ಪ್ರತಿಪಕ್ಷ ಅವಿಶ್ವಾಸ ನಿರ್ಣಯ ಮಂಡಿಸಿದರೆ ಸೋಲು ಖಚಿತ; ಬಿಜೆಪಿ ಬತ್ತಳಿಕೆಯಲ್ಲಿ ಬಾಣವೇ ಇಲ್ಲ: ಬೈರತಿ ಸುರೇಶ್ ವ್ಯಂಗ್ಯ
ಬೆಳಗಾವಿ : ಪ್ರತಿಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ಅವಿಶ್ವಾಸ ನಿರ್ಣಯ ಮಂಡಿಸಿದರೆ ಅದಕ್ಕೆ ಸೋಲಾಗುವುದು ಶತಃಸಿದ್ಧ ಎಂದು ನಗರಾಭಿವೃದ್ಧಿ ಮತ್ತು ನಗರ ಯೋಜನೆ ಸಚಿವ ಬೈರತಿ ಸುರೇಶ್ ತಿಳಿಸಿದ್ದಾರೆ. ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬೆಳಗಾವಿ ಅಧಿವೇಶನದಲ್ಲಿ ನಮ್ಮ ಸರಕಾರದ ವಿರುದ್ಧ ಹಲವಾರು ಅಸ್ತ್ರಗಳನ್ನು ಪ್ರಯೋಗಿಸಲಾಗುವುದು ಎಂದು ಪ್ರತಿ ಪಕ್ಷದ ನಾಯಕ ಆರ್.ಅಶೋಕ ಹೇಳಿದ್ದಾರೆ. ಆದರೆ, ಅವರ ಪಕ್ಷದ ಬತ್ತಳಿಕೆಯಲ್ಲಿ ಬಾಣವೇ ಇಲ್ಲ ಎಂದು ವ್ಯಂಗ್ಯವಾಡಿದರು. ಪ್ರತಿಪಕ್ಷ ಬಿಜೆಪಿಯಲ್ಲೇ ಅಶೋಕ ಬಣ, ವಿಜಯೇಂದ್ರ ಬಣ, ಕುಮಾರ್ ಬಂಗಾರಪ್ಪ ಬಣ ಮತ್ತು ರಮೇಶ್ ಜಾರಕಿಹೊಳಿ ಬಣಗಳಿವೆ. ಮೊದಲು ಆ ಬಣಗಳ ಕಿತ್ತಾಟವನ್ನು ಅಶೋಕ್ ಅವರು ಪರಿಹರಿಸಲಿ. ನಮ್ಮ ಕಾಂಗ್ರೆಸ್ ಪಕ್ಷದಲ್ಲಿ ಯಾವುದೇ ಬಣಗಳಿಲ್ಲ. ನಮ್ಮದೇನಿದ್ದರೂ ಕಾಂಗ್ರೆಸ್ ಬಣ ಎಂದು ಅವರು ಸ್ಪಷ್ಟಪಡಿಸಿದರು. ಬಿಜೆಪಿಯವರು ಜನರಲ್ಲಿ ಕೇವಲ ಮತೀಯ ಭಾವನೆಗಳನ್ನು ಕೆರಳಿಸಿ ಎತ್ತಿಕಟ್ಟುವ ಕೆಲಸ ಮಾಡುತ್ತಿದ್ದಾರೆಯೇ ಹೊರತು, ಯಾವತ್ತಾದರೂ ಅಭಿವೃದ್ಧಿ ಬಗ್ಗೆ ರಾಜಕೀಯ ಮಾಡಿಲ್ಲ. ಜನರ ಪರವಾಗಿ ಎಂದಿಗೂ ಕೆಲಸವನ್ನೂ ಮಾಡಿಲ್ಲ ಎಂದು ಸಚಿವ ಬೈರತಿ ಸುರೇಶ್ ಟೀಕಿಸಿದರು. ವಿಪಕ್ಷ ಶಾಸಕರೇ ನಮ್ಮ ಪರವಿದ್ದಾರೆ : ನಮ್ಮ ಸರಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸುವುದಾಗಿ ವಿಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಹೇಳಿಕೊಂಡಿವೆ. ಆ ನಿರ್ಣಯ ಮಂಡಿಸಲಿ. ಆ ಪಕ್ಷಗಳ ಕೆಲವು ಶಾಸಕರೇ ನಮ್ಮ ಸರಕಾದ ಪರವಾಗಿ ಮತ ಹಾಕುವ ವಿಶ್ವಾಸ ನನಗಿದೆ. ಹೀಗಾಗಿ ಅವಿಶ್ವಾಸ ನಿರ್ಣಯಕ್ಕೆ ಸೋಲು ಖಚಿತವಾಗಲಿದೆ ಎಂದರು. ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿಯಾಗಿ ಡಿ.ಕೆ.ಶಿವಕುಮಾರ್ ಅವರು ಸಮರ್ಥವಾಗಿ ಆಡಳಿತ ನಡೆಸುತ್ತಿದ್ದಾರೆ. ಯಾರು ಯಾವಾಗ, ಎಷ್ಟು ದಿನ ಮುಖ್ಯಮಂತ್ರಿಯಾಗಿರಬೇಕೆಂಬುದನ್ನು ಪಕ್ಷದ ಹೈಕಮಾಂಡ್ ನಿರ್ಧರಿಸಲಿದೆ. ಹೀಗಾಗಿ ನಾಯಕತ್ವದ ವಿಚಾರದಲ್ಲಿ ನಮ್ಮಲ್ಲಿ ಯಾವುದೇ ಗೊಂದಲವಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು.
ಬೆಟ್ಟಹಲಸೂರು- ರಾಜಾನುಕುಂಟೆ ರೈಲ್ವೆ ಮಾರ್ಗಕ್ಕೆ ‘ವಿಶೇಷ ಯೋಜನೆ’ ಸ್ಥಾನಮಾನ - ಎರಡು ಗ್ರಾಮಗಳ ಭೂಸ್ವಾಧೀನಕ್ಕೆ ಆದೇಶ
ಬೆಂಗಳೂರು ಉತ್ತರದಲ್ಲಿ ಬೆಟ್ಟಹಲಸೂರು ಮತ್ತು ರಾಜಾನುಕುಂಟೆ ನಡುವೆ 6.1 ಕಿ.ಮೀ. ಹೊಸ ರೈಲು ಮಾರ್ಗ ನಿರ್ಮಾಣವಾಗಲಿದೆ. ಕೇಂದ್ರ ರೈಲ್ವೆ ಇಲಾಖೆ ಇದನ್ನು ವಿಶೇಷ ರೈಲು ಯೋಜನೆ ಎಂದು ಘೋಷಿಸಿದೆ. ಇದರಿಂದ ಯಲಹಂಕದ ಸಂಚಾರ ದಟ್ಟಣೆ ಕಡಿಮೆಯಾಗಲಿದೆ. ಸರಕು ಸಾಗಣೆ ಮತ್ತು ಉಪನಗರ ಸೇವೆಗಳು ಸುಲಭವಾಗಲಿವೆ. ಯೋಜನೆಗೆ ಭೂಸ್ವಾಧೀನ ಪ್ರಕ್ರಿಯೆಗಳು ವೇಗ ಪಡೆದುಕೊಂಡಿವೆ. ಅಂದಾಜು ವೆಚ್ಚ 248 ಕೋಟಿ ರೂಪಾಯಿ.
ರಾಮನಗರದಲ್ಲಿ ಯುವತಿಯೊಬ್ಬಳು ಯುವಕನೊಬ್ಬನನ್ನು ಪ್ರೀತಿಸಿ ಮೋಸಹೋಗಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳಕಿಗೆ ಬಂದಿದೆ. ತುಮಕೂರಿನ ಅಭಿ ಎಂಬಾತ ಯುವತಿಯ ಖಾಸಗಿ ಫೋಟೋಗಳನ್ನು ಇಟ್ಟುಕೊಂಡು ಬ್ಲಾಕ್ಮೇಲ್ ಮಾಡಿ, ಲೈಂಗಿಕ ಕ್ರಿಯೆಗೆ ಬಳಿಸಿಕೊಂಡಿದ್ದ, ಜೊತೆಗೆ ಗರ್ಭಪಾತ ಮಾಡಿಸಿದ್ದ. ಇಂತಹ ವ್ಯಕ್ತಿಗಳನ್ನು ನಂಬಿ ಮೋಸಹೋಗಬೇಡಿ ಎಂದು ವರ್ಷಿಣಿ ಡೆತ್ನೋಟ್ನಲ್ಲಿ ಬರೆದಿಟ್ಟಿದ್ದಾರೆ. ಜೊತೆಗೆ ಆಕೆಯ ತಾಯಿ ಹಾಗೂ ಶಿಕ್ಷಕರಿಗೆ ಕ್ಷಮೆಯಾಚಿಸಿದ್ದಾರೆ ಎನ್ನಲಾಗಿದೆ.
ಮಾಜಿ ಸಚಿವ ಕೆ.ಎನ್. ರಾಜಣ್ಣ ಅವರು, ಕೆಲವರು ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ಧರಿದ್ದರೂ, ಪಕ್ಷವು ಒಬ್ಬರಿಂದ ಅಧಿಕಾರಕ್ಕೆ ಬಂದಿಲ್ಲ ಎಂದು ಡಿಸಿಎಂ ಡಿಕೆ ಶಿವಕುಮಾರ್ ಅವರಿಗೆ ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ. ಪಕ್ಷ ಅಧಿಕಾರಕ್ಕೆ ಬರಲು ಹಲವು ಜನರ ಶ್ರಮವಿದೆ ಎಂದು ಅವರು ಸ್ಪಷ್ಟಪಡಿಸಿದರು. ಅಷ್ಟೇ ಅಲ್ಲದೆ, ಕಾಂಗ್ರೆಸ್ ನಲ್ಲಿ ನಾಯಕತ್ವ ಗೊಂದಲ ವಿರುದ್ದ ಬಿಜೆಪಿ ಟೀಕೆಗಳಿಗೆ ಕೇವಲ ನಮ್ಮಲ್ಲಿ ಮಾತ್ರವಲ್ಲ ಬಿಜೆಪಿಯಲ್ಲೂ ಈ ಕೂಗು ಕೇಳಲಿ ಬಂದಿದೆ ಎಂದು ತಿರುಗೇಟು ನೀಡಿದ್ದಾರೆ.
Vande Mataram 150: ಬ್ರಿಟೀಷರ ನಿದ್ದೆಗೆಡಿಸಿದ್ದ ವಂದೇ ಮಾತರಂ ರಾಷ್ಟ್ರಕ್ಕೆ ಸ್ಪೂರ್ತಿ: ಪ್ರಧಾನಿ ಮೋದಿ
ನವದೆಹಲಿ, ಡಿಸೆಂಬರ್ 08: ಸ್ವಾತಂತ್ರ್ಯ ಚಳವಳಿಗೆ ಶಕ್ತಿ ತುಂಬಿದ್ದ 'ವಂದೇ ಮಾತರಂ' ಗೀತೆಯನ್ನು ಮಹಾತ್ಮ ಗಾಂಧೀಜಿ ಅವರು ತಮ್ಮ ಪತ್ರಿಕೆಯಲ್ಲಿ ಹೊಗಳಿದ್ದರು. ಅದರೆ ಮಾಜಿ ಪ್ರಧಾನಿ ಜವಾಹರಲಾಲ್ ನೆಹರು ಅವರು ಮುಸ್ಲಿಂ ಲೀಗ್ ವಿರುದ್ಧ ರಾಷ್ಟ್ರೀಯ ಗೀತೆಯನ್ನು ಸಮರ್ಥಿಸಿಕೊಳ್ಳಲಿಲ್ಲ. ದೇಶದ ಸ್ವಾತಂತ್ರ್ಯದ ಬಲಿದಾನ ಮಂತ್ರವಾಗಿದ್ದ ವಂದೇ ಮಾತರಂ ಅನ್ನು ಬುದ್ಧಿವಂತಿಕೆಯಿಂದ ಬಳಸಿಕೊಂಡರೆ ಅದು ಭವಿಷ್ಯಕ್ಕೆ, ಯುವ ಪೀಳಿಗೆಗೆ
2017ರ ಲೈಂಗಿಕ ದೌರ್ಜನ್ಯ ಪ್ರಕರಣದಿಂದ ಮಲಯಾಳಂ ನಟ Dileep ಖುಲಾಸೆ: ಪ್ರಕರಣದಲ್ಲಿ ನಟನ ಪಾತ್ರವೇನು?
ತಿರುವನಂತಪುರಂ: 2017ರಲ್ಲಿ ತಮ್ಮ ಸಹ ನಟಿಯೊಬ್ಬರ ಮೇಲೆ ನಡೆದಿದ್ದ ಅಪಹರಣ ಮತ್ತು ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಎಂಟನೆಯ ಆರೋಪಿಯಾಗಿದ್ದ ನಟ ದಿಲೀಪ್ ಅವರನ್ನು ಸಾಕ್ಷ್ಯಾಧಾರಗಳ ಕೊರತೆಯಿಂದ ಎರ್ನಾಕುಲಂನ ಸೆಷನ್ಸ್ ನ್ಯಾಯಾಲಯವೊಂದರಿಂದ ಖುಲಾಸೆಗೊಳಿಸಿದೆ. ಈ ಪ್ರಕರಣವು ಮಲಯಾಳಂ ಚಿತ್ರರಂಗದಲ್ಲಿ ಅಲ್ಲೋಲಕಲ್ಲೋಲವನ್ನೇ ಸೃಷ್ಟಿಸಿತ್ತು. ►ಏನಿದು ಪ್ರಕರಣ? ಫೆಬ್ರವರಿ 17, 2017ರಂದು ನಟಿಯೊಬ್ಬರು ತ್ರಿಶೂರ್ನ ತಮ್ಮ ನಿವಾಸದಿಂದ ಕೊಚ್ಚಿಗೆ ತೆರಳುವಾಗ, ಆರು ಮಂದಿ ದುಷ್ಮರ್ಮಿಗಳು ಅವರನ್ನು ಅಪಹರಿಸಿದ್ದರು. ಆ ನಟಿಯನ್ನು ದುಷ್ಕರ್ಮಿಗಳು ಕೊಚ್ಚಿಯ ಸುತ್ತ ಆಕೆಯ ಕಾರಿನಲ್ಲಿ ಸುತ್ತಾಡಿಸಿದ ಬಳಿಕ, ಆಕೆಯ ಮೇಲೆ ರೌಡಿ ಶೀಟರ್ ಪಲ್ಸರ್ ಸುನಿ ಎಂಬ ಆರೋಪಿ ಲೈಂಗಿಕ ದೌರ್ಜನ್ಯವೆಸಗಿದ್ದ. ಈ ಘಟನೆಯ ದೃಶ್ಯಾವಳಿಗಳನ್ನು ಪಲ್ಸರ್ ಸುನಿ ತನ್ನ ಮೊಬೈಲ್ನಲ್ಲೂ ಚಿತ್ರೀಕರಿಸಿಕೊಂಡಿದ್ದ. ಇದಾದ ನಂತರ, ಆರೋಪಿಗಳು ಆ ನಟಿಯನ್ನು ಚಿತ್ರ ನಿರ್ದೇಶಕರೊಬ್ಬರ ನಿವಾಸದ ಬಳಿ ಬಿಟ್ಟು ಪರಾರಿಯಾಗಿದ್ದರು. ಆ ಚಿತ್ರ ನಿರ್ದೇಶಕರ ನೆರವಿನಿಂದ ಆ ಸಂತ್ರಸ್ತ ನಟಿ ಪೊಲೀಸರನ್ನು ಸಂಪರ್ಕಿಸಿದ್ದರು. ಅದೇ ದಿನ ಈ ಸಂಬಂಧ ಪ್ರಕರಣ ಕೂಡಾ ದಾಖಲಾಗಿತ್ತು. ತನಿಖೆ ಪ್ರಾರಂಭವಾಗುತ್ತಿದ್ದಂತೆಯೇ ಪೊಲೀಸರಿಗೆ ಶರಣಾಗಿದ್ದ ಪಲ್ಸರ್ ಸುನಿ, ತಾನು ಈ ಕೃತ್ಯವನ್ನು ನಟ ದಿಲೀಪ್ ನಿರ್ದೇಶನದ ಮೇರೆಗೆ ಮಾಡಿದ್ದೆ ಎಂದು ತಪ್ಪೊಪ್ಪಿಕೊಂಡಿದ್ದ. ►ದಿಲೀಪ್ ಪಾತ್ರವೇನು? ಸಂತ್ರಸ್ತ ನಟಿಯನ್ನು ಬೆದರಿಸಲು ಹಾಗೂ ಅವಮಾನಕ್ಕೀಡು ಮಾಡುವ ದೊಡ್ಡ ಪಿತೂರಿಯ ಭಾಗವಾಗಿ ಈ ಲೈಂಗಿಕ ದೌರ್ಜನ್ಯವೆಸಗಲಾಗಿತ್ತು ಎಂದು ತನಿಖಾಧಿಕಾರಿಗಳು ಆರೋಪಿಸಿದ್ದರು. ವಿಚಾರಣೆಯ ವೇಳೆ, ಈ ಅಪರಾಧವನ್ನೆಸಗಲು ನಟ-ನಿರ್ಮಾಪಕ ದಿಲೀಪ್, ರೌಡಿ ಶೀಟರ್ ಪಲ್ಸರ್ ಸುನಿಯನ್ನು ಬಾಡಿಗೆಗೆ ಪಡೆದು ನಿಯೋಜಿಸಿದ್ದರು ಎಂಬ ಸಂಗತಿ ಬೆಳಕಿಗೆ ಬಂದಿತ್ತು. ದಿಲೀಪ್ ಗೆ ತನ್ನ ಸಹನಟಿಯೊಬ್ಬರೊಂದಿಗೆ ವಿವಾಹೇತರ ಸಂಬಂಧವಿದೆ ಎಂದು ಆ ಸಂತ್ರಸ್ತ ನಟಿ ಬಯಲುಗೊಳಿಸಿದ್ದರಿಂದ ಅವರು ಆಕ್ರೋಶಗೊಂಡಿದ್ದರು ಎನ್ನಲಾಗಿದೆ. ಇದಲ್ಲದೆ, ದಿಲೀಪ್ ಗೆ ಪಲ್ಸರ್ ಸುನಿ ಬರೆದಿದ್ದ ಪತ್ರ ಸೋರಿಕೆಯಾಗಿದ್ದರಿಂದಲೂ, ಈ ಪ್ರಕರಣದಲ್ಲಿನ ದಿಲೀಪ್ ಪಾತ್ರದ ಕುರಿತು ತನಿಖೆ ನಡೆಸಲಾಗಿತ್ತು. ಆ ಪತ್ರದಲ್ಲಿ, ನಾನು ನನ್ನ ಅಪರಾಧ ಕೃತ್ಯ ಪೂರೈಸಿರುವುದರಿಂದ, ನನ್ನ ಬಾಕಿಯನ್ನು ಸಂಪೂರ್ಣವಾಗಿ ಪಾವತಿಸುವಂತೆ ಪಲ್ಸರ್ ಸುನಿ ಒತ್ತಾಯಿಸಿದ್ದರು ಎನ್ನಲಾಗಿದೆ. ಇದಾದ ಬಳಿಕ, ದಿಲೀಪ್ ಅನ್ನು ಪ್ರಕರಣದಲ್ಲಿ ಎಂಟನೆ ಆರೋಪಿಯನ್ನಾಗಿ ಸೇರ್ಪಡೆ ಮಾಡಲಾಗಿತ್ತು ಹಾಗೂ ಜುಲೈ 10, 2017ರಂದು ಅವರನ್ನು ಬಂಧಿಸಲಾಗಿತ್ತು. ಎಲ್ಲ ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್ಗಳಡಿ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು. ಬಳಿಕ, ಅದೇ ವರ್ಷದ ಅಕ್ಟೋಬರ್ ತಿಂಗಳಲ್ಲಿ ಅವರಿಗೆ ಷರತ್ತುಬದ್ಧ ಜಾಮೀನು ಮಂಜೂರು ಮಾಡಲಾಗಿತ್ತು. ಸೌಜನ್ಯ: indianexpress.com
ಪೊಲೀಸ್ ಗೆ ಕಚ್ಚಿದ Gemini: ಸಾಮಾಜಿಕ ಜಾಲತಾಣದಲ್ಲಿ ವೀಡಿಯೊ ವೈರಲ್
ಧರ್ಮಪುರಿ: ತಮಿಳುನಾಡಿನ ಧರ್ಮಪುರಿಯಲ್ಲಿ ಟಿವಿಕೆ ಪಕ್ಷದ ಕಾರ್ಯಕರ್ತರ ಪ್ರತಿಭಟನೆಯ ವೇಳೆ ವ್ಯಕ್ತಿಯೊಬ್ಬರು ಕರ್ತವ್ಯನಿರತ ಪೊಲೀಸ್ ಅಧಿಕಾರಿಗೆ ಕಚ್ಚಿರುವ ಘಟನೆ ನಡೆದಿದೆ. ಈ ದೃಶ್ಯದ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಸಾರ್ವಜನಿಕರ ಗಮನ ಸೆಳೆಯುತ್ತಿದೆ. In a TVK protest in Tamilnadu a cadre bites a police personnel. pic.twitter.com/li7Cs8mSgz — Suresh Kumar (@journsuresh) December 7, 2025 ಹೊಸದಾಗಿ ಆರಂಭವಾದ ಮದ್ಯದ ಅಂಗಡಿಯನ್ನು ಮುಚ್ಚುವಂತೆ ಆಗ್ರಹಿಸಿ ಟಿವಿಕೆ ಪಕ್ಷದ ಕಾರ್ಯಕರ್ತರು ಧರ್ಮಪುರಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದರು. ಅವರನ್ನು ತಡೆಯಲು ಮುಂದಾದ ಪೊಲೀಸರು ಪ್ರತಿಭಟನಾಕಾರರನ್ನು ನಿಯಂತ್ರಿಸುವ ಪ್ರಯತ್ನದಲ್ಲಿ ತೊಡಗಿದ್ದಾಗ, ಜೆಮಿನಿ ಎಂದು ಗುರುತಿಸಲ್ಪಟ್ಟ ವ್ಯಕ್ತಿ ಪೊಲೀಸ್ ಅಧಿಕಾರಿಯ ಕೈಗೆ ಕಚ್ಚಿದ ಘಟನೆ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆ ಬಳಿಕ ಜೆಮಿನಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಕರ್ತವ್ಯನಿರತ ಪೊಲೀಸರಿಗೆ ಅಡ್ಡಿಪಡಿಸಿದ ಆರೋಪದಡಿ ಮತ್ತೂ ಮೂವರು ಪ್ರತಿಭಟನಾನಿರತರನ್ನು ಬಂಧಿಸಲಾಗಿದೆ ಎಂದು ತಿಳಿದು ಬಂದಿದೆ.
ಕಾಂಗ್ರೆಸ್ ತುಂಡರಿಸಿದ ವಂದೇ ಮಾತರಂ ಗೀತೆಯ ಶ್ರೇಷ್ಠತೆಯ ಮರುಸ್ಥಾಪನೆಗೆ ಅವಕಾಶ; ನರೇಂದ್ರ ಮೋದಿ
ಲೋಕಸಭೆಯಲ್ಲಿ ಇಂದು (ಡಿ.8-ಸೋಮವಾರ) ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ವಂದೇ ಮಾತರಂ ಗೀತೆಯ 150ನೇ ವರ್ಷಾಚರಣೆಯ ಕುರಿತ ಚರ್ಚೆಗೆ ಚಾಲನೆ ನೀಡಿದರು. ವಂದೇ ಮಾತರಂ ಗೀತೆಯ ಮಹತ್ವದ ಕುರಿತು ಸುದೀರ್ಘವಾಗಿ ಭಾಷಣ ಮಾಡಿದ ಪ್ರಧಾನಿ ಮೋದಿ, ದೇಶದ ಸ್ವಾತಂತ್ರ್ಯ ಚಳುವಳಿಯಲ್ಲಿ ಅತ್ಯಂತ ಮಹತ್ವದ ಪಾತ್ರವಹಿಸಿದ ಈ ಗೀತೆಯ ಶ್ರೇಷ್ಠತೆಯನ್ನು ಮರುಸ್ಥಾಪಿಸುವ ಅವಕಾಶ ಒದಗಿ ಬಂದಿದೆ ಎಂದು ಹೇಳಿದರು. ವಂದೇ ಮಾತರಂ ಗೀತೆಯನ್ನು ಮಂತ್ರವಾಗಿಸಿಕೊಂಡು, ಭಾರತ ಭವಿಷ್ಯದತ್ತ ಹೆಜ್ಜೆ ಹಾಕಲಿದೆ ಎಂದೂ ಪ್ರಧಾನಿ ಮೋದಿ ಭರವಸೆ ವ್ಯಕ್ತಪಡಿಸಿದರು.
IndiGo ಬಿಕ್ಕಟ್ಟು ಪ್ರಕರಣ: ಸರಕಾರ ಸ್ಪಂದಿಸಿದೆ, ತುರ್ತು ವಿಚಾರಣೆ ಬೇಕಿಲ್ಲ: ಸುಪ್ರೀಂ ಕೋರ್ಟ್
ಹೊಸದಿಲ್ಲಿ: ಇಂಡಿಗೊ ವಿಮಾನಯಾನ ಸಂಸ್ಥೆ ಯ ನೂರಾರು ವಿಮಾನಗಳು ರದ್ದಾದ ಪರಿಣಾಮ ದೇಶದಾದ್ಯಂತ ಪ್ರಯಾಣಿಕರು ಅನುಭವಿಸಿದ ತೊಂದರೆಯನ್ನು ಉಲ್ಲೇಖಿಸಿ ಸಲ್ಲಿಸಲಾದ ಅರ್ಜಿಯ ತುರ್ತು ವಿಚಾರಣೆಯ ಮನವಿಯನ್ನು ಸುಪ್ರೀಂ ಕೋರ್ಟ್ ಸೋಮವಾರ ತಿರಸ್ಕರಿಸಿದೆ. ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಮತ್ತು ನ್ಯಾಯಮೂರ್ತಿ ಜಾಯ್ ಮಾಲ್ಯ ಬಾಗ್ಚಿ ಅವರಿದ್ದ ಪೀಠವು ಅರ್ಜಿಯನ್ನು ತಿರಸ್ಕರಿಸಿದೆ. ಸರ್ಕಾರ ಈಗಾಗಲೇ ಸೂಕ್ತ ಸಮಯದಲ್ಲಿ ನಿರ್ಧಾರ ಕೈಗೊಂಡಿರುವುದರಿಂದ ತುರ್ತು ವಿಚಾರಣೆ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ. ಅರ್ಜಿದಾರರ ಪರ ವಕೀಲರು, ಹಲವು ವಿಮಾನ ನಿಲ್ದಾಣಗಳಲ್ಲಿ ಲಕ್ಷಾಂತರ ಪ್ರಯಾಣಿಕರು ಪರದಾಡಬೇಕಾದ ಪರಿಸ್ಥಿತಿ ಉಂಟಾಗಿದೆ ಎಂದು ಪೀಠದ ಗಮನಕ್ಕೆ ತಂದರು. ಆರೋಗ್ಯ ಸಮಸ್ಯೆ ಹೊಂದಿದವರು, ತುರ್ತು ಕಾರಣಗಳಿಂದ ವಿಮಾನ ಪ್ರಯಾಣ ಆರಿಸಿಕೊಂಡವರು ಹೆಚ್ಚಿನ ಸಂಕಷ್ಟ ಅನುಭವಿಸಿದ್ದಾರೆ. ಇಂಡಿಗೊ ಸಂಸ್ಥೆ ಕೊನೆಯ ಕ್ಷಣದವರೆಗೂ ವಿಮಾನ ಹಾರಾಟ ರದ್ದಾದ ಮಾಹಿತಿಯನ್ನು ನೀಡದಿರುವುದು ಗಂಭೀರ ನಿರ್ಲಕ್ಷ್ಯವಾಗಿದ್ದು, ಸುಮಾರು 2,500 ವಿಮಾನಗಳು ರದ್ದಾಗಿರುವುದರಿಂದ 95 ವಿಮಾನ ನಿಲ್ದಾಣಗಳಲ್ಲಿ ಅವ್ಯವಸ್ಥೆ ಉಂಟಾಗಿದೆ ಎಂದು ವಕೀಲರು ವಾದಿಸಿದರು. ಇಂಡಿಗೊ ಸಂಸ್ಥೆಯಲ್ಲಿ ಉಂಟಾದ ಈ ವ್ಯತ್ಯಯಕ್ಕೆ ಪೈಲೆಟ್ ಗಳ ಕೆಲಸದ ಹೊರೆ ಮತ್ತು ವಿಶ್ರಾಂತಿ ಅವಧಿಗೆ ಸಂಬಂಧಿಸಿದ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯದ ಹೊಸ ನಿಯಮಾವಳಿ ಕಾರಣ ಎನ್ನಲಾಗಿದೆ3 ಡಿಸೆಂಬರ್ 2ರಿಂದ ಜಾರಿಗೆ ಬಂದಿರುವ ಈ ನಿಯಮದಿಂದ ಕಾರ್ಯಾಚರಣೆಯು ಗೊಂದಲಕ್ಕೆ ಸಿಲುಕಿದ್ದು, ಪ್ರಯಾಣಿಕರಲ್ಲಿ ಅಸಮಾಧಾನ ಹೆಚ್ಚಾಗಿದೆ. ಹಾರಾಟ ವ್ಯತ್ಯಯದ ಪರಿಣಾಮವಾಗಿ ಸೋಮವಾರ ಷೇರುಪೇಟೆಯಲ್ಲಿ ಇಂಡಿಗೊ ಷೇರು ಮೌಲ್ಯವೂ ಕುಸಿದಿದೆ.
ಇಂಡಿಗೋ ವಿಮಾನಗಳ ರದ್ದತಿ ತಡೆಯುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯ ತುರ್ತು ವಿಚಾರಣೆಗೆ ಸುಪ್ರೀಂ ಕೋರ್ಟ್ ನಕಾರ
ಇಂಡಿಗೋ ವಿಮಾನಯಾನ ಸಂಸ್ಥೆಯ ನೂರಾರು ವಿಮಾನಗಳ ರದ್ದತಿಯನ್ನು ತಡೆಯುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯ ತುರ್ತು ವಿಚಾರಣೆಗೆ ಸುಪ್ರೀಂ ಕೋರ್ಟ್ ನಿರಾಕರಿಸಿದೆ. ಕೇಂದ್ರ ಸರ್ಕಾರ ಪರಿಸ್ಥಿತಿಯ ಗಂಭೀರತೆಯನ್ನು ಅರಿತು ಸೂಕ್ತ ಕ್ರಮ ಕೈಗೊಂಡಿದೆ ಎಂದು ನ್ಯಾಯಾಲಯ ತಿಳಿಸಿದೆ. ದೇಶದ ವಿಮಾನ ನಿಲ್ದಾಣಗಳಲ್ಲಿ ಲಕ್ಷಾಂತರ ಪ್ರಯಾಣಿಕರು ಪರದಾಡುತ್ತಿದ್ದಾರೆ ಎಂಬುದು ಗಮನಕ್ಕೆ ಬಂದಿದೆ.
ಚುನಾವಣೆಯಲ್ಲಿ ʼಗ್ಯಾರಂಟಿʼ ಘೋಷಿಸಿ ಸಿದ್ದರಾಮಯ್ಯ ಗೆಲುವು ಪ್ರಶ್ನಿಸಿ ಅರ್ಜಿ: ಸುಪ್ರೀಂಕೋರ್ಟ್ ನಿಂದ ನೋಟಿಸ್ ಜಾರಿ
ಪ್ರಣಾಳಿಕೆಯಲ್ಲಿನ ಘೋಷಣೆಗಳು ಹೇಗೆ ಭ್ರಷ್ಟಾಚಾರಕ್ಕೆ ಸಮವಾಗುತ್ತವೆ? ಎಂದ ನ್ಯಾಯಾಲಯ
ಅಧಿಕಾರ ಹಂಚಿಕೆ: ಪಕ್ಷ ಒತ್ತಾಯಿಸಿದ್ರೆ ಪರಮೇಶ್ವರ್ ಬೆಂಬಲಕ್ಕೆ ಸಿದ್ದರಾಮಯ್ಯ!
ಬೆಂಗಳೂರು, ಡಿಸೆಂಬರ್ 08: ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನಡುವಿನ ನಾಯಕತ್ವದ ಗೊಂದಲ ತಾತ್ಕಾಲಿಕವಾಗಿ ಶಮನಗೊಂಡಿದೆ. ಇಬ್ಬರೂ ನಾಯಕರು ಹೈಕಮಾಂಡ್ ನಿರ್ಧಾರಕ್ಕೆ ಬದ್ಧರಾಗಿದ್ದು, ರಾಜ್ಯ ರಾಜಕೀಯದಲ್ಲಿ ಸದ್ಯದಲ್ಲಿ ಬ್ರೇಕ್ ಫಾಸ್ಟ್ ಮೀಟಿಂಗ್ ನಡುವೆ ಹಲವು ಸಚಿವರನ್ನ ಡಿ ಕೆ ಶಿವಕುಮಾರ್ ಭೇಟಿ ಮಾಡಿರುವುದು ಹಲವು ಕುತೂಹಲಕ್ಕೆ ಕಾರಣವಾಗಿದೆ. ಕರ್ನಾಟಕದ ಆಡಳಿತಾರೂಢ ಕಾಂಗ್ರೆಸ್ನಲ್ಲಿ ನಡೆಯುತ್ತಿರುವ ಅಧಿಕಾರ
OYO New Rules: ಓಯೋ ರೂಂ ಪಡೆಯಲು ಆಧಾರ್ ಕಾರ್ಡ್ ಬೇಕಿಲ್ಲ, ಬಂತು ಹೊಸ ರೂಲ್ಸ್
ಗ್ರಾಹಕರಿಗೆ ಆತಿಥ್ಯ ಸೇವೆ ನೀಡುತ್ತಿರುವ ಓಯೋ ರೂಂ ಬುಕಿಂಗ್ ಮಾಡಲು ಹೊಸ ನಿಯಮಗಳು ಜಾರಿಯಾಗುತ್ತಿವೆ. ಸದ್ಯ ಓಯೋ ರೂಂಗಳನ್ನು ಬುಕಿಂಗ್ ಮಾಡಲು ಅಥವಾ ಚೆಕ್-ಇನ್ ಆಗಲು ಆಧಾರ್ ಕಾರ್ಡ್ ಸೇರಿದಂತೆ ಇನ್ನಿತರ ಗುರುತಿನ ಚೀಟಿಗಳನ್ನು ತೋರಿಸುವುದು ಕಡ್ಡಾಯವಾಗಿದೆ. ಅಲ್ಲದೆ ಬುಕಿಂಗ್ ವೇಳೆ ಗ್ರಾಹಕರು ಆಧಾರ್ ಅಥವಾ ವೈಯಕ್ತಿಕ ಮಾಹಿತಿ ಇರುವ ದಾಖಲೆಯ ಪ್ರತಿಗಳನ್ನು ಸಹ ಪಡೆದುಕೊಳ್ಳಲಾಗುತ್ತಿದೆ. ಆದರೆ
ವರುಣಾ ಕ್ಷೇತ್ರ ಚುನಾವಣಾ ಅಕ್ರಮ ಆರೋಪ: ಸಿಎಂ ಸಿದ್ದರಾಮಯ್ಯಗೆ ನೋಟಿಸ್ ಜಾರಿಗೊಳಿಸಿದ ಸುಪ್ರೀಂ ಕೋರ್ಟ್!
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2023ರ ವರುಣ ವಿಧಾನಸಭಾ ಚುನಾವಣೆಯಲ್ಲಿ ಆಯ್ಕೆಯಾಗಿದ್ದನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ನಡೆಸಿದೆ. ಈ ಸಂಬಂಧ ಸಿದ್ದರಾಮಯ್ಯ ಅವರಿಗೆ ನೋಟಿಸ್ ಜಾರಿ ಮಾಡಲಾಗಿದ್ದು, ಪ್ರತಿಕ್ರಿಯೆ ನೀಡುವಂತೆ ಸೂಚಿಸಲಾಗಿದೆ. ಚುನಾವಣಾ ಪೂರ್ವ ಭರವಸೆಗಳು ದುರುಪಯೋಗವಾಗುತ್ತವೆಯೇ ಎಂಬ ಬಗ್ಗೆ ಸುಪ್ರೀಂ ಕೋರ್ಟ್ನಲ್ಲಿ ವಿಚಾರಣೆ ನಡೆಯುತ್ತಿದೆ. ಈ ಬೆಳವಣಿಗೆ ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದೆ.
ಯಾದಗಿರಿ | ಮನೆಕಳ್ಳತನಕ್ಕೆ ಯತ್ನ : ತಡೆಯಲು ಬಂದ ಮಹಿಳೆಗೆ ಚಾಕುವಿನಿಂದ ಇರಿತ
ಯಾದಗಿರಿ : ಹಾಡು ಹಗಲೇ ಹಾಡಹಗಲೇ ಮನೆಕಳ್ಳತನಕ್ಕೆ ಯತ್ನಿಸಿರುವ ಘಟನೆ ನಗರದ ಮಾತಾ ಮಾಣಿಕೇಶ್ವರಿ ನಗರದಲ್ಲಿ ಸೋಮವಾರ ಬೆಳಗ್ಗೆ 10.30 ರ ಸುಮಾರಿಗೆ ನಡೆದಿದೆ. ಮನೆಯ ಯಜಮಾನಿಯ ಜಾಗುರುಕತೆಯಿಂದಾಗಿ ಮನೆಕಳ್ಳತನದ ಯತ್ನ ವಿಫಲಗೊಂಡಿದ್ದು, ಕಳ್ಳರು ಮಹಿಳೆಗೆ ಚಾಕುವಿನಿಂದ ಇರಿದು ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ. ಬೆಳಗ್ಗೆ ಎಂದಿನಂತೆ ಅಡುಗೆ ಮಾಡುತ್ತಿದ್ದ ಮಹಿಳೆಗೆ ಮನೆಯಲ್ಲಿ ಶಬ್ದ ಕೇಳಿ ನೋಡಲು ಬಂದಾಗ ಕಳ್ಳರು ಇದ್ದದ್ದು ತಿಳಿದುಬಂದಿದೆ. ಈ ವೇಳೆ ಕೈಯಲ್ಲಿದ್ದ ಕಾರಪುಡಿ ಕಳ್ಳರ ಮೇಲೆ ಚೆಲ್ಲಿದಾಗ, ಕಳ್ಳರಲ್ಲಿ ಒರ್ವ ಮಹಿಳೆಯ ಕೈಗೆ ಚಾಕುವಿನಿಂದ ಇರಿದು ಪರಾರಿಯಾಗಿದ್ದಾನೆ. ಅಷ್ಟರಲ್ಲಿಯೇ ಆಕೆ ಜೊರಾದ ಶಬ್ದ ಮಾಡಿದಾಗ ಅಕ್ಕಪಕ್ಕದವರು ಬಂದು ವಿಚಾರಿಸಿದಾಗ ಮನೆ ಕಳ್ಳತನಕ್ಕೆ ಬಂದ ವಿಷಯ ಗೊತ್ತಾಗಿದೆ. ಕೂಡಲೇ ಸ್ಥಳಕ್ಕೆ ಎಸ್ ಪಿ ಪ್ರಥ್ವಿಕ್ ಶಂಕರ್, ಹೆಚ್ಚವರಿ ಎಸ್ ಪಿ ಧರಣೇಶ್, ಸಿಪಿಐ ಸುನೀಲ್ ಮೂಲಿಮನಿ ಭೇಟಿ ನೀಡಿ ಪರಿಶೀಲಿಸಿ ಮಾಹಿತಿ ಕಲೆ ಹಾಕಿದ್ದಾರೆ.
US Fed ದರ ಕಡಿತದ ನಿರೀಕ್ಷೆಯಲ್ಲಿ ಇನ್ನಷ್ಟು ಏರಿಕೆಯಾಗಲಿರುವ Gold; ಮಂಗಳೂರಿನಲ್ಲಿ ಚಿನ್ನಕ್ಕೆಷ್ಟು?
ಚಿನ್ನದ ದರಗಳು ತೀವ್ರ ಏರಿಳಿತದ ನಡುವೆ ವಹಿವಾಟು ನಡೆಸುತ್ತಿವೆ. ಒಂದು ದಿನ ಹೆಚ್ಚಾದರೆ, ಮರುದಿನ ಕಡಿಮೆಯಾಗುತ್ತಿದೆ. ಹಿಂದಿನ ದಿನ ಏರಿಕೆಯಾಗಿದ್ದ ದರ ರವಿವಾರ ಮತ್ತೆ ಇಳಿಕೆ ಕಂಡಿದೆ. ಸೋಮವಾರ ಮತ್ತೆ ಏರಿಕೆ ಕಂಡಿದೆ. ಡಿಸೆಂಬರ್ 8ರಂದು ಸೋಮವಾರ ಚಿನ್ನ ಮತ್ತು ಬೆಳ್ಳಿ ಮಿಶ್ರ ಪ್ರವೃತ್ತಿಯನ್ನು ತೋರಿಸಿವೆ. ದುರ್ಬಲ ಅಮೆರಿಕನ್ ಡಾಲರ್ ಮೇಲೆ ಚಿನ್ನ ಏರಿಕೆ ಕಂಡರೆ, ಕಳೆದ ವಾರ ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ತಲುಪಿದ ಬೆಳ್ಳಿ ಇಳಿಕೆ ಕಂಡಿತು. ಅಮೆರಿಕದ ಫೆಡರಲ್ ರಿಸರ್ವ್ನ ನೀತಿ ನಿರ್ಧಾರಕ್ಕಾಗಿ ಮಾರುಕಟ್ಟೆಗಳು ಕಾಯುತ್ತಿರುವಾಗ ಈ ಚಲನೆ ಕಂಡುಬಂದಿದೆ. ಚಿನ್ನದ ದರಗಳು ತೀವ್ರ ಏರಿಳಿತದ ನಡುವೆ ವಹಿವಾಟು ನಡೆಸುತ್ತಿವೆ. ಒಂದು ದಿನ ಹೆಚ್ಚಾದರೆ, ಮರುದಿನ ಕಡಿಮೆಯಾಗುತ್ತಿದೆ. ಹಿಂದಿನ ದಿನ ಏರಿಕೆಯಾಗಿದ್ದ ದರ ರವಿವಾರ ಮತ್ತೆ ಇಳಿಕೆ ಕಂಡಿದೆ. ಸೋಮವಾರ ಮತ್ತೆ ಏರಿಕೆ ಕಂಡಿದೆ. ಮಂಗಳೂರಿನಲ್ಲಿ ಚಿನ್ನದ ದರವೆಷ್ಟು? ಸೋಮವಾರ ಮಂಗಳೂರಿನಲ್ಲಿ ಹತ್ತು ಗ್ರಾಂ ಬಂಗಾರದ ಬೆಲೆ ಮತ್ತೆ ಏರಿಕೆ ಕಂಡಿದೆ. ಬೆಳಗಿನ ವಹಿವಾಟಿನಲ್ಲಿ 24 ಕ್ಯಾರೆಟ್ ಚಿನ್ನಕ್ಕೆ ರೂ. 13,042 (+ 27), 22 ಕ್ಯಾರೆಟ್ ಚಿನ್ನಕ್ಕೆ ರೂ. 11,955 (+25) ಮತ್ತು 18 ಕ್ಯಾರೆಟ್ ಚಿನ್ನಕ್ಕೆ ರೂ. 9,782 (+21) ಬೆಲೆಗೆ ಏರಿದೆ. ►ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನ ಸ್ಪಾಟ್ ಚಿನ್ನವು ಪ್ರತಿ ಔನ್ಸ್ಗೆ ಶೇ 0.3 ರಷ್ಟು ಏರಿಕೆಯಾಗಿ 4,212.70 ಡಾಲರ್ಗೆ ತಲುಪಿದೆ, ಇದಕ್ಕೆ ಡಾಲರ್ ಒಂದು ತಿಂಗಳ ಕನಿಷ್ಠ ಮಟ್ಟದಲ್ಲಿದೆ ಎಂಬ ಬೆಂಬಲವಿದೆ. ಯುಎಸ್ ಫ್ಯೂಚರ್ ಗಳು ಪ್ರತಿ ಔನ್ಸ್ಗೆ 4,241.30 ಡಾಲರ್ ಮುಂದೆ ಸ್ಥಿರವಾಗಿವೆ. ಡಿಸೆಂಬರ್ 9ರಿಂದ 10ರ ನಡುವೆ ಫೆಡರಲ್ ಸಭೆ ನಡೆಯಲಿದ್ದು, 25 ಮೂಲಾಂಶವನ್ನು ಕಡಿತ ಮಾಡುವ ಶೇ 88ರಷ್ಟು ಸಾಧ್ಯತೆ ಚಿನ್ನದ ಬೆಲೆಯ ಮೇಲೆ ಪರಿಣಾಮ ಬೀರಲಿದೆ. ►ಸ್ಥಿರವಾಗಿ ಉಳಿದ ಬೆಳ್ಳಿಯ ದರ ಭಾರತದಲ್ಲಿ ಬೆಳ್ಳಿಯ ದರ ಸ್ಥಿರವಾಗಿ ಉಳಿದಿದೆ. 24 ಕ್ಯಾರೆಟ್ ಚಿನ್ನವು ಪ್ರತಿ ಗ್ರಾಂಗೆ ರೂ 13,042 ಕ್ಕೆ ತಲುಪಿದೆ. ಆದರೆ ಇತ್ತೀಚಿನ ವ್ಯಾಪಾರ ದತ್ತಾಂಶವು ಬೆಲೆಗಳು 10 ಗ್ರಾಂಗೆ ರೂ 13.04 ಲಕ್ಷದ ಸಮೀಪದಲ್ಲಿದೆ ಎಂದು ತೋರಿಸುತ್ತದೆ. ಬೆಳ್ಳಿ ಪ್ರತಿ ಗ್ರಾಂಗೆ ರೂ 189.90 ಕ್ಕೆ ತಲುಪಿದೆ. ಶುಕ್ರವಾರ (ಡಿಸೆಂಬರ್ 5) ದಾಖಲೆಯ 59.32 ಡಾಲರ್ ಔನ್ಸ್ಗೆ ಏರಿಕೆಯಾದ ನಂತರ ಬೆಳ್ಳಿ, ಪ್ರತಿ ಔನ್ಸ್ಗೆ ಶೇ 0.4 ರಷ್ಟು ಕುಸಿದು 58.06 ಡಾಲರ್ಗೆ ತಲುಪಿದೆ. ಫೆಡ್ ದರ ಕಡಿತದ ನಿರೀಕ್ಷೆಗಳು ಸ್ಥಿರವಾಗಿರುವುದರಿಂದ ಚಿನ್ನವು ಮತ್ತಷ್ಟು ಲಾಭ ಗಳಿಸುವ ಉತ್ತಮ ಸ್ಥಾನದಲ್ಲಿದೆ.
Belagavi | ಎಂಇಎಸ್ ವಿರುದ್ಧ ಪ್ರತಿಭಟನೆ; ಕರವೇ ಕಾರ್ಯಕರ್ತರು ವಶಕ್ಕೆ
ಬೆಳಗಾವಿ : ಎಂಇಎಸ್ ಧೋರಣೆ ಖಂಡಿಸಿ, ಇಲ್ಲಿನ ವ್ಯಾಕ್ಸಿನ್ ಡಿಪೊ ಮೈದಾನದತ್ತ ತೆರಳುತ್ತಿದ್ದ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರನ್ನು ಧರ್ಮವೀರ ಸಂಭಾಜಿ ವೃತ್ತದಲ್ಲಿ ಪೊಲೀಸರು ವಶಕ್ಕೆ ಪಡೆದರು. ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷ ದೀಪಕ ಗುಡಗನಟ್ಟಿ ಸೇರಿ ಹಲವರನ್ನು ವಶಕ್ಕೆ ಪಡೆಯಲಾಗಿದೆ. ಮತ್ತೊಂದೆಡೆ, ಕರ್ನಾಟಕ ರಕ್ಷಣಾ ವೇದಿಕೆ(ಶಿವರಾಮೇಗೌಡ ಬಣ) ಜಿಲ್ಲಾ ಘಟಕದ ಅಧ್ಯಕ್ಷ ವಾಜೀದ್ ಹಿರೇಕೋಡಿ ಅವರನ್ನು ವಶಕ್ಕೆ ಪಡೆಯಲಾಗಿದೆ. ನಗರದಲ್ಲಿ ಏಕಕಾಲಕ್ಕೆ ಕನ್ನಡ ಸಂಘಟನೆಯವರು ಮತ್ತು ಎಂಇಎಸ್ ನವರು ಬೇರೆ ಬೇರೆ ಸ್ಥಳಗಳಲ್ಲಿ ಪ್ರತಿಭಟಿಸುತ್ತಿದ್ದಾರೆ. ಪೋಲೀಸರು ಮಹಾಮೇಳಾವ್ ನಡೆಯದಂತೆ ತಡಯುವಲ್ಲಿ ಯಶಸ್ವಿಯಾಗಿದ್ದಾರೆ.
ಪುರುಷರಲ್ಲೇ ಬಂಜೆತನದ ಸಮಸ್ಯೆ ಹೆಚ್ಚು!
ಧೂಮಪಾನ, ಮದ್ಯಪಾನ, ಒತ್ತಡ, ಖಿನ್ನತೆಯಿಂದ Sperm ಗುಣಮಟ್ಟ ಕುಸಿತ -- ಬಂಜೆತನವನ್ನು ಮಹಿಳೆಯರ ಸಮಸ್ಯೆ ಎಂದು ಭಾವಿಸಿರುವ ಕಾಲ ದೂರ ಹೋಗಿದೆ. ಇತ್ತೀಚೆಗೆ ಸಂಗಾತಿಗಳು ಮದುವೆಗೆ ಮುಂಚೆಯೇ ಬಂಜೆತನದ ಸಮಸ್ಯೆ ಇದೆಯೇ ಎನ್ನುವ ಪರೀಕ್ಷೆ ನಡೆಸುವಷ್ಟು ಸಮಸ್ಯೆ ಹದಗೆಟ್ಟಿದೆ -- ಹತ್ತು ವರ್ಷಗಳ ಹಿಂದಿನ ಮಾತು. 2015ರ ಸಮಯ. ಕ್ಷಮಾ ಸುಮಾರು 5-6 ವರ್ಷಗಳಿಂದ ವೈದ್ಯರ ಬಳಿ ಬಂಜೆತನಕ್ಕೆ ಸಂಬಂಧಿಸಿ ಔಷಧಿ ಸೇವಿಸುತ್ತಿದ್ದರೂ ಆಕೆಯ ಪತಿ ಪರೀಕ್ಷೆಗೆ ಸಿದ್ಧವಿರಲಿಲ್ಲ. ಕೊನೆಗೆ ಆರು ವರ್ಷಗಳ ಬಳಿಕ ಆಕೆ ತನ್ನ ಪತಿಯ ಮನವೊಲಿಸಿ ವೈದ್ಯರ ಬಳಿಗೆ ಕರೆದೊಯ್ದಳು. ವೈದ್ಯಕೀಯ ಪರೀಕ್ಷೆಯಲ್ಲಿ ಪತಿಯ ವೀರ್ಯಾಣುಗಳಲ್ಲಿ ಕೊರತೆ ಇರುವುದು ಕಂಡುಬಂತು. ಆರಂಭದಲ್ಲಿ ಆಕೆಯ ಪತಿ ಔಷಧಿಗೆ ನಿರಾಕರಿಸಿದರೂ, ಕೊನೆಗೆ ಕುಟುಂಬದ ಅಗತ್ಯಗಳನ್ನು ಪರಿಗಣಿಸಿ ವೈದ್ಯರ ಬಳಿ ಚಿಕಿತ್ಸೆಗೆ ಒಪ್ಪಿಕೊಂಡರು. ಅದೃಷ್ಟವಶಾತ್ ಚಿಕಿತ್ಸೆ ಫಲ ನೀಡಿ ಇದೀಗ ಮಗುವಿನ ತಂದೆಯಾಗಿದ್ದಾರೆ. ►ಸಹಜ ಸಮಸ್ಯೆಯಾಗಿರುವ ವೀರ್ಯಾಣು ಕೌಂಟ್ ಹತ್ತು ವರ್ಷಗಳ ಹಿಂದಿನ ಸ್ಥಿತಿ ಈಗಿಲ್ಲ. ಇದೀಗ ಮದುವೆಯಾಗಿ ಒಂದೆರಡು ವರ್ಷಗಳಲ್ಲಿ ಮಗುವಾಗದೆ ಇದ್ದರೆ ಪತಿ-ಪತ್ನಿ ಇಬ್ಬರೂ ವೈದ್ಯರನ್ನು ಭೇಟಿ ಮಾಡುತ್ತಾರೆ. ಇದೀಗ ವೀರ್ಯಾಣು ಕೌಂಟ್ ಕಡಿಮೆ ಇರುವುದು ಪೌರುಷದ ಸಮಸ್ಯೆಯಾಗಿ ಉಳಿದಿಲ್ಲ. ಬಂಜೆತನವನ್ನು ಮಹಿಳೆಯರ ಸಮಸ್ಯೆ ಎಂದು ಭಾವಿಸಿರುವ ಕಾಲ ದೂರ ಹೋಗಿದೆ. ಇತ್ತೀಚೆಗೆ ಸಂಗಾತಿಗಳು ಮದುವೆಗೆ ಮುಂಚೆಯೇ ಬಂಜೆತನದ ಸಮಸ್ಯೆ ಇದೆಯೇ ಎನ್ನುವ ಪರೀಕ್ಷೆ ನಡೆಸುವಷ್ಟು ಜಗತ್ತು ಮುಂದುವರಿದಿದೆ. ►ಮದುವೆಗೆ ಮೊದಲೇ ಪರೀಕ್ಷೆ ವೈದ್ಯರ ಪ್ರಕಾರ ಭಾರತದಲ್ಲಿ ಇತ್ತೀಚೆಗಿನ ದಿನಗಳಲ್ಲಿ ವಿವಾಹದ ಮೊದಲು ಯುವ ಸಂಗಾತಿಗಳು ವೈದ್ಯರ ಬಳಿ ಹೋಗಿ ಬಂಜೆತನದ ಪರೀಕ್ಷೆ ಮಾಡಿಸಿಕೊಳ್ಳುವುದು ಹೆಚ್ಚಾಗುತ್ತಿದೆ. ಅದಕ್ಕೆ ಮುಖ್ಯ ಕಾರಣ ಬಂಜೆತನದಿಂದ ಮಕ್ಕಳಾಗದಿರುವ ಸಮಸ್ಯೆ ಎದುರಾಗುವ ಭಯ! ಆದರೆ ಹೀಗೆ ಪರೀಕ್ಷಿಸಿಕೊಂಡ ಸಂಗಾತಿಗಳಲ್ಲಿ ಪುರುಷರಲ್ಲಿ ಹೆಚ್ಚು ಬಂಜೆತನದ ಸಮಸ್ಯೆ ಕಾಣುತ್ತಿದೆ. ಮಾತ್ರವಲ್ಲ, ಜಾಗತಿಕವಾಗಿ ವೀರ್ಯದ ಶಕ್ತಿಗುಂದುವ ಸಮಸ್ಯೆ ಎದ್ದುಕಾಣುತ್ತಿದೆ. ದಿಲ್ಲಿಯ ಏಮ್ಸ್ನ ಯೂರೋಲಜಿ ಮುಖ್ಯಸ್ಥರ ಪ್ರಕಾರ ದೇಶದಲ್ಲಿ ಶೇ 40ರಷ್ಟು ಬಂಜೆತನ ಪುರುಷರ ಕಾರಣದಿಂದ ಬಂದರೆ, ಶೇ 40ರಷ್ಟು ಬಂಜೆತನ ಮಹಿಳೆಯರ ಕಾರಣದಿಂದ ಬರುತ್ತಿದೆ. ಉಳಿದ ಶೇ 10ರಷ್ಟು ಇಬ್ಬರ ಸಮಸ್ಯೆಯಿಂದ ವಿವರಿಸಲಾಗದೆ ಇರುವಂತಹ ಅಥವಾ ಸ್ವಯಂಜನ್ಯ ಸಮಸ್ಯೆಯಿಂದ ಕಂಡುಬರುತ್ತಿದೆ. ►ಜಾಗತಿಕವಾಗಿ ವೀರ್ಯಾಣು ಕೌಂಟ್ ಸಮಸ್ಯೆ ಆದರೆ ಜಾಗತಿಕವಾಗಿ ಪುರುಷರಲ್ಲಿ ವಿರ್ಯಾಣುಗಳ ಸಂಖ್ಯೆ ಕಡಿಮೆಯಾಗುತ್ತಿದೆ. 2022ರಲ್ಲಿ ನಡೆದ ಮೆಟಾ ವಿಶ್ಲೇಷಣೆಯಲ್ಲಿ 1973ರಿಂದ 2018ರ ನಡುವೆ ಜಾಗತಿಕವಾಗಿ ನಡೆದ ಅಧ್ಯಯನದಲ್ಲಿ ಪುರುಷರ ವೀರ್ಯಾಣು ಸಾಂದ್ರತೆಯಲ್ಲಿ ಶೇ 51.6ರಷ್ಟು ಕುಸಿತ ಕಂಡಿದೆ. ಆ ನಂತರ ವಿಶ್ವ ಆರೋಗ್ಯ ಸಂಸ್ಥೆಯೂ ತನ್ನ ಮಾನದಂಡಗಳನ್ನು ಪರಿಷ್ಕರಿಸಿತ್ತು. ಪ್ರತಿ ಮಿಲಿಮೀಟರ್ಗೆ 15 ಮಿಲಿಯನ್ ವೀರ್ಯವಿರುವುದು ಕೆಳಸ್ತರದ ಸಾಮಾನ್ಯ ಶ್ರೇಣಿಯಾಗಿ ಪರಿಗಣಿಸಿದೆ. “1990ರಲ್ಲಿ ಭಾರತದಲ್ಲಿ ವೀರ್ಯಾಣು ಬ್ಯಾಂಕ್ ಸ್ಥಾಪಿಸಿದಾಗ ನಮ್ಮ ವೀರ್ಯ ದಾನಿಗಳ ಅವಶ್ಯಕತೆ ಅಂದಿನ ಸಾಮಾನ್ಯ ಸಂಖ್ಯೆಗಿಂತ ಹೆಚ್ಚಾಗಿತ್ತು. ಪ್ರತಿ ಮಿಲಿಲೀಟರ್ಗೆ 40 ಮಿಲಿಯನ್ ಕೌಂಟ್ ಬೇಕಾಗಿತ್ತು” ಎಂದು ಮುಂಬೈನ್ ಕೆಇಎಂ ಆಸ್ಪತ್ರೆಯ ಸ್ತ್ರೀರೋಗ ತಜ್ಞರಾದ ಪ್ರೊಫೆಸರ್ ಅಂಜಲಿ ಮಲ್ಪಾನಿ ಅಭಿಪ್ರಾಯಪಟ್ಟಿದ್ದಾರೆ. ►ವೀರ್ಯಾಣು ಗುಣಮಟ್ಟ ಜೀವನಶೈಲಿ ಸಮಸ್ಯೆ ಇತ್ತೀಚೆಗಿನ ವೈಜ್ಞಾನಿಕ ಅಧ್ಯಯನದ ಪ್ರಕಾರ ಬಂಜೆತನ ಮಹಿಳೆಯರಿಗಿಂತ ಹೆಚ್ಚು ಪುರುಷರ ಸಮಸ್ಯೆಯಾಗಿದೆ. ನ್ಯಾಷನಲ್ ಲೈಬ್ರರಿ ಆಫ್ ಮೆಡಿಸಿನ್ನಲ್ಲಿ ಪ್ರಕಟವಾಗಿರುವ ಪಿಎಂಸಿ ಅಧ್ಯಯನದ ಪ್ರಕಾರ ಸುಮಾರು ಶೇ 50ರಷ್ಟು ಪ್ರಕರಣಗಳಲ್ಲಿ ಬಂಜೆತನದಲ್ಲಿ ಪುರುಷರ ಸಮಸ್ಯೆಯೇ ಆಗಿರುವುದು ಕಂಡುಬಂದಿದೆ. ಅಧ್ಯಯನದ ಪ್ರಕಾರ ಪುರುಷರ ಬಂಜೆತನದ ಸಮಸ್ಯೆಯ ಶೇ 30ರಷ್ಟು ಸ್ವಯಂಜನ್ಯವೇ ಆಗಿದೆ. ಅಂದರೆ ವಂಶವಾಹಿ ಸಮಸ್ಯೆಗಿಂತ ಹೆಚ್ಚಾಗಿ ಜೀವನಶೈಲಿಯಿಂದ ಬಂಜೆತದ ಸಮಸ್ಯೆ ಸೃಷ್ಟಿಯಾಗಿರುವುದೇ ಹೆಚ್ಚಾಗಿ ಗೋಚರಿಸುತ್ತಿದೆ “ಮಹಿಳೆಯರಲ್ಲಿ ಅಂಡಗಳಿಗೆ ಅನ್ವಯಿಸುವಂತೆ ಪುರುಷರಲ್ಲಿ ವೀರ್ಯಾಣುಗಳಿಗೂ ಗುಣಮಟ್ಟದ ಸಮಸ್ಯೆ ಅನ್ವಯಿಸುತ್ತದೆ. ವಯಸ್ಸಾಗುತ್ತಿದ್ದಂತೆಯೇ ವೀರ್ಯಾಣುಗಳ ಗುಣಮಟ್ಟ ಕಡಿಮೆಯಾಗುತ್ತ ಹೋಗುತ್ತದೆ. ಮಾತ್ರವಲ್ಲದೆ ಧೂಮಪಾನ, ಕುಡಿತ, ಸರಿಯಾಗಿ ಆಹಾರ ಸೇವಿಸದೆ ಇರುವುದು, ಒತ್ತಡ, ಖಿನ್ನತೆ ಹಾಗೂ ದೀರ್ಘಕಾಲೀನ ಕೆಲಸ ಮಾಡುವುದು ಮೊದಲಾದ ಜೀವನಶೈಲಿ ಸಮಸ್ಯೆಗಳೂ ವೀರ್ಯಾಣು ಗುಣಮಟ್ಟ ಕಡಿಮೆಯಾಗಲು ಕಾರಣವಾಗಿದೆ. ಇತ್ತೀಚೆಗಿನ ಸಮಯದಲ್ಲಿ ವಾಯುಮಾಲಿನ್ಯ, ರಾಸಾಯನಿಕಗಳಿಗೆ ಒಡ್ಡಿಕೊಳ್ಳುವುದು, ಸೂಕ್ಷ್ಮ ಮತ್ತು ನ್ಯಾನೋಪ್ಲಾಸ್ಟಿಕ್ಗಳು, ಹಾರ್ಮೋನ್-ತಡೆ ರಾಸಾಯನಿಕಗಳು ಮೊದಲಾದವು ವೀರ್ಯಾಣು ಕಳಪೆಯಾಗಲು ಅಥವಾ ಹಾನಿಗೆ ಕಾರಣವಾಗುತ್ತಿವೆ” ಎಂದು ಗುರುಗಾಂವ್ನ ವೈದ್ಯರಾದ ಡಾ ನರ್ಮದಾ ಪ್ರಸಾದ್ ಗುಪ್ತಾ ಅಭಿಪ್ರಾಯಪಟ್ಟಿದ್ದಾರೆ. ಸೌಜನ್ಯ: Indianexpress.com
ಬೆಳಗಾವಿ | ಅಧಿವೇಶನಕ್ಕೆ ಪರ್ಯಾಯವಾಗಿ ಮಹಾಮೇಳಾವ್: ಎಂಇಎಸ್ ಮುಖಂಡರ ಬಂಧನ
ಬೆಳಗಾವಿ : ಚಳಿಗಾಲ ಅಧಿವೇಶನಕ್ಕೆ ವಿರುದ್ಧವಾಗಿ ಮಹಾಮೇಳಾವ್ ಆಚರಿಸಲು ಮುಂದಾದ ಎಂಇಎಸ್ ಮುಖಂಡರಿಗೆ ಬೆಳಗಾವಿ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ. ಒಬ್ಬೊಬ್ಬರನ್ನೇ ಬಂಧಿಸಿ ಪೊಲೀಸ್ ವಾಹನದಲ್ಲಿ ಕರೆದೊಯ್ದಿದ್ದಾರೆ. ಅಧಿವೇಶನ ನಡೆಯುವ ಮೊದಲ ದಿನವೇ ಮಹಾಮೇಳಾವ್ ಹೆಸರಿನಲ್ಲಿ ಎಂಇಎಸ್ ಮುಖಂಡರು ಈ ರೀತಿಯ ಚಟುವಟಿಕೆಗಳನ್ನು ನಡೆಸುತ್ತಾ ಬರುತ್ತಿದ್ದಾರೆ. ಇಲ್ಲಿನ ಟಿಳಕವಾಡಿಯ ವ್ಯಾಕ್ಸಿನ್ ಡಿಪೋದಲ್ಲಿ ಸಮಾವೇಶ ನಡೆಸಲು ಇಂದೂ ಕೂಡ ತಯಾರಿ ನಡೆಸಲಾಗಿತ್ತು. ಆದರೆ, ಜಿಲ್ಲಾಡಳಿತ ಅನುಮತಿ ಕೊಟ್ಟಿರಲಿಲ್ಲ. ಅಲ್ಲದೇ ಎಂಇಎಸ್ ಮುಖಂಡರು ಮನೆ ಬಿಟ್ಟು ಹೊರಬಾರದಂತೆ ಪೊಲೀಸರು ಬೆಳಿಗ್ಗೆಯಿಂದಲೇ ಕಟ್ಟೆಚ್ಚರ ವಹಿಸಿದ್ದರು. ಮನೆಯಿಂದ ಹೊರಬರುತ್ತಿದ್ದಂತೆ ಅವರನ್ನು ಪೊಲೀಸರು ವಶಕ್ಕೆ ಪಡೆಯುತ್ತಿದ್ದಾರೆ. ಈಗಾಗಲೇ ಎಂಇಎಸ್ ಮುಖಂಡರಾದ ಮಾಳೋಜಿರಾವ್ ಅಷ್ಟೇಕರ್, ಶುಭಂ ಶೇಳಕೆ, ರಮಾಕಾಂತ ಕೊಂಡೂಸ್ಕರ್ ಸೇರಿದಂತೆ 20ಕ್ಕೂ ಹೆಚ್ಚು ಜನರನ್ನು ಪೊಲೀಸರು ಬಂಧಿಸಿದ್ದಾರೆ. 'ಜೈ ಮಹಾರಾಷ್ಟ್ರ' ಎಂದು ಸ್ಟೀಕರ್ ಅಂಟಿಸಿ ಉದ್ಧಟತನ : ಮಹಾಮೇಳಾವ್ಗೆ ಅನುಮತಿ ನೀಡದ ಹಿನ್ನೆಲೆಯಲ್ಲಿ ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ ಕರ್ನಾಟಕದ ಸಾರಿಗೆ ಬಸ್ ತಡೆದು 'ಜೈ ಮಹಾರಾಷ್ಟ್ರ' ಎಂದು ಸ್ಟೀಕರ್ ಅಂಟಿಸಿ ಉದ್ಧಟತನ ಪ್ರದರ್ಶಿಸಿದ್ದಾರೆ.
Year Ender 2025: ಈ ವರ್ಷ ಹೆಚ್ಚು ಹುಡುಕಾಡಿದ ಟಾಪ್ 10 AI ಟೂಲ್ಗಳ ಪಟ್ಟಿ: ಗೂಗಲ್
Top 10 AI Tool Serch in 2025: ಭಾರತ ಮಾತ್ರವಲ್ಲದೇ ವಿಶ್ವಾದಾದ್ಯಂತ ಕೃತಕ ಬುದ್ಧಿಮತ್ತೆ (AI) ದೈನಂದಿನ ಜೀವನದ ಭಾಗವೇ ಆಗಿಬಿಟ್ಟಿದೆ. ಅದರ ಮೇಲೆಯೇ ಭವಿಷ್ಯ ನಿರ್ಧಾರವಾಗುವಷ್ಠರ ಮಟ್ಟಿಗೆ ಭೀರಿದೆ. ವಿದ್ಯಾರ್ಥಿಗಳಿಂದ ಹಿಡಿದು ಎಲ್ಲ ವೃತ್ತಿಪರರವರೆಗೂ ಅದು ತಲುಪುತ್ತಿದೆ. 2025ರಲ್ಲಿ ಬಳಕೆದಾರರ ಜೀವನದಲ್ಲಿ AI ವಹಿಸಿದ ಪಾತ್ರವನ್ನು ವಿಶ್ಲೇಷಣೆ ಮಾಡಲಾಗಿದೆ. ಭಾರತದಲ್ಲಿ ಈ ವರ್ಷ ಏನೆಲ್ಲ
ಕೊಪ್ಪಳ : ಪ್ರೀವೆಡ್ಡಿಂಗ್ ಶೂಟ್ ಮುಗಿಸಿ ಬರುವಾಗ ಅಪಘಾತ; ನವಜೋಡಿ ಸಾವು
ಹಸೆಮಣೆಗೆ ಏರಬೇಕಿದ್ದ ಪ್ರೇಮಿಗಳಿಬ್ಬರು ಪ್ರೀ-ವೆಡ್ಡಿಂಗ್ ಶೂಟ್ ಮುಗಿಸಿ ವಾಪಸ್ ಬರುವಾಗ ಭೀಕರ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಕರಿಯಪ್ಪ ಮಡಿವಾಳ್ ಮತ್ತು ಕವಿತಾ ಪವಾಡೆಪ್ಪ ಮಡಿವಾಳ ಎಂಬುವರೇ ಮೃತ ದುರ್ದೈವಿಗಳು. ಕ್ವಾರಿಯ ಲಾರಿ ಬೈಕ್ ಮೇಲೆ ಹರಿದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ.
ಸೋನಂ ವಾಂಗ್ಚುಕ್ ಬಂಧನ ಪ್ರಶ್ನಿಸಿ ಅವರ ಪತ್ನಿ ಸಲ್ಲಿಸಿರುವ ಅರ್ಜಿಯ ಸುಪ್ರೀಂ ಕೋರ್ಟ್ ನಲ್ಲಿ ವಿಚಾರಣೆ
ಹೊಸದಿಲ್ಲಿ: ತಮ್ಮ ಪತಿ ಹಾಗೂ ಹವಾಮಾನ ಹೋರಾಟಗಾರ ಸೋನಂ ವಾಂಗ್ಚುಕ್ ಅವರನ್ನು ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಬಂಧಿಸಿರುವುದು ಕಾನೂನುಬಾಹಿರ ಹಾಗೂ ಅವರ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸಿರುವ ನಿರಂಕುಶಾಧಿಕಾರಿ ವರ್ತನೆ ಎಂದು ಆರೋಪಿಸಿ, ಅವರ ಪತ್ನಿ ಗೀತಾಂಜಲಿ ಜೆ. ಆಂಗ್ಮೊ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಸೋಮವಾರ ಸುಪ್ರೀಂಕೋರ್ಟ್ ನಡೆಸಲಿದೆ. ಆಂಗ್ಮೊ ಸಲ್ಲಿರುವ ತಿದ್ದುಪಡಿ ಅರ್ಜಿಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡುವಂತೆ ಕೇಂದ್ರ ಸರಕಾರ ಹಾಗೂ ಲಡಾಖ್ ಆಡಳಿತಕ್ಕೆ ಅಕ್ಟೋಬರ್ 29ರಂದು ಸುಪ್ರೀಂಕೋರ್ಟ್ ಸೂಚಿಸಿತ್ತು. ನಿರ್ಜೀವ ಎಫ್ಐಆರ್, ಅವಸರದ ತೀರ್ಮಾನ, ಊಹಾತ್ಮಕ ಅಭಿಪ್ರಾಯ, ಬಂಧನಕ್ಕೆ ಅಗತ್ಯವಾದ ಯಾವುದೇ ಜೀವಂತ ಅಥವಾ ಸೂಕ್ತ ಸಂಬಂಧವಿರುವ ಸಾಕ್ಷ್ಯಗಳಿಲ್ಲದೆ ಬಂಧನದ ಆದೇಶವನ್ನು ಹೊರಡಿಸಲಾಗಿದೆ ಹಾಗೂ ಇದರಿಂದಾಗಿ ಯಾವುದೇ ಕಾನೂನಾತ್ಮಕ ಅಥವಾ ನೈಜ ಸಮರ್ಥನೆಯನ್ನು ನಿರಾಕರಿಸಲಾಗಿದೆ ಎಂದು ತಿದ್ದುಪಡಿ ಅರ್ಜಿಯಲ್ಲಿ ವಾದಿಸಲಾಗಿದೆ. ಸೆಪ್ಟೆಂಬರ್ 24ರಂದು ಲೇಹ್ ನಲ್ಲಿ ನಡೆದ ಹಿಂಸಾಚಾರಕ್ಕೆ ಸೋನಂ ವಾಂಗ್ಚುಕ್ ಅವರ ಯಾವುದೇ ಹೇಳಿಕೆ ಅಥವಾ ಕ್ರಿಯೆಯನ್ನು ತಳುಕು ಹಾಕಬಾರದು ಎಂದೂ ಆಂಗ್ಮೊ ತಮ್ಮ ಅರ್ಜಿಯಲ್ಲಿ ವಾದಿಸಿದ್ದಾರೆ.
ಮಲಯಾಳಂ ನಟಿ ಅಪಹರಣ ಅತ್ಯಾಚಾರ ಕೇಸ್ - ನಟ ದಿಲೀಪ್ ಖುಲಾಸೆ!
2017ರ ನಟಿ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ಮಲಯಾಳಂ ನಟ ದೀಲೀಪ್ರನ್ನು ಕೇರಳದ ನ್ಯಾಯಾಲಯ ನಿರ್ದೋಷಿ ಎಂದು ತೀರ್ಪು ನೀಡಿದೆ. ಸಂತ್ರಸ್ತ ನಟಿಯ ಅಪಹರಣ ಮತ್ತು ಅತ್ಯಾಚಾರ ಪ್ರಕರಣದಲ್ಲಿ ದೀಲೀಪ್ರ ವಿರುದ್ಧ ಸಾಕ್ಷ್ಯಗಳನ್ನು ಒದಗಿಸಲು ಪ್ರಾಸಿಕ್ಯೂಷನ್ ವಿಫಲವಾಯಿತು. ಈ ತೀರ್ಪಿನ ನಂತರ, ದೀಲೀಪ್ರೊಂದಿಗೆ ವಿಚಾರಣೆಗೆ ಒಳಗಾಗಿದ್ದ ಇತರೆ ಮೂವರು ಆರೋಪಿಗಳನ್ನೂ ನಿರ್ದೋಷಿಗಳೆಂದು ಬಿಡುಗಡೆ ಮಾಡಲಾಗಿದೆ.
300ಕ್ಕೂ ಹೆಚ್ಚು indiGo ವಿಮಾನಗಳ ರದ್ದು: ಬೆಂಗಳೂರು, ಮುಂಬೈ, ದಿಲ್ಲಿ ಏರ್ಪೋರ್ಟ್ ಗಳಲ್ಲಿ ಪ್ರಯಾಣಿಕರ ಪರದಾಟ
ಹೊಸದಿಲ್ಲಿ: ಇಂಡಿಗೊ ವಿಮಾನ ಕಾರ್ಯಾಚರಣೆಯಲ್ಲಿನ ವ್ಯತ್ಯಯ ಏಳನೆಯ ದಿನವೂ ಮುಂದುವರಿದಿದ್ದು, ಕಾರ್ಯಾಚರಣೆ ಸಮಸ್ಯೆಗಳಿಂದಾಗಿ ಸೋಮವಾರ ಕೂಡಾ 300ಕ್ಕೂ ಹೆಚ್ಚು ವಿಮಾನಗಳು ರದ್ದುಗೊಂಡಿವೆ. ಇದರಿಂದಾಗಿ ದಿಲ್ಲಿ ವಿಮಾನ ನಿಲ್ದಾಣದಲ್ಲಿ 134 ವಿಮಾನಗಳು ರದ್ದುಗೊಂಡಿದ್ದರೆ, ಬೆಂಗಳೂರು ವಿಮಾನ ನಿಲ್ದಾಣದಲ್ಲಿ 127 ವಿಮಾನಗಳು ರದ್ದುಗೊಂಡಿವೆ. ಚೆನ್ನೈ ವಿಮಾನ ನಿಲ್ದಾಣದಲ್ಲಿ 71 ವಿಮಾನಗಳು ರದ್ದುಗೊಂಡಿವೆ ಎಂದು ಇಂಡಿಗೊ ವಿಮಾನ ಯಾನ ಸಂಸ್ಥೆಯ ಅಧಿಕಾರಿಗಳು ತಿಳಿಸಿದ್ದಾರೆ ಎಂದು ANI ಸುದ್ದಿ ಸಂಸ್ಥೆ ವರದಿ ಮಾಡಿದೆ. ದೇಶದ ಅತಿ ದೊಡ್ಡ ವೈಮಾನಿಕ ಸಂಸ್ಥೆಯಾದ ಇಂಡಿಗೊ ತನ್ನ ಕಾರ್ಯಾಚರಣೆ ಸಮಸ್ಯೆಗಳಿಂದಾಗಿ ಕಳೆದ ಮಂಗಳವಾರದಿಂದ ಭಾರಿ ಪ್ರಮಾಣದ ವಿಮಾನ ಸೇವೆ ರದ್ದತಿ ಹಾಗೂ ಮರು ವೇಳಾಪಟ್ಟಿ ನಿಗದಿಯ ಸಂಕಷ್ಟಕ್ಕೆ ಸಿಲುಕಿದೆ. ಡಿಸೆಂಬರ್ 10ರ ವೇಳೆಗೆ ತನ್ನ ವೈಮಾನಿಕ ಸೇವೆ ಸ್ಥಿರಗೊಳ್ಳಬಹುದು ಎಂದು ನಿರೀಕ್ಷಿಸಲಾಗಿದೆ.
ಉತ್ತರ ಕರ್ನಾಟಕದ ಸಮಸ್ಯೆಗಳಿಗೆ ಕೇಂದ್ರ ಉತ್ತರಿಸಬೇಕು; ಬೆಳಗಾವಿಯಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಹೇಳಿಕೆ
ಉತ್ತರ ಕರ್ನಾಟಕದ ಸಮಸ್ಯೆಗಳ ಪರಿಹಾರಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ಜಂಟಿ ಪ್ರಯತ್ನಗಳಿಗೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಕರೆ ಕೊಟ್ಟಿದ್ದಾರೆ. ಬೆಳಗಾವಿಯ ಸುವರ್ಣ ಸೌಧದಲ್ಲಿ ಮಾತನಾಡಿದ ಡಿಕೆಶಿ, ಉತ್ತರ ಕರ್ನಾಟಕದ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಹೆಚ್ಚಿನ ಗಮನ ಕೊಡಬೇಕು ಎಂದು ಆಗ್ರಹಿಸಿದ್ದಾರೆ. ಅಲ್ಲದೇ ಈ ನಿಟ್ಟಿನಲ್ಲಿ ರಾಜ್ಯ ಬಿಜೆಪಿ ಸಂಸದರು ಕೇಂದ್ರದ ಮೇಲೆ ಒತ್ತಡ ಹೇರಬೇಕು ಎಂದೂ ಡಿಸಿಎಂ ಸಲಹೆ ನೀಡಿದ್ದಾರೆ. ಈ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ.
ಬೆಳಗಾವಿ ಅಧಿವೇಶನ | ಸಾಲುಮರದ ತಿಮ್ಮಕ್ಕ, ಎಸ್.ಎಲ್.ಭೈರಪ್ಪ ಸಹಿತ ಅಗಲಿದ ಗಣ್ಯರಿಗೆ ವಿಧಾನ ಪರಿಷತ್ನಲ್ಲಿ ಸಂತಾಪ
ಬೆಳಗಾವಿ : ವಿಧಾನಸಭೆಯ ಚಳಿಗಾಲದ ಅಧಿವೇಶನ ಸುವರ್ಣಸೌಧದಲ್ಲಿ ಇಂದಿನಿಂದ ಆರಂಭವಾಗಿದ್ದು, ಅಗಲಿದ ಗಣ್ಯರಿಗೆ ಮೇಲ್ಮನೆಯಲ್ಲಿ ಸಂತಾಪ ಸೂಚಿಸಲಾಯಿತು. ವಿಧಾನ ಪರಿಷತ್ತಿನ ಮಾಜಿ ಸದಸ್ಯರಾಗಿದ್ದ ಕೆ.ನರಹರಿ, ವಿಧಾನ ಪರಿಷತ್ತಿನ ಹಾಗೂ ವಿಧಾನ ಸಭೆಯ ಮಾಜಿ ಸದಸ್ಯರಾಗಿದ್ದ ಆರ್.ವಿ.ದೇವರಾಜ್, ಲೋಕಸಭಾ ಮಾಜಿ ಸದಸ್ಯರು, ಮಾಜಿ ಸಚಿವರು ಹಾಗೂ ವಿಧಾನ ಸಭೆ ಹಾಲಿ ಸದಸ್ಯರಾಗಿದ್ದ ಹುಲ್ಲಪ್ಪ ಯಮನಪ್ಪ ಮೇಟಿ, ಖ್ಯಾತ ಜಾನಪದ ತಜ್ಞ ಹಾಗೂ ಸಾಹಿತಿಯಾಗಿದ್ದ ಡಾ.ಎನ್.ಆರ್.ನಾಯಕ, ಖ್ಯಾತ ಕಾದಂಬರಿಕಾರರಾಗಿದ್ದ ಎಸ್.ಎಲ್.ಭೈರಪ್ಪ, ಹಿರಿಯ ಪತ್ರಕರ್ತರಾಗಿದ್ದ ಟಿ.ಜೆ.ಎಸ್. ಜಾರ್ಜ್, ಪ್ರಸಿದ್ಧ ಸುಗಮ ಸಂಗೀತ ಗಾಯಕಿಯಾಗಿದ್ದ ಅನುರಾಧಾ ಧಾರೇಶ್ವರ, ಪರಿಸರ ಸಂರಕ್ಷಣೆಯಲ್ಲಿಯೇ ತನ್ನ ಜೀವನ ಸವೆಸಿದ ಸಾಲುಮರದ ತಿಮ್ಮಕ್ಕ, ಮಾಜಿ ಸಂಸದರು, ಖ್ಯಾತ ನಟ ಹಾಗೂ ನಿರ್ಮಾಪಕರಾಗಿದ್ದ ಧರ್ಮೇಂದ್ರ ಹಾಗೂ ಹಿರಿಯ ಹಾಸ್ಯ ನಟರಾಗಿದ್ದ ಮೈಸೂರು ಶ್ರೀಕಂಠಯ್ಯ ಉಮೇಶ್ ನಿಧನಕ್ಕೆ ವಿಷಾದ ವ್ಯಕ್ತಪಡಿಸಿ ಸಂತಾಪ ಸೂಚಿಸಲಾಯಿತು. ಸಭಾಪತಿ ಬಸವರಾಜ ಹೊರಟ್ಟಿ ಸಂತಾಪ ಸೂಚನೆ ನಿರ್ಣಯ ಮಂದಿಸಿದರು. ಸಭಾ ನಾಯಕರು ಹಾಗೂ ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಬೋಸರಾಜು ಹಾಗೂ ವಿರೋಧ ಪಕ್ಷದ ನಾಯಕರು ಮೃತರ ಕುರಿತು ಮಾತನಾಡಿದರು. ಮೃತರ ಗೌರವಾರ್ಥ ಒಂದು ನಿಮಿಷ ಮೌನ ಆಚರಣೆ ಮಾಡಲಾಯಿತು.
ಬೆಳಗಾವಿ ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಜ್ವಲಂತ ಸಮಸ್ಯೆಗಳ ನಿವಾರಣೆ ಬಗ್ಗೆ ಚರ್ಚೆಯಾಗಲಿ : ಲಕ್ಷ್ಮಣ್ ದಸ್ತಿ ಒತ್ತಾಯ
ಕಲಬುರಗಿ : ಇಂದಿನಿಂದ (ಡಿ.8) ಹತ್ತು ದಿನಗಳ ಕಾಲ ನಡೆಯುವ ಬೆಳಗಾವಿ ವಿಧಾನಮಂಡಲ ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಕಲ್ಯಾಣ ಕರ್ನಾಟಕ ಮತ್ತು ಕಿತ್ತೂರು ಕರ್ನಾಟಕದ ಜ್ವಲಂತ ಸಮಸ್ಯೆಗಳ ನಿವಾರಣೆಗೆ ಮಾತ್ರ ಸೀಮಿತವಾಗಲಿ ಎಂದು ಕಲ್ಯಾಣ ಕರ್ನಾಟಕ ಹೋರಾಟ ಸಮಿತಿಯ ಗೌರವಾಧ್ಯಕ್ಷರಾದ ಬಸವರಾಜ ದೇಶಮುಖ ಮತ್ತು ಸಂಸ್ಥಾಪಕ ಅಧ್ಯಕ್ಷರಾದ ಡಾ.ಲಕ್ಷ್ಮಣ ದಸ್ತಿ ಒತ್ತಾಯಿಸಿದ್ದಾರೆ. ರೈತರ ಸಮಸ್ಯೆ, ಕಬ್ಬು ಬೆಳೆಗಾರರ ಸಮಸ್ಯೆ, ಕೃಷ್ಣಾ ಕಣಿವೆ ಪ್ರದೇಶದ ಮತ್ತು ಗೋದಾವರಿ ಕಣಿವೆ ಪ್ರದೇಶದ ನೀರಾವರಿ ಯೋಜನೆಗಳ ಬಗ್ಗೆ, ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದ ಸಮಸ್ಯೆಗಳು, ಕಲ್ಯಾಣ ಕರ್ನಾಟಕದಲ್ಲಿ ಉದ್ಯೋಗ ಸೃಷ್ಟಿ,371ನೇ(ಜೇ) ಕಲಂ ಅಡಿ ನೇಮಕಾತಿಯಲ್ಲಿ ಆಗುತ್ತಿರುವ ವಿಳಂಬ ನೀತಿ, ಈ ಹಿಂದೆ ಘೋಷಣೆಯಾದ ಯೋಜನೆಗಳ ಅನುಷ್ಠಾನ, ಕಲ್ಯಾಣ ಕರ್ನಾಟಕ ಪ್ರದೇಶದ ಕಾಲಮಿತಿಯ ಅಭಿವೃದ್ಧಿ ಬಗ್ಗೆ ವೈಜ್ಞಾನಿಕ ಕ್ರಿಯಾ ಯೋಜನೆ ರೂಪಿಸುವ ಬಗ್ಗೆ, ಕಲಬುರಗಿ ವಿಮಾನಗಳ ಸಂಚಾರ ಸ್ಥಗಿತಗೊಂಡ ಸಮಸ್ಯೆ, ಕಾರಂಜಾ ರೈತ ಸಂತ್ರಸ್ತರಿಗೆ ಪರಿಹಾರ ಹಣ ವಿತರಣೆ ಸಮಸ್ಯೆ, ಕಲ್ಯಾಣ ಕರ್ನಾಟಕದ ರೈಲ್ವೆ ವಿಭಾಗೀಯ ಕಚೇರಿ ಸೇರಿದಂತೆ ರೈಲ್ವೆ ಮಾರ್ಗಗಳು, ರಸ್ತೆ ನಿರ್ಮಾಣಗಳು ಸಮಾರೋಪಾದಿಯಲ್ಲಿ ಕಾಮಗಾರಿ ನಡೆಸುವ ಬಗ್ಗೆ, ಕಲ್ಯಾಣ ಕರ್ನಾಟಕದಲ್ಲಿ ಏಮ್ಸ್ ಸ್ಥಾಪನೆಗೆ ಸಂಬಂಧಿಸಿದ ವಿಷಯ, ಕಲ್ಯಾಣ ಕರ್ನಾಟಕದಲ್ಲಿ ಎಸೆಸೆಲ್ಸಿ, ಪಿಯುಸಿ ಫಲಿತಾಂಶದ ಸುಧಾರಣೆ ಬಗ್ಗೆ, ಶಿಕ್ಷಕರ ನೇಮಕಾತಿ ಸೇರಿದಂತೆ ಖಾಲಿ ಹುದ್ದೆಗಳ ಭರ್ತಿಗೆ ಸಂಬಂಧಿಸಿದ ಸಮಸ್ಯೆಗಳು,ವಿವಿಗಳ ಅಭಿವೃದ್ಧಿ ಜೊತೆಗೆ ಖಾಲಿ ಹುದ್ದೆಗಳ ನೇಮಕಾತಿ, ಪ್ರವಾಸೋದ್ಯಮ ಅಭಿವೃದ್ಧಿ, ಆಸ್ಪತ್ರೆಗಳ ಅವ್ಯವಸ್ಥೆ,ಹೀಗೆ ಉತ್ತರ ಕರ್ನಾಟಕದ ಎಲ್ಲಾ ರಂಗಗಳ ಅಭಿವೃದ್ಧಿಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಗಂಭೀರವಾಗಿ ಚರ್ಚಿಸಿ ದಿಟ್ಟ ನಿರ್ಧಾರಗಳು ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ. ಅದರಂತೆ ಮಾನ್ಯ ಸಭಾ ಅಧ್ಯಕ್ಷರು ಮತ್ತು ಮಾನ್ಯ ಸಭಾಪತಿಗಳು ಉತ್ತರ ಕರ್ನಾಟಕ ಪ್ರದೇಶಕ್ಕೆ ಸಂಬಂಧಿಸಿದ ವಿಷಯಗಳ ಚರ್ಚೆಗೆ ಮಾತ್ರ ಅವಕಾಶ ನೀಡಬೇಕು, ಬೇರೆ ವಿಷಯಗಳ ಬಗ್ಗೆ ಚರ್ಚೆಗೆ ಅವಕಾಶ ನೀಡಬಾರದು ಎಂದು ತಿಳಿಸಿದ್ದಾರೆ.
ಕೃಷಿ ಉಪ ನಿರ್ದೇಶಕರ ಕಚೇರಿ ಸ್ಥಳಾಂತರ ವಿರೋಧಿಸಿ ಲಿಂಗಸುಗೂರಿನಲ್ಲಿ ಪ್ರತಿಭಟನೆ
ಲಿಂಗಸುಗೂರು: ತಾಲೂಕಿನ ಕೃಷಿ ಉಪ ನಿರ್ದೇಶಕರ ಕಚೇರಿಯನ್ನು ಸಿಂಧನೂರಿಗೆ ಸ್ಥಳಾಂತರಕ್ಕೆ ಸರ್ಕಾರದ ಅಧೀನ ಕಾರ್ಯದರ್ಶಿಯವರು ಹೊರಡಿಸಿರುವ ಆದೇಶವನ್ನು ತಕ್ಷಣವೇ ರದ್ದುಪಡಿಸಬೇಕು. ಈ ಬಗ್ಗೆ ಬೆಳಗಾವಿ ಅಧಿವೇಶನದಲ್ಲಿ ಶಾಸಕ ಮಾನಪ್ಪ ವಜ್ಜಲ್ ಅವರು ಮಾತನಾಡಬೇಕು ಎಂದು ಆಗ್ರಹಿಸಿ ಲಿಂಗಸೂಗೂರು ತಾಲೂಕು ಅಭಿವೃದ್ಧಿ ಸಮಿತಿಯಿಂದ ಶಾಸಕರ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಈ ವೇಳೆ ಮಾತನಾಡಿದ ಪ್ರತಿಭಟನಾಕಾರರು, ಈಗಾಗಲೇ ತಾಲೂಕಿನ ಮಂಜೂರಾತಿ ಹಂತದಲ್ಲಿದ್ದ ಪ್ರಾದೇಶಿಕ ಸಾರಿಗೆ ಕಚೇರಿ , ಕೆಪಿಟಿಸಿಎಲ್ ಕಚೇರಿ ಹಾಗೂ ಜಿಲ್ಲಾ ನ್ಯಾಯಾಲಯ ಸೇರಿ ತಾಲೂಕಿನ ಒಂದೊಂದಾಗಿ ಕಚೇರಿಗಳು ಸ್ಥಳಾಂತರವಾಗುತ್ತಿವೆ. ಲಿಂಗಸುಗೂರು ತಾಲೂಕು ಅಭಿವೃದ್ಧಿ ಮಾಡುತ್ತೇವೆಂದು ಕಳೆದ 15 ವರ್ಷಗಳಿಂದ ಹಾಲಿ ಮತ್ತು ಮಾಜಿ ಶಾಸಕರು ಹಾಗೂ ಸ್ಥಳೀಯರಾದ ಹಾಲಿ ವಿಧಾನ ಪರಿಷತ್ತು ಸದಸ್ಯ ಶರಣೇಗೌಡ ಬಯ್ಯಾಪುತ ಅವರು ತಮ್ಮ ಸ್ವಅಭಿವೃದ್ಧಿ ಮಾಡಿಕೊಳ್ಳುತ್ತಿದ್ದೀರಿ ವಿನಹ ಕ್ಷೇತ್ರದ ಅಭಿವೃದ್ಧಿಯ ಕಡೆ ಎಳ್ಳಷ್ಟು ಗಮನ ಕೊಟ್ಟಿಲ್ಲ ಎಂದು ದೂರಿದರು. ಒಂದು ವಾರದಲ್ಲಿ ಕೃಷಿ ನಿರ್ದೇಶಕರ ಕಚೇರಿ-2 ಸ್ಥಳಾಂತರ ಆದೇಶವನ್ನು ರದ್ದುಪಡಿಸದಿದ್ದರೆ ಮುಂದಿನ ದಿನಗಳಲ್ಲಿ ತೀವ್ರ ಹೋರಾಟ ನಡೆಸಲಾಗುವುದು ಎಂದು ಪ್ರತಿಭಟನಾಕಾರರು ಎಚ್ಚರಿಸಿದ್ದಾರೆ. ಈ ವೇಳೆ ಸಮಿತಿಯ ಮುಖಂಡರಾದ ರಮೇಶವೀರಾಪೂರು, ಶಿವಪುತ್ರಪ್ಪಗೌಡ, ಹಾಜಿಬಾಬು ಕಟ್ಟಿಮನಿ, ಬಾಬಾಜಾನಿ ಇದ್ದರು.
ಬಿಳಿಯೂರು ಅಣೆಕಟ್ಟಿಗೆ ಗೇಟ್ ಅಳವಡಿಕೆ : ಉಪ್ಪಿನಂಗಡಿ ವ್ಯಾಪ್ತಿವರೆಗೆ ತುಂಬಿದ ಹಿನ್ನೀರು
ಉಪ್ಪಿನಂಗಡಿ : ಇಲ್ಲಿನ ಬಿಳಿಯೂರಿನಲ್ಲಿ ನೇತ್ರಾವತಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಅಣೆಕಟ್ಟಿಗೆ ಗೇಟ್ ಅಳವಡಿಸಿ ನೀರು ನಿಲ್ಲಿಸುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಇದರಿಂದ ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ–ಮಹಾಕಾಳಿ ಸನ್ನಿಧಿಯ ಸಂಗಮ ಪ್ರದೇಶದಲ್ಲಿರುವ ಉದ್ಭವಲಿಂಗ ಜಲಾವೃತಗೊಂಡಿದೆ. ನೀರು ಸಂಗ್ರಹವಾಗುತ್ತಿರುವುದು ಕೃಷಿಕರಿಗೆ ಸಂತಸ ತಂದರೆ, ಲಿಂಗ ಜಲಾವೃತಗೊಂಡಿರುವುದು ಭಕ್ತರಲ್ಲಿ ನಿರಾಶೆ ಮೂಡಿಸಿದೆ. ಬಿಳಿಯೂರಿನಲ್ಲಿ ಸಂಪರ್ಕ ಸೇತುವೆ ಸಹಿತ ನಿರ್ಮಿತ ಈ ಅಣೆಕಟ್ಟಿಗೆ 4 ಮೀಟರ್ ಎತ್ತರದ ಗೇಟ್ ಅಳವಡಿಸಿದಾಗ, ನೀರು ನೆಕ್ಕಿಲಾಡಿವರೆಗೆ ಮಾತ್ರ ತುಂಬುತ್ತದೆ ಎಂದು ಪ್ರಾರಂಭದಲ್ಲಿ ತಿಳಿಸಲಾಗಿತ್ತು. ಆದರೆ ಯೋಜನೆ ಪೂರ್ಣಗೊಂಡ ನಂತರ ಹಿನ್ನೀರು ಉಪ್ಪಿನಂಗಡಿ ಗ್ರಾಮ ವ್ಯಾಪ್ತಿಯವರೆಗೂ ಹರಡಿದ್ದು, ಪಾರಂಪರಿಕ ಶಿವರಾತ್ರಿ ಮಖೆ ಸೇರಿದಂತೆ ಮೂರೂ ಮಖೆ ಜಾತ್ರೆಗಳಲ್ಲಿ ನಡೆಯುತ್ತಿದ್ದ ಪೂಜಾ ಕ್ರಮ ವ್ಯತ್ಯಯಗೊಂಡಿತ್ತು. ಆದರೆ, ನದಿಯಲ್ಲಿ ಸಮುದ್ರಮಟ್ಟಕ್ಕಿಂತ 26.4ಮೀಟರ್ ಎತ್ತರದಲ್ಲಿ ನೀರು ಶೇಖರಣೆಯಾಗಿರುವುದರಿಂದ ಅಂತರ್ಜಲ ವೃದ್ಧಿಯಾಗಿ ಬತ್ತಿ ಹೋಗಿದ್ದ ಕೊಳವೆ ಬಾವಿಗಳಲ್ಲಿಯೂ ಜಲಸಂಪತ್ತು ಕಾಣಿಸಲಾರಂಭಿಸಿದೆ. ಜೊತೆಗೆ ಮಂಗಳೂರು ನಗರಕ್ಕೆ ಕುಡಿಯುವ ನೀರಿನ ಪೂರೈಕೆಗೂ ಈ ಅಣೆಕಟ್ಟು ಉಪಯುಕ್ತವಾಯಿತು. ಆದರೆ ಉದ್ಭವಲಿಂಗ ಜಲಾವೃತವಾದ ಕಾರಣ ಉಪ್ಪಿನಂಗಡಿ ವ್ಯಾಪಾರಿಕ ವಲಯಕ್ಕೂ ಪರಿಣಾಮ ಬಿದ್ದಿದೆ. ಭಕ್ತರು ಕನಿಷ್ಠ ಮಖೆ ಜಾತ್ರೆಗಳ ಅವಧಿಯಲ್ಲಿ ಗೇಟ್ ಎತ್ತರವನ್ನು 2 ಮೀಟರ್ಗಾಗಿಸಿದರೆ ಪೂಜೆ ಮಾಡಲು ಅವಕಾಶ ಸಿಗುತ್ತದೆ ಎಂದು ಬೇಡಿಕೆ ಸಲ್ಲಿಸಿದ್ದರು. ಆದರೆ, ಅಣೆಕಟ್ಟಿನ ಗೇಟಿನ ಎತ್ತರ ಕಡಿಮೆ ಮಾಡುವುದು ತಾಂತ್ರಿಕವಾಗಿಯೂ ನೀರಿನ ಅಗತ್ಯದ ದೃಷ್ಟಿಯಿಂದ ಸಾಧ್ಯವಿಲ್ಲ, ಕುಡಿಯುವ ನೀರು ಮುಖ್ಯ ಆದ್ಯತೆ ಎಂದು ಶಾಸಕ ಅಶೋಕ್ ಕುಮಾರ್ ರೈ ಸ್ಪಷ್ಟಪಡಿಸಿದ್ದರು.
ರಾಜ್ಯದಲ್ಲಿನ 1-12 ತರಗತಿವರೆಗಿನ ವಿದ್ಯಾರ್ಥಿಗಳಿಗೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಮಹತ್ವದ ಮಾಹಿತಿ
Good News: ರಾಜ್ಯದಲ್ಲಿ ಶಿಕ್ಷಣ ಇಲಾಖೆಯೂ ವಿದ್ಯಾರ್ಥಿಗಳಿಗೆ ಅನುಕೂಲ ಆಗುವಂತೆ ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಲಿರುತ್ತದೆ. ಇದೀಗ ಸಚಿವ ಮಧು ಬಂಗಾರಪ್ಪ ಅವರು 1-12 ತರಗತಿವರೆಗಿನ ವಿದ್ಯಾರ್ಥಿಗಳಿಗೆ ಶುಭಸುದ್ದಿಯೊಂದನ್ನು ನೀಡಿದ್ದಾರೆ. ಹಾಗಾದ್ರೆ ಅದೇನು ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ. ಮುಂದಿನ ಶೈಕ್ಷಣಿಕ ವರ್ಷದಿಂದ ರಾಜ್ಯ ಸರ್ಕಾರ 1 ರಿಂದ 12ನೇ ತರಗತಿಯ ವಿದ್ಯಾರ್ಥಿಗಳಿಗೆ ನೋಟ್ಬುಕ್ ಮತ್ತು
'ನನಗೆ ಗಂಡು ಮಗುವೇ ಬೇಕು'; ನವಜಾತ ಹೆಣ್ಣು ಶಿಶುವನ್ನು ಹುಟ್ಟಿದ ಕೆಲವೇ ನಿಮಿಷಗಳಲ್ಲಿ ಕೊಂದ ತಾಯಿ ಅಂದರ್
ಘಾಜಿಯಾಬಾದ್ನಲ್ಲಿ 22 ವರ್ಷದ ಮಹಿಳೆ ತನ್ನ ನವಜಾತ ಹೆಣ್ಣು ಮಗುವನ್ನು ಹುಟ್ಟಿದ 45 ನಿಮಿಷಗಳಲ್ಲಿ ಕೊಲೆ ಮಾಡಿದ್ದಾಳೆ. ಸಹೋದರಿಯ ಮನೆಯ ಟೆರೇಸ್ನಿಂದ ಮಗುವನ್ನು ಎಸೆದಿದ್ದಳು. ಮರಣೋತ್ತರ ಪರೀಕ್ಷೆಯಲ್ಲಿ ಮಗು ಜೀವಂತವಿದ್ದಾಗಲೇ ಗಾಯಗೊಂಡಿರುವುದು ತಿಳಿದುಬಂದಿದೆ. ಗಂಡು ಮಗುವಿನ ಆಸೆಯಿಂದ ಈ ಕೃತ್ಯ ಎಸಗಿದ್ದಾಳೆ. ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಉಡುಪಿ | ಮದ್ಯ ವ್ಯಸನಿಯಿಂದ ಅಡ್ಡಾದಿಡ್ಡಿ ಗ್ಯಾಸ್ ಬುಲೆಟ್ ಟ್ಯಾಂಕರ್ ಚಾಲನೆ : ತಪ್ಪಿದ ಅನಾಹುತ
ಉಡುಪಿ, ಡಿ.7 :ಟ್ಯಾಂಕರ್ ಚಾಲಕನೊಬ್ಬ ರಾತ್ರಿಯ ಹೊತ್ತು ಹೆಡ್ ಲೈಟ್ ಕೂಡ ಹಾಕದೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಡ್ಡಾದಿಡ್ಡಿಯಾಗಿ ಗ್ಯಾಸ್ ಬುಲೆಟ್ ಟ್ಯಾಂಕರ್ ಮಾಡಿಕೊಂಡು ಬಂದಿದ್ದು ಕೂದಲೆಳೆಯ ಅಂತರದಲ್ಲಿ ಹಲವಾರು ಅಪಘಾತಗಳು ತಪ್ಪಿದೆ. ಕೊನೆಗೆ ಆತನನ್ನು ಅಂಬಲಪಾಡಿಯ ಬಳಿ ವಾಹನವನ್ನು ನಿಲ್ಲಿಸಿ ಸಾರ್ವಜನಿಕರು ಮದ್ಯ ವ್ಯಸನಿಯನ್ನು ವಶಕ್ಕೆ ಪಡೆದು ಪೋಲಿಸರಿಗೆ ಒಪ್ಪಿಸಿದ್ದಾರೆ. ಟ್ಯಾಂಕರ್ ಚಾಲಕ ಮಹಾರಾಷ್ಟ್ರ ಮೂಲದವನಾಗಿದ್ದು, ಬಹಳಷ್ಟು ಮದ್ಯ ಸೇವಿಸಿ ರಾತ್ರಿಯ ಹೊತ್ತು ಹೆಡ್ ಲೈಟ್ ಕೂಡ ಹಾಕದೆ ಬಹಳಷ್ಟು ವೇಗವಾಗಿ ಬರುತ್ತಿದ್ದ. ಇದನ್ನು ಗಮನಿಸಿದ ವ್ಯಕ್ತಿಯೊರ್ವರು ವಾಹನವನ್ನು ಹಿಂಬಾಲಿಸಿಕೊಂಡು ಬಂದು ಅಂಬಲಪಾಡಿಯ ಬಳಿ ನಿಲ್ಲಿಸಿದ್ದಾರೆ. ಈ ವೇಳೆ ಉದ್ರಿಕ್ತ ಸಾರ್ವಜನಿಕರು ಚಾಲಕನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ರೂಪಾಯಿಯ ತೀವ್ರ ಕುಸಿತ ಮತ್ತು ಬಿಸಿಲುಗುದುರೆಯಾಗಿರುವ ದಾರಿ
ಮಾಧ್ಯಮಗಳಲ್ಲಿ ಈಗಾಗಲೇ ವರದಿಯಾದಂತೆ ಅಮೆರಿಕದ ಡಾಲರ್ ಮತ್ತು ಭಾರತದ ರೂಪಾಯಿಯ ವಿನಿಮಯ ದರ ತೀವ್ರವಾಗಿ ಕುಸಿದಿದೆ. ಡಿಸೆಂಬರ್ ಮೂರನೇ ತಾರೀಕಿಗೆ ಒಂದು ಡಾಲರಿನ ಬೆಲೆ 90 ರೂಪಾಯಿಗೆ ಏರಿತು, ಮರುದಿನ ಅಂದರೆ ನಾಲ್ಕನೇ ತಾರೀಕಿಗೆ ಅದು 90.40 ರೂಪಾಯಿಯಷ್ಟಾಯಿತು. ಮೂರು ವರ್ಷಗಳ ಹಿಂದೆ ಅಂದರೆ 2022ರ ಸಂದರ್ಭದಲ್ಲಿ ಡಾಲರಿನ ಬೆಲೆ 80 ರೂಪಾಯಿಗೆ ಏರಿದಾಗ ಇಷ್ಟು ಬೇಗ ಅದು 90ರ ಮಟ್ಟವನ್ನು ದಾಟಬಹುದೆಂದು ಯಾರೂ ಊಹಿಸಿರಲಿಲ್ಲ. (ಇದೇ ಲೇಖಕ ಜೂನ್ 27, 2022ರಂದು ಪತ್ರಿಕೆಗೆ ಬರೆದ ಲೇಖನವನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು). ಸರಕಾರವಾಗಲಿ, ಹಣಕಾಸು ವ್ಯವಸ್ಥೆಯ ನಿಯಂತ್ರಕ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್ಬಿಐ) ಆಗಲಿ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಅತಿ ಶೀಘ್ರವಾಗಿ ರೂಪಾಯಿಯ ಬೆಲೆ ಇನ್ನೂ ಪತನವಾಗಿ 100ನ್ನು ತಲಪಬಹುದು. ಈ ಬೆಳವಣಿಗೆಯಿಂದಾಗಿ ಏಶ್ಯದ ದೇಶದ ಕರೆನ್ಸಿಗಳಲ್ಲಿ ಭಾರತದ ರೂಪಾಯಿಯೇ ಅತ್ಯಂತ ದುರ್ಬಲವೆಂದು ತಜ್ಞರ ಅಭಿಪ್ರಾಯ. 2014ರಲ್ಲಿ ನರೇಂದ್ರ ಮೋದಿ ಅಧಿಕಾರಕ್ಕೆ ಬಂದ ನಂತರ ರೂಪಾಯಿಯ ಮೌಲ್ಯವು ನಿರಂತರ ಕೆಳಗಿಳಿಯುತ್ತಲೇ ಇದೆ. ಸುಮಾರು 2010ರ ತನಕ ನಿಧಾನಗತಿಯಲ್ಲಿ ಬೆಲೆಯ ಪತನವಾಗಿತ್ತು. 2000ದಲ್ಲಿ 44.31 ರೂಪಾಯಿಗೆ ಒಂದು ಡಾಲರು ಸಿಗುತ್ತಿದ್ದರೆ 2010ರಲ್ಲಿ ಅದು 46 ನ್ನು ದಾಟಿತು. ಆದರೆ ಮುಂದಿನ ವರ್ಷಗಳಲ್ಲಿ ಕುಸಿತವು ತೀವ್ರವಾಗುತ್ತಲೇ ಬಂತು. 2014ರಲ್ಲಿ ಅದು 60.95ಕ್ಕೆ ಏರಿತು. ಮೋದಿಯವರು ತನ್ನ ಅಧಿಕಾರದ ಮೊದಲ ವಾರ್ಷಿಕೋತ್ಸವವನ್ನು ಆಚರಿಸುವ ಹೊತ್ತಿಗೆ ಅದು 66.79ಕ್ಕೆ ಜಿಗಿಯಿತು. ಎರಡನೇ ಬಾರಿ ಮೋದಿಯವರು ಪ್ರಧಾನಿಯಾಗಿ ಆಯ್ಕೆಯಾದ ಮರುವರ್ಷ ಅಂದರೆ 2020ರಲ್ಲಿ 75.45 ದಾಟಿತು. ತರುವಾಯ ಎರಡೇ ವರ್ಷದಲ್ಲಿ ಅಂದರೆ 2022ಕ್ಕೆ ರೂಪಾಯಿಯ ಬೆಲೆ 81.62 ತಲಪಿತು. ಮುಂದೆ ಮೌಲ್ಯವು ಮತ್ತಷ್ಟು ಕುಸಿಯುತ್ತಾ ಬಂದು ಈ ಡಿಸೆಂಬರ್ನಲ್ಲಿ 90ನ್ನು ದಾಟಿತು. ಹಣಕಾಸು ವ್ಯವಹಾರಕ್ಕೆ ಮೀಸಲಾದ ಪ್ರತಿಷ್ಠಿತ ಆಂಗ್ಲ ಪತ್ರಿಕೆ ‘ಫೈನಾನ್ಶಿಯಲ್ ಟೈಮ್ಸ್’ ತನ್ನ ಇತ್ತೀಚಿನ ಸಂಚಿಕೆಯಲ್ಲಿ ಪ್ರಕಟಿಸಿದ ರೇಖಾಚಿತ್ರ ಇದನ್ನು ಸರಳವಾಗಿ ಚಿತ್ರಿಸುತ್ತದೆ. ಕುಸಿತದ ಕಾರಣಗಳು ಕೇಂದ್ರ ಸರಕಾರದ ಪ್ರಕಾರ ಈ ಅರ್ಥವರ್ಷದ ಎರಡನೇ ತ್ರೈಮಾಸಿಕದಲ್ಲಿ ದೇಶದ ಜಿಡಿಪಿ (ಸ್ಥೂಲ ದೇಶೀಯ ಉತ್ಪನ್ನ) ಶೇ. 8.2ರಷ್ಟಿತ್ತು-ಹೋದ ಆರು ತ್ರೈಮಾಸಿಕಗಳಲ್ಲಿ ಇದು ಒಂದು ದಾಖಲೆಯ ಹೆಚ್ಚಳ. (ಐಎಂಎಫ್-ಅಂತರ್ರಾಷ್ಟ್ರೀಯ ನಾಣ್ಯ ನಿಧಿಯು ಈ ವರದಿ ವಾಸ್ತವದಿಂದ ದೂರವಿದೆ ಎಂದು ಹೇಳಿದೆ). ಮೇಲ್ನೋಟಕ್ಕೆ ಇದು ದೇಶದ ಅರ್ಥವ್ಯವಸ್ಥೆ ಮತ್ತಷ್ಟು ಭದ್ರವಾಗುತ್ತಿದೆ ಎಂಬುದರ ಸೂಚಕ ಮತ್ತು ಸ್ಥಿರವಾದ ವಿನಿಮಯ ದರವು ಸುಭದ್ರ ಆರ್ಥಿಕತೆಯ ಸಂಕೇತ ಎಂದು ಸಾಮಾನ್ಯವಾದ ತಿಳಿವಳಿಕೆ. ಹಾಗಿದ್ದರೆ ಜಿಡಿಪಿಯಲ್ಲಿ ದಾಖಲೆಯ ಹೆಚ್ಚಳವಾದರೂ ಭಾರತದ ರೂಪಾಯಿಯ ಮೌಲ್ಯ ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಯಾಕೆ ಅಧೋಮುಖವಾಗಿದೆ? ರೂಪಾಯಿಯ ಮೌಲ್ಯದ ಎಗ್ಗಿಲ್ಲದ ಕುಸಿತಕ್ಕೆ ಪ್ರಮುಖ ಕಾರಣಗಳು ಹೀಗಿವೆ 1. ಭಾರತದ ವಿದೇಶ ವ್ಯಾಪಾರದಲ್ಲಿ ಹೆಚ್ಚುತ್ತಿರುವ ಕೊರತೆ. 2. ದೇಶಕ್ಕೆ ಬರುವ ಬಂಡವಾಳದ ಪ್ರಮಾಣದಲ್ಲಿ ಕುಸಿತ. 3. ದೇಶದಲ್ಲಿ ವಿದೇಶೀಯರು ಹೂಡಿದ್ದ ಬಂಡವಾಳದ ಹಿಂಪಡೆತ. 4. ಡಾಲರ್ ರೂಪದಲ್ಲಿ ಹೆಚ್ಚಾಗುತ್ತಿರುವ ಹೊರ ಹರಿವು. 5. ದೇಶದ ಆಂತರಿಕ ನಿರ್ಧಾರಗಳಿಂದ ಉಂಟಾಗುವ ಅನಿಶ್ಚಿತತೆಗಳು. ವರದಿಗಳ ಪ್ರಕಾರ 2024-25ರ ನವೆಂಬರ್-ಅಕ್ಟೋಬರ್ ಒಂದು ವರ್ಷದಲ್ಲಿ ಸರಕುಗಳ ನಿರ್ಯಾತದಲ್ಲಿ ಶೇ. 11.8 ಕುಸಿತವಾಗಿದೆ. ಶುದ್ಧೀಕೃತ ತೈಲ, ಇಂಜಿನಿಯರಿಂಗ್ ಉತ್ಪನ್ನ, ರಾಸಾಯನಿಕ ವಸ್ತು, ಸಿದ್ಧ ಉಡುಪು, ಮುತ್ತು, ರತ್ನ ಮತ್ತು ಸಿದ್ಧಪಡಿಸಿದ ಆಭರಣ ಮುಂತಾದ ರಂಗಗಳು ತೀವ್ರ ಕುಸಿತವನ್ನು ದಾಖಲಿಸಿವೆ. ಇದಕ್ಕೆ ವಿರುದ್ಧವಾಗಿ ಇದೇ ಅವಧಿಯಲ್ಲಿ ಸರಕುಗಳ ಆಯಾತದಲ್ಲಿ ಶೇ. 16.6 ಹೆಚ್ಚಳವಾಗಿದೆ. ಚಿನ್ನದ ಆಮದು ಹೋದ ವರ್ಷ 4.9 ಬಿಲಿಯನ್ ಡಾಲರ್(ಡಾಲರಿನ ಬೆಲೆ 90 ರೂಪಾಯಿ ಎಂದುಕೊಂಡರೆ 44,100 ಕೋಟಿ ರೂಪಾಯಿ) ಇದ್ದರೆ ಈ ಅಕ್ಟೋಬರ್ ವರ್ಷದಲ್ಲಿ ಅದು 14.7 ಬಿಲಿಯನ್ ಡಾಲರಿಗೆ (1,32,300 ಕೋಟಿ ರೂಪಾಯಿಗೆ) ಅಂದರೆ ಒಂದೇ ವರ್ಷದಲ್ಲಿ ಮೂರು ಪಟ್ಟು ಹೆಚ್ಚಾಯಿತು. ಒಟ್ಟಾರೆ ಅಕ್ಟೋಬರ್ ವರ್ಷಾಂತ್ಯಕ್ಕೆ ಭಾರತದ ಚಾಲ್ತಿ ಖಾತೆಯಲ್ಲಿನ ಕೊರತೆ (ರಫ್ತು ಮತ್ತು ಆಮದುಗಳ ಮೌಲ್ಯದ ಅಂತರ) ಸುಮಾರಾಗಿ 3,75,300 ರೂಪಾಯಿಗಳಷ್ಟು ಎಂದು ಅಂದಾಜಿಸಲಾಗಿದೆ. ಶೇರು ಮಾರುಕಟ್ಟೆಯ ಅನಿಶ್ಚಿತತೆಗಳಿಂದಾಗಿ ಜನವರಿ 2025ರಿಂದ ಈ ತನಕ ಸುಮಾರು 1.48 ಲಕ್ಷ ಕೋಟಿ ರೂ. ಮೌಲ್ಯದ ಬಂಡವಾಳವನ್ನು ವಿದೇಶಿ ಬಂಡವಾಳ ಹೂಡಿಕೆ ಸಂಸ್ಥೆಗಳು ಹಿಂಪಡೆದಿವೆ. ದೇಶದ ಅರ್ಥವ್ಯವಸ್ಥೆಯ ಕುರಿತಾಗಿ ಹುಟ್ಟುವ ಅನಿಶ್ಚಿತತೆಯಿಂದ ವಿದೇಶಿ ಸಂಸ್ಥೆಗಳು ತಮ್ಮ ಹೂಡಿಕೆಯನ್ನು ಹಿಂಪಡೆಯಲು ಮುಂದಾಗುತ್ತವೆ. ಇದರ ಜೊತೆಗೆ, ನವೋದ್ಯಮ (ಸ್ಟಾರ್ಟ್ ಅಪ್) ಕಂಪೆನಿಗಳು ಹೊಸತಾಗಿ ಶೇರು ಮಾರುಕಟ್ಟೆಗೆ ಪ್ರವೇಶಿಸಿ-ಐಪಿಒ ಆರಂಭಿಕ ಸಾರ್ವಜನಿಕ ಕೊಡುಗೆಗಳ ಮೂಲಕ ಹೆಚ್ಚು ಬಂಡವಾಳವನ್ನು ಪೇರಿಸಲು ಪ್ರಯತ್ನಿಸಿದಾಗ ಹೂಡಿಕೆದಾರರಿಂದ ನಿರೀಕ್ಷಿತ ಸ್ಪಂದನೆ ಇತ್ತೀಚಿನ ವರ್ಷಗಳಲ್ಲಿ ಲಭಿಸಿರಲಿಲ್ಲ. ಪ್ರವರ್ತಕರು ಶೇರು ವ್ಯಾಪಾರದಿಂದ ಲಾಭ ಸಂಪಾದಿಸಿ ತಾವು ಆರಂಭಿಸಿದ ಉದ್ದಿಮೆಗಳನ್ನು ಹೊಸ ಮಾಲಕರಿಗೆ ಹಸ್ತಾಂತರಿಸಿದರು. ಮಾರುಕಟ್ಟೆಯ ಏರಿಳಿತದಿಂದಾಗಿ ಹೊಸ ಮಾಲಕರು ಉದ್ದಿಮೆಗಳಿಗೆ ಬೀಗ ಜಡಿದರೆಂದು ವರದಿಗಳಿವೆ. ಈ ಬೆಳವಣಿಗೆಗಳ ಹಿಂದೆ ಅಮೆರಿಕದ ಟ್ರಂಪ್ ಸರಕಾರದ ಆರ್ಥಿಕ ನೀತಿಗಳು, ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಸಂಭವಿಸುತ್ತಿರುವ ರಾಜಕೀಯ ವಿದ್ಯಮಾನಗಳು ಮತ್ತು ದೇಶದ ಆಂತರಿಕ ಅರ್ಥವ್ಯವಸ್ಥೆಗೆ ಸಮರ್ಥವಾದ ನಾಯಕತ್ವದ ಕೊರತೆಗಳು ಎದ್ದು ಕಾಣುತ್ತವೆ. ಭಾರತ ಅಮೆರಿಕ ವಾಣಿಜ್ಯ ಒಪ್ಪಂದಕ್ಕೆ ಇನ್ನೂ ಶುಭಗಳಿಗೆ ಒದಗಿಲ್ಲ. ಅದರ ಬಗೆಗೂ ಅನಿಶ್ಚಿತತೆ ಕಾಡುತ್ತಿದೆ. ಪರಿಣಾಮಗಳು ಸರಕಾರ, ಅದರ ಅಂಗ ಸಂಸ್ಥೆಗಳು ಹಾಗೂ ವಂದಿಮಾಗಧರು ರೂಪಾಯಿಯ ಬೆಲೆ ಕುಸಿದಾಗ ನಮ್ಮ ರಫ್ತುಗಳು ಅಗ್ಗವಾಗಿ ಅವುಗಳಿಗೆ ಉತ್ತೇಜನ ಸಿಗಲಿದೆ; ಆಮದು ದುಬಾರಿಯಾಗಿ ಅವುಗಳಲ್ಲಿ ಕಡಿತವಾಗಲಿದೆ ಎಂದು ಸಮಜಾಯಿಷಿಯನ್ನು ನೀಡಬಹುದು ಮತ್ತು ಬೆಲೆ ಕುಸಿತ ತಾತ್ಕಾಲಿಕ ಎನ್ನಬಹುದು (ವಿತ್ತ ಮಂತ್ರಿ ನಿರ್ಮಲಾ ಸೀತಾರಾಮನ್ ‘ರೂಪಾಯಿ ಕೃಶವಾಗಿಲ್ಲ, ಬದಲಿಗೆ ಡಾಲರು ಪ್ರಬಲವಾಗಿದೆ’ ಎಂದು ಹಿಂದೊಮ್ಮೆ ಹೇಳಿದ್ದು ಇಲ್ಲಿ ಸಂಗತವಾಗುತ್ತದೆ). ಆದರೆ ಈ ಬೆಳವಣಿಗೆಯಿಂದ ವಿವಿಧ ಕ್ಷೇತ್ರಗಳ ಮೇಲೆ ದುಷ್ಪರಿಣಾಮಗಳು ಆಗಿಯೇ ಆಗುತ್ತವೆ. ಆಮದು ದುಬಾರಿಯಾದಾಗ ಆಮದು ಮಾಡಿಕೊಂಡ ಕಚ್ಚಾ ವಸ್ತುಗಳ ಬೆಲೆ ಹೆಚ್ಚುತ್ತದೆ. ಇದರ ಪರಿಣಾಮ ಉತ್ಪಾದನಾ ವೆಚ್ಚದ ಮೇಲೆ ಆಗುತ್ತದೆ. ಇದರ ನೇರ ಪ್ರಭಾವ ಸಿದ್ಧಪಡಿಸಿದ ಸರಕುಗಳ ಬೆಲೆಯ ಮೇಲೆ ಆಗುತ್ತದೆ. ಇದರಿಂದ ಸಂಕಷ್ಟಕ್ಕೆ ಈಡಾಗುವವರು ಮಧ್ಯಮ ಮತ್ತು ತಳವರ್ಗದ ನಾಗರಿಕರು. ಆಮದು ಮಾಡಿದ ಕಚ್ಚಾವಸ್ತುಗಳ ಬೆಲೆ ಹೆಚ್ಚಿದಾಗ ಉತ್ಪಾದನಾ ವೆಚ್ಚ ಏರುತ್ತದೆ. ಗ್ರಾಹಕರ ಆದಾಯ ಸ್ಥಗಿತಗೊಂಡಾಗ ಉದ್ದಿಮೆಗಳ ಉತ್ಪನ್ನಗಳಿಗೆ ಮತ್ತು ಸೇವೆಗಳಿಗೆ ಬೇಡಿಕೆ ಕುಂಠಿತವಾಗಿ ಉತ್ಪಾದನೆಯಲ್ಲಿ ಕುಸಿತವಾಗುವ ಸಾಧ್ಯತೆ ಇದೆ. ಅನಿಶ್ಚಿತತೆಯ ಕಾರಣದಿಂದಾಗಿ ಬಂಡವಾಳದ ಒಳ ಹರಿವು ಕ್ಷೀಣಿಸುತ್ತದೆ. ವಿದೇಶಿ ವ್ಯಾಪಾರದಲ್ಲಿ ಮಿಗತೆಯ ಬದಲು ಖೋತಾ ಆದಾಗ ಆಮದು ಮಾಡಿಕೊಂಡ ಅಗತ್ಯ ವಸ್ತುಗಳ ಬಿಲ್ಲುಗಳನ್ನು ಸಂದಾಯಿಸಲು ದೇಶದ ವಿದೇಶಿ ವಿನಿಮಯವನ್ನು ಉಪಯೋಗಿಸಬೇಕಾಗುತ್ತದೆ. ಇದರಿಂದಾಗಿ ನಮ್ಮ ವಿದೇಶಿ ವಿನಿಮಯದ ದಾಸ್ತಾನು ಮತ್ತಷ್ಟು ಕ್ಷೀಣಿಸಬಹುದು. ಸರಕಾರವು ಅಂತರ್ರಾಷ್ಟ್ರೀಯ ಹಣಕಾಸು ಸಂಸ್ಥೆಗಳಿಂದ ಡಾಲರು ಮೂಲಕ ಪಡೆದ ಸಾಲಗಳ ಮೇಲಿನ ಬಡ್ಡಿ ಮತ್ತು ಮರುಪಾವತಿಯ ಭಾರ ಹೆಚ್ಚಾಗಿ ನಮ್ಮ ವಿದೇಶಿ ವಿನಿಮಯದ ರಾಶಿಗೆ ಹೊಡೆತ ಬೀಳಬಹುದು. ಅದೇ ರೀತಿ ವಿದೇಶಗಳಲ್ಲಿ ಉಚ್ಚ ಶಿಕ್ಷಣಕ್ಕೆ ಡಾಲರ್ ಸಾಲ ಪಡಕೊಂಡ ಯುವ ಜನರ ಮರುಪಾವತಿ ಹೊರೆಯೂ ಹೆಚ್ಚಾಗಲಿದೆ, ಅವರ ಭವಿಷ್ಯ ಡೋಲಾಯಮಾನವಾಗಲಿದೆ. ಆರ್ಥಿಕ ಸಮಸ್ಯೆಗಳನ್ನು ಎದುರಿಸುವಲ್ಲಿ ಅಪ್ರಬುದ್ಧತೆ ಇಂದಿನ ಅತ್ಯಂತ ಕಲುಷಿತ ರಾಜಕೀಯ ಪರಿಸ್ಥಿತಿಯಲ್ಲಿ ಹಿಂದಿನ ನಾಯಕರನ್ನು ದೂಷಿಸುವುದರಲ್ಲಿಯೇ ಕಾಲಹರಣವಾಗುತ್ತದೆ. ಚರ್ಚೆಗಳ ದಿಕ್ಕು ತಪ್ಪಿಸಲು ನಿರಂತರ ಪ್ರಯತ್ನ ನಡೆಯುತ್ತಿದೆ. 2013ರಲ್ಲಿ ರೂಪಾಯಿಯ ಬೆಲೆ ಕುಸಿಯುತ್ತಿದ್ದಾಗ ಅಂದು ಗುಜರಾತಿನ ಮುಖ್ಯಮಂತ್ರಿಗಳಾಗಿದ್ದ ನರೇಂದ್ರ ಮೋದಿ ಅವರು ಆಗಿನ ಪ್ರಧಾನಿ ಮನಮೋಹನ್ ಸಿಂಗ್ರ ಮೇಲೆ ಉಗ್ರವಾದ ಟೀಕಾಪ್ರಹಾರವನ್ನೇ ಮಾಡಿದ್ದರು. ಆಗ ಭಾರತೀಯ ಜನತಾ ಪಕ್ಷದ ವಕ್ತಾರೆಯಾಗಿದ್ದ (ಇಂದಿನ ಹಣಕಾಸು ಮಂತ್ರಿ) ನಿರ್ಮಲಾ ಸೀತಾರಾಮನ್ ಸುಮಾರಾಗಿ ಅದೇ ಧಾಟಿಯಲ್ಲಿ ಸರಕಾರವನ್ನು ಪ್ರಶ್ನಿಸಿದ್ದರು. ಅಂದಿನ ಅನೇಕ ಗಣ್ಯರು (ಶ್ರೀಶ್ರೀ ರವಿಶಂಕರ್, ತಾರೆ ಶಿಲ್ಪಾ ಶೆಟ್ಟಿ, ಉದ್ಯಮಿ ಆನಂದ್ ಮಹೀಂದ್ರರನ್ನು ಒಳಗೊಂಡು) ಮೋದಿ ಅವರು ಪ್ರಧಾನಿಯಾದರೆ ರೂಪಾಯಿ ಬೆಲೆ 40ರ ಆಸುಪಾಸಿನಲ್ಲಿಯೇ ಸ್ಥಿರವಾಗಲಿದೆ ಎಂದು ಘಂಟಾಘೋಷವಾಗಿ ಸಾರಿದ್ದರು. ಈಗ ರೂಪಾಯಿಯ ಮೌಲ್ಯವು 90ರನ್ನು ಮೀರಿದರೂ ಈ ಗಣ್ಯರು ಇಂದಿನ ಸರಕಾರವನ್ನು ಪ್ರಶ್ನಿಸುವ ಬದಲು ಜಾಣಮೌನಕ್ಕೆ ಶರಣಾಗಿದ್ದಾರೆ. 2013ರಲ್ಲಿ ರೂಪಾಯಿ ಬೆಲೆ ನಿರಂತರ ಕುಸಿಯುತ್ತಿದ್ದಾಗ ಪ್ರಧಾನಿ ಮನಮೋಹನ್ ಸಿಂಗ್ರವರು ಧೈರ್ಯವಾಗಿ ಸಂಸತ್ತನ್ನು ಉದ್ದೇಶಿಸಿ ಮಾತನಾಡಿ ಯಾಕೆ ರೂಪಾಯಿ ಬೆಲೆ ಕುಸಿಯುತ್ತಿದೆ ಮತ್ತು ಸರಕಾರವು ಏನು ಕ್ರಮಗಳನ್ನು ಕೈಗೊಳ್ಳಲಿದೆ ಎಂದು ತಿಳಿಸಿದ್ದರು. ಇದಕ್ಕೆ ವ್ಯತಿರಿಕ್ತವಾಗಿ 11 ವರ್ಷಗಳಲ್ಲಿ ರೂಪಾಯಿಯ ಬೆಲೆ ಸತತವಾಗಿ ಪತನವಾಗುತ್ತಿದ್ದಾಗ ಪ್ರಧಾನಿ ಮೋದಿ ಅವರು ಒಮ್ಮೆಯೂ ಈ ವಿಷಯದ ಬಗ್ಗೆ ಸರಕಾರದ ಅನಿಸಿಕೆಗಳನ್ನು ಮತ್ತು ಪರಿಹಾರೋಪಾಯಗಳನ್ನು ಸಂಸತ್ತಿನ ಮುಂದೆ ಇಡುವ ಸಾಹಸವನ್ನು ಮಾಡಲಿಲ್ಲ. ಅರ್ಥವ್ಯವಸ್ಥೆಯ ಜ್ವಲಂತ ಸಮಸ್ಯೆಗಳಿಗೆ ಪರಿಹಾರವನ್ನು ಪಕ್ಷಭೇದವನ್ನು ಬದಿಗಿರಿಸಿ ಚರ್ಚಿಸಿ ಕಂಡು ಹುಡುಕಬೇಕು. ಸ್ವತಂತ್ರ ತಜ್ಞರ ಅಭಿಪ್ರಾಯಗಳನ್ನು ಮುಕ್ತ ಮನಸ್ಸಿನಿಂದ ಸ್ವೀಕರಿಸಬೇಕು. ದೂರದೃಷ್ಟಿ ಹೊಂದಿದ ರಾಜಕೀಯ ನಾಯಕರು ಈ ದಾರಿಯನ್ನು ತುಳಿಯುತ್ತಾರೆ. ಆದರೆ ರಾಜಕೀಯ ಇಬ್ಬಂದಿತನವು ಸಾಮಾನ್ಯವಾದ ಇಂದಿನ ಪರಿಸ್ಥಿತಿಯಲ್ಲಿ ಈ ದಾರಿ ಬಿಸಿಲುಗುದುರೆಯಾಗಿಯೇ ಉಳಿಯುತ್ತದೆ.
ಒಂದು ಅಥವಾ ಎರಡು ಮಕ್ಕಳನ್ನಷ್ಟೇ ಮಾಡಿಕೊಳ್ಳಿ : ಸಿದ್ದರಾಮಯ್ಯ ಸಲಹೆ
ಧಾರವಾಡ, ಡಿಸೆಂಬರ್ 08: ನಿಮಗೆ ಜಾಸ್ತಿ ಮಕ್ಕಳು ಬೇಡ, ನೀವು ಎರಡೇ ಮಕ್ಕಳನ್ನು ಮಾಡಿಕೊಳ್ಳಿ. ಏಕೆಂದರೆ, ಭಾರತದಲ್ಲಿ ಜನಸಂಖ್ಯೆ ಅತಿಯಾಗಿ ಹೆಚ್ಚಾಗುತ್ತಿದೆ. ಜನಸಂಖ್ಯೆ ನಿಯಂತ್ರಣ ಇಂದಿನ ಅಗತ್ಯ ಎಂದು ನೂತನ ದಂಪತಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಲಹೆ ನೀಡಿದರು. ಧಾರವಾಡ ಜಿಲ್ಲೆ ನವಲಗುಂದ ಪಟ್ಟಣದ ಮಾಡೆಲ್ ಹೈಸ್ಕೂಲ್ ಮೈದಾನದಲ್ಲಿ ಭಾನುವಾರ ಶಾಸಕ ಎನ್. ಎಚ್.ಕೋನರಡ್ಡಿಯವರು ತಮ್ಮ ಪುತ್ರ
ಯಾಕಯ್ಯ ಸಣ್ಣಗಾಗಿದ್ದೀಯಾ, ನಾಟಿಕೋಳಿ ತಿನ್ನಬೇಕಯ್ಯಾ - ಆರ್ ಅಶೋಕ್ ಗೆ ಸಿದ್ದರಾಮಯ್ಯ ಸಲಹೆ
ಬೆಳಗಾವಿ ಸುವರ್ಣಸೌಧದಲ್ಲಿ ಸಿಎಂ ಸಿದ್ದರಾಮಯ್ಯ ಮತ್ತು ವಿಪಕ್ಷ ನಾಯಕ ಆರ್. ಅಶೋಕ್ ಭೇಟಿಯಾದರು. ಈ ವೇಳೆ ನಾಟಿಕೋಳಿ ಸೇವನೆ ಬಗ್ಗೆ ಇಬ್ಬರ ನಡುವೆ ಚರ್ಚೆ ನಡೆಯಿತು. ಆರ್. ಅಶೋಕ್ ನಾಟಿಕೋಳಿ ತಿನ್ನುವುದಿಲ್ಲ ಎಂದಾಗ, ಸಿಎಂ ಸಿದ್ದರಾಮಯ್ಯ ನಾಟಿಕೋಳಿ ತಿನ್ನಿ ಏನೂ ಆಗುವುದಿಲ್ಲ ಎಂದು ಸಲಹೆ ನೀಡಿದರು. ಇತ್ತೀಚೆಗೆ ನಡೆದ ಉಪಾಹಾರ ಕೂಟದಲ್ಲಿ ಸಿಎಂ ನಾಟಿಕೋಳಿ ಸಾಂಬಾರ್ ಸವಿದಿದ್ದನ್ನು ಇಲ್ಲಿ ಸ್ಮರಿಸಬಹುದು.
Gold Price on December 8: ಚಿನ್ನದ ದರ ಸತತ ಏರಿಕೆ, ಇಂದು ಒಂದೇ ದಿನಕ್ಕೆ ಭರ್ಜರಿ ಹೆಚ್ಚಳ..!
Gold Rate Today Bengaluru: ಚಿನ್ನದ ಬೆಲೆಯಲ್ಲಿ ಸತತವಾಗಿ ಏರಿಕೆ ಆಗುತ್ತಲೇ ಬಂದಿದೆ. ಮಾರುಕಟ್ಟೆ, ವಿದೇಶಿ ನೀತಿಗಳ ಬೆಳವಣಿಗೆ, ಬದಲಾವಣೆ ಹೊರತಾಗಿಯು ವಾರದ ಮೊದಲ ದಿನ ಸೋಮವಾರ ಡಿಸೆಂಬರ್ 08 ರಂದು ಬಂಗಾರದ ದರದಲ್ಲಿ ಏರಿಕೆ ಆಗಿದೆ. ಬೆಳ್ಳಿಯು ಇಂದು ಬೆಳ್ಳಿ ದರದಲ್ಲಿ ಕುಸಿತವಾಗಿದೆ. ನವೆಂಬ್ 29ರಿಂದ ನಿರಂತರವಾಗಿ ಏರಿಕೆ ಆಗುತ್ತಿರುವ ಚಿನ್ನ ದರ ಬೆಂಗಳೂರು ಸೇರಿ
ಜಾಗೃತಿಯ ಮಧ್ಯೆಯೂ ಸೈಬರ್ ಅಪರಾಧ ಪ್ರಕರಣಗಳಲ್ಲಿ ಹೆಚ್ಚಳ
ವಂಚನೆಗೆ ಒಳಗಾಗುತ್ತಿರುವವರಲ್ಲಿ ಸುಶಿಕ್ಷಿತರೇ ಅಧಿಕ!
ಅಮೆರಿಕ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಅಮೆರಿಕಕ್ಕೆ ವಿದೇಶಿಯರ ವಲಸೆಯನ್ನು ವಿರೋಧಿಸುವುದು ಎಂದರೆ, ಬಿಸಿ ನೀರಿನಲ್ಲಿ ಕೈ ಹಾಕಿದಂತೆಯೇ ಸರಿ. ಸ್ವತಃ ಅವರ ಪತ್ನಿ ಉಷಾ ವ್ಯಾನ್ಸ್ ಭಾರತೀಯ ಮೂಲದವರಾಗಿರುವುದರಿಂದ, ಜೆಡಿ ವ್ಯಾನ್ಸ್ ವಲಸೆಯನ್ನು ವಿರೋಧಿಸಿದಾಗಲೆಲ್ಲಾ ಅವರಿಗೆ ತಿರುಗುಬಾಣವಾಗುತ್ತದೆ. ಅದೇ ರೀತಿ ವಲಸಿಗರು ಅಮೆರಿಕನ್ ಕಾರ್ಮಿಕರ ಅವಕಾಶ ಕಸಿಯುತ್ತಿದ್ದಾರೆ ಎಂಬ ಅವರ ಇತ್ತೀಚಿನ ಹೇಳಿಕೆಯಿಂದ ಗರಂ ಆಗಿರುವ ನೆಟ್ಟಿಗರು, ಪತ್ನಿ ಉಷಾ ವ್ಯಾನ್ಸ್ ಮತ್ತು ಮಕ್ಕಳನ್ನು ಭಾರತಕ್ಕೆ ಗಡಿಪಾರು ಮಾಡುವಂತೆ ಒತ್ತಾಯ ಮಾಡಿದ್ದಾರೆ.
ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ಗೆ ’Mr Mrs ಎಂತೋಳ್ ಅವಳು’ ಎಂದ CM ಸಿದ್ದರಾಮಯ್ಯ
Siddaramaiah habit of speaking lightly continues : ನಮ್ಮ ರಾಜ್ಯದ ರಾಜ್ಯ ಸಭಾ ಸದಸ್ಯರು ಭಾರತದ ಹಣಕಾಸು ಹಾಗೂ ಕಾರ್ಪೊರೇಟ್ ವ್ಯವಹಾರಗಳ ಸಚಿವರಾಗಿರುವ ಶ್ರೀಮತಿ ನಿರ್ಮಲಾ ಸೀತಾರಾಮನ್ ರ ಬಗ್ಗೆ ಕರ್ನಾಟಕ ದ ಮುಖ್ಯಮಂತ್ರಿಗಳು ಕನಿಷ್ಠ ತಮ್ಮ ಸ್ಥಾನದ ಅರಿವಿಲ್ಲದೆ ಗೌರವ ಸೌಜನ್ಯ ಮರೆತು ಮಾತನಾಡಿದ್ದಾರೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಕಿಡಿಕಾರಿದ್ದಾರೆ.
ಬಿಎಂಟಿಸಿ ಬಸ್ಸಿನ ಡೀಸೆಲ್ ಗೂ ಕನ್ನ ಹಾಕಿದ ಖದೀಮರು! ಜಸ್ಟ್ 13 ನಿಮಿಷದಲ್ಲಿ 124 ಲೀಟರ್ ಇಂಧನ ಕಳವು
ರಾಂಪುರ ಪೆಟ್ರೋಲ್ ಬಂಕ್ನಲ್ಲಿ ನಿಲ್ಲಿಸಿದ್ದ ಬಿಎಂಟಿಸಿ ಬಸ್ನಿಂದ 124 ಲೀಟರ್ ಡೀಸೆಲ್ ಕಳುವಾಗಿದೆ. ಇಬ್ಬರು ದುಷ್ಕರ್ಮಿಗಳು ಕಾರಿನಲ್ಲಿ ಬಂದು ಈ ಕೃತ್ಯ ಎಸಗಿದ್ದಾರೆ. ಬಸ್ ಚಾಲಕ ಮತ್ತು ನಿರ್ವಾಹಕರು ನಿದ್ರಿಸುತ್ತಿದ್ದಾಗ ಈ ಕಳ್ಳತನ ನಡೆದಿದೆ. ಸುಮಾರು 11,000 ರೂಪಾಯಿ ನಷ್ಟ ಅಂದಾಜಿಸಲಾಗಿದೆ. ಪೊಲೀಸರು ದುಷ್ಕರ್ಮಿಗಳ ಬಂಧನಕ್ಕೆ ಪ್ರಯತ್ನಿಸುತ್ತಿದ್ದಾರೆ. ರಾತ್ರಿ ವೇಳೆ ವಾಹನಗಳ ಸುರಕ್ಷತೆ ಬಗ್ಗೆ ಇದು ಪ್ರಶ್ನೆ ಎತ್ತಿದೆ.
ಬಿಕ್ಕಟ್ಟಿನ ನಡುವೆಯೂ ಅಮೆರಿಕಾದ ಹಿರಿಯ ಅಧಿಕಾರಿಗಳು ಭಾರತಕ್ಕೆ 5 ದಿನಗಳ ಕಾಲ ಭೇಟಿ
ಅಮೆರಿಕದ ಶೇ. 50 ದಂಡಾತ್ಮಕ ಸುಂಕದ ನಡುವೆಯೂ, ಉಭಯ ದೇಶಗಳ ಸಂಬಂಧವನ್ನು ಬಲಪಡಿಸಲು ಅಮೆರಿಕದ ಉನ್ನತ ಅಧಿಕಾರಿ ಅಲಿಶನ್ ಹೂಕರ್ ಭಾರತಕ್ಕೆ ಭೇಟಿ ನೀಡಿದ್ದಾರೆ. ವ್ಯಾಪಾರ, ತಂತ್ರಜ್ಞಾನ ಮತ್ತು ಕಾರ್ಯತಂತ್ರದ ಸಹಕಾರವನ್ನು ಹೆಚ್ಚಿಸುವ ಗುರಿಯೊಂದಿಗೆ ಈ ಭೇಟಿ ಮಹತ್ವ ಪಡೆದಿದೆ.
Ration Card: ರಾಜ್ಯದಲ್ಲಿ ಪಡಿತರ ಚೀಟಿ ತಿದ್ದುಪಡಿಗೆ ಅವಕಾಶ: ಬೇಕಾಗುವ ದಾಖಲೆಗಳೇನು?
Ration Card: ರಾಜ್ಯದಲ್ಲಿ ಪಡಿತರ ಚೀಟಿ ಪ್ರಮುಖ ದಾಖಲೆಗಳಲ್ಲಿ ಒಂದಾಗಿದೆ. ಇದು ಬರೀ ರೇಷನ್ ಪಡೆಯಲು ಅಷ್ಟೇ ಅಲ್ಲದೆ, ಹಲವು ಸರ್ಕಾರಿ ಸೌಲಭ್ಯಗಳು ಸೇರಿದಂತೆ ಇನ್ನಿತರ ಅರ್ಜಿ ಸಲ್ಲಿಕೆ ವೇಳೆ ಅಗತ್ಯವಾಗಿ ಬೇಕೇ ಬೇಕಾಗುತ್ತದೆ. ಇದೀಗ ಈ ಪಡಿತರ ಚೀಟಿ ತಿದ್ದುಪಡಿಗೆ ಅವಕಾಶ ಕಲ್ಪಿಸಲಾಗಿದೆ. ಹಾಗಾದ್ರೆ ಯಾವೆಲ್ಲಾ ದಾಖಲೆಗಳು ಬೇಕು? ನೀವು ಪಾಲಿಸಬೇಕಾದ ನಿಯಮಗಳೇನು ಎನ್ನುವ ಸಂಪೂರ್ಣ
2017ರ ಲೈಂಗಿಕ ದೌರ್ಜನ್ಯ ಪ್ರಕರಣ: ಮಲಯಾಳಂ ನಟ ದಿಲೀಪ್ ಖುಲಾಸೆ
ಕೊಚ್ಚಿ: 2017ರಲ್ಲಿ ಮಲಯಾಳಂ ನಟಿಯೊಬ್ಬರ ಮೇಲೆ ನಡೆದಿದೆ ಎಂದು ಆರೋಪಿಸಿದ್ದ ಲೈಂಗಿಕ ದೌರ್ಜನ್ಯ ಮತ್ತು ಅಪಹರಣ ಪ್ರಕರಣದಲ್ಲಿ ನಟ ದಿಲೀಪ್ ಅವರಿಗೆ ಕೇರಳ ನ್ಯಾಯಾಲಯ ಸೋಮವಾರ ಖುಲಾಸೆ ನೀಡಿದೆ. ಸುಮಾರು 8 ವರ್ಷಗಳ ಕಾಲ ವಿಚಾರಣೆ ನಡೆದ ಈ ಪ್ರಕರಣದಲ್ಲಿ ದಿಲೀಪ್ ವಿರುದ್ಧ ಹೊರಡಿಸಿದ್ದ ಪಿತೂರಿ ಮತ್ತು ಸಾಕ್ಷ್ಯ ನಾಶಕ್ಕೆ ಸಹಾಯ ಮಾಡಿದ ಆರೋಪಗಳನ್ನು ನ್ಯಾಯಾಲಯ ತಳ್ಳಿಹಾಕಿದೆ. ಎರ್ನಾಕುಲಂ ಜಿಲ್ಲಾ ಮತ್ತು ಪ್ರಧಾನ ಸೆಷನ್ಸ್ ನ್ಯಾಯಾಧೀಶ ಹನಿ ಎಂ. ವರ್ಗೀಸ್ ಅವರು ಬೆಳಿಗ್ಗೆ 11 ಗಂಟೆಗೆ ತೀರ್ಪು ಪ್ರಕಟಿಸಿದರು. ದಿಲೀಪ್ ವಿರುದ್ಧ ಪ್ರಾಸಿಕ್ಯೂಷನ್ ಸಲ್ಲಿಸಿದ್ದ ಸಾಕ್ಷ್ಯಗಳು ಆರೋಪಗಳನ್ನು ಸಮರ್ಥಿಸುವಂತಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. 2017ರ ಫೆಬ್ರವರಿ 17ರಂದು ಕೊಚ್ಚಿಯಲ್ಲಿ ಪ್ರಮುಖ ನಟಿಯೊಬ್ಬರನ್ನು ಅಪಹರಿಸಿ, ಅವರ ಕಾರಿನೊಳಗೆ ಸುಮಾರು 2 ಗಂಟೆಗಳ ಕಾಲ ಲೈಂಗಿಕ ದೌರ್ಜನ್ಯ ಎಸಗಲಾಗಿತ್ತು ಎಂದು ಆರೋಪಿಸಲಾಗಿತ್ತು. ಈ ಘಟನೆ ದಕ್ಷಿಣ ಭಾರತದ ಸಿನಿಮಾರಂಗವನ್ನು ನಡುಗಿಸಿತ್ತು. ಈ ಪ್ರಕರಣದಲ್ಲಿ ಪಲ್ಸರ್ ಸುನಿ, ಮಾರ್ಟಿನ್ ಆಂಟೋನಿ, ಮಣಿಕಂಡನ್ ಬಿ., ವಿಜೇಶ್ ವಿಪಿ., ಸಲೀಂ ಎಚ್., ಪ್ರದೀಪ್, ಚಾರ್ಲಿ ಥಾಮಸ್, ಸನಿಲ್ ಕುಮಾರ್ ಅಲಿಯಾಸ್ ‘ಮೇಷ್ಟ್ರಿ ಸನಿಲ್’ ಮತ್ತು ಶರತ್ ಸೇರಿದಂತೆ ಒಟ್ಟು 10 ಮಂದಿ ಆರೋಪಿಗಳು ವಿಚಾರಣೆಯನ್ನು ಎದುರಿಸಿದ್ದರು.
ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ತಮ್ಮ ವಿರುದ್ದ ಭ್ರಷ್ಟಾಚಾರ ಸಾಬೀತಾದರೆ ತಕ್ಷಣ ಸ್ಥಾನದಿಂದ ಇಳಿಯುತ್ತೇನೆ ಎಂದಿದ್ದು, ತಮ್ಮ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆ ಸದನಕ್ಕೆ ಬಿಟ್ಟ ವಿಚಾರ ಎಂದು ಸ್ಪಷ್ಟಪಡಿಸಿದರು. ಅಷ್ಈಟೇ ಅಲ್ಲದೆ, ಕಳೆದ ಬಾರಿ ನಡೆದ ಸಿಟಿ ರವಿ ಹಾಗೂ ಲಕ್ಷ್ಮಿ ಹೆಬ್ಬಾಳ್ಕರ್ ಅವರ ವಿಚಾರದಲ್ಲಿ ನಾವು ಯಾವುದೇ ನಿರ್ಲಕ್ಷವಹಿಸಿಲ್ಲ. ಎಂದಿದ್ದಾರೆ.ಇದೇ ವೇಳೆ ಅವರು ಈ ಬಾರಿಯ ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಸಮಸ್ಯೆಗಳ ಚರ್ಚೆಗೆ ಆದ್ಯತೆ ನೀಡಲಾಗುವುದು ಎಂದು ತಿಳಿಸಿದ್ದಾರೆ.
ಬೆಳಗಾವಿ : 157ನೇ ಅಧಿವೇಶನದಲ್ಲಿ ಪ್ರತಿ ಬುಧವಾರ ಮತ್ತು ಗುರುವಾರ ಪೂರ್ತಿ ದಿನದ ಕಲಾಪವನ್ನು ಉತ್ತರ ಕರ್ನಾಟಕ, ಕಲ್ಯಾಣ ಕರ್ನಾಟಕ ಭಾಗದ ಜ್ವಲಂತ ಸಮಸ್ಯೆಗಳ ಚರ್ಚೆಗೆ ಮೀಸಲಿಡಲಾಗುವುದು ಎಂದು ಕರ್ನಾಟಕ ವಿಧಾನ ಪರಿಷತ್ ಸಭಾಪತಿಗಳಾದ ಬಸವರಾಜ ಹೊರಟ್ಟಿ ಅವರು ಹೇಳಿದರು. ಸುವರ್ಣಸೌಧದ ಎರಡನೇ ಮಹಡಿಯ ಕೊಠಡಿ ಸಂಖ್ಯೆ 238ರಲ್ಲಿ ಸೋಮವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರು. ಉತ್ತರ ಕರ್ನಾಟಕ ಹಾಗೂ ಕಲ್ಯಾಣ ಕರ್ನಾಟಕ ಭಾಗದ ಜ್ವಲಂತ ಸಮಸ್ಯೆಗಳ ಬಗ್ಗೆ 145ನೇ ಅಧಿವೇಶನದಲ್ಲಿ 6 ಗಂಟೆ 35 ನಿಮಿಷ ಚರ್ಚೆಯಾಗಿದ್ದು, 19 ಜನ ಪರಿಷತ್ ಶಾಸಕರು ಮಾತನಾಡಿದ್ದಾರೆ. 151ನೇ ಅಧಿವೇಶನದಲ್ಲಿ 1 ಗಂಟೆ 40 ನಿಮಿಷ ಚರ್ಚೆಯಾಗಿದ್ದು, 6 ಜನ ಪರಿಷತ್ ಶಾಸಕರು ಮಾತನಾಡಿದ್ದಾರೆ. 154ನೇ ಅಧಿವೇಶನದಲ್ಲಿ 5 ಗಂಟೆ 12 ನಿಮಿಷ ಚರ್ಚೆಯಾಗಿದ್ದು, 11 ಜನ ಪರಿಷತ್ ಶಾಸಕರು ಮಾತನಾಡಿದ್ದಾರೆ. ಅದೇ ರೀತಿ ಈ ಬಾರಿಯ ಅಧಿವೇಶನದಲ್ಲಿ ಸಹ ಉತ್ತರ ಕರ್ನಾಟಕ, ಕಲ್ಯಾಣ ಕರ್ನಾಟಕ ಭಾಗದ ಜ್ವಲಂತ ಸಮಸ್ಯೆಗಳ ಚರ್ಚೆಗೆ ವಿಶೇಷ ಅವಕಾಶ ಕಲ್ಪಿಸಲಾಗುವುದು ಎಂದು ಹೇಳಿದರು. ಪ್ರತಿ ಬುಧವಾರ ಮತ್ತು ಗುರುವಾರ ನಡೆಯುವ ಇಡೀ ದಿನದ ಕಲಾಪದಲ್ಲಿ ಪ್ರಶ್ನೋತ್ತರ, ಗಮನ ಸೆಳೆಯುವ ಸೂಚನೆ, ಶೂನ್ಯ ವೇಳೆ ಇದ್ಯಾವುದಕ್ಕು ಅವಕಾಶ ನೀಡದೇ ಕೃಷ್ಣಮೇಲ್ದಂಡೆ ಯೋಜನೆ, ಮಹಾದಾಯಿ, ಕಳಸಾ ಬಂಡೂರಿ ಯೋಜನೆಗಳ ಅನುಷ್ಠಾನದ ಬಗ್ಗೆ, ಅರಣ್ಯಭೂಮಿ ಅತೀಕ್ರಮಣ, ಸಂತ್ರಸ್ಥರ ಸಮಸ್ಯೆ ಹಾಗೂ ಪರಿಹಾರೋಪಾಯಗಳು., ಉತ್ತರ ಕರ್ನಾಟಕ ಭಾಗದ ರೈತರು ಎದುರಿಸುತ್ತಿರುವ ಸಮಸ್ಯೆಗಳು ಹಾಗೂ ಪರಿಹಾರಗಳು ಮತ್ತು ಉದ್ಯೋಗ ಸೃಷ್ಠಿಗೆ ಕ್ರಿಯಾಯೋಜನೆ ವಿಷಯಗಳ ಮೇಲೆ ಅಂದು ಇಡೀ ದಿನ ಚರ್ಚೆಗೆ ಅವಕಾಶ ನೀಡಲಾಗುವುದು. ಚರ್ಚೆ ಪೂರ್ಣವಾಗುವವರೆಗೆ ಸದನವನ್ನು ಮುಂದೂಡುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು. 157ನೇ ಪರಿಷತ್ ಅಧಿವೇಶನದಲ್ಲಿ 10 ದಿನಗಳನ್ನು ಉಪವೇಶನದ ದಿನಗಳೆಂದು ನಿಗದಿಪಡಿಸಲಾಗಿದೆ. ಪ್ರಸಕ್ತ ಅಧಿವೇಶನಕ್ಕೆ ಇದುವರೆಗೆ ಒಟ್ಟು 1,649 ಪ್ರಶ್ನೆಗಳನ್ನು ಸ್ವೀಕರಿಸಿದ್ದು, ಅವುಗಳಲ್ಲಿ 965 ಚುಕ್ಕೆ ಗುರುತಿನ ಹಾಗೂ 684 ಚುಕ್ಕೆ ರಹಿತ ಪ್ರಶ್ನೆಗಳಾಗಿವೆ. ನಿಯಮ 72ರಡಿ 112 ಸೂಚನೆಗಳನ್ನು ಸ್ವೀಕರಿಸಲಾಗಿದೆ. ನಿಯಮ 330 ರಡಿ ಬಂದಂತಹ 84 ಸೂಚನೆಗಳನ್ನು ಸ್ವೀಕರಿಸಲಾಗಿದೆ ಎಂದು ತಿಳಿಸಿದರು. ಮೊದಲ ದಿನ, ಕಳೆದ ಅಧಿವೇಶನದಿಂದೀಚೆಗೆ ಅಗಲಿದ ಗಣ್ಯ ವ್ಯಕ್ತಿಗಳ ಬಗ್ಗೆ ಸಂತಾಪ ಸೂಚನೆ ಇರಲಿದೆ. ಕಾರ್ಯಕಲಾಪಗಳ ಸಲಹಾ ಸಮಿತಿ ತೀರ್ಮಾನದಂತೆ ಇನ್ನೀತರೆ ವಿಷಯಗಳ ಮೇಲೆ ಚರ್ಚೆ ನಡೆಯಲಿದೆ ಎಂದು ಅವರು ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ವಿಧಾನ ಪರಿಷತ್ ಕಾರ್ಯದರ್ಶಿ ಕೆ ಆರ್ ಮಹಾಲಕ್ಷ್ಮಿ, ಅಪರ ಕಾರ್ಯದರ್ಶಿ ನಿರ್ಮಲಾ ಎಸ್ ಹಾಗು ಸಚಿವಾಲಯದ ಅಧಿಕಾರಿಗಳು ಇದ್ದರು.
ಅಮೆರಿಕ ಅಧ್ಯಕ್ಷರ ಪುತ್ರ ಡೊನಾಲ್ಡ್ ಟ್ರಂಪ್ ಉಕ್ರೇನ್-ರಷ್ಯಾ ಯುದ್ಧಕ್ಕೆ ಶಾಂತಿ ಒಪ್ಪಂದದ ಮಾತುಕತೆ ನಡೆಸುತ್ತಿರುವಾಗಲೇ, ಅವರ ಪುತ್ರ ಟ್ರಂಪ್ ಜೂನಿಯರ್ ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಯುದ್ಧವನ್ನು ಬೇಕಂತಲೇ ಎಳೆಯುತ್ತಿದ್ದಾರೆ ಎಂದು ಆರೋಪಿಸಿದ್ದು, ಯುದ್ಧ ನಿಂತರೆ ಚುನಾವಣೆ ಎದುರಿಸಬೇಕಾಗುತ್ತದೆ ಎಂಬ ಭಯದಿಂದ ಝೆಲೆನ್ಸ್ಕಿ ಹೀಗೆ ಮಾಡುತ್ತಿದ್ದಾರೆ ಎಂದಿದ್ದಾರೆ. ಹಾಗಾಗಿ ಬಹುಶಃ ಟ್ರಂಪ್ ಅವರು ಅವರಿಗೆ ನೀಡುತ್ತಿರುವ ಬೆಂಬಲವನ್ನು ಹಿಂಪಡೆಯಬಹುದು ಎಂಬ ಸುಳಿವನ್ನು ನೀಡಿದ್ದಾರೆ. ಅಲ್ಲದೆ, ರಷ್ಯಾಗಿಂತ ಹೆಚ್ಚು ಉಕ್ರೇನ್ ಭ್ರಷ್ಟಾಚಾರದಿಂದ ಕೂಡಿದೆ ಎಂದು ಟ್ರಂಪ್ ಜೂನಿಯರ್ ಟೀಕಿಸಿದ್ದಾರೆ. ಇದೇ ವೇಳೆ, ಯುರೋಪಿಯನ್ ಯೂನಿಯನ್ ರಷ್ಯಾದ ಮೇಲೆ ವಿಧಿಸಿರುವ ನಿರ್ಬಂಧಗಳು ತೈಲ ಬೆಲೆ ಏರಿಕೆಗೆ ಕಾರಣವಾಗಿವೆ ವಾಗ್ದಾಳಿ ನಡೆಸಿದ್ದಾರೆ. ಟ್ರಂಪ್ ಪುತ್ರನ ಈ ಹೇಳಿಕೆಗಳು ಅಮೆರಿಕದ ವಿದೇಶಾಂಗ ನೀತಿಯಲ್ಲಿ ಬದಲಾವಣೆ ತರಬಹುದೇ ಎಂಬ ಕುತೂಹಲ ಮೂಡಿಸಿದೆ.
ಉಡುಪಿ | ರೋಗಿಗೆ ಸಿಗಲಿಲ್ಲ ಆಂಬುಲೆನ್ಸ್ 108! : ಗೂಡ್ಸ್ ಟೆಂಪೋದಲ್ಲಿ ರೋಗಿ ಆಸ್ಪತ್ರೆಗೆ
ಉಡುಪಿ ಡಿ.8: ಉಡುಪಿ ನಗರದ ಉದ್ಯಾವರದಲ್ಲಿ ಅಸ್ವಸ್ಥಗೊಂಡ ರೋಗಿಯೊಬ್ಬರಿಗೆ ರಾತ್ರಿ 7:00 ಗಂಟೆಯಿಂದ 9 :30 ಗಂಟೆಯವರೆಗೆ ಯಾವುದೇ ಅಂಬುಲೆನ್ಸ್ ಸಿಗದ ಕಾರಣ ವಿಶು ಶೆಟ್ಟಿ ಅಂಬಲಪಾಡಿ ಅವರು ತನ್ನ ಗೂಡ್ಸ್ ಟೆಂಪೋದಲ್ಲಿ ಮಂಚ ಇರಿಸಿ ರೋಗಿಯನ್ನು ಆಸ್ಪತ್ರೆಗೆ ದಾಖಲಿಸಿದ ಘಟನೆ ನಡೆದಿದೆ . ರೋಗಿಯ ಸಂಬಂಧಪಟ್ಟವರು108 ಅಂಬುಲೆನ್ಸ್ ಗೆ ಕರೆ ಮಾಡಿದಾಗ ಅಂಬುಲೆನ್ಸ್ ಲಭ್ಯವಿರಲಿಲ್ಲ. ಖಾಸಗಿ ಅಂಬುಲೆನ್ಸ್ ಗಳು ಕೂಡ ಲಭ್ಯವಿಲ್ಲದಿರುವುದರಿಂದ ರೋಗಿಯ ಕಡೆಯವರು ವಿಶು ಶೆಟ್ಟಿ ಅವರನ್ನು ಸಂಪರ್ಕಿಸಿದ್ದಾರೆ. ವಿಶು ಶೆಟ್ಟಿ ಕೂಡ ಖಾಸಗಿ ಆಂಬುಲೆನ್ಸ್ ಸಂಪರ್ಕಿಸಿಯು ಅಂಬುಲೆನ್ಸ್ ಸಿಗದೇ ಇರುವುದರಿಂದ ರೋಗಿ ತೀರ ಚಿಂತಾ ಜನಕ ಪರಿಸ್ಥಿತಿ ತಲುಪಿದ್ದರಿಂದ ಬೇರೆ ದಾರಿ ಕಾಣದೆ ತನ್ನ ಗೂಡ್ಸ್ ಟೆಂಪೋ ಗೆ ಮಂಚ ಇರಿಸಿ ಅದರ ಮುಖಾಂತರ ರೋಗಿಯನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ. ಕಳೆದ ಒಂದು ವರುಷದಿಂದ 108 ಅಂಬುಲೆನ್ಸ್ ಸರಿಯಾಗಿ ಲಭ್ಯ ಇಲ್ಲದಿರುವುದರಿಂದ ನೂರಾರು ರೋಗಿಗಳು ಮೃತಪಟ್ಟಿದ್ದಾರೆ. ಈ ಬಗ್ಗೆ ನಾನು ಕಳೆದ ಒಂದು ವರ್ಷದಿಂದ ಸರಕಾರದ ಗಮನಕ್ಕೆ ತಂದರೂ, ಯಾವುದೇ ಪ್ರಯೋಜನ ಆಗಲಿಲ್ಲ. ಈ ಘಟನೆಯಲ್ಲಿ ಕೂಡ ಎರಡುವರೆ ಗಂಟೆ ಅಂಬುಲೆನ್ಸ್ ಸಿಗದೇ ರೋಗಿ ಚಿಂತಾ ಜನಕ ಪರಿಸ್ಥಿತಿ ತಲುಪಿದ್ದು, ವಿಧಿ ಇಲ್ಲದೆ ಗೂಡ್ಸ್ ಟೆಂಪೋದಲ್ಲಿ ರೋಗಿಯನ್ನು ಕರೆದುಕೊಂಡು ಹೋಗಬೇಕಾಯಿತು. ಇನ್ನಾದರೂ ಸರಕಾರ, ಜಿಲ್ಲಾಡಳಿತ ಈ ಬಗ್ಗೆ ಕ್ರಮ ತೆಗೆದುಕೊಂಡು ಸಹಕರಿಸಬೇಕು. ಸಾರ್ವಜನಿಕರ ಪ್ರಾಣವನ್ನು ನಿರ್ಲಕ್ಷಿಸಬಾರದು ಉಡುಪಿ ಜಿಲ್ಲೆಯಲ್ಲಿ 108 ಆಂಬುಲೆನ್ಸ್ 18 ಇದ್ದರೂ ಸೇವೆಗೆ ಸಿಗುವುದು ಐದರಿಂದ ಆರು ಮಾತ್ರ. -ವಿಶು ಶೆಟ್ಟಿ ಅಂಬಲಪಾಡಿ
ಲೋಕಸಭೆಯಲ್ಲಿ 'ವಂದೇ ಮಾತರಂ' ಗೀತೆಯ ಕುರಿತು 10 ಗಂಟೆಗಳ ಚರ್ಚೆ ನಡೆಯಲಿದೆ. ಪ್ರಧಾನಿ ಮೋದಿ, ಪ್ರಿಯಾಂಕಾ ಗಾಂಧಿ ಪಾಲ್ಗೊಳ್ಳಲಿದ್ದು, 150 ವರ್ಷಗಳ 'ವಂದೇ ಮಾತರಂ' ಅನ್ನು ರಾಷ್ಟ್ರಗೀತೆಯನ್ನಾಗಿ ಏಕೆ ಆರಿಸಲಿಲ್ಲ ಎಂಬುದು ಚರ್ಚೆಯ ಮುಖ್ಯಾಂಶವಾಗಿದೆ. ನೆಹರೂ ಸರ್ಕಾರವು ಸರಳತೆ ಮತ್ತು ಉಚ್ಚಾರಣೆಯ ಸುಲಭತೆಯನ್ನು ಗಮನಿಸಿ 'ಜನಗಣಮನ'ವನ್ನು ರಾಷ್ಟ್ರಗೀತೆಯನ್ನಾಗಿ ಆಯ್ಕೆ ಮಾಡಿತ್ತು.
ಆಘಾತಕಾರಿ ಕ್ರಮ ಎಂದು ಆಕ್ಷೇಪ ವ್ಯಕ್ತಪಡಿಸಿದ ಸರ್ವೋಚ್ಚ ನ್ಯಾಯಾಲಯ
ಹೈದರಾಬಾದ್ ರಸ್ತೆಗೆ ಡೊನಾಲ್ಡ್ ಟ್ರಂಪ್ ಹೆಸರು; ರೇವಂತ್ ರೆಡ್ಡಿ ಪ್ರಸ್ತಾವನೆಗೆ ಭಾಗ್ಯನಗರ ನೆನಪಿಸಿದ ಬಿಜೆಪಿ
ನಗರಗಳ ಮತ್ತು ರಸ್ತೆಗಳ ಮರುನಾಮಕರಣ ಮಾಡುವುದರಲ್ಲಿ ಉತ್ತರ ಪ್ರದೇಶ ಸರ್ಕಾರ ಎತ್ತಿದ ಕೈ. ಭಾರತೀಯ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಹೆಸರುಗಳನ್ನು ರಸ್ತೆಗಳಿಗೆ ಇಡುವುದನ್ನು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ರೂಡಿಸಿಕೊಂಡು ಬಂದಿದ್ದಾರೆ. ಆದರೆ ಇದೀಗ ತೆಲಂಗಾಣ ಸರ್ಕಾರ ಕೂಡ ಇಂತದ್ದೇ ನಡೆ ಕೈಗೊಂಡಿದ್ದು, ಹೈದರಾಬಾದ್ನ ಪ್ರಮುಖ ನಗರವೊಂದಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೆಸರಿಡುವ ತೀರ್ಮಾನ ಮಾಡಿದೆ. ಆದರೆ ಪ್ರತಿಪಕ್ಷ ಬಿಜೆಪಿ ಸಿಎಂ ರೇವಂತ್ ರೆಡ್ಡಿ ಅವರ ಈ ತೀರ್ಮಾನವನ್ನು ಟೀಕಿಸಿದೆ.
ಬಿಜೆಪಿಯವರು ಪುತಿನ್’ಗೆ ಲೋಕಸಭೆ ಟಿಕೆಟ್ ಕೊಡ್ತಾರೆ ಅನ್ಕೊಂಡಿದ್ದೆ : ಏನಿದು ವ್ಯಂಗ್ಯ?
Putin's India Visit : ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುತಿನ್ ಭೇಟಿಯ ಬಗ್ಗೆ ಕರ್ನಾಟಕ ಕಾರ್ಮಿಕ ಇಲಾಖೆಯ ಸಚಿವ ಸಂತೋಷ್ ಲಾಡ್ ವ್ಯಂಗ್ಯವಾಡಿದ್ದಾರೆ. ಮಾಧ್ಯಮದಲ್ಲಿ ಸಿಗುತ್ತಿದ್ದ ಅಬ್ಬರದ ಪ್ರಚಾರ ನೋಡಿ, ಅವರೇನೋ ಭಾರತದಲ್ಲಿ ಚುನಾವಣೆಗೆ ಸ್ಪರ್ಧೆ ಮಾಡುತ್ತಾರೆ ಎಂದು ಅಂದುಕೊಂಡೆ ಎಂದು ಸಚಿವರು ಲೇವಡಿ ಮಾಡಿದ್ದಾರೆ.
IMD Weather Alert: ವೈಪರೀತ್ಯ ಪ್ರಭಾವ! ಈ ಭಾಗಗಳಲ್ಲಿ ಶೀತದ ಅಲೆ ಎಚ್ಚರಿಕೆ, ಕೆಲವೆಡೆ ಮಳೆ ಮುನ್ಸೂಚನೆ
India Weather Forecast: ಭಾರತದಲ್ಲಿ ಹವಾಮಾನದ ಸ್ಥಿತಿಗತಿಗಳು ತೀವ್ರತರದಲ್ಲಿ ಬದಲಾಗುತ್ತಿವೆ. ರಾಷ್ಟ್ರ ರಾಜಧಾನಿ ದೆಹಲಿ ಮಾತ್ರವಲ್ಲದೇ ಇತರ ರಾಜ್ಯಗಳ ಭಾಗಗಳಲ್ಲಿ ದಟ್ಟ ಮಂಜು ಆವರಿಸಿದೆ. ಇದರೊಂದಿಗೆ ಕೆಲವು ಪ್ರದೇಶಗಳಲ್ಲಿ ಹವಾಮಾನ ವೈಪರಿತ್ಯಗಳ ಕಾರಣದಿಂದ ಅಲ್ಲಲ್ಲಿ ಮಳೆ ನಿರೀಕ್ಷೆ ಇದೆ. ಮೀನುಗಾರರಿಗೆ ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ಸಹ ನೀಡಲಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ಸೋಮವಾರ ಮುನ್ಸೂಚನೆ ನೀಡಿದೆ.
ಗೋವಾ ನೈಟ್ಕ್ಲಬ್ ನಲ್ಲಿ ದುರಂತ: ಕನಿಷ್ಠ 25 ಮಂದಿ ಮೃತ್ಯು; ನಾಲ್ವರ ಬಂಧನ, ಮೂವರು ಅಧಿಕಾರಿಗಳ ಅಮಾನತು
ಒಂದು ವಾರದಲ್ಲಿ ತನಿಖಾ ವರದಿ ಸಲ್ಲಿಸಲು ಸಮಿತಿ ರಚನೆ
ಆರೆಸ್ಸೆಸ್ ಮುಂದಿನ ಟಾರ್ಗೆಟ್ ಯುಪಿ!
ಯೋಗಿ-ಭಾಗವತ್ ಭೇಟಿ, ಕುಮಾರಸ್ವಾಮಿಯಿಂದ ಮಾಹಿತಿ ಪಡೆದ್ರಾ ಅಮಿತ್ ಶಾ?
ಸಂಪಾದಕೀಯ | ದ್ವೇಷಾಪರಾಧ ವಿರುದ್ಧದ ಕಾನೂನಿಗೆ ‘ಬೆರ್ಚಪ್ಪ’ನ ಸ್ಥಿತಿ ಬಾರದಿರಲಿ
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
Gold Rate Rise: 1.30 ಲಕ್ಷ ಮೀರಿದ ಸುದ್ಧ ಚಿನ್ನದ ಬೆಲೆ: ಇಂದು ಮತ್ತೆ ಏರಿಕೆ ಕಾಣಲು ಕಾರಣಗಳೇನು ಗೊತ್ತಾ?
ಚಿನ್ನದ ಬೆಲೆ ಗಗನಕ್ಕೇರುತ್ತಿದೆ, ಹೂಡಿಕೆ ಹೆಚ್ಚುತ್ತಿರುವ ಕಾರಣ ಚಿನ್ನದ ಬೆಲೆ ಗಗನಮುಖಿಯಾಗಿದೆ. ಈಗಾಗಲೇ 1 ಲಕ್ಷದ 30 ಸಾವಿರ ಮೀರಿ ಚಿನ್ನದ ಬೆಲೆ ಗಗನಕ್ಕೇರುತ್ತಿದೆ. ಪ್ರತಿನಿತ್ಯದ ಚಿನ್ನದ ಬೆಲೆ ತಿಳಿಯಲು ವಿಜಯ ಕರ್ನಾಟಕ ವೆಬ್ ಫಾಲೋ ಮಾಡಿ
ಕುಂದಾ ನಗರಿಯಲ್ಲಿ ಸದನ ಕದನ ಶುರು: ಚಳಿಯಲ್ಲೂ ಕಾವೇರುತ್ತಾ ಅಧಿವೇಶನ, ಈ ಬಾರಿ ಏನೆಲ್ಲಾ ಹೈಲೈಟ್ಸ್ ?
ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ಆರಂಭವಾಗಲಿದೆ. ಹತ್ತು ದಿನಗಳ ಕಾಲ ನಡೆಯುವ ಈ ಅಧಿವೇಶನದಲ್ಲಿ ಪ್ರಮುಖ ವಿಧೇಯಕಗಳು ಮಂಡನೆಯಾಗಲಿವೆ. ಬಿಜೆಪಿ ರೈತರ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಸರ್ಕಾರದ ವಿರುದ್ಧ ಹೋರಾಟ ನಡೆಸಲಿದೆ. ಸುವರ್ಣಸೌಧ ಮುತ್ತಿಗೆ ಹಾಕುವ ಮೂಲಕ ಸರ್ಕಾರದ ವೈಫಲ್ಯಗಳನ್ನು ಎತ್ತಿ ಹಿಡಿಯಲು ಬಿಜೆಪಿ ನಿರ್ಧರಿಸಿದೆ. ಕಬ್ಬು ದರ, ಮೆಕ್ಕೆಜೋಳ ಖರೀದಿ ಕೇಂದ್ರ, ನೀರಾವರಿ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಯಲಿದೆ.
ತಿರುಪತಿ ಸಂಸ್ಕೃತ ವಿವಿಯಲ್ಲಿ ಲೈಂಗಿಕ ಕಿರುಕುಳ: ಸಂಸತ್ನಲ್ಲಿ ಧ್ವನಿ ಎತ್ತಲು ಸಂಸದರ ನಿರ್ಧಾರ
ತಿರುಪತಿ ರಾಷ್ಟ್ರೀಯ ಸಂಸ್ಕೃತ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿನಿಯೊಬ್ಬರ ಮೇಲೆ ನಡೆದ ಲೈಂಗಿಕ ಕಿರುಕುಳ ಪ್ರಕರಣವು ಸಂಸತ್ತಿನಲ್ಲಿ ಮಹತ್ವದ ಚರ್ಚೆಗೆ ಕಾರಣವಾಗಿದೆ. ವೈ.ಎಸ್.ಆರ್. ಕಾಂಗ್ರೆಸ್ ಮತ್ತು ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಸಂಸದರು ಈ ಬಗ್ಗೆ ನಿರ್ಣಯ ಮಂಡಿಸಲಿದ್ದಾರೆ. ಆರೋಪಿತ ಪ್ರಾಧ್ಯಾಪಕರ ವಿರುದ್ಧ ಪ್ರಕರಣ ದಾಖಲಾಗಿದೆ. ವಿದ್ಯಾರ್ಥಿನಿಯ ಸುರಕ್ಷತೆ ಮತ್ತು ನ್ಯಾಯಕ್ಕಾಗಿ ಆಗ್ರಹಿಸಲಾಗಿದೆ. ಈ ಪ್ರಕರಣವು ಶಿಕ್ಷಣ ಸಂಸ್ಥೆಗಳಲ್ಲಿನ ಸುರಕ್ಷತೆಯ ಬಗ್ಗೆ ಪ್ರಶ್ನೆಗಳನ್ನು ಎತ್ತಿದೆ.
ಜರ್ಮನಿಯಲ್ಲಿ 9 ವರ್ಷಗಳಿಂದ ನೆಲೆಸಿರುವ ಭಾರತೀಯ ಮೂಲದ ಉದ್ಯಮಿ ಮಯೂಖ್ ಪಂಜಾ, ಜರ್ಮನ್ ಪೌರತ್ವ ನಿರಾಕರಿಸಿದ್ದಾರೆ. ತಾನು ಜರ್ಮನ್ ಸಮಾಜಕ್ಕೆ ಸೇರಿಲ್ಲ, ಮನದಾಳದಿಂದ ಭಾರತೀಯನೆಂದು ಹೇಳಿಕೊಂಡಿದ್ದಾರೆ. ಅಲ್ಲದೆ, ಜರ್ಮನ್ ಸಾಮಾಜದಲ್ಲಿ ಹಲವು ವಿಚಾರಗಳು ನನಗೆ ಅರ್ಥವಾದರೂ ನಾನು ಅವುಗಳೊಂದಿಗೆ ಬಾಂಧವ್ಯ ಬೆಳೆಸಲು ಸಾಧ್ಯವಿಲ್ಲ ಎಂದಿರುವ ಮಯೂಖ್ ನನಗೆ ಭಾರತ ಕ್ರಿಕೆಟ್ ಗೆದ್ದಾಗ ಆಗುವಷ್ಟು ಸಂತೋಷ ಜರ್ಮನ್ ಪುಟ್ಬಾಲ್ ಗೆದ್ದಾಗ ಆಗುವುದಿಲ್ಲಎಂದು ವಿವರಿಸಿದ್ದಾರೆ.ಅಷ್ಟೇ ಅಲ್ಲದೆ, ಭಾರತೀಯ ಪಾಸ್ಪೋರ್ಟ್ ತನ್ನ ಗುರುತಿನ ಸಂಕೇತವೆಂದು ಬಣ್ಣಿಸಿರುವ ಅವರ ನಿರ್ಧಾರಕ್ಕೆ ಸಾಮಾಜಿಕ ಜಾಲತಾಣದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮನದಾಳದಿಂದ ಭಾರತೀಯನ ಈ ಮಾತು ವಿದೇಶದಲ್ಲಿದ್ದರೂ ನಮ್ಮ ದೇಶದ ಹಾಗೂ ಮನೆಯ ವಾತವಾರಣದ ಭಾವನೆ ಸಿಗಲೂ ಸಾಧ್ಯವಿಲ್ಲ ಎಂಬುದನ್ನು ಒತ್ತಿ ಹೇಳುತ್ತಿದ್ದು, ಇದು ವಿದೇಶಕ್ಕೆ ಹೋಗಲು ಬಯಸುವವರನ್ನು ಯೋಚಿಸುವಂತೆ ಮಾಡಿದೆ.
Maize Price: ರೈತರಿಗೆ ಗುಡ್ ನ್ಯೂಸ್; ಮೆಕ್ಕೆ ಜೋಳ ಖರೀದಿ ಬಗ್ಗೆ ರಾಜ್ಯ ಸರ್ಕಾರದಿಂದ ಮಹತ್ವದ ನಿರ್ಧಾರ
ಬೆಂಗಳೂರು, ಡಿಸೆಂಬರ್ 08: ರಾಜ್ಯ ಸರ್ಕಾರವೂ ಮೆಕ್ಕೆ ಜೋಳ ಬೆಳೆ ಬೆಳೆದ ರೈತರಿಗೆ ಗುಡ್ ನ್ಯೂಸ್ ನೀಡಿದೆ. ಪ್ರತಿ ರೈತರಿಂದ ಖರೀದಿಸುವ ಮೆಕ್ಕೆಜೋಳದ ಗರಿಷ್ಠ ಮಿತಿಯನ್ನು 20 ಕ್ವಿಂಟಾಲ್ನಿಂದ 50 ಕ್ವಿಂಟಾಲ್ಗೆ ಹೆಚ್ಚಿಸಿ ದಿನಾಂಕ 02.12.2025 ರಂದು ತಿದ್ದುಪಡಿ ಆದೇಶ ಹೊರಡಿಸಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದಲ್ಲಿ ಹಾಗೂ ಕೃಷಿ ಸಚಿವ ಎನ್ .ಚಲುವರಾಯಸ್ವಾಮಿಯವರ ವಿಶೇಷ ಕಾಳಜಿ ಹಾಗೂ
ಮಂಗಳೂರು | ಕೆಎಫ್ಸಿ ಟ್ರೋಫಿ ಮುಡಿಗೇರಿಸಿಕೊಂಡ ಟೀಂ ಸರ್ಜನ್
ಕ್ರೀಡೆಗೆ ಧರ್ಮವಿಲ್ಲ, ಕ್ರೀಡಾಪಟುಗಳಿಗೆ ಕ್ರೀಡೆಯೇ ಧರ್ಮ : ಸಬ್ ಇನ್ ಸ್ಪೆಕ್ಟರ್ ಮಾರುತಿ ಪಿ.
ಮನೆಕೆಲಸಕ್ಕೆ, ವ್ಯಾಪಾರಕ್ಕೆ ಯಾರನ್ನಾದರೂ ನೇಮಿಸಿಕೊಳ್ಳುವ ಮೊದಲು ಗುರುತು ಪರಿಶೀಲಿಸಿ: ಯೋಗಿ ಆದಿತ್ಯನಾಥ್
ಉತ್ತರ ಪ್ರದೇಶದಲ್ಲಿ ರೋಹಿಂಗ್ಯಾ ಮತ್ತು ಬಾಂಗ್ಲಾದೇಶಿ ಅಕ್ರಮ ನುಸುಳುಕೋರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತಿದೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನಾಗರೀಕರಿಗೆ ಮನವಿ ಮಾಡಿದ್ದಾರೆ. ಮನೆಕೆಲಸಕ್ಕೆ ಅಥವಾ ವ್ಯಾಪಾರಕ್ಕೆ ಯಾರನ್ನಾದರೂ ನೇಮಿಸಿಕೊಳ್ಳುವ ಮೊದಲು ಅವರ ಗುರುತನ್ನು ಪರಿಶೀಲಿಸುವಂತೆ ಕರೆ ನೀಡಿದ್ದಾರೆ. ಅಕ್ರಮ ವಲಸಿಗರ ವಿರುದ್ಧ ಒಂದು ವಾರದ ವಿಶೇಷ ಪರಿಶೀಲನಾ ಅಭಿಯಾನ ಆರಂಭಿಸಲಾಗಿದೆ.
ಮುಂಬೈನ ಪೊಲೀಸ್ ಅಧಿಕಾರಿಗಳು ಪ್ರತಿ ವರ್ಷ ಮಾಹಿಮ್ ದರ್ಗಾಗೆ ಚಾದರ್ ಹೊತ್ತು ಮೆರವಣಿಗೆ ಮಾಡುವುದೇಕೆ?
ಮುಂಬೈ: ಪ್ರತಿವರ್ಷ ಮಾಹಿಮ್ ದರ್ಗಾದ ಉರೂಸ್ ಪ್ರಾರಂಭವಾದಂತೆ, ಪೊಲೀಸ್ ಬ್ಯಾಂಡ್ ಮುನ್ನಡೆಸುವ ಮೆರವಣಿಗೆ, ಹಸಿರು ಚಾದರ್ ಹೊತ್ತ ಹಿರಿಯ ಅಧಿಕಾರಿಗಳು ಮತ್ತು ನೂರಾರು ಸಮವಸ್ತ್ರಧಾರಿಗಳು ಸಾಲಾಗಿ ನಡೆಯುತ್ತಿರುವ ದೃಶ್ಯ ಮುಂಬೈ ನಗರದ ಬೀದಿಗಳಲ್ಲಿ ಕಂಡು ಬರುತ್ತದೆ. ಧಾರ್ಮಿಕ ಆಚರಣೆಯಂತೆ ಕಾಣುವ ಈ ಪದ್ಧತಿಗೆ ನಗರದ ವಸಾಹತು ಇತಿಹಾಸ, ಸೂಫಿ ಸಂತರೊಂದಿಗಿನ ನಗರದ ಐತಿಹಾಸಿಕ ಬಾಂಧವ್ಯ ಈ ಸಂಪ್ರದಾಯಕ್ಕೆ ಜೀವ ತುಂಬಿವೆ. ಆರು ಶತಮಾನಗಳ ಮಾಹಿಮ್ ದರ್ಗಾ ಮಖ್ದೂಮ್ ಅಲಿ ಮಹಿಮಿಯವರ ದರ್ಗಾ ಮುಂಬೈನ ಅತ್ಯಂತ ಹಳೆಯ ಸೂಫಿ ದಾರ್ಶನಿಕರ ಸ್ಥಳಗಳಲ್ಲಿ ಒಂದಾಗಿದೆ. ಹಝರತ್ ಮಖ್ದೂಮ್ ಅಲಿ ಮಹಿಮಿಯ ಪೂರ್ವಜರು ಬಸ್ರಾದ ಗವರ್ನರ್ ಹಜ್ಜಾಜ್ ಇಬ್ನ್ ಯೂಸುಫ್ ಅವರ ಕಿರುಕುಳದಿಂದ ಪಲಾಯನ ಮಾಡಿದ ನಂತರ ಕ್ರಿ.ಶ. 860ರ ಸುಮಾರಿಗೆ ಭಾರತಕ್ಕೆ ಬಂದರು ಎನ್ನುವ ಜನನಂಬಿಕೆ ಇದೆ. ಭಾರತದಲ್ಲೇ ಜನಿಸಿದ ಮಖ್ದೂಮ್ ಅಲಿ, ಇಸ್ಲಾಮಿಕ್ ಕಾನೂನು ಮತ್ತು ತತ್ತ್ವಶಾಸ್ತ್ರದಲ್ಲಿ ಪರಿಣತಿ ಪಡೆದ ನಂತರ ಮಹಿಮ್ ಸಮುದಾಯಕ್ಕೆ ಫಕೀಹ್, ಧಾರ್ಮಿಕ ಕಾನೂನು ಗುರುವಾಗಿ ನೇಮಕಗೊಂಡರು. 1431ರಲ್ಲಿ ಅವರ ನಿಧನದ ನಂತರ ನಿರ್ಮಾಣವಾದ ದರ್ಗಾ, ಶತಮಾನಗಳಿಂದ ನಾವಿಕರು, ವ್ಯಾಪಾರಿಗಳು ಮತ್ತು ವಿವಿಧ ಸಮುದಾಯಗಳಿಗೆ ಆಧ್ಯಾತ್ಮಿಕ ಆಶ್ರಯ ಒದಗಿಸಿದೆ. ಪೊಲೀಸರ ನಂಟು ಹೇಗೆ ಬಂತು? : ಔಪಚಾರಿಕ ಮುಂಬೈ ಪೊಲೀಸ್ ವ್ಯವಸ್ಥೆ ರೂಪಗೊಳ್ಳುವ ಮುನ್ನ, ಭಂಡಾರಿ ಮಿಲಿಟಿಯಾ ಎಂಬ ಸ್ಥಳೀಯ ಕಾವಲು ದಳವೇ ಕಾನೂನು ಸುವ್ಯವಸ್ಥೆಯ ಹೊಣೆ ಹೊತ್ತಿತ್ತು. ಅವರ ಚೌಕಿಗಳು ಸಂತರು ವಾಸಿಸುತ್ತಿದ್ದ ಅಥವಾ ಬೋಧನೆ ನೀಡುತ್ತಿದ್ದ ಪ್ರದೇಶಗಳ ಹತ್ತಿರವಿದ್ದ ಕಾರಣ, ಸೂಫಿ ಪರಂಪರೆ ಮತ್ತು ಸ್ಥಳೀಯ ಕಾವಲುಗಾರರ ನಡುವೆ ಸೌಹಾರ್ದ ನಂಟು ಬೆಳೆದಿತ್ತು. ಕೆಲ ಸಂದರ್ಭಗಳಲ್ಲಿ ಮಿಲಿಟಿಯಾ ಸದಸ್ಯರು “ಕಾಣದ ಶಕ್ತಿ ಸಹಾಯ ಮಾಡುತ್ತಿದೆ” ಎಂದು ನಂಬಿದ್ದರು. ಈ ದಂತಕಥೆಗಳು ಮುಂದಿನ ಪೊಲೀಸ್ಪಡೆ–ದರ್ಗಾ ನಂಟಿನ ಭಾವನಾತ್ಮಕ ನೆಲೆಯಾಗಿ ಉಳಿದಿವೆ ಎಂಬ ಮಾತು ಜನಜನಿತವಾಗಿದೆ. ಈ ನಂಟು ಮೆರವಣಿಗೆಯ ರೂಪದಲ್ಲಿ ವಾಸ್ತವವಾಗಿರುವುದನ್ನು 1909–1916ರ ಪೊಲೀಸ್ ಆಯುಕ್ತ ಎಸ್.ಎಂ.ಎಡ್ವರ್ಡ್ಸ್ ತಮ್ಮ ದಾಖಲೆಯಲ್ಲಿ ಉಲ್ಲೇಖಿಸಿದ್ದಾರೆ. 1910ರ ಬಾಂಬೆ ಗೆಜೆಟಿಯರ್ನಲ್ಲಿ “ಪೊಲೀಸ್ ಮೆರವಣಿಗೆ ಉರೂಸ್ನ ಪ್ರಮುಖ ಅಂಗ” ಎಂದು ಹಳೆಯ ದಾಖಲೆಗಳಿವೆ. ಇಂದಿಗೂ, ಮುಂಬೈ ಪೊಲೀಸರು ಸಿಬ್ಬಂದಿಯಿಂದ 25 ರೂ. ಸಂಗ್ರಹಿಸಿ ದರ್ಗಾಗೆ ಅರ್ಪಿಸುವ ಚಾದರ್ ಸೇರಿದಂತೆ ಕಾಣಿಕೆಗಳನ್ನು ವ್ಯವಸ್ಥೆ ಮಾಡುವ ವಿಶೇಷ ಟ್ರಸ್ಟ್ ನಡೆಸುತ್ತಿದ್ದಾರೆ. ರೆಹಮಾನ್ ಶಾ ಬಾಬಾ ದರ್ಗಾದಲ್ಲೂ ಸಂಪ್ರದಾಯ ಜೀವಂತ : ಮಾಹಿಮ್ ಮಾತ್ರವಲ್ಲ ಡೋಂಗ್ರಿಯ ಹಾಜಿ ರೆಹಮಾನ್ ಶಾ ಬಾಬಾ ದರ್ಗಾದಲ್ಲಿಯೂ ಪೊಲೀಸರಿಂದ ನಡೆಯುವ ವಾರ್ಷಿಕ ಕಾಣಿಕೆ ಚಾದರ್ ಅರ್ಪಣೆ ಆಚರಣೆ ಚಾಲ್ತಿಯಲ್ಲಿದೆ. 19ನೇ ಶತಾಬ್ಧಿಯಲ್ಲಿ ಸೇಲಂನಲ್ಲಿ ಜನಿಸಿ ಬಳಿಕ ಬಾಂಬೆ ಸೇರಿದ್ದ ರೆಹಮಾನ್ ಶಾ ಬಾಬಾ ಅವರ ಬಗ್ಗೆ ಹಲವು ದಂತಕಥೆಗಳು ಪ್ರಸಿದ್ಧ—ವಿಶೇಷವಾಗಿ “ಎಷ್ಟೇ ದೂರುಗಳು ಬಂದರೂ ಅವರನ್ನು ಬಂಧಿಸಲು ಪೊಲೀಸರಿಗೆ ಸಾಧ್ಯವಾಗಲಿಲ್ಲ” ಎನ್ನುವ ಕಥನ. 1915ರಲ್ಲಿ ಅವರ ನಿಧನದ ನಂತರ, ಸ್ಥಳೀಯ ಸಮುದಾಯದ ಗೌರವ ಹಾಗೂ ಅವರ ಪ್ರಭಾವ ಪರಿಗಣಿಸಿ ಬಾಂಬೆ ಪೊಲೀಸರು ದರ್ಗಾಗೆ ಗೌರವ ಸಲ್ಲಿಸಲು ಆರಂಭಿಸಿದರು. ಈ ವರ್ಷ ಅಕ್ಟೋಬರಲ್ಲಿಯೂ ಮುಂಬೈ ಪೊಲೀಸ್ ಆಯುಕ್ತರು ಸ್ವತಃ ಸಂದಲ್ ಮೆರವಣಿಗೆಗೆ ನೇತೃತ್ವವಹಿಸಿ ದರ್ಗಾಗೆ ಚಾದರ್ ಅರ್ಪಿಸಿದರು. ಧರ್ಮಕ್ಕಿಂತಲೂ ನಗರ ನಿರ್ವಹಣೆಯ ಪರಂಪರೆ : ಮಹಿಮ್, ಹಾಜಿ ಅಲಿ, ಡೋಂಗ್ರಿ ಇವು 19ನೇ–20ನೇ ಶತಮಾನಗಳಲ್ಲಿ ಮುಂಬೈನ ಅತಿದೊಡ್ಡ ಸಾರ್ವಜನಿಕ ಕೇಂದ್ರಗಳು. ಉರೂಸ್ ಸಂದರ್ಭದಲ್ಲಿ ಸಾವಿರಾರು ಜನ ಸೇರುವುದರಿಂದ ಸಂಚಾರ, ಕಳ್ಳತನ, ಜಗಳ, ಕಾಲ್ತುಳಿತದಂತಹ ಪೊಲೀಸ್ ಕಾವಲು ಅಗತ್ಯವಾಗುತ್ತಿತ್ತು. ಉರೂಸ್ ಸಮಿತಿಯೊಂದಿಗೆ ಈ ನಿರಂತರ ಸಮನ್ವಯವು ಕೊನೆಗೆ ವಿಧ್ಯುಕ್ತ ಸಮಾರಂಭವಾಗಿ ರೂಪುಗೊಂಡಿತು. ಹಳೆಯ ಪೊಲೀಸ್ ಚೌಕಿಗಳು ದರ್ಗಾಗಳ ಪಕ್ಕದಲ್ಲಿಯೇ ಇದ್ದುದರಿಂದ ಸಂಬಂಧ ಮತ್ತಷ್ಟು ಗಾಢವಾಯಿತು. ಬ್ರಿಟಿಷ್ ಆಡಳಿತವು ಡಾಕ್ಯಾರ್ಡ್ ಉದ್ವಿಗ್ನತೆ ಮತ್ತು ಕೋಮು ಗಲಭೆಗಳನ್ನು ತಗ್ಗಿಸಲು ಸಮುದಾಯ ಸಂಸ್ಥೆಗಳೊಂದಿಗೆ ಸ್ನೇಹಪೂರ್ಣ ನಂಟನ್ನು ಬೆಳೆಸಲು ಪೊಲೀಸರಿಗೆ ಪ್ರೇರಣೆ ನೀಡಿತ್ತು.
ಡಿಸೆಂಬರ್ 8ರಂದು ರಾಜ್ಯದಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ?: ಜಿಲ್ಲಾವರು ಅಂಕಿಅಂಶಗಳ ವಿವರ
Petrol, Diesel Price: ಪೆಟ್ರೋಲ್, ಡೀಸೆಲ್ ದರಲ್ಲಿ ಜಾಸ್ತಿ ಅಲ್ಲದಿದ್ದರೂ, ಸ್ವಲ್ಪ ಪ್ರಮಾಣದಲ್ಲಾದ್ರೂ ಏರಿಳಿತ ಆಗುತ್ತಿರುತ್ತದೆ. ಹಾಗಾದರೆ, ಇಂದು (ಡಿಸೆಂಬರ್ 8) ಬೆಂಗಳೂರು ಸೇರಿದಂತೆ ರಾಜ್ಯದ ಉಳಿದ ಜಿಲ್ಲೆಗಳಲ್ಲಿ ಲೀಟರ್ ಪೆಟ್ರೋಲ್, ಡೀಸೆಲ್ ಬೆಲೆ ಎಷ್ಟಿದೆ ಎನ್ನುವ ಅಂಕಿಅಂಶಗಳನ್ನು ಇಲ್ಲಿ ನೀಡಲಾಗಿದೆ ಕಣ್ಣಾಡಿಸಿ. ಶಕ್ತಿಯ ಮೂಲ ಎನಿಸಿಕೊಂಡಿರುವ ಪೆಟ್ರೋಲ್ ಮತ್ತು ಡೀಸೆಲ್ ಇಂಧನ ಅತ್ಯವಶ್ಯಕವಾಗಿ ಬೇಕಾಗುವ ಸಂಪನ್ಮೂಲಗಳಲ್ಲಿ
ಬೆಳುವಾಯಿ ಹೈಸ್ಕೂಲ್ ಸ್ಥಾಪಕ ಜೆ.ಎಂ.ಪಡುಬಿದ್ರಿ
ಮೂಡುಬಿದಿರೆ : ವಿದ್ಯಾವರ್ಧಕ ಸಂಘ, ಬೆಳುವಾಯಿ ಇದರ ಆಡಳಿತದಲ್ಲಿ ನಡೆಸಲ್ಪಡುವ ಸ್ವಾಮಿ ಮುಕ್ತಾನಂದ ಪರಮಹಂಸ ಪ್ರೌಢಶಾಲೆ, ಕೆಸರಗದ್ದೆ, ಬೆಳುವಾಯಿ ಇದರ ಸ್ಥಾಪಕ ಜೆ.ಎಂ.ಪಡುಬಿದ್ರಿ ಇವರು ಡಿ.6ರಂದು ಮೂಡುಬಿದಿರೆ ಜೈನ್ ಪೇಟೆಯ ನಿವಾಸದಲ್ಲಿ ನಿಧನ ಹೊಂದಿದರು. ಬಾಲ್ಯದಲ್ಲಿ ಮುಂಬಯಿಗೆ ಹೋಗಿ, ಕ್ಯಾoಟೀನ್ ಉದ್ಯೋಗದೊಂದಿಗೆ ರಾತ್ರಿ ಶಾಲೆಯಲ್ಲಿ ವಿದ್ಯಾಭ್ಯಾಸವನ್ನು ಮುಂದುವರೆಸಿ, ಮುಂಬೈ ಯಲ್ಲಿ ಯಂಗ್ ಮೆನ್ ಸೊಸೈಟಿ ಇವನಿಂಗ್ ಸ್ಕೂಲ್ ಸ್ಥಾಪಿಸಿ ಪ್ರಾoಶುಪಾಲರೂ ಆಗಿದ್ದರು. ನಂತರ ಮುಂಬೈಯಲ್ಲಿ ಜೆ ಎಮ್ಸ್ ಕೆಟರಿಂಗ್ ಎಂಬ ಸ್ವಂತ ಉದ್ದಿಮೆಯನ್ನು ನೆಡೆಸಿದ್ದರು. ಹರಿಹರದ ಆದಿತ್ಯ ಬಿರ್ಲಾ ಗ್ರೂಪ್ ಗ್ರಾಸಿಂ ಇಂಡಸ್ಟ್ರಿಯಲ್ಲಿ ಉದ್ಯೋಗಿಯಾಗಿದ್ದು, ಚಲನಚಿತ್ರವಾಗಿ ಪ್ರಸಿದ್ದಿಯಾದ ಗುಡ್ಡೆದ ಭೂತ ನಾಟಕದಲ್ಲಿಯೂ ನಟಿಸಿದ್ದರು. ಅಲ್ಲದೆ ಕಂಗಿಲು ಜಾನಪದ ನೃತ್ಯದ ಕಲಾವಿದರೂ ಆಗಿದ್ದು, ಹಲವಾರು ಕಾರ್ಯಕ್ರಮ ನೀಡಿದ್ದರು. ಮೂಲತಃ ಸಿಪಾಯಿ ಮನೆ ಪಡುಬಿದ್ರಿ ಇಲ್ಲಿಯ ಮನೆತನದವರಾಗಿದ್ದು, ನಂತರ ಬೆಳುವಾಯಿಯಲ್ಲಿ ವಾಸವಾಗಿದ್ದು,1979 ರಲ್ಲಿ ಬೆಳುವಾಯಿ ತುಳುನಾಡ ಹೈಸ್ಕೂಲ್ ಸ್ಥಾಪಿಸಿದರು. ಮುಂದೆ 1982ರಲ್ಲಿ ಸ್ವಾಮಿ ಮುಕ್ತಾನಂದ ಪರಮಹಂಸ ಪ್ರೌಢ ಶಾಲೆಯಾಗಿ ನಾಮಕರಣಗೊಂಡಿತು. ಮೃತರು ಪತ್ನಿ, ಪುತ್ರಿ, 2 ಪುತ್ರರನ್ನು ಅಗಲಿದ್ದಾರೆ.
ಬೆಂಗಳೂರು ಮೆಟ್ರೋ ರೈಲು ನಿಗಮವು ಹಳದಿ ಮಾರ್ಗಕ್ಕೆ ಆರು ಹೊಸ ಚಾಲಕರಹಿತ ರೈಲುಗಳನ್ನು ಖರೀದಿಸಲು ಬಿಇಎಂಎಲ್ ಜೊತೆ ಒಪ್ಪಂದ ಮಾಡಿಕೊಂಡಿದೆ. 2027ರ ವೇಳೆಗೆ ಈ ರೈಲುಗಳು ಪೂರೈಕೆಯಾಗುವ ನಿರೀಕ್ಷೆಯಿದೆ. ಮುಂದಿನ ಎರಡು ವರ್ಷಗಳಲ್ಲಿ ಎಲ್ಲಾ ಮಾರ್ಗಗಳಲ್ಲಿ ಪ್ರತಿ ನಾಲ್ಕು ನಿಮಿಷಕ್ಕೊಂದು ರೈಲು ಓಡಿಸುವ ಯೋಜನೆಯನ್ನು ಬಿಎಂಆರ್ ಸಿಎಲ್ ಈ ಮೂಲಕ ಪ್ರಯಾಣಿಕರ ಅನುಕೂಲ ಹೆಚ್ಚಲಿದೆ.
ದೇಶದ ಒಟ್ಟು 8 ಲಕ್ಷ ವಕ್ಫ್ ಆಸ್ತಿಗಳ ಪೈಕಿ ಕೇವಲ 2.16 ಲಕ್ಷ ಆಸ್ತಿಗಳು ಮಾತ್ರ ನೋಂದಣಿ
ದೇಶದಲ್ಲಿ ಒಟ್ಟು 8.8 ಲಕ್ಷ ವಕ್ಫ್ ಆಸ್ತಿಗಳಿವೆ. ಉತ್ತರ ಪ್ರದೇಶವು ಸುನ್ನಿ ಮತ್ತು ಶಿಯಾ ಮಂಡಳಿಗಳ ಅಡಿಯಲ್ಲಿ 2.4 ಲಕ್ಷ ಆಸ್ತಿಗಳೊಂದಿಗೆ ಅತಿ ಹೆಚ್ಚು ವಕ್ಫ್ ಆಸ್ತಿಗಳನ್ನು ಹೊಂದಿದೆ. ನಂತರದ ಸ್ಥಾನಗಳಲ್ಲಿ ಪಶ್ಚಿಮ ಬಂಗಾಳ (80,480), ಪಂಜಾಬ್ (75,511), ತಮಿಳುನಾಡು (66,092), ಮತ್ತು ಕರ್ನಾಟಕ (65,242) ಇವೆ. ಕರ್ನಾಟಕವು ತನ್ನ ಒಟ್ಟು ವಕ್ಫ್ ಆಸ್ತಿಗಳ ಶೇಕಡಾ 81 ರಷ್ಟು ಅಂದರೆ 52,917 ಆಸ್ತಿಗಳನ್ನು ಯಶಸ್ವಿಯಾಗಿ ನೋಂದಾಯಿಸಿದೆ.
ವಂದೇ ಮಾತರಂ ಗೀತೆಗೆ 150 ವರ್ಷ; ಲೋಕಸಭೆಯಲ್ಲಿ ವಿಶೇಷ ಚರ್ಚೆಗೆ ಚಾಲನೆ ನೀಡಲಿರುವ ನರೇಂದ್ರ ಮೋದಿ
ಸ್ವಾತಂತ್ರ್ಯ ಹೋರಾಟಕ್ಕೆ ಸ್ಪೂರ್ತಿ ನೀಡಿದ, ದೇಶದ ಸ್ವಾತಂತ್ರ್ಯಕ್ಕಾಗಿ ನಗುನಗುತ್ತಾ ಹುತಾತ್ಮರಾದ ಅದೆಷ್ಟೋ ದೇಶಭಕ್ತರಿಗೆ ಪ್ರೇರಣೆ ನೀಡಿದ ಮತ್ತು ಈಗಲೂ ದೇಶವನ್ನು ಒಗ್ಗೂಡಿಸಿರುವ ವಂದೇ ಮಾತರಂ ಗೀತೆಗೆ 150 ವರ್ಷಗಳು ತುಂಬಿವೆ. ಈ ಸಂದರ್ಭದಲ್ಲಿ ದೇಶದ ಐಕ್ಯತೆಗೆ ಕಾರಣವಾಗಿರುವ ಈ ದೇಶಭಕ್ತಿ ಗೀತೆಯ ಕುರಿತು, ಪ್ರಧಾನಿ ಮೋದಿ ಇಂದು ಲೋಕಸಭೆಯಲ್ಲಿ ವಿಶೇಷ ಚರ್ಚೆಯನ್ನು ಆರಂಭಿಸಲಿದ್ದಾರೆ. ಸದನದಲ್ಲಿ ವಂದೇ ಮಾತರಂ ಗೀತೆಯ 150 ವರ್ಷಗಳ ಇತಿಹಾಸದ ಬಗ್ಗೆ ಪ್ರಧಾನಿ ಮೋದಿ ಸುದೀರ್ಘವಾಗಿ ಮಾತನಾಡಲಿದ್ದಾರೆ.
ನವ ಮಂಗಳೂರು ಬಂದರು: ಭದ್ರತೆಯಲ್ಲಿ ದೇಶದಲ್ಲೇ ಫಸ್ಟ್! ಹೇಗಿದೆ ಗೊತ್ತಾ ಇಲ್ಲಿನ ಸೆಕ್ಯುರಿಟಿ
ನವ ಮಂಗಳೂರು ಬಂದರು ಪ್ರಾಧಿಕಾರವು ಸುರಕ್ಷತೆ ಮತ್ತು ದಕ್ಷತೆಯನ್ನು ಹೆಚ್ಚಿಸಲು ಅತ್ಯಾಧುನಿಕ ಅಂಡರ್ ವೆಹಿಕಲ್ ಸ್ಕ್ಯಾನರ್ ಸಿಸ್ಟಮ್ (ಯುವಿಎಸ್ಎಸ್) ಅಳವಡಿಸಿಕೊಂಡಿದ್ದು ಇದು ದೇಶದಲ್ಲೇ ಪ್ರಥಮವಾಗಿದೆ. ಇಲ್ಲಿನ ಸುರಕ್ಷತೆಗಾಗಿ ಹಲವು ಸುಧಾರಿತ ಕ್ರಮಗಳಿದ್ದು, ಇಲ್ಲಿದೆ ನೋಡಿ ವಿವರ..
ಡಿ.12 ಅಂತಿಮ ಗಡುವು
ಶಿವು ಕೈಹಿಡಿದ ಸುಭಾಷ್ ಪಾಳೇಕಾರ್ರ ಸಮಗ್ರ ಕೃಷಿ ಪದ್ಧತಿ
ಮಂಡ್ಯ: ಭತ್ತ, ಕಬ್ಬು, ರಾಗಿ, ಹಿಪ್ಪುನೇರಳೆಯಂತಹ ಸಾಂಪ್ರದಾಯಿಕ ಬೇಸಾಯ ಪದ್ಧತಿಗೆ ಜೋತುಬಿದ್ದಿದ್ದ ಜಿಲ್ಲೆಯ ಹಲವು ಕೃಷಿಕರು ಪರ್ಯಾಯ ಕೃಷಿಯತ್ತ ಹೊರಳಿದ್ದಾರೆ. ಕಡಿಮೆ ಹಿಡುವಳಿಯಲ್ಲೇ ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಂಡು ಅನೇಕ ಯುವಕರು ಕೃಷಿಯಲ್ಲೂ ಲಾಭ ಕಂಡುಕೊಂಡು ಇತರರಿಗೆ ಮಾದರಿಯಾಗುತ್ತಿದ್ದಾರೆ. ಇಂತಹವರ ಪೈಕಿ ಮದ್ದೂರು ತಾಲೂಕು ಬನ್ನಹಳ್ಳಿ ಗ್ರಾಮದ ದಿವಂಗತ ನಂಜುಂಡೇಗೌಡ ಅವರ ಪುತ್ರ ಶಿವು ಒಬ್ಬರು. ಇವರು ಸುಭಾಷ್ ಪಾಳೇಕಾರ್ ಅವರ ನೈಸರ್ಗಿಕ ಕೃಷಿ ಪದ್ಧತಿಯಲ್ಲಿ ಸಮಗ್ರ ಕೃಷಿ ಕೈಗೊಂಡು ವಾರ್ಷಿಕ ಕನಿಷ್ಠ 5 ಲಕ್ಷ ರೂ. ಸಂಪಾದಿಸುತ್ತಿದ್ದಾರೆ. ಶಿವು ಅವರ ಪಿತ್ರಾರ್ಜಿತವಾದ 2.15 ಎಕರೆ ಖುಷ್ಕಿ ಜಮೀನಿನ ಬಹುಭಾಗವು ವಿವಿಧ ಜಾತಿ ಹಣ್ಣಿನ ಮರಗಳಿಂದ ಕಂಗೊಳಿಸುತ್ತಿದೆ. ಹಲಸು, ಮಾವು, ಬೆಣ್ಣೆ ಹಣ್ಣು, ರಾಮಫಲ, ಸೀತಾಫಲ, ಲಕ್ಷ್ಮಣಫಲ ಮತ್ತು ಹನುಮಫಲ, ಡ್ರ್ಯಾಗನ್ ಫ್ರೂಟ್, ಇತರ ಹಣ್ಣಿನ ಮರಗಳಿವೆ. ಇದಲ್ಲದೆ ಶ್ರೀಗಂಧದ ಮರ 40, ಟೀಕ್ 35, ಹೊನ್ನೆ ಮರ 2, ಬೀಟೆ ಮರ 2, ರಕ್ತ ಚಂದನ 2, 40 ತೆಂಗಿನ ಮರಗಳನ್ನು ಬೆಳೆಸಿ ತೋಟಗಾರಿಕೆ ಬೆಳೆ ಜತೆಗೆ ಅರಣ್ಯ ಕೃಷಿಯನ್ನೂ ಅಳವಡಿಸಿಕೊಂಡಿದ್ದಾರೆ. ಈ ಮರಗಳಿಗೆ ಕಾಳು ಮೆಣಸು ಗಿಡ ಹಬ್ಬಿಸಿದ್ದಾರೆ. ಭೂಮಿಯ ಸ್ವಲ್ಪ ಭಾಗದಲ್ಲಿ ರೇಷ್ಮೆ ಕೃಷಿ ಕೈಗೊಂಡಿದ್ದಾರೆ. ಮರಗಡ್ಡಿ ಪದ್ಧತಿಯಲ್ಲಿ ರೇಷ್ಮೆ ಕೃಷಿ ಮಾಡುತ್ತಿದ್ದು, ಹಿಪ್ಪುನೇರಳೆ ಕಡ್ಡಿ ನಡುವಿನ ಜಾಗದಲ್ಲಿ ಬಿತ್ತಿರುವ ಉದ್ದು, ಹೆಸರು, ಸಾಸಿವೆ, ಕಡಲೆ ಮುಂತಾದ ದ್ವಿದಳ ಧಾನ್ಯ ಬೆಳೆಗಳೂ ಲಾಭ ತಂದುಕೊಡುತ್ತಿವೆ. ಶಿವು ಸಾಂಪ್ರದಾಯಿಕ ಕೃಷಿಯನ್ನೂ ಮುಂದುವರಿಸಿದ್ದಾರೆ. ಜಮೀನನ್ನು ವಿಭಾಗ ಮಾಡಿಕೊಂಡು ಪಟದ ಕಬ್ಬು, ರಾಗಿ, ಸಿರಿಧಾನ್ಯ, ಭತ್ತ ಬೆಳೆದುಕೊಳ್ಳುತ್ತಾರೆ. ಗೆಣಸು, ಬಳ್ಳಿ ಆಲೂಗೆಡ್ಡೆ, ಟೊಮೆಟೊ, ಬದನೆಕಾಯಿ ಸೇರಿದಂತೆ ವಿವಿಧ ಬಗೆಯ ತರಕಾರಿ ಮತ್ತು ಸೊಪ್ಪು ಬೆಳೆಯುತ್ತಿದ್ದಾರೆ. ಕೃಷಿಗೆ ಪೂರಕವಾಗಿ ಹಸುಗಳನ್ನೂ ಸಾಕಿರುವುದರಿಂದ ರಾಸುಗಳಿಗೆ ಸೀಮೆ ಹುಲ್ಲು, ಜೋಳ ಬೆಳೆದುಕೊಳ್ಳುತ್ತಾರೆ. ಸುಮಾರು 100 ನಾಟಿಕೋಳಿಗಳನ್ನು ಸಾಕುತ್ತಿದ್ದು, ದಿನಕ್ಕೆ 50ರಿಂದ 60 ಮೊಟ್ಟೆಗಳು ಬರುತ್ತಿದೆ. ನಾಟಿ ಕೋಳಿಗೆ ಬೇಡಿಕೆ ಇರುವುದರಿಂದ ಕೆ.ಜಿ.ಗೆ ಕನಿಷ್ಠ 500 ರೂ.ಗೆ ಮಾರಾಟ ಮಾಡುತ್ತಾರೆ. ಒಂದು ನಾಟಿಕೋಳಿಯ ಮೊಟ್ಟೆಗೆ 15 ರೂ. ಬೆಲೆ ಇದೆ. ಶಿವು ತಾವು ಬೆಳೆದ ಹಣ್ಣು, ತರಕಾರಿ, ಸೊಪ್ಪು ಮತ್ತು ನಾಟಿಹಸುವಿನ ಬೆಣ್ಣೆ, ತುಪ್ಪವನ್ನು ಪ್ರತಿ ರವಿವಾರ ಮಂಡ್ಯದ ತೋಟಗಾರಿಕೆ ಇಲಾಖೆ ಆವರಣದಲ್ಲಿ ನಡೆಯುವ ರೈತ ಸಂತೆಯಲ್ಲಿ ಮಾರಾಟ ಮಾಡುತ್ತಾರೆ. ಇವರ ರಾಸಾಯನಿಕ ಮುಕ್ತ ಕೃಷಿ ಉತ್ಪನ್ನಗಳಿಗೆ ಉತ್ತಮ ಬೇಡಿಕೆ ಇದೆಯಂತೆ. ಮಳೆ ಆಧಾರಿತ ಪ್ರದೇಶವಾದ್ದರಿಂದ ಎರಡು ಕೊಳವೆಬಾವಿ ಕೊರೆಸಿದ್ದಾರೆ. ಸಾಕಷ್ಟು ನೀರು ಬರುತ್ತಿದೆ. ಹನಿ ನೀರಾವರಿ ಪದ್ಧತಿ ಅಳವಡಿಕೆಯಿಂದಾಗಿ ನೀರಿನ ಕೊರತೆ ಇಲ್ಲವಂತೆ. ಕೃಷಿ ಮತ್ತು ತೋಟಗಾರಿಕೆ ಇಲಾಖೆ ಅಧಿಕಾರಿಗಳು ತಮ್ಮ ಇಲಾಖೆಯಿಂದ ಸಿಗುವ ಸೌಲಭ್ಯಗಳು, ತಾಂತ್ರಿಕ ನೆರವನ್ನು ಶಿವು ಅವರಿಗೆ ಒದಗಿಸುತ್ತಿದ್ದಾರೆ. ಜಪಾನ್ ದೇಶದವರೂ ಸೇರಿದಂತೆ ಹಲವು ಕೃಷಿ ವಿಜ್ಞಾನಿಗಳು ಶಿವು ಕೃಷಿ ತಾಟಿಗೆ ಭೇಟಿ ನೀಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ತಾಲೂಕು ಮತ್ತು ಜಿಲ್ಲಾಮಟ್ಟದ ಉತ್ತಮ ಕೃಷಿಕ ಪ್ರಶಸ್ತಿ ಸೇರಿದಂತೆ ಹಲವು ಸಂಘಸಂಸ್ಥೆಗಳ ಸನ್ಮಾನಕ್ಕೆ ಶಿವು ಭಾಜನರಾಗಿದ್ದಾರೆ. ಇವರ ಕೃಷಿಯಿಂದ ಪ್ರೇರಿತರಾಗಿ ಅಕ್ಕಪಕ್ಕದ ಗ್ರಾಮಗಳ ಯುವಕರು ಕೃಷಿಯತ್ತ ಮುಖ ಮಾಡಿದ್ದಾರೆ. ಬಳಿರಂಗನಾಥಸ್ವಾಮಿ ಬೆಟ್ಟದ ತಪ್ಪಲಿನಲ್ಲಿ ರೈತ ಚೇತನ ಪ್ರೊ.ಎಂ.ಡಿ.ನಂಜುಂಡಸ್ವಾಮಿ ಅವರ ಪುತ್ರಿ ಚುಕ್ಕಿ ನಂಜುಂಡಸ್ವಾಮಿ ನೇತೃತ್ವದಲ್ಲಿ ಆಯೋಜಿಸಿದ್ದ ಸುಭಾಷ್ ಪಾಳೇಕಾರ್ ಕೃಷಿ ಪದ್ಧತಿ ಕುರಿತ ಕಾರ್ಯಾಗಾರದಿಂದ ಸಮಗ್ರ, ನೈಸರ್ಗಿಕ ಕೃಷಿ ಮಾಡ ಬೇಕೆಂಬ ನಿರ್ಧಾರ ಮಾಡಿದೆ. ಶ್ರಮ ಸಾರ್ಥಕವಾಗಿದೆ. ನನ್ನ ಈ ಶ್ರಮದಲ್ಲಿ ತಾಯಿ ಗಂಗಮ್ಮ, ಪತ್ನಿ ಮಂಜುಳಾ ಹೆಗಲು ಕೊಟ್ಟಿದ್ದಾರೆ. ಶಾಲೆಗೆ ರಜೆ ವೇಳೆ ಮಕ್ಕಳಾದ ಚೈತ್ರಾ, ಪ್ರೇಮ್ ಕೂಡಾ ನೆರವಾಗುತ್ತಾ ಬೇಸಾಯ ಕ್ರಮವನ್ನೂ ಅರಿಯುತ್ತಿದ್ದಾರೆ. ತೋಟದಲ್ಲೇ ಸಿಗುವ ತ್ಯಾಜ್ಯವೇ ಗೊಬ್ಬರವಾಗುತ್ತದೆ. ಸೆಗಣಿ, ಮೂತ್ರದಿಂದ ಜೀವಾಮೃತ ತಯಾರಿಸಿ ಬೆಳೆಗೆ ನೀಡುತ್ತೇನೆ. ಯಾವುದೇ ರಾಸಾಯನಿಕ ಬಳಕೆ ಇಲ್ಲದ ಕಾರಣ ನಾನು ಬೆಳೆದ ಬೆಳೆಗಳಿಗೆ ಉತ್ತಮ ಬೇಡಿಕೆ ಇದೆ. -ಶಿವು, ಪ್ರಗತಿಪರ ರೈತ
ಚಿಕ್ಕಮಗಳೂರು | ಕಾರು-ಬೈಕ್ ಢಿಕ್ಕಿ : ಬಾಲಕಿ ಮೃತ್ಯು, ಮೂವರಿಗೆ ಗಾಯ
ಚಿಕ್ಕಮಗಳೂರು : ಕಾರು ಮತ್ತು ಬೈಕ್ ನಡುವೆ ಮುಖಾಮುಖಿ ಢಿಕ್ಕಿ ಸಂಭವಿಸಿ ಸ್ಥಳದಲ್ಲೇ ಬಾಲಕಿ ಮೃತಪಟ್ಟು, ಮೂವರು ಗಂಭೀರವಾಗಿ ಗಾಯಗೊಂಡ ಘಟನೆ ತಾಲೂಕಿನ ಕಟ್ಟೆ ತಿಮ್ಮನಹಳ್ಳಿ ತಿರುವಿನ ಬಳಿ ಭಾನುವಾರ ಸಂಜೆ ವೇಳೆ ನಡೆದಿದೆ. ಲಹರಿ (6) ಸ್ಥಳದಲ್ಲಿ ಮೃತಪಟ್ಟಿದ್ದು, ಪುನೀತ್ (37), ಚೈತ್ರ (34), ಸಿರಿ (8) ಅವರ ಸ್ಥಿತಿ ಗಂಭೀರ ವಾಗಿದ್ದು, ಚಿಕ್ಕಮಗಳೂರು ಮಲ್ಲೇಗೌಡ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಪುನೀತ್ ಹೆಂಡತಿ ಮಕ್ಕಳು ಜತೆ ಬೈರಂಬುದಿಯಿಂದ ಅಂಬಳೆ ಗ್ರಾಮಕ್ಕೆ ತೆರಳುತ್ತಿದ್ದ ವೇಳೆ ಘಟನೆ ಸಂಭವಿಸಿದೆ. ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕರಾವಳಿಯಲ್ಲಿ ಪ್ರವಾಸಿ ಋುತು ಆರಂಭ : ಬೀಚ್ ರೆಸಾರ್ಟ್, ಹೋಂ ಸ್ಟೇಗಳು ಶೀಘ್ರ ಭರ್ತಿ
ಕ್ರಿಸ್ಮಸ್ ಮತ್ತು ಹೊಸ ವರ್ಷಾಚರಣೆಯ ಹಿನ್ನೆಲೆಯಲ್ಲಿ ಕರಾವಳಿಯಲ್ಲಿ ಪ್ರವಾಸಿ ಋುತು ಭರ್ಜರಿಯಾಗಿ ಆರಂಭಗೊಂಡಿದೆ. ನವೆಂಬರ್ನಲ್ಲೇ ಹೆಚ್ಚಿನ ವಸತಿ ಸೌಕರ್ಯಗಳು ಬುಕ್ ಆಗಿದ್ದು, ಉತ್ತರ ಭಾರತದ ಕುಟುಂಬಗಳ ಸಂಬಂಧಿಕರ ಆಗಮನ ಮತ್ತು ಮದುವೆಗಳ ಹೆಚ್ಚಳ ಇದಕ್ಕೆ ಕಾರಣವಾಗಿದೆ. ಪ್ರೀಮಿಯಂ ಮತ್ತು ಮಧ್ಯಮ ಶ್ರೇಣಿಯ ಹೋಟೆಲ್ಗಳು ಪೂರ್ಣ ಆಕ್ಯುಪೆನ್ಸಿ ತಲುಪಿವೆ.
ಹಾರ್ನ್ಬಿಲ್ ಹಕ್ಕಿಯ ‘ಕೌತುಕ’ ಬದುಕು!
ಮಂಗಟ್ಟೆಯ ಕುತೂಹಲಕಾರಿ ಜಗತ್ತು ಪರಿಚಯಿಸುವ ‘ಕೌತುಕ’
ಲ್ಯಾಂಡೊ ನೊರೀಸ್ ವಿಶ್ವಚಾಂಪಿಯನ್: 17 ವರ್ಷಗಳ ಪ್ರಶಸ್ತಿ ಬರದಿಂದ ಹೊರಬಂದ ಮೆಕ್ಲರೇನ್
ಅಬುದಾಬಿ: ಮೆಕ್ಲರೇನ್ ತಂಡದ ಲ್ಯಾಂಡೊ ನೊರೇಸ್ ವೃತ್ತಿಜೀವನದ ಮೊಟ್ಟಮೊದಲ ಫಾಮ್ರ್ಯುಲಾ 1 ವಿಶ್ವ ಚಾಂಪಿಯನ್ಶಿಪ್ ಪ್ರಶಸ್ತಿ ಗೆದ್ದಿದ್ದಾರೆ. ಸೀಸನ್ನ ಕೊನೆಯ ಅಬುಧಾಬಿ ಗ್ರ್ಯಾಂಡ್ ಪ್ರಿಕ್ಸ್ ನಲ್ಲಿ ಮೂರನೇ ಸ್ಥಾನ ಪಡೆಯುವ ಮೂಲಕ ಭಾನುವಾರ ಈ ಕನಸಿನ ಸಾಧನೆಮಾಡಿದರು. ಅಂತಿಮ ದಿನ ಪ್ರಶಸ್ತಿಗಾಗಿ ತ್ರಿಕೋನ ಪೈಪೋಟಿ ಇತ್ತು. ತಂಡದ ಸಹ ಆಟಗಾರ ಆಸ್ಕರ್ ಪಿಯಾಸ್ಟ್ರಿ ಮತ್ತು ನಾಲ್ಕು ಬಾರಿಯ ವಿಶ್ವಚಾಂಪಿಯನ್ ಮ್ಯಾಕ್ಸ್ ವೆಸ್ರ್ಟೆಪ್ಪೆನ್ ರೇಸ್ನಲ್ಲಿದ್ದರು. 12 ಅಂಕಗಳ ಮುನ್ನಡೆಯೊಂದಿಗೆ ಅಬುಧಾಬಿಗೆ ಆಗಮಿಸಿದ್ದ 26 ವರ್ಷದ ರೇಸರ್ ಅವರಿಂದ ಕಠಿಣ ಸ್ಪರ್ಧೆ ಎದುರಿಸಬೇಕಾಗಿತ್ತು. ಮೂರನೇ ರೇಸ್ ಗೆದ್ದರೂ ವೆಸ್ರ್ಟೆಪ್ಪೆನ್ ಚಾಂಪಿಯನ್ಶಿಪ್ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ತೃಪ್ತಿಪಡಬೇಕಾಯಿತು. ಪೈಸ್ಟ್ರಿ ಮೂರನೆಯವರಾಗಿ ಸ್ಪರ್ಧೆ ಕೊನೆಗೊಳಿಸಿದರು. 2008ರಲ್ಲಿ ಲೆವೀಸ್ ಹ್ಯಾಮಿಲ್ಟನ್ ಪ್ರಶಸ್ತಿ ಗೆದ್ದ ಬಳಿಕ ಮೆಕ್ಲರೇನ್ ಗೆ ಪ್ರಶಸ್ತಿ ಗೆದ್ದುಕೊಟ್ಟ ಮೊಟ್ಟಮೊದಲ ಚಾಲಕ ಎಂಬ ಹೆಗ್ಗಳಿಕೆಗೆ ನೋರಿಸ್ ಪಾತ್ರರಾದರು. ಇದರೊಂದಿಗೆ ಮೆಕ್ಲರೇನ್ ತಂಡದ 17 ವರ್ಷಗಳ ಪ್ರಶಸ್ತಿಯ ಬರ ನೀಗಿದಂತಾಯಿತು.
ಪಾಕಿಸ್ತಾನದ ಹೊಗಳಿಕೆ ಮತ್ತು ಲಂಚಕ್ಕಾಗಿ ಭಾರತ ಕಳೆದುಕೊಂಡರು; ಡೊನಾಲ್ಡ್ ಟ್ರಂಪ್ ರುಬ್ಬಿದ ಮೈಕೆಲ್ ರೂಬಿನ್!
ಅದ್ಯಾವ ಸಮಯದಲ್ಲಿ ಅಮೆರಿಕ ಅಧ್ಯಕ್ಷ ಭಾರತವನ್ನು ದೂರ ಮಾಡುವ ಮತ್ತು ಪಾಕಿಸ್ತಾನವನ್ನು ಅಪ್ಪಿಕೊಳ್ಳುವ ನಿರ್ಧಾರ ಮಾಡಿದರೋ ಗೊತ್ತಿಲ್ಲ. ಅವರ ಈ ನಿರ್ಧಾರ ಅಮೆರಿಕನ್ನರಿಂದ ಸಾಕಷ್ಟು ಟೀಕೆಗೆ ಗುರಿಯಾಗುತ್ತಿದೆ. ಪೆಂಟಗನ್ ಮಾಜಿ ಅಧಿಕಾರಿ ಮೈಕೆಲ್ ರೂಬಿನ್ ಕೂಡ ಪಾಕಿಸ್ತಾನಕ್ಕಾಗಿ ಭಾರತವನ್ನು ಕಳೆದುಕೊಳ್ಳುತ್ತಿರುವ ಟ್ರಂಪ್ ಆಡಳಿತವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಅಲ್ಲದೇ ಡೊನಾಲ್ಡ್ ಟ್ರಂಪ್ ಅವರು ಪಾಕಿಸ್ತಾನದಿಂದ ಲಂಚ ಪಡೆಯುತ್ತಿದ್ದಾರೆ ಎಂದೂ ರೂಬಿನ್ ಗಂಭೀರ ಆರೋಪ ಮಾಡಿದ್ದಾರೆ. ಈ ಕುರಿತು ಇಲ್ಲಿದೆ ಹೆಚ್ಚಿನ ಮಾಹಿತಿ.
‘ಚಳಿಗಾಲ’ದಲ್ಲೂ ಕಾವೇರಿಸುವ ವಾಗ್ಯುದ್ಧಕ್ಕೆ ವೇದಿಕೆ ಸಜ್ಜು
Karnataka Weather Today: ರಾಜ್ಯಾದ್ಯಂತ ತೀವ್ರ ಚಳಿ ಮುನ್ಸೂಚನೆ, ಕರಾವಳಿಯಲ್ಲಿ ಅಧಿಕ ತಾಪಮಾನ
Karnataka Cold Weather Alert: ಕರ್ನಾಟಕದಾದ್ಯಂತ ಮಳೆ ಅಬ್ಬರ ಕೊನೆಗೊಂಡಿದೆ. ಎಲ್ಲೆಡೆ ಅಧಿಕ ತಾಪಮಾನ ಹಾಗೂ ಅಲ್ಲಲ್ಲಿ ಮೈಕೊರೆವ ಚಳಿಯ ವಾತಾವರಣ ಸೃಷ್ಟಿಯಾಗಿದೆ. ಬಿಸಿಲು ಹೆಚ್ಚಾಗಿ ಕಂಡು ಬರುವ ಉತ್ತರ ಕರ್ನಾಟಕದ ಭಾಗಗಳಲ್ಲಿ ಮೈಕೊರೆವ ಚಳಿ ಸೃಷ್ಟಿಯಾಗಿದೆ. ಬೆಳಗ್ಗೆ ದಟ್ಟ ಮಂಜು, ಚಳಿ ಆವರಿಸಿದೆ. ರಾಜ್ಯದ ಬಹುತೇಕ ಎಲ್ಲ ಜಿಲ್ಲೆಗಳಲ್ಲೂ ಇದೇ ರೀತಿಯ ವಾತಾವರಣ ಕಂಡು ಬರಲಿದೆ
Winter Session: ಇಂದಿನಿಂದ ಬೆಳಗಾವಿ ಚಳಿಗಾಲ ಅಧಿವೇಶನ: 20 ವಿಧೇಯಕ ಮಂಡನೆಗೆ ಸಿದ್ಧತೆ, ಏನೆಲ್ಲ ಚರ್ಚೆಗಳಾಗುತ್ತೆ?
Winter Session 2025: ಉತ್ತರ ಕರ್ನಾಟಕದ ಸಮಸ್ಯೆಗಳು, ಪರಿಹಾರಗಳನ್ನೇ ಪ್ರಧಾನಾಗಿಟ್ಟುಕೊಂಡು ಹಾಗೂ ಸಿಎಂ ಕುರ್ಚಿ ಕದನದ ಮಧ್ಯ ರಾಜ್ಯದಲ್ಲಿ ಎರಡು ವಾರಗಳ ಚಳಿಗಾಲದ ಬೆಳಗಾವಿ ಅಧಿವೇಶನ (Belagavi Winter Session 2025) ಇಂದಿನಿಂದ (ಡಿ.8) ಆರಂಭವಾಗುತ್ತಿದೆ. ರಾಜ್ಯದ ನಾಯಕತ್ವ ಬದಲಾವಣೆ ತಿಕ್ಕಾಟದ ಮಧ್ಯ ಒಗ್ಗಟ್ಟಿನ ಮಂತ್ರ ಜಪಿಸಿರುವ ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿಗಳು ವಿಪಕ್ಷಗಳ ಟೀಕೆಗಳಿಗೆ, ಪ್ರಶ್ನೆಗಳು
ಫ್ಯಾಕ್ಟ್ ಚೆಕ್ ಮಾಡೋರು ಅಮೆರಿಕಕ್ಕೆ ಬರಬೇಡಿ; ಹೊಸ ಯುಎಸ್ ವೀಸಾ ನೀತಿಯಿಂದ ಭಾರತೀಯರ ಮೇಲೆ ಪರಿಣಾಮ
ಅಮೆರಿಕದ ವೀಸಾ ನೀತಿಯಲ್ಲಿ ದಿನಕ್ಕೊಂದು ಬದಲಾವಣೆ ಮಾಡುತ್ತಿರುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತ, ಇದೀಗ ಫ್ಯಾಕ್ಟ್ ಚೆಕ್ ಮತ್ತು ಸೆನ್ಸಾರ್ಶಿಪ್ ಕ್ಷೇತ್ರದ ವೀಸಾ ಅರ್ಜಿದಾರರ ಅರ್ಜಿಗಳನ್ನು ತಿರಸ್ಕರಿಸಲು ಮುಂದಾಗಿದೆ. ಫ್ಯಾಕ್ಟ್ ಚೆಕ್ ಹೆಸರಿನಲ್ಲಿ ಅಮೆರಿಕನ್ನರ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಗೊಂದಲದಲ್ಲಿ ಮುಳುಗಿಸುವವರ ಅರ್ಜಿಗಳನ್ನು ತಿರಸ್ಕರಿಸುವಂತೆ, ಟ್ರಂಪ್ ಆಡಳಿತವು ಕಾನ್ಸುಲರ್ ಅಧಿಕಾರಿಗಳಿಗೆ ಸೂಚನೆ ನೀಡಿದೆ. ಏನಿದು ಹೊಸ ನಿಯಮ? ಫ್ಯಾಕ್ಟ್ ಚೆಕ್ ಮಾಡುವುದನ್ನು ಟ್ರಂಪ್ ಆಡಳಿತ ಸಹಿಸುವುದಿಲ್ಲವೇ? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.
ಪ್ರಾಣಿಗಳಿಗೂ ಆಧಾರ್! ಜಾನುವಾರು ಗುರುತು ಪತ್ತೆಗೆ ಸ್ಮಾರ್ಟ್ ಅಪ್ಲಿಕೇಶನ್, ಹು-ಧಾ ಪಾಲಿಕೆಯಿಂದ ಚಿಂತನೆ
ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯು ಜಾನುವಾರು ಮತ್ತು ಬೀದಿನಾಯಿಗಳಿಗೆ ಆಧಾರ್ ಮಾದರಿಯ ಗುರುತು ಚೀಟಿ ನೀಡಲು ಸ್ಮಾರ್ಟ್ ಅಪ್ಲಿಕೇಶನ್ ಅಳವಡಿಸಿಕೊಳ್ಳುವ ಬಗ್ಗೆ ಚಿಂತನೆ ನಡೆಸಿದೆ. ಪ್ರಾಣಿಗಳ ಕಿವಿಗೆ ಸ್ಕ್ಯಾನರ್ ಇರುವ ಟ್ಯಾಗ್ ಅಳವಡಿಸಿ, ಅದರ ಮೂಲಕ ಮಾಲೀಕರು, ಪ್ರಾಣಿಯ ವಿವರಗಳನ್ನು ದಾಖಲಿಸಲಾಗುವುದು. ಇದರಿಂದ ಪ್ರಾಣಿಗಳ ಕಳ್ಳತನ ತಡೆಯಲು, ಆರೋಗ್ಯ ಮಾನಿಟರಿಂಗ್ಗೆ ಅನುಕೂಲವಾಗಲಿದೆ.
ಭಾಗ್ಯಲಕ್ಷ್ಮಿಯರಿಗೆ ಬಾಂಡ್ ಹಣ : ಚಾಮರಾಜನಗರದಲ್ಲಿ 4433 ಫಲಾನುಭವಿಗಳು
2006-07ರಲ್ಲಿ ಜಾರಿಯಾದ ಭಾಗ್ಯಲಕ್ಷ್ಮಿ ಯೋಜನೆಯಡಿ 18 ವರ್ಷ ಪೂರೈಸಿದ ಹೆಣ್ಣು ಮಕ್ಕಳಿಗೆ 30 ಸಾವಿರ ರೂ. ಪರಿಪಕ್ವ ಮೊತ್ತ ಲಭ್ಯವಾಗುತ್ತಿದೆ. ಚಾಮರಾಜನಗರ ಜಿಲ್ಲೆಯಲ್ಲಿ 4941 ಹೆಣ್ಣು ಮಕ್ಕಳಲ್ಲಿ 4433 ಮಂದಿ ಅರ್ಹರಾಗಿದ್ದು, ಅವರ ಬ್ಯಾಂಕ್ ಖಾತೆಗೆ ಹಣ ಜಮೆಯಾಗುತ್ತಿದೆ. ಹೆಣ್ಣು ಮಕ್ಕಳಲ್ಲಿ ಆತ್ಮವಿಶ್ವಾಸ ಮೂಡಿಸಿ, ಆರ್ಥಿಕ ಸ್ವಾವಲಂಬನೆಗೆ ಈ ಯೋಜನೆ ಸಹಕಾರಿಯಾಗಿದೆ.
ಗೃಹಲಕ್ಷ್ಮೀ ಸಹಕಾರ ಸಂಘದಿಂದ ಸದ್ಯಕ್ಕೆ ಸಾಲ ಸಿಗೋದಿಲ್ಲ!
ಗೃಹಲಕ್ಷ್ಮಿ ಫಲಾನುಭವಿಗಳಿಗಾಗಿ ಸ್ಥಾಪಿಸಲಾದ ಸಹಕಾರ ಸಂಘದಲ್ಲಿ ಚುನಾವಣೆ ನಡೆಯದೆ ಪದಾಧಿಕಾರಿಗಳ ಆಯ್ಕೆ ವಿಳಂಬವಾಗಿದೆ. ಇದರಿಂದಾಗಿ ಸದಸ್ಯತ್ವ ಪಡೆದರೂ ಸಾಲ ಸೌಲಭ್ಯ ದೊರೆಯುತ್ತಿಲ್ಲ. ಸಂಘದ ಕಾರ್ಯನಿರ್ವಹಣೆಗೆ ಮಾರ್ಗಸೂಚಿ ರೂಪಿಸದ ಕಾರಣ ಫಲಾನುಭವಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮಂಡ್ಯ | ಖಾಸಗಿ ಬಸ್ ಉರುಳಿ ಬಿದ್ದು 30 ಮಂದಿಗೆ ಗಾಯ
ಮಂಡ್ಯ : ಬೆಂಗಳೂರು ಮೈಸೂರು ಹೆದ್ದಾರಿಯ ಸರ್ವಿಸ್ ರಸ್ತೆಯಲ್ಲಿ ಚಲಿಸುತ್ತಿದ್ದ ಖಾಸಗಿ ಬಸ್ ಚಾಲಕನ ನಿಯಂತ್ರಣ ತಪ್ಪಿ ಉರುಳಿ ಬಿದ್ದು ಸುಮಾರು 30 ಮಂದಿ ಗಾಯಗೊಂಡಿರುವ ಘಟನೆ ಮದ್ದೂರು ತಾಲೂಕು ಅಗರಲಿಂಗನದೊಡ್ಡಿ ಬಳಿ ರವಿವಾರ ಸಂಜೆ ನಡೆದಿರುವುದು ವರದಿಯಾಗಿದೆ. ಬೆಂಗಳೂರಿನ ಕೆ.ಪಿ.ಅಗ್ರಹಾರದ ನಿವಾಸಿಗಳು ಸದರಿ ಬಸ್ನಲ್ಲಿ ಮಳವಳ್ಳಿ ತಾಲೂಕಿನ ಶಿಂಷಾ ಬಳಿ ಇರುವ ದೇವಸ್ಥಾನಕ್ಕೆ ತೆರಳಿ, ವಾಪಸ್ ಬೆಂಗಳೂರಿಗೆ ತೆರಳುತ್ತಿದ್ದಾಗ ಈ ಘಟನೆ ಸಂಭವಿಸಿದ್ದು, ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ. ತಕ್ಷಣ ಸ್ಥಳಕ್ಕಾಗಮಿಸಿದ ಮದ್ದೂರು ಸಂಚಾರಿ ಪೊಲೀಸರು ಮತ್ತು ಸ್ಥಳೀಯರು ಬಸ್ನಲ್ಲಿ ಗಾಯಗೊಂಡವರನ್ನು ಮದ್ದೂರಿನ ಸಾರ್ವಜನಿಕ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ಕೊಡಿಸಿದರು. ನಂತರ, ಹೆಚ್ಚಿನ ಚಿಕಿತ್ಸೆಗಾಗಿ ಮಿಮ್ಸ್ ಜಿಲ್ಲಾಸ್ಪತ್ರೆಗೆ ಗಾಯಗೊಂಡವರನ್ನು ದಾಖಲು ಮಾಡಲಾಗಿದೆ. ಆಸ್ಪತ್ರೆಗೆ ಡಿಸಿ ಭೇಟಿ: ವಿಷಯ ತಿಳಿದ ಜಿಲ್ಲಾಧಿಕಾರಿ ಡಾ.ಕುಮಾರ್ ಮಿಮ್ಸ್ ಜಿಲ್ಲಾಸ್ಪತ್ರೆಗೆ ತೆರಳಿ ಪ್ರಯಾಣಿಕರ ಆರೋಗ್ಯ ವಿಚಾರಿಸಿ, ಸೂಕ್ತ ಹಾಗೂ ಉತ್ತಮ ಮಟ್ಟದ ಔಷಧೋಪಚಾರಗಳನ್ನು ತುರ್ತಾಗಿ ಮಾಡುವಂತೆ ವೈದ್ಯಾಧಿಕಾರಿಗಳಿಗೆ ಸೂಚಿಸಿದರು. ಈ ಸಂಬಂಧ ಮದ್ದೂರು ಸಂಚಾರಿ ಪೊಲೀಸ್ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
Bengaluru | ವಿದ್ಯಾರ್ಥಿಗೆ ಕಪಾಳಕ್ಕೆ ಹೊಡೆದಿದ್ದ ದೈಹಿಕ ಶಿಕ್ಷಕನ ಬಂಧನ
ಬೆಂಗಳೂರು : ವಿದ್ಯಾರ್ಥಿಗೆ ಕಪಾಳಕ್ಕೆ ಹೊಡೆದಿರುವ ಪ್ರಕರಣದಲ್ಲಿ ಖಾಸಗಿ ಶಾಲೆಯ ದೈಹಿಕ ಶಿಕ್ಷಕರೊಬ್ಬರನ್ನು(ಪಿಟಿ) ಇಲ್ಲಿನ ಹುಳಿಮಾವು ಠಾಣೆ ಪೊಲೀಸರು ಬಂಧಿಸಿದ್ದಾರೆ. ರಾಜೇಶ್ ಬಂಧಿತ ಶಿಕ್ಷಕರಾಗಿದ್ದಾರೆ. ನಗರದ ನಾರಾಯಣ ಇ-ಟೆಕ್ನೋ ಶಾಲೆಯಲ್ಲಿ ರಾಜೇಶ್ ದೈಹಿಕ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದು, ಏಳನೆ ತರಗತಿಯ ವಿದ್ಯಾರ್ಥಿಗೆ ಕಪಾಳಕ್ಕೆ ಹೊಡೆದಿದ್ದರು. ವಿದ್ಯಾರ್ಥಿ ಮಧ್ಯಾಹ್ನದ ವೇಳೆ ಶಾಲಾ ಕೊಠಡಿಯಲ್ಲಿ ತನ್ನ ಸ್ನೇಹಿತನ ಕುರ್ಚಿಯನ್ನು ಎಳೆದಿದ್ದರಿಂದ ಕೆಳಗೆ ಬಿದ್ದಿದ್ದ. ಈ ಕುರಿತು ಸಹಪಾಠಿಯು ನೇರವಾಗಿ ಶಿಕ್ಷಕ ರಾಜೇಶ್ಗೆ ದೂರು ನೀಡಿದ್ದ. ಈ ಹಿನ್ನೆಲೆ ಸ್ಟಾಫ್ ರೂಂಗೆ ಕರೆಸಿ ವಿದ್ಯಾರ್ಥಿಯ ಕಪಾಳಕ್ಕೆ ನಾಲ್ಕೆದು ಬಾರಿ ಹೊಡೆದಿದ್ದಾರೆ ಎನ್ನಲಾಗಿದೆ. ವಿದ್ಯಾರ್ಥಿಯನ್ನು ಮನೆಗೆ ಕಳುಹಿಸದೆ ಸಂಜೆವರೆಗೂ ಶಾಲೆಯಲ್ಲಿಯೇ ಇರಿಸಿಕೊಂಡಿದ್ದರು. ಸಂಜೆಯಾದರೂ ಮನೆಗೆ ಮಗ ಬರದಿರುವುದನ್ನು ಕಂಡು ಪೋಷಕರು ಶಾಲೆಗೆ ಬಂದಿದ್ದು, ತನ್ನ ಮಗನ ಕೆನ್ನೆ ಊದಿಕೊಂಡಿರುವುದನ್ನು ಕಂಡು ಕೂಡಲೇ ಪೋಷಕರು, ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಈ ವೇಳೆ ವಿದ್ಯಾರ್ಥಿಯ ತಂದೆ ಹುಳಿಮಾವು ಪೊಲೀಸ್ ಠಾಣೆಗೆ ದೂರು ನೀಡಿದ್ದು, ದೂರಿನ ಅನ್ವಯ ಸದ್ಯ ರಾಜೇಶ್ನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸರಕಾರಿ ಆಯುಷ್ ಆಸ್ಪತ್ರೆಗಳಿಗೆ ದಾನಿಗಳು ಸೂಚಿಸಿರುವ ಹೆಸರು ನಾಮಕರಣ : ಆದೇಶ
ಬೆಂಗಳೂರು : ಆಯುಷ್ ಇಲಾಖೆಯ ವ್ಯಾಪ್ತಿಗೆ ಬರುವ ಆಯುಷ್ ಆಸ್ಪತ್ರೆಗಳಿಗೆ, ಚಿಕಿತ್ಸಾಲಯಗಳಿಗೆ ದಾನಿಗಳ ಅಥವಾ ದಾನಿಗಳು ಸೂಚಿಸಿರುವ ಹೆಸರನ್ನು ನಾಮಕರಣ ಮಾಡಲಾಗುವುದು ಎಂದು ರಾಜ್ಯ ಸರಕಾರವು ಆದೇಶ ಹೊರಡಿಸಿದೆ. ಚಿಕಿತ್ಸಾಲಯ, ಆಯುಷ್ಮಾನ್ ಆರೋಗ್ಯ ಮಂದಿರ, ತಾಲ್ಲೂಕು ಆಯುಷ್ ಆಸ್ಪತ್ರೆ 2 ಎಕರೆ ಹಾಗೂ ಜಿಲ್ಲ ಆಯುಷ್ ಆಸ್ಪತ್ರೆ 4 ಎಕರೆ ಜಮೀನನ್ನು ದಾನ ನೀಡಿದ್ದಲ್ಲಿ, ದಾನಿಗಳು ಅಥವಾ ದಾನಿಗಳು ಸೂಚಿಸುವ ಹೆಸರುಗಳನ್ನು ಆಸ್ಪತ್ರೆಗಳಿಗೆ, ಕೇಂದ್ರಗಳಿಗೆ ನಾಮಕರಣ ಮಾಡಲಾಗುವುದು ಎಂದು ತಿಳಿಸಿದೆ. ಪಟ್ಟಣ ಪ್ರದೇಶಗಳಲ್ಲಿ, ನಗರ ಪ್ರದೇಶಗಳಲ್ಲಿ ಸರಕಾರಿ ಆಸ್ಪತ್ರೆ, ಕೇಂದ್ರಗಳಿಗೆ ದಾನಿಗಳ ಹೆಸರನ್ನು ನಾಮಕರಣ ಮಾಡಲು ಕಟ್ಟಡದ ಅಂದಾಜು ಮೌಲ್ಯದ ಅರ್ಧ ಭಾಗ ಹಾಗೂ ಗ್ರಾಮೀಣ ಭಾಗದಲ್ಲಿ ನಾಲ್ಕನೆ ಒಂದು ಭಾಗದಷ್ಟು ಕಟ್ಟಡದ ಅಂದಾಜು ಮೌಲ್ಯದ ಮೊತ್ತವನ್ನು ದಾನವಾಗಿ ನೀಡಿರಬೇಕು ಎಂದು ಆದೇಶದಲ್ಲಿ ಉಲ್ಲೇಖಿಸಿದೆ. ಆಸ್ಪತ್ರೆಯ ಒಂದು ವಾರ್ಡ್/ರೂಮ್ ನಿರ್ಮಿಸಲು ಪೂರ್ಣ ಮೊತ್ತವನ್ನು ದಾನವಾಗಿ ನೀಡಿದ್ದಲ್ಲಿ, ವಾರ್ಡ್/ರೂಮ್ಗೆ ದಾನಿಗಳ ಅಥವಾ ದಾನಿಗಳು ಸೂಚಿಸುವ ಹೆಸರುಗಳನ್ನು ನಾಮಕರಣ ಮಾಡಲಾಗುವುದು. ಉಪಕರಣಗಳನ್ನು ನೀಡಿದ್ದಲ್ಲಿ, ಫಲಕದಲ್ಲಿ ದಾನಿಗಳ ಹೆಸರನ್ನು ನಮೂದಿಸಲಾಗುವುದು ಎಂದು ತಿಳಿಸಿದೆ. ದಾನಿಗಳು 1 ಲಕ್ಷ ರೂ. ಹಾಗೂ ಅದಕ್ಕಿಂತ ಹೆಚ್ಚಿನ ಮೊತ್ತವನ್ನು ದಾನವಾಗಿ ನೀಡಿದಲ್ಲಿ ಆಸ್ಪತ್ರೆಯ ನಾಮಫಲಕದಲ್ಲಿ ದಾನಿಗಳ ಹೆಸರನ್ನು ನಮೂದಿಸಲಾಗುವುದು. ಸ್ವೀಕರಿಸಿದ ದಾನ, ಆಸ್ಪತ್ರೆಗಳಿಗೆ ದಾನಿಗಳು ಸೂಚಿಸುವ ಹೆಸರನ್ನು ನಾಮಕರಣ ಮಾಡಲು ಮಾತ್ರ ಅನ್ವಯವಾಗುತ್ತದೆ. ಹಾಗೆಯೇ ಸ್ವೀಕರಿಸಿದ ದಾನವನ್ನು ಯಾವುದೇ ಕಾರಣಕ್ಕಾಗಿ ಹಿಂದಿರುಗಿಸುದಿಲ್ಲ ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.
ಕೇರಳದಲ್ಲಿ ಲೈಂಗಿಕ ಅಲ್ಪಸಂಖ್ಯಾತರ ಮೇಲೆ ದೌರ್ಜನ್ಯ : ಅಕ್ಕೈ ಪದ್ಮಶಾಲಿ ಖಂಡನೆ
ಬೆಂಗಳೂರು : ಶಬರಿಮಲೆ ದೇವಸ್ಥಾನಕ್ಕೆ ಬೆಂಗಳೂರಿನಿಂದ ತೆರಳಿದ್ದ ಲೈಂಗಿಕ ಅಲ್ಪಸಂಖ್ಯಾತ ಸಮುದಾಯದ ಸದಸ್ಯರ ಮೇಲೆ ಕೇರಳ ಪೊಲೀಸರು ದೌರ್ಜನ್ಯ ಎಸೆಗಿರುವುದು ಖಂಡನೀಯ, ಈ ಸಂಬಂಧಿಸಿದಂತೆ ರಾಜ್ಯ ಸರಕಾರ ಮಧ್ಯ ಪ್ರವೇಶ ಮಾಡಬೇಕೆಂದು ಲೈಂಗಿಕ ಅಲ್ಪಸಂಖ್ಯಾತರ ಹಕ್ಕುಗಳ ಹೋರಾಟಗಾರ್ತಿ ಅಕ್ಕೈ ಪದ್ಮಶಾಲಿ ಒತ್ತಾಯಿಸಿದ್ದಾರೆ. ರವಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲೈಂಗಿಕ ಅಲ್ಪಸಂಖ್ಯಾತ ಸಮುದಾಯದ ಸದಸ್ಯರು ಎಂಬ ಕಾರಣಕ್ಕಾಗಿ ಶಬರಿಮಲೆ ದೇವಸ್ಥಾನದ ಒಳಗೆ ಪ್ರವೇಶಿಸಲು ನಿರಾಕರಿಸಲಾಗಿದೆ ಎಂದು ಆರೋಪಿಸಿದರು. ಅದರಲ್ಲೂ, ಪಾಂಬಾ ಪೊಲೀಸ್ ಠಾಣೆಯ ಅಧಿಕಾರಿಗಳು ಅವರನ್ನು ಬಟ್ಟೆ ಬಿಚ್ಚುವಂತೆ ಬಲವಂತ ಮಾಡಿದ್ದು ನಿನ್ನೆ ರಾತ್ರಿ ನಗ್ನಗೊಳಿಸಿ ಹೀನಾಯ ಕೃತ್ಯ ಎಸಗಿದ್ದಾರೆ. ಆಹಾರ ನೀಡದೆ ಹಿಂಸೆ ನೀಡಲಾಗುತ್ತಿದೆ ಎಂದು ಅವರು ದೂರಿದರು. ಈ ಸಂಬಂಧಿಸಿದಂತೆ ಗೃಹ ಸಚಿವರು, ರಾಜ್ಯ ಸರಕಾರ ರಕ್ಷಣೆಗೆ ಧಾವಿಸಿ ಸೂಕ್ತ ಕ್ರಮ ಕೈಗೊಂಡು ತಪ್ಪಿತಸ್ಥ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಅಕ್ಕೈ ಪದ್ಮಶಾಲಿ ಒತ್ತಾಯ ಮಾಡಿದ್ದಾರೆ.
ಗ್ರೀಕ್ ದ್ವೀಪದ ಬಳಿ ವಲಸಿಗರ ದೋಣಿ ಮುಳುಗಿ 18 ಸಾವು
ಅಥೆನ್ಸ್: ಗಾಳಿ ತುಂಬ ಬಹುದಾದ ದೋಣಿಯಲ್ಲಿ ಮೆಡಿಟರೇನಿಯನ್ ಸಮುದ್ರವನ್ನು ದಾಟಲು ಪ್ರಯತ್ನಿಸುತ್ತಿದ್ದ ಕನಿಷ್ಠ 18 ಮಂದಿ ವಲಸಿಗರು ದಕ್ಷಿಣ ಗ್ರೀಕ್ನ ಕ್ರೀಟ್ ದ್ವೀಪದ ಬಳಿ ದೋಣಿ ಮುಳುಗಿದಾಗ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ನೀರಿನಲ್ಲಿ ಅರ್ಧ ಮುಳುಗಿದ್ದ ದೋಣಿಯನ್ನು ಟರ್ಕಿಯ ಸರಕು ನೌಕೆ ಪತ್ತೆಹಚ್ಚಿ ಗ್ರೀಕ್ ಅಧಿಕಾರಿಗಳಿಗೆ ಮಾಹಿತಿ ನೀಡಿದೆ. ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಯಲ್ಲಿ ಯುರೋಪಿಯನ್ ಗಡಿ ಏಜೆನ್ಸಿಯ ಹಡಗು ಮತ್ತು ವಿಮಾನ, ಗ್ರೀಕ್ ಕರಾವಳಿ ಕಾವಲು ಪಡೆಯ ಹೆಲಿಕಾಪ್ಟರ್ ಮತ್ತು ಮೂರು ಹಡಗುಗಳು ಪಾಲ್ಗೊಂಡಿದ್ದು ಇಬ್ಬರನ್ನು ರಕ್ಷಿಸಲಾಗಿದೆ ಎಂದು ಕರಾವಳಿ ಕಾವಲು ಪಡೆಯ ಅಧಿಕಾರಿ ಹೇಳಿದ್ದಾರೆ.
Hassan | ಪ್ರತ್ಯೇಕ ರಸ್ತೆ ಅಪಘಾತ : ಇಬ್ಬರ ಮೃತ್ಯು
ಹಾಸನ : ಜಿಲ್ಲೆಯಲ್ಲಿ ನಡೆದ ಎರಡು ಪ್ರತ್ಯೇಕ ರಸ್ತೆ ಅಪಘಾತಗಳಲ್ಲಿ ಇಬ್ಬರು ಮಹಿಳೆಯರು ಮೃತಪಟ್ಟಿರುವುದು ವರದಿಯಾಗಿದೆ. ನಂದಿನಿ ಮಿಲ್ಕ್ ಪಾರ್ಲರ್ ಎದುರು ಸುರೇಶ್ ಎಂಬವರು ಬೈಕ್ ಅನ್ನು ಅತೀವೇಗದಲ್ಲಿ ಓಡಿಸಿ ಹಂಪ್ಸ್ ಹಾರಿಸಿದ ಪರಿಣಾಮ ಹಿಂಬದಿ ಕುಳಿತಿದ್ದ ಹಾಸನ ತಾಲೂಕು ಮಾವಿನಹಳ್ಳಿ ಗ್ರಾಮದ ಜಯಮ್ಮ (68)ರಸ್ತೆಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದರು. ಅವರನ್ನು ತಕ್ಷಣ ಹಾಸನದ ಇಂಡಿಯಾನ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ. ದೂರಿನ ಆಧಾರದ ಮೇಲೆ ಸುರೇಶ್ ವಿರುದ್ಧ ಪ್ರಕರಣ ದಾಖಲಿಸಿ ಸಂಚಾರ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಹೊಳೆನರಸೀಪುರ ತಾಲೂಕಿನ ತಿರುಮಲಾಪುರ ಗ್ರಾಮದ ಜಯಂತಿ (50) ಶನಿವಾರ ಸಂಜೆ ಲಾರಿ ಢಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಪತಿ ಕೇಶವಮೂರ್ತಿ ಠಾಣೆಗೆ ನೀಡಿದ ದೂರಿನ ಪ್ರಕಾರ, ಅವರು ತಮ್ಮ ಹೆಂಡತಿ ಜಯಂತಿಯನ್ನು ಬೈಕ್ ಮೇಲೆ ಕೂರಿಸಿಕೊಂಡು ಕೆಲಸದ ನಿಮಿತ್ತ ಪಟ್ಟಣಕ್ಕೆ ಬಂದಿದ್ದರು. ವಾಪಸ್ಸಾಗುತ್ತಿರುವಾಗ ಸೂರನಹಳ್ಳಿಯ ಬಳಿ ಎದುರುಗಡೆಯಿಂದ ಬಂದ ಲಾರಿ ಅತೀವೇಗ ನೇರವಾಗಿ ಬೈಕ್ಗೆ ಢಿಕ್ಕಿ ಹೊಡೆದಿದೆ. ರಸ್ತೆಗೆ ಬಿದ್ದ ಜಯಂತಿ ಅವರ ತಲೆಯ ಮೇಲೆ ಲಾರಿ ಚಕ್ರ ಹರಿದ ಪರಿಣಾಮ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಪೊಲೀಸರು ಲಾರಿ ಚಾಲಕನ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.
ಪಶ್ಚಿಮ ದಂಡೆ: ಇಸ್ರೇಲ್ ದಾಳಿಯಲ್ಲಿ ಇಬ್ಬರ ಸಾವು
ರಮಲ್ಲಾ: ಪಶ್ಚಿಮ ದಂಡೆಯಲ್ಲಿ ಇಸ್ರೇಲ್ ಯೋಧರತ್ತ ಕಾರನ್ನು ಅಪಾಯಕಾರಿಯಾಗಿ ನುಗ್ಗಿಸಿದ ಫೆಲೆಸ್ತೀನಿಯನ್ ಯುವಕನನ್ನು ಭದ್ರತಾ ಪಡೆ ಗುಂಡಿಕ್ಕಿ ಹತ್ಯೆಗೈದಿದೆ. ಈ ಘಟನೆಯಲ್ಲಿ ರಸ್ತೆಯ ಪಕ್ಕ ನಿಲ್ಲಿಸಿದ್ದ ಮತ್ತೊಬ್ಬ ಫೆಲೆಸ್ತೀನಿಯನ್ ವ್ಯಕ್ತಿಯೂ ಸಾವನ್ನಪ್ಪಿರುವುದಾಗಿ ಇಸ್ರೇಲ್ ನ ಭದ್ರತಾ ಅಧಿಕಾರಿಗಳು ರವಿವಾರ ಹೇಳಿದ್ದಾರೆ. ಪಶ್ಚಿಮದಂಡೆಯ ಹೆಬ್ರಾನ್ ನಗರದಲ್ಲಿನ ಚೆಕ್ಪಾಯಿಂಟ್ನಲ್ಲಿ ಈ ಘಟನೆ ನಡೆದಿದೆ ಎಂದು ಹೇಳಿಕೆ ತಿಳಿಸಿದೆ. ರಸ್ತೆ ಸ್ವಚ್ಛ ಮಾಡುತ್ತಿದ್ದ ನಗರಪಾಲಿಕೆಯ ಪೌರ ಕಾರ್ಮಿಕ 55 ವರ್ಷದ ನಯಿಮ್ ಅಬು ದಾವೂದ್ ಹಾಗೂ ಮತ್ತೊಬ್ಬ ಯುವಕ ಮೃತಪಟ್ಟಿರುವುದಾಗಿ ಫೆಲೆಸ್ತೀನ್ ನ ಸರಕಾರಿ ಸ್ವಾಮ್ಯದ ವಫಾ ಸುದ್ದಿಸಂಸ್ಥೆ ವರದಿ ಮಾಡಿದೆ.

27 C