SENSEX
NIFTY
GOLD
USD/INR

Weather

21    C
... ...View News by News Source

ಬೆಂಬಲ ಬೆಲೆ ಯೋಜನೆಯಡಿಯಲ್ಲಿ ತೊಗರಿ ಖರೀದಿಸಲು ಆದೇಶ : ಪ್ರಿಯಾಂಕ್ ಖರ್ಗೆ

ಬೆಂಗಳೂರು : 2025-26 ನೇ ಸಾಲಿನ ಸರಕಾರದ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ತೊಗರಿ ಖರೀದಿಸಲು ಆದೇಶ ಹೊರಡಿಸಲಾಗಿದೆ ಎಂದು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ. ಶನಿವಾರ ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಅವರು, ಕಲಬುರಗಿ ಜಿಲ್ಲಾಧಿಕಾರಿಯೊಂದಿಗೆ ನಡೆಸಿದ ಜಿಲ್ಲಾ ಮಟ್ಟದ ಕಾರ್ಯಪಡೆ ಸಭೆಯಲ್ಲಿ, ಬೆಂಬಲ ಬೆಲೆ ಯೋಜನೆಯಡಿ ತೊಗರಿ ಪ್ರತಿ ಕ್ವಿಂಟಾಲ್‍ಗೆ 8 ಸಾವಿರ ರೂ. ದರದಲ್ಲಿ ಪ್ರತಿ ಎಕರೆಗೆ 4 ಕ್ವಿಂಟಾಲ್‍ನಂತೆ ಹಾಗೂ ಫ್ರೂಟ್ಸ್ ತಂತ್ರಾಂಶದಲ್ಲಿ ಲಭ್ಯವಿರುವಂತೆ ರೈತರು ತೊಗರಿ ಬೆಳೆದ ಜಮೀನಿನ ವಿಸ್ತೀರ್ಣಕ್ಕೆ ಅನುಗುಣವಾದ ಪ್ರಮಾಣದಲ್ಲಿ ತೊಗರಿಯನ್ನು ಖರೀದಿಸಲು ಅನುಮತಿ ನೀಡಲಾಗಿದೆ ಎಂದು ಹೇಳಿದ್ದಾರೆ. ಸರಕಾರದ ಆದೇಶದಂತೆ ಕಲಬುರಗಿ ಜಿಲ್ಲೆಗೆ ಬೆಂಬಲ ಬೆಲೆ ಯೋಜನೆಯಡಿ ತೊಗರಿ ಖರೀದಿಸಲು ರಾಜ್ಯ ದ್ವಿದಳ ಧಾನ್ಯ ಅಭಿವೃದ್ಧಿ ಮಂಡಳಿ ಹಾಗೂ ರಾಜ್ಯ ಸಹಕಾರ ಮಾರಾಟ ಮಹಾ ಮಂಡಳಿ ಸಂಸ್ಥೆಯನ್ನು ರಾಜ್ಯ ಖರೀದಿ ಸಂಸ್ಥೆಗಳಾಗಿ ನೇಮಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ. ಕಲಬುರಗಿ ಜಿಲ್ಲೆಯಲ್ಲಿ ಒಟ್ಟು 141 ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳು ಮತ್ತು ಎಫ್.ಪಿ.ಒ ಗಳ ಮೂಲಕ ಪ್ರತಿಯೊಂದು ಖರೀದಿ ಕೇಂದ್ರಗಳಲ್ಲಿ ಪಿಓಎಸ್ ಯಂತ್ರಗಳಲ್ಲಿ ರೈತರ ನೋಂದಣಿ ಹಾಗೂ ಖರೀದಿ ಪ್ರಕ್ರಿಯೆಯಲ್ಲಿ ಯುಐಡಿಎಐ ಬಯೋ ಮೆಟ್ರಿಕ್ ಪಡೆಯುವುದು ಕಡ್ಡಾಯವಾಗಿದೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ. ನೋಂದಣಿ ಕಾರ್ಯ ಪ್ರಾರಂಭವಾಗಿದ್ದು, 2026ರ ಮಾ.6ರವರೆಗೆ ಮುಂದುವರಿಯಲಿದೆ. ರೈತರಿಂದ ಖರೀದಿಸಿದ ಉತ್ಪನ್ನದ ಮೌಲ್ಯವನ್ನು ಡಿಬಿಟಿ ಪೋರ್ಟಲ್ ಮೂಲಕ ಪಾವತಿಸಲಾಗುವುದು. ಬೆಂಬಲ ಬೆಲೆ ದರಕ್ಕಿಂತ ಹೆಚ್ಚಿನ ಮಾರುಕಟ್ಟೆ ಧಾರಣೆ ಇದ್ದಲ್ಲಿ, ನಾಫೆಡ್ ಸಂಸ್ಥೆಯು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಇ-ಆಕ್ಷನ್ ಪೋರ್ಟಲ್ ಹಾಗೂ ಮುಕ್ತ ಮಾರುಕಟ್ಟೆಯಲ್ಲಿ ಬಫರ್ ಸ್ಟಾಕ್ ಉದ್ದೇಶಕ್ಕಾಗಿ ನೋಂದಾಯಿತ ರೈತರಿಂದ ಬೆಂಬಲ ಬೆಲೆಗಿಂತಲೂ ಹೆಚ್ಚಿನ ದರದಲ್ಲಿ ಖರೀದಿ ಕೈಗೊಳ್ಳಲಿದೆ ಎಂದು ಅವರು ಹೇಳಿದ್ದಾರೆ. ಜಿಲ್ಲೆಯ ರೈತ ಬಾಂಧವರು ಬೆಂಬಲ ಬೆಲೆ ಯೋಜನೆಯ ಸದುಪಯೋಗ ಪಡೆದುಕೊಂಡು, ತಮ್ಮ ಸಮೀಪದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿಗೆ ಹಾಗೂ ಎಫ್.ಪಿ.ಓ ಗಳಿಗೆ ಮತ್ತು ಜಿಲ್ಲೆಯ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳಲ್ಲಿರುವ ತೊಗರಿ ಖರೀದಿ ಕೇಂದ್ರಗಳಿಗೆ ಭೇಟಿ ನೀಡಿ ತಾವು ಬೆಳೆದ ತೊಗರಿಯನ್ನು ನಿಗದಿತ ಅವಧಿಯಲ್ಲಿ ಮಾರಾಟಕ್ಕೆ ನೋಂದಾಯಿಸಿಕೊಂಡು ಮಾರಾಟ ಮಾಡಬೇಕೆಂದು ಅವರು ಕೋರಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ಮೊಬೈಲ್ ಫೋನ್ ಸಂಖ್ಯೆಗಳನ್ನು ಸಂಪರ್ಕಿಸಿ. ರಾಜ್ಯ ಸಹಕಾರ ಮಾರಾಟ ಮಹಾ ಮಂಡಳಿ ಕಲಬುರಗಿ: ಮೊಬೈಲ್ ಸಂಖ್ಯೆ 9449864446, ರಾಜ್ಯ ದ್ವಿದಳ ಧಾನ್ಯ ಅಭಿವೃದ್ದಿ ಮಂಡಳಿ ಕಲಬುರಗಿ: ಮೊಬೈಲ್ ಸಂಖ್ಯೆ 9964474444 ಎಂದು ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.

ವಾರ್ತಾ ಭಾರತಿ 20 Dec 2025 7:02 pm

ಸಿದ್ದು vs ಡಿಕೆಶಿ: ಸಿಎಂ ಹುದ್ದೆಗಾಗಿನ ಹಾವು-ಏಣಿ ಆಟದಲ್ಲಿ ಈವರೆಗೆ ನಡೆದ ಚರ್ಚೆ, ಡೈಲಾಗ್‌ಗಳು

ಬೆಂಗಳೂರು: ಸಿದ್ದರಾಮಯ್ಯ ಸರ್ಕಾರ ಅಧಿಕಾರಕ್ಕೆ ಬಂದು ಎರಡೂವರೆ ವರ್ಷ ಕಳೆಯುತ್ತಿದ್ದಂತೆ ರಾಜ್ಯ ಕಾಂಗ್ರೆಸ್ನಲ್ಲಿ ಪವರ್ ಶೇರಿಂಗ್ ಪಾಲಿಟಿಕ್ಸ್ ಗರಿಗೆದರಿದೆ.ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್ ನಡುವಿನ ಶೀತಲ ಸಮರ ಈಗ ಅಕ್ಷರಶಃ ಇದೀಗ ಡಿನ್ನರ್‌ ಪಾಲಿಟಿಕ್ಸ್‌ ಆಗಿದೆ. ಸಿಎಂ ಕುರ್ಚಿಯ ಅಧಿಕಾರಕ್ಕಾಗಿ ಚದುರಂಗದಾಟ ಕೈ ಪಾಳಯದಲ್ಲಿ ಜೋರಾಗಿದೆ. ಎರಡೂವರೆ ವರ್ಷಗಳಿಂದ ಸಿಎಂ ಪಟ್ಟಕ್ಕಾಗಿ ಕಾದುಕುಳಿತಿದ್ದ ಡಿ ಕೆ

ಒನ್ ಇ೦ಡಿಯ 20 Dec 2025 6:53 pm

ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ: 4 ವರ್ಷದಲ್ಲಿ 15,000ಕ್ಕೂ ಹೆಚ್ಚು ಕೇಸ್‌, ಪ್ರಭಾವಿಗಳೂ ಭಾಗಿ!

ರಾಜ್ಯದಲ್ಲಿ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿವೆ. ಕಳೆದ ನಾಲ್ಕು ವರ್ಷಗಳಲ್ಲಿ 15,146 ಪೋಕ್ಸೋ ಪ್ರಕರಣಗಳು ದಾಖಲಾಗಿವೆ. ಬೆಂಗಳೂರು, ಶಿವಮೊಗ್ಗ, ಬೆಳಗಾವಿ, ಮೈಸೂರು ಜಿಲ್ಲೆಗಳಲ್ಲಿ ಪ್ರಕರಣಗಳು ಹೆಚ್ಚಾಗಿವೆ. ಪ್ರಭಾವಿಗಳ ಮೇಲೂ ಪೋಕ್ಸೋ ಅಸ್ತ್ರ ಪ್ರಯೋಗವಾಗಿದೆ. ಸರ್ಕಾರ ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿದ್ದು, ರಾಜಿ ಸಂಧಾನದಿಂದ ಪ್ರಕರಣಗಳು ಪೊಲೀಸ್ ಠಾಣೆ ಮೆಟ್ಟಿಲೇರದೇ ಇರುವುದೂ ದೊಡ್ಡ ಅಡ್ಡಿಯಾಗಿದೆ.

ವಿಜಯ ಕರ್ನಾಟಕ 20 Dec 2025 6:10 pm

ಸುಸ್ಥಿರ ವಾಣಿಜ್ಯ ಯೋಜನೆಗೆ ಬ್ಯಾರೀಸ್ ಗ್ರೂಪ್‌ಗೆ CREDAI ರಾಷ್ಟ್ರೀಯ ಪ್ರಶಸ್ತಿ

ಹೊಸದಿಲ್ಲಿ, ಡಿ.19: ಸುಸ್ಥಿರ ವಾಣಿಜ್ಯ ಅಭಿವೃದ್ಧಿ ಕ್ಷೇತ್ರದಲ್ಲಿ ಸಾಧನೆಗಾಗಿ ಬ್ಯಾರೀಸ್ ಸಂಸ್ಥೆಗೆ CREDAI ನ್ಯಾಷನಲ್ ರಿಯಲ್ ಎಸ್ಟೇಟ್ ಎಕ್ಸಲೆನ್ಸ್ ಅವಾರ್ಡ್ ಲಭಿಸಿದೆ. ಡಿಸೆಂಬರ್ 19ರಂದು ಹೊಸದಿಲ್ಲಿಯ ತಾಜ್ ಪ್ಯಾಲೇಸ್ ನಲ್ಲಿ ನಡೆದ CREDAI ನ್ಯಾಷನಲ್ ರಿಯಲ್ ಎಸ್ಟೇಟ್ ಎಕ್ಸಲೆನ್ಸ್ ಅವಾರ್ಡ್ ಪ್ರದಾನ ಸಮಾರಂಭದಲ್ಲಿ ಈ ಗೌರವ ಪ್ರದಾನ ಮಾಡಲಾಯಿತು. ಪ್ರಶಸ್ತಿಗಳ ಮೊದಲ ಆವೃತ್ತಿಯಲ್ಲಿ ದೇಶದಾದ್ಯಂತ 500ಕ್ಕೂ ಹೆಚ್ಚು ಡೆವಲಪರ್‌ಗಳು ಭಾಗವಹಿಸಿದ್ದು, 800ಕ್ಕೂ ಹೆಚ್ಚು ಯೋಜನೆಗಳನ್ನು ಪರಿಗಣನೆಗೆ ಸಲ್ಲಿಸಲಾಗಿತ್ತು. ಮೌಲ್ಯಮಾಪನದ ಬಳಿಕ 175 ಯೋಜನೆಗಳನ್ನು ಶಾರ್ಟ್‌ಲಿಸ್ಟ್ ಮಾಡಲಾಗಿದ್ದು, ಅವುಗಳಲ್ಲಿ 25 ಯೋಜನೆಗಳಿಗೆ ಪ್ರಶಸ್ತಿ ನೀಡಲಾಗಿದೆ. ಬ್ಯಾರೀಸ್ ಗ್ರೂಪ್ ಪರವಾಗಿ ಸಂಸ್ಥೆಯ ಉಪ ವ್ಯವಸ್ಥಾಪಕ ನಿರ್ದೇಶಕ ಸಿದ್ದೀಕ್ ಬ್ಯಾರಿ ಪ್ರಶಸ್ತಿಯನ್ನು ಸ್ವೀಕರಿಸಿದರು. ಜಾಗತಿಕ ಮಾನದಂಡಗಳಿಗೆ ಅನುಗುಣವಾಗಿ ಅನುಷ್ಠಾನಗೊಳಿಸಿದ ಸುಸ್ಥಿರ ಕ್ರಮಗಳು, ಸುರಕ್ಷತಾ ಮಾನದಂಡಗಳು ಮತ್ತು ತಂತ್ರಜ್ಞಾನಗಳನ್ನು ಅಳವಡಿಸಿಕೊಂಡ NTT ಡೇಟಾ ಸೆಂಟರ್ ಪಾರ್ಕ್ ಯೋಜನೆಯ ವಿನ್ಯಾಸ ಮತ್ತು ಕಾರ್ಯಗತಗೊಳಿಸುವಿಕೆಗೆ ಈ ಮನ್ನಣೆ ದೊರೆತಿದೆ. ಹಸಿರು ತಂತ್ರಜ್ಞಾನ ಅಳವಡಿಸಿಕೊಂಡು ಮಾಡಲಾಗಿರುವ ಭಾರತದ ಮುಂದುವರಿದ ಡೇಟಾ ಸೆಂಟರ್ ಅಭಿವೃದ್ಧಿಗಳಲ್ಲಿ ಈ ಯೋಜನೆ ಪ್ರಮುಖವಾಗಿದೆ ಎಂದು ಸಂಸ್ಥೆಯ ಪ್ರಕಟನೆ ತಿಳಿಸಿದೆ. ಪ್ರಶಸ್ತಿ ಸ್ವೀಕರಿಸಿದ ಬಳಿಕ ಮಾತನಾಡಿದ ಉಪ ವ್ಯವಸ್ಥಾಪಕ ನಿರ್ದೇಶಕ ಸಿದ್ದೀಕ್ ಬ್ಯಾರಿ, CREDAI ರಾಷ್ಟ್ರೀಯ ಪ್ರಶಸ್ತಿಗಳ ಮೊದಲ ಆವೃತ್ತಿಯಲ್ಲಿ ಲಭಿಸಿದ ಈ ಗೌರವ ಬ್ಯಾರೀಸ್ ಗ್ರೂಪ್‌ಗೆ ಮಹತ್ವದ ಮೈಲಿಗಲ್ಲು. ಸುಸ್ಥಿರ ಅಭಿವೃದ್ಧಿ ಹಾಗೂ ಗುಣಮಟ್ಟದ ಇಂಜಿನಿಯರಿಂಗ್‌ಗೆ ಸಂಸ್ಥೆ ನೀಡುತ್ತಿರುವ ಆದ್ಯತೆಯ ಪ್ರತಿಫಲವೇ ಈ ಮನ್ನಣೆ ಎಂದು ಅವರು ಹೇಳಿದರು.

ವಾರ್ತಾ ಭಾರತಿ 20 Dec 2025 6:05 pm

ಇತ್ತೀಚೆಗೆ ಭಾರತಕ್ಕೆ ಬಂದಿದ್ದ ಮೆಸ್ಸಿ ಜೊತೆಗೆ ಫೋಟೋ ಕ್ಲಿಕ್ಕಿಸಿಕೊಳ್ಳಲು 30 ಲಕ್ಷ ರೂ. ಶುಲ್ಕ! ಕಾರ್ಯಕ್ರಮ ಸಂಘಟಕನ ಮನೆ ರೈಡ್

ಲಿಯೋನೆಲ್ ಮೆಸ್ಸಿ ಕಾರ್ಯಕ್ರಮದ ಸಂಘಟಕ ಸತಾದ್ರು ದತ್ತಾ ಅವರ ಕೋಲ್ಕತ್ತಾದ ಮನೆಯಲ್ಲಿ ಪೊಲೀಸರು ಶೋಧ ನಡೆಸಿದ್ದಾರೆ. ಮೆಸ್ಸಿಯೊಂದಿಗೆ ಫೋಟೋಗೆ ಲಕ್ಷಾಂತರ ರೂಪಾಯಿ ವಸೂಲಿ ಮತ್ತು ಹಣಕಾಸಿನ ಅಕ್ರಮಗಳ ಆರೋಪಗಳು ತನಿಖೆಗೆ ಕಾರಣವಾಗಿವೆ. ಟಿಕೆಟ್ ಮಾರಾಟದಲ್ಲೂ ಗೊಂದಲ ಕಂಡುಬಂದಿದೆ. ವಿಶೇಷ ತನಿಖಾ ದಳ ಈ ಪ್ರಕರಣವನ್ನು ತೀವ್ರವಾಗಿ ಪರಿಶೀಲಿಸುತ್ತಿದೆ. ಅಕ್ರಮ ಹಣಕಾಸು ವ್ಯವಹಾರಗಳ ಬಗ್ಗೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

ವಿಜಯ ಕರ್ನಾಟಕ 20 Dec 2025 5:58 pm

ಕೊಳಲಬಾಕಿಮಾರು | ವಿದ್ಯಾರ್ಥಿಗಳಿಗೆ ಅಂಚೆ ಇಲಾಖೆ ಬಗ್ಗೆ ಮಾಹಿತಿ

ಬಂಟ್ವಾಳ, ಡಿ.20: ತಾಲೂಕಿನ ಕೊಳಲಬಾಕಿಮಾರು ಕಿರಿಯ ಪ್ರಾಥಮಿಕ ಶಾಲೆಯ ವತಿಯಿಂದ ‘ಡಿಸೆಂಬರ್ ತಿಂಗಳ ಸಂಭ್ರಮ’ ಪ್ರಯುಕ್ತ ‘ಸಾರ್ವಜನಿಕ ಸೌಕರ್ಯ ಮತ್ತು ನನ್ನ ಜವಾಬ್ದಾರಿ’ ವಿಷಯದ ಬಗ್ಗೆ ವಿದ್ಯಾರ್ಥಿಗಳಿಗೆ ಜಾಗೃತಿ ಕಾರ್ಯಕ್ರಮ ಶನಿವಾರ ನಡೆಯಿತು. ಕೊಳಲಬಾಕಿಮಾರು ಶಾಲಾ ಪರಿಸರದ ಮೂಡುಪಡುಕೋಡಿ ಅಂಚೆ ಕಚೇರಿಗೆ ವಿದ್ಯಾರ್ಥಿಗಳನ್ನು ಭೇಟಿ ಮಾಡಿಸಿ ಅಂಚೆ ಇಲಾಖೆಯ ಕಾರ್ಯ ಚಟುವಟಿಕೆಗಳ ಬಗ್ಗೆ ಅರಿವು ಮೂಡಿಸಲಾಯಿತು. ಈ ಸಂದರ್ಭದಲ್ಲಿ ಪೋಸ್ಟ್ ಮಾಸ್ಟರ್ ಮುಹಮ್ಮದ್ ಖಲೀಲ್, ಶಾಲಾ ಮುಖ್ಯ ಶಿಕ್ಷಕ ರಾಜೇಶ ಕೆ., ಅತಿಥಿ ಶಿಕ್ಷಕಿ ನಿಕಿತಾ ಕೆ., ಅಂಚೆ ಕಚೇರಿಯ ಇತರರು ಉಪಸ್ಥಿತರಿದ್ದರು.

ವಾರ್ತಾ ಭಾರತಿ 20 Dec 2025 5:57 pm

ಅಮಿತ್ ಶಾ ಜಗದೇಕವೀರನಲ್ಲ, ’ಅಸಮರ್ಥ ಗೃಹ ಸಚಿವ’ ಎಂದ ಪ್ರಿಯಾಂಕ್ ಖರ್ಗೆ : 5 ಕಾರಣ ಕೊಟ್ಟ ಸಚಿವರು

Five reasons why Amit Shah not capable : ಕೇಂದ್ರ ಸರ್ಕಾರ ಮತ್ತು ಸಚಿವರುಗಳನ್ನು ಟೀಕಿಸುವ ಕೆಲಸವನ್ನು ಮುಂದುವರಿಸಿರುವ ಕರ್ನಾಟಕ ಸಚಿವ ಪ್ರಿಯಾಂಕ್ ಖರ್ಗೆ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಅಸಮರ್ಥರು ಎಂದು ದೂರಿದ್ದಾರೆ. ಇದಕ್ಕಾಗಿ ಅವರು ಐದು ಕಾರಣವನ್ನು ನೀಡಿದ್ದಾರೆ.

ವಿಜಯ ಕರ್ನಾಟಕ 20 Dec 2025 5:45 pm

ಯಾದಗಿರಿ | ಅರ್ಥಪೂರ್ಣವಾಗಿ ವಿಶ್ವಕರ್ಮ ಅಮರಶಿಲ್ಪಿ ಜಕಣಚಾರಿ ಜಯಂತಿ ಆಚರಣೆಗೆ ನಿರ್ಧಾರ

ಯಾದಗಿರಿ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ವಿವಿಧ ಇಲಾಖೆಗಳು ಹಾಗೂ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಜ.1 ರಂದು ವಿಶ್ವಕರ್ಮ ಅಮರಶಿಲ್ಪಿ ಜಕಣಚಾರಿ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲು ನಿರ್ಧರಿಸಲಾಗಿದೆ. ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಅಮರಶಿಲ್ಪಿ ಜಕಣಾಚಾರಿ ಜಯಂತಿ ಆಚರಿಸುವ ಕುರಿತು ಸಹಾಯಕ ಆಯುಕ್ತ ಶ್ರೀಧರ್ ಗೋಟುರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಪೂರ್ವಭಾವಿ ಸಿದ್ಧತಾ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ. ಅಂದು ನಗರದ ಸರ್ಕಾರಿ ಪದವಿ ಮಹಾವಿದ್ಯಾಲಯದ ಸಭಾಂಗಣದಲ್ಲಿ ಮಧ್ಯಾಹ್ನ 1 ಗಂಟೆಗೆ ಈ ಜಯಂತಿ ಆಯೋಜಿಸಲು, ಜಕಣಾಚಾರಿ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ಪಾರ್ಚನೆ ಮಾಡಿ ಗೌರವ ಅರ್ಪಿಸಲು, ವೇದಿಕೆ, ಆಸನದ ವ್ಯವಸ್ಥೆ, ಶಿಷ್ಟಾಚಾರದಂತೆ ಗಣ್ಯರನ್ನು, ಉಪನ್ಯಾಸಕರನ್ನು ಆಹ್ವಾನಿಸಲು ನಿರ್ಧರಿಸಲಾಯಿತು. ಸಭೆಯ ಅಧ್ಯಕ್ಷತೆ ವಹಿಸಿದ್ದ ಸಹಾಯಕ ಆಯುಕ್ತ ಶ್ರೀಧರ್ ಗೋಟುರ್ ಅವರು ಕಾರ್ಯಕ್ರಮದ ಸಂದರ್ಭದಲ್ಲಿ, ಸೂಕ್ತ ಪೊಲೀಸ್ ಬಂದೋಬಸ್ತ್, ವೇದಿಕೆ ಸಿದ್ಧತೆ ನೋಡಿಕೊಳ್ಳಲು, ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು. ಆಮಂತ್ರಣ ಪತ್ರಿಕೆ ವಿತರಿಸುವ ವ್ಯವಸ್ಥೆಗೆ ಸೂಚಿಸಲಾಯಿತು. ಕಾರ್ಯಕ್ರಮವನ್ನು ತಾಲೂಕು ಮಟ್ಟದಲ್ಲಿ ಶಾಲಾ, ಕಾಲೇಜು, ಗ್ರಾಮ ಪಂಚಾಯತ್, ವಿವಿಧ ಕಚೇರಿಗಳಲ್ಲಿ ಈ ಜಯಂತಿ ಆಚರಣೆ, ಮುಖ್ಯ ಕಾರ್ಯಕ್ರಮಕ್ಕೆ, ಅಗತ್ಯ ಸಿದ್ಧತೆ ಮಾಡಿಕೊಳ್ಳಲು ಸಂಬಂಧಿಸಿದ ಅಧಿಕಾರಿಗಳಿಗೆ ಅವರು ಸೂಚಿಸಿದರು. ಸಮಾಜದ ಮೂಲಕ ಹಮ್ಮಿಕೊಳ್ಳಲಾಗುವ ಮೆರವಣಿಗೆ ಕಾರ್ಯಕ್ರಮ ಮುಂಚಿತವಾಗಿ ಜಿಲ್ಲಾಡಳಿತಕ್ಕೆ ಈ ಕುರಿತು ಮಾಹಿತಿ ನೀಡಲು ಸೂಚಿಸಿದರು. ಸಭೆಯಲ್ಲಿ ಕನ್ನಡ ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಉತ್ತರದೇವಿ ಸ್ವಾಗತಿಸಿದರು. ವಿಶ್ವಕರ್ಮ ತಡಿಬಿಡಿ, ಶಿವಣ್ಣ ವಿಶ್ವಕರ್ಮ, ದೇವಿಂದ್ರಪ್ಪ ವಿಶ್ವಕರ್ಮ, ಶಿವಕುಮಾರ್, ಚಂದ್ರ ಶೇಖರ್ ಪತ್ತಾರ, ಹಣಮಂತರಾಯ್ ವಿಶ್ವ ಕರ್ಮ ಉಪಸ್ಥಿತರಿದ್ದರು.

ವಾರ್ತಾ ಭಾರತಿ 20 Dec 2025 5:42 pm

ಬ್ರಹ್ಮಾವರ| ಬಿಲ್ಲವ ಮುಖಂಡ ಪ್ರವೀಣ್ ಪೂಜಾರಿ, ಯುವಮೋರ್ಚಾ ಜಿಲ್ಲಾಧ್ಯಕ್ಷ ಪೃಥ್ವಿರಾಜ್ ಹೆಗ್ಡೆ ವಿರುದ್ಧ ಸುಮೊಟೋ ಪ್ರಕರಣ ದಾಖಲು

ಬ್ರಹ್ಮಾವರ: ವಾರೆಂಟ್ ಜಾರಿಗೊಳಿಸಲು ಮನೆಗೆ ತೆರಳಿದ ಪೋಲಿಸರು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ಬ್ರಹ್ಮಾವರ ಠಾಣೆಯ ಮುಂಭಾಗ ನಡೆದ ಪ್ರತಿಭಟನೆ ನೇತೃತ್ವ ವಹಿಸಿದ್ದ ಬಿಲ್ಲವ ವೇದಿಕೆ ಜಿಲ್ಲಾಧ್ಯಕ್ಷ ಪ್ರವೀಣ್ ಪೂಜಾರಿ, ಬಿಜೆಪಿ ಯುವಮೋರ್ಚಾ ಜಿಲ್ಲಾಧ್ಯಕ್ಷ ಪೃಥ್ವಿರಾಜ್ ಹೆಗ್ಡೆ ಸೇರಿದಂತೆ ಇತರರ ವಿರುದ್ಧ ಬ್ರಹ್ಮಾವರ ಠಾಣೆಯಲ್ಲಿ ಸುಮೊಟೋ ಪ್ರಕರಣ ದಾಖಲಾಗಿದೆ. ಪ್ರತಿಭಟನೆಯಲ್ಲಿ ಬಳಸಿದ್ದ ಧ್ವನಿವರ್ಧಕಕ್ಕೆ ಯಾವುದೇ ರೀತಿಯ ಅನುಮತಿಯನ್ನು ಪಡೆಯದೇ ಕಾನೂನು ಉಲ್ಲಂಘಿಸಲಾಗಿದೆ ಎಂದು ಬ್ರಹ್ಮಾವರ ಪಿಎಸ್ಐ ಅಶೋಕ್ ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ.

ವಾರ್ತಾ ಭಾರತಿ 20 Dec 2025 5:34 pm

ಕಲ್ಲರಕೋಡಿ: ಶಾಲಾ ದೈಹಿಕ ಶಿಕ್ಷಕನ ಮೃತದೇಹ ಬಾವಿಯಲ್ಲಿ ಪತ್ತೆ

ಉಳ್ಳಾಲ: ನರಿಂಗಾನ ಗ್ರಾಮದ ಕಲ್ಲರಕೋಡಿ ಸರ್ಕಾರಿ ಶಾಲೆಯ ದೈಹಿಕ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಪ್ರಭಾಕರ್ ಜೋಗಿ (51) ಎಂಬವರ ಮೃತದೇಹ ಕೋಟೆಕಾರು ಪಟ್ಟಣ ವ್ಯಾಪ್ತಿಯ ಕೊಂಡಾಣದ ತನ್ನ ಮನೆಯ ಬಾವಿಯಲ್ಲಿ ಶುಕ್ರವಾರ ಸಂಜೆ ಪತ್ತೆಯಾಗಿದ್ದು, ಅನಾರೋಗ್ಯದಿಂದ ಆತ್ಮಹತ್ಯೆ ಮಾಡಿಕೊಂಡಿರಬೇಕು ಎಂದು ಶಂಕಿಸಲಾಗಿದೆ. ಶುಕ್ರವಾರ ಸಂಜೆ ಪ್ರಭಾಕರ್ ತನ್ನ ಮಗಳನ್ನು ಉಚ್ಚಿಲದ ಶಾಲೆಗೆ ಶಾಲಾ ವಾರ್ಷಿಕೋತ್ಸವಕ್ಕೆಂದು ಬಿಟ್ಟು ಮನೆಗೆ ಬಂದಿದ್ದರು. ಬಳಿಕ ಪತ್ನಿ ಮತ್ತು ಮಗನ ಜೊತೆ ಮಗಳ ಶಾಲಾ ವಾರ್ಷಿಕೋತ್ಸವಕ್ಕೆ ತೆರಳಲು ಸಿದ್ಧತೆ ನಡೆಸಿದ್ದರು. ನಂತರ ನಾಪತ್ತೆಯಾಗಿದ್ದರು. ಅವರನ್ನು ಹುಡುಕಾಡಿದಾಗ ಅವರ ಮೃತದೇಹ ಮನೆಯ ಬಾವಿಯಲ್ಲಿ ಪತ್ತೆಯಾಗಿದೆ. ಮೃತ ಪ್ರಭಾಕರ ಜೋಗಿಯವರು ನರ ದೌರ್ಬಲ್ಯದ ಸಮಸ್ಯೆಯಿಂದ ಬಳಲುತ್ತಿದ್ದರೆನ್ನಲಾಗಿದೆ. ಪ್ರಭಾಕರ ಜೋಗಿಯವರು ಉಳ್ಳಾಲ ತಾಲೂಕಿನ ಹಲವು ಶಾಲೆಗಳಲ್ಲಿ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸಿದ್ದರು. ದೈಹಿಕ ಶಿಕ್ಷಕರ ಸಂಘಟನೆಗಳಲ್ಲಿಯೂ ಅವರು ಸಕ್ರಿಯರಾಗಿದ್ದರು. ಘಟನಾ ಸ್ಥಳಕ್ಕೆ ಉಳ್ಳಾಲ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಮೃತ ದೇಹವನ್ನ ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ನನ್ನ ತಂದೆ ಬಾವಿಗೆ ಹಾರಿ ಅತ್ಮಹತ್ಯೆ ಮಾಡಿಕೊಂಡಿದ್ದು, ಇದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಪ್ರಭಾಕರ್ ಅವರ ಪುತ್ರ ಸಾಯಿ ತೇಜಸ್ ಉಳ್ಳಾಲ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ವಾರ್ತಾ ಭಾರತಿ 20 Dec 2025 5:27 pm

ಬುದ್ಧಿಮಾಂದ್ಯ ಬಾಲಕನ ಕಣ್ಣಿಗೆ ಖಾರದಪುಡಿ ಎರಚಿ, ರಕ್ತ ಹೆಪ್ಪುಗಟ್ಟುವಂತೆ ಹೊಡೆದ ವಸತಿಶಾಲೆ ಮಾಲೀಕ - ಬಾಗಲಕೋಟೆಯಲ್ಲಿ ಘಟನೆ

ಬಾಗಲಕೋಟೆಯ ನವನಗರದಲ್ಲಿರುವ ದಿವ್ಯಜ್ಯೋತಿ ವಿಕಲಚೇತನರ ವಸತಿ ಶಾಲೆಯಲ್ಲಿ ಅಕ್ಷಯ್ ಎಂಬಾತ ಮಕ್ಕಳ ಮೇಲೆ ತೀವ್ರ ಹಲ್ಲೆ ನಡೆಸಿದ್ದಾನೆ. ಬುದ್ಧಿಮಾಂದ್ಯ ಬಾಲಕನಿಗೆ ಪ್ಲಾಸ್ಟಿಕ್ ಪೈಪ್ ನಿಂದ ಹೊಡೆದು, ಕಣ್ಣಿಗೆ ಖಾರದ ಪುಡಿ ಎರಚಿದ ಆರೋಪ ಕೇಳಿಬಂದಿದೆ. ಕೆಲಸಗಾರನೊಬ್ಬ ಚಿತ್ರೀಕರಿಸಿದ ವಿಡಿಯೋ ವೈರಲ್ ಆಗಿದ್ದು, ಪೊಲೀಸರು ಅಕ್ಷಯ್ ಹಾಗೂ ಆತನ ಪತ್ನಿಯನ್ನು ವಶಕ್ಕೆ ಪಡೆದಿದ್ದಾರೆ. ಶಾಲೆಯು ಅಗತ್ಯ ಪರವಾನಗಿ ಹೊಂದಿಲ್ಲ ಎಂಬುದು ತನಿಖೆಯಲ್ಲಿ ತಿಳಿದುಬಂದಿದೆ.

ವಿಜಯ ಕರ್ನಾಟಕ 20 Dec 2025 5:19 pm

Chamarajanagar | ನಂಜದೇವನಪುರ ಗ್ರಾಮದಲ್ಲಿ 5 ಹುಲಿಗಳು ಪ್ರತ್ಯಕ್ಷ; ಗ್ರಾಮಸ್ಥರಲ್ಲಿ ಆತಂಕ

ಚಾಮರಾಜನಗರ : ಗಡಿಜಿಲ್ಲೆಯಲ್ಲಿ‌ ಹುಲಿಗಳ‌ ಓಡಾಟದಿಂದ ಜನರು ಬೆಚ್ಚಿ ಬೀಳುತ್ತಿದ್ದಾರೆ. ಇದೀಗ, ಚಾಮರಾಜನಗರ ಹಾಗೂ ಗುಂಡ್ಲುಪೇಟೆ ತಾಲೂಕುಗಳ ಗ್ರಾಮಸ್ಥರಲ್ಲಿ ವ್ಯಾಘ್ರದ ಆತಂಕ ಮನೆ ಮಾಡಿದೆ. 5 ಹುಲಿಗಳು ಹಾದುಹೋದ ದೃಶ್ಯ ನಂಜದೇವನಪುರ ಗ್ರಾಮದ ಕುಮಾರಸ್ವಾಮಿ ಎಂಬುವರ ಜಮೀನಿನ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಚಾಮರಾಜನಗರ ತಾಲೂಕಿನ ನಂಜದೇವಪುರದ ಜಮೀನಿನ‌ ಪಕ್ಕವೇ ಆನೆಮಡುವಿನ ಕೆರೆಯಿದ್ದು, ಅಲ್ಲಿಂದ 5 ಹುಲಿಗಳು ತೆರಳುವಾಗ ಸಿಸಿಟಿವಿಯಲ್ಲಿ ದೃಶ್ಯ ರೆಕಾರ್ಡ್​ ಆಗಿದೆ. ಕೆರೆ ಬಳಿ ಹುಲಿಗಳು ಪ್ರತ್ಯಕ್ಷವಾಗಿದ್ದನ್ನು ತಿಳಿದು ಸುತ್ತಮುತ್ತಲಿನ ಗ್ರಾಮಸ್ಥರು ಬೆಚ್ಚಿಬಿದ್ದಿದ್ದಾರೆ. ಈ ಹಿಂದೆ ಇದೇ ನಂಜದೇವನಪುರ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಬಿಆರ್​​ಟಿ ಚಾಮರಾಜನಗರ ಬಫರ್ ಅರಣ್ಯ ಇಲಾಖೆ ಸಿಬ್ಬಂದಿ ಹುಲಿಗಳ ಸೆರೆಗಾಗಿ ತೀವ್ರ ಕೂಂಬಿಂಗ್ ನಡೆಸಿದ್ದರಾದರೂ ಸೆರೆಯಾಗಿರಲಿಲ್ಲ. ಈಗ ಮತ್ತೆ ಹುಲಿಗಳು ಕಾಣಿಸಿಕೊಂಡಿರುವುದು ರೈತರನ್ನು ಆತಂಕಕ್ಕೀಡುಮಾಡಿದೆ. ಮಾಹಿತಿ ತಿಳಿದು ಅರಣ್ಯಾಧಿಕಾರಿಗಳು‌‌‌‌‌ ಸ್ಥಳಕ್ಕೆ‌‌ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ವಾರ್ತಾ ಭಾರತಿ 20 Dec 2025 5:18 pm

ಆತಿಥ್ಯ ವಲಯಕ್ಕೆ ಅದಾನಿ ಗ್ರ್ಯಾಂಡ್ ಎಂಟ್ರಿ, 60 ಹೋಟೆಲ್ ನಿರ್ಮಾಣಕ್ಕೆ ಪ್ಲಾನ್! ಟಾಟಾದ ತಾಜ್‌, ಐಟಿಸಿಗೆ ಪೈಪೋಟಿ

ವಿಮಾನ ನಿಲ್ದಾಣ ಮತ್ತು ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಪ್ರಾಬಲ್ಯ ಹೊಂದಿರುವ ಗೌತಮ್ ಅದಾನಿ ನೇತೃತ್ವದ ಅದಾನಿ ಗ್ರೂಪ್, ಇದೀಗ ಆತಿಥ್ಯ ಕ್ಷೇತ್ರಕ್ಕೆ ಲಗ್ಗೆ ಇಡಲು ಸಜ್ಜಾಗಿದೆ. ದೇಶದ ಪ್ರಮುಖ ಹೋಟೆಲ್ ಉದ್ಯಮಗಳಾದ ತಾಜ್, ಐಟಿಸಿ ಮತ್ತು ಒಬೆರಾಯ್ ಗ್ರೂಪ್‌ಗಳಿಗೆ ಪೈಪೋಟಿ ನೀಡುವ ರೀತಿಯಲ್ಲಿ, ಬರೋಬ್ಬರಿ 60ಕ್ಕೂ ಹೆಚ್ಚು ಹೋಟೆಲ್‌ಗಳನ್ನು ನಿರ್ಮಿಸಲು ಅದಾನಿ ಸಮೂಹ ಯೋಜನೆ ರೂಪಿಸಿದೆ.

ವಿಜಯ ಕರ್ನಾಟಕ 20 Dec 2025 5:08 pm

T20 World Cup Squad : ಗಿಲ್, RCB ಆಟಗಾರನನ್ನು ತಂಡದಿಂದ ಕೈಬಿಟ್ಟಿದ್ದೇಕೆ - ಇಲ್ಲಿದೆ ಅಸಲಿ ಕಾರಣ

T20 Word Cup Squad : ಮುಂದಿನ ವರ್ಷ ನಡೆಯಲಿರುವ ವಿಶ್ವಕಪ್ ಟಿ20 ಪಂದ್ಯಾವಳಿಗೆ ಭಾರತದ ತಂಡವನ್ನು ಪ್ರಕಟಿಸಲಾಗಿದೆ. ತಂಡದಲ್ಲಿ ಕೆಲವೊಂದು ಬದಲಾವಣೆಯನ್ನು ಮಾಡಲಾಗಿದೆ. ನಾಯಕನಾಗಿ, ಸೂರ್ಯ ಕುಮಾರ್ ಯಾದವ್ ಮುಂದುವರಿಯಲಿದ್ದಾರೆ. ಶುಬ್ಮನ್ ಗಿಲ್ ಮತ್ತು ಜಿತೇಶ್ ಶರ್ಮಾ ಅವರನ್ನು ಕೈಬಿಟ್ಟಿದ್ದು ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.

ವಿಜಯ ಕರ್ನಾಟಕ 20 Dec 2025 4:56 pm

ಬೆಂಗಳೂರು ಸೇರಿ 6,117 ರೈಲು ನಿಲ್ದಾಣಗಳಲ್ಲಿ ಉಚಿತ ವೈಫೈ: ಭದ್ರತೆಗಾಗಿ 11,953 ಬೋಗಿಗಳಲ್ಲಿ ಸಿಸಿಟಿವಿ

ನವದೆಹಲಿ: ಭಾರತೀಯ ರೈಲ್ವೆಯು ತನ್ನ ವ್ಯಾಪ್ತಿಯಲ್ಲಿ ರೈಲುಗಳ ಮೂಲಸೌಕರ್ಯ ಅಭಿವೃದ್ಧಿ ಮಾಡುತ್ತಲೇ ಬಂದಿದೆ. ಕರ್ನಾಟಕ ಸೇರಿದಂತೆ ದೇಶದ ಹೊಸ ಮಾರ್ಗಗಳಲ್ಲಿ ರೈಲು ಸೇವೆ ಆರಂಭಿಸಿದೆ. ಹೊಸ ಮಾರ್ಗಗಳನ್ನು ಸ್ಥಾಪಿಸುವ ಕಾರ್ಯದಲ್ಲಿ ಇಲಾಖೆ ನಿರತವಾಗಿದೆ. ಇದೀಗ ರೈಲುಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರ ಸುರಕ್ಷತೆಗೆ ಒತ್ತು ನೀಡಿದೆ. ಡಿಜಿಟಲ್ ಹಣಕಾಸು ಸೇವೆಗೆ, ಇತರ ಉಪಯೋಗಕ್ಕೆ ರೈಲು ಬೋಗಿಗಳಲ್ಲಿ ವೈಫೈ ಸೇವೆ ಒದಗಿಸಿದೆ.

ಒನ್ ಇ೦ಡಿಯ 20 Dec 2025 4:28 pm

ಪ್ರಿಯಾಂಕ್ ಖರ್ಗೆ ವಿರುದ್ಧ ದ್ವೇಷ ಭಾಷಣ ನಿಯಂತ್ರಣ ಕಾನೂನಿನಡಿ ಕ್ರಮವಾಗಲಿ: ಗೋವಿಂದ ಕಾರಜೋಳ

ಬೆಂಗಳೂರು: ನಿನ್ನೆ ವಿಧಾನ ಪರಿಷತ್ತಿನಲ್ಲಿ ಸಚಿವ ಪ್ರಿಯಾಂಕ್ ಖರ್ಗೆಯವರು ಕೇಂದ್ರ ಸಚಿವ ಅಮಿತ್ ಶಾ ಬಗ್ಗೆ ಅವಹೇಳಕಾರಿಯಾಗಿ ಮತ್ತು ಅಸಂಸದೀಯ ಪದಗಳನ್ನು ಬಳಸಿ ಮಾತನಾಡಿದ್ದು ಖಂಡನೀಯ. ಸರಕಾರ ಹೊಸದಾಗಿ ಜಾರಿಗೊಳಿಸಿರುವ ದ್ವೇಷ ಭಾಷಣ ನಿಯಂತ್ರಣ ಕಾನೂನಿನಡಿ ಪ್ರಿಯಾಂಕ್ ಖರ್ಗೆ ಮೊದಲನೇ ಅಪರಾಧಿ. ಅವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಮಾಜಿ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಒತ್ತಾಯಿಸಿದ್ದಾರೆ. ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿಂದು ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಿಯಾಂಕ್ ಖರ್ಗೆ ಕೂಡಲೇ ಕ್ಷಮೆ ಕೇಳಬೇಕೆಂದು ಆಗ್ರಹಿಸಿದರು. ಉತ್ತರ ಕರ್ನಾಟಕದ ವಿಜಯಪುರ, ರಾಯಚೂರು, ಕಲಬುರಗಿ, ಹೈದರಾಬಾದ್ ನಲ್ಲಿ ಒಂದು ನಾಣ್ಣುಡಿ ಇದೆ. ಸಣ್ಣ ಬಾಯೊಳಗೆ ದೊಡ್ಡ ಮಾತು (ಚೋಟಿ ಮುಹ್, ಬಡೀ ಬಾತ್) ಎಂಬರ್ಥವನ್ನು ಇದು ಕೊಡುತ್ತದೆ. ಈ ನಾಣ್ಣುಡಿ ಪ್ರಿಯಾಂಕ್ ಸಲುವಾಗಿಯೇ ಇದ್ದಂತಿದೆ ಎಂದು ಕಾರಜೋಳ ವ್ಯಂಗ್ಯವಾಡಿದರು. ಪ್ರಿಯಾಂಕ್ ತಂದೆಯವರ ಹೆಸರು ಮಲ್ಲಿಕಾರ್ಜುನ ಇರದೇ ಹೋಗಿದ್ದರೆ, ಪ್ರಿಯಾಂಕ್ ಖರ್ಗೆಯನ್ನು ಯಾವೂರ ದಾಸಯ್ಯ ಎಂದು ಯಾರೂ ಕೇಳುತ್ತಿರಲಿಲ್ಲ. ಅವರ ತಂದೆಯವರಿಗಾಗಿ ಅವರಿಗೆ ಗೌರವ ಸಿಕ್ಕಿದೆ ಎಂದ ಕಾರಜೋಳ, ಚಿಕ್ಕವರಾದರೂ ಅವರು ತಿದ್ದಿಕೊಳ್ಳಬೇಕಿದೆ. ಬಾಯ್ತಪ್ಪಿ ಮಾತನಾಡಿದ್ದರೆ ಕ್ಷಮೆ ಕೇಳಿ ಅದನ್ನು ಸರಿಪಡಿಸಿಕೊಳ್ಳುವುದನ್ನು ಕಲಿಯಲಿ ಎಂದರು. ನಾಲಿಗೆ ಹರಿಬಿಡುವುದರಲ್ಲಿ ಪ್ರಿಯಾಂಕ್ ನಂಬರ್ 1: ಛಲವಾದಿ ನಾರಾಯಣಸ್ವಾಮಿ ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಮಾತನಾಡಿ, ನಾಲಿಗೆ ಹರಿಬಿಡುವುದರಲ್ಲಿ ಪ್ರಿಯಾಂಕ್ ಖರ್ಗೆ ಇಡೀ ಕಾಂಗ್ರೆಸ್ ನಲ್ಲಿ ನಂಬರ್ 1. ಖರ್ಗೆ ಎಂಬ ಹೆಸರು ಪ್ರಿಯಾಂಕ್ ಪಕ್ಕದಲ್ಲಿ ಇಲ್ಲದೇ ಇರುತ್ತಿದ್ದರೆ ಅವರು ಮಂಡಲ ಪಂಚಾಯತ್ ಸದಸ್ಯರೂ ಆಗುತ್ತಿರಲಿಲ್ಲ ಎಂದು ಟೀಕಿಸಿದರು. ಕಾಂಗ್ರೆಸ್ ಎಂಬುದೇ ವಂಶಪಾರಂಪರ್ಯದ ಸಂತತಿ. ಆ ಕಾರಣದಿಂದ ಹೀಗಾಗಿದೆ. ಸ್ವಾತಂತ್ರ್ಯ ಬಂದ ಬಳಿಕ, ಸಂವಿಧಾನ ಬಂದ ನಂತರ ರಾಜಪ್ರಭುತ್ವ ಇದ್ದುದು ಮುಗಿದು ಪ್ರಜಾಪ್ರಭುತ್ವ ಜಾರಿಯಲ್ಲಿರುತ್ತದೆ ಎಂದು ಡಾ. ಅಂಬೇಡ್ಕರ್ ಹೇಳಿದ್ದರು. ಮತಪೆಟ್ಟಿಗೆಯಿಂದ ರಾಜರು ಹುಟ್ಟುತ್ತಾರೆ ಎಂದು ಅವರು ಹೇಳಿದ್ದರು. ಈಗ ವಂಶಪಾರಂಪರ್ಯದಲ್ಲಿ ಆ ರಾಜಮನೆತನದ ಆಡಳಿತವೇ ಮತ್ತೆ ಬಂದ ಹಾಗೆ ಕಾಣುತ್ತಿದೆ ಎಂದು ಟೀಕಿಸಿದರು. ಪ್ರಿಯಾಂಕ್ ಖರ್ಗೆ ಸದನದಲ್ಲಿ ಉತ್ತರ ಕೊಡಬೇಕಾದ ವೇಳೆ ಪರಾರಿಯಾಗುತ್ತಾರೆ. ಅವರ ಸಾಧನೆ ಶೂನ್ಯವಾದುದೇ ಇದಕ್ಕೆ ಕಾರಣ ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಕೇಂದ್ರ ಮಾಜಿ ಸಚಿವ ಎ.ನಾರಾಯಣಸ್ವಾಮಿ, ರಾಜ್ಯ ವಕ್ತಾರ ವೆಂಕಟೇಶ ದೊಡ್ಡೇರಿ, ಎಸ್ ಸಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ಹೂಡಿ ಮಂಜುನಾಥ್ ಉಪಸ್ಥಿತರಿದ್ದರು.

ವಾರ್ತಾ ಭಾರತಿ 20 Dec 2025 4:22 pm

ಬೆಂಗಳೂರಿನಲ್ಲಿ ಮತ್ತೊಂದು ಬೃಹತ್‌ ಆಸ್ಪತ್ರೆ ಡೀಲ್‌, 430 ಕೋಟಿ ರೂ.ಗೆ ಹಾಸ್ಪಿಟಲ್‌ ಖರೀದಿ

ದೇಶದ ಪ್ರಮುಖ ಆರೋಗ್ಯ ಸೇವಾ ಸಂಸ್ಥೆಯಾದ ಫೋರ್ಟಿಸ್ ಹೆಲ್ತ್‌ಕೇರ್, ಬೆಂಗಳೂರಿನ ಯಶವಂತಪುರದಲ್ಲಿರುವ ಪೀಪಲ್ ಟ್ರೀ ಆಸ್ಪತ್ರೆಯನ್ನು 430 ಕೋಟಿ ರೂ.ಗೆ ಖರೀದಿಸಿದೆ. ಈ ಒಪ್ಪಂದದ ಜೊತೆಗೆ, ಆಸ್ಪತ್ರೆಯ ಅಭಿವೃದ್ಧಿಗಾಗಿ ಮುಂದಿನ ಮೂರು ವರ್ಷಗಳಲ್ಲಿ ಹೆಚ್ಚುವರಿ 410 ಕೋಟಿ ರೂ. ಹೂಡಿಕೆ ಮಾಡುವುದಾಗಿ ಕಂಪನಿಯು ಘೋಷಿಸಿದೆ.

ವಿಜಯ ಕರ್ನಾಟಕ 20 Dec 2025 4:11 pm

ಸಿಎಂ-ಡಿಸಿಎಂ ಒಪ್ಪಂದದ ಬಗ್ಗೆ ಗೊತ್ತಿಲ್ಲ, ಹೈಕಮಾಂಡ್ ನಿರ್ಧಾರಕ್ಕೆ ಎಲ್ಲರೂ ಬದ್ಧ: ಡಾ.ಶರಣಪ್ರಕಾಶ್ ಪಾಟೀಲ್

ಬೆಂಗಳೂರು, ಡಿ.20: ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದಲ್ಲಾಗಲಿ ಅಥವಾ ಸರಕಾರದಲ್ಲಾಗಲಿ ಯಾವುದೇ ಗೊಂದಲಗಳಿಲ್ಲ. ಸರಕಾರ ಸುಭದ್ರವಾಗಿದೆ. ಸಮರ್ಥ ಆಡಳಿತ ನಡೆಸುತ್ತಿದೆ ಎಂದು ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಜೀವನೋಪಾಯ ಸಚಿವ ಡಾ.ಶರಣಪ್ರಕಾಶ ಆರ್. ಪಾಟೀಲ್ ಹೇಳಿದ್ದಾರೆ. ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮವೊಂದರ ನೇಪಥ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಅಧಿಕಾರ ಹಸ್ತಾಂತರ ಅಥವಾ ಇನ್ನಾವುದೇ ವಿಷಯಗಳಿದ್ದರೂ ನಮ್ಮ ಪಕ್ಷದ ವರಿಷ್ಠ ನಾಯಕರು ತೀರ್ಮಾನ ಕೈಗೊಳ್ಳುತ್ತಾರೆ ಎಂದರು. ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿ ನಡುವೆ ಒಪ್ಪಂದ ಎಂಬ ವಿಷಯವನ್ನು ಮಾಧ್ಯಮಗಳಲ್ಲಿ ನೋಡಿದೆ. ಆದರೆ ಈ ಬಗ್ಗೆ ನಮಗೆ ಯಾವುದೇ ಮಾಹಿತಿ ಇಲ್ಲ. ಪಕ್ಷದ ಎಲ್ಲಾ ನಾಯಕರ ತೀರ್ಮಾನ ಒಂದೇ. ಹೈಕಮಾಂಡ್ ಏನು ಹೇಳುತ್ತದೆಯೋ ಅದನ್ನು ನಾವೆಲ್ಲರೂ ಪಾಲಿಸುತ್ತೇವೆ ಎಂದರು. ಸರಕಾರದಲ್ಲಿ ಎಲ್ಲರೂ ಒಟ್ಟಾಗಿದ್ದೇವೆ. ಸಿಎಂ ಮತ್ತು ಡಿಸಿಎಂ ನೇತೃತ್ವದಲ್ಲಿ ಎಲ್ಲವೂ ಸುಸೂತ್ರವಾಗಿ ಸಾಗುತ್ತಿದೆ. ಇಷ್ಟು ಮಾತ್ರ ನಾನೂ ಹೇಳಬಲ್ಲೆ ಎಂದು ಸಚಿವರು ವಿವರಿಸಿದರು. ಒಪ್ಪಂದದ ಬಗ್ಗೆ ನಮಗೆ ಯಾರಿಗೂ ಗೊತ್ತಿಲ್ಲ. ಅದು ಹೈಕಮಾಂಡ್ ನಾಯಕರಿಗೆ, ಸಿಎಂ ಮತ್ತು ಡಿಸಿಎಂಗೆ ಬಿಟ್ಟ ವಿಚಾರ. ಇದರ ಬಗ್ಗೆ ನಾನು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್ ಸ್ಪಷ್ಟಪಡಿಸಿದರು.

ವಾರ್ತಾ ಭಾರತಿ 20 Dec 2025 3:59 pm

ಉತ್ತರ ಕರ್ನಾಟಕಕ್ಕೆ ಗುಡ್‌ನ್ಯೂಸ್: 112 ನಗರ ಬಸ್‌ಗಳಿಗೆ ಚಾಲನೆ, 400 ಹೊಸ ಬಸ್‌ಗಳ ಸೇರ್ಪಡೆ ಶೀಘ್ರ

ವಿಜಯಪುರ: ಕರ್ನಾಟಕ ರಾಜ್ಯ ಸಾರಿಗೆ ಇಲಾಖೆ ವ್ಯಾಪ್ತಿಯಲ್ಲಿ ವಿದ್ಯುತ್ ಚಾಲಿತ್ ಬಸ್‌ಗಳ ಖರೀದಿ ಸೇರಿದಂತೆ ಹೊಸ ಬಸ್‌ಗಳನ್ನು ಸಾರಿಗೆ ಸಂಸ್ಥೆಗಳಿಗೆ ಸೇರ್ಪಡೆಗೊಳಿಸುವ ಉಪಕ್ರಮ ಜಾರಿಯಲ್ಲಿದೆ. ಅದರ ಭಾಗವಾಗಿ 112 ನೂತನ ನಗರ ಸಾರಿಗೆ ಬಸ್ ವಾಹನಗಳ ಕಾರ್ಯಾಚರಣೆಗೆ ಸಚಿವ ರಾಮಲಿಂಗಾ ರೆಡ್ಡಿ ಅವರು ಶನಿವಾರ ಚಾಲನೆ ನೀಡಿದರು. ಇದರೊಂದಿಗೆ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ (KKRTC)

ಒನ್ ಇ೦ಡಿಯ 20 Dec 2025 3:51 pm

Epstein Files ರಹಸ್ಯ: ಡೊನಾಲ್ಡ್ ಟ್ರಂಪ್ ಮತ್ತು ಆ ಕರಾಳ ಪ್ಯಾರಾಗ್ರಾಫ್‌ಗಳ ಹಿಂದಿನ ಸತ್ಯ.

ಅಮೆರಿಕದ ನ್ಯಾಯಾಂಗ ವ್ಯವಸ್ಥೆಯಲ್ಲಿ ದಶಕಗಳಿಂದ ರಹಸ್ಯವಾಗಿಡಲಾಗಿದ್ದ ಸಾವಿರಾರು ಪುಟಗಳ ದಾಖಲೆಗಳು ಈಗ ಹೊರಬಂದಿದ್ದು, ಇಡೀ ವಿಶ್ವದ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿವೆ. ಈ ಕಡತಗಳು ಬಿಡುಗಡೆಯಾದ ಕ್ಷಣದಿಂದ ಸಾಮಾಜಿಕ ಜಾಲತಾಣಗಳಲ್ಲಿ ಒಂದು ದೊಡ್ಡ ಚರ್ಚೆ ಶುರುವಾಗಿದೆ. ವಿಶೇಷವಾಗಿ ಅಮೆರಿಕದ ಪ್ರಭಾವಿ ನಾಯಕ ಡೊನಾಲ್ಡ್ ಟ್ರಂಪ್ ಅವರ ಹೆಸರು ಈ ದಾಖಲೆಗಳಲ್ಲಿ ಪ್ರಸ್ತಾಪವಾಗಿರುವುದು ಎಲ್ಲರ ಗಮನ ಸೆಳೆದಿದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಕೆಲವು ಚಿತ್ರಗಳು ಮತ್ತು ದೋಷಾರೋಪಣೆಗಳು ಕಾಳ್ಗಿಚ್ಚಿನಂತೆ ಹರಡುತ್ತಿವೆ. ಅಸಲಿಗೆ ‘ಎಪ್ಸ್ಟೀನ್ ಫೈಲ್ಸ್’ ಎಂದರೆ ಏನು? ಎಪ್ಸ್ಟೀನ್ ... Read more The post Epstein Files ರಹಸ್ಯ: ಡೊನಾಲ್ಡ್ ಟ್ರಂಪ್ ಮತ್ತು ಆ ಕರಾಳ ಪ್ಯಾರಾಗ್ರಾಫ್‌ಗಳ ಹಿಂದಿನ ಸತ್ಯ. appeared first on Karnataka Times .

ಕರ್ನಾಟಕ ಟೈಮ್ಸ್ 20 Dec 2025 3:45 pm

T20 World Cup| ಭಾರತ ತಂಡ ಪ್ರಕಟ: ಸೂರ್ಯಕುಮಾರ್ ನಾಯಕ, ಗಿಲ್‌ ಔಟ್‌

 ಹೊಸದಿಲ್ಲಿ: ಮುಂಬರುವ ಐಸಿಸಿ ಟಿ20 ವಿಶ್ವಕಪ್‌ಗಾಗಿ 15 ಸದಸ್ಯರ ಭಾರತ ತಂಡವನ್ನು ಪ್ರಕಟಿಸಲಾಗಿದೆ. ಭಾರತ ತಂಡವನ್ನು ಸೂರ್ಯಕುಮಾರ್ ಯಾದವ್ ಮುನ್ನಡೆಸಲಿದ್ದು, ಶುಭಮನ್ ಗಿಲ್ ಹಾಗೂ ಜಿತೇಶ್ ಶರ್ಮಾ ಅವರನ್ನು ತಂಡದಿಂದ ಕೈಬಿಡಲಾಗಿದೆ. ಅಚ್ಚರಿ ಎಂದರೆ ಶುಭಮನ್ ಗಿಲ್ ಅವರನ್ನು ಭಾರತದ ಟಿ20 ತಂಡದ ಉಪನಾಯಕ ಸ್ಥಾನದಿಂದ ಕೈಬಿಡಲಾಗಿದೆ. ಗಿಲ್ ಬದಲು ಅಕ್ಷರ್ ಪಟೇಲ್ ನೂತನ ಉಪನಾಯಕನಾಗಿ ಘೋಷಣೆ ಮಾಡಲಾಗಿದೆ. ಕಳಪೆ ಸ್ಕೋರ್‌ ಹಿನ್ನೆಲೆ ಬಿಸಿಸಿಐ ಆಯ್ಕೆ ಸಮಿತಿಯು ಅವರನ್ನು ಭಾರತದ ಟಿ20 ತಂಡದಿಂದ ಕೈಬಿಟ್ಟಿದೆ ಎಂದು ಹೇಳಲಾಗಿದೆ. ಟಿ20 ವಿಶ್ವಕಪ್‌ಗೆ ಭಾರತ ತಂಡ ಸೂರ್ಯಕುಮಾರ್ ಯಾದವ್(ನಾಯಕ), ಅಕ್ಷರ್ ಪಟೇಲ್ (ಉಪನಾಯಕ) ಅಭಿಷೇಕ್ ಶರ್ಮಾ, ಜಸ್ಪ್ರೀತ್ ಬುಮ್ರಾ, ಸಂಜು ಸ್ಯಾಮ್ಸನ್, ಹರ್ಷಿತ್ ರಾಣಾ, ಅರ್ಷದೀಪ್ ಸಿಂಗ್, ತಿಲಕ್ ವರ್ಮಾ, ಕುಲದೀಪ ಯಾದವ್, ಹಾರ್ದಿಕ್ ಪಾಂಡ್ಯ, ವರುಣ್ ಚಕ್ರವರ್ತಿ, ಶಿವಂ ದುಬೆ, ವಾಷಿಂಗ್ಟನ್ ಸುಂದರ್, ರಿಂಕು ಸಿಂಗ್, ಇಶನ್ ಕಿಶನ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

ವಾರ್ತಾ ಭಾರತಿ 20 Dec 2025 3:40 pm

ಡಿ.21ರಂದು ಕಲ್ಲಡ್ಕ ಶ್ರೀರಾಮ ವಿದ್ಯಾ ಕೇಂದ್ರದಲ್ಲಿ 'ಕ್ರೀಡೋತ್ಸವ '

ಬಂಟ್ವಾಳ: ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದ ವತಿಯಿಂದ 2025ನೇ ಸಾಲಿನ ಹೊನಲು-ಬೆಳಕಿನ ಕ್ರೀಡೋತ್ಸವವು ಡಿ.21ರಂದು ಸಂಜೆ 6ರಿಂದ ಸಂಸ್ಥೆಯ ವಿದ್ಯಾರ್ಥಿಗಳ ಹಲವು ಬಗೆಯ ಸಾಹಸಮಯ ಪ್ರದರ್ಶನಗಳೊಂದಿಗೆ ನಡೆಯಲಿದೆ ಎಂದು ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಪ್ರಭಾಕರ ಭಟ್ ಕಲ್ಲಡ್ಕ ತಿಳಿಸಿದ್ದಾರೆ. ಅವರು ಬಿ.ಸಿ.ರೋಡಿನಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, . ಪ್ರತಿವರ್ಷ ನಡೆಯುವ ಕ್ರೀಡಾಕೂಟದಲ್ಲಿ ಮಕ್ಕಳ ಸಾಹಸಮಯ ಪ್ರದರ್ಶನವು ಶಿಕ್ಷಣ ಪ್ರೇಮಿಗಳ ಮೆಚ್ಚುಗೆಗೆ ಪಾತ್ರವಾಗಿದ್ದು, ಈ ಬಾರಿ ಸುಮಾರು 4 ಸಾವಿರದಷ್ಟು ಮಕ್ಕಳು ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಲಿದ್ದಾರೆ. ಶಿಶು ನೃತ್ಯ, ಸಂಚಲನ, ಘೋಷ್ ಪ್ರದರ್ಶನ, ಜಡೆ ಕೋಲಾಟ, ನಿಯುದ್ಧ, ದೀಪಾರತಿ, ಯೋಗಾಸನ, ನೃತ್ಯ ಭಜನೆ, ಮಲ್ಲಕಂಬ, ತಿರುಗುವ ಮಲ್ಲಕಂಬ, ಟಿಕ್ ಟಿಕ್ ಪ್ರದರ್ಶನ, ಚೆಂಡೆ, ನೃತ್ಯ ವೈವಿಧ್ಯ, ಬೆಂಕಿ ಸಾಹಸ, ಚಕ್ರ ಸಮತೋಲನ, ಕಾಲ್ಚಕ್ರ, ಕೂಪಿಕಾ ಮೊದಲಾದ ಸಾಹಸಮಯ ಪ್ರದರ್ಶನಗಳನ್ನು ವಿದ್ಯಾರ್ಥಿಗಳು ನೀಡಲಿದ್ದಾರೆ. ಮೈಸೂರು ಸಂಸದ ಯದುವೀರ ಕೃಷ್ಣದತ್ತ ಒಡೆಯರ್, ಚಲನಚಿತ್ರ ನಟ ಪ್ರಕಾಶ್ ಬೆಳವಾಡಿ, ಮನೋಜ್ ಸಿಂಗ್, ಸೀಮಾ ಬಿ.ಆರ್.ಶೆಟ್ಟಿ, ಉಮೇಶ್ ರಘುವಂಶಿ, ಡಾ.ವಿಜಯ ಜಿ.ಕಲಾಂತ್ರಿ, ರವಿಕಾಂತ್, ಡಾ.ಶಿಶಿರ್ ಶೆಟ್ಟಿ, ಸಂಪತ್ ಶೆಟ್ಟಿ ಮೊದಲಾದ ಗಣ್ಯರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದರು. ಸುದ್ದಿಗೋಷ್ಠಿಯಲ್ಲಿ ವಿದ್ಯಾ ಕೇಂದ್ರದ ಅಧ್ಯಕ್ಷ ಬಿ.ನಾರಾಯಣ ಸೋಮಯಾಜಿ, ಸಂಚಾಲಕ ವಸಂತ ಮಾಧವ, ಕಾರ್ಯನಿರ್ವಹಣಾಧಿಕಾರಿ ಕೃಷ್ಣಪ್ರಸಾದ್ ಕಾಯರ್ ಕಟ್ಟೆ ಉಪಸ್ಥಿತರಿದ್ದರು.

ವಾರ್ತಾ ಭಾರತಿ 20 Dec 2025 3:38 pm

India T20 World Cup Squad: ಟಿ-20 ವಿಶ್ವಕಪ್‌ಗೆ ಟೀಂ ಇಂಡಿಯಾ ಪ್ರಕಟ: ಶಭ್‌ಮನ್ ಗಿಲ್‌ ಔಟ್

India T20 World Cup Squad Announcement: ಕಾತರದಿಂದ ಕಾಯುತ್ತಿದ್ದ ಟಿ 20 ವಿಶ್ವಕಪ್‌ಗೆ ಬಿಸಿಸಿಐ ಶನಿವಾರ (ಡಿಸೆಂಬರ್ 20) ತಂಡ ಪ್ರಕಟಿಸಿದೆ. ಶುಭಮನ್ ಗಿಲ್ ಹೊರಗುಳಿದಿದ್ದು, ಸೂರ್ಯ ಕುಮಾರ್ ಯಾದವ್ ತಂಡವನ್ನು ಮುನ್ನಡೆಸಲಿದ್ದಾರೆ ಎಂದು ತಿಳಿದುಬಂದಿದೆ. ಹಾಗಾದ್ರೆ ಯಾರೆಲ್ಲಾ ಈ ಪಟ್ಟಿಯಲ್ಲಿದ್ದಾರೆ ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ. ಮುಂದಿನ ವರ್ಷ ನಡೆಯಲಿರುವ ಪುರುಷರ ಟಿ-20

ಒನ್ ಇ೦ಡಿಯ 20 Dec 2025 3:25 pm

ಕಳಪೆಗೆ ಜಾರಿದ ದೆಹಲಿ AIQ,ಆರೆಂಜ್‌ ಅಲರ್ಟ್‌ ಘೋಷಣೆ! : ಗೋಚರತೆ ಕಡಿಮೆಯಾಗಿದ್ದು, ವಿಮಾನ ಹಾಗೂ ರೈಲು ಸಂಚಾರದಲ್ಲಿ ವ್ಯತ್ಯಯ!

ದೆಹಲಿ ಮತ್ತು ಎನ್‌ಸಿಆರ್‌ನಲ್ಲಿ ವಾಯು ಗುಣಮಟ್ಟ ಸೂಚ್ಯಂಕ 380 ತಲುಪಿದ್ದು, ದಟ್ಟ ಹೊಗೆಯಿಂದಾಗಿ ಗೋಚರತೆ ಶೂನ್ಯಕ್ಕಿಳಿದಿದೆ. ಇದರಿಂದಾಗಿ 100ಕ್ಕೂ ಹೆಚ್ಚು ವಿಮಾನಗಳು ರದ್ದಾಗಿ, 50 ರೈಲುಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ. ದೆಹಲಿಯಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದ್ದು, ಮುಂದಿನ ದಿನಗಳಲ್ಲಿ ವಾಯು ಗುಣಮಟ್ಟ ಮತ್ತಷ್ಟು ಹದಗೆಡುವ ಸಾಧ್ಯತೆಯಿದೆ.

ವಿಜಯ ಕರ್ನಾಟಕ 20 Dec 2025 3:22 pm

CM vs DCM: ಕುರ್ಚಿ ಕಾಳಗ; ಹೈಕಮಾಂಡ್‌ ನಾಯಕರ ಭೇಟಿ ಬಗ್ಗೆ ಡಿ ಕೆ ಶಿವಕುಮಾರ್‌ ಹೇಳಿದ್ದೇನು?

ಬೆಂಗಳೂರು, ಡಿಸೆಂಬರ್‌ 20: ನಮ್ಮ ಹೈಕಮಾಂಡ್ ನಾಯಕರು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ನನಗೆ ಇಬ್ಬರಿಗೂ ಏನೋ ಹೇಳಿದ್ದಾರೆ. ಸೂಕ್ತ ಸಮಯದಲ್ಲಿ ಕರೆಸುತ್ತೇವೆ ಎಂದೂ ಇಬ್ಬರಿಗೂ ಹೇಳಿದ್ದಾರೆ. ಆಗ ಇಬ್ಬರೂ ದಿಲ್ಲಿಗೆ ಹೋಗುತ್ತೇವೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು. ಸದಾಶಿವನಗರ ನಿವಾಸದ ಬಳಿ ಡಿಸಿಎಂ ಡಿ.ಕೆ. ಶಿವಕುಮಾರ್ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ನ್ಯಾಷನಲ್ ಹೆರಾಲ್ಡ್

ಒನ್ ಇ೦ಡಿಯ 20 Dec 2025 2:56 pm

2026ರ ಟಿ20 ವಿಶ್ವಕಪ್ ಟೂರ್ನಿಗೆ ಟೀಂ ಇಂಡಿಯಾ ಪ್ರಕಟ - ಶುಬ್ಮನ್ ಗಿಲ್ ಡ್ರಾಪ್! ಇಶಾನ್ ಕಿಶನ್ ಗೆ ಅವಕಾಶ

ಮುಂಬೈ : 2026ರ ಫೆಬ್ರವರಿ - ಮಾರ್ಚ್ ನಲ್ಲಿ ನಡೆಯಲಿರುವ ಪುರುಷರ ಟಿ20 ಕ್ರಿಕೆಟ್ ವಿಶ್ವಕಪ್ ಪಂದ್ಯಾವಳಿಗಾಗಿ ಭಾರತೀಯ ಕ್ರಿಕೆಟ್ ತಂಡವನ್ನು ಪ್ರಕಟಿಸಲಾಗಿದೆ. ಮುಂಬೈನಲ್ಲಿರುವ ಭಾರತೀಯ ಕ್ರಿಕೆಟ್ ತಂಡದ (ಬಿಸಿಸಿಐ) ಕೇಂದ್ರ ಕಚೇರಿಯಲ್ಲಿ ಡಿ. 20ರಂದು ನಡೆದ ತಂಡದ ಆಯ್ಕೆ ಮಂಡಳಿ ಸಭೆಯಲ್ಲಿ ತಂಡದ ಆಯ್ಕೆಯನ್ನು ಮಾಡಲಾಯಿತು. ತಂಡ ಇಂತಿದೆ: ಸೂರ್ಯಕುಮಾರ್ ಯಾದವ್ (ನಾಯಕ), ಅಭಿಷೇಕ್ ಶರ್ಮಾ, ಸಂಜು ಸ್ಯಾಮ್ಸನ್, ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ಅಕ್ಸರ್ ಪಟೇಲ್ (ಉಪ ನಾಯಕ), ರಿಂಕು ಸಿಂಗ್, ಕುಲದೀಪ್ ಯಾದವ್, ವರುಣ್ ಚಕ್ರವರ್ತಿ, ಜಸ್ಪ್ರೀತ್ ಬುಮ್ರಾ, ಅರ್ಷದೀಪ್ ಸಿಂಗ್, ಹರ್ಷಿತ್ ರಾಣಾ, ವಾಷಿಂಗ್ಟನ್ ಸುಂದರ್.

ವಿಜಯ ಕರ್ನಾಟಕ 20 Dec 2025 2:31 pm

ಅನ್ನಭಾಗ್ಯಕ್ಕೆ ಕನ್ನ: 2 ವರ್ಷದಲ್ಲಿ 961 ಪ್ರಕರಣ, 1,064 ಬಂಧನ!

ಅನ್ನಭಾಗ್ಯ ಯೋಜನೆಯ ಅಕ್ಕಿ ಕಳ್ಳ ಸಾಗಾಟ ಹೆಚ್ಚಾಗಿದೆ. ಕಳೆದ ಎರಡು ವರ್ಷಗಳಲ್ಲಿ 961 ಪ್ರಕರಣಗಳು ದಾಖಲಾಗಿವೆ. 1064 ಜನರನ್ನು ಬಂಧಿಸಲಾಗಿದೆ. ಆಹಾರ ಧಾನ್ಯ, ಎಲ್ ಪಿಜಿ, ಪೆಟ್ರೋಲ್, ಡೀಸೆಲ್ ಮತ್ತು ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ಪಡಿತರ ದುರ್ಬಳಕೆ ತಡೆಯಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತಿದೆ. ಅಕ್ರಮ ತಡೆಯಲು ಜಾಗೃತಿ ಸಮಿತಿಗಳು ಕಾರ್ಯನಿರ್ವಹಿಸುತ್ತಿವೆ. ಆದರೂ ಕಳ್ಳ ಸಾಗಾಟಗಾರರ ಕೈಚಳಕ ಮುಂದುವರೆಯುತ್ತಲೇ ಇದೆ.

ವಿಜಯ ಕರ್ನಾಟಕ 20 Dec 2025 2:24 pm

ದಟ್ಟ ಮಂಜು| ದಿಲ್ಲಿ ವಿಮಾನ ನಿಲ್ದಾಣದಿಂದ 100ಕ್ಕೂ ಹೆಚ್ಚು ವಿಮಾನಗಳ ಹಾರಾಟ ರದ್ದು

ಹೊಸ ದಿಲ್ಲಿ: ಶನಿವಾರ ಉತ್ತರ ಭಾರತದಾದ್ಯಂತ ದಟ್ಟ ಮಂಜು ಆವರಿಸಿರುವುದರಿಂದ ಗೋಚರತೆಯ ಪ್ರಮಾಣ ಕ್ಷೀಣಿಸಿದ್ದು, ಇದರ ಪರಿಣಾಮವಾಗಿ ದಿಲ್ಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 100ಕ್ಕೂ ಹೆಚ್ಚು ವಿಮಾನಗಳ ಹಾರಾಟ ರದ್ದುಗೊಂಡಿದೆ. ದಟ್ಟ ಮಂಜು ಆವರಿಸಿರುವುದರಿಂದಾಗಿ 66 ವಿಮಾನಗಳ ಆಗಮನ ಹಾಗೂ 63 ವಿಮಾನಗಳ ನಿರ್ಗಮನ ರದ್ದುಗೊಂಡಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಉತ್ತರ ಭಾರತದಾದ್ಯಂತ ದಟ್ಟ ಮಂಜು ಆವರಿಸಿರುವುದರಿಂದ ಗೋಚರತೆಯ ಪ್ರಮಾಣ ಕ್ಷೀಣಿಸಿದ್ದು, ಕೆಲ ವಿಮಾನಗಳ ಹಾರಾಟ ರದ್ದುಗೊಂಡಿದೆ. ಆದ್ದರಿಂದ ವಿಮಾನ ಯಾನ ಸಂಸ್ಥೆಗಳೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿರುವಂತೆ  ಪ್ರಯಾಣಿಕರಿಗೆ ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರ ಸಲಹೆ ನೀಡಿದೆ.

ವಾರ್ತಾ ಭಾರತಿ 20 Dec 2025 2:18 pm

ರಾಜಕಾರಣ ಮಾಡಬೇಕಾದವರು ಜನರು, ಜನಪ್ರತಿನಿಧಿಗಳಲ್ಲ: ನಟ ಪ್ರಕಾಶ್ ರಾಜ್

'ವಾರ್ತಾಭಾರತಿ'ಯ ಕಲ್ಯಾಣ ಕರ್ನಾಟಕ ಆವೃತ್ತಿ ಲೋಕಾರ್ಪಣೆ

ವಾರ್ತಾ ಭಾರತಿ 20 Dec 2025 2:11 pm

ಲಿಬಿಯಾದ ಕರಾವಳಿ ಪ್ರದೇಶದಲ್ಲಿ ರಷ್ಯಾದ ನೆರಳು ಟ್ಯಾಂಕರ್‌ ಮೇಲೆ ಉಕ್ರೇನ್‌ ದಾಳಿ; ಸೇಡಿನ ಶಪಥ ಮಾಡಿದ ಪುಟಿನ್‌, ಈ ಯುದ್ದಕ್ಕೆ ಎಲ್ಲೆ ಎಲ್ಲಿದೆ?

ರಷ್ಯಾ-ಉಕ್ರೇನ್ ಯುದ್ಧದಲ್ಲಿ ಮಹತ್ವದ ತಿರುವು ಎದುರಾಗಿದೆ. ರಷ್ಯಾ-ಉಕ್ರೇನ್ ಯುದ್ದಕ್ಕೆ ಎಲ್ಲೆ ಎಲ್ಲಿದೆ ಎಂದು ಹುಡುಕು ಪರಿಸ್ಥಿತಿ ಎದುರಾಗಿದ್ದು, ಉಕ್ರೇನ್ ತನ್ನ ಗಡಿಯಿಂದ ಸಾವಿರಾರು ಮೈಲಿ ದೂರವಿರುವ ಲಿಬಿಯಾದಲ್ಲಿ ರಷ್ಯಾದ ಟ್ಯಾಂಕರ್ ಮೇಲೆ ದಾಳಿ ನಡೆಸಿದೆ. ಇದು ಮೆಡಿಟರೇನಿಯನ್ ಸಮುದ್ರದಲ್ಲಿ ನಾಲ್ಕು ವರ್ಷಗಳ ಬಳಿಕ ನಡೆದ ಮೊದಲ ಇಂತಹ ದಾಳಿಯಾಗಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, ಉಕ್ರೇನ್‌ನ ಇಂತಹ ದಾಳಿಗಳಿಗೆ ಪ್ರತಿಕಾರ ತೀರಿಸಿಕೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ. ಈ ದಾಳಿ ರಷ್ಯಾದ ಆರ್ಥಿಕತೆಗೆ ಹೊಡೆತ ನೀಡುವ ಪ್ರಯತ್ನವಾಗಿದ್ದು, ಯುರೋಪಿಯನ್‌ ನಾಯಕರು ಇದಕ್ಕೆ ಕುಮ್ಮಕ್ಕು ನೀಡಿ ಹೈಬ್ರಿಡ್‌ ದಾಳಿ ನಡೆಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ವಿಜಯ ಕರ್ನಾಟಕ 20 Dec 2025 2:00 pm

ನನ್ನ ವಿರುದ್ದದ ಭೂಕಬಳಿಕೆ ಷಡ್ಯಂತ್ರಕ್ಕೆ 7 ಕಾರಣಗಳು : ಸಚಿವ ಕೃಷ್ಣ ಬೈರೇಗೌಡ ಸ್ಪೋಟಕ ಮಾಹಿತಿ

Krisha Byre Gowda Press Release : ವಿಧಾನ ಮಂಡಲದ ಅಧಿವೇಶದ ವೇಳೆ ತಮ್ಮ ಮೇಲೆ ಬಂದಿರುವ ಭೂಕಬಳಿಕೆ ಆರೋಪದ ಬಗ್ಗೆ ಕಂದಾಯ ಸಚಿವ ಕೃಷ್ಣ ಬೈರೇಗೌಡ ಸುದೀರ್ಘ ಸ್ಪಷ್ಟನೆಯನ್ನು ನೀಡಿದ್ದಾರೆ. ಇದೊಂದು ಬಹುದೊಡ್ಡ ಷಡ್ಯಂತ್ರದ ಭಾಗ ಎಂದಿರುವ ಸಚಿವರು, ಇದಕ್ಕೆ ಕಾರಣವನ್ನು ನೀಡಿದ್ದಾರೆ.

ವಿಜಯ ಕರ್ನಾಟಕ 20 Dec 2025 1:24 pm

ರಾಜ್ಯದಲ್ಲಿ ಹೆಚ್ಚುತ್ತಿದೆ ಅಪ್ರಾಪ್ತ ಹೆಣ್ಣುಮಕ್ಕಳ ಗರ್ಭಧಾರಣೆ: 3 ವರ್ಷಗಳಲ್ಲಿ 2,320 ಪ್ರಕರಣ, ಶಿವಮೊಗ್ಗದಲ್ಲೇ ಅಧಿಕ!

ರಾಜ್ಯದಲ್ಲಿ ಅಪ್ರಾಪ್ತ ಹೆಣ್ಣು ಮಕ್ಕಳ ಗರ್ಭಧಾರಣೆ ಪ್ರಕರಣಗಳು ಹೆಚ್ಚುತ್ತಿದ್ದು, ಕಳೆದ ಮೂರು ವರ್ಷಗಳಲ್ಲಿ 2320 ಪ್ರಕರಣಗಳು ಮಕ್ಕಳ ಕಲ್ಯಾಣ ಸಮಿತಿಯ ಮುಂದೆ ಬಂದಿವೆ. ಶಿವಮೊಗ್ಗ ಜಿಲ್ಲೆಯಲ್ಲಿ ಅತಿ ಹೆಚ್ಚು ಪ್ರಕರಣಗಳು ವರದಿಯಾಗಿವೆ. ಈ ಪ್ರಕರಣಗಳನ್ನು ತಡೆಯಲು ಸರ್ಕಾರ ವಿವಿಧ ಇಲಾಖೆಗಳ ಮೂಲಕ ಜಾಗೃತಿ ಮೂಡಿಸುತ್ತಿದೆ ಮತ್ತು ಸಂತ್ರಸ್ತರಿಗೆ ಕಾನೂನು ಸಲಹೆ, ಆರ್ಥಿಕ ನೆರವು ನೀಡುತ್ತಿದೆ. ಆದಾಗ್ಯೂ ರಾಜ್ಯದಲ್ಲಿ ಅಪ್ರಾಪ್ತ ಹೆಣ್ಣು ಮಕ್ಕಳ ಗರ್ಭಧಾರಣೆ ಪ್ರಕರಣಗಳು ಏರಿಕೆಯಾಗುತ್ತಿದ್ದು ಸಂಪೂರ್ಣ ನಿರ್ಮೂಲನೆಗೆ ಸರ್ಕಾರ ಸೂಕ್ತ ಕ್ರಮಗಳನ್ನು ಇನ್ನುಷ್ಟು ಪರಿಣಾಮಕಾರಿಯಾಗಿ ಜರುಗಿಸುವ ಅವಶ್ಯಕತೆ ಇದೆ.

ವಿಜಯ ಕರ್ನಾಟಕ 20 Dec 2025 1:23 pm

ದಟ್ಟ ಮಂಜಿನ ಕಾರಣಕ್ಕೆ ಲ್ಯಾಂಡ್‌ ಆಗದ ನರೇಂದ್ರ ಮೋದಿ ಹೆಲಿಕಾಪ್ಟರ್‌; ಕೋಲ್ಕತ್ತಾಗೆ ಮರಳಿದ ಪ್ರಧಾನಿ!

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಂದು (ಡಿ.20-ಶನಿವಾರ) ಪಶ್ಚಿಮ ಬಂಗಾಳ ಪ್ರವಾಸ ಕೈಗೊಂಡಿದ್ಧಾರೆ. ನಾಡಿಯಾ ಜಿಲ್ಲೆಯ ತಾಹೆರ್‌ಪುರದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಹೆದ್ದಾರಿ ಉದ್ಘಾಟನೆ ಮಾಡಬೇಕಿದ್ದ ಪ್ರಧಾನಿ ಮೋದಿ, ದಟ್ಟ ಮಂಜಿನ ಕಾರಣಕ್ಕೆ ಅವರ ಸೇನಾ ಹೆಲಿಕಾಪ್ಟರ್‌ ಲ್ಯಾಂಡ್‌ ಆಗದ ಕಾರಣ, ಕೋಲ್ಕತ್ತಾಗೆ ಮರಳಿದ್ದಾರೆ. ಬಹುಶಃ ಪ್ರಧಾನಿ ಮೋದಿ ಅವರನ್ನು ಅವರ ಭದ್ರತಾ ಸಿಬ್ಬಂದಿ ರಸ್ತೆ ಮಾರ್ಗದ ಮೂಲಕ ತಾಹೆರ್‌ಪುರಕ್ಕೆ ಕರೆತರಲಿದ್ಧಾರೆ ಎಂದು ಮೂಲಗಳು ತಿಳಿಸಿವೆ. ಈ ಕುರಿತು ಇಲ್ಲಿದೆ ಹೆಚ್ಚಿನ ಮಾಹಿತಿ.

ವಿಜಯ ಕರ್ನಾಟಕ 20 Dec 2025 1:21 pm

ದಿಲ್ಲಿ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕನ ಮೇಲೆ ಹಲ್ಲೆ ಆರೋಪ: ಏರ್ ಇಂಡಿಯಾ ಪೈಲಟ್ ಅಮಾನತು

ಹೊಸದಿಲ್ಲಿ: ದಿಲ್ಲಿ ವಿಮಾನ ನಿಲ್ದಾಣದಲ್ಲಿ ಕರ್ತವ್ಯ ನಿರತ ಏರ್ ಇಂಡಿಯಾ ಎಕ್ಸ್‌ಪ್ರೆಸ್‌ ಪೈಲಟ್ ಪ್ರಯಾಣಿಕನ ಮೇಲೆ ಹಲ್ಲೆ ನಡೆಸಿರುವ ಆರೋಪ ಕೇಳಿ ಬಂದ ಬೆನ್ನಲ್ಲೆ ಈ ಕುರಿತು ತನಿಖೆ ಪೂರ್ಣಗೊಳ್ಳುವವರೆಗೆ ವಿಮಾನಯಾನ ಸಂಸ್ಥೆ ಪೈಲೆಟ್ ಅನ್ನು ಅಮಾನತುಗೊಳಿಸಿದೆ ಎಂದು thehindu ವರದಿ ಮಾಡಿದೆ. ಘಟನೆ ಕುರಿತು ತನಗಾದ ಕಹಿ ಅನುಭವವನ್ನು ಸಂತ್ರಸ್ತ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದರು. ಜೊತೆಗೆ ತನ್ನ ಮುಖದಲ್ಲಿ ರಕ್ತ ಬರುತ್ತಿರುವ ಪೋಟೊ ಮತ್ತು ಪೈಲಟ್‌ ಫೋಟೊವನ್ನು ಕೂಡ ಹಂಚಿಕೊಂಡಿದ್ದರು. ‘ದಿಲ್ಲಿ ವಿಮಾನ ನಿಲ್ದಾಣದಲ್ಲಿ ನಮ್ಮ ಸಿಬ್ಬಂದಿಯೊಬ್ಬರು ಪ್ರಯಾಣಿಕರೊಂದಿಗೆ ವಾಗ್ವಾದ ನಡೆಸಿರುವ ಬಗ್ಗೆ ಮಾಹಿತಿ ಪಡೆದುಕೊಂಡಿದ್ದೇವೆ. ನಾವು ಇಂತಹ ನಡವಳಿಕೆಯನ್ನು ಬಲವಾಗಿ ಖಂಡಿಸುತ್ತೇವೆ. ಸಂಬಂಧಪಟ್ಟ ಉದ್ಯೋಗಿಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಿದ್ದೇವೆ. ಈ ಕುರಿತು ತನಿಖಾ ವರದಿ ಆಧರಿಸಿ ಸೂಕ್ತ ಕ್ರಮ ತೆಗೆದುಕೊಳ್ಳುತ್ತೇವೆ’ ಎಂದೂ ವಿಮಾನಯಾನ ಸಂಸ್ಥೆ ಹೇಳಿದೆ. ದಿಲ್ಲಿ ವಿಮಾನ ನಿಲ್ದಾಣದ ಟರ್ಮಿನಲ್ 1ರಲ್ಲಿ ಏರ್ ಇಂಡಿಯಾ ಎಕ್ಸ್‌ಪ್ರೆಸ್‌ ಪೈಲಟ್ ವೀರೇಂದ್ರ ಸೆಜ್ವಾಲ್ ಅವರು ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ. ಘಟನಾ ಸ್ಥಳದಲ್ಲಿದ್ದ ಏಳು ವರ್ಷದ ನನ್ನ ಮಗಳು ಆಘಾತಕ್ಕೊಳಗಾಗಿದ್ದಾಳೆ ಎಂದು ಪ್ರಯಾಣಿಕ ಅಂಕಿತ್ ದಿವಾನ್ ಆರೋಪಿಸಿದ್ದರು. 

ವಾರ್ತಾ ಭಾರತಿ 20 Dec 2025 1:18 pm

ದೇಶದಲ್ಲಿ ಸುದ್ದಿಕಳ್ಳತನ ನಡೆಯುತ್ತಿದೆ: ಪತ್ರಕರ್ತ ಸಿದ್ಧಾರ್ಥ್ ವರದರಾಜನ್

► “ಸುದ್ದಿಯ ʼಯದ್ಧಭೂಮಿʼಯಲ್ಲಿ ಮುಖ್ಯವಾಹಿನಿಗಳು ದೂರು ಉಳಿದಿವೆ” ► ವಾರ್ತಾಭಾರತಿಯ ಕಲ್ಯಾಣ ಕರ್ನಾಟಕ ಆವೃತ್ತಿ ಲೋಕಾರ್ಪಣೆ

ವಾರ್ತಾ ಭಾರತಿ 20 Dec 2025 1:15 pm

ಕಲಬುರಗಿ | ವಾರ್ತಾಭಾರತಿಯ ಕಲ್ಯಾಣ ಕರ್ನಾಟಕ ಆವೃತ್ತಿ ಲೋಕಾರ್ಪಣೆ

ಕಲಬುರಗಿ: 'ವಾರ್ತಾ ಭಾರತಿ' ಕನ್ನಡ ದೈನಿಕದ ಕಲ್ಯಾಣ ಕರ್ನಾಟಕ ಆವೃತ್ತಿಯು ಶನಿವಾರ ಲೋಕಾರ್ಪಣೆಗೊಂಡಿತು. ಇಲ್ಲಿನ ಡಾ.ಎಸ್.ಎಂ.ಪಂಡಿತ್ ರಂಗಮಂದಿರದಲ್ಲಿ ನಡೆಯುತ್ತಿರುವ ಅದ್ದೂರಿ ಕಾರ್ಯಕ್ರಮದಲ್ಲಿ 'ವಾರ್ತಾ ಭಾರತಿ' ಕನ್ನಡ ದೈನಿಕದ ಕಲ್ಯಾಣ ಕರ್ನಾಟಕ ಆವೃತ್ತಿಯನ್ನು 'THE WIRE' ಪ್ರಧಾನ ಸಂಪಾದಕ ಸಿದ್ಧಾರ್ಥ್ ವರದರಾಜನ್ ಲೋಕಾರ್ಪಣೆ ಮಾಡಿದರು. ಕರ್ನಾಟಕ ವಿಧಾನಸಭೆಯ ಸಭಾಧ್ಯಕ್ಷ ಡಾ.ಯು.ಟಿ.ಖಾದರ್ ಕಾರ್ಯಕ್ರಮ ಉದ್ಘಾಟಿಸಿದರು. ಬಹುಭಾಷಾ ನಟ, ಸಾಮಾಜಿಕ ಹೋರಾಟಗಾರ ಪ್ರಕಾಶ್ ರಾಜ್, ರಾಜ್ಯ ಸಣ್ಣ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ಯಮಗಳ ಸಚಿವ ಶರಣಬಸಪ್ಪಗೌಡ ದರ್ಶನಾಪುರ್, ರಾಜ್ಯ ಪೌರಾಡಳಿತ ಮತ್ತು ಹಜ್ ಸಚಿವ ರಹೀಮ್ ಖಾನ್, ರಾಜ್ಯ ನೀತಿ ಮತ್ತು ಯೋಜನಾ ಆಯೋಗದ ಉಪಾಧ್ಯಕ್ಷ ಹಾಗೂ ಆಳಂದ ಶಾಸಕ ಬಿ.ಆರ್ ಪಾಟೀಲ್, ರಾಜ್ಯ ವಕ್ಫ್ ಮಂಡಳಿ ಅಧ್ಯಕ್ಷ ಹಾಗೂ ಖ್ವಾಜಾ ಬಂದೇ ನವಾಝ್ ದರ್ಗಾದ ಸಜ್ಜಾದಾ ನಶೀನ್ ಹಝ್ರತ್ ಸೈಯದ್ ಮುಹಮ್ಮದ್ ಅಲಿ ಅಲ್ ಹುಸೈನಿ, ಕಲಬುರಗಿ ದಕ್ಷಿಣ ಶಾಸಕ ಅಲ್ಲಮಪ್ರಭು ಪಾಟೀಲ್ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದಾರೆ. ಆಳಂದದ ತೋಂಟದಾರ್ಯ ಅನುಭವ ಮಂಟಪದ ಕೋರಣೇಶ್ವರ ಮಹಾಸ್ವಾಮೀಜಿ, ಕಲಬುರಗಿ ಬಿಷಪ್ ರೆ.ಫಾ.ರಾಬರ್ಟ್ ಮಿರಾಂಡ, ಆಣದೂರಿನ ಪೂಜ್ಯ ಭಂತೆ ವರಜ್ಯೋತಿ, ಸಾಮಾಜಿಕ ಹೋರಾಟಗಾರ್ತಿ ಕೆ.ನೀಲಾ, ರೈತ ಸಂಘದ ಮುಖಂಡ ಚಾಮರಸ ಮಾಲಿ ಪಾಟೀಲ್, ಡಿಎಸ್ಎಸ್ ರಾಜ್ಯ ಸಂಚಾಲಕ ಡಿ.ಜಿ.ಸಾಗರ್, ಹೋರಾಟಗಾರ, ಗಾಯಕ ಅಂಬಣ್ಣ ಆರೋಲಿಕರ್ ವಿಶೇಷ ಅತಿಥಿಗಳಾಗಿ ವೇದಿಕೆಯ ಮೇಲೆ ಉಪಸ್ಥಿತರಿದ್ದಾರೆ. ವಾರ್ತಾ ಭಾರತಿ ಸ್ಥಾಪಕ ನಿರ್ದೇಶಕ ಯಾಸೀನ್ ಮಲ್ಪೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಾಧ್ಯಮ ಕಮ್ಯುನಿಕೇಶನ್ಸ್ ಅಧ್ಯಕ್ಷ ಎಚ್.ಎಂ.ಅಪ್ರೋಝ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದಾರೆ. ಪ್ರಧಾನ ಸಂಪಾದಕ ಅಬ್ದುಸ್ಸಲಾಮ್ ಪುತ್ತಿಗೆ ಉಪಸ್ಥಿತರಿದ್ದಾರೆ. ಕಾರ್ಯಕ್ರಮದಲ್ಲಿ ಪ್ರಗತಿಪರ ಚಿಂತಕರು, ಸಾಮಾಜಿಕ ಹೋರಾಟಗಾರರು, ರೈತ, ಕಾರ್ಮಿಕ, ವಿದ್ಯಾರ್ಥಿಯ ಸಂಘಟನೆಯ ಹೋರಾಟಗಾರರು ಸೇರಿದಂತೆ ವಿವಿಧ ಜಿಲ್ಲೆ, ತಾಲೂಕುಗಳ ಓದುಗ, ವೀಕ್ಷಕರು ಪಾಲ್ಗೊಂಡಿದ್ದಾರೆ.                  

ವಾರ್ತಾ ಭಾರತಿ 20 Dec 2025 1:04 pm

2026 ರ ಅಧಿಕೃತ ಬಂಗಾರದ ಬೆಲೆ ತಿಳಿಸಿದ ತಜ್ಞರು! ಇಲ್ಲಿದೆ ಅಂತಿಮ ವರದಿ

2026ಕ್ಕೆ 1 ಗ್ರಾಂ ಚಿನ್ನದ ಬೆಲೆ ಎಲ್ಲಿಗೆ ಹೋಗುತ್ತೆ ಗೊತ್ತಾ? ಬೆಲೆ ಕೇಳಿದ್ರೆ ತಲೆ ತಿರುಗುತ್ತೆ! ಭಾರತೀಯರಿಗೆ ಬಂಗಾರ ಅಂದ್ರೆ ಕೇವಲ ಆಭರಣ ಅಲ್ಲ, ಅದೊಂದು ಹೂಡಿಕೆ ಮತ್ತು ಸಂಪ್ರದಾಯ. ಮದುವೆ ಇರಲಿ, ಹಬ್ಬ ಇರಲಿ, ಎಷ್ಟೇ ಕಷ್ಟವಿದ್ದರೂ ಒಂದು ಗ್ರಾಂ ಗ್ರಾಂ ಆದ್ರೂ ಚಿನ್ನ ತಗೋಬೇಕು ಅಂತ ಪ್ರತಿಯೊಬ್ಬರೂ ಆಸೆ ಪಡ್ತಾರೆ. ಆದರೆ, ಕಳೆದ ಕೆಲ ವರ್ಷಗಳಿಂದ ಚಿನ್ನದ ಬೆಲೆ ಏರುತ್ತಿರುವ ವೇಗ ನೋಡಿದರೆ, ಸಾಮಾನ್ಯ ಜನರು ಚಿನ್ನದ ಅಂಗಡಿ ಕಡೆ ತಿರುಗಿ ನೋಡಲು ಭಯಪಡುವಂತಾಗಿದೆ. ... Read more The post 2026 ರ ಅಧಿಕೃತ ಬಂಗಾರದ ಬೆಲೆ ತಿಳಿಸಿದ ತಜ್ಞರು! ಇಲ್ಲಿದೆ ಅಂತಿಮ ವರದಿ appeared first on Karnataka Times .

ಕರ್ನಾಟಕ ಟೈಮ್ಸ್ 20 Dec 2025 1:02 pm

ಕಳೆದ ಐದು ವರ್ಷಗಳಲ್ಲಿ ಕಲ್ಯಾಣ ಕರ್ನಾಟಕದ ನಾಲ್ಕು ಜಿಲ್ಲೆಗಳಲ್ಲಿ 800 ರೈತರ ಆತ್ಮಹತ್ಯೆ

ಕಲಬುರಗಿ, ಡಿ.19: ಕಲ್ಯಾಣ ಕರ್ನಾಟಕದ ನಾಲ್ಕು ಜಿಲ್ಲೆಗಳಲ್ಲಿ ಕಳೆದ ಐದು ವರ್ಷಗಳಲ್ಲಿ ಸಾಲಬಾಧೆಯಿಂದ ಸುಮಾರು 800 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸ್ಥಳೀಯ ಕೃಷಿ ಇಲಾಖೆ ಹಾಗೂ ರೈತ ಸಂಘಟನೆಗಳ ದಾಖಲೆಗಳು ಈ ಅಂಶವನ್ನು ಬಹಿರಂಗಪಡಿಸಿವೆ. ಕಲ್ಯಾಣ ಕರ್ನಾಟಕದ ಬೀದರ್, ಕಲಬುರಗಿ, ಯಾದಗಿರಿ ಹಾಗೂ ರಾಯಚೂರು ಜಿಲ್ಲೆಗಳಲ್ಲಿ ಕಳೆದ ಐದು ವರ್ಷಗಳಲ್ಲಿ ಸುಮಾರು 800 ರೈತರು ಸಾಲಭಾದೆಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದು, ಕೃಷಿ ಇಲಾಖೆಯಲ್ಲಿ ದಾಖಲಾದ ಎಲ್ಲ ರೈತರ ಕುಟುಂಬಗಳಿಗೆ ತಲಾ ಐದು ಲಕ್ಷ ರೂ.ನಂತೆ ಪರಿಹಾರ ಲಭಿಸಿದೆ. ಆದರೆ ರೈತ ಸಂಘಟನೆಗಳ ಪ್ರಕಾರ ಆತ್ಮಹತ್ಯೆಗೆ ಶರಣಾದ ಇನ್ನೂ ಹಲವು ರೈತರ ಕುಟುಂಬಗಳ ಕೈಗೆ ಪರಿಹಾರ ತಲುಪಿಲ್ಲ. ಕಳೆದ ಐದು ವರ್ಷಗಳಲ್ಲಿ (2020ರಿಂದ 2025) ಬೀದರ್ ಜಿಲ್ಲೆಯಲ್ಲಿ 159, ಕಲಬುರಗಿಯಲ್ಲಿ 483, ಯಾದಗಿರಿಯಲ್ಲಿ 64 ಹಾಗೂ ರಾಯಚೂರು ಜಿಲ್ಲೆಯಲ್ಲಿ 50 ಪ್ರಕರಣಗಳು ದಾಖಲಾಗಿವೆ. ಒಟ್ಟು ಕಲ್ಯಾಣ ಕರ್ನಾಟಕದ ನಾಲ್ಕು ಜಿಲ್ಲೆಗಳಲ್ಲಿ 756 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರೈತರ ಆತ್ಮಹತ್ಯೆಯಲ್ಲಿ ಕಲಬುರಗಿ ಜಿಲ್ಲೆ ಮುಂಚೂಣಿಯಲ್ಲಿದೆ. ಆತ್ಮಹತ್ಯೆ ಮಾಡಿದ ರೈತರಲ್ಲಿ ಅತೀ ಹೆಚ್ಚು ಜನ ವಿಷ ಸೇವಿಸಿ ಮೃತಪಟ್ಟಿದ್ದಾರೆ. ರೈತರಿಗೆ ಕೃಷಿಗೆ ಬಳಸುವ ರಾಸಾಯನಿಕ ಪದಾರ್ಥಗಳು ಸುಲಭವಾಗಿ ಲಭಿಸುವುದರಿಂದ ತಮ್ಮ ಸಾವಿಗೆ ಅದನ್ನೇ ಉಪಯೋಗಿಸುತ್ತಾರೆ ಎಂದು ಸಮೀಕ್ಷೆಯಲ್ಲಿ ಗೊತ್ತಾಗಿದೆ. ಇನ್ನು ಕೆಲವು ರೈತರು ಸಾಲದ ಹೊರೆ ಹೊತ್ತು ಖಿನ್ನತೆಗೆ ಒಳಗಾಗಿ ವಿಪರೀತ ಮದ್ಯ ಕುಡಿದು ಸಾವಿಗೆ ಶರಣಾಗುತ್ತಾರೆ ಎಂಬ ವಿಚಾರವನ್ನು ರೈತರ ಕುಟುಂಬಸ್ಥರು ನಮ್ಮ ಜೊತೆಗೆ ಹಂಚಿಕೊಂಡಿದ್ದಾರೆ. ಇವಿಷ್ಟು ಕೃಷಿ ಇಲಾಖೆಯಿಂದ ಪರಿಹಾರ ಪಡೆದ ರೈತ ಕುಟುಂಬಗಳ ದಾಖಲೆ. ಆದರೆ ಪರಿಹಾರ ತಲುಪದವರೂ ಇದ್ದಾರೆ ಎಂಬುದು ರೈತ ಸಂಘಟನೆಗಳ ಆರೋಪ. ರಾಜ್ಯದಲ್ಲಿ ನಿರುದ್ಯೋಗದ ಸಮಸ್ಯೆ ಎದುರಿಸುತ್ತಿರುವ ಹಾಗೂ ಅತಿ ಹೆಚ್ಚು ಗುಳೆ ಹೋಗುವ ಜಿಲ್ಲೆಗಳೆಂದರೆ ಅದು ಕಲ್ಯಾಣ ಕರ್ನಾಟಕ ಜಿಲ್ಲೆಗಳು. ಸಮರ್ಪಕ ಮೂಲಭೂತ ಸೌಲಭ್ಯಗಳಿಂದ ವಂಚಿತವಾಗಿರುವ ಈ ಜಿಲ್ಲೆಗಳು ಶೈಕ್ಷಣಿಕವಾಗಿ ಹಾಗೂ ಅಭಿವೃದ್ಧಿ ಸೂಚ್ಯಂಕದಲ್ಲಿ ಬಹಳ ಹಿಂದಿವೆ. ಸ್ಥಳೀಯವಾಗಿ ಉದ್ಯೋಗಗಳು ಸಿಗದೆ ಇರುವುದು ಹಾಗೂ ಸಕಾಲಿಕ ಮಳೆ ಸುರಿಯದೇ ಇರುವುದೂ ಇಲ್ಲಿನ ಗುಳೆ ಸಮಸ್ಯೆಗೆ ಕಾರಣ. ಇಲ್ಲಿನ ಜನ ಉದ್ಯೋಗ ಸಿಗಲಾರದೆ ನೆರೆಯ ರಾಜ್ಯಗಳಿಗೆ ಹಾಗೂ ರಾಜ್ಯದ ಬೇರೆ ಬೇರೆ ಪಟ್ಟಣಗಳಿಗೆ ಉದ್ಯೋಗ ಅರಸುತ್ತಾ ಗುಳೆ ಹೋದರೆ, ಅಲ್ಪಸ್ವಲ್ಪ ಜಮೀನುಗಳಿದ್ದ ರೈತರು ಸಾಲ ಮಾಡಿ ವ್ಯವಸಾಯ ಮಾಡಲು ಮುಂದಾಗುತ್ತಾರೆ. ಬೆಳೆ ಚೆನ್ನಾಗಿ ಕೈ ಹಿಡಿಯಲಿಲ್ಲ ಎಂದಾದರೆ ಕೆಲವು ರೈತರು ಮಾಡಿದ ಸಾಲ ತೀರಿಸಲು ಪಟ್ಟಣಗಳಿಗೆ ಗುಳೆ ಹೋದರೆ, ಹಲವು ರೈತರು ಆತ್ಮಹತ್ಯೆಗೆ ಶರಣಾಗುತ್ತಾರೆ. ಈ ಭಾಗದ ರೈತರು ಹೇಳುವ ಪ್ರಕಾರ ವರ್ಷದಲ್ಲಿ 40ಕ್ಕಿಂತ ಅಧಿಕ ರೈತರ ಆತ್ಮಹತ್ಯೆ ಪ್ರಕರಣಗಳು ನಡೆಯುತ್ತವೆ. ಕಳೆದ 15 ವರ್ಷಗಳಿಂದ ತೊಗರಿ ಬೆಳೆ ಬೆಳೆಗಾರರು ನಷ್ಟ ಅನುಭವಿಸುತ್ತಿದ್ದಾರೆ. ರಾಸಾಯನಿಕ ಗೊಬ್ಬರಗಳು ಸಬ್ಸಿಡಿ ರೀತಿಯಲ್ಲಿ ದೊರೆಯುತ್ತಿಲ್ಲ. ಟ್ರ್ಯಾಕ್ಟರ್ ಹಾಗೂ ಇನ್ನಿತರ ಕೃಷಿ ಉಪಕರಣಗಳ ಬೆಲೆ ದುಬಾರಿಯಾಗುತ್ತಿವೆ. ಉಪಕರಣಗಳ ಖರೀದಿಗೆ ನೀಡುವ ಸಾಲಕ್ಕೆ ಬಡ್ಡಿದರ ಹೆಚ್ಚಾಗುತ್ತಿವೆ. ಗ್ರಾಮೀಣ ಬ್ಯಾಂಕುಗಳಲ್ಲಿ ರೈತರಿಗೆ ಬೇಕಾದಾಗ ಸಾಲಗಳು ಸಿಗುವುದಿಲ್ಲ. ಸಿಕ್ಕ ಸಾಲಕ್ಕೆ ವರ್ಷಕ್ಕೆ ನವೀಕರಣ ಮಾಡಿಸಬೇಕಾಗುತ್ತದೆ. ನವೀಕರಣ ಮಾಡಿಸದ ಸಾಲಗಳಿಗೆ ಶೇ. 14 ಬಡ್ಡಿದರ ಹಾಗೂ ನವೀಕರಿಸಿದ ಸಾಲಕ್ಕೆ ಶೇ. 4 ಬಡ್ಡಿದರ ಪಾವತಿಸಬೇಕು. ಹೀಗಿರುವಾಗ ಸುಲಭವಾಗಿ ರೈತರು ಮೈಕ್ರೋ ಫೈನಾನ್ಸ್‌ನಂತಹ ಖಾಸಗಿ ಫೈನಾನ್ಸ್ ಕಂಪೆನಿಗಳ ಮೊರೆ ಹೋಗಬೇಕಾಗುತ್ತದೆ. ಸಾಲ ಪಡೆದ ಬಳಿಕ ಮೈಕ್ರೋ ಫೈನಾನ್ಸ್‌ಗಳ ಹಾವಳಿ ಹೆಚ್ಚಾದಂತೆ ರೈತ ಆತ್ಮಹತ್ಯೆಯ ದಾರಿ ಹಿಡಿಯುತ್ತಾನೆ. ಇಲ್ಲಿನ ರೈತರ ಆತ್ಮಹತ್ಯೆಗಳಿಗೆ ಮೂಲ ಕಾರಣಗಳನ್ನು ಹುಡುಕಿದಾಗ ಇವಿಷ್ಟು ಮುಖ್ಯ ಅಂಶಗಳು ತಿಳಿದುಬಂದಿವೆ. ಗ್ರಾಮೀಣ ಬ್ಯಾಂಕುಗಳಲ್ಲಿ 8ರಿಂದ 10 ಎಕರೆ ಕೃಷಿ ಜಮೀನು ಹೊಂದಿರುವ ರೈತರಿಗೆ ವ್ಯವಸಾಯಕ್ಕಾಗಿ 5 ಸಾವಿರದಿಂದ 5 ಲಕ್ಷ ರೂ.ಗಳವರೆಗೆ ಸಾಲ ನೀಡಲಾಗುತ್ತದೆ. ದಕ್ಷಿಣ ಕರ್ನಾಟಕದ ಜಿಲ್ಲೆಗಳಲ್ಲಿ ಎಕರೆಗೆ 25ರಿಂದ 35 ಲಕ್ಷ ರೂ. ಉತ್ಪಾದನೆ ಬರುತ್ತದೆ. ಹಾಗಾಗಿ ಆ ಭಾಗಗಳಲ್ಲಿ ರೈತರ ಆತ್ಮಹತ್ಯೆ ಪ್ರಕರಣಗಳು ನಡೆಯುತ್ತಿಲ್ಲ, ನಡೆದರೂ ತೀರಾ ಅಪರೂಪ. ಸುರಿಯುವ ಅಕಾಲಿಕ ಮಳೆ ಹಾಗೂ ತಮ್ಮ ಭೂಮಿಯಲ್ಲಿ ಯಾವ ಕಾಲಕ್ಕೆ ಯಾವ ಬೆಳೆ ಬೆಳೆಯಬೇಕು ಎಂಬ ಮಾಹಿತಿಯ ಕೊರತೆಯಿಂದ ರೈತ ವ್ಯವಸಾಯದಲ್ಲಿ ಇಳುವರಿ ಪಡೆಯಲು ಎಡವುತ್ತಿದ್ದಾನೆ ಎಂಬುವುದು ಇಲ್ಲಿನ ರೈತ ಮುಖಂಡರ ಅಭಿಪ್ರಾಯ. ರೈತರ ಅತ್ಮಹತ್ಯೆಗಳಿಗೆ ಸಾಲದ ಹೊರೆಯೇ ನೇರಕಾರಣ ಎಂದು ತಿಳಿದು ಬಂದಿದೆ. ಆತ್ಮಹತ್ಯೆ ಮಾಡಿದ ರೈತರಿಗೆ ಸರಕಾರದಿಂದ ತಲಾ 5 ಲಕ್ಷ ರೂ. ನಂತೆ ಪರಿಹಾರ ಸಿಕ್ಕಿವೆ. ಆತ್ಮಹತ್ಯೆ ಮಾಡಿದ ರೈತನ ಹೆಸರಿನಲ್ಲಿ ಹೊಲ ಹಾಗೂ ಸಾಲ ಇದ್ದರೆ ಅಂತಹವರ ಖಾತೆಗೆ ಪರಿಹಾರ ಮೊತ್ತ ಜಮೆ ಆಗಿವೆ. ಸಮದ್ ಪಟೇಲ್, ಜಂಟಿ ನಿರ್ದೇಶಕರು, ಕೃಷಿ ಇಲಾಖೆ, ಕಲಬುರಗಿ ರೈತರು ಬೆಳೆದ ಬೆಳೆಗೆ ಬೆಂಬಲ ಬೆಲೆ ಸಿಗದೆ ರೈತರ ಆರ್ಥಿಕ ಅಪರಿಸ್ಥಿತಿ ಕುಸಿಯುತ್ತಿದೆ. ಸಾಲದ ಬಾಧೆ ತಾಳಲಾರದೆ ರೈತರ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗುತ್ತಿವೆ. ಈ ಬಗ್ಗೆ ರಾಜ್ಯ ಹಾಗೂ ಕೇಂದ್ರ ಸರಕಾರ ಸಾಲ ಋಣ ಮುಕ್ತ ಕಾಯ್ದೆ ಜಾರಿಗೆ ತರಬೇಕು. ಅಲ್ಲದೆ ಕೇಂದ್ರ ಸರಕಾರ ವಿಶೇಷ ಮುತುವರ್ಜಿ ವಹಿಸಿ 2+15 ಶೇ. ಸೇರಿಸಿ ಕನಿಷ್ಠ ಬೆಂಬಲ ಬೆಲೆ ಕಾನೂನು ಜಾರಿಗೆ ಬರುವಂತೆ ಮಾಡಬೇಕು. ಶರಣ ಬಸಪ್ಪ ಮಮಶೆಟ್ಟಿ, ರಾಜ್ಯ ಉಪಾಧ್ಯಕ್ಷ, ಕರ್ನಾಟಕ ಪ್ರಾಂತ ರೈತ ಸಂಘ ರೈತರ ಆತ್ಮಹತ್ಯೆಗಳನ್ನು ತಡೆಗಟ್ಟಲು ಹಾಗೂ ರೈತರಿಗೆ ಪೂರಕವಾಗಿ ಹಲವಾರು ಕಾರ್ಯಕ್ರಮಗಳನ್ನು ನಡೆಸುತ್ತಾ ಇದ್ದೇವೆ. ರೈತರಿಗೆ ಬೇಕಾದ ವಿಮೆ ಸೌಲಭ್ಯಗಳನ್ನೂ ಮಾಡುತ್ತಿದ್ದೇವೆ. ರೈತರಿಗೆ ಆತ್ಮಹತ್ಯೆ ವಿರುದ್ಧ ಜಾಗೃತಿ ಮೂಡಿಸುವುದರ ಜೊತೆಗೆ ಮಾನಸಿಕ ಆರೋಗ್ಯದ ಬಗೆಗೂ ಕಾರ್ಯಕ್ರಮ ನಡೆಯುತ್ತಿದೆ. ಈಗಾಗಲೇ ರೈತರಿಗಾಗಿ ಪರಿಹಾರ, ಅನುದಾನ ಸೇರಿದಂತೆ ಸುಮಾರು 3 ಸಾವಿರ ಕೋಟಿ ರೂ.ಗಳನ್ನು ವ್ಯಯಿಸಲಾಗಿದೆ. ಬಿ. ಫೌಝಿಯಾ ತರನ್ನುಮ್ ಜಿಲ್ಲಾಧಿಕಾರಿ, ಕಲಬುರಗಿ ಮೈಕ್ರೋ ಫೈನಾನ್ಸ್ ಹಾವಳಿ 1992ರಿಂದ ಗ್ರಾಮೀಣ ಬ್ಯಾಂಕ್‌ಗಳಲ್ಲಿ ಸಬ್ಸಿಡಿ ಆಧಾರದಲ್ಲಿ ಸಾಲ ನೀಡಬೇಕೆಂದು ಹೋರಾಟ ಮಾಡುತ್ತಲೇ ಬಂದಿದ್ದೇವೆ. ಇನ್ನೂ ಅದಕ್ಕೆ ಸ್ಪಂದನ ಸಿಕ್ಕಿಲ್ಲ. ಇಡೀ ಕಲ್ಯಾಣ ಕರ್ನಾಟಕದಲ್ಲಿ ವರ್ಷಕ್ಕೆ 500ಕ್ಕಿಂತಲೂ ಅಧಿಕ ರೈತರ ಆತ್ಮಹತ್ಯೆ ಪ್ರಕರಣಗಳು ದಾಖಲಾಗುತ್ತಿವೆ. ಇದಕ್ಕೆ ಮೈಕ್ರೋಫೈನಾನ್ಸ್‌ಗಳ ಹಾವಳಿ ಹೆಚ್ಚಾಗಿರುವುದು ಕಾರಣ ಎಂದೇ ಹೇಳಬಹುದು. ಕೆಲವು ರೈತರು ಸಂಬಂಧಿಕರ ಅಥವಾ ಪರಿಚಯಸ್ಥರ ಜತೆ ಕೈ ಸಾಲ ಮಾಡಿ ವ್ಯವಸಾಯ ಮಾಡಿರುತ್ತಾರೆ. ಆ ಸಂದರ್ಭದಲ್ಲಿ ಆ ರೈತ ಆತ್ಮಹತ್ಯೆ ಮಾಡಿಕೊಂಡರೆ ಅಂಥವರಿಗೆ ಸರಕಾರದಿಂದ ಪರಿಹಾರ ಮೊತ್ತ ಸಿಗಲ್ಲ. ಇದರಿಂದ ರೈತರ ಕುಟುಂಬಗಳು ಸಂಕಷ್ಟಕ್ಕೆ ಒಳಗಾಗುತ್ತವೆೆ. ಮಳೆ ಹೆಚ್ಚಾಗಿ ಸುರಿದರೂ, ಸುರಿಯದೆ ಇದ್ದರೂ ಮಳೆಗೆ ಹಾನಿಯಾಗದಂತಹ ಬೆಳೆ ಬೆಳೆಸುವ ಬಗ್ಗೆ ತರಬೇತಿ ನೀಡಬೇಕು. ಮಾವು, ಹಲಸು, ಸೀತಾಫಲದಂತಹ ಕೃಷಿಗಳಿಗೆ ಹೆಚ್ಚಿನ ಮಹತ್ವ ನೀಡಬೇಕು. ಸಾಮಾಜಿಕ ವಿಭಾಗೀಯ ಅರಣ್ಯ ಇಲಾಖೆಯಲ್ಲಿ ಬೀಜಗಳನ್ನು ನೆಟ್ಟು ಸಸಿಗಳಾಗಿ ಬೆಳೆಸಿ ಅದನ್ನು ರೈತರಿಗೆ ನೀಡಿದರೆ ಬಿತ್ತನೆ ಸಮಯದಲ್ಲಿ ರೈತ ಎದುರಿಸುವ ಸಂಕಷ್ಟಗಳನ್ನು ತಡೆಯಬಹುದು. ಮೌಲಾ ಮುಲ್ಲಾ ರಾಜ್ಯಾಧ್ಯಕ್ಷರು, ಅಖಿಲ ಭಾರತ ಕಿಸಾನ್ ಸಭಾ

ವಾರ್ತಾ ಭಾರತಿ 20 Dec 2025 12:46 pm

M.Chinnaswamy Stadium: ಮಾರ್ಗಸೂಚಿಗಳೊಂದಿಗೆ ಬೆಂಗಳೂರಿನ ಎಂ.ಚಿನ್ನಸ್ವಾಮಿಯಲ್ಲಿ ಐಪಿಎಲ್‌ ಪಂದ್ಯ: ಇಲ್ಲಿದೆ ಮಾಹಿತಿ

Bengaluru M.Chinnaswamy Stadium: ಆರ್‌ಸಿಬಿ ಐಪಿಎಲ್‌ 2025 ಟ್ರೋಫಿ ಗೆದ್ದ ಹಿನ್ನೆಲೆ ಬೆಂಗಳೂರಿನಲ್ಲಿ ಜೂನ್‌ 4ರಂದು ವಿಯಯೋತ್ಸವ ಇಟ್ಟುಕೊಳ್ಳಲಾಗಿತ್ತು. ಈ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಕಾಲ್ತುಳಿತ ಸಂಭವಿಸಿ 11 ಮಂದಿ ಅಭಿಮಾನಿಗಳು ಮೃತಪಟ್ಟಿದ್ದರು. ಆಗಿನಿಂದ ಇಲ್ಲಿಯವರೆಗೆ ಇಲ್ಲಿ ಯಾವುದೇ ಪಂದ್ಯಗಳನ್ನು ಆಡಿಸಂತೆ ನಿಷೇಧ ಹೇರಲಾಗಿತ್ತು. ಆದರೆ, ಇದೀಗ ಮಾರ್ಗಸೂಚಿಗಳೊಂದಿಗೆ ಪಂದ್ಯಗಳನ್ನು ನಡೆಸಲು ಗ್ರೀನ್‌ ಸಿಗ್ನಲ್‌ ನೀಡಲಾಗಿದೆ.

ಒನ್ ಇ೦ಡಿಯ 20 Dec 2025 12:39 pm

ಡಿ.23ರಂದು ದಲಿತರಿಂದ ‘ನಮ್ಮ ಭೂಮಿ ನಮ್ಮ ಹಕ್ಕು’ ; ಬೆಳ್ತಂಗಡಿಯಲ್ಲಿ ಹಕ್ಕೊತ್ತಾಯ ಜಾಥಾ-ಸಮಾವೇಶ : ಎಂ.ಬಿ.ಕರಿಯ

ಮಂಗಳೂರು, ಡಿ.20: ನಮ್ಮ ಭೂಮಿ ನಮ್ಮ ಹಕ್ಕು ಘೋಷಣೆಯೊಂದಿಗೆ ದಲಿತರಶಿಕ್ಷಣ ಮತ್ತು ಭೂ ಹಕ್ಕೊತ್ತಾಯ ಸಮಿತಿ ಮತ್ತು ನಾಗರಿಕ ಸೇವಾ ಟ್ರಸ್ಟ್‌ನ ಆಶ್ರಯದಲ್ಲಿ ಡಿ. 23ರಂದು ದಲಿತರಿಂದ ಬೆಳ್ತಂಗಡಿಯಲ್ಲಿ ಹಕ್ಕೊತ್ತಾಯ ಜಾಥಾ ಮತ್ತು ಸಮಾವೇಶವನ್ನು ಆಯೋಜಿಸಲಾಗಿದೆ ಎಂದು ಸಮಿತಿಯ ಸಂಚಾಲಕ ಎಂ.ಬಿ.ಕರಿಯ ಧರ್ಮಸ್ಥಳ ತಿಳಿಸಿದರು. ನಗರದ ಪ್ರೆಸ್‌ಕ್ಲಬ್‌ನಲ್ಲಿ ಶನಿವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಜಾಥಾ ಬೆಳಗ್ಗೆ 10 ಗಂಟೆಗೆ ಬೆಳ್ತಂಗಡಿ ಅಯ್ಯಪ್ಪ ಗುಡಿಯ ಬಳಿಯಿಂದ ಹೊರಡಲಿದ್ದು, ಬಳಿಕ ಸಿವಿಸಿ ಹಾಲ್‌ನಲ್ಲಿ ಸಮಾವೇಶ ನಡೆಯಲಿದೆ ಎಂದರು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಪ್ರತಿ ಕುಟುಂಬಕ್ಕೆ ಲಭ್ಯ ಇರುವ ಸರಕಾರಿ ಭೂಮಿಯಲ್ಲಿ ಕನಿಷ್ಟ ಒಂದು ಎಕರೆ ಭೂಮಿ ನೀಡಬೇಕು. ಭೂ ಅಭಿವೃದ್ಧಿಗೆ ಹೆಚ್ಚಿನ ಸೌಲಭ, ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ಬೋದಕ ಮತ್ತು ಬೋದಕೇತರ ಸಿಬ್ಬಂದಿ ಪೈಕಿ ಶೇ.20ರಷ್ಟು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರನ್ನು ನೇಮಕ ಮಾಡಬೇಕು. ದಲಿತರ ಶಿಕ್ಷಣಕ್ಕೆ ಹೆಚ್ಚಿನ ಅನುದಾನ ಒದಗಿಸಬೇಕು ಎಂಬ ಪ್ರಮುಖ ಬೇಡಿಕೆಗಳೊಂದಿಗೆ ಈ ಹಕ್ಕೊತ್ತಾಯ ಜಾಥಾ ಹಾಗೂ ಸಮಾವೇಶ ನಡೆಯಲಿದೆ ಎಂದರು. ದಲಿತರ 14 ಹಕ್ಕೊತ್ತಾಯಗಳ ಕುರಿತು ಚಿಂತಕ ಲಕ್ಷ್ಮೀಶ ತೋಳ್ಪಾಡಿ, ವಿಚಾರವಾದಿ ಸಂಘಟನೆಗಳ ರಾಷ್ಟ್ರೀಯ ಒಕ್ಕೂಟದ ಅಧ್ಯಕ್ಷ ಡಾ. ನರೇಂದ್ರ ನಾಯಕ್, ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಾವಳ್ಳಿ ಶಂಕರ್, ಭೀಮ್ ಆರ್ಮಿಯ ರಾಜ್ಯಾಧ್ಯಕ್ಷ ರಾಜಗೋಪಾಲ್, ಅಂಬೇಡ್ಕರ್ ಸೇನೆಯ ರಾಜ್ಯಾಧ್ಯಕ್ಷ ಪಿ.ಮೂರ್ತಿ, ಅಂಬೇಡ್ಕರ್ ಸೇವಾ ಸಮಿತಿ ಕೋಲಾರ ಅಧ್ಯಕ್ಷ ಸಂದೇಶ್ ಕೆ.ಎಂ., ಚಲನಚಿತ್ರ ನಿರ್ದೇಶಕ ಹಾಗೂ ಸಾಮಾಜಿಕ ಹೋರಟಾಗರ ಟೈಗರ್ ನಾಗ್, ಪ್ರೊಕೃಷ್ಣಪ್ಪ ಸ್ವಾಭಿಮಾನ ಬಳಗದ ರಾಜ್ಯ ಸಂಘಟನಾ ಸಂಚಾಲಕ ದೇವದಾಸ್, ಡಿಎಸ್‌ಎಸ್ ಬೆಳ್ತಂಗಡಿ ತಾಲೂಕು ಸಮಿತಿ ಸಂಚಾಲಕ ಆರ್.ರಮೇಶ್, ಸಂಸದ ಕ್ಯಾ.ಬ್ರಿಜೇಶ್ ಚೌಟ, ಶಾಸಕ ಹರೀಶ್ ಪೂಂಜಾ, ಕಾಂಗ್ರೆಸ್ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಮಾತನಾಡಲಿದ್ದಾರೆ ಎಂದವರು ಹೇಳಿದರು. ನಾಗರಿಕ ಸೇವಾ ಟ್ರಸ್ಟ್‌ನ ಸಂಚಾಲಕರಾದ ಕೆ. ಸೋಮನಾಥ ನಾಯಕ್ ಮಾತನಾಡಿ, ಮಾಹಿತಿ ಹಕ್ಕಿನಲ್ಲಿ ಕೊಕ್ಕಡ, ಬೆಳ್ತಂಗಡಿ, ವೇಣೂರು ಮೂರು ಫಿರ್ಕಾದ ಕಂದಾಯ ನಿರೀಕ್ಷರು ನೀಡಿದ ಮಾಹಿತಿ ಪ್ರಕಾರ 81 ಗ್ರಾಮಗಳಲ್ಲಿ ಒಟ್ಟು 1,43,191.01 ಎಕರೆ ಸರಕಾರಿ ಭೂಮಿಯಲ್ಲಿ ಕುಮ್ಕಿ, ಡೀಮ್ಡ್ ಫಾರೆಸ್ಟ್, ಸಾರ್ವಜನಿಕ ಉದ್ದೇಶಕ್ಕೆ ಕಾದಿರಿಸಿದ 94 ಸಿ ಮತ್ತು ನಮೂನೆ 57,53, ಸಾಗುವಳಿ ಜಮೀನು ಇತ್ಯಾದಿ ಸುಮಾರು 7ರಿಂದ 10 ಸಾವಿರ ಎಕರೆ ಭೂಮಿ ಲಭ್ಯ ಇರುವುದಾಗಿ ಅಂದಾಜಿಸಲಾಗಿದೆ. ನಾಗರಿಕ ಸೇವಾ ಟ್ರಸ್ಟ್ 2004ರಲ್ಲಿ ಮಾಡಿದ ದಲಿತರ ಸ್ಥಿತಿಗತಿ ಅಧ್ಯಯನ ಪ್ರಕಾರ ಬೆಳ್ತಂಗಡಿ ತಾಲೂಕಿನ ದಲಿತರು ತುಂಡು ಭೂಮಿ ಹೊಂದಿದ್ದು, ಎಲ್ಲರೂ ಕೃಷಿ ಕಾರ್ಮಿಕರಾಗಿದ್ದಾರೆ. ಬೆಳ್ತಂಗಡಿ ತಹಶೀಲ್ದಾರರು ಪ್ರತಿ ವರ್ಷ ಸರಕಾರಿ ಭೂಮಿ ಲಭ್ಯ ಇಲ್ಲ ಎಂದು ಪ್ರಕಟನೆ ಹೊರಡಿಸುತ್ತಾರೆ. ಧರ್ಮಸ್ಥಳ ಗ್ರಾಮದಲ್ಲಿಯೇ 400 ಎಕರೆಗೂ ಅಧಿಕ ಸರಕಾರಿ ಭೂಮಿ ಇದ್ದು, ಭಾಗಶ: ಭೂ ಮಾಲಕರಿಂದ ಅತಿಕ್ರಮಣವಾಗಿದೆ. ಕೆಲವೊಂದು ಸರಕಾರಿ ಭೂಮಿ ನೀಡಲಾದ ಉದ್ದೇಶಕ್ಕೆ ಬಳಕೆಯಾಗಿಲ್ಲ. ಅತಿಕ್ರಮಣ ಹಾಗೂ ಉದ್ದೇಶ ಈಡೇರದ ಭೂಮಿಯನ್ನು ವಾಪಾಸು ಪಡೆದು ಸುತ್ತಮುತ್ತಲಿನ ಗ್ರಾಮಗಳ ದಲಿತರಿಗೆ ಹಂಚಬೇಕು. ಇದಕ್ಕಾಗಿ ಬೆಳ್ತಂಗಡಿಯಲ್ಲಿ ಸಮಗ್ರ ಸರಕಾರಿ ಭೂಮಿಯ ಸಮೀಕ್ಷೆ ನಡೆಸಬೇಕು. ಬೆಳ್ತಂಗಡಿ ತಾಲೂಕಿನಲ್ಲಿರುವ 473 ಎಕರೆ ಡಿಸಿ ಮನ್ನಾ ಭೂಮಿಯ ಅತಿಕ್ರಮಣ ತೆರವುಗೊಳಿಸಿ ದಲಿತರಿಗೆ ಹಂಚಬೇಕು ಎಂದು ಆಗ್ರಹಿಸಿದರು. ಸಹ ಸಂಚಾಲಕ ಸುಕೇಶ್ ಮಾಲಾಡಿ ಮಾತನಾಡಿ, ಉಜಿರೆಯ ಕಾಲೇಜಿಗೆ ಮತ್ತು ನಾಲ್ಕು ಹೈಸ್ಕೂಲ್‌ಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ಮೀಸಲಾತಿ ನಿಯಮ ಪ್ರಕಾರ ಶೇ.20ರಷ್ಟು ಬೋದಕ ಮತ್ತು ಬೋದಕೇತರ ಸಿಬ್ಬಂದಿ ನೇಮಕ ಮಾಡಿಲ್ಲ. ಈ ಬಗ್ಗೆ ಕಾನೂನು ಕ್ರಮ ವಹಿಸಬೇಕು ಎಂದು ಆಗ್ರಹಿಸಿದರು. ಗೋಷ್ಟಿಯಲ್ಲಿ ಸಹ ಸಂಚಾಲಕರಾದ ಬಾಬ ಎ., ನಾರಾಯಣ ಕಿಲಂಗೋಡಿ ಉಪಸ್ಥಿತರಿದ್ದರು. 

ವಾರ್ತಾ ಭಾರತಿ 20 Dec 2025 12:34 pm

ಮುಂದಿನ ವರ್ಷಾಂತ್ಯಕ್ಕೆ ಅನುಭವ ಮಂಟಪ ಪೂರ್ಣ : ಬೀದರ್ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ

ಬಸವ ಕಲ್ಯಾಣದಲ್ಲಿ ನಿರ್ಮಾಣವಾಗುತ್ತಿರುವ ಅನುಭವ ಮಂಟಪಕ್ಕೆ ಮುಖ್ಯಮಂತ್ರಿಯವರಲ್ಲಿ ಮನವಿ ಮಾಡಿ 200 ಕೋಟಿ ರೂ. ಬಿಡುಗಡೆ ಮಾಡಿಸಲಾಗಿದೆ. ಕಾಮಗಾರಿ ಭರದಿಂದ ಸಾಗಿದ್ದು, 2026ರ ಅಂತ್ಯದೊಳಗೆ ಕಾಮಗಾರಿ ಪೂರ್ಣಗೊಳಿಸಿ ಲೋಕಾರ್ಪಣೆ ಮಾಡುವ ನಿಟ್ಟಿನಲ್ಲಿ ಕೆಲಸ ನಡೆಯುತ್ತಿದೆ. 770 ಅಮರಗಣಂಗಳ ಚಿತ್ರ, ವಚನಗಳನ್ನು ಕಲ್ಲಿನ ಕಂಬಗಳ ಮೇಲೆ ಕೆತ್ತಿಸಲಾಗಿದೆ. ವಾ.ಭಾ.ವಿಶೇಷ ಪ್ರತಿನಿಧಿ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರದಲ್ಲಿ ಬೀದರ್ ಜಿಲ್ಲೆಯ ಉಸ್ತುವಾರಿ ಸಚಿವರಾಗಿ ಜವಾಬ್ದಾರಿ ಹೊತ್ತಿರುವ ಈಶ್ವರ್ ಖಂಡ್ರೆ, ಕಳೆದ ಎರಡೂವರೆ ವರ್ಷಗಳ ಅವಧಿಯಲ್ಲಿ ಜಿಲ್ಲೆಯಲ್ಲಿ ಕೈಗೊಂಡಿರುವ ಅಭಿವೃದ್ಧಿ ಕಾಮಗಾರಿಗಳು ಹಾಗೂ ಭವಿಷ್ಯದ ಯೋಜನೆಗಳ ಬಗ್ಗೆ ‘ವಾರ್ತಾಭಾರತಿ’ ಪತ್ರಿಕೆಗೆ ನೀಡಿರುವ ವಿಶೇಷ ಸಂದರ್ಶನದಲ್ಲಿ ಹಂಚಿಕೊಂಡಿದ್ದಾರೆ. ► ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದು ಎರಡೂವರೆ ವರ್ಷ ಪೂರೈಸಿದೆ. ಜಿಲ್ಲಾ ಉಸ್ತುವಾರಿ ಸಚಿವರಾಗಿ ಬೀದರ್ ಜಿಲ್ಲೆಯ ಅಭಿವೃದ್ಧಿಗೆ ತಾವು ಕೈಗೊಂಡಿರುವ ಕ್ರಮಗಳೇನು? ಈಶ್ವರ್ ಖಂಡ್ರೆ : ಬೀದರ್ ಜಿಲ್ಲೆಯಲ್ಲಿ ಅಭಿವೃದ್ಧಿ ಪರ್ವ ಆರಂಭಿಸಲು 2025 ಕೋಟಿ ರೂ. ಮೌಲ್ಯದ ಯೋಜನೆಗಳ ಶಂಕುಸ್ಥಾಪನೆ ಮತ್ತು ಉದ್ಘಾಟನೆಯನ್ನು ಕಳೆದ ಎಪ್ರಿಲ್‌ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೆರವೇರಿಸಿದ್ದಾರೆ. ಬಜೆಟ್ ನಲ್ಲಿ 5 ಸಾವಿರ ಕೋಟಿ ರೂ. ಹಂಚಿಕೆಯಾಗಿದ್ದು, ಬೀದರ್ ಜಿಲ್ಲೆಯಲ್ಲೂ ಪ್ರಗತಿ ಆಗುತ್ತಿದೆ. ಹಿಂದೆ ರಾಜ್ಯ ಹಾಗೂ ಕೇಂದ್ರದಲ್ಲಿ ಬಿಜೆಪಿ ಸರಕಾರ ಇದ್ದಾಗ ಉಡಾನ್ ಯೋಜನೆಯಡಿ ಬೀದರ್‌ಗೆ ಕಲ್ಪಿಸಿದ್ದ ವಿಮಾನಯಾನ ಸೇವೆಯನ್ನು ಸ್ಥಗಿತಗೊಳಿಸಲಾಗಿತ್ತು. ಒಂದೂವರೆ ವರ್ಷ ನಿಂತು ಹೋಗಿತ್ತು. ಆದರೆ ಈಗ 15 ಕೋಟಿ ರೂ. ಅನುದಾನ ನೀಡಿ, ವಿಮಾನ ಯಾನ ಸೇವೆ ಪುನಾರಂಭ ಮಾಡಲಾಗಿದೆ. ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ವತಿಯಿಂದ ಶೈಕ್ಷಣಿಕ ಅಭಿವೃದ್ಧಿಗಾಗಿ 350 ಕೋಟಿ ರೂ. ಅನುದಾನ ಒದಗಿಸಲಾಗಿದೆ. ಜಿಲ್ಲೆಯಾದ್ಯಂತ ಇರುವ ನೂರಾರು ಪ್ರಾಥಮಿಕ ಶಾಲೆ, ಪ್ರೌಢಶಾಲೆ, ಪದವಿಪೂರ್ವ ಕಾಲೇಜುಗಳಿಗೆ ಹೊಸ ಕೊಠಡಿಗಳು, ಪ್ರಯೋಗಾಲಯಗಳು, ಆಟದ ಮೈದಾನ, ಶೌಚಾಲಯ, ಶುದ್ಧ ಕುಡಿಯುವ ನೀರು, ಪೀಠೋಪಕರಣ, ಪಾಠೋಪಕರಣ, ಆವರಣ ಗೋಡೆ, ಕಂಪ್ಯೂಟರ್ ಕೊಠಡಿ, ನೂತನ ಕಟ್ಟಡ ಇತ್ಯಾದಿ ಸೌಲಭ್ಯ ಕಲ್ಪಿಸಲಾಗಿದೆ. ಆರೋಗ್ಯ ಕ್ಷೇತ್ರದಲ್ಲಿ ಕಲ್ಯಾಣ ಕರ್ನಾಟಕ ಮತ್ತು ಆರೋಗ್ಯ ಇಲಾಖೆಯ ಸಹಯೋಗದಲ್ಲಿ ಎಎನ್‌ಎಂ ಕೇಂದ್ರಗಳು, ಸಮುದಾಯ ಆರೋಗ್ಯ ಕೇಂದ್ರ, ತಾಲೂಕು ಆಸ್ಪತ್ರೆ ಮತ್ತು ಜಿಲ್ಲಾ ಆಸ್ಪತ್ರೆಗೆ ನೂರಾರು ಕೋಟಿ ರೂ. ಅನುದಾನ ಒದಗಿಸಿ, ಕಟ್ಟಡ, ವೆಂಟಿಲೇಟರ್, ಹಾಸಿಗೆ, ಪರೀಕ್ಷಾ ಉಪಕರಣ, ಸಲಕರಣೆಗಳನ್ನು ಒದಗಿಸಿ, ಗುಣಮಟ್ಟದ ಆರೋಗ್ಯ ಸೇವೆ ದೊರಕುವಂತೆ ಮಾಡಲಾಗಿದೆ. 32 ಕೋಟಿ ರೂ. ವೆಚ್ಚದಲ್ಲಿ 150 ಹಾಸಿಗೆಯ ಹೊಸ ಆಸ್ಪತ್ರೆ ನಿರ್ಮಾಣವಾಗುತ್ತಿದೆ. ಬೀದರ್ ವರ್ತುಲ ರಸ್ತೆಗೆ 20 ಕೋಟಿ ರೂ., ಬೀದರ್ ಮಹಿಳಾ ಪದವಿ ಕಾಲೇಜಿಗೆ 10 ಕೋಟಿ ರೂ. ಮಂಜೂರಾಗಿದೆ. ಬೀದರ್ ಜಿಲ್ಲೆಯಲ್ಲಿ 40 ಲಕ್ಷ ಸಸಿಗಳನ್ನು ನೆಟ್ಟು, ಹಸಿರು ಬೀದರ್ ಮಾಡುವ ಯೋಜನೆಗೆ ಚಾಲನೆ ನೀಡಲಾಗಿದೆ. ಅಂದಾಜು 500 ಕೋಟಿ ರೂ. ವೆಚ್ಚದಲ್ಲಿ ಹದಿನಾಲ್ಕು 100 ಕೆ.ವಿ. ವಿದ್ಯುತ್ ಕೇಂದ್ರಗಳನ್ನು, ತಲಾ ಒಂದು 220 ಕೆ.ವಿ. ಕೇಂದ್ರ 400 ಕೆ.ವಿ. ಕೇಂದ್ರ ಸ್ಥಾಪಿಸಲಾಗುತ್ತಿದೆ. ► ಬೀದರ್ ಜಿಲ್ಲೆಯಲ್ಲಿ ನೀರಾವರಿ ಯೋಜನೆಗಳ ಅನುಷ್ಠಾನಕ್ಕೆ ಕೈಗೊಂಡಿರುವ ಕ್ರಮಗಳೇನು? ಈಶ್ವರ್ ಖಂಡ್ರೆ : ಜಿಲ್ಲೆಯಲ್ಲಿ ನನೆಗುದಿಗೆ ಬಿದ್ದಿದ್ದ ನೀರಾವರಿ ಯೋಜನೆಗಳಿಗೆ ಚಾಲನೆ ನೀಡಲಾಗಿದೆ. ನಾನು ಸಚಿವನಾದ ತರುವಾಗ 550 ಕೋಟಿ ರೂ. ಅನುದಾನ ಮಂಜೂರು ಮಾಡಿಸಿ, ಔರಾದ್ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕೆರೆ ತುಂಬುವ ಕಾರ್ಯಕ್ರಮ ಹಾಗೂ ಭಾಲ್ಕಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಮೆಹಖರ್ ಏತ ನೀರಾವರಿ ಯೋಜನೆ ಅಡಿಯಲ್ಲಿ ಸುಮಾರು 25 ಸಾವಿರ ಎಕರೆ ರೈತರ ಭೂಮಿಗೆ ನೀರೊದಗಿಸುವ ಯೋಜನೆಯನ್ನು ಕಾರ್ಯಗತ ಮಾಡಲು ಕಾಮಗಾರಿ ಆರಂಭಿಸಲಾಗಿದೆ. ಇದರ ಜೊತೆಗೆ 100 ಕೋಟಿ ರೂ. ಹೆಚ್ಚುವರಿ ವೆಚ್ಚದಲ್ಲಿ ಕಾರಂಜಾ ಎಡದಂಡೆ ಮತ್ತು ಬಲದಂಡೆ ಕಾಲುವೆ ಆಧುನೀಕರಣ ಹಾಗೂ ನಾಲ್ಕು ಬ್ರಿಜ್ ಕಂ ಬ್ಯಾರೇಜ್‌ಗಳ ನವೀಕರಣ ಮಾಡಲಾಗುತ್ತಿದೆ. ಒಟ್ಟಾರೆ ಕೃಷಿಯನ್ನೇ ಪ್ರಧಾನವಾಗಿ ಅವಲಂಬಿಸಿರುವ ನಮ್ಮ ಬೀದರ್ ಜಿಲ್ಲೆಗೆ ಹೆಚ್ಚಿನ ನೀರಾವರಿ ಸೌಲಭ್ಯ ಕಲ್ಪಿಸಲು ಶ್ರಮಿಸಲಾಗುತ್ತಿದೆ. ► ಬಿಎಸ್‌ಎಸ್‌ಕೆ ಸಕ್ಕರೆ ಕಾರ್ಖಾನೆಯ ಮೇಲೆ ಕೋಟ್ಯಂತರ ರೂ. ಸಾಲವಿದ್ದ ಕಾರಣ ಅದನ್ನು ಮುಚ್ಚಲ್ಪಟ್ಟಿದೆ. ಅದನ್ನು ಪುನರ್ ಆರಂಭಿಸಬೇಕು ಎನ್ನುವುದು ರೈತರ ಬೇಡಿಕೆಯಾಗಿದೆ. ಈ ಬಗ್ಗೆ ಏನು ಕ್ರಮ ಕೈಗೊಂಡಿದ್ದೀರಿ? ಈಶ್ವರ್ ಖಂಡ್ರೆ: ಬೀದರ್ ಸಹಕಾರಿ ಸಕ್ಕರೆ ಕಾರ್ಖಾನೆ (ಬಿಎಸ್‌ಎಸ್‌ಕೆ) ಬಗ್ಗೆ ನನಗೆ ಭಾವನಾತ್ಮಕವಾದ ಸಂಬಂಧವಿದೆ. ಬಿಎಸ್‌ಎಸ್‌ಕೆ ಸ್ಥಾಪನೆ ಮಾಡಿದ ಕೀರ್ತಿ ನನ್ನ ತಂದೆ ಭೀಮಣ್ಣ ಖಂಡ್ರೆಯವರಿಗೆ ಸಲ್ಲುತ್ತದೆ. ನಾನೂ ಕೂಡ ಇದರ ಅಧ್ಯಕ್ಷನಾಗಿದ್ದೆ. ಆಗ ಕಾರ್ಖಾನೆ ಉತ್ತಮ ಸ್ಥಿತಿಯಲ್ಲಿತ್ತು. ಅನಂತರ ಬಿಜೆಪಿ ಬೆಂಬಲಿತ ಆಡಳಿತ ಮಂಡಳಿ ಈ ಕಾರ್ಖಾನೆಯನ್ನು ನಷ್ಟದ ಸುಳಿಗೆ ಸಿಲುಕಿಸಿತು. ನಾನು ಸಚಿವನಾದ ನಂತರ ಈ ಕಾರ್ಖಾನೆ ಪುನರಾರಂಭಕ್ಕೆ ಬಹಳ ಪ್ರಯತ್ನ ಮಾಡಿದ್ದೇನೆ. ಸಕ್ಕರೆ ಸಚಿವರ ಅಧ್ಯಕ್ಷತೆಯಲ್ಲಿ ಸಭೆಯೂ ನಡೆದಿದೆ. ಕಾರ್ಖಾನೆ ಪುನಾರಂಭ ಮಾಡಲೂ ಸಾಧ್ಯವಾಗದಷ್ಟು ಸಾಲದ ಹೊರೆ ಕಾರ್ಖಾನೆ ಮೇಲಿದೆ. ಡಿಸಿಸಿ ಬ್ಯಾಂಕ್, ಅಪೆಕ್ಸ್ ಬ್ಯಾಂಕ್ ನಲ್ಲೂ ಸಾಲ ಇದೆ. ಕಾರ್ಮಿಕರ ವೇತನ, ಭತ್ತೆ ಬಾಕಿ ಎಲ್ಲ ಸೇರಿ 400 ಕೋಟಿ ರೂ. ಸಾಲ ಇದೆ. ಸರಕಾರ ಅನುದಾನ ನೀಡಿದರೂ ಇದು ಪುನಶ್ಚೇತನ ಆಗುವ ಸ್ಥಿತಿಯಲ್ಲಿಲ್ಲ. ಆದರೂ ಕಬ್ಬು ಬೆಳೆಗಾರರ ಹಿತ ಕಾಯಲು ಪುನಶ್ಚೇತನದ ಪ್ರಯತ್ನ ಮುಂದುವರಿದಿದೆ. ► ಬ್ರಿಮ್ಸ್ ಆಸ್ಪತ್ರೆಯಲ್ಲಿ ಸೂಪರ್ ಸ್ಪೆಷಾಲಿಟಿ ಹೃದ್ರೋಗ ಘಟಕ ಸ್ಥಾಪನೆ ಮಾಡಿ ಚಾಲನೆ ನೀಡಲಾಗಿದೆ. ಆದರೆ ಆ ಹೃದ್ರೋಗ ಘಟಕದಲ್ಲಿ ವೈದ್ಯರಿಲ್ಲದೆ ಅದಕ್ಕೆ ಬೀಗ ಹಾಕಲಾಗಿದೆ. ಆ ಹೃದ್ರೋಗ ಘಟಕಕ್ಕೆ ವೈದ್ಯರ ನೇಮಕ ಮಾಡಿ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಯಾವಾಗ ಮಾಡುತ್ತೀರಿ? ಈಶ್ವರ್ ಖಂಡ್ರೆ : ಬ್ರಿಮ್ಸ್ ಆಸ್ಪತ್ರೆಯಲ್ಲಿ ಹೃದ್ರೋಗ ಕೇಂದ್ರ ತೆರೆಯಲು ನಾನು ಪ್ರಯತ್ನ ಮಾಡಿದ್ದು ಸಂಪೂರ್ಣ ಸಜ್ಜಾಗಿದೆ. ಎರಡು ಬಾರಿ ಹೃದ್ರೋಗ ತಜ್ಞರ ಹುದ್ದೆಗೆ ಅರ್ಜಿ ಕರೆದರೂ ಯಾರೂ ಮುಂದೆ ಬಂದಿಲ್ಲ. ಹೀಗಾಗಿ ಇದನ್ನು ಜಯದೇವ ಹೃದ್ರೋಗ ಕೇಂದ್ರದ ಅಡಿಯಲ್ಲಿ ತಂದು ಕಾರ್ಯಾರಂಭ ಮಾಡಿಸಲು ಮುಖ್ಯಮಂತ್ರಿಗೆ ಮನವಿ ಮಾಡಲಾಗಿದೆ. ► ಕೆಕೆಆರ್‌ಡಿಬಿ ಮೂಲಕ ಬೀದರ್ ಜಿಲ್ಲೆಗೆ ಕಳೆದ ಎರಡೂವರೆ ವರ್ಷಗಳಲ್ಲಿ ಲಭ್ಯವಾಗಿರುವ ಅನುದಾನ ಎಷ್ಟು? ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳು ಯಾವುವು? ಈಶ್ವರ್ ಖಂಡ್ರೆ : ಕೆಕೆಆರ್‌ಡಿಬಿಯಿಂದ ಬೀದರ್ ಜಿಲ್ಲೆಗೆ ಕಳೆದ ಎರಡೂವರೆ ವರ್ಷದಲ್ಲಿ ಸುಮಾರು 1,500 ಕೋಟಿ ರೂ. ಅನುದಾನ ಲಭ್ಯವಾಗಿದೆ. ಇದರ ಅಡಿಯಲ್ಲಿ ನಿಂತು ಹೋಗಿದ್ದ ಬೀದರ್-ಬೆಂಗಳೂರು ವಿಮಾನಯಾನ ಸೇವೆ ಪುನಾರಂಭವಾಗಿದೆ. 2024-25ರವರೆಗೆ ಒಟ್ಟು 5,086 ಕಾಮಗಾರಿ ಮಂಜೂರಾಗಿದ್ದು, ಈ ಪೈಕಿ 4,254 ಕಾಮಗಾರಿ ಪೂರ್ಣಗೊಂಡಿದೆ. 661 ಕಾಮಗಾರಿಗಳು ಪ್ರಗತಿಯಲ್ಲಿದ್ದು, 141 ಕಾಮಗಾರಿ ಆರಂಭವಾಗಬೇಕಿದೆ. ► ಬೀದರ್ ಜಿಲ್ಲೆಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಕೈಗೊಂಡಿರುವ ಕ್ರಮಗಳೇನು? ಈಶ್ವರ್ ಖಂಡ್ರೆ : 22 ಕೋಟಿ ರೂ. ವೆಚ್ಚದಲ್ಲಿ ಪಾಪನಾಶ ಶಿವ ದೇವಾಲಯ ಅಭಿವೃದ್ಧಿ ಕಾಮಗಾರಿ ಕೈಗೆತ್ತಿಕೊಳ್ಳಲಾಗುತ್ತಿದೆ. 20 ಕೋಟಿ ರೂ. ವೆಚ್ಚದಲ್ಲಿ ಬೀದರ್ ಕೋಟೆಯ ಜೀರ್ಣೋದ್ಧಾರ ಹಾಗೂ ಕಾರಂಜ ಜಲಾಶಯದ ಬಳಿ ಮೈಸೂರು ಬಳಿಯ ಕೆಆರ್‌ಎಸ್ ಬೃಂದಾವನ ಉದ್ಯಾನದ ರೀತಿಯಲ್ಲಿ ಉದ್ಯಾನ ನಿರ್ಮಾಣಕ್ಕೆ ಡಿಪಿಆರ್ ಮಾಡಲು ಆದೇಶ ನೀಡಲಾಗಿದೆ. ಇದೇ ಮೊದಲ ಬಾರಿಗೆ 15 ಕೋಟಿ ರೂ. ವೆಚ್ಚದಲ್ಲಿ ಬೀದರ್ ಜಿಲ್ಲೆಯಲ್ಲಿ ಪರಿಸರ ಪ್ರವಾಸೋದ್ಯಮಕ್ಕೆ ಒತ್ತು ನೀಡಲಾಗಿದೆ. ಹೊನ್ನಿಕೇರಿಯಲ್ಲಿ ಯೋಜನೆ ಕಾರ್ಯಗತವಾಗುತ್ತಿದೆ. ಬಸವ ಕಲ್ಯಾಣದಲ್ಲಿ ಆಧುನಿಕ ಅನುಭವ ಮಂಟಪ ಲೋಕಾರ್ಪಣೆ ಆದ ಬಳಿಕ ಜಗತ್ತಿನ ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದಾಗಲಿದೆ. ► ನೂತನ ಜಿಲ್ಲಾಡಳಿತ ಕಚೇರಿ ಸಂಕಿರಣ ಕಟ್ಟಡ ನಿರ್ಮಾಣ ಕಾರ್ಯ ಯಾವಾಗ ಪೂರ್ಣಗೊಳ್ಳಲಿದೆ? ಈಶ್ವರ್ ಖಂಡ್ರೆ : ಜಿಲ್ಲಾಡಳಿತ ಕಚೇರಿ ಸಂಕಿರಣ ಕಟ್ಟಡಕ್ಕಾಗಿ 50 ಕೋಟಿ ರೂ. ಅನುದಾನ ತಂದು ಕಾಮಗಾರಿ ಆರಂಭಿಸಲಾಗಿದೆ. 2026ರ ಅಂತ್ಯಕ್ಕೆ ಕಾಮಗಾರಿ ಪೂರ್ಣಗೊಳ್ಳುವ ನಿರೀಕ್ಷೆ ಇದೆ. ಜನರಿಗೆ ಒಂದೇ ಸೂರಿನಡಿ ವಿವಿಧ ಇಲಾಖೆಗಳ ಸೇವೆ ಲಭಿಸುವಂತೆ ಮಾಡಲಾಗುವುದು. ► ಬೀದರ್ ಜಿಲ್ಲೆಯಲ್ಲಿ ರಾಷ್ಟ್ರೀಯ ಕ್ರೀಡಾಂಗಣ ನಿರ್ಮಾಣ ಯೋಜನೆ ಯಾವ ಹಂತದಲ್ಲಿದೆ? ಈಶ್ವರ್ ಖಂಡ್ರೆ : ಈ ವರ್ಷ ಕೆಕೆಆರ್‌ಡಿಬಿಯಿಂದ 10 ಕೋಟಿ ರೂ. ಮಂಜೂರು ಮಾಡಿಸಿ, ಮುಂದಿನ ಒಂದೂವರೆ ವರ್ಷದಲ್ಲಿ ಕ್ರೀಡಾಂಗಣ ಲೋಕಾರ್ಪಣೆ ಮಾಡುವುದು ನಮ್ಮ ಗುರಿಯಾಗಿದೆ. ಈಗ ಯೋಜನೆ ಡಿಪಿಆರ್ ಹಂತದಲ್ಲಿದೆ. ► 371(ಜೆ) ಜಾರಿಯಾದ ಬಳಿಕ ಬೀದರ್ ಜಿಲ್ಲೆಯಲ್ಲಿ ಆಗಿರುವ ಬದಲಾವಣೆಗಳು ಏನು? ಈಶ್ವರ್ ಖಂಡ್ರೆ : 371(ಜೆ) ಘೋಷಣೆಯ ಬಳಿಕ ಬೀದರ್ ಜಿಲ್ಲೆಗೆ 1,500 ಕೋಟಿ ರೂ. ಮಂಜೂರಾಗಿದೆ. ನಮ್ಮ ಭಾಗದ ಯುವಜನರಿಗೆ ವೈದ್ಯಕೀಯ, ಇಂಜಿನಿಯರಿಂಗ್ ಸೇರಿದಂತೆ ಉನ್ನತ ಶಿಕ್ಷಣ ಕೋರ್ಸ್‌ಗಳಲ್ಲಿ ಮೀಸಲಾತಿ ಲಭಿಸುತ್ತಿದೆ. ಉದ್ಯೋಗವೂ ಲಭಿಸುತ್ತಿದೆ. ವಿಶೇಷ ಸ್ಥಾನಮಾನ ಸಿಕ್ಕಿರುವುದರಿಂದ ಬೀದರ್ ಜಿಲ್ಲೆಯ ಜನರಿಗೆ ತುಂಬಾ ಅನುಕೂಲವಾಗಿದೆ. 371 (ಜೆ) ಜಾರಿ ಪೂರ್ವದಲ್ಲಿ ವರ್ಷಕ್ಕೆ 10ರಿಂದ 15 ವೈದ್ಯಕೀಯ ಸೀಟುಗಳು ಬೀದರ್ ಯುವಜನರಿಗೆ ಲಭಿಸುತ್ತಿದ್ದವು. ಈಗ ಬೀದರ್ ಜಿಲ್ಲೆಯ ಪ್ರತಿಭಾವಂತ ಯುವಜನರಿಗೆ 80ರಿಂದ 100 ಸೀಟು ಲಭಿಸುತ್ತಿದೆ.

ವಾರ್ತಾ ಭಾರತಿ 20 Dec 2025 12:34 pm

National Herald Case: ಗಾಂಧಿ ಕುಟುಂಬದ ವಿರುದ್ಧದ ಆರೋಪ ಪಟ್ಟಿ ಪರಿಗಣಿಸಲು ನಿರಾಕರಿಸಿದ ಆದೇಶ ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ ಜಾರಿ ನಿರ್ದೇಶನಾಲಯ

ಹೊಸ ದಿಲ್ಲಿ: ನ್ಯಾಷನಲ್ ಹೆರಾಲ್ಡ್ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ಮತ್ತಿತರರ ವಿರುದ್ಧ ಸಲ್ಲಿಸಲಾಗಿದ್ದ ಆರೋಪ ಪಟ್ಟಿಯನ್ನು ಪರಿಗಣಿಸಲು ವಿಚಾರಣಾ ನ್ಯಾಯಾಲಯ ನಿರಾಕರಿಸಿರುವ ಆದೇಶವನ್ನು ಪ್ರಶ್ನಿಸಿ ಜಾರಿ ನಿರ್ದೇಶನಾಲಯ ದಿಲ್ಲಿ ಹೈಕೋರ್ಟ್ ಮೆಟ್ಟಿಲೇರಿದೆ. ಈ ಆದೇಶ ನ್ಯಾಯಾಂಗ ಶಾಸನಕ್ಕೆ ಸಮವಾಗಿದೆ ಎಂದು ಜಾರಿ ನಿರ್ದೇಶನಾಲಯ ವಾದಿಸಿದ್ದು, ಈ ಅರ್ಜಿಯ ವಿಚಾರಣೆ ಮುಂದಿನ ವಾರ ವಿಚಾರಣೆಗೆ ಪಟ್ಟಿ ಮಾಡಲಾಗಿದೆ.  ನ್ಯಾಷನಲ್ ಹೆರಾಲ್ಡ್ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ ದಾಖಲಿಸಿರುವ ದೂರು ಎಫ್ಐಆರ್ ಆಧಾರದಲ್ಲಿ ದಾಖಲಾಗದೆ ಇರುವುದರಿಂದ ಡಿಸೆಂಬರ್ 16ರ ವಿಚಾರಣೆಯ ವೇಳೆ ವಿಚಾರಣಾ ನ್ಯಾಯಾಲಯದ ನ್ಯಾ. ವಿಶಾಲ್ ಗೊಗ್ನೆ ಅವರು ಜಾರಿ ನಿರ್ದೇಶನಾಲಯ ಸಲ್ಲಿಸಿದ್ದ ಆರೋಪ ಪಟ್ಟಿಯನ್ನು ಪರಿಗಣಿಸಲು ನಿರಾಕರಿಸಿದ್ದರು. ಈ ಆದೇಶವನ್ನು ಪ್ರಶ್ನಿಸಿ ಜಾರಿ ನಿರ್ದೇಶನಾಲಯ ದಿಲ್ಲಿ ಹೈಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿದೆ.

ವಾರ್ತಾ ಭಾರತಿ 20 Dec 2025 12:17 pm

ಏಮ್ಸ್ ಸ್ಥಾಪನೆಯಿಂದ ಅತ್ಯಾಧುನಿಕ ಆರೋಗ್ಯ ಸೇವೆ :ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್

ರಾಜೀವ್ ಗಾಂಧಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಈಗಾಗಲ್ಲೇ ಕ್ಯಾನ್ಸರ್ ಘಟಕವನ್ನು ಪ್ರಾರಂಭಿಸಿ ಮೆಡಿಕಲ್ ಆಂಕಾಲಜಿ ಹಾಗೂ ಸರ್ಜಿಕಲ್ ಆಂಕಾಲಜಿ ವಿಭಾಗಗಳನ್ನು ಪ್ರಾರಂಭಿಸಲಾಗಿದೆ. ಇದರಿಂದಾಗಿ, ಈ ಭಾಗದ ಬಡ ಜನರು ಚಿಕಿತ್ಸೆಗಾಗಿ ಹೈದರಾಬಾದ್, ಬೆಂಗಳೂರಿಗೆ ಹೋಗುವ ಸಂಕಷ್ಟ ತಪ್ಪಿದೆ. ಕ್ಯಾನ್ಸರ್‌ಗೆ ಸಂಬಂದಪಟ್ಟ ಶಸ್ತ್ರ ಚಿಕಿತ್ಸೆಗಳು, ಕಿಮಿಯೋಥೆರಪಿ ಸೌಲಭ್ಯ ಲಭ್ಯವಿದೆ. ಅಲ್ಲದೇ, ಔಷಧಿಗಳನ್ನು ಈ ಆಸ್ಪತ್ರೆಯಲ್ಲಿಯೆ ನೀಡಲಾಗುತ್ತಿದೆ. ಆಯುಷ್ಮಾನ್ ಭಾರತ ಆರೋಗ್ಯ ಕರ್ನಾಟಕ ಯೋಜನೆ ಅಡಿಯಲ್ಲಿ ಎಲ್ಲ ಚಿಕಿತ್ಸೆಗಳು ಉಚಿತವಾಗಿ ನೀಡಲಾಗುತ್ತಿದೆ. ಇದೇ ಆಸ್ಪತ್ರೆಯಲ್ಲಿ ಟ್ರಾಮಾ ಸೆಂಟರ್ ಆರಂಭವಾಗಿರುವುದರಿಂದ ಬಡವರಿಗೆ ಅನುಕೂಲವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದು ಎರಡೂವರೆ ವರ್ಷ ಪೂರ್ಣಗೊಳಿಸಿದ್ದು, ಈ ಅವಧಿಯಲ್ಲಿ ರಾಯಚೂರು ಜಿಲ್ಲೆಯಲ್ಲಿ ಆಗಿರುವ ಅಭಿವೃದ್ಧಿ ಹಾಗೂ ಭವಿಷ್ಯದ ಯೋಜನೆಗಳ ಕುರಿತು ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್ ‘ವಾರ್ತಾಭಾರತಿ’ ಪತ್ರಿಕೆಗೆ ನೀಡಿರುವ ವಿಶೇಷ ಸಂದರ್ಶನದಲ್ಲಿ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ► ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವರಾಗಿ ಎರಡೂವರೆ ವರ್ಷಗಳಲ್ಲಿ ಜಿಲ್ಲೆಯಲ್ಲಿ ಕೈಗೊಂಡಿರುವ ಅಭಿವೃದ್ಧಿ ಯೋಜನೆಗಳು ಯಾವುವು? ಶರಣ ಪ್ರಕಾಶ್ ಪಾಟೀಲ್ : ರಾಯಚೂರು ವಿಮಾನ ನಿಲ್ದಾಣ ಕಾಮಗಾರಿ ಆರಂಭ, ರಾಯಚೂರಿನ ರಾಜೀವ್ ಗಾಂಧಿ ಸೂಪರ್ ಸ್ಪೆಶಾಲಿಟಿ ಆಸ್ಪತ್ರೆಯ ಆವರಣದಲ್ಲಿ 50 ಕೋಟಿ ರೂ. ವೆಚ್ಚದಲ್ಲಿ ಕಿದ್ವಾಯಿ ಫೆರಿಫರಲ್ ಕ್ಯಾನ್ಸರ್ ಚಿಕಿತ್ಸಾ ಘಟಕ ಸ್ಥಾಪಿಸಲಾಗುತ್ತಿದೆ. ರಾಯಚೂರು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ತಾಯಿ ಮತ್ತು ಮಕ್ಕಳ ಆಸ್ಪತ್ರೆ ನಿರ್ಮಾಣ ಮಾಡಲಾಗುವುದು. ನಗರದಲ್ಲಿ ಸುಸಜ್ಜಿತ ವಾದ ಜಿಲ್ಲಾ ಆಸ್ಪತ್ರೆ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗಿದೆ. ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯದಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ರಾಯಚೂರು ಮತ್ತು ಸಿಂಧನೂರು ತಾಲೂಕುಗಳಲ್ಲಿ ಜಿಟಿಟಿಸಿ ಕೇಂದ್ರಗಳ ಸ್ಥಾಪನೆ ಮಾಡಲಾಗುವುದು. ಜಿಲ್ಲೆಯಲ್ಲಿ ಮೆಗಾ ಜವಳಿ ಪಾರ್ಕ್ ನಿರ್ಮಾಣ ಮಾಡಲಾಗುವುದು. ಇಂಡಿಯನ್ ಇನ್ಸ್‌ಟಿಟ್ಯೂಟ್ ಆಫ್ ಇರ್ನ್ಫಾಮೇಷನ್ ಟೆಕ್ನಾಲಜಿ ಕಟ್ಟಡದ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ► ರಾಯಚೂರು ಜಿಲ್ಲೆಗೆ ಏಮ್ಸ್ ಸಿಗಬೇಕೆಂಬ ಅನೇಕ ವರ್ಷಗಳ ಬೇಡಿಕೆಗೆ ಕೇಂದ್ರ ಸರಕಾರ ಸ್ಪಂದಿಸುತ್ತಿಲ್ಲ. ಈ ನಿಟ್ಟಿನಲ್ಲಿ ನಿಮ್ಮ ಮುಂದಿನ ನಡೆ ಏನು? ಶರಣ ಪ್ರಕಾಶ್ ಪಾಟೀಲ್ : ಏಮ್ಸ್ ಸ್ಥಾಪನೆಗೆ ಬೇಕಾದ ಎಲ್ಲಾ ದಾಖಲೆಗಳು, ವರದಿಗಳು ಮತ್ತು ತಾಂತ್ರಿಕ ಪ್ರಸ್ತಾವನೆಗಳನ್ನು ಜಿಲ್ಲಾಡಳಿತ ಮತ್ತು ರಾಜ್ಯ ಸರಕಾರ ಈಗಾಗಲೇ ಸಿದ್ಧಪಡಿಸಿ ಕೇಂದ್ರ ಸರಕಾರಕ್ಕೆ ಸಲ್ಲಿಸಿದೆ. ರಾಜ್ಯ ಸರಕಾರವೂ ರಾಯಚೂರಿನಲ್ಲಿ ಏಮ್ಸ್ ಸ್ಥಾಪನೆಗೆ ಬೆಂಬಲ ಸೂಚಿಸಿದೆ. ಆದರೆ ಅಂತಿಮ ಅನುಮೋದನೆ ನೀಡಬೇಕಿರುವ ಕೇಂದ್ರ ಸರಕಾರದಿಂದ ಇನ್ನೂ ಒಪ್ಪಿಗೆ ಬಂದಿಲ್ಲ. ಈ ಉದ್ದೇಶಕ್ಕಾಗಿ ನಮ್ಮ ಜಿಲ್ಲೆಯ ಹೋರಾಟ ಗಾರರು, ಆರೋಗ್ಯ ವೃಂದದವರು ಹಾಗೂ ರಾಜಕಾರಣಿಗಳು ಏಮ್ಸ್ ಬೇಕೆಂದು ಕೇಂದ್ರ ಸರಕಾರವನ್ನು ಒತ್ತಾಯಿಸುತ್ತಿದ್ದಾರೆ. ► ರಾಯಚೂರು ಜಿಲ್ಲೆಯಲ್ಲಿ ಶೈಕ್ಷಣಿಕ ಹಾಗೂ ಆರೋಗ್ಯ ಕ್ಷೇತ್ರದ ಬಲವರ್ಧನೆಗೆ ಯಾವ ಯೋಜನೆಗಳನ್ನು ರೂಪಿಸಲಾಗಿದೆ? ಶರಣ ಪ್ರಕಾಶ್ ಪಾಟೀಲ್ : ಎಸೆಸೆಲ್ಸಿ ಪರೀಕ್ಷಾ ಫಲಿತಾಂಶ ಸುಧಾರಣೆಗಾಗಿ 29 ಅಂಶಗಳನ್ನು ಅನುಷ್ಠಾನಗೊಳಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಎಸೆಸೆಲ್ಸಿ ಮಕ್ಕಳಿಗೆ, ಎಸ್‌ಸಿ, ಎಸ್‌ಟಿಹಾಗೂ ಇತರ ಸಮುದಾಯಗಳ ಹೆಣ್ಣು ಮಕ್ಕಳಿಗೆ ಶುಲ್ಕ ಮರುಪಾವತಿ ಮಾಡಲಾಗುತ್ತಿದೆ. ಶಾಲೆಗಳಿಗೆ ಅಗತ್ಯ ವಿರುವ ಡೆಸ್ಕ್, ಗಣಕಯಂತ್ರಗಳು, ಸ್ಮಾರ್ಟ್ ಕ್ಲಾಸ್‌ಗಳಿಗೆ ಅಗತ್ಯವಿರುವ ಸೌಲಭ್ಯಗಳು, ಕೆಪಿಎಸ್ ಶಾಲೆಗಳ ಸ್ಥಾಪನೆ, ಎನ್‌ಎಸ್‌ಕ್ಯೂಎಫ್, ಇಸಿಸಿಇ ದ್ವಿಭಾಷಾ ವಿಶೇಷ ತರಗತಿ, ವಿಜ್ಞಾನ ಉಪಕರಣಗಳನ್ನು ಶಾಲೆಗಳಿಗೆ ಸರಬರಾಜು ಮಾಡಲಾಗುತ್ತಿದೆ. ಡಯಟ್ ವತಿಯಿಂದ ಶಿಕ್ಷಕರಿಗೆ ತರಬೇತಿಯನ್ನು ಹಮ್ಮಿಕೊಳ್ಳಲಾಗುತ್ತದೆ. ಖಾಲಿರುವ ಹುದ್ದೆಗಳಿಗೆ ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗುತ್ತದೆ. ಸರಕಾರಿ ಶಾಲಾ ವಿದ್ಯಾರ್ಥಿ ಗಳಿಗೆ ಸಮವಸ್ತ್ರ, ಶೂ, ಸಾಕ್ಸ್, ಅಕ್ಷರದಾಸೋಹ ಯೋಜನೆ ಯಡಿ ಬಿಸಿಯೂಟ, ಕ್ಷೀರಭಾಗ್ಯ, ಬಾಳೆಹಣ್ಣು, ಮೊಟ್ಟೆ, ಚಿಕ್ಕಿ ಇತ್ಯಾದಿ ಯೋಜನೆಗಳನ್ನು ಜಾರಿಗೊಳಿಸಲಾಗಿದೆ. ಆರೋಗ್ಯ ಕ್ಷೇತ್ರಕ್ಕೆ ಸಂಬಂಧಪಟ್ಟಂತೆ ಜಿಲ್ಲೆಗೆ ಎಂಟು ಪ್ರಾಥಮಿಕ ಆರೋಗ್ಯ ಕೇಂದ್ರಗಳು ಹೊಸದಾಗಿ ಮಂಜೂರಾಗಿವೆ. ನಾಲ್ಕು ಸಮುದಾಯ ಆರೋಗ್ಯ ಕೇಂದ್ರಗಳನ್ನು 30 ಹಾಸಿಗೆಯಿಂದ 50 ಹಾಸಿಗೆಗೆ ಮೇಲ್ದರ್ಜೆಗೇರಿಸಲಾಗಿದೆ. ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಸಮುದಾಯ ಆರೋಗ್ಯ ಕೇಂದ್ರಗಳನ್ನಾಗಿ ಮೇಲ್ದರ್ಜೆಗೇರಿಸಲಾಗಿದೆ. ಸಿಂಧನೂರು ಸಾರ್ವಜನಿಕ ಆಸ್ಪತ್ರೆಯನ್ನು 100 ಹಾಸಿಗೆಯಿಂದ 200 ಹಾಸಿಗೆಯ ಜಿಲ್ಲಾ ಮಟ್ಟದ ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೇರಿಸಲಾಗಿದೆ. ನಗರ ವ್ಯಾಪ್ತಿಯಲ್ಲಿ ಹೊಸದಾಗಿ ಸಮು ದಾಯ ಆರೋಗ್ಯ ಕೇಂದ್ರ ವನ್ನು ಮತ್ತು ನಗರ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಕ್ರಮವಾಗಿ ರಾಯಚೂರು ಮತ್ತು ಮಾನ್ವಿ ತಾಲೂಕಿ ನಲ್ಲಿ ಪ್ರಾರಂಭಿಸಲಾ ಗುವುದು. ಈಗಾಗಲೇ ಜಿಲ್ಲೆಯಲ್ಲಿ ಸುಮಾರು 50 ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಆಯುಷ್ಮಾನ್ ಆರೋಗ್ಯ ಕೇಂದ್ರಗಳು, 7 ನಗರ ಆರೋಗ್ಯ ಕೇಂದ್ರಗಳು, 19 ನಮ್ಮ ಕ್ಲಿನಿಕ್‌ಗಳು, ಕಾರ್ಯನಿರ್ವಹಿಸುತ್ತಿವೆ. ಪ್ರತಿ ತಾಲೂಕಿನಲ್ಲಿ ತಾಯಿ ಮಕ್ಕಳ ಆಸ್ಪತ್ರೆಯನ್ನು ಪ್ರಾರಂಭಿಸಲು ಕ್ರಮ ಕೈಗೊಳ್ಳಲಾಗಿದೆ. ಈಗಾಗಲೇ ರಾಯಚೂರು, ಮಾನ್ವಿ, ಸಿಂಧನೂರಿನಲ್ಲಿ ಆಸ್ಪತ್ರೆ ಕಾರ್ಯಾರಂಭ ಮಾಡಲಾಗಿದ್ದು, ಲಿಂಗಸುಗೂರು ತಾಲೂಕಿನಲ್ಲಿ 100 ಹಾಸಿಗೆಯುಳ್ಳ ತಾಯಿ ಮಕ್ಕಳ ಆಸ್ಪತ್ರೆಯನ್ನು ಸದ್ಯದಲ್ಲೇ ಪ್ರಾರಂಭಿಸಲಾಗುವುದು. ದೇವದುರ್ಗ ತಾಲೂಕಿನಲ್ಲಿ ಇನ್ನೂ ನಿರ್ಮಾಣ ಹಂತದಲ್ಲಿದೆ. ಗುತ್ತಿಗೆ ಆಧಾರದ ಮೇಲೆ 30 ಜನ ಎಂಬಿಬಿಎಸ್ ವೈದ್ಯರು ಮತ್ತು 15 ಜನ ವಿವಿಧ ತಜ್ಞ ವೈದ್ಯರನ್ನು ನೇಮಕ ಮಾಡಲಾಗಿದೆ. ► ಓಪೆಕ್ ಆಸ್ಪತ್ರೆಯ ಪುನಶ್ಚತನಕ್ಕೆ ಕೈಗೊಂಡಿರುವ ಕ್ರಮಗಳೇನು? ಪುಟ್ಟಪರ್ತಿಯ ಸತ್ಯಸಾಯಿ ಸಂಸ್ಥೆ ಈ ಆಸ್ಪತ್ರೆಯನ್ನು ನಿರ್ವಹಿಸುವ ಸಂಬಂಧ ಮಾತುಕತೆ ನಡೆದಿದೆಯೇ? ಶರಣ ಪ್ರಕಾಶ್ ಪಾಟೀಲ್ : ಓಪೆಕ್ ಆಸ್ಪತ್ರೆಯ ಪುನಶ್ಚೇತನಕ್ಕೆ ಹಾಗೂ ಆಸ್ಪತ್ರೆಯ ಮುಂಭಾಗ, ಹೊರ ಮತ್ತು ಒಳರೋಗಿಗಳ ವಿಭಾಗ, ಓಪಿಡಿಗಳ ವಿಭಾಗ ಸೇರಿದಂತೆ ಆಸ್ಪತ್ರೆಯ ಒಳ ಆವರಣವನ್ನು ನವೀಕರಿಸಲು 7 ಕಾಮಗಾರಿಗಳು ಪ್ರಾರಂಭವಾಗಿದ್ದು, ಅದರಲ್ಲಿ 5 ಕಾಮಗಾರಿಗಳು ಪೂರ್ಣಗೊಂಡಿವೆ, 2 ಕಾಮಗಾರಿಗಳು ಮುಕ್ತಾಯ ಹಂತದಲ್ಲಿವೆ. ಜತೆಗೆ ಕಳೆದ ಎರಡೂವರೆ ವರ್ಷಗಳಲ್ಲಿ ಬೆಲೆ ಬಾಳುವ ಉಪಕರಣಗಳನ್ನು ಸಂಬಂಧಪಟ್ಟ ವಿಭಾಗದಲ್ಲಿ ಅಳವಡಿಸಲಾಗುತ್ತಿದೆ. ► ರಾಯಚೂರು ಜಿಲ್ಲೆಯಲ್ಲಿ ಹತ್ತಿ ಹೆಚ್ಚು ಬೆಳೆಯಲಾಗುತ್ತದೆ. ಮೆಗಾ ಟೆಕ್ಸ್‌ಟೈಲ್ ಪಾರ್ಕ್ ನಿರ್ಮಿಸಬೇಕೆಂಬ ಬೇಡಿಕೆಗೆ ಕೇಂದ್ರ ಸರಕಾರ ಕಿವಿಗೊಡುತ್ತಿಲ್ಲ. ಹತ್ತಿ ಬೆಳೆಗಾರರ ರಕ್ಷಣೆಗೆ ರಾಜ್ಯ ಸರಕಾರ ಕೈಗೊಂಡಿರುವ ಕ್ರಮವೇನು? ಶರಣ ಪ್ರಕಾಶ್ ಪಾಟೀಲ್ : ಹತ್ತಿ ಬೆಳೆಗಾರರು ಹತ್ತಿಯನ್ನು ಬೆಳೆದು ಹತ್ತಿ ಗಿರಣಿಯಲ್ಲಿ ಮಾರಾಟ ಮಾಡುತ್ತಾರೆ. ಹತ್ತಿ ಬೆಳೆಗಾರರಿಗೆ ಮಾರಾಟದಲ್ಲಿ ಅನುಕೂಲವಾಗುವ ನಿಟ್ಟಿನಲ್ಲಿ ಹತ್ತಿ ಗಿರಣಿಗಳನ್ನು ಸ್ಥಾಪಿಸಲು ಕೈಮಗ್ಗ ಮತ್ತು ಜವಳಿ ಇಲಾಖೆಯಿಂದ ಯೋಜನೆಗಳನ್ನು ನೀಡಲಾಗುತ್ತಿದೆ. ನೂತನ ಜವಳಿ ಮತ್ತು ಸಿದ್ಧ ಉಡುಪು ನೀತಿ 2019-24 ಅಡಿ ಹೊಸದಾಗಿ ಸ್ಥಾಪಿತವಾದ ಜವಳಿ ಆಧಾರಿತ ಕೈಗಾರಿಕೆಗಳಿಗೆ ರಿಯಾಯಿತಿ ಮತ್ತು ಪ್ರೋತ್ಸಾಹ ಧನಗಳನ್ನು ಒದಗಿಸಲಾಗುವುದು. ಪ್ರಮುಖವಾಗಿ ಸಾಲ ಆಧಾರಿತ ಬಂಡವಾಳ ಹೂಡಿಕೆ ಸಹಾಯಧನ, ಬಡ್ಡಿ ಸಹಾಯಧನ, ಮುದ್ರಾಂಕ ಶುಲ್ಕ ವಿನಾಯಿತಿ ಮತ್ತು ನೋಂದಣಿ ರಿಯಾಯಿತಿ ಸೌಲಭ್ಯ, ಕಾರ್ಮಿಕರ ಇಎಸ್‌ಐ ಮತ್ತು ಇಪಿಎಫ್, ವಿದ್ಯುತ್ ಸಹಾಯಧನ ನೀಡಲಾಗುತ್ತಿದೆ. ನೇಕಾರರ ಪ್ಯಾಕೇಜ್ ಯೋಜನೆಯಡಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದ ವೈಯಕ್ತಿಕ ಫಲಾನುಭವಿ, ಪಾಲುದಾರಿಕೆ ಸಂಸ್ಥೆ, ಕಂಪನಿ, ಜವಳಿ ಸಹಕಾರಿ ಸಂಘ, ಸಂಸ್ಥೆಗಳು ಸ್ಥಾಪಿಸುವ ಕ್ಷೇತ್ರಕ್ಕೆ ಸಂಬಂಧಿಸಿದ ಸಣ್ಣ ಮತ್ತು ಅತಿಸಣ್ಣ (ಎಸ್‌ಎಮ್‌ಇ) ಸಂಸ್ಥೆಗಳಿಗೆ ಬಂಡವಾಳ ಹೂಡಿಕೆ ಸಹಾಯಧನ ಹಾಗೂ ಶೇ.15ರಷ್ಟು ಬಡ್ಡಿ ಸಹಾಯಧನ ಒದಗಿಸಲಾಗುವುದು.

ವಾರ್ತಾ ಭಾರತಿ 20 Dec 2025 12:17 pm

Gold Price: ಭಾರೀ ಕುಸಿತ ಕಂಡ ಬಂಗಾರ, ಇಂದಿನ ಚಿನ್ನದ ದರ ಎಷ್ಟಿದೆ?

ಈ ವಾರದಲ್ಲಿ ನಿರಂತರವಾಗಿ ಏರಿಕೆ ಕಂಡಿದ್ದ ಚಿನ್ನದ ದರಗಳು ಶನಿವಾರ ದಿಢೀರ್‌ ಕುಸಿತ ಕಂಡಿತ್ತು. 24 ಕ್ಯಾರೆಟ್ ಚಿನ್ನದ ಮೇಲೆ ಗ್ರಾಂ.ಗೆ 66 ರೂಪಾಯಿವರೆಗೆ ದರ ಕಡಿಮೆಯಾಗಿತ್ತು. ಇಂದು ಕೂಡ ದರಗಳು ಸ್ಥಿರವಾಗಿವೆ. ಬೆಂಗಳೂರಿನಲ್ಲಿ ಈಗ 24 ಕ್ಯಾರೆಟ್, 22 ಕ್ಯಾರೆಟ್, 18 ಕ್ಯಾರೆಟ್ ಚಿನ್ನದ ದರ ಹಾಗೂ ಬೆಳ್ಳಿಯ ದರಗಳ ಮಾಹಿತಿ ಇಲ್ಲಿ ತಿಳಿಯಿರಿ. ಹೂಡಿಕೆ

ಒನ್ ಇ೦ಡಿಯ 20 Dec 2025 12:16 pm

Government Employees: ಸರ್ಕಾರಿ ನೌಕರರು ಕರ್ತವ್ಯದ ವೇಳೆ ಈ ನಿಯಮಗಳ ಪಾಲನೆ ಕಡ್ಡಾಯ: ಕರ್ನಾಟಕ ಸರ್ಕಾರ ಆದೇಶ

ಬೆಂಗಳೂರು: ಕರ್ನಾಟಕ ಸರ್ಕಾರಿ ನೌಕರರು ಕರ್ತವ್ಯದ ವೇಳೆ ಸಮಯಪಾಲನೆ, ಐಡಿ ಕಾರ್ಡ್ ಧರಿಸುವುದು, ಪ್ರಾಮಾಣಿಕತೆ ಮತ್ತು ನಿಗದಿತ ನಿಯಮಗಳ ಪಾಲನೆ ಕಡ್ಡಾಯವಾಗಿದೆ. ಮುಖ್ಯವಾಗಿ ನಿಗದಿತ ಸಮಯಕ್ಕೆ ಹಾಜರಾಗುವುದು, ವಿಳಂಬಕ್ಕೆ ಕಾರಣ ನೀಡುವುದು, ಮತ್ತು ಕರ್ತವ್ಯದ ಅವಧಿಯಲ್ಲಿ ಗುರುತಿನ ಚೀಟಿ ಧರಿಸುವುದು ಅತ್ಯಗತ್ಯ, ಇದೀಗ ಕರ್ನಾಟಕ ಸರ್ಕಾರವಿ ಸರ್ಕಾರಿ ನೌಕರರಿಗೆ ಕರ್ತವ್ಯದ ವೇಳೆ ಕಡ್ಡಾಯವಾಗಿ ಕೆಲ ನಿಯಮಗಳನ್ನೂ ಪಾಲಿಸಬೇಕು

ಒನ್ ಇ೦ಡಿಯ 20 Dec 2025 12:14 pm

‘ಕೊಪ್ಪಳಕ್ಕೆ ಕುಡಿಯುವ ನೀರು ಒದಗಿಸುವುದು ನನ್ನ ಕನಸು’ : ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ

‘ಉದ್ಯೋಗಾವಕಾಶ ಸೃಷ್ಟಿಸಲು ಕ್ರಮ’ ಉದ್ಯೋಗಾವಕಾಶಗಳನ್ನು ಜಿಲ್ಲಾ ಹಂತದಲ್ಲಿ ಸೃಷ್ಟಿಸಲು ಆಗುವುದಿಲ್ಲ. ರಾಜ್ಯ ಸರಕಾರ ಇಡೀ ರಾಜ್ಯಕ್ಕೆ ಅನ್ವಯಿಸು  ವಂತೆ ಕಾರ್ಯಕ್ರಮಗಳು,ಯೋಜನೆಗಳನ್ನು ರೂಪಿಸ  ಬೇಕಾಗುತ್ತದೆ. ನಮ್ಮ ಭಾಗದಲ್ಲಿ ಕೈಗಾರಿಕೆಗಳು ಬರಬೇಕು.  ಆದರೆ, ಕೈಗಾರಿಕೆಗಳ ಪರ ಹಾಗೂ ವಿರೋಧ ಅಭಿಪ್ರಾಯಗಳು ಇವೆ. ಊರುಗಳ ಸಮೀಪದಲ್ಲಿ ಕೈಗಾರಿಕೆಗಳು ಬೇಡ ಎಂದು ನಾನು ವೈಯಕ್ತಿಕ ಅಭಿಪ್ರಾಯವನ್ನು ತಿಳಿಸಿದ್ದೇನೆ. ಒಳ ಮೀಸಲಾತಿಯ ವಿಚಾರ ವಿಚಾರ ಅಡ್ಡ ಬಂದಿರುವುದರಿಂದ ನೇಮಕಾತಿ ಪ್ರಕ್ರಿಯೆಯಲ್ಲಿ ವಿಳಂಬವಾಗಿದೆ. ಒಳ ಮೀಸಲಾತಿ ವಿಚಾರ ಪ್ರಶ್ನಿಸಿ ಕೆಲವರು ನ್ಯಾಯಾಲಯಕ್ಕೂ ಹೋಗಿದ್ದಾರೆ. ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿ ಈ ಸಮಸ್ಯೆಯನ್ನು ಬಗೆಹರಿಸುವ ವಿಶ್ವಾಸವಿದೆ. ಮುಂದಿನ ದಿನಗಳಲ್ಲಿ ಯುವಕರಿಗೆ ಉದ್ಯೋಗಾವಕಾಶಗಳು ಲಭ್ಯವಾಗಲಿವೆ. ಶಿವರಾಜ ತಂಗಡಗಿಯವರು, ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕೊಪ್ಪಳ ಜಿಲ್ಲೆಯ ಉಸ್ತುವಾರಿ ಸಚಿವರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.ಇವರು ಎರಡೂವರೆ ವರ್ಷಗಳಲ್ಲಿ ಜಿಲ್ಲೆಯಲ್ಲಿ ಕೈಗೊಂಡಿರುವ ಅಭಿವೃದ್ಧಿ ಕಾಮಗಾರಿಗಳು ಹಾಗೂ ಭವಿಷ್ಯದ ಯೋಜನೆಗಳ ಕುರಿತು ‘ವಾರ್ತಾಭಾರತಿ’ ಪತ್ರಿಕೆಗೆ ನೀಡಿರುವ ವಿಶೇಷ ಸಂದರ್ಶನದಲ್ಲಿ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ. ► ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ನಂತರ ಕೊಪ್ಪಳ ಜಿಲ್ಲೆಯಲ್ಲಿ ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳು ಯಾವುವು? ಶಿವರಾಜ್ ತಂಗಡಗಿ : ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಹಿಂದಿನ ಸರಕಾರದ ಅವಧಿಯಲ್ಲಿ ಕೊಪ್ಪಳ ಜಿಲ್ಲೆಯಲ್ಲಿ ಸರಕಾರಿ ವೈದ್ಯಕೀಯ ಕಾಲೇಜು, ಎಂಜಿನಿಯರಿಂಗ್ ಕಾಲೇಜು, ವಿದ್ಯಾರ್ಥಿನಿಲಯ ಸ್ಥಾಪನೆ ಮಾಡಲಾಯಿತು. ನನ್ನ ಮತ ಕ್ಷೇತ್ರದಲ್ಲಿ ತೋಟಗಾರಿಕಾ ಪಾರ್ಕ್ ನಿರ್ಮಾಣ ಮಾಡಲಾಗಿದೆ. ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ(ಕೆಕೆಆರ್‌ಡಿಬಿ) ಅನುದಾನವನ್ನು ಅತೀ ಹೆಚ್ಚು ಬಳಕೆ ಮಾಡಿಕೊಂಡು, ನಮ್ಮ ಜಿಲ್ಲೆಯಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ವಿಶೇಷ ಒತ್ತು ನೀಡಿದ್ದೇವೆ. ರೈತರ ಅನುಕೂಲಕ್ಕಾಗಿ ಕೆರೆ ತುಂಬಿಸುವ ಯೋಜನೆ ಹಮ್ಮಿಕೊಂಡು, ಕುಷ್ಟಗಿ, ಯಲಬುರ್ಗಾ ಮತ್ತು ಕನಕಗಿರಿ ತಾಲೂಕುಗಳಲ್ಲಿ ಕೆರೆ ತುಂಬಿಸುವ ಕೆಲಸ ಮಾಡಿದ್ದೇವೆ. ► ಕನಕಗಿರಿ ತಾಲೂಕಿನಲ್ಲಿ ಕ್ರೀಡಾಂಗಣ ನಿರ್ಮಾಣಕ್ಕಾಗಿ ಕೈಗೊಂಡಿರುವ ಕ್ರಮಗಳೇನು? ಶಿವರಾಜ್ ತಂಗಡಗಿ: ಕನಕಗಿರಿ ತಾಲೂಕಿನಲ್ಲಿ ಕ್ರೀಡಾಂಗಣ ನಿರ್ಮಾಣ ಮಾಡಬೇಕು ಎಂಬುದು ನನ್ನ ಕನಸಾಗಿದೆ. ಕ್ರೀಡಾಂಗಣ ನಿರ್ಮಿಸಲು ಮುಂದಿನ ಸಾಲಿನ ಬಜೆಟ್‌ನಲ್ಲಿ ವಿಶೇಷ ಅನುದಾನ ಪಡೆಯಲು ಪ್ರಯತ್ನಿಸಲಾಗುವುದು. ಈ ಕ್ರೀಡಾಂಗಣ ನಿರ್ಮಾಣದಿಂದಾಗಿ ಜಿಲ್ಲೆಯಲ್ಲಿರುವ ಯುವ ಕ್ರೀಡಾ ಪಟುಗಳಿಗೆ ತರಬೇತಿ ಪಡೆಯಲು, ಅಭ್ಯಾಸ ಮಾಡಲು ಅನುಕೂಲವಾಗುತ್ತದೆ. ಕ್ರೀಡಾ ಚಟುವಟಿಕೆಗಳಿಗೆ ನೀಡುವ ಪ್ರೋತ್ಸಾಹವು ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಬುನಾದಿಯಾಗಲಿದೆ. ► ನವಲಿ ಸಮಾನಾಂತರ ಜಲಾಶಯ ನಿರ್ಮಾಣದ ಯೋಜನೆ ಯಾವ ಹಂತದಲ್ಲಿದೆ? ಶಿವರಾಜ್ ತಂಗಡಗಿ : ನವಲಿ ಸಮಾನಾಂತರ ಜಲಾಶಯ ನಿರ್ಮಾಣ ಕುರಿತು ಕೇವಲ ಕರ್ನಾಟಕ ತೀರ್ಮಾನ ಮಾಡುವಂತಹದ್ದು ಅಲ್ಲ.ಇದರಲ್ಲಿ ಕರ್ನಾಟಕ, ಆಂಧ್ರ ಹಾಗೂ ತೆಲಂಗಾಣ ರಾಜ್ಯದ ಸರಕಾರಗಳು ಕೂತು ಪರಸ್ಪರ ಚರ್ಚೆ ಮಾಡಿ ಈ ಯೋಜನೆ ಕುರಿತು ನಿರ್ಧಾರ ಕೈಗೊಳ್ಳಬೇಕಿದೆ. ಆದರೆ, ಆಂಧ್ರ ಹಾಗೂ ತೆಲಂಗಾಣದಿಂದ ನಮಗೆ ಸಮರ್ಪಕ ಸಹಕಾರ ಸಿಗುತ್ತಿಲ್ಲ. ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಈ ಯೋಜನೆ ಕುರಿತು ಗಂಭೀರವಾಗಿದ್ದಾರೆ. ಈ ಜಲಾಶಯದ ನಿರ್ಮಾಣದಿಂದ ಜಿಲ್ಲೆಯ ಕೊನೆಯ ಭಾಗದಲ್ಲಿರುವ ಹಾಗೂ ರಾಯಚೂರು ಭಾಗದ ರೈತರಿಗೆ ಸರಾಗವಾಗಿ ನೀರು ಕೊಡಬಹುದು. ಜತೆಗೆ,ಒಣ ಬೇಸಾಯ ಮಾಡುವಂತಹ ಕನಕಗಿರಿ, ಮಸ್ಕಿ, ತುರುವಿಹಾಳ ಸೇರಿದಂತೆ ಇತರಕಡೆ ನೀರಾವರಿ ಸೌಲಭ್ಯ ಕಲ್ಪಿಸಲು ಸಹಕಾರಿಯಾಗಲಿದೆ. ► ಅಂಜನಾದ್ರಿ ಅಭಿವೃದ್ಧಿಗೆ ಕೈಗೊಂಡಿರುವ ಕ್ರಮಗಳೇನು? ಶಿವರಾಜ್ ತಂಗಡಗಿ : ನಮ್ಮ ಸರಕಾರ ಅಧಿಕಾರಕ್ಕೆ ಬಂದನಂತರ 100ಕೋಟಿ ರೂ.ಗಳನ್ನು ಅಂಜನಾದ್ರಿ ಅಭಿವೃದ್ಧಿಗೆ ನೀಡಲಾಗಿದೆ. ಹಿಂದಿನ ಬಿಜೆಪಿ ಸರಕಾರದ ಅವಧಿಯಲ್ಲಿ ಘೋಷಿಸಿದ್ದ ಹಣ ಬಂದಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಮ್ಮ ಸರಕಾರ ಅಧಿಕಾರಕ್ಕೆ ಬಂದ ನಂತರ 100 ಕೋಟಿ ರೂ.ಗಳನ್ನು ಒದಗಿಸಿ, ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದೆ. ಜತೆಗೆ, ನಮಗೆ ಕಾನೂನಿನ ತೊಡಕು ಎದುರಾಗಿದೆ. ಆ ಭಾಗದಲ್ಲಿ ಅತಿ ಹೆಚ್ಚು ಅರಣ್ಯ ಪ್ರದೇಶ ಇರುವುದರಿಂದ ಸಮಸ್ಯೆಗಳಿವೆ. ಅವುಗಳನ್ನು ಬಗೆಹರಿಸಿ ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಳ್ಳಲಾಗುವುದು. ಅಲ್ಲಿ ಭೇಟಿ ನೀಡುವ ಪ್ರವಾಸಿಗರು, ಭಕ್ತಾದ್ಧಿಗಳಿಗಾಗಿ ಡಾರ್ಮಿಟರಿ, ವಸತಿ, ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ► ತುಂಗಭದ್ರಾ ಜಲಾಶಯದ ಕ್ರಸ್ಟ್ ಗೇಟ್‌ಗಳನ್ನು ಬದಲಾಯಿಸುವ ಕಾರ್ಯ ಯಾವ ಹಂತದಲ್ಲಿದೆ? ಶಿವರಾಜ್ ತಂಗಡಗಿ : ಸೋಮವಾರದಿಂದ ಜಲಾಶಯದ ಎಲ್ಲ 33 ಕ್ರಸ್ಟ್ ಗೇಟ್‌ಗಳನ್ನು ಬದಲಾಯಿಸುವ ಕೆಲಸ ಆರಂಭಿಸಲಾಗಿದೆ. ಮೇ ಅಂತ್ಯದ ವೇಳೆಗೆ ಎಲ್ಲ ಕ್ರಸ್ಟ್ ಗೇಟ್‌ಗಳನ್ನು ಬದಲಾಯಿಸಲು ಯೋಜನೆ ರೂಪಿಸಿದ್ದೇವೆ. ಟೆಂಡರ್‌ನಲ್ಲಿ ಅರ್ಹತೆ ಪಡೆದಿರುವ ಗುಜರಾತ್ ಮೂಲದ ಕಂಪೆನಿಗೆ ಕಾಮಗಾರಿ ನಡೆಸಲು ಕಾರ್ಯಾದೇಶ ನೀಡಲಾಗಿದೆ. ಇದರ ಜತೆಗೆ ಕೆಲ ಕಾಲುವೆಗಳ ದುರಸ್ತಿ ಹಾಗೂ ಅಣೆಕಟ್ಟೆಯ ಇನ್ನಿತರ ಸಣ್ಣಪುಟ್ಟ ದುರಸ್ತಿಗಳನ್ನು ಇದೇ ಸಂದರ್ಭದಲ್ಲಿ ಪೂರ್ಣಗೊಳಿಸಲಾಗುವುದು. ► ರೈತರು ಎರಡನೆ ಬೆಳೆಗೆ ನೀರು ಬೇಕೆಂದು ಬೇಡಿಕೆ ಇಟ್ಟಿದ್ದಾರೆ. ಕ್ರಸ್ಟ್ ಗೇಟ್‌ಗಳನ್ನು ಬದಲಾಯಿಸುತ್ತಿರುವುದರಿಂದ ನೀರು ನೀಡಲು ಸಾಧ್ಯವೇ? ಶಿವರಾಜ್ ತಂಗಡಗಿ : ಎರಡನೆ ಬೆಳೆಗೆ ನೀರು ಬೇಕು ಎಂದು ನಮ್ಮ ಭಾಗದ ರೈತರು ಬೇಡಿಕೆ ಇಟ್ಟಿಲ್ಲ. ಬಿಜೆಪಿಯವರು ಇಟ್ಟಿರುವ ಬೇಡಿಕೆ ಇದ್ದಾಗಿದೆ. ರೈತರು ಮೊದಲು ಕ್ರಸ್ಟ್ ಗೇಟ್‌ಗಳನ್ನು ಬದಲಾಯಿಸಿ, ನಮಗೆ ಜಲಾಶಯ ಮುಖ್ಯ, ಎರಡನೆ ಬೆಳೆ ಇಲ್ಲದಿದ್ದರೂ ಪರವಾಗಿಲ್ಲ ನಮಗೆ ಕ್ರಸ್ಟ್ ಗೇಟ್ ಮುಖ್ಯ ಎಂದು ಹೇಳಿದ್ದಾರೆ. ಆದರೆ, ಬಿಜೆಪಿಯವರು ಈ ವಿಚಾರದಲ್ಲಿ ಅನಗತ್ಯವಾಗಿ ರಾಜಕೀಯ ಮಾಡುತ್ತಿದ್ದಾರೆ. ಜಲಾಶಯದಲ್ಲಿ ಪ್ರಸ್ತುತ  75 ಟಿಎಂಸಿ ನೀರು ಲಭ್ಯವಿದೆ. ನಿಂತ ಬೆಳೆಗಳಿಗೆ ಯಾವುದೇ ತೊಂದರೆಯಾಗದಂತೆ ಜ.10ರವರೆಗೆ ನೀರು ಹರಿಸಲಾಗುವುದು. ಅಲ್ಲದೆ, ಬೇಸಿಗೆ ಸಮಯದಲ್ಲಿ ಕುಡಿಯುವ ನೀರಿಗಾಗಿ ಕೆರೆಕಟ್ಟೆ ತುಂಬಿಸುವುದು ಹಾಗೂ ಇತರ ಉಪಯೋಗಕ್ಕಾಗಿ ನೀರನ್ನು ಸಂಗ್ರಹಿಸಿಟ್ಟುಕೊಳ್ಳಲಾಗುವುದು. ಸರಕಾರಕ್ಕೆ ರೈತರ ಹಿತ ಕಾಪಾಡುವುದರ ಜೊತೆಗೆ ಅಣೆಕಟ್ಟೆಯನ್ನು ರಕ್ಷಣೆ ಮಾಡುವುದು ಅಷ್ಟೇ ಮುಖ್ಯ. ► ಆನೆಗುಂದಿ ಮತ್ತು ಕನಕಗಿರಿ ಉತ್ಸವಗಳು ಈ ಬಾರಿ ಹೇಗೆ ಆಚರಣೆ ಮಾಡಲಾಗುವುದು? ಶಿವರಾಜ್ ತಂಗಡಗಿ :ಆನೆಗುಂದಿ ಮತ್ತು ಕನಕಗಿರಿ ಉತ್ಸವ ಗಳನ್ನು ಕಳೆದ ವರ್ಷವೆ ಮಾಡಬೇಕಿತ್ತು. ವಿರೋಧ ವ್ಯಕ್ತವಾಗಿದ್ದರಿಂದ ಆಚರಣೆ ಮಾಡಲು ಆಗಿರಲಿಲ್ಲ. ಈ ಬಾರಿ ಎಲ್ಲರೊಂದಿಗೆ ಚರ್ಚಿಸಿ ಆನೆಗುಂದಿ ಹಾಗೂ ಕನಕಗಿರಿ ಉತ್ಸವ ಗಳನ್ನು ಆಚರಿಸುವ ಸಂಬಂಧ ತೀರ್ಮಾನ ಕೈಗೊಳ್ಳುತ್ತೇವೆ. ► ಕೊಪ್ಪಳ ಜಿಲ್ಲೆಯಲ್ಲಿ ರಾಜ್ಯ ಸರಕಾರದ ಪಂಚ ಗ್ಯಾರಂಟಿಗಳಿಂದ ಆಗಿರುವ ಬದಲಾವಣೆಗಳು ಏನು? ಶಿವರಾಜ್ ತಂಗಡಗಿ : ರಾಜ್ಯ ಸರಕಾರದ ಪಂಚ ಗ್ಯಾರಂಟಿಗಳಿಂದ ಕೇವಲ ಕೊಪ್ಪಳ ಜಿಲ್ಲೆಯಷ್ಟೇ ಅಲ್ಲ, ಇಡೀ ರಾಜ್ಯದಲ್ಲಿ ಬದಲಾವಣೆಗಳನ್ನು ಕಾಣಬಹುದು. ಬಡವರು ನೆಮ್ಮದಿಯಿಂದ ಬದುಕುತ್ತಿದ್ದಾರೆ. ಮೂರು ಹೊತ್ತು ಊಟ ಮಾಡುತ್ತಿದ್ದಾರೆ. ಬಡವರು ಜೀವನದಲ್ಲಿ ನೆಮ್ಮದಿಯ ವಾತಾವರಣ ನಿರ್ಮಾಣವಾಗಿರುವುದರನ್ನು ನಾವು ಕಾಣಬಹದು. ಮಹಿಳೆಯರಲ್ಲಿ ಆರ್ಥಿಕ ಸ್ವಾವಲಂಬನೆ ಬಂದಿದೆ. ► ಕೊಪ್ಪಳ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ನಿಮ್ಮ ಕನಸಿನ ಯೋಜನೆಗಳು ಏನು? ಶಿವರಾಜ್ ತಂಗಡಗಿ : ಜಿಲ್ಲೆಯಲ್ಲಿರುವ ಕೆರೆಗಳನ್ನು ತುಂಬಿಸುವುದು ನನ್ನ ಕನಸು. ಸಮರ್ಪಕವಾಗಿ ಕುಡಿಯುವ ನೀರು ಒದಗಿಸಬೇಕು. ಗ್ರಾಮೀಣ ಪ್ರದೇಶದಲ್ಲಿ ಶೇ.80ರಷ್ಟು ನಾವು ತಲುಪಿದ್ದೇವೆ. ನಗರ ಪ್ರದೇಶಕ್ಕೆ ಕುಡಿಯುವ ನೀರಿನ ವ್ಯವಸ್ಥೆ ಆಗಬೇಕು. ನೇರವಾಗಿ ಜಲಾಶಯದಿಂದ ನೀರು ತಂದು ಭಾಗ್ಯ ನಗರ, ಯಲಬುರ್ಗಾ, ಕನಕಗಿರಿ, ಕಾರಟಗಿ ಪ್ರದೇಶಗಳಿಗೆ ಕುಡಿಯುವ ನೀರು ಒದಗಿಸಬೇಕೆಂಬುದು ನನ್ನ ಕನಸು. ಆ ನಿಟ್ಟಿನಲ್ಲಿ ಪ್ರಯತ್ನ ಮಾಡುತ್ತಿದ್ದೇನೆ.

ವಾರ್ತಾ ಭಾರತಿ 20 Dec 2025 12:05 pm

ಬೆಂಗಳೂರು | ಹಿರಿಯ ಪತ್ರಕರ್ತ ದೊಡ್ಡಬೊಮಯ್ಯ ನಿಧನ

ಬೆಂಗಳೂರು, ಡಿ.20: ಬೆಳಗಾವಿ ಅಧಿವೇಶನ ಮುಗಿಸಿ ಬೆಂಗಳೂರಿಗೆ ಹಿಂತಿರುಗಿ ಬರುವಾಗ ಹೃದಯಾಘಾತದಿಂದ ಹಿರಿಯ ಪತ್ರಕರ್ತ ಹಾಗೂ ಕರ್ನಾಟಕ ಪತ್ರಕರ್ತರ ಸಹಕಾರ ಸಂಘದ ಉಪಾಧ್ಯಕ್ಷ ದೊಡ್ಡ ಬೊಮಯ್ಯ ಅವರು ಇಂದು ಬೆಳಗ್ಗೆ ನಿಧನರಾಗಿದ್ದಾರೆ. ಬೆಳಗಾವಿಯಲ್ಲಿ ಚಳಿಗಾಲ ಅಧಿವೇಶನದ ಕಾರ್ಯಕಲಾಪಗಳ ವರದಿಗಾಗಿ ತೆರಳಿದ್ದ ಅವರು ಇಂದು ಬೆಳಗ್ಗೆ ಬೆಂಗಳೂರಿಗೆ ವಾಪಸ್ಸಾಗಿದರು. ಕೆಎಸ್‌‍ಆರ್‌ಟಿಸಿ ಬಸ್‌‍ ನಿಂದ ಇಳಿದು, ಬಾಗಲೂರಿನಲ್ಲಿರುವ ತಮ್ಮ ಮನೆ ತಲುಪಲು ಬಿಎಂಟಿಸಿ ಬಸ್‌‍ ಹತ್ತಿದ್ದ ಸಂದರ್ಭದಲ್ಲಿ ತೀವ್ರ ಹೃದಯಾಘಾತವಾಗಿದೆ. ಸಹಪ್ರಯಾಣಿಕರು ಉಪಚರಿಸಿದ ಹೊರತಾಗಿಯೂ ಬಸ್‌‍ ನಲ್ಲಿಯೇ ನಿಧನ ಹೊಂದಿದ್ದಾರೆ. ಮೂಲತಃ ತುಮಕೂರು ಜಿಲ್ಲೆಯ ಪಾವಗಡ ತಾಲ್ಲೂಕಿನ ರೊಪ್ಪ ಗ್ರಾಮದ ದೊಡ್ಡಯ್ಯ ಮತ್ತು ಚಿಕ್ಕಮ ದಂಪತಿಯ ಪುತ್ರರಾದ ದೊಡ್ಡಬೊಮಯ್ಯ ಅವರು ಈ ಮೊದಲು ಸಂಜೆವಾಣಿ ಮತ್ತು ಪ್ರಸ್ತುತ ಇಂದು ಸಂಜೆ ಪತ್ರಿಕೆಯಲ್ಲಿ ವರದಿಗಾರರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಆಕಾಶವಾಣಿ ಮತ್ತು ದೂರದರ್ಶನದಲ್ಲಿ ಅರೆಕಾಲಿಕ ಸಹಾಯಕ ಸುದ್ದಿ ಸಂಪಾದಕರಾಗಿ ಕೆಲಸ ಮಾಡಿದ್ದರು. ಸುಮಾರು 30 ವರ್ಷ ಪತ್ರಿಕೋದ್ಯಮದಲ್ಲಿ ಸೇವೆ ಸಲ್ಲಿಸಿದ್ದ ಅವರು, ಅಪಾರವಾದ ಆತ್ಮೀಯ ಬಳಗವನ್ನು ಗಳಿಸಿಕೊಂಡಿದ್ದರು. ಕರ್ನಾಟಕ ಪತ್ರಕರ್ತರ ಸಹಕಾರ ಸಂಘದ ಉಪಾಧ್ಯಕ್ಷರಾಗಿದ್ದರು. ಪ್ರೆಸ್‌‍ ಕ್ಲಬ್‌ ಪದಾಧಿಕಾರಿಯಾಗಿಯೂ ಸೇವೆ ಸಲ್ಲಿಸಿದ್ದರು. ಅವರ ನಿಧನಕ್ಕೆ ಕರ್ನಾಟಕ ಪತ್ರಕರ್ತರ ಸಹಕಾರ ಸಂಘದ ಅಧ್ಯಕ್ಷ ರಮೇಶ್‌ಪಾಳ್ಯ, ಸಂಘದ ಪದಾಧಿಕಾರಿಗಳು, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು, ಪ್ರೆಸ್‌‍ಕ್ಲಬ್‌ ಅಧ್ಯಕ್ಷ ಶ್ರೀಧರ್‌, ಪ್ರಧಾನ ಕಾರ್ಯದರ್ಶಿ ಶಿವಕುಮಾರ್‌ ಬೆಳ್ಳಿತಟ್ಟೆ, ವರದಿಗಾರರ ಕೂಟದ ಅಧ್ಯಕ್ಷ ಆರ್‌.ಟಿ.ವಿಠಲ ಮೂರ್ತಿ ಮತ್ತಿತರ ಹಿರಿಯ ಪತ್ರಕರ್ತರು ಸಂತಾಪ ವ್ಯಕ್ತಪಡಿಸಿದ್ದಾರೆ.

ವಾರ್ತಾ ಭಾರತಿ 20 Dec 2025 12:01 pm

ವಿಶೇಷ ಸಂಪಾದಕೀಯ | ಮೂಕನಾಯಕರ ಧ್ವನಿ ಮೊಳಗುತಿದೆ ಕಲ್ಯಾಣ ಭೂಮಿಯಿಂದ

ಇಂದಿನ ದಿನವನ್ನು ಐತಿಹಾಸಿಕವೆಂದು ಪರಿಗಣಿಸಿ ಸಂಭ್ರಮಿಸುವುದಕ್ಕೆ ಕಾರಣಗಳ ಸರಮಾಲೆಯೇ ಇದೆ. ಜನಪ್ರಿಯ ಕನ್ನಡ ದೈನಿಕ ವಾರ್ತಾಭಾರತಿಯ ನಾಲ್ಕನೆಯ ಮುದ್ರಣ ಆವೃತ್ತಿಯು ಇಂದು ಬಿಡುಗಡೆಯಾಗುತ್ತಿದೆ. ಇದು ಕಲಬುರಗಿ, ಬೀದರ್, ಯಾದಗಿರಿ, ರಾಯಚೂರು, ಕೊಪ್ಪಳ, ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳನ್ನೊಳಗೊಂಡ ಸುಂದರ, ಐತಿಹಾಸಿಕ ಕಲ್ಯಾಣ ಕರ್ನಾಟಕದಲ್ಲಿ, ‘ಕಲ್ಯಾಣಕರ್ನಾಟಕದ ಆವೃತ್ತಿ’ಯಾಗಿ ಹೊರಬರುತ್ತಿದೆ ಎಂಬುದು ಇಂದಿನ ದಿನದ ಹಲವು ಅನನ್ಯ ವಿಶೇಷತೆಗಳ ಪೈಕಿ ಒಂದು. 21ನೇ ಶತಮಾನದ ಉದಯದೊಂದಿಗೆ ಮುದ್ರಣ ಮಾಧ್ಯಮದ ಅಸ್ತಮಾನವಾಗಿ ಬಿಡುತ್ತದೆಂಬ ನಿರಾಶಾದಾಯಕ ವದಂತಿಗಳ ದಟ್ಟ ಕಾರ್ಮೋಡ, ಕಳೆದ ಶತಮಾನದ ಕೊನೆಯಲ್ಲಿ ಮೂಡಿತ್ತು. ಅಂತಹ ನಿರಾಶಾದಾಯಕ ವದಂತಿಗಳ ಹೊರತಾಗಿಯೂ 21ನೇ ಶತಮಾನದಲ್ಲೇ (2003ರಲ್ಲಿ) ಜನಿಸಿ, ಎಲ್ಲ ಭವಿಷ್ಯವಾಣಿಗಳನ್ನು ಸುಳ್ಳಾಗಿಸಿ, ನವಯುಗದ ಕೊಡುಗೆಗಳನ್ನೆಲ್ಲಾ ಬಳಸಿಕೊಂಡು, ಸತತವಾಗಿ ಬೆಳೆದ ಮಾಧ್ಯಮ ಈ ನಿಮ್ಮ ‘ವಾರ್ತಾಭಾರತಿ’. ಕಳೆದ 22 ವರ್ಷಗಳಲ್ಲಿ ಯಾವುದೇ ಜಾತಿ, ಧರ್ಮ, ಸರಕಾರ, ಪಕ್ಷ, ಪಂಗಡ ಅಥವಾ ಉದ್ಯಮಿಯ ಕೃಪೆಯನ್ನು ಅವಲಂಬಿಸದೆ, ಆಶ್ರಯಿಸದೆ, ಯಾರದೇ ಮಡಿಲಲ್ಲಿ ವಿಶ್ರಮಿಸದೆ, ಕೇವಲ ಜನಬೆಂಬಲದಿಂದ, ಅದರಲ್ಲೂ ವಿಶೇಷವಾಗಿ ವಂಚಿತ, ದಮನಿತ, ಉಪೇಕ್ಷಿತ ಜನವರ್ಗಗಳ ಬೆಂಬಲದಿಂದ ಬೆಳೆದ ಮಾಧ್ಯಮ ಇದು. ಇಂತಹ ಮಾಧ್ಯಮವು ಇದೀಗ 2025ರಲ್ಲಿ, ಅಂದರೆ ಅದೇ 21ನೇ ಶತಮಾನದ 25ನೇ ವರ್ಷದಲ್ಲಿ ತನ್ನ ನಾಲ್ಕನೆಯ ಆವೃತ್ತಿಯನ್ನು ಹೊರತರುತ್ತಿದೆ ಎಂಬುದು ನಿಷ್ಪಕ್ಷ ಮಾಧ್ಯಮದ ಕಿಮ್ಮತ್ತು ಬಲ್ಲವರೆಲ್ಲರಿಗೆ ಅಪಾರ ಸಂಭ್ರಮ ತಂದಿರುವ ಬೆಳವಣಿಗೆಯಾಗಿದೆ. ವಸ್ತುತಃ ಕಲಬುರಗಿಯಲ್ಲಿ ವಾರ್ತಾಭಾರತಿಯ ಹೊಸ ಆವೃತ್ತಿಯ ಆಗಮನವು ಕನ್ನಡ ಪತ್ರಿಕಾ ಮಾಧ್ಯಮದ ಅತಂತ್ರ ಭವಿಷ್ಯದ ಬಗ್ಗೆ ಚಿಂತಿತರಾಗಿದ್ದ ಅನೇಕರಿಗೆ ನೆಮ್ಮದಿ ನೀಡಿರುವ ಒಂದು ಗಣ್ಯ ಮುನ್ನಡೆಯಾಗಿದೆ. ವಾರ್ತಾಭಾರತಿಯನ್ನು ಕೇವಲ ಇನ್ನೊಂದು ಪತ್ರಿಕೆಯಾಗಿ ಕಾಣದೆ ಅದನ್ನು ಜನಧ್ವನಿಯ ಸಾರಥಿಯಾಗಿ, ಕಾರ್ಮಿಕರು, ರೈತರು, ಕೃಷಿಕರು, ಸಣ್ಣ ವ್ಯಾಪಾರಿಗಳು, ಬಳಕೆದಾರರು ಮುಂತಾದವರ ಪ್ರತಿನಿಧಿಯಾಗಿ ಪರಿಗಣಿಸುವ ಅಸಂಖ್ಯ ಕನ್ನಡಿಗರು ಕಲ್ಯಾಣಕರ್ನಾಟಕದಲ್ಲಿದ್ದಾರೆ. ತಮ್ಮ ನೆಲದಲ್ಲಿ ವಾರ್ತಾಭಾರತಿ ಅರಳುವುದನ್ನು ಕಾಣಲು ಬಹುಕಾಲದಿಂದ ಕಾದಿದ್ದ ಅವರ ಕಾತರ ಇಂದು ಸಾಕ್ಷಾತ್ಕಾರಗೊಳ್ಳುತ್ತಿದೆ. ಹಾಗೆಯೇ ಇದು, ವಾರ್ತಾಭಾರತಿಯನ್ನು ದಲಿತರು, ಶೋಷಿತರು, ಬಡವರು ಮತ್ತು ದುರ್ಬಲರಲ್ಲಿ ಅವರ ಹಕ್ಕುಗಳ ಬಗ್ಗೆ, ಸಾಮಾಜಿಕ ಹಾಗೂ ಆರ್ಥಿಕ ನ್ಯಾಯದ ಬಗ್ಗೆ ಮತ್ತು ಅವರ ಮುಂದಿರುವ ನೈಜ ಸವಾಲುಗಳ ಬಗ್ಗೆ ಜಾಗೃತಿ ಮೂಡಿಸುವ ಆಂದೋಲನವಾಗಿ ಕಾಣುವ ಈ ಭೂಭಾಗದ ಕನ್ನಡಿಗರಿಗೆ ತೃಪ್ತಿ ತಂದ ಬೆಳವಣಿಗೆಯಾಗಿದೆ. ಪತ್ರಿಕೆ ಎಂಬುದು, ಪ್ರತಿದಿನ ಹಾಗೂ ನಮ್ಮ ಯುಗದಲ್ಲಿ ಅನುಕ್ಷಣ, ಸಮಾಜವನ್ನು ಘಟನೆ ಮತ್ತು ಬೆಳವಣಿಗೆಗಳ ಜಗತ್ತಿಗೆ ಮಾತ್ರವಲ್ಲ ವಿಚಾರ, ಸಾಹಿತ್ಯ, ವಿಮರ್ಶೆ ಮತ್ತು ವಿಶ್ಲೇಷಣೆಗಳ ಜಗತ್ತಿಗೆ ಕೂಡಾ ಕರೆದೊಯ್ಯುವ ವಾಹನವಾಗಿರುತ್ತದೆ. ಕನ್ನಡ ಮಾಧ್ಯಮರಂಗದಲ್ಲಿ ವಾರ್ತಾಭಾರತಿಯ ಸಂಪಾದಕೀಯ ಹಾಗೂ ಅದರ ಸಂಪನ್ನ ವೈಚಾರಿಕ ಪುಟಗಳಿಗೆ ತನ್ನದೇ ಆದ ವಿಶೇಷ ಗೌರವ ಹಾಗೂ ಮಾನ್ಯತೆ ಇದೆ. ಸುದ್ದಿಗಳಲ್ಲಿ ಯಾವುದಕ್ಕೆ ಎಲ್ಲಿ ಎಷ್ಟು ಸ್ಥಾನ ನೀಡಬೇಕೆಂಬ ವಿಷಯದಲ್ಲಿ ವಾರ್ತಾಭಾರತಿಯು ಅನುಸರಿಸುತ್ತಾ ಬಂದಿರುವ ಪ್ರಬುದ್ಧ ಜನಪರ ಧೋರಣೆಗೆ ವ್ಯಾಪಕ ಮನ್ನಣೆ ಪ್ರಾಪ್ತವಾಗಿದೆ. ಇದು, ಯಾವ ಅಥವಾ ಯಾರ ಪಕ್ಷ ಅಧಿಕಾರದಲ್ಲಿದೆ ಎಂಬುದನ್ನು ಲೆಕ್ಕಿಸದೆ, ಅಧಿಕಾರಸ್ಥರ ಪ್ರಸನ್ನತೆಯನ್ನಾಗಲಿ ಪುರಸ್ಕಾರಗಳನ್ನಾಗಲಿ ನಿರೀಕ್ಷಿಸದೆ ಸದಾ ಪರಿಣಾಮಕಾರಿ ಪ್ರತಿಪಕ್ಷವಾಗಿ ಕಾರ್ಯನಿರ್ವಹಿಸುತ್ತಾ ಬಂದಿರುವ ಮಾಧ್ಯಮವಾಗಿದೆ. ಅಧಿಕಾರಸ್ಥರು ಮತ್ತು ಪ್ರಬಲ ಪಕ್ಷ, ಪಂಥಗಳು ಕೆಂಗಣ್ಣಿನಿಂದ ನೋಡುವ ಹಲವು ಪ್ರತಿಭಾವಂತ, ಸಾಹಸಿ ಸಾಹಿತಿಗಳ, ಬರಹಗಾರರ, ದೈತ್ಯರ ದಿಟ್ಟ, ಮುಕ್ತ ವಿಚಾರಗಳು ಮತ್ತು ಕಟು ವಿಮರ್ಶೆಗಳು ವಾರ್ತಾಭಾರತಿಯಲ್ಲಿ ನಿತ್ಯ ಪ್ರಕಟವಾಗುತ್ತಿರುತ್ತವೆ. ಜನಸಾಮಾನ್ಯರನ್ನು ಗೊಂದಲಕ್ಕೆ ಕೆಡವಿರುವ ವಿಷಯಗಳಲ್ಲಿ ಅವರಲ್ಲಿ ಸ್ಪಷ್ಟತೆ ಮೂಡಿಸುವ ಮತ್ತು ಅವರ ಹಿತ ಯಾವುದರಲ್ಲಿದೆ ಎಂದು ಮಾರ್ಗದರ್ಶನ ಮಾಡುವ ಬರಹಗಳು ‘ವಿಚಾರಭಾರತಿ’ ಪುಟಗಳಲ್ಲಿ ನಿತ್ಯ ಮೆರೆಯುತ್ತವೆ. ವಿವಿಧ ವಿಷಯಗಳಲ್ಲಿ ಅನೇಕ ಓದುಗರು ‘ವಿಚಾರಭಾರತಿ’ ಯಿಂದ ಮಾರ್ಗದರ್ಶನವನ್ನು ನಿರೀಕ್ಷಿಸುತ್ತಾರೆ. ಸಾಹಿತ್ಯ, ಸಂಸ್ಕೃತಿ, ಇತಿಹಾಸ, ಕಲೆ, ಜಾನಪದ, ಗ್ರಾಮೀಣ ಬದುಕು, ಯಾರೂ ಕೇಳರಿಯದ ಪುಟ್ಟ ಬುಡಕಟ್ಟುಗಳ ವ್ಯಾಕುಲಗಳು, ನಾಡಿಗಿನ್ನೂ ಪರಿಚಿತವಾಗಿಲ್ಲದ ಕಸುಬುಗಳು, ಕೌಶಲ್ಯಗಳು, ವಿವಿಧ ಕ್ಷೇತ್ರಗಳಲ್ಲಿ ನಡೆದಿರುವ ನವೀನ ಪ್ರಯೋಗಗಳು, ಕ್ರಾಂತಿಕಾರಿ ಸುಧಾರಣೆಗಳು.... ಹೀಗೆ ಅನೇಕಾರು ವಿಷಯಗಳ ಕುರಿತಾದ ಚರ್ಚೆ, ಸಂವಾದ ಮತ್ತು ಸಂಶೋಧನೆಗಳು ವಾರ್ತಾಭಾರತಿ ವೈಚಾರಿಕ ಪುಟಗಳ ಮೂಲಕ ಸಮಾಜದಲ್ಲಿ ಚರ್ಚೆಗೆ ಬರುತ್ತವೆ. ಸಾಂವಿಧಾನಿಕ ಅಧಿಕಾರಗಳು, ಮಾನವೀಯ ಹಕ್ಕು ಮತ್ತು ಸ್ವಾತಂತ್ರ್ಯಗಳು, ಹಸಿದವರು, ದಾರಿದ್ರ್ಯ ಪೀಡಿತರು, ನಿರಾಶ್ರಿತರು, ನಿರ್ವಸಿತರು, ಮೂಲನಿವಾಸಿಗಳು, ನಿರುದ್ಯೋಗಿಗಳು, ಅತಿ ದುಬಾರಿಯಾದ ಕಾರಣಕ್ಕೆ ಶಿಕ್ಷಣ ಮತ್ತು ಆರೋಗ್ಯದಂತಹ ಮೂಲಭೂತ ಸವಲತ್ತುಗಳಿಂದ ವಂಚಿತರಾದವರು, ಕುಬೇರರ ಖಜಾನೆ ತುಂಬಲು ಸರಕಾರ ತಳೆದ ಜನವಿರೋಧಿ ಧೋರಣೆಗಳು, ಆ ಧೋರಣೆಗಳಿಗೆ ಬಲಿಪಶುಗಳಾದ ಕೋಟ್ಯಂತರ ಮುಗ್ಧ ಮೂಕ ಪ್ರಜೆಗಳ ನೋವುಗಳು, ಸಾರ್ವಜನಿಕ ಬೊಕ್ಕಸದಿಂದ ಲಕ್ಷಾಂತರ ಕೋಟಿ ರೂಪಾಯಿಗಳನ್ನು ಕಬಳಿಸಿದ ಬೃಹತ್ ಹಗರಣಗಳು, ದೇಶದ ನೆಲದ ಮೇಲೆ ವಿದೇಶಿ ಆಕ್ರಮಣಗಳು, ಕುಸಿದು ಪಾತಾಳಕ್ಕಿಳಿದ ರೂಪಾಯಿ ಮೌಲ್ಯ, ಗಗನಕ್ಕೇರಿದ ಅವಶ್ಯಕ ವಸ್ತುಗಳ ಬೆಲೆಗಳು, ಉಸಿರುಗಟ್ಟಿಸುವ ಪರಿಸರ ಮಾಲಿನ್ಯ, ಬಯಲಾಗುತ್ತಿರುವ ಕಾಡುಗಳು.... ‘ಕಾರ್ಪೊರೇಟ್ ಜಗತ್ತಿನ ತುತ್ತೂರಿ ಮಾಧ್ಯಮಗಳು’ ಸದಾ ಕತ್ತಲ ಲೋಕದಲ್ಲೇ ಭದ್ರವಾಗಿ ಮುಚ್ಚಿಡುವ ಈ ಎಲ್ಲ ವಿಷಯಗಳು ವಾರ್ತಾಭಾರತಿಯಲ್ಲಿ ಸದಾ ಪ್ರಾಶಸ್ತ್ಯವನ್ನು ಪಡೆಯುತ್ತವೆ. ಈ ಕುರಿತಾದ ಸುದ್ದಿ, ಬೆಳವಣಿಗೆಗಳನ್ನು ವಾರ್ತಾಭಾರತಿಯು ಆದ್ಯತೆಯೊಂದಿಗೆ, ಪ್ರಮುಖವಾಗಿ ಪ್ರಕಟಿಸುವುದು ಮಾತ್ರವಲ್ಲ, ಸಮಾಜದಲ್ಲಿ ಈ ಕುರಿತು ಜಾಗೃತಿ ಬೆಳೆಯುವಂತೆ ಹಾಗೂ ಇವೆಲ್ಲಾ ಸಾರ್ವಜನಿಕ ಸ್ತರದಲ್ಲಿ ಚರ್ಚಾವಿಷಯಗಳಾಗುವಂತೆ ನೋಡಿಕೊಳ್ಳುತ್ತದೆ. ಈ ಮೂಲಕ ವಾರ್ತಾಭಾರತಿಯು ಸಮಾಜದ ಗಮನವನ್ನು ಮಿಥ್ಯ ಚರ್ಚಾ ವಿಷಯಗಳ ಮಾಯಾಜಾಲದಿಂದ ಬಿಡುಗಡೆಗೊಳಿಸಲು ನೆರವಾಗಿದೆ. ಇಂದಿನಿಂದ ವಾರ್ತಾಭಾರತಿಯ ವಿಶೇಷತೆಗಳನ್ನು ಸ್ವತಃ ಪತ್ರಿಕೆಯ ಪುಟಗಳೇ ಕಲ್ಯಾಣಕರ್ನಾಟಕದ ತನ್ನ ಓದುಗರಿಗೆ ನಿತ್ಯ ನೆನಪಿಸಲಿದೆ. ಜೊತೆಗೇ ಪತ್ರಿಕೆಯ ಅಭಿಮಾನಿಗಳು ಯೂಟ್ಯೂಬ್, ಫೇಸ್ ಬುಕ್, ಇನ್‌ಸ್ಟಾಗ್ರಾಮ್, ವಾಟ್ಸ್‌ಆ್ಯಪ್ ಇತ್ಯಾದಿ ಸಾಮಾಜಿಕ ಮಾಧ್ಯಮ ವೇದಿಕೆಗಳ ಮೂಲಕವೂ ವಾರ್ತಾಭಾರತಿಯ ಅನನ್ಯಕೊಡುಗೆಗಳನ್ನು ಪಡೆಯಬಹುದು. -ಅಬ್ದುಸ್ಸಲಾಮ್ ಪುತ್ತಿಗೆ, ಪ್ರಧಾನ ಸಂಪಾದಕ

ವಾರ್ತಾ ಭಾರತಿ 20 Dec 2025 12:00 pm

‘ವಿಜಯಪುರ ಜಿಲ್ಲಾ ಕೈಗಾರಿಕಾ ನಕಾಶೆಯಲ್ಲಿ ಮಿಂಚಲಿದೆ’ : ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ್

ವಿಜಯಪುರ ಜಿಲ್ಲೆ ಮೂಲತಃ ಶುಷ್ಕ ಪ್ರದೇಶ. ಮಳೆ ಕಡಿಮೆ. ಕೆಲ ವರ್ಷಗಳ ಹಿಂದೆ ನಮ್ಮಲ್ಲಿ ಕೇವಲ ಶೇ. 0.17ರಷ್ಟು ಅರಣ್ಯ ಮಾತ್ರವಿದೆ ಅಂತ ಗೊತ್ತಾದಾಗ ನನಗೆ ದಿಗ್ಭ್ರಮೆಯಾಯಿತು. ಆಗ ಹುಟ್ಟಿದ ಆಲೋಚನೆಯೇ ವೃಕ್ಷಥಾನ್ ಉಪಕ್ರಮದ ಪರಿಕಲ್ಪನೆ. ಇದರಿಂದಾಗಿ ಈತನಕ ಒಂದೂವರೆ ಕೋಟಿ ಸಸಿ ನೆಟ್ಟು, ಪೋಷಿಸಿದ್ದೇವೆ. ಇದರಿಂದ ಜಿಲ್ಲೆಯಲ್ಲಿ ಅರಣ್ಯಪ್ರದೇಶ ಶೇ. 2ಕ್ಕೇರಿದೆ. ಈ ಬಗ್ಗೆ ನ್ಯೂಯಾರ್ಕ್ ಟೈಮ್ಸ್ ಪತ್ರಿಕೆ ಕೂಡ ವಿಸ್ತೃತವಾಗಿ ಬರೆದು, ಗಮನ ಸೆಳೆದಿದೆ. ವಾ.ಭಾ.ವಿಶೇಷ ಪ್ರತಿನಿಧಿ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ್, ತಮ್ಮ ಜಿಲ್ಲೆಗೆ ನೀಡಿರುವ ಕೈಗಾರಿಕಾ ಕೊಡುಗೆ, ಕರೆತಂದಿರುವ ಉದ್ಯಮಗಳು, ಬಂಡವಾಳ ಹೂಡಿಕೆ, ಜಿಲ್ಲೆಯ ಅಭಿವೃದ್ಧಿಗೆ ಕಟ್ಟಿಕೊಂಡಿರುವ ಕನಸುಗಳ ಕುರಿತು ‘ವಾರ್ತಾಭಾರತಿ’ ಪತ್ರಿಕೆಗೆ ನೀಡಿರುವ ವಿಶೇಷ ಸಂದರ್ಶನದಲ್ಲಿ ಮುಕ್ತವಾಗಿ ಮಾತನಾಡಿದ್ದಾರೆ. ► ವಿಜಯಪುರ ಜಿಲ್ಲೆಯ ಅಭಿವೃದ್ಧಿಗೆ ನಿಮ್ಮ ಕನಸುಗಳೇನು? ಎಂ.ಬಿ.ಪಾಟೀಲ್ : ಸಮಗ್ರ ಕರ್ನಾಟಕದ ಅಭಿವೃದ್ಧಿಗೆ ಸಂಬಂಧಿಸಿದಂತೆ ‘ವಿಜಯಪುರ ಮಾಡೆಲ್’ ಅಂತ ಒಂದು ಬ್ರ್ಯಾಂಡನ್ನು ಸೃಷ್ಟಿಸಬೇಕು ಎನ್ನುವುದು ನನ್ನ ಹೆಬ್ಬಯಕೆ. ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಕರ್ಯ ಅಭಿವೃದ್ಧಿ ಖಾತೆಗಳ ಜೊತೆಗೆ ಜಿಲ್ಲಾ ಉಸ್ತುವಾರಿ ಸಚಿವನಾಗಿ ಈ ಬಗ್ಗೆ ನನಗೊಂದು ಸ್ಪಷ್ಟ ಕಲ್ಪನೆ ಇದೆ. ವಿಜಯಪುರ ಜಿಲ್ಲೆಯು ಶುಷ್ಕವಾದ ಬರಡು ಪ್ರದೇಶ ಎನ್ನುವುದೆಲ್ಲ ಈಗ ಹಳೆಯ ಮಾತು. ನಮ್ಮಲ್ಲಿರುವಷ್ಟು ನೀರಾವರಿ ಸಮೃದ್ಧಿ ಬೇರೆಲ್ಲೂ ಇಲ್ಲ. ಹಾಗೆಯೇ ಕೈಗಾರಿಕೆಗಳಿಗೆ ಬೇಕಾದ ಭೂಮಿಯೂ ಇದೆ. ನೀರು ಮತ್ತು ಭೂಮಿ ಎರಡೂ ಕೈಗಾರಿಕೆಗಳ ಬೆಳವಣಿಗೆಗೆ ಅತ್ಯಗತ್ಯ. ಇವೆರಡನ್ನೂ ನಾವು ಕೃಷಿಯ ಜೊತೆಯಲ್ಲೇ ಔದ್ಯಮಿಕ ಪ್ರಗತಿಗೂ ಬಳಸಿಕೊಳ್ಳಬೇಕು. ಇಂತಹ ವಿವೇಚನೆಯ ದಾರಿ ನನ್ನದು. ಈ ಮೂಲಕ ವಿಜಯಪುರ ಜಿಲ್ಲೆಯನ್ನು ಉತ್ತರ ಕರ್ನಾಟಕದ 14 ಜಿಲ್ಲೆಗಳ ಪೈಕಿ ಕೈಗಾರಿಕಾ ನಕಾಶೆಯಲ್ಲಿ ಮೇಲ್ಪಂಕ್ತಿಯಾಗಿ ಬೆಳೆಸಲಾಗುವುದು. ► ನೀವು ಈ ಖಾತೆ ವಹಿಸಿಕೊಂಡು ಎರಡೂವರೆ ವರ್ಷ ಗಳಾದವು. ಈ ನಿಟ್ಟಿನಲ್ಲಿ ನೀವು ಇಟ್ಟಿರುವ ಹೆಜ್ಜೆಗಳೇನು? ಎಂ.ಬಿ.ಪಾಟೀಲ್ : ಜಿಲ್ಲೆಯನ್ನು ಇಂಧನ ಕ್ಷೇತ್ರದ ಸಾಧನಗಳು, ಮಶಿನರೀಸ್ ಮತ್ತು ಎಕ್ವಿಪ್‌ಮೆಂಟ್, ನಾನ್-ಮೆಟಾಲಿಕ್ ಖನಿಜೋತ್ಪನ್ನಗಳು, ಕೃಷಿ ಮತ್ತು ಕೃಷಿ ಆಧರಿತ ಉತ್ಪನ್ನಗಳು, ನ್ಯೂಟ್ರಾಸುಟಿಕಲ್ ಮೆಡಿಸಿನಲ್ ಮತ್ತು ಬೊಟಾನಿಕಲ್ ಉತ್ಪನ್ನಗಳು, ವಿಶೇಷ ಅಲಾಯ್ ಮತ್ತು ಲೋಹೋತ್ಪನ್ನ ಈ ಆರೂ ವಲಯಗಳ ಕೈಗಾರಿಕಾ ಅಭಿವೃದ್ಧಿ ತಯಾರಿಕಾ ಕ್ಲಸ್ಟರ್ ಆಗಿ ಬೆಳೆಸಲಾಗುವುದು. ಇದನ್ನು ಬಜೆಟ್ಟಿನಲ್ಲಿಯೆ ಘೋಷಿಸಲಾಗಿದೆ. ಇದು ದೀರ್ಘಾವಧಿಯಲ್ಲಿ ಫಲ ತಂದುಕೊಡುವಂತಹ ರಚನಾತ್ಮಕ ಕ್ರಮ ಎನ್ನುವುದರಲ್ಲಿ ಎರಡು ಮಾತಿಲ್ಲ, ಇದಕ್ಕಾಗಿ ಮುಳವಾಡದಲ್ಲಿ ಕೆಐಎಡಿಬಿಗೆ ಸೇರಿದ 300 ಎಕರೆ ಜಾಗದಲ್ಲಿ ಉತ್ಪಾದನಾ ಕ್ಲಸ್ಟರ್ ಸ್ಥಾಪಿಸಲಾಗುವುದು. ಈ ವರ್ಗದ ಫೆಬ್ರವರಿಯಲ್ಲಿ ನಡೆಸಿದ ‘ಜಾಗತಿಕ ಹೂಡಿಕೆದಾರರ ಸಮಾವೇಶ’ ಹಾಗೂ ಇತರ ಪ್ರಯತ್ನಗಳ ಮೂಲಕ ನಮ್ಮ ಜಿಲ್ಲೆಗೆ 42 ಸಾವಿರ ಕೋಟಿ ರೂ. ಮೊತ್ತದ ಕೈಗಾರಿಕಾ ಯೋಜನೆಗಳನ್ನು ತರುವ ಸಂಬಂಧ ಮಾತುಕತೆ ನಡೆದಿದೆ. ಜೊತೆಗೆ ತಿಡಗುಂದಿ ಯಲ್ಲಿ 1,200 ಎಕರೆ ವ್ಯಾಪ್ತಿಯಲ್ಲಿ ಕೈಗಾರಿಕೆ ಮತ್ತು ಲಾಜಿಸ್ಟಿಕ್ಸ್ ಪಾರ್ಕ್ ಸ್ಥಾಪಿಸುತ್ತಿದ್ದು, ಇದಕ್ಕೆ 25 ಸಾವಿರ ಕೋಟಿ ರೂ. ಹೂಡಿಕೆ ಆಗುತ್ತಿದೆ. ಇದರಿಂದ 20 ಸಾವಿರಕ್ಕೂ ಹೆಚ್ಚು ನೇರ ಉದ್ಯೋಗ ಸೃಷ್ಟಿ ಆಗಲಿದೆ. ಜಿಲ್ಲೆಯು ಆರ್ಥಿಕ ವಹಿವಾಟಿನ ಪ್ರಮುಖ ಕೇಂದ್ರವಾಗಿ ಹೊರಹೊಮ್ಮಲಿದೆ. ಪರಿಣಾಮವಾಗಿ ಪ್ರಾದೇಶಿಕ ತಾರತಮ್ಯ ನಿವಾರಣೆ ಮತ್ತು ವಲಸೆಗೆ ಅಂಕುಶ ಎರಡೂ ಸಾಧ್ಯವಾಗಲಿವೆ. ಕರ್ನಾಟಕ ಸಾಬೂನು ಮತ್ತು ಮಾರ್ಜಕಗಳ ನಿಯಮಿತ (ಕೆಎಸ್‌ಡಿಎಲ್) ಈಗ ಒಳ್ಳೆಯ ಲಾಭದಲ್ಲಿದೆ. ಜೊತೆಗೆ ಇದರ ಉತ್ಪನ್ನಗಳಿಗೆ ಒಳ್ಳೆಯ ಮಾರುಕಟ್ಟೆ ಇದೆ. ಇದನ್ನು ಗಮನಿಸಿ, ವಿಜಯಪುರದಲ್ಲಿ 250 ಕೋಟಿ ರೂ. ವೆಚ್ಚದಲ್ಲಿ ಕೆಎಸ್‌ಡಿಎಲ್ ಘಟಕವನ್ನು ಶುರು ಮಾಡುತ್ತಿದ್ದೇವೆ. ಇದಕ್ಕೆ ಈಗಾಗಲೇ 50 ಎಕರೆ ಜಮೀನನ್ನೂ ಕೊಡಲಾಗಿದೆ. ಸೋಲಾರ್-ವೇಫರ್, ಬಣ್ಣ ಮತ್ತು ರಾಸಾಯನಿಕಗಳು ಹಾಗೂ ಮರುಬಳಕೆ ಇಂಧನ ತಯಾರಿಕೆ ವಲಯದಲ್ಲಿ ಬೇರೆ ಬೇರೆ ಉದ್ಯಮ ಸಮೂಹಗಳು ವಿಜಯಪುರ ಜಿಲ್ಲೆಯಲ್ಲಿ ಒಟ್ಟು 17 ಸಾವಿರ ಕೋಟಿ ರೂ.ಗಳಿಗೂ ಹೆಚ್ಚು ಬಂಡವಾಳ ತೊಡಗಿಸಲು ಮುಂದೆ ಬಂದಿವೆ. ► ವಿಜಯಪುರ ಜಿಲ್ಲೆಯಲ್ಲಿ ಯಾವ್ಯಾವ ಕಂಪೆನಿಗಳು ಬಂದು ಬಂಡವಾಳ ಹೂಡುತ್ತಿವೆ ಅಂತ ಹೇಳಬಹುದೇ? ಎಂ.ಬಿ.ಪಾಟೀಲ್ : ರಿಲಯನ್ಸ್ ಸಮೂಹದ ಕ್ಯಾಂಪಾಕೋಲಾ ನಮ್ಮಲ್ಲಿ ತಂಪು ಪಾನೀಯ ಮತ್ತು ಬಾಟ್ಲಿಂಗ್ ಘಟಕ (1,622 ಕೋಟಿ ರೂ.), ಧಾನ್ಯ ಸಂಸ್ಕರಣೆ ಕ್ಷೇತ್ರದಲ್ಲಿ ವಿಂಗ್ಸ್ ವಿಟಾರಾ ಕಂಪೆನಿ (350 ಕೋಟಿ ರೂ.), ಪವನ ವಿದ್ಯುತ್ ಕ್ಷೇತ್ರದಲ್ಲಿ ಸುಜ್ಲಾನ್ (360 ಕೋಟಿ ರೂ.), ಸೌರಫಲಕಗಳು ಮತ್ತು ಎಲೆಕ್ಟ್ರಾನಿಕ್ ಬಿಡಿಭಾಗಗಳ ತಯಾರಿಕೆಗೆ ರೆನೈಸಾನ್ಸ್ ಕಂಪೆನಿ (6,000 ಕೋಟಿ ರೂ) ಹೀಗೆ ಹತ್ತಾರು ಕಂಪೆನಿಗಳು ಬರುತ್ತಿವೆ. ಮೈಸೂರಿನ ಕೇನ್ಸ್ ಟೆಕ್ನಾಲಜೀಸ್ ಕಂಪೆನಿ ಕೂಡ ನಮ್ಮಲ್ಲಿಗೆ ಬಂದು ಪಿಸಿಬಿ ತಯಾರಿಕಾ ಘಟಕ ಮಾಡಬೇಕೆಂದು ಕೇಳಿಕೊಂಡಿದ್ದೀವಿ. ಕ್ಯಾಂಪಾಕೋಲಾ ಹೆಚ್ಚುವರಿಯಾಗಿ 450 ಕೋಟಿ ರೂ. ಹೂಡಿಕೆ ಮಾಡಲು ತೀರ್ಮಾನಿಸಿದೆ. ಒಟ್ಟಾರೆಯಾಗಿ ನಮ್ಮ ಜಿಲ್ಲೆಯಲ್ಲಿ ಹೂಡಿಕೆ ಮಾಡಲು ಎಫ್‌ಎಂಸಿಜಿ ವಲಯದಲ್ಲಿ 30, ಸೋಲಾರ್ ವಲಯದಲ್ಲಿ 25 ಮತ್ತು ಜವಳಿ ವಲಯದಲ್ಲಿ 15ಕ್ಕೂ ಹೆಚ್ಚು ಕಂಪೆನಿಗಳು ಮುಂದಾಗಿವೆ. ಆಹಾರ ಸಂಸ್ಕರಣೆ ವಲಯದಲ್ಲಿ ಕಬ್ಬನ್ನು ಆಧರಿಸಿ ಎಥೆನಾಲ್, ಚಾಕೊಲೇಟ್ ಮತ್ತು ತಂಪು ಪಾನೀಯ ತಯಾರಿಕೆ ಘಟಕಗಳಿಗೆ ಹೆಚ್ಚು ಅವಕಾಶವಿದ್ದು, 20ಕ್ಕೂ ಹೆಚ್ಚು ಕಂಪೆನಿಗಳು ಬಂಡವಾಳ ಹೂಡಿಕೆಗೆ ಆಸಕ್ತವಾಗಿವೆ. ಇವುಗಳೊಂದಿಗೆ ಮಾತುಕತೆ ಪ್ರಗತಿಯಲ್ಲಿದೆ. ಸುಜ್ಲಾನ್ ಕಂಪೆನಿಯು 5,000 ಮೆಗಾವ್ಯಾಟ್ ಪವನ ವಿದ್ಯುತ್ ಉತ್ಪಾದನಾ ಸ್ಥಾವರವನ್ನು ಜಿಲ್ಲೆಯಲ್ಲಿ ಸ್ಥಾಪಿಸಲಿದ್ದು, ಇದಕೆ 30 ಸಾವಿರ ಕೋಟಿ ರೂ. ಬಂಡವಾಳ ಹೂಡುತ್ತಿದೆ. ಇದಕ್ಕೆ ಪೂರಕವಾಗಿ ಬೆಳಗಾವಿ-ವಿಜಯಪುರ-ಧಾರವಾಡ ಜಿಲ್ಲೆಯನ್ನು ಒಳಗೊಂಡಂತೆ ರಕ್ಷಣಾ ಉದ್ಯಮವನ್ನು ಬೆಳೆಸಬೇಕು ಎನ್ನುವುದು ನನ್ನ ದೂರದೃಷ್ಟಿ. ಈ ಸಂಬಂಧ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರನ್ನು ಭೇಟಿ ಮಾಡಿ, ಮನವಿ ಮಾಡಲಾಗಿದೆ. ► ಬಹುನಿರೀಕ್ಷಿತ ವಿಜಯಪುರ ವಿಮಾನ ನಿಲ್ದಾಣ ಯಾವಾಗ ಕಾರ್ಯಾರಂಭ ಮಾಡಬಹುದು? ಇದರಿಂದ ಜಿಲ್ಲೆಗೆ ಏನು ಲಾಭ? ಎಂ.ಬಿ.ಪಾಟೀಲ್ : ನಿಜ, ಇದರ ಬಗ್ಗೆ ನಾನು ಮೊದಲ ದಿನದಿಂದಲೂ ಉತ್ಸಾಹದಿಂದ ಮಾತನಾಡುತ್ತಿದ್ದೇನೆ. ಆದರೆ, ಇದಕ್ಕೆ ಅನಿರೀಕ್ಷಿತ ಸಮಸ್ಯೆಗಳು ಎದುರಾಗಿ ಬಿಟ್ಟವು. ಕೆಲವು ಪ್ರಕರಣಗಳು ನ್ಯಾಯಾಲಯದ ಮೆಟ್ಟಿಲೇರಿದ್ದರಿಂದ ಕೈಕಟ್ಟಿ ಹಾಕಿದಂತಾಯಿತು. ಈಗ ಇವೆಲ್ಲವೂ ಬಹುತೇಕ ಮುಗಿಯುವ ಹಂತಕ್ಕೆ ಬಂದಿದ್ದು, ಪರಿಸರ ಇಲಾಖೆಯ ಅನುಮತಿ ಮಾತ್ರ ಬಾಕಿ ಇದೆ. ಎಲ್ಲವೂ ಅಂದುಕೊಂಡಂತೆ ನಡೆದರೆ, 2026ರ ಯುಗಾದಿ ಹೊತ್ತಿಗೆ ವಿಜಯಪುರ ವಿಮಾನ ನಿಲ್ದಾಣದಿಂದ ನಾಗರಿಕ ವಿಮಾನ ಸೇವೆ ಆರಂಭವಾಗಲಿದೆ. ಏತನ್ಮಧ್ಯೆ ನಾನು, ಕೇಂದ್ರ ವಿಮಾನಯಾನ ಸಚಿವರನ್ನು ಭೇಟಿ ಮಾಡಿ, ಮಾತುಕತೆ ನಡೆಸಿದ್ದೇನೆ. ಇಲ್ಲಿ ವಿಮಾನ ನಿಲ್ದಾಣ ಆರಂಭವಾದರೆ ಕೃಷಿ ಉತ್ಪನ್ನಗಳ ಸಾಗಾಟ, ರಫ್ತು, ಶಿಕ್ಷಣ, ಪ್ರವಾಸೋದ್ಯಮ, ಕೈಗಾರಿಕೆ ಎಲ್ಲವೂ ಬೆಳೆಯಲಿವೆ. ಈಗ ಕಿತ್ತೂರು ಕರ್ನಾಟಕದಲ್ಲಿ ಬೆಳಗಾವಿ ಮತ್ತು ಹುಬ್ಬಳ್ಳಿಯಲ್ಲಿ ಮಾತ್ರ ವಿಮಾನ ನಿಲ್ದಾಣಗಳಿವೆ. ವಿಜಯಪುರದಲ್ಲೂ ಶುರುವಾದರೆ ಮಹಾರಾಷ್ಟ್ರ ಗುಜರಾತ್, ದಿಲ್ಲಿ, ಹೈದರಾಬಾದ್ ಮುಂತಾದ ಕಡೆಗಳಿಗೆ ಪ್ರಯಾಣ ಸುಲಭವಾಗಲಿದೆ. ಇದು ಪ್ರತ್ಯಕ್ಷವಾಗಿಯೂ ಪರೋಕ್ಷವಾಗಿಯೂ ಆರ್ಥಿಕ ಬೆಳವಣಿಗೆಗೆ ಕಾರಣವಾಗಲಿದೆ. ಇದನ್ನು ಗಮನಿಸಿ ಮೆಲ್‌ಸ್ಟಾರ್ ಕಂಪೆನಿಯು ವಿಜಯಪುರದಲ್ಲಿ ವಿಮಾನ ಹಾರಾಟ ತರಬೇತಿ ಶಾಲೆ ಪ್ರಾರಂಭಿಸಲು ಮುಂದೆ ಬಂದಿದೆ. ► ನೀವು ಮೂಲಸೌಕರ್ಯ ಅಭಿವೃದ್ಧಿ ಖಾತೆಯನ್ನೂ ನಿಭಾಯಿಸುತ್ತಿದ್ದೀರಿ. ವಿಜಯಪುರ ಜಿಲ್ಲೆಗೆ ಏನಾದರೂ ಪ್ರಯೋಜನವಿದೆಯೇ? ಎಂ.ಬಿ.ಪಾಟೀಲ್ : ಖಂಡಿತವಾಗಿಯೂ ಇದೆ. ಈಗ ನಮ್ಮ ಜಿಲ್ಲಾಕೇಂದ್ರದಿಂದ ರಾಜಧಾನಿ ಬೆಂಗಳೂರಿಗೆ ರೈಲಿನಲ್ಲಿ ಹೋಗಬೇಕೆಂದರೆ15-16 ಗಂಟೆಗಳು ಹಿಡಿಯುತ್ತಿದೆ. ಇದನ್ನು 10 ಗಂಟೆಗಳಿಗೆ ಇಳಿಸ ಬೇಕು ಅಂತ ನಾನು ನಿರಂತರವಾಗಿ ನೈಋತ್ಯ ರೈಲ್ವೆ ಜೊತೆ ಮಾತುಕತೆ ನಡೆಸುತ್ತಿದ್ದೇನೆ. ಜೊತೆಗೆ ಕೇಂದ್ರ ರೈಲ್ವೆ ಸಹಾಯಕ ಸಚಿವ ವಿ.ಸೋಮಣ್ಣ ಅವರ ಜೊತೆಯೂ ಸಭೆಗಳನ್ನು ನಡೆಸಿದ್ದೇನೆ. ಹೀಗೆ ಒತ್ತಡ ಹೇರಿದ್ದರಿಂದ ನೈಋತ್ಯ ರೈಲ್ವೆಯವರು ಈಗ ಹುಬ್ಬಳ್ಳಿ ಮತ್ತು ಗದಗ ಬೈಪಾಸ್ ಮಾರ್ಗಗಳ ಮೂಲಕ ವಿಜಯಪುರಕ್ಕೆ ರೈಲು ಓಡಿಸಲು ಒಪ್ಪಿಕೊಂಡಿದ್ದಾರೆ. ಇದು ಸಾಧ್ಯವಾಗಬೇಕೆಂದರೆ ಹೊಸ ರೈಲುಗಳ ಮಂಜೂರಾತಿ ಬೇಕು. ಇದಕ್ಕೆ ಕೇಂದ್ರ ಸರಕಾರಕ್ಕೆ ಪತ್ರ ಬರೆದು, ವ್ಯವಹರಿಸಲಾಗುವುದು. ► ಕೃಷ್ಣಾ ಮೇಲ್ದಂಡೆ ಯೋಜನೆಯ ತೀರ್ಪಿನ ಬಗ್ಗೆ ಕೇಂದ್ರ ಸರಕಾರದ ಗೆಜೆಟ್ಟಿನಲ್ಲಿ ಪ್ರಕಟವಾಗಿಲ್ಲ. ಈ ಸಂಬಂಧ ಕೇಂದ್ರದ ಮೇಲೆ ಒತ್ತಡ ಹೇರಲು ಏನು ಕ್ರಮಗಳನ್ನು ಕೈಗೊಳ್ಳಲಾಗಿದೆ? ಎಂ.ಬಿ.ಪಾಟೀಲ್ : ಈ ವಿಳಂಬಕ್ಕೆ ಕೇಂದ್ರ ಸರಕಾರವೇ ಕಾರಣ. ತೀರ್ಪು 2010ರಲ್ಲೇ ಬಂದಿದೆ. ಅದಾದಮೇಲೆ 15 ವರ್ಷಗಳು ಉರುಳಿವೆ. ಆದರೂ ಕೇಂದ್ರ ಸರಕಾರ ಮಾತ್ರ ಉದಾಸೀನ ಮಾಡುತ್ತಿದೆ. ಈ ಮಧ್ಯೆ ಮಹಾರಾಷ್ಟ್ರ ,ಆಂಧ್ರಪ್ರದೇಶ ರಾಜ್ಯಗಳು ಪರಿಸ್ಥಿತಿಯ ದುರ್ಲಾಭ ಪಡೆಯುತ್ತಿವೆ. ಇದರಿಂದಾಗಿ ಆಲಮಟ್ಟಿ ಅಣೆಕಟ್ಟೆಯ ಎತ್ತರವನ್ನು 519 ಮೀಟರಿನಿಂದ 524 ಮೀಟರಿಗೆ ಹೆಚ್ಚಿಸಲು ತಡವಾಗುತ್ತಿದೆ. ರಾಜ್ಯದ ಬಿಜೆಪಿ ಸಂಸದರು ಇದರ ಬಗ್ಗೆ ತುಟಿ ಬಿಚ್ಚುತ್ತಿಲ್ಲ. ಈ ನಡುವೆ ಯೋಜನೆಗೆ ಎಷ್ಟು ಭೂಮಿ ಬೇಕು, ಸಂತ್ರಸ್ತರಿಗೆ ಎಷ್ಟು ಪರಿಹಾರ ಕೊಡಬೇಕು ಎಂಬ ಬಗ್ಗೆ ನ್ಯಾಯಾಲಯದಲ್ಲಿರುವ ಪ್ರಕರಣಗಳನ್ನು ಆದ್ಯತೆಯ ಮೇರೆಗೆ ಇತ್ಯರ್ಥ ಮಾಡುತ್ತಿದ್ದೇವೆ.

ವಾರ್ತಾ ಭಾರತಿ 20 Dec 2025 11:55 am

ಮಸ್ಕತ್‌ನಲ್ಲಿ ಕರ್ನಾಟಕ ರಾಜ್ಯೋತ್ಸವ ವಿಶೇಷಾಂಕ ಲೋಕಾರ್ಪಣೆ: ಅರಬ್ಬರ ನಾಡಿನಲ್ಲಿ ಮೊಳಗಿದ ಕನ್ನಡದ ನಾದ

ಒಮಾನ್‌ ಕನ್ನಡಿಗರ ಸಾಮಾಜಿಕ ಚಟುವಟಿಕೆಗಳು ನಿತ್ಯ ನಿರಂತರ. ಸದಾ ಒಂದಿಲ್ಲೊಂದು ಸಾಹಿತ್ಯ ಚಟುವಟಿಕೆಯ ಮೂಲಕ ಕನ್ನಡಿಗರನ್ನು ಒಂದುಗೂಡಿಸುವ ಮಸ್ಕತ್‌ ಕನ್ನಡ ಸಂಘ ಇತ್ತೀಚಿಗೆ ಪಿಎಸ್‌ ರಂಗನಾಥ್‌ ಅವರ ಸಂಪಾದಕತ್ವದಲಿ ಮೂಡಿಬಂದ ಕರ್ನಾಟಕ ರಾಜ್ಯೋತ್ಸವ ವಿಶೇಷಾಂಕ- ೨೦೨೫ ಕೃತಿಯನ್ನು ಬಿಡುಗಡೆ ಮಾಡಿದೆ. ಕರ್ನಾಟಕ ಜಾನಪದ ಪರಿಷತ್ ಒಮಾನ್ ಘಟಕದ ವತಿಯಿಂದ ಆಯೋಜಿಸಲಾಗಿದ್ದ ಶಿಶಿರ ಕಾವ್ಯ ಸಂಜೆ ಕಾರ್ಯಕ್ರಮದಲ್ಲಿ ಈ ವಿಶೇಷ ಕೃತಿಯನ್ನು ಬಿಡುಗಡೆ ಮಾಡಲಾಗಿದೆ. ಈ ಕುರಿತು ಇಲ್ಲಿದೆ ಹೆಚ್ಚಿನ ಮಾಹಿತಿ.

ವಿಜಯ ಕರ್ನಾಟಕ 20 Dec 2025 11:55 am

ಉಡುಪಿ ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷನ ರೆಸಾರ್ಟ್ ನಲ್ಲಿ ಅಕ್ರಮ ವಿದೇಶಿ ವಲಸಿಗರಿಗೆ ಕೆಲಸ: ಪ್ರಕರಣ ದಾಖಲು

ದೇಶದ ಆಂತರಿಕ ಭದ್ರತೆಗೆ ಮಾರಕ: ಮಾಲಕರ ವಿರುದ್ಧ ಕಾನೂನು ಕ್ರಮ: ಎಸ್ಪಿ ಉಡುಪಿ, ಡಿ.20: ಉಡುಪಿ ಜಿಲ್ಲಾ ಯುವ ಮೋರ್ಚಾದ ಅಧ್ಯಕ್ಷನ ರೆಸಾರ್ಟ್ ನಲ್ಲಿ ಯಾವುದೇ ದಾಖಲೆಗಳಿಲ್ಲದಿರುವ ಅಕ್ರಮ ವಿದೇಶಿ ವಲಸಿಗರಿಗೆ ಕೆಲಸ ನೀಡಿರುವ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಾರಕೂರಿನ ಸರಕಾರಿ ಆಸ್ಪತ್ರೆಗೆ ಒಬ್ಬರು ವಿದೇಶಿ ಗರ್ಭಿಣಿಯೊಬ್ಬರು ಚಿಕಿತ್ಸೆಗೆಂದು ಬಂದಿದ್ದು, ಆ ವೇಳೆ ಅಲ್ಲಿನ ವೈದ್ಯರು ಆಕೆಯೊಂದಿಗೆ ದಾಖಲಾತಿಗಳನ್ನು ಕೇಳಿದ್ದರು. ಆದರೆ ಆಕೆ ಯಾವುದೇ ದಾಖಲಾತಿ ಹೊಂದಿಲ್ಲ ಎಂದು ಹೇಳಿದ್ದಾಳೆ. ಈ ಹಿನ್ನೆಲೆಯಲ್ಲಿ ಸರಕಾರಿ ಆಸ್ಪತ್ರೆಯವರು ಸ್ಥಳೀಯ ಬ್ರಹ್ಮಾವರ ಪೊಲೀಸ್ ಠಾಣೆಗೆ ಕೂಡಲೇ ಮಾಹಿತಿ ನೀಡಿದ್ದರು. ಅದರಂತೆ ಬ್ರಹ್ಮಾವರ ಪೊಲೀಸ್ ಉಪನಿರೀಕ್ಷಕರು ಸ್ಥಳಕ್ಕೆ ಭೇಟಿ ನೀಡಿ ವಿಚಾರಿಸಿದಾಗ, ರೀಪಕ್ ದಮಾಯಿ(28), ಸುನೀತಾ ದಮಾಯಿ(27), ಊರ್ಮಿಳಾ(19), ಕೈಲಾಶ್ ದಮಾಯಿ(18) ಕಪಿಲ್ ದಮಾಯಿ(19), ಸುನೀತಾ ದಮಾಯಿ(21) ಹಾಗೂ ಮೂವರು ಸಣ್ಣ ಮಕ್ಕಳು, ಉಡುಪಿ ಜಿಲ್ಲಾ ಬಿಜೆಪಿ ಯುವ ಮೋರ್ಚಾದ ಅಧ್ಯಕ್ಷ ಪೃಥ್ವಿರಾಜ್ ಶೆಟ್ಟಿ ಬಿಲ್ಲಾಡಿಗೆ ಸೇರಿದ ಹನೆಹಳ್ಳಿ ಗ್ರಾಮದ ಕೂರಾಡಿ ಸಂಕಮ್ಮ ತಾಯಿ ರೆಸಾರ್ಟ್ ನಲ್ಲಿ ಅಕ್ರಮವಾಗಿ ನೆಲೆಸಿರುವುದು ಬೆಳಕಿಗೆ ಬಂದಿದೆ. ಮೂವರು ಮಕ್ಕಳು ಸೇರಿದಂತೆ ಒಟ್ಟು ಒಂಭತ್ತು ಮಂದಿ ಭಾರತೀಯ ರಾಷ್ಟ್ರೀಯತೆಯನ್ನು ಹೊಂದದೇ ಇದ್ದು, ಯಾವ ದೇಶದವರು ಎಂಬುದಕ್ಕೆ ಇವರಲ್ಲಿ ಯಾವುದೇ ದಾಖಲೆಗಳು ಕಂಡುಬಂದಿಲ್ಲ. ಪ್ರಸಕ್ತ ಇವರು ಯಾವ ದೇಶದ ಪ್ರಜೆ ಎಂಬುದು ಸ್ಪಷ್ಟವಾಗಿ ತಿಳಿದುಬಂದಿಲ್ಲ. ಇವರು ಯಾವುದೋ ರಾಷ್ಟ್ರದ ಪ್ರಜೆಗಳಾಗಿದ್ದು, ಅವರಲ್ಲಿ ಯಾವುದೇ ಐಡೆಂಟಿಟಿ ಕಾರ್ಡ್, ಜನ್ಮ ದಾಖಲೆ, ಪಾಸ್ ಪೋರ್ಟ್, ಪ್ರಯಾಣ ದಾಖಲೆ ಹಾಗೂ ವಿಸಾವನ್ನು ಹೊಂದದೇ ಅಕ್ರಮವಾಗಿ ಭಾರತವನ್ನು ಪ್ರವೇಶಿಸಿರುವ ವಿದೇಶಿಗರಾಗಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಇವರು ಯಾವ ದೇಶದಿಂದ ಬಂದಿರುವ ಬಗ್ಗೆ ಹಾಗೂ ಯಾವ ದೇಶದ ಪ್ರಜೆಗಳು ಎಂದು ತಿಳಿಸಲು ಅವರಲ್ಲಿ ಯಾವುದೇ ದಾಖಲಾತಿಗಳು ಇರುವುದಿಲ್ಲ. ಈ ಹಿನ್ನೆಲೆಯಲ್ಲಿ ಇವರ ವಿರುದ್ಧ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ. ಅಕ್ರಮವಾಗಿ ಕೆಲಸಕ್ಕೆ ನೇಮಿಸಿಕೊಳ್ಳುವುದು ಅಪರಾಧ: ಎಸ್ಪಿ ಯಾವುದೇ ದೇಶದ ಪ್ರಜೆಗಳು ಅಕ್ರಮವಾಗಿ ದೇಶದಲ್ಲಿ ವಾಸಿಸುವುದು ದೇಶದ ಆಂತರಿಕ ಭದ್ರತೆ ಮಾರಕವಾಗುವ ಸಾಧ್ಯತೆ ಇರುವುದರಿಂದ, ಇಂತಹವರ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡುವುದು ಅಗತ್ಯವಾಗಿದೆ. ರೆಸಾರ್ಟ್/ಲಾಡ್ಜ್ ಗಳು ಯಾವುದೇ ಮಾಹಿತಿಗಳಿಲ್ಲದ ವ್ಯಕ್ತಿಗಳನ್ನು ಕೆಲಸಕ್ಕೆ ನೇಮಿಸಿಕೊಳ್ಳುವುದು ಅಪರಾಧವಾಗಿದೆ. ಅಂತಹ ರೆಸಾರ್ಟ್/ಲಾಡ್ಜ್ ಗಳ ಮಾಲಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಂ ಶಂಕರ್ ತಿಳಿಸಿದ್ದಾರೆ. ರೆಸಾಟರ್ಟ್/ಲಾಡ್ಜ್ ಗಳಲ್ಲಿ ಯಾವುದೇ ದೇಶದ ಪ್ರಜೆಗಳು ಬಂದಲ್ಲಿ ಅವರಿಂದ ಇ ಫಾರ್ಮ್ ಪಡೆದು ಜಿಲ್ಲಾ ಪೊಲೀಸ್ ಕಚೇರಿಗೆ ಕಡ್ಡಾಯವಾಗಿ ಮಾಹಿತಿ ನೀಡಬೇಕು. ಯಾವುದೇ ದೇಶದ ಪ್ರಜೆ ಬಂದಿದ್ದು, ಅವರಲ್ಲಿ ಸಮರ್ಪಕ ದಾಖಲಾತಿ ಇಲ್ಲದೇ ಇದ್ದಲ್ಲಿ ಕೂಡಲೇ ಸ್ಥಳೀಯ ಪೊಲೀಸ್ ಮತ್ತು ಜಿಲ್ಲಾ ಪೊಲೀಸ್ ಕಚೇರಿಗೆ ಕೂಡಲೇ ಮಾಹಿತಿ ನೀಡಬೇಕು ಎಂದು ರೆಸಾರ್ಟ್/ಲಾಡ್ಜ್ ಗಳಲ್ಲಿ ಯಾವುದೇ ಅಕ್ರಮ ಚಟುವಟಿಕೆಗಳಿಗೆ ಅವಕಾಶ ನೀಡುವಂತಹ ರೆಸಾರ್ಟ್/ಲಾಡ್ಜ್ ಗಳ ಮ್ಯಾನೇಜರ್ ಹಾಗೂ ಮಾಲಕರ ವಿರುದ್ದ ಪ್ರಕರಣ ದಾಖಲಿಸಲಾಗುವುದು. ಆದುದರಿಂದ ಜಿಲ್ಲೆಯ ಯಾವುದೇ ರೆಸಾರ್ಟ್/ಲಾಡ್ಜ್ ಗಳಲ್ಲಿ ಯಾವುದೇ ರೀತಿಯ ಅನೈತಿಕ/ಅಕ್ರಮ ಚಟುವಟಿಕೆಗಳಿಗೆ ಅವಕಾಶ ನೀಡಬಾರದು. ಉಡುಪಿ ಜಿಲ್ಲೆಯಲ್ಲಿ ರೆಸಾರ್ಟ್/ಲಾಡ್ಜ್ ಗಳಲ್ಲಿ ನಡೆಯುತ್ತಿರುವ ಅಕ್ರಮ ಚಟುವಟಿಕೆಗಳ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಎಸ್ಪಿ ಎಚ್ಚರಿಕೆ ನೀಡಿದ್ದಾರೆ.

ವಾರ್ತಾ ಭಾರತಿ 20 Dec 2025 11:47 am

ಬಳ್ಳಾರಿಯಲ್ಲಿ ಜೀನ್ಸ್ ತಯಾರಿಕಾ ಕೈಗಾರಿಕಾ ಪಾರ್ಕ್ ಸ್ಥಾಪನೆ : ಬಳ್ಳಾರಿ-ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವ ಝಮೀರ್ ಅಹ್ಮದ್ ಖಾನ್

ರಾಜ್ಯ ಸರಕಾರವು ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ಬಜೆಟ್‌ನಲ್ಲಿ 5 ಸಾವಿರ ಕೋಟಿ ರೂ.ಗಳನ್ನು ಒದಗಿಸಿದೆ. ಕೆಕೆಆರ್‌ಡಿಬಿ, ಡಿಎಂಎಫ್, ಕೆಎಂಇಆರ್‌ಸಿಯ ಸಾವಿರಾರು ಕೋಟಿ ರೂ.ಗಳ ಅನುದಾನ ಎರಡು ಜಿಲ್ಲೆಗಳ ಆರೋಗ್ಯ, ಶಿಕ್ಷಣ, ಕೃಷಿ, ನೀರಾವರಿ ವಲಯಕ್ಕೆ ವೆಚ್ಚ ಮಾಡಲಾಗಿದೆ. ಶಾಲಾ-ಕಾಲೇಜು ಕಟ್ಟಡ ನಿರ್ಮಾಣ, ಕುಡಿಯುವ ನೀರಿನ ಸೌಲಭ್ಯ, ಕೌಶಲ್ಯ ತರಬೇತಿಗೆ ಹೆಚ್ಚು ಒತ್ತು ನೀಡಲಾಗಿದೆ. ವಾ.ಭಾ.ವಿಶೇಷ ಪ್ರತಿನಿಧಿ ಕಾಂಗ್ರೆಸ್ ಸರಕಾರ ಗಡಿನಾಡು ಬಳ್ಳಾರಿ ಹಾಗೂ ವಿಜಯ ನಗರ ಜಿಲ್ಲೆಯಲ್ಲಿ ಕಳೆದ ಎರಡೂವರೆ ವರ್ಷಗಳಿಂದ ಕೈಗೊಂಡಿರುವ ಅಭಿವೃದ್ಧಿ ಹಾಗೂ ಭವಿಷ್ಯದ ಯೋಜನೆಗಳಿಗೆ ಸಂಬಂಧಿಸಿದಂತೆ ಉಭಯ ಜಿಲ್ಲೆಗಳ ಉಸ್ತುವಾರಿ ಸಚಿವ ಬಿ.ಝಡ್.ಝಮೀರ್ ಅಹ್ಮದ್ ಖಾನ್ ‘ವಾರ್ತಾಭಾರತಿ’ ಪತ್ರಿಕೆಗೆ ವಿಶೇಷ ಸಂದರ್ಶನ ನೀಡಿದ್ದಾರೆ. ► ಬಳ್ಳಾರಿಯಲ್ಲಿ ಅಂತಾರಾಷ್ಟ್ರೀಯ ಮಟ್ಟದ ಜೀನ್ಸ್ ತಯಾರಿಕೆಯ ಬೃಹತ್ ಕೈಗಾರಿಕಾ ಪಾರ್ಕ್ ಸ್ಥಾಪನೆಯ ಕನಸು ಏನಾಯಿತು? ಝಮೀರ್ ಅಹ್ಮದ್ : ರಾಹುಲ್ ಗಾಂಧಿಯವರು ಭಾರತ್ ಜೋಡೋ ಯಾತ್ರೆಯ ವೇಳೆ ಬಳ್ಳಾರಿ ಜಿಲ್ಲೆಯ ಕನಸಿನ ಯೋಜನೆಯಾದ ಜೀನ್ಸ್ ತಯಾರಿಕೆಯ ಅಂತರ್ ರಾಷ್ಟ್ರೀಯ ಮಟ್ಟದ ಬೃಹತ್ ಕೈಗಾರಿಕಾ ಪಾರ್ಕ್ ಸ್ಥಾಪನೆಯ ಬಗ್ಗೆ ಭರವಸೆ ನೀಡಿದ್ದರು. ಅವರ ಆಶಯದಂತೆ ಬೃಹತ್ ಕೈಗಾರಿಕಾ ಪಾರ್ಕ್ ಸ್ಥಾಪನೆಯ ಪೂರ್ವ ತಯಾರಿ ಹಾಗೂ ಮಂಜೂರಾಗಬೇಕಾದ ಅನುದಾನದ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಜೊತೆ ಸಭೆ ನಡೆಸಲಾಗಿದೆ. ಆದಷ್ಟು ಬೇಗ ಈ ಯೋಜನೆಗೆ ರೂಪ ಸಿಗುವ ಸಾಧ್ಯತೆಯಿದೆ. ► ಬಳ್ಳಾರಿ ಜಿಲ್ಲೆಯಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಯಡಿ ಶಾಲೆ ಹಾಗೂ ಹಾಸ್ಟೆಲ್‌ಗಳ ನಿರ್ಮಾಣಕ್ಕೆ ಒದಗಿಸಿರುವ ಅನುದಾನ ಎಷ್ಟು? ಝಮೀರ್ ಅಹ್ಮದ್ : ಬಳ್ಳಾರಿ ಜಿಲ್ಲೆಗೆ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಡಿ ಶಾಲೆ ಹಾಗೂ ಹಾಸ್ಟೆಲ್ ನಿರ್ಮಾಣಕ್ಕೆ 52.50 ಕೋಟಿ ರೂ., ಅಲ್ಪಸಂಖ್ಯಾತರ ಕಾಲನಿ ಅಭಿವೃದ್ಧಿಗೆ 25 ಕೋಟಿ ರೂ., ಸಮುದಾಯ ಭವನ ನಿರ್ಮಾಣಕ್ಕೆ 12 ಕೋಟಿ ರೂ. ಅನುದಾನ ಒದಗಿಸಲಾಗಿದೆ. ► ವಸತಿ ಇಲಾಖೆಯಿಂದ ಬಳ್ಳಾರಿಯಲ್ಲಿ ಎಷ್ಟು ಬಡ ಕುಟುಂಬಗಳಿಗೆ ಮನೆ ನಿರ್ಮಾಣ ಮಾಡಿಕೊಡಲಾಗಿದೆ? ಝಮೀರ್ ಅಹ್ಮದ್ : ವಸತಿ ಇಲಾಖೆಯ ರಾಜೀವ್ ಗಾಂಧಿ ವಸತಿ ನಿಗಮದಿಂದ ಬಳ್ಳಾರಿಯಲ್ಲಿ 371.14 ಕೋಟಿ ರೂ. ವೆಚ್ಚದಲ್ಲಿ 5,616 ಮನೆ, ಸಂಡೂರಿನಲ್ಲಿ 135.74 ಕೋಟಿ ರೂ. ವೆಚ್ಚದಲ್ಲಿ 2,172 ಮನೆ, ಬಸವ, ಅಂಬೇಡ್ಕರ್ ವಸತಿ ಯೋಜನೆಯಡಿಯಲ್ಲಿ 6,653 ಮನೆ ಹಾಗೂ ಕೊಳೆಗೇರಿ ಅಭಿವೃದ್ಧಿ ಮಂಡಳಿಯಿಂದ 5,978 ಮನೆ ನಿರ್ಮಿಸಿ ಕೊಡಲಾಗಿದೆ. ► ಉಭಯ ಜಿಲ್ಲೆಯ ಉಸ್ತುವಾರಿ ಹೊತ್ತಿರುವ ತಾವು ಅಲ್ಲಿನ ಅಭಿವೃದ್ಧಿಗೆ ಕೈಗೊಂಡಿರುವ ಕ್ರಮಗಳೇನು? ಝಮೀರ್ ಅಹ್ಮದ್:  ವಿಜಯನಗರ ಜಿಲ್ಲೆಗೆಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ 19ಶಾಲೆ, ಹಾಸ್ಟೆಲ್ ನಿರ್ಮಾಣಕ್ಕೆ 65.92 ಕೋಟಿ ರೂ., ಅಲ್ಪಸಂಖ್ಯಾತರ ಕಾಲನಿ ಅಭಿವೃದ್ಧಿಗೆ 20 ಕೋಟಿ ರೂ. ಒದಗಿಸಲಾಗಿದೆ. ಕೊಳೆಗೇರಿ ಅಭಿವೃದ್ಧಿ ಮಂಡಳಿಯಿಂದ 5,607 ಮನೆ, ರಾಜೀವ್ ಗಾಂಧಿ ವಸತಿ ನಿಗಮದಿಂದ 6,232 ಮನೆ ಮಂಜೂರು ಮಾಡಲಾಗಿದೆ. ಕೂಡ್ಲಿಗಿ ಕ್ಷೇತ್ರಕ್ಕೆ 10 ಎಕರೆ ಜಾಗದಲ್ಲಿ 626 ಬಡ ಕುಟುಂಬಗಳಿಗೆ ಮನೆ ನಿರ್ಮಾಣ ಯೋಜನೆಗೆ ಒಪ್ಪಿಗೆ ನೀಡಲಾಗಿದೆ. ರಾಜೀವ್ ಗಾಂಧಿ ವಸತಿ ನಿಗಮದ ವತಿಯಿಂದ 383 ಬಡ ಕುಟುಂಬಗಳಿಗೆ ಮನೆ ನಿರ್ಮಿಸಿಕೊಡಲು ಒಪ್ಪಿಗೆ ನೀಡಲಾಗಿದೆ. ► ತುಂಗಭದ್ರಾ ಜಲಾಶಯದ ಕ್ರಸ್ಟ್ ಗೇಟ್ ದುರಸ್ತಿ ಕಾಮಗಾರಿ ಆರಂಭವಾಗಲಿದ್ದು, ರೈತರಿಗೆ ಎರಡನೇ ಬೆಳೆಗೆ ನೀರು ಸಿಗುವುದೆ? ಝಮೀರ್ ಅಹ್ಮದ್: ಈಗಿರುವ ಬೆಳೆಗೆ ನೀರು ಕೊಡಲು ಯಾವುದೇ ತೊಂದರೆ ಇಲ್ಲ. ಆದರೆ, ತುಂಗಭದ್ರಾ ಅಣೆಕಟ್ಟೆಯ ಎಲ್ಲ 33 ಕ್ರಸ್ಟ್ ಗೇಟುಗಳನ್ನು ಹೊಸದಾಗಿ ಅಳವಡಿಸಬೇಕಿರುವುದರಿಂದ ಪೂರ್ಣ ಪ್ರಮಾಣದಲ್ಲಿ ನೀರು ಸಂಗ್ರಹ ಕಷ್ಟ. ಸರಕಾರಕ್ಕೆ ರೈತರ ಹಿತ ಮುಖ್ಯ. ಜೊತೆಗೆ ಅಣೆಕಟ್ಟೆಯ ರಕ್ಷಣೆಯೂ ನಮ್ಮ ಕರ್ತವ್ಯ. ಹೊಸ ಗೇಟುಗಳ ಅಳವಡಿಕೆ ಜೂನ್ ಅಂತ್ಯಕ್ಕೆ ಪೂರ್ಣ ಗೊಳ್ಳಲಿದೆ. ಈ ಹಿನ್ನೆಲೆಯಲ್ಲಿ ಕೊಪ್ಪಳ, ರಾಯಚೂರು, ವಿಜಯನಗರ ಹಾಗೂ ಬಳ್ಳಾರಿ ಜಿಲ್ಲೆಯ ಎಲ್ಲಾ ಪಕ್ಷದ ಜನ ಪ್ರತಿನಿಧಿಗಳು ಹಾಗೂ ರೈತ ಮುಖಂಡರ ಜೊತೆ ಸಭೆ ನಡೆಸಿ ನಿರ್ಧಾರ ಕೈಗೊಳ್ಳಲಾಗಿದೆ. ► ಮೌಲಾನಾ ಆಝಾದ್ ಮಾದರಿ ಶಾಲೆಗಳಲ್ಲಿ ಎಸೆಸೆಲ್ಸಿ ಫಲಿತಾಂಶ ವೃದ್ಧಿಗೆ ಕೈಗೊಂಡಿರುವ ಕ್ರಮಗಳೇನು? ಝಮೀರ್‌ಅಹ್ಮದ್ : ವಿಜಯನಗರ ಜಿಲ್ಲೆಯಲ್ಲಿ ನಾಲ್ಕು ಮೌಲಾನಾ ಆಝಾದ್ ಮಾದರಿ ಶಾಲೆಗಳಿದ್ದು, 2024-25ನೆ ಸಾಲಿನ ಎಸೆಸೆಲ್ಸಿ ಪರೀಕ್ಷೆಯನ್ನು 101 ಮಕ್ಕಳು ಕೈಗೊಂಡಿದ್ದು, ಶೇ.69.31ರಷ್ಟು ಫಲಿತಾಂಶ ಬಂದಿದೆ. ಬಳ್ಳಾರಿಯಲ್ಲಿ ಒಂದು ಮೌಲಾನಾ ಆಝಾದ್ ಶಾಲೆಯಿದ್ದು, 22 ಮಕ್ಕಳು ಎಸೆಸೆಲ್ಸಿಯಲ್ಲಿ ಶೇ. 90.91ರಷ್ಟು ಫಲಿತಾಂಶ ಪಡೆದಿದ್ದಾರೆ. ಮೌಲಾನಾ ಆಝಾದ್ ಮಾದರಿ ಶಾಲೆಗಳಲ್ಲಿ ಫಲಿತಾಂಶ ಸುಧಾರಣೆ ಹಾಗೂ ಬಡವರ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡಬೇಕು ಎಂಬುದು ನಮ್ಮ ಬದ್ಧತೆಯಾಗಿದೆ. ► ಅಲ್ಪಸಂಖ್ಯಾತ ಸಮುದಾಯದ ಶೈಕ್ಷಣಿಕ ಪ್ರಗತಿಗೆ ಕೈಗೊಂಡಿರುವ ಕ್ರಮಗಳೇನು? ಝಮೀರ್ ಅಹ್ಮದ್: ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯು ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡುತ್ತಿದೆ. 2025-26ನೆ ಸಾಲಿನ ಬಜೆಟ್‌ನಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗೆ 4,500 ಕೊಟಿ ರೂ. ಅನುದಾನ ನಿಗದಿಪಡಿಸಲಾಗಿದೆ. ಇದರಲ್ಲಿ 2,900 ಕೋಟಿ ರೂ.ಗಳನ್ನು ಅಲ್ಪಸಂಖ್ಯಾತ ಸಮುದಾಯಗಳ ಶೈಕ್ಷಣಿಕ ಚಟುವಟಿಕೆಗಳಿಗೆ ಮೀಸಲಿಡಲಾಗಿದೆ. ಬೆಂಗಳೂರಿನ ಹಜ್ ಭವನದಲ್ಲಿ ಅಲ್ಪಸಂಖ್ಯಾತ ಸಮುದಾಯದ ಅಭ್ಯರ್ಥಿಗಳಿಗೆ ಐಎಎಸ್, ಐಪಿಎಸ್, ಕೆಎಎಸ್ ನಂತರ ಸ್ಪರ್ಧಾತ್ಮಕ ಪರೀಕ್ಷೆಯ ಪೂರ್ವಭಾವಿ ತರಬೇತಿಯನ್ನು ನೀಡಲಾಗುತ್ತಿದೆ. ಇದೇ ಮೊದಲ ಬಾರಿಗೆ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವತಿಯಿಂದ 400 ಅಭ್ಯರ್ಥಿಗಳಿಗೆ ಪೂರ್ವ ನೇಮಕಾತಿ ಸಬ್‌ಇನ್ಸ್‌ಪೆಕ್ಟರ್ ತರಬೇತಿಯನ್ನು ನೀಡಲಾಗಿದೆ. ವಿದೇಶದಲ್ಲಿನ ವಿಶ್ವವಿದ್ಯಾಲಯಗಳಲ್ಲಿ ವಿದ್ಯಾಭ್ಯಾಸ ಮಾಡಲು ಹೋಗುವಂತಹ ವಿದ್ಯಾರ್ಥಿಗಳ ವೇತನವನ್ನು 2025-26ನೆ ಸಾಲಿನಿಂದ 30 ಲಕ್ಷ ರೂ.ಗಳಿಗೆ ಹೆಚ್ಚಿಸಲಾಗಿದೆ. ಬಿಎಸ್ಸಿ ನರ್ಸಿಂಗ್ ಓದುತ್ತಿರುವವರಿಗೆ ಈ ವರ್ಷದಿಂದ ವಿದ್ಯಾರ್ಥಿ ವೇತನ ನೀಡಲಾಗುತ್ತಿದೆ. ಎಂಬಿಬಿಎಸ್ ಓದುವ ವಿದ್ಯಾರ್ಥಿಗಳಿಗೆ 5 ಲಕ್ಷ ರೂ. ವಿದ್ಯಾರ್ಥಿವೇತನ ನೀಡಲಾಗುತ್ತಿದೆ. ಕರ್ನಾಟಕ ಪಬ್ಲಿಕ್ ಶಾಲೆಗಳ ಮಾದರಿಯಲ್ಲಿ ಎಲ್‌ಕೆಜಿಯಿಂದ ಪಿಯುಸಿವರೆಗೆ ಉಚಿತ ಶಿಕ್ಷಣ ನೀಡುವ 100 ಮೌಲಾನಾ ಆಝಾದ್ ಶಾಲೆಗಳನ್ನು ಆರಂಭಿಸಲಾಗುತ್ತಿದೆ. ► ನೂತನ ವಿಜಯನಗರ ಜಿಲ್ಲೆಯ ಅಭಿವೃದ್ಧಿ ಬಗ್ಗೆ ನಿಮ್ಮ ಮುಂದಿನ ನಡೆ ಏನು? ಝಮೀರ್ ಅಹ್ಮದ್ : ಬಳ್ಳಾರಿಯಿಂದ ವಿಭಜಿಸಲ್ಪಟ್ಟು ಹೊಸದಾಗಿ ಅಸ್ತಿತ್ವಕ್ಕೆ ಬಂದಿರುವ ವಿಜಯನಗರ ಜಿಲ್ಲೆಯು ಐತಿಹಾಸಿಕ, ಪಾರಂಪರಿಕ, ಪ್ರೇಕ್ಷಣೀಯ ಸ್ಥಳಗಳ ತಾಣವಾಗಿದೆ. ಇಲ್ಲಿ ಪ್ರವಾಸೋದ್ಯಮ ಚಟುವಟಿಕೆಗಳನ್ನು ವಿಸ್ತರಿಸಲು ಹೆಚ್ಚಿನ ಅವಕಾಶಗಳಿವೆ. ಆ ಮೂಲಕ ಯುವ ಸಮುದಾಯಕ್ಕೆ ಉದ್ಯೋಗಾವಕಾಶಗಳನ್ನು ಕಲ್ಪಿಸಲು ಸಾಧ್ಯವಾಗುತ್ತದೆ.

ವಾರ್ತಾ ಭಾರತಿ 20 Dec 2025 11:45 am

Property Rights: ಪ್ರೀತಿಸಿ ಮದುವೆಯಾದರೆ ತಂದೆಯ ಆಸ್ತಿಯಲ್ಲಿ ಪಾಲಿಲ್ವಾ? ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು.

ನಮ್ಮ ದೇಶದಲ್ಲಿ ಆಸ್ತಿಯ ಹಕ್ಕು ಮತ್ತು ಮದುವೆಯ ವಿಷಯಗಳು ಯಾವಾಗಲೂ ಸೂಕ್ಷ್ಮವಾಗಿರುತ್ತವೆ. ಸಾಮಾನ್ಯವಾಗಿ ತಂದೆ-ತಾಯಿಯ ಆಸ್ತಿಯ ಮೇಲೆ ಮಕ್ಕಳಿಗೆ ಸಹಜವಾಗಿಯೇ ಹಕ್ಕಿರುತ್ತದೆ (Property Rights), ಅದನ್ನು ಯಾರೂ ಕಸಿದುಕೊಳ್ಳಲು ಸಾಧ್ಯವಿಲ್ಲ ಎಂದು ನಾವು ನಂಬಿದ್ದೇವೆ. ಆದರೆ, ಇದೀಗ ಸುಪ್ರೀಂ ಕೋರ್ಟ್ ನೀಡಿರುವ ಒಂದು ತೀರ್ಪು ದೇಶದಾದ್ಯಂತ ಭಾರೀ ಚರ್ಚೆಗೆ ಗ್ರಾಸವಾಗಿದೆ. “ಪೋಷಕರ ಇಚ್ಛೆಗೆ ವಿರುದ್ಧವಾಗಿ, ಬೇರೆ ಜಾತಿ ಅಥವಾ ಧರ್ಮದವರನ್ನು ಪ್ರೀತಿಸಿ ಮದುವೆಯಾದರೆ, ಅಂತಹವರಿಗೆ ಆಸ್ತಿಯಲ್ಲಿ ಪಾಲು ಸಿಗುವುದಿಲ್ಲವೇ?” ಎಂಬ ಪ್ರಶ್ನೆ ಈಗ ಪ್ರತಿಯೊಬ್ಬರ ಮನಸ್ಸಿನಲ್ಲೂ ಕಾಡುತ್ತಿದೆ. ... Read more The post Property Rights: ಪ್ರೀತಿಸಿ ಮದುವೆಯಾದರೆ ತಂದೆಯ ಆಸ್ತಿಯಲ್ಲಿ ಪಾಲಿಲ್ವಾ? ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು. appeared first on Karnataka Times .

ಕರ್ನಾಟಕ ಟೈಮ್ಸ್ 20 Dec 2025 11:42 am

ವಿಶೇಷ ಸ್ಥಾನಮಾನದ ಬಳಿಕ ಕಲ್ಯಾಣ ಕರ್ನಾಟಕಕ್ಕೆ 19,778.33 ಕೋಟಿ ರೂ.ಹಂಚಿಕೆ

ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ

ವಾರ್ತಾ ಭಾರತಿ 20 Dec 2025 11:24 am

ವಿಶೇಷ ಸ್ಥಾನಮಾನದ ಬಳಿಕ ಕಲ್ಯಾಣ ಕರ್ನಾಟಕಕ್ಕೆ19,778.33 ಕೋಟಿ ರೂ.ಹಂಚಿಕೆ

ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ

ವಾರ್ತಾ ಭಾರತಿ 20 Dec 2025 11:24 am

ಪ್ರಚೋದನಕಾರಿ ಪೋಸ್ಟ್| ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವಿಯಾ ವಿರುದ್ಧ ಎಫ್ಐಆರ್ ದಾಖಲು

ಪಶ್ಚಿಮ ಬಂಗಾಳ: ಕೋಮು ಸೌಹಾರ್ದತೆಗೆ ಬೆದರಿಕೆ ಒಡ್ಡುವಂತಹ ಹಾಗೂ ಭಾರತದ ಸಾರ್ವಭೌಮತೆಗೆ ಧಕ್ಕೆ ತರುವಂತಹ ಸಾಮಾಜಿಕ ಮಾಧ್ಯಮ ಪೋಸ್ಟ್ ಮಾಡಿದ ಆರೋಪದಲ್ಲಿ  ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವಿಯಾ ವಿರುದ್ಧ ಪಶ್ಚಿಮ ಬಂಗಾಳದ ನರೇಂದ್ರಪುರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಡಿಸೆಂಬರ್ 19ರಂದು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಅಮಿತ್ ಮಾಳವಿಯಾ ಪ್ರಚೋದನಕಾರಿ ಪೋಸ್ಟ್ ಮಾಡಿದ್ದಾರೆ ಎಂದು ಆರೋಪಿಸಿ ಟಿಎಂಸಿ ನಾಯಕ ತನ್ಮೋಯ್ ಘೋಷ್ ನರೇಂದ್ರ ಪುರ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ. ಈ ದೂರಿನಲ್ಲಿ ನಿರ್ದಿಷ್ಟ ಪೋಸ್ಟ್ ಒಂದನ್ನು ಉಲ್ಲೇಖಿಸಲಾಗಿದ್ದು, ಇದು ಕೋಮು ಸೌಹಾರ್ದತೆಯ ವಿರುದ್ಧ ಪ್ರಚೋದನೆ ನೀಡುವಂತಿದೆ ಎಂದು ಆರೋಪಿಸಲಾಗಿದೆ. ಇದರಿಂದ ಭಾರತದ ಸಾರ್ವಭೌಮತೆಗೆ ಗಮನಾರ್ಹ ಬೆದರಿಕೆ ಎದುರಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಬಾಂಗ್ಲಾದೇಶದ ಢಾಕಾದಲ್ಲಿ ನಡೆಯುತ್ತಿರುವ ಧ್ವಂಸ ಕಾರ್ಯಾಚರಣೆ ಒಂದು ಎಚ್ಚರಿಕೆಯಾಗಿದೆ. ಭಯೋತ್ಪಾದನೆಯನ್ನು ತುಷ್ಟೀಕರಣ ಮಾಡಿದಾಗ ಹಾಗೂ ಕಾನೂನು ರಾಹಿತ್ಯವನ್ನು ಸಹಜವೆಂಬಂತೆ ಸ್ವೀಕರಿಸಿದಾಗ ಹೇಗೆ ಸಮಾಜದ ಹೆಣಿಗೆ ಬಿಚ್ಚಿಕೊಳ್ಳುತ್ತದೆ ಎಂಬುದಕ್ಕೆ ಇದು ನಿದರ್ಶನ” ಎಂದು ಅಮಿತ್ ಮಾಳವಿಯಾ ಹೇಳಿದ್ದರು.

ವಾರ್ತಾ ಭಾರತಿ 20 Dec 2025 11:22 am

ರಾಜ್ಯದಲ್ಲಿ ಐದು ವರ್ಷದಲ್ಲಿ 24,139 ಮಾನವ ಹಕ್ಕು ಉಲ್ಲಂಘನೆ! ಬೆಂಗಳೂರು, ಮೈಸೂರಿನಲ್ಲೇ ಅಧಿಕ ಪ್ರಕರಣ

ರಾಜ್ಯದಲ್ಲಿ ಕಳೆದ ಐದು ವರ್ಷಗಳಲ್ಲಿ 24,139 ಮಾನವ ಹಕ್ಕುಗಳ ಉಲ್ಲಂಘನೆ ಪ್ರಕರಣಗಳು ವರದಿಯಾಗಿವೆ. ಬೆಂಗಳೂರು ನಗರ ಮತ್ತು ಮೈಸೂರಿನಲ್ಲಿ ಈ ಸಂಖ್ಯೆ ಗಣನೀಯವಾಗಿದೆ.ಈ ಮಾನವ ಉಲ್ಲಂಘನೆಗಳಿಗೆ ಕಡಿವಾಣ ಹಾಕಲು ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗವು ಇಂತಹ ಪ್ರಕರಣಗಳನ್ನು ದಾಖಲಿಸಿ, ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುತ್ತಿದೆ.ಜೊತೆಗೆ ಸಂತ್ರಸ್ತರಿಗೆ ಪರಿಹಾರ ನೀಡಲು ಸರ್ಕಾರಕ್ಕೆ ಶಿಫಾರಸು ಮಾಡಲಾಗುತ್ತದೆ. ಆದಾಗ್ಯೂ ರಾಜಧಾನಿ ಸೇರಿಂದತೆ ಪ್ರಮುಖ ನಗರಗಳಲ್ಲಿ ದಿನದಿಂದ ದಿನಕ್ಕೆ ಇಂತಹ ಪ್ರಕರಣಗಳಲ್ಲಿ ಏರಿಕೆಯಾಗುತ್ತಿದೆ.

ವಿಜಯ ಕರ್ನಾಟಕ 20 Dec 2025 11:16 am

ಟಿ-20 ವಿಶ್ವಕಪ್‌ಗೆ ಭಾರತ ತಂಡ ಪ್ರಕಟಿಸಲಿದೆ ಬಿಸಿಸಿಐ; ಗಿಲ್‌ಗೆ ಫಾರ್ಮ್‌ ಚಿಂತೆ, ಆಯ್ಕೆದಾರರ ಕಣ್ಣು ಯಾರ ಮೇಲಂತೆ?

ಮಹತ್ವದ ಬೆಳವಣಿಗೆಯೊಂದರಲ್ಲಿ ಇಂದು (ಡಿ.20-ಶನಿವಾರ) 2026ರಲ್ಲಿ ನಡೆಯಲಿರುವ ಟಿ-20 ವಿಶ್ವಕಪ್‌ ಪಂದ್ಯಾವಳಿಗೆ, ಬಿಸಿಸಿಐ ಭಾರತ ತಂಡವನ್ನು ಪ್ರಕಟಿಸಲಿದೆ. ಜೊತೆಗೆ ನ್ಯೂಜಿಲೆಂಡ್‌ ವಿರುದ್ಧದ ಟಿ-20 ಸರಣಿಗೂ ಇಂದು ತಂಡ ಪ್ರಕಟಗೊಳ್ಳಲಿದೆ. ವಿಶ್ವಕಪ್‌ ಪಂದ್ಯಾವಳಿಗೆ ಭಾರತ ತಂಡ ಪ್ರಕಟಿಸುವುದು ಬಿಸಿಸಿಐಗೆ ಸವಾಲಿನ ಕೆಲಸವಾಗಿದೆ. ಶುಭ್ಮನ್‌ ಗಿಲ್‌ ಅವರ ಕಳಪೆ ಫಾರ್ಮ್‌ ಮತ್ತು ಇತರ ಆಟಗಾರರ ನಡುವೆ ಉತ್ತಮ ಆಟಗಾರರನ್ನು ಆಯ್ಕೆ ಮಾಡುವ ವಿಚಾರದಲ್ಲಿ ಬಿಸಿಸಿಐ ಗೊಂದಲದಲ್ಲಿದೆ. ಆದಾಗ್ಯೂ, ಮಧ್ಯಾಹ್ನ ನಡೆಯುವ ಪತ್ರಿಕಾಗೋಷ್ಠಿಯಲ್ಲಿ ಎಲ್ಲದಕ್ಕೂ ಉತ್ತರ ದೊರೆಯಲಿದೆ.

ವಿಜಯ ಕರ್ನಾಟಕ 20 Dec 2025 11:11 am

ಮೊದಲ ಮಹಿಳಾ ಹುತಾತ್ಮ ಕ್ರಾಂತಿಕಾರಿ ಪ್ರೀತಿಲತಾ ವಡ್ಡೇದಾರ್ : ಇವರಾರೂ ಕ್ಷಮೆ ಯಾಚಿಸಲಿಲ್ಲ!

ಸ್ವಾತಂತ್ರ್ಯ ಯಜ್ಞಕುಂಡಕ್ಕೆ ಧುಮುಕಿದವರು!► ಭಾಗ - 2

ವಾರ್ತಾ ಭಾರತಿ 20 Dec 2025 11:00 am

IMD Weather: ಶೀತಗಾಳಿ, ಚಳಿಯೊಂದಿಗೆ ಈ ರಾಜ್ಯಗಳಲ್ಲಿ ಮಳೆ ಮುನ್ಸೂಚನೆ

ಕರ್ನಾಟಕ ಸೇರಿ ವಿವಿಧ ರಾಜ್ಯಗಳಲ್ಲಿ ರಾತ್ರಿ ಹಾಗೂ ಬೆಳಿಗ್ಗೆ ದಟ್ಟವಾದ ಮಂಜಿನ ವಾತಾವರಣ ಮುಂದುವರಿಯುವ ಸಾಧ್ಯತೆ ಹೆಚ್ಚು. ಪಂಜಾಬ್‌, ಉತ್ತರಾಖಂಡ, ಹರಿಯಾಣ, ಚಂಡೀಗಢ, ಪಶ್ಚಿಮ ಉತ್ತರ ಪ್ರದೇಶ, ಉತ್ತರ ಮಧ್ಯಪ್ರದೇಶ, ಬಿಹಾರದಲ್ಲಿ ಶೀತ ದಿನ ಮುಂದುವರಿಯುವ ಸಾಧ್ಯತೆ ಇದೆ, ಕೆಲವೆಡೆ ಮಳೆಯಾಗುವ ಮುನ್ಸೂಚನೆ ಇದೆ ಎಂದು ಹವಾಮಾನ ಇಲಾಖೆ ಹೇಳಿದೆ. ತೆಲಂಗಾಣ ಮತ್ತು ದಕ್ಷಿಣದ ಪ್ರತ್ಯೇಕ ಸ್ಥಳಗಳಲ್ಲಿ

ಒನ್ ಇ೦ಡಿಯ 20 Dec 2025 10:55 am

ಡಿಸೆಂಬರ್ 20ರಂದು ರಾಜ್ಯದಲ್ಲಿ ಪೆಟ್ರೋಲ್‌, ಡೀಸೆಲ್‌ ದರ ಎಷ್ಟಿದೆ?: ಜಿಲ್ಲಾವಾರು ಅಂಕಿಅಂಶಗಳ ವಿವರ

Petrol, Diesel Price: ಪೆಟ್ರೋಲ್, ಡೀಸೆಲ್‌ ದರದಲ್ಲಿ ಜಾಸ್ತಿ ಅಲ್ಲದಿದ್ದರೂ, ಸ್ವಲ್ಪ ಪ್ರಮಾಣದಲ್ಲಾದ್ರೂ ಏರಿಳಿತ ಆಗುತ್ತಿರುತ್ತದೆ. ಹಾಗಾದರೆ, ಇಂದು (ಡಿಸೆಂಬರ್ 20) ಬೆಂಗಳೂರು ಸೇರಿದಂತೆ ರಾಜ್ಯದ ಉಳಿದ ಜಿಲ್ಲೆಗಳಲ್ಲಿ ಲೀಟರ್‌ ಪೆಟ್ರೋಲ್‌, ಡೀಸೆಲ್‌ ಬೆಲೆ ಎಷ್ಟಿದೆ ಎನ್ನುವ ಅಂಕಿಅಂಶಗಳನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ. ಶಕ್ತಿಯ ಮೂಲಗಳು ಎನಿಸಿಕೊಂಡಿರುವ ಪೆಟ್ರೋಲ್ ಮತ್ತು ಡೀಸೆಲ್ ಇಂಧನ ಅತ್ಯವಶ್ಯಕವಾಗಿ ಬೇಕಾಗುವ ಸಂಪನ್ಮೂಲಗಳಾಗಿವೆ.

ಒನ್ ಇ೦ಡಿಯ 20 Dec 2025 10:49 am

ಕೇರಳ ಕಮ್ಯುನಿಸ್ಟರ ಸೋಲಿಗೆ ಭಾರತ ಬೆಲೆ ತೆರಬೇಕಾದೀತು..!

‘‘ಭಾರತದ ಇತರ ಯಾವುದೇ ಕಡೆ ಕೇರಳದಂತೆ ಕಮ್ಯುನಿಸ್ಟ್ ಸರಕಾರಗಳು ತಲೆ ಎತ್ತದಂತೆ ತಡೆಯಬೇಕು’’ ಎಂದು ಕೇರಳದ ಮೊದಲ ಕಮ್ಯುನಿಸ್ಟ್ ಸರಕಾರದ ಸಮಯದಲ್ಲಿದ ಭಾರತದ ಅಂದಿನ ಅಮೆರಿಕದ ರಾಯಭಾರಿ ಡೇನಿಯಲ್ ಪ್ಯಾಟ್ರಿಕ್ ಮೊಯ್ನಿಹಾನ್ ತಮ್ಮ ಆತ್ಮಕತೆಯಲ್ಲಿ ಬರೆದ ಮಾತಿದು..!. ಜನತಾಂತ್ರಿಕ ಚುನಾವಣಾ ಪ್ರಜಾಪ್ರಭುತ್ವದ ಮೂಲಕ ಆರಿಸಿ ಬಂದ ಜಗತ್ತಿನ ಹಾಗೂ ಭಾರತದ ಮೊದಲ ಕಮ್ಯುನಿಸ್ಟ್ ಸರಕಾರ ಕೇರಳ ರಾಜ್ಯದ್ದು. ಪುಟ್ಟ ರಾಜ್ಯ ಕೇರಳದಲ್ಲಿ ಕಮ್ಯುನಿಸ್ಟ್ ಸರಕಾರವನ್ನು ಬುಡಸಮೇತ ಕಿತ್ತು ಹಾಕಲು ಜಗತ್ತಿನ ದೊಡ್ಡಣ್ಣನ ದುಸ್ಸಾಹಸಗಳನ್ನು ಇತಿಹಾಸದ ಪುಟಗಳೇ ಹೇಳುವಾಗ, ಯಕಶ್ಚಿತ್ ಸ್ಥಳೀಯ ಚುನಾವಣೆಯಲ್ಲಿ ಕಮ್ಯುನಿಸ್ಟ್ ಪಕ್ಷಗಳ ಸಣ್ಣ ಮಟ್ಟದ ಹಿನ್ನಡೆಯನ್ನು ಆಳುವ ಕೇಂದ್ರದ ಪ್ರಭುತ್ವ ಹಾಗೂ ಮಾಧ್ಯಮಗಳು ಸೇರಿದಂತೆ ಇಡೀ ವ್ಯವಸ್ಥೆ ಕೇಕೆ ಹಾಕುತ್ತಿರುವುದು ಕಂಡು ಆಶ್ಚರ್ಯವಾಗಬೇಕಿಲ್ಲ. ವಿಧಾನಸಭಾ ಚುನಾವಣೆಯ ಒಂದು ವರ್ಷದ ಹೊಸ್ತಿಲಲ್ಲಿ ನಡೆಯುವ ಕೇರಳ ಸ್ಥಳೀಯ ಸಂಸ್ಥೆಗಳ ಚುನಾವಣೆಯ ಫಲಿತಾಂಶ ರಾಜ್ಯದ ವಿಧಾನಸಭೆಯ ಮೇಲೂ ಪರಿಣಾಮ ಬೀರುವುದು ವಾಡಿಕೆ. ಆಳುವ ಪಕ್ಷದ ಮುಂದಿನ ಭವಿಷ್ಯವನ್ನು ಸ್ಥಳೀಯ ಸಂಸ್ಥೆಯ ಚುನಾವಣಾ ಫಲಿತಾಂಶವೇ ಕನ್ನಡಿ ಹಿಡಿದು ತೋರಿಸಿ ಬಿಡುತ್ತದೆ. ಆದ್ದರಿಂದಲೇ ಅಸ್ತಿತ್ವಕ್ಕಾಗಿ ಹೆಣಗಾಡುತ್ತಿದ್ದ ಬಿಜೆಪಿ ಕೇವಲ ಒಂದೇ ಮಹಾನಗರ ಪಾಲಿಕೆಯನ್ನು ಬಾಚಿಕೊಂಡು, ಕೆಲವು ಗ್ರಾಮೀಣ ಮಟ್ಟದಲ್ಲಿ ನಿರೀಕ್ಷೆ ಮೀರಿ ಬಂದಿರುವ ಫಲಿತಾಂಶದಿಂದ ಶಾಸನಸಭೆಯಲ್ಲಿ ಸಂಖ್ಯೆಯ ಬಲಾಬಲ ತೋರಿಸಿಕೊಳ್ಳುವ ಭ್ರಮಾಲೋಕದಲ್ಲಿ ತೇಲುತ್ತಿದೆ. ಕಾಂಗ್ರೆಸ್ ನೇತೃತ್ವದ ಯುಡಿಎಫ್ ಪಾಲಿಗೆ ಬಂದಿರುವ ಸಕಾರಾತ್ಮಕ ಫಲಿತಾಂಶದಿಂದ ರಾಜ್ಯದ ಗದ್ದುಗೆ ಏರುವ ಕನಸು ಕಾಣುತ್ತಿದೆ. ಮೇಲಿನ ಇವೆರಡೂ ರಾಜಕೀಯ ಬೆಳವಣಿಗೆಗಳು ಮುಂದಿನ ಒಂದೇ ವರ್ಷದಲ್ಲಿ ಕೇರಳದಲ್ಲಿ ನಡೆಯಲು ಸಂಭವವೇ ಇಲ್ಲ ಎಂದು ಹೇಳಲು ಸಾಧ್ಯವಿಲ್ಲದಂತೆ ಸ್ಥಳೀಯ ಚುನಾವಣೆಯ ಫಲಿತಾಂಶ ಕಟ್ಟಿಹಾಕುತ್ತಿದೆ. ಕೇರಳದ ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶದ ಒಳನೋಟಗಳನ್ನು ಸರಕಾರದ ಆಡಳಿತ ವಿರೋಧಿ ಅಲೆ, ಭ್ರಷ್ಟಾಚಾರ ಕೈಗಂಟಿಸಿಕೊಂಡಿರುವ ಮಂತ್ರಿಗಳು, ಶಬರಿಮಲೆ ವಿವಾದ, ಹೀಗೆ ಸಿದ್ಧಮಾದರಿಯ ಅಂಶಗಳನ್ನು ಮಾತ್ರ ಅವಲೋಕಿಸಿದರೆ ಪೇಲವವಾದೀತು. ಕೇರಳ ಇಂದು ಸ್ವಾಮಿ ವಿವೇಕಾನಂದರ ‘ಹುಚ್ಚರ ಸಂತೆ’ಯಿಂದ ಬಿಡುಗಡೆಗೊಂಡು, ಸುಶಿಕ್ಷಿತರ ನಾಡಾಗಿ ಹೊರಳುವ ಮಹತ್ತರ ಕಾಲದಲ್ಲಿಯೇ ಮೂಲಭೂತವಾದಿಗಳ ಕೈಗೆ ಹೋಗುತ್ತಿರುವ ಭಾರೀ ಅಪಾಯವನ್ನು ಒಳಗಣ್ಣಿನಿಂದಲೇ ನೋಡಬೇಕಿದೆ. ಕೇರಳ ಕಳೆದ ದಶಕಗಳಿಂದ ಅತ್ಯಂತ ವ್ಯವಸ್ಥಿತವಾಗಿ ಮೂಲಭೂತವಾದಿಗಳ ಕ್ರಿಯಾಶೀಲ ಚಟುವಟಿಕೆಗಳಿಗೆ ಸಾಕ್ಷಿಯಾಗುತ್ತಿದೆ. ರಾಜ್ಯದ ಜನಸಂಖ್ಯೆಯಲ್ಲಿ ಶೇ. 26.56 ಮುಸ್ಲಿಮರನ್ನು, ಶೇ. 18.4 ಕ್ರಿಶ್ಚಿಯನ್ನರನ್ನೂ ಹೊಂದಿರುವ ಕೇರಳದಲ್ಲಿ ಸಂಘಪರಿವಾರಕ್ಕೆ ಸೈದ್ಧಾಂತಿಕ ಎದುರಾಳಿ ಕಮ್ಯುನಿಸ್ಟರೇ ಹೊರತು ಕಾಂಗ್ರೆಸ್ ಪಕ್ಷ ಅಲ್ಲವೇ ಅಲ್ಲ. ಅಲ್ಪಸಂಖ್ಯಾತ ಹಾಗೂ ಬಹುಸಂಖ್ಯಾತ ಮೂಲಭೂತವಾದಿಗಳಿಗೆ ಸೈದ್ಧಾಂತಿಕವಾಗಿ ಕಮ್ಯುನಿಸ್ಟರು ಶತ್ರುಗಳಾಗಿರುವಾಗ, ಕಮ್ಯುನಿಸ್ಟರು ಇವೆರಡೂ ವಿಚ್ಛಿದ್ರಕಾರಿ ಶಕ್ತಿಗಳನ್ನು ಎದುರಿಸಬೇಕಾಗಿದೆ. ಯುಡಿಎಫ್ ನೇತೃತ್ವದ ಕಾಂಗ್ರೆಸ್ ಪಕ್ಷವೂ ಸೈದ್ಧಾಂತಿಕ ರಾಜಕೀಯದ ಒಳಸುಳಿಗಳನ್ನು ಸೂಕ್ಷ್ಮವಾಗಿ ಅರ್ಥೈಸಿಕೊಳ್ಳದೆ ಅಪವಿತ್ರ ಮೈತ್ರಿಗಳಿಗೆ ಸಾಕ್ಷಿಯಾಗುತ್ತಿರುವುದು ಸ್ವತಃ ಕಾಂಗ್ರೆಸ್ ಪಕ್ಷಕ್ಕೆ ಹಾನಿಯಾಗುತ್ತಿದೆ. ಅದಕ್ಕೆ ತಿರುವಂತನಪುರ ಮಹಾನಗರಪಾಲಿಕೆ ಚುನಾವಣಾ ಫಲಿತಾಂಶವೇ ಸಾಕ್ಷಿ.! 1956-57ರಿಂದ 2021ರ ಕೇರಳ ವಿಧಾನಸಭೆ ಚುನಾವಣೆವರೆಗೂ ಐದು ಬಾರಿ ರಾಷ್ಟ್ರಪತಿ ಆಡಳಿತ ನೋಡಿರುವ ಕೇರಳ ರಾಜ್ಯ, ಐದು ವರ್ಷಗಳ ಆಡಳಿತ ನಡೆಸಿದ ಪಕ್ಷವನ್ನು ಮತ್ತೆ ಆಡಳಿತದಲ್ಲಿ ಮುಂದುವರಿಸಿರುವ ಇತಿಹಾಸ ಇಲ್ಲ. ಆದರೆ ಅಂತಹ ಇತಿಹಾಸವನ್ನೇ ಬದಲಾಯಿಸಿದ್ದು ಪಿಣರಾಯಿ ವಿಜಯನ್ ನೇತೃತ್ವದ ಸಿಪಿಎಂ ಪಕ್ಷ. ಸತತವಾಗಿ ಎರಡು ಬಾರಿ ಅಧಿಕಾರಕ್ಕೆ ತಂದ ಪಿಣರಾಯಿ ನೇತೃತ್ವದ ಸಿಪಿಎಂನ ಪಡೆ ಇಂದು ಸ್ಥಳೀಯ ಚುನಾವಣೆಯಲ್ಲಿ ಮುಗ್ಗರಿಸಿರುವುದು ಸ್ವತಃ ಸಿಪಿಎಂನ ಜಂಘಾಬಲವೇ ಕುಸಿಯುವಂತೆ ಮಾಡಿದೆ. ಲೋಕ ಸಭಾ ಚುನಾವಣೆಯ ಭಾರೀ ಸೋಲಿನಿಂದ ಪಕ್ಷ ಪಾಠ ಕಲಿತಿಲ್ಲ ಎಂಬುದನ್ನು ಸ್ಥಳೀಯ ಚುನಾವಣೆ ಫಲಿತಾಂಶ ಎತ್ತಿ ತೋರಿಸುತ್ತಿದೆ. ದೇಶದಲ್ಲಿ ಆಡಳಿತದಲ್ಲಿರುವ ಹಾಗೂ ಆಡಳಿತವನ್ನು ಉಳಿಸಿಕೊಳ್ಳಲೇಬೇಕಾದ ಕಮ್ಯುನಿಸ್ಟ್ ರಾಜ್ಯ ಕೇರಳ ಮಾತ್ರ. ಒಂದು ವೇಳೆ 2026ರಲ್ಲಿ ನಡೆಯಲಿರುವ ಕೇರಳ ವಿಧಾನಸಭೆಯಲ್ಲಿ ಸಿಪಿಎಂ ಸೋತಿದ್ದೇ ಆದರೆ ಸ್ವತಂತ್ರ ಭಾರತದ ಚುನಾವಣಾ ಇತಿಹಾಸದಲ್ಲಿ 1960ರ ನಂತರ ಯಾವ ರಾಜ್ಯದಲ್ಲೂ ಕಮ್ಯುನಿಸ್ಟ್ ಆಡಳಿತವೇ ಇಲ್ಲದ ಭಾರತವನ್ನು ಎದುರು ನೋಡಬೇಕಾಗುತ್ತದೆ.! ಬಂಗಾಳದಲ್ಲಿ ಏಳು ಬಾರಿ, ತ್ರಿಪುರಾದಲ್ಲಿ 25 ವರ್ಷಗಳ ಕಾಲ ಆಡಳಿತ ನಡೆಸಿದ್ದ ಸಿಪಿಎಂ, ಈ ಉಭಯ ರಾಜ್ಯಗಳಲ್ಲಿ ಕೇವಲ ಹತ್ತೇ ವರ್ಷಗಳಲ್ಲಿ ತನ್ನ ಅಸ್ತಿತ್ವದ ಉಳಿವಿನ ಹುಡುಕಾಟ ನಡೆಸುತ್ತಿದೆ. ಮುಂದಿನ ಹತ್ತು ವರ್ಷಗಳಲ್ಲೂ ಅಧಿಕಾರ ಹಿಡಿಯುವ ಸಣ್ಣ ಸೂಚನೆಯೂ ಕಾಣುತ್ತಿಲ್ಲ. ಬಲಪಂಥೀಯ ರಾಜಕೀಯಕ್ಕೆ ಎಡಪಂಥವೇ ಸೈದ್ಧಾಂತಿಕ ಹೋರಾಟದ ಪರ್ಯಾಯ ಎಂದು ವ್ಯಾಖ್ಯಾನಿಸುವವರಿಗೆ ಬಿಜೆಪಿ ವಿರುದ್ಧ ಸಿಪಿಎಂ ಅನ್ನು ಎದುರಾಳಿಯಾಗಿ ನೋಡಲು ಈ ಎರಡೂ ರಾಜ್ಯಗಳ ರಾಜಕೀಯ ಬೆಳವಣಿಗೆ ಸಹಕರಿಸಲು ಸಾಧ್ಯವಾಗುವುದಿಲ್ಲ. ಕಳೆದ ಎರಡು ದಶಕಗಳಿಂದ ಸಿಪಿಎಂ ಹಾಗೂ ಎಡಪಕ್ಷಗಳು ಚುನಾವಣಾ ರಾಜಕೀಯದಲ್ಲಿ ಭಾರೀ ಹಿನ್ನಡೆ ಅನುಭವಿಸಿರುವುದು ಮಾತ್ರವಲ್ಲ, ತನ್ನ ಅಸ್ತಿತ್ವವನ್ನೇ ಕಳೆದುಕೊಳ್ಳುತ್ತಿರುವ ಕಾಲಘಟ್ಟದಲ್ಲಿದೆ. ಕೊನೆಯ ಮಾತು. ದೇಶದಲ್ಲಿ ಕಮ್ಯುನಿಸ್ಟ್ ಪಕ್ಷಗಳ ಚುನಾವಣಾ ಸೋಲು ದಮನಿತ, ಅಲ್ಪಸಂಖ್ಯಾತ, ಧ್ವನಿ ಇಲ್ಲದ ಶೋಷಿತ ವರ್ಗದ ಸೋಲೆಂದೇ ಅರ್ಥ. ಸಂಸತ್, ವಿಧಾನಸಭೆಗಳಲ್ಲಿ ಕಮ್ಯುನಿಸ್ಟರ ಸಂಖ್ಯೆಯ ಕ್ಷೀಣಿಸುವಿಕೆಯಿಂದ ದುಡಿಯುವ ವರ್ಗದ ಕತೆ ಏನಾಗಿದೆ? ಎಂಬುದನ್ನು ವರ್ತಮಾನ ಸಾಕ್ಷೀಕರಿಸಿದೆ. ಕಮ್ಯುನಿಸ್ಟರ ಸೋಲಿನ ಸಂಭ್ರಮ ಭವಿಷ್ಯತ್ತಿನ ಭಾರತದ ಕರಾಳತೆಯ ಆಹ್ವಾನವಾಗಲಿದೆ.

ವಾರ್ತಾ ಭಾರತಿ 20 Dec 2025 10:42 am

ಜನವರಿಯಿಂದ ಔಷಧಿ ರಂಗದಲ್ಲೂ ಒಂದು ‘ಇಂಡಿಗೊ ಸಂಕಟಕ್ಕೆ’ ದೇಶ ಸನ್ನದ್ಧ

ಗೊತ್ತಿದ್ದೂ ಗೊತ್ತಿದ್ದೂ ಇಂತಹದೊಂದು ಸಂಕಟದ ಸ್ಥಿತಿಯತ್ತ ಔಷಧಿ ಉದ್ಯಮ ಏಕೆ ಸಾಗುತ್ತಿದೆ ಎಂದು ಆಳವಾಗಿ ನೋಡಿದರೆ, ಇದರಲ್ಲಿ ಒಂದೆಡೆ ಸಣ್ಣ ಉದ್ದಿಮೆಗಳ ನಿರುತ್ಸಾಹ, ಪ್ಲ್ಯಾನಿಂಗ್‌ನಲ್ಲಿ ಕೊರತೆ ಹಾಗೂ ಬೆಂಕಿ ಬಿದ್ದ ಬಳಿಕವಷ್ಟೇ ಅದನ್ನು ಆರಿಸಬೇಕೆಂದು ಎಚ್ಚರಗೊಳ್ಳುವ ಸರಕಾರಿ ಬುದ್ಧಿವಂತಿಕೆಗಳು ಎದ್ದು ಕಾಣಿಸುತ್ತಿವೆ. ಇಂಡಿಗೊ ಪ್ರಕರಣದಲ್ಲಿ ನಾಗರಿಕ ವಿಮಾನಯಾನ ನಿರ್ದೇಶನಾಲಯ (DGCA) ಹೇಗೆ ಮುಂಗಾಣ್ಕೆ ಇಲ್ಲದೆ ವರ್ತಿಸಿತೋ, ಅದೇ ಹಾದಿಯಲ್ಲಿ ಈಗ ಔಷಧಿ ರಂಗದ ನಿಯಂತ್ರಣ ಹೊಂದಿರುವ ಕೇಂದ್ರೀಯ ಔಷಧಿ ಗುಣಮಟ್ಟ ನಿಯಂತ್ರಣ ಸಂಸ್ಥೆ (CDSCO) ಕೂಡ ವರ್ತಿಸುತ್ತಿದೆ ಎಂಬುದು ಮೇಲುನೋಟಕ್ಕೇ ಗೋಚರ. ದೇಶದಲ್ಲಿರುವ ಸುಮಾರು 12,000 ಔಷಧಿ ಉತ್ಪಾದಕ ಸಂಸ್ಥೆಗಳಲ್ಲಿ, ಅಂದಾಜು 8,500ಕ್ಕೂ ಮಿಕ್ಕಿ ಸಂಸ್ಥೆಗಳು ಮಧ್ಯಮ, ಸಣ್ಣ ಮತ್ತು ಅತಿಸಣ್ಣ ಉದ್ಯಮಗಳ (MSME) ವ್ಯಾಪ್ತಿಯಲ್ಲಿ ಬರುತ್ತವೆ. ಸರಕಾರ ತನ್ನ ನಿಯಮಗಳನ್ನು ಇಂಡಿಗೊ ಪ್ರಕರಣದಲ್ಲಿ ಮಾಡಿದ ರೀತಿಯಲ್ಲೇ ಖಡಕ್ಕಾಗಿ ಪಾಲಿಸಿದರೆ, 8,500ರಲ್ಲಿ ಬಹುತೇಕ ಅರ್ಧಕ್ಕೂ ಮಿಕ್ಕಿ (ಶೇ. 60 ಎಂದು ಅಂದಾಜು) ಔಷಧಿ ಕಂಪೆನಿಗಳು ಜನವರಿ ಒಂದರಿಂದ ಅಂಗಡಿ ಮುಚ್ಚುವುದು ಅನಿವಾರ್ಯ ಆಗಲಿದೆ. ಹಾಗೇನಾದರೂ ಆದರೆ, ಇಂಡಿಗೊ ಸಂಕಟದ ಸಮಯದಲ್ಲಿ ಆದಂತಹದೇ ಸನ್ನಿವೇಶ ಎದುರಾಗಬಹುದು. ಸಾಮಾನ್ಯವಾಗಿ ಬಳಕೆಯಲ್ಲಿರುವ ಹಲವು ಔಷಧಿಗಳ ಉತ್ಪಾದನೆ ಏಕಾಏಕಿ ಸ್ಥಗಿತಗೊಳ್ಳಲಿದೆ, ಭಾರತದಲ್ಲಿ ಮಾತ್ರವಲ್ಲದೆ ಭಾರತವು ಔಷಧಿ ರಫ್ತು ಮಾಡುವ ಹಲವು ಬಡ, ಮಧ್ಯಮ ಆದಾಯವರ್ಗದ ದೇಶಗಳಲ್ಲಿ ಔಷಧಿ ಕೊರತೆ ಕಾಡಲಿದೆ. ಮಾತ್ರವಲ್ಲದೆ, ಸಾವಿರಾರು ಮಂದಿ ಭಾರತೀಯರು ಉದ್ಯೋಗ ಕಳೆದುಕೊಳ್ಳುವ ಸಾಧ್ಯತೆಗಳಿವೆ. ಭಾರತದ ಒಟ್ಟು ಔಷಧಿ ಮಾರುಕಟ್ಟೆಯ ಗಾತ್ರ 2.5ಲಕ್ಷ ಕೋಟಿ ರೂ.ಗಳದಾಗಿದ್ದು, ಅದರಲ್ಲಿ 75,000 ಕೋಟಿ ರೂ.ಗಳ ವಹಿವಾಟು ಏಕಾಏಕಿ ಸ್ಥಗಿತಗೊಳ್ಳಬಹುದು. ಹಾಗೆಂದು ಔಷಧಿ ಉತ್ಪಾದಕ ಸಂಸ್ಥೆಗಳ ಸಂಘಟನೆಗಳು ಎಚ್ಚರಿಸಿವೆ. ಗೊತ್ತಿದ್ದೂ ಗೊತ್ತಿದ್ದೂ ಇಂತಹದೊಂದು ಸಂಕಟದ ಸ್ಥಿತಿಯತ್ತ ಔಷಧಿ ಉದ್ಯಮ ಏಕೆ ಸಾಗುತ್ತಿದೆ ಎಂದು ಆಳವಾಗಿ ನೋಡಿದರೆ, ಇದರಲ್ಲಿ ಒಂದೆಡೆ ಸಣ್ಣ ಉದ್ದಿಮೆಗಳ ನಿರುತ್ಸಾಹ, ಪ್ಲ್ಯಾನಿಂಗ್‌ನಲ್ಲಿ ಕೊರತೆ ಹಾಗೂ ಬೆಂಕಿ ಬಿದ್ದ ಬಳಿಕವಷ್ಟೇ ಅದನ್ನು ಆರಿಸಬೇಕೆಂದು ಎಚ್ಚರಗೊಳ್ಳುವ ಸರಕಾರಿ ಬುದ್ಧಿವಂತಿಕೆಗಳು ಎದ್ದು ಕಾಣಿಸುತ್ತಿವೆ. ಇಂಡಿಗೊ ಪ್ರಕರಣದಲ್ಲಿ ನಾಗರಿಕ ವಿಮಾನಯಾನ ನಿರ್ದೇಶನಾಲಯ (DGCA) ಹೇಗೆ ಮುಂಗಾಣ್ಕೆ ಇಲ್ಲದೆ ವರ್ತಿಸಿತೋ, ಅದೇ ಹಾದಿಯಲ್ಲಿ ಈಗ ಔಷಧಿ ರಂಗದ ನಿಯಂತ್ರಣ ಹೊಂದಿರುವ ಕೇಂದ್ರೀಯ ಔಷಧಿ ಗುಣಮಟ್ಟ ನಿಯಂತ್ರಣ ಸಂಸ್ಥೆ (CDSCO) ಕೂಡ ವರ್ತಿಸುತ್ತಿದೆ ಎಂಬುದು ಮೇಲುನೋಟಕ್ಕೇ ಗೋಚರ. ಆಗಿರುವುದೇನು? ಇವೆಲ್ಲ ರಾತ್ರೋರಾತ್ರಿ ಬಂದಿಳಿದಿರುವ ಸಂಕಟಗಳಲ್ಲ. ಭಾರತದಲ್ಲಿ ಔಷಧಿ ಉತ್ಪಾದನೆಯ ಮೇಲೆ ನಿಯಂತ್ರಣ ಇರುವುದು 1940ರ ಡ್ರಗ್ಸ್ ಆಂಡ್ ಕಾಸ್ಮೆಟಿಕ್ಸ್ ಕಾಯ್ದೆಯಲ್ಲಿ. ಈ ಕಾಯ್ದೆಯ ಅಡಿಯಲ್ಲಿ ನಿಯಮಗಳು ಪ್ರಕಟಗೊಂಡಿರುವುದು 1945ರಲ್ಲಿ (Drug Rules, 1945). ಈ ನಿಯಮಗಳಿಗೆ 2023ರ ಡಿಸೆಂಬರ್ 28ರಂದು ಭಾರತ ಸರಕಾರವು ಮಹತ್ವದ ಬದಲಾವಣೆಗಳನ್ನು ಪ್ರಕಟಿಸಿತ್ತು [GSR 922(E)]. ಅದರ ಅನ್ವಯ, ನಿಯಮಗಳ ಷೆಡ್ಯೂಲ್ ‘ಎಂ’ನಲ್ಲಿ, ‘ಒಳ್ಳೆಯ ಗುಣಮಟ್ಟದ ಉತ್ಪಾದನಾ ಕ್ರಮಗಳು ಮತ್ತು ಅದಕ್ಕಾಗಿ ಸೂಕ್ತ ಸ್ಥಳ, ಕಾರ್ಖಾನೆ, ಉಪಕರಣಗಳ ಅವಶ್ಯಕತೆ’ಯ ಬಗ್ಗೆ ಬಹಳ ವಿವರವಾಗಿ ಹೇಳಲಾಗಿತ್ತು. ಔಷಧಿ ಗುಣಮಟ್ಟ ವ್ಯವಸ್ಥೆ (PQS); ಗುಣಮಟ್ಟ ಸಂಬಂಧಿ ರಿಸ್ಕ್‌ಗಳ ನಿರ್ವಹಣೆ (QRM); ಸ್ವಚ್ಛತೆ ಮತ್ತು ಶುದ್ಧತೆ; ಅರ್ಹತೆ ಮತ್ತು ಮೌಲ್ಯ ಮಾಪನ; ದೂರುಗಳು ಮತ್ತು ಅಡ್ಡ ಪರಿಣಾಮಗಳು; ಕಳಪೆ ಉತ್ಪನ್ನಗಳನ್ನು ಮಾರುಕಟ್ಟೆಯಿಂದ ಹಿಂದೆ ಪಡೆಯುವುದು; ಬದಲಾವಣೆಗಳ ಮೇಲೆ ನಿಯಂತ್ರಣ... ಹೀಗೆ ಹಲವು ತಾತ್ವಿಕ ಬದಲಾವಣೆಗಳನ್ನು ನಿಯಮ ತಿದ್ದುಪಡಿಯಲ್ಲಿ ಸೂಚಿಸಲಾಗಿತ್ತು. ಇದನ್ನೆಲ್ಲ 250 ಕೋಟಿ ರೂ.ಗಿಂತ ಹೆಚ್ಚಿನ ವಾರ್ಷಿಕ ವಹಿವಾಟು ಇರುವ ಔಷಧಿ ಕಂಪೆನಿಗಳು ಆರು ತಿಂಗಳ ಒಳಗೂ (28 ಜೂನ್, 2024) ಮತ್ತು 250 ಕೋಟಿ ರೂ.ಗಿಂತ ಕಡಿಮೆ ವಾರ್ಷಿಕ ವಹಿವಾಟು ಇರುವ ಕಂಪೆನಿಗಳು ಒಂದು ವರ್ಷದ ಒಳಗೂ (28 ಡಿಸೆಂಬರ್, 2024) ಕಡ್ಡಾಯವಾಗಿ ಪಾಲಿಸತೊಡಗಬೇಕಿತ್ತು. ಬಹುತೇಕ ದೊಡ್ಡ ಕಂಪೆನಿಗಳು ಆರ್ಥಿಕವಾಗಿ ಬಲಾಢ್ಯವಾಗಿದ್ದುದರಿಂದ ಇದನ್ನು ಪಾಲಿಸಿದವು. ಆದರೆ ಸಣ್ಣ ಕಂಪೆನಿಗಳಿಗೆ (MSME) ಈ ಬದಲಾವಣೆಗಳನ್ನು ಮಾಡಿಕೊಳ್ಳುವುದು ಸಾಧ್ಯ ಆಗಲಿಲ್ಲ. ಆ ಕಂಪೆನಿಗಳು ಮತ್ತು ಅವರ ಸಂಘಟನೆಗಳು ಸೇರಿ, ಸರಕಾರದ ಬಳಿ ಕೊನೆಯ ದಿನಾಂಕದ ವಿಸ್ತರಣೆಗಾಗಿ ಕೋರಿದವು. ಅದಕ್ಕೆ ಒಪ್ಪಿದ ಭಾರತ ಸರಕಾರವು ಮತ್ತೆ ಒಂದು ವರ್ಷದ ಅವಧಿ ವಿಸ್ತರಣೆ ನೀಡಿತ್ತು. ಆ ಅವಧಿ ಈಗ 2025ರ ಡಿಸೆಂಬರ್ 31ಕ್ಕೆ ಕೊನೆಗೊಳ್ಳಲಿದೆ. ಈ ಒಂದು ಹೆಚ್ಚುವರಿ ವರ್ಷದಲ್ಲಿ ಕೂಡ ಹೆಚ್ಚಿನ ಕಂಪೆನಿಗಳಿಗೆ ಸರಕಾರ ಸೂಚಿಸಿರುವ ತಿದ್ದುಪಡಿಗಳನ್ನು ಮಾಡಿಕೊಳ್ಳುವುದು ಸಾಧ್ಯ ಆಗಿಲ್ಲ ಎಂದು ಹೇಳಲಾಗುತ್ತಿದೆ. ಈ ಕಂಪೆನಿಗಳು 20-30 ವರ್ಷಗಳಿಂದ ಮಾರುಕಟ್ಟೆಯಲ್ಲಿವೆಯಾದರೂ, ತಮ್ಮದೇ ಸಮಸ್ಯೆಗಳ ಸುಳಿಯಲ್ಲಿ ಸಿಲುಕಿಕೊಂಡಿವೆ. ಹಾಗಾಗಿ, ಸರಕಾರ ಸೂಚಿಸಿರುವ ಸುಧಾರಣೆಗಳಿಗೆ ಅಗತ್ಯವಿರುವ ಅಪಾರ ಹೂಡಿಕೆ ಮಾಡಲು ಸಾಧ್ಯವಾಗುವ ಸ್ಥಿತಿಯಲ್ಲಿ ಅವು ಇಲ್ಲ. ಹೊಸ ನಿಯಮಗಳನ್ನು ಪಾಲಿಸಬೇಕಾದರೆ, ತಮ್ಮ ಕಾರ್ಖಾನೆಗಳನ್ನು ಅಪ್‌ಗ್ರೇಡ್ ಮಾಡುವುದು, ಔಷಧಿ ಗುಣಮಟ್ಟ ತಪಾಸಣಾ ಸೌಲಭ್ಯಗಳನ್ನು ಅಭಿವೃದ್ಧಿಪಡಿಸುವುದು ಮತ್ತು ಇವಕ್ಕೆಲ್ಲ ದಾಖಲೆಗಳ ನಿರ್ವಹಣೆ ಮಾಡುವುದು ಅನಿವಾರ್ಯ. ಮೊದಲೇ ಸಾಲದ ಸುಳಿ, ಸಿಬ್ಬಂದಿ ಕೊರತೆಯಿಂದ ಕಂಗೆಟ್ಟಿರುವ ಈ ಔಷಧಿ ಉತ್ಪಾದನಾ ಸಂಸ್ಥೆಗಳಿಗೆ ಸರಕಾರದ ಕಡೆಯಿಂದ ತರಬೇತಿಯ ನೆರವು ಮಾತ್ರವಲ್ಲದೆ, ಆಧುನಿಕ ಔಷಧಿ ತಂತ್ರಜ್ಞಾನ ಮೇಲ್ದರ್ಜೆಗೇರಿಸುವಿಕೆಗೆ ಸಹಾಯಧನ ಯೋಜನೆಯಡಿ (RPTUAS), ತಲಾ ಎರಡು ಕೋಟಿಗಳ ತನಕ ಹಣ ಒದಗಿಸುವುದಾಗಿ ಪ್ರಕಟಿಸಲಾಗಿದೆಯಂತೆ, ಆದರೆ ಈ ಹಣ ಕಾರ್ಖಾನೆಗಳಿಗೆ ತಲುಪುವಲ್ಲಿ ಬಾಟಲ್‌ನೆಕ್ ಇದೆ. ಬದಲಾಗಲು ಆಸಕ್ತಿ ಇರುವ ಕಂಪೆನಿಗಳಿಗೆ ಹಣ ಸಿಗುತ್ತಿಲ್ಲ ಮತ್ತು ಉಳಿದವರಿಗೆ ಬದಲಾಗುವ ಆಸಕ್ತಿಯೂ ಇಲ್ಲ- ಇದು ಒಟ್ಟು ಸನ್ನಿವೇಶ. ಸರಕಾರದ ಕಡೆಯಿಂದ ಈಗಾಗಲೇ ನವೆಂಬರ್ 7ರಂದು ಔಷಧಿ ಕಂಪೆನಿಗಳಿಗೆ ಅಂತಿಮ ಎಚ್ಚರಿಕೆ ನೋಟಿಸ್ ಹೊರಟಿದ್ದು, ನಿಯಮ ಪಾಲಿಸದಿದ್ದಲ್ಲಿ ಕಠಿಣ ಕ್ರಮಗಳ ಎಚ್ಚರಿಕೆ ನೀಡಲಾಗಿದೆ. ಮಾತ್ರವಲ್ಲದೆ, ರಾಜ್ಯಗಳ ಮಟ್ಟದಲ್ಲಿ ಆಗುತ್ತಿರುವ ಬದಲಾವಣೆಗಳ ಕುರಿತು ಮಹಿತಿ ಪಡೆಯಲು, ಪ್ರತೀ ತಿಂಗಳು ಔಷಧಿ ಕಂಪೆನಿಗಳ ತಪಾಸಣೆ, ಗಮನಿಸುವಿಕೆ, ಸೂಚಿಸಲಾದ ಕ್ರಮಗಳ ಬಗ್ಗೆ ವರದಿ ನೀಡುವಂತೆ ರಾಜ್ಯ ಔಷಧಿ ನಿಯಂತ್ರಕರಿಗೆ ಅಆSಅಔ ಆದೇಶ ನೀಡಿದೆ. ಜೊತೆಗೆ, ಉತ್ಪಾದಕ ಒSಒಇ ಕಂಪೆನಿಗಳಿಗೆ, ಸದ್ಯ ತಾವಿರುವ ಸ್ಥಿತಿಯಿಂದ, ಹೊಸ ನಿಯಮ ಪಾಲನೆಗೆ ತಲುಪಬೇಕಾಗಿರುವ ಸ್ಥಿತಿಯ ನಡುವೆ ಇರುವ ಕಂದರದ ವಿಶ್ಲೇಷಣೆ (gap analysis) ಮತ್ತು ಈ ಕಂದರ ತುಂಬಿ ನಿಯಮಗಳನ್ನು ಪಾಲಿಸಲು ಮಾಡಿಕೊಂಡಿರುವ ಯೋಜನೆಗಳನ್ನು ವಿವರವಾಗಿ ಸಲ್ಲಿಸಬೇಕೆಂದು ಆದೇಶಿಸಲಾಗಿದೆ. ಸಂಭಾವ್ಯ ಪರಿಣಾಮಗಳು ಒಂದು ವೇಳೆ ಜನವರಿ 2026ರಿಂದ CDSCO ಕಠಿಣ ಕ್ರಮಗಳನ್ನು ಕೈಗೊಳ್ಳಲಾರಂಭಿಸಿದರೆ, 4-5 ಸಾವಿರದಷ್ಟು ಸಣ್ಣಪುಟ್ಟ ಔಷಧಿ ಕಂಪೆನಿಗಳು ಮುಚ್ಚಿಕೊಳ್ಳಲಿವೆ. ಇದರ ಪರಿಣಾಮವಾಗಿ ದೇಶದೊಳಗಿನ ಔಷಧಿ ಮಾರುಕಟ್ಟೆಯಲ್ಲೂ ಹಲವು ಆ್ಯಂಟಿ ಬಯಾಟಿಕ್‌ಗಳು, ರಕ್ತದೊತ್ತಡ ನಿಯಂತ್ರಕಗಳು, ಉರಿಯೂತ ನಿವಾರಕಗಳು, ನೋವು ನಿವಾರಕಗಳು, ಕೆಮ್ಮು-ಶೀತದ ಔಷಧಿಗಳು, ಮಧುಮೇಹದ ಔಷಧಿಗಳ ಸರಬರಾಜಿನಲ್ಲಿ ಕೊರತೆ ಉಂಟಾಗಬಹುದಂತೆ. ಈ MSMEಗಳು ಸರಕಾರಕ್ಕೂ ಸರಬರಾಜು ಮಾಡುತ್ತವೆ. ಹಾಗಾಗಿ, ಕೆಲವು ಜನರಿಕ್ ಔಷಧಿಗಳ ಕೊರತೆಯೂ ಕಾಣಿಸಿಕೊಳ್ಳಬಹುದು ಎಂದು ಮಾರುಕಟ್ಟೆ ಮೂಲಗಳು ಅಭಿಪ್ರಾಯಪಟ್ಟಿವೆ. ‘ಇಕನಾಮಿಕ್ ಟೈಮ್ಸ್’ (ಡಿ.16) ವರದಿಯ ಪ್ರಕಾರ, 20ಕ್ಕೂ ಮಿಕ್ಕಿ ಔಷಧಿ ಉತ್ಪಾದಕರ ಸಂಘಟನೆಗಳು, ಡೆಡ್‌ಲೈನನ್ನು ಇನ್ನಷ್ಟು ವಿಸ್ತರಿಸುವಂತೆ ಸರಕಾರಕ್ಕೆ ಈಗಾಗಲೇ ಮನವಿ ಸಲ್ಲಿಸಿವೆ. ಆದರೆ, ಸರಕಾರಕ್ಕೆ ಈ ಬಾರಿ ಸಲೀಸಾಗಿ ವಿಸ್ತರಣೆ ನೀಡುವುದು ಸಾಧ್ಯವಾಗದು. ಯಾಕೆಂದರೆ, ಭಾರತದ ಔಷಧಿ ಗುಣಮಟ್ಟಗಳ ಬಗ್ಗೆ ಕಳೆದ ಮೂರು ನಾಲ್ಕು ವರ್ಷಗಳಲ್ಲಿ ಹಲವು ಬಾರಿ ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಗಳೆದ್ದಿವೆ. ಇದೇ ಅಕ್ಟೋಬರ್ ತಿಂಗಳಿನಲ್ಲಿ ತಮಿಳುನಾಡು ಮೂಲದ ಔಷಧಿ ಕಂಪೆನಿಯೊಂದರ ಕೆಮ್ಮಿನ ಸಿರಪ್ ಸೇವಿಸಿದ 22 ಮಕ್ಕಳು ತೀರಿಕೊಂಡಿದ್ದರು. 2022ರಲ್ಲಿ ಭಾರತದ ಔಷಧಿಗಳನ್ನು ಸೇವಿಸಿದ ಗಾಂಬಿಯಾದ 70 ಮತ್ತು ಉಜ್ಬೆಕಿಸ್ಥಾನದ 18 ಮಕ್ಕಳು ತೀರಿಕೊಂಡಿದ್ದರು. ನಮ್ಮ ಔಷಧಿಗಳ ಗುಣಮಟ್ಟದ ಮೇಲೆ ವಿಶ್ವ ಆರೋಗ್ಯ ಸಂಸ್ಥೆ (WHO) ಕಡೆಯಿಂದಲೂ ಆಕ್ಷೇಪ ಎದುರಾಗಿತ್ತು. ಹೆಚ್ಚಿನಂಶ ಆ ಹಿನ್ನೆಲೆಯಲ್ಲೇ 2018ರಲ್ಲೇ ಸಿದ್ಧಗೊಂಡಿದ್ದ ನಿಯಮ ತಿದ್ದುಪಡಿಗಳನ್ನು 2023ರ ಡಿಸೆಂಬರಿನಲ್ಲಿ ಜಾರಿಗೊಳಿಸಲಾಗಿತ್ತು. ಭಾರತದ ಔಷಧಿ ಉತ್ಪಾದನಾ ಉದ್ದಿಮೆಗೆ ‘ಜಾಗತಿಕ ದಕ್ಷಿಣ ವಲಯದ ಫಾರ್ಮಸಿ’ ಎಂಬ ತುರಾಯಿ ಇದ್ದರೂ, ಗುಣಮಟ್ಟಕ್ಕೆ ಸಂಬಂಧಿಸಿದಂತೆ ಹಲವು ಆಕ್ಷೇಪಗಳಿವೆ. ಇಲ್ಲಿನ ನಿಯಮಗಳು ಕಾಗದಪತ್ರಗಳಲ್ಲಿ ಮಾತ್ರ ಬಿಗುವಾಗಿದ್ದು, ಆಚರಣೆಯಲ್ಲಿ ಅಪಾರ ಭ್ರಷ್ಟಾಚಾರ, ಸ್ವಜನಪಕ್ಷಪಾತ ತಾಂಡವವಾಡುತ್ತಿವೆ ಎಂಬ ದೂರುಗಳಿವೆ. ಹಾಗಾಗಿ, ಜಾಗತಿಕ ಔಷಧಿ ಮಾರುಕಟ್ಟೆಯಲ್ಲಿ ತನ್ನ ಕಳೆದುಕೊಂಡಿರುವ ವಿಶ್ವಾಸವನ್ನು ಮರಳಿ ಗಳಿಸಿಕೊಳ್ಳಲು, ಭಾರತಕ್ಕೆ ಗುಣಮಟ್ಟ ಸುಧಾರಿಸಬಲ್ಲ ಕಠಿಣ ನಿಯಮಗಳನ್ನು ಅಳವಡಿಸಿಕೊಳ್ಳುವುದು ಅನಿವಾರ್ಯ ಎನ್ನಿಸುವ ಸ್ಥಿತಿ ಇದೆ. ಇಂತಹದೊಂದು ಸನ್ನಿವೇಶದ ಲಾಭವನ್ನು ಸಹಜವಾಗಿಯೇ ಔಷಧಿ ಉದ್ಯಮದ ಬೃಹತ್ ಕಾರ್ಪೊರೇಟ್‌ಗಳು ಪಡೆಯಲಿವೆ. MSMEಗಳು ಮುಚ್ಚುಗಡೆ ಆದರೆ, ಆ ವಲಯ ಉತ್ಪಾದಿಸುವ ಸರಕುಗಳತ್ತ ಈ ದೊಡ್ಡ ಕಂಪೆನಿಗಳು ಸಹಜವಾಗಿಯೇ ಕಣ್ಣುಹಾಕಲಿವೆ ಮತ್ತು ಮಾರುಕಟ್ಟೆಯನ್ನು ಕಸಿದುಕೊಳ್ಳಲಿವೆ. ದೇಶದ ಎಲ್ಲ ಉದ್ಯಮವಲಯಗಳಲ್ಲೂ ಇಂತಹದೇ ಪ್ಯಾಟರ್ನ್ ಕಾಣಿಸಿಕೊಳ್ಳತೊಡಗಿದಾಗ, ಇದು ಸರಕಾರದ ಕಡೆಯಿಂದ ಹಾವು ಹೊಡೆದು ಹದ್ದಿಗೆ ಉಣ್ಣಿಸುವ ಆಟ ಇರಬಹುದೆ? ಎಂಬ ಸಂಶಯ ಮೂಡದಿರದು. ಕೇವಲ ಬಾಯುಪಚಾರಕ್ಕಷ್ಟೇ ತಾನು MSME ಪರ ಎಂದು ಹೇಳಿಕೊಳ್ಳುವ ಭಾರತ ಸರಕಾರ, ಅದನ್ನು ಆಚರಿಸಿ ತೋರಿಸಿ, ಸಣ್ಣ ಫಾರ್ಮಾ ಉದ್ಯಮಗಳನ್ನು ಕೈ ಹಿಡಿದು ಮುನ್ನಡೆಸದಿದ್ದರೆ, ಸರಕಾರವು ದೊಡ್ಡ ಫಾರ್ಮಾ ‘ಆನಿ’ಗಳ ಪರವಾಗಿ ನಿಂತೇ ಈ ಆಟ ಆಡುತ್ತಿದೆ ಎಂಬ ಶಂಕೆ ಮೂಡುತ್ತದೆ. ಇಂಡಿಗೊ ವಿಚಾರದಲ್ಲಿ ಆಗಿರುವುದೂ ಇದೇ ಮಾದರಿಯ ಆಟ ಅಲ್ಲವೇ?!

ವಾರ್ತಾ ಭಾರತಿ 20 Dec 2025 10:39 am

Assam| ರಾಜಧಾನಿ ಎಕ್ಸ್ ಪ್ರೆಸ್ ರೈಲು ಢಿಕ್ಕಿ: 7 ಆನೆಗಳು ಮೃತ್ಯು

ಘಟನೆ ವೇಳೆ ಹಳಿತಪ್ಪಿದ ರೈಲು

ವಾರ್ತಾ ಭಾರತಿ 20 Dec 2025 10:38 am

ಪಾಂಡ್ಯ ಹೊಡೆದ ಸ್ಪೋಟಕ ಸಿಕ್ಸ್, ಕ್ಯಾಮರಾಮ್ಯಾನ್ ಮೇಲೆ ಬಡಿದಾಗ : ಓಡಿ ಹೋಗಿ ತಬ್ಬಿಕೊಂಡ ಹಾರ್ದಿಕ್

Hardik Pandya Monster Innings : ದಕ್ಷಿಣ ಆಫ್ರಿಕಾ ಜೊತೆಗಿನ ಐದು ಪಂದ್ಯಗಳ ಟಿ20 ಸರಣಿ ಮುಕ್ತಾಯಗೊಂಡಿದೆ. ಸರಣಿಯನ್ನು ಭಾರತ 3 -1ರಲ್ಲಿ ಗೆದ್ದುಕೊಂಡಿದೆ. ಸ್ಪೋಟಕ ಬ್ಯಾಟಿಂಗ್ ಪ್ರದರ್ಶಿಸಿದ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಹೊಡೆದ ಸಿಕ್ಸ್ ಒಂದು ಕ್ಯಾಮರಾಮ್ಯಾನ್ ಮೇಲೆ ಬಡಿಯಿತು. ತನ್ನ ಇನ್ನಿಂಗ್ಸ್ ಮುಗಿದ ಕೂಡಲೇ ಆತನನ್ನು ಪಾಂಡ್ಯ ವಿಚಾರಿಸಿದರು.

ವಿಜಯ ಕರ್ನಾಟಕ 20 Dec 2025 10:37 am

ಉಳ್ಳಾಲ | ʼಇನೀಝಿಯೋ 2025ʼ ವಾರ್ಷಿಕ ಕ್ರೀಡಾಕೂಟ

ಉಳ್ಳಾಲ : ಇಸ್ಲಾಹಿ ಆಂಗ್ಲ ಮಾಧ್ಯಮ ಶಾಲೆ ಮತ್ತು ಪದವಿಪೂರ್ವ ಕಾಲೇಜು ಇದರ ಆಶ್ರಯದಲ್ಲಿ ಇನೀಝಿಯೋ 2025 ವಾರ್ಷಿಕ ಕ್ರೀಡಾಕೂಟವು ಬುಧವಾರ ನಡೆಯಿತು . ಕರ್ನಾಟಕ ರಾಜ್ಯ ಅಲೈಡ್ ಮತ್ತು ಹೆಲ್ತ್ ಸೈನ್ಸ್ ಅಧ್ಯಕ್ಷ ಯು.ಟಿ.ಇಫ್ತಿಕರ್ ಫರೀದ್ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ, ಕ್ರೀಡಾ ಮನೋಭಾವದಿಂದ ಆಟ ಆಡಬೇಕು. ಗೆಲುವು ಮತ್ತು ಸೋಲು ಒಂದೇ ನಾಣ್ಯದ ಎರಡು ಮುಖ ಇದ್ದಂತೆ, ನಿಮ್ಮ ಜೀವನದಲ್ಲಿ ಗುರಿ ಇರಬೇಕು ಎಂದು ಹಾರೈಸಿದರು. ಇಸ್ಲಾಹಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಜಿ.ಅಬ್ದುಲ್ ರಝಾಕ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಅಲೈಡ್ ಮತ್ತು ಹೆಲ್ತ್ ಸೈನ್ಸ್ ಅಧ್ಯಕ್ಷ ಯು.ಟಿ.ಇಫ್ತಿಕರ್ ಫರೀದ್ ಅವರನ್ನು ಸನ್ಮಾನಿಸಲಾಯಿತು. ಕ್ರೀಡೆಯಲ್ಲಿ ವಿಜೇತರಾದ ವಿದ್ಯಾರ್ಥಿ ಗಳಿಗೆ ಬಹುಮಾನ ವಿತರಣೆ ಮಾಡಲಾಯಿತು. ಇಸ್ಲಾಹಿ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷ ಅಬ್ದುಲ್ ರಹ್ಮಾನ್ ಭಾಷಾ, ಸ್ಥಾಪಕ ಟ್ರಸ್ಟಿ ಯು.ಎನ್.ಅಬ್ದುಲ್ ರಝಾಕ್, ಕಾರ್ಯದರ್ಶಿ ಅಹಮ್ಮದ್ ಕುಂಞ ಎಂ., ಟ್ರಸ್ಟಿಗಳಾದ ಕೆ.ಅಬ್ದುಲ್ ಲತೀಫ್, ಎಂ.ಇಬ್ರಾಹಿಂ ಫಕೀರ್, ಕೆ.ಎಚ್.ಸಲೀಮ್, ಫಿರೋಝ್ ಅಬ್ದುಲ್ ರಝಾಕ್, ಇಬ್ರಾಹಿಂ ಸೌಶಾದ್, ಆಡಳಿತ ಅಧಿಕಾರಿ ಆಯಿಶಾ ಸಬೀನಾ ಕೈಸಿರನ್, ಪ್ರಾಂಶುಪಾಲರಾದ ಸುಮಂಗಲ ಶೆಟ್ಟಿ, ಮುಖ್ಯೋಪಾಧ್ಯಾಯಿನಿ ಹರಿಣಾಕ್ಷಿ, ಮ್ಯಾನೇಜರ್ ಅನಿಲ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು. ನಿತಾಶ ಅಬಿದ್ ಜಲೀಲ್ ಕಾರ್ಯಕ್ರಮವನ್ನು ನಿರೂಪಿಸಿದರು. ಮೂನಿಸ್ ಸ್ವಾಗತಿಸಿದರು. ಚೈತ್ರ ವಂದಿಸಿದರು.

ವಾರ್ತಾ ಭಾರತಿ 20 Dec 2025 10:36 am

BELTHANGADY | ಮಹೇಶ್ ಶೆಟ್ಟಿ, ಗಿರೀಶ್ ಮಟ್ಟಣ್ಣವರ್, ಸಮೀರ್ ಎಂ.ಡಿ. ಸಹಿತ ನಾಲ್ವರ ವಿರುದ್ಧ ದೂರು ನೀಡಿದ ಚಿನ್ನಯ್ಯ

ಬೆಳ್ತಂಗಡಿ, ಡಿ.20: ಧರ್ಮಸ್ಥಳ ಪ್ರಕರಣದಲ್ಲಿ ಜೈಲು ಸೇರಿ ಹೊರಬಂದ ಚಿನ್ನಯ್ಯ ಇದೀಗ ಮಹೇಶ್ ಶೆಟ್ಟಿ ತಿಮರೋಡಿ, ಯೂಟ್ಯೂಬರ್ ಸಮೀರ್ ಎಂ.ಡಿ. ಸಹಿತ ನಾಲ್ವರ ವಿರುದ್ಧ ಧರ್ಮಸ್ಥಳ ಪೊಲೀಸ್ ಠಾಣೆಗೆ ದೂರು ನೀಡಿದ್ದಾನೆ. ಸೌಜನ್ಯಾ ಪರ ಹೋರಾಟಗಾರರಾದ ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ್ ಮಟ್ಟಣ್ಣವರ್, ಜಯಂತ್ ಟಿ., ಯೂಟ್ಯೂಬರ್ ಸಮೀರ್ ಎಂ.ಡಿ. ಹಾಗೂ ಸೌಜನ್ಯಾಳ ಮಾವ ವಿಠಲ ಗೌಡ ಅವರು ತನಗೆ ತನ್ನ ಕುಟುಂಬಕ್ಕೆ ತಮಗೆ ಜೀವಬೆದರಿಕೆ ಹಾಕಬಹುದು. ಆದ್ದರಿಂದ ತನಗೆ ರಕ್ಷಣೆ ನೀಡಬೇಕು ಎಂದು ಚಿನ್ನಯ್ಯ ಪೊಲೀಸ್ ದೂರಿನಲ್ಲಿ ಆಗ್ರಹಿಸಿದ್ದಾನೆ. ಧರ್ಮಸ್ಥಳ ಪ್ರಕರಣದಲ್ಲಿ ಆರೋಪಿಯಾಗಿ ಜೈಲು ಸೇರಿದ್ದ ಚಿನ್ನಯ್ಯ, ಡಿ.18 ರಂದು ಶಿವಮೊಗ್ಗ ಜೈಲಿನಿಂದ ಬಿಡುಗಡೆಯಾಗಿದ್ದ. ಅಂದು ರಾತ್ರಿ ಎಂಟು ಗಂಟೆ ಸುಮಾರಿಗೆ ಚಿನ್ನಯ್ಯ ತನ್ನ ಪತ್ನಿ ಮಲ್ಲಿಕಾ ಮತ್ತು ಸಹೋದರಿ ರತ್ನಾ ಜೊತೆ ಧರ್ಮಸ್ಥಳ ಪೊಲೀಸ್ ಠಾಣೆಗೆ ಹಾಜರಾಗಿ ದೂರು ನೀಡಿದ್ದಾನೆ. ಮಹೇಶ್ ಶೆಟ್ಟಿ ತಿಮರೋಡಿ, ಜಯಂತ್ ಟಿ, ಯೂಟ್ಯೂಬರ್ ಸಮೀರ್ ಎಂ.ಡಿ., ಸೌಜನ್ಯಾಳ ಮಾವ ವಿಠಲ ಗೌಡ, ಗಿರೀಶ್ ಮಟ್ಟಣ್ಣವರ್ ಹಾಗೂ ಸಂಗಡಿಗರು ತನಗೆ ಮತ್ತು ತನ್ನ ಪತ್ನಿ ಮಲ್ಲಿಕಾ ಯಾನೆ ನಾಗಮ್ಮ ಗೆ ಜೀವಬೆದರಿಕೆ ಹಾಕಬಹುದು. ಆದ್ದರಿಂದ ಸೂಕ್ತ ಕಾನೂನು ಕ್ರಮ ಕೈಗೊಂಡು ತಮಗೆ ಯಾವುದೇ ತೊಂದರೆಯಾಗದಂತೆ ರಕ್ಷಣೆ ಕಲ್ಪಿಸಬೇಕು ಎಂದು ದೂರಿನಲ್ಲಿ ಆಗ್ರಹಿಸಿದ್ದಾರೆ. ಬೆಳ್ತಂಗಡಿ ಪೊಲೀಸರು ದೂರು ಸ್ವೀಕರಿಸಿದ್ದಾರೆ. ಈ ಬಗ್ಗೆ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಅರುಣ್ ಕೆ. ತಿಳಿಸಿದ್ದಾರೆ.

ವಾರ್ತಾ ಭಾರತಿ 20 Dec 2025 10:33 am

ದಲಿತರಲ್ಲೂ ಆತ್ಮಾವಲೋಕನ ಅಗತ್ಯವಲ್ಲವೇ?

ಸಾಮಾಜಿಕ ಶೋಷಣೆಗಳೊಳಗಾದ ದಲಿತರ ಹಿತರಕ್ಷಣೆ ಮತ್ತು ಅವರ ಸಂವಿಧಾನಬದ್ಧ ಹಕ್ಕುಬಾಧ್ಯತೆಗಳ ಸಂರಕ್ಷಣೆಯ ರಕ್ಷಾಕವಚವಾಗಿ ಕಾನೂನಿನ ನೆರವು ಮತ್ತು ವಿಶೇಷ ಆದ್ಯತೆಗಳನ್ನು ನಮ್ಮ ಸಂವಿಧಾನ ದೊರಕಿಸಿಕೊಟ್ಟಿದೆ. ಈ ಕಾನೂನಿನ ನೆರವು ಮತ್ತು ಅಭಯದಿಂದ ದಲಿತ ಸಮುದಾಯ ಒಂದಷ್ಟು ಭರವಸೆ ಮತ್ತು ನಂಬಿಕೆಯಿಂದ ಬದುಕನ್ನು ಕಟ್ಟಿಕೊಂಡಿದೆ. ಆದರೆ, ದಿನನಿತ್ಯ ಒಂದಲ್ಲ ಒಂದು ಕಾರಣದಿಂದ ನಡೆಯುತ್ತಿರುವ ದಲಿತರ ಮೇಲಿನ ದೌರ್ಜನ್ಯ ದಬ್ಬಾಳಿಕೆಗಳಿಂದ ಈ ಸಮುದಾಯ ರೋಸಿರುವುದು ಸತ್ಯವಷ್ಟೆ. ಅಲ್ಲದೆ ಕೆಲವು ವೇಳೆ ಪ್ರತೀಕಾರದ ಮನೋಭಾವ ಮೊಳೆಯುವುದು ಸಹಜವೆ. ದೌರ್ಜನ್ಯಗಳ ವಿರುದ್ಧ ಕೆಲವೆಡೆ ದಲಿತರೂ ಕೂಡಾ ಸಿಡಿದೆದ್ದಿರುವುದನ್ನು ಮೇಲ್ವರ್ಗದ ಸಮಾಜ ಸಹಿಸದೆ ತನ್ನ ಮೇಲರಿಮೆಯನ್ನು ಕಾಪಿಟ್ಟುಕೊಳ್ಳುವುದನ್ನು ಕಾಣಬಹುದು. ಜಮೀನ್ದಾರರ ಹೊಲ ಗದ್ದೆಗಳಲ್ಲಿ ಕೂಲಿ ಅಥವಾ ಜೀತ ಮಾಡುವ ಕುಟುಂಬದ ಮಕ್ಕಳು ಕಷ್ಟಪಟ್ಟು ವಿದ್ಯಾಭ್ಯಾಸ ಮಾಡಿ ಉದ್ಯೋಗ ಗಳಿಸಿ ಒಂದಷ್ಟು ಆರ್ಥಿಕವಾಗಿ ಸಬಲರಾದರೆ, ಒಂದು ಸ್ವಂತ ಮನೆ ನಿರ್ಮಿಸಿಕೊಂಡರೆ, ಒಂದು ವಾಹನ, ಜಮೀನು ಅಥವಾ ನಿವೇಶನ ಖರೀದಿಸಿದರೆ ಅದನ್ನು ಸಹಿಸಲಾರದೆ ಕೆಂಗಣ್ಣು ಬೀರುವುದಲ್ಲದೆ ಅದರ ವಿರುದ್ಧ ಪ್ರತ್ಯಕ್ಷವಾಗಿಯೋ, ಪರೋಕ್ಷವಾಗಿಯೋ ಹೀಯಾಳಿಸಿ ಪ್ರತಿರೋಧ ವ್ಯಕ್ತಪಡಿಸುವುದನ್ನು ದಿನನಿತ್ಯದ ಬದುಕಲ್ಲಿ ಕಾಣುತ್ತಿದ್ದೇವೆ. ಇನ್ನೂ ಕೆಲವು ಸಂದರ್ಭಗಳಲ್ಲಿ ದಲಿತ ಹೆಣ್ಣು ಮಕ್ಕಳನ್ನು ಪುಸಲಾಯಿಸಿ ವೈವಾಹಿಕ ಆಸೆ ಹುಟ್ಟಿಸಿ ವಂಚಿಸುತ್ತಿರುವ ಸಂದರ್ಭಗಳಲ್ಲಿ ಮನೆತನದ ಗೌರವ ಮತ್ತು ಭವಿಷ್ಯದ ದೃಷ್ಟಿಯಿಂದ ಅದೆಷ್ಟೋ ಹೆಣ್ಣು ಮಕ್ಕಳು ಮೂಕವೇದನೆಯಿಂದ ನಲುಗಿರುವ ಪ್ರಕರಣಗಳು ಕೂಡಾ ನಮ್ಮ ಕಣ್ಣೆದುರು ಇರುವುದನ್ನು ಅಲ್ಲಗಳೆಯಲಾಗದು. ಆಧುನಿಕ ಕಾಲಘಟ್ಟದಲ್ಲಿ ಅಷ್ಟೋ ಇಷ್ಟೋ ಶಿಕ್ಷಣ ಕೊಡಿಸಬೇಕೆನ್ನುವ ಸಂಕಲ್ಪದಿಂದ ಹೆಣ್ಣು ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸಿ ಮುಂದಿನ ಅವರ ಭವಿಷ್ಯಕ್ಕೆ ಒಂದಷ್ಟು ಆಸರೆ ಒದಗಿಸಲು ಪೋಷಕರು ಹಗಲಿರುಳು ಶ್ರಮಿಸುವುದರ ಫಲವಾಗಿ ದಲಿತ ಸಮುದಾಯದ ಹೆಣ್ಣು ಮಕ್ಕಳು ಸುಶಿಕ್ಷಿತರಾಗುತ್ತಿರುವುದು ವಾಸ್ತವ. ಆದರೆ, ಇಂದಿನ ಸಾಮಾಜಿಕ ಪರಿಸರದಲ್ಲಿ ಇಂದಿಗೂ ಜೀವಂತವಾಗಿರುವ ಜಾತೀಯತೆ ಹಾಗೂ ಅಸ್ಪಶ್ಯತೆಯ ಕರಾಳ ಮುಖಗಳನ್ನು ಸುದ್ದಿ ಮಾಧ್ಯಮಗಳು, ವಿದ್ಯುನ್ಮಾನಗಳು ನಾ ಮುಂದು ತಾ ಮುಂದು ಎಂದು ಆಗಿಂದಾಗ ಬಿತ್ತರಿಸುತ್ತಾ ಸಮಾಜದಲ್ಲಿ ಅರಿವು ಮತ್ತು ಎಚ್ಚರ ಮೂಡಿಸುತ್ತಿದ್ದರೂ, ಯೌವನಾವಸ್ಥೆಯ ಮೋಹಕ್ಕೆ ಸಿಲುಕಿ ಅನೇಕ ದಲಿತ ಹೆಣ್ಣು ಮಕ್ಕಳು ಮೇಲ್ಜಾತಿ ಯುವಕರ ಬಣ್ಣದ ಮಾತಿನ ಮೋಡಿಗೋ ಅಥವಾ ಹಣ, ಅಂತಸ್ತಿನ ವ್ಯಾಮೋಹಕ್ಕೋ ಬಲಿಯಾಗಿ ತಮ್ಮ ಬದುಕನ್ನು ಕಳೆದುಕೊಳ್ಳುತ್ತಿರುವ ಸನ್ನಿವೇಶಗಳು ನಿಜಕ್ಕೂ ವಿಷಾದಕರ ಸಂಗತಿ. ಮದುವೆಯ ಬಂಧನದ ಸಂದರ್ಭ ಎದುರಾಗುವವರೆಗೂ ಗುಟ್ಟಾಗುಳಿದ ಪ್ರೇಮ ಪ್ರಸಂಗಗಳು ಜಾತಿಯ ಕಾರಣದಿಂದಾಗಿ ಭಗ್ನಗೊಳ್ಳುವುದು, ಕೆಲವೊಮ್ಮೆ ಮದುವೆಯಾದರೂ ಆನಂತರ ಜಾತಿಯ ಕಾರಣದಿಂದ ನಿಂದನೆಗೀಡಾಗಿ ಕೊನೆಗೆ ಗಂಡನಿಂದಲೂ ತಿರಸ್ಕೃತಗೊಳ್ಳುವ ಪ್ರಸಂಗಗಳಲ್ಲಿ ವಿದ್ಯಾವಂತ ಯುವತಿಯರೇ ಬಲಿಪಶುಗಳಾಗುತ್ತಿರುವ ಸನ್ನಿವೇಶಗಳನ್ನು ಕಂಡಾಗ ಸುಶಿಕ್ಷಿತ ದಲಿತ ಹೆಣ್ಣು ಮಕ್ಕಳಲ್ಲಿ ಈ ಬಗ್ಗೆ ಅರಿವು ಮತ್ತು ಮುಂದಾಲೋಚನೆಯ ಆತ್ಮವಿಮರ್ಶೆ ಬರದೇ ಇರಲು ಕಾರಣಗಳೇನು? ಎಂದು ಪ್ರಶ್ನಿಸಿಕೊಳ್ಳಬೇಕಾಗಿದೆ. ನಮ್ಮ ಸಾಮಾಜಿಕ ವ್ಯವಸ್ಥೆಯಲ್ಲಿರುವ ಜಾತೀಯತೆಯ ಕರಾಳ ಸತ್ಯಗಳನ್ನು ಕಣ್ಣಾರೆ ಕಂಡು, ಅನುಭವಿಸಿರುವ ಸುಶಿಕ್ಷಿತ ಸರಕಾರಿ ಉದ್ಯೋಗಸ್ಥರು ಕೂಡಾ ತಮ್ಮ ಜಾತಿಯ ಕೀಳರಿಮೆಯಿಂದ ಸುಳ್ಳು ಜಾತಿಗಳನ್ನು ಹೇಳಿಕೊಂಡು ಮದುವೆ ಮಾಡಿಕೊಳ್ಳುವುದು (ಅಂತರ್‌ಜಾತಿಯ ಒಪ್ಪಿತ ವಿವಾಹಗಳನ್ನು ಹೊರತುಪಡಿಸಿ) ಜನರನ್ನು ನಂಬಿಸಲು ಜನಿವಾರ, ಶಿವದಾರ, ವಿಭೂತಿ, ಕುಂಕುಮಗಳನ್ನು ಧರಿಸಿ ಸಂಪ್ರದಾಯಗಳ ಮೊರೆ ಹೋಗಿ ಬಾಡಿಗೆ ಮನೆಗಳನ್ನು ಪಡೆದು ಆತಂಕ ಮತ್ತು ಅಭದ್ರತೆಯಿಂದ ಜೀವನ ಸಾಗಿಸುವುದು, ಬಂಧು ಬಾಂಧವರಿಂದ ದೂರ ಉಳಿಯುವುದು, ವಂಶಪಾರಂಪರ್ಯವಾಗಿ ರೂಢಿಗತ ಮಾಡಿಕೊಂಡಿದ್ದ ನೆಂಟರಿಸ್ಟರೊಂದಿಗಿನ ಹಬ್ಬ, ಜಾತ್ರೆ, ಮದುವೆ, ಸಾಮೂಹಿಕ ಭೋಜನದಂತಹ ಸಂಭ್ರಮ ಸಂತಸಗಳಿಂದ ವಂಚಿತರಾಗಿ ಒಂಟಿತನ ಹಾಗೂ ಹತಾಶೆಯಿಂದ ಬದುಕು ಸಾಗಿಸುವಂತೆ ಮಾಡುವಲ್ಲಿ ಯಾರ ಒತ್ತಡವಿದೆ? ಎಂದು ಒಮ್ಮೆ ಆಲೋಚಿಸಿ ಆತ್ಮವಿಮರ್ಶೆ ಮಾಡಿಕೊಳ್ಳಲು ಈ ಸುಶಿಕ್ಷಿತ ದಲಿತರಿಗೆ ಇರುವ ಅಡ್ಡಿಯಾದರೂ ಏನು? ಎಂದು ಚಿಂತಿಸಬೇಕಾಗಿದೆ. ದೇವರು ಧರ್ಮದ ಹೆಸರಿನಲ್ಲಿ ಅಸ್ಪಶ್ಯತೆ, ಜಾತೀಯತೆ ಆಚರಿಸುವ ಧಾರ್ಮಿಕ ಶೋಷಣೆಯ ವಿರುದ್ಧ ಪ್ರತಿಭಟನೆಯ ಧ್ವನಿ ಬುದ್ಧ, ಬಸವ, ಬಾಬಾಸಾಹೇಬರ ಕಾಲಘಟ್ಟದಿಂದಲೇ ಪ್ರತಿಧ್ವನಿಸಿದ್ದನ್ನು ಅರಿತವರು ಕೂಡಾ ಇಂದಿಗೂ ದೇವಸ್ಥಾನಗಳಿಗೆ ಪ್ರವೇಶ ನೀಡುತ್ತಿಲ್ಲವೆಂದು ಹಲುಬುತ್ತಾ, ಅಂತಹ ದೇವಸ್ಥಾನಗಳ ಸುತ್ತ ಗಿರಕಿ ಹೊಡೆಯುತ್ತಾ ಈ ತಾರತಮ್ಯಗಳನ್ನು ದೂರ ಮಾಡಲು ಸಂಕಲ್ಪ ಮಾಡಿ ಗ್ರಾಮೀಣ ಪ್ರದೇಶಗಳಲ್ಲಿ ಹೋರಾಟದಲ್ಲಿ ತೊಡಗಿಸಿಕೊಂಡು ಹಿಂದೂ ಸಂಪ್ರದಾಯಸ್ಥರ ಮನಃಪರಿವರ್ತನೆಯ ಕನಸು ಕಾಣುತ್ತಿರುವವರು ಒಂದೆಡೆ, ಮೇಲ್ಜಾತಿ/ಮೇಲ್ವರ್ಗದವರ ಕಪಿಮುಷ್ಟಿಯಲ್ಲಿರುವ ಜಾತೀಯತೆಯನ್ನು ಪೋಷಿಸುವ ಮಠ, ಮಂದಿರಗಳನ್ನು ತಿರಸ್ಕರಿಸಿ ಬಾಬಾಸಾಹೇಬರು ತೋರಿದ ಪ್ರೀತಿ, ಕರುಣೆ ಮತ್ತು ಮೈತ್ರಿಯನ್ನು ಸಾಕ್ಷೀಕರಿಸುವ ಬುದ್ಧ ಮಾರ್ಗದತ್ತ ಪಯಣಿಸುತ್ತಿರುವವರು ಮತ್ತೊಂದೆಡೆ. ಹೀಗೆ, ಎರಡು ದೋಣಿಯ ಪಯಣದಲ್ಲಿ ಸಾಗುತ್ತಿರುವ ದಲಿತರು ಒಮ್ಮೆ ಆತ್ಮಾವಲೋಕನ ಮಾಡಿಕೊಳ್ಳುವುದು ಅನಿವಾರ್ಯವಲ್ಲವೇ? ಜಾತಿ ವ್ಯವಸ್ಥೆಯ ಕೂಪದಲ್ಲಿ ನರಳುತ್ತಿರುವ ಈ ಸಮಾಜದಲ್ಲಿ ತಳಸಮುದಾಯದ ಮೇಲೆ ನೀಡುವ ಕಿರುಕುಳಗಳ ಮಾದರಿಗಳು ಈಗ ಬದಲಾಗಿವೆ. ಸಿನೆಮಾ ಮಂದಿರದಲ್ಲಿ ಕಾಲ್ತುಳಿದ, ದೇವರ ಪಟ ಮುಟ್ಟಿದ, ದೇವಸ್ಥಾನಕ್ಕೆ ನುಗ್ಗಿ ಶಾಸ್ತ್ರ ಸಂಪ್ರದಾಯಗಳಿಗೆ ಧಕ್ಕೆ ತಂದ, ಕೆಕ್ಕರಿಸಿ ನೋಡಿದ, ಅನೈತಿಕ ಸಂಬಂಧವಿರಿಸಿಕೊಂಡಿದ್ದ, ಮೇಲ್ಜಾತಿ ಹುಡುಗಿಯನ್ನು ಕೆಣಕಿದ... ಹೀಗೆ ನಾನಾ ತೆರನಾದ ಪ್ರಕರಣಗಳನ್ನು ಮುಂದು ಮಾಡಿ ಸಮಾಜವನ್ನು ನಂಬಿಸಿ ದಲಿತ ಸಮುದಾಯದ ಮೇಲೆ ದ್ವೇಷಕಾರುವಂತಹ ಸನ್ನಿವೇಶಗಳನ್ನು ಸೃಷ್ಟಿ ಮಾಡುವುದಲ್ಲದೆ, ಸಂಬಂಧವಿಲ್ಲದ ಪ್ರಕರಣಗಳಿಗೆ ತಳಕು ಹಾಕಿ ಪೊಲೀಸ್, ಕೋರ್ಟ್ ಕಚೇರಿಗಳಿಗೆ ಅಲೆಯುವಂತೆ ಮಾಡುವಲ್ಲಿ ಮೇಲ್ಜಾತಿ/ಮೇಲ್ವರ್ಗದವರ ಹಿತ ಕಾಯುವ ಈ ಸಮಾಜ ಸದಾ ಸನ್ನದ್ಧವಾಗಿರುವುದನ್ನು ಮರೆಯುವಂತಿಲ್ಲ. ಇಂತಹ ಸನ್ನಿವೇಶಗಳಲ್ಲಿ ದಲಿತರು ತಮ್ಮ ರಕ್ಷಣೆಗಾಗಿ ಇರುವ ಅಟ್ರಾಸಿಟಿ ಕೇಸುಗಳನ್ನು ದಾಖಲಿಸಿ ನ್ಯಾಯ ಸಿಗುವ ಹಂಬಲದಲ್ಲಿ ಪೊಲೀಸ್ ಠಾಣೆಗಳತ್ತ ಅಲೆಯುವುದು ಮಾತ್ರ ತಪ್ಪಿಲ್ಲ. ಆದರೆ, ಜಾತೀಯ ವ್ಯಾಮೋಹದಲ್ಲಿರುವ ಬಹಳಷ್ಟು ಅಧಿಕಾರಿಗಳು ಅಟ್ರಾಸಿಟಿ ಕೇಸುಗಳನ್ನು ಸಡಿಲಗೊಳಿಸಿ ದಲಿತರಿಗೆ ನ್ಯಾಯ ದೊರಕಿಸಿಕೊಡುವಲ್ಲಿ ನಿರಾಸಕ್ತಿ ವಹಿಸುವುದು ಹೊಸದೇನಲ್ಲ. ಕೈತುಂಬಾ ಸಂಬಳ, ಅಧಿಕಾರ ಮತ್ತು ಅವಕಾಶಗಳನ್ನು ಹೊಂದಿರುವ ಪೊಲೀಸ್ ಅಧಿಕಾರಿಗಳು ಪ್ರಾಮಾಣಿಕವಾಗಿ ಯಾವುದೇ ಪೂರ್ವಾಗ್ರಹವಿಲ್ಲದೆ ನ್ಯಾಯ ಒದಗಿಸಿ ಕೊಡುವಂತಹ ಮನೋಧರ್ಮವನ್ನು ಹೊಂದಲು ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಅಗತ್ಯತೆ ಎಂದಿಗಿಂತ ಇಂದು ಬಹುಮುಖ್ಯವಾಗಿದೆ. ನ್ಯಾಯ ದೊರಕಿಸಿಕೊಡುವ ಪ್ರಾಮಾಣಿಕ ಅಧಿಕಾರಿಗಳನ್ನು ನೊಂದ ದಲಿತ ಸಮಾಜ ಕೃತಜ್ಞತೆಯಿಂದ ಸ್ಮರಿಸುತ್ತದೆ ಎಂಬುದು ಸುಳ್ಳಲ್ಲ. ಸಾಮಾಜಿಕ ಶೋಷಣೆಗೊಳಗಾದ ದಲಿತ ಸಮಾಜ ಸರಕಾರದ ನೆರವಿಗಾಗಿ ನಿರೀಕ್ಷಿಸುವ ಸಂದರ್ಭದಲ್ಲಿ ಶಿಕ್ಷಣ ಮತ್ತು ಅರಿವಿನ ಕೊರತೆಯೋ, ಉಡಾಫೆ ಧೋರಣೆಯೋ, ಸೋಮಾರಿತನವೋ ಅಥವಾ ಉದ್ಧಟತನವೋ ಅಂತೂ ತಮ್ಮದೇ ಆದ ವಿತಂಡವಾದವನ್ನು ಮೈಗೂಡಿಸಿಕೊಂಡು ಸಮಾಜ ಹಾಗೂ ಅಧಿಕಾರಶಾಹಿಯ ಕೆಂಗಣ್ಣಿಗೆ ಅಥವಾ ಉಪೇಕ್ಷೆಗೆ ಗುರಿಯಾಗಿರುವುದನ್ನು ನಿರಾಕರಿಸಲಾಗದು. ಜಾತಿಯ ಕಾರಣವೊಂದನ್ನೇ ಮುಂದು ಮಾಡಿ ಸಹಾನುಭೂತಿ ಗಿಟ್ಟಿಸುವ ಅಥವಾ ಇನ್ನಿತರರ ಮೇಲೆ ಅಟ್ರಾಸಿಟಿ ಕಾಯ್ದೆಯನ್ನು ದುರುಪಯೋಗಪಡಿಸಿಕೊಳ್ಳುವರೆಂಬ ಆಪಾದನೆಯಿಂದ ಹೊರಬಂದು ಸ್ವಂತ ವಿವೇಚನೆ ಹಾಗೂ ಆತ್ಮವಿಶ್ವಾಸದಿಂದ ಬದುಕು ಕಟ್ಟಿಕೊಳ್ಳುವಂತಹ ಸನ್ನಿವೇಶ ಎದುರಾಗಬೇಕಾಗಿದೆ. ಅಂತಹ ಆತ್ಮಾವಲೋಕನ ಸಾಧ್ಯವೇ?

ವಾರ್ತಾ ಭಾರತಿ 20 Dec 2025 10:29 am

ದ್ವೇಷ ಭಾಷಣ ತಡೆ ಕಾಯ್ದೆಗೆ ಬಿಜೆಪಿ ಅಡ್ಡಿ!

ಕರ್ನಾಟಕ ಸರ್ವ ಜನಾಂಗದ ಶಾಂತಿಯ ತೋಟ. ಇಲ್ಲಿ ದ್ವೇಷ ಭಾಷಣ, ಪ್ರತೀಕಾರದ ರಾಜಕಾರಣ ನಡೆಯುವುದಿಲ್ಲ ಎಂಬುದಕ್ಕೆ ಸಾವಿರ ನಿದರ್ಶನಗಳಿವೆ. ಬಿಜೆಪಿ ಒಪ್ಪಲಿ ಬಿಡಲಿ. ದ್ವೇಷ ಭಾಷಣ ಪ್ರತಿಬಂಧಕ ಕಾಯ್ದೆಯನ್ನು ಸಮರ್ಪಕವಾಗಿ ಜಾರಿಗೊಳಿಸಲು ಸರಕಾರ ಗಂಭೀರ ಪ್ರಯತ್ನ ಮಾಡಬೇಕು. ಕಾಯ್ದೆ ರೂಪಿಸುವುದು ಎಷ್ಟು ಮುಖ್ಯವೋ ಅದನ್ನು ಅನುಷ್ಠಾನದಲ್ಲಿ ತರುವುದು ಸರಕಾರದ ಮೊದಲ ಆದ್ಯತೆಯಾಗಬೇಕು. ಕರ್ನಾಟಕದಲ್ಲಿ ಪ್ರೀತಿ ವಿಶ್ವಾಸ, ಸಾಮರಸ್ಯ ಮತ್ತು ಸಹಬಾಳ್ವೆಯ ರಾಜಕಾರಣ ಮಾತ್ರ ಯಶಸ್ವಿಯಾಗುತ್ತದೆ. ಕಳಬೇಡ ಕೊಲಬೇಡ ಹುಸಿಯ ನುಡಿಯಲು ಬೇಡ ಮುನಿಯಬೇಡ ಅನ್ಯರಿಗೆ ಅಸಹ್ಯಪಡಬೇಡ ತನ್ನ ಬಣ್ಣಿಸಬೇಡ ಇದಿರ ಹಳಿಯಲು ಬೇಡ ಇದೇ ಅಂತರಂಗ ಶುದ್ಧಿ ಇದೇ ಬಹಿರಂಗ ಶುದ್ಧಿ ಇದೇ ನಮ್ಮ ಕೂಡಲಸಂಗಮ ದೇವರನೊಲಿಸುವ ಪರಿ -ಬಸವಣ್ಣ ಮೇಲಿನ ವಚನ ಮನು ಪ್ರಣೀತ ಭಾರತೀಯ ಜನತಾ ಪಕ್ಷದ ಒಟ್ಟು ತಾತ್ವಿಕತೆಗೆ ಬುದ್ಧಿವಾದ ಹೇಳಿದಂತಿದೆ. ಅಷ್ಟು ಮಾತ್ರವಲ್ಲ ಭಗವದ್ಗೀತೆಯ ಬೋಧನೆಯ ಸಾರಕ್ಕೆ ಪರ್ಯಾಯ ಚಿಂತನೆ ಈ ವಚನ ಪ್ರತಿಪಾದಿಸುತ್ತದೆ. ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಕರ್ನಾಟಕ ಸರಕಾರ ತಡವಾಗಿಯಾದರೂ ದ್ವೇಷ ಭಾಷಣ ಪ್ರತಿಬಂಧಕ ಮಸೂದೆ ಮಂಡಿಸಿ ಒಪ್ಪಿಗೆ ಪಡೆದುಕೊಂಡಿದೆ. ದ್ವೇಷ ಭಾಷಣ ಪ್ರತಿಬಂಧಕ ವಿಧೇಯಕವನ್ನು ಕೂಲಂಕಷವಾಗಿ ಚರ್ಚಿಸಬೇಕು ಎಂಬುದರಲ್ಲಿ ಎರಡು ಮಾತಿಲ್ಲ. ದ್ವೇಷ ಭಾಷಣ ಪ್ರತಿಬಂಧಕ ವಿಧೇಯಕ ಮಾತ್ರವಲ್ಲ ರಾಜ್ಯ ಸರಕಾರ ಮಂಡಿಸುವ ಸಾರ್ವಜನಿಕ ಮಹತ್ವವುಳ್ಳ ಪ್ರತಿಯೊಂದು ಮಸೂದೆಯೂ ಎಲ್ಲ ಆಯಾಮಗಳಲ್ಲಿ ಚರ್ಚಿಸಿಯೇ ಕಾಯ್ದೆಯ ರೂಪ ಪಡೆದುಕೊಳ್ಳಬೇಕು. ಆದರೆ ಭಾರತೀಯ ಜನತಾ ಪಕ್ಷ ಕರ್ನಾಟಕದಲ್ಲಿ ಅಧಿಕಾರ ನಡೆಸುತ್ತಿರುವಾಗ, ವಿಶೇಷವಾಗಿ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿ ಕಾರ್ಯ ನಿರ್ವಹಿಸುತ್ತಿರುವಾಗ ಹಲವಾರು ಮಸೂದೆಗಳನ್ನು ಚರ್ಚೆಯಿಲ್ಲದೆ ಅನುಮೋದನೆ ಪಡೆದುಕೊಂಡ ನಿದರ್ಶನಗಳಿವೆ. ಕರ್ನಾಟಕದಲ್ಲಿ ಮೊದಲ ಬಾರಿಗೆ ವ್ಯಾಪಕವಾಗಿ ಮತಾಂತರ ನಡೆದಿದ್ದು ಹನ್ನೆರಡನೆಯ ಶತಮಾನದಲ್ಲಿ. ಅದು ಬಿಜ್ಜಳನ ಆಸ್ಥಾನದ ಮಹಾಮಂತ್ರಿ ಬಸವಣ್ಣನವರ ನೇತೃತ್ವದಲ್ಲಿ. ಬಸವಣ್ಣನವರ ಮೂಲ ಆಶಯಕ್ಕೆ ಅಪಮಾನ ಮಾಡುವ ರೀತಿಯಲ್ಲಿ ಬಸವರಾಜ ಬೊಮ್ಮಾಯಿ ಸರಕಾರ ಮತಾಂತರ ನಿಷೇಧ ಮಸೂದೆ ಮಂಡಿಸಿ ಉಭಯ ಸದನಗಳ ಒಪ್ಪಿಗೆ ಪಡೆದು ಕಾಯ್ದೆ ರೂಪಿಸಿತು. ದನದ ಮಾಂಸವನ್ನು ಭಾರೀ ಪ್ರಮಾಣದಲ್ಲಿ ವಿದೇಶಗಳಿಗೆ ರಫ್ತು ಮಾಡಿ ಹಣ ಮಾಡುತ್ತಿರುವವರು ಭಾರತೀಯ ಜನತಾ ಪಕ್ಷದ ನಿಷ್ಠಾವಂತ ಭಕ್ತರು. ಆದರೆ ಬಡ ಮುಸ್ಲಿಮರನ್ನು ಗುರಿಯಾಗಿಸಿ ಗೋ ಹತ್ಯೆ ನಿಷೇಧ ಕಾಯ್ದೆ ರೂಪಿಸಿದರು. ಬಸವರಾಜ ಬೊಮ್ಮಾಯಿ ಕರ್ನಾಟಕದಲ್ಲಿ ಮುಖ್ಯಮಂತ್ರಿಯಾಗಿರುವಾಗ ರಾಜ್ಯದ ಅಭಿವೃದ್ಧಿ ಮರೆತು ದ್ವೇಷ ಮತ್ತು ಮತೀಯ ರಾಜಕಾರಣವನ್ನೇ ಮಾಡಿದರು. ಅಷ್ಟು ಮಾತ್ರವಲ್ಲ, ಅಂದಿನ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಕಟೀಲು ಅವರು ಬಹಿರಂಗವಾಗಿಯೇ ಪಕ್ಷದ ಕಾರ್ಯಕರ್ತರಿಗೆ ಕರೆ ಕೊಟ್ಟರು: ‘‘ಇದು ಚುನಾವಣಾ ಸಮಯ. ಯಾರೂ ಅಭಿವೃದ್ಧಿ ಕುರಿತು ಮಾತನಾಡಬೇಡಿ. ಮತೀಯ ವಿಚಾರಗಳನ್ನು ಮಾತ್ರ ಪ್ರಸ್ತಾಪಿಸಬೇಕು’’ ಎಂದು. ಹಿಜಾಬ್, ಹಲಾಲ್, ಜಟ್ಕಾ, ಟಿಪ್ಪು ಮತ್ತು ಉರಿಗೌಡ-ನಂಜೇಗೌಡ ವಿಷಯವನ್ನು ಮುನ್ನೆಲೆಗೆ ತಂದು ವ್ಯಾಪಕವಾಗಿ ಚರ್ಚೆ ನಡೆಸಿದರು. ಬಿಜೆಪಿಯ ದ್ವೇಷ ಬಿತ್ತುವ, ಮತೀಯ ಗಲಭೆ ಸೃಷ್ಟಿಸುವ, ಕೋಮುವಾದಿ ವಿಚಾರಧಾರೆಗಳನ್ನು ಕರ್ನಾಟಕದ ಪ್ರಜ್ಞಾವಂತ ಮತದಾರ 2023ರ ವಿಧಾನಸಭಾ ಚುನಾವಣೆಯಲ್ಲಿ ಮುಲಾಜಿಲ್ಲದೆ ತಿರಸ್ಕರಿಸಿದರು. ಬಿಜೆಪಿ ಆ ಚುನಾವಣೆಯನ್ನು ಮತೀಯ ವಿಚಾರಧಾರೆಗಳನ್ನು ಮುನ್ನೆಲೆಗೆ ತಂದು ಹಿಂದೂ-ಮುಸ್ಲಿಮ್ ಮತಗಳ ಧ್ರುವೀಕರಣ ಮಾಡಿ ಗೆಲುವು ಸಾಧಿಸುವ ಇರಾದೆ ಹೊಂದಿತ್ತು. ಬಿಜೆಪಿ ಕರ್ನಾಟಕದಲ್ಲಿ ಮತೀಯ ವಿಚಾರಧಾರೆಗಳನ್ನು ಪ್ರಮುಖ ವಿಷಯಗಳನ್ನಾಗಿ ಸ್ವೀಕರಿಸಿ ಚುನಾವಣೆ ಎದುರಿಸಿದಾಗ ಹೀನಾಯ ಸೋತಿದೆ. 2008 ಮತ್ತು 2018ರ ಚುನಾವಣೆಯಲ್ಲಿ ಬಿಜೆಪಿ ಬಿ.ಎಸ್. ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಬಿಂಬಿಸಿ, ಅಭಿವೃದ್ಧಿಯ ಕನಸುಗಳನ್ನು ಬಿತ್ತಿದ್ದರಿಂದ ಅಲ್ಪ ಪ್ರಮಾಣದ ಮುನ್ನಡೆ ಸಾಧಿಸಿತ್ತು. ಯಡಿಯೂರಪ್ಪ ತಮ್ಮ ಸುದೀರ್ಘ ಹೋರಾಟದ ರಾಜಕಾರಣದಲ್ಲಿ ರೈತ ನಾಯಕ ಎಂದೇ ಬಿಂಬಿಸಿಕೊಳ್ಳಲು ಯತ್ನಿಸಿದ್ದರು. ಕರ್ನಾಟಕವನ್ನು ಅಭಿವೃದ್ಧಿಯಲ್ಲಿ ಮಾದರಿ ರಾಜ್ಯವನ್ನಾಗಿ ರೂಪಿಸುವುದಾಗಿ ಹೇಳುತ್ತಿದ್ದರು. ಯಡಿಯೂರಪ್ಪ ಮೊದಲ ಬಾರಿಗೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವಾಗ ಹೆಗಲ ಮೇಲೆ ಹಸಿರು ಟವೆಲ್ ಧರಿಸಿದ್ದರು. ಸಾಧ್ಯವಾದಷ್ಟು ರೈತ ನಾಯಕ ಎಂದು ಬಿಂಬಿಸಿಕೊಳ್ಳಲು ಹರಸಾಹಸ ಪಡುತ್ತಿದ್ದರು. 2013ರ ವಿಧಾನಸಭಾ ಚುನಾವಣೆಯ ಹೊತ್ತಿಗೆ ಪ್ರಹ್ಲಾದ್ ಜೋಶಿ ಬಿಜೆಪಿಯ ರಾಜ್ಯಾಧ್ಯಕ್ಷರಾಗಿದ್ದರು. ದ್ವೇಷ, ಪ್ರತೀಕಾರ, ಮತೀಯ ವಿಚಾರಧಾರೆಗಳನ್ನು ಮುಂದೆ ಮಾಡಿ ಚುನಾವಣೆ ಎದುರಿಸಿದರು. ಕರ್ನಾಟಕದ ಪ್ರಜ್ಞಾವಂತ ಮತದಾರ ಆ ಚುನಾವಣೆಯಲ್ಲಿ ಬಿಜೆಪಿಗೆ ಕೇವಲ 40 ಶಾಸಕರ ಬಲ ನೀಡುವ ಮೂಲಕ ಹೀನಾಯವಾಗಿ ಸೋಲಿಸಿದ್ದರು. ಪ್ರಾದೇಶಿಕ ಪಕ್ಷ ಜೆಡಿಎಸ್ ಕೂಡಾ 40 ಮತ ಕ್ಷೇತ್ರಗಳಲ್ಲಿ ಗೆದ್ದು ಬೀಗಿತ್ತು. 2023ರ ವಿಧಾನಸಭಾ ಚುನಾವಣೆಯಲ್ಲಿಯಂತೂ ಬಿಜೆಪಿ ದ್ವೇಷ ಮತ್ತು ಮತೀಯ ರಾಜಕಾರಣದ ಪರಾಕಾಷ್ಠೆ ತಲುಪಿತ್ತು. ಕೋಮು ಗಲಭೆಗಳನ್ನು ಸೃಷ್ಟಿಸಿ 150 ಸ್ಥಾನಗಳಲ್ಲಿ ಗೆಲುವು ಸಾಧಿಸುವ ಕನಸು ಕಂಡಿತ್ತು. ನೂರು ವರ್ಷಗಳ ಹಿಂದೆ ಅಸ್ತಿತ್ವಕ್ಕೆ ಬಂದ ಆರೆಸ್ಸೆಸ್ ಜನರಿಗೆ ಹತ್ತಿರವಾಗಿದ್ದು ಸಂಘಟನಾ ಕೌಶಲ್ಯದಿಂದ. ಸಂಘದ ಪ್ರಚಾರಕರ ಸರಳತೆ ಮತ್ತು ಆಪ್ತ ಒಡನಾಟದಿಂದ. ಆದರೆ ಆರೆಸ್ಸೆಸ್ ಮನು ಪ್ರಣೀತ ಹಿಂದೂ ಧರ್ಮವನ್ನು ಪ್ರತಿಪಾದಿಸುತ್ತಾ ಬಂದಿದೆ. ದ್ವೇಷ, ಪ್ರತೀಕಾರ ಮತ್ತು ಸಾಮಾಜಿಕ ಸಾಮರಸ್ಯ ಹಾಳು ಮಾಡಿ ಮತೀಯ ಗಲಭೆ ಸೃಷ್ಟಿಸುವುದರಲ್ಲಿ ಹೆಚ್ಚು ಆಸಕ್ತಿ ಹೊಂದಿದೆ. ಧರ್ಮದ ಆಧಾರದಲ್ಲಿ ಮತದಾರರನ್ನು ವಿಭಜಿಸುವ ಮುಖ್ಯ ಉದ್ದೇಶ ಬಿಜೆಪಿಯದ್ದು. ಹಾಗಾಗಿ ಅದು ದ್ವೇಷ ಭಾಷಣಗಳನ್ನು ಹೆಚ್ಚು ಅವಲಂಬಿಸಿದೆ. ಬಿಜೆಪಿಗೆ ಭಾರತದ ಸಂವಿಧಾನದ ಮೇಲೆ ಕಿಂಚಿತ್ ನಂಬಿಕೆಯಿಲ್ಲ. ಸುಪ್ರೀಂ ಕೋರ್ಟ್ ತೀರ್ಪಿನ ಅನ್ವಯ ಕರ್ನಾಟಕ ಸರಕಾರ ದ್ವೇಷ ಭಾಷಣ ಪ್ರತಿಬಂಧಕ ಕಾಯ್ದೆ ರೂಪಿಸುತ್ತಿದೆ. ಉಭಯ ಸದನಗಳಲ್ಲಿ ಮಂಡಿಸಲು ಸಿದ್ಧಪಡಿಸಿರುವ ವಿಧೇಯಕವನ್ನು ಚರ್ಚೆಗೆ ಒಳಪಡಿಸಿ ಹೆಚ್ಚು ವೈಜ್ಞಾನಿಕವಾಗಿ ರೂಪಿಸಲು ಬಿಜೆಪಿಯವರು ಒತ್ತಾಯಿಸಬೇಕಿತ್ತು. ವಿಧೇಯಕದ ಸಾಧಕ ಬಾಧಕಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಬೇಕಾಗಿತ್ತು. ಅದು ಬಿಟ್ಟು ಬಿಜೆಪಿಯವರು ದ್ವೇಷ ಭಾಷಣ ಪ್ರತಿಬಂಧಕ ಮಸೂದೆಯನ್ನೇ ಸಾರಾಸಗಟಾಗಿ ವಿರೋಧಿಸುತ್ತಿರುವುದು ಜನತಂತ್ರವನ್ನು ಅಣಕಿಸಿದಂತೆ. ಪ್ರಜಾಪ್ರಭುತ್ವದ ಮೂಲ ಆಶಯವೇ ಸ್ವಾತಂತ್ರ್ಯ, ಸಮಾನತೆ, ಪ್ರೀತಿ-ವಿಶ್ವಾಸ, ಸಾಮರಸ್ಯ ನೆಲೆಸುವಂತೆ ಪ್ರಯತ್ನಿಸುವುದು. ಆದರೆ ಬಿಜೆಪಿ ಭಂಡತನಕ್ಕೆ ಬಿದ್ದು ಪ್ರೀತಿ-ವಿಶ್ವಾಸ, ಸಾಮರಸ್ಯದ ವಿರೋಧಿಯಂತೆ ನಡೆದುಕೊಳ್ಳುತ್ತಿದೆ. ಬಿಜೆಪಿಯ ಶಾಸಕರು ಸಂವಿಧಾನ ಪಾಲನೆಯ ಪ್ರಮಾಣ ವಚನ ಸ್ವೀಕರಿಸಿದವರು. ಭಾರತದ ಸಂವಿಧಾನ ಕೂಡಿ ಬಾಳುವುದರ ಮಹತ್ವವನ್ನೇ ಮತ್ತೆ ಮತ್ತೆ ಒತ್ತಿ ಹೇಳಿದೆ. ಭಾರತದ ಸಂವಿಧಾನ ಮಾತ್ರವಲ್ಲ, ಹಿಂದೂ ಧರ್ಮವು ‘ಸರ್ವೇ ಜನ ಸುಖಿನೋ ಭವ’ ಆದರ್ಶದಲ್ಲಿ ನಂಬಿಕೆ ಇರಿಸಿದೆ. ‘ವಸುಧೈವ ಕುಟುಂಬಕಂ’ ತತ್ವವನ್ನು ಸಾರುತ್ತದೆ. ಹಿಂದೂ ಧರ್ಮವನ್ನು ಆತ್ಯಂತಿಕವಾಗಿ ಗೌರವಿಸುತ್ತಿದ್ದ ಮತ್ತು ತಾವು ಹಿಂದೂ ಎಂದು ಹೇಳಿಕೊಳ್ಳಲು ಹೆಮ್ಮೆ ಪಡುತ್ತಿದ್ದ ಮಹಾತ್ಮಾ ಗಾಂಧಿ, ರಾಮಕೃಷ್ಣ ಪರಮಹಂಸ, ಸ್ವಾಮಿ ವಿವೇಕಾನಂದರು ಪ್ರೀತಿ ವಿಶ್ವಾಸ, ಸಾಮರಸ್ಯ ಪ್ರತಿಪಾದಿಸುವ ನೈಜ ಹಿಂದೂ ಧರ್ಮದಲ್ಲಿ ನಂಬಿಕೆ ಇರಿಸಿದ್ದರು. ಬುದ್ಧ, ಬಸವ, ಅಂಬೇಡ್ಕರ್ ಅವರು ಕರುಣೆ, ಪ್ರೀತಿ, ಮಾನವೀಯತೆ, ಸಾಮರಸ್ಯವೇ ನಿಜವಾದ ಧರ್ಮದ ತಿರುಳು ಎಂದು ನಂಬಿಕೊಂಡಿದ್ದರು. ಬಿಜೆಪಿ ಶಾಸಕರು ವಿರೋಧಿಸುತ್ತಿರುವ ದ್ವೇಷ ಭಾಷಣ ಪ್ರತಿಬಂಧಕ ಮಸೂದೆಯಲ್ಲಿ ‘ಪ್ರೀತಿ-ವಿಶ್ವಾಸ, ಸಾಮರಸ್ಯ’ದ ಮಾತುಗಳೇ ಇವೆ. ದ್ವೇಷ ಭಾಷಣದ ಪ್ರಸರಣೆ, ಪ್ರಕಟಣೆ, ಪ್ರಚಾರವನ್ನು, ನಿರ್ದಿಷ್ಟ ವ್ಯಕ್ತಿ ಅಥವಾ ವ್ಯಕ್ತಿಗಳ ಸಮೂಹ ಅಥವಾ ಸಂಸ್ಥೆಗಳ ವಿರುದ್ಧ ಅಸಾಮರಸ್ಯ ದ್ವೇಷವನ್ನು ಹುಟ್ಟಿಸುವ ಅಪರಾಧಗಳನ್ನು ಈ ಕಾಯ್ದೆ ಪ್ರತಿಬಂಧಿಸುತ್ತದೆ. ಧರ್ಮ, ಜನಾಂಗ, ಜಾತಿ ಅಥವಾ ಸಮುದಾಯ, ಲಿಂಗ, ಲಿಂಗತ್ವ ಮುಂತಾದ ವಿಷಯಗಳ ಅವಹೇಳನ, ನಿಂದನೆಯನ್ನು ಈ ಕಾಯ್ದೆ ಪ್ರತಿಬಂಧಿಸುತ್ತದೆ. ಹಾಗೆ ನೋಡಿದರೆ ಈ ಕಾಯ್ದೆ ಎಲ್ಲ ರಾಜಕೀಯ ಪಕ್ಷಗಳಿಗೂ ಅನ್ವಯಿಸುತ್ತದೆ. ಬಿಜೆಪಿಯ ಉಚ್ಚಾಟಿತ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಮುಸ್ಲಿಮ್ ಸಮುದಾಯವನ್ನು ಗುರಿಯಾಗಿಸಿ ಅತ್ಯಂತ ಕೆಟ್ಟ ಪದಗಳಲ್ಲಿ ನಿಂದಿಸುತ್ತಿದ್ದರು. ಕಲ್ಲಡ್ಕ ಪ್ರಭಾಕರ್ ಭಟ್, ಪ್ರಮೋದ್ ಮುತಾಲಿಕ್, ಸಿ.ಟಿ. ರವಿ ಮತ್ತು ಕರಾವಳಿ ಭಾಗದ ಬಹುತೇಕ ಬಿಜೆಪಿ ಶಾಸಕರು ದ್ವೇಷ ಭಾಷಣಕ್ಕೆ ಹೆಸರಾಗಿದ್ದಾರೆ. ಅಂಥವರನ್ನು ನಿಯಂತ್ರಿಸಲು ಕಾಯ್ದೆ ರೂಪಿಸುವುದು ತಪ್ಪೇ? ಕಾಂಗ್ರೆಸ್, ಜೆಡಿಎಸ್ ಅಥವಾ ಬೇರೆ ಯಾವುದೇ ಸಂಘಟನೆಯ ಮುಖಂಡರು ದ್ವೇಷ ಭಾಷಣ ಮಾಡಿದರೂ ಅದು ಶಿಕ್ಷಾರ್ಹ ಅಪರಾಧ ಎನಿಸಿಕೊಳ್ಳುತ್ತದೆ. ದ್ವೇಷ ಭಾಷಣ ಪ್ರತಿಬಂಧಕ ಕಾಯ್ದೆ ಬಿಜೆಪಿ ಮತ್ತು ಮೋದಿ ಮಡಿಲ ಮೀಡಿಯಾ ಮಂದಿಗೆ ಕಂಗೆಡಿಸಿದಂತಿದೆ. ದ್ವೇಷ ಭಾಷಣದ ಚಟ ಇರುವುದು ಮೋದಿ ಮಡಿಲ ಮಾಧ್ಯಮಗಳಿಗೆ ಮಾತ್ರ. ಕೋವಿಡ್ ಕಾಲಾವಧಿಯಲ್ಲಿ ಕನ್ನಡದ ಕೆಲವು ಮಾಧ್ಯಮಗಳು ಕೊರೋನ ಹಬ್ಬಲು ತಬ್ಲಿಗಿ ಸಂಸ್ಥೆ ಕಾರಣ ಎಂಬಂತೆ ಸುದ್ದಿ ಪ್ರಸಾರ ಮಾಡಿದ್ದವು. ಅಂದಿನ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಸ್ಪಷ್ಟೀಕರಣ ನೀಡಬೇಕಾಯಿತು. ಭಾರತೀಯ ಜನತಾ ಪಕ್ಷ ಮತ್ತು ಮೋದಿ ಮಡಿಲ ಮಾಧ್ಯಮಗಳು ದ್ವೇಷ ಬಿತ್ತುವ ಕೆಲಸದಲ್ಲಿ ತೃಪ್ತಿ ಪಟ್ಟುಕೊಳ್ಳುತ್ತಿವೆ. ಈ ನೀಚ ಪ್ರವೃತ್ತಿಗೆ ಕಡಿವಾಣ ಹಾಕಲು ದ್ವೇಷ ಭಾಷಣ ಪ್ರತಿಬಂಧಕ ಕಾಯ್ದೆ ಅಗತ್ಯವಾಗಿತ್ತು. ಭಾರತೀಯ ಜನತಾ ಪಕ್ಷಕ್ಕೆ ದ್ವೇಷ, ಪ್ರತೀಕಾರದ ಮೇಲೆ ಹೆಚ್ಚು ಆಸಕ್ತಿ ಇದೆ ಎನ್ನುವುದಕ್ಕೆ ನೂರಾರು ನಿದರ್ಶನಗಳು ಕೊಡಬಹುದು. ಆದರೆ ಬಿಜೆಪಿ ದ್ವೇಷ ರಾಜಕಾರಣದಿಂದ ಏನನ್ನೂ ಸಾಧಿಸಲಿಲ್ಲ. ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಜನಸಂಘವು ಸೇರಿದಂತೆ ಜನತಾ ಪರಿವಾರದ ಎಲ್ಲರೂ ಪ್ರೀತಿ ವಿಶ್ವಾಸ, ಸಾಮರಸ್ಯಕ್ಕಾಗಿ ಹಂಬಲಿಸಿದ್ದರು. ಆ ಕಾರಣಕ್ಕೆ ಜನಸಂಘ ಜನತಾ ಪಕ್ಷದ ಭಾಗವಾಗಿತ್ತು. ಆದರೆ ಮೂಲತಃ ದ್ವೇಷ, ಪ್ರತೀಕಾರದ ಮೇಲೆ ವಿಶ್ವಾಸ ಹೊಂದಿರುವ ಬಿಜೆಪಿ ಹೆಚ್ಚು ಕಾಲ ಜನತಾ ಪರಿವಾರದ ಭಾಗವಾಗಿ ಉಳಿಯಲಿಲ್ಲ. ಭಾರತೀಯ ಜನತಾ ಪಕ್ಷ ದ್ವೇಷ ಮತ್ತು ಸಾಮರಸ್ಯ ಹಾಳು ಮಾಡುವ ರಾಜಕಾರಣ ಬಿಟ್ಟು ಅಭಿವೃದ್ಧಿ ರಾಜಕಾರಣ ಮಾಡಿದ್ದರೆ ಎಂದೋ ಜನತೆಯ ಪ್ರೀತಿ ವಿಶ್ವಾಸಕ್ಕೆ ಪಾತ್ರವಾಗುತ್ತಿತ್ತು. ಸಂವಿಧಾನ ಬಾಹಿರವಾಗಿ ಬಾಬರಿ ಮಸೀದಿ ಧ್ವಂಸ ಮಾಡಿದ ಬಿಜೆಪಿ ಮತ್ತು ಅದರ ಅಂಗ ಸಂಸ್ಥೆಗಳು ದೇಶದ ತುಂಬಾ ಕೋಮು ಗಲಭೆ ಸೃಷ್ಟಿಸಿದವು. ಅಪಾರ ಪ್ರಮಾಣದ ಪ್ರಾಣ ಹಾನಿಗೆ ಕಾರಣವಾಗಿದ್ದವು. ಆದರೆ ಕೋಮು ಗಲಭೆ ಸೃಷ್ಟಿಸಿ ಬಿಜೆಪಿ ಇನ್ನೂರು ಕ್ಷೇತ್ರಗಳಲ್ಲೂ ಗೆಲುವು ಸಾಧಿಸಲು ಸಾಧ್ಯವಾಗಿರಲಿಲ್ಲ. 2014ರಲ್ಲಿ ಮೋದಿ ನೇತೃತ್ವದ ಬಿಜೆಪಿ ಗೆಲುವು ಸಾಧಿಸಲು ಕಾರಣವಾಗಿದ್ದು ಅಭಿವೃದ್ಧಿ ರಾಜಕಾರಣದ ಮಾತುಗಳಿಂದ. ‘ಸಬ್‌ಕಾ ಸಾಥ್ ಸಬ್‌ಕಾ ವಿಕಾಸ್’ ಸ್ಲೋಗನ್ ಬಿಜೆಪಿ ಬಗೆಗಿನ ಗ್ರಹಿಕೆ ಬದಲಾಯಿಸಿತು. ಆದರೆ ಆಳದಲ್ಲಿ ಮೋದಿ ನೇತೃತ್ವದ ಬಿಜೆಪಿ ಕೂಡಾ ದ್ವೇಷ ಪ್ರತೀಕಾರದ ಆಶಯವನ್ನೇ ಹೊತ್ತು ಅಭಿವೃದ್ಧಿಯ ಮುಖವಾಡ ಧರಿಸಿತ್ತು. ಹಿಂದೂ ಧರ್ಮವನ್ನು ವಿಶಾಲ ಅರ್ಥದಲ್ಲಿ ಜಗತ್ತಿಗೆ ಪರಿಚಯಿಸಿದ ಮಹಾತ್ಮಾ ಗಾಂಧಿ, ರಾಮಕೃಷ್ಣ ಪರಮಹಂಸ ಮತ್ತು ಸ್ವಾಮಿ ವಿವೇಕಾನಂದ ಅವರ ಬಗ್ಗೆಯೂ ಬಿಜೆಪಿಗೆ ಒಳ್ಳೆಯ ಅಭಿಪ್ರಾಯ ಇರಲಿಲ್ಲ ಎಂಬುದು ದಿನೇ ದಿನೇ ಅನಾವರಣಗೊಳ್ಳುತ್ತಾ ಹೋಯಿತು. ಮಹಾತ್ಮಾ ಗಾಂಧಿ ಗುಜರಾತ್ ನೆಲದ ಹೆಮ್ಮೆಯ ಪುತ್ರ. ಇಡೀ ಪ್ರಪಂಚವೇ ಗಾಂಧೀಜಿ ಅವರ ತತ್ವ ಆದರ್ಶಗಳಿಂದ ಪ್ರಭಾವಿತವಾಗಿತ್ತು. ಆದರೆ ಗುಜರಾತ್ ಮೂಲದ ನರೇಂದ್ರ ಮೋದಿ ಪ್ರಧಾನ ಮಂತ್ರಿಯಾದ ಮೇಲೆಯೂ ಮಹಾತ್ಮಾ ಗಾಂಧೀಜಿ ನಿಂದನೆಗೆ ಕಡಿವಾಣ ಹಾಕಲಿಲ್ಲ. ಮಹಾತ್ಮಾ ಗಾಂಧೀಜಿಯವರನ್ನು ಸಂಘ ಪರಿವಾರದ ಅಂಗ ಸಂಸ್ಥೆಗಳು ಅತ್ಯಂತ ಕೆಟ್ಟ ಪದಗಳಲ್ಲಿ ಟೀಕಿಸುತ್ತಿದ್ದವು. ವಿಶೇಷವಾಗಿ ಕೆಲವು ಯೂಟ್ಯೂಬ್ ಚಾನೆಲ್‌ಗಳು ಮಹಾತ್ಮಾ ಗಾಂಧೀಜಿಯವರ ಅವಹೇಳನಕ್ಕೆ ಮೀಸಲಾಗಿದ್ದವು. ಅವುಗಳ ವಿರುದ್ಧ ಕ್ರಮ ಜರುಗಿಸುವುದು ಒತ್ತಟ್ಟಿಗಿರಲಿ ಮೋದಿ ಸರಕಾರ ನಿಯಂತ್ರಿಸಲು ಯತ್ನಿಸಲಿಲ್ಲ. ಕನ್ನಡದ ‘ಸಂವಾದ’ ಎಂಬ ಯೂಟ್ಯೂಬ್ ಚಾನೆಲ್‌ನಲ್ಲಿ ಸೌಜನ್ಯಾ ಕೌಶಿಕ್ ಎನ್ನುವವರು ಮಹಾತ್ಮಾ ಗಾಂಧೀಜಿಯವರನ್ನು ಅತ್ಯಂತ ಕೆಟ್ಟ ಪದಗಳಲ್ಲಿ ನಿಂದಿಸಿ ವೀಡಿಯೊ ಮಾಡಿದ್ದರು. ಮಹಾತ್ಮಾ ಗಾಂಧೀಜಿಯವರ ಬಗ್ಗೆ ಮೋದಿಯವರು ತೋರಿಕೆಯ ಪ್ರೀತಿ ಇಟ್ಟುಕೊಂಡಿದ್ದರು. ಅದು ಈಗ ಬಟಾ ಬಯಲಾಗಿದೆ. 2005ರಲ್ಲಿ ಮನಮೋಹನ್ ಸಿಂಗ್ ಅವರು ಪ್ರಧಾನ ಮಂತ್ರಿಯಾಗಿದ್ದಾಗ ‘ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ’ ಆರಂಭಿಸಲಾಗಿತ್ತು. ಈಗ ಮೋದಿ ಸರಕಾರ ಯೋಜನೆಯ ಶೀರ್ಷಿಕೆಯಲ್ಲಿ ಸೇರಿಕೊಂಡಿದ್ದ ಮಹಾತ್ಮಾ ಗಾಂಧಿ ಹೆಸರನ್ನೇ ಕಿತ್ತು ಹಾಕಿದ್ದಾರೆ. ಗೋಡ್ಸೆ ಹೆಸರು ಭಾಸವಾಗುವಂತೆ ಜಿ ರಾಮ್ ಜಿ ಎಂದು ಮರು ನಾಮಕರಣ ಮಾಡಿದ್ದಾರೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅತಿಯಾಗಿ ರಾಮ ಮಂದಿರ ನಿರ್ಮಾಣ ಕಾರ್ಯವನ್ನು ಪ್ರಚಾರ ಮಾಡಿಕೊಂಡಿತ್ತು. ಅಷ್ಟು ಮಾತ್ರವಲ್ಲ ಮುಸ್ಲಿಮ್ ವಿರೋಧಿ ನಿಲುವನ್ನು ಬಹಿರಂಗವಾಗಿ ಪ್ರಕಟಿಸಿತ್ತು. ಬಹು ಭಾಷೆ, ಬಹು ಧರ್ಮ ಮತ್ತು ಬಹು ಸಂಸ್ಕೃತಿಗಳ ಈ ದೇಶದಲ್ಲಿ ಮೋದಿ ಮತ್ತು ಬಿಜೆಪಿಯವರ ದ್ವೇಷ ರಾಜಕಾರಣ ಯಶಸ್ಸು ಆಗಲಿಲ್ಲ. ಭಾರತದ ಮತದಾರ ಮೋದಿಯವರ ‘ಚಾರ್ ಸೌ ಪಾರ್’ ಸ್ಲೋಗನ್‌ನ್ನು ಪುರಸ್ಕರಿಸಲಿಲ್ಲ. ಅಷ್ಟು ಮಾತ್ರವಲ್ಲ ರಾಮಮಂದಿರ ನಿರ್ಮಾಣ ಕಾರ್ಯ ಮಾತ್ರ ವೋಟು ತಂದು ಕೊಡಲಾರದು ಎಂಬ ಸಂದೇಶ ರವಾನಿಸಿದ್ದರು. ಈಗಲಾದರೂ ಕರ್ನಾಟಕದ ಬಿಜೆಪಿ ನಾಯಕರು ಬುದ್ಧ, ಬಸವ, ಅಂಬೇಡ್ಕರ್ ಅವರಿಗೆ ಗೌರವಿಸಿ ದ್ವೇಷ ರಾಜಕಾರಣ ಮಾಡುವುದನ್ನು ನಿಲ್ಲಿಸಬೇಕು. ಕರ್ನಾಟಕ ಸರ್ವ ಜನಾಂಗದ ಶಾಂತಿಯ ತೋಟ. ಇಲ್ಲಿ ದ್ವೇಷ ಭಾಷಣ, ಪ್ರತೀಕಾರದ ರಾಜಕಾರಣ ನಡೆಯುವುದಿಲ್ಲ ಎಂಬುದಕ್ಕೆ ಸಾವಿರ ನಿದರ್ಶನಗಳಿವೆ. ಬಿಜೆಪಿ ಒಪ್ಪಲಿ ಬಿಡಲಿ. ದ್ವೇಷ ಭಾಷಣ ಪ್ರತಿಬಂಧಕ ಕಾಯ್ದೆಯನ್ನು ಸಮರ್ಪಕವಾಗಿ ಜಾರಿಗೊಳಿಸಲು ಸರಕಾರ ಗಂಭೀರ ಪ್ರಯತ್ನ ಮಾಡಬೇಕು. ಕಾಯ್ದೆ ರೂಪಿಸುವುದು ಎಷ್ಟು ಮುಖ್ಯವೋ ಅದನ್ನು ಅನುಷ್ಠಾನದಲ್ಲಿ ತರುವುದು ಸರಕಾರದ ಮೊದಲ ಆದ್ಯತೆಯಾಗಬೇಕು. ಕರ್ನಾಟಕದಲ್ಲಿ ಪ್ರೀತಿ ವಿಶ್ವಾಸ, ಸಾಮರಸ್ಯ ಮತ್ತು ಸಹಬಾಳ್ವೆಯ ರಾಜಕಾರಣ ಮಾತ್ರ ಯಶಸ್ವಿಯಾಗುತ್ತದೆ. ಅಭಿವೃದ್ಧಿ ರಾಜಕಾರಣದಿಂದ ವಿಮುಖವಾಗಿ ದ್ವೇಷ ರಾಜಕಾರಣ ಮಾಡುತ್ತಿರುವ ಬಿಜೆಪಿಗೆ ಈ ನಾಡಿನ ಮತದಾರರೇ ಪಾಠ ಕಲಿಸುತ್ತಾರೆ. ದ್ವೇಷ ಭಾಷಣ ಪ್ರತಿಬಂಧಕ ಕಾಯ್ದೆ ಕಾಲದ ಅಗತ್ಯವಾಗಿತ್ತು. ಕರ್ನಾಟಕ ಸರಕಾರ ನಿರ್ಧಾರ ಕೈಗೊಂಡಿದೆ.

ವಾರ್ತಾ ಭಾರತಿ 20 Dec 2025 10:24 am

ಉತ್ತರ ಕರ್ನಾಟಕ ಭಾಗಕ್ಕೆ ಖರ್ಚಾಗಿದ್ದೆಷ್ಟು? ಅಂಕಿ ಅಂಶಗಳ ಲೆಕ್ಕ ಕೊಟ್ಟ ಸಿದ್ದರಾಮಯ್ಯ

ಬೆಳಗಾವಿ: ಬೆಳಗಾವಿಯಲ್ಲಿ ಅಧಿವೇಶನ ನಡೆದರೆ. ಭರವಸೆಗಳು ಮೂಡುತ್ತವೆ. ಆದರೆ ಅಧಿವೇಶನ ಮುಗಿದ ಮೇಲೆ ಮತ್ತೆ ಅದೇ ಮೌನ...ಅದೇ ಸಮಸ್ಯೆಗಳು...ಅದೇ ನಿರ್ಲಕ್ಷ್ಯ... ಉತ್ತರ ಕರ್ನಾಟಕ ಮೊದಲಿನಿಂದಲೂ ಅನುದಾನ ವಿಚಾರದಲ್ಲಿ ಅನ್ಯಾಯವಾಗುತ್ತಿದೆ ಎಂಬ ಕೂಗು ಮೊದಲಿನಿಂದಲೂ ಇದೆ. ಈ ಬಗ್ಗೆ ಶುಕ್ರವಾರ ವಿಧಾನ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉತ್ತರ ಕರ್ನಾಟಕ ಬಿಡುಗಡೆಯಾದ ಹಣ ಎಷ್ಟು ಎಂಬ ಬಗ್ಗೆ ಅಂಕಿ

ಒನ್ ಇ೦ಡಿಯ 20 Dec 2025 10:06 am

ಗ್ರೀನ್‌ ಕಾರ್ಡ್‌ ಬ್ಯಾನ್‌ ಮಾಡಿದ ಟ್ರಂಪ್‌ ಆಡಳಿತ: ಆದ್ರೆ ಇದರಿಂದ ಭಾರತೀಯರಿಗೆ ನೋ ಪ್ರಾಬ್ಲಂ, ಅದು ಹೇಗೆ?

ಅಮೆರಿಕಾದಲ್ಲಿ ಗ್ರೀನ್ ಕಾರ್ಡ್ ಲಾಟರಿ ಕಾರ್ಯಕ್ರಮವನ್ನು ಅಧ್ಯಕ್ಷ ಟ್ರಂಪ್ ಸ್ಥಗಿತಗೊಳಿಸಿದ್ದಾರೆ. ಪೋರ್ಚುಗಲ್ ದೇಶದ ನಾಗರಿಕನೊಬ್ಬ ಗ್ರೀನ್ ಕಾರ್ಡ್ ಮೂಲಕ ಅಮೆರಿಕಾ ಪ್ರವೇಶಿಸಿ ಬ್ರೌನ್ ಯೂನಿವರ್ಸಿಟಿ ಸೇರಿಂದತೆ ಇನ್ನೊಂದು ಯೂನಿವರ್ಸಿಟಿ ಮೇಲೆ ದಾಳಿ ನಡೆಸಿದ ಹಿನ್ನೆಲೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಆದರೆ ಈ ನಿರ್ಬಂಧ ಭಾರತೀಯರ ಮೇಲೆ ಹೆಚ್ಚಿನ ಪರಿಣಾಮ ಬೀರುವುದಿಲ್ಲ. ಏಕೆಂದರೆ ಭಾರತ ಈಗಾಗಲೇ ಗ್ರೀನ್ ಕಾರ್ಡ್ ಅರ್ಜಿ ಸಲ್ಲಿಸಲು ಅರ್ಹತೆ ಹೊಂದಿಲ್ಲ. ಉದ್ಯೋಗ, ಕುಟುಂಬ, ಹೂಡಿಕೆ ಅಥವಾ ಆಶ್ರಯದ ಮೂಲಕ ವಾಸಿಸುವ ಅವಕಾಶಗಳು ಇವೆ.

ವಿಜಯ ಕರ್ನಾಟಕ 20 Dec 2025 9:57 am

IND vs SA 5th T20: ವರುಣ್ ಚಕ್ರವರ್ತಿ, ಬುಮ್ರಾ ಬೌಲಿಂಗ್ ದಾಳಿಗೆ ಪತರಗುಟ್ಟಿದ ದಕ್ಷಿಣ ಆಫ್ರಿಕಾ: ಭಾರತಕ್ಕೆ 30 ರನ್‌ಗಳ ಜಯ

IND vs SA 5th T20: ಗುಜರಾತ್‌ನ ಅಹಮದಾಬಾದ್‌ನ ನರೇಂದ್ರ ಮೋದಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ (ಡಿಸೆಂಬರ್ 19) ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡಗಳ ನಡುವೆ 5ನೇ ಟಿ-20 ಪಂದ್ಯ ನಡೆಯಿತು. ಈ ವೇಳೆ ಟೀಂ ಇಂಡಿಯಾ 30 ರನ್‌ಗಳಿಂದ ಭರ್ಜರಿ ಗೆಲುವು ಸಾಧಿಸಿ ಸರಣಿಯಲ್ಲಿ 3-1 ಅಂತರದಿಂದ ಸರಣಿ ಗೆದ್ದುಕೊಂಡಿತು. ಟಾಸ್‌ ಗೆದ್ದ ದಕ್ಷಿಣ ಆಫ್ರಿಕಾ

ಒನ್ ಇ೦ಡಿಯ 20 Dec 2025 9:53 am

ಮಲಯಾಳಂ ಚಿತ್ರರಂಗದ ಹಿರಿಯ ನಟ, ನಿರ್ದೇಶಕ ಶ್ರೀನಿವಾಸನ್ ನಿಧನ

ಕೊಚ್ಚಿ: ಮಲಯಾಳಂ ಚಿತ್ರರಂಗದ ಹಿರಿಯ ನಟ, ನಿರ್ದೇಶಕ ಮತ್ತು ನಿರ್ಮಾಪಕ ಶ್ರೀನಿವಾಸನ್(69) ಶನಿವಾರ ನಿಧನರಾಗಿದ್ದಾರೆ. ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಶ್ರೀನಿವಾಸನ್ ಅವರು ಉದಯಂಪೀರೂರಿನ ತನ್ನ ನಿವಾಸದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅವರ ಆರೋಗ್ಯದಲ್ಲಿ ದಿಡೀರ್ ಏರುಪೇರು ಕಂಡು ಬಂದ ಬಳಿಕ ಅವರನ್ನು ತ್ರಿಪ್ಪುನಿತುರಾದ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಶನಿವಾರ ಬೆಳಿಗ್ಗೆ ಅವರು ಮೃತಪಟ್ಟಿದ್ದಾರೆ. ಕೇರಳದ ತಲಶ್ಶೇರಿ ಬಳಿಯ ಪಟ್ಯಂನಲ್ಲಿ 1956ರ ಏಪ್ರಿಲ್ 6 ರಂದು ಜನಿಸಿದ ಶ್ರೀನಿವಾಸನ್, ಕದಿರೂರಿನಲ್ಲಿ ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿದರು. ಆ ಬಳಿಕ ಮಟ್ಟನೂರಿನ ಪಿಆರ್‌ಎನ್ ಎಸ್‌ಎಸ್ ಕಾಲೇಜಿನಿಂದ ಅರ್ಥಶಾಸ್ತ್ರ ವಿಷಯದಲ್ಲಿ ಪದವಿ ಪಡೆದರು. 1977ರಲ್ಲಿ ಪಿ.ಎ. ಬ್ಯಾಕರ್ ಅವರ ʼಮಣಿಮುಳಕ್ಕಂʼ ಚಿತ್ರದ ಮೂಲಕ ಶ್ರೀನಿವಾಸನ್ ನಟನೆಗೆ ಪಾದಾರ್ಪಣೆ ಮಾಡಿದರು ಮತ್ತು ಮಲಯಾಳಂ ಚಿತ್ರರಂಗದ ಅತ್ಯಂತ ಜನಪ್ರಿಯ ನಟರಲ್ಲಿ ಒಬ್ಬರಾದರು. ಸುಮಾರು ಐದು ದಶಕಗಳ ಕಾಲ ಅವರು 225ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟನೆಯನ್ನು ಮಾಡಿದ್ದಾರೆ. ನಟ, ನಿರ್ಮಾಪಕ, ಬರಹಗಾರ ಮತ್ತು ಚಲನಚಿತ್ರ ನಿರ್ಮಾಪಕರಾಗಿ ಶ್ರೀನಿವಾಸನ್ ಅವರ ಕೊಡುಗೆ ಆಧುನಿಕ ಮಲಯಾಳಂ ಸಿನಿಮಾವನ್ನು ರೂಪಿಸಲು ಸಹಾಯ ಮಾಡಿದೆ. 

ವಾರ್ತಾ ಭಾರತಿ 20 Dec 2025 9:43 am

ನಂಜನಗೂಡು ಬಳಿ ಕೆಎಸ್‌ಆರ್‌ಟಿಸಿ ಬಸ್‌ ಬೆಂಕಿಗಾಹುತಿ; 44 ಪ್ರಯಾಣಿಕರು ಪಾರಾಗಿದ್ದೇ ರೋಚಕ

ಮೈಸೂರು: ನಂಜನಗೂಡು ಸಮೀಪ ಬೆಳ್ಳಂಬೆಳಿಗ್ಗೆ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಬೆಂಕಿ ಕಾಣಿಸಿಕೊಂಡಿರುವ ಘಟನೆ ವರದಿಯಾಗಿದೆ. ಶುಕ್ರವಾರ ಈ ಘಟನೆ ಸಂಭವಿಸಿದ್ದು, ಭಾರೀ ಆತಂಕ ಸೃಷ್ಟಿಯಾಯಿತು. ಬೆಂಗಳೂರು-ಕೋಜಿಕೋಡ್ ಮಾರ್ಗವಾಗಿ ಮೈಸೂರಿನಿಂದ ಕೇರಳ ಕಡೆಗೆ ಸಂಚರಿಸುತ್ತಿದ್ದ ಈ ಬಸ್ ನಸುಕಿನ ಜಾವ 2 ಗಂಟೆ ಸುಮಾರಿಗೆ ಈ ಅವಘಡಕ್ಕೆ ಒಳಗಾಯಿತು. ಅದೃಷ್ಟವಶಾತ್ ಬಸ್‌ನಲ್ಲಿದ್ದ ಎಲ್ಲ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ವರದಿಗಳ ಪ್ರಕಾರ

ಒನ್ ಇ೦ಡಿಯ 20 Dec 2025 9:14 am

ಬಾಹ್ಯಾಕಾಶಕ್ಕೆ ತೆರಳಲಿರುವ ಮೊದಲ ವೀಲ್‌ಚೇರ್ ಬಳಕೆದಾರೆ ಏರೋಸ್ಪೇಸ್ ಇಂಜಿನಿಯರ್ ಮೈಕೆಲಾ ಬೆಂಥೌಸ್

ವಾಷಿಂಗ್ಟನ್, ಡಿ. 19: ಬಿಲಿಯನೇರ್ ಸ್ಥಾಪಿಸಿರುವ ಏರೋಸ್ಪೇಸ್ ಸಂಸ್ಥೆ ಸಬ್‌ಆರ್ಬಿಟಲ್ ಐತಿಹಾಸಿಕ ಹೆಜ್ಜೆ ಇಡುತ್ತಿದೆ. ಮೊದಲ ಬಾರಿಗೆ, ವೀಲ್‌ಚೇರ್ ಬಳಸುವ ಏರೋಸ್ಪೇಸ್ ಇಂಜಿನಿಯರ್ ಮೈಕೆಲಾ ಬೆಂಥೌಸ್ ಅವರನ್ನು ಬಾಹ್ಯಾಕಾಶಕ್ಕೆ ಕಳುಹಿಸುವ ಸಬ್‌ಆರ್ಬಿಟಲ್ ಹಾರಾಟವನ್ನು ಸಂಸ್ಥೆ ನಡೆಸಲಿದೆ. ಜರ್ಮನಿಯ ಏರೋಸ್ಪೇಸ್ ಹಾಗೂ ಮೆಕಾಟ್ರಾನಿಕ್ಸ್ ಇಂಜಿನಿಯರ್ ಮೈಕೆಲಾ ‘ಮಿಚಿ’ ಬೆಂಥೌಸ್ ಅವರು ನ್ಯೂ ಶೆಪರ್ಡ್ ರಾಕೆಟ್‌ನ NS-37 ಕಾರ್ಯಾಚರಣೆಯಲ್ಲಿ ಇತರ ಐದು ಮಂದಿಯೊಂದಿಗೆ ಭಾಗವಹಿಸಲಿದ್ದಾರೆ. ಈ ಹಾರಾಟದಲ್ಲಿ ಸಿಬ್ಬಂದಿಯನ್ನು ಭೂಮಿಯಿಂದ ಸುಮಾರು 100 ಕಿಲೋಮೀಟರ್ ಎತ್ತರದಲ್ಲಿರುವ ಕರ್ಮನ್ ರೇಖೆಯಾಚೆಗೆ ಕರೆದೊಯ್ಯಲಾಗುತ್ತದೆ. ಈ ರೇಖೆಯನ್ನು ಬಾಹ್ಯಾಕಾಶದ ಗಡಿಯೆಂದು ಅಂತರರಾಷ್ಟ್ರೀಯವಾಗಿ ಗುರುತಿಸಲಾಗಿದೆ. 2018ರಲ್ಲಿ ಮೌಂಟನ್ ಬೈಕಿಂಗ್ ಅಪಘಾತದಲ್ಲಿ ಬೆನ್ನುಹುರಿಗೆ ಗಾಯಗೊಂಡ ಬಳಿಕ ಬೆಂಥೌಸ್ ವೀಲ್‌ಚೇರ್ ಬಳಸುತ್ತಿದ್ದಾರೆ. ದೈಹಿಕ ಅಡಚಣೆಗಳ ನಡುವೆಯೂ ಅವರು ಬಾಹ್ಯಾಕಾಶ ಸಂಶೋಧನಾ ಕ್ಷೇತ್ರದಲ್ಲಿ ತಮ್ಮ ವೃತ್ತಿಯನ್ನು ಮುಂದುವರಿಸಿಕೊಂಡಿದ್ದಾರೆ. ಈ ಹಾರಾಟದಲ್ಲಿ ಎಂಜಿನಿಯರ್ ಹ್ಯಾನ್ಸ್ ಕೊಯೆನಿಗ್ಸ್‌ಮನ್, ಉದ್ಯಮಿ ನೀಲ್ ಮಿಲ್ಚ್, ಹೂಡಿಕೆದಾರರಾದ ಜೋಯ್ ಹೈಡ್ ಮತ್ತು ಅಡೋನಿಸ್ ಪೌರೌಲಿಸ್ ಹಾಗೂ ಜೇಸನ್ ಸ್ಟ್ಯಾನ್ಸೆಲ್ ಸಹ ಭಾಗವಹಿಸಲಿದ್ದಾರೆ. ಮೆಕಾಟ್ರಾನಿಕ್ಸ್, ರೋಬೋಟಿಕ್ಸ್ ಮತ್ತು ಆಟೊಮೇಷನ್ ಇಂಜಿನಿಯರಿಂಗ್‌ನಲ್ಲಿ ಪದವಿ ಪಡೆದಿರುವ ಬೆಂಥೌಸ್, ಮ್ಯೂನಿಕ್ ತಾಂತ್ರಿಕ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿಯನ್ನೂ ಪಡೆದಿದ್ದಾರೆ. 2016ರಿಂದ ವಿವಿಧ ಸಂಶೋಧನಾ ಸಂಸ್ಥೆಗಳಲ್ಲಿ ಕೆಲಸ ಮಾಡಿದ ಅವರು, 2024ರಲ್ಲಿ ಯ ಯಂಗ್ ಗ್ರಾಜುಯೇಟ್ ಟ್ರೈನಿ (YGT) ಆಗಿ ಸೇರಿದ್ದಾರೆ. ಸುಮಾರು 10ರಿಂದ 12 ನಿಮಿಷಗಳ ಕಾಲ ನಡೆಯುವ ಈ ಹಾರಾಟದಲ್ಲಿ ಕೆಲ ನಿಮಿಷಗಳ ಸೂಕ್ಷ್ಮ ಗುರುತ್ವಾಕರ್ಷಣೆಯ ಅನುಭವ ಲಭಿಸಲಿದೆ. NS-37 ಕಾರ್ಯಾಚರಣೆ ಬ್ಲೂ ಒರಿಜಿನ್ ಸಂಸ್ಥೆಯ 16ನೇ ಮಾನವ ಬಾಹ್ಯಾಕಾಶ ಹಾರಾಟವಾಗಿದ್ದು, ಇದುವರೆಗೆ ಸಂಸ್ಥೆ 86 ಜನರನ್ನು ಬಾಹ್ಯಾಕಾಶ ಗಡಿಯಾಚೆಗೆ ಕರೆದೊಯ್ದಿದೆ.

ವಾರ್ತಾ ಭಾರತಿ 20 Dec 2025 8:49 am

Explained: ಕಲಾಪದಲ್ಲಿ ವೈರತ್ವ, ಟೀ ಪಾರ್ಟಿಯಲ್ಲಿ ಮಿತ್ರತ್ವ; ಜಗತ್ತಿಗೆ ಮಾದರಿ ಭಾರತದ ಪ್ರಜಾಪ್ರಭುತ್ವ! ಹೀಗೆಯೇ ಇರಲಿ ಭ್ರಾತೃತ್ವ

ಭಾರತದ ಉತ್ತರ ಹಿಮಾಲಯದಿಂದ ಹೊರಟು ನಿಂತರೆ, ನಿಮಗೆ ಪ್ರಜಾಪ್ರಭುತ್ವ ವ್ಯವಸ್ಥೆ ಸಿಗೋದು ದೂರದ ಯುರೋಪ್‌ ಖಂಡದಲ್ಲಿ. ದಾರಿ ಮಧ್ಯೆ ಸಿಗುವ ಬಹುತೇಕ ದೇಶಗಳಲ್ಲಿ ಪ್ರಜಾಪ್ರಭುತ್ವ ಉಸಿರಾಡುತ್ತಿಲ್ಲ. ಜಾಗತಿಕ ರಾಜಕೀಯ ಭೂಪಟದಲ್ಲಿ ಪ್ರಜಾಪ್ರಭುತ್ವವಿರಳವಾಗುತ್ತಿರುವ ಈ ಸಂದರ್ಭದಲ್ಲಿ, ಭಾರತದ ಪ್ರಜಾತಾಂತ್ರಿಕ ವ್ಯವಸ್ಥೆ ಜಗತ್ತಿಗೆ ಮಾದರಿಯಾಗಬಲ್ಲದು. ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಪರಸ್ಪರ ಕಿತ್ತಾಡಿಕೊಂಡ ಆಡಳಿತ ಮತ್ತು ವಿಪಕ್ಷ ಸದಸ್ಯರು, ಅಧಿವೇಶನದ ಮುಕ್ತಾಯದ ಬಳಿಕ ಲೋಕಸಭೆ ಸ್ಪೀಕರ್‌ ಓಂ ಬಿರ್ಲಾ ಆಯೋಜಿಸಿದ್ದ ಚಹಾಕೂಟದಲ್ಲಿ ಪರಸ್ಪರ ಆತ್ಮೀಯವಾಗಿ ಬೆರೆತಿರುವುದನ್ನು ಉದಾಹರಣೆಯಾಗಿ ಕೊಡಬಹುದು.

ವಿಜಯ ಕರ್ನಾಟಕ 20 Dec 2025 8:46 am

ಅಧಿವೇಶನ ಮುಕ್ತಾಯ : ಕಾಂಗ್ರೆಸ್ 'ಕುರ್ಚಿ ಫೈಟ್‌ಗೆ' ಎರಡು ಆಯಾಮದ ಬಿಗ್ ಟ್ವಿಸ್ಟ್ - ಅಸಲಿ ಆಟ ಶುರು?

Karnataka Power Tussle : ವಿಧಾನ ಮಂಡಲದ ಚಳಿಗಾಲದ ಅಧಿವೇಶನ ಮುಕ್ತಾಯಗೊಂಡಿದೆ. ಈ ವೇಳೆ, ಹಲವು ಬಿಲ್ ಪಾಸ್ ಆಗಿವೆ. ಎಲ್ಲಕ್ಕಿಂತ ಸದ್ದನ್ನು ಮಾಡಿದ್ದು, ಕರ್ನಾಟಕ ಕಾಂಗ್ರೆಸ್ಸಿನ ಬಣ ರಾಜಕೀಯದ ಭಾಗವಾಗಿ, ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ನೀಡಿದ ಹೇಳಿಕೆ ಕುತೂಹಲಕ್ಕೆ ಕಾರಣವಾಗಿದೆ.

ವಿಜಯ ಕರ್ನಾಟಕ 20 Dec 2025 8:39 am

384 ಗೆಜೆಟೆಡ್ ಪ್ರೊಬೆಷನರ್ಸ್‌ ಹುದ್ದೆಗಳ ನೇಮಕಾತಿ ಬಗ್ಗೆ ಅಪ್‌ಡೇಟ್‌ ಕೊಟ್ಟ ಸರ್ಕಾರ

ರಾಜ್ಯ ಸರ್ಕಾರವು 2023-24ನೇ ಸಾಲಿನ 384 ಗೆಜೆಟೆಡ್ ಪ್ರೊಬೆಷನರ್ಸ್‌ ಹುದ್ದೆಗಳ ನೇಮಕಾತಿ ಬಗ್ಗೆ ಅಪ್‌ಡೇಟ್‌ ನೀಡಿದೆ. ಬೆಳಗಾವಿ ಚಳಿಗಾಲದ ಅಧಿವೇಶನದಲ್ಲಿ ಈ ಬಗ್ಗೆ ಚರ್ಚೆ ನಡೆದಿದೆ. ವಿಧಾನ ಪರಿಷತ್ ಸದಸ್ಯ ನಿರಾಣಿ ಹನುಮಂತ ರುದ್ರಪ್ಪ ಅವರ ಪ್ರಶ್ನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪರವಾಗಿ ಸಣ್ಣ ನೀರಾವರಿ ಸಚಿವ ಎನ್‌.ಎಸ್‌.ಭೋಸರಾಜು ಅವರು ನೇಮಕಾತಿ ಬಗ್ಗೆ ಮಾಹಿತಿ ಹಂಚಿಕೊಂಡರು. ಕೆಎಎಸ್

ಒನ್ ಇ೦ಡಿಯ 20 Dec 2025 8:17 am

ಆಹಾ , ನನಗೂ ಪ್ರೈಸ್ ಬಂತು ! ರಾಜಧಾನಿ ಫುಲ್ ಖುಷ್!; ಹೇಗಿತ್ತು ಬೆಂಗಳೂರು? ಹೇಗಾಯ್ತು ನಮ್ಮೂರು?

ಹೇಗಿದ್ದ ಹೇಗಾದ ಗೊತ್ತಾ ನಮ್ಮ ಚಿನ್ನಾರಿ ಮುತ್ತ ಎಂಬ ಕನ್ನಡ ಚಲಚಿತ್ರದ ಗೀತೆಯೊಂದು, ಕರ್ನಾಟಕದ ರಾಜಧಾನಿ ಬೆಂಗಳೂರಿನ ಈಗಿನ ಪರಿಸ್ಥಿತಿಗೆ ಹೇಳಿ ಮಾಡಿಸಿದಂತಿದೆ. ಒಂದಾನೊಂದು ಕಾಲದಲ್ಲಿ ಬೆಂಗಳೂರನ್ನು ಸ್ವರ್ಗ ಎನ್ನುತ್ತಿದ್ದವರು ಈಗ ನಗರದ ನರಕ ಸದೃಶ್ಯ ಪರಿಸ್ಥಿತಿಗೆ ಕಣ್ಣೀರುಡುತ್ತಿದ್ದಾರೆ. ನಗರದ ವಾಯುಮಾಲಿನ್ಯ ಗುಣಮಟ್ಟ ಕುಸಿತ, ಸಂಚಾರ ದಟ್ಟಣೆ, ನೀರಿನ ಸಮಸ್ಯೆ, ಕೆರೆಗಳ ಕಣ್ಮರೆ ಹೀಗೆ ಬೆಂಗಳೂರಿನ ಕೆಟ್ಟ ಪರಿಸ್ಥಿತಿಗಳಿಗೆ ಹಲವಾರು ಉದಾಹರಣೆಗಳನ್ನು ಕೊಡಬಹುದು. ಈ ಬಗ್ಗೆ ಖ್ಯಾತ ಲೇಖಕರಾದ ಡಾ. ಸಹನಾ ಪ್ರಸಾದ್‌ ಅವರ ವಿಡಂಬನಾತ್ಮಕ ಲೇಖನ ಇಲ್ಲಿದೆ.

ವಿಜಯ ಕರ್ನಾಟಕ 20 Dec 2025 7:47 am

ಮಂಗಳೂರು ಎಲೆಕ್ಟ್ರಿಕ್ ಬಸ್‌ಗಳ ಚಾರ್ಜಿಂಗ್‌ ಪಾಯಿಂಟ್‌ಗೆ ಗ್ರೀನ್‌ ಸಿಗ್ನಲ್; ನಗರದಲ್ಲೇ ಓಡಾಟ ನಡೆಸಲು ನಿರ್ಧಾರ

ಮಂಗಳೂರು ನಗರದಲ್ಲಿ ಎಲೆಕ್ಟ್ರಿಕಲ್ ಬಸ್‌ಗಳ ಸಂಚಾರಕ್ಕೆ ಸಿದ್ಧತೆಗಳು ಭರದಿಂದ ಸಾಗಿವೆ. ಕುಂಟಿಕಾನ ಡಿಪೋ ಮತ್ತು ಬಿಜೈ ಬಸ್ ನಿಲ್ದಾಣದಲ್ಲಿ ಚಾರ್ಜಿಂಗ್ ಪಾಯಿಂಟ್‌ಗಳಿಗೆ ಮೆಸ್ಕಾಂ ಮತ್ತು ಕೆಪಿಟಿಸಿಎಲ್ ಅನುಮೋದನೆ ನೀಡಿದೆ. ಕೇಂದ್ರದ ಅನುದಾನ ಬಂದ ಕೂಡಲೇ ಕಾಮಗಾರಿ ಆರಂಭವಾಗಲಿದ್ದು, ಮುಂದಿನ ವರ್ಷದೊಳಗೆ 100 ಎಲೆಕ್ಟ್ರಿಕಲ್ ಬಸ್‌ಗಳು ರಸ್ತೆಗಿಳಿಯಲಿವೆ.

ವಿಜಯ ಕರ್ನಾಟಕ 20 Dec 2025 7:38 am

ಹೊಸದಿಲ್ಲಿ | ಸರದಿ ಉಲ್ಲಂಘಿಸಿದ್ದಕ್ಕೆ ಆಕ್ಷೇಪ: ವಿಮಾನ ಪ್ರಯಾಣಿಕನ ಮೇಲೆ ಪೈಲಟ್ ಹಲ್ಲೆ!

ಹೊಸದಿಲ್ಲಿ: ವಿಮಾನ ಏರುವ (ಬೋರ್ಡಿಂಗ್) ಸರದಿಯನ್ನು ಏರ್ ಇಂಡಿಯಾ ಪೈಲಟ್ ಒಬ್ಬರು ಉಲ್ಲಂಘಿಸಿದ್ದನ್ನು ಆಕ್ಷೇಪಿಸಿದ ಕಾರಣಕ್ಕೆ ತನ್ನ ಮೇಲೆ ಹಲ್ಲೆ ನಡೆಸಿದ್ದಾಗಿ ಸ್ಪೈಸ್‍ಜೆಟ್ ಪ್ರಯಾಣಿಕರೊಬ್ಬರ ಆಪಾದಿಸಿದ್ದಾರೆ. ಅಂಕಿತ್ ದೇವನ್ ಎಂಬ ಪ್ರಯಾಣಿಕ ಈ ವಿಷಯವನ್ನು ಎಕ್ಸ್ ಪೋಸ್ಟ್ ನಲ್ಲಿ ಬಹಿರಂಗಪಡಿಸಿದ್ದು, ರಕ್ತಸಿಕ್ತ ಮುಖದ ಚಿತ್ರವನ್ನು ಪೋಸ್ಟ್ ಮಾಡಿದ್ದಾರೆ. ತಮ್ಮ ಏಳು ವರ್ಷದ ಪುತ್ರಿ ಈ ಘಟನೆಗೆ ಸಾಕ್ಷಿಯಾಗಿದ್ದು, ಘಟನೆಯಿಂದ ಆಘಾತಕ್ಕೆ ಒಳಗಾಗಿದ್ದಾಗಿ ವಿವರಿಸಿದ್ದಾರೆ. ದೆಹಲಿ ವಿಮಾನ ನಿಲ್ದಾಣದ 1ನೇ ಟರ್ಮಿನಲ್‍ನಲ್ಲಿ ಈ ಘಟನೆ ನಡೆದಿದೆ. ಪುಟ್ಟ ಮಗು ಇದ್ದ ಕಾರಣಕ್ಕೆ ನಾಲ್ಕು ತಿಂಗಳ ಪುತ್ರಿ ಸೇರಿದಂತೆ ತಮ್ಮ ಕುಟುಂಬ ಸದಸ್ಯರನ್ನು ಸಿಬ್ಬಂದಿಗಾಗಿ ಇರುವ ಸೆಕ್ಯುರಿಟಿ ಚೆಕ್‍ಇನ್ ಸರದಿ ಸೇರಿಕೊಳ್ಳುವಂತೆ ಸೂಚಿಸಲಾಯಿತು. ಈ ಸಂದರ್ಭದಲ್ಲಿ ಪೈಲಟ್ ಸರದಿ ಉಲ್ಲಂಘಿಸಿ ನನ್ನ ಮುಂದೆ ನಿಂತರು. ಕ್ಯಾಪ್ಟನ್ ವೀರೇಂದ್ರ ಎಂಬುವವರು ಕೂಡಾ ಇದನ್ನೇ ಅನುಸರಿಸಿದರು. ನೀನು ಅನಕ್ಷರಸ್ಥನೇ, ಸಿಬ್ಬಂದಿಯ ಪ್ರವೇಶಕ್ಕೆ ಮೀಸಲು ಎನ್ನುವ ಸಂಕೇತ ಕಾಣುವುದಿಲ್ಲವೇ ಎಂದು ನಿಂದಿಸಿದ್ದಾಗಿ ದೇವನ್ ವಿವರಿಸಿದ್ದಾರೆ. ವಾಗ್ವಾದ ನಡೆದ ಸಂದರ್ಭದಲ್ಲಿ ಏರ್ ಇಂಡಿಯಾ ಪೈಲಟ್ ದೈಹಿಕವಾಗಿ ಹಲ್ಲೆ ನಡೆಸಿ ಗಾಯಗೊಳಿಸಿದ. ಆತನ ಅಂಗಿಯ ಮೇಲೆ ಇದ್ದ ರಕ್ತ ಕೂಡಾ ನನ್ನ ರಕ್ತ ಎಂದು ದೇನ್ ಹೇಳಿದ್ದಾರೆ. ಇಂಥ ವರ್ತನೆಯನ್ನು ಒಕ್ಕೊರಲಿನಿಂದ ಖಂಡಿಸುವುದಾಗಿ ಏರ್ ಇಂಡಿಯಾ ಎಕ್ಸ್ ಪ್ರೆಸ್ ಹೇಳಿಕೆ ನೀಡಿದೆ. AIX Pilot, Capt. Vijender Sejwal pic.twitter.com/Ntp1pnDgdb — Ankit Dewan (@ankitdewan) December 19, 2025

ವಾರ್ತಾ ಭಾರತಿ 20 Dec 2025 7:17 am

ಶುರುವಾಯ್ತು ಆಪರೇಷನ್‌ ಹಾಕೀ ಸ್ಟ್ರೈಕ್;‌ ಸಿರಿಯನ್‌ ಐಸಿಸ್‌ ಉಗ್ರರಿಗೆ ಡೊನಾಲ್ಡ್‌ ಟ್ರಂಪ್ ಬ್ಯಾಡ್‌ ಲಕ್‌‌ ಸಂದೇಶ!

ಮಧ್ಯಪ್ರಾಚ್ಯದ ಅತ್ಯಂತ ಭೀಕರ ಭಯೋತ್ಪಾದಕ ಸಂಘಟನೆ ಐಸಿಸ್‌ ವಿರುದ್ಧ ಅಮೆರಿಕ ಮತ್ತೆ ತೊಡೆ ತಟ್ಟಿದೆ. ಪಾಲ್ಮಿರಾದಲ್ಲಿ ಮೂವರು ಅಮೆರಿಕನ್‌ ಯೋಧರನ್ನು ಕೊಂದ ಐಸಿಸ್‌ ವಿರುದ್ಧ‌, ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಆಪರೇಷನ್‌ ಹಾಕೀ ಸ್ಟ್ರೈಕ್‌ ಸೇನಾ ಕಾರ್ಯಾಚರಣೆಗೆ ಆದೇಶ ನೀಡಿದ್ದಾರೆ. ಸಿರಿಯಾದಲ್ಲಿರುವ ಐಸಿಸ್‌ ಮೂಲಸೌಕರ್ಯಗಳನ್ನು ಗುರಿಯಾಗಿಸಿಕೊಂಡು, ಅಮೆರಿಕ ವೈಮಾನಿಕ ದಾಳಿಗಳನ್ನು ಆರಂಭಿಸಿದೆ. ಸಿರಿಯಾದಲ್ಲಿ ಅಮೆರಿಕ vs ಐಸಿಸ್‌ ಜಟಾಪಟಿಯ ಎರಡನೇ ಭಾಗ ಶುರುವಾಗಿದ್ದು, ಐಸಿಸ್‌ ಉಗ್ರ ನೆಲೆಗಳನ್ನು ನಾಶಪಡಿಸಲಾಗುವುದು ಎಂದು ಅಮೆರಿಕ ಘೋಷಿಸಿದೆ.

ವಿಜಯ ಕರ್ನಾಟಕ 20 Dec 2025 6:54 am

Karnataka Weather: ಈ ಜಿಲ್ಲೆಗಳಲ್ಲಿ ಇನ್ನೆರಡು ದಿನ ತೀವ್ರ ಚಳಿ ವಾತಾವರಣ

ಮುಂದಿನ 2 ದಿನಗಳವರೆಗೆ ಕರ್ನಾಟಕದ ಒಳನಾಡು ಹಾಗೂ ಕರಾವಳಿ ಕರ್ನಾಟಕದಲ್ಲಿ ಕನಿಷ್ಠ ತಾಪಮಾನ ಕಂಡುಬರಲಿದೆ. ಡಿಸೆಂಬರ್‌ 20ರಂದು ಬೀದರ್, ಕಲಬುರಗಿ, ವಿಜಯಪುರ, ಯಾದಗಿರಿ ಮತ್ತು ರಾಯಚೂರಿನಲ್ಲಿ ತೀವ್ರ ಚಳಿ ವಾತಾವರಣ ಇರಲಿದೆ. ಬಾಗಲಕೋಟೆ, ಗದಗ, ಕೊಪ್ಪಳ, ಧಾರವಾಡ, ಬೆಳಗಾವಿ ಮತ್ತು ಹಾವೇರಿ ಜಿಲ್ಲೆಗಳಲ್ಲಿ ಚಳಿ ಹೆಚ್ಚಾಗಿರಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಉತ್ತರ ಒಳ ಕರ್ನಾಟಕ ಮತ್ತು

ಒನ್ ಇ೦ಡಿಯ 20 Dec 2025 6:30 am

Explained: ಕುಕ್ಕುಟ ಮತ್ತು ಹೈನೋದ್ಯಮಕ್ಕೆ ಚಳಿಯ ಹೊಡೆತ; ಪರಿಹಾರ ಮಾರ್ಗ ಕಂಡುಕೊಂಡ ಅನ್ನದಾತ

ಕರ್ನಾಟಕದಲ್ಲಿ ಈ ಬಾರಿ ವಿಪರೀತ ಚಳಿ ಇದೆ. ಈ ಚಳಿಯ ಆರೋಗ್ಯ ಸವಾಲುಗಳು ಚಿಕ್ಕಬಳ್ಳಾಪುರ ಜಿಲ್ಲೆಯನ್ನೂ ಕಾಡುತ್ತಿದೆ. ಆದರೆ ಭೀಕರ ಚಳಿ ಕೇವಲ ಮನುಷ್ಯರು ಮಾತ್ರವಲ್ಲದೇ ಜಾನುವಾರುಗಳನ್ನೂ ಹಿಂಡಿ ಹಿಪ್ಪೆ ಮಾಡುತ್ತಿದೆ. ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಕುಕ್ಕುಟ ಮತ್ತು ಹೈನೋದ್ಯಮದಲ್ಲಿ ತೊಡಗಿರುವ ರೈತರು, ಭೀಕರ ಚಳಿಯ ಸವಾಲುಗಳನ್ನು ಎದುರಿಸುತ್ತಿದ್ದಾರೆ. ಪಶು ಸಂಗೋಪನಾ ಇಲಾಖೆಯು ಚಳಿಯ ಸವಾಲುಗಳನ್ನು ಎದುರಿಸಲು ರೈತರಿಗೆ ಹಲವು ಸಲಹೆಗಳನ್ನು ನೀಡಿದೆ. ಏನದು? ಈ ಕುರಿತು ಇಲ್ಲಿದೆ ಸಂಪೂರ್ಣ ಮಾಹಿತಿ.

ವಿಜಯ ಕರ್ನಾಟಕ 20 Dec 2025 5:48 am

Explained: ಆದಾಯ ಸಾವಿರ ಕೋಟಿ ರೂ. ತಲುಪಿದರೂ ತಪ್ಪಿಲ್ಲ ನಷ್ಟ; ನಮ್ಮ ಮೆಟ್ರೋ ನಿರ್ವಹಣೆ ಏಕಿಷ್ಟು ಕಷ್ಟ?

ಕರ್ನಾಟಕ ರಾಜಧಾನಿ ಬೆಂಗಳೂರಿನ ಜೀವನಾಡಿಗಳಲ್ಲಿ ಒಂದಾದ ನಮ್ಮ ಮೆಟ್ರೋ, ಹಗಲಿರುಳು ದುಡಿದರೂ 2024-25ರ ಹಣಕಾಸು ವರ್ಷದಲ್ಲಿ ಬರೋಬ್ಬರಿ 623 ಕೋಟಿ ರೂ.ನಷ್ಟವನ್ನು ಕಂಡಿದೆ. ಟಿಕೆಟ್‌ ಮತ್ತು ಟಿಕೆಟೇತರ ಮೂಲಗಳಿಂದ ಒಟ್ಟು 1,190 ಕೋಟಿ ರೂ. ಆದಾಯ ಗಳಿಸಿದ್ದರೂ, ಅದು ಲಾಭಕ್ಕೆ ಪರಿವರ್ತನೆ ಹೊಂದದಿರುವುದು, ನಮ್ಮ ಮೆಟ್ರೋ ನಿರ್ವಹಣೆಯ ಸವಾಲುಗಳತ್ತ ನಮ್ಮ ಗಮನ ಸಳೆಯುತ್ತದೆ. ಆದಾಯ ಸಾವಿರ ಕೋಟಿ. ರೂ ದಾಟಿದ್ದರೂ, ನಮ್ಮ ಮೆಟ್ರೋ ನಷ್ಟದಲ್ಲೇಕಿದೆ? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.

ವಿಜಯ ಕರ್ನಾಟಕ 20 Dec 2025 5:01 am

ಕರ್ನಾಟಕದಲ್ಲಿ Cold Wave: ಮುಂದಿನ 48 ಗಂಟೆಗಳ ಹವಾಮಾನ ಮುನ್ಸೂಚನೆ ಮತ್ತು ಎಚ್ಚರಿಕೆ

ಕಳೆದ ಕೆಲವು ದಿನಗಳಿಂದ ಕರ್ನಾಟಕದ ವಾತಾವರಣವು ನಿಗೂಢವಾಗಿ ಬದಲಾಗುತ್ತಿದೆ. ಕಲ್ಯಾಣ ಕರ್ನಾಟಕದಿಂದ ಹಿಡಿದು ಕರಾವಳಿಯವರೆಗೆ ಜನರು ಮುಂಜಾನೆ ಎದ್ದಾಗ ಪ್ರಕೃತಿಯ ಒಂದು ವಿಚಿತ್ರ ಸನ್ನಿವೇಶಕ್ಕೆ ಸಾಕ್ಷಿಯಾಗುತ್ತಿದ್ದಾರೆ. ಇದು ಕೇವಲ ಸಾಧಾರಣ ಮಂಜಲ್ಲ, ಬದಲಾಗಿ ಇಡೀ ರಾಜ್ಯವನ್ನೇ ನಡುಗಿಸುತ್ತಿರುವ ಒಂದು ಗಂಭೀರ ಹವಾಮಾನ ವೈಪರೀತ್ಯದ ಮುನ್ಸೂಚನೆಯಾಗಿದೆ. ದಕ್ಷಿಣದ ಬಯಲು ಸೀಮೆ ಮತ್ತು ಉತ್ತರದ ಗಡಿ ಜಿಲ್ಲೆಗಳ ನಡುವೆ ಹವಾಮಾನದಲ್ಲಿ ಕಂಡುಬರುತ್ತಿರುವ ಈ ಸಾಮ್ಯತೆಯು ತಜ್ಞರನ್ನೂ ಆಶ್ಚರ್ಯಚಕಿತಗೊಳಿಸಿದೆ. ರಾಜ್ಯದ ಕೆಲವು ಭಾಗಗಳಲ್ಲಿ ಜನರು ಬೆಳಿಗ್ಗೆ ಹೊರಬರಲು ಕನಿಷ್ಠ ಒಂದು ವಾರದಿಂದ ... Read more The post ಕರ್ನಾಟಕದಲ್ಲಿ Cold Wave: ಮುಂದಿನ 48 ಗಂಟೆಗಳ ಹವಾಮಾನ ಮುನ್ಸೂಚನೆ ಮತ್ತು ಎಚ್ಚರಿಕೆ appeared first on Karnataka Times .

ಕರ್ನಾಟಕ ಟೈಮ್ಸ್ 20 Dec 2025 12:37 am

ಕೇಂದ್ರ ಕೃಷಿ ಸಚಿವರಿಗೆ ಹಲಸಿನ ಹಣ್ಣು ನೀಡಿ ವಿಶೇಷ ಮನವಿ ಸಲ್ಲಿಸಿದ ದೇವೇಗೌಡರು, ಏನದು?

ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡ ಅವರು ಕೇಂದ್ರ ಕೃಷಿ ಸಚಿವ ಶಿವರಾಜ್‌ ಸಿಂಗ್‌ ಚೌಹಾಣ್‌ ಅವರನ್ನು ಭೇಟಿ ಮಾಡಿ ಹುಣಸೆ, ಹಲಸು, ನೇರಳೆ ಮುಂತಾದ ಪೌಷ್ಟಿಕಾಂಶಯುಕ್ತ ಹಣ್ಣುಗಳಿಗಾಗಿ ಪ್ರತ್ಯೇಕ ರಾಷ್ಟ್ರೀಯ ಮಂಡಳಿ ಸ್ಥಾಪಿಸುವಂತೆ ಮನವಿ ಮಾಡಿದ್ದಾರೆ. ಈ ಹಣ್ಣುಗಳು ಔಷಧೀಯ ಗುಣಗಳಿದ್ದು, ಸಾವಯವವಾಗಿ ಬೆಳೆಯುವ ಇವುಗಳಿಗೆ ದೇಶೀಯ ಹಾಗೂ ರಫ್ತು ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆಯಿದೆ ಎಂದು ಅವರು ಒತ್ತಿ ಹೇಳಿದರು.

ವಿಜಯ ಕರ್ನಾಟಕ 19 Dec 2025 11:42 pm

ಲೈಂಗಿಕ ಅಪರಾಧಿ ಜೆಫ್ರಿ ಎಪಿಸ್ಟೇನ್ ಜೊತೆಗೆ ಬಿಲ್ ಗೇಟ್ಸ್ ಫೋಟೋ ಏಕೆ? ಎಪಿಸ್ಟೇನ್ ಕಡತಗಳ ಬಿಡುಗಡೆಗೆ ಡೆಮಾಕ್ರಟ್ಸ್ ಆಗ್ರಹ

ಲೈಂಗಿಕ ಅಪರಾಧಿ ಜೆಫ್ರಿ ಎಪಿಸ್ಟೇನ್ ಜೊತೆಗೆ ಅಮೆರಿಕದ ಪ್ರಮುಖ ಉದ್ಯಮಿಗಳು ಮತ್ತು ಇತರ ಕ್ಷೇತ್ರಗಳ ಖ್ಯಾತನಾಮರು ಇರುವ ಫೋಟೋಗಳನ್ನು ಡೆಮಾಕ್ರಟ್ಸ್ ಬಿಡುಗಡೆ ಮಾಡಿದ್ದಾರೆ. ಶಿಕ್ಷಗೆ ಒಳಗಾಗಿರುವ ಲೈಂಗಿಕ ಅಪರಾಧಿ ಜೆಫ್ರಿ ಎಪಿಸ್ಟೇನ್ ಅವರ ಎಸ್ಟೇಟ್ ನಿಂದ ಅಮೆರಿಕದ ಸಂಸತ್ತಿನ ಡೆಮಾಕ್ರಾಟ್ ಗಳು ಗುರುವಾರ ಡಿಸೆಂಬರ್ 18ರಂದು ಹೊಸ ಫೋಟೋಗಳನ್ನು ಬಿಡುಗಡೆ ಮಾಡಿದ್ದಾರೆ. ಈ ಚಿತ್ರಗಳಲ್ಲಿ ಬಿಲಿಯನೇರ್ ಬಿಲ್ಗೇಟ್ಸ್, ಚಲನಚಿತ್ರ ನಿರ್ಮಾಪಕ ವುಡಿ ಅಲೆನ್ ಮತ್ತು ತತ್ವಜ್ಞಾನಿ ನೋಮ್ ಚೋಮ್ಸ್ಕಿ ಮೊದಲಾದವರಿದ್ದಾರೆ. ಆದರೆ ಈ ಫೋಟೋಗಳ ದಿನಾಂಕ ಮತ್ತು ವಿವರ ಪತ್ತೆಯಾಗಿಲ್ಲ. ವಿವಾದಾತ್ಮಕ ‘ಲೊಲಿಟ’ ಕಾದಂಬರಿಯ ಸಾಲುಗಳನ್ನು ಮಹಿಳೆಯ ದೇಹದ ವಿವಿಧ ಭಾಗಗಳಲ್ಲಿ ಬರೆದಿರುವಂತಹ ಚಿತ್ರಗಳನ್ನೂ ಡೆಮಾಕ್ರಾಟ್ ಗಳು ಬಿಡುಗಡೆ ಮಾಡಿದ್ದಾರೆ. ಅಮೆರಿಕದ ಸಂಸತ್ತು ಎಪಿಸ್ಟೇನ್ ನ ಎಸ್ಟೇಟ್ನಿಂದ ಪಡೆದ 95,000 ಚಿತ್ರಗಳಲ್ಲಿ ಇವುಗಳು ಸೇರಿವೆ. ಈ ಚಿತ್ರಗಳಿಂದಾಗಿ ಎಪಿಸ್ಟೇನ್ ಗೆ ಸಂಬಂಧಿಸಿದ ಕಡತಗಳನ್ನು ಡಿಸೆಂಬರ್ 19ರ ಅಂತಿಮ ಗಡುವಿಗೆ ಮೊದಲು ಬಹಿರಂಗಪಡಿಸುವಂತೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತದ ಮೇಲೆ ಒತ್ತಡ ಬಿದ್ದಿದೆ. ಪ್ರಭಾವಿ ವ್ಯಕ್ತಿಗಳ ಚಿತ್ರಗಳ ಬಿಡುಗಡೆ ಅನೇಕ ಪ್ರಭಾವಿ ಮತ್ತು ಜನಪ್ರಿಯ ವ್ಯಕ್ತಿಗಳ ಫೋಟೋಗಳು ಲೈಂಗಿಕ ಅಪರಾಧಿ ಜೆಫ್ರಿ ಎಪಿಸ್ಟೇನ್ನ್ ನ ಎಸ್ಟೇಟ್ನಿಂದ ದೊರಕಿದೆ. ಅಮೆರಿಕ ಸಂಸತ್ತಿನ ಪ್ರಮುಖ ತನಿಖಾ ಮಂಡಳಿಯಾದ ಹೌಸ್ ಓವರ್ಸೈಟ್ ಕಮಿಟಿಯಲ್ಲಿರುವ ಡೆಮಾಕ್ರಾಟ್ಗಳು ಈ ಫೋಟೋಗಳನ್ನು ಪ್ರಕಟಿಸಿದ್ದಾರೆ. ಮೈಕ್ರೋಸಾಫ್ಟ್ ಸಹಸಂಸ್ಥಾಪಕ ಬಿಲ್ ಗೇಟ್ಸ್ ಅವರು ಮುಖ ಮರೆ ಮಾಡಿರುವ ಮಹಿಳೆಯರ ಜೊತೆಗೆ ಫೋಟೋದಲ್ಲಿರುವುದನ್ನು ತೋರಿಸಲಾಗಿದೆ. ಪ್ರಸಿದ್ಧ ಭಾಷಾ ಶಾಸ್ತ್ರಜ್ಞ ಮತ್ತು ತತ್ವಜ್ಞಾನಿ ನೋವಮ್ ಚೋಮ್ಸ್ಕಿ ಅವರು ಖಾಸಗಿ ವಿಮಾನದಲ್ಲಿ ಎಪಿಸ್ಟೇನ್ ಜೊತೆಗೆ ಕುಳಿತಿರುವ ಚಿತ್ರವನ್ನೂ ಬಿಡುಗಡೆ ಮಾಡಲಾಗಿದೆ. ಬಿಲ್ ಗೇಟ್ಸ್ ಮತ್ತು ಚೋಮ್ಸ್ಕಿ ಅವರು ಎಪಿಸ್ಟೇನ್ ನ ಪರಿಚಿತರು ಎನ್ನುವ ಊಹಾಪೋಹಗಳು ಹರಿದಾಡಿದ್ದವು. ಗೇಟ್ಸ್ ಈ ಮೊದಲಿಗೆ ಎಪಿಸ್ಟೇನ್ ಅನ್ನು ಭೇಟಿಯಾಗಿರುವುದು ಜೀವನದ ಅತಿದೊಡ್ಡ ತಪ್ಪು ಎಂದು ಹೇಳಿಕೆ ನೀಡಿದ್ದರು. ಅವರು ಸಿಎನ್ಎನ್ ಗೆ ಹೇಳಿರುವ ಪ್ರಕಾರ, “ದತ್ತಿ ಕಾರ್ಯಕ್ರಮವೊಂದಕ್ಕಾಗಿ ಎಪಿಸ್ಟೇನ್ ಜೊತೆಗೆ ಅನೇಕ ಬಾರಿ ಭೋಜನ ಕೂಟದಲ್ಲಿ ಭಾಗವಹಿಸಿದ್ದೆ. ಆದರೆ ಆ ಕಾರ್ಯಕ್ರಮ ನಡೆಯದ ಕಾರಣ ಸಂಬಂಧ ಅಲ್ಲಿಗೇ ಮುಕ್ತಾಯವಾಗಿತ್ತು.” ಟ್ರಂಪ್ ಅವರ ಮಾಜಿ ಸಲಹೆಗಾರ ಸ್ಟೀವ್ ಬನಾನ್ ಎಪಿಸ್ಟೇನ್ನ ಪಕ್ಕದ ಡೆಸ್ಕ್ನಲ್ಲಿ ಕುಳಿತಿರುವುದು ಸೆರೆಹಿಡಿಯಲಾಗಿದೆ. ನ್ಯೂಯಾರ್ಕ್ ಟೈಮ್ಸ್ ಲೇಖಕ ಮತ್ತು ಅಂಕಣಕಾರ ಡೇವಿಡ್ ಬ್ರೂಕ್ಸ್ ಅವರೂ ಅನೇಕ ಫೋಟೋಗಳಲ್ಲಿ ಎಪಿಸ್ಟೇನ್ ನ ಜೊತೆಗೆ ಫೋಟೋದಲ್ಲಿ ಪತ್ತೆಯಾಗಿದ್ದಾರೆ. ಯಾವುದೋ ಭೋಜನ ಕೂಟದಲ್ಲಿ ಅವರು ಗೂಗಲ್ ಸಹಸಂಸ್ಥಾಪಕ ಸರ್ಜಿ ಬ್ರಿನ್ ಪಕ್ಕದಲ್ಲಿ ಅವರು ಕುಳಿತಿದ್ದರು. ನ್ಯೂಯಾರ್ಕ್ಟೈಮ್ಸ್ ಈ ಬಗ್ಗೆ ಹೇಳಿಕೆ ನೀಡಿದ್ದು, “ಭೋಜನ ಕೂಟ 2011ರಲ್ಲಿ ನಡೆದಿತ್ತು. ಎಪಿಸ್ಟೇನ್ ಅಪ್ರಾಪ್ತರ ಮೇಲೆ ಲೈಂಗಿಕ ದೌರ್ಜನ್ಯದಲ್ಲಿ ಶಿಕ್ಷೆಗೊಳಗಾದ ಮೂರು ವರ್ಷಗಳ ನಂತರ ಈ ಫೋಟೋ ತೆಗೆಯಲಾಗಿದೆ. ಬ್ರೂಕ್ಸ್ಗೆ ಎಪಿಸ್ಟೇನ್ ನ ಜೊತೆಗೆ ನಂತರ ಯಾವುದೇ ಸಂಪರ್ಕ ಇರಲಿಲ್ಲ. ಪತ್ರಕರ್ತರಾಗಿ ಡೇವಿಡ್ ಬ್ರೂಕ್ಸ್ ತಮ್ಮ ಅಂಕಣಕ್ಕೆ ಮಾಹಿತಿ ಪಡೆಯಲು ನಿಯಮಿತವಾಗಿ ಪ್ರಮುಖ ಉದ್ಯಮಿಗಳನ್ನು ಬೇಟಿಯಾಗುತ್ತಾರೆ. 2011ರ ಕಾರ್ಯಕ್ರಮವೂ ಅಂತಹುದೇ ಒಂದು ಭೋಜನ ಕೂಟವಾಗಿತ್ತು. ಬ್ರೂಕ್ಸ್ ಅವರಿಗೆ ಅದಕ್ಕಿಂತ ಮೊದಲು ಅಥವಾ ನಂತರ ಎಪಿಸ್ಟೇನ್ ಜೊತೆಗೆ ಯಾವುದೇ ಸಂಪರ್ಕವಿರಲಿಲ್ಲ” ಎಂದು ತಿಳಿಸಿದೆ. ಕಳೆದ ವಾರ ಬಿಡುಗಡೆ ಮಾಡಲಾಗಿರುವ ಎಪಿಸ್ಟೇನ್ ಎಸ್ಟೇಟ್ ಫೋಟೋಗಳಲ್ಲಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಮಾಜಿ ಅಧ್ಯಕ್ಷ ಬಿಲ್ ಕ್ಲಿಂಟನ್, ಸಿನಿಮಾ ನಿರ್ದೇಶಕ ವುಡಿ ಅಲೆನ್, ಮಾಜಿ ಅಮೆರಿಕದ ಕೋಶಾಧಿಕಾರಿ ಲ್ಯಾರಿ ಸಮನ್ಸ್, ವಕೀಲರಾದ ಅಲನ್ ಡೆರ್ಶೊವಿಟ್ಜ್, ಮಾಜಿ ಬ್ರಿಟಿಷ್ ರಾಜಕುಮಾರ ಆಂಡ್ರ್ಯೂ ಮೌಂಟ್ಬ್ಯಾಟನ್-ವಿಂಡ್ಸರ್ ಮತ್ತು ಇತರರು ಇದ್ದಾರೆ. ಈ ಚಿತ್ರಗಳಲ್ಲಿ ಕಾಣಿಸಿಕೊಂಡ ಮಾತ್ರಕ್ಕೆ ಅವರು ತಪ್ಪು ಮಾಡಿದ್ದಾರೆ ಎಂದು ಊಹಿಸುವುದು ಸರಿಯಲ್ಲ. *ಚಿತ್ರಗಳಲ್ಲಿ ಇನ್ನೇನು ವಿವರಗಳಿದ್ದವು? ಹೌಸ್ ಓವರ್ಸೈಟ್ ಕಮಿಟಿ ಬಿಡುಗಡೆ ಮಾಡಿದ ಚಿತ್ರಗಳಲ್ಲಿ ವ್ಲಾದಿಮಿರ್ ನಬೊಕೊವ್ನ ಕಾದಂಬರಿ ‘ಲೊಲಿತ’ದಿಂದ ತೆಗೆದುಕೊಂಡ ವಾಕ್ಯಗಳನ್ನು ಮಹಿಳೆಯ ದೇಹದ ವಿವಿಧ ಭಾಗಗಳಲ್ಲಿ ಬರೆದಿರುವುದನ್ನು ತೋರಿಸಲಾಗಿದೆ. ಒಂದು ಫೋಟೋಗ್ರಾಫ್ ನ ಹಿನ್ನೆಲೆಯಲ್ಲಿ ಪುಸ್ತಕ ಇರಿಸಿರುವುದನ್ನು ಕಾಣಬಹುದು. ಈ ಪುಸ್ತಕದಲ್ಲಿ ವ್ಯಕ್ತಿಯೊಬ್ಬ ಮಗುವಿನ ಕುರಿತಾದ ಲೈಂಗಿಕ ಗೀಳು ಸಂಬಂಧಿತ ಕತೆಯನ್ನು ನಿರೂಪಿಸಲಾಗಿದೆ. ಒಂದು ಫೋಟೋದಲ್ಲಿ ಮಹಿಳೆಯ ಎದೆಯ ಮೇಲೆ ಬರಹಗಳು ಇವೆ. ಇನ್ನೊಂದು ಚಿತ್ರದಲ್ಲಿ ಮಹಿಳೆಯ ಕಾಲಿನ ಮೇಲೆ ಬರಹಗಳು ಇವೆ. ಅನೇಕ ವಿದೇಶಿ ಪಾಸ್ಪೋರ್ಟ್ ಗಳ ಚಿತ್ರಗಳೂ ಇವೆ. ಲಿಥೂವಾನಿಯ, ರಷ್ಯಾ, ಝೆಕ್ ರಿಪಬ್ಲಿಕ್ ಮತ್ತು ಉಕ್ರೇನ್ನಂತಹ ದೇಶಗಳ ಮಹಿಳೆಯರ ಪಾಸ್ಪೋರ್ಟ್ಗಳ ಫೋಟೋಗಳಿವೆ. “ನನಗೆ ಒಬ್ಬ ಸ್ಕೌಟ್ ಪರಿಚಯವಿದೆ. ಆಕೆ ಕೆಲವು ಹುಡುಗಿಯರನ್ನು ಕಳುಹಿಸಿದ್ದಾಳೆ. ಆದರೆ ಒಂದು ಹುಡುಗಿಗೆ 1000 ಡಾಲರ್ ಹೇಳುತ್ತಾರೆ”. ಮೊದಲಾಗಿ 18 ವರ್ಷ ವಯಸ್ಸಿನ ಯುವತಿಯ ಕುರಿತ ಮಾತುಕತೆಯ ವಿವರಗಳ ಸ್ಕ್ರೀನ್ಶಾಟ್ಗಳು ಇವೆ. ಮತ್ತೊಂದು ಫೋಟೋದಲ್ಲಿ ಎಪಿಸ್ಟೇನ್ ಮುಖ ಮರೆಮಾಡಿದ ಮಹಿಳೆಯರ ಜೊತೆಗೆ ಆಪ್ತವಾಗಿ ಕುಳಿತಿರುವುದನ್ನು ಕಾಣಬಹುದು. ಎಪಿಸ್ಟೇನ್ ಕಡತಗಳ ಬಿಡುಗಡೆಗೆ ಒತ್ತಡ ಅಮೆರಿಕ ಹೌಸ್ ಓವರ್ಸೈಟ್ ಕಮಿಟಿಯಲ್ಲಿರುವ ಡೆಮಾಕ್ರಟ್ಗಳು ಫೋಟೋಗಳ ಸಂದರ್ಭದ ವಿವರ ನೀಡಲಿಲ್ಲ. ಆದರೆ ಇತ್ತೀಚೆಗಿನ ಚಿತ್ರಗಳು “ಜೆಫ್ರಿ ಎಪಿಸ್ಟೇನ್ ಮತ್ತು ಆತನ ಜೊತೆಗಾರರು ತೊಡಗಿಸಿಕೊಂಡಿರುವ ಮಹಿಳೆಯರ ಪಾಸ್ಪೋರ್ಟ್ಗಳಾಗಿವೆ. ಎಪಿಸ್ಟೇನ್ ಕಕ್ಷೆಯಲ್ಲಿದ್ದ ಶ್ರೀಮಂತ ಮತ್ತು ಪ್ರಭಾವೀ ಪುರುಷರ ಫೋಟೋಗಳು ಮತ್ತು ಎಪಿಸ್ಟೇನ್ಗೆ ಮಹಿಳೆಯರನ್ನು ನೇಮಿಸುತ್ತಿರುವ ಸಂಬಂಧಿತ ಪಠ್ಯದ ಸಂದೇಶಗಳು” ಎಂದು ವಿವರ ನೀಡಿದ್ದಾರೆ. ಎಪಿಸ್ಟೇನ್ನ ಜಾಲ ಮತ್ತು ಆತನ ಚಟುವಟಿಕೆಗಳ ಬಗ್ಗೆ ಜನರಿಗೆ ಅರಿವು ಮೂಡಿಸಲು ಫೋಟೋಗಳನ್ನು ಬಿಡುಗಡೆ ಮಾಡಲಾಗಿದೆ ಎಂದು ಡೆಮಾಕ್ರಟ್ಸ್ ತಿಳಿಸಿದ್ದಾರೆ. “ಕಮಿಟಿಯ ಬಳಿ ಇಂತಹ ಸಾವಿರಾರು ಫೋಟೋಗಳು ಇವೆ. ಹೊಸ ಫೋಟೋಗಳಿಂದ ನ್ಯಾಯಾಂಗ ಇಲಾಖೆಯ ಬಳಿ ಏನಿದೆ ಎನ್ನುವ ಬಗ್ಗೆ ಇನ್ನಷ್ಟು ಕುತೂಹಲ ಮೂಡಿಸಿದೆ. ಶ್ವೇತ ಭವನ ಇವರನ್ನು ರಕ್ಷಿಸಲು ನೋಡುವುದನ್ನು ನಾವು ತಡೆಯಬೇಕಿದೆ. ಇದೀಗ ಎಪಿಸ್ಟೇನ್ನ ಕಡತಗಳನ್ನು ಸರ್ಕಾರ ಬಿಡುಗಡೆ ಮಾಡಬೇಕು” ಎಂದು ಅವರು ಹೇಳಿದ್ದಾರೆ. ಆದರೆ ಕಮಿಟಿಯಲ್ಲಿ ಬಹುಸಂಖ್ಯಾತಾಗಿರುವ ರಿಪಬ್ಲಿಕನ್ಸ್ ಪ್ರಕಾರ, “ಡೆಮಾಕ್ರಟ್ ಗಳು ಕೆಲವೊಂದು ಫೋಟೋಗಳನ್ನು ಆರಿಸಿ ಡೊನಾಲ್ಡ್ ಟ್ರಂಪ್ ಕುರಿತಂತೆ ಕಪೋಲಕಲ್ಪಿತ ನಿರೂಪಣೆಗೆ ಹೊರಟಿದ್ದಾರೆ.” ಆದರೆ ಇತ್ತೀಚೆಗೆ ಬಿಡುಗಡೆ ಮಾಡಿದ ಫೋಟೋಗಳು ಕಡತಗಳನ್ನು ಅಂತಿಮ ಗಡುವಿಗೆ ಮೊದಲು ಬಿಡುಗಡೆ ಮಾಡುವಂತೆ ಸರ್ಕಾರದ ಮೇಲೆ ಒತ್ತಡ ಹೇರಲಿದೆ. ನ್ಯಾಯಾಂಗ ಇಲಾಖೆ ಶುಕ್ರವಾರದ ಮೊದಲು ಕಡತಗಳನ್ನು ಬಿಡುಗಡೆ ಮಾಡಲಿದೆಯೇ ಎನ್ನುವ ಬಗ್ಗೆ ತುಟಿಪಿಟಿಕ್ ಎನ್ನದೆ ಮೌನವಾಗಿದೆ.

ವಾರ್ತಾ ಭಾರತಿ 19 Dec 2025 11:20 pm

IND Vs SA- ಹಾರ್ದಿಕ್ ಪಾಂಡ್ಯ ಬಳಿಕ ವರುಣ್ ಚಕ್ರವರ್ತಿ ಸವಾರಿ; ಹರಿಣಗಳ ವಿರುದ್ಧ ಭಾರತಕ್ಕೆ ಟಿ20 ಸರಣಿ

ಭಾರತ ತಂಡ ದಕ್ಷಿಣ ಆಫ್ರಿಕಾ ವಿರುದ್ಧ 30 ರನ್ ಗಳಿಂದ ಗೆದ್ದು 5 ಪಂದ್ಯಗಳ ಟಿ20 ಸರಣಿಯನ್ನು 3-1 ಅಂತರದಿಂದ ತನ್ನದಾಗಿಸಿಕೊಂಡಿತು. ತಿಲಕ್ ವರ್ಮಾ ಅರ್ಧಶತಕ, ಹಾರ್ದಿಕ್ ಪಾಂಡ್ಯ ಅವರ ವೇಗದ ಅರ್ಧಶತಕ ಮತ್ತು ಆಲ್ರೌಂಡ್ ಆಟ, ವರುಣ್ ಚಕ್ರವರ್ತಿ ಅವರ ಮಾರಕ ಬೌಲಿಂಗ್ ಭಾರತದ ಗೆಲುವಿಗೆ ಕಾರಣವಾಯಿತು. ಈ ಗೆಲುವಿನೊಂದಿಗೆ ಭಾರತ ಸತತ 14ನೇ ಟಿ20 ಸರಣಿ ಗೆದ್ದ ಸಾಧನೆ ಮಾಡಿದೆ.

ವಿಜಯ ಕರ್ನಾಟಕ 19 Dec 2025 11:14 pm