ಸಕಲೇಶಪುರ: ನೀರಿನ ತೊಟ್ಟಿಗೆ ಬಿದ್ದು ಮಗು ಮೃತ್ಯು
ಸಕಲೇಶಪುರ: ಆಕಸ್ಮಿಕವಾಗಿ ನೀರಿನ ತೊಟ್ಟಿಗೆ ಬಿದ್ದು ಆರು ವರ್ಷದ ಮಗು ಸಾವನ್ನಪ್ಪಿರುವ ಘಟನೆ ತಾಲೂಕಿನ ಹಾಲೆಬೇಲೂರು ಗ್ರಾಮದಲ್ಲಿ ಬುಧವಾರ ಮಧ್ಯಾಹ್ನ ನಡೆದಿರುವುದು ವರದಿಯಾಗಿದೆ. ಮೃತ ಮಗುವನ್ನು ಹಾಲೆಬೇಲೂರು ಗ್ರಾಮದ ನಿವಾಸಿ ತಿಲಕ್ ಮತ್ತು ವಂದಿತಾ ದಂಪತಿಯ ಪುತ್ರಮೌರ್ಯ(6) ಎಂದು ಗುರುತಿಸಲಾಗಿದೆ. ಬುಧವಾರ ಮಧ್ಯಾಹ್ನ ಸುಮಾರು 12:30ರ ವೇಳೆಗೆ ಮೌರ್ಯ ತನ್ನ ಮನೆಯ ಮುಂಭಾಗದ ಕಾಫಿ ತೋಟದ ಬಳಿ ಆಟವಾಡುತ್ತಿದ್ದ ವೇಳೆ, ಸಮೀಪದಲ್ಲೇ ಇದ್ದ ನೀರಿನ ತೊಟ್ಟಿಗೆ ಬಿದ್ದು ಮೃತಪಟ್ಟಿದ್ದಾನೆ. ಈ ಕುರಿತು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಫಜಲಪುರ: ಹೃದಯಾಘಾತದಿಂದ ಹೆಡ್ ಕಾನ್ಸ್ಟೇಬಲ್ ಚಂದ್ರಕಾಂತ್ ಇಟಗೊಂಡ ನಿಧನ
ಅಫಜಲಪುರ: ಮಾದನ ಹಿಪ್ಪರಗಾ ಪೊಲೀಸ್ ಠಾಣೆಯಲ್ಲಿ ಹೆಡ್ ಕಾನ್ಸ್ಟೇಬಲ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಚಂದ್ರಕಾಂತ್ ಇಟಗೊಂಡ (ಎಚ್ಸಿ–53) ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ. 2008ನೇ ಬ್ಯಾಚ್ನ ಪೊಲೀಸ್ ಪೇದೆಯಾಗಿರುವ ಚಂದ್ರಕಾಂತ್ ಇಟಗೊಂಡ ಅವರು ಅಫಜಲಪುರ ತಾಲೂಕಿನ ಗೊಬ್ಬುರ್ (ಬಿ) ಗ್ರಾಮದ ನಿವಾಸಿಯಾಗಿದ್ದಾರೆ, ಅಫಜಲಪುರ ಪಟ್ಟಣದಲ್ಲಿ ಸ್ವಂತ ಮನೆ ಮಾಡಿಕೊಂಡು ಕುಟುಂಬ ಸಮೇತ ವಾಸವಾಗಿದ್ದರು. ಕಳೆದ ಒಂದು ವರ್ಷದಿಂದ ಅವರು ಆಳಂದ ತಾಲೂಕಿನ ಮಾದನ ಹಿಪ್ಪರಗಾ ಪೊಲೀಸ್ ಠಾಣೆಯಲ್ಲಿ ಹೆಡ್ ಕಾನ್ಸ್ಟೇಬಲ್ ಆಗಿ ಸೇವೆ ಸಲ್ಲಿಸುತ್ತಿದ್ದರು. ಮಂಗಳವಾರ ರಾತ್ರಿ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದ ವೇಳೆ ಮಧ್ಯರಾತ್ರಿ ವೇಳೆಗೆ ಹೃದಯಾಘಾತ ಸಂಭವಿಸಿದ್ದು, ತಕ್ಷಣ ಅವರನ್ನು ಅಫಜಲಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ. ಮೃತರು ಪತ್ನಿ, ಇಬ್ಬರು ಪುತ್ರರು, ಓರ್ವ ಪುತ್ರಿಯನ್ನು ಅಗಲಿದ್ದಾರೆ.
ಹೊಸ ವರ್ಷದ ಸಂಭ್ರಮಾಚರಣೆ: ರಾಜ್ಯದ ಜನತೆಗೆ ಶುಭ ಕೋರಿದ ಸಿಎಂ, ರಾಜ್ಯಪಾಲ
ಬೆಂಗಳೂರು: ರಾಜ್ಯದ ಜನತೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ರಾಜ್ಯಪಾಲ ಥಾವರ್ ಚೆಂದ್ ಗೆಹ್ಲೋಟ್ ಅವರು ಹೊಸ ವರ್ಷದ ಶುಭಾಶಯಗಳನ್ನು ಕೊರಿದ್ದಾರೆ. ಬುಧವಾರ ಎಕ್ಸ್ನಲ್ಲಿ ಪೋಸ್ಟ್ ಹಾಕಿರುವ ಸಿಎಂ ಸಿದ್ದರಾಮಯ್ಯ, ‘2026ರ ಹೊಸ ವರ್ಷವನ್ನು ಅತ್ಯಂತ ಸಂತೋಷ-ಸಂಭ್ರಮದಿಂದ ಬರಮಾಡಿಕೊಳ್ಳುವ ಜೊತೆಗೆ ಸುರಕ್ಷತೆಯ ಬಗ್ಗೆಯೂ ಕಾಳಜಿ ವಹಿಸೋಣ. ಸರ್ವರಿಗೂ ಹೊಸ ವರ್ಷದ ಹಾರ್ದಿಕ ಶುಭಾಶಯಗಳು’ ಎಂದು ತಿಳಿಸಿದ್ದಾರೆ. ಕರ್ನಾಟಕದ ಜನತೆಗೆ ಹೊಸ ವರ್ಷ-2026ರ ಶುಭಾಶಯಗಳು. ಈ ಹೊಸ ವರ್ಷವೂ ನಮ್ಮ ದೇಶವನ್ನು ಶಾಂತಿ, ಸಮೃದ್ಧಿ ಮತ್ತು ಏಕತೆಯ ಮಾರ್ಗದಲ್ಲಿ ಮುನ್ನಡೆಸುವ ಅವಕಾಶ ಒದಗಿಸಲಿ ಹಾಗೂ ಎಲ್ಲರಿಗೂ ಸಂತೋಷ, ಸಮೃದ್ಧಿ ಮತ್ತು ಮಿತಿಯಿಲ್ಲದ ಅವಕಾಶಗಳನ್ನು ತರಲಿ. ದೇಶದ ಉಜ್ವಲ ಭವಿಷ್ಯದ ಕಡೆಗೆ ನಾವೆಲ್ಲರೂ ಒಟ್ಟಾಗಿ ಮುನ್ನಡೆಯೋಣ ಎಂದು ಗೆಹ್ಲೋಟ್ ಶುಭ ಕೋರಿದ್ದಾರೆ.
ರಂಗೇರಿದ ಸಿಲಿಕಾನ್ ಸಿಟಿ... ಸಂಭ್ರಮ, ಸಡಗರದಿಂದ 2026ಕ್ಕೆ 'ವೆಲ್ಕಮ್' ಹೇಳಿದ ಬೆಂಗಳೂರಿಗರು!
ಬೆಂಗಳೂರಿನಲ್ಲಿ 2026ರ ಹೊಸ ವರ್ಷವನ್ನು ಸಾವಿರಾರು ಜನರು ಅದ್ಧೂರಿಯಾಗಿ ಸ್ವಾಗತಿಸಿದರು. ಎಂಜಿ ರಸ್ತೆ, ಬ್ರಿಗೇಡ್ ರಸ್ತೆ ಸೇರಿದಂತೆ ಹಲವೆಡೆ ಸಂಭ್ರಮಾಚರಣೆ ಜೋರಾಗಿತ್ತು. ಪೊಲೀಸರು ಬಿಗಿ ಬಂದೋಬಸ್ತ್ ಏರ್ಪಡಿಸಿದ್ದು, ಮೆಟ್ರೋ ಹಾಗೂ ಬಿಎಂಟಿಸಿ ಸೇವೆಗಳನ್ನು ರಾತ್ರಿಯೆಲ್ಲಾ ವಿಸ್ತರಿಸಲಾಗಿದೆ.
ಹಿರಿಯ ಪತ್ರಕರ್ತ ಶಿವಶಂಕರಸ್ವಾಮಿ ನಿಧನ
ಮೈಸೂರು: ಹಿರಿಯ ಪತ್ರಕರ್ತ, ವಾರದ ಮಿತ್ರ ಪತ್ರಿಕೆ ಸಂಪಾದಕ ಶಿವಶಂಕರಸ್ವಾಮಿ (68) ಅವರು ಬುಧವಾರ ಮಧ್ಯಾಹ್ನ ವಿದ್ಯಾರಣ್ಯಪುರಂ ನಲ್ಲಿರುವ ಅವರ ನಿವಾಸದಲ್ಲಿ ನಿಧನರಾಗಿದ್ದಾರೆ. ಮೃತರು ಪತ್ನಿ, ಇಬ್ಬರು ಮಕ್ಕಳು ಸೇರಿದಂತೆ ಅಪಾರ ಬಂಧುಬಳಗವನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆ ಜ.1 ರ ಗುರುವಾರ ಮಧ್ಯಾಹ್ನ ಚಾಮುಂಡಿ ಬೆಟ್ಟ ತಪ್ಪಲಿನ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
BIT | ವೃತ್ತಿ ಮಾರ್ಗದರ್ಶನದಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದು: ಅನೀಸ್ ಕುಟ್ಟಿ
ಮಂಜೇರಿ: ವೃತ್ತಿ ಮಾರ್ಗದರ್ಶನದಲ್ಲಿ ಶಿಕ್ಷಕರ ಪಾತ್ರ ದಿನದಿಂದ ದಿನಕ್ಕೆ ವಿಸ್ತಾರಗೊಳ್ಳುತ್ತಿದ್ದು, ಅವರು ಕೇವಲ ಪಾಠ ಬೋಧಕರಲ್ಲದೆ ವಿದ್ಯಾರ್ಥಿಗಳ ಮಾರ್ಗದರ್ಶಕರು ಹಾಗೂ ವೃತ್ತಿ ರೂಪಿಸುವ ಶಿಲ್ಪಿಗಳಾಗಬೇಕಾಗಿದೆ ಎಂದು ಶಿಕ್ಷಣ ತಜ್ಞ ಅನೀಸ್ ಕುಟ್ಟಿ ಅಭಿಪ್ರಾಯಪಟ್ಟರು. ಬ್ಯಾರೀಸ್ ನಾಲೆಡ್ಜ್ ಕ್ಯಾಂಪಸ್ನ ಬ್ಯಾರೀಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಮಂಗಳವಾರ ಆಯೋಜಿಸಿದ್ದ ಅಧ್ಯಾಪಕರ ಉತ್ಕೃಷ್ಟ(faculty enrichment) ಕಾರ್ಯಕ್ರಮದ ಅಂಗವಾಗಿ ನಡೆದ ಕಮ್ಮಟದಲ್ಲಿ ಅವರು ಮಾತನಾಡಿದರು. ಅಂತರರಾಷ್ಟ್ರೀಯ ಸೆಮಿನಾರ್ ಹಾಲ್ನಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಅಧ್ಯಾಪಕರ ವೃತ್ತಿಪರ ಅಭಿವೃದ್ಧಿ, ಶೈಕ್ಷಣಿಕ ಮಾರ್ಗದರ್ಶನ ಹಾಗೂ ವಿದ್ಯಾರ್ಥಿ ಕೇಂದ್ರಿತ ಬೋಧನಾ ವಿಧಾನಗಳ ಕುರಿತು ಚರ್ಚೆ ನಡೆಯಿತು. ಮೂರು ದಶಕಗಳಿಗೂ ಅಧಿಕ ಅನುಭವ ಹೊಂದಿರುವ ಅನೀಸ್ ಕುಟ್ಟಿ, ಫಲಿತಾಂಶ ಆಧಾರಿತ ಶಿಕ್ಷಣದ ಅಗತ್ಯತೆ, ಕಲಿಯುವವರಲ್ಲಿ ಕುತೂಹಲ, ಸ್ಥಿತಿಸ್ಥಾಪಕತೆ ಹಾಗೂ ನೈತಿಕ ಮೌಲ್ಯಗಳನ್ನು ಬೆಳೆಸುವಲ್ಲಿ ಶಿಕ್ಷಕರ ಜವಾಬ್ದಾರಿಯ ಬಗ್ಗೆ ವಿವರಿಸಿದರು. ಕಮ್ಮಟವು ಸಂವಾದಾತ್ಮಕ ಸ್ವರೂಪ ಹೊಂದಿದ್ದು, ಅಧ್ಯಾಪಕರು ತಮ್ಮ ತರಗತಿ ಅನುಭವ ಗಳನ್ನು ಹಂಚಿಕೊಂಡು ಚರ್ಚೆಯಲ್ಲಿ ಸಕ್ರಿಯವಾಗಿ ಭಾಗವಹಿಸಿದರು. ಭಾರತ ಮತ್ತು ವಿದೇಶಗಳಲ್ಲಿ ಮಾರ್ಗದರ್ಶನ, ರಕ್ಷಣಾ ತರಬೇತಿ, ವೃತ್ತಿ ಸಮಾಲೋಚನೆ ಹಾಗೂ ಶಿಕ್ಷಕರ ತರಬೇತಿ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿರುವ ಅನೀಸ್ ಕುಟ್ಟಿ, ಶೈಕ್ಷಣಿಕ ಪರಿಸರ ವ್ಯವಸ್ಥೆಗಳ ನಿರ್ಮಾಣಕ್ಕೆ ಒತ್ತು ನೀಡುತ್ತಿರುವುದನ್ನೂ ಈ ಸಂದರ್ಭದಲ್ಲಿ ಉಲ್ಲೇಖಿಸಿದರು. ಕಾರ್ಯಕ್ರಮವನ್ನು ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಸಂದೀಪ್ ನಂಬಿಯಾರ್ ಆಯೋಜಿಸಿದ್ದರು. ಕಮ್ಮಟದಲ್ಲಿನ ವಿಷಯಗಳ ಪ್ರಸ್ತುತತೆ, ಆಳ ಮತ್ತು ಪ್ರಾಯೋಗಿಕ ಮಾಹಿತಿಗೆ ಅಧ್ಯಾಪಕ ವೃಂದ ಮೆಚ್ಚುಗೆ ವ್ಯಕ್ತಪಡಿಸಿತು.
ಭಟ್ಕಳದಲ್ಲಿ ಮನೆಗೆ ನುಗ್ಗಿ ಕಳ್ಳತನ; 9 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳವು
ಭಟ್ಕಳ: ಮಂಗಳೂರಿನ ಮದುವೆ ಸಮಾರಂಭಕ್ಕೆ ತೆರಳಿದ್ದ ಸಂದರ್ಭವನ್ನು ದುರುಪಯೋಗಪಡಿಸಿಕೊಂಡು ಭಟ್ಕಳದ ಮನೆಯೊಂದಕ್ಕೆ ನುಗ್ಗಿದ ಕಳ್ಳರು ಸುಮಾರು 9 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ದೋಚಿ ಪರಾರಿಯಾಗಿರುವ ಘಟನೆ ವರದಿಯಾಗಿದೆ. ನಗರದ ಪುರವರ್ಗಾ ಚರ್ಚ್ ಹಿಂಭಾಗದಲ್ಲಿರುವ, ಪತ್ರಿಕಾ ವಿತರಕ ಫ್ರಾನ್ಸಿಸ್ ಡಿಸೋಜಾ ಅವರ ನಿವಾಸದಲ್ಲಿ ಈ ಕಳ್ಳತನ ನಡೆದಿದೆ ಎನ್ನಲಾಗಿದೆ. ಮಂಗಳವಾರ ಬೆಳಿಗ್ಗೆ ಸುಮಾರು 10 ಗಂಟೆ ಸುಮಾರಿಗೆ ಡಿಸೋಜಾ ದಂಪತಿ ಮನೆಗೆ ಬೀಗ ಹಾಕಿ ಮಂಗಳೂರಿಗೆ ತೆರಳಿದ್ದರು. ಬುಧವಾರ ಮುಂಜಾನೆ ಮನೆಗೆ ಹಿಂತಿರುಗಿದ ವೇಳೆ, ಮುಂಭಾಗದ ಬಾಗಿಲಿನ ಬೀಗ ಮುರಿದಿರುವುದು ಕಂಡುಬಂದಿದೆ. ಮನೆಯೊಳಗೆ ಪ್ರವೇಶಿಸಿದಾಗ ಮಲಗುವ ಕೋಣೆಯ ಕಪಾಟನ್ನು ಮುರಿದು ಒಳಗಿದ್ದ ಸಾಮಗ್ರಿಗಳನ್ನು ಚೆಲ್ಲಾಪಿಲ್ಲಿ ಮಾಡಲಾಗಿತ್ತು. ಪರಿಶೀಲನೆ ನಡೆಸಿದಾಗ, ಕಪಾಟಿನಲ್ಲಿ ಇರಿಸಿದ್ದ ಸುಮಾರು 9 ಲಕ್ಷ ರೂ ಮೌಲ್ಯದ ಚಿನ್ನಾಭರಣಗಳು ನಾಪತ್ತೆಯಾಗಿರುವುದು ಗೊತ್ತಾಗಿದೆ. ಘಟನೆಯ ಮಾಹಿತಿ ತಿಳಿದ ತಕ್ಷಣ ಭಟ್ಕಳ ನಗರ ಪೊಲೀಸ್ ಠಾಣೆಯ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪ್ರಕರಣದ ತನಿಖೆಗಾಗಿ ಕಾರವಾರದಿಂದ ಶ್ವಾನ ದಳ ಹಾಗೂ ಬೆರಳಚ್ಚು ತಜ್ಞರನ್ನು ಕೂಡ ಕರೆಸ ಲಾಗಿದೆ. ಈ ಕುರಿತು ಭಟ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ನಡೆಯುತ್ತಿದೆ.
ಬೆಂಗಳೂರು ದಕ್ಷಿಣ ವಿಭಾಗದ 9 ಅಂಚೆ ಕಚೇರಿಗಳು ವಿಲೀನ, ಯಾವ್ಯಾವ ಪೋಸ್ಟ್ ಆಫೀಸ್ ವಿಲೀನ? ಇಲ್ಲಿದೆ ವಿವರ
ಬೆಂಗಳೂರಿನ 9 ಅಂಚೆ ಕಚೇರಿಗಳು ಸಮೀಪದ ಅಂಚೆ ಕಚೇರಿಗಳೊಂದಿಗೆ ವಿಲೀನಗೊಂಡಿವೆ. ಆಡಳಿತ ದಕ್ಷತೆ ಮತ್ತು ಗ್ರಾಹಕ ಸೇವೆ ಸುಧಾರಣೆಗಾಗಿ ಈ ಕ್ರಮ ಕೈಗೊಳ್ಳಲಾಗಿದೆ. ಅಸ್ತಿತ್ವದಲ್ಲಿರುವ ಎಲ್ಲಾ ಅಂಚೆ ಕಚೇರಿ ಸೇವೆಗಳನ್ನು ಆಯಾ ಅಂಚೆ ಕಚೇರಿಗಳ ಮೂಲಕ ಯಾವುದೇ ಅಡೆತಡೆಯಿಲ್ಲದೆ ಒದಗಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
2026ರಲ್ಲಿ ಟೀಂ ಇಂಡಿಯಾ ಫುಲ್ ಬಿಝಿ; A To Z ಎಲ್ಲಾ ಪಂದ್ಯಗಳ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ ನೋಡಿ
2026 ಭಾರತೀಯ ಪುರುಷರ ಕ್ರಿಕೆಟ್ ತಂಡಕ್ಕೆ ಮಹತ್ವದ ವರ್ಷವಾಗಿದ್ದು, ತವರಿನಲ್ಲಿ ಟಿ20 ವಿಶ್ವಕಪ್ಗೆ ಆತಿಥ್ಯ ವಹಿಸಲಿದೆ. ನ್ಯೂಜಿಲೆಂಡ್, ಅಮೆರಿಕಾ, ಪಾಕಿಸ್ತಾನ, ಇಂಗ್ಲೆಂಡ್, ಶ್ರೀಲಂಕಾ, ವೆಸ್ಟ್ ಇಂಡೀಸ್ ಮತ್ತು ಅಫ್ಘಾನಿಸ್ತಾನ ವಿರುದ್ಧ ಸರಣಿಗಳು, ಟೆಸ್ಟ್, ಏಕದಿನ ಮತ್ತು ಟಿ20 ಪಂದ್ಯಗಳು ನಡೆಯಲಿವೆ. ಎಂದಿನಂತೆ 2 ತಿಂಗಳು ಐಪಿಎಲ್ ಕೂಡ ನಡೆಯಲಿದೆ. ಈ ಬಿಡುವಿಲ್ಲದ ವೇಳಾಪಟ್ಟಿ ಭಾರತ ತಂಡಕ್ಕೆ ದೈಹಿಕ ಮತ್ತು ಮಾನಸಿಕವಾಗಿ ಸವಾಲಿನದಾಗಿರಲಿದೆ. 2025ರಲ್ಲಿ ಎದುರಾದ ಹಿನ್ನಡೆಯನ್ನು ಸರಿಪಡಿಸಿಕೊಂಡು, ವೈಟ್-ಬಾಲ್ ಕ್ರಿಕೆಟ್ ನೊಂದಿಗೆ ಟೆಸ್ಟ್ ಸರಣಿಗಳನ್ನೂ ಗೆಲ್ಲುವುದು ಭಾರತ ಕ್ರಿಕೆಟ್ ತಂಡದ ಮುಖ್ಯ ಗುರಿಯಾಗಿದೆ.
Madhya Pradesh: ರಾಷ್ಟ್ರೀಯ ಜಲ ಪ್ರಶಸ್ತಿ ಪಡೆಯಲು AI ಚಿತ್ರ ಬಳಕೆ ಆರೋಪ: IAS ಅಧಿಕಾರಿಗಳಿಂದ ನಿರಾಕರಣೆ
ಹೊಸದಿಲ್ಲಿ: ಪ್ರತಿಷ್ಠಿತ ರಾಷ್ಟ್ರಪತಿ ಪ್ರಶಸ್ತಿಯನ್ನು ಪಡೆಯಲು ಕೃತಕ ಬುದ್ಧಿಮತ್ತೆ (AI) ಚಾಲಿತ ಚಿತ್ರಗಳನ್ನು ಬಳಸಿದ್ದಾರೆ ಎಂಬ ಆರೋಪಕ್ಕೆ ಗುರಿಯಾಗಿರುವ ಮಧ್ಯಪ್ರದೇಶ ಕೇಡರ್ ನ ಖಾಂಡ್ವಾ ಜಿಲ್ಲಾಧಿಕಾರಿ ರಿಶವ್ ಗುಪ್ತ ಹಾಗೂ ಜಿಲ್ಲಾ ಪಂಚಾಯತಿ ಸಿಇಒ ಡಾ. ನಾಗಾರ್ಜುನ್ ಬಿ.ಗೌಡ ಅವರು ವಿವಾದದ ಕೇಂದ್ರಬಿಂದುವಾಗಿದ್ದಾರೆ. ಈ ಕುರಿತು ಸೋಮವಾರ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದ ಮಧ್ಯಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಜೀತು ಪತ್ವಾರಿ, “ಕೃತಕ ಬುದ್ಧಿಮತ್ತೆ(AI) ಯನ್ನು ಸೂಕ್ತವಾಗಿ ಬಳಸಿಕೊಳ್ಳಿ ಎಂದು ಮಕ್ಕಳಿಗೆ ಬೋಧಿಸಬೇಕಾದ ಮಧ್ಯಪ್ರದೇಶ ಬಿಜೆಪಿ ಸರ್ಕಾರ, ತಾನೇ ಭ್ರಷ್ಟಾಚಾರ ನಡೆಸಲು ಕೃತಕ ಬುದ್ಧಿಮತ್ತೆಯನ್ನು ಬಳಸಿಕೊಂಡಿದೆ” ಎಂದು ಆರೋಪಿಸಿದ್ದರು. “ಖಾಂಡ್ವಾದಲ್ಲಿ ಬಿಜೆಪಿ ಸರ್ಕಾರದ ಅಧಿಕಾರಿಗಳು ಜಲ ಸಂರಕ್ಷಣೆಯ ಹೆಸರಲ್ಲಿ ಎರಡು ಅಡಿ ಆಳದ ಗುಂಡಿಯನ್ನು ಬಾವಿಯಂತೆ ತೋರಿಸಲು ಕೃತಕ ಬುದ್ಧಿಮತ್ತೆಯನ್ನು ಬಳಸಿಕೊಂಡಿದ್ದು, ಆ ಪ್ರದೇಶದಾದ್ಯಂತ ನಡೆದಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳ ಕೃತಕ ಬುದ್ಧಿಮತ್ತೆ ಚಾಲಿತ ಚಿತ್ರಗಳನ್ನು ತನ್ನ ಪೋರ್ಟಲ್ನಲ್ಲಿ ಅಪ್ಲೋಡ್ ಮಾಡಿದ್ದಾರೆ. ಈ ಕೃತಕ ಬುದ್ಧಿಮತ್ತೆ ಚಿತ್ರಗಳನ್ನೇ ಆಧರಿಸಿ, ಅವರು ಗೌರವಾನ್ವಿತ ರಾಷ್ಟ್ರಪತಿಯಿಂದ ಪ್ರಶಸ್ತಿ ಸ್ವೀಕರಿಸಿದ್ದಾರೆ” ಎಂದೂ ಅವರು ಆರೋಪಿಸಿದ್ದರು. जहाँ भाजपा सरकार को हमारे बच्चों को AI का सदुपयोग सिखाना चाहिए, वहीं वह खुद AI से भ्रष्टाचार कर रही है। खंडवा में भाजपा सरकार के अधिकारियों ने जल संरक्षण के नाम पर दो फीट के गड्ढों को AI से कुआँ बना दिया और पूरे क्षेत्र में तरह तरह के विकास कार्यों की AI से बनाई गई तस्वीरें… pic.twitter.com/ya4gLLTUmf — Jitendra (Jitu) Patwari (@jitupatwari) December 29, 2025 “ವಾಸ್ತವವಾಗಿ ಅಲ್ಲಿ ಖಾಲಿ ಮೈದಾನಗಳು ಹಾಗೂ ಹೊಲಗಳಿದ್ದವು. ಬಿಜೆಪಿಯ ಆಡಳಿತದಲ್ಲಿ ಭ್ರಷ್ಟಾಚಾರವೂ ಚಾಣಾಕ್ಷವಾಗಿದೆ” ಎಂದು ಅವರು ದೂರಿದ್ದಾರೆ.ಆದರೆ, ಈ ಆರೋಪವನ್ನು ಅಲ್ಲಗಳೆದಿರುವ ಐಎಎಸ್ ಅಧಿಕಾರಿಗಳಿಬ್ಬರೂ, ಇದು ಸುಳ್ಳು ಎಂದು ಪ್ರತಿಪಾದಿಸಿದ್ದಾರೆ. “ಈ ವಿವಾದ ನಿಜವಾಗಿಯೂ ಆಕಸ್ಮಿಕವಾಗಿದ್ದರೂ, ದುರದೃಷ್ಟಕರವಾಗಿದೆ” ಎಂದು ಖಾಂಡ್ವಾ ಜಿಲ್ಲಾ ಪಂಚಾಯತಿಯ ಸಿಇಒ ಡಾ. ನಾಗಾರ್ಜುನ್ ಬಿ.ಗೌಡ ಸ್ಪಷ್ಟನೆ ನೀಡಿದ್ದಾರೆ. ‘ಜಲ್ ಸಂಚಯ್ ಜನ್ ಭಾಗಿದಾರಿ’ ಉಪಕ್ರಮದಡಿ ಪ್ರಶಸ್ತಿ ಗಳಿಸಲು ಖಾಂಡ್ವಾ ಜಿಲ್ಲಾಡಳಿತವು ಇತರ ಎಲ್ಲ ಸ್ಪರ್ಧಿಗಳಂತೆ ತಾನೂ ಕೈಗೊಂಡಿರುವ ಅಭಿವೃದ್ಧಿ ಯೋಜನೆಗಳ ಕುರಿತು ದತ್ತಾಂಶ ಹಾಗೂ ಛಾಯಾಚಿತ್ರ ಸಾಕ್ಷ್ಯಗಳನ್ನೊಳಗೊಂಡ ದಾಖಲೆಗಳನ್ನು ಸಲ್ಲಿಸಬೇಕಾಗಿತ್ತು. ಆದರೆ, ಈ ಕುರಿತು ವರದಿ ಮಾಡಿದ್ದ ‘ದೈನಿಕ್ ಭಾಸ್ಕರ್’ ದಿನಪತ್ರಿಕೆ, ಖಾಂಡ್ವಾ ಜಿಲ್ಲಾಡಳಿತ ಸಲ್ಲಿಸಿದ್ದ ಛಾಯಾಚಿತ್ರಗಳಲ್ಲಿ ಕೃತಕ ಬುದ್ಧಿಮತ್ತೆ ಚಾಲಿತ ವಾಟರ್ಮಾರ್ಕ್ಗಳಿರುವುದನ್ನು ಎತ್ತಿ ತೋರಿಸಿತ್ತು. ಇದರ ಆಧಾರದಲ್ಲಿ ಆ ಛಾಯಾಚಿತ್ರಗಳು ನಕಲಿಯಾಗಿದ್ದು, ವಂಚನೆ ನಡೆದಿದೆ ಎಂದು ಆರೋಪಿಸಿತ್ತು. “ತಾಂತ್ರಿಕ ಗೊಂದಲದಿಂದಾಗಿ ಈ ವರದಿ ತಪ್ಪಾಗಿ ಮೂಡಿದೆ. ಈ ಮಾಧ್ಯಮ ಸಂಸ್ಥೆಯು ಮಾಹಿತಿ, ಶಿಕ್ಷಣ ಮತ್ತು ಸಂವಹನಕ್ಕೆ ಮಾತ್ರ ಮೀಸಲಾದ ‘ಕ್ಯಾಚ್ ದಿ ರೈನ್’ ಪೋರ್ಟಲ್ನಿಂದ ಆ ಛಾಯಾಚಿತ್ರವನ್ನು ತೆಗೆದುಕೊಂಡಿದೆ. ನಾವು ದಸ್ತಾವೇಜುಗಳನ್ನು ಸಲ್ಲಿಸಿದ್ದ ಪೋರ್ಟಲ್ಗೆ ಕೇವಲ ಜಿಲ್ಲಾಧಿಕಾರಿಗೆ ಮಾತ್ರ ಪ್ರವೇಶವಿದ್ದು, ಸಾರ್ವಜನಿಕರಿಗೆ ಅದು ಲಭ್ಯವಿಲ್ಲ. ಪ್ರಾತಿನಿಧಿಕ ಉದ್ದೇಶಕ್ಕಾಗಿ ‘ಕ್ಯಾಚ್ ದಿ ರೈನ್’ ಪೋರ್ಟಲ್ ಹಲವು ಚಿತ್ರಗಳನ್ನು ಬಳಸಿಕೊಳ್ಳುತ್ತದೆ. ಆ ಚಿತ್ರಗಳನ್ನು ತೆಗೆದುಕೊಂಡು ಈ ಆರೋಪಗಳನ್ನು ಮಾಡಲಾಗಿದೆ” ಎಂದು ಖಾಂಡ್ವಾ ಜಿಲ್ಲಾ ಪಂಚಾಯತಿ ಸಿಇಒ ಡಾ. ನಾಗಾರ್ಜುನ್ ಬಿ.ಗೌಡ ಸ್ಪಷ್ಟಪಡಿಸಿದ್ದಾರೆ.
ಪತ್ರಕರ್ತರು ಯಾರಿಗೂ ಹೆದರುವ ಅಗತ್ಯವಿಲ್ಲ: ಸಭಾಪತಿ ಹೊರಟ್ಟಿ
55 ಮಂದಿಗೆ ಪ್ರೆಸ್ಕ್ಲಬ್ ವಾರ್ಷಿಕ ಪ್ರಶಸ್ತಿ ಪ್ರದಾನ
ಮಂಗಳೂರು| ದ.ಕ. ಜಿಲ್ಲಾ ವಕ್ಫ್ ಅಧಿಕಾರಿ ಅಬೂಬಕ್ಕರ್ ನಿವೃತ್ತಿ; ಬೀಳ್ಕೊಡುಗೆ
ದಕ್ಷಿಣ ಕನ್ನಡ ಜಿಲ್ಲಾ ವಕ್ಫ್ ಅಧಿಕಾರಿಯಾಗಿ ಉತ್ತಮ ಸೇವೆ ಸಲ್ಲಿಸಿ ಬುಧವಾರ ಸೇವಾ ನಿವೃತ್ತಿಯಾದ ಅಬೂಬಕ್ಕರ್ ಅವರಿಗೆ ದಕ್ಷಿಣ ಕನ್ನಡ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ವತಿಯಿಂದ ಮಂಗಳೂರಿನ ಪಾಂಡೇಶ್ವರದಲ್ಲಿರುವ ಮೌಲಾನಾ ಆಝಾದ್ ಭವನದಲ್ಲಿ ಬೀಳ್ಕೊಡುಗೆ ಸಮಾರಂಭ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಮಾತನಾಡಿದ ದ.ಕ. ಜಿಲ್ಲಾ ವಕ್ಫ್ ಅಧಿಕಾರಿ ಅಬೂಬಕ್ಕರ್ ಅವರು, 1986ರಲ್ಲಿ ಸರ್ಕಾರಿ ಸೇವೆಗೆ ಸೇರಿದ್ದೆ. 39 ವರ್ಷಗಳ ಕಾಲ ಸರ್ಕಾರಿ ಸೇವೆ ಸಲ್ಲಿಸಿರುವುದಕ್ಕೆ ತೃಪ್ತಿ ಇದೆ. ಸಹಕಾರ ನೀಡಿದ ಎಲ್ಲ ಸಹೋದ್ಯೋಗಿಗಳಿಗೆ ಧನ್ಯವಾದ ಸಲ್ಲಿಸುತ್ತೇನೆ ಎಂದು ತಿಳಿಸಿದರು. ಈ ವೇಳೆ ಮಾತನಾಡಿದ ದಕ್ಷಿಣ ಕನ್ನಡ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಜಿನೇಂದ್ರ ಕೋಟ್ಯಾನ್ಅಬೂಬಕ್ಕರ್ ಅವರು ನಮ್ಮ ಇಲಾಖೆಯಲ್ಲಿ ಅತ್ಯಂತ ಹಿರಿಯ ಸಹೋದ್ಯೋಗಿ, ಎಲ್ಲ ಸಹೋದ್ಯೋಗಿ ಗಳೊಂದಿಗೆ ಬಹಳ ಅನ್ಯೋತ್ಯತೆಯಿಂದ ಸೇವೆ ಸಲ್ಲಿಸಿರುವುದು ನಮಗೆ ಖುಷಿ ತಂದಿದೆ. ಅವರ ಪ್ರಾಮಾಣಿಕ ಸೇವೆಯನ್ನು ಇಲಾಖೆಯು ಶ್ಲಾಘಿಸುತ್ತದೆ. ಅವರ ನಿವೃತ್ತಿ ಜೀವನವು ಸುಖಃಕರವಾಗಿರಲಿ ಎಂದು ಶುಭ ಹಾರೈಸಿದರು. ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ತಾಲೂಕು ವಿಸ್ತರಣಾಧಿಕಾರಿ ಫಾರೂಕ್ ಮಾತನಾಡಿ, ಅಬೂಬಕ್ಕರ್ ಅವರಿಗೆ ಶುಭಹಾರೈಸಿದರು. ಈ ಸಂದರ್ಭದಲ್ಲಿ ದ.ಕ. ಜಿಲ್ಲಾ ವಕ್ಫ್ನ ಲೆಕ್ಕಪರಿಶೋಧಕ ಅನ್ವರ್ ಮುಸ್ತಫಾ, ಅಲ್ಪಸಂಖ್ಯಾತರ ಇಲಾಖೆಯ ಅಧಿಕಾರಿ ಮಂಜುನಾಥ್, ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರಾದ ಯಶೋಧರ್, ಸಿಬ್ಬಂದಿ ಫಕೀರಪ್ಪ ಸೇರಿದಂತೆ ಸಿಬ್ಬಂದಿ ಉಪಸ್ಥಿತರಿದ್ದರು.
ಕೊಡಗು: ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ಅವರು ವರ್ಗಾವಣೆಗೊಂಡಿದ್ದಾರೆ. ಇವರ ಸ್ಥಾನಕ್ಕೆ ಮೈಸೂರಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಬಿಂದುಮಣಿ ನೂತನ ಎಸ್ಪಿಯಾಗಿ ನಿಯುಕ್ತಿಗೊಂಡಿದ್ದಾರೆ. ಕರ್ನಾಟಕ ಸರ್ಕಾರದ ಆದೇಶದಂತೆ ಕೊಡಗಿನ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ಅವರನ್ನು ಬೆಳಗಾವಿ ಜಿಲ್ಲೆಗೆ ವರ್ಗಾವಣೆ ಮಾಡಲಾಗಿದೆ. ಈ ಕುರಿತು ಕರ್ನಾಟಕ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ.
Uttar Pradesh: ದಲಿತ ಬಾಲಕಿಯ ಮೇಲೆ ಅತ್ಯಾಚಾರ
ಅಮೇಠಿ, ಡಿ.31: ಹೊಲಕ್ಕೆ ತೆರಳಿದ್ದ 13 ವರ್ಷದ ದಲಿತ ಬಾಲಕಿಯ ಮೇಲೆ ದುಷ್ಕರ್ಮಿಯೋರ್ವ ಅತ್ಯಾಚಾರ ಎಸಗಿದ ಘಟನೆ ಮಂಗಳವಾರ ಇಲ್ಲಿನ ಫುರಸತಗಂಜ್ ಪ್ರದೇಶದಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಅದೇ ಗ್ರಾಮದ ಯುವಕನೊಬ್ಬ ಬಾಲಕಿಯನ್ನು ತನ್ನ ಕೊಳವೆಬಾವಿಯತ್ತ ಎಳೆದುಕೊಂಡು ಹೋಗಿ ಅತ್ಯಾಚಾರ ನಡೆಸಿದ್ದು, ಈ ವಿಷಯವನ್ನು ಯಾರಿಗಾದರೂ ತಿಳಿಸಿದರೆ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ. ಬಾಲಕಿಯ ತಾಯಿಯ ದೂರಿನ ಮೇರೆಗೆ ಎಫ್ಐಆರ್ ದಾಖಲಿಸಿಕೊಂಡಿರುವ ಪೊಲೀಸರು, ತಲೆಮರೆಸಿಕೊಂಡಿರುವ ಆರೋಪಿಗಾಗಿ ತೀವ್ರ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ.
ಬೆಂಗರೆ ಪಲ್ಗುಣಿ ನದಿಯಲ್ಲಿ ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆ
ಪಣಂಬೂರು: ಇಲ್ಲಿನ ಪೊಲೀಸ್ ಠಾಣಾ ವ್ಯಾಪ್ತಿಯ ಬೆಂಗರೆ ಪಲ್ಗುಣಿ ನದಿಯಲ್ಲಿ ಅಪರಿಚಿತ ವ್ಯಕ್ತಿಯ ಶವಪತ್ತೆಯಾಗಿದೆ. ಅಪರಿಚಿತ ವ್ಯಕ್ತಿ ಸುಮಾರು 40-43 ವರ್ಷದವರಾಗಿದ್ದು, ನೀಲಿ ಬಣ್ಣದ ಉದ್ದ ತೋಳಿನ ಜೀನ್ಸ್ ಅಂಗಿ ಅದರ ಒಳಗೆ ಹಳದಿ ಮತ್ತು ನೀಲಿ ಬಣ್ಣದ ದಪ್ಪಗೆರೆಗಳ ಟೀ ಶರ್ಟ್, ಬಳಿ ಬಣ್ಣದ ಬರಹಗಳಿರುವ ಕಪ್ಪು ಬಣ್ಣದ ಸ್ಪೋರ್ಟ್ಸ್ ಪ್ಯಾಂಟ್ ಧರಿಸಿದ್ದಾರೆ. ಸದ್ಯ ಮೃತದೇಹವನ್ನು ಮೇಲೆತ್ತಿರುವ ಪಣಂಬೂರು ಪೊಲೀಸರು ವೆನ್ ಲಾಕ್ ಆಸ್ಪತ್ರೆಗೆ ರವಾನಿಸಿದ್ದಾರೆ ಎಂದು ತಿಳಿದು ಬಂದಿದೆ. ಈ ಚಹರೆಯ ವ್ಯಕ್ತಿಯ ಪರಿಚಯಸ್ಥರು, ವಾರೀಸುದಾರರು ಇದ್ದಲ್ಲಿ ಪಣಂಬೂರು ಪೊಲೀಸ್ ನಿರೀಕ್ಷಕ ಸಲೀಮ್ ಅಬ್ಬಾಸ್ +91 94808 05331 ಅಥವಾ ಪೊಲೀಸ್ ಠಾಣೆಯನ್ನು ಸಂಪರ್ಕಿಸುವಂತೆ ಪಣಂಬೂರು ಪೊಲೀಸ್ ಠಾಣೆಯ ಪ್ರಕಟಣೆ ತಿಳಿಸಿದೆ.
ಢಾಕಾದಲ್ಲಿ ಜೈಶಂಕರ್–ಪಾಕ್ ಸಂಸತ್ತಿನ ಸ್ಪೀಕರ್ ಸಾದಿಕ್ ಭೇಟಿ
ಶಿಷ್ಟಾಚಾರ ಎಂದು ಭಾರತದ ಪ್ರತಿಕ್ರಿಯೆ
ಪುಟಿನ್ ನಿವಾಸದ ಮೇಲೆ ಉಕ್ರೇನ್ ನ ಡ್ರೋನ್ ದಾಳಿಯ ವೀಡಿಯೊ ಬಿಡುಗಡೆ
ಮಾಸ್ಕೋ, ಡಿ.31: ರಶ್ಯವು ಬುಧವಾರ ಹೊಡೆದುರುಳಿಸಲಾದ ಡ್ರೋನ್ನ ವೀಡಿಯೊವನ್ನು ಬಿಡುಗಡೆಗೊಳಿಸಿದ್ದು, ಈ ಡ್ರೋನ್ ಅನ್ನು ರಶ್ಯದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರ ನಿವಾಸದತ್ತ ಉಕ್ರೇನ್ ಪ್ರಯೋಗಿಸಿತ್ತು ಎಂದು ಪ್ರತಿಪಾದಿಸಿದೆ. ರಾತ್ರಿ ಚಿತ್ರೀಕರಿಸಲಾದ ವೀಡಿಯೊವನ್ನು ರಶ್ಯದ ರಕ್ಷಣಾ ಸಚಿವಾಲಯ ಬಿಡುಗಡೆಗೊಳಿಸಿದೆ. ಈ ವಾರ ವಾಯವ್ಯ ರಶ್ಯದಲ್ಲಿ ಪುಟಿನ್ ನಿವಾಸವನ್ನು ಗುರಿಯಾಗಿಸಿಕೊಂಡ ಡ್ರೋನ್ ಅರಣ್ಯ ಪ್ರದೇಶದಲ್ಲಿ ಪತನಗೊಂಡಿರುವುದು ವೀಡಿಯೊದಲ್ಲಿ ಕಾಣುತ್ತದೆ. ಆಪಾದಿತ ದಾಳಿಯನ್ನು ಎಚ್ಚರಿಕೆಯಿಂದ ಯೋಜಿಸಿ ಹಂತಗಳಲ್ಲಿ ನಡೆಸಲಾಗಿದೆ ಎಂದು ರಕ್ಷಣಾ ಇಲಾಖೆಯ ಮೂಲಗಳನ್ನು ಉಲ್ಲೇಖಿಸಿ ಎಎಫ್ಪಿ ವರದಿ ಮಾಡಿದೆ. ಡ್ರೋನ್ ದಾಳಿಯನ್ನು ಸಾಬೀತುಪಡಿಸುವ ಯಾವುದೇ ಪುರಾವೆಗಳನ್ನು ಒದಗಿಸಲು ಸಾಧ್ಯವಿಲ್ಲ. ಏಕೆಂದರೆ ಎಲ್ಲಾ ಡ್ರೋನ್ಗಳನ್ನು ಹೊಡೆದುರುಳಿಸಲಾಗಿದೆ ಎಂದು ಮಂಗಳವಾರ ರಶ್ಯ ಅಧ್ಯಕ್ಷರ ಕಚೇರಿ ಹೇಳಿಕೆ ನೀಡಿತ್ತು. ಡ್ರೋನ್ ದಾಳಿ ನಡೆದಿರುವುದಕ್ಕೆ ಯಾವುದೇ ವಿಶ್ವಾಸಾರ್ಹ ದಾಖಲೆಗಳನ್ನು ರಶ್ಯ ಒದಗಿಸಲು ವಿಫಲವಾಗಿರುವುದು ಆರೋಪ ಸುಳ್ಳೆಂಬುದಕ್ಕೆ ನಿದರ್ಶನವಾಗಿದೆ ಎಂದು ಉಕ್ರೇನ್ ಮಂಗಳವಾರ ಪ್ರತಿಕ್ರಿಯಿಸಿತ್ತು.
ಜೈಶಂಕರ್ ಬಾಂಗ್ಲಾ ಭೇಟಿಯು ದ್ವಿಪಕ್ಷೀಯ ಬಾಂಧವ್ಯ ಸುಧಾರಣೆಗೆ ಪೂರಕ: ಬಾಂಗ್ಲಾ ಸರಕಾರ
ಢಾಕಾ, ಡಿ.31: ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಅವರು ಬಾಂಗ್ಲಾದೇಶಕ್ಕೆ ಭೇಟಿ ನೀಡಿದ ಬಳಿಕ ಉಭಯ ದೇಶಗಳ ನಡುವಿನ ಸಂಬಂಧಗಳಲ್ಲಿ ಹೊಸ ಅಧ್ಯಾಯ ಆರಂಭಗೊಳ್ಳುವ ವಿಶ್ವಾಸ ಮೂಡಿಸಿದೆ ಎಂದು ಬಾಂಗ್ಲಾದೇಶ ಬುಧವಾರ ಹೇಳಿದೆ. ಬಾಂಗ್ಲಾದ ಮಾಜಿ ಪ್ರಧಾನಿ ಖಾಲಿದಾ ಝಿಯಾ ಅವರ ಅಂತ್ಯಸಂಸ್ಕಾರದಲ್ಲಿ ಪಾಲ್ಗೊಳ್ಳಲು ಜೈಶಂಕರ್ ಬುಧವಾರ ಢಾಕಾಕ್ಕೆ ಆಗಮಿಸಿದ್ದರು. ಈ ಸಂದರ್ಭದಲ್ಲಿ ಅವರು ಬಾಂಗ್ಲಾದೇಶ್ ನ್ಯಾಷನಲಿಸ್ಟ್ ಪಾರ್ಟಿ (ಬಿಎನ್ಪಿ)ಯ ಹಂಗಾಮಿ ಅಧ್ಯಕ್ಷ ತಾರಿಕ್ ರಹ್ಮಾನ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿರುವುದಾಗಿ ವರದಿಯಾಗಿದೆ. ಖಾಲಿದಾ ಝಿಯಾ ಅವರ ಅಂತ್ಯಸಂಸ್ಕಾರ ಸಂದರ್ಭದಲ್ಲಿ ಗೌರವ ಸಲ್ಲಿಸಲು ಸಾವಿರಾರು ಮಂದಿ ಸೇರಿದ್ದರು. ಭಾರತ ಸರಕಾರ ಮತ್ತು ಜನತೆಯನ್ನು ಪ್ರತಿನಿಧಿಸಿದ್ದ ಜೈಶಂಕರ್, ಅಪ್ರತಿಮ ನಾಯಕಿಯ ನಿಧನದ ಬಗ್ಗೆ ಭಾರತದ ಸಂತಾಪವನ್ನು ವ್ಯಕ್ತಪಡಿಸಿದರು. ಅಲ್ಲದೆ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ಪತ್ರವನ್ನು ರಹ್ಮಾನ್ ಅವರಿಗೆ ಹಸ್ತಾಂತರಿಸಿ ಭಾರತದ ಸಹಾನುಭೂತಿಯನ್ನು ಅರ್ಪಿಸಿದರು. ಜೈಶಂಕರ್ ಅವರ ಸಂಕ್ಷಿಪ್ತ ಭೇಟಿಯು ಉಭಯ ದೇಶಗಳ ನಡುವಿನ ಬಾಂಧವ್ಯವನ್ನು ಸುಧಾರಿಸುವಲ್ಲಿ ಪ್ರಮುಖ ಹೆಜ್ಜೆಯಾಗಿದೆ ಎಂದು ಬಾಂಗ್ಲಾ ಸರಕಾರ ಅಭಿಪ್ರಾಯಪಟ್ಟಿದೆ.
100 ಮಿಲಿಗ್ರಾಮ್ ಗೂ ಹೆಚ್ಚಿನ ನಿಮೆಸುಲೈಡ್ ಒಳಗೊಂಡ ಔಷಧಿಗಳಿಗೆ ಕೇಂದ್ರದ ನಿಷೇಧ
ಹೊಸದಿಲ್ಲಿ, ಡಿ.31: ಕೇಂದ್ರ ಸರ್ಕಾರವು 100 ಮಿಲಿಗ್ರಾಮ್ಗಿಂತ ಹೆಚ್ಚಿನ ನಿಮೆಸುಲೈಡ್ ಒಳಗೊಂಡಿರುವ ಬಾಯಿ ಮೂಲಕ ಸೇವಿಸುವ ಎಲ್ಲ ಔಷಧಿಗಳ ತಯಾರಿಕೆ, ಮಾರಾಟ ಮತ್ತು ವಿತರಣೆಯನ್ನು ತಕ್ಷಣವೇ ಜಾರಿಗೆ ಬರುವಂತೆ ನಿಷೇಧಿಸಿದೆ. ಔಷಧಿಗಳ ತಾಂತ್ರಿಕ ಸಲಹಾ ಮಂಡಳಿಯೊಂದಿಗೆ ಸಮಾಲೋಚನೆಯ ಬಳಿಕ, ಔಷಧಿಗಳು ಮತ್ತು ಸೌಂದರ್ಯವರ್ಧಕಗಳ ಕಾಯ್ದೆ–1940ರ 26ಎ ಕಲಮ್ ನಡಿ ನಿಮೆಸುಲೈಡ್ ಅನ್ನು ನಿಷೇಧಿಸಲಾಗಿದೆ. ತಕ್ಷಣವೇ ಬಿಡುಗಡೆಗೊಳ್ಳುವ ರೂಪದಲ್ಲಿಯ 100 ಮಿಲಿಗ್ರಾಮ್ಗಿಂತ ಹೆಚ್ಚಿನ ನಿಮೆಸುಲೈಡ್ ಒಳಗೊಂಡಿರುವ ಔಷಧಿಗಳು ಮನುಷ್ಯರಿಗೆ ಅಪಾಯಕಾರಿಯಾಗಿದ್ದು, ಸುರಕ್ಷಿತ ಪರ್ಯಾಯಗಳು ಲಭ್ಯವಿವೆ ಎಂದು ಆರೋಗ್ಯ ಸಚಿವಾಲಯವು ಅಧಿಸೂಚನೆಯಲ್ಲಿ ತಿಳಿಸಿದೆ. ಸ್ಟಿರಾಯ್ಡೇತರ ಉರಿಯೂತ ನಿಗ್ರಹ ಔಷಧಿಯಾಗಿರುವ ನಿಮೆಸುಲೈಡ್ ಯಕೃತ್ತಿಗೆ ಸಂಭಾವ್ಯ ಹಾನಿ ಮತ್ತು ಇತರ ಪ್ರತಿಕೂಲ ಪರಿಣಾಮಗಳಿಗಾಗಿ ಜಾಗತಿಕ ಪರಿಶೀಲನೆಯಲ್ಲಿದೆ. ಸರ್ಕಾರದ ಕ್ರಮವು ಸುರಕ್ಷತಾ ಮಾನದಂಡಗಳನ್ನು ಬಿಗುಗೊಳಿಸುವ ಮತ್ತು ಅಪಾಯಕಾರಿ ಔಷಧಿಗಳನ್ನು ಹಂತಹಂತವಾಗಿ ತೆಗೆದುಹಾಕುವ ಪ್ರಯತ್ನಗಳಿಗೆ ಅನುಗುಣವಾಗಿದೆ. ನಿಷೇಧವು ಮಾನವ ಬಳಕೆಗಾಗಿ ಹೆಚ್ಚಿನ ಡೋಸ್ನ ಔಷಧಿಗಳಿಗೆ ಮಾತ್ರ ಅನ್ವಯಿಸುತ್ತದೆ ಮತ್ತು ಕಡಿಮೆ ಡೋಸ್ನ ಔಷಧಿಗಳು ಹಾಗೂ ಇತರ ಚಿಕಿತ್ಸಾ ಪರ್ಯಾಯಗಳು ಲಭ್ಯವಿರುತ್ತವೆ.
ದಟ್ಟ ಮಂಜು, ಮಾಲಿನ್ಯ, ಶೀತ ಗಾಳಿಯಿಂದ ಪೂರ್ವ ಮತ್ತು ಉತ್ತರ ಭಾರತ ತತ್ತರ
ಹೊಸದಿಲ್ಲಿ, ಡಿ.31: ಉತ್ತರ ಮತ್ತು ಪೂರ್ವ ಭಾರತದ ಹೆಚ್ಚಿನ ಭಾಗಗಳಲ್ಲಿ ಬುಧವಾರವೂ ತೀವ್ರ ಚಳಿ ಮುಂದುವರಿದಿದ್ದು, ದಟ್ಟ ಮಂಜು ಮತ್ತು ವಾಯುಮಾಲಿನ್ಯದಿಂದಾಗಿ ಹಲವಾರು ರಾಜ್ಯಗಳಲ್ಲಿ ಸಾಮಾನ್ಯ ಜನಜೀವನ ಅಸ್ತವ್ಯಸ್ತಗೊಂಡಿದೆ. ಬುಧವಾರ ಬೆಳಿಗ್ಗೆ ರಾಷ್ಟ್ರ ರಾಜಧಾನಿಯನ್ನು ದಟ್ಟ ಮಂಜು ಆವರಿಸಿದ್ದು, ವಾಯು ಗುಣಮಟ್ಟ ಕಳಪೆ ವರ್ಗದಲ್ಲಿಯೇ ಮುಂದುವರಿದಿದೆ. ಪಾಲಂ ಮತ್ತು ಸಫ್ದರ್ಜಂಗ್ ಪ್ರದೇಶಗಳಲ್ಲಿ ಬೆಳಿಗ್ಗೆ ಗೋಚರತೆ 50 ಮೀಟರ್ಗೆ ಕುಸಿದಿತ್ತು. ಕಡಿಮೆ ಗಾಳಿವೇಗಗಳು ಮತ್ತು ಕಳಪೆ ವಾತಾಯನ ಪರಿಸ್ಥಿತಿಗಳು ವಾಯುಮಾಲಿನ್ಯ ಹೆಚ್ಚಲು ಕಾರಣವೆಂದು ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಪ ಸುಧಾರಣೆ ಕಂಡುಬರುವ ಮುನ್ನ, ಜ.1ರಂದು ದಿಲ್ಲಿಯ ವಾಯು ಗುಣಮಟ್ಟ ಸೂಚ್ಯಂಕ (ಎಕ್ಯೂಐ) ಇನ್ನಷ್ಟು ಹದಗೆಡುವ ನಿರೀಕ್ಷೆಯಿದೆ. ಕನಿಷ್ಠ ತಾಪಮಾನ 6.4 ಡಿಗ್ರಿ ಸೆಲ್ಸಿಯಸ್ಗೆ ಕುಸಿದಿದ್ದು, ಹೊಸ ವರ್ಷದ ದಿನ ಹಗುರ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ತಿಳಿಸಿದೆ. ಪಶ್ಚಿಮ ಬಂಗಾಳದಾದ್ಯಂತ ಚಳಿ ತೀವ್ರಗೊಂಡಿದ್ದು, ಕೋಲ್ಕತಾದಲ್ಲಿ 11 ಡಿಗ್ರಿ ಸೆಲ್ಸಿಯಸ್ನಷ್ಟು ಋತುಮಾನದ ಕನಿಷ್ಠ ತಾಪಮಾನ ದಾಖಲಾಗಿದೆ. ದಾರ್ಜಿಲಿಂಗ್ ಅತ್ಯಂತ ಚಳಿಯ ಪ್ರದೇಶವಾಗಿದ್ದು, ಅಲ್ಲಿ ತಾಪಮಾನ 3.4 ಡಿಗ್ರಿ ಸೆಲ್ಸಿಯಸ್ಗೆ ಕುಸಿದಿತ್ತು. ಇದೆಯಂತೆ ರಾಜಸ್ಥಾನ, ಅಸ್ಸಾಂ, ಪಂಜಾಬ್ ಮತ್ತು ಹರ್ಯಾಣಗಳಲ್ಲಿಯೂ ಶೀತ ಪರಿಸ್ಥಿತಿ ಮುಂದುವರಿದಿದೆ. ಮುಂದಿನ ದಿನಗಳಲ್ಲಿ ಹಲವಾರು ರಾಜ್ಯಗಳಲ್ಲಿ ಇದೇ ಸ್ಥಿತಿ ಮುಂದುವರಿಯುವ ಸಾಧ್ಯತೆಯಿದೆ ಎಂದು ಐಎಂಡಿ ಎಚ್ಚರಿಕೆ ನೀಡಿದೆ.
Uttarakhand | ತ್ರಿಪುರಾ ವಿದ್ಯಾರ್ಥಿಯ ಹತ್ಯೆ ಪ್ರಕರಣದ ತನಿಖೆಗೆ SIT ರಚನೆ
ಡೆಹ್ರಾಡೂನ್, ಡಿ.30: ತ್ರಿಪುರಾದ ವಿದ್ಯಾರ್ಥಿ ಆ್ಯಂಜೆಲ್ ಚಕ್ಮಾ ಹತ್ಯೆ ಪ್ರಕರಣದ ತನಿಖೆಗೆ ಉತ್ತರಾಖಂಡ ಪೊಲೀಸರು ಬುಧವಾರ ವಿಶೇಷ ತನಿಖಾ ತಂಡವೊಂದನ್ನು (SIT) ರಚಿಸಿದ್ದಾರೆ. ಆ್ಯಂಜೆಲ್ ಚಕ್ಮಾ ಅವರು ಉತ್ತರಾಖಂಡದ ರಾಜಧಾನಿ ಡೆಹ್ರಾಡೂನ್ನಲ್ಲಿ ಡಿಸೆಂಬರ್ 9ರಂದು ದುಷ್ಕರ್ಮಿಗಳ ಹಲ್ಲೆಯಿಂದ ಗಾಯಗೊಂಡು ಸಾವನ್ನಪ್ಪಿದ್ದರು. ಈವರೆಗಿನ ತನಿಖೆಯ ಆಧಾರದ ಮೇಲೆ ಹೇಳುವುದಾದರೆ, ಈ ಘಟನೆ ಜನಾಂಗೀಯ ದ್ವೇಷದಿಂದ ಪ್ರೇರಿತವಾಗಿದೆ ಎನ್ನುವುದಕ್ಕೆ ಯಾವುದೇ ಪುರಾವೆಗಳಿಲ್ಲ ಎಂದು ಹಿರಿಯ ಪೊಲೀಸ್ ಅಧೀಕ್ಷಕ (ಎಸ್ಎಸ್ಪಿ) ಅಜಯ್ ಸಿಂಗ್ ತಿಳಿಸಿದ್ದಾರೆ. ಡೆಹ್ರಾಡೂನ್ನಲ್ಲಿ ನಡೆದ ಹುಟ್ಟುಹಬ್ಬ ಕಾರ್ಯಕ್ರಮವೊಂದರಲ್ಲಿ ಕೆಲವರು ತನ್ನನ್ನು ಪರಿಹಾಸ್ಯ ಮಾಡಿದ್ದನ್ನು ಚಕ್ಮಾ ಆಕ್ಷೇಪಿಸಿದಾಗ ಮಾತಿನ ಚಕಮಕಿ ಉಂಟಾಗಿದ್ದು, ನಂತರ ಅವರ ಮೇಲೆ ಹಲ್ಲೆ ನಡೆದಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಮೃತ ವಿದ್ಯಾರ್ಥಿ 24 ವರ್ಷದ ಆ್ಯಂಜೆಲ್ ಚಕ್ಮಾ ತ್ರಿಪುರಾದ ಉನಾಕೋಟಿ ಜಿಲ್ಲೆಯಲ್ಲಿ ಎಂಬಿಎ ಪದವಿ ಅಧ್ಯಯನ ನಡೆಸುತ್ತಿದ್ದರು. ಆ್ಯಂಜೆಲ್ ಹಾಗೂ ಅವರ ಸಹೋದರ ಮೈಕೆಲ್ ಮೇಲೆ ಆರು ಮಂದಿ ವಿದ್ಯಾರ್ಥಿಗಳು ಹಲ್ಲೆ ನಡೆಸಿದ್ದರು. ಬೆನ್ನುಮೂಳೆ ಹಾಗೂ ಕುತ್ತಿಗೆಗೆ ತೀವ್ರ ಗಾಯಗಳಾಗಿದ್ದ ಆ್ಯಂಜೆಲ್, 17 ದಿನಗಳ ಕಾಲ ಆಸ್ಪತ್ರೆಯಲ್ಲಿ ಜೀವನ್ಮರಣದ ಹೋರಾಟ ನಡೆಸಿ ಡಿಸೆಂಬರ್ 16ರಂದು ಕೊನೆಯುಸಿರೆಳೆದರು. ಆರೋಪಿಗಳು ಹಾಗೂ ಸಂತ್ರಸ್ತರಿಗೆ ಪರಸ್ಪರ ಪರಿಚಯವಿರಲಿಲ್ಲ ಮತ್ತು ಕ್ಷಣಿಕ ಉದ್ವೇಗದಿಂದಾಗಿ ಈ ದಾಳಿ ನಡೆದಿದೆ ಎಂದು ಎಸ್ಎಸ್ಪಿ ಸಿಂಗ್ ವಿವರಿಸಿದ್ದಾರೆ. ಪ್ರಕರಣದ ಪ್ರಮುಖ ಆರೋಪಿಯಾದ 22 ವರ್ಷದ ನೇಪಾಳಿ ಪ್ರಜೆ ಯಾಗ್ಯಾರಾಜ್ ಅವಸ್ಥಿ ತಲೆಮರೆಸಿಕೊಂಡಿದ್ದು, ಆತನ ಬಂಧನಕ್ಕೆ ಪೊಲೀಸರು ಜಾಮೀನು ರಹಿತ ವಾರಂಟ್ ಹೊರಡಿಸಿದ್ದಾರೆ. ಆತನನ್ನು ಹಿಡಿದುಕೊಡುವವರಿಗೆ 25 ಸಾವಿರ ರೂ.ಗಳಿಂದ 1 ಲಕ್ಷ ರೂ.ವರೆಗೆ ಬಹುಮಾನ ಘೋಷಿಸಲಾಗಿದೆ. ಎಫ್ಐಆರ್ನಲ್ಲಿ ಹೆಸರಿಸಲಾದ ಇತರ ಐದು ಮಂದಿಯನ್ನು ಕಸ್ಟಡಿಗೆ ತೆಗೆದುಕೊಳ್ಳಲಾಗಿದ್ದು, ಪ್ರಕರಣದ ಇಬ್ಬರು ಬಾಲ ಆರೋಪಿಗಳನ್ನು ಬಾಲಕೇಂದ್ರಕ್ಕೆ ಕಳುಹಿಸಲಾಗಿದೆ. ಇತರ ಮೂವರು ಆರೋಪಿಗಳನ್ನು ನ್ಯಾಯಾಂಗ ಕಸ್ಟಡಿಯಲ್ಲಿ ಇರಿಸಲಾಗಿದೆ. ಪೊಲೀಸ್ ತನಿಖೆಯ ಪ್ರಕಾರ, ವಾಗ್ವಾದದ ಸಂದರ್ಭ ಆರೋಪಿ ಅವಸ್ಥಿಯು ಆ್ಯಂಜೆಲ್ ನನ್ನು ಇರಿಯಲು ಸಮೀಪದ ಮೊಟ್ಟೆ ಗಾಡಿಯಲ್ಲಿದ್ದ ಚೂರಿಯನ್ನು ಎತ್ತಿಕೊಂಡಿದ್ದಾನೆ ಎಂದು ತಿಳಿದುಬಂದಿದೆ. ಘಟನೆಯ ದೃಶ್ಯಾವಳಿಗಳಿರುವ ಸಿಸಿಟಿವಿ ವೀಡಿಯೊವನ್ನು ಪೊಲೀಸರು ಸಂಗ್ರಹಿಸಿದ್ದು, ಸ್ಥಳೀಯ ನಿವಾಸಿಗಳ ಹೇಳಿಕೆಗಳನ್ನು ದಾಖಲಿಸಿಕೊಂಡಿದ್ದಾರೆ. ಆದರೆ ಆ್ಯಂಜೆಲ್ ವಿರುದ್ಧ ಆರೋಪಿಗಳು ಜನಾಂಗೀಯ ನಿಂದನೆ ನಡೆಸಿದ್ದಾರೆ ಎಂಬ ಬಗ್ಗೆ ಯಾವುದೇ ಪುರಾವೆಗಳಿಲ್ಲ ಎಂದು ಎಸ್ಎಸ್ಪಿ ಸಿಂಗ್ ಸ್ಪಷ್ಟಪಡಿಸಿದ್ದಾರೆ. ಮಣಿಪುರ ಮೂಲದ ಸೂರಜ್ ಖ್ವಾಸ್ ಎಂಬವರು ಆಯೋಜಿಸಿದ್ದ ಸಂತೋಷಕೂಟದಲ್ಲಿ ಎರಡು ಗುಂಪುಗಳ ನಡುವೆ ವಾಗ್ವಾದ ಭುಗಿಲೆದ್ದ ಸಂದರ್ಭ ಈ ಘಟನೆ ನಡೆದಿದೆ. ಆರೋಪಿಗಳ ಪೈಕಿ ಯಾರಿಗೂ ಈ ಹಿಂದೆ ಕ್ರಿಮಿನಲ್ ಕೃತ್ಯಗಳಲ್ಲಿ ತೊಡಗಿದ್ದ ದಾಖಲೆಗಳಿಲ್ಲ ಎಂದು ಅವರು ಹೇಳಿದ್ದಾರೆ.
ಐಡಿಎ ದಕ್ಷಿಣ ಕನ್ನಡ ಶಾಖೆಯ ಅಧ್ಯಕ್ಷರಾಗಿ ಡಾ. ಜಗದೀಶ್ ಚಂದ್ರ ಅಧಿಕಾರ ಸ್ವೀಕಾರ
ಮಂಗಳೂರು, ಡಿ.30: ಮಂಗಳೂರಿನ ಯೆನೆಪೊಯ ದಂತ ಕಾಲೇಜಿನ ಓರಲ್ ಮತ್ತು ಮ್ಯಾಕ್ಸಿಲೊಫೇಶಿಯಲ್ ಸರ್ಜರಿ ವಿಭಾಗದ ಪ್ರಾಧ್ಯಾಪಕ ಮತ್ತು ಮುಖ್ಯಸ್ಥ ಡಾ. ಜಗದೀಶ್ ಚಂದ್ರ ಅವರು ದಕ್ಷಿಣ ಕನ್ನಡ ಶಾಖೆಯ ಭಾರತೀಯ ದಂತ ಸಂಘ (ಐಡಿಎ) ಅಧ್ಯಕ್ಷರಾಗಿ ಡಿ.26ರಂದು ಅಧಿಕಾರ ವಹಿಸಿಕೊಂಡರು. ನಗರದ ಖಾಸಗಿ ಹೋಟೆನಲ್ಲಿ ನಡೆದ ಸಮಾರಂಭದಲ್ಲಿ ಅಧಿಕಾರ ವಹಿಸಿಕೊಂಡು ಮಾತನಾಡಿದ ಡಾ. ಜಗದೀಶ್ ಚಂದ್ರ ಅವರು ತಮ್ಮ ಶಿಕ್ಷಕರು, ಸಹೋದ್ಯೋಗಿಗಳು ಮತ್ತು ಐಡಿಎ ಭ್ರಾತೃತ್ವದ ನಿರಂತರ ಬೆಂಬಲಕ್ಕಾಗಿ ಕೃತಜ್ಞತೆಯನ್ನು ವ್ಯಕ್ತಪಡಿಸಿದರು. ಸಹೋದ್ಯೋಗಿಗಳು ಡಾ. ಚಂದ್ರ ಅವರನ್ನು ಅಭಿನಂದಿಸಿದರು.
ಪ್ರತ್ಯೇಕ ಪ್ರಕರಣ: ಇಬ್ಬರು ಆತ್ಮಹತ್ಯೆ
ಬೈಂದೂರು, ಡಿ.31: ಮದ್ಯದಲ್ಲಿ ವಿಷಬೇರಿಸಿ ಸೇವಿಸಿ ಅಸ್ವಸ್ಥಗೊಂಡಿದ್ದ ಉಪ್ಪುಂದ ಗ್ರಾಮದ ದೊಡ್ಡತೂಮಿನ ಹಿತ್ಲುವಿನ ನಿವಾಸಿ ಸುರೇಶ್ ಪೂಜಾರಿ ಎಂಬವರು ಅಜ್ಜರಕಾಡು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ನಿನ್ನೆ ರಾತ್ರಿ ಮೃತಪಟ್ಟಿದ್ದಾರೆ. ಸುರೇಶ್ ಪೂಜಾರಿ ಅವರನ್ನು ಸೋಮವಾರ ವಿಷ ಪದಾರ್ಥ ಸೇವಿಸಿ ಅಸ್ವಸ್ಥಗೊಂಡಿದ್ದು, ಕುಂದಾಪುರ ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ ಅಲ್ಲಿ ಅವರ ಆರೋಗ್ಯದಲ್ಲಿ ಏರುಪೇರಾದ ಕಾರಣ ಉಡುಪಿ ಜಿಲ್ಲಾಸ್ಪತ್ರೆಗೆ ಕರೆದೊಯ್ಯಲಾ ಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಅವರು ನಿನ್ನೆ ರಾತ್ರಿ 10:30ರ ಸುಮಾರಿಗೆ ಮೃತಪಟ್ಟರು. ಈ ಬಗ್ಗೆ ಬೈಂದರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನೇಣು ಬಿಗಿದು ಆತ್ಮಹತ್ಯೆ ಗಂಗೊಳ್ಳಿ: ಪತ್ನಿ ಮೃತಪಟ್ಟ ಹಿನ್ನೆಲೆಯಲ್ಲಿ ಜೀವನದಲ್ಲಿ ಜಿಗುಪ್ಸೆಗೊಂಡ ಗುಜ್ಜಾಡಿ ಗ್ರಾಮ ಕಂಚುಗೋಡು ಸನ್ಯಾಸಿ ಬಲ್ಲೆಯ ಮಹಾದೇವ ಖಾರ್ವಿ (47) ಎಂಬವರು ತನ್ನ ಮನೆಯ ಕೋಣೆಯೊಂದರಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಇಂದು ಬೆಳಗ್ಗೆ ನಡೆದಿದೆ. ಗಂಗೊಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಎಎಸ್ಪಿ ಹರ್ಷ ಪ್ರಿಯಂವದರಿಗೆ ಮುಂಬಡ್ತಿ
ಉಡುಪಿ, ಡಿ.31: ಕಳೆದ ಫೆಬ್ರವರಿ ತಿಂಗಳಿನಿಂದ ಕಾರ್ಕಳ ಉಪ ವಿಭಾಗದ ಎಎಸ್ಪಿಯಾಗಿದ್ದ ಕಾರ್ಯ ನಿರ್ವಹಿಸುತಿದ್ದ ಡಾ. ಹರ್ಷ ಪ್ರಿಯಂವದ ಅವರಿಗೆ ರಾಜ್ಯ ಸರಕಾರ ಸಿಐಡಿ ಎಸ್ಪಿಯಾಗಿ ಮುಂಬಡ್ತಿ ನೀಡಿ ಆದೇಶ ಹೊರಡಿಸಿದೆ. ಜಾರ್ಖಂಡ್ ಮೂಲದ ಹರ್ಷ ಪ್ರಿಯಂವದ, 2020ರ ಯುಪಿಎಸ್ಸಿ ಪರೀಕ್ಷೆಯಲ್ಲಿ 165ನೇ ರ್ಯಾಂಕ್ ಪಡೆದಿದ್ದು, ಐಪಿಎಸ್ನ್ನು ಆಯ್ಕೆ ಮಾಡಿದ್ದರು. ಎಂಬಿಬಿಎಸ್ ಪದವೀಧರೆಯಾಗಿರುವ ಹರ್ಷ ಪ್ರಿಯಂವದ, ಅವರನ್ನು 2025ರ ಫೆಬ್ರವರಿಯಲ್ಲಿ ಕಾರ್ಕಳ ಉಪ ವಿಭಾಗದ ಎಎಸ್ಪಿಯಾಗಿ ಸರಕಾರ ನೇಮಿಸಿತ್ತು. ದಕ್ಷ ಹಾಗೂ ಚುರುಕಿನ ಐಪಿಎಸ್ ಅಧಿಕಾರಿಯಾಗಿ ಡಾ.ಹರ್ಷ ಅವರು ಜಿಲ್ಲೆಯಲ್ಲಿ ಹಲವು ಜಟಿಲ ಪ್ರಕರಣಗಳನ್ನು ಬೇಧಿಸಿ ಆರೋಪಿಗಳನ್ನು ಬಂಧಿಸು ವಲ್ಲಿ ಯಶಸ್ವಿಯಾಗಿದ್ದರು. ಇದೀಗ ಅವರು ಸಿಐಡಿ ಎಸ್ಪಿ ಆಗಿ ನೇಮಕಗೊಂಡಿದ್ದಾರೆ.
ಚೆನ್ನೈ ಸಮೀಪ ರೈಲಿನಲ್ಲಿ ಒಡಿಶಾ ಯುವಕನ ಮೇಲೆ ಮಾರಕಾಯುಧಗಳಿಂದ ಬಾಲಕರ ದಾಳಿ
ಚೆನ್ನೈ: ಸಮೀಪದ ತಿರುತ್ತಣಿಯಲ್ಲಿ ಹೊರರಾಜ್ಯದ ಯುವಕನೊಬ್ಬನ ಮೇಲೆ ಕುಡುಗೋಲುಗಳಿಂದ ದಾಳಿ ನಡೆಸಿದ 17 ವರ್ಷದ ಬಾಲಕರನ್ನು ಬಂಧಿಸಿದ ಘಟನೆ ವರದಿಯಾಗಿದೆ. ತಿರುತ್ತಣಿಯಲ್ಲಿ ದಾಳಿಗೊಳಗಾದ ಸೂರಜ್ ಅವರಿಗೆ ಗಾಯಗಳಾಗಿದ್ದು, ಸದ್ಯಕ್ಕೆ ಅವರ ಸ್ಥಿತಿ ಸ್ಥಿರವಾಗಿದೆ ಎಂದು ತಿಳಿದುಬಂದಿದೆ. ಒಡಿಶಾ ಮೂಲದ ಸೂರಜ್, ಚೆನ್ನೈ–ತಿರುತ್ತಣಿ ಇಎಂಯು ರೈಲಿನಲ್ಲಿ ಪ್ರಯಾಣಿಸುತ್ತಿದ್ದಾಗ ಪಾನಮತ್ತ ಬಾಲಕರು ರೈಲನ್ನೇರಿದ್ದರು. ಇನ್ಸ್ಟಾಗ್ರಾಂಗಾಗಿ ರೀಲ್ಸ್ ಮಾಡುತ್ತಿದ್ದ ಅವರು ನಾಟಕೀಯವಾಗಿ ಸೂರಜ್ ನ ಕೊರಳಿಗೆ ಕುಡುಗೋಲನ್ನು ಹಿಡಿದಿದ್ದರು. ಅದನ್ನು ಸೂರಜ್ ಆಕ್ಷೇಪಿಸಿದಾಗ, ಬಾಲಕರು ಆತನಿಗೆ ಇರಿದಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.
ತಮಿಳಿನಲ್ಲಿ ಮಾತನಾಡದ ವಲಸೆ ಕಾರ್ಮಿಕನಿಗೆ ಇರಿತ; ದುಷ್ಕರ್ಮಿಗಳಿಗಾಗಿ ಪೊಲೀಸರ ಶೋಧ
ಕೊಯಮತ್ತೂರು, ಡಿ.31: ತಮಿಳಿನಲ್ಲಿ ಮಾತನಾಡದೆ ಇದ್ದುದಕ್ಕಾಗಿ ಬೇಕರಿಯೊಂದರಲ್ಲಿ ವಲಸೆ ಕಾರ್ಮಿಕನೊಬ್ಬನೊಂದಿಗೆ ವಾಗ್ವಾದಕ್ಕಿಳಿದ ಇಬ್ಬರು ವ್ಯಕ್ತಿಗಳು ಆತನಿಗೆ ಚೂರಿಯಿಂದ ಇರಿದು ಪರಾರಿಯಾದ ಘಟನೆ ಕೊಯಮತ್ತೂರಿನ ಕರುಮಾದಂಪಟ್ಟಿ ಸಮೀಪ ವರದಿಯಾಗಿದೆ. ಡಿಸೆಂಬರ್ 15ರಂದು ಈ ಘಟನೆ ನಡೆದಿದ್ದು, ಅದರ ಸಿಸಿಟಿವಿ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಮೂಲತಃ ಉತ್ತರ ಪ್ರದೇಶದ ಮಹಾರಾಜ್ಗಂಜ್ ಜಿಲ್ಲೆಯ ನಿವಾಸಿ 27 ವರ್ಷದ ಗೋವಿಂದ್ ಕೊಂಡ್, ಕೊಯಮತ್ತೂರಿನ ಖಾಸಗಿ ಕಂಪೆನಿಯೊಂದರಲ್ಲಿ ಕಾರ್ಪೆಂಟರ್ ಆಗಿ ಕೆಲಸ ಮಾಡುತ್ತಿದ್ದನು. ಆತ ಕರುಮಾದಂಪಟ್ಟಿಯಲ್ಲಿರುವ ಖಾಸಗಿ ಹಾಲ್ನಲ್ಲಿ 2025ರ ಡಿಸೆಂಬರ್ 9ರಿಂದ ವಾಸ್ತವ್ಯ ಹೂಡಿದ್ದನು. ಡಿಸೆಂಬರ್ 15ರಂದು ಗೋವಿಂದ್ ಹಾಗೂ ಆತನ ಸಹದ್ಯೋಗಿ ರಾಕೇಶ್ (19) ಚಹಾ ಕುಡಿಯಲೆಂದು ಸಮೀಪದ ಬೇಕರಿಗೆ ತೆರಳಿದ್ದರು. ಅಲ್ಲಿಗೆ ಆಗಮಿಸಿದ ಇಬ್ಬರು ಗೋವಿಂದ್ ನನ್ನು ತಮಿಳಿನಲ್ಲಿ ಪ್ರಶ್ನಿಸಿದರು. ಅದಕ್ಕೆ ಗೋವಿಂದ್ ತನಗೆ ತಮಿಳು ತಿಳಿದಿಲ್ಲವೆಂದು ಹಿಂದಿಯಲ್ಲಿ ಉತ್ತರಿಸಿದ್ದ. ಆಗ ವಾಗ್ವಾದ ನಡೆದಾಗ ಒಬ್ಬಾತ ರಾಕೇಶ್ ನ ಕೆನ್ನೆಗೆ ಬಾರಿಸಿದ್ದ. ಗೋವಿಂದ್ ಮಧ್ಯಪ್ರವೇಶಿಸಿದಾಗ, ದುಷ್ಕರ್ಮಿಯು ತನ್ನ ಉಡುಪಿನಲ್ಲಿ ಬಚ್ಚಿಟ್ಟಿದ್ದ ಚಾಕುವನ್ನು ಹೊರಗೆಳೆದು, ಆತನ ಎದೆ, ಸೊಂಟದ ಎಡಭಾಗ ಹಾಗೂ ಕೈಗಳಿಗೆ ಇರಿದಿದ್ದ. ಆಗ ಬೇಕರಿಯ ಸಿಬ್ಬಂದಿ ಮಧ್ಯಪ್ರವೇಶಿಸಿದಾಗ ದುಷ್ಕರ್ಮಿಗಳು ಪರಾರಿಯಾಗಿದ್ದರು. ಗಾಯಗಳಾಗಿದ್ದ ಗೋವಿಂದ್ನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆತ ನೀಡಿದ ದೂರನ್ನು ಆಧರಿಸಿ ಕರುಮಾದಂಪಟ್ಟಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಉಸ್ಮಾನ್ ಹಾದಿ ಹತ್ಯೆಯ ಶಂಕಿತ ಆರೋಪಿ ದುಬೈಯಲ್ಲಿ: ವರದಿ
ದುಬೈ, ಡಿ.31: ಢಾಕಾದಲ್ಲಿ ಉಸ್ಮಾನ್ ಹಾದಿಯನ್ನು ಗುಂಡಿಕ್ಕಿ ಹತ್ಯೆಗೈದ ಶಂಕಿತ ಆರೋಪಿ ಫೈಸಲ್ ಕರೀಮ್ ಮಸೂದ್, ಹತ್ಯೆಯಲ್ಲಿ ತಾನು ಪಾಲ್ಗೊಂಡಿರುವುದನ್ನು ನಿರಾಕರಿಸಿದ್ದು, ತಾನು ಈಗ ದುಬೈಯಲ್ಲಿ ಇರುವುದಾಗಿ ಹೇಳಿದ್ದಾನೆ. ಬುಧವಾರ ವೈರಲ್ ಆಗಿರುವ ವೀಡಿಯೊದಲ್ಲಿ ಮಸೂದ್, “ಹಾದಿಯ ಹತ್ಯೆಯಲ್ಲಿ ತನ್ನ ಪಾತ್ರವಿಲ್ಲ. ಆದರೆ ಇದರಲ್ಲಿ ತನ್ನನ್ನು ಸಿಲುಕಿಸಲು ಪ್ರಯತ್ನ ನಡೆಯುತ್ತಿರುವ ಮಾಹಿತಿ ಸಿಕ್ಕಿದ ತಕ್ಷಣ ಬಾಂಗ್ಲಾದಿಂದ ಪರಾರಿಯಾಗಿ ದುಬೈಗೆ ಆಗಮಿಸಿದ್ದೇನೆ. ಹಾದಿಯ ಹತ್ಯೆಯನ್ನು ಜಮಾತೆ ಇಸ್ಲಾಮಿ ಪಕ್ಷದ ಶಕ್ತಿಗಳು ನಡೆಸಿವೆ” ಎಂದು ಪ್ರತಿಪಾದಿಸಿದ್ದಾನೆ. ಹಾದಿಯನ್ನು ಹತ್ಯೆಗೈದ ಶಂಕಿತ ಆರೋಪಿಗಳು ಬಳಿಕ ಭಾರತಕ್ಕೆ ಪರಾರಿಯಾಗಿರುವುದಾಗಿ ಬಾಂಗ್ಲಾದೇಶದ ಪೊಲೀಸರು ಆರೋಪಿಸಿದ್ದರು.
12 ಮಂದಿ ಐಎಎಸ್ ಅಧಿಕಾರಿಗಳ ವರ್ಗಾವಣೆ, 66 ಮಂದಿ ಐಎಎಸ್ ಅಧಿಕಾರಿಗಳಿಗೆ ಮುಂಭಡ್ತಿ
ಬೆಂಗಳೂರು: ಐದು ಮಂದಿ ಜಿಲ್ಲಾಧಿಕಾರಿಗಳು ಸೇರಿದಂತೆ 12 ಮಂದಿ ಐಎಎಸ್ ಅಧಿಕಾರಿಗಳನ್ನು ಬುಧವಾರ ವರ್ಗಾವಣೆ ಮಾಡಿರುವ ರಾಜ್ಯ ಸರಕಾರ, 66 ಮಂದಿ ಐಎಎಸ್ ಅಧಿಕಾರಿಗಳಿಗೆ ಮುಂಭಡ್ತಿ ನೀಡಿದ್ದು, ಈ ಪೈಕಿ ಕೆಲ ಅಧಿಕಾರಿಗಳಿಗೆ ಹೆಚ್ಚುವರಿ ಹೊಣೆಗಾರಿಕೆ ನೀಡಿ ಆದೇಶ ಹೊರಡಿಸಿದೆ. ಆರ್ಥಿಕ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಿತೇಶ್ ಕುಮಾರ್ ಸಿಂಗ್, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ವಿ.ರಶ್ಮಿ ಮಹೇಶ್, ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಾಟೇರಿಯಾ, ವಾಣಿಜ್ಯ ಇಲಾಖೆಯ ಜಂಟಿ ಕಾರ್ಯದರ್ಶಿ ದೀಪಕ್ ಜೈನ್, ಆರ್ಥಿಕ ಇಲಾಖೆಯ ಜಂಟಿ ಕಾರ್ಯದರ್ಶಿ ಡಾ. ಏಕ್ರೂಪ್ ಕೌರ್, ಬಿಎಂಆರ್ಸಿಎಲ್ನ ವ್ಯವಸ್ಥಾಪಕ ನಿರ್ದೇಶಕ ರವಿಶಂಕರ್ ಜೆ. ಸೇರಿದಂತೆ 66 ಮಂದಿ ಐಎಎಸ್ ಅಧಿಕಾರಿ ಮುಂಭಡ್ತಿ ನೀಡಲಾಗಿದೆ. ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಮಹ್ಸಿನ್ ಅವರಿಗೆ ಮುಂಬಡ್ತಿ ನೀಡಿ, ಆರೋಗ್ಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯರ್ಶಿಯಾಗಿ ಹೆಚ್ಚುವರಿ ಹೊಣೆಗಾರಿಕೆ ನೀಡಲಾಗಿದೆ. ಆರೋಗ್ಯ ಇಲಾಖೆಯ ಆಯುಕ್ತ ಶಿವಕುಮಾರ್ ಅವರನ್ನು ಮುಂಬಡ್ತಿ ನೀಡಿ, ಬಿಎಂಟಿಸಿಯ ವ್ಯವಸ್ಥಾಪಕ ನಿರ್ದೇಶಕರಾಗಿ ವರ್ಗಾವಣೆ ಮಾಡಲಾಗಿದೆ. ಐದು ಜಿಲ್ಲಾಧಿಕಾರಿಗಳ ವರ್ಗಾವಣೆ: ಚಿಕ್ಕಮಗಳೂರು ಜಿಲ್ಲಾಧಿಕಾರಿ ಮೀನಾ ನಾಗರಾಜ್ ಸಿ.ಎನ್. ಅವರನ್ನು ಬೆಂಗಳೂರಿನ ಕಂದಾಯ ವಿಭಾಗದ ಆಯುಕ್ತರಾಗಿ ವರ್ಗಾವಣೆ ಮಾಡಲಾಗಿದೆ. ಅವರ ಸ್ಥಾನಕ್ಕೆ ಕರ್ನಾಟಕ ಕೌಶಲ್ಯಾಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ನಾಗರಾಜ ಎನ್.ಎಂ. ಅವರನ್ನು ವರ್ಗಾಯಿಸಲಾಗಿದೆ. ಶಿವಮೊಗ್ಗ ಜಿಲ್ಲಾಧಿಕಾರಿ ಗುರುದತ್ ಹೆಗಡೆ ಅವರನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಯುಕ್ತರನ್ನಾಗಿ ಹಾಗೂ ಚಾಮರಾಜನಗರ ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರನ್ನು ಪಶುಸಂಗೋಪನಾ ಇಲಾಖೆಯ ಆಯುಕ್ತರನ್ನಾಗಿ ವರ್ಗಾವಣೆ ಮಾಡಲಾಗಿದೆ. ತುಮಕೂರು ಜಿಲ್ಲಾಧಿಕಾರಿ ಶುಭಾ ಕಲ್ಯಾಣ್ ಅವರನ್ನು ತುಮಕೂರು ಜಿ.ಪಂ ಸಿಇಒ ಹುದ್ದೆಗೆ ವರ್ಗಾವಣೆ ಮಾಡಲಾಗಿದೆ. ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿಯಾಗಿದ್ದ ರವೀಂದ್ರ ಪಿ.ಎನ್. ಅವರನ್ನು ಪೌರಾಡಳಿತ ನಿರ್ದೇಶನಾಲಯದ ನಿರ್ದೇಶಕರನ್ನಾಗಿ ವರ್ಗಾಯಿಸಲಾಗಿದ್ದು, ತುಮಕೂರು ಜಿ.ಪಂ ಸಿಇಒ ಆಗಿದ್ದ ಪ್ರಭು ಜಿ. ಅವರನ್ನು ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿಯಾಗಿ ನೇಮಿಸಲಾಗಿದೆ. ಪಶುಸಂಗೋಪನಾ ಇಲಾಖೆಯ ಆಯುಕ್ತೆ ಶ್ರೀರೂಪಾ ಅವರನ್ನು ಚಾಮರಾಜನಗರ ಜಿಲ್ಲಾಧಿಕಾರಿಯಾಗಿ ವರ್ಗಾವಣೆ ಮಾಡಲಾಗಿದೆ. ಕೃಷಿ ಇಲಾಖೆಯ ಆಯುಕ್ತ ಪಾಟೀಲ್ ಯಳಗೌಡ ಶಿವನಗೌಡ ಅವರನ್ನು ತೋಟಗಾರಿಕಾ ಇಲಾಖೆಯ ನಿರ್ದೇಶಕರಾಗಿ ವರ್ಗಾವಣೆ ಮಾಡಲಾಗಿದೆ.
ಕಿಂಗ್ ಕೊಹ್ಲಿಯಿಂದ ಅನುಷ್ಕಾ ಶರ್ಮಾಗೆ ಹೊಸ ವರ್ಷದ ಹೃದಯಸ್ಪರ್ಶಿ ಸಂದೇಶ; ನೆಟ್ಟಿಗರು ಫುಲ್ ಫಿದಾ!
Virat Kohli Instagram Post- ಹೊಸ ವರ್ಷದ ಸಂಭ್ರಮಾಚರಣೆಯಲ್ಲಿ ಪತ್ನಿ ಅನುಷ್ಕಾ ಶರ್ಮಾ ಅವರಿಗೆ ವಿರಾಟ್ ಕೊಹ್ಲಿ ಹೃದಯಸ್ಪರ್ಶಿ ಸಂದೇಶ ನೀಡಿದ್ದು ಇದೀಗ ಫುಲ್ ವೈರಲ್ ಆಗಿದೆ. 2017ರಲ್ಲಿ ಇಟಲಿಯಲ್ಲಿ ನಡೆದ ವಿವಾಹ ಸಮಾರಂಭದಲ್ಲಿ ವಿವಾಹವಾದ ಈ ಜೋಡಿ ಇಬ್ಬರು ಮಕ್ಕಳೊಂದಿಗೆ ಸುಖವಾಗಿದ್ದಾರೆ. ಇತ್ತೀಚೆಗೆ ಫಾರ್ಮ್ಗೆ ಮರಳಿರುವ ಕೊಹ್ಲಿ, ವಿಜಯ್ ಹಜಾರೆ ಟ್ರೋಫಿಯಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ. ಶೀಘ್ರದಲ್ಲಿ ನ್ಯೂಜಿಲೆಂಡ್ ವಿರುದ್ಧದ ಪ್ರಾರಂಭ ಆಗಲಿರುವ ಸರಣಿಯಲ್ಲಿ ಅವರ ಪ್ರದರ್ಶನ ನೋಡಲು ಅಭಿಮಾನಿಗಳು ಉತ್ಸುಕರಾಗಿದ್ದಾರೆ.
ಧರ್ಮಸ್ಥಳ ಪ್ರಕರಣ: ಶ್ರೀಕ್ಷೇತ್ರ ಧರ್ಮಸ್ಥಳ ಪರವಾಗಿ ಬೆಳ್ತಂಗಡಿ ನ್ಯಾಯಾಲಯಕ್ಕೆ ವಕಾಲತ್ತು ಸಲ್ಲಿಕೆ
ಬೆಳ್ತಂಗಡಿ: ದೇಶಾದ್ಯಂತ ಭಾರಿ ಸುದ್ದಿಯಾಗಿದ್ದ ಧರ್ಮಸ್ಥಳ ಪ್ರಕರಣ ಸಂಬಂಧ ಶ್ರೀಕ್ಷೇತ್ರ ಧರ್ಮಸ್ಥಳದ ಪರವಾಗಿ ಬೆಳ್ತಂಗಡಿ ನ್ಯಾಯಾಲಯಕ್ಕೆ ವಕಾಲತ್ತು ಸಲ್ಲಿಕೆಯಾಗಿದೆ. ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಮೊಕದ್ದಮೆ ಸಂಖ್ಯೆ 39/2025ರ ಸಂಬಂಧ ಬೆಂಗಳೂರಿನ ಹಿರಿಯ ನ್ಯಾಯವಾದಿ ಸಿ.ವಿ. ನಾಗೇಶ್ ಹಾಗೂ ಪುತ್ತೂರಿನ ಮಹೇಶ್ ಕಜೆ ವಕಾಲತ್ತು ಸಲ್ಲಿಸಿದ್ದು, ಡಿ.31ರಂದು ಬೆಳ್ತಂಗಡಿ ನ್ಯಾಯಾಲಯಕ್ಕೆ ಆಗಮಿಸಿ ಕ್ಷೇತ್ರದ ಪರವಾಗಿ ವಾದ ಮಂಡಿಸಿದ್ದಾರೆ. ವಾದ ಆಲಿಸಿದ ನ್ಯಾಯಲಯ ವಿಚಾರಣೆಯನ್ನು ಜ.3 ಕ್ಕೆ ಮುಂದೂಡಿದ್ದಾರೆ. ಪ್ರಕರಣ ಸಂಬಂಧ ಸದ್ಯ ಎಸ್ಐಟಿ ತನಿಖೆ ನಡೆಸುತ್ತಿದ್ದು, ಈ ಬಗ್ಗೆ ಬೆಳ್ತಂಗಡಿ ನ್ಯಾಯಾಲಯಕ್ಕೆ ವರದಿ ಕೂಡ ಸಲ್ಲಿಕೆಯಾಗಿದೆ. ಆ ವರದಿಯಲ್ಲಿ ಧರ್ಮಸ್ಥಳ ವಿರುದ್ಧ ಷಡ್ಯಂತ್ರ ನಡೆಸಿರುವ ಬಗ್ಗೆ ಎಸ್.ಐ.ಟಿ ಆರು ಮಂದಿಯ ವಿರುದ್ಧ ಆರೋಪ ಮಾಡಿದೆ. ಆದರೆ ಆರೋಪಿಗಳ ವಿರುದ್ಧ ಈ ವರೆಗೆ ಎಸ್ಐಟಿ ಕ್ರಮ ಕೈಗೊಂಡಿಲ್ಲ. ಇದಕ್ಕಾಗಿ ಎಸ್.ಐ.ಟಿ ನ್ಯಾಯಲಯದಲ್ಲಿ ಸಲ್ಲಿಸಿರುವ ಅರ್ಜಿಯ ವಿಚಾರಣೆ ಇನ್ನೂ ಮುಂದುವರಿದಿದೆ. ಇದೀಗ ಇದೇ ಮೊದಲ ಬಾರಿಗೆ ಶ್ರೀಕ್ಷೇತ್ರ ಧರ್ಮಸ್ಥಳದವರು ಈ ಪ್ರಕರಣದಲ್ಲಿ ನೇರವಾಗಿ ಸೇರ್ಪಡೆಯಾಗಿದ್ದು, ಧರ್ಮಸ್ಥಳ ಪರವಾಗಿ ವಾದ ಮಂಡನೆ ನಡೆದಿದೆ. ಎಸ್ಐಟಿ ವರದಿ ಸಂಬಂಧ ಜ.3ಕ್ಕೆ ಬೆಳ್ತಂಗಡಿ ಆದೇಶವನ್ನು ಕಾದಿರಿಸಿದ್ದು, ಈ ಹಿನ್ನಲೆಯಲ್ಲಿ ಇದು ಮತ್ತಷ್ಟು ಮಹತ್ವ ಪಡೆದುಕೊಂಡಿದೆ. ನ್ಯಾಯಾಲಯದಲ್ಲಿ ವಾದ ಮಂಡಿಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ನ್ಯಾಯವಾದಿ ಮಹೇಶ್ ಕಜೆ ಅವರು ಸಂತ್ರಸ್ತರು ಎಂಬ ನೆಲೆಯಲ್ಲಿ ಧರ್ಮಸ್ಥಳ ಪರವಾಗಿ ವಕಾಲತು ಸಲ್ಲಿಸಲಾಗಿದೆ. ಇಡೀ ಪ್ರಕರಣದಲ್ಲಿ ಧರ್ಮಸ್ಥಳ ದೇವಸ್ಥಾನವನ್ನು ಉಲ್ಲೇಖ ಮಾಡಲಾಗಿದ್ದು ಸಂತ್ರಸ್ತರಾಗಿದ್ದ ಅವರಿಗೂ ಈ ಪ್ರಕರಣದಲ್ಲಿ ಸ್ವತಹ ಭಾಗಿಯಾಗಲು ಅವಕಾಶ ನೀಡಬೇಕು ಎಂದು ಅರ್ಜಿ ಸಲ್ಲಿಸಲಾಗಿದೆ. ಜ.3ಕ್ಕೆ ಮತ್ತೆ ವಿಚಾರಣೆಗೆ ದಿನಾಂಕ ನಿಗದಿ ಮಾಡಿದ್ದಾರೆ. ಇದಕ್ಕೆ ಪೂರಕವಾಗಿರುವ ದಾಖಲೆಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ. ಇದಕ್ಕೆ ಯಾವುದೇ ಆಕ್ಷೇಪ ಸಲ್ಲಿಕೆಯಾಗಿಲ್ಲ. ಸುಪ್ರೀಂ ಕೋರ್ಟ್ ನಲ್ಲಿ ಸಲ್ಲಿಸಲಾಗಿರುವ ಅರ್ಜಿಯಲ್ಲಿ ಆರೋಪ ಇರುವುದೇ ಧರ್ಮಸ್ಥಳ ವಿರುದ್ಧ ಧರ್ಮಸ್ಥಳವನ್ನು ಉಲ್ಲೇಖಿಸಿ ಸುಪ್ರೀಂ ಕೋರ್ಟ್ ನಲ್ಲಿ ಆರೋಪಿಗಳು ಈ ಹಿಂದೆ ಸಾರ್ವಜನಿಕ ಹಿತಾಸಕ್ತಿಯ ಅರ್ಜಿ ಸಲ್ಲಿಸಿದ್ದರು. ಈ ಹಿನ್ನಲೆಯಲ್ಲಿ ಪ್ರಕರಣ ದಲ್ಲಿ ಭಾಗಿಯಾಗಲು ಸಂತ್ರಸ್ತರಾಗಿರುವವರ ವಾದಗಳನ್ನು ಮಂಡಿಸಲು ಅವಕಾಶ ನೀಡುವಂತೆ ಶ್ರೀ ಕ್ಷೇತ್ರ ಧರ್ಮಸ್ಥಳ ಪರವಾಗಿ ಅರ್ಜಿ ಸಲ್ಲಿಕೆಯಾಗಿದೆ. ನ್ಯಾಯಾಲಯದ ಮುಂದಿನ ತೀರ್ಮಾನದಂತೆ ಮುಂದಿನ ಕಾನೂನು ಹೋರಾಟವನ್ನು ಮುಂದುವರಿಸುವುದಾಗಿ ತಿಳಿಸಿದ್ದಾರೆ.
ಕೇರಳಯಾತ್ರೆ: ಜ.1ರಂದು ಎಸ್ವೈಎಸ್ ಐಕ್ಯದಾರ್ಡ್ಯ ಸಂಗಮ
ಮಂಗಳೂರು, ಡಿ.31: ಕೇರಳ ಮುಸ್ಲಿಂ ಜಮಾಅತ್ ವತಿಯಿಂದ ಸುಲ್ತಾನುಲ್ ಉಲಮಾ ಎ.ಪಿ ಉಸ್ತಾದರ ನೇತೃತ್ವದಲ್ಲಿ ಜನವರಿ 1 ರಿಂದ 16 ತನಕ ಕಾಸರಗೋಡಿನಿಂದ ತಿರುವನಂತಪುರ ತನಕ ನಡೆಯುವ ಮೂರನೆಯ ಕೇರಳ ಯಾತ್ರೆಯ ಅಂಗವಾಗಿ ಎಸ್ವೈಎಸ್ ಐಕ್ಯದಾರ್ಡ್ಯ ಸಂಗಮ ಕಾರ್ಯಕ್ರಮ ಜನವರಿ 1 ರಂದು ನಡೆಯಲಿದೆ. ಮಧ್ಯಾಹ್ನ 1:30ಕ್ಕೆ ಉಳ್ಳಾಲ ದರ್ಗಾ ಝಿಯಾರತ್ ನಡೆಯಲಿದ್ದು, ಬಳಿಕ ಎಸ್ವೈಎಸ್ ದ.ಕ ವೆಸ್ಟ್ ಜಿಲ್ಲಾ ಸಮಿತಿಯಿಂದ ಉಳ್ಳಾಲ ದರ್ಗಾದಿಂದ ತಲಪಾಡಿ ತನಕ ಕೇರಳ ಯಾತ್ರಾ ನಾಯಕರ ಜತೆ ಸಾಗಲಿದೆ. ಕೇರಳ ಗಡಿ ತಲಪಾಡಿ ಟೋಲ್ಗೇಟ್ ಬಳಿ ಮಧ್ಯಾಹ್ನ 2:00 ಗಂಟೆಗೆ ಕೇರಳ ಯಾತ್ರೆಯ ನಾಯಕರನ್ನು ಗೌರವಿಸುವ ಐಕ್ಯದಾಡ್ಯ ಸಂಗಮವು ನಡೆಯಲಿದೆ. ಎಸ್ವೈಎಸ್ ದ.ಕ ಜಿಲ್ಲಾಧ್ಯಕ್ಷ ಮಹ್ಬೂಬ್ ಸಖಾಫಿ ಕಿನ್ಯ ನೇತೃತ್ವದಲ್ಲಿ ಈ ಕಾರ್ಯಕ್ರಮ ನಡೆಯಲಿದೆ ಎಂದು ದ.ಕ ವೆಸ್ಟ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಮಾಸ್ಟರ್ ಮರಿಕ್ಕಳ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಉಡುಪಿ, ಡಿ.31: ಕೂಲಿ ಕೆಲಸ ಮಾಡಿಕೊಂಡಿದ್ದ ಉದ್ಯಾವರ ಗ್ರಾಮದ ನಿವಾಸಿ ಲಕ್ಷ್ಮಣ ಛಲವಾದಿ (23) ಎಂಬವರು ನ.23ರಂದು ಕೆಲಸಕ್ಕೆಂದು ಮನೆಯಿಂದ ಹೊರಗೆ ಹೋದವರು ವಾಪಾಸು ಬಾರದೇ ನಾಪತ್ತೆಯಾಗಿದ್ದಾರೆ. 5 ಅಡಿ 1 ಇಂಚು ಎತ್ತರ, ಕಪ್ಪು ಮೈಬಣ್ಣ, ದುಂಡು ಮುಖ ಹೊಂದಿದ್ದು, ಕನ್ನಡ ಭಾಷೆ ಮಾತನಾಡುತ್ತಾರೆ. ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಉಡುಪಿ ಪೊಲೀಸ್ ಕಂಟ್ರೋಲ್ ರೂಂ. ದೂ.ಸಂಖ್ಯೆ: 0820-2526444, 2526709, ಕಾರ್ಕಳ ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕರ ಕಚೇರಿ ದೂ.ಸಂಖ್ಯೆ: 08258-231333, ಕಾಪು ಪೊಲೀಸ್ ವೃತ್ತ ನಿರೀಕ್ಷಕರ ಕಚೇರಿ ದೂ.ಸಂಖ್ಯೆ: 0820-2572333, ಮೊ.ನಂ: 9480805431 ಹಾಗೂ ಕಾಪು ಪೊಲೀಸ್ ಠಾಣೆಯ ಉಪನಿರೀಕ್ಷಕರು ದೂ.ಸಂಖ್ಯೆ: 0820- 2551033, ಮೊ.ನಂ: 9480805449 ಅನ್ನು ಸಂಪರ್ಕಿಸ ಬಹುದು ಎಂದು ಕಾಪು ಪೊಲೀಸ್ ಠಾಣಾಧಿಕಾರಿಗಳ ಪ್ರಕಟಣೆ ತಿಳಿಸಿದೆ.
ವಿಕಲಚೇತನರ ಬಸ್ ಪಾಸ್ ನವೀಕರಣಕ್ಕೆ ಸೂಚನೆ
ಉಡುಪಿ, ಡಿ.31: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಮಂಗಳೂರು ವಿಭಾಗದಿಂದ ಸಕಾಲ ಸಂಬಂಧಿತ ಸೇವೆಯಾದ ವಿಕಲಚೇತನರ ರಿಯಾಯಿತಿ ದರದ ಬಸ್ಪಾಸನ್ನು ಸೇವಾಸಿಂಧು ಪೋರ್ಟಲ್ ಮುಖಾಂತರ ನಿರ್ವಹಿಸಲಾಗುತ್ತಿದ್ದು, ವಿಕಲಚೇತನ ಪ್ರಯಾಣಿಕರಿಗೆ ತಮ್ಮ ವಾಸಸ್ಥಳದಿಂದ 100 ಕಿ.ಮೀ. ವ್ಯಾಪ್ತಿಯಲ್ಲಿ ಪ್ರಯಾಣಿಸಲು ರಿಯಾಯಿತಿ ದರದಲ್ಲಿ ಬಸ್ಸು ಪಾಸುಗಳನ್ನು ವಿತರಿಸಲಾಗುತ್ತಿದೆ. 2025ನೇ ಸಾಲಿನಲ್ಲಿ ವಿತರಿಸಿರುವ ಸದ್ರಿ ರಿಯಾಯಿತಿ ಬಸ್ ಪಾಸುಗಳ ಅವಧಿ ಡಿಸೆಂಬರ್ 31ಕ್ಕೆ ಮುಕ್ತಾಯಗೊಳ್ಳಲಿದ್ದು, 2026ನೇ ಸಾಲಿಗಾಗಿ ಈ ಬಸ್ಪಾಸುಗಳನ್ನು 2026ರ ಜನವರಿ 01ರಿಂದ ನವೀಕರಿಸಲು ಕ್ರಮ ಕೈಗೊಳ್ಳಲಾಗಿದೆ. ಶೀಘ್ರ ಹೊಸ ಪಾಸುಗಳನ್ನು ನೀಡಲಾಗುವುದು. ವಿಕಲಚೇತನರ ರಿಯಾಯಿತಿ ದರದ ಬಸ್ ಪಾಸುಗಳನ್ನು ಫಲಾನುಭವಿಗಳು ಬಂದು ನವೀಕರಿಸಿಕೊಳ್ಳಲು ಅನುಕೂಲವಾಗುವಂತೆ 2025ನೇ ಸಾಲಿನಲ್ಲಿ ವಿತರಿಸಿದ ಪಾಸುಗಳನ್ನು 2026ರ ಫೆಬ್ರವರಿ 28ರವರೆಗೆ ಮಾನ್ಯ ಮಾಡಲಾಗುವುದು.ವಿಕಲಚೇತನರ ರಿಯಾಯಿತಿ ಪಾಸುಗಳನ್ನು ಪಡೆಯಲು ಸೇವಾಸಿಂಧು ಪೋರ್ಟಲ್ ಮೂಲಕ - https://sevasindhuservices.karnataka.gov.in-ನಲ್ಲಿ ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ 1 ಸ್ಟಾಂಪ್ ಸೈಜಿನ ಮತ್ತು 2 ಪಾಸ್ಪೋರ್ಟ್ ಸೈಜಿನ ಇತ್ತೀಚಿನ ಭಾವಚಿತ್ರ, ವಿಕಲಚೇತನ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯು ವಿತರಿಸುವ ಗುರುತಿನ ಚೀಟಿಯ ಮೂಲ ಪ್ರತಿಯನ್ನು (ಮಾನ್ಯತಾ ಅವಧಿ ಮುಗಿದಿರಬಾರದು) ಅಥವಾ ವಿಕಲಚೇತನ ವ್ಯಕ್ತಿಗಳಿಗೆ ಹೊಸದಾಗಿ ನೀಡಲಾಗಿರುವ ಯುಡಿಐಡಿ ಕಾರ್ಡಿನ ಮೂಲಪ್ರತಿ ಹಾಗೂ ವಿಳಾಸದ ದೃಢೀಕರಣ ದಾಖಲಾತಿ (ಆಧಾರ್ಕಾರ್ಡ್) ಮೂಲಪ್ರತಿಯೊಂದಿಗೆ ಅರ್ಜಿ ಸಲ್ಲಿಸಬೇಕು. ನಿಗಮದ ವಿಕಲಚೇತನರ ರಿಯಾಯಿತಿ ಬಸ್ಪಾಸನ್ನು ಪಡೆಯುವ ಫಲಾನುಭವಿಗಳು ಮೇಲ್ಕಂಡ ಸೂಕ್ತ ದಾಖಲೆಗಳನ್ನು ಜೆಪಿಇಜಿ ಹಾಗೂ ಪಿಡಿಎಫ್ ನಮೂನೆಯಲ್ಲಿ ಸೇವಾಸಿಂಧು ಪೋರ್ಟಲ್ನಲ್ಲಿ ಅಪ್ಲೋಡ್ ಮಾಡಿ, ಸದರಿ ದಾಖಲೆಗಳ ಜೆರಾಕ್ಸ್ ಪ್ರತಿಗಳನ್ನು ಹಾಗೂ ಪಾಸ್ನ ಶುಲ್ಕ 660ರೂ.ವನ್ನು ನೀಡಿ ಪಾಸುಗಳನ್ನು ಪಡೆಯ ಬಹುದು. ಪಾಸುಗಳನ್ನು ನವೀಕರಿಸಲು ಫೆ.28 ಕೊನೆಯ ದಿನವಾಗಿದೆ ಎಂದು ಮಂಗಳೂರು ಕ.ರಾ.ರ.ಸಾ. ನಿಗಮದ ಹಿರಿಯ ವಿಭಾಗೀಯ ನಿಯಂತ್ರಣಾಧಿಕಾರಿಗಳ ಪ್ರಕಟಣೆ ತಿಳಿಸಿದೆ.
ರಾಜ್ಯ ಪೊಲೀಸ್ ಇಲಾಖೆಯಲ್ಲಿ ಮಹತ್ವದ ಬದಲಾವಣೆ: 48 ಮಂದಿ ಐಪಿಎಸ್ ಅಧಿಕಾರಿಗಳಿಗೆ ಮುಂಭಡ್ತಿ
ವಿವಿಧ ಜಿಲ್ಲೆಗಳ ಎಸ್ಪಿ ವರ್ಗಾವಣೆ
ವಿಟ್ಲ: ಇಲೆಕ್ಟ್ರಾನಿಕ್ ಅಂಗಡಿಯಲ್ಲಿ ಬೆಂಕಿ
ವಿಟ್ಲ: ಇಲೆಕ್ಟ್ರಾನಿಕ್ ಅಂಗಡಿಯೊಂದರಲ್ಲಿ ಬೆಂಕಿ ಕಾಣಿಸಿಕೊಂಡಿ ಅಂಗಡಿ ಸಂಪೂರ್ಣ ಹೊತ್ತಿ ಉರಿದ ಘಟನೆ ವಿಟ್ಲ ಪೇಟೆಯಲ್ಲಿ ನಡೆದಿದೆ. ಬೆಂಕಿಗೆ ಕಾರಣ ಇನ್ನಷ್ಟೇ ತಿಳಿಯಬೇಕಿದೆ. ಅಂಗಡಿ ಸಂಪೂರ್ಣ ಭಸ್ಮವಾಗಿದ್ದು ಬೆಂಕಿ ಹೊತ್ತಿ ಉರಿಯುತ್ತಿದೆ. ಪಕ್ಕದ ಅಂಗಡಿಗಳಿಗೂ ಬೆಂಕಿ ಹರಡುವ ಸಂಭವವಿದ್ದು ಬೆಂಕಿ ನಂದಿಸಲು ಹರಸಾಹಸ ಪಡುತ್ತಿದ್ದಾರೆ.
ಜ.3: ವಿದುಷಿ ದೀಕ್ಷಾ ರಾಮಕೃಷ್ಣರಿಂದ ‘ಏಕವ್ಯಕ್ತಿ ಗಾನ ನೃತ್ಯಾರ್ಪಣೆ’
ಉಡುಪಿ, ಡಿ.31: ಉಡುಪಿ-ಮಣಿಪಾಲದ ಹೆಜ್ಜೆ-ಗೆಜ್ಜೆ ಫೌಂಡೇಷನ್ನ ಸಹ ನಿರ್ದೇಶಕಿಯಾಗಿರುವ ವಿದುಷಿ ದೀಕ್ಷಾ ರಾಮಕೃಷ್ಣ ಇವರಿಂದ ಇದೇ ಜ.3ರಂದು ಶ್ರೀಪುರಂದರ ದಾಸರ ರಚನೆಗಳಿಗೆ ಏಕವ್ಯಕ್ತಿ ಗಾನ-ನೃತ್ಯಾರ್ಪಣೆ ಕಾರ್ಯಕ್ರಮ ಆರು ಗಂಟೆಗಳ ಕಾಲ ನಡೆಯಲಿದೆ ಎಂದು ಹೆಜ್ಜೆ-ಗೆಜ್ಜೆಯ ಕಾರ್ಯದರ್ಶಿ ರಾಮಕೃಷ್ಣ ಹೆಗಡೆ ತಿಳಿಸಿದ್ದಾರೆ. ಉಡುಪಿಯಲ್ಲಿಂದು ಕರೆದ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ತಮ್ಮ ಈ ಪ್ರಯತ್ನದ ಮೂಲಕ ದೀಕ್ಷಾ ರಾಮಕೃಷ್ಣ ಅವರು ಗೋಲ್ಡನ್ ಬುಕ್ ಆಫ್ ವಲ್ಡ್ ರೆಕಾರ್ಡ್ನಲ್ಲಿ ಸೇರ್ಪಡೆಗೊಳ್ಳಲು ಪ್ರಯತ್ನಿಸ ಲಿದ್ದಾರೆ ಎಂದರು. ಉಡುಪಿ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ದೀಕ್ಷಾ ಅವರು ಬೆಳಗ್ಗೆ 9ಗಂಟೆಗೆ ತನ್ನ ದಾಖಲೆಯ ಗಾನ-ನೃತ್ಯ ಕಾರ್ಯಕ್ರಮ ನಡೆಸಲಿದ್ದು, ಅಪರಾಹ್ನ 3:00ಗಂಟೆಯವರೆಗೆ ಸತತವಾಗಿ ಆರು ಗಂಟೆಗಳ ಕಾಲ ಇದನ್ನು ಮುಂದು ವರಿಸುವರು. ಈ ಅವಧಿಯಲ್ಲಿ ಅವರು ಪುರಂದರದಾಸರ ಸುಮಾರು 500ಕ್ಕೂ ಅಧಿಕ ಕೀರ್ತನೆಗಳನ್ನು ಹಾಡಿ ಕುಣಿಯಲಿದ್ದಾರೆ ಎಂದರು. ಇಂಥ ಗಾನ-ನೃತ್ಯ ಪ್ರಯತ್ನವನ್ನು ಈ ಹಿಂದೆ ಯಾರೂ ಮಾಡಿಲ್ಲ. ಹೀಗಾಗಿ ಈ ಮೂಲಕ ದೀಕ್ಷಾ ಅವರ ಸಾಧನೆ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ನಲ್ಲಿ ದಾಖಲಾಗಲಿದೆ. ಈ ಪ್ರಯತ್ನದಲ್ಲಿ ಅವರಿಗೆ ಹಿಮ್ಮೇಳನದಲ್ಲಿ ಹಾರ್ಮೋನಿಯಂನಲ್ಲಿ ವಿದ್ವಾನ್ ಸತೀಶ್ ಭಟ್ ಹೆಗ್ಗಾರ್,. ವಿದ್ವಾನ್ ಶಶಿಕಿರಣ್ ತಬಲದಲ್ಲಿ ವಿದ್ವಾನ್ ಮಾಧವಾಚಾರ್ ಉಡುಪಿ, ವಿದುಷಿ ವಿಜೇತಾ ಹೆಗಡೆ ಸಹಕರಿಸಲಿದ್ದಾರೆ ಎಂದು ರಾಮಕೃಷ್ಣ ಹೆಗಡೆ ತಿಳಿಸಿದರು. ಜ.3ರಂದು ಬೆಳಗ್ಗೆ 8:30ಕ್ಕೆ ಗೋಲ್ಡನ್ ಬುಕ್ ಆಫ್ ರೆಕಾರ್ಡ್ಸ್ನ ಏಷಿಯಾ ಮುಖ್ಯಸ್ಥ ಡಾ.ಮನಿಷ್ ವಿಶ್ನೋಯ್, ಹೆಜ್ಜೆ-ಗೆಜ್ಜೆ ನಿರ್ದೇಶಕಿ ವಿದುಷಿ ಯಶಾ ರಾಮಕೃಷ್ಣ, ಬಳ್ಳಾರಿ ಬಸವ ಟ್ರಸ್ಟ್ನ ಅಧ್ಯಕ್ಷ ಡಾ.ಶರಣ ಬಸವ ಅವರ ಉಪಸ್ಥಿತಿಯಲ್ಲಿ ಕಾರ್ಯಕ್ರಮ ಉದ್ಘಾಟನೆಗೊಳ್ಳಲಿದೆ. ದೀಕ್ಷಾ ರಾಮಕೃಷ್ಣ ಅವರ ಗಾನ ನೃತ್ಯಾರ್ಪಣೆಯ ಬಳಿಕ ಸಂಜೆ 5:00 ಗಂಟೆಗೆ ದಾಸ ಪದ ವೈಭವಂ ಮತ್ತು ಪುರಂದರ ಗಾನ ನರ್ತನದ ಸಮಾರೋಪ ಸಮಾರಂಭ ನಡೆಯಲಿದೆ. ಇದರಲ್ಲಿ ಶಾಸಕ ಯಶ್ಪಾಲ್ ಸುವರ್ಣ ಸೇರಿದಂತೆ ಅನೇಕ ಗಣ್ಯರು ಪಾಲ್ಗೊಳ್ಳಲಿದ್ದಾರೆ. ಸಂಜೆ 6ಗಂಟೆ ಬಳಿಕ ವಿದುಷಿ ದೀಕ್ಷಾ ರಾಮಕೃಷ್ಣ ಮತ್ತು ಹೆಜ್ಜೆ-ಗೆಜ್ಜೆ ವಿದ್ಯಾರ್ಥಿಗಳಿಂದ ನೃತ್ಯ ಕಾಯಕ್ರಮ ನಡೆಯಲಿದೆ. ಮರುದಿನ ಜ.4ರಂದು ರವಿವಾರ ಸಂಜೆ 4:00ಗಂಟೆಗೆ ನೂತನ ರವೀಂದ್ರ ಮಂಟಪದಲ್ಲಿ ದಾಸ ಪದ ವೈಭವಂನ ಸಮಾರೋಪ ಸಮಾರಂಭ ನಡೆಯಲಿದೆ. ಸಭಾ ಕಾರ್ಯಕ್ರಮದ ಬಳಿಕ ಬೆಂಗಳೂರಿನ ವಿದುಷಿ ಗೌರಿ ಸಾಗರ್ರಿಂದ ವಿಷಯಾಧಾರಿತ ಏಕವ್ಯಕ್ತಿ ನೃತ್ಯ ‘ಶ್ರೀವಿನೋದ’ ಪ್ರದರ್ಶನ ಗೊಳ್ಳಲಿದೆ. ಬಳಿಕ ವಿವಿಧ ನೃತ್ಯಶಾಲೆಗಳ ವಿದ್ಯಾರ್ಥಿಗಳಿಂದ ನೃತ್ಯ ಕಾರ್ಯಕ್ರಮ ನಡೆಯಲಿದೆ ಎಂದು ರಾಮಕೃಷ್ಣ ಹೆಗಡೆ ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ವಿದುಷಿ ದೀಕ್ಷಾ ರಾಮಕೃಷ್ಣ ಹಾಗೂ ವಿದುಷಿ ರಂಜನಿ ಕಾಮತ್ ಉಪಸ್ಥಿತರಿದ್ದರು.
ಉಡುಪಿ: ಕ್ರೈಸ್ತರಿಂದ ಹೊಸ ವರ್ಷಕ್ಕೆ ಸ್ವಾಗತ
ಉಡುಪಿ, ಡಿ.31: ಪ್ರಾರ್ಥನೆ ಹಾಗೂ ಧನ್ಯವಾದ ಸಮರ್ಪಣೆಯೊಂದಿಗೆ ಜಿಲ್ಲೆಯ ಕ್ರೈಸ್ತ ಬಾಂಧವರು 2026ನೇ ಹೊಸ ವರ್ಷವನ್ನು ಹಾರ್ದಿಕವಾಗಿ ಸ್ವಾಗತಿಸಿದರು. ಬುಧವಾರ ಸಂಜೆ ಚರ್ಚ್ಗಳಿಗೆ ತೆರಳಿದ ಕ್ರೈಸ್ತರು ದೇವರಿಗೆ ಕೃತಜ್ಞತೆ ಸಲ್ಲಿಸುವುದೊರಂದಿಗೆ ನೂತನ ವರ್ಷ ಪ್ರತಿಯೊಬ್ಬರ ಜೀವನದಲ್ಲಿ ಸುಖ, ಶಾಂತಿ, ನೆಮ್ಮದಿಯನ್ನು ಕರುಣಿಸಲಿ ಎಂದು ಪ್ರಾರ್ಥಿಸಿದರು. ಉಡುಪಿ ಧರ್ಮಪ್ರಾಂತದ ಧರ್ಮಾಧ್ಯಕ್ಷ ಡಾ.ಜೆರಾಲ್ಡ್ಐಸಾಕ್ ಲೋಬೊ ಅವರು ಕಲ್ಯಾಣಪುರ ಮಿಲಾಗ್ರಿಸ್ ಕ್ಯಾಥೆಡ್ರಲ್ನಲ್ಲಿ ಬುಧವಾರ ರಾತ್ರಿ ಪವಿತ್ರ ಬಲಿಪೂಜೆಯನ್ನು ಅರ್ಪಿಸಿದರು. ನೂತನ ವರ್ಷದಲ್ಲಿ ದೇವರು ತೋರಿದ ಹಾದಿಯಲ್ಲಿ ನಡೆದು ವಿಶ್ವ ಶಾಂತಿಗಾಗಿ ಪ್ರತಿಯೊಬ್ಬರು ಪ್ರಾರ್ಥನೆ ಸಲ್ಲಿಸುವಂತೆ ಸಲಹೆ ನೀಡುವುದರೊಂದಿಗೆ ವಿಶ್ವಶಾಂತಿಗಾಗಿ ನಮ್ಮಿಂದಾಗುವ ಪ್ರಯತ್ನವನ್ನು ಮಾಡುವಂತೆ ಕ್ರೈಸ್ತ ಸಮುದಾಯಕ್ಕೆ ಕರೆ ನೀಡಿದರು. ಮಿಲಾಗ್ರಿಸ್ ಕ್ಯಾಥೆಡ್ರಲ್ನ ಪ್ರಧಾನ ಧರ್ಮಗುರು ಮೊನ್ಷಿಂಜ್ಞೊರ್ ಫರ್ಡಿನಾಂಡ್ ಗೊನ್ಸಾಲ್ವಿಸ್, ಸಹಾಯಕ ಧರ್ಮಗುರುಗಳಾದ ಪ್ರದೀಪ್ ಕಾರ್ಡೋಜಾ ಹಾಗೂ ಅತಿಥಿ ಧರ್ಮಗುರುಗಳು ಉಪಸ್ಥಿತರಿದ್ದರು. ಉಡುಪಿ ಶೋಕಮಾತಾ ಇಗರ್ಜಿಯಲ್ಲಿ ಧರ್ಮಗುರು ಚಾರ್ಲ್ಸ್ ಮಿನೇಜಸ್, ಶಿರ್ವ ಆರೋಗ್ಯ ಮಾತಾ ಚರ್ಚಿನಲ್ಲಿ ವಂ. ಲೆಸ್ಲಿ ಡಿಸೋಜಾ, ತೊಟ್ಟಂ ಸಂತ ಅನ್ನಮ್ಮ ಚರ್ಚ್ನಲ್ಲಿ ವಂ.ಡೆನಿಸ್ ಡೆಸಾ ಅವರ ನೇತೃತ್ವದಲ್ಲಿ ಹಾಗೂ ಜಿಲ್ಲೆಯ ಎಲ್ಲಾ ಚರ್ಚುಗಳಲ್ಲಿ ಹೊಸ ವರ್ಷ ಆಚರಣೆಯ ಪ್ರಯುಕ್ತ ಬಲಿಪೂಜೆಗಳು ನಡೆದವು. ಹೊಸ ವರ್ಷಾಚರಣೆ ಸ್ವಾಗತಿಸುವ ಅಂಗವಾಗಿ ಚರ್ಚ್ಗಳಲ್ಲಿ ಯುವ ಸಂಘಟನೆಯ ಸದಸ್ಯರಿಂದ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮ, ಕೇಕ್ ವಿತರಣೆ ಕೂಡ ನಡೆಯಿತು. ಬಲಿಪೂಜೆಯ ಬಳಿಕ ಪರಸ್ಪರ ಹೊಸ ವರ್ಷದ ಶುಭಾಶಯ ವಿನಿಮಯ ಮಾಡಿಕೊಳ್ಳಲಾಯಿತು.
ಮೂಡುಬಿದಿರೆ : ಕಾರು ಢಿಕ್ಕಿ; ಬಾಲಕ ಮೃತ್ಯು
ಮೂಡುಬಿದಿರೆ : ಚಾಲಕನ ಅಜಾಗರೂಕತೆಯಿಂದ ಕಾರೊಂದು ಢಿಕ್ಕಿ ಹೊಡೆದ ಪರಿಣಾಮವಾಗಿ ಬಾಲಕ ಮೃತಪಟ್ಟಿರುವ ಘಟನೆ ಮಾರೂರು ಹೊಸಂಗಡಿ ಬಳಿ ಬುಧವಾರ ಮಧ್ಯಾಹ್ನ ನಡೆದಿದೆ. ಹೊಸಂಗಡಿಯ ನಝೀರ್ ಎಂಬವರ ಪುತ್ರ ಝಾಹಿರ್ (13) ಮೃತಪಟ್ಟ ಬಾಲಕ ಎಂದು ಗುರುತಿಸಲಾಗಿದೆ. ಝಾಹಿರ್ ಸ್ಥಳೀಯ ಶಾಲೆಯ ಏಳನೇ ತರಗತಿಯ ವಿದ್ಯಾರ್ಥಿಯಾಗಿದ್ದು, ಇಂದು ಮಧ್ಯಾಹ್ನ ತಾಯಿಯೊಂದಿಗೆ ಅಂಗಡಿಗೆಂದು ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ಸಂದರ್ಭ ಎದುರಿನಿಂದ ಬಂದ ಕಾರು ಢಿಕ್ಕಿ ಹೊಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
108 ಆಂಬ್ಯುಲೆನ್ಸ್ಗಳು ಅಗತ್ಯಕ್ಕಿಂತ ಹೆಚ್ಚು ಸೇವೆಯಲ್ಲಿವೆ: ಬಿಜೆಪಿಯದ್ದು ಸುಳ್ಳು ಆರೋಪ: ಸಚಿವ
ಬೆಂಗಳೂರು: ಕರ್ನಾಟಕ ರಾಜ್ಯ ಆರೋಗ್ಯ ಇಲಾಖೆ ವ್ಯಾಪ್ತಿಯಲ್ಲಿನ '108 ಆಂಬ್ಯುಲೆನ್ಸ್ಗಳು ಧೂಳು ಹಿಡಿದಿವೆ. ದುರಸ್ತಿ ಎದುರು ನೋಡುತ್ತಿವೆ ಎಂಬುದು ಬಿಜೆಪಿ ಸುಳ್ಳಿನ ಫ್ಯಾಕ್ಟರಿಯಲ್ಲಿ ಹುಟ್ಟಿದ ವದಂತಿಯಾಗಿದೆ. ಇದಕ್ಕೆ ನಾಡಿನ ಜನತೆ ಕಿವಿಗೊಡಬಾರದು. ಬಿಜೆಪಿ ಆರೋಪ ಸತ್ಯಕ್ಕೆ ದೂರವಾಗಿದೆ. ಅಗತ್ಯತೆಗಿಂತಲೂ ಅಧಿಕ ಆಂಬ್ಯುಲೆನ್ಸ್ಗಳು ಸೇವೆಯಲ್ಲಿ ಕಾರ್ಯನಿರತವಾಗಿವೆ ಎಂದು ಆರೋಗ್ಯ ಇಲಾಖೆ ಸಚಿವ ದಿನೇಶ್ ಗುಂಡೂರಾವ್ ಅವರು ತಿರುಗೇಟು ನೀಡಿದರು.
2026 ಮುಗಿಯುವ ಒಳಗೆ ಕೆಲಸ ಕಳೆದುಕೊಳ್ಳಲಿದ್ದಾರೆ ಇವರೆಲ್ಲಾ, ಯಾವ ಹುದ್ದೆಗಳು ಮಾಯ? Job Displacement
ಕೆಲಸ ಹೋಗುತ್ತಿದೆ, ಎಐ ಟೆಕ್ನಾಲಜಿ ಬಂದ ನಂತರ ಇಡೀ ಜಗತ್ತಿನಲ್ಲಿ ಅಲ್ಲೋಲ ಕಲ್ಲೋಲವೇ ಸೃಷ್ಟಿಯಾಗಿದೆ ಎಂಬ ಭಯ ಕೂಡ ಆವರಿಸಿದೆ. ಇಂತಹ ಸಮಯದಲ್ಲೇ ಮತ್ತೊಂದು ಭೀಕರವಾದ ಸುದ್ದಿ ನಿರೋದ್ಯೋಗದ ಮೂಟೆಯನ್ನೇ ಹೊತ್ತು ತಂದಿದೆ. ಭವಿಷ್ಯದಲ್ಲಿ ಮತ್ತಷ್ಟು ಕೆಲಸ ಹೋಗಿ ನಿರುದ್ಯೋಗ ಹೆಚ್ಚಾಗುವುದು ಗ್ಯಾರಂಟಿ ಆಗುತ್ತಿದೆ. 2026 ಮುಗಿಯುವ ಒಳಗೆ ಕೆಲಸ ಇಲ್ಲದೆ ಎಲ್ಲಾ ಕಡೆ ಪರದಾಡುವ ಜನರ
ಆಟೋ ಚಾಲಕ ಜಬ್ಬಾರ್ ಕೊಲೆ ಪ್ರಕರಣ: ಇಬ್ಬರು ಆರೋಪಿಗಳ ಬಂಧನ
ಸುಳ್ಯ: ಶಾಂತಿನಗರ ನಿವಾಸಿ ಆಟೋ ಚಾಲಕ ಜಬ್ಬಾರ್ ಎಂಬವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಆರೋಪಿಗಳನ್ನು ಸುಳ್ಯ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ರಫೀಕ್ ಪಡು (41) ಹಾಗು ಸಂಪಾಜೆ ನಿವಾಸಿ ಮನೋಹರ್ ಕೆ.ಎಸ್. (42) ಎಂದು ಗುರುತಿಸಲಾಗಿದೆ. ಅ.17 ರಂದು ಅಟೋ ಚಾಲಕ ಜಬ್ಬಾರ್ ರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟರು. ರಫೀಕ್ ಪಡು ಮತ್ತು ಮನೋಹರ್ ಸೇರಿ ಹಲ್ಲೆ ನಡೆಸಿದರ ಪರಿಣಾಮವಾಗಿ ತನ್ನ ಪತಿ ಮೃತಪಟ್ಟಿರುವುದಾಗಿ ಜಬ್ಬಾರ್ ಅವರ ಪತ್ನಿ ಸುಳ್ಯ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಹಲ್ಲೆಯಿಂದ ಜಬ್ಬಾರ್ ಮೃತಪಟ್ಟಿದ್ದಾರೆ ಎಂದು ವೈದ್ಯಕೀಯ ವರದಿಯಲ್ಲಿ ದೃಡಪಟ್ಟ ಕಾರಣ ಕೊಲೆ ಪ್ರಕರಣವಾಗಿ ಮಾರ್ಪಡಿಸಲಾಗಿದೆ. ಡಿ 30 ರಂದು ಆರೋಪಿ ರಫೀಕ್ನನ್ನು ಪೊಲೀಸರು ಸುಳ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ನ್ಯಾಯಾಲಯವು ಆತನನ್ನು ಹೆಚ್ಚಿನ ತನಿಖೆಗಾಗಿ ಮತ್ತೆ ಪೊಲೀಸ್ ಕಸ್ಟಡಿಗೆ ನೀಡಿದೆ. ಮತ್ತೋರ್ವ ಆರೋಪಿ ಸಂಪಾಜೆಯ ಮಹೋಹರ್ ನನ್ನು ಕೂಡ ದಸ್ತಗಿರಿ ಮಾಡಲಾಗಿದ್ದು, ಅಲ್ಲದೇ ಕೃತ್ಯಕ್ಕೆ ಬಳಸಿದ ಕಾರನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪುದುಚೇರಿ ಕ್ರಿಕೆಟ್ ನಲ್ಲಿ ಭಾರೀ ಗೋಲ್ ಮಾಲ್! ಅನ್ಯರಾಜ್ಯಗಳ ಆಟಗಾರರ ಸೇರ್ಪಡೆಗಾಗಿ ಕೋಚ್ ಗಳ ಸರ್ಕಸ್ ಅಷ್ಟಿಷ್ಟಲ್ಲ
Puducherry ‘Cricket Scam- ಪುದುಚೇರಿ ರಾಜ್ಯ ಕ್ರಿಕೆಟ್ ತಂಡದ ಆಯ್ಕೆಯಲ್ಲಿ ದೊಡ್ಡ ಗೋಲ್ ಮಾಲ್ ನಡೆಯುತ್ತಿದೆ ಎಂಬ ಆರೋಪ ಕೇಳಿ ಬಂದಿದೆ. ಹೊರ ರಾಜ್ಯ ಆಟಗಾರರನ್ನು ತಂಡಕ್ಕೆ ಆಯ್ಕೆ ಮಾಡುವ ಸಲುವಾಗಿ ನಕಲಿ ನಿವಾಸ ಪ್ರಮಾಣಪತ್ರ ಸೇರಿದಂತೆ ಹಲವು ಅಕ್ರಮ ದಾಖಲೆಗಳನ್ನು ಸೃಷ್ಟಿಸಲಾಗುತ್ತಿದೆ. ಹಣಕ್ಕಾಗಿ ಕೆಲ ಖಾಸಗಿ ತರಬೇತುದಾರರು ಈ ಅಕ್ರಮಕ್ಕೆ ಕುಮ್ಮಕ್ಕು ನೀಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ರಾಜ್ಯ ಕ್ರಿಕೆಟ್ ಅಸೋಸಿಯೇಶನ್ ಈ ಆರೋಪವನ್ನು ಅಲ್ಲಗೆಳೆದಿದ್ದು ಬಿಸಿಸಿಐ ಈವರೆಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಜ.2-4: ವಾರ್ಷಿಕ ಜಲಾಲಿಯ್ಯ , ಬುರ್ದಾ ಮಜ್ಲಿಸ್; ಅಧ್ಯಾತ್ಮಿಕ ಸಂಗಮ
ಮಂಗಳೂರು, ಡಿ.29: ಉಳ್ಳಾಲದ ಮೇಲಂಗಡಿಯ ಕೆಎಂಜೆ, ಎಸ್ವೈಎಸ್, ಎಸ್ಎಸ್ಎಫ್ ವತಿಯಿಂದ 9ನೇ ವಾರ್ಷಿಕ ಜಲಾಲಿಯ್ಯ, ಬುರ್ದಾ ಮಜ್ಲಿಸ್ ಮತ್ತು ಆಧ್ಮಾತ್ಮಿಕ ಸಂಗಮ ಕಾರ್ಯಕ್ರಮ ಜ.2ರಿಂದ 4ರ ತನಕ ಮೇಲಂಗಡಿಯ ತಾಜುಲ್ ಉಲಮಾ ವೇದಿಕೆ ಖುರ್ರತುಸ್ಸಾದಾತ್ ಸಭಾಂಗಣದಲ್ಲಿ ನಡೆಯಲಿದೆ. ಜ.2ರಂದು ಮಗ್ರಿಬ್ ನಮಾಝ್ನ ಬಳಿಕ ಅಶ್ರಫ್ ಮುಸ್ಲಿಯಾರ್ ಪೆರುಮುಗಂ ನೇತೃತ್ವದಲ್ಲಿ ಬೃಹತ್ ಬುರ್ದಾ ಮಜ್ಲಿಸ್ ನಡೆಯಲಿದೆ. ಜ.3ರಂದು ಮಗ್ರಿಬ್ ನಮಾಜ್ನ ಬಳಿಕ ಅಸ್ಸಯ್ಯಿದ್ ಹಸ್ಸಬುಲ್ಲಾಹ್ ಬಾಫಖಿ ತಂಙಳ್ ಕೊಲ್ಲಂ ಇವರಿಂದ ಮತಪ್ರಭಾಷಣವನ್ನು ಆಯೋಜಿಸಲಾಗಿದೆ. ಜ.4ರಂದು ಮಗ್ರಿಬ್ ನಮಾಝ್ನ ಬಳಿಕ ಮಾದರಿ ಮದುವೆ ಶತದಿನ ಅಭಿಯಾನ ಕಾರ್ಯಕ್ರಮದಲ್ಲಿ ಕೆ.ಎಂ. ಅಬೂಬಕರ್ ಸಿದ್ದೀಕ್ ಉಸ್ತಾದ್ ಮೋಂಟುಗೋಳಿ ವಿಷಯ ಮಂಡನೆ ಮಾಡಲಿರುವರು. ಬಳಿಕ ಸಯ್ಯದ್ ಮುಷ್ತಾಕುರ್ರಹ್ಮಾನ್ ತಂಙಳ್ ಚಟ್ಟಕ್ಕಲ್ ನೇತೃತ್ವದಲ್ಲಿ ಬೃಹತ್ ಜಲಾಲಿಯ್ಯ ಮಜ್ಲಿಸ್ ಮತ್ತು ಸನ್ಮಾನ ಕಾರ್ಯಕ್ರಮ ನಡೆಯಲಿದೆ. ಕರ್ನಾಟಕ ವಿಧಾನ ಸಭೆಯ ಸ್ಪೀಕರ್ ಯು.ಟಿ.ಖಾದರ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿರುವರು ಎಂದು ಪ್ರಕಟನೆ ತಿಳಿಸಿದೆ.
ಸ್ವಚ್ಛ ಮನೆ ಸ್ವಯಂ ಘೋಷಣೆಯೊಂದಿಗೆ ಹೊಸ ವರ್ಷಾಚರಣೆ: ಶೀನ ಶೆಟ್ಟಿ
ಮುಡಿಪು: ಸ್ವಚ್ಚ ಮನೆ ಸ್ವಯಂ ಘೋಷಣೆ ಮೂಲಕ ಕಸ ಬಯಲು ಕಸಾಲಯ ಮುಕ್ತ ಸ್ವಚ್ಚ ಸ್ವರಾಜ್ಯ ಕಟ್ಟುವ ಸಂಕಲ್ಪ ದೊಂದಿಗೆ ಹೊಸ ವರ್ಷಾಚರ ಣೆಯನ್ನು ಆಚರಿಸು ವಂತೆ ಜಿಲ್ಲಾ ಸ್ವಚ್ಛತಾ ರಾಯಭಾರಿ ಶೀನ ಶೆಟ್ಟಿ ಕೋರಿದ್ದಾರೆ. ಅವರು ಮುಡಿಪು ಜನಶಿಕ್ಷಣ ಟ್ರಸ್ಟ್ ಸಭಾಂಗಣದಲ್ಲಿ ಹಮ್ಮಿಕೊಂಡ ಸ್ವಚ್ಛ ಮನೆ ಸ್ವಾಭಿಮಾನಿ ಕುಟುಂಬ ಸ್ವಯಂ ಘೋಷಣಾ ಪತ್ರ ನೀಡುವ ಕಾರ್ಯಕ್ರಮ ವನ್ನುದ್ದೇಶಿಸಿ ಮಾತನಾಡುತ್ತಿದ್ದರು. ಜನ ಶಿಕ್ಷಣ ಟ್ರಸ್ಟ್, ಅಪ್ನಾದೇಶ್ ಸ್ವಚ್ಚ ಗ್ರಾಮ ಅಭಿಯಾನ ದಡಿ ಗ್ರಾ.ಪಂ ಸಂಘ ಸಂಸ್ಥೆ ಸಹಯೋಗದಲ್ಲಿ ಕಳೆದ 3ವರ್ಷಗಳಿಂದ ಸ್ವಚ್ಚ ಮನೆ ಸ್ವಯಂ ಘೋಷಣೆ ಬಗ್ಗೆ ಅರಿವು ಮೂಡಿಸುತ್ತಾ , ಹತ್ತು ಸಾವಿರ ಕುಟುಂಬಗಳ ಮನೆ ಗಳಿಂದ ಸ್ವಯಂ ಘೋಷಣೆ ಪತ್ರಗಳನ್ನು ಸಲ್ಲಿಸುವ ಪ್ರಕ್ರಿಯೆ ಆರಂಭವಾಗಿದ್ದು ಈಗಾಗಲೇ ಉಳ್ಳಾಲ ತಾಲೂಕಿನ ನರಿಂಗಾನ ಪುತ್ತೂರು ತಾಲೂಕನ ಒಳಮೊಗ್ರು ಗ್ರಾಮ ಪಂಚಾಯತ್ ಬಂಟ್ವಾಳ ಪುತ್ತೂರು ಸಾಂತ್ವನ ಕೇಂದ್ರ, ತಾಲೂಕು ಸಂಜೀವಿನಿ ಒಕ್ಕೂಟ, ಸ್ಮೈಲ್ ಸ್ಕಿಲ್ ಸ್ಕೂಲ್, ಮಂಗಳೂರು ವಿಶ್ವವಿದ್ಯಾಲಯ ಸಮಾಜ ಕಾರ್ಯ ವಿಭಾಗದ, ಶಾರದಾ ಆಯುರ್ವೇದ ಕಾಲೇಜು ಸ.ಪ್ರ. ದರ್ಜೆ ಕಾಲೇಜು ಮುಡಿಪು,ವಾಮದ ಪದವು, ಪುಂಜಾಲಕಟ್ಟೆ ಹಾಗೂ ಬೀರಿಗ, ಪೆರಾಬೆ ಅಂಗನವಾಡಿ, ಗ್ರಾಮ ವಿಕಾಸ ಕೇಂದ್ರಗಳ ಮೂಲಕ ಸುಮಾರು ಐದು ಸಾವಿರಕ್ಕೂ ಹೆಚ್ಚು ಕುಟುಂಬದವರು ಸ್ವಯಂ ಘೋಷಣೆ ಪತ್ರ ಸಲ್ಲಿಸಿದ್ದಾರೆ ಎಂದು ಶೀನ ಶೆಟ್ಟಿ ಸಭೆಗೆ ಮಾಹಿತಿ ನೀಡಿದ್ದಾರೆ. ಬಯಲು ಕಸಾಲಯಗಳನ್ನು ಅಳಿಸಿ ಸುಸ್ಥಿರ ಸ್ವಚ್ಛತೆ ಸಾಧಿಸಲು ಕಸವನ್ನು ಎಲ್ಲೆಂದರಲ್ಲಿ ಬಿಸಾಡದೆ ಸುಡದೆ ಮೂಲದಲ್ಲೇ ಹಸಿ ಒಣ ಅಪಾಯಕಾರಿ ಕಸಗಳನ್ನು ವಿಂಗಡಿಸಿ ಸಮರ್ಪಕವಾಗಿ ನಿರ್ವಹಿಸುತ್ತಿರುವ ಕುಟುಂಬಗಳು ಸ್ವಚ್ಚ ಮನೆ ಸ್ವಾಭಿಮಾನಿ ಕುಟುಂಬ ಸ್ವಯಂ ಘೋಷಣೆ ಪತ್ರಗಳನ್ನು ಸಲ್ಲಿಸಿ ಸುಸ್ಥಿರ ಸ್ವಚ್ಛತೆಯ ಕಾರ್ಯ ಸಾಧನೆಗೆ ಮುನ್ನುಡಿ ಬರೆಯುತ್ತಿದ್ದಾರೆ ಎಂದವರು ತಿಳಿಸಿದ್ದಾರೆ. ದ.ಕ.ಜಿಲ್ಲಾ ಉಸ್ತುವಾರಿ ಸಚಿವರು ಸ್ವಚ್ಚ ಮನೆ ಸ್ವಯಂ ಘೋಷಣೆ ಮೂಲಕ ಕಸ ಮುಕ್ತ ಜಿಲ್ಲೆಯ ಕಾರ್ಯಾಚರಣೆಗೆ ಅಗತ್ಯ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿ ಹಾಗೂ ಜಿ.ಪಂ. ಸಿಇಒಗೆ ಸೂಚಿಸಿದ್ದಾರೆ ಅದೇರೀತಿ ಬಯಲು ಬಹಿರ್ದೆಸೆ ಮುಕ್ತ ಸುಸ್ಥಿರ ಸ್ವಚ್ಛ ಗ್ರಾಮಗಳ ನಿರ್ಮಾಣಕ್ಕೆ ಸ್ವಯಂ ಘೋಷಣೆ ಪತ್ರ ಸಲ್ಲಿಸುವ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಯವರೂ ಅಪಾರ ಮುಖ್ಯ ಕಾರ್ಯದರ್ಶಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಇವರಿಗೆ ಸೂಚಿಸಿದ್ದಾರೆ ಎಂದು ಜಿಲ್ಲಾ ಸ್ವಚ್ಛತಾ ರಾಯಭಾರಿ ಶೀನ ಶೆಟ್ಟಿ ಕೋರಿದ್ದಾರೆ.ಈ ಸಂದರ್ಭ ವಿವಿಧ ಸಂಘ ಸಂಸ್ಥೆಗಳ ಸ್ವಚ್ಛತಾ ಸೇನಾನಿಗಳು ಉಪಸ್ಥಿತರಿದ್ದರು.
ಶಿವಮೊಗ್ಗ ಡಿಸಿ, ಎಸ್ಪಿ ವರ್ಗಾವಣೆ; ನೂತನ ಜಿಲ್ಲಾಧಿಕಾರಿಯಾಗಿ ಪ್ರಭುಲಿಂಗ ಕವಲಿಕಟ್ಟಿ ನೇಮಕ
ಶಿವಮೊಗ್ಗ: ಶಿವಮೊಗ್ಗ ಜಿಲ್ಲೆಯ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ವರಿಷ್ಠಾಧಿಕಾರಿಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶಿಸಿದೆ. ಶಿವಮೊಗ್ಗ ಜಿಲ್ಲಾಧಿಕಾರಿಯಾಗಿದ್ದ ಗುರುದತ್ತ ಹೆಗಡೆ ಅವರನ್ನು ವರ್ಗಾವಣೆ ಮಾಡಲಾಗಿದ್ದು, ಅವರ ಸ್ಥಾನಕ್ಕೆ ಪ್ರಸ್ತುತ ಬೆಂಗಳೂರಿನ ಪೌರಾಡಳಿತ ನಿರ್ದೇಶನಾಲಯದ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿರುವ ಪ್ರಭುಲಿಂಗ ಕವಲಿಕಟ್ಟಿ ಅವರನ್ನು ನಿಯೋಜಿಸಿದೆ. ಜಿಲ್ಲಾಧಿಕಾರಿಯಾಗಿರುವ ಗುರುದತ್ತ ಹೆಗಡೆ ಅವರನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಆಯುಕ್ತರಾಗಿ ವರ್ಗಾವಣೆ ಮಾಡಲಾಗಿದೆ. ಕರ್ನಾಟಕ ಸ್ಟೇಟ್ ಮೆಡಿಕಲ್ ಸಪ್ಲೈ ಕಾರ್ಪೊರೇಷನ್ ಲಿಮಿಟೆಡ್ ವ್ಯವಸ್ಥಾಪಕ ನಿರ್ದೇಶಕರಾಗಿ ನೇಮಕ ಮಾಡಿ ಡಿಪಿಎಆರ್ ಆದೇಶದಲ್ಲಿ ತಿಳಿಸಲಾಗಿದೆ. ಎಸ್ಪಿ ವರ್ಗಾವಣೆ: ಶಿವಮೊಗ್ಗ ಜಿಲ್ಲಾ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್ ಅವರ ವರ್ಗಾವಣೆಯಾಗಿದೆ. ಜಿಲ್ಲೆಯ ನೂತನ ವರಿಷ್ಠಾಧಿಕಾರಿಯಾಗಿ ಬಿ.ನಿಖಿಲ್ ಅವರನ್ನು ಸರ್ಕಾರ ನೇಮಕ ಮಾಡಿದೆ. ಜಿ.ಕೆ.ಮಿಥುನ್ ಕುಮಾರ್ ಅವರು 2022ರ ಅಕ್ಟೋಬರ್ 5ರಂದು ಶಿವಮೊಗ್ಗ ಜಿಲ್ಲಾ ರಕ್ಷಣಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡಿದ್ದರು. ಅವರನ್ನು ಬೆಂಗಳೂರು ನಗರದ ಈಶಾನ್ಯ ವಿಭಾಗದ ಡಿಸಿಪಿಯಾಗಿ ವರ್ಗಾವಣೆ ಮಾಡಲಾಗಿದೆ. ಕೋಲಾರ ಜಿಲ್ಲೆಯ ರಕ್ಷಣಾಧಿಕಾರಿಯಾಗಿರುವ ಬಿ.ನಿಖಿಲ್ ಅವರನ್ನು ಶಿವಮೊಗ್ಗಕ್ಕೆ ವರ್ಗಾಯಿಸಲಾಗಿದೆ
ಮಂಗಳೂರು ತಾಲೂಕು ಬ್ಯಾರಿ ಸಾಹಿತ್ಯ ಸಮ್ಮೇಳನ: ಐದು ಬ್ಯಾರಿ ಪುಸ್ತಕಗಳು ಬಿಡುಗಡೆ
ಮಂಗಳೂರು,ಡಿ.31:ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿಯ ವತಿಯಿಂದ ಜ.4ರಂದು ಗುರುಪುರ ಕೈಕಂಬದ ಮೇಘಾ ಪ್ಲಾಝಾ ಸಭಾಂಗಣದಲ್ಲಿ ನಡೆಯಲಿರುವ ಮಂಗಳೂರು ತಾಲೂಕು ಬ್ಯಾರಿ ಸಾಹಿತ್ಯ ಸಮ್ಮೇಳನದಲ್ಲಿ ಬ್ಯಾರಿ ಬರಹಗಾರರ ಐದು ಬ್ಯಾರಿ ಕೃತಿಗಳು ಬಿಡುಗಡೆಯಾಗಲಿವೆ. ಶಮೀಮಾ ಕುತ್ತಾರ್ ಅವರ ಪಡಿಞ್ಞಿರ್ರೊ ಪೂ (ಕಥಾ ಸಂಕಲನ), ಹಸೀನ ಮಲ್ನಾಡ್ ಅವರ ಮಿನ್ನಾಂಪುಲು( ಹನಿಗವನ ಸಂಕಲನ), ಎನ್.ಎಂ. ಹನೀಫ್ ನಂದರಬೆಟ್ಟು ಅವರ ಸಂಪುಕಾತ್ (ಕವನ ಸಂಕಲನ), ಬಶೀರ್ ಅಹ್ಮದ್ ಬೆಳ್ಳಾಯಿರು ಅವರ ಬೆಲ್ಚ (ಕವನ ಸಂಕಲನ), ಹೈದರಲಿ ಕಾಟಿಪಳ್ಳ ಅವರ ಱನಸೀಅತ್ (ಕವನ ಸಂಕಲನ) ಬಿಡುಗಡೆಗೊಳ್ಳಲಿದೆ ಎಂದು ಅಕಾಡಮಿಯ ಅಧ್ಯಕ್ಷ ಉಮರ್ ಯು.ಎಚ್. ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಮಂಗಳೂರು| ನ್ಯಾಯಾಲಯಕ್ಕೆ ನಕಲಿ ದಾಖಲೆ ಸಲ್ಲಿಕೆ ಆರೋಪ: ಪ್ರಕರಣ ದಾಖಲು
ಮಂಗಳೂರು: ಸೂಕ್ತ ದಾಖಲೆಗಳಿಲ್ಲದೆ ಗೋಮಾಂಸ ಸಾಗಾಟ ಮಾಡುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ನಕಲಿ ದಾಖಲೆ ಸಲ್ಲಿಸಿರುವ ಬಗ್ಗೆ ಪ್ರಕರಣ ದಾಖಲಾಗಿದೆ. ಬಜ್ಪೆ ಪೊಲೀಸ್ ಠಾಣಾ ವ್ಯಾಪ್ತಿಯ ಮಳಲಿ ನಾರ್ಲಪದವು ರಸ್ತೆಯಲ್ಲಿ ಕಳೆದ ಶನಿವಾರ ಮುಲ್ಲರಪಟ್ನದ ಅಬ್ದುಲ್ ಸತ್ತಾರ್ ಗೋಮಾಂಸ ಸಾಗಾಟ ಮಾಡುತ್ತಿದ್ದಾಗ ಇಬ್ಬರು ಯುವಕರು ತಡೆದ ಬಗ್ಗೆ ಪ್ರಕರಣ ದಾಖಲಾಗಿತ್ತು. ಈ ಸಂಬಂಧ ಸುಮಿತ್ ಭಂಡಾರಿ ಮತ್ತು ರಜತ್ ನಾಯ್ಕ್ ವಿರುದ್ಧ ಅನೈತಿಕ ಪೊಲೀಸ್ಗಿರಿ ಆರೋಪದಡಿ ಪ್ರಕರಣ ದಾಖಲಿಸಿ ಬಂಧಿಸಲಾಗಿತ್ತು. ಸೂಕ್ತ ದಾಖಲೆಗಳಿಲ್ಲದೆ ಮಾಂಸ ಸಾಗಾಟ ಮಾಡುತ್ತಿದ್ದ ಹಿನ್ನೆಲೆಯಲ್ಲಿ ಅಬ್ದುಲ್ ಸತ್ತಾರ್ನನ್ನು ಕೂಡ ಪೊಲೀಸರು ಬಂಧಿಸಿದ್ದರು. ಅಬ್ದುಲ್ ಸತ್ತಾರ್ನ ಜಾಮೀನು ಅರ್ಜಿಯ ವಿಚಾರಣೆಯ ವೇಳೆ ನ್ಯಾಯಾಲಯಕ್ಕೆ ಬಿಲ್ನ್ನು ಹಾಜರುಪಡಿಸಲಾಗಿತ್ತು. ಆ ಬಿಲ್ನ ಬಗ್ಗೆ ಸಂಶಯ ವ್ಯಕ್ತಪಡಿಸಿದ ಪೊಲೀಸ್ ತನಿಖಾಧಿಕಾರಿ ಬಿಲ್ ಬುಕ್ ಜಪ್ತಿ ಮಾಡಿ ಪರಿಶೀಲನೆ ನಡೆಸಿದಾಗ ನ್ಯಾಯಾಲಯಕ್ಕೆ ನಕಲಿ ಬಿಲ್ ಸಲ್ಲಿಸಿರುವುದು ಗೊತ್ತಾಗಿದೆ. ಆ ಹಿನ್ನೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ನಕಲಿ ಬಿಲ್ ಸಲ್ಲಿಕೆಗೆ ಸಂಬಂಧಿಸಿದಂತೆ ಮಾಂಸ ಸಾಗಾಟ ಮಾಡುತ್ತಿದ್ದ ಅಬ್ದುಲ್ ಸತ್ತಾರ್, ನಕಲಿ ಬಿಲ್ ನೀಡಿದ್ದ ಅಂಗಡಿ ಮಾಲಕ ತೊಕ್ಕೊಟ್ಟು ಸಮೀಪದ ಚೊಂಬುಗುಡ್ಡೆ ನಿವಾಸಿ ಅಬ್ದುಲ್ ಸತ್ತಾರ್ ಮತ್ತು ಬಿಲ್ ಸಂಗ್ರಹಿಸಿದ ಮುಲ್ಲರ ಪಟ್ನ ನಿವಾಸಿ ಸಿಯಾಬುದ್ದೀನ್ ಯಾನೆ ಸಿಯಾಬ್ ವಿರುದ್ಧ ಪ್ರಕರಣ ದಾಖಲಾಗಿದೆ. ಬಿಲ್ ಬುಕ್ನ್ನು ಅಂಗಡಿಯಿಂದ ಜಪ್ತಿ ಮಾಡಿ ಪರಿಶೀಲಿಸಿದಾಗ ನ್ಯಾಯಾಲಯಕ್ಕೆ ನಕಲಿ ಬಿಲ್ ಸಲ್ಲಿಸಿರುವುದು ಗೊತ್ತಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ.
ತಲೆನೋವು ಎಂದರೆ ಕೇವಲ ನೋವಲ್ಲ; ತಲೆನೋವು ಏಕೆ ಬರುತ್ತದೆ?
ಬಹುತೇಕ ತಲೆನೋವುಗಳು ಅಪಾಯಕಾರಿಯಲ್ಲದೆ ಇದ್ದರೂ, ಹಠಾತ್ ಮತ್ತು ಸಹಿಸಲಸಾಧ್ಯವಾದ ತಲೆನೋವು, ಜ್ವರ ಮತ್ತು ಕುತ್ತಿಗೆ ಬಿಗಿತದ ಜೊತೆಗಿನ ತಲೆನೋವು, ದೌರ್ಬಲ್ಯ, ಒತ್ತಡ ಅಥವಾ ತಲೆಗೆ ಗಾಯವಾಗಿ ಆಗುವ ನೋವಿಗೆ ತಕ್ಷಣವೇ ವೈದ್ಯರನ್ನು ಕಾಣಬೇಕು. ತಲೆಯ ಒಳಗೆ ಮತ್ತು ಸುತ್ತಮುತ್ತ ಇರುವ ನೋವಿಗೆ ಸಂವೇದನಾಶೀಲವಾಗಿರುವ ಅಂಗಾಂಶಗಳಿಗೆ ಕಿರಿಕಿರಿ ಉಂಟಾದಾಗ ಅಥವಾ ಸಮತೋಲನದ ತಪ್ಪಿದಾಗ ತಲೆನೋವು ಉಂಟಾಗುತ್ತದೆ. ಮೆದುಳಿನ ಅಂಗಾಂಶಕ್ಕೆ ನೋವು ಉಂಟಾಗದೆ ಇದ್ದರೂ, ಸಮೀಪವಿರುವ ರಚನೆಗಳಾದ ಮೆದುಳಿನ ಸುತ್ತ ಸುತ್ತಿರುವ ರಕ್ತನಾಳಗಳು (ಮೆನಿಂಜಸ್), ಮುಖದಿಂದ ನೆತ್ತಿಗೆ ಸಂವೇದನೆಯನ್ನು ಕೊಂಡೊಯ್ಯುವ ನರವ್ಯೂಹಗಳು, ಕುತ್ತಿಗೆ ಮತ್ತು ದವಡೆಯ ಸ್ನಾಯುಗಳು ಮತ್ತು ಸೈನಸ್ಗಳಿಗೆ ನೋವಾಗುತ್ತದೆ. ಈ ಅಂಗಾಂಶಗಳು ಹರಡಿಕೊಂಡಾಗ, ಉರಿಯೂತವಾದಾಗ, ಹಿಂಡಿ ಹೋದಾಗ ಅಥವಾ ರಾಸಾಯನಿಕವಾಗಿ ಒಂದು ರೀತಿಯಲ್ಲಿ ‘ಸಕ್ರಿಯವಾದಾಗ’ ಅವು ಮೆದುಳಿನ ಕಾಂಡಕ್ಕೆ ಮತ್ತು ಮೆದುಳಿನ ಮೇಲಿನ ಪ್ರದೇಶಗಳಿಗೆ ಸಂಕೇತಗಳನ್ನು ಕಳುಹಿಸುತ್ತವೆ. ಅವು ಅದನ್ನು ನೋವು ಎಂದು ವ್ಯಾಖ್ಯಾನಿಸುತ್ತವೆ. ವಿಭಿನ್ನ ತಲೆನೋವುಗಳು ವಿಭಿನ್ನವಾಗಿ ಆರಂಭವಾಗುತ್ತವೆ. ಟೆನ್ಷನ್ ತಲೆನೋವುಗಳು, ಅತಿ ದೀರ್ಘಕಾಲದ ಸ್ನಾಯು ಟೆನ್ಷನ್ ಮತ್ತು ಒತ್ತಡ-ಸಂಬಂಧಿತ ಬದಲಾವಣೆಗಳು ನೋವನ್ನು ಪ್ರಕ್ರಿಯೆಗೊಳಿಸುವಾಗ ನೆತ್ತಿ ಮತ್ತು ಕುತ್ತಿಗೆ ಮೇಲೆ ನೋವು ಮತ್ತು ಬಿಗಿತವನ್ನು ಅನುಭವಿಸುತ್ತವೆ. ಮೈಗ್ರೇನ್ಗಳ ಸಂದರ್ಭದಲ್ಲಿ ನರವ್ಯೂಹ ವ್ಯವಸ್ಥೆಯು ಅಸಹಜವಾಗಿ ಸಂವೇದನಾಶೀಲವಾಗುತ್ತದೆ; ಸಂವೇದನಾ ಒಳನೋಟವನ್ನು ನಿಯಂತ್ರಿಸುವ ಮೆದುಳಿನ ಜಾಲಗಳು, ರಕ್ತನಾಳಗಳ ಲಯ ಮತ್ತು ನೋವು ಅತಿ-ಪ್ರತಿಕ್ರಿಯಾತ್ಮಕ ಸ್ಥಿತಿಗೆ ಬದಲಾಗಬಹುದು. ಇವು ನರಗಳ ಸುತ್ತಲಿನ ಉರಿಯೂತದ ಅಣುಗಳು ಮತ್ತು ಮೆದುಳಿನ ಕಾಂಡದ ನರವ್ಯೂಹಗಳಲ್ಲಿನ ಬದಲಾವಣೆಗಳನ್ನು ಹೊಂದಿದ ಕವಲುಗಳನ್ನು ಪ್ರಚೋದಿಸಬಹುದು. ಅದರಿಂದ ಮಿದುಳಿನ ನೋವು, ವಾಕರಿಕೆ ಮತ್ತು ಬೆಳಕು ಅಥವಾ ಶಬ್ದಕ್ಕೆ ಸೂಕ್ಷ್ಮತೆಯನ್ನು ಉಂಟು ಮಾಡಬಹುದು. ನಿರ್ಜಲೀಕರಣ, ಊಟ ತಪ್ಪಿಸುವುದು, ಸರಿಯಾಗಿ ನಿದ್ರೆ ಮಾಡದೆ ಇರುವುದು, ಮದ್ಯಪಾನ, ಸೋಂಕುಗಳು ಮತ್ತು ಪ್ರಕಾಶಮಾನವಾದ ಬೆಳಕು ತಲೆನೋವನ್ನು ಪ್ರಚೋದಿಸಬಹುದು. ಏಕೆಂದರೆ ಅವು ಜಲಸಂಚಯನ, ರಕ್ತದಲ್ಲಿನ ಸಕ್ಕರೆ ಪ್ರಮಾಣ, ಹಾರ್ಮೋನುಗಳು ಮತ್ತು/ಅಥವಾ ರೋಗ ನಿರೋಧಕ ಸಂಕೇತಗಳನ್ನು ಬದಲಿಸುತ್ತವೆ. ಆದರೆ ಬಹುತೇಕ ತಲೆನೋವುಗಳು ಅಪಾಯಕಾರಿಯಲ್ಲದೆ ಇದ್ದರೂ, ಹಠಾತ್ ಆಗಿ ಬರುವ ಮತ್ತು ನಿಜವಾಗಿಯೂ ಸಹಿಸಲಸಾಧ್ಯವಾದ ತಲೆನೋವು, ಜ್ವರ ಮತ್ತು ಕುತ್ತಿಗೆ ಬಿಗಿತದ ಜೊತೆಗಿನ ತಲೆನೋವು, ದೌರ್ಬಲ್ಯ, ಒತ್ತಡ ಅಥವಾ ತಲೆಗೆ ಗಾಯವಾಗಿ ಆಗುವ ನೋವಿಗೆ ತಕ್ಷಣವೇ ವೈದ್ಯರನ್ನು ಕಾಣಬೇಕು.
ಕೇರಳ ಯಾತ್ರೆ ಯಶಸ್ವಿಗೆ ಎಸ್ ವೈ ಎಸ್ ಕರೆ
ಮಂಗಳೂರು: ಸುಲ್ತಾನುಲ್ ಉಲಮಾ ಎಪಿ ಉಸ್ತಾದ್ ನೇತೃತ್ವದಲ್ಲಿ ಮುಸ್ಲಿಂ ಜಮಾಅತ್ ಸಂಘಟಿಸುತ್ತಿರುವ ಎರಡು ವಾರಗಳ ಕೇರಳ ಯಾತ್ರೆಗೆ ಜ. 1ರಂದು ಉಳ್ಳಾಲ ದರ್ಗಾ ಶರೀಫ್ನಲ್ಲಿ ಚಾಲನೆ ದೊರೆಯಲಿದ್ದು, ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಕರ್ನಾಟಕ ರಾಜ್ಯ ಸುನ್ನೀ ಯುವಜನ ಸಂಘ ಕರೆ ನೀಡಿದೆ. ಇಂಡಿಯನ್ ಗ್ರ್ಯಾಂಡ್ ಮುಫ್ತಿ ಸುಲ್ತಾನುಲ್ ಉಲಮಾ, ಮುಸ್ಲಿಂ ಜಮಾಅತ್ ರಾಜ್ಯಾಧ್ಯಕ್ಷ ಸೈಯದ್ ಖಲೀಲುಲ್ ಬುಖಾರಿ, ಸಮಸ್ತ ಕೇರಳ ಜಂಇಯತುಲ್ ಉಲಮಾ ಅಧ್ಯಕ್ಷ ರಈಸುಲ್ ಉಲಮಾ, ಉಪಾಧ್ಯಕ್ಷ ಸೈಯದ್ ಆಟಕ್ಕೋಯ ತಂಙಳ್ ಕುಂಬೋಲ್, ಕಾರ್ಯದರ್ಶಿ ಪೇರೋಡ್ ಉಸ್ತಾದ್, ಕರ್ನಾಟಕ ಜಂಇಯತುಲ್ ಉಲಮಾ ಅಧ್ಯಕ್ಷ ಝೈನುಲ್ ಉಲಮಾ ಮಾಣಿ ಉಸ್ತಾದ್ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ. ಮಧ್ಯಾಹ್ನ 1ಗಂಟೆಗೆ ಉಳ್ಳಾಲದಲ್ಲಿ ಝಿಯಾರತ್ ನಡೆಯಲಿದ್ದು, ಎರಡು ಗಂಟೆಗೆ ತಲಪಾಡಿಯಲ್ಲಿ ಕೇರಳ ಯಾತ್ರಾ ತಂಡಕ್ಕೆ ಬೀಳ್ಕೊಡಲಾಗುವುದು. ಈ ಸಂದರ್ಭ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಭಾಗವಹಿಸಬೇಕು ಎಂದು ಎಸ್ ವೈ ಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ ಎಂ ಅಬೂಬಕರ್ ಸಿದ್ದೀಖ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಹೂಡಿಕೆ ಜಗತ್ತಿನ ಭೀಷ್ಮ ವಾರೆನ್ ಬಫೆಟ್ ಯುಗಾಂತ್ಯ, ₹90 ಲಕ್ಷ ಕೋಟಿ ಸಾಮ್ರಾಜ್ಯವನ್ನು ಮುನ್ನಡೆಸುವವರು ಯಾರು?
ಜಾಗತಿಕ ಷೇರು ಮಾರುಕಟ್ಟೆಯ ದಿಗ್ಗಜ ವಾರೆನ್ ಬಫೆಟ್ ಅವರು ಬರ್ಕ್ಶೈರ್ ಹ್ಯಾಥ್ವೇ ಮುಖ್ಯಸ್ಥ ಸ್ಥಾನದಿಂದ ಕೆಳಗಿಳಿದಿದ್ದಾರೆ. ನಷ್ಟದಲ್ಲಿದ್ದ ಜವಳಿ ಕಂಪನಿಯನ್ನು 1 ಟ್ರಿಲಿಯನ್ ಡಾಲರ್ ಮೌಲ್ಯದ ಹೂಡಿಕೆ ಸಾಮ್ರಾಜ್ಯವನ್ನಾಗಿ ಬೆಳೆಸಿದ ಕೀರ್ತಿ ಬಫೆಟ್ ಅವರಿಗೆ ಸಲ್ಲುತ್ತದೆ. ಇದೀಗ ಕಂಪನಿಯ ಚುಕ್ಕಾಣಿಯನ್ನು ಗ್ರೆಗ್ ಏಬಲ್ ಅವರಿಗೆ ಹಸ್ತಾಂತರಿಸಲಾಗಿದ್ದು, ವಿಮಾ ವಲಯದ ಜವಾಬ್ದಾರಿಯನ್ನು ಭಾರತೀಯ ಮೂಲದ ಅಜಿತ್ ಜೈನ್ ನಿರ್ವಹಿಸಲಿದ್ದಾರೆ. ದಿವಂಗತ ಚಾರ್ಲಿ ಮಂಗರ್ ಅವರೊಂದಿಗಿನ ಸ್ನೇಹ ಮತ್ತು ಕೋಕಾ-ಕೋಲಾದಂತಹ ದೀರ್ಘಕಾಲೀನ ಹೂಡಿಕೆಗಳು ಕಂಪನಿಯ ಯಶಸ್ಸಿನ ಪ್ರಮುಖ ಮೈಲಿಗಲ್ಲುಗಳಾಗಿವೆ.
ರಾಜ್ಯದ 5 ಜಿಲ್ಲೆಗಳ ಜಿಲ್ಲಾಧಿಕಾರಿಗಳು ಸೇರಿ 12 IAS ಅಧಿಕಾರಿಗಳ ವರ್ಗಾವಣೆ - ಕರ್ನಾಟಕ ಸರ್ಕಾರ ಮಹತ್ವದ ಆದೇಶ
ಕರ್ನಾಟಕ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ. ರಾಜ್ಯದ 5 ಜಿಲ್ಲೆಗಳ ಜಿಲ್ಲಾಧಿಕಾರಿಗಳು ಸೇರಿದಂತೆ ಒಟ್ಟು 12 ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ. ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಶಿವಮೊಗ್ಗ, ತುಮಕೂರು, ಚಾಮರಾಜನಗರ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಬದಲಾಗಿದ್ದಾರೆ. ಕೆಲವರಿಗೆ ಹೆಚ್ಚುವರಿ ಹೊಣೆಗಾರಿಕೆ ನೀಡಲಾಗಿದೆ. ಅಧಿಕಾರಿಗಳ ಹುದ್ದೆಗಳಲ್ಲಿ ಮಹತ್ವದ ಬದಲಾವಣೆ ಮಾಡಲಾಗಿದೆ.
ಬೈಂದೂರು| ಖಂಬದಕೊಣೆಯಲ್ಲಿ ಅಪಘಾತ: ಬೈಕ್ ಸವಾರ ಮೃತ್ಯು
ಹಿಂಬದಿ ಸವಾರನಿಗೆ ಗಂಭೀರ ಗಾಯ
ಬೆಂಗಳೂರು: ಕೇಂದ್ರ ಸರ್ಕಾರಿ ಆರೋಗ್ಯ ಯೋಜನೆ (ಸಿಜಿಎಚ್ಎಸ್) ಅಡಿ ತುರ್ತು ಮತ್ತು ನಿರ್ಣಾಯಕ ಆರೈಕೆ ಸಂದರ್ಭಗಳಲ್ಲಿ ನಗದುರಹಿತ ವೈದ್ಯಕೀಯ ಕಾರ್ಯವಿಧಾನ ಜಾರಿಗೊಳಿಸುವ ಸಾಧ್ಯತೆ ಬಗ್ಗೆ ಪರಿಶೀಲಿಸುವಂತೆ ಕೇಂದ್ರ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ ನೀಡಿದೆ. ಪತಿಯ ಚಿಕಿತ್ಸೆಗಾಗಿ ವೆಚ್ಚ ಮಾಡಿದ್ದ ಹಣ ಮರುಪಾವತಿಗೆ ನಿರ್ದೇಶನ ಕೋರಿ ನಿವೃತ್ತ ಐಎಎಸ್ ಅಧಿಕಾರಿ ಐವಿ ಮಿಲ್ಲರ್ ಚಾಹಲ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಆದೇಶ ಮಾಡಿದೆ. ಸೇವೆಯಲ್ಲಿರುವ ಅಥವಾ ನಿವೃತ್ತರಾದ ಸರ್ಕಾರಿ ನೌಕರರು ಮತ್ತು ಅವರ ಅವಲಂಬಿತ ಕುಟುಂಬ ಸದಸ್ಯರು ಗಣನೀಯ ವೈದ್ಯಕೀಯ ವೆಚ್ಚಗಳನ್ನು ಭರಿಸಬೇಕಾಗಿ ಬಂದು, ನಂತರ ಮರುಪಾವತಿ ವಿಳಂಬವನ್ನು ಎದುರಿಸಬೇಕಾದ ಸಂದರ್ಭಗಳನ್ನು ತಡೆಯಲು ನಗದುರಹಿತ ಚಿಕಿತ್ಸಾ ವಿಧಾನ ಜಾರಿಗೊಳಿಸುವುದು ಸೂಕ್ತ ಎನಿಸುತ್ತದೆ ಎಂದು ಅಭಿಪ್ರಾಯಪಟ್ಟಿರುವ ನ್ಯಾಯಪೀಠ, ಅರ್ಜಿದಾರರಿಗೆ 2023ರ ಅಕ್ಟೋಬರ್ ತಿಂಗಳಿನಿಂದ ಅನ್ವಯವಾಗುವಂತೆ 15.3 ಲಕ್ಷ ರೂ.ಗಳನ್ನು ಶೇ.12 ಬಡ್ಡಿಸಹಿತ 30 ದಿನಗಳಲ್ಲಿ ಪಾವತಿಸುವಂತೆ ಕೇಂದ್ರ ಸರ್ಕಾರಕ್ಕೆ ಆದೇಶಿಸಿದೆ. ನಗದುರಹಿತ ವಿಧಾನ ಜಾರಿಗೆ ಸಲಹೆ: ಜೀವನಕ್ಕೆ ಅಪಾಯಕಾರಿ ತುರ್ತು ಸಂದರ್ಭಗಳಲ್ಲಿ ರೋಗಿಗಳು ಅಥವಾ ಅವರ ಸಹಾಯಕರು ಸಿಜಿಎಚ್ಎಸ್ ಚೌಕಟ್ಟಿನ ಅಡಿಯಲ್ಲಿ ಚಿಕಿತ್ಸಾ ಪ್ರೋಟೋಕಾಲ್ಗಳನ್ನು ನಿರ್ಣಯಿಸುತ್ತಾರೆ ಅಥವಾ ಮರುಪಾವತಿ ಅರ್ಹತೆ ಮೌಲ್ಯಮಾಪನ ಮಾಡುತ್ತಾರೆಂದು ನಿರೀಕ್ಷಿಸಲಾಗುವುದಿಲ್ಲ ಎಂದು ನ್ಯಾಯಪೀಠ ಆದೇಶದಲ್ಲಿ ಅಭಿಪ್ರಾಯಪಟ್ಟಿದೆ. ನಿವೃತ್ತ ಉದ್ಯೋಗಿಗಳ ವಿಷಯದಲ್ಲಿ ಇಂತಹ ಕ್ರಮಗಳು ವಿಶೇಷವಾಗಿ ಅಸಮಾನವಾಗಿರುತ್ತವೆ. ಅವರ ಗಳಿಕೆಯ ಸಾಮರ್ಥ್ಯ ಮತ್ತು ಆರ್ಥಿಕ ಭದ್ರತೆ ಸೀಮಿತವಾಗಿದೆ. ಈ ಪ್ರಕರಣದಲ್ಲಿ, ರೋಗಿ ಅಥವಾ ಕುಟುಂಬದ ಸದಸ್ಯರು ಅಲ್ಪಾವಧಿಯಲ್ಲಿ ಹಣವನ್ನು ಹೊಂದಿಸಿ, ನಂತರ ಮರುಪಾವತಿ ಕೋರಿದ್ದಾರೆ. ಆದರೆ, ಅಧಿಕಾರಿಗಳು ಕಾರ್ಯವಿಧಾನದ ಪರಿಶೀಲನೆ ನಡೆಸಲು ವಿಳಂಬ ಮಾಡುವುದರಿಂದ ವ್ಯಾಜ್ಯಗಳಿಗೆ ಕಾರಣವಾಗುತ್ತದೆ ಎಂದು ಹೈಕೋರ್ಟ್ ಹೇಳಿದೆ. ವಿಶೇಷವಾಗಿ ತುರ್ತು ಮತ್ತು ಜೀವ ಉಳಿಸುವ ಕಾರ್ಯವಿಧಾನಗಳಿಗೆ ನಗದುರಹಿತ ಚಿಕಿತ್ಸಾ ಕಾರ್ಯವಿಧಾನ ಜಾರಿಯಿಂದ ಮರುಪಾವತಿಯಲ್ಲಿನ ವಿಳಂಬ ಗಮನಾರ್ಹವಾಗಿ ಕಡಿಮೆಯಾಗುತ್ತದೆ. ಅಂತಹ ವ್ಯವಸ್ಥೆಯು ಸಂವಿಧಾನದ ಪರಿಚ್ಛೇದ 21ರ ಅಯಲ್ಲಿ ಆರೋಗ್ಯದ ಹಕ್ಕಿಗೆ ಅರ್ಥಪೂರ್ಣ ಪರಿಣಾಮ ನೀಡುತ್ತದೆ. 14ನೇ ಪರಿಚ್ಛೇದದ ಅಡಿಯಲ್ಲಿ ವೈದ್ಯಕೀಯ ಆರೈಕೆ ಲಭ್ಯತೆಯನ್ನು ಖಾತ್ರಿಪಡಿಸುತ್ತದೆ ಹಾಗೂ ಕಲ್ಯಾಣ ಉದ್ಯೋಗದಾತರಾದ ಸರ್ಕಾರದ ಬಾಧ್ಯತೆಯನ್ನು ಬಲಪಡಿಸುತ್ತದೆ ಎಂದು ನ್ಯಾಯಾಲಯ ಆದೇಶದಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದೆ. ಪ್ರಕರಣವೇನು? ಬೆಂಗಳೂರಿನಲ್ಲಿರುವ ಮಧ್ಯಪ್ರದೇಶ ಕೇಡರ್ನ ನಿವೃತ್ತ ಐಎಎಸ್ ಅಧಿಕಾರಿ ಐವಿ ಮಿಲ್ಲರ್ ಚಾಹಲ್ ಅವರ ಪತಿಯೂ ಆದ ಮಧ್ಯಪ್ರದೇಶ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ನಿವೃತ್ತ ಕಾರ್ಯನಿರ್ವಾಹಕ ನಿರ್ದೇಶಕ ಗುರ್ಮೈಲ್ ಸಿಂಗ್ ಚಾಹಲ್ 2023ರ ಎಪ್ರಿಲ್ನಲ್ಲಿ ಖಾಸಗಿ ಆಸ್ಪತ್ರೆಯಲ್ಲಿ ತುರ್ತು ಚಿಕಿತ್ಸೆಗೆ ಒಳಗಾಗಿದ್ದರು. ಅದೇ ವರ್ಷದ ಅಕ್ಟೋಬರ್ನಲ್ಲಿ ಸಿಆರ್ಟಿ-ಡಿ (ಡಿಫಿಬ್ರಿಲೇಟರ್ನೊಂದಿಗೆ ಕಾರ್ಡಿಯಾಕ್ ರೀಸಿಂಕ್ರೊನೈಸೇಶನ್ ಥೆರಪಿ) ಇಂಪ್ಲಾಂಟ್ ಮಾಡಿಸಿಕೊಂಡಿದ್ದರು. ಇದಕ್ಕಾಗಿ 15,30,093 ರೂ. ವೆಚ್ಚವಾಗಿತ್ತು. ಗುರ್ಮೈಲ್ ಸಿಂಗ್ ಅವರು 2024ರ ಮಾರ್ಚ್ 18 ರಂದು ನಿಧನರಾಗಿದ್ದರು. ಚಿಕಿತ್ಸೆಯ ಸಮಯದಲ್ಲಿ ಮಾಡಿದ ವೆಚ್ಚವನ್ನು ಕೇಂದ್ರ ಸರ್ಕಾರ ಮರುಪಾವತಿಸದ ಹಿನ್ನೆಲೆಯಲ್ಲಿ ಈ ನಿಟ್ಟಿನಲ್ಲಿ ಸೂಕ್ತ ನಿರ್ದೇಶನ ನೀಡುವಂತೆ ಕೋರಿ ಐವಿ ಮಿಲ್ಲರ್ ಚಾಹಲ್ ಹೈಕೋರ್ಟ್ ಮೊರೆ ಹೋಗಿದ್ದರು.
ಧರ್ಮಸ್ಥಳ ಪ್ರಕರಣಕ್ಕೆ ಹೊಸ ತಿರುವು: ದೇವಸ್ಥಾನ ಪರ ಹಿರಿಯ ವಕೀಲರಾದ ಸಿವಿ ನಾಗೇಶ್, ಮಹೇಶ್ ಕಜೆ ವಕಾಲತ್ತು
ಮಂಗಳೂರು: ಕರ್ನಾಟಕ ಮಾತ್ರವಲ್ಲದೇ ದೇಶದಾದ್ಯಂತ ಗಮನ ಸೆಳೆದಿದ್ದ ಧರ್ಮಸ್ಥಳ ಗ್ರಾಮದಲ್ಲಿ ಶವಗಳನ್ನು ಹೂತಿಟ್ಟ ಆರೋಪ ಪ್ರಕರಣ ಸಂಬಂಧಿಸಿದ ಬುರಡೆ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಶ್ರೀ ಕ್ಷೇತ್ರ ಧರ್ಮಸ್ಥಳ ಪರವಾಗಿ ವಾದ ಮಾಡಲು ಹಿರಿಯ ವಕೀಲರಾದ ಸಿ.ವಿ. ನಾಗೇಶ್ ಹಾಗೂ ಪುತ್ತೂರಿನ ವಕೀಲ ಮಹೇಶ್ ಕಜೆ ಅವರು ಇಂದು (ಡಿಸೆಂಬರ್ 31) ಬೆಳ್ತಂಗಡಿ ನ್ಯಾಯಲಯಕ್ಕೆ ಆಗಮಿಸಿ ವಕಾಲತ್ತು
2026ರಲ್ಲಿ ಖಗೋಳ ವಿದ್ಯಾಮಾನ; ನಾಲ್ಕು ಗ್ರಹಣಗಳು
ಉಡುಪಿ, ಡಿ.31: ಪ್ರತೀ ವರ್ಷದಂತೆ ನಾಳೆ ಪ್ರಾರಂಭಗೊಳ್ಳುವ ಹೊಸ ವರ್ಷ 2026ರಲ್ಲಿ ನಾಲ್ಕು ಗ್ರಹಣಗಳು ಸಂಭವಿಸಲಿವೆ. ಎರಡು ಸೂರ್ಯಗ್ರಹಣ ಹಾಗೂ ಎರಡು ಚಂದ್ರಗ್ರಹಣಗಳು ಈ ವರ್ಷದಲ್ಲಿ ಕಾಣಿಸಲಿವೆ ಎಂದು ಖ್ಯಾತ ಖಗೋಳ ವಿಜ್ಞಾನಿ ಹಾಗೂ ನಿವೃತ್ತ ಪ್ರಾಂಶುಪಾಲರಾದ ಡಾ.ಎ.ಪಿ. ಭಟ್ ತಿಳಿಸಿದ್ದಾರೆ. ಫೆಬ್ರವರಿ 17ರಂದು ಕಂಕಣ ಸೂರ್ಯಗ್ರಹಣ (ಅಂಟಾರ್ಟಿಕಾ), ಆಗಸ್ಟ್ 12ರಂದು ಖಗ್ರಾಸ ಸೂರ್ಯ ಗ್ರಹಣ (ಗ್ರೀನ್ಲ್ಯಾಂಡ್ ಸ್ಪೈನ್, ಹಾಗೂ ಆರ್ಕ್ಟಿಕ್), ಮಾರ್ಚ್ 3ರಂದು ಖಂಡಗ್ರಾಸ ಚಂದ್ರಗ್ರಹಣ ಭಾರತಕ್ಕೆ, ಆಗಸ್ಟ್28ರಂದು ಖಂಡಗ್ರಾಸ ಚಂದ್ರಗ್ರಹಣ (ಭಾರತಕ್ಕೆ ಇಲ್ಲ) ಕಂಡು ಬರಲಿವೆ. ಈ ನಾಲ್ಕರಲ್ಲಿ ಭಾರತದಲ್ಲಿ ಗೋಚರಿಸುವುದು ಒಂದೇ ಮಾರ್ಚ್ 3ರ ಖಂಡಗ್ರಾಸ ಚಂದ್ರಗ್ರಹಣ ಮಾತ್ರ. ಇದೂ ದಕ್ಷಿಣ ಭಾರತದವರಿಗೆ ಚಂದ್ರೋದಯಕ್ಕೆ ಸ್ವಲ್ಪ ಮಾತ್ರ ಉಳಿದಿರುವ ಗ್ರಹಣದ ಚಂದ್ರ. ಹೆಚ್ಚೆಂದರೆ ಕೇವಲ 8 ನಿಮಿಷ ಕಾಲ ಮಾತ್ರ ಇದು ಗೋಚರಿಸಬಹುದು. ಇನ್ನು ವರ್ಷದಲ್ಲಿ ಉಲ್ಕಾಪಾತ ಹಾಗೂ ಧೂಮಕೇತುಗಳ ವಿಚಾರಕ್ಕೆ ಬಂದರೆ, ಪ್ರತೀ ವರ್ಷದಂತೆ ಈ ವರ್ಷವೂ ಸುಮಾರು 30 ಕಣ್ಣಿಗೆ ಕಾಣುವ ಉಲ್ಕಾಪಾತಗಳಲ್ಲಿ 12 ಉಲ್ಕಾಪಾತಗಳು ಸಂಭವಿಸುತ್ತವೆ. ಸದ್ಯಕ್ಕೆ ಕಣ್ಣಿಗೆ ಕಾಣಬಹುದಾದ ಅಲೆಮಾರಿ ಧೂಮಕೇತುಗಳು ಈ ಬಾರಿ ಗೋಚರಿಸುವುದಿಲ್ಲ. ಸೂರ್ಯ ಕಲೆಗಳು: ಸೂರ್ಯ ತನ್ನ 11ವರ್ಷಗಳ ಕುಣಿತದ (ಸೂರ್ಯ ಕಲೆಗಳು, ಸನ್ ಫ್ಲಾರ್, ಕೊರೋನಲ್ ಮಾಸ್ ಇಜೆಕ್ಷನ್ಗಳು) 25ನೇ ಆವೃತ್ತಿ ಕಳೆದ 2025ರ ಜನವರಿಗೇ ಮುಗಿಯುವದೆಂದು ಅಂದಾಜಿಸಿದ್ದರೂ ಇನ್ನೂ ಮುಗಿದಿಲ್ಲ. ಎಕ್ಸ್ , ಎಮ್ ಫ್ಲಾರ್, ಶಕ್ತಿಯುತ ಕಣ ಶಕ್ತಿಗಳ ಕೊರೋನಲ್ ಮಾಸ್ ಇಜೆಕ್ಷನ್ಸ್ ಇನ್ನೂ ನಡೆಯುತ್ತಲೇ ಇವೆ. ಇದಕ್ಕೆ ಪೂರಕವಾಗಿ ಭೂಮಿಯಲ್ಲಿ ಅನೇಕಾನೇಕ ಜ್ವಾಲಾಮುಖಿಗಳು ಸಂಭವಿಸು ತ್ತಲೇ ಇರುತ್ತವೆ ಎಂದು ಡಾ.ಎ.ಪಿ.ಭಟ್ ತಿಳಿಸಿದ್ದಾರೆ.
ಮಾನ್ಯತೆ ನವೀಕರಣವಾಗದ ಪ್ರೌಢಶಾಲೆಗಳ ವಿದ್ಯಾರ್ಥಿಗಳನ್ನು ವರ್ಗಾಹಿಸುವ ನಿರ್ಧಾರಕ್ಕೆ ಭೋಜೇಗೌಡ ವಿರೋಧ
ಬೆಂಗಳೂರು: 2025-26ನೇ ಸಾಲಿಗೆ ಮಾನ್ಯತೆ ನವೀಕರಣವಾಗದ ಪ್ರೌಢಶಾಲೆಗಳ ಎಸೆಸೆಲ್ಸಿ ವಿದ್ಯಾರ್ಥಿಗಳನ್ನು ಇತರ ಪ್ರೌಢಶಾಲೆಗಳಿಗೆ ವರ್ಗಾಹಿಸುವ ಸರಕಾರದ ನಿರ್ಧಾರವನ್ನು ವಿಧಾನ ಪರಿಷತ್ತಿನ ಸದಸ್ಯ ಎಸ್.ಎಲ್. ಭೋಜೇಗೌಡ ವಿರೋಧಿಸಿದ್ದಾರೆ. ಬುಧವಾರ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಸರಕಾರದ ಪ್ರಧಾನ ಕಾರ್ಯದರ್ಶಿ ರಶ್ಮಿ ಮಹೇಶ್ ಮನವಿ ಪತ್ರವನ್ನು ಸಲ್ಲಿಸಿದ ಅವರು, ಪರೀಕ್ಷಾ ಮಂಡಳಿಯು ಮಾನ್ಯತೆ ನವೀಕರಣವಾಗದ ಪ್ರೌಢಶಾಲೆಗಳ ಎಸೆಸೆಲ್ಸಿ ವಿದ್ಯಾರ್ಥಿಗಳನ್ನು ಇತರ ಸರಕಾರಿ ಹಾಗೂ ಮಾನ್ಯತೆಗೊಂಡ ಅನುದಾನಿತ ಪ್ರೌಢ ಶಾಲೆಗಳಿಗೆ ಹಾಜರಾಗುವಂತೆ ಕ್ರಮವಹಿಸಲು ಸುತ್ತೋಲೆ ಹೊರಡಿಸಿದೆ. ಇದನ್ನು ಹಿಂಪಡೆದು, ಮಾನ್ಯತೆ ನವೀಕರಣದ ಪ್ರತಿಯನ್ನು ಕಡ್ಡಾಯಗೊಳಿಸದೆ ಎಲ್ಲ ವಿದ್ಯಾರ್ಥಿಗಳಿಗೆ ಅದೇ ಶಾಲೆಯಲ್ಲಿ ಪರೀಕ್ಷೆಗೆ ಹಾಜರಾಗುವಂತೆ ಕ್ರಮ ವಹಿಸಬೇಕು ಎಂದು ಒತ್ತಾಯಿಸಿದ್ದಾರೆ. ರಾಜ್ಯ ಸರಕಾರವು 2025-26ನೇ ಸಾಲಿಗೆ ಸಂಬಂಧಿಸಿದಂತೆ ಅನುದಾನಿತ ಮತ್ತು ಖಾಸಗಿ ಪ್ರೌಢಶಾಲೆಗಳ ಮಾನ್ಯತೆ ನವೀಕರಣಕ್ಕಾಗಿ ಆನ್ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಆದರೆ ಹಲವಾರು ಷರತ್ತು-ನಿಬಂಧನೆಗಳನ್ನು ವಿಧಿಸಲಾಗಿದೆ ಎಂದು ಅವರು ಹೇಳಿದ್ದಾರೆ. ರಾಜ್ಯ ಸರಕಾರವು ಮಾನ್ಯತೆ ನವೀಕರಣಕ್ಕಾಗಿ ಇರುವ ಕಠಿಣ ನಿಯಮಗಳನ್ನು ಸಡಿಲಿಸಲು ಒಂದು ಉಪಸಮಿತಿಯನ್ನು ರಚಿಸಿದೆ. ಈ ಸಮಿತಿಯು ಈಗಾಗಲೇ ಸಭೆಯನ್ನು ನಡೆಸಿದ್ದು, ಅದರ ವರದಿಯನ್ನು ಶೀಘ್ರವಾಗಿ ಸರಕಾರಕ್ಕೆ ಸಲ್ಲಿಸಲಿದೆ. ಇದರ ನಡುವೆ ಪರೀಕ್ಷಾ ಮಂಡಳಿಯು ಸುತ್ತೋಲೆ ಹೊರಡಿಸಿದೆ. ಹೀಗಾಗಿ ಉಪಸಮಿತಿ ವರದಿ ನೀಡುವವರೆಗೆ ಮಾನ್ಯತೆ ನವೀಕರಣದ ಪ್ರತಿಯನ್ನು ಕಡ್ಡಾಯಗೊಳಿಸದೆ ಎಲ್ಲ ವಿದ್ಯಾರ್ಥಿಗಳಿಗೆ ಅದೇ ಶಾಲೆಯಲ್ಲಿ ಪರೀಕ್ಷೆಗೆ ಹಾಜರಾಗುವಂತೆ ಕ್ರಮ ವಹಿಸಬೇಕು ಎಂದು ಅವರು ತಿಳಿಸಿದ್ದಾರೆ.
ರಾಜ್ಯ ಸರ್ಕಾರ ಪೊಲೀಸ್ ಇಲಾಖೆಯಲ್ಲಿ ಮಹತ್ವದ ಬದಲಾವಣೆಗಳನ್ನು ಮಾಡಿದ್ದು, 48 ಐಪಿಎಸ್ ಅಧಿಕಾರಿಗಳಿಗೆ ಮುಂಬಡ್ತಿ ಮತ್ತು ವರ್ಗಾವಣೆಗೊಳಿಸಿ ಆದೇಶ ಹೊರಡಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅನುಮೋದನೆ ಪಡೆದ ಈ ಆದೇಶದಲ್ಲಿ 23 ಅಧಿಕಾರಿಗಳಿಗೆ ಡಿಐಜಿಪಿ ಮತ್ತು ಇಬ್ಬರಿಗೆ ಐಜಿಪಿ ಹುದ್ದೆಗೆ ಪದೋನ್ನತಿ ನೀಡಲಾಗಿದೆ. ಬೆಂಗಳೂರು, ಬೆಳಗಾವಿ, ಮೈಸೂರು ಸೇರಿದಂತೆ ಪ್ರಮುಖ ಜಿಲ್ಲೆಗಳ ಎಸ್ಪಿ ಮತ್ತು ಡಿಸಿಪಿಗಳೂ ಬದಲಾಗಿದ್ದಾರೆ.
ಕೋಗಿಲು ಅಕ್ರಮ ನಿರ್ಮಾಣ ತೆರವು ಪ್ರಕರಣ: ಸತ್ಯಶೋಧನೆಗೆ ಶಾಸಕ ಎಸ್.ಆರ್.ವಿಶ್ವನಾಥ್ ನೇತೃತ್ವದಲ್ಲಿ ಬಿಜೆಪಿ ತಂಡ ರಚನೆ
ಬೆಂಗಳೂರು: ಯಲಹಂಕದ ಕೋಗಿಲು ಲೇಔಟ್ ಬಳಿಯಿರುವ ಫಕೀರ್ ಕಾಲನಿ ಮತ್ತು ವಸೀಮ್ ಬಡಾವಣೆಯಲ್ಲಿ 200ಕ್ಕೂ ಹೆಚ್ಚು ಮನೆಗಳನ್ನು ನೆಲಸಮ ಮಾಡಿರುವ ಕುರಿತು ಸತ್ಯಶೋಧನೆಗೆ ಶಾಸಕ ಎಸ್.ಆರ್.ವಿಶ್ವನಾಥ್ ನೇತೃತ್ವದಲ್ಲಿ ಏಳು ಮಂದಿಯ ತಂಡವನ್ನು ಬಿಜೆಪಿ ರಚಿಸಿದೆ. ಈ ಸಂಬಂಧ ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಸತ್ಯಶೋಧನಾ ತಂಡವನ್ನು ರಚಿಸಿ ಆದೇಶ ಹೊರಡಿಸಿದ್ದು, ಶಾಸಕ ಎಸ್.ಮುನಿರಾಜು, ಪರಿಷತ್ ಸದಸ್ಯ ಕೆ.ಎಸ್.ನವೀನ್, ಉಪಾಧ್ಯಕ್ಷೆ ಮಾಳವಿಕಾ ಅವಿನಾಶ್, ಕಾರ್ಯದರ್ಶಿ ತಮ್ಮೇಶ್ಗೌಡ, ಜಿಲ್ಲಾಧ್ಯಕ್ಷ ಎಸ್.ಹರೀಶ್ ಹಾಗೂ ನಿವೃತ್ತ ಪೊಲೀಸ್ ಅಧಿಕಾರಿ ಭಾಸ್ಕರ್ ಅವರು ತಂಡದಲ್ಲಿದ್ದಾರೆ. ಸ್ಥಳಕ್ಕೆ ತೆರಳಿ ಪರಿಶೀಲಿಸಿ, ಒಂದು ವಾರದೊಳಗೆ ವರದಿ ನೀಡಲು ಸೂಚನೆ ನೀಡಿದ್ದಾರೆ.
ಶುರುವಾಯ್ತು ಹೊಸ ವರ್ಷದ ಸಂಭ್ರಮಾಚರಣೆ, ಬಣ್ಣಬಣ್ಣದ ಚಿತ್ತಾರದೊಂದಿಗೆ 2026ನ್ನು ಸ್ವಾಗತಿಸಿದ ನ್ಯೂಜಿಲೆಂಡ್
ಹೊಸ ವರ್ಷ 2026 ಅನ್ನು ವಿಶ್ವದ ಎರಡನೇ ದೇಶವಾಗಿ ನ್ಯೂಜಿಲೆಂಡ್ ಸಂಭ್ರಮದಿಂದ ಸ್ವಾಗತಿಸಿದೆ. ಆಕ್ಲೆಂಡ್ನ ಸ್ಕೈ ಟವರ್ನಲ್ಲಿ ನಡೆದ ಅದ್ಧೂರಿ ಸುಡುಮದ್ದುಗಳ ಪ್ರದರ್ಶನ ಕಣ್ಮನ ಸೆಳೆಯಿತು. ಇದಕ್ಕೂ ಮೊದಲು ಪೆಸಿಫಿಕ್ ಮಹಾಸಾಗರದ ಕಿರಿಬಾಟಿ ದ್ವೀಪವು ಜಗತ್ತಿನಲ್ಲೇ ಮೊದಲ ಬಾರಿಗೆ ಹೊಸ ವರ್ಷವನ್ನು ಬರಮಾಡಿಕೊಂಡಿತು. ವಿವಿಧ ದೇಶಗಳಲ್ಲಿ ಭಾರತೀಯ ಕಾಲಮಾನದ ಪ್ರಕಾರ ಯಾವಾಗ ಹೊಸ ವರ್ಷ ಆಚರಣೆ ನಡೆಯಲಿದೆ ಎಂಬ ವಿವರ ಇಲ್ಲಿದೆ.
ಕರ್ನಾಟಕ ಸಾರಿಗೆ ನೌಕರರಿಗೆ ಗುಡ್ನ್ಯೂಸ್: ಜನವರಿ 1ರಿಂದ ಅಂತರ್ನಿಗಮ ವರ್ಗಾವಣೆ ಪ್ರಕ್ರಿಯೆ ಶುರು
ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) ಅಂತರ ನಿಗಮ ವರ್ಗಾವಣೆಗೆ ಸಂಬಂಧಿಸಿದಂತೆ, ಈಗಾಗಲೇ ಅರ್ಹ ನೌಕರರಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿತ್ತು. ವರ್ಗಾವಣೆ ಬಯಸುವವರಿಗೆ ಹೊಸ ವರ್ಷ 2026ಕ್ಕೆ ಗುಡ್ ನ್ಯೂಸ್ ನೀಡಿದ್ದು, ಜನವರಿ 1ರಿಂದಲೇ ವರ್ಗಾವಣೆ ಪ್ರಕ್ರಿಯೆ ಆರಂಭವಾಗಲಿದೆ ಎಂದು ಸಾರಿಗೆ ಇಲಾಖೆ ಅಧಿಕಾರಿಗಳು ಬುಧವಾರ ಮಾಹಿತಿ ನೀಡಿದರು. ಕರ್ನಾಟಕ ರಾಜ್ಯ ಸರ್ಕಾರದ ಟಿಡಿ 45
T20 World Cup- ಅಫ್ಘಾನಿಸ್ತಾನಕ್ಕೆ ಸೂಪರ್ ಸ್ಟಾರ್ ಆಲ್ರೌಂಡರ್ ರಶೀದ್ ಖಾನ್ ಸಾರಥ್ಯ; ಹೇಗಿದೆ ಈ ತಂಡದ ಸಾಮರ್ಥ್ಯ?
Afghanistan Team For ICC T20 World Cup 2026- ಮುಂಬರುವ ಚುಟುಕು ಕ್ರಿಕೆಟ್ ವಿಶ್ವಸಮರಕ್ಕೆ ಅಫ್ಘಾನಿಸ್ತಾನ ತಂಡವನ್ನು ಪ್ರಕಟಿಸಲಾಗಿದ್ದು ರಶೀದ್ ಖಾನ್ ಅವರಿಗೆ ತಂಡದ ನಾಯಕತ್ವವನ್ನು ವಹಿಸಲಾಗದೆ. ಅವರೊಂದಿಗೆ ಇಬ್ರಾಹಿಂ ಝದ್ರನ್ ಉಪನಾಯಕರಾಗಿರುತ್ತಾರೆ. ಅನುಭವೀ ಮುಜೀಬ್ ಉರ್ ರೆಹಮಾನ್ ತಂಡಕ್ಕೆ ಮರಳಿದ್ದಾರೆ. ನವೀನ್-ಉಲ್-ಹಕ್ ಮತ್ತು ಗುಲ್ಬದಿನ್ ನೈಬ್ ಅವರ ಪುನರಾಗಮನ ಬೌಲಿಂಗ್ ವಿಭಾಗಕ್ಕೆ ಬಲ ತುಂಬಿದೆ. ಅಫ್ಘಾನಿಸ್ತಾನ ತಂಡವು ಡಿ ಗುಂಪಿನಲ್ಲಿ ನ್ಯೂಜಿಲೆಂಡ್, ದಕ್ಷಿಣ ಆಫ್ರಿಕಾ, ಯುನೈಟೆಡ್ ಅರಬ್ ಎಮಿರೇಟ್ಸ್ ಮತ್ತು ಕೆನಡಾ ತಂಡಗಳೊಂದಿಗೆ ಸೆಣೆಸಲಿದೆ.
ಅಫಜಲಪುರ | ಕಬ್ಬು ತುಂಬಿದ ಟ್ರಾಕ್ಟರ್ ವಿದ್ಯುತ್ ಕಂಬಕ್ಕೆ ಢಿಕ್ಕಿ : ತಪ್ಪಿದ ಭಾರೀ ಅನಾಹುತ
ಅಫಜಲಪುರ: ಅಫಜಲಪುರ–ಘತ್ತರಗಾ ಮುಖ್ಯ ರಸ್ತೆಯ ಪಟ್ಟಣದ ವಾರ್ಡ್ ನಂಬರ್ 21ರ ಲಿಂಬಿತೋಟ ಬಡಾವಣೆಯ ಶಾರದಾ ಕಲ್ಯಾಣ ಮಂಟಪದ ಎದುರು ಇರುವ ವಿದ್ಯುತ್ ಕಂಬಕ್ಕೆ ಕಬ್ಬು ತುಂಬಿಕೊಂಡು ಸಾಗುತ್ತಿದ್ದ ಟ್ರಾಕ್ಟರ್ ಢಿಕ್ಕಿ ಹೊಡೆದಿದ್ದು, ಪರಿಣಾಮ ವಿದ್ಯುತ್ ಕಂಬ ಮುರಿದು ಬಿದ್ದ ಘಟನೆ ನಡೆದಿದೆ. ಈ ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ಸ್ಥಳೀಯರು ತಿಳಿಸಿದ್ದಾರೆ. ಘಟನೆ ಸಂಭವಿಸುವ ವೇಳೆ ವಿದ್ಯುತ್ ಕಂಬದಲ್ಲಿ ವಿದ್ಯುತ್ ಪ್ರವಾಹ ಹರಿಯುತ್ತಿತ್ತು. ವಿಷಯ ತಿಳಿದ ಕೂಡಲೇ ವಿದ್ಯುತ್ ಇಲಾಖೆಯ ಸಿಬ್ಬಂದಿಗಳು ಸ್ಥಳಕ್ಕೆ ಧಾವಿಸಿ ತಕ್ಷಣ ವಿದ್ಯುತ್ ಸರಬರಾಜನ್ನು ಸ್ಥಗಿತಗೊಳಿಸಿ ಸಂಭವಿಸಬಹುದಾದ ಭಾರೀ ಅನಾಹುತವನ್ನು ತಪ್ಪಿಸಿದ್ದಾರೆ. ದಿನನಿತ್ಯ ಡಬಲ್ ಟ್ರೈಲರ್ಗಳಲ್ಲಿ ಅಪಾಯ ಮೀರಿ ಕಬ್ಬು ತುಂಬಿಕೊಂಡು ಟ್ರಾಕ್ಟರ್ಗಳು ಇದೇ ಮಾರ್ಗವಾಗಿ ತಾಲೂಕಿನ ರೇಣುಕಾ ಸಕ್ಕರೆ ಕಾರ್ಖಾನೆಗೆ ಸಂಚರಿಸುತ್ತಿವೆ. ಇದರಿಂದ ಬೈಕ್ ಸವಾರರು, ಪಾದಚಾರಿಗಳು ಹಾಗೂ ಸಣ್ಣ ವಾಹನ ಸವಾರರು ಜೀವಭಯದೊಂದಿಗೆ ಸಂಚಾರ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ತಕ್ಷಣ ಕ್ರಮ ಕೈಗೊಂಡು, ಅಪಾಯಕಾರಿಯಾದ ಟ್ರಾಕ್ಟರ್ ಸಂಚಾರಕ್ಕೆ ನಿಯಂತ್ರಣ ಹೇರಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಛೂ ಬಾಣ – ಪಿ. ಮೊಹಮ್ಮದ್ ಕಾರ್ಟೂನ್
ಭಟ್ಕಳ: ಯೋನೊ ಆಪ್ ಮೂಲಕ 8 ಲಕ್ಷ ರೂ. ಸಾಲ ವಂಚನೆ
ಭಟ್ಕಳ: ಡಿಜಿಟಲ್ ಬ್ಯಾಂಕಿಂಗ್ ಬಳಕೆ ದಿನೇದಿನೇ ವಿಸ್ತಾರಗೊಳ್ಳುತ್ತಿರುವ ಈ ಕಾಲಘಟ್ಟದಲ್ಲಿ, ಗ್ರಾಹಕರ ಅನುಮತಿ ಇಲ್ಲದೆ ಮೊಬೈಲ್ ಆಪ್ ಮೂಲಕವೇ ಸಾಲ ಮಂಜೂರು ಮಾಡಿ ಹಣವನ್ನು ಲೂಟಿ ಮಾಡುವ ಹೊಸ ಮಾದರಿಯ ವಂಚನೆ ಪ್ರಕರಣವೊಂದು ಭಟ್ಕಳದಲ್ಲಿ ಬೆಳಕಿಗೆ ಬಂದಿದ್ದು, ಇಡೀ ಜಿಲ್ಲೆಯ ಜನರಲ್ಲಿ ಆತಂಕ ಮೂಡಿಸಿದೆ. ಭಟ್ಕಳ ತಾಲೂಕಿನ ಸರ್ಕಾರಿ ಇಲಾಖೆಯೊಂದರಲ್ಲಿ ಸೇವೆ ಸಲ್ಲಿಸುತ್ತಿರುವ ಸರ್ಕಾರಿ ನೌಕರನೊಬ್ಬರ ಮೊಬೈಲ್ ಫೋನ್ ಹ್ಯಾಕ್ ಮಾಡಿ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಯೋನೊ (YONO) ಆಪ್ ಮೂಲಕ ಸುಮಾರು 8 ಲಕ್ಷ ರೂಪಾಯಿ ಪ್ರೀ–ಅಪ್ರೂವ್ಡ್ ಪರ್ಸನಲ್ ಲೋನ್ ಪಡೆದು, ಅದನ್ನು ಕ್ಷಣಾರ್ಧದಲ್ಲೇ ಐದು ಬಾರಿ ಬೇರೆ ಖಾತೆಗಳಿಗೆ ವರ್ಗಾವಣೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಅನುಮತಿ ಇಲ್ಲದೆ ಸಾಲ – ಹೇಗೆ ಸಾಧ್ಯ?: ಪೀಡಿತ ನೌಕರನ ಹೇಳಿಕೆಯಂತೆ, ಸಾಲಕ್ಕೆ ಸಂಬಂಧಿಸಿದಂತೆ ಯಾವುದೇ OTP, ಡಿಜಿಟಲ್ ಅನುಮತಿ ಅಥವಾ ಸಹಿ ನೀಡಿಲ್ಲ. ಬ್ಯಾಂಕಿಗೆ ತೆರಳಿ ವಿಚಾರಣೆ ನಡೆಸಿದ್ದ ವೇಳೆ ಕೂಡ ಯೋನೊ ಆಪ್ ಓಪನ್ ಆಗಿರಲಿಲ್ಲ. ಆದರೆ ಮನೆಗೆ ಮರಳಿದ ಕೆಲವೇ ಸಮಯದಲ್ಲಿ, ಸಾಲ ಮಂಜೂರಾದ ಕುರಿತು ಸಂದೇಶಗಳು ಬಂದಿದ್ದು, ಖಾತೆ ಪರಿಶೀಲಿಸಿದಾಗ ಯೋನೊ ಆಪ್ ಮೂಲಕವೇ 8 ಲಕ್ಷ ರೂ ಸಾಲ ತೆಗೆದು ಕೊಳ್ಳಲಾಗಿದೆ ಎಂಬುದು ತಿಳಿದು ಅವರು ಬೆಚ್ಚಿಬಿದ್ದಿದ್ದಾರೆ. ಇದು ಡಿಜಿಟಲ್ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿನ ಭದ್ರತಾ ವ್ಯವಸ್ಥೆಗಳ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಎತ್ತಿಹಿಡಿಯುತ್ತದೆ. ಗ್ರಾಹಕರ ನೇರ ಅನುಮತಿ ಇಲ್ಲದೆ, ಇಂತಹ ದೊಡ್ಡ ಮೊತ್ತದ ಹಣ ವಹಿವಾಟು ಹೇಗೆ ಸಾಧ್ಯವಾಯಿತು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಮೊಬೈಲ್ ಹ್ಯಾಕ್ – ಮೂಲ ಕಾರಣ? ಎಸ್ಬಿಐ ಭಟ್ಕಳ ಶಾಖೆಯ ಮ್ಯಾನೇಜರ್ ಮಾನಸ ಭಟ್ ಅವರ ಪ್ರಕಾರ, “ಯೋನೊ ಆಪ್ ಅತ್ಯಂತ ಸುರಕ್ಷಿತವಾಗಿದೆ. ಇಲ್ಲಿ ಸಮಸ್ಯೆ ಯೋನೊದಲ್ಲಿಲ್ಲ, ಸರ್ಕಾರಿ ನೌಕರರ ಮೊಬೈಲ್ ಫೋನ್ ಹ್ಯಾಕ್ ಆಗಿರುವುದೇ ಮೂಲ ಕಾರಣ. ಯೋನೊ ಆಪ್ನಲ್ಲಿ ಅರ್ಹತೆ ಇರುವವರಿಗೆ ಪ್ರೀ–ಅಪ್ರೂವ್ಡ್ ಪರ್ಸನಲ್ ಲೋನ್ ಪಡೆಯುವ ಅವಕಾಶವಿದ್ದು, ಅದನ್ನು ದುರುಪಯೋಗಪಡಿಸಿಕೊಂಡು ಹ್ಯಾಕರ್ಗಳು ವಂಚನೆ ನಡೆಸಿದ್ದಾರೆ.” ಅವರ ಹೇಳಿಕೆಯಂತೆ, ಈ ಖಾತೆಯಲ್ಲಿ ಈ ಹಿಂದೆಯೂ ಯುಪಿಐ ಮೂಲಕ ಕಡಿಮೆ ಮೊತ್ತದ ವಂಚನೆ ನಡೆದಿದ್ದು, ಆ ಹಂತದಲ್ಲೇ ಸೂಕ್ತ ಎಚ್ಚರಿಕೆ ವಹಿಸಬೇಕಾಗಿತ್ತು. ಪ್ರಸ್ತುತ ಖಾತೆಯನ್ನು ಹೋಲ್ಡ್ನಲ್ಲಿ ಇಡಲಾಗಿದ್ದು, ಉಳಿದ ಹಣ ಸುರಕ್ಷಿತವಾಗಿದೆ. ಗ್ರಾಹಕರ ತಪ್ಪೇ, ವ್ಯವಸ್ಥೆಯ ವೈಫಲ್ಯವೇ? : ಈ ಪ್ರಕರಣವು ಕೇವಲ ವ್ಯಕ್ತಿಗತ ನಿರ್ಲಕ್ಷ್ಯಕ್ಕೆ ಸೀಮಿತವೋ, ಅಥವಾ ಡಿಜಿಟಲ್ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿನ ಗಂಭೀರ ಲೋಪವೋ ಎಂಬ ಚರ್ಚೆಗೆ ಕಾರಣವಾಗಿದೆ. ಮೊಬೈಲ್ ಹ್ಯಾಕ್ ಆಗಿದ್ದರೂ ಸಹ, OTP, ಬಯೋಮೆಟ್ರಿಕ್ ಅಥವಾ ಬಹು ಹಂತದ ದೃಢೀಕರಣ ಇಲ್ಲದೆ ಇಷ್ಟೊಂದು ದೊಡ್ಡ ಮೊತ್ತದ ಸಾಲ ಮಂಜೂರಾಗಿರುವುದು ಸಾರ್ವಜನಿಕರಲ್ಲಿ ಅನುಮಾನ ಹುಟ್ಟಿಸಿದೆ. ಡಿಜಿಟಲ್ ಪ್ಲಾಟ್ಫಾರ್ಮ್ಗಳಲ್ಲಿ ಗ್ರಾಹಕರ ಜವಾಬ್ದಾರಿಯ ಜೊತೆಗೆ, ಬ್ಯಾಂಕ್ಗಳ ಮೇಲಿನ ಜವಾಬ್ದಾರಿಯೂ ಸಮಾನವಾಗಿದೆ. ವಿಶೇಷವಾಗಿ ಪ್ರೀ–ಅಪ್ರೂವ್ಡ್ ಲೋನ್ಗಳಂತಹ ಸೌಲಭ್ಯಗಳಿಗೆ ಹೆಚ್ಚುವರಿ ಭದ್ರತಾ ಪದರ ಗಳನ್ನು ಜಾರಿಗೆ ತರಬೇಕಾದ ಅಗತ್ಯವನ್ನು ಈ ಪ್ರಕರಣ ಮತ್ತೊಮ್ಮೆ ನೆನಪಿಸುತ್ತದೆ. ಎಚ್ಚರಿಕೆಯ ಗಂಟೆ: ಈ ಘಟನೆ ಭಟ್ಕಳಕ್ಕೆ ಮಾತ್ರ ಸೀಮಿತವಾಗದೆ, ಇಡೀ ಜಿಲ್ಲೆಯಲ್ಲಿನ ಹಾಗೂ ರಾಜ್ಯದ ಡಿಜಿಟಲ್ ಬ್ಯಾಂಕಿಂಗ್ ಬಳಕೆದಾರರಿಗೆ ಎಚ್ಚರಿಕೆಯ ಸಂದೇಶ ನೀಡುವಂತಿದೆ. ಮೊಬೈಲ್ ಸುರಕ್ಷತೆ, ಅಪರಿಚಿತ ಲಿಂಕ್ಗಳು, ಆಪ್ ಅನುಮತಿಗಳು ಹಾಗೂ ಅನುಮಾನಾಸ್ಪದ ಚಟುವಟಿಕೆಗಳ ಬಗ್ಗೆ ಗ್ರಾಹಕರು ಹೆಚ್ಚಿನ ಜಾಗೃತಿ ವಹಿಸಬೇಕಾಗಿದೆ. ಅದರೊಂದಿಗೆ, ಬ್ಯಾಂಕ್ಗಳು “ಆಪ್ ಸುರಕ್ಷಿತವಾಗಿದೆ” ಎಂಬ ಹೇಳಿಕೆಗೆ ಸೀಮಿತವಾಗದೆ, ಇಂತಹ ವಂಚನೆಗಳು ಮರುಕಳಿಸದಂತೆ ಕಠಿಣ ನಿಯಂತ್ರಣ ಮತ್ತು ತಾಂತ್ರಿಕ ಸುಧಾರಣೆಗಳನ್ನು ಜಾರಿಗೆ ತರಬೇಕಾಗಿದೆ. ಇಲ್ಲವಾದರೆ ಡಿಜಿಟಲ್ ಬ್ಯಾಂಕಿಂಗ್ ಮೇಲಿನ ಜನರ ವಿಶ್ವಾಸಕ್ಕೆ ಧಕ್ಕೆ ಬರುವ ಸಾಧ್ಯತೆ ಇದೆ ಎಂದು ಗ್ರಾಹಕರು ಅಭಿಪ್ರಾಯಪಟ್ಟಿದ್ದಾರೆ.
ಜ.2ರಿಂದ ʼದಲಿತ ಸಾಹಿತ್ಯ ಮತ್ತು ಚಳವಳಿ-50’ ಅಧ್ಯಯನ ಶಿಬಿರ : ಎಲ್.ಎನ್.ಮುಕುಂದರಾಜ್
ಬೆಂಗಳೂರು : ಕರ್ನಾಟಕ ಸಾಹಿತ್ಯ ಅಕಾಡಮಿ ಹಾಗೂ ಬೆಂಗಳೂರು ವಿವಿಯ ಕನ್ನಡ ಅಧ್ಯಯನ ಕೇಂದ್ರದ ಸಹಯೋಗದಲ್ಲಿ ಜ.2ರಿಂದ ಜ.4ರ ವರೆಗೆ ಮೂರು ದಿನಗಳ ಕಾಲ ‘ದಲಿತ ಸಾಹಿತ್ಯ ಮತ್ತು ಚಳುವಳಿ-50’ ಎಂಬ ಅಧ್ಯಯನ ಶಿಬಿರವನ್ನು ಜ್ಞಾನಭಾರತಿ ಆವರಣದ ವೆಂಕಟಗಿರಿಗೌಡ ಸಭಾಂಗಣದಲ್ಲಿ ಆಯೋಜಿಸಲಾಗಿದೆ ಎಂದು ಸಾಹಿತ್ಯ ಅಕಾಡಮಿಯ ಅಧ್ಯಕ್ಷ ಎಲ್.ಎನ್.ಮುಕುಂದರಾಜ್ ತಿಳಿಸಿದ್ದಾರೆ. ಬುಧವಾರ ನಗರದ ಕನ್ನಡ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಅಧ್ಯಯನ ಶಿಬಿರದ ನಿರ್ದೇಶಕರಾಗಿ ಹಿರಿಯ ಸಾಹಿತಿ ಕೋಟಿಗಾನಹಳ್ಳಿ ರಾಮಯ್ಯ ಅವರು, ಶಿಬಿರದ ಸಹ ನಿರ್ದೇಶಕರಾಗಿ ಲೇಖಕಿ ದು.ಸರಸ್ವತಿ, ಸುಬ್ಬು ಹೊಲೆಯಾರ್, ಹಾಗೂ ಶಿಬಿರದ ಸಂಚಾಲಕರಾಗಿ ಸಾಹಿತ್ಯ ಅಕಾಡಮಿಯ ಸದಸ್ಯ ಡಾ.ರವಿಕುಮಾರ್ ಬಾಗಿ ಅವರು ಕಾರ್ಯ ನಿರ್ವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬೆಂಗಳೂರು ವಿವಿಯ ಕುಲಪತಿ ಡಾ.ಜಯಕರ ಎಸ್.ಎಂ ವಹಿಸಲಿದ್ದು, ಕಾರ್ಯಕ್ರಮದ ದಿಕ್ಸೂಚಿ ಮಾತುಗಳನ್ನು ದಸಂಸ ಮುಖಂಡ ಪ್ರೊ.ಎಚ್. ಗೋವಿಂದಯ್ಯ ಅವರು ಆಡಲಿದ್ದಾರೆ. ಸದರಿ ಕಾರ್ಯಕ್ರಮದಲ್ಲಿ ದಲಿತ ಸಾಹಿತ್ಯ ಮತ್ತು ಚಳವಳಿ ನಡೆದು ಬಂದ ದಾರಿ, ಉಂಟು ಮಾಡಿದ ಪರಿಣಾಮ, ಪ್ರಸ್ತುತ ಸ್ಥಿತಿ ಈ ಎಲ್ಲ ವಿಷಯಗಳ ಕುರಿತು 3 ದಿನ ಚರ್ಚೆ ನಡೆಯಲಿದೆ ಎಂದು ತಿಳಿಸಿದರು. ಈ ಅಧ್ಯಯನ ಶಿಬಿರದಲ್ಲಿ ವಿಷಯಕ್ಕೆ ಪೂರಕವಾಗಿ ಪಂಚಮ ಪತ್ರಿಕೆ ಆಧಾರಿತ, ಚಂದ್ರಶೇಖರ ಕೆ. ಅವರ ನಿರ್ದೇಶನದ ‘ಪಂಚಮಪದ’ ಎಂಬ ನಾಟಕವನ್ನು ಪ್ರದರ್ಶನವನ್ನು ಏರ್ಪಡಿಸಿದ್ದು, ಕಾರ್ಯಕ್ರಮದಲ್ಲಿ ಸುಮಾರು 100 ಜನ ಸಾಹಿತ್ಯಾಸಕ್ತರು ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ಮಧುಮಲೈ ಹುಲಿ ಅಭಯಾರಣ್ಯಕ್ಕೆ ಆಗಮಿಸಿದ ಈ ಅಪರೂಪದ ಅತಿಥಿ ಯಾರು?
ಮಧುಮಲೈ ಹುಲಿ ಅಭಯಾರಣ್ಯದಲ್ಲಿ ರಣಹದ್ದುಗಳಿಗೆ ಸೂಕ್ತವಾಗಿರುವ ವಾತಾವರಣ, ಆಹಾರ ಲಭ್ಯತೆ ಮತ್ತು ಆವಾಸಸ್ಥಾನವಿದೆ. ಈ ಬಾರಿಯ ಚಳಿಗಾಲದಲ್ಲಿ ಮಧುಮಲೈ ಹುಲಿ ಅಭಯಾರಣ್ಯಕ್ಕೆ ಹೊಸ ಅತಿಥಿ ಆಗಮಿಸಿದೆ. ವನ್ಯಜೀವಿ ಪ್ರೇಮಿಗಳು ಅಪರೂಪದ ಅತಿಥಿ ಕಂಡುಬಂದಿರುವುದನ್ನು ಖಚಿತಪಡಿಸಿದ್ದಾರೆ. ಹೌದು, ಇಲ್ಲಿ ಈಸ್ಟರ್ನ್ ಇಂಪೀರಿಯಲ್ ಈಗಲ್ (ಆಕ್ವಿಲಾ ಹೆಲಿಯಕಾ) ಜಾತಿಯ ರಣಹದ್ದು ಪತ್ತೆಯಾಗಿದೆ. ಈಜಿಪ್ಟಿಯನ್ ರಣಹದ್ದು ಆಗಿರುವ ಈಸ್ಟರ್ನ್ ಇಂಪೀರಿಯಲ್ ಹದ್ದಿನ ಜೋಡಿಯೊಂದು ಭಾರತೀಯ ಕಾಡುಗಳಲ್ಲಿ ಪತ್ತೆಯಾಗಿದೆ. ಛಾಯಾಗ್ರಾಹಕ ಮುರಳಿ ಮೂರ್ತಿಯವರ ಕಣ್ಣಿಗೆ ಈ ರಣಹದ್ದು ಬಿದ್ದಿದೆ. ಮುರಳಿ ಹೇಳುವ ಪ್ರಕಾರ ಈ ರಣಹದ್ದು ಪಶ್ಚಿಮ ಮತ್ತು ಮಧ್ಯ ಏಷ್ಯಾ ಪ್ರದೇಶಗಳಲ್ಲಿ ಕಂಡುಬರುತ್ತದೆ. ಚಳಿಗಾಲದಲ್ಲಿ ಇವು ಆಫ್ರಿಕಾ, ಮಧ್ಯಪ್ರಾಚ್ಯ ಮತ್ತು ದಕ್ಷಿಣ ಮತ್ತು ಫೂರ್ವ ಏಷ್ಯಾಗಳಿಗೆ ವಲಸೆ ಬರುತ್ತವೆ. 2011ರಿಂದ 2022ರ ನಡುವೆ 58 ಪ್ರಬೇಧಗಳ ಹಿಂಸ್ರಪಕ್ಷಿಗಳ ವಿವರವನ್ನು ದಾಖಲೆ ಸಮೇತ ಪಟ್ಟಿ ಮಾಡಿರುವ ಬಾಂಬೆ ನ್ಯಾಚುರಲ್ ಹಿಸ್ಟರಿ ಸೊಸೈಟಿಯ ಅರೊಕೊಯಿನಾಥನ್ ಸಾಮ್ಸನ್ ಪ್ರಕಾರ, ಹುಲಿ ಅಭಯಾರಣ್ಯದಲ್ಲಿ ರಣಹದ್ದುಗಳಿಗೆ ಸೂಕ್ತವಾಗಿರುವ ವಾತಾವರಣ, ಆಹಾರ ಲಭ್ಯತೆ ಮತ್ತು ಆವಾಸಸ್ಥಾನವಿದೆ. “ಬಹುತೇಕ ಹಿಂಸ್ರ ಪಕ್ಷಿಗಳು ಉತ್ತಮ ಆಹಾರ ಲಭ್ಯತೆಯ ಜೊತೆಗೆ ಕಡಿಮೆ ಮಾನವಜನ್ಯ ಒತ್ತಡವಿರುವ (ಮಾನವ ಚಟುವಟಿಕೆಗಳು ಪರಿಸರ, ಪರಿಸರ ವ್ಯವಸ್ಥೆಗಳು ಮತ್ತು ನೈಸರ್ಗಿಕ ಸಂಪನ್ಮೂಲಗಳ ಮೇಲೆ ಬೀರುವ ನಕಾರಾತ್ಮಕ ಪರಿಣಾಮ) ಪ್ರದೇಶಗಳನ್ನು ಬಯಸುತ್ತವೆ” ಎನ್ನುತ್ತಾರೆ ಸಾಮ್ಸನ್. ಸಂತಾನೋತ್ಪತ್ತಿ ಸಮಯದಲ್ಲಿ ಇಂಪೀರಿಯಲ್ ಹದ್ದುಗಳು ಮುಕ್ತ ಪ್ರದೇಶ ಮತ್ತು ಅರಣ್ಯ-ಹುಲ್ಲುಗಾವಲು ಆವಾಸಸ್ಥಾನಗಳನ್ನು ಬಯಸುತ್ತವೆ. ಈ ಪ್ರದೇಶಗಳು ಮೊಟ್ಟೆ ಇಡಲು ಎತ್ತರದ ಮರಗಳನ್ನು ಹೊಂದಿರುತ್ತವೆ. ಬೇಟೆಯಾಡಲು ಮುಕ್ತ ಪ್ರದೇಶವೂ ಇರುತ್ತದೆ. ಸಂತಾನೋತ್ಪತ್ತಿ ಪ್ರದೇಶ ವಿಶಾಲವಾಗಿದ್ದು, ಪಶ್ಚಿಮ ಯುರೋಪ್ನಿಂದ ಪೂರ್ವ ಯುರೋಪ್ ಮತ್ತು ಮಧ್ಯ ಏಷ್ಯಾವರೆಗೆ ಮತ್ತು ಸೈಬೀರಿಯದಿಂದ ವಾಯುವ್ಯ ಚೀನಾವರೆಗೆ ಹರಡಿದೆ. ಇಲಿಗಳು ಮತ್ತು ಸಣ್ಣ ಇಲಿಗಳನ್ನು ತಿನ್ನುವ ಮೂಲಕ ಬೇಟೆಯಲ್ಲಿ ಕುಖ್ಯಾತಿ ಪಡೆದಿರುವ ಇಂಪೀರಿಯಲ್ ಹದ್ದು ಪರಿಸರ ಸಮತೋಲನದಲ್ಲಿ ಬಹಳ ಮುಖ್ಯ ಪಾತ್ರ ವಹಿಸುತ್ತದೆ. ಭಾರತದಲ್ಲಿ ಈ ಹದ್ದು ಕಂಡುಬಂದಿರುವುದು ಆರೋಗ್ಯಕರ ಪರಿಸರ ವ್ಯವಸ್ಥೆಯನ್ನು ಸೂಚಿಸುತ್ತದೆ. ಆದರೆ ಆವಾಸಸ್ಥಾನ ನಷ್ಟ, ಗದ್ದಲ ಮತ್ತು ಆಹಾರ ಲಭ್ಯತೆ ಕಡಿಮೆಯಾಗಿರುವುದರಿಂದ ಈ ಹದ್ದು ವಿನಾಶದಂಚಿಗೆ ತಲುಪಿದೆ. ಅದರ ಸಂತಾನೋತ್ಪತ್ತಿ ನೆಲೆಗಳನ್ನು ರಕ್ಷಿಸುವುದು ಚಳಿಗಾಲದಲ್ಲಿ ಅವುಗಳ ಆಗಮನವನ್ನು ಖಾತರಿಗೊಳಿಸುತ್ತದೆ. ಈ ವರ್ಷ ದೊಡ್ಡ ಪ್ರಮಾಣದಲ್ಲಿ ಚಳಿಗಾಲದ ವಲಸೆ ಪಕ್ಷಿಗಳು ಭಾರತಕ್ಕೆ ಆಗಮಿಸಿವೆ. ಮುಖ್ಯವಾಗಿ ಬೇಟೆ ಪಕ್ಷಿಗಳು ಪ್ರಮುಖವಾಗಿ ಕಂಡುಬಂದಿವೆ. 2024ಕ್ಕೆ ಹೋಲಿಸಿದಲ್ಲಿ ಈ ವರ್ಷ ಆಗಮಿಸಿದ ಬೇಟೆ ಪಕ್ಷಿಗಳ ಸಂಖ್ಯೆ ಹೆಚ್ಚಿತ್ತು. ಹಾಗಿದ್ದರೂ ಪರಿಸರ ಸಂರಕ್ಷಕರು ಅರಣ್ಯ ಇಲಾಖೆ ಮತ್ತು ನೀಲಗಿರಿ ಜಿಲ್ಲೆಯ ಆಡಳಿತವನ್ನು ಕಾಡಿಗೆ ಪ್ರವಾಸಕ್ಕಾಗಿ ಆಗಮಿಸುವ ಜನರ ಪ್ರಮಾಣವನ್ನು ಕಡಿಮೆಗೊಳಿಸುವಂತೆ ವಿನಂತಿಸಿಕೊಂಡಿದ್ದಾರೆ. ಮುಖ್ಯವಾಗಿ ಬೇಸಗೆ ಮತ್ತು ಚಳಿಗಾಲದಲ್ಲಿ ಪ್ರವಾಸಿಗರ ಸಂಖ್ಯೆಯಲ್ಲಿ ನಿಯಂತ್ರಣ ಹೇರುವಂತೆ ವಿನಂತಿಸಲಾಗಿದೆ. “ಹುಲಿ ಅಭಯಾರಣ್ಯ ಜೀವವೈವಿಧ್ಯದ ತಾಣವಾಗಿರುವ ಕಾರಣದಿಂದ ಪ್ರವಾಸೋದ್ಯಮದ ಒತ್ತಡ ಎದುರಿಸುತ್ತಿದೆ. ಊಟಿ ಮತ್ತು ನೀಲಗಿರೀಸ್ ಗೆ ಅತಿಯಾಗಿ ಪ್ರವವಾಸಿಗರು ಆಗಮಿಸುತ್ತಾರೆ. ಹೀಗಾಗಿ ಸರ್ಕಾರ ಪ್ರವಾಸಿ ನೀತಿಯನ್ನು ಮರುಪರಿಶೀಲಿಸಬೇಕು” ಎಂದು ಪರಿಸರವಾದಿಗಳು ವಿನಂತಿಸಿಕೊಂಡಿದ್ದಾರೆ. ಜಾಗತಿಕ ಪಕ್ಷಿವೀಕ್ಷಣೆ ಇಬರ್ಡ್ ನಲ್ಲಿ 2020ರಿಂದ 2025ರ ನಡುವೆ ಇಂಪೀರಿಯಲ್ ರಣಹದ್ದು ಕಂಡಿರುವ ಬಗ್ಗೆ ನಿರಂತರವಾಗಿ ದಾಖಲಾತಿ ಆಗಿದೆ. ಹೀಗಾಗಿ ಮಧುಮಲೈನಲ್ಲಿ ಅದರ ಉಪಸ್ಥಿತಿ ಪರಿಸರದ ಪ್ರಾಮುಖ್ಯತೆಯನ್ನು ಹೆಚ್ಚಿಸಿದೆ. ಈ ಬಹುತೇಕ ದಾಖಲಾತಿಗಳು ನವೆಂಬರ್ನಿಂದ ಫೆಬ್ರವರಿ ನಡುವೆ ಆಗಿದೆ. ಹೀಗಾಗಿ ಅವುಗಳ ಸಂತಾನೋತ್ಪತ್ತಿ ಸಮಯದಲ್ಲಿ ಇಂಪೀರಿಯಲ್ ರಣಹದ್ದುಗಳು ಹೆಚ್ಚು ಕಾಣಿಸಿಕೊಂಡಿವೆ ಎನ್ನುವುದು ತಿಳಿದುಬಂದಿದೆ.
ಕಂದಾಯ ನ್ಯಾಯಾಲಯಗಳಲ್ಲಿ ಇನ್ನೂ ಆನ್ಲೈನ್ ವ್ಯವಸ್ಥೆ
ಬೆಂಗಳೂರು : ಜನ-ಕೇಂದ್ರಿತ ಆಡಳಿತ ಮತ್ತು ಪಾರದರ್ಶಕ ಆಡಳಿತದತ್ತ ಮಹತ್ವದ ಹೆಜ್ಜೆಯನ್ನಿಟ್ಟಿರುವ ರಾಜ್ಯ ಸರಕಾರವು ಪ್ರಾಯೋಗಿಕವಾಗಿ ಕಂದಾಯ ನ್ಯಾಯಾಲಯದ ವಿಚಾರಣೆಗಳ ನೇರ ಪ್ರಸಾರವನ್ನು ಆನ್ಲೈನ್ ಮೂಲಕ ಪ್ರಾರಂಭಿಸಲು ಆದೇಶವನ್ನು ಹೊರಡಿಸಿದೆ. ಲೈವ್ ಮಾದರಿ ಪ್ರಸ್ತುತ ಅಭಿವೃದ್ಧಿಯ ಹಂತದಲ್ಲಿದೆ ಮತ್ತು ಶೀಘ್ರದಲ್ಲೇ ಪೈಲಟ್ ಅನ್ನು ಜಾರಿಗೆ ತರಲಾಗುವುದು. ಪ್ರಾಯೋಗಿಕ ಉಪಕ್ರಮವು ಆಡಳಿತವನ್ನು ಹೆಚ್ಚು ಸುಲಭ, ಪರಿಣಾಮಕಾರಿ ಮತ್ತು ಪಾರದರ್ಶಕವಾಗಿಸಲು ತಂತ್ರಜ್ಞಾನವನ್ನು ಬಳಸಿಕೊಳ್ಳುವ ಸರಕಾರ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ. ನಾಗರಿಕರಿಂದ ಪರಿಣಾಮಕಾರಿತ್ವ, ಬಳಕೆ ಮತ್ತು ಪ್ರತಿಕ್ರಿಯೆಯ ಆಧಾರದ ಮೇಲೆ, ಉಪಕ್ರಮವನ್ನು ಹಂತ ಹಂತವಾಗಿ ವಿಸ್ತರಿಸಲಾಗುವುದು ಎಂದು ತಿಳಿಸಲಾಗಿದೆ. ಕಂದಾಯ ನ್ಯಾಯಾಲಯಗಳನ್ನು ಹೇಗೆ ನಡೆಸಬೇಕೆಂದು ಯಾವುದೇ ಸ್ಪಷ್ಟ ನಿಯಮಗಳಿರಲಿಲ್ಲ. ಉಪ ವಿಭಾಗಾಧಿಕಾರಿಗಳ ಕೋರ್ಟ್ಗಳು ತಮ್ಮ ಅಧಿಕಾರ ವ್ಯಾಪ್ತಿ ಮೀರಿ ಅನೇಕ ಆದೇಶಗಳನ್ನು ಹೊರಡಿಸಿರುವ ಉದಾಹರಣೆಗಳಿವೆ. ಹೀಗಾಗಿ ಕಂದಾಯ ಕೋರ್ಟ್ಗಳನ್ನು ಮೊದಲು ಜನಸ್ನೇಹಿಗೊಳಿಸಬೇಕು ಹಾಗೂ ಇಲ್ಲಿನ ನ್ಯಾಯಿಕ ತೀರ್ಮಾನಗಳನ್ನು ಪಾರದರ್ಶಕಗೊಳಿಸಬೇಕು ಎಂಬ ಚರ್ಚೆ ನಡೆಯುತ್ತಿತ್ತು. ಆ ಹಿನ್ನೆಲೆಯಲ್ಲಿ ಕಂದಾಯ ನ್ಯಾಯಾಲಯಗಳಲ್ಲಿ ಆರ್ಸಿಸಿ ಎಂಎಸ್ ಸೇರಿದಂತೆ ಡಿಜಿಟೈಶೇಷನ್ ಮುಖಾಂತರ ಆದೇಶಗಳನ್ನು ನೀಡುವ ವ್ಯವಸ್ಥೆಗೆ ಈಗಾಗಲೇ ಚಾಲನೆ ನೀಡಲಾಗಿತ್ತು. ಇವುಗಳ ಸುಧಾರಣಾ ಕಾನೂನುಗಳಿಗೆ ನ್ಯಾಯಿಕ ಬಲವನ್ನು ಒದಗಿಸುವ ಜೊತೆಗೆ ಇಲ್ಲಿ ನೀಡಲಾಗುತ್ತಿದ್ದ ಆದೇಶಗಳ ಮೇಲೂ ನಿಗಾ ವಹಿಸುವ ವ್ಯವಸ್ಥೆಯನ್ನು ರೂಪಿಸಲಾಗಿತ್ತು. ಜನಸಾಮಾನ್ಯರು ತಮ್ಮ ಕೆಲಸಕ್ಕಾಗಿ ಸರಕಾರಿ ಕಚೇರಿಗಳಿಗೆ ಅಲೆದು ವ್ಯವಸ್ಥೆಯ ಮೇಲೆಯೇ ಜಿಗುಪ್ಸೆಗೊಂಡಿದ್ದಾರೆ. ಹೀಗಾಗಿ ಜನರು ಸರಕಾರಿ ಕಚೇರಿಗಳಿಗೆ ಅಲೆಯುವುದಕ್ಕೆ ವಿರಾಮ ನೀಡಬೇಕು ಎಂಬ ಉದ್ದೇಶದಿಂದಲೇ ಇ-ಆಡಳಿತಕ್ಕೆ ಹೆಚ್ಚು ಒತ್ತು ನೀಡಿದ್ದೆವು. ವಿಎಗಳಿಗೂ ಲ್ಯಾಪ್ಟಾಪ್ ನೀಡುವ ಮೂಲಕ ಕಂದಾಯ ಇಲಾಖೆಯ ಕಾರ್ಯವೈಖರಿಯಲ್ಲಿ ಪಾರದರ್ಶಕತೆ ತರಲಾಗಿತ್ತು. ಭೂ ಸುರಕ್ಷಾ ಯೋಜನೆಯ ಮೂಲಕ ಎಲ್ಲ ಭೂ ದಾಖಲೆಗಳನ್ನೂ ಆನ್ಲೈನ್ನಲ್ಲೇ ಪಡೆಯುವುದಕ್ಕೆ ಅವಕಾಶ ನೀಡಲಾಗಿತ್ತು. ಇದೀಗ ಕಂದಾಯ ನ್ಯಾಯಾಲಯಗಳನ್ನೂ ಆನ್ಲೈನ್ ಮೂಲಕ ನಡೆಸುವ ಕ್ರಾಂತಿಕಾರಕ ವ್ಯವಸ್ಥೆಗೆ ಅಂಕಿತ ಹಾಕಲಾಗಿದೆ. ಇನ್ನು ಕಂದಾಯ ನ್ಯಾಯಾಲಯಗಳಿಗೆ ವಾದಿ-ಪ್ರತಿವಾದಿಗಳು ಸುತ್ತುವುದರ ಬದಲಿಗೆ ಅವರು ಆನ್ಲೈನ್ ಮುಖಾಂತರವೇ ನ್ಯಾಯಾಲಯ ಕಲಾಪಗಳಿಗೆ ಭಾಗವಹಿಸುವ ಸುಲಭ ಮಾರ್ಗ ನೀಡಲಾಗಿದೆ. ಪಾರದರ್ಶಕತೆ ಮತ್ತು ನಾಗರಿಕರ ಅನುಕೂಲತೆ ಮತ್ತು ಸಬಲೀಕರಣವನ್ನು ಹೆಚ್ಚಿಸಲು ಕರ್ನಾಟಕವು ಪೈಲಟ್ ಆಧಾರದ ಮೇಲೆ ಕಂದಾಯ ನ್ಯಾಯಾಲಯಗಳ ನೇರ ಪ್ರಸಾರವನ್ನು ಪರಿಚಯಿಸಲಿದೆ. ಈ ಉಪಕ್ರಮದ ಭಾಗವಾಗಿ, ಪ್ರಕರಣಗಳ ಪಕ್ಷಗಳು ನ್ಯಾಯಾಲಯದ ವಿಚಾರಣೆಗಳನ್ನು ಆನ್ಲೈನ್ನಲ್ಲಿ ವೀಕ್ಷಿಸಲು ಮತ್ತು ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ಭಾಗವಹಿಸಲು ಸಾಧ್ಯವಾಗುತ್ತದೆ. ಇದು ಕಂದಾಯ ಇಲಾಖೆ ಕಚೇರಿಗಳಲ್ಲಿ ಪದೇ ಪದೇ ಓಡಾಡುವ ಅಗತ್ಯವನ್ನು ಕಡಿಮೆ ಮಾಡುತ್ತದೆ. ಈ ಕ್ರಮವು ಸಮಯವನ್ನು ಉಳಿಸುವುದು, ನ್ಯಾಯದ ಪ್ರವೇಶವನ್ನು ಸುಧಾರಿಸುವುದು ಮತ್ತು ಸರಕಾರ ಮತ್ತು ನಾಗರಿಕರ ನಡುವೆ ವಿಶ್ವಾಸವನ್ನು ಬಲಪಡಿಸುವ ಗುರಿಯನ್ನು ಹೊಂದಿದೆ ಎಂದು ತಿಳಿಸಲಾಗಿದೆ.
Steel Import: ಭಾಯಿ ಭಾಯಿ ಎನ್ನುತ್ತಲ್ಲೇ ಚೀನಾಗೆ ಉಕ್ಕಿನ ಶಾಕ್ ಕೊಟ್ಟ ಭಾರತ
ನವದೆಹಲಿ: ಭಾರತವು ಚೀನಾದಿಂದ ಆಮದು ಆಗುತ್ತಿರುವ ಉಕ್ಕಿನ ಉತ್ಪನ್ನಗಳ ಮೇಲೆ ಭಾರೀ ಪ್ರಮಾಣದ ಸುಂಕ ವಿಧಿಸುವುದಕ್ಕೆ ಮುಂದಾಗಿದೆ. ಈ ವರ್ಷ ಭಾರತದ ವಿವಿಧ ವಸ್ತುಗಳ ಮೇಲೆ ಅಮೆರಿಕಾ ಹಾಗೂ ಮೆಕ್ಸಿಕೋ ಶೇ 50ರಷ್ಟು ಸುಂಕ ವಿಧಿಸಿದ್ದವು. ಅಲ್ಲದೇ ವಿವಿಧ ಉತ್ಪನ್ನಗಳ ಮೇಲೆ ಮನಸೋ ಇಚ್ಛೆ ಸುಂಕ ವಿಧಿಸಲಾಗಿದೆ. ಇದೀಗ ಕೇಂದ್ರ ಬಿಜೆಪಿ ಸರ್ಕಾರವು ಭಾರತದ ಆರ್ಥಿಕ ಹಿತದೃಷ್ಟಿಯಿಂದ
2026 ರ ಹೊಸ ವರ್ಷದಿಂದ ಹೊಸ ರೀತಿಯ ಜೀವನ ನಡೆಸಲು ನೂರಾರು ಕನಸುಗಳನ್ನ ಜನರು ಕಟ್ಟಿಕೊಂಡಿದ್ದಾರೆ. 2026ಕ್ಕೆ ಸಂಬಂಧ ಪಟ್ಟಂತೆ ಆಫಾತಕಾರಿ ಭವಿಷ್ಯವನ್ನ ವಾಂಗಾ ಭವಿಷ್ಯವನ್ನ ನುಡಿದಿದ್ದಾರೆ. ಎಲ್ಲರ ದೃಷ್ಟಿ ಬಲ್ಗೇರಿಯಾದ ಅತೀಂದ್ರಿಯ ವ್ಯಕ್ತಿ, ಅಂಧೆಯಾದರೂ ಮಹಿಮಾವಂತೆಯಾಗಿರೋ ಬಾಬಾ ವಂಗಾ ಭವಿಷ್ಯ ವಾಣಿ ಮೇಲೆ ಇದೆ. ಆ ಕಾಲಜ್ಞಾನಿ ನುಡಿರೋ ಭವಿಷ್ಯವಾಣಿ ಏನಿದೆ? ಹೊಸ ವರ್ಷಕ್ಕೆ ಏನಾದ್ರೂ
ಎದುರುಪದವು ಮಸೀದಿ-ಮದ್ರಸದ ವತಿಯಿಂದ ಸಹೋದರತ್ವದ ಸಮಾಗಮ
ಮಂಗಳೂರು, ಡಿ.31: ಮೂಡುಶೆಡ್ಡೆ-ಎದುರುಪದವಿನ ಹಯಾತುಲ್ ಇಸ್ಲಾಂ ಬದ್ರಿಯ ಜುಮ್ಮಾ ಮಸೀದಿ ಮತ್ತು ಮದ್ರಸದ ವತಿಯಿಂದ ಸಹೋದರತ್ವದ ಸಮಾಗಮ-2025 ಕಾರ್ಯಕ್ರಮವು ಕುಪ್ಪೆಪದವಿನ ಮಾಝರಾ ಗಾರ್ಡನ್ನಲ್ಲಿ ನೇರವೇರಿತು. ಹಯಾತುಲ್ ಇಸ್ಲಾಂ ಬದ್ರಿಯ ಜುಮ್ಮಾ ಮಸೀದಿ ಮತ್ತು ಮದ್ರಸದ ಖತೀಬ್ ಸಫ್ವಾನ್ ಇರ್ಫಾನಿ ಮುಂಡೋಳೆ ದುಆ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ಈ ವೇಳೆ ಇನ್ಫಾರ್ಮೆಟ್ ಫೌಂಡೇಶನ್ (ರಿ) ಕರ್ನಾಟಕ ಸಂಸ್ಥಾಪಕ ಅಬ್ದುಲ್ ಖಾದರ್ ನಾವೂರ್ ವಿದ್ಯಾರ್ಥಿಗಳ ಜೀವನ ಮತ್ತು ಶಿಕ್ಷಣದ ಮಹತ್ವ ಬಗ್ಗೆ ಮಾಹಿತಿ ನೀಡಿದರು. ಅಲ್ಲದೆ ವಿದ್ಯಾರ್ಥಿಗಳಿಗೆ ವಿವಿಧ ಕ್ರೀಡಾ ಕೂಟ, ಮನೋರಂಜನಾ ಕಾರ್ಯಕ್ರಮ ನಡೆಸಿ ಬಹುಮಾನ ವಿತರಿಸಲಾಯಿತು. ಹಯಾತುಲ್ ಇಸ್ಲಾಂ ಬದ್ರಿಯ ಜುಮ್ಮಾ ಮಸೀದಿ ಮತ್ತು ಮದ್ರಸದ ಅಧ್ಯಕ್ಷ ಇಕ್ಬಾಲ್ ಎಪಿ., ಉಪಾಧ್ಯಕ್ಷರಾದ ರಝಾಕ್ ಎಆರ್, ಸದರ್ ಉಸ್ತಾದ್ ಜುಬೈರ್ ಯಮಾನಿ ಜೋಕಟ್ಟೆ, ಮುಅಲ್ಲಿಂ ಜಾಬಿರ್ ಜೌಹರಿ ಕಲ್ಲಡ್ಕ, ಕಾರ್ಯದರ್ಶಿ ಸಜುದ್ದೀನ್, ಜೊತೆ ಕಾರ್ಯದರ್ಶಿ ಆರೀಫ್, ಬದ್ರಿಯಾ ಯಂಗ್ಮೆನ್ಸ್ ಸದಸ್ಯ ಆಶಿಕ್, ಎಸ್ಕೆಎಸ್ಬಿವಿ ಅಧ್ಯಕ್ಷ ಮುಹಮ್ಮದ್ ಅನಸ್, ಆಡಳಿತ ಮಂಡಳಿಯ ಸದಸ್ಯರಾದ ಮನ್ಸೂರ್, ಇಕ್ಬಾಲ್, ಮಾಜಿ ಅಧ್ಯಕ್ಷ ಸೈಫುದ್ದೀನ್, ಮಾಜಿ ಸದಸ್ಯರಾದ ಇಕ್ಬಾಲ್ ಸಿಎಚ್, ಇಸಾಕ್ ಮತ್ತಿತರರು ಉಪಸ್ಥಿತರಿದ್ದರು.
ಕುಕನೂರು | ಶಿಕ್ಷಕ ವೀರನಗೌಡ ಪಾಟೀಲರಿಗೆ ವಯೋನಿವೃತ್ತಿ ಬೀಳ್ಕೊಡುಗೆ
ಕುಕನೂರು : ಸರ್ಕಾರಿ ಹುದ್ದೆಯಲ್ಲಿ ವಯೋನಿವೃತ್ತಿಯಾಗುವುದು ಸಹಜವಾದರೂ, ಶಿಕ್ಷಕ ವೃತ್ತಿಯಲ್ಲಿ ಉತ್ತಮ ಸೇವೆ ಸಲ್ಲಿಸಿ ಎಲ್ಲರೊಂದಿಗೆ ಆತ್ಮೀಯತೆ ಗಳಿಸಿದ ವೀರನಗೌಡ ಪಾಟೀಲರು ಇತರರಿಗೆ ಮಾದರಿಯಾಗಿದ್ದಾರೆ ಎಂದು ನೌಕರರ ಸಂಘದ ತಾಲೂಕು ಅಧ್ಯಕ್ಷ ಮಾರುತಿ ತಳವಾರ ಹೇಳಿದರು. ಪಟ್ಟಣದ ಕೋಳಿಪೇಟೆಯಲ್ಲಿರುವ ಸರ್ಕಾರಿ ಕನ್ನಡ ಹಾಗೂ ಆಂಗ್ಲ ಮಾಧ್ಯಮ ಮಾಧ್ಯಮಿಕ ಶಾಲೆಯಲ್ಲಿ ಆಯೋಜಿಸಿದ್ದ ವೀರನಗೌಡ ಪಾಟೀಲರ ವಯೋನಿವೃತ್ತಿ ಬೀಳ್ಕೊಡುಗೆ ಸಮಾರಂಭದಲ್ಲಿ ಅವರು ಮಾತನಾಡಿದರು. ವೀರನಗೌಡ ಪಾಟೀಲರು ತಮ್ಮ ಸೇವಾ ಅವಧಿಯಲ್ಲಿ ಸಹಕಾರ ಮನೋಭಾವದಿಂದ ಕಾರ್ಯನಿರ್ವಹಿಸಿ ಸುಮಾರು 31 ವರ್ಷಗಳ ಕಾಲ ಶಿಕ್ಷಣ ಇಲಾಖೆಯಲ್ಲಿ ಶ್ಲಾಘನೀಯ ಸೇವೆ ಸಲ್ಲಿಸಿದ್ದಾರೆ. ಅವರ ನಿವೃತ್ತಿ ಜೀವನ ಸುಖಕರವಾಗಿರಲಿ ಎಂದು ಶುಭ ಹಾರೈಸಿದರು. ಶಿಕ್ಷಕ ಮಹೇಶ ಬೆದವಟ್ಟಿ ಮಾತನಾಡಿ, ವೀರನಗೌಡ ಪಾಟೀಲರು ಇಲಾಖೆಗೆ ಸಲ್ಲಿಸಿದ ಸೇವೆ ಅನನ್ಯ. ಅನುಭವಿ ಶಿಕ್ಷಕರನ್ನು ಕಳೆದುಕೊಳ್ಳುವುದು ದುಃಖಕರವಾದರೂ, ಕುಟುಂಬದವರೊಂದಿಗೆ ಅವರು ಸಂತೋಷದ ನಿವೃತ್ತಿ ಜೀವನ ನಡೆಸಲಿ ಎಂದರು. ಕಾರ್ಯಕ್ರಮದಲ್ಲಿ ನೌಕರರ ಸಂಘದ ಖಜಾಂಚಿ ಬಸವರಾಜ್ ಬೆಲ್ಲದ್, ಗುಡುಸಾಬ ಮಕಾಂದರ್, ಅಬ್ದುಲ್ ದೇವದುರ್ಗ, ಸಂಗಪ್ಪ ರಾಜೂರ, ಹುಲಿಗೆಮ್ಮ ವಜ್ರಬಂಡಿ, ಶಿವಕುಮಾರ್ ಮುತ್ತಾಳ, ವೀರಣ್ಣ ಕೋನಾರಿ, ಶಂಭುಲಿಂಗಪ್ಪ ಅರಿಶಿನ, ಮುಖ್ಯ ಶಿಕ್ಷಕಿ ಕೃಷ್ಣವೇಣಿ ದೀಕ್ಷಿತ್, ಇಮಾಮ್ ಕಲ್ಬಂಡಿ, ಶಿಕ್ಷಕಿಯರಾದ ಶಾಂತ ಕಟ್ಟಿ, ರೇಣುಕಾ ಬಡಿಗೇರ್ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಬೆಂಗಳೂರು | ಪಾನಮತ್ತರಾಗಿ ವಾಹನ ಚಾಲನೆ: 10 ದಿನಗಳಲ್ಲಿ 4,147 ಪ್ರಕರಣ ದಾಖಲು
ಬೆಂಗಳೂರು : ರಾಜಧಾನಿ ಬೆಂಗಳೂರಿನಾದ್ಯಂತ ಸತತ 10 ದಿನಗಳ ವಿಶೇಷ ಕಾರ್ಯಾಚರಣೆ ಕೈಗೊಂಡ ನಗರ ಸಂಚಾರ ಪೊಲೀಸರು ಪಾನಮತ್ತರಾಗಿ ವಾಹನ ಚಾಲನೆ ಮಾಡುವವರ ವಿರುದ್ಧ 4,147 ಪ್ರಕರಣಗಳನ್ನು ದಾಖಲಿಸಿಕೊಂಡಿರುವುದಾಗಿ ತಿಳಿಸಿದ್ದಾರೆ. ಡಿಸೆಂಬರ್ 22ರಿಂದ 31ರವರೆಗೆ ನಗರಾದ್ಯಂತ ವಿವಿಧ ಠಾಣೆಗಳ ವ್ಯಾಪ್ತಿಯಲ್ಲಿ ವಿಶೇಷ ಕಾರ್ಯಾಚರಣೆ ನಡೆಸಲಾಗಿದ್ದು, 3.01 ಲಕ್ಷ ವಾಹನಗಳ ಚಾಲಕರನ್ನು ತಪಾಸಣೆಗೆ ಒಳಪಡಿಸಲಾಗಿದೆ. ಆ ಪೈಕಿ ಪಾನಮತ್ತರಾಗಿದ್ದ 4,147 ಜನರ ವಿರುದ್ಧ ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ ಎಂದು ಸಂಚಾರ ಪೊಲೀಸರು ಮಾಹಿತಿ ನೀಡಿದ್ದಾರೆ. ಪಾನಮತ್ತರಾಗಿ ವಾಹನ ಚಾಲನೆ ಮಾಡುವವರ ವಿರುದ್ಧ ವಿಶೇಷ ಕಾರ್ಯಾಚರಣೆ ಮುಂದುವರೆಯಲಿದ್ದು, ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ಕೈಗೊಳ್ಳುವಂತೆ ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಸೂಚಿಸಿದ್ದಾರೆ. ನಗರದಲ್ಲಿ ಕಿಡಿಗೇಡಿಗಳ ವ್ಹೀಲಿಂಗ್ ಮೇಲೆ ನಿರಂತರ ನಿಗಾ ಇರಿಸಲು ಹಾಗೂ ಅಪಘಾತಗಳನ್ನು ತಪ್ಪಿಸಲು ಈ ಕ್ರಮ ವಹಿಸಲಾಗುತ್ತಿದೆ ಎಂದು ಬೆಂಗಳೂರು ಸಂಚಾರ ಪೊಲೀಸರು ತಿಳಿಸಿದ್ದಾರೆ.
ಬೆಂಗಳೂರು : ವಿಜ್ಞಾನ ಮತ್ತು ಔಷಧ ವಿಜ್ಞಾನ ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿರುವ ಕರ್ನಾಟಕದಲ್ಲಿ ಕೇಂದ್ರ ಸರಕಾರವು ರಾಷ್ಟ್ರೀಯ ಔಷಧ ವಿಜ್ಞಾನ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಯನ್ನು(ಎನ್ಯಪಿಇಆರ್)ಆರಂಭಿಸಬೇಕು. ಇದಕ್ಕೆ ಅಗತ್ಯ ಭೂಮಿ, ಮೂಲಸೌಕರ್ಯ ಒದಗಿಸಲು ರಾಜ್ಯ ಸರಕಾರವು ಕ್ರಮ ವಹಿಸಲಿದೆ ಎಂದು ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್, ಕೇಂದ್ರ ಆರೋಗ್ಯ ಸಚಿವ ಜೆ.ಪಿ.ನಡ್ಡಾರಿಗೆ ಪತ್ರ ಬರೆದ್ದಾರೆ. ಬುಧವಾರ ಈ ಸಂಬಂಧ ಪತ್ರ ಬರೆದಿರುವ ಅವರು, ಹಿಂದೊಮ್ಮೆ ಈ ಕೇಂದ್ರವನ್ನು ಕರ್ನಾಟಕದಲ್ಲಿ ಪ್ರಾರಂಭಿಸಬೇಕೆಂದು ಕೇಂದ್ರ ಸರಕಾರವು ಆಲೋಚಿಸಿತ್ತು. ಆದರೆ, ಅದು ಕಾರ್ಯರೂಪಕ್ಕೆ ಬರಲಿಲ್ಲ. ರಾಜ್ಯದಲ್ಲಿರುವ ವೈಜ್ಞಾನಿಕ ಸಂಶೋಧನಾ ಸಂಸ್ಥೆಗಳು, ಜೈವಿಕ ತಂತ್ರಜ್ಞಾನ (ಬಿಟಿ) ಕಂಪೆನಿಗಳು ಇತ್ಯಾದಿಗಳನ್ನು ಪರಿಗಣಿಸಿ ಈ ಚಿಂತನೆಗೆ ಮರುಜೀವ ನೀಡಬೇಕು ಎಂದು ಆಗ್ರಹಿಸಿದ್ದಾರೆ. ರಾಜ್ಯವು ಔಷಧ ವಿಜ್ಞಾನ, ಬಿಟಿ ಮತ್ತು ಆರೋಗ್ಯ ಸೇವೆಗಳಲ್ಲಿ ದೇಶದಲ್ಲೇ ಮುಂಚೂಣಿಯಲ್ಲಿದೆ. ಅದರಲ್ಲೂ ಬೆಂಗಳೂರೊಂದರಲ್ಲೇ 400ಕ್ಕೂ ಹೆಚ್ಚು ಬಿಟಿ ಕಂಪೆನಿಗಳಿವೆ. ಜೊತೆಗೆ ಇಲ್ಲಿ ಭಾರತೀಯ ವಿಜ್ಞಾನ ಸಂಸ್ಥೆ, ರಾಷ್ಟ್ರೀಯ ಜೀವ ವಿಜ್ಞಾನಗಳ ಕೇಂದ್ರ (ಎನ್ಸಿಬಿಎಸ್), ಬಯೋಇನ್ಫಮ್ರ್ಯಾಟಿಕ್ಸ್ ಮತ್ತು ಅಪ್ಲೈಡ್ ಬಯೋಟೆಕ್ನಾಲಜಿ (ಐಬಿಎಬಿ) ಮುಂತಾದ ಪ್ರತಿಷ್ಠಿತ ಸಂಸ್ಥೆಗಳಿವೆ. ರಾಜ್ಯ ಸರಕಾರದ ಬಯೊ-ಇನ್ನೋವೇಶನ್ ಸೆಂಟರ್ ಮತ್ತು ರಚನಾತ್ಮಕ ಬಿಟಿ ನೀತಿಯ ಮೂಲಕ ಈ ಕ್ಷೇತ್ರದ ನವೋದ್ಯಮಗಳಿಗೆ ಬೆಂಬಲ ಕೊಡಲಾಗುತ್ತಿದೆ ಎಂದು ಅವರು ವಿವರಿಸಿದ್ದಾರೆ. ದೇಶದಲ್ಲಿರುವ ಬಿ.ಟಿ. ಕಂಪೆನಿಗಳ ಪೈಕಿ ಶೇ.60ರಷ್ಟು ಕರ್ನಾಟಕ ರಾಜ್ಯದಲ್ಲೇ ಇವೆ. ಭಾರತವು ಮಾಡುತ್ತಿರುವ ಒಟ್ಟು ಔಷಧಗಳ ರಫ್ತಿನಲ್ಲಿ ರಾಜ್ಯದ ಪಾಲು ಶೇ.12ರಷ್ಟಿದೆ. ಅಲ್ಲದೆ ಕ್ಲಿನಿಕಲ್ ಸಂಶೋಧನೆ, ವೈದ್ಯಕೀಯ ಸಾಧನ ಸಲಕರಣೆಗಳ ತಯಾರಿಕೆ ಮತ್ತು ಎಪಿಐ ಉತ್ಪಾದನೆಯ ಕಾರ್ಯಜಾಲ ನಮ್ಮಲ್ಲಿದೆ. ಇವೆಲ್ಲವುಗಳನ್ನು ಪರಿಗಣಿಸಿ ರಾಜ್ಯಕ್ಕೆ ರಾಷ್ಟ್ರೀಯ ಔಷಧ ವಿಜ್ಞಾನ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಯನ್ನು ಮಂಜೂರು ಮಾಡಬೇಕು ಎಂದು ಪಾಟೀಲ್ ತಮ್ಮ ಪತ್ರದಲ್ಲಿ ಗಮನಸೆಳೆದಿದ್ದಾರೆ.
ರಾಯಚೂರು | ಶ್ರೀ ಅಂಬಾದೇವಿ ಜಾತ್ರೆ; ಪ್ರಾಣಿ ಬಲಿ ನಿಷೇಧ : ಡಿಸಿ ನಿತೀಶ್ ಕೆ.
ರಾಯಚೂರು: ಜಿಲ್ಲೆಯ ಸಿಂಧನೂರು ತಾಲ್ಲೂಕಿನ ಸೋಮಲಾಪೂರು ಗ್ರಾಮದಲ್ಲಿ 2026ರ ಜ.2ರಿಂದ 8ರವರೆಗೆ ನಡೆಯಲಿರುವ ಶ್ರೀ ಅಂಬಾದೇವಿ ಜಾತ್ರೆಯ ಹಿನ್ನೆಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ಹಾಗೂ ಸಾರ್ವಜನಿಕ ಹಿತದೃಷ್ಟಿಯಿಂದ ಮಹತ್ವದ ಆದೇಶ ಹೊರಡಿಸಲಾಗಿದೆ. ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿಗಳಾದ ನಿತೀಶ್ ಕೆ. ಅವರು, ಕರ್ನಾಟಕ ಪ್ರಾಣಿ ಬಲಿ ನಿಷೇಧ ಕಾಯ್ದೆಯಡಿ, ಜಾತ್ರೆ ನಡೆಯುವ ಅವಧಿಯಲ್ಲಿ ದೇವಾಲಯದ ಆವರಣದಲ್ಲಿ ಅಥವಾ ಸೋಮಲಾಪೂರು ಗ್ರಾಮದ ಸಾರ್ವಜನಿಕ ವ್ಯಾಪ್ತಿಯಲ್ಲಿ ಭಕ್ತಾಧಿಗಳು ಹಾಗೂ ಸಾರ್ವಜನಿಕರು ದೇವರ ಹೆಸರಿನಲ್ಲಿ ಯಾವುದೇ ರೀತಿಯ ಪ್ರಾಣಿ ಅಥವಾ ಪಕ್ಷಿ ಬಲಿ ನೀಡುವುದನ್ನು ಸಂಪೂರ್ಣವಾಗಿ ನಿಷೇಧಿಸಿ ಆದೇಶ ಹೊರಡಿಸಿದ್ದಾರೆ. ಜಾತ್ರೆಯ ಸಂದರ್ಭದಲ್ಲಿ ಶಾಂತಿ, ಸುವ್ಯವಸ್ಥೆ ಮತ್ತು ಸಾರ್ವಜನಿಕ ಸುರಕ್ಷತೆ ಕಾಪಾಡುವ ಉದ್ದೇಶದಿಂದ ಈ ನಿರ್ಬಂಧ ವಿಧಿಸಲಾಗಿದ್ದು, ಆದೇಶ ಉಲ್ಲಂಘಿಸಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಡಳಿತ ಸ್ಪಷ್ಟಪಡಿಸಿದೆ.
ಕೋಗಿಲು ಅಕ್ರಮ ನಿರ್ಮಾಣ ತೆರವು ಪ್ರಕರಣ | ಜ.2ಕ್ಕೆ ಸಂತ್ರಸ್ತರಿಗೆ ಮನೆಗಳ ವಿತರಣೆ : ಸಚಿವ ಝಮೀರ್ ಅಹ್ಮದ್ ಖಾನ್
ಬೆಂಗಳೂರು : ಯಲಹಂಕ ಸಮೀಪದ ಕೋಗಿಲು ಬಡಾವಣೆಯಲ್ಲಿ ಅಕ್ರಮ ಮನೆಗಳ ತೆರವು ಹಿನ್ನೆಲೆಯಲ್ಲಿ ಅರ್ಹ ಸಂತ್ರಸ್ತರಿಗೆ 2026ರ ಜನವರಿ 2ಕ್ಕೆ ಮನೆ ವಿತರಣೆ ಮಾಡಲಾಗುವುದು ಎಂದು ವಸತಿ ಸಚಿವ ಬಿ.ಝಡ್. ಝಮೀರ್ ಅಹ್ಮದ್ ಖಾನ್ ಅವರು ಇಂದಿಲ್ಲಿ ಸ್ಪಷ್ಟಪಡಿಸಿದ್ದಾರೆ. ಬುಧವಾರ ಈ ಸಂಬಂಧ ಪ್ರಕಟಣೆ ನೀಡಿರುವ ಅವರು, ಕೋಗಿಲು ಬಡಾವಣೆಯಲ್ಲಿ ಅಕ್ರಮ ಮನೆಗಳ ತೆರವು ಪ್ರಕರಣದ ಹಿನ್ನೆಲೆಯಲ್ಲಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಹಾಗೂ ರಾಜೀವ್ ಗಾಂಧಿ ವಸತಿ ನಿಗಮ ವತಿಯಿಂದ ಪರ್ಯಾಯವಾಗಿ ಶಾಶ್ವತ ವಸತಿ ವ್ಯವಸ್ಥೆ ಮಾಡಿಕೊಡುವ ಬಗ್ಗೆ ದಾಖಲೆ ಪರಿಶೀಲನೆ ಮುಂದುವರಿದಿದೆ ಎಂದು ತಿಳಿಸಿದ್ದಾರೆ. ಈ ವಿಚಾರದಲ್ಲಿ ಅರ್ಹರಿಗೆ ಮಾತ್ರ ವಸತಿ ವ್ಯವಸ್ಥೆ ಮಾಡಿಕೊಡುವುದು ನಮ್ಮ ಸರಕಾರದ ಉದ್ದೇಶ. ಹೀಗಾಗಿ ಯಾವುದೇ ರೀತಿಯ ತರಾತುರಿ ಮಾಡದೆ ಸಮಗ್ರವಾಗಿ ದಾಖಲೆ ಪರಿಶೀಲನೆ ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯಯವರು ಸೂಚನೆ ನೀಡಿದ್ದು, ಕಂದಾಯ ಇಲಾಖೆ ಹಾಗೂ ಗ್ರೇಟರ್ ಬೆಂಗಳೂರು ಪ್ರಾಧಿಕಾರಿದ ಅಧಿಕಾರಿಗಳು ಆ ಕಾರ್ಯದಲ್ಲಿ ನಿರತರಾಗಿದ್ದಾರೆ ಎಂದು ಝಮೀರ್ ಅಹ್ಮದ್ ಮಾಹಿತಿ ನೀಡಿದ್ದಾರೆ. ಸಂತ್ರಸ್ತರ ದಾಖಲೆ ಪರಿಶೀಲನೆ ಕಾರ್ಯದ ಹಿನ್ನೆಲೆಯಲ್ಲಿ 2026ರ ಜನವರಿ ಒಂದರಂದು ಉದ್ದೇಶಿಸಲಾಗಿದ್ದ ಮನೆಗಳ ವಿತರಣೆಯನ್ನು ಜನವರಿ 2ಕ್ಕೆ ಮುಂದೂಡಿಕೆ ಮಾಡಲಾಗಿದೆ. ಕೋಗಿಲು ಬಡಾವಣೆಯಲ್ಲಿ ನೆಲೆಸಿದ್ದ ಕನ್ನಡಿಗರಿಗೆ ಮಾತ್ರವೇ ವಸತಿ ಸೌಲಭ್ಯ ಕಲ್ಪಿಸಲಾಗುವುದು ಎಂದು ಝಮೀರ್ ಅಹಮದ್ ಖಾನ್ ಪ್ರಕಟಣೆಯಲ್ಲಿ ವಿವರಣೆ ನೀಡಿದ್ದಾರೆ.
ಬೀದರ್ | ಹುಬ್ಬಳ್ಳಿಯ ಮರ್ಯಾದೆಗೇಡು ಹತ್ಯೆ ಖಂಡಿಸಿ ಪ್ರಗತಿಪರ ಸಂಘಟನೆಗಳ ಒಕ್ಕೂಟದಿಂದ ಪ್ರತಿಭಟನೆ
ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹ
ಚೀನಾದ ಉಕ್ಕಿನ ಮೇಲೆ ಭಾರೀ ಸುಂಕ; ಟಾಟಾ, ಜೆಎಸ್ಡಬ್ಲ್ಯೂ, ಜಿಂದಾಲ್ ಸ್ಟೀಲ್ ಷೇರುಗಳು ಭರ್ಜರಿ ಏರಿಕೆ
ಕೇಂದ್ರ ಸರ್ಕಾರವು ದೇಶೀಯ ಉಕ್ಕು ಉತ್ಪಾದಕರನ್ನು ರಕ್ಷಿಸಲು, ಆಯ್ದ ಉಕ್ಕಿನ ಆಮದಿನ ಮೇಲೆ ಮೂರು ವರ್ಷಗಳ ಕಾಲ ಶೇಕಡಾ 12ರಷ್ಟು 'ಸೇಫ್ಗಾರ್ಡ್ ಡ್ಯೂಟಿ' ವಿಧಿಸಿದೆ. ವಿಶೇಷವಾಗಿ ಚೀನಾ, ವಿಯೆಟ್ನಾಂ ಮತ್ತು ನೇಪಾಳದಿಂದ ಬರುವ ಅಗ್ಗದ ಆಮದನ್ನು ನಿಯಂತ್ರಿಸುವುದು ಇದರ ಉದ್ದೇಶವಾಗಿದೆ. ಈ ಸುದ್ದಿಯ ಪರಿಣಾಮವಾಗಿ ಬುಧವಾರ ಷೇರು ಮಾರುಕಟ್ಟೆಯಲ್ಲಿ ಟಾಟಾ ಸ್ಟೀಲ್, ಜೆಎಸ್ಡಬ್ಲ್ಯೂ ಸ್ಟೀಲ್ ಮತ್ತು ಜಿಂದಾಲ್ ಸ್ಟೀಲ್ ಷೇರುಗಳು ಶೇ. 2-5ರಷ್ಟು ಭಾರೀ ಏರಿಕೆ ಕಂಡಿವೆ.
ಕೋವಿಡ್ ವೈದ್ಯಕೀಯ ಉಪಕರಣಗಳ ಖರೀದಿಯಲ್ಲಿ ಅವ್ಯವಹಾರ; ಸರಕಾರಕ್ಕೆ ಅಂತಿಮ ವರದಿ ಸಲ್ಲಿಕೆ
ಬೆಂಗಳೂರು : ಕೋವಿಡ್ ಅವಧಿಯಲ್ಲಿ ಸಂಭವಿಸಿದ ಸಾವುಗಳು ಮತ್ತು ವೈದ್ಯಕೀಯ ಉಪಕರಣಗಳ ಖರೀದಿಯಲ್ಲಿನ ಅವ್ಯವಹಾರದ ಬಗ್ಗೆ ತನಿಖೆ ನಡೆಸಿರುವ ನ್ಯಾಯಾಧೀಶ ಮೈಕೇಲ್ ಡಿ ಕುನ್ಹಾ ಅವರು ಇಂದು ಅಂತಿಮ ವರದಿಯನ್ನು ಸರಕಾರಕ್ಕೆ ಸಲ್ಲಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಮ್ಮುಖದಲ್ಲಿ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರು ವರದಿ ಸ್ವೀಕರಿಸಿದರು.
ಜ.2ರಂದು ಯುನಿವೆಫ್ನಿಂದ ‘ಅರಿಯಿರಿ ಮನುಕುಲದ ಪ್ರವಾದಿಯನ್ನು’ ಅಭಿಯಾನ ಸಮಾರೋಪ
ಮಂಗಳೂರು, ಡಿ.31: ಯುನಿವೆಫ್ ಕರ್ನಾಟಕದಿಂದ ಸೆ. 19ರಿಂದ ಆರಂಭಿಸಲಾದ ‘ಅರಿಯಿರಿ ಮನುಕುಲದ ಪ್ರವಾದಿಯನ್ನು’ ಅಭಿಯಾನ ಜ. 2ರಂದು ನಗರದ ಪುರಭವನದಲ್ಲಿ ಸಮಾರೋಪಗೊಳ್ಳಲಿದೆ. ನಗರದ ಪ್ರೆಸ್ಕ್ಲಬ್ನಲ್ಲಿ ಬುಧವಾರ ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದ ಅಭಿಯಾದ ಸಂಚಾಲಕ ಯು.ಕೆ. ಖಾಲಿದ್, ಸಂಜೆ 6.45ಕ್ಕೆ ಕಾರ್ಯಕ್ರಮ ನಡೆಯಲಿದೆ ಎಂದರು. ಶೋಷಿತ ಸಮಾಜ ಹಾಗೂ ಮಾನವ ಘನತೆ ಮತ್ತು ಪ್ರವಾದಿ ಮುಹಮ್ಮದ್ ಎಂಬ ಕೇಂದ್ರೀಯ ವಿಷಯದಲ್ಲಿ ನಡೆಯಲಿರುವ ಸಮಾರಂಭದಲ್ಲಿ ಚಿಕ್ಕಮಗಳೂರಿನ ವಿಶ್ವಧರ್ಮ ಪೀಠ ಜಯಬಸವಾನಂದ ತಪೋವನದ ಡಾ. ಜಯಬಸವಾನಂದ ಸ್ವಾಮೀಜಿ, ಸಿ.ಆರ್. ಐ. ಅಧ್ಯಕ್ಷ ಹಾಗೂ ಪ್ಯಾರಿಷ್ ಧರ್ಮಗುರು ರೆ. ಡಾ.ಡೊಮಿನಿಕ್ ವಾಸ್, ಮಾಜಿ ಸಚಿವ ಬಿ. ರಮಾನಾಥ ರೈ, ಯುನಿವೆಫ್ ಕರ್ನಾಟಕದ ಅಧ್ಯಕ್ಷ ರಫೀಉದ್ದೀನ್ ಕುದ್ರೋಳಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಅಧ್ಯಕ್ಷತೆಯನ್ನು ವಾರ್ತಾಭಾರತಿ ಪತ್ರಿಕೆಯ ಪ್ರಧಾನ ಸಂಪಾದಕ ಅಬ್ದುಸ್ಸಲಾಂ ಪುತ್ತಿಗೆ ವಹಿಸಲಿದ್ದಾರೆ. ಸಮಾರಂಭದಲ್ಲಿ ಜೆಪ್ಪು ಸದ್ಭಾವನಾ ವೇದಿಕೆಯ ಅಧ್ಯಕ್ಷ ಹಾಗೂ ಯೋಗ ಗುರು ದಿವಾನ್ ಕೇಶವಭಟ್, ಎಸ್ಡಿಪಿಐ ಮಂಗಳೂರು ಗ್ರಾಮಾಂತರ ಜಿಲ್ಲಾ ಉಪಾಧ್ಯಕ್ಷ ಇನಾಸ್ ರಾಡ್ರಿಗಸ್, ರಾಜ್ಯಸಭಾ ಮಾಜಿ ಸದಸ್ಯ ಬಿ. ಇಬ್ರಾಹೀಂ ಮೊದಲಾದವರು ಭಾಗವಹಿಸಲಿದ್ದಾರೆ ಎಂದು ಅವರು ಹೇಳಿದರು. ಅಭಿಯಾನದ ಅಂಗವಾಗಿ ದ.ಕ. ಜಿಲ್ಲೆಯಲ್ಲಿ 14 ಕಾರ್ಯಕ್ರಮ ನಡೆಸಲಾಗಿದೆ. 20 ವರ್ಷಗಳಿಂದ ನಿರಂತರವಾಗಿ ಈ ಅಭಿಯಾನವನ್ನು ಯುನಿವೆಫ್ನಿಂದ ಸಂಘಟಿಸಲಾಗುತ್ತಿದೆ ಎಂದು ಯು.ಕೆ. ಖಾಲಿದ್ ತಿಳಿಸಿದರು. ಗೋಷ್ಟಿಯಲ್ಲಿ ಅಭಿಯಾನದ ಸಹ ಸಂಚಾಲಕರಾದ ಮುಹಮ್ಮದ್ ಆಸಿಫ್, ಉಬೈದುಲ್ಲಾ ಬಂಟ್ವಾಳ, ಸದಸ್ಯರಾದ ಅಬ್ದುಲ್ ರಶೀದ್, ಸಯೀದ್ ಅಹ್ಮದ್, ಶೇಖ್ ಅಹ್ಮದ್ ಉಪಸ್ಥಿತರಿದ್ದರು.
ಯಲಬುರ್ಗಾ | ಗ್ರಾಹಕರಿಗೆ ಅನ್ಯಾಯವಾದರೆ ಅಂಜದೆ ದೂರು ನೀಡಿ: ಸೌಭಾಗ್ಯಲಕ್ಷ್ಮೀ
ಯಲಬುರ್ಗಾ:ಯಾವುದೇ ತಯಾರಕರು ಅಥವಾ ಮಾರಾಟಗಾರರಿಂದ ಗ್ರಾಹಕರಿಗೆ ಅನ್ಯಾಯವಾದಲ್ಲಿ ಯಾರಿಗೂ ಅಂಜದೇ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕಿಗೆ ದೂರು ದಾಖಲಿಸಬೇಕು ಎಂದು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷೆ ಜಿ.ಇ.ಸೌಭಾಗ್ಯಲಕ್ಷ್ಮೀ ಹೇಳಿದರು. ಪಟ್ಟಣದ ಕಂದಾಯ ಭವನದಲ್ಲಿ ಬುಧವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಆಹಾರ–ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ, ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಸೇರಿದಂತೆ ವಿವಿಧ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಗ್ರಾಹಕರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಖರೀದಿಸುವ ವಸ್ತುವಿನ ಬೆಲೆ ಕಡಿಮೆಯಿದ್ದರೂ ಅದರ ಗುಣಮಟ್ಟ ಸರಿಯಾಗಿರದಿದ್ದರೆ ರಶೀದಿ ಸಮೇತ ದೂರು ದಾಖಲಿಸಬೇಕು. ಇದರಿಂದ ತಯಾರಕರು ಹಾಗೂ ಮಾರಾಟಗಾರರು ಎಚ್ಚೆತ್ತುಕೊಳ್ಳುವಂತೆ ಆಗುತ್ತದೆ. ಜೊತೆಗೆ ಮುಂದಿನ ಗ್ರಾಹಕರಿಗೆ ಆಗುವ ಅನ್ಯಾಯವನ್ನು ತಡೆಯಲು ಸಹಕಾರಿಯಾಗುತ್ತದೆ. ಅನ್ಯಾಯಕ್ಕೊಳಗಾದ ಗ್ರಾಹಕರಿಗೆ ಗ್ರಾಹಕರ ವೇದಿಕೆ ಸೂಕ್ತ ಪರಿಹಾರ ಒದಗಿಸುತ್ತದೆ ಎಂದರು. ಜಿಲ್ಲಾ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಉಪನಿರ್ದೇಶಕ ಸೋಮಶೇಖರ ಬಿರಾದರ ಮಾತನಾಡಿ, ಗ್ರಾಮೀಣ ಪ್ರದೇಶಗಳಲ್ಲಿಯೂ ಗ್ರಾಹಕ ಜಾಗೃತಿ ಮೂಡಿಸುವ ಉದ್ದೇಶದಿಂದ ತಾಲೂಕು ಮಟ್ಟದಲ್ಲಿ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ ಎಂದರು. ಕೊಪ್ಪಳದ ನ್ಯಾಯವಾದಿ ಹಾಗೂ ಹೋರಾಟಗಾರ್ತಿ ಸಾವಿತ್ರಿ ಮುಜಮದಾರ ವಿಶೇಷ ಉಪನ್ಯಾಸ ನೀಡಿ, ವಸ್ತು ಖರೀದಿಯಲ್ಲಿ ಮಹಿಳೆಯರು ಹೆಚ್ಚಾಗಿ ಮೋಸಕ್ಕೆ ಒಳಗಾಗುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು. ಜಾಹೀರಾತುಗಳಿಗೆ ಮರುಳಾಗದೇ ಗುಣಮಟ್ಟದ ವಸ್ತುಗಳಿಗೆ ಆದ್ಯತೆ ನೀಡಬೇಕು. ಇತ್ತೀಚೆಗೆ ಸೈಬರ್ ಹಾಗೂ ಡಿಜಿಟಲ್ ವಂಚನೆಗಳು ಹೆಚ್ಚುತ್ತಿದ್ದು, ಸಾವಿರಾರು ಕೋಟಿ ರೂ. ಮೌಲ್ಯದ ವಂಚನೆ ನಡೆದಿದೆ ಎಂದು ವಿಷಾದಿಸಿದರು. ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಸದಸ್ಯ ರಾಜು ಮೇತ್ರಿ, ತಹಶೀಲ್ದಾರ್ ಪ್ರಕಾಶ ನಾಶಿ, ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ನೀಲಗಂಗಮ್ಮ ಮಾತನಾಡಿದರು. ಕಾರ್ಯಕ್ರಮದಲ್ಲಿ ತಾಲೂಕಿನ ನ್ಯಾಯಬೆಲೆ ಅಂಗಡಿ ಮಾಲಕರು, ಆಸಕ್ತ ಗ್ರಾಹಕರು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು. ಆಹಾರ ಇಲಾಖೆಯ ಮಲ್ಲಿಕಾರ್ಜುನ ಪ್ರಾರ್ಥಿಸಿದರು. ಸಹಾಯಕ ನಿರ್ದೇಶಕ ಕೆ.ಆರ್.ದೇವರಾಜು ಸ್ವಾಗತಿಸಿದರು. ಶಿವಮೂರ್ತಿ ಇಟಗಿ ಭಾವಗೀತೆ ಹಾಡಿದರು. ಸರ್ಕಾರಿ ಅಪರ ವಕೀಲ ಮಲ್ಲನಗೌಡ ಪಾಟೀಲ ನಿರೂಪಿಸಿ ವಂದಿಸಿದರು.
ಹೊಸ ವರ್ಷಾಚರಣೆ ಕ್ಯಾನ್ಸಲ್, ಯಾವ ಯಾವ ನಗರಗಳಲ್ಲಿ ಮಾಹಿತಿ ತಿಳಿಯಿರಿ... Happy New Year
ಹೊಸ ವರ್ಷ ಬಂದೇ ಬಿಟ್ಟಿದೆ, ಕೆಲವೇ ಗಂಟೆಗಳಲ್ಲಿ ನಾವೆಲ್ಲಾ 2025 ದಾಟಿ 2026ಕ್ಕೆ ಭರ್ಜರಿ ಎಂಟ್ರಿ ಕೊಡುತ್ತಿದ್ದೇವೆ. ಎಲ್ಲೆಲ್ಲೂ ಹೊಸ ವರ್ಷದ ಸಂಭ್ರಮ ಕಳೆಗಟ್ಟಿದ್ದು, ಸೆಲೆಬ್ರೇಷನ್ ಮಾಡಿ ಹೊಸ ವರ್ಷ ಬರಮಾಡಿಕೊಳ್ಳಲು ನೂರಾರು ಕೋಟಿ ಜನರು ಜಗತ್ತಿನಾದ್ಯಂತ ಕಾಯುತ್ತಿದ್ದಾರೆ. ಸಂಜೆ ಶುರುವಾಗುವ ಸಂಭ್ರಮ ಬೆಳಗ್ಗೆ ತನಕವೂ ಮುಂದುವರಿಯಲಿದೆ, ಆದರೆ ಇಷ್ಟೆಲ್ಲಾ ಖುಷಿ ಇರುವಾಗಲೇ ಕೆಲವು ಕಡೆ ಆತಂಕ
ಕುಕನೂರು | ಗ್ರಾಮದ ಅಭಿವೃದ್ಧಿಗೆ ಅಧಿಕಾರಿಗಳ ನಿರ್ಲಕ್ಷ್ಯ : ನಾಗರಾಜ್ ವೆಂಕಟಾಪುರ ಅಸಮಾಧಾನ
ಕುಕನೂರು : ಗ್ರಾಮದ ಸರ್ವಾಂಗಿಣ ಅಭಿವೃದ್ಧಿಗೆ ಸಂಬಂಧಿಸಿದಂತೆ ಅಧಿಕಾರಿಗಳು ಹಾಗೂ ಕೆಲ ಗ್ರಾಮ ಪಂಚಾಯತ್ ಸದಸ್ಯರು ಸಮರ್ಪಕವಾಗಿ ಸ್ಪಂದಿಸುತ್ತಿಲ್ಲ ಎಂದು ಬನ್ನಿಕೊಪ್ಪ ಗ್ರಾಮ ಪಂಚಾಯತ್ ಅಧ್ಯಕ್ಷ ನಾಗರಾಜ್ ವೆಂಕಟಾಪುರ ಅವರು ಅಸಮಾಧಾನ ವ್ಯಕ್ತಪಡಿಸಿದರು. ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಅಗತ್ಯವಿರುವ ಅನುದಾನಗಳು ಸಮಯಕ್ಕೆ ಸರಿಯಾಗಿ ಲಭ್ಯವಾಗುತ್ತಿಲ್ಲ. ಪರಿಣಾಮವಾಗಿ ಅನೇಕ ಅಭಿವೃದ್ಧಿ ಕಾಮಗಾರಿಗಳು ಸ್ಥಗಿತಗೊಂಡಿದ್ದು, ವಸತಿ ಯೋಜನೆಗಳ ಜಾರಿಯೂ ಸಮರ್ಪಕವಾಗಿ ನಡೆಯುತ್ತಿಲ್ಲ. ಜನರ ವಿಶ್ವಾಸದ ಮೇಲೆ ಆಯ್ಕೆಯಾದರೂ ನೀಡಿದ ಭರವಸೆಗಳನ್ನು ಈಡೇರಿಸಲು ಸಾಧ್ಯವಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಬನ್ನಿಕೊಪ್ಪ ಗ್ರಾಮ ಪಂಚಾಯತ್ ವ್ಯಾಪ್ತಿಯ 144 ನಿವೇಶನಗಳಲ್ಲಿ ಈಗಾಗಲೇ 122 ನಿವೇಶನಗಳ ಹಕ್ಕುಪತ್ರಗಳನ್ನು ವಿತರಿಸಲಾಗಿದೆ. ಆದರೆ ಪಂಚಾಯತ್ ಅಧಿಕಾರಿಗಳಿಂದ ನಿರೀಕ್ಷಿತ ಸಹಕಾರ ದೊರೆಯುತ್ತಿಲ್ಲ. ಈ ಕುರಿತು ಶಾಸಕರು, ಸಚಿವರು ಹಾಗೂ ಮೇಲಾಧಿಕಾರಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಸ್ಪಂದನೆ ಸಿಗುತ್ತಿಲ್ಲ ಎಂದು ಆರೋಪಿಸಿದರು. ರಾಜ್ಯ ಸರ್ಕಾರದ ಡಿಜಿಟಲೀಕರಣ ಯೋಜನೆಯಡಿ ಬನ್ನಿಕೊಪ್ಪ ಗ್ರಾ.ಪಂ. ಗ್ರಂಥಾಲಯಕ್ಕೆ ನೀಡಬೇಕಾದ 56 ಇಂಚಿನ ಆಂಡ್ರಾಯ್ಡ್ ಎಲ್ಇಡಿ ಟಿವಿಯನ್ನು ತಾಲೂಕು ಪಂಚಾಯತ್ ಕಚೇರಿ ಸ್ವೀಕರಿಸಿದ್ದರೂ, ಇದುವರೆಗೆ ಗ್ರಂಥಾಲಯಕ್ಕೆ ಒದಗಿಸಿಲ್ಲ. ಈ ವಿಷಯವಾಗಿ ಪುನಃಪುನಃ ಮನವಿ ಮಾಡಿದರೂ ಅಧಿಕಾರಿಗಳ ಜಾಣ ಕುರುಡುತನದಿಂದ ಅನುಮಾನಗಳು ಮೂಡುತ್ತಿವೆ. ಈ ಕುರಿತು ಮೇಲಾಧಿಕಾರಿಗಳು ಸ್ಪಷ್ಟನೆ ನೀಡಿ ಸೂಕ್ತ ತನಿಖೆ ನಡೆಸಬೇಕು ಎಂದು ಅವರು ಆಗ್ರಹಿಸಿದರು. ಇದೇ ಸಂದರ್ಭದಲ್ಲಿ, ಬನ್ನಿಕೊಪ್ಪ ಗ್ರಾ.ಪಂ. ಕಚೇರಿಯಲ್ಲಿ ಸೇವೆ ಸಲ್ಲಿಸುತ್ತಿರುವ ಪಿಡಿಒ ದೀರ್ಘಕಾಲದಿಂದ ಕರ್ತವ್ಯಕ್ಕೆ ಗೈರಾಗಿರುವುದರಿಂದ ಪಂಚಾಯತ್ ವ್ಯಾಪ್ತಿಯ ಅಭಿವೃದ್ಧಿ ಕಾರ್ಯಗಳು ಕುಂಠಿತಗೊಳ್ಳುತ್ತಿವೆ. ಸಾರ್ವಜನಿಕರಿಗೆ ದೊರೆಯಬೇಕಾದ ಮೂಲಭೂತ ಸೌಲಭ್ಯಗಳು ವಿಳಂಬವಾಗುತ್ತಿದ್ದು, ಈ ವಿಷಯದಲ್ಲಿ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಮೌನವಹಿಸಿರುವುದು ಸರಿಯಲ್ಲ ಎಂದರು. ಬೂದು ನೀರಿನ ನಿರ್ವಹಣಾ ಘಟಕಕ್ಕೆ 2 ಕೋಟಿ 13 ಲಕ್ಷ 53 ಸಾವಿರ ರೂ. ಮೊತ್ತದ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದ್ದು, ಅನುದಾನಕ್ಕೂ ಅನುಮೋದನೆ ದೊರೆತಿದ್ದರೂ ಪ್ರಕ್ರಿಯಾತ್ಮಕ ಕಾರಣಗಳಿಂದ ಕಾಮಗಾರಿಗೆ ಇನ್ನೂ ಅಂತಿಮ ಅನುಮೋದನೆ ಸಿಕ್ಕಿಲ್ಲ. ಅಲ್ಲದೆ ಗ್ರಾಮದಲ್ಲಿ ಚರಂಡಿ, ವಿದ್ಯುತ್ ಕಂಬ, ಕುಡಿಯುವ ನೀರಿನ ಘಟಕ ಸೇರಿದಂತೆ ಹಲವು ಮೂಲಭೂತ ಸೌಕರ್ಯಗಳ ಕಾಮಗಾರಿಗಳು ಬಾಕಿಯಿವೆ ಎಂದು ಅವರು ವಿವರಿಸಿದರು. ಪತ್ರಿಕಾಗೋಷ್ಠಿಯಲ್ಲಿ ಮರಿಗೌಡ ತೆಗ್ಗಿನಮಠ, ಸಿದ್ದಪ್ಪ ಮಾಳಿಕೊಪ್ಪ, ಶಿವಪ್ಪ ಚವಡಿ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಪಾಕಿಸ್ತಾನ ಕ್ರಿಕೆಟ್ ಮಂಡಳಿಗೆ ಆಘಾತ! ಶಾಹೀನ್ ಅಫ್ರಿದಿಯನ್ನು ಬಿಗ್ ಬ್ಯಾಷ್ ಲೀಗ್ ಗೆ ಕಳಿಸಿದ್ದೇ ತಪ್ಪಾಯ್ತಾ?
Shaheen Shah Afridi Injury- ಪಾಕಿಸ್ತಾನದ ಪ್ರಧಾನ ವೇಗದ ಬೌಲರ್ ಶಾಹೀನ್ ಶಾ ಅಫ್ರಿದಿ ಅವರು ಬಿಗ್ ಬ್ಯಾಷ್ ಲೀಗ್ನಲ್ಲಿ ಮೊಣಕಾಲಿಗೆ ಗಾಯ ಮಾಡಿಕೊಂಡಿದ್ದಾರೆ. ಪ್ರಸ್ತುತ ಅವರು ಪಾಕಿಸ್ತಾನಕ್ಕೆ ಹಿಂದುರುಗಿದ್ದು ಲಾಹೋರ್ ನ ಹೈ ಪರ್ಫಾರ್ಮೆನ್ಸ್ ಸೆಂಟರ್ ನಲ್ಲಿ ಚಿಕಿತ್ಸೆ ಮತ್ತು ಪುನರ್ವಸತಿ ಪಡೆಯುತ್ತಿದ್ದು ವೈದ್ಯರು ಸಂಪೂರ್ಣ ವಿಶ್ರಾಂತಿ ಸೂಚಿಸಿದ್ದಾರೆ. ಹೀಗಾಗಿ ಅವರು 2026ರ ಟಿ20 ವಿಶ್ವಕಪ್ಗೆ ಅಲಭ್ಯರಾಗುವ ಸಾಧ್ಯತೆ ಇದೆ. ಇದು ಪ್ರಸ್ತುತ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಚಿಂತೆಗೆ ಕಾರಣವಾಗಿದೆ.
ಸಿಎಂ ಕುರ್ಚಿ ಉಳಿಸಿಕೊಳ್ಳುವ ಯತ್ನ ಮತ್ತು ಪಡೆಯುವ ಯತ್ನ ಈ ರಾಜ್ಯಕ್ಕೆ, ಬಡವರಿಗೆ ಅನ್ಯಾಯ ಮಾಡುತ್ತಿದೆ ಎಂದು ಆಕ್ಷೇಪಿಸಿದರು. 2013-18ರ ಅವಧಿಯಲ್ಲಿ 14.5 ಲಕ್ಷ ಮನೆಗಳನ್ನು ನಿರ್ಮಿಸಿದೆ. ಬಳಿಕ ಬಿಜೆಪಿ ಸರಕಾರ ಇದ್ದಾಗ ಕೇವಲ 5.19 ಲಕ್ಷ ಮನೆಗಳನ್ನು ಮಾತ್ರ ನಿರ್ಮಿಸಿದೆ. ಮಾರ್ಚ್ 2023ಕ್ಕೆ ಬಾಕಿ ಉಳಿದ 12 ಲಕ್ಷ ಮನೆಗಳನ್ನು ನಿರ್ಮಿಸುವ ಗುರಿಯನ್ನು ಪೂರ್ಣಗೊಳಿಸಲು 17,815 ಕೋಟಿ ರೂ. ಬೇಕಿದೆ. 3 ಲಕ್ಷ ಮನೆಗಳನ್ನು ಪ್ರಸಕ್ತ ವರ್ಷದಲ್ಲಿ ಪೂರ್ಣಗೊಳಿಸಿ ಫಲಾನುಭವಿಗಳಿಗೆ ಹಸ್ತಾಂತರಿಸಲಾಗುವುದು. ಇದಕ್ಕೆ 2450 ಕೋಟಿ ರೂ. ಮೀಸಲಿಡುವುದಾಗಿ ಮುಖ್ಯಮಂತ್ರಿಗಳು 2023ರಲ್ಲಿ ಬಜೆಟ್ ಭಾಷಣದಲ್ಲಿ ಹೇಳಿದ್ದರು ಎಂದು ಗಮನ ಸೆಳೆದರು. ಸರಕಾರ ಬಂದು ಎರಡೂವರೆ ವರ್ಷ ಆಯಿತಲ್ಲವೇ? ಮುಖ್ಯಮಂತ್ರಿಗಳೇ, ಈ ಅವಧಿಯಲ್ಲಿ ಬಡವರಿಗೆ ಎಷ್ಟು ಮನೆ ಕಟ್ಟಿಸಿ ಕೊಟ್ಟಿದ್ದೀರಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಪ್ರಶ್ನಿಸಿದರು.
ಕೇರಳದಲ್ಲಿ ಕರ್ನಾಟಕವು ಸಮ ಸಮಾಜ ನಿರ್ಮಾಣದತ್ತ ಮುಂದಡಿಯಿಟ್ಟಿದೆ ಎಂದ ಸಿದ್ದರಾಮಯ್ಯ
ತಿರುವನಂತಪುರಂ: ಕರ್ನಾಟಕ ಹಾಗೂ ಕೇರಳದ ರಾಜಕಾರಣಿಗಳ ನಡುವೆ ಕಳೆದ ಕೆಲವು ದಿನಗಳಿಂದ ರಾಜಕೀಯ ಕೆಸರೆರಚಾಟ ನಡೆದಿದೆ. ಬುಧವಾರ ಕೇರಳದ ತಿರುವನಂತಪುರನ ವರ್ಕಳದಲ್ಲಿ ಶಿವಗಿರಿ ಮಠದ ಕಾರ್ಯಕ್ರಮದಲ್ಲಿ ಭಾಗವಹಿಸಿರುವ ಸಿದ್ದರಾಯಮ್ಯ ಅವರು, ಕೇರಳದ ನೆಲದಲ್ಲಿ ನಿಂತು ಕರ್ನಾಟಕವು ಸಮ ಸಮಾಜ ನಿರ್ಮಾಣದತ್ತ ಮುಂದಡಿಯಿಟ್ಟಿದೆ ಎಂದಿದ್ದಾರೆ. ಬೆಂಗಳೂರಿನ ಕೋಗಿಲು ಬಡಾವಣೆಯಲ್ಲಿ ಅಕ್ರಮ ಮನೆಗಳು, ಶೆಡ್ಗಳ ತೆರವು ವಿಚಾರವಾಗಿ ಕರ್ನಾಟಕ ಹಾಗೂ
2026 ರಲ್ಲಿ ಭಾರತದ ರಾಜಕೀಯದಲ್ಲಿ ಮಹತ್ವದ ಬದಲಾವಣೆಗಳು ಕಂಡುಬರಲಿವೆ. ತಮಿಳುನಾಡು, ಪಶ್ಚಿಮ ಬಂಗಾಳ, ಕೇರಳ, ಅಸ್ಸಾಂ ಮತ್ತು ಪುದುಚೇರಿಯಲ್ಲಿ ವಿಧಾನಸಭಾ ಚುನಾವಣೆಗಳು ನಡೆಯಲಿವೆ. ಎಸ್ಐಆರ್ ವಿವಾದ ತಾರಕಕ್ಕೇರಲಿದ್ದು, ರಾಜ್ಯಸಭಾ ಚುನಾವಣೆಗಳು ಮತ್ತು ಬ್ರಿಕ್ಸ್ ಅಧ್ಯಕ್ಷ ಸ್ಥಾನದಂತಹ ಪ್ರಮುಖ ಘಟನೆಗಳು ಸಹ ನಡೆಯಲಿವೆ. ಈ ಚುನಾವಣೆಗಳು ದೇಶದ ರಾಜಕೀಯ ಚಿತ್ರಣವನ್ನು ಬದಲಾಯಿಸುವ ಸಾಧ್ಯತೆಯಿದೆ.
ಕಲಬುರಗಿ | ಮಾಜಿ ಸಚಿವ ದಿ. ಖಮರ್ ಉಲ್ ಇಸ್ಲಾಂ ಅವರ ಸಹೋದರಿ ಸಬಿಯಾ ಆಪಾ ನಿಧನ
ಕಲಬುರಗಿ: ಮಾಜಿ ಸಚಿವ ದಿ. ಖಮರ್ ಉಲ್ ಇಸ್ಲಾಂ ಅವರ ಹಿರಿಯ ಸಹೋದರಿ ಸಬಿಯಾ ಆಪಾ (85) ಅವರು ವಯೋಸಹಜ ಅನಾರೋಗ್ಯದಿಂದ ಬುಧವಾರ ಬೆಳಗ್ಗೆ ನಿಧನರಾಗಿದ್ದಾರೆ. ಕಲಬುರಗಿ ಉತ್ತರ ಮತಕ್ಷೇತ್ರದ ಶಾಸಕಿ ಕನೀಝ್ ಫಾತಿಮಾ ಅವರ ನಾದಿನಿಯಾಗಿದ್ದ ಸಬಿಯಾ ಆಪಾ ಅವರು ಕಲಬುರಗಿಯ ಎಲ್ಲಾ ಸಮುದಾಯದ ಜನರೊಂದಿಗೆ ಬಾಂಧವ್ಯ ಹೊಂದಿದ್ದರು. ಕಲಬುರಗಿಯ ಬಹುತೇಕರು ಇವರನ್ನು ಸಬಿಯಾ ಆಪಾ ಎಂದು ಪ್ರೀತಿಯಿಂದ ಕರೆಯುತ್ತಿದ್ದರು. ಇಬ್ಬರು ಗಂಡು ಮತ್ತು 4 ಜನ ಹೆಣ್ಣು ಮಕ್ಕಳು ಸೇರಿದಂತೆ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ. ಗುರುವಾರ ಸ್ಟೇಷನ್ ಬಜಾರ್ ಮಸೀದಿಯಲ್ಲಿ ನಮಾಝ್ ಎ ಜನಾಝಾದ ನಂತರ ಜಿಲ್ಲಾ ನ್ಯಾಯಾಲಯದ ಹಿಂಭಾಗದಲ್ಲಿ ಇರುವ ಕಲಂದರ್ ಖಾನ್ ಕಬ್ರಿಸ್ತಾನ್ ನಲ್ಲಿ ಅಂತಿಮ ಸಂಸ್ಕಾರ ನೇರವೆರಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.
ಸಿರುಗುಪ್ಪ | ಕೆಂಚನಗುಡ್ಡ ಕ್ಲಸ್ಟರ್ ಮಟ್ಟದ ಕಲಿಕಾ ಹಬ್ಬ ಕಾರ್ಯಕ್ರಮ
ಸಿರುಗುಪ್ಪ: ತಾಲೂಕಿನ ಕೆ ತಾಂಡ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಮಂಗಳವಾರ ಕೆಂಚನಗುಡ್ಡ ಕ್ಲಸ್ಟರ್ ಮಟ್ಟದ ಕಲಿಕಾ ಹಬ್ಬ ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೋಜಿಸಲಾಯಿತು. ಕಾರ್ಯಕ್ರಮದಲ್ಲಿ ಮಕ್ಕಳಿಗಾಗಿ ಮೆಮೊರಿ ಪರೀಕ್ಷೆ, ರಸಪ್ರಶ್ನೆ, ಪೋಷಕರೊಂದಿಗೆ ಆಟ, ಆರೋಗ್ಯ ಮತ್ತು ಪೌಷ್ಟಿಕಾಂಶ ಸ್ಪರ್ಧೆ, ಸಂತೋಷದಾಯಕ ಗಣಿತ, ಕಥೆ ಹೇಳುವ ಸ್ಪರ್ಧೆ ಸೇರಿದಂತೆ ವಿವಿಧ ಚಟುವಟಿಕೆಗಳನ್ನು ಆಯೋಜಿಸಲಾಗಿತ್ತು. ಮಕ್ಕಳ ಕಲಿಕಾ ಸಾಮರ್ಥ್ಯ ಹೆಚ್ಚಿಸುವುದು ಹಾಗೂ ಕಲಿಕೆಯನ್ನು ಆನಂದದಾಯಕವಾಗಿಸುವ ಉದ್ದೇಶದಿಂದ ಈ ಸ್ಪರ್ಧೆಗಳು ನಡೆಯಿತು. ಶಿಕ್ಷಣ ಸಂಯೋಜಕರಾದ ಜ್ಞಾನೇಶ್ವರ ಹಾಗೂ ಬಿಆರ್ಪಿ ಗಜೇಂದ್ರ ಅವರು ಕಾರ್ಯಕ್ರಮದ ರೂಪರೇಖೆಯನ್ನು ಸಿದ್ಧಪಡಿಸಿದರು. ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿಗಳಾದ ಎಂ.ಟಿ. ಶಾಂತ, ಶಾಲೆಯ ಮುಖ್ಯ ಶಿಕ್ಷಕಿ ಕೆ.ವಿ. ನಾಗರತ್ನಮ್ಮ, ಶಾಲಾ ಎಸ್ಡಿಎಂಸಿ ಅಧ್ಯಕ್ಷ ನಾಕಾ ಹಾಗೂ ಸಮಿತಿ ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ರಾಜ್ಯ ಎನ್ಪಿಎಫ್ಎಲ್ಎನ್ಎಸ್ ಘಟಕದ ಉಪಾಧ್ಯಕ್ಷರಾದ ಎರಪ್ಪಗೌಡ ಅವರು ಕಾರ್ಯಕ್ರಮದ ನಿರೂಪಣೆ ಮಾಡಿದರು. ಪ್ರಾಸ್ತಾವಿಕವಾಗಿ ಮಾತನಾಡಿದ ಎಂ.ಟಿ.ಶಾಂತ, ಮಕ್ಕಳಲ್ಲಿ ಕಲಿಕಾ ನ್ಯೂನ್ಯತೆ ಕಡಿಮೆಯಾಗಬೇಕು ಎಂಬ ಉದ್ದೇಶದಿಂದ ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು. ಉದ್ಘಾಟನಾ ನುಡಿಗಳನ್ನು ಜ್ಞಾನೇಶ್ವರ ಹಾಗೂ ಗಜೇಂದ್ರ ಅವರು ನೀಡಿದರು. ಕಾರ್ಯಕ್ರಮದಲ್ಲಿ ಶಿಕ್ಷಕರ ಸಂಘ ಬಳ್ಳಾರಿಯ ಸಂಘಟನಾ ಕಾರ್ಯದರ್ಶಿ ಗೀತಾ, ಶಿಕ್ಷಕರ ಸಂಘದ ನೂತನ ಕಾರ್ಯದರ್ಶಿ ಶರಣಮ್ಮ, ಹಿರಿಯ ಬಡ್ತಿ ಮುಖ್ಯಗುರುಗಳಾದ ಮಹದೇವಪ್ಪ, ರವಿಕುಮಾರ್, ಶಿವಾಜಿ ನಾಯಕ, ಲೋಕೇಶ್ ಸೇರಿದಂತೆ ಶಾಲಾ ಸಿಬ್ಬಂದಿ ವರ್ಗ ಹಾಜರಿದ್ದರು.
ರಾಜ್ಯದಲ್ಲಿ ಕನ್ನಡಿಗರಿಗೆ ಟೋಪಿ, ಮಿನಿ ಬಾಂಗ್ಲಾದೇಶಗಳ ನಿರ್ಮಾಣ: ಆರ್.ಅಶೋಕ್ ಗಂಭೀರ ಆರೋಪ
ರಾಜ್ಯದ 38 ಲಕ್ಷ ಜನರು ಅರ್ಜಿ ಸಲ್ಲಿಸಿ ಮನೆಗೆ ಕಾಯುತ್ತಿದ್ದಾರೆ. ಬೆಂಗಳೂರಿನಲ್ಲಿ 40 ಕಡೆ ಅಕ್ರಮ ಮನೆಗಳ ತೆರವು ಮಾಡಿದ್ದು, ಒಬ್ಬರಿಗೂ ಮನೆ ಕೊಟ್ಟಿಲ್ಲ. ಬಡವರಾದ ಅವರಿಗೆಲ್ಲ ಮನೆ ಕೊಡದೇ ಇವರಿಗೇನು ವಿಶೇಷ? ಕಾರಣ ಹೇಳಿ ಎಂದು ಒತ್ತಾಯಿಸಿದರು. ಅವರಿಗೂ ಮನೆ ಕೊಡಿ ಎಂದರು. ಮೊದಲು ಇದನ್ನು ಎನ್ಐಎಗೆ ಕೊಡಿ. ಅದಾಗಿ ವರದಿ ಬಂದ ಬಳಿಕ ಮುಂದುವರೆಯಿರಿ ಎಂದು ವಿಪಕ್ಷ ನಾಯಕ ಆರ್ ಅಶೋಕ್ ತಿಳಿಸಿದರು. ಹೊರರಾಜ್ಯದ ಸಂಸದರು ಬಂದು ಪರಿಶೀಲನೆ ಮಾಡಲು ಅವರು ಯಾರು? ಅವರನ್ನು ಬಂಧಿಸಬೇಕಿತ್ತು. ನಮ್ಮ ರಾಜ್ಯದ ಆಡಳಿತದಲ್ಲಿ ಮೂಗು ತೂರಿಸಲು ಕೇರಳದ ಸಚಿವರು, ಸಂಸದರು, ಶಾಸಕರಿಗೆ ಅವಕಾಶ ನೀಡಬಾರದು ಎಂದರು.
ವಿಜಯನಗರ | ಸಂಸಾರಿಕ ಕಲಹ : ಪತಿಯಿಂದ ಪತ್ನಿಯ ಹತ್ಯೆ
ವಿಜಯನಗರ : ಸಂಸಾರಿಕ ಕಲಹದಿಂದಾಗಿ ಪತಿ, ಪತ್ನಿಯನ್ನು ಮಾರಕಾಸ್ತ್ರದಿಂದ ಹತ್ಯೆ ಮಾಡಿರುವ ಘಟನೆ ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ವೆಂಕಟಾಪುರ ಕ್ಯಾಂಪ್ ಬಳಿ ನಡೆದಿದೆ. ಕೊಲೆಯಾದ ಮಹಿಳೆಯನ್ನು ಜಾನ್ಸಿ (36) ಎಂದು ಗುರುತಿಸಲಾಗಿದ್ದು, ಆರೋಪಿ ಪತಿ ಸೆಲ್ವಕುಮಾರ್ (40) ಘಟನೆಯ ಬಳಿಕ ಪರಾರಿಯಾಗಿದ್ದಾನೆ ಎನ್ನಲಾಗಿದೆ. ಸಂಸಾರಿಕ ಕಲಹದಿಂದ ಮಾರಕಾಸ್ತ್ರದಿಂದ ಪತ್ನಿಯನ್ನು ಕೊಲೆ ಮಾಡಿರುವುದಾಗಿ ತಿಳಿದುಬಂದಿದೆ. ಘಟನಾ ಸ್ಥಳಕ್ಕೆ ವಿಜಯನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಾಹ್ನವಿ ಎಸ್. ಹಾಗೂ ಡಿವೈಎಸ್ಪಿ ಡಾ. ಮಂಜುನಾಥ್ ತಳವಾರ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂಬಂಧ ಕಮಲಾಪುರ ಗ್ರಾಮ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

20 C