ಬೆಂಗಳೂರು: ಪ್ರಸಕ್ತ ಸಾಲಿನ ಐಪಿಎಲ್ 2026 (IPL 2026) ಹತ್ತಿರ ಬರುತ್ತಿದೆ. ಕಳೆದ ವರ್ಷ ಚಿನ್ನಸ್ವಾಮಿ ಕ್ರೀಡಾಂಗಣ ಬಳಿ ನಡೆದ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಬಾರಿ ಆರ್ಸಿಬಿ ಪಂದ್ಯಾವಳಿಗೆ ಬೆಂಗಳೂರಲ್ಲಿ ಆಡಲು ಅವಕಾಶ ನೀಡುವ ಬಗ್ಗೆ ಇನ್ನು ಅಂತಿಮ ನಿರ್ಧಾರವಾಗಿಲ್ಲ. ಇದೀಗ ರಾಜ್ಯ ಗೃಹ ಸಚಿವರನ್ನು ಕರ್ನಾಟಕ ರಾಜ್ಯ ಕ್ರಿಕೇಟ್ ಸಂಘ (KSCA) ಮತ್ತು RCB
ಹೊಸ ದಿಲ್ಲಿ: ಲೋಕಸಭಾ ಸ್ಪೀಕರ್ ಓಂ ಬಿರ್ಲಾ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲು ಸಾಧ್ಯವೇ ಎಂಬ ಮಾರ್ಗಗಳನ್ನು ವಿರೋಧ ಪಕ್ಷಗಳು ಶೋಧಿಸುತ್ತಿವೆ ಎಂದು ಕಾಂಗ್ರೆಸ್ ಮೂಲವೊಂದು ತಿಳಿಸಿರುವ ಬಗ್ಗೆ ವರದಿಯಾಗಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ್ದ 2026-27ನೇ ಸಾಲಿನ ಕೇಂದ್ರ ಬಜೆಟ್ ಮೇಲಿನ ಚರ್ಚೆ ಸಂಸತ್ತಿನ ಎರಡೂ ಸದನಗಳಲ್ಲಿ ಸೋಮವಾರ ನಿಗದಿಯಾಗಿತ್ತು. ಸದನದಲ್ಲಿ ಗದ್ದಲದ ಹಿನ್ನೆಲೆ ಕಲಾಪವನ್ನು ಮಧ್ಯಾಹ್ನ 2ರವರೆಗೆ ಮುಂದೂಡಲಾಗಿದೆ. ಕಳೆದ ವಾರ, ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯವು ಪ್ರಧಾನಿಯ ಸಾಂಪ್ರದಾಯಿಕ ಪ್ರತಿಕ್ರಿಯೆ ಇಲ್ಲದೆ, ಧ್ವನಿಮತದಿಂದ ಅಂಗೀಕಾರಗೊಂಡಿತ್ತು. ಈ ವೇಳೆ, ವಿರೋಧ ಪಕ್ಷಗಳು ಭಾರತ ಮತ್ತು ಅಮೆರಿಕ ನಡುವಿನ ವ್ಯಾಪಾರ ಒಪ್ಪಂದವನ್ನು ಆಕ್ಷೇಪಿಸಿ ಹಾಗೂ ಲೋಕಸಭಾ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರಿಗೆ ಭಾಷಣ ಮಾಡಲು ಅವಕಾಶ ನೀಡದ ಸ್ಪೀಕರ್ ಕ್ರಮವನ್ನು ವಿರೋಧಿಸಿ ತೀವ್ರ ಪ್ರತಿಭಟನೆ ನಡೆದಿತ್ತು.
Viral Video: ಪ್ರೇಯಸಿ ಜೊತೆ ಸಿಕ್ಕಿಬಿದ್ದ ಮಗ; ಮೆಟ್ರೋ ನಿಲ್ದಾಣದಲ್ಲೇ ಎಂಗೇಜ್ಮೆಂಟ್ ಮಾಡಿಸಿದ ಪೋಷಕರು
ಪ್ರೀತಿಯಲ್ಲಿ ಬಿದ್ದವರು ಸಾಮಾನ್ಯವಾಗಿ ಮನೆಯವರ ಕಣ್ಣಿಗೆ ಕಾಣದಂತೆ ಕದ್ದುಮುಚ್ಚಿ ಓಡಾಡುವುದೇ ಹೆಚ್ಚು. ಯಾರಾದ್ರೂ ನೋಡಿದ್ರೆ ನಮ್ ಕಥೆ ಮುಗೀತು? ಅನ್ನೋ ಭಯದಲ್ಲೇ ಇರುತ್ತಾರೆ. ಆದರೆ ಪ್ರೇಯಸಿ ಜೊತೆ ಸಿಕ್ಕಿಬಿದ್ದ ಮಗನಿಗೆ ಪೋಷಕರು ಮೆಟ್ರೋ ನಿಲ್ದಾಣದಲ್ಲೇ ಸರಳವಾಗಿ ಎಂಗೇಜ್ಮೆಂಟ್ ನೆರವೇರಿಸಿ, ಆಶೀರ್ವಾದ ಮಾಡಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ನೆಟ್ಟಿಗರ ಹುಬ್ಬೇರಿಸಿದೆ. ಈ ವಿಡಿಯೋ ವೈರಲ್ ಆಗಿದ್ದು, ಇದು ನಿಜವಾಗಿ
ಟಿ-20 ವಿಶ್ವಕಪ್ | ಭಾರತದೊಂದಿಗೆ ಆಡಲು ಮೂರು ಷರತ್ತುಗಳನ್ನು ವಿಧಿಸಿದ ಪಾಕಿಸ್ತಾನ: ವರದಿ
ಇಸ್ಲಮಾಬಾದ್: ಫೆಬ್ರವರಿ 15ರಂದು ಕೊಲಂಬೊದಲ್ಲಿ ಭಾರತ ತಂಡದೆದುರು ನಡೆಯಬೇಕಿರುವ ಪಂದ್ಯದಲ್ಲಿ ಭಾಗವಹಿಸುವುದಿಲ್ಲ ಎಂಬ ತನ್ನ ನಿರ್ಧಾರವನ್ನು ಮರುಪರಿಶೀಲಿಸಬೇಕಿದ್ದರೆ ಹಾಗೂ ಈ ಕುರಿತು ತನ್ನ ಸರಕಾರದೊಂದಿಗೆ ಸಮಾಲೋಚನೆ ನಡೆಸಬೇಕಿದ್ದರೆ, ತನ್ನ ಮೂರು ಬೇಡಿಕೆಗಳನ್ನು ಈಡೇರಿಸಬೇಕು ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿಯು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯ ಎದುರು ಷರತ್ತು ವಿಧಿಸಿರುವ ಬಗ್ಗೆ ವರದಿಯಾಗಿದೆ. ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯವು ನಿಗದಿಯಂತೆಯೇ ಸುಗಮವಾಗಿ ನಡೆಯುವುದನ್ನು ಖಾತರಿಪಡಿಸಲು ಸಂಧಾನ ಪರಿಹಾರವನ್ನು ಅನ್ವೇಷಿಸಲು ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯ ಮುಖ್ಯಸ್ಥ ಅಮೀನುಲ್ ಇಸ್ಲಾಂ ಬುಲ್ ಬುಲ್ ರೊಂದಿಗೆ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಸದಸ್ಯರು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯ ನಿಯೋಗವನ್ನು ಭೇಟಿ ಮಾಡಿತು. ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯ ಆದಾಯದಲ್ಲಿ ಪಾಕಿಸ್ತಾನದ ಪಾಲನ್ನು ಹೆಚ್ಚಳ ಮಾಡಬೇಕು, ಭಾರತದೊಂದಿಗಿನ ದ್ವಿಪಕ್ಷೀಯ ಕ್ರಿಕೆಟ್ ಅನ್ನು ಮರುಸ್ಥಾಪಿಸಬೇಕು ಹಾಗೂ ಹಸ್ತಲಾಘವ ಶಿಷ್ಟಾಚಾರವನ್ನು ಮರು ಜಾರಿಗೊಳಿಸಬೇಕು ಎಂಬ ಮೂರು ಷರತ್ತುಗಳನ್ನು ಪಾಕಿಸ್ತಾನ ಕ್ರಿಕೆಟ್ ಮಂಡಳಿಯು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯೆದುರು ಇರಿಸಿದೆ ಎಂದು Cricbuzz ವರದಿ ಮಾಡಿದೆ. ಭಾರತದೆದುರು ಪಾಕಿಸ್ತಾನ ತಂಡವು ಟಿ-20 ವಿಶ್ವಕಪ್ ಪಂದ್ಯವನ್ನು ಆಡುವುದಿಲ್ಲ ಎಂದು ಪಾಕಿಸ್ತಾನ ಸರಕಾರ ಪ್ರಕಟಿಸಿದ್ದರಿಂದ ಈ ವಿವಾದ ಭುಗಿಲೆದ್ದಿದೆ.
ತಂದೆಯ ಪರ ಪದೇ ಪದೇ ಬ್ಯಾಟಿಂಗ್ ಬೇಡ, ನಮ್ಮನ್ನು ಪ್ರಚೋದಿಸಬೇಡಿ: ಯತೀಂದ್ರಗೆ ಇಕ್ಬಾಲ್ ಹುಸೇನ್ ಖಡಕ್ ವಾರ್ನಿಂಗ್
ಸಿಎಂ ಸಿದ್ದರಾಮಯ್ಯ ಅವರ ಪರವಾಗಿ ಪದೇ ಪದೇ ಬ್ಯಾಟಿಂಗ್ ಮಾಡುವುದು ಬೇಡ. ಈ ಮೂಲಕ ನಮ್ಮನ್ನು ಪ್ರಚೋದನೆ ಮಾಡಬೇಡಿ ಎಂದು ವಿಧಾನಪರಿಷತ್ ಸದಸ್ಯ ಯತೀಂದ್ರ ಸಿದ್ದರಾಮಯ್ಯ ಅವರಿಗೆ ರಾಮನಗರ ಶಾಸಕ ಇಕ್ಬಾಲ್ ಹುಸೇನ್ ಖಡಕ್ ವಾರ್ನಿಂಗ್ ನೀಡಿದ್ದಾರೆ. ಬೆಂಗಳೂರಿನಲ್ಲಿ ಸೋಮವಾರ ಮಾತನಾಡಿದ ಅವರು ಯತೀಂದ್ರ ಅವರಿಗೆ ನೋಟಿಸ್ ಯಾಕಿಲ್ಲ? ಎಂದೂ ಪರೋಕ್ಷವಾಗಿ ಪ್ರಶ್ನಿಸಿದರು. ಈ ಕುರಿತಾಗಿ ಅವರು ಏನು ಹೇಳಿದ್ದಾರೆ? ಜೊತೆಗೆ ಡಿಕೆ ಶಿವಕುಮಾರ್ ಪರವಾಗಿ ಯಾವ ರೀತಿಯಲ್ಲಿ ಬ್ಯಾಟಿಂಗ್ ಮಾಡಿದ್ದಾರೆ ಎಂಬ ವಿವರ ಇಲ್ಲಿದೆ.
ಅಕ್ಷರ ಭೂಮಿ ಸ್ವಾಭಿಮಾನದ ‘ಲ್ಯಾಂಡ್ ಲಾರ್ಡ್’
ನಾವು ಸಾಮಾನ್ಯವಾಗಿ ಭೂಮಿಯನ್ನು ತಾಯಿಗೆ ಹೋಲಿಸುತ್ತೇವೆ. ಆ ತಾಯಿಯ ಮಕ್ಕಳು ತಾಯಿಯ ಕನಸು ಆಶಯಗಳ ರೀತಿಯಲ್ಲಿಯೇ ಬರಬೇಕು. ಇಡೀ ಮನುಷ್ಯ ಕುಲವೇ ತಾಯಿಯ ಮಕ್ಕಳು. ತಾಯಿಯ ಎದೆಹಾಲಿನಿಂದಲೇ ಬದುಕಿರುವುದು. ಲ್ಯಾಂಡ್ ಲಾರ್ಡ್ ಎನ್ನುವುದು ಭೂ ತಾಯಿಯ ಮಕ್ಕಳು ಸಮಸಮಾಜದಲ್ಲಿ ಸಮಸಮವಾಗಿ ಸ್ವಾಭಿಮಾನದಿಂದ ಬದುಕುವ ಸೌಂದರ್ಯವನ್ನೇ ಹೇಳುತ್ತದೆ. ಜಗತ್ತಿನಲ್ಲಿ ಸಿನೆಮಾ ಮಾಧ್ಯಮ ಅತ್ಯಂತ ಪ್ರಭಾವಿ ಮಾಧ್ಯಮ. ಉಳ್ಳವರಿಗೂ ಇಲ್ಲದವರಿಗೂ ಸಮಾನವಾಗಿ ಮನರಂಜಿಸುವ ಮಾಧ್ಯಮ. ಮನುಷ್ಯ ತನ್ನದೇ ಆಗು-ಹೋಗುಗಳನ್ನ್ನು ತನ್ನಂತೆ ಇರುವವರು ಮಾಡುವಾಗ, ಅವರಲ್ಲಿ ತನ್ನನ್ನು ಕಂಡುಕೊಳ್ಳುತ್ತಾ ಒಳಿತು-ಕೆಡುಕುಗಳನ್ನ್ನು ಆವಾಹಿಸಿಕೊಳ್ಳುತ್ತಾನೆ. ಪ್ರೀತಿಸುತ್ತಾನೆ, ದುಃಖಿಸುತ್ತಾನೆ, ಅಳುತ್ತಾನೆ, ನಗುತ್ತಾನೆ, ಹಾಡು ಹೇಳುತ್ತಾನೆ, ನೋವು ಮರೆಯುತ್ತಾನೆ, ಪ್ರೀತಿಸುತ್ತಾನೆ... ಹೀಗೆ ಜೀವನದ ಒಂದು ಸಣ್ಣ ನಿರಂಬಳತೆಯನ್ನು ಈ ಸಿನೆಮಾದಿಂದ ಪಡೆಯುತ್ತಾನೆ. ಕ್ಯಾಮರಾ ಮುಖಾಂತರ ತನ್ನನ್ನೇ ಮೋಹಿಸಿಕೊಳ್ಳುವ ಮನುಷ್ಯ ಅತ್ಯಂತ ಕಡುಮೋಹಿಯಾಗಿರುತ್ತಾನೆ. ಜಗತ್ತಿನಲ್ಲಿ ಎಷ್ಟೊಂದು ಸಿನೆಮಾಗಳು ಬಂದು ಹೋಗಿವೆ. ಎಷ್ಟೊಂದು ಜನರನ್ನು ಪ್ರಭಾವಿಸಿವೆೆ, ಪ್ರಭಾವಿಸುತ್ತಿವೆೆ. ನನ್ನ ಬಾಲ್ಯದಲ್ಲಿ ನಮ್ಮೂರಿನ ಟೆಂಟುಗಳಲ್ಲಿ ನಡೆಯುತ್ತಿದ್ದ ಸಿನೆಮಾಗಳು ಅದು ಎಷ್ಟು ಪ್ರದರ್ಶನ ಕಂಡಿದೆಯೋ ಅಷ್ಟು ಪ್ರದರ್ಶನಗಳನ್ನು ನಾನು ತಪ್ಪದೇ ನೋಡಿದ್ದೇನೆ. ಅವುಗಳೆಲ್ಲವನ್ನು ನಾನು ಬಹುತೇಕ ಕದ್ದೇ ನೋಡಿದ್ದೇನೆ. ಅದನ್ನು ಹೇಳುವುದಕ್ಕೆ ಹೋದರೆ ದೊಡ್ಡ ಪುಸ್ತಕವೇ ಆಗುತ್ತದೆ. ಆದರೆ ನಾನು ‘ನೀನಾಸಂ’ ಸೇರಿದ ಮೇಲೆ ಜಗತ್ತಿನ ಶ್ರೇಷ್ಠ ಸಿನೆಮಾಗಳನ್ನು ನೋಡಲು ದೊಡ್ಡ ಅವಕಾಶ ಸಿಕ್ಕಿದ್ದು ನನ್ನ ಜೀವಮಾನದ ದೊಡ್ಡ ಗ್ರಹಿಕೆಯ ಕಾಲ ಎನ್ನಬಹುದು. ಜಗತ್ತಿನಲ್ಲಿ ಸಿನಿಮಾ ನೋಡದ ಕಣ್ಣುಗಳು ಮತ್ತು ಸಿನೆಮಾ ಹಾಡುಗಳನ್ನು ಕೇಳದ ಕಿವಿಗಳು ಇಲ್ಲದ್ದಿಲ್ಲ. ಅಷ್ಟರಮಟ್ಟಿಗೆ ಸಿನೆಮಾ ಮನುಷ್ಯನಲ್ಲಿ ಹಾಸುಹೊಕ್ಕಾಗಿದೆ. ಇತ್ತೀಚೆಗೆ ನಮ್ಮ ಪ್ರೀತಿಯ ಪತ್ರಕರ್ತರಾದ ಮಂಜುನಾಥ್ ಅದ್ದೆಯವರು ನಮ್ಮೆಲ್ಲರ ಹೆಮ್ಮೆಯ ‘ಕನ್ನಡದ ಸಾರ್ವಕಾಲಿಕ ನಟ, ಕಲಾವಿದ ಡಾ. ರಾಜ್ಕುಮಾರ್’ ಬಗ್ಗೆ ‘ಬಡವರ ರಾಜಕುಮಾರ’ ಎನ್ನುವ ಒಂದು ಅಪರೂಪದ ಪುಸ್ತಕ ಬರೆದಿದ್ದಾರೆ. ಇದರ ಬಿಡುಗಡೆ ಸಮಾರಂಭಕ್ಕೆ ಕನ್ನಡ ಸಿನೆಮಾಕ್ಕೆ ಹೊಸ ಭಾಷ್ಯೆ ಬರೆದ ಸೂರಿ ನಿರ್ದೇಶನದ ದುನಿಯಾ ಸಿನೆಮಾದಿಂದ ದುನಿಯಾ ವಿಜಯ್ ಎಂದೇ ಪ್ರಸಿದ್ಧರಾದ ಶ್ರೀ ವಿಜಯ್ಕುಮಾರ್ ಬಂದಿದ್ದರು. ತನ್ನ ಬಣ್ಣದಿಂದ ಅಪಾರ ನೋವು, ಅವಮಾನ ಅನುಭವಿಸಿದ ಶ್ರೀ ವಿಜಯ್ಕುಮಾರ್ ಇಡೀ ನಾಡಿಗೆ ದುನಿಯಾ ವಿಜಯ್ ಆದರು. ಅದರಿಂದ ಕನ್ನಡ ಸಿನೆಮಾಗೆ ಒಂದು ಅಪರೂಪದ ಪ್ರತಿಭೆ ಸಿಕ್ಕಂತಾಯಿತು. ಈ ನೆಲದ ಅಪ್ಪಟ ಕಲಾವಿದ ನಿರ್ದೇಶಕ, ನಿರ್ಮಾಪಕ ದುನಿಯಾ ವಿಜಯ್ ತನ್ನ ಸಿನೆಮಾ ಜೀವನದಲ್ಲಿ ಅನೇಕ ಏರಿಳಿತಗಳನ್ನು ಕಂಡಿದ್ದಾರೆ. ಹೊಸ ಪ್ರಯೋಗಗಳಿಗೆ ಒಡ್ಡಿಕೊಂಂಡಿದ್ದಾರೆ. ಕೆಲವೊಮ್ಮೆ ಈ ನೆಲದಲ್ಲಿ ನಡೆದ ಸತ್ಯದ ಘಟನೆಗಳನ್ನು ಇಟ್ಟುಕೊಂಡು ಸಿನೆಮಾ ಮಾಡಿದ್ದಾರೆ. ಈ ಸಿನೆಮಾ ಮಾಧ್ಯಮ ತುಂಬಾ ಸಂಕೀರ್ಣವಾದದ್ದು ಹೌದು. ಸಂಕಷ್ಟದ ಮಾಧ್ಯಮವೂ ಹೌದು. ಅತ್ಯಂತ ಸಾಮಾನ್ಯರಲ್ಲಿ ಸಾಮಾನ್ಯರು ತಮ್ಮ ಪ್ರತಿಭೆಯಿಂದ ಮೇಲೆ ಬಂದಿದ್ದ್ದೂ ಇದೆ. ಇನ್ನು ಕೆಲವರು ಜಾತಿ ಪ್ರಭಾವವೋ ‘ಹಣದ ಪ್ರಭಾವವೋ’ ಕಾರಣವಾಗಿ ಬಂದಿರುವುದು ಇದೆ. ಆದರೆ ಅಂತಿಮವಾಗಿ ಯಾರು ಅಪ್ಪಟ ಕಲಾವಿದರಾಗಿದ್ದಾರೋ, ಜನರ ಪ್ರೀತಿ ಗಳಿಸಿದ್ದಾರೋ, ಸಮಾಜವನ್ನು ಪ್ರಭಾವಿಸಿದ್ದಾರೋ ಅಂಥವರು ಮಾತ್ರ ಎಲ್ಲಾ ಕಾಲಕ್ಕೂ ಉಳಿಯುತ್ತಾರೆ. ಕೆಲವು ಸಂದರ್ಭಗಳಲ್ಲಿ ಕೆಲವು ಸಮುದಾಯಗಳನ್ನು ಇಟ್ಟುಕೊಂಡು ಸಿನೆಮಾ ಮಾಡಿದ್ದರೆ ಅವು ಓಡುವುದಿಲ್ಲ. ಇವತ್ತಿಗೂ ನೇರವಾಗಿ ಅಸ್ಪಶ್ಯತೆಯನ್ನು ಕುರಿತು ಸಿನೆಮಾ ಮಾಡಿದರೆ ಓಡುವುದಿಲ್ಲ. ಕಾರಣ ಸ್ಪಷ್ಟ. ಇವತ್ತಿಗೂ ಅಸ್ಪಶ್ಯತೆ ಜೀವಂತವಾಗಿದೆ. ಅಸ್ಪಶ್ಯತೆಯ ಆಚರಣೆಗಳು ಇವತ್ತಿಗೂ ಘೋರವಾಗಿ ಆಚರಿಸಲ್ಪಡುತ್ತಿವೆ. ತಮಿಳು, ಮರಾಠಿ ಚಲನಚಿತ್ರಗಳು ಅಸ್ಪಶ್ಯತೆ ಮತ್ತು ಶೋಷಣೆಯ ವಿರುದ್ಧದ ಕಥನಗಳನ್ನು ಯಶಸ್ವಿಯಾಗಿ ಸಿನೆಮಾ ಆಗಿಸಿದ್ದಾರೆ. ಕನ್ನಡದಲ್ಲಿ ಅದಿನ್ನೂ ಸಾಧ್ಯವಾಗಿಲ್ಲ. ಸುಮಾರು 60-70 ವರ್ಷಗಳ ಹಿಂದೆ ಡಾ. ರಾಜ್ ಕುಮಾರ್ ರವರ ‘ಭಕ್ತಚೇತ’ ಮತ್ತು ನಂತರ ಬಂದ ‘ಹೇಮಾವತಿ’, ‘ಎಲ್ಲಿಂದಲೋ ಬಂದವರು’ ‘ಬೂತಯ್ಯನ ಮಗ ಅಯ್ಯು’ ಸಿನೆಮಾಗಳು ಪ್ರಭಾವಿಸಿವೆ. ಆ ನಂತರದ ದಿನಗಳಲ್ಲಿ ಬಂದ ತುಂಡು ಭೂಮಿಗಾಗಿ ಹೋರಾಡಿದ ‘ಚೋಮನದುಡಿ’ ನಮ್ಮ ನೆನಪಿನಾಳದಲ್ಲಿದೆ. ಇದನ್ನು ಹೊರತು ಪಡಿಸಿದರೆ ಇತ್ತೀಚೆಗೆ ಬಂದ ‘ಕಾಂತಾರ’ ಸಿನೆಮಾ ಭೂ ಹೀನರ ಭೂ ಹೋರಾಟದ ಕಥನವೇ ಆಗಿದ್ದರೂ ದೈವಗಳ ಆರಾಧನೆ ಕಡೆಯೇ ತಿರುಗಿಸಿದ್ದರಿಂದ ಭೂ ಹೋರಾಟ ನಗಣ್ಯವಾಯಿತು. ಹಾಗೆಯೇ ಬಂದ ಇನ್ನೊಂದು ಮಹತ್ವದ ಸಿನೆಮಾ ‘ಕಾಟೇರಾ’ ಕೂಡ ಅತ್ಯಂತ ಪ್ರಭಾವ ಬೀರಿದ ಸಿನೆಮಾ. ನಾನು ಈಗ ಹೇಳ ಹೊರಟಿದ್ದು ‘ಲ್ಯಾಂಡ್ ಲಾರ್ಡ್’ ಸಿನೆಮಾದ ಬಗ್ಗೆ. ಇದರ ಅರ್ಥ ‘ಭೂ ಮಾಲೀಕ’. ಹಾಗೆ ನೋಡಿದರೆ ಇಲ್ಲಿ ಯಾರು ಕೂಡ ಭೂ ಮಾಲೀಕನಾಗಲು ಸಾಧ್ಯವಿಲ್ಲ. ಭೂಮಿಗೇ ಭೂಮಿಯೇ ಮಾಲಿಕ. ಆದರೆ ಭೂಮಿಯ ಒಡೆತನ, ಕೃಷಿಯ ಸಾಗುವಳಿ ಬದುಕುವವರ ವಿಶ್ವಾಸ ಹೆಚ್ಚಿಸುತ್ತದೆ. ಹೇಗೆಂದರೆ ಇನ್ನೊಬ್ಬರ ತೋಟ, ಗದ್ದೆ, ಜಮೀನುಗಳಲ್ಲಿ ಕೂಲಿ ಮಾಡುವುದೇ ಬದುಕಲ್ಲ; ತನಗೆ ಸಿಕ್ಕ ಅಥವಾ ಇರುವ ಭೂಮಿಯಲ್ಲೇ ಕೃಷಿ ಮಾಡುವ ಬದುಕು ಸ್ವಾಭಿಮಾನದ ಬದುಕು. ಆದರೆ ಭಾರತೀಯ ಸಮಾಜದಲ್ಲಿ ಮನುಸ್ಮತಿ ಸೃಷ್ಟಿಸಿದ ಅಸಮಾನತೆಯಿಂದಾಗಿ ಇಡೀ ಸಮಾಜವನ್ನು ಕತ್ತರಿಸಿ ಹೋಳು ಮಾಡಲಾಗಿದೆ. ಈ ನೆಲದಲ್ಲಿ ಭೂ ಹೀನರು, ಶೋಷಿತರು, ಅಸ್ಪಶ್ಯರು, ಶೂದ್ರರು... ಇವರೆಲ್ಲರಿಗೂ ಒಂದು ಆಶಾದಾಯಕ ಬೆಳಕು ಮೂಡಿದ್ದು ಅದು ‘ಡಾ. ಬಾಬಾ ಸಾಹೇಬ್ ಅಂಬೇಡ್ಕರ್’. ಸ್ವತಃ ತಾನು ಅನುಭವಿಸಿ ಇದಕ್ಕೊಂದು ದೊಡ್ಡ ಪರಿಹಾರವನ್ನು ಸಂವಿಧಾನ ಮೂಲಕ ದೊರಕಿಸಿಕೊಟ್ಟಿರುವುದು ನಮಗೆಲ್ಲರಿಗೂ ಗೊತ್ತಿರುವ ವಿಷಯ. ಶೋಷಣೆಯ ಕೊಂಡಿಗಳನ್ನು ಕಳಚುವ ನಿರಂತರ ಪ್ರಯತ್ನ ಅನೇಕ ನಾಯಕರಿಂದ ನಡೆದಿದೆ. ಸ್ವತಃ ನೊಂದ ಜನರು ಕೂಡ ತನ್ನ ಕ್ಷೀಣ ಧ್ವನಿಯಿಂದಲೂ ಅಬ್ಬರದ ಧ್ವನಿಯಿಂದಲೂ ಇದಕ್ಕೆ ಪರಿಹಾರ ಕೇಳಲಾಗಿದೆ. ಆದರೆ ಒಂದು ಸಮುದಾಯವನ್ನು ಅಸ್ಪಶ್ಯರೆಂದು ಆಚೆಗಿಟ್ಟು ಇವತ್ತಿಗೂ ಮುಟ್ಟಿಸಿಕೊಳ್ಳಲೂ ಹಿಂಜರಿಯುವವರೆಂದರೆ ಇನ್ನು ಉಳಿದಿದ್ದನ್ನು ನೀವೇ ಊಹಿಸಿಕೊಳ್ಳಿ. ದಲಿತರು ಎನ್ನುವ ಕಾರಣಕ್ಕಾಗಿಯೇ ಅವರ ಏಳಿಗೆಯನ್ನು ಸಹಿಸದೆ ಕೊಲ್ಲಲಾಗುತ್ತಿದೆ ಎಂದರೆ ಇದಕ್ಕಿಂತಲೂ ದುರಂತ ಇನ್ನೇನಿದೆ ಇಂತಹ ಸಮಾಜ ಹೇಗೆ ತಾನೆ ಏಳಿಗೆಯಾದೀತು...? ತನ್ನ ಹೊಟ್ಟೆಯಲ್ಲಿ ಹುಟ್ಟಿದ ಮಗಳೊಬ್ಬಳು ಅನ್ಯ ಸಮುದಾಯದ ಹುಡುಗನನ್ನು ಮದುವೆಯಾದಳೆಂಬ ಕಾರಣಕ್ಕೆ ಆ ಮಗಳ ಹೊಟ್ಟೆಯಲ್ಲಿ ಇನ್ನೊಂದು ಜೀವ ಚಿಗುರೊಡೆಯುತ್ತಿರುವುದನ್ನು ಕನಿಕರಿಸದೆ ಕೊಲ್ಲುವ ಕ್ರೌರ್ಯ ಮನುಷ್ಯ ಸಮಾಜದಲ್ಲಿ ಮಾತ್ರ ನಡೆಯುವಂತಹದ್ದು. ಇಂತಹ ಅಸಮಾನತೆಯ ಸಮಾಜಕ್ಕೆ ಕನಿಷ್ಠ್ಟ ಸಣ್ಣ ಅರಿವು ಮೂಡಿಸಲು ಕಥೆ, ಕವನ, ನಾಟಕ, ಸಿನೆಮಾಗಳು ನಿರಂತರವಾಗಿ ಈ ಸಮಾಜವನ್ನು ಎಚ್ಚರಿಸಲು ಪ್ರಯತ್ನಿಸುತ್ತಿವೆ. ಹಾಗೇ ಅಂತಹ ಅರಿವನು,್ನ ಎಚ್ಚರವನ್ನು ಮೂಡಿಸುವ ದೊಡ್ಡ ಪ್ರಯತ್ನವೇ ಇತ್ತೀಚೆಗೆ ರಾಜ್ಯದಲ್ಲಿ ಬಿಡುಗಡೆಯಾದ ಕನ್ನಡ ಸಿನಿಮಾವೆ ‘ಲ್ಯಾಂಡ್ ಲಾರ್ಡ್’. ಮನುಷ್ಯ ಯಾವುದರಿಂದಲಾದರೂ ಪ್ರಭಾವಕ್ಕೆ ಒಳಗಾಗಲೇ ಬೇಕು. ಜನ್ಮ ಕೊಟ್ಟ ತಂದೆ-ತಾಯಿಯಾಗಿರಬಹುದು. ತಾನು ಬದುಕಲು ಜೀವ ಪ್ರಾಣ ನೀಡುವ ಪಂಚಭೂತಗಳಾಗಿರಬಹುದು. ತಾನು ಬೆರೆತು ಬದುಕುತ್ತಿರುವ ಸಮಾಜ ಆಗಿರಬಹುದು. ಅಂತಿಮವಾಗಿ ಈ ಸಮಾಜದ ನೀತಿ, ಪ್ರೀತಿ, ಕರುಣೆ, ಭ್ರಾತೃತ್ವ, ಸಮಾನತೆಯ ಆಶಯಗಳನ್ನು ಕಟ್ಟಿಕೊಡುವ ‘ನೀನು ಬದುಕು, ಮತ್ತೊಬ್ಬರನ್ನು ಬದುಕಲು ಅವಕಾಶ ಮಾಡಿಕೊಡು’ ಎನ್ನುವುದು. ಇದು ಈ ದೇಶದ ಸಂವಿಧಾನದ ಶ್ರೇಷ್ಠ ಆಶಯವೂ ಆಗಿದೆ. ಇಂತಹ ಆಶಯಗಳನ್ನು ಹೊತ್ತ ಈ ದೇಶದಲ್ಲಿ ಎಷ್ಟೇ ದೊಡ್ಡವನಾಗಿರಲಿ, ಎಷ್ಟೇ ಸಾಮಾನ್ಯನಾಗಿರಲಿ ಅವರಿಬ್ಬರಿಗೂ ಒಂದೇ ಕಾನೂನು. ಈ ಸಿನೆಮಾದಲ್ಲಿ ಒಂದು ಮುಖ್ಯವಾದ ಘಟನೆ ಬರುತ್ತದೆ. ತಮಗೆ ದಕ್ಕಿದ ಎರಡು ಎಕರೆ ಜಮೀನನ್ನು ಯಾವುದೋ ಕಾರಣಕ್ಕೆ ಜಮೀನ್ದಾರರಿಗೆ ಬರೆದುಕೊಟ್ಟಿದ್ದು ಆ ನಂತರದ ದಿನಗಳಲ್ಲಿ ಈ ಚಿತ್ರದ ನಾಯಕ ರಾಚಯ್ಯ ತನ್ನ ಜಮೀನಿನಲ್ಲಿ ಕೃಷಿ ಮಾಡಿ ಸ್ವಾಭಿಮಾನದಿಂದ ಜೀವನ ಮಾಡಲು ಹೋರಾಡುತ್ತಾನೆ. ಆಗ ಆತನಿಗೆ ಇನ್ನೆಷ್ಟು ದಿನ ಈ ಅವಮಾನ, ಹಿಂಸೆ, ಗುಲಾಮಗಿರಿತನ... ಇವೆಲ್ಲದರಿಂದಲೂ ಮುಕ್ತವಾಗಲು ಅಕ್ಷರದಿಂದ ಮಾತ್ರ ಸಾಧ್ಯ ಎಂದು ಅರಿತು ತನ್ನ ಮಗಳನ್ನು ಶಾಲೆಗೆ ಸೇರಿಸುತ್ತಾನೆ. ಮೇಲ್ವರ್ಗದ ಮಕ್ಕಳು ಕೂಡ ವಿದ್ಯಾಭ್ಯಾಸ ಪಡೆಯುತ್ತಿದ್ದರೂ ಅಂತಿವವಾಗಿ ಪರೀಕ್ಷೆಯಲ್ಲಿ ಉತ್ತೀರ್ಣಳಾದವಳು ಕೂಲಿಕಾರನ ಮಗಳು. ‘ವಿದ್ಯೆ ಓದುಗನ ಸ್ವತ್ತೇ ಹೊರತು, ಸೋಮಾರಿಯ ಸ್ವತ್ತಲ್ಲ’ ಎಂಬುದು ಮತ್ತೊಮ್ಮೆ ಸಾಬೀತಾಗುತ್ತದೆ. ಮಗಳು ಓಡೋಡಿ ಬಂದು ತಂದೆ ತಾಯಿಯ ಜೊತೆ ಈ ಖುಷಿಯನ್ನು ಹಂಚಿಕೊಳ್ಳುತ್ತಾಳೆ. ಇದೇ ಸಂದರ್ಭದಲ್ಲಿ ಊರಿನಲ್ಲಿ ದೇವರ ಉತ್ಸವ ನಡೆಯುತ್ತಿರುತ್ತದೆ. ಆಗ ದೇವರ ಸೀರೆ ಗಾಳಿಗೆ ಹಾರಿದಾಗ ಅದನ್ನು ಈ ಹುಡುಗಿ ಹಿಡಿದು ದೇವರ ಮೇಲೆ ಹಾಕಿ ದೇವರನ್ನು ಮುಟ್ಟಿ ನಮಸ್ಕಾರ ಮಾಡುತ್ತಾಳೆ. ಕೆಳಜಾತಿಯವರು ದೇವರನ್ನು ಮುಟ್ಟಿ ಮೈಲಿಗೆಯಾಯಿತು ಎನ್ನುವ ಕಾರಣಕ್ಕೆ ಜಮೀನ್ದಾರ ಮತ್ತು ಊರಿನ ನಾಯಕರು ಸೇರಿ ಶಿಕ್ಷೆ ನೀಡುತ್ತಾರೆ. ಏನೆಂದರೆ ನಿನ್ನ ಮಗಳು ವಿದ್ಯೆ ಕಲಿಯುವುದು ನಿಲ್ಲಿಸಬೇಕು. ಇಲ್ಲ ಹತ್ತು ಏಟಿಗೆ ದೇವರ ಕಂಬ ಉರುಳಿಸಬೇಕೆಂದು. ತನ್ನ ಮಗಳು ಯಾವುದೇ ಕಾರಣಕ್ಕೂ ವಿದ್ಯಾಭ್ಯಾಸದಿಂದ ದೂರ ಉಳಿಯಬಾರದೆಂದು ಹತ್ತು ಏಟಿಗೆ ದೇವರ ಕಂಬವನ್ನು ಉರುಳಿಸಿ ತನ್ನ ಮಗಳನ್ನು ರಕ್ಷಣೆ ಮಾಡಿಕೊಳ್ಳುತ್ತಾನೆ ಅವಳ ತಂದೆ. ಕೂಲಿಕಾರನ ಶ್ರಮದ ಶಕ್ತಿ, ನೈತಿಕ ಸಿಟ್ಟು ಒಂದೇ ಸಾರಿಗೆ ಜಮೀನ್ದಾರರನ್ನು ಅಲುಗಾಡಿಸುತ್ತದೆ. ಹೀಗಿರುವಾಗ ಈ ಹುಡುಗಿ ದೇವರು ಮುಟ್ಟಿದ್ದು ಮತ್ತು ತೇರು ಮೈಲಿಗೆಯಾಗಿದೆಯೆಂದು ರಾತ್ರೋರಾತ್ರಿ ತೇರು ಮತ್ತು ದೇವರನ್ನು ಸುಟ್ಟು ಹಾಕುತ್ತಾರೆ. ಇಲ್ಲಿ ಸುಟ್ಟಿದ್ದು ದೇವರನ್ನಲ್ಲ; ಮನುಷ್ಯನ ನಂಬಿಕೆ ಮತ್ತು ವಿಶ್ವಾಸವನ್ನು. ಹಾಗೆಯೇ ಏಕಕಾಲದಲ್ಲಿ ಭಾಗ್ಯಾ ಎಸ್.ಐ. ಪರೀಕ್ಷೆಗೆ ತಯಾರಿ ನಡೆಸುತ್ತಿದ್ದರೆ, ರಾಚಯ್ಯ ತನ್ನ ಮತ್ತು ತನ್ನ ಸಮುದಾಯದವರ ಭೂಮಿಗಾಗಿ ಹೋರಾಟ ಮಾಡುತ್ತಿರುತ್ತಾರೆೆ. ಪೂ.ಚಂತೇ ರವರು ಹೇಳಿದ ಹಾಗೇ ‘ಹೋರಾಟವಿಲ್ಲದೆ ಯಾವುದನ್ನೂ ಪಡೆದುಕೊಳ್ಳಲು ಸಾಧ್ಯವಿಲ’್ಲ ಎನ್ನುವ ಮಾತು ಈ ಸಂದರ್ಭ ನೆನಪಿಸುತ್ತದೆ. ನಮ್ಮ ಸಂವಿಧಾನ ಎಲ್ಲರಿಗೂ ಸಮತೆಯಿಂದ, ಸಮಾನತೆಯಿಂದ, ಘನತೆಯಿಂದ ಬದುಕುವ ಹಕ್ಕನ್ನು ನೀಡಿದೆ. ಅದಕ್ಕೆ ಒಂದು ಉದಾಹರಣೆ ಎಂದರೆ ಭಾಗ್ಯಾ ಎನ್ನುವ ಹೆಣ್ಣುಮಗಳಿಗೆ ಓದಿ ಸರಕಾರಿ ನೌಕರಿ ಪಡೆದು ಊರಿನ ಮಾನ ಪ್ರಾಣದ ಜೊತೆಗೆ ಸಂವಿಧಾನದ ಆಶಯವನ್ನು ತಿಳಿಸುವ ಹಂಬಲವಿರುತ್ತದೆ. ಇದಕ್ಕೆ ತನ್ನ ಪೋಷಕರಾದಂತಹ ರಾಚಯ್ಯ ಮತ್ತು ನಿಂಗವ್ವರವರೇ ನಿದರ್ಶನ. ಅಂದು ಬಾಬಾ ಸಾಹೇಬರ ಕನಸು ಹಿಂದೂ ಕೋಡ್ ಬಿಲ್ ಜಾರಿಗೆ ಬರಬೇಕು ಎನ್ನುವುದು. ಆದರೆ ಆ ದಿನಗಳಲ್ಲಿ ಅದು ಸಾಧ್ಯವಾಗಲಿಲ್ಲ. ಆದರೆ ನಂತರದ ದಿನಗಳಲ್ಲಿ ಒಂದೊಂದೇ ಅಂಶಗಳು ಸಂವಿಧಾನದೊಳಗೆ ಸೇರಿದ ಕಾರಣ ಇಂದು ಒಬ್ಬ ದಿಟ್ಟ ಹೆಣ್ಣುಮಗಳು ತನ್ನನ್ನು ತಾನು ಕಾಪಾಡಿಕೊಳ್ಳಲು, ಸಮಾಜದ ಅಸ್ಮಿತೆಯನ್ನು ಉಳಿಸಲು, ಸಮಾನತೆಯನ್ನು ಸಾಧಿಸಲು ಸಾಧ್ಯವಾಗುತ್ತದೆ. ಉದಾಹರಣೆಗೆ ಗಂಡ ಸತ್ತ ನಂತರ ಹೆಣ್ಣನ್ನು ವಿಧವೆ ಮಾಡುವ ಶಾಸ್ತ್ರ ಬಂದಾಗ ಹೆಣ್ಣು ಮಕ್ಕಳಿಗೆ ಹುಟ್ಟಿನಿಂದಲೇ ಬಂದಿದೆ ಅಲಂಕಾರ. ಅವಳಿಗ್ಯಾಕೆ ಈ ಕಟ್ಟುಪಾಡು ಎನ್ನುವ ಸಂದೇಶ ಮತ್ತು ತನ್ನ ಮಗಳನ್ನು ಬಸವಿ ಮಾಡಲು ಹೊರಟಾಗ ದಿಟ್ಟತನದಿ ಕತ್ತಿ ಮಸೆದು ಹೋರಾಟಕ್ಕೆ ನಿಲ್ಲುವ ಆಕೆಯ ಸ್ಥೈರ್ರ ಮೆಚ್ಚುವಂಹತದ್ದು. ಇಲ್ಲಿ ಸಂವಿಧಾನವನ್ನು ಉಲ್ಲೇಖಿಸಲಾಗಿದೆ. ಸಂವಿಧಾನದ ಹೆಸರೇ ಡಾ. ಬಾಬಾ ಸಾಹೇಬ್ ಅಂಬೇಡ್ಕರ್! ಪ್ರಜಾಪ್ರಭುತ್ವ ಎನ್ನುವ ಅಂಶವೇ ಪ್ರಜೆಗಳಿಗೆ ಇರುವ ದಿಟ್ಟ ಅಸ್ತ್ರ. ಅನಾದಿಕಾಲದಿಂದಲೂ ಭೂಮಿಗಾಗಿ ಕೂಲಿಕಾರ್ಮಿಕರು ಹೋರಾಡುತ್ತಲೇ ಬರುತ್ತಿದ್ದಾರೆ. ಕೂಲಿ ಕಾರ್ಮಿಕರಿಗೆ ಬೆವರು ಹರಿಸಿಯೂ ಗೊತ್ತು, ಮಿತಿ ಮೀರಿ ತನ್ನ ಸಮುದಾಯ ಮತ್ತು ಸ್ವಾಭಿಮಾನಕ್ಕೆ ಪೆಟ್ಟು ಬಿದ್ದರೆ ಪ್ರತಿರೋಧ ಒಡ್ಡುವ ಸಾಮರ್ಥ್ಯವೂ ಇದೆ. ಆದರೂ ರಾಚಯ್ಯ ನಿಮ್ಮ ಮಕ್ಕಳಿಗೆ ನೆತ್ತರು ಬಸಿಯುವ ಆಯುಧಗಳನ್ನು ಕೊಡಬೇಡಿ ಅಕ್ಷರ ಕಲಿಯುವ ಬಳಪ ಪೆನ್ನು ನೀಡಿರಿ ಎನ್ನುವ ಸಂದೇಶ ಸಾರ್ವಕಾಲಿಕವಾದದ್ದು. ಇಂತಹ ಚಿತ್ರಗಳನ್ನು ಬೆಂಬಲಿಸಬೇಕು ಮತ್ತು ಆ ಆಶಯಗಳನ್ನು ನಾವು ಅಳವಡಿಸಿಕೊಳ್ಳಬೇಕು. ಇಡೀ ಚಿತ್ರದಲ್ಲಿ ‘ಭೂಹೀನರಿಗೆ ಭೂಮಿಯೂ ಬೇಕು. ಸ್ವಾಭಿಮಾನದಿಂದ ಬದುಕುವ ಅಕ್ಷರವೂ ಬೇಕು’. ಈ ಎರಡು ಸಂದೇಶವನ್ನು ಹೇಳುತ್ತದೆ ‘ಲ್ಯಾಂಡ್ ಲಾರ್ಡ್’. ನಾವು ಸಾಮಾನ್ಯವಾಗಿ ಭೂಮಿಯನ್ನು ತಾಯಿಗೆ ಹೋಲಿಸುತ್ತೇವೆ. ಆ ತಾಯಿಯ ಮಕ್ಕಳು ತಾಯಿಯ ಕನಸು ಆಶಯಗಳ ರೀತಿಯಲ್ಲಿಯೇ ಬರಬೇಕು. ಇಡೀ ಮನುಷ್ಯ ಕುಲವೇ ತಾಯಿಯ ಮಕ್ಕಳು. ತಾಯಿಯ ಎದೆಹಾಲಿನಿಂದಲೇ ಬದುಕಿರುವುದು. ಲ್ಯಾಂಡ್ ಲಾರ್ಡ್ ಎನ್ನುವುದು ಭೂ ತಾಯಿಯ ಮಕ್ಕಳು ಸಮಸಮಾಜದಲ್ಲಿ ಸಮಸಮವಾಗಿ ಸ್ವಾಭಿಮಾನದಿಂದ ಬದುಕುವ ಸೌಂದರ್ಯವನ್ನೇ ಹೇಳುತ್ತದೆ. ಇದನ್ನೇ ಸಂವಿಧಾನ ಎಂದು ಹೇಳುತ್ತೇವೆ. ಇಡೀ ಸಿನೆಮಾದಲ್ಲಿ ಎಲ್ಲಾ ಪಾತ್ರಗಳು ನೈಜತೆಯಿಂದ ಕೂಡಿದ್ದು ಎಲ್ಲರೂ ಅವರವರ ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದಾರೆ. ರಾಚಯ್ಯನ ಪಾತ್ರದಲ್ಲಿ ದುನಿಯಾ ವಿಜಯ್ ನಾಯಕನಾಗಿದ್ದರೂ, ಮಗಳು ಭಾಗ್ಯಾ ಇಡೀ ಸಿನೆಮಾದ ಆಶಯಗಳ ರೂಪಕದಂತೆ ಎದ್ದು ಕಾಣುತ್ತಾಳೆ. ಪ್ರಥಮ ಸಿನೆಮಾ ಆದರೂ ಈಕೆಯ ನೈಜ ನಟನೆ ಚಿತ್ರಕ್ಕೆ ಜೀವ ತುಂಬಿದೆ. ಮುಂದಿನ ದಿನಗಳಲ್ಲಿ ಕನ್ನಡ ಸಿನೆಮಾಕ್ಕೆ ಒಳ್ಳೆಯ ಕಲಾವಿದೆಯಾಗುವ ಎಲ್ಲಾ ಲಕ್ಷಣಗಳು ಇವೆ. ಕನ್ನಡಿಗರು ಇಂತಹ ಸಿನೆಮಾಗಳನ್ನು ಗೆಲ್ಲಿಸಬೇಕು. ಈಗ ಸರಕಾರ ತೆರಿಗೆ ವಿನಾಯಿತಿ ಕೊಟ್ಟಿದ್ದರಿಂದ ಎಲ್ಲರೂ ಥಿಯೇಟರಿಗೆ ಹೋಗಿ ಇಂತಹ ಕನ್ನಡ ಸಿನೆಮಾಗಳನ್ನು ಗೆಲ್ಲಿಸುವಂತಾಗಲಿ. ► ಸರಕಾರಕ್ಕೆ ಮನವಿ ಲ್ಯಾಂಡ್ ಲಾರ್ಡ್ ಸಿನೆಮಾದಲ್ಲಿ ಒಳ್ಳೆಯ ಸಾಮಾಜಿಕ ಸಂದೇಶವಿದೆಯೆಂದು ಕನ್ನಡಿಗರು ಮತ್ತು ಸಿನೆಮಾ ಪ್ರಿಯರು ನೋಡುವಂತೆ ಮಾಡಿರುವುದು ‘ಮಾನ್ಯ ಮುಖ್ಯಂತ್ರಿಗಳಾದ ಸಿದ್ಧಾರಾಮಯ್ಯ’ನವರ ಸಾಮಾಜಿಕ ಕಳಕಳಿ ಮತ್ತು ಬದ್ಧತೆಯನ್ನು ಅಭಿನಂದಿಸುತ್ತೇನೆ. ಹಾಗೆಯೇ ಅವರಿಗೊಂದು ಮನವಿಯನ್ನೂ ಸಹ ಮಾಡುತ್ತೇನೆ. ಅದೆಂದರೆ, ಈ ನಾಡಿನ ಶೋಷಿತರು ಮತ್ತು ದಲಿತರಿಗೆ ಇವತ್ತಿಗೂ ಅಂಗೈ ಅಗಲ ಜಾಗ ಸಿಕ್ಕಿಲ್ಲ. ಪಿಟಿಸಿಎಲ್ ಆಕ್ಟ್ ಅನ್ನು ಮತ್ತೊಮ್ಮೆ ಪರಿಶೀಲಿಸಿ ಭೂ ಹೀನರಿಗೆ ಭೂಮಿ ಸಿಗುವಂತೆ ತಮ್ಮ ಇಚ್ಛಾಶಕ್ತಿಯನ್ನು ತೋರಿಸಬೇಕಾಗಿ ವಿನಂತಿ. ಕಳೆದ ಐದು ದಶಕಗಳಿಂದ ಈ ನಾಡಿನ ನೊಂದವರಿಗೆ ಅರಿವು ಮತ್ತು ಎಚ್ಚರವನ್ನು ಮೂಡಿಸಿದ ದಲಿತ ಸಂಘರ್ಷ ಸಮಿತಿ ಹೆಂಡ ಬೇಡ, ಭೂಮಿ ಬೇಕೆಂದು ನಿರಂತರವಾಗಿ ಹೋರಾಟ ಮಾಡುತ್ತಾ ಬಂದಿದೆ. ಇವತ್ತಿಗೂ ಭೂ ಸುಧಾರಣೆ ನೀತಿಯಿಂದಲೂ ಭೂ ವಂಚಿತರಿಗೆ ಭೂಮಿ ದಕ್ಕಿಲ್ಲ. ಆದ್ದರಿಂದ ಪಿಟಿಸಿಎಲ್ ಆಕ್ಟ್ ಅನ್ನು ಬಲಗೊಳಿಸಿ ಪ್ರಬಲವಾಗಿ ಜಾರಿಗೊಳಿಸುವ ಮೂಲಕ ಭೂಹೀನರ ಕನಸನ್ನು ನನಸು ಮಾಡಲೇಬೇಕು. ಇದು ಪ್ರೀತಿಪೂರ್ವಕ ಒತ್ತಾಯ. ಮುಖ್ಯಮಂತ್ರಿಗಳಿಗೆ ಇಂತಹ ವಿಷಯಗಳ ಬಗ್ಗೆ ದೊಡ್ಡ ಜವಾಬ್ದಾರಿ ಇದೆ ಎಂದು ಗೊತ್ತಿದೆ. ರಾಚಯ್ಯನಂತಹ ಲಕ್ಷಾಂತರ ಭೂ ಹೀನರಿಗೆ ಭೂಮಿ ಸಿಗುವಂತಾದರೆ ದಲಿತರಿಗೆ ಅದು ದೊಡ್ಡ ಆಸರೆಯಾಗಿರುತ್ತದೆ. ತಾನು ಸ್ವಾಭಿಮಾನದಿಂದ ಬದುಕು ಕಟ್ಟಿಕೊಳ್ಳುವುದಲ್ಲದೆ ಮುಂದಿನ ತಲೆಮಾರು ನೆಮ್ಮದಿಯಿಂದ ಬದುಕಲು ಕಾರಣವಾಗುತ್ತದೆ. ಇದರಿಂದ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ರವರ ಕನಸು ನನಸು ಮಾಡಿದಂತಾಗುತ್ತದೆ.
ಮಣಿಪುರ | ನಾಗಾ-ಕುಕಿ ಸಮುದಾಯಗಳ ನಡುವೆ ಮತ್ತೆ ಘರ್ಷಣೆ: ಹಲವು ಮನೆಗಳಿಗೆ ಬೆಂಕಿ
ಇಂಫಾಲ್: ಮಣಿಪುರದಲ್ಲಿ ನಾಗಾ-ಕುಕಿ ಸಮುದಾಯಗಳ ನಡುವೆ ಘರ್ಷಣೆ ನಡೆದಿದ್ದು, ಹಲವು ಸಶಸ್ತ್ರ ಬಂಡುಕೋರರ ಮನೆಗಳಿಗೆ ಬೆಂಕಿ ಹಚ್ಚಿರುವ ಘಟನೆ ಸೋಮವಾರ ಉಖ್ರುಲ್ ಜಿಲ್ಲೆಯಲ್ಲಿ ನಡೆದಿದೆ. ಮಧ್ಯರಾತ್ರಿಯ ಹೊತ್ತಿನಲ್ಲಿ ಲಿಟಾನ್ ಸರೈಯಖಾಂಗ್ ಗ್ರಾಮದಲ್ಲಿ ಎರಡೂ ಸಮುದಾಯಗಳ ಮನೆಗಳಿಗೆ ಬೆಂಕಿ ಹಚ್ಚಲಾಗಿದೆ. ಈ ಕುರಿತು ಪ್ರತಿಕ್ರಿಯಿಸಿದ ಜಿಲ್ಲೆಯ ಅಧಿಕಾರಿಯೊಬ್ಬರು, “ಘಟನೆ ಬಗ್ಗೆ ಪರಿಶೀಲಿಸಲಾಗುತ್ತಿದ್ದು, ಪರಿಸ್ಥಿತಿ ಇನ್ನೂ ಪ್ರಕ್ಷುಬ್ಧವಾಗಿಯೇ ಉಳಿದಿದೆ” ಎಂದು ತಿಳಿಸಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ವಿಡಿಯೊದಲ್ಲಿ ದುಷ್ಕರ್ಮಿಗಳು ಮನೆಗಳು ಹಾಗೂ ವಾಹನಗಳಿಗೆ ಬೆಂಕಿ ಹಚ್ಚುತ್ತಿರುವುದು ಸೆರೆಯಾಗಿದೆ. ಮುಸುಕುಧಾರಿ ಬಂಡುಕೋರರು ಅತ್ಯಾಧುನಿಕ ಶಸ್ತ್ರಾಸ್ತ್ರಗಳಿಂದ ಗಾಳಿಯಲ್ಲಿ ಗುಂಡು ಹಾರಿಸುತ್ತಿರುವುದೂ ಈ ವೀಡಿಯೊದಲ್ಲಿ ಸೆರೆಯಾಗಿದೆ. ಲಿಟಾನ್ ಸರೈಯಖಾಂಗ್ ಗ್ರಾಮದಲ್ಲಿ ಕುಕಿ ಸಮುದಾಯ ಬಾಹುಳ್ಯವಿದ್ದರೆ, ಉಖ್ರುಲ್ ಜಿಲ್ಲೆಯಲ್ಲಿ ತಾಂಗ್ಖುಲ್ ನಾಗಾ ಸಮುದಾಯದ ಉಪಸ್ಥಿತಿ ಇದೆ. ಮಣಿಪುರದಲ್ಲಿ ತಾಂಗ್ಲುಖ್ ಅತಿ ದೊಡ್ಡ ನಾಗಾ ಬುಡಕಟ್ಟು ಸಮುದಾಯವಾಗಿದೆ. ಪ್ರಕ್ಷುಬ್ಧ ಸ್ಥಿತಿಯ ಹಿನ್ನೆಲೆಯಲ್ಲಿ ಮಹಾದೇವ್, ಲಂಬುಯಿ, ಶಾಂಗ್ಕಾಯಿ, ಹಾಗೂ ಇನ್ನಿತರ ಪ್ರದೇಶಗಳಲ್ಲಿ ಹೆಚ್ಚುವರಿ ಭದ್ರತಾ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. ಲಿಟಾನ್ ನಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಲು ಹಾಗೂ ಅನುಮಾನಾಸ್ಪದ ವ್ಯಕ್ತಿಗಳ ಚಲನವಲನಗಳನ್ನು ನಿಯಂತ್ರಿಸಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮಾಂದಲಪಟ್ಟಿಗೆ ತೆರಳುವ ಪ್ರವಾಸಿಗರೇ ಗಮನಿಸಿ, 10 ದಿನಗಳ ಕಾಲ ನಿರ್ಬಂಧವಿರಲಿದೆ
ಮಾಂದಲಪಟ್ಟಿ ರಸ್ತೆ ದುರಸ್ತಿ ಕಾಮಗಾರಿ ಸದ್ಯದಲ್ಲೇ ನಡೆಯಲಿದ್ದು ಅಂದಾಜು 10 ದಿನಗಳ ಕಾಲ ಪ್ರವಾಸಿಗರಿಗೆ ಬಂದ್ ಆಗಿರಲಿದೆ. ಬಳಿಕ ಅರಣ್ಯ ಇಲಾಖೆ ಜೀಪ್ ಅಲ್ಲದೇ ಇತರ ವಾಹನಗಳ ಸಂಚಾರಕ್ಕೆ ಅವಕಾಶ, ಸಮಯ ನಿಗದಿ ಮತ್ತಿತರ ವಿಚಾರಗಳ ಕುರಿತು ತಮ್ಮ ವೆಬ್ಸೈಟ್ನಲ್ಲಿ ಪ್ರಕಟಿಸಲಿದೆ.
ಕೇಂದ್ರ ಸಚಿವ ಜೋಶಿ ಕೈಯಲ್ಲಿ ಗಾಳಿಪಟದ ದಾರ - ಬಾಯಲ್ಲಿ ’ಆಕಾಶ ಇಷ್ಟೇ ಯಾಕಿದೆಯೋ’ ಸ್ವರ
International Kite Festival : ಗಾಳಿಪಟ ಹಾರಿಸಿ, ’ಆಕಾಶ ಇಷ್ಟೇ ಯಾಕಿದೆಯೋ’ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹಾಡಿದ್ದಾರೆ. ಧಾರವಾಡ ಸಂಸದರು ಸಾಂಸ್ಕೃತಿಕ ಮತ್ತು ಕ್ರೀಡಾ ಮಹೋತ್ಸವದಲ್ಲಿ ಭಾನುವಾರ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಖ್ಯಾತ ಗಾಯಕ ಸೋನು ನಿಗಮ್, ಗಾನ ಕೋಗಿಲೆ ಖ್ಯಾತಿಯ ಮಹನ್ಯಾ ಪಾಟೀಲ ತಂಡದಿಂದ ವಿಶೇಷ ಸಂಗೀತೋತ್ಸವ ಅಭಿಮಾನಿಗಳನ್ನು ನಲಿಸಿತು.
ಭಾರತ ವಿರುದ್ಧದ ಪಂದ್ಯ ಆಡಲು ಸಿದ್ದವಾದ ಪಾಕಿಸ್ತಾನ; ಐಸಿಸಿಗೆ ಮೂರು ಬೇಡಿಕೆ, ಬಾಂಗ್ಲಾ ಮೇಲೆ ಎಲ್ಲಿಲ್ಲದ ಪ್ರೀತಿ!
ಐಸಿಸಿ ಟಿ-20 ಪಂದ್ಯಾವಳಿಯಲ್ಲಿ ತನ್ನ ನಾಟಕವನ್ನು ಮುಂದುವರೆಸಿರುವ ಪಾಕಿಸ್ತಾನ ಕ್ರಿಕೆಟ್ ಮಂಡಳಿ, ಭಾರತ ವಿರುದ್ಧದ ಪಂದ್ಯ ಬಹಿಷ್ಕಾರವನ್ನು ಹಿಂಪಡೆಯಬೇಕಾದರೆ, ತನ್ನ ಮೂರು ಪ್ರಮುಖ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿದೆ. ಈ ಎಲ್ಲಾ ಬೇಡಿಕೆಗಳು ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯ ಪರವಾಗಿದ್ದು, ಬಿಸಿಬಿ ಮೇಲಿನ ಪಿಸಿಬಿ ಪ್ರೀತಿ ಗಮನ ಸೆಳೆದಿದೆ. ಆದರೆ ಐಸಿಸಿ ಈ ಬೇಡಿಕೆಗಳ ಬಗ್ಗೆ ಏನು ಪ್ರತಿಕ್ರಿಯೆ ನೀಡಲಿದೆ ಎಂಬುದನ್ನು ಕಾದು ನೋಡಬೇಕಿದೆ. ಈ ಕುರಿತು ಇಲ್ಲಿದೆ ಹೆಚ್ಚಿನ ಮಾಹಿತಿ.
ಮಾನ್ವಿ ಪೊಲೀಸರ ಕಾರ್ಯಾಚರಣೆ: 24 ಗಂಟೆಗಳಲ್ಲಿ ಕಾರು ಕಳ್ಳರ ಬಂಧನ
ಮಾನ್ವಿ: ತಾಲೂಕಿನ ಪ್ರಸಿದ್ಧ ಶ್ರೀ ಕ್ಷೇತ್ರ ನೀರಮಾನ್ವಿ ಎಲ್ಲಮ್ಮ ದೇವಿ ಜಾತ್ರಾ ಮಹೋತ್ಸವದ ಸಂದರ್ಭದಲ್ಲಿ ಮಹಾರಾಷ್ಟ್ರದಿಂದ ಆಗಮಿಸಿದ್ದ ಭಕ್ತಾದಿಗಳ ಕಾರು, ಮೊಬೈಲ್ಗಳು ಹಾಗೂ ನಗದು ಹಣ ಸೇರಿ ಸುಮಾರು ₹15 ಲಕ್ಷ ಮೌಲ್ಯದ ವಸ್ತುಗಳನ್ನು ಕಳ್ಳತನ ಮಾಡಿದ್ದ ಆರೋಪಿಗಳನ್ನು ಮಾನ್ವಿ ಪೊಲೀಸರು ಕೇವಲ 24 ಗಂಟೆಗಳೊಳಗೆ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಶುಕ್ರವಾರ ಸಂಜೆ ಸುಮಾರು 7 ಗಂಟೆಯ ವೇಳೆಗೆ ಭಕ್ತಾದಿಗಳು ತಮ್ಮ ಕಾರುಗಳು ಹಾಗೂ ಇತರ ವಸ್ತುಗಳು ಕಳ್ಳತನವಾಗಿರುವ ಕುರಿತು ಮಾನ್ವಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ದೂರಿನ ಆಧಾರದ ಮೇಲೆ ತಕ್ಷಣ ಕಾರ್ಯಪ್ರವೃತ್ತರಾದ ರಾಯಚೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಮಾರ್ಗದರ್ಶನದಲ್ಲಿ, ಸಿಂಧನೂರು ಡಿ.ವೈ.ಎಸ್.ಪಿ ಹಾಗೂ ಮಾನ್ವಿ ಪೊಲೀಸ್ ಠಾಣೆಯ ಪಿ.ಐ. ಸೋಮಶೇಖರ್ ಕೆಂಚರೆಡ್ಡಿ ಅವರ ನೇತೃತ್ವದಲ್ಲಿ ವಿಶೇಷ ಪೊಲೀಸ್ ತಂಡವನ್ನು ರಚಿಸಲಾಯಿತು. ಎ.ಎಸ್.ಐ. ಸುಗಪ್ಪಗೌಡ, ಬಸವನಗೌಡ, ಹುಸೇನ್ಸಾಬ್, ಡೇವಿಡ್, ಬಸವರಾಜ್, ಚರಣರಾಜ್ ಹಾಗೂ ರಾಮಣ್ಣ ಅವರನ್ನು ಒಳಗೊಂಡ ತಂಡವು ತೀವ್ರ ತನಿಖೆ ಹಾಗೂ ತಾಂತ್ರಿಕ ಮಾಹಿತಿಯ ಆಧಾರದ ಮೇಲೆ ಶೋಧ ಕಾರ್ಯಾಚರಣೆ ನಡೆಸಿ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಯಿತು. ಬಂಧಿತರಿಂದ ಕಳ್ಳತನಗೊಂಡ ಕಾರು, ಮೊಬೈಲ್ಗಳು ಹಾಗೂ ನಗದು ಹಣವನ್ನು ವಶಪಡಿಸಿಕೊಳ್ಳಲಾಗಿದೆ. ಬಂಧಿತ ಆರೋಪಿಗಳನ್ನು ಡಿ.ಜೆ. ವಿಶ್ವನಾಥ್ (ಕೋನಾಪುರ್ಪೇಟೆ), ಶರಣಬಸವ (ಹಿರೇಕೊಟ್ನೇಕಲ್) ಹಾಗೂ ಮೌನೇಶ್ (ಹಿರೇಕೊಟ್ನೇಕಲ್) ಎಂದು ಗುರುತಿಸಲಾಗಿದ್ದು, ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಈ ಯಶಸ್ವಿ ಕಾರ್ಯಾಚರಣೆಗೆ ಸಾರ್ವಜನಿಕ ವಲಯದಲ್ಲಿ ಮಾನ್ವಿ ಪೊಲೀಸರ ತ್ವರಿತ ಕ್ರಮ ಹಾಗೂ ಕಾರ್ಯಕ್ಷಮತೆಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.
Panipuri Business: ಭಾರತದ ಬಹುತೇಕ ನಗರಗಳಲ್ಲಿ ಪಾನಿಪುರಿ ಪ್ರಸಿದ್ಧ ಚಾಟ್ಸ್ನಲ್ಲಿ ಒಂದಾಗಿದೆ. ಇದಕ್ಕೆ ವಿದೇಶಗಳಲ್ಲೂ ಕೂಡ ಹೆಚ್ಚಿನ ಬೇಡಿಗೆ ಇದೆ. ಇದನ್ನು ಗಮನಿಸಿಯೇ ಕರ್ನಾಟಕದ ಬೆಂಗಳೂರು ಟೆಕ್ಕಿ ದಂಪತಿಯೊಂದು ಲಂಡನ್ನಲ್ಲಿ ಪಾನಿಪುರಿ ಮಾರಾಟಕ್ಕೆ ಇಳಿದು ತಿಂಗಳಿಗೆ ಕೋಟಿ.. ಕೋಟಿ.. ರೂಪಾಯಿ ಹಣ ಸಂಪಾದನೆ ಮಾಡುತ್ತಿದೆ. ಹಾಗಾದ್ರೆ ಅಲ್ಲಿ ಒಂದು ಪ್ಲೇಟ್ಗೆ ಎಷ್ಟು ದರ ಇದೆ ಎನ್ನುವ ಸಂಪೂರ್ಣ
Gold Price Today: ಇಂದು ದಾಖಲೆ ಮಟ್ಟದಲ್ಲಿ ಚಿನ್ನ-ಬೆಳ್ಳಿ ದರ ಏರಿಕೆ, ನಿಮ್ಮೂರಲ್ಲಿ ಎಷ್ಟಿದೆ ಬೆಲೆ?
ಬೆಂಗಳೂರು: ಚಿನ್ನ ಬೆಳ್ಳಿ ದರದಲ್ಲಿ ಹಾವು ಏಣಿ ಆಟ ಮುಂದುವರಿದಿದೆ. ಇಂದು ಸೋಮವಾರ ಫೆಬ್ರವರಿ 9 ರಂದು ಬೆಳ್ಳಿ ಮತ್ತು ಬಂಗಾರದ ದರದಲ್ಲಿ ಮತ್ತೆ ಗರಿಷ್ಠ ಪ್ರಮಾಣದ ಭರ್ಜರಿ ಏರಿಕೆ ದಾಖಲಿಸಿದೆ. ಈ ಮೂಲಕ ಗ್ರಾಹಕರಿಗೆ ಆಘಾತ ನೀಡಿದೆ. ಯಾರೆಲ್ಲ ಈ ಲೋಹಗಳ ಖರೀದಿಗೆ ಮುಂದಾಗಿದ್ದರೋ ಅವರಿಗೆ ಬ್ರೇಕ್ ಬಿದ್ದಂತಾಗಿದೆ. ಹೂಡಿಕೆದಾರರಲ್ಲಿ ಕೊಂಚ ನಿರಾಳತೆ ಮೂಡಿಸಿದೆ. ದರ
ದೆಹಲಿಯಲ್ಲಿ ಇತ್ತೀಚೆಗೆ ಖಲಿಸ್ತಾನಿ ಉಗ್ರರ ಹಾವಳಿ ಜಾಸ್ತಿಯಾಗಿದ್ದು, ಇತ್ತೀಗಷ್ಟೆ ಗಣರಾಜ್ಯೋತ್ಸವದ ಸಂದರ್ಭದಲ್ಲಿ ಖಲಿಸ್ತಾನಿ ಪರವಾದ ಬರಹಗಳನ್ನು ನಗರದಲ್ಲಿ ಬರೆದು ಹುಚ್ಚಾಟ ಮೆರೆದಿದ್ದರು. ಇದೀಗ ಮತ್ತೆ ಈ ಹುಚ್ಚಟವನ್ನು ಮುಂದುವರೆಸಿರುವ ಇವರು ದೆಹಲಿಯ 9 ಶಾಲೆಗಳಿಗೆ ಬಾಂಬ್ ಬೆದರಿಕೆ ಸಂದೇಶಗಳನ್ನು ಕಳುಹಿಸಿದ್ದು, ಇದರಲ್ಲಿ ಖಲಿಸ್ತಾನಿ ಪರವಾದ ಘೋಷಣೆಗಳನ್ನು ಸಹ ಉಲ್ಲೇಖಿಸಿದ್ದಾರೆ. ಅಷ್ಟೇ ಅಲ್ಲದೆ, ಪಾರ್ಲಿಮೆಂಟ್ ಮೇಲೆಯೂ ಬಾಂಬ್ ಹಾಕುವ ಬೆದರಿಕಗಳನ್ನು ಹಾಕಿದ್ದು, ಖಲಿಸ್ತಾನಿ ಪರವಾದ ಪ್ರಚೋದನಕಾರಿ ಹೇಳಿಕೆಗಳು ಸೇರಿದಂತೆ ರಾಷ್ಟ್ರೀಯ ನಾಯಕರ ಶತ್ರುಗಳು ಎಂದು ಉಲ್ಲೇಖಿಸಿ ಇ-ಮೇಲ್ ಸಂದೇಶಗಳನ್ನು ಕಳುಹಿಸಿದ್ದಾರೆ. ಸದ್ಯ, ರಕ್ಷಣಾ ಸಿಬ್ಬಂದಿಗಳು ತುರ್ತು ಕಾರ್ಯಚರಣೆಯಲ್ಲಿ ತೊಡಗಿಕೊಂಡಿದ್ದಾರೆ.
ವಿಧಾನಸೌಧದ ಪಕ್ಕದಲ್ಲಿ ತಲೆ ಎತ್ತಲಿದೆ ದೇಶದ ಮೊದಲ ಧಾರ್ಮಿಕ ಸೌಧ: 27 ಕೋಟಿ ವೆಚ್ಚದಲ್ಲಿ ನಿರ್ಮಾಣ, ಏನಿದರ ವಿಶೇಷತೆ
ಬೆಂಗಳೂರಿನಲ್ಲಿ ಶೀಘ್ರದಲ್ಲೇ ಧಾರ್ಮಿಕ ಸೌಧ ನಿರ್ಮಾಣ ಆಗಲಿದೆ. ಮುಜರಾಯಿ ಇಲಾಖೆಗೆ ಸ್ವಂತ ಕಟ್ಟಡ ಇರಲಿಲ್ಲ. ಇದೀಗ ದೇಶದಲ್ಲೇ ಮೊದಲ ಬಾರಿಗೆ ಇಂತಹದೊಂದು ಧಾರ್ಮಿಕ ಕಟ್ಟಡವನ್ನು ನಿರ್ಮಾಣ ಮಾಡಲು ನಿರ್ಧರಿಸಲಾಗಿದೆ. ನೂತನವಾಗಿ ನಿರ್ಮಾಣ ಆಗಲಿರುವ ಧಾರ್ಮಿಕ ಸೌಧ 38241 ಚದರ ಅಡಿ ವಿಸ್ತೀರ್ಣ ಇರಲಿದೆ. ಇದಕ್ಕೆ 27.70 ಕೋಟಿ ಇದಕ್ಕೆ ಖರ್ಚು ಆಗಲಿದೆ ಎಂದು ಅಂದಾಜಿಸಲಾಗಿದೆ. ರಾಮಾಂಜೇಯ ಸ್ವಾಮಿ ದೇವಸ್ಥಾನಕ್ಕೆ ಸೇರಿದ 919 ಚ.ಮೀ ಜಮೀನನ್ನು ಧಾರ್ಮಿಕ ಸೌಧ ನಿರ್ಮಾಣಕ್ಕೆ ನೀಡಲು ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ ಮಾಡಲಾಗಿತ್ತು.
ಮತ್ತೆ ಏರು ಹಾದಿಯಲ್ಲಿ ಚಿನ್ನ; ಮಂಗಳೂರಿನಲ್ಲಿ ಇಂದಿನ ದರವೆಷ್ಟು?
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಜನವರಿ 29ರಂದು ಅತ್ಯಧಿಕ 5,600 ಡಾಲರ್ಗಳಿಗೆ ಏರಿದ ನಂತರ ಇಳಿಕೆ ಮತ್ತು ಏರಿಕೆಯ ಏರಿಳಿತದ ನಡುವೆ ನಿನ್ನೆ ರವಿವಾರ ಮತ್ತೆ 5,000 ಡಾಲರ್ಗಳಿಗೆ ಬಂದು ನಿಂತಿದೆ. ಗುರುವಾರ ಮತ್ತು ಶುಕ್ರವಾರ ಸತತ ಕುಸಿತ ಕಂಡಿದ್ದ ಚಿನ್ನ ಶನಿವಾರ ಅಲ್ಪ ಏರಿಕೆ ಕಂಡಿತ್ತು. ಇದೀಗ ಸೋಮವಾರ ಮತ್ತೆ ಏರಿಕೆ ಕಂಡಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಜನವರಿ 29ರಂದು ಅತ್ಯಧಿಕ 5,600 ಡಾಲರ್ಗಳಿಗೆ ಏರಿದ ನಂತರ ಇಳಿಕೆ ಮತ್ತು ಏರಿಕೆಯ ಏರಿಳಿತದ ನಡುವೆ ನಿನ್ನೆ ರವಿವಾರ ಮತ್ತೆ 5,000 ಡಾಲರ್ಗಳಿಗೆ ಬಂದು ನಿಂತಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಡಾಲರ್ ಬೆಲೆ ಕುಸಿತ ಇಂದಿನ ಏರಿಕೆಗೆ ಪ್ರಮುಖ ಕಾರಣವಾಗಿದೆ. ದೇಸಿ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೂಡಿಕೆದಾರರ ಭಾವನೆಗಳಿಗೆ ತಕ್ಕಂತೆ ಚಿನ್ನದ ಬೆಲೆಯಲ್ಲಿ ಏರಿಳಿತ ಕಾಣುತ್ತಿದೆ. ಒಂದೆಡೆ ಹೂಡಿಕೆದಾರರು ಲಾಭ ಗಳಿಕೆಯಲ್ಲಿ ಮಾರಾಟ ಮಾಡಿದರೆ, ಮತ್ತೊಂದೆಡೆ ದೇಸಿ ಮಾರುಕಟ್ಟೆಯಲ್ಲಿ ಜನರು ಖರೀದಿಗೆ ಇಳಿದ ಕಾರಣ ಗರಿಷ್ಠ ಮಟ್ಟಕ್ಕೆ ಏರಿದ್ದ ಚಿನ್ನ ನಂತರ ಚಂಚಲತೆ ಪ್ರದರ್ಶಿಸುತ್ತಿದೆ. ಫೆಬ್ರವರಿ 9ರ ವಿವರಗಳ ಪ್ರಕಾರ 24 ಕ್ಯಾರೆಟ್ನ ಶುದ್ಧ ಚಿನ್ನ ಪ್ರತಿ ಗ್ರಾಂಗೆ 15,884 ರೂ. ಮತ್ತು 22 ಕ್ಯಾರೆಟ್ ಚಿನ್ನ ಪ್ರತಿ ಗ್ರಾಂಗೆ 14,560 ರೂ. ಮತ್ತು 18 ಕ್ಯಾರೆಟ್ ಚಿನ್ನಕ್ಕೆ ಪ್ರತಿ ಗ್ರಾಂಗೆ 11,913 ರೂ.ಗೆ ಬಂದು ನಿಂತಿದೆ. ಮಂಗಳೂರಿನಲ್ಲಿ ಇಂದಿನ ಚಿನ್ನದ ದರವೆಷ್ಟು? ಸೋಮವಾರ (ಫೆಬ್ರವರಿ 9ರಂದು) ಬೆಳಗಿನ 11 ಗಂಟೆಯ ವಹಿವಾಟಿನಲ್ಲಿ ಮಂಗಳೂರಿನಲ್ಲಿ ಚಿನ್ನದ ಬೆಲೆ ಮತ್ತೆ ಅಲ್ಪ ಏರಿಕೆ ಕಂಡಿದೆ. ಬೆಳಗಿನ ವಹಿವಾಟಿನಲ್ಲಿ ಒಂದು ಗ್ರಾಂ 24 ಕ್ಯಾರೆಟ್ ಚಿನ್ನದ ದರ 15,884 (+224) ರೂ. ಗೆ ಏರಿದೆ. ಒಂದು ಗ್ರಾಂ 22 ಕ್ಯಾರೆಟ್ ಚಿನ್ನದ ದರ 14,560 (+205) ರೂ. ಮತ್ತು ಒಂದು ಗ್ರಾಂ 18 ಕ್ಯಾರೆಟ್ ಚಿನ್ನದ ದರ 11,913 (+168) ರೂ. ಬೆಲೆಗೆ ತಲುಪಿದೆ. ಬೆಳ್ಳಿ ಬೆಲೆಯಲ್ಲೂ ಅಲ್ಪ ಏರಿಕೆ ಗುರುವಾರ ಮತ್ತು ಶುಕ್ರವಾರ ಸತತ ಕುಸಿತ ಕಂಡಿದ್ದ ಬೆಳ್ಳಿ ಶನಿವಾರ ಏರಿಕೆಯಾಗಿತ್ತು. ಇದೀಗ ಸೋಮವಾರ ಮಾರುಕಟ್ಟೆ ತೆರೆದ ತಕ್ಷಣ ಪ್ರತಿ ಗ್ರಾಂಗೆ 15 ರೂ.ನಷ್ಟು ಏರಿದ ಬೆಳ್ಳಿ ಕೆಜಿಗೆ 3,00,000 ಲಕ್ಷ ರೂ. ಗೆ ಬಂದು ನಿಂತಿದೆ. ವಿವಿಧ ನಗರಗಳಲ್ಲಿ 1 ಗ್ರಾಂ ಚಿನ್ನದ ದರ (ಬೆಳಗಿನ ವಹಿವಾಟು) ಹೇಗಿದೆ? ದಿಲ್ಲಿ: 24 ಕ್ಯಾರೆಟ್ ಚಿನ್ನದ ದರ 15,899 (+224) ರೂ., 22 ಕ್ಯಾರೆಟ್ ಚಿನ್ನದ ದರ 14,575 (+205) ರೂ. ಮುಂಬೈ: 24 ಕ್ಯಾರೆಟ್ ಚಿನ್ನದ ದರ 15,884 (+224) ರೂ., 22 ಕ್ಯಾರೆಟ್ ಚಿನ್ನದ ದರ 14,560 (+205) ರೂ. ಅಹ್ಮದಾಬಾದ್: 24 ಕ್ಯಾರೆಟ್ ಚಿನ್ನದ ದರ 15,889 (+224) ರೂ., 22 ಕ್ಯಾರೆಟ್ ಚಿನ್ನದ ದರ 14,565 (+205) ರೂ. ಚೆನ್ನೈ: 24 ಕ್ಯಾರೆಟ್ ಚಿನ್ನದ ದರ 15,982 (+251) ರೂ., 22 ಕ್ಯಾರೆಟ್ ಚಿನ್ನದ ದರ 14,650 (+230) ರೂ. ಕೋಲ್ಕತ್ತಾ: 24 ಕ್ಯಾರೆಟ್ ಚಿನ್ನದ ದರ 15,884 (+224) ರೂ., 22 ಕ್ಯಾರೆಟ್ ಚಿನ್ನದ ದರ 14,560 (+205) ರೂ. ಹೈದರಾಬಾದ್: 24 ಕ್ಯಾರೆಟ್ ಚಿನ್ನದ ದರ 15,884 (+224) ರೂ., 22 ಕ್ಯಾರೆಟ್ ಚಿನ್ನದ ದರ 14,560 (+205) ರೂ. ಜೈಪುರ: 24 ಕ್ಯಾರೆಟ್ ಚಿನ್ನದ ದರ 15,899 (+224) ರೂ., 22 ಕ್ಯಾರೆಟ್ ಚಿನ್ನದ ದರ 14,575 (+205) ರೂ. ಭೋಪಾಲ್: 24 ಕ್ಯಾರೆಟ್ ಚಿನ್ನದ ದರ 15,889 (+224) ರೂ., 22 ಕ್ಯಾರೆಟ್ ಚಿನ್ನದ ದರ 14,565 (+205) ರೂ. ಲಕ್ನೋ: 24 ಕ್ಯಾರೆಟ್ ಚಿನ್ನದ ದರ 15,899 (+224) ರೂ., 22 ಕ್ಯಾರೆಟ್ ಚಿನ್ನದ ದರ 14,575 (+205) ರೂ. ಚಂಡೀಗಢ: 24 ಕ್ಯಾರೆಟ್ ಚಿನ್ನದ ದರ 15,899 (+224) ರೂ., 22 ಕ್ಯಾರೆಟ್ ಚಿನ್ನದ ದರ 14,575 (+205) ರೂ.
ಬೆಳ್ತಂಗಡಿ: ಕಾಲೇಜು ವಿದ್ಯಾರ್ಥಿನಿಯ ಅಪಹರಣ ಯತ್ನ; ಆರೋಪಿಗಳು ಪರಾರಿ
ಬೆಳ್ತಂಗಡಿ: ಸ್ಕೂಟರ್ನಲ್ಲಿ ಕಾಲೇಜಿಗೆ ತೆರಳುತ್ತಿದ್ದ ಅಪ್ರಾಪ್ತ ಬಾಲಕಿಯನ್ನು ಕಾರಿನಲ್ಲಿ ಬಂದ ಮೂವರು ಅಪರಿಚಿತ ವ್ಯಕ್ತಿಗಳು ಅಪಹರಣ ಮಾಡಲು ಯತ್ನಿಸಿ, ಚೂರಿಯಿಂದ ಹಲ್ಲೆ ನಡೆಸಿದ ಘಟನೆ ಬೆಳ್ತಂಗಡಿಯಲ್ಲಿ ನಡೆದಿದೆ. ಬೆಳ್ತಂಗಡಿ ನಗರದ ಸುದೇಮುಗೇರು ನಿವಾಸಿಯಾಗಿರುವ ಪ್ರಥಮ ಪಿಯುಸಿ ವಿದ್ಯಾರ್ಥಿನಿ ಫೆಬ್ರವರಿ 9ರಂದು ಬೆಳಗ್ಗೆ ಸುಮಾರು 8.30ರ ವೇಳೆಗೆ ಸ್ಕೂಟರ್ನಲ್ಲಿ ಸಂತೆಕಟ್ಟೆಗೆ ಬಸ್ ಹಿಡಿಯಲು ತೆರಳುತ್ತಿದ್ದ ವೇಳೆ, ನಂಬರ್ ಪ್ಲೇಟ್ಗೆ ಬಟ್ಟೆ ಕಟ್ಟಿದ ಕಾರಿನಲ್ಲಿ ಬಂದ ಮೂವರು ದುಷ್ಕರ್ಮಿಗಳು ಆಕೆಯ ಸ್ಕೂಟರ್ಗೆ ಅಡ್ಡಗಟ್ಟಿ ಕಾರಿನೊಳಗೆ ಎಳೆದು ತರುವ ಪ್ರಯತ್ನ ನಡೆಸಿದ್ದಾರೆ ಎನ್ನಲಾಗಿದೆ. ಈ ವೇಳೆ ಬಾಲಕಿ ಬೊಬ್ಬೆ ಹೊಡೆದು ತೀವ್ರವಾಗಿ ವಿರೋಧ ವ್ಯಕ್ತಪಡಿಸಿ ತಪ್ಪಿಸಿಕೊಂಡಿದ್ದಾಳೆ. ಹಿಂಭಾಗದಿಂದ ಮತ್ತೊಂದು ಸ್ಕೂಟರ್ ಬರುತ್ತಿರುವುದನ್ನು ಗಮನಿಸಿದ ದುಷ್ಕರ್ಮಿಗಳು, ಚೂರಿಯಿಂದ ಬಾಲಕಿಯ ಕೈ ಹಾಗೂ ಬೆರಳಿಗೆ ಚುಚ್ಚಿ ಕಾರಿನೊಂದಿಗೆ ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ. ಗಾಯಗೊಂಡ ವಿದ್ಯಾರ್ಥಿನಿಯನ್ನು ಬೆಳ್ತಂಗಡಿ ತಾಲೂಕು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಬೆಳ್ತಂಗಡಿ ಪೊಲೀಸರು ಆಸ್ಪತ್ರೆಗೆ ಭೇಟಿ ನೀಡಿ ವಿದ್ಯಾರ್ಥಿನಿಯಿಂದ ಮಾಹಿತಿ ಪಡೆದು ತನಿಖೆಯನ್ನು ಚುರುಕುಗೊಳಿಸಿದ್ದಾರೆ. ಘಟನೆ ಸಂಬಂಧ ಹೆಚ್ಚಿನ ವಿವರಗಳು ಇನ್ನಷ್ಟೇ ಲಭ್ಯವಾಗಬೇಕಿವೆ.
ಬೌದ್ಧಿಕವಾಗಿ ಬೆಳೆದರೆ, ಸಂವಿಧಾನಕ್ಕೆ ಬದ್ಧವಾಗಿ ಇದ್ದರೆ ಸದನದಲ್ಲಾಗಲಿ ಹೊರಗಾಗಲಿ ಮನ ಮುಟ್ಟುವಂತೆ ಮಾತಾಡಬಹುದು.ಆದರೆ ಸಂಘದ ಶಾಖೆಯಲ್ಲಿ ಬೆಳೆದವರು ಬೇರಾವುದನ್ನು ನೋಡಬಾರದು ಮತ್ತು ಓದಬಾರದು ಎಂದು ಕಣ್ಣಿಗೆ ಬಟ್ಟೆಯನ್ನು ಕಟ್ಟಿಕೊಂಡಿರುತ್ತಾರೆ. ಹೊರಗಿನ ಗಾಳಿ ಬೆಳಕು ಬರದಂತೆ ಕಿವಿ ಮುಚ್ಚಿಕೊಂಡಿರುತ್ತಾರೆ. ಯಾವುದೇ ಸಕಾರಾತ್ಮಕ, ಆರ್ಥಿಕ, ಸಾಮಾಜಿಕ ಮೌಲ್ಯಗಳಲ್ಲಿ ನಂಬಿಕೆಯಿಲ್ಲದ, ಜನಾಂಗ ದ್ವೇಷ ಮತ್ತು ಮೌಢ್ಯ, ಕಂದಾಚಾರಗಳನ್ನೇ ಬಂಡವಾಳ ಮಾಡಿಕೊಂಡ ಪಕ್ಷಕ್ಕೆ ಮತ್ತು ಅದು ನಂಬಿದ ಸಿದ್ಧಾಂತಕ್ಕೆ ಸೌಜನ್ಯದ, ಸಜ್ಜನಿಕೆಯ ಭಾಷೆ ಅರ್ಥವಾಗುವುದಿಲ್ಲ. ಕಳೆದ ವಾರ ವಿಧಾನ ಪರಿಷತ್ತಿನಲ್ಲಿ ಕಾಂಗ್ರೆಸ್ ಸದಸ್ಯ ನಸೀರ್ ಅಹ್ಮದ್ ಮತ್ತು ಬಿಜೆಪಿ ಸದಸ್ಯ ಸಿ.ಟಿ.ರವಿ ನಡುವಿನ ವಾಗ್ವಾದವನ್ನು ಗಮನಿಸಿದರೆ ಯಾರು ಏನೆಂಬುದು ಗೊತ್ತಾಗುತ್ತದೆ. ಸದನದಲ್ಲಿ ಚರ್ಚೆಯ ಮಧ್ಯ ನಸೀರ್ ಅಹ್ಮದ್ ಅವರು ಪ್ರಧಾನಿ ನರೇಂದ್ರ ಮೋದಿಯವರ ಬಗ್ಗೆ ಟೀಕಿಸಿದರು.ಅದು ಸಹಜ ರಾಜಕೀಯ ಟೀಕೆಯಾಗಿತ್ತು. ಪ್ರಧಾನಿ ಮೋದಿಯವರ ಬಗ್ಗೆ ಆಡಿದ ಮಾತು ಸದಭಿರುಚಿಯಿಂದ ಕೂಡಿರಲಿಲ್ಲ. ಆದರೆ ಅಸಂಸದೀಯ ಪದವನ್ನೇನೂ ಅವರು ಬಳಸಿರಲಿಲ್ಲ. ಇದನ್ನು ಕೇಳಿ ಸಹನೆ ಕಳೆದುಕೊಂಡ ಸಿ.ಟಿ.ರವಿ ‘ಪ್ರಧಾನಿಯವರನ್ನು ಟೀಕಿಸುವ ನಾಲಗೆ ಪಾಕಿಸ್ತಾನದ ನಾಲಗೆ’ ಎಂದು ತನಗೆ ತಿಳಿದಷ್ಟು ಮಾತಾಡಿದ್ದು ಕೋಲಾಹಲಕ್ಕೆ ಕಾರಣವಾಯಿತು. ನಸೀರ್ ಅಹ್ಮದ್ ಮಾತಿನ ಬಗ್ಗೆ ಸಿ.ಟಿ. ರವಿಗೆ ಕೋಪ ಬಂದಿದ್ದರೆ, ಅದಕ್ಕೆ ರಾಜಕೀಯವಾಗಿ ಮರು ಉತ್ತರ ನೀಡಬೇಕಿತ್ತು. ಟೀಕಿಸಲು ಸಾಕಷ್ಟು ವಿಷಯಗಳಿದ್ದವು. ಆದರೆ, ಮೆದುಳು ಇರಬೇಕಾದ ಜಾಗದಲ್ಲಿ ಇನ್ನೇನೋ ಇದ್ದರೆ ಅಸಭ್ಯ, ಕೊಳಕು ಮಾತುಗಳು ಬರುತ್ತವೆ. ಕೋಟಿ ರವಿ ಎಂದು (ಜನರ ಬಾಯಿಯಲ್ಲಿ ಇರುವ ಇನ್ನೊಂದು ಪದವನ್ನು ನಾನು ಇಲ್ಲಿ ಬರೆಯುವುದಿಲ್ಲ) ಚಿಕ್ಕಮಗಳೂರಿನ ಜನರು ಕರೆಯುವ ಸಿ.ಟಿ.ರವಿ ಹೊರಗೆ ಇಂಥ ಅಸಭ್ಯ ಮಾತುಗಳನ್ನು ಸಾಕಷ್ಟು ಆಡುತ್ತಾರೆ. ಆದರೆ ಇಂಥದೇ ಮಾತನ್ನು ಸದನದ ಒಳಗೂ ಬಳಸಿ ಸದನದ ಘನತೆಗೆ ಧಕ್ಕೆ ತಂದ ಉದಾಹರಣೆಗಳೂ ಇವೆ. ಕೆಲ ತಿಂಗಳ ಹಿಂದೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಬಗೆಗೂ ಅಸಭ್ಯ ಮಾತನ್ನು ಆಡಿ ಸಭಾಪತಿಯವರ ಕೆಂಗಣ್ಣಿಗೆ ಗುರಿಯಾಗಿದ್ದರು. ಹೆಣ್ಣು ಮಕ್ಕಳ ಬಗ್ಗೆ ಆಡಬಾರದ ಮಾತು ಆಡಿದ ಕಾರಣಕ್ಕಾಗಿ ಲಕ್ಷ್ಮೀ ಹೆಬ್ಬಾಳ್ಕರ್ ಸ್ಪೀಕರ್ಗೆ ದೂರನ್ನು ನೀಡಿದ್ದರು. ನಸೀರ್ ಅಹ್ಮದ್ ಮಾತಿನ ಬಗ್ಗೆ ಆಕ್ಷೇಪವಿದ್ದರೆ, ನೇರವಾಗಿ ಹೇಳಬಹುದಿತ್ತು. ಆದರೆ, ನಸೀರ್ ಅಹ್ಮದ್ ಮುಸ್ಲಿಮ್ ಎಂಬ ಕಾರಣಕ್ಕಾಗಿ ಬೇಕಂತಲೇ ಪಾಕಿಸ್ತಾನದ ನಾಲಗೆ ಎಂದು ಟೀಕಿಸಿದರು. ಬಿಜೆಪಿ ಸದಸ್ಯರ ದೌರ್ಬಲ್ಯವೆಂದರೆ ಅವರಲ್ಲಿ ಅಧ್ಯಯನ ಶೀಲತೆ ವಿರಳ. ವಿರೋಧಿಗಳಿಗೂ ಪಾಕಿಸ್ತಾನಕ್ಕೂ ತಳಕು ಹಾಕಿ ಮಾತಾಡುವುದು ಅವರ ಚಾಳಿ. ರವಿ ಇಂಥ ಮಾತನ್ನು ಆಡಿದಾಗ ತಿರುಗೇಟು ನೀಡಿದ ಕಾಂಗ್ರೆಸ್ ಸದಸ್ಯ ಕೆ.ಎನ್ .ಹರಿಪ್ರಸಾದ್, ‘ರುಚಿಯಾದ ಬಿರಿಯಾನಿ ಸಿಗುತ್ತದೆ ಅಂದರೆ ಆ ನಾಲಗೆ ಪಾಕಿಸ್ತಾನಕ್ಕೂ ಹೋಗಿ ಬರುತ್ತದೆ’ ಎಂದು ಛೇಡಿಸಿದರು. ಪ್ರಧಾನಿ ಮೋದಿಯವರು ಯಾರಿಗೂ ಹೇಳದೇ ಪಾಕಿಸ್ತಾನಕ್ಕೆ ಹೋಗಿ ಆ ದೇಶದ ಅಧ್ಯಕ್ಷನೊಂದಿಗೆ ಬಿರಿಯಾನಿ ತಿಂದು ಬಂದ ಕತೆಯನ್ನು ನೆನಪಿಸಿದರು. ನಿಜ ಅವರಿಗೆ ಪಾಕಿಸ್ತಾನದ ಬಗ್ಗೆ ವಿಶೇಷ ಪ್ರೇಮ. ಸಿಂದಗಿಗೆ ಹೋಗಿ ಪಾಕಿಸ್ತಾನದ ಧ್ವಜ ಹಾರಿಸಿದವರು ಯಾರೆಂಬುದನ್ನು ಇಲ್ಲಿ ವಿವರಿಸಬೇಕಾಗಿಲ್ಲ. ತಾಲಿಬಾನ್ಗಲಿಗೆ ಸರಕಾರದ ಖಜಾನೆಯಿಂದ ಕೋಟ್ಯಂತರ ರೂಪಾಯಿ ನೀಡಿದವರು ಯಾರೆಂಬುದನ್ನು ಇಲ್ಲಿ ಹೇಳಬೇಕಾಗಿಲ್ಲ. ವಿಭಿನ್ನ ವಿಚಾರ ಧಾರೆಗಳಿಗೆ ಸೇರಿದ ನಮ್ಮ ನಡುವೆ ಸಾಕಷ್ಟು ಭಿನ್ನಾಭಿಪ್ರಾಯಗಳಿರುವುದು ಸಹಜ. ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಒಪ್ಪಿಕೊಂಡು ಬದುಕುವವರಿಗೆ ಅದರಲ್ಲೂ ಶಾಸನ ಸಭೆಗಳ ಸದಸ್ಯರಾದವರಿಗೆ ಭಿನ್ನಾಭಿಪ್ರಾಯಗಳನ್ನು ಗೌರವಿಸುವ ಸೌಜನ್ಯ ಇರಬೇಕಾಗುತ್ತದೆ. ಸೌಜನ್ಯ ಮಾತ್ರವಲ್ಲ ಅಸಂಸದೀಯ ಪದಗಳನ್ನು ಬಳಸಬಾರದೆಂಬ ಎಚ್ಚರವೂ ಇರಬೇಕಾಗುತ್ತದೆ. ಶಾಸನ ಸಭೆಗಳಿಗೆ ಹೊಸದಾಗಿ ಬರುವವರು ತಮ್ಮ ಧಿಮಾಕು,ಪಾಳೆಯಗಾರಿ ಭಾಷೆಗಳನ್ನು ಹೊರಗಿಟ್ಟು ಸದನವನ್ನು ಪ್ರವೇಶಿಸಬೇಕಾಗುತ್ತದೆ. ಬಹುತೇಕ ಮಂದಿ ಹೊಸಬರು ಸಹ ಶಾಸಕರನ್ನು ನೋಡಿ, ಅನುಭವಿಗಳ ಮಾತನ್ನು ಕೇಳಿ ಬದಲಾಗುತ್ತಾರೆ.ಬದಲಾಗದ ಉದ್ಧಟರ ಸಾಲಿನಲ್ಲಿ ಸಿ.ಟಿ. ರವಿಯಂಥವರು ಇರುತ್ತಾರೆ. ಈ ಉದ್ಧಟತನದ ವರ್ತನೆಗೆ ವೈಯಕ್ತಿಕ ವಾಗಿ ಅವರ ದುರಹಂಕಾರ ಮಾತ್ರವಲ್ಲ, ಅವರು ಬೆಳೆದು ಬಂದ ಸಂಘಟನೆಯೂ ಕಾರಣವಾಗಿರಬಹುದು. ಅವರ ಸಂಘಟನೆ ಒಬ್ಬೊಬ್ಬರಿಗೆ ಒಂದೊಂದು ಮುಖವಾಡ ಹಾಕಿರುತ್ತದೆ. ಸಿ.ಟಿ .ರವಿ ಹೀಗಾದರೆ ಇದಕ್ಕೆ ತದ್ವಿರುದ್ಧ್ದವಾಗಿ ಸುರೇಶ್ ಕುಮಾರ್ ಅಂಥವರು ಸರಳತೆ, ಸಜ್ಜನಿಕೆಯಿಂದ ಗಮನ ಸೆಳೆಯುತ್ತಾರೆ.ರವಿ ಅಂಥವರು ಉದ್ಧಟರಂತೆ ಕಾಣಿಸಿಕೊಳ್ಳುತ್ತಾರೆ. ಸಂಘಟನೆಗೆ ಇವರಿಬ್ಬರೂ ಬೇಕು. ಬೇಕಂತಲೇ ಸಂಘ ಪರಿವಾರ ವಿಧಾನಸಭಾ ಚುನಾವಣೆಯಲ್ಲಿ ಸೋತ ಸಿ.ಟಿ.ರವಿಯನ್ನು ವಿಧಾನ ಪರಿಷತ್ತಿಗೆ ತಂದು ಕೂರಿಸುತ್ತದೆ.ಈ ರವಿ ಈ ರೀತಿ ಮಾತಾಡಿದ್ದು ಇದೇ ಮೊದಲ ಸಲವಲ್ಲ. ಈತನ ಉದ್ಧಟತನವನ್ನು ಆತ ಶಾಸಕನಾಗುವ ಮುಂಚಿನಿಂದಲೂ ನೋಡುತ್ತಿರುವೆ. 2005ರಲ್ಲಿ ಬಾಬಾ ಬುಡನ್ಗಿರಿ ವಿವಾದವನ್ನು ಕೋಮುವಾದಿಗಳು ಹುಟ್ಟು ಹಾಕಿದಾಗ ಕೋಮು ಸೌಹಾರ್ದ ವೇದಿಕೆ ಮತ್ತು ಸಮಾನ ಮನಸ್ಕ ಸಂಘಟನೆಗಳು ಚಿಕ್ಕಮಗಳೂರಿನಲ್ಲಿ ಸೌಹಾರ್ದ ಸಮಾವೇಶವನ್ನು ನಡೆಸಿದ್ದವು. ಆಗ ನಿಡುಮಾಮಿಡಿ ಮಠದ ಶ್ರೀ ವೀರಭದ್ರ ಚೆನ್ನಮಲ್ಲ ಸ್ವಾಮಿಗಳು ಕಾರ್ಯಕ್ರಮದ ಉದ್ಘಾಟನೆಗೆ ಆಗಮಿಸಿದ್ದರು. ಆಗ ಅವರಿಗಾಗಿ ಸ್ಥಳೀಯ ಸರಕಾರಿ ಅತಿಥಿ ಗೃಹದಲ್ಲಿ (ಐಬಿ) ಕೊಠಡಿಯನ್ನು ಕಾಯ್ದಿರಿಸಿದಾಗ ಅದಕ್ಕಿಂತ ಮುಂಚೆ ಅಲ್ಲಿ ಹೋದ ರವಿ ಅಲ್ಲಿನ ಎಲ್ಲ ಕೋಣೆಗಳನ್ನು ಬುಕ್ ಮಾಡಿದ್ದ. ಸೌಹಾರ್ದ ವೇದಿಕೆಗೆ ಒಂದೂ ರೂಮ್ ಸಿಗದಂತೆ ಮಾಡಿದ್ದ. ಹೀಗಾಗಿ ನಿಡುಮಾಮಿಡಿ ಸ್ವಾಮಿಗಳು ಸೇರಿದಂತೆ ಎಲ್ಲ ಅತಿಥಿಗಳು ಹೋಟೆಲ್ನಲ್ಲಿ ಇರಬೇಕಾಗಿ ಬಂತು. ಇನ್ನೊಂದು ಉದಾಹರಣೆ ಅಂದರೆ ನಾನು ‘ಸೂರ್ಯೋದಯ’ ಪತ್ರಿಕೆಯ ಸಹಾಯಕ ಸಂಪಾದಕನಾಗಿ ಕೆಲಸ ಮಾಡುತ್ತಿದ್ದಾಗ ನಾನು ಕೆಲಸ ಮಾಡುವ ಆ ಪತ್ರಿಕೆಯ ಮಾಲೀಕರಿಗೆ ಫೋನ್ ಮಾಡಿದ ರವಿ ನನ್ನ ಹೆಸರು ಹೇಳಿ ‘ನಿಮ್ಮ ಪತ್ರಿಕೆಯಲ್ಲಿ ನಕ್ಸಲಿಯರನ್ನು ನೇಮಕ ಮಾಡಿಕೊಂಡಿದ್ದೀರಿ’ ಎಂದು ಜೋರು ಮಾಡಿದ್ದ. ಶಾಸಕನಾಗಿ ಬಂದ ನಂತರವೂ ಈತ ಸುಧಾರಿಸಲಿಲ್ಲ. ಟಿ.ವಿ.ಚರ್ಚೆಯೊಂದರಲ್ಲಿ ಏನೇನೋ ಮಾತಾಡಲು ಹೋಗಿ ಆಗ ಕಮ್ಯುನಿಸ್ಟ್ ಶಾಸಕರಾಗಿದ್ದ ಜಿ.ವಿ.ಶ್ರೀ ರಾಮರೆಡ್ಡಿ ಅವರಿಂದ ಉಗಿಸಿಕೊಂಡಿದ್ದ. ಇದು ಮಾತ್ರವಲ್ಲ, ಐದು ವರ್ಷಗಳ ಹಿಂದೆ ಈತ ಸಚಿವನಾಗಿದ್ದಾಗ ಚಿಕ್ಕ ಮಗಳೂರು ಜಿಲ್ಲಾ ಸಾಹಿತ್ಯ ಪರಿಷತ್ತಿನ ಸಮ್ಮೇಳನದ ಸಂದರ್ಭದಲ್ಲಿ ಇದೇ ರೀತಿ ವರ್ತಿಸಿದ್ದ.ಆ ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದ ಕಲ್ಕುಳಿ ವಿಠಲ ಹೆಗ್ಗಡೆ ಅವರ ಬಗ್ಗೆ ಅಪಸ್ವರ ತೆಗೆದ. ವಿಠಲ್ ಹೆಗ್ಗಡೆ ಅವರನ್ನು ನಕ್ಸಲೀಯ ಎಂದು ಕರೆದುದು ಮಾತ್ರವಲ್ಲ ಆ ಸಮ್ಮೇಳನದಲ್ಲಿ ಭಾಗವಹಿಸಲು ನಿರಾಕರಿಸಿದ. ಅಷ್ಟೇ ಅಲ್ಲ, ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ನಿಂದ ಚಿಕ್ಕ ಮಗಳೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ಗೆ ಅನುದಾನ ಸಿಗದಂತೆ ತಡೆ ಹಿಡಿದ. ಆಗ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿದ್ದ ಮನು ಬಳಿಗಾರ ಅವರು ಚಿಕ್ಕ ಮಗಳೂರು ಸಮ್ಮೇಳನಕ್ಕೆ ಹೋಗದಂತೆ ಅಡ್ಡಗಾಲು ಹಾಕಿದ. ಈ ಅವಾಂತರಕ್ಕೆ ಕಾರಣ ರವಿ ಎಂಬಾತ ನಂಬಿದ ಸಿದ್ಧಾಂತ ಅಂದರೆ ತಪ್ಪಿಲ್ಲ. ರವಿ ಮಾತ್ರವಲ್ಲ ಅದೇ ಸೈದ್ಧಾಂತಿಕ ಹಿನ್ನೆಲೆಯಿಂದ ಬಂದ ಕೆಲವು ಸಂಸದರು,ಶಾಸಕರು ಸದನದ ಒಳಗೆ ಮತ್ತು ಹೊರಗೆ ಆಡುವ ಮಾತುಗಳನ್ನು ಗಮನಿಸಿದರೆ ಈ ತಪ್ಪು ವೈಯಕ್ತಿಕವಾಗಿ ಅವರದು ಮಾತ್ರವಲ್ಲ, ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಒಪ್ಪಿಕೊಳ್ಳದ ರಾಜ ಪ್ರಭುತ್ವವನ್ನು ಇಷ್ಟಪಡುವ ಅವರ ಸಿದ್ಧಾಂತ ಇದಕ್ಕೆ ಕಾರಣವಲ್ಲದೇ ಬೇರೇನೂ ಅಲ್ಲ. ಮುಂಚೆ ಅಟಲ್ ಬಿಹಾರಿ ವಾಜಪೇಯಿ ಅವರಂಥ ನಾಯಕರು ಸಂಸತ್ತಿನ ಘನತೆಗೆ ಧಕ್ಕೆ ಬರದಂತೆ ಎಚ್ಚರ ವಹಿಸುತ್ತಿದ್ದರು. ಈಗಿನ ಇವರ ಪರಮೋಚ್ಚ ನಾಯಕ, ವಿಶ್ವಗುರು ಸದನದಲ್ಲಿ ಆಡುವ ಮಾತುಗಳನ್ನು ಅವಲೋಕಿಸಿದರೆ ಸಿ.ಟಿ. ರವಿ ಆಡುವ ಮಾತುಗಳು ಅಚ್ಚರಿ ಅನಿಸುವುದಿಲ್ಲ. ಇವರೆಲ್ಲ ವಾಟ್ಸ್ ಆ್ಯಪ್ ಯುನಿವರ್ಸಿಟಿಯ ಮೂಲ ಪುರುಷರು ಅಂದರೆ ಅತಿಶಯೋಕ್ತಿಯಲ್ಲ. ಇಂಥ ಮಾತುಗಳನ್ನು ಆಡುವ ಮೂಲಕ ಇವರು ಭಾರತದ ಪ್ರಜೆಗಳಾದ ಮುಸಲ್ಮಾನರ ದೇಶ ಭಕ್ತಿಯನ್ನು ನಿರಂತರವಾಗಿ ಪ್ರಶ್ನಿಸುತ್ತಲೇ ಇರುತ್ತಾರೆ. ದೇಶದಲ್ಲಿ 18 ಕೋಟಿಯಷ್ಟಿರುವ ಮುಸಲ್ಮಾನರು ಇವರ ಕಿರಿಕಿರಿಯಿಂದ ಪ್ರತಿದಿನವೂ ತಮ್ಮ ದೇಶ ಭಕ್ತಿಯನ್ನು ಸಾಬೀತು ಪಡಿಸುತ್ತಲೇ ಇರಬೇಕಾಗಿದೆ. ಸ್ವಾತಂತ್ರ್ಯ ಹೋರಾಟದಲ್ಲಿ ಎಂದೂ ಪಾಲ್ಗೊಳ್ಳದ , ಸ್ವಾತಂತ್ರ್ಯಾ ನಂತರ ಗಡಿಯಲ್ಲಿ ಶತ್ರು ಸೇನೆಯ ಜೊತೆಗೆ ಎಂದೂ ಹೋರಾಡದ, ಭಾರತೀಯ ರ ನಡುವೆ ಜಾತಿ, ಮತದ ವಿಷ ಬೀಜ ಬಿತ್ತುವ ಶಕ್ತಿಗಳಿಂದ ಮುಸಲ್ಮಾನರು, ಕ್ರೈಸ್ತರು, ದಲಿತರು ದೇಶ ಭಕ್ತಿಯ ಪಾಠ ಕಲಿಯಬೇಕಾಗಿ ಬಂದುದು ದೇಶದ ದುರಂತ. ತಲೆಯಲ್ಲಿ ಮೆದುಳೆಂಬುದು ಇದ್ದರೆ ಶಾಸನ ಸಭೆಗಳಿಗೆ ಚುನಾಯಿತರಾಗಿ ಬರುವವರು ತಮ್ಮ ಬೌದ್ಧಿಕ ಮಟ್ಟವನ್ನು ಹೆಚ್ಚಿಸಿಕೊಳ್ಳಲು ಸಾಕಷ್ಟು ಅವಕಾಶಗಳಿರುತ್ತವೆ. ಸಂಸತ್ ಭವನದಲ್ಲಿ ಹಾಗೂ ರಾಜ್ಯಗಳ ವಿಧಾನ ಮಂಡಲಗಳ ಗ್ರಂಥಾಲಯಗಳಲ್ಲಿ ಇರುವ ಅತ್ಯಂತ ಅಪರೂಪದ ಉತ್ತಮ ಪುಸ್ತಕಗಳನ್ನು ಓದಬಹುದು. ಬಹುತೇಕ ಸದಸ್ಯರು ಇದರ ಸದುಪಯೋಗವನ್ನು ಮಾಡಿಕೊಳ್ಳುವುದಿಲ್ಲ. ಕೆಲವೇ ಕೆಲವರು ಜ್ಞಾನದ ಹಸಿವಿದ್ದವರು ಮಾತ್ರ ದಿನವಿಡೀ ಗ್ರಂಥಾಲಯ ಗಳಲ್ಲಿ ಕುಳಿತು ಓದುತ್ತಿರುತ್ತಾರೆ. ನಾನು ವಿಧಾನ ಸಭೆಯ ಕಲಾಪದ ವರದಿಗೆ ಹೋದಾಗ ರಮೇಶ್ ಕುಮಾರ್, ಭೂಪತಿ, ಜಿ.ವಿ.ಶ್ರೀ ರಾಮರೆಡ್ಡಿ, ಬಿ.ಆರ್.ಪಾಟೀಲರು ಗ್ರಂಥಾಲಯದಲ್ಲಿ ಓದುತ್ತ ಕುಳಿತಿದ್ದನ್ನು ಕಣ್ಣಾರೆ ಕಂಡಿರುವೆ. ಬಿ.ಕೆ.ಹರಿಪ್ರಸಾದ್ ವಿದ್ಯಾರ್ಥಿಯಾಗಿದ್ದಾಗ ಹೇಗಿದ್ದರೆಂಬುದು ಈಗ ಅಗತ್ಯವಿಲ್ಲ.ಆದರೆ ರಾಜ್ಯಸಭೆಗೆ ಹೋದ ನಂತರ ಗಂಭೀರವಾದ ಅಧ್ಯಯನದಿಂದ ತಮ್ಮ ಜ್ಞಾನ ಸಂಪತ್ತನ್ನು ಹೆಚ್ಚಿಸಿಕೊಂಡರು.ಪ್ರತಿಯೊಂದು ವಿಷಯದ ಬಗ್ಗೆ ಮಾತಾಡುವ ಪಾಂಡಿತ್ಯವನ್ನು ಪಡೆದರು.ರವಿ ಮತ್ತು ಸುನೀಲ್ ಕುಮಾರರಂಥವರು ಇವರನ್ನು ಮಾದರಿಯಾಗಿಟ್ಟುಕೊಳ್ಳಬೇಕು.ಸದನದ ಭಾಷಣಕ್ಕೆ ವಾಟ್ಸ್ ಆ್ಯಪ್ ಯುನಿವರ್ಸಿಟಿಯನ್ನು ಅವಲಂಬಿಸಿ ಅಪಹಾಸ್ಯಕ್ಕೆ ಈಡಾಗಬಾರದು. ಬೌದ್ಧಿಕವಾಗಿ ಬೆಳೆದರೆ, ಸಂವಿಧಾನಕ್ಕೆ ಬದ್ಧವಾಗಿ ಇದ್ದರೆ ಸದನದಲ್ಲಾಗಲಿ ಹೊರಗಾಗಲಿ ಮನ ಮುಟ್ಟುವಂತೆ ಮಾತಾಡಬಹುದು.ಆದರೆ ಸಂಘದ ಶಾಖೆಯಲ್ಲಿ ಬೆಳೆದವರು ಬೇರಾವುದನ್ನು ನೋಡಬಾರದು ಮತ್ತು ಓದಬಾರದು ಎಂದು ಕಣ್ಣಿಗೆ ಬಟ್ಟೆಯನ್ನು ಕಟ್ಟಿಕೊಂಡಿರುತ್ತಾರೆ. ಹೊರಗಿನ ಗಾಳಿ ಬೆಳಕು ಬರದಂತೆ ಕಿವಿ ಮುಚ್ಚಿಕೊಂಡಿರುತ್ತಾರೆ. ಅಂತಲೇ ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರು ನಿವೃತ್ತ ಸೇನಾಧಿಕಾರಿ ನರವಣೆ ಅವರು ಬರೆದ ಆತ್ಮಚರಿತ್ರೆಯ ಅಪ್ರಕಟಿತ ಪುಸ್ತಕವನ್ನು ಸದನದಲ್ಲಿ ತೋರಿಸಿ ಸವಾಲು ಹಾಕಿದಾಗ 56 ಇಂಚಿನ ಎದೆಯ ವಿಶ್ವ ಗುರು ಗಾಬರಿಯಾದರು. ರಾಷ್ಟ್ರಪತಿ ಅವರ ಭಾಷಣದ ಮೇಲೆ ನಡೆದ ಚರ್ಚೆಗೆ ಉತ್ತರ ನೀಡಲು ಅವರು ಸದನಕ್ಕೆ ಬರಬೇಕಾಗಿತ್ತು. ಆದರೆ ಬರಲಿಲ್ಲ. ಯಾಕೆಂದರೆ ಅವರ ಬಳಿ ಉತ್ತರವಿರಲಿಲ್ಲ. ಮುಖವೂ ಇರಲಿಲ್ಲ. ಅವರ ಬದಲಿಗೆ ಲೋಕ ಸಭಾಧ್ಯಕ್ಷ ಓಂ ಬಿರ್ಲಾ ಸಮಜಾಯಿಷಿ ನೀಡಿ ಪ್ರಧಾನಿಯವರ ಜೀವಕ್ಕೆ ಅಪಾಯವಿದ್ದುದರಿಂದ ಸದನಕ್ಕೆ ಬರಲಿಲ್ಲ ಎಂದು ಸ್ಪಷ್ಟೀಕರಣ ನೀಡಬೇಕಾಗಿ ಬಂತು. ಇದಕ್ಕೆ ಲೇವಡಿ ಮಾಡಿದ ಪ್ರತಿಪಕ್ಷ ಸದಸ್ಯರು ಸದನದಲ್ಲಿ ಪ್ರಧಾನಿಗೆ ರಕ್ಷಣೆ ಇಲ್ಲವೆಂದರೆ ಸಾಮಾನ್ಯ ಜನರ ಗತಿಯೇನು ಎಂದು ಛೇಡಿಸಿದರು.ಹೀಗಾಗಿ ರಾಷ್ಟ್ರಪತಿ ಅವರಿಗೆ ವಂದನೆ ಸೂಚಿಸುವ ನಿರ್ಣಯ ಪ್ರಧಾನಿ ಉತ್ತರವಿಲ್ಲದೇ ಅಂಗೀಕಾರವಾಯಿತು. ವರ್ಷದಿಂದ ವರ್ಷಕ್ಕೆ ಸಂಸತ್ತಿನ ಗುಣಮಟ್ಟ ಕುಸಿಯುತ್ತಲೇ ಇದೆ. ಮೊದಲು ಜನಪರ ಹೋರಾಟಗಾರರು ಸದನದಲ್ಲಿ ಇರುತ್ತಿದ್ದರು. ಈಗ ರಿಯಲ್ ಎಸ್ಟೇಟ್, ಮೈನಿಂಗ್ ಉದ್ಯಮಿಗಳು, ವಂಚಕ. ಕಾರ್ಪೊರೇಟ್ ದನಿಗಳು ಸದನದಲ್ಲಿ ತುಂಬಿದ್ದಾರೆ.ಹೀಗಾಗಿ ಅಧ್ಯಯನಶೀಲ ಸಂಸದರು ಹಾಗೂ ಶಾಸಕರು ತುಂಬಾ ಕಡಿಮೆ. ಬಿಜೆಪಿ, ಕಾಂಗ್ರೆಸ್ ಹೀಗೆ (ಎಡಪಕ್ಷಗಳನ್ನು ಹೊರತು ಪಡಿಸಿ)ಎಲ್ಲ ಪಕ್ಷಗಳಲ್ಲೂ ಇದೇ ಪರಿಸ್ಥಿತಿ. ಅಂತಲೇ ಕರ್ನಾಟಕ ವಿಧಾನಸಭೆಯಲ್ಲಿ ಪ್ರತಿಯೊಂದಕ್ಕೂ ಮುಖ್ಯ ಮಂತ್ರಿ ಸಿದ್ದರಾಮಯ್ಯನವರೇ ಎದ್ದು ನಿಂತು ಉತ್ತರಿಸಬೇಕಾಗುತ್ತದೆ. ಆದರೂ ಕೃಷ್ಣ ಬೈರೇಗೌಡ, ಪ್ರಿಯಾಂಕ್ ಖರ್ಗೆ, ಸಂತೋಷ್ ಲಾಡ್ , ಸತೀಶ್ ಜಾರಕಿಹೊಳಿ ಮೊದಲಾದ ಕೆಲವರು ಕಾಂಗ್ರೆಸ್ನ ಭರವಸೆಯ ನಾಯಕರಾಗಿದ್ದಾರೆ. ಎಲ್ಲ ಪಕ್ಷಗಳ ಸದಸ್ಯರು ಜನಪರ ಕಾಳಜಿ, ಅಧ್ಯಯನ ಶೀಲತೆ, ಸಂವಿಧಾನ ಬದ್ಧತೆಯನ್ನು ಉಳಿಸಿ,ಬೆಳೆಸಿ ಕೊಂಡರೆ ಸದನದ ಘನತೆಯೂ ಹೆಚ್ಚುತ್ತದೆ.
Bihar | ಸರಕಾರಿ ಶಾಲೆಯಲ್ಲಿ ಮಧ್ಯಾಹ್ನದ ಬಿಸಿಯೂಟ ಸೇವಿಸಿದ ಬಳಿಕ 70 ವಿದ್ಯಾರ್ಥಿಗಳು ಅಸ್ವಸ್ಥ: ಪೋಷಕರಿಂದ ಆಕ್ರೋಶ
ಮಧೇಪುರ: ಮಾಧೇಪುರ ಪೊಲೀಸ್ ಠಾಣಾ ವ್ಯಾಪ್ತಿಯ ಸಾಹುಗಢ ಗ್ರಾಮದ ಕರು ಟೋಲಾದ ಅಪ್ಗ್ರೇಡ್ ಮಿಡಲ್ ಶಾಲೆಯಲ್ಲಿ ಶನಿವಾರ ಮಧ್ಯಾಹ್ನ ಬಿಸಿಯೂಟ ಸೇವಿಸಿ 70 ವಿದ್ಯಾರ್ಥಿಗಳು ಅಸ್ವಸ್ಥರಾಗಿದ್ದಾರೆ. ಅಸ್ವಸ್ಥರಾದ ಎಲ್ಲಾ ಮಕ್ಕಳನ್ನು ಸದರ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಹೆಚ್ಚಿನ ಮಕ್ಕಳ ಆರೋಗ್ಯ ಸ್ಥಿರವಾಗಿದ್ದರೂ, ಒಬ್ಬ ಬಾಲಕಿಯ ಸ್ಥಿತಿ ಗಂಭೀರವಾಗಿದೆ ಎಂದು ವರದಿಯಾಗಿದೆ. ಊಟ ಮಾಡಿದ ಸ್ವಲ್ಪ ಸಮಯದ ನಂತರ ಮಕ್ಕಳಲ್ಲಿ ವಾಂತಿ, ಹೊಟ್ಟೆ ನೋವು ಮತ್ತು ಅಸ್ವಸ್ಥತೆ ಕಂಡು ಬಂದಿದೆ. ಮಕ್ಕಳನ್ನು ಆಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ದಾಖಲಿಸಲಾಗಿದೆ. ಆತಂಕಗೊಂಡ ಪೋಷಕರು ಆಸ್ಪತ್ರೆಯಲ್ಲಿ ಜಮಾಯಿಸಿ ಘಟನೆಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು. ಘಟನೆಗೆ ಕಾರಣರಾದವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ. ಜಿಲ್ಲಾ ಶಿಕ್ಷಣಾಧಿಕಾರಿ ಸಂಜಯ್ ಕುಮಾರ್ ಅವರು ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶಾಲೆಗೆ ಮಧ್ಯಾಹ್ನದ ಊಟವನ್ನು ಸರಕಾರೇತರ ಸಂಸ್ಥೆಯು ವಿತರಿಸುತ್ತಿದೆ. ಘಟನೆ ಬಗ್ಗೆ ಈಗಾಗಲೇ ತನಿಖೆ ಆರಂಭವಾಗಿದೆ. ಆಹಾರದ ಗುಣಮಟ್ಟ, ಪೂರೈಕೆ ಮತ್ತು ವಿತರಣೆಗೆ ಸಂಬಂಧಿಸಿದ ಎಲ್ಲಾ ಅಂಶಗಳನ್ನು ಕೂಲಂಕಷವಾಗಿ ತನಿಖೆ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ.
Memoir of MM Naravane : ಸಂಸತ್ತಿನಲ್ಲಿ ಭಾರೀ ಹಂಗಾಮಕ್ಕೆ ಕಾರಣವಾಗಿದ್ದ ಮಾಜಿ ಸೇನಾ ಮುಖ್ಯಸ್ಥ ಎಂಎಂ ನರವಾಣೆ ಅವರ ಪುಸ್ತಕವು ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಕೈಸೇರಿದ್ದು ಹೇಗೆ ಎನ್ನುವ ಪ್ರಶ್ನೆ, ಬಿಜೆಪಿ ನಾಯಕರಲ್ಲಿ ಕಾಡಲಾರಂಭಿಸಿದೆ. ಕೇಂದ್ರ ರಕ್ಷಣಾ ಇಲಾಖೆಯಿಂದ ಅನುಮತಿ ಸಿಗುವ ಮುನ್ನವೇ, ಈ ಪುಸ್ತಕವನ್ನು ಪ್ರಿಂಟ್ ಮಾಡಲಾಗಿತ್ತೇ ಎನ್ನುವುದು ಪ್ರಶ್ನೆಯಾಗಿದೆ.
ದರ ಏರಿಕೆ ಹಂಗಾಮ: ಖಾಲಿ ಟ್ರಂಕ್ ಜೊತೆ ನಮ್ಮ ಮೆಟ್ರೋ ಪ್ರಯಾಣಕ್ಕೆ ಮುಂದಾದ ತೇಜಸ್ವಿ ಸೂರ್ಯ ಪೊಲೀಸ್ ವಶಕ್ಕೆ
ಮೆಟ್ರೋ ದರ ಏರಿಕೆ ವಿಚಾರ ಇದೀಗ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರದ ನಡುವಿನ ಜಟಾಪಟಿಗೆ ಕಾರಣವಾಗಿದೆ. ಮೆಟ್ರೋ ದರ ಏರಿಕೆಗೆ ತಾತ್ಕಾಲಿಕ ತಡೆ ಬಿದ್ದಿದೆ. ಹಾಗಿದ್ದರೂ ಹೊಸ ದರ ನಿಗದಿ ಸಮಿತಿಗಾಗಿ ಬಿಜೆಪಿ ಆಗ್ರಹ ಮಾಡಿದೆ. ಅದರಲ್ಲೂ ಸಂಸದ ತೇಜಸ್ವಿ ಸೂರ್ಯ ಅವರು ರಾಜ್ಯ ಸರ್ಕಾರದ ವಿರುದ್ಧ ಖಾಲಿ ಟ್ರಂಕ್ ಪ್ರತಿಭಟನೆ ನಡೆಸಿದ್ದಾರೆ. ದರ ಏರಿಕೆ ಹಂಗಾಮದ ನಡುವೆ ಖಾಲಿ ಟ್ರಂಕ್ ಜೊತೆಗೆ ನಮ್ಮ ಮೆಟ್ರೋದಲ್ಲಿ ಅವರು ಪ್ರಯಾಣ ಮಾಡಲು ಮುಂದಾಗಿದ್ದಾರೆ. ಇದೇ ಸಂದರ್ಭದಲ್ಲಿ ತೇಜಸ್ವಿ ಸೂರ್ಯ ಅವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡರು.
ಗಾಂಧಿ ಜಾಹೀರಾತಿನ ಐಡಿಯಾ ಯಾರದ್ದು?
ಜೀವಮಾನವಿಡೀ ಅಹಿಂಸೆಯನ್ನೇ ಉಸಿರಾಡಿದ ಮಹಾತ್ಮಾ ಗಾಂಧೀಜಿ ಕೋಲು ಹಿಡಿದು ಹೊಡೆಯಲು ಹೋಗುತ್ತಿದ್ದಾರೆ ಎಂದು ಬಿಂಬಿಸುವ, ಹಿಂಸೆಯ ಪ್ರತಿರೂಪದಂತಿರುವ ಜಾಹೀರಾತಿನ ಬಗ್ಗೆ ಈಗ ಚರ್ಚೆಯಾಗುತ್ತಿದೆ. ಗಾಂಧೀಜಿ ಬಗೆಗಿನ ದ್ವೇಷವೇ ಬಿಜೆಪಿಗೆ ಇಂಥದೊಂದು ಜಾಹೀರಾತು ನೀಡುವಂತೆ ಪ್ರಚೋದಿಸಿದೆ ಎಂಬ ಮಾತೂ ಕೇಳಿಬರುತ್ತಿದೆ. ಎಂದಿನಂತೆ ನಾವೇ ನಿಜವಾದ ಗಾಂಧಿಯ ವಾರಸುದಾರರು ಎಂದು ಕಾಂಗ್ರೆಸಿಗರು ಕಾಟಾಚಾರಕ್ಕೆ ಮಾಧ್ಯಮ ಹೇಳಿಕೆ ಮೂಲಕ ಖಂಡಿಸಿ, ನೆಪಕ್ಕೆ ದೂರೊಂದನ್ನು ಸಲ್ಲಿಸಿ ಸುಮ್ಮನಾಗಿದ್ದಾರೆ. ಗಾಂಧೀಜಿ ಬಗೆಗೆ ಬಿಜೆಪಿ ನಾಯಕರದ್ದು ದಶಕಗಳ ದ್ವೇಷ. ಅವರು ಗಾಂಧೀಜಿ ಬಗ್ಗೆ ಪ್ರಬುದ್ಧವಾಗಿ ಅಥವಾ ಮಾನವೀಯವಾಗಿ ನಡೆದುಕೊಳ್ಳುತ್ತಾರೆ ಎನ್ನುವುದನ್ನು ಊಹಿಸಿಕೊಳ್ಳುವುದಕ್ಕೂ ಸಾಧ್ಯವಿಲ್ಲ. ಆದುದರಿಂದ ಜಾಹೀರಾತು ಪ್ರಹಸನದಲ್ಲೂ ಕಾಂಗ್ರೆಸ್ ಧಾಟಿಯಲ್ಲೇ ಉತ್ತರ ನೀಡಲು ಹೋಗಿ ಅಚಾತುರ್ಯವಾಗಿದೆ ಎಂದು ಅವರು ವಿಷಾದ ಅಥವಾ ಪಶ್ಚಾತಾಪ ವ್ಯಕ್ತಪಡಿಸುವ ಪ್ರಮೇಯ ಕೂಡ ಇಲ್ಲ. ಗಾಂಧೀಜಿಯನ್ನು ರಾಜಕಾರಣಿಗಳ ನಡುವಿನ ಸಂತ, ಸಂತರ ನಡುವಿನ ರಾಜಕಾರಣಿ ಎಂದು ಹೇಳಲಾಗುತ್ತದೆ. ಗಾಂಧೀಜಿ ರಾಜಕಾರಣ ಮತ್ತು ಜೀವನವನ್ನು, ಒಂದು ಹಂತದಲ್ಲಿ ಧರ್ಮವನ್ನು ಅಷ್ಟು ಉತ್ಕೃಷ್ಟವಾಗಿ ಕಂಡುಂಡವರು. ಇಂದಿನ ರಾಜಕಾರಣಿಗಳು ಗಾಂಧೀಜಿಯನ್ನೇ ಕ್ಷುಲ್ಲಕ ರಾಜಕಾರಣಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಗಾಂಧೀಜಿ ಹೆಸರಿನಲ್ಲಿದ್ದ ಮನರೇಗಾ ಕಾಯ್ದೆಯನ್ನು ರದ್ದು ಮಾಡಿದ ಬಿಜೆಪಿಯದ್ದು ಒಂದು ರೀತಿಯ ಕೀಳು ಮಟ್ಟದ ರಾಜಕಾರಣ. ಅದಕ್ಕೆ ಅವಕಾಶ ಮಾಡಿಕೊಟ್ಟ ಕಾಂಗ್ರೆಸ್ ಪಕ್ಷದ್ದು ಮತ್ತೊಂದು ಬಗೆಯ ನೀಚ ರಾಜಕಾರಣ. ಈ ದೇಶದ ಅನ್ನದಾತರು ದಿಲ್ಲಿ ಗಡಿಯಲ್ಲಿ ಕೊರೆಯುವ ಚಳಿ ಮತ್ತು ಬೆಂಕಿಯಂಥ ಬಿಸಿಲಿನ ನಡುವೆಯೂ ವರ್ಷವಿಡೀ ಪ್ರತಿಭಟನೆ ನಡೆಸಿ, 600ಕ್ಕೂ ಹೆಚ್ಚು ಪ್ರಾಣಗಳನ್ನು ಬಲಿಕೊಟ್ಟು, ಕಡೆಗೂ ಕೇಂದ್ರ ಸರಕಾರ ಮರಣಶಾಸನದಂತಿದ್ದ ಮೂರು ಕೃಷಿ ಕಾಯ್ದೆಗಳನ್ನು ವಾಪಸ್ ತೆಗೆದುಕೊಳ್ಳುವಂತೆ ಮಾಡಿದರು. ಅಂಥ ಕೆಲಸ ಮನರೇಗಾ ವಿಷಯದಲ್ಲಿ ಕಾಂಗ್ರೆಸಿಗರಿಂದ ಮಾಡಲು ಸಾಧ್ಯವಾಗುವುದಿಲ್ಲ. ಸ್ವಾತಂತ್ರ್ಯ ಹೋರಾಟ, ತ್ಯಾಗ, ಬಲಿದಾನ ಎಂಬಿತ್ಯಾದಿ ಬೊಗಳೆ ಮಾತನ್ನಾಡುವ ಕಾಂಗ್ರೆಸ್ ನಾಯಕರು ಗ್ರಾಮೀಣ ಭಾರತದ ಬಡವರ, ದಿನ ದಲಿತರ ಹೊಟ್ಟೆಪಾಡಿಗಾಗಿ ಇದ್ದ ಮನರೇಗಾ ಕಾಯ್ದೆಯನ್ನು ಉಳಿಸಿಕೊಳ್ಳಲು ಪ್ರಾಮಾಣಿಕವಾಗಿ ಪ್ರಯತ್ನ ಮಾಡುತ್ತಿಲ್ಲ. ಇದರಿಂದಾಗಿ ಅವರಿಗೆ ಗಾಂಧೀಜಿ ಬಗ್ಗೆ ಮಾತನಾಡುವ ನೈತಿಕತೆಯೂ ಉಳಿದಿಲ್ಲ. ► ಪ್ರಿಯಾಂಕ್-ವಿಜಯೇಂದ್ರ ಉತ್ತರಿಸಲಿ ಮನರೇಗಾ ಕಾಯ್ದೆಯನ್ನು ಮರು ಸ್ಥಾಪಿಸಿ ಎಂದು ವಿಧಾನಸಭೆಯಲ್ಲಿ ನಿರ್ಣಯ ಪಾಸು ಮಾಡುವುದು ಸುಲಭ. ಅದಕ್ಕಾಗಿ ಮಾಡಿದ್ದಾರೆ. ಹೋರಾಟ, ಪ್ರತಿಭಟನೆ, ಉಪವಾಸಗಳನ್ನು ಮಾಡುವುದು ಕಷ್ಟ. ಅದಕ್ಕಾಗಿ ಅವುಗಳನ್ನು ಮಾಡುವುದಿಲ್ಲ. ಜಾಹೀರಾತಿನ ವಿಚಾರಕ್ಕೆ ಬರುವುದಾದರೆ ಇನ್ನೊಂದಷ್ಟು ದುರ್ನಾತ. ಮನರೇಗಾ ಕಾಯ್ದೆ ರದ್ದಾಗಿರುವುದನ್ನು ಗಾಂಧೀಜಿ ಮೂಲಕವೇ ವಿರೋಧಿಸಬೇಕು ಎನ್ನುವುದು ಪ್ರಿಯಾಂಕ್ ಖರ್ಗೆಯವರ ಕಲ್ಪನೆಯಂತೆ. ಬಿಜೆಪಿ ಅದೇ ಧಾಟಿಯಲ್ಲಿ ಉತ್ತರಿಸಿರುವುದರಿಂದ ಪ್ರಿಯಾಂಕ್ ಖರ್ಗೆ ಅವರೇ ಪ್ರತ್ಯುತ್ತರ ನೀಡಲಿ, ನಾವ್ಯಾಕೆ ಮಾತನಾಡಬೇಕು ಎನ್ನುತ್ತಾರೆ ಕೆಲ ಕಾಂಗ್ರೆಸಿಗರು. ಗಾಂಧೀಜಿ ಅವರನ್ನು ಅವರ ವ್ಯಕ್ತಿತ್ವಕ್ಕೆ ವಿರುದ್ಧವಾಗಿ ಚಿತ್ರಿಸಲಾಗಿದೆ. ಅವರ ಮೌಲ್ಯಗಳಿಗೆ ಧಕ್ಕೆ ತರಲಾಗಿದೆ ಎನ್ನುವುದು ಕಾಂಗ್ರೆಸಿಗರಿಗೆ ಸಮಸ್ಯೆಯೇ ಅಲ್ಲ. ಮುಖ್ಯಮಂತ್ರಿ, ಕೆಪಿಸಿಸಿ ಅಧ್ಯಕ್ಷ, ಮಂತ್ರಿಗಳಾದಿಯಾಗಿ ಯಾರೂ ಈ ಕುರಿತು ಮಾತನಾಡಿಲ್ಲ. ಖಂಡಿಸಿಲ್ಲ. ಪ್ರಿಯಾಂಕ್ ಖರ್ಗೆಯನ್ನು ಬಿಡಿ, ನಿಮಗೆ ಗಾಂಧೀಜಿ ಬೇಡವಾ? ಎಂದರೆ ಅದಕ್ಕೂ ಅವರಲ್ಲಿ ಉತ್ತರವಿಲ್ಲ. ಇದರಿಂದ ಬಿಜೆಪಿಯಲ್ಲಿ ಮಾತ್ರವಲ್ಲ, ಸ್ವಪಕ್ಷೀಯರಲ್ಲೂ ಪ್ರಿಯಾಂಕ್ ಖರ್ಗೆ ಬಗ್ಗೆ ಹೆಚ್ಚುತ್ತಿರುವ ಅಸೂಯೆ ಎದ್ದು ಕಾಣುತ್ತಿದೆ. ಗಾಂಧೀಜಿ ಕೈಗೆ ಕೋಲು ಕೊಟ್ಟು ತಾವೇ ಹೊಡಿಸಿಕೊಳ್ಳುತ್ತಿರುವ ಬಿಜೆಪಿಯವರನ್ನು ಕೇಳಿದರೆ ಅವರದೂ ಅಂಥ ದುರ್ಬುದ್ಧಿಯೇ. ವಿಜಯೇಂದ್ರನನ್ನು ಕೇಳಿ, ನಮ್ಮನ್ನು ಏಕೆ ಕೇಳುತ್ತೀರಿ? ಎಂದು ಜಾರಿಕೊಳ್ಳುತ್ತಾರೆ. ರಾಜ್ಯ ಬಿಜೆಪಿಯಲ್ಲಿ ಈಗ ಎಲ್ಲದಕ್ಕೂ ಕ್ರೆಡಿಟ್ ವಾರ್. ವಿಜಯೇಂದ್ರ ಮತ್ತು ಆರ್.ಅಶೋಕ್ ಪೂರ್ವ-ಪಶ್ಚಿಮ. ಅಲ್ಲಿ ಉತ್ತರ, ದಕ್ಷಿಣಗಳೂ ಉಂಟು. ಒಬ್ಬರು ಪ್ರಸ್ತಾಪಿಸುವ ವಿಷಯ ಇನ್ನೊಬ್ಬರಿಗೆ ಸರಿ ಎನಿಸುವುದಿಲ್ಲ. ಇನ್ನೊಬ್ಬರು ಎತ್ತುವ ಪ್ರಶ್ನೆಗಳು ಮತ್ತೊಬ್ಬರಿಗೆ ಸಹ್ಯವಾಗುವುದಿಲ್ಲ. ► ಒಂದು ಚೊಂಬಿನ ಕತೆ ಜಾಹೀರಾತು ಕೊಟ್ಟಿರುವ ಬಿಜೆಪಿ ಬಗ್ಗೆ ಮಾತ್ರವಲ್ಲ, ಪ್ರಕಟಿಸಿರುವ ಮಾಧ್ಯಮಗಳ ಬಗ್ಗೆಯೂ ಚರ್ಚೆಯಾಗುತ್ತಿದೆ. ಮಾಧ್ಯಮಗಳು ಈ ಮಟ್ಟದ ಅಧಃಪತನಕ್ಕೆ ಇಳಿಯಬಾರದಿತ್ತು ಎಂಬ ಚರ್ಚೆಯಾಗುತ್ತಿದೆ. ಸಿದ್ದರಾಮಯ್ಯ, ರಾಹುಲ್ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆ ಜಾಗದಲ್ಲಿ ನರೇಂದ್ರ ಮೋದಿ ಇದ್ದರೆ ಮಾಧ್ಯಮಗಳು ಈ ಜಾಹೀರಾತನ್ನು ಪಕಟಿಸುವ ಧೈರ್ಯ ತೋರುತ್ತಿದ್ದವೇ? ಎನ್ನುವ ಪ್ರಶ್ನೆಗಳು ಕೇಳಿಬರುತ್ತಿವೆ. ಈ ಹಿನ್ನೆಲೆಯಲ್ಲಿ ಹಿಂದಿನ ಕೆಲ ಘಟನೆಗಳನ್ನು ನೆನಪಿಸಿಕೊಳ್ಳಬೇಕು. ಹಿಂದೆ ಕೇಂದ್ರ ಸರಕಾರದಿಂದ ಕರ್ನಾಟಕಕ್ಕೆ ಬಿಡಿಗಾಸು ಕೂಡ ಸಿಕ್ಕಿಲ್ಲ, ದೊಡ್ಡ ಮಟ್ಟದಲ್ಲಿ ಅನ್ಯಾಯವಾಗಿದೆ ಎಂದು ಬಿಂಬಿಸಲು ಕಾಂಗ್ರೆಸ್ ಪಕ್ಷ ‘ಚೊಂಬಿನ ಜಾಹೀರಾತು’ ಕೊಡಲು ಮುಂದಾಗಿತ್ತು. ಆಗ ಅದನ್ನು ಪ್ರಕಟಿಸಲು ಮಾಧ್ಯಮಗಳು ಹಿಂದೇಟು ಹಾಕಿದ್ದವು. ‘ನೀವು ಇದನ್ನು ಪ್ರಕಟಿಸದಿದ್ದರೆ ಮುಂದೆ ಯಾವ ಜಾಹೀರಾತನ್ನೂ ಕೊಡುವುದಿಲ್ಲ’ ಎಂದು ಧಮಕಿ ಹಾಕಿದ ಮೇಲೆ ಪ್ರಕಟಿಸಿದವು. ಅದೇ ರೀತಿ ‘40ಶೇ. ಭ್ರಷ್ಟಾಚಾರದ ಜಾಹೀರಾತು’ ಪ್ರಕಟಿಸುವಂತೆ ಕೇಳಿಕೊಂಡಾಗಲೂ ಮಾಧ್ಯಮಗಳು ಒಪ್ಪಿರಲಿಲ್ಲ. ‘ಇದರಿಂದ ಕಾನೂನು ತೊಡಕುಂಟಾದರೆ ನಾವು ಜವಾಬ್ದಾರರು’ ಎಂದು ಬರೆದುಕೊಟ್ಟ ಮೇಲೆ ಪ್ರಕಟಿಸಿದವು. ಈಗ ಯಾರೂ ಬೆದರಿಸಿಲ್ಲ, ಏಕೆಂದರೆ ಎಲ್ಲರೂ ಮೊದಲೇ ಹೆದರಿ ಕೂತಿದ್ದಾರೆ. ► ಯಾರಿಗೂ ಬೇಡವಾದ ಗಾಂಧಿ ಗಾಂಧೀಜಿ ಎಲ್ಲರಿಗೂ ಸೇರಿದವರು. ಇಡೀ ಸಮಾಜ ಗಾಂಧೀಜಿಗಾಗುವ ಅವಮಾನಕ್ಕೆ ತಲೆ ತಗ್ಗಿಸಬೇಕು ಎನ್ನುವುದು ನಿಜ. ಆದರೂ ಕಾಂಗ್ರೆಸ್ ಜವಾಬ್ದಾರಿ ಜಾಸ್ತಿ. ಕಾಂಗ್ರೆಸ್ ಇಷ್ಟು ಬೇಜವಾಬ್ದಾರಿತನ ಹೊಂದಿರುವುದರಿಂದಲೇ ಗಾಂಧೀಜಿ ಎಂಬ ಮಹಾತ್ಮನ ಎದುರು ಕ್ಷುದ್ರ ಗೋಡ್ಸೆಯನ್ನು ನಿಲ್ಲಿಸುತ್ತಿರುವುದು. ಅಹಿಂಸಾ ತತ್ವವನ್ನು ಜಗತ್ತಿಗೇ ಕೂಗಿ ಹೇಳಿದ ಗಾಂಧೀಜಿಗೆ ಇಂದು ಕೋಲು ಕೊಟ್ಟವರು ನಾಳೆ ಚಾಕು, ಚೂರಿಗಳನ್ನೂ ಕೊಡಬಹುದು. ಅರೆಬೆತ್ತಲೆಯ ಮೂಲಕ ಆಡಂಬರವನ್ನು ನಿರಾಕರಿಸಿದ ಫಕೀರನಿಗೆ ‘ಆಧುನಿಕ ಫಕೀರ’ನಂತೆ ಸೂಟು ಬೂಟು ಹಾಕಬಹುದು. ಕೇವಲ ಕನ್ನಡಕದ ಗೆರೆಗಳನ್ನು ಬಿಡಿಸಿ ಈತನೇ ಆ ಮಹಾನ್ ಮಾನವತಾವಾದಿ ಎಂದು ಹೇಳಿಬಿಡುವಷ್ಟು ಸರಳವಾಗಿರುವ ಗಾಂಧಿಗೆ ನರೇಂದ್ರ ಮೋದಿ ಧರಿಸುತ್ತಾರೆ ಎಂದು ಹೇಳಲಾಗುವ (ಖಾತರಿ ಇಲ್ಲ) ದುಬಾರಿ ಕನ್ನಡಕ ಚಿಚ್ಚ ಉಛಿಡಿಛಿಚ್ಟ ಅನ್ನು ತೊಡಿಸಬಹುದು. ಸತ್ಯವನ್ನು ಪ್ರತಿಪಾದಿಸಿದ ಗಾಂಧೀಜಿ ಬಾಯಲ್ಲಿ ವಾಟ್ಸ್ಆ್ಯಪ್ ಯೂನಿವರ್ಸಿಟಿಗಳು ಆತಂಕಕಾರಿ ಸುಳ್ಳುಗಳನ್ನೂ ಹೇಳಿಸಬಹುದು. ಇವೆಲ್ಲಾ ಸಾಧ್ಯವಾಗುತ್ತವೆ. ಏಕೆಂದರೆ ‘ಗಾಂಧಿ ಭಾರತ’ದಲ್ಲಿ ಗಾಂಧೀಜಿಗಿರುವಷ್ಟು ‘ಶತ್ರುಗಳು’ ಬೇರಾರಿಗೂ ಇಲ್ಲ. ಗಾಂಧೀಜಿ ಮುಸ್ಲಿಮ್ರ ಬಗ್ಗೆ ಮೃದು ಧೋರಣೆ ಹೊಂದಿದ್ದರು ಎಂದು ಹಿಂದೂಗಳು ವಿರೋಧಿಸುತ್ತಾರೆ. ಜವಾಹರಲಾಲ್ ನೆಹರೂರನ್ನು ಪ್ರಧಾನಿ ಮಾಡಲು ಮುಹಮ್ಮದ್ ಅಲಿ ಜಿನ್ನಾಗೆ ಅನ್ಯಾಯ ಮಾಡಿದರು ಎಂದು ಕೆಲವು ಮುಸ್ಲಿಮರಿಗೂ ಗಾಂಧೀಜಿ ಬೇಡವಾಗಿದ್ದಾರೆ. ಗಾಂಧೀಜಿ ಮತ್ತು ಅಂಬೇಡ್ಕರ್ ಅವರನ್ನು ಒಪ್ಪಿಕೊಂಡರೆ ನಮ್ಮ ಸಮಸ್ಯೆಗಳು ಅರ್ಧಕ್ಕರ್ಧ ಕಮ್ಮಿಯಾಗುತ್ತವೆ ಎನ್ನುವ ಅರಿವು ಅವರಿಗಿಲ್ಲ. ಜಾತಿ ವಿಷಯಕ್ಕೆ ಬರುವುದಾದರೆ ಹರಿಜನರ ಪರವಾಗಿದ್ದರು, ಜಾತ್ಯತೀತ ಭಾರತದ ಕನಸು ಹೊಂದಿದ್ದರು ಎನ್ನುವ ಕಾರಣಗಳಿಗಾಗಿ ಸುಧಾರಣೆಯನ್ನು ಒಪ್ಪದ ಬ್ರಾಹ್ಮಣರು ಗಾಂಧೀಜಿಯನ್ನು ಉಗ್ರವಾಗಿ ವಿರೋಧಿಸುತ್ತಾರೆ. ಪೂನಾ ಒಪ್ಪಂದವೂ ಸೇರಿದಂತೆ ಬಾಬಾ ಸಾಹೇಬ್ ಅಂಬೇಡ್ಕರ್ ಜೊತೆ ಕೆಲ ಅಭಿಪ್ರಾಯ ಭೇದಗಳಿದ್ದವು ಎನ್ನುವ ಕಾರಣಕ್ಕಾಗಿ ದಲಿತರು ಕೂಡ ಗಾಂಧೀಜಿಯನ್ನು ಒಪ್ಪುವುದಿಲ್ಲ. ಉಳಿದಂತೆ ದೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ಶೂದ್ರರಿಗೆ ಯಾರು ನಮ್ಮವರು, ಯಾರು ನಮ್ಮ ಶತ್ರುಗಳು ಎನ್ನುವುದೇ ಗೊತ್ತಿಲ್ಲ. ಅವರು ಕೂಡ ಗಾಂಧೀಜಿಯನ್ನು ಅಪ್ಪಿಕೊಳ್ಳುವುದಿಲ್ಲ. ಒಟ್ಟಿನಲ್ಲಿ ಗಾಂಧೀಜಿಗೆ ಅಪ್ಪ, ಅಮ್ಮ ಇಲ್ಲ. ಗಾಂಧೀಜಿ ದೇಹಕ್ಕೆ ಗೋಡ್ಸೆ ಗುಂಡು ಹೊಡೆದು ಕೊಂದ. ಆದರೆ ಭಾರತ-ಪಾಕಿಸ್ತಾನ ವಿಭಜನೆಯಾದಾಗಲೇ ಅವರು ಅರ್ಧ ಸತ್ತಿದ್ದರು. ಅವರನ್ನು ದೈಹಿಕವಾಗಿ ಕೊಲ್ಲುವ ಮೊದಲೇ ಅವರ ವಿಚಾರಧಾರೆಗಳಿಗೆ ಅಪಚಾರ ಎಸಗುವ ಕೆಲಸ ನಡೆಯುತ್ತಿತ್ತು. ಕೊಲೆಯ ಬಳಿಕ ಇನ್ನಷ್ಟು ಜಾಸ್ತಿಯಾಗಿತ್ತು. ಈಗ ಕೇಂದ್ರದಲ್ಲಿ ತಾಂತ್ರಿಕವಾಗಿ ಬಿಜೆಪಿ ಮತ್ತು ತಾತ್ವಿಕವಾಗಿ ಆರೆಸ್ಸೆಸ್ ಅಧಿಕಾರಕ್ಕೆ ಬಂದ ಮೇಲೆ ಶರವೇಗದಲ್ಲಿ ನಡೆಯುತ್ತಿದೆ. 2014ರ ಅಕ್ಟೋಬರ್ 2ರಂದು ಶುರುವಾದ ಸ್ವಚ್ಛ ಭಾರತ ಅಭಿಯಾನದ ಹಿಂದೆ ಕೂಡ ದುರದ್ದೇಶವಿತ್ತು. ಅಂದಾದರೂ ಗಾಂಧೀಜಿ ವಿಚಾರಧಾರೆಗಳ ಬಗ್ಗೆ ಚರ್ಚೆಯಾಗುತ್ತಿತ್ತು. ಅದನ್ನು ಮರೆಮಾಚಿ ಕಸ-ಪೊರಕೆಗಳ ಬಗ್ಗೆ ಚರ್ಚಿಸುವಂತೆ ಮಾಡಲಾಯಿತು. ಬಹಿರಂಗವಾಗಿ ಗೋಡ್ಸೆಯ ಆರಾಧನೆ ನಡೆಯಿತು. ಲಡಾಖ್ಗೆ ಪೂರ್ಣ ರಾಜ್ಯದ ಸ್ಥಾನಮಾನ ಕೊಡಿ ಎಂದು ಗಾಂಧಿ ಮಾದರಿಯಲ್ಲಿ ಪ್ರತಿಭಟನೆ ಮಾಡುತ್ತಿರುವ ಸೋನಂ ವಾಂಗ್ಚುಕ್ ಅವರನ್ನು ಬಂಧಿಸಿ ಜೈಲಿನಲ್ಲಿಡಲಾಯಿತು. ಹೊಸ ಸೇರ್ಪಡೆ ಮನರೇಗಾ ಕಾಯ್ದೆಯ ರದ್ದು. ಗೋಡ್ಸೆಗೆ ಗುಡಿ ಕಟ್ಟುವವರಿಂದ ಮತ್ತೇನನ್ನು ನಿರೀಕ್ಷೆ ಮಾಡಲು ಸಾಧ್ಯ?
ಉತ್ತರ ಪ್ರದೇಶ | ದಲಿತ ಯುವಕನ ಮೇಲೆ ಮಾರಣಾಂತಿಕ ಹಲ್ಲೆ: ಪ್ರಕರಣ ದಾಖಲು
ಭದೋಹಿ: ನಾಲೆಯ ಬಳಿ ಮಲ ವಿಸರ್ಜನೆ ಮಾಡಿದ ಕಾರಣಕ್ಕೆ ದಲಿತ ವ್ಯಕ್ತಿಯೊಬ್ಬನ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿ ಕಣ್ಣಿಗೆ ಮೋಟರ್ ಬೈಕ್ ಕೀಯನ್ನು ಚುಚ್ಚಿದ ಪರಿಣಾಮ, ಆತನ ಒಂದು ಕಣ್ಣಿನ ದೃಷ್ಟಿ ನಷ್ಟವಾಗಿರುವ ಘಟನೆ ಉತ್ತರ ಪ್ರದೇಶದ ಭದೋಹಿ ಜಿಲ್ಲೆಯಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಶುಕ್ರವಾರ ಮಧ್ಯಾಹ್ನ ಔರಾಯಿ ಪ್ರದೇಶದಲ್ಲಿನ ನಾಲೆಗೆ ಮಲ ವಿಸರ್ಜನೆ ಮಾಡಲು ಸಂತ್ರಸ್ತ ಯುವಕ ರಾಹುಲ್ ತೆರಳಿದ್ದಾಗ ಆರೋಪಿ ಶಂಕರ್ ಬಿಂದ್ ನಡುವೆ ವಾಗ್ವಾದ ನಡೆದಿದೆ. ನಾಲೆಯ ಬಳಿ ಮಲ ವಿಸರ್ಜನೆ ಮಾಡುವುದಕ್ಕೆ ಆರೋಪಿ ಶಂಕರ್ ಬಿಂದ್ ಆಕ್ಷೇಪ ವ್ಯಕ್ತಪಡಿಸಿದ್ದಾನೆ. ಬಳಿಕ ಜಾತಿ ನಿಂದನೆ ಮಾಡಿ ಹಲ್ಲೆ ನಡೆಸಿದ್ದಾನೆ ಎಂದು ಹೇಳಲಾಗಿದೆ. ಹಲ್ಲೆಯಿಂದ ತಪ್ಪಿಸಿಕೊಳ್ಳಲು ಸಂತ್ರಸ್ತ ಯುವಕ ಪ್ರಯತ್ನಿಸಿದಾಗ, ಆತನ ಒಂದು ಕಣ್ಣಿಗೆ ಮೋಟರ್ ಬೈಕ್ ನ ಕೀಯಿಂದ ಆರೋಪಿ ಶಂಕರ್ ಬಿಂದ್ ಚುಚ್ಚಿದ್ದಾನೆ. ಸಂತ್ರಸ್ತ ಯುವಕ ಘಟನಾ ಸ್ಥಳದಲ್ಲೇ ಕುಸಿದು ಬಿದ್ದಿದ್ದಾನೆ ಎಂದು ಭದೋಹಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಭಿಮನ್ಯು ಮಂಗ್ಲೀಕ್ ತಿಳಿಸಿದ್ದಾರೆ. ಸ್ಥಳೀಯರು ಘಟನಾ ಸ್ಥಳದಲ್ಲಿ ಜಮಾಯಿಸಿದಾಗ ಆರೋಪಿಯು ಅಲ್ಲಿಂದ ಪರಾರಿಯಾಗಿದ್ದಾನೆ. ಸುದ್ದಿ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಧಾವಿಸಿದ ಪೊಲೀಸರು, ಗಾಯಾಳು ಯುವಕನನ್ನು ಸಮುದಾಯ ಆರೋಗ್ಯ ಕೇಂದ್ರಕ್ಕೆ ಸ್ಥಳಾಂತರಿಸಿದ್ದಾರೆ. ಸಂತ್ರಸ್ತ ಯುವಕನ ತಂದೆ ರಾಮ್ ಧಾನಿ ನೀಡಿದ ದೂರನ್ನು ಆಧರಿಸಿ, ಆರೋಪಿ ಶಂಕರ್ ಬಿಂದ್ ವಿರುದ್ಧ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಗಳ ದೌರ್ಜನ್ಯ ತಡೆ ಕಾಯ್ದೆ ಮತ್ತು ಭಾರತೀಯ ನ್ಯಾಯ ಸಂಹಿತೆಯ ವಿವಿಧ ಸೆಕ್ಷನ್ ಗಳಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
T20 World Cup : ಜಿದ್ದಿಗೆ ಬಿದ್ದು ಭಾರತದ ಪಂದ್ಯ ಬಹಿಷ್ಕಾರ - ಪಾಕಿಸ್ತಾನ ಕ್ರಿಕೆಟ್ ಪಾಲಿಗೆ ಇದುವೇ ಮರಣಶಾಸನ?
IND Vs PAK - T20 World Cup : ಶ್ರೀಲಂಕಾ ಮತ್ತು ಭಾರತದಲ್ಲಿ ಜಂಟಿಯಾಗಿ ಆಯೋಜಿಸಲಾಗುತ್ತಿರುವ ಟಿ20 ವಿಶ್ವಕಪ್ ಕ್ರೀಡಾಕೂಟ ಆರಂಭಗೊಂಡಿದೆ. ಭಾರತ ಮತ್ತು ಪಾಕಿಸ್ತಾನ ತಂಡಗಳು ಮೊದಲ ಪಂದ್ಯವನ್ನು ಆಡಿ ಗೆದ್ದಾಗಿದೆ. ಆದರೆ, ಹೈವೋಲ್ಟೇಜ್ ಎರಡು ದೇಶಗಳ ನಡುವೆ ನಿಗದಿಯಾಗಿರುವ ಫೆಬ್ರವರಿ ಹದಿನೈದರ ಪಂದ್ಯ ಇನ್ನೂ ಗೊಂದಲದಲ್ಲಿದೆ. ಪಾಕಿಸ್ತಾನ ಸರ್ಕಾರ ಈ ಪಂದ್ಯವನ್ನು ಬಹಿಷ್ಕರಿಸುವ ನಿರ್ಧಾರಕ್ಕೆ ಬಂದಿದೆ. ಹಾಗಾದರೆ, ಈ ಪಂದ್ಯ ನಡೆಯದೇ ಇದ್ದಲ್ಲಿ ಏನೇನು ತೊಂದರೆಗಳು ಎದುರಾಗಬಹುದು? ಯಾರಿಗೆ ಎಷ್ಟು ನಷ್ಟವಾಗಬಹುದು ಎನ್ನುವುದನ್ನು ಇಲ್ಲಿ ವಿಶ್ಲೇಷಿಸಲಾಗಿದೆ.
RSS ಶತಮಾನೋತ್ಸವದಲ್ಲಿ ಬಾಲಿವುಡ್ ಸೆಲೆಬ್ರಿಟಿಗಳ ದಂಡು; ಸಲ್ಮಾನ್ ಖಾನ್ ಫ್ಯಾಷನ್ ಹೊಗಳಿದ ಮೋಹನ್ ಭಾಗವತ್
ರಾಷ್ಟ್ರೀಯ ಸ್ವಯಂಸೇಆವಕ ಸಂಘ (ಆರ್ಎಸ್ಎಸ್)ದ ಶತಮಾನೋತ್ಸವದ ಅಂಗವಾಗಿ, ನಿನ್ನೆ (ಫೆ.8-ಭಾನುವಾರ) ಮುಂಬೈನಲ್ಲಿ ಉಪನ್ಯಾಸ ಕಾರ್ಯಕ್ರಮ ಹಮ್ಮಿ,ಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ಹಿಂದಿ ಚಲನಚಿತ್ರ ರಂಗದ ಅನೇಕ ದಿಗ್ಗಜರು ಭಾಗವಹಿಸಿದ್ದರು. ಬಾಲಿವುಡ್ ಬ್ಯಾಡ್ ಬಾಯ್ ಸಲ್ಮಾನ್ ಖಾನ್ ಕೂಡ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು, ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ತಮ್ಮ ಸಂವಾದದಲ್ಲಿ ಸಲ್ಮಾನ್ ಖಾನ್ ಅವರ ಫ್ಯಾಷನ್ ಬಗ್ಗೆ ಉಲ್ಲಖ ಮಾಡಿದ್ದಾರೆ. ಇದಕ್ಕೆ ಸಲ್ಲು ಭಾಯಿ ನಗುವಿನ ಮೂಲಕ ಉತ್ತರಿಸಿದ್ದಾರೆ. ಇಲ್ಲಿದೆ ಹೆಚ್ಚಿನ ಮಾಹಿತಿ.
ಖಾಲಿ ಟ್ರಂಕ್ ಪ್ರತಿಭಟನೆ | ಮೆಟ್ರೋ ದರ ಏರಿಕೆ ವಿರೋಧಿಸಿ ಪ್ರತಿಭಟನೆ ವೇಳೆ ತೇಜಸ್ವಿ ಸೂರ್ಯ ವಶಕ್ಕೆ
ಬೆಂಗಳೂರು: ನಮ್ಮ ಮೆಟ್ರೋ ದರ ಏರಿಕೆ ವಿರೋಧಿಸಿ ‘ಖಾಲಿ ಟ್ರಂಕ್’ ಪ್ರತಿಭಟನೆ ಆಯೋಜಿಸಿದ್ದ ಬೆಂಗಳೂರು ದಕ್ಷಿಣ ಸಂಸದ ಹಾಗೂ ಭಾರತೀಯ ಜನತಾ ಯುವ ಮೋರ್ಚಾ ಅಧ್ಯಕ್ಷ ತೇಜಸ್ವಿ ಸೂರ್ಯರನ್ನು ಪೊಲೀಸರು ಸೋಮವಾರ ವಶಕ್ಕೆ ಪಡೆದರು. ಮೆಟ್ರೋ ನಿಲ್ದಾಣದಲ್ಲಿ ಪೂರ್ವಾನುಮತಿ ಪಡೆಯದೆ ರವಿವಾರ ಪ್ರತಿಭಟನೆ ನಡೆಸಿದ್ದ ಹಿನ್ನೆಲೆಯಲ್ಲಿ ಅವರಿಗೆ ಪೊಲೀಸರು ನೋಟಿಸ್ ಜಾರಿ ಮಾಡಿದ್ದರು. ಇದರ ನಡುವೆಯೂ ಸೋಮವಾರ ಮತ್ತೆ ಮೆಟ್ರೋ ನಿಲ್ದಾಣದ ಮುಂಭಾಗದಲ್ಲಿ ಮತ್ತೆ ಪ್ರತಿಭಟನೆ ನಡೆಸಲು ಮುಂದಾದ ವೇಳೆ ಅವರನ್ನು ಪೊಲೀಸರು ವಶಕ್ಕೆ ಪಡೆದರು. ಬಂಧನಕ್ಕೂ ಮುನ್ನ ಆರ್ವಿ ರಸ್ತೆ ಮೆಟ್ರೋ ನಿಲ್ದಾಣದ ಹೊರಭಾಗದಲ್ಲಿ ಮಾತನಾಡಿದ ತೇಜಸ್ವಿ ಸೂರ್ಯ, “ಕೇಂದ್ರ ಸರಕಾರದ ಒತ್ತಡದಿಂದಾಗಿ ಮೆಟ್ರೋ ದರ ಏರಿಕೆಯನ್ನು ಎರಡನೇ ಬಾರಿಗೆ ತಡೆಹಿಡಿಯಲಾಗಿದೆ. ರಾಜ್ಯ ಸರಕಾರ ತನ್ನ ಆರ್ಥಿಕ ಪರಿಸ್ಥಿತಿಯ ಕುರಿತು ಶ್ವೇತಪತ್ರ ಬಿಡುಗಡೆ ಮಾಡಬೇಕು” ಎಂದು ಆಗ್ರಹಿಸಿದರು. “ಉತ್ತಮ ರಸ್ತೆಗಳು, ಮೂಲಸೌಕರ್ಯ ಮತ್ತು ಸಾರ್ವಜನಿಕ ಸೌಕರ್ಯಗಳನ್ನು ಒದಗಿಸುವ ಬದಲು ರಾಜ್ಯ ಸರಕಾರ ಜನರ ಮೇಲೆ ಬಲವಂತ ಹಾಗೂ ಬಂಧನದ ಕ್ರಮ ಕೈಗೊಳ್ಳುತ್ತಿರುವುದು ನಾಚಿಕೆಗೇಡಿನ ಸಂಗತಿ. ನಾವು ಕೇಳುತ್ತಿರುವುದು ಕೈಗೆಟುಕುವ ಸಾರ್ವಜನಿಕ ಸಾರಿಗೆ ಮಾತ್ರ” ಎಂದು ಅವರು ಹೇಳಿದರು. ಸೋಮವಾರದಿಂದ ಜಾರಿಗೆ ಬರಲಿದ್ದ ನಮ್ಮ ಮೆಟ್ರೋ ದರಗಳಲ್ಲಿ ಶೇಕಡಾ 5ರಷ್ಟು ಹೆಚ್ಚಳವನ್ನು ಕೇಂದ್ರ ಸರಕಾರದ ನಿರ್ದೇಶನದಂತೆ ತಾತ್ಕಾಲಿಕವಾಗಿ ತಡೆಹಿಡಿದಿರುವುದಾಗಿ ಘೋಷಿಸಿದ ಒಂದು ದಿನದ ನಂತರ ಈ ಘಟನೆ ನಡೆದಿದೆ.
ಚಿನ್ನ ಬೆಳ್ಳಿ ದರದಲ್ಲಿ ಭಾರಿ ಏರಿಕೆ ಕಂಡಿದ್ದು, ಫೆಬ್ರವರಿಯಲ್ಲಿ ಗರಿಷ್ಠ ದರಕ್ಕೆ ಏರಿದೆ. ಫೆಬ್ರವರಿ ತಿಂಗಳಲ್ಲಿ ಏರಿಳಿತ ಕಂಡುಬರುತ್ತಿದ್ದು ಬೆಲೆ ಇಳಿಕೆಗಾಗಿ ಗ್ರಾಹಕರು ಎದುರು ನೋಡುತ್ತಿದ್ದಾರೆ. 5 ಲಕ್ಷದ 70 ಸಾವಿರಕ್ಕೆ ಏರಿದ್ದ ಚಿನ್ನದ ಬೆಲೆ
ದಿಲ್ಲಿಯ 9 ಶಾಲೆಗಳಿಗೆ ಬಾಂಬ್ ಬೆದರಿಕೆ: ಪೊಲೀಸರಿಂದ ಪರಿಶೀಲನೆ
ಹೊಸದಿಲ್ಲಿ: ದಿಲ್ಲಿಯಾದ್ಯಂತ 9 ಶಾಲೆಗಳನ್ನು ಗುರಿಯಾಗಿಸಿಕೊಂಡು ಬಾಂಬ್ ಬೆದರಿಕೆ ಕರೆ ಮಾಡಲಾಗಿದ್ದು, ವಿದ್ಯಾರ್ಥಿಗಳನ್ನು ಸ್ಥಳಾಂತರಿಸಿ ಪರಿಶೀಲನೆ ನಡೆಸಲಾಗುತ್ತಿದೆ. ದಿಲ್ಲಿಯ ಪ್ರಮುಖ ಶಾಲೆಗಳಿಗೆ ಬೆಳಿಗ್ಗೆ 8:30 ರಿಂದ 9ರ ನಡುವೆ ಬಾಂಬ್ ಬೆದರಿಕೆ ಕರೆಗಳು ಬಂದಿವೆ ಎಂದು ವರದಿಯಾಗಿದೆ. ಸ್ಥಳದಲ್ಲಿ ಅಗ್ನಿಶಾಮಕ ದಳಗಳು ಮತ್ತು ಬಾಂಬ್ ನಿಷ್ಕ್ರಿಯ ದಳವನ್ನು ನಿಯೋಜಿಸಲಾಗಿದೆ. ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಯನ್ನು ತಕ್ಷಣವೇ ಸ್ಥಳಾಂತರಿಸಲಾಗಿದೆ. ದಿಲ್ಲಿಯಂತಹ ಮಹಾನಗರಗಳಲ್ಲಿ ಹುಸಿ ಬಾಂಬ್ ಬೆದರಿಕೆಗಳು ದಿನನಿತ್ಯ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಪೋಷಕರು ಮತ್ತು ಶಾಲಾ ಆಡಳಿತ ಮಂಡಳಿ ಕಳವಳ ವ್ಯಕ್ತಪಡಿಸಿದೆ. ಇದಕ್ಕೂ ಮೊದಲು, ಜನವರಿ 29ರ ಬೆಳಿಗ್ಗೆ ದಿಲ್ಲಿಯ ಐದು ಶಾಲೆಗಳಿಗೆ ಇಮೇಲ್ ಮೂಲಕ ಬಾಂಬ್ ಬೆದರಿಕೆ ಹಾಕಲಾಗಿತ್ತು. ಭದ್ರತಾ ಸಂಸ್ಥೆಗಳು ವ್ಯಾಪಕವಾಗಿ ಶೋಧ ನಡೆಸಿದ ನಂತರ ಆ ಬೆದರಿಕೆಗಳು ಸುಳ್ಳು ಎಂಬುದು ಬಹಿರಂಗವಾಗಿದೆ.
Vaibhav Suryavanshi: ಅಂಡರ್-19 ವಿಶ್ವಕಪ್ ಹೀರೋ ವೈಭವ್ ಸೂರ್ಯವಂಶಿಗೆ ಮುಂದಿನ ಆವೃತ್ತಿಯಲ್ಲಿ ನೋ ಎಂಟ್ರಿ
Vaibhav Suryavanshi: ಭಾರತೀಯ ಕ್ರಿಕೆಟ್ನಲ್ಲಿ ಅಪರೂಪದ ಪ್ರತಿಭೆಯಾಗಿ ಹೊರಹೊಮ್ಮಿರುವ ವೈಭವ್ ಸೂರ್ಯವಂಶಿ ಇದೀಗ ಕೇವಲ 16 ವರ್ಷದ ವಯಸ್ಸಿನಲ್ಲೇ ದೊಡ್ಡ ಸಾಧನೆ ಮಾಡಿದ್ದಾರೆ. 2026ರ ಅಂಡರ್-19 ವಿಶ್ವಕಪ್ನಲ್ಲಿ ಟೀಮ್ ಇಂಡಿಯಾ ಚಾಂಪಿಯನ್ ಆಗಲು ಮಹತ್ವದ ಕೊಡುಗೆ ನೀಡಿದ ಈ ಯುವ ಎಡಗೈ ಬ್ಯಾಟ್ಸ್ಮನ್, ತಮ್ಮ ಆಕ್ರಮಣಕಾರಿ ಆಟದಿಂದ ದೇಶದಾದ್ಯಂತ ಗಮನ ಸೆಳೆದಿದ್ದಾರೆ. ಚಿಕ್ಕ ವಯಸ್ಸಿನಲ್ಲೇ ಸಾಧನೆ ಮಾಡಿರುವ
ಫೆ.13-15ರವರೆಗೆ 3 ದಿನಗಳು ಅದ್ದೂರಿ ಹಂಪಿ ಉತ್ಸವ: ಗತವೈಭವ ವೈಭವ ಮರುಸೃಷ್ಟಿಗೆ 5 ಸಾವಿರ ಕಲಾವಿದರು ಸಜ್ಜು!
ವಿಜಯನಗರ ಸಾಮ್ರಾಜ್ಯದ ಇತಿಹಾಸ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಸ್ಮರಿಸುವ ಮೂಲಕ ಜಗತ್ತಿಗೆ ಅದರ ಮಹತ್ವವನ್ನು ಸಾರುವ ಹಂಪಿ ಉತ್ಸವ ಫೆ.13ರಿಂದ 15ರವರೆಗೆ 3 ದಿನಗಳು ಅದ್ದೂರಿಯಾಗಿ ನಡೆಯಲು ಭರದಿಂದ ಸಿದ್ದತೆ ಸಾಗಿದೆ. ಈ ಉತ್ಸವಕ್ಕೆ ಫೆ.13ರಂದು ಸಿಎಂ ಸಿದ್ದರಾಮಯ್ಯ ಅವರು ಚಾಲನೆ ನೀಡಿಲಿದ್ದಾರೆ. ಈ ಬಾರಿ ಉತ್ದವ ಕೇವಲ ಪ್ರದರ್ಶನಕ್ಕೆ ಮಾತ್ರ ಸಿಮೀತವಾಗದೆ ನಾಡಿನ ಕಲೆ ಮತ್ತು ಸಂಸ್ಕೃತಿಯ ಸೊಬಗನ್ನು ಎತ್ತಿತೋರಿಸುವಂತೆ ಹಲವು ಕಲಾತಂಡಗಳಿಂದ ಸುಮಾರು 5ಸಾವಿರ ಕಲಾವಿದರಿಂದ ವಿಜಯನಗರ ಸಾಮಾಜ್ಯದ ಗತವೈಭವ ಮರುಸೃಷ್ಟಿಸುವ ಕ್ಷಣಕ್ಕೆ ಹಂಪಿ ಅಣಿಯಾಗುತ್ತಿದೆ
ಭಾರತ ಮತ್ತು ಅಮೆರಿಕ ನಡುವಿನ ದ್ವಿಪಕ್ಷೀಯ ವ್ಯಾಪಾರ ಒಪ್ಪಂದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಒಪ್ಪಂದವು ಭಾರತದ ರೈತರ ಪಾಲಿನ ಮರಣಶಾಸನ ಎಂದು ಗುಡುಗಿದ್ದಾರೆ. ಈ ಕುರಿತು ತಮ್ಮ ಅಧಿಕೃತ ಎಕ್ಸ್ ಅಕೌಂಟ್ನಲ್ಲಿ ಸುದೀರ್ಘ ಪೋಸ್ಟ್ ಮಾಡಿರುವ ಸಿಎಂ ಸಿದ್ದರಾಮಯ್ಯ, ಪ್ರಧಾನಿ ಮೋದಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮುಂದೆ ಸಂಪೂರ್ಣವಾಗಿ ಶರಣಾಗಿದ್ದಾರೆ ಎಂದು ಹರಿಹಾಯ್ದಿದ್ದಾರೆ. ಸಿದ್ದರಾಮಯ್ಯ ಪೋಸ್ಟ್ ಇದೀಗ ಭಾರೀ ವೈರಲ್ ಆಗಿದೆ. ಇಲ್ಲಿದೆ ಹೆಚ್ಚಿನ ಮಾಹಿತಿ.
ಮೈಸೂರಲ್ಲಿ ಭಾರಿ ಬೆಂಕಿ ಅವಘಡ ಸಂಭವಿಸಿದೆ. ಘಟನೆಗೆ ಕಾರಣರಾದವರ ವಿರುದ್ಧ ದೂರು ದಾಖಲಾಗಿದೆ. ಭಾರಿ ನಷ್ಟವಾಗಿದ್ದು, 12 ಕ್ಕೂ ಹೆಚ್ಚು ಗೋದಾಮುಗಳು ಬೆಂಕಿಗೆ ಆಹುತಿಯಾಗಿವೆ.
ಫೆಬ್ರವರಿ 9ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ
Petrol, Diesel Price: ಪೆಟ್ರೋಲ್, ಡೀಸೆಲ್ ದರದಲ್ಲಿ ಜಾಸ್ತಿ ಅಲ್ಲದಿದ್ದರೂ, ಸ್ವಲ್ಪ ಪ್ರಮಾಣದಲ್ಲಾದರೂ, ಏರಿಳಿತ ಆಗುತ್ತಿರುತ್ತದೆ. ಹಾಗಾದರೆ, ಇಂದು (ಫೆಬ್ರವರಿ 9) ಬೆಂಗಳೂರು ಸೇರಿದಂತೆ ರಾಜ್ಯದ ಉಳಿದ ಜಿಲ್ಲೆಗಳಲ್ಲಿ ಲೀಟರ್ ಪೆಟ್ರೋಲ್, ಡೀಸೆಲ್ ಬೆಲೆ ಎಷ್ಟಿದೆ ಎನ್ನುವ ಅಂಕಿಅಂಶಗಳನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ. ಶಕ್ತಿಯ ಮೂಲಗಳು ಎನಿಸಿಕೊಂಡಿರುವ ಪೆಟ್ರೋಲ್ ಮತ್ತು ಡೀಸೆಲ್ ಇಂಧನ ಅತ್ಯವಶ್ಯಕವಾಗಿ ಬೇಕಾಗುವ ಸಂಪನ್ಮೂಲಗಳಾಗಿವೆ.
ಲಜ್ಜೆ ಕಳೆದುಕೊಂಡವನು ಎಲ್ಲವನ್ನೂ ಕಳೆದುಕೊಂಡ ಎನ್ನುವ ಮಾತು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ್ವಾ ಶರ್ಮಾ ಅವರಂತಹ ನಾಯಕರಿಗೆ ಚೆನಾಗಿ ಒಪ್ಪುತ್ತದೆ. ತಮ್ಮ ವರ್ತನೆ, ಮಾತುಗಳ ಮೂಲಕ ರಾಜಕೀಯ ನಾಯಕನಾಗಿ ಬಿಡಿ, ಕನಿಷ್ಠ ಮನುಷ್ಯನಾಗಿ ಗುರುತಿಸಿಕೊಳ್ಳುವುದಕ್ಕೂ ಅವರು ಅನರ್ಹರಾಗುತ್ತಿದ್ದಾರೆ. ಒಂದು ಕಾಲದಲ್ಲಿ ಚಹಾಕ್ಕಾಗಿ ದೇಶ ವಿದೇಶಗಳಲ್ಲಿ ಖ್ಯಾತಿಯನ್ನು ಪಡೆದಿದ್ದ ಅಸ್ಸಾಮನ್ನು ಇಂದು ತನ್ನ ದ್ವೇಷದ ಕಹಿ ಮಾತುಗಳ ಮೂಲಕವೇ ಕುಖ್ಯಾತಗೊಳಿಸಲು ಬಹುತೇಕ ಯಶಸ್ವಿಯಾಗಿದ್ದಾರೆ ಹಿಮಂತ ಬಿಸ್ವ್ವಾ ಶರ್ಮಾ. ಮಹಿಳೆಯರ ಮೇಲಿನ ದೌರ್ಜನ್ಯ, ಗರ್ಭಿಣಿ ಮಹಿಳೆಯರ ಸಾವು, ಮಕ್ಕಳಲ್ಲಿ ಹೆಚ್ಚುತ್ತಿರುವ ಅಪೌಷ್ಟಿಕತೆ, ಕಾರ್ಮಿಕರ ಶೋಷಣೆ, ವಲಸೆ ಇವೆಲ್ಲವುಗಳಿಗಾಗಿ ಕುಖ್ಯಾತಿಯನ್ನು ಪಡೆದಿರುವ ಅಸ್ಸಾಮಿನಲ್ಲಿ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳುವುದಕ್ಕೆ ಚಹಾ ತೋಟವಾಗಿರುವ ಅಸ್ಸಾಮನ್ನು ಜನಾಂಗೀಯ ದ್ವೇಷದ ವಿಷ ಬೀಜ ಬಿತ್ತಿ ಹಿಂಸೆಯ ಕೊಯ್ಲು ಕೊಯ್ಯುವುದಕ್ಕೆ ಹೊರಟಿದ್ದಾರೆ. ತಾನು ಮುಖ್ಯಮಂತ್ರಿಯಾಗಿ ಮುಂದುವರಿಯಲು ಈ ದ್ವೇಷದ ಹಾದಿಯನ್ನು ಹೊರತು ಪಡಿಸಿ ಇನ್ನಾವ ದಾರಿಯೂ ಉಳಿದಿಲ್ಲ ಎನ್ನುವುದು ಅವರಿಗೆ ಸ್ಪಷ್ಟವಾದಂತಿದೆ. ಇತ್ತೀಚಿನ ಅವರ ಹೇಳಿಕೆಗಳು, ಅವರ ಮಾನಸಿಕ ಸ್ಥಿತಿ ತೀರಾ ಉಲ್ಬಣಗೊಂಡಿರುವುದನ್ನು ಹೇಳುತ್ತದೆ.ಅಸ್ಸಾಮನ್ನು ಅವರಿಂದ ರಕ್ಷಿ ಸಬೇಕಾದರೆ ಒಂದೋ ಅವರನ್ನು ದಿಗ್ಬಂಧನದಲ್ಲಿಡಬೇಕು ಅಥವಾ ಮಾನಸಿಕ ಆಸ್ಪತ್ರೆಗೆ ಸೇರಿಸಬೇಕು ಎನ್ನುವ ಸ್ಥಿತಿ ನಿರ್ಮಾಣವಾಗಿದೆ. ಎಸ್ಐಆರ್ ಜಾರಿಗೊಂಡ ದಿನಗಳಿಂದ ಮುಖ್ಯಮಂತ್ರಿ ಹಿಮಂತ ಬಿಸ್ವ್ವಾ ಶರ್ಮಾ ಅವರ ನಡವಳಿಕೆಗಳು, ಹೇಳಿಕೆಗಳು ಇಡೀ ಎಸ್ಐಆರ್ ಪ್ರಕ್ರಿಯೆಯ ಬಗ್ಗೆಯೇ ದೇಶ ಶಂಕಿಸುವಂತೆ ಮಾಡಿದೆ. ‘‘ಎಸ್ಐಆರ್ನಲ್ಲಿ ಸುಮಾರು 5 ಲಕ್ಷ ಮಿಯಾಗಳ( ಬಂಗಾಳಿ ಮಾತನಾಡುವ ಮುಸ್ಲಿಮರು) ಹೆಸರನ್ನು ಅಳಿಸಲಾಗುವುದು’’ ಎಂಬ ಹೇಳಿಕೆಯನ್ನು ಅವರು ಇತ್ತೀಚೆಗೆ ನೀಡಿದ್ದರು. ಅಂದರೆ ಎಸ್ಐಆರ್ನ ಉದ್ದೇಶವೇ ಬಂಗಾಳಿ ಮಾತನಾಡುವ ಮುಸ್ಲಿಮರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಅಳಿಸಿ ಹಾಕುವುದು ಎಂಬರ್ಥದಲ್ಲಿ ಅವರು ಹೇಳಿಕೆ ನೀಡಿದ್ದರು. ಪರಿಷ್ಕರಣೆಗೆ ಮುನ್ನವೇ ಮತದಾರರ ಪಟ್ಟಿಯಿಂದ ಎಷ್ಟು ಲಕ್ಷ ಜನರನ್ನು ಹೊರ ಹಾಕಲಾಗುತ್ತದೆ ಎನ್ನುವುದನ್ನು ಮುಖ್ಯಮಂತ್ರಿ ಘೋಷಿಸಿದ ಮೇಲೆ ಈ ಪ್ರಕ್ರಿಯೆಗೆ ಅರ್ಥವೇನು ಉಳಿಯಿತು? ತಕ್ಷಣವೇ ಇದಕ್ಕೆ ಸ್ಪಷ್ಟೀಕರಣ ನೀಡಿ ತನ್ನ ಮಾನವನ್ನು ಚುನಾವಣಾ ಆಯೋಗ ಉಳಿಸಿಕೊಳ್ಳಬೇಕಾಗಿತ್ತು. ಆದರೆ, ಚುನಾವಣಾ ಆಯೋಗ ಮುಖ್ಯಮಂತ್ರಿ ಶರ್ಮಾ ಅವರ ಹೇಳಿಕೆಯನ್ನು ಮೌನವಾಗಿ ಸಮ್ಮತಿಸಿತು. ಬಂಗಾಳಿ ಮಾತನಾಡುವ ಮುಸ್ಲಿಮರಿಗೆ ತೊಂದರೆ ನೀಡುವುದೇ ನನ್ನ ಉದ್ದೇಶ ಎಂದು ಶರ್ಮಾ ಅವರು ಮಾಧ್ಯಮಗಳಿಗೆ ಸ್ಪಷ್ಟಗೊಳಿಸಿದ ಬಳಿಕವೂ ಅವರ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳಲಾಗಿಲ್ಲ. ಎಸ್ಐರ್ ಪ್ರಕ್ರಿಯೆಯಲ್ಲಿ ಬಂಗಾಳಿ ಮಾತನಾಡುವ ಮುಸ್ಲಿಮರ ವಿರುದ್ಧ ಬಿಜೆಪಿ ಕಾರ್ಯಕರ್ತರು ಐದು ಲಕ್ಷಕ್ಕೂ ಅಧಿಕ ದೂರುಗಳನ್ನು ದಾಖಲಿಸಿದ್ದಾರೆ ಎಂದೂ ಅವರು ಬಳಿಕ ಹೇಳಿದ್ದರು. ಅಂದರೆ ಉದ್ದೇಶಪೂರ್ವಕವಾಗಿ ಅವರ ವಿರುದ್ಧ ದೂರುಗಳನ್ನು ದಾಖಲಿಸಲಾಗಿದೆ ಎನ್ನುವುದನ್ನು ಮುಖ್ಯಮಂತ್ರಿಯೇ ಒಪ್ಪಿಕೊಂಡಿದ್ದಾರೆ. ಎಸ್ಐಆರ್ ಎಂದರೆ ಎನ್ಆರ್ಸಿಯ ಮುಂದುವರಿದ ಭಾಗ ಎನ್ನುವುದನ್ನು ಈ ಮೂಲಕ ದೇಶಕ್ಕೆ ಮನವರಿಕೆ ಮಾಡಿಸಿದ್ದಾರೆ. ಇಷ್ಟಾದರೂ ಈ ದೇಶದ ಸುಪ್ರೀಂಕೋರ್ಟ್ ಶರ್ಮಾ ಹೇಳಿಕೆಗೆ ಜಾಣ ಕಿವುಡುತನವನ್ನು ಪ್ರದರ್ಶಿಸಿದೆ. ಇದೀಗ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ್ವ್ವಾ ಶರ್ಮಾ ಅವರು ರೈಫಲ್ ಹಿಡಿದುಕೊಂಡು ತುಂಬಾ ಹತ್ತಿರದಿಂದ ಮುಸ್ಲಿಮರ ಮೇಲೆ ಗುಂಡು ಹಾರಿಸುತ್ತಿರುವಂತೆ ತೋರಿಸಿರುವ ಎಐ ವೀಡಿಯೊವನ್ನು ಅಲ್ಲಿನ ರಾಜ್ಯ ಬಿಜೆಪಿಯು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದೆ. ‘ಪಾಯಿಂಟ್ ಬ್ಲ್ಯಾಂಕ್ ಶೂಟ್’ ಎಂಬ ಶೀರ್ಷಿಕೆಯೊಂದಿಗೆ ‘ವಿದೇಶಿಗರಿಂದ ಮುಕ್ತ ಅಸ್ಸಾಂ’ ‘ಯಾವುದೇ ಕರುಣೆ ಇಲ್ಲ’ ‘ಬಾಂಗ್ಲಾದೇಶಿಗರಿಗೆ ಕ್ಷಮೆಯೇ ಇಲ್ಲ’ ಇತ್ಯಾದಿ ಅಡಿಬರಹಗಳನ್ನೂ ಈ ವೀಡಿಯೊ ಹೊಂದಿದೆ. ವೀಡಿಯೊ ಬಗ್ಗೆ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದ್ದಂತೆಯೇ ಅದನ್ನು ಅಳಿಸಿ ಹಾಕಲಾಗಿದೆಯಾದರೂ, ಈ ಪ್ರಚೋದನೆಯ ಉದ್ದೇಶ ಸ್ಪಷ್ಟವಾಗಿದೆ. ಅಸ್ಸಾಮಿನಲ್ಲಿ ಬೃಹತ್ ಹತ್ಯಾಕಾಂಡವೊಂದರ ತಯಾರಿ ನಡೆಯುತ್ತಿರುವುದನ್ನು ಇದು ಜಗತ್ತಿಗೆ ಸ್ಪಷ್ಟ ಪಡಿಸಿದೆ. ಈ ಹಿಂದೆ ಮಣಿಪುರದಲ್ಲಿ ಹೇಗೆ ಬಿಜೆಪಿ ನೇತೃತ್ವದಲ್ಲೇ ಭಾರೀ ಹತ್ಯಾಕಾಂಡಕ್ಕೆ ಯೋಜನೆಗಳು ಸಿದ್ಧವಾಯಿತೋ ಅಂತಹದೇ ಸಂಚೊಂದು ಅಸ್ಸಾಮಿನಲ್ಲಿ ನಡೆಯುತ್ತಿದೆ ಎನ್ನುವ ಸೂಚನೆಯನ್ನು ಈ ವೀಡಿಯೊ ಮೂಲಕ ನೀಡಲಾಗಿದೆ. ‘ನರಮೇಧವೊಂದಕ್ಕೆ’ ಈ ರೀತಿ ಮುಖ್ಯಮಂತ್ರಿಯೇ ಬಹಿರಂಗ ಕರೆ ನೀಡಿದ್ದರೂ ಅವರ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳಲಾಗಿಲ್ಲ. ಇದು ಈಶಾನ್ಯ ಭಾರತವನ್ನು ಇನ್ನಷ್ಟು ಭೀಕರ ಸ್ಥಿತಿಗೆ ತಳ್ಳಲಿದೆ ಮಾತ್ರವಲ್ಲ, ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಭಾರತದ ಸ್ಥಿತಿಯನ್ನು ಇನ್ನಷ್ಟು ದಯನೀಯವಾಗಿಸಲಿದೆ. ಶರ್ಮಾ ಕೃತ್ಯದಿಂದ ಅಸ್ಸಾಮಿನಿಂದ ಮುಸ್ಲಿಮರನ್ನು ಒದ್ದೋಡಿಸಲು ಸಾಧ್ಯವಾಗುತ್ತದೆಯೋ ಇಲ್ಲವೋ ಎನ್ನುವುದು ಆನಂತರದ ಮಾತು, ಆದರೆ, ಅಸ್ಸಾಮನ್ನು ಹಿಂಸೆಗೆ ಬಲಿಕೊಡುವ ಮಾತುಗಳು ಪರೋಕ್ಷವಾಗಿ ಚೀನಾ, ಬಾಂಗ್ಲಾ, ಪಾಕಿಸ್ತಾನಗಳ ಪಾಲಿಗಂತೂ ಹಿತವಾದ ವಿಷಯವಾಗಿದೆ. ‘ಬಂಗಾಳಿ ಮುಸ್ಲಿಮ್’ ತನ್ನ ಗುರಿ ಎಂದು ಹೇಳುತ್ತಿದ್ದರೂ ಶರ್ಮಾ ಅಸ್ಸಾಮಿನಲ್ಲಿರುವ ಎಲ್ಲ ಮುಸ್ಲಿಮರನ್ನೂ ಗುರಿ ಮಾಡಿಕೊಂಡಿದ್ದಾರೆ ಎನ್ನುವುದು ಅವರ ಕೃತ್ಯಗಳಿಂದ ಸ್ಪಷ್ಟವಾಗುತ್ತದೆ. ಶೇ. 35ರಷ್ಟು ಮುಸ್ಲಿಮರು ಅಸ್ಸಾಮಿನಲ್ಲಿದ್ದು ಇವರಲ್ಲಿ ಅಸ್ಸಾಮಿ ಮುಸ್ಲಿಮರು, ಬಂಗಾಳಿ ಮಾತನಾಡುವ ಮುಸ್ಲಿಮರು ಮತ್ತು ಮಿಯಾ ಮುಸ್ಲಿಮರು ಎಂದು ವಿಂಗಡಿಸಲಾಗುತ್ತದೆ. ಬಾಂಗ್ಲಾ ವಿಭಜನೆಯ ಸಂದರ್ಭದಲ್ಲಿ ದೊಡ್ಡ ಮಟ್ಟದ ಮುಸ್ಲಿಮರು ಅಸ್ಸಾಮಿಗೆ ವಲಸೆ ಬಂದರು ಎನ್ನುವುದು ಬಲಪಂಥೀಯ ಸಂಘಟನೆಗಳ ಆರೋಪವಾಗಿದೆ. ಇವರು ಅಸ್ಸಾಮಿನ ಸಂಪತ್ತನ್ನು ದೋಚುತ್ತಿದ್ದಾರೆ ಎನ್ನುವುದು ಮತ್ತೊಂದು ಆರೋಪ. ಆದರೆ, ಅಸ್ಸಾಮಿನ ಮುಸ್ಲಿಮರ ಜೀವನ ಮಟ್ಟ ಅತ್ಯಂತ ದಯನೀಯವಾಗಿದೆ ಮಾತ್ರವಲ್ಲ, ಕಳೆದ ಒಂದು ದಶಕದಲ್ಲಿ ಸರಕಾರದ ನೀತಿಗಳು ಇವರ ಮನೆಮಠಗಳನ್ನು ಕಿತ್ತುಕೊಳ್ಳುವಲ್ಲಿ ಯಶಸ್ವಿಯಾಗುತ್ತಿವೆ. ಸುಮಾರು ಐದು ದಶಕಗಳಿಗೂ ಅಧಿಕ ಸಮಯದಿಂದ ಬಾಳಿ ಬದುಕುತ್ತಾ ಬಂದವರನ್ನು ಎನ್ಆರ್ಸಿಯ ಮೂಲಕ ಪೌರತ್ವ ಕಿತ್ತು ಅವರನ್ನು ‘ನುಸುಳುಕೋರರನ್ನಾಗಿ’ ಪರಿವರ್ತಿಸಲಾಯಿತು. ಸುಮಾರು 15 ಲಕ್ಷ ಜನರ ಕೈಯಿಂದ ಪಡಿತರವನ್ನು ಕಿತ್ತುಕೊಳ್ಳಲಾಯಿತು. ಇವರೆಲ್ಲರೂ ದಿನಗೂಲಿ ಕಾರ್ಮಿಕರು ಎನ್ನುವುದು ಗಮನಾರ್ಹವಾಗಿದೆ. ಮುಸ್ಲಿಮರನ್ನು ಅಕ್ರಮವಾಗಿ ಬಂಧಿಸುವುದಕ್ಕಾಗಿಯೇ ಬಾಲ್ಯವಿವಾಹ ಕಾಯ್ದೆಯನ್ನು ದುರ್ಬಳಕೆ ಮಾಡಿತು. 4,000ಕ್ಕೂ ಅಧಿಕ ಮಂದಿಯನ್ನು ಬಾಲ್ಯ ವಿವಾಹ ಕಾಯ್ದೆಯಡಿಯಲ್ಲಿ ಸಾಮೂಹಿಕವಾಗಿ ಬಂಧಿಸಿದ ಹೆಗ್ಗಳಿಕೆ ಅಸ್ಸಾಂ ಸರಕಾರಕ್ಕೆ ಸೇರಬೇಕು. ಅಷ್ಟೇ ಅಲ್ಲ, ನೂರಾರು ಮಂದಿಯ ವಿರುದ್ಧ ಪೋಕ್ಸೋ ಕಾಯ್ದೆಯನ್ನು ಬಳಸಿತು. ಮುಸ್ಲಿಮರು ಅಸಾಮಿನಲ್ಲಿ ಉಳಿಯುವುದಕ್ಕೆ ಪರಿಹಾರವೊಂದನ್ನು ಕೂಡ ಶರ್ಮಾ ಅವರೇ ಸೂಚಿಸಿದ್ದಾರೆ. ‘‘ಮೂಲ ಅಸ್ಮಿತೆಗೆ ಮರಳಿದರೆ ಮುಸ್ಲಿಮರಿಗೆ ಮೂಲನಿವಾಸಿ ಸ್ಥಾನಮಾನ ನೀಡಲಾಗುವುದು’’ ಎಂದು ಎರಡು ವರ್ಷಗಳ ಹಿಂದೆ ಸದನದಲ್ಲಿ ಹೇಳಿಕೆ ನೀಡಿದ್ದರು. ನಿಜಕ್ಕೂ ಅಸ್ಸಾಮನ್ನು ದೋಚುತ್ತಿರುವುದು ಈ ಬಡಕಾರ್ಮಿಕರಲ್ಲ, ಬದಲಿಗೆ ಮುಖ್ಯಮಂತ್ರಿ ಶರ್ಮಾ ಕುಟುಂಬ ಎನ್ನುವುದು ಇತ್ತೀಚೆಗೆ ತನಿಖಾ ವರದಿಯೊಂದು ಬಹಿರಂಗ ಪಡಿಸಿದೆ. ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರ ಕುಟುಂಬ ಅಸ್ಸಾಮಿನಾದ್ಯಂತ 3,960 ಎಕರೆಗೂ ಅಧಿಕ ಭೂಮಿಯನ್ನು ಕಬಳಿಸಿದೆ ಎನ್ನುವ ಆರೋಪ ಕೇಳಿ ಬರುತ್ತಿದೆ. ಶರ್ಮಾ ಕುಟುಂಬ 17 ಕಂಪೆನಿಗಳ ಒಡೆತನವನ್ನು ಹೊಂದಿದ್ದು ಸಾವಿರಾರು ಕೃಷಿ ಭೂಮಿಗಳನ್ನು ಕೈಗಾರಿಕಾ ಭೂಮಿಯನ್ನಾಗಿ ಪರಿವರ್ತಿಸಿ ಕೈವಶ ಮಾಡಿಕೊಂಡಿವೆ ಎಂದು ವಿರೋಧ ಪಕ್ಷಗಳು ದೂರುತ್ತಿವೆ. ಯೋಜನೆಗಳ ಗುತ್ತಿಗೆದಾರರಿಂದ ಬೃಹತ್ ಲಂಚಗಳನ್ನು ಪಡೆಯುತ್ತಾ ಇಡೀ ಅಸ್ಸಾಮನ್ನೇ ಮಾರಾಟ ಮಾಡುತ್ತಿದ್ದಾರೆ. ನಿಜಕ್ಕೂ ಅಸ್ಸಾಮಿಗೆ ಅಪಾಯವಿರುವುದು ಬಂಗಾಳಿ ಮಾತನಾಡುವ ಮಿಯಾಗಳಿಂದಲ್ಲ, ಈ ಶರ್ಮಾ ಮತ್ತು ಅವರ ಬಳಗದಿಂದ ಎನ್ನುವುದು ಜನರಿಗೂ ಮನವರಿಕೆಯಾಗುತ್ತಿದೆ. ಆ ಆತಂಕದಿಂದ ಶರ್ಮಾ ದ್ವೇಷವನ್ನು ಉಗುಳುತ್ತಾ ತನ್ನನ್ನು ತಾನು ಉಳಿಸಿಕೊಳ್ಳುವ ಪ್ರಯತ್ನ ನಡೆಸುತ್ತಿದ್ದಾರೆ. ಈ ಶರ್ಮಾರನ್ನು ಸೇರಿಸಬೇಕಾದ ಸ್ಥಳಕ್ಕೆ ಸೇರಿಸಿ ಅಸ್ಸಾಮನ್ನು ರಕ್ಷಿಸುವುದು ಇಂದಿನ ತುರ್ತು ಅಗತ್ಯವಾಗಿದೆ.
ನೀಟ್-ಪಿಜಿ ಕಟ್ಆಫ್ : ಒಂದಂಕಿ ಅಂಕಕ್ಕೂ ಉನ್ನತ ವೈದ್ಯಕೀಯ ಸೀಟ್!
ಹೊಸದಿಲ್ಲಿ: ನೀಟ್-ಪಿಜಿ ಅರ್ಹತಾ ಮಾನದಂಡವನ್ನು ಗಣನೀಯವಾಗಿ ಇಳಿಕೆ ಮಾಡಿರುವ ಕಾರಣದಿಂದ ಅಗ್ರಗಣ್ಯ ಅತ್ಯಧಿಕ ಅಪಾಯ ಸಾಧ್ಯತೆಯ ವೈದ್ಯಕೀಯ ವಿಶೇಷ ಪರಿಣತಿ ಕ್ಷೇತ್ರಗಳಲ್ಲೂ ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಸ್ನಾತಕೋತ್ತರ ಪದವಿ ಸೀಟುಗಳು ತೀರಾ ಕಡಿಮೆ ಅಂಕ ಪಡೆದವರಿಗೂ ಲಭ್ಯವಾಗಿರುವುದು ವೈದ್ಯಕೀಯ ಕ್ಷೇತ್ರದಲ್ಲಿ ತೀವ್ರ ಆತಂಕಕ್ಕೆ ಕಾರಣವಾಗಿದೆ. ಮೂರನೇ ಸುತ್ತಿನ ಪಿಜಿ ಕೌನ್ಸಿಲಿಂಗ್ ನಲ್ಲಿ ಒಂದಂಕಿ ಅಥವಾ ಎರಡಂಕಿಯ ಅಂಕಗಳನ್ನು ಗಳಿಸಿದ ಅಭ್ಯರ್ಥಿಗಳು ಕೂಡಾ ಸರ್ಕಾರಿ ಕಾಲೇಜುಗಳಲ್ಲಿ ಕ್ಲಿನಿಕಲ್ ಹಾಗೂ ನಾನ್-ಕ್ಲಿನಿಕಲ್ ಸೀಟುಗಳನ್ನು ಪಡೆದಿದ್ದಾರೆ. ಅಗ್ರಗಣ್ಯ ಸಂಸ್ಥೆಗಳಲ್ಲಿ ಕೂಡಾ ಪ್ರಮುಖ ಕ್ಲಿನಿಕಲ್ ಶಾಖೆಗಳಲ್ಲಿ ಅಭ್ಯರ್ಥಿಗಳಿಗೆ ಇಂಥ ಸೀಟುಗಳು ಹಂಚಿಕೆಯಾಗಿವೆ. ರೋಹ್ಟಕ್ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಎಂಎಸ್-ಆರ್ಥೊಪೆಡಿಕ್ ಸೀಟು 800 ಅಂಕಗಳ ಪೈಕಿ 4 ಅಂಕ ಲಭಿಸಿದವರಿಗೂ ದಕ್ಕಿದೆ. ದೆಹಲಿಯ ಪ್ರಮುಖ ವೈದ್ಯಕೀಯ ಕಾಲೇಜುಗಳಲ್ಲಿ ಪ್ರಸೂತಿ ಮತ್ತು ಸ್ತ್ರೀರೋಗ ಶಾಸ್ತ್ರ ಸ್ನಾತಕೋತ್ತರ ಪದವಿ ಸೀಟು 44 ಅಂಕ ಗಳಿಸಿದ ಅಭ್ಯರ್ಥಿಗೆ ಸಿಕ್ಕಿದೆ. 47 ಅಂಕ ಪಡೆದ ಅಭ್ಯರ್ಥಿ ಸಾಮಾನ್ಯ ಶಸ್ತ್ರಚಿಕಿತ್ಸೆ ವಿಭಾಗದಲ್ಲಿ ಸೀಟು ಗಿಟ್ಟಿಸಿಕೊಂಡಿದ್ದಾರೆ. ಈ ಬೆಳವಣಿಗೆ ವೈದ್ಯಕೀಯ ಶಿಕ್ಷಣದ ಕುಸಿತಕ್ಕೆ ಮತ್ತು ಶ್ರಮಶಕ್ತಿ ಯೋಜನೆ ಕುಸಿತ ಕಾರಣದ ಸಂಕೇತ ಎಂದು ಸರ್ಕಾರಿ ಕಾಲೇಜಿನ ಹಿರಿಯ ಬೋಧಕ ಸಿಬ್ಬಂದಿಯೊಬ್ಬರು ಆತಂಕ ವ್ಯಕ್ತಪಡಿಸಿದ್ದಾರೆ. ಎಲುಬು ಮತ್ತು ಕೀಲುಶಾಸ್ತ್ರ, ಅತ್ಯಧಿಕ ಬೇಡಿಕೆಯ ಶಸ್ತ್ರಚಿಕಿತ್ಸಾ ಕ್ಷೇತ್ರವಾಗಿದೆ. ಶೂನ್ಯಕ್ಕೆ ಸನಿಹ ಇರುವಂಥ ವಿದ್ಯಾರ್ಥಿಗಳ ಸೇರ್ಪಡೆಯು ದುರ್ಬಲ ವಿದ್ಯಾರ್ಥಿಗಳ ಸಂಕೇತವಾಗಿರುವ ಜತೆಗೆ ಇಡೀ ವ್ಯವಸ್ಥೆ ತೀವ್ರ ಹದಗೆಡಲು ಕಾರಣವಾಗುತ್ತದೆ ಎಂದು ಅವರು ವಿಶ್ಲೇಷಿಸಿದ್ದಾರೆ. ಕೇಂದ್ರ ಆರೋಗ್ಯ ಸಚಿವಾಲಯ 2025-26ನೇ ಶೈಕ್ಷಣಿಕ ವರ್ಷಕ್ಕೆ ನೀಟ್-ಪಿಜಿ ಅರ್ಹತಾ ಮಾನದಂಡವನ್ನು ಗಣನೀಯವಾಗಿ ಕಡಿಮೆ ಮಾಡಿ ಕಟಾಫ್ ಅಂಕಗಳನ್ನು ಕೆಲ ವರ್ಗಗಳಲ್ಲಿ ಋಣಾತ್ಮಕ ಅಂಕಕ್ಕೂ ಇಳಿಸಿರುವುದರಿಂದ ಈ ಸೀಟು ಹಂಚಿಕೆ ಆತಂಕಕ್ಕೆ ಕಾರಣವಾಗಿದೆ.
ಭಾರತ-ಅಮೆರಿಕ ವ್ಯಾಪಾರ ಒಪ್ಪಂದಿಂದ ದೇಶದ ಡೈರಿ ವಲಯದಲ್ಲಿ ಕಳವಳ; ಅಮುಲ್ ಅಭಯವೇನು?
ಭಾರತ ಮತ್ತು ಅಮೆರಿಕ ನಡುವಿನ ದ್ವಿಪಕ್ಷೀಯ ವ್ಯಾಪಾರ ಒಪ್ಪಂದ ಜಾರಿಯಾಗುತ್ತಿದ್ದಂತೇ, ದೇಶದ ಡೈರಿ ವಲಯದ ರೈತರಲ್ಲಿ ಆತಂಕ ಶುರುವಾಗಿದೆ. ಅಮೆರಿಕದ ಡೈರಿ ಉತ್ಪನ್ನಗಳು ಭಾರತದ ಮಾರುಕಟ್ಟೆಗೆ ಹೆಚ್ಚಿನ ಪ್ರವೇಶ ಪಡೆಯಲಿದೆ ಎಂಬ ಚರ್ಚೆಗಳು ಈ ಆತಂಕಕ್ಕೆ ಕಾರಣವಾಗಿದೆ. ಈ ಬಗ್ಗೆ ಅಮುಲ್ ವ್ಯವಸ್ಥಾಪಕ ನಿರ್ದೇಶಕ ಜಯನ್ ಮೆಹ್ತಾ ಅವರು ರೈತರಿಗೆ ಅಭಯ ನೀಡಿದ್ದು, ವ್ಯಾಪಾರ ಒಪ್ಪಂದವು ದೇಶದ ಕೃಷಿ ವಲಯವನ್ನು ಬಲಪಡಿಸುತ್ತದೆ ಎಂದು ಹೇಳಿದ್ದಾರೆ. ಈ ಕುರಿತು ಇಲ್ಲಿದೆ ಮಾಹಿತಿ.
KEA: ಪಿಜಿ ನೀಟ್ 2025 ಸೀಟು ಹಂಚಿಕೆ, ಫಾರ್ಮಾ ಕೋರ್ಸ್ಗಳ ಅಪ್ಡೇಟ್ ನೀಡಿದ ಕೆಇಎ
ಬೆಂಗಳೂರು: ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ- ಸ್ನಾತಕೋತ್ತರ (PGNEET 2025) ವೈದ್ಯಕೀಯ ಕೋರ್ಸ್ಗಳಿಗೆ ಸಂಬಂಧಿಸಿದಂತೆ ಸೀಟು ಹಂಚಿಕೆ ಹಾಗೂ ಎಂ ಫಾರ್ಮಾ ಮತ್ತು ಡಿ ಫಾರ್ಮಾ ಕೋರ್ಸ್ಗಳಿಗೆ ಸಂಬಂಧಿಸಿದಂತೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಮಹತ್ವದ ಅಪ್ಡೇಟ್ ನೀಡಿದೆ. ಪಿಜಿ ನೀಟ್ 2025 ಸ್ನಾತಕೋತ್ತರ ವೈದ್ಯಕೀಯ ಕೋರ್ಸ್ ಗಳಿಗೆ 3ನೇ ಸುತ್ತಿನ ಸೀಟು ಹಂಚಿಕೆಗೆ ಆಪ್ಷನ್ಸ್
Pm Kissan Samman Nidhi: ಕೇಂದ್ರ ಸರ್ಕಾರವು ಪರಿಚಯಿಸುವ ಪ್ರಮುಖ ಯೋಜನೆಗಳಲ್ಲಿ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಸಹ ಪ್ರಮುಖವಾಗಿದೆ. ಇದು ದೇಶದ ಲಕ್ಷಾಂತರ ಜನ ರೈತರಿಗೆ ಆರ್ಥಿಕವಾಗಿ ನೆರವಾಗಿದೆ. ಭಾರತವು ಕೃಷಿ ಪ್ರಧಾನ ದೇಶವಾಗಿದ್ದು, ಇಂದಿಗೂ ಕೋಟ್ಯಾಂತರ ಜನ ಕೃಷಿಯನ್ನೇ ಅವಲಂಬಿಸಿದ್ದಾರೆ. ಇದೀಗ ಭಾರತದ ರೈತರು ಪಿಎಂ ಕಿಸಾನ್ ಸಮ್ಮಾನ್ ನಿಧಿಯ 22ನೇ ಕಂತಿನ
ಬೆಳಗಾವಿಗೆ ಕಾಲಿಡದ ಪ್ರಸಿದ್ಧ ಕಂಪೆನಿಗಳು! ಭೂಮಿ ಅಲಭ್ಯತೆಯಿಂದ ಕೈತಪ್ಪಿದ ಉದ್ಯೋಗಾವಕಾಶ
ಕೈಗಾರಿಕಾ ಅಭಿವೃದ್ಧಿ ಪ್ರಾಧಿಕಾರ ಬೆಳಗಾವಿಯಲ್ಲಿ 1ಸಾವಿರ ಎಕರೆ ಲ್ಯಾಂಡ್ ಬ್ಯಾಂಕ್ ಸ್ಥಾಪಿಸುವುದಾಘಿ 2024 ರಲ್ಲಿ ಘೋಷಣೆ ಮಾಡಿದ್ರೂ ಇಂದಿಗೂ ಕೈಗಾರಿಕೆಗಳಿಗೆ ಬೇಕಾದ ಭೂಮಿ ದೊರಕಿಸಲು ಸಾಧ್ಯವಾಗಿಲ್ಲ. ಇದರಿಂದ ದೊಡ್ಡ ಕಂಪನಿಗಳೆಲ್ಲ ಬೆಳಗಾವಿ ಬಿಟ್ಟು ಹೊರನಡೆಯುವಂತಾಗಿದೆ, ಇದರಿಂದ ಉದ್ಯೋಗ ಅವಕಾಶಗಳೂ ಜಿಲ್ಲೆ ಜನರ ಕೈತಪ್ಪಿವೆ.
ಕಳೆದ ವರ್ಷದ ಬಜೆಟ್ನಲ್ಲಿ ಘೋಷಣೆಯಾದ ನಿಮ್ಹಾನ್ಸ್ ಆಸ್ಪತ್ರೆಗೆ ಈಗಾಗಲೇ ಜಾಗ ಗುರತಿಸಿದ್ದು ಶೀಘ್ರ ಕಾರ್ಯಾರಂಭ ಆಗಲಿದೆ. 100 ಕೋಟಿ ವೆಚ್ಚದಲ್ಲಿ ನಿರ್ಮಾಣ ಆಗಲಿರುವ ಆಸ್ಪತ್ರೆಯಿಂದ ಅಪಘಾತ ಸಂದರ್ಭದಲ್ಲಿ ತಲೆಗೆ ಸಂಬಂಧಿಸಿದ ತುರ್ತು ಚಿಕಿತ್ಸೆಗಾಗಿ ಾನುಕೂಲ ಆಗಲಿದೆ. ಇದರಿಂದ ಬೆಂಗಳೂರು ನಿಮ್ಹಾನ್ಸ್ಆಸ್ಪತ್ರೆ ಮೇಲಿನ ಒತ್ತಡವೂ ಕಡಿಮೆ ಆಗಲಿದೆ.
'ಸ್ವಾತಂತ್ರ್ಯವೀರ ವಿ.ಡಿ. ಸಾವರ್ಕರ್ ಅವರಿಗೆ ಇದುವರೆಗೂ ಮರಣೋತ್ತರ ಭಾರತ ರತ್ನ ಪ್ರಶಸ್ತಿ ಏಕೆ ಘೋಷಿಸಿಲ್ಲ ಎಂದು ಯಾರಾದರೂ ನನ್ನನ್ನು ಕೇಳಿದರೆ, ನಾನು ಆಯ್ಕೆ ಸಮಿತಿ ಸದಸ್ಯ ಅಲ್ಲ ಎಂನಬ ಉತ್ತರ ನೀಡುತ್ತೇನೆ. ಆದರೆ ಯಾರಾದರೂ ಸದಸ್ಯ ನನಗೆ ಸಿಕ್ಕರೆ, ಖಂಡಿತ ಈ ಕುರಿತು ನಾನು ಅವರನ್ನು ಪ್ರಶ್ನಿಸುತ್ತೇನೆ.. ಇದು ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರ ಸ್ಪಷ್ಟನುಡಿ. ಸಾವರ್ಕರ್ ಅವರಿಗೆ ಭಾರತ ರತ್ನ ನೀಡುವುದರಿಂದ, ಆ ಪ್ರಶಸ್ತಿಯ ಘನತೆ ಹೆಚ್ಚುತ್ತದೆ ಎಂದು ಮೋಹನ್ ಭಾಗವತ್ ಹೇಳಿದ್ದಾರೆ.
Weather Alert: ಕರ್ನಾಟಕದಲ್ಲಿ ಹೆಚ್ಚಲಿದೆ ಗರಿಷ್ಠ ತಾಪಮಾನ, ಫೆ. 15ರ ವರೆಗಿನ ಹವಾಮಾನ ಮುನ್ಸೂಚನೆ
ಬೆಂಗಳೂರು: ಕರ್ನಾಟಕ ರಾಜ್ಯದಲ್ಲಿ ಚಳಿ ವಾತಾವರಣ ಮರೆಯಾಗಿ ಉಷ್ಣ ಅಲೆಯ ವಾತಾವರಣ ನಿರ್ಮಾಣವಾಗುತ್ತಿದೆ. ಒಂದೆರಡು ಕಡೆಗಳಲ್ಲಿ ಕನಿಷ್ಠ ತಾಪಮಾನದಲ್ಲಿ ಇಳಿಕೆ ಆಗಿದ್ದು ಬಿಟ್ಟರೆ ರಾಜ್ಯದಲ್ಲಿ ಬಹುತೇಕ ಕಡೆಗಳಲ್ಲಿ ಗರಿಷ್ಠ ತಾಪಮಾನ ಹಾಗೂ ಶಾಖದ ಅಲೆಯೇ ಮೇಲುಗೈ ಸಾಧಿಸುವ ಲಕ್ಷಣಗಳು ಕಂಡು ಬಂದಿವೆ. ಮುಂದಿನ ಒಂದು ವಾರ ಬೆಂಗಳೂರು ಸೇರಿದಂತೆ ರಾಜ್ಯದ ವಾತಾವರಣ ಹೇಗಿರಲಿದೆ? ಎಂಬ ಮುನ್ಸೂಚನೆ ಇಲ್ಲಿದೆ.
ಮಂಗಳೂರಿಗೆ ಬೆಂಗಳೂರಿಂದ ನಾಲ್ಕಾರು ರೈಲುಗಳಿದ್ದರೂ, ದಕ್ಷಿಣ ಕನ್ನಡದ ಪ್ರಸಿದ್ಧ ಯಾತ್ರಾ ಸ್ಥಳಗಳಿರುವ ಬೆಳ್ತಂಗಡಿಗೆ ಮಾತ್ರ ರೈಲು ಸಂಪರ್ಕವಿಲ್ಲ. ಬಂಟ್ವಾಳವೇ ಕೊನೇ ನಿಲ್ದಾಣವಾಗಿದ್ದು, ಜನ ರೈಲ್ವೇ ನಿಲ್ದಾಣಕ್ಕೆ ಬರಲು 50 ಕಿ.ಮೀ ದೂರ ಕ್ರಮಿಸಬೇಕಾಗಿದೆ. ಕರಾವಳಿ ಜಿಲ್ಲೆಗಳಿಗೆ ಹೊಸ ರೈಲು ಮಾರ್ಗ ಬಂದು 25 ವರ್ಷಗಳೇ ಕಳೆದಿವೆ. ಸುಬ್ರಹ್ಮಣ್ಯ- ಧರ್ಮಸ್ಥಳ-ಕೊಲ್ಲೂರು ಮಾರ್ಗದ ಸರ್ವೇ ನಡೆದು ಬಳಿಕ ಏನಾಯ್ತು, ರೈಲು ಮಾರ್ಗದ ಅಗತ್ಯಗಳೇನು ಎಂಬ ವಿವರ ಇಲ್ಲಿದೆ ನೋಡಿ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ರಾಗಿ ಖರೀದಿಗೆ ಗೋಣಿಚೀಲ ಸಮಸ್ಯೆ; ಸರ್ಕಾರ ಕಣ್ತೆರೆದರೆ ಇರದು ಅವಸ್ಥೆ
ಜ.1ರಿಂದ ರಾಗಿ ಖರೀದಿಸುವುದಾಗಿ ಹೇಳಿದ್ದ ರಾಜ್ಯ ಸರ್ಕಾರ, ಫೆಬ್ರವರಿ ಬಂದರೂ ಖರೀದಿ ಪ್ರಕ್ರಿಯೆಯನ್ನು ಆರಂಭಿಸಿಲ್ಲ. ಈ ಮಧ್ಯೆ ಗೋಣಿ ಚೀಲದ ಸಮಸ್ಯೆಯಿಂದಾಗಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ರಾಗಿ ಖರೀದಿ ಪ್ರಕ್ರಿಯೆ ವಿಳಂಬವಾಗುತ್ತಿದೆ ಎಂದು ರೈತರು ಆಕ್ರೋಶ ಹೊರಹಾಕಿದ್ದಾರೆ. ರಾಗಿ ಕೇಂದ್ರದ ಅಲಭ್ಯತೆ ಕೂಡ ರಾಗಿ ಶೇಖರಣೆಯ ಸವಾಲುಗಳನ್ನು ಮುಂದಿಟ್ಟಿದೆ. ಅಲ್ಲದೇ ಖರೀದಿಗಾಗಿ ಆರಂಭಿಸಲಾಗಿದ್ದ ನೋಂದಣಿ ಪ್ರಕ್ರಿಯೆ ನಿಲ್ಲಿಸಿರುವುದು, ರಾಗಿ ಬೆಳೆಗಾರರಿಗೆ ಸಂಕಷ್ಟ ತಂದಿದೆ. ಈ ಕುರಿತು ಇಲ್ಲಿದೆ ಹೆಚ್ಚಿನ ಮಾಹಿತಿ.
ಪೀಣ್ಯ ಕೈಗಾರಿಕೆಗಳಿಗೆ ಶೀಘ್ರ ಸಂಸ್ಕರಿಸಿದ ನೀರು ಪೂರೈಕೆಗೆ ಜಲಮಂಡಳಿ ನಿರ್ಧಾರ; ನೀರಿನ ಮರುಬಳಕೆಗೆ ಕ್ರಮ
ನೀರು ಮರುಬಳಕೆ ಮತ್ತು ನೀರಿನ ಉಳಿತಾಯ ದೃಷ್ಟಿಯಿಂದ ರಾಜಧಾನಿ ಬೆಂಗಳೂರಿನ ಪೀಣ್ಯದಲ್ಲಿರುವ ಕೈಗಾರಿಕೆಗಳಿಗೆ, ಸಂಸ್ಕರಿಸಿದ ನೀರು ಸರಬರಾಜು ಮಾಡುವ ಯೋಜನೆಯನ್ನು ಬೆಂಗಳೂರು ಜಲಮಂಡಳಿ ಪ್ರಕಟಿಸಿದೆ. ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಉದ್ಭವವಾಗದಿರಲಿ ಎಂಬ ಕಾರಣಕ್ಕೆ, ಜಲಮಂಡಳಿ ಈ ನಿರ್ಧಾರವನ್ನು ಪ್ರಕಟಿಸಿದೆ ಎಂದು ಹೇಳಲಾಗಿದೆ. ಪೀಣ್ಯ ಕೈಗಾರಿಕಾ ಪ್ರದೇಶಕ್ಕೆ 4 ಎಂಎಲ್ಡಿಯಷ್ಟು ಸಂಸ್ಕರಿಸಿದ ನೀರನ್ನು ಪೂರೈಸಲು, ರಾಜ್ಯ ಸರ್ಕಾರ ಅನುಮತಿ ನೀಡಿದೆ ಎಂದು ಹೇಳಲಾಗಿದೆ. ಈ ಕುರಿತು ಇಲ್ಲಿದೆ ಹೆಚ್ಚಿನ ಮಾಹಿತಿ.
ಅಂತೂ ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (ಬಿಎಂಆರ್ಸಿಎಲ್) ನಮ್ಮ ಮೆಟ್ರೋ ದರ ಏರಿಕೆ ಮಾಡುವ ತನ್ನ ನಿರ್ಧಾರದಿಂದ ಹಿಂದೆ ಸರಿದಿದೆ. ಈ ವಿಚಾರವಾಗಿ ಸಾರ್ವಜನಿಕ ಜಾಗೃತಿ ಅಭಿಯಾನ ನಡೆಸುತ್ತಿದ್ದ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ, ದರ ಏರಿಕೆ ಹಿಂಪಡೆಯುವ ನಿರ್ಧಾರವನ್ನು ಸ್ವಾಗತಿಸಿದ್ದಾರೆ. ಕೆಲವು ದಿನಗಳಿಂದ ಮೆಟ್ರೋ ಪ್ರಯಾಣಿಕರೊಂದಿಗೆ ನಿರಂತರವಾಗಿ ಸಂವಾದ ನಡೆಸುತ್ತಿದ್ದ ಅವರು, ಮೆಟ್ರೋ ದರ ಏರಿಕೆ ಸ್ಥಗಿತವನ್ನು ಜನರ ಹೋರಾಟಕ್ಕೆ ಸಂದ ಜಯ ಎಂದು ಬಣ್ಣಿಸಿದ್ದಾರೆ.
ಶೀಘ್ರದಲ್ಲೆ ರಾಜ್ಯದ ಜನತೆಗೆ ವಿದ್ಯುತ್ ದರ ಏರಿಕೆ ಬಿಸಿ ಸಾಧ್ಯತೆ?
ಬೆಂಗಳೂರು : ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಸಂಕಷ್ಟಕ್ಕೆ ಸಿಲುಕಿರುವ ರಾಜ್ಯದ ಜನ ಸಾಮಾನ್ಯರಿಗೆ, ಶೀಘ್ರದಲ್ಲೇ ವಿದ್ಯುತ್ ದರ ಏರಿಕೆ ಬಿಸಿಯೂ ತಟ್ಟುವ ಸಾಧ್ಯತೆಗಳಿವೆ. ವಿದ್ಯುತ್ ಪೂರೈಕೆ ಕಂಪೆನಿಗಳು ನಷ್ಟದ ಸುಳಿಗೆ ಸಿಲುಕಿದ್ದು, ಆದಾಯವನ್ನು ಸರಿದೂಗಿಸಲು ವಿದ್ಯುತ್ ದರ ಏರಿಕೆ ಮಾಡುವಂತೆ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣಾ ಆಯೋಗಕ್ಕೆ ಎಸ್ಕಾಂಗಳು ಪ್ರಸ್ತಾವನೆ ಸಲ್ಲಿಸಿವೆ. ಪ್ರತಿ ಯೂನಿಟ್ಗೆ 1 ರೂ.ನಂತೆ ವಿದ್ಯುತ್ ದರ ಏರಿಕೆ ಮಾಡಬೇಕು ಎಂದು ಮನವಿ ಮಾಡಿವೆ ಎಂದು ಗೊತ್ತಾಗಿದೆ. ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗಕ್ಕೆ ಎಸ್ಕಾಂಗಳು ಪ್ರಸ್ತಾವನೆ ಸಲ್ಲಿಸಿದ್ದು, ಸಾರ್ವಜನಿಕ ವಿಚಾರಣೆಯ ನಂತರ ಅಂತಿಮ ನಿರ್ಧಾರ ಕೈಗೊಳ್ಳಲಾಗುತ್ತದೆ. ಪ್ರತಿ ಯೂನಿಟ್ಗೆ 8 ರಿಂದ 10 ಪೈಸೆಗಳಷ್ಟು ಇರಬಹುದು ಎಂದು ಅಂದಾಜಿಸಲಾಗಿದೆ. ಎಪ್ರಿಲ್ 1 ರಿಂದ ಪರಿಷ್ಕೃತ ದರ ಜಾರಿಗೆ ಬರುವ ಸಾಧ್ಯತೆ ಇದ್ದು, ಕೈಗಾರಿಕೆ, ವಾಣಿಜ್ಯ ಮತ್ತು ಗೃಹ ಬಳಕೆದಾರರ ಮೇಲೆ ಪರಿಣಾಮ ಬೀರುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.
Mandya | ನೇಣುಬಿಗಿದ ಸ್ಥಿತಿಯಲ್ಲಿ ತಾಯಿ, ಮಗಳ ಮೃತದೇಹ ಪತ್ತೆ
ಮಂಡ್ಯ : ಮಳವಳ್ಳಿ ತಾಲೂಕಿನ ದಳವಾಯಿ ಕೋಡಿಹಳ್ಳಿ ಗ್ರಾಮದಲ್ಲಿ ತಾಯಿ, ಮಗಳ ಮೃತದೇಹ ನೇಣುಬಿಗಿದ ಸ್ಥಿತಿಯಲ್ಲಿ ರವಿವಾರ ಬೆಳಗ್ಗೆ ಪತ್ತೆಯಾಗಿರುವ ಘಟನೆ ನಡೆದಿರುವುದು ವರದಿಯಾಗಿದೆ. ಗ್ರಾಮದ ಮಹೇಶ ಎಂಬವರ ಪತ್ನಿ ಶಕುಂತಲಾದೇವಿ (46) ಹಾಗೂ ಪುತ್ರಿ ಪ್ರಿಯಾಂಕಾ (19) ಅವರ ಮೃತದೇಹಗಳು ಮನೆಯಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿವೆ. ಪಕ್ಕದ ಮನೆಯವನ ಬೆದರಿಕೆ ಹಾಗೂ ಕಿರುಕುಳದಿಂದ ಬೇಸತ್ತು ಪತ್ನಿ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮೃತ ಶಕುಂತಲಾ ಪತಿ ಮಹೇಶ ಪೊಲೀಸರಿಗೆ ದೂರು ನೀಡಿದ್ದಾರೆ. ತನ್ನ ಮಗಳಾದ ಪ್ರಿಯಾಂಕಳಿಗೆ ಮದುವೆ ಮಾಡುವ ಸಿದ್ದತೆಯಲ್ಲಿ ನಮ್ಮ ಕುಟುಂಬ ತೊಡಗಿರುವಾಗ ಪಕ್ಕದ ಮನೆಯ ಮುತ್ತುರಾಜ್ ಎಂಬಾತ ಮದುವೆ ಮಾಡಲು ಬಿಡುವುದಿಲ್ಲ ಎಂದು ಬೆದರಿಕೆ ಹಾಕುತ್ತ ಕಿರುಕಳ ನೀಡುತ್ತಿದ್ದ ಇದರಿಂದ ಮನನೊಂದು ತಾಯಿ, ಮಗಳಿಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮಹೇಶ ದೂರಿನಲ್ಲಿ ಆರೋಪಿಸಿದ್ದಾರೆ. ಈ ಸಂಬಂಧ ಹಲಗೂರು ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ರಿಯಾದ್/ಹೊಸದಿಲ್ಲಿ: “ನಾನು ವಿಮಾನ ನಿಲ್ದಾಣಕ್ಕೆ ಹೋಗುತ್ತಿದ್ದೇನೆ, ಜೈ ಮಾತಾ ದಿ” ಎಂದು ಸಂದೇಶ ರವಾನಿಸಿದ್ದ ಜಾರ್ಖಂಡ್ ಮೂಲದ 40 ವರ್ಷದ ವ್ಯಕ್ತಿಯೊಬ್ಬರು ಜನವರಿ 10ರಿಂದ ಸೌದಿ ಅರೇಬಿಯಾದಲ್ಲಿ ನಾಪತ್ತೆಯಾಗಿದ್ದಾರೆ ಎಂದು ಅವರ ಕುಟುಂಬದ ಸದಸ್ಯರು ಅಳಲು ತೋಡಿಕೊಂಡಿದ್ದಾರೆ. ಈ ಸಂದೇಶ ರವಾನಿಸಿದ ವೇಳೆ ತಾನುಳಿದುಕೊಂಡಿದ್ದ ವಾಸ್ತವ್ಯದಿಂದ ಅವರು ಭಾರತಕ್ಕೆ ಮರಳಲು ಜಿದ್ದಾ ವಿಮಾನ ನಿಲ್ದಾಣಕ್ಕೆ ತೆರಳುತ್ತಿದ್ದರು ಎನ್ನಲಾಗಿದೆ. ಆದರೆ, ಅವರು ವಿಮಾನ ನಿಲ್ದಾಣವನ್ನು ತಲುಪಿಯೇ ಇಲ್ಲ ಎಂದು ಕುಟುಂಬದ ಸದಸ್ಯರು ಶಂಕಿಸಿದ್ದಾರೆ. ಸೌದಿ ಅರೇಬಿಯಾದಲ್ಲಿ ನಾಪತ್ತೆಯಾಗಿರುವ ವ್ಯಕ್ತಿಯನ್ನು ಜಾರ್ಖಂಡ್ ನ ಧನ್ ಬಾದ್ ಜಿಲ್ಲೆಯ ಸಿಂದ್ರಿ ಗ್ರಾಮದ ನಿವಾಸಿ ಚಂದ್ರಶೇಖರ್ ಕುಮಾರ್ ಎನ್ನಲಾಗಿದ್ದು, ಅವರು ಜುಲೈ 2025ರಲ್ಲಿ ಗುಜರಾತ್ ಮೂಲದ ನೇಮಕಾತಿ ಏಜೆಂಟ್ ಮೂಲಕ ಉದ್ಯೋಗಕ್ಕಾಗಿ ಸೌದಿ ಅರೇಬಿಯಾಗೆ ಪ್ರಯಾಣ ಬೆಳೆಸಿದ್ದರು ಎನ್ನಲಾಗಿದೆ. ಚಂದ್ರಶೇಖರ್ ಕುಮಾರ್ ಈ ಹಿಂದೆ ಸೌದಿ ಅರೇಬಿಯಾ ಹಾಗೂ ದುಬೈನಲ್ಲಿ ಉದ್ಯೋಗ ನಿರ್ವಹಿಸಿದ್ದು, ಅವರಿಗೆ ಆ ಪ್ರಾಂತ್ಯಗಳು ಪರಿಚಿತವಾಗಿವೆ ಎಂದು ಅವರ ಸೋದರಳಿಯ ಸಾಹಿಲ್ ಕುಮಾರ್ ತಿಳಿಸಿದ್ದಾರೆ. ಸಾಹಿಲ್ ಕುಮಾರ್ ಪ್ರಕಾರ, ಜುಲೈ 24, 2025ರಂದು ಮುಂಬೈನಿಂದ ಸೌದಿ ಅರೇಬಿಯಾಗೆ ಪ್ರಯಾಣ ಬೆಳೆಸಿದ್ದ ಚಂದ್ರಶೇಖರ್ ಕುಮಾರ್, ಗುತ್ತಿಗೆ ಆಧಾರದಲ್ಲಿ ಅಲ್ ಝಮೀಲ್ ಮೆಟಲ್ ವರ್ಕ್ಸ್ ಫ್ಯಾಕ್ಟರಿಯಲ್ಲಿ ಉದ್ಯೋಗಕ್ಕೆ ಸೇರ್ಪಡೆಯಾಗಿದ್ದರು ಎನ್ನಲಾಗಿದೆ. ಆರಂಭದಲ್ಲಿ ಮೂರು ತಿಂಗಳ ವೀಸಾ ನೀಡಿದ್ದ ಕಂಪನಿಯು, ಬಳಿಕ, ಅವರ ಉದ್ಯೋಗ ಮುಂದುವರಿಯಲಿದೆ ಎಂದು ಭರವಸೆ ನೀಡಿದ ಮೇಲೆ ಅವರ ವೀಸಾ ಅವಧಿ ವಿಸ್ತರಣೆಗೊಂಡಿತ್ತು. ಜನವರಿ 8ರಂದು ನಾನು ಶೀತ ಹಾಗೂ ಜ್ವರದಿಂದ ಬಳಲುತ್ತಿದ್ದೇನೆ ಎಂದು ಚಂದ್ರಶೇಖರ್ ಕುಮಾರ್ ಮಾಹಿತಿ ನೀಡಿದ್ದರು ಎಂದು ಅವರ ಸೋದರಳಿಯ ಸಾಹಿಲ್ ತಿಳಿಸಿದ್ದಾರೆ. ಈದ್ ಬಳಿಕ, ಚಂದ್ರಶೇಖರ್ ರ ಟಿಕೆಟ್ ವೆಚ್ಚವನ್ನು ಮರುಪಾವತಿ ಮಾಡಲಾಗುವುದು ಎಂದು ಭರವಸೆ ನೀಡಿದ್ದ ಕಂಪನಿಯು, ಸ್ವಂತ ಖರ್ಚಿನಲ್ಲಿ ಭಾರತಕ್ಕೆ ಮರಳುವಂತೆ ಅವರಿಗೆ ಸೂಚಿಸಿತ್ತು. ಜನವರಿ 10ರಂದು ಜಿದ್ದಾದಿಂದ ಅಹಮದಾಬಾದ್ ಗೆ ಮರಳಲು ಅವರು ಇಂಡಿಗೊ ವಿಮಾನವನ್ನು ಟಿಕೆಟ್ ಕಾಯ್ದಿರಿಸಿದ್ದರು. ತದನಂತರ, ವಾರಣಾಸಿ ಮತ್ತು ಧನ್ ಬಾದ್ ಗೆ ರೈಲಿನಲ್ಲಿ ಪ್ರಯಾಣಿಸುವ ಯೋಜನೆಯನ್ನು ಅವರು ಹೊಂದಿದ್ದರು ಎಂದು ಸಾಹಿಲ್ ಹೇಳಿದ್ದಾರೆ. ಅವರು ನಾಪತ್ತೆಯಾಗಿ ಒಂದು ತಿಂಗಳೇ ಆಗಿದ್ದರೂ, ಅವರ ನಾಪತ್ತೆಯ ಕುರಿತು ಇದುವರೆಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ ಎಂದು ಚಂದ್ರಶೇಖರ್ ಕುಮಾರ್ ಕುಟುಂಬದ ಸದಸ್ಯರು ತಿಳಿಸಿದ್ದಾರೆ. ಈ ವಿಷಯದಲ್ಲಿ ತುರ್ತಾಗಿ ಮಧ್ಯಪ್ರವೇಶಿಸಬೇಕು ಎಂದು ಅವರು ಸರಕಾರಕ್ಕೆ ಮನವಿ ಮಾಡಿದ್ದಾರೆ.
Russia: ರಷ್ಯಾ ದೇಶಕ್ಕೆ ಭರ್ಜರಿ ಬಂಪರ್ ನಿರೀಕ್ಷೆ, ಉಕ್ರೇನ್ ಜೊತೆ ಶಾಂತಿ ಒಪ್ಪಂದದ ನಂತರ ಭೂಭಾಗ ಹೆಚ್ಚುವ ಸಾಧ್ಯತೆ
ರಷ್ಯಾ ಈಗಾಗಲೇ ಉಕ್ರೇನ್ ವಿರುದ್ಧ ಎಲ್ಲಾ ರೀತಿಯ ತಂತ್ರ ಪ್ರಯೋಗಿಸಿ ಯುದ್ಧ ಮಾಡುತ್ತಿದೆ, ತನ್ನ ಬಳಿ ಇರುವ ದೊಡ್ಡ ದೊಡ್ಡ ಅಸ್ತ್ರಗಳನ್ನ ಪ್ರಯೋಗ ಮಾಡಿ ಉಕ್ರೇನ್ ದೇಶ ನಲುಗಿ ಹೋಗುವ ರೀತಿಯೇ ದಾಳಿ ಮಾಡಿದೆ. ಈ ಪೈಕಿ ಚಳಿಗಾಲದ ಸಮಯದಲ್ಲಿ ನಡೆದ ದಾಳಿ ಪರಿಣಾಮ ಈಗಾಗಲೇ ಉಕ್ರೇನ್ ದೇಶದ ಜನರು ಜೀವ ಉಳಿಸಿಕೊಳ್ಳಲು ವಲಸೆ ಹೋಗುವ ವಾತಾವರಣ
ಚಳಿಗಾಲದ ಒಲಿಂಪಿಕ್ಸ್ ವಿರೋಧಿಸಿ ಇಟಲಿಯಲ್ಲಿ ಪ್ರತಿಭಟನೆ
ಮಿಲಾನ್ (ಇಟಲಿ): ಚಳಿಗಾಲದ ಒಲಿಂಪಿಕ್ಸನ್ನು ಪ್ರತಿಭಟಿಸಿ ಸಾವಿರಾರು ಜನರು ಶನಿವಾರ ಇಟಲಿಯ ಮಿಲಾನ್ ನಗರದಲ್ಲಿ ಮೆರವಣಿಗೆ ನಡೆಸಿದರು. ಈ ಸಂದರ್ಭದಲ್ಲಿ ಕೆಲವು ಪ್ರತಿಭಟನಾಕಾರರು ಪಟಾಕಿಗಳನ್ನು ಸಿಡಿಸಿ ಪೊಲೀಸರೊಂದಿಗೆ ಘರ್ಷಣೆ ನಡೆಸಿದರು. ಪ್ರದರ್ಶನಕಾರರು ಬೆಂಕಿಯ ಉಂಡೆಗಳು ಮತ್ತು ಕಲ್ಲುಗಳನ್ನು ಪೊಲೀಸರತ್ತ ಎಸೆದರು. ಪೊಲೀಸರು ಜಲಫಿರಂಗಿ ಧಾರೆ ಬಳಸಿ ಪ್ರತಿಭಟನಾಕಾರರನ್ನು ಚದುರಿಸಿದರು. ಇಟಲಿಯ ಉತ್ತರದ ನಗರ ಮಿಲಾನ್ನಲ್ಲಿ ಚಳಿಗಾಲದ ಒಲಿಂಪಿಕ್ ಕ್ರೀಡಾಕೂಟದ ಉದ್ಘಾಟನಾ ಸಮಾರಂಭ ನಡೆದ ಒಂದು ದಿನದ ಬಳಿಕ ಈ ಪ್ರತಿಭಟನೆ ನಡೆದಿದೆ. ಕ್ರೀಡಾಕೂಟದಲ್ಲಿ ಕೃತಕ ಮಂಜುಗಡ್ಡೆ ಬಳಕೆ ಮತ್ತು ಮರಗಳನ್ನು ಕಡಿಯುವುದನ್ನು ಪ್ರತಿಭಟನಾಕಾರರು ವಿರೋಧಿಸುತ್ತಿದ್ದಾರೆ. ಅದೂ ಅಲ್ಲದೆ, ಈ ಕ್ರೀಡಾಕೂಟದಿಂದಾಗಿ ಇಟಲಿಯ ಆರ್ಥಿಕ ಮತ್ತು ಫ್ಯಾಶನ್ ರಾಜಧಾನಿಯಲ್ಲಿ ಉಂಟಾಗಿರುವ ವಸತಿ ಬಿಕ್ಕಟ್ಟಿನ ವಿರುದ್ಧವೂ ಅವರು ಪ್ರತಿಭಟಿಸುತ್ತಿದ್ದಾರೆ. ‘‘ಪರಿಸರ ಮತ್ತು ಸಾಮಾಜಿಕ ಕಳಕಳಿಗೆ ಈ ಕ್ರೀಡಾಕೂಟವು ಹೊಂದಿಕೆಯಾಗುವುದಿಲ್ಲ. ಈ ಕ್ರೀಡಾಕೂಟದ ಕಾಲ ಮುಗಿದುಹೋಗಿದೆ’’ ಎಂದು ಯುವ ಪ್ರತಿಭಟನಾಕಾರರೊಬ್ಬರು ಎಎಫ್ಪಿ ಸುದ್ದಿಸಂಸ್ಥೆಗೆ ತಿಳಿಸಿದರು. ಈ ಕ್ರೀಡಾಕೂಟಕ್ಕಾಗಿ ನಿರ್ಮಿಸಲಾಗುತ್ತಿರುವ ಮೂಲಸೌಕರ್ಯವು ಸೂಕ್ಷ್ಮ ಪರ್ವತ ವಾತಾವರಣದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ ಎಂದು ಅದರ ಟೀಕಾಕಾರರು ಆರೋಪಿಸುತ್ತಾರೆ. ಕಳೆದ ವಾರಾಂತ್ಯದಲ್ಲಿ ಟುರಿನ್ ನಗರದಲ್ಲಿ ಹಿಂಸಾತ್ಮಕ ಪ್ರತಿಭಟನೆ ನಡೆದಿತ್ತು. ಆ ಘಟನೆಯಲ್ಲಿ 100ಕ್ಕೂ ಅಧಿಕ ಪೊಲೀಸರು ಗಾಯಗೊಂಡಿದ್ದರು.
USA Military: ಅಮೆರಿಕ ಸೇನೆ ಕುರಿತು ಮಹತ್ವದ ಪ್ರತಿಕ್ರಿಯೆ ನೀಡಿದ ಇರಾನ್, ಯುದ್ಧಕ್ಕೆ ಎರಡೂ ದೇಶಗಳ ಸಿದ್ಧತೆ ಆತಂಕ
ಅಮೆರಿಕ ಇದೀಗ ಇರಾನ್ ವಿರುದ್ಧ ಯಾವುದೇ ರೀತಿಯ ಕ್ರಮಕ್ಕೂ ಸಿದ್ಧ ಎಂದು ಗುಡುಗುತ್ತಿದೆ, ಈ ಸಮಯದಲ್ಲೇ ಇರಾನ್ ಕೂಡ ಎಲ್ಲವನ್ನೂ ಎದುರಿಸಲು ತಾನು ಕೂಡ ಸಿದ್ಧ ಎನ್ನುತ್ತಿದೆ. ಇಬ್ಬರೂ ಹೀಗೆಲ್ಲಾ ತಿಕ್ಕಾಟ ನಡೆಸುವಾಗ ಮಧ್ಯಪ್ರಾಚ್ಯ ಭಾಗದಲ್ಲಿ ಸೂಕ್ಷ್ಮ ವಾತಾವರಣ ನಿರ್ಮಾಣ ಆಗುತ್ತಿದೆ. ಯಾವ ಕ್ಷಣದಲ್ಲಿ ಯುದ್ಧ ಜೋರಾಗುತ್ತದೋ? ಎಂಬ ಪ್ರಶ್ನೆಯಲ್ಲೇ ಜಗತ್ತು ಮುಳುಗಿದೆ. ಪ್ರಮುಖವಾಗಿ ಇಲ್ಲಿ ಕಾಡುತ್ತಿರುವ
ಆಗಸದಲ್ಲಿ ವ್ಯವಸ್ಥಾ ವೈಫಲ್ಯ: ಡಿಜಿಸಿಎ ಪರೀಕ್ಷೆ ಅನಿವಾರ್ಯವಾಗಿಸಿದ ವಿಜಯಪುರದ ವಿಮಾನ ಪತನ!
ಉತ್ತರ ಕರ್ನಾಟಕದ ವಿಜಯಪುರದಲ್ಲಿ ಅಭ್ಯಾಸ ನಿರತ ತರಬೇತಿ ವಿಮಾನವೊಂದು ಪತನವಾಗಿದೆ. ಇಬ್ಬರು ತರಬೇತುದಾರರು ಬದುಕುಳಿದಿದ್ದಾರೆ. ಈ ಅಪಘಾತಗಳು ವಿಮಾನ ಹಾರಾಟ ತರಬೇತಿ ಕಾರ್ಯಾಚರಣೆಗಳ ಮೇಲೆ ಗಂಭೀರ ಹಾಗೂ ಅಸಮಾಧಾನಕರ ಪ್ರಶ್ನೆಯನ್ನು ಮೂಡಿಸಿವೆ. ಈ ಘಟನೆಯಲ್ಲಿ ಗ್ರಾಮಸ್ಥರ ಧೈರ್ಯದ ಬಗ್ಗೆ ಮೆಚ್ಚುಗೆ ವ್ಯಕ್ತವಾಗಿದೆ. ತರಬೇತುದಾರರ ಸಮಯ ಪ್ರಶ್ನೆ ಜೀವ ಉಳಿಸಿದೆ. ಈ ಬಗ್ಗೆ ಸಮಗ್ರ ಲೇಖನ ಇಲ್ಲಿದೆ.
ಕಲಬುರಗಿ| ಬಸವಗೀತೆ ಸತ್ಯ ಸಂವಾದ 9 ಸಂಪುಟಗಳ ಪುಸ್ತಕ ಲೋಕಾರ್ಪಣೆ
ಕಲಬುರಗಿ: ಓದುವ, ಬರೆಯುವ ಪರಿಪಾಠ ಕಡಿಮೆಯಾಗಿರುವ ಈ ದಿನಗಳಲ್ಲಿ ಪುಸ್ತಕ ಸಂಸ್ಕೃತಿ ಬೆಳೆಸುವ ನಿಟ್ಟಿನಲ್ಲಿ ಹೆಚ್ಚಿನ ಪುಸ್ತಕಗಳು ಬಿಡುಗಡೆಯಾಗುತ್ತಿರುವುದು, ಪ್ರಕಟವಾಗುತ್ತಿರುವುದು ಅಭಿಮಾನದ ಸಂಗತಿ ಎಂದು ವಿಶ್ರಾಂತ ಪ್ರಾಧ್ಯಾಪಕಿ ಡಾ. ನೀಲಾಂಬಿಕಾ ಪೊಲೀಸ್ ಪಾಟೀಲ್ ಅಭಿಪ್ರಾಯಪಟ್ಟರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ವತಿಯಿಂದ ನಗರದ ಕನ್ನಡ ಭವನದಲ್ಲಿ ರವಿವಾರ ಸಂಜೆ ಆಯೋಜಿಸಿದ್ದ ಸುದ್ದಿಮೂಲ ಕನ್ನಡ ದಿನಪತ್ರಿಕೆಯ ಸಂಪಾದಕ ಬಸವರಾಜ ಸ್ವಾಮಿ ವಿರಚಿತ ಬಸವಗೀತೆ ಸತ್ಯಸಂವಾದ (9 ಸಂಪುಟಗಳ ಗುಚ್ಛ) ಪುಸ್ತಕ ಲೋಕಾರ್ಪಣೆ ಮಾಡಿ ಮಾತನಾಡಿದ ಅವರು, ಕಲಬುರಗಿ ಈಗ ಪುಸ್ತಕ ಹಬ್ ಆಗುತ್ತಿದೆ. ಭವಿಷ್ಯತ್ತಿನಲ್ಲಿ ಪುಸ್ತಕಗಳ ಸ್ಥಾನಮಾನ ಏನು? ಎಂಬುದರ ಬಗ್ಗೆ ಗಂಭೀರವಾಗಿ ಆಲೋಚಿಸಬೇಕು ಎಂದು ತಿಳಿಸಿದರು. ಪುಸ್ತಕಗಳ ಕುರಿತು ಮಾತನಾಡಿದ ಡಾ. ಶ್ರೀಶೈಲ ನಾಗರಾಳ ಅವರು, ಬಸವಣ್ಣ ಹಾಗೂ ಆತನ ಸಮಕಾಲೀನರು ಪರಸ್ಪರ ನಡೆಸಿರುವ ಸತ್ಯ ಸಂವಾದ ಬಹಳ ಅಪರೂಪದ್ದಾಗಿದೆ. ಮಾಂತ್ರಿಕ ವಾಸ್ತವಿಕ ತಂತ್ರ ಬಳಸಿ ಬರೆದಿರುವ ಈ ಕೃತಿ ಕನ್ನಡದಲ್ಲಿ ಹೊಸ ಪ್ರಯೋಗ ಎಂದರು. 1571 ಪುಟಗಳ ವ್ಯಾಪ್ತಿಯ ಈ ಸಂಪುಟದಲ್ಲಿ ಬಸವಣ್ಣ ಹಾಗೂ ಆತನ ಸಮಕಾಲೀನ ಶರಣರು ನಡೆಸಿದ ಪ್ರಶ್ನೋತ್ತರಗಳಿವೆ. ಬದುಕಿನ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಒದಗಿಸುವಂತಿವೆ. ಓದುಗರೊಡನೆ ಅನುಶೀಲನೆ ಮಾಡಿ ಬಿಡುವು ಕೊಟ್ಟು ಮತ್ತೊಂದು ವಿಷಯದ ಕಡೆಗೆ ಎಳೆದೊಯ್ಯುವಂತಿದೆ ಎಂದು ತಿಳಿಸಿದರು. ಮುಖ್ಯ ಅತಿಥಿಯಾಗಿದ್ದ ಪ್ರಗತಿಪರ ಚಿಂತಕ ಪ್ರೊ. ಆರ್.ಕೆ. ಹುಡಗಿ ಮಾತನಾಡಿ, ಭಗವದ್ಗೀತೆಗೆ ಪ್ರತಿರೋದಂತಿರುವ ಬಸವಗೀತೆ ಪ್ರತಿಯೊಬ್ಬರ ಮನೆಯಲ್ಲಿರಬೇಕಾದ ಪುಸ್ತಕವಾಗಿದೆ ಎಂದು ತಿಳಿಸಿದರು. ಕೃತಿಕಾರ ಬಸವರಾಜ ಸ್ವಾಮಿ ಮಾತನಾಡಿ, ಮನೋಕಾಯವನ್ನು ಜ್ಞಾನಕಾಯವನ್ನಾಗಿ ಮಾಡಿಕೊಂಡಿದ್ದ ಶರಣರು ದೇಹಧರ್ಮ, ಪ್ರಕೃತಿಧರ್ಮದ ಬಗ್ಗೆ ಮಾತನಾಡಿದ್ದಾರೆ. ಮಹಾಪುರುಷರದ್ದು ಧರ್ಮ ಸ್ಥಾಪನೆಯ ಗುರಿಯಾಗಿರಲಿಲ್ಲ ಅವರು ಸ್ಥಾಪಿಸಿದ್ದು ಮನುಷ್ಯ ಧರ್ಮ, ಸಹಜ ಧರ್ಮ, ಸರಳ ಧರ್ಮ ಎಂದು ವಿವರಿಸಿದರು. ಮುಖ್ಯ ಅತಿಥಿಯಾಗಿದ್ದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ಡಾ. ಶಿವರಂಜನ ಸತ್ಯಂಪೇಟೆ ಪ್ರಾಸ್ತಾವಿಕ ಮಾತನಾಡಿ, ವಚನಗಳ ಅಧ್ಯಯನ, ಸಂಗ್ರಹ, ಸಂಶೋಧನೆ ಕಾರ್ಯದ ಜೊತೆಗೆ ವಚನಗಳ ವಿವಿಧ ಆಯಾಮಗಳ ಬಗ್ಗೆ ಗುರುತಿಸಲಾಗುತ್ತಿದೆ. ಆದರೆ ವಚನಗಳ ಆಳ-ಅಗಲಕ್ಕೆ ಈವರೆಗೆ ಏರಲಾಗುತ್ತಿಲ್ಲ. ವಚನಗಳ ಬೆಳಕು, ಬೆಡಗು ಬೆರಗು ಮೂಡಿಸುವಂಥದ್ದಾಗಿದೆ ಎಂದರು. ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಬಾಬುರಾವ್ ಯಡ್ರಾಮಿ, ಸಂಘದ ಮಾಜಿ ರಾಜ್ಯ ಉಪಾಧ್ಯಕ್ಷ ಭವಾನಿಸಿಂಗ್ ಠಾಕೂರ ವೇದಿಕೆಯಲ್ಲಿದ್ದರು. ಜಿಲ್ಲಾ ಕಸಾಪ ಕೋಶಾಧ್ಯಕ್ಷ ಶರಣರಾಜ ಛಪ್ಪರಬಂದಿ ಅಧ್ಯಕ್ಷತೆ ವಹಿಸಿದ್ದರು. ಶಿವರಾಜ ಅಣಜಗಿ ನಿರೂಪಿಸಿದರು. ಸೋಮೇಶಗೌಡ ನಂದಿಕೂರ ಸ್ವಾಗತಿಸಿದರು. ಬಾಬುರಾವ ಕೋಬಾಳ ಪ್ರಾರ್ಥನೆಗೀತೆ ಹಾಡಿದರು. ಶ್ರೇಯಾ, ಸಹಸ್ರಾ ವಚನ ನೃತ್ಯ ಪ್ರದರ್ಶಿಸಿದರು. ರವೀಂದ್ರ ಶಾಬಾದಿ, ಧರ್ಮಣ್ಣ ಧನ್ನಿ, ಎಸ್.ಎಸ್. ಪಾಟೀಲ, ಶರಣು ನೀರಡಗಿ, ಚಂದ್ರಕಾಂತ ತಡಪಳ್ಳಿ, ಡಾ. ಅಶೋಕ ದೊಡ್ಡಮನಿ, ವಿನೋದ ಜನೆವೆರಿ, ನಿಜಲಿಂಗ ದೊಡ್ಡಮನಿ, ಪಿಡ್ಡಪ್ಪ ಜಾಲಗಾರ, ವಿಠ್ಠಲ ಚಿಕಣಿ, ಶಿವಕುಮಾರ ತೊಟ್ನಳ್ಳಿ, ಸಂಜೀವಕುಮಾರ ಕಾಂಬಳೆ, ದೇವೇಂದ್ರಪ್ಪ ಅವಂಟಿ ಇತರರು ಉಪಸ್ಥಿತರಿದ್ದರು.
Rafah Crossing: ಗಾಜಾ ಜನರಿಗೆ ರಫಾ ಬಾಗಿಲು ರೀ ಓಪನ್, ಶಾಂತಿ ಸ್ಥಾಪನೆಗೆ ಮೊದಲು ಲಕ್ಷಾಂತರ ಜನರಿಗೆ ರಿಲೀಫ್
ಗಾಜಾ ಪಟ್ಟಿಯಲ್ಲಿ ಶಾಂತಿ ಸ್ಥಾಪನೆ ಮಾಡಲು ಈಗಾಗಲೇ ಅಮೆರಿಕ ಹಾಗೂ ಇಸ್ರೇಲ್ ಮಹತ್ವದ ಪ್ಲಾನ್ ಮಾಡಿವೆ. ಅರಬ್ ದೇಶಗಳು ಸೇರಿದಂತೆ ಮಧ್ಯಪ್ರಾಚ್ಯದ ಬಹುತೇಕ ದೇಶಗಳು ಗಾಜಾ ಪಟ್ಟಿ ಶಾಂತಿಯ ವಿಚಾರದಲ್ಲಿ ಅಮೆರಿಕ ಹಾಗೂ ಇಸ್ರೇಲ್ ಬೆನ್ನಿಗೆ ನಿಂತಿವೆ. ಈ ಮೂಲಕ ಗಾಜಾ ಜನರು ನೆಮ್ಮದಿಯ ನಿಟ್ಟುಸಿರು ಬಿಡುವ ಸಮಯ ಕೂಡ ಬಂದಿದ್ದು, ಮತ್ತೊಂದು ಕಡೆ ತಮ್ಮ ಕುಟುಂಬದವರ
ಮಾ.4ರಿಂದ ಶ್ರೀ ಭಗವತೀ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ; ಆಮಂತ್ರಣ ಪತ್ರಿಕೆ ಬಿಡುಗಡೆ
ಹಳೆಯಂಗಡಿ: ಸಸಿಹಿತ್ಲುವಿನ ಶ್ರೀ ಭಗವತೀ ದೇವಸ್ಥಾನದಲ್ಲಿ ಮಾ.4ರಿಂದ ಮಾ.8ರ ವರೆಗೆ ನಡೆಯಲಿರುವ ಬ್ರಹ್ಮಕಲಶೋತ್ಸವದ ಆಮಂತ್ರಣ ಪತ್ರಿಕೆಯನ್ನು ರವಿವಾರ ಬಿಡುಗಡೆಗೊಳಿಸಲಾಯತು. ಆಮಂತ್ರಣ ಪತ್ರಿಕೆಯನ್ನು ಮುಲ್ಕಿ ಸೀಮೆಯ ಅಸರು ದುಗ್ಗಣ್ಣ ಸಾವಂತರು ಬಿಡುಗಡೆಗೊಳಿಸಿದರು. ಈ ಸಂದರ್ಭ ಮುಂಬೈ ಉದ್ಯಮಿ ಗಂಗಾಧರಶೆಟ್ಟಿ ಸಸಿಹಿತ್ಲು, ಚಂದ್ರ ಶೇಖರ ನಾನಿಲ್ ಹಳೆಯಂಗಡಿ, ಸುನಿಲ್ ಆಳ್ವ, ದಿವಾಕರ ಸಾಮಾನಿ,ಕಿಶೋರ್ ಗುರಿಕಾರ,ಸತೀಶ ಶೆಟ್ಟಿ, ಉದಯ ಅಗ್ಗಿದ ಕಳಿಯ, ಗೀತಾಂಜಲಿ, ಕಸ್ತೂರಿ ಪಂಜ, ಬೋಜ ಗುರಿಕಾರ ಮೊದಲಾದವರು ಉಪಸ್ಥಿತರಿದ್ದರು.
ಡಿವೈಎಫ್ಐ ಬೆಂಗ್ರೆ ಘಟಕದಿಂದ ರಕ್ತದಾನ ಶಿಬಿರ
ಮಂಗಳೂರು,ಫೆ.8: ಡಿವೈಎಫ್ಐ ಬೆಂಗ್ರೆ 11ನೇ ವಾರ್ಡ್ ನೇತೃತ್ವದಲ್ಲಿ ನಗರದ ಫಾದರ್ ಮುಲ್ಲರ್ ಆಸ್ಪತ್ರೆಯ ಸಹಯೋಗದೊಂದಿಗೆ ಕಸಬಾ ಬೆಂಗ್ರೆಯ ಮದ್ರಸದಲ್ಲಿ ರಕ್ತದಾನ ಶಿಬಿರ ನಡೆಯಿತು. ಡಿವೈಎಫ್ಐ ದ.ಕ.ಜಿಲ್ಲಾಧ್ಯಕ್ಷ ಬಿ.ಕೆ. ಇಮ್ತಿಯಾಝ್ ಉದ್ಘಾಟಿಸಿ ಮಾತನಾಡಿದರು. ಡಿವೈಎಫ್ಐ ಮಾಜಿ ರಾಜ್ಯ ಅಧ್ಯಕ್ಷ ಸುನಿಲ್ ಕುಮಾರ್ ಬಜಾಲ್ ರಕ್ತದಾನದ ಮಹತ್ವದ ಬಗ್ಗೆ ಮಾತನಾಡಿದರು. ಬೆಂಗ್ರೆ ಡಿವೈಎಫ್ಐ ಮಾಜಿ ಅಧ್ಯಕ್ಷ ಹಮೀದ್ ಹಾಜಿ, ಮಂಗಳೂರು ನಗರ ಘಟಕದ ಅಧ್ಯಕ್ಷ ನವೀನ್ ಕೊಂಚಾಡಿ, ಮರ್ಕಝುನ್ನೂರು ಮದ್ರಸ ಅಧ್ಯಕ್ಷ ಕುಂಞಿಮೋನು, ವೈದ್ಯರಾದ ಡಾ. ರೀನಾ ಕಾರ್ಲಿನ್, ಕಸ್ಬಾ ಗ್ರಾಜುಯೇಟ್ ಫೊರಮ್ ಅಧ್ಯಕ್ಷ ಅಬ್ದುಲ್ ರಫೀಕ್, ಮುಖಂಡರಾದ ಶ್ರೀನಾಥ್ ಕಾಟಿಪಳ್ಳ, ಪಿ.ಜಿ ರಫೀಕ್, ಕೃಷ್ಣ ತಣ್ಣೀರುಬಾವಿ, ತೈಯೂಬ್ ಬೆಂಗ್ರೆ, ನೌಶಾದ್ ಬೆಂಗ್ರೆ, ಡಿವೈಎಫ್ಐ ಬೆಂಗ್ರೆ 11ನೇ ಘಟಕದ ಅಧ್ಯಕ್ಷ ಮುಹಮ್ಮದ್ ರಫೀಕ್ ಉಪಸ್ಥಿತರಿದ್ದರು. ಘಟಕದ ಪ್ರಮುಖರಾದ ಸಾಹಿಲ್, ತಂಝೀಲ್, ಕಬೀರ್, ನಿಸಾರ್, ಮುಹಾಝ್, ತಸ್ರೀಫ್, ಹನೀಫ್, ನಾಸಿರ್ ಬಾಸ್, ರಿಝ್ವಾನ್, ಝಿಮ್, ಶಾರೂಕ್, ಆಸಿಫ್, ಕಬೀರ್, ಶರೀಫ್ ಸಹಕರಿಸಿದರು.
ಭಾರತ್ ಬೀಡಿ ವರ್ಕ್ಸ್ ಸಂಸ್ಥೆಯ ಸಂಸ್ಥಾಪಕರ 113 ನೇ ಜನ್ಮ ದಿನಾಚರಣೆ
ಮಂಗಳೂರು: 30 ಮಾರ್ಕಿನ ಬೀಡಿಗಳ ತಯಾರಕರಾದ ಭಾರತ್ ಬೀಡಿ ವರ್ಕ್ಸ್ ಪ್ರೈವೇಟ್ ಲಿಮಿಟೆಡ್ ನ ಸಂಸ್ಥಾಪಕರಾದ ಮಂಜುನಾಥ ಪೈ ಅವರ 113 ನೇ ಜನ್ಮ ದಿನಾಚರಣೆ ಸಂಸ್ಥೆಯ ಕೇಂದ್ರ ಕಚೇರಿಯಲ್ಲಿ ನಡೆಯಿತು. ಸಂಸ್ಥೆಯ ಕಾರ್ಯಕಾರಿ ನಿರ್ದೇಶಕರಾದ ಸುಬ್ರಾಯ ಎಂ. ಪೈ ಅವರು ಸಂಸ್ಥೆಯು ನಡೆದು ಬಂದ ದಾರಿ, ಸಂಸ್ಥಾಪಕರು ಸಮಾಜಕ್ಕೆ ನೀಡಿದ ಕೊಡುಗೆ, ಸಂಸ್ಥಾಪಕರ ದೂರ ದೃಷ್ಟಿಯ ಬಗ್ಗೆ ವಿವರಿಸಿದರು. ಕಾರ್ಯಕ್ರಮದಲ್ಲಿ ವಿವಿಧ ಬ್ಯಾಂಕುಗಳ ಅಧಿಕಾರಿಗಳು, ತಮ್ಮ ಅನಿಸಿಕೆಯನ್ನು ಹೇಳಿದರು. ರಮೇಶ್ ಪೈ ನಿಪ್ಪಾಣಿ ಅವರು ಸಂಸ್ಥಾಪಕರ ಬಗ್ಗೆ ಗುಣಗಾನ ಮಾಡಿದರು. ಲೆಕ್ಕ ಪರಿಶೋಧಕ ಸಿ. ಎ. ಶಿವಾನಂದ ಪೈ ಅವರು ಸಂಸ್ಥೆ ನಡೆದು ಬಂದ ಬಗ್ಗೆ ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು. ಈ ಕಾರ್ಯಕ್ರಮದಲ್ಲಿ ಸಂಸ್ಥೆಯ ನಿರ್ದೇಶಕರಾದ ನಾಗೇಂದ್ರ ಡಿ ಪೈ, ಆನಂದ ಜಿ. ಪೈ, ವೆಂಕಟೇಶ ಎಂ. ಪೈ ಹಾಗೂ ರಫ್ತು ಮಾರುಕಟ್ಟೆ ವಿಭಾಗದ ಆಡಳಿತ ಅಧಿಕಾರಿ ಅಭಿಷೇಕ್ ಎನ್. ಪೈ ಉಪಸ್ಥಿತರಿದ್ದರು. ಸಂಸ್ಥೆಯ ನಿರ್ದೇಶಕ ಸುಧೀರ್ ಎಂ.ವಂದಿಸಿದರು.
ಎಪ್ಸ್ಟೀನ್ ಫೈಲ್ಸ್ : ಬ್ರಿಟನ್ ಪ್ರಧಾನಿಯ ಸಿಬ್ಬಂದಿ ಮುಖ್ಯಸ್ಥ ಮೋರ್ಗನ್ ರಾಜೀನಾಮೆ
ಲಂಡನ್: ಲೈಂಗಿಕ ಅಪರಾಧಿ ಜೆಫ್ರಿ ಎಪ್ಸ್ಟೀನ್ ಜೊತೆ ಸಂಪರ್ಕದಲ್ಲಿದ್ದ ಪೀಟರ್ ಮ್ಯಾಂಡಲ್ಸನ್ ಅವರನ್ನು ಅಮೆರಿಕಾಕ್ಕೆ ರಾಯಭಾರಿಯನ್ನಾಗಿ ನೇಮಿಸಿದ ವಿವಾದಕ್ಕೆ ಸಂಬಂಧಿಸಿ ಬ್ರಿಟನ್ ಪ್ರಧಾನಿ ಸ್ಟಾರ್ಮರ್ ಅವರ ಸಿಬ್ಬಂದಿ ಮುಖ್ಯಸ್ಥ(ಮುಖ್ಯ ಆಡಳಿತಾಧಿಕಾರಿ) ಮೋರ್ಗನ್ ಮೆಕ್ಸ್ವೀನಿ ರವಿವಾರ ರಾಜೀನಾಮೆ ನೀಡಿರುವುದಾಗಿ ವರದಿಯಾಗಿದೆ. `ಮ್ಯಾಂಡಲ್ಸನ್ ರನ್ನು ನೇಮಿಸುವ ನಿರ್ಧಾರ ತಪ್ಪಾಗಿದೆ. ಆತ ನಮ್ಮ ಪಕ್ಷಕ್ಕೆ, ದೇಶಕ್ಕೆ ಮತ್ತು ರಾಜಕೀಯದ ಕ್ಷೇತ್ರದ ವಿಶ್ವಾಸಕ್ಕೆ ಹಾನಿ ಎಸಗಿದ್ದಾರೆ. ಕೂಲಂಕುಷವಾಗಿ ಆಲೋಚಿಸಿದ ಬಳಿಕ ರಾಜೀನಾಮೆಗೆ ನಿರ್ಧರಿಸಿದ್ದೇನೆ' ಎಂದು ಮೆಕ್ಸ್ವೀನಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ತಾಲೂಕು ಹಂತದಲ್ಲಿಯೇ 24 ಗಂಟೆ ಕಾಲ ಆರೋಗ್ಯ ಸೇವೆಗೆ ಪ್ರಯತ್ನ: ದಿನೇಶ್ ಗುಂಡೂರಾವ್
ಕಲಬುರಗಿ: ಸಮುದಾಯ ಆರೋಗ್ಯ ಕೇಂದ್ರದಲ್ಲಿರುವ ಸ್ತ್ರೀ ರೋಗ, ಅರಿವಳಿಕೆ, ಮಕ್ಕಳ ತಜ್ಞ ವೈದ್ಯರನ್ನು ಸಮರ್ಪಕವಾಗಿ ಬಳಕೆ ಮಾಡಲು ಪುನರ್ ಸಂಘಟನೆ ಮಾಡಿ ದಿನದ 24 ಗಂಟೆ ಕಾಲ ತಾಲೂಕು ಹಂತದಲ್ಲಿಯೇ ಗುಣಮಟ್ಟದ ಆರೋಗ್ಯ ಸೇವೆ ಒದಗಿಸುವುದರ ಮೂಲಕ ತಾಲೂಕು ಆಸ್ಪತ್ರೆಗಳನ್ನು ಬಲವರ್ಧನೆ ಮಾಡಲಾಗುತ್ತಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ದಿನೇಶ್ ಗುಂಡೂರಾವ್ ಹೇಳಿದರು. ರವಿವಾರ ಇಲ್ಲಿನ ಜಿಲ್ಲಾ ಪಂಚಾಯತ್ (ಹೊಸ ) ಕಚೇರಿ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ದಿನೇಶ್ ಗುಂಡೂರಾವ್, ಹಲವು ಸಿ.ಎಚ್.ಸಿ.ಯಲ್ಲಿ ವಿಶೇಷವಾಗಿ ತಾಯಿ-ಮಕ್ಕಳ ಅಸ್ಪತ್ರೆಯಲ್ಲಿ ಮಾಸಿಕ ಒಂದಂಕಿಯ ಹೆರಿಗೆ ಕಾಣುತ್ತೇವೆ. ಇಲ್ಲಿ ಕೆಲಸ ಕಡಿಮೆ ಇದ್ದು, ಇಲ್ಲಿನ ವೈದ್ಯರನ್ನು ತಾಲೂಕು ಆಸ್ಪತ್ರೆಗೆ ರವಾನೆ ಮಾಡಲಾಗುತ್ತದೆ ಎಂದರು. ಒಟ್ಟಾರೆಯಾಗಿ ತಾಲೂಕು ಆಸ್ಪತ್ರೆಯಲ್ಲಿ ಕನಿಷ್ಟ ತಲಾ ಇಬ್ಬರು ಸ್ತ್ರೀ ರೋಗ, ಅರಿವಳಿಕೆ, ಮಕ್ಕಳ ತಜ್ಞ ವೈದ್ಯರು ಮತ್ತು ಓರ್ವ ರೇಡಿಯಾಲೋಜಿಸ್ಟ್ ಇರುವಂತೆ ನೋಡಿಕೊಳ್ಳುವುದು ನಮ್ಮ ಉದ್ದೇಶವಾಗಿದ್ದು, ಈ ನಿಟ್ಟಿನಲ್ಲಿ ಈಗಾಗಲೇ ಕಾರ್ಯಕ್ರಮ ರೂಪಿಸಿಲಾಗಿದೆ. ಇದು ಅನುಷ್ಟಾನಗೊಂಡಲ್ಲಿ ಜಿಲ್ಲಾ ಆಸ್ಪತ್ರೆಗಳ ಮೇಲಿನ ಒತ್ತಡ ಕಡಿಮೆಯಾಗಲಿದೆ ಎಂದು ಅವರು ಅಭಿಪ್ರಾಯಪಟ್ಟರು. ಇಲಾಖೆಯಲ್ಲಿನ ಸರಕಾರಿ ಆರೋಗ್ಯ ಕೇಂದ್ರಗಳಿಗೆ ಎನ್.ಕ್ಯೂ.ಎ.ಎಸ್. ಪ್ರಮಾಣಿಕೃತ ಯಂತ್ರೋಪಕರಣಗಳು ಮತ್ತು ಔಷಧಿಗಳು ನೀಡಲಾಗುತ್ತಿದ್ದು, ಇದನ್ನು ಸರಿಯಾಗಿ ಬಳಸಿಕೊಂಡು ಜನರಿಗೆ ಗುಣಮಟ್ಟದ ಸೇವೆ ನೀಡಬೇಕು. ಕಲ್ಯಾಣ ಕರ್ನಾಟಕ ಭಾಗದಲ್ಲಿ ಅರೋಗ್ಯ ಸುಧಾರಣೆಗೆ ಕಳೆದ ವರ್ಷ 1,100 ಕೋಟಿ ರೂ. ಅನುದಾನ ಒದಗಿಸಿದ್ದು, ಇದರಲ್ಲಿ ಆಸ್ಪತ್ರೆ ಮೇಲ್ದರ್ಜೇ, ಹೊಸದಾಗಿ ಪಿ.ಎಚ್.ಸಿ., ಸಿ.ಎಚ್.ಸಿ.ಸ್ಥಾಪನೆ, ಮೂಲಸೌಕರ್ಯ ಒಳಗೊಂಡಿದೆ. ಕಲಬುರಗಿಯಲ್ಲಿನ ಆಹಾರ ಮತ್ತು ಔಷಧ ಪ್ರಯೋಗಾಲಯ ಕಚೇರಿಗೆ ಸ್ವಂತ ಕಟ್ಟಡ ಇಲ್ಲದ ಕಾರಣ ಹೊಸದಾಗಿ ಕಟ್ಟಡ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಅಧಿಕಾರಿಗಳಿಗೆ ಇಂದಿನ ಸಭೆಯಲ್ಲಿ ನಿರ್ದೇಶನ ನೀಡಿದ್ದು, ಪ್ರಸ್ತಾವನೆ ಬಂದ ಕೂಡಲೆ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು ಎಂದರು. ಔಷಧ ನಿಯಂತ್ರಕ ಇಲಾಖೆಯಡಿ ಸುಮಾರು 850 ಫಾರ್ಮಾಶಿಷ್ಟ್, ಟೆಕ್ನಿಶಿಯನ್ ನೇಮಕ ಮಾಡಲಾಗುತ್ತಿದ್ದು, ಮುಂದಿನ ಒಂದು ವಾರದಲ್ಲಿ ನೇಮಕತಿ ಪತ್ರ ವಿತರಣೆ ಮಾಡಲಾಗುತ್ತಿದೆ. ಇದರಲ್ಲಿ 300ಕ್ಕಿಂತ ಹೆಚ್ಚಿನ ಸಿಬ್ಬಂದಿಗಳು ಕಲ್ಯಾಣ ಕರ್ನಾಟಕ ಭಾಗಕ್ಕೆ ಸೇವೆಗೆ ಲಭ್ಯವಾಗಲಿದ್ದಾರೆ ಎಂದು ಸಚಿವ ದಿನೇಶ್ ಗುಂಡೂರಾವ್ ಮಾಹಿತಿ ನೀಡಿದರು. ರಾಜ್ಯದಲ್ಲಿ ವೈದ್ಯಕೀಯ ಕಾಲೇಜು ಮತ್ತು ಜಿಲ್ಲಾ ಆಸ್ಪತ್ರೆಗಳ ನಡುವೆ ಸಮನ್ವಯತೆ ಸಮಸ್ಯೆ ಅಗಾಗ ಕಂಡಬರುತ್ತಿದ್ದು, ಈ ನಿಟ್ಟಿನಲ್ಲಿ ಇಲಾಖೆಯಿಂದ ಯಾವ ಜಿಲ್ಲೆಯಲ್ಲಿ ಪ್ರತ್ಯೇಕ ಜಿಲ್ಲಾ ಆಸ್ಪತ್ರೆ ಇಲ್ಲವೋ ಅಂತಲ್ಲಿ ಹೊಸದಾಗಿ ಜಿಲ್ಲಾ ಆಸ್ಪತ್ರೆ ತೆರೆಯಬೇಕೆಂದು ನಿರ್ಧರಿಸಲಾಗಿದೆ. ವಿಭಾಗದಲ್ಲಿ ಕಲಬುರಗಿ, ಕೊಪ್ಪಳ, ಯಾದಗಿರಿಯಲ್ಕಿ ಹೊಸ ಜಿಲ್ಲಾ ಆಸ್ಪತ್ರೆಗಳನ್ನು ಆರ್ಥಿಕ ಇತಿ ಮಿತಿ ನೋಡಿಕೊಂಡು ಸ್ಥಾಪನೆ ಮಾಡಲಾಗುವುದು ಎಂದು ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು. ಬೀದರ್ ಜಿಲ್ಲೆಯ ಬಸವಕಲ್ಯಾಣ ಮತ್ತು ರಾಯಚೂರು ಜಿಲ್ಲೆಯ ಸಿಂಧನೂರು ಆಸ್ಪತ್ರೆಯನ್ನು ಜಿಲ್ಲಾ ಮಟ್ಟದ ಆಸ್ಪತ್ರೆಯನ್ನಾಗಿ ಮೇಲ್ದರ್ಜೇಗೇರಿಸಲಾಗುವುದು. ವಿಜಯನಗರ ಜಿಲ್ಲೆಯ ನೂತನ ಜಿಲ್ಲಾ ಆಸ್ಪತ್ರೆಯನ್ನು ಶೀಘ್ರದಲ್ಲಿಯೆ ಮುಖ್ಯಮಂತ್ರಿಗಳನ್ನು ಉದ್ಘಾಟಿಸಲಿದ್ದಾರೆ. ಮುಂದಿನ ದಿನದಲ್ಲಿ ವೈದ್ಯಕೀಯ ಕಾಲೇಜು ಮಂಜೂರಾತಿ ನೀಡಿದಲ್ಲಿ ಅದರ ಜೊತೆಯಲ್ಲಿಯೇ ಜಿಲ್ಲಾ ಆಸ್ಪತ್ರೆ ಸಹ ಘೋಷಿಸಬೇಕೆಂದು ಇಲಾಖೆಯ ಪ್ರಸ್ತಾವನೆ ಸರಕಾರದ ಮುಂದಿಟ್ಟಿದ್ದೇವೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಎಂ.ಎಲ್.ಸಿ. ಜಗದೇವ್ ಗುತ್ತೇದಾರ, ಡಿ.ಸಿ. ಬಿ.ಫೌಝಿಯಾ ತರನ್ನುಮ್, ಜಿಲ್ಲಾ ಪಂಚಾಯತ್ ಸಿ.ಇ.ಓ ಭಂವರ್ ಸಿಂಗ್ ಮೀನಾ ಇದ್ದರು.
ವಿದ್ಯಾರ್ಥಿ ನಾಯಕ ಉಸ್ಮಾನ್ ಹಾದಿ ಹತ್ಯೆಯ ತನಿಖೆಗೆ ವಿಶ್ವಸಂಸ್ಥೆ ಸಹಾಯ ಕೋರಿದ ಬಾಂಗ್ಲಾದೇಶ
ಢಾಕ: ವಿದ್ಯಾರ್ಥಿ ನಾಯಕ ಉಸ್ಮಾನ್ ಹಾದಿಯ ಹತ್ಯೆ ಪ್ರಕರಣದ ತನಿಖೆಗೆ ಆಗ್ರಹಿಸಿ ಬಾಂಗ್ಲಾದೇಶದಲ್ಲಿ ಪ್ರತಿಭಟನೆ ತೀವ್ರಗೊಳ್ಳುತ್ತಿದ್ದಂತೆಯೇ ಬಾಂಗ್ಲಾದೇಶ ಸರಕಾರ ತನಿಖೆಯಲ್ಲಿ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಏಜೆನ್ಸಿಯ ಸಹಾಯ ಕೋರಿದೆ ಎಂದು ವರದಿಯಾಗಿದೆ. ಜಿನೆವಾದಲ್ಲಿ ಬಾಂಗ್ಲಾದೇಶದ ನಿಯೋಗವು `ಉಸ್ಮಾನ್ ಹಾದಿ ಹತ್ಯೆಯ ನ್ಯಾಯಯುತ, ನಿಷ್ಪಕ್ಷಪಾತ ಮತ್ತು ತ್ವರಿತ ತನಿಖೆಯನ್ನು ಬೆಂಬಲಿಸುವಂತೆ ಕೋರುವ ರಾಜತಾಂತ್ರಿಕ ಟಿಪ್ಪಣಿಯನ್ನು ಮಾನವ ಹಕ್ಕುಗಳಿಗಾಗಿನ ವಿಶ್ವಸಂಸ್ಥೆಯ ಹೈಕಮಿಷನರ್ (ಒಎಚ್ಸಿಎಚ್ಆರ್) ಕಚೇರಿಗೆ ಸಲ್ಲಿಸಿದೆ. ತನಿಖೆಯನ್ನು ಬೆಂಬಲಿಸಲು ಮಾನವ ಹಕ್ಕುಗಳ ಏಜೆನ್ಸಿಯಿಂದ ತಾಂತ್ರಿಕ ಮತ್ತು ಸಾಂಸ್ಥಿಕ ಸಹಾಯವನ್ನು ವಿನಂತರಿಸಲಾಗಿದೆ ಎಂದು ಮಧ್ಯಂತರ ಸರಕಾರದ ಮೂಲಗಳನ್ನು ಉಲ್ಲೇಖಿಸಿ ಎಎಫ್ಪಿ ವರದಿ ಮಾಡಿದೆ.
ದಿಲ್ಲಿ: ಫ್ಲೈಓವರ್ ನಲ್ಲಿ ನಿಲ್ಲಿಸಿದ್ದ ಕಾರಿನಲ್ಲಿ ಮೂವರ ಮೃತದೇಹಗಳು ಪತ್ತೆ
ಹೊಸದಿಲ್ಲಿ: ಪಶ್ಚಿಮ ದಿಲ್ಲಿಯ ಪೀರಗಢಿ ಫ್ಲೈಓವರ್ ನಲ್ಲಿ ರವಿವಾರ ನಿಲ್ಲಿಸಿದ್ದ ಕಾರೊಂದರಲ್ಲಿ ಮೂವರ ಮೃತದೇಹಗಳು ಪತ್ತೆಯಾಗಿವೆ. ಎತ್ತರದ ರಸ್ತೆಯಲ್ಲಿ ಶಂಕಾಸ್ಪದವಾಗಿ ವಾಹನವೊಂದನ್ನು ನಿಲ್ಲಿಸಿರುವ ಕುರಿತು ಅಗ್ನಿ ಶಾಮಕ ದಳ ಕರೆ ಸ್ವೀಕರಿಸಿದ ಬಳಿಕ ಈ ಘಟನೆ ಬೆಳಕಿಗೆ ಬಂದಿದೆ. ಅಗ್ನಿ ಶಾಮಕ ದಳದ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದಾಗ ಅಲ್ಲಿ ಕಾರೊಂದು ನಿಲ್ಲಿಸಿರುವುದು ಕಂಡು ಬಂತು. ಕಾರನ್ನು ಒಳಗಿನಿಂದ ಲಾಕ್ ಮಾಡಲಾಗಿತ್ತು. ಅದರ ಒಳಗಡೆ ಮೂವರ ಮೃತದೇಹಗಳು ಕಂಡು ಬಂತು. ಕೂಡಲೇ ಪೊಲೀಸರಿಗೆ ಮಾಹಿತಿ ನೀಡಲಾಯಿತು. ಸ್ಥಳಕ್ಕೆ ಧಾವಿಸಿ ಪರಿಶೀಲಿಸಿದ ಬಳಿಕ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಮೃತಪಟ್ಟವರನ್ನು ರಣದೀರ್ ಸಿಂಗ್ (60), ಲಕ್ಷ್ಮೀ ಸಿಂಗ್ (40), ಸಿವ ನಾರಾಯಣ್ (46) ಎಂದು ಪೊಲೀಸರು ಗುರುತಿಸಿದ್ದಾರೆ. ರಣಧೀರ ಹಾಗೂ ಶಿವ ನಾರಾಯಣ ರನಹೋಲಾದ ನಿವಾಸಿ, ಲಕ್ಷ್ಮೀ ಜಹಾಂಗೀರ್ಪುರಿಯ ನಿವಾಸಿ. ಕಾರು ರಣಧೀರ್ ಸಿಂಗ್ ಗೆ ಸೇರಿದ್ದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ಮೃತದೇಹಗಳಲ್ಲಿ ಗಾಯದ ಗುರುತುಗಳು ಇಲ್ಲ. ಮೂವರು ವ್ಯಕ್ತಿಗಳ ಮೌಲ್ಯಯುತ ವಸ್ತುಗಳು ಕಾರಿನ ಒಳಗೆ ಇತ್ತು. ಆದುದರಿಂದ ಸಾವಿಗೆ ಕಾರಣ ಏನು ಎಂಬ ಪ್ರಶ್ನೆ ಹುಟ್ಟಿಕೊಂಡಿದೆ.
ಮಲೇಷ್ಯಾ ಜೊತೆ ಭಾರತದ ಭರ್ಜರಿ ವ್ಯಾಪಾರ ಒಪ್ಪಂದ, ಯಾವ ಯಾವ ಕ್ಷೇತ್ರದಲ್ಲಿ ಬಂಪರ್ ತಿಳಿಯಿರಿ | India And Malaysia
ಭಾರತ ಇದೀಗ ಜಗತ್ತಿನ ಬಹುತೇಕ ಎಲ್ಲಾ ದೊಡ್ಡ ದೊಡ್ಡ ದೇಶಗಳ ಜೊತೆಗೆ ಒಪ್ಪಂದ ಮಾಡುತ್ತಾ, ವ್ಯಾಪಾರ ಕ್ಷೇತ್ರದಲ್ಲಿ ದೊಡ್ಡ ಸಾಧನೆ ಮಾಡಲು ಮುಂದೆ ನುಗ್ಗುತ್ತಿದೆ. ಹೀಗಿದ್ದಾಗ ಯುರೋಪ್ ಸೇರಿ ಅಮೆರಿಕ ಜೊತೆಗೂ ಭಾರತ ಈಗಾಗಲೇ ಮಹತ್ವದ ಒಪ್ಪಂದಗಳಿಗೆ ಸಹಿ ಹಾಕಿದೆ. ಭವಿಷ್ಯದ ದೃಷ್ಟಿ ಇಟ್ಟುಕೊಂಡು ನೋಡುವುದಾದರೆ ಭಾರತ ಇದೀಗ ಮಾಡಿಕೊಳ್ಳುತ್ತಿರುವ ಒಪ್ಪಂದಗಳು ಭಾರಿ ಲಾಭ ತಂದುಕೊಡಲಿವೆ. ಇಂತಹ
ಅಪಘಾತದಲ್ಲಿ ಮೃತಪಟ್ಟ ಪತ್ನಿ, ಮಗುವಿನ ಮೃತದೇಹವನ್ನು ಶವಾಗಾರದಲ್ಲಿರಿಸಿ ಎಸ್ಐಆರ್ ವಿಚಾರಣೆಗೆ ಹಾಜರಾದ ಪತಿ!
ಕೋಲ್ಕತಾ: ರಸ್ತೆ ಅಪಘಾತದಲ್ಲಿ ಮೃತಪಟ್ಟ ಪತ್ನಿ ಹಾಗೂ ಮಗುವಿನ ಮೃತದೇಹವನ್ನು ಶವಾಗಾರದಲ್ಲಿರಿಸಿ ಪತಿ ವಿಶೇಷ ತೀವ್ರ ಪರಿಷ್ಕರಣೆ (ಎಸ್ಐಆರ್)ಯ ವಿಚಾರಣೆಗೆ ಹಾಜರಾದ ಘಟನೆ ಮಾಲ್ಡಾದಲ್ಲಿ ಶುಕ್ರವಾರ ನಡೆದಿದೆ. ಈ ಘಟನೆ ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆಯ ಕುರಿತು ಮತ್ತೊಮ್ಮೆ ವಿವಾದ ಹಾಗೂ ಚರ್ಚೆಗೆ ಕಾರಣವಾಗಿದೆ. ಪಶ್ಚಿಮ ಬಂಗಾಳದಲ್ಲಿ ಮತದಾರರ ಪಟ್ಟಿಯ ಪರಿಷ್ಕರಣೆಯ ವಿಚಾರಣೆಯ ಹಂತದ ನಿಗದಿತ ಮುಕ್ತಾಯಕ್ಕೆ ಒಂದು ದಿನಕ್ಕಿಂತ ಮುನ್ನ ಈ ಘಟನೆ ಸಂಭವಿಸಿದೆ. ಶಿಕ್ಷಕ ಮುಹಮ್ಮದ್ ಯಾಸಿನ್ ಅನ್ಸಾರಿ ತನ್ನ ಪತ್ನಿ ಹಲೀಮಾ ಖಾತುನ್ ಹಾಗೂ ಅವರ 9 ತಿಂಗಳ ಮಗುವಿನೊಂದಿಗೆ ಎಸ್ಐಆರ್ ವಿಚಾರಣಾ ಕೇಂದ್ರಕ್ಕೆ ತಲುಪಲು ರಿಕ್ಷಾದಲ್ಲಿ ಬಸ್ ಸ್ಟ್ಯಾಂಡ್ ಗೆ ತೆರಳುತ್ತಿದ್ದರು. ಈ ಸಂದರ್ಭ ಅವರು ಪ್ರಯಾಣಿಸುತ್ತಿದ್ದ ರಿಕ್ಷಾ ಮಗುಚಿ ಅಪಘಾತ ಸಂಭವಿಸಿದೆ. ಹಲೀಮಾ ಖಾತುನ್ ಸ್ಥಳದಲ್ಲೇ ಮೃತಪಟ್ಟರು. ಗಂಭೀರ ಗಾಯಗೊಂಡಿದ್ದ ಮಗು ಆಸ್ಪತ್ರೆಯಲ್ಲಿ ಮೃತಪಟ್ಟಿತು ಎಂದು ಅವರ ಭಾವ ಅಬ್ದುರ್ ರೆಹ್ಮಾನ್ ಅನ್ಸಾರಿ ತಿಳಿಸಿದ್ದಾರೆ. ಅರ್ಜಿಗಳಲ್ಲಿ ವ್ಯತ್ಯಾಸ ಇದ್ದುದರಿಂದ ಮುಹಮ್ಮದ್ ಯಾಸಿನ್ ಅನ್ಸಾರಿ ಹಾಗೂ ಹಲೀಮಾ ಖಾತುನ್ ಗೆ ಸಮನ್ಸ್ ನೀಡಲಾಗಿತ್ತು. ‘‘ನಾವು ಎಸ್ಐಆರ್ ವಿಚಾರಣೆಗಾಗಿ ಹೋಗಿದ್ದೆವು. ಇಲ್ಲದೆ ಇದ್ದರೆ ಹೋಗುತ್ತಿರಲಿಲ್ಲ’’ ಎಂದು ಮುಹಮ್ಮದ್ ಯಾಸಿನ್ ಅನ್ಸಾರಿ ತಿಳಿಸಿದ್ದಾರೆ. ಘಟನೆ ಕುರಿತಂತೆ ರಾಜ್ಯದ ಆಡಳಿತಾರೂಢ ಟಿಎಂಸಿ ಚುನಾವಣಾ ಆಯೋಗ ಹಾಗೂ ಬಿಜೆಪಿ ನೇತೃತ್ವದ ಕೇಂದ್ರ ಸರಕಾರವನ್ನು ತರಾಟೆಗೆ ತೆಗೆದುಕೊಂಡಿದೆ. ಮಾಲ್ಡಾ ಜಿಲ್ಲೆಯ ಯುವ ತೃಣಮೂಲ ಕಾಂಗ್ರೆಸ್ ನ ಅಧ್ಯಕ್ಷ ಪ್ರಸನ್ಜಿತ್ ದಾಸ್, ಬಿಜೆಪಿಗಾಗಿ ಚುನಾವಣಾ ಆಯೋಗ ಜನರಿಗೆ ತೊಂದರೆ ನೀಡುತ್ತಿರುವುದನ್ನು ಹಾಗೂ ಜೀವಗಳನ್ನು ಬಲಿ ತೆಗೆದುಕೊಳ್ಳುತ್ತಿರುವುದನ್ನು ನಾವು ಬಲವಾಗಿ ಖಂಡಿಸುತ್ತೇವೆ ಎಂದಿದ್ದಾರೆ. ಈ ನಡುವೆ ಬಿಜೆಪಿಯ ಸ್ಥಳೀಯ ವಕ್ತಾರ ಅಮ್ಲಾನ್ ಭಾದುರಿ, ಪಶ್ಚಿಮ ಬಂಗಾಳದಲ್ಲಿ ಸಂಭವಿಸುವ ಸಾವುಗಳನ್ನು ಟಿಎಂಸಿ ರಾಜಕೀಯಗೊಳಿಸುತ್ತಿದೆ ಎಂದು ಹೇಳಿದ್ದಾರೆ.
ಬಳ್ಳಾರಿ| ತೆಕ್ಕಲಕೋಟೆ ಬಳಿ ಉತ್ಖನನ ವೇಳೆ 5 ಸಾವಿರ ವರ್ಷ ಹಳೆಯ ಅಸ್ಥಿಪಂಜರಗಳು ಪತ್ತೆ
ತೆಕ್ಕಲಕೋಟೆ : ಜಿಲ್ಲೆಯ ಸಿರಗುಪ್ಪ ತಾಲೂಕಿನ ತೆಕ್ಕಲಕೋಟೆ ಪಟ್ಟಣದ ಗೌಡ್ರ ಮೂಲೆ ಬೆಟ್ಟದಲ್ಲಿ ನಡೆಯುತ್ತಿರುವ ಉತ್ಖನನದ ವೇಳೆ ಐತಿಹಾಸಿಕ ಎರಡು ಮಾನವ ಅಸ್ಥಿಪಂಜರಗಳು ಪತ್ತೆಯಾಗಿವೆ. ಅಮೆರಿಕಾದ ಹಾರ್ಟ್ವಿಕ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕಿ ಹಾಗೂ ಉತ್ಖನನ ತಂಡದ ಸಹ ನಿರ್ದೇಶಕಿ ನಮಿತಾ ಎಸ್. ಸುಗಂಧಿ ನೇತೃತ್ವದ ಸಂಶೋಧಕರ ತಂಡ ಈ ಉತ್ಖನನ ಕಾರ್ಯವನ್ನು ನಡೆಸುತ್ತಿದೆ. ಕಳೆದ ವಾರ ಮಣ್ಣನ್ನು ಅಗೆದಾಗ ಮೊದಲು ಮಾನವ ಮೂಳೆಗಳು ಪತ್ತೆಯಾಗಿದ್ದು, ನಂತರ ಮತ್ತಷ್ಟು ಆಳವಾಗಿ ಅಗೆದಾಗ ಸುಮಾರು 5.5 ಅಡಿ ಉದ್ದದ ಎರಡು ಸಂಪೂರ್ಣ ಮಾನವ ಅಸ್ಥಿಪಂಜರಗಳು ಒಂದರ ಪಕ್ಕದಲ್ಲೊಂದು ಪತ್ತೆಯಾಗಿವೆ. ಅಸ್ಥಿಪಂಜರಗಳು ಯಾವುದೇ ರೀತಿಯಲ್ಲಿ ಹಾಳಾಗದೆ ಉತ್ತಮ ಸ್ಥಿತಿಯಲ್ಲಿ ದೊರೆತಿದ್ದು, ಮೃತದೇಹಗಳ ಮೇಲೆ ಕಲ್ಲುಗಳನ್ನು ಇಟ್ಟು ಶವಸಂಸ್ಕಾರ ಮಾಡಿದ ಪದ್ಧತಿಯ ಸ್ಪಷ್ಟ ಕುರುಹುಗಳು ಕಂಡುಬಂದಿವೆ. ಅವಶೇಷಗಳ ಸುತ್ತ ಮಡಿಕೆ ಚೂರುಗಳು, ಸೂಕ್ಷ್ಮ ಶಿಲಾಯುಗದ ಅವಶೇಷಗಳು ಹಾಗೂ ಮಾನವ ಆಯುಧ ಬಳಕೆಗೆ ಸಂಬಂಧಿಸಿದ ಸಾಕ್ಷ್ಯಗಳು ಪತ್ತೆಯಾಗಿವೆ. ಇದರಿಂದ ಇದು ನವಶಿಲಾಯುಗ ಅಥವಾ ಪ್ರಾಗೈತಿಹಾಸಿಕ ಕಾಲದ ಪ್ರಮುಖ ಮಾನವ ನೆಲೆ ಆಗಿರಬಹುದೆಂದು ತಜ್ಞರು ಅಂದಾಜಿಸಿದ್ದಾರೆ. ಪತ್ತೆಯಾದ ಅಸ್ಥಿಪಂಜರಗಳು ಸುಮಾರು 3,000 ರಿಂದ 5,000 ವರ್ಷಗಳ ಹಿಂದಿನವು ಆಗಿರಬಹುದೆಂದು ಹೇಳಲಾಗಿದ್ದು, ನಿಖರ ಕಾಲಮಾನದ ನಿರ್ಧಾರಕ್ಕಾಗಿ ಕಾರ್ಬನ್ ಡೇಟಿಂಗ್ ಪರೀಕ್ಷೆಗೆ ಒಳಪಡಿಸಲು ಅಧಿಕಾರಿಗಳು ನಿರ್ಧರಿಸಿದ್ದಾರೆ. ಉತ್ಖನನ ಕಾರ್ಯದ ನಿರ್ದೇಶಕರಾದ ಪರಂಪರೆ ಇಲಾಖೆ ಉಪ ನಿರ್ದೇಶಕ ಆರ್. ಶೇಜೇಶ್ವರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ತೆಕ್ಕಲಕೋಟೆ ಪ್ರದೇಶವನ್ನು ಸಂರಕ್ಷಿಸುವ ಅಗತ್ಯವಿದೆ ಎಂದು ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ. ಪ್ರೊ. ನಮಿತಾ ಎಸ್ ಸುಗಂಧಿ: ಅಮೆರಿಕದ ಹಾಟ್೯ ವಿಕ್ ವಿಶ್ವವಿದ್ಯಾಲಯ ಪ್ರೊ. ನಮಿತಾ ಎಸ್ ಸುಗಂಧಿ, 2019ರಲ್ಲಿ ಮೊದಲ ಬಾರಿಗೆ ತೆಕ್ಕಲಕೋಟೆಗೆ ಉತ್ಖನನಕ್ಕೆ ಬಂದಿದ್ದರು. ನಂತರ 2025 ರಲ್ಲಿ ಸಂಶೋಧನಾ ಪ್ರಬಂಧ ಸಿದ್ದಪಡಿಸಲು ಎರಡನೇ ಸಲ ಭೇಟಿ ನೀಡಿದ್ದರು. ಜೊತೆಗೆ Man and Environment – Tekkalakote ಪ್ರಬಂಧ ಮಂಡನೆಯನ್ನೂ ಮಾಡಿದ್ದರು. ಪ್ರಸ್ತುತವಾಗಿ ಮೂರನೇ ಬಾರಿ ಭೇಟಿ ನೀಡಿರುವ ನಮಿತಾ, ಉತ್ಖನನ ಕಾರ್ಯದಲ್ಲಿ ನಿರತರಾಗಿದ್ದಾರೆ. ಯಾಕೆ ಇದೇ ಸ್ಥಳ ಆಯ್ಕೆ ಮಾಡಿದರು? ಮೈಸೂರು ಪ್ರಾಶ್ಚವಸ್ತು ಇಲಾಖೆಯ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದ್ದ ಎಮ್ ಎಸ್ ನಾಗರಾಜ ರಾವ್, 1964 ರಲ್ಲಿ ಉತ್ಖನನ ಮಾಡಿ ತೆಕ್ಕಲಕೋಟೆ ಇತಿಹಾಸವನ್ನು ಜಗತ್ತಿಗೆ ತಿಳಿಯಪಡಿಸಿದ್ದರು. ಈ ಬಗ್ಗೆ ಪುಸ್ತಕದಲ್ಲಿ ವಿವರಣೆಯನ್ನೂ ನೀಡಿದ್ದಾರೆ. ಈ ಪುಸ್ತಕ ಓದಿದ ನಮಿತಾ ಎಸ್ ಸುಗಂಧಿ, ಕುತೂಹಲದಿಂದ ಸಂಶೋಧನೆಗೆ ತೆಕ್ಕಲಕೋಟೆಯನ್ನು ಆಯ್ಕೆ ಮಾಡಿಕೊಂಡಿದ್ದಾರೆ.
ಭತ್ತದ ಕೃಷಿ ಸಾಧಕಿ ಬೆಳುವಾಯಿಯ ಪ್ರೇಮಾ ಹೆಗ್ಡೆ ಮಾಲಾಡಿಬೀಡುಗೆ ಪ್ರಥಮ ಸ್ಥಾನ
ಮೂಡುಬಿದಿರೆ: 2022-23ನೆ ಸಾಲಿನಲ್ಲಿ ಕೃಷಿ ಪ್ರಶಸ್ತಿ ಕಾರ್ಯಕ್ರಮದಡಿ ಭತ್ತ( ಮುಂಗಾರು- ಮಳೆಯಾಶ್ರಿತ)ದಲ್ಲಿ ಮಹಿಳಾ ವಿಭಾಗದಲ್ಲಿ ಮೂಡುಬಿದಿರೆ ಬೆಳುವಾಯಿಯ ಪ್ರೇಮಾ ಹೆಗ್ಡೆ ಮಾಲಾಡಿಬೀಡು ಅವರು ರಾಜ್ಯಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ. ಅವರನ್ನು ರೂ.1.25 ಲಕ್ಷ ನಗದು ಸಹಿತ ಗೌರವಿಸಲಾಯಿತು. ಬೆಂಗಳೂರಿನಲ್ಲಿ ನಡೆದ ಅಂತಾರಾಷ್ಟ್ರೀಯ ವಾಣಿಜ್ಯ ಮೇಳ ಹಾಗೂ ಉತ್ಪಾದನೋತ್ತರ ಕೃಷಿ,- ಸಶಕ್ತೀಕರಣ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದ ರಾಮಯ್ಯ ಪ್ರಶಸ್ತಿ ಪ್ರದಾನ ಮಾಡಿದರು.
ರಾಯಚೂರು| ಹಟ್ಟಿ ಪಟ್ಟಣಕ್ಕೆ ಡಿಪೋ ಮಂಜೂರು ಮಾಡುವಂತೆ ಡಿಸಿಎಂ ಡಿ.ಕೆ ಶಿವಕುಮಾರ್ಗೆ ಮನವಿ
ರಾಯಚೂರು: ಲಿಂಗಸುಗೂರು ತಾಲೂಕಿನ ಹಟ್ಟಿ ಪಟ್ಟಣಕ್ಕೆ ಬಸ್ ಡಿಪೋ ಮಂಜೂರು ಮಾಡಬೇಕು ಎಂದು ಒತ್ತಾಯಿಸಿ ಹಟ್ಟಿ ಪಟ್ಟಣ ನಾಗರಿಕ ಸಮಿತಿಯಿಂದ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರಿಗೆ ಮನವಿ ಸಲ್ಲಿಸಲಾಯಿತು. ದೇಶದಲ್ಲಿಯೇ ಏಕೈಕ ಚಿನ್ನದ ಗಣಿಯನ್ನು ಹೊಂದಿದ ಹಟ್ಟಿ ಪಟ್ಟಣವು ರಾಯಚೂರು ಜಿಲ್ಲೆಯಲ್ಲಿ ಜನಸಂಖ್ಯೆಯಲ್ಲಿ ನಾಲ್ಕನೇ ಸ್ಥಾನ ಹೊಂದಿದೆ. ಸರಕಾರಿ ಹಾಗೂ ಖಾಸಗಿ ಸೇರಿದಂತೆ ಒಟ್ಟು 22 ಪ್ರಾಥಮಿಕ ಶಾಲೆಗಳು, 12 ಪ್ರೌಢಶಾಲೆಗಳು, 3 ಪದವಿ ಪೂರ್ವ ಕಾಲೇಜು, 2 ಪದವಿ ಕಾಲೇಜು, 1 ಕೇಂದ್ರೀಯ ವಿದ್ಯಾಲಯ, 2 ಐಟಿಐ ಕಾಲೇಜುಗಳಿವೆ. ಹಟ್ಟಿ ಪಟ್ಟಣವು ಲಿಂಗಸುಗೂರು ತಾಲೂಕಿನಲ್ಲೇ ಅತ್ಯಂತ ದೊಡ್ಡ ಪಟ್ಟಣವಾಗಿದೆ. 2011ರ ಜನಗಣತಿಯ ಪ್ರಕಾರ ಹಟ್ಟಿ ಪಟ್ಟಣದ ಜನಸಂಖ್ಯೆ 29814, ಇದು ಜಿಲ್ಲೆಯ ನಾಲ್ಕನೇಯ ಅತಿಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ಪಟ್ಟಣವಾಗಿದೆ. ಹಟ್ಟಿ ಪಟ್ಟಣವು ಸುತ್ತಲಿನ 40 ಹಳ್ಳಿಗಳಿಗೆ ಕೇಂದ್ರ ಸ್ಥಾನವಾಗಿದ್ದು, ಶಿಕ್ಷಣ, ವ್ಯಾಪಾರ ವಹಿವಾಟು, ಬ್ಯಾಂಕ್ ಕೆಲಸಗಳು, ವಾರದ ಸಂತೆ (ವಾರದಲ್ಲಿ ಎರಡು ದಿನ ಸಂತೆ ನಡೆಯುತ್ತದೆ) ಹೀಗೆ ಹಟ್ಟಿ ಪಟ್ಟಣವನ್ನೇ ಸುತ್ತಲಿನ ಹಳ್ಳಿಗಳ ಜನರು ಅವಲಂಬಿಸಿದ್ದಾರೆ. ಹಟ್ಟಿ ಚಿನ್ನದ ಗಣಿಯು ಭಾರತದ ಏಕೈಕ ಚಿನ್ನದ ಗಣಿಯಾಗಿರುವುದರಿಂದ ರಾಜ್ಯದ 31 ಜಿಲ್ಲೆಗಳ ಜನರು ಹಾಗೂ ನಾಲ್ಕಾರು ರಾಜ್ಯದ ಜನರು ಹಟ್ಟಿಯಲ್ಲಿ ವಾಸಿಸುತ್ತಿದ್ದಾರೆ. ಹಟ್ಟಿಯಿಂದ ಬೇರೆ ಬೇರೆ ಊರುಗಳಿಗೆ ಸಂಚರಿಸಲು ಬಸ್ಸುಗಳಿರುವುದಿಲ್ಲ. ಹಟ್ಟಿ ಪಟ್ಟಣಕ್ಕೆ ಲಿಂಗಸಗೂರು ಡಿಪೋದಿಂದ ಸರಿಯಾದ ಸಮಯಕ್ಕೆ ಬಸ್ಸುಗಳು ಬರುತ್ತಿಲ್ಲ. ಹಟ್ಟಿ ಪಟ್ಟಣಕ್ಕೆ ಅಂತರರಾಜ್ಯ ಮತ್ತು ಅಂತರ ಜಿಲ್ಲಾ ಬಸ್ಸುಗಳ ಬೇಡಿಕೆ ಇದ್ದು ಹಾಗೂ ಹೊಸ ಬಸ್ ಡಿಪೋ ಮಂಜೂರು ಮಾಡುವಂತೆ ಸುಮಾರು 30 ವರ್ಷಗಳಿಂದ ವಿವಿಧ ಸಂಘಟನೆಗಳಿಂದ ಹಲವಾರು ಹೋರಾಟಗಳು, ಧರಣಿ ಸತ್ಯಾಗ್ರಹ ಚಳುವಳಿಗಳು ಮಾಡುತ್ತಾ ಬರಲಾಗಿದೆ. ಆದರೆ ಇಲ್ಲಿಯವರೆಗೆ ಯಾವುದೇ ಪ್ರಯೋಜನವಾಗಿಲ್ಲ ಎಂದು ದೂರಿದರು. ಈ ವೇಳೆ ನಾಗರಿಕ ಸಮಿತಿಯ ಅಧ್ಯಕ್ಷ ಸುರೇಶ್ ಗೌಡ ಗುರಿಕಾರ್, ಪ್ರಧಾನ ಕಾರ್ಯದರ್ಶಿ ವೆಂಕಟೇಶ್ ಹಾಗೂ ಉಪಾಧ್ಯಕ್ಷ ದಯಾನಂದ ಉಪಸ್ಥಿತರಿದ್ದರು.
Bihar | 6 ವರ್ಷದ ಬಾಲಕಿಯ ಅತ್ಯಾಚಾರ, ಹತ್ಯೆ: ಓರ್ವನ ಬಂಧನ
ಪಾಟ್ನಾ: ಬಿಹಾರದ ದರ್ಭಾಂಗ ಪಟ್ಟಣದಲ್ಲಿ ಆರು ವರ್ಷದ ಬಾಲಕಿಯ ಮೇಲೆ ಅತ್ಯಾಚಾರವೆಸಗಿ ,ಕೊಲೆಗೈದ ಘಟನೆ ರವಿವಾರ ವರದಿಯಾಗಿದೆ. ಬಾಲಕಿಯ ಮೃತದೇಹವು ವಿಶ್ವವಿದ್ಯಾನಿಲಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಕೆರೆಯೊಂದರ ಬಳಿ ಪತ್ತೆಯಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ವಿಕಾಸ್ ಮಹಾತೋ ಎಂಬ ಸ್ಥಳೀಯ ನಿವಾಸಿಯನ್ನು ಬಂಧಿಸಿದ್ದಾರೆ. ಶನಿವಾರ ಸಂಜೆ ಬಾಲಕಿಯು ತನ್ನದೇ ವಯಸ್ಸಿನ ಇತರ ಇಬ್ಬರು ಬಾಲಕಿಯರ ಜೊತೆ ಆಟವಾಡಲೆಂದು ತೆರಳಿದ್ದಳು. ಕತ್ತಲಾದರೂ ಮರಳದೇ ಇದ್ದಾಗ, ಆತಂಕಗೊಂಡ ಮನೆಯವರು ಹಾಗೂ ನೆರೆಹೊರೆಯವರು ಆಕೆಗಾಗಿ ಹುಡುಕಾಡಿದ್ದರು. ರವಿವಾರ ನಸುಕಿನ ವೇಳೆ ನಿರ್ಜನ ಪ್ರದೇಶದಲ್ಲಿರುವ ಕೆರೆಯೊಂದರ ಬಳಿ ನಾಯಿಗಳು ಬೊಗಳುವ ಸದ್ದು ಕೇಳಿ, ಅವರು ಅಲ್ಲಿಗೆ ಧಾವಿಸಿದಾಗ ರಕ್ತದ ಮಡುವಿನ ಮಧ್ಯೆ ಬಾಲಕಿಯ ಮೃತದೇಹ ಬಿದ್ದಿರುವುದು ಕಂಡುಬಂದಿತ್ತು. ಕುಟುಂಬಿಕರು ನೀಡಿದ ದೂರಿಂತೆ, ಸ್ಥಳಕ್ಕೆ ಧಾವಿಸಿದ ಪೊಲೀಸರು ತನಿಖೆ ನಡೆಸಿದ್ದರು. ಕೆರೆಯ ಬಳಿ ಈ ಮೂವರು ಬಾಲಕಿಯರು ಆಟವಾಡುತ್ತಿದ್ದಾಗ ಆರೋಪಿಯು ಅವರೆಲ್ಲರನ್ನೂ ಅಪಹರಿಸಲು ಯತ್ನಿಸಿದ್ದ. ಆದರೆ ಇಬ್ಬರು ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು. ಆವರು ನಡೆದ ಘಟನೆಯನ್ನು ಮನೆಯವರಿಗೆ ವಿವರಿಸಿದ್ದರು. ತನಿಖೆ ಸಂದರ್ಭ ಈ ಇಬ್ಬರು ಬಾಲಕಿಯರಿಗೆ, ಪೊಲೀಸರು ಪರಿಸರದಲ್ಲಿನ ಸಿಸಿಟಿವಿ ಕ್ಯಾಮರಾದ ದೃಶ್ಯಗಳ್ನು ತೋರಿಸಿದಾಗ ಅವರು ಆರೋಪಿ ವಿಕಾಸ್ ಮಹಾತೋನನ್ನು ಗುರುತಿಸಿದ್ದರು. ಆನಂತರ ಪೊಲೀಸರು ವಿಕಾಸ್ ಮಹಾತೋನ ಮನೆಗೆ ದಾಳಿ ನಡೆಸಿ ಆತನನ್ನು ಬಂಧಿಸಿದ್ದಾರೆ. ಬಂಧನದ ಸಂದರ್ಭ ಆತನ ಬಟ್ಟೆಗಳಲ್ಲಿ ರಕ್ತದ ಕಲೆಗಳು ಪತ್ತೆಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೌರತ್ವದ ಹೆಸರಿನಲ್ಲಿ ಪ್ರತ್ಯೇಕತೆಗೆ ಅವಕಾಶ ಕಲ್ಪಿಸಲು ಬಿಡಬಾರದು: ಕೇರಳ ಸಿಎಂ ಪಿಣರಾಯಿ ವಿಜಯನ್
► ಸಮಸ್ತ ಶತಾಬ್ದಿ ಅಂತಾರಾಷ್ಟ್ರೀಯ ಮಹಾ ಸಮ್ಮೇಳನಕ್ಕೆ ತೆರೆ► ಕುನಿಯಕ್ಕೆ ಹರಿದುಬಂದ ಜನಸಾಗರ
25ಕ್ಕೂ ಅಧಿಕ ಮಂದಿಗೆ ಒಂದೇ ಮಹಡಿ ಮಾರಾಟ: ಗುರುಗ್ರಾಮದ ರಿಯಲ್ ಎಸ್ಟೇಟ್ ಉದ್ಯಮಿಯ ಬಂಧನ
ಗುರುಗ್ರಾಮ: ಕಟ್ಟಡದ ಒಂದೇ ಮಹಡಿಯನ್ನು 25ಕ್ಕೂ ಅಧಿಕ ಮಂದಿಗೆ ಮಾರಾಟ ಮಾಡುವ ಮೂಲಕ 500 ಕೋಟಿ ರೂ. ವಂಚನೆ ನಡೆಸಿದ ಆರೋಪದಲ್ಲಿ ಇಲ್ಲಿನ ರಿಯಲ್ ಎಸ್ಟೇಟ್ ಉದ್ಯಮಿ ಹಾಗೂ 32 ಮೈಲ್ಸ್ಟೋನ್ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಧ್ರುವ ದತ್ತ್ ಶರ್ಮಾನನ್ನು ಬಂಧಿಸಲಾಗಿದೆ. ಶುಕ್ರವಾರ ಬಂಧಿತರಾದ ದ್ರುವದತ್ತ್ ನನ್ನು ಗುರುಗ್ರಾಮ ಪೊಲೀಸರು ನಗರದ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಆರು ದಿನಗಳ ಪೊಲೀಸ್ ಕಸ್ಟಡಿ ವಿಧಿಸಲಾಗಿದೆ. ಕಟ್ಟಡವೊಂದರ ಒಂದೇ ಮಹಡಿಯನ್ನು ನೀಡುವುದಾಗಿ ಹೇಳಿಕೊಂಡು 25ಕ್ಕೂ ಅಧಿಕ ಮಂದಿಯಿಂದ ಒಟ್ಟು 500 ಕೋಟಿ ರೂ. ಅಧಿಕ ಹಣವನ್ನು ವಂಚಿಸಿದ್ದಾನೆಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ. ಟ್ರಾಮ್ವೆಂಚರ್ಸ್ ಪ್ರೈವೇಟ್ ಲಿಮಿಟೆಡ್ ನ ಪ್ರತಿನಿಧಿಯೊಬ್ಬರು ಈಗ 32 ಮೈಲ್ಸ್ಟೋನ್ ವಿಸ್ತಾಸ್ ಪ್ರೈವೇಟ್ ಲಿಮಿಟೆಡ್ ಎಂದು ಮರುನಾಮಕರಣಗೊಂಡಿರುವ ಆ್ಯಪ್ರಾ ಮೋಟೆಲ್ಸ್ ವಿರುದ್ಧ ದೂರು ನೀಡಿದ್ದರು. 2021ರಲ್ಲಿ 32 ಮೈಲ್ಸ್ಟೋನ್ ವಿಸ್ತಾಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ನಿರ್ದೇಶಕರು ಟ್ರಾಮ್ವೆಂಚರ್ಸ್ ಸಂಸ್ಥೆಯನ್ನು ಸಂಪರ್ಕಿಸಿ, ಗುರುಗ್ರಾಮ್ ನ 32 ಮೈಲ್ಸ್ಟೋನ್ ಸಂಕೀರ್ಣದಲ್ಲಿರುವ 3 ಸಾವಿರ ಚದರ ಅಡಿಯ ಮೊದಲ ಅಂತಸ್ತನ್ನು ಮಾರಾಟ ಮಾಡುವ ಕೊಡುಗೆ ನೀಡಿದ್ದರು. 2.5 ಕೋಟಿ ರೂ.ಗೆ ಈ ಡೀಲ್ ಕುದುರಿದ್ದು, ಸೆ.21ರಂದು ಮೊತ್ತವನ್ನು ಪಾವತಿಸಲಾಗಿತ್ತು. ಆದರೆ ಒಡೆತನಕ್ಕೆ ಸಂಬಂಧಪಟ್ಟ ಅಗತ್ಯ ದಾಖಲೆಗಳನ್ನು ಅವರು ಪಡೆಯದೆ ಇದ್ದಾಗ, ಟ್ರಾಮ್ ವೆಂಚರ್ಸ್ ದೂರು ನೀಡಿತ್ತು. ಆನಂತರ ಪೊಲೀಸರು ತನಿಖೆ ನಡೆಸಿದಾಗ 2022 ಹಾಗೂ 2023ರ ನಡುವೆ ಒಂದೇ ಮಹಡಿಯ ಮಾಲಕತ್ವದ ಕುರಿತ ಪ್ರಮುಖ ದಾಖಲೆಗಳ್ನು ಇತರ 25 ಮಂದಿಗೆ ನೀಡಿರುವುದು ಬೆಳಕಿಗೆ ಬಂದಿತ್ತು. ಪ್ರಕರಣಕ್ಕೆ ಸಂಬಂಧಿಸಿ ಆರ್ಥಿಕ ಅಪರಾಧದಳವು ತನಿಖೆ ನಡೆಸಿದ ಬಳಿಕ ಧ್ರುವದತ್ತ್ ಶರ್ಮಾನನ್ನು ಶನಿವಾರ ಬಂಧಿಸಲಾಯಿತೆಂದು ಪೊಲೀಸರು ತಿಳಿಸಿದ್ದಾರೆ.
ಒಬಾಮಾರನ್ನು ಕೋತಿಗಳಂತೆ ತೋರಿಸಿದ ವೀಡಿಯೊಗೆ ಟ್ರಂಪ್ ಖಂಡನೆ; ಕ್ಷಮೆ ಯಾಚಿಸಲು ನಕಾರ
ವಾಷಿಂಗ್ಟನ್: ತನ್ನ ಸಾಮಾಜಿಕ ಮಾಧ್ಯಮದಲ್ಲಿ ಶೇರ್ ಮಾಡಲಾದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಮತ್ತವರ ಪತ್ನಿ ಮಿಷೆಲ್ ಒಬಾಮಾರನ್ನು ಕೋತಿಗಳಂತೆ ತೋರಿಸುವ ವೀಡಿಯೊವನ್ನು ಖಂಡಿಸುವುದಾಗಿ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದು, ಆದರೆ ಈ ಬಗ್ಗೆ ಕ್ಷಮೆ ಯಾಚಿಸಲು ನಿರಾಕರಿಸಿದ್ದಾರೆ. ಟ್ರಂಪ್ ಅವರ `ಟ್ರುಥ್ ಸೋಷಿಯಲ್' ಸಾಮಾಜಿಕ ಮಾಧ್ಯಮದಲ್ಲಿ ಶೇರ್ ಮಾಡಿಕೊಳ್ಳಲಾದ ವೀಡಿಯೊವನ್ನು ಸುಮಾರು 12 ಗಂಟೆಗಳ ಬಳಿಕ ಹಿಂಪಡೆಯಲಾಗಿತ್ತು. ಈ ವೀಡಿಯೊವನ್ನು ಖಂಡಿಸುತ್ತೀರಾ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಟ್ರಂಪ್, ಖಂಡಿತಾ. ಆದರೆ ಈ ವೀಡಿಯೊವನ್ನು ಸಂಪೂರ್ಣ ನೋಡದೆ ಶೇರ್ ಮಾಡಿಕೊಳ್ಳಲಾಗಿದೆ. ವೀಡಿಯೊದ ಆರಂಭದಲ್ಲಿ 2020ರ ಚುನಾವಣಾ ಅಕ್ರಮದ ಬಗ್ಗೆ ಪ್ರತಿಪಾದನೆಯಿತ್ತು. ಆದ್ದರಿಂದ ಅದನ್ನು ನನ್ನ ಸಿಬ್ಬಂದಿಗೆ ಕಳುಹಿಸಿದ್ದೆ. ಸಾಮಾನ್ಯವಾಗಿ ಅವರು ಸಂಪೂರ್ಣವಾಗಿ ಪರಿಶೀಲಿಸಿದ ಬಳಿಕ ಶೇರ್ ಮಾಡುತ್ತಾರೆ. ಬಹುಷಃ ಇದನ್ನು ಪೂರ್ಣ ನೋಡದೆ ಶೇರ್ ಮಾಡಿರಬೇಕು. ವೀಡಿಯೊವನ್ನು ಖಂಡಿಸುತ್ತೇನೆ. ಆದರೆ ಇದರಲ್ಲಿ ನನ್ನದೇನೂ ತಪ್ಪಿಲ್ಲದ ಕಾರಣ ಕ್ಷಮೆ ಯಾಚಿಸುವುದಿಲ್ಲ' ಎಂದು ಹೇಳಿರುವುದಾಗಿ ವರದಿಯಾಗಿದೆ. ವೀಡಿಯೊವನ್ನು ಕಚೇರಿಯ ಸಿಬ್ಬಂದಿಯೊಬ್ಬರು ಪ್ರಮಾದದಿಂದ ಪೋಸ್ಟ್ ಮಾಡಿದ್ದು, ಇದರ ಸಂಪೂರ್ಣ ವಿಷಯವನ್ನು ಅಧ್ಯಕ್ಷರು ಗಮನಿಸಿದ ತಕ್ಷಣ ಅದನ್ನು ತೆಗೆದು ಹಾಕಲಾಗಿದೆ ಎಂದು ಶ್ವೇತಭವನದ ಅಧಿಕಾರಿಗಳು ಹೇಳಿದ್ದಾರೆ.
ಪಡುಬಿದ್ರಿ: ಖಾಸಗಿ ಬಸ್ಸೊಂದು ಢಿಕ್ಕಿ ಹೊಡೆದ ಪರಿಣಾಮ ರಸ್ತೆ ಬದಿ ನಿಂತಿದ್ದ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ರವಿವಾರ ಸಂಜೆ ಪಡುಬಿದ್ರಿ ಜಂಕ್ಷನ್ನಲ್ಲಿ ನಡೆದಿದೆ. ಮೃತರನ್ನು ಪಡುಬಿದ್ರಿ ಕಂಚಿನಡ್ಕ ನಿವಾಸಿ ಶೇಖರ್ (48) ಎಂದು ಗುರುತಿಸಲಾಗಿದೆ. ಅತಿ ವೇಗ ಅಜಾಗರೂಕತೆ ಯಿಂದ ಚಲಾಯಿಸಿಕೊಂಡು ಬಂದ ಬಸ್, ರಸ್ತೆ ಬದಿ ನಿಂತಿದ್ದ ಶೇಖರ್ ಅವರಿಗೆ ಡಿಕ್ಕಿ ಹೊಡೆಯುತ್ತೆನ್ನಲಾಗಿದೆ. ಇದರಿಂದ ರತ್ತೆಗೆ ಬಿದ್ದು ಗಂಭೀರವಾಗಿ ಗಾಯಗೊಂಡ ಅವರು ಉಡುಪಿ ಖಾಸಗಿ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮತ ಪಟ್ಟರು ಎಂದು ತಿಳಿದು ಬಂದಿದೆ ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣವು ದಾಖಲಾಗಿದೆ. ಅವಿವಾಹಿತರಾಗಿರುವ ಶೇಖರ್ ಸೆಕ್ಯೂರಿಟಿ ಗಾಡ್೯ ಕೆಲಸ ನಿರ್ವಹಿಸುತ್ತಿದ್ದರು. ಮೃತರು ತಾಯಿ, ಸಹೋದರ ಹಾಗೂ ಮೂವರು ಸಹೋದರಿಯರನ್ನು ಅಗಲಿದ್ದಾರೆ.
ಉಡುಪಿ: ಸರಕಾರಿ ಆಸ್ಪತ್ರೆಗಳ ಖಾಸಗೀಕರಣ ವಿರೋಧಿಸಿ ಆರೋಗ್ಯ ಹಕ್ಕಿನ ಜಾಥಾ
ಫೆ.10ರಂದು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ
ಸಿಬಿಸಿಐನ ಮೊದಲ ದಲಿತ ಮುಖ್ಯಸ್ಥರಾಗಿ ಹೈದರಾಬಾದ್ ಆರ್ಚ್ ಬಿಷಪ್ ಕಾರ್ಡಿನಲ್ ಪೂಲಾ ಅಂಥೋನಿ ನೇಮಕ
ಕೊಚ್ಚಿ: ಕ್ಯಾಥೋಲಿಕ್ ಬಿಷಪ್ಸ್ ಕಾನ್ಫರೆನ್ಸ್ ಆಫ್ ಇಂಡಿಯಾದ (ಸಿಬಿಸಿಐ) ಅಧ್ಯಕ್ಷರಾಗಿ ಕಾರ್ಡಿನಲ್ ಪೂಲಾ ಅಂಥೋನಿ ಅವರು ಆಯ್ಕೆಯಾಗಿದ್ದು, ದೇಶದಲ್ಲಿಯ ಕ್ಯಾಥೋಲಿಕ್ ಚರ್ಚ್ ಗಳ ಉನ್ನತ ಮಂಡಳಿಯ ಮೊದಲ ದಲಿತ ಮುಖ್ಯಸ್ಥ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಫೆ.7ರಂದು ಬೆಂಗಳೂರಿನಲ್ಲಿ ನಡೆದ ಸಿಬಿಸಿಐನ 37ನೇ ಸಾಮಾನ್ಯ ಸಭೆಯಲ್ಲಿ 64ರ ಹರೆಯದ ಕಾರ್ಡಿನಲ್ ಪೂಲಾ ಅಂಥೋನಿಯವರನ್ನು ಆಯ್ಕೆ ಮಾಡಲಾಗಿದ್ದು, ಇದು ಭಾರತದ ಸುಮಾರು ಎರಡು ಕೋಟಿ ಕ್ಯಾಥೊಲಿಕ್ ಕೈಸ್ತರಿಗೆ ಐತಿಹಾಸಿಕ ಘಳಿಗೆಯಾಗಿದೆ. ದೇಶಾದ್ಯಂತದಿಂದ ಬಿಷಪ್ ಗಳು ಧಾರ್ಮಿಕ ಸೇವೆ, ಸಾಮಾಜಿಕ ಮತ್ತು ಆಡಳಿತಾತ್ಮಕ ವಿಷಯಗಳನ್ನು ಚರ್ಚಿಸಲು ಸಭೆಯಲ್ಲಿ ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಎರಡು ವರ್ಷಗಳ ಅವಧಿಗೆ ನೂತನ ಪದಾಧಿಕಾರಿಗಳನ್ನೂ ಆಯ್ಕೆ ಮಾಡಲಾಯಿತು. ಪ್ರಥಮ ಉಪಾಧ್ಯಕ್ಷರಾಗಿ ತಿರುವನಂತಪುರದ ಆರ್ಚ್ ಬಿಷಪ್ ಥೋಮಸ್ ಮಾರ್ ಕೂರಿಲೋಸ್, ದ್ವಿತೀಯ ಉಪಾಧ್ಯಕ್ಷರಾಗಿ ಕೊಟ್ಟಾಯಂ ಆರ್ಚ್ ಬಿಷಪ್ ಮ್ಯಾಥ್ಯೂ ಮೂಲಕ್ಕಟ್ ಆಯ್ಕೆಯಾದರು. ಸಿಬಿಸಿಐನ ರಾಷ್ಟ್ರೀಯ ಉಪಕ್ರಮಗಳ ಸಂಘಟನೆಯನ್ನು ಮುಂದುವರಿಸಲು ಆರ್ಚ್ ಬಿಷಪ್ ಅನಿಲ್ ಕೌಟೊ ಅವರನ್ನು ಮಹಾ ಕಾರ್ಯದರ್ಶಿಯಾಗಿ ಪುನರಾಯ್ಕೆ ಮಾಡಲಾಗಿದೆ. ಈ ನಾಯಕತ್ವವು ಲ್ಯಾಟಿನ್, ಸೈರೋ-ಮಲಂಕರ್ ಮತ್ತು ಸೈರೋ-ಮಲಬಾರ್ ಪಂಗಡಗಳ ಪ್ರಾತಿನಿಧ್ಯದೊಂದಿಗೆ ಚರ್ಚ್ ನ ಧಾರ್ಮಿಕ ಮತ್ತು ಪೂಜಾ ವೈವಿಧ್ಯತೆಯನ್ನು ಪ್ರತಿಬಿಂಬಿಸುತ್ತದೆ, ತನ್ಮೂಲಕ ಸಿಬಿಸಿಐನ ಎಲ್ಲರನ್ನೂ ಒಳಗೊಳ್ಳುವ ಪ್ರವೃತ್ತಿಯನ್ನು ಎತ್ತಿ ತೋರಿಸಿದೆ. ನಿರ್ಗಮಿತ ಪದಾಧಿಕಾರಿಗಳಾದ ಆರ್ಚ್ ಬಿಷಪ್ ಮಾರ್ ಆ್ಯಂಡ್ರೂಸ್ ತಳಹತ್, ಆರ್ಚ್ ಬಿಷಪ್ ಜಾರ್ಜ್ ಅಂಥೋನಿಸ್ವಾಮಿ ಮತ್ತು ಬಿಷಪ್ ಜೋಸೆಫ್ ಮಾರ್ ಥೋಮಸ್ ಅವರ ನಾಯಕತ್ವವನ್ನು ಸಭೆಯು ಪ್ರಶಂಸಿಸಿತು.
ನೇತ್ರಜ್ಯೋತಿ ಕಾಲೇಜಿನಲ್ಲಿ ಫಿಸಿಯೋಥೆರಪಿ ಕ್ಲಿನಿಕ್ ಉದ್ಘಾಟನೆ
ಉಡುಪಿ: ನಗರದ ನೇತ್ರಜ್ಯೋತಿ ಕಾಲೇಜಿನಲ್ಲಿ ಫಿಸಿಯೋಥೆರಪಿ ಕ್ಲಿನಿಕ್ ಅನ್ನು ಮಣಿಪಾಲ ಕಾಲೇಜು ಆಫ್ ಹೆಲ್ತ್ ಸೈನ್ಸ್ನ ಡೀನ್ ಡಾ. ಅರುಣ್ ಮಯ್ಯ ಇವರು ದೀಪ ಬೆಳಗಿಸಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಮನುಷ್ಯನಿಗೆ ಬದುಕಿನ ಎಲ್ಲಾ ಹಂತಗಳಲ್ಲೂ ಫಿಸಿಯೋಥೆರಪಿ ಚಿಕಿತ್ಸೆಯ ಅವಶ್ಯಕತೆ ಇರುತ್ತದೆ. ಆರೋಗ್ಯ ಪೂರ್ಣ ಬದುಕಿಗೆ ಇದು ಅತ್ಯಗತ್ಯ. ನೇತ್ರ ಜ್ಯೋತಿ ಕಾಲೇಜಿನಲ್ಲಿ ಪ್ರಾರಂಭ ವಾದ ಸುಸಜ್ಜಿತ ಫಿಸಿಯೋಥೆರಪಿ ಕ್ಲಿನಿಕ್ನ ಪ್ರಯೋಜನವನ್ನು ಎಲ್ಲರು ಪಡೆಯುವಂತಾಗಬೇಕು ಎಂದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಉಜ್ವಲ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕ ಪುರುಷೋತ್ತಮ ಶೆಟ್ಟಿ ಮಾತನಾಡಿ, ಭವಿಷ್ಯದಲ್ಲಿ ನೇತ್ರ ಜ್ಯೋತಿ ಕಾಲೇಜು ಶ್ರೇಷ್ಠ ಸಂಸ್ಥೆಯಾಗಿ ಮೂಡಿ ಬರಲಿ ಎಂದು ಶುಭ ಹಾರೈಸಿ ದರು. ಮತ್ತೊಬ್ಬ ಅತಿಥಿ ಬಡಗುಬೆಟ್ಟು ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಅಧ್ಯಕ್ಷ ಇಂದ್ರಾಳಿ ಜಯಕರ ಶೆಟ್ಟಿ ಅವರು ಸಂಸ್ಥೆಗೆ ಶುಭ ಹಾರೈಸಿದರು. ಅಧ್ಯಕ್ಷತೆ ವಹಿಸಿದ್ದ ನೇತ್ರಜ್ಯೋತಿ ಕಾಲೇಜಿನ ಸಂಸ್ಥಾಪಕ ಅಧ್ಯಕ್ಷ ಡಾ. ಕೃಷ್ಣಪ್ರಸಾದ್ ಕೂಡ್ಲು ಮಾತನಾಡಿ, ವೈದ್ಯಕೀಯ ಕ್ಷೇತ್ರದಲ್ಲಿ ಪರಿಪೂರ್ಣತೆ ಪಡೆಯಲು ಅರೆ ವೈದ್ಯಕೀಯ ಸಿಬ್ಬಂದಿಗಳ ಪಾತ್ರ ಬಹಳ ಮುಖ್ಯ ಎಂದರು. ನೇತ್ರ ಜ್ಯೋತಿ ಕಾಲೇಜಿನ ಅಧ್ಯಕ್ಷೆ ರಶ್ಮಿ ಕೃಷ್ಣಪ್ರಸಾದ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕಾಲೇಜಿನ ಮುಖ್ಯ ಕಾರ್ಯ ನಿರ್ವಹಣಾ ಧಿಕಾರಿ ಡಾ. ಗೌರಿ ಪ್ರಭು ನೇತ್ರಜ್ಯೋತಿ ಫಿಸಿಯೋಥೆರಪಿ ಕ್ಲಿನಿಕ್ನಲ್ಲಿ ಸಿಗುವ ಸೌಲಭ್ಯಗಳ ಕುರಿತು ತಿಳಿಸಿದರು. ವೇದಿಕೆಯಲ್ಲಿ ನೇತ್ರಜ್ಯೋತಿ ಚಾರಿಟಬಲ್ ಟ್ರಸ್ಟ್ನ ಟ್ರಸ್ಟಿ ರಘುರಾಮ್ ರಾವ್ ಉಪಸ್ಥಿತರಿದ್ದರು. ಕಾಲೇಜಿನ ಸಂಚಾಲಕ ಮಾಧವ ಪೂಜಾರಿ ಸ್ವಾಗತಿಸಿ ಉಪನ್ಯಾಸಕಿ ಶ್ರಾವ್ಯ ವಂದಿಸಿದರು. ಉಪನ್ಯಾಸಕಿ ಶ್ರುತಿ ಕಾರ್ಯಕ್ರಮ ನಿರೂಪಿಸಿದರು.
ಶಸ್ತ್ರಾಸ್ತ್ರ ಒಪ್ಪಿಸುವುದಿಲ್ಲ, ಗಾಝಾದಲ್ಲಿ ವಿದೇಶಿ ಆಡಳಿತ ಒಪ್ಪುವುದಿಲ್ಲ: ಹಮಾಸ್
ದೋಹಾ: ಹಮಾಸ್ ಶಸ್ತ್ರಾಸ್ತ್ರಗಳನ್ನು ಒಪ್ಪಿಸುವುದಿಲ್ಲ ಮತ್ತು ಗಾಝಾದಲ್ಲಿ ವಿದೇಶಿ ಹಸ್ತಕ್ಷೇಪವನ್ನು ಒಪ್ಪುವುದಿಲ್ಲ ಎಂದು ಹಮಾಸ್ ನ ಉನ್ನತ ನಾಯಕ ಖಾಲಿದ್ ಮಿಷಾಲ್ ಹೇಳಿದ್ದಾರೆ. ಖತರ್ ರಾಜಧಾನಿ ದೋಹದಲ್ಲಿ ನಡೆದ ಸಮಾವೇಶದಲ್ಲಿ ಮಾತನಾಡಿದ ಖಾಲಿದ್ ಮಿಷಾಲ್, ಪ್ರತಿರೋಧ, ಅದರ ಶಸ್ತ್ರಾಸ್ತ್ರಗಳು ಮತ್ತು ಅದನ್ನು ನಡೆಸಿದವರನ್ನು ಅಪರಾಧೀಕರಿಸುವುದನ್ನು ನಾವು ಒಪ್ಪಿಕೊಳ್ಳಬಾರದು. ಆಕ್ರಮಣ ಇರುವವರೆಗೂ ಪ್ರತಿರೋಧ ಇದ್ದೇ ಇರುತ್ತದೆ. ಆಕ್ರಮಣದಡಿ ಪ್ರತಿರೋಧ ತೋರಿಸುವುದು ಜನರ ಹಕ್ಕು ಮತ್ತು ಇದಕ್ಕೆ ರಾಷ್ಟ್ರಗಳು ಹೆಮ್ಮೆ ಪಡುತ್ತವೆ ಎಂದು ಹೇಳಿದ್ದಾರೆ. ಮಿಷಾಲ್ ಈ ಹಿಂದೆ ಹಮಾಸ್ ನ ಮುಖ್ಯಸ್ಥರಾಗಿದ್ದರು. ಫೆಲೆಸ್ತೀನಿಯನ್ ಪ್ರದೇಶದಲ್ಲಿ ವಿದೇಶೀಯರ ಆಡಳಿತವನ್ನು ಹಮಾಸ್ ಸ್ವೀಕರಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದ ಮಿಷಾಲ್, ಗಾಝಾ ಶಾಂತಿ ಮಂಡಳಿಯು ಗಾಝಾದ ಪುನರ್ನಿರ್ಮಾಣ ಮತ್ತು ಅದರ ಸುಮಾರು 2.2 ದಶಲಕ್ಷ ನಿವಾಸಿಗಳಿಗೆ ನೆರವು ಹರಿದು ಬರುವ ಸಮತೋಲಿತ ವಿಧಾನವನ್ನು ಅನುಸರಿಸಬೇಕು ಎಂದು ಆಗ್ರಹಿಸಿದರು. ನಾವು ನಮ್ಮ ರಾಷ್ಟ್ರೀಯ ಸಿದ್ದಾಂತಗಳಿಗೆ ಬದ್ಧರಾಗಿದ್ದೇವೆ ಮತ್ತು ಪೋಷಕತ್ವ(ಅಸಮರ್ಥರ ಪರವಾಗಿ ನಿರ್ಧಾರ ಕೈಗೊಳ್ಳುವ ವ್ಯವಸ್ಥೆ), ಬಾಹ್ಯ ಹಸ್ತಕ್ಷೇಪ ಅಥವಾ ಯಾವುದೇ ರೀತಿಯ ಆದೇಶದ ತತ್ವವನ್ನು ತಿರಸ್ಕರಿಸುತ್ತೇವೆ. ಫೆಲೆಸ್ತೀನ್ ಅನ್ನು ಫೆಲೆಸ್ತೀನೀಯರೇ ಆಳಬೇಕು. ಗಾಝಾವು ಗಾಝಾ ಮತ್ತು ಫೆಲೆಸ್ತೀನ್ ನ ಜನತೆಗೆ ಸೇರಿದೆ. ನಾವು ವಿದೇಶಿ ಆಡಳಿತವನ್ನು ಒಪ್ಪುವುದಿಲ್ಲ ಎಂದವರು ಹೇಳಿರುವುದಾಗಿ ವರದಿಯಾಗಿದೆ. ಗಾಝಾದಲ್ಲಿ ಅಮೆರಿಕ ಮಧ್ಯಸ್ಥಿಕೆಯಲ್ಲಿ ನಡೆದ ಕದನ ವಿರಾಮ ಒಪ್ಪಂದದ ಎರಡನೇ ಹಂತದಲ್ಲಿ ಗಾಝಾವನ್ನು ಮಿಲಿಟರಿ ರಹಿತ ವಲಯವನ್ನಾಗಿಸುವುದು, ಹಮಾಸ್ ಶಸ್ತ್ರಾಸ್ತ್ರ ಕೆಳಗಿಡುವುದು ಮತ್ತು ಈ ಪ್ರದೇಶದಿಂದ ಇಸ್ರೇಲ್ ತನ್ನ ಪಡೆಗಳನ್ನು ಕ್ರಮೇಣ ಹಿಂದಕ್ಕೆ ಪಡೆಯುವುದು ಸೇರಿದೆ.
ಉಡುಪಿ: ಚೊಚ್ಚಲ ವಿಶ್ವಕಪ್ ಗೆದ್ದ ಭಾರತದ ಅಂಧ ಮಹಿಳಾ ಕ್ರಿಕೆಟ್ ತಂಡಕ್ಕೆ ಸನ್ಮಾನ
ಉಡುಪಿ: ಕಳೆದ ನವೆಂಬರ್ ತಿಂಗಳಲ್ಲಿ ನಡೆದ ಮೊದಲ ಬಾರಿಗೆ ನಡೆದ ಅಂಧ ಮಹಿಳೆಯರ ವಿಶ್ವಕಪ್ ಕ್ರಿಕೆಟ್ ಚಾಂಪಿಯನ್ಷಿಪ್ನ್ನು ಜಯಿಸಿ ದಾಖಲೆ ಬರೆದ ಭಾರತದ ಅಂಧ ಮಹಿಳಾ ತಂಡಕ್ಕೆ ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಷನ್ (ಮಾಹೆ) ವಿವಿ ವತಿಯಿಂದ ಶನಿವಾರ ರಾತ್ರಿ ಸನ್ಮಾನಿಸಲಾಯಿತು. ಮಣಿಪಾಲದ ಫಾರ್ಚ್ಯೂನ್ ಇನ್ ವ್ಯಾಲಿವ್ಯೆನಲ್ಲಿ ನಡೆದ ಈ ವಿಶೇಷ ಸನ್ಮಾನ ಸಮಾರಂಭದಲ್ಲಿ ತಂಡದ ಸದಸ್ಯ ರನ್ನು ಸನ್ಮಾನಿಸಿ ಮಾತನಾಡಿದ ಮಾಹೆಯ ಕುಲಪತಿ ಲೆ.ಜ.(ಡಾ.)ಎಂ.ಡಿ. ವೆಂಕಟೇಶ್, ಅಂಧ ಮಹಿಳಾ ಕ್ರಿಕೆಟ್ ತಂಡದ ಅದ್ಭುತ ಕ್ರೀಡಾ ಮನೋಭಾವ ಮತ್ತು ದೃಢಸಂಕಲ್ಪಕ್ಕೆ ಸಂದ ಗೌರವವಿದು. ಕ್ರೀಡಾ ಸಾಧನೆಯು ದೈಹಿಕ ಮಿತಿಗಳಿಗೆ ಸೀಮಿತವಾಗಿಲ್ಲ, ಬದಲಾಗಿ ಅದು ಅವಕಾಶ ಮತ್ತು ಅಂತರ್ಗತವಾದ ದೃಢಸಂಕಲ್ಪವನ್ನು ಅವಲಂಬಿಸಿದೆ ಎಂಬುದನ್ನು ಆಟಗಾರರು ಸಾಬೀತುಪಡಿಸಿದ್ದಾರೆ ಎಂದರು. ಮಾಹೆಯ ಪ್ರೊ ಚಾನ್ಸಲರ್ ಡಾ. ಹೆಚ್. ಎಸ್. ಬಲ್ಲಾಳ್ ಮಾತನಾಡಿ, ವ್ಯವಸ್ಥಿತ ತರಬೇತಿಯಿಂದ ಇಂದು ಅಂಧ ಕ್ರೀಡಾಪಟುಗಳು ಅಂತಾ ರಾಷ್ಟ್ರೀಯ ಮಟ್ಟದಲ್ಲಿ ಮಿಂಚುತ್ತಿದ್ದಾರೆ. ಇವರು ಸಮಾಜದ ಸಾಂಪ್ರದಾಯಿಕ ಗ್ರಹಿಕೆಗಳನ್ನು ಮೆಟ್ಟಿ ನಿಂತು ಸಾಧನೆ ಮಾಡಿದ್ದಾರೆ ಎಂದು ಶ್ಲಾಘಿಸಿದರು. ವಿಶ್ವಕಪ್ ವಿಜೇತ ತಂಡದ ಪರವಾಗಿ ಮಾತನಾಡಿದ ಸೀಮಾದಾಸ್, ತಂಡದ ಹೆಚ್ಚಿನ ಸದಸ್ಯೆಯರು ತೀರಾ ಬಡ ಕುಟುಂಬದಿಂದ ಬಂದವರಾಗಿದ್ದು ಗೆಲ್ಲುವ ಛಲದಿಂದ ಈ ಸಾಧನೆ ಮಾಡಿದ್ದಾರೆ. ಗುರಿ ಮತ್ತು ಛಲವಿದ್ದರೆ ಯಾವ ಸಾಧನೆಯೂ ಅಸಾಧ್ಯವಲ್ಲ ಎಂಬುದನ್ನು ಇವರು ತೋರಿಸಿಕೊಟ್ಟಿದ್ದಾರೆ ಎಂದರು. ಇದೇ ಸಂದರ್ಭದಲ್ಲಿ ಅಂಧರ ಆರ್ಥಿಕ ಸಬಲೀಕರಣದ ಉದ್ದೇಶಕ್ಕಾಗಿ ಬ್ಯಾಂಕ್ ಆಫ್ ಬರೋಡಾದ ಬ್ರೈಲ್ ಲಿಪಿ ಆಧಾರಿತ ಕ್ರೆಡಿಟ್ ಕಾರ್ಡ್ನ್ನು ಅಧಿಕೃತವಾಗಿ ಬಿಡುಗಡೆ ಮಾಡಲಾಯಿತು. ಬ್ಯಾಂಕ್ ಆಫ್ ಬರೋಡಾದ ಮುಖ್ಯ ಪ್ರಧಾನ ವ್ಯವಸ್ಥಾಪಕ ರವೀಂದ್ರ ರೈ ಎಂ. ಹಾಗೂ ಮಾಹೆಯ ಸಹ ಕುಲಾಧಿಪತಿ ಡಾ. ಹೆಚ್. ಎಸ್. ಬಲ್ಲಾಳ್ ಜಂಟಿಯಾಗಿ ಕಾರ್ಡ್ನ್ನು ಬಿಡುಗಡೆ ಮಾಡಿದರು. ಈ ಸಂದರ್ಭದಲ್ಲಿ ಮಾಹೆ ಟ್ರಸ್ಟಿ ವಸಂತಿ ಆರ್. ಪೈ, ಮಾಹೆಯ ಪ್ರೋ ವೈಸ್ ಚಾನ್ಸಲರ್ಗಳಾದ ಡಾ. ನಾರಾಯಣ ಸಭಾಹಿತ್, ಡಾ.ಶರತ್ ಕೆ. ರಾವ್, ರಿಜಿಸ್ಟ್ರಾರ್ ಡಾ.ಪಿ.ಗಿರಿಧರ್ ಕಿಣಿ, ಸಿಒಒ ಡಾ.ಆನಂದ್ ವೇಣುಗೋಪಾಲ್ ಅಲ್ಲದೇ ಮಾಹೆ ಅಂಗಸಂಸ್ಥೆಗಳ ಮುಖ್ಯಸ್ಥರು ಉಪಸ್ಥಿತರಿದ್ದರು. ಅಂಗವಿಕಲರ ಸಂಸ್ಥೆ ‘ಸಮರ್ಥನಂ’ ಹಾಗೂ ಭಾರತೀಯ ಅಂಧರ ಕ್ರಿಕೆಟ್ ಅಸೋಸಿಯೇಷನ್ ಸಹಯೋಗ ದೊಂದಿಗೆ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಸಮರ್ಥನಂ ಸಂಸ್ಥೆಯ ಸಂಸ್ಥಾಪಕ ಮಹಾಂತೇಶ್ ಜಿ. ಕಿವಡಸಣ್ಣವರ್ ಹಾಗೂ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದ ಸಮಾಜ ಸೇವಕ ರಾಯನ್ ಉಪಸ್ಥಿತರಿದ್ದರು. ಎಂಸಿಎಚ್ಪಿ ಡೀನ್ ಡಾ. ಜಿ.ಅರುಣ್ ಮಯ್ಯ ಸ್ವಾಗತಿಸಿದರೆ, ಮಾಹೆ ರಿಜಿಸ್ಟ್ರಾರ್ ಡಾ.ಪಿ. ಗಿರಿಧರ್ ಕಿಣಿ ವಂದಿಸಿದರು.
ನಾವು ನಂಬಿಕೆ ಇಟ್ಟಿಕೊಂಡಿದ್ದು ಮನುಷ್ಯ ಧರ್ಮ, ಮಾನವೀಯತೆ ಧರ್ಮ: ಸಿಎಂ ಸಿದ್ದರಾಮಯ್ಯ
ಹುಬ್ಬಳ್ಳಿ ತಾಲ್ಲೂಕಿನ ಶಿರಗುಪ್ಪಿ ಗ್ರಾಮದಲ್ಲಿ ಬೆಣ್ಣೆಹಳ್ಳ ಪ್ರವಾಹ ನಿಯಂತ್ರಣ ಕಾಮಗಾರಿಗೆ ಶಂಕುಸ್ಥಾಪನೆ ಮತ್ತು ನವಲಗುಂದ ವಿಧಾನಸಭಾ ಕ್ಷೇತ್ರದ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿರುವ ಅವರು, ನವಲಗುಂದ ವಿಧಾನಸಭಾ ಕ್ಷೇತ್ರದಲ್ಲಿ ಹಲವಾರು ಅಭಿವೃದ್ಧಿ ಕೆಲಸಗಳಿಗೆ ಚಾಲನೆ ನೀಡಲಾಗಿದೆ. ಅಣ್ಣಿಗೇರಿಗೆ ಯುಜಿಡಿ ಮಾಡುವ ಕುರಿತು ಬಜೆಟ್ನಲ್ಲಿ ಚರ್ಚಿಸಲಾಗುವುದು. ಈ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ ಮಾಡಲು ಶ್ರಮಿಸಲಾಗುವುದು ಎಂದಿದ್ದಾರೆ. ಬೆಣ್ಣೆ
ಅಹಿಂದ ಸಮುದಾಯಗಳ ಜನಸಂಖ್ಯೆಗೆ ಅನುಗುಣವಾಗಿ ಬಜೆಟ್ನಲ್ಲಿ ಅನುದಾನ ಒದಗಿಸಲು ಸಿ.ಎಂ.ಇಬ್ರಾಹೀಂ ಆಗ್ರಹ
ಬೆಂಗಳೂರು : ‘ರಾಜ್ಯದಲ್ಲಿನ ಅಲ್ಪಸಂಖ್ಯಾತ, ಹಿಂದುಳಿದ ಹಾಗೂ ದಲಿತ (ಅಹಿಂದ) ಸಮುದಾಯಗಳ ಜನಸಂಖ್ಯೆಗೆ ಅನುಗುಣವಾಗಿ ಬಜೆಟ್ನಲ್ಲಿ ಅನುದಾನವನ್ನು ಮೀಡಲಿಸಬೇಕು. ಆದರೆ, ಸರಕಾರಗಳು ಸೂಕ್ತ ಅನುದಾನ ಮೀಸಲಿಡುತ್ತಿಲ್ಲ. ಹೀಗಾಗಿ ಆ ವರ್ಗದ ಜನರು ಪ್ರಶ್ನೆ ಮಾಡಬೇಕು’ ಎಂದು ಕೇಂದ್ರದ ಮಾಜಿ ಸಚಿವ ಸಿ.ಎಂ.ಇಬ್ರಾಹೀಂ ಇಂದಿಲ್ಲಿ ತಿಳಿಸಿದ್ದಾರೆ. ರವಿವಾರ ವಸಂತ ನಗರದಲ್ಲಿನ ಲಿಡ್ಕರ್ ಭವನದಲ್ಲಿ ‘ಅಹಿಂದ ಚಳುವಳಿ’ ವತಿಯಿಂದ ಏರ್ಪಡಿಸಿದ್ದ ಗ್ರೇಟರ್ ಬೆಂಗಳೂರು ಪ್ರಾಧಿಕಾರ(ಜಿಬಿಎ) ಮತ್ತು ಸ್ಥಳೀಯ ಸಂಸ್ಥೆಗಳ ಚುನಾವಣೆ ಸಂಬಂಧ ‘ಅಹಿಂದ ಸಮುದಾಯಗಳ ಜಾಗೃತಿ ಸಭೆ’ಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸಂವಿಧಾನದ ಆಶಯದಂತೆ ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ತತ್ವದ ಆಧಾರದಲ್ಲಿ, ಆಯವ್ಯಯದಲ್ಲಿ ಅಹಿಂದ ಸಮುದಾಯಗಳ ಜನಸಂಖ್ಯೆಗೆ ಅನುಗುಣವಾಗಿ ಹಣ ಒದಗಿಸಬೇಕು ಎಂದು ಆಗ್ರಹಿಸಿದರು. ರಾಜ್ಯದಲ್ಲಿ ಯಾವ ವರ್ಗದ ಜನರು ಎಷ್ಟು ಸಂಖ್ಯೆಯಲ್ಲಿದ್ದಾರೆಂಬುದನ್ನು ತಿಳಿಯಲು ಸರಕಾರ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಸಮೀಕ್ಷೆ ನಡೆಸಿದೆ. ಆದರೆ, ಆ ವರದಿಯನ್ನು ಈವರೆಗೆ ಬಿಡುಗಡೆ ಆಗಿಲ್ಲ. ಈ ಕುರಿತು ಯಾರೂ ಕೇಳುತ್ತಿಲ್ಲ?. ಅಹಿಂದ ಸಮುದಾಯಗಳು ಇದೀಗ ಬುದ್ಧಿವಂತರಾಗಿದ್ದಾರೆ, ಆದರೆ, ಸಂಘಟಿತರಾಗಿಲ್ಲ. ಈ ಬಗ್ಗೆ ಸಮುದಾಯದ ಪ್ರಮುಖರು ಗಂಭೀರವಾಗಿ ಚಿಂತಿಸಬೇಕು ಎಂದು ಅವರು ಕರೆ ನೀಡಿದರು. ಸಭೆಯಲ್ಲಿ ಪಾಲ್ಗೊಂಡಿದ್ದ ಮಾಜಿ ಸಚಿವ ಬಿ.ಸೋಮಶೇಖರ್ ಮಾತನಾಡಿ, ಕರ್ನಾಟಕ ರಾಜ್ಯದಲ್ಲಿ ಎಡಗೈ ಹಾಗೂ ಬಲಗೈ ಸಮುದಾಯದವರು ಒಂದಾದರೆ ಕನಿಷ್ಟ ಪಕ್ಷ 80 ಕ್ಷೇತ್ರಗಳನ್ನು ಗೆಲ್ಲಬಹುದು. ಜೊತೆಯಲ್ಲಿ ಮುಸ್ಲಿಮ್ ಮತ್ತು ಅತಿಹಿಂದುಳಿದ ಸಮುದಾಯಗಳು ಒಗ್ಗೂಡಿದರೆ ಮುಂದಿನ ದಿನಗಳಲ್ಲಿ ಸರಕಾರ ಅಹಿಂದ ಸಮುದಾಯದ ಕೈಗೆ ಸಿಗಲಿದೆ. ಇದನ್ನು ಅರಿತು ಒಗ್ಗಟ್ಟಿನ ಹೋರಾಟಕ್ಕೆ ಅಹಿಂದ ಸಮುದಾಯಗಳು ಮುಂದಾಗಬೇಕು ಎಂದು ಕೋರಿದರು. ಸಭೆಯ ಅಧ್ಯಕ್ಷತೆಯನ್ನು ಎಲ್.ಎನ್.ಮೂರ್ತಿ ವಹಿಸಿದ್ದು, ಮಾಜಿ ಶಾಸಕ ಎಂ.ಪಿ.ಕುಮಾರಸ್ವಾಮಿ, ಮಾಜಿ ಸಂಸದ ವಿ.ಎಸ್.ಉಗ್ರಪ್ಪ, ರಾಜ್ಯ ಸಂಚಾಲಕ ಎಸ್.ಮೂರ್ತಿ ಪಾಲ್ಗೊಂಡಿದ್ದರು. ಅಹಿಂದ ಚಳುವಳಿ ಪದಾಧಿಕಾರಿಗಳಾದ ವೆಂಕಟೇಶ ಗೌಡ, ಅಶೋಕ್ ಕುಮಾರ್, ವೆಂಕಟೇಶ್, ಸುರೇಂದ್ರ. ತಾಜ್ ಪಾಷ, ಮೊಹಮ್ಮದ್ ಸನಾವುಲ್ಲಾ, ಎ.ಜಿ. ಕೈಸಾರ್, ಸಿದ್ದಾರ್ಥ ಜೈನ್, ರೆ. ಎಡ್ವಿನ್ ಭಾಗವಹಿಸಿದ್ದರು.
ನಿಂದನೆ ಆರೋಪ | ನಿರ್ಮಾಪಕ ಕನಕಪುರ ಶ್ರೀನಿವಾಸ್ ವಿರುದ್ಧ ಜೋಗಿ ಪ್ರೇಮ್ ದೂರು; ಎಫ್ಐಆರ್ ದಾಖಲು
ಬೆಂಗಳೂರು : ನಿಂದನೆ ಆರೋಪದಡಿ ಸಿನಿಮಾ ನಿರ್ಮಾಪಕ ಕನಕಪುರ ಶ್ರೀನಿವಾಸ್ ವಿರುದ್ಧ ನಟ, ನಿರ್ದೇಶಕ ಜೋಗಿ ಪ್ರೇಮ್ ಇಲ್ಲಿನ ಕೆ.ಪಿ.ಅಗ್ರಹಾರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಫೆ.8ರಂದು ಕೆ.ಪಿ.ಅಗ್ರಹಾರ ಠಾಣೆಗೆ ಪ್ರೇಮ್ ಜೋಗಿ ದೂರು ನೀಡಿದ್ದು, ಕನಕಪುರ ಶ್ರೀನಿವಾಸ್ ಅವರು ತಮ್ಮ ವಿರುದ್ಧ ನಿಂದನೆ ಹಾಗೂ ಅವಾಚ್ಯವಾಗಿ ಮಾತನಾಡಿದ್ದು, ನನ್ನ ಗೌರವಯುತ ಸಾರ್ವಜನಿಕ ಜೀವನಕ್ಕೆ ಧಕ್ಕೆಯಾಗಿದೆ ಎಂದು ಆರೋಪಿಸಿದ್ದಾರೆ. ಪ್ರೇಮ್ ಅವರ ದೂರಿನನ್ವಯ ಶ್ರೀನಿವಾಸ್ ವಿರುದ್ಧ ಭಾರತೀಯ ನ್ಯಾಯ ಸಂಹಿತೆ ಕಾಯ್ದೆಯ ಕಲಂ 352 (ಸಾರ್ವಜನಿಕ ಶಾಂತಿಭಂಗ, ಉದ್ದೇಶಪೂರ್ವಕ ಅವಮಾನ) ಆರೋಪದಡಿ ಎಫ್ಐಆರ್ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ದೂರಿನ ವಿವರ: ‘ನಾನು ನಿರ್ದೇಶಕನಾಗಿದ್ದು, ಕುಟುಂಬದೊಂದಿಗೆ ವಾಸವಾಗಿದ್ದೇನೆ. ಸಣ್ಣಪುಟ್ಟ ಚಲನಚಿತ್ರಗಳಲ್ಲಿ ನಟಿಸಿಕೊಂಡು ಹಾಗೂ ಹಲವಾರು ಚಲನಚಿತ್ರಗಳ ನಿರ್ದೇಶನ ಮಾಡಿ ಹಂತ ಹಂತವಾಗಿ ಬೆಳೆದಿದ್ದೇನೆ. ನಾನು ನಿರ್ದೇಶನ ಮಾಡಿದ ಚಲನಚಿತ್ರಗಳು ದೇಶಾದ್ಯಂತ ಬಿಡುಗಡೆಯಾಗಿವೆ. ಈ ಮೂಲಕ ನನ್ನದೇ ಆದ ಜನಪ್ರಿಯತೆ ಹಾಗೂ ಗೌರವ ಸಂಪಾದಿಸಿಕೊಂಡು ಸಮಾಜದಲ್ಲಿ ಒಳ್ಳೆಯ ನಿರ್ದೇಶಕನಾಗಿ ಗೌರವಯುತವಾಗಿ ಜೀವನ ನಡೆಸುತ್ತಿದ್ದೇನೆ. ದಿನಾಂಕ 5-2-2026ರಂದು ‘ಕಾಟನ್ ಪೇಟೆ’ ಚಲನಚಿತ್ರದ ನಿರ್ಮಾಪಕ ಆರ್.ಶ್ರೀನಿವಾಸ ಯಾನೆ ಕನಕಪುರ ಶ್ರೀನಿವಾಸ ಎಂಬವರು ಜಿ.ಟಿ.ಮಾಲ್ನಲ್ಲಿ ಮೇಲ್ಕಂಡ ಚಲನಚಿತ್ರದ ಬಿಡುಗಡೆಯ ಪತ್ರಿಕಾಗೋಷ್ಠಿ ನಡೆಸಿದ್ದು, ನನ್ನನ್ನು ವೈಯಕ್ತಿಕವಾಗಿ ಗುರಿಯಾಗಿಸಿ ಸಾರ್ವಜನಿಕ ವೇದಿಕೆಯಲ್ಲಿ ಅವಾಚ್ಯ ಶಬ್ದಗಳಿಂದ ಬೈದು ನಿಂದಿಸಿದ್ದಾರೆ. ಈ ಸಂಬಂಧ ಸಾರ್ವಜನಿಕ ವೇದಿಕೆಗಳಾದ ಯೂಟ್ಯೂಬ್ ಮತ್ತು ಕೆಲವು ಮಾಧ್ಯಮಗಳಲ್ಲಿ ನನ್ನ ಬಗ್ಗೆ ಪ್ರಚಾರವಾಗುತ್ತಿದ್ದು, ತುಂಬಾ ಅವಮಾನವಾಗುತ್ತಿದೆ. ಸಾರ್ವಜನಿಕವಾಗಿ ನನಗೆ ವೈಯಕ್ತಿಕವಾಗಿ ನಿಂದಿಸಿ ನನ್ನ ಗೌರವಾಯುತವಾದ ವೃತ್ತಿ ಜೀವನಕ್ಕೆ ಧಕ್ಕೆ ಉಂಟುಮಾಡಿ ಮಾನಹಾನಿ ಮಾಡಿರುವ ಕನಕಪುರ ಶ್ರೀನಿವಾಸ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ಜೋಗಿ ಪ್ರೇಮ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಕೋಗಿಲು ಬಡಾವಣೆ ತೆರವು ಕಾರ್ಯಾಚರಣೆ ; ಬಿಎಸ್ಡಬ್ಲ್ಯುಎಂಎಲ್ ವಿರುದ್ಧ ಕ್ರಮಕ್ಕೆ ಆಗ್ರಹ
ಬೆಂಗಳೂರು : ಕೋಗಿಲು ಬಡಾವಣೆಯಲ್ಲಿ ಬಡವರ್ಗದವರು ವಾಸವಿದ್ದ ಶೆಡ್ಗಳ ತೆರವುಗೊಳಿಸುವ ಸೂಕ್ಷ್ಮ ವಿಚಾರದಲ್ಲಿ ರಾಜ್ಯ ಸರಕಾರಕ್ಕೆ ಮುಜುಗರ ಉಂಟು ಮಾಡಿದ ಬೆಂಗಳೂರು ಘನ ತ್ಯಾಜ್ಯ ನಿರ್ವಹಣಾ ಕಂಪೆನಿ (ಬಿಎಸ್ಡಬ್ಲ್ಯುಎಂಎಲ್) ಸಿಇಒ ಕರೀಗೌಡ ವಿರುದ್ಧ ಕ್ರಮ ಕೈಗೊಳ್ಳುವಂತೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಗೆ ಕೆಪಿಸಿಸಿ ಬೆಂಗಳೂರು ಪಶ್ಚಿಮ ಜಿಲ್ಲಾ ಕಾಂಗ್ರೆಸ್ ಸಮಿತಿ ಪತ್ರ ಬರೆದು ಒತ್ತಾಯಿಸಿದೆ. ಇಲ್ಲಿನ ವಾಸೀಮ್ ಮತ್ತು ಫಕೀರ್ ಕಾಲನಿಗಳಲ್ಲಿ ಜನರು ಅಕ್ರಮವಾಗಿ ಮನೆ ನಿರ್ಮಿಸಿಕೊಂಡಿದ್ದ ಆರೋಪ ಕೇಳಿಬಂದ ನಂತರ ಅವುಗಳನ್ನು ತೆರವುಗೊಳಿಸುವ ಪ್ರಕ್ರಿಯೆಗೂ ಮೊದಲು ಸಮೀಕ್ಷೆ ನಡೆಸಿ, ಪ್ರಕ್ರಿಯೆ ಪಾಲಿಸಬೇಕಿತ್ತು ಎಂದು ಹೈಕೋರ್ಟ್ ಮೌಖಿಕ ಸೂಚನೆ ನೀಡಿತ್ತು. ಆದರೆ, ಬಿಎಸ್ಡಬ್ಲ್ಯುಎಂಎಲ್ ಸಿಇಒ ಕರೀಗೌಡ ನೇತೃತ್ವದಲ್ಲಿ ಕೈಗೊಳ್ಳಲಾಗಿದ್ದ ತೆರವು ಕಾರ್ಯಾಚರಣೆಯಿಂದ ಮನೆಗಳನ್ನು ನೆಲಸಮ ಮಾಡಲಾಯಿತು. ಜತೆಗೆ, ನಿವಾಸಿಗಳಿಗೆ ಪುನರ್ವಸತಿಯನ್ನು ಸರಕಾರವೇ ಕಲ್ಪಿಸಬೇಕು. ಇದರಿಂದ ಸರಕಾರಕ್ಕೂ ಆರ್ಥಿಕ ನಷ್ಟ ಉಂಟಾಗುವಂತಾಗಿದೆ. ಅಲ್ಲದೆ, ಇಂತಹ ಇರುಸು ಮುರುಸು ಪರಿಸ್ಥಿತಿಗೆ ಬಿಎಸ್ಡಬ್ಲ್ಯುಎಂಎಲ್ನೇ ನೇರ ಹೊಣೆ ಎಂದು ಸಮಿತಿಯ ಉಪಾಧ್ಯಕ್ಷ ಕುಶಾಲ್ ಹುರುವೇಗೌಡ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಘಟನೆಯ ಹಿನ್ನೆಲೆಯನ್ನು ಪರಿಶೀಲಿಸಿದಾಗ ಸಂಸ್ಥೆ ಕೂಡ ತೆರವು ಕಾರ್ಯಾಚರಣೆ ವೇಳೆ ಹಲವು ಲೋಪದೋಷ ಎಸಗಿದೆ.ಬಿಬಿಎಂಪಿ ಹೆಸರಿನಲ್ಲಿತ್ತು ಎನ್ನಲಾದ ಆ ಸ್ಥಳವನ್ನು ಬಿಎಸ್ಡಬ್ಲ್ಯುಎಂ ಎಲ್ ತನ್ನ ಸುಪರ್ದಿಗೆ ಪಡೆದಿರುವ ಯಾವುದೇ ದಾಖಲೆಗಳು ಲಭ್ಯವಿಲ್ಲ. ಹೀಗಾಗಿ, ಸುಪರ್ದಿಗೆ ಪಡೆಯದೇ ಆ ಜಮೀನಿನ ಅತಿಕ್ರಮಣ ತೆರವು ಮಾಡಿರುವುದು ಕಾನೂನುಬಾಹಿರ ಕ್ರಮವಾಗಿದೆ. ಆ ಸ್ಥಳದಲ್ಲಿ 2013ರಿಂದಲೇ ಅತಿಕ್ರಮಣ ಜಾರಿಯಲ್ಲಿದೆ ಎಂದು ನ್ಯಾಯಾಲಯಕ್ಕೆ ದಾಖಲೆ ಸಲ್ಲಿಕೆಯಾಗಿದೆ. ಒಂದು ವೇಳೆ ಬಿಎಸ್ಡಬ್ಲ್ಯುಎಂಎಲ್ ಸುಪರ್ದಿಗೆ ಪಡೆದಿದ್ದರೆ ಆ ಬಗ್ಗೆ ಸಂಸ್ಥೆಯ ಅಧಿಕಾರಿಗಳು ಸರಕಾರದ ಗಮನಕ್ಕೆ ತಂದಿಲ್ಲ. ನೂರಾರು ಜನರು ವಾಸವಿರುವ ಮನೆಗಳನ್ನು ತೆರವುಗೊಳಿಸುವ ಸೂಕ್ಷ್ಮ ವಿಚಾರವನ್ನು ಸರಕಾರಕ್ಕೆ ಗಮನಕ್ಕೆ ತರಬೇಕಿತ್ತು. ಒತ್ತುವರಿ ತೆರವು ಕಾರ್ಯಾಚರಣೆಯನ್ನು ಕಂದಾಯ ಇಲಾಖೆ ಸೇರಿದಂತೆ ಸಂಬಂಧಿಸಿದ ಇಲಾಖೆಗಳ ಮೂಲಕ ಕ್ರಮಬದ್ಧವಾಗಿ ನಡೆಸಬೇಕಿತ್ತು.ನಿಯಮ ಪಾಲಿಸದೆ ಏಕಪಕ್ಷೀಯ ನಿರ್ಧಾರ ಕೈಗೊಂಡಿರುವ ಆರೋಪ ಕೇಳಿ ಬಂದಿದೆ. ಬಿಎಸ್ಡಬ್ಲ್ಯುಎಂಎಲ್ ಸಂಸ್ಥೆಯು ಕಂಪೆನಿ ಕಾಯ್ದೆಯಡಿ ಸ್ಥಾಪಿತ ಸಂಸ್ಥೆಯಾಗಿದೆ. ಇದಕ್ಕೆ ಸ್ವಯಂ ತೆರವು ಕಾರ್ಯಾಚರಣೆ ಕೈಗೊಳ್ಳುವ ಅಧಿಕಾರ ಇಲ್ಲ. ತೆರವು ಕಾರ್ಯಾಚರಣೆಗೆ ಬಳಸಿರುವ ಯಂತ್ರಗ ಮತ್ತು ಕಾರ್ಮಿಕರು ಬಿಎಸ್ಡಬ್ಲ್ಯುಎಂಎಲ್ ಸಂಸ್ಥೆಗೆ ಒಳಪಟ್ಟಿಲ್ಲ. ಸಂಸ್ಥೆಯು ಯಾವುದೇ ಸಂಸ್ಥೆಗೆ ಯಂತ್ರಗಳು ಮತ್ತು ಕಾರ್ಮಿಕರ ಸರಬರಾಜಿಗೆ ಕಾರ್ಯಾದೇಶ ನೀಡಿಲ್ಲ. ಹೀಗಾಗಿ, ತೆರವು ಕಾರ್ಯಾಚರಣೆಗೆ ಅಧಿಕೃತವಾಗಿ ಯಾವುದೇ ತಯಾರಿ ನಡೆಸದೇ ಅನಧಿಕೃತ ಮತ್ತು ಖಾಸಗಿ ಮೂಲಗಳಿಂದ ತೆರವು ಕಾರ್ಯಾಚರಣೆ ಕೈಗೊಳ್ಳುವುದು ಕಾನೂನುಬಾಹಿರ. ಸೂಕ್ತ ಕಾನೂನು ಕ್ರಮ ಅನುಸರಿಸದೇ ಗುಡಿಸಲುಗಳ ತೆರವುಗೊಳಿಸುವ ಕಾರ್ಯಾಚರಣೆ ನಡೆಸಿ ಸರಕಾರಕ್ಕೆ ಮುಜುಗರ ಉಂಟು ಮಾಡಿದ್ದಲ್ಲದೇ ಪುನರ್ವಸತಿಯ ಆರ್ಥಿಕ ನಷ್ಟಕ್ಕೆ ಬಿಎಸ್ಡಬ್ಲ್ಯುಎಂ ಎಲ್ ಕಾರಣವಾಗಿದೆ. ಸರಕಾರಕ್ಕೆ ಆಗಿರುವ ನಷ್ಟವನ್ನು ಅವರಿಂದಲೇ ವಸೂಲು ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಅವರು ಪತ್ರದಲ್ಲಿ ಒತ್ತಾಯಿಸಿದ್ದಾರೆ.
ತುಮಕೂರಿನಲ್ಲಿ 3 ಕಾರುಗಳ ನಡುವೆ ಸರಣಿ ಅಪಘಾತ: ಇಬ್ಬರು ಸ್ಥಳದಲ್ಲೇ ಸಾವು! ಜೆಡಿಎಸ್ ವಕ್ತಾರನ ಸ್ಥಿತಿ ಗಂಭೀರ
ತುಮಕೂರಿನಲ್ಲಿ ಕಾರುಗಳ ನಡುವೆ ಸರಣಿ ಅಪಘಾತವಾಗಿದೆ. ಇಬ್ಬರು ಸುರೇಶ್, ಮುರಳಿ ಎಂಬುವವರು ಸ್ಥಳದಲ್ಲಿಯೇ ಸಾವಿಗೀಡಾಗಿದ್ದಾರೆ. ಇನ್ನು ಜೆಡಿಎಸ್ ವಕ್ತಾರ ಜಯಣ್ಣ ಸ್ಥಿತಿ ಗಂಭೀರವಾಗಿದೆ. ನಗರ ಬಾಣವರ ಗೇಟ್ ಬಳಿ ಈ ಘಟನೆ ನಡೆಸಿದೆ. ಆದಿಚುಂಚನಗಿರಿಯಲ್ಲಿ ಖಾಸಗಿ ಕಾರ್ಯಕ್ರಮಕ್ಕೆ ತೆರಳಿ ವಾಪಸ್ ಆಗುವಾಗ ಈ ಘಟನೆ ನಡೆದಿದೆ.
ಸುಳ್ಳು ಆಶ್ವಾಸನೆ ಆರೋಪ: ಮತದಾನ ಬಹಿಷ್ಕಾರದ ಬ್ಯಾನರ್ ಹಾಕಿ ಆಕ್ರೋಶ ವ್ಯಕ್ತಪಡಿಸಿದ ಗ್ರಾಮಸ್ಥರು
ಸುಳ್ಯ: ರಾಜಕಾರಣಿಗಳು ಸುಳ್ಳು ಆಶ್ವಾಸನೆ ನೀಡಿ ನಮ್ಮನ್ನು ಕಡೆಗಣಿಸಿದ್ದಾರೆ” ಎಂದು ಆರೋಪಿಸಿ ಗ್ರಾಮಸ್ಥರು ಮತದಾನ ಬಹಿಷ್ಕಾರದ ಬ್ಯಾನರ್ ಅಳವಡಿಸಿದ ಘಟನೆ ಸುಳ್ಯ ತಾಲೂಕಿನ ದೇವಚಳ್ಳ ಗ್ರಾಮದ ವಾಲ್ತಾಜೆ ಎಂಬಲ್ಲಿ ನಡೆದಿದೆ. ದೇವಚಳ್ಳ ಗ್ರಾಮದ “ವಾಲ್ತಾಜೆ-ಕರಂಗಲ್ಲು ರಸ್ತೆಯ ಬಲ್ಕಜೆ ತಿರುವು ಹಾಗೂ ವಾಲ್ತಾಜೆ ಮಲೆರ್ಕುಮೇರಿ ರಸ್ತೆಗೆ ಸುಳ್ಳು ಆಶ್ವಾಸನೆ ಕೊಟ್ಟು ಕಾಂಕ್ರೀಟೀಕರಣ ಮಾಡಿಸುವುದೆಂದು ಗುದ್ದಲಿ ಪೂಜೆ ಮಾಡಿಸಿ ಲಾಡು ತಿಂದು ಚಪ್ಪಾಳೆ ತಟ್ಟಿಸಿಕೊಂಡು ಹೋದ ರಾಜಕಾರಣಿಗಳಿಗೆ ಧಿಕ್ಕಾರ. ಇದೇ ರೀತಿ ನಮ್ಮನ್ನು ಕಡೆಗಣಿಸಿದ್ದೇ ಆದಲ್ಲಿ ಮುಂದಿನ ಚುನಾವಣೆಯನ್ನು ಬಹಿಷ್ಕರಿಸಲಾಗುವುದು” ಎಂಬ ಬ್ಯಾನರ್ ಅನ್ನು ಅಳವಡಿಸಿ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮುಸ್ಲಿಮರನ್ನು ಗುರಿಯಾಗಿಸಿಕೊಂಡು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಶರ್ಮಾ ಶೂಟ್ ಮಾಡುವ ಎಐ ವಿಡಿಯೋ, ವ್ಯಾಪಕ ವಿರೋಧ
ಗುವಾಹಟಿ: ಅಸ್ಸಾಂ ಸೇರಿದಂತೆ ದೇಶದ ಐದು ಪ್ರಮುಖ ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ವಿಧಾನಸಭೆ ಚುನಾವಣೆಗೆ ಬಿಜೆಪಿ, ಕಾಂಗ್ರೆಸ್ ಹಾಗೂ ಸ್ಥಳೀಯ ಪಕ್ಷಗಳು ಈಗಾಗಲೇ ಭರ್ಜರಿ ಸಿದ್ಧತೆ ಪ್ರಾರಂಭಿಸಿವೆ. ಆದರೆ ಅಸ್ಸಾಂನ ಬಿಜೆಪಿ ಘಟಕವು ಚುನಾವಣೆ ಸಮೀಪದಲ್ಲೇ ಭಾರೀ ವಿವಾದವೊಂದನ್ನು ಮೈ ಮೇಲೆ ಎಳೆದುಕೊಂಡಿದೆ. ಬಿಜೆಪಿಯ ಅಸ್ಸಾಂ ಘಟಕವು ಶನಿವಾರ ಸೋಷಿಯಲ್ ಮೀಡಿಯಾದಲ್ಲಿ ಮಾಡಿರುವ ಪೋಸ್ಟ್ವೊಂದು ವಿವಾದಕ್ಕೆ
ಶಬರಿಮಲೆ ಚಿನ್ನ ಲೂಟಿ ಪ್ರಕರಣ: ಬಾಗಿಲು ಚೌಕಟ್ಟು ಪದರಗಳ ಬಗ್ಗೆ ಅನುಮಾನ
ಶಬರಿಮಲೆಯಿಂದ ಚಿನ್ನ ಲೇಪನದ ಹೆಸರಲ್ಲಿ ಅಕ್ರಮವಾಗಿ ಹೊರ ಕೊಂಡೊಯ್ಯಲಾದ ಬಾಗಿಲು ಚೌಕಟ್ಟು ಪದರಗಳ ಬಗ್ಗೆ ಅನುಮಾನ ದಟ್ಟವಾಗಿದೆ. ತನಿಖಾ ತಂಡವು ಫೆ.9 ರಂದು ಹೈಕೋರ್ಟ್ಗೆ ವರದಿ ಸಲ್ಲಿಸಲಿದೆ. ನಷ್ಟವಾದ ಚಿನ್ನದ ಅಂದಾಜು ಪ್ರಮಾಣ ಮತ್ತು ಹೆಚ್ಚಿನ ಪರೀಕ್ಷೆಯ ಅಗತ್ಯವನ್ನು ತಿಳಿಸಲಿದೆ.
ಕಾಂತಾಬಾರೆ - ಬೂದಾಬಾರೆ ಕಂಬಳ: ಅಂಚೆ ಲಕೋಟೆ ಬಿಡುಗಡೆ
ಮಂಗಳೂರು: ತುಳುನಾಡಿನ ಮೂಲ ಸಂಪ್ರದಾಯವನ್ನು ಉಳಿಸಿಕೊಂಡು ಆಧುನಿಕತೆಯನ್ನು ಮೈಗೂಡಿಸಿಕೊಂಡಿ ರುವ ಐಕಳಬಾವ ಐತಿಹಾಸಿಕ ಕಾಂತಾಬಾರೆ-ಬೂದಾಬಾರೆ ಕಂಬಳದ ಸುವರ್ಣ ಮಹೋತ್ಸವದ ನೆನಪಿಗಾಗಿ ಭಾರತೀಯ ಅಂಚೆ ಇಲಾಖೆಯು ಐಕಳ ಅಂಚೆ ಕಚೇರಿಯಲ್ಲಿ ಶನಿವಾರ ವಿಶೇಷ ಅಂಚೆ ಲಕೋಟೆಯನ್ನು ಬಿಡುಗಡೆಗೊಳಿಸಿತು. ಮಂಗಳೂರು ಅಂಚೆ ವಿಭಾಗದ ಹಿರಿಯ ಅಂಚೆ ಅಧೀಕ್ಷಕ (ಪ್ರಭಾರ) ಪಿ. ದಿನೇಶ್ ವಿಶೇಷ ಅಂಚೆ ಲಕೋಟೆಯನ್ನು ಬಿಡುಗಡೆ ಮಾಡಿದರು. ಕಂಬಳದ ಕಾರ್ಯಾಧ್ಯಕ್ಷ ಚಿತ್ತರಂಜನ್ ಭಂಡಾರಿ, ಮಂಗಳೂರು ಪ್ರಧಾನ ಅಂಚೆ ಕಚೇರಿಯ ವರಿಷ್ಠ ಅಂಚೆ ಪಾಲಕ ಲೋಕನಾಥ ಎಂ., ಕಂಬಳ ಸಂಚಾಲಕ ಮುರಳೀಧರ ಶೆಟ್ಟಿ, ಕರ್ನಾಟಕ ಬ್ಯಾಂಕ್ ಜನರಲ್ ಮ್ಯಾನೇಜರ್ ಜಯನಾಗರಾಜ ರಾವ್ ಉಪಸ್ಥಿತರಿದ್ದರು. ಮಂಗಳೂರು ವಿಭಾಗದ ಮಾರುಕಟ್ಟೆ ಅಧಿಕಾರಿ ಸುಭಾಷ್ ಸಾಲ್ಯಾನ್ ವಂದಿಸಿದರು. ದಯಾನಂದ ಕತ್ತಲಸರ್ ಕಾರ್ಯಕ್ರಮ ನಿರೂಪಿಸಿದರು.
ಮಾನವೀಯ ಸಂದೇಶ ವೇದಿಕೆಯಿಂದ ‘ಹಸಿವು ಮುಕ್ತ ಭಾರತ ದಿನ’ ಆಚರಣೆ
ಭಟ್ಕಳ: ಮಾನವೀಯ ಮೌಲ್ಯಗಳನ್ನು ಸಮಾಜದೊಳಗೆ ಗಟ್ಟಿಗೊಳಿಸುವ ಉದ್ದೇಶದಿಂದ ಮಾನವೀಯ ಸಂದೇಶ ವೇದಿಕೆಯು ಫೆ.8ರಂದು ರಾಷ್ಟ್ರವ್ಯಾಪಿಯಾಗಿ ‘ಹಸಿವುಮುಕ್ತ ಭಾರತ ದಿನ’ವನ್ನು ಆಚರಿಸಿತು. ಇದರ ಭಾಗವಾಗಿ ಭಟ್ಕಳ ಶಾಖೆಯ ವತಿಯಿಂದ ನಗರದ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದ ಎದುರು ಸಾರ್ವಜನಿಕರಿಗೆ ತಿಂಡಿ ಹಾಗೂ ಪಾನೀಯಗಳನ್ನು ವಿತರಿಸುವ ಮೂಲಕ ಕಾರ್ಯಕ್ರಮಕ್ಕೆ ಅರ್ಥಪೂರ್ಣ ಚಾಲನೆ ನೀಡಲಾಯಿತು. ಈ ಸಂದರ್ಭ ಮಾತನಾಡಿದ ಮಾನವೀಯ ಸಂದೇಶ ವೇದಿಕೆಯ ಮುಖಂಡ ಮುಹಮ್ಮದ್ ಯಾಸೀನ್, ಫೆ.8ನ್ನು ಪ್ರತಿವರ್ಷವೂ ಮಾನವೀಯ ಸಂದೇಶ ವೇದಿಕೆಯ ವತಿಯಿಂದ ‘ಹಸಿವುಮುಕ್ತ ಭಾರತ ದಿನ’ವಾಗಿ ಆಚರಿಸಲಾ ಗುತ್ತಿದ್ದು, ಹಸಿವು ನಿರ್ಮೂಲನೆ ಮತ್ತು ಮಾನವೀಯ ಕಾಳಜಿಯ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು ಇದರ ಮುಖ್ಯ ಉದ್ದೇಶ ಎಂದು ಹೇಳಿದರು. ದೇಶದ ವಿವಿಧ ರಾಜ್ಯಗಳಲ್ಲಿಯೂ ಸಾರ್ವಜನಿಕ ಸ್ಥಳಗಳಲ್ಲಿ ತಿಂಡಿ–ಪಾನೀಯ ವಿತರಣೆ, ಆಸ್ಪತ್ರೆಗಳಿಗೆ ಭೇಟಿ, ಬಡಕುಟುಂಬಗಳಿಗೆ ಆಹಾರ ಹಾಗೂ ಅಗತ್ಯ ಸಹಾಯ ವಿತರಿಸು ವಂತಹ ಸಾಮಾಜಿಕ ಸೇವಾ ಚಟುವಟಿಕೆಗಳನ್ನು ಒಂದೇ ದಿನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು. ಮಾನವೀಯತೆಯ ಸಂದೇಶವನ್ನು ಕ್ರಿಯಾತ್ಮಕವಾಗಿ ಸಮಾಜದೊಳಗೆ ತಲುಪಿಸುವ ನಿಟ್ಟಿನಲ್ಲಿ ವೇದಿಕೆಯು ವರ್ಷಪೂರ್ತಿ ವಿವಿಧ ಸಾಮಾಜಿಕ ಸೇವಾ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದ್ದು, ಹಸಿವುಮುಕ್ತ ಭಾರತ ದಿನವು ಅದರ ಪ್ರಮುಖ ಅಭಿಯಾನಗಳಲ್ಲಿ ಒಂದಾಗಿದೆ ಎಂದು ಅವರು ಹೇಳಿದರು. ಕಾರ್ಯಕ್ರಮದಲ್ಲಿ ಮಾನವೀಯ ಸಂದೇಶ ವೇದಿಕೆಯ ಭಟ್ಕಳ ಶಾಖೆಯ ಕಾರ್ಯಕರ್ತರು ಭಾಗವಹಿಸಿ ಸಾರ್ವಜನಿಕರಿಗೆ ತಿಂಡಿ ಹಾಗೂ ಪಾನೀಯಗಳನ್ನು ವಿತರಿಸಿದರು.
ಯಾದಗಿರಿ| ರಮಾಬಾಯಿ ಅಂಬೇಡ್ಕರ್ ಅವರ 128ನೇ ಜಯಂತಿ ಆಚರಣೆ
ಯಾದಗಿರಿ: ಅಂಬೇಡ್ಕರ್ ಸೇವಾ ಸಮಿತಿ ಯಾದಗಿರಿ ಜಿಲ್ಲಾ ಸಮಿತಿ ವತಿಯಿಂದ ಮಾತೋಶ್ರೀ ರಮಾಬಾಯಿ ಅಂಬೇಡ್ಕರ್ ಅವರ 128ನೇ ಜಯಂತಿಯನ್ನು ನಗರದ ಕೋಟಗಾರವಾಡದಲ್ಲಿರುವ ರಮಾಬಾಯಿ ಅಂಬೇಡ್ಕರ್ ಭವನದಲ್ಲಿ ಆಚರಿಸಲಾಯಿತು. ಜಯಂತಿಯ ಅಂಗವಾಗಿ 5ರಿಂದ 8ನೇ ತರಗತಿ ಮಕ್ಕಳಿಗೆ ಮಾತೋಶ್ರೀ ರಮಾಬಾಯಿ ಅಂಬೇಡ್ಕರ್ ಅವರ ಜೀವನ ಚರಿತ್ರೆ ಕುರಿತು 20 ಅಂಕಗಳ ಕಿರು ಪರೀಕ್ಷೆಯನ್ನು ಆಯೋಜಿಸಲಾಗಿತ್ತು. ಇದೇ ವೇಳೆ ನಿಂಗಪ್ಪ ಕೊಲ್ಲೂರು ಧಮ್ಮಚಾರಿಗಳಿಂದ ಬುದ್ಧ ವಂದನೆ ನೆರವೇರಿಸಲಾಯಿತು. ಕಾರ್ಯಕ್ರಮದಲ್ಲಿ ಮಾತನಾಡಿದ ಅಂಬೇಡ್ಕರ್ ಸೇವಾ ಸಮಿತಿ ಯಾದಗಿರಿ ಜಿಲ್ಲಾ ಅಧ್ಯಕ್ಷ ರಾಹುಲ್ ಕೊಲ್ಲೂರಕರ್, ಮಾತೋಶ್ರೀ ರಮಾಬಾಯಿ ಅಂಬೇಡ್ಕರ್ ಅವರು ಬಾಬಾಸಾಹೇಬ್ ಡಾ.ಬಿ.ಆರ್. ಅಂಬೇಡ್ಕರ್ ಅವರ ಜೀವನದಲ್ಲಿ ವಹಿಸಿದ ಮಹತ್ವದ ಪಾತ್ರ, ಅವರ ತ್ಯಾಗ, ದಿಟ್ಟ ನಿರ್ಣಯಗಳು ಹಾಗೂ ವಿದ್ಯಾಭ್ಯಾಸಕ್ಕಾಗಿ ಅವರು ಅನುಭವಿಸಿದ ಸಂಕಷ್ಟಗಳು ಇಂದಿನ ಪೀಳಿಗೆಗೆ ದಾರಿದೀಪವಾಗಿವೆ ಎಂದು ಹೇಳಿದರು. ಕಿರು ಪರೀಕ್ಷೆಯಲ್ಲಿ ರೇಣುಕಾ ಸೈದಪ್ಪ ಪ್ರಥಮ ಬಹುಮಾನ, ಮಾನಸ ದ್ವಿತೀಯ ಬಹುಮಾನ ಹಾಗೂ ವೆಂಕಟೇಶ್ ತೃತೀಯ ಬಹುಮಾನ ಪಡೆದುಕೊಂಡರು. ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ನೋಟ್ಬುಕ್ ಹಾಗೂ ಪೆನ್ಗಳನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ಕಾಶೀನಾಥ್ ಕಣೆಕಲ್, ಮೌನೇಶ್ ಗಿರೆಪ್ಪನೋರ್, ಆಂಜನೇಯ ಭಂಡಾರಿ, ಮಲ್ಲಪ್ಪ ಕೌಳೂರ್, ಆನಂದ್ ತುಮಕೂರು, ರಮೇಶ್ ಗಣಪುರ, ಕುಮಾರ್ ಅರಿಕೇರಿ, ರಾಧಾಕೃಷ್ಣ ಕೌಳೂರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಉಳ್ಳಾಲ: ಬೃಹತ್ ರಕ್ತದಾನ, ಉಚಿತ ಕಣ್ಣು, ಮೂಳೆ ತಪಾಸಣೆ ಶಿಬಿರ
ಉಳ್ಳಾಲ: ಬ್ಲಡ್ ಹೆಲ್ಪ್ ಲೈನ್ ಕಲ್ಲಾಪು ಇದರ ಆಶ್ರಯದಲ್ಲಿ ಯೆನೆಪೋಯ ಮೆಡಿಕಲ್ ಕಾಲೇಜು ದೇರಳಕಟ್ಟೆ ಕೆಎಸ್ ಹೆಗ್ಡೆ ಮೆಡಿಕಲ್ ಕಾಲೇಜು, ಪ್ರಸಾದ್ ನೇತ್ರಾಲಯ, ಕಣಚೂರು ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ ಕೆಎಮ್ ಸಿ ಆಸ್ಪತ್ರೆ ಮಂಗಳೂರು ಇದರ ಸಹಯೋಗದೊಂದಿಗೆ ಬೃಹತ್ ರಕ್ತದಾನ, ಉಚಿತ ಕಣ್ಣು ತಪಾಸಣೆ ಹಾಗೂ ಮೂಳೆ ತಪಾಸಣಾ ಶಿಬಿರ ಕಲ್ಲಾಪು ಆಝಾದ್ ಮೈದಾನದಲ್ಲಿ ನಡೆಯಿತು. ಸ್ಪೀಕರ್ ಯುಟಿ ಖಾದರ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಜನರಿಗೆ ಚಿಕಿತ್ಸೆ ಗೆ ಆಸ್ಪತ್ರೆಯೇ ಸೀಮಿತ ಆಗಬಾರದು. ಕೆಲವು ಬಾರಿ ಇಂತಹ ವೈದ್ಯಕೀಯ ಶಿಬಿರ ಜನರ ಪ್ರಯೋಜನಕ್ಕೆ ಬರುತ್ತದೆ. ಈ ರೀತಿ ಕ್ಯಾಂಪ್ ಮಾಡಿ ಜನರ ಆರೋಗ್ಯ ಉಳಿಸುವ ಮೂಲಕ ಉತ್ತಮ ಸಮಾಜ ಸೇವೆ ಬ್ಲಡ್ ಹೆಲ್ಪ್ ಲೈನ್ ಕಲ್ಲಾಪು ಮಾಡುತ್ತಿರುವುದು ಶ್ಲಾಘನೀಯ ಎಂದರು. ಈ ಸಂದರ್ಭ ಪ್ರಕಾಶ್ ಕುಂಪಲ, ದರ್ಗಾ ಅಧ್ಯಕ್ಷ ಹನೀಫ್ ಹಾಜಿ, ಪ್ರವೀಣ್ ಶೆಟ್ಟಿ ಮೇಗಿನ ಮನೆ, ಚಂದ್ರ ಹಾಸ್ ಪಂಡಿತ್ ಹೌಸ್, ಸುಹೈಲ್ ಕಂದಕ್, ವಿಶ್ವನಾಥ ನಾಯ್ಕ, ಯುಬಿ ಸಲೀಮ್, ನಾಸೀರ್ ಸಾಮಣಿಗೆ, ರಿಯಾಝ್, ಪಿರೋಝ್ ಮಲಾರ್, ಕಮಲಾಕ್ಷ ಮತ್ತಿತರರು ಭಾಗವಹಿಸಿ ಶುಭ ಹಾರೈಸಿದರು. ಈ ಶಿಬಿರದಲ್ಲಿ ಉಳ್ಳಾಲ ತಾಲೂಕು ವ್ಯಾಪ್ತಿಯ ವಿವಿಧ ಕಡೆಗಳಿಂದ ಸಹಸ್ರಾರು ಸಂಖ್ಯೆಯಲ್ಲಿ ಜನರು ಭಾಗವಹಿಸಿ ಶಿಬಿರದ ಪ್ರಯೋಜನ ಪಡೆದರು. ಬಹಳಷ್ಟು ಯುವಕರು ರಕ್ತದಾನ ಮಾಡುವ ಮೂಲಕ ಪ್ರಶಂಸೆಗೆ ಪಾತ್ರರಾದರು.
ಬಾವಿಗೆ ಹಾರಿ ಎಲೆಕ್ಟ್ರಿಷಿಯನ್ ಆತ್ಮಹತ್ಯೆ
ಉಡುಪಿ, ಫೆ.8: ವೈಯಕ್ತಿಕ ಕಾರಣದಿಂದ ಮನನೊಂದ ಎಲೆಕ್ಟ್ರಿಷಿಯನ್ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಅಂಬಾಗಿಲು ಸಮೀಪದ ಕಕ್ಕುಂಜೆ ಎಂಬಲ್ಲಿ ಶನಿವಾರ ರಾತ್ರಿ ವೇಳೆ ನಡೆದಿದೆ. ಮೃತರನ್ನು ಕಕ್ಕುಂಜೆಯ ನಿವಾಸಿ ಅರ್ಚಕ ವಾಸುದೇವ ನಾಯಕ್ ಎಂಬವರ ಮಗ ಪುರುಷೋತ್ತಮ ನಾಯಕ್(52) ಎಂದು ಗುರುತಿಸ ಲಾಗಿದೆ. ಮಣಿಪಾಲದ ವ್ಯಾಲ್ಯೂವೀವ್ ಹೋಟೆಲ್ನಲ್ಲಿ ಎಲೆಕ್ಟ್ರಿಷಿಯನ್ ವಿಭಾಗದಲ್ಲಿ ಅಸಿಸ್ಟೆಂಟ್ ಸೂಪರ್ವೈಸರ್ ಆಗಿ ಕೆಲಸ ಮಾಡಿಕೊಂಡಿದ್ದ ಇವರು, ಕಳೆದ ಒಂದು ವಾರದಿಂದ ಸರಿಯಾಗಿ ನಿದ್ದೆ ಬರುತ್ತಿಲ್ಲವೆಂದು ಮಾನಸಿಕ ಖಿನ್ನತೆಗೆ ಒಳಗಾಗಿದ್ದರು. ಇದೇ ಚಿಂತೆಯಲ್ಲಿ ಅವರು ಮನೆಯ ಬಳಿಯಿರುವ ತೋಟದ ಬಾವಿ ಕಬ್ಬಿಣದ ಪೈಪ್ಗೆ ಹಗ್ಗ ಕಟ್ಟಿ ಹಾರಿ ಆತ್ಮಹತ್ಯೆ ಮಾಡಿಕೊಂಡರು. ಜಿಗಿದ ರಭಸಕ್ಕೆ ಅವರ ರುಂಡ ಬೇರ್ಪಟ್ಟಿದ್ದು, ದೇಹದ ಭಾಗ ಬಾವಿಯಲ್ಲಿದ್ದರೆ, ರುಂಡ ಹಗ್ಗದಲ್ಲಿ ನೇತಾಡುತ್ತಿತ್ತು. ಇವರು ಕಕ್ಕುಂಜೆಯ ಕಟ್ಟೆಮಹಾದೇವಿ ದೇವಸ್ಥಾನದ ಆಡಳಿತ ಮಂಡಳಿಯ ಕಾರ್ಯದರ್ಶಿ ಯಾಗಿದ್ದರು. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

27 C