಯಾನ appeared first on Sanjevani .
ಸಂಗೀತ ಕಲಾ ರತ್ನ ಪ್ರಶಸ್ತಿ ಪ್ರದಾನ
ಗುಳೇದಗುಡ್ಡ,ಜ29 : ಇಲ್ಲಿನ ಶ್ರೀ ಗಾನಯೋಗಿ ಪಂಚಾಕ್ಷರ ಸಂಗೀತ ವಿದ್ಯಾಲಯದ ಪ್ರಾಚಾರ್ಯ ಹಾಗೂ ಹಿಂದುಸ್ತಾನಿ ಗಾಯಕ ಅಖಂಡೇಶ್ವರ ಎಂ. ಪತ್ತಾರ ಅವರು ಸಂಗೀತ ಕ್ಷೇತ್ರದಲ್ಲಿ ಸಲ್ಲಿಸಿರುವ ಸೇವೆಯನ್ನು ಮನ್ನಿಸಿ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲ್ಲೂಕಿನ ನೇಜ ಗ್ರಾಮದ ಶ್ರೀ ವಿಶ್ವಕರ್ಮ ಪುಣ್ಯಾಶ್ರಮ ಮಠದ 4ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ “ಸಂಗೀತ ಕಲಾ ರತ್ನ ಪ್ರಶಸ್ತಿ’ ನೀಡಿ ಗೌರವಿಸಿದೆ.ಚಿಕ್ಕೋಡಿ ತಾಲ್ಲೂಕಿನ ನೇಜ ಗ್ರಾಮದ ಶ್ರೀ ವಿಶ್ವಕರ್ಮ ಪುಣ್ಯಾಶ್ರಮ ಮಠದಲ್ಲಿ ಇದೇ ಜ,26 ರಂದು ನಡೆದ ಶ್ರೀಮಠದ 4ನೇ ವಾರ್ಷಿಕೋತ್ಸವ ನಿಮಿತ್ತವಾಗಿ […] The post ಸಂಗೀತ ಕಲಾ ರತ್ನ ಪ್ರಶಸ್ತಿ ಪ್ರದಾನ appeared first on Sanjevani .
ಅಣ್ಣಿಗೇರಿ,ಜ29: ಸಮಾಜದಲ್ಲಿ ಸಂಪತ್ತು ಹೊಂದಿದವರು ಬಹಳ ಜನರಿದ್ದಾರೆ, ಆದರೆ ದಾನ ಮಾಡುವಂತಹ ಮನಸ್ಸು ಬಹಳ ಕಡಿಮೆ ಹಾಗಾಗಿ ಸಂಪತ್ತು ಇದ್ದರು ಸಹ ದಾನ ಮಾಡುವ ಮನಸ್ಸು ಮುಖ್ಯ ಎಂದು ನವಲಗುಂದ ಕ್ಷೇತ್ರ ಶಿಕ್ಷಣಾಧಿಕಾರಿ ಶಿವಾನಂದ ಮಲ್ಲಾಡ ತಿಳಿಸಿದರು.ನಗರದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನಂ-4ರಲ್ಲಿ ನಡೆದಂತಹ ಉಚಿತ ಗ್ಯಾಸ್ ಸಿಲೆಂಡರ್ ವಿತರಣೆ ಕಾರ್ಯಕ್ರಮ ಉದ್ಘಾಟನೆ ಮಾಡಿ ಮಾತನಾಡಿದ ಅವರು ಮಾಬುಸಾಬ ಯರಗುಪ್ಪಿಯವರು ಈಗಾಗಲೇ ನಾಲ್ಕು ಸರಕಾರಿ ಶಾಲೆಗಳಿಗೆ ಗ್ಯಾಸ ವಿತರಣೆ ಮಾಡಿದ್ದಾರೆ ಅಂತಹ ಶಿಕ್ಷಣ ಪ್ರೇಮಿಗಳು ಸರಕಾರಿ […] The post ದಾನ ಮಾಡುವ ಮನಸು ಮುಖ್ಯ appeared first on Sanjevani .
ಮೂಡಲಗಿಗೆ ಸಹಕಾರ ನಗರ ಬಿರುದು ಚಿಂತನೆ
ಮೂಡಲಗಿ,ಜ.29: ಜಿಲ್ಲೆಯಲ್ಲಿಯೇ ಅತೀ ಹೆಚ್ಚು ಸಹಕಾರ ಸಂಘಗಳನ್ನು ಹೊಂದಿರುವ ಮೂಡಲಗಿ ಪಟ್ಟಣಕ್ಕೆ ಸಹಕಾರ ನಗರ'' ಎಂಬ ಬಿರುದನ್ನು ನೀಡಲು ಸರ್ಕಾರದ ಮಟ್ಟದ ಚಿಂತನೆ ನಡೆಸುತ್ತಿರುವುದಾಗಿ ಕೆಎಂಎಫ್ ಅಧ್ಯಕ್ಷ, ಶಾಸಕ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು. ಪಟ್ಟಣದ ಬಸವ ರಂಗ ಮಂಟಪದಲ್ಲಿ ಜರುಗಿದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಮೃತ ಮಹೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮೂಡಲಗಿ ಸಹಕಾರ ವಲಯದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವುದರಿಂದ ಸಾಕಷ್ಟು ಸಂಖ್ಯೆಯಲ್ಲಿ ಸಹಕಾರ ಸಂಘಗಳನ್ನು ಹೊಂದಿದೆ ಎಂದು ಹೇಳಿದರು. ಜಿಲ್ಲೆಯಲ್ಲಿಯೇ ಸುಮಾರು 72 […] The post ಮೂಡಲಗಿಗೆ ಸಹಕಾರ ನಗರ ಬಿರುದು ಚಿಂತನೆ appeared first on Sanjevani .
ಮೈಸೂರು ಕೋರ್ಟ್ಗೆ ಸ್ಯಾಂಟ್ರೋ ರವಿ
ಬೆಂಗಳೂರು, ಜ.೨೯-ಗಂಭೀರ ಅಪರಾಧ ಆರೋಪದಡಿ ಬಂಧನಕ್ಕೆ ಒಳಗಾಗಿರುವ ಸ್ಯಾಂಟ್ರೋ ರವಿ ಸಿಐಡಿ ಕಸ್ಟಡಿ ಅಂತ್ಯ ಗೊಳ್ಳಲಿದ್ದು, ಇಂದು ಮೈಸೂರು ಕೋರ್ಟ್ಗೆ ಹಾಜರುಪಡಿಸಲಿದ್ದಾರೆ.ನಿನ್ನೆ ವಿಕ್ಟೋರಿಯಾ ಆಸ್ಪತ್ರೆಯಿಂದ ರವಿ ಡಿಸ್ಚಾರ್ಜ್ ಆಗಿದ್ದು, ಡಿಸ್ಚಾರ್ಜ್ ಬಳಿಕ ಸಿಐಡಿ ಕಚೇರಿಗೆ ಕರೆದುಕೊಂಡು ಬಂದಿದ್ದಾರೆ ಎನ್ನಲಾಗಿದೆ.ಮೈಸೂರು ಕೋರ್ಟ್ ೧೪ ದಿನ ಸಿಐಡಿ ಕಸ್ಟಡಿಗೆ ನೀಡಿದ್ದು, ನಾಳೆ ಕಸ್ಟಡಿ ಅಂತ್ಯ ಹಿನ್ನೆಲೆ ಕೋರ್ಟ್ ಮುಂದೆ ರವಿ ಹಾಜರುಪಡಿಸಲಾಗುತ್ತದೆ. ರವಿಯನ್ನು ಮತ್ತೆ ಕಸ್ಟಡಿಗೆ ಪಡೆಯದಿರಲು ಸಿಐಡಿ ನಿರ್ಧಾರ ಮಾಡಿದ್ದು, ಆರೋಗ್ಯ ಸಮಸ್ಯೆ ಹಿನ್ನೆಲೆ ಚೇತರಿಕೆ ಬಳಿಕ ವಶಕ್ಕೆ […] The post ಮೈಸೂರು ಕೋರ್ಟ್ಗೆ ಸ್ಯಾಂಟ್ರೋ ರವಿ appeared first on Sanjevani .
ಮೇಘಾಲಯ: ಕೈ ಅಭ್ಯರ್ಥಿಗಳ ಅಂತಿಮ ಪಟ್ಟಿ ಪ್ರಕಟ
ಶಿಲ್ಲಾಂಗ್, ಜ. ೨೯- ಮೇಘಾಲಯ ವಿಧಾನಸಭೆ ಚುನಾವಣೆ ಯಲ್ಲಿ ಕಣಕ್ಕಿಳಿಯಲಿರುವ ಪಕ್ಷದ ಐವರು ಅಭ್ಯರ್ಥಿಗಳ ಅಂತಿಮ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ ಎಂದು ಕಾಂಗ್ರೆಸ್ ಹಿರಿಯ ನಾಯಕ ಎಚ್.ಪಾಲ ಇಂದು ತಿಳಿಸಿದ್ದಾರೆ.ಝಾನಿಕಾ ಸಿಯಾಂಗ್ಷಿ (ಖಿಲಿಹ್ರಿಯಾತ್), ಅರ್ಬಿಯಾಂಗ್ಕಮ್ ಖರ್ ಸೋಹ್ಮತ್ (ಅಮ್ಲಾರೆಮ್), ಚಿರೆಂಗ್ ಪೀಟರ್ ಆರ್. ಮಾರಕ್ (ಖಾರ್ಕುತ್ತಾ), ಡಾ. ತ್ವೀಲ್ ಕೆ. ಮಾರಕ್ (ರೆಸುಬೆಲ್ಪಾರ) ಮತ್ತು ಕಾರ್ಲಾ ಆರ್. ಸಂಗ್ಮಾ (ರಾಜಾಬಾಲ) ಪಟ್ಟಿಯಲ್ಲಿರುವ ಐವರು. ೬೦ ಸದಸ್ಯ ಬಲದ ಮೇಘಾಲಯ ವಿಧಾನಸಭೆಗೆ ಸ್ಪರ್ಧಿಸುವ ೫೫ ಅಭ್ಯರ್ಥಿಗಳ ಪಟ್ಟಿಯನ್ನು ಕಾಂಗ್ರೆಸ್ […] The post ಮೇಘಾಲಯ: ಕೈ ಅಭ್ಯರ್ಥಿಗಳ ಅಂತಿಮ ಪಟ್ಟಿ ಪ್ರಕಟ appeared first on Sanjevani .
‘ಹಾಲಲ್ಲಾದರೂ ಹಾಕು, ನೀರಲ್ಲಾದರೂ ಹಾಕು’.. ರಾಯರ ಮೊರೆ ಹೋದ ಕುಮಾರಸ್ವಾಮಿ ದಂಪತಿ
ಹೆಚ್ ಡಿ ಕುಮಾರಸ್ವಾಮಿ ಮತ್ತು ಅನಿತಾ ಕುಮಾರಸ್ವಾಮಿ ದಂಪತಿ ಮಂತ್ರಾಲಯದ ರಾಘವೇಂದ್ರ ಸ್ವಾಮಿಗಳ ಮೊರೆ ಹೋಗಿದ್ದಾರೆ. ಹಾಲಲ್ಲದರೂ ಹಾಕು, ನೀರಲ್ಲಾದರೂ ಹಾಕು ಎಂದು ರಾಘವೇಂದ್ರ ಸ್ವಾಮಿ ಬಳಿ ಬೇಡಿಕೊಂಡೆ. ಆದರೆ ಏನು ಆಗಬೇಕೋ ಅದೇ ಆಗೋದು. ನೀನು ಏನು ಅಂದುಕೊಂಡಿರುವೆಯೋ ಅದನ್ನೇ ಕರುಣಿಸು ಅಂತಾಲೂ ಬೇಡಿಕೊಂಡೆ ಅಂತಾ ಅನಿತಾ ಕುಮಾರಸ್ವಾಮಿ ಹೇಳಿದ್ದಾರೆ. ಹಲವು ವರ್ಷಗಳಿಂದ ಮಂತ್ರಾಲಯಕ್ಕೆ ಭೇಟಿ ಕೊಟ್ಟಿರಲಿಲ್ಲ. ಆದರೆ ಜೆಪಿ ನಗರದಲ್ಲಿ ರಾಘವೇಂದ್ರ ಸ್ವಾಮಿಗಳ ದೇವಸ್ಥಾನಕ್ಕೆ ತೆರಳುತ್ತೇನೆ. ನಾನು ರಾಘವೇಂದ್ರ ಸ್ವಾಮಿಯವರ ಭಕ್ತೆ ಅಂದರು.
ಆರ್ ಸಿ ಕಂಪನಿಯಿಂದ ಸರ್ಕಾರಿ ಶಾಲೆಯ ಮಕ್ಕಳಿಗೆ ಊಟದ ತಟ್ಟೆ ಲೋಟ ವಿತರಣೆ
ಸೇಡಂ, ಜ,29: ಅಲ್ಟ್ರಾಟೆಕ್ ಕಮ್ಯುನಿಟಿ ವೆಲ್ಫೇರ್ ಫೌಂಡೇಶನ್ ರಾಜಶ್ರೀ ಸಿಮೆಂಟ್ ವಕ್ರ್ಸ್ ಸಿ ಎಸ್ ಆರ್ ಘಟಕದ ವತಿಯಿಂದ ತಾಲೂಕಿನ ಊಡಗಿ ಸರಕಾರಿ ಮಾದರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ 350 ಊಟದ ತಟ್ಟೆಗಳು 350 ಹಾಲು ಕುಡಿಯಲು ಲೋಟಗಳು ವಿತರಣೆ ಮಾಡಿದರು. ಈ ವೇಳೆಯಲ್ಲಿ ಕಂಪನಿಯ ಪಿ ಎಚ್ ಉಜ್ವಲ್ ಆರ್ ಸಿ ಎಸ್ ಆರ್ ಘಟಕದ ದಿನೇಶ್ ನಾಯಕ್ ಹಾಗೂ ಚೈತನ್ಯ ಕುಮಾರ್,ಊಡಗಿ ಗ್ರಾಮ ಪಂಚಾಯತ ಅಧ್ಯಕ್ಷರಾದ ಹಣಮಂತ ಬೆನಕನಹಳ್ಳಿ ,ಸದಸ್ಯರಾದ ಮಹಾದೇವ,ಶೇಕ್ ಹುಸೇನ್,ಎಸ್.ಡಿ.ಎಮ್.ಸಿ ಅಧ್ಯಕ್ಷರಾದ […] The post ಆರ್ ಸಿ ಕಂಪನಿಯಿಂದ ಸರ್ಕಾರಿ ಶಾಲೆಯ ಮಕ್ಕಳಿಗೆ ಊಟದ ತಟ್ಟೆ ಲೋಟ ವಿತರಣೆ appeared first on Sanjevani .
ಅಂತಿಮವಾಗದ ಬಿಜೆಪಿ ಅಭ್ಯರ್ಥಿಗಳ ಪಟ್ಟಿ
ಹುಬ್ಬಳ್ಳಿ, ಜ. ೨೯- ಮುಂದಿನ ವಿಧಾನಸಭಾ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಆಯ್ಕೆ ಇನ್ನು ಅಂತಿಮಗೊಂಡಿಲ್ಲ. ಸಮೀಕ್ಷೆಗಳು ನಡೆದಿದ್ದು, ಸಮೀಕ್ಷಾ ವರದಿಯನ್ನು ಆಧರಿಸಿ ಅಭ್ಯರ್ಥಿಗಳ ಆಯ್ಕೆಯನ್ನು ಅಂತಿಮಗೊಳಿಸಲಾಗುವುದು ಎಂಬ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಹೇಳಿಕೆ ತಮಗೆ ಟಿಕೆಟ್ ಎಂದು ಬೀಗುತ್ತಿದ್ದ ಆಕಾಂಕ್ಷಿಗಳಿಗೆ ಒಂದು ರೀತಿಯ ಶಾಕ್ ಕೊಟ್ಟಿದೆ.ಕೆಲ ಕ್ಷೇತ್ರಗಳಿಗೆ ಬಿಜೆಪಿ ಅಭ್ಯರ್ಥಿಗಳನ್ನು ಅಂತಿಮಗೊಳಿಸಿದೆ, ತಮಗೆ ಟಿಕೆಟ್ ಎಂದು ಹೇಳಿಕೊಂಡು ಓಡಾಡುತ್ತಿದ್ದವರಿಗೆ ಮುಖ್ಯಮಂತ್ರಿಗಳ ಹೇಳಿಕೆ ಬಿಸಿ ಮುಟ್ಟಿಸಿದೆ.ಸಮೀಕ್ಷೆ ವರದಿಯ ಮೇಲೆ ಟಿಕೆಟ್ ನೀಡುವ ಅವರ ಮಾತು ತಮಗೆ ಟಿಕೆಟ್ […] The post ಅಂತಿಮವಾಗದ ಬಿಜೆಪಿ ಅಭ್ಯರ್ಥಿಗಳ ಪಟ್ಟಿ appeared first on Sanjevani .
ಜಗತ್ತಿಗೆ ಮಾದರಿ ದೇಶ ಅದು ನಮ್ಮ ಭಾರತ : ಪ್ರೊ.ಸಿ.ಎನ್.ಚೌಗುಲೆ
ವಿಜಯಪುರ: ಜ.29:ದೇಶದ ಏಳಿಗೆಗಾಗಿ ನಾವೆಲ್ಲರೂ ಶ್ರಮಿಸಬೇಕಾಗಿರುವಂಥದ್ದು ಪ್ರತಿಯೊಬ್ಬರಕರ್ತವ್ಯ ಸಂವಿಧಾನದ ಆಶಯಗಳನ್ನು ಕಾರ್ಯರೂಪಕ್ಕೆ ಬರಲು ಪ್ರತಿಯೊಬ್ಬರಿಗೂ ಸಂವಿಧಾನದ ಹಕ್ಕುಗಳು,ಕಾನೂನುಗಳು ಹಾಗೂ ಮೌಲ್ಯಗಳನ್ನು ಎತ್ತಿ ಹಿಡಿದುಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಈ ದಿನ ಆಚರಣೆ ಸಾರ್ಥಕವಾಗುತ್ತದೆಎಂದುಪ್ರಾಚಾರ್ಯರಾದಪ್ರೊ.ಸಿ.ಎನ್.ಚೌಗುಲೆ ಹೆಳಿದರು.ನಗರದ ಬಿ.ಎಲ್.ಡಿ.ಇ ಸಂಸ್ಥೆಯಎಸ್. ಬಿ. ಕಲಾ ಮತ್ತು ಕೆ.ಸಿ.ಪಿ ವಿಜ್ಞಾನ ಮಹಾವಿದ್ಯಾಲಯದಲ್ಲಿನಡೆದ74ನೇ ಗಣರಾಜ್ಯೋತ್ಸವದಲ್ಲಿಪ್ರಾಸ್ತಾವಿಕವಾಗಿ ಮಾತನಾಡಿದಅವರುದೇಶದಉದ್ದಗಲಕ್ಕೂ ಪ್ರತಿ ಮೂಲೆಯಲ್ಲಿಯೂ ಈ ಸಂಬ್ರಮಆಚರಿಸುತ್ತಿದ್ದುದೇಶದ ಸಂಸೃಯನ್ನು ಬಿಂಬಿಸುವಂತಹಆಚರಣೆಯಾಗಿದೆಎಂದರು.ಜಗತ್ತಿಗೆಮಾದರಿಯಾದದೇಶಅದು ಭಾರತದೇಶ ಪ್ರತಿಯೊಂದುದೇಶವೂತನ್ನದೇಆದಂತಹ ಸಂವಿಧಾನವನ್ನು ಹೊಂದಿರುತ್ತದೆಅದೇತೆರನಾಗಿ ಭಾರತವುಕೂಡ ವಿವಿಧ ಗಣಗಳಿಂದ ಕೂಡಿದಅಖಂಡ ಭಾರತದಜನತೆಗೆ ಸ್ವಾತಂತ್ರ್ಯ, ಸಮಾನತೆ, ಭಾತೃತ್ವ, ಹಾಗೂ ಜಾತಾತೀತೆಯ ಮೌಲ್ಯಗಳನ್ನು […] The post ಜಗತ್ತಿಗೆ ಮಾದರಿ ದೇಶ ಅದು ನಮ್ಮ ಭಾರತ : ಪ್ರೊ.ಸಿ.ಎನ್.ಚೌಗುಲೆ appeared first on Sanjevani .
ಕಾಮನಳ್ಳಿ- ಹೀರೊಳ್ಳಿ ರಸ್ತೆ ಕಾಮಗಾರಿಗೆ ಚಾಲನೆ
ಆಳಂದ: ಜ.29:ತಾಲೂಕಿನ ಕಾಮನಳ್ಳಿ ಗ್ರಾಮದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ ಇಲಾಖೆಯಿಂದ ಮಂಜೂರಾದ ರೂ. 1 ಕೋಟಿ ವೆಚ್ಚದಲ್ಲಿ ಕಾಮನಳ್ಳಿಯಿಂದ ಹಿರೋಳ್ಳಿವರೆಗಿನ ರಸ್ತೆ ನಿರ್ಮಾಣ ಕಾಮಗಾರಿಗೆ ಶಾಸಕ ಸುಭಾಷ ಗುತ್ತೇದಾರ ಅವರು ಭೂಮಿ ಪೂಜೆ ನೆರವೇರಿಸಿದರು. ನಂತರ ಮಾತನಾಡಿದ ಅವರು, ಮಾಡಿದ ಅಭಿವೃದ್ಧಿ ಕೆಲಸ ಸಾಕಷ್ಟಾಗಿದ್ದರು ಸಹ ಇನ್ನೂ ಮಾಡುವುದು ಬಹಳಷ್ಟಿದೆ. ಚುನಾವಣೆ ಸಮೀಪಿಸುತ್ತಿದ್ದು ಮುಂದೆಯೂ ರಾಜ್ಯದಲ್ಲಿ ಬಿಜೆಪಿ ಸರ್ಕಾರವೇ ಅಸ್ತಿತ್ವಕ್ಕೆ ಬರಲಿದ್ದು, ಮತ್ತೊಮ್ಮೆ ಚುನಾವಣೆ ಸ್ಫರ್ಧೆಬಯಸಿದ್ದು, ಹೆಚ್ಚಿನ ಮತಗಳನ್ನು ನೀಡಿ ಆಶೀರ್ವದಿಸಿದರೆ ಕ್ಷೇತ್ರವನ್ನು ನೀರಾವರಿ, ಶಿಕ್ಷಣ, […] The post ಕಾಮನಳ್ಳಿ- ಹೀರೊಳ್ಳಿ ರಸ್ತೆ ಕಾಮಗಾರಿಗೆ ಚಾಲನೆ appeared first on Sanjevani .
ಭಿನ್ನಮತ ಸಹಿಸಲ್ಲ, ಶಾ ವಾರ್ನಿಂಗ್
ಬೆಳಗಾವಿ, ಜ. ೨೯- ಬಿಜೆಪಿಯ ಭದ್ರ ಕೋಟೆಯಾಗಿರುವ ಬೆಳಗಾವಿಯಲ್ಲಿ ಮುಂದಿನ ಚುನಾವಣೆಯಲ್ಲಿ ಹೆಚ್ಚು ಸ್ಥಾನಗಳನ್ನು ಗೆಲ್ಲುವತ್ತ ಗಮನ ಕೊಡಿ, ಭಿನ್ನಮತ ಇವುಗಳನ್ನೆಲ್ಲ ಸಹಿಸಲ್ಲ. ಮುಂದಿನ ಬಾರಿ ನಾನು ರಾಜ್ಯಕ್ಕೆ ಬರುವ ಹೊತ್ತಿಗೆ ಯಾವುದೇ ಭಿನ್ನಾಭಿಪ್ರಾಯಗಳು ಯಾರಲ್ಲೂ ಇರಬಾರದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಬೆಳಗಾವಿ ಜಿಲ್ಲಾ ಬಿಜೆಪಿ ನಾಯಕರುಗಳಿಗೆ ಖಡಕ್ ಸೂಚನೆ ನೀಡಿದ್ದಾರೆ.ಬೆಳಗಾವಿ ಬಿಜೆಪಿ ನಾಯಕರಲ್ಲಿ ಭುಗಿಲೆದ್ದಿರುವ ಭಿನ್ನಮತ ಶಮನದ ಸಂಬಂಧ ನಿನ್ನೆ ಬೆಳಗಾವಿಯ ಖಾಸಗಿ ಹೋಟೆಲ್ನಲ್ಲಿ ಎಲ್ಲ ಮುಖಂಡರ ಜತೆ ಸಭೆ ನಡೆಸಿದ […] The post ಭಿನ್ನಮತ ಸಹಿಸಲ್ಲ, ಶಾ ವಾರ್ನಿಂಗ್ appeared first on Sanjevani .
ವಿಜಯಪುರ :ಜ.29:ರಾಷ್ಟ್ರಮಟ್ಟದ ವಾಲಿಬಾಲ್ ಸ್ಪರ್ಧೆಯಲ್ಲಿ ನ್ಯಾಷನಲ್ ಫೆಡರೇಶನ್ ಆಫ್ ಇಂಡಿಯಾ ವತಿಯಿಂದ 7, 8 ಜನೇವರಿ 2023 ರಂದು ಕಟ್ನಿ ಮಧ್ಯಪ್ರದೇಶದಲ್ಲಿ ಜರುಗಲಿರುವ ನ್ಯಾಷನಲ್ ಚಾಂಪಿಯನಶಿಫ 2023 ರಾಷ್ಟ್ರಮಟ್ಟದ ವಾಲಿಬಾಲ್ ಸ್ಪರ್ಧೆಯಲ್ಲಿ ತೌಫಿಕ ಉಮರ ಮಿರ್ದೆ, ಫರವೇಜ ಅಬ್ದುಲಸಾsಬ ಮಿರ್ದೆ, ಆಯಾಜ ಮುರ್ತುಸಾಬ ಮಿರ್ದೆ ದ್ವಿತೀಯ ಸ್ಥಾನ ಪಡೆದು ರಾಜ್ಯ ಹಾಗೂ ಜಿಲ್ಲೆಗೆ ಗೌರವ ತಂದಿದ್ದಾರೆ. ವಿಜಯಪುರ ಜಿಲ್ಲಾಧಿಕಾರಿಗಳಾದ ಮಹಾಂತೇಶ ದಾನಮ್ಮನವರ ಹಾಗೂ ವಿ.ವಿ.ಎಸ್. ಅಂಜುಮನ, ಪಿಡಿಜೆ ಕಾಲೇಜಿನ ಪ್ರಾಧ್ಯಾಪಕರು ಬೋಧಕೇತರ ಸಿಬ್ಬಂದಿಗಳು ವಿದ್ಯಾರ್ಥಿಗಳು ಅಭಿನಂದಿಸಿದ್ದಾರೆ. The post ನ್ಯಾಷನಲ್ ಚಾಂಪಿಯನಶಿಪಗೆ ಆಯ್ಕೆ appeared first on Sanjevani .
ರಾಗಿ ವರ್ಷ ಆಚರಣೆಗೆ ವಿಶ್ವಸಂಸ್ಥೆ ಅಸ್ತು
ಮೋದಿ ಮನದ ಮಾತುನವದೆಹಲಿ,ಜ.೨೯-ಅಂತರರಾಷ್ಟ್ರೀಯ ಯೋಗ ದಿನ ಮತ್ತು ಅಂತರರಾಷ್ಟ್ರೀಯ ರಾಗಿ ವರ್ಷದ ಎರಡೂ ಅಭಿಯಾನಗಳಲ್ಲಿ ಸಾರ್ವಜನಿಕ ಭಾಗವಹಿಸುವಿಕೆಯಿಂದಾಗಿ ಕ್ರಾಂತಿಯ ಹಾದಿಯಲ್ಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.ಭಾರತದ ಪ್ರಸ್ತಾಪದ ನಂತರ ವಿಶ್ವಸಂಸ್ಥೆ ಅಂತರರಾಷ್ಟ್ರೀಯ ಯೋಗ ದಿನ ಮತ್ತು ಅಂತರರಾಷ್ಟ್ರೀಯ ರಾಗಿ ವರ್ಷ ಎರಡನ್ನೂ ಆಚರಿಸಲು ನಿರ್ಧರಿಸಿದೆ. ಯೋಗ ಆರೋಗ್ಯಕ್ಕೂ ಸಂಬಂಧಿಸಿದ್ದರೆ ರಾಗಿ ಆರೋಗ್ಯದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದಿದ್ದಾರೆ.ವರ್ಷದ ಮೊದಲ ಹಾಗು ಮನ್ ಕಿ ಬಾಸ್ ಸರಣಿಯ ೯೭ನೇ ಆವೃತ್ತಿಯಲ್ಲಿ ದೇಶದ ಜನರನ್ನುದ್ದೇಶಿಸಿ ಮಾತನಾಡಿದ ಅವರು ಜನರು […] The post ರಾಗಿ ವರ್ಷ ಆಚರಣೆಗೆ ವಿಶ್ವಸಂಸ್ಥೆ ಅಸ್ತು appeared first on Sanjevani .
ವಾಷಿಂಗ್ಟನ್,ಜ.೨೯-ಗೂಗಲ್ ಸಂಸ್ಥೆಯ ೧೨ ಸಾವಿರಕ್ಕೂ ಅಧಿಕ ಸಿಬ್ಬಂದಿಯನ್ನು ಜಾಗತಿಕವಾಗಿ ಕಡಿತ ಮಾಡಿದ ನಂತರ ಸಂಸ್ಥೆಯ ಸಿಇಒ ಸುಂದರ್ ಪಿಚೈ ಅವರ ತಮ್ಮ ಸಂಬಳ ಸೇರಿದಂತೆ ಇನ್ನಿತರೆ ಸೌಲಭ್ಯಗಳ ಕಡಿತ ಪ್ರಕಟಿಸಿದ್ಧಾರೆ.ವಜಾಗೊಳಿಸುವಿಕೆ ಮತ್ತು ಕಠಿಣ ಸ್ಥೂಲ-ಆರ್ಥಿಕ ಪರಿಸ್ಥಿತಿಗಳ ನಡುವೆ ಗೂಗಲ್ ಉದ್ಯೋಗಿಗಳೊಂದಿಗಿನ ಇತ್ತೀಚಿನ ಸಭೆಯಲ್ಲಿ, “ಹಿರಿಯ ಉಪಾಧ್ಯಕ್ಷ” ಮಟ್ಟಕ್ಕಿಂತ ಹೆಚ್ಚಿನ ಎಲ್ಲಾ ವಾರ್ಷಿಕ ಬೋನಸ್ನಲ್ಲಿ ಗಮನಾರ್ಹ ಇಳಿಕೆಯಾಗಲಿದೆ ಎಂದು ಘೋಷಿಸಿದ್ದಾರೆ.ತಮ್ಮ ವಾರ್ಷಿಕ ಬೋನಸ್ನಲ್ಲಿ ’ಅತ್ಯಂತ ಮಹತ್ವದ’ ಕಡಿತಕ್ಕೆ ಸಾಕ್ಷಿಯಾಗುತ್ತವೆ,ಸಂಭಾವನೆ ಕಂಪನಿಯ ಕಾರ್ಯಕ್ಷಮತೆಗೆ ಸಂಬಂಧಿಸಿದೆ” ಸಂಬಳ ಕಡಿತ ಮಾಡುವ ಬಗ್ಗೆ […] The post ಗೂಗಲ್ನಲ್ಲಿ ಸಂಬಳ ಸೌಲಭ್ಯ ಕಡಿತ appeared first on Sanjevani .
ಶ್ರೀನಗರ,ಜ.೨೯-ಕಾಂಗ್ರೆಸ್ ಪಕ್ಷದ ಮಹತ್ವಾಕಾಂಕ್ಷೆಯ ಭಾರತ್ ಜೋಡೋ ಯಾತ್ರೆ ಸುಮಾರು ೫ ತಿಂಗಳ ಸುದೀರ್ಘ ಅವಧಿಯಲ್ಲಿ ೧೨ ರಾಜ್ಯಗಳ ಮೂಲಕ ೪ ಸಾವಿರ ಕಿ.ಮೀ ಪಾದಯಾತ್ರೆ ಸಾಗಿ ಜಮ್ಮು ಕಾಶ್ಮೀರ ತಲುಪಿದ್ದು ಹೊಸ ದಾಖಲೆ ಬರೆದಿದೆ.ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ್ ಜೋಡೋ ಯಾತ್ರೆ ೪ ಸಾವಿರ ಕಿ.ಮೀ ಪೂರೈಸಿರುವ ಹಿನ್ನೆಲೆಯಲ್ಲಿ ಶ್ರೀನಗರದ ಲಾಲ್ ಚೌಕ್ನಲ್ಲಿ ರಾಹುಲ್ ಗಾಂಧಿ ಧ್ವಜಾರೋಹಣ ಮಾಡಲಿದ್ದು ನಾಳೆ ಯಾತ್ರೆ ಅಧಿಕೃತವಾಗಿ ಸಂಪನ್ನವಾಗಲಿದೆ.ನಾಳೆ ಜಮ್ಮು ಮತ್ತು ಕಾಶ್ಮೀರದ ಶ್ರೀನಗರದಲ್ಲಿ ಭಾರತ್ ಜೋಡೊ ಯಾತ್ರೆ ಮುಕ್ತಾಯಗೊಳಿಸಲಿದೆ. […] The post ಭಾರತ್ ಜೋಡೋಗೆ ನಾಳೆ ತೆರೆ appeared first on Sanjevani .
ಬೆಂಗಳೂರಿನಲ್ಲಿ ನಡೆದ ಐತಿಹಾಸಿಕ ವಿಂಟೇಜ್ ವಾಹಾನಗಳ ರ್ಯಾಲಿಗೆ ಎಡಿಜಿಪಿ ಎಂ ಎ ಸಲೀಂ ಅವರು ಚಾಲನೆ ನೀಡಿದರು. The post ವಿಂಟೇಜ್ ವಾಹನಗಳ ರ್ಯಾಲಿ appeared first on Sanjevani .
The post 29012023Vijayapur appeared first on Sanjevani .
Virat Kohli: 'ಇಷ್ಟು ಬೇಗ ವಿರಾಟ್ ಕೊಹ್ಲಿಗೆ ಬಾಬರ್ ಆಝಮ್ರ ಹೋಲಿಕೆ ಸರಿಯಲ್ಲ'-ಮಿಸ್ಬಾ ಉಲ್ ಹಕ್!
Misbah-ul-Haq on Comparison Between Kohli and Azam: ಭಾರತ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಇಲ್ಲಿಯವರೆಗೂ ಸಾಕಷ್ಟು ಕ್ರಿಕೆಟ್ ಆಡಿದ್ದಾರೆ. ಆದರೆ, ಪಾಕಿಸ್ತಾನ ನಾಯಕ ಬಾಬರ್ ಆಝಮ್ ಅಂತಾರಾಷ್ಟ್ರೀಯ ಕ್ರಿಕೆಟ್ನ ಆರಂಭಿಕ ಹಂತದಲ್ಲಿದ್ದಾರೆ. ಹಾಗಾಗಿ ಇಷ್ಟು ಬೇಗ ವಿರಾಟ್ ಕೊಹ್ಲಿಗೆ ಬಾಬರ್ ಆಝಮ್ ಅವರನ್ನು ಹೋಲಿಕೆ ಮಾಡುವುದರಲ್ಲಿ ಅರ್ಥವಿಲ್ಲ ಎಂದು ಪಾಕ್ ಮಾಜಿ ನಾಯಕ ಮಿಸ್ಬಾ ಉಲ್ ಹಕ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇತ್ತೀಚೆಗೆ 2022ರ ವರ್ಷದ ಏಕದಿನ ಆಟಗಾರ ಪ್ರಶಸ್ತಿಗೆ ಬಾಬರ್ ಆಝಮ್ ಭಾಜನರಾಗಿದ್ದರು.
ಟೊಮೇಟೊಗೆ ‘ಅಂಗಮಾರಿ’ ಕಾಟ: ಮಾರಕ ರೋಗಕ್ಕೆ 300 ಹೆಕ್ಟೇರ್ ಪ್ರದೇಶದ ಬೆಳೆ ತುತ್ತು
ಟೊಮೇಟೊ ಬೆಲೆ ಕೊಂಚ ಸುಧಾರಿಸಿದೆ, ಇನ್ನೇನು ಒಳ್ಳೆ ಬೆಲೆ ಸಿಗುತ್ತಿದೆ ಎಂದು ರೈತರ ಮೊಗದಲ್ಲಿ ಸಂತಸ ಮೂಡಿರುವ ಸಮಯದಲ್ಲೇ ರೋಗಭಾದೆ ಕಾಣಿಸಿಕೊಂಡಿರುವುದು ಚನ್ನಪಟಟ್ಟಣದ ಬೆಳೆಗಾರನನ್ನು ಹೈರಾಣಾಗಿಸಿದೆ. ಟೊಮೇಟೊ ಬೆಳೆಗೆ ಅಂಗಮಾರಿ ರೋಗ ಕಾಣಿಸಿಕೊಂಡಿದೆ. ರೋಗ ಕಾಣಿಸಿಕೊಂಡ ಒಂದೇ ವಾರದಲ್ಲಿ ಇಡೀ ತೋಟಕ್ಕೆ ಆವರಿಸುವ ರೋಗ ಬೆಳೆಯನ್ನು ನಾಶಮಾಡುತ್ತಿದೆ. ಹಲವು ತಿಂಗಳ ಕಾಲ ಕಷ್ಟ ಪಟ್ಟು ಬೆಳೆದ ಬೆಳೆ ಕೆಲವೇ ದಿನಗಳಲ್ಲಿ ರೋಗದಿಂದ ಹಾಳಾಗುತ್ತಿರುವುದನ್ನು ಕಂಡು ಬೆಳೆಗಾರರು ತಲೆಮೇಲೆ ಕೈಹೊತ್ತು ಕೂರುವ ಪರಿಸ್ಥಿತಿ ನಿರ್ಮಾಣವಾಗಿದೆ.
IND vs NZ: ಹಾರ್ದಿಕ್ ಪಾಂಡ್ಯ ಬುದ್ದಿವಂತ ನಾಯಕ ಅಲ್ಲವೆಂದ ದಾನಿಶ್ ಕನೇರಿಯಾ!
Danish kaneria opinion on Hardik Pandya Captaincy: ಕಳೆದ 2022ರ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಪ್ರಶಸ್ತಿ ಗೆಲ್ಲುವಲ್ಲಿ ಭಾರತ ವಿಫಲವಾಗಿತ್ತು. ಇದರಿಂದ ಎಚ್ಚೆತ್ತುಕೊಂಡ ಬಿಸಿಸಿಐ, ಟೆಸ್ಟ್ ಚಾಂಪಿಯನ್ಷಿಪ್ ಫೈನಲ್ ಹಾಗೂ ಏಕದಿನ ವಿಶ್ವ ಟೂರ್ನಿಗಳ ನಿಮಿತ್ತ ತಂಡವನ್ನು ಬಲಿಷ್ಠ ಗೊಳಿಸಲು ಮುಂದಾಗಿದೆ. 2024ರ ಟಿ20 ವಿಶ್ವಕಪ್ ಟೂರ್ನಿಯ ಸಲುವಾಗಿ ಯುವ ಆಟಗಾರರಿಗೆ ಮಣೆ ಹಾಕಿ ಹಾರ್ದಿಕ್ ಪಾಂಡ್ಯಗೆ ನಾಯಕತ್ವ ವಹಿಸಿದೆ. ಹಲವು ಸರಣಿಗಳಲ್ಲಿ ಯಶಸ್ವಿಯಾಗಿರುವ ಅವರು, ನ್ಯೂಜಿಲೆಂಡ್ ವಿರುದ್ಧ ಮೊದಲನೇ ಟಿ20 ಪಂದ್ಯದಲ್ಲಿ21 ರನ್ ಸೋಲು ಅನುಭವಿಸಿತ್ತು.
Womens U-19 World Cup: ಫೈನಲ್ಗೂ ಮುನ್ನ ಭಾರತ ತಂಡವನ್ನು ಭೇಟಿಯಾದ ನೀರಜ್ ಚೋಪ್ರಾ!
Neeraj Chopra meets U-19 India women’s team: ಶಫಾಲಿ ವರ್ಮಾ ನಾಯಕತ್ವದ ಭಾರತ ಅಂಡರ್ 19 ಮಹಿಳಾ ತಂಡ ವಿಶ್ವಕಪ್ ಟೂರ್ನಿಯಲ್ಲಿ ಫೈನಲ್ ಪ್ರವೇಶಿಸಿದೆ. ಇಂದು (ಭಾನುವಾರ) ಸಂಜೆ ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡದ ಸವಾಲನ್ನು ಭಾರತ ಎದುರಿಸಲಿದೆ. ಈ ಮಹತ್ವದ ಫೈನಲ್ ಪಂದ್ಯಕ್ಕೂ ಮುನ್ನ ಟೋಕಿಯೋ ಒಲಿಂಪಿಕ್ಸ್ ಚಿನ್ನದ ಪದಕದ ವಿಜೇತ ನೀರಜ್ ಚೋಪ್ರಾ ಅವರು ಭಾರತ ಕಿರಿಯರ ಮಹಿಳಾ ತಂಡವನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಈ ಫೋಟೋಗಳನ್ನು ಬಿಸಿಸಿಐ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದೆ.
IND vs AUS: ಭಾರತ ವಿರುದ್ಧ ಟೆಸ್ಟ್ ಸರಣಿಗೂ ಮುನ್ನ ಅಚ್ಚರಿ ಹೇಳಿಕೆ ನೀಡಿದ ಡೇವಿಡ್ ವಾರ್ನರ್!
David Warner quite tired ahead of Test series against India: ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳು ಫೆಬ್ರವರಿ 9 ರಿಂದ ನಾಲ್ಕು ಪಂದ್ಯಗಳ ಬಾರ್ಡರ್ ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯಲ್ಲಿ ಕಾದಾಟ ನಡೆಸಲಿವೆ. ಈ ಮಹತ್ವದ ಟೆಸ್ಟ್ ಸರಣಿಗೂ ಮುನ್ನ ಆಸ್ಟ್ರೇಲಿಯಾ ತಂಡದ ಆರಂಭಿಕ ಬ್ಯಾಟ್ಸ್ಮನ್ ಡೇವಿಡ್ ವಾರ್ನರ್ ಅಚ್ಚರಿ ಹೇಳಿಕೆ ನೀಡಿದ್ದಾರೆ. ಈ ಬೇಸಿಗೆಯಲ್ಲಿ ಬುಡುವಿಲ್ಲದ ವೇಳಾಪಟ್ಟಿಯಿಂದ ನಾನು ತುಂಬಾ ದಣಿದಿದ್ದೇನೆ. ಆದರೆ, ಈ ವೇಳೆ ಉತ್ತಮ ಹಾಗೂ ತಾಜಾತನದಿಂದ ಇರಲು ಪ್ರಯತ್ನಿಸುತ್ತಿದ್ದೇನೆಂದು ಸಿಡ್ನಿ ಥಂಡರ್ಸ್ ತಂಡದ ಆಟಗಾರ ತಿಳಿಸಿದ್ದಾರೆ.
ಹಾಸನ ಕಾರಾಗೃಹದೊಳಗೆ ಗಾಂಜಾ ಘಮಲು: ದಾಳಿ ವೇಳೆ ನಾಲ್ವರ ಬಂಧನ, ಹೆಚ್ಚಿದ ಕೈದಿಗಳ ಒತ್ತಡ
ಹಾಸನ ಜೈಲಿನಲ್ಲಿ ರಾಜಾರೋಷವಾಗಿ ಕೈದಿಗಳ ಕೈ ಸೇರುತ್ತಿದೆ ಗಾಂಜಾ. ಕಾಂಪೌಂಡ್ಗೆ ಅಣತಿ ದೂರದಲ್ಲಿ ಶ್ರೀನಗರ ಕೊಳಚೆಪ್ರದೇಶ, ವರ್ಕ್ಶಾಪ್ ಹಾಗೂ ವಸತಿ, ವಾಣಿಜ್ಯ ಪ್ರದೇಶವಿದ್ದು, ಈ ಭಾಗದಿಂದ ಗಾಂಜಾ ಜೈಲಿನ ಒಳಭಾಗಕ್ಕೆ ತೂರಿ ಬರುತ್ತಿದೆ. ಒಂದಿಷ್ಟು ಸಿಬ್ಬಂದಿ ಕೈಗೆ ಸಿಕ್ಕರೆ ಬಹಳಷ್ಟು ಕೈದಿಗಳ ಪಾಲಾಗುತ್ತಿದೆ. ಇದನ್ನು ತಡೆಯಲು ನಡೆಯುತ್ತಿರುವ ಪ್ರಯತ್ನದಲ್ಲಿ ಸಕ್ಸಸ್ ಕಂಡಿಲ್ಲ. ಸುರಕ್ಷತೆ ದೃಷ್ಟಿಯಿಂದ ಸುಸಜ್ಜಿತ ಕಾರಾಗೃಹ ಕಟ್ಟಡ ನಿರ್ಮಿಸಬೇಕೆಂಬ ಕನಸು ಕನಸಾಗಿಯೇ ಉಳಿದಿದೆ. ಆದರೆ ಕಾರಾಗೃಹದ ಸಮಸ್ಯೆ ಮಾತ್ರ ತಪ್ಪುತ್ತಿಲ್ಲ.
ಅಡಕೆ ಧಾರಣೆ ಮತ್ತೆ 8-10 ಸಾವಿರ ರೂ. ಏರಿಕೆ, ಬೆಳೆಗಾರರು ನಿರಾಳ
ಡಿಸೆಂಬರ್ ಮೊದಲ ವಾರದಲ್ಲಿ ದಿಢೀರನೆ 8 - 10 ಸಾವಿರ ರೂ.ವರೆಗೆ ಕುಸಿತ ಕಂಡು ಬೆಳೆಗಾರರನ್ನು ಕಂಗೆಡಿಸಿದ್ದ ಅಡಕೆ ಧಾರಣೆ ಇದೀಗ ಮತ್ತೆ ಏರಿಕೆ ಹಾದಿಯಲ್ಲಿದೆ. 50 ದಿನಗಳ ಬಳಿಕ ಪುನಃ ಹಳೆ ಧಾರಣೆಗೆ ಮರಳಿದೆ.