ಮಾ. 3ರಂದು ಮಂಗಳೂರು - ಗಲ್ಫ್ ವಿಮಾನ ಸಂಚಾರ ರದ್ದು
ಮಂಗಳೂರು, ಮಾ.2: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮಾ.3ರಂದು ದುಬೈ, ದೋಹ, ದಮ್ಮಾಮ್, ಖತರ್, ಅಬುಧಾಬಿಗೆ ಹೊರಡಬೇಕಿದ್ದ ವಿಮಾನ ಸಂಚಾರವನ್ನು ರದ್ದುಪಡಿಸಲಾಗಿದೆ ಎಂದು ಪ್ರಕಟನೆ ತಿಳಿಸಿದೆ. ಇಸ್ರೇಲ್-ಅಮೇರಿಕಾ ದಾಳಿಗೆ ಪ್ರತಿಯಾಗಿ ಇರಾನ್ ಗಲ್ಫ್ ರಾಷ್ಟ್ರಗಳಲ್ಲಿ ಅಮೇರಿಕಾ ಸೇನಾ ನೆಲೆ ಸಹಿತ ಹಲವು ಪ್ರಮುಖ ಕೇಂದ್ರಗಳ ಮೇಲೆ ನಡೆಸಿರುವ ದಾಳಿಯಿಂದಾಗಿ ವಿಷಮ ಪರಿಸ್ಥಿತಿ ಎದುರಾಗಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಗಲ್ಫ್ ರಾಷ್ಟ್ರಗಳಿಗೆ ತೆರಳುವ ವಿಮಾನ ಸಂಚಾರವನ್ನು ರದ್ದುಪಡಿಸಲಾಗಿದೆ. ಈ ದಾಳಿಯಿಂದ ಗಲ್ಫ್ನಲ್ಲಿ ನೆಲೆಸಿರುವ ಕರಾವಳಿ ಕನ್ನಡಿಗರಲ್ಲಿ ಮಾತ್ರವಲ್ಲ ಇಲ್ಲಿನ ಅವರ ಕುಟುಂಬಸ್ಥರಲ್ಲೂ ಆತಂಕ ಸೃಷ್ಟಿಯಾಗಿದೆ.
Bidar | ಆತ್ಮಹತ್ಯೆಗೆ ಯತ್ನಿಸಿ ಚಿಕಿತ್ಸೆ ಪಡೆಯುತ್ತಿರುವ ಯುವತಿಯ ಆರೋಗ್ಯ ವಿಚಾರಿಸಿದ ಸಚಿವ ಈಶ್ವರ್ ಖಂಡ್ರೆ
ಬೀದರ್: ಆಸ್ಪತ್ರೆಯ ಕೆಲ ಪುರುಷ ಸಿಬ್ಬಂದಿಗಳ ಕಿರುಕುಳದಿಂದ ಮನನೊಂದು ಆತ್ಮಹತ್ಯೆಗೆ ಯತ್ನಿಸಿ ಚಿಕಿತ್ಸೆ ಪಡೆಯುತ್ತಿರುವ ಯುವತಿಯನ್ನು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ ಸೋಮವಾರ ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿ ಧೈರ್ಯ ತುಂಬಿದರು. ಘಟನೆಯ ಕುರಿತು ಸಂಪೂರ್ಣ ಹಾಗೂ ನಿಷ್ಪಕ್ಷಪಾತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಸಚಿವರು ಸೂಚನೆ ನೀಡಿದರು. ಮಹಿಳಾ ಸಿಬ್ಬಂದಿಗಳ ಸುರಕ್ಷತೆ ಮತ್ತು ಗೌರವದ ವಿಚಾರದಲ್ಲಿ ಯಾವುದೇ ನಿರ್ಲಕ್ಷ್ಯ ಸಹಿಸಲಾಗುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಬ್ರಿಮ್ಸ್ ಆಸ್ಪತ್ರೆಯ ಎಲ್ಲಾ ಸಿಬ್ಬಂದಿಗಳಿಗೆ ಸಮಯಕ್ಕೆ ಸರಿಯಾಗಿ ಸಂಬಳ ಪಾವತಿಸುವಂತೆ ನಿರ್ದೇಶಕರಿಗೆ ಸೂಚನೆ ನೀಡಿದರು. ಈ ಸಂದರ್ಭದಲ್ಲಿ ಬ್ರಿಮ್ಸ್ ನಿರ್ದೇಶಕಿ ಡಾ. ಶಾಂತಲಾ ಕೌಜಲಗಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಬಸವಕಲ್ಯಾಣ | ಲಿಂಗಾಯತರೆಲ್ಲ ಶೂದ್ರರೆಂಬುದು ಮರೆತರೆ ಲಿಂಗಾಯತ ಧರ್ಮ ನಾಶ : ನಿಜಗುಣಾನಂದ್ ಸ್ವಾಮೀಜಿ
ಬಸವಕಲ್ಯಾಣ : ಲಿಂಗಾಯತರೆಲ್ಲ ಶೂದ್ರರಾಗಿದ್ದು, ಬಸವಣ್ಣನವರು ಲಿಂಗಾಯತ ಧರ್ಮ ನೀಡಿ ನಮ್ಮನ್ನೆಲ್ಲ ಈ ಸಮಾಜಕ್ಕೆ ತಂದಿದ್ದಾರೆ. ನಾವೆಲ್ಲರೂ ದಲಿತ ವರ್ಗದಿಂದ ಲಿಂಗಾಯತರಾಗಿದ್ದೇವೆ ಎನ್ನುವ ಮನೋಭಾವನೆ ಇದ್ದರೆ ಮಾತ್ರ ಈ ಲಿಂಗಾಯತ ಧರ್ಮ ಬೆಳೆಯುತ್ತದೆ. ಇಲ್ಲವಾದರೆ ಈ ಲಿಂಗಾಯತ ಧರ್ಮ ನಾಶವಾಗುತ್ತದೆ ಎಂದು ಬೈಲೂರು ನಿಷ್ಕಲ ಮಂಟಪದ ಪೀಠಾಧಿಪತಿ ನಿಜಗುಣಾನಂದ್ ಸ್ವಾಮಿ ಹೇಳಿದರು. ನಗರದ ಬಸವಧರ್ಮ ಪೀಠದ ಬಸವ ಮಹಾಮನೆ ಆವರಣದಲ್ಲಿ ರವಿವಾರ ನಡೆದ ಕಲ್ಯಾಣ ನಡಿಗೆ ಮತ್ತು ಹರಳಯ್ಯ ಜ್ಯೋತಿ ಪಾದಯಾತ್ರೆಯ ಸಮಾರೋಪ, ಶರಣ ಸಂಸತ್ ಸಮಾವೇಶ ಹಾಗೂ ಶರಣ ವಂದನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ದಲಿತ ವರ್ಗದವರು ಬಸವಣ್ಣನವರ ಎಲ್ಲ ಸಂಕಲ್ಪಗಳು ಧೃಡಿಕರಿಸಿ ಎತ್ತರಕ್ಕೆ ತೆಗೆದುಕೊಂಡು ಹೋಗಿದ್ದಾರೆ. ಇದರ ಎಚ್ಚರಿಕೆ ನಮಗಿರಬೇಕು. ಈ ಎಚ್ಚರ ತಪ್ಪಿದರೆ ಈ ಲಿಂಗಾಯತ ಧರ್ಮ ಹೊರಟು ಹೋಗುತ್ತದೆ. ನಾವೆಲ್ಲರೂ ಶೂದ್ರರೆ. ಆ ಶೂದ್ರತ್ವದ ಧರ್ಮಕ್ಕೆ ಕಿರೀಟ ಪ್ರಾಯರಾದವರೆಲ್ಲರೂ ದಲಿತ ವರ್ಗದವರಾಗಿದ್ದಾರೆ. ಇದರ ಅರಿವು ನಮ್ಮಲ್ಲಿ ಹೊರಟು ಹೋಗಿರುವುದರಿಂದ ಲಿಂಗಾಯತ ಧರ್ಮ ಬೆಳೆಯುವುದರಲ್ಲಿ ಸೋಲುತ್ತಿದೆ ಎಂದರು. ಉತ್ತುಂಗಕ್ಕೆ ಬೆಳೆದ ಲಿಂಗಾಯತ ಧರ್ಮದ ಮೇಲೆ ಇಷ್ಟೊಂದು ಗಧಾ ಪ್ರಹಾರ ಆಗುವುದಕ್ಕೆ ಕಾರಣ ಏನೆಂದರೆ, ಎರಡನೇ ವೈದಿಕ ವರ್ಗದ ಬ್ರಾಹ್ಮಣರ ಮನಸ್ಥಿತಿಯಲ್ಲಿ ಲಿಂಗಾಯತರು ನಿಂತುಕೊಂಡಿದ್ದೇವೆ. ಈ ದೇಶದ ಚಾತುರ್ವರ್ಣ ವ್ಯವಸ್ಥೆಯ ಬ್ರಾಹ್ಮಣ ವರ್ಗದ ವೈದಿಕ ಮನಸ್ಥಿತಿಯಲ್ಲಿ ಲಿಂಗಾಯತರು ಉಳಿದಿರುವುದರಿಂದ ಶೀಲವಂತ, ಮಧುವರಸ, ಮಾದರಸ, ಮಾದಾರ ಚೆನ್ನಯ್ಯ, ಸೂಳೆ ಸಂಕವ್ವ ನಮಗೆ ಅರ್ಥವಾಗುವುದಿಲ್ಲ ಎಂದು ಅವರು ತಿಳಿಸಿದರು. ಕಲ್ಯಾಣ ಕರ್ನಾಟಕ ಪ್ರತಿಷ್ಠಾನದ ಅಧ್ಯಕ್ಷ ಬಸವಕುಮಾರ್ ಪಾಟೀಲ್ ಅವರು ಮಾತನಾಡಿ, ಹರಳಯ್ಯನವರ ಪಾದರಕ್ಷೆ ಇರುವ ಬೀಜನಳ್ಳಿ ಗ್ರಾಮವು ಸಂಪೂರ್ಣವಾಗಿ ನಿರ್ಲಕ್ಷಕ್ಕೆ ಒಳಗಾಗಿದೆ. ಈ ಹಳ್ಳಿ ಅಭಿವೃದ್ಧಿಯಾಗಬೇಕು. ಬೀಜನಳ್ಳಿಯಲ್ಲಿ ಭವ್ಯವಾದ ಮಂಟಪ ನಿರ್ಮಾಣ ಮಾಡಿ ದಾಸೋಹ, ವಸತಿಯ ವ್ಯವಸ್ಥೆಯಾಗಬೇಕು ಎಂದರು. ಗುಣತೀರ್ಥವಾಡಿಯ ಬಸವಪ್ರಭು ಸ್ವಾಮಿ, ಹೂಲಸೂರಿನ ಬಸವೇಶ್ವರ್ ಸಂಸ್ಥಾನ ಮಠದ ಶಿವಾನಂದಸ್ವಾಮಿ, ಸಾಹಿತಿ ವಿಶ್ವಾರಾಧ್ಯ ಸತ್ಯಂಪೇಟೆ ಹಾಗೂ ಮಾಹಾಂತೇಶ್ ಕುಂಬಾರ್ ಹೂವಿನಹಳ್ಳಿ ಅವರು ಮಾತನಾಡಿದರು. ಕಾರ್ಯಕ್ರಮದಲ್ಲಿ ನಿವೃತ್ತ ನ್ಯಾಯಾಧೀಶ ಎಸ್.ಎಸ್.ನಾಗರಾಣೆ ಅಧ್ಯಕ್ಷತೆವಹಿಸಿದ್ದರು. ಈ ಸಂದರ್ಭದಲ್ಲಿ ಬಸವಧರ್ಮ ಪೀಠದ ಸಿದ್ದರಾಮೇಶ್ವರ್ ಸ್ವಾಮಿ, ಅನುಭವ ಮಂಟಪದ ಸಂಚಾಲಕ ಶಿವಾನಂದ್ ಸ್ವಾಮಿ, ಶಂಕರಲಿಂಗ್ ಸ್ವಾಮಿ, ಬಸವದೇವರು, ಸತ್ಯಕ್ಕ ಮಾತಾಜಿ, ಪಂಡಿತ್ ಬಾಳೊರೆ, ಸಂಗಮೇಶ್ ಎನ್. ಜವಾದಿ, ಜಗನ್ನಾಥ್ ಪತಂಗೆ, ಓಂಪ್ರಕಾಶ್ ರೊಟ್ಟೆ, ಸಿದ್ದಯ್ಯ ಕವಡಿಮಠ್, ಸುರೇಶ್ ಪಾಟೀಲ್, ರಮೇಶ್ ಚಿಲ್ಲರಗಿ, ರಾಜುಕುಮಾರ್ ಧುಮ್ಮನಸೂರ್, ಹಾವಯ್ಯಾ ಸ್ವಾಮಿ, ಉಮಾದೇವಿ ಚಿಲ್ಲರ್ಗಿ, ಶೈಲಜಾ ಧುಮ್ಮನಸೂರ್, ಅಂಬಿಕಾ ರಾಮಶೆಟ್ಟಿ, ಹೇಮಲತಾ ಪಾಟೀಲ್, ವೈಜಿನಾಥ್ ಸಜ್ಜನಶೆಟ್ಟಿ, ಅಲ್ಲಮಪ್ರಭು ನಾವದಗೇರಿ, ರಾಜಶೇಖರ್ ದೇವಣಿ, ರವೀಂದ್ರ ಕೊಳಕೋರ್ ಹಾಗೂ ಚಂದ್ರಮೌಳಿ ಸೆರಿದಂತೆ ಅನೇಕರು ಇದ್ದರು.
Shares Price Drop: ಇರಾನ್-ಇಸ್ರೇಲ್ ಯುದ್ಧದಿಂದ ಈ ವೈಮಾನಿಕ ಸಂಸ್ಥೆಗಳ ಶೇರು ಮೌಲ್ಯ ಭಾರೀ ಕುಸಿತ
Iran-Israel War Effect: ಜಾಗತಿಕ ದೃಷ್ಟಿ ಇದೀಗ ಇರಾನ್ ಮತ್ತು ಅಮೆರಿಕ-ಇಸ್ರೇಲ್ ಮಧ್ಯದ ಯುದ್ಧದ ಮೇಲೆ ನೆಟ್ಟಿದೆ. ಯುದ್ಧ ಮುಂದುವರಿದಿದ್ದು, ನಾಗರಿಕ ವಿಮಾನಗಳ ಸಂಚಾರದ ಮೇಲೂ ದುಷ್ಪರಿಣಾಮ ಬೀರಿದೆ. ಒಂದೊಂದೇ ವಲಯಗಳ ಮೇಲೆ ಯುದ್ಧದ ಪ್ರಭಾವ ಬಿದ್ದಿದೆ. ಇದೀಗ ವೈಮಾನಿಕ ಸಂಸ್ಥೆಗಳಾದ ಇಂಡಿಗೋ, ಸ್ಪೈಸ್ಜೆಟ್ ಹಾಗೂ ಪ್ರವಾಸೋದ್ಯಮಕ್ಕೆ ಸಂಬಂಧಿಸಿದ ಷೇರುಗಳ ಮೌಲ್ಯ ತೀವ್ರವಾಗಿ ಕುಸಿದಿದೆ. ವಾಯು ಪ್ರದೇಶಗಳು
ನಟಾಂಝ್ ಪರಮಾಣು ನೆಲೆಗೆ ದಾಳಿ: ಪುನರ್ ನಿರ್ಮಾಣಕ್ಕೆ ಇರಾನ್ ಪ್ರತಿಜ್ಞೆ
ವಿಕಿರಣ ಸೋರಿಕೆಯ ಅಪಾಯದ ಗಂಭೀರ ಎಚ್ಚರಿಕೆ ನೀಡಿದ IAEA
ಇರಾನ್ ಮೊದಲು ದಾಳಿ ಮಾಡುವ ಸೂಚನೆ ಇರಲಿಲ್ಲ: ಸಂಸತ್ತಿನಲ್ಲಿ ಒಪ್ಪಿಕೊಂಡ ಪೆಂಟಗನ್
ವಾಷಿಂಗ್ಟನ್: ಇರಾನ್ ಮೊದಲು ಅಮೆರಿಕದ ಪಡೆಗಳ ಮೇಲೆ ದಾಳಿ ನಡೆಸಲು ಯೋಜಿಸಿದೆ ಎಂಬ ಯಾವುದೇ ಖಚಿತ ಗುಪ್ತಚರ ಮಾಹಿತಿ ಲಭ್ಯವಿರಲಿಲ್ಲ ಎಂದು ಟ್ರಂಪ್ ಆಡಳಿತದ ಹಿರಿಯ ಅಧಿಕಾರಿಗಳು ಸಂಸತ್ತಿನಲ್ಲಿ (ಅಮೆಕಾದ ಕಾಂಗ್ರೆಸ್) ಮುಚ್ಚಿದ ಬಾಗಿಲಿನ ಬ್ರೀಫಿಂಗ್ ಸಭೆ ವೇಳೆ ತಿಳಿಸಿದ್ದಾರೆ ಎಂದು ಮೂಲಗಳು Reuters ಗೆ ತಿಳಿಸಿದ್ದಾರೆ. ಈ ಬೆಳವಣಿಗೆ ಇರಾನ್ ವಿರುದ್ಧದ ಮಿಲಿಟರಿ ಕ್ರಮಕ್ಕೆ ಆಡಳಿತ ಮುಂದಿಟ್ಟಿದ್ದ ಪ್ರಮುಖ ಆಧಾರವನ್ನು ದುರ್ಬಲಗೊಳಿಸಿರುವುದಾಗಿ ರಾಜಕೀಯ ವಲಯದಲ್ಲಿ ಚರ್ಚೆ ನಡೆಯುತ್ತಿದೆ. ಶನಿವಾರ ಅಮೆರಿಕ ಮತ್ತು ಇಸ್ರೇಲ್, ಇರಾನ್ ವಿರುದ್ಧ ದಶಕಗಳಲ್ಲಿಯೇ ಅತ್ಯಂತ ದೊಡ್ಡ ಮಟ್ಟದ ದಾಳಿಗಳನ್ನು ಆರಂಭಿಸಿವೆ. ಈ ದಾಳಿಗಳಲ್ಲಿ ಇರಾನ್ನ ಸುಪ್ರೀಂ ನಾಯಕ ಅಯತೊಲ್ಲಾ ಅಲಿ ಖಾಮಿನೈ ಹತ್ಯೆಗೀಡಾಗಿದ್ದು, ಹಲವು ಯುದ್ಧನೌಕೆಗಳನ್ನು ಮುಳುಗಿಸಲಾಗಿದೆ ಹಾಗೂ 1,000ಕ್ಕೂ ಹೆಚ್ಚು ನೆಲೆಗಳ ಮೇಲೆ ದಾಳಿ ನಡೆಸಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಮಧ್ಯಪ್ರಾಚ್ಯದಲ್ಲಿರುವ ಅಮೆರಿಕದ ಪಡೆಗಳ ಮೇಲೆ ಇರಾನ್ “ಬಹುಶಃ ಪೂರ್ವಭಾವಿಯಾಗಿ” ದಾಳಿ ನಡೆಸಬಹುದೆಂಬ ಆತಂಕದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಿಂದಿನ ದಿನ ಹೇಳಿದ್ದರು. “ಈ ಪ್ರದೇಶದಲ್ಲಿನ ಅಮೆರಿಕನ್ ಪಡೆಗಳು ದಾಳಿಗಳನ್ನು ನೋಡಿಕೊಂಡು ಕುಳಿತುಕೊಳ್ಳುವುದಕ್ಕೆ ನಾವು ಅನುಮತಿಸುವುದಿಲ್ಲ,” ಎಂದು ಟ್ರಂಪ್ ಹೇಳಿದ್ದರು. ಆದರೆ ರವಿವಾರ ಸಂಸತ್ತಿಗೆ ನೀಡಿದ ವಿವರಗಳಲ್ಲಿ, ಟೆಹ್ರಾನ್ ಮೊದಲು ದಾಳಿ ನಡೆಸುವ ಕುರಿತು ಯಾವುದೇ ನಿಖರ ಗುಪ್ತಚರ ಮಾಹಿತಿ ಇರಲಿಲ್ಲ ಎಂದು ಮೂಲಗಳು ತಿಳಿಸಿವೆ. ಪೆಂಟಗನ್ ಅಧಿಕಾರಿಗಳು ಸೆನೆಟ್ ಮತ್ತು ಪ್ರತಿನಿಧಿಗಳ ಸಭೆಯ ರಾಷ್ಟ್ರೀಯ ಭದ್ರತಾ ಸಮಿತಿಗಳ ಡೆಮಾಕ್ರಟಿಕ್ ಹಾಗೂ ರಿಪಬ್ಲಿಕನ್ ಸಿಬ್ಬಂದಿಗೆ 90 ನಿಮಿಷಗಳಿಗಿಂತ ಹೆಚ್ಚು ಕಾಲ ಇರಾನ್ನಲ್ಲಿ ನಡೆಯುತ್ತಿರುವ ಸೈನಿಕ ಕಾರ್ಯಾಚರಣೆ ಕುರಿತು ಮಾಹಿತಿ ನೀಡಿದರು. ಬ್ರೀಫಿಂಗ್ನಲ್ಲಿ ಇರಾನ್ ನ ಬ್ಯಾಲಿಸ್ಟಿಕ್ ಕ್ಷಿಪಣಿಗಳು ಹಾಗೂ ಪ್ರಾಕ್ಸಿ ಪಡೆಗಳು ಅಮೆರಿಕದ ಹಿತಾಸಕ್ತಿಗಳಿಗೆ ಸನ್ನಿಹಿತ ಬೆದರಿಕೆ ಒಡ್ಡಿವೆ ಎಂದು ಒತ್ತಿ ಹೇಳಲಾಯಿತು. ಆದರೆ ತಕ್ಷಣದ ದಾಳಿ ಕುರಿತು ದೃಢವಾದ ಗುಪ್ತಚರ ಮಾಹಿತಿ ಇಲ್ಲದಿರುವುದನ್ನು ಅಧಿಕಾರಿಗಳು ಒಪ್ಪಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ವಾರಗಳ ಕಾಲ ಮುಂದುವರಿಯಬಹುದಾದ ಈ ಮಿಲಿಟರಿ ಕಾರ್ಯಾಚರಣೆ ಇರಾನ್ ಪರಮಾಣು ಶಸ್ತ್ರಾಸ್ತ್ರ ಹೊಂದುವುದನ್ನು ತಡೆಯುವುದು, ಅದರ ಕ್ಷಿಪಣಿ ಕಾರ್ಯಕ್ರಮವನ್ನು ಕುಂಠಿತಗೊಳಿಸುವುದು ಹಾಗೂ ಅಮೆರಿಕ ಮತ್ತು ಮಿತ್ರ ರಾಷ್ಟ್ರಗಳಿಗೆ ಎದುರಾಗುವ ಬೆದರಿಕೆಗಳನ್ನು ನಿವಾರಿಸುವುದು ಎಂಬ ಗುರಿಯನ್ನು ಹೊಂದಿದೆ ಎಂದು ಟ್ರಂಪ್ ಹೇಳಿದ್ದಾರೆ. ಇದೇ ವೇಳೆ, ಇರಾನಿಯರು ದಂಗೆ ಎದ್ದು ಸರ್ಕಾರವನ್ನು ಉರುಳಿಸಬೇಕು ಎಂದು ಅವರು ಕರೆ ನೀಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಡೆಮೋಕ್ರಾಟ್ ನಾಯಕರು, ಟ್ರಂಪ್ “ಆಯ್ಕೆಯ ಯುದ್ಧ” ನಡೆಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಮಧ್ಯವರ್ತಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಒಮಾನ್ ಭರವಸೆ ನೀಡಿದ್ದ ಶಾಂತಿ ಮಾತುಕತೆಗಳನ್ನು ಕೈಬಿಟ್ಟಿರುವುದನ್ನೂ ಅವರು ಟೀಕಿಸಿದ್ದಾರೆ. ಇದೇ ವೇಳೆ, ಸಂಘರ್ಷದ ನಡುವೆ ಮೊದಲ ಅಮೆರಿಕದ ಪಡೆಗಳಲ್ಲಿ ಮೊದಲ ಸಾವುನೋವುಗಳನ್ನು ಮಿಲಿಟರಿ ರವಿವಾರ ಬಹಿರಂಗಪಡಿಸಿರುವುದರಿಂದ, ಯುದ್ಧದ ಸಮರ್ಥನೆ ಹಾಗೂ ಆಡಳಿತದ ನಿರ್ಧಾರ ಪ್ರಕ್ರಿಯೆ ಕುರಿತು ರಾಜಕೀಯ ವಲಯದಲ್ಲಿ ಪ್ರಶ್ನೆಗಳು ಮತ್ತಷ್ಟು ಗಂಭೀರಗೊಂಡಿವೆ.
CM ಸ್ಟಾಲಿನ್ ಹುಟ್ಟುಹಬ್ಬದಂದು ಅಣ್ಣಾಮಲೈ ವ್ಯಂಗ್ಯ : 'ಹೋದ ವರ್ಷ ಬ್ರೋ..ಬ್ರೋ, ಈ ವರ್ಷ ನೋ Bro..'
Annamalai Vs MK Stalin : ತಮಿಳುನಾಡು ಬಿಜೆಪಿ ಘಟಕದ ಮಾಜಿ ಅಧ್ಯಕ್ಷ ಅಣ್ಣಾಮಲೈ, ಸಿಎಂ ಎಂಕೆ ಸ್ಟಾಲಿನ್ ಅವರಿಗೆ ಅವರ ಹುಟ್ಟುಹಬ್ಬದಂದೇ ಕಾಲೆಳೆಯುವ ಟ್ವೀಟ್ ಅನ್ನು ಮಾಡಿದ್ದಾರೆ. ಮಾರ್ಚ್ ಒಂದರಂದು, ಅವರ ಹುಟ್ಟುಹಬ್ಬದ ದಿನದಂದು, ಒಂದು ವರ್ಷದ ಹಿಂದಿನ ಮತ್ತು ಈಗಿನ ರಾಹುಲ್ ಗಾಂಧಿ ಶುಭಾಶಯವನ್ನು ಹಾಕಿ, ಪೋಸ್ಟ್ ಮಾಡಿದ್ದಾರೆ.
ಕರ್ನಾಟಕದ ಅಲಿಪುರದಲ್ಲಿ ಇರಾನ್ ನಾಯಕ ಖಮೇನಿ ಅಂದು ಆಡಿದ್ದ ಮಾತುಗಳೇನು ?
ಇತ್ತೀಚೆಗೆ ಇರಾನ್ನಲ್ಲಿ ನಡೆದ ಹಲವು ಬೆಳವಣಿಗೆಗಳು ಹಾಗೂ ಅಲ್ಲಿನ ಪರಮೋಚ್ಛ ನಾಯಕ ಅಲಿ ಖಮೇನಿ ಕುರಿತು ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆಯುತ್ತಿರುವ ಸಂದರ್ಭಗಳಲ್ಲಿ ಕರ್ನಾಟಕದ ಗೌರಿಬಿದನೂರು ತಾಲ್ಲೂಕಿನ ಅಲಿಪುರ ಗ್ರಾಮಕ್ಕೂ ಇರಾನ್ ನಾಯಕರಿಗೂ ಇರುವ ಅಪರೂಪದ ನಂಟು ಬೆಳಕಿಗೆ ಬಂದಿದೆ. ಈ ಪುಟ್ಟ ಗ್ರಾಮ ಮತ್ತು ಇರಾನ್ ನಡುವಿನ ಧಾರ್ಮಿಕ ಹಾಗೂ ಐತಿಹಾಸಿಕ ಸಂಬಂದ ಸ್ಥಳೀಯರಲ್ಲಿ ವಿಶೇಷ
Sanju Samson Net Worth 2026: ಟೀಂ ಇಂಡಿಯಾ ಸ್ಟಾರ್ ಸಂಜು ಸ್ಯಾಮ್ಸನ್ ಆಸ್ತಿ, ಕಾರುಗಳ ಕಲೆಕ್ಷನ್
Sanju Samson Net Worth 2026: ಟಿ20 ವಿಶ್ವಕಪ್ 2026ರ ಕೊನೆಯ ಸೂಪರ್ 8 ಹಂತದ ಮಹತ್ವದ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಭಾರತದ ಪರ ಸಂಜು ಸ್ಯಾಮ್ಸನ್ ಸ್ಫೋಟಕ ಬ್ಯಾಟಿಂಗ್ ಮಾಡಿ ತಂಡದ ಗೆಲುವಿಗೆ ಪ್ರಮುಖ ಪಾತ್ರವಹಿಸಿದ್ದಾರೆ. ಇದೀಗ ಎಲ್ಲಾ ಕಡೆಯೂ ಇವರದ್ದೇ ಹೆಸರು ದೊಡ್ಡ ಮಟ್ಟದಲ್ಲಿ ಕೇಳಿಬರುತ್ತಿದೆ. ಅದರಲ್ಲೂ ಇವರ ಆಸ್ತಿ ಮೌಲ್ಯ ಎಷ್ಟು
ಇಸ್ರೇಲ್ ಪ್ರಧಾನಿ ಕಚೇರಿಯನ್ನೇ ಗುರಿಯಾಗಿರಿಸಿ ಕ್ಷಿಪಣಿ ದಾಳಿ; ಬೆಂಜಮಿನ್ ನೆತನ್ಯಾಹು ಭವಿಷ್ಯ ಅಸ್ಪಷ್ಟ ಎಂದ ಇರಾನ್!
Mid East Conflict- ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧ ಇದೀಗ ತೀವ್ರ ಸ್ವರೂಪವನ್ನು ಪಡೆದುಕೊಂಡಿದೆ. ತನ್ನ ದೇಶದ ಪರಮೋಚ್ಚ ಧಾರ್ಮಿಕ ನಾಯಕ ಅಯತೊಲ್ಲಾ ಖಮೇನಿ ಅವರ ಹತ್ಯೆಗೆ ಪ್ರತಿಯಾಗಿ ಇರಾನ್ ಸೇನೆಯು ಇಸ್ರೇಲ್ ಪ್ರಧಾನ ಮಂತ್ರಿ ಬೆಂಜಮಿನ್ ನೆತನ್ಯಾಹು ಅವರ ಕಚೇರಿಯನ್ನೇ ಗುರಿಯಾಗಿರಿಸಿಕೊಂಡು ಅಚ್ಚರಿಯ ಕ್ಷಿಪಣಿ ದಾಳಿ ನಡೆಸಿದೆ. ಜೊತೆಗೆ ಇಸ್ರೇಲಿ ವಾಯುಪಡೆಯ ಕಮಾಂಡರ್ ಇರುವ ಸ್ಥಳವನ್ನು ಗುರಿಯಾಗಿಸಿಕೊಂಡು ದಾಳಿ ಮಾಡಿದೆ. ಆದರೆ ಈ ಎಲ್ಲಾ ಪ್ರಯತ್ನಗಳೂ ವಿಫಲಗೊಂಡಿವೆ ಎಂದು ಇಸ್ರೇಲ್ ಸ್ಪಷ್ಟನೆ ನೀಡಿದೆ.
ಖಾಲಿ ಹುದ್ದೆಗಳ ನೇಮಕಾತಿಗೂ ಮುನ್ನ ಒಳ ಮೀಸಲಾತಿ ಜಾರಿಗೆ ಎಲ್ಲರ ವಿಶ್ವಾಸ ತೆಗೆದುಕೊಳ್ಳಿ: ಬಸವರಾಜ ಬೊಮ್ಮಾಯಿ ಆಗ್ರಹ
ಬೆಂಗಳೂರು: ರಾಜ್ಯ ಸರ್ಕಾರವು ಖಾಲಿ ಇರುವ ಸರ್ಕಾರಿ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯನ್ನು ಆರಂಭಿಸುವ ಮುನ್ನ ಒಳ ಮೀಸಲಾತಿ ವಿಷಯದಲ್ಲಿ ಎಲ್ಲಾ ಸಮುದಾಯಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ನಾಯಕ ಬಸವರಾಜ ಬೊಮ್ಮಾಯಿ ಒತ್ತಾಯಿಸಿದ್ದಾರೆ. ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಒಳ ಮೀಸಲಾತಿ ಜಾರಿಗೆ ಸಂಬಂಧಿಸಿದಂತೆ ಸರ್ಕಾರದ ಮುಂದಿರುವ ಗೊಂದಲಗಳು ಮತ್ತು ಕೈಗೊಳ್ಳಬೇಕಾದ ಕ್ರಮಗಳ
ರಾಯಚೂರು | ಖಾಲಿ ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಲು ಒತ್ತಾಯ: ಉದ್ಯೋಗಾಂಕ್ಷಿಗಳಿಂದ ಧರಣಿ
ರಾಯಚೂರು: ರಾಜ್ಯ ಸಚಿವ ಸಂಪುಟ ಅನುಮೋದಿಸಿರುವ 56,432 ಹುದ್ದೆಗಳ ಭರ್ತಿಗೆ ಕೂಡಲೇ ಅಧಿಸೂಚನೆ ಹೊರಡಿಸಬೇಕು ಎಂದು ಒತ್ತಾಯಿಸಿ ಉದ್ಯೋಗಾಕಾಂಕ್ಷಿಗಳ ಹೋರಾಟ ಸಮಿತಿಯಿಂದ ನಗರದ ಡಾ.ಬಿ.ಆರ್ ಅಂಬೇಡ್ಕರ್ ವೃತ್ತದಲ್ಲಿ ಸೋಮವಾರ ಧರಣಿ ನಡೆಯಿತು. ರಾಜ್ಯದಲ್ಲಿ ಖಾಲಿ ಇರುವ 2,84,881 ಹುದ್ದೆಗಳಲ್ಲಿ 56,432 ಹುದ್ದೆಗಳಿಗೆ ಯಾವುದೇ ವಿಳಂಬವಿಲ್ಲದೆ ಅಧಿಸೂಚನೆ ಹೊರಡಿಸಬೇಕು. ಶಿಕ್ಷಕರ ಹುದ್ದೆಯನ್ನು ನಾಶಮಾಡುವ ಕೆಪಿಎಸ್ ಮ್ಯಾಗ್ನೆಟ್ ಯೋಜನೆಯನ್ನು ಕೈಬಿಡಬೇಕು ಎಂದು ಧರಣಿನಿರತರು ಒತ್ತಾಯಿಸಿದರು. ಜಿಲ್ಲೆಯಲ್ಲಿ ಖಾಲಿ ಇರುವ 5000ಕ್ಕೂ ಹೆಚ್ಚು ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರನ್ನು ಹಾಗೂ ಚಿತ್ರಕಲಾ, ಸಂಗೀತ, ದೈಹಿಕ ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡಬೇಕು. ಪ್ರತೀ ವರ್ಷ ಖಾಲಿಯಾಗುವ ಹುದ್ದೆಗಳ ಭರ್ತಿಗೆ ವಾರ್ಷಿಕ ಕ್ಯಾಲೆಂಡರ್ ಅನ್ನು ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು. ಕೇಂದ್ರದ 78 ಇಲಾಖೆಗಳಲ್ಲಿ ಖಾಲಿ ಇರುವ 9.79 ಲಕ್ಷ ಹುದ್ದೆಗಳ ಭರ್ತಿಗೆ ಕೂಡಲೆ ಕ್ರಮ ಕೈಗೊಳ್ಳಬೇಕು. ಸರ್ಕಾರಿ ವೆಚ್ಚ ಕಡಿತ ಮಾಡುವ ಹೆಸರಿನಲ್ಲಿ ಜಾರಿಗೊಳಿಸಲಾಗಿರುವ ಫಿಸ್ಕಲ್ ರೆಸ್ಪಾನ್ಸಿಬಿಲಿಟಿ ಅಂಡ್ ಬಜೆಟ್ ಮ್ಯಾನೇಜ್ಮೆಂಟ್(ಎಫ್. ಆರ್. ಬಿ. ಎಂ) ಕಾಯ್ದೆಯನ್ನು ರದ್ದುಗೊಳಿಸಬೇಕು. ರಾಜ್ಯದಲ್ಲಿ ಹಾರ್ನಳ್ಳಿ ರಾಮಸ್ವಾಮಿ ವೀರಪ್ಪ ಮೊಗಲಿ ಮತ್ತು ದೇಶಪಾಂಡೆ ನೇತೃತ್ವದ ಎ. ಆರ್. ಸಿ ಶಿಫಾರಸುಗಳನ್ನು ಕೈಬಿಡಬೇಕು ಎಂದು ಮನವಿ ಮಾಡಿದರು. ನೇಮಕಾತಿ ಪ್ರಕ್ರಿಯೆಯಲ್ಲಿ ಸಂಪೂರ್ಣ ಪಾರದರ್ಶಕತೆ ಇರಬೇಕು ಮತ್ತು ಎಲ್ಲಾ ತೆರನಾದ ಪರೀಕ್ಷಾ ಅಕ್ರಮಗಳನ್ನು ತಡೆಗಟ್ಟಬೇಕು. ನೇಮಕಾತಿಗಳಲ್ಲಿ ದುಬಾರಿ ಅರ್ಜಿ ಶುಲ್ಕ ಕೈಬಿಡಬೇಕು ಹಾಗೂ ಅಭ್ಯರ್ಥಿಗಳಿಗೆ ಉಚಿತ ಸಾರಿಗೆ ವ್ಯವಸ್ಥೆ ಕಲ್ಪಿಸಬೇಕು. ಉದ್ಯೋಗಾವಕಾಶ ದೊರೆಯುವವರಿಗೆ ಗೌರವಯುತ ಜೀವನ ನಡೆಸಲು ಸೂಕ್ತವಾದ ನಿರುದ್ಯೋಗ ಭತ್ತೆ ನೀಡಬೇಕು ಎಂದು ಒತ್ತಾಯಿಸಿದರು. ಕೆಪಿಎಸ್ ಸಿಯಲ್ಲಿನ ಅಕ್ರಮ ತಡೆಗಟ್ಟಲು ರಾಜ್ಯ ಸರ್ಕಾರ ಹೋಟ ಸಮಿತಿ ಶಿಫಾರಸ್ಸುಗಳನ್ನು ಜಾರಿಗೊಳಿಸಬೇಕು. ಸರಕಾರಿ ಸಂಸ್ಥೆಗಳ ಖಾಸಗೀಕರಣ ನೀತಿಯನ್ನು ರದ್ದುಗೊಳಿಸಬೇಕು. ಗುತ್ತಿಗೆ ಪದ್ಧತಿಯನ್ನು ರದ್ದುಗೊಳಿಸಬೇಕು, ಖಾಯಂ ನೇಮಕಾತಿಗಳನ್ನು ಮಾಡಬೇಕು ಎಂದು ಆಗ್ರಹಿಸಿದರು. ಧರಣಿಯಲ್ಲಿ ಉದ್ಯೋಗಾಕಾಂಕ್ಷಿಗಳ ಹೋರಾಟ ಸಮಿತಿಯ ರಾಜ್ಯ ಸಂಚಾಲಕ ಚನ್ನಬಸವ ಜಾನೇಕಲ್, ಜಿಲ್ಲಾ ಘಟಕದ ಅಧ್ಯಕ್ಷ ಹನುಮಂತ ಕುರ್ಡಿ, ಜಿಲ್ಲಾ ಜಂಟಿ ಕಾರ್ಯದರ್ಶಿ ಶಿವಪ್ಪ ಅಸ್ಕಿಹಾಳ್, ವಿನೋದ ಕುಮಾರ, ಉದ್ಯೋಗ ಆಕಾಂಕ್ಷಿಗಳಾದ ಅಶೋಕ, ಮೌನೇಶ, ಕೃಷ್ಣ, ಸಂತೋಷ ಸಾಗರ್, ಶರಣಬಸವ, ರವಿ, ಜಮಶೇರ್, ಮೋಹನ, ಸಣ್ಣ ಬಸವ, ಮಂಜುನಾಥ, ಶ್ರೀಕಾಂತ್, ಶಾಂತಕುಮಾರ್, ಶಹಬಾಝ್ ಪಾಲ್ಗೊಂಡಿದ್ದರು.
Explainer : ಇರಾನ್ ಮೇಲೆ ಅಮೆರಿಕ - ಇಸ್ರೇಲ್ ಸಮರ: ವಿವಿಧ ದೇಶಗಳ ಮೇಲೆ ಏನಾಗಲಿದೆ ಪರಿಣಾಮ?
ಇಸ್ಲಾಂ ಜಗತ್ತಿನ ನಾಯಕರಾಗಿ ಗುರುತಿಸಲ್ಪಟ್ಟಿದ್ದ ಇರಾನ್ ಪರಮೋಚ್ಛ ನಾಯಕ ಖಮೇನಿ ಹತ್ಯೆಯಾಗಿದ್ದಾರೆ. ಸಾಗರ ಗರ್ಭದಲ್ಲಿನ ಭೂಕಂಪವು ನಿಮಿಷಗಳ ಬಳಿಕ ತರುವ ಸುನಾಮಿಯಂತೆ ಅಮೆರಿಕ- ಇಸ್ರೇಲ್ ನಡೆಸುತ್ತಿರುವ ಯುದ್ಧದ ಪರಿಣಾಮ ಮತ್ತು ಅಡ್ಡಪರಿಣಾಮಗಳು ಇರಾನ್ ಮಾತ್ರವಲ್ಲ, ಮಧ್ಯಪ್ರಾಚ್ಯ ಮಾತ್ರವಲ್ಲ ಬಹಳಷ್ಟು ದೇಶಗಳ ಮನೆ ಬಾಗಿಲು ಬಡಿಯಲಿವೆ.
ಕರಿದ ಎಣ್ಣೆಯನ್ನು ಮರಳಿ ಬಳಸದಂತೆ ಎಚ್ಚರಿಸಿದ ಏಮ್ಸ್ ವೈದ್ಯೆ; ಕಾರಣವೇನು?
ಕರಿದ ಪದಾರ್ಥಗಳಿಂದ ಉಳಿದ ಎಣ್ಣೆಯನ್ನು ಮತ್ತೆ ಬಿಸಿ ಮಾಡುವುದು ಅಗ್ಗದ ಆಯ್ಕೆಯಂತೆ ಕಾಣಿಸಿದರೂ ಅಪಾಯಕಾರಿ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಭಾರತೀಯ ಅಡುಗೆಮನೆಗಳಲ್ಲಿ ಒಮ್ಮೆ ಕರಿಯಲು ಬಳಸಿದ ಎಣ್ಣೆಯನ್ನು ಮರುಬಳಕೆ ಮಾಡುವುದು ಸಾಮಾನ್ಯವಾಗಿ ಕಂಡುಬರುವ ಅಭ್ಯಾಸವಾಗಿದೆ. ಕರಿದ ಪದಾರ್ಥಗಳಿಂದ ಉಳಿದ ಎಣ್ಣೆಯನ್ನು ಉಳಿಸಿ ನಂತರ ಮತ್ತೆ ಬಿಸಿ ಮಾಡುವುದು ಅಗ್ಗದ ಆಯ್ಕೆಯಂತೆ ಕಾಣಿಸಬಹುದು. ಸಾಮಾನ್ಯವಾಗಿ ಎಲ್ಲಾ ಫಾಸ್ಟ್ ಫುಟ್ ಚೈನ್ಗಳು ನಿಯಮಿತವಾಗಿ ಹೀಗೆ ಎಣ್ಣೆ ಉಳಿಸುತ್ತಾರೆ. ಆದರೆ ಅಗ್ಗದ ಎಣ್ಣೆ ಎಂದು ಪದೇಪದೇ ಬಳಸಿದ ಎಣ್ಣೆಯನ್ನೇ ಬಳಸಬಹುದೆ? ಹೀಗೆ ಕರಿದ ಎಣ್ಣೆಯನ್ನು ಒಂದಕ್ಕಿಂತ ಹೆಚ್ಚು ಬಾರಿ ಬಳಸುವುದರಿಂದ ಕ್ಯಾನ್ಸರ್ ಅಪಾಯವೂ ಇದೆ ಎಂದು ತಜ್ಞರು ಎಚ್ಚರಿಸಿದ್ದಾರೆ. ಹೊಸದಿಲ್ಲಿಯ ಏಮ್ಸ್ನಲ್ಲಿ ನರವಿಜ್ಞಾನಿ ಮತ್ತು ವೈದ್ಯೆಯಾಗಿರುವ ಡಾ. ಪ್ರಿಯಾಂಕಾ ಸೆಹ್ರಾವತ್ ಹೀಗೆ ಅಡುಗೆ ಎಣ್ಣೆಗಳನ್ನು ಪದೇಪದೆ ಬಿಸಿ ಮಾಡುವುದರಿಂದ ಆಗುವ ಅಪಾಯಗಳನ್ನು ನಾವು ನಿರ್ಲಕ್ಷಿಸುತ್ತಿದ್ದೇವೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಫೆಬ್ರವರಿ 23ರಂದು ಅವರು ಇನ್ಸ್ಟಾಗ್ರಾಂ ವೀಡಿಯೊದಲ್ಲಿ ಈ ಬಗ್ಗೆ ವಿವರ ನೀಡಿದ್ದಾರೆ. ಅಡುಗೆ ಮನೆಯ ಇಂತಹ ಅಭ್ಯಾಸವು ದೀರ್ಘಕಾಲೀನ ಆರೋಗ್ಯ ಅಪಾಯಗಳಿಗೆ ಸದ್ದಿಲ್ಲದೆ ಕೊಡುಗೆ ಕೊಡುತ್ತದೆ. ಚಯಾಪಚಯ ಅಡಚಣೆಯಿಂದ ತೊಡಗಿ ಹೃದಯ ರಕ್ತನಾಳದ ಕಾಯಿಲೆ ಮತ್ತು ಕ್ಯಾನ್ಸರ್ನಂತಹ ಗಂಭೀರ ಸ್ಥಿತಿಗಳಿಗೆ ಕಾರಣವಾಗಬಹುದು ಎಂದು ಅವರು ಎಚ್ಚರಿಸಿದ್ದಾರೆ. ಎಣ್ಣೆಯನ್ನು ಮರಳಿ ಬಿಸಿ ಮಾಡುವುದರಿಂದ ಏನಾಗುತ್ತದೆ? ಪ್ರಿಯಾಂಕಾ ಅವರ ಪ್ರಕಾರ, ಅಡುಗೆ ಎಣ್ಣೆಯನ್ನು ಪದೇಪದೇ ಬಿಸಿ ಮಾಡುವುದು ಗಂಭೀರ ಮತ್ತು ಹೆಚ್ಚಾಗಿ ನಾವು ಅಲಕ್ಷಿಸುವ ಕ್ಯಾನ್ಸರ್ ಅಪಾಯಕ್ಕೆ ಕಾರಣವಾಗಲಿದೆ. ಜೈಪುರದ ಫಾಸ್ಟ್ ಫುಡ್ ಔಟ್ಲೆಟ್ಗಳಲ್ಲಿ ಇತ್ತೀಚೆಗೆ ನಡೆಸಲಾದ ಸಮೀಕ್ಷೆಯನ್ನು ಅವರು ಉಲ್ಲೇಖಿಸಿದ್ದಾರೆ. ಒಂದೇ ಎಣ್ಣೆಯನ್ನು ಸಂಪೂರ್ಣ ಕಪ್ಪು ಬಣ್ಣಕ್ಕೆ ತಿರುಗುವವರೆಗೆ ಬಿಸಿ ಮಾಡಲಾಗಿದೆ. ಆಳವಾಗಿ ಕರಿಯಲು ಬಳಸುವ ಎಣ್ಣೆಯನ್ನು ಪದೇಪದೆ ಬಿಸಿ ಮಾಡಿದಾಗ ಅದು ಒಡೆಯುತ್ತದೆ ಮತ್ತು ಕ್ಯಾನ್ಸರ್ ಜನಕ ಸಂಯುಕ್ತಗಳು ಮತ್ತು ಇತರ ಹಾನಿಕರ ವಸ್ತುಗಳನ್ನು ಬಿಡುಗಡೆ ಮಾಡುತ್ತದೆ ಎಂದು ಪ್ರಿಯಾಂಕಾ ಹೇಳಿದ್ದಾರೆ. ಜೈಪುರದ ಫಾಸ್ಟ್ ಫುಡ್ ಔಟ್ಲೆಟ್ನಲ್ಲಿ ನಡೆದ ಸಮೀಕ್ಷೆಯಲ್ಲಿ ಪದೇಪದೆ ಬಿಸಿ ಮಾಡಿದ ಎಣ್ಣೆ ಬಳಸುವ ಕುರಿತಾದ ಸಮೀಕ್ಷೆಯಲ್ಲಿ ಕ್ಯಾನ್ಸರ್ಜನಕ ಸಂಯುಕ್ತಗಳು ಇರುವುದು ಬಹಿರಂಗವಾಗಿದೆ. ಎಣ್ಣೆ ಸಂಪೂರ್ಣವಾಗಿ ಕಪ್ಪಾಗಿತ್ತು. ಆಳವಾಗಿ ಕರಿದ ವಸ್ತುಗಳನ್ನು ತಯಾರಿಸಿದ ಎಣ್ಣೆಯನ್ನು ಮತ್ತೆ ಕರಿದ ಪದಾರ್ಥಗಳನ್ನು ತಯಾರಿಸಲು ಬಳಸಿದರೆ ಕ್ಯಾನ್ಸರ್ ಜನಕ ಸಂಯುಕ್ತಗಳು, ಒಟ್ಟು ಪೋಲಾರ್ ಸಂಯುಕ್ತಗಳು, ಪಾಲಿಸೈಕ್ಲಿಕ್ ಆರೋಮ್ಯಾಟಿಕ್ ಹೈಡ್ರೋಕಾರ್ಬನ್ಗಳು, ಟ್ರಾನ್ಸ್ ಕೊಬ್ಬುಗಳು ಮತ್ತು ಫ್ರೀ ರ್ಯಾಡಿಕಲ್ಗಳನ್ನು ಬಿಡುಗಡೆ ಮಾಡುತ್ತದೆ. ಕರಿದ ಎಣ್ಣೆಯಿಂದ ಆರೋಗ್ಯ ಅಪಾಯಗಳು ಕ್ಯಾನ್ಸರ್ ಅಪಾಯ ಮುಖ್ಯವಾಗಿ ಕಂಡುಬಂದಿದೆ. ಅಲ್ಲದೆ, ಹೃದಯದ ಆರೋಗ್ಯದ ಮೇಲೂ ಗಂಭೀರ ಪರಿಣಾಮಗಳನ್ನು ಬೀರುತ್ತವೆ. ಕೊಳೆತ ಎಣ್ಣೆಯಲ್ಲಿ ಬೇಯಿಸಿದ ಆಹಾರವನ್ನು ನಿಯಮಿತವಾಗಿ ಸೇವಿಸುವುದರಿಂದ ಹೃದಯಾಘಾತ ಸೇರಿದಂತೆ ಹೃದಯರಕ್ತನಾಳದ ರೋಗಗಳ ಅಪಾಯ ಹೆಚ್ಚಾಗುತ್ತದೆ. ಅಲ್ಲದೆ, ಬಿಸಿ ಮಾಡಿದ ಎಣ್ಣೆಯು ರಕ್ತದಲ್ಲಿ ಕೆಟ್ಟ ಎಲ್ಡಿಎಲ್ ಕೊಲೆಸ್ಟರಾಲ್ ಮಟ್ಟವನ್ನು ಹೆಚ್ಚಿಸಲು ಕೊಡುಗೆ ನೀಡುತ್ತದೆ. ಹೃದಯದಲ್ಲಿ ಲೋಳೆಗಳ ನಿರ್ಮಾಣ ಮತ್ತು ದೀರ್ಘಕಾಲೀನ ಸಮಸ್ಯೆಗಳ ಸಾಧ್ಯತೆಯನ್ನು ಸೃಷ್ಟಿಸುತ್ತದೆ. ಈ ಸಮಸ್ಯೆಗೆ ಪರಿಹಾರವೇನು? ಪದೇಪದೆ ಎಣ್ಣೆ ಬಳಸುವುದರಿಮದ ಅಲ್ಪಾವಧಿಯ ಉಳಿತಾಯಕ್ಕೆ ಪ್ರಯತ್ನಿಸಿ ದೀರ್ಘಾವಧಿ ಅಪಾಯ ತಂದುಕೊಳ್ಳಲಾಗುತ್ತಿದೆ ಎಂದು ವೈದ್ಯೆ ಪ್ರಿಯಾಂಕಾ ಎಚ್ಚರಿಸಿದ್ದಾರೆ. ಎಣ್ಣೆಯನ್ನು ಮರಳಿ ಬಳಸಬೇಕೆಂದರೆ ಅದನ್ನು ಸೋಸಿ ಸೂಕ್ತ ರೀತಿಯಲ್ಲಿ ಸಂಗ್ರಹಿಸಿಡಬೇಕು ಮತ್ತು ಮುಂದಿನ ಒಂದೆರಡು ದಿನಗಳಲ್ಲಿ ಒಗ್ಗರಣೆ ಮತ್ತಿತರ ಲಘು ಅಡುಗೆಗಳಿಗೆ ಬಳಸಬಹುದು. ಹಾಗಿದ್ದರೂ ಅಧಿಕ ತಾಪಮಾನದಿಂದ ಎಣ್ಣೆಯ ಗುಣಮಟ್ಟ ಇನ್ನಷ್ಟು ತಗ್ಗುತ್ತದೆ ಮತ್ತು ಹಾನಿಕರ ಸಂಯುಕ್ತಗಳ ರಚನೆಯನ್ನು ಏರಿಸುತ್ತದೆ.
CBSE 10ನೇ ತರಗತಿ ಹಿಂದಿ ಪರೀಕ್ಷೆ ಬರೆದ ವಿದ್ಯಾರ್ಥಿಗಳು ಫುಲ್ ಖುಷ್: ಇಲ್ಲಿದೆ ಪ್ರಶ್ನೆ ಪತ್ರಿಕೆ ವಿಶ್ಲೇಷಣೆ
ಬೆಂಗಳೂರು: ಕೇಂದ್ರೀಯ ಪ್ರೌಢಶಿಕ್ಷಣ ಮಂಡಳಿ (CBSE) 2026ರ 10ನೇ ತರಗತಿ ಬೋರ್ಡ್ ಪರೀಕ್ಷೆಗಳು ದೇಶಾದ್ಯಂತ ಬಿರುಸಿನಿಂದ ಸಾಗುತ್ತಿದ್ದು, ಇಂದು (ಮಾರ್ಚ್ 2, 2026) ಪ್ರಮುಖ ಭಾಷಾ ವಿಷಯವಾದ ಹಿಂದಿ ಪರೀಕ್ಷೆ ಯಶಸ್ವಿಯಾಗಿ ಮುಕ್ತಾಯಗೊಂಡಿದೆ. ಇಂದು ಹಿಂದಿ ಕೋರ್ಸ್-ಎ ಹಾಗೂ ಹಿಂದಿ ಕೋರ್ಸ್-ಬಿ ಎರಡೂ ಪರೀಕ್ಷೆಗಳು ನಡೆದಿದ್ದು, ಬೆಳಿಗ್ಗೆ 10:30ಕ್ಕೆ ಆರಂಭವಾದ ಪರೀಕ್ಷೆ ಮಧ್ಯಾಹ್ನ 1:30ರವರೆಗೆ ಸುಗಮವಾಗಿ ನಡೆಯಿತು.
ಮೂರನೇ ದಿನವೂ ಇರಾನ್ ಪ್ರತೀಕಾರದ ದಾಳಿ ಮುಂದುವರಿಕೆ
ಖತರ್, ಯುಎಇ, ಕುವೈತ್ ನಲ್ಲಿ ಸ್ಫೋಟಗಳ ವರದಿ; ಗಲ್ಫ್ ಪ್ರದೇಶದಲ್ಲಿ ಭೀತಿ
ಇತ್ತೀಚಿನ ವರ್ಷಗಳಲ್ಲಿ ಹಳಿ ತಪ್ಪಿದ್ದ ದ್ವಿಪಕ್ಷೀಯ ಸಂಬಂಧವನ್ನು ಮತ್ತೆ ಪುನಶ್ಚೇತನಗೊಳಿಸಲು ಉಭಯದೇಶಗಳು ಮುಂದಾಗಿದ್ದು,ಈ ಹಿನ್ನಲೆಯಲ್ಲಿ ಕೆನಡಾ ಪ್ರಧಾನಿ ಮಾರ್ಕ್ ಕಾರ್ನಿ ಭಾರತ ಪ್ರವಾಸ ಕೈಗೊಂಡು ಭಾರತ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಿದ್ದಾರೆ. ಇದಾದ ಬಳಿಕ ಉಭಯ ನಾಯಕರು ಜಂಟಿ ಸುದ್ದಿಗೋಷ್ಠಿ ನಡೆಸಿದ್ದು, 2030ರ ವೇಳೆಗೆ ದ್ವಿಪಕ್ಷೀಯ ವ್ಯಾಪಾರವನ್ನು $50ಬಿಲಿಯನ್ ತಲುಪಿಸಲು ಗುರಿಹೊಂದಿದ್ದು,ಈ ನಿಟ್ಟನಲ್ಲಿ ಸಮಗ್ರ ಆರ್ಥಿಕ ಪಾಲುದಾರಿಕೆ ಒಪ್ಪಂದವನ್ನು(CEPA) ಶೀಘ್ರವೇ ಅಂತಿಮಗೊಳಿಸುವುದಾಗಿ ತಿಳಿಸಿದ್ದಾರೆ. ಇನ್ನು, ಈ ಸುದ್ದಿಗೋಷ್ಠಿಯಲ್ಲಿ ಕೆನಡಾ ಪ್ರಧಾನಿ ಕಾರ್ನಿ ಸ್ವಾಮಿ ವಿವೇಕಾನಂದರ ಘೋಷವಾಕ್ಯವನ್ನು ಉಲ್ಲೇಖಿಸಿ ಗಮನ ಸೆಳೆದಿದ್ದಾರೆ. ಈ ಕುರಿತ ವರದಿ ಇಲ್ಲಿದೆ..
Shivamogga | ಶರಾವತಿ ಮುಳುಗಡೆ ಸಂತ್ರಸ್ತರ ಸಮಸ್ಯೆ ಪರಿಹರಿಸಲು ಆಗ್ರಹ: ರೈತರಿಂದ ರಾ.ಹೆದ್ದಾರಿ ತಡೆ, ಧರಣಿ
ಶಿವಮೊಗ್ಗ: ದಶಕಗಳ ಕಾಲದ ಶರಾವತಿ ಮುಳುಗಡೆ ಸಂತ್ರಸ್ತರ ಸಮಸ್ಯೆ ಹಾಗೂ ಅರಣ್ಯ ಭೂಮಿ ಸಾಗುವಳಿದಾರರ ಬೇಡಿಕೆಗಳಿಗೆ ಶಾಶ್ವತ ಪರಿಹಾರ ಒದಗಿಸುವಂತೆ ಒತ್ತಾಯಿಸಿ ಮಲೆನಾಡು ರೈತ ಹೋರಾಟ ಸಮಿತಿಯ ವತಿಯಿಂದ ಸೋಮವಾರ ಸಿಗಂದೂರು ಸೇತುವೆ ಬಳಿ ರಾಷ್ಟ್ರೀಯ ಹೆದ್ದಾರಿ ತಡೆದು ಧರಣಿ ನಡೆಯಿತು. ಮಲೆನಾಡು ರೈತ ಹೋರಾಟ ಸಮಿತಿಯ ಜಿಲ್ಲಾ ಸಂಚಾಲಕ ತೀ.ನ. ಶ್ರೀನಿವಾಸ್ ನೇತೃತ್ವದಲ್ಲಿ ಸಿಗಂದೂರು ಸೇತುವೆ ಪ್ರದೇಶದಲ್ಲಿ ರಾಷ್ಟ್ರೀಯ ಹೆದ್ದಾರಿ ತಡೆದು ನೂರಾರು ರೈತರು ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಕೆಪಿಸಿ ಭೂಮಿ ನಂಬಿ ಬದುಕುತ್ತಿರುವ ತಮಗೆ ಕೂಡಲೇ ಹಕ್ಕುಪತ್ರ ನೀಡಬೇಕೆಂದು ರಾಜ್ಯ ಸರಕಾರವನ್ನು ಆಗ್ರಹಿಸಿದ ಸಾಗುವಳಿದಾರರು, 1964ರಿಂದಲೂ ಮುಳುಗಡೆ ಸಂತ್ರಸ್ತರು ಅನುಭವಿಸುತ್ತಿರುವ ನೋವನ್ನು ಆಲಿಸುವಲ್ಲಿ ಶಾಸಕಾಂಗ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಸಂಚಾಲಕ ತೀ.ನ. ಶ್ರೀನಿವಾಸ್, ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬರುವ ಮುನ್ನ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಒಂದು ವರ್ಷದೊಳಗೆ ಹಕ್ಕುಪತ್ರ ನೀಡುವುದಾಗಿ ಭರವಸೆ ನೀಡಿದ್ದರು. ಆದರೆ ಈಗ ಮೂರು ವರ್ಷ ಕಳೆದರೂ ಈ ಬಗ್ಗೆ ಚಕಾರವೆತ್ತುತ್ತಿಲ್ಲ. ಮಲೆನಾಡ ರೈತರ ಸಂಕಷ್ಟದ ವಿಷಯದಲ್ಲಿ ಸರಕಾರ ತೋರುತ್ತಿರುವ ನಿರ್ಲಕ್ಷ್ಯ ಖಂಡನೀಯ ಎಂದರು. ಒಂದು ವೇಳೆ ಸಮಸ್ಯೆ ಶೀಘ್ರವಾಗಿ ಇತ್ಯರ್ಥವಾಗದಿದ್ದರೆ ಮುಂದಿನ ದಿನಗಳಲ್ಲಿ ಜಿಲ್ಲಾಧಿಕಾರಿ ಕಚೇರಿ ಹಾಗೂ ಸಚಿವರ ಕಚೇರಿಗಳಿಗೆ ಮುತ್ತಿಗೆ ಹಾಕುವುದಾಗಿ ಅವರು ಎಚ್ಚರಿಕೆ ನೀಡಿದರು. ರೈತ ಹೋರಾಟ ಸಮಿತಿಯ ಕಾನೂನು ಸಲಹೆಗಾರ, ವಕೀಲ ಕುಮಾರಸ್ವಾಮಿ ಮಾತನಾಡಿ, ಜನ ಸಾಮಾನ್ಯರ ಬದುಕಿಗೆ ಅರ್ಥವಿಲ್ಲದಂತೆ ಮಾಡುತ್ತಿದ್ದಾರೆ. ಅರಣ್ಯ ಇಲಾಖೆಯವರು ಪ್ರಾಣಿಗಳಿಗೆ ತೋರಿಸುವ ದಯೆಯನ್ನ ಮನುಷ್ಯರಿಗೆ ತೋರಿಸುತ್ತಿಲ್ಲ. ಅಭಯಾರಣ್ಯ ಘೋಷಣೆಯಾಗುವ ಮುನ್ನವೇ ಜನರು ವಾಸವಿದ್ದಾರೆ. ಅದನ್ನು ಪರಿಗಣಿಸಲಿ ಎಂದು ಒತ್ತಾಯಿಸಿದರು. ಪ್ರಮುಖರಾದ ಕೆ.ಎಸ್ ಪ್ರಶಾಂತ್, ಹೂವಣ್ಣ ಹುರಳಿ ಮತ್ತಿತರರು ಧರಣಿಯಲ್ಲಿ ಭಾಗವಹಿಸಿದ್ದರು.
ಮಧ್ಯಪ್ರಾಚ್ಯ ಉದ್ವಿಗ್ನ| ಪೂರೈಕೆ ಸರಪಳಿಗಳಿಗೆ ಅಡಚಣೆಯಿಂದ ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಯಾವ ರೀತಿ ಪರಿಣಾಮ ಬೀರಿದೆ?
ಕಚ್ಚಾ ತೈಲ ಬೆಲೆಗಳು ಭಾರತದ ಆರ್ಥಿಕತೆಯ ಮೇಲೆ ಹೇಗೆ ಪರಿಣಾಮ ಬೀರುತ್ತವೆ?; ಇಲ್ಲಿದೆ ಮಾಹಿತಿ...
ಲಿಂಗಾಯತ ಸಮುದಾಯದ ಸಹಕಾರ ಕೋರಿಕೆ: ಅಪ್ಪನ ಹಾದಿ ಹಿಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ
ಬದಲಾದ ರಾಜಕೀಯ ಕಾಲಘಟ್ಟದಲ್ಲಿ ಶಕ್ತಿ ಪ್ರದರ್ಶನಕ್ಕೆ ಈಗಿನಿಂದಲೇ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ ಬಿ ವೈ ವಿಜಯೇಂದ್ರ. ಸಮುದಾಯದ ನಾಯಕನಾಗಿ ಗುರುತಿಸಿಕೊಳ್ಳಲು ಬಿ ವೈ ವಿಜಯೇಂದ್ರ ಈಗಿನಿಂದಲೇ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಲಿಂಗಾಯತ ಧರ್ಮದ ಪ್ರಮುಖರೆದುರೇ ತಮ್ಮ ಕೈ ಹಿಡಿಯುವಂತೆ ಸಮುದಾಯವನ್ನ ಕೋರಿದ್ದಾರೆ ಬಿಜೆಪಿ ರಾಜ್ಯಾಧ್ಯಕ್ಷ.
VSR ವೆಂಚರ್ಸ್ ಮಾಲಕ ಪೈಲಟ್ ಸೀಟಿನಲ್ಲಿ ನಿದ್ರಿಸುತ್ತಿರುವ ವೀಡಿಯೊ ಹಂಚಿಕೊಂಡ ಅಜಿತ್ ಪವಾರ್ ಪುತ್ರ
ಇದು ಆಘಾತಕಾರಿ ಘಟನೆ: ಪೈಲಟ್ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ ಜಯ್ ಪವಾರ್
ಜಾಗತಿಕ ಮಾನಸಿಕ ಆರೋಗ್ಯದಲ್ಲಿ ಕೇವಲ 33 ಅಂಕಗಳಿಸಿದ ಭಾರತದ ಯುವಜನತೆ; ಕಳವಳ ವ್ಯಕ್ತಪಡಿಸಿದ ಅಧ್ಯಯನ
‘ಗ್ಲೋಬಲ್ ಮೈಂಡ್ ಹೆಲ್ತ್ 2025’ ವರದಿಯಲ್ಲಿ ಏನಿದೆ?
ಕಾರವಾರ | ಸಚಿವ ಮಂಕಾಳ ವೈದ್ಯ ವಿರುದ್ಧ ಶಾಸಕ ಸತೀಶ್ ಸೈಲ್ ಆಕ್ರೋಶ: ಕೆಡಿಪಿ ಸಭೆಯಿಂದ ಹೊರನಡೆದ ಶಾಸಕ
ಕಾರವಾರ: ನಗರದ ಜಿಪಂ ಕಚೇರಿಯಲ್ಲಿ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ಸಭೆ(ಕೆಡಿಪಿ)ಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಮತ್ತು ಸ್ವಪಕ್ಷೀಯ ಶಾಸಕ ಸತೀಶ್ ಸೈಲ್ ಮಧ್ಯೆ ಭಿನ್ನಾಭಿಪ್ರಾಯ, ಆರೋಗ್ಯ ಇಲಾಖೆಯ ಚರ್ಚೆಯ ಸಂದರ್ಭದ ಔಷಧಿ ಕೊರತೆಯ ವಿಷಯ ವಿಕೋಪಕ್ಕೆ ತಿರುಗಿ ಶಾಸಕರು ಸಭೆಯಿಂದ ಹೊರನಡೆದ ಘಟನೆ ನಡೆಯಿತು. ಸಭೆಯಲ್ಲಿ ಜಿಲ್ಲೆಯ ಆರೋಗ್ಯ ವ್ಯವಸ್ಥೆಯ ಬಗ್ಗೆ ಚರ್ಚೆ ನಡೆಯುತ್ತಿದ್ದಾಗ, ಕೆಲವು ಆಸ್ಪತ್ರೆಗಳಲ್ಲಿ ಔಷಧಿಗಳ ಕೊರತೆ ಇದೆ ಎಂದು ಶಾಸಕ ಸತೀಶ್ ಸೈಲ್ ಅಸಮಾಧಾನ ವ್ಯಕ್ತಪಡಿಸಿದರು. ಈ ವೇಳೆ ಡಿಎಚ್ಒ ಶಂಕರ ರಾವ್ ಸ್ಪಷ್ಟನೆ ನೀಡಲು ಮುಂದಾಗಿ, ಕೆಲವು ಕಡೆ ವೈದ್ಯರ ಕೊರತೆ ಇರಬಹುದು ಆದರೆ ಔಷಧಿಗಳ ಲಭ್ಯತೆ ಇದೆ ಎಂದು ಉತ್ತರಿಸಿದರು. ಇದನ್ನು ಬೆಂಬಲಿಸಿದ ಸಚಿವ ಮಂಕಾಳ ವೈದ್ಯ, ಜಿಲ್ಲೆಯಲ್ಲಿ ಔಷಧಿ ಕೊರತೆ ಇಲ್ಲ ಎಂದು ಪ್ರತಿಪಾದಿಸಿದರು. ಈ ಸಮರ್ಥನೆಯಿಂದ ಸಮಾಧಾನಗೊಳ್ಳದ ಶಾಸಕ ಸೈಲ್, ವಾಸ್ತವದಲ್ಲಿ ಔಷಧಿ ಕೊರತೆ ಇದೆ ಎಂದು ಏರಿದ ಧ್ವನಿಯಲ್ಲಿ ಆಕ್ಷೇಪ ವ್ಯಕ್ತಪಡಿಸಿದರು. ಶಾಸಕರ ವರ್ತನೆಯಿಂದ ಆಕ್ರೋಶಗೊಂಡ ಸಚಿವರು, ನಿಮಗೆ ನಿಭಾಯಿಸಲು ಸಾಧ್ಯವಾಗದಿದ್ದರೆ ನಾವು ಮಾಡುತ್ತೇವೆ, ಸುಮ್ಮನೆ ಕುಳಿತುಕೊಳ್ಳಿ ಎಂದು ಗದರಿಸಿದರು. ಇದರಿಂದ ಸಿಡಿಮಿಡಿಗೊಂಡ ಸತೀಶ್ ಸೈಲ್, ನಾನು ಅಂಗೂಟಾ ಚಾಪ್ (ಅನಕ್ಷರಸ್ಥ) ಅಲ್ಲ ಎಂದು ಅಸಮಾಧಾನ ವ್ಯಕ್ತಪಡಿಸುತ್ತಾ ಸಭೆಯಿಂದ ಹೊರನಡೆದರು. ಆರೋಗ್ಯ ಇಲಾಖೆಯ ವಿಷಯಕ್ಕೂ ಮುನ್ನ, ಸಾರಿಗೆ ಬಸ್ಗಳ ಕೊರತೆ ಮತ್ತು ಹಳೆಯ ವಿದ್ಯುತ್ ತಂತಿಗಳ ಬದಲಾವಣೆ ಕುರಿತಾದ ಚರ್ಚೆಯಲ್ಲೂ ಸಚಿವರು ಮತ್ತು ಶಾಸಕರ ನಡುವೆ ಅಭಿಪ್ರಾಯ ಭೇದಗಳು ಎದ್ದುಕಂಡಿದ್ದವು.
Uttar Pradesh | ಕುಸಿದು ಬಿದ್ದ ಶಾಲಾ ಬಸ್ ಅಡಿಭಾಗ : ಚಕ್ರಗಳಡಿ ಸಿಲುಕಿ 7 ವರ್ಷದ ಬಾಲಕಿ ಮೃತ್ಯು
ಲಕ್ನೊ: ಶಿಥಿಲಗೊಂಡ ಶಾಲಾ ಬಸ್ ನ ಅಡಿಭಾಗ ಕುಸಿದು ಬಿದ್ದು, ಎಂಟು ವರ್ಷದ ವಿದ್ಯಾರ್ಥಿನಿಯೊಬ್ಬಳು ಬಸ್ ನ ಹಿಂಬದಿಯ ಚಕ್ರಗಳಿಗೆ ಸಿಲುಕಿ ಮೃತಪಟ್ಟ ಘಟನೆ ಕಸ್ಗಂಜ್ ಜಿಲ್ಲೆಯಲ್ಲಿ ನಡೆದಿದೆ ಎಂದು ವರದಿಯಾಗಿದೆ. ಮೃತ ಬಾಲಕಿಯನ್ನು ಅನನ್ಯ ಎಂದು ಗುರುತಿಸಲಾಗಿದೆ. ಈ ಘಟನೆಯಿಂದ ಇಡೀ ಗ್ರಾಮಸ್ಥರು ಆಕ್ರೋಶಗೊಂಡಿದ್ದು, ಈ ಘಟನೆಗೆ ಶಾಲೆ ಮತ್ತು ಚಾಲಕನ ಅಜಾಗರೂಕತೆಯ ಕಾರಣ ಎಂದು ಆರೋಪಿಸಿದ್ದಾರೆ. ಅವರು ಘಟನೆಗೆ ಕಾರಣವಾದ ಬಸ್ ಅನ್ನು ಧ್ವಂಸಗೊಳಿಸಿದ್ದು, ಬಸ್ ಚಾಲಕನನ್ನು ಹಿಡಿದು ಥಳಿಸಿದ್ದಾರೆ ಹಾಗೂ ರಸ್ತೆಯನ್ನು ಬಂದ್ ಮಾಡಿ ಪ್ರತಿಭಟನೆ ನಡೆಸಿದ್ದಾರೆ. ಈ ಶಾಲಾ ಬಸ್ ಸಂಪೂರ್ಣವಾಗಿ ಶಿಥಿಲಗೊಂಡು ಯಾವುದಾದರೂ ದುರಂತಕ್ಕೆ ಕಾಯುತ್ತಿರುವಂತಿತ್ತು. ಅನನ್ಯ ಆಸೀನವಾಗಿದ್ದ ಆಸನದ ಬಳಿಯೇ ಹಿಂಬದಿ ಚಕ್ರಗಳ ಸ್ವಲ್ಪ ಮೇಲೆ ದೊಡ್ಡ ರಂಧ್ರವೊಂದು ಇತ್ತು. ಹೀಗಿದ್ದೂ, ಪ್ರತಿ ದಿನ ಸುಮಾರು 40 ಮಕ್ಕಳು ಈ ಬಸ್ ನಲ್ಲಿ ಸಂಚರಿಸುತ್ತಿದ್ದರು ಎಂದು ವರದಿಯಾಗಿದೆ. ಶನಿವಾರ ಮಧ್ಯಾಹ್ನ ಸುಮಾರು 3 ಗಂಟೆಗೆ ಅನನ್ಯ ಹಾಗೂ ಆಕೆಯ ಹಿರಿಯ ಸಹೋದರ ಯಾಜತ್ ಮನೆಗೆ ಮರಳುತ್ತಿದ್ದರು. ಬಸ್ ಬಿರ್ಹಾರ್ ಗ್ರಾಮವನ್ನು ಬಿಟ್ಟಾಗ, ಅನನ್ಯ ಕುಳಿತಿದ್ದ ಆಸನದ ಕೆಳಭಾಗ ಕುಸಿದಿದೆ. ಆಕೆ ಚಲಿಸುತ್ತಿದ್ದ ಬಸ್ ನಿಂದ ನೇರವಾಗಿ ತನ್ನೆದುರಿಗಿದ್ದ ರಂಧ್ರಂದೊಳಗೆ ಜಾರಿ ಬಿದ್ದಿದ್ದಾಳೆ. 10 ವರ್ಷದ ಬಾಲಕನಾಗಿರುವ ಆಕೆಯ ಸಹೋದರ ಈ ಘಟನೆಯನ್ನು ಕಂಡು ನೆರವಿಗಾಗಿ ಕೂಗಿಕೊಂಡಿದ್ದಾನೆ. ಆದರೆ, ಚಾಲಕನು ಬಸ್ ನಿಲ್ಲಿಸುವ ವೇಳೆಗೆ ಆತನ ಸಹೋದರಿಯ ಮೇಲೆ ಬಸ್ ನ ಹಿಂಬದಿಯ ಚಕ್ರಗಳು ಹರಿದಿವೆ ಎಂದು ವರದಿಯಾಗಿದೆ. ಘಟನೆ ಸಂಬಂಧ ಬಸ್ ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ. 7-year-old Ananya died after falling through a hole in the floor of a dilapidated school bus near Aligarh, UP and being crushed by its rear wheels. The bus reportedly had no valid fitness certificate or insurance. Driver arrested. Serious questions over school transport safety. pic.twitter.com/feePTtxn6p — The News Drill™ (@thenewsdrill) March 1, 2026
ಸರ್ಕಾರಿ ನೌಕರರು ಷೇರುಪೇಟೆ ಹೂಡಿಕೆಗೆ ಅವಕಾಶವಿದೆಯೇ? ಟ್ರೇಡಿಂಗ್ಗೆ ಕಠಿಣ ನಿಯಮಗಳು ಅನ್ವಯ! ನಿರ್ಬಂಧಗಳೇನು?
ಸರ್ಕಾರಿ ನೌಕರರು ಕೂಡ ಆನ್ಲೈನ್ ಟ್ರೇಡಿಂಗ್ ಹಾಗೂ ಸ್ಟಾಕ್ ಮಾರ್ಕೆಟ್ನಲ್ಲಿ ಹೂಡಿಕೆ ಮಾಡಲು ಹೆಚ್ಚು ಆಸಕ್ತಿ ತೋರುತ್ತಿದ್ದಾರೆ. ಆದರೆ, ಅವರಿಗೆ ಸರ್ಕಾರಿ ನಿಯಮಗಳು, ಉದ್ಯೋಗ ಕಳೆದುಕೊಳ್ಳುವ ಆತಂಕವಿದೆ. ಸದ್ಯ ಕರ್ನಾಟಕ, ಕೇಂದ್ರ ಸರ್ಕಾರದ ನಿಯಮಗಳು ಏನು? ಯಾವೆಲ್ಲಾ ಹೂಡಿಕೆ, ಟ್ರೇಡಿಂಗ್ ಮಾಡಬಹುದು ಎಂಬ ಸಂಪೂರ್ಣ ವಿವರ ಇಲ್ಲಿದೆ.
Viral Meme: ಜಗತ್ತಿನ ಕಣ್ಣು ಯುದ್ಧದತ್ತ, ಭಾರತೀಯರ ಚಿತ್ತ ಹೋಳಿಯತ್ತ
ಬೆಂಗಳೂರು: ಮಧ್ಯಪ್ರಾಚ್ಯದಲ್ಲಿ (Middle East) ಅಮೆರಿಕ, ಇಸ್ರೇಲ್ ಮತ್ತು ಇರಾನ್ ನಡುವೆ ಭೀಕರ ಸೇನಾ ಸಂಘರ್ಷ ಭುಗಿಲೆದ್ದಿದ್ದು, ಇದು ವ್ಯಾಪಕ ಪ್ರಾದೇಶಿಕ ಯುದ್ಧವಾಗಿ ಮಾರ್ಪಾಡಾಗಿದೆ. ಇರಾನ್ನ ಸೇನಾ ನೆಲೆಗಳ ಮೇಲೆ ಅಮೆರಿಕ ಮತ್ತು ಇಸ್ರೇಲ್ ನಡೆಸಿದ ಭಾರಿ ವೈಮಾನಿಕ ದಾಳಿಯಿಂದಾಗಿ, ಇರಾನ್ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಹತ್ಯೆಯಾಗಿದ್ದಾರೆ. ಇದಕ್ಕೆ ಪ್ರತಿಯಾಗಿ ಇರಾನ್ ಕೂಡ ಕ್ಷಿಪಣಿ
ದುಬೈ | ಸಂಕಷ್ಟದಲ್ಲಿರುವ ಪ್ರವಾಸಿಗರಿಗೆ ಕನ್ನಡಿಗಾಸ್ ಹೆಲ್ಪ್ ಲೈನ್ ನೆರವು: ತುರ್ತು ಸಹಕಾರಕ್ಕಾಗಿ ಸರಕಾರಕ್ಕೆ ಮನವಿ
ಖ್ಯಾತ ಅನಿವಾಸಿ ಉದ್ಯಮಿ ಡಾ.ರೊನಾಲ್ಡ್ ಕೊಲಾಸೋ ನೇತೃತ್ವದಲ್ಲಿ ಆನ್ ಲೈನ್ ಸಭೆ
ಕಲಬುರಗಿ: ಐವರು ಅಪ್ರಾಪ್ತೆಯರಿಗೆ ಕಿರುಕುಳ ಆರೋಪ: ಶಾಲಾ ಸಿಬ್ಬಂದಿ ವಿರುದ್ಧ ಪೋಕ್ಸೋ ಪ್ರಕರಣ ದಾಖಲು
ಕಲಬುರಗಿ: ಐವರು ಅಪ್ರಾಪ್ತ ಶಾಲಾ ಬಾಲಕಿಯರಿಗೆ ಅನುಚಿತವಾಗಿ ಸ್ಪರ್ಶಿಸಿರುವುದಾಗಿ ಪೋಷಕರು ನೀಡಿರುವ ದೂರನ್ನು ಆಧರಿಸಿ ಖಾಸಗಿ ಶಾಲೆಯ ಸಿಬ್ಬಂದಿ ವಿರುದ್ಧ ಪೋಕ್ಸೋ ಪ್ರಕರಣ ದಾಖಲಾಗಿರುವ ಘಟನೆ ನಡೆದಿದೆ. ನಗರದ ಖಾಸಗಿ ಶಾಲೆಯ ಸಿಬ್ಬಂದಿ ದಾವೂದ್ (60) ಎಂಬುವರ ವಿರುದ್ಧ ಪ್ರಕರಣ ದಾಖಲಾಗಿದೆ. ಶಾಲೆಯಲ್ಲಿ ಐವರು ಅಪ್ರಾಪ್ತ ಬಾಲಕಿಯರನ್ನು ಅನುಚಿತವಾಗಿ ಸ್ಪರ್ಶಿಸಿ ಕಿರುಕುಳ ನೀಡುತ್ತಿದ್ದ ಎಂದು ಆರೋಪಿಸಲಾಗಿದ್ದು, ಈ ಕಿರುಕುಳಕ್ಕೆ ಬೇಸತ್ತು ಶಾಲೆಗೆ ಹೋಗಲು ನಿರಾಕರಿಸಿದ ಹಿನ್ನೆಲೆಯಲ್ಲಿ ಕೃತ್ಯ ಬೆಳಕಿಗೆ ಬಂದಿದೆ ಎಂದು ಪೋಷಕರು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಈ ಕುರಿತು ಆರೋಪಿಯ ವಿರುದ್ಧ ವಿಶ್ವ ವಿದ್ಯಾಲಯ ಪೊಲೀಸರು ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ. ಸದ್ಯ ಆರೋಪಿಗೆ ಜಾಮೀನು ಸಿಕ್ಕಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಐವರು ಬಾಲಕಿಯರೊಂದಿಗೆ ಅನುಚಿತವಾಗಿ ಸ್ಪರ್ಶಿಸಿ ಕಿರುಕುಳ ನೀಡಿದ ಇಂತಹ ಆರೋಪಿಯ ಜಾಮೀನು ಅರ್ಜಿ ತಿರಸ್ಕರಿಸಿ ಕಠಿಣ ಶಿಕ್ಷೆಗೆ ಗುರಿಪಡಿಸಬೇಕೆಂದು ಸಮಾಜಿಕ ಕಾರ್ಯಕರ್ತೆ ಶಹೇನಾಜ್ ಅಕ್ತರ್ ಅವರ ನೇತೃತ್ವದಲ್ಲಿ ಮಹಿಳಾ ಸಂಘಟನೆಯ ಸದಸ್ಯರು ಕಲಬುರಗಿ ನಗರ ಪೊಲೀಸ್ ಆಯುಕ್ತರಿಗೆ ಮನವಿ ಸಲ್ಲಿಸಿ ಆಗ್ರಹಿಸಿದ್ದಾರೆ. ಹೆಣ್ಣು ಮಕ್ಕಳು ಶಾಲೆಯಲ್ಲಿ ಸುರಕ್ಷಿತವಾಗಿ ಇಲ್ಲ ಎಂಬುದಕ್ಕೆ ಈ ಪ್ರಕರಣ ಸಾಕ್ಷಿ, ಶಾಲಾ ಬಾಲಕಿಯರೊಂದಿಗೆ ಅನುಚಿತವಾಗಿ ಸ್ಪರ್ಶಿಸಿದ ಇಂತಹ ಆರೋಪಿಯ ವಿರುದ್ಧ ಗಂಭೀರ ಸೆಕ್ಷನ್ ಗಳು ಹಾಕಿ ಕಠಿಣ ಶಿಕ್ಷೆಗೆ ಗುರಿಪಡಿಸಬೇಕು ಎಂದು ಮಾನವ ಹಕ್ಕುಗಳ ಹೋರಾಟಗಾರರಾದ ರಿಯಾಜ್ ಖತೀಬ್ ಆಗ್ರಹಿಸಿದ್ದಾರೆ.
ಸೌದಿ ಅರೇಬಿಯ | ಡ್ರೋನ್ ದಾಳಿ ಬಳಿಕ ರಾಸ್ ತನೂರಾ ತೈಲ ಸಂಸ್ಕರಣಾಗಾರ ಸ್ಥಗಿತಗೊಳಿಸಿದ Aramco
ಮಧ್ಯಪ್ರಾಚ್ಯ ಉದ್ವಿಗ್ನತೆ ನಡುವೆ ಕಚ್ಚಾ ತೈಲ ಬೆಲೆಯಲ್ಲಿ 9.7% ಏರಿಕೆ
ನೆನಪುಗಳ ಪಟ್ಟಿಗೆ ಸೇರಿದ ಶಂಸುದ್ದೀನ್ ವೃತ್ತ
ಭಟ್ಕಳ, ಮಾ.1: ಯಾವುದೇ ಒಂದು ಊರಿಗೆ ಹೋದಾಗ ಅಲ್ಲಿನ ಒಂದು ನಿರ್ದಿಷ್ಟ ಜಾಗ ಆ ಊರಿನ ಅಸ್ಮಿತೆಯಾಗಿರುತ್ತದೆ. ಭಟ್ಕಳದ ಮಟ್ಟಿಗೆ ಅಂತಹ ಒಂದು ಭಾವನಾತ್ಮಕ ಗುರುತು ಎಂದರೆ ಅದು ‘ಶಂಸುದ್ದೀನ್ ಸರ್ಕಲ್’. ರಾಷ್ಟ್ರೀಯ ಹೆದ್ದಾರಿ 66ರ ಅಗಲೀಕರಣದ ಅಬ್ಬರಕ್ಕೆ ಸಿಲುಕಿ ಇಂದು ಈ ವೃತ್ತ ಇತಿಹಾಸದ ಪುಟ ಸೇರಿದೆ. ಆದರೆ, ಭಟ್ಕಳದ ಜನ ಮಾನಸದಲ್ಲಿ ಈ ವೃತ್ತ ಮೂಡಿಸಿರುವ ಪ್ರಭಾವ ಮಾತ್ರ ಅಳಿಸಲಾಗದಂತದ್ದು. ಸೌಹಾರ್ದ ಧ್ವನಿಸುತ್ತಿದ್ದ ಬಂಗಾರದ ಬಳೆ ಇದು ಬರೀ ಸಿಮೆಂಟ್ ಮತ್ತು ಕಬ್ಬಿಣದಿಂದ ಕೂಡಿದ ಕಟ್ಟಡವಾಗಿರಲಿಲ್ಲ. 2002ರಲ್ಲಿ ಗೋಲ್ಡನ್ ಜ್ಯುವೆಲ್ಲರ್ಸ್ ಸಂಸ್ಥೆಯ ಶಬೀಬ್ ಕೋಲಾ ಅವರ ಪರಿಕಲ್ಪನೆಯಲ್ಲಿ ಮೂಡಿಬಂದ ಈ ವೃತ್ತವು, ಭಟ್ಕಳದ ಸಮಾಜ ಸೇವಕ ಜುಕಾಕೋ ಶಂಸುದ್ದೀನ್ ಸಾಹೇಬರ ಸ್ಮರಣಾರ್ಥ ನಿರ್ಮಾಣವಾಗಿತ್ತು. ಚಿನ್ನದ ಉಂಗುರದ ಆಕರ್ಷಕ ವಿನ್ಯಾಸದ ಈ ಶಿಲ್ಪದ ನಾಲ್ಕು ದಿಕ್ಕುಗಳಲ್ಲಿ ನಾಲ್ಕು ಧರ್ಮಗಳ ಸಂಕೇತಗಳಿದ್ದವು. ಎಲ್ಲಕ್ಕಿಂತ ಹೆಚ್ಚಾಗಿ ಶಿಲ್ಪದ ಮೇಲ್ಭಾಗದಲ್ಲಿದ್ದ ಬೃಹತ್ ಗೋಳವು ‘ಮೇಲೆ ಹೋದಾಗ ನಾವೆಲ್ಲರೂ ಒಂದೇ’ ಎಂಬ ಒಗ್ಗಟ್ಟಿನ ಸಂದೇಶವನ್ನು ಸಾರುತ್ತಿತ್ತು. ಇಲ್ಲಿಗೆ ಬಂದ ಪ್ರತಿ ಯೊಬ್ಬರಿಗೂ ಈ ವೃತ್ತವು ಭಟ್ಕಳದ ಸಾಂಪ್ರ ದಾಯಿಕ ಸೌಹಾರ್ದವನ್ನು ನೆನಪಿಸುತ್ತಿತ್ತು. ಭಟ್ಕಳದಲ್ಲಿ ಯಾವುದೇ ಸಾರ್ವಜನಿಕ ಚಟುವಟಿಕೆ ನಡೆಯಬೇಕಾದರೂ ಅದು ವೃತ್ತದ ಸಾಕ್ಷಿಯಾಗಿಯೇ ನಡೆಯ ಬೇಕಿತ್ತು. ಅದು ಪ್ರತಿಭಟನೆಯ ಇರಲಿ, ಧಾರ್ಮಿಕ ಮೆರವಣಿಗೆ ಅಥವಾ ರಸ್ತೆ ತಡೆ ಇರಲಿ, ಜನರ ಧ್ವನಿ ಮೊದಲು ಮೊಳಗುತ್ತಿದದ್ದು ಇದೇ ಸರ್ಕಲ್ನಲ್ಲಿ. ರಾಜ್ಯ ಮಟ್ಟದ ಸುದ್ದಿವಾಹಿನಿಗಳಲ್ಲಿ ಭಟ್ಕಳದ ಬಗ್ಗೆ ವರದಿ ಪ್ರಸಾರವಾಗಬೇಕಾದರೆ, ಮೊದಲು ತೆರೆಯ ಮೇಲೆ ಕಾಣಿಸುತ್ತಿದ್ದುದೇ ವೃತ್ತದ ದೃಶ್ಯ. ಇದು ಕೇವಲ ಸಂಚಾರದ ಕವಲು ದಾರಿಯಾಗಿರದೆ, ಜನರ ಭಾವನೆ ಗಳು ಹೊರಹೊಮ್ಮುವ ಸಂವಾದದ ಕೇಂದ್ರ ವಾಗಿತ್ತು. ಶಂಸುದ್ದೀನ್ ವೃತ್ತವು ಭಟ್ಕಳದ ವೈವಿಧ್ಯಮಯ ಸಂಸ್ಕೃತಿಯ ಪ್ರತಿಬಿಂಬವಾಗಿತ್ತು. ಹಿಂದೂ ಹಬ್ಬಗಳ ಸಂದರ್ಭದಲ್ಲಿ ಕೇಸರಿ ಬಣ್ಣದ ಅಲಂಕಾರದಿಂದ ಕಂಗೊಳಿಸುತ್ತಿದ್ದರೆ, ಈದ್ ಅಥವಾ ಮೀಲಾದುನ್ನಬಿ ಸಂದರ್ಭದಲ್ಲಿ ಹಸಿರು ಹಸಿರಾಗಿ ಮಿನುಗುತ್ತಿತ್ತು. ಕನ್ನಡ ರಾಜ್ಯೋತ್ಸವ ಬಂತೆಂದರೆ ಹಳದಿ-ಕೆಂಪು ಬಣ್ಣದ ಧ್ವಜಗಳಿಂದ ಅಲಂಕೃತಗೊಂಡು ನಾಡಪ್ರೇಮದ ಸಂಕೇತವಾಗಿ ನಿಲ್ಲುತ್ತಿತ್ತು. ಧರ್ಮ, ಭಾಷೆ ಮತ್ತು ರಾಜಕೀಯ ಭೇದಗಳನ್ನು ಮೀರಿ ಎಲ್ಲರನ್ನೂ ತನ್ನತ್ತ ಸೆಳೆಯುವ ಶಕ್ತಿ ಈ ವೃತ್ತಕ್ಕಿತ್ತು. ಹೆದ್ದಾರಿ ವಿಸ್ತರಣೆಯಾಗಬೇಕು, ವಾಹನ ಸಂಚಾರ ಸುಗಮ ವಾಗಬೇಕು ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ ಈ ಅಭಿವೃದ್ಧಿಯ ಹಾದಿಯಲ್ಲಿ ಭಟ್ಕಳದ ಹೃದಯದಂತಿದ್ದ ವೃತ್ತ ವನ್ನು ತೆರವುಗೊಳಿಸಿರುವುದು ಸ್ಥಳೀಯರಲ್ಲಿ ಒಂದು ರೀತಿಯ ಮೌನವಾದ ನೋವನ್ನು ತಂದಿದೆ. ರಸ್ತೆಗಳು ಅಗಲವಾಗಬಹುದು, ದೊಡ್ಡ ಸೇತುವೆಗಳು ಬರಬಹುದು. ಆದರೆ ಶಮ್ಸುದ್ದೀನ್ ಸರ್ಕಲ್ ಬಳಿ ನಿಂತು ಹರಟೆ ಹೊಡೆಯುತ್ತಿದ್ದ ಗೆಳೆಯರ ಬಳಗಕ್ಕೆ, ಅಲ್ಲಿ ಘೋಷಣೆ ಕೂಗಿದ ಹೋರಾಟಗಾರರಿಗೆ ಮತ್ತು ಅಲ್ಲಿನ ಸಂಭ್ರಮ ಕಂಡ ಜನರಿಗೆ ಆ ಹಳೆಯ ನೆನಪುಗಳು ಎಂದಿಗೂ ಮಾಸದ ಹಸಿರು. ಇಂದು ಆ ದೃಶ್ಯ ವೈಭವ ಕಣ್ಣಿಗೆ ಕಾಣುತ್ತಿಲ್ಲ ನಿಜ. ಆದರೆ ಭಟ್ಕಳದ ಪ್ರತಿಯೊಬ್ಬ ನಾಗರಿಕನ ಮನಸ್ಸಿನಲ್ಲಿ ‘ಬಂಗಾರ ಬಳೆಯ ಶಿಲ್ಪ’ ಶಾಶ್ವತವಾಗಿ ಅಚ್ಚೊತ್ತಿದೆ. ಕಲ್ಲು-ಮಣ್ಣಿನ ಕಟ್ಟಡ ಕುಸಿದಿರಬಹುದು, ಆದರೆ ಅದು ಸಾರಿದ ಒಗ್ಗಟ್ಟಿನ ಮೌಲ್ಯಗಳು ಜನರ ಹೃದಯದಲ್ಲಿ ಇಂದಿಗೂ ಜೀವಂತವಾಗಿವೆ.
Iran Vs America, Israel: ಅಮೆರಿಕ, ಇಸ್ರೇಲ್ Vs ಇರಾನ್ ದೇಶಗಳ ನಡುವಿನ ಯುದ್ಧವು ತೀವ್ರ ಸ್ವರೂಪವನ್ನು ಪಡೆದುಕೊಂಡಿದೆ. ಇಷ್ಟು ವರ್ಷಗಳ ಕಾಲ ಇರಾನ್ ಹಾಗೂ ಇಸ್ರೇಲ್ನ ನಡುವೆ ನಡೆಯುತ್ತಿದ್ದ ಯುದ್ಧ - ಸಂಘರ್ಷವು ಇದೀಗ ಇರಾನ್ನ ಸರ್ವೋಚ್ಛ ನಾಯಕ ಅಯತೊಲ್ಲಾ ಖಮೇನಿ ಹತ್ಯೆಯ ನಂತರ ಇನ್ನುಳಿದ ದೇಶಗಳಿಗೂ ವ್ಯಾಪಿಸಿದೆ. ಈ ಯುದ್ಧವು ಎಷ್ಟು ತೀವ್ರ ಸ್ವರೂಪವನ್ನು
ಯುದ್ಧದ ನಡುವೆಯೂ ಸರ್ವಧರ್ಮ ಸಮನ್ವಯತೆ ಸಂದೇಶ: ನಮ್ ಭಾರತ ಅಂದ್ರೆ ಹೀಗೆ ಅಂತಾ ವಿಶ್ವಕ್ಕೆ ಸಾರಿದ ಸಂಜು ಸ್ಯಾಮ್ಸನ್
Sanju samson: ಟಿ20 ವಿಶ್ವಕಪ್ 2026 ಸೂಪರ್ 8 ಹಂತದ ನಿರ್ಣಾಯಕ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಸಂಜು ಸ್ಯಾಮ್ಸನ್ ಅಬ್ಬರದ ಬ್ಯಾಟಿಂಗ್ ಮಾಡಿ ಟೀಂ ಇಂಡಿಯಾ ಗೆಲುವಿಗೆ ಮಹತ್ವದ ಪಾತ್ರವಹಿಸಿದರು. ಅವರು ಕೇವಲ ಬ್ಯಾಟಿಂಗ್ನಿಂದ ಮಾತ್ರವಲ್ಲದೆ ತಮ್ಮ ನಡತೆಯಿಂದಲೂ ಕೋಟ್ಯಂತರ ಅಭಿಮಾನಿಗಳ ಮನ ಗೆದ್ದಿದ್ದಾರೆ. ಪಂದ್ಯ ಮುಗಿದ ಬಳಿಕ ಅವರು ತೋರಿದ ಭಕ್ತಿ ಮತ್ತು ಗೌರವದ
ಸತ್ವ ಕಳೆದುಕೊಂಡ ಕೋಲಾರದ ಮಣ್ಣು, ಆತಂಕದಲ್ಲಿ ರೈತರು
ಕೋಲಾರ, ಮಾ.1: ಜಗತ್ತಿಗೇ ಚಿನ್ನ, ತರಕಾರಿ, ಹಾಲು, ಮಾವು ಮತ್ತು ರೇಷ್ಮೆ ಕೊಟ್ಟ ಕೋಲಾರ ಜಿಲ್ಲೆಯ ರೈತರು ನೆಲದ ಮಣ್ಣು ಇಂದು ಸತ್ವ ಕಳೆದುಕೊಂಡ ಸುದ್ದಿ ಕೇಳಿ ಆತಂಕಕ್ಕೆ ಒಳಗಾಗಿದ್ದಾರೆ. ಅತಿ ಹೆಚ್ಚು ರಾಸಾಯನಿಕ ಬಳಕೆಯಿಂದ ವಿಷಕಾರಿಯಾಗಿ ಸತ್ವ ಕಳೆದುಕೊಂಡಿರುವ ಮಣ್ಣಿನಲ್ಲಿ ಬೆಳೆಗಳು ಒಣಗುತ್ತಿರುವದು, ಕೆಲವೊಮ್ಮೆ ಬೆಳೆ ಬಂದರೂ ರೋಗ ಪೀಡಿತವಾಗುತ್ತಿರುವುದು, ಗಮನಿಸಿ ಎಚ್ಚರಿಕೆ ನೀಡುತ್ತಿರುವ ಭೂಗರ್ಭ ಶಾಸ್ತ್ರ ವಿಜ್ನಾನಿಗಳ ಹೇಳಿಕೆಗಳನ್ನು ಕೇಳಿ ರೈತರು ಮುಂದೇನು ಎಂಬ ಚಿಂತೆಗೀಡಾಗಿದ್ದಾರೆ. ಕೋಲಾರ ಜಿಲ್ಲೆಯಲ್ಲಿ ಸುಮಾರು ಒಂದು ಲಕ್ಷಕ್ಕೂ ಅಧಿಕ ಪ್ರದೇಶದಲ್ಲಿ ರೈತರು ಕೃಷಿ ಮಾಡುತ್ತಾರೆ. ಅದರ ಜೊತೆಗೆ ವಿವಿಧ ತರಕಾರಿಗಳು, ಹೂವುಗಳು, ಹಣ್ಣು ಬೆಳೆಗಳನ್ನು ಬೆಳೆಯುತ್ತಾರೆ. ಇಲ್ಲಿ ಬೆಳೆಯುವ ಬೆಳೆಗಳು ದೇಶದ ವಿವಿದ ರಾಜ್ಯಗಳು ಸೇರಿದಂತೆ ವಿದೇಶಕ್ಕೂ ರಪ್ತಾಗುತ್ತದೆ. ಇಷ್ಟರ ಮಟ್ಟಿಗೆ ಹೆಸರುವಾಸಿಯಾಗಿದ್ದ ಕೋಲಾರ ಜಿಲ್ಲೆಯಲ್ಲಿ ಕಳೆದ ಕೆಲವು ವರ್ಷದಿಂದ ರೈತರು ಬೆಳೆಯುವ ಬೆಳೆಗಳು ಸರಿಯಾಗಿ ಬೆಳೆಯುತ್ತಿಲ್ಲ, ಬೆಳೆದ ಬೆಳೆಗಳೂ ಕೂಡಾ ವಿವಿಧ ರೋಗಕ್ಕೆ ತುತ್ತಾಗುತ್ತಿವೆ ಅನ್ನೋ ಕಾರಣಕ್ಕೆ ಕೋಲಾರ ಜಿಲ್ಲೆಯ ರೈತರು ಆತಂಕಗೊಂಡಿದ್ದಾರೆ. ಸದ್ಯ ಕೃಷಿ ವಿಜ್ನಾನ ಕೇಂದ್ರದ ವಿಜ್ನಾನಿಗಳು ನೀಡಿದ ಹೇಳಿಕೆ ಪ್ರಕಾರ ಕೋಲಾರ ಜಿಲ್ಲೆಯ ಮಣ್ಣು ಸಂಪೂರ್ಣವಾಗಿ ಬಲಹೀನಗೊಂಡಿದೆ. ಸದ್ಯ ಜಿಲ್ಲೆಯಲ್ಲಿ ಇದೇ ಪರಿಸ್ಥಿತಿ ಮುಂದುವರಿದರೆ ಮುಂದೊಂದು ದಿನ ಇಲ್ಲಿನ ಮಣ್ಣು ಬಂಜರುಭೂಮಿ ಆದರೂ ಆಶ್ಚರ್ಯವಿಲ್ಲ ಎಂದಿದ್ದಾರೆ ಭೂ ವಿಜ್ಞಾನಿಗಳು. ವಿಜ್ಞಾನಿಗಳ ಹೇಳಿಕೆಗೆ ಪೂರಕ ಎಂಬಂತೆ ಮೂರು ನಾಲ್ಕು ವರ್ಷಗಳಿಂದ ಕೋಲಾರ ಜಿಲ್ಲೆಯಲ್ಲಿ ಯಾವುದೇ ರೀತಿಯ ಬೆಳೆಗಳು ಬೆಳೆಯಲು ಸಾಧ್ಯವಾಗುತ್ತಿಲ್ಲ,ಅಕಸ್ಮಾತ್ ಬೆಳೆ ಬೆಳೆದರೂ ಅದು ಗುಣಮಟ್ಟದ ಬೆಳೆ ಬೆಳೆಯಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಇಡೀ ದೇಶಕ್ಕೆ ತರಕಾರಿ ಹಣ್ಣು ಹೂವು ಬೆಳೆದು ರಪ್ತು ಮಾಡುತ್ತಿದ್ದ ರೈತರು ಈಗ ತಲೆ ಮೇಲೆ ಕೈಹೊತ್ತು ಕೂರುವಂತಾಗಿದೆ. ಬಹುತೇಕ ಜಿಲ್ಲೆಯ ರೈತರು ಹಾಗೂ ಮುಖಂಡರು ಬೆಂಗಳೂರು ತ್ಯಾಜ್ಯ ನೀರನ್ನು ಸಂಸ್ಕರಿಸಿ ಕೋಲಾರ ಜಿಲ್ಲೆಯ ಕೆರೆಗಳಿಗೆ ಹರಿಸುತ್ತಿರುವ ನೀರಿನಿಂದಲೇ ಈ ಸಮಸ್ಯೆ ಎಂದು ಹೇಳಲಾಗುತ್ತಿತ್ತು. ಕೋಲಾರ ಜಿಲ್ಲೆಯಲ್ಲಿ ಮಣ್ಣು ಫಲವತ್ತತೆ ಕಳೆದುಕೊಂಡಿದೆ ಅನ್ನೋ ಆತಂಕಕಾರಿ ಅಂಶ ಹೊರಬಿದ್ದಿದ್ದು ಕೂಡಲೇ ಸರಕಾರ ಕೋಲಾರ ಜಿಲ್ಲೆಯ ರೈತರಿಗೆ ಮುನ್ನೆಚ್ಚರಿಕಾ ಕ್ರಮಗಳನ್ನು ಸೂಚಿಸಿ ಜಿಲ್ಲೆಯ ಮಣ್ಣಿನ ಫಲವತ್ತತೆ ಕಾಪಾಡುವಲ್ಲಿ ಕ್ರಮ ವಹಿಸಬೇಕಾದ ಅಗತ್ಯವಿದೆ ಎಂಬುದು ರೈತ ಮುಖಂಡರ ಮನವಿಯಾಗಿದೆ. ಕೋಲಾರ ಜಿಲ್ಲೆಯ ಮಣ್ಣು ಈ ಮಟ್ಟಿಗೆ ಹಾಳಾಗಲು ಕಾರಣ ಅತಿ ಹೆಚ್ಚು ರಾಸಾಯನಿಕ ಬಳಕೆ ಎನ್ನಲಾಗಿದ್ದು, ಜಿಲ್ಲೆಯ ರೈತರು ಕೇವಲ ಒಂದೇ ರೀತಿಯ ಬೆಳೆಗಳನ್ನು ಬೆಳೆಯುತ್ತಿರುವ ಹಿನ್ನೆಲೆಯಲ್ಲಿ ಈ ರೀತಿಯಾಗಿದ್ದು ರೈತರು ಹೆಚ್ಚು ಹೆಚ್ಚು ಸಾವಯವ ಗೊಬ್ಬರ ಬಳಕೆ ಮಾಡಬೇಕು ಜೊತೆಗೆ ಬೆಳೆ ಪರಿವರ್ತನೆ ಮಾಡಿದಾಗ ಮಾತ್ರವೇ ಜಿಲ್ಲೆಯ ಮಣ್ಣಿನ ಸತ್ವ ಕಾಪಾಡಲು ಮಣ್ಣಿನ ಆರೋಗ್ಯ ಕಾಪಾಡಲು ಸಾಧ್ಯ. -ಸುನಿಲ್ ಕುಮಾರ್, ಮಣ್ಣಿನ ವಿಜ್ಞಾನಿ, ಕೃಷಿ ವಿಜ್ಞಾನ ಕೇಂದ್ರ, ಕೋಲಾರ ವಿಜ್ಞಾನಿಗಳು ಇತ್ತೀಚೆಗೆ ನೀಡಿರುವ ಹೇಳಿಕೆ ಪ್ರಕಾರವಾಗಿ ಕೋಲಾರ ಜಿಲ್ಲೆಯಲ್ಲಿ ಅತಿಹೆಚ್ಚು ರಾಸಾಯನಿಕ ಬಳಕೆ, ಔಷದಿ ಬಳಕೆ ಜೊತೆಗೆ ಬೆಳೆ ಪರಿವರ್ತನೆ ಮಾಡದೆ ಇರುವ ಹಿನ್ನೆಲೆ ಮಣ್ಣು ಸತ್ವ ಹಾಗೂ ಫಲವತ್ತತೆ ಕಳೆದುಕೊಂಡಿದೆ ಹಾಗಾಗಿ ರೈತರು ಬೆಳೆ ಪರಿವರ್ತನೆ ಸೇರಿದಂತೆ ವಿವಿಧ ಪರಿಷ್ಕರಣಾ ಕ್ರಮ ಕೈಗೊಳ್ಳಬೇಕಿದೆ. ಇನ್ನು ಸರಕಾರವೂ ಕೂಡಾ ಕೋಲಾರ ಜಿಲ್ಲೆಯ ಮಣ್ಣು ಬಂಜರು ಭೂಮಿಯಾಗುವ ವಿಶೇಷ ಪ್ಯಾಕೇಜ್ ಅಡಿಯಲ್ಲಿ ಮಣ್ಣಿನ ಸತ್ವವನ್ನು ಬಲಗೊಳಿಸುವ ಪ್ರಯತ್ನ ಮಾಡಬೇಕಿದೆ. -ಕುಮಾರಸ್ವಾಮಿ, ಜಂಟಿ ನಿರ್ದೇಶಕರು, ತೋಟಗಾರಿಕೆ ಇಲಾಖೆ, ಕೋಲಾರ
’ರಾಯಭಾರ ಕಚೇರಿಯ ಜೊತೆ ನಿರಂತರ ಸಂಪರ್ಕ : ಕನ್ನಡಿಗರನ್ನು ತಾಯ್ನಾಡಿಗೆ ಕರೆತರಲು ಕೇಂದ್ರ ಸರ್ಕಾರ ಸನ್ನದ್ದ’
Government of India in touch with Embassy : ಮಧ್ಯಪ್ರಾಚ್ಯದಲ್ಲಿ ಯುದ್ದದ ಕಾರ್ಮೋಡದ ಹಿನ್ನಲೆಯಲ್ಲಿ ದುಬೈ, ಕತಾರ್ ಸೇರಿದಂತೆ, ಹಲವು ದೇಶಗಳ ಪ್ರಮುಖ ವಿಮಾನ ನಿಲ್ದಾಣವನ್ನು ಬಂದ್ ಮಾಡಲಾಗಿದೆ. ಸಾವಿರಾರು ಭಾರತೀಯರು, ಸ್ವದೇಶಕ್ಕೆ ಮರಳಲಾಗದೇ ಪರದಾಡುತ್ತಿದ್ದಾರೆ. ಹೊರ ದೇಶದಲ್ಲಿ ಇರುವವರನ್ನು ತಾಯ್ನಾಡಿಗೆ ಕರೆತರುವ ಕೆಲಸ, ಕೇಂದ್ರ ಸರ್ಕಾರ ಮಾಡುತ್ತಿದೆ ಎಂದು ಸಚಿವ ಪ್ರಲ್ಹಾದ ಜೋಶಿ ಹೇಳಿದ್ದಾರೆ.
ಭಾರತ-ಇಯು ಮುಕ್ತ ವ್ಯಾಪಾರ ಒಪ್ಪಂದ: ಜವಳಿ ವಲಯದ ವ್ಯಾಪಾರಕ್ಕೆ ಐತಿಹಾಸಿಕ ಮುನ್ನಡೆ
ವಿಶ್ವವು ನಿರ್ಲಕ್ಷಿಸಲು ಸಾಧ್ಯವಾಗದ ರೀತಿಯಲ್ಲಿ ಭಾರತವು ಜಾಗತಿಕ ವೇದಿಕೆಯ ಮೇಲೆ ತನ್ನ ಪ್ರಭಾವ ಬೀರಿದೆ. 16ನೇ ಭಾರತ-ಇಯು ಶೃಂಗಸಭೆಯಲ್ಲಿ, ಭಾರತ-ಐರೋಪ್ಯ ಒಕ್ಕೂಟದ ಮುಕ್ತ ವ್ಯಾಪಾರ ಒಪ್ಪಂದ (ಎಫ್ ಟಿ ಎ) ವು ಅಧಿಕೃತವಾಗಿ ಮುಕ್ತಾಯಗೊಂಡಿತು. ಇದು ದಶಕಗಳ ಪರಿಶ್ರಮ, ದೃಷ್ಟಿಕೋನ, ದೃಢಸಂಕಲ್ಪ ಮತ್ತು ಪ್ರಧಾನಮಂತ್ರಿ ನರೇಂದ್ರ ಮೋದಿಯವರ ದಿಟ್ಟ ಆರ್ಥಿಕ ನಾಯಕತ್ವದ ಫಲವಾಗಿ ಲಭಿಸಿದ ಐತಿಹಾಸಿಕ ಕ್ಷಣವಾಗಿದೆ. ವಿಶ್ವದ 4ನೇ ಮತ್ತು 2ನೇ ಅತಿದೊಡ್ಡ ಆರ್ಥಿಕತೆಗಳಾಗಿರುವ ಭಾರತ ಮತ್ತು ಐರೋಪ್ಯ ಒಕ್ಕೂಟವು ಜಾಗತಿಕ ಜಿಡಿಪಿಯ ಸುಮಾರು ಶೇ.25 ರಷ್ಟು ಪಾಲನ್ನು ಹೊಂದಿವೆ. ಈ ಎರಡು ಆರ್ಥಿಕ ದೈತ್ಯರು ಒಟ್ಟಾಗಿ ಈ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಿದಾಗ, ಅದು ಕೇವಲ ಮತ್ತೊಂದು ವ್ಯಾಪಾರ ಒಪ್ಪಂದವಾಗಿರಲಿಲ್ಲ; ಅದು ತನ್ನ ಅಗಾಧತೆ ಮತ್ತು ಕಾರ್ಯತಂತ್ರದ ಪ್ರಾಮುಖ್ಯತೆಯಿಂದಾಗಿ ‘ಎಲ್ಲಾ ವ್ಯಾಪಾರ ಒಪ್ಪಂದಗಳ ತಾಯಿ’ ಎನಿಸಿಕೊಂಡಿತು. ಭಾರತ-ಇಯು ಮುಕ್ತ ವ್ಯಾಪಾರ ಒಪ್ಪಂದದ ಪ್ರಯಾಣವು ಆಡಳಿತದ ಶೈಲಿಯಲ್ಲಿನ ಸ್ಪಷ್ಟ ವ್ಯತ್ಯಾಸವನ್ನು ಎತ್ತಿ ತೋರಿಸುತ್ತದೆ. 2014 ರ ಮೊದಲು ಕೇವಲ 19 ದೇಶಗಳಿಗೆ ವ್ಯಾಪಾರ ಪ್ರವೇಶವಿದ್ದದ್ದು ಇಂದು 56 ದೇಶಗಳಿಗೆ ವಿಸ್ತರಿಸಿದೆ. ಭಾರತ-ಇಯು ಮುಕ್ತ ವ್ಯಾಪಾರ ಒಪ್ಪಂದವೊಂದೇ 27 ಉನ್ನತ ಮೌಲ್ಯದ ಮಾರುಕಟ್ಟೆಗಳ ಬಾಗಿಲು ತೆರೆದಿರುವುದು ಸ್ಪಷ್ಟ ಹಾಗೂ ಫಲಿತಾಂಶ-ಆಧಾರಿತ ಆಡಳಿತಕ್ಕೆ ಸಾಕ್ಷಿಯಾಗಿದೆ. ಇಂದಿನ ಜಾಗತಿಕ ಜವಳಿ ಮತ್ತು ಉಡುಪು ಮಾರುಕಟ್ಟೆಯು 1.1 ಟ್ರಿಲಿಯನ್ ಅಮೆರಿಕನ್ ಡಾಲರ್ಗಿಂತಲೂ ಹೆಚ್ಚಿದ್ದು, ಇದು ವಿಶ್ವದ ಬೇಡಿಕೆಯ ಪ್ರಮಾಣ ಮತ್ತು ಚೈತನ್ಯವನ್ನು ಪ್ರತಿಬಿಂಬಿಸುತ್ತದೆ. 2001ರಲ್ಲಿ 366.8 ಬಿಲಿಯನ್ ಡಾಲರ್ ನಷ್ಟಿದ್ದ ಜಾಗತಿಕ ಆಮದುಗಳು, 2024 ರ ಹೊತ್ತಿಗೆ ಸುಮಾರು 800 ಬಿಲಿಯನ್ ಡಾಲರ್ ಗಳಿಗೆ ದ್ವಿಗುಣಗೊಂಡಿವೆ, ಇದು ಅಂತರ್ರಾಷ್ಟ್ರೀಯ ವ್ಯಾಪಾರದಲ್ಲಿನ ಸುಸ್ಥಿರ ವಿಸ್ತರಣೆಯನ್ನು ಒತ್ತಿಹೇಳುತ್ತದೆ. ಈ ಪರಿಸರದಲ್ಲಿ ಭಾರತವು ತನ್ನ ಸ್ಥಾನವನ್ನು ಸ್ಥಿರವಾಗಿ ಬಲಪಡಿಸಿಕೊಂಡಿದೆ. ಒಟ್ಟಾರೆ ಜವಳಿ ರಫ್ತು 10 ಬಿಲಿಯನ್ ಡಾಲರ್ ನಿಂದ ಸುಮಾರು 40 ಬಿಲಿಯನ್ ಡಾಲರ್ಗೆ ಏರಿಕೆಯಾಗಿದ್ದು, ಜಾಗತಿಕ ವ್ಯಾಪಾರದಲ್ಲಿ ಭಾರತದ ಉಪಸ್ಥಿತಿಯ ಗಣನೀಯ ಏರಿಕೆಯನ್ನು ಗುರುತಿಸಿದೆ. ದೇಶೀಯವಾಗಿಯೂ ಸಹ ಈ ವೇಗವು ಅಷ್ಟೇ ಪ್ರಬಲ ವಾಗಿದೆ. ಹೆಚ್ಚುತ್ತಿರುವ ಗ್ರಾಹಕರ ಬೇಡಿಕೆ ಮತ್ತು ಹೆಚ್ಚಿನ ಖರೀದಿ ಸಾಮರ್ಥ್ಯದಿಂದಾಗಿ ಭಾರತದ ಜವಳಿ ಮಾರುಕಟ್ಟೆಯು 138 ಬಿಲಿಯನ್ ಡಾಲರ್ನಿಂದ 2025 ರಲ್ಲಿ 190 ಬಿಲಿಯನ್ ಡಾಲರ್ ಗೆ ವಿಸ್ತರಿಸಿದೆ. ಈ ಬೆಳವಣಿಗೆಗೆ ಉತ್ಪಾದನೆಯನ್ನು ಆಧುನೀಕರಿಸಿದ, ಮೌಲ್ಯ ಸರಪಳಿಗಳನ್ನು ಬಲಪಡಿಸಿದ ಮತ್ತು ಜಾಗತಿಕ ಸ್ಪರ್ಧಾತ್ಮಕತೆಯನ್ನು ಸುಧಾರಿಸಿದ ರಚನಾತ್ಮಕ ಸುಧಾರಣೆಗಳು ಮತ್ತು ನೀತಿ ಉಪಕ್ರಮಗಳು ಬೆಂಬಲವಾಗಿವೆ. ಈ ಹಿನ್ನೆಲೆಯಲ್ಲಿ ಭಾರತ-ಇಯು ಮುಕ್ತ ವ್ಯಾಪಾರ ಒಪ್ಪಂದವು ಐತಿಹಾಸಿಕ ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ. ಈ ಒಪ್ಪಂದವು ಒಟ್ಟು 24 ಟ್ರಿಲಿಯನ್ ಅಮೆರಿಕನ್ ಡಾಲರ್ ಮೌಲ್ಯದ ಯುರೋಪಿಯನ್ ಒಕ್ಕೂಟದ ಮಾರುಕಟ್ಟೆಯಲ್ಲಿನ ಸುಮಾರು 200 ಕೋಟಿ ಗ್ರಾಹಕರಿಗೆ ಪ್ರವೇಶವನ್ನು ಕಲ್ಪಿಸುತ್ತದೆ. ಮೌಲ್ಯದ ಆಧಾರದ ಮೇಲೆ ಶೇಕಡಾ 99 ಕ್ಕಿಂತ ಹೆಚ್ಚು ಭಾರತೀಯ ರಫ್ತುಗಳಿಗೆ ಆದ್ಯತೆಯ ಪ್ರವೇಶವನ್ನು ನೀಡುವ ಮೂಲಕ ಮತ್ತು ಸುಮಾರು 33 ಬಿಲಿಯನ್ ಅಮೆರಿಕನ್ ಡಾಲರ್ ಮೌಲ್ಯದ ಸರಕುಗಳ ಮೇಲಿನ ಶೇ. 10-12 ರಷ್ಟು ಸುಂಕಗಳನ್ನು ರದ್ದುಗೊಳಿಸುವ ಮೂಲಕ, ಈ ಮುಕ್ತ ವ್ಯಾಪಾರ ಒಪ್ಪಂದವು ವಿಶ್ವದ ಅತ್ಯಂತ ಶ್ರೀಮಂತ ಮಾರುಕಟ್ಟೆಗಳಲ್ಲಿ ಭಾರತದ ವೆಚ್ಚದ ಸ್ಪರ್ಧಾತ್ಮಕತೆಯನ್ನು ಗಣನೀಯವಾಗಿ ಹೆಚ್ಚಿಸುತ್ತದೆ. ಕಳೆದ ಎರಡು ವರ್ಷಗಳಲ್ಲಿ, ನಾವು ಜಿಡಿಪಿ, ಬೇಡಿಕೆಯ ಪ್ರವೃತ್ತಿಗಳು, ಜನಸಂಖ್ಯೆಯ ಪ್ರಮಾಣ ಮತ್ತು ತಲಾದಾಯದ ದತ್ತಾಂಶವನ್ನು ಆಧರಿಸಿ ಹೊಸ ಮಾರುಕಟ್ಟೆ ವೈವಿಧ್ಯೀಕರಣ ಕಾರ್ಯತಂತ್ರವನ್ನು ವ್ಯವಸ್ಥಿತವಾಗಿ ರೂಪಿಸಿದ್ದೇವೆ. ಆ ಕಾರ್ಯತಂತ್ರದ ತಳಹದಿಯು ಈಗ ಸ್ಪಷ್ಟ ಫಲಿತಾಂಶಗಳನ್ನು ನೀಡುತ್ತಿದೆ. 2025ರಲ್ಲಿ, ಜಾಗತಿಕ ಸವಾಲುಗಳ ಹೊರತಾಗಿಯೂ, ಭಾರತದ ಜವಳಿ ವಲಯವು 100 ಕ್ಕೂ ಹೆಚ್ಚು ದೇಶಗಳಲ್ಲಿ ಸಕಾರಾತ್ಮಕ ರಫ್ತು ಬೆಳವಣಿಗೆಯನ್ನು ದಾಖಲಿಸಿದೆ, ಇದು ನಮ್ಮ ಜಾಗತಿಕ ಹೆಜ್ಜೆಯ ನಿರ್ಣಾಯಕ ವಿಸ್ತರಣೆಯನ್ನು ಗುರುತಿಸಿದೆ. ಈ ಯೋಜಿತ ಪ್ರಯತ್ನಗಳಿಂದಾಗಿ ಅರ್ಜೆಂಟೀನಾದಲ್ಲಿ ಶೇ.77, ಪರಾಗ್ವೆಯಲ್ಲಿ ಶೇ.45 ಮತ್ತು ಈಜಿಪ್ಟ್ ನಲ್ಲಿ ಶೇ. 30 ರಷ್ಟು ರಫ್ತು ಹೆಚ್ಚಳವಾಗಿದೆ. ಈ ಏರಿಕೆಯು ಉಡುಪು ಆಧಾರಿತವಾಗಿದ್ದು, ಒಂದು ದಶಕದ ಕಾಲ ನಡೆದ ಉತ್ಪಾದನಾ ಸಾಮರ್ಥ್ಯದ ವಿಸ್ತರಣೆಯಿಂದ ಇದಕ್ಕೆ ಬೆಂಬಲ ಸಿಕ್ಕಿದೆ. ಕಳೆದ ಹತ್ತು ವರ್ಷಗಳಲ್ಲಿ, ಭಾರತದ ಉತ್ಪಾದನಾ ಪರಿಸರ ವ್ಯವಸ್ಥೆಗೆ 2 ಕೋಟಿಗೂ ಹೆಚ್ಚು ಹೊಲಿಗೆ ಯಂತ್ರಗಳನ್ನು ಸೇರಿಸಲಾಗಿದೆ, ಇದು ಉತ್ಪಾದನೆಯನ್ನು ಗಣನೀಯವಾಗಿ ಬಲಪಡಿಸಿದೆ, ಉತ್ಪಾದಕತೆಯನ್ನು ಹೆಚ್ಚಿಸಿದೆ ಮತ್ತು ಉದ್ಯೋಗವನ್ನು ಸೃಷ್ಟಿಸಿದೆ. ಈ ವಿಸ್ತರಣೆಯು ಬಲವಾದ ನೀತಿ ಬೆಂಬಲದಿಂದ ಪುನಶ್ಚೇತನಗೊಂಡಿದೆ. ಕೇಂದ್ರ ಬಜೆಟ್ 2026-27 ಬೃಹತ್ ಜವಳಿ ಪಾರ್ಕ್ ಗಳು, ಸಮಗ್ರ ಮೌಲ್ಯ ಸರಪಳಿಗಳು, ಸುಸ್ಥಿರತೆಯ ಉಪಕ್ರಮಗಳು ಮತ್ತು ‘ಸಮರ್ಥ್ 2.0’ ಅಡಿಯಲ್ಲಿ ಕೌಶಲ್ಯ ಅಭಿವೃದ್ಧಿಯ ಮೂಲಕ ಜವಳಿ ವಲಯವನ್ನು ಭಾರತದ ಬೆಳವಣಿಗೆಯ ಕಾರ್ಯತಂತ್ರದ ಕೇಂದ್ರಭಾಗದಲ್ಲಿ ಇರಿಸಿದೆ. ಇದಕ್ಕೆ ಪೂರಕವಾಗಿ, ಪ್ರಮುಖ ಕ್ಲಸ್ಟರ್ ಗಳಲ್ಲಿನ ಜವಳಿ ರಫ್ತು ಸುಗಮಗೊಳಿಸುವ ಕೇಂದ್ರಗಳು ರಫ್ತುದಾರರಿಗೆ ಮಾರುಕಟ್ಟೆ ಮಾಹಿತಿ, ಎಫ್ ಟಿ ಎ ಮಾರ್ಗದರ್ಶನ, ನಿಯಂತ್ರಕ ಬೆಂಬಲ ಮತ್ತು ಸುಗಮ ಸೌಲಭ್ಯಗಳನ್ನು ಒಂದೇ ವೇದಿಕೆಯಲ್ಲಿ ಒದಗಿಸುತ್ತವೆ. ಭಾರತದ ಜವಳಿ ರಫ್ತು ದೃಢವಾದ ಏರಿಕೆಯ ಹಾದಿಯಲ್ಲಿದೆ; ಇದು 2019-20ರಲ್ಲಿ ರೂ. 2.5 ಲಕ್ಷ ಕೋಟಿ ಇದ್ದದ್ದು 2024-25ರ ವೇಳೆಗೆ ರೂ. 3.5 ಲಕ್ಷ ಕೋಟಿಗೇರಿದೆ, ಅಂದರೆ ಐದು ವರ್ಷಗಳಲ್ಲಿ ಶೇ. 28 ರಷ್ಟು ಗಮನಾರ್ಹ ಬೆಳವಣಿಗೆ ಕಂಡಿದೆ. ಮುಂದಿನ ಹಂತವು ಈಗ ರಫ್ತುದಾರರನ್ನೇ ಕೇಂದ್ರವಾಗಿಸಿಕೊಂಡು ಈ ವೇಗವನ್ನು ಮತ್ತಷ್ಟು ಹೆಚ್ಚಿಸುವತ್ತ ಗಮನಹರಿಸಬೇಕು. ಮೊದಲನೆಯದಾಗಿ, ರಫ್ತುದಾರರು ಅಸ್ತಿತ್ವದಲ್ಲಿರುವ ಮುಕ್ತ ವ್ಯಾಪಾರ ಒಪ್ಪಂದದ ಮಾರುಕಟ್ಟೆಗಳಲ್ಲಿ ತಮ್ಮ ಪ್ರಭಾವವನ್ನು ಇನ್ನಷ್ಟು ವಿಸ್ತರಿಸಬೇಕು. ಜವಳಿ ಕ್ಲಸ್ಟರ್ ಗಳಿಗೆ ಪೂರಕವಾದ ಯೋಜಿತ ಕಾರ್ಯತಂತ್ರವನ್ನು ಅಳವಡಿಸಿಕೊಂಡರೆ, ಈ ಮಾರುಕಟ್ಟೆಗಳಲ್ಲಿ ಹೆಚ್ಚುವರಿ ಶೇ. 20-25 ರಷ್ಟು ರಫ್ತು ಬೆಳವಣಿಗೆಯನ್ನು ಸಾಧಿಸಲು ತಕ್ಷಣದ ಅವಕಾಶಗಳಿವೆ. ಎರಡನೆಯದಾಗಿ, ಪಾಲುದಾರ ದೇಶಗಳಲ್ಲಿನ ಉತ್ಪನ್ನಗಳ ಬೇಡಿಕೆ ಮತ್ತು ಪೂರೈಕೆಯ ನಡುವಿನ ಅಂತರವನ್ನು ವ್ಯವಸ್ಥಿತವಾಗಿ ಗುರುತಿಸಬೇಕು. ಅಂದರೆ, ಆ ದೇಶಗಳು ದೊಡ್ಡ ಪ್ರಮಾಣದಲ್ಲಿ ಆಮದು ಮಾಡಿಕೊಳ್ಳುವ ಆದರೆ ಭಾರತದ ಸ್ಪರ್ಧಾತ್ಮಕತೆ ತೀರಾ ಕಡಿಮೆ ಇರುವ ಉತ್ಪನ್ನಗಳ ಮೇಲೆ ಗಮನ ಹರಿಸಬೇಕು. ಉದಾಹರಣೆಗೆ, ಬ್ರಿಟನ್ ಸಾಕ್ಸ್ ಗಳ ದೊಡ್ಡ ಆಮದುದಾರ ರಾಷ್ಟ್ರವಾಗಿದೆ, ಆದರೂ ಭಾರತೀಯ ರಫ್ತುದಾರರು ಅಲ್ಲಿನ ಪ್ರಮುಖ ಪೂರೈಕೆದಾರರ ಪಟ್ಟಿಯಲ್ಲಿಲ್ಲ. ಇಂತಹ ಕೊರತೆಗಳು ನಮಗೆ ಸ್ಪಷ್ಟವಾದ ಮತ್ತು ಕಾರ್ಯರೂಪಕ್ಕೆ ತರಬಹುದಾದ ಉತ್ತಮ ಅವಕಾಶಗಳಾಗಿವೆ. ಮೂರನೆಯದಾಗಿ, ರಫ್ತುದಾರರ ವ್ಯಾಪ್ತಿ ಅಥವಾ ಸಂಖ್ಯೆಯು ವಿಸ್ತಾರವಾಗಬೇಕು. ಈಗಾಗಲೇ ಮಾರುಕಟ್ಟೆಯಲ್ಲಿ ನೆಲೆಯೂರಿರುವ ರಫ್ತುದಾರರು, ಪ್ರತಿ ಜವಳಿ ಕ್ಲಸ್ಟರ್ ನಿಂದ ಬರುವ ಹೊಸ ರಫ್ತುದಾರರಿಗೆ ಮಾರ್ಗದರ್ಶನ ನೀಡಿ ಅವರನ್ನು ಜಾಗತಿಕ ವ್ಯಾಪಾರದೊಂದಿಗೆ ಜೋಡಿಸಬೇಕು. ವಿಶೇಷವಾಗಿ, ಇತ್ತೀಚೆಗೆ 100 ದೇಶಗಳಲ್ಲಿ ಕಂಡುಬಂದ ರಫ್ತು ಬೆಳವಣಿಗೆಗೆ ಅಂತರ್ರಾಷ್ಟ್ರೀಯ ಮಾರುಕಟ್ಟೆಗೆ ಪ್ರವೇಶಿಸಿದ ಹೊಸ ರಫ್ತುದಾರರೇ ಪ್ರಮುಖ ಕಾರಣರಾಗಿದ್ದಾರೆ. ಸರಕಾರವು ಈ ವಿಸ್ತರಣಾ ಪ್ರಕ್ರಿಯೆಗೆ ಸಕ್ರಿಯವಾಗಿ ಬೆಂಬಲ ನೀಡುತ್ತಿದೆ. 2030ರ ವೇಳೆಗೆ 100 ಬಿಲಿಯನ್ ಅಮೆರಿಕನ್ ಡಾಲರ್ ರಫ್ತು ಗುರಿಯನ್ನು ಹೊಂದಿರುವ ಭಾರತದ ಜವಳಿ ಕಾರ್ಯತಂತ್ರವು, ದೇಶದ ಅಗಾಧ ವ್ಯಾಪ್ತಿ, ವೇಗ ಮತ್ತು ಜಾಗತಿಕ ಮಹತ್ವಾಕಾಂಕ್ಷೆಯನ್ನು ಪ್ರತಿಬಿಂಬಿಸುತ್ತದೆ. ಭಾರತ-ಇಯು ಮುಕ್ತ ವ್ಯಾಪಾರ ಒಪ್ಪಂದವು ಈ ವೇಗಕ್ಕೆ ಮತ್ತಷ್ಟು ಬಲ ತುಂಬಲಿದೆ. ಇದು ಕೇವಲ ಒಂದು ವ್ಯಾಪಾರ ಒಪ್ಪಂದವಲ್ಲ; ಬದಲಿಗೆ ಇದು ಉಭಯ ಆರ್ಥಿಕತೆಗಳ ನಡುವಿನ ತೊಡಗಿಸಿಕೊಳ್ಳುವಿಕೆಯನ್ನು 179 ಬಿಲಿಯನ್ ಡಾಲರ್ ನಿಂದ2030ರ ವೇಳೆಗೆ 350 ಬಿಲಿಯನ್ ಡಾಲರ್ ಗೆ ವಿಸ್ತರಿಸುವ ಗುರಿ ಹೊಂದಿರುವ ಒಂದು ಕಾರ್ಯತಂತ್ರದ ಪಾಲುದಾರಿಕೆಯಾಗಿದೆ. ಭಾರತವು ಈಗ ಜಾಗತಿಕ ವ್ಯಾಪಾರದ ಕೇವಲ ಒಂದು ಭಾಗವಾಗಿ ಉಳಿದಿಲ್ಲ, ಬದಲಾಗಿ ಅದು ಜಾಗತಿಕ ವ್ಯಾಪಾರವನ್ನೇ ರೂಪಿಸುತ್ತಿದೆ
AI ಶೃಂಗಸಭೆಯಲ್ಲಿ ಪ್ರತಿಭಟನೆ | ಬಂಧಿತ 9 ಯುವ ಕಾಂಗ್ರೆಸ್ ಕಾರ್ಯಕರ್ತರಿಗೆ ದಿಲ್ಲಿ ನ್ಯಾಯಾಲಯ ಜಾಮೀನು
ಯುವ ಕಾಂಗ್ರೆಸ್ನ ಪ್ರತಿಭಟನೆಯು ರಾಜಕೀಯ ಭಿನ್ನಾಭಿಪ್ರಾಯದ ಅಭಿವ್ಯಕ್ತಿಯಾಗಿದೆ ಎಂದ ನ್ಯಾಯಾಲಯ
ಪ್ರಕೃತಿ ಪ್ರಿಯರ,ಚಾರಣಿಗರಿಗೆ ನೆಚ್ಚಿನ ತಾಣ ಕುಂದಾದ್ರಿ ಬೆಟ್ಟ
ಶಿವಮೊಗ್ಗ: ಜಿಲ್ಲೆಯ ತೀರ್ಥಹಳ್ಳಿಯು ಜಲಪಾತ, ಕಾಡು ಮತ್ತು ಬೆಟ್ಟಗಳನ್ನು ಒಳಗೊಂಡ ಸುಂದರವಾದ ನೈಸರ್ಗಿಕ ತಾಣ. ಇದು ಪ್ರಕೃತಿ ಪ್ರಿಯರಿಗೆ ಮತ್ತು ಚಾರಣಿಗರಿಗೆ ನೆಚ್ಚಿನ ತಾಣವಾಗಿದೆ. ಕುಂದಾದ್ರಿ ಬೆಟ್ಟವು ತೀರ್ಥಹಳ್ಳಿಯಲ್ಲಿರುವ ಜನಪ್ರಿಯ ಪ್ರವಾಸಿ ತಾಣಗಳಲ್ಲಿ ಒಂದಾಗಿದೆ.ಕುಂದಾದ್ರಿ ಬೆಟ್ಟ ಜೈನರ ಪವಿತ್ರ ಯಾತ್ರಾ ಸ್ಥಳವೂ ಆಗಿದೆ. ತೀರ್ಥಹಳ್ಳಿಯಿಂದ ಆಗುಂಬೆ ಕಡೆ ಹೋಗುವಾಗ ಗುಡ್ಡೆಕೇರಿ ಎಂಬ ಗ್ರಾಮದಿಂದ ಸುಮಾರು 9 ಕಿ.ಮೀ. ದೂರದಲ್ಲಿ ಕುಂದಾದ್ರಿ ಬೆಟ್ಟವಿದೆ. ಬೆಟ್ಟವನ್ನು ತಲುಪಲು ಡಾಂಬರು ರಸ್ತೆಯಿದೆ ಹಾಗೂ ನಡೆದು ಹೋಗಲು ಕಾಲು ದಾರಿ ಕೂಡ ಇದೆ. ಸುಮಾರು 826 ಮೀ. ನಷ್ಟು ಎತ್ತರವಿರುವ ಈ ಬೆಟ್ಟವು ಪಾರ್ಶ್ವನಾಥ ತೀರ್ಥಂಕರರಿಗೆ ಸಮರ್ಪಿತವಾದ 17ನೇ ಶತಮಾನದ ಜೈನ ದೇವಾಲಯಕ್ಕೆ ಹೆಸರುವಾಸಿಯಾಗಿದೆ ಮತ್ತು ಈ ಸ್ಥಳವು ಹಿಂದಿನ ಶತಮಾನಗಳಲ್ಲಿ ಆಚಾರ್ಯ ಕುಂದಕುಂದನಿಗೆ ಆಶ್ರಯ ನೀಡಿತ್ತು ಎಂದು ತಿಳಿದುಬಂದಿದೆ. ಈ ದೇವಾಲಯದ ಒಂದು ಬದಿಯಲ್ಲಿ ಬಂಡೆಯಿಂದ ರೂಪುಗೊಂಡ ಎರಡು ಸಣ್ಣ ಕೊಳಗಳು ಇವೆ. ಧಾರ್ಮಿಕ ಪ್ರಾಮುಖ್ಯತೆಯ ಹೊರತಾಗಿ, ಕುಂದಾದ್ರಿ ಬೆಟ್ಟವು ಟ್ರೆಕ್ಕಿಂಗ್ ಮತ್ತು ಕ್ಯಾಂಪಿಂಗ್ಗೆ ಜನಪ್ರಿಯ ತಾಣವಾಗಿದೆ. ಬೆಟ್ಟವು ಕಲ್ಲಿನ ಭೂಪ್ರದೇಶದಿಂದ ರೂಪಿಸಲ್ಪಟ್ಟಿದೆ ಮತ್ತು ಸಾಹಸ ಚಟುವಟಿಕೆ ಗಳಿಗೆ ಸಾಕಷ್ಟು ಅವಕಾಶಗಳನ್ನು ಒದಗಿಸುತ್ತದೆ. ಅನೇಕ ಚಾರಣಿಗರು ಮತ್ತು ಪ್ರಕೃತಿ ಉತ್ಸಾಹಿಗಳು ಕುಂದಾದ್ರಿ ಬೆಟ್ಟವನ್ನು ಅದರ ವೈವಿಧ್ಯಮಯ ಸಸ್ಯ ಮತ್ತು ಪ್ರಾಣಿಗಳನ್ನು ಅನ್ವೇಷಿಸಲು ಭೇಟಿ ನೀಡುತ್ತಾರೆ. ಜೊತೆಗೆ ಅದ್ಭುತವಾದ ಸೂರ್ಯೋದಯ ಮತ್ತು ಸೂರ್ಯಾಸ್ತದ ವೀಕ್ಷಣೆಗಳನ್ನು ವೀಕ್ಷಿಸುತ್ತಾರೆ. ಕುಂದಾದ್ರಿ ಬೆಟ್ಟಕ್ಕೆ ಹೋಗುವಾಗ ದಟ್ಟವಾದ ಕಾಡುಗಳು ಮತ್ತು ರಮಣೀಯ ಭೂದೃಶ್ಯ ಗಳಿಂದ ಸುತ್ತುವರಿದ ಅಂಕುಡೊಂಕಾದ ರಸ್ತೆಗಳಿವೆ. ಚಳಿಗಾಲದ ತಿಂಗಳುಗಳಲ್ಲಿ ಹವಾಮಾನವು ಆಹ್ಲಾದಕರ ಮತ್ತು ಹೊರಾಂಗಣ ಚಟುವಟಿಕೆಗಳಿಗೆ ಸೂಕ್ತವಾದಾಗ ಭೇಟಿ ನೀಡಬಹುದು. ತಲುಪುವುದು ಹೇಗೆ? ಕುಂದಾದ್ರಿಯು ಜಿಲ್ಲಾ ಕೇಂದ್ರವಾದ ಶಿವಮೊಗ್ಗದಿಂದ ಸುಮಾರು 80 ಕಿ.ಮೀ. ಮತ್ತು ತೀರ್ಥಹಳ್ಳಿ ಪಟ್ಟಣದಿಂದ ಸುಮಾರು 20 ಕಿ.ಮೀ. ದೂರದಲ್ಲಿದೆ. ಶಿವಮೊಗ್ಗದಿಂದ ತೀರ್ಥಹಳ್ಳಿಯನ್ನು ತಲುಪಲು ರಾಷ್ಟ್ರೀಯ ಹೆದ್ದಾರಿ ಎನ್ಎಚ್ -13 (ತೀರ್ಥಹಳ್ಳಿ ರಸ್ತೆ) ಮೂಲಕ ಹೋಗಬೇಕು. ನಂತರ ರಾಜ್ಯ ಹೆದ್ದಾರಿ ಎಸ್ಎಚ್-1 (ಆಗುಂಬೆ ರಸ್ತೆ) ನಲ್ಲಿ ಗುಡ್ಡೆಕೇರಿಯವರೆಗೆ ಸಾಗಿ ನಂತರ ಎಡಕ್ಕೆ ತಿರುಗಬೇಕು. ಬೆಂಗಳೂರಿನಿಂದ ತೀರ್ಥಹಳ್ಳಿಗೆ ಇರುವ ಒಟ್ಟು ದೂರವು 332 ಕಿ.ಮೀ. ಆಗಿದೆ. ಮಂಗಳೂರಿನಿಂದ ರಾಷ್ಟ್ರೀಯ ಹೆದ್ದಾರಿ 13ರ ಮೂಲಕ ತೀರ್ಥಹಳ್ಳಿಯನ್ನು ತಲುಪಬಹುದು. ಮಂಗಳೂರು ತೀರ್ಥಹಳ್ಳಿಯಿಂದ ಸುಮಾರು 146 ಕಿ.ಮೀ. ದೂರದಲ್ಲಿದೆ. ಕುಂದಾದ್ರಿ ಬೆಟ್ಟ ಚಾರಣಿಗರಿಗೆ ಬಲು ಇಷ್ಟ. ಹೀಗಾಗಿ, ಸಾಕಷ್ಟು ಸಂಖ್ಯೆಯಲ್ಲಿ ಚಾರಣ ಪ್ರಿಯರು ಕುಂದಾದ್ರಿಯತ್ತ ಬರುತ್ತಾರೆ. ಹಚ್ಚ ಹಸಿರ ಸಿರಿಯ ನಡುವೆ ಸಾಗುವ ಖುಷಿ ಇಲ್ಲಿ ಮನಸ್ಸನ್ನು ಉಲ್ಲಸಿತಗೊಳಿಸುತ್ತದೆ. ಸಮುದ್ರ ಮಟ್ಟದಿಂದ ಸುಮಾರು 3,200 ಅಡಿಗಳಷ್ಟು ಎತ್ತರದಲ್ಲಿ ಈ ಬೆಟ್ಟವಿದೆ. ಬೆಟ್ಟದ ಮೇಲಿನಿಂದ ಸೂರ್ಯೋದಯ ಮತ್ತು ಸೂರ್ಯಾಸ್ತದ ದೃಶ್ಯ ಇನ್ನಷ್ಟು ರಮಣೀಯವಾಗಿ ಕಾಣಿಸುತ್ತದೆ. ಈ ಕ್ಷಣವನ್ನು ಕಣ್ತುಂಬಿಕೊಳ್ಳುವ ಸಲುವಾಗಿಯೇ ಸಾಕಷ್ಟು ಜನರು ಇಲ್ಲಿಗೆ ಬರುತ್ತಾರೆ. ವರ್ಷ ಪೂರ್ತಿ ಇಲ್ಲಿಗೆ ಪ್ರವಾಸಿಗರು ಸಾಕಷ್ಟು ಸಂಖ್ಯೆಯಲ್ಲಿ ಬರುತ್ತಿರುತ್ತಾರೆ.
ಗರಿಷ್ಠ ಲಾಭಪಡೆಯಲು ಅಗಸೆಬೀಜಗಳನ್ನು ಸೇವಿಸುವುದು ಹೇಗೆ?
ಅಗಸೆ ಬೀಜಗಳು ಏಕೆ ಅಗತ್ಯ?
ಗಲ್ಫ್ ರಾಷ್ಟ್ರಗಳಲ್ಲಿ ಸಂಕಷ್ಟಕ್ಕೀಡಾದ ಕನ್ನಡಿಗರ ರಕ್ಷಣೆಗೆ ಏನು ಕ್ರಮ: ಸಿಎಂ ಕಚೇರಿಯಿಂದ ಅಧಿಕೃತ ಪಟ್ಟಿ ಬಿಡುಗಡೆ
ಗಲ್ಫ್ ರಾಷ್ಟ್ರಗಳಲ್ಲಿ ಸಂಕಷ್ಟಕ್ಕೀಡಾದ ಕನ್ನಡಿಗರ ರಕ್ಷಣೆಗೆ ಕ್ರಮ ಕೈಗೊಳ್ಳಲಾಗುತ್ತಿದೆ. ಈ ನಡುವೆ ಗಲ್ಫ್ ರಾಷ್ಟ್ರಗಳಲ್ಲಿ ಸಿಕ್ಕಿಹಾಕಿಕೊಂಡವರ ಕನ್ನಡಿಗರ ಮಾಹಿತಿಯನ್ನು ರಾಜ್ಯ ಸರ್ಕಾರ ಸಂಗ್ರಹಿಸಿದೆ. ಈ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ಅವರ ಕಚೇರಿಯಿಂದ ಅಧಿಕೃತ ಪಟ್ಟಿ ಬಿಡುಗಡೆ ಮಾಡಲಾಗಿದೆ. ಇನ್ನು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರು ವಿದೇಶಾಂಗ ಇಲಾಖೆಯ ಕಾರ್ಯದರ್ಶಿಗೆ ಪತ್ರವನ್ನು ಬರೆದಿದ್ದರು ಅರಬ್ ರಾಷ್ಟ್ರದಲ್ಲಿರುವ ಕನ್ನಡಿಗರ ರಕ್ಷಣೆಗೆ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ. ಮತ್ತಷ್ಟು ವಿವರ ಇಲ್ಲಿದೆ.
ಹಾಂಕಾಂಗ್ನಲ್ಲಿ ಕನ್ನಡ ಡಿಂಡಿಮ ಬಾರಿಸುತ್ತಿರುವ ‘ಕನ್ನಡ ಸಂಘ’
Vijay: ತಮಿಳುನಾಡು ವಿಧಾನಸಭೆ ಚುನಾವಣಾ ಕಣ ರಂಗೇರಿದೆ. ಈ ಬಾರಿ ತಮಿಳುನಾಡು ವಿಧಾನಸಭೆ ಚುನಾವಣಾ ಕಣದಲ್ಲಿ ಹಲವು ಹೊಸ ಪಕ್ಷಗಳು ಅದೃಷ್ಟ ಪರೀಕ್ಷೆಗೆ ಮುಂದಾಗಿವೆ. ಅದರಲ್ಲಿ ನಟ, ರಾಜಕಾರಣಿ ದಳಪತಿ ವಿಜಯ್ ಅವರ ತಮಿಳಗ ವೆಟ್ರಿ ಕಳಗಂ ಪಕ್ಷವು ಪ್ರಮುಖವಾಗಿದೆ. ಆದರೆ, ನಟ ವಿಜಯ್ ಅವರಿಗೆ ಮೇಲಿಂದ ಮೇಲೆ ಸವಾಲುಗಳು ಎದುರಾಗುತ್ತಿವೆ. ನಟಿ ತ್ರಿಷಾ ಅವರೊಂದಿಗಿನ ಸ್ನೇಹ
ಲೆಬನಾನ್ ಮೇಲೆ ಇಸ್ರೇಲ್ ದಾಳಿ: ಕನಿಷ್ಠ 31 ಮಂದಿ ಮೃತ್ಯು, 149 ಜನರಿಗೆ ಗಾಯ
ಬೈರೂತ್: ಲೆಬನಾನ್ ಮೇಲೆ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ಕನಿಷ್ಠ 31 ಜನರು ಮೃತಪಟ್ಟಿದ್ದಾರೆ ಮತ್ತು 149 ಜನರು ಗಾಯಗೊಂಡಿದ್ದಾರೆ ಎಂದು ಲೆಬನಾನ್ ಆರೋಗ್ಯ ಸಚಿವಾಲಯ ತಿಳಿಸಿರುವ ಬಗ್ಗೆ aljazeera.com ವರದಿ ಮಾಡಿದೆ. ಲೆಬನಾನ್ನ ರಾಷ್ಟ್ರೀಯ ಸುದ್ದಿ ಸಂಸ್ಥೆಯ ವರದಿಯ ಪ್ರಕಾರ, ಬೈರೂತ್ನ ದಕ್ಷಿಣ ಉಪನಗರಗಳ ಮೇಲೆ ಇಸ್ರೇಲ್ ನಡೆಸಿದ ದಾಳಿಯಲ್ಲಿ 20 ಜನರು ಮೃತಪಟ್ಟಿದ್ದು, 91 ಮಂದಿ ಗಾಯಗೊಂಡಿದ್ದಾರೆ. ಲೆಬನಾನ್ ದೇಶದ ದಕ್ಷಿಣದಲ್ಲಿ 11 ಜನರು ಮೃತಪಟ್ಟಿದ್ದಾರೆ ಮತ್ತು 58 ಜನರು ಗಾಯಗೊಂಡಿದ್ದಾರೆ. ಉತ್ತರ ಇಸ್ರೇಲ್ ಮೇಲೆ ರಾಕೆಟ್ ದಾಳಿಯ ನಂತರ ಹಿಝ್ಬುಲ್ಲಾ ಮೇಲೆ ದಾಳಿ ಮಾಡುತ್ತಿರುವುದಾಗಿ ಇಸ್ರೇಲ್ ಸೇನೆ ಹೇಳಿದೆ. ಬಿಂಟ್ ಜೆಬೈಲ್ ಪಟ್ಟಣ ಸೇರಿದಂತೆ ದಕ್ಷಿಣ ಲೆಬನಾನ್ನ 53 ಹಳ್ಳಿಗಳು ಮತ್ತು ಪಟ್ಟಣಗಳ ಜನರಿಗೆ ಬಲವಂತವಾಗಿ ಸ್ಥಳಾಂತರಗೊಳ್ಳುವಂತೆ ಇಸ್ರೇಲ್ ಮಿಲಿಟರಿ ಆದೇಶಗಳನ್ನು ಹೊರಡಿಸಿದೆ. ಇಸ್ರೇಲ್ ದಾಳಿಯ ನಂತರ ನಿವಾಸಿಗಳು ಲೆಬನಾನ್ ರಾಜಧಾನಿ ಬೈರೂತ್ ನಿಂದ ಪಲಾಯನ ಮಾಡುತ್ತಿರುವುದರಿಂದ ಭಾರೀ ಜನದಟ್ಟನೆ ಕಂಡು ಬಂದಿದೆ ಎಂದು ವರದಿಯಾಗಿದೆ.
ಮತ್ತೆ ಕುಸಿದ ಚಿನ್ನ; ಬೆಳ್ಳಿ ಬೆಲೆಯಲ್ಲಿ ಭಾರೀ ಏರಿಕೆ
ಅಮೆರಿಕ ಮತ್ತು ಇರಾನ್ ನಡುವಿನ ಯುದ್ಧದಲ್ಲಿ ತೈಲ ಬೆಲೆ ಏರಿಕೆಯಾಗುವ ಹಿನ್ನೆಲೆಯಲ್ಲಿ ಹಣದುಬ್ಬರ ಆತಂಕದಿಂದ ಹೂಡಿಕೆದಾರರು ಸುರಕ್ಷಿತ ಹೂಡಿಕೆಯತ್ತ ಗಮನಿಸುತ್ತಿರುವ ಕಾರಣ ಅಮೂಲ್ಯ ಲೋಹಗಳ ಬೆಲೆಯಲ್ಲಿ ಏರಿಕೆಯಾಗುತ್ತಿದೆ. ಫೆಬ್ರವರಿ ತಿಂಗಳ ಆರಂಭದಲ್ಲಿ ಕುಸಿತ ಕಂಡಿದ್ದ ಚಿನ್ನದ ಬೆಲೆ ಫೆಬ್ರವರಿ 23 ಸೋಮವಾರದಿಂದ ತುಸು ಏರು ಹಾದಿಯಲ್ಲಿತ್ತು. ಕಳೆದ ಸೋಮವಾರ, ಮಂಗಳವಾರ ಮತ್ತು ಬುಧವಾರ ಚಿನ್ನದಲ್ಲಿ ಅಲ್ಪ ಏರಿಕೆ ಕಂಡುಬಂದು 16 ಸಾವಿರದ ಗಡಿಯನ್ನು ದಾಟಿತ್ತು. ಗುರುವಾರ ಅಲ್ಪ ಕುಸಿತ ಕಂಡ ಬೆಲೆ ಮತ್ತೆ ಶುಕ್ರವಾರ ಅಲ್ಪ ಏರಿಕೆ ಕಂಡಿದ್ದು, ಶನಿವಾರ ಗ್ರಾಂಗೆ 300 ರೂ. ಮೀರಿ ಏರಿದ ನಂತರ ರವಿವಾರವೂ ಗ್ರಾಂಗೆ 437 ರೂ. ಏರಿಕೆಯಾಗಿ 17 ಸಾವಿರದ ಗಡಿ ದಾಟಿತ್ತು. ಇದೀಗ ಸೋಮವಾರ ದಿಢೀರ್ ಕುಸಿತ ಕಂಡ ಚಿನ್ನದ ಬೆಲೆ ಮತ್ತೆ ಗ್ರಾಂಗೆ 16,980 ರೂ.ಗೆ ಬಂದು ನಿಂತಿದೆ. ಆದರೆ ಕಳೆದ ಕೆಲವು ದಿನಗಳಿಂದ ಸ್ಥಿರವಾಗಿದ್ದ ಬೆಳ್ಳಿ ಬೆಲೆ ಸೋಮವಾರ ಶೇ 3ರಷ್ಟು ಅಂದರೆ, ಗ್ರಾಂಗೆ 35 ರೂ. ಏರಿಕೆಯಾಗಿ 3,30,000 ರೂ. ಗೆ ತಲುಪಿದೆ. ಯುದ್ಧ ಮತ್ತು ಭೌಗೋಳಿಕ-ರಾಜಕೀಯ ಉದ್ವಿಗ್ನತೆಯ ನಡುವೆ ಚಿನ್ನ ಮತ್ತು ಬೆಳ್ಳಿ ಬೆಲೆ ಏರಿಕೆಯಾಗುತ್ತಿದೆ. ಅಮೆರಿಕ ಮತ್ತು ಇರಾನ್ ನಡುವಿನ ಯುದ್ಧದಲ್ಲಿ ತೈಲ ಬೆಲೆ ಏರಿಕೆಯಾಗುವ ಹಿನ್ನೆಲೆಯಲ್ಲಿ ಹಣದುಬ್ಬರ ಆತಂಕದಿಂದ ಹೂಡಿಕೆದಾರರು ಸುರಕ್ಷಿತ ಹೂಡಿಕೆಯತ್ತ ಗಮನಿಸುತ್ತಿರುವ ಕಾರಣ ಅಮೂಲ್ಯ ಲೋಹಗಳ ಬೆಲೆಯಲ್ಲಿ ಏರಿಕೆಯಾಗುತ್ತಿದೆ. ಮಾರ್ಚ್ 2ರಂದು ಸೋಮವಾರ ಬೆಂಗಳೂರಿನ ಮಾರುಕಟ್ಟೆಗಳಲ್ಲಿ 24 ಕ್ಯಾರೆಟ್ ಶುದ್ಧ ಚಿನ್ನದ ಬೆಲೆ ರವಿವಾರದ ಬೆಲೆಗೆ ಹೋಲಿಸಿದರೆ ಗ್ರಾಂಗೆ ದಿಢೀರ್ 329 ರೂ. ಕುಸಿತ ಕಂಡು ಹತ್ತು ಗ್ರಾಂ ಬೆಲೆ 1,55,650 ರೂ.ಗೆ ಬಂದು ನಿಂತಿದೆ. ಆಭರಣ ಚಿನ್ನವಾದ 22 ಕ್ಯಾರೆಟ್ ಬೆಲೆಯು ಗ್ರಾಂಗೆ 300 ರೂ. ಇಳಿದು ಹತ್ತು ಗ್ರಾಂಗೆ 1,58,650 ರೂ.ಗೆ ತಲುಪಿದೆ. 18 ಕ್ಯಾರೆಟ್ ಚಿನ್ನವು ಪ್ರತಿ ಗ್ರಾಂಗೆ 246 ರೂ. ಏರಿಕೆಯಾಗಿ ಹತ್ತು ಗ್ರಾಂಗೆ 1,27,350 ರೂ. ಗೆ ತಲುಪಿದೆ. ಮಂಗಳೂರಿನಲ್ಲಿ ಚಿನ್ನದ ದರವೆಷ್ಟಿದೆ? ಮಾರ್ಚ್ 2ರಂದು ಸೋಮವಾರ ಬೆಳಗಿನ 11 ಗಂಟೆಯ ವಹಿವಾಟಿನಲ್ಲಿ ಮಂಗಳೂರಿನಲ್ಲಿ ಚಿನ್ನದ ಬೆಲೆ ಮತ್ತೆ ಹಠಾತ್ ಕುಸಿತ ಕಂಡಿದೆ. ಒಂದು ಗ್ರಾಂ 24 ಕ್ಯಾರೆಟ್ ಚಿನ್ನದ ದರ 16,980 (-329) ರೂ. ನಷ್ಟಿದೆ. ಒಂದು ಗ್ರಾಂ 22 ಕ್ಯಾರೆಟ್ ಚಿನ್ನದ ದರ 15,565 (-300) ರೂ. ಮತ್ತು ಒಂದು ಗ್ರಾಂ 18 ಕ್ಯಾರೆಟ್ ಚಿನ್ನದ ದರ 12,735 (-246) ರೂ. ಬೆಲೆಗೆ ತಲುಪಿದೆ. ಸ್ಥಿರವಾದ ಬೆಳ್ಳಿದರ ಫೆಬ್ರವರಿ ಆರಂಭದಿಂದಲೇ ಸತತ ಕುಸಿತ ಕಂಡಿದ್ದ ಬೆಳ್ಳಿ ಫೆಬ್ರವರಿ 19ರ ಗುರುವಾರದಿಂದ ಏರುಹಾದಿಯಲ್ಲಿತ್ತು. ಕಳೆದ ವಾರದಲ್ಲಿ ಬುಧವಾರ, ಗುರುವಾರ ಮತ್ತು ಶುಕ್ರವಾರ ಸ್ಥಿರವಾಗಿದ್ದ ಬೆಳ್ಳಿಯ ಬೆಲೆ, ಶನಿವಾರ ಗ್ರಾಂಗೆ ರೂ 10 ಏರಿಕೆಯಾಗಿ ಒಂದು ಕೆಜಿ ಬೆಳ್ಳಿ ಬೆಲೆ 2,95,000 ರೂ. ಗೆ ಬಂದು ನಿಂತಿತ್ತು. ಮಾರ್ಚ್ 1ರಂದು ಭಾನುವಾರವೂ ಇದೇ ಬೆಲೆಯಲ್ಲಿ ಸ್ಥಿರವಾಗಿ ನಿಂತಿತ್ತು. ಆದರೆ ಸೋಮವಾರ ಬರೋಬ್ಬರಿ ಗ್ರಾಂಗೆ 35 ರೂ. ಏರಿಕೆಯಾಗಿ ಒಂದು ಕೆಜಿ ಬೆಳ್ಳಿ ಬೆಲೆಯು 3,30,000 ರೂ. ಗೆ ತಲುಪಿದೆ. ವಿವಿಧ ನಗರಗಳಲ್ಲಿ 1 ಗ್ರಾಮ್ ಚಿನ್ನದ ದರ (ಬೆಳಗಿನ ವಹಿವಾಟು) ಹೇಗಿದೆ? ದಿಲ್ಲಿ: 24 ಕ್ಯಾರೆಟ್ ಚಿನ್ನದ ದರ 16,995 (-328) ರೂ., 22 ಕ್ಯಾರೆಟ್ ಚಿನ್ನದ ದರ 15,580 (-300) ರೂ. ಮುಂಬೈ: 24 ಕ್ಯಾರೆಟ್ ಚಿನ್ನದ ದರ 16,980 (-329) ರೂ., 22 ಕ್ಯಾರೆಟ್ ಚಿನ್ನದ ದರ 15,565 (-300) ರೂ. ಅಹಮದಾಬಾದ್: 24 ಕ್ಯಾರೆಟ್ ಚಿನ್ನದ ದರ 16,985 (-328) ರೂ., 22 ಕ್ಯಾರೆಟ್ ಚಿನ್ನದ ದರ 15,570 (-300) ರೂ. ಚೆನ್ನೈ: 24 ಕ್ಯಾರೆಟ್ ಚಿನ್ನದ ದರ 17,084 (-125) ರೂ., 22 ಕ್ಯಾರೆಟ್ ಚಿನ್ನದ ದರ 15,660 (-115) ರೂ. ಕೋಲ್ಕತ್ತಾ: 24 ಕ್ಯಾರೆಟ್ ಚಿನ್ನದ ದರ 16,980 (-329) ರೂ., 22 ಕ್ಯಾರೆಟ್ ಚಿನ್ನದ ದರ 15,565 (-300) ರೂ. ಹೈದರಾಬಾದ್: 24 ಕ್ಯಾರೆಟ್ ಚಿನ್ನದ ದರ 16,980 (-329) ರೂ., 22 ಕ್ಯಾರೆಟ್ ಚಿನ್ನದ ದರ 15,565 (-300) ರೂ. ಜೈಪುರ: 24 ಕ್ಯಾರೆಟ್ ಚಿನ್ನದ ದರ 16,995 (-328) ರೂ., 22 ಕ್ಯಾರೆಟ್ ಚಿನ್ನದ ದರ 15,580 (-300) ರೂ. ಚಂಡೀಗಢ: 24 ಕ್ಯಾರೆಟ್ ಚಿನ್ನದ ದರ 16,995 (-328) ರೂ., 22 ಕ್ಯಾರೆಟ್ ಚಿನ್ನದ ದರ 15,580 (-300) ರೂ. ಲಕ್ನೋ: 24 ಕ್ಯಾರೆಟ್ ಚಿನ್ನದ ದರ 16,995 (-328) ರೂ., 22 ಕ್ಯಾರೆಟ್ ಚಿನ್ನದ ದರ 15,580 (-300) ರೂ.
ಬೂಕರ್ ಬಾನು ಮುಷ್ತಾಕ್ ಬುಕ್ ಕವರ್ಸ್!
ಈ ಕಾಲದಲ್ಲಂತೂ ಪುಸ್ತಕ ಬಿಡುಗಡೆಯಾಗುವ ಮೊದಲೇ ಪುಸ್ತಕದ ಕವರುಗಳು ಡಿಜಿಟಲ್ ಮಾಧ್ಯಮದ ಮೂಲಕ ಹಲ ಬಗೆಯ ತೆರೆಗಳ ಮೇಲೆ ಮೂಡುತ್ತಿರುತ್ತವೆ. ಈ ಕಾಲ ಪುಸ್ತಕ ವಿನ್ಯಾಸಕಾರರಿಗೆ ಇನ್ನಷ್ಟು ಚಾಲೆಂಜಿಂಗ್ ಎಂಬುದನ್ನೂ ಅಹ್ಲಾವತ್ ಗಮನಿಸಿದ್ದಾರೆ: ‘ಈ ಸನ್ನಿವೇಶದಲ್ಲಿ ಜಾಣ ವಿನ್ಯಾಸಕಾರನೊಬ್ಬ ಡಿಜಿಟಲ್ ಮಾಧ್ಯಮದಲ್ಲಿ ಪರಿಣಾಮಕಾರಿಯಾಗಬಲ್ಲ ಅಕ್ಷರಗಳು, ಬಣ್ಣಗಳು, ಪ್ರತಿಮೆಗಳನ್ನು ಬಳಸುತ್ತಲೇ, ಕವರ್ ಮುದ್ರಣವಾದಾಗ ಕೂಡ ತನ್ನ ಸಮಗ್ರತೆಯನ್ನು ಕಾಪಾಡಿಕೊಳ್ಳುವ ಕಡೆ ಗಮನ ಕೊಡಬೇಕಾಗುತ್ತದೆ.’ ಪುಸ್ತಕ ಓದುವ ಎಷ್ಟು ಜನ ಪುಸ್ತಕದ ಕವರುಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಾರೋ ಗೊತ್ತಿಲ್ಲ. ಈ ಮುಖಪುಟ ಕಲಾವಿದರು ಮೂಲತಃ ಸೃಜನಶೀಲ ಲೇಖಕ, ಲೇಖಕಿಯರಷ್ಟೇ ಸೂಕ್ಷ್ಮಜೀವಿಗಳು, ಪ್ರತಿಭಾವಂತರು ಎಂಬುದನ್ನು ನಾವು ಸರಿಯಾಗಿ ಯೋಚಿಸಿರುವುದೇ ಇಲ್ಲ. ಅದೇನೇ ಇರಲಿ, ಬಾನು ಮುಷ್ತಾಕ್ ಅವರ ‘ಹಾರ್ಟ್ ಲ್ಯಾಂಪ್’ (ಅನುವಾದ: ದೀಪಾ ಭಾಸ್ತಿ) ಅನುವಾದಿತ ಕೃತಿಗೆ ಹಲ ಬಗೆಯ ರಕ್ಷಾಪುಟಗಳನ್ನು ಮಾಡಿದ ಕಲಾವಿದ ಅಹ್ಲಾವತ್ ಗುಂಜನ್ ಅವರ ಸಂದರ್ಶನ ಮುಖಪುಟ ವಿನ್ಯಾಸದ ಕಲೆ ಕುರಿತು ನನ್ನ ಕಣ್ಣನ್ನಂತೂ ತೆರೆಸಿತು. ಸಂದರ್ಶನದ ಶುರುವಿಗೇ ಅಹ್ಲಾವತ್, ‘ಪುಸ್ತಕ ವಿನ್ಯಾಸ ಒಂದು ‘ಸರ್ವಿಸ್’ ಎಂದ ತಕ್ಷಣ, ಸರ್ವಿಸ್ ಎಂಬ ಪದಕ್ಕಿರುವ ವಿಶಾಲ ಅರ್ಥಗಳು ನನ್ನನ್ನು ತಟ್ಟಿದವು. ಈ ಸರ್ವಿಸ್- ಪುಸ್ತಕಕ್ಕೆ, ಪುಸ್ತಕ ಬರೆದವರಿಗೆ, ಪುಸ್ತಕದ ಸೂಕ್ಷ್ಮ ವಿವರಗಳಿಗೆ, ವಸ್ತುವಿಗೆ, ನಿರೂಪಣೆಗೆ, ಪುಸ್ತಕ ಸಂಸ್ಕೃತಿಗೆ, ಒಟ್ಟಾರೆ ಸಂಸ್ಕೃತಿಗೆ, ಓದುಗ ಓದುಗಿಯರಿಗೆ, ಪುಸ್ತಕ ಪ್ರಕಾಶಕರಿಗೆ...ಹೀಗೆ ಅಹ್ಲಾವತ್ ಹೇಳುವ ‘ಸರ್ವಿಸ್’ ಎಂಬುದರ ಅರ್ಥಗಳು ವಿಸ್ತಾರವಾಗುತ್ತಾ ಹೋದವು. ಅಹ್ಲಾವತ್ ಪ್ರಕಾರ, ಪುಸ್ತಕ ವಿನ್ಯಾಸಕಾರನ ಈ ಸರ್ವಿಸ್ ಎಂಥದೆಂದರೆ, ‘ಅದು ಕೃತಿಗೆ, ಪಠ್ಯಕ್ಕೆ ನಿಷ್ಠೆ. ನನ್ನ ಪಾತ್ರ ಏನು ಅಂದರೆ, ಪದಗಳ ಮೂಲಸತ್ವವನ್ನು ಒಂದು ರೂಪಕ್ಕೆ, ಆಕಾರಕ್ಕೆ -ಫಾರ್ಮ್ಗೆ- ಭಟ್ಟಿ ಇಳಿಸುವುದು. ಆ ರೂಪ ನೋಡಿದ ತಕ್ಷಣ ನೋಡಿದವರಿಗೆ ಅರ್ಥ ಎಟುಕಬೇಕು, ಸಂದರ್ಭ ಕರಾರುವಾಕ್ಕಾಗಿರಬೇಕು; ಸೌಂದರ್ಯದ ದೃಷ್ಟಿಯಿಂದ ಅದು ನೋಡಲೇಬೇಕು ಎನ್ನಿಸುವಂತಿರಬೇಕು.’ ‘ಅಂದರೆ, ಬರೆಯುವವರಿಗೆ ಇಲ್ಲದ ಒತ್ತಡ, ಆಹ್ವಾನ ಪುಸ್ತಕ ಕಲಾವಿದನ ಸೃಜನಶೀಲ ನೋಟಕ್ಕೆ ಇರುತ್ತದೆ: ಈ ಕಣ್ಣು ಕೃತಿಯ ಒಳಗೆ ನೋಡಬೇಕು; ಕೃತಿಯಲ್ಲಿ ಕೇಂದ್ರ ಅರ್ಥ ಹೊಮ್ಮಿಸುವ ವಿವರಗಳನ್ನು, ಪ್ರತಿಮೆಗಳನ್ನು ಹುಡುಕಬೇಕು; ಓದುಗಿ-ಓದುಗರನ್ನೂ ಗಮನದಲ್ಲಿಟ್ಟುಕೊಳ್ಳಬೇಕು.’ ಇದು ಅಹ್ಲಾವತ್ ಗ್ರಹಿಕೆ. ‘ಹಾರ್ಟ್ ಲ್ಯಾಂಪ್’ ಕೃತಿಗೆ ಬೂಕರ್ ಅವಾರ್ಡ್ ಬಂದ ಕಾಲಕ್ಕೆ ಪುಸ್ತಕ ಹಾಗೂ ಅದರ ಅನುವಾದ ಕುರಿತು ವಿಧಾನಸೌಧದ ಬಾಂಕ್ವೆಟ್ ಹಾಲ್ನಲ್ಲಿ ನಡೆದ ಅಭಿನಂದನೆಯ ಸಂದರ್ಭದಲ್ಲಿ ಹತ್ತು ನಿಮಿಷ ಮಾತಾಡುವ ಸಂದರ್ಭ ನನಗೆ ಬಂದಿತ್ತು. ಆಗ ಈ ಪುಸ್ತಕದ ಕವರ್ ಕುರಿತು ಸರಿಯಾಗಿ ಯೋಚಿಸಿರಲೇ ಇಲ್ಲ. ಮನಸ್ಸೆಲ್ಲ ಇದ್ದದ್ದು ಒಂದೇ ದಿನದಲ್ಲಿ ಪುಸ್ತಕ ಓದಿ ಮಾತಾಡುವುದರ ಕಡೆಗೇ! ಮೊನ್ನೆ ಅಹ್ಲಾವತ್ ಈ ಕತೆಗಳನ್ನು ಓದಿದ ಕ್ರಮ ನನ್ನನ್ನು ಅಚ್ಚರಿಗೊಳಿಸಿತು. ‘ಡಿಸೈನರ್ ಒಬ್ಬ ಟ್ರಾನ್ಸ್ಲೇಟರ್’ ಎನ್ನುವ ಅಹ್ಲಾವತ್ಗೆ, ‘ಡಿಸೈನರ್ ಕೇವಲ ಅಲಂಕಾರಪಟುವಲ್ಲ’ ಎಂಬ ನಂಬಿಕೆ. ಬಾನು ಮುಷ್ತಾಕರ ಕತೆಗಳನ್ನು ಅನುವಾದಿಸಿದ ದೀಪಾ ಭಾಸ್ತಿ ಒಮ್ಮೆ ಅಹ್ಲಾವತ್ ತಲೆಯಲ್ಲಿ ಬಿತ್ತಿದ ದಾಳಿಂಬೆ ಬೀಜಗಳ ಐಡಿಯಾ ಅವರ ಕಲಾವಿದ ಪ್ರತಿಭೆಯಲ್ಲಿ ಮೊಳೆಯತೊಡಗಿತು: ‘ಹಾರ್ಟ್ ಲ್ಯಾಂಪ್’ನ ಕತೆಗಳು ನನ್ನಲ್ಲಿ ಉಳಿದವು: ಅವುಗಳ ಸದ್ದಿಲ್ಲದ ಶಕ್ತಿ, ಅವು ಸ್ತ್ರೀತನವನ್ನು ಶೋಧಿಸುವ ರೀತಿ, ಪ್ರೀತಿ, ಕಳೆದುಕೊಂಡ ಸಂಗತಿಗಳು, ಸಂಪ್ರದಾಯದ ಭಾರ... ಎಲ್ಲವೂ ನನ್ನೊಳಗೆ ಉಳಿದವು. ಪ್ರತಿದಿನ ಕಾಣುವ ಚಿತ್ರಗಳ ಬಗ್ಗೆ ಬಾನು ಮುಷ್ತಾಕ್ ಕತೆಗಳಲ್ಲಿ ಎಷ್ಟೊಂದು ಕೋಮಲತೆಯಿತ್ತು; ಅವರ ಪಾತ್ರಗಳ ಮೌನದಲ್ಲಿ ಎಷ್ಟೊಂದು ಶಕ್ತಿಯಿತ್ತು! ನನ್ನ ಮನಸ್ಸು ಮತ್ತೆ ಮತ್ತೆ ದಾಳಿಂಬೆಯ ಪ್ರತಿಮೆಗೆ ಮರಳುತ್ತಿತ್ತು. ಅವುಗಳ ದಿಟ್ಟ, ಪೂರ್ಣ ಜೀವಂತಿಕೆ, ಆದರೆ ಅದೇ ವೇಳೆಗೆ ಅವುಗಳ ತಾತ್ಕಾಲಿಕತೆ, ನಶ್ವರತೆ...’ ಅಹ್ಲಾವತ್ ನೋಟಗಳು ಲೇಖಕ-ಲೇಖಕಿ- ಕಲಾವಿದ-ಕಲಾವಿದೆ-ಪ್ರಕಾಶಕ-ಪ್ರಕಾಶಕಿ -ಓದುಗ-ಓದುಗಿ ಎಲ್ಲರನ್ನೂ ಎಜುಕೇಟ್ ಮಾಡಬಲ್ಲವು: ‘ಬುಕ್ ಕವರ್ ಬರಿ ಪ್ಯಾಕೇಜಿಂಗ್ ಅಂತ ನಾನು ತಿಳಿದಿಲ್ಲ. ಅದು ತನ್ನದೇ ಆದ ಸ್ಟ್ರಕ್ಚರ್-ಐಡೆಂಟಿಟಿ ಇರುವ ಪ್ರಕ್ರಿಯೆ. ಇವೆರಡೂ ಸೇರಿ ಕೃತಿ ಬರೆದವರ ಅರ್ಥ, ಸಂದೇಶಗಳಿಗೆ ಆಕಾರ ಕೊಟ್ಟು, ಕೃತಿಯೊಳಗಿನ ಶಬ್ದಗಳಿಗೆ ಒಂದು ಮುಖ ಕೊಡುತ್ತವೆ. ಇದು ನಾವು ಪುಸ್ತಕ ತೆರೆಯುವ ಮೊದಲೇ ಕಾಣುವ ಮುಖ. ಪುಸ್ತಕ ತೆರೆಯುವ ಆ ಗಳಿಗೆಯಲ್ಲಿ ಮುಖಪುಟಕ್ಕೆ ನಿರ್ಣಾಯಕ ಪಾತ್ರವಿದೆ. ಅದು ಪುಸ್ತಕ ಓದುವವರಲ್ಲಿ ಪ್ರತಿಧ್ವನಿ ಪಡೆಯಬೇಕು. ಆಹ್ವಾನಿಸಬೇಕು. ಪುಸ್ತಕ ಓದಲು ಒತ್ತಾಯಿಸಬೇಕು. ಎಲ್ಲವೂ ಪುನರಾವರ್ತನೆಯಾಗುವ ಈ ಕಾಲದಲ್ಲಿ ವಿನ್ಯಾಸಕಾರ ಅತ್ಯಂತ ವಿಭಿನ್ನವಾಗಿಯೇ ಯೋಚಿಸಬೇಕಾಗುತ್ತದೆ; ತನ್ನೊಳಗಿನ ಪಿಸುದನಿಯನ್ನು ಕೇಳಿಸಿಕೊಂಡು ರಿಸ್ಕ್ ತೆಗೆದುಕೊಳ್ಳಬೇಕಾಗುತ್ತದೆ. ಅಲ್ಲಿ ಓದುವವರ ನಿರೀಕ್ಷೆಗೆ ಮೀರಿದ್ದನ್ನು ಕೊಡುವುದು ಅನಿವಾರ್ಯ.’ ‘ಹಾರ್ಟ್ ಲ್ಯಾಂಪ್’ ಕೃತಿ ಮರುಮುದ್ರಣವಾದಾಗಲೆಲ್ಲ ಅಹ್ಲಾವತ್ ಮೂಲದ ದಾಳಿಂಬೆ ಪ್ರತಿಮೆಯನ್ನು ಬೇರೆ ಬೇರೆ ಥರದಲ್ಲಿ ಬಳಸಿದರು: ‘‘ಒಂದು ಪ್ರಕಾಶನ ಸಂಸ್ಥೆಯಲ್ಲಿ ಮುಖಪುಟ ವಿನ್ಯಾಸ ಎನ್ನುವುದು ಹಲವರು ಸೇರಿ ಮಾಡುವ ಕೆಲಸ. ಎಡಿಟರುಗಳು, ಮಾರಾಟ ವಿಭಾಗ, ಕೃತಿ ಬರೆದವರು ಅನುವಾದಿಸಿದವರು... ಎಲ್ಲರ ಜೊತೆಗೂ ನಾವು ಕೆಲಸ ಮಾಡಬೇಕಾಗುತ್ತದೆ. ‘ಹಾರ್ಟ್ ಲ್ಯಾಂಪ್’ ಕೃತಿಯ ವಿನ್ಯಾಸದ ಸಂದರ್ಭದಲ್ಲಿ ದೀಪಾ ಭಾಸ್ತಿ ದಾಳಿಂಬೆ ಬೀಜದ ಐಡಿಯಾ ಸೂಚಿಸಿದ ಮೇಲೆ, ಕಥಾ ಸಂಕಲನದ ಹಸ್ತಪ್ರತಿ ಓದಿದಾಗ ಈ ಸಲಹೆಯ ಅರ್ಥ ಹಾಗೂ ಸೌಂದರ್ಯ ನನ್ನೊಳಗೆ ಇಳಿಯತೊಡಗಿದವು.’’ ‘ಹಾರ್ಟ್ ಲ್ಯಾಂಪ್ ಮುಖಪುಟ ಬಾನು ಮುಷ್ತಾಕರ ಲೋಕಕ್ಕೆ ನನ್ನ ಸ್ಪಂದನ. ಈ ಕತೆಗಳಂತೆ ಈ ಮುಖಪುಟ ಕೂಡ ಓದುಗ ಓದುಗಿಯರನ್ನು ಮೆಲ್ಲಗೆ ಹಾಗೂ ಬಲವಾಗಿ ಆಹ್ವಾನಿಸುತ್ತದೆ ಎಂಬುದು ನನ್ನ ನಿರೀಕ್ಷೆ’ ಎನ್ನುವ ಆಹ್ಲಾವತ್, ನಂತರ ‘ಹಾರ್ಟ್ ಲ್ಯಾಂಪ್’ನ ಹತ್ತಾರು ಮುದ್ರಣಗಳಿಗೆ ಬಗೆಬಗೆಯ ಬಣ್ಣಗಳ ಕವರುಗಳನ್ನು ಮಾಡುತ್ತಲೇ ಇದ್ದಾರೆ. ವಿನ್ಯಾಸ ಕಲಾವಿದ ಒಳ್ಳೆಯ ರೀಡರ್ ಕೂಡ ಆಗಿದ್ದರೆ ಅದು ಇನ್ನೂ ಚಂದ: ಆಗ ಇಡೀ ಕೆಲಸ ಆಳವಾಗಿ ತೊಡಗುವ, ಒಳ್ಳೆಯ ಫಲ ಕೊಡುವ, ಆನಂದದ ಕೆಲಸವಾಗುತ್ತದೆ. ಕಲಾವಿದ ಪುಸ್ತಕ ಓದಿದ್ದರೆ, ಇಡೀ ವಿನ್ಯಾಸ ರಚನೆಯ ಪಯಣದಲ್ಲಿ ನಡೆಯುವ ಚರ್ಚೆಗಳು, ಆಲೋಚನೆಗಳು ತೀರ್ಮಾನಗಳು, ಅರ್ಥಪೂರ್ಣವಾಗುತ್ತವೆ... ಇವೆಲ್ಲದರ ಬಗ್ಗೆ ಅಹ್ಲಾವತ್ ಸ್ಪಷ್ಟವಾಗಿದ್ದರು. ಈ ಕಾಲದಲ್ಲಂತೂ ಪುಸ್ತಕ ಬಿಡುಗಡೆಯಾಗುವ ಮೊದಲೇ ಪುಸ್ತಕದ ಕವರುಗಳು ಡಿಜಿಟಲ್ ಮಾಧ್ಯಮದ ಮೂಲಕ ಹಲ ಬಗೆಯ ತೆರೆಗಳ ಮೇಲೆ ಮೂಡುತ್ತಿರುತ್ತವೆ. ಈ ಕಾಲ ಪುಸ್ತಕ ವಿನ್ಯಾಸಕಾರರಿಗೆ ಇನ್ನಷ್ಟು ಚಾಲೆಂಜಿಂಗ್ ಎಂಬುದನ್ನೂ ಅಹ್ಲಾವತ್ ಗಮನಿಸಿದ್ದಾರೆ: ‘ಈ ಸನ್ನಿವೇಶದಲ್ಲಿ ಜಾಣ ವಿನ್ಯಾಸಕಾರನೊಬ್ಬ ಡಿಜಿಟಲ್ ಮಾಧ್ಯಮದಲ್ಲಿ ಪರಿಣಾಮಕಾರಿಯಾಗಬಲ್ಲ ಅಕ್ಷರಗಳು, ಬಣ್ಣಗಳು, ಪ್ರತಿಮೆಗಳನ್ನು ಬಳಸುತ್ತಲೇ, ಕವರ್ ಮುದ್ರಣವಾದಾಗ ಕೂಡ ತನ್ನ ಸಮಗ್ರತೆಯನ್ನು ಕಾಪಾಡಿಕೊಳ್ಳುವ ಕಡೆ ಗಮನ ಕೊಡಬೇಕಾಗುತ್ತದೆ.’ ಒಬ್ಬ ಗಂಭೀರ ಹೆಣ್ಣು ಅಥವಾ ಗಂಡು ಸಂಗೀತ, ಸಾಹಿತ್ಯ, ನಟನೆ, ಚಿತ್ರಕಲೆ... ಹೀಗೆ ಯಾವುದೇ ರಂಗದಲ್ಲಿರಲಿ, ಅವರು ಮನದಾಳದಿಂದ ಪ್ರಾಮಾಣಿಕವಾಗಿ ಮಾತಾಡಿದಾಗ, ಗಂಭೀರವಾಗಿ ಸ್ಪಂದಿಸಿದಾಗ ಎಂಥ ತೂಕವಿರುತ್ತದೆ ಎಂಬುದನ್ನು ಅಹ್ಲಾವತ್ ಮಾತುಗಳು ಕೂಡ ಸೂಚಿಸುತ್ತವೆ. ಹಾಗೆಯೇ ಅವರ ಜೊತೆ ಅಷ್ಟೇ ತೂಕವಾಗಿ ಮಾತಾಡಿರುವ ಐಶ್ವರ್ಯ ಖೋಸ್ಲಾರ ಪ್ರಬುದ್ಧತೆ, ಸಿದ್ಧತೆ... ನಮ್ಮ ಕನ್ನಡ ಪತ್ರಿಕೆಗಳಲ್ಲಿ ಇಂಥದ್ದಕ್ಕೆಲ್ಲ ಜಾಗವಿರದಿದ್ದರೆ ಹೋಗಲಿ, ಅವುಗಳ ಡಿಜಿಟಲ್ ಮಾಧ್ಯಮದಲ್ಲಾದರೂ ವಿವಿಧ ಸಾಂಸ್ಕೃತಿಕ ಕ್ಷೇತ್ರಗಳ ಇಂಥ ತೂಕದ ಮಾತುಕತೆಗಳು ಬಂದರೆ ಸಂಸ್ಕೃತಿಗಳ ವಿಕಾಸಕ್ಕೆ ಘನತೆ ಬರಬಲ್ಲದು. ಅಂದ ಹಾಗೆ, ಮುಖಪುಟದ ಕೊನೇ ಗಳಿಗೆಯ ಕೆತ್ತನೆಯಲ್ಲಿ ತೊಡಗುವ ಕಲಾವಿದ-ಲೇಖಕ-ಪ್ರಕಾಶಕ ಬಳಗ; ಕಲಾವಿದರ ಸಂಭಾವನೆಯನ್ನು ಏರಿಸದೆ ಇಪ್ಪತ್ತು ವರ್ಷಗಳ ಹಿಂದಿನ ಸಂಭಾವನೆಯನ್ನೇ ಕೊಸರಾಡಿ ಕೊಡುವ ಜನ; ಅಥವಾ ಪುಸ್ತಕದ ಮೇಲೆ ಕಣ್ಣಾಡಿಸದೇ ಮುಖಪುಟ ಮಾಡುವ ಮಂದಿ, ತಮ್ಮ ಐಡಿಯಾವನ್ನೇ ವಿನ್ಯಾಸಕಾರರ ಮೇಲೆ ಹೇರುವವರು ...ಎಲ್ಲರೂ ಅಹ್ಲಾವತ್ ಅವರ ಒಳನೋಟದ ನಿವೇದನೆಗಳನ್ನು, ತನಗೆ ತಾನೇ ಆಡಿಕೊಂಡಂತಿರುವ ಪಿಸುದನಿಗಳನ್ನು ಗಮನವಿಟ್ಟು ಕೇಳಿಸಿಕೊಂಡರೆ ಒಳ್ಳೆಯದಾಗುತ್ತದೆ. ಎರಡು ವಾರಗಳ ಕೆಳಗೆ ಇಂಡಿಯನ್ ಎಕ್ಸ್ಪ್ರೆಸ್ ಡಿಜಿಟಲ್ ಆವೃತ್ತಿಯಲ್ಲಿ ಬಂದ ಈ ಸಂದರ್ಶನವನ್ನು ಬಾನು ಮುಷ್ತಾಕ್ ನೋಡಿರಲಿಕ್ಕಿಲ್ಲ ಎಂದು ಬೆಳಬೆಳಗ್ಗೆಯೇ ಫೋನ್ ಮಾಡಿ, ‘ಅಕ್ಕಾವ್ರಾ?’ ಎಂದೆ. ಅಷ್ಟೊತ್ತಿಗಾಗಲೇ ಬಾನು ಮುಷ್ತಾಕ್ ಅಹ್ಲಾವತ್ ಮಾತುಗಳನ್ನು ಓದಿದ್ದರು. ‘ಅಹ್ಲಾವತ್ ಗುಂಜನ್ ನಿಮ್ಮ ಕತೆಗಳನ್ನ ಓದಿರೋ ರೀತಿಯೇ ಬೇರೆ! ನಾನು ಮೊದಲ ಸಲ ಈ ಪುಸ್ತಕ ನೋಡಿದಾಗ ಇದ್ಯಾಕೆ ಈ ದಾಳಿಂಬೆ ಬೀಜ... ಅಂದುಕೊಂಡು ಸುಮ್ಮನಾಗಿದ್ದೆ. ಈಗ ನೋಡಿದರೆ ಈ ಕವರ್ ಪೇಜಿನ ಪ್ರತಿಮೆಗಳು ಎಷ್ಟೊಂದು ಅರ್ಥಪೂರ್ಣ ಅನ್ನಿಸುತ್ತಿವೆ!’ ಎಂದೆ. ‘ಹೂಂ’ ಎಂದ ಬಾನು ಕೂಡ ಅಹ್ಲಾವತ್ ತಮ್ಮ ಕತೆಗಳನ್ನು ಓದಿದ ರೀತಿಗೆ ವಿಸ್ಮಯಗೊಂಡಿದ್ದರು. ಒಂದು ಪ್ರತಿಭೆ ಮತ್ತೊಂದು ಪ್ರತಿಭೆಯನ್ನು ಭೇಟಿ ಮಾಡುವುದೆಂದರೆ ಇದೇ; ‘ಕವಿಗೆ ಕವಿ ಮಣಿವಂ’ ಎಂದು ನಮ್ಮ ಹಿರಿಯ ಕವಿಗಳು ಹೇಳಿದ್ದೂ ಇದೇ!
ಅಮೆರಿಕ-ಇರಾನ್ ಯುದ್ಧದ ಪರಿಣಾಮ ಷೇರುಪೇಟೆ ಕುಸಿತ, ತೈಲ ಬೆಲೆ ಏರಿಕೆ
ಸಾಂದರ್ಭಿಕ ಚಿತ್ರ | Photo Credit : freepik ಅಮೆರಿಕ ಮತ್ತು ಇರಾನ್ ನಡುವಿನ ಯುದ್ಧ, ಖಮೇನಿ ಸಾವು ಹಾಗೂ ತೈಲ ಬೆಲೆ ಏರಿಕೆಯ ಪರಿಣಾಮ ಸೋಮವಾರ (ಮಾರ್ಚ್ 02) ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ 1000ಕ್ಕೂ ಅಧಿಕ ಅಂಕಗಳ ಭಾರೀ ಕುಸಿತದೊಂದಿಗೆ ವಹಿವಾಟು ಆರಂಭಿಸಿದೆ. ಪಶ್ಚಿಮ ಏಷ್ಯಾ ಅಥವಾ ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆಗಳು, ವಿದೇಶಿ ಬಂಡವಾಳ ಹೊರಹರಿವು, ಭೌಗೋಳಿಕ ರಾಜಕೀಯ ಅನಿಶ್ಚಿತತೆಗಳು ಮತ್ತು ಹೆಚ್ಚು ಪ್ರಭಾವವಿಲ್ಲದ ಆದಾಯದ ನಡುವೆ ಈಗಾಗಲೇ ಬಹಳ ಸೂಕ್ಷ್ಮವಾಗಿದ್ದ ಭಾರತೀಯ ಷೇರುಮಾರುಕಟ್ಟೆ ಮಾರ್ಚ್ 2ರ ಸೋಮವಾರದ ಬೆಳಗಿನ ವಹಿವಾಟಿನಲ್ಲಿ ಬಲವಾದ ಮಾರಾಟಕ್ಕೆ ಸಾಕ್ಷಿಯಾಗಿದೆ. ಅಮೆರಿಕ ಮತ್ತು ಇರಾನ್ ನಡುವಿನ ಯುದ್ಧ, ಖಾಮಿನೈ ಸಾವು ಹಾಗೂ ತೈಲ ಬೆಲೆ ಏರಿಕೆಯ ಪರಿಣಾಮ ಸೋಮವಾರ (ಮಾರ್ಚ್ 02) ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ 1000ಕ್ಕೂ ಅಧಿಕ ಅಂಕಗಳ ಭಾರೀ ಕುಸಿತದೊಂದಿಗೆ ವಹಿವಾಟು ಆರಂಭಿಸಿದೆ. ಷೇರು ಸಂವೇದಿ ಸೂಚ್ಯಂಕ 2743 ಅಥವಾ ಶೇ 3.34ರಷ್ಟು ಕುಸಿತದೊಂದಿಗೆ 78,543.73 ರೊಂದಿಗೆ ಆರಂಭವಾಯಿತು. ಸೋಮವಾರದ ವಹಿವಾಟಿನ ಮೊದಲ ಕೆಲವು ನಿಮಿಷಗಳಲ್ಲಿ ಹೂಡಿಕೆದಾರರು 8 ಲಕ್ಷ ಕೋಟಿ ರೂಪಾಯಿಗಿಂತ ಹೆಚ್ಚು ಕಳೆದುಕೊಂಡರು, ಏಕೆಂದರೆ ಬಿಎಸ್ಇ-ಪಟ್ಟಿಮಾಡಿದ ಸಂಸ್ಥೆಗಳ ಒಟ್ಟಾರೆ ಮಾರುಕಟ್ಟೆ ಬಂಡವಾಳೀಕರಣವು ಹಿಂದಿನ ವಹಿವಾಟಿನಲ್ಲಿ 463.50 ಲಕ್ಷ ಕೋಟಿ ರೂಪಾಯಿಯಿಂದ 455 ಲಕ್ಷ ಕೋಟಿ ರೂಪಾಯಿಗೆ ಇಳಿದಿದೆ. ಷೇರುಪೇಟೆ ಸಂವೇದಿ ಸೂಚ್ಯಂಕ 1,047.21 ಅಂಕಗಳಷ್ಟು ಇಳಿಕೆಯೊಂದಿಗೆ 80,235.75 ಅಂಕಗಳಲ್ಲಿ ವಹಿವಾಟು ಮುಂದುವರೆದಿದೆ. ಅದೇ ರೀತಿ ಎನ್ಎಸ್ಇ ನಿಫ್ಟಿ 316 ಅಂಕಗಳಷ್ಟು ಕುಸಿತದೊಂದಿಗೆ 24,862.75 ಅಂಕಗಳಿಗೆ ಇಳಿಕೆಯಾಗಿದೆ. ಸಂವೇದಿ ಸೂಚ್ಯಂಕ ನಿಫ್ಟಿ ಕುಸಿತದಿಂದಾಗಿ ವೊಡಾಫೋನ್, ಐಡಿಯಾ ಲಿಮಿಟೆಡ್, ಯೆಸ್ ಬ್ಯಾಂಕ್, ಇಂಡಿಯನ್ ಆಯಿಲ್ ಕಾರ್ಪೋರೇಶನ್, ರೆಡಿಗ್ಟಂಟ್ ಲಿಮಿಟೆಡ್, ಬ್ಯಾಂಕ್ ಆಫ್ ಮಹಾರಾಷ್ಟ್ರ ಇಂಟರ್ ಗ್ಲೋಬ್ ಏವಿಯೇಶನ್, ಬಿರ್ಲಾ ಕಾರ್ಪೋರೇಶನ್, ರಾಜೇಶ್ ಎಕ್ಸ್ಪೋರ್ಟ್ಸ್ ಷೇರುಗಳು ನಷ್ಟ ಕಂಡಿದೆ. ಮತ್ತೊಂದೆಡೆ ಸ್ಟರ್ ಲೈಟ್ ಟೆಕ್ನಾಲಜೀಸ್ ಲಿಮಿಟೆಡ್, ಭಾರತ್ ಡೈನಾಮಿಕ್ಸ್ ಲಿಮಿಟೆಡ್, ಮಲ್ಟಿ ಕಮೊಡಿಟಿ ಎಕ್ಸ್ಚೇಂಜ್ ಆಫ್ ಇಂಡಿಯಾ, ಕೆಇಐ ಇಂಡಸ್ಟ್ರೀಸ್, ಮಿಶ್ರಾ ಧಾತು ನಿಗಮ್, ಭಾರತ್ ಎಲೆಕ್ಟ್ರಾನಿಕ್ಸ್ ಷೇರುಗಳು ಲಾಭಗಳಿಸಿವೆ. ಯುದ್ಧ ಉಲ್ಬಣಗೊಳ್ಳುವ ಆತಂಕ ಅಮೆರಿಕ ಮತ್ತು ಇರಾನ್ ನಡುವಿನ ಯುದ್ಧ ಉಲ್ಬಣಗೊಳ್ಳಬಹುದು ಮತ್ತು ಇತರ ಪ್ರದೇಶಗಳಿಗೂ ಹರಡಬಹುದು ಎನ್ನುವ ಆತಂಕ ಮಾರುಕಟ್ಟೆಯಲ್ಲಿ ಕಂಡುಬಂದಿದೆ. ಇರಾನ್ನ ಸರ್ವೋಚ್ಛ ನಾಯಕ ಆಯತುಲ್ಲಾ ಅಲಿ ಖಾಮಿನೈ ಮತ್ತು ಇತರ ಹಿರಿಯ ಅಧಿಕಾರಿಗಳು ಅಮೆರಿಕ ಮತ್ತು ಇಸ್ರೇಲ್ ನಡೆಸಿದ ದಾಳಿಯಲ್ಲಿ ಸಾವನ್ನಪ್ಪಿದ ನಂತರ ಇರಾನ್ ಈ ಪ್ರದೇಶದಾದ್ಯಂತ ಕ್ಷಿಪಣಿಗಳನ್ನು ಹಾರಿಸುವುದರ ಮೂಲಕ ಬಲವಾದ ಪ್ರತೀಕಾರ ವ್ಯಕ್ತಪಡಿಸಿದೆ. ಈ ನಡುವೆ ಇರಾನ್ನ ಕ್ಷಿಪಣಿ ದಾಳಿಯಲ್ಲಿ ಸಾವನ್ನಪ್ಪಿದ ಮೂವರು ಅಮೆರಿಕದ ಸೇವಾ ಸದಸ್ಯರ ಸಾವಿಗೆ ಅಮೆರಿಕ ಸೇಡು ತೀರಿಸಿಕೊಳ್ಳುತ್ತದೆ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಸಿದ್ದಾರೆ. ಈ ಬೆಳವಣಿಗೆಗಳು ಮಾರುಕಟ್ಟೆಯಲ್ಲಿ ಸಂವೇದನೆಗೆ ಕಾರಣವಾಗಿದೆ. ತೈಲ ಬೆಲೆಯಲ್ಲಿ ಏರಿಕೆ ಪಶ್ಚಿಮ ಏಷ್ಯಾದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆಯ ಮಧ್ಯೆ ಕಚ್ಚಾ ತೈಲ ಬೆಲೆಗಳು ಬಹು ತಿಂಗಳ ಗರಿಷ್ಠ ಮಟ್ಟಕ್ಕೆ ತೀವ್ರವಾಗಿ ಜಿಗಿದಿವೆ. ಹಾರ್ಮುಜ್ ಜಲಸಂಧಿಯ ಬಳಿ ಟ್ಯಾಂಕರ್ಗಳಿಗೆ ಹಾನಿ ಮತ್ತು ಭದ್ರತಾ ಅಪಾಯಗಳು ಉಂಟಾಗಿದ್ದು, ಸಾಗಣೆಗೆ ಅಡ್ಡಿಯಾಗಿದೆ ಎಂದು ವರದಿಗಳು ಸೂಚಿಸಿವೆ. ಹೀಗಾಗಿ ಸೋಮವಾರ ಕಚ್ಚಾ ತೈಲದ ಬೆಲೆಗಳು ಶೇ 8ಕ್ಕಿಂತ ಹೆಚ್ಚು ಏರಿಕೆಯಾಗಿವೆ. ಬ್ರೆಂಟ್ ಕಚ್ಚಾ ತೈಲ ಬೆಲೆ 82 ಡಾಲರ್ಗಿಂತ ಹೆಚ್ಚಾಗಿದ್ದು, ನಂತರ 78 ಡಾಲರ್ನ ಸಮೀಪ ಬಂದು ನಿಂತಿದೆ. ವೆಸ್ಟ್ ಟೆಕ್ಸಾಸ್ ಇಂಟರ್ಮೀಡಿಯೇಟ್ ಬ್ಯಾರೆಲ್ಗೆ 75 ಡಾಲರ್ಗೆ ಏರಿದೆ. ರವಿವಾರವೂ ಬ್ರೆಂಟ್ ಕಚ್ಚಾ ತೈಲವು ಬ್ಯಾರೆಲ್ಗೆ ಶೇ 10ರಷ್ಟು ಏರಿಕೆಯಾಗಿ ಸುಮಾರು 80 ಡಾಲರ್ಗೆ ತಲುಪಿದೆ.
ರಾಜ್ಯದಲ್ಲಿ ಬಿ.ಇಡಿ ಕೋರ್ಸ್ ಪ್ರವೇಶಾತಿಯಲ್ಲಿ ಇಳಿಕೆ
ಖಾಲಿ ಉಳಿದ 3,902 ಸರಕಾರಿ ಸೀಟ್ಗಳು
ನಾಡಿನ ಪರಮ ವೀರಶೈವ ಪೀಠದ ಮುಂದೆ ತಪ್ಪೊಪ್ಪಿಗೆ : ಲಿಂಗಾಯತ ಪ್ರತ್ಯೇಕ ಧರ್ಮ ಹೋರಾಟ - ಡಿಕೆಶಿ ಚಿಂತನ ಮಂಥನ
Separate Lingayat Religion Protest : ಬಾಳೆಹೊನ್ನೂರು ರಂಭಾಪುರಿ ಮಠದ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ಕರ್ನಾಟಕದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್, ಹಿಂದಿನ ಘಟನೆಯನ್ನು ಮೆಲುಕು ಹಾಕಿಕೊಂಡಿದ್ದಾರೆ. ರಾಜ್ಯದ ಪ್ರಮುಖ ವೀರಶೈವ ಲಿಂಗಾಯತ ಪೀಠದ ಕಾರ್ಯಕ್ರಮದಲ್ಲೇ ಈ ವಿಷಯವನ್ನು ಡಿಕೆಶಿ ಪ್ರಸ್ತಾವಿಸಿದ್ದು ಕುತೂಹಲಕ್ಕೆ ಕಾರಣವಾಗಿದೆ.
ವಿದ್ಯಾರ್ಥಿಗಳ ಮುಖದಲ್ಲಿ ನಗು ಮೂಡಿಸುತ್ತಿರುವ 'ಚನ್ನಾ ವಾಲಿ ದಾದಿ': Viral Video ನೋಡಿ ಮನಸೋತ ನೆಟ್ಟಿಗರು
ಭೋಪಾಲ್: ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿದಿನ ಸಾವಿರಾರು ವಿಡಿಯೋಗಳು ವೈರಲ್ ಆಗುತ್ತವೆ. ಆದರೆ, ಅವುಗಳಲ್ಲಿ ಕೆಲವೇ ಕೆಲವು ವಿಡಿಯೋಗಳು ಮಾತ್ರ ನಮ್ಮ ಮನಸ್ಸಿಗೆ ನಾಟುತ್ತವೆ ಮತ್ತು ನಮ್ಮ ಬಾಲ್ಯದ ಮಧುರ ನೆನಪುಗಳನ್ನು ಮರುಕಳಿಸುವಂತೆ ಮಾಡುತ್ತವೆ. ಇದೀಗ ಮಧ್ಯಪ್ರದೇಶದ ಶಾಲೆಯೊಂದರ ವಿಡಿಯೋ ಒಂದು ಇಂಟರ್ನೆಟ್ ಲೋಕದಲ್ಲಿ ಭಾರಿ ಸದ್ದು ಮಾಡುತ್ತಿದ್ದು, ವಯೋವೃದ್ಧೆಯೊಬ್ಬರ ನಿಸ್ವಾರ್ಥ ಪ್ರೀತಿ ಎಲ್ಲರ ಹೃದಯವನ್ನು ಗೆದ್ದಿದೆ. ಶಾಲೆಯ
ಮಾರ್ಚ್ 2ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ
Petrol, Diesel Price: ಪೆಟ್ರೋಲ್, ಡೀಸೆಲ್ ದರದಲ್ಲಿ ಜಾಸ್ತಿ ಅಲ್ಲದಿದ್ದರೂ, ಸ್ವಲ್ಪ ಪ್ರಮಾಣದಲ್ಲಾದರೂ, ಏರಿಳಿತ ಆಗುತ್ತಿರುತ್ತದೆ. ಹಾಗಾದರೆ, ಇಂದು (ಮಾರ್ಚ್ 2) ಬೆಂಗಳೂರು ಸೇರಿದಂತೆ ರಾಜ್ಯದ ಉಳಿದ ಜಿಲ್ಲೆಗಳಲ್ಲಿ ಲೀಟರ್ ಪೆಟ್ರೋಲ್, ಡೀಸೆಲ್ ಬೆಲೆ ಎಷ್ಟಿದೆ ಎನ್ನುವ ಅಂಕಿಅಂಶಗಳನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ. ಶಕ್ತಿಯ ಮೂಲಗಳು ಎನಿಸಿಕೊಂಡಿರುವ ಪೆಟ್ರೋಲ್ ಮತ್ತು ಡೀಸೆಲ್ ಇಂಧನ ಅತ್ಯವಶ್ಯಕವಾಗಿ ಬೇಕಾಗುವ ಸಂಪನ್ಮೂಲಗಳಾಗಿವೆ.
ಭದ್ರಾವತಿ: ಎತ್ತಿನಗಾಡಿಯಿಂದ ಬಿದ್ದು ಕೂಲಿ ಕಾರ್ಮಿಕ ಮೃತ್ಯು
ಶಿವಮೊಗ್ಗ: ಎತ್ತಿನಗಾಡಿಯಿಂದ ಬಿದ್ದು ಕೂಲಿ ಕಾರ್ಮಿಕನೋರ್ವ ಮೃತಪಟ್ಟ ಘಟನೆ ಭದ್ರಾವತಿಯಲ್ಲಿ ನಡೆದಿದೆ. ಮೃತರನ್ನು ಭದ್ರಾವತಿ ತಾಲೂಕಿನ ಶರವಣ (53) ಎಂದು ಗುರುತಿಸಲಾಗಿದೆ. ಶರವಣ ರವಿವಾರ ಬೆಳಗ್ಗೆ ಅಡಿಕೆ ಮರವನ್ನು ಕಡಿದು ತಮ್ಮ ಎತ್ತಿನಗಾಡಿಯಲ್ಲಿ ಸಾಗಿಸುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಗಾಡಿಯ ಮೇಲೆ ಕುಳಿತು ತೆರಳುತ್ತಿದ್ದ ವೇಳೆ, ಜೇಡಿಕಟ್ಟೆಯ ವಿನಾಯಕ ಇಂಡಸ್ಟ್ರೀಸ್ ಸಮೀಪ ತಲುಪುತ್ತಿದ್ದಂತೆ ಶರವಣ ಹಠಾತ್ತನೆ ಆಯತಪ್ಪಿ ಗಾಡಿಯಿಂದ ಕೆಳಕ್ಕೆ ಬಿದ್ದು ಮೃತಪಟ್ಟಿದ್ದಾರೆ. ಮೃತದೇಹವನ್ನು ಹೆಚ್ಚಿನ ತಪಾಸಣೆ ಹಾಗೂ ಮರಣೋತ್ತರ ಪರೀಕ್ಷೆಗಾಗಿ ಭದ್ರಾವತಿಯ ಸರಕಾರಿ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಲಾಗಿದೆ. ಮರಣೋತ್ತರ ಪರೀಕ್ಷೆಯ ವರದಿ ಬಂದ ನಂತರವಷ್ಟೇ ಸಾವಿಗೆ ನಿಖರ ಕಾರಣವೇನು ಎಂಬುದು ತಿಳಿದುಬರಲಿದೆ. ಈ ಸಂಬಂಧ ಭದ್ರಾವತಿ ನ್ಯೂ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
Sanju Samson: ಟಿ20 ವಿಶ್ವಕಪ್ 2026ರ ವೆಸ್ಟ್ ಇಂಡೀಸ್ ವಿರುದ್ಧದ ನಿರ್ಣಾಯಕ ಪಂದ್ಯದಲ್ಲಿ ಸಂಜು ಸ್ಯಾಮ್ಸನ್ ಅವರ ಅಬ್ಬರದ ಬ್ಯಾಟಿಂಗ್ ಪ್ರದರ್ಶನವು ಭಾರತಕ್ಕೆ ಜಯ ತಂದುಕೊಟ್ಟಿದ್ದಲ್ಲದೆ, ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್ನ ನಿರ್ಧಾರಗಳನ್ನೂ ಬದಲಿಸುವಂತೆ ಮಾಡಿದೆ. ಹಲವು ಬಾರಿ ತಂಡದಿಂದ ಹೊರಗಿಟ್ಟಿದ್ದ ಕೋಚ್ ಗಂಬೀರ್ ಅವರೇ ಅವರ ಆಟಕ್ಕೆ ಮನಸೋತು ಬಿರುದೊಂದನ್ನು ಕೊಟ್ಟಿದ್ದಾರೆ. ಭಾರತೀಯ ಕ್ರಿಕೆಟ್ ತಂಡದ ಮುಖ್ಯ
ಅಮೆರಿಕ–ಇಸ್ರೇಲ್ ದಾಳಿಗಳ ಬಳಿಕ ಮಾತುಕತೆಗೆ ಇರಾನ್ ಸ್ಪಷ್ಟ ನಿರಾಕರಣೆ
ಟೆಹ್ರಾನ್: ಎರಡು ಸುತ್ತಿನ ಅಮೆರಿಕ–ಇಸ್ರೇಲ್ ದಾಳಿಗಳ ನಂತರ ಅಮೆರಿಕದೊಂದಿಗೆ ಮಾತುಕತೆ ನಡೆಸುವ ಪ್ರಶ್ನೆಯೇ ಇಲ್ಲ ಎಂದು ಇರಾನ್ ಸ್ಪಷ್ಟಪಡಿಸಿದೆ. ಅಮೆರಿಕದ ಕೆಲವು ಮಾಧ್ಯಮ ವರದಿಗಳು ಇರಾನ್ ಮಾತುಕತೆಗೆ ಸಿದ್ಧವಿದೆ ಎಂದು ಸೂಚಿಸಿದ್ದರೂ, ಅದನ್ನು ಇರಾನ್ ಸರ್ಕಾರ ತಳ್ಳಿಹಾಕಿದೆ ಎಂದು aljazeera.com ವರದಿ ಮಾಡಿದೆ. ಇರಾನ್ನ ರಾಷ್ಟ್ರೀಯ ಭದ್ರತಾ ಮಂಡಳಿಯ ಕಾರ್ಯದರ್ಶಿ ಅಲಿ ಲಾರಿಜಾನಿ ಈ ಕುರಿತು ಪ್ರತಿಕ್ರಿಯಿಸಿ, ಇರಾನ್ ಅಮೆರಿಕದೊಂದಿಗೆ ಯಾವುದೇ ರೀತಿಯ ಮಾತುಕತೆ ನಡೆಸುವುದಿಲ್ಲ ಎಂದು ಹೇಳಿದ್ದಾರೆ. ದೇಶವು ಪ್ರಸ್ತುತ ತನ್ನನ್ನು ತಾನು ಸಮರ್ಥಿಸಿಕೊಳ್ಳುವ ಹಂತದಲ್ಲಿದೆ ಎಂದೂ ಅವರು ಸ್ಪಷ್ಟಪಡಿಸಿದ್ದಾರೆ. ಈ ಯುದ್ಧವನ್ನು ಇರಾನ್ನ ಸಶಸ್ತ್ರ ಪಡೆಗಳು ಆರಂಭಿಸಿಲ್ಲ ಎಂಬುದನ್ನೂ ಅವರು ಒತ್ತಿ ಹೇಳಿದ್ದಾರೆ. ಕಳೆದ ಕೆಲವು ದಿನಗಳಿಂದ ಇರಾನ್ ಸರ್ಕಾರ ಇದೇ ನಿಲುವು ಪ್ರತಿಧ್ವನಿಸುತ್ತಿದೆ. ರಾಷ್ಟ್ರದ ಭದ್ರತೆ ಮತ್ತು ಸ್ವಾಯತ್ತತೆಯನ್ನು ಕಾಪಾಡಿಕೊಳ್ಳುವುದೇ ಈಗಿನ ಪ್ರಮುಖ ಆದ್ಯತೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇರಾನ್ ರಾಜತಾಂತ್ರಿಕ ಮಾತುಕತೆಗಳನ್ನು ಮುಂದುವರಿಸುವುದೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ವಿದೇಶಾಂಗ ಸಚಿವಾಲಯದ ವಕ್ತಾರರು, ದೇಶವು ಈಗಾಗಲೇ ಎರಡು ಬಾರಿ ರಾಜತಾಂತ್ರಿಕ ಪ್ರಯತ್ನಗಳನ್ನು ಕೈಗೊಂಡಿದೆ ಎಂದು ತಿಳಿಸಿದ್ದಾರೆ. 2025ರಲ್ಲಿ ಯುಎಸ್–ಇಸ್ರೇಲಿ ದಾಳಿಯಿಂದ ಮಾತುಕತೆಗಳಿಗೆ ಹಿನ್ನಡೆಯಾಯಿತು ಎಂದು ಅವರು ಹೇಳಿದ್ದಾರೆ. ಇತ್ತೀಚೆಗೆ ಅಮೆರಿಕ ಮತ್ತು ಅಂತರರಾಷ್ಟ್ರೀಯ ಅಣುಶಕ್ತಿ ಸಂಸ್ಥೆ (IAEA) ಜೊತೆ ಎರಡು ಹೊಸ ಸುತ್ತಿನ ಮಾತುಕತೆಗಳನ್ನು ನಿರೀಕ್ಷಿಸಲಾಗಿತ್ತು. ಆದರೆ ಅದೇ ವೇಳೆಯಲ್ಲಿ ಮತ್ತೆ ದಾಳಿಗಳು ನಡೆದಿವೆ ಎಂದು ವಕ್ತಾರರು ತಿಳಿಸಿದ್ದಾರೆ. ಈ ಹಿನ್ನಲೆಯಲ್ಲಿ, ಪ್ರಸ್ತುತ ಬಿಕ್ಕಟ್ಟಿಗೆ ರಾಜತಾಂತ್ರಿಕ ಪರಿಹಾರ ಸಿಗುವ ಸಾಧ್ಯತೆ ಬಗ್ಗೆ ಇನ್ನೂ ಸ್ಪಷ್ಟತೆ ಇಲ್ಲ.
ಇರಾನ್ನಿಂದ ಕ್ಷಿಪಣಿ, ಡ್ರೋನ್ ದಾಳಿ ನಿರಂತರ: ಕೊಲ್ಲಿ ರಾಷ್ಟ್ರಗಳಲ್ಲಿ ಆತಂಕದಲ್ಲಿ ಕನ್ನಡಿಗರು, ಹೇಗಿದೆ ಸ್ಥಿತಿ ಗತಿ?
ಇರಾನ್ ಮತ್ತು ಅಮೆರಿಕಾ ಯುದ್ಧದ ಹಿನ್ನೆಲೆಯಲ್ಲಿ ಅರಬ್ ರಾಷ್ಟ್ರಗಳಲ್ಲಿರುವ ಅಮೆರಿಕಾದ ಸೇನಾ ನೆಲೆಗಳ ಮೇಲೆ ಇರಾನ್ ದಾಳಿ ನಡೆಸುತ್ತಿದೆ. ಇದರಿಂದ ದುಬೈ, ಬಹರೈನ್, ಸೌದಿ ಅರೆಬಿಯಾದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಡ್ರೋನ್, ಮಿಸೈಲ್ ದಾಳಿಗಳ ಶಬ್ಧ ಆತಂಕಕ್ಕೆ ಎಡೆಮಾಡಿಕೊಟ್ಟಿದೆ. ಅರಬ್ ರಾಷ್ಟ್ರಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕನ್ನಡಿಗರು ಇದ್ದಾರೆ. ಅವರ ಕುಟುಂಬಸ್ಥರು ಆತಂಕಕ್ಕೆ ಒಳಗಾಗಿದ್ದಾರೆ. ದಾಳಿಯ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಇನ್ನು ಎಷ್ಟು ದಿನಗಳ ಕಾಲ ಇಂತಹ ಪ್ರಕ್ಷುಬ್ಧ ವಾತಾವರಣ ಮುಂದುವರಿಯಲಿದೆ? ಎಂಬುವುದು ಪ್ರಶ್ನಾರ್ಹವಾಗಿದೆ.
ಖಮೇನಿ ಹತ್ಯೆ ಖಂಡಿಸಿ ಜಮ್ಮು- ಕಾಶ್ಮೀರದಲ್ಲಿ ಪ್ರತಿಭಟನೆ: ಜನರ ಸಂಚಾರದ ಮೇಲೆ ತೀವ್ರ ನಿರ್ಬಂಧ
ಇಸ್ರೇಲ್-ಅಮೆರಿಕ ಜಂಟಿ ವಾಯುದಾಳಿಯಲ್ಲಿಇರಾನ್ನ ಸರ್ವೋಚ್ಚ ನಾಯಕ ಅಯಾತೊಲ್ಲಾಅಲಿ ಖಮೇನಿ ಹತನಾಗಿದ್ದಾನೆ. ಇರಾನ್ ಸರಕಾರ ಅಧಿಕೃತವಾಗಿ ಈ ವಿಷಯ ಪ್ರಕಟಿಸಿದ್ದು, ದೇಶಾದ್ಯಂತ 40 ದಿನಗಳ ಶೋಕಾಚರಣೆ ಘೋಷಿಸಲಾಗಿದೆ. ಖಮೇನಿ ಜತೆ ಇಸ್ರೆಲ್ನ ಇಬ್ಬರು ಸೇನಾ ಮುಖ್ಯಸ್ಥರು, ರಕ್ಷಣ ಸಚಿವ ಸಹ ಹತರಾಗಿದ್ದಾರೆ. ಖಮೇನಿ ಹತ್ಯೆ ಖಂಡಿಸಿ ಜಮ್ಮು ಮತ್ತು ಕಾಶ್ಮೀರ ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ ಪ್ರತಿಭಟನೆಗಳೂ ನಡೆದಿವೆ.
ದಿಲ್ಲಿಯ ಒಂದು ಕುಟುಂಬಕ್ಕಾಗಿ ಪುದುಚೇರಿಯನ್ನು ಕಾಂಗ್ರೆಸ್ ಎಟಿಎಂ ಮಾಡಿಕೊಂಡಿದೆ: ಪ್ರಧಾನಿ ಮೋದಿ
ಪುದುಚೇರಿ: ಕಾಂಗ್ರೆಸ್ ವಿರುದ್ಧ ತೀಕ್ಷ್ಣ ವಾಗ್ದಾಳಿ ನಡೆಸಿದ ಪ್ರಧಾನಿ ನರೇಂದ್ರ ಮೋದಿ, ಪುದುಚೇರಿಯಲ್ಲಿ ರಾಜಕೀಯ ಅಸ್ಥಿರತೆ, ಭ್ರಷ್ಟಾಚಾರ ಮನೆಮಾಡಿದ್ದು, ಈ ಕೇಂದ್ರಾಡಳಿತ ಪ್ರದೇಶ ದಿಲ್ಲಿಯ ಒಂದು ಕುಟುಂಬದ ಪಾಲಿಗೆ ಎಟಿಎಂ ಆಗಿ ಬದಲಾಗಿದೆ ಎಂದು ಗಂಭೀರ ಆರೋಪ ಮಾಡಿದರು. ರವಿವಾರ ಪುದುಚೇರಿಯಲ್ಲಿ ಹೊಸ ಯೋಜನೆಗಳ ಉದ್ಘಾಟನೆ ಹಾಗೂ ನೂತನ ಯೋಜನೆಗಳಿಗೆ ಶಿಲಾನ್ಯಾಸ ನೆರವೇರಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ವಿರುದ್ಧವೂ ವಾಗ್ದಾಳಿ ನಡೆಸಿದರು. ದ್ರಾವಿಡ ಪಕ್ಷ ಆಳುತ್ತಿರುವ ನೆರೆಯ ತಮಿಳುನಾಡಿನಲ್ಲಿ ಸಾಲುಸಾಲು ಭ್ರಷ್ಟಾಚಾರಗಳು ನಡೆಯುತ್ತಿವೆ ಎಂದು ಅವರು ಅಪಾದಿಸಿದರು. ಈ ಹಿಂದಿನ ಕಾಂಗ್ರೆಸ್ ಆಡಳಿತದಲ್ಲಿ ಪಡಿತರ ಅಂಗಡಿಗಳಲ್ಲಿ ಅಕ್ಕಿ ಇರುತ್ತಿರಲಿಲ್ಲ, ವೇತನಗಳ ಪಾವತಿ ವಿಳಂಬವಾಗುತ್ತಿತ್ತು, ಗೂಂಡಾಗಳು ಮತ್ತು ಮಾದಕ ದ್ರವ್ಯ ಮಾಫಿಯಾ ರಾಜ್ಯವನ್ನು ಆಳುತ್ತಿದ್ದರು ಎಂದು ಅವರು ಟೀಕಾಪ್ರಹಾರ ನಡೆಸಿದರು. ಪುದುಚೇರಿಯಲ್ಲಿನ ಅಭಿವೃದ್ಧಿ ಕೆಲಸಗಳಿಗೆ ಡಿಎಂಕೆ ಹಾಗೂ ಕಾಂಗ್ರೆಸ್ ವೇಗ ನಿಯಂತ್ರಕಗಳಾಗಿ ಬದಲಾಗಿವೆ ಎಂದು ಅವರು ದೂರಿದರು. ಇದೀಗ ಇದೇ ಶಕ್ತಿಗಳು ಅಧಿಕಾರದ ಹಸಿವು ಹೊಂದಿವೆ ಎಂದು ಇನ್ನು ಒಂದು ತಿಂಗಳಲ್ಲಿ ಚುನಾವಣೆ ನಡೆಯಲಿರುವ ಪುದುಚೇರಿಯಲ್ಲಿ ಸುಮಾರು 2,700 ಕೋಟಿ ರೂ. ಮೌಲ್ಯದ ಯೋಜನೆಗಳನ್ನು ಲೋಕಾರ್ಪಣೆಗೊಳಿಸಿ ಆಪಾದಿಸಿದರು. 2047ರ ವೇಳೆಗೆ ಪುದುಚೇರಿ ಅಭಿವೃದ್ಧಿ ಹೊಂದಿದ ಡಬಲ್ ಇಂಜಿನ್ ಸರಕಾರದ ಕೇಂದ್ರಾಡಳಿತ ಪ್ರದೇಶವಾಗಬೇಕು ಹಾಗೂ ಈ ಕಾರ್ಯಸೂಚಿಯಲ್ಲಿ ನಾವು ನಿಮ್ಮೊಂದಿಗಿದ್ದೇವೆ' ಎಂದು ಅವರು ಆಶ್ವಾಸನೆ ನೀಡಿದರು. ಪುದುಚೇರಿಯಲ್ಲಿ ಎಐಎನ್ಆರ್ಸಿ-ಬಿಜೆಪಿ ಮೈತ್ರಿಕೂಟ ಅಧಿಕಾರದಲ್ಲಿದೆ. Congress made Puducherry an ATM to serve only one family in Delhi. That is why Puducherry will never vote for Congress and its allies. pic.twitter.com/eSI6bVBh6j — Narendra Modi (@narendramodi) March 1, 2026
ಬಾಗಲಕೋಟೆ: ಆರೆಸ್ಸೆಸ್ ಶತಮಾನೋತ್ಸವದ ಅಂಗವಾಗಿ ಹಿಂದೂ ಸಮ್ಮೇಳನ, ಶೋಭಾಯಾತ್ರೆ
ಬಾಗಲಕೋಟೆ : ಆರೆಸ್ಸೆಸ್ ನ ನೂರು ವರ್ಷಾಚರಣೆ ಹಿನ್ನಲೆಯಲ್ಲಿ ಆಯೋಜಿಸಿದ ಹಿಂದೂ ಸಮ್ಮೇಳನ ಅಂಗವಾಗಿ ಬಾಗಲಕೋಟೆ ನಗರದಲ್ಲಿ ಶೋಭಾಯಾತ್ರೆ ನಡೆಯಿತು. ನಗರದ ವೆಂಕಟಪೇಟೆಯಿಂದ ಪ್ರಾರಂಭವಾದ ಮೆರವಣಿಗೆ ಕಿಲ್ಲಾದ ಅಂಬಾಭವಾನಿ ದೇವಾಲಯದಿಂದ, ಪಂಕಾ ಮಸೀದಿ ಮುಂದೆ ಸಾಗಿ, ವಲ್ಲಭಭಾಯಿ ವೃತ್ತದ ಮೂಲಕ ಬಸವೇಶ್ವರ ಸರ್ಕಲ್ನಿಂದ ಬಿವಿವಿ ಸಂಘದ ಮೈದಾನದಲ್ಲಿ ಅಂತ್ಯಗೊಂಡಿತು. ಮಾಜಿ ಶಾಸಕ ವೀರಣ್ಣ ಚರಂತಿಮಠ, ಲೋಕಸಭಾ ಸಂಸದ ಪಿ.ಸಿ. ಗದ್ದಿಗೌಡರ, ರಾಜ್ಯಸಭಾ ಸದಸ್ಯ ನಾರಾಯಣಸಾ ಭಾಂಡೆಗೆ, ವಿಧಾನ ಪರಿಷತ್ ಸದಸ್ಯ ಪಿ.ಎಚ್. ಪೂಜಾರ ಸೇರಿದಂತೆ ವಿವಿಧ ಸಮುದಾಯಗಳ ಮುಖಂಡರು, ಮಹಿಳೆಯರು ಹಾಗೂ ಯುವಕ-ಯುವತಿಯರು ಭಾಗವಹಿಸಿದ್ದರು. ಮಸೀದಿಯ ಮುಂದೆ ಮೆರವಣಿಗೆ ಹಮ್ಮಿಕೊಂಡಿರುವ ಹಿನ್ನಲೆಯಲ್ಲಿ ಇಡೀ ಮಸೀದಿಯನ್ನು ಬಟ್ಟೆಯಿಂದ ಮುಚ್ಚಲಾಗಿತ್ತು. ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಬಿಗಿ ಭದ್ರತೆ ಏರ್ಪಡಿಸಲಾಗಿತ್ತು. ಫೆಬ್ರವರಿ 19ರಂದು ಶಿವಾಜಿ ಮಹಾರಾಜರ ಜಯಂತಿ ಪ್ರಯುಕ್ತ ಉಂಟಾದ ಗಲಭೆಯ ಹಿನ್ನೆಲೆ, ಮಸೀದಿ ಮುಂದೆ ಮೆರವಣಿಗೆ ಸಾಗುವ ವೇಳೆ ಇಡೀ ಮಸೀದಿಗೆ ಬಟ್ಟೆ ಕಟ್ಟಿ ಭದ್ರತೆ ನೀಡಲಾಗಿತ್ತು. ಪೊಲೀಸರು ಸಹ ಬಿಗಿ ಭದ್ರತೆ ಏರ್ಪಡಿಸಿದ್ದರು. ಶೋಭಾಯಾತ್ರೆಯ ಬಳಿಕ ಬಸವೇಶ್ವರ ವಿದ್ಯಾವರ್ಧಕ ಸಂಘದ ಆವರಣದಲ್ಲಿ ಸಮಾವೇಶ ಹಮ್ಮಿಕೊಳ್ಳಲಾಗಿತ್ತು.
ಜೀವನಾಂಶ ನೀಡಲು ಹಣವಿಲ್ಲ ಎಂದ ಪತಿಗೆ ಸುಪ್ರೀಂ ಕೋರ್ಟ್ ತರಾಟೆ, ಸಾಲ ಮಾಡಿಯಾದ್ರೂ ದುಡ್ಡು ಕೊಡಬೇಕು ಎಂದ ನ್ಯಾಯಾಲಯ
ಕೌಟುಂಬಿಕ ಕಲಹ ಹಾಗೂ ವಿಚ್ಛೇದನ ಪ್ರಕರಣಗಳಲ್ಲಿ ಪತ್ನಿಗೆ ಜೀವನಾಂಶ ನೀಡುವುದು ಪತಿಯ ಸಾಂವಿಧಾನಿಕ ಮತ್ತು ನೈತಿಕ ಜವಾಬ್ದಾರಿಯಾಗಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಒಂದು ವಿಚ್ಛೇದನ ಪ್ರಕರಣದಲ್ಲಿ ಜೀವನಾಂಶ ನೀಡಲು ಹಣವಿಲ್ಲ, ನನ್ನ ಆದಾಯ ತೀರ ಕಡಿಮೆ, ಆದಾಯಕ್ಕಿಂತ ಪತ್ನಿಗೆ ನೀಡುವ ಜೀವನಾಂಶವೇ ಹೆಚ್ಚು ಎಂದು ಹೇಳಿದ ಪತಿಗೆ ಸುಪ್ರೀಂ ಕೋರ್ಟ್ ತರಾಟೆಗೆ ತೆಗೆದುಕೊಂಡಿದೆ. ಪತ್ನಿಗೆ ಜೀವನಾಂಶ ನೀಡುವುದು ಪತಿಯ ಜವಾಬ್ದಾರಿ, ಹಣವಿಲ್ಲದಿದ್ದರೆ ಸಾಲ ಮಾಡಿಯಾದರೂ ಪತ್ನಿಗೆ ಜೀವನಾಂಶ ಕೊಡುವುದು ನಿನ್ನ ಜವಾಬ್ದಾರಿ, ನಿಮಗೆ ಜೀವನಾಂಶ ಕೊಡಲು ಆಗುವುದಿಲ್ಲ ಎಂದರೆ, ನಿಮ್ಮ ಪತ್ನಿಯನ್ನು ನಿಮ್ಮೊಂದಿಗೇ ಇರಿಸಿಕೊಳ್ಳಿ, ಆಕೆ ನಿಮಗೂ ಮತ್ತು ನಿಮ್ಮ ಮಕ್ಕಳಿಗೂ ಅಡುಗೆ ಮಾಡಿಕೊಡುತ್ತಾಳೆ ಎಂದು ಕೋರ್ಟ್ ಖಡಕ್ ಆಗಿ ಹೇಳಿದೆ.
ಸಿಂಧನೂರು: ಇರಾನ್ ಮೇಲೆ ಅಮೆರಿಕಾ, ಇಸ್ರೇಲ್ ದಾಳಿ ಖಂಡನೀಯ: ನಾಗರಾಜ ಪೂಜಾರ್
ಸಿಂಧನೂರು, ಮಾ. 2: ಸಾರ್ವಭೌಮ ರಾಷ್ಟ್ರ ಇರಾನ್ ಮೇಲೆ ಸಾಮ್ರಾಜ್ಯಶಾಹಿ ಅಮೆರಿಕಾ ಮತ್ತು ಇಸ್ರೇಲ್ ದೇಶಗಳು ಜಂಟಿ ಬಾಂಬ್ ದಾಳಿ ನಡೆಸುತ್ತಿರುವುದು ಪೈಶಾಚಿಕ ಕೃತ್ಯವಾಗಿದೆ. ಅಮೆರಿಕಾ ಈ ಕೂಡಲೇ ದಾಳಿಯನ್ನು ನಿಲ್ಲಿಸಬೇಕು; ವಿಶ್ವಸಂಸ್ಥೆಯ ಅಂತಾರಾಷ್ಟ್ರೀಯ ಶಾಂತಿ ಒಪ್ಪಂದದಂತೆ ನಡೆದುಕೊಳ್ಳಬೇಕು. ಶಾಂತಿ ಸ್ಥಾಪನೆಗೆ ಭಾರತವು ವಿಶ್ವಸಂಸ್ಥೆಯ ಮೇಲೆ ಒತ್ತಡ ತರಬೇಕೆಂದು ಸಿಪಿಐ (ಎಂಎಲ್) ಲಿಬರೇಶನ್ ಜಿಲ್ಲಾ ಕಾರ್ಯದರ್ಶಿ ನಾಗರಾಜ ಪೂಜಾರ್ ಒತ್ತಾಯಿಸಿದ್ದಾರೆ. ಈ ಕುರಿತು ಸೋಮವಾರ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, “ತೈಲ ಸಂಪತ್ತಿನಿಂದ ಸಮೃದ್ಧವಾದ ಇರಾನ್ ಮೇಲೆ ನಾಗರಿಕ ಹಾಗೂ ಮಿಲಿಟರಿ ಸ್ಥಳಗಳನ್ನು ಗುರಿಯಾಗಿಸಿಕೊಂಡು ಅಮೆರಿಕಾ ಮತ್ತು ಇಸ್ರೇಲ್ ನಡೆಸುತ್ತಿರುವ ಕ್ರಿಮಿನಲ್ ಮಿಲಿಟರಿ ಆಕ್ರಮಣ ಅಂತಾರಾಷ್ಟ್ರೀಯ ಗೂಂಡಾ ವರ್ತನೆಯಷ್ಟೇ ಅಲ್ಲದೆ, ವಿಶ್ವಸಂಸ್ಥೆಯ ಸದಸ್ಯ ರಾಷ್ಟ್ರಗಳ ಸಾರ್ವಭೌಮತ್ವವನ್ನು ಗೌರವದಿಂದ ಕಾಣುವ ವಿಶ್ವಸಂಸ್ಥೆಯ ಸನ್ನದಿನ ಎರಡನೇ ವಿಧಿಯ ಉಲ್ಲಂಘನೆಯೂ ಆಗಿದೆ. ಆರ್ಥಿಕ ಬಿಕ್ಕಟ್ಟಿನಿಂದ ಕಂಗೆಟ್ಟಿರುವ ಸಾಮ್ರಾಜ್ಯಶಾಹಿ ಅಮೆರಿಕಾ ದಾಳಿ ನಡೆಸುವ ಮೂಲಕ ಇತರೆ ದೇಶಗಳ ಶಾಂತಿ, ಸ್ಥಿರತೆ, ಸೌರ್ವಭೌಮತ್ವ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಗೆ ಗಂಭೀರ ಬೆದರಿಕೆ ಒಡ್ಡಿದೆ. ಅಲ್ಲದೆ, ಕೋಟ್ಯಂತರ ಇರಾನ್ ನಾಗರಿಕರ ಜೀವಕ್ಕೆ ಅಪಾಯವನ್ನುಂಟು ಮಾಡಿದೆ. ಇರಾನ್ ಮೇಲೆ ಪರಮಾಣು ಸಂಗ್ರಹದ ಆರೋಪ ಹೊರಿಸಿ ಅದರ ಮೇಲೆ ನಡೆಸುತ್ತಿರುವ ದಾಳಿ ಅಮೆರಿಕದ ಭಯೋತ್ಪಾದಕ ಕೃತ್ಯವಾಗಿದೆ. ಸಾಮ್ರಾಜ್ಯಶಾಹಿ ಅಮೆರಿಕಾದ ಆಕ್ರಮಣಕಾರಿ ಸ್ವರೂಪ ಹಾಗೂ ಅಂತಾರಾಷ್ಟ್ರೀಯ ಮಾನದಂಡಗಳ ಬಗ್ಗೆ ಅದರ ತಿರಸ್ಕಾರವನ್ನು ಇದು ಬಹಿರಂಗಪಡಿಸುತ್ತದೆ” ಎಂದು ಹೇಳಿದ್ದಾರೆ. ಈಗಾಗಲೇ ಇರಾಕ್, ವೆನೆಝುವೆಲಾ ಮೇಲೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುಳ್ಳು ಆರೋಪ ಮಾಡಿ ದಾಳಿ ನಡೆಸಿರುವುದಲ್ಲದೆ, ಇಸ್ರೇಲನ್ನು ಎತ್ತಿಕಟ್ಟಿ ಫೆಲಸ್ತೀನ್ ಮತ್ತು ಗಾಝಾ ಮೇಲೆ, ಉಕ್ರೇನನ್ನು ಎತ್ತಿಕಟ್ಟಿ ರಷ್ಯಾ ಮೇಲೆ ಪರೋಕ್ಷ ದಾಳಿ ನಡೆಸುತ್ತಿರುವುದು ಜಗಜ್ಜಾಹೀರಾಗಿದೆ. ಅಷ್ಟೇ ಅಲ್ಲದೆ, ನೈಸರ್ಗಿಕ ಸಂಪತ್ತಿನಿಂದ ಸಮೃದ್ಧ ರಾಷ್ಟ್ರಗಳನ್ನು ಗುರಿಯಾಗಿಸಿಕೊಂಡು ಅಲ್ಲಿನ ಸಾರ್ವಭೌಮತ್ವವನ್ನು ಕಿತ್ತೊಗೆಯಲು ಮಿಲಿಟರಿ ದಾಳಿ ನಡೆಸುತ್ತಿರುವ ಅಮೆರಿಕಾ ಹಾಗೂ ಅದರ ನೀತಿಗಳು ಇಡೀ ವಿಶ್ವಕ್ಕೆ ಗಂಡಾಂತರಕಾರಿಯಾಗಿವೆ. ಇರಾನ್ ಮೇಲಿನ ನಿಜವಾದ ಉದ್ದೇಶವೆಂದರೆ ಅಲ್ಲಿನ ಜನರ ರಾಷ್ಟ್ರೀಯ ಸಾರ್ವಭೌಮತ್ವ, ರಾಜಕೀಯ ಸ್ವಾತಂತ್ರ್ಯ ಹಾಗೂ ತಮ್ಮದೇ ಆದ ಅಭಿವೃದ್ಧಿಯ ಮಾರ್ಗವನ್ನು ಆಯ್ಕೆ ಮಾಡುವ ಹಕ್ಕನ್ನು ಕಿತ್ತುಕೊಂಡು ಅಲ್ಲಿನ ತೈಲ ಮತ್ತು ಖನಿಜ ಸಂಪನ್ಮೂಲಗಳನ್ನು ವಶಪಡಿಸಿಕೊಳ್ಳುವುದು ಹಾಗೂ ಪ್ರತಿಗಾಮಿ ಶಕ್ತಿಗಳೊಂದಿಗೆ ಮೈತ್ರಿ ಮಾಡಿಕೊಂಡು ಬಲವಂತದ ಆಡಳಿತ ಬದಲಾವಣೆಯನ್ನು ಹೇರುವುದು. ತೈಲ ಸಂಪತ್ತನ್ನು ಕಬಳಿಸಲು ಕಳೆದ ಹಲವು ದಶಕಗಳಿಂದ ಅಮೆರಿಕಾ ಅರಬ್ ರಾಷ್ಟ್ರಗಳ ನಡುವೆ ಪರಸ್ಪರ ಹಗೆತನವನ್ನು ಸೃಷ್ಟಿಸಿ ಅದರ ದುರ್ಬಳಕೆ ಮಾಡಿಕೊಂಡು ಬಂದಿದೆ. ಆದ್ದರಿಂದ, ಅಂತರಾಷ್ಟ್ರೀಯ ಮಟ್ಟದಲ್ಲಿ ಸಮಾಜವಾದಿ ಆಶಯದ ರಾಷ್ಟ್ರಗಳು ಒಗ್ಗೂಡಿ ಸಾಮ್ರಾಜ್ಯಶಾಹಿ, ಫ್ಯಾಸಿಸ್ಟ್ ಅಮೆರಿಕಾ ಸೇರಿದಂತೆ ಅದರ ಬೆಂಬಲದಲ್ಲಿರುವ ರಾಷ್ಟ್ರಗಳಿಗೆ ತಕ್ಕ ಪಾಠ ಕಲಿಸದೇ ಹೋದರೆ, ಶಾಂತಿ-ಸುವ್ಯವಸ್ಥೆ, ಪ್ರಜಾಸತ್ತಾತ್ಮಕ ಮೌಲ್ಯಗಳು ಹಾಗೂ ಪ್ರಜಾತಂತ್ರಕ್ಕೆ ಉಳಿಗಾಲವಿರುವುದಿಲ್ಲ” ಎಂದು ನಾಗರಾಜ ಪೂಜಾರ್ ತಿಳಿಸಿದ್ದಾರೆ.
ಇಸ್ರೇಲ್ - ಇರಾನ್ ಸಂಘರ್ಷ: ಭಾರತದ ಮೇಲೆ ನೇರ ಮತ್ತು ಪರೋಕ್ಷವಾಗಿ ಬೀರುವ ಪರಿಣಾಮಗಳು
ಮಧ್ಯಪ್ರಾಚ್ಯದಲ್ಲಿ ಇಸ್ರೇಲ್ ಮತ್ತು ಇರಾನ್ ನಡುವೆ ದಿನೇ ದಿನೇ ಹೆಚ್ಚುತ್ತಿರುವ ಸಂಘರ್ಷವು ಈಗ ಕೇವಲ ಪ್ರಾದೇಶಿಕ ಸಮರವಾಗುಳಿಯದೆ ಜಾಗತಿಕ ಮಟ್ಟದಲ್ಲಿ ಆತಂಕದ ಅಲೆ ಎಬ್ಬಿಸಿದೆ. ಈ ಎರಡು ಬಲಾಢ್ಯ ರಾಷ್ಟಗಳ ನಡುವಿನ ಉದ್ವಿಗ್ನತೆಯು ವಿಶ್ವದ ರಾಜಕೀಯ ಮತ್ತು ಆರ್ಥಿಕ ಸ್ಥಿರತೆ ಬುಡಮೇಲು ಆಗುವ ಮುನ್ಸೂಚನೆ ಕಾಣುತ್ತಿದೆ. ವಿಶೇಷವಾಗಿ ಭಾರತದಂತಹ ತೈಲ ಆಮದು ಮಾಡಿಕೊಳ್ಳುವ ರಾಷ್ಟ್ರದ ಮೇಲೆ ಅವಲಂಬಿತ
Narendra Modi: ಮಧ್ಯಪ್ರಾಚ್ಯ ಸಂಕಷ್ಟ: ಇಸ್ರೇಲ್ - ಯುಎಇ ಅಧ್ಯಕ್ಷರಿಗೆ ಮೋದಿ ಕರೆ, ಯುದ್ಧದ ಬಗ್ಗೆ ಹೇಳಿದ್ದೇನು
Narendra Modi: ಮಧ್ಯಪ್ರಾಚ್ಯದಲ್ಲಿ ಪರಿಸ್ಥಿತಿ ಕ್ಷಣ ಕ್ಷಣಕ್ಕೂ ವಿಷಮವಾಗುತ್ತಿದೆ. ಇರಾನ್ನ ಸುಪ್ರೀಂ ನಾಯಕ ಅಯತೊಲ್ಲಾ ಅಲಿ ಖಮೇನಿ ಹತ್ಯೆಯ ನಂತರ ಇರಾನ್ ಪ್ರತೀಕಾರ ತೀರಿಸಿಕೊಳ್ಳುವ ತವಕದಲ್ಲಿದೆ. ಅಮೆರಿಕವನ್ನು ಗುರಿಯಾಗಿಸಿಕೊಂಡು ವಿವಿಧ ದೇಶಗಳಲ್ಲಿರುವ ಅಮೆರಿಕದ ವಾಯು, ಸೇನಾ ನೆಲೆಗಳ ಮೇಲೆ ಇರಾನ್ ದಾಳಿ ಮಾಡುತ್ತಿದೆ. ಈ ನಡುವೆ ಪ್ರಧಾನಿ ನರೇಂದ್ರ ಮೋದಿ ಅವರು ಮಹತ್ವದ ಮಾಹಿತಿಯೊಂದನ್ನು ಹಂಚಿಕೊಂಡಿದ್ದಾರೆ. ಪ್ರಧಾನಿ
ರಾಷ್ಟ್ರೀಕೃತ ಬ್ಯಾಂಕುಗಳೇ ಟಾರ್ಗೆಟ್ ಯಾಕೆ ?
ಇತ್ತೀಚೆಗೆ ದಿನನಿತ್ಯ ಬ್ಯಾಂಕುಗಳಲ್ಲಿ ಅವ್ಯವಹಾರ, ಬ್ಯಾಂಕುಗಳ ದರೋಡೆ ಪ್ರಯತ್ನ, ಬ್ಯಾಂಕ್ಗಳ ವಿರುದ್ಧ ಕೇಸು ದಾಖಲುಗಳು, ಬ್ಯಾಂಕುಗಳು ಕೇವಲ ವಿಮೆಗಳ ಮಾರಾಟದಲ್ಲಿ ಗ್ರಾಹಕರನ್ನು ಪೀಡಿಸುತ್ತಿವೆ, ಚಿನ್ನಾಭರಣಗಳ ಮೇಲಿನ ಸಾಲದ ನೆಪದಲ್ಲಿ ಗ್ರಾಹಕರನ್ನು ವಂಚಿಸುತ್ತಿವೆ, ಸೇವಾ ಶುಲ್ಕವೆಂದು ಸಾಕಷ್ಟು ಹಣವನ್ನು ವಸೂಲಿ ಮಾಡಲಾಗುತ್ತಿದೆ, ಹೀಗೆ ಹಲವಾರು ಸುದ್ದಿಗಳು ಮಾಧ್ಯಮಗಳ ಮೂಲಕ ಬಿತ್ತರಿಸುತ್ತಿರುವುದು ನಿಜವಾಗಿಯೂ ಸತ್ಯದ ಮಾತಾಗಿದೆಯೋ ಅಥವಾ ಆರ್ಬಿಐ ನಿಯಮದ ಮೂಲಕವೇ ಬ್ಯಾಂಕ್ಗಳು ತಮ್ಮ ಕರ್ತವ್ಯವನ್ನು ನಿರ್ವಹಿಸುತ್ತಿವೆಯೋ ಎನ್ನುವ ಪ್ರಶ್ನೆಗಳು ಗ್ರಾಹಕರನ್ನು ಕಾಡುತ್ತಲಿವೆ. ಆದರೆ ಇವೆಲ್ಲಾ ಸುದ್ದಿಗಳು ಮತ್ತು ಗೊಂದಲಗಳು ರಾಷ್ಟ್ರೀಕೃತ ಬ್ಯಾಂಕ್ಗಳಲ್ಲೇ ಯಾಕೆ ಘಟಿಸುತ್ತಿವೆ? ಇಂತಹ ಸುದ್ದಿಗಳೇ ಯಾಕೆ ಹೆಚ್ಚು ಹೆಚ್ಚಾಗಿ ಮಾಧ್ಯಮಗಳ ಮೂಲಕ ಬಿತ್ತರಿಸಲಾಗುತ್ತಿದೆ? ಹಾಗಾದರೆ ಖಾಸಗಿ ಬ್ಯಾಂಕ್ಗಳು ಗ್ರಾಹಕರಿಗೆ ಭದತೆಯನ್ನು ಒದಗಿಸುತ್ತಿವೆಯೇ? ಎಲ್ಲಾ ಉದ್ದಿಮೆದಾರರು ಖಾಸಗಿ ಬ್ಯಾಂಕ್ಗಳು ನೀಡುವ ಸೇವೆಗಳಿಂದ ಖುಷಿಯಾಗಿರುವರೆ? ಹಾಗಾದರೆ ಖಾಸಗಿ ಬ್ಯಾಂಕುಗಳು ಏಕೆ ಕೇಂದ್ರ ಮತ್ತು ರಾಜ್ಯ ಸರಕಾರಗಳು ನೀಡುತ್ತಿರುವ ಆರ್ಥಿಕ ಸವಲತ್ತುಗಳು ಹಾಗೂ ಸಾಲ ಸೌಲಭ್ಯಗಳನ್ನು ನೀಡಲು ಸಾಧ್ಯವಾಗುತ್ತಿಲ್ಲ. ಹಾಗಾದರೆ ಇವುಗಳಿಂದ ಸಾಮಾನ್ಯ ಗ್ರಾಹಕರಿಗೆ ಆಗುತ್ತಿರುವ ಲಾಭಗಳಾದರೂ ಏನು ಎನ್ನುವ ಪ್ರಶ್ನೆಗಳು ಇವೆಯಲ್ಲವೇ? ರಾಷ್ಟ್ರೀಕೃತ ಬ್ಯಾಂಕುಗಳಿಂದ ಗ್ರಾಹಕರಿಗೆ ನಿಜವಾಗಿಯೂ ಭದ್ರತೆ ಇಲ್ಲವೇ? ಎಂತೆಲ್ಲಾ ಆಲೋಚನೆಗಳು ಗ್ರಾಹಕರ ಮನಸ್ಸಿನಲ್ಲಿ ಹುಟ್ಟುತ್ತಿರುವುದಕ್ಕೆ ಏನು ಕಾರಣ ಎಂದು ತಿಳಿಯಬೇಕಾಗಿದೆ. 1969-70 ರಲ್ಲಿ ಅಂದಿನ ಪ್ರಧಾನಿ ಭಾರತೀಯರ ಆರ್ಥಿಕ ಅಭಿವೃದ್ಧಿಗೆ, ಪ್ರತಿಯೊಬ್ಬರಿಗೂ ಸರಕಾರದ ಸವಲತ್ತುಗಳು ಹಾಗೂ ದುಡಿಯುವ ಕೈಗಳಿಗೆ ಉದ್ಯೋಗದ ಭದ್ರತೆಯನ್ನು ನೀಡುವ ಉದ್ದೇಶದಿಂದ ಸುಮಾರು 14 ಬ್ಯಾಂಕುಗಳನ್ನು ರಾಷ್ಟ್ರೀಕರಣ ಮಾಡಿದರು. ಇದರಿಂದ ದೇಶದಲ್ಲಿನ ಯುವಕರು ದೀರ್ಘಾವಧಿಯ ಉದ್ಯೋಗ ಮತ್ತು ಆರ್ಥಿಕತೆಯಲ್ಲಿ ಭದ್ರತೆಯನ್ನು ಕಂಡುಕೊಳ್ಳಲು ಸಾಧ್ಯವಾಯಿತು. ಪ್ರತಿಯೊಬ್ಬ ನಾಗರಿಕನು ತಮ್ಮ ಆದಾಯದ ಸ್ವಲ್ಪ ಭಾಗವನ್ನು ಬ್ಯಾಂಕಿನಲ್ಲಿ ಹೂಡಿಕೆ ಮಾಡುತ್ತಾ ಜೀವನದ ಭದ್ರತೆಯನ್ನು ಕಂಡುಕೊಳ್ಳುವಂತಾಯಿತು. ಬ್ಯಾಂಕುಗಳ ಸ್ಥಾಪನೆಯಲ್ಲಿ ಕರ್ನಾಟಕಕ್ಕೆ ಮೊದಲ ಸ್ಥಾನ ಎಂದರೆ ತಪ್ಪಾಗಲಾರದು. ಕೆನರಾ ಬ್ಯಾಂಕ್, ವಿಜಯಾ ಬ್ಯಾಂಕ್, ಸಿಂಡಿಕೇಟ್ ಬ್ಯಾಂಕ್, ಕಾರ್ಪೊರೇಶನ್ ಬ್ಯಾಂಕ್, ಸ್ಟೇಟ್ ಬ್ಯಾಂಕ್ ಆಫ್ ಮೈಸೂರ್, ಕರ್ನಾಟಕ ಬ್ಯಾಂಕ್ ಹೀಗೆ ಹಲವಾರು ಬ್ಯಾಂಕುಗಳು ಹುಟ್ಟಿದ್ದು ನಮ್ಮ ಕನ್ನಡ ಮಣ್ಣಲ್ಲಿ ಎನ್ನುವ ಹೆಮ್ಮೆ ಕನ್ನಡಿಗರಿಗಿದೆ. ಆದರೆ ಈ ಎಲ್ಲಾ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ 2014ರ ನಂತರ ಕೆಲವು ಬ್ಯಾಂಕ್ಗಳು ಇತರ ಬ್ಯಾಂಕುಗಳೊಡನೆ ವೀಲೀನಗೊಂಡು ಕರ್ನಾಟಕದ ಬ್ಯಾಂಕ್ಗಳ ಇತಿಹಾಸವನ್ನು ಅಳಿಸಲಾಯಿತು. ಇನ್ನು ನಮ್ಮ ಜೊತೆಯಲ್ಲಿರುವ ಕನ್ನಡಿಗರ ಹೆಮ್ಮೆಯ ಏಕೈಕ ರಾಷ್ಟ್ರೀಕೃತ ಬ್ಯಾಂಕ್, ಕೆನರಾ ಬ್ಯಾಂಕ್ ಮಾತ್ರ. ಭಾರತದಲ್ಲಿ ಬ್ಯಾಂಕ್ಗಳ ರಾಷ್ಟ್ರೀಕರಣದ ನಂತರ ಎಲ್ಲ ವರ್ಗದ ಜನರಿಗೂ ಉದ್ಯೋಗದಲ್ಲಿ ಸಮಾನತೆ ದೊರೆಯುವ ಮೂಲಕ ಸಾಮಾಜಿಕ ಮತ್ತು ಆರ್ಥಿಕ ಭದ್ರತೆ ದೊರೆಯುತ್ತಿದ್ದಂತೆ ಕಳೆದ 14 ವರ್ಷಗಳ ಭಾರತದ ರಾಜಕೀಯ ಇತಿಹಾಸದಲ್ಲಿ ಸುಮಾರು 33 ರಾಷ್ಟ್ರೀಕೃತ ಸಂಸ್ಥೆಗಳನ್ನು ಖಾಸಗಿಯವರ ಕೈಗೊಪ್ಪಿಸಿ ಉದ್ಯೋಗ ಸೃಷ್ಟಿಯಲ್ಲಿ ಕುಂಠಿತಗೊಳಿಸಿ ನಿರುದ್ಯೋಗ ಸಮಸ್ಯೆಯನ್ನು ಸೃಷ್ಟಿಸಿದಂತಾಯಿತು. ಇದಕ್ಕೆ ಸೂಕ್ತ ನಿದರ್ಶನವೇ ಇತ್ತೀಚೆಗೆ ಯುವಕರು ದೇಶದಾದ್ಯಂತ ಆಡಳಿತ ಸರಕಾರಗಳ ವಿರುದ್ಧ ನಡೆಸುತ್ತಿರುವ ಪ್ರತಿಭಟನೆಗಳು. ಆದರೆ ಮತ್ತೆ ಕೆಲವು ರಾಷ್ಟ್ರೀಕೃತ ಬ್ಯಾಂಕುಗಳನ್ನು ವಿಲೀನಗೊಳಿಸುವ ಮೂಲಕ ಖಾಸಗಿಯವರ ಕೈಗೊಪ್ಪಿಸುವ ಹುನ್ನಾರಗಳು ಸರಕಾರಗಳಿಂದ ನಡೆಯುತ್ತಲೇ ಇವೆ. ರಾಷ್ಟ್ರೀಕೃತ ಬ್ಯಾಂಕ್ಗಳಲ್ಲಿ ನಡೆಯುವ ಸಣ್ಣಪುಟ್ಟ ಸಮಸ್ಯೆಗಳನ್ನು ಮೀಡಿಯಾಗಳ ಮೂಲಕ ಮತ್ತು ಸಾಮಾಜಿಕ ಜಾಲತಾಣಗಳ ಮೂಲಕ ವೈಭವೀಕರಿಸಿ ಪ್ರಚಾರ ಮಾಡುವ ಇಂದಿನ ಮೀಡಿಯಾಗಳಿಗೆ ದೇಶದ ಬ್ಯಾಂಕುಗಳಿಗೆ ಮೋಸ ಮಾಡಿ ಈ ದೇಶದಿಂದ ಕಾಲು ತೆಗೆದು ವಿದೇಶಗಳಿಗೆ ಪರಾರಿಯಾದ ಆರ್ಥಿಕ ನಯ ವಂಚಕರು ಮಾಡಿದ ಆರ್ಥಿಕ ವಂಚನೆ ಸುಮಾರು 360,000 ಲಕ್ಷ ಕೋಟಿಗಳಿಗೂ ಹೆಚ್ಚಿನದು, ಆದರೂ ಇಂತಹ ವಂಚನೆಗಳು ಯಾವ ಗ್ರಾಹಕರಿಗೂ, ಮಾಧ್ಯಮಗಳಿಗೂ ನಿಜವಾದ ವಂಚನೆಗಳು ಎನಿಸುತ್ತಿಲ್ಲ ಯಾಕೆ? ಇಡೀ ಜಗತ್ತನ್ನೇ ಸುತ್ತುತ್ತಿರುವ ನಮ್ಮ ವಿಶ್ವಗುರುವಿಗೆ, ಈ ನಯವಂಚಕರು ಎಲ್ಲಿ ಅಡಗಿ ಕುಳಿತಿದ್ದಾರೆ ಎನ್ನುವ ಮಾಹಿತಿ ಸಿಗುತ್ತಿಲ್ಲವೇ ? ಈ ದೇಶದ ರೈತರ ಸಾಲವನ್ನು ಮನ್ನಾ ಮಾಡಿ ಎಂದಾಗ ದೇಶದ ಆರ್ಥಿಕ ಬೆಳವಣಿಗೆಗೆ ಮತ್ತು ಖಜಾನೆಗೆ ಧಕ್ಕೆಯಾಗುತ್ತದೆ. ಸರಕಾರದ ಬೊಕ್ಕಸದಲ್ಲಿ ಹಣವಿಲ್ಲ ಎಂದವರು ಬೃಹತ್ ಉದ್ದಿಮೆದಾರರ ಮತ್ತು ಬಂಡವಾಳಗಾರರ ಸಾಲವನ್ನು ಕಳೆದ 2024-25 ನೇ ಆರ್ಥಿಕ ಸಾಲಿನಲ್ಲಿ ವರ್ಷಕ್ಕೆ 10.60 ಲಕ್ಷ ಕೋಟಿ ಸಾಲ ಮಾಡಿ ವಂಚಿಸಿದ್ದು, ದೇಶದ ಆರ್ಥಿಕತೆಗೆ ಮೋಸ ಎನಿಸಲಿಲ್ಲವೇ? ಅಷ್ಟೇ ಏಕೆ ಸುಮಾರು 1948 ರಿಂದ ಆರ್ಬಿಐ ನಲ್ಲಿ ಕೂಡಿಟ್ಟಿದ್ದ ಸುಮಾರು 171 ಸಾವಿರ ಕೋಟಿ ತುರ್ತು ಹಣವನ್ನು ಇಂದಿನ ಸರಕಾರ 2019ರಲ್ಲಿ ಬಳಕೆ ಮಾಡಿಕೊಂಡು, ಅದನ್ನು ಯಾವ ಕಾರಣಕ್ಕೆ ಬಳಸಲಾಗಿದೆಯೆಂದು ಇದುವರೆಗೂ ಆರ್ಬಿಐಗೆ ಲೆಕ್ಕವನ್ನು ನೀಡಲಿಲ್ಲ. ಸರಕಾರ ಮಾಡಿರುವ ಇಂತಹ ಆರ್ಥಿಕ ವಂಚನೆಯನ್ನು ಏಕೆ ಬಯಲಿಗೆಳೆಯುತ್ತಿಲ್ಲ? ಸಾಮಾನ್ಯ ಜನರ ಹಣವನ್ನು ದುರುಪಯೋಗ ಮಾಡಿಕೊಂಡಿರುವುದು ಸರಿಯೇ? ಇದಕ್ಕೆ ಯಾರೂ ಹೊಣೆಗಾರರಲ್ಲ ಎನ್ನುವಂತೆ ಸುಮ್ಮನಿರುವುದು ಮೋಸವಲ್ಲವೇ? ಜಿಎಸ್ಟಿ ಹೆಸರಿನಲ್ಲಿ, ಎ ಪಿ ವೈ, ಪಿ ಎಂ ಜೆ ಜೆ ಬಿ ವೈ, ಪಿ ಎಂ ಎಸ್ ಬಿ ವೈ ನೆಪದಲ್ಲಿ ಪ್ರತೀ ವರ್ಷ ಮತ್ತು ಪ್ರತೀ ತಿಂಗಳು ಗ್ರಾಹಕರಿಂದ ಸಾವಿರಾರು ಕೋಟಿ ರೂಪಾಯಿಗಳನ್ನು ಬ್ಯಾಂಕ್ಗಳ ಮೂಲಕವೇ ಪೀಕುತ್ತಿರುವುದು ಮೀಡಿಯಾಗಳ ಪ್ರಕಾರ ಯಾವ ವಂಚನೆಯೂ ಅಲ್ಲ !! ಎ ಪಿ ವೈ ಸುಮಾರು 20 ರಿಂದ 40 ವರ್ಷಗಳು ಪಾವತಿ ಮಾಡುವ ಯೋಜನೆಯಾಗಿದ್ದು ಕಳೆದ 14 ವರ್ಷಗಳಿಂದ ಒಂದು ರೂಪಾಯಿಯನ್ನು ನೀಡದ ಸರಕಾರ ಇಂದಿಗೂ ಹಣವನ್ನು ಗ್ರಾಹಕರಿಂದ ಪೀಕುತ್ತಲೇ ಇದೆ! ಇದಕ್ಕೆ ಸಾಕಷ್ಟು ಬ್ಯಾಂಕ್ಗಳಿಗೆ ನಮ್ಮ ವಿತ್ತ ಮಂತ್ರಿಯವರ ಇಲಾಖೆಯು ಬಹಳ ಒತ್ತಡ ನೀಡುತ್ತಿದೆ. ಆದರೆ ವಿತ್ತ ಮಂತ್ರಿಯವರು ಇತ್ತೀಚೆಗೆ ನೀಡಿರುವ ಹೇಳಿಕೆ ಗ್ರಾಹಕರಿಂದ ಯಾವ ವಿಮೆಯನ್ನು ಕೇಳಬಾರದು, ಕೇಳಿದರೆ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳ ಬೇಕಾಗುತ್ತದೆ ಎಂದಿದ್ದಾರೆ. ಹಾಗಾದರೆ ಪಿ ಎಂ ಜೆ ಜೆ ಬಿ ವೈ, ಪಿ ಎಂ ಎಸ್ ಬಿ ವೈ, ಎ ಪಿ ವೈ ಗಳೆಲ್ಲ ವಿಮೆಗಳಲ್ಲವೇ? ಹಾಗಾದರೆ ಇವುಗಳ ಮುಂದಿನ ಭವಿಷ್ಯವೇನಿರಬಹುದು? ಬ್ಯಾಂಕುಗಳ ಸಣ್ಣ ಪುಟ್ಟ ತಪ್ಪುಗಳನ್ನು ಎತ್ತಿ ಹಿಡಿಯುವ ನಮ್ಮ ಮೀಡಿಯಾಗಳು ಇವುಗಳ ಬಗ್ಗೆ ಯಾಕೆ ಚರ್ಚಿಸುತ್ತಿಲ್ಲಾ ! ಇವುಗಳ ಬಗ್ಗೆ ಯಾಕೆ ಯಾರೂ ಮಾತನಾಡುವುದಿಲ್ಲ ಬದಲಾಗಿ ಈ ನಯಮಂಚನೆಯ ಮೋಸ ಭಾರತದ ಗ್ರಾಹಕರಿಗೆ ಯಾವ ತೊಂದರೆಯನ್ನು ನೀಡುತ್ತಿಲ್ಲ ಎನ್ನುವ ಹಾಗೆಯೇ ತೇಪೆಹಾಕಲಾಗಿದೆ. ಈ ಮೀಡಿಯಾಗಳ ಪಾಲಿಗೆ ಇದು ನಿಜವಾಗಿಯೂ ಮೋಸ ಎನಿಸುತ್ತಿಲ್ಲವೆ? ಇಂತಹ ಮೋಸಗಳನ್ನು ಬಯಲಿಗೆಳೆಯಲು ಸಾಧ್ಯವಾಗುತ್ತಿಲ್ಲವೇ? ಹಾಗಾದರೆ ಇವರ ನಿಜವಾದ ಉದ್ದೇಶವೇನು? ಒಂದೇ ಏಟಿಗೆ ಎರಡು ಹಕ್ಕಿಗಳನ್ನು ಹೊಡೆಯುವ ಬಹು ದೊಡ್ಡ ಹುನ್ನಾರಗಳು ಇವುಗಳ ಹಿಂದೆ ನಡೆಯುತ್ತಿವೆ ಎನ್ನಬಹುದೇ? ಭಾರತದ ಸಾಮಾನ್ಯ ಗ್ರಾಹಕರು ಮೊದಲು ರಾಷ್ಟ್ರೀಕೃತ ಬ್ಯಾಂಕುಗಳ ವ್ಯವಹಾರದಿಂದ ಬೇಸತ್ತು ಖಾಸಗಿ ಬ್ಯಾಂಕ್ಗಳ ಕಡೆಗೆ ಮುಖಮಾಡಬೇಕು ಎನ್ನುವುದು ಇವರ ಉದ್ದೇಶವಾಗಿದೆಯೇ? ರಾಷ್ಟ್ರೀಕೃತ ಬ್ಯಾಂಕುಗಳನ್ನು ದೂಷಿಸುವ ಮೂಲಕ ಖಾಸಗಿ ಬ್ಯಾಂಕುಗಳಿಗೆ ಹೆಚ್ಚು ಆದ್ಯತೆ ನೀಡುವುದನ್ನು ಈ ಸರಕಾರಗಳು ತನ್ನ ಗುರಿಯನ್ನಾಗಿಸಿ ಕೊಂಡಿವೆಯೇ? ಅಲ್ಲದೆ ರಾಷ್ಟ್ರೀಕೃತ ಬ್ಯಾಂಕುಗಳನ್ನು ಮತ್ತೆ ಖಾಸಗಿಯವರ ಕೈಗೊಪ್ಪಿಸಿ ಸಾಮಾಜಿಕ ಅಸಮಾನತೆಯನ್ನು ಸೃಷ್ಟಿಸುವ ಮೂಲಕ ದುಡಿಯುವ ಕೈಗಳಿಂದ ಉದ್ಯೋಗವನ್ನು ಕಸಿದುಕೊಂಡು ನಿರುದ್ಯೋಗವನ್ನು ಸೃಷ್ಟಿಸುವುದೇ? ಇಂತಹ ವ್ಯವಸ್ಥೆಯಲ್ಲಿ ಜನಸಾಮಾನ್ಯರು ಒಬ್ಬರನ್ನೊಬ್ಬರು ಕಿತ್ತು ತಿನ್ನುವ ಪರಿಸ್ಥಿತಿಯನ್ನು ನಿರ್ಮಾಣ ಮಾಡುವುದಾಗಿದೆಯೇ? ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ನಡೆಯುವ ನೇಮಕಾತಿಯಲ್ಲಿ ಎಸ್ಸಿ/ಎಸ್ಟಿ/ಒಬಿಸಿ ಮತ್ತು ಧಾರ್ಮಿಕ ಅಲ್ಪ ಸಂಖ್ಯಾತ ಜಾತಿಯ ಜನರ ಉದ್ಯೋಗವನ್ನು ಕಸಿದು ಮತ್ತೆ ಈ ಜನರನ್ನು ಆರ್ಥಿಕ ಸಾಮಾಜಿಕ ಅಸಮಾನತೆಗೆ ತಳ್ಳುವುದೇ ಇಂದಿನ ಸರಕಾರದ ಮೂಲ ಉದ್ದೇಶವಾಗಿದೆಯೇ? ಈಗಾಗಲೇ ರಾಷ್ಟ್ರೀಕೃತ ಬ್ಯಾಂಕುಗಳನ್ನು ವಂಚಿಸಿ ವಿದೇಶಕ್ಕೆ ಪರಾರಿಯಾದ ವಂಚಕರನ್ನು ಬಂಧಿಸುವಲ್ಲಿ ವಿಫಲವಾಗಿರುವ ಸರಕಾರಗಳು ಕರ್ನಾಟಕದ ಲಾಭದಾಯಕವಾದ ವಿಜಯಾ ಬ್ಯಾಂಕನ್ನು ನಷ್ಟ ಹೊಂದಿದ್ದ ಬರೋಡಾ ಬ್ಯಾಂಕಿನೊಡನೆ ವಿಲೀನಗೊಳಿಸಿ ಕರ್ನಾಟಕಕ್ಕೆ ಮೋಸ ಮಾಡಿತು. ಮೈಸೂರು ಮಹಾರಾಜರು ನಿರ್ಮಿಸಿದ್ದ ಒಡೆಯ ಮನೆತನದ ಐತಿಹಾಸಿಕ ಮೈಲುಗಲ್ಲಾಗಿದ್ದ ಸ್ಟೇಟ್ ಬ್ಯಾಂಕ್ ಆಫ್ ಮೈಸೂರ್ ಬ್ಯಾಂಕಿನ ಇತಿಹಾಸವನ್ನೇ ಅಳಿಸಿ ನಾಲ್ವಡಿ ಕೃಷ್ಣರಾಜ ಒಡೆಯರ್ ರವರ ಹೆಸರನ್ನು ಮರೆಮಾಚುವಂತೆ ಮಾಡಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಜೊತೆ ವಿಲೀನ ಮಾಡಲಾಯಿತು. ಹಾಗೆಯೇ ಕರ್ನಾಟಕದ ಮತ್ತೊಂದು ಶ್ರೇಷ್ಠ ಮತ್ತು ಲಾಭದಾಯಕ ಬ್ಯಾಂಕ್ ಎನಿಸಿದ್ದ ಸಿಂಡಿಕೇಟ್ ಬ್ಯಾಂಕ್ ಅನ್ನು ಕೆನರಾ ಬ್ಯಾಂಕ್ ನೊಡನೆ ವಿಲೀನಗೊಳಿಸಲಾಯಿತು. ಕಾರ್ಪೊರೇಷನ್ ಬ್ಯಾಂಕ್ ಅನ್ನು ಯೂನಿಯನ್ ಬ್ಯಾಂಕಿನೊಡನೆ ವಿಲೀನಗೊಳಿಸಿ ಕರ್ನಾಟಕದಲ್ಲಿ ಹುಟ್ಟಿದ ಎಲ್ಲ ಬ್ಯಾಂಕುಗಳನ್ನು ಇತಿಹಾಸದಲ್ಲಿ ಮರೆಮಾಚಲಾಯಿತು. ಇನ್ನು ಕರ್ನಾಟಕದ ಹೆಸರಿಗೆ ಉಳಿದಿರುವ ಏಕೈಕ ರಾಷ್ಟ್ರೀಕೃತ ಬ್ಯಾಂಕ್, ಕೆನರಾ ಬ್ಯಾಂಕ್ ಇದನ್ನು ಖಾಸಗಿಯವರ ಕೈಗೊಪ್ಪಿಸಿ ಕರ್ನಾಟಕದಲ್ಲಿ ಬ್ಯಾಂಕ್ಗಳ ಹೆಸರು ಇಲ್ಲದಂತೆ ಮಾಡುವುದೇ ಇಂದಿನ ಈ ಸಣ್ಣಪುಟ್ಟ ಕಾರಣಗಳನ್ನು ವೈಭವೀಕರಿಸಿ ಪ್ರಚಾರ ಮಾಡುವ ಹುನ್ನಾರ ವಾಗಿರಬಹುದು. ವಿಕಸಿತ್ ಭಾರತ್ ಯಾತ್ರೆಯು 2024ರ ಚುನಾವಣೆಯ ಸಂದರ್ಭದಲ್ಲಿ ಏಕೆ ಪ್ರಾರಂಭವಾಯಿತು ಯೋಚಿಸಬೇಕಲ್ಲವೇ ? ಭಾರತದ ಎಲ್ಲಾ ರಾಷ್ಟ್ರೀಕೃತ ಬ್ಯಾಂಕ್ಗಳನ್ನು ಚುನಾವಣಾ ಪ್ರಚಾರಕರನ್ನಾಗಿ ಬಳಸಿಕೊಂಡು, ರಾಷ್ಟ್ರೀಕೃತ ಬ್ಯಾಂಕ್ಗಳಿಂದ ಇದಕ್ಕೆ ತಗಲುವ ಸುಮಾರು 10 ಸಾವಿರ ಕೋಟಿಗಳಿಗೂ ಹೆಚ್ಚು ಹಣವನ್ನು ದುರ್ಬಳಕೆ ಮಾಡಿಕೊಂಡಿರುವುದು ಯಾವ ಮಾಧ್ಯಮಗಳಿಗೂ ತಿಳಿಯಲಿಲ್ಲವೇ? ಕೆಲವೊಮ್ಮೆ ಕೇಂದ್ರ ಮಂತ್ರಿಗಳು (ವಿತ್ತ ಮಂತ್ರಿ ಹಾಗೂ ಗ್ರಾಮೀಣ ಅಭಿವೃದ್ಧಿ ಮಂತ್ರಿ) ತಾವು ತಮ್ಮ ಪಕ್ಷಗಳ ಪ್ರಚಾರಕ್ಕೆ ಬರುವಾಗಲು, ಸರಕಾರದ ಯೋಜನೆಗಳ ನೆಪವೊಡ್ಡಿ ಬ್ಯಾಂಕ್ಗಳ (ಗ್ರಾಹಕರ) ಹಣವನ್ನು ಅವರ ಕಾರ್ಯಕ್ರಮಗಳಿಗೆ ಬಳಸಿಕೊಳ್ಳುತ್ತಿರುವುದು ನಿಜವಾಗಿಯೂ ಭಾರತೀಯರಿಗೆ, ಗ್ರಾಹಕ ವರ್ಗಕ್ಕೆ ಮಾಡುತ್ತಿರುವ ಮೋಸವಲ್ಲವೇ ? ಬಂಧುಗಳೇ ನಮ್ಮ ನಾಡಿನ ಬ್ಯಾಂಕ್ ನಮ್ಮ ಹೆಮ್ಮೆ, ಒಂದೆರಡು ತಪ್ಪುಗಳಾಗಿವೆಯೆಂದು ಇಡೀ ಬ್ಯಾಂಕನ್ನೇ ಸರಿಯಿಲ್ಲವೆಂದು ದೂಷಿಸುವುದು ಯಾವ ನ್ಯಾಯ!
ತಿಂಗಳ ಮೊದಲ ದಿನವೇ ಷೇರು ಮಾರುಕಟ್ಟೆ ಧರಾಶಾಹಿ: ಮಧ್ಯಪ್ರಾಚ್ಯ ಸಂಘರ್ಷದ ಎಫೆಕ್ಟ್, ಹೂಡಿಕೆದಾರರಿಗೆ ನಷ್ಟ
BSE and NSE : ಮಧ್ಯಪ್ರಾಚ್ಯದ ಬಿಕ್ಕಟ್ಟಿನ ಎಫೆಕ್ಟ್, ಷೇರು ಮಾರುಕಟ್ಟೆಯ ಮೇಲೆ ಬೀಳಲಾರಂಭಿಸಿದೆ. ಮಾರ್ಚ್ ತಿಂಗಳ ಮೊದಲ ದಿನವೇ ಗಿಫ್ಟ್ ನಿಫ್ಟಿ ಕುಸಿತವನ್ನು ಕಂಡಿದೆ. ಮುಂದಿನ ದಿನಗಳಲ್ಲಿ ಜಾಗತಿಕ ಉದ್ವಿಗ್ನತೆ ಹೆಚ್ಚಾದಂತೇ, ಷೇರು ಮಾರುಕಟ್ಟೆಯಲ್ಲಿ ಇನ್ನಷ್ಟು ಕುಸಿತ ಕಾಣಬಹುದು ಎಂದು ವಿಶ್ಲೇಷಿಸಲಾಗುತ್ತಿದೆ.
ಹೊಸದಿಲ್ಲಿ : ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಮತ್ತು ಇರಾನ್ ದಾಳಿ ಹಿನ್ನೆಲೆ ದುಬೈ ವಿಮಾನ ನಿಲ್ದಾಣದಲ್ಲಿ ಸಿಲುಕಿಕೊಂಡಿದ್ದ ಒಲಿಂಪಿಕ್ ಪದಕ ವಿಜೇತೆ ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧು ಭಯಾನಕ ಅನುಭವವನ್ನು ಹಂಚಿಕೊಂಡಿದ್ದಾರೆ. ದುಬೈ ವಿಮಾನ ನಿಲ್ದಾಣದಲ್ಲಿ ನಾವು ಆಶ್ರಯ ಪಡೆದಿದ್ದ ಸ್ಥಳದ ಬಳಿ ಸ್ಫೋಟ ಸಂಭವಿಸಿದೆ. ಆ ಕ್ಷಣಗಳು ಅತ್ಯಂತ ಭಯಾನಕವಾಗಿದ್ದವು ಎಂದು ಸಿಂಧು ಹೇಳಿದ್ದಾರೆ. ಇಂಗ್ಲೆಂಡ್ನ ಬರ್ಮಿಂಗ್ಹ್ಯಾಮ್ನಲ್ಲಿ ನಿಗದಿಯಾಗಿದ್ದ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಭಾಗವಹಿಸಲು ಬೆಂಗಳೂರಿನಿಂದ ನಾವು ತೆರಳುತ್ತಿದ್ದೆವು. ವಿಮಾನವು ದುಬೈನಲ್ಲಿ ಇಳಿಯುತ್ತಿದ್ದಂತೆ ವಿಮಾನ ನಿಲ್ದಾಣ ಗುರಿಯಾಗಿಸಿ ಕ್ಷಿಪಣಿ ದಾಳಿಗಳು ಪ್ರಾರಂಭವಾದವು. ಸ್ವಲ್ಪ ಸಮಯದಲ್ಲೇ ವಾಯುಪ್ರದೇಶವನ್ನು ಮುಚ್ಚಲಾಗಿದೆ ಎಂದು ಘೋಷಿಸಲಾಯಿತು. ಆಗಸದಲ್ಲೇ ಕ್ಷಿಪಣಿಗಳನ್ನು ಹೊಡೆದುರುಳಿಸುವ ದೃಶ್ಯಗಳು ಭಯಾನಕವಾಗಿದ್ದವು ಎಂದು ಪಿವಿ ಸಿಂಧು ಹೇಳಿದ್ದಾರೆ. ನಾವೆಲ್ಲರೂ ಈಗ ಸುರಕ್ಷಿತರಾಗಿದ್ದೇವೆ ಮತ್ತು ಹೆಚ್ಚು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ, ದುಬೈ ವಿಮಾನ ನಿಲ್ದಾಣದ ಸಿಬ್ಬಂದಿ ಮತ್ತು ದುಬೈ ಅಧಿಕಾರಿಗಳು ಮತ್ತು ದುಬೈನಲ್ಲಿರುವ ಭಾರತೀಯ ಹೈಕಮಿಷನ್ ಅಧಿಕಾರಿಗಳಿಗೆ ಧನ್ಯವಾದಗಳು ಎಂದು ಪಿವಿ ಸಿಂಧು ಹೇಳಿದ್ದಾರೆ.
ಪಾಕಿಸ್ತಾನ ಹಾಗೂ ಅಫ್ಘಾನಿಸ್ತಾನ ಸದ್ಯ ಓಪನ್ ವಾರ್ ನಲ್ಲಿದ್ದು, ಪರಸ್ಫರ ವೈಮಾನಿಕ ದಾಳಿಗಳನ್ನು ನಡೆಸಿಕೊಳ್ಳುತ್ತಿದ್ದಾರೆ. ಹೀಗೆ ಪಾಕ್ ನಡೆಸಿದ ವೈಮಾನಿಕ ದಾಳಿಗೆ ಪ್ರತೀಕಾರವಾಗಿ ತಾಲಿಬಾನಿಗಳು ಪಾಕಿಸ್ತಾನದಲ್ಲಿ ಈಗಾಗಲೇ ಭಾರತ ಆಪರೇಷನ್ ಸಿಂಧೂರ ಸಮಯದಲ್ಲಿ ನಡೆಸಿದ ನಿಖರ ದಾಳಿಯಿಂದ ಧ್ವಂಸಗೊಂಡು ಚೇತರಿಸಿಕೊಳ್ಳಲಾಗದೆ ಅತಂತ್ರ ಸ್ಥಿತಿಯಲ್ಲಿದ್ದ ಪಾಕಿಸ್ತಾನ ನೂರ್ ಖಾನ್ ವಾಯುನೆಲೆ ಸೇರಿದಂತೆ ಹಲವು ಮಿಲಿಟರಿ ಕೇಂದ್ರಗಳ ಮೇಲೆ ದಾಳಿ ನಡೆಸಿದೆ.ಇದರಿಂದ ಈಗಾಗಲೇ ಭಾಗಶಃ ಧ್ವಂಸಗೊಂಡಿದ್ದ ಈ ಸೇನಾ ನೆಲೆಗಳು ಸದ್ಯ ಮತ್ತಷ್ಟು ಹಾನಿಗೊಳಗಾಗಿವೆ. ಇನ್ನು, ಅಫ್ಘಾನ್ ವಾಯುಪ್ರದೇಶದಲ್ಲಿ ದಾಳಿ ನಡೆಸಿದರೆ ಇಂತಹ ಇನ್ನಷ್ಟು ಪ್ರತೀಕಾರದ ದಾಳಿಗಳನ್ನು ನಡೆಸಲಾಗುವುದು ಎಂದು ಅಫ್ಘಾನ್ ರಕ್ಷಣಾ ಸಚಿವಾಲಯ ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದೆ.
ಬಾಗಲಕೋಟೆಯ ಘಟನೆಯ ಬಗ್ಗೆ ಪೊಲೀಸರು ತನಿಖೆ ನಡೆಸಿ ಯಾರೇ ತಪ್ಪಿತಸ್ಥರಾಗಿರಲಿ ಅವರ ಮೇಲೆ ಕಾನೂನು ಕ್ರಮವನ್ನು ಕೈಗೊಳ್ಳಲು ಯಾರ ಅಭ್ಯಂತರವೂ ಇಲ್ಲ. ಕಾಂಗ್ರೆಸ್ ಶಾಸಕ ಮೇಟಿಯವರ ನಿಧನದಿಂದ ತೆರವಾದ ಬಾಗಲಕೋಟೆ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಈ ಘಟನೆ ವಿಶೇಷ ಮಹತ್ವ ಪಡೆದಿದೆ. ಇದರ ಫಲಾನುಭವಿಗಳಾರು ಎಂಬುದು ಚುನಾವಣಾ ಫಲಿತಾಂಶದ ನಂತರ ಗೊತ್ತಾಗುತ್ತದೆ. ಈಗಿನ ಪ್ರಕ್ಷುಬ್ಧ ವಾತಾವರಣ ಮತ್ತು ಕೋಮು ವಿಭಜನೆ ಚುನಾವಣೆ ಮುಗಿಯುವವರೆಗೆ ಮುಂದುವರಿದರೆ ಅಚ್ಚರಿ ಪಡಬೇಕಾಗಿಲ್ಲ. ಕೋಮುವಾದದ ದಳ್ಳುರಿಗೆ ಸಿಲುಕಿದ ಊರುಗಳು ಹೇಗೆ ಅವನತಿಯತ್ತ ದಾಪುಗಾಲಿಡುತ್ತವೆ ಎಂಬುದಕ್ಕೆ ನಮ್ಮ ಕಣ್ಣ ಮುಂದೆ ಹಲವಾರು ಉದಾಹರಣೆಗಳಿವೆ. ಉರಿಯುವ ಬೆಂಕಿಯಲ್ಲಿ ಊರು ಸುಟ್ಟು ಹೋದರೂ ಅದರಿಂದ ಮೈ ಕಾಯಿಸಿಕೊಳ್ಳುವವರು ಅದನ್ನು ಇಷ್ಟ ಪಡುತ್ತಾರೆ. ಯಾವುದೇ ಗಲಭೆ, ಹಿಂಸಾಚಾರಕ್ಕೆ ಯಾರು ಕಾರಣ ಎಂಬುದನ್ನು ಹುಡುಕುವ ಜೊತೆ ಜೊತೆಗೆ ಈ ಅಶಾಂತಿಯ ರಾಜಕೀಯ ಫಲಾನುಭವಿಗಳು ಯಾರು ಎಂಬ ಪ್ರಶ್ನೆಗೆ ಉತ್ತರವನ್ನೂ ಹುಡುಕಬೇಕಿದೆ. ಒಂದೊಂದು ರಾಜಕೀಯ ಪಕ್ಷಗಳಿಗೆ ಅವುಗಳದೇ ಆದ ಕಾರ್ಯಸೂಚಿಗಳು ಇರುತ್ತವೆ. ಕಾಂಗ್ರೆಸ್ನಂಥ ಪಕ್ಷಗಳು ಗ್ಯಾರಂಟಿ ಘೋಷಣೆ ಮಾಡಿ ಮತದಾರರ ಮುಂದೆ ಹೋಗುತ್ತವೆ. ಇನ್ನು ಕೆಲ ಪಕ್ಷಗಳು ಸ್ಥಳೀಯ, ಪ್ರಾದೇಶಿಕ ಜಾತಿಯನ್ನು ಬಳಸಿಕೊಳ್ಳುತ್ತವೆ. ಎಡಪಂಥೀಯ ಪಕ್ಷಗಳು ರೈತ, ಕಾರ್ಮಿಕರ, ಸಮಸ್ಯೆಗಳ ಸುತ್ತ ಸಂಘಟನೆ ಮಾಡುತ್ತವೆ. ಇವುಗಳಲ್ಲದೇ ಮತ್ತೆ ಕೆಲವು ಪಕ್ಷಗಳಿವೆ. ಕೋಮು ಆಧಾರದಲ್ಲಿ ಜನರನ್ನು ವಿಭಜಿಸಿ, ಪ್ರಕ್ಷುಬ್ಧ ಸ್ಥಿತಿಯ ನಡುವೆ ಅಧಿಕಾರಕ್ಕೆ ಬರಲು ಹವಣಿಸುತ್ತವೆ. ಇದು ಭಾರತದ ಇಂದಿನ ಪ್ರಜಾಪ್ರಭುತ್ವದ ಸ್ಥಿತಿ. ಅಂತಲೇ ಸಂವಿಧಾನ ಶಿಲ್ಪಿಬಾಬಾಸಾಹೇಬ ಅಂಬೇಡ್ಕರ್ ಅವರು ಭಾರತ ರಾಜಕೀಯವಾಗಿ ಪ್ರಜಾಪ್ರಭುತ್ವ ಪದ್ಧತಿಯನ್ನು ಸ್ವೀಕರಿಸಿದೆ. ಆದರೆ, ಭಾರತದ ಸಮಾಜ ಪ್ರಜಾಪ್ರಭುತ್ವ್ವವಾಗಿಲ್ಲ. ಈ ವಿರೋಧಾಭಾಸಗಳ ಜೊತೆ ಸಾಗುತ್ತಿದ್ದೇವೆ ಎಂದಿದ್ದರು. ಸಾವಿರಾರು ಜಾತಿ, ಕೋಮು, ಆಚಾರ, ವಿಚಾರಗಳನ್ನು ಒಳಗೊಂಡ ದೇಶ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಒಪ್ಪಿಕೊಳ್ಳುವುದು ಸುಲಭವಲ್ಲ. ಐದು ವರ್ಷಕ್ಕೊಮ್ಮೆ ನಡೆಯುವ ಚುನಾವಣೆ ಬಿಟ್ಟರೆ ಪ್ರಜಾಪ್ರಭುತ್ವ ಬೇರು ಬಿಟ್ಟಿರುವುದಕ್ಕೆ ಬೇರಾವ ಲಕ್ಷಣಗಳು ಇಲ್ಲಿ ಕಾಣುವುದಿಲ್ಲ. ಇತ್ತೀಚಿನ ಬಾಗಲಕೋಟೆ ಘಟನೆಯನ್ನು ಈ ಹಿನ್ನೆಲೆಯಲ್ಲಿ ನೋಡಬೇಕಿದೆ. ಭಾರತದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾತ್ರವಲ್ಲ ಎಲ್ಲ ಅಭಿವೃದ್ಧಿ ಚಟುವಟಿಕೆಗಳಿಗೆ ವ್ಯಾಪಾರ, ವಹಿವಾಟುಗಳಿಗೆ, ಶೈಕ್ಷಣಿಕ ವಾತಾವರಣಕ್ಕೆ ಅತ್ಯಂತ ಕಂಟಕಕಾರಿ ಆಗಿರುವುದು ಕೋಮು ಗಲಭೆ ಮತ್ತು ಹಿಂಸಾಚಾರ. ಬಾಗಲಕೋಟೆಯಲ್ಲಿ ಇತ್ತೀಚಿಗೆ ನಡೆದ ಕೋಮು ಹಿಂಸಾಚಾರದ ಕಾವು ಇನ್ನೂ ತಣ್ಣಗಾಗಿಲ್ಲ. ವಿಧಾನಸಭೆ ಉಪ ಚುನಾವಣೆ ಮುಗಿಯುವವರೆಗೆ ಇದು ಕಾವೇರುತ್ತಲೇ ಇರುತ್ತದೆ ಅಂದರೆ ಅತಿಶಯೋಕ್ತಿಯಲ್ಲ. ಆದರೆ ಬಾಗಲಕೋಟೆಯ ವ್ಯಾಪಾರ, ವಹಿವಾಟುಗಳಿಗೆ ಇದರಿಂದ ತುಂಬಾ ತೊಂದರೆಯಾಗಿದೆ. ಅಲ್ಲಿಂದ ಬಂದ ವರದಿಗಳು ಹಾಗೂ ನನಗೆ ಸಿಕ್ಕ ಖಚಿತ ಮಾಹಿತಿಯ ಪ್ರಕಾರ ಶಿವಾಜಿ ಜಯಂತಿಯ ಮೆರವಣಿಗೆಯ ದಿನ ನಡೆದ ಘಟನೆಯ ಪರಿಣಾಮವಾಗಿ ನಿಷೇಧಾಜ್ಞೆ ಹೇರಿರುವುದರಿಂದ ಒಂದು ವಾರದಿಂದ ಗ್ರಾಮೀಣ ಪ್ರದೇಶದ ಜನರು ಹಾಗೂ ಅಕ್ಕಪಕ್ಕದ ತಾಲೂಕುಗಳ ಜನರು ಸದಾ ಪ್ರಕ್ಷುಬ್ಧ ವಾದ ನಿಷೇಧಾಜ್ಞೆ ಹೇರಲ್ಪಟ್ಟಿರುವ ಬಾಗಲಕೋಟೆಗೆ ಬರಲು ಹಿಂಜರಿಯುತ್ತಿದ್ದಾರೆ. ಹೀಗಾಗಿ ವ್ಯಾಪಾರ, ವಹಿವಾಟುಗಳು ಸಂಪೂರ್ಣ ಸ್ಥಗಿತಗೊಂಡಿವೆ. ತಮ್ಮ ವ್ಯಾಪಾರ, ವಹಿವಾಟುಗಳು ನಿಂತು ಹೋಗಿರುವುದರಿಂದ ವ್ಯಾಪಾರಸ್ಥರು ರೋಸಿ ಹೋಗಿದ್ದಾರೆ. ನಾನು ಹುಬ್ಬಳ್ಳಿಯಲ್ಲಿ 25 ವರ್ಷಗಳ ಕಾಲ ಇದ್ದೆ. ಈಗಲೂ ಹುಬ್ಬಳ್ಳಿ-ಧಾರವಾಡದಲ್ಲಿ ಇರುವೆ. ಹುಬ್ಬಳ್ಳಿ ಈಗ ಕರ್ನಾಟಕದ ಮಾತ್ರವಲ್ಲ ಇಡೀ ದಕ್ಷಿಣ ಭಾರತದ ಸಂಘ ಪರಿವಾರದ ಪ್ರಮುಖ ಕೇಂದ್ರ. ಎಂಭತ್ತರ ದಶಕದಲ್ಲಿ ಇಲ್ಲಿ ಈದ್ಗಾ ಮೈದಾನದಲ್ಲಿ ಧ್ವಜ ಹಾರಿಸುವ ಕುರಿತಂತೆ ನಡೆದ ಕೋಮು ಹಿಂಸಾಚಾರದಲ್ಲಿ ಪೊಲೀಸ್ ಗೋಲಿಬಾರ್ಗೆ ಐದಾರು ಜನ ಬಲಿಯಾದರು. ಪರಿಸ್ಥಿತಿ ನಿಯಂತ್ರಣಕ್ಕೆ ಬಾರದಿರುವುದರಿಂದ ಒಂದೂವರೆ ತಿಂಗಳ ಕಾಲ ಕರ್ಫ್ಯೂ ಹೇರಲಾಗಿತ್ತು. ಇದರಿಂದ ವ್ಯಾಪಾರ, ವಹಿವಾಟು ಮತ್ತು ಶೈಕ್ಷಣಿಕ ಚಟುವಟಿಕೆಗಳ ಮೇಲೆ ದುಷ್ಪರಿಣಾಮ ಉಂಟಾಯಿತು. ಆ ಕಾಲದಲ್ಲೇ ಛೋಟಾ ಮುಂಬೈ ಎಂದು ಕರೆಯಲ್ಪಡುತ್ತಿದ್ದ ಹುಬ್ಬಳ್ಳಿಯ ಸುತ್ತಮುತ್ತಲಿನ ಐದಾರು ಜಿಲ್ಲೆಗಳ ಜನರು ವ್ಯಾಪಾರ, ವಹಿವಾಟುಗಳಿಗಾಗಿ, ಆಸ್ಪತ್ರೆಯ ಚಿಕಿತ್ಸೆಗಾಗಿ ಹುಬ್ಬಳ್ಳಿಗೆ ಬರುತ್ತಾರೆ.ಕರ್ಫ್ಯೂ ಪರಿಣಾಮವಾಗಿ ಜನರು ಹುಬ್ಬಳ್ಳಿಗೆ ಬರುವುದು ಒಮ್ಮಿಂದೊಮ್ಮೆಲೇ ನಿಂತು ಹೋಯಿತು. ಹುಬ್ಬಳ್ಳಿಯ ಬದಲಿಗೆ ಗದಗ ಮತ್ತು ಹಾವೇರಿಗಳಿಗೆ ಹೋಗತೊಡಗಿದರು.ಈಗ ಅವೆರಡೂ ನಗರಗಳು ದೊಡ್ಡ ವ್ಯಾಪಾರ ಕೇಂದ್ರಗಳಾಗಿ ಬೆಳೆದಿವೆ. ಇದಲ್ಲದೆ ಕೋಮುವಾದದ ಪರಿಣಾಮವಾಗಿ ವ್ಯಾಪಾರ , ವಹಿವಾಟು ಮಾತ್ರವಲ್ಲ ಅಭಿವೃದ್ಧಿ ಚಟುವಟಿಕೆಗಳಲ್ಲೂ ಹುಬ್ಬಳ್ಳಿ ಹಿಂದೆ ಉಳಿದಿದೆ. ಹುಬ್ಬಳ್ಳಿಯಿಂದ ಕೇವಲ 18 ಕಿ.ಮಿ. ಅಂತರದಲ್ಲಿ ಧಾರವಾಡ ಇದ್ದರೂ ಅಲ್ಲಿ ಹುಬ್ಬಳ್ಳಿಯಷ್ಟು ಪರಿಸ್ಥಿತಿ ಹದಗೆಟ್ಟಿಲ್ಲ. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಬಗ್ಗೆ ವಿವರಿಸಬೇಕಾಗಿಲ್ಲ.ಶೈಕ್ಷಣಿಕ, ವೈದ್ಯಕೀಯ ಮೊದಲಾದ ಕ್ಷೇತ್ರಗಳಿಗಿಂತ ಮಂಗಳೂರು , ಉಡುಪಿ ಶತಮಾನದ ಹಿಂದೆಯೇ ಕರ್ನಾಟಕದ ಉಳಿದ ಜಿಲ್ಲೆಗಳಿಗಿಂತ ಸಾಕಷ್ಟು ಮುಂದಿದ್ದವು. ಈಗಲೂ ಇವೆ. ಆದರೆ ನಿರೀಕ್ಷಿಸಿದಷ್ಟು ಅಲ್ಲ. ಜನರು ಕೇಳದೇ ಯಾವ ಸರಕಾರವೂ ಏನನ್ನೂ ಕೊಡುವುದಿಲ್ಲ. ಜನರ ನಿರಾಸಕ್ತಿಯಿಂದಾಗಿ ಜಿಲ್ಲೆಗೆ ಸರಕಾರದಿಂದ ಬರಬೇಕಾದ ಅಭಿವೃದ್ಧಿ ಯೋಜನೆಗಳು, ವೈದ್ಯಕೀಯ ಸೌಕರ್ಯಗಳು ಬರಲಿಲ್ಲ. ಅತ್ಯಂತ ಹಿಂದುಳಿದ. ಕಲ್ಯಾಣ ಕರ್ನಾಟಕದ ಕಲಬುರಗಿ, ಬೀದರ್, ರಾಯಚೂರು, ಕೊಪ್ಪಳ ಜಿಲ್ಲೆಗಳು ಈ ನಿಟ್ಟಿನಲ್ಲಿ ಎಷ್ಟೋ ವಾಸಿ. ಕಲಬುರಗಿ ಜನರು ಪಟ್ಟು ಹಿಡಿದು ಹೋರಾಟ ಮಾಡಿ ಸಂವಿಧಾನದ ವಿಶೇಷ ಸ್ಥಾನಮಾನ 370 ಪಡೆದರು. ಇದರಿಂದಾಗಿ ಕರ್ನಾಟಕದ ಎಲ್ಲಾ ಮೆಡಿಕಲ್, ಇಂಜಿನಿಯರಿಂಗ್ ಕಾಲೇಜುಗಳಲ್ಲಿ, ಸರಕಾರದ ನೌಕರಿಗಳಲ್ಲಿ ಕಲ್ಯಾಣ ಕರ್ನಾಟಕ ಭಾಗಕ್ಕೆ ಪ್ರತ್ಯೇಕ ಮೀಸಲು ವ್ಯವಸ್ಥೆ ಇದೆ. ಈ ಭಾಗಕ್ಕೆ ಸಾವಿರಾರು ಕೋಟಿ ರೂ. ವಿಶೇಷ ಅನುದಾನ ಬರುತ್ತದೆ. ಕಲಬುರಗಿಯಲ್ಲಿ ಕೇಂದ್ರೀಯ ವಿಶ್ವವಿದ್ಯಾನಿಲಯ, ಇಎಸ್. ಐ. ಆಸ್ಪತ್ರೆ, ಜಯದೇವ ಹೃದ್ರೋಗ ಆಸ್ಪತ್ರೆ, ಸಂಜಯ ಗಾಂಧಿ ಆಸ್ಪತ್ರೆ ಇದೆ. ನಿಮಾನ್ಸ್ಸ್ ಕೂಡ ಬರಲಿದೆ. ಇದಕ್ಕೆ ಮುಖ್ಯ ಕಾರಣ ಕಲ್ಯಾಣ ಕರ್ನಾಟಕ ಕೋಮು ಗಲಭೆ ಮುಕ್ತ ಪ್ರದೇಶವಾಗಿದೆ. ಕೋಮು ರಾಜಕೀಯದ ಬಗ್ಗೆ ಜನರು ಮಾತಾಡುವುದಿಲ್ಲ. ಆದರೆ ಮಂಗಳೂರು ಈಗ ನಿರಂತರವಾಗಿ ಕೋಮು ಹಿಂಸಾಚಾರ ಪೀಡಿತವಾಗಿದೆ. ಬಹುತೇಕ ಯುವಕರು ತಲೆಯಲ್ಲಿ ಕೋಮು ದ್ವೇಷದ ವಿಷ ಬೀಜ ಬಿತ್ತಲಾಗಿದೆ. ಹೀಗಾಗಿ ಇತ್ತೀಚಿನ ವರ್ಷಗಳಲ್ಲಿ ಸರಕಾರದ ಯಾವ ಮಹತ್ವದ ಯೋಜನೆಗಳೂ ಇಲ್ಲಿ ಬಂದಿಲ್ಲ ಯಾವುದೇ ಪ್ರದೇಶದಲ್ಲಿ ಬಂಡವಾಳ ಹೂಡಿಕೆ ಮಾಡುವವರು, ವ್ಯಾಪಾರ ವಹಿವಾಟು ನಡೆಸುವವರು ಅಲ್ಲಿ ಶಾಂತ ಮತ್ತು ಸಹಜ ಪರಿಸ್ಥಿತಿ ಇರಬೇಕೆಂದು ಬಯಸುತ್ತಾರೆ. ನಿರಂತರವಾಗಿ ಗಲಭೆ, ಹಿಂಸಾಚಾರ, ನಿಷೇಧಾಜ್ಞೆ , ಕರ್ಫ್ಯೂ ಇರುವ ಪ್ರದೇಶದಲ್ಲಿ ಹೂಡಿಕೆ ಮಾಡಲು ಯಾರೂ ಇಷ್ಟ ಪಡುವುದಿಲ್ಲ. ಹೀಗಾಗಿ ಇಂಥ ಪ್ರದೇಶಗಳು ಕ್ರಮೇಣ ಹಿಂದುಳಿಯುತ್ತ ಹೋಗುತ್ತವೆ. ನಂಬಿಕೆ, ಸಮಾಧಾನಕ್ಕೆ ದೇವರು, ಧರ್ಮ ಬೇಕು, ಆದರೆ ಬದುಕಲು ಶಿಕ್ಷಣ, ಅಕ್ಷರ, ಆರೋಗ್ಯ, ವ್ಯಾಪಾರ, ಕಾರ್ಖಾನೆ ಬೇಕು. ಇಂಥ ಅರಿವು ಮೂಡದಿದ್ದರೆ ಯಾರಿಗೂ ನೆಮ್ಮದಿ ಉಳಿಯುವುದಿಲ್ಲ. ಕೆಲವರು ಭಯ ಸೃಷ್ಟಿಗಾಗಿ ಹೇಳುವಂತೆ ಈ ಭಾರತದಲ್ಲಿ ಯಾವ ಧರ್ಮವೂ ಅಪಾಯದಲ್ಲಿ ಇಲ್ಲ. ಆದರೆ ಎಲ್ಲ ಧರ್ಮಗಳಿಗೆ ಸೇರಿದವರು ಅಥವಾ ಯಾವುದೇ ನಂಬಿಕೆ ಇರದಿದ್ದವರ ಬದುಕು ತೊಂದರೆಯಲ್ಲಿದೆ. ಬಡತನ, ನಿರುದ್ಯೋಗ, ಅಸಮಾನತೆ, ಅಪೌಷ್ಟಿಕತೆ, ಹೆಣ್ಣು ಮಕ್ಕಳ ಸುರಕ್ಷತೆ , ಸಣ್ಣಪುಟ್ಟ ಮಕ್ಕಳ ಆರೋಗ್ಯ ಸಮಸ್ಯೆ, ದುಬಾರಿ ಯಾದ ಶಿಕ್ಷಣ ಮತ್ತು ವೈದ್ಯಕೀಯ ಖರ್ಚುವೆಚ್ಚಗಳು ಇಂಥ ಹಲವಾರು ಸಮಸ್ಯೆಗಳು ಎಲ್ಲರನ್ನೂ ಸಂಕಷ್ಟಕ್ಕೆ ನೂಕಿವೆ. ಸರಕಾರಿ ಆಸ್ಪತ್ರೆಗಳು ಇರಬೇಕಾದ ಕಡೆ ಅತ್ಯಂತ ದುಬಾರಿಯಾದ ಖಾಸಗಿ ಆಸ್ಪತ್ರೆಗಳು ಬರುತ್ತಿವೆ. ಇವುಗಳಿಗಾಗಿ ನಾವು ಧ್ವನಿಯೆತ್ತಬೇಕಾಗಿದೆ. ಜನಸಾಮಾನ್ಯರು ಇಂಥ ಜ್ವಲಂತ ಸಮಸ್ಯೆಗಳಿಗಾಗಿ ಧ್ವನಿಯೆತ್ತಬಾರದೆಂದು, ಹೋರಾಡಬಾರದೆಂದು ಧರ್ಮ ಅಪಾಯದಲ್ಲಿ ಇದೆ ಎಂಬು ಸುಳ್ಳು ಕತೆಗಳನ್ನು ಸೃಷ್ಟಿಸಿ ಅಮಾಯಕ ಜನರನ್ನು ದಾರಿ ತಪ್ಪಿಸಲಾಗುತ್ತಿದೆ. ನಾನು ಅವಿಭಜಿತ ಬಿಜಾಪುರ ಜಿಲ್ಲೆಯಿಂದ ಬಂದವನು. ಆಗ ಬಾಗಲಕೋಟೆ ಬಿಜಾಪುರ ಜಿಲ್ಲೆಯಲ್ಲೇ ಇತ್ತು. ಈಗ ಎರಡು ಜಿಲ್ಲೆಯಾಗಿ ನನ್ನ ಊರು ಜಮಖಂಡಿ ತಾಲೂಕಿನ ಸಾವಳಗಿ ಬಾಗಲಕೋಟ ಜಿಲ್ಲೆಗೆ ಹೋಗಿದೆ. ನನಗೆ ಎರಡು ಊರುಗಳಿವೆ.ಒಂದು ಜನಿಸಿದ ಊರು ಸಾವಳಗಿಯಾದರೆ ಬೆಳೆದ ಊರು ಬಸವನ ಬಾಗೇವಾಡಿ. ಹೀಗಾಗಿ ನಾನು ನನ್ನ ಜಿಲ್ಲೆ ಬಿಜಾಪುರ ಎಂದೇ ಈಗಲೂ ಹೇಳುತ್ತೇನೆ. ಬಾಗಲಕೋಟೆ ಜೊತೆಗೆ ನನ್ನ ಒಡನಾಟ ಹಳೆಯದು. ಅದು ಈಗಲ್ಲ ಅರುವತ್ತರ ದಶಕದಿಂದ ಕೋಮು ಗಲಭೆಯ ಸೂಕ್ಷ್ಮ ಪ್ರದೇಶ. ಪ್ರತೀ ವರ್ಷ ಆರೆಸ್ಸೆಸ್ ಪಥ ಸಂಚಲನ ಮಸೀದಿ ಮುಂದೆ ಹೋಗುವುದು, ಗಲಾಟೆಯಾಗುವುದು ಅಲ್ಲಿ ಸಾಮಾನ್ಯ. ಅಲ್ಲಿ 1972ರಲ್ಲಿ ಎನ್.ಕೆ.ಉಪಾಧ್ಯಾಯರು ಕಮ್ಯುನಿಸ್ಟ್ ಪಕ್ಷದ ಅಭ್ಯರ್ಥಿಯಾಗಿ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿದಾಗ ಅಲ್ಲಿ ನಾನು ಅವರ ಪ್ರಚಾರಕ್ಕಾಗಿ ಒಂದು ತಿಂಗಳು ಇದ್ದೆ.ಆಗ ನನಗೆ ಹದಿನೆಂಟರ ಪ್ರಾಯ, ಉಪಾಧ್ಯಾಯರ ಚುನಾವಣಾ ಪ್ರಚಾರಕ್ಕೆ ಹಿರಿಯ ಕಮ್ಯುನಿಸ್ಟ್ ನಾಯಕರಾದ ಇ.ಎಂ.ಎಸ್. ನಂಬೂದಿರಿಪಾಡ್ ಮತ್ತು ಪಿ.ರಾಮಮೂರ್ತಿ ಬಂದಿದ್ದರು. ನಮ್ಮ ಪ್ರತೀ ಚುನಾವಣಾ ಪ್ರಚಾರ ಸಭೆಯಲ್ಲಿ ಸಂಘಿಗಳು ಬಂದು ಗಲಾಟೆ ಮಾಡುತ್ತಿದ್ದರು. ಒಮ್ಮೆ ಕಲಬುರಗಿಯ ಕಮ್ಯುನಿಸ್ಟ್ ನಾಯಕ ಗಂಗಾಧರ ನಮೋಶಿ ಅವರು ಬಹಿರಂಗ ಸಭೆಯಲ್ಲಿ ಆರೆಸ್ಸೆಸ್, ಜನಸಂಘವನ್ನು ಟೀಕಿಸಿದಾಗ ದೊಡ್ಡ ಕೋಲಾಹಲವೇ ನಡೆಯಿತು.ನಮೋಶಿಯವರು ಸುಲಭಕ್ಕೆ ಮಣಿಯುವ ಆಸಾಮಿಯಲ್ಲ. ಅವರಿಗೆ ಮೈ ಮುಟ್ಟಿ ನೋಡಿಕೊಳ್ಳುವಂತೆ ಜಾಡಿಸಿದರು. ಆಗ ಬಿಜೆಪಿ ಇರಲಿಲ್ಲ. ಜನಸಂಘ ಇತ್ತು. ಆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಠೇವಣಿ ಕಳೆದುಕೊಂಡ. ಉಪಾಧ್ಯಾಯರಿಗೂ ಜಾಸ್ತಿ ಮತ ಬರಲಿಲ್ಲ. ನಂತರ ಜನಸಂಘ ಬಿಜೆಪಿಯಾಗಿ ಬೆಳೆದಿದ್ದು ಜೆ.ಪಿ.ಚಳವಳಿಯ ಕೃಪೆಯಿಂದ. ಸುಮ್ಮನೆ ಹಳೆಯದೆಲ್ಲ ನೆನಪಾಗಿ ಬರೆದೆ. ಬಾಗಲಕೋಟೆಯ ಘಟನೆಯ ಬಗ್ಗೆ ಪೊಲೀಸರು ತನಿಖೆ ನಡೆಸಿ ಯಾರೇ ತಪ್ಪಿತಸ್ಥರಾಗಿರಲಿ ಅವರ ಮೇಲೆ ಕಾನೂನು ಕ್ರಮವನ್ನು ಕೈಗೊಳ್ಳಲು ಯಾರ ಅಭ್ಯಂತರವೂ ಇಲ್ಲ. ಕಾಂಗ್ರೆಸ್ ಶಾಸಕ ಮೇಟಿಯವರ ನಿಧನದಿಂದ ತೆರವಾದ ಬಾಗಲಕೋಟೆ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಈ ಘಟನೆ ವಿಶೇಷ ಮಹತ್ವ ಪಡೆದಿದೆ. ಇದರ ಫಲಾನುಭವಿಗಳಾರು ಎಂಬುದು ಚುನಾವಣಾ ಫಲಿತಾಂಶದ ನಂತರ ಗೊತ್ತಾಗುತ್ತದೆ. ಈಗಿನ ಪ್ರಕ್ಷುಬ್ಧ ವಾತಾವರಣ ಮತ್ತು ಕೋಮು ವಿಭಜನೆ ಚುನಾವಣೆ ಮುಗಿಯುವವರೆಗೆ ಮುಂದುವರಿದರೆ ಅಚ್ಚರಿ ಪಡಬೇಕಾಗಿಲ್ಲ.ಇಂಥ ಸಂದರ್ಭವನ್ನು ಎದುರಿಸುವ ಸ್ಥಿತಿಯಲ್ಲಿ ಕಾಂಗ್ರೆಸ್ ಇಲ್ಲ.ಚುನಾವಣೆಯಲ್ಲಿ ಚರ್ಚೆಗೆ ಬರಬೇಕಾದ ಮುಳುಗಡೆ ಸಂತ್ರಸ್ತರ ಸಮಸ್ಯೆ ಮುಂತಾದ ವಿಷಯಗಳು ಮರೆಗೆ ಸರಿದಿವೆ. ನಡೆಯಬಾರದ ಆದರೆ ನಡೆದ ಒಂದು ಅಹಿತಕರ, ಅಪ್ರಿಯಕರ ಘಟನೆಯ ಸುತ್ತ ವಾತಾವರಣ ಸಷ್ಟಿಸಿ ಗೆಲುವು ಸಾಧಿಸಲು ಯಾರು ಯತ್ನಿಸುತ್ತಾರೆ ಎಂಬುದರ ಬಗ್ಗೆ ವಿವರಿಸಬೇಕಾಗಿಲ್ಲ. ಕಳೆದ ಒಂದು ದಶಕದ ಕಾಲಾವಧಿಯಲ್ಲಿ ದೇಶದ ರಾಜಕೀಯ ಚಿತ್ರ ಸಂಪೂರ್ಣ ಬದಲಾಗಿದೆ. ಪ್ರಜಾಪ್ರಭುತ್ವದ ಮೂಲಕ ಅಧಿಕಾರಕ್ಕೆ ಬಂದ ಪ್ರಜಾಪ್ರಭುತ್ವ ವಿರೋಧಿ ಶಕ್ತಿಗಳು ಜನ ಬೆಂಬಲ ಕಡಿಮೆಯಾಗುತ್ತಿದ್ದಂತೆ ಎಸ್. ಐ.ಆರ್. ನಂಥ ಹೊಸ ಅಸ್ತ್ರ ಪ್ರಯೋಗಿಸಿ ಮತದಾರರ ಪಟ್ಟಿಗೆ ಶಸ್ತ್ರ ಚಿಕಿತ್ಸೆ ಮಾಡಲು ಹೊರಟಿದ್ದಾರೆ. ಈ ಜನತಂತ್ರ ವಿರೋಧಿ ಹುನ್ನಾರವನ್ನು ವಿರೋಧಿಸುವವರೇ ಇಲ್ಲದಂತ ಪರಿಸ್ಥಿತಿ ದೇಶದಲ್ಲಿ ನಿರ್ಮಾಣವಾಗಿದೆ. ಇನ್ನು ಏನೇನು ಕಾದಿದೆಯೋ ಯಾರಿಗೆ ಗೊತ್ತು? ಫ್ಯಾಶಿಸ್ಟ್ ಶಕ್ತಿಗಳು ಅಧಿಕಾರಕ್ಕೆ ಬಂದರೆ ತಾವು ಹತ್ತಿ ಬಂದ ಏಣಿಯನ್ನೇ ಹೇಗೆ ಒದ್ದು ಕೆಡವುತ್ತಾರೆ ಎಂಬುದಕ್ಕೆ ಇತಿಹಾಸದಲ್ಲಿ ಜರ್ಮನಿ ಮತ್ತು ಇಟಲಿಯಂಥ ಉದಾಹರಣೆಗಳಿವೆ.ಈ ಹಿನ್ನೆಲೆಯಲ್ಲಿ ಭಾರತದ ಸಂಸದೀಯ ಪ್ರಜಾಪ್ರಭುತ್ವ ಅಪಾಯದಲ್ಲಿ ಇರುವುದು ಉತ್ಪ್ರೇಕ್ಷೆಯಲ್ಲ. ಕಲ್ಯಾಣ ಕ್ರಾಂತಿಯ ನಂತರ ಬಸವಣ್ಣನವರು ದುರಂತ ಅಂತ್ಯ ಕಂಡ ಕೂಡಲ ಸಂಗಮ ಮತ್ತು ಪ್ರತೀ ಸಮರದಲ್ಲಿ ವಿಜಯದ ದುಂದುಂಬಿ ಮೊಳಗಿಸಿದ ಚಾಲುಕ್ಯರ ಎರಡನೇ ಪುಲಕೇಶಿ ಆಳಿದ ಬಾದಾಮಿ, ಐಹೊಳೆಗಳನ್ನು ಒಡಲಲ್ಲಿ ಇಟ್ಟು ಕೊಂಡ ಬಾಗಲಕೋಟೆ ಜಿಲ್ಲೆ ಈಗ ನಡೆಯಬಾರದ ಘಟನೆ ನಡೆದು ಪಡೆಯಬಾರದ ಕೆಟ್ಟ ಹೆಸರನ್ನು ಪಡೆದು ಗಮನ ಸೆಳೆದಿದೆ ಎಂಬುದು ವಿಷಾದಕರ ಸಂಗತಿಯಾಗಿದೆ.
ದೇಶ ದೇಶಗಳ ನಡುವೆ ಯುದ್ದದ ಉನ್ಮಾದ : ಜಾಗತಿಕ ಅಶಾಂತಿಯ ಮಬ್ಬು - ವಿಶ್ವಕ್ಕಾಗುವ ನೇರ ಪರಿಣಾಮಗಳೇನು?
Global Conflict Effect on India : ಜಗತ್ತಿನಲ್ಲಿ ಶಾಂತಿ ನೆಲೆಸಲು ಪ್ರಯತ್ನಿಸಬೇಕಾದ ವಿಶ್ವದ ಬಲಾಢ್ಯ ದೇಶಗಳೇ, ಯುದ್ದಭೂಮಿಗೆ ಇಳಿದಿದೆ. ವರುಷ ವರುಷಗಳಿಂದ ಯುದ್ದ ನಡೆಯುತ್ತಿದ್ದರೂ, ಕೆಲವು ರಾಷ್ಟ್ರಗಳಿಗೆ ಯುದ್ದದ ಉನ್ಮಾದ ಕಮ್ಮಿಯಾಗುತ್ತಿಲ್ಲ. ಇರಾನ್’ನ ಸರ್ವೋಚ್ಚ ನಾಯಕ ಖಮೇನಿ ಹತ್ಯೆಯ ನಂತರ ಯುದ್ದ ಇತರ ದೇಶಗಳಿಗೂ ಆವರಿಸುವ ಭೀತಿ ಎದುರಾಗಿದೆ. ಇನ್ನೊಂದು ಕಡೆ, ನೆರೆಯ ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನದ ನಡುವೆಯೂ ಓಪನ್ ವಾರ್ ಘೋಷಣೆಯಾಗಿದೆ. ಇವೆಲ್ಲಾ ಬೆಳವಣಿಗೆಗಳು, ವಿಶ್ವದ ಮೇಲೆ ಯಾವ ರೀತಿ ಪರಿಣಾಮ ಬೀರಲಿದೆ, ಯುದ್ದಗಳಿಗೆ ಮೂಲ ಕಾರಣವೇನು ಎನ್ನುವ ವಿಶ್ಲೇಷಣೆಯನ್ನು ಈ ಲೇಖನದಲ್ಲಿ ಮಾಡುವ ಪ್ರಯತ್ನವನ್ನು ಮಾಡಲಾಗಿದೆ.
Donald Trump: ಅಮೆರಿಕ, ಇಸ್ರೇಲ್ Vs ಇರಾನ್ ಯುದ್ಧದ ಬಗ್ಗೆ ಬಿಗ್ ಅಪ್ಡೇಟ್ಸ್ ಕೊಟ್ಟ ಡೊನಾಲ್ಡ್ ಟ್ರಂಪ್, ಏನದು
Donald Trump: ಅಮೆರಿಕ, ಇಸ್ರೇಲ್ Vs ಇರಾನ್ ನಡುವಿನ ಯುದ್ಧವು ತೀವ್ರ ಸ್ವರೂಪ ಪಡೆದುಕೊಂಡಿದೆ. ಈ ಯುದ್ಧದ ವ್ಯಾಪ್ತಿಯು ವಿಸ್ತಾರಗೊಳ್ಳುತ್ತಿದೆ. ಯುರೋಪಿಯನ್ ರಾಷ್ಟ್ರಗಳಿಗೂ ಈ ಯುದ್ಧ ವ್ಯಾಪಿಸುತ್ತಿದ್ದು, ವಿಶ್ವದ ಅಂತ್ಯಂತ ಸುರಕ್ಷಿತ ದೇಶ ಎಂಬ ಖ್ಯಾತಿ ಗಳಿಸಿದ್ದ ದುಬೈನ ಮೇಲೂ ಈ ಯುದ್ಧ ತೀವ್ರ ಪರಿಣಾಮ ಬೀರಿದೆ. ಈ ರೀತಿಯ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಅಮೆರಿಕದ ಅಧ್ಯಕ್ಷ
ಲೆಬನಾನ್ ಮೇಲೆ ಇಸ್ರೇಲ್ನಿಂದ ಬಾಂಬ್ ದಾಳಿ : ಬೈರೂತ್ನಿಂದ ಸಾವಿರಾರು ಜನರ ಸ್ಥಳಾಂತರ
ಲೆಬನಾನ್ : ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಮತ್ತಷ್ಟು ಉಲ್ಬಣಗೊಂಡಿದ್ದು, ದಕ್ಷಿಣ ಲೆಬನಾನ್ನ 3 ಪಟ್ಟಣಗಳ ಮೇಲೆ ಇಸ್ರೇಲ್ ದಾಳಿ ನಡೆಸಿದೆ ಎಂದು Aljazeera ವರದಿ ಮಾಡಿದೆ. ಲೆಬನಾನ್ ರಾಜಧಾನಿ ಬೈರೂತ್, ಹ್ಯಾರಿಸ್, ನಬತಿಯೇಹ್ ಅಲ್-ಫವ್ಕಾ, ಮತ್ತು ಮೆಫ್ಡೌನ್ ಪಟ್ಟಣಗಳಲ್ಲಿ ಇಸ್ರೇಲ್ ದಾಳಿ ನಡೆಸಿದೆ ಎಂದು ತಿಳಿದು ಬಂದಿದೆ. ಉತ್ತರ ಇಸ್ರೇಲ್ ಮೇಲೆ ರಾಕೆಟ್ ದಾಳಿಯ ನಂತರ ಹಿಝ್ಬುಲ್ಲಾ ಮೇಲೆ ದಾಳಿ ಮಾಡುತ್ತಿರುವುದಾಗಿ ಇಸ್ರೇಲ್ ಸೇನೆ ಹೇಳಿದೆ. ಬಿಂಟ್ ಜೆಬೈಲ್ ಪಟ್ಟಣ ಸೇರಿದಂತೆ ದಕ್ಷಿಣ ಲೆಬನಾನ್ನ 53 ಹಳ್ಳಿಗಳು ಮತ್ತು ಪಟ್ಟಣಗಳ ಜನರಿಗೆ ಬಲವಂತವಾಗಿ ಸ್ಥಳಾಂತರಗೊಳ್ಳುವಂತೆ ಇಸ್ರೇಲ್ ಮಿಲಿಟರಿ ಆದೇಶಗಳನ್ನು ಹೊರಡಿಸಿದೆ. ಇಸ್ರೇಲಿ ದಾಳಿಯ ನಂತರ ನಿವಾಸಿಗಳು ಲೆಬನಾನ್ ರಾಜಧಾನಿ ಬೈರುತ್ ನಿಂದ ಪಲಾಯನ ಮಾಡುತ್ತಿರುವುದರಿಂದ ಭಾರೀ ಜನದಟ್ಟನೆ ಕಂಡು ಬಂದಿದೆ ಎಂದು ವರದಿಯಾಗಿದೆ.
ಹೆಬ್ಬಾಳ ದಟ್ಟಣೆಗೆ ಕಿರು ಸುರಂಗ: ₹1086 ಕೋಟಿ ವೆಚ್ಚದ ಯೋಜನೆಗೆ 4 ಕಂಪನಿಗಳ ಸ್ಪರ್ಧೆ, 18 ತಿಂಗಳಲ್ಲಿ ಪೂರ್ಣ
ಹೆಬ್ಬಾಳ ಟ್ರಾಫಿಕ್ ಸಮಸ್ಯೆಯನ್ನ ಸುಧಾರಿಸಲು ಆರು ಲೇನ್ಗಳ ಕಿರು ಸುರಂಗ ರಸ್ತೆ ನಿರ್ಮಾಣ ಯೋಜನೆಗೆ ಬಿಡಿಎ ಮುಂದಾಗಿದೆ. ಈ ಯೋಜನೆಯ ಟೆಂಡರ್ಗಳನ್ನು ಬಿಡಿಎ ತೆರೆದಿದ್ದು, 4 ಮೂಲಸೌಕರ್ಯ ಯೋಜನಾ ಸಂಸ್ಥೆಗಳು ಭಾಗವಹಿಸಿವೆ. ಅಂದ್ಹಾಗೆ, ಈ ಯೋಜನೆಗೆ ಅಂದಾಜು 1086 ಕೋಟಿ ರೂಪಾಯಿ ಖರ್ಚಾಗಲಿದೆ.
ಒಂದೆಡೆ ನಾಯಕತ್ವದ ಬದಲಾವಣೆಯ ಚರ್ಚೆ ನಡೆಯುತ್ತಿದೆ. ಇನ್ನೊಂದೆಡೆ ಸಿದ್ದರಾಮಯ್ಯ ಬಜೆಟ್ ತಯಾರಿ ನಡೆಸುತ್ತಿದ್ದಾರೆ. ರಾಜಕೀಯವಾಗಿ ಮುಸ್ಸಂಜೆಯಲ್ಲಿರುವ ಅವರು ಇಷ್ಟೆತ್ತರಕ್ಕೆ ಬೆಳೆಯಲು ಕಾರಣವಾಗಿದ್ದೇ ಕನ್ನಡ ಕಾವಲು ಸಮಿತಿಯಿಂದ ಈವರೆಗೆ ಭಿನ್ನ ಆಡಳಿತಗಾರನಾಗಿ ಗೋಚರಿಸಿದ್ದರಿಂದ. ಆದರೀಗ ಅವರ ರಾಜಕೀಯ ಹತಾರಗಳು ಮೊದಲಿನ ಮೊನಚು ಉಳಿಸಿಕೊಂಡಿಲ್ಲ. ಅದರಿಂದಾಗಿ ರಾಜ್ಯದ ಜನರ ಮನಸ್ಸು ಗೆಲ್ಲಲು ಮತ್ತು ರಾಜಕೀಯವಾಗಿ ಇರುವ ಅಡೆತಡೆಗಳನ್ನು ನಿವಾರಿಸಿಕೊಳ್ಳಲು ಆಡಳಿತ ಮತ್ತು ಬಜೆಟ್ ಮೂಲಕವೇ ‘ಚಮತ್ಕಾರ’ ಮಾಡಬೇಕು. ಸಿದ್ದರಾಮಯ್ಯ ಕೆಲವು ವಿಷಯದಲ್ಲಿ ಯಥಾಸ್ಥಿತಿವಾದಿ. ಬಜೆಟ್ ವಿಷಯದಲ್ಲಿ ಸಂಪ್ರದಾಯವಾದಿ. ಹಿಂದಿನವರು ಕಡೆಗಣಿಸಿದ್ದ ಅಹಿಂದ ವರ್ಗಗಳಿಗೆ ಹಾಲೆರೆದಿರುವುದು ದಿಟ. ಬಡವರ ಪರ ಮರುಗಿರುವುದು ನಿಜ. ಶಿಸ್ತು ಕಾಯ್ದುಕೊಂಡಿರುವುದು ಸತ್ಯ. ಆದರೆ ‘ಇದ್ದುದ್ದರಲ್ಲಿ ಮಾತ್ರವೇ ಹಂಚುವೆ’ ಎನ್ನುವುದು ದೌರ್ಬಲ್ಯವಾಗಬಾರದು. ಜಿಎಸ್ಟಿ ವ್ಯವಸ್ಥೆ ಜಾರಿಯಾದ ಬಳಿಕ ರಾಜ್ಯ ಸರಕಾರಕ್ಕೆ ತೆರಿಗೆ ಮೂಲದಿಂದ ಬರುತ್ತಿದ್ದ ಆದಾಯ ಕಡಿಮೆಯಾಗಿದೆ. ಗಾಯದ ಮೇಲೆ ಬರೆ ಎಳೆದಂತೆ ಕೇಂದ್ರ ಸರಕಾರ ಅನುದಾನ ಹಂಚಿಕೆಯಲ್ಲೂ ದೊಡ್ಡ ಮಟ್ಟದ ತಾರತಮ್ಯ ಮಾಡುತ್ತಿದೆ. ಜೊತೆಗೆ ಗ್ಯಾರಂಟಿಗಳ ಹೊರೆ ಬಾಧಿಸುತ್ತಿದೆ. ಇಂಥ ಪರಿಸ್ಥಿತಿಯಲ್ಲಿ ಸಂಪ್ರದಾಯವಾದಿ ಮಾರ್ಗಗಳು ಫಲಕೊಡಲಾರವು. Out of the box ಯೋಚನೆ ಮಾಡುವುದು ಅನಿವಾರ್ಯ. ಅದಕ್ಕಾಗಿ ಸಿದ್ದರಾಮಯ್ಯ ಹಿಂದಿನ ಪ್ರಧಾನಿಗಳಾದ ಪಿ.ವಿ. ನರಸಿಂಹರಾವ್ ಮತ್ತು ಡಾ. ಮನಮೋಹನ್ ಸಿಂಗ್ ಕಡೆ ನೋಡಬೇಕು. ನರಸಿಂಹರಾವ್ ಪರಿಸ್ಥಿತಿ ಬಿಗಡಾಯಿಸುತ್ತಿದೆ ಎಂಬುದನ್ನರಿತು ಮನಮೋಹನ್ ಸಿಂಗ್ ಅವರನ್ನು ಹುಡುಕಿ ತಂದರು. ಮನಮೋಹನ್ ಸಿಂಗ್ ಪ್ರಧಾನಿ ಹುದ್ದೆಯ ಭಾರದ ಜೊತೆ ಹಣಕಾಸು ಖಾತೆಯ ನಿರ್ವಹಣೆ ಸಾಧ್ಯವಿಲ್ಲ ಎನ್ನುವುದನ್ನು ಮನಗೊಂಡು ಪಿ. ಚಿದಂಬರಂಗೆ ಜವಾಬ್ದಾರಿ ಕೊಟ್ಟರು. ಅವರ ಪ್ರಯೋಗಗಳು ಅಂದಿನ ಹಣಕಾಸು ಪರಿಸ್ಥಿತಿಯಲ್ಲಿ ಪ್ರಯೋಜನ ನೀಡಿದವು. ಸಿದ್ದರಾಮಯ್ಯ ಕೂಡ ಸದ್ಯದ ಪರಿಸ್ಥಿತಿಯಲ್ಲಿ ಇಂಥದೇ ಯೋಚನೆ ಮಾಡಬೇಕಾಗಿದೆ. ಇಲ್ಲದಿದ್ದರೆ ಹಣಕಾಸು ಖಾತೆ ಬಿಡುವುದೇ ಉತ್ತಮ. 16 ಬಜೆಟ್ ಮಂಡಿಸಿ ಅನುಭವ ಇರುವ ನಾಯಕನಿಗೆ ಹಣಕಾಸು ಖಾತೆ ಬಿಡಿ ಎನ್ನುವ ಮಾತು ತುಸು ಕಟುವಾಯಿತು ಎನಿಸುತ್ತದೆಯಾದರೂ ರಾಜ್ಯದ ಹಣಕಾಸು ಪರಿಸ್ಥಿತಿಯನ್ನು ಹೊಸ ದೃಷ್ಟಿಕೋನದಿಂದ ನೋಡಬೇಕಾಗಿದೆ ಎನ್ನುವುದನ್ನು ತಳ್ಳಿಹಾಕಲು ಸಾಧ್ಯವಿಲ್ಲ. ತಲೆಮಾರಿನಿಂದ ತಲೆಮಾರಿಗೆ ಸಮಸ್ಯೆಗಳು, ಸವಾಲುಗಳು ಬದಲಾಗುತ್ತಿರುತ್ತವೆ. ಬದಲಾದ ಪರಿಸ್ಥಿತಿಗೆ ತಕ್ಕಂತೆ ನಿಲುವುಗಳನ್ನು ಬದಲಿಸಿಕೊಳ್ಳಬೇಕು. ಇಲ್ಲದಿದ್ದರೆ ಜವಾಬ್ದಾರಿಯನ್ನೇ ಬದಲಿಸಿಕೊಳ್ಳಬೇಕು. ಈ ಹಿನ್ನೆಲೆಯಲ್ಲಿ ಸದ್ಯ ದೇಶೀ-ವಿದೇಶಿ ಹಣಕಾಸು ತಜ್ಞರ ಜೊತೆ ಚರ್ಚಿಸಿ, ಚಿಂತಿಸಿ ರಾಜ್ಯದ ಪರಿಸ್ಥಿತಿಗೆ ಅನುಗುಣವಾದ ಆರ್ಥಿಕತೆ ರೂಪಿಸಬಲ್ಲ ಸಾಮರ್ಥ್ಯವುಳ್ಳವರಿಗೆ ಅವಕಾಶ ಕೊಡಬೇಕು. ರಾಜ್ಯದ ಸಚಿವ ಸಂಪುಟದಲ್ಲಿ ಕೃಷ್ಣ ಬೈರೇಗೌಡ, ಪ್ರಿಯಾಂಕ್ ಖರ್ಗೆ ಅವರಂಥ ಒಬ್ಬಿಬ್ಬರು ಮಾತ್ರ ಕಾಣುತ್ತಿದ್ದಾರೆ. ಸಿದ್ದರಾಮಯ್ಯ ಹುಡುಕಬೇಕಷ್ಟೇ. ಸಿದ್ದರಾಮಯ್ಯ ಈಗಾಗಲೇ ರಾಜ್ಯದಲ್ಲಿ ಅತಿ ಹೆಚ್ಚು ದಿನ ಮುಖ್ಯಮಂತ್ರಿಯಾಗಿದ್ದ ದಿವಂಗತ ಡಿ. ದೇವರಾಜ ಅರಸು ಅವರ ದಾಖಲೆ ಮುರಿದಿದ್ದಾರೆ. ಈಗ ಇಡೀ ದೇಶದಲ್ಲಿ ಅತಿ ಹೆಚ್ಚು ಬಾರಿ ಬಜೆಟ್ ಮಂಡಿಸಿದ ದಾಖಲೆಯನ್ನು ಮುರಿಯಲು ಹೊರಟಿದ್ದಾರೆ. ಅವರು ಇನ್ನೆಷ್ಟೇ ದಾಖಲೆ ಬರೆದರೂ, ಮುರಿದರೂ ಜನ ನೆನಪಿನಲ್ಲಿ ಇಟ್ಟುಕೊಳ್ಳುವುದು ಹಸಿದವರ ಹೊಟ್ಟೆ ತುಂಬಿಸಿದ ಅನ್ನರಾಮಯ್ಯ, ಬಡವರ ಪರ ನಿಂತ ಭಾಗ್ಯಗಳ ಸರದಾರ ಎಂದು ಮಾತ್ರವೇ. ಅವರೀಗ ದಾಖಲೆಗಳಿಗಾಗಿ ಉಳಿಯುವಂಥದ್ದು ಏನೂ ಇಲ್ಲ. ಮೇಲಾಗಿ ಅವರಿಗೆ ಜಾಸ್ತಿ ದಿನಗಳು ಉಳಿದಿಲ್ಲ. ಉಳಿದ ಅವಧಿಯಲ್ಲಿ ಮಾಡುವ ಕೆಲಸಕ್ಕೆ ಅವರೀಗ ಇದೇ ಬಜೆಟ್ಟಿನಲ್ಲಿ ಮುನ್ನುಡಿ ಬರೆಯಬೇಕು. ಕೇಂದ್ರ ಸರಕಾರ ಎಸಗುತ್ತಿರುವ ಅನ್ಯಾಯ ಮತ್ತು ತಾರತಮ್ಯಗಳ ನಡುವೆಯೂ ರಾಜ್ಯದ ಹಣಕಾಸು ಸ್ಥಿತಿ ಹದಗೆಡುತ್ತಿರಲು ಇನ್ನೆರಡು ಪ್ರಮುಖ ಸಮಸ್ಯೆಗಳಿವೆ. ಒಂದು; ಮಿತಿ ಮೀರಿರುವ ಸರಕಾರದ ಖರ್ಚುಗಳು, ಎರಡು; ಗ್ಯಾರಂಟಿ ಯೋಜನೆಗಳು. ಸರಕಾರದ ಖರ್ಚುಗಳನ್ನು ನೋಡುವುದಾದರೆ 2025-26ನೇ ಸಾಲಿನ ಬಜೆಟ್ ಗಾತ್ರ 4,09,549 ಕೋಟಿ ರೂಪಾಯಿ. ಇದರಲ್ಲಿ ಸಂಬಳ, ಪಿಂಚಣಿ, ಬಡ್ಡಿ ಪಾವತಿ, ಸಬ್ಸಿಡಿಗಳು ಸೇರಿದಂತೆ ಆಡಳಿತ ವೆಚ್ಚ 3,11,739 ಕೋಟಿ ರೂಪಾಯಿ. ಪ್ರತೀ ವರ್ಷ ಇದು ಶೇಕಡಾ 10 ರಷ್ಟು ಹೆಚ್ಚಾಗುತ್ತದೆ. ಈ ಹೊರೆಯನ್ನು ಕಡಿಮೆ ಮಾಡಿದರೆ ಮಾತ್ರ ಅಭಿವೃದ್ಧಿಗಳಿಗೆ ಹಣ ಉಳಿಸಲು ಸಾಧ್ಯ. ಆನೆಭಾರವನ್ನು ಹಗುರಾಗಿಸಿ ಜಿಲ್ಲಾಧಿಕಾರಿ ಇರುವಾಗ, ಹೆಚ್ಚುವರಿ ಜಿಲ್ಲಾಧಿಕಾರಿ, ಅಪರ ಜಿಲ್ಲಾಧಿಕಾರಿ, ತಹಶೀಲ್ದಾರ್ ಇರುವಾಗ ಅಸಿಸ್ಟಂಟ್ ಕಮಿಷನರ್, ಇಲಾಖೆಗಳಲ್ಲಿ ಪ್ರಧಾನ ಕಾರ್ಯದರ್ಶಿ ಜೊತೆಗೆ ಹೆಚ್ಚುವರಿ ಕಾರ್ಯದರ್ಶಿಗಳು, ಅಪರ ಕಾರ್ಯದರ್ಶಿಗಳು ಸೇರಿದಂತೆ ಸರಕಾರಕ್ಕೆ ಅಧಿಕಾರಿಗಳದ್ದೇ ಭಾರ. ಯಾರ ಶ್ರಮಕ್ಕೂ ಅನ್ಯಾಯವಾಗಬಾರದು, ಆದರೆ ಹೆಚ್ಚು ಕೆಲಸ ಮಾಡುವ ಕೆಳ ಹಂತದ ನೌಕರರನ್ನು ಹೆಚ್ಚೆಚ್ಚು ನೇಮಕಾತಿ ಮಾಡಿಕೊಂಡು ಆನೆಭಾರದ ಹುದ್ದೆಗಳನ್ನು ರದ್ದುಪಡಿಸಿದರೆ ಸಂಬಳಕ್ಕೆ ಮಾಡುವ ಖರ್ಚು ತುಸು ಕಮ್ಮಿಯಾದೀತು. ಸರಕಾರ ಹಮ್ಮಿಕೊಳ್ಳುವ ಎಷ್ಟೋ ಕಾರ್ಯಕ್ರಮಗಳು, ಪ್ರವಾಸಗಳು, ಅಧ್ಯಯನಗಳು, ತರಬೇತಿಗಳು ಅನಗತ್ಯವಾಗಿರುತ್ತವೆ. ಸಚಿವರ ಮತ್ತು ಅಧಿಕಾರಿಗಳ ‘ಖುಷಿ’ಗಾಗಿ ಏರ್ಪಟ್ಟವಾಗಿರುತ್ತವೆ. ಆಡಳಿತ ಯಂತ್ರವನ್ನು ಕಾಲಕಾಲಕ್ಕೆ ನವೀಕರಣಗೊಳಿಸುವುದು ಸರಕಾರದ ಕರ್ತವ್ಯವಾದರೂ ಅಧಿಕಾರಿ/ನೌಕರ ವರ್ಗ ಸಣ್ಣ ಕೆಲಸ ಕಲಿಯುವ ಖರ್ಚನ್ನೂ ಸರಕಾರವೇ ಭರಿಸಲಿ ಎಂದು ಬಯಸುತ್ತಾರೆ. ಇದೇ ರೀತಿ ಜಾತಿಯ ಹೆಸರಿನ, ಮಹಾನ್ ನಾಯಕರ ಹೆಸರಿನ ಭವನಗಳು ಮತ್ತು ಪ್ರತಿಮೆಗಳ ನಿರ್ಮಾಣವಾಗುತ್ತಿವೆ. ಇವುಗಳ ಲಾಭ ಆಗುತ್ತಿರುವುದು ಆಯಾ ಜಾತಿಯ, ಆಯಾ ಕ್ಷೇತ್ರದ ರಾಜಕಾರಣಿ ಮತ್ತು ಗುತ್ತಿಗೆದಾರರಿಗೆ ಮಾತ್ರ ಲಾಭ. ಇಂಥ ‘ನಿರುಪಯೋಗಿ ಸ್ಥಾವರ’ಗಳ ಬದಲು ಅಧ್ಯಯನ ಕೇಂದ್ರಗಳು ಮತ್ತು ಶಿಕ್ಷಣ ಸಂಸ್ಥೆಗಳ ನಿರ್ಮಾಣದತ್ತ ಲಕ್ಷ್ಯ ಹರಿಸಬೇಕಾಗಿದೆ. ಅನಗತ್ಯ ಖರ್ಚುಗಳಿಗೆ ಕಡಿವಾಣ ಹಾಕಬೇಕು. ಇತ್ತೀಚೆಗೆ ನಿಗಮ-ಮಂಡಳಿಗಳ ಅಧ್ಯಕ್ಷರಿಗೆ ಸಂಪುಟ ದರ್ಜೆ ಸ್ಥಾನಮಾನ ನೀಡಲಾಗಿದೆ. ಈ ರೀತಿ ರಾಜ್ಯದಲ್ಲಿ ಸಚಿವ ಸಂಪುಟ ದರ್ಜೆ ಸ್ಥಾನಮಾನ ಪಡೆಯುತ್ತಿರುವವರು ಸುಮಾರು 150 ಮಂದಿ. ನಿಗಮ-ಮಂಡಳಿಗಳಿಗೆ ಹಣವಿಲ್ಲ, ಹಣ ಇಲ್ಲದ ಕಾರಣಕ್ಕೆ ಕೆಲಸವೂ ಇಲ್ಲ. ಆದರೂ ಅಧ್ಯಕ್ಷರ ಗತ್ತು-ಗೈರತ್ತುಗಳಿಗಾಗಿ ಗೂಟದ ಕಾರು. ಇದು ಹೊಟ್ಟೆಗೆ ಹಿಟ್ಟಿಲ್ಲ, ಜುಟ್ಟಿಗೆ ಮಲ್ಲಿಗೆ ಹೂವು ಎನ್ನುವಂತಾಗಿದೆ. ಹೀಗೆ ಕೋಟಿ ಕೋಟಿ ರೂಪಾಯಿ ಅನಗತ್ಯವಾಗಿ ಖರ್ಚಾಗುತ್ತಿದೆ. ಇಂಥ ಹಲವು ಲೋಪಗಳನ್ನು ಸರಿಪಡಿಸುವ ಬಗ್ಗೆ ಸಲಹೆ -ಶಿಫಾರಸು ನೀಡಲೆಂದೇ ಕರ್ನಾಟಕ ಆಡಳಿತ ಸುಧಾರಣಾ ಆಯೋಗ ರಚನೆ ಮಾಡಲಾಗಿದೆ. ಆಯೋಗ ನಿರಂತರವಾಗಿ ವರದಿಗಳನ್ನು ಕೊಡುತ್ತಿದೆ. ಆದರೆ ಸರಕಾರಗಳು ಅವುಗಳತ್ತ ಕಣ್ಣೆತ್ತಿ ನೋಡುತ್ತಿಲ್ಲ. ಈಗಲಾದರೂ ಮನಸ್ಸು ಮಾಡಬೇಕು. ಅನ್ನಭಾಗ್ಯಕ್ಕೆ ದುಡ್ಡಿಲ್ಲದಂತಾಗಬಾರದು! ಎರಡನೆಯದಾಗಿ ಗ್ಯಾರಂಟಿ ಯೋಜನೆಗಳನ್ನು ಪರಿಷ್ಕರಣೆಗೆ ಮಾಡಲೇಬೇಕು. ಹೇಗೂ ಈಗ ಗ್ಯಾರಂಟಿಗಳನ್ನು ಪರಿಷ್ಕರಣೆ ಮಾಡುವ ಬಗ್ಗೆ ಚರ್ಚೆ ಹುಟ್ಟಿಕೊಂಡಿದೆ. ಸಿದ್ದರಾಮಯ್ಯ ಚುನಾವಣೆಗೆ ಮುನ್ನ ‘ಮಹದೇವಪ್ಪ ನಿನ್ನ ಹೆಂಡ್ತಿಗೂ ಫ್ರೀ, ನನ್ನ ಹೆಂಡ್ತಿಗೂ ಫ್ರೀ’ ಎಂದು ಹೇಳಿದ್ದರಿಂದ ಗ್ಯಾರಂಟಿಗಳನ್ನು ಯಥಾವತ್ತಾಗಿ ಜಾರಿ ಮಾಡಬೇಕಾಗಿತ್ತು. ಮಾಡಿಯಾಯಿತು. ಈಗಲೂ ಅದೇ ರೀತಿ ಮುಂದುವರಿಸುವ ಅಗತ್ಯ ಇಲ್ಲ. ಮೂರು ವರ್ಷದ ಹತ್ತಿರಕ್ಕೆ ಬಂದು ಮೂರನೇ ಬಜೆಟ್ ಮಂಡಿಸುವ ವೇಳೆಯಲ್ಲಾದರೂ ಸರಕಾರ ತನ್ನ ಮಹತ್ವಾಕಾಂಕ್ಷಿ ಯೋಜನೆಗಳಾದ ಗ್ಯಾರಂಟಿಗಳನ್ನು ಪರಿಷ್ಕರಣೆ ಮಾಡಬೇಕು. ಒಬ್ಬ ವ್ಯಕ್ತಿಗೆ ಎಷ್ಟು ಅಕ್ಕಿ ಬೇಕು ಎಂಬ ಬಗ್ಗೆ ಅಧ್ಯಯನ ನಡೆಸಿ ವೈಜ್ಞಾನಿಕವಾಗಿ ನಿಗದಿ ಮಾಡಬೇಕು. ಅನ್ನಭಾಗ್ಯದ ಲಾಭಕ್ಕಾಗಿ ಅಕ್ರಮವಾಗಿ ಪಡೆದುಕೊಂಡಿರುವ ಬಿಪಿಎಲ್ ಕಾರ್ಡ್ ಗಳನ್ನು ರದ್ದು ಮಾಡಬೇಕು. ಉಚಿತವಾಗಿ ವಿದ್ಯುತ್ ನೀಡಲು ಅವರವರ ಆಸ್ತಿ ಮತ್ತು ಆದಾಯಗಳಿಗೆ ಅನುಗುಣವಾಗಿ ಕೆಲವು ಷರತ್ತುಗಳನ್ನು ವಿಧಿಸಬೇಕು. ಕರ್ನಾಟಕಕ್ಕೆ ಉದ್ಯೋಗ ನಿರ್ಮಾಣ ಮಾಡಬಲ್ಲಂಥ ಕಂಪೆನಿಗಳು ಬರಲು ಇಲ್ಲಿ ಕೌಶಲ್ಯಭರಿತ ಯುವಕ/ಯುವತಿಯರಿಲ್ಲ. ಈ ನಿಟ್ಟಿನಲ್ಲಿ ಯುವನಿಧಿ ಹಣವನ್ನು ಕೌಶಲ್ಯ ತರಬೇತಿಗೆ ಬಳಸಬೇಕು. ಗ್ಯಾರಂಟಿಗಳ ಪೈಕಿ ಅತಿ ಹೆಚ್ಚು ದುಡ್ಡು ಖರ್ಚಾಗುತ್ತಿರುವುದು ಗೃಹಲಕ್ಷ್ಮಿ ಯೋಜನೆಗೆ. ಅದೇ ರೀತಿ ಅತಿ ಹೆಚ್ಚು ದುರುಪಯೋಗ ಆಗುತ್ತಿರುವುದು ಕೂಡ ಗೃಹಲಕ್ಷ್ಮಿ ಯೋಜನೆಯೇ. ಅವರ ಆಸ್ತಿ-ಆದಾಯಗಳ ಆಧಾರದ ಮೇಲೆ ಮಾತ್ರ ಹಣ ನೀಡುವ ಕ್ರಮ ಕೈಗೊಳ್ಳಬೇಕು. ಶಕ್ತಿ ಯೋಜನೆಯಲ್ಲಿ ಮಹಿಳೆಯರು ಓಡಾಡುವುದಕ್ಕೆ ಮಾತ್ರ ಹಣ ಖರ್ಚು ಮಾಡಬೇಕಾಗಿಲ್ಲ. ಉಳಿದಂತೆ ಊಟ, ವಸತಿ ಮತ್ತಿತರ ಕಾರಣಗಳಿಗೆ ಖರ್ಚು ಮಾಡುತ್ತಿದ್ದಾರೆ. ಇದರಿಂದ ಅವರಿಗೆ ಗೃಹಲಕ್ಷ್ಮಿ ಯೋಜನೆಯ ಹಣ ಕೂಡ ಉಳಿಯದಂತಾಗುತ್ತದೆ. ಸರಕಾರ ಈ ನಿಟ್ಟಿನಲ್ಲೂ ಯೋಚನೆ ಮಾಡಬೇಕು. ಈ ಐದು ಗ್ಯಾರಂಟಿಗಳನ್ನು ಈಗ ಪರಮಾರ್ಶೆ ಮಾಡದಿದ್ದರೆ ಮುಂದೊಂದು ದಿನ ಇವುಗಳ ಕಾರಣಕ್ಕೆ ಅನ್ಯಭಾಗ್ಯಕ್ಕೆ ದುಡ್ಡಿಲ್ಲದಂತಾಗುತ್ತದೆ.. ಈಗಲೇ ಮಾಡಬೇಕು! ಮೇಲೆ ಹೇಳಲಾದ ಎರಡೂ ಕೆಲಸಗಳನ್ನು ಸಿದ್ದರಾಮಯ್ಯ ಈಗಲೇ ಮಾಡಬೇಕು. ಸರಕಾರದ ಮೇಲಿನ ಭಾರ ಪ್ರತೀ ದಿನವೂ ಹೆಚ್ಚಾಗುತ್ತಿರುವುದರಿಂದ ಎಷ್ಟು ಬೇಗ ಸುಧಾರಣೆಯಾಗುತ್ತೋ ಅಷ್ಟು ಭಾರ ಕಡಿಮೆಯಾಗುತ್ತದೆ. ಇದಲ್ಲದೆ ಗ್ಯಾರಂಟಿ ಯೋಜನೆಗಳ ಪರಿಷ್ಕರಣೆಗೆ ಮುಂದಿನ ವರ್ಷ ಕೈ ಹಾಕಿದರೆ ಅದು ಚುನಾವಣೆ ಮೇಲೆ ಪರಿಣಾಮ ಬೀರುತ್ತದೆ. ಈಗಲೇ ಮಾಡಿದರೆ ‘ಇದು ಸರಿಪಡಿಸುವ ಕ್ರಮ, ಅರ್ಹರಿಗೆ ಅನ್ಯಾಯವಾಗದಂತೆ ನೋಡಿಕೊಳ್ಳಲು ಅನುಸರಿಸುತ್ತಿರುವ ಹೆಜ್ಜೆ’ ಎನ್ನುವುದನ್ನು ಜನರಿಗೆ ಮನವರಿಕೆ ಮಾಡಿಕೊಡಲು ಸಮಯ ಇರುತ್ತದೆ. ಸರಕಾರಕ್ಕೆ ಕೆಟ್ಟ ಹೆಸರು ಯಾರಿಂದ? ಇದು ಆಡಳಿತಕ್ಕೆ ಸಂಬಂಧಪಟ್ಟಿದ್ದು. ಸಿದ್ದರಾಮಯ್ಯ ನಿಷ್ಕ್ರಿಯರಾಗಿರುವ ಸಚಿವರ ವಿಚಾರದಲ್ಲಿ ಸಕ್ರಿಯವಾಗಬೇಕಿದೆ. ಸರಕಾರಕ್ಕೆ ಹಲವು ಸಚಿವರಿಂದ ಕೆಟ್ಟ ಹೆಸರು ಬರುತ್ತಿದೆ. ಮುಖ್ಯಮಂತ್ರಿ ಹುದ್ದೆ ಆಕಾಂಕ್ಷಿಗಳಿಂದ ಜಾಸ್ತಿ ಕೆಟ್ಟ ಹೆಸರು ಬರುತ್ತಿದೆ. ಡಿ.ಕೆ. ಶಿವಕುಮಾರ್ ಉಸ್ತುವಾರಿಯಾಗಿರುವ ಬೆಂಗಳೂರಿನ ರಸ್ತೆಗಳ ದುಸ್ಥಿತಿಯನ್ನು ಜನ ಸರಕಾರದ ದುಸ್ಥಿತಿ ಎಂದು ಬಣ್ಣಿಸುತ್ತಿದ್ದಾರೆ. ಕೋಗಿಲು ವಿದ್ಯಮಾನದಿಂದ ಹಿಡಿದು ಕಸದ ಸಮಸ್ಯೆಯವರೆಗೆ ಇನ್ನೂ ಒಂದಷ್ಟು ಉದಾಹರಣೆ ಕೊಡಬಹುದು. ಇನ್ನೊಬ್ಬ ಕನಸುಗಾರ ಡಾ. ಜಿ. ಪರಮೇಶ್ವರ್ ಮನಸ್ಸಿಲ್ಲದೆ ಗೃಹ ಇಲಾಖೆ ಚಲಾಯಿಸುತ್ತಿರುವುದು ಅವರು ನೀಡುವ ‘ಗೊತ್ತಿಲ್ಲ’ ಎಂಬ ಉತ್ತರದಿಂದ ಗೊತ್ತಾಗುತ್ತದೆ. ಬಾಯಿ ಬಿಟ್ಟರೆ ಸಂವಿಧಾನದ ಬಗ್ಗೆ ಮಾತನಾಡುವ ಮತ್ತೊಬ್ಬ ಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷಿ ಎಚ್.ಸಿ. ಮಹದೇವಪ್ಪ ಒಳಗೊಳಗೇ ಒಳಮೀಸಲಾತಿ ಜಾರಿಗೆ ವಿರೋಧ ಮಾಡಿದರೆಂಬ ಮಾತು ಹೊರಗೆ ಜೋರಾಗಿ ಕೇಳಿಬರುತ್ತಿದೆ. ಈಗಲ್ಲ, 2028ಕ್ಕೆ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಹೇಳಿಕೊಳ್ಳುವ ಸತೀಶ್ ಜಾರಕಿಹೊಳಿಯವರ ಲೋಕೋಪಯೋಗಿ ಇಲಾಖೆ ಬಗ್ಗೆ ಗುತ್ತಿಗೆದಾರರು ಗುಟುರು ಹಾಕುತ್ತಿದ್ದಾರೆ. ಯಾವಾಗ ಕುತ್ತಿಗೆಗೆ ಬರುತ್ತದೆಯೋ ಗೊತ್ತಿಲ್ಲ. ಸಂಪುಟ ಪುನರ್ ರಚನೆ ಮಾಡಿದರೆ ಎಲ್ಲವೂಸರಿ ಆಗದಿರಬಹುದು, ಮಾಡದಿದ್ದರೆ ಇನ್ನೂ ಕೆಟ್ಟುಹೋಗುತ್ತದೆ ಎನ್ನುವುದರಲ್ಲಿ ಅನುಮಾನವಿಲ್ಲ
ಬೆಂಗಳೂರಿನಲ್ಲಿ ಜನದಟ್ಟಣೆ ಕಡಿಮೆ ಮಾಡಲು ಸ್ಕೈವಾಕ್ಗಳು, ಬಸ್ ನಿಲ್ದಾಣಗಳು ಶಿಫ್ಟ್
ಪ್ರಯಾಣಿಕರ ದಟ್ಟಣೆಯನ್ನು ಕಡಿಮೆ ಮಾಡಲು, ಅವರ ಸಂಚಾರವನ್ನು ಸುಗಮಗೊಳಿಸಲು ನಗರ ಸಂಚಾರ ಪೊಲೀಸರು 101 ಸ್ಥಳಗಳಲ್ಲಿ ಸ್ಕೈವಾಕ್ಗಳನ್ನು ನಿರ್ಮಾಣ ಮಾಡುವಂತೆ ಪ್ರಸ್ತಾಪಿಸಿದ್ದಾರೆ. 103 ಅವೈಜ್ಞಾನಿಕ ಬಸ್ ನಿಲ್ದಾಣಗಳನ್ನು ಶಿಫ್ಟ್ ಮಾಡಲಾಗಿದೆ. 137 ದೀರ್ಘಕಾಲದ ನೀರು ನಿಲ್ಲುವ ಸ್ಥಳಗಳನ್ನು ತುರ್ತು ಸರಿಪಡಿಸಲಾಗಿದೆ.
ಇರಾನ್ ಸುಪ್ರೀಂ ಯತೊಲ್ಲಾ ಅಲಿ ಖಮೇನಿ ಅಂತ್ಯ: ವಿಶ್ವದ ಮೇಲೆ 5 ಪರಿಣಾಮ ಸಾಧ್ಯತೆ: ಆಶಿಶ್ ಸರಡ್ಕ ಬರಹ
ಇರಾನ್ನ ಸುಪ್ರೀಂ ನಾಯಕ ಯತೊಲ್ಲಾ ಅಲಿ ಖಮೇನಿ ಯುಗಾಂತ್ಯವಾಗಿದೆ. ಸದ್ಯದ ಮಟ್ಟಿಗೆ ಇರಾನ್ ಸರ್ವೋಚ್ಛ ನಾಯಕನ ಅಂತ್ಯವು ವಿಶ್ವದ ಮೇಲೆ ಹೇಗೆಲ್ಲಾ ಪರಿಣಾಮ ಬೀರಲಿದೆ. ಇದರಿಂದ ಮುಂದೆ ಏನಾಗಬಹುದು ಎನ್ನುವ 5 ಪ್ರಮುಖ ವಿಷಯಗಳ ಬಗ್ಗೆ ಹವ್ಯಾಸಿ ಬರಹಗಾರರಾದ ಆಶಿಶ್ ಸರಡ್ಕ ಅವರ ಬರಹ ಇಲ್ಲಿದೆ. ಇರಾನ್ನಿಂದ ಬಂದ ಸುದ್ದಿ ಸಣ್ಣದಲ್ಲ. ಸುಮಾರು 36 ವರ್ಷಗಳ ಕಾಲ
ಅಮೆರಿಕಾ-ಇಸ್ರೇಲ್ ಜಂಟಿಯಾಗಿ ಇರಾನ್ ಮೇಲೆ ದಾಳಿ ನಡೆಸಿದರೆ, ಇದಕ್ಕೆ ಪ್ರತಿಕ್ರಿಯೆಯಾಗಿ ಇರಾನ್ ಗಲ್ಫ್ ಪ್ರದೇಶದಲ್ಲಿ ತನ್ನ ನರೆಹೊರೆಯಲ್ಲಿರುವ ಅಮೆರಿಕಾದ ಮಿತ್ರರಾಷ್ಟ್ರಗಳ ಮೇಲೆ ಪ್ರತಿದಾಳಿ ಮಾಡುತ್ತಿದೆ. ಇನ್ನು, ಇದರಿಂದ ಕೆರಳಿರುವ ಯುರೋಪ್ ಮಧ್ಯಪ್ರಾಚ್ಯದಲ್ಲಿನ ಯುದ್ದಕ್ಕೆ ಎಂಟ್ರಿ ಕೊಟ್ಟಿದ್ದು, ತನ್ನ ಮಿತ್ರ ರಾಷ್ಟ್ರಗಳ ರಕ್ಷಣೆಗೆ ಇರಾನ್ ಮೇಲೆದಾಳಿ ನಡೆಸಲು ಯುಎಸ್ ಹಾಗೂ ಗಲ್ಫ್ ರಾಷ್ಟ್ರಗಳೊಂದಿಗೆ ಯುದ್ದಕ್ಕೆ ಸಿದ್ದ ಎಂದು ಫ್ರಾನ್ಸ್, ಜರ್ಮನಿ ಮತ್ತು ಯುಕೆ ದೇಶಗಳು ಘೋಷಣೆ ಅಧಿಕೃತವಾಗಿ ಮಾಡಿವೆ. ಇದು ಸದ್ಯ 3ನೇ ಮಹಾಯುದ್ದಕ್ಕೆ ದೇಶಗಳು ನಾಂದಿ ಹಾಡುತ್ತಿರುವ ಆತಂಕವನ್ನು ಹೆಚ್ಚಿಸಿದೆ.
ಅಮೆರಿಕಾ-ಇಸ್ರೇಲ್ ಜಂಟಿಯಾಗಿ ಇರಾನ್ ಮೇಲೆ ದಾಳಿ ನಡೆಸಿದರೆ, ಇದಕ್ಕೆ ಪ್ರತಿಕ್ರಿಯೆಯಾಗಿ ಇರಾನ್ ಗಲ್ಫ್ ಪ್ರದೇಶದಲ್ಲಿ ತನ್ನ ನರೆಹೊರೆಯಲ್ಲಿರುವ ಅಮೆರಿಕಾದ ಮಿತ್ರರಾಷ್ಟ್ರಗಳ ಮೇಲೆ ಪ್ರತಿದಾಳಿ ಮಾಡುತ್ತಿದೆ. ಇನ್ನು, ಇದರಿಂದ ಕೆರಳಿರುವ ಯುರೋಪ್ ಮಧ್ಯಪ್ರಾಚ್ಯದಲ್ಲಿನ ಯುದ್ದಕ್ಕೆ ಎಂಟ್ರಿ ಕೊಟ್ಟಿದ್ದು, ತನ್ನ ಮಿತ್ರ ರಾಷ್ಟ್ರಗಳ ರಕ್ಷಣೆಗೆ ಇರಾನ್ ಮೇಲೆದಾಳಿ ನಡೆಸಲು ಯುಎಸ್ ಹಾಗೂ ಗಲ್ಫ್ ರಾಷ್ಟ್ರಗಳೊಂದಿಗೆ ಯುದ್ದಕ್ಕೆ ಸಿದ್ದ ಎಂದು ಫ್ರಾನ್ಸ್, ಜರ್ಮನಿ ಮತ್ತು ಯುಕೆ ದೇಶಗಳು ಘೋಷಣೆ ಅಧಿಕೃತವಾಗಿ ಮಾಡಿವೆ. ಇದು ಸದ್ಯ 3ನೇ ಮಹಾಯುದ್ದಕ್ಕೆ ದೇಶಗಳು ನಾಂದಿ ಹಾಡುತ್ತಿರುವ ಆತಂಕವನ್ನು ಹೆಚ್ಚಿಸಿದೆ.
ಮರಾಠಿ, ಕುಡುಬಿ ಸಮುದಾಯಗಳಿಂದ ವಿಶೇಷ ಹೋಳಿ ಹಬ್ಬ ಆಚರಣೆ
ಉಡುಪಿ ಜಿಲ್ಲೆಯಲ್ಲಿ ಇದೀಗ ಹೋಳಿ ಹಬ್ಬದ ಸಂಭ್ರಮ. ಈ ಹಬ್ಬದ ಪ್ರಯುಕ್ತ ಇಲ್ಲಿ ವಿಭಿನ್ನ ಸಂಸ್ಕೃತಿಗಳನ್ನು ಆಚರಿಸಲಾಗುತ್ತಿದೆ. ಕರಾವಳಿಯಲ್ಲಿ ಮರಾಠಿ, ಕುಡುಬಿ ಮತ್ತು ಖಾರ್ವಿ ಸಮುದಾಯಗಳು ಹೋಳಿ ಹಬ್ಬ ವನ್ನು ಹೋಳಿ ಕುಣಿತವಾಗಿ ವಿಶೇಷವಾಗಿ ಆಚರಿಸುತ್ತವೆ. ಮರಾಠಿ ಸಮುದಾಯದವರು ಮೂಲತಃ ಮಹಾರಾಷ್ಟ್ರ ಮೂಲದವರಾಗಿದ್ದು ಶಿವಾಜಿ ಮಹಾರಾಜನ ಸೇನೆಯಲ್ಲಿ ಪ್ರಮುಖ ಹುದ್ದೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ಶಿವಾಜಿ ಮಹಾರಾಜರ ಗೆರಿಲ್ಲ ಯುದ್ಧ ತಂತ್ರಗಾರಿಕೆಯಲ್ಲಿ ಈ ಸಮುದಾಯ ಪ್ರಮುಖ ಪಾತ್ರ ವಹಿಸಿತ್ತು. ಈ ಸಮಾಜ ಅತ್ಯಂತ ಕಠಿಣ ದೈಹಿಕ ಪರಿಶ್ರಮ ಹಾಗೂ ಧೈರ್ಯಕ್ಕೆ ಹೆಸರುವಾಸಿಯಾಗಿದೆ. ಸುಮಾರು 15-16ನೇ ಶತಮಾನದಲ್ಲಿ ಮಹಾರಾಷ್ಟ್ರದಿಂದ ಉತ್ತರ ಕರ್ನಾಟಕ ಮತ್ತು ಗೋವಾ ಪ್ರಾಂತದ ಮೂಲಕ ಕರಾವಳಿಯ ಕಡೆಗೆ ವಲಸೆ ಬಂದ ಈ ಸಮುದಾಯ, ಇಲ್ಲಿಯೇ ತಮ್ಮ ಬದುಕು ಕಂಡುಕೊಂಡಿದೆ. ಆದರೆ ಇವರು ತಮ್ಮ ಸಂಪ್ರದಾಯದ ಮೂಲವಾದ ಹೋಳಿ ಆಚರಣೆಯನ್ನು ಈಗಲೂ ಮುಂದುವರಿಸಿಕೊಂಡು ಬರುತ್ತಿದ್ದಾರೆ. ಫಾಲ್ಗುಣ ಮಾಸದ ಏಕಾದಶಿಯಿಂದ ಪ್ರಾರಂಭಗೊಂಡು ಹುಣ್ಣಿಮೆಯ ತನಕ ಐದು ದಿನಗಳ ಕಾಲ ಹೋಳಿಯನ್ನು ಇವರು ವಿಭಿನ್ನವಾಗಿ ಆಚರಿಸುತ್ತಾರೆ. ಉಡುಪಿ ಜಿಲ್ಲೆಯಲ್ಲಿ ಮರಾಠಿ 136 ಕೂಡುವಳಿಗಳು(ಹತ್ತು ಸಮಸ್ತರ ಕಟ್ಟೆಗಳು) ಇದ್ದು ಎಲ್ಲವೂ ಹೋಳಿ ಆಚರಿಸುತ್ತವೆ. ಈ ಬಾರಿ ಬ್ರಹ್ಮಾವರದ ಚೇರ್ಕಾಡಿಯಲ್ಲಿ 136 ಕೂಡುವಳಿಯ ಎಲ್ಲ ಸದಸ್ಯರು ಸಾಂಸ್ಕೃತಿಕ ಸಂಗಮದಂತೆ ಜೊತೆಯಾಗಲಿದ್ದಾರೆ. ಕೂಡುವಳಿಯ ಯಜಮಾನನ ಮನೆಯಲ್ಲಿ ದಶಮಿ, ಏಕಾದಶಿಯಂದು ತುಳಸಿ ಕಟ್ಟೆಯಲ್ಲಿ ತೆಂಗಿನಕಾಯಿ ಇಟ್ಟು ಕುಣಿತಕ್ಕೆ ಬಳಸುವ ವಸ್ತುಗಳಿಗೆ ಪೂಜೆ ಸಲ್ಲಿಸಲಾಗುತ್ತದೆ. ಅಲ್ಲಿಂದ ಐದು ದಿನಗಳ ಕಾಲ ಊರಿನ ವಿವಿಧ ಮನೆಗಳಿಗೆ, ಧಾರ್ಮಿಕ ಸ್ಥಳಗಳಿಗೆ ತೆರಳಿ ಹೋಳಿ ಕುಣಿದು ತಳಿ ಕಾಣಿಕೆ ಪಡೆಯುವುದು ವಾಡಿಕೆ. ಹುಣ್ಣಿಮೆಯಂದು ಎಲ್ಲರೂ ಸೇರಿ ಸಂಭ್ರಮಿಸಿ ತುಳಸಿಕಟ್ಟೆ ಯಲ್ಲಿದ್ದ ಫಲವನ್ನು ಅವರೋಹಣ ಮಾಡಿದ ಅನಂತರ ಹತ್ತಿರದ ಕೆರೆ ಹೊಳೆಗಳಲ್ಲಿ ಸ್ನಾನಮಾಡಿ ಹಿಂದಿರುಗು ವಾಗ ಕಾಮದಹನದ ಪ್ರತೀಕವೆಂಬಂತೆ ಹುಲ್ಲಿಗೆ ಬೆಂಕಿ ಹಚ್ಚಿ ಅದನ್ನು ದಾಟಿ ಬರುವುದು ಸಂಪ್ರದಾಯ. ಬಳಿಕ ಎಲ್ಲರೂ ಸೇರಿ ಸಾಮೂಹಿಕ ಭೋಜನ ಸ್ವೀಕರಿಸುತ್ತಾರೆ ಎಂದು ಮರಾಠಿ ಸಮುದಾಯದ ಪ್ರಮುಖ ಉಮೇಶ್ ನಾಯ್ಕ್ ತಿಳಿಸಿದ್ದಾರೆ. ಕುಡುಬಿ ಹೋಳಿ ಕುಣಿತ ಕುಡುಬಿ ಜನಾಂಗದವರಲ್ಲಿ ಹೋಳಿ ಅತ್ಯಂತ ಸಂಭ್ರಮ ಹಾಗೂ ಪರಂಪರೆಯೊಂದಿಗೆ ಆಚರಿಸಲ್ಪಡುವ ಹಬ್ಬವಾಗಿದೆ. ಇದು ಅವರ ಸಾಂಸ್ಕೃತಿಕ ಗುರುತಿನ ಭಾಗವಾಗಿದ್ದು, ವಿಶೇಷವಾಗಿ ಕರ್ನಾಟಕದ ಕರಾವಳಿ ಭಾಗಗಳಲ್ಲಿ ವಾಸಿಸುವ ಕುಡುಬಿ ಸಮುದಾಯದಲ್ಲಿ ಹೆಚ್ಚು ಮಹತ್ವ ಪಡೆದಿದೆ. ಅದೇ ರೀತಿ ಕುಡುಬಿ ಜನಾಂಗದವರು ಹೋಳಿ ಹಬ್ಬವನ್ನು ಗುಮಟೆ ನೃತ್ಯ ಮತ್ತು ವಿವಿಧ ಧಾರ್ಮಿಕ ಕಟ್ಟುಪಾಡುಗಳೊಂದಿಗೆ ಆಚರಿಸುತ್ತಾರೆ. ಈ ಗುಮಟೆ ನೃತ್ಯದ ವೇಳೆ ಅವರು ಪೇಟದಲ್ಲಿ ಧರಿಸುವ ಹಕ್ಕಿಯ ಗರಿಗೆ ಭಾರಿ ವಿಶೇಷತೆ ಇದೆ. ಇದು ಕಾಡಿನಲ್ಲಿ ಕಾಣಸಿಗುವ ಹಟ್ಟಿಮುದ್ದ(ಇಂಡಿಯನ್ ಪ್ಯಾರಾಡೈಸ-ಫೈಕ್ಯಾಚರ್) ಎಂಬ ಹಕ್ಕಿಯ ಗರಿಯಾಗಿದೆ. ಗುಮಟೆ ಕುಣಿತ ಆರಂಭದ ಧಾರ್ಮಿಕ ಪ್ರಕ್ರಿಯೆಯಲ್ಲಿ ಹಾಗೂ ಕುಣಿತದ ಕೊನೆ ತನಕ ಈ ಹಕ್ಕಿಯ ಬಾಲದ ಗರಿ ಬಳಕೆಯಾಗುತ್ತದೆ. ಕುಡುಬಿಗಳ ಹೋಳಿಯಲ್ಲಿ ಹಟ್ಟಿಮುದ್ದ ಹಕ್ಕಿಯ ಬಾಲ ಅಗತ್ಯವಾಗಿರಬೇಕು. ಹೀಗಾಗಿ ಪ್ರತೀ ವರ್ಷ ಈ ಸಮಾಜದವರು ಹಕ್ಕಿಯ ಇರುವಿಕೆಯನ್ನು ಗಮನಿಸಿ ಬಾಲವನ್ನು ಕಿತ್ತು ತರುತ್ತಾರೆ. ಹಕ್ಕಿ ಕುಳಿತುಕೊಳ್ಳುವ ಜಾಗವನ್ನು ಅದರ ಕೂಗಿನಿಂದಲೇ ಗುರುತಿಸಿ ಒಂದೆರಡು ದಿನ ಅದರ ಚಲನವಲನ ಗಮನಿಸಲಾಗುತ್ತದೆ. ಈ ಹಕ್ಕಿ ಸಾಮಾನ್ಯವಾಗಿ ಸಂಜೆ ವೇಳೆ ಮರದಲ್ಲಿ ಮಂದವಾಗಿ ಕುಳಿತುಕೊಳ್ಳುತ್ತದೆ. ಆ ಸಂದರ್ಭ ವನ್ನೇ ಕಾದು ಸ್ವಲ್ಪವೂ ಶಬ್ದವಾಗದಂತೆ ಮರವನ್ನೇರಿ ಹಕ್ಕಿಯ ಗರಿಯನ್ನು ಕೀಳಲಾಗುತ್ತದೆ. ಹೋಳಿಹಬ್ಬದಲ್ಲಿ ಈ ಹಕ್ಕಿಯ ಗರಿಗಳಿಗೆ ಧಾರ್ಮಿಕ ಮಹತ್ವ ಕೂಡ ಇದ್ದು, ಅವುಗಳಿಗೂ ಪೂಜೆ ಸಲ್ಲುತ್ತದೆ ಹಾಗೂ ಕುಡುಬಿ ಸಮಾಜ ಗರಿಯನ್ನು ದೈವತ್ವದ ಭಾವದಿಂದ ತಲೆ ಮೇಲೆ ಹೊತ್ತು ಕುಣಿಯಲಾಗುತ್ತದೆ ಎನ್ನುತ್ತಾರೆ ಕುಡುಬಿ ಸಮಾಜದ ಪ್ರಮುಖ ಯಡ್ತಾಡಿ ನರಸಿಂಹ ನಾಯ್ಕ್. ಸಿಗುತ್ತಿಲ್ಲ ಸುರಗಿ ಹೂವು! ಮರಾಠಿಗರ ಹೋಳಿ ಆಚರಣೆಯಲ್ಲಿ ಸುರಗಿ, ಸುರ ಸಂಪಿಗೆ ಹೂವು ಪ್ರಾಧಾನ್ಯ ಪಡೆದಿದೆ. ಆದರೆ, ಈ ಹೂವು ಈಗ ವಿರಳವಾಗಿರುವುದರಿಂದ ಹೋಳಿ ಆಚರಣೆಗೆ ಅದನ್ನು ಹುಡುಕುವುದೇ ದೊಡ್ಡ ಸವಾಲಾಗಿದೆ. ಹೋಳಿ ಕುಣಿತದ ವೇಷದ ಸಂದರ್ಭ ಅಬ್ಬಲಿಗೆ ಮಾಲೆಯ ಜೊತೆಗೆ ಸುರಗಿ ಹೂವಿನ ಮಾಲೆಗಳನ್ನು ತಮ್ಮ ಅಲಂಕಾರ ಪೇಟದ ಸುತ್ತ ಸುತ್ತಿಕೊಳ್ಳ ಲಾಗುತ್ತಿದೆ. ಅದರೊಂದಿಗೆ ಅದನ್ನು ಪೂಜೆಗೂ ಬಳಸಲಾಗುತ್ತದೆ. ಈ ಹೂವು ಪಶ್ಚಿಮ ಘಟ್ಟಗಳ ಕಾಡಿನಲ್ಲಿ ಹೆಚ್ಚಾಗಿ ಕಂಡುಬರುತ್ತವೆ. ಮರಾಠಿಗರ ಹೋಳಿ ಆಚರಣೆ ದೇವಿ ಅಂಬಾ ಭವಾನಿಯ ಪೂಜೆ, ಸ್ಮರಣೆಯೊಂದಿಗೆ ಸಾಗುವುದ ರಿಂದ ಸುರಗಿ ಹೂವಿನ ಬಳಕೆಗೆ ಹೆಚ್ಚು ಮಹತ್ವವಿದೆ. ಆದರೆ ಇಂದು ಸುರಗಿ ಮರ ಅಪರೂಪ ವಾಗುತ್ತಿದ್ದು, ಹಬ್ಬದ ಆಚರಣೆಗೂ ಹೂವುಗಳು ಸಿಗುವುದು ಕಷ್ಟವಾಗಿದೆ. ಹೋಳಿ ಆಚರಣೆ ಮರಾಠಿ ಸಮಾಜದ ಅಸ್ಮಿತೆಯಾಗಿದೆ ಹಾಗೂ ನಮ್ಮ ಆಚರಣೆಯಲ್ಲಿ ಸುರಗಿ ಹೂವು ಪ್ರಾಧಾನ್ಯ ಪಡೆದಿದೆ. ಆದರೆ ಇಂದು ಈ ಪ್ರಭೇದ ಮರೆಯಾಗುತ್ತಿದ್ದು, ಹಬ್ಬದ ಸಂದರ್ಭ ಸಾಕಷ್ಟು ಹುಡುಕಾಟ ನಡೆಸಬೇಕಾಗುತ್ತದೆ ಎನ್ನುತ್ತಾರೆ ಉಮೇಶ್ ನಾಯ್ಕ್ ಚೇರ್ಕಾಡಿ.
ಪಾಕಿಸ್ತಾನ–ಅಫ್ಘಾನಿಸ್ತಾನ ನಡುವೆ ಸಂಘರ್ಷ ತೀವ್ರ: ಕಾಬೂಲ್ ನಲ್ಲಿ ಸ್ಫೋಟಗಳ ಸದ್ದು
ಅಮೆರಿಕದ ನೆಲೆಯಿದ್ದ ಬಾಗ್ರಾಮ್ ಮೇಲೆ ದಾಳಿ ವಿಫಲ ಎಂದ ತಾಲಿಬಾನ್
ವಿಶ್ವಕ್ಕೆ ಯುದ್ದದ ಭೀತಿ, ಜಾಗತಿಕ ನಾಯಕನ ದುರ್ಮರಣ : ಕೋಡಿಶ್ರೀಗಳ ಭವಿಷ್ಯದ ಒಂದು ಒಳನೋಟ
Ayatollah Ali Khamenei Death and Kodi Seer Prediction : ವಿಶ್ವ ನಾಯಕರ ಸಾವು ಮತ್ತು ಯುದ್ಧದ ಭೀತಿ, ಈ ಭವಿಷ್ಯವನ್ನು ಹಲವು ತಿಂಗಳ ಹಿಂದೆಯೇ ಕೋಡಿಶ್ರೀಗಳು ನುಡಿದಿದ್ದರು. ಇರಾನ್ ಸರ್ವೋಚ್ಚ ನಾಯಕ ಆಯತೊಲ್ಲಾ ಆಲಿ ಖಮೇನಿಯನ್ನು ಇಸ್ರೇಲ್ ಮತ್ತು ಅಮೆರಿಕಾದ ಮಿಲಿಟರಿ ಕೊಂದ ನಂತರ, ಶ್ರೀಗಳ ಭವಿಷ್ಯವನ್ನು ಈಗಿನ ವಿದ್ಯಮಾನಕ್ಕೆ ತಾಳೆಹಾಕಲಾಗುತ್ತಿದೆ.
ಈ ವರ್ಷ ಕರ್ನಾಟಕಕ್ಕೆ ರಣಬಿಸಿಲಿನ ಮುನ್ಸೂಚನೆ, ಉತ್ತರ ಕರ್ನಾಟಕಕ್ಕೆ ಮುಂದಿನ 3 ತಿಂಗಳು ಎಚ್ಚರಿಕೆ
ಈ ವರ್ಷ ಕರ್ನಾಟಕದಲ್ಲಿ ದಾಖಲೆ ಪ್ರಮಾಣದ ಬಿಸಿಲು ಬೀಳಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಅದರಲ್ಲೂ ಉತ್ತರ ಕರ್ನಾಟಕ ಭಾಗಕ್ಕೆ ಮುಂದಿನ ಮೂರು ತಿಂಗಳು ಹೆಚ್ಚು ಬಿಸಿಲಿನ ಅಲರ್ಟ್ ಕೊಟ್ಟಿದೆ. ರಾಯಚೂರು, ಕಲಬುರಗಿ, ಕೊಪ್ಪಳ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ದಾಖಲೆ ಪ್ರಮಾಣದ ಬಿಸಿಲು ಕಾಣಿಸಿಕೊಳ್ಳಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ಕೊಟ್ಟಿದ್ದು ಜನರು ಎಚ್ಚರದಿಂದ ಇರಬೇಕು ಎಂದು ಹವಾಮಾನ ಇಲಾಖೆ ಮುನ್ಸೂಚನೆ ಕೊಟ್ಟಿದೆ. ಬಿಸಿಲು ಹೆಚ್ಚಾದಂತೆ ಮಾರ್ಚ್ ಆರಂಭದಲ್ಲೇ ಕೊಂಚ ಮಳೆಯಾಗುವ ಸಾಧ್ಯತೆಯೂ ಇದೆ ಎಂದು ತಜ್ಞರು ತಿಳಿಸಿದ್ದಾರೆ. ಇದು ಹಠಾತ್ ಹವಾಮಾನ ಬದಲಾವಣೆಗೆ ಕಾರಣವಾಗಿ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು ಎಂದು ಎಚ್ಚರಿಸಿದ್ದಾರೆ.
Iran Vs Israel War: ಹಾರ್ಮುಜ್ ಜಲಸಂಧಿಯಲ್ಲಿ ಹಡಗುಗಳ ಮೇಲೆ ಸರಣಿ ದಾಳಿ; ಗಗನಕ್ಕೇರಿದ ಕಚ್ಚಾ ತೈಲ ಬೆಲೆ
ವಾಷಿಂಗ್ಟನ್: ಹಾರ್ಮುಜ್ ಜಲಸಂಧಿಯ (Strait of Hormuz) ಬಳಿ ವಾಣಿಜ್ಯ ಹಡಗುಗಳ ಮೇಲೆ ನಡೆದ ಸರಣಿ ದಾಳಿಯಿಂದಾಗಿ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆಯಲ್ಲಿ ಭಾರಿ ಏರಿಕೆಯಾಗಿದೆ. ಅಮೆರಿಕ ಮತ್ತು ಇರಾನ್ ನಡುವೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ರಾಜಕೀಯ ಉದ್ವಿಗ್ನತೆಗಳು ಈಗ ಜಾಗತಿಕ ತೈಲ ಪೂರೈಕೆಯ ಮೇಲೆ ಗಂಭೀರ ಪರಿಣಾಮ ಬೀರಲಾರಂಭಿಸಿವೆ. ಹಡಗುಗಳ ಮೇಲಿನ ಈ ಹಠಾತ್
Iran Vs Israel War: ಇರಾನ್ - ಇಸ್ರೇಲ್ ಯುದ್ಧ: ಯುರೋಪಿಗೆ ವಿಸ್ತರಿಸುವ ಆತಂಕ, ಯುಕೆ ಮೇಲೆ ಶಂಕಿತ ಡ್ರೋನ್ ದಾಳಿ
Iran Vs Israel War: ಇರಾನ್ ಹಾಗೂ ಇಸ್ರೇಲ್ ನಡುವೆ ಯುದ್ಧ ತೀವ್ರ ಸ್ವರೂಪ ಪಡೆದುಕೊಂಡಿದೆ. ಈ ಬಾರಿ ಅಮೆರಿಕ ನೇರವಾಗಿ ಯುದ್ಧದಲ್ಲಿ ಭಾಗಿಯಾಗಿರುವುದು ಯುದ್ಧದ ಸ್ವರೂಪವನ್ನೇ ಬದಲಾಯಿಸಿದೆ. ಇದೀಗ ಈ ಯುದ್ಧವು ಯುರೋಪಿಗೂ ವ್ಯಾಪಿಸುವ ಆತಂಕ ಎದುರಾಗಿದೆ. ಅಮೆರಿಕದ ಮೇಲೆ ಸೇಡು ತೀರಿಸಿಕೊಳ್ಳುವುದಕ್ಕೆ ಇರಾನ್ ಇದೀಗ ಮಧ್ಯಪ್ರಾಚ್ಯಾದ ಅಮೆರಿಕ ಸೇನಾ ನೆಲೆಗಳ ಮೇಲೆ ದಾಳಿ ಮಾಡುತ್ತಿದೆ.
ಇಸ್ರೇಲ್ ಪ್ರಧಾನಿ ನೆತನ್ಯಾಹು ಜೊತೆ ಮೋದಿ ದೂರವಾಣಿ ಮಾತುಕತೆ: ಯುದ್ಧ ನಿಲ್ಲಿಸಲು ಭಾರತ ಆಗ್ರಹ
ಹೊಸದಿಲ್ಲಿ : ಪ್ರಾದೇಶಿಕ ಉದ್ವಿಗ್ನ ಪರಿಸ್ಥಿತಿಯ ನಡುವೆ ಪ್ರಧಾನಿ ಅವರು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರೊಂದಿಗೆ ದೂರವಾಣಿ ಮಾತುಕತೆ ನಡೆಸಿದ್ದಾರೆ. ಈ ಕುರಿತು ಪ್ರಧಾನಿ ಮೋದಿ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಇತ್ತೀಚಿನ ಬೆಳವಣಿಗೆಗಳ ಬಗ್ಗೆ ಭಾರತದ ಕಳವಳವನ್ನು ಅವರು ವ್ಯಕ್ತಪಡಿಸಿದ್ದು, ನಾಗರಿಕರ ಸುರಕ್ಷತೆಯನ್ನು ಅತ್ಯುನ್ನತ ಆದ್ಯತೆಯಾಗಿ ಪರಿಗಣಿಸಬೇಕೆಂದು ಸ್ಪಷ್ಟಪಡಿಸಿದ್ದಾರೆ. ಪ್ರಾದೇಶಿಕ ಸ್ಥಿರತೆ ಮತ್ತು ಶಾಂತಿಗೆ ಧಕ್ಕೆಯಾಗುವ ಯಾವುದೇ ಕ್ರಮಗಳು ಆತಂಕಕಾರಿ ಎಂಬುದನ್ನೂ ತಿಳಿಸಿದ್ದಾರೆ. ಹಿಂಸಾಚಾರ ಮತ್ತು ಯುದ್ಧ ಪರಿಸ್ಥಿತಿಯಿಂದ ಸಾಮಾನ್ಯ ಜನತೆ ಸಂಕಷ್ಟಕ್ಕೆ ಒಳಗಾಗುತ್ತಾರೆ ಎಂಬುದನ್ನು ಪ್ರಧಾನಿ ಉಲ್ಲೇಖಿಸಿದ್ದಾರೆ. ಉದ್ವಿಗ್ನತೆಯನ್ನು ಶಮನಗೊಳಿಸುವ ದಿಕ್ಕಿನಲ್ಲಿ ತಕ್ಷಣ ಕ್ರಮ ಕೈಗೊಳ್ಳುವುದು ಅಗತ್ಯವೆಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಯುದ್ಧವನ್ನು ಬೇಗನೆ ನಿಲ್ಲಿಸುವ ಅಗತ್ಯವಿದೆ ಎಂಬ ನಿಲುವನ್ನು ಭಾರತ ಪುನರುಚ್ಚರಿಸಿದೆ. ಸಂವಾದ ಮತ್ತು ರಾಜತಾಂತ್ರಿಕ ಮಾರ್ಗಗಳ ಮೂಲಕ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು ಎಂದು ಅವರು ಹೇಳಿದ್ದಾರೆ.
ಕುಡ್ಲದಲ್ಲಿ ಆಯುಷ್ಮತಿ ಕ್ಲಿನಿಕ್ಗೆ ಹೆಚ್ಚಿದ ಬೇಡಿಕೆ ; ಗ್ರಾಮೀಣ ಭಾಗಕ್ಕೂ ವಿಸ್ತರಣೆಗೆ ಆಗ್ರಹ
ನಗರ ಭಾಗದಲ್ಲಿ ಕೇಂದ್ರೀಕೃತವಾಗಿ ನಡೆಯುತ್ತಿರುವ ಆಯುಷ್ಮತಿ ಕೇಂದ್ರಗಳು ಮುಂದಿನ ದಿನಗಳಲ್ಲಿ ಗ್ರಾಮಾಂತರ ಭಾಗದ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೂ ವಿಸ್ತರಣೆಯಾಗಲಿ. ಹಾಗೆಯೇ ನಗರ ಭಾಗದಲ್ಲಿ ಈಗ ನಾಲ್ಕು ಕೇಂದ್ರಗಳಲ್ಲಿಮಾತ್ರ ಈ ಸೇವೆ ಲಭ್ಯವಿದ್ದು, ಮುಂದಿನ ದಿನಗಳಲ್ಲಿಉಳಿದ ನಗರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೂ ಸೇವೆ ವಿಸ್ತರಣೆಯಾದರೆ ಮತ್ತಷ್ಟು ಲಾಭವಿದೆ ಎಂದು ಮಹಿಳಾ ರೋಗಿ ಅಮಿತಾ ಮೊರಾಸ್ ಆಗ್ರಹಿಸಿದ್ದಾರೆ.
ಸೋಲಿನ ನಡುವೆಯೂ ದಾಖಲೆ ಸೃಷ್ಟಿಸಿದ ಹೆಟ್ಮಿಯರ್
ಕೊಲ್ಕತ್ತಾ: ವಿಶ್ವ ಕ್ರಿಕೆಟ್ ನಲ್ಲಿ ಅತ್ಯಂತ ಸ್ಫೋಟಕ ಬ್ಯಾಟ್ಸ್ಮನ್ ಎಂಬ ಹೆಗ್ಗಳಿಕೆ ಹೊಂದಿರುವ ವೆಸ್ಟ್ಇಂಡೀಸ್ ನ ಶಿಮ್ರಾನ್ ಹೆಟ್ಮಿಯರ್ ಟಿ20 ವಿಶ್ವಕಪ್ ನ ಇತಿಹಾಸದಲ್ಲಿ ಹೊಸ ದಾಖಲೆ ಬರೆದಿದ್ದಾರೆ. ಒಂದೇ ಟ20 ವಿಶ್ವಕಪ್ ನಲ್ಲಿ ಗರಿಷ್ಠ ಸಿಕ್ಸರ್ ಸಿಡಿಸಿದ ಹೆಗ್ಗಳಿಕೆ ಇವರಿಗೆ ಸಂದಿದೆ. ಟೂರ್ನಿಯಲ್ಲಿ 19 ಸಿಕ್ಸರ್ ಸಿಡಿಸುವ ಮೂಲಕ ಈ ವಿಶಿಷ್ಟ ದಾಖಲೆ ಸ್ಥಾಪಿಸಿದ್ದಾರೆ. ಕೊಲ್ಕತ್ತಾದ ಈಡನ್ ಗಾರ್ಡನ್ಸ್ ನಲ್ಲಿ ರವಿವಾರ ನಡೆದ ಭಾರತ ವಿರುದ್ಧದ ಹೈವೋಲ್ಟೇಜ್ ಪಂದ್ಯದಲ್ಲಿ ಈ ಮೈಲುಗಲ್ಲು ಸ್ಥಾಪಿಸಿದ್ದಾರೆ. ವಿಶ್ವಕಪ್ ಟೂರ್ನಿಯಲ್ಲಿ ಹೆಟ್ಮಿಯರ್ 19 ಸಿಕ್ಸರ್ ಸಿಡಿಸಿದ ದಾಖಲೆ ಹೊಂದಿದ್ದರೆ, ಶಹೀಬ್ಝಾದಾ ಫರ್ಹಾನ್ (18), ನಿಕೋಲಸ್ ಪೂರನ್ (17), ಕ್ರಿಸ್ ಗೇಲ್ (16) ರಹಮತುಲ್ಲಾ ಗುರ್ಬಝ್ (16) ನಂತರದ ಸ್ಥಾನಗಳಲ್ಲಿದ್ದಾರೆ. ಇದೇ ವಿಶ್ವಕಪ್ ನಲ್ಲಿ ಪಾಕಿಸ್ತಾನದ ಶಹೀಬ್ಝಾದಾ ಫರ್ಹಾನ್ ಸೃಷ್ಟಿಸಿದ್ದ ದಾಖಲೆಯನ್ನು ಈ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಹೆಟ್ಮಿಯರ್ ಪುಡಿಗಟ್ಟಿದರು. ಈ ಟೂರ್ನಿಯಲ್ಲಿ ಗರಿಷ್ಠ ರನ್ ಗಳಿಸಿರುವ ಫರ್ಹಾನ್ 37 ಬೌಂಡರಿ ಹಾಗೂ 18 ಸಿಕ್ಸರ್ಗಳೊಂದಿಗೆ 383 ರನ್ ಸಿಡಿಸಿದ್ದಾರೆ. ಗರಿಷ್ಠ ರನ್ ಗಳಿಸಿದ ಬ್ಯಾಟ್ಸ್ಮನ್ ಗಳ ಪೈಕಿ ಹೆಟ್ಮಿಯರ್ ನಾಲ್ಕನೇ ಸ್ಥಾನದಲ್ಲಿದ್ದಾರೆ. 19 ಸಿಕ್ಸರ್ ಹಾಗೂ 16 ಬೌಂಡರಿಗಳೊಂದಿಗೆ ಹೆಟ್ಮಿಯರ್ 248 ರನ್ ಕಲೆ ಹಾಕಿದ್ದಾರೆ.
ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಉಂಟಾಗಿರುವ ಬಿಕ್ಕಟ್ಟಿನ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಭಾರತದ ನಿಲುವನ್ನು ಸ್ಪಷ್ಟಪಡಿಸಿದ್ದು, ಯುಎಇ ಶಾಂತಿ, ಭದ್ರತೆ , ಸುರಕ್ಷತೆಗಾಗಿ ಒಗ್ಗಟ್ಟಿನಲ್ಲಿ ಇರಲಿದೆ ಎಂದು ಆಶ್ವಾಸನೆ ನೀಡಿದ್ದಾರೆ. ವಿದೇಶದಲ್ಲಿರುವ ಭಾರತೀಯರ ಸುರಕ್ಷತೆಗಾಗಿ ಮನವಿ ಮಾಡಿದ್ದಾರೆ.
ಸೈಬರ್ ವಂಚನೆ ಬಗ್ಗೆ ಧಾರ್ಮಿಕ ಕೇಂದ್ರಗಳಲ್ಲಿ ಜಾಗೃತಿ
ಮಸೀದಿ, ದೇವಸ್ಥಾನ, ಚರ್ಚ್ಗಳಲ್ಲಿ ಜಾಗೃತಿ ಮೂಡಿಸುತ್ತಿರುವ ಮಂಗಳೂರು ಪೊಲೀಸರು
ಮೈಸೂರಿನಲ್ಲಿ ತಲೆ ಎತ್ತಲಿದೆ ರಾಜ್ಯದಲ್ಲೇ ಅತೀ ದೊಡ್ಡ ಅಗ್ನಿಶಾಮಕ ಠಾಣೆ
ಮೈಸೂರಿನ ಅಗ್ನಿಶಾಮಕ ಠಾಣೆಯನ್ನು ರಾಜ್ಯದಲ್ಲಿಯೇ ಬೃಹತ್ ಅಗ್ನಿಶಾಮಕ ಠಾಣೆಯನ್ನಾಗಿ ಪರಿವರ್ತಿಸುವ 30 ಕೋಟಿ ರೂ. ಯೋಜನೆಯ ಪ್ರಸ್ತಾವನೆಯನ್ನು ಸರಕಾರಕ್ಕೆ ಸಲ್ಲಿಸಲಾಗಿದೆ. ಈ ಬಾರಿಯ ಬಜೆಟ್ನಲ್ಲಿ ಅನುಮೋದನೆ ದೊರೆಯುವ ಸಾಧ್ಯತೆ ಇದೆ. ಇದು ರಾಜ್ಯದಲ್ಲಿಯೇ ಅತೀ ದೊಡ್ಡ ಅಗ್ನಿಶಾಮಕ ಠಾಣೆ ಆಗಿರಲಿದೆ.
Gold Rate : ಆಭರಣ ಪ್ರಿಯರಿಗೆ ಬಿಗ್ ಶಾಕ್; ಭಾರಿ ಏರಿಕೆ ಕಂಡ ಚಿನ್ನ- ಬೆಳ್ಳಿ ದರ, ಇಲ್ಲಿದೆ ಇಂದಿನ ಬೆಲೆ ಪಟ್ಟಿ
ಬೆಂಗಳೂರು: ಮದುವೆ ಸೀಸನ್ ನಡುವೆಯೇ ಆಭರಣ ಪ್ರಿಯರಿಗೆ ಚಿನ್ನ ಮತ್ತು ಬೆಳ್ಳಿ ಬೆಲೆ (Gold and Silver Price) ಶಾಕ್ ನೀಡಿದೆ. ಜಾಗತಿಕ ಮಾರುಕಟ್ಟೆಯಲ್ಲಿನ ಬದಲಾವಣೆಗಳು, ಅಮೆರಿಕ ಮತ್ತು ಇರಾನ್ ನಡುವಿನ ಉದ್ವಿಗ್ನತೆ ಹಾಗೂ ಡಾಲರ್ ಮೌಲ್ಯದಲ್ಲಿನ ಏರಿಳಿತಗಳ ನೇರ ಪರಿಣಾಮ ಭಾರತೀಯ ಮಾರುಕಟ್ಟೆಯ ಮೇಲೆಯೂ ಬೀರಿದೆ. ಇಂದು (ಮಾರ್ಚ್ 02, 2026) ಚಿನ್ನದ ದರದಲ್ಲಿ ಭಾರಿ
ಇರಾನ್ ಮೇಲೆ ಯುದ್ಧ: ಜಾಗತಿಕ ವಿಮಾನಯಾನ ಸೇವೆ ಅಸ್ತವ್ಯಸ್ತ
ಹೊಸದಿಲ್ಲಿ: ಇರಾನ್ ಮೇಲೆ ಅಮೆರಿಕ ಹಾಗೂ ಇಸ್ರೇಲ್ ನಡೆಸಿದ ದಾಳಿ ಹಾಗೂ ಇರಾನ್ ನ ಪ್ರತಿದಾಳಿಯಿಂದ ಮಧ್ಯಪ್ರಾಚ್ಯ ಪ್ರದೇಶ ಪ್ರಕ್ಷುಬ್ಧಗೊಂಡಿದ್ದು, ಪಶ್ಚಿಮ ಏಷ್ಯಾದಲ್ಲಿ ಅಂದರೆ ಯುಎಇನಿಂದ ಹಿಡಿದು ಇಸ್ರೇಲ್ ವರೆಗೂ ವಿಮಾನಯಾನ ಸೇವೆ ಅಸ್ತವ್ಯಸ್ತಗೊಂಡಿದೆ. ಎಮಿರೇಟ್ಸ್, ಇತ್ತಿಹಾದ್ ಹಾಗೂ ಕತಾರ್ ಏರ್ ವೇಸ್ ವಿಮಾನಯಾನ ಸಂಸ್ಥೆಗಳು ರವಿವಾರ ಸಂಜೆಯವರೆಗೆ ಸುಮಾರು 1600ಕ್ಕೂ ಹೆಚ್ಚು ವಿಮಾನಗಳನ್ನು ರದ್ದುಪಡಿಸಿವೆ. ಭಾರತದ ವಿಮಾನಯಾನ ಸಂಸ್ಥೆಗಳಾದ ಇಂಡಿಗೊ, ಏರ್ಇಂಡಿಯಾ ಮತ್ತು Akasa air ಸುಮಾರು 350 ವಿಮಾನಗಳ ಸಂಚಾರವನ್ನು ರದ್ದುಪಡಿಸಿವೆ ಎಂದು ವಿಮಾನಯಾನ ಸಚಿವಾಲಯ ಹೇಳಿದೆ. ಬಹಳಷ್ಟು ವಿಮಾನಯಾನ ಕಂಪನಿಗಳು ಸೋಮವಾರದ ವರೆಗೆ ಸೇವೆ ರದ್ದುಪಡಿಸಿರುವುದಾಗಿ ಘೋಷಿಸಿವೆ. ಯುದ್ಧವಲಯದಲ್ಲಿ ಸಂಚಾರ ಸುರಕ್ಷಿತ ಎಂಬ ವಾತಾವರಣ ನಿರ್ಮಾಣವಾದ ಬಳಿಕವಷ್ಟೇ ಸೇವೆ ಪುನಾರಂಭಗೊಳ್ಳುವ ನಿರೀಕ್ಷೆ ಇದೆ. ಏತನ್ಮಧ್ಯೆ ಏರ್ಇಂಡಿಯಾ ಹೇಳಿಕೆ ನೀಡಿ, ಉತ್ತರ ಅಮೆರಿಕ ಮತ್ತು ಯೂರೋಪ್ ದೇಶಗಳಿಗೆ, ಲಭ್ಯವಿರುವ ಪಶ್ಚಿಮ ಏಷ್ಯಾದ ಉಳಿಕೆ ಭಾಗವನ್ನು ಬಳಸಿಕೊಂಡು ಪರ್ಯಾಯ ಮಾರ್ಗದ ಮೂಲಕ ವಿಮಾನಗಳನ್ನು ಹಾರಿಸಲಾಗುವುದು. ಇದರಿಂದ ಹಾರಾಟದ ಅವಧಿ ಹೆಚ್ಚುವ ನಿರೀಕ್ಷೆಯಿದೆ ಎಂದು ಹೇಳಿದೆ. ನ್ಯೂಯಾರ್ಕ್ ನ ಜೆಎಫ್ ಕೆ ಹಾಗೂ ಲಿಬರ್ಟಿ ಇಂಟರ್ನ್ಯಾಷನಲ್ ವಿಮಾನ ನಿಲ್ದಾಣಗಳಿಗೆ ತೆರಳುವ ವಿಮಾನಗಳು ರೋಮ್ ನಲ್ಲಿ ತಾಂತ್ರಿಕ ನಿಲುಗಡೆ ನೀಡಿ ಮುಂದುವರಿಯಲಿವೆ ಎಂದು ತಿಳಿಸಿದೆ. ಭಾರತೀಯ ವಿಮಾನಗಳಿಗೆ ಪಾಕಿಸ್ತಾನ ವಾಯುಪ್ರದೇಶ ಮುಚ್ಚಿರುವುದರಿಂದ, ಲುಫ್ತಾನ್ಸಾ ಏರ್ಲೈನ್ಸ್ನಂಥ ಸಂಸ್ಥೆಗಳಿಗೆ ಲಭ್ಯವಿರುವ ಪಾಕಿಸ್ತಾನ-ಸಿಐಎಸ್ ಮಾರ್ಗವಾಗಿ ಪಾಶ್ಚಿಮಾತ್ಯದೇಶಗಳಿಗೆ ಸಂಚರಿಸುವ ಮಾರ್ಗ ಲಭ್ಯವಿಲ್ಲ. ಪಾಶ್ಚಿಮಾತ್ಯ ದೇಶಗಳಿಗೆ ಏರ್ಇಂಡಿಯಾ 125 ವಿಮಾನಗಳ ಸೇವೆಯನ್ನು ರದ್ದುಪಡಿಸಿವೆ. ಯುಎಇ, ಸೌದಿ ಅರೇಬಿಯಾ, ಇಸ್ರೇಲ್ ಹಾಗೂ ಕತಾರ್ ಗೆ ತೆರಳುವ ಹಾಗೂ ಅಲ್ಲಿಂದ ಬರುವ ವಿಮಾನಗಳ ಸೇವೆಯನ್ನು ರದ್ದುಪಡಿಸಲಾಗಿದೆ.
ಅಮೆರಿಕಾ-ಇರಾನ್ ಸಂಘರ್ಷ: ಸಮುದ್ರ ಮಾರ್ಗ ಬಂದ್ ಭೀತಿ : ಭಾರತದಲ್ಲಿ ತೈಲ, ಎಲೆಕ್ಟ್ರಾನಿಕ್ ವಸ್ತುಗಳ ಬೆಲೆ ಏರಿಕೆ ಆತಂಕ
ಭಾರತ ಹಾಗೂ ಇರಾನ್ ನಡುವೆ ವ್ಯಾಪಾರ ವಹಿವಾಟಿನ ಉತ್ತಮ ಸಂಬಂಧವಿದ್ದು, ಇರಾನ್ ಸಮುದ್ರ ಮಾರ್ಗವನ್ನೇ ಭಾರತ ಆಮದು-ರಫ್ತಿಗಾಗಿ ಅವಲಂಬಿಸಿದೆ. ಆದರೆ ಈಗ ಅಮೆರಿಕ- ಇರಾನ್ ಮಧ್ಯೆ ಸೃಷ್ಟಿಯಾಗಿರುವ ಬಿಕ್ಕಟ್ಟಿನಿಂದಾಗಿ ಸಮುದ್ರ ಮಾರ್ಗ ಬಂದ್ ಆದರೆ, ಭಾರತದ ರಫ್ತು ವಹಿವಾಟಿನ ಮೇಲೆ ಗಂಭೀರ ಪರಿಣಾಮ ಬೀರಲಿದೆ.

31 C