ಪವರ್ ಗ್ರಿಡ್ ಮೇಲೆ ದಾಳಿ ನಡೆಸಿದರೆ ಅಮೆರಿಕದ ಇಂಧನ, ನೀರಿನ ಮೂಲಸೌಕರ್ಯಗಳ ಮೇಲೆ ಪ್ರತಿದಾಳಿ: ಇರಾನ್ ಎಚ್ಚರಿಕೆ
ವಾಷಿಂಗ್ಟನ್: ಇರಾನ್ ವಿರುದ್ಧದ ಕಾರ್ಯಾಚರಣೆಯನ್ನು ಮುಕ್ತಾಯಗೊಳಿಸುವ ಬಗ್ಗೆ ಗಂಭೀರ ಚಿಂತನೆ ನಡೆದಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರಕಟಿಸಿದ್ದಾರೆ. ಟ್ರುಥ್ ಸೋಶಿಯಲ್ ಪೋಸ್ಟ್ ನಲ್ಲಿ ಈ ವಿಷಯ ಬಹಿರಂಗಪಡಿಸಿರುವ ಅವರು, ಅಮೆರಿಕ ತನ್ನ ಗುರಿಗಳನ್ನು ಈಡೇರಿಸಿಕೊಳ್ಳುವ ಸನಿಹಕ್ಕೆ ಬಂದಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಏತನ್ಮಧ್ಯೆ ಶ್ವೇತಭವನ ಹೇಳಿಕೆ ನೀಡಿ, ಈ ಅಭಿಯಾನ ಮುಂದುವರಿಯಲಿದ್ದು, ವಾರದ ಒಳಗೆ ಮುಕ್ತಾಯವಾಗಲಿದೆ ಎಂದು ಸುಳಿವು ನೀಡಿದೆ. ಸಂಘರ್ಷದ ಬಳಿಕ ಮುಚ್ಚಿರುವ ಹಾರ್ಮುಝ್ ಜಲಸಂಧಿಯನ್ನು ಇರಾನ್ 48 ಗಂಟೆಗಳ ಒಳಗಾಗಿ ಯಾವುದೇ ಬೆದರಿಕೆ ಹಾಕದೇ ಸಂಪೂರ್ಣವಾಗಿ ಮುಕ್ತಗೊಳಿಸಬೇಕು ಎಂದು ಟ್ರಂಪ್ ಗಡುವು ವಿಧಿಸಿದ್ದಾರೆ. ಇದಕ್ಕೆ ಬದ್ಧವಾಗದಿದ್ದಲ್ಲಿ ಇರಾನ್ನ ವಿವಿಧ ವಿದ್ಯುತ್ ಘಟಕಗಳ ಮೇಲೆ ದಾಳಿ ನಡೆಸಲಾಗುವುದು ಹಾಗೂ ಇದು ಈ ಹಿಂದೆಂದಿಗಿಂತಲೂ ಪ್ರಬಲ ದಾಳಿಯಾಗಿರುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ. ಟ್ರಂಪ್ ಎಚ್ಚರಿಕೆಗೆ ಸೊಪ್ಪು ಹಾಕದ ಇರಾನ್. ದೇಶದ ಇಂಧನ ಮತ್ತು ವಿದ್ಯುತ್ ಮೂಲಸೌಕರ್ಯಗಳ ಮೇಲೆ ಅಮೆರಿಕ ದಾಳಿ ಮಾಡಿದಲ್ಲಿ, ಈ ಭಾಗದಲ್ಲಿರುವ ಅಮೆರಿಕ ಸಂಬಂಧಿತ ವಿದ್ಯುತ್ ಘಟಕಗಳನ್ನು ಗುರಿ ಮಾಡಿ ದಾಳಿ ನಡೆಸಲಾಗುತ್ತದೆ ಎಂದು ಇರಾನ್ನ ಯುನಿಫೈಡ್ ಕಂಬ್ಯಾಟೆಂಟ್ ಕಮಾಂಡ್ ಪ್ರತಿಹೇಳಿಕೆ ನೀಡಿದೆ. ಈ ಹಿಂದೆ ಎಚ್ಚರಿಕೆ ನೀಡಿದಂತೆ ದೇಶದ ಇಂಧನ ಹಾಗೂ ವಿದ್ಯುತ್ ಮೂಲಸೌಕರ್ಯಗಳನ್ನು ಶತ್ರುದೇಶಗಳು ಉಲ್ಲಂಘಿಸಿದಲ್ಲಿ, ಈ ಭಾಗದಲ್ಲಿರುವ ಅಮೆರಿಕದ ಎಲ್ಲ ಇಂಧನ, ಮಾಹಿತಿ ತಂತ್ರಜ್ಞಾನ ಹಾಗೂ ಡಿಸೆಲೈನೇಶನ್ ಮೂಲಸೌಕರ್ಯಗಳನ್ನು ಧ್ವಂಸ ಮಾಡಲಾಗುವುದು ಎಂದು ಮಿಲಿಟರಿ ಆಪರೇಷನಲ್ ಕಮಾಂಡ್ ಖತಮ್ ಅಲ್ ಅನ್ಬಿಯಾ ಹೇಳಿದ್ದಾಗಿ ಫಾರ್ಸ್ ನ್ಯೂಸ್ ಏಜೆನ್ಸಿ ವರದಿ ಮಾಡಿದೆ.
ಇಸ್ರೇಲ್ ನ ಡಿಮೋನಾ ಮೇಲೆ ಇರಾನ್ ನಿಂದ ಕ್ಷಿಪಣಿ ದಾಳಿ: ಇಂಟರ್ ಸೆಪ್ಟರ್ ನಾಶ, 50ಕ್ಕೂ ಹೆಚ್ಚು ಮಂದಿ ಮೃತ್ಯು
ಡಿಮೋನಾ (ಇಸ್ರೇಲ್), ಮಾ. 22: ಇಸ್ರೇಲ್ ನ ಪರಮಾಣು ಯೋಜನೆಯ ಪ್ರಮುಖ ಕೇಂದ್ರವಾಗಿರುವ ದಕ್ಷಿಣ ಭಾಗದ ಡಿಮೋನಾ ನಗರವು ಶನಿವಾರ ಇರಾನ್ನ ಭಾರೀ ಕ್ಷಿಪಣಿ ದಾಳಿಗೆ ಗುರಿಯಾಗಿದೆ. ಬ್ಯಾಲಿಸ್ಟಿಕ್ ಕ್ಷಿಪಣಿಯೊಂದು ನಗರವನ್ನು ರಕ್ಷಿಸುವ ಇಂಟರ್ ಸೆಪ್ಟರ್ ಭೇದಿಸಿ ನೇರವಾಗಿ ದಾಳಿ ನಡೆಸಿದೆ ಎಂದು Aljazeera ವರದಿ ಮಾಡಿದೆ. ನೆಗೆವ್ ಮರುಭೂಮಿಯಲ್ಲಿರುವ ಡಿಮೋನಾ, ಇಸ್ರೇಲ್ನ ಪರಮಾಣು ಸೌಲಭ್ಯಗಳ ತವರೂರಾಗಿ ಪರಿಗಣಿಸಲ್ಪಟ್ಟಿದ್ದು, ಈ ದಾಳಿ ಕಾರ್ಯತಂತ್ರದ ದೃಷ್ಟಿಯಿಂದ ಅತ್ಯಂತ ಮಹತ್ವ ಪಡೆದಿದೆ. ನಗರದಲ್ಲಿನ ಹಲವು ಪ್ರದೇಶಗಳಲ್ಲಿ ಸ್ಫೋಟಗಳು ಸಂಭವಿಸಿ ವ್ಯಾಪಕ ಹಾನಿ ಉಂಟಾಗಿದೆ ಎಂದು ವರದಿಗಳು ತಿಳಿಸಿವೆ. ಈ ದಾಳಿಯಲ್ಲಿ ಸಾವಿನ ಸಂಖ್ಯೆ 50 ಕ್ಕಿಂತ ಹೆಚ್ಚಾಗಿದೆ ಎನ್ನಲಾಗಿದೆ. ಗಾಯಗೊಂಡ ಹಲವರು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರಲ್ಲಿ 12 ವರ್ಷದ ಬಾಲಕನೊಬ್ಬನ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಇರಾನ್ ಅಧಿಕಾರಿಗಳ ಪ್ರಕಾರ, ತಮ್ಮ ನಟಾಂಜ್ ಪರಮಾಣು ಸೌಲಭ್ಯದ ಮೇಲಿನ ದಾಳಿಗೆ ಪ್ರತೀಕಾರವಾಗಿ ಈ ಕ್ರಮ ಕೈಗೊಳ್ಳಲಾಗಿದೆ. ಆದರೆ ಆ ದಾಳಿಯಲ್ಲಿ ಇಸ್ರೇಲ್ ಭಾಗವಹಿಸಿಲ್ಲ ಎಂದು ಇಸ್ರೇಲ್ ಹೇಳಿಕೊಂಡಿದ್ದು, ಅದು ಅಮೆರಿಕ ನಡೆಸಿದ ಕಾರ್ಯಾಚರಣೆ ಎಂದು ಸ್ಪಷ್ಟಪಡಿಸಿದೆ. ಅದೇ ವೇಳೆ, ಇಸ್ರೇಲ್ ಇತ್ತೀಚೆಗೆ ಟೆಹ್ರಾನ್ ನ ವಿಶ್ವವಿದ್ಯಾಲಯವೊಂದರಲ್ಲಿ ಇರುವ ಪರಮಾಣು ಶಸ್ತ್ರಾಸ್ತ್ರ ಸಂಶೋಧನಾ ಕೇಂದ್ರ ಸೇರಿದಂತೆ ಕೆಲವು ದಾಳಿಗಳಿಗನ್ನು ತಾನು ನಡೆಸಿರುವುದಾಗಿ ಒಪ್ಪಿಕೊಂಡಿದೆ. ಡಿಮೋನಾ ನಗರವು ಶನಿವಾರ ದಾಳಿಯ ಗುರಿಯಾಗಿದ್ದು, ಕ್ಷಿಪಣಿಗಳು ಪ್ರವೇಶಿಸಲು ಯತ್ನಿಸಿದ ವೇಳೆ ಒಟ್ಟು 7 ಬಾರಿ ವಾಯುದಾಳಿಯ ಎಚ್ಚರಿಕೆ ನೀಡಲಾಗಿದೆ. ಇಸ್ರೇಲ್ನ ಇಂಟರ್ ಸೆಪ್ಟರ್ ಗಳು ಸಾಮಾನ್ಯವಾಗಿ ಕ್ಷಿಪಣಿಗಳನ್ನು ತಡೆಹಿಡಿಯುತ್ತವೆ. ಈ ಬಾರಿ ಅವು ಹೇಗೆ ವಿಫಲವಾದವು ಎಂಬುದರ ಕುರಿತು ತನಿಖೆ ಆರಂಭಿಸಲಾಗಿದೆ.
ಇಸ್ರೇಲಿನ ನಗರಗಳು, ಗಲ್ಫ್ ನಲ್ಲಿರುವ ನೆಲೆಗಳ ಮೇಲೆ ಕ್ಷಿಪಣಿ ದಾಳಿ, ಕನಿಷ್ಠ 200 ಮೃತ್ಯು: IRGC ಹೇಳಿಕೆ
ಟೆಹ್ರಾನ್/ಜೆರುಸಲೇಮ್, ಮಾ. 22: ಇರಾನ್ ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಇಸ್ರೇಲ್ ನ ಅರಾದ್, ಡಿಮೋನಾ, ಐಲಾತ್, ಬೀರ್ ಶೆಬಾ ಮತ್ತು ಕಿರ್ಯಾತ್ ಗ್ಯಾಟ್ ನಗರಗಳಲ್ಲಿನ ಮಿಲಿಟರಿ ನೆಲೆಗಳು ಹಾಗೂ ಭದ್ರತಾ ಕೇಂದ್ರಗಳನ್ನು ಗುರಿಯಾಗಿಸಿಕೊಂಡು ಕ್ಷಿಪಣಿ ದಾಳಿ ನಡೆಸಲಾಗಿದೆ ಎಂದು ಹೇಳಿದೆ ಎಂದು Aljazeera ವರದಿ ಮಾಡಿದೆ. ಇದೇ ದಾಳಿಯ ಭಾಗವಾಗಿ ಕುವೈತ್ ನ ಅಲಿ ಅಲ್ ಸಲೇಮ್ ವಾಯುನೆಲೆ ಹಾಗೂ ಯುನೈಟೆಡ್ ಅರಬ್ ಎಮಿರೇಟ್ಸ್ನ ಅಲ್ ಮಿನ್ಹಾದ್ ಮತ್ತು ಅಲ್ ಧಾಫ್ರಾ ನೆಲೆಗಳ ಮೇಲೂ ದಾಳಿ ನಡೆದಿದೆ. ಈ ದಾಳಿಗಳಲ್ಲಿ 200 ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ ಎಂದು IRGC ಹೇಳಿಕೊಂಡಿದೆ. ಆದರೆ, ಇಸ್ರೇಲ್ ಯಾವುದೇ ಸಾವುನೋವುಗಳನ್ನು ದೃಢಪಡಿಸಿಲ್ಲ. ಅರಾದ್ ನಲ್ಲಿ 88 ಮಂದಿ ಗಾಯಗೊಂಡಿದ್ದು, ಡಿಮೋನಾದಲ್ಲಿ 39 ಮಂದಿ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಇಸ್ರೇಲಿನ ಆಂಬ್ಯುಲೆನ್ಸ್ ಸೇವೆ ತಿಳಿಸಿದೆ.
ಹಾರ್ಮುಝ್ ಜಲಸಂಧಿಯನ್ನು 48 ಗಂಟೆಗಳಲ್ಲಿ ತೆರೆಯದಿದ್ದರೆ ಇರಾನ್ ನ ಇಂಧನ ಮೂಲಸೌಕರ್ಯಗಳ ಮೇಲೆ ದಾಳಿ: ಟ್ರಂಪ್ ಎಚ್ಚರಿಕೆ
ವಾಷಿಂಗ್ಟನ್, ಮಾ.22: ಹಾರ್ಮುಝ್ ಜಲಸಂಧಿಯನ್ನು 48 ಗಂಟೆಗಳೊಳಗೆ ಸಂಪೂರ್ಣವಾಗಿ ತೆರೆಯದಿದ್ದರೆ ಇರಾನ್ನ ಇಂಧನ ಮೂಲಸೌಕರ್ಯಗಳ ಮೇಲೆ ದಾಳಿ ನಡೆಸುವುದಾಗಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಕೆ ನೀಡಿದ್ದಾರೆ ಎಂದು Aljazeera ವರದಿ ಮಾಡಿದೆ. ಟ್ರುತ್ ಸೋಷಿಯಲ್ನಲ್ಲಿ ಪ್ರಕಟಿಸಿದ ಪೋಸ್ಟ್ನಲ್ಲಿ ಅವರು, “ಈ ಕ್ಷಣದಿಂದ 48 ಗಂಟೆಗಳೊಳಗೆ ಇರಾನ್ ಹಾರ್ಮುಝ್ ಜಲಸಂಧಿಯನ್ನು ಸಂಪೂರ್ಣವಾಗಿ ತೆರೆಯದಿದ್ದರೆ, ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾ ಅವರ ವಿವಿಧ ಇಂಧನ ಮೂಲಸೌಕರ್ಯಗಳನ್ನು ಹೊಡೆದು ನಾಶಪಡಿಸುತ್ತದೆ. ಮೊದಲು ಅತಿದೊಡ್ಡದ್ದರಿಂದಲೇ ಆರಂಭವಾಗುತ್ತದೆ!” ಎಂದು ತಿಳಿಸಿದ್ದಾರೆ. ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಹೆಚ್ಚುತ್ತಿರುವ ಸಂದರ್ಭದಲ್ಲಿ ಟ್ರಂಪ್ ನೀಡಿರುವ ಈ ಹೇಳಿಕೆ ಗಮನ ಸೆಳೆದಿದ್ದು, ಹಾರ್ಮುಝ್ ಜಲಸಂಧಿಯ ನಿಯಂತ್ರಣ ಜಾಗತಿಕ ತೈಲ ಸರಬರಾಜಿನ ಮೇಲೆ ಮಹತ್ವದ ಪರಿಣಾಮ ಬೀರುವ ಸಾಧ್ಯತೆಯಿದೆ.
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ
ಬೆಂಗಳೂರು: ಕರ್ನಾಟಕದಲ್ಲಿ ಬೇಸಿಗೆಯಲ್ಲೂ ಮಳೆಯ ಆರ್ಭಟ ಕಾಣುವಂತಾಗಿದೆ. ಬಂಗಾಳಕೊಲ್ಲಿಯ ಆಂಧ್ರಪ್ರದೇಶ ಕರಾವಳಿ ಸಮೀಪ ಹಾಗೂ ಉತ್ತರ ಭಾರತದ ವಿವಿಧ ಕಡೆಗಳಲ್ಲಿ ಮೇಲ್ಮೈ ಸುಳಿಗಾಳಿ ಮತ್ತು ಚಂಡಮಾರುತ ಪ್ರಸರಣದಂತಹ ವೈಪರೀತ್ಯಗಳು ಉಂಟಾಗಿವೆ. ಇದರಿಂದ ರಾಜ್ಯದಲ್ಲಿ ಮಾರ್ಚ್ 23ರಿಂದ 28ರವರೆಗೆ ಸುಮಾರು ಹತ್ತಕ್ಕೂ ಅಧಿಕ ಜಿಲ್ಲೆಗಳಲ್ಲಿ ಗುಡುಗು ಸಹಿತ ವ್ಯಾಪಕ ಮಳೆ ನಿರೀಕ್ಷೆ ಇದೆ. ಕರಾವಳಿಗೆ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್
ಗ್ಯಾಸ್ ಸಿಲಿಂಡರ್ಗಳ ಮೇಲೆ ತೀವ್ರ ನಿಗಾ ; ಕಾಳಸಂತೆಯಲ್ಲಿ ಮಾರಿದರೆ ಕಠಿಣ ಕ್ರಮ
ಗೃಹ ಬಳಕೆಯ ಸಿಲಿಂಡರ್ಗಳನ್ನು ಹೋಟೆಲ್, ರೆಸ್ಟೋರೆಂಟ್ ಅಥವಾ ಇತರೆ ವಾಣಿಜ್ಯ ಉದ್ದೇಶಗಳಿಗೆ ಬಳಸುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಅಗತ್ಯ ಸೇವೆಗಳಾದ ಶಾಲೆಗಳು ಮತ್ತು ಸರಕಾರಿ ಹಾಗೂ ಖಾಸಗಿ ವಸತಿನಿಲಯಗಳಲ್ಲಿಅಡುಗೆ ಅನಿಲದ ಕೊರತೆಯಾಗದಂತೆ ವಿತರಕರು ಸರಬರಾಜು ಮಾಡಲು ಕ್ರಮ ವಹಿಸುವಂತೆ ಏಜೆನ್ಸಿಗಳಿಗೂ ಸೂಚನೆ ನೀಡಲಾಗಿದೆ.
India First Magazine: ಉದ್ಯಮಿಗಳ ಸಾಧನೆ ಮತ್ತು ಪ್ರೇರಣಾದಾಯಕ ಕಥೆಗಳು
ಉದ್ಯಮಿಗಳ ಯಶೋಗಾಥೆ ಮತ್ತು ಪ್ರೇರಣಾ ವ್ಯಕ್ತಿತ್ವಗಳನ್ನು ತೋರಿಸುವ ಡಿಜಿಟಲ್ ಮ್ಯಾಗಜಿನ್
ಇಸ್ರೇಲ್ ನ ಅರಾದ್ ನಲ್ಲಿ ಇರಾನಿನಿಂದ ಕ್ಷಿಪಣಿ ದಾಳಿ | ಇಂಟರ್ ಸೆಪ್ಟರ್ ವೈಫಲ್ಯದ ಕುರಿತು ವಾಯುಪಡೆ ತನಿಖೆ: ವರದಿ
ತೆಲ್ ಅವೀವ್, ಮಾ. 22: ದಕ್ಷಿಣ ಇಸ್ರೇಲ್ ನ ಅರಾದ್ ನಗರದಲ್ಲಿ ನೇರವಾಗಿ ಬಿದ್ದ ಇರಾನ್ ನ ಬ್ಯಾಲಿಸ್ಟಿಕ್ ಕ್ಷಿಪಣಿಯನ್ನು ತಡೆಗಟ್ಟುವಲ್ಲಿ ಉಂಟಾದ ಇಂಟರ್ ಸೆಪ್ಟರ್ ವೈಫಲ್ಯದ ಕುರಿತು ಇಸ್ರೇಲ್ ವಾಯುಪಡೆ ತನಿಖೆ ಆರಂಭಿಸಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ ಎಂದು Aljazeera ವರದಿ ಮಾಡಿದೆ. ಇಸ್ರೇಲ್ ನ 'Arutz Sheva’ ಮಾಧ್ಯಮ ವರದಿ ಪ್ರಕಾರ, ಕ್ಷಿಪಣಿಯನ್ನು ಹೊಡೆದುರುಳಿಸಲು ನಡೆಸಿದ ಎರಡು ಇಂಟರ್ ಸೆಪ್ಟರ್ ಪ್ರಯತ್ನಗಳು ವಿಫಲವಾದವು ಎಂದು ಇಸ್ರೇಲ್ ರಕ್ಷಣಾ ಪಡೆಗಳನ್ನು ಉಲ್ಲೇಖಿಸಿ ತಿಳಿಸಲಾಗಿದೆ. ಈ ಹಿನ್ನೆಲೆಯಲ್ಲಿ ವಾಯುಪ್ರತಿರೋಧ ವ್ಯವಸ್ಥೆಯ ಕಾರ್ಯಕ್ಷಮತೆ, ತಾಂತ್ರಿಕ ದೋಷಗಳು ಹಾಗೂ ಪ್ರತಿಕ್ರಿಯಾ ಕ್ರಮಗಳ ಬಗ್ಗೆ ಸಮಗ್ರ ಪರಿಶೀಲನೆ ನಡೆಯುತ್ತಿದೆ. ‘Times of Israel’ ವರದಿ ಪ್ರಕಾರ, ಅರಾದ್ ದಾಳಿಯಲ್ಲಿ ಒಟ್ಟು 59 ಮಂದಿ ಗಾಯಗೊಂಡಿದ್ದು, ಅವರಲ್ಲಿ 6 ಮಂದಿಯ ಸ್ಥಿತಿ ಗಂಭೀರವಾಗಿದೆ. ಗಾಯಾಳುಗಳಿಗೆ ಸಮೀಪದ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದು ಬಂದಿದೆ.
ಇಸ್ರೇಲ್ ನ ಅರಾದ್ ನಗರದ ಮೇಲೆ ಇರಾನ್ ನಿಂದ ಕ್ಷಿಪಣಿ ದಾಳಿ | ವ್ಯಾಪಕ ಹಾನಿ; 150 ಕುಟುಂಬಗಳ ಸ್ಥಳಾಂತರ
ಇಸ್ರೇಲಿನ ಆಸ್ಪತ್ರೆಯಲ್ಲಿ ತುರ್ತು ಪರಿಸ್ಥಿತಿ ಘೋಷಣೆ
ಮೂಡಿಗೆರೆ | ಏಕಲವ್ಯ ವಸತಿ ಶಾಲೆಯ ವಿದ್ಯಾರ್ಥಿಗಳಿಗೆ ಹಲ್ಲೆ ಆರೋಪ; ಪ್ರಾಂಶುಪಾಲ ಸಹಿತ ಮೂವರ ಅಮಾನತಿಗೆ ಒತ್ತಾಯ
ಮೂಡಿಗೆರೆ : ಅನುಮತಿ ಪಡೆಯದೆ ಆಟವಾಡುತ್ತಿದ್ದಾರೆ ಎಂದು ಆರೋಪಿಸಿ ಪ್ರಾಂಶುಪಾಲರು ವಿದ್ಯಾರ್ಥಿಗಳಿಗೆ ಹಲ್ಲೆ ನಡೆಸಿರುವ ಘಟನೆ ಕೊಟ್ಟಿಗೆಹಾರ ಸಮೀಪದ ತರುವೆ ಏಕಲವ್ಯ ವಸತಿ ಶಾಲೆಯಲ್ಲಿ ಶನಿವಾರ ವರದಿಯಾಗಿದೆ. ಶಾಲೆಯ ಪ್ರಾಂಶುಪಾಲ ಸತೀಶ್ ಪ್ರಸಾದ್ ಜೈಸ್ವಾಲ್ ಅವರು ಬೆಳಗ್ಗೆ ಮೈದಾನದಲ್ಲಿ ಅನುಮತಿ ಪಡೆಯದೆ ಆಟವಾಡುತ್ತಿದ್ದ 8 ವಿದ್ಯಾರ್ಥಿಗಳನ್ನು ಪ್ಲಾಸ್ಟಿಕ್ ಪೈಪ್ ಹಾಗೂ ಬೆಲ್ಟ್ನಿಂದ ಮನಸ್ಸೋ ಇಚ್ಛೆ ಹೊಡೆದಿದ್ದಾರೆ. ಹಲ್ಲೆಯ ನಂತರ ಮಕ್ಕಳನ್ನು ವಸತಿ ಶಾಲೆಯ ಕೊಠಡಿಯಲ್ಲಿ ಕೂಡಿ ಹಾಕಲಾಗಿತ್ತು ಎಂದು ಸ್ಥಳೀಯರು ಆರೋಪಿಸಿದ್ದಾರೆ. ವಿದ್ಯಾರ್ಥಿಗಳ ಕೂಗಾಟ ಕೇಳಿ ಸ್ಥಳೀಯ ಕಾಫಿ ತೋಟದ ಕಾರ್ಮಿಕರು ಬಣಕಲ್ ಪೊಲೀಸರಿಗೆ ಮಾಹಿತಿ ನೀಡಿದ್ದು, ತಕ್ಷಣವೇ ಸ್ಥಳಕ್ಕೆ ಆಗಮಿಸಿದ ಪಿಎಸ್ಸೈ ಡಿ.ವಿ. ರೇಣುಕಾ ಅವರು ಕೊಠಡಿಯಲ್ಲಿ ಬಂಧಿತರಾಗಿದ್ದ ಮಕ್ಕಳನ್ನು ರಕ್ಷಿಸಿ ವಿಚಾರಣೆ ನಡೆಸಿದಾಗ ಘಟನೆ ಬಹಿರಂಗವಾಯಿತು. ಗಾಯಗೊಂಡ ವಿದ್ಯಾರ್ಥಿಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಪೋಷಕರು, ವಿವಿಧ ಸಂಘಟನೆಗಳ ಆಕ್ರೋಶ: ಘಟನೆಗೆ ವಿರೋಧ ವ್ಯಕ್ತಪಡಿಸಿದ ಸ್ಥಳೀಯರು, ಪೋಷಕರು ಹಾಗೂ ವಿವಿಧ ಸಂಘಟನೆಗಳ ಮುಖಂಡರು ಏಕಲವ್ಯ ವಸತಿ ಶಾಲೆಯ ಎದುರು ಜಮಾಯಿಸಿ ಪ್ರಾಂಶುಪಾಲ ಸತೀಶ್ ಪ್ರಸಾದ್ ಜೈಸ್ವಾಲ್, ಸಿಬ್ಬಂದಿ ಶುಭಂ ಮತ್ತು ಲೋಕೇಶ್ ಶರ್ಮ ಅವರನ್ನು ತಕ್ಷಣ ಅಮಾನತು ಮಾಡುವಂತೆ ಒತ್ತಾಯಿಸಿದರು. ಅಲ್ಲದೆ, ದೌರ್ಜನ್ಯ ಎಸಗಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಸಹಾಯಕ ಆಯುಕ್ತರು ಹಾಗೂ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗೆ ಮನವಿ ಸಲ್ಲಿಸಿದರು. ಅಧಿಕಾರಿಗಳ ಭರವಸೆ: ಘಟನಾ ಸ್ಥಳಕ್ಕೆ ಭೇಟಿ ನೀಡಿದ ಸಹಾಯಕ ಆಯುಕ್ತ ನಟೇಶ್, ತಹಶೀಲ್ದಾರ್ ಅಶ್ವಿನಿ, ಸಿಪಿಐ ರಾಜಶೇಖರ್, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಮಹಾಂತೇಶ್ ಭಜಂತ್ರಿ, ಪಿಎಸ್ಸೈ ಡಿ.ವಿ. ರೇಣುಕಾ, ಗ್ರಾಮ ಲೆಕ್ಕಾಧಿಕಾರಿ ಪಂಪನಾ ಸೇರಿದಂತೆ ಅಧಿಕಾರಿಗಳು ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಭರವಸೆ ನೀಡಿದರು.
ಮುಖ್ಯರಸ್ತೆಗಳಲ್ಲಿ ಬೀದಿ ವ್ಯಾಪಾರ ನಿಷೇಧ; ಬಡವರಿಗೆ ಮಾಡುತ್ತಿರುವ ದ್ರೋಹ: ಬೀದಿ ವ್ಯಾಪಾರಿಗಳ ಸಂಘ
ಬೆಂಗಳೂರು : ಮುಖ್ಯರಸ್ತೆಗಳಲ್ಲಿ ಬೀದಿ ವ್ಯಾಪಾರ ನಿಷೇಧ ಮಾಡಿರುವುದು ಕಾನೂನು ಬಾಹಿರಮಾತ್ರವಲ್ಲ, ಇದು ಬಡವರಿಗೆ ಮಾಡುತ್ತಿರುವ ದ್ರೋಹ ಎಂದು ಕರ್ನಾಟಕ ಪ್ರಗತಿಪರ ಬೀದಿ ವ್ಯಾಪಾರಿಗಳ ಸಂಘ ತಿಳಿಸಿದೆ. ಶನಿವಾರ ಈ ಕುರಿತು ಪ್ರಕಟನೆ ನೀಡಿರುವ ಕರ್ನಾಟಕ ಪ್ರಗತಿಪರ ಬೀದಿ ವ್ಯಾಪಾರಿಗಳ ಸಂಘದ ಎಸ್.ಬಾಬು, ವಕೀಲ ವಿನಯ್ ಶ್ರೀನಿವಾಸ್, ಲೇಖ ಅಡವಿ ಅವರು, ಬೀದಿ ವ್ಯಾಪಾರಿಗಳ ಜೀವನೋಪಾಯದ ರಕ್ಷಣೆ ಮತ್ತು ನಿಯಂತ್ರಣ ಕಾಯ್ದೆ, 2014ರ ಪ್ರಕಾರ, ಬೀದಿ, ಫುಟ್ಪಾತ್, ರಸ್ತೆ, ಸಾರ್ವಜನಿಕ ಸ್ಥಳಗಳಲ್ಲಿ ವಸ್ತುಗಳ ಮಾರಾಟ ಅಥವಾ ಸೇವೆಗಳನ್ನು ನೀಡುವ ಯಾರನ್ನಾದರೂ ‘ಬೀದಿ ವ್ಯಾಪಾರಿ’ ಎಂದು ಪರಿಗಣಿಸಲಾಗುತ್ತದೆ. ಆದರೆ ಈ ಕಾಯ್ದೆ ಜಾರಿಗೆ ಬಂದು ದಶಕ ಕಳೆದರೂ, ಸಮಗ್ರ ಸಮೀಕ್ಷೆಗಳು ಪೂರ್ಣಗೊಂಡಿಲ್ಲ. ಎಲ್ಲ ವ್ಯಾಪಾರಿಗಳಿಗೆ ಗುರುತಿನ ಚೀಟಿಗಳು ನೀಡಿಲ್ಲ. ಸಾವಿರಾರು ಜನರು ಪಟ್ಟಿಯಿಂದ ಹೊರಗಿದ್ದಾರೆ ಎಂದು ತಿಳಿಸಿದ್ದಾರೆ. ರಸ್ತೆಗಳ ವರ್ಗಗಳನ್ನು ಆಧರಿಸಿ ಸಂಪೂರ್ಣವಾಗಿ ಬೀದಿ ವ್ಯಾಪಾರವನ್ನು ನಿಷೇಧಿಸುವುದು ಕಾನೂನಿಗೆ ವಿರುದ್ಧವಾಗಿದೆ. ಬೀದಿ ವ್ಯಾಪಾರಿಗಳ ಕಾಯ್ದೆಯಲ್ಲಿ ರಸ್ತೆಬದಿಯಲ್ಲಿ ವ್ಯಾಪಾರ ಮಾಡಬಹುದು ಎಂದು ಸ್ಪಷ್ಟವಾಗಿದೆ. ಜೊತೆಗೆ, ಕಾಯ್ದೆ ಪ್ರಕಾರ ಎಲ್ಲಿ ವ್ಯಾಪಾರ ಮಾಡಬಹುದು, ಮಾಡಬಾರದು ಎಂಬುದರ ಬಗ್ಗೆ ಟೌನ್ ವೆಂಡಿಂಗ್ ಸಮಿತಿಗಳಲ್ಲಿ (ಟಿವಿಸಿ) ತೀರ್ಮಾನ ತೆಗೆದುಕೊಳ್ಳಬೇಕು. ಆದರೆ ಹೊಸ ಐದು ನಗರಪಾಲಿಕೆಗಳಾದ ಮೇಲೆ ಇನ್ನು ಸಮಿತಿ ರಚನೆಯಾಗಿಲ್ಲ ಎಂದು ಆರೋಪಿಸಿದ್ದಾರೆ. ಬೀದಿ ವ್ಯಾಪಾರಿಗಳು ಸಮಸ್ಯೆಯಲ್ಲ, ಪರಿಹಾರದ ಭಾಗ. ನಾವು ಬೀದಿಯಲ್ಲಿ ಇರುವುದರಿಂದ ಬೀದಿಗಳನ್ನು ಜೀವಂತವಾಗಿಡುವುದರಿಂದ ಸರ ಕಳ್ಳತನ, ಲೈಂಗಿಕ ಕಿರುಕುಳ ಮುಂತಾದ ಅಪರಾಧಗಳನ್ನು ಕಡಿಮೆ ಮಾಡುತ್ತಾರೆ. ಬೀದಿಯಲ್ಲಿ ಜನರ ಸಂಚಾರವನ್ನು ಹೆಚ್ಚಿಸುವ ಮೂಲಕ ಮಹಿಳೆಯರಿಗೆ ಮತ್ತು ಸಾಮಾನ್ಯ ನಾಗರಿಕರಿಗೆ ಸುರಕ್ಷತೆ ಒದಗಿಸುತ್ತಾರೆ. ಬೀದಿ ವ್ಯಾಪಾರಿಗಳು ನಗರವನ್ನು ಸ್ವಚ್ಛ ಮತ್ತು ಸಕ್ರಿಯವಾಗಿರಲು ಸಹಾಯ ಮಾಡುತ್ತಾರೆ. ಇಂತಹ ವ್ಯಾಪಾರಿಗಳನ್ನು ತೆಗೆದುಹಾಕುವುದರಿಂದ ನಗರಕ್ಕೆ ಅಪಾಯವಾಗುತ್ತದೆ ಎಂದು ಹೇಳಿದ್ದಾರೆ. ಮುಖ್ಯ ಮತ್ತು ಉಪ ಮುಖ್ಯ ರಸ್ತೆಗಳಲ್ಲಿ ಬೀದಿ ವ್ಯಾಪಾರ ನಿಷೇಧಿಸುವ ಯಾವುದೇ ಪ್ರಸ್ತಾವವನ್ನು ಸರಕಾರ ತಕ್ಷಣ ಹಿಂಪಡೆಯಬೇಕು. ಬೀದಿ ವ್ಯಾಪಾರಿಗಳ ಕಾಯ್ದೆಯನ್ನು ಸಂಪೂರ್ಣವಾಗಿ ಜಾರಿಗೆ ತರಬೇಕು. ಬೀದಿ ವ್ಯಾಪಾರಿಗಳ ಸಮಗ್ರ ಸಮೀಕ್ಷೆ ನಡೆಸಿ ಎಲ್ಲರಿಗೂ ಗುರುತಿನ ಚೀಟಿಗಳನ್ನು ನೀಡಬೇಕು ಎಂದು ಆಗ್ರಹಿಸಿದ್ದಾರೆ. ಹೊಸ ನಗರಪಾಲಿಕೆಗಳಲ್ಲಿ ಟೌನ್ ವೆಂಡಿಂಗ್ ಸಮಿತಿಗಳನ್ನು ರಚಿಸಿ, ಬಲಪಡಿಸಿ ವ್ಯಾಪಾರಿಗಳ ನೈಜ ಪ್ರತಿನಿಧಿತ್ವವನ್ನು ಖಚಿತಪಡಿಸಬೇಕು. ಬೀದಿ ವ್ಯಾಪಾರಿಗಳ ತೆರವು, ಜಪ್ತಿ ಮತ್ತು ಕಿರುಕುಳವನ್ನು ತಕ್ಷಣ ನಿಲ್ಲಿಸಬೇಕು. ಬೀದಿ ವ್ಯಾಪಾರಿಗಳನ್ನು ಅಳಿಸಿ ಬೆಂಗಳೂರು ‘ವಿಶ್ವಮಟ್ಟದ ನಗರ’ವಾಗಲು ಸಾಧ್ಯವಿಲ್ಲ. ನಿಜವಾದ ನ್ಯಾಯಯುತ ನಗರವೆಂದರೆ ವ್ಯಾಪಾರಿಗಳು, ಪಾದಚಾರಿಗಳು ಮತ್ತು ಎಲ್ಲಾ ನಾಗರಿಕರು ಗೌರವ ಮತ್ತು ಹಕ್ಕುಗಳೊಂದಿಗೆ ಜಾಗವನ್ನು ಹಂಚಿಕೊಳ್ಳುವ ನಗರ ಎಂದು ತಿಳಿಸಿದ್ದಾರೆ.
Belagavi| ಹೆಣ್ಣು ಮಗು ಎಂದು ವಿಷವುಣಿಸಿ ಕೊಂದ ತಂದೆಯ ಬಂಧನ
ಬೆಳಗಾವಿ : ಬೆಳಗಾವಿ ತಾಲೂಕಿನ ಉಕ್ಕಡ ಗ್ರಾಮದಲ್ಲಿ 15 ದಿನಗಳ ಹೆಣ್ಣು ಶಿಶುವಿಗೆ ವಿಷ ನೀಡಿ ಕೊಲೆ ಮಾಡಿದ ಆರೋಪದ ಮೇಲೆ ತಂದೆಯನ್ನು ಪೊಲೀಸರು ಬಂಧಿಸಿರುವ ಘಟನೆ ನಡೆದಿದೆ. ಭೀಮರಾಯ ಬಾಣಪ್ಪ ಚಿಪ್ಪಡಿ (28) ಬಂಧಿತ ಆರೋಪಿ. ಆರೋಪಿ ಭೂತರಮನಹಟ್ಟಿ ಗ್ರಾಮದ ನಿವಾಸಿಯಾಗಿದ್ದು, ಮೃತ ಶಿಶು ಪ್ರಿಯಾಂಕಾ (15 ದಿನ) ಎಂದು ಗುರುತಿಸಲಾಗಿದೆ. ಈ ಸಂಬಂಧ ಶಿಶುವಿನ ತಾಯಿ ಶೀಲಾ ಚಿಪ್ಪಡಿ ಕಾಕತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪೊಲೀಸರ ಮಾಹಿತಿ ಪ್ರಕಾರ, ಆರೋಪಿಗೆ ಹೆಣ್ಣು ಮಗು ಜನಿಸಿದ್ದಕ್ಕೆ ಅಸಮಾಧಾನವಿದ್ದು, ಪತ್ನಿಗೆ ಮಗುವನ್ನು ತವರು ಮನೆಯಲ್ಲಿ ಬಿಟ್ಟು ತಾನೊಬ್ಬಳೇ ಮನೆಗೆ ಬರುವಂತೆ ಒತ್ತಡ ಹಾಕುತ್ತಿದ್ದನು. ಮಾರ್ಚ್ 17ರಂದು ಮಧ್ಯಾಹ್ನ ಸುಮಾರು 2 ಗಂಟೆಯ ಸುಮಾರಿಗೆ ಮಗು ಹಾಗೂ ತಾಯಿ ಮಲಗಿದ್ದ ಸಂದರ್ಭವನ್ನು ಬಳಸಿಕೊಂಡು, ಮಗುವಿಗೆ ವಿಷ ಉಣಿಸಿರುವುದು ತನಿಖೆಯಲ್ಲಿ ಬಹಿರಂಗವಾಗಿದೆ. ಬಾಟಲಿಯ ತೊಟ್ಟಿಗೆ ವಿಷ ಹಚ್ಚಿ ಮಗುವಿಗೆ ಕುಡಿಸಿರುವುದಾಗಿ ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ಘಟನೆ ಬಳಿಕ ಆರೋಪಿ ಸ್ಥಳದಿಂದ ಪರಾರಿಯಾಗಿದ್ದನು. ಮಗುವಿನ ಬಾಯಿಂದ ನೊರೆ ಬರುತ್ತಿರುವುದನ್ನು ಗಮನಿಸಿದ ತಾಯಿ ತಕ್ಷಣವೇ ಬೆಳಗಾವಿಯ ಬಿಐಎಂಎಸ್ ಆಸ್ಪತ್ರೆಗೆ ಕರೆದೊಯ್ದರೂ, ವೈದ್ಯರು ಮಗುವನ್ನು ಮೃತಪಟ್ಟಿರುವುದಾಗಿ ಘೋಷಿಸಿದರು. ಹತ್ತಿ ಬೆಳೆಗೆ ಸಿಂಪಡಿಸುವ ಕೀಟನಾಶಕವನ್ನು ಬಳಸಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಘಟನೆಯ ನಂತರ ಕಾಕತಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದರು. ಪರಾರಿಯಾಗಿದ್ದ ಆರೋಪಿಯನ್ನು ಮಾ. 20ರಂದು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಆರೋಪಿಯನ್ನು ಹಿಂಡಲಗಾ ಜೈಲಿಗೆ ಕಳುಹಿಸಲಾಗಿದೆ. ಘಟನಾ ಸ್ಥಳಕ್ಕೆ ಬೆಳಗಾವಿ ಗ್ರಾಮೀಣ ಎಸಿಪಿ ನಾರಾಯಣ ಭಾರಮಣಿ ಸಹಿತ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆರೋಪಿಯಿಂದ ವಿಷ ವಶಪಡಿಸಿಕೊಳ್ಳಲಾಗಿದ್ದು, ಮರಣೋತ್ತರ ಪರೀಕ್ಷಾ ವರದಿ ನಿರೀಕ್ಷಿಸಲಾಗುತ್ತಿದೆ.
ರೂಪ್ಲಾ ನಾಯಕ್ಗೆ ʼಸಂತ ಸೇವಾಲಾಲ್ ಪ್ರಶಸ್ತಿʼ
ಬೆಂಗಳೂರು : ಬಂಜಾರ ಸಮುದಾಯದ ಸಮಾಜ ಸೇವಕರಾದ ರೂಪ್ಲಾ ನಾಯಕ್ ಅವರಿಗೆ ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡಮಿಯ 2025ನೇ ಸಾಲಿನ ‘ಸಂತ ಸೇವಾಲಾಲ್ ಪ್ರಶಸಿ’ ಲಭಿಸಿದೆ ಎಂದು ಅಕಾಡಮಿಯ ಅಧ್ಯಕ್ಷ ಡಾ.ಮೋತಿಲಾಲ ಚೌಹಾಣ್ ತಿಳಿಸಿದ್ದಾರೆ. ಶನಿವಾರ ಈ ಕುರಿತು ಪ್ರಕಟಣೆೆ ನೀಡಿರುವ ಅವರು, ಸಂತ ಸೇವಾಲಾಲ್ ಪ್ರಶಸ್ತಿಯು 1 ಲಕ್ಷ ರೂ.ನಗದು. ನೆನಪಿನ ಕಾಣಿಕೆ ಮತ್ತು ಪ್ರಶಸ್ತಿ ಪತ್ರವನ್ನು ಒಳಗೊಂಡಿದೆ. ಬಂಜಾರ ಸಮುದಾಯದ ಕಲಾವಿದರು, ಸಾಹಿತಿಗಳು ಸೇರಿ ಸಾಂಸ್ಕೃತಿಕ ಕ್ಷೇತ್ರದ ಸಾಧಕರಿಗೆ ಪ್ರಶಸ್ತಿ ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ. ಬಂಜಾರ ಭಜನೆ ಹಾಗೂ ಸಾಹಿತ್ಯಕ್ಕಾಗಿ ವಸಂತ ಎಲ್.ಚೌಹಾಣ್, ಲಂಬಾಣಿ ನೃತ್ಯ ಕಲಾವಿದೆ ದೇವಿಬಾಯಿ, ವೈದ್ಯಕೀಯ ಕ್ಷೇತ್ರದ ಡಾ.ರಾಕೇಶ್ ನಾಯ್ಕ್ ಎಲ್., ತಟ್ಟೆ ವಾದ್ಯದ ಗೋವಿಂದ ನಾಯ್ಕ್, ಸಂಗೀತ ಕ್ಷೇತ್ರದ ಸಾಧನೆಗಾಗಿ ಶ್ರೀನಿವಾಸ ನಾಯ್ಕ್, ಕ್ರೀಡಾ ಕ್ಷೇತ್ರದಲ್ಲಿ ಶೇಖರ್ ನಾಯ್ಕ್ ಎಲ್, ಜಾನಪದ ಹಾಡುಗಾರಿಕೆಯಲ್ಲಿ ಶಾಂತಾ ನಾಯಕ್, ಜಾನಪದ ಗೀತೆ ಮತ್ತು ಸಂಗೀತ ಕ್ಷೇತ್ರದಲ್ಲಿ ಪಾಂಡುರಂಗ(ಸುದೀಪ್), ಬಂಜಾರ ಭಜನೆ ಮತ್ತು ಗಾಯನಕ್ಕಾಗಿ ಚಂದ್ರಶೇಖರ ಯಶ್ವತ ರಾಠೋಡ ಹಾಗೂ ಬಂಜಾರ ನೃತ್ಯ ಗಾಯನ, ಭಜನೆ, ನಾಟಕ ಕ್ಷೇತ್ರದ ಸಾಧನೆಗಾಗಿ ವಿಜಯಲಕ್ಷ್ಮೀ ಅವರನ್ನು 2025ನೇ ಸಾಲಿನ ವಾರ್ಷಿಕ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ. ವಾರ್ಷಿಕ ಪ್ರಶಸ್ತಿಯು 25 ಸಾವಿರ ರೂ.ನಗದು ನೆನಪಿನ ಕಾಣಿಕೆ ಪ್ರಶಸ್ತಿ ಪತ್ರವನ್ನು ಒಳಗೊಂಡಿದೆ. ಮಾ.27ರಂದು ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭಾಗವಹಿಸಲಿದ್ದಾರೆ ಎಂದು ತಿಳಿಸಿದ್ದಾರೆ. 5 ಜನರಿಗೆ ಗೌರವ ಪ್ರಶಸ್ತಿ ಜನಪದ ಸಾಹಿತ್ಯ ಮತ್ತು ಸಂಶೋಧನೆಗಾಗಿ ಡಾ.ಹರಿಲಾಲ್ ಪವಾರ್, ನಗಾರಿ ವಾದ್ಯ ಕಲಾವಿದ ಶಂಕರ್ ಪುನ್ನು ಜಾಧವ್, ಬಂಜಾರ ನಗಾರಿ, ಗೀತೆಗಳ ಕಲಾವಿದ ಪಾಂಡಪ್ಪ ದೇವಲಪ್ಪ ಲಮಾಣಿ, ಸಮಾಜ ಸೇವಾ ಕ್ಷೇತ್ರದಲ್ಲಿ ರಾಮಚಂದ್ರ ನಾಯಕ್, ನೃತ್ಯ ಕಲಾವಿದೆ ಗೌರವ್ವಾ ಶಿವಪ್ಪಾ ಲಮಾಣಿ ಅವರು 2025ನೇ ಸಾಲಿನ ಗೌರವ ಪ್ರಶಸ್ತಿಗೆ ಪಾತ್ರರಾಗಿದ್ದು, ಗೌರವ ಪ್ರಶಸ್ತಿಯು 50 ಸಾವಿರ ರೂ. ನಗದು ಒಳಗೊಂಡಿದೆ ಎಂದು ಬಂಜಾರ ಸಂಸ್ಕೃತಿ ಭಾಷಾ ಅಕಾಡಮಿಯ ಅಧ್ಯಕ್ಷ ಡಾ.ಮೋತಿಲಾಲ ಚೌಹಾಣ್ ಮಾಹಿತಿ ನೀಡಿದ್ದಾರೆ.
ಕಂಪ್ಲಿ | ಶಾದಿ ಮಹಲ್ ನಿರ್ಮಾಣಕ್ಕೆ ಶಾಸಕ ಜೆ.ಎನ್.ಗಣೇಶ ಅವರಿಂದ ಭೂಮಿಪೂಜೆ
ಬಳ್ಳಾರಿ/ಕಂಪ್ಲಿ: ಪಟ್ಟಣದ ಹೊಸಪೇಟೆ ಬೈಪಾಸ್ ರಸ್ತೆಯ ಈದ್ಗಾ ಮೈದಾನ ಸಮೀಪ, 2025-26ನೇ ಸಾಲಿನ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಯೋಜನೆಯಡಿ ಸುಮಾರು 1 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುವ ಶಾದಿ ಮಹಲ್ ಕಟ್ಟಡ ಕಾಮಗಾರಿಗೆ ಶಾಸಕ ಜೆ.ಎನ್.ಗಣೇಶ ಅವರು ಶನಿವಾರ ಭೂಮಿಪೂಜೆ ನೆರವೇರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕಂಪ್ಲಿ ಕ್ಷೇತ್ರದ ಕಂಪ್ಲಿ, ಎಮ್ಮಿಗನೂರು, ಕಗ್ಗಲ್ ಹಾಗೂ ಗೆಣಕಿಹಾಳ್ ಗ್ರಾಮಗಳಲ್ಲಿ ತಲಾ 1 ಕೋಟಿ ರೂ. ಅನುದಾನದಲ್ಲಿ ಶಾದಿ ಮಹಲ್ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ ಎಂದರು. ಜೊತೆಗೆ, ತಲಾ 33 ಲಕ್ಷ ರೂ. ವೆಚ್ಚದಲ್ಲಿ 8 ಖಬರಸ್ತಾನ್ಗಳ ಅಭಿವೃದ್ಧಿಗೆ ಒಟ್ಟು 2.64 ಕೋಟಿ ರೂ. ಅನುದಾನ ಮೀಸಲಿಟ್ಟು ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ ಎಂದು ತಿಳಿಸಿದರು. ಕಂಪ್ಲಿಯ ಸಕ್ಕರೆ ಕಾರ್ಖಾನೆ ಸಮೀಪದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಬಳಿ ಮೌಲಾನ ಆಜಾದ್ ಶಾಲೆಯ ನಿರ್ಮಾಣ ಕಾಮಗಾರಿ ಕೂಡ ಈಗಾಗಲೇ ಪ್ರಾರಂಭವಾಗಿದ್ದು, ಇದರಿಂದ ಸ್ಥಳೀಯರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಸೈಯದ್ ಮೈನುದ್ದೀನ್ ಖಾದ್ರಿ, ಸೈಯದ್ ಅಶ್ಫಕ್, ಡಾ. ನೂರ ಮುಹಮ್ಮದ್ ಖಾದ್ರಿ, ಎಪಿಎಂಸಿ ಅಧ್ಯಕ್ಷ ಹಬೀಬ್ ರೆಹಮಾನ್, ಬ್ಲಾಕ್ ಅಧ್ಯಕ್ಷ ಕೆ. ಶ್ರೀನಿವಾಸರಾವ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
Samarth Shamanur: ದಾವಣಗೆರೆ ಉಪಚುನಾವಣೆ ಕಾಂಗ್ರೆಸ್ ಟಿಕೆಟ್ ಫೈಟ್ ಅಂತ್ಯ: ಶಾಮನೂರು ಕುಟುಂಬದ ಕುಡಿ ಸಮರ್ಥ್ ಕಣಕ್ಕೆ
ದಾವಣಗೆರೆ: ಕಳೆದ ಕೆಲವು ದಿನಗಳಿಂದ ತೀವ್ರ ಕುತೂಹಲ ಕೆರಳಿಸಿದ್ದ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಕಾಂಗ್ರೆಸ್ ಟಿಕೆಟ್ ಗೊಂದಲಕ್ಕೆ ಕೊನೆಗೂ ತೆರೆ ಬಿದ್ದಿದೆ. ಕಾಂಗ್ರೆಸ್ ಹೈಕಮಾಂಡ್ ಅಂತಿಮವಾಗಿ ಪಕ್ಷದ ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ ಅವರ ಮೊಮ್ಮಗಸಮರ್ಥ್ ಶಾಮನೂರು (Samarth Shamanur) ಅವರಿಗೆ ಟಿಕೆಟ್ ಫೈನಲ್ ಮಾಡಿದೆ. ಟಿಕೆಟ್ ಹಂಚಿಕೆ ವಿಚಾರದಲ್ಲಿ ಉಂಟಾಗಿದ್ದ ಬಿಕ್ಕಟ್ಟನ್ನು ಶಮನಗೊಳಿಸಲು
ಭಾರತದಲ್ಲಿ LPG ಸೈಬರ್ ಮೋಸಗಳ ಏರಿಕೆ: ನಕಲಿ ಲಿಂಕ್ಗಳು, WhatsApp APK ಮಾಲ್ವೇರ್ ಮತ್ತು UPI ಫ್ರಾಡ್ ಬಹಿರಂಗ
LPG ಸ್ಕ್ಯಾಮ್ ಎಚ್ಚರಿಕೆ: ನಕಲಿ ಬುಕ್ಕಿಂಗ್ ಲಿಂಕ್ಗಳು ಮತ್ತು APK ಮಾಲ್ವೇರ್ ಮೂಲಕ ಖಾಲಿಯಾಗುತ್ತಿರುವ ಬ್ಯಾಂಕ್ ಖಾತೆಗಳು
ಯುಎನ್ಐ ಸುದ್ದಿಸಂಸ್ಥೆಯ ಕಚೇರಿಗೆ ದಿಲ್ಲಿ ಪೊಲೀಸರಿಂದ ಬೀಗಮುದ್ರೆ; ಎಡಪಕ್ಷಗಳ ತೀವ್ರ ಖಂಡನೆ
ಹೊಸದಿಲ್ಲಿ: ಯುಎನ್ಐ ಸುದ್ದಿಸಂಸ್ಥೆಯ ಕಚೇರಿಗೆ ದಿಲ್ಲಿ ಪೊಲೀಸರು ಬೀಗಮುದ್ರೆ ಹಾಕಿರುವುದನ್ನು ಎಡಪಕ್ಷಗಳ ಮುಖಂಡರು ಶನಿವಾರ ಖಂಡಿಸಿದ್ದಾರೆ. ಮಾಧ್ಯಮರಂಗದ ವಿರುದ್ಧ ಆಡಳಿತದ ಬೆದರಿಕೆ ಹಾಗೂ ಉನ್ನತ ಪ್ರಭಾವವನ್ನು ಈ ನಡೆಯು ಪ್ರತಿಬಿಂಬಿಸುತ್ತದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೆದರಿಕೆಯಡಿ ಪತ್ರಿಕಾರಂಗವು ಮುಕ್ತವಾಗಿ ಕಾರ್ಯನಿರ್ವಹಿಸಲಾರದು ಎಂದು ಸಿಪಿಎಂ ಪ್ರಧಾನ ಕಾರ್ಯದರ್ಶಿ ಎಂ.ಎ.ಬೇಬಿ ಅವರು ಸಾಮಾಜಿಕ ಜಾಲತಾಣ ʼಎಕ್ಸ್ʼ ಪೋಸ್ಟ್ ಒಂದರಲ್ಲಿ ತಿಳಿಸಿದ್ದಾರೆ. ಯುಎನ್ಐ ರಫಿ ಮಾರ್ಗ್ನಲ್ಲಿರುವ ಯುಎನ್ಐ ಕಚೇರಿಯಲ್ಲಿ ಪತ್ರಕರ್ತರನ್ನು ಹೊರದಬ್ಬಿದ ಹಾಗೂ ಅವರಿಗೆ ಥಳಿಸಿದ ಅರೆಸೈನಿಕ ಪಡೆಗಳು ಹಾಗೂ ದಿಲ್ಲಿ ಪೊಲೀಸರ ಆಘಾತಕಾರಿ ನಡವಳಿಕೆಯನ್ನು ಬಲವಾಗಿ ಖಂಡಿಸುತ್ತೇವೆ. ಇಂತಹ ದರ್ಪ, ಪೂರ್ವಭಾವಿ ನೋಟಿಸ್ ನೀಡದೆ ಇರುವುದು ಹಾಗೂ ವೈಯಕ್ತಿಕ ಸೊತ್ತುಗಳನ್ನು ಸಂಗ್ರಹಿಸಲು ಕಾಲಾವಕಾಶ ನಿರಾಕರಣೆ ಮತ್ತು ಮಹಿಳೆಯರು ಸೇರಿದಂತೆ ಸಿಬ್ಬಂದಿಯೊಂದಿಗೆ ಅನುಚಿತ ನಡವಳಿಕೆಯು ಪ್ರಜಾಪ್ರಭುತ್ವದಲ್ಲಿ ಅಸ್ವೀಕಾರಾರ್ಹವಾಗಿದೆ ಹಾಗೂ ಅದನ್ನು ನ್ಯಾಯಾಲಯದ ಆದೇಶದ ನೆಪದಲ್ಲಿ ಸಮರ್ಥಿಸಲು ಸಾಧ್ಯವಿಲ್ಲ’’ ಎಂದು ಹೇಳಿದ್ದಾರೆ. ದಿಲ್ಲಿ ಪೊಲೀಸರು ಪತ್ರಕರ್ತರನ್ನು ಹೊರದಬ್ಬುವಾಗ ಅವರ ಮೇಲೆ ಹಲ್ಲೆ ನಡೆಸಿದ್ದಾರೆಂದು ಸಿಪಿಐ(ಎಂಎಲ್)ನ ಸಾಮಾನ್ಯ ಕಾರ್ಯದರ್ಶಿ ದೀಪಂಕರ್ ಭಟ್ಟಾಚಾರ್ಯ ಆಪಾದಿಸಿದ್ದಾರೆ. ಘಟನೆಗೆ ಸಂಬಂಧಿಸಿ ದಿಲ್ಲಿ ಪೊಲೀಸ್ ಆಯುಕ್ತ ಸಚಿನ್ ಶರ್ಮಾ ಅವರು ಹೇಳಿಕೆಯೊಂದನ್ನು ನೀಡಿ, ಯುಎನ್ಐ ಕಚೇರಿಗೆ ಬೀಗಮುದ್ರೆ ಹಾಕಿದ ಸಂದರ್ಭ ಕಾನೂನು ಪ್ರಕ್ರಿಯೆಯನ್ನು ಅನುಸರಿಸಲಾಗಿದೆ ಹಾಗೂ ಯಾವುದೇ ತಪ್ಪು ನಡೆದಿಲ್ಲ ಮತ್ತು ಎಲ್ಲವನ್ನೂ ವೀಡಿಯೋದಲ್ಲಿ ಚಿತ್ರೀಕರಿಸಲಾಗಿದೆಯೆಂದು ತಿಳಿಸಿದ್ದಾರೆ.
ಡಿಜಿಪಿ ಕೆ.ರಾಮಚಂದ್ರರಾವ್ ರಾಸಲೀಲೆ ಪ್ರಕರಣ; ವೀಡಿಯೊಗಳು ಅಸಲಿ: ಸರಕಾರಕ್ಕೆ ಪೊಲೀಸ್ ಇಲಾಖೆ ವರದಿ?
ಬೆಂಗಳೂರು : ಕಚೇರಿಯಲ್ಲೇ ಮಹಿಳೆಯರೊಂದಿಗೆ ಡಿಜಿಪಿ ಕೆ.ರಾಮಚಂದ್ರರಾವ್ ರಾಸಲೀಲೆ ವೀಡಿಯೊ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ತಿರುವು ಸಿಕ್ಕಿದ್ದು, ಈ ವೀಡಿಯೊಗಳು ಅಸಲಿ ಎಂದು ಪೊಲೀಸ್ ಇಲಾಖೆ ಧೃಡಪಡಿಸಿರುವುದಾಗಿ ವರದಿಯಾಗಿದೆ. ತನ್ನ ಕರ್ತವ್ಯದಲ್ಲಿದ್ದಾಗಲೇ ಡಿಜಿಪಿ ಕೆ.ರಾಮಚಂದ್ರರಾವ್ ಮಹಿಳೆಯರ ಜತೆ ಅಸಭ್ಯ ವರ್ತನೆಯ ವೀಡಿಯೊ ಕೃತಕ ಬುದ್ಧಿಮತ್ತೆ (ಎಐ)ಯಿಂದ ತಯಾರಿಸಿದ ಅಥವಾ ಡೀಫ್ ಫೇಕ್ ಮೂಲಕ ತಯಾರಿಸಿದ್ದು ಅಲ್ಲ, ಅಸಲಿ ವೀಡಿಯೊಗಳೆಂದು ಪೊಲೀಸ್ ಇಲಾಖೆಯು ಸರಕಾರಕ್ಕೆ ವರದಿ ನೀಡಿದೆ ಎಂಬುದು ಮೂಲಗಳಿಂದ ತಿಳಿದುಬಂದಿದ್ದು, ಈ ಮೂಲಕ ನಿವೃತ್ತಿಯ ಅಂಚಿನಲ್ಲಿರುವ ರಾಮಚಂದ್ರರಾವ್ಗೆ ಕಾನೂನು ಸಂಕಷ್ಟ ಎದುರಾಗಿದೆ. ಪೊಲೀಸ್ ಸಮವಸ್ತ್ರದಲ್ಲಿ ಕಚೇರಿಯಲ್ಲೇ ಮಹಿಳೆಯರೊಂದಿಗೆ ರಾಮಚಂದ್ರರಾವ್ ಅಸಭ್ಯ ವರ್ತನೆ ತೋರಿರುವ ಆರೋಪ ಸಂಬಂಧ ಜನವರಿಯಲ್ಲಿ ವೀಡಿಯೊ ವೈರಲ್ ಆಗಿ ಭಾರೀ ಸಂಚಲನ ಸೃಷ್ಟಿಸಿತ್ತು. ಇದರಿಂದ ಪೊಲೀಸ್ ಇಲಾಖೆ ತೀವ್ರ ಮುಜುಗರಕ್ಕೀಡಾಗಿತ್ತು. ಈ ವೇಳೆ ಪ್ರತಿಕ್ರಿಯಿಸಿದ್ದ ರಾಮಚಂದ್ರರಾವ್, ತಮ್ಮ ತೇಜೋವಧೆ ಮಾಡಲು ಕಿಡಿಗೇಡಿಗಳು ಎಐ ವೀಡಿಯೊ ಮಾಡಿದ್ದಾರೆ ಎಂದು ಹೇಳಿಕೆ ನೀಡಿದ್ದರು. ರಾಮಚಂದ್ರರಾವ್ ಅವರನ್ನು ಕೂಡಲೇ ಅಮಾನತು ಮಾಡಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಗೃಹ ಇಲಾಖೆ, ಎಡಿಜಿಪಿ ಆರ್.ಹಿತೇಂದ್ರ ಅವರ ನೇತೃತ್ವದ ತಂಡ ರಚಿಸಿ ಸಮಗ್ರ ತನಿಖೆ ನಡೆಸಿ ವರದಿ ನೀಡುವಂತೆ ಸೂಚಿಸಿತ್ತು. ಈ ತಂಡ ತನಿಖೆ ನಡೆಸಿ 100 ಪುಟಗಳ ವರದಿಯನ್ನು ಸರಕಾರಕ್ಕೆ ಸಲ್ಲಿಸಿದೆ. ಮಹಿಳೆಯರೊಂದಿಗೆ ರಾಮಚಂದ್ರರಾವ್ ಇರುವ ವೀಡಿಯೊ ಎಐ ಅಥವಾ ಡೀಪ್ ಫೇಕ್ ಆಗಿಲ್ಲ, ವೀಡಿಯೊ ಅಸಲಿಯಾಗಿದೆ ಎಂದು ಎಫ್ಎಸ್ಎಲ್ ತನ್ನ ವರದಿಯಲ್ಲಿ ದೃಢಪಡಿಸಿದೆ ಎಂದು ಮೂಲಗಳು ತಿಳಿಸಿವೆ.
7 ಲಕ್ಷ ರೂ. ಮೌಲ್ಯದ ಆಭರಣ ಧರಿಸಿ ಮೇವು ತರಲೆಂದು ಹೋದ ವೃದ್ಧೆಯ ಕೊಲೆ
ಜೈಪುರ: ರಾಜಸ್ಥಾನದ ನಾಗೌರ್ ಜಿಲ್ಲೆಯ ಗ್ರಾಮವೊಂದರಲ್ಲಿ ಜಾನುವಾರುಗಳಿಗೆ ಮೇವುತರಲೆಂದು ಬೆಳಗ್ಗೆ ಮನೆಯ ಹೊರಹೋದ 75 ವರ್ಷ ವಯಸ್ಸಿನ ವೃದ್ಧೆ ನಾಥಿದೇವಿ ಬಾವ್ರಿಯ ಶವವಾಗಿ ಛಿದ್ರವಿಛಿದ್ರಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಪಾಲ್ಡಿ ಕಲಾನ್ ಗ್ರಾಮದ ನಿವಾಸಿ ನಾಥಿದೇವಿ ಕೊಲೆಯಾದ ಮಹಿಳೆ. ಅವರು 7 ಲಕ್ಷ ರೂ.ಬೆಲೆಬಾಳುವ ಚಿನ್ನ ಹಾಗೂ ಬೆಳ್ಳಿಯನ್ನು ಧರಿಸಿದ್ದರೆಂದು ಅವರ ಕುಟುಂಬಿಕರು ತಿಳಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ಆಕೆಯ ನೆರೆಹೊರೆಯ ನಿವಾಸಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಮಾರ್ಚ್ 16ಂದು ಈ ಘಟನೆ ನಡೆದಿದೆ. ಸಂಜೆಯಾದರೂ ನಾಥಿದೇವಿ ಮನೆಗೆ ಮರಳದೇ ಇದ್ದಾಗ, ಆಕೆಗಾಗಿ ಕುಟುಂಬಿಕರು ಗ್ರಾಮದಲ್ಲಿ ಹಾಗೂ ಹಾಗೂ ಆಸುಪಾಸಿನ ಹೊಲಗಳಲ್ಲಿ ಹುಡುಕಾಡಿದರು. ರಾತ್ರಿಯಾದರೂ ಯಾವುದೇ ಸುಳಿವು ದೊರೆಯದೇ ಇದ್ದಾಗ ಮನೆಯವರಲ್ಲಿ ಆತಂಕ ಹೆಚ್ಚಾಯಿತು. ಮಾರ್ಚ್ 17ರಂದು ಸಮೀಪದ ಪಾಚಂಡಾ ಗ್ರಾಮದ ಪೊದೆಯೊದರ ಸಮೀಪ ಪ್ಲಾಸ್ಟಿಕ್ ಬ್ಯಾಗೊಂದು ಬಿದ್ದಿರುವುದು ಗ್ರಾಮಸ್ಥರಿಗೆ ಕಂಡುಬಂದಿತು. ಅದನ್ನು ತೆರೆದು ನೋಡಿದಾಗ ವೃದ್ಧೆಯೊಬ್ಬರ ವಿರೂಪಗೊಂಡ ಶವ ಪತ್ತೆಯಾಗಿದೆ. ವೃದ್ಧೆಯ ರುಂಡ ಮತ್ತು ಕಾಲು ಇರಲಿಲ್ಲ ಹಾಗೂ ಅವರು ಧರಿಸಿದ್ದ ಆಭರಣಗಳು ಕಾಣೆಯಾಗಿದ್ದವೆಂದು ತಿಳಿದುಬಂದಿದೆ. ವೃದ್ಧೆಯ ಮೃತದೇಹವನ್ನು ಗುರುತುಹಚ್ಚದಂತೆ ಮಾಡುವ ಉದ್ದೇಶದಿಂದ ಅವರ ದೇಹವನ್ನು ಛಿದ್ರಗೊಳಿಸಲಾಗಿತ್ತು. ಅವರ ಮೃತದೇಹದ ಅವಶೇಷಗಳನ್ನು ಚೀಲದಲ್ಲಿ ತುಂಬಿಸಿ, ನಿರ್ಜನ ಪ್ರದೇಶದಲ್ಲಿ ಎಸೆದಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ. ನಗೌರ್ನ ಪೊಲೀಸ್ ಅಧೀಕ್ಷಕ ರೋಶನ್ ಮೀನಾ ಅವರ ನೇತೃತ್ವದಲ್ಲಿ ಅಪರಾಧ ವಿಧಿವಿಜ್ಞಾನ ತಜ್ಞರು, ಶ್ವಾನ ದಳ ಹಾಗೂ ಡ್ರೋನ್ ಘಟಕಗಳನ್ನು ತನಿಖೆಗಾಗಿ ನಿಯೋಜಿಸಲಾಗಿತ್ತು. ಘಟನೆ ಸಂಬಂಧ ಮಾರ್ಚ್ 20ರಂದು ಪೊಲೀಸರು ಮುಖಶ್ ಭಾರ್ತಿ ಎಂಬ 38 ವರ್ಷದ ವ್ಯಕ್ತಿಯನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ವೃದ್ಧೆ ಧರಿಸಿದ್ದ ಆಭರಣ ಹಾಗೂ ಕೊಲೆಗೆ ಬಳಸಲಾಗಿತ್ತೆನ್ನಲಾದ ಹಾರೆ ಅಥವಾ ಕಬ್ಬಿಣದ ರಾಡ್ ಅನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ವರದಿಯಾಗಿದೆ. ವೃದ್ಧ ಮಹಿಳೆ ಮೇವು ಸಂಗ್ರಹಿಸಲು ತೆರಳಿದ್ದಾಗ, ಆರೋಪಿಯು ಅವರ ಮೇಲೆ ಹಲ್ಲೆ ನಡೆಸಿ ಹತ್ಯೆಗೈದಿದ್ದ ಮತ್ತು ಆನಂತರ ಮೃತದೇಹವನ್ನು ಕತ್ತರಿಸಿ, ಪ್ಲಾಸ್ಟಿಕ್ ಚೀಲಗಳಲ್ಲಿ ತುಂಬಿ ವಿವಿಧ ಸ್ಥಳಗಳಿಗೆ ಎಸೆದಿದ್ದಾನೆಂಬುದು ತನಿಖೆಯಿಂದ ತಿಳಿದುಬಂದಿದೆ. ಈ ಪ್ರಕರಣದಲ್ಲಿ ಇತರ ವ್ಯಕ್ತಿಗಳ ಕೈವಾಡವೇನಾದರೂ ಇದೆಯೇ ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಚೀನಾಕ್ಕೆ ಹೊರಟಿದ್ದ ರಷ್ಯಾ ತೈಲ ಟ್ಯಾಂಕರ್ ಭಾರತಕ್ಕೆ ಯುಟರ್ನ್; ಮಂಗಳೂರಿಗೆ ಹಡಗು ಆಗಮನ! ಮಹತ್ವದ ಬೆಳವಣಿಗೆ
ಮಹತ್ವದ ಬೆಳವಣಿಗೆಯೊಂದರಲ್ಲಿ ಚೀನಾಕ್ಕೆ ಹೊರಟಿದ್ದ ರಷ್ಯಾದ ತೈಲ ಟ್ಯಾಂಕರ್ ಭಾರತಕ್ಕೆ ಆಗಮಿಸಿದೆ. ಅದರಲ್ಲೂ ಕರ್ನಾಟಕದ ಬಂದರು ಮಂಗಳೂರಿಗೆ ಹಡಗು ಬಂದು ನಿಂತಿದೆ. ಭಾರತಕ್ಕೆ ತುರ್ತು ಅನಿಲ ಪೂರೈಕೆ ಮನವಿ ಹಿನ್ನೆಲೆ ಈ ಬೆಳವಣಿಗೆಯಾಗಿದೆ ಎಂದು ತಿಳಿದುಬಂದಿದೆ. ಇದರಲ್ಲಿನ ತೈಲವನ್ನು ಎಂಅರ್ಪಿಎಲ್ಗೆ ಸರಬರಾಜು ಮಾಡಲಾಗುವುದು ಎಂದು ಮೂಲಗಳು ತಿಳಿಸಿವೆ.
ಬೀಜಿಂಗ್, ಹೊಸದಿಲ್ಲಿ ನಡುವೆ ನೇರ ವಿಮಾನಯಾನ: ಏರ್ ಚೀನಾ ಘೋಷಣೆ
ಬೀಜಿಂಗ್: ಬೀಜಿಂಗ್ ಮತ್ತು ಹೊಸದಿಲ್ಲಿ ನಡುವೆ ನೇರ ವಿಮಾನಯಾನವನ್ನು ಪುನರಾರಂಭಿಸಲು ಏರ್ ಚೀನಾ ಸಿದ್ಧವಾಗಿದೆ. ಇದು ಭಾರತ- ಚೀನಾ ವಾಯು ಸಂಪರ್ಕವನ್ನು ಮರುಸ್ಥಾಪಿಸುವ ಮತ್ತು ದ್ವಿಪಕ್ಷೀಯ ಬಾಂಧವ್ಯವನ್ನು ಬಲಪಡಿಸುವಲ್ಲಿ ಪ್ರಮುಖ ಹೆಜ್ಜೆಯಾಗಿದೆ. ವರ್ಧಿತ ವ್ಯಾಪಾರ, ಪ್ರವಾಸೋದ್ಯಮ ಮತ್ತು `ಬ್ರಿಕ್ಸ್', ಶಾಂಘೈ ಸಹಕಾರ ಸಂಘಟನೆಯಂತಹ ವೇದಿಕೆಯಡಿ ಜನರಿಂದ ಜನರ ವಿನಿಮಯಕ್ಕೆ ಈ ಕ್ರಮವು `ಹಸಿರು ನಿಶಾನೆ'ಯಾಗಿದೆ ಎಂದು ಭಾರತದಲ್ಲಿ ಚೀನಾ ರಾಯಭಾರ ಕಚೇರಿಯ ವಕ್ತಾರ ಯೂ ಜಿಂಗ್ ಹೇಳಿದ್ದಾರೆ.
ಮಧ್ಯಪ್ರಾಚ್ಯ ಸಂಘರ್ಷ: ಕೆಲವು ಮಹತ್ವದ ಬೆಳವಣಿಗಳು
ಟೆಹ್ರಾನ್: ಮಧ್ಯಪ್ರಾಚ್ಯದಲ್ಲಿನ ಸಂಘರ್ಷಕ್ಕೆ ಸಂಬಂಧಿಸಿದ ಕೆಲವು ಮಹತ್ವದ ಬೆಳವಣಿಗೆಗಳು: ► ಇರಾನ್ನ ಡ್ರೋನ್ ದಾಳಿಯ ಬಳಿಕ ಇರಾಕ್ ರಾಜಧಾನಿ ಬಗ್ದಾದ್ನಲ್ಲಿ ಅಮೆರಿಕಕ್ಕೆ ಸಂಬಂಧಿಸಿದ ರಾಜತಾಂತ್ರಿಕ ವ್ಯವಸ್ಥೆಯಲ್ಲಿ ಭಾರೀ ಬೆಂಕಿ ಕಾಣಿಸಿಕೊಂಡಿರುವುದಾಗಿ ಮೂಲಗಳನ್ನು ಉಲ್ಲೇಖಿಸಿ ರಾಯ್ಟರ್ಸ್ ವರದಿ ಮಾಡಿದೆ. ► ಇರಾಕ್ನ ಬಗ್ದಾದ್ ನಗರದ ನೆರೆಹೊರೆಯಲ್ಲಿ ವಸತಿ ಕಟ್ಟಡದಲ್ಲಿದ್ದ ಇರಾಕ್ ಗುಪ್ತಚರ ಸೇವೆಯ ಕಚೇರಿಯನ್ನು ಗುರಿಯಾಗಿಸಿ ನಡೆದ ಡ್ರೋನ್ ದಾಳಿಯಲ್ಲಿ ಇರಾಕ್ನ ಗುಪ್ತಚರ ಅಧಿಕಾರಿ ಸಾವು. ► ಶನಿವಾರ ಮಧ್ಯ ಇರಾನ್ನ ಆಗಸದಲ್ಲಿ ಹಾರುತ್ತಿದ್ದ ಇಸ್ರೇಲ್ನ ಎಫ್-16 ಯುದ್ಧ ವಿಮಾನವನ್ನು ಹೊಡೆದುರುಳಿಸಿರುವುದಾಗಿ ಇರಾನ್ನ ಇಸ್ಲಾಮಿಕ್ ರೆವೊಲ್ಯುಷನರಿ ಗಾರ್ಡ್ ಕಾಪ್ರ್ಸ್(IRGC) ಹೇಳಿದೆ. ► ಇರಾನ್ನಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದ ತನ್ನ ಯುದ್ಧ ವಿಮಾನದತ್ತ ನೆಲದಿಂದ ಕ್ಷಿಪಣಿಯನ್ನು ಪ್ರಯೋಗಿಸಿದ್ದು ಅದು ಗುರಿತಪ್ಪಿದ್ದು ವಿಮಾನಕ್ಕೆ ಹಾನಿಯಾಗಿಲ್ಲ ಎಂದು ಇಸ್ರೇಲ್ ಮಿಲಿಟರಿ ಹೇಳಿದೆ. ► ಶುಕ್ರವಾರ ತಡರಾತ್ರಿಯಿಂದ ಇರಾನ್ನ ಇಸ್ಲಾಮಿಕ್ ರೆವೊಲ್ಯುಷನರಿ ಗಾರ್ಡ್ ಕಾಪ್ರ್ಸ್ ಗೆ ಸಂಬಂಧಿಸಿದ ಪ್ರಮುಖ ಕ್ಷಿಪಣಿ ಮೂಲಸೌಕರ್ಯವನ್ನು ಗುರಿಯಾಗಿಸಿ ದಾಳಿ ನಡೆಸಿರುವುದಾಗಿ ಇಸ್ರೇಲ್ ಹೇಳಿದೆ. ► ಹಾರ್ಮುಝ್ ಜಲಸಂಧಿಯ ಮೂಲಕ ಸುರಕ್ಷಿತ ಮಾರ್ಗಕ್ಕೆ 20ಕ್ಕೂ ಹೆಚ್ಚು ದೇಶಗಳು ಬೆಂಬಲ ಘೋಷಿಸಿವೆ. ► ಸೂಕ್ಷ್ಮ ಸೈಟ್ಗಳಿಂದ ಸುದ್ದಿಗಳನ್ನು ಮತ್ತು ಚಿತ್ರಗಳನ್ನು ಪ್ರತಿಕೂಲ ಮಾಧ್ಯಮಗಳಿಗೆ ಕಳುಹಿಸಿದ್ದಕ್ಕಾಗಿ ಪಶ್ಚಿಮ ಅಜೆರ್ಬೈಜಾನ್ ಪ್ರಾಂತದಲ್ಲಿ ಇರಾನ್ ಅಧಿಕಾರಿಗಳು 25 ಜನರನ್ನು ಬಂಧಿಸಿರುವುದಾಗಿ ವರದಿಯಾಗಿದೆ. ► ಇರಾನ್ ನೆರೆಹೊರೆಯ `ಸಹೋದರ' ಗಲ್ಫ್ ದೇಶಗಳೊಂದಿಗೆ ಸಂಘರ್ಷವನ್ನು ಬಯಸುತ್ತಿಲ್ಲ ಎಂದು ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯಾನ್ ಶನಿವಾರ ಹೇಳಿದ್ದಾರೆ. * ಇರಾನ್ನ ನತಾಂಝ್ ಪರಮಾಣು ಸ್ಥಳದ ಮೇಲೆ ಅಮೆರಿಕ ವೈಮಾನಿಕ ದಾಳಿ ನಡೆಸಿರುವುದನ್ನು ಖಂಡಿಸಿರುವ ರಷ್ಯ, ಈ ಕ್ರಮವು ಪ್ರದೇಶಕ್ಕೆ ದೊಡ್ಡ ವಿಪತ್ತನ್ನು ಉಂಟು ಮಾಡಬಹುದು ಎಂದು ಎಚ್ಚರಿಸಿದೆ. ಅಂತರರಾಷ್ಟ್ರೀಯ ಸಮುದಾಯವು ಈ ಬೇಜವಾಬ್ದಾರಿ ಕ್ರಮಗಳ ವಸ್ತುನಿಷ್ಠ ಮತ್ತು ಕಠಿಣ ಮೌಲ್ಯಮಾಪನವನ್ನು ತಕ್ಷಣವೇ ಒದಗಿಸಬೇಕು ಎಂದು ರಷ್ಯ ಆಗ್ರಹಿಸಿದೆ.
ಭಾರತದಲ್ಲಿ ತಯಾರಾದ ನೋವುಶಮನ ಔಷಧಿಯನ್ನು ಮಾರುಕಟ್ಟೆಯಿಂದ ಹಿಂಪಡೆಯಲು ಅಮೆರಿಕದ ಎಫ್ಡಿಎ ಆದೇಶ
ವಾಶಿಂಗ್ಟನ್: ಭಾರತದಲ್ಲಿ ಉತ್ಪಾದಿಸಲಾದ ಮಕ್ಕಳ ನೋವುಶಮನ ಇಬೂಪ್ರೊಫೆನ್ನ 90 ಸಾವಿರ ಬಾಟಲಿಗಳನ್ನು ಮಾರುಕಟ್ಟೆಯಿಂದ ಹಿಂಪಡೆಯುವಂತೆ ಅಮೆರಿಕದ ಫೆಡರ್ ಔಷದ ನಿಯಂತ್ರಣ ಸಂಸ್ಥೆ ‘ಎಫ್ಡಿಎ’ ಯು ವಿತರಕ ಸಂಸ್ಥೆಯಾದ ಟಾರೊ ಫಾರ್ಮಾಸ್ಯೂಟಿಕಲ್ಸ್ಗೆ ಸೂಚಿಸಿದೆ. ಈ ಉತ್ಪನ್ನವು ಬೆರ್ರಿ ಸ್ವಾದದ ಔಷಧೀಯ ದ್ರಾವಣ ಸಂಯೋಜನೆಯಾಗಿದೆ. 2ರಿಂದ 11 ವರ್ಷದೊಳಗಿನ ಮಕ್ಕಳಿಗೆ ಅದನ್ನು ಶಿಫಾರಸು ಮಾಡಲಾಗುತ್ತದೆ. ಔಷಧ ದ್ರಾವಣದಲ್ಲಿ ಜೆಲ್ ಮಾದರಿಯ ದ್ರವ್ಯರಾಶಿ ಹಾಗೂ ಕಪ್ಪುಬಣ್ಣದ ಕಣಗಳು ಕಂಡುಬಂದಿವೆಯೆಂದು ಗ್ರಾಹಕರು ಈ ತಿಂಗಳ ಆರಂಭದಲ್ಲಿ ದೂರು ನೀಡಿದ ಬಳಿಕ ಎಫ್ಡಿಎ ಈ ನೋಟಿಸ್ ಜಾರಿಗೊಳಿಸಿದೆ. ಈ ಔಷಧಿಯನ್ನು ಸ್ಟ್ರೈಡ್ಸ್ ಫಾರ್ಮಾ ಕಂಪೆನಿಯು ತಯಾರಿಸುತ್ತಿದೆ. ಈ ಕಂಪೆನಿಯು ಅಮೆರಿಕ ಹಾಗೂ ಇತರ ಹಲವಾರು ದೇಶಗಳಲ್ಲಿನ ಕಂಪೆನಿಗಳಿಗಾಗಿ ಜೆನೆರಿಕ್ ಔಷಧಿಗಳನ್ನು ಹಾಗೂ ಶೀತ,ನೋವು, ಅಲರ್ಜಿ ಮತ್ತು ಅಜೀರ್ಣ ಶಮನದಂತಹ ವೈದ್ಯರ ಶಿಫಾರಸು ಚೀಟಿಯ ಅಗತ್ಯವಿರದ ಔಷಧಿಗಳನ್ನು ಉತ್ಪಾದಿಸುತ್ತದೆ. ಎಫ್ಡಿಎ ನೋಟಿಸ್ನಂತೆ ಸ್ಟ್ರೈಡ್ಸ್ ಕಂಪೆನಿಯು ವಿವಾದಿತ ಔಷಧಿಯನ್ನು ಮಾರುಕಟ್ಟೆಯಿಂದ ಹಿಂಪಡೆಯುವ ಪ್ರಕ್ರಿಯೆಯನ್ನು ಆರಂಭಿಸಿದೆ ಎಂದು ಮೂಲಗಳು ತಿಳಿಸಿವೆ.
ರಿಯಾದ್ನಲ್ಲಿ ಕ್ಷಿಪಣಿ ದಾಳಿಯಲ್ಲಿ ಭಾರತೀಯ ಸಾವನ್ನಪ್ಪಿರುವುದನ್ನು ದೃಢಪಡಿಸಿದ ಸರಕಾರ
ಸೀತಾಪುರ: ರಿಯಾದ್ನಲ್ಲಿ ಶಂಕಿತ ಕ್ಷಿಪಣಿ ದಾಳಿಯಲ್ಲಿ 26 ವರ್ಷದ ಭಾರತೀಯನೊಬ್ಬ ಮೃತಪಟ್ಟಿದ್ದಾನೆ ಎಂದು ಕೇಂದ್ರ ಸರಕಾರ ದೃಢಪಡಿಸಿದ ಒಂದು ದಿನದ ಬಳಿಕ ಮೃತಪಟ್ಟ ವ್ಯಕ್ತಿ ತನ್ನ ಸಂಬಂಧಿ ಎಂದು ಉತ್ತರಪ್ರದೇಶದ ಕುಟುಂಬವೊಂದು ಶನಿವಾರ ಪ್ರತಿಪಾದಿಸಿದೆ. ಉತ್ತರಪ್ರದೇಶದ ಮಹಮ್ಮೂದಾಬಾದ್ ಪೊಲೀಸ್ ಠಾಣಾ ವ್ಯಾಪ್ತಿಯ ಬಾಘೈನ್ ಗ್ರಾಮದ ರವಿ ಗೋಪಾಲ್ 2025 ಸೆಪ್ಟಂಬರ್ನಿಂದ ರಿಯಾದ್ನಲ್ಲಿ ಪ್ಲಾಸ್ಟಿಕ್ ಕಾರ್ಖಾನೆಯೊಂದರಲ್ಲಿ ಚಾಲಕನಾಗಿ ಕೆಲಸ ಮಾಡುತ್ತಿದ್ದ ಎಂದು ಕುಟುಂಬ ಹೇಳಿದೆ. ರವಿ ಮಾರ್ಚ್ 18ರಂದು ರಾತ್ರಿ ಸುಮಾರು 9.30ಕ್ಕೆ ಕುಟುಂಬದೊಂದಿಗೆ ಕೊನೆಯ ಬಾರಿ ದೂರವಾಣಿ ಮೂಲಕ ಮಾತನಾಡಿದ್ದಾರೆ ಎಂದು ಅವರ ಪತ್ನಿ ರಿತು ತಿಳಿಸಿದ್ದಾರೆ. ‘‘20 ನಿಮಿಷಗಳ ಬಳಿಕ ಕರೆ ಕಡಿತಗೊಂಡಿತು. ನಾವು ಕರೆ ಮಾಡಿದಾಗ, ಫೋನ್ ಸ್ವಿಚ್ ಆಫ್ ಆಗಿತ್ತು. ನಾವು ಅಲ್ಲಿರುವ ಅವರ ಗೆಳೆಯರನ್ನು ಸಂಪರ್ಕಿಸಲು ಪ್ರಯತ್ನಿಸಿದೆವು. ಆದರೆ, ಯಾರೊಬ್ಬರನ್ನು ಸಂಪರ್ಕಿಸಲು ಸಾಧ್ಯವಾಗಲಿಲ್ಲ’’ ಎಂದು ಅವರು ಹೇಳಿದ್ದಾರೆ. ರವಿಯ ಸಾವಿನ ಬಗ್ಗೆ ಸೌದಿ ಅರೇಬಿಯಾದಲ್ಲಿ ಕೆಲಸ ಮಾಡುವ ಅವರ ಸ್ನೇಹಿತ ಹಾಗೂ ಬಾರಾಬಂಕಿಯ ನಿವಾಸಿ ರಾಮ್ ನಿವಾಸ್ ಮರುದಿನ ಮಾಹಿತಿ ನೀಡಿದರು ಎಂದು ಕುಟುಂಬದವರು ಹೇಳಿದ್ದಾರೆ. ‘‘ಕಾರ್ಖಾನೆಯ ಸಮೀಪ ನಡೆದ ಕ್ಷಿಪಣಿ ದಾಳಿ ನಡೆದಿದೆ. ಈ ಸಂದರ್ಭ ರವಿ ಅಲ್ಲಿ ಕೆಲಸ ಮಾಡುತ್ತಿದ್ದ. ಇದರಿಂದ ಆತ ಅವಶೇಷಗಳ ಅಡಿ ಹೂತು ಹೋದ. ಕೂಡಲೇ ಆತನನ್ನು ಆಸ್ಪತ್ರೆಗೆ ಕೊಂಡೊಯ್ಯಲಾಯಿತು. ಆದರೆ, ಆತ ಮೃತಪಟ್ಟಿದ್ದಾನೆ ಎಂದು ವೈದ್ಯರು ತಿಳಿಸಿದರು ಎಂದು ಎಂದು ರಾಮ್ ನಿವಾಸ್ ತಿಳಿಸಿದ’’ ಎಂದು ರವಿಯ ಹಿರಿಯ ಸಹೋದರ ಮನಮೋಹನ್ ದಯಾಳ್ ಹೇಳಿದ್ದಾರೆ. ಘಟನೆಯ ವಿವರ ಹಾಗೂ ರವಿ ಉದ್ಯೋಗದ ಮಾಹಿತಿ ಸಂಗ್ರಹಿಸಲು ಮಹಮೂದಾಬಾದ್ನ ಸ್ಥಳೀಯ ಪೊಲೀಸರು ಕುಟುಂಬವನ್ನು ಸಂಪರ್ಕಿಸಿದ್ದಾರೆ ಎಂದು ದಯಾಳ್ ತಿಳಿಸಿದ್ದಾರೆ. ರವಿ ಕುಟುಂಬದ ಏಕೈಕ ಆಧಾರ ಸ್ತಂಭ. ಅವರು ಪತ್ನಿ ಹಾಗೂ ನಾಲ್ಕು ವರ್ಷದ ಪುತ್ರನನ್ನು ಅಗಲಿದ್ದಾರೆ. ಪರಿಹಾರ ನೀಡುವಂತೆ ಹಾಗೂ ಮೃತದೇಹವನ್ನು ಗ್ರಾಮಕ್ಕೆ ತರಲು ವ್ಯವಸ್ಥೆ ಕಲ್ಪಿಸುವಂತೆ ಕುಟುಂಬ ಆಡಳಿತವನ್ನು ಆಗ್ರಹಿಸಿದೆ.
ನಕಲಿ ಪೊಲೀಸ್ ಎನ್ಕೌಂಟರ್: ಪರಿಹಾರ ಕೋರಿದ ಅರ್ಜಿ ಬಗ್ಗೆ ನಿರ್ಧರಿಸುವಂತೆ ಜಶ್ಪುರ ಜಿಲ್ಲಾಧಿಕಾರಿಗೆ ಹೈಕೋರ್ಟ್ ಆದೇಶ
ರಾಯಪುರ: ಜಶ್ಪುರದಲ್ಲಿ ನಡೆದ ನಕಲಿ ಎನ್ಕೌಂಟರ್ನಲ್ಲಿ ತನ್ನ ಪತಿಯನ್ನು ಕಳೆದುಕೊಂಡ ದಶಕಗಳ ಬಳಿಕವೂ ನ್ಯಾಯ ಕೇಳುತ್ತಿರುವ ವಿಧವೆಯೊಬ್ಬರಿಗೆ ಛತ್ತೀಸ್ಗಢ ಉಚ್ಚ ನ್ಯಾಯಾಲಯ ಭರವಸೆ ಮೂಡಿಸಿದೆ. ಸಂರೆ ಬಾಯಿ ಸಲ್ಲಿಸಿದ ದೀರ್ಘ ಕಾಲದಿಂದ ಬಾಕಿ ಉಳಿದಿರುವ ಪರಿಹಾರ ಕೋರಿದ ಅರ್ಜಿಯ ಕುರಿತು ಔಪಚಾರಿಕವಾಗಿ ನಿರ್ಧಾರ ತೆಗೆದುಕಕೊಳ್ಳುವಂತಂತೆ ನ್ಯಾಯಮೂರ್ತಿ ನರೇಶ್ ಕುಮಾರ್ ಚಂದ್ರವಂಶಿ ಅವರು ಜಶ್ಪುರ ಜಿಲ್ಲಾಧಿಕಾರಿಗೆ ನಿರ್ದೇಶಿಸಿದ್ದಾರೆ. ಈ ಪ್ರಕರಣ ಕನ್ಸಬೆಲ್ ಪೊಲೀಸ್ ಠಾಣೆಯ ಸಿಬ್ಬಂದಿ ರಾಮಾನಾಥ್ ರಾಮ್ ಅವರು ಹತೈಗೈದ ಘಟನೆಯ ಕುರಿತದ್ದಾಗಿದೆ. ಆರಂಭದಲ್ಲಿ ಅಧಿಕಾರಿಗಳು ರಾಮನಾಥ್ ರಾಮ್ಗೆ ‘ನಕ್ಸಲೀಯ’ ಎಂಬ ಹಣೆಪಟ್ಟಿ ಹಚ್ಚಿದ್ದರು. ಆದರೆ, ಅನಂತರ ನಡೆಸಿದ ತನಿಖೆಯಲ್ಲಿ ಅದು ನಕಲಿ ಎನ್ಕೌಂಟರ್ ಎಂಬುದು ಬಹಿರಂಗವಾಯಿತು. ಈ ಪ್ರಕರ 2002 ಜೂನ್ 11ರಂದು ಅಂತ್ಯಗೊಂಡಿತು. ಸೆಷನ್ಸ್ ಕೋರ್ಟ್ ಈ ಪ್ರಕರಣದಲ್ಲಿ ಆಗಿನ ಎಸ್ಎಚ್ಒ ಎಚ್.ಆರ್. ಅಹರ್ವಾತ್ ಹಾಗೂ ಐವರು ಪೊಲೀಸ್ ಸಿಬ್ಬಂದಿಯನ್ನು ದೋಷಿಗಳು ಎಂದು ಪರಿಗಣಿಸಿತ್ತು. ಪ್ರಕರಣ ವಿಚಾರಣೆ ಪೂರ್ಣಗೊಂಡು ನ್ಯಾಯಾಲಯ ಶಿಕ್ಷೆ ಘೋಷಣೆ ಮಾಡಿದ್ದರೂ ಅಧಿಕಾರಶಾಹಿಯ ಕಾರಣದಿಂದ ಸಂರೆ ಬಾಯಿ ಅವರಿಗೆ ಪರಿಹಾರ ದೊರಕಿರಲಿಲ್ಲ. ಈ ಹಿನ್ನೆಲೆಯಲ್ಲಿ ಅವರು ಕಳೆದ ವರ್ಷ ಸೆಪ್ಟಂಬರ್ 24ರಂದು ಜಶ್ಪುರ ಜಿಲ್ಲಾಧಿಕಾರಿಗೆ ಅರ್ಜಿ ಸಲ್ಲಿಸಿದ್ದರು. ಆದರೆ, ಜಿಲ್ಲಾಧಿಕಾರಿ ಈ ಅರ್ಜಿಯ ನಿರ್ಧಾರ ತೆಗೆದುಕೊಂಡಿರಲಿಲ್ಲ.
ಕೋಲ್ಕತಾ: ಮುಂಬರುವ ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ನಿಂದ ಕಣಕ್ಕಿಳಿಯಲು ನಿರ್ಧರಿಸಿದ ತನ್ನ ಸನ್ಯಾಸಿಯೊಬ್ಬರನ್ನು ಭಾರತ ಸೇವಾಶ್ರಮ ಸಂಘ (ಬಿಎಸ್ಎಸ್) ಉಚ್ಛಾಟಿಸಿದೆ. ಈ ನಡೆ ತನ್ನ ನಿಯಮ ಹಾಗೂ ಮೌಲ್ಯಗಳಿಗೆ ವಿರುದ್ಧವಾಗಿದೆ. ಅಲ್ಲದೆ, ರಾಜಕೀಯ ಸ್ವರೂಪದ್ದಾಗಿದೆ ಎಂದು ಬಿಎಸ್ಎಸ್ ತನ್ನ ಆಂತರಿಕ ಸುತ್ತೋಲೆ ತಿಳಿಸಿದೆ. ಸಭೆಯ ನಂತರ ಶನಿವಾರ ಹೊರಡಿಸಿದ ಈ ಆಂತರಿಕ ಸುತ್ತೋಲೆಯಲ್ಲಿ, ಉತ್ತರ ದಿನಜ್ಪುರ ಜಿಲ್ಲೆಯ ಕಾಳಿಗಂಜ್ ಕ್ಷೇತ್ರದಿಂದ ಬಿಜೆಪಿಯಿಂದ ನಾಮನಿರ್ದೇಶಿತರಾಗಿರುವ ಸ್ವಾಮಿ ಜ್ಯೋತಿರ್ಮಯಾನಂದ (ಉತ್ಪಲ್ ಮಹಾರಾಜ್) ಅವರನ್ನು ಭಾರತ್ ಸೇವಾಶ್ರಮ ಸಂಘ ಉಚ್ಛಾಟಿಸಿದೆ ಎಂದು ಸಂಘದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಚುನಾವಣೆಯಲ್ಲಿ ಸ್ವರ್ಧಿಸಲು ನಿರ್ಧರಿಸುವ ಮೂಲಕ ಸ್ವಾಮಿ ಜ್ಯೋತಿರ್ಮಯಾನಂದ ಅವರು ಸನ್ಯಾಸಿಗಳಿಂದ ನಿರಿಕ್ಷಿಸುವ ತ್ಯಾಗ ಹಾಗೂ ಶಿಸ್ತಿನ ಮಾರ್ಗದಿಂದ ದೂರ ಸರಿದಿದ್ದಾರೆ ಎಂದು ನೋಟಿಸಿನಲ್ಲಿ ಹೇಳಲಾಗಿದೆ. ಪಕ್ಷ ರಾಜಕೀಯದಲ್ಲಿ ಸಕ್ರಿಯವಾಗಿ ಭಾಗವಹಿಸುವುದು ಸಂಘ ಎತ್ತಿ ಹಿಡಿದ ಮೌಲ್ಯಗಳಿಗೆ ಹೊಂದಿಕೆಯಾಗುವುದಿಲ್ಲ ಎಂದು ಅದು ಪ್ರತಿಪಾದಿಸಿದೆ. ತನ್ನ ನಿಲುವನ್ನು ಮತ್ತೆ ದೃಢಪಡಿಸಿರುವ ಸಂಘ, ರಾಜಯಕೀಯ ವಿಷಯಗಳಲ್ಲಿ ಕಟ್ಟುನಿಟ್ಟಿನ ತಟಸ್ಥೆ ಕಾಯ್ದುಕೊಳ್ಳುವುದಾಗಿ ಹಾಗೂ ತನ್ನ ಸನ್ಯಾಸಿಗಳು, ಬ್ರಹ್ಮಚಾರಿಗಳು, ಸಹಚರರು ಯಾವುದೇ ರಾಜಕೀಯ ಚಟುವಟಿಕೆಗಲ್ಲಿ ತೊಡಗಿಸಿಕೊಳ್ಳುವುದು ಅಥವಾ ಅನುಮೋದಿಸುವುದನ್ನು ನಿಷೇಧಿಸುವುದಾಗಿ ಹೇಳಿದೆ. ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ್ದ ಉತ್ಪಲ್ ಮಹಾರಾಜ್, ಬಿಜೆಪಿ ಟಿಕೆಟ್ನಲ್ಲಿ ಚುನಾವಣೆಯಲ್ಲಿ ಸ್ಫರ್ದಿಸಲು ಒಪ್ಪಿಕೊಳ್ಳುವ ಮುನ್ನ ಬಿಎಸ್ಎಸ್ನ ಕೇಂದ್ರ ಕಚೇರಿಗೆ ರಾಜೀನಾಮೆ ಪತ್ರ ಸಲ್ಲಿಸಿದ್ದೇನೆ. ತನ್ನ ರಾಜೀನಾಮೆ ಪತ್ರವನ್ನು ಬಿಎಎಸ್ ಪರಿಗಣಿಸಿದೆ ಎಂದಿದ್ದಾರೆ.
ಡಿಯಾಗೋ ಗಾರ್ಸಿಯಾ ಏಕೆ ನಿರ್ಣಾಯಕವಾಗಿದೆ?; ಇಲ್ಲಿದೆ ಮಾಹಿತಿ...
ದಕ್ಷಿಣ ಅಸ್ಸಾಂ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ನಾಯಕನ ಪುತ್ರನನ್ನು ಕಣಕ್ಕಿಳಿಸಿದ ಕಾಂಗ್ರೆಸ್!
ಗುವಾಹಟಿ: ಬಿಜೆಪಿ ನಾಯಕ ಗೌತಮ್ ರಾಯ್ ಅವರ ಪುತ್ರ ರಾಹುಲ್ ರಾಯ್ ರನ್ನು ದಕ್ಷಿಣ ಅಸ್ಸಾಂನ ಹೈಲಕಾಂಡಿ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಕಣಕ್ಕಿಳಿಸಿದೆ. 2021ರ ವಿಧಾನಸಭಾ ಚುನಾವಣೆಗೂ ಮುನ್ನ ಮಾಜಿ ಶಾಸಕ ರಾಹುಲ್ ರಾಯ್ ಅವರ ತಂದೆ ಗೌತಮ್ ರಾಯ್ ಅವರು ಬಿಜೆಪಿಗೆ ಪಕ್ಷಾಂತರ ಮಾಡಿದರೂ, ಅವರು ಮಾತ್ರ ಕಾಂಗ್ರೆಸ್ ಪಕ್ಷ ತೊರೆದಿರಲಿಲ್ಲ. ಆ ಚುನಾವಣೆಯಲ್ಲಿ ಇಬ್ಬರೂ ಕ್ರಮವಾಗಿ ಉಧರ್ ಬಂದ್ ಹಾಗೂ ಕಾಟಿಗೊರಾಹ್ ವಿಧಾನಸಭಾ ಕ್ಷೇತ್ರಗಳಲ್ಲಿ ಪರಾಭವಗೊಂಡಿದ್ದರು. 2021ರ ವಿಧಾನಸಭಾ ಚುನಾವಣೆಯಲ್ಲಿ ರಾಹುಲ್ ರಾಯ್ ಅವರು ಸ್ವತಂತ್ರ ಅಭ್ಯರ್ಥಿಯಾಗಿ ಹೈಲಾಕಾಂಡಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಅವರೀಗ ಕಾಂಗ್ರೆಸ್ ಪಕ್ಷದ ನಾಲ್ಕನೆ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದು, ಈ ಪಟ್ಟಿಯಲ್ಲಿ ಹಾಲಿ ಶಾಸಕ ಭರತ್ ನಾರಾ ಬದಲಿಗೆ ಜೋಯ್ ಪ್ರಕಾಶ್ ದಾಸ್ ಅಭ್ಯರ್ಥಿಯಾಗಿರುವ ನವೊಬೊಯಿಚಾ ವಿಧಾನಸಭಾ ಕ್ಷೇತ್ರ ಕೂಡಾ ಸೇರಿದೆ. ಈ ಪಟ್ಟಿಯಲ್ಲಿ ಒಟ್ಟು ಏಳು ವಿಧಾನಸಭಾ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಪ್ರಕಟಿಸಲಾಗಿದೆ. ಈ ಏಳು ಅಭ್ಯರ್ಥಿಗಳ ಪೈಕಿ ಜಾಲುಕ್ ಬರಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿರುವ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮ ಎದುರು ಬಿದಿಶಾ ನಿಯೋಗ್ ಅವರನ್ನು ಕಣಕ್ಕಿಳಿಸಲಾಗಿದೆ. ರಾಹುಲ್ ರಾಯ್ ಕಾಂಗ್ರೆಸ್ ಪಕ್ಷದಿಂದ ಅಭ್ಯರ್ಥಿಯಾಗಿರುವ ಬಿಜೆಪಿ ನಾಯಕರ ಮಕ್ಕಳ ಪೈಕಿ ಎರಡನೆಯವರಾಗಿದ್ದಾರೆ. ಇದಕ್ಕೂ ಮುನ್ನ, ಇತ್ತೀಚೆಗಷ್ಟೆ ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಯಾಗಿದ್ದ ಸಂಸದ ಪ್ರದ್ಯುತ್ ಬೊರ್ಡೊಲೊಯಿ ಅವರ ಪುತ್ರ ಪ್ರತೀಕ್ ಬೊರ್ಡೊಲೊಯಿ ಅವರ ಹೆಸರು ಮಾರ್ಚ್ 3ರಂದು ಕಾಂಗ್ರೆಸ್ ಪ್ರಕಟಿಸಿದ್ದ 42 ಅಭ್ಯರ್ಥಿಗಳ ಪ್ರಥಮ ಪಟ್ಟಿಯಲ್ಲಿ ಕಾಣಿಸಿಕೊಂಡಿತ್ತು. ಆದರೆ, ಮಾರ್ಚ್ 18ರಂದು ತಮ್ಮ ತಂದೆ ಪ್ರದ್ಯುತ್ ಬೊರ್ಡೊಲೊಯಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಯಾಗಿದ್ದರಿಂದ, ಪ್ರತೀಕ್ ಬೊರ್ಡೊಲೊಯಿ ಸ್ಪರ್ಧೆಯಿಂದ ಹಿಂದೆ ಸರಿದಿದ್ದರು.
ಅಮೆರಿಕ: ನಾಪತ್ತೆಯಾಗಿದ್ದ ಭಾರತೀಯ ವಿದ್ಯಾರ್ಥಿಯ ಮೃತದೇಹ ಪತ್ತೆ
ನ್ಯೂಯಾರ್ಕ: ಅಮೆರಿಕದಲ್ಲಿ ನಾಪತ್ತೆಯಾಗಿದ್ದ ಭಾರತೀಯ ಮೂಲದ ವಿದ್ಯಾರ್ಥಿ ಗೌತಮ್ ರಜನೀಕಾಂತ್ ಮೃತಪಟ್ಟಿರುವುದು ದೃಢಪಟ್ಟಿದೆ. 17 ವರ್ಷದ ಹೈಸ್ಕೂಲ್ ವಿದ್ಯಾರ್ಥಿ ಗೌತಮ್ ಕಳೆದ ವಾರ ಪೆನ್ಸಿಲ್ವೇನಿಯಾ ರಾಜ್ಯದ ಪಿಟ್ಸ್ಬರ್ಗ್ ನಗರದಿಂದ ನಾಪತ್ತೆಯಾಗಿದ್ದು ಪೊಲೀಸರ ನಿರಂತರ ಕಾರ್ಯಾಚರಣೆಯ ಬಳಿಕ ಮೃತದೇಹ ಪತ್ತೆಯಾಗಿರುವುದಾಗಿ ಅಮೆರಿಕದಲ್ಲಿ ವಾಸಿಸುತ್ತಿರುವ ಗೌತಮ್ನ ಪೋಷಕರು ಹೇಳಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.
ರಷ್ಯದತ್ತ ಉಕ್ರೇನ್ ಡ್ರೋನ್ ಸುರಿಮಳೆ
ಮಾಸ್ಕೊ, ಮಾ.21: ಶುಕ್ರವಾರ ತಡರಾತ್ರಿಯಿಂದ ಉಕ್ರೇನ್ ಮಿಲಿಟರಿ ರಶ್ಯದತ್ತ 280ಕ್ಕೂ ಹೆಚ್ಚು ಡ್ರೋನ್ಗಳನ್ನು ಪ್ರಯೋಗಿಸಿರುವುದಾಗಿ ರಷ್ಯದ ರಕ್ಷಣಾ ಇಲಾಖೆ ಶನಿವಾರ ಹೇಳಿದೆ. ದಕ್ಷಿಣದ ರೊಸ್ತೋವ್ ವಲಯದಲ್ಲಿ ಸುಮಾರು 90 ಡ್ರೋನ್ಗಳನ್ನು , ರಾಜಧಾನಿ ಮಾಸ್ಕೊದತ್ತ ನುಗ್ಗುತ್ತಿದ್ದ 27 ಡ್ರೋನ್ಗಳನ್ನೂ ಹೊಡೆದುರುಳಿಸಲಾಗಿದೆ. ನೈಋತ್ಯ ಸರಟೋವ ಪ್ರದೇಶದಲ್ಲಿ ಹಲವಾರು ಮನೆಗಳು ಹಾನಿಗೊಂಡಿದ್ದು ಇಬ್ಬರು ಗಾಯಗೊಂಡಿದ್ದಾರೆ. ಒಟ್ಟು 283 ಡ್ರೋನ್ಗಳನ್ನು ಹೊಡೆದುರುಳಿಸಲಾಗಿದೆ ಎಂದು ಮಾಸ್ಕೊದ ಮೇಯರ್ ಸೆರ್ಗೆಯ್ ಸೊಬ್ಯಾನಿನ್ `ಎಕ್ಸ್'ನಲ್ಲಿ ಪೋಸ್ಟ್ ಮಾಡಿದ್ದಾರೆ.
ಉತ್ತರ ಪ್ರದೇಶ | ಇಫ್ತಾರ್ ಕೂಟದ ಬಳಿಕ ಹೊಳೆಗೆ ಮಾಂಸದ ಅವಶೇಷ ಎಸೆದ ಆರೋಪ : ನಾಲ್ವರ ಬಂಧನ
ಉತ್ತರ ಪ್ರದೇಶ: ಶ್ರಾವಸ್ತಿ ಜಿಲ್ಲೆಯಲ್ಲಿ ಶುಕ್ರವಾರ ಆಶ್ರಮದ ದೇವಸ್ಥಾನದ ಬಳಿಯ ಹೊಳೆಯಲ್ಲಿ ಮಾಂಸದ ಅವಶೇಷಗಳನ್ನು ಎಸೆದ ಆರೋಪದ ಮೇಲೆ ನಾಲ್ವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸಿರ್ಸಿಯಾ ಪ್ರದೇಶದ ಸೋನ್ಪಾತ್ರಿ ಆಶ್ರಮ ದೇವಸ್ಥಾನದ ಬಳಿ ಈ ಘಟನೆ ನಡೆದಿದೆ. ಆಶ್ರಮದ ಮುಖ್ಯಸ್ಥ ಹರಿ ಶರಣಾನಂದ್ ಗುರುವಾರ ಈ ಕುರಿತು ದೂರು ದಾಖಲಿಸಿದ್ದಾರೆ ಎಂದು ವೃತ್ತ ಅಧಿಕಾರಿ ಸತೀಶ್ ಕುಮಾರ್ ಶರ್ಮಾ ತಿಳಿಸಿದ್ದಾರೆ. ಮಂಗಳವಾರ ದೇವಾಲಯದ ಪಕ್ಕದಲ್ಲಿರುವ ಹೊಳೆಯ ಬಳಿ ಇಫ್ತಾರ್ ಕೂಟವನ್ನು ಆಯೋಜಿಸಲಾಗಿತ್ತು ಎಂದು ದೂರುದಾರರು ಆರೋಪಿಸಿದ್ದಾರೆ. ಇಫ್ತಾರ್ ಸಮಯದಲ್ಲಿ ಮಾಂಸವನ್ನು ಬಡಿಸಲಾಗಿತ್ತು ಎಂದು ವೃತ್ತ ಅಧಿಕಾರಿ ತಿಳಿಸಿದ್ದಾರೆ. ಪಾರ್ಟಿಯ ನಂತರ, ಆಯೋಜಕರು ಉಳಿದ ಆಹಾರವನ್ನು ಹೊಳೆಗೆ ಎಸೆದಿದ್ದಾರೆ ಎಂದು ಆರೋಪಿಸಲಾಗಿದೆ. ಇದೇ ಹೊಳೆಯಿಂದ ಆಶ್ರಮವು ಅಡುಗೆ ಮಾಡಲು, ಕುಡಿಯಲು ಮತ್ತು ವಿಗ್ರಹಗಳನ್ನು ತೊಳೆಯಲು ನೀರನ್ನು ಬಳಸುತ್ತದೆ ಎಂದು ಶರ್ಮಾ ಹೇಳಿದ್ದಾರೆ. ಈ ಬಗ್ಗೆ ಆಶ್ರಮದ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದಾಗ, ಇಫ್ತಾರ್ ಕೂಟದ ಆಯೋಜಕರು ಬೆದರಿಕೆ ಹಾಕಿದ್ದಾರೆ ಎಂದು ದೂರುದಾರರು ಆರೋಪಿಸಿದ್ದಾರೆ. ಈ ಕುರಿತು ಭಾರತೀಯ ನ್ಯಾಯ ಸಂಹಿತೆಯ ವಿವಿಧ ಸೆಕ್ಷನ್ಗಳಡಿ ಸಿರ್ಸಿಯಾ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ ಎಂದು ಪಿಟಿಐ ವರದಿ ಮಾಡಿದೆ. ಪ್ರಕರಣದ ನಾಲ್ವರು ಆರೋಪಿಗಳಾದ ಜಮಾಲ್ ಅಹ್ಮದ್, ಇರ್ಫಾನ್ ಅಹ್ಮದ್, ಇಮ್ರಾನ್ ಅಹ್ಮದ್ ಮತ್ತು ಝಹೀರ್ ಖಾನ್ ಅವರನ್ನು ಶುಕ್ರವಾರ ಬಂಧಿಸಲಾಗಿದೆ ಎಂದು ಶರ್ಮಾ ಹೇಳಿದ್ದಾರೆ.
ಮಂಗಳೂರು| ಕೋಮುಪ್ರಚೋದನೆಯ ಪೋಸ್ಟ್ ಹಾಕಿದ ಆರೋಪ: ಯುವತಿ ಸೆರೆ
ಮಂಗಳೂರು, ಮಾ.21: ಸಾಮಾಜಿಕ ಜಾಲತಾಣಗಳಲ್ಲಿ ಕೋಮು ಪ್ರಚೋದನೆಯ ಪೋಸ್ಟ್ ಹಾಕಿದ್ದ ಆರೋಪದ ಮೇರೆಗೆ ಬೆಳ್ತಂಗಡಿ ಮೂಲದ ಯುವತಿಯನ್ನು ಕಂಕನಾಡಿ ನಗರ ಠಾಣೆಯ ಪೊಲೀಸರು ಬಂಧಿಸಿದ್ದಾರೆ. 2025ರಲ್ಲಿ ಯುವತಿಯು ಸಾಮಾಜಿಕ ಜಾಲತಾಣದಲ್ಲಿ ಕೋಮು ಪ್ರಚೋದನೆ ಮಾಡುವಂತಹ ಪೋಸ್ಟ್ಗಳನ್ನು ಹಂಚಿಕೊಂಡಿದ್ದಳು. ಈ ಬಗ್ಗೆ ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಕೋಮು ಪ್ರಚೋದನೆಯ ಪೋಸ್ಟ್ಗಳನ್ನು ಈಕೆ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುವುದು ತನಿಖೆ ವೇಳೆ ತಿಳಿದು ಬಂದಿದೆ. ಮಾ.19ರಂದು ಆಕೆಯನ್ನು ಬಂಧಿಸಲಾಗಿದ್ದು, ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ದಾವಣಗೆರೆ, ಬಾಗಲಕೋಟೆ ಉಪ ಚುನಾವಣೆ ಕಾಂಗ್ರೆಸ್ ಟಿಕೆಟ್ ಅಂತಿಮ; ಅನುಕಂಪಕ್ಕೆ ಜೈ; CM, DCM ಸಭೆಯಲ್ಲಿ ತೀರ್ಮಾನ
ದಾವಣಗೆರೆ ದಕ್ಷಿಣ ಹಾಗೂ ಬಾಲಕೋಟೆ ಕಾಂಗ್ರೆಸ್ ಟಿಕೆಟ್ ಅಂತಿಮವಾಗಿದೆ. ಆಕಾಂಕ್ಷಿಗಳ ನಡುವೆ ಸಿಎಂ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಸೇರಿ ಹೈಮಾಂಡ್ ಪ್ರತಿನಿಧಿಗಳು ನಡೆಸಿದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಕೊನೆಗೂ ಅನುಕಂಪಕ್ಕೆ ಗೆಲುವು ಸಿಕ್ಕಿದ್ದು, ಮೃತ ಶಾಸಕರ ಕುಟುಂಬಗಳಿಗೆ ಟಿಕೆಟ್ ನೀಡಲು ನಿರ್ಧರಿಸಲಾಗಿದೆ. ಎಸ್ಎಸ್ ಮಲ್ಲಿಕಾರ್ಜುನ್ ಪುತ್ರ ಸಮರ್ಥ್ ಶಾಮನೂರು, ಮೇಟಿ ಕಿರಿಯ ಪುತ್ರ ಉಮೇಶ್ಗೆ ಟಿಕೆಟ್ ಖಚಿತವಾಗಿದೆ ಎನ್ನಲಾಗಿದೆ.
ಮಂಗಳೂರು, ಮಾ.21:ಗಾಂಜಾ ಸೇವಿಸಿದ ಆರೋಪದ ಮೇರೆಗೆ ನೀತಿನಗರ ನಿವಾಸಿ ರಿತೇಶ್ (25) ಮತ್ತು ಪದವು ಗ್ರಾಮದ ಜಿತೇಶ್ (23) ಎಂಬವರನ್ನು ಮಂಗಳೂರು ಗ್ರಾಮಾಂತರ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಮಾದಕ ವಸ್ತುವನ್ನು ಸೇವನೆ ಮಾಡಿದಂತೆ ಕಂಡು ಬಂದ ರಿತೇಶ್ನನ್ನು ಶಕ್ತಿನಗರದ ನೀತಿನಗರ ಬಳಿ ಮತ್ತು ಜಿತೇಶ್ನನ್ನು ಶಕ್ತಿನಗರದ ನಾಲ್ಯಪದವು ಬಳಿ ಬಂಧಿಸಿದ್ದಾರೆ. ಆರೋಪಿಗಳ ವಿರುದ್ಧ ಗ್ರಾಮಾಂತರ ಠಾಣೆಯಲ್ಲಿ ಎನ್ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.
ಆಳ್ವಾಸ್ ನುಡಿಸಿರಿ ಮಂಗಳೂರು ಘಟಕದಿಂದ ಸಾಂಸ್ಕೃತಿಕ ವೈಭವ
ಮಂಗಳೂರು: ಆಳ್ವಾಸ್ ನುಡಿಸಿರಿ ಮಂಗಳೂರು ಘಟಕದಿಂದ ಶನಿವಾರ ನಗರದ ಕರಾವಳಿ ಉತ್ಸವ ಮೈದಾನದ ಡಾ.ಎನ್. ವಿನಯ ಹೆಗ್ಡೆ ವೇದಿಕೆಯಲ್ಲಿ ಆಳ್ವಾಸ್ ಸಾಂಸ್ಕೃತಿಕ ವೈಭವ ನಡೆಯಿತು. 500ಕ್ಕೂ ಅಧಿಕ ವಿದ್ಯಾರ್ಥಿಗಳು ಯೋಗದೀಪಿಕ, ಸ್ಟಿಕ್ ಡ್ಯಾನ್ಸ್, ಗುಜರಾತ್ ದಾಂಡಿಯಾ ನೃತ್ಯ, ಡೊಳ್ಳು ಕುಣಿತ ಮೂಲಕ ಸಾಂಸ್ಕೃತಿಕ ಕಲೆಗಳನ್ನು ಪ್ರದರ್ಶಿಸಿ ಸಾರ್ವಜನಿಕರನ್ನು ಆಕರ್ಷಿಸಿದರು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಂಸದ ಬ್ರಿಜೇಶ್ ಚೌಟ ಇದು ಕೇವಲ ಮನರಂಜನೆಗೆ ಸೀಮಿತಗೊಂಡ ಸಾಂಸ್ಕೃತಿಕ ಕಾರ್ಯಕ್ರಮವಲ್ಲ. ನಾಡಿನ ವಿಭಿನ್ನ ಸಂಸ್ಕೃತಿಗಳ ಆಳವನ್ನು ಪ್ರತಿಬಿಂಬಿಸುವ ವಿಶಿಷ್ಟ ಕಾರ್ಯಕ್ರಮ ವಾಗಿದೆ. ಮಂಗಳೂರಿನ ಸಾಂಸ್ಕೃತಿಕ ಹಾಗೂ ಕಲಾಭಿಮಾನಿಗಳಿಗೆ ಇಂತಹ ಅವಕಾಶವನ್ನು ಒದಗಿಸಿದ ಡಾ. ಮೋಹನ್ ಆಳ್ವ ಅಭಿನಂದನಾರ್ಹರು ಎಂದರು. ಆಳ್ವಾಸ್ ಶಿಕ್ಷಣ ಸಂಸ್ಥೆಯು ಕೇವಲ ಶಿಕ್ಷಣಕ್ಕೆ ಸೀಮಿತವಾಗಿಲ್ಲ. ಕಲೆ, ಸಾಹಿತ್ಯ, ಕ್ರೀಡೆಗೆ ಹೆಚ್ಚಿನ ಮಹತ್ವ ನೀಡುತ್ತಿದೆ. ವಿದ್ಯಾರ್ಥಿಗಳ ಸುಪ್ತ ಪ್ರತಿಭೆಯನ್ನು ಗುರುತಿಸಿ ಹೊರತರುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ ಎಂದು ಬ್ರಿಜೇಶ್ ಚೌಟ ಹೇಳಿದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ವೇದವ್ಯಾಸ ಕಾಮತ್ ಕಾರ್ಯಕ್ರಮಗಳನ್ನು ಅಚ್ಚುಕಟ್ಟಾಗಿ ಹೇಗೆ ಮಾಡ ಬೇಕು ಎಂಬುದನ್ನು ಡಾ. ಮೋಹನ ಆಳ್ವರಿಂದ ಕಲಿಯಬೇಕು. ಸರಕಾರವನ್ನೇ ನಾಚಿಸುವ ರೀತಿಯಲ್ಲಿ ಶಿಕ್ಷಣ, ಸಮಾಜ, ಸಂಸ್ಕೃತಿ ಕಟ್ಟಿ ಬೆಳೆಸುವ ಕೆಲಸವನ್ನು ಮಾಡುತ್ತಾ ಬಂದಿರುವುದು ಶ್ಲಾಘನೀಯ ಎಂದರು. ಕಾರ್ಯಕ್ರಮದ ರೂವಾರಿ ಹಾಗೂ ಆಳ್ವಾಸ್ ಸಂಸ್ಥೆಯ ಅಧ್ಯಕ್ಷ ಡಾ.ಮೋಹನ್ ಆಳ್ವ ಮಾತನಾಡಿ ಮಂಗಳೂರಿನಲ್ಲಿ ಮೂರನೇ ಬಾರಿಗೆ ವೈಭವ ಆಯೋಜಿಸಿದ್ದೇವೆ. 30 ಬಾರಿ ವಿರಾಸತ್ ಮತ್ತು 17 ಬಾರಿ ನುಡಿಸಿರಿ ಆಯೋಜಿಸಿ ದ್ದೆವು. ಕರಾವಳಿಯ ಸಂಸ್ಕೃತಿಯ ಪ್ರದರ್ಶನ ರಾಜ್ಯಾದ್ಯಂತ ಆಗಬೇಕು ಎಂಬ ಪರಿಕಲ್ಪನೆಯಡಿ 88 ಘಟಕ ಮಾಡಿಕೊಂಡು ವಿವಿಧ ಕಡೆ ತೆರಳಿ ಸಾಂಸ್ಕೃತಿಕ ವೈಭವ ಮಾಡಲಾಗುತ್ತಿದೆ ಎಂದರು. ವೇಣುಗೋಪಾಲ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ನ್ಯಾಯವಾದಿ, ಕಲಾವಿದ ಶಶಿರಾಜ್ ರಾವ್ ಕಾವೂರು ವಂದಿಸಿದರು.
ಬಂಟ್ವಾಳ| ಹಲ್ಲೆ ಪ್ರಕರಣ: ಆಟೋ ಚಾಲಕ ಸೆರೆ
ಬಂಟ್ವಾಳ : ಪಾಣೆಮಂಗಳೂರು ಸಮೀಪದ ಮೆಲ್ಕಾರ್ -ಗುಡ್ಡೆಅಂಗಡಿ ಅಟೋ ಗ್ಯಾಸ್ ಪಂಪಿಗೆ ಬಂದ ಅಟೋ ರಿಕ್ಷಾ ಚಾಲಕನೋರ್ವ ಪಂಪಿನ ಸಿಬ್ಬಂದಿಗೆ ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆ ನಡೆಸಿದ ಘಟನೆ ಶುಕ್ರವಾರ ಸಂಜೆ ನಡೆದಿದ್ದು, ಈ ಬಗ್ಗೆ ಆರೋಪಿಯನ್ನು ಬಂಟ್ವಾಳ ನಗರ ಠಾಣಾ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಸಜಿಪಮೂಡ ಗ್ರಾಮದ ಅಫ್ರೀಝ್ (28) ಎಂದು ಗುರುತಿಸಲಾಗಿದೆ. ಈ ಬಗ್ಗೆ ಪಂಪಿನ ಮ್ಯಾನೇಜರ್ ಕುನಲ್ ಭುಹ್ನಿಯಾ (27) ಅವರು ಪೊಲೀಸರಿಗೆ ದೂರು ನೀಡಿದ್ದು, ಬೊಗೋಡಿ ಎಂಬಲ್ಲಿರುವ ಗ್ಯಾಸ್ ಪಂಪಿನಲ್ಲಿ ಮಾರ್ಚ್ 20 ರಂದು ಸಂಜೆ ರಿಕ್ಷಾ ಚಲಾಯಿಸಿಕೊಂಡು ಬಂದ ಆರೋಪಿ ಅಟೋ ಚಾಲಕ ಅಫ್ರೀಝ್ ಗ್ಯಾಸ್ ಪಂಪ್ ಏಜೆನ್ಸಿಯ ಒಳಗೆ ಪ್ರವೇಶಿಸಿ ಕಚೇರಿ ಸಿಬ್ಬಂದಿ ಅಶ್ವಿನ್ ಎಂಬವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆ ನಡೆಸಿರುತ್ತಾನೆ ಎಂದು ದೂರಲಾಗಿದೆ. ನಂತರ ಹೊರಬಂದು ಗ್ಯಾಸ್ ಪಂಪ್ ಏಜೆನ್ಸಿಯ ಸೊತ್ತುಗಳಿಗೆ ಹಾನಿ ಮಾಡಿದ್ದು, ಸುಮಾರು 48 ಸಾವಿರ ರೂ. ನಷ್ಟ ಉಂಟಾಗಿದೆ ಎಂದು ನೀಡಿದ ದೂರಿನಂತೆ ಬಂಟ್ವಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
Yadgiri | ದೇಗುಲ ಮುಂಭಾಗದ ಕಟ್ಟೆ ಮೇಲೆ ಕೂತಿದ್ದಕ್ಕೆ ದಲಿತ ಯುವಕರಿಗೆ ಹಲ್ಲೆ : ಆರೋಪ
ಸ್ಥಳದಲ್ಲಿ ಬಿಗುವಿನ ವಾತಾವರಣ
ಮೋದಿ ಅತಿ ದೊಡ್ಡ ಒಳನುಸುಳುಕೋರ: ಮಮತಾ ಬ್ಯಾನರ್ಜಿ
ಕೋಲ್ಕತಾ, ಮಾ. 21: ಪ್ರಧಾನಿ ನರೇಂದ್ರ ಮೋದಿ ಅತಿ ದೊಡ್ಡ ಒಳನುಸುಳುಕೋರ ಎಂದು ಪಶ್ಚಿಮಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಶನಿವಾರ ಬಣ್ಣಿಸಿದ್ದಾರೆ. ಅಲ್ಲದೆ, ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್ಐಆರ್) ಸಂಬಂಧಿಸಿದಂತೆ ಬಿಜೆಪಿ ನೇತೃತ್ವದ ಕೇಂದ್ರ ಸರಕಾರದ ಮೇಲಿನ ತಮ್ಮ ಟೀಕೆಯನ್ನು ಪುನರುಚ್ಚರಿಸಿದ್ದಾರೆ. ಕೋಲ್ಕತ್ತಾದ ರೆಡ್ ರೋಡ್ನಲ್ಲಿ ಈದ್ ಪ್ರಾರ್ಥನೆ ಬಳಿಕ ಜನರನ್ನು ಉದ್ದೇಶಿಸಿ ಮಾತನಾಡಿದ ಮಮತಾ ಬ್ಯಾನರ್ಜಿ, ಪ್ರಜೆಗಳ ಮತದಾನದ ಹಕ್ಕನ್ನು ಕಸಿಯಲು ಮೋದಿ ಹಾಗೂ ಬಿಜೆಪಿಗೆ ಅವಕಾಶ ನೀಡುವುದಿಲ್ಲ ಎಂದರು. ‘‘ನೀವು (ಮೋದಿ)ವಿದೇಶಕ್ಕೆ ಹೋದ ಸಂದರ್ಭ ನಾಯಕರ ಕೈಕುಲುಕುತ್ತೀರಿ. ಸ್ನೇಹದ ಬಗ್ಗೆ ಮಾತನಾಡುತ್ತೀರಿ. ಅದು ನಿಮ್ಮ ಆಯ್ಕೆ. ನಾನು ಎಲ್ಲಾ ದೇಶಗಳಿಗೆ ಗೌರವ ನೀಡುತ್ತೇನೆ. ಆದರೆ, ನೀವು ಭಾರತಕ್ಕೆ ಹಿಂದಿರುಗಿದಾಗ ಇದ್ದಕ್ಕಿದ್ದಂತ ಹಿಂದೂ-ಮುಸ್ಲಿಂ ನಿರೂಪಣೆ ಆರಂಭಿಸುತ್ತೀರಿ. ಅಲ್ಲದೆ, ಜನರನ್ನು ಒಳ ನುಸುಳುಕೋರರು ಎಂದು ಕರೆಯುತ್ತೀರಿ’’ ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ. ಪಶ್ಚಿಮಬಂಗಾಳದಲ್ಲಿ ದಾಖಲೆ ರಹಿತ ವಲಸೆ ನಡೆಯುತ್ತದೆ ಎಂಬ ಕುರಿತ ಬಿಜೆಪಿಯ ಆರೋಪವನ್ನು ಉಲ್ಲೇಖಿಸಿದೆ ಅವರು, ‘‘ಅನಂತರ ನೀವು ಅವರ ಹೆಸರನ್ನು ಅಳಿಸಲು ಹಾಗೂ ನುಸುಳುಕೋರರೆಂದು ಹಣೆ ಪಟ್ಟಿ ಕಟ್ಟಲು ಕರೆ ನೀಡುತ್ತೀರಿ. ನೀವು ಮತ್ತು ನಿಮ್ಮ ಸರಕಾರವೇ ಅತಿ ದೊಡ್ಡ ನುಸುಳುಕೋರ ಎಂದು ನಾನು ಹೇಳುತ್ತೇನೆ’’ ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ.
ವಿದ್ಯಾರ್ಥಿಗಳಲ್ಲಿ ‘ಮೊಬೈಲ್ ಬಿಡಿ -ಪುಸ್ತಕ ಹಿಡಿ’ ಅಭಿಯಾನ ಆರಂಭ
ಬೆಂಗಳೂರು : ಶಾಲಾ ವಿದ್ಯಾರ್ಥಿಗಳಲ್ಲಿ ಓದುವ ಅಭಿರುಚಿ ಬೆಳೆಸಿ, ಮೊಬೈಲ್ ಬಳಕೆ ನಿಯಂತ್ರಿಸುವ ಉದ್ದೇಶದಿಂದ ‘ಮೊಬೈಲ್ ಬಿಡಿ -ಪುಸ್ತಕ ಹಿಡಿ’ ಅಭಿಯಾನವನ್ನು ಆರಂಭಿಸಬೇಕು ಎಂದು ಶಾಲಾ ಶಿಕ್ಷಣ ಇಲಾಖೆಯು ಆದೇಶಸಿದೆ. ಶನಿವಾರ ಈ ಸಂಬಂಧ ಪ್ರಾಥಮಿಕ ಶಿಕ್ಷಣ ನಿರ್ದೇಶಕರು ಜ್ಞಾಪನ ಪತ್ರವನ್ನು ಹೊರಡಿಸಿದ್ದು, ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳಲ್ಲಿ ಮೊಬೈಲ್ ಫೋನ್ಗಳು ಹಾಗೂ ಇತರೆ ಡಿಜಿಟಲ್ ಸಾಧನಗಳ ಬಳಕೆಯಿಂದಾಗಿ ಓದುವಿಕೆಯಲ್ಲಿ ಗಣನೀಯ ಕುಸಿತ ಉಂಟಾಗುತ್ತಿದೆ. ಈ ಹಿನ್ನೆಲೆಯಲ್ಲಿ ಶಾಲೆಗಳಲ್ಲಿ ‘ಮೊಬೈಲ್ ಬಿಡಿ - ಪುಸ್ತಕ ಹಿಡಿ’ ಅಭಿಯಾನವನ್ನು ರಾಜ್ಯದಾದ್ಯಂತ ಹಮ್ಮಿಕೊಳ್ಳಲು ಉದ್ದೇಶಿಸಲಾಗಿದೆ ಎಂದು ವಿವರಿಸಿದ್ದಾರೆ. ಶಾಲಾ ಹಂತದಲ್ಲಿ ನಡೆಯುವ ಎಸ್ಡಿಎಂಸಿ ಮತ್ತು ಪೋಷಕರ ಸಭೆಗಳಲ್ಲಿ ಮೊಬೈಲ್ ಬಳಕೆಯ ಪರಿಣಾಮಗಳ ಬಗ್ಗೆ ಹೆಚ್ಚು ಜ್ಞಾನವನ್ನು ಹೊಂದಿರುವ ತಜ್ಞರ ಮೂಲಕ ಜಾಗೃತಿ ಮೂಡಿಸಲು ಕ್ರಮವಹಿಸಬೇಕು. ಮನೆಗಳಲ್ಲಿ ವಿದ್ಯಾರ್ಥಿಗಳ ಮೊಬೈಲ್ ಬಳಕೆಯನ್ನು ನಿಯಂತ್ರಿಸಲು ಸೂಚಿಸಬೇಕು. ಊಟದ ಸಮಯದಲ್ಲಿ ಮಲಗುವ ಮುನ್ನ ಹಾಗೂ ದೈನಂದಿನ ಇತರೆ ಚಟುವಟಿಕೆಗಳನ್ನು ಮಾಡುವಾಗ ಮೊಬೈಲ್ ಬಳಕೆ ಮಾಡದೆ ಇರುವಂತೆ ಗಮನಹರಿಸಬೇಕು ಎಂದು ತಿಳಿಸಿದೆ. ಓದುವಿಕೆ ಅಥವಾ ಇತರೆ ಆಫ್ಲೈನ್ ಚಟುವಟಿಕೆಗಳಾದ ಆಟಗಳು, ಮನೆಯ ಸದಸ್ಯರೊಂದಿಗೆ ಸಂವಹನ ಮಾಡುವುದು, ಮಕ್ಕಳ ಅಭಿರುಚಿಗೆ ಅನುಗುಣವಾದ ಹವ್ಯಾಸಗಳಲ್ಲಿ ತೊಡಗಿಸಿಕೊಳ್ಳುವುದನ್ನುಪ್ರೋ ತ್ಸಾಹಿಸಬೇಕು. ಪೋಷಕರು ಸ್ವತಃ ಮೊಬೈಲ್ ಬಳಕೆಯನ್ನು ನಿಯಂತ್ರಿಸಿ, ಓದುವಿಕೆ ಹಾಗೂ ಇತರೆ ಚಟುವಟಿಕೆಗಳಿಗೆ ಆದ್ಯತೆ ನೀಡುವ ಮೂಲಕ ಮಕ್ಕಳಿಗೆ ಮಾದರಿಯಾಗಬೇಕು ಎಂದು ಜ್ಞಾಪನ ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಶಾಲೆಗಳಲ್ಲಿ ಹಮ್ಮಿಕೊಳ್ಳಲಾಗುವ ಸಹಪಠ್ಯ ಚಟುವಟಿಕೆಗಳಾದ ಪ್ರತಿಭಾ ಕಾರಂಜಿ, ಕಲೋತ್ಸವ, ರಾಷ್ಟ್ರೀಯ ಹಬ್ಬಗಳು, ಸಮುದಾಯದತ್ತ ಶಾಲಾ ಕಾರ್ಯಕ್ರಮಗಳಲ್ಲಿ ಅಭಿನಯ, ಪೋಸ್ಟರ್ ಮೇಕಿಂಗ್, ನೃತ್ಯ, ಭಾಷಣ ಮುಂತಾದ ಚಟುವಟಿಕೆಗಳ ಮೂಲಕ ಮೊಬೈಲ್ ಹಾಗೂ ಸಾಮಾಜಿಕ ಮಾಧ್ಯಮಗಳ ಸುರಕ್ಷಿತ ಮತ್ತು ಮಿತ ಬಳಕೆಯ ಬಗ್ಗೆ ಅರಿವು ಮೂಡಿಸಬೇಕು. ಗ್ರಂಥಾಲಯ ಬಳಕೆ: ಗ್ರಾಮಪಂಚಾಯತ್ ಗ್ರಂಥಾಲಯಗಳ ಗ್ರಂಥಪಾಲಕರನ್ನು ಶಾಲೆಗಳಿಗೆ ಆಹ್ವಾನಿಸಿ ಮಕ್ಕಳು ಹೆಚ್ಚು ಹೆಚ್ಚು ಗ್ರಂಥಾಲಯಕ್ಕೆ ಭೇಟಿ ನೀಡಿ ಪುಸ್ತಕಗಳ ಬಳಕೆ ಮಾಡಲು ಪ್ರೋ ತ್ಸಾಹಿಸಬೇಕು. ಗ್ರಂಥಾಲಯಗಳ ಬಳಕೆಗೆ ಪೋಷಕರಿಗೆ ಜಾಗೃತಿ ಮೂಡಿಸಬೇಕು. ಇದಕ್ಕಾಗಿ ಪೋಸ್ಟರ್ಗಳು ಹಾಗೂ ಬ್ಯಾನರ್ಗಳ ಮೂಲಕ ಮಕ್ಕಳಲ್ಲಿ, ಪೋಷಕರಲ್ಲಿ ಮೊಬೈಲ್ ಬಳಕೆ ಕಡಿಮೆ ಮಾಡುವ ಬಗ್ಗೆ ಜಾಗೃತಿ ಮೂಡಿಸಬೇಕು. ಆರೋಗ್ಯ ಇಲಾಖೆ: ಅತಿಯಾದ ಮೊಬೈಲ್ ಬಳಕೆಯಿಂದ ಉಂಟಾಗುವ ಮಾನಸಿಕ ಅಸ್ವಸ್ತತೆಯ ಬಗ್ಗೆ ಮಕ್ಕಳಿಗೆ ಜಾಗೃತಿ ಮೂಡಿಸಲು ಆರೋಗ್ಯಾಧಿಕಾರಿಗಳಿಂದ ಸಂವಾದ ಕಾರ್ಯಕ್ರಮಗಳನ್ನು ಆಯೋಜಿಸಬೇಕು. ಮಕ್ಕಳ ಆರೋಗ್ಯ ತಪಾಸಣೆ ಮಾಡುವ ಸಂದರ್ಭದಲ್ಲಿ ಮೊಬೈಲ್ ಬಳಕೆಯಿಂದ ಆರೋಗ್ಯದ ಮೇಲೆ ಉಂಟಾಗುವ ಪರಿಣಾಮದ ಕುರಿತು ತಿಳುವಳಿಕೆ ನೀಡಬೇಕು. ಪೊಲೀಸ್ ಇಲಾಖೆ: ಸೈಬರ್ ಕ್ರೈಮ್ ಪೊಲಿಸ್ ಅಧಿಕಾರಿಗಳನ್ನು ಶಾಲೆಗಳಿಗೆ ಆಹ್ವಾನಿಸಿ, ಮೊಬೈಲ್ನ ಅತಿಯಾದ ಬಳಕೆ, ಸೈಬರ್ ಅಪರಾಧಗಳು, ಸೈಬರ್ ವಂಚನೆಗಳ ಕುರಿತು ಸಂವಾದ ಏರ್ಪಡಿಸಿ ಪೊಷಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸಬೇಕು. ಮೊಬೈಲ್ ಬಳಕೆಗೆ ಸಂಬಂಧಿಸಿದಂತೆ ಮಕ್ಕಳ ಸುರಕ್ಷತೆಗೆ ಇರುವ ಕಾನೂನುಗಳ ಬಗ್ಗೆ ತಿಳುವಳಿಕೆ ನೀಡಬೇಕು ಎಂದು ಶಾಲಾ ಶಿಕ್ಷಣ ಇಲಾಖೆ ಆದೇಶಿಸಿದೆ.
Kasaragod : ಮೊಗ್ರಾಲ್ನಲ್ಲಿ ಬಿಎಲ್ಒ ಆತ್ಮಹತ್ಯೆ
ಕಾಸರಗೋಡು : ಬೂತ್ ಮಟ್ಟದ ಅಧಿಕಾರಿ (ಬಿಎಲ್ಒ) ಒಬ್ಬರು ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಕುಂಬಳೆ ಸಮೀಪದ ಮೊಗ್ರಾಲ್ನಲ್ಲಿ ಶನಿವಾರ ನಡೆದಿರುವುದು ವರದಿಯಾಗಿದೆ. ಮೊಗ್ರಾಲ್ನ ಮುಹಮ್ಮದ್ ಸವಾದ್(32) ಮೃತಪಟ್ಟವರು. ಇವರು ಚೆರ್ಕಳ ಸರಕಾರಿ ಹೈಯರ್ ಸೆಕೆಂಡರಿ ಶಾಲೆಯ ಶಿಕ್ಷಕರಾಗಿದ್ದರು. ಶನಿವಾರ ಬೆಳಗ್ಗೆಯಿಂದ ನಾಪತ್ತೆಯಾಗಿದ್ದ ಸವಾದ್ಗಾಗಿ ಮನೆಯವರು ಶೋಧ ನಡೆಸಿದ್ದು, ಈ ನಡುವೆ ಮೊಗ್ರಾಲ್ ಸೇತುವೆ ಮೇಲೆ ಸವಾದ್ರ ಬೈಕ್ ಪತ್ತೆಯಾಗಿದೆ. ಬಳಿಕ ಕುಟುಂಬಸ್ಥರು ಹಾಗೂ ನಾಗರಿಕರು ಹುಡುಕಾಡಿದಾಗ ನದಿಯಲ್ಲಿ ಅರೆ ಪ್ರಜ್ಞಾವಸ್ಥೆಯಲ್ಲಿ ಪತ್ತೆಯಾಗಿದ್ದಾರೆ. ಕೂಡಲೇ ಕಾಸರಗೋಡು ಜನರಲ್ ಆಸ್ಪತ್ರೆಗೆ ಕೊಂಡೊಯ್ದರೂ ಆಗಲೇ ಮೃತಪಟ್ಟಿದ್ದರು ಎಂದು ತಿಳಿದುಬಂದಿದೆ. ಸವಾದ್ ಕೆಲಸದ ಒತ್ತಡದಿಂದ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಸಮಗ್ರ ತನಿಖೆಗೆ ಆದೇಶ: ಜಿಲ್ಲಾಧಿಕಾರಿ ಮುಹಮ್ಮದ್ ಸವಾದ್ ಸಾವಿನ ಬಗ್ಗೆ ಪೊಲೀಸರು ನಡೆಸಿದ ಪ್ರಾಥಮಿಕ ತನಿಖೆಯ ವೇಳೆ ಡೆತ್ ನೋಟ್ ಪತ್ತೆಯಾಗಿದೆ. ವೈಯುಕ್ತಿಕ ಕಾರಣಗಳಿಂದ ಅವರು ಕೃತ್ಯ ಎಸಗಿದ್ದಾಗಿ ಪೊಲೀಸರು ವರದಿ ನೀಡಿದ್ದಾರೆ. ಈ ಬಗ್ಗೆ ಸಮಗ್ರ ತನಿಖೆಗೆ ಆದೇಶ ನೀಡಲಾಗಿದೆ ಎಂದು ಕಾಸರಗೋಡು ಜಿಲ್ಲಾಧಿಕಾರಿ ಅರ್ಜುನ್ ಪಾಂಡ್ಯನ್ ತಿಳಿಸಿದ್ದಾರೆ. ಮೃತರ ಕುಟುಂಬಕ್ಕೆ ಅರ್ಹ ಎಲ್ಲಾ ಸೌಲಭ್ಯಗಳನ್ನು ಖಾತರಿಪಡಿಸಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
Karnataka High Court About Life Sentence: ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಕೈದಿ 20 ವರ್ಷ ಬಳಿಕ ಜೈಲಿನಿಂದ ಬಿಡುಗಡೆಗೆ ಹಕ್ಕಿಲ್ಲ. ಆದರೆ, ಸರ್ಕಾರಕ್ಕೆ ಕ್ಷಮಾದಾನಕ್ಕೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ ಎಂದು ಕರ್ನಾಟಕ ಹೈಕೋರ್ಟ್ ಹೇಳಿದೆ. ಮೂಲಕ ಕೊಲೆ ಮಾಡಿ ಜೈಲಿನಲ್ಲಿರುವ ಆರೋಪಿ ಸಲ್ಲಿಸಿದ್ದ ಬಿಡುಗಡೆ ಕೋರಿದ ಅರ್ಜಿಯನ್ನು ವಜಾ ಮಾಡಿದೆ.
Kalaburagi | ಸಾಹಿತ್ಯ ಸೌರಭ ಕೃತಿಯ ಪರಿಚಯ ಕಾರ್ಯಕ್ರಮ
ಕಲಬುರಗಿ : ಕನ್ನಡನಾಡು ಲೇಖಕರ ಮತ್ತು ಓದುಗರ ಸಹಕಾರ ಸಂಘದ ವತಿಯಿಂದ ನಗರದಲ್ಲಿ ನಡೆದ ಪುಸ್ತಕ ಪರಿಚಯ ಮಾಲಿಕೆಯ ಕಾರ್ಯಕ್ರಮದಲ್ಲಿ ಡಾ. ಸುರೇಂದ್ರಕುಮಾರ ಕೆರಮಗಿ ರಚಿಸಿದ ಸಾಹಿತ್ಯ ಸೌರಭ ಕೃತಿಯನ್ನು ಪರಿಚಯಿಸಲಾಯಿತು. ಸಾಹಿತಿ ಹಾಗೂ ಕನ್ನಡ ವಿಶ್ವವಿದ್ಯಾಲಯ ಹಂಪಿಯ ವಿಸ್ತರಣಾ ಕೇಂದ್ರ ದೇವದುರ್ಗದ ನಿರ್ದೇಶಕರಾದ ಡಾ.ಶಾಂತಪ್ಪ ಡಂಬಳ ಅವರು ಕೃತಿಯನ್ನು ಪರಿಚಯಿಸಿ ಮಾತನಾಡಿ, ಈ ಕೃತಿ ಮಾನವ ಸಂಬಂಧಗಳ ಬೆಸುಗೆಯ ಪ್ರತೀಕವಾಗಿದ್ದು, ಸಂವೇದನಾಶೀಲ ಲೇಖನಗಳ ಸಂಕಲನವಾಗಿದೆ ಎಂದು ಹೇಳಿದರು. ಕೃತಿಯಲ್ಲಿರುವ ಲೇಖನಗಳು ಸಾಂದರ್ಭಿಕವಾಗಿ ರಚಿಸಲ್ಪಟ್ಟಿದ್ದು, ಈಗಾಗಲೇ ವಿವಿಧ ಸಾಹಿತ್ಯ ಪತ್ರಿಕೆಗಳಲ್ಲಿ ಪ್ರಕಟಗೊಂಡಿರುವುದರ ಜೊತೆಗೆ ಅನೇಕ ಸಾಹಿತ್ಯ ಸಮ್ಮೇಳನಗಳಲ್ಲಿ ಪ್ರಬಂಧ ರೂಪದಲ್ಲಿ ಮಂಡನೆಯಾಗಿವೆ ಎಂದು ತಿಳಿಸಿದರು. ಮುಂದುವರೆದು ಮಾತನಾಡಿದ ಅವರು, ಕೃತಿಯಲ್ಲಿ ವರ್ತಮಾನದ ತಲ್ಲಣಗಳು, ಮಹಿಳಾ ಸಂವೇದನೆಗಳು, ದಲಿತಪರ ಚಳುವಳಿಗಳು ಹಾಗೂ ಕನ್ನಡಪರ ಹೋರಾಟಗಳ ಬಗ್ಗೆ ಚರ್ಚಿಸಲಾಗಿದೆ. ಈ ಕೃತಿ ಸಂಶೋಧನಾ ವಿದ್ಯಾರ್ಥಿಗಳು ಮತ್ತು ಸಾಹಿತ್ಯಾಸಕ್ತರಿಗೆ ಪೂರಕವಾದ ಗ್ರಂಥವಾಗಿದೆ ಎಂದರು. ಕೃತಿಯ ಲೇಖಕರಾದ ಡಾ.ಸುರೇಂದ್ರಕುಮಾರ ಕೆರಮಗಿ ಅವರು ತಮ್ಮ ಸಾಹಿತ್ಯಿಕ ಅನುಭವಗಳನ್ನು ಹಂಚಿಕೊಂಡರು. ಶರಣಬಸವ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾದ ಶ್ರೀಶೈಲ ಮದಾನೆ ಹಾಗೂ ಸಾಹಿತಿ ರೇವಣಸಿದ್ಧಪ್ಪ ದುಕಾನ ಅವರು ಕೃತಿಯ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ ಅಪ್ಪಾರಾವ ಅಕ್ಕೋಣೆ ವಹಿಸಿದ್ದರು. ಡಾ.ವಿಜಯಕುಮಾರ ಪರುತೆಯವರು ಕಾರ್ಯಕ್ರಮವನ್ನು ನಿರೂಪಿಸಿದರು. ಡಾ.ಗವಿಸಿದ್ಧಪ್ಪ ಪಾಟೀಲ್ ಸ್ವಾಗತಿಸಿ, ಡಾ.ಮಲ್ಲಿನಾಥ ತಳವಾರ ವಂದಿಸಿದರು. ಈ ಸಂದರ್ಭದಲ್ಲಿ ಪ್ರೊ.ರವೀಂದ್ರ ಪಾಟೀಲ್, ಡಾ.ಎಸ್.ಶಿವಪುತ್ರ, ಡಾ. ರಾಜಕುಮಾರ ಮಾಳಗೆ, ವಿಶ್ವನಾಥ ಭಕರೆ, ಎಸ್.ಎಸ್. ಪಾಟೀಲ್, ರಾಜೇಂದ್ರ ಝಳಕಿ, ಪ್ರೊ. ಎಸ್.ಎಲ್. ಪಾಟೀಲ್, ಸಿದ್ಧರಾಮ ಸರಸಂಬಿ ಹಾಗೂ ಎಸ್.ಎಸ್.ಹೂಗಾರ ಸೇರಿದಂತೆ ಹಲವರು ಇದ್ದರು.
ಟ್ರೆಡಿಂಗ್ಗೆ ಹೂಡಿಕೆ: ಮಹಿಳೆಗೆ 11.75ಲಕ್ಷ ರೂ. ಆನ್ಲೈನ್ ವಂಚನೆ
ಉಡುಪಿ: ಟ್ರೆಡಿಂಗ್ ಆ್ಯಪ್ನಲ್ಲಿ ಹೂಡಿಕೆ ಮಾಡಿ ಮಹಿಳೆಯೊಬ್ಬರು 11.75ಲಕ್ಷ ರೂ. ಆನ್ಲೈನ್ ವಂಚನೆಗೆ ಒಳಗಾದ ಬಗ್ಗೆ ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಹನ ಎಂಬವರು ಟ್ರೆಡಿಂಗ್ ಬಗ್ಗೆ ತಿಳಿದುಕೊಳ್ಳಲು ಆ್ಯಪ್ವೊಂದನ್ನು ಡೌನ್ಲೋಡ್ ಮಾಡಿದ್ದು, ಮುಂದೆ 15 ದಿನ ಗಳ ನಂತರ ಅಪರಿಚಿತ ಕರೆ ಮಾಡಿ, ವಾಟ್ಸಾಪ್ ಗ್ರೂಪ್ಗೆ ಸೇರಿಸಿದ್ದನು. ಅದರಲ್ಲಿ ಲಿಂಕ್ ನ್ನು ಕಳುಹಿಸಿ ಕೆವೈಸಿ ಡಿಟೈಲ್ ಫಿಲ್ ಮಾಡುವಂತೆ ತಿಳಿಸಲಾಗಿತ್ತು. ನಂತರ ಟ್ರೆಡಿಂಗ್ ಬಗ್ಗೆ ಆರೋಪಿಗಳು ತಿಳಿಸಿದ ಬ್ಯಾಂಕ್ ಖಾತೆಗಳಿಗೆ ಸಹನ ಮಾ.6ರಿಂದ ಮಾ.14ರವರೆಗೆ ಹಂತ ಹಂತವಾಗಿ ಒಟ್ಟು 11,75,000ರೂ. ಹಣವನ್ನು ವರ್ಗಾವಣೆ ಮಾಡಿದ್ದ ರೆನ್ನಲಾಗಿದೆ. ಆದರೆ ಆರೋಪಿಗಳು ಈವರೆಗೆ ವರ್ಗಾವಣೆ ಮಾಡಿದ ಹಣವನ್ನಾಗಲೀ ಅಥವಾ ಲಾಭಾಂಶನ್ನಾಗಲೀ ನೀಡದೇ ಸಹನ ಅವರಿಗೆ ಮೋಸ ಮಾಡಿರುವುದಾಗಿ ದೂರಲಾಗಿದೆ.
ರಾಜ್ಯದಲ್ಲಿ 4 ವರ್ಷಗಳಲ್ಲಿ 104 ಐಎಎಸ್, ಐಪಿಎಸ್ ಹಾಗೂ ಕೆಎಎಸ್ ಅಧಿಕಾರಿಗಳ ವಿರುದ್ಧ ಲೋಕಾಯುಕ್ತ ದಾಳಿ!
ರಾಜ್ಯದಲ್ಲಿ ಕಳೆದ ನಾಲ್ಕು ವರ್ಷಳಲ್ಲಿ 104 ಐಎಎಸ್, ಐಪಿಎಸ್ ಹಾಗೂ ಕೆ ಎಎಸ್ ಅಧಿಕಾರಿಗಳ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ. ಅಲ್ಲದೆ, 91 ಟ್ರಾಪ್ ಪ್ರಕರಣಗಳು ಲೋಕಾಯುಕ್ತದಲ್ಲಿ ದಾಖಲಾಗಿವೆ. ಒಟ್ಟು 195 ಪ್ರಕರಣಗಳಲ್ಲಿ ಅಧಿಕಾರಿಗಳ ವಿರುದ್ಧ ತನಿಖೆ ನಡೆಯುತ್ತಿವೆ. ಕೆಲವು ಪ್ರಕರಣಗಳಲ್ಲಿ ದಾಖಲಾದ ಎಫ್ ಐ ಆರ್ ಗೆ ನ್ಯಾಯಾಲಯ ತಡೆಯಾಜ್ಞೆ ನೀಡಿದೆ. ಇನ್ನುಳಿದ ಪ್ರಕರಣಗಳು ತನಿಖಾ ಹಂತದಲ್ಲಿದೆ. ಹಾಗಾದರೆ ಒಟ್ಟು ಎಷ್ಟು ಪ್ರಕರಣಗಳು ಹಾಗೂ ತನಿಖೆಯ ಹಂತ ಏನಿದೆ? ಎಂಬ ಮಾಹಿತಿ ಇಲ್ಲಿದೆ.
ಉಡುಪಿ| ಸಮಾಧಾನ ಮಹೋತ್ಸವದ ವಿರುದ್ಧ ಪ್ರತಿಭಟನೆ: ಹಿಂಜಾವೇ ಮುಖಂಡರು ಸಹಿತ 38 ಮಂದಿಯ ವಿರುದ್ಧ ಎಫ್ಐಆರ್
ಉಡುಪಿ, ಮಾ.21: ಉಡುಪಿ ಕ್ರಿಶ್ಚಿಯನ್ ಪಿಯು ಕಾಲೇಜು ಮೈದಾನದಲ್ಲಿ ಫೇಲೋಶಿಫ್ ಆಫ್ ಉಡುಪಿ ಡಿಸ್ಟ್ರಿಕ್ ಚರ್ಚಸ್ ವತಿಯಿಂದ ಹಮ್ಮಿಕೊಳ್ಳಲಾದ ಸಮಾಧಾನ ಮಹೋತ್ಸವ ಕಾರ್ಯಕ್ರಮಕ್ಕೆ ವಿರೋಧ ವ್ಯಕ್ತಪಡಿಸಿದ ಮಾ.20ರಂದು ಪ್ರತಿಭಟನೆ ನಡೆಸಿದ ಹಿಂದು ಜಾಗರಣಾ ವೇದಿಕೆಯ ಮುಖಂಡರು ಹಾಗೂ ಕಾರ್ಯಕರ್ತರ ವಿರುದ್ಧ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಸ್ವಯಂ ಪ್ರೇರಿತ ಪ್ರಕರಣ ದಾಖಲಾಗಿದೆ. ಸಮಾಧಾನ ಕಾರ್ಯಕ್ರಮಕ್ಕೆ ಆಗಮಿಸುತ್ತಿರುವ ಮೋಹನ್ ಸಿ.ಲಾಜರಸ್ ಅವರನ್ನು ಆಹ್ವಾನಿಸಿರುವುದಕ್ಕೆ ಹಿಂದೂ ಜಾಗರಣಾ ವೇದಿಕೆ ವಿರೋಧ ವ್ಯಕ್ತಪಡಿಸಿದ್ದು, ಈ ಹಿನ್ನೆಲೆಯಲ್ಲಿ ಕಾರ್ಯಕ್ರಮದ ಆಯೋಜಕರು ಹೈಕೋರ್ಟ್ ಮೆಟ್ಟಿಲೇರಿದ್ದರು. ಆದುದರಿಂದ ಕಾರ್ಯಕ್ರಮಕ್ಕೆ ರಕ್ಷಣೆ ನೀಡುವಂತೆ ಹೈಕೋರ್ಟ್ ಆದೇಶ ನೀಡಿತ್ತು. ಅದರಂತೆ ಪೊಲೀಸರು ಸೂಕ್ತ ಬಂದೋಬಸ್ತ್ ನೀಡಿದ್ದರು. ಹಿಂದೂ ಜಾಗರಣ ವೇದಿಕೆಯ ಮುಖಂಡ ಶ್ರೀಕಾಂತ ಶೆಟ್ಟಿ ಹಾಗೂ 38 ಮಂದಿ ಕಾರ್ಯಕರ್ತರು ಅಕ್ರಮ ಕೂಟ ಸೇರಿಕೊಂಡು ಉಡುಪಿ ಗೋವಿಂದ ಕಲ್ಯಾಣಮಂಟಪದಿಂದ ಸಮಾಧಾನ ಮಹೋತ್ಸವ ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ಘೋಷಣೆಯನ್ನು ಕೂಗುತ್ತ ಪ್ರತಿಭಟನೆ ಹೊರಟರು. ಈ ಸಂದರ್ಭದಲ್ಲಿ ತಡೆದ ಪೊಲೀಸರು, ಪ್ರತಿಭಟನಕ ರರಾದ ಮಹೇಶ್ ಶೆಣೈ(43), ಶ್ರೀಕಾಂತ್ ಶೆಟ್ಟಿ, ಸಂತೋಷ(27), ಉಮೇಶ್ ನಾಯ್ಕ್(51), ಉಮೇಶ್(35), ರಮೇಶ್ ಶೆಟ್ಟಿ(43), ರಾಜೇಶ್ ಉಚ್ಚಿಲ (41), ದರ್ಶನ್(23), ಉದಯ ಕುಮಾರ್(44), ಪ್ರಶಾಂತ್(40), ಗುರುರಾಜ್(37), ಅಜೀತ್ ಗೋಳಿಕಟ್ಟೆ(39), ರಾಧಕೃಷ್ಣ(55), ರೀತೇಶ್ ಪೂಜಾರಿ(25), ಜಗದೀಶ ಪೂಜಾರಿ (31), ಮಹೇಶ್ ಪೂಜಾರಿ(33), ಸುನೀಲ್ ಪೂಜಾರಿ(26), ಚಿರಾಗ್ ಎಚ್.ಎಸ್.(22), ಸುದೀಪ್ ಕಡಿಯಾಳಿ(23), ನಿಖಿಲ್(28), ಸುಜೀತ್(28), ಸಾಜನ್ ಎಂ.ಶೆಟ್ಟಿ(34), ರಾಜೇಶ್ ಪೈಯಾರ್(43), ಲಕ್ಷ್ಮಣ್ ಕರ್ಕೇರ(49), ಶರತ್ ಕುಮಾರ್ ಬೈಲಕೆರೆ(42), ಶೈಲೇಂದ್ರ ಶೆಟ್ಟಿ(50), ವಿಕೇಶ್ ಎಸ್.(29), ನಿತೇಶ್(32), ಸರೋಜಾ ಶೆಣೈ(52), ತಾರಾ ಎಸ್., ತಾರಾ ಆಚಾರ್ಯ(55), ಸಿಂಚನ್ (21), ಧನುಷ್ ಶೆಟ್ಟಿ(21), ವಿಶೇಕ್ ಶೆಟ್ಟಿ(20), ಸಾತ್ವೀಕ್(20), ಮನೀಷ್ (21), ಅಶ್ವತ್ ಅಚಾರ್ಯ(37), ದಿನೇಶ್ ಸಾವಂತ(47) ಎಂಬವರನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ದೇವದುರ್ಗ | ಚಿರತೆ ದಾಳಿಗೆ ಕರು ಬಲಿ : ಗ್ರಾಮಸ್ಥರಲ್ಲಿ ಆತಂಕ
ದೇವದುರ್ಗ: ತಾಲೂಕಿನ ಅರಕೇರಾ ಪಟ್ಟಣದ ಟಿಪ್ಪು ಸುಲ್ತಾನ್ ವೃತ್ತದ ಸಮೀಪ ಸಿದ್ದಮ್ಮ ಜಾಟಗಲ್ ಅವರ ಮನೆಯ ಹಿಂಭಾಗದಲ್ಲಿ ಗಿಡಕ್ಕೆ ಕಟ್ಟಿದ್ದ ಆಕಳ ಕರುವಿನ ಮೇಲೆ ಚಿರತೆ ದಾಳಿ ನಡೆಸಿ ಕೊಂದುಹಾಕಿದ ಘಟನೆ ಶನಿವಾರ ಮುಂಜಾನೆ ನಡೆದಿದೆ. ಬೆಳಗಿನ ಜಾವ ಸುಮಾರು 4 ಗಂಟೆಗೆ ಚಿರತೆ ಬಂದು ಕರುವಿನ ಮೇಲೆ ದಾಳಿ ನಡೆಸಿದ್ದು, ಕರು ಒದ್ದಾಡುತ್ತಿರುವ ಶಬ್ದ ಕೇಳಿದ ಸಿದ್ದಮ್ಮ ಅವರು ಹೊರಗೆ ನೋಡಿದಾಗ ಘಟನೆ ಗಮನಕ್ಕೆ ಬಂದಿದೆ. ಭಯದಿಂದ ಕೂಗುತ್ತಾ ಮನೆಯೊಳಗೆ ತೆರಳಿದ ಬಳಿಕ, ನೆರೆಯವರು ಆಗಮಿಸುವಷ್ಟರಲ್ಲಿ ಚಿರತೆ ಕರುವಿನ ಮೇಲೆ ದಾಳಿ ನಡೆಸಿ ತಿಂದು ಓಡಿಹೋಗಿದೆ. ಘಟನಾ ಸ್ಥಳದಲ್ಲಿ ಚಿರತೆಯ ಹೆಜ್ಜೆ ಗುರುತುಗಳು ಕಂಡುಬಂದಿದ್ದು, ಗ್ರಾಮಸ್ಥರಲ್ಲಿ ಭೀತಿ ಹೆಚ್ಚಾಗಿದೆ. ಮನೆಯ ಬಳಿ ಇನ್ನೂ ಎರಡು-ಮೂರು ಜಾನುವಾರುಗಳನ್ನು ಕಟ್ಟಿದ್ದರೂ, ಅವುಗಳು ಅದೃಷ್ಟವಶಾತ್ ಪಾರಾಗಿವೆ. ಇತ್ತೀಚೆಗೆ ಈ ಪ್ರದೇಶದಲ್ಲಿ ಚಿರತೆ ಹಾವಳಿ ಹೆಚ್ಚಾಗಿದ್ದು, ಮೂರು-ನಾಲ್ಕು ಜಾನುವಾರುಗಳನ್ನು ಈಗಾಗಲೇ ಬಲಿ ಪಡೆದಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ನಿಂಗನದೊಡ್ಡಿ, ಬಂಡೆಗುಡ್ಡ, ಗೊಲುಗುಡ್ಡ ಪ್ರದೇಶಗಳಲ್ಲಿರುವ ಗುಹೆಗಳಲ್ಲಿ ಚಿರತೆ ವಾಸಿಸುತ್ತಿರುವುದು ಗಮನಕ್ಕೆ ಬಂದಿದೆ. ಇದರಿಂದ ರೈತರು ಹಾಗೂ ಕೃಷಿ ಕಾರ್ಮಿಕರು ಜಮೀನಿಗೆ ತೆರಳಲು ಭಯಪಡುವ ಸ್ಥಿತಿ ನಿರ್ಮಾಣವಾಗಿದೆ. ಸಾಕುಪ್ರಾಣಿಗಳ ಮೇಲಿನ ದಾಳಿಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ತಕ್ಷಣ ಅರಣ್ಯ ಇಲಾಖೆಯ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಶಿವಗೇನಿ ನಾಯಕ ಗುಜುಪು ಮನವಿ ಮಾಡಿದ್ದಾರೆ.
Strait of Hormuz tension: ಹಾರ್ಮುಜ್ ಜಲಸಂಧಿ ಪ್ರದೇಶದಲ್ಲಿ ಉದ್ವಿಗ್ನತೆ ಹೆಚ್ಚುತ್ತಿರುವ ಹಿನ್ನೆಲೆ, ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ), ಯುನೈಟೆಡ್ ಕಿಂಗ್ಡಮ್ (ಯುಕೆ), ಫ್ರಾನ್ಸ್, ಜರ್ಮನಿ, ಇಟಲಿ, ಜಪಾನ್, ಕೆನಡಾ ಸೇರಿದಂತೆ ಒಟ್ಟು 22 ದೇಶಗಳ ನಾಯಕರು ಸಂಯುಕ್ತ ಹೇಳಿಕೆ ಬಿಡುಗಡೆ ಮಾಡಿ ಇರಾನ್ ಕ್ರಮಗಳನ್ನು ತೀವ್ರವಾಗಿ ಖಂಡಿಸಿದ್ದಾರೆ. ಜಂಟಿ ಹೇಳಿಕೆಯಲ್ಲಿ, ಪರ್ಷಿಯನ್ ಕೊಲ್ಲಿ ಪ್ರದೇಶದಲ್ಲಿ ನಿರಾಯುಧ
ಹಿರಿಯ ಸಿದ್ದಗಂಗಾ ಶ್ರೀಗಳ ಜಯಂತಿ : ಏ.1ರಂದು ತುಮಕೂರು ಮಠಕ್ಕೆ ಆಗಮಿಸಲಿರುವ ರಾಷ್ಟ್ರಪತಿ ಮುರ್ಮು
Dr Shivakumara Swamiji Jayanthi : ತುಮಕೂರಿನ ಸಿದ್ದಗಂಗಾ ಮಠದಲ್ಲಿ ಏಪ್ರಿಲ್ ಒಂದರಂದು ನಡೆಯಲಿರುವ ಶಿವೈಕ್ಯ ಡಾ. ಶಿವಕುಮಾರ ಮಹಾಸ್ವಾಮೀಜಿಗಳ ಜನ್ಮದಿನಾಚರಣೆಯ ಕಾರ್ಯಕ್ರಮದಲ್ಲಿ ಭಾಗವಹಿಸಲು ರಾಷ್ಟ್ರಪತಿ ದ್ರೌಪದಿ ಮುರ್ಮು ರಾಜ್ಯಕ್ಕೆ ಆಗಮಿಸಲಿದ್ದಾರೆ. ಏಪ್ರಿಲ್ ಒಂದರಂದು ಮಠದ ಕಾರ್ಯಕ್ರಮದಲ್ಲಿ ರಾಷ್ಟ್ರಪತಿಗಳು ಭಾಗವಹಿಸಲಿದ್ದಾರೆ.
ವಾಣಿಜ್ಯ ಬಳಕೆ ಎಲ್ಪಿಜಿ ಹಂಚಿಕೆ ಶೇ.50ಕ್ಕೆ ಹೆಚ್ಚಳ
ಹೊಸದಿಲ್ಲಿ: ಸರಕಾರವು ದೇಶೀಯ ಉತ್ಪಾದನೆಯು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ವಾಣಿಜ್ಯ ಬಳಕೆಯ ಎಲ್ಪಿಜಿ ಹಂಚಿಕೆಯನ್ನು ಶೇ.20ರಷ್ಟು ಹೆಚ್ಚಿಸಿದ್ದು, ಇದರೊಂದಿಗೆ ಒಟ್ಟು ಹಂಚಿಕೆ ಪ್ರಮಾಣ ಶೇ.50ಕ್ಕೇರಿದೆ. ಕಳೆದ ಮೂರು ವಾರಗಳಿಂದ ಪಶ್ಚಿಮ ಏಶ್ಯಾದಲ್ಲಿ ನಡೆಯುತ್ತಿರುವ ಯುದ್ಧವು ಭಾರತಕ್ಕೆ ಇಂಧನ ಪೂರೈಕೆಗೆ ಅಡ್ಡಿಯನ್ನುಂಟು ಮಾಡಿದ್ದರಿಂದ ಸರಕಾರವು ಮನೆಗಳಿಗೆ ಪೂರೈಕೆಗೆ ಆದ್ಯತೆ ನೀಡಲು ಹೋಟೆಲ್ ಮತ್ತು ರೆಸ್ಟೋರಂಟ್ಗಳಂತಹ ವಾಣಿಜ್ಯ ಸಂಸ್ಥೆಗಳಿಗೆ ಎಲ್ಪಿಜಿ ಪೂರೈಕೆಯನ್ನು ಮೊಟಕುಗೊಳಿಸಿತ್ತು. ನಂತರ ವಾಣಿಜ್ಯ ಬಳಕೆಯ ಸಿಲಿಂಡರ್ಗಳ ಪೂರೈಕೆ ಕೊಂಚ ಚೇತರಿಕೆ ಕಂಡಿದ್ದು, ರಾಜ್ಯಗಳು ಕೊಳವೆಗಳ ಮೂಲಕ ಅನಿಲ ಪೂರೈಕೆ ಯೋಜನೆಗಳನ್ನು ತ್ವರಿತಗೊಳಿಸಬೇಕು ಎಂಬ ಷರತ್ತಿನೊಂದಿಗೆ ಪೂರೈಕೆಯನ್ನು ಹಂತಹಂತವಾಗಿ ಶೇ.30ಕ್ಕೆ ಹೆಚ್ಚಿಸಲಾಗಿತ್ತು. ಶನಿವಾರ ಸರಕಾರವು ರೆಸ್ಟೋರಂಟ್ಗಳು, ಹೋಟೆಲ್ಗಳು, ಕೈಗಾರಿಕಾ ಕ್ಯಾಂಟೀನ್ಗಳು, ಆಹಾರ ಸಂಸ್ಕರಣಾ ಘಟಕಗಳು, ಸಮುದಾಯ ಪಾಕಶಾಲೆಗಳು ಮತ್ತು ಸಬ್ಸಿಡಿ ಆಹಾರ ಮಳಿಗೆಗಳಂತಹ ಪ್ರಮುಖ ಕ್ಷೇತ್ರಗಳಿಗೆ ಶೇ.20ರಷ್ಟು ಹೆಚ್ಚುವರಿ ಹಂಚಿಕೆಯನ್ನು ಪ್ರಕಟಿಸಿದೆ. ಹೆಚ್ಚುವರಿ ಹಂಚಿಕೆಯು ವಾಣಿಜ್ಯ ಸಂಸ್ಥೆಗಳು ತೈಲ ಕಂಪನಿಗಳಲ್ಲಿ ನೋಂದಾಯಿಸಿಕೊಂಡು ಕೊಳವೆಗಳ ಮೂಲಕ ನೈಸರ್ಗಿಕ ಅನಿಲ (ಪಿಎನ್ಜಿ) ಸಂಪರ್ಕಕ್ಕಾಗಿ ಅರ್ಜಿ ಸಲ್ಲಿಸುವ ಷರತ್ತಿಗೆ ಒಳಪಟ್ಟಿರುತ್ತದೆ ಎಂದು ತೈಲ ಕಾರ್ಯದರ್ಶಿಗಳು ರಾಜ್ಯಗಳಿಗೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ. ಗೃಹಬಳಕೆ ಎಲ್ಪಿಜಿ ಪೂರೈಕೆ ಸ್ಥಿರವಾಗಿದ್ದು,ವಿತರಕರಲ್ಲಿ ಯಾವುದೇ ಕೊರತೆ ವರದಿಯಾಗಿಲ್ಲ ಮತ್ತು ಸಾಮಾನ್ಯ ವಿತರಣೆ ಕಾರ್ಯಾಚರಣೆಗಳು ಮುಂದುವರಿದಿವೆ ಎಂದು ಅಧಿಕೃತ ಹೇಳಿಕೆಯು ತಿಳಿಸಿದೆ. ಪ್ಯಾನಿಕ್ ಬುಕಿಂಗ್ಗಳು ಕಡಿಮೆಯಾಗಿವೆ,ನಾಗರಿಕರು ವಿತರಣಾ ಕೇಂದ್ರಗಳ ಮುಂದೆ ಜಮಾಯಿಸಬಾರದು ಮತ್ತು ಮನೆಬಾಗಿಲಿಗೆ ವಿತರಣೆಯನ್ನು ನೆಚ್ಚಿಕೊಳ್ಳುವಂತೆ ಅದು ಸೂಚಿಸಿದೆ. ಪೂರೈಕೆ ಮೇಲಿನ ಒತ್ತಡವನ್ನು ತಗ್ಗಿಸಲು,ವಿಶೇಷವಾಗಿ ವಾಣಿಜ್ಯ ಸಂಸ್ಥೆಗಳಿಗೆ ಪಿಎನ್ಜಿ ಸರಬರಾಜನ್ನು ಸರಕಾರವು ಉತ್ತೇಜಿಸುತ್ತಿದೆ ಎಂದು ತಿಳಿಸಿರುವ ಹೇಳಿಕೆಯು,ನಗರ ಅನಿಲ ವಿತರಣೆ ಜಾಲಗಳಿಗೆ ಅನುಮೋದನೆಗಳನ್ನು ತ್ವರಿತಗೊಳಿಸುವಂತೆ ರಾಜ್ಯಗಳನ್ನು ಆಗ್ರಹಿಸಿದೆ. ಪೆಟ್ರೋಲ್ ಮತ್ತು ಡೀಸಿಲ್ನ ಸಾಕಷ್ಟು ಲಭ್ಯತೆಯನ್ನು ಖಚಿತಪಡಿಸಲು ಎಲ್ಲ ಸಂಸ್ಕರಣಾಗಾರಗಳು ಸಾಕಷ್ಟು ಕಚ್ಚಾ ತೈಲ ದಾಸ್ತಾನಿನೊಂದಿಗೆ ಗರಿಷ್ಠ ಸಾಮರ್ಥ್ಯದಲ್ಲಿ ಕಾರ್ಯ ನಿರ್ವಹಿಸುತ್ತಿವೆ. ಚಿಲ್ಲರೆ ಮಾರಾಟ ಮಳಿಗೆಗಳಲ್ಲಿ ಇಂಧನದ ಕೊರತೆಯಿಲ್ಲ ಎಂದು ತಿಳಿಸಿರುವ ಹೇಳಿಕೆಯು ಆತಂಕಕ್ಕೊಳಗಾಗಿ ಖರೀದಿಗೆ ಮುಂದಾಗದಂತೆ ಸಾರ್ವಜನಿಕರಿಗೆ ಸೂಚಿಸಿದೆ. ದೇಶೀಯ ಪಿಎನ್ಜಿ ಮತ್ತು ಸಿಎನ್ಜಿ ಸಾಗಣೆ ಸೇರಿದಂತೆ ಆದ್ಯತಾ ಕ್ಷೇತ್ರಗಳಿಗೆ ಪೂರ್ಣ ಪ್ರಮಾಣದಲ್ಲಿ ನೈಸರ್ಗಿಕ ಅನಿಲ ಪೂರೈಕೆಯಾಗುತ್ತಿದೆ,ಕೈಗಾರಿಕಾ ಬಳಕೆದಾರರು ತಮ್ಮ ಸಾಮಾನ್ಯ ಪೂರೈಕೆಯ ಶೇ.80ರಷ್ಟನ್ನು ಸ್ವೀಕರಿಸುತ್ತಿದ್ದಾರೆ ಎಂದು ಹೇಳಿಕೆಯು ತಿಳಿಸಿದೆ. ದೇಶೀಯ ಎಲ್ಪಿಜಿ ಉತ್ಪಾದನೆ,ಬುಕಿಂಗ್ ಅವಧಿ ವಿಸ್ತರಣೆ ಮತ್ತು ಪರ್ಯಾಯ ಇಂಧನ ಆಯ್ಕೆಗಳನ್ನು ಒದಗಿಸಲು ರಾಜ್ಯಗಳಿಗೆ ಹೆಚ್ಚುವರಿ ಸೀಮೆಎಣ್ಣೆ ಪೂರೈಕೆ ಹೆಚ್ಚುವರಿ ಕ್ರಮಗಳಲ್ಲಿ ಸೇರಿವೆ. ಅನಧಿಕೃತ ದಾಸ್ತಾನು ಮತ್ತು ಕಾಳಸಂತೆಯ ಮೇಲೆ ಕಟ್ಟುನಿಟ್ಟಿನ ನಿಗಾ ಇರಿಸುವಂತೆ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ನಿರ್ದೇಶನಗಳನ್ನು ನೀಡಲಾಗಿದೆ.
Aap Exclusive: ವನ್ಯ ಜೀವಿ- ಮಾನವ ಸಂಘರ್ಷಕ್ಕೆ ಕೊನೆಯೇ ಇಲ್ಲ: 5 ವರ್ಷಗಳಲ್ಲಿ 259 ಮಂದಿ ಬಲಿ
ರಾಜ್ಯದಲ್ಲಿ ಮಾನವ ಮತ್ತು ವನ್ಯಜೀವಿ ಸಂಘರ್ಷಕ್ಕೆ ಕೊನೆ ಇಲ್ಲದಂತಾಗಿದೆ. ಆದರೆ ಇದನ್ನು ನಿಯಂತ್ರಣ ಮಾಡಲು ಅರಣ್ಯ ಇಲಾಖೆ ಕ್ರಮ ಕೈಗೊಳ್ಳುತ್ತಿದೆ. ವನ್ಯಪ್ರಾಣಿಗಳ ಹಾವಳಿ ಹೆಚ್ಚಾಗಿರುವ ಪ್ರದೇಶಗಳಲ್ಲಿ ಈಗಾಗಲೇ ರಚಿಸಿರುವ ಆರ್ ಆರ್ ಟಿ, ಎಡಿಸಿ ಮತ್ತು ಇಟಿಎಫ್ ಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ತಂಡಗಳನ್ನು ಒಟ್ಟುಗೂಡಿಸಿ ಮಾನವ-ವನ್ಯಜೀವಿ ಸಂಘರ್ಷ ಉಪ ತಂಡಗಳಾಗಿ ರಚಿಸಿ ಆಯ್ಕೆ ಸ್ಥಳಗಳಲ್ಲಿ ನಿಯೋಜಿಸಲಾಗುತ್ತಿದೆ. ನಿಸ್ತಂತು ಜಾಲದ ಮೂಲಕ ಮಾಹಿತಿ ಸಂವಹನ ಮಾಡಲಾಗುತ್ತಿದೆ. ಕಾಡಾನೆಗಳ ಮಾಹಿತಿಯನ್ನು ಸಂಗ್ರಹಿಸಲು 24 ಗಂಟೆ ಕಾರ್ಯನಿರ್ವಹಿಸುವ ಮಾಹಿತಿ ಕೇಂದ್ರ ಸ್ಥಾಪಿಸಲಾಗಿದೆ.
ಕಟ್ಟಡ ಕಾರ್ಮಿಕರ ಕಲ್ಯಾಣ ನಿಧಿ ವಿವಿಧ ಯೋಜನೆಗಳಿಗೆ ಬಳಸುವುದಕ್ಕೆ ವಿರೋಧಿಸಿ ಮನವಿ
ಕುಂದಾಪುರ, ಮಾ.21: ಕಟ್ಟಡ ಕಾರ್ಮಿಕರ ಕಲ್ಯಾಣ ನಿಧಿ ಸರಕಾರದ ವಿವಿಧ ಯೋಜನೆಗಳಿಗೆ ಬಳಸುವುದಕ್ಕೆ ವಿರೋಧಿಸಿ ಹಾಗೂ ಕರ್ನಾಟಕದಲ್ಲಿ ಕಲ್ಯಾಣ ಮಂಡಳಿ ಪುನರ್ ಸ್ಥಾಪಿಸಿ ರದ್ದಾಗದಂತೆ ಕ್ರಮವಹಿಸಲು ಕುಂದಾಪುರ ತಾಲೂಕು ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘ(ಸಿಐಟಿಯು) ಶನಿವಾರ ಕುಂದಾಪುರ ಶಾಸಕ ಎ.ಕಿರಣ್ ಕುಮಾರ್ ಕೊಡ್ಗಿ ಅವರಿಗೆ ಮನವಿ ಸಲ್ಲಿಸಿದೆ. 2026-27 ಸಾಲಿನ ಬಜೆಟ್ನಲ್ಲಿ ರಾಜ್ಯ ಸರಕಾರ ಕಟ್ಟಡ ಕಾರ್ಮಿಕರ ಮಕ್ಕಳ ಶೈಕ್ಷಣಿಕ ಧನಸಹಾಯ, ಪಿಂಚಣಿ, ವೈದ್ಯಕೀಯ ವೆಚ್ಚ, ಅಪಘಾತ ಪರಿಹಾರಕ್ಕಾಗಿ ಇರುವ ನಿಧಿಯನ್ನು 60 ಕೋಟಿ ರೂ. ವೆಚ್ಚದಲ್ಲಿ 10 ಜಿಟಿಟಿಸಿ ತರಬೇತಿ ಕೇಂದ್ರಗಳು, 104 ಶ್ರಮಿಕ ವಸತಿ ಶಾಲೆಗಳು ಹಾಗೂ 200 ಕೋಟಿ ರೂ ವೆಚ್ಚದಲ್ಲಿ ಕೌಶಲ್ಯ ತರಬೇತಿ ಅಕಾಡೆಮಿ ಸ್ಥಾಪಿಸಿ ಕಾರ್ಮಿಕರ ಸೌಲಭ್ಯಗಳಿಗೆ ಹಣದ ಕೊರತೆ ಮಾಡುವುದನ್ನು ವಿರೋಧಿಸಲಾಗುತ್ತದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ. ಶಾಸಕ ಕಿರಣ್ ಕುಮಾರ್ ಕೊಡ್ಗಿ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿ ವಿಧಾನಸಭಾ ಅಧಿವೇಶನದ ಶೂನ್ಯ ವೇಳೆಯಲ್ಲಿ ಕಟ್ಟಡ ಕಾರ್ಮಿಕರ ಹಣ ಕಲ್ಯಾಣಕ್ಕಾಗಿ ಮಾತ್ರ ಬಳಸಲು ಮತ್ತು ಈಗಾಗಲೇ 62-63 ವರ್ಷ ಪ್ರಾಯದ ಕಟ್ಟಡ ಕಾರ್ಮಿಕರ ತಿರಸ್ಕರಿಸಿದ ಪಿಂಚಣಿ ಅರ್ಜಿಗಳ ಬಗ್ಗೆಯೂ ಮಾತನಾಡಲು ಪ್ರಯತ್ನಿಸುವುದಾಗಿ ತಿಳಿಸಿದರು. ಕಳೆದ 2024-25 ಹಾಗೂ 2025-2026ನೇ ಸಾಲಿನ ಎರಡು ವರ್ಷಗಳಿಂದ ಕಟ್ಟಡ ಕಾರ್ಮಿಕರ ಮಕ್ಕಳ ವಿದ್ಯಾರ್ಥಿ ವೇತನ ಹಣ ಜಮೆಗೆ ಬಾಕಿ ಇರುವ ಬಗ್ಗೆಯೂ ಶಾಸಕರ ಗಮನ ಸೆಳೆಯಲಾಯಿತು. ಬೇಡಿಕೆ ಈಡೇರದಿದ್ದರೆ ಎಪ್ರಿಲ್ 20 ರಿಂದ ಬೆಂಗಳೂರು ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿ ಎದುರು ಧರಣಿ ನಡೆಸಲು ತೀರ್ಮಾನಿಸಲಾಗಿದೆ ಎಂದು ಮುಖಂಡರು ತಿಳಿಸಿದರು. ಈ ಸಂದರ್ಭ ಸಿಐಟಿಯು ರಾಜ್ಯ ಕಾರ್ಯದರ್ಶಿ ಸುರೇಶ್ ಕಲ್ಲಾಗರ, ಸಂಘದ ಅಧ್ಯಕ್ಷ ಚಿಕ್ಕ ಮೊಗವೀರ ಗಂಗೊಳ್ಳಿ, ಕೋಶಾಧಿಕಾರಿ ಚಂದ್ರಶೇಖರ್ ವಿ, ವಸಂತ್ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.
ಅಸ್ಸೋಚಾಮ್ ಕರ್ನಾಟಕ ರಾಜ್ಯ ಅಭಿವೃದ್ಧಿ ಮಂಡಳಿ ಅಧ್ಯಕ್ಷರಾಗಿ ಕಿಶೋರ್ ಅಳ್ವ ನೇಮಕ
ಉಡುಪಿ, ಮಾ.21: ದಿ ಅಸೋಸಿಯೇಟೆಡ್ ಚೇಂಬರ್ಸ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿ ಆಫ್ ಇಂಡಿಯಾ ಸಂಸ್ಥೆಯು 2026-27ನೇ ಸಾಲಿಗೆ ತನ್ನ ಕರ್ನಾಟಕ ರಾಜ್ಯ ಅಭಿವೃದ್ಧಿ ಮಂಡಳಿಯ ಅಧ್ಯಕ್ಷರಾಗಿ ಕಿಶೋರ್ ಅಳ್ವ ಅವರನ್ನು ನೇಮಕ ಮಾಡಿದೆ. ಕಿಶೋರ್ ಅಳ್ವ ಅವರು ಬಹುರಾಷ್ಟ್ರೀಯ ಕಂಪನಿಗಳು, ಇಂಧನ, ಮೂಲಸೌಕರ್ಯ ಮತ್ತು ಅಂತಾರಾಷ್ಟ್ರೀಯ ವ್ಯಾಪಾರ ಸಂಬಂಧಗಳು ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಮೂರು ದಶಕಗಳಿಗಿಂತ ಹೆಚ್ಚು ವ್ಯಾಪಕ ಅನುಭವವನ್ನು ಹೊಂದಿದ್ದಾರೆ. ತಮ್ಮ ವೃತ್ತಿಜೀವನದಲ್ಲಿ ಜಾಗತಿಕ ಖ್ಯಾತಿಯ ಸಂಸ್ಥೆಗಳಲ್ಲಿ ಪ್ರಮುಖ ನಾಯಕತ್ವ ಮತ್ತು ತಂತ್ರಾತ್ಮಕ ಹುದ್ದೆಗಳನ್ನು ವಹಿಸಿಕೊಂಡಿದ್ದು, ವ್ಯವಹಾರ ಅಭಿವೃದ್ಧಿ, ನೀತಿ ವಕಾಲತ್ತು ಮತ್ತು ಸಂಸ್ಥಾಪನಾ ಬಲವರ್ಧನೆಗೆ ಮಹತ್ವದ ಕೊಡುಗೆ ನೀಡಿದ್ದಾರೆ. ಇವರು 2018-19ರಲ್ಲಿ ಬೆಂಗಳೂರು ಚೇಂಬರ್ ಆಫ್ ಇಂಡಸ್ಟ್ರಿ ಅಂಡ್ ಕಾಮರ್ಸ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದು, ಪ್ರಸ್ತುತ ಕರ್ನಾಟಕದಲ್ಲಿ ಅದಾನಿ ಗ್ರೂಪ್ನ ಕಾರ್ಯನಿರ್ವಾಹಕ ನಿರ್ದೇಶಕರು ಮತ್ತು ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿ ದ್ದಾರೆ. 1920ರಲ್ಲಿ ಸ್ಥಾಪಿತವಾದ ಅಸ್ಸೋಚಾಮ್ 4.5 ಲಕ್ಷಕ್ಕೂ ಹೆಚ್ಚು ಕಂಪನಿಗಳನ್ನು ಒಳಗೊಂಡ ಬಲಿಷ್ಠ ಸದಸ್ಯತ್ವ ದೊಂದಿಗೆ ಭಾರತ ದೇಶದ ಪ್ರಮುಖ ಶೃಂಗ ಮಟ್ಟದ ಉದ್ಯಮ ಸಂಸ್ಥೆಗಳಲ್ಲಿ ಒಂದಾಗಿದೆ.
4000 ಕಿ.ಮೀ ದೂರದ ಡೀಗೊ ಗಾರ್ಶಿಯಾ ಸೇನಾ ನೆಲೆಯತ್ತ ಇರಾನ್ ಕ್ಷಿಪಣಿ ದಾಳಿ
ಟೆಹ್ರಾನ್: ಇರಾನ್ ಮತ್ತು ಅಮೆರಿಕ ನಡುವಿನ ಯುದ್ಧವು ಎರಡು ಪ್ರತ್ಯೇಕ ಮತ್ತು ಮಹತ್ವದ ದಾಳಿಗಳಲ್ಲಿ ಹಿಂದೂ ಮಹಾಸಾಗರಕ್ಕೆ ನಿರ್ಣಾಯಕವಾಗಿ ಚಲಿಸಿದ್ದು ಯುದ್ಧದ ಭೌಗೋಳಿಕ ವ್ಯಾಪ್ತಿ ವಿಸ್ತರಿಸಿರುವುದನ್ನು ಸೂಚಿಸಿದೆ. ಚಾಗೋಸ್ ದ್ವೀಪಗಳಲ್ಲಿರುವ ಅಮೆರಿಕ-ಬ್ರಿಟನ್ ಜಂಟಿ ಸೇನಾನೆಲೆ ಡೀಗೊ ಗಾರ್ಶಿಯಾದ ಕಡೆಗೆ ಇರಾನ್ ಎರಡು ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಪ್ರಯೋಗಿಸಿದೆ. ಎರಡೂ ಕ್ಷಿಪಣಿಗಳು ಗುರಿ ತಲುಪಿಲ್ಲ. ಒಂದು ಮಧ್ಯಧಾರಿಯಲ್ಲಿಯೇ ವಿಫಲವಾದರೆ ಮತ್ತೊಂದನ್ನು ಅಮೆರಿಕದ ಸಮರನೌಕೆಯಿಂದ ಉಡಾಯಿಸಲಾದ ಪ್ರತಿಬಂಧಕ ತುಂಡರಿಸಿದೆ ಎಂದು ಅಮೆರಿಕದ ಅಧಿಕಾರಿಗಳನ್ನು ಉಲ್ಲೇಖಿಸಿ ವಾಲ್ಸ್ಟ್ರೀಟ್ ಜರ್ನಲ್ ವರದಿ ಮಾಡಿದೆ. ವಾಯುನೆಲೆಯು ಇರಾನ್ ಭೂಪ್ರದೇಶದಿಂದ ಸುಮಾರು 4,000 ಕಿ.ಮೀ ದೂರದಲ್ಲಿದ್ದು ಇಲ್ಲಿ ಅಮೆರಿಕದ ಪಡೆಗಳು ಬಾಂಬರ್ ಗಳು ಹಾಗೂ ಇತರ ಸಾಧನಗಳನ್ನು ನೆಲೆಗೊಳಿಸಿವೆ. ಇದೀಗ ಇರಾನ್ ಯುರೋಪ್ನಲ್ಲಿರುವ ನೆಲೆಗಳನ್ನು ಗುರಿಯಾಗಿಸುವ ಸಾಮರ್ಥ್ಯ ಹೊಂದಿರುವುದನ್ನು ಈ ಬೆಳವಣಿಗೆ ಸೂಚಿಸಿದೆ.
ದೇವದುರ್ಗದಲ್ಲಿ ಸಂಭ್ರಮದ ‘ಈದುಲ್ ಫಿತ್ರ್’ ಆಚರಣೆ
ದೇವದುರ್ಗ: ಕಳೆದ 30 ದಿನಗಳ ಉಪವಾಸ ಪೂರ್ಣಗೊಳಿಸಿದ ಬಳಿಕ ಮುಸ್ಲಿಂ ಬಾಂಧವರು ಶನಿವಾರ ಹೊಸ ಉಡುಪುಗಳನ್ನು ಧರಿಸಿ ಈದುಲ್ ಫಿತ್ರ್ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಿದರು. ಪಟ್ಟಣದ ಈದ್ಗಾ ಮೈದಾನದಲ್ಲಿ ಶ್ರದ್ಧಾ-ಭಕ್ತಿಯಿಂದ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಯಿತು. ಇದೇ ವೇಳೆ ಪಟ್ಟಣದ ಜಾಮಿಯಾ ಮಸೀದಿಯಲ್ಲಿಯೂ ಹಾಫೀಜ್ ಜಹೀರ ಅಬ್ಬಾಸ್ ಅವರ ನೇತೃತ್ವದಲ್ಲಿ ವಿಶೇಷ ಪ್ರಾರ್ಥನೆ ನಡೆಯಿತು. ಈದ್ಗಾ ಮೈದಾನದಲ್ಲಿ ಮಾತನಾಡಿದ ಮುಸ್ಲಿಂ ಧರ್ಮಗುರು ಹಾಫೀಜ್ ಜುನೇದ್ ಅವರು, ಈದುಲ್ ಫಿತ್ರ್ ಹಬ್ಬವು ಕೇವಲ ಒಂದು ದಿನಕ್ಕೆ ಸೀಮಿತವಾಗಿರಬಾರದು. ಪ್ರತಿದಿನ ನಮಾಝ್, ಕುರಾನ್ ಪಠಣ ಮಾಡುತ್ತಾ, ತಂದೆ-ತಾಯಿಗೆ ಗೌರವ ನೀಡುವುದು ಅತ್ಯಂತ ಮುಖ್ಯ ಎಂದು ಧಾರ್ಮಿಕ ಸಂದೇಶ ನೀಡಿದರು. ಮಕ್ಕಳಿಗೆ ಮೊದಲಿನಿಂದಲೇ ಹಿರಿಯರನ್ನು ಗೌರವಿಸುವ ಸಂಸ್ಕಾರವನ್ನು ಕಲಿಸಬೇಕು ಎಂದು ಹೇಳಿದರು. ಈ ಸಂದರ್ಭದಲ್ಲಿ ಪ್ರಾರ್ಥನೆಗೆ ಆಗಮಿಸಿದ ಮುಸ್ಲಿಂ ಸಮುದಾಯದವರಿಗೆ ಶಾಸಕಿ ಕರೆಮ್ಮ ಜಿ.ನಾಯಕ ಅವರು ಭೇಟಿ ನೀಡಿ ಈದುಲ್ ಫಿತ್ರ್ ಹಬ್ಬದ ಶುಭಾಶಯಗಳನ್ನು ತಿಳಿಸಿದರು. ಕಾರ್ಯಕ್ರಮದಲ್ಲಿ ವಿವಿಧ ಪಕ್ಷಗಳ ಮುಖಂಡರಾದ ರಂಗಪ್ಪ ಗೋಸಲ್, ಶರಣಗೌಡ ಗೌರಂಪೇಟ್, ಬಾಪೂಗೌಡ ಚಿಕ್ಕಹೊನ್ನಕುಣಿ, ಬಸನಗೌಡ, ವಿನೋದ ಕುಮಾರ ಪಾಟೀಲ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಉಪಚುನಾವಣೆ ಅಭ್ಯರ್ಥಿ ಆಯ್ಕೆ ಕಗ್ಗಂಟು; ಸುರ್ಜೆವಾಲ, ಸಿಎಂ, ಡಿಸಿಎಂ ಸಭೆ
ಬೆಂಗಳೂರು : ದಾವಣಗೆರೆ ದಕ್ಷಿಣ ಕೇತ್ರಗಳ ಉಪಚುನಾವಣೆಗೆ ಆಡಳಿತಾರೂಢ ಕಾಂಗ್ರೆಸ್ ಪಕ್ಷದಲ್ಲಿ ಅಭ್ಯರ್ಥಿ ಆಯ್ಕೆ ಕಗ್ಗಂಟ್ಟಾಗಿದೆ. ಆ ಹಿನ್ನೆಲೆಯಲ್ಲಿ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ, ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಮುಖಂಡರೊಂದಿಗೆ ಸಮಾಲೋಚನೆ ನಡೆಸಿದ್ದಾರೆ. ದಾವಣಗೆರೆ ದಕ್ಷಿಣ ಕೇತ್ರದಲ್ಲಿ ಮುಸ್ಲಿಮ್ ಮುಖಂಡರಿಗೆ ಟಿಕೆಟ್ ನೀಡಬೇಕೆಂಬ ಒತ್ತಡದ ಹಿನ್ನೆಲೆಯಲ್ಲಿ ಅಭ್ಯರ್ಥಿ ಆಯ್ಕೆ ಕಗ್ಗಂಟ್ಟಾಗಿದೆ. ಈ ಬೆಳವಣಿಗೆಗಳ ಮಧ್ಯೆ ಶುಕ್ರವಾರ(ಮಾ.20) ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರ ಪುತ್ರ ಸಮರ್ಥ್ ಪಕ್ಷದ ‘ಬಿ ಫಾರಂ’ ಇಲ್ಲದೆ ನಾಮಪತ್ರ ಸಲ್ಲಿಕೆ ಮಾಡಿದ್ದು, ಯಾರಿಗೆ ಟಿಕೆಟ್ ನೀಡಲಿದ್ದಾರೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ. ಶನಿವಾರ ನಗರದಲ್ಲಿ ಸಭೆ ನಡೆಸಿದ ಮುಖಂಡರು ಮನವೋಲಿಕೆ ಪ್ರಯತ್ನ ನಡೆಸಿದ್ದಾರೆ ಎಂದು ಗೊತ್ತಾಗಿದೆ. ಸಭೆಯಲ್ಲಿ ಸಚಿವರಾದ ಮಲ್ಲಿಕಾರ್ಜುನ, ಝಮೀರ್ ಅಹ್ಮದ್ ಖಾನ್, ಬೈರತಿ ಸುರೇಶ್, ಸಂಸದ ನಾಸೀರ್ ಹುಸೇನ್, ಸಿಎಂ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್, ಶಾಸಕರಾದ ಹಾರಿಸ್, ರಿಝ್ವಾನ್ ಅರ್ಷದ್, ಎಐಸಿಸಿ ಕಾರ್ಯದರ್ಶಿಗಳಾದ ಅಭಿಷೇಕ್ ದತ್, ಗೋಪಿನಾಥನ್ ಭಾಗವಹಿಸಿದ್ದರು. ಉಪಚುನಾವಣೆಗೆ ನಾಮಪತ್ರ ಸಲ್ಲಿಕೆಗೆ ಮಾ.23ರಂದು ಕೊನೆಯ ದಿನವಾಗಿದ್ದು, ನಾಳೆ(ಮಾ.22) ಸಂಜೆಯೊಳಗೆ ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಬೇಕಿದೆ. ಮಾ.24ಕ್ಕೆ ನಾಮಪತ್ರ ಪರಿಶೀಲನೆ ನಡೆಯಲಿದ್ದು, ಮಾ.26ಕ್ಕೆ ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದ್ದು, ಎಪ್ರಿಲ್ 9ಕ್ಕೆ ಉಪಚುನಾವಣೆ ಮತದಾನ ನಡೆಯಲಿದೆ.
ಇತರ ದೇಶಗಳು ಬೆಲೆಗಳನ್ನು ಹೆಚ್ಚಿಸಿವೆಯೇ?; ಇಲ್ಲಿದೆ ಮಾಹಿತಿ...
Uttar Pradesh | ಟ್ರಕ್ ಬಡಿದು ಸಂಘಪರಿವಾರ ಕಾರ್ಯಕರ್ತ ಮೃತ್ಯು; ಹೆದ್ದಾರಿ ತಡೆದು ಪ್ರತಿಭಟನೆ
ಪೋಲಿಸರ ಜೊತೆ ಪ್ರತಿಭಟನಾಕಾರರ ಘರ್ಷಣೆ
ಕೋಲ್ಕತಾ: ಆಸ್ಪತ್ರೆಯ ಲಿಫ್ಟ್ನಲ್ಲಿ ಸಿಲುಕಿ ವ್ಯಕ್ತಿ ಸಾವು, ಐವರ ಬಂಧನ
ಕೋಲ್ಕತಾ: ಆಘಾತಕಾರಿ ಘಟನೆಯೊಂದರಲ್ಲಿ ಶುಕ್ರವಾರ ಕೋಲ್ಕತಾದ ಸರಕಾರಿ ಸ್ವಾಮ್ಯದ ಆರ್ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಲಿಫ್ಟ್ನಲ್ಲಿ ಸಿಲುಕಿ ವ್ಯಕ್ತಿಯೋರ್ವರು ಸಾವನ್ನಪ್ಪಿದ್ದಾರೆ. ಆಸ್ಪತ್ರೆ ಅಧಿಕಾರಿಗಳ ನಿರ್ಲಕ್ಷ್ಯಈ ದುರಂತಕ್ಕೆ ಕಾರಣವೆಂದು ಮೃತರ ಕುಟುಂಬವು ಆರೋಪಿಸಿದೆ. ಮೃತರ ಸಂಬಂಧಿಕರು ಮತ್ತು ಸ್ನೇಹಿತರು ಆಸ್ಪತ್ರೆಯ ಆವರಣದಲ್ಲಿ ಪ್ರತಿಭಟನೆಯನ್ನು ನಡೆಸಿದರು. ಡಂ ಡಂ ನಿವಾಸಿ ಅರೂಪ್ ಬಂಡೋಪಾಧ್ಯಾಯ ಅವರ ಪುತ್ರನನ್ನು ಆಸ್ಪತ್ರೆಯ ಟ್ರಾಮಾ ಕೇರ್ ಸೆಂಟರ್ನಲ್ಲಿ ದಾಖಲಿಸಲಾಗಿದೆ. ಶುಕ್ರವಾರ ಬೆಳಿಗ್ಗೆ ಐದನೇ ಮಹಡಿಯಲ್ಲಿರುವ ಟ್ರಾಮಾ ಕೇರ್ ಸೆಂಟರ್ಗೆ ತೆರಳಲು ಅವರು ಲಿಫ್ಟ್ ಅನ್ನು ಬಳಸಿದ್ದು ಅದರಲ್ಲಿ ಸಿಕ್ಕಿಹಾಕಿಕೊಂಡಿದ್ದರು ಎಂದು ಸಂಬಂಧಿಯೋರ್ವರು ತಿಳಿಸಿದರು. ಮರಣೋತ್ತರ ಪರೀಕ್ಷೆ ವರದಿಯ ಪ್ರಕಾರ ಪಾಲಿಟ್ರಾಮಾ ಅಥವಾ ಬಹುಘಾತದಿಂದ (ಎದೆಯ ಭಿತ್ತಿಗಳ ಸಂಕುಚನ,ಹೃದಯ, ಶ್ವಾಸಕೋಶಗಳು ಮತ್ತು ಯಕೃತ್ತಿನಲ್ಲಿ ಛಿದ್ರತೆ,ಕೈಕಾಲುಗಳು ಮತ್ತು ಪಕ್ಕೆಲಬುಗಳ ಮುರಿತ) ಸಾವು ಸಂಭವಿಸಿದೆ ಎಂದು ಅಧಿಕಾರಿಯೋರ್ವರು ತಿಳಿಸಿದರು. ದುರ್ಘಟನೆ ಸಂಭವಿಸಿದಾಗ ಲಿಫ್ಟ್ನಲ್ಲಿ ನಿರ್ವಾಹಕನಿರಲಿಲ್ಲ. ಬಂಡೋಪಾಧ್ಯಾಯ ಮಧ್ಯದಲ್ಲಿ ಒಂದು ಗಂಟೆಗೂ ಅಧಿಕ ಸಮಯ ಲಿಫ್ಟ್ನಲ್ಲಿ ಸಿಕ್ಕಿಕೊಂಡಿದ್ದು ಈ ವೇಳೆ ಲಿಫ್ಟ್ನ್ನು ಪುನಃ ಸಕ್ರಿಯಗೊಳಿಸಲು ಆಸ್ಪತ್ರೆ ಸಿಬ್ಬಂದಿ ಅಥವಾ ನಿರ್ವಾಹಕ ಲಭ್ಯರಿರಲಿಲ್ಲ ಎಂದು ಸಂಬಂಧಿ ಹೇಳಿದರು. ಈ ಬಗ್ಗೆ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದ್ದು,ಮೂವರು ಲಿಫ್ಟ್ ನಿರ್ವಾಹಕರು ಮತ್ತು ಇಬ್ಬರು ಭದ್ರತಾ ಸಿಬ್ಬಂದಿಗಳನ್ನು ಬಂಧಿಸಲಾಗಿದೆ ಎಂದು ಹಿರಿಯ ಪೋಲಿಸ್ ಅಧಿಕಾರಿಯೋರ್ವರು ಸುದ್ದಿಸಂಸ್ಥೆಗೆ ತಿಳಿಸಿದರು. ಘಟನೆಯ ಬಗ್ಗೆ ಸಮಗ್ರ ತನಿಖೆ ನಡೆಸಲಾಗುವುದು ಎಂದು ಆಸ್ಪತ್ರೆ ಅಧಿಕಾರಿಗಳು ತಿಳಿಸಿದರು. ಆಗಸ್ಟ್ 2024ರಲ್ಲಿ ಆವರಣದಲ್ಲಿ ವೈದ್ಯೆಯ ಮೇಲೆ ಭೀಕರ ಅತ್ಯಾಚಾರ ಮತ್ತು ಕೊಲೆಯಿಂದಾಗಿ ಆರ್ಜಿ ಕರ್ ಆಸ್ಪತ್ರೆ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿತ್ತು.
Kodagu | ಕಾರು ಮತ್ತು ಬೈಕ್ಗಳ ನಡುವೆ ಢಿಕ್ಕಿ : ಇಬ್ಬರು ಮೃತ್ಯು
ಮಡಿಕೇರಿ : ಕಾರು ಮತ್ತು ಎರಡು ಬೈಕ್ಗಳ ನಡುವೆ ಢಿಕ್ಕಿ ಸಂಭವಿಸಿ ಇಬ್ಬರು ಸವಾರರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಗೋಣಿಕೊಪ್ಪ-ತಿತಿಮತಿ-ಮೈಸೂರು ರಸ್ತೆಯಲ್ಲಿ ನಡೆದಿದೆ. ನಂಜನಗೂಡು ನಿವಾಸಿ ಶಿವಕುಮಾರ್(25) ಮತ್ತು ಕೇರಳ ಪಾಲಕ್ಕಾಡ್ ನಿವಾಸಿ ಮುಹಮದ್ ಶಿಹಾಬ್(27) ಮೃತ ಯುವಕರಾಗಿದ್ದಾರೆ. ಕಾರೊಂದು ಮೈಸೂರು-ತಿತಿಮತಿ ಮಾರ್ಗವಾಗಿ ಗೋಣಿಕೊಪ್ಪ ಕಡೆಗೆ ಆಗಮಿಸುತಿತ್ತು. ಇದೇ ಮಾರ್ಗವಾಗಿ ನಂಜನಗೂಡು ನಿವಾಸಿ ಶಿವಕುಮಾರ್ ಹಾಗೂ ಕೇರಳ ಪಾಲಕ್ಕಾಡ್ ನಿವಾಸಿ ಮುಹಮದ್ ಶಿಹಾಬ್ ಅವರು ಮೈಸೂರು ಕಡೆಗೆ ತೆರಳುತ್ತಿದ್ದರು. ಮಧ್ಯಾಹ್ನ ಗೋಣಿಕೊಪ್ಪ-ತಿತಿಮತಿ ಹೆದ್ದಾರಿಯ ದೇವರಪುರ ಬಳಿ ಕಾರು ಮತ್ತು ಬೈಕ್ಗಳ ನಡುವೆ ಢಿಕ್ಕಿ ಸಂಭವಿಸಿದೆ ಎನ್ನಲಾಗಿದೆ. ಪರಿಣಾಮ ಎರಡೂ ಬೈಕ್ಗಳಲ್ಲಿದ್ದ ಸವಾರರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಘಟನಾ ಸ್ಥಳಕ್ಕೆ ಭೇಟಿ ನೀಡಿದ ಗೋಣಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮಾ. 22ರಂದು ಪತ್ರಕರ್ತ ರೇಮಂಡ್ ಡಿಕುನ್ಹಾ ತಾಕೊಡೆ ಅವರ ‘ಬೊಳ್ಳಿಲು’ ತುಳು ಕೃತಿ ಬಿಡುಗಡೆ
ಮೂಡುಬಿದಿರೆ: ಪತ್ರಕರ್ತ ರೇಮಂಡ್ ಡಿಕುನ್ಹಾ ತಾಕೊಡೆ ಅವರ ‘ಬೊಳ್ಳಿಲು’ ತುಳು ಕೃತಿ ಬಿಡುಗಡೆ ಮಾ. 22ರಂದು ಬೆಳಿಗ್ಗೆ ಮೂಡುಬಿದಿರೆಯ ಸಮಾಜ ಮಂದಿರದಲ್ಲಿ ನಡೆಯಲಿದೆ. ಸಭೆಯ ಅಧ್ಯಕ್ಷತೆಯನ್ನು ಮಾಜಿ ಸಚಿವ ಕೆ. ಅಭಯಚಂದ್ರ ಜೈನ್ ವಹಿಸಲಿದ್ದು, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಮ್. ಮೋಹನ್ ಆಳ್ವ ಕೃತಿ ಬಿಡುಗಡೆ ಮಾಡಲಿದ್ದಾರೆ. ಗೀತಾ ಲಕ್ಷ್ಮೀಶ್ ಶೆಟ್ಟಿ ಕೃತಿ ಪರಿಚಯ ನಡೆಸಲಿದ್ದಾರೆ. ಅಂದು ಬೆಳಿಗ್ಗೆ 10:00ರಿಂದ 11:00 ರವರೆಗೆ ಕವಿಗೋಷ್ಠಿ ಉದಯೋನ್ಮುಖ ಕವಿಗಳಿಂದ ನಡೆಯಲಿದೆ. ಗೋಷ್ಠಿಯ ಅಧ್ಯಕ್ಷತೆಯನ್ನು ಸದಾನಂದ ನಾರಾವಿ ವಹಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.
ಭಾಷಾ ವೈವಿಧ್ಯತೆಯನ್ನು ಹೆಮ್ಮೆಯಿಂದ ಸ್ವೀಕರಿಸಬೇಕು: ಡಾ. ಪರಮಶಿವಮೂರ್ತಿ
ಮೂಡುಬಿದಿರೆ: ಹಂಪಿ ಕನ್ನಡ ವಿಶ್ವವಿದ್ಯಾಲಯದ ದ್ರಾವಿಡ ಸಂಸ್ಕೃತಿ ಅಧ್ಯಯನ ವಿಭಾಗ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಹಾಗೂ ಆಳ್ವಾಸ್ ಕಾಲೇಜಿನ ಕನ್ನಡ ವಿಭಾಗದ ಸಂಯುಕ್ತ ಆಶ್ರಯದಲ್ಲಿ ಆಳ್ವಾಸ್ ಕಾಲೇಜಿನ (ಸ್ವಾಯತ್ತ) ಕುವೆಂಪು ಸಭಾಂಗಣದಲ್ಲಿ ‘ಭಾಷಾ ವೈವಿಧ್ಯತೆ ಮತ್ತು ದಕ್ಷಿಣ ಭಾರತದ ಅಸ್ಮಿತೆ’ ಎಂಬ ಶೀರ್ಷಿಕೆಯಡಿ ನಡೆಯುವ ಎರಡು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣವು ಶುಕ್ರವಾರ ಆರಂಭಗೊಂಡಿತು. ಹಂಪಿ ಕನ್ನಡ ವಿವಿಯ ಕುಲಪತಿಗಳಾದ ಡಾ ಡಿ. ವಿ ಪರಮಶಿವಮೂರ್ತಿ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿ ಭಾಷೆ ಭಾವನಾತ್ಮಕ ಹಾಗೂ ಸಾಂಸ್ಕೃತಿಕ ಬಂಧಗಳನ್ನು ಬೆಸೆಯುವ ಪ್ರಮುಖ ಸಾಧನವಾಗಿದ್ದು, ಅದು ಎಲ್ಲರನ್ನು ಒಗ್ಗೂಡಿಸುವ ಕೆಲಸ ಮಾಡಬೇಕು. ಭಾಷೆಗಳು ಒಗ್ಗೂಡಿಸುವ ಬದಲು ಹಲವಾರು ಸಂದರ್ಭಗಳಲ್ಲಿ ಸಂಘರ್ಷಗಳಿಗೆ ಕಾರಣವಾಗುತ್ತಿರುವುದರ ಬಗ್ಗೆ ಅವರು ವಿಷಾದ ವ್ಯಕ್ತಪಡಿಸಿ, “ಭಾಷಾ ವೈವಿಧ್ಯತೆಯನ್ನು ಹೆಮ್ಮೆ ಯಿಂದ ಸ್ವೀಕರಿಸಬೇಕು; ಇರ್ಷ್ಯೆಯಿಂದಲ್ಲ,” ಎಂದು ಅಭಿಪ್ರಾಯಪಟ್ಟರು. ಭಾಷೆಯು ಜ್ಞಾನ ಮತ್ತು ಅರಿವಿನ ವಿಸ್ತರಣೆಗೆ ಪರಿಣಾಮಕಾರಿ ಸಾಧನವಾಗಿದ್ದು, ಮನುಷ್ಯತ್ವವನ್ನು ಉದ್ದೀಪನಗೊಳಿಸಿ, ಮಾನವ ಸಂಬಂಧಗಳನ್ನು ಬಲಪಡಿಸಬೇಕು. ನಮ್ಮ ಭಾಷೆಗೆ ನೀಡುವ ಗೌರವವನ್ನು ಇತರ ಭಾಷೆಗಳಿಗೂ ಹಾಗೂ ಭಾಷಿಕರಿಗೂ ಸಮಾನವಾಗಿ ನೀಡಬೇಕೆಂದು ಅವರು ನುಡಿದರು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ ಎಂ ಮೋಹನ ಆಳ್ವ ಮಾತನಾಡಿ, ಭಾಷಾ ಮತ್ತು ಸಾಂಸ್ಕೃತಿಕ ಪರಂಪರೆಯ ಸಂರಕ್ಷಣೆಗೆ ನಿರಂತರ ಪ್ರಯತ್ನಗಳ ಅಗತ್ಯವಿದೆ ಎಂದು ತಿಳಿಸಿದರು. ವಿಚಾರ ಸಂಕಿರಣದ ಸಂಚಾಲಕರು ಹಾಗೂ ಹಂಪಿ ಕನ್ನಡ ವಿವಿಯ ಹಿರಿಯ ಪ್ರಾಧ್ಯಾಪಕ ಡಾ ಮಾಧವ ಪೆರಾಜೆ ವಿಚಾರ ಸಂಕಿರಣದ ಉದ್ದೇಶಗಳು ಹಾಗೂ ಸಮಕಾಲೀನ ಮಹತ್ವವನ್ನು ವಿವರಿಸಿದರು. ದಿಕ್ಸೂಚಿ ಭಾಷಣ ಮಾಡಿದ ಕನ್ನಡ ಭಾಷಾ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ ಪುರುಷೋತ್ತಮ ಬಿಳಿಮಲೆ, ಭಾಷೆಗಳ ಕುರಿತು ನಡೆಯುವ ಚರ್ಚೆಗಳು ಇಂದಿಗೂ ಹಳೆಯ ಅಂಕಿಅಂಶಗಳ ಮೇಲೆ ಅವಲಂಬಿತವಾಗಿರುವುದು ದುರಾದೃಷ್ಟಕರ. 2011ರ ಜನಗಣತಿಯ ಪ್ರಕಾರ, ಭಾರತದಲ್ಲಿ 19,569 ಮಾತೃಭಾಷೆಗಳಿದ್ದರೂ, ಸಂವಿಧಾನದ ಎಂಟನೇ ಅನುಸೂಚಿಯಲ್ಲಿ ಕೇವಲ 22 ಭಾಷೆಗಳಿವೆ. ಅವುಗಳಲ್ಲಿ 18 ಭಾಷೆಗಳು ಉತ್ತರ ಭಾರತದಾಗಿದ್ದು, ದಕ್ಷಿಣ ಭಾರತದ ದ್ರಾವಿಡ ಭಾಷೆಗಳು ಕೇವಲ ನಾಲ್ಕು ಮಾತ್ರವಿರುವುದು ಭಾಷಾ ಅಸಮಾನತೆಯನ್ನು ಎತ್ತಿ ತೋರಿಸುತ್ತದೆ ಎಂದರು. ಕರ್ನಾಟಕದಲ್ಲಿ ಜನನ ಪ್ರಮಾಣ 1.6ರಷ್ಟಿದ್ದರೆ, ಬಿಹಾರ ಹಾಗೂ ಉತ್ತರ ಪ್ರದೇಶದಂತಹ ರಾಜ್ಯಗಳಲ್ಲಿ ಅದು 2.9ರಷ್ಟಿದೆ. ಈ ವ್ಯತ್ಯಾಸವು ಕೇವಲ ಜನಸಂಖ್ಯಾ ಅಂಕಿ ಅಂಶಗಳಲ್ಲದೆ, ಭವಿಷ್ಯದ ರಾಜಕೀಯ ಪ್ರತಿನಿಧಿತ್ವದ ಮೇಲೂ ಮಹತ್ವದ ಪರಿಣಾಮ ಬೀರುತ್ತವೆ. ಈ ನೆಲೆಯಲ್ಲಿ ಸೆಂಟರ್ ಫಾರ್ ಪಾಲಿಸಿ ರಿಸರ್ಚ ಸೇರಿದಂತೆ ಹಲವು ಸಂಸ್ಥೆಗಳು ನಡೆಸಿದ ಅಧ್ಯಯದ ಪ್ರಕಾರ, ಒಂದು ವೇಳೆ 2028ರ ಲೋಕಸಭಾ ಚುನಾಚಣೆಗೆ ಕ್ಷೇತ್ರ ಪುನರ್ವಿಂಗಡಣೆಯಾದಲ್ಲಿ ಉತ್ತರ ಪ್ರದೇಶದ ಸ್ಥಾನಗಳು 80ರಿಂದ 128ಕ್ಕೆ, ಬಿಹಾರದಲ್ಲಿ 40ರಿಂದ 70ಕ್ಕೆ, ಮದ್ಯಪ್ರದೇಶದಲ್ಲಿ 29 ರಿಂದ 47, ಮಹಾರಾಷ್ಟç 48ರಿಂದ 68, ರಾಜಸ್ಥಾನ 25ರಿಂದ 44, ಪಶ್ಚಿಮ ಬಂಗಾಳ 42ರಿಂದ 60 ಸ್ಥಾನಗಳಿಗೆ ಏರಿಕೆಯಾಗುವ ಸಾಧ್ಯತೆ ಇದೆ. ಇದಕ್ಕೆ ವಿರುದ್ಧವಾಗಿ ದಕ್ಷಿಣದ ರಾಜ್ಯಗಳಲ್ಲಿ ಅಲ್ಪ ಪ್ರಮಾಣದ ಏರಿಕೆ ಮಾತ್ರವಾಗುವ ಸಾಧ್ಯತೆ ಇದ್ದು, ಕರ್ನಾಟಕದಲ್ಲಿ 28ರಿಂದ 36ಕ್ಕೆ, ತಮಿಳುನಾಡಿನಲ್ಲಿ 39ರಿಂದ 42ಕ್ಕೆ, ತೆಲಂಗಾಣದಲ್ಲಿ 17ರಿಂದ 20ಕ್ಕೆ, ಆಂಧ್ರ ಪ್ರದೇಶದಲ್ಲಿ 25ರಿಂದ 28ಕ್ಕೆ ಏರಿಕೆಯಾಗುವ ಸಾಧ್ಯತೆ ಇದ್ದು, ಕೇರಳದಲ್ಲಿ 20ರಿಂದ 19ಕ್ಕೆ ಇಳಿಯುವ ಸಾಧ್ಯತೆ ಇದೆ ಎಂದರು. ಮೊದಲ ದಿನದ ಪ್ರಥಮ ಗೋಷ್ಠಿಯಲ್ಲಿ ಕೇರಳದ ಖ್ಯಾತ ಬರಹಗಾರ ಹಾಗೂ ಭಾಷಾಂತಕಾರಾದ ಡಾ ಸುಧಾಕರ್ ರಾಮಂತಳಿ ಬಹುಭಾಷೆಗಳು ಹಾಗೂ ಮತ್ತು ದಕ್ಷಿಣ ಭಾರತದ ಸಾಂಸ್ಕೃತಿಕ ಅನನ್ಯತೆ ಕುರಿತು, ಡಾ ವಿ ಬಿ ತಾರಕೇಶ್ವರ, ದಕ್ಷಿಣ ಭಾರತದ ಭಾಷಾರಾಷ್ಟ್ರೀಯತೆಯ ಪರಿಕಲ್ಪನೆ, ಡಾ ಡಿ ಪಾಂಡುರಂಗ ಬಾಬು – ಜಾತಿ ವ್ಯವಸ್ಥೆ ಮತ್ತು ಭಾಷೆ: ಸಮಜೋ ಭಾಷಾ ವೈಜ್ಞಾನಿಕ ಚಿಂತನೆಗಳು, ಎರಡನೇ ಗೋಷ್ಠಿಯಲ್ಲಿ ಶ್ರೀಕೃಷ್ಣದೇವರಾಯ ವಿವಿ ಇಂಗ್ಲೀಷ್ ವಿಭಾಗದ ಪ್ರಾಧ್ಯಾಪಕ ಡಾ ರಾಬರ್ಟ ಜೋಶ್- ಜಾಗತಿಕ ಮತ್ತು ಗ್ಲೊಕಲ್ ರಾಜಕರಣದ ನೆಲೆಗಳು, ಡಾ ರೇಖಾ ದತ್ತ, ದಕ್ಷಿಣ ಭಾರತದ ಸ್ತ್ರಿವಾದಿ ಬರಹಗಳು ವಿಷಯದ ಕುರಿತು ಮಾತನಾಡಿದರು. ಕಾರ್ಯಕ್ರಮದಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಸದಸ್ಯ ಪಾಂಗಾಳ ಬಾಬು ಕೊರಗ, ಆಳ್ವಾಸ್ ಕಾಲೇಜಿನ ಪ್ರಾಚರ್ಯ ಡಾ ಕುರಿಯನ್ ಇದ್ದರು. ಆಳ್ವಾಸ್ ಕನ್ನಡ ವಿಭಾಗದ ಮುಖ್ಯಸ್ಥ ಡಾ ಯೋಗೀಶ್ ಕೈರೋಡಿ ಸ್ವಾಗತಿಸಿ, ಕನ್ನಡ ವಿಭಾಗದ ಉಪನ್ಯಾಸಕಿ ಡಾ ಸುಧಾರಾಣಿ ಕಾರ್ಯಕ್ರಮ ನಿರೂಪಿಸಿದರು.
ಹೊಸದಿಲ್ಲಿ: ಇರಾನ್ ಮೇಲೆ ಅಮೆರಿಕ-ಇಸ್ರೇಲ್ ವಾಯುದಾಳಿಗಳನ್ನು ಮತ್ತು ಅಲ್ಲಿಯ ಆಡಳಿತವನ್ನು ಬದಲಿಸಲು ಒತ್ತಡ ಹೇರಲು ಕ್ರೂರ ಪಯತ್ನಗಳನ್ನು ಖಂಡಿಸುವಲ್ಲಿ ಮೋದಿ ಸರಕಾರದ ವೈಫಲ್ಯವು ನೈತಿಕ ಹೇಡಿತನ ಮತ್ತು ಭಾರತದ ನಾಗರಿಕತೆಯ ಮೌಲ್ಯಗಳಿಗೆ ರಾಜಕೀಯ ದ್ರೋಹವನ್ನು ಪ್ರತಿಬಿಂಬಿಸುತ್ತಿದೆ ಎಂದು ಕಾಂಗ್ರೆಸ್ ಹೇಳಿದೆ. ಪ್ರಧಾನಿ ನರೇಂದ್ರ ಮೋದಿಯವರು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರೊಂದಿಗೆ ತಮ್ಮ ಸ್ನೇಹದ ಕುರಿತು ಕೊಚ್ಚಿಕೊಳ್ಳುತ್ತಾರೆ, ಆದರೆ ಅವರು ಅದನ್ನು ಕದನವನ್ನು ನಿಲ್ಲಿಸಲು ಬಳಸಲಿಲ್ಲ ಎಂದೂ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ (ಸಂವಹನ) ಜೈರಾಮ್ ರಮೇಶ್ ಅವರು ಶನಿವಾರ ಎಕ್ಸ್ ಪೋಸ್ಟ್ನಲ್ಲಿ ಕುಟುಕಿದ್ದಾರೆ. ಇರಾನ್ ಮೇಲೆ ಅಮೆರಿಕ ಮತ್ತು ಇಸ್ರೇಲ್ ವಾಯುದಾಳಿಗಳು ಆರಂಭಗೊಂಡು ಸರಿಯಾಗಿ 21 ದಿನಗಳು ಕಳೆದಿವೆ. ಪ್ರಧಾನಿಯವರೂ ಭಾರೀ ಪ್ರಚಾರದ ಇಸ್ರೇಲ್ ಭೇಟಿಯಿಂದ ಮರಳಿ 23 ದಿನಗಳು ಕಳೆದಿವೆ ಎಂದು ಹೇಳಿರುವ ರಮೇಶ್, ಭಾರತ ಸೇರಿದಂತೆ ಎಲ್ಲೆಡೆ ತೀವ್ರ ಆರ್ಥಿಕ ಕುಸಿತಕ್ಕೆ ಕಾರಣವಾಗಿರುವ ಇರಾನ್ ಮೇಲಿನ ಭಾರೀ ವೈಮಾನಿಕ ದಾಳಿಗಳನ್ನು ಮೋದಿ ಸರಕಾರವು ಖಂಡಿಸಿಲ್ಲ, ಟೀಕಿಸಿಯೂ ಇಲ್ಲ. ಇರಾನಿನ ಉನ್ನತ ನಾಯಕರ ಉದ್ದೇಶಿತ ಹತ್ಯೆಗಳ ಕುರಿತು ಅದು ಮೌನವಾಗಿದೆ. ಇರಾನಿನಲ್ಲಿ ಅಂತರ್ಯುದ್ಧಕ್ಕೆ ಕಾರಣವಾಗಬಹುದಾದ ಆಡಳಿತ ಬದಲಾವಣೆ ಮತ್ತು ಸರಕಾರದ ಪತನಕ್ಕಾಗಿ ಒತ್ತಡ ಹೇರಲು ಕ್ರೂರ ಪ್ರಯತ್ನಗಳ ಬಗ್ಗೆಯೂ ಅದು ಬಾಯಿಬಿಟ್ಟಿಲ್ಲ ಎಂದಿದ್ದಾರೆ. ಇರಾನ್ ಮೇಲೆ ಬಾಂಬ್ ದಾಳಿಗಳು ಮತ್ತು ಕೊಲ್ಲಿ ರಾಷ್ಟ್ರಗಳಲ್ಲಿಯ ಇಂಧನ ಮತ್ತು ಇತರ ಮೂಲಸೌಕರ್ಯಗಳ ಮೇಲೆ ಇರಾನಿನ ದಾಳಿಗಳನ್ನು ತಕ್ಷಣವೇ ನಿಲ್ಲಿಸಲು ಮೋದಿ ಸರಕಾರವು ಗಂಭೀರ ರಾಜತಾಂತ್ರಿಕ ಪ್ರಯತ್ನಗಳನ್ನು ನಡೆಸಿದೆಯೇ? ಉತ್ತರ ಇಲ್ಲ ಎಂದು ರಮೇಶ ಹೇಳಿದ್ದಾರೆ. ಇವು ಮೋದಿ ಸರಕಾರದ ನೈತಿಕ ಹೇಡಿತನ ಮತ್ತು ಭಾರತದ ನಾಗರಿಕತೆಯ ಮೌಲ್ಯಗಳಿಗೆ ರಾಜಕೀಯ ದ್ರೋಹವನ್ನು ಪ್ರತಿಬಿಂಬಿಸುತ್ತವೆ ಎಂದು ಅವರು ಆರೋಪಿಸಿದ್ದಾರೆ.
ಕ್ಯಾನ್ಸರ್ ತಪಾಸಣೆಗೆ ಜನರ ಹಿಂಜರಿಕೆ: ಡಾ.ಸುರೇಶ್ ರಾವ್
ಎಂಐಒ ತಂಡದ ʼಸಮೀಕ್ಷೆ-ನಿರೀಕ್ಷೆʼ ವರದಿ ಬಿಡುಗಡೆ
ರಾಜ್ಯದಲ್ಲಿ ಮಹಿಳೆಯರಿಗಿದ್ಯಾ ಸುರಕ್ಷತೆ: 4 ವರ್ಷದಲ್ಲಿ 2072 ಅತ್ಯಾಚಾರ, 18,834 ಲೈಂಗಿಕ ಕಿರುಕುಳ ಪ್ರಕರಣ
ರಾಜ್ಯದಲ್ಲಿ ಕಳೆದ ನಾಲ್ಕು ವರ್ಷಗಳಲ್ಲಿ 2072 ಅತ್ಯಾಚಾರ ಹಾಗೂ 18,834 ಲೈಂಗಿಕ ಕಿರುಕುಳ ಪ್ರಕರಣಗಳು ದಾಖಲಾಗಿವೆ. ಮಹಿಳೆಯರ ಮೇಲೆ ನಿರಂತರ ದೌರ್ಜನ್ಯ ಪ್ರಕರಣಗಳು ವರದಿಯಾಗುತ್ತಿದ್ದು, ಇದನ್ನು ನಿಯಂತ್ರಣ ಮಾಡಲು ಕೆಲವೊಂದು ಬಿಗಿಯಾದ ಕ್ರಮಗಳನ್ನು ಕೈಗೊಳ್ಳಬೇಕಾದ ಅಗತ್ಯ ಇದೆ. ಅಷ್ಟೇ ಅಲ್ಲದೆ, ರಾಜ್ಯದಲ್ಲಿ ಸರ ಕಳ್ಳತನ, ಮಾದಕ ವಸ್ತುಗಳು ಮಾರಾಟ, ಸೇವನೆ ಪ್ರಕರಣಗಳ ಸಂಖ್ಯೆಯೂ ದೊಡ್ಡ ಪ್ರಮಾಣದಲ್ಲಿ ವರದಿಯಾಗಿದೆ. ಈ ಕುರಿತಾಗಿ ಗೃಹ ಇಲಾಖೆ ನೀಡಿರುವ ಒಂದಿಷ್ಟು ಮಾಹಿತಿಗಳು ಇಲ್ಲಿವೆ ಓದಿ.
ಬೇಸಿಗೆ ಅವಧಿಯಲ್ಲಿ ಜಾನುವಾರು ಮತ್ತು ಕೋಳಿಗಳ ನಿರ್ವಹಣೆಗೆ ಮುನ್ನೆಚ್ಚರಿಕೆ ಕ್ರಮ ವಹಿಸಲು ಸೂಚನೆ
ಮಂಗಳೂರು, ಮಾ.21: ಕರಾವಳಿ ಪ್ರದೇಶದಲ್ಲಿ ಪ್ರಸಕ್ತ ಬೇಸಿಗೆ ಅವಧಿಯಲ್ಲಿ ವಾತಾವರಣದ ಉಷ್ಣಾಂಶ ಏರಿಕೆ ಯಾಗಿರುವುದು ಕಂಡು ಬಂದಿದೆ. ಉಷ್ಣಾಂಶದ ಏರಿಕೆಯೊಂದಿಗೆ ವಾತಾವರಣದ ಆದ್ರತೆಯು ಎಲ್ಲಾ ಪ್ರಾಣಿ ಪಕ್ಷಿ ಗಳಲ್ಲಿ ಅದರಲ್ಲಿಯೂ ಉತ್ಪಾದಕ ಪ್ರಾಣಿಗಳಾದ ದನ ಹಾಗೂ ಮಾಂಸ ಕೋಳಿಗಳ ಮೇಲೆ ತುಂಬಾ ಒತ್ತಡವ ನ್ನುಂಟು ಮಾಡುತ್ತದೆ ಎಂದು ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಉಪನಿರ್ದೇಶಕರು ತಿಳಿಸಿದ್ದಾರೆ. ಬೇಸಿಗೆ ಅವಧಿಯಲ್ಲಿ ದನಗಳಲ್ಲಿ ಉಷ್ಣಾಂಶದ ಒತ್ತಡದಿಂದ ಆಹಾರ ತಿನ್ನುವ ಪ್ರಮಾಣ ಕಡಿಮೆಯಾಗಿ ಹಾಲಿನ ಇಳುವರಿ ಕಡಿಮೆಯಾಗುತ್ತದೆ ಅಥವಾ ಇನ್ನೂ ಹೆಚ್ಚಿನ ಬಿಸಿಲಿನ ತಾಪಮಾನದಿಂದಾಗಿ ಸಾಯುವ ಸಾಧ್ಯತೆ ಇರು ತ್ತದೆ. ಮಾಂಸ ಕೋಳಿಗಳು ಆಹಾರ ತಿನ್ನುವ ಪ್ರಮಾಣ ಗಣನೀಯ ಕಡಿಮೆಯಾಗಿ ಮಾಂಸ ಕೋಳಿಗಳ ತೂಕ ಬಾರದೆ ಇರಬಹುದು ಮತ್ತು ಉಷ್ಣಾಂಶದ ಪ್ರಮಾಣ 360ಇಗಿಂತ ಹೆಚ್ಚಾದಾಗ ಕೋಳಿಗಳು ಸಾಯಲು ಪ್ರಾರಂಭಿ ಸುತ್ತವೆ. ಉಷ್ಣಾಂಶದ ಒತ್ತಡದಲ್ಲಿ ಬಳಲಿದ ಪ್ರಾಣಿ ಪಕ್ಷಿಗಳಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆಯಾಗಿ ಸಾಂಕ್ರಾಮಿಕ ರೋಗಗಳು ಕಂಡುಬರಬಹುದು. ಹಾಗಾಗಿ ರೈತರು ಮತ್ತು ಕೋಳಿ ಸಾಕಾಣಿಕೆದಾರರು ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸುವುದರಿಂದ ಆಗಬಹುದಾದ ಆರ್ಥಿಕ ನಷ್ಟ್ಟವನ್ನು ತಪ್ಪಿಸಬಹುದಾಗಿದೆ. *ಜಾನುವಾರುಗಳ ನಿರ್ವಹಣೆಯಲ್ಲಿ ಮುನ್ನೆಚ್ಚರಿಕೆ ಕ್ರಮಗಳು: ಬೇಸಿಗೆಯಲ್ಲಿ ಉಷ್ಣ್ಣತೆ ಹೆಚ್ಚಾಗುವುದರಿಂದ ದನ ಗಳನ್ನು ಬೆಳಗ್ಗೆ ಅಥವಾ ಸಂಜೆ ಮೇಯಲು ಹೊರಗಡೆ ಬಿಡಬೇಕು. ಯಾವುದೇ ಕಾರಣಕ್ಕೂ ಪೂ.11ರಿಂದ 4 ಗಂಟೆ ಅವಧಿಯಲ್ಲಿ ಜಾನುವಾರುಗಳನ್ನು ಹೊರಗಡೆ ಬಿಡಬಾರದು. ದಿನದ 24 ಗಂಟೆಯೂ ತಂಪಾದ ನೀರು ನೀಡಬೇಕು. ನೀರಿನ ಕೊರತೆ ಕಂಡುಬಂದರೆ ಸ್ಥಳೀಯ ಸಂಸ್ಥೆಗಳ ಮೂಲಕ ಪಡೆದುಕೊಳ್ಳಬೇಕು. ಜಾನುವಾರುಗಳನ್ನು ನೆರಳಿ ನಲ್ಲಿ ಮಾತ್ರ ಹೊರಗಡೆ ಕಟ್ಟಬೇಕು. ಜಾನುವಾರು ಶೆಡ್ ಮೇಲೆ ತೆಂಗಿನ ಅಥವಾ ಅಡಿಕೆ ಗರಿ ಹಾಕಿ ಸ್ಪಿಂಕ್ಲರ್ನಲ್ಲಿ ನೀರು ಚಿಮ್ಮಿಸಬಹುದು ಅಥವಾ ಬಿಳಿ ಬಣ್ಣದ ಪೇಂಟ್ ಹಾಕಬಹುದು. ಶೆಡ್ ಒಳಗಡೆ ಫ್ಯಾನ್ಗಳನ್ನು ಅಳವಡಿಸಿದ್ದಲ್ಲಿ ಉಷ್ಣತೆ ಪ್ರಮಾಣ ತಗ್ಗಿಸಬಹುದಾಗಿದೆ. ಒದ್ದೆಯಾದ ಗೋಣಿ ಚೀಲಗಳನ್ನು ಶೆಡ್ ಸುತ್ತಲೂ ಕಟ್ಟಬಹುದು. ಪ್ರತಿ ಗಂಟೆಗೊಮ್ಮೆ ಜಾನುವಾರುಗಳ ಮೈ ಮೇಲೆ 1-2 ನಿಮಿಷ ನೀರು ಚಿಮುಕಿಸುತ್ತಿರಬೇಕು. ಜಾನುವಾರುಗಳಿಗೆ ಹೆಚ್ಚಿನ ಆಹಾರವನ್ನು ಬೆಳಗ್ಗೆ ಬೇಗನೆ ಮತ್ತು ರಾತ್ರಿ ಹೊತ್ತಿನಲ್ಲಿ ತಿನ್ನಿಸುವುದು ಉತ್ತಮ. ಜಾನುವಾರುಗಳಿಗೆ ಅವುಗಳ ಹಾಲಿನ ಇಳುವರಿಗೆ ಅನುಗುಣವಾಗಿ 20-100 ಗ್ರಾಂ ನಷ್ಟು ಲವಣ ಮಿಶ್ರಣವನ್ನು ಪ್ರತಿ ದಿನ ನೀಡಬೇಕು. ಜಾನುವಾರುಗಳಿಗೆ ಪ್ರಜ್ಞೆ ತಪ್ಪುವುದು, ತುಂಬಾ ಹಾಲಿನ ಇಳುವರಿ ಕಡಿತವಾಗುವುದು ಕಂಡುಬಂದಲ್ಲಿ ತಕ್ಷಣ ಹತ್ತಿರದ ಪಶುವೈದ್ಯಕೀಯ ಸಂಸ್ಥೆಯನ್ನು ಭೇಟಿ ಮಾಡಬೇಕು. *ಮಾಂಸದ ಕೋಳಿಗಳ ಸಾಕಾಣಿಕೆಯಲ್ಲಿ ಮುನ್ನೆಚ್ಚರಿಕೆ ಕ್ರಮಗಳು: ಕೋಳಿಗಳಿಗೆ ದಿನದ 24 ಗಂಟೆಗಳ ಕಾಲ ತಂಪಾದ ಮತ್ತು ಶುಚಿಯಾದ ನೀರನ್ನು ಒದಗಿಸಬೇಕು. ಒಂದು ಗಂಟೆ ನೀರು ಇಲ್ಲದಿದ್ದರೆ ಕೋಳಿಗಳು ಸಾವನ್ನಪ್ಪ ಬಹುದು. ಚೆನ್ನಾಗಿ ಗಾಳಿಯಾಡಲು ಅನುಕೂಲವಾಗುವಂತೆ ಎಲ್ಲಾ ತಡೆಗಳನ್ನು ತೆಗೆಯಬೇಕು. ಕೋಳಿಗೂಡಿನ ಮೇಲ್ಭಾಗಕ್ಕೆ ಸುಣ್ಣ ಬಳಿಯಬೇಕು ಆಥವಾ ಹುಲ್ಲು ಅಡಿಕೆ ಗರಿ, ತೆಂಗಿನ ಗರಿಗಳಿಂದ ಹೊದಿಸಬೇಕು. ಅನುಕೂಲ ವಿದ್ದರೆ ಕೋಳಿಗೂಡಿನ ಮೇಲೆ ಸ್ಪಿಂಕ್ಲರ್ನಲ್ಲಿ ನೀರು ಸಿಂಪಡಿಸಬೇಕು. ಕೋಳಿ ಮನೆಯ ಒಳಗೆ ಫ್ಯಾನ್ ಅಥವಾ ಫಾಗಸ್ಗಳನ್ನು ಅಳವಡಿಸಬೇಕು. ವಿಟಮಿನ್ ಸಿ ಮತ್ತು ಇತರೆ ಇಲೆಕ್ಟ್ರೋಲೈಟ್ಗಳನ್ನು ಉಪಯೋಗಿಸುವುದರಿಂದ ಕೋಳಿಗಳ ಮೇಲೆ ಆಗುವ ಬಿಸಿಲಿನ ಒತ್ತಡವನ್ನು ಕಡಿಮೆ ಮಾಡಬಹುದು ಅಥವಾ ಅಡುಗೆ ಸೋಡ 1 ಗ್ರಾಂನ್ನು 5 ಲೀಟರ್ ನೀರಿಗೆ ಬೆರೆಸಿ ಕೋಳಿಗಳಿಗೆ ಕುಡಿಯಲು ನೀಡಬೇಕು. ಕೋಳಿಗೂಡಿನ ನೀರಿನ ಟ್ಯಾಂಕಿನ ಹೊರಮೈಗೆ ಬಿಳಿಬಣ್ಣ ಬಳಿಯಬೇಕು ಅಥವಾ ಗೋಣಿಯನ್ನು ಸುತ್ತಲೂ ಕಟ್ಟಿ ದಿನಕ್ಕೆರಡು ಬಾರಿ ನೀರಿನಿಂದ ಒದ್ದೆ ಮಾಡಬೇಕು ಅಥವಾ ಚಪ್ಪರ ಹಾಕಬೇಕು. ಬೇಸಿಗೆ ಅವಧಿಯಲ್ಲಿ ನೀರಿನಲ್ಲಿ ಹಾನಿಕಾರಕ ಸೂಕ್ಷ್ಮ ಜೀವಿಗಳು ಹೆಚ್ಚಿರುವುದರಿಂದ ಸೋಂಕು ನಿವಾರಕಗಳನ್ನು ಉಪಯೋಗಿಸಬೇಕು. ಅತೀ ಉಷ್ಣ ಹಾಗೂ ಮೋಡ ಕವಿದ ವಾತಾವರಣ ಇದ್ದಾಗ ಮಧ್ಯಾಹ್ನ 1 ಗಂಟೆಯಿಂದ ಸಂಜೆ 5 ಗಂಟೆ ತನಕ ಕೋಳಿಗಳ ಮೇಲೆ ನಿಗಾ ವಹಿಸಬೇಕು. ಯಾವುದೇ ಕಾರಣಕ್ಕೂ ಕೋಳಿ ಮನೆಗಳ ಒಳಗೆ ಬಿಸಿಲು ಬೀಳದಂತೆ ಎಚ್ಚರವಸಬೇಕು. ಬೇಸಿಗೆಯಲ್ಲಿ ಕೋಳಿಗಳು 20 ದಿನದ ನಂತರ, ಆ ದಿನಕ್ಕೆ ನಿಗದಿಪಡಿಸಿದ ಕೋಳಿ ಆಹಾರ ತಿನ್ನುವ ಸಾಧ್ಯತೆ ಕಡಿಮೆ. ಹಾಗಾಗಿ ರೈತರು ದಿನದ ತಂಪಾದ ಸಮಯ ಅಂದರೆ ರಾತ್ರಿ 12 ಗಂಟೆ ತನಕ ಅಥವಾ ಬೆಳಗ್ಗೆ 4 ರಿಂದ 8 ಗಂಟೆ ಅವಧಿಯಲ್ಲಿ ಕೋಳಿಗಳಿಗೆ ಅಹಾರ ಒದಗಿಸಬೇಕು. ಕೋಳಿ ಮನೆಗಳ ಸುತ್ತಲಿನ ಪ್ರದೇಶವನ್ನು ಶುಚಿಯಾಗಿಟ್ಟುಕೊಳ್ಳುವುದು ಹಾಗೂ ನಿಯಮಿತವಾಗಿ ಸೋಂಕು ನಿವಾರಕ ದ್ರಾವಣ ಸಿಂಪಡಿಸಬೇಕು. ಮಾನವೀಯತೆ ದೃಷ್ಟಿಯಿಂದ ಇತರೆ ಪ್ರಾಣಿ ಪಕ್ಷಿಗಳಿಗೆ ಕೂಡ ತಮ್ಮ ಮನೆ ಅಥವಾ ತೋಟದ ಆಸುಪಾಸು ಸ್ವಚ್ಛ ನೀರು ಸಿಗುವಂತೆ ವ್ಯವಸ್ಥೆ ಮಾಡಬಹುದಾಗಿದೆ ಎಂದು ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಉಪನಿರ್ದೇಶಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಕೈಗಾರಿಕಾ ಹೈಡ್ರೋಜನ್ ಉತ್ಪಾದನಾ ಸ್ಕಿಡ್ ಗಳ ಉದ್ಘಾಟನೆ
ಮಂಗಳೂರು: ಮಂಗಳೂರಿನಲ್ಲಿ ವಿಶ್ವ ದರ್ಜೆಯ ಹೈಡ್ರೋಜನ್ ಉತ್ಪಾದನಾ ಘಟಕ ಕಾರ್ಯನಿರ್ವಹಿಸುತ್ತಿರುವುದು ಅತ್ಯಂತ ಹೆಮ್ಮೆಯ ವಿಷಯ. ಹೈಡ್ಜೆನ್ ಸಂಸ್ಥೆ ನೀರಿನಿಂದ ಹೈಡ್ರೋಜನ್ ತಯಾರಿಸುವ ಮೂಲಕ ಗಮನ ಸೆಳೆದಿದ್ದು, ಈ ಸಾಧನೆ ಮತ್ತಷ್ಟು ಜನರನ್ನು ಊರಿಗೆ ಕರೆ ತಂದು ಸಂಶೋಧನೆಯೊಂದಿಗೆ ಉದ್ಯಮದಲ್ಲಿ ತೊಡಗಿಸಿಕೊಳ್ಳಲು ಪ್ರೇರಣೆಯಾಗಲಿದೆ ಎಂದು ಸಂಸದ ಬ್ರಿಜೇಶ್ ಚೌಟ ಹೇಳಿದರು. ವಿವಿಧ ಕಂಪೆನಿಗಳಿಗೆ ರವಾನಿಸಲು ಮಂಗಳೂರಿನ ಹೈಡ್ಜೆನ್ ಸಂಸ್ಥೆ ಸಹ್ಯಾದ್ರಿ ಕಾಲೇಜಿನಲ್ಲಿ ಅಭಿವೃದ್ಧಿಪಡಿಸಲಾದ 8 ಮಾಡ್ಯುಲರ್ ಕೈಗಾರಿಕಾ ಹೈಡ್ರೋಜನ್ ಉತ್ಪಾದನಾ ಸ್ಕಿಡ್ ಗಳನ್ನು ಕಾಲೇಜಿನಲ್ಲಿ ಶುಕ್ರವಾರ ನಡೆದ ಸಮಾರಂಭದಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು. ಹೈಡ್ಜೆನ್ ಸಂಸ್ಥೆ ನಮ್ಮದೇ ಊರಿನವರಿಂದ ನಿರ್ಮಾಣವಾಗಿದ್ದು, ನಮ್ಮದೇ ಮಣ್ಣಿನ ನೀರಿನಿಂದ ಹೈಡ್ರೋಜನ್ ತಯಾರಿಸಿ ವಿಶ್ವವೇ ಒಪ್ಪುವಂತಹ ವಸ್ತುವನ್ನು ಮಂಗಳೂರಿನಲ್ಲಿ ತಯಾರಿಸಿ, ಮಾರುಕಟ್ಟೆಯಲ್ಲಿ ತನ್ನ ಸ್ಥಾನ ಭದ್ರಪಡಿಸುತ್ತಿದೆ. ಸಂಸ್ಥೆ ಗುಣಮಟ್ಟದ ವಿಚಾರದಲ್ಲಿ ಯಾವುದೇ ರಾಜೀ ಮಾಡಬಾರದು. ಜಪಾನ್ ದೇಶ ಮುಂದು ವರೆಯಲು ಅಲ್ಲಿ ತಯಾರಾಗುವ ವಸ್ತುಗಳ ಗುಣಮಟ್ಟವೇ ಕಾರಣ. ನಮ್ಮ ಜನರೂ ಕೂಡ ಗುಣಮಟ್ಟಕ್ಕೆ ಆಧ್ಯತೆ ನೀಡುತ್ತಾರೆ. ಮಂಗಳೂರಿನಲ್ಲಿ ಹೊಟೇಲ್, ಆಸ್ಪತ್ರೆ ಸೇರಿದಂತೆ ವಿವಿಧ ಉದ್ಯಮಗಳು ಬೆಳೆಯಲು ಗುಣಮಟ್ಟದ ಸೇವೆಯೇ ಕಾರಣ. ಕಂಪೆನಿಗಳು ತಾವು ತಯಾರಿಸುವ ಉತ್ಪನ್ನಗಳ ಗುಣಮಟ್ಟದತ್ತ ಹೆಚ್ಚನ ಒತ್ತು ನೀಡಿದ್ದಲ್ಲಿ ಯಶಸ್ಸು ಸಾಧ್ಯ ಎಂದರು. ಹೈಡ್ಜೆನ್ ಸಂಸ್ಥೆಯ ಸಿಒಒ ಡಾ. ಮಾಣಿಪ್ಪಾಡ್ಡಿ ಕೃಷ್ಣ ಕುಮಾರ್ ಅವರು ಮಾತನಾಡಿ, ಮಂಗಳೂರಿನಲ್ಲಿ ಸ್ಥಳೀಯ ವಾಗಿ ತಯಾರಿಸಲಾದ ಮಾಡ್ಯುಲರ್ ಕೈಗಾರಿಕಾ ಹೈಡ್ರೋಜನ್ ಉತ್ಪಾದನಾ ಸ್ಕಿಡ್ಗಳು ಭಾರತದಲ್ಲಿ ಮೊದಲ ತಂತ್ರಜ್ಞಾನ ವೇದಿಕೆಯನ್ನು ಪ್ರತಿನಿಧಿಸುತ್ತವೆ. ಈ ಸಾಧನೆಯು ಪ್ರಧಾನ ಮಂತ್ರಿಯವರ ದೃಷ್ಟಿಕೋನಕ್ಕೆ ಹೊಂದಿಕೆ ಯಾಗುತ್ತದೆ ಮತ್ತು ಭಾರತದ ರಾಷ್ಟ್ರೀಯ ಹಸಿರು ಹೈಡ್ರೋಜನ್ ಮಿಷನ್ ಅನ್ನು ಬೆಂಬಲಿಸುತ್ತದೆ. ಮೇಕ್ ಇನ್ ಇಂಡಿಯಾ ಮತ್ತು ಲೋಕಲ್ ಫಾರ್ ಗ್ಲೋಬಲ್ ಕನಸನ್ನು ಸಾಕಾರಗೊಳಿಸುತ್ತದೆ ಎಂದರು. ಸಂಸ್ಥೆಯ ಸಿಟಿಒ ಡಾ. ಗೌತಮ್ ದಳಪತಿ ಮತ್ತು ಸಿಬಂದಿ ಇದ್ದರು. ನಿರ್ದೇಶಕರಾದ ರಮ್ಯಶ್ರೀ ದೊಡ್ಡಮಣಿ ಶ್ರೀವಾಸ್ತವ ಸ್ವಾಗತಿಸಿದರು.
ಭಾರತೀಯ ಸೇನಾ ಮುಖ್ಯಸ್ಥ ಉಪೇಂದ್ರ ದ್ವಿವೇದಿ ಅವರದ್ದು ಎನ್ನಲಾದ 57 ಸೆಕೆಂಡುಗಳ ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಬಳಿಕ ವಿವಾದ ಸೃಷ್ಟಿಯಾಗಿತ್ತು. ವೀಡಿಯೊದಲ್ಲಿ ಹಿಂದೂ ಮಹಾಸಾಗರದಲ್ಲಿ ಇರಾನ್ ನೌಕೆಯಿರುವ ಬಗ್ಗೆ ಇಸ್ರೇಲ್ನೊಂದಿಗೆ ಮಾಹಿತಿ ಹಂಚಿಕೊಂಡಿರುವ ಬಗ್ಗೆ ಭಾರತೀಯ ಸೇನಾ ಮುಖ್ಯಸ್ಥ ಉಪೇಂದ್ರ ದ್ವಿವೇದಿ ʼಒಪ್ಪಿಕೊಂಡಿರುವುದುʼ ಕಂಡು ಬಂದಿದೆ. ಆದರೆ ಹೆಚ್ಚಿನ ಪರಿಶೀಲನೆ ನಡೆಸಿದಾಗ ಇದೊಂದು AI ರಚಿತ ವೀಡಿಯೊ ಎಂಬುದು ಬಹಿರಂಗವಾಗಿದೆ. Photo Credit : altnews.in Photo Credit : altnews.in ಮಾರ್ಚ್ 4 ರಂದು ವಿಶಾಖಪಟ್ಟಣದಲ್ಲಿ ನೌಕಾ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ ನಂತರ ಸುಮಾರು 130 ಸಿಬ್ಬಂದಿಯೊಂದಿಗೆ ಹಿಂದೂ ಮಹಾಸಾಗರದಲ್ಲಿ ತೆರಳುತ್ತಿದ್ದಾಗ ಇರಾನ್ ನೌಕಾಪಡೆಯ ಹಡಗು ಐರಿಸ್ ದೇನಾವನ್ನು ಶ್ರೀಲಂಕಾದ ದಕ್ಷಿಣ ಕರಾವಳಿಯ ಬಳಿ ಅಮೆರಿಕದ ಜಲಾಂತರ್ಗಾಮಿ ನೌಕೆ ಟಾರ್ಪಿಡೊ ದಾಳಿ ನಡೆಸಿ ಮುಳುಗುವಂತೆ ಮಾಡಿತ್ತು. ವೈರಲ್ ವೀಡಿಯೊದಲ್ಲೇನಿದೆ? ವೈರಲ್ ಆಗಿರುವ ವಿಡಿಯೋದಲ್ಲಿ ಭಾರತದ ಸೇನಾ ಮುಖ್ಯಸ್ಥ ಉಪೇಂದ್ರ ದ್ವಿವೇದಿ ಅವರದ್ದು ಎನ್ನಲಾದ ಮಾತುಗಳು ಈ ರೀತಿ ಇದೆ… “ನಾವು ಇರಾನ್ನ ಪರಿಸ್ಥಿತಿಯನ್ನು ಸಮೀಪದಿಂದ ಗಮನಿಸುತ್ತಿದ್ದೇವೆ. ಇಸ್ರೇಲ್ ನಮ್ಮ ಆಪ್ತ ಮೈತ್ರಿ ರಾಷ್ಟ್ರ. ಇರಾನ್ ನೌಕೆ ಮುಳುಗಿರುವುದು ನಿಜಕ್ಕೂ ದುರದೃಷ್ಟಕರ. ಈ ಘಟನೆ ಅಂತಾರಾಷ್ಟ್ರೀಯ ಜಲ ಪ್ರದೇಶದಲ್ಲಿ ನಡೆದಿದೆ. ಇರಾನಿನ ಹಡಗು ಭಾರತದ ಜಲಪ್ರದೇಶದಲ್ಲಿ ಸುರಕ್ಷಿತವಾಗಿತ್ತು. ಆದರೆ ಅದು ಅಂತಾರಾಷ್ಟ್ರೀಯ ಜಲಪ್ರದೇಶಕ್ಕೆ ಪ್ರವೇಶಿಸಿದ ಬಳಿಕ ಇಸ್ರೇಲ್ ಜೊತೆಗಿನ ಮೈತ್ರಿಯ ಭಾಗವಾಗಿ, ಅದರ ನಿಖರ ಸ್ಥಳವನ್ನು ತಿಳಿಸುವುದು ನಮ್ಮ ಕರ್ತವ್ಯವಾಗಿತ್ತು. ಇರಾನ್ ನೌಕೆಗಳು ಭಾರತೀಯ ಜಲಪ್ರದೇಶದಲ್ಲೇ ಮುಳುಗಡೆಯಾಗಿದೆ ಎಂದು ಭಾವಿಸುವುದು ತಪ್ಪು. ಅಂತಾರಾಷ್ಟ್ರೀಯ ಜಲಪ್ರದೇಶದಲ್ಲಿ ಇಸ್ರೇಲ್ ಏನು ಮಾಡುತ್ತದೆ ಎಂಬುದು ಅವರ ವಿಷಯ. ನಾವು ಅವರಿಗೆ ಸ್ಥಳ ಅಥವಾ ಗುಪ್ತಚರ ಮಾಹಿತಿ ನೀಡಬಹುದು. ಆದರೆ ಅಮೆರಿಕಾ-ಇಸ್ರೇಲ್ ನಡೆಸಿದ ಟಾರ್ಪಿಡೋ ದಾಳಿಯಲ್ಲಿ ನಮಗೆ ಯಾವುದೇ ಪಾತ್ರವಿಲ್ಲ. ಇದು ಇರಾನ್ನ ಯುದ್ಧ. ಭಾರತಕ್ಕೆ ಇದರಲ್ಲಿ ಯಾವುದೇ ಸಂಬಂಧವಿಲ್ಲ. ನಮ್ಮ ಗಮನ ಪಾಕಿಸ್ತಾನದ ಮೇಲೆ ಇದೆ. ಅದನ್ನು ಸಾಧಿಸಲು ಇಸ್ರೇಲ್ ನಮಗೆ ಸಹಾಯ ಮಾಡಲಿದೆ. ನಮಗೆ ರಶ್ಯಾದಿಂದ ತೈಲ ಆಮದು ಮಾಡಲು ಅನುಮತಿ ಪಡೆಯಲು ಸಹಾಯ ಮಾಡಿದ ಪ್ರಧಾನಮಂತ್ರಿ ಬೆಂಜಮಿನ್ ನೆತನ್ಯಾಹು ಅವರಿಗೆ ನಾವು ಕೃತಜ್ಞರಾಗಿದ್ದೇವೆ ಎಂದು ಹೇಳಲಾಗಿದೆ. ಮಾರ್ಚ್ 9ರಂದು ವೈರಲ್ ವೀಡಿಯೊವನ್ನು ಪೋಸ್ಟ್ ಮಾಡಲಾಗಿದೆ. ಇರಾನ್ನ ಹಡಗು ಇರುವ ಸ್ಥಳವನ್ನು ಇಸ್ರೇಲ್ಗೆ ಸೋರಿಕೆ ಮಾಡುವ ಮೂಲಕ ಭಾರತವು ಇರಾನ್ಗೆ ದ್ರೋಹ ಬಗೆದಿದೆ ಎಂದು ಒಪ್ಪಿಕೊಂಡಿದೆ. ಇದರಿಂದಲೇ ಹಡಗು ಸಂಪೂರ್ಣವಾಗಿ ನಾಶವಾಯಿತು ಎಂದು ವೀಡಿಯೊದಲ್ಲಿ ಹೇಳಲಾಗಿದೆ. Photo Credit : altnews.in ಈ ಪೋಸ್ಟ್ ಅನ್ನು 43,500ಕ್ಕೂ ಹೆಚ್ಚು ಜನರು ವೀಕ್ಷಿಸಿದ್ದಾರೆ ಮತ್ತು 400ಕ್ಕೂ ಹೆಚ್ಚು ಬಾರಿ ಮರುಹಂಚಿಕೊಳ್ಳಲಾಗಿದೆ. ವಾಸ್ತವವೇನು? ಈ ಕುರಿತು altnews.in ಪರಿಶೀಲನೆ ನಡೆಸಿದಾಗ ಇದು AI ರಚಿತ ವೀಡಿಯೊ ಎಂಬುದು ಬಹಿರಂಗವಾಗಿದೆ. YouTubeನಲ್ಲಿ ಕೀವರ್ಡ್ ಹುಡುಕಾಟ ನಡೆಸಿದಾಗ Firstpost ಪ್ರಕಟಿಸಿದ ಒಂದು ವಿಡಿಯೋ ಪತ್ತೆಯಾಗಿದೆ. “India’s Army Chief Speaks on Op Sindoor, Pakistan and Future of Warfare | Raisina Dialogue 2026” ಎಂಬ ಶೀರ್ಷಿಕೆಯ ಈ ವಿಡಿಯೋವನ್ನು ಮಾರ್ಚ್ 7ರಂದು ಅಪ್ಲೋಡ್ ಮಾಡಲಾಗಿತ್ತು ಎಂದು altnews ಹೇಳಿದೆ. Photo Credit : altnews.in ಈ 21 ನಿಮಿಷಗಳ ಸಂದರ್ಶನದಲ್ಲಿ ಉಪೇಂದ್ರ ದ್ವಿವೇದಿ ಅವರು ಹರ್ಷ್ ವಿ. ಪಂತ್ ಅವರೊಂದಿಗೆ ಆಪರೇಷನ್ ಸಿಂಧೂರ್ ಕುರಿತು ಪಾಠಗಳು ಮತ್ತು ಯುದ್ಧದ ಬದಲಾಗುತ್ತಿರುವ ಸ್ವರೂಪದ ಬಗ್ಗೆ ಚರ್ಚಿಸುತ್ತಾರೆ. ಈಗ ವೈರಲ್ ಆಗಿರುವ ಕ್ಲಿಪ್ ಇದೇ ಸಂದರ್ಶನದಿಂದ ತೆಗೆದುಕೊಳ್ಳಲಾಗಿದೆ. ಆದರೆ ಈ ಸಂಪೂರ್ಣ ಸಂದರ್ಶನದಲ್ಲಿ ಅಮೆರಿಕ-ಇಸ್ರೇಲ್-ಇರಾನ್ ಸಂಘರ್ಷ ಅಥವಾ ಹಿಂದೂ ಮಹಾಸಾಗರದಲ್ಲಿ ಇರಾನಿನ ಯುದ್ಧನೌಕೆ ಮುಳುಗಿರುವ ಬಗ್ಗೆ ಉಲ್ಲೇಖಿಸಲಾಗಿಲ್ಲ. ಆದ್ದರಿಂದ ಮೂಲ ಸಂದರ್ಶನದ ವೀಡಿಯೊವನ್ನು ತಪ್ಪು ಅರ್ಥ ಕಲ್ಪಿಸುವಂತೆ ಎಡಿಟ್ ಮಾಡಿರುವುದು ಸ್ಪಷ್ಟವಾಗಿದೆ ಎಂದು altnews ವರದಿ ಮಾಡಿದೆ. Photo Credit : altnews.in ಹೆಚ್ಚುವರಿಯಾಗಿ, ಮಾರ್ಚ್ 9ರಂದು, Press Information Bureau (ಪಿಐಬಿ) ಕೂಡ ಈ ಬಗ್ಗೆ ಫ್ಯಾಕ್ಟ್-ಚೆಕ್ ಮಾಡಿದ್ದು, ಇದು ಎಡಿಟೆಡ್ ವೀಡಿಯೊ ಎಂಬುದನ್ನು ಪತ್ತೆ ಹಚ್ಚಿದೆ.
ಮಾ.22: ಉಚಿತ ಆರೋಗ್ಯ ತಪಾಸಣೆ, ರಕ್ತದಾನ ಶಿಬಿರ
ಮಂಗಳೂರು: ನಗರದ ಬೆಂದೂರ್ ಸಂತ ಸೆಬಾಸ್ಟಿಯನ್ ಚರ್ಚ್ನ ಕ್ಯಾಥೋಲಿಕ್ ಆಕ್ಷನ್ ಲೀಗ್, ಆರೋಗ್ಯ ಆಯೋಗ, ಕುಟುಂಬ ಆಯೋಗ, ರಕ್ತದಾನಿಗಳ ಸಂಘ ಮಂಗಳೂರು ಮತ್ತು ಲಯನ್ಸ್ ಕ್ಲಬ್ ಬಿಜೈ ಇವುಗಳ ಸಂಯುಕ್ತ ಆಶ್ರಯದಲ್ಲಿ ಫಾದರ್ ಮುಲ್ಲರ್ ವೈದ್ಯಕೀಯ ಕಾಲೇಜು ಆಸ್ಪತ್ರೆ ಹಾಗೂ ಇಂಡಿಯನ್ ಕ್ಯಾನ್ಸರ್ ಸೊಸೈಟಿಯ ಸಹಯೋಗದೊಂದಿಗೆ ಮಾ.22ರಂದು ಉಚಿತ ಆರೋಗ್ಯ ತಪಾಸಣೆ ಮತ್ತು ರಕ್ತದಾನ ಶಿಬಿರ ನಡೆಯಲಿದೆ. ಬೆಂದೂರ್ ಶತಮಾನೋತ್ಸವ ಭವನದಲ್ಲಿ ಬೆಳಗ್ಗೆ 9ರಿಂದ ನಡೆಯುವ ಶಿಬಿರದಲ್ಲಿ 18 ವರ್ಷ ಪ್ರಾಯ ಮೇಲ್ಪಟ್ಟ ಮಹಿಳೆಯರಿಗೆ ಸ್ತನ ಕ್ಯಾನ್ಸರ್ ಮತ್ತು ಗರ್ಭಕಂಠದ ಕ್ಯಾನ್ಸರ್ ತಪಾಸಣೆಯಲ್ಲದೆ ಎಲುಬು ಮತ್ತು ಕೀಲು, ಕಿವಿ-ಮೂಗು-ಗಂಟಲು, ಚರ್ಮರೋಗ, ಪ್ರಸೂತಿ ಮತ್ತು ಸ್ತ್ರೀರೋಗ ವಿಭಾಗ, ಸಾಮಾನ್ಯ ಆರೋಗ್ಯ ತಪಾಸಣೆಗಳು ಲಭ್ಯವಿದೆ. ಸಮಾಜದ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ರಕ್ತದಾನ ಶಿಬಿರವನ್ನೂ ಆಯೋಜಿಸಲಾಗಿದ್ದು, 18 ರಿಂದ 55 ವರ್ಷ ವಯಸ್ಸಿನ ಆರೋಗ್ಯವಂತ ನಾಗರಿಕರು ರಕ್ತದಾನ ಮಾಡಿ ಸಹಕರಿಸಬಹುದು ಎಂದು ಪ್ರಕಟನೆ ತಿಳಿಸಿದೆ.
ಪಿಜಿ ಸಿಇಟಿ-2026 ಪರೀಕ್ಷೆಗೆ ಆನ್ಲೈನ್ ಮೂಲಕ ಅರ್ಜಿ ಆಹ್ವಾನ
ಬೆಂಗಳೂರು : ಕರ್ನಾಟಕ ಪರೀಕ್ಷಾ ಪ್ರಾಧಿಕಾರವು 2026-27ನೆ ಸಾಲಿನ ಎಂಬಿಎ, ಎಂಸಿಎ, ಎಂಇ, ಎಂ.ಟೆಕ್, ಎಂ.ಆರ್ಕಿಟೆಕ್ಚರ್ ಕೋರ್ಸುಗಳ ಪ್ರವೇಶಕ್ಕಾಗಿ ನಡೆಸುವ ಪಿಜಿ ಸಿಇಟಿ-2026 ಪರೀಕ್ಷೆಗೆ ಆನ್ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಮಾ.23ರಿಂದ ಎ.8ರೊಳಗೆ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಶುಲ್ಕ ಪಾವತಿಗೆ ಎ.10 ಕೊನೆ ದಿನವಾಗಿದೆ. ರವಿವಾರ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ಪ್ರಕಟನೆ ಹೊರಡಿಸಿದ್ದು, ಎಂಇ, ಎಂಟೆಕ್ ಪ್ರವೇಶ ಪರೀಕ್ಷೆಯನ್ನು ಸಿವಿಲ್ ಇಂಜಿನಿಯರಿಂಗ್, ಕಂಪ್ಯೂಟರ್ ಇಂಜಿನಿಯರಿಂಗ್, ಮೆಕಾನಿಕಲ್ ಇಂಜಿನಿಯರಿಂಗ್ ಮತ್ತು ಎಲೆಕ್ಟ್ರಾನಿಕ್ ಇಂಜಿನಿಯರಿಂಗ್ ವಿಷಯಗಳಿಗೆ ಮಾತ್ರ ನಡೆಸಲಾಗುತ್ತದೆ ಎಂದು ತಿಳಿಸಿದ್ದಾರೆ. ಬಯೋ ಟೆಕ್ನೋಲಾಜಿ, ಕೆಮಿಕಲ್ ಇಂಜಿನಿಯರಿಂಗ್, ಎನ್ವಿರಾನ್ಮೆಂಟ್ ಇಂಜಿನಿಯರಿಂಗ್, ಪಾಲಿಮರ್ ಸೈನ್ಸ್ ಮತ್ತು ಟೆಕ್ಟ್ಟೈಲ್ ಟೆಕ್ನಾಲಾಜಿಗೆ ಪರೀಕ್ಷೆಯನ್ನು ನಡೆಸುವುದಿಲ್ಲ. ಈ ವಿಷಯಗಳಿಗೆ ಪ್ರವೇಶಾತಿಯನ್ನು ಆಯಾ ಪದವಿ ಪರೀಕ್ಷೆಗಳಲ್ಲಿ ಪಡೆದ ಅಂಕಗಳ ಆಧಾರದ ಮೇಲೆ ನೀಡಲಾಗುತ್ತದೆ. ಅಭ್ಯರ್ಥಿಗಳ ಮಾಹಿತಿಗಾಗಿ ಪರೀಕ್ಷೆ ನಡೆಸುವ ವಿಷಯಗಳ ಪಠ್ಯಕ್ರಮವನ್ನು ಪ್ರಾಧಿಕಾರದ ವೆಬ್ ಸೈಟಿನಲ್ಲಿ ಪ್ರಕಟಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. ಎಂ.ಆರ್ಕಿಟೆಕ್ಟರ್ ಕೋರ್ಸುಗಳ ಪ್ರವೇಶಾತಿಗೆ ಅಭ್ಯರ್ಥಿಗಳು ಕೌನ್ಸಿಲ್ ಆಫ್ ಆಕಿಟೆಕ್ಟರ್, ನವದೆಹಲಿ ರವರು ನಡೆಸುವ ಪಿಜಿಇಟಿಎ-2026 ರಲ್ಲಿ ಅರ್ಹತೆ ಪಡೆದಿರಬೇಕು. ಆದರೆ ಅಭ್ಯರ್ಥಿಗಳು ಕರ್ನಾಟಕದ ಪಿಜಿಸಿಇಟಿ-2026ಕ್ಕೆ ಆನ್ಲೈನ್ ಮೂಲಕ ನೊಂದಾಯಿಸಿ ಕೊಂಡು, ಆನ್ಲೈನ್ ಅರ್ಜಿ ಸಲ್ಲಿಸಿ, ಅರ್ಜಿ ಶುಲ್ಕ ಪಾವತಿಸುವುದು ಕಡ್ಡಾಯವಾಗಿರುತ್ತದೆ ಎಂದು ಅವರು ಹೇಳಿದ್ದಾರೆ. ಇಂಜಿನಿಯರಿಂಗ್ ಹಾಗು ಟೆಕ್ನಾಲಜಿ ವಿಭಾಗದಲ್ಲಿ ಗೇಟ್ ಪರೀಕ್ಷೆಯಲ್ಲಿ ಅರ್ಹತೆ ಪಡೆದಿರುವ ಅಭ್ಯರ್ಥಿಗಳು ಮಾತ್ರ ವಿಟಿಯು, ಬೆಳಗಾವಿ ಅಡಿಯಲ್ಲಿನ ವಿವಿಧ ಎಂ.ಟೆಕ್ ಕೋರ್ಸುಗಳಿಗೆ ಪ್ರವೇಶ ಪಡೆಯಲು ಅರ್ಹರಾಗುತ್ತಾರೆ. ಗೇಟ್ ಪರೀಕ್ಷೆಯಲ್ಲಿ ಮಾನ್ಯತೆ ಅಂಕಗಳನ್ನು ಹೊಂದಿರುವವರು ಎಂಇ / ಎಂ.ಟೆಕ್ / ಎಂ. ಆರ್ಕ್ ಕೋರ್ಸ್ಗಳ ಪ್ರವೇಶಕ್ಕಾಗಿ, ಪಿಜಿಸಿಇಟಿ-2026ಕ್ಕೆ ಹಾಜರಾಗಬೇಕಾಗಿರುವುದಿಲ್ಲ. ಆದರೆ ಅಂತಹ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿಗಳನ್ನು ಭರ್ತಿ ಮಾಡಿ ಶುಲ್ಕವನ್ನು ಪಾವತಿಸಿ ಪ್ರವೇಶಕ್ಕೆ ಅರ್ಹರಾಗಬಹುದು ಎಂದು ಎಚ್.ಪ್ರಸನ್ನ ಹೇಳಿದ್ದಾರೆ. ಪಿಜಿಸಿಇಟಿ-2026 ಇ-ಮಾಹಿತಿ ಬುಲೆಟಿನ್ ನಲ್ಲಿ ನಿರ್ದಿಷ್ಟಪಡಿಸಿರುವ ಯಾವುದೇ ಅರ್ಹತಾ ಷರತ್ತುಗಳನ್ನು ಪೂರೈಸದ ಅಭ್ಯರ್ಥಿಗಳನ್ನು ಅನ್ಯರಾಜ್ಯದ ಅಭ್ಯರ್ಥಿಗಳು ಎಂದು ಪರಿಗಣಿಸಲಾಗುತ್ತದೆ. ಇಂತಹ ಅಭ್ಯರ್ಥಿಗಳು ಎಂಬಿಎ, ಎಂಸಿಎ ಕೋರ್ಸುಗಳಿಗೆ ಆಡಳಿತ ಮಂಡಳಿಯವರು ಸರಕಾರಕ್ಕೆ ಬಿಟ್ಟು ಕೊಡುವ ಸೀಟುಗಳಿಗೆ ಮಾತ್ರ ಪ್ರವೇಶ ಪಡೆಯಬಹುದು. ಎಸ್ಸಿ,ಎಸ್ಟಿ,ಒಬಿಸಿ ಅರ್ಹತಾ ಮಾನದಂಡಗಳು ಕರ್ನಾಟಕದ ಎಸ್ಸಿ,ಎಸ್ಟಿ,ಒಬಿಸಿ ಅಭ್ಯರ್ಥಿಗಳಿಗೆ ಮಾತ್ರ ಅನ್ವಯಿಸುತ್ತದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಹೆಚ್ಚಿನ ವಿವರಗಳಿಗಾಗಿ https://cetonline.karnataka.gov.in/kea/ ಗೆ ಸಂಪರ್ಕಿಸಬಹುದಾಗಿದೆ. ಪರೀಕ್ಷೆಯ ವೇಳಾಪಟ್ಟಿ: ಮೇ 23 ಮತ್ತು 24ಕ್ಕೆ ಪರೀಕ್ಷೆ: ಮೇ 23ರ ಮಧ್ಯಾಹ್ನ 2.30ರಿಂದ ಸಂಜೆ 4.30ರವರೆಗೆ ಎಂ.ಇ. ಮತ್ತು ಎಂ.ಟೆಕ್. ಪರೀಕ್ಷೆಗಳು, ಮೇ 24ರ ಬೆಳಗ್ಗೆ 10.30ರಿಂದ ಮಧ್ಯಾಹ್ನ 12.30ರವರೆಗೆ ಎಂಸಿಎ ಪರೀಕ್ಷೆ ಮತ್ತು ಮಧ್ಯಾಹ್ನ 2.30ರಿಂದ ಸಂಜೆ 4.30ರವರೆಗೆ ಎಂಬಿಎ ಪರೀಕ್ಷೆಯನ್ನು ನಡೆಸಲಾಗುತ್ತದೆ. 100 ಅಂಕಗಳಿಗೆ ಪರೀಕ್ಷೆಯನ್ನು ನಡೆಸಲಾಗುತ್ತಿದ್ದು, ಪ್ರಶ್ನೆಪತ್ರಿಕೆಗಳು ವಸ್ತುನಿಷ್ಟ ಬಹು ಆಯ್ಕೆ ಮಾದರಿಯಾಗಿರುತ್ತದೆ.
ಕಲಬುರಗಿ | ಮಹಿಳಾಪರ ಚಿಂತನೆಗಳಿಂದ ಸಮ ಸಮಾಜ ನಿರ್ಮಾಣ ಸಾಧ್ಯ : ಸಂತೋಷಿರಾಣಿ
ಕಲಬುರಗಿ: ಮಹಿಳಾಪರ ಚಿಂತನೆಗಳಿಂದ ಸಮ ಸಮಾಜ ನಿರ್ಮಾಣ ಸಾಧ್ಯ ಎಂದು ಜಿಲ್ಲಾ ಬಿಜೆಪಿ ಉಪಾಧ್ಯಕ್ಷೆ ಸಂತೋಷಿರಾಣಿ ಪಾಟೀಲ ತೆಲ್ಕೂರ ಹೇಳಿದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಕಸಾಪ ದಕ್ಷಿಣ ವಲಯದ ಆಶ್ರಯದಲ್ಲಿ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ ಪ್ರಯುಕ್ತ ʼಮಹಿಳೆ ನಿನ್ನಿಂದಲೇ ಈ ಇಳೆʼ ಎಂಬ ಮಹಾಘೋಷವಾಕ್ಯದೊಂದಿಗೆ ಜಿಲ್ಲೆಯ ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಪ್ರಮುಖ ಮಹಿಳಾ ಸಾಧಕರಿಗೆ ಜಗದ ಕಣ್ಣು ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಮಕ್ಕಳಿಗೆ ಶಿಕ್ಷಣದ ಮೂಲಕ ಸಂಸ್ಕಾರ ನೀಡುವವಳು ಹೆಣ್ಣು. ಅವಳು ತಾಯಿಯಾಗಿ, ಮಗಳಾಗಿ ಹಾಗೂ ಸೊಸೆಯಾಗಿ ಸಮಾಜ ಜವಾಬ್ದಾರಿ ನಿರ್ವಹಿಸಿರುತ್ತಾಳೆ. ಸೊಸೆಯನ್ನು ಮಗಳಂತೆ ಹಾಗೂ ಅತ್ತೆಯನ್ನು ತಾಯಿಯಂತೆ ಕಾಣುವ ನೋಟ ಅಳವಡಿಸಿಕೊಳ್ಳಬೇಕು. ನಿಜವಾಗಿಯೂ ಮಹಿಳೆ ಜಗದ ಕಣ್ಣು ಇದ್ದಂತೆ. ಆದರೆ ಕಣ್ತೆರೆಸುವ ವ್ಯವಸ್ಥೆ ಬದಲಾಗಬೇಕಾಗಿದೆ ಎಂದರು. ಪ್ರಶಸ್ತಿ ಪ್ರದಾನ ಮಾಡಿದ ಮಹಾನಗರ ಪಾಲಿಕೆ ಉಪ ಆಯುಕ್ತರಾದ ಪ್ರಮೀಳಾ ಪೆರ್ಲ, ಪ್ರತಿ ಕ್ಷೇತ್ರಗಳಲ್ಲಿ ಪ್ರಗತಿ ಹೊಂದುತ್ತಿರುವ ಮಹಿಳೆಯರಿಂದ ಸಮ ಸಮಾಜ ಕಟ್ಟಲು ಸಾಧ್ಯ. ಮಹಿಳೆಯು ಇಂದು ಹೊಸ ಸಂವೇದನಾಶೀಲ ಬದುಕನ್ನು ಕಟ್ಟಿಕೊಂಡು ಅದನ್ನು ಸಮರ್ಥವಾಗಿ ನಿಭಾಯಿಸಬಲ್ಲಳು. ಪುರುಷರಷ್ಟೇ ಸಮಾನಳಾಗಿ ಮೇಲುಗೈ ಸಾಧಿಸುತ್ತಿದ್ದಾಳೆ ಎಂದರು. ಶರಣ ಲೇಖಕಿ ಡಾ. ಶಿವಲೀಲಾ ಚಟ್ನಳ್ಳಿ, ರಾಜ್ಯಮಟ್ಟದ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ ಪುರಸ್ಕೃತೆ ಅನ್ನಪೂರ್ಣ ಸಂಗೋಳಗಿ, ಸಾಮಾಜಿಕ ಚಿಂತಕಿ ಕು. ಮಾಲಾ ದಣ್ಣೂರ, ವಾಪಿ ಕನ್ನಡ ಸಂಘದ ಕಾರ್ಯದರ್ಶಿ ಪರಮೇಶ್ವರ ಬೆಳಮಗಿ, ಕಸಾಪ ದಕ್ಷಿಣ ವಲಯ ಅಧ್ಯಕ್ಷ ರವಿಕುಮಾರ ಶಹಾಪೂರಕರ್, ಜಿಲ್ಲಾ ಕಸಾಪ ದ ಶಿವರಾಜ ಅಂಡಗಿ, ಧರ್ಮಣ್ಣ ಎಚ್ ಧನ್ನಿ, ಶರಣರಾಜ ಛಪ್ಪರಬಂದಿ, ಧರ್ಮರಾಜ ಜವಳಿ, ಮಲ್ಲಿನಾಥ ಸಂಗಶೆಟ್ಟಿ, ಮಂಜುನಾಥ ಕಂಬಾಳಿಮಠ, ದಿನೇಶ ಮದಕರಿ, ರಾಜೇಂದ್ರ ಮಾಡಬೂಳ, ಹಣಮಂತರಾವ ಪೆಂಚನಪಳ್ಳಿ, ವೆಂಕುಬಾಯಿ ರಜಪೂತ, ಮಾಣಿಕಮ್ಮಾ ಜಮಾದಾರ ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಕಸಾಪ ಜಿಲ್ಲಾಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ, ಮಹಿಳೆಯು ತ್ಯಾಗ ಜೀವಿಯಾಗಿದ್ದು, ಯಾವ ಕುಟುಂಬದಲ್ಲಿ ಮಹಿಳೆ ಪೂಜಿಸುತ್ತಾಳವೋ ಅಂತಹ ಮನೆಯಲ್ಲಿ ದೇವರು ಸದಾ ನೆಲೆಸಿರುತ್ತಾನೆ. ಆದ್ದರಿಂದ ಮಹಿಳೆಯರನ್ನು ಗೌರವಿಸುವ ಕಾರ್ಯವಾಗಬೇಕು ಎಂದರು. ಮಹಿಳಾ ಕ್ಷೇತ್ರದಲ್ಲಿ ಅನುಪಮ ಸೇವೆ ಸಲ್ಲಿಸಿದ ಮಹನೀಯರಾದ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷೆ ಶಶಿಕಲಾ ಟೆಂಗಳಿ, ಮಾಜಿ ಮೇಯರ್ ಮಲ್ಲಮ್ಮ ವಳಕೇರಿ, ಶೀಲಾವತಿ ಭೀಮರಾವ ಟಿ.ಟಿ., ಆದರ್ಶ ಶಿಕ್ಷಕಿ ಆರತಿ ಬಳಗಾರ, ಚಿಂಚೋಳಿ ಪುರಸಭೆ ಮಾಜಿ ಅಧ್ಯಕ್ಷೆ ಜಗದೇವಿ ಗಡಂತಿ, ಮನೋಶಾಸ್ತçಜ್ಞೆ ಡಾ. ರೇಣುಕಾ ಬಗಾಲೆ, ಜಿಪಂ ನ ಮಾಜಿ ಸದಸ್ಯೆ ಸುನಂದಾ ರವಿರಾಜ ಕೊರವಿ, ಸಾಂಸ್ಕೃತಿಕ ಸಂಘಟಕಿ ಶ್ವೇತಾ ಪಾಟೀಲ ಅವರನ್ನು ಜಗದ ಕಣ್ಣು ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಕವಿ ಕಂಡ ಯುಗಾದಿ ವಿಶೇಷ ಕವಿಗೋಷ್ಠಿ : ಕವಿ ಕಂಡ ಯುಗಾಗಿ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ಕಥೆಗಾರ ಸಿ.ಎಸ್.ಆನಂದ, ಕವಿಗಳು, ಸಾಹಿತಿಗಳು ಸುಮ್ಮನೆ ಕಾವ್ಯ ರಚಿಸದೆ ಸಾಮಾಜಿಕ ಜವಾಬ್ದಾರಿಯೊಂದಿಗೆ ಕಾಲದ ದನಿಯಾಗಬೇಕಾಗಿದೆ. ಕವಿತೆ ರಚಿಸುವುದು ಕೇವಲ ಕವಿಯ ಭಾವನೆಗಳ ಅಭಿವ್ಯಕ್ತಿಯಲ್ಲ. ಅದೊಂದು ಕ್ಲಿಷ್ಟಕರವಾದ ಸೃಜನಾತ್ಮಕ ಪ್ರಕ್ರಿಯೆ. ಕವಿ ಸಮಾಜದ ಒಂದು ಭಾಗವಾಗಿರುವುದರಿಂದ ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಆಶಯಗಳನ್ನು ಸಂರಕ್ಷಿಸುವ ಹೊಣೆಗಾರಿಕೆಯನ್ನು ತಮ್ಮ ಹೆಗಲ ಮೇಲೆ ಹೊತ್ತುಕೊಳ್ಳಬೇಕು ಎಂದರು. ಕವಿಗಳಾದ ಪ್ರಭು ನಿಷ್ಠಿ ನಿಡಗುಂದಾ, ಶಕುಂತಲಾ ಪಾಟೀಲ ಜಾವಳಿ, ಜಯಶ್ರೀ ಜಮಾದಾರ, ಅಶ್ವಿನಿ ಎಂ ಪಾಟೀಲ, ವಿದ್ಯಾಧರ ಕಾಂಬಳೆ, ಶರಣು ಅತನೂರ, ಭೀಮರಾಯ ಹೇಮನೂರ, ಜ್ಯೋತಿ ಪಾಟೀಲ, ಶ್ರೀದೇವಿ ಪೊಲೀಸ್ ಪಾಟಖೀಲ, ಕವಿತಾ ಪಿ ಮೋರಾ ಅವರು ವರ್ತಮಾನಕ್ಕೆ ಸ್ಪಂದಿಸುವ ಕವಿತೆಗಳು ವಾಚಿಸಿ ಪ್ರೇಕ್ಷಕರ ಗಮನ ಸೆಳೆದರು.
ಮಂಗಳೂರು ಸಿಸಿಬಿ ಪೊಲೀಸರ ಕಾರ್ಯಾಚರಣೆ: ತಲೆಮರೆಸಿಕೊಂಡಿದ್ದ ಆರೋಪಿ ಸೆರೆ
ಮಂಗಳೂರು, ಮಾ.21: ಹಲವು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದು, ವಿಚಾರಣೆ ವೇಳೆ ನ್ಯಾಯಾಲಯಕ್ಕೆ ಹಾಜರಾಗದೆ ಎರಡು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಕುತ್ತಾರ್ ಸಮೀಪದ ನಿವಾಸಿ ಫರಾಝ್ ಯಾನೆ ಮುಹಮ್ಮದ್ ಫರಾಝ್ (32) ಎಂಬಾತನನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಈತನ ವಿರುದ್ಧ ಉಳ್ಳಾಲ ಠಾಣೆಯಲ್ಲಿ ಕೊಲೆಯತ್ನ, ದರೋಡೆ, ಹಲ್ಲೆ, ಕಳವು ಸಹಿತ 4, ಕೊಣಾಜೆ ಠಾಣೆಯಲ್ಲಿ ಹಲ್ಲೆ, ಬೆದರಿಕೆ, ಕಳವು ಸಹಿತ 2, ಬಂದರ್ ಠಾಣೆಯಲ್ಲಿ ಹಲ್ಲೆ, ಬೆದರಿಕೆ, ಅಪಹರಣ, ದರೋಡೆಗೆ ಸಹಿತ 2, ಬರ್ಕೆ ಠಾಣೆ ಯಲ್ಲಿ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿಪಡಿಸಿ ಕೊಲೆಯತ್ನ ಸಹಿತ 1, ಉರ್ವ ಠಾಣೆಯಲ್ಲಿ ಮಾದಕ ವಸ್ತು ಮಾರಾಟಕ್ಕೆ ಸಂಬಂಧಿಸಿ 1 ಸಹಿತ ಒಟ್ಟು 10 ಪ್ರಕರಣಗಳು ದಾಖಲಾಗಿವೆ. ನ್ಯಾಯಾಲಯದಿಂದ ಜಾಮೀನಿನ ಮೇಲೆ ಬಿಡುಗಡೆಯಾದ ನಂತರ ವಿಚಾರಣೆಗೆ ಹಾಜರಾಗದೆ ಈತ ತಲೆಮರೆಸಿಕೊಂಡಿದ್ದ. ಉಳ್ಳಾಲ ಪೊಲೀಸ್ ಠಾಣೆಯ ರೌಡಿಶೀಟರ್ ಆಗಿರುವ ಈತನ ವಿರುದ್ಧ 6 ವಾರಂಟ್ಗಳು ಮತ್ತು 1 ಪ್ರೊಕ್ಲಮೇಶನ್ ಜಾರಿಯಲ್ಲಿದೆ. ಬಂಧಿತ ಆರೋಪಿಯನ್ನು ಮುಂದಿನ ಕಾನೂನು ಕ್ರಮಕ್ಕಾಗಿ ಉರ್ವ ಪೊಲೀಸ್ ಠಾಣೆಗೆ ಹಸ್ತಾಂತರಿ ಸಲಾಗಿದೆ. ಆರೋಪಿ ಪತ್ತೆ ಕಾರ್ಯದಲ್ಲಿ ಸಿಸಿಬಿ ಘಟಕದ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗ ಪಾಲ್ಗೊಂಡಿತ್ತು.
ಇರಾನ್ ನಿಷ್ಠಾವಂತ ಸ್ನೇಹಿತ; ವಿಶ್ವಾಸಾರ್ಹ ಪಾಲುದಾರ: ಬೆಂಬಲ ದೃಢೀಕರಿಸಿದ ರಷ್ಯ
ಮಾಸ್ಕೊ: ಅಮೆರಿಕದೊಂದಿಗಿನ ಯುದ್ಧದಲ್ಲಿ ಇರಾನ್ಗೆ ರಷ್ಯದ ಬೆಂಬಲವನ್ನು ರಷ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಶನಿವಾರ ಸಾರ್ವಜನಿಕವಾಗಿ ದೃಢಪಡಿಸಿದ್ದಾರೆ. ಇರಾನ್ನ ಹೊಸ ವರ್ಷ ನೌರುಜ್ನ ಸಂದರ್ಭ ಸರ್ವೋಚ್ಛ ನಾಯಕ ಮೊಜ್ತಬಾ ಖಾಮಿನೈ ಹಾಗೂ ಅಧ್ಯಕ್ಷ ಮಸೂದ್ ಪೆಝೆಷ್ಕಿಯಾನ್ಗೆ ಶುಭಾಶಯ ಸಲ್ಲಿಸಿರುವ ಪುಟಿನ್ `ಕಠಿಣ ಪರೀಕ್ಷೆಯನ್ನು' ಸಹಿಸಿಕೊಳ್ಳುವಲ್ಲಿ ಇರಾನ್ನ ಜನತೆಗೆ ಶಕ್ತಿಯನ್ನು ಬಯಸುವುದಾಗಿ ಹೇಳಿದ್ದಾರೆ. ಈ ಕಠಿಣ ಸಮಯದಲ್ಲಿ ರಷ್ಯವು ಇರಾನ್ನ ನಿಷ್ಠಾವಂತ ಸ್ನೇಹಿತ ಮತ್ತು ಪ್ರಾಮಾಣಿಕ ಪಾಲುದಾರನಾಗಿ ಉಳಿಯುತ್ತದೆ ಎಂದು ಪುಟಿನ್ರನ್ನು ಉಲ್ಲೇಖಿಸಿ ರಷ್ಯದ ಮಾಧ್ಯಮಗಳು ವರದಿ ಮಾಡಿವೆ. ಇರಾನ್ಗೆ ರಷ್ಯದ ಪ್ರಾಯೋಗಿಕ ಬೆಂಬಲದ ವ್ಯಾಪ್ತಿಯ ಬಗ್ಗೆ ಚರ್ಚೆಯು ತೀವ್ರಗೊಳ್ಳುತ್ತಿರುವ ಸಂದರ್ಭದಲ್ಲೇ ಪುಟಿನ್ ಅವರ ಹೇಳಿಕೆ ಹೊರಬಿದ್ದಿದೆ. ಇರಾನ್ನ ಮೇಲಿನ ಇತ್ತೀಚಿನ ಇಸ್ರೇಲ್ ಮತ್ತು ಅಮೆರಿಕದ ದಾಳಿಯು ವಿಶಾಲ ಮಧ್ಯಪ್ರಾಚ್ಯವನ್ನು ಪ್ರಪಾತದ ಅಂಚಿಗೆ ತಳ್ಳುತ್ತಿದೆ ಮತ್ತು ವ್ಯಾಪಕ ಜಾಗತಿಕ ಇಂಧನ ಬಿಕ್ಕಟ್ಟಿಗೆ ಪ್ರೋತ್ಸಾಹ ನೀಡುತ್ತಿದೆ ಎಂದು ರಷ್ಯ ಆರೋಪಿಸಿದೆ. ಈ ಮಧ್ಯೆ, ಅಮೆರಿಕವು ರಷ್ಯದ ಕುರಿತ ಗುಪ್ತಚರ ಮಾಹಿತಿಯನ್ನು ಉಕ್ರೇನ್ಗೆ ಒದಗಿಸುವುದನ್ನು ನಿಲ್ಲಿಸಿದರೆ, ಅಮೆರಿಕ ಕುರಿತ ಗುಪ್ತಚರ ಮಾಹಿತಿಯನ್ನು ಇರಾನ್ಗೆ ಒದಗಿಸುವುದನ್ನು ನಿಲ್ಲಿಸುವುದಾಗಿ ರಷ್ಯ ಪ್ರಸ್ತಾಪಿಸಿದೆ ಎಂದು `ಪೊಲಿಟಿಕೊ' ವರದಿ ಮಾಡಿದೆ.
ಸಾರಿಗೆ ಬಸ್ ದರ ಏರಿಕೆ ಮಾಡುವುದಿಲ್ಲ: ಸಚಿವ ರಾಮಲಿಂಗಾರೆಡ್ಡಿ ಸ್ಪಷ್ಟನೆ
ಬೆಂಗಳೂರು : ಪೆಟ್ರೋಲ್ ಮತ್ತು ಡೀಸೆಲ್ ಸೇರಿದಂತೆ ತೈಲೋತ್ಪನ್ನಗಳ ಬೆಲೆ ಏರಿಕೆಯಾಗಿದ್ದರೂ ರಾಜ್ಯದಲ್ಲಿ ಕೆಎಸ್ಸಾರ್ಟಿಸಿ, ಬಿಎಂಟಿಸಿ ಸೇರಿದಂತೆ ಸಾರಿಗೆ ಬಸ್ ಟಿಕೆಟ್ ದರವನ್ನು ಹೆಚ್ಚಿಸುವುದಿಲ್ಲ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಇಂದಿಲ್ಲಿ ಸ್ಪಷ್ಟಪಡಿಸಿದ್ದಾರೆ. ಶನಿವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಟಿಕೆಟ್ ದರ ಏರಿಸಲು ಸದ್ಯಕ್ಕೆ ಅಧಿಕಾರವಿಲ್ಲ. ಬಸ್ ಪ್ರಯಾಣ ದರ ಹೆಚ್ಚಳದ ನಿರ್ಧಾರವನ್ನು ತಿರಸ್ಕರಿಸಿದ್ದಾರೆ. ಇಂಧನ ಬೆಲೆ ಏರಿಕೆಗೆ ಜಾಗತಿಕ ಯುದ್ಧದ ಪರಿಸ್ಥಿತಿಯೇ ಕಾರಣವಾಗಿದೆ ಎಂದರು. ಅಮೆರಿಕ-ಇಸ್ರೇಲ್ ಹಾಗೂ ಇರಾನ್ ನಡುವಿನ ಯುದ್ಧ ಸ್ಥಗಿತಗೊಂಡರೆ ತೈಲೋತ್ಪನ್ನಗಳ ಬೆಲೆಗಳು ತಾನಾಗಿಯೇ ಕಡಿಮೆಯಾಗುತ್ತವೆ ಎಂದ ರಾಮಲಿಂಗಾರೆಡ್ಡಿ, ಹಿಂದಿನ ದಿನಗಳಲ್ಲಿ ಕಚ್ಚಾ ತೈಲದ ಬೆಲೆ ಕಡಿಮೆ ಇದ್ದಾಗಲೂ ಕೇಂದ್ರ ಸರಕಾರ ಜನರಿಗೆ ಯಾವುದೇ ನೆರವು ನೀಡಲಿಲ್ಲ ಎಂದು ಅವರು ಟೀಕಿಸಿದರು.
ಮತದಾರರು ಎಸ್ಐಆರ್ ಬಗ್ಗೆ ತಿಳಿದುಕೊಳ್ಳುವುದು ಅತೀ ಮುಖ್ಯ: ವಿನಯ್ ಕುಮಾರ್ ಸೊರಕೆ
ಉಡುಪಿ, ಮಾ.21: ಜಿಲ್ಲಾ ಪಂಚಾಯತ್ ಹಾಗೂ ತಾಲೂಕು ಪಂಚಾಯತ್ ಚುನಾವಣೆಗಳು ಶೀಘ್ರ ಬರುವುದರಿಂದ ಕೇಂದ್ರ ಸರಕಾರ ತಂದ ಎಸ್ಐಆರ್ ಕಾಯ್ದೆ ಬಗ್ಗೆ ಜಾಗೃತರಾಗಿರಬೇಕು. ಪ್ರಜಾಪ್ರಭುತ್ವ ಉಳಿಯ ಬೇಕಾದರೆ ಪ್ರತಿಯೊಬ್ಬ ನಾಗರಿಕನು ತನ್ನ ಹೆಸರು ಮತದಾರರ ಪಟ್ಟಿಯಲ್ಲಿದೆ ಎಂದು ಪರಿಶೀಲಿಸಿಕೊಳ್ಳುವ ಕಾಲ ಬಂದಿದೆ. ಈಗ ದಾಖಲೆ ಪರಿಶೀಲನೆ ಎಂಬ ಹೆಸರಿನಲ್ಲಿ ಮತದಾರರ ಪಟ್ಟಿಯಿಂದ ಹೆಸರನ್ನು ಅಳಿಸುವ ಕೆಲಸ ನಡೆಯುತ್ತಿದೆ ಎಂದು ಕೆಪಿಸಿಸಿ ಪ್ರಚಾರ ಸಮಿತಿಯ ಅಧ್ಯಕ್ಷ ಹಾಗೂ ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಹೇಳಿದ್ದಾರೆ. ಉಡುಪಿ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ನಡೆದ ಜಿಲ್ಲಾ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಅವರು ಮಾತನಾಡುತಿದ್ದರು. ಸರಕಾರದ ಅನುದಾನದಿಂದ ನಡೆಯುವ ಯೋಜನೆಗಳನ್ನು ಬಿಜೆಪಿ ಮುಖಂಡರು ತಮ್ಮದೇ ನೇತೃತ್ವದ ನಡೆಯುವ ಕಾರ್ಯಕ್ರಮ ಎಂದು ಬಿಂಬಿಸುವ ಪ್ರಯತ್ನ ನಡೆದಿದೆ. ಈ ಕುರಿತು ಜನತೆ ಎಚ್ಚರವಾಗಿರಬೇಕು ಎಂದರು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಅಶೋಕ್ ಕುರ್ಮಾ ಕೊಡವೂರು ಮಾತನಾಡುತ್ತಾ ನೊಂದಾಯಿತರಾದವರಿಗೆ ತಿಳುವಳಿಕೆ ಮೂಡಿಸಲು ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗುವುದ್ದು ಕಾಯಿದೆಯನ್ನು ಸಂಪೂರ್ಣವಾಗಿ ಅರಿತುಕೊಂಡು ನಮ್ಮ ಮತದಾರರ ಹಕ್ಕನ್ನು ಉಳಿಸುವಂತೆ ಮಾಡಬೇಕು ಎಂದರು. ಮುಖಂಡರಾದ ಪ್ರಸಾದ್ ರಾಜ್ ಕಾಂಚನ್ ಮಾತನಾಡಿ ಕೆಂದ್ರ ಸರಕಾರವು ಮತದಾನದ ಹಕ್ಕನ್ನು ಕಸಿಯುವ ಯೋಜನೆ ರೂಪಿಸಿದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬ ನಾಗರಿಕನೂ ಮತದಾರರ ಪಟ್ಟಿಯಲ್ಲಿ ತನ್ನ ಹೆಸರು ಇದೆಯೇ ಎಂಬುವುದನ್ನು ಪರಿಶೀಲಿಸುವುದು ಅಗತ್ಯ ಎಂದರು. ಸಭೆಯಲ್ಲಿ ಕಾರ್ಯಾಧ್ಯಕ್ಷ ಕಿಶನ್ ಹೆಗ್ಡೆ ಕೊಳ್ಕೆಬೈಲು, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನಕರ ಹೇರೂರು, ಮುಖಂಡರಾದ ಮಲ್ಯಾಡಿ ಶಿವರಾಂ ಶೆಟ್ಟಿ, ರಾಜು ಪೂಜಾರಿ, ದಿನೇಶ್ ಪುತ್ರನ್, ಬಿ.ನರಸಿಂಹ ಮೂರ್ತಿ, ನೀರೆ ಕೃಷ್ಣಶೆಟ್ಟಿ, ಹಿರಿಯಣ್ಣ, ನವೀನ್ಚಂದ್ರ ಶೆಟ್ಟಿ, ಹರೀಶ್ ಕಿಣಿ, ದೇವಕಿ ಸಣ್ಣಯ್ಯ, ಭುಜಂಗ ಶೆಟ್ಟಿ, ಗೋಪಿನಾಥ್ ಭಟ್, ಹರಿಪ್ರಸಾದ್ ಶೆಟ್ಟಿ, ಅರವಿಂದ್ ಪೂಜಾರಿ, ವೈ.ಸುಕುಮಾರ್, ಹರಿಪ್ರಸಾದ್ ರೈ, ಮಹಾಬಲ ಕುಂದರ್, ಶಬೀರ್ ಅಹ್ಮದ್, ಹರೀಶ್ ಶೆಟ್ಟಿ ಪಾಂಗಳ, ಜಯರಾಮ್ ನಾಯ್ಕ, ಕೀರ್ತಿ ಶೆಟ್ಟಿ ಅಂಬಲಪಾಡಿ, ಯತೀಶ್ ಕರ್ಕೆರ, ಡಾ.ಸುನಿತಾ ಶೆಟ್ಟಿ, ಮೀನಾಕ್ಷಿ ಮಾಧವ ಬನ್ನಂಜೆ, ರೋಶನಿ ಒಲಿವರಾ, ರೇವತಿ ಶೆಟ್ಟಿ, ಸುರೇಶ್ ಶೆಟ್ಟಿ ಬನ್ನಂಜೆ, ಶೇಕ್ ವಹೀದ್ ಮೊದಲಾದವರು ಉಪಸ್ಥಿತರಿದ್ದರು. ಇತ್ತಿಚೆಗೆ ಅಗಲಿದ ಮುಖಂಡರಿಗೆ ಉಡುಪಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಜ್ಯೋತಿ ಹೆಬ್ಬಾರ್ ನುಡಿನಮನ ಸಲ್ಲಿಸಿದರು. ಉಪಾಧ್ಯಕ್ಷ ಪ್ರಖ್ಯಾತ ಶೆಟ್ಟಿ ಸ್ವಾಗತಿಸಿದರು. ಸಹಕಾರಿ ಕಾಂಗ್ರೆಸ್ ಅಧ್ಯಕ್ಷ ಅಣ್ಣಯ್ಯ ಸೇರಿಗಾರ್ ಕಾರ್ಯಕ್ರಮ ನಿರ್ವಹಿಸಿದರು. ಜಿಲ್ಲಾ ವಕ್ತಾರ ಭಾಸ್ಕರ ರಾವ್ ಕಿದಿಯೂರು ವಂದಿಸಿದರು.
ಶಹಾಬಾದ್ | ಬಲಿಷ್ಠ ಸಂಘಟನೆ ಕಟ್ಟಲು ಪ್ರಶಿಕ್ಷಣ ವರ್ಗ ಅತ್ಯಗತ್ಯ : ವಿಜಯೆಂದ್ರ
ಶಹಾಬಾದ್ : ಪಕ್ಷ ಸಂಘಟನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಬಲಿಷ್ಠ ಸಂಘಟನೆ ಕಟ್ಟಲು ಪ್ರಶಿಕ್ಷಣ ವರ್ಗ ಅತ್ಯಗತ್ಯ, ಇಲ್ಲಿ ಪಡೆದ ಶಿಕ್ಷಣದಿಂದ ಸಮಾಜದಲ್ಲಿ ಪ್ರಭಾವಿ ವ್ಯಕ್ತಿಗಳಾಗಲು ಸಾಧ್ಯ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಶಾಸಕ ಬಿ.ವೈ ವಿಜಯೆಂದ್ರ ರವರು ಪಕ್ಷದ ಕಾರ್ಯಕರ್ತರಿಗೆ ಕರೆ ನೀಡಿದರು. ಅವರು ತಾಲೂಕಿನ ಮಾಲಗತ್ತಿ ಗ್ರಾಮದ ಹಿರೋಡೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ಚಿತ್ತಾಪೂರ(ಮಂಡಲ) ಮತಕ್ಷೇತ್ರದ ವತಿಯಿಂದ ಹಮ್ಮಿಕೊಂಡಿದ್ದ ದೀನದಯಾಳ ಉಪಾಧ್ಯಾಯ ಪ್ರಶಿಕ್ಷಣ ಮಹಾ ಅಭಿಯಾನ-2026ರ ಮಂಡಲ ಮಟ್ಟದ ಸಭೆಯಲ್ಲಿ ಮಾತನಾಡಿದರು. ಬಿಜೆಪಿ ಪ್ರಶಿಕ್ಷಣ ವರ್ಗವು ಪಕ್ಷದ ಸಿದ್ಧಾಂತ, ನೀತಿಗಳು ಮತ್ತು ಸಂಘಟನಾ ಕೌಶಲ್ಯಗಳನ್ನು ಕಾರ್ಯಕರ್ತರಿಗೆ ಕಲಿಸುವ ಮೂಲಕ, ರಾಷ್ಟ್ರ ನಿರ್ಮಾಣ ಮತ್ತು ಪಕ್ಷದ ಸಂಘಟನೆಯನ್ನು ಬಲಪಡಿಸಲು ನಡೆಸುವ ರಚನಾತ್ಮಕ ತರಬೇತಿ ಕಾರ್ಯಕ್ರಮವಾಗಿದೆ. ದೇಶದಲ್ಲಿ ಬಿಜೆಪಿ ಪಕ್ಷವು ತನ್ನ ಸಿದ್ಧಾಂತ ಹಾಗೂ ಕಾರ್ಯದ ಮೂಲಕ ವಿಭಿನ್ನ ಪಕ್ಷ ಎಂದು ಗುರುತಿಸಿಕೊಂಡಿದೆ ಎಂದರು. ವೇದಿಕೆಯಲ್ಲಿ ಗ್ರಾಮೀಣ ಶಾಸಕ ಬಸವರಾಜ ಮತ್ತಿಮಡು, ಮಾಜಿ ಸಂಸದ ಡಾ. ಉಮೇಶ ಜಾದವ, ವಿಧಾನ ಪರಿಷತ್ ಸದಸ್ಯ ಬಿ. ಜಿ ಪಾಟೀಲ, ಮಾಜಿ ಶಾಸಕರಾದ ದತ್ತಾತ್ರೇಯ ಪಾಟೀಲ, ರಾಜಕುಮಾರ್ ಪಾಟೀಲ, ಮಾಜಿ ಎಂಎಲ್ಸಿ ಅಮರನಾಥ ಪಾಟೀಲ, ಕಾಡಾ ನಿಗಮದ ಮಾಜಿ ಅಧ್ಯಕ್ಷ ಶರಣಪ್ಪ ತಳವಾರ, ಧರ್ಮಣ್ಣ ಇಟಗಾ, ಬಸವರಾಜ ಬೆಣ್ಣೂರ, ಶಶಿಕಲಾ ಟೆಂಗ್ಲಿ, ಶೋಬಾ ಬಾಣಿ ಇದ್ದರು. ಪ್ರಶಿಕ್ಷಣ ವರ್ಗದಲ್ಲಿ ಲಿಂಗಾರೆಡ್ಡಿ ಬಾಸರೆಡ್ಡಿ, ಸೋಮಶೇಖರ ಪಾಟೀಲ, ಚಂದ್ರಶೇಖರ ಆವಂಟಿ, ನಾಗರಾಜ ಹೂಗಾರ, ಶರಣು ಜ್ಯೋತಿ, ಡಾ.ಮಹೇಂದ್ರ ಕೋರಿ, ಸಿದ್ದು ಮಾಲಗತ್ತಿ, ಈಶ್ವರ ಮುಗುಳನಾಗಾ, ವೀಣಾ ನಾರಾಯಣ ಸೇರಿದಂತೆ ಬಿಜೆಪಿ ಪಕ್ಷದ ಚಿತ್ತಾಪೂರ ಮತಕ್ಷೇತ್ರದ ಜವಾಬ್ದಾರಿತ ಪ್ರಮುಖರು, ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು. ಮಂಡಲ ಅಧ್ಯಕ್ಷ ರವೀಂದ್ರ ಸಜ್ಜನಶೆಟ್ಟಿ ಸ್ವಾಗತಿಸಿದರು, ಜಿಲ್ಲಾಧ್ಯಕ್ಷ ಅಶೋಕ ಬಗಲಿ ಪ್ರಾಸ್ತಾವಿಕವಾಗಿ ಮಾತನಾಡಿದರು, ನಾಗರಾಜ ಭಂಕಲಗಿ ನಿರೂಪಿಸಿದರು, ಮಲ್ಲಿಕಾರ್ಜನ ಇಟಗಿ ವಂದಿಸಿದರು.
ಇರಾನ್ನ ನತಾಂಝ್ ಪರಮಾಣು ಸ್ಥಾವರದ ಮೇಲೆ ದಾಳಿ; ವಿಕಿರಣ ಸೋರಿಕೆಯಾಗಿಲ್ಲ ಎಂದ ಇರಾನ್
ಟೆಹ್ರಾನ್: ಇರಾನ್ನ ನತಾಂಝ್ ಪರಮಾಣು ಸಂವರ್ಧನೆ ಸೌಲಭ್ಯದ ಮೇಲೆ ಶನಿವಾರ ವೈಮಾನಿಕ ದಾಳಿ ನಡೆದಿದೆ. ಆದರೆ ಯಾವುದೇ ವಿಕಿರಣ ಸೋರಿಕೆಯಾಗಿಲ್ಲ ಎಂದು ಇರಾನ್ ಸರ್ಕಾರಿ ಸ್ವಾಮ್ಯದ ಮಿಝಾನ್ ಸುದ್ದಿಸಂಸ್ಥೆ ವರದಿ ಮಾಡಿದೆ. ಇರಾನ್ನ ಪ್ರಾಥಮಿಕ ಅಣುಶಕ್ತಿ ಸಂವರ್ಧನಾ ಸೌಲಭ್ಯವಾಗಿರುವ ನತಾಂಝ್ ಮೇಲೆ ಯುದ್ಧದ ಆರಂಭದಲ್ಲೇ ದಾಳಿ ನಡೆದಿತ್ತು ಮತ್ತು ಹಲವು ಕಟ್ಟಡಗಳು ಹಾನಿಗೊಂಡಿರುವುದು ಉಪಗ್ರಹ ಚಿತ್ರಗಳಿಂದ ದೃಢಪಟ್ಟಿತ್ತು. ದಾಳಿಯಿಂದ ಯಾವುದೇ ವಿಕಿರಣ ಸಮಸ್ಯೆ ಕಂಡುಬಂದಿಲ್ಲ ಎಂದು ಆಗ ವಿಶ್ವಸಂಸ್ಥೆಯ ಪರಮಾಣು ನಿಗಾ ಸಂಸ್ಥೆ ಹೇಳಿತ್ತು. ಟೆಹ್ರಾನ್ನ ಆಗ್ನೇಯಕ್ಕೆ ಸುಮಾರು 220 ಕಿ.ಮೀ ದೂರವಿರುವ ಸೌಲಭ್ಯದ ಮೇಲೆ ಈ ಹಿಂದೆಯೂ ಹಲವು ಬಾರಿ ದಾಳಿ ನಡೆದಿತ್ತು. 2015ರ ಇರಾನ್-ಇಸ್ರೇಲ್ ಯುದ್ಧದ ಸಂದರ್ಭದಲ್ಲಿ ಇಸ್ರೇಲ್ ವೈಮಾನಿಕ ದಾಳಿ ನಡೆಸಿತ್ತು. ದಾಳಿ ನಡೆದಿರುವುದನ್ನು ಇರಾನ್ನ ಪರಮಾಣು ಸಂಸ್ಥೆ ದೃಢೀಕರಿಸಿದೆ. ಆದರೆ ಯಾವುದೇ ವಿಕಿರಣ ಸೋರಿಕೆಯಾಗಿಲ್ಲ ಮತ್ತು ಸೌಲಭ್ಯದ ಸುತ್ತಮುತ್ತಲಿನ ನಾಗರಿಕರಿಗೆ ಯಾವುದೇ ಅಪಾಯವಿಲ್ಲ ಎಂದು ಸ್ಪಷ್ಟಪಡಿಸಿದೆ. ನತಾಂಝ್ ಸೌಲಭ್ಯದ ವಿರುದ್ಧ ಅಮೆರಿಕ ಬಂಕರ್ ಬಸ್ಟರ್ ಬಾಂಬ್ಗಳನ್ನು ಪ್ರಯೋಗಿಸಿರುವುದಾಗಿ ಇಸ್ರೇಲ್ ಮಾಧ್ಯಮಗಳು ವರದಿ ಮಾಡಿವೆ. ಈ ಮಧ್ಯೆ, ಪ್ರದೇಶದಲ್ಲಿ ಮಿಲಿಟರಿ ಕಾರ್ಯಾಚರಣೆಗಳನ್ನು ಮುಕ್ತಾಯಗೊಳಿಸಲು ಪರಿಗಣಿಸುತ್ತಿರುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಶನಿವಾರ ಬೆಳಿಗ್ಗೆ ಇರಾನ್ ಸರಣಿ ಕ್ಷಿಪಣಿ ದಾಳಿ ನಡೆಸಿರುವುದಾಗಿ ಇಸ್ರೇಲ್ ಹೇಳಿದೆ. ಪೂರ್ವ ವಲಯದಲ್ಲಿ ಪ್ರಮುಖ ತೈಲ ಮೂಲಸೌಕರ್ಯವನ್ನು ಗುರಿಯಾಗಿಸಿ ಇರಾನ್ ಪ್ರಯೋಗಿಸಿದ ಸುಮಾರು 20 ಡ್ರೋನ್ಗಳನ್ನು ಹೊಡೆದುರುಳಿಸಿರುವುದಾಗಿ ಸೌದಿ ಅರೆಬಿಯಾ ಶನಿವಾರ ಹೇಳಿದೆ. ಪಶ್ಚಿಮ ಇರಾನ್: ಕ್ಷಿಪಣಿ ದಾಳಿಯಲ್ಲಿ ಮಗು ಮೃತ್ಯು ನೈಋತ್ಯ ಖಜೆಸ್ತಾನ್ ಪ್ರಾಂತದ ಅಹ್ವಾಜ್ ನಗರದ ಮೇಲೆ ಇಸ್ರೇಲ್, ಅಮೆರಿಕ ಪಡೆಗಳ ವೈಮಾನಿಕ ದಾಳಿಯಲ್ಲಿ ಮಗುವೊಂದು ಸಾವನ್ನಪ್ಪಿದ್ದು ಮಗುವಿನ ಪೋಷಕರು ಗಾಯಗೊಂಡಿರುವುದಾಗಿ ಇರಾನ್ನ ಮೆಹರ್ ಸುದ್ದಿಸಂಸ್ಥೆ ವರದಿ ಮಾಡಿದೆ. ಪೂರ್ವ ಇರಾನ್ನ ಅಘಾಜರಿ ನಗರದ ವಸತಿ ಗೃಹವನ್ನು ಗುರಿಯಾಗಿಸಿ ಮತ್ತೊಂದು ದಾಳಿ ನಡೆದಿದ್ದು ಸಾವು-ನೋವಿನ ವರದಿಯಾಗಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ. ಮಿಲಿಟರಿ ಸಂಯಮಕ್ಕೆ ವಿಶ್ವಸಂಸ್ಥೆ ಕರೆ: ಅಮೆರಿಕ ಮತ್ತು ಇಸ್ರೇಲ್ನೊಂದಿಗಿನ ಯುದ್ಧದಲ್ಲಿ ನತಾಂಝ್ ಪರಮಾಣು ಸ್ಥಳದ ಮೇಲೆ ದಾಳಿ ನಡೆದಿರುವುದಾಗಿ ಇರಾನ್ ಸಲ್ಲಿಸಿದ ವರದಿಯನ್ನು ಪರಿಶೀಲಿಸುತ್ತಿರುವುದಾಗಿ ವಿಶ್ವಸಂಸ್ಥೆಯ ಪರಮಾಣು ನಿಗಾ ಏಜೆನ್ಸಿ `ಅಂತರರಾಷ್ಟ್ರೀಯ ಪರಮಾಣು ಶಕ್ತಿ ಏಜೆನ್ಸಿ( ಐಎಇಎ) ಶನಿವಾರ ಹೇಳಿದೆ. ಪರಮಾಣು ದುರಂತದ ಯಾವುದೇ ಅಪಾಯವನ್ನು ತಪ್ಪಿಸಲು ಮಿಲಿಟರಿ ಸಂಯಮದ ಕರೆಯನ್ನು ಐಎಇಎ ಮುಖ್ಯಸ್ಥ ರಾಫೆಲ್ ಗ್ರಾಸ್ಸಿ ಪುನರುಚ್ಚರಿಸಿದ್ದಾರೆ ಎಂದು ಐಎಇಎ `ಎಕ್ಸ್'ನಲ್ಲಿ ಪೋಸ್ಟ್ ಮಾಡಿದೆ. ಪರಮಾಣು ಸ್ಥಳದ ಮೇಲಿನ ದಾಳಿಯು ಅಂತಾರಾಷ್ಟ್ರೀಯ ಕಾನೂನಿನ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ರಷ್ಯದ ವಿದೇಶಾಂಗ ಇಲಾಖೆಯ ವಕ್ತಾರೆ ಮರಿಯಾ ಝಕರೋವ ಖಂಡಿಸಿದ್ದಾರೆ.
ಉಡುಪಿ: ಮೂರು ದಿನಗಳ ಸಮಾಧಾನ ಮಹೋತ್ಸವಕ್ಕೆ ಚಾಲನೆ
ಉಡುಪಿ, ಮಾ.21: ಉಡುಪಿ ಜಿಲ್ಲೆಯ ಫೆಲೋಶಿಪ್ ಚರ್ಚಸ್ ವತಿಯಿಂದ ಉಡುಪಿ ಮಿಷನ್ ಕಂಪೌಂಡ್ ಮೈದಾನದಲ್ಲಿ ಶುಕ್ರವಾರ ಆಯೋಜಿಸಲಾದ ಮೂರು ದಿನಗಳ ಸಮಾಧಾನ ಮಹೋತ್ಸವಕ್ಕೆ ಉಡುಪಿ ಕಥೊಲಿಕ ಧರ್ಮಪ್ರಾಂತ್ಯದ ಪ್ರೆಷೀತ ಆಡಳಿತಾಧಿಕಾರಿ ಅತಿ ವಂ.ಡಾ.ಜೆರಾಲ್ಡ್ ಐಸಾಕ್ ಲೋಬೊ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ಬೈಬಲ್ ಗ್ರಂಥ ಪ್ರತಿಯೊಬ್ಬರಿಗೂ ಶಾಂತಿಯ ಆಳವಾದ ಅರ್ಥವನ್ನು ಭೋಧಿಸು ತ್ತದೆ. ಯೇಸು ಸ್ವಾಮಿಯ ಜನನದ ಸಂದರ್ಭದಲ್ಲಿ ಕೂಡ ಶಾಂತಿ ಸಮಾಧಾನದ ಉಲ್ಲೇಖವಿದ್ದು ಇದರು ದೇವರು ಮಾನವ ಕುಲದ ಮೇಲೆ ತೋರಿದ ಪ್ರೀತಿಯ ಸಂಕೇತವಾಗಿದೆ. ಲೋಕದ ಶಾಂತಿ ತಾತ್ಕಾಲಿಕವಾದರೆ ಕ್ರಿಸ್ತನ ಶಾಂತಿ ಶಾಶ್ವತವಾದುದಾಗಿದೆ. ಆದ್ದರಿಂದ ಶಾಂತಿಗಾಗಿ ಶ್ರಮಿಸವವರು ಸದಾ ಧನ್ಯರು ಎಂದು ಯೇಸು ಸ್ವಾಮಿ ಹೇಳಿದ್ದು ಅವರ ಸಂದೇಶವನ್ನು ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಪಾಲಿಸೋಣ ಎಂದರು. ಮುಖ್ಯ ಅತಿಥಿಯಾಗಿ ವಿಧಾನಪರಿಷತ್ ಸದಸ್ಯ ಐವನ್ ಡಿಸೋಜ ಮಾತನಾಡಿ, ಪ್ರತಿಯೊಂದು ಧರ್ಮಗಳಿಗೂ ತಮ್ಮ ತಮ್ಮ ಆಚರಣೆಗಳಿಗೆ ದೇಶದಲ್ಲಿ ಮುಕ್ತ ಅವಕಾಶವಿದ್ದು ನಮ್ಮ ಧರ್ಮವನ್ನು ಪ್ರೀತಿಸುವುದರೊಂದಿಗೆ ಇತರ ಧರ್ಮಗಳನ್ನು ಗೌರವಿಸಿದಾಗ ಶಾಂತಿಯ ಸಂದೇಶ ಸಾರ್ಥಕತೆಯನ್ನು ಪಡೆಯುತ್ತದೆ ಎಂದರು. ಸಿಎಸ್ಐ ಕರ್ನಾಟಕ ಸದರ್ನ್ ಡಯಾಸಿಸ್ ಧರ್ಮಾಧ್ಯಕ್ಷ ಅತಿ ವಂ.ಹೇಮಚಂದ್ರ ಕುಮಾರ್ ಮಾತನಾಡಿ, ಮೂರು ದಿನಗಳ ಸಮಾಧಾನ ಮಹೋತ್ಸವ ನಮ್ಮಲ್ಲಿನ ಆಧ್ಯಾತ್ಮಿಕ ಶಕ್ತಿಯನ್ನು ಬಲಗೊಳಿಸಲು ಸಹಕಾರಿ ಯಾಗಲಿ ಎಂದು ಶುಭ ಹಾರೈಸಿದರು. ಭಕ್ತಿ ಸಂಜೀವನ ಕೂಟಗಳನ್ನು ನಡೆಸಿಕೊಡಲಿರುವ ಘನ ಮೋಹನ್ ಸಿ.ಲಾಝರಸ್, ಪಾಸ್ಟರ್ ಟಿ.ವಿ. ಗೋಪಿನಾ ಥನ್, ಲೊಂಬಾರ್ಡ್ ಮೆಮೋರಿಯಲ್ ಆಸ್ಪತ್ರೆಯ ಆಡಳಿತ ನಿರ್ದೇಶಕ ಡಾ.ಸುಶೀಲ್ ಜತ್ತನ್ನ, ಕರ್ನಾಟಕ ರಾಜ್ಯ ಕ್ರೈಸ್ತ ಅಭಿವೃದ್ಧಿ ಮಂಡಳಿಯ ನಿರ್ದೇಶಕ ಪ್ರಶಾಂತ್ ಜತ್ತನ್ನ ಉಪಸ್ಥಿತರಿದ್ದರು. ಕಾರ್ಯಕ್ರಮಕ್ಕೂ ಮುನ್ನ ಸುಮಾರು 200ಕ್ಕೂ ಅಧಿಕ ಮಂದಿ ಗಾಯನ ತಂಡದ ನೇತೃತ್ವದಲ್ಲಿ ಸ್ತುತಿಗೀತೆಗಳ ಗಾಯನ ಜರಗಿತು.
ಇರಾನ್ ಮೇಲೆ ಒತ್ತಡ ಹೇರುವುದಕ್ಕಾಗಿ ಖಾರ್ಗ್ ದ್ವೀಪ ಆಕ್ರಮಿಸಿಕೊಳ್ಳಲು ಅಮೆರಿಕ ಚಿಂತನೆ; ಇದು ಅಪಾಯಕಾರಿ ಏಕೆ?
ಪಶ್ಚಿಮ ಏಷ್ಯಾದಲ್ಲಿ ಯುದ್ಧದ ಮಧ್ಯೆ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಮೆರಿಕದ ಸೇನಾ ಕಾರ್ಯಾಚರಣೆಗಳನ್ನು ವಿಸ್ತರಿಸುವ ಕುರಿತು ಪರ್ಯಾಯ ಮಾರ್ಗಗಳನ್ನು ಪರಿಶೀಲಿಸುತ್ತಿದ್ದಾರೆ.ಇರಾನ್ನ ಪ್ರಮುಖ ತೈಲ ರಫ್ತು ಕೇಂದ್ರವಾಗಿರುವ ಖಾರ್ಗ್ ದ್ವೀಪಕ್ಕೆ ಭೂಸೇನೆಯನ್ನು ಕಳುಹಿಸುವ ಆಯ್ಕೆಗಳ ಬಗ್ಗೆಯೂ ಟ್ರಂಪ್ ಚಿಂತಿಸುತ್ತಿದ್ದಾರೆ. ಹಾರ್ಮುಜ್ ಜಲಸಂಧಿಯನ್ನು ಮತ್ತೆ ತೆರೆಯುವಂತೆ ಇರಾನ್ ಮೇಲೆ ಒತ್ತಡ ಹೇರಲು ದ್ವೀಪವನ್ನು ಆಕ್ರಮಿಸಿಕೊಳ್ಳುವ ಅಥವಾ ದಿಗ್ಬಂಧನ ಮಾಡುವ ಯೋಜನೆಗಳನ್ನು ಅಮೆರಿಕ ಆಡಳಿತ ಪರಿಗಣಿಸುತ್ತಿದೆ ಎಂದು ಅಮೆರಿಕದ ಸುದ್ದಿ ಸಂಸ್ಥೆ ಆಕ್ಸಿಯೋಸ್ ಶುಕ್ರವಾರ ವರದಿ ಮಾಡಿದೆ. ವಿಶ್ವದ ಇಂಧನ ಪೂರೈಕೆಯ ಐದನೇ ಒಂದು ಭಾಗವನ್ನು ಹೊಂದಿರುವ ಕಿರಿದಾದ ಸಮುದ್ರ ಮಾರ್ಗವನ್ನು ಇರಾನ್ ಪರಿಣಾಮಕಾರಿಯಾಗಿ ನಿರ್ಬಂಧಿಸಿದ ನಂತರ ಇಂಧನ ಬೆಲೆಗಳು ಗಗನಕ್ಕೇರಿವೆ. ಇರಾನಿನ ಕರಾವಳಿಯಿಂದ ಸುಮಾರು 50 ಕಿ.ಮೀ ದೂರದಲ್ಲಿರುವ ಪರ್ಷಿಯನ್ ಕೊಲ್ಲಿಯಲ್ಲಿ ಆಳದಲ್ಲಿರುವ ಖಾರ್ಗ್ ದ್ವೀಪವು ಕಿರಿದಾದ, 8 ಕಿ.ಮೀ ಉದ್ದದ ಕಾರ್ಯತಂತ್ರದ ಭೂಪ್ರದೇಶವಾಗಿದೆ. ಮಾರ್ಚ್ 13 ರಂದು ಅಮೆರಿಕವು ದ್ವೀಪದಲ್ಲಿನ ಮಿಲಿಟರಿ ಗುರಿಗಳ ಮೇಲೆ ಬಾಂಬ್ ದಾಳಿ ನಡೆಸಿತ್ತು. ಇರಾನ್ನ ತೈಲ ರಫ್ತಿನ ಸುಮಾರು 90% ಈ ದ್ವೀಪದ ಮೂಲಕವೇ ಹರಿಯುತ್ತದೆ. ಅಂದು ಅಮೆರಿಕ ತೈಲ ಸೌಲಭ್ಯಗಳ ಮೇಲೆ ದಾಳಿ ಮಾಡಿರಲಿಲ್ಲ. ಆ ಸಮಯದಲ್ಲಿ, ಅಮೆರಿಕವು ಇರಾನ್ಗೆ ಕೇವಲ ಎಚ್ಚರಿಕೆ ನೀಡುತ್ತಿದ್ದಂತೆ ತೋರುತ್ತಿತ್ತು. ಬಾಂಬ್ ದಾಳಿಯು ಈಗ ಈ ಆಯಕಟ್ಟಿನ ಸ್ಥಳದಲ್ಲಿ ಸಂಭಾವ್ಯ ನೆಲದ ಕಾರ್ಯಾಚರಣೆಗೆ ಅಡಿಪಾಯ ಹಾಕುವ ಕ್ರಮವಾಗಿದೆ ಎಂದು ತೋರುತ್ತದೆ. ಪಶ್ಚಿಮ ಏಷ್ಯಾದ ಯುದ್ಧದಲ್ಲಿ ಖಾರ್ಗ್ ದ್ವೀಪವು ನಿರ್ಣಾಯಕ ಪಾತ್ರ ವಹಿಸುತ್ತದೆ. ಆದರೆ ದ್ವೀಪವನ್ನು ಸ್ವಾಧೀನಪಡಿಸಿಕೊಳ್ಳುವ ಯಾವುದೇ ಕಾರ್ಯಾಚರಣೆಯು ಅಪಾಯದಿಂದ ಕೂಡಿದ್ದಾಗಿದೆ. ►ಖಾರ್ಗ್ ದ್ವೀಪದ ಮಹತ್ವ ಖಾರ್ಗ್ ದ್ವೀಪವು ಇರಾನ್ನ ಅತ್ಯಂತ ಸೂಕ್ಷ್ಮ ಆರ್ಥಿಕ ಗುರಿಯಾಗಿದೆ. ಈಗ, ಟ್ರಂಪ್ ಭೂಸೇನೆ ಮೂಲಕ ದ್ವೀಪವನ್ನು ಸ್ವಾಧೀನಪಡಿಸಿಕೊಳ್ಳಲು ಯೋಜಿಸುತ್ತಿದ್ದಾರೆ. ಮೂರು ವಿಭಿನ್ನ ಸಾಗರ ಘಟಕಗಳು ಈ ಪ್ರದೇಶಕ್ಕೆ ಬರುತ್ತಿವೆ. ಶ್ವೇತಭವನ ಮತ್ತು ಪೆಂಟಗನ್ ಶೀಘ್ರದಲ್ಲೇ ಇನ್ನೂ ಹೆಚ್ಚಿನ ಪಡೆಗಳನ್ನು ಕಳುಹಿಸುವುದನ್ನು ಪರಿಗಣಿಸುತ್ತಿವೆ ಎಂದು ಅಮೆರಿಕದ ಅಧಿಕಾರಿಯೊಬ್ಬರು ಹೇಳಿದ್ದನ್ನು ಆಕ್ಸಿಯಾಸ್ ವರದಿ ಉಲ್ಲೇಖಿಸಿದೆ. ಆದರೆ ಖಾರ್ಗ್ ದ್ವೀಪವನ್ನು ಹಿಡಿತಕ್ಕೆ ತೆಗೆದುಕೊಳ್ಳುವ ಯಾವುದೇ ಕ್ರಮವು ಅಮೆರಿಕದ ಪಡೆಗಳನ್ನು ನೇರವಾಗಿ ಸಂಕಷ್ಟಕ್ಕೆ ಸಿಲುಕಿಸಬಹುದು. ಅಮೆರಿಕದ ಶಾಶ್ವತ ಯುದ್ಧಗಳನ್ನು ಕೊನೆಗೊಳಿಸುವ ಚುನಾವಣಾ ಪೂರ್ವದ ಭರವಸೆ ಮತ್ತು ಅವರ MAGA (ಮೇಕ್ ಅಮೆರಿಕ ಗ್ರೇಟ್ ಅಗೇನ್) ನೆಲೆಯಲ್ಲಿ ಅಂತಹ ಯಾವುದೇ ಕ್ರಮಕ್ಕೆ ಸಾಮಾನ್ಯ ವಿರೋಧ ಇರುವುದರಿಂದ ಟ್ರಂಪ್ ಇದನ್ನು ಮಾಡಲು ಹಿಂಜರಿಯುತ್ತಾರೆ. ಹಾರ್ಮುಜ್ ಜಲಸಂಧಿ ಮೇಲೆ ಇರಾನ್ ಹೊಂದಿರುವ ಹಿಡಿತವು ಜಾಗತಿಕ ತೈಲ ಮತ್ತು ಅನಿಲ ಬೆಲೆಗಳನ್ನು ಹೆಚ್ಚಿಸಿದೆ. ಈ ಸಂಘರ್ಷದಲ್ಲಿ ಇರಾನಿನ ಆಡಳಿತವು ಹೊಂದಿರುವ ಬಲವಾದ ಹತೋಟಿ ಎಂದು ಇದನ್ನು ನೋಡಲಾಗುತ್ತದೆ. ಖಾರ್ಗ್ ಮೂಲಕ ಅದರ ರಫ್ತುಗಳು ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ಗೆ (IRGC) ಪ್ರಮುಖ ಆರ್ಥಿಕ ಜೀವನಾಡಿಯಾಗಿದ್ದು, ಸಂಘರ್ಷಕ್ಕೆ ಅಗತ್ಯವಾದ ಆದಾಯವನ್ನು ಒದಗಿಸುತ್ತವೆ. ಅಮೆರಿಕದ ಸೇನೆಯು ಹಾರ್ಮುಜ್ ಜಲಸಂಧಿಯ ಸುತ್ತ ಇರಾನ್ನ ಮಿಲಿಟರಿ ಸಾಮರ್ಥ್ಯವನ್ನು ಮತ್ತಷ್ಟು ಕುಗ್ಗಿಸಿದ ನಂತರವೇ ಅಂತಹ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಗುವುದು ಎಂದು ಆಕ್ಸಿಯೋಸ್ ವರದಿ ಉಲ್ಲೇಖಿಸಿದೆ. ಆದರೆ ಆಕ್ರಮಣದಲ್ಲಿ ರಫ್ತು ಟರ್ಮಿನಲ್ನಲ್ಲಿರುವ ತೈಲ ಸೌಲಭ್ಯಗಳಿಗೆ ಹಾನಿಯಾಗುವ ಅಪಾಯವಿದೆ. ಮಾರ್ಚ್ 13 ರ ಬಾಂಬ್ ದಾಳಿಯ ನಡುವೆಯೂ ಸಹ, ಅಮೆರಿಕ ಮತ್ತು ಇಸ್ರೇಲ್ ಖಾರ್ಗ್ ದ್ವೀಪದ ತೈಲ ಮೂಲಸೌಕರ್ಯವನ್ನು ಇಲ್ಲಿಯವರೆಗೆ ಮುಟ್ಟದೇ ಇರುವುದಕ್ಕೂ ಕಾರಣವಿದೆ. ಇರಾನಿನ ಮುಖ್ಯ ಭೂಭಾಗಕ್ಕೆ ತುಂಬಾ ಹತ್ತಿರದಲ್ಲಿರುವ ಕಾರಣ ಇದು ವಿಷಯಗಳನ್ನು ಸಂಕೀರ್ಣಗೊಳಿಸುತ್ತದೆ. ಇಂಥಾ ಕಾರ್ಯಾಚರಣೆಯು ಅಪಾಯಕಾರಿಯಾಗಿದ್ದು, ಕ್ಷಿಪಣಿಗಳು ಮತ್ತು ಡ್ರೋನ್ಗಳ ಮೂಲಕ ಈ ದ್ವೀಪವನ್ನು ತಲುಪುವ ಸಾಮರ್ಥ್ಯವನ್ನು ಇರಾನ್ ಹೊಂದಿದೆ. ಅದನ್ನು ನಾಶಮಾಡುವುದರಿಂದ ಇರಾನ್ನ ಬಹುತೇಕ ಎಲ್ಲಾ ದೈನಂದಿನ ಕಚ್ಚಾ ತೈಲ ರಫ್ತುಗಳನ್ನು ತಟಸ್ಥಗೊಳಿಸಿದಂತಾಗುತ್ತದೆ. ಇದು ಈಗಾಗಲೇ ಏರುತ್ತಿರುವ ತೈಲ ಬೆಲೆಗಳಲ್ಲಿ ನಿರಂತರ ಏರಿಕೆಗೆ ಕಾರಣವಾಗುತ್ತದೆ. ದ್ವೀಪದ ಮೇಲೆ ಭೂಸೇನೆ ಆಕ್ರಮಣವು ಅಂತಹ ಯಾವುದೇ ಹಾನಿಯನ್ನು ಪರಿಣಾಮಕಾರಿಯಾಗಿ ತಪ್ಪಿಸಲು ಸಾಧ್ಯವೇ ಎಂಬುದು ಸ್ಪಷ್ಟವಾಗಿಲ್ಲ. ►ಹಾರ್ಮುಜ್ ಜಲಸಂಧಿಯ ನಿಯಂತ್ರಣ ಖಾರ್ಗ್ ಹೊರತುಪಡಿಸಿ, ಈ ಪ್ರದೇಶದಲ್ಲಿ ಇರಾನಿನ ನಿಯಂತ್ರಣದಲ್ಲಿ ಕನಿಷ್ಠ ಮೂರು ಪ್ರಮುಖ ದ್ವೀಪಗಳಿವೆ - ಅಬು ಮೂಸಾ, ಗ್ರೇಟರ್ ಟನ್ಬ್ ಮತ್ತು ಲೆಸ್ಸರ್ ಟನ್ಬ್. 1971 ರಿಂದ ಇರಾನ್ ನಿಯಂತ್ರಿಸುತ್ತಿರುವ ಲೆಸ್ಸರ್ ಟನ್ಬ್, ನೆರೆಯ ಯುಎಇ ಜೊತೆ ದಶಕಗಳ ಕಾಲದ ವಿವಾದದ ಕೇಂದ್ರಬಿಂದುವಾಗಿದೆ.ಈ ದ್ವೀಪಗಳ ಉಸ್ತುವಾರಿ ಯಾರು ಎಂಬುದು ಜಲಸಂಧಿಯನ್ನು ಯಾರು ನಿಯಂತ್ರಿಸುತ್ತಾರೆ ಎಂಬುದರ ಮೇಲೆ ಬಲವಾದ ಪ್ರಭಾವ ಬೀರುತ್ತದೆ. ಇದು ತೈಲ ಟ್ಯಾಂಕರ್ಗಳು ಮತ್ತು ಯುದ್ಧನೌಕೆಗಳ ಸಾಗಣೆಗೆ ಪ್ರಮುಖವೆಂದು ಪರಿಗಣಿಸಲಾಗಿದೆ. ತಜ್ಞರ ಪ್ರಕಾರ, ಇರಾನಿನ ಮುಖ್ಯ ಭೂಭಾಗಕ್ಕಿಂತ ಈ ದ್ವೀಪಗಳಿಂದ ಜಲಮಾರ್ಗವನ್ನು ಉತ್ತಮವಾಗಿ ನಿಯಂತ್ರಿಸಬಹುದು. ಕಾರ್ಯತಂತ್ರದ ದೃಷ್ಟಿಕೋನದಿಂದ, ಪರ್ಷಿಯನ್ ಕೊಲ್ಲಿ ದ್ವೀಪಗಳು ಇರಾನಿನ ಮುಖ್ಯ ಭೂಭಾಗಕ್ಕಿಂತ ಅಮೆರಿಕದ ಭೂ ನಿಯೋಜನೆಗೆ ಹೆಚ್ಚು ಕಾರ್ಯಸಾಧ್ಯವಾದ ಸ್ಥಳವನ್ನು ಪ್ರತಿನಿಧಿಸುತ್ತವೆ. ಈ ಕಡಲಾಚೆಯ ಪ್ರದೇಶಗಳನ್ನು ಆಕ್ರಮಿಸಿಕೊಳ್ಳುವುದರಿಂದ ಮಿಲಿಟರಿಗೆ ಬಫರ್ ವಲಯವನ್ನು ಸ್ಥಾಪಿಸಲು ಅನುವು ಮಾಡಿಕೊಡುತ್ತದೆ. ಕರಾವಳಿಯ ಬದಲು ಖಾರ್ಗ್ ದ್ವೀಪದಲ್ಲಿ ಭೌತಿಕ ಉಪಸ್ಥಿತಿಯನ್ನು ಕೇಂದ್ರೀಕರಿಸುವ ಮೂಲಕ, ಅಮೆರಿಕವು ಇರಾನ್ನ ಆರ್ಥಿಕ ಉತ್ಪಾದನೆಯನ್ನು ಪರಿಣಾಮಕಾರಿಯಾಗಿ ಅಡ್ಡಿಪಡಿಸಬಹುದು ಮತ್ತು ದೀರ್ಘಕಾಲದ, ಹೆಚ್ಚಿನ ಸಾವುನೋವುಗಳ ಅಪಾಯವನ್ನು ಕಡಿಮೆ ಮಾಡಬಹುದು. ►ಖಾರ್ಗ್ ಮೂಲಕ ತೈಲ ಹರಿವು ಪ್ರತಿದಿನ ಸರಾಸರಿ 1.5 ಮಿಲಿಯನ್ ಬ್ಯಾರೆಲ್ ತೈಲ ಖಾರ್ಗ್ ಮೂಲಕ ಹಾದು ಹೋಗುತ್ತದೆ, ಆದರೂ ಫೆಬ್ರವರಿ ಮಧ್ಯದಲ್ಲಿ ಇರಾನ್ ದಿನಕ್ಕೆ 3 ಮಿಲಿಯನ್ ಬ್ಯಾರೆಲ್ಗಳಿಗೆ ತೈಲದ ಪ್ರಮಾಣವನ್ನು ತೀವ್ರವಾಗಿ ಹೆಚ್ಚಿಸಿದೆ ಎಂದು ಹೂಡಿಕೆ ಬ್ಯಾಂಕ್ ಜೆಪಿ ಮೋರ್ಗನ್ ತಿಳಿಸಿದೆ. ಅಮೆರಿಕ ನೇತೃತ್ವದ ಸಂಭಾವ್ಯ ದಾಳಿಗೆ ಸಿದ್ಧತೆಯಾಗಿ ಈ ಕ್ರಮ ಕೈಗೊಳ್ಳಲಾಗಿತ್ತು. ಹೆಚ್ಚುವರಿ 18 ಮಿಲಿಯನ್ ಬ್ಯಾರೆಲ್ಗಳನ್ನು ಖಾರ್ಗ್ನಲ್ಲಿ ಬ್ಯಾಕಪ್ ಆಗಿ ಸಂಗ್ರಹಿಸಲಾಗಿದೆ ಎಂದು ಜೆಪಿ ಮೋರ್ಗನ್ ತಿಳಿಸಿದೆ. 2025 ರ ಅಂತ್ಯ ಮತ್ತು 2026 ರ ಆರಂಭದಲ್ಲಿ, ಕಚ್ಚಾ ತೈಲ ಮತ್ತು ಕಂಡೆನ್ಸೇಟ್ ಸೇರಿದಂತೆ ಇರಾನ್ನ ಒಟ್ಟು ತೈಲ ರಫ್ತು ದಿನಕ್ಕೆ ಸುಮಾರು 1.8 ಮಿಲಿಯನ್ ಬ್ಯಾರೆಲ್ಗಳಷ್ಟಿತ್ತು ಎಂದು ಅಂದಾಜಿಸಲಾಗಿದೆ, ಇದರಲ್ಲಿ ಹೆಚ್ಚಿನವು ಚೀನಾಕ್ಕೆ ಹೋಗುತ್ತಿದ್ದವು. 2026 ರ ಆರಂಭದಲ್ಲಿ ಉತ್ಪಾದನೆಯು ದಿನಕ್ಕೆ 3.1 ಮಿಲಿಯನ್ ಬ್ಯಾರೆಲ್ಗಳ ಹತ್ತಿರ ವರದಿಯಾಗಿದೆ. ಇದರಲ್ಲಿ ಹೆಚ್ಚಿನದನ್ನು ಖಾರ್ಗ್ ಮೂಲಕ ರವಾನಿಸಲಾಗಿದೆ. ದೇಶದ ಮಧ್ಯ ಮತ್ತು ಪಶ್ಚಿಮದಲ್ಲಿರುವ ಇರಾನ್ನ ತೈಲ ನಿಕ್ಷೇಪಗಳಿಂದ ಬರುವ ಪೈಪ್ಲೈನ್ಗಳು ಖಾರ್ಗ್ನಲ್ಲಿ ಕೊನೆಗೊಳ್ಳುತ್ತವೆ. ಅಮೆರಿಕದ ತೈಲ ಸಮೂಹವಾದ ಅಮೇರಿಕನ್ ಆಯಿಲ್ ಕಂಪನಿ ಅಥವಾ ಅಮೋಕೊ ಸ್ಥಾಪಿಸಿದ ಇದನ್ನು 1979 ರ ಕ್ರಾಂತಿಯ ಸಮಯದಲ್ಲಿ ಇರಾನ್ ವಶಪಡಿಸಿಕೊಂಡಿತು. ಅಮೋಕೊ ಬಿಪಿ ಮಾಲಕತ್ವದ ಅಡಿಯಲ್ಲಿ ಇಂಧನ ಬ್ರಾಂಡ್ಗಳನ್ನು ಚಿಲ್ಲರೆ ಮಾರಾಟ ಮಾಡುವುದನ್ನು ಮುಂದುವರೆಸಿದೆ. ಅಮೆರಿಕನ್ನರು ಇದನ್ನೆಲ್ಲ ಸ್ಥಾಪಿಸಲು ಸಹಾಯ ಮಾಡಿದ್ದರಿಂದ, ಖಾರ್ಗ್ ದ್ವೀಪ ಸೇರಿದಂತೆ ಇರಾನ್ನಲ್ಲಿನ ತೈಲ ಮೂಲಸೌಕರ್ಯದಲ್ಲಿ ಅವರಿಗೆ ಸರಿಯಾದ ಪಾಲು ಇದೆ ಎಂಬ ಅಭಿಪ್ರಾಯವಿದೆ. ಇದು ವೆನೆಜುವೆಲಾದ ತೈಲ ಮೂಲಸೌಕರ್ಯದ ಬಗ್ಗೆ ಅಮೆರಿಕನ್ ಆಡಳಿತದ ದೃಷ್ಟಿಕೋನದೊಂದಿಗೆ ಪ್ರತಿಧ್ವನಿಸುತ್ತದೆ, ಇದನ್ನು ಅಮೆರಿಕನ್ನರು ಸಹ ಸುಮಾರು ಅರ್ಧ ಶತಮಾನದ ಹಿಂದೆ ಸ್ಥಾಪಿಸಲು ಸಹಾಯ ಮಾಡಿದರು.
ಜೀವಾವಧಿ ಶಿಕ್ಷೆಗೆ ಗುರಿಯಾದವರಿಗೆ 20 ವರ್ಷ ಸೆರೆವಾಸದ ಬಳಿಕ ಬಿಡುಗಡೆ ಹೊಂದುವ ಕಾನೂನಾತ್ಮಕ ಹಕ್ಕಿಲ್ಲ : ಹೈಕೋರ್ಟ್
ಬೆಂಗಳೂರು : ಅಪರಾಧ ಪ್ರಕರಣಗಳಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾದವರು 20 ವರ್ಷ ಸೆರೆವಾಸ ಪೂರೈಸಿದ ಬಳಿಕ ಸ್ವಯಂಚಾಲಿತವಾಗಿ ಬಿಡುಗಡೆಗೆ ಕೋರುವ ಯಾವುದೇ ರೀತಿಯ ಕಾನೂನಾತ್ಮಕ ಹಕ್ಕು ಹೊಂದಿಲ್ಲ ಎಂದು ಹೈಕೋರ್ಟ್ ಆದೇಶಿಸಿದೆ. ಮೈಸೂರು ಕಾರಾಗೃಹದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಕೊಲೆ ಪ್ರಕರಣದಲ್ಲಿ ಅಪರಾಧಿಯಾಗಿರುವ ಬೆಂಗಳೂರಿನ ಕೋರಮಂಗಲದ ಕಿಶನ್ ಎಂಬಾತ ಸಲ್ಲಿಸಿದ್ದ ಅರ್ಜಿಯನ್ನು ಇತ್ತೀಚೆಗೆ ವಜಾಗೊಳಿಸಿರುವ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಆದೇಶ ಮಾಡಿದೆ. ಹೈಕೋರ್ಟ್ ಆದೇಶವೇನು? ಕ್ಷಮಾದಾನ ಅಥವಾ ಅವಧಿಗೂ ಮುನ್ನ ಅಪರಾಧಿಯನ್ನು ಬಿಡುಗಡೆ ಮಾಡುವ ಪ್ರಶ್ನೆಯು ಶಾಸನಬದ್ಧ ನಿಬಂಧನೆ ಮತ್ತು ನೀತಿಯಡಿ ಸೂಕ್ತ ಸರಕಾರಕ್ಕೆ ಮಾತ್ರ ಇದೆ. ಅಪರಾಧಿಯು 20 ವರ್ಷ ಶಿಕ್ಷೆ ಪೂರೈಸಿದ ಬಳಿಕ ಜೀವಾವಧಿ ಶಿಕ್ಷೆಗೆ ಗುರಿಯಾದವನನ್ನು ಬಿಡುಗಡೆ ಮಾಡಬಹುದು ಎಂದು ಐಪಿಸಿ ಸೆಕ್ಷನ್ 57 ಹೇಳುವುದಿಲ್ಲ. ಕಾನೂನಿನ ಅಡಿ ಪರಿವರ್ತನೆ ಅಥವಾ ಕ್ಷಮಾದಾನ ಸಿಗದ ಹೊರತು ಜೈಲು ಶಿಕ್ಷೆಯನ್ನು ಸೀಮಿತಗೊಳಿಸುವ ನಿರ್ದಿಷ್ಟ ನ್ಯಾಯಾಂಗ ನಿರ್ದೇಶನದ ಗೈರಿನ ಹಿನ್ನೆಲೆಯಲ್ಲಿ ಅರ್ಜಿದಾರರಿಗೆ ವಿಧಿಸಿರುವ ಜೀವಾವಧಿ ಶಿಕ್ಷೆಯನ್ನು ಬದುಕಿರುವವರೆಗಿನ ಶಿಕ್ಷೆ ಎಂದು ಪರಿಗಣಿಸಬೇಕಾಗುತ್ತದೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. ಹಾಲಿ ಪ್ರಕರಣದಲ್ಲಿ ಅರ್ಜಿದಾರರು 20 ವರ್ಷ ಸೆರೆಮನೆಯಲ್ಲಿ ಕಳೆದಿರುವುದರಿಂದ ಸರಕಾರಕ್ಕೆ ಕ್ಷಮಾದಾನ ಕೋರಿಕೆ ಸಲ್ಲಿಸಲು ಅರ್ಹರಾಗಿದ್ದಾರೆ. ರಾಜ್ಯ ಸರಕಾರದ ಕ್ಷಮಾದಾನ ನೀತಿ ಮತ್ತು ಸೂಕ್ತ ಶಾಸನಬದ್ಧ ನಿಬಂಧನೆಗಳ ಅಡಿ ಕ್ಷಮಾದಾನ ಕೋರಬಹುದಾಗಿದೆ. ಇಂಥ ಅರ್ಜಿಯನ್ನು ಸಲ್ಲಿಸಿದರೆ ಸೂಕ್ತ ಸರಕಾರ/ಶಿಕ್ಷೆ ಪರಿಶೀಲನಾ ಮಂಡಳಿಯು ಪ್ರಕರಣದ ಆಧಾರದ ಮೇಲೆ ಅಪರಾಧಿಯು ಶಿಕ್ಷೆ ಅನುಭವಿಸಿರುವ ಅವಧಿ, ಅರ್ಜಿದಾರನ ನಡತೆ, ಅಪರಾಧದ ಸ್ವರೂಪ, ಸಂತ್ರಸ್ತರ ಹಿತಾಸಕ್ತಿ ಮತ್ತು ಅನ್ವಯಿಸುವ ನೀತಿಯನ್ನು ಪರಿಗಣಿಸಿ ನಿರ್ಧರಿಸಬಹುದು ಎಂದು ನ್ಯಾಯಾಲಯ ಆದೇಶದಲ್ಲಿ ಹೇಳಿದೆ. ಪ್ರಕರಣವೇನು? ಇಬ್ಬರು ಮಕ್ಕಳನ್ನು ಅಪಹರಿಸಿ ಕೊಲೆ ಮಾಡಿದ ಪ್ರಕರಣದಲ್ಲಿ ಅರ್ಜಿದಾರ ಕಿಶನ್ ಸೇರಿ ಮೂವರಿಗೆ ಬೆಂಗಳೂರಿನ ಸೆಷನ್ಸ್ ನ್ಯಾಯಾಲಯ ಗಲ್ಲು ಶಿಕ್ಷೆ ವಿಧಿಸಿತ್ತು. ಈ ಪ್ರಕರಣದ ಮೇಲ್ಮನವಿ ಪ್ರಕ್ರಿಯೆಯು 2013ರಲ್ಲಿ ಪೂರ್ಣಗೊಂಡಿದ್ದು, ಮರಣದಂಡನೆ ಶಿಕ್ಷೆಯನ್ನು ಹೈಕೋರ್ಟ್ ಜೀವಾವಧಿ ಶಿಕ್ಷೆಯನ್ನಾಗಿ ಪರಿವರ್ತಿಸಿತ್ತು. ಐಪಿಸಿ ಸೆಕ್ಷನ್ 57ರ ಅಡಿ 14 ವರ್ಷ ಜೈಲು ಶಿಕ್ಷೆ ಪೂರ್ಣಗೊಂಡ ಬಳಿಕ ಶಿಕ್ಷೆಯ ಅವಧಿಯಲ್ಲಿ ಯಾವುದೇ ಕಡಿತ ಇರುವುದಿಲ್ಲ ಎಂಬ ಸ್ಪಷ್ಟ ನಿರ್ದೇಶನವನ್ನೂ ನ್ಯಾಯಾಲಯ ನೀಡಿತ್ತು. 2025ರ ಜನವರಿ 15ರಂದು 20 ವರ್ಷ ಜೈಲು ಶಿಕ್ಷೆ ಪೂರೈಸಿದ್ದ ಕಿಶನ್, ಐಪಿಸಿ ಸೆಕ್ಷನ್ 57ರ ಅಡಿ ಕ್ಷಮಾದಾನಕ್ಕೆ ಅರ್ಹವಾಗಿರುವುದರಿಂದ ಬಿಡುಗಡೆ ಮಾಡುವಂತೆ ಕೋರಿದ್ದರು.
ನೈಸಿಯಾ ಘೋಷಣೆ ಕ್ರೈಸ್ತ ಬಂಧುಗಳಿಗೆ ವಿಶ್ವಾಸದ ಅಡಿಪಾಯ: ಬಿಷಪ್ ಜೆರಾಲ್ಡ್ ಲೋಬೊ
ಉಡುಪಿ, ಮಾ.21: ನೈಸಿಯಾ ವಿಶ್ವಾಸದ ಘೋಷಣೆ ಕ್ರೈಸ್ತ ಬಂಧುಗಳಿಗೆ ವಿಶ್ವಾಸದ ಅಡಿಪಾಯವಾಗಿದೆ. ಯಾವುದೇ ಸಭೆಗಳಿಗೂ ಸೇರಿದ್ದರೂ ಕೂಡ ಒಂದೇ ವಿಶ್ವಾಸದ ಘೋಷಣೆ ಮಾಡುವಾಗ ಐಕ್ಯತೆಯನ್ನು ಪ್ರಚುರ ಪಡಿಸಿದಂತಾಗುತ್ತದೆ ಎಂದು ಉಡುಪಿ ಧರ್ಮಪ್ರಾಂತ್ಯದ ಪ್ರೇಷಿತ ಆಡಳಿತದಾರ ಅತಿ ವಂ.ಡಾ.ಜೆರಾಲ್ಡ್ ಐಸಾಕ್ ಲೋಬೊ ಹೇಳಿದ್ದಾರೆ. ಉಡುಪಿ ಯುಬಿಎಂ ಜುಬಿಲಿ ಮೆಮೋರಿಯಲ್ ಸಭಾಂಗಣದಲ್ಲಿ ಯುನಾಯ್ಟೆಡ್ ಬಾಸೆಲ್ ಮಿಷನ್ ಚರ್ಚ್, ಉಡುಪಿ ಧರ್ಮಪ್ರಾಂತ್ಯದ ಐಕ್ಯತಾ ಆಯೋಗ ಮತ್ತು ಆಲ್ ಕರ್ನಾಟಕ ಯುನೈಟೆಡ್ ಕ್ರಿಶ್ಚಿಯನ್ ಫೋರಮ್ ಹ್ಯೂಮನ್ ರೈಟ್ಸ್ ಇವರುಗಳ ಜಂಟಿ ಆಶ್ರಯದಲ್ಲಿ ಉಡುಪಿ ಧರ್ಮಪ್ರಾಂತ್ಯ ಮಟ್ಟದ ನೈಸಿಯಾ ವಿಶ್ವಾಸದ ಘೋಷಣೆ ಒಡಬಂಡಿಕೆಯ 1700ನೇ ವರ್ಷಾಚರಣೆಯ ಪ್ರಯುಕ್ತ ಗುರುವಾರ ಆಯೋಜಿಸಲಾದ ಐಕ್ಯತಾ ಪ್ರಾರ್ಥನಾ ಕೂಟದಲ್ಲಿ ಅವರು ಮಾತನಾಡುತಿದ್ದರು. ಧರ್ಮಸಭೆ ಯಾವಾಗಲೂ ಸರ್ವ ಕ್ರೈಸ್ತ ಏಕತೆಯ ಮಹತ್ವವನ್ನು ಒತ್ತಿ ಹೇಳುತ್ತದೆ. ಎರಡನೇ ವ್ಯಾಟಿಕನ್ ಮಹಾಸಭೆಯಲ್ಲಿ ಎಲ್ಲಾ ಕ್ರೈಸ್ತರ ಏಕತೆಯನ್ನು ಪುನರ್ ಸ್ಥಾಪಿಸುವುದು ಧರ್ಮಸಭೆಯ ಪ್ರಮುಖ ಕಾಳಜಿಗಳಲ್ಲಿ ಒಂದಾಗಿದೆ ಎಂದು ಹೇಳಿದೆ. ನಿಜವಾದ ಏಕತೆ ಆತ್ಮೀಕ ಪರಿವರ್ತನೆಯಿಂದ ಆರಂಭವಾಗುತ್ತದೆ. ವಿನಯ, ಪರಸ್ಪರ ಕ್ಷಮೆ ಮತ್ತು ಒಟ್ಟಾಗಿ ಪ್ರಾರ್ಥಿಸಿದಾಗ ಮಾತ್ರ ನಿಜವಾದ ಐಕ್ಯತೆ ಕಾಣಲು ಸಾಧ್ಯವಿದೆ. ಚರ್ಚ್ ಆಫ್ ಸೌತ್ ಇಂಡಿಯಾ ಕರ್ನಾಟಕ ಸದರ್ನ್ ಡಯಾಸಿಸ್ ಧರ್ಮಾಧ್ಯಕ್ಷ ಅತಿ ವಂ.ಹೇಮಚಂದ್ರ ಕುಮಾರ್ ಮಾತನಾಡಿ, ನೈಸಿಯಾ ವಿಶ್ವಾಸದ ಘೋಷಣೆ ಕ್ರೈಸ್ತರು ದೇವರಲ್ಲಿ ಇಟ್ಟಿರುವ ವಿಶ್ವಾಸ ಭದ್ರ ಬುನಾದಿಯಾಗಿದ್ದು 1700 ವರ್ಷಗಳ ಬಳಿಕವೂ ಕ್ರೈಸ್ತರು ಒಟ್ಟಾಗಿ ಒಂದಾಗಿ ಬದಕಲು ಪ್ರೇರೆಪಿಸುತ್ತಿದೆ. ಬೈಬಲ್ ಗ್ರಂಥದಲ್ಲಿ ಕ್ರೈಸ್ತ ಸಭೆಯನ್ನು ಯಾವ ರೀತಿಯಲ್ಲಿ ಬಲಪಡಿಸಲು ಸಾಧ್ಯ ಎನ್ನುವುದು ವಿವಿಧ ಕಡೆಯಲ್ಲಿ ಉಲ್ಲೇಖಿಸ ಲಾಗಿದೆ. ನಮ್ಮ ಸಭೆಗಳಲ್ಲಿ ವಿಶ್ವಾಸದ ಸ್ತ್ರೋತ್ರವನ್ನು ಪ್ರತಿನಿತ್ಯ ಪಠಿಸುವು ರಿಂದ ನಮ್ಮಲ್ಲಿನ ಐಕ್ಯತೆಯನ್ನು ಭದ್ರಪಡಿಸಲು ಸಹಕಾರಿಯಾಗುತ್ತದೆ ಎಂದರು. ಗೋವಾ ಡಿವೈನ್ ಸ್ಪ್ರಿಂಗ್ ಧ್ಯಾನ ಮಂದಿರದ ಮುಖ್ಯಸ್ಥ ವಂ.ರೊವಲ್ ಶುಭದೀಪ್ ಡಿಸೋಜ ಮತ್ತು ಕರ್ನಾಟಕ ಥಿಯೋಲೋಜಿಕಲ್ ಕಾಲೇಜು ಬಲ್ಮಠ ಮಂಗಳೂರು ಇದರ ಪ್ರಾಂಶುಪಾಲರು ವಿಶ್ವಾಸದ ಘೋಷಣೆಯ ಐತಿಹಾಸಿಕ ಚರಿತ್ರೆ ಮತ್ತು ಆಧ್ಯಾತ್ಮಿಕ ಮಹತ್ವದ ಕುರಿತು ಉಪನ್ಯಾಸ ನೀಡಿದರು. ವಂ.ಲಿಯೋ ಪ್ರವೀಣ್, ವಂ.ಪ್ರವೀಣ್ ಮಾಬೆನ್, ವಂ.ನೊಯೆಲ್ ಲೂವಿಸ್, ಪ್ರಶಾಂತ್ ಜತ್ತನ್ನ, ಸಹಿತ ರೋಮನ್ ಕ್ಯಾಥೊಲಿಕ್, ಓರ್ಥೋಡಕ್ಸ್, ಸಿಎಸ್ಐ, ಯುಬಿಎಂ ಸಭೆಗಳ ಧರ್ಮಗುರುಗಳು, ಪಾಸ್ಟರ್ಸ್, ಧರ್ಮಭಗಿನಿಯರು ಹಾಗೂ ಭಕ್ತವೃಂದದವರು ಉಪಸ್ಥಿತರಿದ್ದರು. ವಂ.ಸಂತೋಷ್ ಸ್ವಾಗತಿಸಿದರು. ಎಬನೇಜರ್ ಕ್ರಿಸ್ಟೋಫರ್ ಕರ್ಕಡ ವಂದಿಸಿದರು. ವಂ.ವಿಜಯ್ ಹಾರ್ವಿನ್ ಪ್ರಾರ್ಥಸಿದರು. ವಂ.ಡೆನಿಸ್ ಡೆಸಾ ಕಾರ್ಯಕ್ರಮ ನಿರೂಪಿಸಿದರು.
ಹೆಬ್ರಿ, ಮಾ.21: ರಾಜ್ಯದ ಶ್ರೀನಾರಾಯಣ ಗುರು ಅಭಿವೃದ್ಧಿ ನಿಗಮದ ಅಧ್ಯಕ್ಷ ಮುದ್ರಾಡಿ ಮಂಜುನಾಥ ಪೂಜಾರಿ ಅವರ ತಾಯಿ ಕಮಲ ಪೂಜಾರಿ(88) ಶುಕ್ರವಾರ ರಾತ್ರಿ ಅಲ್ಪಕಾಲದ ಅಸೌಖ್ಯದ ಸ್ವಗೃಹದಲ್ಲಿ ನಿಧನರಾದರು. ಮಂಡಲ ಪಂಚಾಯಿತಿ ಸದಸ್ಯರಾಗಿದ್ದ ದಿವಂಗತ ಚಂದು ಪೂಜಾರಿ ಯವರ ಧರ್ಮಪತ್ನಿಯಾಗಿದ್ದ ಕಮಲ ಪೂಜಾರಿ ಮುದ್ರಾಡಿ ಗ್ರಾಮ ಪಂಚಾಯತ್ ಸದಸ್ಯೆಯಾಗಿಯು ಸೇವೆ ಸಲ್ಲಿಸಿದ್ದರು. ಕಮಲ ಪೂಜಾರಿ ಮುದ್ರಾಡಿ ಮಂಜುನಾಥ ಪೂಜಾರಿ ಸಹಿತ ನಾಲ್ವರು ಪುತ್ರರು, ನಾಲ್ವರು ಪುತ್ರಿಯರು ಹಾಗೂ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.
ದೋರನಹಳ್ಳಿ | ಸಂಭ್ರಮದ ಈದುಲ್ ಫಿತ್ರ್ ಆಚರಣೆ
ಯಾದಗಿರಿ/ ದೋರನಹಳ್ಳಿ : ಪಟ್ಟಣದಲ್ಲಿ ಈದುಲ್ ಫಿತ್ರ್ ಹಬ್ಬವನ್ನು ಅತ್ಯಂತ ಭಕ್ತಿಭಾವ ಮತ್ತು ಸಂಭ್ರಮದಿಂದ ಆಚರಿಸಲಾಯಿತು. ಒಂದು ತಿಂಗಳ ಉಪವಾಸದ ಬಳಿಕ ಬಂದ ಈ ಹಬ್ಬವು ಪರಸ್ಪರ ಸೌಹಾರ್ದತೆ, ದಾನಧರ್ಮ ಮತ್ತು ಸಹೋದರತ್ವದ ಸಂದೇಶವನ್ನು ಸಾರಿತು. ಹಬ್ಬದ ಅಂಗವಾಗಿ ಮುಂಜಾನೆ ಮಸೀದಿಗಳಲ್ಲಿ ವಿಶೇಷ ನಮಾಝ್ ಸಲ್ಲಿಸಲಾಯಿತು. ನಂತರ ಪರಸ್ಪರ “ಈದ್ ಮುಬಾರಕ್” ಎಂದು ಶುಭಾಶಯ ವಿನಿಮಯ ಮಾಡಿಕೊಂಡರು. ಮನೆಮನೆಗಳಲ್ಲಿ ವಿಶೇಷ ಆಹಾರ ಪದಾರ್ಥಗಳನ್ನು ತಯಾರಿಸಲಾಗಿತ್ತು. ಶೀರ್ ಖುರ್ಮಾ, ಬಿರಿಯಾನಿ ಸೇರಿದಂತೆ ವಿವಿಧ ಸಿಹಿ ಮತ್ತು ಖಾರದ ವಾಂಛಿತ ತಿನಿಸುಗಳನ್ನು ಸವಿದರು. ಸ್ನೇಹಿತರು, ಬಂಧುಗಳು ಮನೆಗಳಿಗೆ ಭೇಟಿ ನೀಡಿ ಹಬ್ಬದ ಸಂಭ್ರಮವನ್ನು ಹೆಚ್ಚಿಸಿದರು. ಪಟ್ಟಣದ ಜನಪ್ರತಿನಿಧಿಗಳು, ವಿವಿಧ ಸಂಘಟನೆಗಳ ಮುಖಂಡರು ಈದುಲ್ ಫಿತ್ರ್ ಹಬ್ಬದ ಶುಭಾಶಯಗಳನ್ನು ಕೋರಿದರು. ಕೆಲವರು ಮಸೀದಿಗಳಿಗೆ ಭೇಟಿ ನೀಡಿ ಹಬ್ಬದ ಸಂಭ್ರಮದಲ್ಲಿ ಪಾಲ್ಗೊಂಡರು. ಒಟ್ಟಾರೆ, ದೋರನಹಳ್ಳಿ ಪಟ್ಟಣದಲ್ಲಿ ಈದುಲ್ ಫಿತ್ರ್ ಹಬ್ಬವು ಧರ್ಮಭೇದವಿಲ್ಲದೆ ಎಲ್ಲರನ್ನೂ ಒಂದೇ ವೇದಿಕೆಯಲ್ಲಿ ಸೇರಿಸಿ, ಸೌಹಾರ್ದತೆ, ಸಹೋದರತ್ವ ಮತ್ತು ಮಾನವೀಯ ಮೌಲ್ಯಗಳ ಸಂದೇಶವನ್ನು ಸಾರಿದ ಹಬ್ಬವಾಗಿ ಅರ್ಥಪೂರ್ಣವಾಗಿ ಆಚರಿಸಲ್ಪಟ್ಟಿತು.
ಮಿಲಾಗ್ರಿಸ್ ಪ್ರೀಮಿಯರ್ ಲೀಗ್ ವಾಲಿಬಾಲ್ ಪಂದ್ಯಾಟಕ್ಕೆ ಚಾಲನೆ
ಉಡುಪಿ: ಕ್ರೀಡೆ ಎಂದರೆ ಕೇವಲ ಸ್ಪರ್ಧೆಯಲ್ಲ, ಅದು ವ್ಯಕ್ತಿತ್ವ, ಶಿಸ್ತು ಮತ್ತು ಐಕ್ಯತೆಯ ಪ್ರತಿಬಿಂಬವಾಗಿದೆ. ಸವಾಲುಗಳನ್ನು ಎದುರಿಸುವ ಧೈರ್ಯ ಹಾಗೂ ಜಯದಲ್ಲಿ ವಿನಯವನ್ನು ಕಲಿಸುತ್ತದೆ ಎಂದು ಉಡುಪಿ ಧರ್ಮ ಪ್ರಾಂತ್ಯದ ಪ್ರೇಷಿತ ಆಡಳಿತಾಧಿಕಾರಿ ಅತೀ ವಂ.ಡಾ.ಜೆರಾಲ್ಡ್ ಐಸಾಕ್ ಲೋಬೊ ಹೇಳಿದ್ದಾರೆ. ಕಲ್ಯಾಣಪುರದ ಮಿಲಾಗ್ರಿಸ್ ಕಾಲೇಜು ಹಳೆ ವಿದ್ಯಾರ್ಥಿ ಸಂಘದ ವತಿಯಿಂದ ಆಯೋಜಿಸಲಾದ ಶನಿವಾರ ಮಿಲಾಗ್ರಿಸ್ ಪ್ರೀಮಿಯರ್ ಲೀಗ್ ವಾಲಿಬಾಲ್ ಪಂದ್ಯಾಟಕ್ಕೆ ಚಾಲನೆ ನೀಡಿ ಅವರು ಮಾತನಾಡುತಿದ್ದರು. ಪಂದ್ಯಾಟವು ಹಳೆ ವಿದ್ಯಾರ್ಥಿಗಳು, ವಿದ್ಯಾರ್ಥಿಗಳು ಮತ್ತು ಅಭಿಮಾನಿಗಳನ್ನು ಒಟ್ಟುಗೂಡಿಸುವ ಉತ್ತಮ ವೇದಿಕೆ ಯಾಗಿದೆ. ಇದು ಸಂಸ್ಥೆಯ ಒಗ್ಗಟ್ಟನ್ನು ಬಲಪಡಿಸುವುದರ ಜೊತೆಗೆ ಪರಸ್ಪರ ಸಹಕಾರ ಮತ್ತು ಗೌರವದ ಮೌಲ್ಯ ಗಳನ್ನು ಉತ್ತೇಜಿಸುತ್ತದೆ. ಶಿಕ್ಷಣವು ತರಗತಿಗಳಲ್ಲಿ ಮಾತ್ರ ಸೀಮಿತವಾಗದೆ ಸಂಬಂಧಗಳ ಮೂಲಕ ಮುಂದುವರಿಯುತ್ತದೆ ಎಂಬುದನ್ನು ಈ ಸಂಘ ತೋರಿಸಿದೆ. ಎಂದು ಹೇಳಿದರು. ಕ್ರೀಡಾಪಟುಗಳಿಗೆ ಪ್ರೇರಣೆ ನೀಡಿದ ಅವರು, ಪ್ರಾಮಾಣಿಕತೆ, ಉತ್ಸಾಹ ಮತ್ತು ಗೌರವದೊಂದಿಗೆ ಆಟವಾಡುವಂತೆ ಕರೆ ನೀಡಿದ ಅವರು, ಸವಾಲುಗಳನ್ನು ಅವಕಾಶಗಳಾಗಿ ಪರಿವರ್ತಿಸಿ ಮುಂದೆ ಸಾಗುವಂತೆ ಸಲಹೆ ನೀಡಿದರು. ವಿಜಯ ಮುಖ್ಯವಾದರೂ, ಅದಕ್ಕಿಂತ ಮುಖ್ಯವಾದುದು ಕ್ರೀಡಾಸ್ಫೂರ್ತಿ ಎಂಬುದನ್ನು ಒತ್ತಿ ಹೇಳಿದ ಅವರು, ಸೋಲಿನ ನಂತರ ಪುನಃ ಎದ್ದು ನಿಲ್ಲುವ ಮನೋಬಲವೇ ನಿಜವಾದ ಚಾಂಪಿಯನ್ಗಳ ಗುಣ ಎಂದು ಹೇಳಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾಜಿ ಅಂತರಾಷ್ಟ್ರೀಯ ಬ್ಯಾಡ್ಮಿಂಟನ್ ಪಟು ಮಂಜುಷಾ ಕನ್ವರ್ ಕ್ರೀಡಾಪಟು ಗಳಿಗೆ ಶುಭಹಾರೈಸಿದರು. ಕಾಲೇಜಿನ ಸಂಚಾಲಕ ವಂ.ಫರ್ಡಿನಾಂಡ್ ಗೊನ್ಸಾಲ್ವಿಸ್, ಕಾಲೇಜಿನ ಉಪಪ್ರಾಂಶು ಪಾಲ ಸೊಫೀಯಾ ಡಾಯಸ್, ಶಾಲೆಟ್ ಮಥಾಯಸ್, ಹಳೆ ವಿದ್ಯಾರ್ಥಿ ಸಂಘದ ಆಲನ್ ಲೂವಿಸ್, ತೋಮಸ್ ಡಿಸೋಜ, ರಾಜ್ ಬೆಂಗ್ರೆ, ಮೆಲ್ವಿನ್ ಸಿಕ್ವೇರಾ, ವಿಲ್ಸನ್ ಫೆರ್ನಾಡಿಸ್, ನಿಖಿಲ್ ಉಪಸ್ಥಿತರಿದ್ದರು. ಕಾಲೇಜಿನ ಪ್ರಾಂಶುಪಾಲ ಡಾ.ವಿನ್ಸೆಂಟ್ ಆಳ್ವಾ ಸ್ವಾಗತಿಸಿದರು. ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಶಶಿಧರ ಸಾಲಿಯಾನ್ ವಂದಿಸಿದರು. ಪಂದ್ಯಾಟದಲ್ಲಿ ಒಟ್ಟು ಎಂಟು ತಂಡಗಳು ಭಾಗವಹಿಸಿವೆ.
ಯುದ್ಧ ಸಾಮ್ರಾಜ್ಯಶಾಹಿ ವ್ಯಾಪಾರ: ಸುರೇಶ್ ಕಲ್ಲಾಗರ ಆರೋಪ
ಅಡುಗೆ ಅನಿಲ ಬೆಲೆ ಏರಿಕೆ, ಕೊರತೆ ವಿರುದ್ಧ ಸಿಪಿಎಂ ಪ್ರತಿಭಟನೆ
ಕೆಂಭಾವಿ | ಸಂಭ್ರಮದ ಈದುಲ್ ಫಿತ್ರ್ ಆಚರಣೆ
ಕೆಂಭಾವಿ : ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಗ್ರಾಮೀಣ ವಲಯದಲ್ಲಿ ಶನಿವಾರ ಈದುಲ್ ಫಿತ್ರ್ ಹಬ್ಬವನ್ನು ಅತ್ಯಂತ ಸಡಗರ, ಸಂಭ್ರಮ ಹಾಗೂ ಭಕ್ತಿಭಾವದಿಂದ ಆಚರಿಸಲಾಯಿತು. ಕಳೆದ ಒಂದು ತಿಂಗಳಿನಿಂದ ಕಠಿಣ ಉಪವಾಸ ಆಚರಣೆಯಲ್ಲಿ ನಿರತರಾಗಿದ್ದ ಮುಸ್ಲಿಂ ಬಾಂಧವರು, ವೃತದ ಕೊನೆಯ ದಿನವಾದ ಶನಿವಾರ ಮುಂಜಾನೆಯೇ ಉತ್ಸಾಹದಿಂದ ಹಬ್ಬದ ಆಚರಣೆಯಲ್ಲಿ ತೊಡಗಿದ್ದರು. ಮಕ್ಕಳು, ಯುವಕರು ಹಾಗೂ ಹಿರಿಯರು ಹೊಸ ಬಟ್ಟೆಗಳನ್ನು ಧರಿಸಿ ಪಟ್ಟಣದ ಪ್ರಮುಖ ಬೀದಿಗಳ ಮೂಲಕ ಮೆರವಣಿಗೆಯಲ್ಲಿ ಸಾಗಿ ಈದ್ಗಾ ಮೈದಾನ ತಲುಪಿದರು. ಅಲ್ಲಿ ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಬಾಂಧವರು ಸಾಮೂಹಿಕ ನಮಾಝ್ ಸಲ್ಲಿಸಿದರು. ನಂತರ ಒಬ್ಬರಿಗೊಬ್ಬರು ಆಲಿಂಗಿಸಿಕೊಳ್ಳುವ ಮೂಲಕ ‘ಈದ್ ಮುಬಾರಕ್’ ಎಂದು ಶುಭಾಶಯ ವಿನಿಮಯ ಮಾಡಿಕೊಂಡರು. ಹಬ್ಬದ ಮಹತ್ವದ ಕುರಿತು ಮಾತನಾಡಿದ ಖಾಜಿ ಮುಹಮ್ಮದ್ ಆದಮ್ ಫಾರೂಕಿ, ಈದುಲ್ ಫಿತ್ರ್ ಹಬ್ಬವು ಕೇವಲ ಆಚರಣೆಗೆ ಸೀಮಿತವಾಗದೆ, ಮನುಷ್ಯನಲ್ಲಿ ಶ್ರದ್ಧೆ, ಭಕ್ತಿ ಮತ್ತು ಸಹನೆಯನ್ನು ಮೈಗೂಡಿಸುತ್ತದೆ. ಅತಿಯಾದ ಸಂಪತ್ತಿನ ಸಂಗ್ರಹವನ್ನು ತ್ಯಜಿಸಿ, ಬಡವ-ಬಲ್ಲಿದ ಎಂಬ ಭೇದವಿಲ್ಲದೆ ದಾನ (ಝಕಾತ್) ಮಾಡಲು ಇದು ಪ್ರೇರೇಪಿಸುತ್ತದೆ. ಬಡತನದ ನೋವು ಮತ್ತು ಹಸಿವಿನ ಅರಿವು ಪ್ರತಿಯೊಬ್ಬರಿಗೂ ಉಂಟಾಗಲಿ ಎಂಬುದು ಈ ವೃತದ ಮೂಲ ಉದ್ದೇಶ. ಈ ಹಬ್ಬವು ಸಮಾಜದಲ್ಲಿ ಪರಸ್ಪರ ಭರವಸೆ, ಸಾಮರಸ್ಯ ಹಾಗೂ ಭಾವೈಕ್ಯತೆಯ ಮನೋಭಾವವನ್ನು ಇನ್ನಷ್ಟು ಗಟ್ಟಿಗೊಳಿಸಲಿ ಎಂದು ಶುಭ ಹಾರೈಸಿದರು.
ಲವಿಟಾಗೆ ಬಿಎಸ್ಡಬ್ಲ್ಯೂ ಪ್ರಥಮ ರ್ಯಾಂಕ್
ಉಡುಪಿ, ಮಾ.21: ಇತ್ತೀಚೆಗೆ ನಡೆದ ಮಂಗಳೂರು ವಿಶ್ವವಿದ್ಯಾಲಯದ ರ್ಯಾಂಕ್ ಪಟ್ಟಿಯಲ್ಲಿ ತೆಂಕನಿಡಿಯೂರು ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದ ಲವಿಟಾ ಮಥಾಯಸ್ ಅವರು ಬಿಎಸ್ಡಬ್ಲ್ಯೂ ವಿಭಾಗದಲ್ಲಿ ಪ್ರಥಮ ರ್ಯಾಂಕ್ ಪಡೆದದ್ದಾರೆ. ಇವರಿಗೆ ಕಾಲೇಜು ಅಭಿವೃದ್ದಿ ಸಮಿತಿ, ಪ್ರಾಂಶುಪಾಲರು ಹಾಗೂ ಕಾಲೇಜಿನ ವಿದ್ಯಾರ್ಥಿಗಳ ಪರವಾಗಿ ಅಭಿನಂದನೆ ಸಲ್ಲಿಸಲಾಯಿತು.
ಬೆಳಗಾವಿಯಲ್ಲಿ ಭಾರೀ ಸೈಬರ್ ವಂಚನೆ; 15 ಕೋಟಿ ರೂ. ಕಳೆದುಕೊಂಡು ವೃದ್ಧ ಉದ್ಯಮಿ!
ಬೆಳಗಾವಿ : ರಾಜ್ಯವನ್ನೇ ಬೆಚ್ಚಿಬೀಳಿಸುವಂತಹ ಮತ್ತೊಂದು ಸೈಬರ್ ವಂಚನೆ ಪ್ರಕರಣ ಬೆಳಗಾವಿಯಲ್ಲಿ ಬೆಳಕಿಗೆ ಬಂದಿದೆ. 81 ವರ್ಷದ ವೃದ್ಧ ಉದ್ಯಮಿಯನ್ನು ಬೆದರಿಸಿ ಸೈಬರ್ ವಂಚಕರು 15 ಕೋಟಿ ರೂ. ದೋಚಿರುವ ಘಟನೆ ನಡೆದಿದೆ. ದುಷ್ಕರ್ಮಿಗಳು ಡಾರ್ಕ್ ವೆಬ್ ಮೂಲಕ ವೃದ್ಧನ ಸಂಪರ್ಕಕ್ಕೆ ಬಂದು, ಅವರ ಬ್ಯಾಂಕ್ ಖಾತೆ ಮನಿ ಲಾಂಡ್ರಿಂಗ್ ಪ್ರಕರಣದಲ್ಲಿ ಸಿಲುಕಿದೆ ಎಂದು ಹೇಳಿ ಬೆದರಿಕೆ ಹಾಕಿದ್ದಾರೆ. ಬಳಿಕ ವಿಡಿಯೋ ಕಾಲ್ ಮಾಡಿ ತಾವು ಈಡಿ ಅಧಿಕಾರಿಗಳೆಂದು ನಂಬಿಸಿ, ತನಿಖೆ ನಡೆಯುತ್ತಿದೆ ಎಂದು ಹೇಳಿದ್ದಾರೆ. “ತನಿಖೆ ಪೂರ್ಣಗೊಳ್ಳುವವರೆಗೂ ನಿಮ್ಮ ಹಣವನ್ನು ನಾವು ಸೂಚಿಸುವ ಖಾತೆಗೆ ವರ್ಗಾಯಿಸಿ. ಅದು ಸುರಕ್ಷಿತವಾಗಿರುತ್ತದೆ. ನಂತರ ನಿಮ್ಮ ಖಾತೆಗೆ ಹಿಂದಿರುಗಿಸಲಾಗುತ್ತದೆ” ಎಂದು ನಂಬಿಸಿದ್ದಾರೆ ಎನ್ನಲಾಗಿದೆ. ಬಳಿಕ ವೃದ್ಧ ಉದ್ಯಮಿ ತಮ್ಮ ಖಾತೆಯಲ್ಲಿದ್ದ 15 ಕೋಟಿ ರೂ. ಹಣವನ್ನು ಅವರ ಖಾತೆಗಳಿಗೆ ವರ್ಗಾಯಿಸಿದ್ದಾರೆ ಎಂದು ತಿಳಿದು ಬಂದಿದೆ. ಸೈಬರ್ ವಂಚಕರು ಅನುಮಾನ ಬಾರದಂತೆ ಕೆಲವು ದಿನಗಳ ಕಾಲ ಸಂಪರ್ಕದಲ್ಲಿದ್ದರು. ಬಳಿಕ ಸಂಪರ್ಕ ಕಡಿತವಾದಾಗ ಉದ್ಯಮಿ ಪೊಲೀಸರನ್ನು ಸಂಪರ್ಕಿಸಿ, ಬೆಳಗಾವಿ ನಗರದ ಸಿಇಎನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ತಕ್ಷಣವೇ ಆರೋಪಿಗಳ ಬ್ಯಾಂಕ್ ಖಾತೆಗಳನ್ನು ಫ್ರೀಜ್ ಮಾಡಿಸಿದ್ದಾರೆ. ಈಗಾಗಲೇ 90 ಲಕ್ಷ ಹಣವನ್ನು ಮರುಪಡೆಯಲಾಗಿದೆ. ಉಳಿದ ಹಣದ ಪತ್ತೆಗಾಗಿ ಪೊಲೀಸರು ಪರಿಶೀಲನೆ ಮುಂದುವರೆಸಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಸೈಬರ್ ಪೊಲೀಸರು ಆರೋಪಿಗಳ ಬೆನ್ನಟ್ಟಿದ್ದು, ಇಂತಹ ವಂಚನೆಗಳಿಂದ ಎಚ್ಚರಿಕೆಯಿಂದ ಇರಬೇಕು ಎಂದು ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.
ಪಂಚಗಂಗಾ ಎಕ್ಸ್ಪ್ರೆಸ್ ರೈಲಿಗೆ ಕುಣಿಗಲ್ ನಿಲುಗಡೆ ಮುಂದುವರಿಕೆ
ಉಡುಪಿ, ಮಾ.21: ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣ ಬಹಾಗೂ ಕಾರವಾರ ನಡುವೆ ಸಂಚರಿಸುವ ದೈನಂದಿನ ಪಂಚಗಂಗಾ ಎಕ್ಸ್ಪ್ರೆಸ್ ರೈಲಿಗೆ ಕುಣಿಗಲ್ ನಿಲ್ದಾಣದಲ್ಲಿ ಪ್ರಾಯೋಗಿಕ ನೆಲೆಯಲ್ಲಿ ನಿಲುಗಡೆಯನ್ನು ಜೂನ್ 30ರವರೆಗೆ ಮುಂದುವರಿಸಲಾಗಿದೆ ಎಂದು ಕೊಂಕಣ ರೈಲ್ವೆ ಪ್ರಕಟಣೆ ತಿಳಿಸಿದೆ.
ಯಾದಗಿರಿ ಜಿಲ್ಲೆಯಾದ್ಯಾಂತ ಸಂಭ್ರಮದ ಈದುಲ್ ಫಿತ್ರ್ ಆಚರಣೆ
ಯಾದಗಿರಿ: ಯಾದಗಿರಿ ನಗರ ಸೇರಿದಂತೆ ಜಿಲ್ಲೆಯಾದ್ಯಂತ ಮುಸ್ಲಿಂ ಬಾಂಧವರು ಈದುಲ್ ಫಿತ್ರ್ ಹಬ್ಬವನ್ನು ಶನಿವಾರ ಸಡಗರ ಸಂಭ್ರಮದಿಂದ ಆಚರಿಸಿದರು. ಕಳೆದ ಒಂದು ತಿಂಗಳ ಕಾಲ ಮುಂಜಾನೆಗಳಿಂದಲೇ ಆಹಾರ-ನೀರು ಸೇವಿಸದೆ ರೋಜಾ ಆಚರಿಸಿದ್ದ ಜನರು, ಉಪವಾಸ ಮುಗಿಸಿ ಹೊಸ ಬಟ್ಟೆಗಳನ್ನು ಧರಿಸಿ ಸಾವಿರಾರು ಸಂಖ್ಯೆಯಲ್ಲಿ ಈದ್ಗಾ ಮೈದಾನಗಳಲ್ಲಿ ಸೇರಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಬಳಿಕ ಪರಸ್ಪರ ಆಲಿಂಗನ ಮಾಡಿಕೊಂಡು ಈದ್ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು. ಹಬ್ಬದ ಅಂಗವಾಗಿ ಬಂಧು-ಬಳಗ ಹಾಗೂ ಸ್ನೇಹಿತರ ಮನೆಗಳಿಗೆ ತೆರಳಿ ಸಿಹಿ ತಿಂಡಿಗಳನ್ನು ಹಂಚಿಕೊಂಡು ಸಂಭ್ರಮಿಸಿದರು. ನಗರದ ಎರಡು ಈದ್ಗಾ ಮೈದಾನಗಳಲ್ಲಿ ಬೆಳಗ್ಗೆಯಿಂದಲೇ ಭಕ್ತರ ದೊಡ್ಡ ಸಂಖ್ಯೆಯ ಸಮಾಗಮ ಕಂಡುಬಂದಿತು. ಜಿಲ್ಲೆಯ ಶಹಾಪುರ, ಸುರಪುರ, ಗುರುಮಠಕಲ್, ವಡಗೇರಾ, ಸೈದಾಪುರ, ಹುಣಸಗಿ, ಕೆಂಭಾವಿ, ನಾರಾಯಣಪುರ, ಕೊಡೆಕಲ್, ಭೀಮಗುಡಿ ಸೇರಿದಂತೆ ವಿವಿಧ ಪ್ರದೇಶಗಳಲ್ಲಿಯೂ ರಂಜಾನ್ ಹಬ್ಬವನ್ನು ಭಕ್ತಿಭಾವದಿಂದ ಹಾಗೂ ಸಂಭ್ರಮದಿಂದ ಆಚರಿಸಲಾಯಿತು.
ಮಹಾಡ್ ಚಳುವಳಿ ದಲಿತರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ: ಶ್ಯಾಮರಾಜ್ ಬಿರ್ತಿ
ಹೆಬ್ರಿ, ಮಾ.21: ಮಹಾಡ್ ಚಳುವಳಿಯು ಚೌದಾರ ಕೆರೆಯ ನೀರನ್ನು ಮುಟ್ಟಿ ಕುಡಿದಿರುವುದು ದಲಿತರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ. ಹಿಂದೂಗಳು ನಾವೆಲ್ಲಾ ಒಂದು ಎಂದು ಹೇಳುವವರ ಬಗ್ಗೆ ನಾವು ಜಾಗೃತರಾಗಿರಬೇಕು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಮೈಸೂರು ವಿಭಾಗೀಯ ಸಂಘಟನಾ ಸಂಚಾಲಕ ಶ್ಯಾಮರಾಜ್ ಬಿರ್ತಿ ಹೇಳಿದ್ದಾರೆ. ಕರ್ನಾಟಕ ದಲಿತ ಸಂಘರ್ಷ ಸಮಿತಿ(ಅಂಬೇಡ್ಕರ್ ವಾದ) ಉಡುಪಿ ಜಿಲ್ಲೆ ಮತ್ತು ಹೆಬ್ರಿ ತಾಲೂಕು ಸಮಿತಿ ವತಿ ಯಿಂದ ಮಹಾಡ್ ಚಳುವಳಿಯ ನೆನಪಿನಲ್ಲಿ ಹೆಬ್ರಿಯ ದೋರಿಯಾಲ್ನಲ್ಲಿ ಶುಕ್ರವಾರ ನಡೆದ ಮಹಾಡ್ ಕೆರೆ ಚಳುವಳಿ ಕಥಾ ಕಥನಾ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು. ಅಧ್ಯಕ್ಷತೆ ವಹಿಸಿದ್ದ ದಸಂಸ ಜಿಲ್ಲಾ ಪ್ರಧಾನ ಸಂಚಾಲಕ ಮಂಜುನಾಥ ಗಿಳಿಯಾರ್ ಮಾತನಾಡಿ, 1927ರ ಮಾ.20ರಂದು ಮಹಾರಾಷ್ಟ್ರದ ಮಹಾಡ್ನ ಸಾರ್ವಜನಿಕ ಚೌದಾರ್ ಕೆರೆಯ ನೀರನ್ನು, ಹಂದಿ, ನಾಯಿ, ಹಸು ಗಳೆಲ್ಲಾ ಸ್ವೇಚ್ಛಾನುಸಾರವಾಗಿ ಕುಡಿದರೂ ದಲಿತರಿಗೆ, ಅಸ್ಪೃಶ್ಯರಿಗೆ ನೀರನ್ನು ಮುಟ್ಟಲು ಅವಕಾಶ ಇರಲಿಲ್ಲ. ಬಾಬಾಸಾಹೇಬರು ಸಾವಿರಾರು ದಲಿತ ರೊಂದಿಗೆ ಹೋಗಿ ಚೌದಾರ್ ಕೆರೆಯ ನೀರನ್ನು ಬೊಗಸೆಯಲ್ಲಿ ತೆಗೆದು ಕುಡಿದು ಪ್ರತಿಭಟಿಸಿರುವುದೇ ಈ ಮಹಾಡ್ ಚಳುವಳಿ. ಇದು ಐತಿಹಾಸಿಕ ದಿನವಾಗಿದ್ದು, ಈ ಚಳುವಳಿಯು ಅಸ್ಪೃಶ್ಯತೆ ವಿರುದ್ಧದ ಸ್ವಾಭಿಮಾನದ ಸಂಕೇತದ ಚಳುವಳಿಯಾಗಿದೆ. ಈ ಮಹಾನ್ ಮಹಾಡ್ ಚಳುವಳಿಯನ್ನು ಮತ್ತೆ ಮತ್ತೆ ನೆನೆಯುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ತಿಳಿಸಿದರು. ಮಖ್ಯ ಅತಿಥಿಗಳಾಗಿ ದಸಂಸ ಬ್ರಹ್ಮಾವರ ತಾಲೂಕು ಸಂಚಾಲಕ ಶ್ಯಾಮಸುಂದರ ತೆಕ್ಕಟ್ಟೆ, ಕುಂದಾಪುರ ತಾಲೂಕು ಸಂಚಾಲಕರ ರಾಜು ಬೆಟ್ಟಿನಮನೆ, ಜಿಲ್ಲಾ ಸಂಘಟನಾ ಸಂಚಾಲಕ ದೇವು ಹೆಬ್ರಿ ಮಾತನಾಡಿದರು. ಕುಮಾರ್ ಕೋಟಾ, ಬಿರ್ತಿ ಸುರೇಶ, ಕೆ.ಡಿ.ಹರೀಶ್ಚಂದ್ರ, ವಿಜಯ ಗಿಳಿಯಾರು, ಪ್ರಶಾಂತ್ ಬಿರ್ತಿ, ಬೋಜರಾಜ್ ಕಾವ್ರಾಡಿ ಉಪಸ್ಥಿತರಿದ್ದರು. ಸಂತೋಷ ಮಾಸ್ಟರ್ ಮುದ್ರಾಡಿ ಸ್ವಾಗತಿಸಿದರು. ಹೆಬ್ರಿ ತಾಲೂಕು ಸಂಚಾಲಕ ಅಣ್ಣಪ್ಪ ಮಾಸ್ಟರ್ ಮುದ್ರಾಡಿ ವಂದಿಸಿದರು.

22 C