SENSEX
NIFTY
GOLD
USD/INR

Weather

29    C
...

ನೇರಳಕಟ್ಟೆ : ಯಂಗ್ ಚಾಲೆಂಜರ್ಸ್ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘದಿಂದ ಹೊನಲು ಬೆಳಕಿನ ಕ್ರೀಡಾ ಕೂಟ

ಬಂಟ್ವಾಳ : ನೇರಳಕಟ್ಟೆಯ ಯಂಗ್ ಚಾಲೆಂಜರ್ಸ್ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘ ಇದರ ವತಿಯಿಂದ ವೈ.ಸಿ.ಜಿ.2026 ಹೊನಲು ಬೆಳಕಿನ ಕ್ರೀಡಾ ಕೂಟವು ಶನಿವಾರ ಸಂಜೆ ನೇರಳಕಟ್ಟೆಯಲ್ಲಿ ನಡೆಯಿತು. ಕಾರ್ಯಕ್ರಮವನ್ನು ಪತ್ರಕರ್ತ ಲತೀಫ್ ನೇರಳಕಟ್ಟೆ ಉದ್ಘಾಟಿಸಿದರು. ವೈಸಿಜಿ ಅದ್ಯಕ್ಷ ಉಪೇಂದ್ರ ಆಚಾರ್ಯ ಅಧ್ಯಕ್ಷತೆ ವಹಿಸಿದ್ದರು. ಕ್ರೀಡಾ ಕೂಟದಲ್ಲಿ ಭಾಗವಹಿಸಿದ್ದ ಮಾಜಿ ಸಚಿವ ಬಿ.ರಮಾನಾಥ ರೈ, ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್, ಅರುಣ್ ಕುಮಾರ್ ಪುತ್ತಿಲ, ನೆಟ್ಲಮುಡ್ನೂರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಸತೀಶ್ ಪೂಜಾರಿ, ಸದಸ್ಯ ಶ್ರೀಧರ್ ರೈ, ಯುವ ಮುಖಂಡ ನಿರಂಜನ್ ರೈ ಶುಭ ಹಾರೈಸಿದರು. ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ನೇರಳಕಟ್ಟೆ ಡಿ.ಕೆ.ಶ್ರಧ್ಧಾ ಕೇಂದ್ರದ ಡಿ.ಕೆ.ಸ್ವಾಮೀಜಿ ವಿಜೇತರಿಗೆ ಬಹುಮಾನ ವಿತರಿಸಸಿದರು. ಯುವ ಮುಖಂಡ ಫಾರೂಕ್ ಬಯಬೆ, ನೆಟ್ಲಮುಡ್ನೂರು ಗ್ರಾಮ ಪಂಚಾಯತ್ ಮಾಜಿ ಸದಸ್ಯರಾದ ಅಶೋಕ್ ರೈ, ಧನುಂಜಯ ಗೌಡ, ಪ್ರೇಮಾ ಜಯಕರ ದೇವಾಡಿಗ, ನೇರಳಕಟ್ಟೆ ಸಿ.ಎ.ಬೇಂಕ್ ಉಪಾಧ್ಯಕ್ಷ ಡಿ.ತನಿಯಪ್ಪ ಗೌಡ, ನಾಟಿ ವೈದ್ಯ ಗಂಗಾಧರ ಪಂಡಿತ್, ಪ್ರಮುಖರಾದ ವೆಂಕಪ್ಪ ರೈ ಕುರ್ಲೆತ್ತಿಮಾರು, ರಾಮಚಂದ್ರ ಮಾಸ್ಟರ್, ಭೋಜ ನಾರಾಯಣ, ಬೇಬಿ ನಾಯ್ಕ, ರಾಜೇಶ್ ಕರುವನ್, ರೋಹಿತಾಶ್ವ, ಕುಸುಮಾಕರ ಗೌಡ ಅತಿಥಿಗಳಾಗಿ ಭಾಗವಹಿಸಿದ್ದರು. ಯಂಗ್ ಚಾಲೆಂಜರ್ಸ್ ಗೌರವಾಧ್ಯಕ್ಷ ವಿಶುಕುಮಾರ್ ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ಕಿರಣ್ ಕುಮಾರ್ ವಂದಿಸಿದರು. ಗೋಪಾಲಕೃಷ್ಣ ಮಾಸ್ಟರ್ ಕಾರ್ಯಕ್ರಮ ನಿರೂಪಿಸಿದರು. ಪೆರಾಜೆ, ಮಾಣಿ, ವೈಸಿಜಿ ನೇರಳಕಟ್ಟೆ ತಂಡಗಳಿಗೆ ಪ್ರಥಮ ಪ್ರಶಸ್ತಿ ಆಹ್ವಾನಿತ ತಂಡಗಳ ಕ್ರಿಕೆಟ್ ಲೀಗ್ ಪಂದ್ಯಾಟದಲ್ಲಿ ಶ್ರೀ ವಿಷ್ಣು ಪೆರಾಜೆ ಪ್ರಥಮ, ಪಂಡಿತ್ ಗಯ್ಸ್ ದ್ವಿತೀಯ, ವೈಸಿಜಿ ನೇರಳಕಟ್ಟೆ ತೃತೀಯ, ಯುವಶಕ್ತಿ ಗಣೇಶನಗರ ತಂಡ ಚತುರ್ಥ ಸ್ಥಾನವನ್ನು ಪಡೆದುಕೊಂಡಿತು. ಅಂಡರ್ 21 ವಾಲಿಬಾಲ್ ಪಂದ್ಯಾಟದಲ್ಲಿ ಮಾಣಿ ಯುವಕ ಮಂಡಲ ಪ್ರಥಮ, ತತ್ವಮಸಿ ದ್ವಿತೀಯ, ವೈಸಿಜಿ ನೇರಳಕಟ್ಟೆ ತೃತಿಯ ಹಾಗೂ ಜನನಿ ಕ್ಯಾಟರಿಂಗ್ ತಂಡ ಚತುರ್ಥ ಸ್ಥಾನವನ್ನು ಪಡೆದುಕೊಂಡಿತು. ಬೆಲ್ಟ್ ಏರ್ಯ ವಾಲಿಬಾಲ್ ಪಂದ್ಯಾಟದಲ್ಲಿ ವೈಸಿಜಿ ನೇರಳಕಟ್ಟೆ ಪ್ರಥಮ, ತತ್ವಮಸಿ ದ್ವಿತೀಯ, ನೇತಾಜಿ ತೃತಿಯ ಹಾಗೂ ಯುವಶಕ್ತಿ ಚತುರ್ಥ ಸ್ಥಾನವನ್ನು ತಮ್ಮದಾಗಿಸಿಕೊಂಡಿತು.

ವಾರ್ತಾ ಭಾರತಿ 1 Mar 2026 8:44 pm

ಮಂಗಳೂರು ವಿವಿ ಹಳೆ ವಿದ್ಯಾರ್ಥಿ ಸಂಘ ಇಡೀ ರಾಜ್ಯಕ್ಕೆ ಮಾದರಿ: ಪ್ರೊ. ಎ.ಎಂ.ಖಾನ್

ಮಂಗಳಾ ಅಲ್ಯುಮಿನಿ ಮೀಟ್ ಸ್ಮೃತಿ ಸಂಗಮ ಕಾರ್ಯಕ್ರಮ

ವಾರ್ತಾ ಭಾರತಿ 1 Mar 2026 8:41 pm

ಮಲಾರ್ ಮಸೀದಿ ಸಂಪರ್ಕ ಕಾಂಕ್ರೀಟ್ ರಸ್ತೆ ಉದ್ಘಾಟನೆ

ಕೊಣಾಜೆ: ಹರೇಕಳ ಗ್ರಾಮದಲ್ಲಿ ಹಿಂದೆ ಮಣ್ಣಿನ ರಸ್ತೆಯಾಗಿದ್ದ ಮಾರ್ಗಗಳೆಲ್ಲವೂ ಈಗ ಕಾಂಕ್ರೀಟ್ ರಸ್ತೆಯಾಗಿ ಮಾಡಲಾಗಿದೆ. ಗ್ರಾಮ ಪಂಚಾಯಿತಿ ಪ್ರತಿನಿಧಿಗಳು ಒತ್ತಡ ಹಾಕಿದ್ದರಿಂದ ಹೆಚ್ಚುವರಿ ಅನುದಾನ ಮೀಸಲಿಟ್ಟು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗಿದೆ ಎಂದು ವಿಧಾನ ಸಭಾಧ್ಯಕ್ಷ ಯು.ಟಿ. ಖಾದರ್ ತಿಳಿಸಿದರು. ಹರೇಕಳ ಗ್ರಾಮದ ಮಲಾರ್ ಮುಹಿಯುದ್ದೀನ್ ಜುಮಾ ಮಸೀದಿ ಸಂಪರ್ಕ ಕಾಂಕ್ರೀಟ್ ರಸ್ತೆಯ ಶನಿವಾರ ನಡೆದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಲಾರ್ ಮತ್ತು ಕೋಡಿ ಭಾಗದ ಎಲ್ಲಾ ರಸ್ತೆಗಳು ಗ್ರಾಮ ಪಂಚಾಯಿತಿಗೆ ನೇರ ಸಂಪರ್ಕ ಹೊಂದುವಂತೆ ಅಭಿವೃದ್ಧಿಪಡಿಸಲಾಗಿದೆ. ವಿದ್ಯುತ್ ಹಾಗೂ ನೀರಿನ ಸಮಸ್ಯೆ ಬಾರ ದಂತೆ ಸುದೀರ್ಘ ಕಾಲದ ಯೋಜನೆ ರೂಪಿಸಿ ಮೂಲ ಸೌಕರ್ಯಗಳಿಗೆ ಆದ್ಯತೆ ನೀಡಲಾಗಿದೆ ಎಂದು ತಿಳಿಸಿದರು. ಹಿರಿಯರಾದ ಮಹಮ್ಮದ್ ಮಲಾರ್ ರಸ್ತೆ ಉದ್ಘಾಟಿಸಿದರು. ಮಸೀದಿಯ ಖತೀಬ್ ಸಿರಾಜುದ್ದೀನ್ ದಾರಿಮಿ ಉಸ್ತಾದ್ ದುವಾ ನೆರವೇರಿಸಿದರು. ಮುಅದ್ದೀನ್ ಶರೀಫ್ ಉಮೈದಿ, ಅಧ್ಯಕ್ಷ ಎಸ್.ಎಂ. ಆಸಿಫ್ ಇಕ್ಬಾಲ್, ಪ್ರಧಾನ ಕಾರ್ಯದರ್ಶಿ ರಹ್ಮತುಲ್ಲಾ, ಕೋಶಾಧಿಕಾರಿ ಇಸ್ಮಾಯಿಲ್ ಕೋಡಿ, ಸದಸ್ಯರಾದ ರಿಯಾಝ್ ಅಹ್ಮದ್, ಸಂಶುದ್ದೀನ್, ಹರೇಕಳ ಗ್ರಾಮ ಪಂಚಾಯಿತಿ ನಿಕಟಪೂರ್ವ ಅಧ್ಯಕ್ಷ ಬದ್ರುದ್ದೀನ್ ಫರೀದ್ ನಗರ, ಸದಸ್ಯರಾದ ಸತ್ತಾರ್ ನ್ಯೂಪಡ್ಪು, ಅಬೂಬಕ್ಕರ್ ಸಿದ್ದೀಕ್, ಎಸ್.ಎಂ. ಬಶೀರ್, ಮಾಜಿ ಸದಸ್ಯ ಬಶೀರ್ ಉಂಬುದ, ಪ್ರಮುಖರಾದ ಎಚ್.ಎಂ. ಮಹಮ್ಮದ್, ಇಸ್ಮಾಯಿಲ್ ಮಾಸ್ಟರ್, ಝಕರಿಯಾ ಮಲಾರ್, ಝಾಯಿದ್ ಮಲಾರ್, ಅಶ್ರಫ್ ಮದೀನಾ, ಹಸನ್ ಕುಂಞಿ ಮಲಾರ್, ಇಬ್ರಾಹಿಂಮೋನು, ಹಾರಿಸ್ ಮಲಾರ್, ಮುನೀರ್ ಆಲಡ್ಕ, ಹಮೀದ್ ಕಂಡಿಲ, ಅಬ್ದುಲ್ ರಹ್ಮಾನ್, ಹಮೀದ್ ಎಂ.ಬಿ, ಮೊದಲಾದವರು ಉಪಸ್ಥಿತರಿದ್ದರು. ಮಂಗಳೂರು ತಾ.ಪಂ. ಮಾಜಿ ಸದಸ್ಯ ಮುಸ್ತಫಾ ಹರೇಕಳ ಪ್ರಾಸ್ತಾವಿಕವಾಗಿ ಮಾತನಾಡಿದರು.

ವಾರ್ತಾ ಭಾರತಿ 1 Mar 2026 8:39 pm

ಪುತ್ತೂರು: ಅಂತರ್ ಜಿಲ್ಲಾಮಟ್ಟದ ಗಾಣಿಗ ಸಂಗಮ ಕಾರ್ಯಕ್ರಮ

ಪುತ್ತೂರು; ಗಾಣಿಗ ಸಮಾಜದಿಂದ ವಿಶ್ವದಲ್ಲಿಯೇ ಭಾರತದ ಹೆಸರು ಚಿರಸ್ಥಾಯಿಯಾಗಿದೆ. ಗಾಣಿಗ ಸಮಾಜದ ಮಗನಿಂದ ದೇಶದಲ್ಲಿಯೇ ದೊಡ್ಡ ಬದಲಾವಣೆ ಉಂಟಾಗಿದೆ. ಭ್ರಷ್ಟಾಚಾರ ನಿರ್ಮೂಲನೆಯಾಗಿದೆ. ಸಭ್ ಕಾ ಸಾಥ್ ಸಭ್ ಕಾ ವಿಕಾಸ್‌ನಿಂದ ಭಾರತವನ್ನು ವಿಶ್ವವೇ ಗುರುತಿಸುವಂತಾಗಿದೆ ಎಂದು ಪ್ರದಾನಿ ನರೇಂದ್ರ ಮೋದಿ ಅವರ ಸಹೋದರ ಪ್ರಹ್ಲಾದ್ ದಾಮೋದರದಾಸ್ ಮೋದಿ ಅಭಿಪ್ರಾಯಪಟ್ಟರು. ಅವರು ರವಿವಾರ ಸಾಲ್ಮರದ ಕೊಟೇಚಾ ಸಭಾಂಗಣದಲ್ಲಿ ನಡೆದ ಅಂತರ್ ಜಿಲ್ಲಾಮಟ್ಟದ ಗಾಣಿಗ ಸಂಗಮ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ಗಾಣಿಗ ಸಮಾಜದ ಸಂಗಟಯಾಗುವ ಮೂಲಕ ನಾವು ಏನೆಂದು ತೋರಿಸಬೇಕಾದ ಅವಶ್ಯಕತೆ ಇದೆ. ದೇಶದಾದ್ಯಂತ 14 ಕೋಟಿ ಗಾಣಿಗ ಸಮಾಜದವರಿದ್ದೇವೆ. ರಾಮಾಯಣದಲ್ಲೂ ಗಾಣಿಗರ ಪಾತ್ರವಿದೆ. ಸ್ವಾತಂತ್ರ್ಯ ಸಂಗ್ರಾಮದಲ್ಲಿ ಗಾಣಿಗರ ಕೊಡುಗೆ ಇದೆ. ಆದರೆ ನಾವು ಸಂಘಟಿತರಾಗಿಲ್ಲ ಎಂಬುವುದು ಸತ್ಯ ಎಂದರು. ಕೆಪಿಸಿಸಿ ಉಪಾಧ್ಯಕ್ಷ ವಿ.ಆರ್ ಸುದರ್ಶನ್ ಅವರು ಮಾತನಾಡಿ, ಸಮುದಾಯದ ಅಭಿವೃದ್ಧಿಯಾಗಬೇಕಾದರೆ ರಾಜಕೀಯ ಕ್ಷೇತ್ರದಲ್ಲಿ ಮಹಿಳಾ ನಾಯಕತ್ವ ಬೆಳೆಯಬೇಕು. ನ್ಯಾಯಾಂಗ ಹಾಗೂ ಕಾರ್ಯಾಂಗದಲ್ಲಿಯೂ ಗಾಣಿಗ ಸಮಾಜದ ಮಂದಿ ಅಧಿಕಾರಿಗಳಾಗಿ ಬರಬೇಕು. ಗಾಣಿಗ ಸಮಾಜದ ವಿದ್ಯಾರ್ಥಿಗಳು ಈ ನಿಟ್ಟಿನಲ್ಲಿ ಹೆಚ್ಚು ಚಿಂತನೆಗಳನ್ನು ನಡೆಸಬೇಕು. ಕೇವಲ ಹೆಸರಿಗೋಸ್ಕರ ಸಂಘಟನೆ ಬೇಡ. ಸಮಾಜದ ಅಭಿವೃದ್ಧಿಗಾಗಿ ಸಂಘಟನೆ ಎಂಬ ಮನೋಭಾವ ಬೆಳೆಸಿಕೊಳ್ಳಬೇಕು ಎಂದರು. ಸಂಸದ ಬ್ರಿಜೇಶ್ ಚೌಟ ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ವ್ಯಕ್ತಿಯೊಬ್ಬ ಯಾವುದೇ ಕ್ಷೇತ್ರದಲ್ಲಿಯೂ ಸಾಧನೆ ಮಾಡಬೇಕಾದರೆ ಅದರಲ್ಲಿ ಮಹಿಳೆಯರ ಪಾತ್ರ ಬಹಳ ಮುಖ್ಯ. ಯುವಜನತೆ ಹೆಚ್ಚು ಹೆಚ್ಚಾಗಿ ಉದ್ಯಮ ಕ್ಷೇತ್ರಕ್ಕೆ ಬರಬೇಕು. ಪ್ರಧಾನಿ ಮೋದಿ ಅವರ ವಿಕಸಿತ ಭಾರತ ಸಂಕಲ್ಪ ಒಬ್ಬ ವ್ಯಕ್ತಿಯದ್ದಲ್ಲ. ಅದು ಇಡೀ ಭಾರತದೇಶದ ಸಂಕಲ್ಪವಾಗಿದೆ. ನಾವು ದೇಶದ ಅಭಿವೃದ್ಧಿಯಲ್ಲಿ ತೊಡಗಿಸಿಕೊಳ್ಳಬೇಕಾಗಿದೆ ಅದರಲ್ಲೂ ವಿಶೇಷ ವಾಗಿ ಮಹಿಳೆಯರು ಈ ನಿಟ್ಟಿನಲ್ಲಿ ಯೋಚನೆ ಮಾಡಬೇಕಾಗಿದೆ. ಗಾಣಿಗ ಸಮಾಜ ಗಟ್ಟಿಯಾಗಬೇಕಾದರೆ ಅದಕ್ಕೆ ಹಿಂದುತ್ವದ ಹಿನ್ನಲೆ ಬೇಕು. ದಕ ಜಿಲ್ಲೆಯಲ್ಲಿ ನಾವು ಹಿಂದುತ್ವದ ಗಟ್ಟಿತನ ಕಾಣಬಹುದಾಗಿದೆ. ಜಿಲ್ಲೆಯ ಸಂಸ್ಕೃತಿಗೆ ಅನುಗುಣವಾಗಿ ವಿಕಸಿತ ಭಾರತದ ಕಡೆಗೆ ಹೆಜ್ಜೆ ಹಾಕಬೇಕಾದರೆ ನಮ್ಮ ಒಗ್ಗಟ್ಟು ಅತೀ ಅಗತ್ಯ ಎಂದರು. ಶಾಸಕ ಅಶೋಕ್ ರೈ ಅವರು ಮಾತನಾಡಿ, ಗಾಣಿಗ ಸಮಾಜದ ಅಭಿವೃದ್ಧಿಯಾಗಬೇಕಾದರೆ ಮೊದಲು ವಿದ್ಯೆಯತ್ತ ಆದ್ಯತೆ ನೀಡಬೇಕು. ಸಹಾಯ ಮನೋಭಾವ ಬೆಳೆಸಿಕೊಳ್ಳಬೇಕು. ಹಾಗಾದಾಗ ಮಾತ್ರ ಯೋಜನೆಗಳು ಸಾಕಾರ ಗೊಳ್ಳುತ್ತವೆ. ಗಾಣಿಗ ಸಮಾಜದ ಅಭಿವೃದ್ಧಿಗೆ ಗಾಣಿಗ ನಿಗಮ ಇದೆ. ಅದಕ್ಕೆ ಶಕ್ತಿ ತುಂಬುವ ಕೆಲಸವಾದರೆ ಅಭಿವೃದ್ಧಿಯ ಹಂತಕ್ಕೇರಬಹುದಾಗಿದೆ. ಪುತ್ತೂರಿನಲ್ಲಿ ಗಾಣಿಗ ಸಭಾಭವನ ನಿರ್ಮಾಣಕ್ಕೆ ಪಹಣಿಪತ್ರ ಸಹಿತ ಜಾಗ ಹುಡುಕಿಕೊಡಿ. ಅದಕ್ಕೆ ಮುಖ್ಯಮಂತ್ರಿಯವರ ಅನುಮೋದನೆ ಮಾಡಿಸಿಕೊಡುತ್ತೇನೆ ಎಂದು ಅವರು ಭರವಸೆ ನೀಡಿದರು. ಮುಂಬೈ ಸಾಫಲ್ಯ ಸೇವಾ ಸಂಘದ ಅಧ್ಯಕ್ಷ ಶ್ರೀನಿವಾಸ ಸಫಲ್ಯ ಅವರು ಮಾತನಾಡಿ, ಇಚ್ಛಾಶಕ್ತಿ ಇದ್ದಾಗ ಮಾತ್ರ ಅಭಿವೃದ್ಧಿ ಸಾಧ್ಯವಾಗುತ್ತದೆ. ಪುತ್ತೂರಿನಲ್ಲಿ ನಡೆದಿರುವುದು ಗಾಣಿಗ ಸಂಗಮ ಅಲ್ಲ. ಅದು ಗಾಣಿಗರ ಆತ್ಮಾವ ಲೋಕನ. ಗಾಣಿಗ ಸಮಾಜದ ಭವಿಷ್ಯವನ್ನು ನಿರ್ಧರಿಸುವ ಚಿಂತನೆಯಾಗಿದೆ. ಗಾಣಿಗ ಸಮಾಜದ ಆಚಾರ-ವಿಚಾರಗಳು ಪ್ರಸ್ತುತ ದಿಕ್ಕು ತಪ್ಪುತ್ತಿದೆ. ಅದಕ್ಕಾಗಿ ಸಂಘಟನೆ ಅತೀ ಅಗತ್ಯವಾಗಿದೆ. ಗಾಣಿಗರ ಜೀವನ ಸಂಸ್ಕೃತಿಯನ್ನು ಬಿಂಬಿಸುವ ವೆಬ್‌ಸೈಟ್ ಗಳ ಅಗತ್ಯವಿದ್ದು, ಸಂಘಟನೆ ಈ ಬಗ್ಗೆ ಚಿಂತನೆ ಮಾಡುವ ಕಾಲ ಬಂದಿದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪುತ್ತೂರು ಗಾಣಿಗ ಯಾನೆ ಸಪಲಿಗರ ಸಂಘದ ಅಧ್ಯಕ್ಷ ಲಕ್ಷ್ಮಿ ಪ್ರಸಾದ್ ವಹಿಸಿದ್ದರು. ವೇದಿಕೆಯಲ್ಲಿ ಎಂಎಲ್‌ಸಿ ಕಿಶೋರ್ ಕುಮಾರ್ ಬೊಟ್ಯಾಡಿ, ಮುಂಬೈ ಉದ್ಯಮಿ ವಸಂತ ಜಿ ಸಪಲ್ಯ, ಪುತ್ತೂರು ಮಹಾಲಿಂಗೇಶ್ವರ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್, ಅಖಿಲ ಕರ್ನಾಟಕ ಗಾಣಿಗ ಸಂಘದ ಎಂ.ಆರ್.ರಾಜಶೇಖರ್ ಗಾಣಿಗ, ಗಾಣಿಗ ಅಭಿವೃದ್ಧಿ ನಿಗಮದ ಅಧ್ಯಕ್ಷ ವಿಶ್ವಾಸ್‌ ಕುಮಾರ್ ದಾಸ್, ಬಂಟ್ವಾಳ ತಾಪಂ ಮಾಜಿ ಸದಸ್ಯ ಮಾಧವ ಮಾವೆ, ಉಪ್ಪಿನಂಗಡಿ ಗಾಣಿಗ ಸಂಘದ ಅಧ್ಯಕ್ಷ ಹರಿರಾಮಚಂದ್ರ, ಉದ್ಯಮಿ ಭುವನೇಶ್ ರಘು ಸಪಲ್ಯ ಪಾಣೆಮಂಗಳೂರು, ಪ್ರಹ್ಲಾದ್ ಮೋದಿ ಪುತ್ರಿ ಸೋನಾಲ್ ಬೆನ್ ಮೋದಿ, ಪ್ರವೀಣ್ ತೆಲಂಗಾಣ, ವಿನಯಕುಮಾರ್ ಬಾರ್ಕೂರು, ವಿಜಯಕುಮಾರ್, ಉದ್ಯಮಿ ಮನೋಜ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಗಾಣಿಗ ಸಮಾಜದ ವಿವಿಧಕ್ಷೇತ್ರದ ಸಾಧಕರಿಗೆ ಸನ್ಮಾನಿಸಲಾಯಿತು. ಮಹಿಳೆಯರಿಗೆ ಸೀರೆ ವಿತರಣೆ ನಡೆಯಿತು. ವಧು-ವರರ ಅನ್ವೇಷಣೆಯ ನೋಂದಾವಣೆ ನಡೆಸಲಾಯಿತು. ಡ್ಯಾನ್ಸ್ ಗಾಣಿಗ ಡ್ಯಾನ್ಸ್ ಸಹಿತ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಪುತ್ತೂರು ಗಾಣಿಗ ಯಾನೆ ಸಪಲಿಗರ ಸಂಘದ ಪ್ರಧಾನ ಕಾರ್ಯದರ್ಶಿ ಜಯಂತ ಉರ್ಲಾಂಡಿ ಸ್ವಾಗತಿಸಿದರು. ಸಂಘದ ಅಧ್ಯಕ್ಷ ಲಕ್ಷ್ಮಿ ಪ್ರಸಾದ್ ಬೆಟ್ಟ ವಂದಿಸಿದರು. ದೀಪಕ್ ಅಡ್ಯಾರ್ ಕಾರ್ಯಕ್ರಮ ನಿರೂಪಿಸಿದರು.

ವಾರ್ತಾ ಭಾರತಿ 1 Mar 2026 8:37 pm

ಎಂಸಿಸಿ ಬ್ಯಾಂಕ್ ಮೂಲಕ ಶೀಘ್ರ ಯುಪಿಐ, ಗೂಗಲ್ ಪೇ ಸೌಲಭ್ಯ: ಅನಿಲ್ ಲೋಬೊ

ಎಂಸಿಸಿ ಬ್ಯಾಂಕ್ ಬೆಳ್ಮಣ್ ಪ್ರಥಮ ವಾರ್ಷಿಕೋತ್ಸವ

ವಾರ್ತಾ ಭಾರತಿ 1 Mar 2026 8:34 pm

T20 World Cup 2026: ಸೆಮಿಫೈನಲ್ ಸ್ಥಾನಕ್ಕಾಗಿ ಟೀಂ ಇಂಡಿಯಾ ಕಾದಾಟ

T20 World Cup 2026: ಕೋಲ್ಕತ್ತಾದಲ್ಲಿ ಭಾನುವಾರ ನಡೆಯುತ್ತಿರುವ ಐಸಿಸಿ ಪುರುಷರ ಟಿ20 ವಿಶ್ವಕಪ್ 2026ರ ಸೂಪರ್ 8 ಹಂತದ ಮಹತ್ವದ ಪಂದ್ಯದಲ್ಲಿ ಭಾರತ ಮತ್ತು ವೆಸ್ಟ್ ಇಂಡೀಸ್ ಮುಖಾಮುಖಿಗಿವೆ. ಈ ಪಂದ್ಯದಲ್ಲಿ ಗೆಲ್ಲುವ ತಂಡ ಸೆಮಿಫೈನಲ್‌ನ ಕೊನೆಯ ಉಳಿದ ಸ್ಥಾನವನ್ನು ಖಚಿತಪಡಿಸಿಕೊಳ್ಳಲಿದೆ. ಈಗಾಗಲೇ ನ್ಯೂಜಿಲೆಂಡ್, ಇಂಗ್ಲೆಂಡ್ ತಂಡಗಳು ತಮ್ಮ ಸೆಮಿಫೈನಲ್ ಸ್ಥಾನವನ್ನು ಭದ್ರಪಡಿಸಿಕೊಂಡಿವೆ. ಈಗಾಗಲೇ ಸೂಪರ್

ಒನ್ ಇ೦ಡಿಯ 1 Mar 2026 8:34 pm

ವಿದೇಶಿಗನಿಂದ ಶಿರ್ವದ ಮಹಿಳೆಗೆ 14 ಲಕ್ಷ ರೂ. ವಂಚನೆ: ಪ್ರಕರಣ ದಾಖಲು

ಶಿರ್ವ, ಮಾ.1: ಸಾಮಾಜಿಕ ಜಾಲತಾಣದ ಮೂಲಕ ಪರಿಚಯಿತನಾದ ವಿದೇಶದ ವ್ಯಕ್ತಿ ಕೋರಿಯರ್ ಕಳುಹಿಸಿರುವುದಾಗಿ ನಂಬಿಸಿ ಶಿರ್ವದ ಮಹಿಳೆಗೆ ಲಕ್ಷಾಂತರ ರೂ. ಹಣ ವಂಚನೆ ಮಾಡಿರುವ ಬಗ್ಗೆ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವಿದ್ಯಾ ಎಂಬವರಿಗೆ ಒಂದು ತಿಂಗಳ ಹಿಂದೆ ಮೊಬೈಲ್ ಮೂಲಕ ಪರಿಚಯ ಆಗಿದ್ದು ಆತನು ತಾನು ವಿದೇಶದಲಿದ್ದು, ಅಲ್ಲಿಂದ ಗಿಫ್ಟ್ ಕೋರಿಯರ್ ಮಾಡಿರುವುದಾಗಿ ಫೆ.22ರಂದು ತಿಳಿಸಿದ್ದನು. ಫೆ.23ರಂದು ವಿದ್ಯಾ ಅವರಿಗೆ ಮಹಿಳೆಯೊಬ್ಬರು ಕರೆ ಮಾಡಿ ನಿಮಗೆ ವಿದೇಶದಿಂದ ಕೋರಿಯರ್ ಬಂದಿದ್ದು, ಅದು ವಿಮಾನ ನಿಲ್ದಾಣದಿಂದ ಹೊರಗಡೆ ಬರಬೇಕಾದರೆ 49,700ರೂ. ಹಣವನ್ನು ಪಾವತಿಸುವಂತೆ ತಿಳಿಸಿದ್ದಳು. ಅದರಂತೆ ವಿದ್ಯಾ ಹಣ ಪಾವತಿಸಿದ್ದರು. ಬಳಿಕ ಸ್ವಲ್ಪ ಸಮಯದ ಬಳಿಕ ಮತ್ತೆ ಕರೆ ಮಾಡಿ, ಕೋರಿಯರ್‌ನಲ್ಲಿ 30,000 ವಿದೇಶದ ಪೌಂಡ್ ಇದ್ದು, ಇದಕ್ಕೆ ಕೂಡಲೇ 1,89,000ರೂ. ಹಣವನ್ನು ಹಾಕುವಂತೆ ತಿಳಿಸಿದ್ದಳು. ಹಾಗೇ ವಿದ್ಯಾ ಮತ್ತೆ ಹಣ ಪಾವತಿಸಿ ದರು. ಅದೇ ದಿನ ಸಂಜೆ ಕರೆ ಮಾಡಿ ಮನಿ ಎಕ್ಸ್ಚೇಂಜ್ ಮಾಡಲು ಹೆಚ್ಚುವರಿ ಹಣ ಕಳುಹಿಸುವಂತೆ ತಿಳಿಸಿದಳು. ಅದರಂತೆ ಒಟ್ಟು 2,50,000ರೂ. ಹಣವನ್ನು ಪಾವತಿಸಿದ್ದರು. ಹೀಗೆ ಹಲವು ಬಾರಿ ಫೆ.23ರಿಂದ ಫೆ.27ರವರೆಗೆ ಒಟ್ಟು 13,99,700ರೂ. ಹಣವನ್ನು ಬೇರೆ ಬೇರೆ ಖಾತೆಗೆ ಹಾಕಿದ್ದರು. ಆದರೆ ಕೋರಿಯರ್ ಮಾತ್ರ ಬಂದಿರುವುದಿಲ್ಲ. ಸ್ನೇಹಿತನ ಹೆಸರಿನಲ್ಲಿ ವಿದೇಶದ ವ್ಯಕ್ತಿ ವಿದ್ಯಾ ಅವರಿಗೆ ನಂಬಿಸಿ ಮೋಸ ಮಾಡಿರುವುದಾಗಿ ದೂರಲಾಗಿದೆ.

ವಾರ್ತಾ ಭಾರತಿ 1 Mar 2026 8:27 pm

ಕಾರಿಗೆ ಬೈಕ್ ಢಿಕ್ಕಿ: ಇಬ್ಬರು ಸವಾರರು ಮೃತ್ಯು

ಕಾರ್ಕಳ, ಮಾ.1: ಕಾರೊಂದು ಬೈಕಿಗೆ ಢಿಕ್ಕಿ ಹೊಡೆದ ಪರಿಣಾಮ ಇಬ್ಬರು ಸವಾರರು ಮೃತಪಟ್ಟ ಘಟನೆ ಫೆ.28ರಂದು ರಾತ್ರಿ 8.45ರ ಸುಮಾರಿಗೆ ಕುಕ್ಕುಂದೂರು ಗ್ರಾಮದ ಮಹಾತ್ಮ ಗಾಂಧಿ ಶಾಲೆ ಎದುರುಗಡೆ ನಡೆದಿದೆ. ಮೃತರನ್ನು ಎರ್ಲಪಾಡಿ ಗೋವಿಂದೂರಿನ ಬೈಕ್ ಸವಾರ ರಕ್ಷೀತ್(18) ಮತ್ತು ಅವರ ಸಂಬಂಧಿ ಸಹ ಸವಾರ ಶಿವಾನಂದ(19) ಎಂದು ಗುರುತಿಸಲಾಗಿದೆ. ಉಡುಪಿ ಕಡೆಯಿಂದ ಕಾರ್ಕಳ ಕಡೆಗೆ ಹೋಗುತ್ತಿದ್ದ ಕಾರು, ಎದುರಿ ನಲ್ಲಿದ್ದ ವಾಹನವನ್ನು ಒವರ್ ಟೇಕ್ ಮಾಡುವ ಭರದಲ್ಲಿ ಎದುರಿನಲ್ಲಿ ಅಂದರೆ ಕಾರ್ಕಳದಿಂದ ಬೈಲೂರು ಕಡೆಗೆ ಬರುತ್ತಿದ್ದ ಬೈಕಿಗೆ ಢಿಕ್ಕಿ ಹೊಡೆಯಿತ್ತೆನ್ನಲಾಗಿದೆ. ಇದರಿಂದ ಬೈಕ್ ಸವಾರರು ಬೈಕ್ ಸಮೇತ ರಸ್ತೆ ಬಿದ್ದರೆನ್ನಲಾಗಿದೆ. ಇದರಿಂದ ಗಂಭೀರವಾಗಿ ಗಾಯಗೊಂಡ ರಕ್ಷೀತ್ ಮತ್ತು ಶಿವಾನಂದ ಕಾರ್ಕಳ ಸರಕಾರಿ ಆಸ್ಪತ್ರಗೆ ಕೆರೆದೊಯ್ಯುತ್ತಿರುವ ದಾರಿ ಮದ್ಯೆ ಮೃತಪಟ್ಟರು ಎಂದು ತಿಳಿದುಬಂದಿದೆ. ಕಾರು ಚಾಲಕ ಅಪಘಾತ ಉಂಟು ಮಾಡಿದ ನಂತರ ಗಾಯಾಳುವನ್ನು ಚಿಕಿತ್ಸೆಗೆ ಕರೆದೊಯ್ಯದೆ, ಪೊಲೀಸರಿಗೂ ಮಾಹಿತಿ ನೀಡದೇ ಸ್ಥಳದಿಂದ ಓಡಿ ಪರಾರಿಯಾಗಿರುವುದಾಗಿ ದೂರಲಾಗಿದೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಾರ್ತಾ ಭಾರತಿ 1 Mar 2026 8:21 pm

ಶತ್ರುಗಳ ಮಿಲಿಟರಿ ನೆಲೆಗಳನ್ನು ನಾಶಮಾಡುವುದನ್ನು ಇರಾನ್ ಮುಂದುವರಿಸಲಿದೆ: ಇರಾನ್ ಅಧ್ಯಕ್ಷ ಮಸೂದ್ ಪೆಝೆಶ್ಕಿಯಾನ್

“ನಮ್ಮನ್ನು ನಾವು ರಕ್ಷಿಸಿಕೊಳ್ಳುವಲ್ಲಿ ಯಾವುದೇ ನಿರ್ಬಂಧಗಳಿಲ್ಲ” ಎಂದ ವಿದೇಶಾಂಗ ಸಚಿವ

ವಾರ್ತಾ ಭಾರತಿ 1 Mar 2026 8:19 pm

ಇರಾನ್ ಯುದ್ಧ: ಅಬುಧಾಬಿಯಲ್ಲಿ ಸಿಲುಕಿದ ಪ್ರವಾಸಿಗರ ವಾಸ್ತವ್ಯ ವ್ಯವಸ್ಥೆಗೆ ಹೊಟೆಲ್‌ಗಳಿಗೆ ಸರ್ಕಾರ ಸೂಚನೆ, ವೆಚ್ಚ ಭರಿಸುವ ಭರವಸೆ

ಇಸ್ರೇಲ್‌ ಇರಾನ್‌ ಮೇಲೆ ಕ್ಷಿಪಣಿ ದಾಳಿ ಬೆನ್ನಲ್ಲೇ ಹಲವು ದೇಶಗಳಲ್ಲಿ ವಿಮಾನ ಸೇವೆ ರದ್ದುಪಡಿಸಲಾಗಿದೆ. ಹಾಗೆಯೇ ಪ್ರಯಾಣ ನಿರ್ಬಂಧಗಳಿಂದಾಗಿ ಅಬುಧಾಬಿಯಲ್ಲಿ ಸಿಲುಕಿರುವ ಪ್ರವಾಸಿಗರಿಗೆ ಅಲ್ಲಿನ ಸರ್ಕಾರವು ನೆರವು ಘೋಷಿಸಿದೆ. ಚೆಕ್-ಔಟ್ ಅವಧಿ ಮುಗಿದಿದ್ದರೂ ಪ್ರಯಾಣಿಸಲು ಸಾಧ್ಯವಾಗದ ಅತಿಥಿಗಳ ವಾಸ್ತವ್ಯವನ್ನು ವಿಸ್ತರಿಸುವಂತೆ ಅಬುಧಾಬಿ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಇಲಾಖೆಯು ಹೋಟೆಲ್‌ಗಳಿಗೆ ಸೂಚನೆ ನೀಡಿದೆ. ಪ್ರಯಾಣ ನಿರ್ಬಂಧಗಳಿಂದಾಗಿ ತಮ್ಮ ದೇಶಗಳಿಗೆ

ಒನ್ ಇ೦ಡಿಯ 1 Mar 2026 8:18 pm

‘ಪೊಲೀಸ್ ರನ್’ ಮ್ಯಾರಾಥಾನ್‍ಗೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಚಾಲನೆ

ಬೆಂಗಳೂರು, ಮಾ.1: ಮಾದಕ ದ್ರವ್ಯ (ಡ್ರಗ್ಸ್) ಮುಕ್ತ ಕರ್ನಾಟಕ, ಸೈಬರ್ ಅಪರಾಧದ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ಕರ್ನಾಟಕ ಪೊಲೀಸ್ ಇಲಾಖೆ ಹಾಗೂ ಎಸ್‍ಬಿಐ ವತಿಯಿಂದ ಆಯೋಜಿಸಿದ್ದ ‘ಪೊಲೀಸ್ ರನ್' 3ನೇ ಆವೃತ್ತಿಯ ಮ್ಯಾರಥಾನ್‍ಗೆ ಗೃಹ ಸಚಿವ ಡಾ.ಜಿ. ಪರಮೇಶ್ವರ್ ಅವರು ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದ್ದಾರೆ. ರವಿವಾರ ಬೆಳಗ್ಗೆ ವಿಧಾನಸೌಧದ ಎದುರು ಮಾದಕ ಮುಕ್ತ ಕರ್ನಾಟಕ ಮತ್ತು ಸೈಬರ್ ಅಪರಾಧಗಳ ತಡೆಗಟ್ಟುವಿಕೆ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಧ್ಯೇಯವಾಕ್ಯದಡಿ ಮ್ಯಾರಥಾನ್ ಆಯೋಜಿಸಲಾಗಿತ್ತು. ಮ್ಯಾರಥಾನ್‍ನಲ್ಲಿ 10 ಕಿ.ಮೀ ಹಾಗೂ 5 ಕಿ.ಮೀ ಓಟದ ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾದವರಿಗೆ ಬಹುಮಾನ ವಿತರಿಸಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ರಾಜ್ಯ ಪೊಲೀಸ್ ಮಹಾನಿರ್ದೇಶಕ ಡಾ. ಎಂ.ಎ.ಸಲೀಂ, ಗ್ರೇಟರ್ ಬೆಂಗಳೂರು ಪ್ರಾಧಿಕಾರದ(ಜಿಬಿಎ) ಆಯುಕ್ತ ಮಹೇಶ್ವರ ರಾವ್, ಬೆಂಗಳೂರು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್, ಎಸ್‍ಬಿಐ ಬೆಂಗಳೂರು ವಲಯ ವ್ಯವಸ್ಥಾಪಕಿ ಜೂಹಿ ಸ್ಮಿತಾ ಸಿನ್ಹಾ ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು.

ವಾರ್ತಾ ಭಾರತಿ 1 Mar 2026 8:08 pm

ಒಂದೆರಡು ದಿನದಲ್ಲಿ ಸರ್ವೋಚ್ಚ ನಾಯಕನ ಆಯ್ಕೆ: ಇರಾನ್ ವಿದೇಶಾಂಗ ಸಚಿವ ಅರಘ್ಚಿ ಹೇಳಿಕೆ

ಟೆಹ್ರಾನ್: ಇರಾನ್‌ ನಲ್ಲಿ ಸರ್ವೋಚ್ಚ ನಾಯಕನ ಆಯ್ಕೆ ಪ್ರಕ್ರಿಯೆ ಇನ್ನೂ ಒಂದು ಅಥವಾ ಎರಡು ದಿನಗಳಲ್ಲಿ ಮಹತ್ವದ ಹಂತ ತಲುಪುವ ಸಾಧ್ಯತೆ ಇದೆ ಎಂದು ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಘ್ಚಿ ತಿಳಿಸಿದ್ದಾರೆ ಎಂದು aljazeera.com ವರದಿ ಮಾಡಿದೆ. ಟೆಹ್ರಾನ್‌ ನಲ್ಲಿ ಮಾತನಾಡಿದ ಅವರು, ದೇಶದ ಎಲ್ಲಾ ಸಂಸ್ಥೆಗಳು ಪ್ರಸ್ತುತ ಸಕ್ರಿಯವಾಗಿದ್ದು, ಆಡಳಿತದಲ್ಲಿ ಯಾವುದೇ ಸ್ಥಗಿತ ಅಥವಾ ಗೊಂದಲ ಇಲ್ಲ ಎಂದು ಸ್ಪಷ್ಟಪಡಿಸಿದರು. ಇರಾನ್ ಸ್ಪಷ್ಟವಾದ ಸಾಂವಿಧಾನಿಕ ವ್ಯವಸ್ಥೆ ಹಾಗೂ ನಿಗದಿತ ಕ್ರಮಗಳನ್ನು ಹೊಂದಿರುವುದರಿಂದ ನಾಯಕತ್ವ ಬದಲಾವಣೆಯ ಪ್ರಕ್ರಿಯೆ ಸುಗಮವಾಗಿ ನಡೆಯಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು. “ಒಂದು ಅಥವಾ ಎರಡು ದಿನಗಳೊಳಗೆ ಸರ್ವೋಚ್ಚ ನಾಯಕನ ಆಯ್ಕೆ ಕುರಿತ ಬೆಳವಣಿಗೆಗಳನ್ನು ನೀವು ನೋಡಬಹುದು,” ಎಂದು ಅರಘ್ಚಿ ಹೇಳಿದರು. ಸರ್ವೋಚ್ಚ ನಾಯಕನ ಸ್ಥಾನ ಇರಾನ್ ಆಡಳಿತ ವ್ಯವಸ್ಥೆಯಲ್ಲಿ ಅತ್ಯಂತ ಪ್ರಭಾವಶಾಲಿ ಸ್ಥಾನವೆಂದು ಪರಿಗಣಿಸಲಾಗುತ್ತದೆ. ರಾಜಕೀಯ, ಧಾರ್ಮಿಕ ಮತ್ತು ರಕ್ಷಣಾ ಕ್ಷೇತ್ರಗಳ ಪ್ರಮುಖ ನೀತಿಗಳ ಮೇಲೆ ಈ ಹುದ್ದೆ ನಿರ್ಣಾಯಕ ಪ್ರಭಾವ ಬೀರುತ್ತದೆ.

ವಾರ್ತಾ ಭಾರತಿ 1 Mar 2026 8:00 pm

ದೇವರಾಯನದುರ್ಗ ಜಾತ್ರೆ: ಮಾ.3ರ ಮಧ್ಯಾಹ್ನವೇ ಅದ್ಧೂರಿ ರಥೋತ್ಸವ, ಗ್ರಹಣ ಪ್ರಭಾವದಿಂದ ತೇರು ಸಾಗದೆಂಬ ಚರ್ಚೆ

ತುಮಕೂರು: ತಾಲೂಕಿನ ಸುಪ್ರಸಿದ್ಧ ಯಾತ್ರೆ ಸ್ಥಳ ದೇವರಾಯನದುರ್ಗದಲ್ಲಿ ಜಾತ್ರಾ ಮಹೋತ್ಸವದ ಸಂಭ್ರಮ, ಸಡಗರ ಮನೆ ಮಾಡಿದೆ. ಈಗಾಗಲೇ ಜಾತ್ರೆಯ ಆಚರಣೆಗಳು ಶುರುವಾಗಿವೆ. ಶ್ರೀ ಯೋಗ ಮತ್ತು ಭೋಗ ಲಕ್ಷ್ಮೀ ನರಸಿಂಹ ಸ್ವಾಮಿ ದೇವಾಲಯಗಳಲ್ಲಿ ದೇವಸ್ಥಾನ ದೀಪಾಲಂಕಾರಗಳಿಂದ ಕಂಗೊಳಿಸುತ್ತಿದೆ. ಧ್ವಜಾರೋಹಣ ನೆರವೇರಿಸುವ ಮೂಲಕ ದೇವಸ್ಥಾನ ಸಮಿತಿ ಹಾಗೂ ಊರ ಭಕ್ತರು ಜಾತ್ರೆಯ ಆರಂಭಕ್ಕೆ ಸಾಕ್ಷಿಯಾದರು. ಈ ಬಾರಿ ಚಂದ್ರಗ್ರಹಣ

ಒನ್ ಇ೦ಡಿಯ 1 Mar 2026 7:55 pm

Ayatollah Ali Khamenei | ಜಾಗತಿಕ ಪ್ರತಿರೋಧ ರಾಜಕೀಯವನ್ನು ರೂಪಿಸಿದ ಇರಾನಿನ ಸರ್ವೋಚ್ಚ ನಾಯಕ

ಟೆಹ್ರಾನ್: ಅಮೆರಿಕ–ಇಸ್ರೇಲ್ ಜಂಟಿ ವಾಯುದಾಳಿಯಲ್ಲಿ ಇರಾನಿನ ಸರ್ವೋಚ್ಚ ನಾಯಕ ಆಯತುಲ್ಲಾ ಅಲಿ ಖಾಮಿನೈ (86) ಮೃತಪಟ್ಟಿದ್ದಾರೆ ಎಂದು ಇರಾನಿನ ರಾಜ್ಯ ಮಾಧ್ಯಮ ರವಿವಾರ ಮುಂಜಾನೆ ಅಧಿಕೃತವಾಗಿ ಪ್ರಕಟಿಸಿದೆ. ಫೆಬ್ರವರಿ 28ರಂದು ಟೆಹ್ರಾನ್ನಲ್ಲಿರುವ ಅವರ ಅಧಿಕೃತ ನಿವಾಸ ‘ಕಾಂಪೌಂಡ್ ’ ಮೇಲೆ ನಡೆದ ದಾಳಿಯಲ್ಲಿ ಅವರು ಹುತಾತ್ಮರಾಗಿದ್ದಾರೆ ಎಂದು ಇರಾನಿನ ಅರೆಸರಕಾರಿ ಸುದ್ದಿ ಸಂಸ್ಥೆ ತಸ್ನಿಮ್ ವರದಿ ಮಾಡಿದೆ. ದಾಳಿಯಲ್ಲಿ ಖಾಮಿನೈ ಅವರ ಮಗಳು, ಅಳಿಯ ಮತ್ತು ಮೊಮ್ಮಗ ಕೂಡ ಕೊಲ್ಲಲ್ಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಅಮೇರಿಕ ಹಾಗೂ ಇಸ್ರೇಲ್ ನಂತಹ ಬಲಾಢ್ಯರ ವಿರುದ್ಧ ಸೆಟೆದು ನಿಂತು ನೀವು ಏನು ಬೇಕಾದರೂ ಮಾಡಿಕೊಳ್ಳಿ. ನಾವು ನಿಮ್ಮ ಮುಂದೆ ಶರಣಾಗುವುದಿಲ್ಲ ಎಂದು ಘಂಟಾ ಘೋಷವಾಗಿ ಸಾರಿದ ಖಾಮಿನೈ ಇಡೀ ಜಗತ್ತಿನಲ್ಲಿ ಪ್ರತಿರೋಧ ರಾಜಕೀಯದ ಸಂಕೇತವಾಗಿ ಕಂಡಿದ್ದರು. ರಾಜಿಯಿಲ್ಲದ ನಾಯಕನಾಗಿ, ದಿಟ್ಟ ನೇತಾರನಾಗಿ, ಜೀವ ಹೋದರೂ ಸ್ವಾಯತ್ತತೆ ಬಿಟ್ಟು ಕೊಡದೆ ಇರುವ ನಿಲುವಿಗಾಗಿ ಜಗತ್ತಿನಾದ್ಯಂತ ಅಭಿಮಾನಿಗಳನ್ನು ಪಡೆದವರು. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶನಿವಾರ ರಾತ್ರಿ ಇರಾನಿನಲ್ಲಿ ಪ್ರಮುಖ ಯುದ್ಧ ಕಾರ್ಯಾಚರಣೆ ಆರಂಭಿಸಿದ್ದೇವೆ ಎಂದು ಘೋಷಿಸಿದ್ದರು. ಖಾಮಿನೈ ಮತ್ತು ಇತರ ಇರಾನಿನ ಅಧಿಕಾರಿಗಳು ಅಮೆರಿಕದ ಗುಪ್ತಚರ ಮತ್ತು ಮುಂದುವರಿದ ಟ್ರ್ಯಾಕಿಂಗ್ ವ್ಯವಸ್ಥೆಗಳಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಅವರು ಎಚ್ಚರಿಸಿದ್ದರು. 1939ರಲ್ಲಿ ಈಶಾನ್ಯ ಇರಾನಿನ ಶಿಯಾ ನಗರ ಮಶ್ಹಾದ್ನಲ್ಲಿ ಜನಿಸಿದ ಖಾಮಿನೈ, ಅಜೆರ್ಬೈಝಾನಿ ಮೂಲದ ಧಾರ್ಮಿಕ ಕುಟುಂಬಕ್ಕೆ ಸೇರಿದವರು. ಅವರ ತಂದೆ ಮಸೀದಿಯನ್ನು ಮುನ್ನಡೆಸುತ್ತಿದ್ದ ಪಂಡಿತರು. ತಾಯಿ ಖದೀಜಾ ಮಿರ್ದಮಾದಿ ಕುರಾನ್ ಮತ್ತು ಸಾಹಿತ್ಯದಲ್ಲಿ ಆಸಕ್ತಿ ಹೊಂದಿದ್ದರು. ನಾಲ್ಕನೇ ವಯಸ್ಸಿನಲ್ಲಿ ಕುರಾನ್ ಅಧ್ಯಯನ ಆರಂಭಿಸಿದ ಖಾಮಿನೈ ಅವರು, ಪ್ರೌಢಶಾಲೆ ಪೂರ್ಣಗೊಳಿಸದೆ ಧಾರ್ಮಿಕ ಶಿಕ್ಷಣ ಅಧ್ಯಯನ ಪ್ರಾರಂಭಿಸಿದರು. ಮಶ್ಹಾದ್ನ ಪ್ರಾಥಮಿಕ ಇಸ್ಲಾಮಿಕ್ ಶಾಲೆಯಲ್ಲಿ ಶಿಕ್ಷಣ ಪಡೆದ ಬಳಿಕ ನಜಾಫ್ ಮತ್ತು ಕೋಮ್ ನ ಶಿಯಾ ವಿದ್ಯಾಕೇಂದ್ರಗಳಲ್ಲಿ ಉನ್ನತ ವಿದ್ಯಾಭ್ಯಾಸ ಮಾಡಿದರು. ►1953ರ ಇರಾನ್ ದಂಗೆ 1953ರಲ್ಲಿ ಇರಾನಿನಲ್ಲಿ ನಡೆದ ದಂಗೆ ದೇಶದ ಆಧುನಿಕ ಇತಿಹಾಸದ ನಿರ್ಣಾಯಕ ತಿರುವಾಯಿತು. ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾದ ಪ್ರಧಾನಮಂತ್ರಿ ಮೊಹಮ್ಮದ್ ಮೊಸದ್ದೇಗ್ ಅವರು ತೈಲ ಉದ್ಯಮವನ್ನು ರಾಷ್ಟ್ರೀಕರಿಸಿದ ಹಿನ್ನೆಲೆಯಲ್ಲಿ ಬ್ರಿಟನ್ ಮತ್ತು ಅಮೆರಿಕದ ಅಸಮಾಧಾನ ಹೆಚ್ಚಾಯಿತು. ಬ್ರಿಟಿಷ್ ಗುಪ್ತಚರ ಸಂಸ್ಥೆ MI6 ಮತ್ತು ಅಮೆರಿಕನ್ ಗುಪ್ತಚರ ಸಂಸ್ಥೆ CIA ಸಂಯುಕ್ತವಾಗಿ ರೂಪಿಸಿದ “ಆಪರೇಶನ್ ಅಜಾಕ್ಸ್” ಮೂಲಕ ಮೊಸದ್ದೇಗ್ ಸರ್ಕಾರವನ್ನು ಪತನಗೊಳಿಸಲಾಯಿತು ಎಂಬುದು ಬಳಿಕ ದಾಖಲೆಗಳಿಂದ ಬಹಿರಂಗವಾಯಿತು. ದಂಗೆಯ ನಂತರ ಷಾ ಮೊಹಮ್ಮದ್ ರೆಜಾ ಪಹ್ಲವಿ ಸಂಪೂರ್ಣ ಅಧಿಕಾರವನ್ನು ಮರಳಿ ಪಡೆದು ಕೇಂದ್ರೀಕೃತ ಆಡಳಿತವನ್ನು ಬಲಪಡಿಸಿದರು. ಈ ಘಟನೆ ಇರಾನಿನ ಜನಮನದಲ್ಲಿ ಪಶ್ಚಿಮ ರಾಷ್ಟ್ರಗಳ ಮೇಲಿನ ಗಾಢ ಅನುಮಾನಕ್ಕೆ ಕಾರಣವಾಗಿ, ಮುಂದಿನ ದಶಕಗಳಲ್ಲಿ ರಾಜಪ್ರಭುತ್ವ ವಿರೋಧಿ ಚಳುವಳಿ ಮತ್ತು 1979ರ ಇಸ್ಲಾಮಿಕ್ ಕ್ರಾಂತಿಗೆ ಭೂಮಿಕೆಯಾಗಿತು. ಈ ಬೆಳವಣಿಗೆಗಳ ನಂತರ ಖಾಮಿನೈ ರಾಜಪ್ರಭುತ್ವ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿದರು. ಷಾ ಅವರ ರಹಸ್ಯ ಪೊಲೀಸರು (SAVAK) ಅವರನ್ನು ಪದೇಪದೇ ಬಂಧಿಸಿ ಆಗ್ನೇಯ ಇರಾನಿನ ಇರಾನ್ಶಹರ್ ನಗರಕ್ಕೆ ಗಡಿಪಾರು ಮಾಡಿದರು. 1978ರ ಪ್ರತಿಭಟನೆಗಳಲ್ಲಿ ಪಾಲ್ಗೊಳ್ಳಲು ಅವರು ಮರಳಿದರು. ►1979ರ ಇಸ್ಲಾಮಿಕ್ ಕ್ರಾಂತಿಯಲ್ಲಿ ಪ್ರಮುಖ ಪಾತ್ರ 1978–79ರ ಇಸ್ಲಾಮಿಕ್ ಕ್ರಾಂತಿಯ ಬಳಿಕ ರಾಜಪ್ರಭುತ್ವ ಪತನಗೊಂಡಿತು. ಹೊಸ ಇಸ್ಲಾಮಿಕ್ ಗಣರಾಜ್ಯ ಸ್ಥಾಪನೆಯ ಸಂದರ್ಭದಲ್ಲಿ ಖಾಮಿನೈ ಪ್ರಮುಖ ನಾಯಕರಾಗಿ ಹೊರಹೊಮ್ಮಿದರು. ಅವರು ರಕ್ಷಣಾ ಸಚಿವರಾಗಿ ಮತ್ತು ನಂತರ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಮೇಲ್ವಿಚಾರಕರಾಗಿ ಸೇವೆ ಸಲ್ಲಿಸಿದರು. ಟೆಹ್ರಾನ್ ನ ಶುಕ್ರವಾರದ ಪ್ರಾರ್ಥನಾ ನಾಯಕರಾಗಿ ಅವರ ಪ್ರಭಾವ ಹೆಚ್ಚಾಯಿತು. 1981ರಲ್ಲಿ ಮೊಜಾಹೆದಿನ್-ಇ ಖಲ್ಕ್ (MEK) ಸಂಘಟನೆ ನಡೆಸಿದ ಹತ್ಯಾ ಯತ್ನದಿಂದ ಸ್ವಲ್ಪದರಲ್ಲೇ ಪಾರಾದ ಅವರು ತಮ್ಮ ಬಲಗೈ ಕಳೆದುಕೊಂಡರು. ಅದೇ ವರ್ಷ ಅಧ್ಯಕ್ಷರಾಗಿ ಆಯ್ಕೆಯಾಗಿ, ಇರಾನಿನ ಮೊದಲ ಧಾರ್ಮಿಕ ಗುರು ಅಧ್ಯಕ್ಷರಾದರು. ►ಇರಾಕ್ ವಿರುದ್ಧ ಎಂಟು ವರ್ಷದ ಯುದ್ಧ 1981ರಿಂದ 1989ರವರೆಗೆ ಇರಾಕ್ ವಿರುದ್ಧ ನಡೆದ ರಕ್ತಸಿಕ್ತ ಯುದ್ಧದಲ್ಲಿ ಅವರು ದೇಶದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು. ಸಂಘರ್ಷದಲ್ಲಿ ಹತ್ತು ಲಕ್ಷಕ್ಕೂ ಹೆಚ್ಚು ಜನರು ಸಾವನ್ನಪ್ಪಿದರು ಎಂದು ಅಂದಾಜಿಸಲಾಗಿದೆ. ಇರಾಕ್ ರಾಸಾಯನಿಕ ಶಸ್ತ್ರಾಸ್ತ್ರ ಬಳಕೆ ಮಾಡಿದ ಘಟನೆಗಳು ಇರಾನಿನ ಜನಮನದಲ್ಲಿ ಪಶ್ಚಿಮದ ವಿರುದ್ಧ ಗಾಢ ಅಪನಂಬಿಕೆ ಮೂಡಿಸಿತು ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಡುತ್ತಾರೆ. ►1989ರಲ್ಲಿ ಸರ್ವೋಚ್ಚ ನಾಯಕತ್ವ 1989ರಲ್ಲಿ ಆಯತುಲ್ಲಾ ರುಹೊಲ್ಲಾ ಖೋಮೇನಿ ನಿಧನದ ಬಳಿಕ ಸಂವಿಧಾನ ಪರಿಷ್ಕರಣೆ ಮೂಲಕ ಖಾಮಿನೈಯವರನ್ನು ಸರ್ವೋಚ್ಚ ನಾಯಕನಾಗಿ ನೇಮಿಸಲಾಯಿತು. ದೇಶದ ಅತ್ಯುನ್ನತ ಹುದ್ದೆಗೆ ಅಗತ್ಯವಾದ ಅರ್ಹತೆಗಳನ್ನು ಸಡಿಲಗೊಳಿಸಲಾಯಿತು. “ನಾನು ಈ ಹುದ್ದೆಗೆ ಅರ್ಹನಲ್ಲ” ಎಂದು ಅವರು ಆ ವೇಳೆ ಹೇಳಿದ್ದರೂ, ನಂತರ ಸಂಪೂರ್ಣ ಅಧಿಕಾರವನ್ನು ಕೇಂದ್ರೀಕರಿಸಿದರು. ಇರಾನ್ ಸದಾ ಮುತ್ತಿಗೆಗೆ ಒಳಗಾಗಿರುವ ರಾಷ್ಟ್ರ ಎಂಬ ನಿಲುವಿನಿಂದ “ಮುಂದಿನ ರಕ್ಷಣಾ” ತಂತ್ರವನ್ನು ಸ್ಥಾಪಿಸಿದರು. ►IRGC ಬಲವರ್ಧನೆ, ‘ಪ್ರತಿರೋಧದ ಆರ್ಥಿಕತೆ’ ಖಾಮಿನೈ ಆಡಳಿತದಲ್ಲಿ IRGC ಅರೆಸೈನಿಕ ಪಡೆಯಿಂದ ಪ್ರಬಲ ಭದ್ರತಾ, ರಾಜಕೀಯ ಮತ್ತು ಆರ್ಥಿಕ ಶಕ್ತಿಯಾಯಿತು. ಬಸಿಜ್ ಸ್ವಯಂಸೇವಕ ಪಡೆ ಬಲಪಡಿಸಲಾಯಿತು. ಪಾಶ್ಚಿಮಾತ್ಯ ನಿರ್ಬಂಧಗಳ ನಡುವೆಯೂ ಸ್ವಾವಲಂಬನೆಗೆ ಒತ್ತು ನೀಡುವ ‘ಪ್ರತಿರೋಧ ಆರ್ಥಿಕತೆ’ಯನ್ನು ಉತ್ತೇಜಿಸಿದರು. ಪಶ್ಚಿಮದೊಂದಿಗೆ ಹೊಂದಾಣಿಕೆಗೆ ಅವರು ಗಾಢ ಸಂದೇಹ ವ್ಯಕ್ತಪಡಿಸುತ್ತಿದ್ದರು. ►1997 ಸುಧಾರಣಾ ಅಲೆ, 2009 ಗ್ರೀನ್ ಮೂವ್ಮೆಂಟ್ 1997ರಲ್ಲಿ ಸುಧಾರಣಾವಾದಿ ಮೊಹಮ್ಮದ್ ಖಾತಮಿ ಗೆಲುವು ಸಾಧಿಸಿದರೂ, ಪಶ್ಚಿಮದೊಂದಿಗೆ ಹೊಂದಾಣಿಕೆ ವಿಚಾರದಲ್ಲಿ ಖಾಮಿನೈಯ ನಿಲುವು ಬದಲಾಗಲಿಲ್ಲ. 2009ರಲ್ಲಿ ಮಹಮೂದ್ ಅಹ್ಮದಿನೆಜಾದ್ ವಿವಾದಿತ ಗೆಲುವಿನ ಬಳಿಕ ‘ಗ್ರೀನ್ ಮೂವ್ಮೆಂಟ್’ ಹೆಸರಿನಲ್ಲಿ ರಾಷ್ಟ್ರವ್ಯಾಪಿ ಪ್ರತಿಭಟನೆಗಳು ನಡೆದವು. ಸಾವಿರಾರು ಬಂಧನಗಳು, ಡಝನ್ಗಟ್ಟಲೆ ಸಾವಿನ ವರದಿಗಳು ಹೊರಬಂದವು. ►2015 ಪರಮಾಣು ಒಪ್ಪಂದ ಮತ್ತು ನಂತರದ ನಿರ್ಬಂಧಗಳು 2015ರಲ್ಲಿ ಜಂಟಿ ಸಮಗ್ರ ಕ್ರಿಯಾ ಯೋಜನೆ (JCPOA) ಮೂಲಕ ಇರಾನ್ ಮತ್ತು ವಿಶ್ವ ಶಕ್ತಿಗಳ ನಡುವೆ ಪರಮಾಣು ಒಪ್ಪಂದಕ್ಕೆ ಖಾಮಿನೈ ಹಸಿರು ನಿಶಾನೆ ತೋರಿದರು. ನಿರ್ಬಂಧ ಪರಿಹಾರಕ್ಕೆ ಬದಲಾಗಿ ಪರಮಾಣು ಚಟುವಟಿಕೆ ಮಿತಿಗೊಳಿಸಲಾಯಿತು. ಆದರೆ 2018ರಲ್ಲಿ ಅಮೆರಿಕ ಒಪ್ಪಂದದಿಂದ ಹಿಂದೆ ಸರಿಯುತ್ತಿದ್ದಂತೆ, ಇರಾನ್ ಯುರೇನಿಯಂ ಪುಷ್ಟೀಕರಣವನ್ನು 60% ಮಟ್ಟಕ್ಕೆ ಹೆಚ್ಚಿಸಿತು. 2003ರಲ್ಲಿ ಇದೇ ಸರ್ಕಾರ ಪರಮಾಣು ಶಸ್ತ್ರಾಸ್ತ್ರ ನಿಷೇಧಿಸುವ ಫತ್ವಾ ನೀಡಿತ್ತು. ►2019, 2022 ಮತ್ತು 2026 ಅಶಾಂತಿ 2019ರಲ್ಲಿ ಪೆಟ್ರೋಲ್ ಬೆಲೆ ಏರಿಕೆಯ ವಿರುದ್ಧ ಪ್ರತಿಭಟನೆಗಳು ಭುಗಿಲೆದ್ದವು. 2022ರಲ್ಲಿ ಮಹ್ಸಾ ಅಮಿನಿ ಸಾವಿನ ಬಳಿಕ ಮಹಿಳಾ ಹಕ್ಕುಗಳ ಚಳುವಳಿ ರಾಷ್ಟ್ರವ್ಯಾಪಿಯಾಗಿ ಹರಡಿತು. ಅಮ್ನೆಸ್ಟಿ ವರದಿಗಳ ಪ್ರಕಾರ ನೂರಾರು ಮಂದಿ ಸಾವನ್ನಪ್ಪಿದರು. ಜನವರಿ 2026ರಲ್ಲಿ ಕರೆನ್ಸಿ ಕುಸಿತ ಮತ್ತು ನಿರ್ಬಂಧ ಒತ್ತಡದಿಂದ ಪ್ರತಿಭಟನೆಗಳು ರಾಷ್ಟ್ರವ್ಯಾಪಿ ಕ್ರಾಂತಿಯಾಗಿ ಮಾರ್ಪಟ್ಟವು. ಸಾವಿರಾರು ಪ್ರತಿಭಟನಾಕಾರರ ಸಾವುಗಳ ಆರೋಪ ಕೇಳಿಬಂದವು. ►ಪ್ರತಿರೋಧದ ತಂತ್ರ ಖಾಮಿನೈ ಲೆಬನಾನ್ ನ ಹಿಜ್ಬೊಲ್ಲಾ, ಸಿರಿಯಾದ ಬಶರ್ ಅಲ್-ಅಸ್ಸದ್, ಫೆಲೆಸ್ತೀನಿನ ಹಮಾಸ್, ಯೆಮೆನ್ ನ ಹೌತಿಗಳು ಹಾಗೂ ಇರಾಕ್ ನ ಶಿಯಾ ಗುಂಪುಗಳೊಂದಿಗೆ ಮೈತ್ರಿ ಬಲಪಡಿಸಿದರು. IRGC ಕುದ್ಸ್ ಪಡೆಗಳ ಕಮಾಂಡರ್ ಖಾಸೆಮ್ ಸೊಲೈಮಾನಿ ಈ ತಂತ್ರದ ಹಿಂದಿನ ವ್ಯಕ್ತಿಯಾಗಿದ್ದರು. 2020ರಲ್ಲಿ ಅಮೆರಿಕ ದಾಳಿಯಲ್ಲಿ ಅವರು ಸಾವನ್ನಪ್ಪಿದರು. 2025 ಜೂನ್ 13ರಂದು ಇಸ್ರೇಲ್ ಇರಾನಿನ ಪರಮಾಣು ಮತ್ತು ಸೇನಾ ನೆಲಗಳ ಮೇಲೆ ದಾಳಿ ನಡೆಸಿತು. ಸುಮಾರು ಎರಡು ವಾರಗಳ ಕಾಲ ಯುದ್ಧ ನಡೆಯಿತು. ಅಮೆರಿಕ ಮೂರು ಪ್ರಮುಖ ಪರಮಾಣು ಸೌಲಭ್ಯಗಳ ಮೇಲೆ ಬಂಕರ್ ಬಸ್ಟರ್ ದಾಳಿ ನಡೆಸಿದ ಬಳಿಕ ಉದ್ವಿಗ್ನತೆ ತಾತ್ಕಾಲಿಕವಾಗಿ ಕಡಿಮೆಯಾಯಿತು. ಸೌಜನ್ಯ: Aljazeera.com

ವಾರ್ತಾ ಭಾರತಿ 1 Mar 2026 7:53 pm

T20 World Cup- ಪಾಕ್ ಸೋಲಿಗೆ ಮೊಹ್ಸಿನ್ ನಖ್ವಿ ಗುರಿಯಾಗಿಸಿ ಶೊಯೇಬ್ ಅಖ್ತರ್ ಟೀಕೆ; ಈ ಬಾರಿ ನಾಜೂಕಾಗಿ ತರಾಟೆ!

Shoib Akhtar On Mohsin Naqvi- ಕೆಲ ದಿನಗಳ ಹಿಂದಷ್ಟೇ ಪಾಕಿಸ್ತಾನ ತಂಡದ ಮಾಜಿ ವೇಗಿ ಶೊಯೇಬ್ ಅಖ್ತರ್ ಅವರು ಪಿಸಿಬಿ ಅಧ್ಯಕ್ಷ ಮೊಹ್ಸಿನ್ ನಖ್ವಿ ಅವರ ಬಗ್ಗೆ ವಿಪರೀತ ಟೀಕೆ ಮಾಡಿ ಬಳಿಕ ಯೂ ಟರ್ನ್ ಹೊಡೆದಿದ್ದರು. ಇದೀಗ ಮತ್ತೊಮ್ಮ ವಾಗ್ದಾಳಿ ನಡೆಸಿದ್ದಾರೆ. ಈ ಬಾರಿ ಮಾತ್ರ ಮೊದಲು ನಖ್ವಿ ಅವರೊಬ್ಬ ಉತ್ತಮ ಆಡಳಿತಗಾರ, ಪ್ರಭಾವಿ ಎಂದೆಲ್ಲಾ ಹೊಗಳಿ, ಬಳಿಕ ನಾಜೂಕಾಗಿ ಟೀಕಿಸಿದ್ದಾರೆ. ಪಾಕಿಸ್ತಾನ ತಂಡದ ಆಯ್ಕೆ ಪ್ರಕ್ರಿಯೆಯೇ ಸರಿಯಿಲ್ಲ ಎಂದು ಹೀಗಳೆದಿದ್ದಾರೆ.

ವಿಜಯ ಕರ್ನಾಟಕ 1 Mar 2026 7:51 pm

ಮಂಗಳೂರು: ಪೊಲೀಸ್ ಇಲಾಖೆ ಮತ್ತು ಎಸ್‌ಬಿಐನಿಂದ ಓಟ

ಮಂಗಳೂರು, ಮಾ.1: ನಗರ ಪೊಲೀಸ್ ಆಯುಕ್ತಾಲಯ ಮತ್ತು ದ.ಕ.ಜಿಲ್ಲಾ ಪೊಲೀಸ್ ಇಲಾಖೆಯ ವತಿಯಿಂದ ಕರ್ನಾಟಕ ರಾಜ್ಯ ಪೊಲೀಸ್ ಹಾಗೂ ಸ್ಟೇಟ್‌ಬ್ಯಾಂಕ್ ಆಫ್ ಇಂಡಿಯಾದ ಸಹಯೋಗದಲ್ಲಿ ರವಿವಾರ ಱನಮ್ಮ ಪೊಲೀಸ್-ನಮ್ಮ ಹೆಮ್ಮೆ-2026 ಫಿಟ್ನೆಸ್ ಫಾರ್ ಆಲ್, ಡ್ರಗ್ ಫ್ರೀ ಕರ್ನಾಟಕ, ಸೈಬರ್ ಕ್ರೈಂ ಕುರಿತು ಅರಿವು ಮೂಡಿಸುವ ಧ್ಯೇಯದೊಂದಿಗೆ ಓಟ ಆಯೋಜಿಸಲಾಯಿತು. ಮಂಗಳಾ ಕ್ರೀಡಾಂಗಣದಲ್ಲಿ ಓಟಕ್ಕೆ ಚಾಲನೆ ನೀಡಲಾಯಿತು. 5 ಕಿ.ಮೀ, 10 ಕಿ.ಮೀ ಓಟದಲ್ಲಿ ಸುಮಾರು 2,800ಕ್ಕೂ ಅಧಿಕ ಮಂದಿ ಭಾಗವಹಿಸಿದ್ದರು. ಈ ಸಂದರ್ಭ ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರಡ್ಡಿ, ದ.ಕ.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅರುಣ್ ಕೆ., ಡಿಸಿಪಿಗಳಾದ ಮಿಥುನ್ ಎಚ್.ಎನ್. ರವಿಶಂಕರ್ ಕೆ., ಎಎಸ್ಪಿಅನಿಲ್ ಕುಮಾರ್ ಭೂಮರೆಡ್ಡಿ ಮತ್ತಿತರರು ಪಾಲ್ಗೊಂಡಿದ್ದರು.

ವಾರ್ತಾ ಭಾರತಿ 1 Mar 2026 7:47 pm

ಇರಾನಿನ ಪ್ರತೀಕಾರ ದಾಳಿ | ಕುವೈತ್‌ ನಲ್ಲಿ ಓರ್ವ, UAEಯಲ್ಲಿ ಮೂವರು ಮೃತ್ಯು, 58 ಮಂದಿಗೆ ಗಾಯ

165 ಬ್ಯಾಲಿಸ್ಟಿಕ್ ಕ್ಷಿಪಣಿಗಳ ಪತ್ತೆ; 152 ನಾಶ, 541 ಡ್ರೋನ್‌ ಗಳಲ್ಲಿ 506ಕ್ಕೆ ತಡೆ

ವಾರ್ತಾ ಭಾರತಿ 1 Mar 2026 7:46 pm

ರೋಟರಿ ಜಿಲ್ಲಾಮಟ್ಟದ ರಸಪ್ರಶ್ನಾ ಸ್ಪರ್ಧೆ ರೋಟರಿ ಮೈಸೂರು, ವಿಜಯನಗರ ಸಂಸ್ಥೆಗೆ ಪ್ರಶಸ್ತಿ

ಮಂಗಳೂರು, ಮಾ.1: ರೋಟರಿ ಮಂಗಳೂರು ಸೆಂಟ್ರಲ್ ಸಂಸ್ಥೆಯ ಆಶ್ರಯದಲ್ಲಿ ರೋಟರಿ ಜ್ಞಾನ, ಮಾಹಿತಿ ಮತ್ತು ಜಾಗೃತಿ ಅಭಿಯಾನದ ಅಂಗವಾಗಿ ರೋಟರಿ ಜಿಲ್ಲಾ ಮಟ್ಟದ 20ನೇ ವಾರ್ಷಿಕ ‘‘ಅಂತರ ರೋಟರಿ ಕ್ಲಬ್ ರಸಪ್ರಶ್ನಾ ಸ್ಪರ್ಧಾ ಕೂಟ’ ಶುಕ್ರವಾರ ನಗರದ ಬಿಜೈ ಓಷನ್ ಪಾರ್ಲ್ ಹೊಟೇಲ್ ಸಭಾಂಗಣದಲ್ಲಿ ಜರಗಿತು. ರೋಟರಿ ಕ್ಲಬ್, ಮೈಸೂರು ವಿಜಯನಗರ ಸಂಸ್ಥೆಯನ್ನು ಪ್ರತಿನಿಧಿಸಿದ ಎಚ್, ಎಮ್. ಹರೀಶ್ ಪ್ರಥಮ ಸ್ಥಾನ ಪಡೆದು ರೋಟರಿ ಪ್ರತಿಷ್ಠಿತ ಪ್ರಶಸ್ತಿ ಬಾಚಿಕೊಂಡರು. ರೋಟರಿ ಕ್ಲಬ್ ಮಂಗಳೂರು ಸಿಟಿ ಸಂಸ್ಥೆಯನ್ನು ಪ್ರತಿನಿಧಿಸಿದ ಡಾ. ರಂಜನ್ ಮತ್ತು ಸುಮಿತ್ ರಾವ್ ತಂಡ ದ್ವಿತೀಯ ಸ್ಥಾನ ಪಡೆದರು. ರೋಟರಿ ಮಂಗಳೂರು ಕೋಸ್ಟಲ್ ಸಂಸ್ಥೆಯನ್ನು ಪ್ರತಿನಿಧಿಸಿದ ಸುಬೋದ್ ಕುಮಾರ್‌ದಾಸ್ ಮತ್ತು ಕಿರಣ್ ಪ್ರಸಾದ್ ರೈ ತೃತೀಯ ಸ್ಥಾನವನ್ನು ಪಡೆಯಿತು. ಮಾಜಿ ರೋಟರಿ ಜಿಲ್ಲಾ ಗವರ್ನರ್ ಎಚ್. ಆರ್. ಕೇಶವ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ವಲಯ ಸಹಾಯಕ ಗವರ್ನರ್ ರೋ. ಚಿನ್ನಗಿರಿ ಗೌಡರವರು ಗೌರವ ಅತಿಥಿಯಾಗಿ ಪಾಲ್ಗೊಂಡು ಸಂಸ್ಥೆಯ ಸಾಪ್ತಾಹಿಕ ವಾರ್ತಾ ಗೃಹ ಪತ್ರಿಕೆ ‘ಸೆಂಟೋರ್’ ರನ್ನು ಬಿಡುಗಡೆಗೊಳಿಸಿದರು. ಕ್ಲಬ್ ಅಧ್ಯಕ್ಷ ಭಾಸ್ಕರ್ ರೈ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ವಲಯ ಪ್ರತಿನಿಧಿ ರೋ. ರವಿ ಜಲಾನ್, ಸಂಸ್ಥೆಯ ನಿಯೋಜಿತ ಅಧ್ಯಕ್ಷ ರವೀಂದ್ರ ಬಿ.ಎನ್. ಉಪಸ್ಥಿತರಿದ್ದರು. ಮೈಸೂರು, ಕೊಳ್ಳೆಗಾಲ, ಎಲಂದೂರ್, ಮಂಗಳೂರು, ಸುರತ್ಕಲ್, ಪುತ್ತೂರು, ದೇರಳಕಟ್ಟೆ ಸಿದ್ದಕಟ್ಟೆ ಸೇರಿದಂತೆ ಜಿಲ್ಲೆಯ 14 ರೋಟರಿ ತಂಡಗಳು ನಿರ್ಣಾಯಕ ಸ್ಪರ್ಧೆಯಲ್ಲಿ ಭಾಗವಹಿಸಿತ್ತು. ಡಾ. ದೇವದಾಸ್ ರೈ ರಸಪ್ರಶ್ನೆ ಸ್ಪರ್ಧೆಯನ್ನು ನಡೆಸಿಕೊಟ್ಟರು. ರೋಟರಿ ಕಾರ್ಯದರ್ಶಿ ರೋ. ವಿಕಾಸ್ ಕೋಟ್ಯಾನ್ ಮಾಸಿಕ ವರದಿ ಮಂಡಿಸಿದರು. ಮಾಜಿ ಅಧ್ಯಕ್ಷ ಸಾಯಿಬಾಬಾ ರಾವ್ ವಂದಿಸಿದರು.

ವಾರ್ತಾ ಭಾರತಿ 1 Mar 2026 7:44 pm

ವಿದೇಶದಲ್ಲಿ ಸಿಲುಕಿರುವ ಕನ್ನಡಿಗರ ರಕ್ಷಣೆಗೆ ಕ್ರಮ : ಗೃಹ ಸಚಿವ ಜಿ.ಪರಮೇಶ್ವರ್

ಬೆಂಗಳೂರು, ಮಾ. 1: ‘ಇರಾನ್ ಮತ್ತು ಇಸ್ರೇಲ್ ನಡುವಿನ ಯುದ್ಧದ ಪರಿಸ್ಥಿತಿಯಿಂದ ದುಬೈ ಸೇರಿದಂತೆ ಕೊಲ್ಲಿ ರಾಷ್ಟ್ರಗಳಲ್ಲಿ ವಿದ್ಯಾರ್ಥಿಗಳು ಸಹಿತ 150ಕ್ಕೂ ಹೆಚ್ಚು ಕನ್ನಡಿಗರು, ಕಾಲೇಜು ವಿದ್ಯಾರ್ಥಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆಂಬ ಮಾಹಿತಿ ಸಿಕ್ಕಿದೆ’ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ. ರವಿವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಮುಖ್ಯವಾಗಿ ಚಿಕ್ಕಬಳ್ಳಾಪುರ ಮೂಲದ ವಿದ್ಯಾರ್ಥಿಗಳ ಬಗ್ಗೆ ಅಲ್ಲಿ ಸಿಲುಕಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಅವರೆಲ್ಲರನ್ನೂ ಸುರಕ್ಷಿತವಾಗಿ ರಾಜ್ಯಕ್ಕೆ ಮರಳಿ ಕರೆತರಲು ನಮ್ಮ ಅಧಿಕಾರಿಗಳು ನಿರಂತರ ಪ್ರಯತ್ನ ನಡೆಸುತ್ತಿದ್ದಾರೆ ಎಂದು ಹೇಳಿದರು. ಯುದ್ಧದ ಹಿನ್ನೆಲೆಯಲ್ಲಿ ಸಂಕಷ್ಟದಲ್ಲಿರುವ ಕನ್ನಡಿಗರಿಗೆ ಅಗತ್ಯ ಮೂಲಸೌಲಭ್ಯ ಒದಗಿಸಲು ಮತ್ತು ಅವರ ಕುಟುಂಬದೊಂದಿಗೆ ಸಂಪರ್ಕ ಸಾಧಿಸಲು ರಾಜ್ಯ ಸರಕಾರವು ಕಾರ್ಯಪ್ರವೃತ್ತವಾಗಿದೆ. ನಮಗೆ ಸಾಧ್ಯವಿರುವ ಎಲ್ಲ ಪ್ರಯತ್ನಗಳ ಮೂಲಕ ಸಂಕಷ್ಟದಲ್ಲಿರುವವರನ್ನು ಸುರಕ್ಷಿತವಾಗಿ ಕರೆತರಲಾಗುವುದು ಎಂದು ಅವರು ತಿಳಿಸಿದರು.

ವಾರ್ತಾ ಭಾರತಿ 1 Mar 2026 7:43 pm

ಎನ್‌ಐಟಿಕೆ ಸುರತ್ಕಲ್‌ನಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆ

ಮಂಗಳೂರು: ಎನ್‌ಐಟಿಕೆ ಸುರತ್ಕಲ್‌ನಲ್ಲಿ ರಾಷ್ಟ್ರೀಯ ವಿಜ್ಞಾನ ದಿನವನ್ನು ಶುಕ್ರವಾರ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಉಪನ್ಯಾಸಗಳು, ಪ್ರದರ್ಶನಗಳು ಮತ್ತು ಸಂವಾದಾತ್ಮಕ ಅವಧಿಗಳ ಮೂಲಕ ಯುವ ಮನಸ್ಸುಗಳನ್ನು ಪ್ರೇರೇಪಿಸಿತು. ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ) ಪರಿಸರ ವಿಜ್ಞಾನ ಕೇಂದ್ರದ ಪ್ರಾಧ್ಯಾಪಕಿ ಪ್ರೊ. ಮಾರಿಯಾ ಥಾಕರ್ ಪ್ರಮುಖ ಭಾಷಣಕಾರರಾಗಿ ಮಾತನಾಡಿ ಜಿಪಿಎಸ್ ಕಾಲರ್‌ಗಳು, ರೇಡಿಯೋ ಟ್ರ್ಯಾಕಿಂಗ್, ಉಪಗ್ರಹ ದತ್ತಾಂಶ ಮತ್ತು ತಾಪಮಾನ ಸಂವೇದಕಗಳನ್ನು ಬಳಸಿಕೊಂಡು ಆನೆಗಳು ಮತ್ತು ಇತರ ದೊಡ್ಡ ಪ್ರಾಣಿಗಳ ಚಲನೆಯನ್ನು ವಿಜ್ಞಾನಿಗಳು ಹೇಗೆ ಅಧ್ಯಯನ ಮಾಡುತ್ತಾರೆ ಎಂಬುದನ್ನು ವಿವರಿಸಿದರು. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಾದ್ಯಂತ 21 ಶಾಲೆಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಎನ್‌ಐಟಿಕೆ ನಿರ್ದೇಶಕ ಪ್ರೊ. ಬಿ. ರವಿ ಕಾರ್ಯಕ್ರಮ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಕುತೂಹಲ ಮತ್ತು ಸೃಜನಶೀಲತೆ ವೈಜ್ಞಾನಿಕ ಪ್ರಗತಿಯ ಅಡಿಪಾಯವನ್ನು ರೂಪಿಸುತ್ತದೆ ಎಂದರು. ಶಿಕ್ಷಣದಲ್ಲಿ ಕೃತಕ ಬುದ್ಧಿಮತ್ತೆಯ ಹೆಚ್ಚುತ್ತಿರುವ ಪ್ರಭಾವವನ್ನು ಸಹ ಉಲ್ಲೇಖಿಸಿದರು ಮತ್ತು ಪ್ರಪಂಚದಾದ್ಯಂತದ ವಿದ್ಯಾರ್ಥಿಗಳು ಆನ್‌ಲೈನ್ ಪರಿಸರದಲ್ಲಿ ಪ್ರಯೋಗಾಲಯ ಪ್ರಯೋಗಗಳನ್ನು ನಡೆಸಲು ಅನುವು ಮಾಡಿಕೊಡುವ ವರ್ಚುವಲ್ ಲ್ಯಾಬ್ಸ್ ಉಪಕ್ರಮಕ್ಕೆ ಎನ್‌ಐಟಿಕೆ ಕೊಡುಗೆಯನ್ನು ವಿವರಿಸಿದರು. ಎನ್‌ಐಟಿಕೆ ಸುರತ್ಕಲ್‌ನ ಭೌತಶಾಸ್ತ್ರ, ರಸಾಯನಶಾಸ್ತ್ರ ಮತ್ತು ಗಣಿತ ಮತ್ತು ಕಂಪ್ಯೂಟೇಶನಲ್ ವಿಜ್ಞಾನ ವಿಭಾಗಗಳ ಸಂಶೋಧನಾ ವಿದ್ವಾಂಸರು ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳು ನಡೆಸಿದ 30 ಕ್ಕೂ ಹೆಚ್ಚು ನೇರ ಪ್ರಯೋಗಗಳನ್ನು ಪ್ರದರ್ಶಿಸಲಾಗಿತ್ತು. ವೈಜ್ಞಾನಿಕ ಜ್ಞಾನ ಮತ್ತು ಉತ್ಸಾಹವನ್ನು ಪರೀಕ್ಷಿಸುವ ಅಂತರ-ಶಾಲಾ ರಸಪ್ರಶ್ನೆ ಸ್ಪರ್ಧೆಯೊಂದಿಗೆ ದಿನವು ಮುಕ್ತಾಯವಾಯಿತು, ನಂತರ ಎಲ್ಲಾ ಭಾಗವಹಿಸುವವರಿಗೆ ಪ್ರಮಾಣಪತ್ರಗಳನ್ನು ವಿತರಿಸಲಾಯಿತು.

ವಾರ್ತಾ ಭಾರತಿ 1 Mar 2026 7:43 pm

ಇರಾನ್ ನಿಂದ ಪ್ರತಿರೋಧದ ದಾಳಿ: ಇಸ್ರೇಲ್‌ನಲ್ಲಿ ಕನಿಷ್ಠ 9 ಮಂದಿ ಮೃತ್ಯು

ಟೆಲ್ ಅವೀವ್: ಮಧ್ಯ ಇಸ್ರೇಲ್‌ನ ಬೈತ್ ಶೆಮೇಶ್ ನಗರದ ಮೇಲೆ ಇರಾನ್ ನಡೆಸಿದ ಕ್ಷಿಪಣಿ ದಾಳಿಯಲ್ಲಿ ಕನಿಷ್ಠ 9 ಮಂದಿ ಮೃತಪಟ್ಟಿದ್ದು, 27 ಜನರು ಗಾಯಗೊಂಡಿದ್ದಾರೆ. ಅವರಲ್ಲಿ ಇಬ್ಬರ ಸ್ಥಿತಿ ಗಂಭೀರವಾಗಿದೆ ಎಂದು aljazeera.com ವರದಿ ಮಾಡಿದೆ. ಮ್ಯಾಗೆನ್ ಡೇವಿಡ್ ಆಡಮ್ ಆಂಬ್ಯುಲೆನ್ಸ್ ಸೇವೆಯ ಪ್ರಕಾರ, ಜೆರುಸಲೇಂನ ಪಶ್ಚಿಮಕ್ಕೆ 30 ಕಿಮೀ ದೂರದಲ್ಲಿರುವ ಮಧ್ಯ ಇಸ್ರೇಲ್‌ನ ಬೈತ್ ಶೆಮೇಶ್ ನಗರದಲ್ಲಿ ಇರಾನಿನ ಬ್ಯಾಲಿಸ್ಟಿಕ್ ಕ್ಷಿಪಣಿ ದಾಳಿಯಲ್ಲಿ ಕನಿಷ್ಠ 9 ಮಂದಿ ಮೃತಪಟ್ಟಿದ್ದಾರೆ. ಇಸ್ರೇಲ್ ಸೇನೆಯು ಟೆಲಿಗ್ರಾಮ್‌ನಲ್ಲಿ ನೀಡಿದ ಹೇಳಿಕೆಯಲ್ಲಿ, ರಕ್ಷಣಾ ಪಡೆಗಳು ಮತ್ತು ವೈದ್ಯಕೀಯ ತಂಡಗಳು ಗಾಯಾಳುಗಳ ರಕ್ಷಣಾ ಕಾರ್ಯವನ್ನು ನಡೆಸುತ್ತಿದೆ ಎಂದು ತಿಳಿಸಿದೆ.

ವಾರ್ತಾ ಭಾರತಿ 1 Mar 2026 7:28 pm

ವಿಜಯನಗರ | ಕೊಟ್ಟೂರಿನಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆ

ವಿಜಯನಗರ : ಕೊಟ್ಟೂರಿನಲ್ಲಿ ರಾಷ್ಟ್ರೀಯ ವಿಜ್ಞಾನ ದಿನವನ್ನು ಶನಿವಾರ ಆಚರಿಸಲಾಯಿತು. ಪಟ್ಟಣದ ಕೊಟ್ಟೂರೇಶ್ವರ ಕಾಲೇಜಿನಲ್ಲಿ ವಿಜ್ಞಾನ ವಿಭಾಗದ ವತಿಯಿಂದ ಏರ್ಪಡಿಸಿದ್ದ ಸಮಾರಂಭವನ್ನು ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಸಿ.ಮೋಹನ್ ರೆಡ್ಡಿ ಉದ್ಘಾಟಿಸಿದರು. ವಿಜ್ಞಾನ ಜಗತ್ತಿನಲ್ಲಿ ಭಾರತವನ್ನು ಮೇರು ಶಿಖರಕ್ಕೆ ಕೊಂಡೊಯ್ದ ಸಿ.ವಿ.ರಾಮನ್ ಅವರ ಅಪೂರ್ವ ಸಾಧನೆಗಳ ನೆನಪಿಗಾಗಿ ರಾಷ್ಟ್ರೀಯ ವಿಜ್ಞಾನ ದಿನವನ್ನು ಆಚರಿಸಲಾಗುತ್ತದೆ ಎಂದು ಹೇಳಿದರು. ಪ್ರಾಂಶುಪಾಲ ಎಂ.ರವಿಕುಮಾರ್ ಮಾತನಾಡಿ, ಈ ವರ್ಷದ ವಿಷಯವಾದ “ವಿಕಸಿತ ಭಾರತಕ್ಕಾಗಿ ವಿಜ್ಞಾನದಲ್ಲಿ ಮಹಿಳೆಯರ ಪಾತ್ರ” ಎಂಬ ಆಶಯದಡಿ ಎಲ್ಲರೂ ವಿಜ್ಞಾನ ಜ್ಞಾನವನ್ನು ಪಡೆದು ದೇಶದ ಪ್ರಗತಿಗೆ ಕೈಜೋಡಿಸಬೇಕು ಎಂದು ಕರೆ ನೀಡಿದರು. ಈ ಸಂದರ್ಭದಲ್ಲಿ ಉಪನ್ಯಾಸಕರಾದ ಸಿ.ಬಸವರಾಜ್, ಸ್ವಾಮಿ ಆರಾಧ್ಯ ಮಠ, ಚೇತನ ಚವಾಣ್, ಕೆ.ಎಂ.ಪೂಜಾ, ಪಿ.ಎಚ್.ವಿಜಯಲಕ್ಷ್ಮಿ ಮಾತನಾಡಿದರು. ಕೆ.ನಾಗರಾಜ್, ನವ್ಯ, ಕೆ.ಎಚ್.ದ್ರಾಕ್ಷಾಯಿಣಿ, ಅನುಷಾ ಸೇರಿದಂತೆ ವಿವಿಧ ವಿಭಾಗದ ಮುಖ್ಯಸ್ಥರು, ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ವಾರ್ತಾ ಭಾರತಿ 1 Mar 2026 7:25 pm

ಕಲಬುರಗಿ | ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ : ನಾರಿ ಶಕ್ತಿ ಬೈಕ್ ರ‍್ಯಾಲಿಗೆ ಚಾಲನೆ

ಕಲಬುರಗಿ : ನಗರದ ಶ್ರೀ ಶರಣಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಜೆಎಸ್‌ಜಿ ಸಂಗಿನಿ, ಇನ್ನರ್‌ವ್ಹಿಲ್ ಕ್ಲಬ್ ಗುಲ್ಬರ್ಗಾ ಉತ್ತರ, ಇನ್ನರ್‌ವ್ಹಿಲ್ ಕ್ಲಬ್ ಗುಲ್ಬರ್ಗಾ, ಇನ್ನರ್‌ವ್ಹಿಲ್ ಕ್ಲಬ್ ಗುಲ್ಬರ್ಗಾ ದಕ್ಷಿಣ, ಇನ್ನರ್‌ವ್ಹಿಲ್ ಕ್ಲಬ್ ಆಫ್ ಗುಲ್ಬರ್ಗಾ ಸನ್‌ಸಿಟಿ ಹಾಗೂ ಆರ್ಯ ವೈಶ್ಯ ವಾಸವಿ ಕ್ಲಬ್ ವತಿಯಿಂದ ಹಮ್ಮಿಕೊಂಡಿರುವ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ ನಿಮಿತ್ತ ನಾರಿ ಶಕ್ತಿ ಬೈಕ್ ರ‍್ಯಾಲಿಗೆ ಶ್ರೀ ಶರಣಬಸವೇಶ್ವರ ಸಂಸ್ಥಾನದ ಮಾತೋಶ್ರೀ ದಾಕ್ಷಾಯಿಣಿ ಎಸ್. ಅಪ್ಪಾ ಅವರು ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಲಕ್ಷ್ಮೀ ಪಾಟೀಲ ರೇವೂರ, ನವಿತಾ ಶಹಾ, ಜ್ಯೋತಿ ತೇಗನೂರ, ಜೆಎಸ್‌ಜಿ ಸಂಗಿನಿ ಅಧ್ಯಕ್ಷೆ ಅನುಜಾ ಶಹಾ, ಕಾರ್ಯದರ್ಶಿ ಮೋನಿಕಾ ಚಕೋರ ಮೇಹತಾ, ಇನ್ನರ್‌ವ್ಹಿಲ್ ಕ್ಲಬ್ ಗುಲ್ಬರ್ಗಾ ಉತ್ತರ ಅಧ್ಯಕ್ಷೆ ನಮೃತಾ ಎಸ್. ಫಟಾಟೆ, ಕಾರ್ಯದರ್ಶಿ ಸವಿತಾ ಹಳಹಳ್ಳಿ, ಇನ್ನರ್‌ವ್ಹಿಲ್ ಕ್ಲಬ್ ಗುಲ್ಬರ್ಗಾ ಅಧ್ಯಕ್ಷೆ ಕಲ್ಯಾಣೇಶ್ವರಿ ಚಕ್ಕಿ, ಕಾರ್ಯದರ್ಶಿ ಶಿವಲೀಲಾ ಮಾಮನಿ, ಇನ್ನರ್‌ವ್ಹಿಲ್ ಕ್ಲಬ್ ಗುಲ್ಬರ್ಗಾ ದಕ್ಷಿಣ ಅಧ್ಯಕ್ಷೆ ಪೂರ್ಣಿಮಾ ಕುಲಕರ್ಣಿ, ಕಾರ್ಯದರ್ಶಿ ಅಶ್ವಿನಿ ಹತ್ತಿ, ಇನ್ನರ್‌ವ್ಹಿಲ್ ಕ್ಲಬ್ ಆಫ್ ಗುಲ್ಬರ್ಗಾ ಸನ್‌ಸಿಟಿ ಅಧ್ಯಕ್ಷೆ ಸ್ವಾತಿ ಪವಾರ್, ಕಾರ್ಯದರ್ಶಿ ಶಿಲ್ಪಾ ಜೈನ್, ಆರ್ಯ ವೈಶ್ಯ ವಾಸವಿ ಕ್ಲಬ್ ಅಧ್ಯಕ್ಷೆ ಅಧ್ಯಕ್ಷೆ ನೀತಾ ಮಾದಮಶೆಟ್ಟಿ, ಕಾರ್ಯದರ್ಶಿ ಮಂಜುಷಾ ಮೈಲಾಪುರ ಸೇರಿದಂತೆ ಇತರರು ಇದ್ದರು.

ವಾರ್ತಾ ಭಾರತಿ 1 Mar 2026 7:19 pm

ವಾಡಿ |ನೈತಿಕ ಮೌಲ್ಯಗಳಿಲ್ಲದೆ ಶಿಕ್ಷಣ ಅಪೂರ್ಣ: ಸುಭಾಷ ರಾಠೋಡ

ವಾಡಿ: ಮಕ್ಕಳಿಗೆ ಕೇವಲ ಅಕ್ಷರಜ್ಞಾನ ನೀಡುವುದು ಶಿಕ್ಷಣವಲ್ಲ, ಜೀವನದ ನೈತಿಕ ಮೌಲ್ಯಗಳನ್ನು ಕಲಿಸುವುದೇ ಶಿಕ್ಷಣದ ಮೂಲ ಉದ್ದೇಶ ಎಂದು ನಿವೃತ್ತ ನ್ಯಾಯಾಧೀಶ ಸುಭಾಷ ರಾಠೋಡ ಹೇಳಿದರು. ಪಟ್ಟಣದ ಬಂಜಾರಾ ಮಹಿಳಾ ಶಿಕ್ಷಣ ಸಂಸ್ಥೆಯ ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಅಕ್ಷರ ಶಿಕ್ಷಣ ನೀಡುವ ಸಂಸ್ಥೆಗಳಿಗೆ ಕೊರತೆಯಿಲ್ಲದಿದ್ದರೂ, ಸಂಸ್ಕಾರ ಬೋಧನೆಯಲ್ಲಿ ಹಲವಾರು ಸಂಸ್ಥೆಗಳು ವಿಫಲವಾಗುತ್ತಿವೆ ಎಂದು ಅವರು ಅಭಿಪ್ರಾಯಪಟ್ಟರು. ಉನ್ನತ ಶಿಕ್ಷಣ ಪಡೆದು ದೊಡ್ಡ ಕಂಪನಿಗಳಲ್ಲಿ ಉದ್ಯೋಗ ಮಾಡಿ ಲಕ್ಷಾಂತರ ರೂಪಾಯಿ ಸಂಪಾದಿಸುವವರೇ ತಮ್ಮ ಪೋಷಕರೊಂದಿಗೆ ಸರಿಯಾಗಿ ನಡೆದುಕೊಳ್ಳದಿರುವುದು ನೈತಿಕ ಮೌಲ್ಯಗಳ ಕುಸಿತದ ಲಕ್ಷಣವಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು. ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಮುಗುಳನಾಗಾಂವ ಶ್ರೀ ಯಲ್ಲಾಲಿಂಗ ಪುಣ್ಯಾಶ್ರಮದ ಪೂಜ್ಯ ಶ್ರೀ ಜೇಮಸಿಂಗ್ ಮಹಾರಾಜರು, ಬಂಜಾರಾ ಮಹಿಳಾ ಶಿಕ್ಷಣ ಸಂಸ್ಥೆ ಬಡ ಮಕ್ಕಳಿಗೆ ಗುಣಮಟ್ಟದ ಶಿಕ್ಷಣದೊಂದಿಗೆ ಮಾನವೀಯ ಮೌಲ್ಯಗಳನ್ನು ಬೋಧಿಸುತ್ತಿರುವುದು ಶ್ಲಾಘನೀಯ ಕಾರ್ಯ ಎಂದು ಹೇಳಿದರು. ಈ ಸಂದರ್ಭದಲ್ಲಿ ಶ್ರೀ ಸರಸ್ವತಿ ಮಾತಾ ದೇವಾಪುರ, ನಿವೃತ್ತ ಸಿಪಿಐ ಕೃಷ್ಣಪ್ಪ ಕಲ್ಲೆದೇವರು ಮಾತನಾಡಿದರು. ಸಂಸ್ಥೆಯ ಅಧ್ಯಕ್ಷ ಶಿವರಾಮ ಪವಾರ, ಕಸಾಪ ಅಧ್ಯಕ್ಷ ಸಿದ್ದಯ್ಯಶಾಸ್ತ್ರಿ ನಂದೂರುಮಠ, ಈಶ್ವರ ರಾಠೋಡ, ಹರೀಶ್ಚಂದ್ರ ಚೌವ್ಹಾಣ, ಚಂದು ಪವಾರ, ವಿನೋದ ಚೌವ್ಹಾಣ, ಕುಮಾರ ಜಾಧವ, ಮಲ್ಲಿಕಾರ್ಜುನ ಬಳಗಾರ ಅಣಕೇರಿ, ರವಿ ಸಿಂಧಗಿ, ದಾನುಬಾಯಿ ಪಾಂಡು ರಾಠೋಡ, ಹಾಸಕಿಬಾಯಿ ಶಂಕರ ಚೌವ್ಹಾಣ, ಲಕ್ಷ್ಮೀ ಜಾಧವ, ರಾಜು ಕೋಲಿ ಸೇರಿದಂತೆ ಶಿಕ್ಷಕರು ಹಾಗೂ ನೂರಾರು ಪೋಷಕರು ಉಪಸ್ಥಿತರಿದ್ದರು. ಶಿಕ್ಷಕರಾದ ರಾಘವೇಂದ್ರ ಗುಡಾಳ ಕಾರ್ಯಕ್ರಮ ನಿರೂಪಿಸಿದರು. ಮಲ್ಲಮ್ಮ ವಂದಿಸಿದರು. ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

ವಾರ್ತಾ ಭಾರತಿ 1 Mar 2026 7:18 pm

ಸುರಪುರ | ಕಕ್ಕೇರಾ ತಾಲೂಕು ಕೇಂದ್ರ ಘೋಷಣೆಗೆ ಆಗ್ರಹಿಸಿ ಪಟ್ಟಣ ಬಂದ್

ಸುರಪುರ: ತಾಲೂಕಿನ ಕಕ್ಕೇರಾ ಪಟ್ಟಣವನ್ನು ತಾಲೂಕು ಕೇಂದ್ರವೆಂದು ಘೋಷಣೆ ಮಾಡುವಂತೆ ಆಗ್ರಹಿಸಿ ಸಾಮೂಹಿಕ ಸಂಘಟನೆಗಳ ವೇದಿಕೆ ನೇತೃತ್ವದಲ್ಲಿ ಕರೆ ನೀಡಿದ್ದ ಕಕ್ಕೇರಾ ಪಟ್ಟಣ ಬಂದ್ ಶಾಂತಿಯುತವಾಗಿ ಯಶಸ್ವಿಯಾಯಿತು. ಪಟ್ಟಣದ ಶ್ರೀ ಮಹರ್ಷಿ ವಾಲ್ಮೀಕಿ ವೃತ್ತದಲ್ಲಿ ಬೃಹತ್ ಬಹಿರಂಗ ಸಮಾವೇಶ ನಡೆಯಿತು. ಈ ವೇಳೆ ಮಾತನಾಡಿದ ಮುಖಂಡರು, ರಾಜ್ಯದಲ್ಲಿಯೇ ಕಕ್ಕೇರಾ ದೊಡ್ಡ ಹೋಬಳಿಯಾಗಿದ್ದು ತಾಲೂಕ ಕೇಂದ್ರವಾಗಲು ಅಗತ್ಯವಾದ ಎಲ್ಲಾ ಸೌಲಭ್ಯಗಳು ಹಾಗೂ ಅರ್ಹತೆಗಳನ್ನು ಹೊಂದಿದೆ ಎಂದು ತಿಳಿಸಿದರು. ಕಕ್ಕೇರಾ ಪಟ್ಟಣಕ್ಕಿಂತಲೂ ಚಿಕ್ಕದಾದ ಅನೇಕ ಊರುಗಳಿಗೆ ಸರ್ಕಾರ ತಾಲೂಕ ಕೇಂದ್ರ ಸ್ಥಾನಮಾನ ನೀಡಿರುವುದನ್ನು ಉದಾಹರಿಸಿ, ಹಲವು ವರ್ಷಗಳಿಂದ ಮನವಿ ಸಲ್ಲಿಸಿದರೂ ಸರ್ಕಾರ ನಿರ್ಲಕ್ಷ್ಯ ತೋರುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಮುಂದಿನ ಆಯವ್ಯಯ ಮಂಡನೆ ವೇಳೆ ಕಕ್ಕೇರಾವನ್ನು ತಾಲೂಕ ಕೇಂದ್ರವಾಗಿ ಘೋಷಿಸಬೇಕು. ಇಲ್ಲದಿದ್ದಲ್ಲಿ ಸರ್ಕಾರ ಮತ್ತು ಜನಪ್ರತಿನಿಧಿಗಳ ವಿರುದ್ಧ ಹೋರಾಟ ತೀವ್ರಗೊಳಿಸಲಾಗುವುದು ಎಂದು ಎಚ್ಚರಿಸಿದರು. ಬಳಿಕ ಮುಖ್ಯಮಂತ್ರಿಗಳಿಗೆ ಬರೆದ ಮನವಿಯನ್ನು ಉಪ ತಹಸೀಲ್ದಾರ್ ರೇವಪ್ಪ ತೆಗ್ಗಿನಮನಿ ಅವರ ಮೂಲಕ ಸಲ್ಲಿಸಲಾಯಿತು. ಬಂದ್ ಹಿನ್ನೆಲೆಯಲ್ಲಿ ವ್ಯಾಪಾರಸ್ಥರು ಸ್ವಯಂಪ್ರೇರಿತವಾಗಿ ಅಂಗಡಿಗಳನ್ನು ಮುಚ್ಚಿ ಬೆಂಬಲ ಸೂಚಿಸಿದರು. ಕೊಡೇಕಲ್ ಪೊಲೀಸ್ ಠಾಣೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಪೊಲೀಸ್ ಬಂದೋಬಸ್ತ್ ಕೈಗೊಂಡಿದ್ದರು. ರಸ್ತೆ ತಡೆದು ಸಮಾವೇಶ ನಡೆಸಿದ ಪರಿಣಾಮ ಕೆಲಕಾಲ ವಾಹನ ಸಂಚಾರ ಅಸ್ತವ್ಯಸ್ತಗೊಂಡು ಸವಾರರು ಪರದಾಡಿದರು. ಪ್ರತಿಭಟನೆಯಲ್ಲಿ ದೇವೇಂದ್ರಪ್ಪ ಬಳಿಚಕ್ರ, ಅಯ್ಯಣ್ಣ ಪೂಜಾರಿ, ನಿಂಗನಗೌಡ ಬೂದಗುಂಪಿ, ತಿಪ್ಪಣ್ಣ ಜಂಪಾ, ರಮೇಶ್ ಶೆಟ್ಟಿ, ಸುನಿಲ್ ಶೆಟ್ಟಿ, ಚಂದ್ರಕಾಂತ್ ಸಕ್ರಿ, ಮೌನೇಶ ಗುರಿಕಾರ, ಸಂಗಮೇಶ ಕುರಿ, ಮಲ್ಲಣ್ಣಗೌಡ ಹೆಗ್ಗಣದೊಡ್ಡಿ, ಮರೆಪ್ಪ ಕಾಂಗ್ರೆಸ್, ಮಹಾಂತೇಶ ಇಂಗಳಗಿ, ಬಸವರಾಜ ಹೊಸಮನಿ, ಚಂದ್ರು ನಡಿಗೇರಿ, ಭೀಮಣ್ಣ ಮ್ಯಾಗೇರಿ, ಸೋಮರಾಯಗೌಡ, ಪರಮಣ್ಣ ದೊಡ್ಡಮನಿ, ಅಯೂಬ್ ಸೇರಿದಂತೆ ನೂರಾರು ಮಂದಿ ಭಾಗವಹಿಸಿದ್ದರು.

ವಾರ್ತಾ ಭಾರತಿ 1 Mar 2026 7:11 pm

ರಾಜ್ಯಕ್ಕೆ 3.15 ಲಕ್ಷ ಕೋಟಿ ರೂ. ಸಾಲದ ಹೊರೆ : ಆರ್ ಅಶೋಕ್ ಟೀಕೆ

ಗ್ಯಾರಂಟಿ ಯೋಜನೆಗಳಿಂದ ಸರಕಾರ ದಿವಾಳಿಯಾಗಿದೆ. ಸರ್ಕಾರದ ಬೊಕ್ಕಸದಲ್ಲಿ ಹಣವಿಲ್ಲ. ಸಿಎಂ ಸಿದ್ದರಾಮಯ್ಯ ಸರ್ಕಾರವು ರಾಜ್ಯವನ್ನು ಪಾಪರ್ ಮಾಡಲು ಹೊರಟಿದೆ ಎಂದು ವಿಧಾನಸಭೆ ಪ್ರತಿಪಕ್ಷದ ನಾಯಕ ಆರ್‌.ಅಶೋಕ್‌ ಟೀಕಿಸಿದ್ದಾರೆ. ಪ್ರತಿ ಸಾರ್ವಜನಿಕರ ತಲೆ ಮೇಲೆ ತಲಾ 1 ಲಕ್ಷ ರೂ. ಸಾಲದ ಹೊರೆ ಹೊರೆಸುತ್ತಾರೆ ಎಂದು ಆರೋಪಿಸಿದರು.

ವಿಜಯ ಕರ್ನಾಟಕ 1 Mar 2026 7:07 pm

ರಣಜಿ ಟ್ರೋಫಿ: ಕರ್ನಾಟಕದ ವಿರುದ್ಧ ಗೆದ್ದು ಚೊಚ್ಚಲ ಕಿರೀಟಕ್ಕೆ ಮುತ್ತಿಟ್ಟ ಜಮ್ಮು-ಕಾಶ್ಮೀರ ತಂಡಕ್ಕೆ ಹಣದ ಹೊಳೆ ಹರಿಸಿದ ಬಿಸಿಸಿಐ

Ranji Trophy 2026: ಹುಬ್ಬಳ್ಳಿಯ ಕೆಎಸ್‌ಸಿಎ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ರಣಜಿ 2026 ಫೈನಲ್ ಪಂದ್ಯಲ್ಲಿ ಕರ್ನಾಟಕ ತಂಡವನ್ನು ಸೋಲಿಸಿ ಚೊಚ್ಚಲ ಟ್ರೋಫಿಗೆ ಮುತ್ತಿಟ್ಟ ಜಮ್ಮು-ಕಾಶ್ಮೀರ ತಂಡಕ್ಕೆ ಪ್ರಶಂಸೆ ಜೊತೆಗೆ ಬಹುಮಾನಗಳ ಸುರಿಮಳೆಯೇ ಹರಿದುಬಂದಿದೆ. ಜೆ &ಕೆ ಸಿಎಂ ಒಮರ್ ಅಬ್ದುಲ್ಲಾ 2,00,00,000 ರೂಪಾಯಿ ನಿಡಿದ್ದು, ಬಿಸಿಸಿಐ ಕೂಡ ಹಣದ ಹೊಳೆಯನ್ನೇ ಹರಿಸಿದೆ. ಹಾಗಾದ್ರೆ, ರನ್ನರ್

ಒನ್ ಇ೦ಡಿಯ 1 Mar 2026 6:52 pm

ಹಾವೇರಿ: ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದ ಕಾರು; 15 ದಿನಗಳ ಹಿಂದಷ್ಟೇನವ ದಾಂಪತ್ಯಕ್ಕೆ ಕಾಲಿಟ್ಟಿದ್ದ ಜೋಡಿ ಸಾವು

ಹಾವೇರಿ ರಾಷ್ಟ್ರೀಯ ಹೆದ್ದಾರಿ-48 ರಲ್ಲಿ ರವಿವಾರ ನಸುಕಿನ ಜಾವ ಭೀಕರ ರಸ್ತೆ ಅಪಘಾತ ಸಂಭವಿಸಿ ಕೇವಲ 15 ದಿನಗಳ ಹಿಂದಷ್ಟೇನವ ದಾಂಪತ್ಯಕ್ಕೆ ಕಾಲಿಟ್ಟಿದ್ದ ಜೋಡಿಗಳು ಮೃತಪಟ್ಟಿರುವ ಘಟನೆ ಶಿಗ್ಗಾವಿ ತಾಲೂಕು ಕಡಹಳ್ಳಿ ಬಳಿ ಸಂಭವಿಸಿದೆ. ಹಾವೇರಿಯ ಕಾರ್ತಿಕ್ ಹೂಗಾರ್ (33), ಪತ್ನಿ ಐಶ್ವರ್ಯ ಹೂಗಾರ್ (26) ಸ್ಥಳದಲ್ಲೇ ಮೃತಪಟ್ಟಿರುವ ದುರ್ದೈವಿಗಳು.

ವಿಜಯ ಕರ್ನಾಟಕ 1 Mar 2026 6:45 pm

Holi Date: ಕರ್ನಾಟಕದಲ್ಲಿ ಹೋಳಿ ಹಬ್ಬ ಯಾವಾಗ? ದಿನಾಂಕ, ಸಮಯ- ಪೌರಾಣಿಕ ಮಹತ್ವ

Holi Festival 2026: ಕರ್ನಾಟಕ ಸೇರಿದಂತೆ ಭಾರತವು ಬಣ್ಣಗಳ ಹಬ್ಬ 'ಹೋಳಿ' (Holi 2026) ಆಚರಣೆಗೆ ಸಿದ್ಧವಾಗುತ್ತಿದೆ. ಹೋಳಿ ಹಬ್ಬಕ್ಕೆ ಎರಡು ದಿನ ಬಾಕಿ ಇದೆ. ದೀಪಾವಳಿ ಬಳಿಕ ಮಾರ್ಚ್‌ ವೇಳೆಗೆ ಬರುವ ಹಿಂದೂಗಳ ಪಾಲಿನ ಮತ್ತೊಂದು ವಿಶೇಷ ಹಬ್ಬವಾಗಿದೆ. ಯುವ ಸಮೂಹ ಹಾಗೂ ಮಕ್ಕಳು ಇದರಲ್ಲಿ ಅತ್ಯುತ್ಸಾಹದಿಂದ ಪಾಲ್ಗೊಳ್ಳುತ್ತಾರೆ. ಪರಸ್ಪರ ಬಣ್ಣಗಳಲ್ಲಿ ಮಿಂದೆದ್ದು ಸಂಭ್ರಮಿಸುವುದು ವಾಡಿಕೆ.

ಒನ್ ಇ೦ಡಿಯ 1 Mar 2026 6:38 pm

Middle East Crisis- ಒಮನ್ ಬಳಿ ತೈಲ ಟ್ಯಾಂಕರ್ ಮೇಲೆ ಇರಾನ್ ದಾಳಿ: 15 ಭಾರತೀಯರ ರಕ್ಷಣೆ

ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ ನಡೆಸುತ್ತಿರುವ ದಾಳಿಗೆ ಪ್ರತಿಯಾಗಿ ಇರಾನ್ ಇದೀಗ ವಿಶ್ವದ ಪ್ರಮುಖ ತೈಲ ಸಾಗಣೆ ಮಾರ್ಗವಾದ ಹಾರ್ಮುಜ್ ಜಲಸಂಧಿಯಲ್ಲಿ ಮಿಲಿಟರಿ ಕಾರ್ಯಾಚರಣೆ ಚುರುಕು ಮಾಡಿದೆ. ಇದರ ಭಾಗವಾಗಿ ಪಲಾವ್ ಗಣರಾಜ್ಯದ ಧ್ವಜವನ್ನು ಹೊಂದಿರುವ ತೈಲ ಟ್ಯಾಂಕರ್ ಒಂದರ ಮೇಲೆ ದಾಳಿ ನಡೆದಿದ್ದು ಘಟನೆಯಲ್ಲಿ ನಾಲ್ಕರು ಗಾಯಗೊಂಡಿದ್ದಾರೆ. ತೈಲ ಟ್ಯಾಂಕರ್ ನಲ್ಲಿದ್ದ 15 ಮಂದಿ ಭಾರತೀಯ ಸಿಬ್ಬಂದಿಯನ್ನು ಸ್ಥಳಾಂತರ ಮಾಡಲಾಗಿದೆ ಎಂದ ಒಮಾನ್ ಕಡಲ ಭದ್ರತಾ ಕೇಂದ್ರ ಮಾಹಿತಿ ನೀಡಿದೆ.

ವಿಜಯ ಕರ್ನಾಟಕ 1 Mar 2026 6:26 pm

ರಾಜ್ಯ ಸರಕಾರ ಖಾಲಿ ಹುದ್ದೆಗಳನ್ನು ಭರ್ತಿ ಮಾಡದೇ ಯುವಜನತೆಗೆ ಅನ್ಯಾಯ ಮಾಡಿದೆ : ಬಿ.ವೈ.ವಿಜಯೇಂದ್ರ

ಚಿಕ್ಕಮಗಳೂರು : ಸಿದ್ದರಾಮಯ್ಯ ಸರಕಾರ ಅಹಿಂದ ಹೆಸರಿನಲ್ಲಿ ಅಧಿಕಾರಕ್ಕೆ ಬಂದಿದ್ದು, ಈಗ ಈ ಸಮುದಾಯಗಳಿಗೆ ಅನ್ಯಾಯ ಮಾಡುತ್ತಿದೆ. ಖಾಲಿ ಹುದ್ದೆಗಳನ್ನು ಭರ್ತಿ ಮಾಡದೇ ಅಹಿಂದ ಸಮುದಾಯಕ್ಕೂ ದ್ರೋಹ ಎಸಗುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಟೀಕಿಸಿದ್ದಾರೆ. ರವಿವಾರ ಜಿಲ್ಲೆಯ ಬಾಳೆಹೊನ್ನೂರು ಪಟ್ಟಣದ ರಂಭಾಪುರಿ ಮಠಕ್ಕೆ ಭೇಟಿ ನೀಡಿದ್ದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ಯುವ ಸಮುದಾಯದ ಆಕ್ರೋಶಕ್ಕೆ ರಾಜ್ಯ ಸರಕಾರ ಬೆಲೆ ತೆರಬೇಕಾಗುತ್ತದೆ. ರಾಜ್ಯದಲ್ಲಿ ಸುಮಾರು 2.80ಲಕ್ಷ ಹುದ್ದೆಗಳು ಖಾಲಿ ಇವೆ. ಈ ಹುದ್ದೆಗಳನ್ನು ಭರ್ತಿ ಮಾಡಬೇಕೆಂದು ಯುವಜನತೆ ಧಾರವಾಡದಲ್ಲಿ ಪ್ರತಿಭಟನೆ ಮಾಡಿದ್ದು, ಈ ವೇಳೆ ರಾಜ್ಯ ಸರಕಾರ ಯುವಜನರ ಮೇಲೆ ಲಾಠಿ ಪ್ರಹಾರ ನಡೆಸುವ ಮೂಲಕ ಸರಕಾರ ಹೋರಾಟದ ಹಕ್ಕಿನ ಧಮನ ಮಾಡಲು ಮುಂದಾಗಿದೆ ಎಂದು ಆರೋಪಿಸಿದರು. ರಾಜ್ಯ ಸರಕಾರದ ಆಡಳಿತದಿಂದಾಗಿ ರೈತರು ಹತಾಶರಾಗಿದ್ದಾರೆ, ಯುವಜನತೆ ಸರಕಾರದ ಮೇಲೆ ವಿಶ್ವಾಸ ಕಳೆದುಕೊಂಡಿದ್ದಾರೆ. ಸರಕಾರ ಯುವಜನತೆ ಮತ್ತು ರೈತರ ಬೇಡಿಕೆಗಳನ್ನು ಈಡೇರಿಸದೇ ನಿರ್ಲಕ್ಷಿಸಿದರೇ ಅವರು ರಾಜ್ಯಾದ್ಯಂತ ದಂಗೆ ಏಳುವುದು ಖಚಿತ ಎಂದು ಎಚ್ಚರಿಸಿದರು.

ವಾರ್ತಾ ಭಾರತಿ 1 Mar 2026 6:10 pm

Bengaluru | ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಪ್ರಕರಣ: ಐವರ ಬಂಧನ

ಬೆಂಗಳೂರು, ಮಾ.1 : ಮಾದಕ ದ್ರವ್ಯ (ಡ್ರಗ್ಸ್) ಮಿಶ್ರಿತ ಮಾತ್ರೆ ನೀಡಿ ಕಾಲೇಜು ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ಎಸಗಿದ ಪ್ರಕರಣ ಸಂಬಂಧ ಐವರು ಆರೋಪಿಗಳನ್ನು ಇಲ್ಲಿನ ಅಮೃತಹಳ್ಳಿ ಠಾಣೆಯ ಪೊಲೀಸರು ಬಂಧಿಸಿದ್ದಾರೆ. 19 ವರ್ಷದ ಸಂತ್ರಸ್ತ ಯುವತಿ ನೀಡಿದ್ದ ದೂರಿನನ್ವಯ ತನಿಖೆ ಕೈಗೊಂಡಿದ್ದಪೊಲೀಸರು ಡಿಕ್ಸನ್ ಸ್ಯಾಂಟ್ರಾ(21), ನಿಖಿಲ್(34) ಹಾಗೂ ಕೃತ್ಯಕ್ಕೆ ಸಹಕರಿಸಿದ ಆರೋಪದಡಿ ಶ್ರವಣ್(21), ಅನಿರುದ್ಧ್(33) ಹಾಗೂ ಮೋಹಿತ್ ಜೈನ್(23) ಎಂಬಾತನನ್ನು ಬಂಧಿಸಿರುವುದಾಗಿ ತಿಳಿಸಿದ್ದಾರೆ. ತಮಿಳುನಾಡು ಮೂಲದ ಯುವತಿ ಬೆಂಗಳೂರಿನ ಖಾಸಗಿ ಕಾಲೇಜಿನ ವಿದ್ಯಾರ್ಥಿನಿಯಾಗಿದ್ದು, ಇವರಿಗೆ ಇನ್‍ಸ್ಟಾಗ್ರಾಂ ಮೂಲಕ ಪಶ್ಚಿಮ ಬಂಗಾಳದ ಡಿಕ್ಸನ್ ಎಂಬವನ ಪರಿಚಯವಾಗಿತ್ತು. ಸಂತ್ರಸ್ತೆ ದೂರಿನಲ್ಲಿ, ಪ್ರೀತಿಸುತ್ತಿರುವುದಾಗಿ ಹೇಳಿದ್ದ ಡಿಕ್ಸನ್, ಫೆಬ್ರವರಿ 14ರಂದು ಆಕೆಯನ್ನು ಜಕ್ಕೂರಿನಲ್ಲಿರುವ ವಿಲ್ಲಾವೊಂದಕ್ಕೆ ಆಹ್ವಾನಿಸಿದ್ದ. ಅದರಂತೆ ಸಂತ್ರಸ್ತೆ ಹಾಗೂ ಆಕೆಯ ಸ್ನೇಹಿತೆ ವಿಲ್ಲಾಗೆ ಹೋಗಿದ್ದರು. ಈ ವೇಳೆ ಡಿಕ್ಸನ್ ಹಾಗೂ ನಿಖಿಲ್ ಬಲವಂತವಾಗಿ ಮಾತ್ರೆಯೊಂದನ್ನು ತಿನ್ನಿಸಿದ್ದರು. ಕೆಲ ಸಮಯದ ಬಳಿಕ ಅರೆ ಪ್ರಜ್ಞಾವಸ್ಥೆಯಲ್ಲಿದ್ದ ತನ್ನ ಮೇಲೆ ಡಿಕ್ಸನ್ ಹಾಗೂ ನಿಖಿಲ್ ಅತ್ಯಾಚಾರವೆಸಗಿದ್ದಾರೆ. ಬಳಿಕ ನಡೆದ ಘಟನೆಯ ಕುರಿತು ಯಾರಿಗೂ ಹೇಳದಂತೆ ಜೀವ ಬೆದರಿಕೆ ಹಾಕಿದರು. ನಾನು ನಡೆದಿರುವ ಘಟನೆಯಿಂದ ಆಘಾತಕ್ಕೊಳಗಾಗಿ, ನಂತರ ಸಹೋದರನ ಸೂಚನೆಯಂತೆ ದೂರು ನೀಡಿರುವುದಾಗಿ ಸಂತ್ರಸ್ತೆ ದೂರಿನಲ್ಲಿ ತಿಳಿಸಿದ್ದಾರೆ. ಸಂತ್ರಸ್ತೆ ವಿರುದ್ಧವೂ ದೂರು: ಇನ್ನು, ಸಂತ್ರಸ್ತ ಯುವತಿಯೇ ಸುಳ್ಳು ಆರೋಪ ಮಾಡುತ್ತಿದ್ದು, ಖಾಸಗಿ ವಾಹಿನಿಯ ಸಿಬ್ಬಂದಿಯ ಹೆಸರಿನಲ್ಲಿ ಕರೆ ಮಾಡಿಸಿ ಬೆದರಿಸಿ ಹಣಕ್ಕೆ ಬೇಡಿಕೆಯಿಟ್ಟಿದ್ದಾಳೆ ಎಂದು ಬಂಧಿತ ಆರೋಪಿ ನಿಖಿಲ್ ಆರೋಪಿಸಿದ್ದಾನೆ. ಈ ಸಂಬಂಧವಾಗಿ ಯುವತಿಯ ದೂರಿಗೂ ಮೊದಲೇ ಮಲ್ಲೇಶ್ವರಂ ಪೊಲೀಸ್ ಠಾಣೆಗೆ ದೂರು ನೀಡಿರುವ ನಿಖಿಲ್, ಫೆ.14ರಂದು ಪಾರ್ಟಿಗೆ ಬಂದಿದ್ದ ಯುವತಿ ತಾನೇ ತೀರಾ ಸಲುಗೆಯಿಂದ ವರ್ತಿಸುತ್ತಿದ್ದಳು. ಅದೇ ದಿನ ಆಕೆಯನ್ನು ಸುರಕ್ಷಿತವಾಗಿ ರಾಜಾಜಿ ನಗರದ ವಾರಿಯರ್ ಬೇಕರಿ ಬಳಿ ಡ್ರಾಪ್ ಮಾಡಿದ್ದೆ. ಆ ನಂತರ ಆಕೆ ಇನ್‍ಸ್ಟಾಗ್ರಾಂ ವಿಡಿಯೋ ಮೂಲಕ ಸುಳ್ಳು ಆರೋಪ ಮಾಡಿದ್ದಾಳೆ. ನಂತರ ಖಾಸಗಿ ವಾಹಿನಿಯ ಪ್ರತಿನಿಧಿಯ ಹೆಸರಿನಲ್ಲಿ ಇಮ್ರಾನ್ ಎಂಬಾತ ಕರೆ ಮಾಡಿ ಹಣಕ್ಕೆ ಬೇಡಿಕೆಯಿಟ್ಟಿದ್ದ ಎಂದು ದೂರಿನಲ್ಲಿ ತಿಳಿಸಿದ್ದಾನೆ.

ವಾರ್ತಾ ಭಾರತಿ 1 Mar 2026 6:07 pm

ಶಾಲೆ ಮೇಲೆ ವೈಮಾನಿಕ ದಾಳಿ ಖಂಡನೀಯ; ಭಾರತೀಯ ನಾಗರಿಕನ್ನು ರಕ್ಷಣೆ ಮಾಡಿ : ಡಿ.ಕೆ.ಶಿವಕುಮಾರ್ ಆಗ್ರಹ

ಬೆಂಗಳೂರು/ ಬಾಳೆಹೊನ್ನೂರು: ಅಮೆರಿಕ, ಇಸ್ರೇಲ್ ಮತ್ತು ಇರಾನ್ ನಡುವೆ ಈಗ ನಡೆಯುತ್ತಿರುವ ಯುದ್ಧ ಸರಿಯಲ್ಲ. ವೈಮಾನಿಕ ದಾಳಿಯಲ್ಲಿ ಮಕ್ಕಳು ಸತ್ತಿದ್ದಾರೆ. ಏನೂ ಮಾಡದ ಮಕ್ಕಳ ಶಾಲೆ ಮೇಲೆ ಏಕೆ ದಾಳಿ ಮಾಡಬೇಕು. ಇದು ಖಂಡನೀಯ. ದುಬೈ ಸೇರಿದಂತೆ ಕೊಲ್ಲಿ ದೇಶಗಳಲ್ಲಿ ಸಿಲುಕಿರುವ ಭಾರತೀಯ ನಾಗರಿಕರನ್ನು ರಕ್ಷಣೆ ಮಾಡಬೇಕು ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಆಗ್ರಹಿಸಿದರು. ಸದಾಶಿವನಗರದ ನಿವಾಸದ ಬಳಿ ಹಾಗೂ ಬಾಳೆಹೊನ್ನರಿನಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಅವರು ರವಿವಾರ ಪ್ರತಿಕ್ರಿಯೆ ನೀಡಿದರು. ಸೌದಿ, ದುಬೈ ಸೇರಿದಂತೆ ಇತರೆಡೆ ಇರುವ ಕನ್ನಡಿಗರ ರಕ್ಷಣೆ ಬಗ್ಗೆ ಕೇಳಿದಾಗ, ಕರ್ನಾಟಕ, ಕೇರಳ ಸೇರಿದಂತೆ ಭಾರತೀಯ ನಾಗರಿಕರನ್ನ ರಕ್ಷಣೆ ಮಾಡಬೇಕು ಎಂದು ಕೇಂದ್ರ ಸರಕಾರದ ಬಳಿ ಮನವಿ ಮಾಡುತ್ತೇನೆ. ನಾಗರಿಕರ ರಕ್ಷಣೆಗೆ ಏನೂ ಒತ್ತಡ ಹೇರಬೇಕೋ ಆ ಕೆಲಸವನ್ನು ನಾವು ಮಾಡುತ್ತೇವೆ. ಭಾರತೀಯರು, ಕನ್ನಡಿಗರಿಗೆ ಧೈರ್ಯ ತುಂಬುವ ಕೆಲಸ ನಾವು ಮಾಡುತ್ತೇವೆ. ಪ್ರಪಂಚದ ಯಾವ ಮನುಷ್ಯರು ಹೀಗೆ ಸಾಯುವುದನ್ನ ನಾನು ಖಂಡಿಸುತ್ತೇನೆ ಎಂದರು. ದುಬೈನಲ್ಲಿ ನಮ್ಮ ಶಾಸಕರಾದ ಎ.ಸಿ.ಶ್ರೀನಿವಾಸ್, ಭರತ್ ರೆಡ್ಡಿ ಅವರ ಕುಟುಂಬ, ಎಂಎಲ್ ಸಿ ಭೋಜೇಗೌಡ ಅವರು ಸಿಲುಕಿಕೊಂಡಿದ್ದಾರೆ. ಜೊತೆಗೆ ಅನೇಕ ನಾಗರಿಕರು ಸಿಲುಕಿಕೊಂಡಿದ್ದಾರೆ. ಇವರನ್ನೆಲ್ಲಾ ರಕ್ಷಣೆ ಮಾಡಬೇಕು. ದಕ್ಷಿಣ ಭಾರತದ ಅನೇಕರು ದುಬೈ, ಸೌದಿಯಲ್ಲಿದ್ದಾರೆ. ಅನೇಕ ಭಾರತೀಯ ವಿದ್ಯಾಸಂಸ್ಥೆಗಳಿವೆ ಎಂದರು. ಅಲ್ಲಿರುವ ಕನ್ನಡ ಸಂಘಟನೆಗಳು ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಬೇಕು. ಅನೇಕ ಪರಿಚಿತರಿಂದ ವ್ಯಾಪಕವಾಗಿ ಕರೆಗಳು ಬರುತ್ತಿವೆ. ನಮ್ಮ ಜೊತೆ ವ್ಯವಹಾರ ನಡೆಸುವವರು, ಪರಿಚಿತರು ಗಾಬರಿಯಾಗಿದ್ದಾರೆ. ಸೌದಿಯಲ್ಲಿ ಏರ್ ಸ್ಟೈಕ್, ಕ್ಷಿಪಣಿಗಳು ಹಾರುತ್ತಿರುವುದು ಕಾಣುತ್ತಿದೆ ಎಂದು ಹೇಳಿದ್ದಾರೆ. ನಾನು ಆತಂಕ ಪಡುವುದು ಬೇಡ ಎಂದು ಹೇಳಿದ್ದೇನೆ ಎಂದು ತಿಳಿಸಿದರು. ಬೆಂಗಳೂರಿನವರು ಯಾರಾದರೂ ಸಿಲುಕಿರುವ ಮಾಹಿತಿ ಇದೆಯೇ ಎಂದು ಕೇಳಿದಾಗ, ಈ ಕಾರಣಕ್ಕೆ ಕಮಿಷನರ್ ಅವರಿಗೆ ಮುಖ್ಯಮಂತ್ರಿಯವರು ಸೇರಿದಂತೆ ನಾವು ನಿರ್ದೇಶನ‌ ನೀಡಿದ್ದೇವೆ ಎಂದರು. ಸಹಾಯವಾಣಿ ತೆರೆಯುವ ಇರಾದೆ ಏನಾದರೂ ಇದೆಯೇ ಎಂದು ಕೇಳಿದಾಗ, ನಾವು ಹಾಗೂ ಕೇಂದ್ರ ಸರಕಾರ ಬೇರೆ, ಬೇರೆಯಾಗಿ ಸಹಾಯವಾಣಿ ತೆರೆಯಲು ಆಗುವುದಿಲ್ಲ. ವಿದೇಶಾಂಗ ಇಲಾಖೆಯಿಂದ ಮಾಡಬೇಕು. ನಾವು ಧೈರ್ಯ ತುಂಬುವಂತಹ ಕೆಲಸ ಮಾಡಬೇಕು ಎಂದರು. ಮಾನವ ಧರ್ಮಕ್ಕೆ ಜಯವಾಗಲಿ: ಪ್ರಪಂಚದಲ್ಲಿ ಶಾಂತಿ ನೆಲೆಸಬೇಕು. ಯಾವುದೇ ಪ್ರಾಣ ಹಾನಿಯಾಗಬಾರದು ಎಂಬುದು ನಮ್ಮ ಪ್ರಾರ್ಥನೆ. ಮಾನವಧರ್ಮಕ್ಕೆ ಜಯವಾಗಲಿ ಎಂದರು ಅಮೇರಿಕಾ ಯುದ್ಧವನ್ನು ನಿಲ್ಲಿಸಬೇಕಿದೆ. ಈ ಯುದ್ಧ ದಿಂದ ಭಾರತಕ್ಕೂ ಗಂಡಾಂತರವಾಗಲಿದೆ. ನಮ್ಮ ಸರಕಾರದಿಂದಲೂ ನಮ್ಮ ಜನರಿಗೆ ಧೈರ್ಯ ತುಂಬುವ ಕೆಲಸವಾಗುತ್ತಿದೆ. ಶಾಂತಿ ಕಾಪಾಡಲು ನಾವೆಲ್ಲರೂ ಮನವಿ ಮಾಡೋಣ ಎಂದರು. ಇಲ್ಲಿ ಕನ್ನಡಿಗರು, ಆ ರಾಜ್ಯದವರು ಎಂದು ಬರುವುದಿಲ್ಲ‌. ನಾವೆಲ್ಲರೂ ಭಾರತೀಯರು. ಏಕೆಂದರೆ ಇಡೀ ಸೌದಿ ದೇಶ ನಡೆಯುತ್ತಿರುವುದೇ ಭಾರತೀಯರಿಂದ. ಅದರಲ್ಲೂ ದಕ್ಷಿಣ ಭಾರತೀಯರು ವೃತ್ತಿಪರವಾಗಿ ಕೆಲಸ ಮಾಡುತ್ತಿದ್ದಾರೆ. ಮಂಗಳೂರು, ಕೇರಳ ಭಾಗದಲ್ಲಿ ಕುಟುಂಬದ ಒಬ್ಬರಾದರೂ ಸೌದಿಯಲ್ಲಿ ನೆಲೆಸಿರುತ್ತಾರೆ. ದೇಶವನ್ನು ಬೆಳೆಸುತ್ತಾ ಅವರೂ ಬದುಕುತ್ತಿದ್ದಾರೆ ಎಂದು ಹೇಳಿದರು.

ವಾರ್ತಾ ಭಾರತಿ 1 Mar 2026 5:53 pm

ಚಿನ್ನದ ಬೆಲೆಯಲ್ಲಿ ಬಾರೀ ಏರಿಕೆ!

ಅಮೆರಿಕ ಮತ್ತು ಇಸ್ರೇಲ್ ಜೊತೆಗೂಡಿ ಇರಾನ್ ಮತ್ತು ಅದರ ನಾಯಕರ ಮೇಲೆ ಸರಣಿ ವೈಮಾನಿಕ ದಾಳಿಗಳನ್ನು ನಡೆಸಿದೆ. ಈ ಹಿನ್ನೆಲೆಯಲ್ಲಿ ಹೂಡಿಕೆದಾರರು ಅಮೂಲ್ಯ ಲೋಹಗಳ ಮೇಲೆ ಸುರಕ್ಷಿತ ಹೂಡಿಕೆಯನ್ನು ಕಾಣುತ್ತಿದ್ದಾರೆ. ಜನವರಿಯಲ್ಲಿ ಗರಿಷ್ಠ ಮಟ್ಟಕ್ಕೆ ಏರಿದ್ದ ಚಿನ್ನ ಮತ್ತೆ ಏರು ಹಾದಿಯಲ್ಲಿದೆ. ಫೆಬ್ರವರಿ ತಿಂಗಳ ಆರಂಭದಲ್ಲಿ ಕುಸಿತ ಕಂಡಿದ್ದ ಚಿನ್ನದ ಬೆಲೆ ಫೆಬ್ರವರಿ 23 ಸೋಮವಾರದಿಂದ ತುಸು ಏರು ಹಾದಿಯಲ್ಲಿತ್ತು. ಸೋಮವಾರ, ಮಂಗಳವಾರ ಮತ್ತು ಬುಧವಾರ ಚಿನ್ನದಲ್ಲಿ ಅಲ್ಪ ಏರಿಕೆ ಕಂಡುಬಂದು 16 ಸಾವಿರದ ಗಡಿಯನ್ನು ದಾಟಿತ್ತು. ಗುರುವಾರ ಅಲ್ಪ ಕುಸಿತ ಕಂಡ ಬೆಲೆ ಮತ್ತೆ ಶುಕ್ರವಾರ ಅಲ್ಪ ಏರಿಕೆ ಕಂಡಿದ್ದು, ಶನಿವಾರ ದಿಢೀರ್ ಗ್ರಾಂಗೆ 300 ರೂ. ಮೀರಿ ಏರಿಕೆ ಕಂಡಿದೆ. ಇದೀಗ ರವಿವಾರ 17 ಸಾವಿರದ ಗಡಿ ದಾಟಿದೆ. ಮಧ್ಯಪ್ರಾಚ್ಯದಲ್ಲಿ ಭೌಗೋಳಿಕ ರಾಜಕೀಯದಲ್ಲಿ ಹೊಸ ಉದ್ವಿಗ್ನತೆಯ ನಂತರ ಮಾರ್ಚ್ 1ರಂದು ಭಾರತದಲ್ಲಿ ಚಿನ್ನದ ಬೆಲೆಗಳು ತೀವ್ರವಾಗಿ ಏರಿವೆ. ಅಮೆರಿಕ ಮತ್ತು ಇಸ್ರೇಲ್ ಜೊತೆಗೂಡಿ ಇರಾನ್ ಮತ್ತು ಅದರ ನಾಯಕರ ಮೇಲೆ ಸರಣಿ ವೈಮಾನಿಕ ದಾಳಿಗಳನ್ನು ನಡೆಸಿದೆ. ಈ ಹಿನ್ನೆಲೆಯಲ್ಲಿ ಹೂಡಿಕೆದಾರರು ಅಮೂಲ್ಯ ಲೋಹಗಳ ಮೇಲೆ ಸುರಕ್ಷಿತ ಹೂಡಿಕೆಯನ್ನು ಕಾಣುತ್ತಿದ್ದಾರೆ. ಮಾರ್ಚ್ 1ರಂದು ರವಿವಾರ ಬೆಂಗಳೂರಿನ ಮಾರುಕಟ್ಟೆಗಳಲ್ಲಿ 24 ಕ್ಯಾರೆಟ್ ಶುದ್ಧ ಚಿನ್ನದ ಬೆಲೆ ಗ್ರಾಂಗೆ ಬರೋಬ್ಬರಿ 437 ರೂ. ಏರಿಕೆಯಾಗಿ ಹತ್ತು ಗ್ರಾಂ ಬೆಲೆ 1,73,080 ರೂ.ಗೆ ಬಂದು ನಿಂತಿದೆ. ಆಭರಣ ಚಿನ್ನವಾದ 22 ಕ್ಯಾರೆಟ್ ಬೆಲೆಯು ಗ್ರಾಂಗೆ 400 ರೂ. ಏರಿಕೆಯಾಗಿ ಹತ್ತು ಗ್ರಾಂಗೆ 1,58,650 ರೂ.ಗೆ ತಲುಪಿದೆ. 18 ಕ್ಯಾರೆಟ್ ಚಿನ್ನವು ಪ್ರತಿ ಗ್ರಾಂಗೆ 328 ರೂ. ಏರಿಕೆಯಾಗಿ ಹತ್ತು ಗ್ರಾಂಗೆ 1,29,810 ರೂ. ಗೆ ತಲುಪಿದೆ. ಮಂಗಳೂರಿನಲ್ಲಿ ಚಿನ್ನದ ದರವೆಷ್ಟಿದೆ? ಮಾರ್ಚ್ 1ರಂದು ರವಿವಾರ ಮಧ್ಯಾಹ್ನದ ವಹಿವಾಟಿನಲ್ಲಿ ಮಂಗಳೂರಿನಲ್ಲಿ ಚಿನ್ನದ ಬೆಲೆ ಮತ್ತೆ ಏರಿಕೆ ಕಂಡಿದೆ. ಒಂದು ಗ್ರಾಂ 24 ಕ್ಯಾರೆಟ್ ಚಿನ್ನದ ದರ 17,308 (+437) ರೂ. ನಷ್ಟಿದೆ. ಒಂದು ಗ್ರಾಂ 22 ಕ್ಯಾರೆಟ್ ಚಿನ್ನದ ದರ 15,865 (+400) ರೂ. ಮತ್ತು ಒಂದು ಗ್ರಾಂ 18 ಕ್ಯಾರೆಟ್ ಚಿನ್ನದ ದರ 12,981 (+328) ರೂ. ಬೆಲೆಗೆ ತಲುಪಿದೆ. ಸ್ಥಿರವಾದ ಬೆಳ್ಳಿದರ ಫೆಬ್ರವರಿ ಆರಂಭದಿಂದಲೇ ಸತತ ಕುಸಿತ ಕಂಡಿದ್ದ ಬೆಳ್ಳಿ ಫೆಬ್ರವರಿ 19ರ ಗುರುವಾರದಿಂದ ಏರುಹಾದಿಯಲ್ಲಿತ್ತು. ಗುರುವಾರ ಮತ್ತು ಶುಕ್ರವಾರ ಕೆಜಿಗೆ 2,70,000 ರೂ. ಗೆ ಸ್ಥಿರವಾಗಿ ನಿಂತಿದ್ದ ಬೆಳ್ಳಿ ಬೆಲೆ, ಶನಿವಾರ 5 ರೂ. ಏರಿಕೆಯಾಗಿ 2,75,000ಗೆ ಬಂದು ತಲುಪಿತ್ತು. ನಂತರ ಸೋಮವಾರ ಬರೋಬ್ಬರಿ ಪ್ರತಿ ಗ್ರಾಂಗೆ 25 ರೂ. ಏರಿಕೆ ಕಂಡ ಚಿನ್ನ ಅಂತಿಮವಾಗಿ ಕೆಜಿಗೆ 3,00,000ಕ್ಕೆ ತಲುಪಿತ್ತು. ಆದರೆ ಮಂಗಳವಾರ ಪ್ರತಿ ಗ್ರಾಂಗೆ 15 ರೂ. ಕುಸಿದು ಕೆಜಿಗೆ 2,85,000 ರೂ.ಗೆ ತಲುಪಿದೆ. ಬುಧವಾರ, ಗುರುವಾರ ಮತ್ತು ಶುಕ್ರವಾರ ಸ್ಥಿರವಾಗಿದ್ದ ಬೆಳ್ಳಿಯ ಬೆಲೆ, ಶನಿವಾರ ಗ್ರಾಂಗೆ ರೂ 10 ಏರಿಕೆಯಾಗಿ 2,95,000 ರೂ. ಗೆ ಬಂದು ನಿಂತಿತ್ತು. ರವಿವಾರವೂ ಇದೇ ಬೆಲೆಯಲ್ಲಿ ಸ್ಥಿರವಾಗಿ ನಿಂತಿದೆ. ವಿವಿಧ ನಗರಗಳಲ್ಲಿ 1 ಗ್ರಾಮ್ ಚಿನ್ನದ ದರ (ಬೆಳಗಿನ ವಹಿವಾಟು) ಹೇಗಿದೆ? ದಿಲ್ಲಿ: 24 ಕ್ಯಾರೆಟ್ ಚಿನ್ನದ ದರ 17,323 (+437) ರೂ., 22 ಕ್ಯಾರೆಟ್ ಚಿನ್ನದ ದರ 15,880 (+400) ರೂ. ಮುಂಬೈ: 24 ಕ್ಯಾರೆಟ್ ಚಿನ್ನದ ದರ 17,308 (+437) ರೂ., 22 ಕ್ಯಾರೆಟ್ ಚಿನ್ನದ ದರ 15,865 (+400) ರೂ. ಅಹಮದಾಬಾದ್: 24 ಕ್ಯಾರೆಟ್ ಚಿನ್ನದ ದರ 17,313 (+437) ರೂ., 22 ಕ್ಯಾರೆಟ್ ಚಿನ್ನದ ದರ 15,870 (+400) ರೂ. ಚೆನ್ನೈ: 24 ಕ್ಯಾರೆಟ್ ಚಿನ್ನದ ದರ 17,209 (+245) ರೂ., 22 ಕ್ಯಾರೆಟ್ ಚಿನ್ನದ ದರ 15,775 (+225) ರೂ. ಕೋಲ್ಕತ್ತಾ: 24 ಕ್ಯಾರೆಟ್ ಚಿನ್ನದ ದರ 17,308 (+437) ರೂ., 22 ಕ್ಯಾರೆಟ್ ಚಿನ್ನದ ದರ 15,865 (+400) ರೂ. ಹೈದರಾಬಾದ್: 24 ಕ್ಯಾರೆಟ್ ಚಿನ್ನದ ದರ 17,308 (+437) ರೂ., 22 ಕ್ಯಾರೆಟ್ ಚಿನ್ನದ ದರ 15,865 (+400) ರೂ. ಜೈಪುರ: 24 ಕ್ಯಾರೆಟ್ ಚಿನ್ನದ ದರ 17,323 (+437) ರೂ., 22 ಕ್ಯಾರೆಟ್ ಚಿನ್ನದ ದರ 15,880 (+400) ರೂ. ಚಂಡೀಗಢ: 24 ಕ್ಯಾರೆಟ್ ಚಿನ್ನದ ದರ 17,323 (+437) ರೂ., 22 ಕ್ಯಾರೆಟ್ ಚಿನ್ನದ ದರ 15,880 (+400) ರೂ. ಲಕ್ನೋ: 24 ಕ್ಯಾರೆಟ್ ಚಿನ್ನದ ದರ 17,323 (+437) ರೂ., 22 ಕ್ಯಾರೆಟ್ ಚಿನ್ನದ ದರ 15,880 (+400) ರೂ.

ವಾರ್ತಾ ಭಾರತಿ 1 Mar 2026 5:45 pm

ಮಾರ್ಚ್‌ 1ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್‌, ಡೀಸೆಲ್‌ ದರ ಎಷ್ಟಿದೆ ತಿಳಿಯಿರಿ

Petrol, Diesel Price: ಪೆಟ್ರೋಲ್, ಡೀಸೆಲ್‌ ದರದಲ್ಲಿ ಜಾಸ್ತಿ ಅಲ್ಲದಿದ್ದರೂ, ಸ್ವಲ್ಪ ಪ್ರಮಾಣದಲ್ಲಾದರೂ, ಏರಿಳಿತ ಆಗುತ್ತಿರುತ್ತದೆ. ಹಾಗಾದರೆ, ಇಂದು (ಮಾರ್ಚ್‌ 1) ಬೆಂಗಳೂರು ಸೇರಿದಂತೆ ರಾಜ್ಯದ ಉಳಿದ ಜಿಲ್ಲೆಗಳಲ್ಲಿ ಲೀಟರ್‌ ಪೆಟ್ರೋಲ್‌, ಡೀಸೆಲ್‌ ಬೆಲೆ ಎಷ್ಟಿದೆ ಎನ್ನುವ ಅಂಕಿಅಂಶಗಳನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ. ಶಕ್ತಿಯ ಮೂಲಗಳು ಎನಿಸಿಕೊಂಡಿರುವ ಪೆಟ್ರೋಲ್ ಮತ್ತು ಡೀಸೆಲ್ ಇಂಧನ ಅತ್ಯವಶ್ಯಕವಾಗಿ ಬೇಕಾಗುವ ಸಂಪನ್ಮೂಲಗಳಾಗಿವೆ.

ಒನ್ ಇ೦ಡಿಯ 1 Mar 2026 5:44 pm

ಮಧ್ಯಪ್ರಾಚ್ಯ ಉದ್ವಿಗ್ನ | ಬಹರೈನ್ ಮನಾಮದಲ್ಲಿ ‘ಕ್ರೌನ್ ಪ್ಲಾಜಾ ಹೋಟೆಲ್’ ಮೇಲೆ ದಾಳಿ: ಕಟ್ಟಡಕ್ಕೆ ಹಾನಿ

ಮನಾಮ: ಬಹರೈನ್‌ ನ ರಾಜಧಾನಿ ಮನಾಮದಲ್ಲಿರುವ ‘ಕ್ರೌನ್ ಪ್ಲಾಜಾ ಹೋಟೆಲ್’ ಮೇಲೆ ನಡೆದ ದಾಳಿಯಿಂದ ಕಟ್ಟಡಕ್ಕೆ ಹಾನಿಯಾಗಿದೆ ಎಂದು ಬಹರೈನ್ ನ ಆಂತರಿಕ ಸಚಿವಾಲಯ ತಿಳಿಸಿದೆ. ದಾಳಿಯ ಪರಿಣಾಮವಾಗಿ ಹೋಟೆಲ್‌ ಆವರಣದಲ್ಲಿ ಭಾಗಶಃ ಹಾನಿ ಸಂಭವಿಸಿದೆ. ಯಾವುದೇ ಜೀವಹಾನಿ ಸಂಭವಿಸಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಸಚಿವಾಲಯದ ಪ್ರಕಟಣೆಯಂತೆ, ದಾಳಿ ನಡೆದ ತಕ್ಷಣ ತುರ್ತು ಸೇವಾ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ. ಹೋಟೆಲ್‌ನಲ್ಲಿ ತಂಗಿದ್ದ ಅತಿಥಿಗಳು ಮತ್ತು ಸಿಬ್ಬಂದಿಯನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ಸುತ್ತಮುತ್ತಲಿನ ಪ್ರದೇಶದಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದ್ದು, ತನಿಖೆ ಪ್ರಾರಂಭಿಸಲಾಗಿದೆ. ಇದಕ್ಕೂ ಮುನ್ನ, ದ್ವೀಪ ರಾಷ್ಟ್ರದಲ್ಲಿರುವ ಅಮೆರಿಕ ನೌಕಾಪಡೆಯ 5ನೇ ಫ್ಲೀಟ್ ಪ್ರಧಾನ ಕಚೇರಿಯನ್ನು ಗುರಿಯಾಗಿಸಿಕೊಂಡು ಕ್ಷಿಪಣಿ ದಾಳಿ ನಡೆದಿರುವುದಾಗಿ ಬಹ್ರೇನ್ ಹೇಳಿತ್ತು. ಆ ದಾಳಿಯ ಪರಿಣಾಮವಾಗಿ ಮನಾಮ ನಗರದ ಮೂರು ಕಟ್ಟಡಗಳು ಹಾನಿಗೊಳಗಾಗಿವೆ ಎಂದು ಸರ್ಕಾರ ಮಾಹಿತಿ ನೀಡಿದೆ.

ವಾರ್ತಾ ಭಾರತಿ 1 Mar 2026 5:41 pm

10ನೇ ತರಗತಿ, ಪಿಯುಸಿ ಪಾಸಾದವರಿಗೆ ಅಂಗನವಾಡಿ ಕೇಂದ್ರಗಳಲ್ಲಿ ಉದ್ಯೋಗವಕಾಶ

ಹುದ್ದೆಗಳಿಗೆ ಯಾವುದೇ ಲಿಖಿತ ಪರೀಕ್ಷೆ ಇರುವುದಿಲ್ಲ ಮತ್ತು ಅರ್ಜಿ ಸಲ್ಲಿಸಲು ಯಾವುದೇ ಶುಲ್ಕವೂ ಇರುವುದಿಲ್ಲ. ಆದರೆ, ಮಹಿಳಾ ಅಭ್ಯರ್ಥಿಗಳು ಮಾತ್ರ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅರ್ಹರಾಗಿದ್ದಾರೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕಲಬುರಗಿ ಜಿಲ್ಲೆಯಾದ್ಯಂತ ಖಾಲಿ ಇರುವ ಬರೋಬ್ಬರಿ 412 ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿ ಹುದ್ದೆಗಳ ಭರ್ತಿಗೆ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ. ಆಸಕ್ತರು ಈ ಮುಂದಿನ ಲಿಂಕ್ ಬಳಸಿ ಅರ್ಜಿ ಸಲ್ಲಿಸಬಹುದು: https://karnemakaone.kar.nic.in/abcd/ApplicationForm_JA_org.aspx ಈ ಹುದ್ದೆಗಳಿಗೆ ಯಾವುದೇ ಲಿಖಿತ ಪರೀಕ್ಷೆ ಇರುವುದಿಲ್ಲ ಮತ್ತು ಅರ್ಜಿ ಸಲ್ಲಿಸಲು ಯಾವುದೇ ಶುಲ್ಕವೂ ಇರುವುದಿಲ್ಲ. ಆದರೆ, ಮಹಿಳಾ ಅಭ್ಯರ್ಥಿಗಳು ಮಾತ್ರ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅರ್ಹರಾಗಿದ್ದಾರೆ. ಹತ್ತನೇ ತರಗತಿ ಮತ್ತು ಪಿಯುಸಿ ಪಾಸಾದವರು ಅರ್ಜಿ ಸಲ್ಲಿಸಬಹುದು. ಪ್ರಮುಖ ದಿನಾಂಕಗಳು * ಆನ್‌ಲೈನ್ ಅರ್ಜಿ ಆರಂಭ: 20 ಫೆಬ್ರವರಿ 2026 * ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 16 ಮಾರ್ಚ್ 2026 (ಸಂಜೆ 5.30ರೊಳಗೆ) ಸಂಕ್ಷಿಪ್ತ ವಿವರ: ನೇಮಕಾತಿ ಸಂಸ್ಥೆ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕಲಬುರಗಿ ಉದ್ಯೋಗ ಸ್ಥಳ: ಕಲಬುರಗಿ ಜಿಲ್ಲೆ, ಕರ್ನಾಟಕ ಹುದ್ದೆಯ ಹೆಸರು: ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ಹುದ್ದೆಗಳ ವಿವರ: ವಿವಿಧ ತಾಲೂಕುಗಳಲ್ಲಿ ಖಾಲಿ ಇರುವ ಹುದ್ದೆಗಳ ಹಂಚಿಕೆ ಹೀಗಿದೆ, ಅಫಜಲಪುರ: ಕಾರ್ಯಕರ್ತೆ 6, ಸಹಾಯki 35 ಆಳಂದ: ಕಾರ್ಯಕರ್ತೆ 20, ಸಹಾಯಕಿ 68 ಚಿಂಚೋಳಿ: ಕಾರ್ಯಕರ್ತೆ 10, ಸಹಾಯಕಿ 39 ಚಿತ್ತಾಪುರ: ಕಾರ್ಯಕರ್ತೆ 05, ಸಹಾಯಕಿ 29 ಜೇವರ್ಗಿ: ಕಾರ್ಯಕರ್ತೆ 19, ಸಹಾಯಕಿ 25 ಕಲಬುರಗಿ ಗ್ರಾಮೀಣ: ಕಾರ್ಯಕರ್ತೆ 13, ಸಹಾಯಕಿ 56 ಕಲಬುರಗಿ ನಗರ: ಕಾರ್ಯಕರ್ತೆ 0, ಸಹಾಯಕಿ 11 ಸೇಡಂ: ಕಾರ್ಯಕರ್ತೆ 04, ಸಹಾಯಕಿ 21 ಶಹಾಬಾದ್: ಕಾರ್ಯಕರ್ತೆ 12, ಸಹಾಯಕಿ 39 ಹುದ್ದೆಗಳು ಮತ್ತು ಶೈಕ್ಷಣಿಕ ಅರ್ಹತೆ * ಅಂಗನವಾಡಿ ಕಾರ್ಯಕರ್ತೆಯರು: ಪಿಯುಸಿ ತೇರ್ಗಡೆಯಾಗಬೇಕು. * ಅಂಗನವಾಡಿ ಸಹಾಯಕಿಯರು: 10ನೇ ತರಗತಿ ತೇರ್ಗಡೆಯಾಗಬೇಕು ವೇತನ ಶ್ರೇಣಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಸರ್ಕಾರದ ನಿಯಮಾನುಸಾರ ನಿಗದಿತ ಮಾಸಿಕ ಗೌರವ ಧನವನ್ನು ನೀಡುತ್ತಾರೆ. ವಯೋಮಿತಿ ಅರ್ಜಿ ಸಲ್ಲಿಸುವ ಅಭ್ಯರ್ಥಿಯ ವಯಸ್ಸು ಕನಿಷ್ಠ 19 ವರ್ಷಗಳು ತುಂಬಿರಬೇಕು ಮತ್ತು ಗರಿಷ್ಠ 35 ವರ್ಷಗಳ ಒಳಗಿರಬೇಕು. ಸರ್ಕಾರದ ನಿಯಮಗಳಂತೆ ವಯೋಮಿತಿ ಇರುತ್ತದೆ. ವಿಕಲಚೇತನ ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿಯಲ್ಲಿ 10 ವರ್ಷಗಳ ಸಡಿಲಿಕೆ ನೀಡಲಾಗಿದೆ.

ವಾರ್ತಾ ಭಾರತಿ 1 Mar 2026 5:37 pm

Iran War Update: ಹತ್ಯೆಯಾದ ಖಮೇನಿ ಸ್ಥಾನಕ್ಕೆ ನೇಮಕಗೊಂಡ ಅಯತೊಲ್ಲಾ ಅಲಿರೆಜಾ ಅರಾಫಿ, ಯಾರಿವರು?

Ayatollah Alireza Arafi: ಇರಾನ್ ದೇಶದ ಟೆಹರಾನ್ ಮೇಲೆ ಅಮೆರಿಕ-ಇಸ್ರೇಲ್ ಜಂಟಿಯಾಗಿ ನಡೆಸಿದ ವೈಮಾನಿಕ ದಾಳಿಯಲ್ಲಿ ಇರಾನ್ ಸರ್ವೋಚ್ಚ ನಾಯಕ ಅಲಿ ಖಮೇನಿ ಯನ್ನು ಹತ್ಯೆ ಮಾಡಲಾಯಿತು. ಅಲ್ಲದೇ ಇರಾನ್ ದೇಶದ ರಕ್ಷಣಾ ಸಚಿವರು, ಕಮಾಂಡರ್‌ ರನ್ನು ಹತ್ಯೆ ಮಾಡಲಾಗಿದೆ. ಯುದ್ಧದ ವೇಳೆ ಸರ್ವೋಚ್ಚ ನಾಯಕನ ಸಾವಿನಿಂದ ಕುಗ್ಗದ ಇರಾನ್ ಅವರ ಜಾಗಕ್ಕೆ ಹಿರಿಯ ಧರ್ಮಗುರು ಅಯತೊಲ್ಲಾ

ಒನ್ ಇ೦ಡಿಯ 1 Mar 2026 5:35 pm

ಸುಳ್ಳು ಸುದ್ದಿ ಹರಡುವವರು ದೇಶದ್ರೋಹಿಗಳು : ಬಿ. ರಮಾನಾಥ ರೈ

ಮಂಗಳೂರು, ಮಾ.1: ಸುಳ್ಳು ಸುದ್ದಿ ಹರಡಿಸುವುದು ಅಪಾಯಕಾರಿ. ಅಂಥವರು ದೇಶದ್ರೋಹಿಗಳು. ಇದರಿಂದಾಗಿ ಜನಾಂಗೀಯ ಘರ್ಷಣೆ ಉಂಟಾಗಬಹುದು. ಜನಾಂಗೀಯ ಘರ್ಷಣೆ ಯಾವುದೇ ದೇಶದಲ್ಲಿ ಉಂಟಾದರೆ ಆ ದೇಶವೂ ಅಭಿವೃದ್ಧಿ ಹೊಂದಲು ಸಾಧ್ಯವಿಲ್ಲ ಎಂದು ರಮಾನಾಥ ರೈ ಹೇಳಿದ್ದಾರೆ. ನಗರದ ಸಹೋದಯ ಸಭಾಂಗಣದಲ್ಲಿ ರವಿವಾರ, ಲೇಖಕ, ಕಾಂಗ್ರೆಸ್ ರಾಜ್ಯ ವಕ್ತಾರ ಎಂ.ಜಿ. ಹೆಗಡೆ ಅವರ ‘ಭಾರತ ಮುಸ್ಲಿಂ ರಾಷ್ಟ್ರವಾಗುವುದೇ’ ಕೃತಿ ಬಿಡುಗಡೆ ಮತ್ತು ‘ಗಾಂಧಿ ಮನೆಯ ಅವಲಕ್ಕಿ ಸರ’ ಕಾದಂಬರಿ ಪರಿಚಯ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು. ಸುಳ್ಳು ಸುದ್ದಿ, ಅಪಪ್ರಚಾರಗಳಿಗೆ ಕಡಿವಾಣ ಹಾಕುವ ಕೆಲಸವನ್ನು ಸ್ವಸ್ಥ ಸಮಾಜ ಮಾಡಬೇಕು ಸುಳ್ಳು ಸುದ್ದಿಗಳನ್ನು ಹರಡಿಸುವ ಮನೋಭಾವ ಇತ್ತೀಚಿನ ವರ್ಷಗಳಲ್ಲಿ ಹೆಚ್ಚುತ್ತಿದ್ದು, ಇದು ಜನರ ನಡುವೆ ಅಪನಂಬಿಕೆಗೆ ಕಾರಣವಾ ಗುತ್ತಿದೆ. ಇದೇ ಮುಂದೆ ಜನಾಂಗೀಯ ಘರ್ಷಣೆಗೆ ಕಾರಣವಾಗಬಹುದು. ನಮ್ಮ ದೇಶಕ್ಕೆ ಅಂತಹ ಪರಿಸ್ಥಿತಿ ಬರಬಾರದು ಎಂದು ಮಾಜಿ ಸಚಿವ ಬಿ. ರಮಾನಾಥ ರೈ ಎಚ್ಚರಿಸಿದರು. ದೇಶದಲ್ಲೀಗ 100- 110 ಕೋಟಿಯಷ್ಟು ಹಿಂದೂಗಳ ಜನಸಂಖ್ಯೆ ಇದ್ದರೆ ಉಳಿದೆಲ್ಲ ಧರ್ಮಗಳ ಜನಸಂಖ್ಯೆ ಇರುವುದು ಕೇವಲ 30 ಕೋಟಿ ಆಸುಪಾಸು. ಆದರೆ ಕೆಲವರು ಸುಳ್ಳು ಲೆಕ್ಕಾಚಾರಗಳನ್ನು ಮುಂದಿಡುತ್ತಾ ಭಾರತ ಮುಸ್ಲಿಂ ರಾಷ್ಟ್ರವಾಗಲಿದೆ ಎನ್ನುತ್ತಾರೆ. ಇಂಥ ಪರಾಕಾಷ್ಠೆಯ ಭಾವನೆಗಳು, ಸುಳ್ಳುಗಳಿಗೆ ‘ಭಾರತ ಮುಸ್ಲಿಂ ರಾಷ್ಟ್ರವಾಗುವುದೇ?’ ಎಂಬ ಪುಸ್ತಕ ಕಡಿವಾಣ ಹಾಕಲಿದೆ. ಈ ಪುಸ್ತಕವು ಭಾರತದ ಸಾಮರಸ್ಯದ, ಭಾವೈಕ್ಯತೆಯ ಪರಿಕಲ್ಪನೆಗೆ ಪೂರಕವಾಗಿದೆ ಎಂದು ಹೇಳಿದರು. ಬಿ. ರಮಾನಾಥ ರೈ ಅವರು ಎಂ.ಜಿ. ಹೆಗಡೆ ‘ಭಾರತ ಮುಸ್ಲಿಂ ರಾಷ್ಟ್ರವಾಗುವುದೇ’ ಕೃತಿ ಬಿಡುಗಡೆಗೊಳಿಸಿದರು. ಜನರ ಚಿಂತನೆ ಬದಲಾಗಲಿ: ಮಾಜಿ ಸಚಿವ ಜಯಪ್ರಕಾಶ್ ಹೆಗ್ಡೆ ಮಾತನಾಡಿ, ಕೆಲವರು ಹತ್ತತ್ತು ಮಕ್ಕಳನ್ನು ಹುಟ್ಟಿಸಿ ಎಂದು ಕರೆ ನೀಡುತ್ತಾರೆ. ಆದರೆ ಇರುವ ಮಕ್ಕಳಿಗೆ ಸರಕಾರ ಎಷ್ಟು ಉದ್ಯೋಗ ಸೃಷ್ಟಿ ಮಾಡಿದೆ? ಉದ್ಯೋಗ ನೀಡಲು ಸಾಧ್ಯವಾಗದೆ ಇರುವ ಪರಿಸ್ಥಿತಿಯಲ್ಲಿ ಜನಸಂಖ್ಯೆ ಹೆಚ್ಚಾದರೆ ಇನ್ನೆಂಥ ಪರಿಸ್ಥಿತಿ ಉಂಟಾಗಬಹುದು ಎಂದು ಪ್ರಶ್ನಿಸಿದರು. ಭಾರತದಲ್ಲಿ ಮೊಘಲರ ಕಾಲದಿಂದ ಮುಸ್ಲಿಮರ ಜನಸಂಖ್ಯೆ ಎಷ್ಟು ಏರಿಕೆಯಾಗಿದೆ ಎನ್ನುವ ಎಲ್ಲ ವಿವರಗಳು ಈ ಪುಸ್ತಕದಲ್ಲಿದೆ. ಇತಿಹಾಸವನ್ನು ಅರ್ಥ ಮಾಡಿಕೊಳ್ಳಲು ಆಗದಿದ್ದರೆ ವರ್ತಮಾನವನ್ನೂ, ಭವಿಷ್ಯವನ್ನೂ ಕಟ್ಟಲಾ ಗದು. ಈ ನಿಟ್ಟಿನಲ್ಲಿ ಜನರ ಚಿಂತನೆ ಬದಲಾವಣೆ ಆಗಬೇಕಾಗಿದೆ. ಬದಲಾವಣೆ ನಮ್ಮಿಂದಲೇ ಶುರುವಾಗಲಿ ಎಂದರು. ಸುಳ್ಳುಗಳ ವಿರುದ್ಧ ಬರೆಯೋಣ: ಕೃತಿಕಾರ ಎಂ.ಜಿ. ಹೆಗಡೆ ಮಾತನಾಡಿ, ಭಾರತದ ಜನಗಣತಿ ಪ್ರಕಾರ ಮುಸ್ಲಿಮರ ಜನಸಂಖ್ಯೆ ಇರೋದು 25 ಕೋಟಿ. ಮುಂದಿನ 25 ವರ್ಷಗಳಲ್ಲಿ ಭಾರತ ಮುಸ್ಲಿಂ ರಾಷ್ಟ್ರ ಆಗಲಿದೆ ಎಂದು ಕೆಲವರು ಹೇಳುತ್ತಾರೆ. ಅದು ಸಾಧ್ಯವಾಗಬೇಕಾದರೆ ಮುಸ್ಲಿಮರ ಜನಸಂಖ್ಯೆ 125 ಕೋಟಿ ಆಗಬೇಕು. ನೂರಾರು ವರ್ಷಗಳಲ್ಲೇ ಇದು ಸಾಧ್ಯವಾಗಿಲ್ಲ, ಕೇವಲ 25 ವರ್ಷಗಳಲ್ಲಿ ಸಾಧ್ಯವಾ? ಈ ರೀತಿಯ ಸುಳ್ಳು ನರೇಟಿವ್‌ಗಳನ್ನು ಸೃಷ್ಟಿಸುವ ಮೂಲಕ ಧರ್ಮಗಳ ನಡುವೆ ದ್ವೇಷ, ಸಂಶಯ ಹುಟ್ಟು ಹಾಕುತ್ತಿದ್ದಾರೆ. ಇದನ್ನು ನಿಲ್ಲಿಸಬೇಕಾದರೆ ನಾವೆಲ್ಲರೂ ಮಾತನಾಡ ಬೇಕು, ಬರೆಯಬೇಕು. ಇದು ಚಳವಳಿಯ ರೂಪದಲ್ಲಿ ಮುಂದುವರಿಯಬೇಕು ಎಂದು ಆಶಿಸಿದರು. ಪತ್ರಕರ್ತ, ಚಿಂತಕ ಎ.ಕೆ. ಕುಕ್ಕಿಲ ಅವರು ‘ಭಾರತ ಮುಸ್ಲಿಂ ರಾಷ್ಟ್ರವಾಗುವುದೇ?’ ಕೃತಿಯ ಕುರಿತು ಹಾಗೂ ಮಂಗಳೂರು ವಿವಿ ನಿವೃತ್ತ ಉಪಕುಲಸಚಿವ ಡಾ. ಪ್ರಭಾಕರ ನೀರುಮಾರ್ಗ ಅವರು ‘ಗಾಂಧಿ ಮನೆಯ ಅವಲಕ್ಕಿ ಸರ’ ಕಾದಂಬರಿಯ ಕುರಿತು ಮಾತನಾಡಿದರು. ಮಂಜುಳಾ ನಾಯಕ್ ಸ್ವಾಗತಿಸಿದರು. ರಹ್ಮಾನ್ ಕುಂಜತ್ತಬೈಲ್ ವಂದಿಸಿದರು.  

ವಾರ್ತಾ ಭಾರತಿ 1 Mar 2026 5:25 pm

ಇಸ್ರೇಲ್ - ಇರಾನ್ ವಾರ್ : ದುಬೈನಲ್ಲಿ ಸಿಲುಕಿದ ಸಾಫ್ಟ್‌ವೇರ್ ಕನ್ನಡಿಗ ಉದ್ಯೋಗಿ

ಇರಾನ್ - ಇಸ್ರೇಲ್ ನಡುವೆ ಯುದ್ಧ ನಡೆಯುತ್ತಿದೆ. ಮಧ್ಯಪ್ರಾಚ್ಯದಲ್ಲಿ ಬಿಕ್ಕಟ್ಟು ಶುರುವಾಗಿದೆ. ದುಬೈನಲ್ಲಿ ಬೀಳಗಿ ಪಟ್ಟಣದ ಗಿರೀಶ್ ಕೆರೂರು ಸಿಲುಕಿದ್ದಾರೆ. ಇವರು ಸಾಫ್ಟ್‌ವೇರ್ ಎಂಜಿನೀಯರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಬಾಗಲಕೋಟೆ ಜಿಲ್ಲೆಯ ಬೀಳಗಿ ನಿವಾಸಿ.

ವಿಜಯ ಕರ್ನಾಟಕ 1 Mar 2026 5:25 pm

ಶಾಲೆ ಜೀವನದ ಅತ್ಯಗತ್ಯ ಪಾಠಗಳನ್ನು ಕಲಿಸುತ್ತದೆ: ಸೋದೆ ಶ್ರೀ

ಉಡುಪಿ: ಶಾಲೆ ಎನ್ನುವುದು ಕೇವಲ ಪಠ್ಯಪುಸ್ತಕದ ಜ್ಞಾನವನ್ನಷ್ಟೇ ಅಲ್ಲದೆ, ಜೀವನದ ಅತ್ಯಗತ್ಯ ಪಾಠಗಳನ್ನು ಮತ್ತು ಸಂಸ್ಕಾರವನ್ನು ಕಲಿಸುತ್ತದೆ ಎಂದು ಸೋದೆ ಮಠಾಧೀಶ ಶ್ರೀವಿಶ್ವವಲ್ಲಭ ತೀರ್ಥ ಸ್ವಾಮೀಜಿ ಹೇಳಿದ್ದಾರೆ. ಉಡುಪಿಯ ಸೌತ್ ಶಾಲಾ ಹಳೆ ವಿದ್ಯಾರ್ಥಿ ಸಂಘ ನೂತನವಾಗಿ ವಿನ್ಯಾಸಗೊಳಿಸಲಾದ ಅಧಿಕೃತ ವೆಬ್ಸೈಟ್‌ನ್ನು ಇತ್ತೀಚೆಗೆ ಶಾಲೆಯ ನಲಂದಾ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಲೋಕಾರ್ಪಣೆಗೊಳಿಸಿ ಅವರು ಮಾತನಾಡುತಿದ್ದರು. ಡಿಡಿಪಿಐ (ಅಭಿವೃದ್ಧಿ) ಮತ್ತು ಶಾಲೆಯ ಮಾಜಿ ಮುಖ್ಯೋಪಾಧ್ಯಾಯ ಅಶೋಕ್ ಕಾಮತ್ ಮಾತನಾಡಿ, ಸರಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ದೊರೆಯುತ್ತಿರುವುದರಿಂದ ವರ್ಷದಿಂದ ವರ್ಷಕ್ಕೆ ವಿದ್ಯಾರ್ಥಿಗಳ ದಾಖಲಾತಿ ಹೆಚ್ಚುತ್ತಿರುವುದು ಹೆಮ್ಮೆಯ ವಿಷಯವಾಗಿದೆ. ಆದರೆ, ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾದಂತೆ ಮೂಲಸೌಕರ್ಯಗಳ ಅಗತ್ಯವೂ ಹೆಚ್ಚಾಗುತ್ತದೆ. ಆದ್ದರಿಂದ ಹಳೆಯ ವಿದ್ಯಾರ್ಥಿಗಳು ಶಾಲೆಯ ಅಭಿವೃದ್ಧಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು ಎಂದರು. ಇದೇ ಸಂದರ್ಭದಲ್ಲಿ ಹಳೆಯ ವಿದ್ಯಾರ್ಥಿ ಆದರ್ಶ್, ಶಾಲೆಗೆ ಕೊಡುಗೆಯಾಗಿ ನೀಡಿದ ಉನ್ನತ ಗುಣಮಟ್ಟದ ’ಅಹುಜಾ ಸೌಂಡ್ ಮಿಕ್ಸರ್’ ಅನ್ನು ಹಸ್ತಾಂತರಿಸಲಾಯಿತು. ಅಧ್ಯಕ್ಷತೆಯನ್ನು ಗಣೇಶ್ ಶೇಟ್ ವಹಿಸಿದ್ದರು. ವೇದಿಕೆಯಲ್ಲಿ ಎಸ್‌ಡಿಎಂಸಿ ಪ್ರಾಥಮಿಕ ವಿಭಾಗದ ಅಧ್ಯಕ್ಷ ಡಾ. ವಿರೂಪಾಕ್ಷ, ಎಸ್‌ಡಿಎಂಸಿ ಪ್ರೌಢಶಾಲಾ ವಿಭಾಗದ ಅಧ್ಯಕ್ಷ ರಮೇಶ್ ಹೆಗ್ಡೆ ಉಪಸ್ಥಿತರಿದ್ದರು ವೆಬ್‌ಸೈಟ್ ಅಭಿವೃದ್ಧಿಪಡಿಸಿದ ಉಡುಪಿ ವೆಬ್ ಸಲ್ಯೂಷನ್ಸ್ ತಂಡದ ಶ್ರೀನಿಧಿ ಆಚಾರ್ಯ, ರವಿಪ್ರಸಾದ್ ಮತ್ತು ಶಶಾಂಕ್ ಭಾಗವಹಿಸಿದ್ದರು. ಪ್ರಾಥಮಿಕ ವಿಭಾಗದ ಮುಖ್ಯೋಪಾಧ್ಯಾಯಿನಿ ಕುಸುಮ ಸ್ವಾಗತಿಸಿದರು. ಪ್ರೌಢಶಾಲಾ ವಿಭಾಗದ ಮುಖ್ಯೋಪಾಧ್ಯಾಯಿನಿ ಪೂರ್ಣಿಮಾ ವಂದಿಸಿದರು. ನಾಗೇಶ್ ವಿ.ಪ್ರಭು ಕಾರ್ಯಕ್ರಮ ನಿರ್ವಹಿಸಿದರು.

ವಾರ್ತಾ ಭಾರತಿ 1 Mar 2026 5:19 pm

ಜೀವನ ವಿದ್ಯಾ ಸನಿವಾಸ ಶಿಬಿರ ಸಮಾರೋಪ

ಉಡುಪಿ, ಮಾ.1: ಉಡುಪಿಯ ಯಕ್ಷಗಾನ ಕಲಾರಂಗ ಐವೈಸಿ ಸಭಾಂಗಣದಲ್ಲಿ ಆಯೋಜಿಸಲಾದ ಪ್ರಥಮ ಪಿಯುಸಿ ಮುಗಿಸಿದ ವಿದ್ಯಾಪೋಷಕ್ ವಿದ್ಯಾರ್ಥಿಗಳ ಐದು ದಿನಗಳ ಶೈಕ್ಷಣಿಕ ಸನಿವಾಸ ಶಿಬಿರ ’ಜೀವನ ವಿದ್ಯಾ’ದ ಸಮಾರೋಪ ಸಮಾರಂಭ ಶನಿವಾರ ಜರಗಿತು. ಅಧ್ಯಕ್ಷತೆ ವಹಿಸಿದ್ದ ಹರಿಕೃಷ್ಣ ಭಟ್ ಜಪಾನ್ ಮಾತನಾಡಿ, ವಿದ್ಯಾರ್ಥಿ ಗಳು ಕಠಿಣ ಪರಿಶ್ರಮದಿಂದ ಹೊಸ, ಹೊಸ ಕೌಶಲಗಳನ್ನು ಕಲಿತು ಸದಾ ಜ್ಞಾನವರ್ಧನೆ ಮಾಡಿಕೊಳ್ಳುತ್ತಿರಬೇಕು. ಉದ್ಯೋಗವಕಾಶಗಳು ಅಂಥವರನ್ನು ಹುಡುಕಿಕೊಂಡು ಬರುತ್ತವೆ. ನಾಗರಿಕ ಪ್ರಜ್ಞೆ, ಪರಿಸರ ಪ್ರೀತಿ, ಸಾಮಾಜಿಕ ಕಳಕಳಿ ಪ್ರತಿಯೊಬ್ಬರಲ್ಲಿರಬೇಕಾದ ಮೂಲಭೂತ ಸಂಗತಿಗಳಾಗಿವೆ ಎಂದು ಹೇಳಿದರು. ಅಂಬಲಪಾಡಿ ದೇವಳದ ಧರ್ಮದರ್ಶಿ ಡಾ.ನಿ.ಬೀ.ವಿಜಯ ಬಲ್ಲಾಳ ಪ್ರಮಾಣಪತ್ರ ವಿತರಣೆ ಮಾಡಿದರು. ಉದ್ಯಮಿ ಶ್ರೀಕಾಂತ ಅರಿಮಣಿತ್ತಾಯರು, ಪ್ರೊ.ಸಖಾರಾಮ ಸೋಮಯಾಜಿ, ಬಿ.ನರಹರಿ, ಪಿ.ಸತೀಶ್ ರಾವ್, ಶ್ರೀಧರ ಶೇಟ್, ಮಾರಾಳಿ ಪ್ರತಾಪ ಹೆಗ್ಡೆ ಮುಖ್ಯ ಅತಿಥಿಗಳಾಗಿದ್ದರು. ಶಿಬಿರದ ನಿರ್ದೇಶಕ ಮಂಗಳೂರಿನ ಫೋಟೋ ಅಪ್ ಸ್ಕಿಲ್‌ನ ಗುರುದತ್ತ ಬಂಟ್ವಾಳಕರ್, ಸಹನಾ ಕಿಣಿ ಹಾಗೂ ಬಳಗದವರನ್ನು ಗೌರವಿಸಲಾಯಿತು. ಉಪಾಧ್ಯಕ್ಷರಾದ ಎಸ್.ವಿ.ಭಟ್, ವಿ.ಜಿ.ಶೆಟ್ಟಿ, ವಿಶ್ವನಾಥ ಶೆಣೈ, ಯು.ಎಸ್ ರಾಜಗೋಪಾಲ ಆಚಾರ್ಯ, ಭುವನ ಪ್ರಸಾದ ಹೆಗಡೆ, ಡಾ.ಸುದರ್ಶನ ಮೂರ್ತಿ ದಂಪತಿ ಉಪಸ್ಥಿತರಿದ್ದರು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು, ವಿತರಿಸಲಾಯಿತು. ಐದು ದಿನಗಳ ಶಿಬಿರದಲ್ಲಿ ನೇಮಿಚಂದ್ರ, ಪ್ರವೀಣ ಗುಡಿ, ಡಾ.ವಿರೂಪಾಕ್ಷ ದೇವರಮನೆ, ಡಾ.ಜೆ.ಎನ್.ಭಟ್, ಪಿ.ವಾಸುದೇವ ಐತಾಳ್, ಎಸ್.ವೆಂಕಟೇಶ್, ನಂದಾ ವೆಂಕಟೇಶ್, ಡಾ.ಶಾರದಾ ಎಂ., ಬಿ.ಭಾಸ್ಕರ ರಾವ್, ಸ್ವಸ್ತಿಕ್ ಕೆ.ಜೆ., ಡಾ.ಅಪರ್ಣಾ ಶಾನುಭಾಗ್, ಡಾ.ಗೀತಾ ಸಾಮಕ್, ಡಾ. ಪಿ ಅನಂತಕೃಷ್ಣ ಭಟ್, ಜಯ ಕುಮಾರ್ ಮುದ್ರಾಡಿ, ಸಂಸ್ಕೃತಿ ಶೆಟ್ಟಿಗಾರ್, ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಸಿ, ದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು. ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರ ರಾವ್ ಸ್ವಾಗತಿಸಿದರು. ನಾರಾಯಣ ಎಂ. ಹೆಗಡೆ ವಂದಿಸಿದರು. ಕಾರ್ಯದರ್ಶಿ ಮುರಲಿ ಕಡೆಕಾರ್ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾ ಪ್ರಸಾದ, ಅಶೋಕ ಎಂ. ಸಹಕರಿಸಿದರು. ಶಿಬಿರದಲ್ಲಿ ಉಡುಪಿ ಜಿಲ್ಲೆಯ 244 ವಿದ್ಯಾರ್ಥಿಗಳು ಪಾಲ್ಗೊಂಡಿ ದ್ದರು. ಶಿಬಿರದ ನಾಲ್ಕನೇ ದಿನ ರಾತ್ರಿ ನಡೆಸಿದ ಕ್ಯಾಂಪ್ ಫೈರ್‌ನಲ್ಲಿ ಗುರು ಬನ್ನಂಜೆ ಸಂಜೀವ ಸುವರ್ಣ, ಆದ್ಯತಾ ಭಟ್ ಮತ್ತು ಬಳಗದವರಿಂದ ಸೊಗಸಾಗಿ ಯಕ್ಷಗಾನದ ತುಣುಕನ್ನು ಪ್ರಸ್ತುತ ಪಡಿಸಿ ವಿದ್ಯಾರ್ಥಿಗಳಿಗೆ ಮುದಗೊಳಿ ಸಿದರು. ಮರುದಿನ ಪೂರ್ವಾಹ್ನ ನಡೆಸಿದ ಸ್ವಚ್ಛತಾ ಅಭಿಯಾನ ವಿದ್ಯಾರ್ಥಿಗಳಿಗೆ ವಿಶೇಷ ಸ್ಫೂರ್ತಿ ನೀಡಿತು.

ವಾರ್ತಾ ಭಾರತಿ 1 Mar 2026 5:14 pm

‘ಪಯಣ’ ಚಿತ್ರಕಲೆ -ಛಾಯಾಚಿತ್ರಗಳ ಪ್ರದರ್ಶನ ಉದ್ಘಾಟನೆ

ಉಡುಪಿ : ಉಡುಪಿಯ ಗ್ಯಾಲರಿ ದೃಷ್ಠಿಯಲ್ಲಿ ಹಮ್ಮಿಕೊಳ್ಳಲಾಗಿ ರುವ ಉಡುಪಿಯ ಆರ್ಟಿಸ್ಟ್ಸ್ ಫೋರಂ ಸದಸ್ಯರ ಚಿತ್ರಕಲೆ ಮತ್ತು ಛಾಯಾಚಿತ್ರ ಕೃತಿಗಳ ಸಂಯುಕ್ತ ಪ್ರದರ್ಶನ ‘ಪಯಣ’ವನ್ನು ಮಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಪಿ.ಎಲ್.ಧರ್ಮ ಶನಿವಾರ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಕಲೆ ಸಾಂಪ್ರದಾಯಿಕವಾಗಿ ಬದುಕಿನ ಭಾಗವಾಗಿದೆ. ಹೇಳುವುದನ್ನು ಬಣ್ಣದಲ್ಲಿ ತಿಳಿಸುವುದು ಕಲಾವಿದನ ನೈಪುಣ್ಯತೆಗೆ ಸಾಕ್ಷಿಯಾಗಿದೆ. ಕಲಾಮಾಧ್ಯಮ ಗೌಪ್ಯವಾಗಿ ಸಮಾಜದ ಬೇರೆ ಬೇರೆ ರೂಪಗಳನ್ನು ತಿಳಿಸುವ ಮಾಧ್ಯಮವಾಗಿದೆ ಎಂದು ಹೇಳಿದರು. ಕಲೆಗಾರರು ಸಮಾಜದ ದೇವದೂತರು. ಅವರ ಮನಸ್ಸಿನ ಭಾವನೆ ಚಿತ್ರದಲ್ಲಿ ಅಡಕವಾಗಿರುತ್ತವೆ. ಭಾವನೆಗಳನ್ನು ವ್ಯಕ್ತಪಡಿಸಲು ಬಣ್ಣದ ಪಾತ್ರವೂ ಮಹತ್ತರವಾದುದು. ಕಲೆಗಾರರಿಂದ ಸಮಾಜದಲ್ಲಿ ಒಗ್ಗಟ್ಟು ಇದೆ. ಬಣ್ಣದಿಂದ ಒತ್ತಡ ನಿವಾರಣೆ ಸಾಧ್ಯವಿದೆ ಎಂದು ಅವರು ತಿಳಿಸಿದರು. ಮಂಗಳೂರು ಫಿಶರೀಸ್ ಕಾಲೇಜಿನ ಮಾಜಿ ಡೀನ್ ಡಾ.ಎಸ್.ಎಂ. ಶಿವಪ್ರಕಾಶ್, ಸಿವಿಲ್ ಇಂಜಿನಿಯರ್ಸ್‌ ಅಸೋಸಿಯೇಶನ್ ಅಧ್ಯಕ್ಷ ಕೆ. ರಂಜನ್, ಉಡುಪಿ ಆ್ಯತ್ಲೆಟಿಕ್ಸ್ ಅಸೋಸಿಯೇಶನ್ ಅಧ್ಯಕ್ಷ ಹರಿಪ್ರಸಾದ್ ರೈ, ಎಲುಬು ಮತ್ತು ಕೀಲು ತಜ್ಞ ಡಾ.ಕಿರಣ್ ಆಚಾರ್ಯ, ಫೊರಂ ಅಧ್ಯಕ್ಷ ರಮೇಶ್ ರಾವ್, ಕಾರ್ಯದರ್ಶಿ ಸಕು ಪಾಂಗಾಳ ಉಪಸ್ಥಿತರಿದ್ದರು. ಕಲಾಪ್ರದರ್ಶನ ಮಾ.2ರವರೆಗೆ ನಡೆಯಲಿದ್ದು, ಬೆಳಗ್ಗೆ 10ರಿಂದ ರಾತ್ರಿ 7೭ರವರೆಗೆ ಪ್ರದರ್ಶನ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ. ರಮೇಶ್ ರಾವ್, ಸಕು ಪಾಂಗಾಳ, ಲಿಯಾಕತ್ ಅಲಿ, ಕುರ್ಶಿದ್ ಯಾಕುಬ್, ಸೀತಾರಾ ರಾವ್, ಜನಾರ್ದನ ಹಾವಂಜೆ, ಜೀವನ್ ಶೆಟ್ಟಿ, ಪ್ರಸಾದ್ ರಾವ್ ಜಿ., ಮಂಜುನಾಥ ಮಯ್ಯ, ರೇಶ್ಮಾ ಶೆಟ್ಟಿ, ಶ್ರೀನಾಥ ಮಣಿಪಾಲ, ಸಪ್ನಾ ನರೋಹ್ನಾ, ಗಣೇಶ್ ಕುಕ್ಕೆಹಳ್ಳಿ, ಮೋನಪ್ಪ ಎಚ್.ಎಸ್., ಥಾಮಸ್ ಎಂ.ಜೆ., ಪವನ್ ಕುಮಾರ್ ಅತ್ತಾವರ, ಸ್ನೇಹಾ ಸುಬ್ರಹ್ಮಣ್ಯ, ಎಚ್.ಕೆ.ರಾಮಚಂದ್ರ, ಡಾ.ಕಿರಣ್ ಆಚಾರ್ಯ, ಸಂತೋಷ್ ಪೈ, ಅಭಿಷೇಕ್ ತಲ್ವಾಲ್ಕರ್, ಜಯವಂತ್, ಸತೀಶ್ಚಂದ್ರ, ರವಿ ಹಿರೆಬೆಟ್ಟು, ವಸಂತ ಹೆಬ್ರಿ, ಆಸ್ಟ್ರೋ ಮೋಹನ್, ಪ್ರವೀಣಾ ಮೋಹನ್ ಸೇರಿದಂತೆ ಒಟ್ಟು ೨೭ ಕಲಾವಿದರ ಒಟ್ಟು ೪೦ ಕಲಾಕೃತಿಗಳನ್ನು ಪ್ರದರ್ಶಿಸಲಾಗುತ್ತಿದೆ.

ವಾರ್ತಾ ಭಾರತಿ 1 Mar 2026 5:10 pm

Strike on Iran- 24 ಗಂಟೆಯಲ್ಲಿ ಏನೇನಾಯ್ತು? `ಆಪರೇಷನ್ ಎಪಿಕ್ ಫ್ಯೂರಿ'ಯ ಟೈಂಲೈನ್ ವಿಡಿಯೋ ಬಿಡುಗಡೆ ಮಾಡಿದ ಅಮೆರಿಕ ಸೇನೆ

USA- Israel Attack On Iran- ಇರಾನ್ ಮೇಲೆ ಕಳೆದೊಂದು ದಿನದಿಂದ ಅಮೆರಿಕ ಮತ್ತು ಇಸ್ರೇಲ್ ಇರಾನ್ ಮೇಲೆ ಜಂಟಿ ಕಾರ್ಯಾಚರಣೆ ನಡೆಸುತ್ತಿದ್ದು ಇರಾನ್ ನ ಹಲವು ಪ್ರಮುಖ ಸೇನಾನಾಯಕರು ಹತರಾಗಿದ್ದಾರೆಂದು ಇಸ್ರೇಲ್ ನ ರಕ್ಷಣಾ ಇಲಾಖೆ ಮಾಹಿತಿ ನೀಡಿದೆ. ಈ ಕಾರ್ಯಾಚರಣೆಗೆ Operation Epic Fury ಎಂದು ಹೆಸರಿಡಲಾಗಿದೆ. ಏತನ್ಮಧ್ಯೆ ಅಮೆರಿಕದ ರಕ್ಷಣಾ ಪಡೆಗಳಲ್ಲಿ ಒಂದಾಗಿರುವ us central command(CENTCOM ) ಇದೀಗ 24 ಗಂಟೆಗಳ ಘಟನಾವಳಿಗಳ ವಿಡಿಯೋವನ್ನು ಬಿಡುಗಡೆ ಮಾಡಿದೆ.

ವಿಜಯ ಕರ್ನಾಟಕ 1 Mar 2026 4:53 pm

ಖಮೇನಿ ಹತ್ಯೆ ಬೆನ್ನಲ್ಲೇ ಇರಾನ್‌ ಮಧ್ಯಂತರ ಸುಪ್ರೀಂ ಲೀಡರ್‌ ಆಗಿ ಅಲಿರೆಜಾ ಅರಾಫಿ ಆಯ್ಕೆ; ಯಾರೀತಾ, ಈತನೇ ಖಾಯಂ ಸರ್ವೋಚ್ಚ ನಾಯಕನಾ?

ಅಮೆರಿಕಾ-ಇಸ್ರೇಲ್‌ ನಡೆಸಿದ ಜಂಟಿ ದಾಳಿಯಲ್ಲಿ ಇರಾನ್‌ ನ ಸುಪ್ರೀಂ ಲೀಡರ್‌ ಆಯತೊಲ್ಲಾ ಅಲಿ ಖಮೇನಿ ಸಾವನ್ನಪ್ಪಿದ್ದ ಬಳಿಕ ಇರಾನ್‌ ನ ಮುಂದಿನ ಪರಿಸ್ಥಿತಿ ಏನು? ಇರಾನ್‌ ಅನ್ನು ಈ ಸಮಯದಲ್ಲಿ ಮುನ್ನಡೆಸುವವರು ಯಾರು ಎಂಬ ಹಲವು ಪ್ರಶ್ನೆಗಳು ಉದ್ಬವಿಸಿದ್ದವು. ಸದ್ಯ ಇದಕ್ಕೆಲ್ಲಾ ಉತ್ತರ ಸಿಕ್ಕಿದ್ದು, ಖಮೇನಿ ಆಪ್ತ ಹಾಗೂ ಇರಾನ್ ಹಿರಿಯ ಧರ್ಮಗುರುಗಳಲ್ಲಿ ಒಬ್ಬರಾಗಿರುವ ಅಯತೊಲ್ಲಾ ಅಲಿರೆಜಾ ಅರಾಫಿ ಇರಾನ್‌ ನ ಮಧ್ಯಂತರ ಸುಪ್ರೀಂ ಲೀಡರ್‌ ಆಯ್ಕೆಯಾಗಿದ್ದಾರೆ. ಹಾಗದ್ರೆ, ಯಾರೀ ಅಲಿರೆಜಾ ಅರಾಫಿ? ಈತನೇ ಇರಾನ್‌ ಅನ್ನು ಶಾಶ್ವತವಾಗಿ ಮುನ್ನಡೆಸುತ್ತಾನಾ? ಎಂಬುದರ ಕುರಿತು ಮಾಹಿತಿ ಇಲ್ಲಿದೆ...

ವಿಜಯ ಕರ್ನಾಟಕ 1 Mar 2026 4:38 pm

ದುಬೈನಲ್ಲಿ ಬಳ್ಳಾರಿಯ 32 ಮಂದಿ ಅತಂತ್ರ: ಮರಳಿ ಕರೆತರಲು, ಸಹಾಯವಾಣಿ ಆರಂಭಿಸಲು ಸಿದ್ದರಾಮಯ್ಯ ಸೂಚನೆ

ಬೆಂಗಳೂರು: ಇರಾನ್-ಇಸ್ರೇಲ್ ಮಧ್ಯ ಸಂಭವಿಸಿದ ಯುದ್ಧವು ಕೇವಲ ಆ ದೇಶಗಳಿಗೆ ಮಾತ್ರವೇ ತೊಂದರೆ ಆಗಿಲ್ಲ. ಅದರಲ್ಲಿ ಜಾಗತಿಕವಾಗಿ ಇತರ ದೇಶಗಳ ಮೇಲೂ ಪರಿಣಾಮ ಬೀರುತ್ತಿದೆ. ಕನ್ನಡಿಗರು ಸೇರಿ ಭಾರತದ ಅನೇಕ ಪ್ರಜೆಗಳು ದುಬೈನಲ್ಲಿ ಸಿಲುಕಿದ್ದಾರೆ. ಅವರ ರಕ್ಷಣೆಗಾಗಿ ಆಗ್ರಹಗಳು ಜೋರಾಗಿವೆ. ಇದಕ್ಕೆ ಪ್ರತಿಕ್ರಿಯಿಸಿರುವ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಸ್ರೇಲ್ - ಇರಾನ್ ನಡುವಿನ ಉದ್ವಿಗ್ನ ಪರಿಸ್ಥಿತಿಯಿಂದಾಗಿ

ಒನ್ ಇ೦ಡಿಯ 1 Mar 2026 4:34 pm

ಅಬೂಬಕರ್ ಹಾಜಿ (ಕನ್ನಡ ನಾಡು) ನಿಧನ

ಸುರತ್ಕಲ್ : ಸಾಮಾಜಿಕ, ರಾಜಕೀಯ, ಧಾರ್ಮಿಕ ಕ್ಷೇತ್ರಗಳ ಮುತ್ಸದ್ಧಿ ಕೃಷ್ಣಾಪುರ ನಿವಾಸಿ ಅಬೂಬಕರ್ ಹಾಜಿ (ಕನ್ನಡ ನಾಡು) ಅಲ್ಪ ಕಾಲದ ಅಸೌಖ್ಯದಿಂದಾಗಿ ಇಂದು ರವಿವಾರ ಮಧ್ಯಾಹ್ನ 2ಗಂಟೆಗೆ ತಮ್ಮ ಸ್ವಗೃಹದಲ್ಲಿ ನಿಧನರಾದರು. ಇವರು ಸಮಾಜಿಕ, ರಾಜಕೀಯ ಹಾಗೂ ಧಾರ್ಮಿಕ ಕ್ಷೇತ್ರದಲ್ಲಿ ಎಲ್ಲರಿಗೂ ಚಿರಪರಿಚಿತರಾಗಿದ್ದು, ಕೃಷ್ಣಾಪುರ ಬದ್ರುಲ್ ಹುದಾ ಜುಮಾ ಮಸೀದಿಯ ಮಾಜಿ ಅಧ್ಯಕ್ಷರಾಗಿದ್ದರು. ಅಲ್ಲದೆ, ಕನ್ನಡ ನಾಡು ಪಕ್ಷದಲ್ಲಿ ಮಂಗಳೂರು ಉತ್ತರದಿಂದ ಕೃಷ್ಣ ಜೆ. ಪಾಲೆಮಾರ್ ವಿರುದ್ಧ ಚುನಾವಣೆಯಲ್ಲೂ ಸ್ಪರ್ಧಿಸಿದ್ದರು. ಇವರು ಫೈಝಲ್ ಮತ್ತು ನೌಫಲ್ ಸೇರಿದಂತೆ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ. ರವಿವಾರ ಮಗ್ರಿಬ್ ನಮಾಝಿಗೆ ಮುಂಚಿತವಾಗಿ ಕೃಷ್ಣಾಪುರ ಈದ್ಗಾ ಕಬರ್ ಸ್ತಾನದಲ್ಲಿ ಅಂತ್ಯ ಕ್ರಿಯೆ ನಡೆಯಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

ವಾರ್ತಾ ಭಾರತಿ 1 Mar 2026 4:12 pm

ಆಯತುಲ್ಲಾ ಅಲಿ ಖಾಮಿನೈ ಹತ್ಯೆ; ಇರಾನಿನ ನಾಯಕತ್ವ ಮಂಡಳಿಗೆ ಅಲಿರೆಝಾ ಅರಾಫಿ ನೇಮಕ

ಟೆಹ್ರಾನ್: ಇರಾನ್ ನಲ್ಲಿ ಸರ್ವೋಚ್ಚ ನಾಯಕತ್ವಕ್ಕೆ ಸಂಬಂಧಿತ ಅನಿಶ್ಚಿತತೆ ಮುಂದುವರಿದಿರುವ ನಡುವೆಯೇ, ಗಾರ್ಡಿಯನ್ ಕೌನ್ಸಿಲ್‌ನ ಪ್ರಭಾವಿ ಧರ್ಮಗುರು ಅಲಿರೆಝಾ ಅರಾಫಿ ಅವರನ್ನು ತಾತ್ಕಾಲಿಕ ನಾಯಕತ್ವ ಮಂಡಳಿಗೆ ನೇಮಿಸಲಾಗಿದೆ. ತಜ್ಞರ ಸಭೆ ಹೊಸ ಸರ್ವೋಚ್ಚ ನಾಯಕನನ್ನು ಆಯ್ಕೆ ಮಾಡುವವರೆಗೆ, ಸರ್ವೋಚ್ಚ ನಾಯಕನ ಸಂವಿಧಾನಾತ್ಮಕ ಕರ್ತವ್ಯಗಳನ್ನು ಈ ಮೂವರು ಸದಸ್ಯರ ಮಂಡಳಿ ನಿರ್ವಹಿಸಲಿದೆ ಎಂದು Aljazeera ವರದಿ ಮಾಡಿದೆ. 67 ವರ್ಷದ ಅರಾಫಿ ಅವರು ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಮತ್ತು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಘೋಲಾಮ್-ಹೊಸೇನ್ ಮೊಹ್ಸೆನಿ-ಎಜೇಯ್ ಅವರೊಂದಿಗೆ ತಾತ್ಕಾಲಿಕ ಮಂಡಳಿಯಲ್ಲಿ ಸ್ಥಾನ ಪಡೆದಿದ್ದಾರೆ. ಸಂವಿಧಾನದಲ್ಲಿ ನಿಗದಿಪಡಿಸಿದ ಪ್ರಕ್ರಿಯೆಯಂತೆ, ಹೊಸ ಸರ್ವೋಚ್ಚ ನಾಯಕನ ಆಯ್ಕೆ ಪೂರ್ಣಗೊಳ್ಳುವವರೆಗೆ ಆಡಳಿತದ ನಿರಂತರತೆಯನ್ನು ಕಾಪಾಡುವುದು ಈ ಮಂಡಳಿಯ ಹೊಣೆಗಾರಿಕೆಯಾಗಿದೆ. ಅರಾಫಿ ಅವರು ಗಾರ್ಡಿಯನ್ ಕೌನ್ಸಿಲ್‌ನ ಸದಸ್ಯರಾಗಿರುವುದರ ಜೊತೆಗೆ, ಪ್ರಭಾವಿ ಮಧ್ಯಸ್ಥಿಕೆ ಸಂಸ್ಥೆಯಾದ ಎಕ್ಸ್ಪೆಡಿಯೆನ್ಸಿ ಕೌನ್ಸಿಲ್‌ನಲ್ಲಿಯೂ ಪ್ರಮುಖ ಪಾತ್ರವಹಿಸಿದ್ದಾರೆ.  ಇದರೊಂದಿಗೆ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಮತ್ತು ಭದ್ರತಾ ವಲಯದ ಒಳಸಮೀಕರಣಗಳೂ ಮಹತ್ವ ಪಡೆದಿವೆ. ಭದ್ರತಾ ವ್ಯವಸ್ಥೆಯಲ್ಲಿ ಪ್ರಭಾವಿ ಸ್ಥಾನ ಹೊಂದಿರುವ ಅಲಿ ಲಾರಿಜಾನಿ ಮುಂದಿನ ರಾಜಕೀಯ ಬೆಳವಣಿಗೆಗಳಲ್ಲಿ ಪ್ರಮುಖ ಪಾತ್ರವಹಿಸುವ ಸಾಧ್ಯತೆ ಇದೆ ಎಂದು ವಿಶ್ಲೇಷಕರು ಅಭಿಪ್ರಾಯಪಡುತ್ತಿದ್ದಾರೆ. ಆದರೆ ಅಧಿಕಾರದ ನಿಜವಾದ ಸಮತೋಲನ ಯಾವ ದಿಕ್ಕಿನಲ್ಲಿ ಸಾಗಲಿದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಈ ಸಂದರ್ಭದಲ್ಲಿ, IRGCನ ಕಮಾಂಡರ್-ಇನ್-ಚೀಫ್ ಒಂದು ವರ್ಷಕ್ಕಿಂತ ಕಡಿಮೆ ಅವಧಿಯಲ್ಲಿ ಎರಡನೇ ಬಾರಿ ಹತ್ಯೆಗೀಡಾಗಿರುವುದು ದೇಶದ ಭದ್ರತಾ ವ್ಯವಸ್ಥೆಯಲ್ಲಿ ಆತಂಕ ಸೃಷ್ಟಿಸಿದೆ. ಮಿಲಿಟರಿ ಹಾಗೂ ಆರ್ಥಿಕವಾಗಿ ಪ್ರಭಾವಿ ಶಕ್ತಿಯಾಗಿರುವ ಈ ಪಡೆಯ ಮುಂದಿನ ನಾಯಕನ ಹೆಸರು ಇನ್ನೂ ಪ್ರಕಟವಾಗಿಲ್ಲ. IRGCಗೆ ಸಂಬಂಧಿಸಿದ ಟೆಲಿಗ್ರಾಮ್ ಚಾನೆಲ್‌ಗಳ ಪ್ರಕಾರ, ಎರಡು ತಿಂಗಳ ಹಿಂದೆ ಖಾಮಿನೈ ನೇಮಕ ಮಾಡಿದ್ದ ಉಪ ಮುಖ್ಯಸ್ಥ ಅಹ್ಮದ್ ವಾಹಿದಿ ಅವರನ್ನು ಸಂಭಾವ್ಯ ಅಭ್ಯರ್ಥಿಯಾಗಿ ಪರಿಗಣಿಸಲಾಗುತ್ತಿದೆ. ಆದರೆ ಈ ಕುರಿತು ಅಧಿಕೃತ ಘೋಷಣೆ ಇನ್ನಷ್ಟೇ ಹೊರಬರಬೇಕಿದೆ.

ವಾರ್ತಾ ಭಾರತಿ 1 Mar 2026 4:09 pm

ಖಮೇನಿ ಉತ್ತರಾಧಿಕಾರಿ ಬಗ್ಗೆ ಚರ್ಚೆ ಶುರು; ಆಯ್ಕೆ ಪ್ರಕ್ರಿಯೆ ಹೀಗಿರುತ್ತದೆ

ಅಮೆರಿಕ-ಇಸ್ರೇಲ್‌ ನಡೆಸಿರುವ ಜಂಟಿ ದಾಳಿಯಲ್ಲಿಇರಾನ್‌ ಪರಮೋಚ್ಚ ನಾಯಕ ಆಯತೊಲ್ಲಾಅಲಿ ಖಮೇನಿ, ಅವರ ಅಳಿಯ, ಸೊಸೆ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಒಟ್ಟಾರೆ ಸಂಘರ್ಷದಲ್ಲಿ82 ಮಕ್ಕಳು ಸೇರಿದಂತೆ 201 ಮಂದಿ ಸಾವಿಗೀಡಾಗಿದ್ದಾರೆ. 747ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಇದೀಗ ಮುಂದಿನ ಉತ್ತರಾಧಿಕಾರಿ ಬಗ್ಗೆ ಚರ್ಚೆ ಶುರುವಾಗಿದೆ.

ವಿಜಯ ಕರ್ನಾಟಕ 1 Mar 2026 4:06 pm

ರಿಯಾದ್ ನಲ್ಲಿ ಭಾರೀ ಸ್ಫೋಟಗಳ ಶಬ್ದ; ಆಕಾಶದಲ್ಲಿ ದಟ್ಟ ಹೊಗೆ: ವರದಿ

ರಿಯಾದ್: ಸೌದಿ ಅರೇಬಿಯಾದ ರಾಜಧಾನಿ ರಿಯಾದ್ ನಗರದ ಪೂರ್ವ ಭಾಗದಲ್ಲಿ ಭಾರೀ ಸ್ಫೋಟಗಳ ಶಬ್ದಗಳು ಕೇಳಿಬಂದಿರುವುದಾಗಿ ಅಂತರರಾಷ್ಟ್ರೀಯ ಸುದ್ದಿ ಸಂಸ್ಥೆಗಳು ವರದಿ ಮಾಡಿವೆ. ಪೂರ್ವ ರಿಯಾದ್ ನ ನಿವಾಸಿಗಳ ಪ್ರಕಾರ, ಒಂದರ ಹಿಂದೆ ಒಂದಾಗಿ ಹಲವು ದೊಡ್ಡ ಸ್ಫೋಟಗಳು ಸಂಭವಿಸಿದ್ದು, ಅದರ ನಂತರ ಆಕಾಶದಲ್ಲಿ ದಟ್ಟ ಹೊಗೆ ಆವರಿಸಿರುವುದು ಗೋಚರಿಸಿದೆ. ಎಎಫ್‌ಪಿ ವರದಿ ಪ್ರಕಾರ, ಅಲ್ಲಿನ ವರದಿಗಾರರೂ ಸ್ಫೋಟಗಳ ಶಬ್ದವನ್ನು ನೇರವಾಗಿ ಕೇಳಿದ್ದಾರೆ ಎಂದು ತಿಳಿದು ಬಂದಿದೆ ಎಂದು Aljazeera ವರದಿ ಮಾಡಿದೆ. ಘಟನೆಯ ಸ್ವರೂಪ, ಸ್ಫೋಟಗಳ ಕಾರಣ ಹಾಗೂ ಸಂಭವನೀಯ ಹಾನಿಯ ಬಗ್ಗೆ ಅಧಿಕಾರಿಗಳಿಂದ ಇನ್ನೂ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಭದ್ರತಾ ಸಂಸ್ಥೆಗಳು ಎಚ್ಚರಿಕೆಯಲ್ಲಿ ಇದ್ದು, ಪರಿಸ್ಥಿತಿಯನ್ನು ಸಮೀಪದಿಂದಲೇ ಮೇಲ್ವಿಚಾರಣೆ ಮಾಡಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ. ಈ ಬೆಳವಣಿಗೆ ಮಧ್ಯಪ್ರಾಚ್ಯದಲ್ಲಿ ಈಗಾಗಲೇ ಹೆಚ್ಚುತ್ತಿರುವ ಉದ್ವಿಗ್ನತೆಯನ್ನು ಮತ್ತಷ್ಟು ಗಂಭೀರಗೊಳಿಸಿದೆ.

ವಾರ್ತಾ ಭಾರತಿ 1 Mar 2026 3:52 pm

Israel Attack Iran- ದುಬೈನಲ್ಲಿ ಸಿಲುಕಿರುವ ಕನ್ನಡಿಗರಿಗೆ ತವರಿಗೆ ಮರಳಲು ವ್ಯವಸ್ಥೆ: ಸಿಎಂ ಸಿದ್ದರಾಮಯ್ಯ ಭರವಸೆ

CM Siddaramaiah Video Call With SIddaramaiah- ಮಧ್ಯಪ್ರಾಚ್ಯದಲ್ಲಿ ಆಗಿರುವ ಹಠಾತ್ ಬೆಳವಣಿಗೆಯಿಂದಾಗಿ ಕಳೆದೊಂದು ದಿನದಿಂದ ವಿಮಾನ ಸೇವೆಯಲ್ಲಿ ಬಹಳಷ್ಟು ವ್ಯತ್ಯಾಸವಾಗಿವೆ. ಭಾರತದಿಂದ ಕೊಲ್ಲಿ ರಾಷ್ಟ್ರಗಳಿಗೆ ತೆರಳಬೇಕಿದ್ದ ಪ್ರಯಾಣಿಕರು, ಮಂಗಳೂರು ಮತ್ತು ಬೆಂಗಳೂರು ವಿಮಾನ ನಿಲ್ದಾಣಗಳಲ್ಲಿ ಬಾಕಿಯಾಗಿದ್ದಾರೆ. ಅದೇ ರೀತಿ ತವರಿಗೆ ಮರಳಬೇಕಾಗಿರುವ ಕರ್ನಾಟಕದ ಪ್ರಯಾಣಿಕರು ದುಬೈ ವಿಮಾನ ನಿಲ್ದಾಣದಲ್ಲಿ ಸಿಲುಕಿಕೊಂಡಿದ್ದಾರೆ. ಈ ಬಗ್ಗೆ ವಿಡಿಯೋ ಕಾಲ್ ಮಾಡಿ ಮಾತನಾಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಡಿಯೋ ಕಾಲ್ ನಲ್ಲಿ ಮಾತನಾಡಿದ್ದಾರೆ.

ವಿಜಯ ಕರ್ನಾಟಕ 1 Mar 2026 3:48 pm

ಅರಬ್ ದೇಶಗಳಲ್ಲಿ ಸಿಲುಕಿರುವ ಕನ್ನಡಿಗರನ್ನು ಸುರಕ್ಷಿತವಾಗಿ ಕರೆತರುವ ಬಗ್ಗೆ ಸಿಎಂ ಸಿದ್ದರಾಮಯ್ಯ ಮಹತ್ವದ ಮಾಹಿತಿ

ಶಿವಮೊಗ್ಗ, ಮಾರ್ಚ್‌ 1: ಜಾಗತಿಕ ಮಟ್ಟದಲ್ಲಿ ಉಂಟಾಗಿರುವ ಯುದ್ಧದ ಭೀತಿಯ ಬಗ್ಗೆ ಶಿವಮೊಗ್ಗದಲ್ಲಿ ಪ್ರತಿಕ್ರಿಯಿಸಿದ ಸಿಎಂ ಸಿದ್ದರಾಮಯ್ಯ, ಇರಾನ್ ಮೇಲಿನ ಅಮೆರಿಕ-ಇಸ್ರೇಲ್ ದಾಳಿಯನ್ನು ಕಟುವಾಗಿ ಟೀಕಿಸಿದರು. ಶಾಂತಿ ಮಂತ್ರ ಪಠಿಸುತ್ತಲೇ ಯುದ್ಧಕ್ಕೆ ಪ್ರಚೋದನೆ ನೀಡುವ ಅಮೆರಿಕದ ದ್ವಂದ್ವ ನಿಲುವಿನ ವಿರುದ್ಧ ಆಕ್ರೋಶ ಹೊರಹಾಕಿದರು. ಇದೇ ವೇಳೆ ವಿದೇಶದಲ್ಲಿರುವ ಕನ್ನಡಿಗರ ಸುರಕ್ಷತೆಯ ಬಗ್ಗೆಯೂ ಮಹತ್ವದ ಮಾಹಿತಿ ಹಂಚಿಕೊಂಡರು. ಸಿಎಂ

ಒನ್ ಇ೦ಡಿಯ 1 Mar 2026 3:42 pm

ವಿಜಯನಗರ | ಯುವಕರು ಮಾದಕ ವಸ್ತುಗಳಿಂದ ದೂರವಿರಬೇಕು : ಎಸ್ಪಿ ಜಾಹ್ನವಿ

ಪೊಲೀಸ್ ಇಲಾಖೆ ವತಿಯಿಂದ ಮ್ಯಾರಥಾನ್

ವಾರ್ತಾ ಭಾರತಿ 1 Mar 2026 3:39 pm

50 ವರ್ಷಗಳ ಸಕ್ರಿಯ ರಾಜಕಾರಣ ಪೂರ್ಣ ; ಬಿಎಸ್‌ವೈ ಅಭಿನಂದನೆಗೆ ಚಿತ್ರದುರ್ಗದಲ್ಲಿ ಸಿದ್ಧತೆ

ರೈತಪರ ಹೋರಾಟಗಾರ ಮಾಜಿ ಸಿಎಂ ಬಿ.ಎಸ್‌. ಯಡಿಯೂರಪ್ಪ ಅವರು ಸುದೀರ್ಘ 50 ವರ್ಷಗಳ ಸಕ್ರಿಯ ರಾಜಕಾರಣ ಪೂರ್ಣಗೊಳಿಸಿದ್ದಾರೆ. ಅವರನ್ನು ಅದ್ಧೂರಿಯಾಗಿ ಸನ್ಮಾನಿಸಲು ಮೇ ತಿಂಗಳಲ್ಲಿ ಸಮಾರಂಭ ಆಯೋಜಿಸಲು ಸಿದ್ಧತೆ ಶುರುವಾಗಿದೆ. ರಾಜ್ಯದ ಎಲ್ಲ ಜಿಲ್ಲೆಗಳಿಂದ 10 ಲಕ್ಷಕ್ಕೂ ಹೆಚ್ಚು ಮಂದಿ ಸೇರಿಸುವ ನಿರೀಕ್ಷೆ ಇದೆ.

ವಿಜಯ ಕರ್ನಾಟಕ 1 Mar 2026 3:24 pm

ಫೆ.28 ಇರಾನ್ ಮೇಲೆ ದಾಳಿ ಖಚಿತ.. ʼGrok AIʼ ಭವಿಷ್ಯವಾಣಿ ನಿಜ! ಪೋಸ್ಟ್‌ ವೈರಲ್‌, ಎಲಾನ್‌ ಮಸ್ಕ್‌ ಹೇಳಿದ್ದೇನು?

ಇರಾನ್‌ ಮೇಲೆ ಇಸ್ರೇಲ್‌ ಹಾಗೂ ಅಮೆರಿಕಾ ದಾಳಿ ನಡೆಸಿದ್ದ ಇರಾನ್‌ ಸುಪ್ರೀಂ ಲೀಡರ್‌ ಖಮೇನಿ ಸೇರಿದಂತೆ 40ಕ್ಕೂ ಅಧಿಕ ಉನ್ನತ ನಾಯಕರು ಸಾವನ್ನಪ್ಪಿದ್ದಾರೆ. ಈ ಸುದ್ದಿ ಈಗಾಗಲೇ ಸಾಕಷ್ಟು ಸುದ್ದಿ ಮಾಡುತ್ತಿದ್ದು, ಈ ನಡುವೆ ಎಲನ್‌ ಮಸ್ಕ್‌ ಒಡೆತನದ xAI ಚಾಟ್‌ ಬಾಟ್‌ ಗ್ರೋಕ್‌ ಇರಾನ್‌ ಮೇಲೆ ಸ್ರೇಲ್‌ ಹಾಗೂ ಅಮೆರಿಕಾ ದಾಳಿ ನಡೆಸುವ ದಿನಾಂಕವನ್ನು ಇದಕ್ಕೂ ಮೊದಲೇ ನಿಖರವಾಗಿ ಊಹಿಸಿದ್ದು, ಇದಕ್ಕೆ ಪುರಾವೆಗಳನ್ನು ಸಹ ನೀಡಿದೆ ಎಂಬ ಪೋಸ್ಟ್‌ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ. ಅಲ್ಲದೆ, ಗ್ರೋಕ್‌ ನ ಈ ಭವಿಷ್ಯವಾಣಿಯನ್ನು ದಿ ಜೆರುಸಲೇಂ ಪೋಸ್ಟ್‌ ಸುದ್ದಿ ಸಂಸ್ಥೆ ದಾಳಿಗೂ ಮೂರು ದಿನ ಮೊದಲೇ ಅಂದರೆ ಫೆ.25ರಂದೇ ಪ್ರಕಟಮಾಡಿದೆ. ಇನ್ನು, ಇದಕ್ಕೆ ಎಲಾನ್‌ ಮಸ್ಕ್‌ ಪ್ರತಿಕ್ರಿಯೆ ನೀಡಿದ್ದಾರೆ. ಹಾಗಾದ್ರೆ, ಮಸ್ಕ್‌ ಈ ಬಗ್ಗೆ ಹೇಳಿದ್ದೇನು? ಗ್ರೋಕ್‌ ಈ ದಾಳಿ ಬಗ್ಗೆ ಅಷ್ಟು ನಿಖರವಾಗಿ ಊಹಿಸಿದ್ದೇಗೆ ಎಂದು ನೋಡೋಣ ಬನ್ನಿ..

ವಿಜಯ ಕರ್ನಾಟಕ 1 Mar 2026 3:09 pm

ವಯನಾಡ್ ಭೂಕುಸಿತದ ಸಂತ್ರಸ್ತರಿಗೆ 51 ಮನೆಗಳನ್ನು ಹಸ್ತಾಂತರಿಸಿದ IUML

ಕೋಯಿಕ್ಕೋಡ್: ವಯನಾಡ್ ನ ಮುಂಡಕ್ಕೈ-ಚೂರಲ್ಮಾಲದಲ್ಲಿ ಸಂಭವಿಸಿದ್ದ ಭೂಕುಸಿತದಿಂದ ಮನೆ ಕಳೆದುಕೊಂಡಿದ್ದ ಕುಟುಂಬಗಳಿಗೆ ಪುನರ್ವಸತಿ ಕಲ್ಪಿಸಲು ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ 51 ಮನೆಗಳನ್ನು ಹಸ್ತಾಂತರಿಸಿತು. ಶನಿವಾರ ತ್ರಿಕ್ಕೈಪಟ್ಟದಲ್ಲಿನ ಯೋಜನಾ ಸ್ಥಳದಲ್ಲಿ ಆಯ್ದ ಫಲಾನುಭವಿಗಳಿಗೆ ಮನೆಗಳ ಬೀಗದ ಕೈ ಹಾಗೂ ದಾಖಲೆಗಳನ್ನು ಐಯುಎಂಎಲ್ ರಾಜ್ಯಾಧ್ಯಕ್ಷ ಪಾನಕ್ಕಾಡ್ ಸಯ್ಯದ್ ಸಾದಿಕ್ ಅಲಿ ಶಿಹಾಬ್ ತಂಙಳ್‌ ಹಸ್ತಾಂತರಿಸಿದರು. ಬಳಿಕ ಮಾತನಾಡಿದ ತಂಙಳ್, ಈ ಯೋಜನೆಯು ಸಾಮೂಹಿಕ ಪರಿಶ್ರಮ ಮತ್ತು ಬದ್ಧತೆಯ ಪ್ರತೀಕವಾಗಿದೆ ಎಂದು ಹೇಳಿದರು. ಈ ದುರಂತದಲ್ಲಿ ತೊಂದರೆಗೀಡಾದ ಕುಟುಂಬಗಳಿಗೆ ನೆರವು ಒದಗಿಸಲು ಜನರು ತೋರಿದ ಒಗ್ಗಟ್ಟನ್ನು ಅವರು ಇದೇ ಸಂದರ್ಭದಲ್ಲಿ ಶ್ಲಾಘಿಸಿದರು. ಈ ಯೋಜನೆಗೆ ಸ್ನೇಹ ಭವನಂ ಎಂಬ ಹೆಸರು ಇಡುವ ಮೂಲಕ ಜಾತಿ ಮತ್ತು ಧರ್ಮಕ್ಕಿಂತ ಮಾನವೀಯತೆ ದೊಡ್ಡದು ಎಂಬ ಸಂದೇಶವನ್ನು ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ರವಾನಿಸಿದೆ ಎಂದೂ ಅವರು ತಿಳಿಸಿದರು. ಮೊದಲ ಹಂತದಲ್ಲಿ ಮಂಜೂರು ಮಾಡಲಾಗಿರುವ 51 ಮನೆಗಳ ಪೈಕಿ 14 ಮನೆಗಳನ್ನು ಹಿಂದೂ ಕುಟುಂಬಗಳಿಗೆ ಮಂಜೂರು ಮಾಡಲಾಗಿದ್ದು, ಯಾವುದೇ ಡ್ರಾ ಇಲ್ಲದೆ ಆದ್ಯತೆಯ ಮೇರೆಗೆ ಅವರಿಗೆ ಮನೆಗಳನ್ನು ಮಂಜೂರು ಮಾಡಲಾಗಿದೆ. ಯೋಜನೆಯ ಮೊದಲ ಹಂತದಲ್ಲೇ ಈ ಅರ್ಜಿದಾರರಿಗೆ ಮನೆಗಳನ್ನು ಮಂಜೂರು ಮಾಡುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿತ್ತು. ಉಳಿದ 37 ಫಲಾನುಭವಿಗಳು ಮುಸ್ಲಿಂ ಸಮುದಾಯಕ್ಕೆ ಸೇರಿದ್ದು, ಅವರನ್ನೆಲ್ಲ ಡ್ರಾ ಮೂಲಕ ಆಯ್ಕೆ ಮಾಡಲಾಗಿದೆ. ಈ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ವಯನಾಡ್ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ, “ವಯನಾಡ್ ಭೂಕುಸಿತ ದುರಂತದ ಸಂತ್ರಸ್ತರಿಗೆ ಬೆಂಬಲ ಮತ್ತು ಅಗತ್ಯ ನೆರವು ಒದಗಿಸುವುದಾಗಿ ನೀಡಿದ್ದ ಭರವಸೆಯನ್ನು ಪೂರೈಸಿರುವ ಎಲ್ಲ ಪಕ್ಷಗಳ ಬಗೆಗೂ ನನಗೆ ಹೆಮ್ಮೆಯಿದೆ” ಎಂದು ಹೇಳಿದ್ದಾರೆ. 

ವಾರ್ತಾ ಭಾರತಿ 1 Mar 2026 2:59 pm

Oman ಕರಾವಳಿಯಲ್ಲಿ ತೈಲ ಟ್ಯಾಂಕರ್ ಮೇಲೆ ದಾಳಿ; ನಾಲ್ವರಿಗೆ ಗಾಯ

ಮಸ್ಕತ್: ಅರೇಬಿಯನ್ ಸಮುದ್ರ ತೀರದಲ್ಲಿ ಉದ್ವಿಗ್ನತೆ ಹೆಚ್ಚುತ್ತಿರುವ ಸಂದರ್ಭದಲ್ಲಿ ಒಮಾನ್ ಕರಾವಳಿಯ ಸಮೀಪ ಪಲಾವ್(Palau) ಧ್ವಜ ಹೊತ್ತ ‘ಸ್ಕೈಲೈಟ್’ ತೈಲ ಟ್ಯಾಂಕರ್ ಮೇಲೆ ದಾಳಿ ನಡೆದಿದೆ. ಮುಸಂಡಮ್ ಪ್ರದೇಶದಿಂದ ಸುಮಾರು ಐದು ನಾಟಿಕಲ್ ಮೈಲು ದೂರದಲ್ಲಿ ಈ ಘಟನೆ ಸಂಭವಿಸಿದೆ ಎಂದು ಒಮಾನ್ ಕಡಲ ಭದ್ರತಾ ಕೇಂದ್ರ ತಿಳಿಸಿದೆ ಎಂದು Aljazeera ವರದಿ ಮಾಡಿದೆ. ದಾಳಿಯಲ್ಲಿ ನಾಲ್ವರು ಸಿಬ್ಬಂದಿ ಗಾಯಗೊಂಡಿದ್ದಾರೆ. ಹಡಗಿನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಒಟ್ಟು 20 ಮಂದಿಯನ್ನೂ ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ. ಗಾಯಾಳುಗಳಿಗೆ ತಕ್ಷಣ ಚಿಕಿತ್ಸೆ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹಡಗಿನ ಹಾನಿ ಪ್ರಮಾಣ ಮತ್ತು ದಾಳಿಯ ಸ್ವರೂಪದ ಬಗ್ಗೆ ತಕ್ಷಣ ಹೆಚ್ಚಿನ ವಿವರಗಳು ಲಭ್ಯವಾಗಿಲ್ಲ. ಇದಕ್ಕೂ ಮೊದಲು, ಒಮಾನ್ ದೇಶದ ಸರಕಾರಿ ಮಾಧ್ಯಮವು ಎರಡು ಡ್ರೋನ್ಗಳು ಡುಕ್ಮ್ ಪೋರ್ಟ್ ಗುರಿಯಾಗಿಸಿಕೊಂಡು ದಾಳಿ ನಡೆಸಿದ್ದಾಗಿ ವರದಿ ಮಾಡಿತ್ತು. ಆ ದಾಳಿಯಲ್ಲಿ ಒಬ್ಬ ವಿದೇಶಿ ಕಾರ್ಮಿಕ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ. ಒಮಾನ್‌ ಕರಾವಳಿ ಪ್ರದೇಶದಲ್ಲಿ ಸಮುದ್ರ ಭದ್ರತೆಯನ್ನು ಕಠಿಣಗೊಳಿಸಲಾಗಿದ್ದು, ಸಾಗರ ಮಾರ್ಗಗಳ ಮೇಲೆ ನಿಗಾವಣೆ ಹೆಚ್ಚಿಸಲಾಗಿದೆ. ಎರಡೂ ಘಟನೆಗಳ ಕುರಿತಾಗಿ ತನಿಖೆ ಮುಂದುವರಿದಿದೆ ಎಂದು ಮೂಲಗಳು ತಿಳಿಸಿವೆ.

ವಾರ್ತಾ ಭಾರತಿ 1 Mar 2026 2:57 pm

ದುಬೈನಲ್ಲಿ ಸಿಲುಕಿದ ಬಳ್ಳಾರಿ ಜಿಲ್ಲೆಯ 52 ಪ್ರವಾಸಿಗರು: ತುರ್ತು ಕ್ರಮಕ್ಕೆ ಶಾಸಕ ಬಿ. ನಾಗೇಂದ್ರ ಮನವಿ

ಬಳ್ಳಾರಿ: ಬಳ್ಳಾರಿ ಗ್ರಾಮಾಂತರ ಕ್ಷೇತ್ರದ ಶಾಸಕರು ಹಾಗೂ ಮಾಜಿ ಸಚಿವರಾದ ಬಿ. ನಾಗೇಂದ್ರ ಅವರು ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಹಾಗೂ ಸರ್ಕಾರದ ಮುಖ್ಯ ಕಾರ್ಯದರ್ಶಿ ಮತ್ತು ಅಪರ ಮುಖ್ಯ ಕಾರ್ಯದರ್ಶಿಯವರೊಂದಿಗೆ ದೂರವಾಣಿ ಮೂಲಕ ಸಂಪರ್ಕಿಸಿ, ದುಬೈ ಪ್ರವಾಸಕ್ಕೆ ತೆರಳಿದ್ದ ಬಳ್ಳಾರಿ ಜಿಲ್ಲೆಯ 52 ಮಂದಿ ಪ್ರವಾಸಿಗರನ್ನು ಸುರಕ್ಷಿತವಾಗಿ ಭಾರತಕ್ಕೆ ಕರೆತರಲು ತುರ್ತು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು. ಅಂತರರಾಷ್ಟ್ರೀಯ ಮಟ್ಟದಲ್ಲಿ ನಡೆಯುತ್ತಿರುವ ಯುದ್ಧ ಪರಿಸ್ಥಿತಿಗಳ ಹಿನ್ನೆಲೆಯಲ್ಲಿ ಹಲವು ವಿಮಾನ ಸೇವೆಗಳು ತಾತ್ಕಾಲಿಕವಾಗಿ ರದ್ದಾಗಿರುವುದರಿಂದ ದುಬೈಗೆ ತೆರಳಿದ್ದ ಪ್ರವಾಸಿಗರು ಅಲ್ಲೇ ಸಿಲುಕಿಕೊಂಡಿದ್ದಾರೆ. ಇವರಲ್ಲಿ ಬಳ್ಳಾರಿ ನಗರ ಮತ್ತು ಗ್ರಾಮಾಂತರ ಭಾಗಗಳಿಂದ 25 ಮಹಿಳೆಯರು ಹಾಗೂ 7 ಪುರುಷರು ಸೇರಿ 32 ಮಂದಿ, ಸಿರುಗುಪ್ಪ ಭಾಗದಿಂದ 20 ಮಂದಿ ಸೇರಿ ಒಟ್ಟು 52 ಮಂದಿ ಇದ್ದಾರೆ ಎಂದು ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ಪ್ರವಾಸಿಗರ ಸುರಕ್ಷತೆ ಕುರಿತು ಕಾಳಜಿ ವ್ಯಕ್ತಪಡಿಸಿದ ಶಾಸಕ ಬಿ. ನಾಗೇಂದ್ರ ಅವರು ರಾಜ್ಯ ಸರ್ಕಾರದ ಉನ್ನತ ಅಧಿಕಾರಿಗಳೊಂದಿಗೆ ಮಾತನಾಡಿ, ಕೇಂದ್ರ ಸರ್ಕಾರ ಹಾಗೂ ಸಂಬಂಧಿತ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ ಎಲ್ಲರನ್ನು ಶೀಘ್ರ ಹಾಗೂ ಸುರಕ್ಷಿತವಾಗಿ ಭಾರತಕ್ಕೆ ಕರೆತರಲು ಅಗತ್ಯ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ. ರಾಜ್ಯ ಸರ್ಕಾರವು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ್ದು, ಸಿಲುಕಿಕೊಂಡಿರುವ ಪ್ರವಾಸಿಗರ ಸುರಕ್ಷತೆ ಮತ್ತು ಮರಳುವ ವ್ಯವಸ್ಥೆಗಾಗಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ವಾರ್ತಾ ಭಾರತಿ 1 Mar 2026 2:54 pm

ಖಾಮಿನೈ ಹತ್ಯೆಗೆ ಆಕ್ರೋಶ | ಕರಾಚಿಯ ಅಮೆರಿಕ ದೂತಾವಾಸಕ್ಕೆ ಮುತ್ತಿಗೆ ಯತ್ನ; ಗಲಭೆಯಲ್ಲಿ ಆರು ಮಂದಿ ಮೃತ್ಯು, ಹಲವರಿಗೆ ಗಾಯ

ಕರಾಚಿ: ಇರಾನ್ ನ ಸುಪ್ರೀಂ ನಾಯಕ ಆಯತುಲ್ಲಾ ಅಲಿ ಖಾಮಿನೈ ಅವರ ಹತ್ಯೆ ಖಂಡಿಸಿ ಉಂಟಾದ ಆಕ್ರೋಶದ ನಡುವೆ ಪಾಕಿಸ್ತಾನದ ಕರಾಚಿ ನಗರದಲ್ಲಿರುವ ಅಮೆರಿಕದ ದೂತಾವಾಸಕ್ಕೆ ಪ್ರತಿಭಟನಾಕಾರರು ಮುತ್ತಿಗೆ ಹಾಕಲು ಯತ್ನಿಸಿದ ಘಟನೆ ಗಲಭೆಗೆ ತಿರುಗಿದೆ. ಘಟನೆಯಲ್ಲಿ ಆರು ಮಂದಿ ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ ಎಂದು ಪಾಕಿಸ್ತಾನದ ಎಧಿ ರಕ್ಷಣಾ ಸೇವೆ ತಿಳಿಸಿದೆ ಎಂದು Aljazeera ವರದಿ ಮಾಡಿದೆ. ವೈರಲ್‌ ಆಗಿರುವ ವೀಡಿಯೊ ದೃಶ್ಯಗಳಲ್ಲಿ, ಪ್ರತಿಭಟನಾಕಾರರು ಕರಾಚಿಯಲ್ಲಿರುವ ಅಮೆರಿಕದ ರಾಜತಾಂತ್ರಿಕ ಕಚೇರಿಯ ಕಿಟಕಿಗಳಿಗೆ ಬೆಂಕಿ ಹಚ್ಚಿ ಅವುಗಳನ್ನು ಒಡೆದು ಹಾಕುತ್ತಿರುವುದು ಕಂಡುಬಂದಿದೆ. ಕೆಲವರು ಕಟ್ಟಡದೊಳಗೆ ನುಗ್ಗಲು ಪ್ರಯತ್ನಿಸಿದರೆ, ಇನ್ನು ಕೆಲವರು ಕಲ್ಲು ತೂರಾಟ ನಡೆಸಿರುವುದಾಗಿ ವರದಿಯಾಗಿದೆ. ಖಾಮಿನೈಯವರ ಹತ್ಯೆ ಸುದ್ದಿ ಹೊರಬಿದ್ದ ಬಳಿಕ ಕರಾಚಿಯ ವಿವಿಧ ಭಾಗಗಳಲ್ಲಿ ಪ್ರತಿಭಟನೆಗಳು ನಡೆದವು. ಆಕ್ರೋಶಿತ ಜನರು ರಾಯಭಾರಿ ಕಚೇರಿಗೆ ತೆರಳಿದರು ಎಂದು ಸ್ಥಳೀಯ ಮೂಲಗಳು ತಿಳಿಸಿವೆ. ಗಲಭೆ ತೀವ್ರಗೊಂಡಂತೆ ಪೊಲೀಸರು ಸ್ಥಳಕ್ಕೆ ಧಾವಿಸಿ ಗುಂಪನ್ನು ಚದುರಿಸಲು ಕ್ರಮ ಕೈಗೊಂಡರು. ಈ ವೇಳೆ ಉಂಟಾದ ತಳ್ಳಾಟ, ಗದ್ದಲದಲ್ಲಿ ಹಲವರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಘಟನೆಯ ಬಳಿಕ ದೂತಾವಾಸ ಪ್ರದೇಶದ ಸುತ್ತಮುತ್ತ ಕಟ್ಟುನಿಟ್ಟಿನ ಭದ್ರತೆ ಕಲ್ಪಿಸಲಾಗಿದ್ದು, ಹೆಚ್ಚುವರಿ ಪೊಲೀಸ್ ಹಾಗೂ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದೆ. ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಾರ್ತಾ ಭಾರತಿ 1 Mar 2026 2:48 pm

ಬಾಗಲಕೋಟೆ ಗಲಭೆ ಸ್ಥಳಕ್ಕೆ ಸತ್ಯ ಶೋಧನಾ ಸಮಿತಿ ಭೇಟಿ, ಪರಿಶೀಲನೆ

ಬಾಗಲಕೋಟೆ : ಬಾಗಲಕೋಟೆ ಗಲಭೆ ಸ್ಥಳಕ್ಕೆ ಸತ್ಯ ಶೋಧನಾ ಸಮಿತಿ ಭೇಟಿ ನೀಡಿ, ಘಟನೆ ಬಗ್ಗೆ ಸಮಗ್ರ ಮಾಹಿತಿ ಸಂಗ್ರಹಿಸಿದ್ದು, ಈ ಬಗ್ಗೆ ವರದಿ.ಯನ್ನು ಸಿಎಂಗೆ ನೀಡಲು ನಿರ್ಧರಿಸಿದೆ.  ಉಪ ಚುನಾವಣೆ ಹಿನ್ನಲೆಯಲ್ಲಿ ಕೋಮು ಭಾವನೆ ಗೆ ಕುಮಕ್ಕು ನೀಡಲಾಗಿದೆ ಎಂಬ ಅಂಶವನ್ನು ವರದಿಯಲ್ಲಿ ಉಲ್ಲೇಖ ಮಾಡಲಾಗಿದೆ ಎಂದು ಸಮಿತಿಯವರು ತಿಳಿಸಿದ್ದಾರೆ. ಬೆಂಗಳೂರು ಜನಶಕ್ತಿ ಪತ್ರಿಕೆಯ ವರದಿಗಾರ ರಾಮಕೃಷ್ಣ, ಧಾರವಾಡದ ಮೇ ಸಾಹಿತ್ಯ ವತಿಯಿಂದ ಬಸವರಾಜ ಸೂಳಿಭಾವಿ, ಮುತ್ತು ಬಿಳಿಎಲೆ, ಪ್ರೊ.ಕಾಶಿನಾಥ ಅಂಬಲಿಗಿ, ಡಾ.ಮೀನಾಕ್ಷಿ ಬಾಳಿ, ಕೆ.ನೀಲಾ, ಮೆಹರಾಜ್ ಪಟೇಲ್, ಜೆ.ಎಸ್. ಪಾಟೀಲ ಹಾಗೂ ಮಾನವ ಬಂಧುತ್ವ ವೇದಿಕೆಯ ಪ್ರಭುಗೌಡ ಸೇರಿದಂತೆ ಸತ್ಯ ಶೋಧನಾ ಸಮಿತಿಯ ಸದಸ್ಯರು ಸ್ಥಳಕ್ಕೆ ಭೇಟಿ ನೀಡಿ ಸ್ಥಳೀಯರಿಂದ ಮಾಹಿತಿ ಸಂಗ್ರಹಿಸಲಾಯಿತು ಕೆಲವರು ಪಂಕಾ ಮಸೀದಿ ಬಳಿ ಸುಮಾರು 40 ನಿಮಿಷಗಳ ಕಾಲ ಉದ್ರಿಕ್ತ ವಾತಾವರಣ ಸೃಷ್ಟಿಸಿದ್ದಾರೆ ಎಂದು ಸ್ಥಳೀಯರು ಆರೋಪಿಸಿದರು. ಎಸ್‌ಪಿ ಅವರು 20 ನಿಮಿಷ ಮಾತ್ರ ಗಲಾಟೆ ನಡೆದಿದೆ ಎಂದು ಹೇಳಿದರೂ, ಸ್ಥಳೀಯರ ಪ್ರಕಾರ ಹೆಚ್ಚು ಸಮಯ ಗಲಾಟೆ ನಡೆದಿದೆ ಎನ್ನಲಾಗಿದೆ. ಮಸೀದಿ ಎದುರು ಜಾಗದಲ್ಲಿ ಹಾಡು ಹಾಕಿ ಕುಣಿದು, ಪ್ರಚೋದನಕಾರಿ ವರ್ತನೆ ತೋರಲಾಗಿದೆ ಎಂದು ದೂರಲಾಗಿದೆ. ಸಿಸಿಟಿವಿ ದೃಶ್ಯಾವಳಿ ಪರಿಶೀಲಿಸಿ ಕೆಲವರನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಇಲಾಖೆ ತಿಳಿಸಿದೆ. ರಾತ್ರಿ ವೇಳೆ ತರಕಾರಿ ತಳ್ಳುಗಾಡಿಗೆ ಬೆಂಕಿ ಹಚ್ಚಿರುವ ಘಟನೆ ಹಾಗೂ ಮರುದಿನ ಬೆಳಗ್ಗೆ ಅಂಗಡಿ ಬಂದ್ ಮಾಡಿಸಲು ಯುವಕರ ಗುಂಪು ಕಲ್ಲು ತೂರಿದ ಪ್ರಕರಣಗಳೂ ನಡೆದಿವೆ ಎಂದು ತಿಳಿದುಬಂದಿದೆ. ಈ ಸಂಬಂಧವೂ ಕೆಲವರನ್ನು ಬಂಧಿಸಲಾಗಿದೆ ಎಂದು ಎಸ್‌ಪಿ ಹೇಳಿದ್ದಾರೆ. ಘಟನೆ ತಡೆಯುವಲ್ಲಿ ಪೊಲೀಸ್ ಇಲಾಖೆ ಹಾಗೂ ಜಿಲ್ಲಾಡಳಿತ ವಿಫಲವಾಗಿದೆ ಎಂದು ಸಮಿತಿ ಆರೋಪಿಸಿದೆ. ವಯೋವೃದ್ಧರ ವಿರುದ್ಧ ಅವಾಚ್ಯ ಶಬ್ದ ಬಳಕೆ ಸೇರಿದಂತೆ ಹಲವು ಘಟನೆಗಳು ನಡೆದಿದ್ದರೂ, ಸೂಕ್ತ ಕ್ರಮ ಕೈಗೊಳ್ಳಲಿಲ್ಲ ಎಂದು ಡಾ.ಮೀನಾಕ್ಷಿ ಬಾಳಿ ಆರೋಪಿಸಿದರು. ಉಪಚುನಾವಣೆ ಹಿನ್ನೆಲೆ ರಾಜಕೀಯ ಉದ್ದೇಶದಿಂದ ವಾತಾವರಣ ಕೆಡಿಸಲಾಗಿದೆ ಎಂದು ಸಮಿತಿ ಸದಸ್ಯರು ಆರೋಪಿಸಿದರು. ರಾತ್ರಿ ಮೆರವಣಿಗೆಗೆ ಅನುಮತಿ ನೀಡಿದ ಕುರಿತು ಪ್ರಶ್ನಿಸಿದಾಗ, ಹಿಂದೆಯೂ ರಾತ್ರಿ ಮೆರವಣಿಗೆ ನಡೆದಿತ್ತು ಎಂದು ಎಸ್‌ಪಿ ಉತ್ತರಿಸಿದ್ದಾರೆ ಎನ್ನಲಾಗಿದೆ. ಕೆಲವರ ಪ್ರಚೋದನಕಾರಿ ಹೇಳಿಕೆಗಳ ವಿರುದ್ಧ ಕ್ರಮ ಕೈಗೊಳ್ಳಲಿಲ್ಲ ಎಂಬ ಆಕ್ಷೇಪವೂ ಕೇಳಿಬಂದಿದೆ. ಶಾಂತಿ ಸಭೆ ನಡೆಸುವಂತೆ ಮನವಿ ಮಾಡಿದರೂ, ಆಡಳಿತ ಸಮರ್ಪಕವಾಗಿ ಪ್ರತಿಕ್ರಿಯಿಸಿಲ್ಲ ಎಂದು ಸಮಿತಿ ದೂರಿದೆ. ಸತ್ಯ ಶೋಧನಾ ಸಮಿತಿ ಸಂಪೂರ್ಣ ವರದಿ ಸಿದ್ಧಪಡಿಸಿ ಮುಖ್ಯಮಂತ್ರಿ ಹಾಗೂ ಗೃಹ ಸಚಿವರಿಗೆ ಸಲ್ಲಿಸುವುದಾಗಿ ತಿಳಿಸಿದೆ. ಘಟನೆ ಕುರಿತು ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಹಾಗೂ ಶಾಂತಿ ಕಾಪಾಡಲು ದಕ್ಷ ಅಧಿಕಾರಿಗಳನ್ನು ನೇಮಿಸಬೇಕು ಎಂದು ಒತ್ತಾಯಿಸಿದೆ.

ವಾರ್ತಾ ಭಾರತಿ 1 Mar 2026 2:45 pm

National Highway: ರಾಜ್ಯದಲ್ಲಿ ಹೊಸ ರಾ‍ಷ್ಟ್ರೀಯ ಹೆದ್ದಾರಿಯ ಮಹತ್ವದ ಅಪ್ಡೇಟ್‌

National Highway: ರಾಜ್ಯದಲ್ಲಿ ರಾಷ್ಟ್ರೀಯ ಹೆದ್ದಾರಿ ಜಾಲ ವಿಸ್ತರಣೆ ಆಗುತ್ತಿದೆ. ಹಾಗೆಯೇ ದಶಕಗಳ ಬೇಡಿಕೆಯಾಗಿರುವ ಮರಿಯಮ್ಮನಹಳ್ಳಿ-ಶಿವಮೊಗ್ಗ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಕೆಲಸಕ್ಕೆ ಸಂಸದೆ ಪ್ರಭಾ ಮಲ್ಲಿಕಾರ್ಜುನ ಅವರು ಹೊಸ ವೇಗ ನೀಡಲು ಮುಂದಾಗಿದ್ದಾರೆ. ಕೇಂದ್ರ ಸಚಿವರನ್ನು ಭೇಟಿ ಮಾಡಿದ್ದರೂ ನಿರೀಕ್ಷಿತ ಫಲ ಸಿಗದ ಹಿನ್ನೆಲೆಯಲ್ಲಿ ಈಗ ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದು ಭೇಟಿಗೆ ಅವಕಾಶ ಕೇಳಿದ್ದಾರೆ.

ಒನ್ ಇ೦ಡಿಯ 1 Mar 2026 2:34 pm

ಖಾಮಿನೈ ಹತ್ಯೆ ವಿರೋಧಿಸಿ ಕಾಶ್ಮೀರದಲ್ಲಿ ಪ್ರತಿಭಟನೆ; ಶಾಂತಿ ಕಾಪಾಡಲು ಸಿಎಂ ಉಮರ್ ಅಬ್ದುಲ್ಲಾ ಮನವಿ

ಶ್ರೀನಗರ: ಇರಾನ್ ನ ಸರ್ವೋಚ್ಚ ನಾಯಕ ಆಯತುಲ್ಲಾ ಅಲಿ ಖಾಮಿನೈ ಅವರು ಮೃತಪಟ್ಟ ವರದಿಗಳ ಹಿನ್ನೆಲೆಯಲ್ಲಿ ಕಾಶ್ಮೀರದ ಹಲವಾರು ಭಾಗಗಳಲ್ಲಿ ರವಿವಾರ ಪ್ರತಿಭಟನೆಗಳು ನಡೆದಿವೆ. ಶಿಯಾ ಜನರು ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುವ ಪ್ರದೇಶಗಳಲ್ಲಿ ನೂರಾರು ಮಂದಿ ಬೀದಿಗಿಳಿದು ಪ್ರತಿಭಟನೆ ನಡೆಸಿದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಮೆರಿಕ ಹಾಗೂ ಇಸ್ರೇಲ್ ನಡೆಸಿದ ದಾಳಿಯಲ್ಲಿ ಖಾಮಿನೈ ಮೃತಪಟ್ಟಿದ್ದಾರೆ ಎಂದು ಇರಾನ್ ದೇಶದ ಸರಕಾರಿ ಮಾಧ್ಯಮ ರವಿವಾರ ಮುಂಜಾನೆ ದೃಢಪಡಿಸಿರುವುದಾಗಿ ವರದಿಯಾಗಿದೆ. ಈ ಬೆಳವಣಿಗೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿ ವಿವಿಧ ಪ್ರದೇಶಗಳಲ್ಲಿ ಜನರು ಪ್ರತಿಭಟನಾ ಮೆರವಣಿಗೆ ನಡೆಸಿದರು. ಪ್ರತಿಭಟನಾಕಾರರು ಅಮೆರಿಕ ಮತ್ತು ಇಸ್ರೇಲ್ ವಿರುದ್ಧ ಘೋಷಣೆಗಳನ್ನು ಕೂಗಿದರು. ಕಾನೂನು ಸುವ್ಯವಸ್ಥೆ ಕಾಪಾಡಲು ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದ್ದು, ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪ್ರತಿಭಟನೆಗಳ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಉಮರ್ ಅಬ್ದುಲ್ಲಾ ಜನರು ಶಾಂತಿಯನ್ನು ಕಾಪಾಡಿಕೊಳ್ಳುವಂತೆ ಮನವಿ ಮಾಡಿದ್ದಾರೆ. “ಇರಾನ್ ನಲ್ಲಿ ನಡೆಯುತ್ತಿರುವ ಬೆಳವಣಿಗೆಗಳು, ಅದರಲ್ಲೂ ಸರ್ವೋಚ್ಚ ನಾಯಕ ಆಯತುಲ್ಲಾ ಅಲಿ ಖಾಮಿನೈ ಅವರ ಹತ್ಯೆಯ ವರದಿಗಳ ಕುರಿತು ಮುಖ್ಯಮಂತ್ರಿ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಎಲ್ಲಾ ಸಮುದಾಯಗಳು ಶಾಂತವಾಗಿರಬೇಕು, ಶಾಂತಿಯನ್ನು ಕಾಪಾಡಬೇಕು ಹಾಗೂ ಉದ್ವಿಗ್ನತೆ ಅಥವಾ ಅಶಾಂತಿಗೆ ಕಾರಣವಾಗುವ ಯಾವುದೇ ಕ್ರಮಗಳನ್ನು ತಪ್ಪಿಸಬೇಕು” ಎಂದು ಮುಖ್ಯಮಂತ್ರಿ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ.

ವಾರ್ತಾ ಭಾರತಿ 1 Mar 2026 2:34 pm

ಬೇರೆ ದೇಶಗಳಂತೆ ಭಾರತೀಯರಿಗೆ ಭಯದಿಂದ ನಿದ್ರಿಸುವ ಪರಿಸ್ಥಿತಿ ಅಲ್ಲ: ನಿವೃತ್ತ ಸೇನಾಧಿಕಾರಿ ಸುನೀಲ್ ಕುಮಾರ್ ಶಾಸ್ತ್ರಿ

ಸದ್ಯದ ಜಾಗತಿಕ ಯುದ್ಧದ ಸನ್ನಿವೇಶ ಮತ್ತು ಭಾರತದ ಸ್ಥಿತಿಗತಿಯ ಬಗ್ಗೆ ನಿವೃತ್ತ ಸೇನಾಧಿಕಾರಿ ಲೆಫ್ಟಿನೆಂಟ್ ಕರ್ನಲ್ ಸುನೀಲ್ ಕುಮಾರ್ ಶಾಸ್ತ್ರಿ ಅವರು ಒನ್ ಇಂಡಿಯಾ ಕನ್ನಡದೊಂದಿಗೆ ಸಮಗ್ರವಾಗಿ ಮಾತನಾಡಿದ್ದಾರೆ. ಮಧ್ಯಪ್ರಾಚ್ಯದಲ್ಲಿ ಇಸ್ರೇಲ್-ಇರಾನ್ ಸಂಘರ್ಷ ತಾರಕಕ್ಕೇರಿರುವ ಈ ಸಂದರ್ಭದಲ್ಲಿ, ವಿಶ್ವದ ಅನೇಕ ದೇಶಗಳು ಆತಂಕದಲ್ಲಿವೆ. ಇಂತಹ ಹೊತ್ತಿನಲ್ಲಿ ಭಾರತವು ಈ ಪರಿಸ್ಥಿತಿಯನ್ನು ಹೇಗೆ ಗಮನಿಸುತ್ತಿದೆ ಮತ್ತು ಸಾಮಾನ್ಯ ಭಾರತೀಯನಾಗಿ

ಒನ್ ಇ೦ಡಿಯ 1 Mar 2026 2:23 pm

ಜಾತಿ ನಿರ್ಮೂಲನೆ ಅಂಬೇಡ್ಕರ್–ಮಾರ್ಕ್ಸ್ ವಾದಿಗಳ ಗುರಿಯಾಗಲಿ: ಆರ್. ಮಾನಸಯ್ಯ

ಸಿಂಧನೂರು: ಜಾತಿಯು ಮನುಷ್ಯನ ಆಸ್ತಿ ಮತ್ತು ಅಂತಸ್ಥನ್ನು ನಿರ್ಧರಿಸುತ್ತಿದೆ. ಅಂಬೇಡ್ಕರ್ ವಾದಿಗಳು ಹಾಗೂ ಮಾರ್ಕ್ಸ್ ವಾದಿಗಳು ಜಾತಿ ನಿರ್ಮೂಲನೆನ್ನು ತಮ್ಮ ಪರಮ ಗುರಿಯಾಗಿಸಿಕೊಳ್ಳಬೇಕು ಎಂದು ಸಿಪಿಐ (ಎಂಎಲ್) ರೆಡ್ ಸ್ಟಾರ್ ನ ಪಿಬಿ ಸದಸ್ಯ ಆರ್.ಮಾನಸಯ್ಯ ಹೇಳಿದರು.   ಶನಿವಾರ ಸಂಜೆ ಸಿಪಿಐ (ಎಂಎಲ್) ರೆಡ್ ಸ್ಟಾರ್ ಜಿಲ್ಲಾ ಸಮಿತಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ವಿಚಾರ ಸಂಕಿರಣದಲ್ಲಿ “ಜಾತಿ ನಿರ್ಮೂಲನೆಗಾಗಿ ಮಾರ್ಕ್ಸ್ ವಾದಿ-ಅಂಬೇಡ್ಕರ್ ವಾದಿಗಳ ಐಕ್ಯತೆಯ ಸವಾಲುಗಳು” ವಿಷಯದ ಕುರಿತು ಅವರು ಮಾತನಾಡಿದರು. ಭಾರತದಲ್ಲಿ ದಲಿತ ಚಳುವಳಿ ಹಾಗೂ ಕಮ್ಯುನಿಸ್ಟ್ ಚಳುವಳಿ ಪ್ರತ್ಯೇಕಗೊಂಡಿರುವುದು ದೊಡ್ಡ ದುರಂತವಾಗಿದೆ. ಭಾರತೀಯ ಸಮಾಜವು ಯುರೋಪ್ ಮಾದರಿಯ ಸಮಾಜವಲ್ಲ. ಇಲ್ಲಿ ವರ್ಣಗಳು ವರ್ಗಗಳಾಗಿ, ನಂತರ ಜಾತಿಗಳಾಗಿ ಬೆಳೆಯುತ್ತ ಬಂದಿವೆ. ಜಾತಿಯು ಸಮಾಜದ ಮೇಲ್ದರ್ಜೆಯ ಸಮಸ್ಯೆ; ಅದು ಕ್ರಾಂತಿಯ ನಂತರ ತಾನಾಗಿಯೇ ನಶಿಸುತ್ತದೆ ಎಂಬ ಧೋರಣೆ ಕಮ್ಯುನಿಸ್ಟ್ ಚಳುವಳಿಯ ದೌರ್ಬಲ್ಯವಾಗಿದೆ ಎಂದು ಹೇಳಿದರು. ಭಾರತದಲ್ಲಿ ಜಾತಿ ಮತ್ತು ವರ್ಗಗಳು ಪ್ರತ್ಯೇಕಿಸಲಾಗದ ಆರ್ಥಿಕ, ರಾಜಕೀಯ ಹಾಗೂ ಸಾಮಾಜಿಕ ವಾಸ್ತವಗಳಾಗಿವೆ. ಜಾತಿಯು ಪ್ರತಿಯೊಂದು ಸಮುದಾಯದ ಆಸ್ತಿ, ಅಧಿಕಾರ ಮತ್ತು ಅಂತಸ್ಥನ್ನು ನಿರ್ಧರಿಸುತ್ತದೆ. ಬಹುತೇಕ ಮೇಲ್ಜಾತಿಗಳು ಆಸ್ತಿ ಹೊಂದಿದ ಶೋಷಕ ವರ್ಗಗಳಾಗಿವೆ. ನೂರಕ್ಕೆ 99ರಷ್ಟು ದಲಿತರು ಹಾಗೂ ದುರ್ಬಲ ವರ್ಗದವರು ಆಸ್ತಿಯಿಲ್ಲದ, ಅಸ್ಪೃಶ್ಯತೆ ಹಾಗೂ ಜಾತಿ ತುಳಿತಕ್ಕೆ ತುತ್ತಾದ ಸಮುದಾಯಗಳಾಗಿದ್ದಾರೆ. ಜಾತಿ ನಿರ್ಮೂಲನೆಯೇ ಅಂಬೇಡ್ಕರ್ ವಾದಿ ಮತ್ತು ಮಾರ್ಕ್ಸ್ ವಾದಿಗಳ ಪರಮ ಗುರಿಯಾಗಬೇಕು. ಜಾತಿ ನಿರ್ಮೂಲನೆ ಕಾರ್ಯಕ್ರಮವಿಲ್ಲದೆ ಇಲ್ಲಿ ವರ್ಗ ಹೋರಾಟ ಯಶಸ್ವಿಯಾಗದು. B. R. Ambedkar ಕಮ್ಯುನಿಸ್ಟ್ ವಿರೋಧಿಗಳಾಗಿರಲಿಲ್ಲ; ಅವರು ಕಮ್ಯುನಿಸ್ಟ್ ಮುಂದಾಳುಗಳು ತಾಳಿದ ಯಾಂತ್ರಿಕ ಮಾರ್ಕ್ಸ್ ವಾದವನ್ನು ವಿರೋಧಿಸಿದರು. ಇತಿಹಾಸದಲ್ಲಿ ನಡೆದ ತಪ್ಪುಗಳನ್ನು ತಿದ್ದಿಕೊಳ್ಳಬೇಕು. ದುಡಿಯುವ ವರ್ಗ ಹಾಗೂ ದಮನಿತ ಜನಾಂಗಗಳ ಬಲಿಷ್ಠ ಐಕ್ಯ ಚಳುವಳಿಯ ಮೂಲಕ ರಾಜ್ಯಾಧಿಕಾರವನ್ನು ಕೈವಶ ಮಾಡಿಕೊಳ್ಳಬೇಕು ಎಂದು ಮಾನಸಯ್ಯ ಕರೆ ನೀಡಿದರು. ಭಾರತದ ಕಮ್ಯುನಿಸ್ಟರು ಸ್ವಾತಂತ್ರ್ಯ ಚಳುವಳಿಯಲ್ಲಿ ಅಪಾರ ತ್ಯಾಗ-ಬಲಿದಾನ ಮಾಡಿದ್ದಾರೆ. ತೆಲಂಗಾಣ, ತೆಭಾಗಾ, ಕಯ್ಯೂರು, ವರ್ಲಿ, ಸುವರ್ಣಕಣಿವೆ ಸೇರಿದಂತೆ ಮುಂಬೈ ಕಾರ್ಮಿಕರು ಮತ್ತು ನೌಕಾದಳದ ಬಂಡಾಯಗಳಿಗೆ ನೇತೃತ್ವ ವಹಿಸಿದ್ದರು. ಆದರೆ ತಪ್ಪಾದ ಕಾರ್ಯತಂತ್ರ ಮತ್ತು ಕಾಂಗ್ರೆಸ್ ಪಕ್ಷದ ಕುರಿತು ತಾಳಿದ ಅನಿರ್ದಿಷ್ಟ ಅವಗಾಹನೆಯಿಂದ ಸ್ವಾತಂತ್ರ್ಯ ಚಳುವಳಿಗೆ ನೇತೃತ್ವ ನೀಡಲು ಸಾಧ್ಯವಾಗಲಿಲ್ಲ ಎಂದರು. ಸಂಘ ಪರಿವಾರ ಬ್ರಿಟಿಷ್ ವಸಾಹತುಶಾಹಿಗಳೊಂದಿಗೆ ಕೈಜೋಡಿಸಿ ಸ್ವಾತಂತ್ರ್ಯ ಚಳುವಳಿಗೆ ದ್ರೋಹ ಮಾಡಿತು ಎಂದು ಅವರು ಆರೋಪಿಸಿದರು. All-India Muslim League ಸ್ವಾತಂತ್ರ್ಯ ಚಳುವಳಿಯಲ್ಲಿದ್ದರೂ ದ್ವಿರಾಷ್ಟ್ರ ಸಿದ್ಧಾಂತವನ್ನು ಪ್ರತಿಪಾದಿಸಿತು. ಒಟ್ಟಾರೆ, ಸ್ವಾತಂತ್ರ್ಯ ಚಳುವಳಿ ಎಂದರೆ ಕೇವಲ ಕಾಂಗ್ರೆಸ್ ಮಾತ್ರವಲ್ಲ; ಕಮ್ಯುನಿಸ್ಟರ ಹೋರಾಟದ ತ್ಯಾಗ-ಬಲಿದಾನವೂ ಅದರ ಹಿಂದೆ ಇದೆ ಎಂದರು. ಸಿಪಿಐ ಪಕ್ಷದ ಮುಖಂಡ ಹಾಗೂ ಹಿರಿಯ ಪತ್ರಕರ್ತ ಡಿ.ಎಚ್. ಕಂಬಳಿ ಮಾತನಾಡಿ, ಶೋಷಿತ ಮತ್ತು ದಮನಿತ ಜನರು ಗಟ್ಟಿಮುಟ್ಟಾದ ಐಕ್ಯ ಹೋರಾಟದ ಮೂಲಕ ಫ್ಯಾಸಿಸ್ಟ್ ವ್ಯವಸ್ಥೆಯನ್ನು ಎದುರಿಸಬೇಕು ಎಂದರು. ಉಪನ್ಯಾಸಕ ನಾರಾಯಣ ಬೆಳಗುರ್ಕಿ ಮಾತನಾಡಿ, ರೈತರು, ಕಾರ್ಮಿಕರು, ಆದಿವಾಸಿಗಳು ಮತ್ತು ದಮನಿತರ ಹೋರಾಟಗಳ ಹಿಂದೆ ಕಮ್ಯುನಿಸ್ಟರ ಮಹತ್ವದ ಪಾತ್ರವಿದೆ ಎಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಂದೇಗಾಲ ಶ್ರೀನಿವಾಸ್ ವಹಿಸಿದ್ದರು. ಪ್ರಾಸ್ತಾವಿಕವಾಗಿ ಎಂ. ಗಂಗಾಧರ ಮಾತನಾಡಿದರು. ಸಂಕಿರಣವನ್ನು ಆದೇಶ ನಗನೂರು ನಿರೂಪಿಸಿದರು. ಉಪನ್ಯಾಸಕರು ಶಂಕರ ವಾಲೇಕರ್, ಸಿಪಿಎಂ ಮುಖಂಡ ಬಸವಂತರಾಯ ಗೌಡ ಕಲ್ಲೂರು, ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಬಸವರಾಜ ಗೋಡಿಹಾಳ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಎಚ್.ಇ. ಸಣ್ಣಪ್ಪ, ಜಯಣ್ಣ ಕೊಡಗು, ಸಂದೀಪ್ ಬಿ.ಆರ್., ಸಂತೋಷ್ ಹಿರೆದಿನ್ನಿ, ಮಾರುತಿ ಜಿನ್ನಾಪುರ್, ಎಸ್. ದೇವೇಂದ್ರಗೌಡ, ಗಿರಿಲಿಂಗಸ್ವಾಮಿ ದೇವದುರ್ಗ, ಕಮ್ಯುನಿಸ್ಟ್ ಪಕ್ಷದ ಮಸ್ಕಿ ತಾಲೂಕು ಕಾರ್ಯದರ್ಶಿ ವೆಂಕಟೇಶ್ ನಾಯಕ್, ಮಾನವಿ ಕಾರ್ಯದರ್ಶಿ ಯಲ್ಲಪ್ಪ ಉಟಕನೂರು, ಎಂ. ನಿರಂಜನ್, ಸಮರ, ಬಸವರಾಜ ಎಕ್ಕಿ, ಹೆಚ್.ಆರ್. ಹೊಸಮನಿ, ಮುದಿಯಪ್ಪ, ರಾಮಕೃಷ್ಣ ಮಾನ್ವಿ, ಹುಲಗಪ್ಪ ಬಳ್ಳಾರಿ ಮುಂತಾದವರು ಭಾಗವಹಿಸಿದ್ದರು.

ವಾರ್ತಾ ಭಾರತಿ 1 Mar 2026 2:17 pm

ದುಬೈನಲ್ಲಿ ಸಿಲುಕಿದ ಸಿಂಧನೂರಿನ ವೈದ್ಯ ಡಾ.ಕೆ.ಶಿವರಾಜ್

ಸಿಂಧನೂರು: ವಿಜಯರತ್ನ ಇಂಟರ್ ನ್ಯಾಷನಲ್ ಪ್ರಶಸ್ತಿ ಸ್ವೀಕರಿಸಲು ದುಬೈಗೆ ತೆರಳಿದ್ದ ಸಿಂಧನೂರಿನ ಮಕ್ಕಳ ತಜ್ಞ ಡಾ.ಕೆ.ಶಿವರಾಜ್ ಸೇರಿ ಕರ್ನಾಟಕದ 70 ಜನ ದುಬೈನಲ್ಲಿ ಸಿಲುಕಿದ್ದಾರೆ. ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ 27ಕ್ಕೂ ಅಧಿಕ ಜನರಿಗೆ ವಿಆರ್ ಎಲ್ ಸಮೂಹ ಸಂಸ್ಥೆಯಿಂದ ದುಬೈನಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ಆಯೋಜಿಸಲಾಗಿತ್ತು. ಅದರಲ್ಲಿ ಸಿಂಧನೂರಿನ ಸಹನಾ ಆಸ್ಪತ್ರೆಯ ಮಕ್ಕಳ ತಜ್ಞ ಡಾ.ಕೆ.ಶಿವರಾಜ್ ಅವರಿಗೆ ಪ್ರಶಸ್ತಿ ಲಭಿಸಿತ್ತು. ಈ ಹಿನ್ಜಲೆಯಲ್ಲಿ ಡಾ.ಕೆ.ಶಿವರಾಜ್ ಹಾಗೂ ತಮ್ಮ ಪತ್ನಿ ಕೆ.ಜ್ಯೋತಿ ಅವರೊಂದಿಗೆ ಕಳೆದ ಕೆಲ ದಿನಗಳ ಹಿಂದೆ ದುಬೈ ಪ್ರವಾಸಕ್ಕೆ ತೆರಳಿದ್ದರು. ಮಾರ್ಚ್ 1 ರ ಬೆಳಗ್ಗೆ 11 ಗಂಟೆಗೆ ಭಾರತಕ್ಕೆ ವಾಪಾಸ್ಸು ಆಗಮಿಸಲು ಟಿಕೆಟ್ ಬುಕ್ ಮಾಡಲಾಗಿತ್ತು. ಆದರೆ ಇರಾನ್- ಇಸ್ರೇಲ್ ನಡುವಿನ ಯುದ್ಧ ಹಿನ್ನೆಲೆ ವಿಮಾನ ಸೇವೆಗಳು ರದ್ದಾದ ಕಾರಣ ಡಾ.ಕೆ.ಶಿವರಾಜ್ ಸೇರಿದಂತೆ 70 ಜನ ಭಾರತಕ್ಕೆ ಬರಲು ಆಗದೆ ಸಿಲುಕಿಕೊಂಡಿದ್ದಾರೆ. ವಿಜಯರತ್ನ ಪ್ರಶಸ್ತಿ ಸ್ವೀಕಾರ ಮಾಡಲು ದುಬೈಗೆ ಕರ್ನಾಟಕದಿಂದ 70 ಜನ ಆಗಮಿಸಿದ್ದೇವೆ. ಯುದ್ಧದ ಹಿನ್ನಲೆ ಭಾರತಕ್ಕೆ ಬರುವ ಎಲ್ಲಾ ವಿಮಾನ ಸೇವೆಯನ್ನು ರದ್ದುಗೊಳಿಸಿದ್ದು, ನಾವು ದುಬೈ ಹೋಟೆಲೊಂದರಲ್ಲಿ ತಂಗಿದ್ದೇವೆ. ಇನ್ನೆರೆಡು ದಿನಗಳಲ್ಲಿ ವಿಮಾನ ಸೇವೆ ಆರಂಭವಾಗುವ ನಿರೀಕ್ಷೆಯಲ್ಲಿದ್ದೇವೆ. ನನ್ನನ್ನು ಸೇರಿ ಎಲ್ಲರೂ ಸುರಕ್ಷಿತವಾಗಿದ್ದು, ಯಾರು ಆತಂಕ ಪಡುವ ಅಗತ್ಯವಿಲ್ಲ. -ಡಾ.ಕೆ.ಶಿವರಾಜ್, ಮಕ್ಕಳ ತಜ್ಞ, ಸಹನಾ ಆಸ್ಪತ್ರೆ.

ವಾರ್ತಾ ಭಾರತಿ 1 Mar 2026 2:11 pm

ಖಮೇನಿ ಸಾವಿಗೆ ಇಂಡಿಯಾ ಟು ಇರಾಕ್‌ ಭುಗಿಲೆದ್ದ ಪ್ರತಿಭಟನೆ: ಕರಾಚಿಯಲ್ಲಿ US ರಾಯಭಾರ ಕಚೇರಿಗೆ ನುಗ್ಗಿ ದಾಂಧಲೆ ಎಬ್ಬಿಸಿದ ಪಾಕಿಗಳು!

ಒಬ್ಬರ ಹಿರೋ ಮತ್ತೊಬ್ಬರ ಜೀವನದಲ್ಲಿ ವಿಲನ್‌... ಈ ಮಾತು ಇರಾನ್‌ ಸುಪ್ರೀಂ ಲೀಡರ್‌ ಖಮೇನಿಗೆ ಅತ್ಯಂತ ಸೂಕ್ತವೆನಿಸುತ್ತದೆ. ಇದಕ್ಕೆ ಕಾರಣ ಅಮೆರಿಕಾ ಹಾಗೂ ಇಸ್ರೇಲ್‌ ನಡೆಸಿದ ದಾಳಿಯಲ್ಲಿ ಇರಾನ್‌ ಸರ್ವೊಚ್ಚ ನಾಯಕ ಖಮೇನಿ ಸಾವನ್ನಪ್ಪಿದ್ದು, ಇದನ್ನು ಇರಾನ್‌ ಸೇರಿದಂತೆ ಜಗತ್ತಿನಾದ್ಯಂತ ಇರುವ ಹಲವು ಇರಾನಿಯನ್ನರು ಸಂಭ್ರಮಿಸುತ್ತಿದ್ದರೆ, ಇತ್ತ ಶಿಯಾ ಪಂಗಡದ ನಾಯಕನ್ನು ಕಳೆದುಕೊಂಡಿರುವ ಹಲವರು ಅಮೆರಿಕಾ ವಿರುದ್ದ ಆಕ್ರೋಶ ವ್ಯಕ್ತಪಡಿಸುತ್ತಿದ್ದು, ಪ್ರತಿಭಟನೆಗಳನ್ನು ನಡೆಸುತ್ತಿದ್ದಾರೆ. ಇದು ಭಾರತದ, ಕಾಶ್ಮೀರ, ಪಾಕಿಸ್ತಾನದ ಕರಾಚಿಯಿಂದ ಹಿಡಿದು ಇರಾಕ್‌ ವರೆಗೂ ಹಬ್ಬಿದೆ. ಈ ಕುರಿತ ವರದಿ ಇಲ್ಲಿದೆ..

ವಿಜಯ ಕರ್ನಾಟಕ 1 Mar 2026 2:04 pm

ದುಬೈ ಏರ್‌ಪೋರ್ಟ್‌ನಲ್ಲಿ ಕನ್ನಡಿಗರು: ಡ್ರೋನ್ ಪ್ರತಾಪ್, ಪಿ.ವಿ ಸಿಂಧು, ವಿಷ್ಣು ಮಂಚು, ಸೋನಾಲ್ ಚೌಹಾಣ್‌ಗೆ ಸಂಕಷ್ಟ

ಇರಾನ್ ಹಾಗೂ ಇಸ್ರೇಲ್ ನಡುವೆ ಯುದ್ಧ ತೀವ್ರ ಸ್ವರೂಪ ಪಡೆದುಕೊಂಡಿದೆ. ಮಧ್ಯಪ್ರಾಚ್ಯದಲ್ಲಿ ಕ್ಷಣ ಕ್ಷಣಕ್ಕೂ ಆತಂಕ ಹೆಚ್ಚಾಗುತ್ತಿದೆ. ಇರಾನ್ - ಇಸ್ರೇಲ್‌ನ ನಡುವೆ ಭಾರತೀಯರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇರಾನ್‌ ಮೇಲಿನ ನಿರಂತರ ದಾಳಿಗಳು ನಡೆಯುತ್ತಿದ್ದು, ಇರಾನ್ ಸಹ ಪ್ರತಿ ದಾಳಿಯನ್ನು ನಡೆಸುತ್ತಿದೆ. ಇರಾನ್ ವಾಯುಪ್ರದೇಶವನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ. ಇದರಿಂದಾಗಿ ಗಲ್ಫ್‌ ರಾಷ್ಟ್ರಗಳಲ್ಲಿ ಸಂಕಷ್ಟ ಎದುರಾಗಿದೆ. ಅದರಲ್ಲೂ ಪ್ರಮುಖವಾಗಿ

ಒನ್ ಇ೦ಡಿಯ 1 Mar 2026 2:00 pm

ಉದ್ಯೋಗಕ್ಕಾಗಿ ಗುಳೆ ಹೋಗುತ್ತಿರುವ ಯುವಕರು

ದೇವದುರ್ಗಕ್ಕೆ ಕೈಗಾರಿಕಾ ಕ್ರಾಂತಿ ಅನಿವಾರ್ಯ: ಸಾರ್ವಜನಿಕರ ಆಶಯ

ವಾರ್ತಾ ಭಾರತಿ 1 Mar 2026 1:59 pm

ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನ | UAEಯಲ್ಲಿ ಸಾಮಾನ್ಯ ಜನ ಜೀವನದ ಮೇಲೆ ಬೀರಿದ ಪ್ರಭಾವ, ಅಗತ್ಯವಸ್ತುಗಳಿಗೆ ಮುಗಿಬಿದ್ದ ಜನ

ದುಬೈ : ಮಧ್ಯಪ್ರಾಚ್ಯದಲ್ಲಿನ ಉದ್ವಿಗ್ನತೆ, ಇರಾನ್‌ ಮೇಲೆ ಇಸ್ರೇಲ್‌- ಅಮೆರಿಕದ ಜಂಟಿ ದಾಳಿ, ಇರಾನ್‌ನ ಪ್ರತಿಕಾರದ ದಾಳಿಯು ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ಸಾಮಾನ್ಯ ಜನಜೀವನದ ಮೇಲೆ ಪ್ರಭಾವ ಬೀರಿರುವುದು ಕಂಡು ಬಂದಿದೆ. ದುಬೈ ನಗರದ ಕೆಲವು ಸೂಪರ್ ಮಾರ್ಕೆಟ್‌ಗಳಲ್ಲಿ ತಾಜಾ ವಸ್ತುಗಳ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿದೆ. ಸಂಘರ್ಷದ ವಾತಾವರಣದಿಂದ ಜನರು ಆತಂಕಗೊಂಡಿದ್ದಾರೆ. ಅಗತ್ಯ ವಸ್ತುಗಳ ಖರೀದಿಗಾಗಿ ಜನರು ಸೂಪರ್‌ ಮಾರ್ಕೆಟ್‌ಗಳಲ್ಲಿ ಮುಗಿಬಿದ್ದಿದ್ದಾರೆ. ಮಾರ್ಕೆಟ್‌ಗಳಲ್ಲಿ ತರಕಾರಿ ಹಾಗೂ ಇತರ ತಾಜಾ ವಸ್ತುಗಳು ಅಭಾವ ಕೂಡ ಕಂಡು ಬಂದಿದೆ. ಕೆಲವು ಮಾರ್ಕೆಟ್‌ಗಳಲ್ಲಿ ಮಾಂಸ, ತರಕಾರಿ ಸೇರಿದಂತೆ ಅಗತ್ಯ ಆಹಾರವಸ್ತುಗಳ ಇಂದಿನ ಮಾರಾಟ ಬೆಲೆ ನಿಗದಿಯಾಗಿಲ್ಲ ಎಂದು ಗ್ರಾಹಕರಿಗೆ ಹೇಳಲಾಗುತ್ತಿದೆ. ಇದಲ್ಲದೆ ದುಬೈಯ ಕೆಲವೆಡೆ ರಮಝಾನ್ ಅವಧಿಯಲ್ಲಿ ನೀಡಲಾಗುತ್ತಿದ್ದ ರಿಯಾಯಿತಿಗಳನ್ನು ಸ್ಥಗಿತಗೊಳಿಸಿ, ಹಿಂದಿನ ಸಾಮಾನ್ಯ ಬೆಲೆಗಳಲ್ಲಿ ಅಗತ್ಯ ವಸ್ತುಗಳನ್ನು ಮಾರಾಟ ಮಾಡಲಾಗುತ್ತಿದೆ. ಇದು ವ್ಯಾಪಕವಾಗಿ ಎಲ್ಲೆಡೆ ಕಂಡುಬಂದಿಲ್ಲವಾದರೂ, ಕೆಲ ಸೂಪರ್ ಮಾರ್ಕೆಟ್‌ಗಳಲ್ಲಿ ಈ ರೀತಿಯ ಪರಿಸ್ಥಿತಿ ಇದೆ. ಜನರು ಹೆಚ್ಚಿನ ಪ್ರಮಾಣಗಳಲ್ಲಿ ಅಗತ್ಯ ವಸ್ತುಗಳನ್ನು ಖರೀದಿ ಮಾಡುತ್ತಿದ್ದಾರೆ ಎಂದು ತಿಳಿದು ಬಂದಿದೆ.

ವಾರ್ತಾ ಭಾರತಿ 1 Mar 2026 1:47 pm

ಅಮೆರಿಕ–ಇಸ್ರೇಲ್ ನಡೆಸಿದ ದಾಳಿಯಲ್ಲಿ ರಕ್ಷಣಾ ಸಚಿವ ಅಝೀಝ್ ನಾಸಿರ್ಝಾದೆ, ಸೇನಾ ಮುಖ್ಯಸ್ಥ ಅಬ್ದುಲ್ ರಹೀಮ್ ಮೌಸವಿ ಹತ್ಯೆ: ದೃಢಪಡಿಸಿದ ಇರಾನ್

ಟೆಹ್ರಾನ್: ಅಮೆರಿಕ–ಇಸ್ರೇಲ್‌ ನಡೆಸಿದ ಜಂಟಿ ದಾಳಿಯಲ್ಲಿ ಶನಿವಾರ ಇರಾನ್ ನ ರಕ್ಷಣಾ ಸಚಿವ ಅಝೀಝ್ ನಾಸಿರ್ಝಾದೆ ಮತ್ತು ಸೇನಾ ಮುಖ್ಯಸ್ಥ ಅಬ್ದುಲ್ ರಹೀಮ್ ಮೌಸವಿ ಮೃತಪಟ್ಟಿದ್ದಾರೆ ಎಂದು ಅಧಿಕೃತ IRNA ಸುದ್ದಿ ಸಂಸ್ಥೆ ತಿಳಿಸಿದೆ. ದಾಳಿಯಲ್ಲಿ ಇರಾನ್ ನ ಪರಮೋಚ್ಚ ನಾಯಕ ಆಯತುಲ್ಲ ಅಲಿ ಖಾಮಿನೈ ಅವರೂ ಹತ್ಯೆಯಾಗಿರುವುದಾಗಿ ಸರ್ಕಾರ ದೃಢಪಡಿಸಿದೆ. ಅವರ ಭದ್ರತಾ ಸಲಹೆಗಾರ ಅಲಿ ಶಮ್ಖಾನಿ ಹಾಗೂ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ IRGCಯ ಕಮಾಂಡರ್-ಇನ್-ಚೀಫ್ ಮೊಹಮ್ಮದ್ ಪಕ್ಪೌರ್ ಅವರೂ ದಾಳಿಯಲ್ಲಿ ಮೃತಪಟ್ಟಿದ್ದಾರೆ ಎಂದು ವರದಿ ಹೇಳಿದೆ. ಇದೇ ವೇಳೆ ಸಶಸ್ತ್ರ ಪಡೆಗಳ ಇನ್ನೂ ಹಲವು ಕಮಾಂಡರ್ ಗಳು ಪ್ರಾಣ ಕಳೆದುಕೊಂಡಿದ್ದಾರೆ ಎಂದು IRNA ತಿಳಿಸಿದ್ದು, ಮೃತರ ಹೆಸರುಗಳನ್ನು ನಂತರ ಹಂತ ಹಂತವಾಗಿ ಪ್ರಕಟಿಸಲಾಗುವುದು ಎಂದು ಹೇಳಿದೆ. ದಾಳಿಯ ಬಳಿಕ ದೇಶದಲ್ಲಿ ಭದ್ರತಾ ಎಚ್ಚರಿಕೆಗಳನ್ನು ಜಾರಿಗೊಳಿಸಲಾಗಿದ್ದು, ಸರ್ಕಾರ ಉನ್ನತ ಮಟ್ಟದ ಸಭೆಗಳನ್ನು ನಡೆಸುತ್ತಿದೆ.

ವಾರ್ತಾ ಭಾರತಿ 1 Mar 2026 1:43 pm

ಮೌನವಾಗಿರಬೇಡಿ; ಆಯತೊಲ್ಲಾ ಖಮೇನಿ ಹತ್ಯೆ ಖಂಡಿಸುವಂತೆ ಭಾರತದಲ್ಲಿರುವ ಇರಾನ್‌ ರಾಯಭಾರ ಕಚೇರಿ ಮನವಿ

ಅಮೆರಿಕ ಮತ್ತು ಇಸ್ರೇಲ್‌ ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಇರಾನ್‌ನ ಸರ್ವೋಚ್ಚ ನಾಯಕ ಆಯತೊಲ್ಲಾ ಅಲಿ ಖಮೇನಿ ಹತ್ಯೆಗೀಡಾಗಿದ್ದಾರೆ. ಭಾರತದಲ್ಲಿರುವ ಇರಾನ್‌ ರಾಯಭಾರ ಕಚೇರಿ ಖಮೇನಿ ನಿಧನಕ್ಕೆ ಕಂಬನಿ ಮಿಡಿದಿದ್ದು, ಈ ಹತ್ಯೆಯನ್ನು ಖಂಡಿಸುವಂತೆ ಜಾಗತಿಕ ಸರ್ಕಾರಗಳಿಗೆ ಮನವಿ ಮಾಡಿದೆ. ಈ ಕುರಿತು ಅಧಿಕೃತ ಹೇಳಿಕೆಯನ್ನು ಪ್ರಕಟಿಸಿರುವ ಇರಾನ್‌ ರಾಯಭಾರ ಕಚೇರಿ, ಸ್ವಾತಂತ್ರ್ಯ ಮತ್ತು ಸಾರ್ವಭೌಮತ್ವಕ್ಕೆ ಗೌರವ ನೀಡುವ ಪ್ರಪಂಚದಾದ್ಯಂತ ಇರುವ ಸರ್ಕಾರಗಳು ಈ ಕ್ರೂರ ಹತ್ಯೆಯನ್ನು ಖಂಡಿಸಬೇಕು ಎಂದು ಆಗ್ರಹಿಸಿದೆ.

ವಿಜಯ ಕರ್ನಾಟಕ 1 Mar 2026 1:39 pm

ಕಾಸರಗೋಡು: ಶ್ರೀ ಪೂಬನಂಕುಳಿ ದೇವಾಲಯದಲ್ಲಿ ಇಫ್ತಾರ್ ಕೂಟ

ಕಾಸರಗೋಡು : ಬ್ರಹ್ಮಕಲಶೋತ್ಸವ ಉತ್ಸವದ ಅಂಗವಾಗಿ ಗುರುವಾರ ತಚಂಗಡ್‌ನಲ್ಲಿರುವ ಶ್ರೀ ಪೂಬನಂಕುಳಿ ದೇವಾಲಯವು ತನ್ನ ಅಂಗಳದಲ್ಲಿ ಮುಸ್ಲಿಮರಿಗೆ ಇಫ್ತಾರ್ ಕೂಟ ಫೆ.27 ರಂದು ನಡೆಯಿತು. ಬ್ರಹ್ಮಕಲಶೋತ್ಸವ ನಡೆಯುತ್ತಿರುವ ಕಾಸರಗೋಡು ಅರಾವತ್ ಮತ್ತೈಂಗನಂ ಕಳಗಂ ಪೂಬನಂಕುಳಿ ದೇವಾಲಯದ ಅಂಗಳವು ಧಾರ್ಮಿಕ ಸಾಮರಸ್ಯದ ಭವ್ಯ ಕಾರ್ಯಕ್ರಮಕ್ಕೆ ಸಾಕ್ಷಿಯಾಯಿತು. ದೇವಾಲಯ ಸಮಿತಿಯ ಆಶ್ರಯದಲ್ಲಿ ದೇವಾಲಯದ ಅಂಗಳದಲ್ಲಿ ನಡೆದ ಸಾಮೂಹಿಕ ಇಫ್ತಾರ್ ಕೂಟವು ಜನರಿಗೆ ಹಬ್ಬವಾಗಿ ಮಾರ್ಪಟ್ಟಿತು. ಮೌವ್ವಲ್, ಪರವಂಗಾ ಮತ್ತು ಮೌವ್ವಲ್‌ನಂತಹ ಪ್ರದೇಶಗಳಿಂದ ಅನೇಕ ಮುಸ್ಲಿಮ್‌ಸಹೋದರರು ದೇವಾಲಯದ ಅಂಗಳಕ್ಕೆ ಬಂದು ಇಫ್ತಾರ್‌ನಲ್ಲಿ ಭಾಗಿಯಾದರು. ಅವರಿಗಾಗಿ ವಿಸ್ತಾರವಾದ ವ್ಯವಸ್ಥೆಗಳನ್ನು ದೇವಾಲಯದ ಭಕ್ತರು ಕಲ್ಪಿಸಿದ್ದರು. ಯುಎಇ ಸಮಿತಿಯ ಅಧ್ಯಕ್ಷ ಕೆ.ಅಶೋಕನ್ ಮತ್ತು ದೇವಾಲಯ ಆಚರಣೆ ಸಮಿತಿಯ ಅಧ್ಯಕ್ಷ ಕೆ.ಶಿವರಾಮನ್ ಮೇಸ್ತ್ರಿ ಅತಿಥಿಗಳನ್ನು ಸ್ವಾಗತಿಸಿದರು. ಹಕೀಮ್ ಕುನ್ನಿಲ್, ಸಜಿತ್ ಮೌವ್ವಲ್ ಮತ್ತು ನ್ಯಾಯವಾದಿ ಕೆ.ಬಾಲಕೃಷ್ಣನ್ ಹಾಗೂ ವಿವಿಧ ರಾಜಕೀಯ ಮತ್ತು ಸಾಮಾಜಿಕ, ಧಾರ್ಮಿಕ ನಾಯಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ವಾರ್ತಾ ಭಾರತಿ 1 Mar 2026 1:36 pm

ದೈನಂದಿನ ಸೇವೆಗಳ ನಿರಾಕರಣೆ ಮತ್ತು ಸಂವಿಧಾನಾತ್ಮಕ ಸಮಾನತೆ

ಕರ್ನಾಟಕದ ಗದಗ ಜಿಲ್ಲೆಯಲ್ಲಿ ದಲಿತರಿಗೆ ಕ್ಷೌರ ಸೇವೆ ನಿರಾಕರಿಸಿದ ಘಟನೆ ದೈನಂದಿನ ಸಾಮಾಜಿಕ ಅಸಮಾನತೆಯ ಸಾಂದರ್ಭಿಕ ಉದಾಹರಣೆಯಾಗಿದೆ. ಇಂತಹ ಘಟನೆಗಳು ಕೇವಲ ಪ್ರತ್ಯೇಕ ಗ್ರಾಮಗಳ ಸಮಸ್ಯೆಯಾಗದೆ, ಭಾರತದ ಹಲವು ರಾಜ್ಯಗಳಲ್ಲಿ ಮರುಕಳಿಸುತ್ತಿರುವ ಸಾಮಾಜಿಕ ಬಹಿಷ್ಕಾರದ ರೂಪವಾಗಿವೆ. ಸಂವಿಧಾನಾತ್ಮಕ ವಿಧಿಗಳು, ಕಾನೂನು ರಕ್ಷಣಾ ವ್ಯವಸ್ಥೆ ಮತ್ತು ರಾಷ್ಟ್ರೀಯ ಅಪರಾಧ ದಾಖಲೆಗಳ ಬೆಳಕಿನಲ್ಲಿ ಈ ಘಟನೆಯನ್ನು ವಿಶ್ಲೇಷಿಸಬೇಕಿದೆ. ಸಾಮಾನ್ಯವಾಗಿ ಕ್ಷೌರ ಸೇವೆ ನಿರಾಕರಣೆ ಅಲ್ಪಪ್ರಮಾಣದ ಘಟನೆ ಎಂದು ಕಾಣಬಹುದು. ಆದರೆ ಸಮಾಜಶಾಸ್ತ್ರೀಯವಾಗಿ ಇದು ದೈನಂದಿನ ಜಾತಿ ಪ್ರಾತ್ಯಕ್ಷಿಕೆಯ ರೂಪವಾಗಿದೆ. ಭಾರತೀಯ ಸಂವಿಧಾನದ ವಿಧಿ 17 ಅಸ್ಪಶ್ಯತೆಯನ್ನು ನಿಷೇಧಿಸಿದೆ. ಆದರೂ ಗ್ರಾಮೀಣ ಭಾರತದಲ್ಲಿ ಸಾರ್ವಜನಿಕ ಸೇವೆಗಳ ಪ್ರವೇಶದಲ್ಲಿನ ಭೇದಭಾವ ಮುಂದುವರಿಯುತ್ತಿರುವುದು ಸಂವಿಧಾನಾತ್ಮಕ ಮೌಲ್ಯಗಳ ಅನುಷ್ಠಾನದಲ್ಲಿ ಗಂಭೀರ ವ್ಯತ್ಯಾಸವಿದೆ ಎಂಬುದನ್ನು ಸೂಚಿಸುತ್ತದೆ. ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳ (ಅತ್ಯಾಚಾರ ತಡೆ) ಕಾಯ್ದೆ(1989) ದಲಿತರ ವಿರುದ್ಧದ ಅವಮಾನ, ಸಾಮಾಜಿಕ ಬಹಿಷ್ಕಾರ ಮತ್ತು ಹಿಂಸಾಚಾರವನ್ನು ದಂಡನೀಯ ಅಪರಾಧವಾಗಿ ಪರಿಗಣಿಸುತ್ತದೆ. 2015 ಮತ್ತು 2018ರ ತಿದ್ದುಪಡಿ ಮೂಲಕ ಸಾಮಾಜಿಕ ಬಹಿಷ್ಕಾರವನ್ನು ಸ್ಪಷ್ಟವಾಗಿ ಅಪರಾಧವೆಂದು ಗುರುತಿಸಲಾಗಿದೆ. ಆದರೆ ಕಾನೂನು ಅಸ್ತಿತ್ವದಲ್ಲಿದ್ದರೂ, ದೈನಂದಿನ ಸೇವೆಗಳ ನಿರಾಕರಣೆ ಪ್ರಕರಣಗಳು ಗ್ರಾಮೀಣ ಸಮಾಜದಲ್ಲಿ ಅಡಗಿದ ರೂಪದಲ್ಲಿ ಮುಂದುವರಿಯುತ್ತಿವೆ. ಹಲವು ಬಾರಿ ದಲಿತರು ದೂರು ನೀಡಲು ಹೆದರುತ್ತಾರೆ ಅಥವಾ ಸ್ಥಳೀಯ ಒತ್ತಡದಿಂದ ಪ್ರಕರಣಗಳು ಹಿಂಪಡೆಯಲ್ಪಡುತ್ತವೆ. ನ್ಯಾಷನಲ್ ಕ್ರೈಂ ರೆಕಾರ್ಡ್ಸ್ ಬ್ಯೂರೋ ಬಿಡುಗಡೆ ಮಾಡಿದ ಕ್ರೈಂ ಇನ್ ಇಂಡಿಯಾ 2022 ವರದಿ ಪ್ರಕಾರ, ಅನುಸೂಚಿತ ಜಾತಿಗಳ ವಿರುದ್ಧ ದಾಖಲಾದ ಅಪರಾಧ ಪ್ರಕರಣಗಳ ಸಂಖ್ಯೆ 50,000ಕ್ಕೂ ಅಧಿಕವಾಗಿದೆ (ಸುಮಾರು 57,000 ಪ್ರಕರಣಗಳು). 2021ರಲ್ಲಿ ಇದು ಸುಮಾರು 50,900 ಪ್ರಕರಣಗಳಷ್ಟಿತ್ತು. ಅಂದರೆ ದಿನಕ್ಕೆ ಸರಾಸರಿ 150ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗುತ್ತಿವೆ. ಈ ಅಂಕಿಅಂಶಗಳು ದೈಹಿಕ ಹಿಂಸಾಚಾರ, ಹಲ್ಲೆ, ಭೂ ವಿವಾದ, ಲೈಂಗಿಕ ದೌರ್ಜನ್ಯ ಮುಂತಾದ ಗಂಭೀರ ಪ್ರಕರಣಗಳನ್ನು ಒಳಗೊಂಡಿವೆ. ಆದರೆ ಕ್ಷೌರ ಸೇವೆ, ದೇವಾಲಯ ಪ್ರವೇಶ, ಕುಡಿಯುವ ನೀರಿನ ಬಳಕೆ ಮುಂತಾದ ದೈನಂದಿನ ಸೇವೆಗಳ ನಿರಾಕರಣೆ ಬಹುಪಾಲು ದಾಖಲಾಗದೆ ಉಳಿಯುವ ಸಾಧ್ಯತೆ ಇದೆ. ಇದರಿಂದ ಅಧಿಕೃತ ಅಂಕಿಅಂಶಗಳು ವಾಸ್ತವ ಪರಿಸ್ಥಿತಿಯ ಸಂಪೂರ್ಣ ಚಿತ್ರಣ ನೀಡುವುದಿಲ್ಲ. ಇಂತಹ ಘಟನೆಗಳು ಕೇವಲ ಕರ್ನಾಟಕಕ್ಕೆ ಸೀಮಿತವಲ್ಲ. ತೆಲಂಗಾಣ, ಉತ್ತರ ಪ್ರದೇಶ, ರಾಜಸ್ಥಾನ ಮತ್ತು ಗುಜರಾತ್‌ಗಳಲ್ಲಿ ದಲಿತರಿಗೆ ಸಲೂನ್ ಸೇವೆ ನಿರಾಕರಣೆ ಅಥವಾ ಪ್ರತ್ಯೇಕವಾಗಿ ಸೇವೆ ನೀಡುವ ಘಟನೆಗಳು ವರದಿಯಾಗಿವೆ. ಇವುಗಳು ಜಾತಿ ಆಧಾರಿತ ಶುದ್ಧತೆ-ಅಶುದ್ಧತೆ ಕಲ್ಪನೆಯ ಜೀವಂತತೆಯನ್ನು ಸೂಚಿಸುತ್ತವೆ. ಭಾರತೀಯ ಸಮಾಜವು ಭೀಕರ ಜಾತಿ ಹಿಂಸಾಚಾರದ ಘಟನೆಗಳನ್ನು ಕಂಡಿದೆ. ಉದಾಹರಣೆಗೆ ಆಂಧ್ರಪ್ರದೇಶದ ಕರಂಚೇಡು ಹತ್ಯಾಕಾಂಡ ಮತ್ತು ಸುಂಡೂರು ಹತ್ಯಾಕಾಂಡ. ಇವುಗಳು ದೈಹಿಕ ಹಿಂಸಾಚಾರದ ತೀವ್ರ ರೂಪಗಳು. ಇಂದಿನ ಕ್ಷೌರ ಸೇವೆ ನಿರಾಕರಣೆಯಂತಹ ಘಟನೆಗಳು ಆ ಮಟ್ಟದ ಹಿಂಸಾಚಾರವಲ್ಲದಿದ್ದರೂ, ಅಸಮಾನತೆಯ ಮೂಲ ಮನೋವೃತ್ತಿ ಅದೇ ಆಗಿದೆ. ಡಾ. ಬಿ.ಆರ್. ಅಂಬೇಡ್ಕರ್ ಒತ್ತಿಹೇಳಿದ ಕಾನ್‌ಸ್ಟಿಟ್ಯೂಷನಲ್ ಮೊರ್ಯಾಲಿಟಿ ಇನ್ನೂ ಸಂಪೂರ್ಣವಾಗಿ ಸಾಮಾಜಿಕ ಜೀವನದಲ್ಲಿ ಆವರಿಸಿಲ್ಲ. ಕಾನೂನು ಸಮಾನತೆ ನೀಡಿದರೂ, ಸಾಮಾಜಿಕ ಸ್ವೀಕೃತಿ ಇಲ್ಲದೆ ಅದು ಕಾಗದದ ಮೇಲಿನ ಹಕ್ಕಾಗಿಯೇ ಉಳಿಯುತ್ತದೆ. ಕ್ಷೌರ ಸೇವೆ ನಿರಾಕರಣೆ ಪ್ರಕರಣಗಳು ಪ್ರಜಾಪ್ರಭುತ್ವದ ದೈನಂದಿನ ಅನುಭವದಲ್ಲಿ ಅಸಮಾನತೆ ಉಳಿದಿರುವುದನ್ನು ತೋರಿಸುತ್ತವೆ. ಇದು ಗ್ರಾಮ ಮಟ್ಟದಲ್ಲಿ ಸಂವಿಧಾನ ಜಾಗೃತಿ ಅಭಿಯಾನಗಳು, ಸಾಮಾಜಿಕ ಬಹಿಷ್ಕಾರ ಪ್ರಕರಣಗಳ ತ್ವರಿತ ವಿಚಾರಣೆ, ಪಂಚಾಯತ್ ಮಟ್ಟದಲ್ಲಿ ಸಮಾನ ಸೇವೆ ಖಚಿತಪಡಿಸುವ ನಿಯಮಗಳು, ಶಾಲಾ ಶಿಕ್ಷಣದಲ್ಲಿ ಜಾತಿ ವಿರೋಧಿ ಮೌಲ್ಯಗಳ ಒಳಗೊಳ್ಳುವಿಕೆಯ ಮೂಲಕ ಪರಿವರ್ತನೆ ಸಾಧ್ಯವಾಗಬಹುದು. ಗದಗದಂತಹ ಘಟನೆಗಳು ಕೇವಲ ಸ್ಥಳೀಯ ಸಮಸ್ಯೆಯಾಗಿಲ್ಲ; ಅವು ಸಂವಿಧಾನಾತ್ಮಕ ಸಮಾನತೆ ಮತ್ತು ಸಾಮಾಜಿಕ ವಾಸ್ತವಗಳ ನಡುವಿನ ಅಂತರವನ್ನು ಬಹಿರಂಗಪಡಿಸುತ್ತವೆ. ದಲಿತರಿಗಾಗಿ ಕ್ಷೌರ ಸೇವೆಗೆ ಪ್ರವೇಶವು ಕೇವಲ ಸೇವಾ ಪ್ರಶ್ನೆಯಲ್ಲ, ಅದು ಮಾನವ ಗೌರವ ಮತ್ತು ನಾಗರಿಕ ಸಮಾನತೆಯ ಪ್ರಶ್ನೆ. ಕಾನೂನು ಮತ್ತು ಅಂಕಿಅಂಶಗಳು ಸಮಸ್ಯೆಯ ತೀವ್ರತೆಯನ್ನು ತೋರಿಸುತ್ತವೆ; ಆದರೆ ನಿಜವಾದ ಬದಲಾವಣೆ ಸಾಮಾಜಿಕ ಮನೋವೃತ್ತಿಯ ಪರಿವರ್ತನೆಯಿಂದ ಮಾತ್ರ ಸಾಧ್ಯ.

ವಾರ್ತಾ ಭಾರತಿ 1 Mar 2026 1:32 pm

ಉಡುಪಿ : ಎಸ್ಐ ನಾಸೀರ್ ಹುಸೇನ್ ಕುಸಿದು ಬಿದ್ದು ಮೃತ್ಯು

ನಮ್ಮ ಪೊಲೀಸ್ ನಮ್ಮ ಹೆಮ್ಮೆ ಎಲ್ಲರಿಗೂ ಫಿಟ್ನೆಸ್ ಡಬ್ ಫ್ರೀ ಕರ್ನಾಟಕ ಸೈಬರ್ ಜಾಗೃತಿಗಾಗಿ ಉಡುಪಿ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ 5 ಕಿ.ಮೀ. ಮ್ಯಾರಥಾನ್ ಓಟವನ್ನು ಆಯೋಜಿಸಲಾಗಿತ್ತು. ಉಡುಪಿ ಅಜ್ಜರಕಾಡು ಮೈದಾನದಲ್ಲಿ ಹಮ್ಮಿಕೊಳ್ಳಲಾಗಿತ್ತು. ಇದರಲ್ಲಿ ಭಾಗಿಯಾಗಿದ್ದ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯ ಎಸ್‌ಐ ನಸೀರ್ ಹುಸೇನ್ ಕುಸಿದು ಬಿದ್ದು ಮೃತಪಟ್ಟಿದ್ದಾರೆ.

ವಿಜಯ ಕರ್ನಾಟಕ 1 Mar 2026 1:26 pm

ಕುವೈತ್ ಮೇಲೆ ಭೀಕರ ದಾಳಿ ನಡೆಸಿದ ಇರಾನ್ ಮಿಲಿಟರಿ, ಅಮೆರಿಕ ಸೇನಾ ನೆಲೆಗೆ ಹಾನಿ ಆರೋಪ | Israel Military

ಇಸ್ರೇಲ್ ದಿಢೀರ್ ಇರಾನ್ ಮೇಲೆ ದಾಳಿ ಮಾಡಿದ ನಂತರ ಮಧ್ಯಪ್ರಾಚ್ಯ ಭಾಗದಲ್ಲಿ ಪರಿಸ್ಥಿತಿ ಅತ್ಯಂತ ಸೂಕ್ಷ್ಮ ಸ್ಥಿತಿಗೆ ತಲುಪಿದೆ. ಇರಾನ್ ಸೇನೆ ಕೂಡ ರೊಚ್ಚಿಗೆದ್ದು ಇದೀಗ ಮರುದಾಳಿ ಆರಂಭಿಸಿದ್ದು, ಈ ಮೂಲಕ ಎರಡೂ ಕಡೆ ಕ್ಷಿಪಣಿಗಳು ತೂರಾಡುತ್ತಿವೆ. ಇದರ ಜೊತೆಗೆ ಅಮೆರಿಕ ಸೇನೆಯ ಬೃಹತ್ &ಶಕ್ತಿಶಾಲಿ ಯುದ್ಧ ವಿಮಾನಗಳು ಕೂಡ ಅಬ್ಬರಿಸುತ್ತಾ ಇರಾನ್ ನೆಲವನ್ನು ಧೂಳ್

ಒನ್ ಇ೦ಡಿಯ 1 Mar 2026 1:21 pm

ಮಾಚನೂರಲ್ಲಿ ಚರಂಡಿ ನೀರಿನ ಸಮಸ್ಯೆ; ಸಾಂಕ್ರಾಮಿಕ ರೋಗದ ಭೀತಿಯಲ್ಲಿ ಜನತೆ

ಯಾದಗಿರಿ: ಜಿಲ್ಲೆಯ ವಡಗೇರಾ ತಾಲೂಕು ವ್ಯಾಪ್ತಿಯ ಮಾಚನೂರ ಗ್ರಾಮದಲ್ಲಿ ಚರಂಡಿ ನೀರು ರಸ್ತೆ ಮೇಲೆ ಹರಿದು ಪಾಚುಗಟ್ಟಿರುವ ಪರಿಣಾಮ ಗ್ರಾಮಸ್ಥರು ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ. ಬಿಳ್ಹಾರ ಗ್ರಾಪಂಗೆ ವ್ಯಾಪ್ತಿಗೆ ಸೇರಿದ ಈ ಗ್ರಾಮದಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ ಗಂಭೀರವಾಗಿ ಕಾಣಿಸಿಕೊಂಡಿದ್ದು, ಸಾಂಕ್ರಾಮಿಕ ರೋಗದ ಭೀತಿ ಹೆಚ್ಚಾಗಿದೆ. ಗ್ರಾಮದ ಪ್ರಮುಖ ರಸ್ತೆಗಳ ಮೇಲೆಯೇ ಚರಂಡಿ ನೀರು ಹರಿದು ಸಂಚಾರ ದುಸ್ತರವಾಗಿದೆ. ವರ್ಷಗಳಿಂದ ಸಮರ್ಪಕ ಸ್ವಚ್ಛತೆ ಕೈಗೊಳ್ಳದ ಕಾರಣ ನಿಂತ ನೀರು ಹಸಿರು ಬಣ್ಣಕ್ಕೆ ತಿರುಗಿದ್ದು, ಸೊಳ್ಳೆಗಳ ಉತ್ಪತ್ತಿಗೆ ಕಾರಣವಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಇದರಿಂದ ಡೆಂಗ್ಯೂ, ಮಲೇರಿಯಾ ಸೇರಿದಂತೆ ವಿವಿಧ ಸಾಂಕ್ರಾಮಿಕ ರೋಗಗಳು ಹರಡುವ ಆತಂಕ ಮನೆ ಮಾಡಿದೆ. ಗ್ರಾಮದ ಸರಕಾರಿ ಶಾಲಾ ಕಟ್ಟಡ ಶಿಥಿಲಾವಸ್ಥೆಯಲ್ಲಿದ್ದು, ತಡೆಗೋಡೆ ಕುಸಿದಿದೆ. ಶಾಲೆ ಮತ್ತು ಮಹಿಳೆಯರ ಶೌಚಾಲಯಗಳು ಬಳಕೆಗೆ ಅಯೋಗ್ಯವಾಗಿವೆ. ಶುದ್ಧ ಕುಡಿಯುವ ನೀರಿನ ಘಟಕ ದುರಸ್ತಿಗೊಳಿಸದಿರುವುದರಿಂದ ಜನರು ಪರದಾಡುತ್ತಿದ್ದಾರೆ. ಸಿಸಿ ರಸ್ತೆ ಹಾಗೂ ಸಮರ್ಪಕ ಚರಂಡಿ ವ್ಯವಸ್ಥೆ ಸೇರಿದಂತೆ ಅನೇಕ ಮೂಲ ಸೌಕರ್ಯಗಳ ಕೊರತೆ ಸ್ಪಷ್ಟವಾಗಿದೆ. ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ಹಲವು ಬಾರಿ ಸಮಸ್ಯೆ ತಂದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದುಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ತಕ್ಷಣ ಚರಂಡಿ ಸ್ವಚ್ಛಗೊಳಿಸಿ, ತಗ್ಗು ಪ್ರದೇಶಗಳನ್ನು ಮಣ್ಣಿನಿಂದ ಮುಚ್ಚಿ, ಬ್ಲೀಚಿಂಗ್ ಪೌಡರ್ ಸಿಂಪಡಣೆ ಹಾಗೂ ಫಾಗಿಂಗ್ ಮೂಲಕ ಸೊಳ್ಳೆ ನಿಯಂತ್ರಣ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ. ಮಾಚನೂರಗ್ರಾಮದಲ್ಲಿ ಮೂಲಸೌಕರ್ಯಗಳ ಕೊರತೆಯಿಂದ ಜನ ಸಂಕಷ್ಟ ಅನುಭವಿಸುತ್ತಿದ್ದಾರೆ. ಸಾರ್ವಜನಿಕರ ಆರೋಗ್ಯದೊಂದಿಗೆ ಚಲ್ಲಾಟ ಆಡುತ್ತಿರುವ ಅಧಿಕಾರಿಗಳನ್ನು ಎಚ್ಚರಿಸಲು ಸಿಇಒ ಹಾಗೂ ಡಿಸಿ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ಉಮೇಶ್ ಕೆ. ಮುದ್ನಾಳ,  ಸಾಮಾಜಿಕ ಹೋರಾಟಗಾರ ಮಾಹಿತಿ ನೀಡದ ಅಧಿಕಾರಿಗಳು ಗ್ರಾಮದ ಕುಡಿಯುವ ನೀರು, ರಸ್ತೆ, ಚರಂಡಿ ಸೇರಿದಂತೆ ಹಲವು ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಮಾಹಿತಿ ಪಡೆಯಲು ಪತ್ರಿಕಾ ಪ್ರತಿನಿಧಿ ತಾಪಂ ಇಒ ಹಾಗೂ ಜಿಪಂ ಸಿಇಒ ಅವರನ್ನು ಸಂಪರ್ಕಿಸಲು ಯತ್ನಿಸಿದರೂ ದೂರವಾಣಿ ಸ್ವೀಕರಿಸಲಿಲ್ಲ ಎಂಬ ಆರೋಪ ಕೇಳಿಬಂದಿದೆ. ಜನ ಸಮಸ್ಯೆಗೆ ಸ್ಪಂದಿಸುವಲ್ಲಿ ಅಧಿಕಾರಿಗಳ ನಿರ್ಲಕ್ಷ್ಯ  ಅಸಮಾಧಾನಕ್ಕೆ ಕಾರಣವಾಗಿದೆ. ಚರಂಡಿ ನೀರು ರಸ್ತೆ ಮೇಲೆ ಹರಿದು ಪಾಚುಗಟ್ಟಿರುವುದರಿಂದ ಸಂಚಾರ ಕಷ್ಟವಾಗಿದೆ. ಸೊಳ್ಳೆಗಳ ಕಾಟದಿಂದ ಸಾಂಕ್ರಾಮಿಕ ರೋಗದ ಭೀತಿ ಹೆಚ್ಚಾಗಿದೆ. ಅಧಿಕಾರಿಗಳು ತಕ್ಷಣ ಭೇಟಿ ನೀಡಿ ಸಮಸ್ಯೆ ಬಗೆಹರಿಸಬೇಕು. -ರವಿ, ಗ್ರಾಮಸ್ಥ

ವಾರ್ತಾ ಭಾರತಿ 1 Mar 2026 1:17 pm

Bank Holidays: ಕರ್ನಾಟಕದಲ್ಲಿ ಮಾರ್ಚ್‌ ತಿಂಗಳ ಬ್ಯಾಂಕ್‌ ರಜೆಗಳ ಪಟ್ಟಿ

Karnataka bank holidays March 2026: ಕರ್ನಾಟಕದಲ್ಲಿ ಹಬ್ಬಗಳು ಮತ್ತು ವಾರಾಂತ್ಯದ ರಜೆಗಳು ಸೇರಿ ಮಾರ್ಚ್‌ ತಿಂಗಳಿನಲ್ಲಿ 10 ದಿನ ಕಾಲ ಬ್ಯಾಂಕ್‌ಗಳು ಮುಚ್ಚಲ್ಪಡುತ್ತವೆ. ಇದರಿಂದ ಬ್ಯಾಂಕ್ ಉದ್ಯೋಗಿಗಳಿಗೆ ಗುಡ್‌ ನ್ಯೂಸ್‌ ಸಿಕ್ಕಂತಾಗಿದೆ. ಮತ್ತೊಂದೆಡೆ, ಸಾಮಾನ್ಯ ಗ್ರಾಹಕರಿಗೆ ತೊಂದರೆ ಆಗುವ ಸಾಧ್ಯತೆಯಿದೆ. ಯಾವೆಲ್ಲ ದಿನ ಬ್ಯಾಂಕ್ ಬಂದ್ ಆಗಲಿವೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ. ಮಾರ್ಚ್‌ನಲ್ಲಿ ಯುಗಾದಿ,

ಒನ್ ಇ೦ಡಿಯ 1 Mar 2026 1:16 pm

‘ಲಚ್ಮನ ಸೈಕಲ್ ಪುರಾಣ’-ಪ್ರವಚನ

‘ಲಚ್ಮನ ಸೈಕಲ್ ಪುರಾಣ’-ಪ್ರವಚನ ಸಣ್ಣ ಕಥಾ ಪ್ರಕಾರವು ಕನ್ನಡ ಸಾಹಿತ್ಯಕ್ಕೆ ಪ್ರವೇಶವಾದುದು ಪಾಶ್ಚತ್ಯ ಸಾಹಿತ್ಯ ಪ್ರೇರಣೆಯಿಂದ. ಪಂಜೆ ಮಂಗೇಶರಾಯರ ‘ನನ್ನ ಚಿಕ್ಕ ತಾಯಿ’ ಮೊದಲ ಸಣ್ಣ ಕಥೆ. 1900ನೇ ಇಸವಿಯ ಜುಲೈ ತಿಂಗಳ ‘ಸುವಾಸಿನಿ’ ಪತ್ರಿಕೆಯಲ್ಲಿ ಈ ಕಥೆ ಪ್ರಕಟವಾದ ಮೇಲೆ ಸಣ್ಣ ಕಥೆಗಳ ಯುಗವೇ ಪ್ರಾರಂಭವಾಯಿತು. ಒಂದೂ ಕಾಲು ಶತಮಾನದಿಂದಲೂ ಈ ಪ್ರಕಾರವು ಸಮೃದ್ಧವೂ, ಶ್ರೀಮಂತವೂ ಆಗಿ ಬೆಳೆಯುತ್ತಲೇ ಇದೆ. ಈ 21ನೇ ಶತಮಾನದಲ್ಲಿ ಬರೆಯುತ್ತಿರುವ ಯುವ ಸಾಹಿತಿಗಳು ಕನ್ನಡ ಕಥಾ ಲೋಕಕ್ಕೆ ವಿಶಿಷ್ಟ ಆಕರ್ಷಣೆ, ಗತ್ತು, ಗೈರತ್ತುಗಳನ್ನು ನೀಡಿದ್ದಾರೆ. ಯಾವುದೇ ಸಾಹಿತ್ಯ ಪ್ರಕಾರವು ಸಹೃದಯರಲ್ಲಿ ಭಾವದೀಪ್ತಿಗೊಳ್ಳುವುದರ ಜೊತೆಗೆ, ಹೊಸ ಚಿಂತನೆಗಳಿಂದ ಬೌದ್ಧಿಕ ಅರಿವು ವಿಸ್ತರಿಸಬೇಕು. ಇದು ನಮ್ಮದೇ ಕಥೆ ಎಂಬ ಸಣ್ಣ ಅನುಭೂತಿ ಓದುಗನಲ್ಲಿ ಉಂಟಾದರೆ ಲೇಖಕ ಧನ್ಯನೆಂದು ಭಾವಿಸುತ್ತಾನೆ. ಇಂತಹ ಒಂದು ಅನುಭೂತಿಯನ್ನು ಉಂಟು ಮಾಡಿದ ಕಥೆಗಾರ ಮೋಹನ ಬಣಕಾರ ಇವರ ಚೊಚ್ಚಲ ಕಥಾ ಸಂಕಲನ ‘ಲಚ್ಮನ ಸೈಕಲ್ ಪುರಾಣ ಮತ್ತು ಇತರ ಕಥೆಗಳು’ ಎಂಬ ಕೃತಿಯಲ್ಲಿ 10 ಕಥೆಗಳಿವೆ. ನಾಟಕ ಕಂಪೆನಿ, ಪೊಲೀಸ್ ಅಜ್ಜಿ, ಹೀಗೊಂದು ಮದುವೆ ಮುಂತಾದವುಗಳು ಸ್ತ್ರೀ ಕೇಂದ್ರಿತವಾದವುಗಳಾಗಿದ್ದು ರಾಜೂ ಕಾಕಾ, ಒಂದು ಬಾಟಲಿನ ಕಥೆ, ಆಚಾರವಿಲ್ಲದ ನಾಲಿಗೆ, ಲಚ್ಮನ ಸೈಕಲ್ ಪುರಾಣ ಮುಂತಾದವುಗಳು ಪುರುಷ ಕೇಂದ್ರಿತವಾದವುಗಳಾಗಿವೆ. ಮುಗ್ಧ ಮಗುವನ್ನು ಕೇಂದ್ರವಾಗಿಸಿದ. ‘ಎ.ಬಿ.ಸಿ.ಡಿ.’ ಕಥೆ ಮತ್ತು ‘ಲೈಟ್ ಆಫ್ ಪ್ಲೀಸ್’ ಸಲಿಂಗ ಕಾಮದ ಬಗ್ಗೆ ಮಾತನಾಡುತ್ತದೆ. ಕಥೆಗಳಿಗೆ ವಸ್ತುವನ್ನು ಆಯ್ಕೆ ಮಾಡುವುದರಲ್ಲಿಯೂ, ಅದನ್ನು ಪ್ರಸ್ತುತ ಮಾಡಿಸಿದ ರೀತಿಯಲ್ಲಿಯೂ ಲೇಖಕರ ಕೌಶಲ ಮತ್ತು ಪ್ರತಿಭೆಯನ್ನು ಮೆಚ್ಚಲೇಬೇಕು. ‘ಹೇಳುವುದು ಶಾಸ್ತ್ರ, ಇಕ್ಕುವುದು ಗಾಳ’ ಎಂಬ ಗಾದೆ ಮಾತಿನಂತೆ ಊರಿಗೆಲ್ಲ ಉಪದೇಶ ಮಾಡುವ ಶಿಕ್ಷಕರ ಮಗನೇ ಕುಡುಕನಾಗಿ ಮಾಡುತ್ತಿದ್ದ ಅವಾಂತರಗಳ ಅನಾವರಣವನ್ನು ‘ಆಚಾರ ಹೇಳುವ ನಾಲಿಗೆ’ ಕಥೆಯಲ್ಲಿ ಮಾಡಲಾಗಿದೆ. ಗಾಜಿನ ಮನೆಯೊಳಗೆ ಕೂತವರು ಇತರರ ಮನೆಗೆ ಕಲ್ಲು ಹೊಡೆಯಬಾರದು ಎಂಬ ವಿವೇಕವನ್ನು ಮೂಡಿಸುತ್ತದೆ. ಪರರ ಸೊತ್ತುಗಳನ್ನು ಆಶಿಸಬಾರದು ಎಂಬುದನ್ನು ಯುಕ್ತಿಪೂರ್ವಕವಾದ ಘಟನೆಗಳಿಂದ ಹೆಣೆಯಲಾದ ಕಥೆ ‘ಅವಲಕ್ಕಿ ಸರ’. ಕಳೆದುಕೊಂಡ ಅಮೂಲ್ಯ ವಸ್ತುವನ್ನು ದೇವರ ಹುಂಡಿಯಿಂದಲೂ ಹೊರತೆಗೆದು ನೀಡಿ ಸಂತೈಸಿದ ರೀತಿ ಅನನ್ಯ. ಇದು ಸಾಧ್ಯವೇ ಎಂಬ ಪ್ರಶ್ನೆ ಓದುಗನಲ್ಲಿ ಮೂಡಿಸಿದರೂ, ನೊಂದವರನ್ನು ರಕ್ಷಿಸುವ ಹೊಣೆ ದೇವರಿಗಿರಬೇಕು ಎಂಬುದನ್ನು ಸಾರುತ್ತದೆ. ಹುಂಡಿಯನ್ನು ಒಡೆದು ಅವಲಕ್ಕಿ ಸರವನ್ನು ಕಳೆದುಕೊಂಡ ನೊಂದವರಿಗೆ ನೀಡಿದ ಅರ್ಚಕರೇ ನಮಗೆ ದೇವರಾಗಿ ಕಾಣುತ್ತಾರೆ. ‘ಹೀಗೊಂದು ಮದುವೆ’ಯ ವಸ್ತುವೂ ವಿಶಿಷ್ಟವಾಗಿದೆ. ಹೆತ್ತವರ ಒತ್ತಾಯಕ್ಕೆ ಮಣಿದ ಆಧುನಿಕ ಯುವಕ- ಯುವತಿಯರು ಮದುವೆಗೆ ಸಮ್ಮತಿಸದೆ ಒಂದು ವರ್ಷದವರೆಗೂ ಸಂಪರ್ಕಿಸದೆ ದೂರ ಉಳಿದವರು ಬಳಿಕ ಮದುವೆಗೆ ಒಪ್ಪಿದ್ದು ಹೆತ್ತವರಿಗೆ ಸಂತಸದ ವಿಷಯವಾಯಿತು. ಆದರೆ ಯುವತಿಯು ಚಾಣಾಕ್ಷತನದಿಂದ ತನ್ನ ಪ್ರೇಮಿಯೊಂದಿಗೆ ವಿದೇಶಕ್ಕೆ ಹಾರಲು ತಂತ್ರ ಹೂಡಿದ್ದು, ಯುವಕನನ್ನು ಕಂಗೆಡಿಸುತ್ತದೆ. ಯುವಕನ ಮುಗ್ಧತೆಯನ್ನು ದುರುಪಯೋಗ ಪಡಿಸಿಕೊಂಡ ಯುವತಿಯ ಕೃತ್ಯಕ್ಕೆ ಬೆರಗಾಗುವ ಸರದಿ ನಮ್ಮದು. ಸಲಿಂಗ ಕಾಮಿಗಳು ಯಾವ ಸ್ಥಳದಲ್ಲಿ, ಯಾವ ಸಮಯದಲ್ಲಿ, ಯಾವ ರೀತಿಯಲ್ಲಿ ತಮ್ಮ ತೀಟೆಯನ್ನು ತೀರಿಸಿಕೊಳ್ಳುತ್ತಾರೆ ಎಂಬುದನ್ನು ತಿಳಿಸುವ ಕಥೆಯೇ ‘ಲೈಟ್ ಆಫ್ ಪ್ಲೀಸ್’. ಈ ಕಥೆಯಲ್ಲಿ ಸಮಾಜವನ್ನು ಎಚ್ಚರಿಸುವ ಹಿತ ನುಡಿಗಳಿವೆ. ‘ಲಚ್ಮನ ಸೈಕಲ್ ಪುರಾಣ’ ಹಳ್ಳಿಯ ಮುಗ್ಧ ಯುವಕನ ಪ್ರೀತಿ ಮತ್ತು ಸ್ವಾಮಿ ನಿಷ್ಠೆಯನ್ನು ಸೊಗಸಾಗಿ ವರ್ಣಿಸಲಾಗಿದೆ. ಕೃಷಿಕ ಕುಟುಂಬದ ಪ್ರಾಣಿ ಪ್ರೀತಿ, ಅದು ಕಾಯಿಲೆ ಬಿದ್ದಾಗ ಪಶು ವೈದ್ಯರನ್ನು ಸಂಪರ್ಕಿಸಲು ಪಡುವ ಸಂಕಷ್ಟಗಳು, ತನಗೆ ಸೈಕಲ್ ಬಿಡಲು ಬಾರದಿದ್ದರೂ, ಸೈಕಲ್ ಕೊಂಡು ಹೋಗು ಎಂಬ ಮಾತನ್ನೇ ನಂಬಿ ಸೈಕಲ್ ದೂಡಿಕೊಂಡು ಹೋದ ಆಳು ಲಚ್ಮನ ನಿಷ್ಠೆಯನ್ನು ನಾವು ಗೌರವಿಸುವಂತೆ ಮಾಡುತ್ತದೆ. ವಿದ್ಯಾರ್ಥಿಗಳು ವಾಸವಿದ್ದ ಪಕ್ಕದ ಮನೆಗೆ ಬಾಡಿಗೆಗೆ ಬಂದ ಅಜ್ಜಿ ಈ ಹುಡುಗರೊಂದಿಗೆ ಪ್ರೀತಿಯನ್ನು ಬೆಳೆಸಿಕೊಂಡು ಅವರಲ್ಲಿ ಶಿಸ್ತನ್ನು ರೂಪಿಸಿದ ರೀತಿ ಖುಷಿ ಕೊಡುತ್ತದೆ. ಅದೇ ಅಜ್ಜಿ ಒಂದು ದಿನ ಮಲಗಿದಲ್ಲೇ ನಿಧನರಾದಾಗ ಈ ಹುಡುಗರು ನಿಜವಾಗಿ ತಾವು ಅನಾಥರಾದಂತೆ ಕಂಬನಿ ತುಂಬಿ ವಿದಾಯ ಹೇಳಿದ್ದು ಹೃದಯಸ್ಪರ್ಶಿಯಾಗಿದೆ. ‘ಪೊಲೀಸ್ ಅಜ್ಜಿ’ಯ ಈ ಕತೆ ನಮ್ಮ ಮನಸ್ಸನ್ನು ತಟ್ಟುವಂತೆ ಮಾಡುತ್ತದೆ. ಸಹ ಪ್ರಯಾಣಿಕರೊಂದಿಗೆ ಸಹನೆ ಇಲ್ಲದೆ ವರ್ತಿಸುವ ನಡವಳಿಕೆಯು ಮನುಷ್ಯ ಪ್ರೀತಿಯ ಕೊರತೆಯನ್ನು ಹೇಳುತ್ತಾ ಸಾಮಾಜಿಕ ಸಭ್ಯತೆಯು ಸಮಾಜದಲ್ಲಿ ನಮ್ಮ ಅಸ್ತಿತ್ವಕ್ಕೆ ಮತ್ತು ನೆಮ್ಮದಿಗೆ ಅತ್ಯವಶ್ಯಕವಾಗಿವೆ ಎಂಬುದನ್ನು ವ್ಯಕ್ತಪಡಿಸುವ ಕಥೆಯೇ ‘ಒಂದು ಬಾಟಲಿನ ಕಥೆ’. ನೀರಿನ ಬಾಟಲ್ ಕೆಳಗೆ ಬಿದ್ದ ಕಾರಣಕ್ಕೆ ಕೆರಳಿದ ನಾಯಕಿಯೇ ಮುಂದೆ ಅಪಘಾತದ ದುರಂತದಲ್ಲಿ ತತ್ತರಿಸುತ್ತಾ ಅದೇ ಬಾಟಲಿಯ ನೀರನ್ನು ಬಯಸುವ ಘಟನೆಯ ಚಿತ್ರಣವು ಮನೋಜ್ಞವಾಗಿದೆ. ಸಾಮಾಜಿಕ ಎಚ್ಚರದ ಜೊತೆಗೆ ಮನುಷ್ಯರ ಮಧ್ಯೆ ಹೊಗೆಯಾಡುತ್ತಿರುವ ಅಪನಂಬಿಕೆಗಳ ದುಷ್ಪರಿಣಾಮಗಳನ್ನು ಈ ಕಥೆ ಸುಂದರವಾಗಿ ಕಟ್ಟಿಕೊಟ್ಟಿದೆ. ಕುಟುಂಬಕ್ಕಾಗಿ ತನ್ನ ಸರ್ವಸ್ವವನ್ನು ತ್ಯಾಗ ಮಾಡಿದ ರಾಜೂ ಕಾಕನ ಅಂತ್ಯವು ಓದುಗರ ಕಣ್ಣು ತೇವಗೊಳ್ಳುವಂತೆ ಮಾಡುತ್ತದೆ. ಮನೆಯ ಹೆಂಗಸರು ಕಾಕನ ಮೇಲೆ ಹೊರಿಸಿದ ಆರೋಪಗಳಿಂದ ಘಾಸಿಗೊಂಡ ಕಾಕಾ ಆತ್ಮಹತ್ಯೆ ಮಾಡಿಕೊಂಡು ಸಾಯುವುದಕ್ಕೆ ಅವನು ಸಾಕಿದ ಕುಟುಂಬವೇ ಹೊಣೆಯೆಂಬುದನ್ನು ಲೇಖಕ ಸ್ಪಷ್ಟಪಡಿಸಿದ ರೀತಿಗೆ ಸಹೃದಯರು ಅಭಿನಂದಿಸಲೇ ಬೇಕು. ‘ರಾಜೂ ಕಾಕಾ ಹೋಗಿಬಿಟ್ಟ’ ಎಂಬ ಕಥೆಯು ರಾಜೂನ ವ್ಯಕ್ತಿತ್ವವನ್ನು ಅಪೂರ್ವ ರೀತಿಯಲ್ಲಿ ಕಟ್ಟಿಕೊಟ್ಟಿದೆ. ‘ಎ.ಬಿ.ಸಿ.ಡಿ.’ ಕಥೆಯು ಮಕ್ಕಳ ಮುಗ್ಧ ಪ್ರಪಂಚವನ್ನು ಅದರಲ್ಲೂ ಪ್ರಾಣಿಗಳ ಮೇಲಿನ ಪ್ರೀತಿಯನ್ನು, ಸೂಕ್ಷ್ಮ ರೀತಿಯ ಸ್ಪಂದನವನ್ನು ಸೊಗಸಾಗಿ ಚಿತ್ರಿಸಿದೆ. ‘ನಾಟಕ ಕಂಪೆನಿ’ ಕಥೆಯಲ್ಲಿ ಆಧುನಿಕ ಉದ್ಯೋಗಸ್ಥ ಮಹಿಳೆಯರು ಮಾಡುವ ಕೆಲಸಗಳ್ಳತನದ ಪ್ರಸಂಗಗಳನ್ನು ಲಲಿತ ಪ್ರಬಂಧ ರೀತಿಯಲ್ಲಿ ಸುಂದರವಾಗಿ ಹಣೆಯಲ್ಪಟ್ಟಿದೆ. ಒಟ್ಟಾರೆಯಾಗಿ ಈ ಹತ್ತು ಕಥೆಗಳಲ್ಲಿ ಹೆಚ್ಚಿನವುಗಳು ಪ್ರಸ್ತುತಿಗೊಂಡದ್ದು ಸಂಭಾಷಣೆಗಳ ಮೂಲಕ. ಇದು ಈ ಸಂಕಲನದ ವಿಶಿಷ್ಟ ಶೈಲಿಯಾಗಿದೆ. ಲೇಖಕರು ಮಾನವ ಮನಸ್ಸಿನ ತುಡಿತ-ಮಿಡಿತಗಳಿಗೆ ಸ್ಪಂದಿಸಿದ ರೀತಿಯೂ ಗಮನಾರ್ಹವಾಗಿದೆ. ಈ ಸಂಕಲನದ ಹಲವು ಕಥೆಗಳು ತುಷಾರ, ಮಯೂರ ಮುಂತಾದ ಪತ್ರಿಕೆಗಳಲ್ಲಿ ಪ್ರಕಟಗೊಂಡಿದ್ದು ಜನ ಮೆಚ್ಚುಗೆಗಳಿಸಿವೆ. ಲೇಖಕ ಮೋಹನ ಬಣಕಾರ ಅವರಿಂದ ಕನ್ನಡ ಕಥಾಲೋಕಕ್ಕೆ ಇನ್ನೂ ಉತ್ಕೃಷ್ಟವಾದ ಕಥೆಗಳನ್ನು ನಿರೀಕ್ಷಿಸಬಹುದು. ಪ್ರಕಾಶಕರಾದ ಬೆನಕ ಬುಕ್ಸ್ ಬ್ಯಾಂಕ್ ಅವರಿಗೂ ನಮ್ಮ ಅಭಿನಂದನೆಗಳು. ಈ ಕೃತಿಯ ಮುಖಬೆಲೆ: 230 ರೂ. ಪ್ರಕಾಶಕರು: ಬೆನಕ ಬುಕ್ಸ್ ಬ್ಯಾಂಕ್, ಯಳಗಲ್ಲು, ಕೋಡೂರು ಅಂಚೆ, 577418 ಹೊಸನಗರ (ತಾ.), ಶಿವಮೊಗ್ಗ ಜಿಲ್ಲೆ, ಮೊ:7338437666

ವಾರ್ತಾ ಭಾರತಿ 1 Mar 2026 1:12 pm

ಇರಾನ್‌ನ ಶಾಲೆ ಮೇಲೆ ಇಸ್ರೇಲ್‌ ನಡೆಸಿದ ದಾಳಿಯಲ್ಲಿ ಮೃತ ಮಕ್ಕಳ ಸಂಖ್ಯೆ 148ಕ್ಕೆ ಏರಿಕೆ

ಟೆಹರಾನ್: ಶನಿವಾರ ದಕ್ಷಿಣ ಇರಾನ್‌ನ ಮಿನಾಬ್ ನಗರದಲ್ಲಿನ ಪ್ರಾಥಮಿಕ ಶಾಲೆಯ ಮೇಲೆ ಇಸ್ರೇಲ್-ಅಮೆರಿಕ ಜಂಟಿಯಾಗಿ ನಡೆಸಿದ ದಾಳಿಯಲ್ಲಿ ಮೃತ ಮಕ್ಕಳ ಸಂಖ್ಯೆ 148ಕ್ಕೆ ಏರಿಕೆಯಾಗಿದ್ದು, 95 ಮಂದಿ ಗಾಯಗೊಂಡಿದ್ದಾರೆ ಎಂದು aljazeera ವರದಿ ಮಾಡಿದೆ.   ಶನಿವಾರ ಇಸ್ರೇಲ್-ಅಮೆರಿಕ ಜಂಟಿಯಾಗಿ ನಡೆಸಿದ ದಾಳಿಯಲ್ಲಿ ಶಾಲಾ ಕಟ್ಟಡ ಭಾರಿ ಹಾನಿಗೀಡಾಗಿತ್ತು. ಈ ದಾಳಿಯಲ್ಲಿ ಇನ್ನೂ ಹಲವರು ಕಟ್ಟಡದ ಅವಶೇಷಗಳಡಿ ಸಿಲುಕಿರುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ದಾಳಿಯಲ್ಲಿ ಗಾಯಗೊಂಡಿದ್ದ ವಿದ್ಯಾರ್ಥಿನಿಯರು ಹಾಗೂ ಶಾಲಾ ಸಿಬ್ಬಂದಿಗಳನ್ನು ಸಮೀಪದ ಆಸ್ಪತ್ರೆಯೊಂದಕ್ಕೆ ದಾಖಲಿಸಲಾಗಿತ್ತು. ಈ ದಾಳಿಯಲ್ಲಿ ಮೃತರ ಸಂಖ್ಯೆ ಏರಿಕೆಯಾಗುತ್ತಲೇ ಸಾಗಿದೆ.

ವಾರ್ತಾ ಭಾರತಿ 1 Mar 2026 1:02 pm

ಇಂದಿನಿಂದ ಕಲಬುರಗಿಯಲ್ಲಿ ಮಹಿಳಾ ಐಟಿಎಫ್ ಟೆನಿಸ್ ಟೂರ್ನಿ

11ಕ್ಕೂ ಹೆಚ್ಚು ವಿದೇಶಿ ಆಟಗಾರ್ತಿಯರು ಭಾಗಿ: ವಿನ್ನರ್‌ಗೆ 30 ಸಾವಿರ ಡಾಲರ್!

ವಾರ್ತಾ ಭಾರತಿ 1 Mar 2026 1:00 pm

34 -36 ಡಿಗ್ರಿ ಸೆಲ್ಸಿಯಸ್ ಉರಿ ಬಿಸಿಲು, ಸೆಖೆ ಭುಗಿಲು ; ಫೆಬ್ರವರಿಯಲ್ಲೇ ಉರಿಯುತ್ತಿದೆ ಹಾವೇರಿ

ಹಾವೇರಿ ಜಿಲ್ಲೆಯಾದ್ಯಂತ ಬೇಸಿಗೆ ಆರಂಭದಲ್ಲೇ ನೀರಿನ ಕೊರತೆ ಎದುರಾಗಿದೆ. ಬಹುತೇಕ ಕಡೆ ಬೋರ್‌ವೆಲ್‌ ಮತ್ತು ತೆರೆದ ಬಾವಿಗಳ ನೀರಿನ ಮಟ್ಟ ಕುಸಿತ ಕಂಡುಬಂದಿದೆ. ಒಂದೆಡೆ ನೀರಿನ ಅಭಾವ ಮತ್ತೊಂದೆಡೆ ಸುಡು ಬಿಸಿಲಿಗೆ ಬೆಳೆಗಳು ಕಮರುತ್ತಿವೆ. ರೈತರು ನೀರಾವರಿ ನಿರ್ವಹಣೆಯಲ್ಲಿ ಹೆಚ್ಚು ಜಾಗ್ರತೆ ವಹಿಸುವ ಅಗತ್ಯವಿದೆ ಎಂದು ಕೃಷಿ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ವಿಜಯ ಕರ್ನಾಟಕ 1 Mar 2026 12:57 pm

ಅಕ್ಷತಾ ಎಂಬ ಕವಯಿತ್ರಿಯೂ ರಾಧಕ್ಕ ಎಂಬ ಟೀಚರೂ..!

ಅಣಶಿಯ ಶಾಲೆ ಕೇವಲ ಒಂದು ವಿದ್ಯಾಲಯವಲ್ಲ; ಅದು ಬದುಕಿನ ಪಾಠಶಾಲೆ. ಅಲ್ಲಿ ಮಕ್ಕಳ ಹೆಜ್ಜೆಗೊಂದು ಕಥೆ, ಕಣ್ಣೀರಿಗೊಂದು ಅರ್ಥ, ನಗುವಿಗೊಂದು ಭವಿಷ್ಯ ಮತ್ತು ಈ ಎಲ್ಲದ ಮಧ್ಯೆ ನಿಂತಿರುವ ರಾಧಕ್ಕ - ಕಾಡಿನ ನಡುವೆ ಹೊತ್ತಿ ಉರಿಯುವ ಒಂದು ಬೆಳಕಿನ ಮೌನದ ದೀಪವೇ ಸರಿ. ಮೊನ್ನೆ ಜೋಯಿಡಾ ಕಾಡಿನೊಳಗಡೆ ಕನ್ನಡ ಶಾಲೆಗಳಿಗೆ ಸ್ನೇಹಿತರು ಅಕ್ಷರ ಸಾಮಗ್ರಿಗಳನ್ನು ಹಂಚುತ್ತಿದ್ದ ಸಂದರ್ಭ. ಒಂದು ಶಾಲೆ ಮುಗಿದರೆ ಮತ್ತೊಂದು ಶಾಲೆ. ಹಸಿರು ಕಾಡಿನ ಮಧ್ಯೆ ಅಡಗಿಕೊಂಡ ಪುಟ್ಟ ಪುಟ್ಟ ಸರಕಾರಿ ಶಾಲೆಗಳವು. ಅಲ್ಲಿ ಮಕ್ಕಳ ಕಣ್ಣುಗಳಲ್ಲಿ ಕನಸು, ಕೈಯಲ್ಲಿ ಕಾಗದ-ಪೆನ್ನು, ಮನಸ್ಸಿನಲ್ಲಿ ಕಲಿಕೆಯ ಭರವಸೆ ಎದ್ದು ಕಾಣುತ್ತಿತ್ತು. ಆ ಓಡಾಟದ ಮಧ್ಯೆ ನನ್ನ ಹುಡುಕಾಟ ಒಂದೇ. ‘‘ಈ ಕಾಡಿನೊಳಗಡೆ ಎಲ್ಲಾದರೂ ರಾಧಕ್ಕೋರು ಸಿಗುತ್ತಾರಾ?’’ ಎಂದು. ಕಾರಣ, ಕನ್ನಡ ಮಾಸಿಕ ಒಂದರಲ್ಲಿ ಕೆಲವು ವರ್ಷಗಳ ಹಿಂದೆ ಕಂತು ಕಂತುಗಳಲ್ಲಿ ಪ್ರಕಟವಾದ ಕಾಡೊಳಗಡೆಯ ಶಿಕ್ಷಕಿಯೊಬ್ಬರು ಬರೆದ ಅಪರೂಪದ ಅನುಭವ ಕಥನವನ್ನು ಓದಿದ್ದೆ. ಹಾಗಂತ ಅದು ಕೇವಲ ಶಿಕ್ಷಕಿಯೊಬ್ಬರ ದಿನಚರಿ ಅಲ್ಲ; ಅದು ಕಾಡುಮಕ್ಕಳ ಬದುಕಿನ ಪಾಠ. ಬುಡಕಟ್ಟು ಜನಾಂಗದ ಮಕ್ಕಳ ಕೈ ಹಿಡಿದು ಕಲಿಕೆಯ ಹಾದಿಯಲ್ಲಿ ನಡೆಸುವ ತಪಸ್ಸಿನ ಕಥೆ. ಆ ಅಂಕಣ ಓದಿದ ಮೇಲೆ, ಆ ರಾಧಕ್ಕ ನನ್ನೊಳಗೆ ಹೀರೋ ಆಗಿಬಿಟ್ಟಿದ್ದರು. ಸಿದ್ಧಿ, ಹಾಲಕ್ಕಿ, ಕುಡುಬಿ-ಈ ಜನಾಂಗಗಳ ಸಾಂದ್ರತೆಯೊಳಗೆ ಇರುವ ಜೋಯಿಡಾ ಕಾಡು, ಅಲ್ಲಿ ವಿದ್ಯಾಭ್ಯಾಸ ಎಂದರೆ ಪಠ್ಯಪುಸ್ತಕದ ಪಾಠವಲ್ಲ; ಅದು ಬದುಕಿನೊಂದಿಗೆ ಹೋರಾಡುವ ಕಲೆ. ಸರಿಯಾದ ವಿದ್ಯುತ್ ಇಲ್ಲ, ನಿರಂತರ ಸುರಿಯುವ ಮಳೆ, ಕೆಲವೊಮ್ಮೆ ಮೊಬೈಲ್ ರೇಂಜ್ ಕೂಡ ಇಲ್ಲದ ಪ್ರದೇಶ. ಒಂದೇ ಒಂದು ಪೆಟ್ರೋಲ್ ಬಂಕ್ ಇರುವ ಇಡೀ ತಾಲೂಕು. ರಸ್ತೆಗಳೇ ವಿರಳ. ಕಾಡುಪ್ರಾಣಿಗಳ ಹಾವಳಿ, ನಿರಾಸಕ್ತಿಯ ಪೋಷಕರು. ಇಂತಹ ಪರಿಸ್ಥಿತಿಯಲ್ಲಿ ಪ್ರತಿದಿನ ಮಕ್ಕಳನ್ನು ತರಗತಿಯಲ್ಲಿ ಕೂರಿಸಿ ಪಾಠ ಹೇಳುವುದು ಕಡಿಮೆ ಪರಿಶ್ರಮವಲ್ಲ; ಅದು ತಪಸ್ಸೇ. ಅಂಥ ಜಾಗದಲ್ಲಿ ಹುಟ್ಟೂರು ಬಿಟ್ಟು, ಮೂಲಭೂತ ಸೌಲಭ್ಯಗಳಿಲ್ಲದ ಶಾಲೆಗಳಲ್ಲಿ ಸೇವೆ ಮಾಡುತ್ತಿರುವ ಶಿಕ್ಷಕರು ನಿಜಕ್ಕೂ ಮೌನ ಯೋಧರು. ಶಿವಮೊಗ್ಗ, ಕುಮಟಾ, ಕಾರವಾರ, ಹಳಿಯಾಳದಂತಹ ನಗರಗಳಿಂದ ಬಂದು, ಕಾಡಿನೊಳಗಡೆ ಮಕ್ಕಳ ಭವಿಷ್ಯ ಕಟ್ಟಲು ತಮ್ಮ ಬದುಕಿನ ಸುಖವನ್ನು ಪಣಕ್ಕಿಟ್ಟಿರುವ ಈ ಶಿಕ್ಷಕರ ಆದರ್ಶಗಳ ಬಗ್ಗೆ ಒಂದು ಪುಸ್ತಕವೇ ಬರಬೇಕು. ಅಂಥ ಕಾಡೊಳಗಡೆ ರಾಧಕ್ಕರ ಹುಡುಕಾಟಕ್ಕೆ ವಿಶೇಷ ಕಾರಣವಿತ್ತು. ಅವರು ಬರೆದ ಅಂಕಣದಲ್ಲಿ, ಊರೊಟ್ಟಿಗೆ ಸೇರಿ ಶಾಲೆ ಕಟ್ಟಿದ ಕಥೆಯನ್ನು ವಿವರಿಸಿದ್ದರು. ಅದರಲ್ಲಿ ಓದುಗ ಅಭಿಮಾನಿಗಳು ಕೊಟ್ಟ ಪುಸ್ತಕಗಳು ಗ್ರಂಥಾಲಯ ತುಂಬಿದ ಕಥೆ ಇತ್ತು. ದಾನಿಗಳು ಕೊಟ್ಟ ಸಹಾಯದ ಸಾಕ್ಷಿಗಳು ಶಾಲೆ ತುಂಬಿತ್ತು. ಊರಿನ ಜೊತೆ ಬೆಸೆದುಕೊಂಡ ಸಂಬಂಧ, ಮಕ್ಕಳನ್ನು ಊರಿನ ನಾಳೆಯ ಮಕ್ಕಳಾಗಿ ರೂಪಿಸಬೇಕೆನ್ನುವ ದೂರದೃಷ್ಟಿ, ಶಿಕ್ಷಣವನ್ನು ಬದುಕಿನ ಭಾಗವಾಗಿಸುವ ಅವರ ಕನಸು-ಇವೆಲ್ಲ ನನ್ನ ಮನಸ್ಸನ್ನು ತೀವ್ರವಾಗಿ ಕಾಡಿತ್ತು. ಅಂತೂ ಮೊನ್ನೆ ದಿನ, ನಮ್ಮ ಬಸ್ಸು ಅಣಶಿ ಶಾಲೆಯ ಅಂಗಳದಲ್ಲಿ ನಿಂತಾಗ, ರಾಧಕ್ಕ ಸಿಕ್ಕೇ ಬಿಟ್ಟರು. ಅವರ ನಡಿಗೆ, ವೇಗ, ದೃಢತೆ, ಹೊಣೆಗಾರಿಕೆಯ ಹೆಜ್ಜೆಗಳು. ಹೇಳದೇ ಹೇಳುವಂತೆ, ಈ ಶಾಲೆಯ ಮುಖ್ಯೋಪಾಧ್ಯಾಯಿನಿ ಅವರೇ ಅನ್ನುವ ಭಾವವಿತ್ತು. ನಮ್ಮವರು ತಂದ ಲೇಖನ ಸಾಮಗ್ರಿ, ಕುಣಬಿ ಮಕ್ಕಳ ತಾಯಂದಿರಿಗೆ ಸೀರೆ, ಮಕ್ಕಳಿಗೆ ತಿಂಡಿಗಳನ್ನು ಹಂಚುವ ಮುಂಚೆ, ರಾಧಕ್ಕ ನಮ್ಮನ್ನೆಲ್ಲ ಉದ್ದೇಶಿಸಿ ಮಾತನಾಡಲು ನಿಂತರು. ಅದಕ್ಕೂ ಮುಂಚೆ, ಕುಣಬಿ ಹುಡುಗನೊಬ್ಬ ದಾಸರ ಪದವನ್ನು ಹಾಡಿದ. ಕಾಡಿನ ಮೌನದೊಳಗೆ ಕೀರ್ತನೆಯ ಸ್ವರ ಹರಿದಾಗ, ಖಂಡಿತವಾಗಿಯೂ ಆ ಶಾಲೆ ಯಾವುದೋ ವಿಶಿಷ್ಟ ಸ್ಥಳವೆನಿಸಿತು. ರಾಧಕ್ಕನ ಮುನ್ನುಡಿ, ಆ ಶಾಲೆಯನ್ನು ನನ್ನ ಕಣ್ಣಲ್ಲಿ ಮತ್ತಷ್ಟು ಎತ್ತರಕ್ಕೆ ಏರಿಸಿತು. ಕಾಡೊಳಗಡೆಯ ಅಂಗಳದಲ್ಲಿ ಹಳೆಯ ಕಟ್ಟಡ ಕಳಚಿಕೊಂಡು, ಹೊಸ ಶಾಲಾ ಕಟ್ಟಡ ಎದ್ದಿತ್ತು. ಅದರೊಳಗೆ ಕಾಲಿಟ್ಟಾಗ, ನಾನು ಬೆರಗಾದೆ. ಇಡೀ ಆವರಣ ಒಂದು ಕಲಾ ಶಾಲೆಯಾಗಿ ಪರಿವರ್ತಿತವಾಗಿತ್ತು. ಗೋಡೆಯ ಮೇಲೆ ಅಂಗೈಯಗಳ ಖಾಲಿ ಜಾಗವೇ ಇಲ್ಲ. ಮಕ್ಕಳ ಚಿತ್ರಗಳು, ಕೈಚಾಣದ ಕಲಾಕೃತಿಗಳು, ವಿಜ್ಞಾನ ಮಾದರಿಗಳು, ಕೃಷಿ ಉಪಕರಣಗಳ ಪುಟ್ಟ ಪುಟ್ಟ ಅಣಕು ರೂಪಗಳು. ಮಣ್ಣು ಮರ ತೆಂಗಿನ ನಾರು ಚಿಪ್ಪಿಯಿಂದ ಮಾಡಿದ ಕತ್ತಿ, ಕುಡುಗೋಲು, ನೇಗಿಲು, ಮುಟ್ಟಾಳೆ ಇನ್ನೂ ಏನೇನೋ. ಇಲ್ಲಿ ಓದುವವರು ಓದಿಸುವವರೆಲ್ಲ ಮಣ್ಣಿನ ಮಕ್ಕಳು ಅನ್ನೋದಕ್ಕೆ ನೂರಾರು ಸಾಕ್ಷಿಗಳು ಅಲ್ಲಿ ನಿಂತಿದ್ದವು. ರಾಧಕ್ಕನವರು ನನ್ನ ಕೈಗೆ ಪೆನ್ನು ಕೊಟ್ಟು, ‘‘ಇಲ್ಲೊಂದು ಸೈನ್ ಮಾಡಿ’’ ಎಂದರು. ಗೋಡೆಯ ಮೇಲೆ ನಾನು ಕಪ್ಪುಮಸಿಯಲ್ಲಿ ‘ದೇರ್ಲ’ ಎಂದು ಕನ್ನಡದಲ್ಲಿ ಸಹಿ ಹಾಕುತ್ತಿದ್ದಾಗ, ಅದರ ಆಚೆ-ಈಚೆ ಇದ್ದ ಕನ್ನಡದ ಸಹಿಗಳು ಕಣ್ಣಿಗೆ ಬಿದ್ದವು-ಐಎಎಸ್ ಅಧಿಕಾರಿಗಳು, ಸಾಹಿತಿಗಳು, ವಿಜ್ಞಾನಿಗಳು, ಸೈನಿಕರು, ಶಿಕ್ಷಕರು, ಚಿಂತಕರು... ನಾಗರಿಕ ಜಗತ್ತಿನ ದೂರದ ಅಣಶಿ ಶಾಲೆಗೆ ಬಂದು ಹೋದವರೇ. ನಾವು ಹಿಂದಿನ ದಿನ ನೋಡಿದ ಮೂರು-ನಾಲ್ಕು ಶಾಲೆಗಳ ಒಟ್ಟು ಮಕ್ಕಳ ಸಂಖ್ಯೆಗಳಿಗಿಂತ, ಇಲ್ಲಿ ಒಂದೇ ಶಾಲೆಯಲ್ಲಿ 80ಕ್ಕಿಂತಲೂ ಹೆಚ್ಚು ಮಕ್ಕಳಿದ್ದರು. ಎಲ್ಲರೂ ಕುಣುಬಿ ಮಕ್ಕಳೇ. ಅವರ ಆಸಕ್ತಿ, ಅಭಿರುಚಿ, ಕಲೆಯ ಪ್ರೀತಿ ಅಳೆಯಲು ಹೆಚ್ಚು ಸಮಯ ಬೇಕಾಗಿರಲಿಲ್ಲ. ಒಬ್ಬ ಶಿಕ್ಷಕ-ಶಿಕ್ಷಕಿ ಮನಸ್ಸು ಮಾಡಿದರೆ ಏನೂ ಮಾಡಬಹುದು ಅನ್ನೋದಕ್ಕೆ, ಈ ಅಣಶಿ ಶಾಲೆಯೇ ಸಾಕ್ಷಿ. ಅಂದಹಾಗೆ, ಈ ರಾಧಕ್ಕ ಯಾರು? ಅವರ ನಿಜವಾದ ಹೆಸರೇನು? ನಿಮಗೂ ಕುತೂಹಲ ಇರಬೇಕಲ್ಲ? ಕನ್ನಡದ ಶ್ರೇಷ್ಠ ಲೇಖಕಿ, ಕವಯಿತ್ರಿ, ಕತೆಗಾರ್ತಿ ಅಕ್ಷತಾ ಕೃಷ್ಣಮೂರ್ತಿ. ಬುಡಕಟ್ಟು ಜನಾಂಗದ ಮಕ್ಕಳ ಪ್ರೀತಿಯ ಈ ಅಕ್ಕ ಕಾಡಿನ ಶಾಲೆಯ ಕಥೆಯನ್ನು ದೂರದ ಪತ್ರಿಕೆಗೆ ಕಂತು ಕಂತಾಗಿ ಬರೆಯುವಾಗ, ಎಲ್ಲೂ ತಮ್ಮ ಹೆಸರನ್ನು ಪ್ರಕಟಿಸಿರಲಿಲ್ಲ. ಶಾಲೆಯ ಯಶಸ್ಸು ಊರಿಗೆ ಗೊತ್ತಿರಲಿ, ನಾನು ಮಾತ್ರ ನಾಡಿಗೆ ಗೊತ್ತಾಗಬಾರದು ಅನ್ನುವ ಒಂದು ಮೌನ ಸಂಕಲ್ಪ ಆಕೆಯದಾಗಿತ್ತು. ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆ ಅಣಶಿ ಜೋಯಿಡಾ - ಇಲ್ಲಿಯ ಕಂತು ಕಂತಿನ ಕಥೆ ಪುಸ್ತಕವಾಗುವ ಹೊತ್ತಿಗೆ ಮುನ್ನುಡಿ ಬರೆಯಲು ಕೂತ ನಾಡಿನ ಹಿರಿಯ ಲೇಖಕ, ಸಂಸ್ಕೃತಿ ಚಿಂತಕ ಬರಗೂರು ರಾಮಚಂದ್ರಪ್ಪ ಬೆರಗು ಮತ್ತು ಹಠಕ್ಕೆ ಬೀಳುತ್ತಾರೆ. ‘ಅದು ಬೇರೆ ಯಾರೂ ಅಲ್ಲ, ನಾನು ಅಕ್ಷತಾ ಕೃಷ್ಣಮೂರ್ತಿ’ ಎಂದು ಈ ಟೀಚರಮ್ಮ ಸತ್ಯ ಹೇಳಬೇಕಾಯಿತು! ಕಾಡಿನ ನಡುಹಾದಿಯಲ್ಲಿ ನಿಂತ ಆ ಶಾಲೆಯ ದಿನಚರಿಯೇ ಒಂದು ಜೀವಂತ ಕಥೆ. ಬೆಳಗಿನ ಮೌನ, ಮಧ್ಯಾಹ್ನದ ಗದ್ದಲ, ಸಂಜೆಗತ್ತಲಿನ ಆತಂಕ, ತರಗತಿಯ ಒಳಗಡೆಯೇ ನುಗ್ಗುವ ಮಂಗ ಹಾವು ನಾಯಿ ಚೇಳು ಇಲಿ ಹೆಗ್ಗಣ.... ಎಲ್ಲವೂ ಒಟ್ಟಾಗಿ ಸೇರಿ ಅಣಶಿಯ ಈ ಶಾಲೆಯನ್ನು ಕೇವಲ ಕಟ್ಟಡವಲ್ಲ, ಒಂದು ಉಸಿರಾಡುವ ಜೀವಿಯಂತೆ ಮಾಡಿವೆ. ಅಲ್ಲಿ ಪ್ರತಿ ದಿನವೂ ಪುಸ್ತಕದೊಂದಿಗೆ ಬದುಕೂ ಪಾಠ ಹೇಳುತ್ತದೆ. ಪಠ್ಯಪುಸ್ತಕಗಳಿಗಿಂತ ಗಾಢವಾದ, ಪರೀಕ್ಷೆಗಳಿಗಿಂತ ಕಠಿಣವಾದ ಪಾಠಗಳು ಅಲ್ಲಿ ಪ್ರತಿಕ್ಷಣ ನಡೆಯುತ್ತಲೇ ಇರುತ್ತವೆ. ಕೋವಿಡ್ ಸಂದರ್ಭದಲ್ಲಿ ಆ ಶಾಲೆ ಹೇಗಿತ್ತು ಅನ್ನುವುದನ್ನು ರಾಧಕ್ಕನ ಮಾತಿನಲ್ಲೇ ಕೇಳಿ, ‘‘....ಶಾಲೆಯ ಹೊಸ ಕಟ್ಟಡ ಸೊರಗುತ್ತಿದೆ. ಮಕ್ಕಳನ್ನು ನೋಡದೇ ಒಂದು ರೀತಿಯ ಮಾನಸಿಕ ಕ್ಷೋಭೆಗಳಾಗಿದೆ. ಹೀಗಾಗಿಯೇ ಧೂಳು ಹಿಡಿಸಿಕೊಂಡು ಮೀಯದೆ ಕುಂತು ಬಿಟ್ಟಿದೆ. ಮಕ್ಕಳ ಹೆಜ್ಜೆ ಗುರುತಿನ ಸಪ್ಪಳವಿಲ್ಲ, ಪ್ರಾರ್ಥನೆಯ ಸಾಲು ಇಲ್ಲ, ಕಸಕಡ್ಡಿ ಆರಿಸುವ ಕೈಗಳಿಲ್ಲ, ಬಾಗಿಲು ಕಿಟಕಿಗಳು ತೆರೆಯುತ್ತಾ ಹಾಕುವಾಗ ಆಗುವ ಕಿರ್ ಎಂಬ ಹಿತವಾದ ಸದ್ದಿಲ್ಲ. ಗೋಡೆಯ ಮೇಲಿದ್ದ ಮಿಂಚುಫಲಕಗಳಿಗೆ ಮಕ್ಕಳ ಸ್ಪರ್ಶ ಸುಖ ಸಿಗುತ್ತಿಲ್ಲ, ಕಾರ್ಡುಗಳ ರಾಶಿ ಸರಿಪಡಿಸುವವರಿಲ್ಲ, ಹವಾಮಾನ ನಕ್ಷೆ ಹೇಳ ಹೆಸರಿಲ್ಲದೆ ಸ್ತಬ್ಧವಾಗಿದೆ. ಬಿಸಿಯೂಟದ ಕೋಣೆಯಲ್ಲಿ ಒಗ್ಗರಣೆಯ ಪರಿಮಳವಿಲ್ಲ, ರಸಂ, ಪಲಾವ್, ಸಾಗು ಮುಂತಾದ ಪದಾರ್ಥಗಳೆಲ್ಲ ಮಕ್ಕಳ ಹೊಟ್ಟೆ ಸೇರುವ ಸರದಿಯಲ್ಲಿ ಇಲ್ಲ, ಕರಿಹಲಗೆಯ ದಿನಾಂಕ ಬದಲಾಗಿಲ್ಲ, ಇಡೀ ದಿನ ಮಾತನಾಡುವ ಮಕ್ಕಳ ಹೆಸರನ್ನು ಪಟ್ಟಿ ಮಾಡುವವರಿಲ್ಲ, ಮೂಲೆಯಲ್ಲಿ ಬಿದ್ದ ಡಸ್ಪರು ತನ್ನ ಹೊಟ್ಟೆ ತೆರೆದು ತೋರಿಸುವ ಸ್ಥಿತಿಗೆ ಬಂದರೂ ಅದಕ್ಕೆ ಸೂಕ್ತ ಆಪರೇಷನ್ ಮಾಡುವ ಮಕ್ಕಳ ವೈದ್ಯರಿಲ್ಲ, ಮಳೆಗಾಲಕ್ಕೆಂದು ವರ್ಗಕೋಣೆಯ ಮೂಲೆಯಲ್ಲಿ ಆಗಲೇ ಬಂದುಳಿಯುತ್ತಿದ್ದ ಎರಡು ಮೂರು ಹಿಡಿಗಳು (ಕಸಬರಿಗೆ) ಇನ್ನೂ ಹಾಜರಾಗಿಲ್ಲ. ರಗಸದಅ ಬರೆದುಕೊಂಡ ಅಕ್ಷರ ಫಲಕಗಳು ತಮ್ಮ ಹೆಸರಿನ ಅಸ್ತಿತ್ವ ಮರೆತೇ ಹೋದಂತಾಗಿವೆ, ಸಮಯ ಪರಿಪಾಲಕ ಶಾಲೆಯ ಗಂಟೆ ಹಸಿವಾಗಿ ತನ್ನ ಶಬ್ದವನ್ನು ತಾನೇ ನುಂಗಿಬಿಟ್ಟಿದೆ ಎಂಬಂತಿದೆ. ಏಳನೆಯ ವರ್ಗದ ಮಕ್ಕಳು ದೇಣಿಗೆ ಕೊಟ್ಟ ಲೈಟಿನ ಸರ ಹೊತ್ತಿಕೊಳ್ಳದೆ ವಿದಾಯದ ಗೀತೆ ಹಾಡುತ್ತಿರುವಾಗ, ಶಾಲೆಯ ಫಿಲ್ಟರು ನೀರಿಲ್ಲದ ಬಾವಿಯಂತಾಗಿರುವಾಗ ಇಡೀ ಶಾಲೆ ಇದ್ದಲ್ಲಿಯೇ ಕುಬ್ಜವಾಗುತ್ತಿರುವುದು ಊರವರ ಗಮನಕ್ಕೂ ಬಂದಿದೆ. ಶಾಲೆಯ ಸುತ್ತಮುತ್ತಲಿನ ಗಿಡಮರಗಳು ಕೂಡ ಮಕ್ಕಳ ಕೈ ತಾಗದೇ ಮೈದುಂಬಿಕೊಂಡಿಲ್ಲ...’’ ಹದ್ದೊಂದು ಕುಕ್ಕಿ ಒಯ್ಯುವಾಗ ಆಕಾಶದಿಂದಲೇ ಬಿದ್ದ ಪುಟ್ಟ ಹಕ್ಕಿಮರಿಯ ಆರೈಕೆಯ ಚಿತ್ರ ಕಾಡೊಳಗಡೆಯ ನಿಜ ಮೌಲ್ಯವಾಗಿ ಕಾಣಿಸಿಕೊಳ್ಳುತ್ತದೆ. ಕ್ಷಣದಲ್ಲೇ ಮಕ್ಕಳ ಕಣ್ಣುಗಳಲ್ಲಿ ಮೂಡಿದ ಆತಂಕ, ಕೈಗಳಲ್ಲಿ ಮೂಡಿದ ಚುರುಕು, ಹೃದಯದಲ್ಲಿ ಉಕ್ಕಿದ ಕರುಣೆ - ಇವೆಲ್ಲವೂ ಒಟ್ಟಾಗಿ ರಾಧಕ್ಕನ ಶಾಲೆಯ ಅಸಲಿ ಪಠ್ಯಕ್ರಮ. ಯಾರೂ ಹೇಳಿಕೊಡದ ಮಾನವೀಯತೆಯ ಪಾಠ. ಹಕ್ಕಿಗೆ ನೀರು ಕುಡಿಸಲು ಪ್ರಯತ್ನಿಸಿದ ಪ್ರವೀಣನ ಕೈಕಂಪು, ಗಾಯಕ್ಕೆ ಔಷಧಿ ಹಚ್ಚಿದ ಅಖಿಲನ ಎಚ್ಚರಿಕೆ, ಉಬ್ಬಸ ಹೊಡೆದು ಅಳುತ್ತ ಬಂದ ಆಯೇರಾಳ ಕಣ್ಣೀರು - ಈ ಎಲ್ಲವೂ ಮಕ್ಕಳೊಳಗಿನ ಜೀವಸ್ಪಂದನವನ್ನು ಬಿಚ್ಚಿಟ್ಟವು. ಪಾಠದ ವೇಳಾಪಟ್ಟಿಯಲ್ಲಿ ಇಲ್ಲದಿದ್ದರೂ, ಈ ಕ್ಷಣವೇ ಅವರ ಬದುಕಿನ ಅತಿ ದೊಡ್ಡ ಪಾಠವಾಗಿತ್ತು. ರಾಧಕ್ಕ ಆ ಮಕ್ಕಳ ನಡುವೆ ನಿಂತು ನೋಡುತ್ತಿದ್ದಾಗ, ಆಕೆಗೆ ಅರ್ಥವಾಯಿತು - ತಾನು ಖಂಡಿತ ಬರೀ ಶಿಕ್ಷಕಿಯಲ್ಲ, ಈ ಕಾಡಿನೊಳಗಿನ ಬದುಕಿನ ಸಾಕ್ಷಿ. ಮಕ್ಕಳ ಕಣ್ಣುಗಳಲ್ಲಿ ಮಿಂಚುವ ಕರುಣೆ, ಪರಸ್ಪರ ಕೈಹಿಡಿದು ನಿಲ್ಲುವ ಧೈರ್ಯ, ಅಪಾಯದ ಮುಂದೆ ಹೆದರದೆ ಬುದ್ಧಿಯಿಂದ ಎದುರಿಸುವ ಚಾಣಾಕ್ಷತೆ - ಇವೆಲ್ಲವೂ ಸೇರಿ ಅಣಶಿಯ ಶಾಲೆಯನ್ನು ವಿಶಿಷ್ಟವನ್ನಾಗಿಸುತ್ತವೆ. ಇಲ್ಲಿ ವಿದ್ಯೆ ಅಂದರೆ ಕೇವಲ ಅಕ್ಷರಜ್ಞಾನವಲ್ಲ; ಬದುಕನ್ನು ಅರ್ಥಮಾಡಿಕೊಳ್ಳುವ ಜ್ಞಾನವೂ ಹೌದು. ಅದೇ ಹಕ್ಕಿ ಸ್ವಲ್ಪ ಚೇತರಿಸಿಕೊಂಡು ಕಣ್ಣು ಬಿಟ್ಟಾಗ ಮಕ್ಕಳ ಮುಖದಲ್ಲಿ ಮೂಡಿದ ನಗು, ಇಡೀ ಜೋಯಿಡಾ ಕಾಡಿನ ಮೇಲೆಯೇ ಹಬ್ಬಿದ ಮಿಂಚಿನಂತೆ ಕಾಣಿಸುತ್ತದೆ. ಆ ಕ್ಷಣದಲ್ಲಿ ಮತ್ತೊಮ್ಮೆ ಶಾಲೆಯ ಗಂಟೆ ಮತ್ತೆ ಧ್ವನಿಸಿದಂತೆ ಆಯಿತು. ಆದರೆ ಅದು ಕಬ್ಬಿಣದ ಗಂಟೆಯ ಸದ್ದು ಅಲ್ಲ; ಮಕ್ಕಳ ಹೃದಯದೊಳಗಿನ ಸಂವೇದನೆಯ ಧ್ವನಿ. ಆ ಧ್ವನಿ ಕಾಡಿನೊಳಗೆ ಹರಡಿದಂತೆ, ಮರಗಳ ನಡುವೆ, ಹಕ್ಕಿಗಳ ಗಾನದಲ್ಲಿ, ಗಾಳಿಯ ಉಸಿರಿನಲ್ಲಿ ಬೆರೆತು ಹೋಯಿತು. ರಾಧಕ್ಕನ ಜೊತೆಗೆ ನನಗೂ ಆಗ ಅರ್ಥವಾಯಿತು - ಈ ಶಾಲೆಯ ಪ್ರತಿದಿನವೂ ಒಂದು ಕಥೆ. ಪ್ರತಿಕ್ಷಣವೂ ಒಂದು ಪಾಠ. ಅಣಶಿಯ ಈ ಶಾಲೆ ಕರ್ನಾಟಕದ ಸಾವಿರಾರು ಶಾಲೆಗಳ ನಡುವೆ ನಿಂತು, ಮೌನವಾಗಿ ಆದರೆ ದೃಢವಾಗಿ ಹೇಳುತ್ತಿದೆ: ‘‘ನಾವು ಕಾಡಿನೊಳಗೆ ಇದ್ದೇವೆ, ಆದರೆ ಅಜ್ಞಾನದಲ್ಲಲ್ಲ. ನಾವು ಅಪಾಯದ ಮಧ್ಯೆ ಬದುಕುತ್ತೇವೆ, ಆದರೆ ಭಯದಲ್ಲಿ ಅಲ್ಲ. ನಾವು ಬಡವರು, ಆದರೆ ಮನಸ್ಸಿನಲ್ಲಿ ಸಿರಿವಂತರು’’ಎಂದು. ಹೀಗಾಗಿಯೇ ಅಣಶಿಯ ಶಾಲೆ ಕೇವಲ ಒಂದು ವಿದ್ಯಾಲಯವಲ್ಲ; ಅದು ಬದುಕಿನ ಪಾಠಶಾಲೆ. ಅಲ್ಲಿ ಮಕ್ಕಳ ಹೆಜ್ಜೆಗೊಂದು ಕಥೆ, ಕಣ್ಣೀರಿಗೊಂದು ಅರ್ಥ, ನಗುವಿಗೊಂದು ಭವಿಷ್ಯ ಮತ್ತು ಈ ಎಲ್ಲದರ ಮಧ್ಯೆ ನಿಂತಿರುವ ರಾಧಕ್ಕ - ಕಾಡಿನ ನಡುವೆ ಹೊತ್ತಿ ಉರಿಯುವ ಒಂದು ಬೆಳಕಿನ ಮೌನದ ದೀಪವೇ ಸರಿ. ರಾಧಕ್ಕ ಯಾನೆ ಅಕ್ಷತಾ ಕೃಷ್ಣಮೂರ್ತಿ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾದ ಬೇಲೆಕೇರಿ ಗ್ರಾಮದವರು. ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಪಡೆದವರು. ಕಾವ್ಯದ ಓದು, ಬರಹ, ಕಥೆ, ಗಝಲ್, ವಿಮರ್ಶೆ ಇವರ ಆಸಕ್ತಿಗಳು. ಸಾಮಾಜಿಕ ಸೇವೆಯಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿರುವ ಇವರು ಹನ್ನೆರಡು ವರ್ಷಗಳಿಂದ ಗಾಂವಕರ ಮೆಮೋರಿಯಲ್ ಫೌಂಡೇಷನ್ ಪರಿಕಲ್ಪನೆ ಹಾಗೂ ಸಂಘಟನೆಗಳಲ್ಲಿ ಕ್ರಿಯಾಶೀಲರಾಗಿದ್ದಾರೆ. ‘ಹನ್ನೆರಡು ದಡೆ ಬೆಲ್ಲ’, ‘ಕೋಳ್ತಂಬ’, ‘ನಾನು ದೀಪ ಹಚ್ಚಬೇಕೆಂದಿದ್ದೆ’ ಕವನ ಸಂಕಲನಗಳು. ‘ಹಾಲಕ್ಕಿ ಒಕ್ಕಲಿಗರು... ಜನಾಂಗ ಅಧ್ಯಯನ ಕೃತಿ’, ‘ಸುಕ್ರಿ ಬೊಮ್ಮಗೌಡ’ ಜೀವನ ಚರಿತ್ರೆ, ‘ಮಧುರ ಚೆನ್ನ’ ವ್ಯಕ್ತಿ ಪರಿಚಯದ ಕೃತಿ, ‘ಕೇದಿಗೆಯ ಕಂಪು’ ವಿಮರ್ಶಾ ಕೃತಿ, ‘ಅಬ್ಬೋಲಿ’ ಕಥಾ ಸಂಕಲನ, ‘ಹಾಲಕ್ಕಿ ಕೋಗಿಲೆ’ ಸಂಪಾದಿತ ಕೃತಿ, ‘ಇಸ್ಕೂಲು’ ಪ್ರಕಟಿತ ಕೃತಿಗಳು. ಮಯೂರವರ್ಮ ಪ್ರಶಸ್ತಿ, ಹಲಸಂಗಿ ಗೆಳೆಯರ ಪ್ರತಿಷ್ಠಾನದ ಯುವ ಪ್ರಶಸ್ತಿ, ಕರ್ನಾಟಕ ಜಾನಪದ ಪರಿಷತ್ತಿನ ಲೋಕಸರಸ್ವತಿ ಗ್ರಂಥ ಪ್ರಶಸ್ತಿ, ಕಡೆಂಗೋಡ್ಲು ಶಂಕರಭಟ್ಟ ಕಾವ್ಯ ಪ್ರಶಸ್ತಿ, ಸಂಕ್ರಮಣ ಕಾವ್ಯ ಬಹುಮಾನ, ಡಿ.ಎಸ್. ಕರ್ಕಿ ಕಾವ್ಯ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತಿನ ನೀಲಗಂಗಾ ದತ್ತಿ ಕಾವ್ಯ ಪ್ರಶಸ್ತಿ, ಡಾ. ಅನುಪಮಾ ನಿರಂಜನ ಕಥಾ ಸ್ಪರ್ಧೆಯ ಬಹುಮಾನ, ಫೀನಿಕ್ಸ್ ಕಥಾರತ್ನ ಪ್ರಶಸ್ತಿ, ಉತ್ತರ ಕನ್ನಡ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ, ಸಂಗಾತಿ ರಂಗಭೂಮಿ ಅಂಕೋಲಾ ಉತ್ಸವ-2007 ಪ್ರಶಸ್ತಿ ಮುಂತಾಗಿ ಪುರಸ್ಕಾರ ಗೌರವಗಳಿಗೆ ಪಾತ್ರರಾಗಿದ್ದಾರೆ. ಇವರೂ ಸೇರಿ ಈ ದೇಶದ ಇಂತಹ ಕಾಡೊಳಗಡೆಯ ಕತ್ತಲೆಯಲ್ಲಿ ಮಕ್ಕಳ ದಾರಿ ಬೆಳಗುವ ವಿನಾಯಕ ಪಟಗಾರ, ಶಾಂತ ಕುಮಾರ್, ಮೋಹನ್ ಸರ್ ಹೀಗೆ ಕಾಡೊಳಗಡೆ ಇರುವ ಸಾವಿರಾರು ಶಿಕ್ಷಕರಿಗೆ ಈ ದಾರಿಯಲ್ಲಿ ಹೃದಯ ತುಂಬಿ ಅಭಿನಂದನೆ ಸಲ್ಲಿಸುವೆ.

ವಾರ್ತಾ ಭಾರತಿ 1 Mar 2026 12:56 pm

ಕೋಲಾರ ಜಿಲ್ಲೆಯ 186 ಗ್ರಾಮಗಳಲ್ಲಿ ನೀರಿನ ಕೊರತೆ ಸಾಧ್ಯತೆ

ಕೋಲಾರ : ಬೇಸಿಗೆ ಎನ್ನುವುದು ಕೋಲಾರ ಜಿಲ್ಲೆಯ ಮಟ್ಟಿಗೆ ಅಗ್ನಿಪರೀಕ್ಷೆ. ಶಾಶ್ವತ ನದಿ ನಾಲೆಗಳಿಲ್ಲದ ಕೋಲಾರ ಜಿಲ್ಲೆಯಲ್ಲಿ ಬೇಸಿಗೆಯಲ್ಲಿ ಜನರು ಹಾಗೂ ಜಾನುವಾರುಗಳಿಗೆ ಕುಡಿಯುವ ನೀರು ಒದಗಿಸುವುದು ಸವಾಲಿನ ಕೆಲಸವೇ ಆಗಿದೆ. ಇಡೀ ಕೋಲಾರ ಜಿಲ್ಲೆಯು ಕುಡಿಯುವ ನೀರಿಗಾಗಿ ಕೆರೆ ಕುಂಟೆಗಳನ್ನು ಅವಲಂಬಿಸಿದೆ. ವಾರ್ಷಿಕ ಸರಾಸರಿ ಮಳೆ ಸುರಿದಾಗ ಮಾತ್ರವೇ ಕೆರೆ ಕುಂಟೆಗಳಲ್ಲಿ ಒಂದಷ್ಟು ನೀರು ಸಂಗ್ರಹವಾಗುತ್ತದೆ. ಇಲ್ಲವಾದರೆ ಡಿಸೆಂಬರ್ ಅಂತ್ಯದವೇಳೆಗೆ ಇಡೀ ಜಿಲ್ಲೆಯ ಕೆರೆ ಕುಂಟೆಗಳು ಬಟಾ ಬಯಲಾಗಿ ಬದಲಾಗುತ್ತವೆ. ಇಂತಹ ಪರಿಸ್ಥಿತಿಯಲ್ಲಿ ಕೋಲಾರ ಜಿಲ್ಲೆಯ ದಾಹವನ್ನು ನಿವಾರಣೆ ಮಾಡುವುದು ಕೇವಲ ಕೊಳವೆ ಬಾವಿಗಳು ಮಾತ್ರ. ಮಳೆ ಹೆಚ್ಚಳ: ಕಳೆದ ವರ್ಷ 2025 ಡಿಸೆಂಬರ್‌ನಿಂದ ನವೆಂಬರ್ ಅವಧಿಯವರೆಗೂ ಕೋಲಾರ ಜಿಲ್ಲಾದ್ಯಂತ 735.1 ಮಿಮೀ ವಾಡಿಕೆ ಮಳೆ ಸುರಿಯಬೇಕಾಗಿತ್ತು. ಆದರೆ, ಈ ಅವಧಿಯಲ್ಲಿ 927 ಮಿ.ಮೀ ಮಳೆ ಸುರಿಯುವ ಮೂಲಕ ಶೇ.26ರಷ್ಟು ಮಳೆ ಪ್ರಮಾಣ ಹೆಚ್ಚುವರಿಯಾಗಿರುವುದು ದಾಖಲಾಗಿದೆ. ಅಂದರೆ ಕೋಲಾರ ಜಿಲ್ಲೆ 2025ರಲ್ಲಿ ಸಮಾಧಾನಕರ ಮಳೆಯನ್ನು ದಾಖಲಿಸಿಕೊಂಡಿದೆ. ಕೆಸಿವ್ಯಾಲಿ ಯರಗೋಳ್ ನೀರು: ಕೋಲಾರ ಜಿಲ್ಲೆಯಲ್ಲಿ ಬೇಸಿಗೆ ಆರಂಭಕ್ಕೂ ಮೊದಲೇ ಪ್ರತಿ ಗ್ರಾಮ, ಪಟ್ಟಣ, ನಗರಗಳ ಹಲವಾರು ಕಡೆಗಳಲ್ಲಿ ಮಹಿಳೆಯರು ಖಾಲಿ ಬಿಂದಿಗೆಗಳನ್ನು ರಸ್ತೆಯಲ್ಲಿಟ್ಟು ನೀರಿಗಾಗಿ ಪ್ರತಿಭಟನೆ ನಡೆಸುವ ದೃಶ್ಯಗಳು ಸಾಮಾನ್ಯ ಎನ್ನುವಂತೆ ನಡೆಯುತ್ತಿದ್ದವು. ಆದರೆ, ಕೋಲಾರ ಜಿಲ್ಲೆಗೆ ಕೆಸಿ ವ್ಯಾಲಿ ನೀರು ಹಾಗೂ ಯರಗೋಳ್ ನೀರು ಹರಿದ ನಂತರ ಈ ದೃಶ್ಯಗಳು ಕಾಣ ಸಿಗುತ್ತಿಲ್ಲ. ಕೆಸಿ ವ್ಯಾಲಿ ನೀರಿನಿಂದಾಗಿ ಕೋಲಾರ ಜಿಲ್ಲೆಯ ನೂರಕ್ಕೂ ಹೆಚ್ಚು ಕೆರೆಗಳಿಗೆ ಎರಡು ಬಾರಿ ಸಂಸ್ಕರಿಸಿದ ತ್ಯಾಜ್ಯ ನೀರು ತುಂಬುತ್ತಿದ್ದು, ಇದರಿಂದ ಅಂತರ್ಜಲ ಮಟ್ಟ ಹೆಚ್ಚಾಗಿದೆ. ಕೋಲಾರ ಜಿಲ್ಲೆಯಲ್ಲಿ ಸಣ್ಣ ನೀರಾವರಿ ಇಲಾಖೆಯ 138 ಕೆರೆಗಳ ಪೈಕಿ 18 ಕೆರೆಗಳು ಪೂರ್ಣ ತುಂಬಿದ್ದು, 15 ಕೆರೆಗಳು ಶೇ.51 ರಿಂದ 99 ರಷ್ಟು ತುಂಬಿವೆ. ಕೆಸಿ ವ್ಯಾಲಿ ಯೋಜನೆಯಡಿ ಜಿಲ್ಲೆಯ 132 ಕೆರೆಗಳ ಪೈಕಿ 51 ಕೆರೆಗಳು ಶೇ.100 ರಷ್ಟು ಭರ್ತಿಯಾಗಿವೆ. ಉಳಿದಂತೆ ಇರುವ ಜಿಪಂ ವ್ಯಾಪ್ತಿಯ ಕೆರೆಗಳಲ್ಲಿಯೂ ಅಲ್ಪಸ್ವಲ್ಪ ನೀರು ಲಭ್ಯವಾಗಿದೆ. ಇದರಿಂದ ಜಾನುವಾರುಗಳ ಕುಡಿಯುವ ನೀರಿಗೆ ಇನ್ನೂ ಒಂದೆರಡು ತಿಂಗಳು ಕೊರತೆ ಇಲ್ಲದಂತಾಗಿದೆ. ನೀರಿನ ಕೊರತೆ: ಕೆಸಿ ವ್ಯಾಲಿ ನೀರು ಹರಿಯುವಿಕೆ ಹಾಗೂ ಯರಗೋಳ್ ನೀರಿನ ಪೂರೈಕೆಯ ಹೊರತಾಗಿಯೂ ಕೋಲಾರ ಜಿಲ್ಲೆಯ ಗ್ರಾಮೀಣ ಭಾಗದ 186 ಗ್ರಾಮಗಳಲ್ಲಿ ಹಾಗೂ ನಗರ ಪ್ರದೇಶದ 31 ವಾರ್ಡ್‌ಗಳಲ್ಲಿ ಮುಂದಿನ ದಿನಗಳಲ್ಲಿ ನೀರಿನ ಕೊರತೆ ಉಂಟಾಗಬಹುದು ಎಂಬ ನಿರೀಕ್ಷೆ ಹೊಂದಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಇಂತ ಗ್ರಾಮ ಮತ್ತು ವಾರ್ಡ್ಗಳಲ್ಲಿ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಲು ಡಿಸಿ ಸೂಚನೆ ಮೇರೆಗೆ ಅಧಿಕಾರಿಗಳು ಕ್ರಮವಹಿಸಿದ್ದಾರೆ. ಹಿಂದಿನ ವರ್ಷಗಳಲ್ಲಿ ಆದಂತೆ ಟ್ಯಾಂಕರ್ ಪೂರೈಕೆಯಲ್ಲಿ ಲೋಪಗಳು ಹಾಗೂ ಅಕ್ರಮಗಳು ಆಗದಂತೆ ಎಚ್ಚರವಹಿಸಲು ಕಟ್ಟೆಚ್ಚರವಹಿಸುವಂತೆಯೂ ಸೂಚನೆ ನೀಡಲಾಗಿದೆ. ಕ್ರಿಯಾ ಯೋಜನೆ: ಬೇಸಿಗೆಯಲ್ಲಿನ ಹೀಟ್ ವೇವ್ ತಡೆಯಲು ಕ್ರಿಯಾ ಯೋಜನೆ ಸಿದ್ಧಪಡಿಸಲಾಗಿದ್ದು, ನರೇಗಾ ಸಮಯದಲ್ಲಿ ಬದಲಾವಣೆ, ಆಸ್ಪತ್ರೆಗಳಲ್ಲಿ ಬೇಸಿಗೆಯಲ್ಲಿ ಹರಡುವ ಸಾಂಕ್ರಾಮಿಕ ರೋಗಗಳ ನಿಯಂತ್ರಣಕ್ಕೆ ಅಗತ್ಯ ಔಷಧಿಗಳ ಮತ್ತು ಒಆರ್‌ಎಸ್ ಪೌಡರ್ ದಾಸ್ತಾನು ಇಡಲು ಸೂಚಿಸಲಾಗಿದೆ. ತೆರೆದ ಗಾಡಿಗಳಲ್ಲಿ ಕತ್ತರಿಸಿದ ಹಣ್ಣುಗಳ ಮಾರಾಟಕ್ಕೆ ಕಡಿವಾಣ ಹಾಕಲು ಹಾಗೂ ನಿಗಾವಹಿಸಲು ಸಲಹೆ ನೀಡಲಾಗಿದೆ. ಅಗ್ನಿ ಅವಘಡಗಳನ್ನು ತಡೆಯಲು ಅಗ್ನಿ ಶಾಮಕ ದಳದಲ್ಲಿ ನೀರಿನ ಸಂಗ್ರಹಣೆ, ಉಪಕರಣಗಳ ಸನ್ನದ್ಧತೆ ನಿಯಮಿತವಾಗಿ ಪರಿಶೀಲಿಸಿ ಸಜ್ಜಾಗಿರಲು ಸೂಚಿಸಲಾಗಿದೆ. ಜಿಲ್ಲಾಧಿಕಾರಿಯ ಹಾಗೂ ತಹಶೀಲ್ದಾರ್‌ಗಳ ಪಿಡಿ ಖಾತೆಯಲ್ಲಿ ಪ್ರಸ್ತುತ ಒಟ್ಟು 917.91 ಲಕ್ಷ ರೂ. ಎಸ್‌ಡಿಆರ್‌ಎಫ್ ಹಾಗೂ ಎಸ್‌ಡಿಎಂಎಫ್ ಅನುದಾನ ಲಭ್ಯವಿದೆ. ಬೇಸಿಗೆ ನಿರ್ವಹಣೆ ಕುರಿತ ಮುನ್ನಚ್ಚರಿಕೆ ಕ್ರಮಗಳನ್ನು ಪ್ರಚರ ಪಡಿಸಲು ಸಂಬಂಧಪಟ್ಟ ಇಲಾಖೆಗಳಿಗೆ ಮಾಹಿತಿ ಶಿಕ್ಷಣ ಸಂವಹನದ ಚಟುವಟಿಕೆಗಳನ್ನು ಕೈಗೊಂಡು ಕಾರ್ಯಪ್ರವೃತ್ತರಾಗಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. <ಡಾ.ಎಂ.ಆರ್.ರವಿ, ಜಿಲ್ಲಾಧಿಕಾರಿ

ವಾರ್ತಾ ಭಾರತಿ 1 Mar 2026 12:51 pm

ಸಾಮಾಜಿಕ ನ್ಯಾಯಯದ ಆಶಯವು ರಾಜಕೀಯ ಲೆಕ್ಕಾಚಾರಕ್ಕೆ ಬಲಿಯಾಗಬಾರದು

2019 ರಲ್ಲಿ ನ್ಯಾಯಮೂರ್ತಿ ನಾಗಮೋಹನ್ ದಾಸ್ ಅವರ ಅಧ್ಯಕ್ಷತೆಯಲ್ಲಿ ಕರ್ನಾಟಕ ರಾಜ್ಯ ಪರಿಶಿಷ್ಟ ಜಾತಿ ಮತ್ತು ಪ.ವರ್ಗಗಳ ಮೀಸಲಾತಿ ಪ್ರಮಾಣ ಹೆಚ್ಚಳಕ್ಕಾಗಿ ರಚನೆಯಾದ ಆಯೋಗದ ಮುಂದೆ ಅನೇಕ ಸಂಘಟನೆಗಳು ಸಲ್ಲಿಸಲಾದ ಮನವಿಯಲ್ಲಿ ಈ ಅಂಶಗಳನ್ನು ಸ್ಪಷ್ಟವಾಗಿ ತಿಳಿಸಲಾಗಿತ್ತು. ಭಾರತದ ಹಲವಾರು ರಾಜ್ಯಗಳು ಈಗಾಗಲೇ ಶೇ. 50ರ ಮಿತಿಯನ್ನು ಮೀರಿ ಮೀಸಲಾತಿ ಜಾರಿಗೊಳಿಸಿರುವುದು. ತಮಿಳುನಾಡಿನಲ್ಲಿ 69ಶೇ., ಮಹಾರಾಷ್ಟ್ರದಲ್ಲಿ 68ಶೇ., ಛತ್ತೀಸ್‌ಗಡದಲ್ಲಿ 82ಶೇ., ಮಧ್ಯಪ್ರದೇಶದಲ್ಲಿ 73ಶೇ., ರಾಜಸ್ಥಾನದಲ್ಲಿ 68ಶೇ. ಮೀಸಲಾತಿ ಜಾರಿಯಲ್ಲಿದೆ ಎಂದು ಉಲ್ಲೇಖಿಸಲಾಗಿದೆ. ಇವುಗಳನ್ನು ಈಗಾಗಲೇ ಸಂವಿಧಾನದ 9th Schedule ನಲ್ಲಿ ಸೇರಿಸಲ್ಪಟ್ಟಿದೆ. ನ್ಯಾಯಾಲಯದ ಹಸ್ತಕ್ಷೇಪದಿಂದ ರಕ್ಷಣೆ ಪಡೆಯುವ ಉದ್ದೇಶದಿಂದ ಆ ಕ್ರಮ ಕೈಗೊಳ್ಳಲಾಗಿದೆ. ಹಾಗಾಗಿ ಕರ್ನಾಟಕ ರಾಜ್ಯದ ವಿಷಯದಲ್ಲಿ 50ಶೇ. ಮಿತಿಯನ್ನು ಮೀರಬಾರದು ಎಂದು ಹೇಳುವುದರಲ್ಲಿ ನ್ಯಾಯವಿದೆಯೇ?. ಖಂಡಿತ ಇಲ್ಲ. ಶೇ. 50ರ ಮಿತಿಯನ್ನು ಮೀರಬಾರದು ಎನ್ನುವ ವಿಚಾರ ಮೊದಲಿಗೆ M. R. Balaji v/s State of Mysore (28.9.1962) ತೀರ್ಪಿನಲ್ಲಿ ಹೊರಬಂದಿತ್ತು. ನಂತರ Indra Sawhney v/s Union of India(16.11.1992) ತೀರ್ಪಿನಲ್ಲಿ ಅದನ್ನು ಪುನರುಚ್ಚರಿಸಿದರೂ, ಅದೇ ತೀರ್ಪಿನಲ್ಲಿ “compelling extraordinary circumstances” ಇದ್ದಲ್ಲಿ ಈ ಮಿತಿಯನ್ನು ಮೀರಿ ಹೋಗಬಹುದು ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ. ಅಂದರೆ, ಸಾಮಾಜಿಕ ಹಿಂದುಳಿದಿರುವಿಕೆಯ ಗಂಭೀರತೆ, ಜನಸಂಖ್ಯೆಯ ಪ್ರಮಾಣ, ಶಿಕ್ಷಣ ಮತ್ತು ಉದ್ಯೋಗ ಕ್ಷೇತ್ರಗಳಲ್ಲಿ ಪ್ರತಿನಿಧಿತ್ವದ ಕೊರತೆಯಂತಹ ಅಸಮತೋಲನ ಪರಿಸ್ಥಿತಿಗಳು ಎದುರಾದಂತಹ ಸಮಯದಲ್ಲಿ ಮೀರಬಹುದು ಎಂದರ್ಥ. ಕರ್ನಾಟಕದಲ್ಲಿ ಪರಿಶಿಷ್ಟ ಜಾತಿಗಳ ಜನಸಂಖ್ಯೆ ಸುಮಾರು 17ಶೇ. ಕ್ಕಿಂತ ಹೆಚ್ಚು, ಪರಿಶಿಷ್ಟ ಪಂಗಡಗಳು ಸುಮಾರು 7ಶೇ. ಕ್ಕಿಂತ ಹೆಚ್ಚು ಇದೆ. ಐತಿಹಾಸಿಕವಾಗಿ ಹಿಂದುಳಿದ ಈ ಸಮುದಾಯಗಳಿಗೆ ಸಮರ್ಪಕ ಪ್ರಾತಿನಿಧಿತ್ವ ಸಿಗದಿರುವುದನ್ನು ಸುಪ್ರೀಂಕೋರ್ಟ್ ಹೇಳಿದಂತೆ “compelling extraordinary circumstances” ಎಂದೇ ಪರಿಗಣಿಸಬಹುದಾಗಿದೆ ಎನ್ನುವುದು ವಾಸ್ತವಿಕತೆ. ಇದಕ್ಕೆ ವಿರುದ್ಧವಾಗಿ, 103ನೇ ಸಂವಿಧಾನ ತಿದ್ದುಪಡಿ ಮೂಲಕ ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ (EWS) ೧೦ಶೇ. ಮೀಸಲಾತಿ ಜಾರಿಗೆ ತರಲಾಯಿತು. ಈ ತಿದ್ದುಪಡಿ Janhit Abhiyan v/s Union of India ತೀರ್ಪಿನಲ್ಲಿ ಬಹುಮತದಿಂದ ಮಾನ್ಯತೆ ಪಡೆದರೂ, ಅದು ಮೀಸಲಾತಿಯ ಮೂಲ ತತ್ವಕ್ಕೇ ವಿರುದ್ಧವಾಗಿದೆ.Articles ೧೫(೪), ೧೬(೪) ಮತ್ತು ೪೬ ರ ಆಶಯವು ಶತಮಾನಗಳ ಕಾಲ ಸಾಮಾಜಿಕ ದಮನಕ್ಕೆ ಒಳಗಾದವರಿಗೆ ಪರಿಹಾರ ಒದಗಿಸುವುದು. ಆದರೆ EWS ಮೀಸಲಾತಿ ಸ್ಪಷ್ಟವಾಗಿ ಆರ್ಥಿಕ ಹಿಂದುಳಿದಿರುವಿಕೆಯ ಮಾನದಂಡದ ಮೇಲೆ ರೂಪುಗೊಂಡಿದೆ. ಆರ್ಥಿಕ ಹಿಂದುಳಿದಿರುವಿಕೆಯ ನಿವಾರಣೆಗೆ ಕಲ್ಯಾಣ ಯೋಜನೆಗಳನ್ನು ತರಬಹುದಾಗಿತ್ತು. ಆ ರೀತಿಯ ಅನೇಕ ಕಲ್ಯಾಣ ಯೋಜನೆಗಳನ್ನು ಈಗಾಗಲೇ ತರಲಾಗಿದೆ. ಆದರೆ ಅದನ್ನು ಮೀಸಲಾತಿಯ ಪರಿಕಲ್ಪನೆಗೆ ಜೋಡಿಸುವುದು ಸಂವಿಧಾನ ಬೋಧಿಸುವ ಸಾಮಾಜಿಕ ನ್ಯಾಯ, ಸಮಾನ ಪ್ರಾತಿನಿಧಿತ್ವ ಎನ್ನುವ ಮೂಲ ಆಶಯಕ್ಕೆ ವಿರುದ್ಧವಾಗಿದೆ. ಇಲ್ಲಿ ಮುಖ್ಯವಾದ ಪ್ರಶ್ನೆ ಉದ್ಭವಿಸುವುದೇನೆಂದರೆ, EWS 10ಶೇ. ಮೀಸಲಾತಿಗೆ ಕೇಂದ್ರ ಸರಕಾರ ತ್ವರಿತವಾಗಿ ಸಂವಿಧಾನ ತಿದ್ದುಪಡಿ ಮಾಡಿ, ರಾಷ್ಟ್ರಪತಿ ಅಂಕಿತ ಪಡೆದು ಜಾರಿಗೊಳಿಸಿರುವಾಗ, ಕರ್ನಾಟಕದ ಪರಿಶಿಷ್ಟ ಜಾತಿ-ಪಂಗಡಗಳ ಮೀಸಲಾತಿ ಹೆಚ್ಚಳದ ವಿಷಯದಲ್ಲಿ ಯಾಕೆ ಉತ್ಸಾಹ ತೋರುತ್ತಿಲ್ಲ? 50ಶೇ. ಮಿತಿ ಮೀರಬಾರದು ಎನ್ನುವ ವಿಚಾರದಲ್ಲಿ ಈಗ ಕಠಿಣ ನಿಲುವು ತಾಳುವವರು, EWS ವಿಷಯದಲ್ಲಿ ಅದನ್ನು ಯಾಕೆ ಮೀರಿದರು?. ಇದು ಕೇಂದ್ರ ಸರಕಾರದ ಮಲತಾಯಿ ಧೋರಣೆ ಎನ್ನಿಸುವುದಿಲ್ಲವೇ?. ಇದಕ್ಕಿಂತ ಹೆಚ್ಚು ಆತಂಕಕಾರಿ ಎನ್ನಿಸುವುದು, ಕರ್ನಾಟಕದಿಂದ ಆಯ್ಕೆಯಾದ ಬಿಜೆಪಿಯ ಸಂಸದರು ಮತ್ತು ಪ್ರಮುಖ ನಾಯಕರು ಈ ವಿಷಯದಲ್ಲಿ ಮೌನ ವಹಿಸಿರುವುದು. ರಾಜ್ಯದ ಹಿತಾಸಕ್ತಿಯನ್ನು ರಕ್ಷಿಸುವುದು ಅವರ ಸಂವಿಧಾನಾತ್ಮಕ ಮತ್ತು ನೈತಿಕ ಹೊಣೆಗಾರಿಕೆಯಾಗಬೇಕು. ಪರಿಶಿಷ್ಟ ಜಾತಿ-ಪಂಗಡಗಳ ಮೀಸಲಾತಿ ಹೆಚ್ಚಳಕ್ಕೆ ರಾಜ್ಯ ಸರಕಾರ ಶಿಫಾರಸು ಮಾಡಿದಾಗ, ರಾಜ್ಯದ ಎಲ್ಲಾ ಪಕ್ಷಗಳ ಸಂಸದರು ಒಗ್ಗೂಡಿ ಕೇಂದ್ರ ಸರಕಾರದ ಮೇಲೆ ಒತ್ತಡ ತರಬೇಕಾಗಿತ್ತು. 9th Scheduleಗೆ ಸೇರಿಸಲು ಅಗತ್ಯವಾದ ಸಂವಿಧಾನ ತಿದ್ದುಪಡಿ ಬಗ್ಗೆ ಸ್ಪಷ್ಟ ನಿಲುವು ತೆಗೆದುಕೊಳ್ಳಬೇಕಾಗಿತ್ತು. ಆದರೆ ಈ ವಿಷಯದಲ್ಲಿ ಮೌನವೇ ಹೆಚ್ಚಾಗಿ ಗೋಚರಿಸುತ್ತಿದೆ. ಈ ಮೌನವು ಅನುಕೂಲಸಿಂಧು ರಾಜಕಾರಣ ಅಂತ ಅನ್ನಿಸುವುದಿಲ್ಲವೇ? ಸಂವಿಧಾನ ತಮಗೆ ನೀಡಿರುವ ಹಕ್ಕನ್ನು ಕೇಳುವುದಕ್ಕೆ ಇವರು ಮೋದಿ-ಶಾ ಗಳಿಗೆ ಹೆದರುವ ಅವಶ್ಯಕತೆ ಇದೆಯೇ. ರಾಜ್ಯದ ಹಿತಕ್ಕಿಂತ ಪಕ್ಷವೇ ಮುಖ್ಯವೆಂದು ಭಾವಿಸುವ ಮನೋಭಾವವಿದು ಎನ್ನುವಂತಹ ಪ್ರಶ್ನೆಗಳು ಸಹಜವಾಗಿ ಮೂಡುತ್ತವೆ. ಜನಪ್ರತಿನಿಧಿಗಳ ಕರ್ತವ್ಯವು ಕೇವಲ ಪಕ್ಷಕ್ಕೆ ನಿಷ್ಠರಾಗಿರುವುದಷ್ಟೇ ಅಲ್ಲ, ತಮ್ಮ ಸಮುದಾಯಗಳ ನ್ಯಾಯಸಮ್ಮತ ಬೇಡಿಕೆಗಾಗಿ ಧ್ವನಿ ಎತ್ತುವುದಾಗಿದೆ.

ವಾರ್ತಾ ಭಾರತಿ 1 Mar 2026 12:45 pm

ಖಮೇನಿ ಸಾವಿಗೆ ಕಣ್ಣೀರಿಟ್ಟ ಚಿಕ್ಕಬಳ್ಳಾಪುರದ ಆಲಿಪುರ ಗ್ರಾಮಸ್ಥರು, 3 ದಿನ ಬ್ಲಾಕ್‌ ಡೇ ಘೋಷಣೆ! ಖಮೇನಿಗೂ ಆಲಿಪುರಕ್ಕೂ ನಂಟೇನು?

ಅಮೆರಿಕಾ-ಇಸ್ರೇಲ್‌ ಜಂಟಿಯಾಗಿ ಇರಾನ್‌ ಮೇಲೆ ವೈಮಾನಿಕ ದಾಳಿ ನಡೆಸಿದ್ದು, ಇದರಿಂದಾಗಿ ಇರಾನ್‌ ಸುಪ್ರೀಂ ಲೀಡರ್‌ ಆಯತೊಲ್ಲಾ ಅಲಿ ಖಮೇನಿ ಹತ್ಯೆಗೀಡಾಗಿದ್ದಾರೆ. ಈ ನಿಧನದ ವಾರ್ತೆಯನ್ನು ಕೇಳುತ್ತಿದ್ದಂತೆ ಕರ್ನಾಟಕದಲ್ಲಿನ ಮಿನಿ ಇರಾನ್‌ ಆಲಿಪುರದಲ್ಲಿ ಶೋಕಮಡುಗಟ್ಟಿದ್ದು, ಅಲ್ಲಿನ ಗ್ರಾಮಸ್ಥರು ಸ್ವಯಂ ಪ್ರೇರಿತವಾಗಿ ಅಂಗಡಿಗಳನ್ನು ಬಂದ್‌ ಮಾಡಿದ್ದು, 3 ದಿನಗಳ ಕಾಲ ಕರಾಳ ದಿನ ಎಂದು ಶೋಕಾರಚಣೆ ಮಾಡಲು ಮುಂದಾಗಿದ್ದಾರೆ. ಅಲ್ಲದೆ, ಖಮೇನಿ ಹತ್ಯೆಗೆ ಕಾರಣವಾದ ಅಮೆರಿಕಾ ವಿರುದ್ದ ಆಕ್ರೋಶ ಹೊರಹಾಕಿದ್ದು, ಧಿಕ್ಕಾರಗಳನ್ನು ಕೂಗುತ್ತಿದ್ದಾರೆ. ಇರಾನ್‌ ನಾಯಕನ ಹತ್ಯೆ ಕರ್ನಾಟಕದ ಆಲಿಪುರ ಗ್ರಾಮಸ್ಥರ ದುಃಖಕ್ಕೆ ಕಾರಣವಾಗಿದ್ದೇಕೆ? ಖಮೇನಿಗೂ ಮತ್ತು ಆಲಿಪುರಕ್ಕೆ ಇರುವ ನಂಟೇನು? ಈ ಕುರಿತ ವರದಿ ಇಲ್ಲಿದೆ..

ವಿಜಯ ಕರ್ನಾಟಕ 1 Mar 2026 12:43 pm

ರಾಷ್ಟ್ರೀಯ ವಿಜ್ಞಾನ ದಿನ 2026ರ ಭವಿಷ್ಯದ ಒಳನೋಟ; ಜ್ಞಾನ ಸಂಪಾದನೆಗೆ ಭಾರತವೇ ಮುಕುಟ

ಪ್ರತಿವರ್ಷ ಫೆ.28ರಂದು ಭಾರತದಲ್ಲಿ ರಾಷ್ಟ್ರೀಯ ವಿಜ್ಞಾನ ದಿನ ಆಚರಿಸಲಾಗುತ್ತದೆ. ಜಗತ್ತು ಕಂಡ ಅದ್ಭುತ ಭಾರತೀಯ ವಿಜ್ಞಾನ ಪ್ರತಿಭೆ ಸಿವಿ ರಾಮನ್‌ ಅವರ ರಾಮನ್‌ ಪರಿಣಾಮ ಕಂಡುಹಿಡಿದ ಈ ದಿನ ಭಾರತೀಯ ವಿಜ್ಞಾನ ಕ್ಷೇತ್ರಕ್ಕೆ ಅತ್ಯಂತ ಮಹತ್ವದ್ದಾಗಿದ್ದು, ಅದನ್ನು ಗೌರವಿಸಲು ರಾಷ್ಟ್ರೀಯ ಗೌರವ ದಿನ ಆಚರಿಸಲಾಗುತ್ತದೆ. ಈ ಕುರಿತು ಯುವ ವಿಜ್ಞಾನಿ ದೀಪಕ್‌ ಎಎಸ್‌ ಅವರು ಸುದೀರ್ಘ ಲೇಖನ ಬರೆದಿದ್ದು, ವಿಜ್ಞಾನ ಕ್ಷೇತ್ರದಲ್ಲಿ ಭಾರತದ ಬೆಳವಣಿಗೆ ಕುರಿತು ಬೆಳಕು ಚೆಲ್ಲಿದ್ದಾರೆ, ಇಲ್ಲಿದೆ ಮಾಹಿತಿ.

ವಿಜಯ ಕರ್ನಾಟಕ 1 Mar 2026 12:34 pm

Maharashtra | ಕಾರ್ಖಾನೆಯಲ್ಲಿ ಭಾರಿ ಸ್ಫೋಟ: ಕನಿಷ್ಠ 10 ಮಂದಿ ಮೃತ್ಯು, ಹಲವರಿಗೆ ಗಾಯ

ಮುಂಬೈ: ನಾಗ್ಪುರ ಜಿಲ್ಲೆಯ ಕಟೋಲ್ ನಲ್ಲಿರುವ ಕಾರ್ಖಾನೆಯೊಂದರಲ್ಲಿ ರವಿವಾರ ಸಂಭವಿಸಿದ ಭಾರಿ ಸ್ಫೋಟದಲ್ಲಿ ಕನಿಷ್ಠ 10 ಮಂದಿ ಮೃತಪಟ್ಟು, ಹಲವರು ಗಾಯಗೊಂಡಿದ್ದಾರೆ. ಮೃತಪಟ್ಟವರ ಪೈಕಿ ಓರ್ವ ಮಹಿಳೆಯೂ ಸೇರಿದ್ದಾರೆ. ಸ್ಫೋಟಕಗಳ ತಯಾರಿಕಾ ಕಾರ್ಖಾನೆಯಲ್ಲಿ ಈ ಘಟನೆ ಸಂಭವಿಸಿದೆ.  ಈ ಘಟನೆಯಲ್ಲಿ ಹಲವು ಕಿಲೋಮೀಟರ್ ದೂರದವರೆಗೆ ಭಾರಿ ಸ್ಫೋಟದ ಸದ್ದುಗಳು ಕೇಳಿ ಬಂದಿದೆ.   ಸುದ್ದಿ ತಿಳಿಯುತ್ತಿದ್ದಂತೆ ಕಟೋಲ್ ಶಾಸಕ ಚರಣ್ ಸಿಂಗ್ ಠಾಕೂರ್ ಘಟನಾ ಸ್ಥಳಕ್ಕೆ ತೆರಳಿ ಪರಿಶೀಲನೆಯನ್ನು ನಡೆಸಿದ್ದಾರೆ.

ವಾರ್ತಾ ಭಾರತಿ 1 Mar 2026 12:09 pm

LPG Price: ಎಲ್‌ಪಿಜಿ ಗ್ಯಾಸ್‌ ಸಿಲಿಂಡರ್ ದರದಲ್ಲಿ ಭಾರೀ ಏರಿಕೆ: ಇಲ್ಲಿದೆ ಮಾರ್ಚ್‌ 1ರ ದರಪಟ್ಟಿ

LPG Price: ಇಂಧನ ಕಂಪನಿಗಳು ಪ್ರತಿ ತಿಂಗಳ ಆರಂಭದಲ್ಲಿ ಎಲ್‌ಪಿಜಿ ಸಿಲಿಂಡರ್ ದರವನ್ನು ಪರಿಷ್ಕರಣೆ ಮಾಡುತ್ತಲಿರುತ್ತವೆ. ಹಾಗೆಯೇ ಇದೀಗ ಇಂದು (ಮಾರ್ಚ್‌ 1) ದರವನ್ನು ಏರಿಕೆ ಮಾಡಲಾಗಿದೆ. ಹಾಗಾದ್ರೆ, ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಬೆಲೆ ಎಷ್ಟಿದೆ ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ. ವಾಣಿಜ್ಯ ಸಿಲಿಂಡರ್‌ ಬೆಲೆಯನ್ನು ಪ್ರತಿ ತಿಂಗಳ ಮೊದಲ ದಿನದಂದು

ಒನ್ ಇ೦ಡಿಯ 1 Mar 2026 11:59 am

ಖಮೇನಿ ಜಾಗಕ್ಕೆ ಹೊಸ ನಾಯಕನ ಆಯ್ಕೆ ಮಾಡಲು ಮಂಡಳಿ ರಚಿಸಿದ ಇರಾನ್ | Israel Military

ಇರಾನ್ ಸರ್ವಾಧಿಕಾರಿ ಖಮೇನಿ ಹತ್ಯೆಯ ನಂತರ ಈಗ ಮಧ್ಯಪ್ರಾಚ್ಯ ಧಗಧಗ ಅಂತಿದ್ದು, ಯಾವುದೇ ಕ್ಷಣದಲ್ಲಿ ಇಡೀ ಮಧ್ಯಪ್ರಾಚ್ಯ ಹೊತ್ತಿ ಉರಿಯುವ ವಾತಾವರಣ ಸೃಷ್ಟಿಯಾಗಿದೆ. ಹೀಗಿದ್ದಾಗ ದಿಢೀರ್ ಅಂತಾ ಖಮೇನಿ ಜಾಗಕ್ಕೆ ಹೊಸ ನಾಯಕನನ್ನು ಆಯ್ಕೆ ಮಾಡಿದ ಇರಾನ್ ಇನ್ನಷ್ಟು ದಾಳಿ ಮಾಡಲು ಸಜ್ಜಾಗಿದೆ. ಇರಾನ್‌ ಸುಪ್ರೀಂ ಲೀಡರ್ ಅಯಾತೊಲ್ಲಾ ಅಲಿ ಖಮೇನಿ ಹತ್ಯೆ ನಂತರ, ಇರಾನ್ ಆಡಳಿತ

ಒನ್ ಇ೦ಡಿಯ 1 Mar 2026 11:56 am

ಇರಾನ್-ಇಸ್ರೇಲ್ ಯುದ್ಧದಿಂದಾಗಿ ದುಬೈನಲ್ಲಿ ಡ್ರೋನ್ ಪ್ರತಾಪ್, ಕಾಂಗ್ರೆಸ್ ಶಾಸಕ ಸೇರಿ 150 ಕನ್ನಡಿಗರು ಲಾಕ್!

ಇಸ್ರೇಲ್‌-ಅಮೆರಿಕಾ ಜಂಟಿಯಾಗಿ ಇರಾನ್‌ ಮೇಲೆ ನಡೆಸುತ್ತಿರುವ ದಾಳಿಗಳಿಂದಾಗಿ ಯುದ್ದ ಆರಂಭವಾಗಿದ್ದು, ಇದರಿಂದಾಗಿ ಮಧ್ಯಪ್ರಾಚ್ಯದಲ್ಲಿ 150 ಕನ್ನಡಿಗರು ಸಿಲುಕಿರುವುದಾಗಿ ಮಾಹಿತಿ ದೊರೆತಿದೆ. ಇನ್ನು, ಈ ಕನ್ನಡಿಗರಲ್ಲಿ ಬಳ್ಳಾರಿ ಶಾಸಕ ಭರತ್ ರೆಡ್ಡಿ, ಬಿಗ್ ಬಾಸ್​ ಮಾಜಿ ಸ್ಪರ್ಧಿ ಡ್ರೋನ್ ಪ್ರತಾಪ್ ಸೇರಿದಂತೆ ಹಲವರು ದುಬೈನ ವಿಮಾನ ನಿಲ್ದಾಣದಲ್ಲಿ ಸಿಲುಕಿಕೊಂಡಿದ್ದಾರೆ ಎಂದು ಗೃಹಸಚಿವರು ಮಾಹಿತಿ ನೀಡಿದ್ದಾರೆ. ಅಲ್ಲದೆ, ಇವರೆಲ್ಲರನ್ನು ಸುರಕ್ಷಿತವಾಗಿ ಕರೆತರುವ ಕಾರ್ಯ ನಡೆಸಲಾಗುವುದು ಎಂದು ತಿಳಿಸಿದ್ದಾರೆ. ಇನ್ನು, ಯುದ್ದಪೀಡಿತ ಮಧ್ಯಪ್ರಾಚ್ಯದ ಹಲವು ದೇಶಗಳಲ್ಲಿ ಸಿಲುಕಿಕೊಂಡಿರುವ ಭಾರತೀಯರು ಕೇಂದ್ರವನ್ನು ಸಂಪರ್ಕಿಸಲು ಭಾರತದ ವಿದೇಶಾಂಗ ಸಚಿವಾಲಯ ಸಹಾಯವಾಣಿ ಸಂಖ್ಯೆಯನ್ನು ಬಿಡುಗಡೆ ಮಾಡಿದೆ. ಅವುಗಳ ವಿವರ ಇಲ್ಲಿದೆ..

ವಿಜಯ ಕರ್ನಾಟಕ 1 Mar 2026 11:55 am