Puttur |ಕಾಲೇಜು ವಿದ್ಯಾರ್ಥಿಗೆ ತಂಡದಿಂದ ಹಲ್ಲೆ
ಪುತ್ತೂರು : ಖಾಸಗಿ ಕಾಲೇಜು ವಿದ್ಯಾರ್ಥಿಯೊಬ್ಬನ ಮೇಲೆ ಐದಾರು ಜನರ ತಂಡವೊಂದು ಹಲ್ಲೆ ನಡೆಸಿ ಜೀವಬೆದರಿಕೆ ಹಾಕಿರುವ ಘಟನೆ ಪುತ್ತೂರು ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದ ಬಳಿ ಬುಧವಾರ ಸಂಜೆ ನಡೆದಿರುವುದು ವರದಿಯಾಗಿದೆ. ಆದಿಲ್ ಹಲ್ಲೆಗೊಳಗಾದ ಕಾಲೇಜು ವಿದ್ಯಾರ್ಥಿ. ಬುಧವಾರ ಸಂಜೆ ಆದಿಲ್ ತನ್ನ ಸ್ನೇಹಿತರಾದ ಸುಹೈಲ್ ಮತ್ತು ಅಝಾರ್ ರೊಂದಿಗೆ ಪುತ್ತೂರು ಕಸಬಾ ಗ್ರಾಮದ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದ ಬಳಿ ಚಹಾ ಕುಡಿಯುತ್ತಿದ್ದರು. ಈ ವೇಳೆ ಅಲ್ಲಿಗೆ ಬಂದ ಪರಿಚಯಸ್ಥರಾದ ಬಿ.ಕೆ.ಮುಈನುದ್ದೀನ್, ಮುಆದ್ ಹಾಗೂ ಇತರ ಐವರು ಸೇರಿ ಆದಿಲ್ ಮೇಲೆ ಏಕಾಏಕಿ ಹಲ್ಲೆ ನಡೆಸಿ, ಜೀವ ಬೆದರಿಕೆ ಹಾಕಿದ್ದಾರೆ. ತಡೆಯಲು ಯತ್ನಿಸಿದ ಸ್ನೇಹಿತರಿಗೂ ಬೆದರಿಕೆ ಹಾಕಿದ್ದಾರೆ. ಕೆಲವು ತಿಂಗಳ ಹಿಂದೆ ಕಾಲೇಜಿನ ವಿದ್ಯಾರ್ಥಿಗಳಿಗೆ ಮುಈನುದ್ದೀನ್ ಮತ್ತು ತಂಡ ಹೊಡೆಯುತ್ತಿದ್ದ ವೇಳೆ ಆದಿಲ್ ಮಧ್ಯ ಪ್ರವೇಶಿಸಿ ಗಲಾಟೆ ಬಿಡಿಸಿದ್ದರು. ಇದೇ ದ್ವೇಷವನ್ನು ಮನಸ್ಸಿನಲ್ಲಿಟ್ಟುಕೊಂಡು ಈಗ ಹಲ್ಲೆ ನಡೆಸಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಗಾಯಗೊಂಡ ಆದಿಲ್ ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಬಗ್ಗೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
NKWRTC: ಕರ್ನಾಟಕ-ಗೋವಾ ಸಂಪರ್ಕ ಮತ್ತಷ್ಟು ಸುಲಭ, ಹುಬ್ಬಳ್ಳಿ-ಮಡಗಾಂವಗೆ 2 ವಿಶೇಷ ಬಸ್ ಸಂಚಾರ
ಹುಬ್ಬಳ್ಳಿ; ಉತ್ತರ ಕರ್ನಾಟಕದ ಪ್ರಮುಖ ಕೇಂದ್ರವಾಗಿರುವ ಹುಬ್ಬಳ್ಳಿ-ಧಾರವಾಡ ಭಾಗದಿಂದ ಗೋವಾರ ಕಡೆಗೆ ತೆರಳುವವರ ಸಂಖ್ಯೆ ಹೆಚ್ಚಿರುತ್ತದೆ. ಅದರಲ್ಲೂ ಸದ್ಯದ ಬೇಸಿಗೆ ವೇಳೆ ಗೋವಾದತ್ತ ಪ್ರವಾಸಕ್ಕೆ ತೆರಳುವವರ ಸಂಖ್ಯೆ ಅಧಿಕ. ಪ್ರಯಾಣಿಕರ ಅನುಕೂಲಕ್ಕಾಗಿ ಹುಬ್ಬಳ್ಳಿ- ಮಡಗಾಂವ ನಡುವೆ 2 ವೇಗದೂತ ಬಸ್ ಗಳ ಸಂಚಾರ ಆರಂಭಿಸಲಾಗಿದೆ ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ಎಚ್. ರಾಮನಗೌಡರ ಮಾಹಿತಿ ನೀಡಿದ್ದಾರೆ. ಪ್ರಸ್ತುತ ಬೇಸಿಗೆ
West Bengal ಮೊದಲ ಹಂತದ ಮತದಾನ| ಕುಮಾರ್ ಗಂಜ್ ನಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿ ದಾಳಿ ಮಾಡಿದ ಗುಂಪು
ಟಿಎಂಸಿ ಕಾರ್ಯಕರ್ತರು ದಾಳಿ ಮಾಡಿದ್ದಾರೆ ಎಂದು ಆರೋಪಿಸಿದ ಬಿಜೆಪಿ
ಚುನಾವಣೆಯ ಅಗತ್ಯವಾದರೂ ಏನಿದೆ?”: ಚುನಾವಣಾ ಆಯೋಗಕ್ಕೆ ಕಪಿಲ್ ಸಿಬಲ್ ತರಾಟೆ
ಹೊಸದಿಲ್ಲಿ: ಚುನಾವಣಾ ಆಯೋಗದ ಮೇಲೆ ಗುರುವಾರ ತೀಕ್ಷ್ಣ ವಾಗ್ದಾಳಿ ನಡೆಸಿರುವ ಮಾಜಿ ಕಾನೂನು ಸಚಿವ ಕಪಿಲ್ ಸಿಬಲ್, “ಚುನಾವಣಾ ಆಯೋಗವು ಪಶ್ಚಿಮ ಬಂಗಾಳದಲ್ಲಿ ಮತ ಹಕ್ಕು ನಿರಾಕರಣೆಯ ಪ್ರಯೋಗ ನಡೆಸುತ್ತಿದೆ” ಎಂದು ಆರೋಪಿಸಿದ್ದಾರೆ. “ಅಂದಮೇಲೆ ಚುನಾವಣೆಯ ಅಗತ್ಯವಾದರೂ ಏನಿದೆ?” ಎಂದು ಅವರು ಪ್ರಶ್ನಿಸಿದ್ದಾರೆ. ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ರಾಜ್ಯಸಭಾ ಸಂಸದರೂ ಆದ ಕಪಿಲ್ ಸಿಬಲ್, ಅವರಿಗೆ ಪದ್ಮಭೂಷಣ ಪ್ರಶಸ್ತಿ ನೀಡಿ ಪುರಸ್ಕರಿಸಬೇಕು ಎಂದು ವ್ಯಂಗ್ಯವಾಡಿದ್ದಾರೆ. ಈ ಕುರಿತು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಕಪಿಲ್ ಸಿಬಲ್, “ಚುನಾವಣಾ ಆಯೋಗ ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಮತ ಹಕ್ಕು ನಿರಾಕರಣೆಯ ಪ್ರಯೋಗ ನಡೆಸುತ್ತಿದೆ. ಮುಖ್ಯ ಚುನಾವಣಾ ಆಯುಕ್ತರಿಗೆ ಪದ್ಮಭೂಷಣ ಪ್ರಶಸ್ತಿ ನೀಡಿ ಪುರಸ್ಕರಿಸಲೇಬೇಕು!” ಎಂದು ಛೇಡಿಸಿದ್ದಾರೆ. “ನನ್ನ ಪ್ರಶ್ನೆ: ಚುನಾವಣೆಯ ಅಗತ್ಯವಾದರೂ ಏನಿದೆ?” ಎಂದೂ ಅವರು ತೀಕ್ಷ್ಣವಾಗಿ ಪ್ರಶ್ನಿಸಿದ್ದಾರೆ. ತೀವ್ರವಾಗಿ ಧ್ರುವೀಕರಣಗೊಂಡಿರುವ ಪಶ್ಚಿಮ ಬಂಗಾಳದಲ್ಲಿ ಇಂದು ಮೊದಲ ಹಂತದ ಮತದಾನ ನಡೆಯುತ್ತಿದೆ. ಭ್ರಷ್ಟಾಚಾರ, ನಿರುದ್ಯೋಗದಂತಹ ವಿಷಯಗಳ ಜಾಗವನ್ನು ಗುರುತು, ನಾಗರಿಕತ್ವ ಹಾಗೂ ಮತಪಟ್ಟಿಯಿಂದ ಹೆಸರುಗಳನ್ನು ಅಳಿಸಿಹಾಕಿರುವ ವಿವಾದ ಆಕ್ರಮಿಸಿರುವುದು ಈ ಬಾರಿಯ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ವಿಶೇಷವಾಗಿದೆ.
ಎಸೆಸೆಲ್ಸಿ ಫಲಿತಾಂಶ : 624 ಅಂಕ ಗಳಿಸಿದ ಕೋಲಾರದ ಲಕ್ಷ್ಮೀ ಜಿಲ್ಲೆಗೆ ಪ್ರಥಮ
ಕೋಲಾರ : ಪ್ರಸಕ್ತ (2025-26ನೇ) ಶೈಕ್ಷಣಿಕ ಸಾಲಿನ ಎಸೆಸೆಲ್ಸಿ ವಾರ್ಷಿಕ ಪರೀಕ್ಷೆಯಲ್ಲಿ ಕೋಲಾರದ ವಿದ್ಯಾರ್ಥಿನಿ ಲಕ್ಷ್ಮೀ 624 (99.84 ಶೇ.) ಅಂಕಗಳನ್ನು ಗಳಿಸಿ ರಾಜ್ಯಕ್ಕೆ ದ್ವಿತೀಯ ಸ್ಥಾನ ಗಳಿಸಿದ್ದರೆ, ಕೋಲಾರ ಜಿಲ್ಲೆಗೆ ಪ್ರಥಮ ಸ್ಥಾನಿಯಾಗಿದ್ದಾರೆ. ರಾಜ್ಯದಲ್ಲಿ 21 ವಿದ್ಯಾರ್ಥಿಗಳು 625ರಲ್ಲಿ 624 ಅಂಕಗಳನ್ನು ಗಳಿಸಿದ್ದಾರೆ. ಲಕ್ಷ್ಮೀ ಕೋಲಾರ ನಗರದ ಕೀಲು ಕೋಟೆ ನಿವಾಸಿ, ಶಿಕ್ಷಕ ನಾಗರಾಜ್ ಅವರ ಪುತ್ರಿ.
ಎಸೆಸೆಲ್ಸಿ ಪರೀಕ್ಷೆ| ಸ್ಟಾರ್ಲೈನ್ ಸ್ಕೂಲ್ ಮಂಜೊಟ್ಟಿಗೆ ಶೇ.100 ಫಲಿತಾಂಶ
ಬೆಳ್ತಂಗಡಿ: ಪ್ರಸಕ್ತ ಸಾಲಿನ ಎಸೆಸೆಲ್ಸಿ ಪರೀಕ್ಷೆಯಲ್ಲಿ ಮಂಜೊಟ್ಟಿಯಲ್ಲಿರುವ ಸ್ಟಾರ್ಲೈನ್ ಸ್ಕೂಲ್ ಶೇ. 100 ಫಲಿತಾಂಶ ಪಡೆದುಕೊಂಡಿದೆ. ಪರೀಕ್ಷೆಗೆ ಹಾಜರಾದ 16 ವಿದ್ಯಾರ್ಥಿಗಳಲ್ಲಿ ಇಬ್ಬರು ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ, 12 ಮಂದಿ ಪ್ರಥಮ ದರ್ಜೆ ಹಾಗು ಇಬ್ಬರು ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ತೇರ್ಗಡೆಯಾಗಿದ್ದಾರೆ. 8 ಮಂದಿ ವಿದ್ಯಾರ್ಥಿಗಳು 500ಕ್ಕೂ ಹೆಚ್ಚು ಅಂಕಗಳನ್ನು ಪಡೆದಿದ್ದಾರೆ. ವಿದ್ಯಾರ್ಥಿ ಮಹಮ್ಮದ್ ಶಮ್ಮಾಝ್ ಶರೀಫ್ 625ರಲ್ಲಿ 577 ಅಂಕ ಹಾಗು ಮಹಮ್ಮದ್ ಹಾಶಿಮ್ 576 ಅಂಕಗಳನ್ನು ಪಡೆದು ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. ವಿದ್ಯಾರ್ಥಿಗಳನ್ನು ಶಾಲೆಯ ಮುಖ್ಯೋಪಾಧ್ಯಾಯಿನಿ ಜಾಕಿನ್ ಬಿನ್, ಮ್ಯಾನೇಜ್ಮೆಂಟ್ ಅಭಿನಂದಿಸಿದ್ದಾರೆ.
ಕೋಲ್ಕತ್ತಾ: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಗೆ ಮೊದಲ ಹಂತದ ಮತದಾನ ಪ್ರಕ್ರಿಯೆ ಚಾಲ್ತಿಯಲ್ಲಿದ್ದು, ಈ ನಡುವೆ, ನಂದಿಗ್ರಾಮದಲ್ಲಿ ಪೊಲೀಸರು ಬಿಜೆಪಿಯ ಪರವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಆಡಳಿತಾರೂಢ ಟಿಎಂಸಿ ಆರೋಪಿಸಿದ್ದರೆ, ʼಆಡಳಿತಾರೂಢ ಟಿಎಂಸಿ ಬೆಂಬಲಿತ ಗೂಂಡಾಗಳು ಜನರನ್ನು ಬೆದರಿಸುತ್ತಿದ್ದಾರೆʼ ಎಂದು ವಿಪಕ್ಷ ನಾಯಕ ಸುವೇಂದು ಅಧಿಕಾರಿ ಪ್ರತ್ಯಾರೋಪ ಮಾಡಿದ್ದಾರೆ. ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ರಾಜ್ಯ ಸಚಿವ ಶಶಿ ಪಂಜಾ, ಪೂರ್ಬ ಮೇದಿನಿಪುರ್ ಜಿಲ್ಲೆಯ ನಂದಿಗ್ರಾಮದಲ್ಲಿ ಪೊಲೀಸರು ಬಿಜೆಪಿಯ ಪರವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಪಾಕ್ ಕ್ರೀಡಾ ಪತ್ರಕರ್ತನ ಸಹೋದರನ ಅಪಹರಣದಲ್ಲಿ ಪಿಸಿಬಿ ಮುಖ್ಯಸ್ಧ ಮೊಹ್ಸಿನ್ ನಖ್ವಿ ಕೈವಾಡ!: ಏನಿದು ಹೊಸ ವಿವಾದ?
Mohsin Naqvi New Controversy- ಪಾಕಿಸ್ತಾನ ಕ್ರಿಕೆಟ್ ಮಂಡಳಿ ಅಧ್ಯಕ್ಷ ಹಾಗೂ ಆಂತರಿಕ ಸಚಿವ ಮೊಹ್ಸಿನ್ ನಖ್ವಿ ಅವರು ಕ್ರೀಡಾ ಪತ್ರಕರ್ತ ಸನಾವುಲ್ಲಾ ಖಾನ್ ಅವರ ಸಹೋದರನ ಅಪಹರಣ ಪ್ರಕರಣದಲ್ಲಿ ನೇರ ಆರೋಪ ಎದುರಿಸುತ್ತಿದ್ದಾರೆ. ಇಸ್ಲಾಮಾಬಾದ್ನಲ್ಲಿ ನಖ್ವಿ ಅವರ 'ಮ್ಯಾನ್ಹ್ಯಾಟನ್-ಶಾಂಘೈ' ಮಾದರಿಯ ನಗರೀಕರಣ ಯೋಜನೆಯನ್ನು ಪ್ರಶ್ನಿಸಿದ್ದಕ್ಕಾಗಿ ಈ ಕಿಡ್ನಾಪ್ ನಡೆದಿದೆ ಎಂದು ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಒಂದು ಕಡೆ ಬುಲ್ಡೋಜರ್ ಮೂಲಕ ಬಡವರ ಮನೆಗಳನ್ನು ಕೆಡವುತ್ತಿರುವುದು, ಮತ್ತೊಂದೆಡೆ ಕ್ರೀಡಾ ವಲಯದಲ್ಲಿ ಪಕ್ಷಪಾತ ಮತ್ತು ಕಳಪೆ ನಿರ್ಧಾರಗಳಿಂದ ಪಾಕಿಸ್ತಾನ ಕ್ರಿಕೆಟ್ನ ಅವನತಿಗೆ ನಖ್ವಿ ಅವರೇ ಕಾರಣ ಎಂಬ ಟೀಕೆಗಳು ವ್ಯಕ್ತವಾಗುತ್ತಿವೆ.
ಬಂಗಾಳ ಕಣದಲ್ಲಿ ಮೋದಿ ಭವಿಷ್ಯ : ’ಮೇ 4ಕ್ಕೆ ಸಿಹಿ, ಜಾಲ್’ಮುರಿ ಹಂಚುತ್ತೇವೆ’ ಎಂದ ಪ್ರಧಾನಿ
West Bengal Election 2026 : ಪಶ್ಚಿಮ ಬಂಗಾಳದಲ್ಲಿ ಮೊದಲನೇ ಹಂತದ ವಿಧಾನಸಭಾ ಚುನಾವಣೆ ನಡೆಯುತ್ತಿದೆ. ಎರಡನೇ ಹಂತದ ಚುನಾವಣೆ ನಡೆಯುವ ಕ್ಷೇತ್ರಗಳಲ್ಲಿ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಿದ್ದ ಪ್ರಧಾನಮಂತ್ರಿ ನರೇಂದ್ರ ಮೋದಿ, ಮೇ ನಾಲ್ಕಕ್ಕೆ ಜಾಲ್’ಮುರಿ ಮತ್ತು ಮಿಠಾಯಿಯನ್ನು ಹಂಚುತ್ತೇವೆ ಎನ್ನುವ ವಿಶ್ವಾಸದ ಮಾತನ್ನಾಡಿದ್ದಾರೆ.
ಎಸೆಸೆಲ್ಸಿ ಉತ್ತೀರ್ಣನಾದ ಖುಷಿಯಲ್ಲಿ ಈಜಲು ತೆರಳಿದ್ದ ಬಾಲಕ ಬಾವಿಯಲ್ಲಿ ಮುಳುಗಿ ನಾಪತ್ತೆ
ಕೋಲಾರ : ಇಂದು ಪ್ರಕಟಗೊಂಡ ಎಸೆಸೆಲ್ಸಿ ಪರೀಕ್ಷೆಯ ಫಲಿತಾಂಶದಲ್ಲಿ ಉತ್ತೀರ್ಣನಾದ ಖುಷಿಯಲ್ಲಿ ಸ್ನೇಹಿತರ ಜೊತೆ ಈಜಲು ತೆರಳಿದ ಬಾಲಕನೋರ್ವ ಬಾವಿ ನೀರಲ್ಲಿ ಮುಳುಗಿ ಕಣ್ಮರೆಯಾದ ದಾರುಣ ಘಟನೆ ಮುಳಬಾಗಿಲು ತಾಲೂಕಿನಲ್ಲಿ ಗುರುವಾರ ಮಧ್ಯಾಹ್ನ ನಡೆದಿದೆ. ಮುಳಬಾಗಿಲು ತಾಲೂಕಿನ ಸೊಣ್ಣವಾಡಿ ಗ್ರಾಮದ ಕಿರಣ್ (15) ಬಾವಿ ನೀರಲ್ಲಿ ಮುಳುಗಿ ನಾಪತ್ತೆಯಾದ ಬಾಲಕ. ಎಸೆಸೆಲ್ಸಿ ಫಲಿತಾಂಶ ಪ್ರಕಟಗೊಂಡ ಬಳಿಕ ಸ್ನೇಹಿತರೊಂದಿಗೆ ತೆರಳಿದ್ದ ಕಿರಣ್, ಆಳದ ಬಾವಿಯಲ್ಲಿ ಮುಳುಗಿ ನಾಪತ್ತೆಯಾಗಿದ್ದಾನೆ. ಕಿರಣ್ ಗಾಗಿ ಅಗ್ನಿಶಾಮಕ ದಳದ ಸಿಬ್ಬಂದಿ ಹುಡುಕಾಟ ನಡೆಸುತ್ತಿದ್ದಾರೆ. ಮುಳಬಾಗಿಲು ಗ್ರಾಮಾಂತರ ಪೊಲೀಸ್ ರಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಹೊಸದಿಲ್ಲಿ: ಶಬರಿಮಲೆ ದೇವಸ್ಥಾನ ಪ್ರವೇಶ ವಿವಾದದ ಕುರಿತು ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ ಗುರುವಾರ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದ್ದು, “ಗಣ್ಯರು, ಚಿಂತಕರು ಹಾಗೂ ನ್ಯಾಯಶಾಸ್ತ್ರಜ್ಞರ ಅಭಿಪ್ರಾಯಗಳನ್ನು ಗೌರವಿಸುತ್ತೇವೆ. ಆದರೆ ‘ವಾಟ್ಸಾಪ್ ಯುನಿವರ್ಸಿಟಿ’ದಿಂದ ಬರುವ ಮಾಹಿತಿಯನ್ನು ಸ್ವೀಕರಿಸಲು ಸಾಧ್ಯವಿಲ್ಲ” ಎಂದು ಹೇಳಿದೆ. ಧಾರ್ಮಿಕ ಸ್ವಾತಂತ್ರ್ಯ, ಆಚರಣೆಗಳ ವ್ಯಾಪ್ತಿ ಹಾಗೂ ಮಹಿಳೆಯರ ಪ್ರವೇಶಕ್ಕೆ ಸಂಬಂಧಿಸಿದ ಅರ್ಜಿಗಳ ವಿಚಾರಣೆ ವೇಳೆ ಒಂಭತ್ತು ನ್ಯಾಯಮೂರ್ತಿಗಳ ಸಂವಿಧಾನ ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿತು. ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ನೇತೃತ್ವದ ಪೀಠದಲ್ಲಿ ನ್ಯಾಯಮೂರ್ತಿಗಳಾದ ಬಿ.ವಿ. ನಾಗರತ್ನ, ಎಂ.ಎಂ. ಸುಂದರೇಶ್, ಅಹ್ಸಾನುದ್ದೀನ್ ಅಮಾನುಲ್ಲಾ, ಅರವಿಂದ್ ಕುಮಾರ್, ಅಗಸ್ಟೀನ್ ಜಾರ್ಜ್ ಮಸಿಹ್, ಪ್ರಸನ್ನ ಬಿ. ವರಾಲೆ, ಆರ್. ಮಹಾದೇವನ್ ಹಾಗೂ ಜೋಯ್ಮಲ್ಯ ಬಾಗ್ಚಿ ಸೇರಿದ್ದರು. ದಾವೂದಿ ಬೊಹ್ರಾ ಸಮುದಾಯದ ಪರವಾಗಿ ಹಿರಿಯ ವಕೀಲ ನೀರಜ್ ಕಿಶನ್ ಕೌಲ್ ವಾದ ಮಂಡಿಸಿ, ಧಾರ್ಮಿಕ ವಿಷಯಗಳಲ್ಲಿ ನ್ಯಾಯಾಂಗ ಸಂಯಮದ ಅಗತ್ಯತೆ ಕುರಿತು ಕಾಂಗ್ರೆಸ್ ನಾಯಕ ಶಶಿ ತರೂರ್ ಬರೆದ ಲೇಖನವನ್ನು ಉಲ್ಲೇಖಿಸಿದರು. ಈ ವೇಳೆ ಮುಖ್ಯ ನ್ಯಾಯಮೂರ್ತಿ ಕಾಂತ್, “ವೈಯಕ್ತಿಕ ಅಭಿಪ್ರಾಯವು ವೈಯಕ್ತಿಕವಾಗಿಯೇ ಉಳಿಯುತ್ತದೆ” ಎಂದು ಹೇಳಿದರು. ಇದಕ್ಕೆ ಪ್ರತಿಯಾಗಿ ಕೌಲ್, “ಜ್ಞಾನ ಮತ್ತು ಮಾಹಿತಿ ಯಾವುದೇ ಮೂಲದಿಂದ ಬಂದರೂ ಸ್ವೀಕರಿಸಬೇಕು” ಎಂದು ಅಭಿಪ್ರಾಯಪಟ್ಟರು. ಇದಕ್ಕೆ ಹಾಸ್ಯಭರಿತವಾಗಿ ಪ್ರತಿಕ್ರಿಯಿಸಿದ ನ್ಯಾಯಮೂರ್ತಿ ನಾಗರತ್ನ, “ಆದರೆ ವಾಟ್ಸಾಪ್ ಯುನಿವರ್ಸಿಟಿಯಿಂದ ಅಲ್ಲ” ಎಂದು ಹೇಳಿದರು. ಕೌಲ್ ಕೂಡ ಅಂತಹ ಮೂಲಗಳನ್ನು ಅವಲಂಬಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಈ ಪ್ರಕರಣದ ವಿಚಾರಣೆ ಮುಂದುವರಿದಿದ್ದು, ಧಾರ್ಮಿಕ ಆಚರಣೆಗಳನ್ನು ‘ಅಗತ್ಯ ಮತ್ತು ಅವಿಭಾಜ್ಯ’ ಎಂದು ಗುರುತಿಸುವ ಮಾನದಂಡಗಳನ್ನು ನಿರ್ಧರಿಸುವುದು ಕಷ್ಟಕರ ಎಂಬ ಅಭಿಪ್ರಾಯವನ್ನು ನ್ಯಾಯಾಲಯ ಈಗಾಗಲೇ ವ್ಯಕ್ತಪಡಿಸಿದೆ. ಗಮನಾರ್ಹವಾಗಿ, 2018ರಲ್ಲಿ ಐದು ನ್ಯಾಯಮೂರ್ತಿಗಳ ಪೀಠವು 4:1 ಬಹುಮತದ ತೀರ್ಪಿನಲ್ಲಿ 10ರಿಂದ 50 ವರ್ಷದೊಳಗಿನ ಮಹಿಳೆಯರಿಗೆ ಶಬರಿಮಲೆ ಅಯ್ಯಪ್ಪ ದೇವಸ್ಥಾನ ಪ್ರವೇಶವನ್ನು ನಿರಾಕರಿಸುವ ನಿಷೇಧವನ್ನು ರದ್ದುಪಡಿಸಿ, ಆ ಆಚರಣೆಯನ್ನು ಸಂವಿಧಾನಬಾಹಿರವೆಂದು ಘೋಷಿಸಿತ್ತು.
SSLC Exam Results 2026: ಅಂಕಗಳಿಗಿಂತ ಜೀವನ ಮುಖ್ಯ - ವಿದ್ಯಾರ್ಥಿಗಳಿಗೆ ಪ್ರೇರಣಾದಾಯಕ ಕಿವಿಮಾತು: ಮನಶ್ಶಾಸ್ತ್ರಜ್ಞೆ ಹಾಗೂ ಮಕ್ಕಳ ಸುರಕ್ಷತಾ ತರಬೇತುದಾರರಾದ ಭವ್ಯಾ ವಿಶ್ವನಾಥ್ ಅವರ ಬರಹ ಇಲ್ಲಿದೆ. ಕಿವಿಮಾತು - ಮಕ್ಕಳೇ, Sslc Results 2026 ನಿಮ್ಮ ಪರೀಕ್ಷೆಯ ಫಲಿತಾಂಶವೇ ಹೊರತು, ನಿಮ್ಮ ಬದುಕಿನ ಫಲಿತಾಂಶವಲ್ಲ. ಬದುಕಿನಲ್ಲಿ ಇನ್ನು ಅನೇಕ ಪರೀಕ್ಷೆಗಳನ್ನು ನೀವು ಎದುರಿಸಬೇಕಾಗಿದೆ. ಇದು
ಬೆಟ್ಟಿಂಗ್ ಆರೋಪ: ಗೃಹಸಚಿವ ಪರಮೇಶ್ವರ್ ವಿರುದ್ಧದ ಪ್ರಕರಣಕ್ಕೆ ಹೈಕೋರ್ಟ್ ತಡೆಯಾಜ್ಞೆ
ಬೆಂಗಳೂರು: ತುಮಕೂರು ನಗರದಲ್ಲಿ ಕಳೆದ ವರ್ಷ ಅಕ್ಟೋಬರ್ ನಲ್ಲಿ ನಡೆದಿದ್ದ ಕಬಡ್ಡಿ ಪಂದ್ಯಾವಳಿಯಲ್ಲಿ ಕಾನೂನುಬಾಹಿರ ಬೆಟ್ಟಿಂಗ್ ನಲ್ಲಿ ತೊಡಗಿಸಿಕೊಂಡ ಆರೋಪಕ್ಕೆ ಸಂಬಂಧಿಸಿ ರಾಜ್ಯ ಗೃಹಸಚಿವ ಡಾ.ಜಿ.ಪರಮೇಶ್ವರ್ ವಿರುದ್ಧದ ಪ್ರಕರಣಕ್ಕೆ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿದೆ. ಬೆಟ್ಟಿಂಗ್ ಆರೋಪಕ್ಕೆ ಸಂಬಂಧಿಸಿದಂತೆ ಎಫ್ಐಆರ್ ದಾಖಲಿಸಿ ತನಿಖೆ ನಡೆಸಲು ಪೊಲೀಸರಿಗೆ ನಿರ್ದೇಶಿಸಿದ್ದ ಬೆಂಗಳೂರಿನ 42ನೇ ಎಸಿಜೆಎಂ ನ್ಯಾಯಾಲಯದ ಆದೇಶ ಪ್ರಶ್ನಿಸಿ ಪರಮೇಶ್ವರ್ ಸಲ್ಲಿಸಿದ್ದ ಅರ್ಜಿಯನ್ನು ಗುರುವಾರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸುನೀಲ್ ದತ್ ಯಾದವ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಮಧ್ಯಂತರ ಆದೇಶ ಮಾಡಿತು. ವಿಚಾರಣೆ ವೇಳೆ ಪರಮೇಶ್ವರ್ ಪರ ಹಿರಿಯ ವಕೀಲ ಕೆ.ಎನ್. ಫಣೀಂದ್ರ ವಾದ ಮಂಡಿಸಿ, ಗೃಹಸಚಿವರು ಕಬಡ್ಡಿ ಟೂರ್ನಿಯ ಮುಖ್ಯ ಅತಿಥಿಯಾಗಿ ಹೋಗಿದ್ದರು. ವಿಜಯಪುರ ತಂಡ ಗೆಲ್ಲುತ್ತದೆಂದು 500 ರೂ. ಬೆಟ್ಟಿಂಗ್ ಕಟ್ಟಿದ್ದಾಗಿ ಹೇಳಿದ್ದಾರೆ. ಸೋತ ತಂಡಕ್ಕೆ ಬೇಸರವಾಗಬಾರದೆಂದು ಡಾ.ಜಿ.ಪರಮೇಶ್ವರ್ ಹೀಗೆ ಹೇಳಿದ್ದಾರೆ. ಇದನ್ನೇ ಅಪರಾಧವೆಂಬಂತೆ ಬಿಂಬಿಸಿ ಖಾಸಗಿ ದೂರು ದಾಖಲಿಸಲಾಗಿದೆ. ವಿಚಾರಣಾ ಕೋರ್ಟ್ ಎಫ್ಐಆರ್ ದಾಖಲಿಸಲು ಆದೇಶಿಸುವ ಮುನ್ನ ಪ್ರಕ್ರಿಯೆ ಪಾಲಿಸಿಲ್ಲವೆಂದು ಆಕ್ಷೇಪಿಸಿದರು. ವಾದ ಆಲಿಸಿದ ನ್ಯಾಯಪೀಠ, ತಮಾಷೆಗಾಗಿ ಮಾತನಾಡಿದರೂ ಕೇಸ್ ಹಾಕಬಹುದೇ? ಎಂದು ಪ್ರಶ್ನಿಸಿತಲ್ಲದೆ, ಉದ್ದೇಶಪೂರ್ವಕವಾಗಿ ಇಂತಹ ಹೇಳಿಕೆ ನೀಡಿದಂತೆ ಕಾಣುತ್ತಿಲ್ಲ. ತನಿಖೆಗೆ ಆದೇಶಿಸುವ ಮುನ್ನ ಪೊಲೀಸರಿಂದ ವಿವರಣೆ ಪಡೆಯಬೇಕಿತ್ತು ಎಂದು ಅಭಿಪ್ರಾಯಪಟ್ಟು, ಪ್ರಕರಣಕ್ಕೆ ಮಧ್ಯಂತರ ತಡೆ ನೀಡಿ ಅರ್ಜಿಯ ವಿಚಾರಣೆ ಮುಂದೂಡಿತು. ಎಚ್.ಆರ್. ನಾಗಭೂಷಣ್ ಎಂಬುವವರು ಸಲ್ಲಿಸಿದ್ದ ಖಾಸಗಿ ದೂರನ್ನು ಮಂಗಳವಾರ (ಎಪ್ರಿಲ್ 21) ವಿಚಾರಣೆ ನಡೆಸಿದ್ದ ಬೆಂಗಳೂರಿನ 42ನೇ ಹೆಚ್ಚುವರಿ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ (ಎಸಿಜೆಎಂ) ಕೆ.ಎನ್.ಶಿವಕುಮಾರ್ ಪ್ರಕರಣದ ಸಂಬಂಧ ಎಫ್ಐಆರ್ ದಾಖಲಿಸಿ ತನಿಖೆ ನಡೆಸುವಂತೆ ತುಮಕೂರಿನ ಕೊರಟಗೆರೆ ತಾಲೂಕಿನ ಕೊಡಿಗೇಹಳ್ಳಿ ಪೊಲೀಸ್ ಠಾಣೆಯ ಇನ್ ಸ್ಪೆಕ್ಟರ್ ಗೆ ನಿರ್ದೇಶಿಸಿದ್ದರು.
ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯು ಪ್ರಸಕ್ತ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆಯ ಫಲಿತಾಂಶವನ್ನು ಪ್ರಕಟಿಸಿದ್ದು, ಇದರಲ್ಲಿ ಮೈಸೂರು ಜಿಲ್ಲೆಯ ವಿದ್ಯಾರ್ಥಿ ಧನುಷ್ ಸುಧೀರ್ ಅವರು 625ಕ್ಕೆ 625 ಅಂಕಗಳನ್ನು ಗಳಿಸುವ ಮೂಲಕ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದು ಸಾಧನೆ ಮಾಡಿದ್ದಾರೆ. ತಮ್ಮ ಈ ಯಶಸ್ಸಿನ ಬಗ್ಗೆ ಮಾಧ್ಯಮಗಳೊಂದಿಗೆ ಸಂತಸ ಹಂಚಿಕೊಂಡಿರುವ ಧನುಷ್, ತಮ್ಮ ಸಾಧನೆಯ ಹಿಂದಿನ
ಪಕ್ಷ ವಿರೋಧಿ ಚಟುವಟಿಕೆ ಮಾಡಿದ್ರೆ ನನ್ನ ವಿರುದ್ಧ ಕ್ರಮ ಆಗಲಿ: ಜಮೀರ್ ಅಹ್ಮದ್ ಖಾನ್ ಸವಾಲು
ನಾನು ಏನಾದರೂ ಪಕ್ಷ ವಿರೋಧಿ ಚಟುವಟಿಕೆ ಮಾಡಿದರೆ ನನ್ನ ವಿರುದ್ಧವೂ ಕ್ರಮ ಆಗಲಿ ಎಂದು ಸಚಿವ ಜಮೀರ್ ಅಹ್ಮದ್ ಖಾನ್ ಸವಾಲು ಹಾಕಿದ್ದಾರೆ. ಬೆಂಗಳೂರಿನಲ್ಲಿ ಗುರುವಾರ ಮಾತನಾಡಿದ ಅವರು, ಮೌಲಾನಗಳ ಅಸಮಾಧಾನದ ಹಿನ್ನೆಲೆಯಲ್ಲಿ ಶುಕ್ರವಾರ ನಮಾಜ್ ಬಳಿಕ ಸಭೆ ನಡೆಸಿ ಚರ್ಚೆ ಮಾಡಲಾಗುವುದು ಎಂದರು. ದಾವಣಗೆರೆ ಉಪ ಚುನಾವಣೆ ವಿಚಾರವಾಗಿ ಮುಸ್ಲಿಂ ಸಮುದಾಯಕ್ಕೆ ಅನ್ಯಾಯ ಅಗಿದೆ ಎಂದು ಬೇಸರ ಅಗಿರುವುದು ನಿಜ. ಅದರೆ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಟಿಕೆಟ್ ಸಿಗುವ ಭರವಸೆ ನೀಡಲಾಗಿದೆ ಎಂದರು.
ಎಸೆಸೆಲ್ಸಿ ಪರೀಕ್ಷೆ: ಫಿಝಾ ಫಾತಿಮಾಳಿಗೆ 94.88 ಶೇ. ಅಂಕ
ಸುಳ್ಯ, ಎ.23: ಪ್ರಸಕ್ತ (2025-26ನೇ) ಶೈಕ್ಷಣಿಕ ಸಾಲಿನ ಎಸೆಸೆಲ್ಸಿ ವಾರ್ಷಿಕ ಪರೀಕ್ಷೆಯಲ್ಲಿ ಸುಳ್ಯದ ಸೈಂಟ್ ಜೋಸೆಫ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿನಿ ಫಿಝಾ ಫಾತಿಮಾ 593 (94.88 ಶೇ.) ಅಂಕಗಳನ್ನು ಗಳಿಸಿ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಇವರು ಜಾಲ್ಸೂರಿನ ಅಝರುದ್ದೀನ್ ಎನ್. ಮತ್ತು ಬಿ.ಎಂ.ಅಸ್ಮಾ ದಂಪತಿಯ ಪುತ್ರಿ.
Gautam Adani: ಗೌತಮ್ ಅದಾನಿ ಅವರು ಅಕ್ಷಯ ತೃತೀಯದಂದು ತರಂಗ ಜೈನ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಿದರು. ಯಾತ್ರಿಕರ ಸೌಲಭ್ಯಗಳು ಮತ್ತು ಪರಿಸರ ಸಂರಕ್ಷಣೆಯ ಬಗ್ಗೆ ಈ ಸಂದರ್ಭದಲ್ಲಿ ಅವರು ಚರ್ಚೆ ಮಾಡಿದರು. ಅದಾನಿ ಗ್ರೂಪ್ ಅಧ್ಯಕ್ಷ ಗೌತಮ್ ಅದಾನಿ ಅವರು ಭಾನುವಾರ ಗುಜರಾತ್ನ ತರಂಗ ಬೆಟ್ಟಗಳಲ್ಲಿರುವ ಐತಿಹಾಸಿಕ ಶ್ರೀ ಅಜಿತ್ನಾಥ ಭಗವಾನ್ ಶ್ವೇತಾಂಬರ್ ಜೈನ್ ದೇರಾಸರ್ಗೆ ಭೇಟಿ
ಈ ಬಾರಿಯ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ರಾಜ್ಯದ ಒಟ್ಟು ಏಳು ವಿದ್ಯಾರ್ಥಿಗಳು 625ಕ್ಕೆ 625 ಅಂಕಗಳಿಸಿ ಗಮನ ಸೆಳೆದಿದ್ದಾರೆ. ಈ ಪೈಕಿ ಕುಂದಾಪುರದ ಶಂಕರನಾರಾಯಣ ಮದರ್ ಥೆರೆಸಾ ಮೆಮೋರಿಯಲ್ ಪ್ರೌಢಶಾಲೆಯ ವಿದ್ಯಾರ್ಥಿ ಪ್ರೀತಮ್ ಜಿ. ಪೂಜಾರಿ ಕೂಡ ಒಬ್ಬರಾಗಿದ್ದಾರೆ. ಖಾಸಗಿ ಬಸ್ ಕಂಡಕ್ಟರ್ ಮಗನಾಗಿರುವ ಪೀತಮ್, ಅತ್ಯಂತ ಯೋಜನಾಬದ್ಧ ಅಧ್ಯಯನದ ಮೂಲಕ ತಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ಪಡೆದಿದ್ದಾರೆ. ಪ್ರೀತಮ್ ಪೂಜಾರಿ ಈ ಬಾರಿಯ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಎರಡನೇ ಸ್ಥಾನದಲ್ಲಿರುವ ಉಡುಪಿ ಜಿಲ್ಲೆಗೆ ಪ್ರಥಮ ಸ್ಥಾನಗಳಿಸಿದ್ದಾರೆ.
Kolara | ಕೆಜಿಎಫ್ ನಲ್ಲಿ ಪತಿಯಿಂದ ಪತ್ನಿಯ ಕೊಲೆ
ಕೋಲಾರ: ಶೀಲ ಶಂಕಿಸಿ ಪತ್ನಿಯನ್ನು ಪತಿಯೇ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ಕೆಜಿಎಫ್ ತಾಲೂಕಿನ ಚಿನ್ನದ ಗಣಿ ಗ್ರಾಮದ ಬಳಿ ನಡೆದಿದೆ. ಆಂಧ್ರ ಪ್ರದೇಶದ ಪೆದ್ದೂರು ಗ್ರಾಮದ ಈಶ್ವರಮ್ಮ ಕೊಲೆಯಾದ ಮಹಿಳೆ. ಆಕೆಯ ಪತಿ ಆಂಧ್ರದ ರಾಳ್ಳಬೂದಗೂರು ಬಳಿಯ ಪೆದ್ದೂರು ನಿವಾಸಿ ಗೋಪಿನಾಥ ಕೊಲೆ ಆರೋಪಿಯಾಗಿದ್ದಾನೆ. ಈಶ್ವರಮ್ಮ ಬಂಗಾರಪೇಟೆಯಲ್ಲಿರುವ ಸಂಬಂಧಿಕರ ಮನೆಗೆ ಬಂದು ಹಿಂದಿರುಗುತ್ತಿದ್ದ ವೇಳೆ ಕೊಲೆ ಮಾಡಲಾಗಿದೆ. ಆರೋಪಿ ಗೋಪಿನಾಥ್ ನನ್ನು ಊರಿಗಾಂ ಪೊಲೀಸರು ಬಂಧಿಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಪಶ್ಚಿಮ ಬಂಗಾಳ-ತಮಿಳುನಾಡು ಮತದಾರರನ್ನು ಶ್ಲಾಘಿಸಿದ ಪ್ರಧಾನಿ ಮೋದಿ
ಕೃಷ್ಣಾನಗರ: ಮತದಾನ ನಡೆಯುತ್ತಿರುವ ತಮಿಳುನಾಡು ಹಾಗೂ ಪಶ್ಚಿಮ ಬಂಗಾಳದ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಮತಚಲಾಯಿಸುತ್ತಿರುವುದರ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದು ಪ್ರಜಾಪ್ರಭುತ್ವದ ಶಕ್ತಿಶಾಲಿ ಸೂಚಕ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಇಂದಿಲ್ಲಿ ಮಾತನಾಡಿದ ಅವರು, ಪಶ್ಚಿಮ ಬಂಗಾಳ ಹಾಗೂ ತಮಿಳುನಾಡು ಮತದಾರರು ಚುನಾವಣೆ ಪ್ರಕ್ರಿಯೆಯಲ್ಲಿ ತೋರಿಸುತ್ತಿರುವ ಉತ್ಸುಕತೆಯನ್ನು ಮುಕ್ತ ಕಂಠದಿಂದ ಶ್ಲಾಘಿಸಿದರು. ಎರಡೂ ರಾಜ್ಯಗಳಲ್ಲಿ ಈ ಬಾರಿ ದಾಖಲೆ ಮಟ್ಟದ ಮತದಾನ ನಡೆಯುವ ವಿಶ್ವಾಸವಿದೆ ಎಂದ ಅವರು, ಜನರ ಉತ್ಸಾಹ ಪ್ರಜಾಪ್ರಭುತ್ವದ ಬಲವನ್ನು ಪ್ರತಿಬಿಂಬಿಸುತ್ತದೆ […] The post ಪಶ್ಚಿಮ ಬಂಗಾಳ-ತಮಿಳುನಾಡು ಮತದಾರರನ್ನು ಶ್ಲಾಘಿಸಿದ ಪ್ರಧಾನಿ ಮೋದಿ first appeared on Vistara News .
ಶಿಕ್ಷಕರ ಕೊರತೆಯಿಂದ ಉರ್ದು ಶಾಲೆಯ ವಿದ್ಯಾರ್ಥಿಗಳು ವಂಚಿತ
ಧ್ವನಿ ಎತ್ತಬೇಕಾದ ಅಲ್ಪಸಂಖ್ಯಾತ ನಾಯಕರ ದಿವ್ಯ ಮೌನ
ಎಸೆಸಲ್ಸಿ ಫಲಿತಾಂಶ : ನಂ.1 ಸ್ಥಾನ ಉಳಿಸಿಕೊಂಡ ದ.ಕ. ಜಿಲ್ಲೆ
ಮಂಗಳೂರು, ಎ.23: ಪ್ರಸಕ್ತ (2025-26ನೇ) ಶೈಕ್ಷಣಿಕ ಸಾಲಿನ ಎಸೆಸೆಲ್ಸಿ ವಾರ್ಷಿಕ ಪರೀಕ್ಷೆಯ ಫಲಿತಾಂಶ ಗುರುವಾರ ಪ್ರಕಟಗೊಂಡಿದ್ದು, ದ.ಕ. ಜಿಲ್ಲೆ ರಾಜ್ಯದಲ್ಲೇ ಶೇ 98.40 ಫಲಿತಾಂಶ ದಾಖಲಿಸುವ ಮೂಲಕ ಸತತ ಎರಡನೇ ಬಾರಿಗೆ ನಂ.1 ಸ್ಥಾನ ಉಳಿಸಿಕೊಂಡಿದೆ. ಜಿಲ್ಲೆಯಿಂದ ಈ ಬಾರಿ ಪರೀಕ್ಷೆಗೆ ಹಾಜರಾಗಿದ್ದ 27,207 ವಿದ್ಯಾರ್ಥಿಗಳ ಪೈಕಿ 26,771 ಮಂದಿ ಉತ್ತೀರ್ಣರಾಗಿದ್ದಾರೆ. ಕೇವಲ 436 ಮಂದಿ ಅನುತ್ತೀರ್ಣರಾಗಿದ್ದಾರೆ. ಇದರೊಂದಿಗೆ ಅಗ್ರ ಸ್ಥಾನ ಕಾಯ್ದುಕೊಳ್ಳುವುದರೊಂದಿಗೆ ಫಲಿತಾಂಶದಲ್ಲೂ ಕಳೆದ ವರ್ಷಕ್ಕಿಂತ ಇನ್ನಷ್ಟು ಪ್ರಗತಿ ಸಾಧಿಸಿದೆ. 2025ರಲ್ಲಿ ದ.ಕ. ಜಿಲ್ಲೆ 94.41 ಶೇ. ಫಲಿತಾಂಶದೊಂದಿಗೆ ಮೊದಲ ಸ್ಥಾನ ಪಡೆದಿತ್ತು. 2022ರಲ್ಲಿ 20ನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದ ಜಿಲ್ಲೆ, 2023ರಲ್ಲಿ ಶೇ 89.47 ಫಲಿತಾಂಶದೊಂದಿಗೆ 17ನೇ ಸ್ಥಾನ ಗಳಿಸಿತ್ತು. 2024ರಲ್ಲಿ ಶೇ.92.12 ಫಲಿತಾಂಶ ಪಡೆದು 2ನೇ ಸ್ಥಾನಕ್ಕೆ ಜಿಗಿದಿತ್ತು.
ಮಳೆ ಅಬ್ಬರ: ಬಾಳೆ, ಪಪಾಯಿ, ಎಲೆಬೆಳೆ, ರೇಷ್ಮೆ ತೋಟ ನಾಶ; ರೈತರಿಗೆ ಲಕ್ಷಾಂತರ ರೂ. ನಷ್ಟ
ಕೊಟ್ಟೂರು: ತಾಲೂಕಿನ ಹರಾಳು ಗ್ರಾಮದಲ್ಲಿ ಮಂಗಳವಾರ ಸಂಜೆ ಸುರಿದ ಅಕಾಲಿಕ ಬಿರುಗಾಳಿ ಸಹಿತ ಮಳೆಯ ಅಬ್ಬರಕ್ಕೆ ವ್ಯಾಪಕ ಕೃಷಿ ಹಾನಿ ಸಂಭವಿಸಿದ್ದು, ಹಲವಾರು ರೈತರ ಬದುಕು ಸಂಕಷ್ಟದ ಅಂಚಿಗೆ ತಳ್ಳಲ್ಪಟ್ಟಿದೆ. ವಿಶೇಷವಾಗಿ ಬಾಳೆ, ಪಪ್ಪಾಯಿ, ಎಲೆಬಳ್ಳಿ ಹಾಗೂ ರೇಷ್ಮೆಗೂಡುಗಳಿಗೆ ಸಂಭವಿಸಿದ ಅಪಾರ ಹಾನಿ ರೈತರ ಆರ್ಥಿಕ ಸ್ಥಿತಿಗೆ ಭಾರೀ ಹೊಡೆತ ನೀಡಿದೆ. ಗ್ರಾಮದ ಬಸವನಗೌಡ ದೇಸಾಯಿ ಅವರ 7 ಎಕರೆ ಹಾಗೂ ನಿರಂಜನಗೌಡ ಕೊಟ್ರುಗೌಡ್ರು ಅವರ 6 ಎಕರೆ ಸೇರಿದಂತೆ ಒಟ್ಟು ಸುಮಾರು 13 ಎಕರೆ ಬಾಳೆ ತೋಟ ಮತ್ತು 4 ಎಕರೆ ಪಪ್ಪಾಯಿ ತೋಟ ಸಂಪೂರ್ಣ ನೆಲಸಮಗೊಂಡಿವೆ. ಕಟಾವಿಗೆ ಸಿದ್ಧವಾಗಿದ್ದ ಬೆಳೆಗಳು ನೆಲಕಚ್ಚಿರುವುದರಿಂದ ಲಕ್ಷಾಂತರ ರೂಪಾಯಿ ನಷ್ಟ ಉಂಟಾಗಿದೆ. ಪ್ರತಿ ಎಕರೆಗೆ 80 ಸಾವಿರದಿಂದ 1 ಲಕ್ಷ ರೂಪಾಯಿ ವೆಚ್ಚವಾಗಿರುವ ಬಾಳೆ ತೋಟದಿಂದ ಸುಮಾರು 20 ರಿಂದ 25 ಲಕ್ಷ ರೂಪಾಯಿ ಆದಾಯ ನಿರೀಕ್ಷಿಸಿದ್ದ ರೈತರಿಗೆ ಇದು ದೊಡ್ಡ ಆಘಾತವಾಗಿದೆ. ಪಪ್ಪಾಯಿ ಬೆಳೆಯಿಂದ ಮಾತ್ರವೂ ಸುಮಾರು 4 ಲಕ್ಷಕ್ಕೂ ಹೆಚ್ಚು ಆದಾಯ ನಷ್ಟ ಸಂಭವಿಸಿರುವುದಾಗಿ ರೈತರು ತಿಳಿಸಿದ್ದಾರೆ. ವಡ್ಡಿನಹಳ್ಳಿ ಕರಿಯಪ್ಪ ಅವರ ಒಂದು ಎಕರೆ ಎಲೆಬಳ್ಳಿ ತೋಟವು ಬಿರುಗಾಳಿ ಹಾಗೂ ಆನೆಕಲ್ಲು ಮಳೆಗೆ ಸಂಪೂರ್ಣ ಹಾನಿಗೊಂಡಿದೆ. ಮೂರು ವರ್ಷ ಗಳ ಶ್ರಮದ ಫಲವಾಗಿ ಬೆಳೆದ ಈ ತೋಟ ಕಟಾವಿಗೆ ತಯಾರಾಗಿದ್ದಾಗಲೇ ನಾಶವಾಗಿದ್ದು, ರೈತನಿಗೆ ಸುಮಾರು 2 ಲಕ್ಷ ರೂಪಾಯಿ ನಷ್ಟ ಉಂಟಾಗಿದೆ. ಮತ್ತೊಂದೆಡೆ, ಯರಬಳ್ಳಿ ಫಕ್ಕೀರಪ್ಪ ಅವರ ಸುಮಾರು 2 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿದ್ದ 59*23 ಅಳತೆಯ ರೇಷ್ಮೆಗೂಡು ಗಾಳಿಗೆ ನೆಲಕ್ಕೊರಗಿದ್ದು, ಅದರಲ್ಲಿದ್ದ ರೇಷ್ಮೆ ಉತ್ಪಾದನೆ ಸಂಪೂರ್ಣ ಹಾಳಾಗಿದೆ. ಇನ್ನೂ ಕೆಲವೇ ತಿಂಗಳಲ್ಲಿ ಮಾರಾಟದಿಂದ ಉತ್ತಮ ಆದಾಯ ಬರಬೇಕಿದ್ದ ಸಂದರ್ಭದಲ್ಲಿ ಈ ಘಟನೆ ಸಂಭವಿಸಿದ್ದು, ರೈತನಿಗೆ ಸುಮಾರು 5 ರಿಂದ 6 ಲಕ್ಷ ರೂಪಾಯಿ ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ. ಘಟನೆ ಕುರಿತು ಮಾಹಿತಿ ತಿಳಿದು ಸ್ಥಳಕ್ಕೆ ಕಂದಾಯ, ಕೃಷಿ ಹಾಗೂ ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೆ.ಅಯ್ಯಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಗ್ರಾಮ ಆಡಳಿತಾಧಿಕಾರಿ ಶಾರದಾ ಅವರೂ ಹಾನಿಯ ವಿವರ ಸಂಗ್ರಹಿಸಿದ್ದಾರೆ. ಮಳೆ ಬಂದು ಬಿಸಿಲಿನ ತಾಪ ತಗ್ಗಿಸಿದರೂ, ಇನ್ನೊಂದು ಕಡೆ ಬೆಳೆಗಳು ಸಂಪೂರ್ಣ ಹಾಳಾಗಿ ನಮ್ಮ ಬದುಕು ಅಸ್ತವ್ಯಸ್ತವಾಗಿದೆ. ಸರಕಾರ ತಕ್ಷಣವೇ ಬೆಳೆಹಾನಿ ಪರಿಹಾರ ನೀಡಬೇಕು ಎಂದು ರೈತರು ತಮ್ಮ ನೋವನ್ನು ವ್ಯಕ್ತಪಡಿಸಿದ್ದಾರೆ. ಪರಿಹಾರಕ್ಕೆ ಒತ್ತಾಯ: ಹಾನಿಗೊಳಗಾದ ರೈತರಿಗೆ ಶೀಘ್ರ ಪರಿಹಾರ ನೀಡುವಂತೆ ರೈತ ಸಂಘಟನೆಗಳು ಆಗ್ರಹಿಸಿದ್ದು, ಕೃಷಿ, ತೋಟಗಾರಿಕೆ ಹಾಗೂ ರೇಷ್ಮೆ ಇಲಾಖೆ ಅಧಿಕಾರಿಗಳು ತುರ್ತು ಕ್ರಮ ಕೈಗೊಂಡು ನಷ್ಟದ ಅಂದಾಜು ಮಾಡಿ ಸರಕಾರಕ್ಕೆ ವರದಿ ಸಲ್ಲಿಸಬೇಕು ಎಂದು ಒತ್ತಾಯಿಸಿದ್ದಾರೆ. ಒಟ್ಟಾರೆ, ಅಕಾಲಿಕ ಬಿರುಗಾಳಿ ಮತ್ತು ಮಳೆಯ ದಾಳಿಗೆ ಹರಾಳು ಗ್ರಾಮದಲ್ಲಿ ವಿವಿಧ ಬೆಳೆಗಳು ನೆಲಸಮಗೊಂಡಿದ್ದು, ರೈತರ ಜೀವನದಲ್ಲಿ ಅನಿಶ್ಚಿತತೆ ಮೂಡಿಸಿದೆ. ಸರಕಾರದ ತ್ವರಿತ ಸ್ಪಂದನೆ ಮಾತ್ರವೇ ಸಂಕಷ್ಟದಲ್ಲಿರುವ ರೈತರಿಗೆ ನೆಮ್ಮದಿ ನೀಡಬಲ್ಲದು.
ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಗೆಲುವು: ಪ್ರಧಾನಿ ಮೋದಿ ವಿಶ್ವಾಸ
ಕೃಷ್ಣಾನಗರ: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭೂತಪೂರ್ವ ಗೆಲುವು ಸಾಧಿಸುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಅವರು ಎರಡನೇ ಹಂತದ ಚುನಾವಣೆ ನಡೆಯಲಿರುವ ಕೃಷ್ಣಾನಗರದಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.ರಾಜ್ಯದಲ್ಲಿ ಇಂದು ಮತದಾನ ಶಾಂತಿಯುತವಾಗಿ ನಡೆಯುತ್ತಿದೆ. ಮತದಾರರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು ಜನ ಬದಲಾವಣೆ ಬಯಸಿರುವುದನ್ನು ತೋರಿಸುತ್ತದೆ. ಹಿಂಸಾಚಾರವು ಐವತ್ತು ವರ್ಷಗಳಲ್ಲಿ ಕನಿಷ್ಠ ಮಟ್ಟ ತಲುಪಿದೆ. ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ನಡೆದಾಗಲೆಲ್ಲಾ ಬಿಜೆಪಿಗೆ ಗೆಲುವು ಕಟ್ಟಿಟ್ಟ ಎಂದರು.ನಾನು ಜಲ್ಮುರಿ ಸೇವಿಸಿದ್ದಕ್ಕೆ ಆಡಳಿತಾರೂಢ ಪಕ್ಷ […] The post ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಗೆಲುವು: ಪ್ರಧಾನಿ ಮೋದಿ ವಿಶ್ವಾಸ first appeared on Vistara News .
ಪಾತಾಳಕ್ಕೆ ಕುಸಿದ ಈರುಳ್ಳಿ ದರ: ಕಂಗೆಟ್ಟ ರೈತರು
ವಿಜಯಪುರ: ಒಂದು ಕಾಲದಲ್ಲಿ ‘ಚಿನ್ನದ ಬೆಲೆ’ ತಂದುಕೊಟ್ಟಿದ್ದ ಈರುಳ್ಳಿ, ಇಂದು ರೈತರ ಕಣ್ಣಲ್ಲಿ ನೀರು ತರಿಸುತ್ತಿದೆ. ಮಾರುಕಟ್ಟೆಗೆ ಬಂದ ರೈತರು ಬರಿಗೈಯಲ್ಲಿ ಮನೆಗೆ ಹೋಗುವ ಪರಿಸ್ಥಿತಿಯಲ್ಲಿ ಸಿಲುಕಿದ್ದಾರೆ. ವಿಜಯಪುರದ ಎಪಿಎಂಸಿ ಮಾರುಕಟ್ಟೆಯಲ್ಲಿ ಬುಧವಾರ ಈರುಳ್ಳಿ ಮಾರುಕಟ್ಟೆಯಲ್ಲಿ ಲಾರಿ, ಟೆಂಪು, ಟ್ಯಾಕ್ಟರ್, ಜೀಪ್ಗಳಲ್ಲಿ ತುಂಬಿಕೊಂಡು ಬಂದು, ಮರಳಿ ಖಾಲಿ ಕೈಯಲ್ಲಿ ಮನೆಗೆ ತೆರಳಿದ್ದಾರೆ. ಈರುಳ್ಳಿ ಬೆಳೆ ಬೆಳೆಯಲು ಮಾಡಿದಷ್ಟು ಖರ್ಚು ಬಂದಿಲ್ಲ. ಇದರಿಂದ ಬುಧವಾರ ಕ್ವಿಂಟಾಲ್ಗೆ 300-600 ರೂ. ಈರುಳ್ಳಿ ಬೆಲೆ ಕುಸಿತ ಕಂಡಿದ್ದು, ಇದರಿಂದ ರೈತರು ಕಣ್ಣೀರು ಹಾಕುವಂತಾಗಿದೆ. ವಿಜಯಪುರ ಜಿಲ್ಲೆಯಲ್ಲಿ ಹಿಂಗಾರಿನಲ್ಲಿ ಸುಮಾರು 30 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಈರುಳ್ಳಿ ಬಿತ್ತನೆ ಮಾಡಿದ್ದ ರೈತರಿಗೆ ಈಗ ದರ ಕುಸಿತ ದೊಡ್ಡ ಏಟು ನೀಡಿದೆ. ನಿಡಗುಂದಿ, ಕೊಲ್ಲಾರ, ಸಿಂದಗಿ, ಬಸವನ ಬಾಗೇವಾಡಿ, ಬಬಲೇಶ್ವರ, ದೇವರಹಿಪ್ಪರಗಿ ತಾಲೂಕುಗಳ ವ್ಯಾಪ್ತಿಯಲ್ಲಿ ಹೆಚ್ಚಿನ ರೈತರು ಈರುಳ್ಳಿ ಬೆಳೆದಿದ್ದು, ಕಳೆದ ಮುಂಗಾರಿನಲ್ಲಿ ಸ್ವಲ್ಪ ಮಟ್ಟದ ಬೆಳೆ ಕೈ ಹಿಡಿದಿತ್ತಾದರೂ, ಈಗ ಹಿಂಗಾರು ಬೆಳೆಯು ಈರುಳ್ಳಿ ಬೆಳೆಗಾರರನ್ನು ಬೀದಿಗೆ ಬೀಳುವಂತೆ ಮಾಡಿದೆ. ದರ ಕುಸಿತದ ಆಘಾತ: ನಗರದಲ್ಲಿ ಬುಧವಾರ ಮಾರುಕಟ್ಟೆಯಲ್ಲಿ ಕ್ವಿಂಟಾಲ್ಗೆ 300-600 ರೂ. ಮಾರಾಟ ಮಾಡಿದ್ದು, ಏಪ್ರಿಲ್ ಮೊದಲ ವಾರದಲ್ಲಿ ಕ್ವಿಂಟಾಲ್ಗೆ ರೂ.1,000ದಿಂದ ರೂ.1,500 ರಷ್ಟಿದ್ದ ಈರುಳ್ಳಿ ಬೆಲೆ, ಕೇವಲ ಒಂದೇ ವಾರದಲ್ಲಿ ಕನಿಷ್ಠ ರೂ.600ಕ್ಕೆ ಕುಸಿದಿದೆ. ಕಳೆದ ಮುಂಗಾರು ಹಂಗಾಮಿನಲ್ಲಿ ಕ್ವಿಂಟಾಲ್ಗೆ ರೂ.1,500 ರವರೆಗೆ ದರ ಸಿಕ್ಕಿದೆ. ಖರ್ಚೂ ಬಾರದ ಸ್ಥಿತಿ: ಒಂದು ಎಕರೆ ಈರುಳ್ಳಿ ಬೆಳೆಯಲು ಬೀಜ, ಗೊಬ್ಬರ, ಕೂಲಿ ಸೇರಿದಂತೆ ಕನಿಷ್ಠ 50 ಸಾವಿರಕ್ಕೂ ಹೆಚ್ಚು ಖರ್ಚಾಗುತ್ತದೆ. ಆದರೆ ಈಗ ಸಿಗುತ್ತಿರುವ ದರವು ಕನಿಷ್ಠ ಉತ್ಪಾದನಾ ವೆಚ್ಚವನ್ನೂ ಭರಿಸುತ್ತಿಲ್ಲ. ಬೆಂಗಳೂರು, ಮುಂಬೈನಂತಹ ನಗರಗಳಿಗೆ ಕಳುಹಿಸೋಣ ಎಂದರೆ ವಾಹನ ಬಾಡಿಗೆಯೇ ಅಧಿಕವಾಗುತ್ತದೆ. ಅಲ್ಲಿ ಕ್ವಿಂಟಾಲ್ಗೆ 1,000 ರೂ. ಸಿಕ್ಕರೂ ನಮಗೆ ನಷ್ಟವೇ ಎಂದು ಬೂದಿಹಾಳದ ಮಲ್ಲೇಶ ರೋಳಿ ಅಳಲು ತೋಡಿಕೊಂಡಿದ್ದಾರೆ. ಹೊಲದಲ್ಲೇ ಕೊಳೆಯುತ್ತಿದೆ ಈರುಳ್ಳಿ: ಮಾರುಕಟ್ಟೆಯಲ್ಲಿ ಬೇಡಿಕೆ ಇಲ್ಲದ ಕಾರಣ, ಅದರಲ್ಲೂ ಕಡಿಮೆ ಗುಣಮಟ್ಟದ ಈರುಳ್ಳಿಯನ್ನು ಕೇಳುವವರೇ ಇಲ್ಲದಂತಾಗಿದೆ. ಹೀಗಾಗಿ ರೈತರು ಈರುಳ್ಳಿಯನ್ನು ಮಾರುಕಟ್ಟೆಗೆ ತರುವ ಬದಲು ಹೊಲದಲ್ಲಿಯೇ ಬಿಡುತ್ತಿದ್ದಾರೆ. ಇದರಿಂದಾಗಿ ಲಕ್ಷಾಂತರ ರೂಪಾಯಿ ಸಾಲ ಮಾಡಿ ಬೆಳೆ ಬೆಳೆದ ರೈತರು ಈಗ ಸಾಲ ತೀರಿಸುವುದು ಹೇಗೆ ಎಂಬ ಚಿಂತೆಯಲ್ಲಿದ್ದಾರೆ. ನಾವು ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಈರುಳ್ಳಿ ಬೆಳೆದಿದ್ದೇವೆ. ಇಂದು ಮಾರುಕಟ್ಟೆಗೆ ಬಂದು ಬರಿಗೈಯಿಂದ ಮನೆಗೆ ಹೋಗುವಂತಾಗಿದೆ. ಲಾರಿ ತುಂಬಿಕೊಂಡು ಬಂದಿದ್ದೆ, ಆದರೆ, ಈ ಈರುಳ್ಳಿ ಮಾರಿದ ಹಣವು ಲಾರಿ ಬಾಡಿಗೆಗೆ ಸಾಲುವುದಿಲ್ಲ. ಮರಳಿ ಮನೆಯಿಂದ ಹಣ ತಂದು ಅವರಿಗೆ ಬಾಡಿಗೆ ಕೊಟ್ಟು ನಡೆದುಕೊಂಡು ಹೋಗುವ ಸ್ಥಿತಿ ಬಂದಿದೆ. -ವಿಜಯಕುಮಾರ ನೇಗಿನಾಳ, ಈರುಳ್ಳಿ ಬೆಳೆಗಾರರು. ಮುಳ್ಳಸಾವಳಿ. ಅಡುಗೆ ಅನಿಲದ ಕೊರತೆಯಿಂದಾಗಿ ಅನೇಕ ಹೋಟೆಲ್ ಮತ್ತು ಢಾಬಾಗಳು ಮುಚ್ಚಿವೆ. ಅಥವಾ ಕೆಲವು ಆಹಾರ ಪದಾರ್ಥಗಳ ತಯಾರಿಕೆಯನ್ನು ನಿಲ್ಲಿಸಿವೆ. ಇದು ಈರುಳ್ಳಿಯ ಬೇಡಿಕೆಯ ಮೇಲೆ ನೇರ ಪರಿಣಾಮ ಬೀರಿದ್ದು, ಬೆಲೆ ಕುಸಿತಕ್ಕೆ ಪ್ರಮುಖ ಕಾರಣವಾಗಿದೆ. -ಅಲ್ಲಾಬಕ್ಷ ಬಿಜಾಪುರ, ಕಾರ್ಯದರ್ಶಿಗಳು, ಎಪಿಎಂಸಿ. ವಿಜಯಪುರ. ಕಬ್ಬು ಬೆಳೆಗಾರರಿಗೆ ಸಿಗುವ ಬೆಂಬಲ ಈರುಳ್ಳಿ ಬೆಳೆಗಾರರಿಗೆ ಸಿಗುತ್ತಿಲ್ಲ. ಸರಕಾರ ಕೂಡಲೇ ಮಧ್ಯಪ್ರವೇಶಿಸಿ ಕನಿಷ್ಠ ಬೆಂಬಲ ಬೆಲೆ ಘೋಷಿಸಬೇಕು ಅಥವಾ ವಿಶೇಷ ಪ್ಯಾಕೇಜ್ ಮೂಲಕ ನಷ್ಟ ಪರಿಹಾರ ನೀಡಬೇಕು. -ಸಂಗಮೇಶ ಸಗರ. ರೈತ ಮುಖಂಡರು. ವಿಜಯಪುರ
ಭಾರತ-ಚೀನಾವನ್ನು ‘ನರಕಗಳು’ ಎಂದ ಪತ್ರ ಮರು ಪೋಸ್ಟ್: ಪೌರತ್ವ ವಿವಾದಕ್ಕೆ ನಾಂದಿ ಹಾಡಿದ ಟ್ರಂಪ್
ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ಸಾಮಾಜಿಕ ಜಾಲತಾಣ ಟ್ರೂತ್ ಸೋಷಿಯಲ್ನಲ್ಲಿ ಭಾರತ ಹಾಗೂ ಚೀನಾವನ್ನು ʼನರಕಗಳುʼ ಎಂದು ಉಲ್ಲೇಖಿಸುವ ವಿವಾದಾತ್ಮಕ ಪತ್ರವನ್ನು ಮರು ಹಂಚಿಕೊಂಡಿದ್ದು, ಜನ್ಮಸಿದ್ಧ ಪೌರತ್ವದ ಕುರಿತ ಚರ್ಚೆಗೆ ನಾಂದಿ ಹಾಡಿದೆ. ಮರು ಪೋಸ್ಟ್ ಮಾಡಿದ ಈ ಪತ್ರದಲ್ಲಿ, ಅಮೆರಿಕದಲ್ಲಿ ಜನಿಸಿದವರಿಗೆ ಸ್ವಯಂಚಾಲಿತವಾಗಿ ನಾಗರಿಕತ್ವ ನೀಡುವ ‘ಜನ್ಮಸಿದ್ಧ ಪೌರತ್ವ’ ವ್ಯವಸ್ಥೆಯನ್ನು ಕಟುವಾಗಿ ಟೀಕಿಸಲಾಗಿದೆ. ಈ ನೀತಿ ವಲಸಿಗರಿಗೆ ಹೆರಿಗೆಯ ಮೂಲಕ ದೇಶದಲ್ಲಿ ನೆಲೆಗೊಳ್ಳಲು ಅವಕಾಶ ಮಾಡಿಕೊಡುತ್ತದೆ ಎಂದು ಆರೋಪಿಸಲಾಗಿದ್ದು, ಅಮೆರಿಕದಲ್ಲಿ ಜನಿಸಿದ ಮಗು ತಕ್ಷಣ ನಾಗರಿಕನಾಗುವುದರಿಂದ ನಂತರ ಕುಟುಂಬದ ಇತರ ಸದಸ್ಯರಿಗೂ ವಲಸೆ ಸಾಧ್ಯವಾಗುತ್ತದೆ ಎಂದು ಹೇಳಲಾಗಿದೆ. ಈ ವಿಚಾರವನ್ನು ನ್ಯಾಯಾಲಯಗಳು ತೀರ್ಮಾನಿಸಬಾರದು; ಬದಲಿಗೆ ಅಮೆರಿಕದ ನಾಗರಿಕರೇ ನಿರ್ಧರಿಸಬೇಕು ಎಂಬ ಅಭಿಪ್ರಾಯ ಪತ್ರದಲ್ಲಿ ವ್ಯಕ್ತವಾಗಿದೆ. ಅಮೆರಿಕನ್ ಸಿವಿಲ್ ಲಿಬರ್ಟೀಸ್ ಯೂನಿಯನ್ (ACLU) ಸೇರಿದಂತೆ ಕೆಲವು ಕಾನೂನು ಸಂಸ್ಥೆಗಳು ಅಕ್ರಮ ವಲಸೆಗೆ ಅನುಕೂಲವಾಗುವ ನೀತಿಗಳಿಗೆ ಬೆಂಬಲ ನೀಡುತ್ತಿವೆ ಹಾಗೂ ಸಾರ್ವಜನಿಕ ವ್ಯವಸ್ಥೆಗಳ ಮೇಲೆ ಒತ್ತಡ ಉಂಟುಮಾಡುತ್ತಿವೆ ಎಂಬ ಆರೋಪ ಮಾಡಲಾಗಿದೆ. ವಲಸಿಗರು ಕಲ್ಯಾಣ ಯೋಜನೆಗಳು ಹಾಗೂ ಆರೋಗ್ಯ ಸೇವೆಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಸಿಕೊಳ್ಳುತ್ತಾರೆ ಎಂದು ಹೇಳಲಾಗಿದ್ದು, ಕ್ಯಾಲಿಫೋರ್ನಿಯಾ ರಾಜ್ಯವನ್ನು ಉದಾಹರಣೆಯಾಗಿ ಉಲ್ಲೇಖಿಸಲಾಗಿದೆ. ACLU ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂಬ ಆಗ್ರಹದ ಜೊತೆಗೆ, ವಲಸೆ ನಿಯಂತ್ರಣಕ್ಕೆ ಬಲವಾದ ಕ್ರಮಗಳನ್ನು ಜಾರಿಗೆ ತರಬೇಕು ಎಂಬ ಒತ್ತಾಯವೂ ವ್ಯಕ್ತವಾಗಿದೆ. ಅಮೆರಿಕದ ಸಂವಿಧಾನವು ಇಂದಿನ ತಂತ್ರಜ್ಞಾನ ಮತ್ತು ಜಾಗತಿಕ ಪರಿಸ್ಥಿತಿಗೆ ಹೊಂದಿಕೊಳ್ಳುವ ಪ್ರಶ್ನೆಯನ್ನು ಪತ್ರ ಉಲ್ಲೇಖಿಸಿದೆ. ವಿಮಾನಯಾನ, ಇಂಟರ್ನೆಟ್ ಮತ್ತು ಟೆಲಿವಿಶನ್ ಗೂ ಮೊದಲು ರೂಪುಗೊಂಡ ಈ ಸಂವಿಧಾನವನ್ನು ಇಂದಿನ ಸಂದರ್ಭಕ್ಕೆ ಹೊಂದಿಸಿ ಪರಿಗಣಿಸಬೇಕಾಗಿದೆ ಎಂದು ಅಭಿಪ್ರಾಯ ವ್ಯಕ್ತವಾಗಿದೆ. ಜನ್ಮಸಿದ್ಧ ಪೌರತ್ವದಂತಹ ಪ್ರಮುಖ ವಿಷಯಗಳನ್ನು ಜನಮತದ ಮೂಲಕ ನಿರ್ಧರಿಸಬೇಕು ಎಂಬ ಸೂಚನೆಯೂ ನೀಡಲಾಗಿದೆ. ಇನ್ನೊಂದೆಡೆ, ಇತ್ತೀಚಿನ ವಲಸೆ ಪ್ರವಾಹದಿಂದ ಅಮೆರಿಕದ ಸಾಂಸ್ಕೃತಿಕ ಹಾಗೂ ಸಾಮಾಜಿಕ ರಚನೆ ಮೇಲೆ ಪರಿಣಾಮ ಬೀರುತ್ತಿದೆ ಎಂದು ಪತ್ರದಲ್ಲಿ ಹೇಳಲಾಗಿದೆ. ಐರಿಶ್, ಇಟಾಲಿಯನ್, ಪೋಲಿಷ್ ಸೇರಿದಂತೆ ಹಿಂದಿನ ಯುರೋಪಿಯನ್ ವಲಸಿಗರು ಅಮೆರಿಕ ಸಮಾಜದಲ್ಲಿ ಯಶಸ್ವಿಯಾಗಿ ಏಕೀಕೃತಗೊಂಡಿದ್ದರೆ, ಇಂದಿನ ಪರಿಸ್ಥಿತಿಯಲ್ಲಿ ಆ ಪ್ರಕ್ರಿಯೆ ಕುಂದಿದೆ ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ.
ಎಸೆಸೆಲ್ಸಿ ಫಲಿತಾಂಶ : ಬುಷ್ರಾ ಅಂಜುಮ್ಗೆ 613 ಅಂಕ
ಹುಮನಾಬಾದ್, ಎ.23 : ತಾಲೂಕಿನ ದುಬಲಗುಂಡಿ ಗ್ರಾಮದ ಮೆಕ್ಯಾನಿಕ್ ಅಬ್ದುಲ್ ಶುಕುರ್ ಸೌದಾಗರ್ ಅವರ ಪುತ್ರಿ ಬುಷ್ರಾ ಅಂಜುಮ್ ಎಸೆಸೆಲ್ಸಿ ಪರೀಕ್ಷೆ–1ರಲ್ಲಿ 625ಕ್ಕೆ 613 ಅಂಕ (ಶೇ.99.00) ಪಡೆದು ಗಮನಾರ್ಹ ಸಾಧನೆ ಮಾಡಿದ್ದಾರೆ. ಗ್ರಾಮೀಣ ಹಿನ್ನೆಲೆಯ ಈ ವಿದ್ಯಾರ್ಥಿನಿ ಹುಮನಾಬಾದ್ನ ಸನ್ರೈಸ್ ಪಬ್ಲಿಕ್ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದ್ದು, ಉನ್ನತ ಅಂಕಗಳೊಂದಿಗೆ ತೇರ್ಗಡೆಯಾಗಿದ್ದಾರೆ.
ಮಧ್ಯಪ್ರಾಚ್ಯದಲ್ಲಿನ ಯುದ್ಧದ ಕುರಿತು ಇರಾನ್-ಅಮೆರಿಕಾ ನಡುವಿನ ಶಾಂತಿ ಮಾತುಕತೆಯಲ್ಲಿ ಮಧ್ಯಸ್ಥಿಕೆ ವಹಿಸಿರುವ ಪಾಕಿಸ್ತಾನದ ಧೋರಣೆಯ ಕುರಿತು ಇರಾನ್ ಕಿಡಿ ಕಾರಿದ್ದು, ಪಾಕ್ ನಾಯಕರ ದ್ವಿಮುಖ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿದ್ದಾರೆ. ಅಲ್ಲದೆ, ಮಾತುಕತೆಗಳು ಯಾವುದೇ ಫಲಿತ ನೀಡದಿದ್ದರೂ ಸಹ ಅಂತರಾಷ್ಟ್ರೀಯ ಮಾಧ್ಯಮಗಳ ಮೂಲಕ ಯಶಸ್ವಿಯಾಗಿರುವಂತೆ ಬಿಂಬಿಸುತ್ತಿದೆ ಎಂದು ಟೀಕಿಸಿದೆ. ಇದರ ಜೊತೆಗೆ ಇರಾನ್ಗೆ ಬೆದರಿಕೆ ಹೆಚ್ಚಾದರೆ ಸಮುದ್ರದಾಳದಲ್ಲಿನ ಡೇಟಾ ಕೇಬಲ್ಗಳನ್ನು ಕಡಿತಗೊಳಿಸುವ ಎಚ್ಚರಿಕೆ ನೀಡಿದೆ.
ಕಲಬುರಗಿ: ಎಸೆಸೆಲ್ಸಿ ಪರೀಕ್ಷೆಯಲ್ಲಿ 625ಕ್ಕೆ 623 ಅಂಕ; ಗಣೇಶ್ ಬೋಸ್ಲೆ ಜಿಲ್ಲೆಗೆ ಟಾಪರ್
ಕಲಬುರಗಿ: ಎಸೆಸೆಲ್ಸಿ ವಾರ್ಷಿಕ ಪರೀಕ್ಷೆಯ ಫಲಿತಾಂಶ ಗುರುವಾರ ಪ್ರಕಟಗೊಂಡಿದ್ದು, ಕಲಬುರಗಿ ತಾಲೂಕಿನ ಸಾವಳಗಿ (ಬಿ) ಗ್ರಾಮದ ಸಮೀಪದ ಅಜೀಮ್ ಪ್ರೇಮ್ಜಿ ಶಾಲೆಯ ವಿದ್ಯಾರ್ಥಿ ಗಣೇಶ್ ಬೋಸ್ಲೆ ಕಲಬುರಗಿ ಜಿಲ್ಲೆಗೆ ಟಾಪರ್ ಆಗಿ ಹೊರಹೊಮ್ಮಿದ್ದಾರೆ. ಒಟ್ಟು 625 ಅಂಕಗಳಿಗೆ 623 ಅಂಕಗಳನ್ನು ಪಡೆದು ಅವರು ಕಲಬುರಗಿ ಜಿಲ್ಲೆಗೆ ಪ್ರಥಮ ರ್ಯಾಂಕ್ ಹಾಗೂ ರಾಜ್ಯಕ್ಕೆ ತೃತೀಯ ಸ್ಥಾನ ಪಡೆದಿದ್ದಾರೆ. ಕಲಬುರಗಿ ನಗರದ ನ್ಯೂ ರಾಘವೇಂದ್ರ ಕಾಲೋನಿಯ ನಿವಾಸಿಗಳಾದ ಸಹದೇವ ಬೋಸ್ಲೆ–ಗೀತಾ ದಂಪತಿಯ ಪುತ್ರರಾಗಿದ್ದಾರೆ. ಇಂಗ್ಲಿಷ್ ಹಾಗೂ ವಿಜ್ಞಾನ ವಿಷಯಗಳಲ್ಲಿ ಒಂದೊಂದು ಅಂಕ ಕಡಿಮೆ ಗಳಿಸಿದ್ದಾಗಿ ತಿಳಿಸಿರುವ ಗಣೇಶ್, “ಅವೆರಡು ಅಂಕ ಬಂದಿದ್ದರೆ ಇನ್ನೂ ಚೆನ್ನಾಗಿರುತ್ತಿತ್ತು” ಎಂದು ಅಭಿಪ್ರಾಯಪಟ್ಟಿದ್ದಾರೆ. ಮುಂದೆ ಎಂ.ಬಿ.ಬಿ.ಎಸ್ ಕೋರ್ಸ್ ಮಾಡಿ ಮಕ್ಕಳ ವೈದ್ಯರಾಗುವ ಆಸೆ ಇದೆ ಎಂದು ಹೇಳಿದ್ದಾರೆ. ನಗರದ ಎಸ್.ಬಿ.ಆರ್ ಶಾಲೆಯ ವಿದ್ಯಾರ್ಥಿನಿಯರಾದ ಮಾಧವಿ ಹಾಗೂ ಮೇಘನಾ ತಲಾ 622 ಅಂಕಗಳನ್ನು ಪಡೆದು ಕಲಬುರಗಿ ಜಿಲ್ಲೆಗೆ ದ್ವಿತೀಯ ರ್ಯಾಂಕ್ ಪಡೆದಿದ್ದಾರೆ.
ಎಸ್ಎಸ್ಎಲ್ಸಿಯಲ್ಲಿ ಕಡಿಮೆ ಅಂಕ: ಇನ್ಸ್ಟಾ ಖಾತೆಯಲ್ಲಿ ಸ್ಟೇಟಸ್ ಹಾಕಿ ನೇಣಿಗೆ ಶರಣಾದ ಬಾಲಕ!
ಎಸ್ಎಸ್ಎಲ್ಸಿಯಲ್ಲಿ ಕಡಿಮೆ ಅಂಕ ಬಂದಿದೆ ಎಂದು ಮನನೊಂದ ವಿದ್ಯಾರ್ಥಿಯೊಬ್ಬ ನೇಣಿಗೆ ಶರಣಾಗಿದ್ದಾನೆ. ಚಿತ್ರದುರ್ಗದಲ್ಲಿ ಈ ಘಟನೆ ನಡೆದಿದೆ. ಇನ್ಸ್ಟಾ ಖಾತೆಯಲ್ಲಿ ಸ್ಟೇಟಸ್ ಹಾಕಿ ಬಾಲಕ ನೇಣಿಗೆ ಶರಣಾಗಿದ್ದಾನೆ. ಮೃತ ವಿದ್ಯಾರ್ಥಿಯನ್ನು ಚಿತ್ರದುರ್ಗದ ಹೊರಪೇಟೆ ನಿವಾಸಿ ಅಯಾನ್ ಬೇಗ್ ಎಂದು ಗುರುತಿಸಲಾಗಿದೆ. ಮನೆಯಲ್ಲಿ ಯಾರೂ ಇಲ್ಲದೆ ಇದ್ದಾಗ ನೇಣಿಗೆ ಕೊರಳೊಡ್ಡಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಬಾಲಕನ ಸಾವಿನಿಂದ ಪೋಷಕರು ಹಾಗೂ ಕುಟುಂಬಸ್ಥರಲ್ಲಿ ಆಕ್ರಂದನ ಮಡುಗಟ್ಟಿದೆ. ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಈ ವಿದ್ಯಾರ್ಥಿ ಶೇ 70 ರಷ್ಟು ಅಂಕ ಪಡೆದುಕೊಂಡಿದ್ದ ಎಂಬ ಮಾಹಿತಿ ಇದೆ.
ರ್ಯಾಂಕ್ ಪಡೆದವರೇ ಬುದ್ಧಿವಂತರು ಎಂಬ ಭ್ರಮೆ ಬೇಡ, ಫೇಲಾದರೆ ಜೀವನ ಮುಗಿದಿಲ್ಲ
ಸಾಮಾನ್ಯವಾಗಿ ಎಸ್ಎಸ್ಎಲ್ಸಿ ಮತ್ತು ಪಿಯುಸಿಯಲ್ಲಿ ರ್ಯಾಂಕ್ ಪಡೆದವರೆಲ್ಲ ಬುದ್ಧಿವಂತರು ಎಂಬ ಭ್ರಮೆ ಇರುತ್ತದೆ. ಪರೀಕ್ಷೆಯಲ್ಲಿ ಫೇಲಾದವರಲ್ಲೂ ಬುದ್ಧಿವಂತರು ಇರಬಹುದು. ರ್ಯಾಂಕ್ ಪಡೆದವರಲ್ಲಿ ಬಹುತೇಕರು ಎಂಜಿನಿಯರಿಂಗ್, ಎಂಬಿಬಿಎಸ್ ಅಥವಾ ಎಂಬಿಎಗೆ ಹೋಗಲು ಬಯಸುವುದು ಸಹಜ. ಯಾರೂ ಪತ್ರಕರ್ತನಾಗುತ್ತೇನೆ ಎಂದು ಹೇಳುವುದಿಲ್ಲ. ಅಂದರೆ ರ್ಯಾಂಕ್ ಪಡೆದವರಲ್ಲಿ ಹೆಚ್ಚಿನವರು ಹೆಚ್ಚಿನ ಸಂಪಾದನೆ ಕಡೆ ಗಮನಕೊಡುತ್ತಾರೆ. ಅವರು ಜೀವನದಲ್ಲಿ ರಿಸ್ಕ್ ತೆಗೆದುಕೊಳ್ಳಲು ಬಯಸುವುದಿಲ್ಲ.
ರಾಯಚೂರು: ಪ್ರಧಾನಿ ಮೋದಿ ಬಗ್ಗೆ ಖರ್ಗೆ ಅವರ ವಿವಾದಾತ್ಮಕ ಹೇಳಿಕೆ ಖಂಡಿಸಿ ಬಿಜೆಪಿ ಪ್ರತಿಭಟನೆ
ರಾಯಚೂರು, ಏ.21: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ನೀಡಿದ ವಿವಾದಾತ್ಮಕ ಹೇಳಿಕೆಯನ್ನು ಖಂಡಿಸಿ ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿ ಎದುರು ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ನಗರ ಶಾಸಕ ಡಾ. ಶಿವರಾಜ್ ಪಾಟೀಲ್ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಕಾರ್ಯಕರ್ತರು ಖರ್ಗೆ ಅವರ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಇದೇ ವೇಳೆ ಟೈರ್ಗೆ ಬೆಂಕಿ ಹಚ್ಚಿ, ಖರ್ಗೆ ಅವರ ಪ್ರತಿಕೃತಿಯನ್ನು ದಹಿಸಿ ತಮ್ಮ ವಿರೋಧವನ್ನು ತೀವ್ರವಾಗಿ ವ್ಯಕ್ತಪಡಿಸಿದರು. ಈ ವೇಳೆ ಮಾತನಾಡಿದ ಶಾಸಕ ಡಾ. ಶಿವರಾಜ್ ಪಾಟೀಲ್, ತಮಿಳುನಾಡಿನಲ್ಲಿ ನಡೆದ ಚುನಾವಣಾ ಪ್ರಚಾರದ ಕೊನೆಯ ದಿನ ಚೆನ್ನೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಖರ್ಗೆ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು “ಭಯೋತ್ಪಾದಕ” ಎಂದು ಉಲ್ಲೇಖಿಸಿರುವುದಾಗಿ ಆರೋಪಿಸಿದರು. ಇಂತಹ ಹೇಳಿಕೆಗಳು ದೇಶದ ರಾಜಕೀಯ ಸಂಸ್ಕೃತಿಗೆ ಧಕ್ಕೆಯುಂಟುಮಾಡುವಂತವು ಎಂದು ಹೇಳಿದರು. ಮಹಿಳಾ ಮೀಸಲಾತಿ ಮಸೂದೆ ಮತ್ತು ಕ್ಷೇತ್ರ ಪುನರ್ವಿಂಗಡಣೆ ವಿಚಾರದಲ್ಲಿ ವಿರೋಧ ಪಕ್ಷಗಳ ಒಗ್ಗಟ್ಟನ್ನು ಪ್ರಶ್ನಿಸಿದ ಖರ್ಗೆ, ಬಿಜೆಪಿ ಬೆಂಬಲಿಸಿದ್ದಕ್ಕಾಗಿ ಎಐಎಡಿಎಂಕೆ ಪಕ್ಷವನ್ನು ಟೀಕಿಸಿ, ಪ್ರಧಾನಿ ಮೋದಿಯವರ ವಿರುದ್ಧ ಅಸಂಬದ್ಧ ಆರೋಪಗಳನ್ನು ಮಾಡಿದ್ದಾರೆ ಎಂದು ಆರೋಪಿಸಿದರು. “ಪ್ರಧಾನಿ ಮೋದಿ ದೇಶದ ಜನರ ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದಾರೆ. ಅವರ ವಿರುದ್ಧ ಇಂತಹ ಅವಹೇಳನಕಾರಿ ಪದಗಳನ್ನು ಬಳಸುವುದು ಕಾಂಗ್ರೆಸ್ ಪಕ್ಷದ ನಿಜಸ್ವಭಾವವನ್ನು ತೋರಿಸುತ್ತದೆ,” ಎಂದು ಶಾಸಕರು ಕಿಡಿಕಾರಿದರು. ಖರ್ಗೆ ಅವರು ಇಡಿ, ಐಟಿ, ಸಿಬಿಐ ಸಂಸ್ಥೆಗಳ ದುರುಪಯೋಗ ಕುರಿತು ಮಾಡಿದ ಆರೋಪಗಳನ್ನೂ ತಳ್ಳಿ ಹಾಕಿದ ಅವರು, ಇದು ರಾಜಕೀಯ ಲಾಭಕ್ಕಾಗಿ ಮಾಡಲಾಗುತ್ತಿರುವ ತಪ್ಪು ಪ್ರಚಾರ ಎಂದು ಹೇಳಿದರು. ಪ್ರತಿಭಟನೆ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಸ್ಥಳದಲ್ಲಿ ಬಿಗಿ ಬಂದೋಬಸ್ತ್ ಏರ್ಪಡಿಸಿದ್ದರು. ಈ ಪ್ರತಿಭಟನೆಯಲ್ಲಿ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
ಕರ್ನಾಟಕ ಶಾಲಾ ಪರೀಕ್ಷೆ ಮಯತ್ತು ಮೌಲ್ಯ ನಿರ್ಣಯ ಮಂಡಳಿ ಇಂದು (ಏ.23-ಗುರುವಾರ) 10ನೇ ತರಗತಿ ಪರೀಕ್ಷೆ ಫಲಿತಾಂಶ 2026ನ್ನು ಪ್ರಕಟಿಸಿದೆ. ಈ ಬಾರಿ ರಾಜ್ಯದಲ್ಲಿ ಒಟ್ಟು ಶೇ. 94.1ರಷ್ಟು ಫಲಿತಾಂಶ ಬಂದಿದ್ದು, ದಕ್ಷಿಣ ಕನ್ನಡ ಜಿಲ್ಲೆ ಪ್ರಥಮ ಸ್ಥಾನ ಮತ್ತು ಕಲಬುರಗಿ ಕೊನೆಯ ಸ್ಥಾನವನ್ನು ಪಡೆದುಕೊಂಡಿವೆ. ಜಿಲ್ಲೆಯಲ್ಲಿ ಒಟ್ಟು ಶೇ. 85.6ರಷ್ಟು ಫಲಿತಾಂಶ ಬಂದಿದ್ದು, ಈ ಕುರಿತು ಕರ್ನಾಟಕ ಬಿಜೆಪಿ ಘಟಕ ಕಾಂಗ್ರೆಸ್ ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ಪ್ರಶ್ನಿಸಿದೆ.
Tamil Nadu | ಒಂದು ಗಂಟೆ ಹೊತ್ತಿಗೆ ಶೇ. 56.81ರಷ್ಟು ಮತದಾನ
ಚೆನ್ನೈ: ತಮಿಳುನಾಡು ವಿಧಾನಸಭಾ ಚುನಾವಣೆಗೆ ಇಂದು ಒಂದೇ ಹಂತದಲ್ಲಿ ಮತದಾನ ನಡೆಯುತ್ತಿದ್ದು, ಮಧ್ಯಾಹ್ನ ಒಂದು ಗಂಟೆ ಹೊತ್ತಿಗೆ ಶೇ. 56.81ರಷ್ಟು ಮತದಾನವಾಗಿದೆ ಎಂದು ವರದಿಯಾಗಿದೆ. ಇವಿಎಂ/ವಿವಿಪ್ಯಾಟ್ ನಲ್ಲಿ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡಿದ್ದರಿಂದ, ಈರೋಡ್ ಹಾಗೂ ನಮಕ್ಕಲ್ ಪ್ರಾಂತ್ಯದ ಕೆಲವು ಮತಗಟ್ಟೆಗಳಲ್ಲಿ ಗುರುವಾರ ಬೆಳಗ್ಗೆ ಮತದಾನ ವಿಳಂಬವಾಗಿರುವ ಘಟನೆ ನಡೆದಿದೆ. ಈ ಸಮಸ್ಯೆಗಳನ್ನು ತಕ್ಷಣವೇ ಪರಿಹರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈರೋಡ್ ನ ಸೂರಂಪಟ್ಟಿ ಪ್ರದೇಶದಲ್ಲಿನ ಮತಗಟ್ಟೆಯಲ್ಲಿನ ಇವಿಎಂನಲ್ಲಿ ಸಣ್ಣ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡಿದ್ದು, ಅದನ್ನು ಸರಿಪಡಿಸಲಾಗಿದೆ ಎಂದು ಅವರು ಹೇಳಿದ್ದಾರೆ. ನಮಕ್ಕಲ್ ನ ಕೊಲ್ಲಿಮಲೈ ಬೆಟ್ಟದ ತಪ್ಪಲಿನ ಮತಗಟ್ಟೆಯಲ್ಲಿ ಇವಿಎಂ/ವಿವಿಪ್ಯಾಟ್ ಕೆಲಸ ಮಾಡದೆ ಇದ್ದುದರಿಂದ ಮತದಾನದಲ್ಲಿ ವಿಳಂಬವಾಯಿತು. ಬಳಿಕ, ಅವುಗಳ ಬದಲಿಸಿ ಹೊಸ ಯಂತ್ರಗಳನ್ನು ಅಳವಡಿಸಲಾಯಿತು ಎಂದೂ ಅವರು ತಿಳಿಸಿದ್ದಾರೆ. ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ 5.73 ಕೋಟಿಗೂ ಅಧಿಕ ಮತದಾರರು 4,023 ಅಭ್ಯರ್ಥಿಗಳ ಹಣೆಬರಹವನ್ನು ನಿರ್ಧರಿಸಲಿದ್ದಾರೆ. ತಮಿಳುನಾಡಿನ ಬಹುತೇಕ ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರಮುಖವಾಗಿ ಡಿಎಂಕೆ ನೇತೃತ್ವದ ಮೈತ್ರಿಕೂಟ, ಎಐಎಡಿಎಂಕೆ ನೇತೃತ್ವದ ಎನ್ಡಿಕಎ ಮೈತ್ರಿಕೂಟ ಹಾಗೂ ನಟ ವಿಜಯ್ ನೇತೃತ್ವದ ತಮಿಳ ವೆಟ್ರಿ ಕಳಗಂ ಪಕ್ಷದ ನಡುವೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಎರಡನೆ ಅವಧಿಗೆ ಪುನರಾಯ್ಕೆಯನ್ನು ಬಯಸುತ್ತಿದ್ದರೆ, ಎಐಎಡಿಎಂಕೆ ಮುಖ್ಯಸ್ಥ ಎಡಪ್ಪಾಡಿ ಕೆ. ಪಳನಿಸ್ವಾಮಿ ಐದು ವರ್ಷಗಳ ನಂತರ ಮತ್ತೆ ಅಧಿಕಾರಕ್ಕೆ ಮರಳುವ ಗುರಿ ಹೊಂದಿದ್ದಾರೆ. ಆದರೆ, ನಟ ವಿಜಯ್ ರ ತಮಿಳಗ ವೆಟ್ರಿ ಕಳಗಂ ಚುನಾವಣಾ ಕಣಕ್ಕಿಳಿದಿರುವುದರಿಂದ ಸ್ಪರ್ಧೆಗೆ ಹೊಸ ಆಯಾಮ ದೊರೆತಿದ್ದು, ದ್ರಾವಿಡ ಪಕ್ಷಗಳ ನಡುವೆ ನಿಕಟ ಪೈಪೋಟಿ ಏರ್ಪಟ್ಟಿದೆ.
ಎಸೆಸೆಲ್ಸಿ ಪರೀಕ್ಷೆ: ಮಾನ್ವಿಯ ಸುಖದೇವ್ ರಾಜ್ಯಕ್ಕೆ ಪ್ರಥಮ
ರಾಯಚೂರು: ಎಸೆಸೆಲ್ಸಿ ಪರೀಕ್ಷೆಯ ಫಲಿತಾಂಶ ಹೊರ ಬಿದ್ದಿದ್ದು ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ವಿದ್ಯಾರ್ಥಿ ಸುಖದೇವ್ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದು ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ಮಾನ್ವಿ ಪಟ್ಟಣದ ಬಿ.ವಿ.ಆರ್ ಶಾಲೆಯ ವಿದ್ಯಾರ್ಥಿ ಆಗಿರುವ ಸುಖದೇವ್ 625 ಕ್ಕೆ 625 ಅಂಕ ಪಡೆದಿದ್ದಾರೆ. ಸುಖದೇವ್ ಅವರ ತಂದೆ ಪರಶುರಾಮ ಮಾನ್ವಿಯ ಖಾಸಗಿ ಡಿಗ್ರಿ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕರಾಗಿದ್ದು, ತಾಯಿ ಚಂದ್ರಕಲಾ ಅವರು ಮಾನ್ವಿ ತಾಲೂಕಿನ ಪೋತ್ನಾಳ ಸರ್ಕಾರಿ ಶಾಲೆಯ ಶಿಕ್ಷಕಿ. ಮಗನ ಈ ಸಾಧನೆಗೆ ಪಾಲಕರು ಸಾಕಷ್ಟು ಮಾರ್ಗದರ್ಶಕರಾಗಿದ್ದಾರೆ. ಮನೆಯ ಸಮೀಪವೇ ಸುಖದೇವ್ ಕಲಿಯುತ್ತಿದ್ದ ಬಿ.ವಿ.ಆರ್ ಶಾಲೆಯಿದ್ದು, ಪ್ರತಿದಿನ ತಪ್ಪದೇ ಶಾಲೆಗೆ ಹೋಗುತ್ತಿದ್ದ ಹಾಗೂ ಯಾವುದೇ ಟ್ಯೂಷನ್ ಗೆ ಹೋಗದೇ ಪ್ರತಿ ದಿನ 3-4 ತಾಸು ಓದುತ್ತಿದ್ದ. ಶಾಲೆಯಲ್ಲಿ ಹೇಳಿದ ಪಾಠ ಅಂದಿನ ದಿನವೇ ಪುನರಾವರ್ತನೆ ಮಾಡುತ್ತಿದ್ದ. ನಾವು ಹೆಚ್ಚು ಒತ್ತಡ ಹಾಕಿರಲಿಲ್ಲ. ಶಾಲೆಯ ಶಿಕ್ಷಕರ ಮಾರ್ಗದರ್ಶನ ಪರಿಶ್ರಮವೇ ಸಾಧನೆಗೆ ಕಾರಣವಾಗಿದೆ ಎಂದು ಸುಖದೇವ್ ಅವರ ತಾಯಿ ಚಂದ್ರಕಲಾ ತಿಳಿಸಿದರು. ಎಸೆಸೆಲ್ಸಿ ಪರೀಕ್ಷೆಯಲ್ಲಿ ರಾಯಚೂರು ಜಿಲ್ಲೆ ಕಳೆದ ಬಾರಿ ರಾಯಚೂರು 32ನೇ ಸ್ಥಾನದಲ್ಲಿತ್ತು. ಈ ಬಾರಿ 21ನೇ ಸ್ಥಾನ ಪಡೆದಿದೆ.
ಎಸೆಸೆಲ್ಸಿ ಪರೀಕ್ಷೆ : ಕುಕ್ಕುಂದೂರು ಕೆ.ಎಂ.ಇ.ಎಸ್ ಶಿಕ್ಷಣ ಸಂಸ್ಥೆಗೆ ಶೇ.100 ಫಲಿತಾಂಶ
ಕಾರ್ಕಳ : 2025-26 ನೇ ಸಾಲಿನ ಎಸೆಸೆಲ್ಸಿ ಪರೀಕ್ಷೆಯಲ್ಲಿ ಕುಕ್ಕುಂದೂರು ಕೆ.ಎಂ.ಇ.ಎಸ್ ಶಿಕ್ಷಣ ಸಂಸ್ಥೆ ಉತ್ತಮ ಫಲಿತಾಂಶ ದಾಖಲಿಸಿದೆ. ಪರೀಕ್ಷೆಗೆ ಹಾಜರಾದ 43 ವಿದ್ಯಾರ್ಥಿಗಳಲ್ಲಿ 619 ಅಂಕ ಪಡೆದ ಮೊಹಮ್ಮದ್ ಅರ್ಮಾನ್ ಶಾಹೀದ್ ರಾಜ್ಯಕ್ಕೆ 6ನೇ ಸ್ಥಾನವನ್ನು ಪಡೆದು ಸಂಸ್ಥೆಗೆ ಪ್ರಥಮ ಸ್ಥಾನಿಯಾಗಿದ್ದಾರೆ. 607 ಅಂಕ ಪಡೆದ ಕೃತಿಕಾ ವಿ. ನಾಯಕ್ ದ್ವಿತೀಯ ಸ್ಥಾನಿಯಾಗಿದ್ದಾರೆ. ಈ ಪೈಕಿ 21 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ , 19 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ , 02 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ, ಓರ್ವ ವಿದ್ಯಾರ್ಥಿಯು ತೃತೀಯ ಶ್ರೇಣಿಯಲ್ಲಿ ತೇರ್ಗಡೆ ಹೊಂದಿರುತ್ತಾರೆ. ಉತ್ತಮ ಫಲಿತಾಂಶಕ್ಕೆ ಕಾರಣರಾದ ವಿದ್ಯಾರ್ಥಿಗಳನ್ನು, ಶಿಕ್ಷಕರನ್ನು, ಸಂಸ್ಥೆಯ ಅಧ್ಯಕ್ಷರಾದ ಕೆ.ಎಸ್.ಇಮ್ತಿಯಾಜ್ ಅಹಮ್ಮದ್ರವರು ಅಭಿನಂದಿಸಿದ್ದಾರೆ.
ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಮೊದಲ ಸ್ಥಾನ ಗಳಿರುವ ಪ್ರಾರ್ಥನಾ ಬಿರಾದಾರ್ ಅವರು ಸರ್ಕಾರಿ ಶಾಲೆ ವಿದ್ಯಾರ್ಥಿನಿ. ಅವರ ತಂದೆ ಕೂಡ ಅದೇ ಶಾಲೆಯ ಕನ್ನಡ ಶಿಕ್ಷಕರಾಗಿದ್ದು, ಮಗಳನ್ನು ತಮ್ಮ ಶಾಲೆಯಲ್ಲಿ ಓದಿಸಿ ಪರೀಕ್ಷೆಗೆ ಉತ್ತಮ ಮಾರ್ಗದರ್ಶನ ಮಾಡಿದ್ದಾರೆ. ಈ ಮೂಲಕ ರಾಜ್ಯ ಸರ್ಕಾರಿ ನೌಕರರಿಗೆ, ಶಾಲಾ ಶಿಕ್ಷಕರಿಗೆ ಹಾಗೂ ಖಾಸಗಿ ಶಾಲೆಯಲ್ಲಿ ಓದಿದರೆ ಮಾತ್ರ ಉತ್ತಮ ಅಂಕ ಎಂಬ ಭ್ರಮೆಯಲ್ಲಿರುವ ಪೋಷಕರಿಗೆ ಮಾದರಿಯಾಗಿದ್ದಾರೆ.
IPL : ಸಮಯಕ್ಕೆ ಸರಿಯಾಗಿ ಮುಗಿಯದ ಪಂದ್ಯಗಳು - ರಿವ್ಯೂ ದುರುಪಯೋಗ ಸೇರಿದಂತೆ 3 ಕಾರಣಗಳು?
IPL Slow Over Rate : ಇಂಡಿಯನ್ ಪ್ರೀಮಿಯರ್ ಲೀಗ್ ಪಂದ್ಯಗಳು ಸಮಯಕ್ಕೆ ಸರಿಯಾಗಿ ಮುಗಿಯುತ್ತಿಲ್ಲ. ಇನ್ನೂರು ನಿಮಿಷದಲ್ಲಿ ಮುಗಿಯಬೇಕಾದ ಪಂದ್ಯಗಳು ಕೆಲವೊಮ್ಮೆ ಒಂದು ಗಂಟೆ ತಡವಾಗಿ ಮುಗಿದ ಉದಾಹರಣೆಗಳಿವೆ. ಐಪಿಎಲ್ ಪಂದ್ಯಗಳು ನಿಗದಿತ ಸಮಯವನ್ನು ಮೀರಿ ನಡೆಯುತ್ತಿರುವುದಕ್ಕೆ ಮೂರು ಕಾರಣಗಳು ಎಂದು ವಿಶ್ಲೇಷಿಸಲಾಗುತ್ತಿದೆ. ಯಾವ ಕಾರಣಗಳು?
ಎಸೆಸೆಲ್ಸಿ ಪರೀಕ್ಷೆ : ಆತೂರು ಆಯಿಶಾ ಹೆಣ್ಮಕ್ಕಳ ಶಾಲೆಗೆ ಶೇ.100 ಫಲಿತಾಂಶ
ಉಪ್ಪಿನಂಗಡಿ, ಎ. 23 : ಆತೂರು ಆಯಿಶಾ ಹೆಣ್ಮಕ್ಕಳ ಪ್ರೌಢ ಶಾಲೆ 2025–26ನೇ ಸಾಲಿನ ಎಸೆಸೆಲ್ಸಿ ಪರೀಕ್ಷೆಯಲ್ಲಿ ಶೇ.100 ಫಲಿತಾಂಶ ದಾಖಲಿಸಿದೆ. ಶಾಲೆಯಿಂದ ಪರೀಕ್ಷೆಗೆ ಹಾಜರಾದ 25 ವಿದ್ಯಾರ್ಥಿನಿಯರೆಲ್ಲರೂ ಉತ್ತೀರ್ಣರಾಗಿದ್ದು, ಇವರಲ್ಲಿ 11 ಮಂದಿ ವಿಶಿಷ್ಟ ಶ್ರೇಣಿ, 12 ಮಂದಿ ಪ್ರಥಮ ಶ್ರೇಣಿ ಹಾಗೂ 2 ಮಂದಿ ದ್ವಿತೀಯ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. ಈ ಪೈಕಿ ಆಸಿಯ ರಿಫಾ ಮತ್ತು ಆಲಿಯಾ ಹುದಾ ತಲಾ 588 ಅಂಕ (94.08%) ಪಡೆದು ಅಗ್ರಸ್ಥಾನ ಪಡೆದಿದ್ದಾರೆ. ಆಯನಾ ಆಯಿಶಾ ಅಲಿ 583 (93.28%), ಶದಾ ರಹ್ ಫಾ 578 (92.48%), ಆಯಿಶಾ 576 (92.16%), ಆಯಿಶಾ ಫರ್ಹಾ 566 (90.56%), ಶಿಫಾನ 559 (89.44%), ಫಾತಿಮಾ ರಿಝಾ 557 (89.12%), ಎ.ಆರ್. ರಿದಾ ಆಯಿಶಾ 554 (88.64%), ಎ.ಐಶಾ ಬಾನು 553 (88.48%) ಮತ್ತು ಆಯಿಶಾ ಇಫ್ರತ್ 548 (87.68%) ಅಂಕ ಗಳಿಸಿದ್ದಾರೆ.
ಎಸ್ಎಸ್ಎಲ್ಸಿಯಲ್ಲಿ ಫೇಲ್ ಆದರೆ ಧೃತಿಗೆಡಬೇಕಿಲ್ಲ!ನಿಮಗೂ ಇದೆ ಬಹಳಷ್ಟು ಆಯ್ಕೆ
ಎಸ್ಎಸ್ಎಲ್ಸಿ ಫಲಿತಾಂಶ ಪ್ರಕಟವಾಗಿದೆ. ಎಲ್ಲರ ಕುತೂಹಲಕ್ಕೆ ತೆರೆಬಿದ್ದಿದೆ. ಪರೀಕ್ಷಾ ಫಲಿತಾಂಶ ಅಂದ ಕೂಡಲೇ ಪ್ರತಿಯೊಬ್ಬರೂ ರ್ಯಾಂಕ್ ಪಡೆದೇ ಪಡೆಯುತ್ತಾರೆ, ಡಿಸ್ಟಿಕ್ಷನ್ ಪಡೆಯುತ್ತಾರೆ ಎಂದಲ್ಲ, ಜಸ್ಟ್ ಪಾಸ್ ಆದವರೂ ಇರುತ್ತಾರೆ. ಇನ್ನು ಕೆಲವರು ಫೇಲ್ ಆಗಲೂ ಬಹುದು. ಹಾಗಂದ ಮಾತ್ರಕ್ಕೆ ಅವರ ಜೀವನ ಇಲ್ಲಿಗೇ ಮುಗಿದು ಹೋಯಿತು ಎಂದೇನಲ್ಲ. ಎಸ್ಎಸ್ಎಲ್ಸಿ ಫೇಲ್ ಆದ ತಕ್ಷಣ ಮುಂದಿನ ವಿದ್ಯಾಭ್ಯಾಸಕ್ಕೆ ಪೂರ್ಣ
Udupi | ಎಸೆಸೆಲ್ಸಿ ಫಲಿತಾಂಶ: ರಾಜ್ಯಕ್ಕೆ ಟಾಪರ್ ಆದ ಬಸ್ ಕಂಡಕ್ಟರ್ ಮಗ ಪ್ರೀತಮ್
ಕುಂದಾಪುರ, ಎ.23: ಪ್ರಸಕ್ತ ಸಾಲಿನ ಎಸೆಸೆಲ್ಸಿ ಪರೀಕ್ಷೆಯಲ್ಲಿ ಶಂಕರನಾರಾಯಣ ಮದರ್ ಥೆರೆಸಾ ಮೆಮೋರಿಯಲ್ ಪ್ರೌಢಶಾಲೆಯ ವಿದ್ಯಾರ್ಥಿ ಪ್ರೀತಮ್ ಜಿ. ಪೂಜಾರಿ 625 ಅಂಕ ಪಡೆಯುವ ಮೂಲಕ ರಾಜ್ಯಕ್ಕೆ ಟಾಪರ್ ಗಳಲ್ಲಿ ಒಬ್ಬರಾಗಿದ್ದರೆ, ಉಡುಪಿ ಜಿಲ್ಲೆಗೆ ಪ್ರಥಮ ಸ್ಥಾನಿಯಾಗಿದ್ದಾರೆ. ಪ್ರೀತಮ್ ಪೂಜಾರಿ ಸೇರಿ ಒಟ್ಟು ಏಳು ಮಂದಿ ಗರಿಷ್ಠ 625 ಅಂಕ ಗಳಿಸುವ ಮೂಲಕ ರಾಜ್ಯದಲ್ಲಿ ಅಗ್ರಸ್ಥಾನವನ್ನು ಹಂಚಿಕೊಂಡಿದ್ದಾರೆ ಪ್ರೀತಮ್ ಬಿದ್ಕಲ್ಕಟ್ಟೆ ನಿವಾಸಿ ಗಣಪತಿ ಪೂಜಾರಿ-ನಾಗರತ್ನಾ ದಂಪತಿಯ ಇಬ್ಬರ ಮಕ್ಕಳ ಪೈಕಿ ಹಿರಿಯ ಪುತ್ರ. ತಂದೆ ಗಣಪತಿಯವರು ಶ್ರೀ ಲಕ್ಷ್ಮೀ ಎಕ್ಸ್ಪ್ರೆಸ್ ಖಾಸಗಿ ಬಸ್ಸಿನಲ್ಲಿ ಕಂಡಕ್ಟರ್. ತಾಯಿ ನಾಗರತ್ನಾ ಗೃಹಿಣಿ. ಎಲ್.ಕೆ.ಜಿ.ಯಿಂದಲೂ ಈತ ಮದರ್ ಥೆರೆಸಾ ಸಂಸ್ಥೆಯಲ್ಲಿ ಕಲಿತಿದ್ದ. ಈ ಬಗ್ಗೆ 'ವಾರ್ತಾಭಾರತಿ'ಗೆ ಪ್ರತಿಕ್ರಿಯಿಸಿದ ಸಾಧಕ ವಿದ್ಯಾರ್ಥಿ ಪ್ರೀತಮ್ ಜಿ. ಪೂಜಾರಿ, ಅಂದಿನ ಪಾಠವನ್ನು ಅಂದೇ ಕಣ್ಣುಹಾಯಿಸುತ್ತಿದ್ದೆ. ಪಠ್ಯವನ್ನು ಓದಿ ಮುಗಿಸಲು ತಿಂಗಳ ಗುರಿಯನ್ನು ಇಟ್ಟುಕೊಂಡಿದ್ದೆ. ಪೋಷಕರು ಹಾಗೂ ವಿದ್ಯಾಸಂಸ್ಥೆಯವರ ಪ್ರೋತ್ಸಾಹ, ಮಾರ್ಗದರ್ಶನ ಸಾಧನೆಗೆ ಪ್ರೇರಣೆ. ಮುಂದೆ ವಿಜ್ಞಾನ ವಿಭಾಗದಲ್ಲಿ ಪಿಸಿಎಂಸಿಎಸ್ ಓದಿ ಜೆಇಇ ಪರೀಕ್ಷೆ ಬರೆಯುವ ಇಂಗಿತ ವ್ಯಕ್ತಪಡಿಸಿದ್ದಾರೆ. ಶಂಕರನಾರಾಯಣ ಮದರ್ ಥೆರೆಸಾ ಮೆಮೋರಿಯಲ್ ಶಾಲೆಯ ಸಂಸ್ಥಾಪಕರಾದ ಶಮಿತಾ ರಾವ್ ಬಲ್ಮಠ, ರೇನಿಟಾ ಲೋಬೋ ಮಾತನಾಡಿ, ವಿದ್ಯಾರ್ಥಿ ಪ್ರೀತಮ್ ಪೂಜಾರಿ ಸಾಧನೆ ಸಂತಸ ತಂದಿದೆ. ಆತ ವಿದ್ಯಾಭ್ಯಾಸ ಹಾಗೂ ಇತರ ಚಟುವಟಿಕೆಯಲ್ಲಿ ಸದಾ ಚುರುಕಾಗಿದ್ದ. 625 ಅಂಕ ಪಡೆಯುವ ನಿರೀಕ್ಷೆಯೂ ನಮಗೆ ಇತ್ತು. ಆತನ ಪರಿಶ್ರಮದ ಜೊತೆಗೆ ಗುರುಹಿರಿಯರ ಜೊತೆ ವಿನಮ್ರತೆ ಹೊಂದಿದ್ದ. ಈ ಬಾರಿ ರಾಜ್ಯಮಟ್ಟದ ಕ್ವಿಝ್ ನಲ್ಲಿ ಎರಡನೇ ಸ್ಥಾನಿಯಾಗಿದ್ದ ಎಂದರು.
SSLC Result 2026: ಕನ್ನಡಕ್ಕೆ ಭರ್ಜರಿ ಜಯ, ಗಣಿತ-ಹಿಂದಿಯಲ್ಲೂ ಮುನ್ನಡೆ, ದಾಖಲೆ ಬರೆದ ಫಲಿತಾಂಶ
SSLC Subject Wise Result 2026: ಕರ್ನಾಟಕ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಕನ್ನಡ ಮತ್ತು ಗಣಿತ ವಿಷಯದಲ್ಲಿ ಮಕ್ಕಳು ಮಹತ್ವದ ಸಾಧನೆ ಮಾಡಿದ್ದಾರೆ. ಕನ್ನಡ ನೆಲದಲ್ಲಿ ಕನ್ನಡ ವಿಷಯದಲ್ಲಿ ಫಲಿತಾಂಶ ಶೇ. 90 ಕ್ಕಿಂತ ಹೆಚ್ಚಿರಬೇಕು. ಆದರೆ ಅದು ಇಷ್ಟು ವರ್ಷ ಆಗಲಿರಲಿಲ್ಲ. ಆದರೆ 2026ರಲ್ಲಿ ಕನ್ನಡ ವಿಷಯದಲ್ಲಿ ಫಲಿತಾಂಶ ಶೇ.97.24 ರಷ್ಟು ದಾಖಲಾಗಿದೆ. ಅದೇ ರೀತಿ ಗಣಿತ
ಹೊಸದಿಲ್ಲಿ, ಏ. 23: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ಮೊದಲ ಹಂತದ ಮತದಾನಕ್ಕೆ ಮುರ್ಷಿದಾಬಾದ್ ಜಿಲ್ಲೆಯಲ್ಲಿ ಉದ್ವಿಗ್ನತೆಯ ನಡುವೆಯೇ ಚಾಲನೆ ದೊರೆಯಿತು. ಕೆಲವೆಡೆ ಹಿಂಸಾಚಾರ, ಮತದಾರರಿಗೆ ಬೆದರಿಕೆ ಹಾಗೂ ಇವಿಎಂ ದೋಷಗಳು ವರದಿಯಾದವು. ಶಿವನಗರ ಪ್ರಾಥಮಿಕ ಶಾಲೆ ಬಳಿ ಬುಧವಾರ ರಾತ್ರಿ ಕಚ್ಚಾ ಬಾಂಬ್ ಎಸೆದ ಘಟನೆ ನಡೆದಿದೆ. ಇದರಲ್ಲಿ ಒಬ್ಬ ವ್ಯಕ್ತಿ ಗಾಯಗೊಂಡಿದ್ದಾರೆ “ನಮಾಝ್ ಗೆ ತೆರಳುತ್ತಿದ್ದ ವೇಳೆ ಇಬ್ಬರು ಬಂದು ನನ್ನ ಬಳಿ ಬಾಂಬ್ ಎಸೆದರು” ಎಂದು ಗಾಯಾಳು ಆರೋಪಿಸಿದ್ದಾರೆ. ಗುರುವಾರ ಬೆಳಿಗ್ಗೆ ಮತದಾನದ ವೇಳೆ ತೃಣಮೂಲ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಆಮ್ ಜನತಾ ಉನ್ನಯನ್ ಪಕ್ಷದ ನಾಯಕ ಹುಮಾಯೂನ್ ಕಬೀರ್ ಬೆಂಬಲಿಗರ ನಡುವೆ ಘರ್ಷಣೆ ನಡೆಯಿತು. ಪರಿಸ್ಥಿತಿ ನಿಯಂತ್ರಣಕ್ಕೆ ಪೊಲೀಸರು ಹಾಗೂ ಭದ್ರತಾ ಪಡೆಗಳನ್ನು ನಿಯೋಜಿಸಲಾಯಿತು. ಕೆಲವೆಡೆ ಲಘು ಲಾಠಿಚಾರ್ಜ್ ಕೂಡ ನಡೆಸಲಾಯಿತು. ಆದರೆ, ಹುಮಾಯೂನ್ ಕಬೀರ್ ಬಹುತೇಕ ಕಡೆಗಳಲ್ಲಿ ಶಾಂತಿಯುತ ಮತದಾನ ನಡೆಯುತ್ತಿದೆ ಎಂದು ಹೇಳಿದ್ದಾರೆ. ಕೆಲವೇ ಬೂತ್ ಗಳಲ್ಲಿ ಸಣ್ಣ ಘಟನೆಗಳು ನಡೆದಿವೆ ಎಂದರು. ಡೊಮ್ಕಲ್ ಪ್ರದೇಶದಲ್ಲಿ ಮತದಾರರಿಗೆ ಬೆದರಿಕೆ ಹಾಕಲಾಗಿದೆ ಎಂಬ ಆರೋಪ ಕೇಳಿಬಂದಿದೆ. ರಾಯ್ಪುರ ಗ್ರಾಮದಲ್ಲಿ ಶಸ್ತ್ರಸಜ್ಜಿತ ವ್ಯಕ್ತಿಗಳು ಹಾಜರಿದ್ದು ಭಯದ ವಾತಾವರಣ ನಿರ್ಮಿಸಿದ್ದಾರೆ ಎಂದು ಸ್ಥಳೀಯರು ದೂರಿದ್ದಾರೆ. ಚುನಾವಣಾ ಆಯೋಗ ವರದಿ ಕೇಳಿ ಹೆಚ್ಚುವರಿ ಭದ್ರತಾ ಪಡೆಗಳನ್ನು ನಿಯೋಜಿಸಿದೆ. ನಂತರ ಮತದಾನ ಮುಂದುವರಿಯಿತು. ಮುರ್ಷಿದಾಬಾದ್ನ ಕೆಲವು ಬೂತ್ಗಳಲ್ಲಿ ಇವಿಎಂ ದೋಷಗಳಿಂದ ಮತದಾನ ತಡವಾಯಿತು. ನಂದಿಗ್ರಾಮ್, ಮಾಲ್ಡಾ, ಕೂಚ್ ಬೆಹಾರ್ ಮತ್ತು ಸಿಲಿಗುರಿಯಲ್ಲಿಯೂ ಇದೇ ರೀತಿಯ ಸಮಸ್ಯೆಗಳು ಕಂಡುಬಂದಿವೆ. “ನೂರಾರು ಮಂದಿ ಸರತಿ ಸಾಲಿನಲ್ಲಿ ಕಾಯುತ್ತಿದ್ದಾರೆ. ಮತದಾನ ಯಾವಾಗ ಆರಂಭವಾಗುತ್ತದೆ ಎಂಬ ಮಾಹಿತಿ ಇಲ್ಲ” ಎಂದು ಕಾಂಗ್ರೆಸ್ ಅಭ್ಯರ್ಥಿ ಸಂಜಯ್ ಅಧಿಕಾರಿ ತಿಳಿಸಿದ್ದಾರೆ. 152 ಕ್ಷೇತ್ರಗಳಲ್ಲಿ ಬೆಳಿಗ್ಗೆ 7 ಗಂಟೆಗೆ ಮತದಾನ ಆರಂಭವಾಗಿದ್ದು, ಬೆಳಿಗ್ಗೆ 9 ಗಂಟೆಯ ವೇಳೆಗೆ ಶೇ. 18.76 ಮತದಾನ ದಾಖಲಾಗಿದೆ.
SSLC Exam | ಮಿತ್ತೂರು ದಾರುಲ್ ಇರ್ಶಾದ್ ಬಾಲಕರ ಪ್ರೌಢಶಾಲೆಗೆ 100 ಶೇ. ಫಲಿತಾಂಶ
ಬಂಟ್ವಾಳ: ಪ್ರಸಕ್ತ ಸಾಲಿನ ಎಸೆಸೆಲ್ಸಿ ಪರೀಕ್ಷೆಯಲ್ಲಿ ಮಾಣಿಯ ದಾರುಲ್ ಇರ್ಶಾದ್ ಅಧೀನದ ಮಿತ್ತೂರು ಕೆಜಿಎನ್ ಕ್ಯಾಂಪಸ್ ನಲ್ಲಿ ಕಾರ್ಯಾಚರಿಸುತ್ತಿರುವ ಜ್ಯೂನಿಯರ್ ದಅವಾ ವಿಭಾಗದ ದಾರುಲ್ ಇರ್ಶಾದ್ ಬಾಲಕರ ಪ್ರೌಢಶಾಲೆಯು 100 ಶೇಕಡ ಫಲಿತಾಂಶ ದಾಖಲಿಸಿದೆ. 13 ವರ್ಷಗಳಿಂದ ದಾರುಲ್ ಇರ್ಶಾದ್ ಬಾಲಕರ ಪ್ರೌಢಶಾಲೆಯು 100 ಶೇ. ಫಲಿತಾಂಶ ದಾಖಲಿಸುತ್ತಾ ಬಂದಿದೆ. ವಿದ್ಯಾರ್ಥಿ ಅಹ್ಮದ್ ಮನಾಸಿರ್ ಕರ್ನೂರ್ 574 (ಶೇ.91.84) ಅಂಕ ಗಳಿಸಿ ಶಾಲೆಗೆ ಪ್ರಥಮ ಸ್ಥಾನಿಯಾದರೆ, ಅಬ್ದುಲ್ ಖಾದರ್ ಸುಜಾಹ್ ಪೇರಾಜೆ 568(ಶೇ.90.88 ) ದ್ವಿತೀಯ, ಅಹ್ಮದ್ ಶಮೀಲ್ ಕಾಪೆಜಾಲು 567(90.77%) ತೃತೀಯ ಹಾಗೂ ಮುಆಝ್ ಅರಿಯಡ್ಕ 566(90.56%) ಚತುರ್ಥ ಸ್ಥಾನ ಗಳಿಸಿದ್ದಾರೆ ಎಂದು ಶಾಲೆಯ ಪ್ರಕಟನೆ ತಿಳಿಸಿದೆ.
ಎಸ್ಎಸ್ಎಲ್ಸಿ ಪರೀಕ್ಷೆ ಮರುಮೌಲ್ಯಮಾಪನ ಹೇಗೆ? ಪೂರಕ ಪರೀಕ್ಷೆ ಯಾವಾಗ? ಈ ಮಾಹಿತಿ ಸೋಲೊಪ್ಪಿಕೊಳ್ಳದ ಧೀರರಿಗಾಗಿ
ಕರ್ನಾಟಕ ಶಾಲಾ ಪರೀಕ್ಷೆ ಮಯತ್ತು ಮೌಲ್ಯ ನಿರ್ಣಯ ಮಂಡಳಿ ಇಂದು (ಏ.23-ಗುರುವಾರ) 10ನೇ ತರಗತಿ ಪರೀಕ್ಷೆ ಫಲಿತಾಂಶ 2026ನ್ನು ಪ್ರಕಟಿಸಿದೆ. ಒಟ್ಟು ಶೇ. 94.1ರಷ್ಟು ಫಲಿತಾಂಶ ಬಂದಿದೆ. ಈ ಮಧ್ಯೆ ಪರೀಕ್ಷೆಯಲ್ಲಿ ನಿರೀಕ್ಷಿತ ಫಲಿತಾಂಶ ಗಳಿಸದ ವಿದ್ಯಾರ್ಥಿಗಳು ಮರುಮೌಲ್ಯಮಾಪನಕ್ಕೆ ಸಜ್ಜಾಗಿದ್ದು, ಇದರ ಪ್ರಕ್ರಿಯೆ ಕುರಿತು ಮಾಹಿತಿ ಪಡೆಯುತ್ತಿದ್ದಾರೆ. ಹಾಗೆಯೇ ಪರೀಕ್ಷೆಯನ್ನು ಅನುತ್ತೀರ್ಣರಾದ ವಿದ್ಯಾರ್ಥಿಗಳು ಪೂರಕ ಪರೀಕ್ಷೆಗೆ ತಯಾರಾಗಿದ್ದು, ಎರಡನೇ ಅವಕಾಶದಲ್ಲಿ ಗೆಲ್ಲುವ ಪಣ ತೊಟ್ಟಿದ್ದಾರೆ. ಎಸ್ಎಸ್ಎಲ್ಸಿ ಮರುಮೌಲ್ಯಮಾಪನ ಮತ್ತು ಪೂರಕ ಪರೀಕ್ಷೆ ಸಂಬಂಧಿತ ಮಾಹಿತಿ ಇಲ್ಲಿದೆ.
ಸಿಸಿಟಿವಿ, ಆಟೋ ನೀಡಿದ ಸುಳಿವು: ಐಆರ್ಎಸ್ ಅಧಿಕಾರಿಯ ಮಗಳ ಹತ್ಯೆ ಮಾಡಿದ್ದ ಆರೋಪಿ 12 ಗಂಟೆಗಳೊಳಗೆ ಬಂಧನ
ಹೊಸದಿಲ್ಲಿ, ಎ. 23: ರಾಜಸ್ಥಾನದ ಅಲ್ವಾರ್ ಹಾಗೂ ಹೊಸದಿಲ್ಲಿಯಲ್ಲಿ 12 ಗಂಟೆಗಳೊಳಗೆ ನಡೆದ ಎರಡು ಲೈಂಗಿಕ ದೌರ್ಜನ್ಯ ಪ್ರಕರಣಗಳಲ್ಲಿ ತೊಡಗಿದ್ದಾನೆಂಬ ಆರೋಪದ ಮೇಲೆ 23 ವರ್ಷದ ವ್ಯಕ್ತಿಯನ್ನು ಹೊಸದಿಲ್ಲಿ ಪೊಲೀಸರು ಬಂಧಿಸಿದ್ದಾರೆ. ಸಿಸಿಟಿವಿ ದೃಶ್ಯಾವಳಿ ಹಾಗೂ ಆಟೋ ಚಾಲಕನ ಮಾಹಿತಿ ಪ್ರಕರಣ ಭೇದಿಸಲು ನೆರವಾಯಿತು ಎಂದು ತಿಳಿದು ಬಂದಿದೆ. ಪೊಲೀಸರು ತನಿಖೆಗೆ 15 ತಂಡಗಳನ್ನು ರಚಿಸಿ, ಸಂತ್ರಸ್ತೆ ವಾಸಿಸುತ್ತಿದ್ದ ವಸತಿ ಸಂಕೀರ್ಣದ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದರು. ಇದರಿಂದ ಆರೋಪಿಯ ಚಲನವಲನ ಹಾಗೂ ಪರಾರಿಯಾದ ದಿಕ್ಕು ಪತ್ತೆಯಾಯಿತು. ಅಪರಾಧದ ಬಳಿಕ ಆರೋಪಿಯು ಹತ್ತಿದ ಆಟೋರಿಕ್ಷಾವನ್ನು ಗುರುತಿಸಿದ ಪೊಲೀಸರು, ಆಟೋ ಚಾಲಕನನ್ನು ಪತ್ತೆಹಚ್ಚಿದರು. ಆತ ಆರೋಪಿಯನ್ನು ಒಂದು ಹೋಟೆಲ್ ಬಳಿ ಇಳಿಸಿದ್ದಾಗಿ ತಿಳಿಸಿದ ಹಿನ್ನೆಲೆಯಲ್ಲಿ ಪೊಲೀಸರು ಅಲ್ಲಿಗೆ ತೆರಳಿ ಆರೋಪಿಯನ್ನು ಬಂಧಿಸಿದರು. ಪೊಲೀಸರ ಪ್ರಕಾರ, ಆರೋಪಿಯು ಬೆಳಿಗ್ಗೆ 6.28ರ ಸುಮಾರಿಗೆ ವಸತಿ ಸಂಕೀರ್ಣಕ್ಕೆ ಪ್ರವೇಶಿಸಿ, ಸುಮಾರು ಒಂದು ಗಂಟೆಯೊಳಗೆ ಹೊರಟಿದ್ದಾನೆ. ನಂತರ ಬಟ್ಟೆ ಬದಲಿಸಿಕೊಂಡು ಸ್ಥಳದಿಂದ ತೆರಳಿರುವುದು ಸಿಸಿಟಿವಿ ದೃಶ್ಯಗಳಲ್ಲಿ ಕಂಡುಬಂದಿದೆ. ಈ ಘಟನೆಗೆ ಕೆಲವೇ ಗಂಟೆಗಳ ಮೊದಲು ಅಲ್ವಾರ್ ನಲ್ಲಿ ಆರೋಪಿಯು ತನ್ನ 22 ವರ್ಷದ ನೆರೆಹೊರೆಯವಳ ಮೇಲೆ ದೌರ್ಜನ್ಯ ಎಸಗಿದ್ದಾನೆ. ಈ ಸಂಬಂಧ ಅಲ್ವಾರ್ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಮರುದಿನ ಬೆಳಿಗ್ಗೆ ಆರೋಪಿಯು ಹೊಸದಿಲ್ಲಿಗೆ ಬಂದು, ಅಮರ್ ಕಾಲೋನಿಯಲ್ಲಿರುವ ತಾನು ಈ ಹಿಂದೆ ಕೆಲಸ ಮಾಡುತ್ತಿದ್ದ ಮನೆಗೆ ನುಗ್ಗಿದ್ದಾನೆ. ಅಲ್ಲಿ ಐಆರ್ಎಸ್ ಅಧಿಕಾರಿಯ 22 ವರ್ಷದ ಮಗಳ ಮೇಲೆ ದೌರ್ಜನ್ಯ ಎಸಗಿ ಕೊಲೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ. ಬೆಳಿಗ್ಗೆ ಜಿಮ್ ನಿಂದ ಮನೆಗೆ ಮರಳಿದ ಪೋಷಕರು ಮಗಳನ್ನು ರಕ್ತದ ಮಡುವಿನಲ್ಲಿ ಕಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆರೋಪಿಯು ಹಿಂದೆ ಆ ಮನೆಯಲ್ಲಿ ಕೆಲಸ ಮಾಡುತ್ತಿದ್ದ. ಬಳಿಕ ಹಣಕಾಸು ಅಕ್ರಮಗಳು ಹಾಗೂ ಬೆಟ್ಟಿಂಗ್ ಹವ್ಯಾಸದ ಕಾರಣದಿಂದ ಕೆಲಸದಿಂದ ತೆಗೆದುಹಾಕಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಸಿಸಿಟಿವಿ ದೃಶ್ಯಾವಳಿ, ತಳಮಟ್ಟದ ತನಿಖೆ ಹಾಗೂ ಆಟೋ ಚಾಲಕನ ಮಾಹಿತಿ ಆಧರಿಸಿ ಆರೋಪಿಯನ್ನು ಪತ್ತೆಹಚ್ಚಿ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಎಸೆಸೆಲ್ಸಿ ಪರೀಕ್ಷೆ: ಜಿಲ್ಲಾವಾರು ಫಲಿತಾಂಶದ ವಿವರ ಹೀಗಿದೆ
ಬೆಂಗಳೂರು: ಪ್ರಸಕ್ತ (2025-26ನೇ) ಶೈಕ್ಷಣಿಕ ಸಾಲಿನ ಎಸೆಸೆಲ್ಸಿ ವಾರ್ಷಿಕ ಪರೀಕ್ಷೆಯಲ್ಲಿ ಒಟ್ಟು 94.10 ಶೇ. ದಾಖಲೆ ಫಲಿತಾಂಶ ದಾಖಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆ ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿದ್ದರೆ, ಉಡುಪಿ ಜಿಲ್ಲೆ ದ್ವಿತೀಯ ಸ್ಥಾನ ಗಳಿಸಿದೆ. ಉತ್ತರ ಕನ್ನಡ ಜಿಲ್ಲೆ ತೃತೀಯ ಸ್ಥಾನ ಗಳಿಸಿದೆ. ಶೇ. 98.40 ಫಲಿತಾಂಶದೊಂದಿಗೆ ದಕ್ಷಿಣ ಕನ್ನಡ ಜಿಲ್ಲೆ ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿದರೆ, ಶೇ. 98.18 ಫಲಿತಾಂಶ ಪಡೆದ ಉಡುಪಿ ದ್ವಿತೀಯ ಸ್ಥಾನ ಗಳಿಸಿದೆ. ಶೇ.85.06 ಫಲಿತಾಂಶದೊಂದಿಗೆ ಕಲಬುರಗಿ ಜಿಲ್ಲೆ ಕೊನೆಯ ಸ್ಥಾನದಲ್ಲಿದೆ. ಜಿಲ್ಲಾವಾರು ಫಲಿತಾಂಶದ ವಿವರ ದಕ್ಷಿಣ ಕನ್ನಡ ಜಿಲ್ಲೆ- 98.40% ಉಡುಪಿ – 98.18% ಉತ್ತರ ಕನ್ನಡ- 98.09% ಹಾಸನ- 97.51% ಮಂಡ್ಯ- 97.45% ಶಿರಸಿ- 97.21% ಹಾವೇರಿ- 96.87% ಕೊಡಗು- 96.70% ಶಿವಮೊಗ್ಗ- 96.56% ವಿಜಯನಗರ- 96.39% ಬೆಂಗಳೂರು ಗ್ರಾಮಾಂತರ – 95.84% ಧಾರವಾಡ – 95.59% ಕೋಲಾರ- 95.50% ಬಾಗಲಕೋಟೆ- 95.42% ಬೆಂಗಳೂರು ಉತ್ತರ- 95.34% ಗದಗ- 95.24% ಚಿಕ್ಕಮಗಳೂರು- 94.99% ಬೆಳಗಾವಿ – 94.75% ದಾವಣಗೆರೆ- 94.64% ಮೈಸೂರು- 94.50% ರಾಯಚೂರು- 94.41% ವಿಜಯಪುರ- 94.17% ಚಿಕ್ಕೋಡಿ- 94.09% ಬಳ್ಳಾರಿ- 93.36% ಕೊಪ್ಪಳ- 93.10% ರಾಮನಗರ- 92.83% ಚಿತ್ರದುರ್ಗ- 92.25% ಬೀದರ್- 92.18% ತುಮಕೂರು- 92.04% ಚಾಮರಾಜನಗರ- 91.89% ಯಾದಗಿರಿ- 91.89% ಬೆಂಗಳೂರು ದಕ್ಷಿಣ- 91.65% ಚಿಕ್ಕಬಳ್ಳಾಪುರ- 90.88% ಮಧುಗಿರಿ- 90.26% ಕಲಬುರಗಿ-85.06% ವಿದ್ಯಾರ್ಥಿಗಳು ಫಲಿತಾಂಶವನ್ನು karresults.nic.in ನಲ್ಲಿ ಅಥವಾ https://karresults.nic.in KarnatakaOne Mobile App ಮೂಲಕವೂ ಪಡೆಯಬಹುದು. ಅಲ್ಲದೇ, ವಿದ್ಯಾರ್ಥಿಗಳ ನೋಂದಾಯಿತ ಮೊಬೈಲ್ ಸಂಖ್ಯೆಗೆ ವಾಟ್ಸ್ ಆ್ಯಪ್/ಎಸ್ಸೆಮ್ಮೆಸ್ (SMS) ಮೂಲಕವೂ ಫಲಿತಾಂಶದ ಮಾಹಿತಿ ರವಾನಿಸಲಾಗಿದೆ ಎಂದು ಮಂಡಳಿ ತಿಳಿಸಿದೆ. ಈ ವರ್ಷ ಪ್ರಥಮ ಬಾರಿ ವಿದ್ಯಾರ್ಥಿಗಳ ಫಲಿತಾಂಶದ ಅಂಕಪಟ್ಟಿಯನ್ನು ಡಿಜಿಲಾಕರ್ ನಲ್ಲೂ ಅಪ್ಲೋಡ್ ಮಾಡಲಾಗುತ್ತದೆ. ಅರ್ಹ ವಿದ್ಯಾರ್ಥಿಗಳು ಅಂಕಪಟ್ಟಿಯನ್ನು https://www.digilocker.gov.in ನಲ್ಲಿ ಡೌನ್ ಲೋಡ್ ಮಾಡಿಕೊಳ್ಳಬಹುದು. ಮಾರ್ಚ್ 18ರಿಂದ ಎಪ್ರಿಲ್ 2ರವರೆಗೆ ಕರ್ನಾಟಕದಾದ್ಯಂತ 2870 ಪರೀಕ್ಷಾ ಕೇಂದ್ರಗಳಲ್ಲಿ SSLC ಪರೀಕ್ಷೆ ನಡೆದಿತ್ತು. ಒಟ್ಟು 8,66,046 ನೋಂದಣಿ ಮಾಡಿಕೊಂಡಿದ್ದು, 8,56,516 ಮಂದಿ ಪರೀಕ್ಷೆ ಬರೆದಿದ್ದರು.
ಬಿಸಿಲಿನ ತಾಪಕ್ಕೆ 32 ನವಿಲುಗಳ ಸಾವು: ತುಮಕೂರು ಜಿಲ್ಲೆಯಲ್ಲಿ ಹೀಟ್ಸ್ಟ್ರೋಕ್ ಭೀತಿ!
ತುಮಕೂರು: ಜಿಲ್ಲೆಯಲ್ಲಿ ಬೇಸಿಗೆಯ ಬಿಸಿಲು ಅಕ್ಷರಶಃ ಮೃತ್ಯುಕೂಪವಾಗಿ ಪರಿಣಮಿಸಿದ್ದು, ಕಳೆದ ಐದಾರು ದಿನಗಳಲ್ಲಿ ಬರೋಬ್ಬರಿ 32 ನವಿಲುಗಳು ಸಾವನ್ನಪ್ಪಿರುವುದು ಆತಂಕಕಾರಿ ಸಂಗತಿಯಾಗಿದೆ. ತುಮಕೂರು ತಾಲೂಕಿನ ಬೊಮ್ಮನಹಳ್ಳಿ, ಕೋಳಿಹಳ್ಳಿ, ಭೈರಸಂದ್ರ ಮತ್ತು ಹುಲ್ಲೆನಹಳ್ಳಿ ಗ್ರಾಮಗಳ ವ್ಯಾಪ್ತಿಯಲ್ಲಿ ಏಪ್ರಿಲ್ 16ರಿಂದ 21ರ ಅವಧಿಯಲ್ಲಿ ಈ ರಾಷ್ಟ್ರಪಕ್ಷಿಗಳು ಮೃತಪಟ್ಟಿವೆ. ತೀವ್ರವಾಗಿ ಏರುತ್ತಿರುವ ತಾಪಮಾನ ಮತ್ತು ನೀರಿನ ಹಸಿವಿನಿಂದಾಗಿ ಉಂಟಾಗುವ ‘ಹೀಟ್ಸ್ಟ್ರೋಕ್’ (Heatsroke) ಈ ಸಾವಿಗೆ ಪ್ರಮುಖ ಕಾರಣವಿರಬಹುದು ಎಂದು ಪ್ರಾಥಮಿಕವಾಗಿ ಶಂಕಿಸಲಾಗಿದೆ. ಒಂದೇ ಭಾಗದಲ್ಲಿ ಇಷ್ಟೊಂದು ಪ್ರಮಾಣದಲ್ಲಿ ನವಿಲುಗಳು ಬಲಿಯಾಗಿರುವುದು ಅರಣ್ಯ […] The post ಬಿಸಿಲಿನ ತಾಪಕ್ಕೆ 32 ನವಿಲುಗಳ ಸಾವು: ತುಮಕೂರು ಜಿಲ್ಲೆಯಲ್ಲಿ ಹೀಟ್ಸ್ಟ್ರೋಕ್ ಭೀತಿ! first appeared on Vistara News .
SSLC ಫಲಿತಾಂಶ ಪ್ರಕಟ; ಬಾಲಕಿಯರೇ ಮೇಲುಗೈ; ಮೊದಲ ಸ್ಥಾನದಲ್ಲಿ ಉಡುಪಿ; ಕಲಬುರಗಿಗೆ ಕೊನೆಯ ಸ್ಥಾನ
ಬೆಂಗಳೂರು: ಎಸ್ ಎಸ್ ಎಲ್ ಸಿ ಫಲಿತಾಂಶ ಪ್ರಕಟವಾಗಿದ್ದು, ಈ ವರ್ಷ ಶೇ.94.1ರಷ್ಟು ಫಲಿತಾಂಶ ಪ್ರಕಟವಾಗಿದೆ. 2024-25ನೇ ಸಾಲಿನಲ್ಲಿ ಶೇ. 80.04 ರಷ್ಟು ಫಲಿತಾಂಶ ಪ್ರಕಟವಾಗಿತ್ತು.ಪ್ರತಿವರ್ಷದಂತೆ ಈ ವರ್ಷವೂ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. ಪರೀಕ್ಷೆಗೆ ಹಾಜರಾದ ಬಾಲಕಿಯರ ಪೈಕಿ ಶೇ. 96.18 ರಷ್ಟು ತೇರ್ಗಡೆಯಾಗಿದ್ದಾರೆ. ಶೇ.91.94 ರಷ್ಟು ಬಾಲಕರು ಪಾಸ್ ಆಗಿದ್ದಾರೆ. ಈ ವರ್ಷ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳೂ ಉತ್ತಮ ಸಾಧನೆ ಮಾಡಿರುವುದು ಮತ್ತೊಂದು ವಿಶೇಷ. ಪರೀಕ್ಷೆಗೆ ಹಾಜರಾದ ಗ್ರಾಮೀಣ ವಿದ್ಯಾರ್ಥಿಗಳ ಪೈಕಿ ಶೇ. 94.80 ರಷ್ಟು […] The post SSLC ಫಲಿತಾಂಶ ಪ್ರಕಟ; ಬಾಲಕಿಯರೇ ಮೇಲುಗೈ; ಮೊದಲ ಸ್ಥಾನದಲ್ಲಿ ಉಡುಪಿ; ಕಲಬುರಗಿಗೆ ಕೊನೆಯ ಸ್ಥಾನ first appeared on Vistara News .
Karnataka SSLC Results 2026: ಎಸ್ಎಸ್ಎಲ್ಸಿ ಫಲಿತಾಂಶ ಪ್ರಕಟ; ರಾಜ್ಯದಲ್ಲಿ ಯಾವ ಜಿಲ್ಲೆ ಎಷ್ಟನೇ ಸ್ಥಾನ?
SSLC Results 2026: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯು ನಡೆಸಿದ 2026ನೇ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆಯ ಫಲಿತಾಂಶವನ್ನು ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಗುರುವಾರ (ಏಪ್ರಿಲ್ 23) ಅಧಿಕೃತವಾಗಿ ಪ್ರಕಟಿಸಿದ್ದಾರೆ. ಹಾಗಾದ್ರೆ ಜಿಲ್ಲಾವಾರು ಫಲಿತಾಂಶವನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ. ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ (KSEAB) ನಡೆಸಿದ 2026ನೇ ಸಾಲಿನ ಎಸ್ಎಸ್ಎಲ್ಸಿ
ಬೀದರ್| ಬಸವೇಶ್ವರ ರಥೋತ್ಸವದಲ್ಲಿ ಅವಘಡ: ರಥದ ಚಕ್ರದಲ್ಲಿ ಸಿಲುಕಿ ಮೂವರಿಗೆ ಗಾಯ
ಬಸವಕಲ್ಯಾಣ: ನಗರದ ಶ್ರೀ ಬಸವೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸವದ ರಥೋತ್ಸವದ ವೇಳೆ ಭೀಕರ ಅವಘಡ ಸಂಭವಿಸಿದ್ದು, ರಥದ ಚಕ್ರಕ್ಕೆ ಸಿಲುಕಿ ಒಬ್ಬರ ಕಾಲು ತುಂಡಾಗಿದ್ದು, ಇಬ್ಬರಿಗೆ ಗಂಭೀರ ಗಾಯಗಳಾದ ಘಟನೆ ಗುರುವಾರ ಬೆಳಿಗ್ಗೆ ಸುಮಾರು 6 ಗಂಟೆಗೆ ನಡೆದಿದೆ. ಧನರಾಜ್ ಎಂಬವರ ಎರಡು ಕಾಲುಗಳು ತುಂಡಾಗಿದ್ದು, ರಿಶಬ್ ಎಂಬವರ ಕಾಲುಗಳಿಗೆ ಗಂಭೀರ ಗಾಯಗಳಾಗಿವೆ. ಹಾಗೆಯೇ ಭೀಮಾಶಂಕರ್ ಎಂಬುವವರಿಗೂ ಸಣ್ಣಪುಟ್ಟ ಗಾಯಗಳಾಗಿವೆ ಎಂದು ತಿಳಿದು ಬಂದಿದೆ. ಈ ಘಟನೆ ಬಸವಕಲ್ಯಾಣ ನಗರದ ರಥ ಮೈದಾನದಲ್ಲಿ ಗುರುವಾರ ಬೆಳಿಗ್ಗೆ 6 ಗಂಟೆಗೆ ಸಂಭವಿಸಿದೆ. ಬಸವೇಶ್ವರ ಜಾತ್ರಾ ರಥೋತ್ಸವದ ವೇಳೆ ಜನಸಮೂಹ ಹೆಚ್ಚಾಗಿದ್ದರಿಂದ ನೂಕಾಟ-ತಳ್ಳಾಟ ಉಂಟಾಗಿ ಘಟನೆ ಸಂಭವಿಸಿದೆ. ಗಾಯಾಳುಗಳಿಗೆ ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಕಲಬುರಗಿ ಆಸ್ಪತ್ರೆಗೆ ರವಾನಿಸಲಾಗಿದೆ.
ಎಸೆಸೆಲ್ಸಿ ಫಲಿತಾಂಶ: ಏಳು ವಿದ್ಯಾರ್ಥಿಗಳಿಗೆ 625ರಲ್ಲಿ 625 ಅಂಕ
21 ವಿದ್ಯಾರ್ಥಿಗಳಿಗೆ 624 ಅಂಕ
ದೇವದುರ್ಗ: ಅರಿವಿನ ಮಠದ ಸಂಸ್ಥಾಪಕ ಬಸವ ದೇವರು ಲಿಂಗೈಕ್ಯ
ದೇವದುರ್ಗ, ಎ.22: ದೇವದುರ್ಗ ಪಟ್ಟಣದ ಅರಿವಿನ ಮಠದ ಸಂಸ್ಥಾಪಕರಾದ ಬಸವ ದೇವರು ಅವರು ಅನಾರೋಗ್ಯದಿಂದ ಬುಧವಾರ ಸಂಜೆ ಲಿಂಗೈಕ್ಯರಾದರು. ಮೃತರ ಅಂತ್ಯಸಂಸ್ಕಾರವು ಗುರುವಾರ ಮಧ್ಯಾಹ್ನ 3 ಗಂಟೆಗೆ ಅರಿವಿನ ಮನೆ ಮಠದಲ್ಲಿ ನಡೆಯಲಿದೆ ಎಂದು ಟ್ರಸ್ಟ್ ಅಧ್ಯಕ್ಷ ವೆಂಕಟರಾವ್ ಬೆನಕನ್ ತಿಳಿಸಿದ್ದಾರೆ.
ಅಂಬಾನಿ ಮನೆ ಅಡುಗೆಮನೆ ಮೆನು ಹೇಗಿರುತ್ತೆ ಗೊತ್ತಾ? ಪ್ರತಿದಿನ 4000 ರೊಟ್ಟಿ ತಯಾರಾಗುವುದರ ಹಿಂದಿನ ಅಸಲಿ ಕಾರಣವೇನು?
ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರಾದ ಮುಖೇಶ್ ಅಂಬಾನಿ ಅವರ ನಿವಾಸ ‘ಆಂಟಿಲಿಯಾ’ ಕೇವಲ ಐಷಾರಾಮಿ ಜೀವನಕ್ಕೆ ಮಾತ್ರವಲ್ಲ, ಅಲ್ಲಿನ ಶಿಸ್ತುಬದ್ಧ ಆಹಾರ ಪದ್ಧತಿಗೂ ಹೆಸರುವಾಸಿ. ಅಂಬಾನಿ ಕುಟುಂಬದ ಸದಸ್ಯರು ಅಪ್ಪಟ ಸಸ್ಯಾಹಾರಿಗಳಾಗಿದ್ದು, ಅತ್ಯಂತ ಸಾತ್ವಿಕ ಹಾಗೂ ಪೌಷ್ಟಿಕ ಆಹಾರವನ್ನು ಸೇವಿಸುತ್ತಾರೆ. ಮುಖೇಶ್ ಅಂಬಾನಿ ಅವರ ದಿನಚರಿ ಬೆಳಿಗ್ಗೆ ಪಪ್ಪಾಯಿ ರಸ ಮತ್ತು ಇಡ್ಲಿ-ಸಾಂಬಾರ್ನೊಂದಿಗೆ ಆರಂಭವಾದರೆ, ನೀತಾ ಅಂಬಾನಿ ಅವರು ಹಣ್ಣುಗಳು ಹಾಗೂ ಡ್ರೈಫ್ರೂಟ್ಸ್ ಗೆ ಆದ್ಯತೆ ನೀಡುತ್ತಾರೆ. ಮಧ್ಯಾಹ್ನದ ಊಟದಲ್ಲಿ ಗುಜರಾತಿ ಶೈಲಿಯ ದಾಲ್, ಅನ್ನ, […] The post ಅಂಬಾನಿ ಮನೆ ಅಡುಗೆಮನೆ ಮೆನು ಹೇಗಿರುತ್ತೆ ಗೊತ್ತಾ? ಪ್ರತಿದಿನ 4000 ರೊಟ್ಟಿ ತಯಾರಾಗುವುದರ ಹಿಂದಿನ ಅಸಲಿ ಕಾರಣವೇನು? first appeared on Vistara News .
SSLC 2026 ಫಲಿತಾಂಶ: ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಟಾಪರ್ಸ್ ಇವರೇ ನೋಡಿ..
2026ನೇ ಸಾಲಿನ ಎಸ್ಎಸ್ಎಲ್ಸಿ (SSLC) ಪರೀಕ್ಷೆಯ ಫಲಿತಾಂಶವನ್ನು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯು (KSEAB) ಅಧಿಕೃತವಾಗಿ ಪ್ರಕಟಿಸಿದೆ. ಈ ಬಾರಿಯ ಪರೀಕ್ಷೆಯಲ್ಲಿ ರಾಜ್ಯದ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆ ಮಾಡಿದ್ದು, ಒಟ್ಟಾರೆ ಶೇಕಡಾ 94.10% ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಇದರೊಂದಿಗೆ ರಾಜ್ಯಮಟ್ಟದಲ್ಲಿ ಅತಿ ಹೆಚ್ಚು ಅಂಕಗಳನ್ನು ಪಡೆದು ಸಾಧನೆಗೈದ ಟಾಪರ್ಸ್ ಪಟ್ಟಿಯನ್ನು ಸಹ ಮಂಡಳಿಯು ಬಿಡುಗಡೆ
ತಮಿಳುನಾಡು ವಿಧಾನಸಭಾ ಚುನಾವಣೆ |ಎಐಎಡಿಎಂಕೆ-ಡಿಎಂಕೆ ಮತಗಟ್ಟೆ ಏಜೆಂಟ್ ಗಳ ನಡುವೆ ಮಾರಾಮಾರಿ
ಸೇಲಂ: ಗುರುವಾರದ ಮತದಾನದ ವೇಳೆ ಎಐಎಡಿಎಂಕೆ ಹಾಗೂ ಡಿಎಂಕೆ ಮತಗಟ್ಟೆ ಏಜೆಂಟ್ ಗಳ ನಡುವೆ ಸೇಲಂನ ಅರಿಸಿಪಾಳ್ಯಂ ಬಳಿಯ 139ನೇ ಮತಗಟ್ಟೆಯೊಳಗೆ ಮಾರಾಮಾರಿ ನಡೆದಿದೆ ಎಂದು ವರದಿಯಾಗಿದೆ. ಎಐಎಡಿಎಂಕೆ ಮತಗಟ್ಟೆ ಏಜೆಂಟ್ ಎಂ.ಕಂದಸ್ವಾಮಿ ಹಾಗೂ ಡಿಎಂಕೆ ಮತಗಟ್ಟೆ ಏಜೆಂಟ್ ಸಿ.ಸೆಂಥಿಲ್ ಮತಗಟ್ಟೆಯೊಳಗೆ ಮಾತನಾಡುವಾಗ ಈ ಘಟನೆ ನಡೆದಿದೆ ಎಂದು ಹೇಳಲಾಗಿದೆ. ಪ್ರತ್ಯಕ್ಷದರ್ಶಿಯ ಪ್ರಕಾರ, ಮತಗಟ್ಟೆಯೊಳಗೆ ಸೆಂಥಿಲ್ ಡಿಎಂಕೆ ಪರವಾಗಿ ಪ್ರಚಾರ ನಡೆಸುತ್ತಿದ್ದರು ಎನ್ನಲಾಗಿದೆ. ಇದು ತಪ್ಪು ಗ್ರಹಿಕೆಗೆ ಕಾರಣವಾಗಿ ಇಬ್ಬರ ನಡುವೆ ಮಾರಾಮಾರಿ ನಡೆದಿದೆ ಎಂದು ಹೇಳಲಾಗಿದೆ. ಅವರಿಬ್ಬರ ನಡುವಿನ ಸಂಭಾಷಣೆಯನ್ನು ತನ್ನನ್ನು ಉದ್ದೇಶಿಸಿ ಹೇಳಿದ್ದು ಎಂದು ತಪ್ಪಾಗಿ ಗ್ರಹಿಸಿದ 27ನೇ ವಾರ್ಡ್ ನ ಮಹಿಳಾ ಮತದಾರೆ ಎಸ್.ಲೋಗನಾಯಕಿ ಆಕ್ರೋಶಗೊಂಡು ಕಂದಸ್ವಾಮಿಯ ಮೇಲೆ ಕೂಗಾಡಲು ಪ್ರಾರಂಭಿಸಿದ್ದಾರೆ. ಇದು ಅವರಿಬ್ಬರ ನಡುವೆ ಘರ್ಷಣೆಗೆ ಕಾರಣವಾಗಿದ್ದು, ಆಕೆ ಕಂದಸ್ವಾಮಿಗೆ ಕಪಾಳ ಮೋಕ್ಷ ಮಾಡಿದ್ದಾಳೆ. ಅದಕ್ಕೆ ಪ್ರತಿಯಾಗಿ ಕಂದಸ್ವಾಮಿ ಕೂಡಾ ಹೊಡೆದಿದ್ದರಿಂದ ಮತಗಟ್ಟೆಯೊಳಗೆ ಮಾರಾಮಾರಿ ನಡೆದಿದೆ. ಬಳಿಕ ಲೋಗನಾಯಕಿಯೊಂದಿಗೆ ಸೇರಿಕೊಂಡಿರುವ ಆಕೆಯ ಪುತ್ರ ವಿಘ್ನೇಶ್ವರನ್ ಹಾಗೂ ಆಕೆಯ ಸಹೋದರಿ ಎಂ.ರೇಣುಕಾ ಕಂದಸ್ವಾಮಿಯ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಈ ಕುರಿತು ಪ್ರತಿಕ್ರಿಯಿಸಿದ ಕಂದಸ್ವಾಮಿ, “ಈ ಹಲ್ಲೆಯಲ್ಲಿ ನನಗೆ ಗಾಯಗಳಾಗಿದ್ದು, ನನ್ನ ಬಟ್ಟೆ ಹರಿದಿದೆ” ಎಂದು ಆರೋಪಿಸಿದ್ದಾರೆ. ಈ ಆರೋಪವನ್ನು ಅಲ್ಲಗಳೆದಿರುವ ಲೋಗನಾಯಕಿ, ಕಂದಸ್ವಾಮಿಯೇ ಮೊದಲು ನನ್ನನ್ನು ನಿಂದಿಸಿದರು ಹಾಗೂ ಹಲ್ಲೆ ನಡೆಸಿದರು ಎಂದು ಪ್ರತ್ಯಾರೋಪ ಮಾಡಿದ್ದಾರೆ. ‘ಮೂಗಿನಿಂದ ರಕ್ತ ಸುರಿಯುವುದು ಸೇರಿದಂತೆ ನನಗೆ ಹಲವು ಕಡೆ ಗಾಯಗಳಾಗಿವೆ” ಎಂದು ಆರೋಪಿಸಿರುವ ಲೋಗನಾಯಕಿ, ಈ ಘಟನೆಯ ಹಿಂದೆ ಎಐಎಡಿಎಂಕೆ ವಾರ್ಡ್ ಕಾರ್ಯದರ್ಶಿ ಎಂ.ಯುವರಾಜ್ ಇದ್ದಾರೆ ಎಂದು ಆರೋಪಿಸಿದ್ದಾರೆ. ಆದರೆ, ಈ ಆರೋಪವನ್ನು ನಿರಾಕರಿಸಿರುವ ಯುವರಾಜ್, ಇತ್ತೀಚೆಗಷ್ಟೇ ಎಐಎಡಿಎಂಕೆ ತೊರೆದು ಡಿಎಂಕೆ ಸೇರ್ಪಡೆಯಾಗಿರುವ ಲೋಗನಾಯಕಿ, ಎಐಎಡಿಎಂಕೆ ವರ್ಚಸ್ಸಿಗೆ ಮಸಿ ಬಳಿಯಲು ಉದ್ದೇಶಪೂರ್ವಕವಾಗಿ ಮತಗಟ್ಟೆಯೊಳಗೆ ಉದ್ವಿಗ್ನತೆ ಸೃಷ್ಟಿಸಿದ್ದಾರೆ ಎಂದು ಪ್ರತ್ಯಾರೋಪ ಮಾಡಿದ್ದಾರೆ. ಸುದ್ದಿ ತಿಳಿಯುತ್ತಿದ್ದಂತೆಯೇ ಘಟನಾ ಸ್ಥಳಕ್ಕೆ ಧಾವಿಸಿದ ಪಲ್ಲಪಟ್ಟಿ ಠಾಣೆಯ ಪೊಲೀಸರು, ತನಿಖೆ ಕೈಗೊಂಡಿದ್ದಾರೆ. ಮತಗಟ್ಟೆಯೊಳಗೆ ನಡೆದಿರುವ ಗಲಭೆಯ ಕುರಿತು ಚುನಾವಣಾಧಿಕಾರಿಗಳು ಇಂದು ಸಂಜೆ ವರದಿ ಸಲ್ಲಿಸುವ ನಿರೀಕ್ಷೆ ಇದೆ.
ರಾಯಚೂರು : ಉಚಿತ ಹೆಲ್ಮೆಟ್ ವಿತರಣೆ, ಕಾನೂನು ಅರಿವು ಕಾರ್ಯಕ್ರಮ
ಹೆಲ್ಮೆಟ್ ಧರಿಸಿ ಜೀವ ಕಾಪಾಡಿಕೊಳ್ಳಿ : ಎಸ್ಪಿ ಅರುಣಾಂಶು ಗಿರಿ
2025-26ನೇ ಎಸೆಸೆಲ್ಸಿ ಪರೀಕ್ಷೆ : ದಕ್ಷಿಣ ಕನ್ನಡ ಪ್ರಥಮ, ಉಡುಪಿ ದ್ವಿತೀಯ
94.10 ಶೇ. ಫಲಿತಾಂಶ ದಾಖಲು
SSLC ಫಲಿತಾಂಶ 2026: ಶಿಕ್ಷಣ ಸಚಿವರಿಂದ ಸಮಗ್ರ ವಿವರ -Live ವಿಡಿಯೊ ಇಲ್ಲಿದೆ
SSLC Results 2026: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯು ನಡೆಸಿದ 2026ನೇ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆಯ ಫಲಿತಾಂಶವನ್ನು ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಗುರುವಾರ (ಏಪ್ರಿಲ್ 23) ಅಧಿಕೃತವಾಗಿ ಪ್ರಕಟಿಸಿದ್ದಾರೆ. ಲೈವ್ ವಿಡಿಯೋ ಇಲ್ಲಿದೆ ನೋಡಿ. ಪತ್ರಿಕಾಗೋಷ್ಠಿಯ ಮೂಲಕ ಈ ವರ್ಷದ ಫಲಿತಾಂಶದ ಅಂಕಿಅಂಶಗಳನ್ನು ಹಂಚಿಕೊಂಡ ಸಚಿವರು, ವಿದ್ಯಾರ್ಥಿಗಳ ಸಾಧನೆಯ
ಕೊಡಗು: ಗ್ರಾಪಂಗಳ ಚುನಾಯಿತ ಸದಸ್ಯರ ಸಂಖ್ಯೆ ನಿಗದಿ
ಆಕ್ಷೇಪ ಸಲ್ಲಿಸಲು ನಾಳೆ ಕೊನೆಯ ದಿನ
ಮಧ್ಯಪ್ರಾಚ್ಯದಲ್ಲಿನ ಅನಿಶ್ಚಿತತೆಯಿಂದಾಗಿ ಎದುರಾಗಿರುವ ತೈಲ ಬಿಕ್ಕಟ್ಟಿನ ಮಧ್ಯೆ ವಿವಿಧ ರಾಜ್ಯಗಳಲ್ಲಿನ ಚುನಾವಣೆಗಳ ಬಳಿಕ ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಏರಿಕೆ ಮಾಡಲಾಗುತ್ತದೆ ಎಂಬ ವರದಿಗಳಿಗೆ ಸ್ಪಷ್ಟನೆ ನೀಡಿರುವ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ ಸರ್ಕಾರದ ಮುಂದೆ ಅಂತಹ ಯಾವುದೇ ಪ್ರಸ್ತಾವನೆ ಇಲ್ಲ ಎಂದು ಹೇಳುವ ಮೂಲಕ ತೈಲ ಬೆಲೆ ಏರಿಕೆಯಾಗುವುದಿಲ್ಲ ಎಂದು ತಿಳಿಸಿದೆ. ಇದರ ಜೊತೆಗೆ ಇಂತಹ ವರದಿಗಳನ್ನು ಹರಡುವವರು ಜನರಲ್ಲಿ ಭೀತಿಯನ್ನು ಸೃಷ್ಟಿಸುವಂತೆ ದುರುದ್ದೇಶದಿಂದ ಮಾಡಲಾಗಿದೆ ಎಂದು ಕಿಡಿಕಾರಿದೆ. ಈ ಕುರಿತ ವರದಿ ಇಲ್ಲಿದೆ..
ಪ್ರಧಾನಿ ನರೇಂದ್ರ ಮೋದಿ ಕುರಿತಾಗಿ ವಿವಾದಾತ್ಮಕ ಹೇಳಿಕೆ ನೀಡಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಬಿಜೆಪಿ ಹೋರಾಟ ನಡೆಸಿದೆ. ಮಲ್ಲಿಕಾರ್ಜುನ ಖರ್ಗೆ ಅವರು ಕೂಡಲೇ ಕ್ಷಮೆಯಾಚನೆ ಮಾಡಬೇಕು ಎಂದು ಅವರು ಅಗ್ರಹಿಸಿದ್ದಾರೆ. ವಿಧಾನಸೌಧದ ಗಾಂಧಿ ಪ್ರತಿಮೆ ಮುಂಭಾಗದಲ್ಲಿ ನಡೆಸಿದ ಪ್ರತಿಭಟನೆಯಲ್ಲಿ ಖರ್ಗೆ ವಿರುದ್ಧ ವಾಗ್ದಾಳಿ ನಡೆಸಿದರು. ವಿಪಕ್ಷ ನಾಯಕ ಆರ್ ಅಶೋಕ್, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಸೇರಿದಂತೆ ಪ್ರಮುಖ ನಾಯಕರು ಭಾಗಿಯಾಗಿದ್ದಾರೆ. ಈ ಬಗ್ಗೆ ವಿವರ ಇಲ್ಲಿದೆ.
ಹಾರ್ಮುಝ್ ಜಲಸಂಧಿಯಲ್ಲಿ ಎರಡು ಹಡಗು ವಶ ಪಡಿಸಿಕೊಂಡ ಇರಾನ್; ವೀಡಿಯೊ ಬಿಡುಗಡೆ ಮಾಡಿದ IRGC
ಟೆಹ್ರಾನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕದನ ವಿರಾಮವನ್ನು ಅನಿರ್ದಿಷ್ಟವಾಗಿ ವಿಸ್ತರಿಸುವುದಾಗಿ ಘೋಷಿಸಿದ ಕೆಲವೇ ಗಂಟೆಗಳ ನಂತರ, ಇರಾನ್ ಹಾರ್ಮುಝ್ ಜಲಸಂಧಿಯಲ್ಲಿ ಎರಡು ಹಡಗುಗಳನ್ನು ವಶಪಡಿಸಿಕೊಂಡಿದೆ. ಬುಧವಾರ ಈ ಬಗ್ಗೆ ಮಾಹಿತಿ ನೀಡಿದ ಇರಾನ್ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC), ವಶಪಡಿಸಿಕೊಂಡ ಹಡಗುಗಳಲ್ಲಿ ಒಂದನ್ನು ಇಸ್ರೇಲ್ಗೆ ಸಂಬಂಧಿಸಿದೆ ಎಂದು ತಿಳಿಸಿದೆ. ಜಲಸಂಧಿಯಲ್ಲಿ ಹಿಡಿದ ಎರಡೂ ಹಡಗುಗಳನ್ನು ಇರಾನ್ ಕರಾವಳಿಯತ್ತ ಕೊಂಡೊಯ್ಯಲಾಗಿದೆ ಎಂದು ತಿಳಿಸಲಾಗಿದೆ. ಅಮೆರಿಕ ಮತ್ತು ಇಸ್ರೇಲ್ ಕದನ ವಿರಾಮವನ್ನು ಉಲ್ಲಂಘಿಸುತ್ತಿರುವವರೆಗೆ ಹಾರ್ಮುಝ್ ಜಲಸಂಧಿಯ ಮೇಲಿನ ತನ್ನ ನಿಯಂತ್ರಣ ಕ್ರಮಗಳನ್ನು ಹಿಂಪಡೆಯುವುದಿಲ್ಲ ಎಂದು ಇರಾನ್ ಸ್ಪಷ್ಟಪಡಿಸಿದೆ. ಈ ನಡುವೆ, ಹಾರ್ಮುಝ್ ಜಲಸಂಧಿಯಲ್ಲಿ ಕಂಟೇನರ್ ಹಡಗನ್ನು ಸೆರೆಹಿಡಿಯುತ್ತಿರುವ ದೃಶ್ಯಗಳ ವೀಡಿಯೊವನ್ನು ಇರಾನ್ ಬಿಡುಗಡೆ ಮಾಡಿದೆ. ವೀಡಿಯೊದಲ್ಲಿ ಶಸ್ತ್ರಸಜ್ಜಿತ ಹಾಗೂ ಮುಸುಕು ಧರಿಸಿದ ಇರಾನಿನ ಪಡೆಗಳು ಸರಕು ಹಡಗಿನ ಬದಿಯನ್ನು ಏರಿ ಹಡಗನ್ನು ವಶಪಡಿಸಿಕೊಳ್ಳುತ್ತಿರುವುದು ಕಾಣಿಸುತ್ತದೆ. ಪರ್ಷಿಯನ್ ಕೊಲ್ಲಿಯ ಪ್ರಮುಖ ಸಾಗಣೆ ಮಾರ್ಗವಾದ ಹಾರ್ಮುಝ್ ಜಲಸಂಧಿಯಲ್ಲಿ ಈ ಬೆಳವಣಿಗೆ ನಡೆದಿರುವುದು ಜಾಗತಿಕ ತೈಲ ಹಾಗೂ ವಾಣಿಜ್ಯ ಸಾಗಣೆಗೆ ಪರಿಣಾಮ ಬೀರುವ ಸಾಧ್ಯತೆಯನ್ನು ಉಂಟುಮಾಡಿದೆ. Iran has released footage showing IRGC forces using high-speed boats to intercept vessels that violated naval instructions, with elite units boarding the ships. pic.twitter.com/1Wuid2UYYM — Nova HD (@NOVA_PressHD) April 22, 2026
SSLC Results 2026: ಬಂತು ಎಸ್ಎಸ್ಎಲ್ಸಿ ರಿಸಲ್ಟ್; ಈ ಬಾರಿ ಶೇ 90ರಷ್ಟು ಸಾಧನೆ
SSLC Result 2026: ಬಹು ನಿರೀಕ್ಷೆಯಿಂದ ಕಾಯುತ್ತಿದ್ದ ಕರ್ನಾಟಕ ಎಸ್ಎಸ್ಎಲ್ಸಿ ಬೋರ್ಡ್ ಪರೀಕ್ಷೆ ಫಲಿತಾಂಶ 2026 ಇಂದು ಗುರುವಾರ (ಏ.23) ಬಿಡುಗಡೆ ಆಗಿದೆ. ಈ ಬಾರಿ ಶೇಕಡಾ ಶೇ 90ರಷ್ಟು ಫಲಿತಾಂಶ ದಾಖಲಾಗಿದೆ. ಹಿಂದೆಂದು ಕೂಡ ಈ ರೀತಿಯ ಫಲಿತಾಂಶ ಬಂದಿರಲಿಲ್ಲ ಎಂಬುದು ಗಮನಿಸಬೇಕಾದ ವಿಷಯ. ರಾಜ್ಯ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ
ಎಸೆಸೆಲ್ಸಿ ಪರೀಕ್ಷೆ-1ರ ಫಲಿತಾಂಶ ವೆಬ್ ಸೈಟ್ ನಲ್ಲಿ ಪ್ರಕಟ
ಬೆಂಗಳೂರು: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ(KSEAB) ನಡೆಸಿದ ಪ್ರಸಕ್ತ (2025-26ನೇ) ಶೈಕ್ಷಣಿಕ ಸಾಲಿನ ಎಸೆಸೆಲ್ಸಿ ವಾರ್ಷಿಕ ಪರೀಕ್ಷೆ-1ರ ಫಲಿತಾಂಶ ಪ್ರಕಟಗೊಂಡಿದೆ. ವಿದ್ಯಾರ್ಥಿಗಳು ಫಲಿತಾಂಶವನ್ನು karresults.nic.in ನಲ್ಲಿ ಅಥವಾ https://karresults.nic.in KarnatakaOne Mobile App ಮೂಲಕವೂ ಪಡೆಯಬಹುದು. ಅಲ್ಲದೇ, ವಿದ್ಯಾರ್ಥಿಗಳ ನೋಂದಾಯಿತ ಮೊಬೈಲ್ ಸಂಖ್ಯೆಗೆ ವಾಟ್ಸ್ ಆ್ಯಪ್/ಎಸ್ಸೆಮ್ಮೆಸ್ (SMS) ಮೂಲಕವೂ ಫಲಿತಾಂಶದ ಮಾಹಿತಿ ರವಾನಿಸಲಾಗಿದೆ ಎಂದು ಮಂಡಳಿ ತಿಳಿಸಿದೆ.
ಅಮೆರಿಕ ಮತ್ತು ಇರಾನ್ ನಡುವಿನ ಕಾಳಗ ಕೇವಲ ಯುದ್ಧಭೂಮಿಗೆ, ಕ್ಷಿಪಣಿಗಳ ಆರ್ಭಟಕ್ಕೆ ಮಾತ್ರ ಸೀಮಿತವಾಗಿಲ್ಲ. ಬದಲಾಗಿ ಜಾಗತಿಕ ಆರ್ಥಿಕತೆಯ ಮೇಲೂ ಇದು ಭಾರಿ ಪರಿಣಾಮ ಬೀರುತ್ತಿದ್ದು, ಭಾರತದ ಷೇರುಪೇಟೆಯನ್ನು ಅಕ್ಷರಶಃ ನಡುಗಿಸುತ್ತಿದೆ. ಕಳೆದೆರಡು ದಿನಗಳಿಂದ ಷೇರುಪೇಟೆಯಲ್ಲಿ ಹೂಡಿಕೆ ಮಾಡಿ ಲಾಭದ ನಿರೀಕ್ಷೆಯಲ್ಲಿದ್ದ ಹೂಡಿಕೆದಾರರು, ಇಂದಿನ (ಏ.23-ಗುರುವಾರ) ಷೇರುಪೇಟೆ ವ್ಯವಹಾರ ನೋಡಿ ಅಕ್ಷರಶಃ ಶಾಕ್ನಲ್ಲಿದ್ದಾರೆ. ಬಾಂಬೆ ಸ್ಟಾಕ್ ಎಕ್ಸ್ಚೇಂಜ್ (BSE) ಹಾಗೂ ನ್ಯಾಷನಲ್ ಸ್ಟಾಕ್ ಎಕ್ಸ್ಚೇಂಜ್ (NSE) ಎರಡರಲ್ಲೂ ಷೇರುಗಳ ಮೌಲ್ಯ ಪಾತಾಳಕ್ಕೆ ಕುಸಿದಿದೆ.
SSLC Exam 2026: ಫಲಿತಾಂಶ ಪ್ರಕಟ; ಯಾವ ಜಿಲ್ಲೆ ಫಸ್ಟ್ ಲಾಸ್ಟ್? ಸಚಿವ ಮಧು ಬಂಗಾರಪ್ಪ ಮಾಹಿತಿ
ಬಹುನಿರೀಕ್ಷಿತ ಕರ್ನಾಟಕ ಎಸ್ಎಸ್ಎಲ್ಸಿ ಪರೀಕ್ಷೆ 2026 ಫಲಿತಾಂಶ ಪ್ರಕಟವಾಗಿದೆ. ವೆಬ್ಸೈಟ್ ಹಾಗೂ ಮೊಬೈಲ್ಗಳಲ್ಲಿ ಫಲಿತಾಂಶ ಲಭ್ಯವಿದೆ. ಮಧ್ಯಾಹ್ನ ಬಳಿಕ ಶಾಲೆಗಳ ನೋಟಿಸ್ ಬೋರ್ಡ್ನಲ್ಲಿ ಫಲಿತಾಂಶ ಹಾಕಲು ವ್ಯವಸ್ಥೆ ಮಾಡಲಾಗಿದೆ. ಇನ್ನು ಜಿಲ್ಲಾವಾರು ಫಲಿತಾಂಶದ ಬಗ್ಗೆ ಸಚಿವ ಮಧು ಬಂಗಾರಪ್ಪ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ್ದಾರೆ.
ಪಿಲಿಕುಳದಲ್ಲಿ ಆದಿವಾಸಿ ಹೆರಿಟೇಜ್ ಮ್ಯೂಸಿಯಂ?
25 ಕೋಟಿ ರೂ. ವೆಚ್ಚದ ಯೋಜನೆ: ಕರಡು ಪ್ರಸ್ತಾವ ಸಿದ್ಧ
ಅಕ್ಷರ ದೇಗುಲಗಳ ಅಂಗಳದಲ್ಲಿ ಅಸ್ಪಶ್ಯತೆಯ ನೆರಳು
ಷೇಕ್ಸ್ಪಿಯರ್ ಒಮ್ಮೆ ‘ಹೆಸರಿನಲ್ಲೇನಿದೆ?’ ಎಂದು ಕೇಳಿರಬಹುದು. ಆದರೆ, ಭಾರತೀಯ ಸಾಮಾಜಿಕ ಸಂದರ್ಭದಲ್ಲಿ ಆತನ ಈ ಪ್ರಶ್ನೆ ಸಂಪೂರ್ಣ ಅಪ್ರಸ್ತುತವಾಗುತ್ತದೆ. ಏಕೆಂದರೆ, ನಮ್ಮಲ್ಲಿ ಹೆಸರು ಕೇವಲ ವ್ಯಕ್ತಿ ಅಥವಾ ಸ್ಥಳದ ಭೌಗೋಳಿಕ ಗುರುತಲ್ಲ; ಅದೊಂದು ಸಾಮಾಜಿಕ ಶ್ರೇಣೀಕರಣದ ಕರಾಳ ಶಾಸನ. ತಲೆಮಾರುಗಳ ಶೋಷಣೆಯ ಇತಿಹಾಸವನ್ನು ಹೊತ್ತೊಯ್ಯುವ ವಾಹಕವದು. ನಮ್ಮ ಅಕ್ಷರ ದೇಗುಲಗಳಾದ ಶಾಲೆಗಳು ಸಮಾನತೆಯ ಪ್ರಯೋಗಶಾಲೆಗಳಾಗಬೇಕು ಎಂಬುದು ಸಂವಿಧಾನದ ಆಶಯ. ಆದರೆ, ಇಂದಿಗೂ ಕರ್ನಾಟಕದ ಕೆಲವು ಭಾಗಗಳಲ್ಲಿ ಶಾಲೆಗಳ ನಾಮಫಲಕಗಳು ಅಸ್ಪಶ್ಯತೆಯ ಕಹಿಯನ್ನು ಉಗುಳುತ್ತಿರುವುದು ನಮ್ಮ ಪ್ರಜಾಪ್ರಭುತ್ವದ ಅತಿದೊಡ್ಡ ವಿಪರ್ಯಾಸ. ಇದಕ್ಕೆ ಜೀವಂತ ಸಾಕ್ಷಿ ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ಕಡಚರ್ಲ ಗ್ರಾಮದ ‘ಸರಕಾರಿ ಕಿರಿಯ ಪ್ರಾಥಮಿಕ ಶಾಲೆ, ಹರಿಜನ ವಾಡಾ’. ಕೇವಲ ಕಡಚರ್ಲ ಮಾತ್ರವಲ್ಲ, ಕಲ್ಯಾಣ ಕರ್ನಾಟಕ ಸೇರಿದಂತೆ ರಾಜ್ಯದ ಅನೇಕ ಭಾಗಗಳಲ್ಲಿ ಸರಕಾರಿ ದಾಖಲೆಗಳಲ್ಲಿ ಇಂದಿಗೂ ಶಾಲೆಗಳು ಮತ್ತು ಅಂಗನವಾಡಿಗಳು ‘ಹರಿಜನ ವಾಡಾ’, ’ಹರಿಜನ ಕೇರಿ’ ಎಂಬ ಹೆಸರಿನಿಂದಲೇ ಉಸಿರಾಡುತ್ತಿವೆ. ಭಾಷೆ ಎಂಬ ರಾಜಕೀಯ ಅಸ್ತ್ರ ಮತ್ತು ಹಿಂಸೆ ಭಾಷೆಗೂ ಶೋಷಣೆಗೂ ಇರುವ ನಂಟಿನ ಬಗ್ಗೆ ಆಫ್ರಿಕನ್-ಅಮೆರಿಕನ್ ಚಿಂತಕ ಜೇಮ್ಸ್ ಬಾಲ್ಡ್ವಿನ್ ಹೇಳುತ್ತಾರೆ, ಭಾಷೆ ಕೇವಲ ಸಂವಹನದ ಮಾಧ್ಯಮವಲ್ಲ; ಅದೊಂದು ರಾಜಕೀಯ ಅಸ್ತ್ರ ಹಾಗೂ ಅಧಿಕಾರದ ದ್ಯೋತಕ. ಅಂದರೆ, ಆಳುವ ವರ್ಗವು ತಾನು ಸೃಷ್ಟಿಸಿದ ಭಾಷೆಯ ಮೂಲಕವೇ ಶೋಷಿತರನ್ನು ನಿಯಂತ್ರಿಸುತ್ತದೆ. ನೊಬೆಲ್ ಪುರಸ್ಕೃತೆ ಟೋನಿ ಮಾರಿಸನ್ ಇದೇ ಆಶಯವನ್ನು ಇನ್ನಷ್ಟು ಕಟುವಾಗಿ, ಶೋಷಕ ಭಾಷೆ ಹಿಂಸೆಯನ್ನು ಪ್ರತಿನಿಧಿಸುವುದು ಮಾತ್ರವಲ್ಲ; ಆ ಭಾಷೆಯೇ ಒಂದು ಹಿಂಸೆ ಎಂದು ವಿಶ್ಲೇಷಿಸುತ್ತಾರೆ. ಬ್ರಿಟಿಷ್ ಲೇಖಕ ಜಾರ್ಜ್ ಆರ್ವೆಲ್ ತನ್ನ ‘1984’ ಕಾದಂಬರಿಯಲ್ಲಿ ‘ನ್ಯೂಸ್ಪೀಕ್’ ಎಂಬ ಪರಿಕಲ್ಪನೆಯನ್ನು ಕಟ್ಟಿಕೊಡುತ್ತಾನೆ. ವ್ಯವಸ್ಥೆಯು ಪದಗಳ ಅರ್ಥವನ್ನು ಬದಲಾಯಿಸುವ ಮೂಲಕ ಮನುಷ್ಯನ ಚಿಂತನೆಗಳನ್ನು ಹೇಗೆ ತನ್ನ ಗುಲಾಮಗಿರಿಯಲ್ಲಿಯೇ ಇಟ್ಟುಕೊಳ್ಳುತ್ತದೆ ಎಂಬುದನ್ನು ಆತ ವಿವರಿಸುತ್ತಾನೆ. ನಮ್ಮೂರಿನ ಶಾಲಾ ನಾಮಫಲಕಗಳಲ್ಲಿ ರಾರಾಜಿಸುತ್ತಿರುವ ಜಾತಿವಾಚಕ ಪದಗಳು ಮಾಡುವುದು ಇದನ್ನೇ. ಆ ಪದಗಳು ಶೋಷಿತ ಸಮುದಾಯದ ಮಕ್ಕಳನ್ನು ಕೀಳರಿಮೆಯ ಜೈಲಿನಲ್ಲಿ ಅರಿವಿಗೆ ಬಾರದಂತೆ ಬಂಧಿಸಿಡುತ್ತವೆ. ‘ಹರಿಜನ’ ಮತ್ತು ‘ವಾಡಾ’: ಕರುಣೆಯ ಸೋಗಿನಲ್ಲಿರುವ ಕ್ರೌರ್ಯ ಮಹಾತ್ಮಾ ಗಾಂಧಿಯವರು ಅಸ್ಪಶ್ಯರನ್ನು ಮುಖ್ಯವಾಹಿನಿಗೆ ತರುವ ಸದುದ್ದೇಶದಿಂದ ‘ಹರಿಜನ’ (ದೇವರ ಮಕ್ಕಳು) ಎಂಬ ಪದವನ್ನು ಹುಟ್ಟುಹಾಕಿರಬಹುದು. ಆದರೆ, ಡಾ. ಬಿ.ಆರ್. ಅಂಬೇಡ್ಕರ್ ಅವರು ಈ ಪದವನ್ನು ಕಟುವಾಗಿ ತಿರಸ್ಕರಿಸಿದರು. ನಮಗೆ ಕರುಣೆ ಬೇಡ, ಹಕ್ಕುಗಳು ಬೇಕು. ‘ದೇವರ ಮಕ್ಕಳು’ ಎಂಬ ಹಣೆಪಟ್ಟಿ ನಮ್ಮ ಮೇಲಿನ ದೌರ್ಜನ್ಯವನ್ನು ಮರೆಮಾಚುವ ಕಾವ್ಯಾತ್ಮಕ ಸೋಗು ಎಂದು ಬಾಬಾಸಾಹೇಬರು ವಾದಿಸಿದ್ದರು. ಇಂದು ಸಂವಿಧಾನಾತ್ಮಕವಾಗಿಯೂ ‘ಹರಿಜನ’ ಪದದ ಬಳಕೆ ನಿಷೇಧಿತವಾಗಿದೆ. ಆದರೂ ಸರಕಾರಿ ಕಡತಗಳಲ್ಲಿ ಅದು ಜೀವಂತವಾಗಿರುವುದು ಆಡಳಿತ ಯಂತ್ರದ ಜಡತ್ವವನ್ನು ತೋರಿಸುತ್ತದೆ. ಇನ್ನು ‘ವಾಡಾ’ ಅಥವಾ ‘ಕೇರಿ’ ಎಂಬುದು ಕೇವಲ ಭೌಗೋಳಿಕ ಪದವಲ್ಲ; ಅದೊಂದು ಊರ ಹೊರಗಿನ, ಅವಕಾಶ ವಂಚಿತ, ಬಹಿಷ್ಕೃತ ಜಗತ್ತಿನ ಸಂಕೇತ. ಊರು ಮತ್ತು ವಾಡಾದ ನಡುವೆ ಇರುವ ಅದೃಶ್ಯ ರೇಖೆ ಜಾತಿವ್ಯವಸ್ಥೆಯ ಬೇರುಗಳನ್ನು ಗಟ್ಟಿಗೊಳಿಸುತ್ತದೆ. ದೇವನೂರ ಮಹಾದೇವರ ಸಾಹಿತ್ಯದ ಒಳದನಿಯು ಹೇಳುವಂತೆ, ಇಂತಹ ಶಬ್ದಗಳು ಎದೆಗೆ ಬಿದ್ದಾಗ, ಅವು ಅಕ್ಷರವಾಗಿ ಅರಳುವ ಬದಲು ಕೀಳರಿಮೆಯ ಬೀಜಗಳಾಗಿ ಬೇರುಬಿಡುತ್ತವೆ. ಮಕ್ಕಳ ಮನಸ್ಸಿನ ಮೇಲಾಗುವ ಸಾಂಸ್ಥಿಕ ಹಿಂಸೆ ಒಮ್ಮೆ ಕಲ್ಪಿಸಿಕೊಳ್ಳಿ; ಮುಗ್ಧ ಮಗುವೊಂದು ಮೊದಲ ಬಾರಿಗೆ ಶಾಲೆಗೆ ಕಾಲಿಡುವಾಗ ನಾಮಫಲಕದಲ್ಲಿರುವ ‘ಹರಿಜನ ವಾಡಾ’ ಎಂಬ ಅಕ್ಷರಗಳನ್ನು ಓದುತ್ತದೆ. ಆ ಕ್ಷಣದಲ್ಲೇ ಆ ಮಗುವಿಗೆ ನೀನು ಈ ಊರಿನವನಲ್ಲ, ಊರ ಹೊರಗಿನ ವಾಡಾದವನು. ನಿನ್ನ ಇತಿಹಾಸ ಶೋಷಣೆಯದ್ದು ಎಂಬ ಕ್ರೂರ ಸಂದೇಶ ರವಾನೆಯಾಗುತ್ತದೆ. ಶಿಕ್ಷಣವು ಮಗುವಿಗೆ ಜಗತ್ತನ್ನು ಗೆಲ್ಲುವ ಆತ್ಮವಿಶ್ವಾಸವನ್ನು ತುಂಬಬೇಕು. ಬದಲಾಗಿ, ಶಾಲೆಯ ಹೆಸರೇ ಅವರ ಜಾತಿಯನ್ನು ಪ್ರತಿದಿನ ನೆನಪಿಸುತ್ತಿದ್ದರೆ, ಅದು ಶಿಕ್ಷಣ ವ್ಯವಸ್ಥೆ ಎಸಗುವ ‘ಸಾಂಸ್ಥಿಕ ಹಿಂಸೆ’ ಆಗುತ್ತದೆ. ಸ್ವಾಭಿಮಾನದ ಮರುನಾಮಕರಣ: ಕೇವಲ ಹೆಸರಲ್ಲ, ಅದೊಂದು ಅಸ್ಮಿತೆ ಹಾಗಾದರೆ ಪರಿಹಾರವೇನು? ಈ ಶೋಷಣೆಯ ಸಂಕೇತಗಳನ್ನು ಕಿತ್ತೊಗೆದು, ಆ ಜಾಗದಲ್ಲಿ ಸ್ವಾಭಿಮಾನದ, ಶೈಕ್ಷಣಿಕ ಕ್ರಾಂತಿಯ ಸಂಕೇತಗಳನ್ನು ಸ್ಥಾಪಿಸಬೇಕು. ಇಂತಹ ಶಾಲೆಗಳನ್ನು ಮತ್ತು ಬಡಾವಣೆಗಳನ್ನು ತಕ್ಷಣವೇ ‘ಜೈ ಭೀಮ್ ನಗರ’, ‘ಬಾಬಾಸಾಹೇಬ್ ನಗರ’ ಅಥವಾ ‘ಬಾಬೂಜಿ ನಗರ’ ಎಂದು ಮರುನಾಮಕರಣ ಮಾಡಬೇಕು. ‘ಜೈ ಭೀಮ್’ ಎಂದರೆ ಕೇವಲ ಘೋಷಣೆಯಲ್ಲ; ಅದೊಂದು ಸಮಾನತೆಯ ಉಸಿರು. ಬುದ್ಧ, ಬಸವ, ಅಂಬೇಡ್ಕರ್ ಅವರ ವೈಚಾರಿಕತೆಯ ಪ್ರತೀಕ. ಶಾಲೆಯೊಂದರ ಹೆಸರು ‘ಡಾ. ಬಿ.ಆರ್. ಅಂಬೇಡ್ಕರ್ ನಗರ ಸರಕಾರಿ ಶಾಲೆ’ ಎಂದಾದಾಗ, ಆ ಶಾಲೆಗೆ ಹೋಗುವ ಪ್ರತಿಯೊಂದು ಮಗುವಿನ ಎದೆಯಲ್ಲೂ ನಾನು ಈ ದೇಶದ ಸಂವಿಧಾನ ಶಿಲ್ಪಿಯ ವಾರಸುದಾರ ಎಂಬ ಹೆಮ್ಮೆ ಮೊಳಕೆಯೊಡೆಯುತ್ತದೆ. ಇದು ಕೇವಲ ಕಡತಗಳಲ್ಲಿ ನಡೆಯುವ ತಿದ್ದುಪಡಿಯಲ್ಲ, ಬದಲಾಗಿ ಶತಮಾನಗಳಿಂದ ತುಳಿತಕ್ಕೊಳಗಾದ ಸಮುದಾಯಗಳಿಗೆ ನಾವು ಒದಗಿಸುವ ಸಾಂಕೇತಿಕ ಹಾಗೂ ‘ಚಾರಿತ್ರಿಕ ನ್ಯಾಯ’ವಾಗಿದೆ. ಇದು ಕೇವಲ ಸೇಡಂ ತಾಲೂಕಿನ ಸಮಸ್ಯೆಯಲ್ಲ. ನಮ್ಮ ಶಿಕ್ಷಣ ಇಲಾಖೆ ಮತ್ತು ಕಂದಾಯ ಇಲಾಖೆಗಳು ತಕ್ಷಣವೇ ಎಚ್ಚೆತ್ತುಕೊಂಡು, ರಾಜ್ಯದಾದ್ಯಂತ ಸಮೀಕ್ಷೆ ನಡೆಸಬೇಕು. ಸರಕಾರಿ ದಾಖಲೆಗಳಲ್ಲಿ ಉಳಿದುಕೊಂಡಿರುವ ಇಂತಹ ಎಲ್ಲ ಅವಹೇಳನಕಾರಿ ಹೆಸರುಗಳನ್ನು ಅಳಿಸಿಹಾಕಿ, ಮಹನೀಯರ ಹೆಸರುಗಳನ್ನು ನಾಮಕರಣ ಮಾಡಲು ಅಧಿಕೃತ ಸರಕಾರಿ ಆದೇಶ ಹೊರಡಿಸಬೇಕು. ನಮ್ಮ ಶಾಲೆಗಳು ಊರಿನವರ, ವಾಡಾದವರ ಶಾಲೆಗಳಾಗಬಾರದು; ಅವು ಪ್ರಜ್ಞಾವಂತರ ಶಾಲೆಗಳಾಗಬೇಕು. ಶೋಷಣೆಯ ಕತ್ತಲಿನಿಂದ ಸ್ವಾಭಿಮಾನದ ಬೆಳಕಿನೆಡೆಗೆ ನಡೆಯುವ ಈ ಪ್ರಕ್ರಿಯೆ ಕೇವಲ ನಾಮಫಲಕಗಳ ಬದಲಾವಣೆಯಾಗದೆ, ನಮ್ಮೆಲ್ಲರ ಮನಸ್ಥಿತಿಯ ಬದಲಾವಣೆಯೂ ಆಗಬೇಕಿದೆ.
ಮತದಾನದ ಅವಧಿಯನ್ನು ರಾತ್ರಿ 8 ಗಂಟೆಯವರೆಗೆ ವಿಸ್ತರಿಸಿ: ಚುನಾವಣಾ ಆಯೋಗಕ್ಕೆ ನಟ ವಿಜಯ್ ಮನವಿ
ಚೆನ್ನೈ: ಸಾರಿಗೆ ವ್ಯವಸ್ಥೆ ಸಂಪೂರ್ಣವಾಗಿ ವ್ಯತ್ಯಯವಾಗಿರುವುದರಿಂದ ಸಾವಿರಾರು ಮಂದಿ ಮಾರ್ಗಮಧ್ಯದಲ್ಲಿ ಸಿಲುಕಿಕೊಂಡಿದ್ದು, ಮತದಾನದ ಅವಧಿಯನ್ನು 8 ಗಂಟೆಯವರೆಗೂ ವಿಸ್ತರಿಸಬೇಕು ಎಂದು ಗುರುವಾರ ತಮಿಳಗ ವೆಟ್ರಿ ಕಳಗಂ ಪಕ್ಷದ ಮುಖ್ಯಸ್ಥ ವಿಜಯ್ ಚುನಾವಣಾ ಆಯೋಗಕ್ಕೆ ಮನವಿ ಮಾಡಿದ್ದಾರೆ. ತಮಿಳುನಾಡು ಮುಖ್ಯ ಚುನಾವಣಾಧಿಕಾರಿ ಅರ್ಚನಾ ಪಟ್ನಾಯಕ್ ಗೆ ಪತ್ರ ಬರೆದಿರುವ ವಿಜಯ್, ಜನರು ತಮ್ಮ ನಿಯೋಜಿತ ಮತಗಟ್ವೆಗಳನ್ನು ತಲುಪಲು ಯಾವುದೇ ಬಸ್ ಗಳಿಲ್ಲದೆ ಇರುವುದರಿಂದ ಅಥವಾ ಪರ್ಯಾಯ ಸಾರ್ವಜನಿಕ ಸಾರಿಗೆ ಲಭ್ಯವಿಲ್ಲದೆ ಇರುವುದರಿಂದ ಸಾವಿರಾರು ಮಂದಿ ಮತದಾರರು ಚೆನ್ನೈ ಟರ್ಮಿನಲ್ ಗಳಲ್ಲಿ ಹಾಗೂ ಇನ್ನಿತರ ಮೆಟ್ರೊ ನಗರಗಳಲ್ಲಿ ಸಿಲುಕಿಕೊಂಡಿದ್ದಾರೆ ಎಂದು ಗಮನ ಸೆಳೆದಿದ್ದಾರೆ.
Gold Silver Price Update: ಚಿನ್ನಾಭರಣಪ್ರಿಯರಿಗೆ ಇಲ್ಲೊಂದು ಶುಭ ಸುದ್ದಿ ಸಿಕ್ಕಿದೆ. ಬಂಗಾರ ಹಾಗೂ ಬೆಳ್ಳಿ ದರದಲ್ಲಿ ನಿರಂತರವಾಗಿ ಇಳಿಕೆ ಆಗಿದೆ. ಕಳೆದ ನಾಲ್ಕೈದು ದಿನಗಳಿಂದ ಈ ಎರಡು ಲೋಹಗಳು ಬೆಲೆಗಳು ಇಳಿಮುಖವಾಗಿದ್ದು, ಆಭರಣ ಖರೀದಿಸುವವರಿಗೆ ಇದೊಂದು ಸೂಕ್ತ ಸಮಯ ಎನ್ನಬಹುದು. ವಾರಾಂತ್ಯದ ಹೊತ್ತಿಗೆ ಇನ್ನಷ್ಟು ಇಳಿಕೆಯ ನಿರೀಕ್ಷೆ ಇದೆ. ಇಂದು ಗುರುವಾರ (ಏಪ್ರಿಲ್ 23) ಕರ್ನಾಟಕ
ಪಶ್ಚಿಮ ಬಳಗಾಳ ವಿಧಾನಸಭೆ ಚುನಾವಣೆ 2026: ಟಿಎಂಸಿ-ಬಿಜೆಪಿ ನಡುವೆ ನೇರ ಪೈಪೋಟಿ
West Bengal Assembly Election 2026: ಇಡೀ ದೇಶದ ಗಮನ ಸೆಳೆದಿರುವ ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯ ಮೊದಲ ಹಂತದ ಮತದಾನ ಇಂದು (ಏಪ್ರಿಲ್ 23, ಗುರುವಾರ) ಆರಂಭಗೊಂಡಿದೆ. 294 ಕ್ಷೇತ್ರಗಳ ಪೈಕಿ ಇಂದು ಅರ್ಧಕ್ಕಿಂತ ಹೆಚ್ಚು ಅಂದರೆ 152 ಸ್ಥಾನಗಳಿಗೆ ಮೊದಲ ಹಂತದ ಮತದಾನ ಆರಂಭವಾಗಿದೆ. ಹಾಗಾದ್ರೆ, ಯಾವ್ಯಾವ ಪಕ್ಷಗಳ ನಡುವೆ ನೇರಪೈಪೋಟಿ ಇದೆ ಎನ್ನುವ
SSLC ಫಲಿತಾಂಶ 2025: ಶೇ. 62.34ರಷ್ಟು ವಿದ್ಯಾರ್ಥಿಗಳು ಪಾಸ್, ದಕ್ಷಿಣ ಕನ್ನಡವೇ ನಂಬರ್ 1
ರಾಜ್ಯಾದ್ಯಂತ ಪೋಷಕರು ಹಾಗೂ ವಿದ್ಯಾರ್ಥಿಗಳ ಬಹುನಿರೀಕ್ಷಿತ 2026ರ ಎಸ್ಎಸ್ಎಲ್ಸಿ (SSLC) ಫಲಿತಾಂಶಕ್ಕೆ ಕ್ಷಣಗಣನೆ ಆರಂಭವಾಗಿದೆ. ಇನ್ನೇನು ಶಿಕ್ಷಣ ಸಚಿವರಾದ ಮಧು ಬಂಗಾರಪ್ಪನವರು ಸುದ್ದಿಗೋಷ್ಟಿ ನಡೆಸಿ ಫಲಿತಾಂಶವನ್ನು ಬಿಡುಗಡೆ ಮಾಡಲಿದ್ದಾರೆ. ಈ ಸಂದರ್ಭದಲ್ಲಿ ನಾವು ಕಳೆದ ವರ್ಷ ಅಂದರೆ 2025ರ ಎಸ್ಎಸ್ಎಲ್ಸಿ ಫಲಿತಾಂಶದ ಕಡೆಗೆ ಒಮ್ಮೆ ಗಮನ ಹರಿಸೋಣ. 2025ರ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆಯ ಫಲಿತಾಂಶದಲ್ಲಿ ಒಟ್ಟಾರೆ ಶೇ.
ಬೆಳಗಾವಿಯಲ್ಲಿ ನಿರ್ಮಾಣವಾಗಲಿದೆ ಭವ್ಯ ತಿರುಪತಿ ತಿಮ್ಮಪ್ಪನ ದೇಗುಲ: 100 ಕೋಟಿ ವೆಚ್ಚ, 7 ಎಕರೆ ಜಾಗ ಮಂಜೂರು
ಬೆಳಗಾವಿ: ಉತ್ತರ ಕರ್ನಾಟಕದ ಭಕ್ತರ ಪಾಲಿಗೆ ತಿರುಮಲ ತಿರುಪತಿ ದೇವಸ್ಥಾನ (TTD) ಮಂಡಳಿಯು ಸಿಹಿ ಸುದ್ದಿಯೊಂದನ್ನು ನೀಡಿದೆ. ತಿರುಪತಿಯ ಭವ್ಯ ವೆಂಕಟೇಶ್ವರ ದೇವಾಲಯದ ಮಾದರಿಯಲ್ಲೇ ಬೆಳಗಾವಿಯಲ್ಲಿಯೂ ಸುಮಾರು 100 ಕೋಟಿ ರೂಪಾಯಿ ವೆಚ್ಚದಲ್ಲಿ ಶ್ರೀನಿವಾಸನ ಸನ್ನಿಧಿ ತಲೆಯೆತ್ತಲಿದೆ. ಬೆಳಗಾವಿ ತಾಲೂಕಿನ ಕೋಳಿಕೊಪ್ಪ ಹೊರವಲಯದ ಸುಮಾರು 7 ಎಕರೆ ಪ್ರದೇಶದಲ್ಲಿ ಈ ಯೋಜನೆ ಸಾಕಾರಗೊಳ್ಳಲಿದ್ದು, ಇದಕ್ಕಾಗಿ ಬೆಳಗಾವಿ ರೆಡ್ಡಿ ಸಂಘವು ಭೂಮಿಯನ್ನು ಖರೀದಿಸಿ ಈಗಾಗಲೇ ಟಿಟಿಡಿ ಮಂಡಳಿಗೆ ಅಧಿಕೃತವಾಗಿ ಹಸ್ತಾಂತರಿಸಿದೆ. ಈ ಮೂಲಕ ಕುಂದಾನಗರಿಯಲ್ಲಿ ತಿಮ್ಮಪ್ಪನ ದರ್ಶನಕ್ಕೆ ಮೊದಲ […] The post ಬೆಳಗಾವಿಯಲ್ಲಿ ನಿರ್ಮಾಣವಾಗಲಿದೆ ಭವ್ಯ ತಿರುಪತಿ ತಿಮ್ಮಪ್ಪನ ದೇಗುಲ: 100 ಕೋಟಿ ವೆಚ್ಚ, 7 ಎಕರೆ ಜಾಗ ಮಂಜೂರು first appeared on Vistara News .
Thokkottu | ಆರಿಫ್ ಕೊಲೆ ಪ್ರಕರಣ: ಮತ್ತೋರ್ವ ಆರೋಪಿಯ ಸೆರೆ; ಬಂಧಿತರ ಸಂಖ್ಯೆ 11ಕ್ಕೆ ಏರಿಕೆ
ಉಳ್ಳಾಲ, ತೊಕ್ಕೊಟ್ಟು ಫ್ಲೈ ಓವರನ್ ನಲ್ಲಿ ಇತ್ತೀಚೆಗೆ ನಡೆದ ರೌಡಿ ಶೀಟರ್ ಆರಿಫ್ ಹುಸೇನ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಮತ್ತೋರ್ವ ಪ್ರಮುಖ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಮುಹಮ್ಮದ್ ಸುಹೈಲ್ ಅಲಿಯಾಸ್ ಚಿಯಾ(24) ಬಂಧಿತ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ. ಇದರೊಂದಿಗೆ ಪ್ರಕರಣಕ್ಕೆ ಸಂಬಂಧಿಸಿ ಬಂಧಿತರ ಸಂಖ್ಯೆ 11ಕ್ಕೆ ಏರಿದೆ. ಈತನು ಆರಿಫ್ ಮೇಲೆ ನಡೆದ ಮೊದಲ ದಾಳಿಗೆ ಮುಹಮ್ಮದ್ ಸುಹೈಲ್ ಸಹಕಾರ ನೀಡಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಪೊಲೀಸರು ವಿವರವಾದ ತನಿಖೆಯ ನಂತರ ಸುಹೈಲ್ ನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಆರಿಫ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ 10 ಜನರ ಬಂಧನ ಆಗಿತ್ತು. ಇದೀಗ ಮುಹಮ್ಮದ್ ಸುಹೈಲ್ ಬಂಧನದೊಂದಿಗೆ ಈ ಸಂಖ್ಯೆ 11ಕ್ಕೆ ಏರಿಕೆಯಾಗಿದೆ. ಆರಿಫ್ ಕೊಲೆ ಪ್ರಕರಣದಲ್ಲಿ 15 ಮಂದಿಯ ಪಾತ್ರ ಇರುವುದು ಪೊಲೀಸ್ ತನಿಖೆ ವೇಳೆ ಬೆಳಕಿಗೆ ಬಂದಿತ್ತು. ಕಳೆದ ಮಾರ್ಚ್ 27ರ ಮುಂಜಾನೆ ತೊಕ್ಕೊಟ್ಟು ಫ್ಲೈಓವರ್ ಮೇಲೆ ಬೈಕಿನಲ್ಲಿ ಸಂಚರಿಸುತ್ತಿದ್ದ ಆರಿಫ್ ನನ್ನು ದುಷ್ಕರ್ಮಿಗಳು ಕಾರಿನಲ್ಲಿ ಬಂದು ಅಡ್ಡಗಟ್ಟಿ, ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದರು.
ಬ್ರೇಕ್ ವಿಫಲ:ಉತ್ತರ ಪ್ರದೇಶದಲ್ಲಿ ಭೀಕರ ಸರಣಿ ಅಪಘಾತ: 11 ಮಂದಿ ಸಜೀವ ದಹನ
ಮಿರ್ಜಾಪುರ್: ಬ್ರೇಕ್ ವಿಫಲಗೊಂಡ ಪರಿಣಾಮ ಹೆದ್ದಾರಿಯಲ್ಲಿ ಯದ್ವಾತದ್ವಾ ಟ್ರಕ್ ಚಲಾಯಿಸಿದ್ದರಿಂದ ಭೀಕರಸರಣಿ ಅಪಘಾತವೊಂದು ಉತ್ತರ ಪ್ರದೇಶದಲ್ಲಿ ಬುಧವಾರ ರಾತ್ರಿ ಸಂಭವಿಸಿದೆ. ಇದರ ಪರಿಣಾಮ 11 ಮಂದಿ ಮೃತಪಟ್ಟು ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.ಮಿರ್ಜಾಪುರ್–ರೆವಾ ರಾಷ್ಟ್ರೀಯ ಹೆದ್ದಾರಿ 135ರ ಧರ್ಮಾಗಂಜ್ನ ಬೈಸೋದಾ ಹಿಲ್ ಸಮೀಪ ಕಳೆದರಾತ್ರಿ 9 ಗಂಟೆ ವೇಳೆಗೆ ಸಂಭವಿಸಿದೆ.ಮಿರ್ಜಾಪುರಕ್ಕೆ ಚಲಿಸುತ್ತಿದ್ದ ಟ್ರಕ್, ಬ್ರೇಕ್ ವಿಫಲವಾಗಿ ಮುಂದೆ ಚಲಿಸುತ್ತಿದ್ದ ಆಲ್ಟೋ ಹಾಗೂ ಬೊಲೆರೊ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಟ್ರಕ್, ಆ ಎರಡೂ […] The post ಬ್ರೇಕ್ ವಿಫಲ:ಉತ್ತರ ಪ್ರದೇಶದಲ್ಲಿ ಭೀಕರ ಸರಣಿ ಅಪಘಾತ: 11 ಮಂದಿ ಸಜೀವ ದಹನ first appeared on Vistara News .
West Bengal ಮೊದಲ ಹಂತದ ಮತದಾನ| ಗಂಭೀರ ಕ್ರಿಮಿನಲ್ ಪ್ರಕರಣ ಎದುರಿಸುತ್ತಿರುವ 294 ಅಭ್ಯರ್ಥಿಗಳು
ಮಹಿಳೆಯರ ವಿರುದ್ಧದ ಪ್ರಕರಣಗಳು 98; ಮಹಿಳಾ ಅಭ್ಯರ್ಥಿಗಳು ಕೇವಲ 11%
ಕ್ಷೇತ್ರ ಪುನರ್ವಿಂಗಡಣೆ ಮತ್ತು ಮಹಿಳಾ ಮೀಸಲಾತಿ
ಸಾಮಾನ್ಯ ಸಂದರ್ಭಗಳಲ್ಲಿ ಕೇಂದ್ರ ಸರಕಾರ ತನ್ನ ಸೋಲನ್ನು ಮತ್ತು ಒಟ್ಟಾರೆ ವೈಫಲ್ಯವನ್ನು ಒಪ್ಪಿಕೊಂಡು ರಾಜೀನಾಮೆ ನೀಡಬೇಕಾಗಿತ್ತು ಅಥವಾ ಒಬ್ಬ ಸಚಿವರ ತಲೆದಂಡವನ್ನಾದರೂ ಪಡೆಯಬೇಕಾಗಿತ್ತು. ಆದರೆ ರಾಜಕಾರಣ ಎಷ್ಟು ಅವನತಿಗೆ ಮತ್ತು ನೀಚತನಕ್ಕೆ ಇಳಿದಿದೆಯೆಂದರೆ ಗೌರವ, ಘನತೆ, ಮರ್ಯಾದೆ ಇವೆಲ್ಲ ಈಗ ಬಳಕೆಯಿಂದಲೇ ಮರೆಯಾಗಿವೆ. ರಾಜಕಾರಣದಲ್ಲಿ ಸ್ಪರ್ಧೆಯಿರಬೇಕಾದ್ದು ಸಹಜ. ಆದರೆ ಅದೀಗ ಬದಲಾಗಿ ವೈರವನ್ನು ಅಭ್ಯಾಸ ಮಾಡಿಕೊಂಡಿದೆ. ಅಮೆರಿಕದ ಅಧ್ಯಕ್ಷರಾಗಿದ್ದ ಅಬ್ರಹಾಂ ಲಿಂಕನ್ ಹೇಳಿದರೆನ್ನಲಾದ ಮತ್ತು ಸಾಕಷ್ಟು ಬಾರಿ ಬಳಕೆಯಾದ ಒಂದು ಉಕ್ತಿ ಹೀಗಿದೆ: ‘‘ನೀವು ಕೆಲವರನ್ನು ಯಾವಾಗಲೂ ಮೂರ್ಖರನ್ನಾಗಿಸಬಹುದು ಮತ್ತು ಎಲ್ಲರನ್ನೂ ಕೆಲವೊಮ್ಮೆ ಮೂರ್ಖರನ್ನಾಗಿಸಬಹುದು, ಆದರೆ ಎಲ್ಲರನ್ನೂ ಯಾವಾಗಲೂ ಮೂರ್ಖರನ್ನಾಗಿಸಲು ಸಾಧ್ಯವಿಲ್ಲ.’’ ಭಾರತದ ಈಗಿನ ಪ್ರಧಾನಿ ನರೇಂದ್ರ ಮೋದಿಯವರು ಇದನ್ನು ಕಳೆದ ಒಂದು ದಶಕಕ್ಕೂ ಮಿಕ್ಕಿದ ತಮ್ಮ ಅಧಿಕಾರಾವಧಿಯಲ್ಲಿ ಸುಳ್ಳು ಮಾಡಿದರು ಮತ್ತು ಲಿಂಕನ್ ಮಾತುಗಳನ್ನು ಬಹುತೇಕ ಅಪ್ರಸ್ತುತಗೊಳಿಸಿದರು. ಇದು ಅರ್ಥವಾಗಬೇಕಾದರೆ ಇತ್ತೀಚೆಗಿನ ಕ್ಷೇತ್ರ ಪುನರ್ವಿಂಗಡಣೆ ಮತ್ತು ಮಹಿಳಾ ಮೀಸಲಾತಿ ಮಸೂದೆಯ ಕೆಲವು ಹಿನ್ನೆಲೆ ಮತ್ತು ಬೆಳವಣಿಗೆಗಳನ್ನು ಪರಿಗಣಿಸಬೇಕು. 19.09.2023ರಂದು ಮಂಡಿಸಿದ ‘ಸಂವಿಧಾನದ (106ನೇ ತಿದ್ದುಪಡಿಯ) ಮಸೂದೆೆ’ಯ ಮೂಲಕ ಈಗಿರುವ ಸಂಸತ್ತು ಮತ್ತು ರಾಜ್ಯಗಳ ಹಾಗೂ ಕೇಂದ್ರಾಡಳಿತ ಪ್ರದೇಶಗಳ ಶಾಸನ ಸಭೆಗಳಲ್ಲಿ (ಕೇಂದ್ರ ಮತ್ತು ರಾಜ್ಯಗಳ ಮೇಲ್ಮನೆಗಳನ್ನು ಹೊರತುಪಡಿಸಿ) ಮಹಿಳಾ ಮೀಸಲಾತಿಯ ಕಾಯ್ದೆಯು ‘ನಾರೀಶಕ್ತಿ ವಂದನಾ ಅಧಿನಿಯಮ’ವೆಂಬ ಹೆಸರಿನಲ್ಲಿ ಅವಿರೋಧವಾಗಿ/ಒಮ್ಮತದಿಂದ ಸ್ವೀಕೃತವಾಯಿತು ಮತ್ತು 20.09.2023ರಂದು ವಿಧ್ಯುಕ್ತವಾಗಿ ಶಾಸನವಾಯಿತು. ಆದರೆ ಈ ಶಾಸನವನ್ನು ಮೋದಿ ಸರಕಾರವು 2024ರ ಚುನಾವಣೆಗೆ ಮೊದಲು ಜಾರಿ ಮಾಡಲೇ ಇಲ್ಲ. ಒಂದು ವೇಳೆ ಜಾರಿ ಮಾಡಿದ್ದರೆ ಕಳೆದ ಲೋಕಸಭಾ ಚುನಾವಣೆಯಲ್ಲಿ 180 ಮಹಿಳಾ ಸಂಸದರಿರುತ್ತಿದ್ದರು. ಸರಕಾರದ ಸುಳ್ಳುನಡೆಯಿಂದಾಗಿ ಹಾಗಾಗಲಿಲ್ಲ. ಈಗ ಲೋಕಸಭೆಯಲ್ಲಿ 74 ಅಂದರೆ ಶೇ. 14 ಮಹಿಳಾ ಸಂಸದರಿದ್ದಾರೆ. ಭಾಜಪ-240ರಲ್ಲಿ 31, ಕಾಂಗ್ರೆಸ್-99ರಲ್ಲಿ 13, ಟಿಎಂಸಿ-29ರಲ್ಲಿ 11, ಎಸ್ಪಿ-37ರಲ್ಲಿ 5, ಡಿಎಂಕೆ-22ರಲ್ಲಿ 3, ಮುಖ್ಯವಾದವು; ಇತರ ಅಂದರೆ ಜೆಡಿಯು-2. ಎಲ್ಜೆಪಿ-2, ಟಿಡಿಪಿ, ಎನ್ಸಿಪಿ-ಶರದ್ ಪವಾರ್, ಆರ್ಜೆಡಿ, ಜೆಎಂಎಂ ತಲಾ 1 ಮಹಿಳಾ ಸಂಸದರನ್ನು ಹೊಂದಿವೆ. ರಾಜ್ಯವೊಂದರ ಪ್ರಾತಿನಿಧ್ಯವನ್ನು ಗಮನಿಸಿದರೆ ಪಶ್ಚಿಮ ಬಂಗಾಳವು 11 ಮಹಿಳಾ ಸಂಸದರನ್ನು ಮತ್ತು 1/3ಕ್ಕಿಂತ ಹೆಚ್ಚು ಪ್ರಾತಿನಿಧ್ಯವನ್ನು ನೀಡಿದ ಹೆಗ್ಗಳಿಕೆಯನ್ನು ಪಡೆದಿದೆ. (ಆದರೂ ಯತ್ರ ನಾರ್ಯಸ್ತು ಪೂಜ್ಯಂತೇ ಮಾತ್ರ ಪುಸ್ತಕದೊಳಗೇ ಉಳಿದಿದೆ!) ಪ್ರಧಾನಿಯವರ ಕೂಗೊಂದು; ನಡೆಯೊಂದು. ವಿಶೇಷವೆಂದರೆ ಪ್ರತಿಪಕ್ಷಗಳೂ ಇದನ್ನು ಕಳೆದ ಮಹಾಚುನಾವಣೆಯಲ್ಲಿ ಮತದಾರರ ವಿಶೇಷವಾಗಿ ಮಹಿಳೆಯರ ಗಮನಕ್ಕೆ ತರಲೇ ಇಲ್ಲ. ಒಂದು ವೇಳೆ ಇದನ್ನೊಂದು ಚುನಾವಣಾ ವಿಷಯವನ್ನಾಗಿಸಿದ್ದರೆ ಆಡಳಿತ ಪಕ್ಷ ಮತ್ತು ಮತದಾರರ ಪ್ರತಿಕ್ರಿಯೆಯು ಹೇಗಿರುತ್ತಿತ್ತೆಂಬ ಬಗ್ಗೆ ಕುತೂಹಲವಿತ್ತು. ದುರದೃಷ್ಟವೆಂದರೆ ಯಾವ ಪಕ್ಷವೂ ಈ ತಿದ್ದುಪಡಿ ಕಾಯ್ದೆಯನ್ನು ತಾತ್ವಿಕವಾಗಿಯೂ ಅನುಸರಿಸಲಿಲ್ಲ. ಅನುಸರಿಸಿದ್ದರೆ ಸಾಂಕೇತಿಕವಾಗಿಯಾದರೂ ತಮ್ಮ ಅಭ್ಯರ್ಥಿಗಳಲ್ಲಿ ಮೂರನೇ ಒಂದು ಮಹಿಳಾ ಅಭ್ಯರ್ಥಿಗಳನ್ನು ಕಣಕ್ಕಿಳಿಸುತ್ತಿದ್ದವು. ಇಂತಹ ವಿರೋಧಾಭಾಸದ ದುರಂತಗಳು ಭಾರತೀಯ ಪ್ರಜಾಪ್ರಭುತ್ವದ ಸಹಜ ಲಕ್ಷಣಗಳು. ಈಚೆಗೆ ಕೇರಳ, ತಮಿಳುನಾಡು, ಪಶ್ಚಿಮ ಬಂಗಾಳ, ಅಸ್ಸಾಂ ಸೇರಿದಂತೆ ಹಲವು ರಾಜ್ಯಗಳ ಚುನಾವಣೆ ಘೋಷಣೆೆಯಾಯಿತು. ಆಗಲೂ ಈ ಪ್ರಶ್ನೆ ಉದ್ಭವಿಸಲಿಲ್ಲ. ಆದರೆ ನಮ್ಮ ಪ್ರಧಾನಿ ದಾರಿತಪ್ಪಿಸುವ ಮತ್ತು ವಿಭಜನ ರಾಜಕಾರಣದಲ್ಲಿ ನಿಪುಣ. ಪ್ರತಿಪಕ್ಷಗಳನ್ನು ಟೀಕಿಸುವುದು ಅವರ ಕೈಲಾಸ ಕಾಯಕ, ಪ್ರತಿಪಕ್ಷಗಳ ರಾಜಕಾರಣಿಗಳನ್ನು ಸಾಧ್ಯವಾದರೆ ಖರೀದಿಸುವುದು, ಇಲ್ಲವೇ ತಮ್ಮ ನಿಯಂತ್ರಣದಲ್ಲಿರುವ ಈ.ಡಿ., ಸಿಬಿಐ, ಐಟಿ ಮುಂತಾದ ಕೇಂದ್ರಾಡಳಿತ ಸಂಸ್ಥೆಗಳ ಮೂಲಕ ತೊಂದರೆ ನೀಡಿ ಅವರನ್ನು ಬಗ್ಗಿಸಿ, ಬಾಗಿಸಿ, ತಮ್ಮವರನ್ನಾಗಿಸುವುದು ಅವರ ಆಡಳಿತದ ಕ್ರಮ. ಬಿಜೆಪಿಯೆಂದರೆ ಎಂತಹ ಕೊಚ್ಚೆಕೊಳೆಯನ್ನೂ ತೊಳೆಯುವ ಗಂಗೆಯಾಗಿಸಿದ್ದು ಅವರ ರಾಜಕೀಯ ಶ್ರಮ. ಬಹಳಷ್ಟು ಪ್ರತಿಪಕ್ಷ ರಾಜಕಾರಣಿಗಳು ಯಾವುದಾದರೊಂದು ಆರೋಪಕ್ಕೆ ಸಿಕ್ಕಾಗ ಗುದ್ದಾಡುವುದಕ್ಕಿಂತ ಶರಣಾಗುವುದು ಲೇಸೆಂದು ಅವರ ಜೊತೆಗೂಡುವುದು ಕಳೆದ ಒಂದು ದಶಕದ ದೃಶ್ಯಗಳು, (ಮಾಜಿ ಪ್ರಧಾನಿ ದೇವೇಗೌಡರೂ ಇದಕ್ಕೆ ಬಲಿಯಾಗಿದ್ದಾರೆ!) ಆದರೂ ಪ್ರಮುಖ ಎದುರಾಳಿಗಳಾದ ಕಾಂಗ್ರೆಸ್, ಟಿಎಂಸಿ, ಆಪ್, ಡಿಎಂಕೆ, ಎಡಪಕ್ಷಗಳನ್ನು ಹಣಿಯುವಲ್ಲಿ ಮೋದಿ ನಿರೀಕ್ಷಿತ ಯಶಸ್ಸನ್ನು ಪಡೆಯಲಿಲ್ಲ. ಕಾಂಗ್ರೆಸ್ ಎಂದರೆ ಹಾವು ಮೆಟ್ಟಿದಂತೆ ವರ್ತಿಸುವುದು ಅವರ ಚಾತುರ್ಯ. ಆಯಾಯ ರಾಜ್ಯಗಳ ಚುನಾವಣಾ ಪ್ರಚಾರದಲ್ಲಿ ಇನ್ನೊಮ್ಮೆ ಹುಟ್ಟಿದರೆ ಇಲ್ಲೇ ಹುಟ್ಟಬೇಕು ಎನ್ನುವುದು ಅಥವಾ ಆಯಾಯ ಆಡಳಿತದ ಕುರಿತು ಕುತ್ಸಿತ ಸಂಶಯಗಳನ್ನು ಹುಟ್ಟುಹಾಕುವುದು, ವಿನಾಕಾರಣ ಅಳುವುದು ಮತ್ತು ಆ ಮೂಲಕ ಅನುಕಂಪದ ಅಲೆಗಳ ಮೇಲೆ ತೇಲಾಡುವುದು ಅವರ ತಂತ್ರಗಾರಿಕೆ, ಶೈಲಿ. ಈ ರೀತಿಯಲ್ಲಿ ಮಾತನಾಡುವವರನ್ನು ನಂಬುವುದು ಈ ದೇಶದ ಬಹುಸಂಖ್ಯಾತರ ಹುಟ್ಟುಗುಣ. ರಾಜಕಾರಣದಲ್ಲಿ ಯಾರು ಯಾರನ್ನು ಯಾಕೆ ನಂಬುತ್ತಾರೆಂಬ ಬಗ್ಗೆ ಕಾರಣ ಹುಡುಕಬಾರದು. ಅಂತೂ ಲಿಂಕನ್ ಸೋತರು. ಇದ್ದಕ್ಕಿದ್ದಂತೆಯೇ ಜ್ಞಾನೋದಯವಾದಂತೆ ಮೋದಿ ಸರಕಾರವು ಒಂದು ವಿಶೇಷ ಅಧಿವೇಶನವನ್ನು ಕರೆದು 16/4/2026ರಂದು ಸಂವಿಧಾನ (131ನೇ ತಿದ್ದುಪಡಿ) ಮಸೂದೆಯನ್ನು ಮಂಡಿಸಿತು. ಈ ಮಸೂದೆಯನ್ನು ಮೋದಿ ಸರಕಾರ ಮಹಿಳಾ ಮೀಸಲಾತಿ ಮಸೂದೆಯೆಂದು ಬೊಗಳೆ ಬಿಟ್ಟಿತಾದರೂ ಅದು ಇನ್ನೊಂದು ಅಪಾಯಕಾರಿ ವಿಚಾರವನ್ನೊಳಗೊಂಡಿತ್ತು. ಅದರಂತೆ ಸಂಸತ್ತಿನ ಸದಸ್ಯರ ಸಂಖ್ಯೆಯನ್ನು ಈಗಿರುವ 543ರಿಂದ 850ನ್ನು ಮೀರದಂತೆ ಏರಿಸುವುದನ್ನು ಸೇರಿಸಿತ್ತು ಮತ್ತು ಅದರ ಆಧಾರದಲ್ಲಿ 2029ರ ಚುನಾವಣೆಯಲ್ಲಿ ಮಹಿಳಾ ಮೀಸಲಾತಿಯನ್ನು ನೀಡಲು ಉದ್ದೇಶಿಸಿತು. ಇದು ವಿಳಂಬ ತಂತ್ರವೂ ಹೌದು; ಬಿಜೆಪಿಯ ಪ್ರಭಾವವಿರುವ ಉತ್ತರಭಾರತದ ಸ್ಥಾನಗಳನ್ನು ಗಣನೀಯವಾಗಿ ಹೆಚ್ಚಿಸುವ ಕುತಂತ್ರವೂ ಹೌದು. ಕೇಂದ್ರ ಸರಕಾರವು ಈ ಮಸೂದೆಯನ್ನು ಮಹಿಳಾ ಮೀಸಲಾತಿಯ ಸುವರ್ಣ ವರ್ಷವೆಂಬಂತೆ ಪ್ರಚಾರ ಮಾಡಿತು. ಈ ವಂಚನೆ ಪ್ರಜ್ಞಾವಂತ ಮತದಾರರಿಗೆ ಮಾತ್ರ ಗೊತ್ತಾಗುವಂತಿತ್ತು. ಈ ಹಿಂದೆ 2023ರಲ್ಲಿ ಸ್ವೀಕೃತವಾದ ತಿದ್ದುಪಡಿಯನ್ನು ಜಾರಿಗೆ ತರುವುದಕ್ಕೆ ಏನು ಅಡ್ಡಿಯೆಂದು ಕೇಂದ್ರ ಸರಕಾರದ ಬೆಂಬಲಿಗರು ಕೇಳಲು ಅಸಮರ್ಥರಾದರೋ ಪಕ್ಷಪ್ರೀತಿಯೋ ಅಂತೂ ಸುಮ್ಮನಿದ್ದರು. ಮಾಮೂಲಿನಂತೆ ಗೋದಿಮಾಧ್ಯಮಗಳು ಕೇಂದ್ರ ಸರಕಾರದ ಪರವಾಗಿ ತುತ್ತೂರಿ ಊದಿದವು. ಈ ಮಸೂದೆಯ ಚರ್ಚೆಗೆ ಕೇವಲ ಒಂದು ದಿನ ಮಾತ್ರ ನಿಗದಿಪಡಿಸಿ 17/04/2026ರಂದು ಮತದಾನಕ್ಕೆ ಒಡ್ಡಲಾಯಿತು. ನಾರೀ ಸೆರಗಿನ ಹಿಂದೆ ಪುನರ್ವಿಂಗಡಣೆಯ ನೆಪದಲ್ಲಿ ತನ್ನ ಸ್ಥಾನಗಳನ್ನು ವೃದ್ಧಿಸುವುದು ಮೋದಿಪಕ್ಷದ ಹುನ್ನಾರವಾಗಿತ್ತು. ಆದರೆ ಇದರ ದುರುದ್ದೇಶ ಪ್ರತಿಪಕ್ಷಗಳಿಗೆ ಅರಿವಾದ್ದರಿಂದ ಅವು ಬೆಂಬಲವನ್ನು ಕ್ರೋಡೀಕರಿಸಿ ವಿರೋಧಿಸಿದ್ದರಿಂದ ಅದು ಸಾಂವಿಧಾನಿಕ ತಿದ್ದುಪಡಿಗೆ ಬೇಕಾದ 2/3 ಬಹುಮತವನ್ನು ಪಡೆಯಲು ವಿಫಲವಾಗಿ (298-230) ಸೋತಿತು. ಈ ಸಂದರ್ಭದಲ್ಲಿ 543 ಸದಸ್ಯರ ಲೋಕಸಭೆಯಲ್ಲಿ 528 ಮಂದಿ ಹಾಜರಿದ್ದರು. ಒಂದು ವೇಳೆ ಎಲ್ಲರೂ ಹಾಜರಿದ್ದರೂ ಮಸೂದೆಗೆ ಸೋಲಾಗುತ್ತಿತ್ತು. ಸಾಂವಿಧಾನಿಕ ತಿದ್ದುಪಡಿಯೊಂದು ಲೋಕಸಭೆಯಲ್ಲಿ ಸೋಲುವುದೆಂದರೆ ಸರಕಾರಕ್ಕೆ ಸೋಲೆಂದೇ ಅರ್ಥ. ಈ ಸೋಲಿನ ಬಗ್ಗೆ ಮೋದಿ ಸರಕಾರಕ್ಕೆ ಅರಿವಿತ್ತು. ಹಾಗಾದರೆ ಮಸೂದೆಯನ್ನು ಮಂಡಿಸಿದರೇಕೆ? ಕೆಲವು ಸಾಧ್ಯತೆಗಳಿವೆ: ಒಂದು, ಪ್ರತಿಪಕ್ಷಗಳ ಸದಸ್ಯರು ಒಟ್ಟಾಗದೆ ಕೆಲವರು ರಾಜ್ಯ ಚುನಾವಣೆಗಳಲ್ಲಿ ಭಾಗಿಯಾಗಿ, ಇನ್ನು ಕೆಲವರು ಗೈರುಹಾಜರಾಗಿ, ಹಾಜರಿದ್ದವರ ಪೈಕಿ 2/3 ಬಹುಮತ ಸಿಕ್ಕಲೂಬಹುದು: ಎರಡು, ಕೆಲವಾದರೂ ಸದಸ್ಯರಿಗೆ ಈ ಮಸೂದೆಯ ಆಂತರ್ಯದ ಅರಿವಿಲ್ಲದಿರಬಹುದು ಅಥವಾ ಮಸೂದೆಯನ್ನು ವಿರೋಧಿಸಿದರೆ ಅದು ಮಹಿಳಾ ವಿರೋಧಿ ನಿಲುವೆಂಬ ಅಂಜಿಕೆಯಿಂದ ಮಸೂದೆಯನ್ನು ಬೆಂಬಲಿಸಬಹುದು; ಮೂರು, ಒಂದು ವೇಳೆ ಮಸೂದೆಯು ಗೆಲುವನ್ನು ಪಡೆಯಲು ವಿಫಲವಾದರೆ ಅದು ಮಹಿಳಾ ವಿರೋಧಿ ನಿಲುವಿನಿಂದ ಎಂದು ಪ್ರಚಾರ ಮಾಡಿ ದೇಶದ ತುಂಬ ಇರುವ ಹುಂಬ ಮತದಾರರ ಅನುಕಂಪವನ್ನು ಪಡೆದು ಅದನ್ನು ಸದ್ಯದ ವಿಧಾನಸಭಾ ಚುನಾವಣೆಯಲ್ಲಿ ನಗದೀಕರಿಸಬಹುದು. ಮೋದಿ ಸರಕಾರಕ್ಕೆ ಮೊದಲ ಎರಡು ಸಾಧ್ಯತೆಗಳ ಅದೃಷ್ಟವಿರಲಿಲ್ಲ. ಆದ್ದರಿಂದ ಮೋದಿ 18/4/2026ರ ರಾತ್ರಿ 8:30ಕ್ಕೆ ದೇಶವನ್ನುದ್ದೇಶಿಸಿ ಒಂದು ಪ್ರಸಾರ ಭಾಷಣ ಮಾಡಿದರು. ಇದು ನಿಜಕ್ಕೂ ಪ್ರಸಾರ ಭಾಷಣವಾಗದೆ ಪ್ರಚಾರ ಭಾಷಣವಾಗಿತ್ತು. ಈಗಾಗಲೇ ಕೆಲವಾದರೂ ಮಾಧ್ಯಮಗಳಲ್ಲಿ ವರದಿಯಾದಂತೆ ಇಂತಹ ಪ್ರಸಾರ ಭಾಷಣಗಳು ವಿಶೇಷ ಸಂದರ್ಭಗಳಲ್ಲಿ ದೇಶದ ವಿಕಾಸಕ್ಕೆ ಮತ್ತು ಆಕಸ್ಮಿಕ ಆಘಾತಗಳನ್ನೆದುರಿಸಲು ಜನರಿಗೆ ವಿವರಣೆ, ಸಹಾಯ ಮತ್ತು ಭರವಸೆಯನ್ನು ನೀಡಲು ಆಡಳಿತಕ್ಕೆ ಇರುವ ಸೌಲಭ್ಯಗಳು. ಇದನ್ನು ದುರುಪಯೋಗಪಡಿಸಿಕೊಳ್ಳಲು ಪ್ರಧಾನಿಗಾಗಲಿ, ರಾಷ್ಟ್ರಪತಿಗಾಗಲಿ ಅಧಿಕಾರವಿಲ್ಲ. ಹಾಗೆಯೇ ಇದು ಇತರರನ್ನು ದೂಷಿಸಲು ಮತ್ತು ರಾಜಕೀಯ ಸ್ವಾರ್ಥವನ್ನು ಸಾಧಿಸಲು ಇರುವ ಸಂದರ್ಭ-ಅವಕಾಶವಲ್ಲ. ಆದರೆ ಪ್ರಧಾನಿ ಇದನ್ನು ಮಸೂದೆಯ ಕುರಿತು ಮತದಾರರ ದಾರಿ ತಪ್ಪಿಸಲು ಮತ್ತು ಪ್ರತಿಪಕ್ಷಗಳನ್ನು ಮತ್ತು ಮುಖ್ಯವಾಗಿ ಕಾಂಗ್ರೆಸ್ ಪಕ್ಷವನ್ನು ದೂಷಿಸಲು ಬಳಸಿಕೊಂಡರು. (ಪ್ರಧಾನಿ ತನ್ನ ಮನ್ ಕೀ ಬಾತ್ನ್ನೂ ಇದಕ್ಕೇ ಬಳಸಿಕೊಂಡಿದ್ದಾರೆ!) ಪ್ರಜ್ಞಾವಂತರಿಗೆ ಪ್ರಧಾನಿಯ ಈ ಹಾದಿ ಗೊತ್ತಿತ್ತು. ಸ್ವಾತಂತ್ರ್ಯೋತ್ಸವ, ಗಣರಾಜ್ಯೋತ್ಸವ ಸೇರಿದಂತೆ ದೇಶ ಒಟ್ಟಾಗಿರಬೇಕಾದ ವೇದಿಕೆಗಳಲ್ಲೂ ಪ್ರಧಾನಿ ಮಾತ್ರವಲ್ಲ ರಾಷ್ಟ್ರಪತಿಯೂ 2014ರಿಂದ ದೇಶವನ್ನು ಒಡೆಯುವ ಕೆಲಸವನ್ನೇ ಮಾಡುತ್ತ ಬಂದಿದ್ದಾರೆ. ರಾಜ್ಯಗಳ ಚುನಾವಣೆ ನಡೆಯುತ್ತಿರುವಾಗ ಜಾರಿಯಲ್ಲಿರುವ ಮಾದರಿ ನೀತಿ ಸಂಹಿತೆಯ ಸಂದರ್ಭದಲ್ಲಿ ಪ್ರಧಾನಿ ಈ ರೀತಿಯ ಸ್ವಾರ್ಥ ರಾಜಕೀಯ ಭಾಷಣವನ್ನು ಮಾಡುವುದು ಅಪ್ಪಟ ಅಕ್ರಮ. ಈ ಸಂದರ್ಭಕ್ಕೆ ಇನ್ನೂ ಒಂದು ಮುಖವಿದೆ: ಕೇಂದ್ರ ಸರಕಾರದ ಅಂಗ ಸಂಸ್ಥೆಯಾದರೂ ಆಕಾಶವಾಣಿಯು ಕಾಗದದಲ್ಲಾದರೂ ಸ್ವಾಯತ್ತವೆಂಬ ಮುಖವಾಡವನ್ನು ಧರಿಸಿದೆ/ಹೊದ್ದಿದೆ. ಅದು ಇಂತಹ ಭಾಷಣಕ್ಕೆ ಅವಕಾಶ ನೀಡಬಾರದು. ಒಂದು ವೇಳೆ ನೀಡಿದರೂ ಅದನ್ನು ಉತ್ತರಿಸಲು ಪ್ರತಿಪಕ್ಷ ನಾಯಕರಿಗೂ ಅವಕಾಶ ನೀಡಬೇಕು. ಆದರೆ ಈಗಿನ ಆಕಾಶವಾಣಿಯನ್ನು ಗಮನಿಸಿದರೆ ಅದು ತನ್ನತನವನ್ನು ಕಳೆದುಕೊಂಡಿರುವುದು ಮತ್ತು ಸರಕಾರದ ಗುಲಾಮನಾಗಿರುವುದು ಮಾತ್ರವಲ್ಲ ಆಡಳಿತ ಪಕ್ಷದ ಮುಖವಾಣಿಯಾಗಿರುವುದೂ ಸ್ಪಷ್ಟವಾಗಿದೆ. ಪ್ರಧಾನಿ ದೇಶದಲ್ಲಿ ತಾನೊಬ್ಬ ನಾರೀರಕ್ಷಕನ ಪೋಸ್ನಲ್ಲಿ ಮಾತನಾಡಿ ಪ್ರತಿಪಕ್ಷಗಳನ್ನು ಅದರಲ್ಲೂ ಕಾಂಗ್ರೆಸನ್ನು ದೂಷಿಸಿದರು. ಎಷ್ಟು ಬಾರಿ ಕಾಂಗ್ರೆಸ್ನ ಹೆಸರನ್ನು ಹೇಳಿದರೆಂಬುದನ್ನು ಹಲವರು ಲೆಕ್ಕ ಹಾಕಿದರು. ತಮಾಷೆಯೆಂದರೆ ಕಾಂಗ್ರೆಸ್ ಮುಕ್ತ ಭಾರತವನ್ನು ನಿರ್ಮಿಸುವ ಘೋಷಣೆ ಹಾಕಿ ತನ್ನ ಅಧಿಕಾರವನ್ನು ಆರಂಭಿಸಿದ ಪ್ರಧಾನಿ ಮೋದಿ ಈಗ ಕಾಂಗ್ರೆಸನ್ನು ಮಟ್ಟಹಾಕಲು ಏದುಸಿರು ಬಿಡುತ್ತಿದ್ದಾರೆ. ಕಾಂಗ್ರೆಸ್ ತನ್ನಪಾಡಿಗೆ ತಾನು ನಿತ್ರಾಣವಾಗುತ್ತ ಹೋಗುತ್ತಿದ್ದರೂ ಅದಕ್ಕೆ ಜೀವರಸ ನೀಡಿ ಶಕ್ತವಾಗಿಸಿದ ಕೀರ್ತಿ ಮೋದಿಯವರಿಗೇ ಸಲ್ಲುತ್ತದೆ. ಕಂಸನ ಕನಸಲ್ಲಿ ಕೃಷ್ಣ ಬಂದಂತೆ ಮೋದಿಯವರಿಗೆ ರಾಹುಲ್ ಗಾಂಧಿ ಬರುವ ಚಿಹ್ನೆಗಳಿವೆ. ತನ್ಮಧ್ಯೆ ಸಂವಿಧಾನದ 106ನೇ ತಿದ್ದುಪಡಿಯನ್ನು ಜಾರಿಮಾಡಲು ಬೇಕಾದ ಆದೇಶವನ್ನು ಈ ವರೆಗೂ ಪ್ರಕಟಿಸದೆ 3 ವರ್ಷಗಳ ಬಳಿಕ ಮೊನ್ನೆ ಎಪ್ರಿಲ್ 16ರಂದು ಪ್ರಕಟಿಸಿದೆ. ಇದನ್ನು ಮೊದಲೇ ಯಾಕೆ ಮಾಡಲಿಲ್ಲವೆಂಬುದನ್ನು ಪ್ರಧಾನಿ ತನ್ನ ಭಾಷಣದಲ್ಲಿ ದೇಶಕ್ಕೆ ಹೇಳಬೇಕಾಗಿತ್ತು. ತನ್ನ ವೈಫಲ್ಯವನ್ನು ಮುಚ್ಚಿಕೊಳ್ಳಲು ಮತ್ತು ಮಹಿಳಾ ಮೀಸಲಾತಿಯನ್ನು ಎಷ್ಟು ಸಾಧ್ಯವೋ ಅಷ್ಟೂ ವಿಳಂಬಿಸಲು ಮೋದಿ ಸರಕಾರ ಹಾಕಿಕೊಂಡ ಸಂಚು ವಿಫಲವಾದದ್ದು ಮಾತ್ರವಲ್ಲ, ಬಯಲಾಗಿದೆ. ಸಾಮಾನ್ಯ ಸಂದರ್ಭಗಳಲ್ಲಿ ಕೇಂದ್ರ ಸರಕಾರ ತನ್ನ ಸೋಲನ್ನು ಮತ್ತು ಒಟ್ಟಾರೆ ವೈಫಲ್ಯವನ್ನು ಒಪ್ಪಿಕೊಂಡು ರಾಜೀನಾಮೆ ನೀಡಬೇಕಾಗಿತ್ತು ಅಥವಾ ಒಬ್ಬ ಸಚಿವರ ತಲೆದಂಡವನ್ನಾದರೂ ಪಡೆಯಬೇಕಾಗಿತ್ತು. ಆದರೆ ರಾಜಕಾರಣ ಎಷ್ಟು ಅವನತಿಗೆ ಮತ್ತು ನೀಚತನಕ್ಕೆ ಇಳಿದಿದೆಯೆಂದರೆ ಗೌರವ, ಘನತೆ, ಮರ್ಯಾದೆ ಇವೆಲ್ಲ ಈಗ ಬಳಕೆಯಿಂದಲೇ ಮರೆಯಾಗಿವೆ. ರಾಜಕಾರಣದಲ್ಲಿ ಸ್ಪರ್ಧೆಯಿರಬೇಕಾದ್ದು ಸಹಜ. ಆದರೆ ಅದೀಗ ಬದಲಾಗಿ ವೈರವನ್ನು ಅಭ್ಯಾಸ ಮಾಡಿಕೊಂಡಿದೆ. ಈ ದೇಶದ ಮತದಾರರನ್ನು ಮತ್ತು ಒಟ್ಟಿನಲ್ಲಿ ಜನರನ್ನು ಗಮನಿಸಿದರೆ ಕನ್ನಡದ ಕವಿ ನಿಸಾರ್ ಅಹಮದ್ ಬರೆದ ‘ಕುರಿಗಳು ಸಾರ್, ಕುರಿಗಳು’ ಕವಿತೆ ನೆನಪಾಗದಿರದು. ಮೋದಿಯವರು ತನ್ನ ಅವರೋಹಣಗತಿಯಲ್ಲಿದ್ದಾರೆ. ದುರಂತವೆಂದರೆ ಅವರು ಸಮರ್ಥರಾಗಿದ್ದಾಗಲೇ ಕಿರೀಟವನ್ನು ಇನ್ನೊಬ್ಬರ ಹೆಗಲಿಗಿರಿಸಿದ್ದರೆ ತನ್ನ ಪಕ್ಷವನ್ನಾದರೂ ಉಳಿಸಿಕೊಳ್ಳಬಹುದಿತ್ತು. ಆದರೆ ಅವರು ಕೋತಿ ತಾನು ಕೆಟ್ಟದ್ದಲ್ಲದೆ ಕಾಡನ್ನೂ ಕೆಡಿಸಿತು ಎಂಬ ಹಾಗೆ ತನ್ನ ಅಧಿಕಾರವನ್ನು ಮತ್ತು ತನ್ನ ಪಕ್ಷವನ್ನು ತನ್ನೊಂದಿಗೇ ರಾಜಕೀಯದ, ಅಧಿಕಾರದ, ಕಾಲಪ್ರವಾಹದಲ್ಲಿ ಒಯ್ಯುತ್ತಾರೆಂದು ಅನ್ನಿಸುತ್ತದೆ. ಎಲ್ಲ ಸರ್ವಾಧಿಕಾರ/ರಿಗಳೂ ಕೊನೆಯಾಗುವುದು ಹೀಗೆಯೇ. ಪ್ರಜಾಪ್ರಭುತ್ವದ, ಪ್ರಚಾರದ ಹೊದಿಕೆ ಕಾಲದ ಬಿರುಗಾಳಿಯೆದುರು ನಿಲ್ಲುವುದಿಲ್ಲ. ಕ್ಷೇತ್ರ ಪುನರ್ವಿಂಗಡಣೆಯನ್ನು ಮಹಿಳಾ ಮೀಸಲಾತಿಯ ಹೊದಿಕೆೆಯಡಿ ಅಡಗಿಸಿದರೆ ಅದು ತನ್ನನ್ನು ಧರಿಸಿದವನನ್ನು ಬೆತ್ತಲೆ ಮಾಡುತ್ತದೆ ಹಾಗೂ ಮೆಫಿಸ್ಟೋಫಿಲಿಸ್ ಫಾಸ್ಟಸ್ನನ್ನು ಎಳೆದೊಯ್ಯುವ ದೃಶ್ಯವನ್ನು ತೆರೆಯಲ್ಲಿ ಮೂಡಿಸುತ್ತದೆ.
ಕರ್ನಾಟಕ ರಾಜಕೀಯದಲ್ಲಿ ಮೇ 4 ‘ಡೆಡ್ಲೈನ್’: ಸಿದ್ದರಾಮಯ್ಯ ಕುರ್ಚಿ ಸೇಫ್ ಆಗುತ್ತಾ, ಡಿಕೆಶಿ ಕನಸು ನನಸಾಗುತ್ತಾ?
ಕರ್ನಾಟಕ ರಾಜಕೀಯದಲ್ಲಿ ಮೇ 4 ‘ಡೆಡ್ಲೈನ್’ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ. ಒಂದು ನಡೆಯಲ್ಲಿ ನಾಯಕತ್ವ ಬದಲಾವಣೆ ವಿಚಾರವಾಗಿ ಸಾಕಷ್ಟು ಬೆಳವಣಿಗೆಗಳು ನಡೆಯುತ್ತಿವೆ. ಮತ್ತೊಂದು ಕಡೆಯಲ್ಲಿ ಸಂಪುಟ ಪುನಾರಚನೆ ಕುರಿತಾಗಿ ಬೇಡಿಕೆ ತೀವ್ರಗೊಳ್ಳುತ್ತಿವೆ. ಈ ಎಲ್ಲಾ ಬೆಳವಣಿಗೆಯ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರ ಕುರ್ಚಿ ಸೇಫ್ ಆಗುತ್ತಾ? ಅಥವಾ ಡಿಕೆ ಶಿವಕುಮಾರ್ ಅವರ ಆಸೆ ಈಡೇರುತ್ತಾ? ಎಂಬ ಕುತೂಹಲ ತೀವ್ರಗೊಳ್ಳುತ್ತಿದೆ. ಸದ್ಯ ಸೈಲೆಂಟಾಗಿರುವ ಶಾಸಕರು ಸಂಪುಟಕ್ಕೆ ಸೇರ್ಪಡೆ ಅಗಲು ಒತ್ತಡ ಹೇರುವ ನಿಟ್ಟಿನಲ್ಲಿ ತಂತ್ರಗಾರಿಕೆ ನಡೆಸುತ್ತಿದ್ದಾರೆ.
ನಿಮಗಾಗುತ್ತಿರುವ ಗೊಂದಲವನ್ನು, ಒತ್ತಡವನ್ನು ಯಾರ ಬಳಿಯೂ ಹೇಳಿಕೊಳ್ಳಲಾಗುತ್ತಿಲ್ಲ ಎಂದನಿಸಿದ್ರೆ, ಅಂಗೈಯಲ್ಲಿರುವ ಮೊಬೈಲ್ ಸಹಾಯದಿಂದ ಇದಕ್ಕೆ ಪರಿಹಾರ ಸಿಗಲಿದೆ. ಹೌದು ನಿಮ್ಹಾನ್ಸ್ ಅಭಿವೃದ್ಧಿಪಡಿಸಿದ ಮೈಂಡ್ ನೋಟ್ ಎಂಬ ಆಪ್ ಹಲವು ರೀತಿಯಲ್ಲಿ ಸಹಕಾರಿ ಆಗಲಿದೆ.
Kodagu | ವಿದೇಶಿ ಮಹಿಳೆಗೆ ಲೈಂಗಿಕ ದೌರ್ಜನ್ಯ ಪ್ರಕರಣ: ಕುಟ್ಟ ಗ್ರಾಮದ 'ದೇವಿ ವಿಲ್ಲಾ ಹೋಂ ಸ್ಟೇ ಪರವಾನಿಗೆ ರದ್ದು
ಮಡಿಕೇರಿ, ಎ.23: ವಿದೇಶಿ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ ಎನ್ನಲಾದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಇಲಾಖೆ, ಆರೋಪಿತ ಪೊನ್ನಂಪೇಟೆ ತಾಲೂಕಿನ ಶ್ರೀಮಂಗಲ ಹೋಬಳಿಯ ಕುಟ್ಟ ಗ್ರಾಮದ ದೇವಿ ವಿಲ್ಲಾ ಹೋಂ ಸ್ಟೇಯ ಪರವಾನಿಗೆಯನ್ನು ರದ್ದುಗೊಳಿಸಿದೆ. ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿಯ ಅಧ್ಯಕ್ಷರೂ ಆಗಿರುವ ಕೊಡಗು ಜಿಲ್ಲಾಧಿಕಾರಿ ಸೋಮಶೇಖರ್ ಅವರು ದೇವಿ ವಿಲ್ಲಾ ಹೋಂ ಸ್ಟೇ ನಡೆಸಲು ನೀಡಲಾಗಿದ್ದ ಪರವಾನಿಗೆಯನ್ನು ರದ್ದುಪಡಿಸಿ ಆದೇಶ ಹೊರಡಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ದೇವಿ ವಿಲ್ಲಾ ಹೋಂ ಸ್ಟೇ ಮಾಲಕ ಸೇರಿದಂತೆ ಇಬ್ಬರನ್ನು ಈಗಾಗಲೇ ಪೊಲೀಸರು ಬಂಧಿಸಿದ್ದಾರೆ. ಕುಟ್ಟ ಗ್ರಾಮದ ಪಿ.ಎ. ಪೊನ್ನಪ್ಪ ಎಂಬವರಿಗೆ ದೇವಿ ಎಲ್ಲಾ ಹೋಂ ಸ್ಟೇ ನಡೆಸಲು 2024ರ ಜನವರಿ 15ರಂದು ಪ್ರವಾಸೋದ್ಯಮ ಇಲಾಖೆಯಿಂದ ಪರವಾನಿಗೆ ನೀಡಲಾಗಿತ್ತು. ಕಳೆದ ಎ.12ರಂದು ಈ ಹೋಂ ಸ್ಟೇಯಲ್ಲಿ ಅಮೆರಿಕ ಮೂಲದ ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ ಎಂಬ ಆರೋಪ ಕೇಳಿಬಂದಿತ್ತು. ಈ ಬಗ್ಗೆ ತನಿಖೆ ಕೈಗೆತ್ತಿಕೊಂಡಿರುವ ಕುಟ್ಟ ಪೊಲೀಸರು ಹೋಂ ಸ್ಪೇ ಮಾಲಕ ಹಾಗೂ ನೌಕರನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿ, ಹೋಂ ಸ್ಟೇ ಪರವಾನಿಯನ್ನು ರದ್ದುಗೊಳಿಸುವಂತೆ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿಗೆ ಶಿಫಾರಸು ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಸಮಿತಿಯ ಅಧ್ಯಕ್ಷರಾಗಿರುವ ಜಿಲ್ಲಾಧಿಕಾರಿ ಸೋಮಶೇಖರ್ ಪರವಾನಿಗೆ ರದ್ದು ಮಾಡಿ ಆದೇಶ ಹೊರಡಿಸಿದ್ದಾರೆ.
ಇರಾನ್ ಮೇಲಿನ ಇಸ್ರೇಲ್-ಅಮೆರಿಕಾ ಜಂಟಿ ಕಾರ್ಯಚರಣೆಗೆ ಟ್ರಂಪ್ ಮನವೊಲಿಸಿದ್ದೇ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಎಂದು ಆರೋಪಗಳು ಕೇಳಿಬರುತ್ತಿವೆ. ಈ ನಡುವೆ ಇರಾನ್ ಯುದ್ಧದ ಕುರಿತು ಟ್ರಂಪ್ ಅವರಿಗಿಂತ ಮೊದಲೇ ಅಮೆರಿಕಾದ 3 ಅಧ್ಯಕ್ಷರಾಗಿದ್ದ ಜಾರ್ಜ್ ಡಬ್ಲ್ಯೂ ಬುಷ್, ಒಬಾಮ್ ಹಾಗೂ ಜೋ ಬೈಡನ್ ಅವರ ಕಾಲದಲ್ಲೂ ನೆತನ್ಯಾಹು ಇದೇ ಪ್ರಸ್ತಾಪವನ್ನಿಟ್ಟಿದ್ದರು. ಆದರೆ, ಇದಕ್ಕೆ ಅವರ್ಯಾರು ಒಪ್ಪಿಗೆ ನೀಡಿಲ್ಲ ಎಂದು USನ ಮಾಜಿ ವಿದೇಶಾಂಗ ಕಾರ್ಯದರ್ಶಿ ಜಾನ್ ಕೆರ್ರಿ ಬಹಿರಂಗ ಪಡಿಸಿದ್ದಾರೆ. ಇದು ಸದ್ಯ ನಡೆಯುತ್ತಿರುವ ಚರ್ಚೆಗಳಿಗೆ ಪೂರಕವಾಗುವಂತಿದೆ.
ಆಹಾ! ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್, ಸೇನಾಧ್ಯಕ್ಷ ಜನರಲ್ ಅಸಿಮ್ ಮುನೀರ್ ಅವರನ್ನು ಹೊಗಳಿದ್ದೇ ಹೊಗಳಿದ್ದು. ಮಧ್ಯಪ್ರಾಚ್ಯದಲ್ಲಿ ಶಾಂತಿ ಸ್ಥಾಪನೆ ಕೇವಲ ಇವರಿಬ್ಬರಿಂದಲೇ ಸಾಧ್ಯ ಎಂಬುವಷ್ಟರ ಮಟ್ಟಿಗೆ ಡೊನಾಲ್ಡ್ ಟ್ರಂಪ್ ಹೇಳಿಕೆ ನೀಡುತ್ತಿದ್ದಾರೆ. ಇದಕ್ಕೆ ಪೂರಕವಾಗಿ ಪಾಕಿಸ್ತಾನ ನಾಯಕರು ಕೂಡ ಬೆಳಗ್ಗೆಂದು ನೀಟಾಗಿ ಡ್ರೆಸ್ ಮಾಡಿಕೊಂಡು, ಕ್ಯಾಮರಾಗಳ ಮುಂದೆ ಶಾಂತಿದೂತರ ರೀತಿ ಪೋಸ್ ಕೊಡುತ್ತಿದ್ದಾರೆ. ಹಾಗಿದ್ದರೆ ಅಮೆರಿಕ ಮತ್ತು ಪಾಕಿಸ್ತಾನದ ನಡುವೆ ಏನು ನಡೆಯುತ್ತಿದೆ? ಅಮೆರಿಕ-ಇರಾನ್ ನಡುವೆ ಪಾಕಿಸ್ತಾನದ ಮಧ್ಯಸ್ಥಿಕೆ ಪಾತ್ರದಲ್ಲಿ ಅದೆಷ್ಟು ಸತ್ಯಾಂಶವಿದೆ? ಇಲ್ಲಿದೆ ನೋಡಿ ವಿಶ್ಲೇಷಣೆ.
ಮಾರುಕಟ್ಟೆಯಲ್ಲಿ ನಿಂಬೆಹಣ್ಣಿಗೆ ಹೆಚ್ಚಾಯ್ತು ಡಿಮ್ಯಾಂಡ್! ಪೂರೈಕೆ ಕಟ್, ದರ ಡಬಲ್ –ಕಂಗಾಲಾದ ಗ್ರಾಹಕ
ಬೇಸಿಗೆಯ ತೀವ್ರ ಶಾಖ ಮತ್ತು ಬಿಸಿಗಾಳಿಯ ನಡುವೆ ದೇಹವನ್ನು ತಂಪು ಮಾಡಿಕೊಳ್ಳಲು ಬಯಸುವ ಜನರಿಗೆ ನಿಂಬೆಹಣ್ಣಿನ ಬೆಲೆ ಏರಿಕೆ ದೊಡ್ಡ ಹೊಡೆತ ನೀಡಿದೆ. ರಾಜ್ಯದ ಚಿಲ್ಲರೆ ಮಾರುಕಟ್ಟೆಗಳಲ್ಲಿ ಪ್ರತಿ ಕೆಜಿ ನಿಂಬೆಹಣ್ಣಿನ ಬೆಲೆ ಬರೋಬ್ಬರಿ ₹250ರ ಗಡಿಯನ್ನು ದಾಟಿದ್ದು, ಗ್ರಾಹಕರು ಹಾಗೂ ಸಣ್ಣ ವ್ಯಾಪಾರಿಗಳು ಕಂಗಾಲಾಗಿದ್ದಾರೆ. ನೆರೆಯ ರಾಜ್ಯಗಳಾದ ಕೇರಳ, ತಮಿಳುನಾಡು ಮತ್ತು ಆಂಧ್ರಪ್ರದೇಶಗಳಿಂದ ಪೂರೈಕೆಯಾಗುತ್ತಿದ್ದ ನಿಂಬೆಹಣ್ಣಿನ ಪ್ರಮಾಣದಲ್ಲಿ ಗಣನೀಯ ಕುಸಿತ ಕಂಡಿರುವುದು ಈ ಬೆಲೆ ಏರಿಕೆಗೆ ಪ್ರಮುಖ ಕಾರಣವಾಗಿದೆ. ಕೇವಲ ಒಂದು ತಿಂಗಳ ಹಿಂದೆ ಸಗಟು […] The post ಮಾರುಕಟ್ಟೆಯಲ್ಲಿ ನಿಂಬೆಹಣ್ಣಿಗೆ ಹೆಚ್ಚಾಯ್ತು ಡಿಮ್ಯಾಂಡ್! ಪೂರೈಕೆ ಕಟ್, ದರ ಡಬಲ್ – ಕಂಗಾಲಾದ ಗ್ರಾಹಕ first appeared on Vistara News .
ಪಶ್ಚಿಮ ಬಂಗಾಳದಲ್ಲಿ ಮೊದಲ ಹಂತದ ಮತದಾನ; ಮತ ಚಲಾಯಿಸಿದ ಸುವೇಂದು ಅಧಿಕಾರಿ
ಕೊಲ್ಕತ್ತಾ: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ಮೊದಲ ಹಂತದ ಮತದಾನ ಗುರುವಾರ ಬೆಳಿಗ್ಗೆ 7 ಗಂಟೆಗೆ ಆರಂಭವಾಯಿತು. ರಾಜ್ಯದ 16 ಜಿಲ್ಲೆಗಳ ವ್ಯಾಪ್ತಿಯ 152 ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾನ ನಡೆಯುತ್ತಿದ್ದು, ಸುಮಾರು 3.60 ಕೋಟಿ ಮತದಾರರು 1,478 ಅಭ್ಯರ್ಥಿಗಳ ಭವಿಷ್ಯವನ್ನು ನಿರ್ಧರಿಸಲಿದ್ದಾರೆ. ಉತ್ತರ ಬಂಗಾಳದ ಎಂಟು ಹಾಗೂ ದಕ್ಷಿಣ ಬಂಗಾಳದ ಎಂಟು ಜಿಲ್ಲೆಗಳು ಈ ಹಂತದಲ್ಲಿ ಒಳಗೊಂಡಿವೆ. ವಿಶೇಷ ತೀವ್ರ ಪರಿಷ್ಕರಣೆ (ಎಸ್ಐಆರ್) ಬಳಿಕ ನಡೆಯುತ್ತಿರುವ ಈ ಚುನಾವಣೆಯಲ್ಲಿ ಮತದಾರರ ಪಟ್ಟಿಯಲ್ಲಿ ಸುಮಾರು 12 ಶೇಕಡಾ ಕಡಿತವಾಗಿದೆ. ಭದ್ರತೆಗಾಗಿ ಚುನಾವಣಾ ಆಯೋಗವು ದಾಖಲೆಯ 2,450 ಕೇಂದ್ರ ಅರೆಸೈನಿಕ ಪಡೆಗಳ ತುಕಡಿಗಳನ್ನು ನಿಯೋಜಿಸಿದ್ದು, ಸುಮಾರು 2.5 ಲಕ್ಷ ಸಿಬ್ಬಂದಿ ಕರ್ತವ್ಯದಲ್ಲಿದ್ದಾರೆ. ನಂದಿಗ್ರಾಮದಲ್ಲಿ ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ ಮತ ಚಲಾಯಿಸಿದರು. “ರಾಜ್ಯದಲ್ಲಿ ಬದಲಾವಣೆ ಅಗತ್ಯ. ಆಡಳಿತವನ್ನು ಬಿಜೆಪಿ ಕೈಗೆ ನೀಡಬೇಕು. ಶಾಂತಿಯುತ ಮತದಾನ ನಡೆಯಲಿ” ಎಂದು ಹೇಳಿದರು. ಅಸನ್ಸೋಲ್ನಲ್ಲಿ ಮತದಾನ ಆರಂಭವಾಗುತ್ತಿದ್ದಂತೆಯೇ ಮತಗಟ್ಟೆಗಳ ಹೊರಗೆ ಮತದಾರರ ಉದ್ದನೆಯ ಸಾಲುಗಳು ಕಂಡುಬಂದವು. ಬಿಜೆಪಿ ಅಭ್ಯರ್ಥಿ ಅಗ್ನಿಮಿತ್ರ ಪಾಲ್ ಮತ ಚಲಾಯಿಸಿದರು.
ರಾಯಚೂರಿನಲ್ಲಿ ಸುಡುಬಿಸಿಲು: ಪೊಲೀಸ್ ಶ್ವಾನಗಳಿಗೆ ಕೂಲರ್ ವ್ಯವಸ್ಥೆ!
ರಾಯಚೂರು: ಬಿಸಿಲುನಾಡು ರಾಯಚೂರಿನಲ್ಲಿ ಕಳೆದೊಂದು ತಿಂಗಳಿನಿಂದ ಬಿಸಿಲು ಧಗೆ ಜೋರಾಗಿದ್ದು, ಗರಿಷ್ಠ ತಾಪಮಾನ 42-44 ಡಿಗ್ರಿ ಸೆಲ್ಸಿಯಸ್ ನಷ್ಟು ದಾಖಲಾಗುತ್ತಿದೆ. ಇದರಿಂದ ಜನರು, ಜಾನುವಾರುಗಳು ತತ್ತರಿಸಿ ಹೋಗಿವೆ. ಸಾಕು ಪ್ರಾಣಿಗಳನ್ನು ಮರಗಳ ನೆರಳಿನಲ್ಲಿ ಮಾಲಕರು ಕಟ್ಟಿ ಹಾಕಿ ಬಿಸಿಲ ಬೇಗೆಯಿಂದ ರಕ್ಷಿಸಲು ಪ್ರಯತ್ನಿಸುತ್ತಿದ್ದಾರೆ. ಈ ನಡುವೆ ಜಿಲ್ಲೆಯ ಪೊಲೀಸ್ ಇಲಾಖೆಯ ಅಧಿಕಾರಿಗಳು ಇಲಾಖೆಯಲ್ಲಿ ಕಾರ್ಯಾಚರಿಸುತ್ತಿರುವ ಶ್ವಾನ ದಳಕ್ಕೂ ಕೂಲರ್ ಗಳ ವ್ಯವಸ್ಥೆ ಮಾಡಿ ತಂಪಾಗಿಸುತ್ತಿದ್ದಾರೆ. ಕಲ್ಯಾಣ ಕರ್ನಾಟಕ ಭಾಗದ ಏಳು ಜಿಲ್ಲೆಗಳಲ್ಲಿ ಬಿರುಬಿಸಿಲು ತಾಂಡವವಾಡುತ್ತಿದ್ದು. ಈ ಹಿನ್ನೆಲೆಯಲ್ಲಿ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಶ್ವಾನ ದಳದಲ್ಲಿರುವ ಐದು ನಾಯಿಗಳಿದ್ದು, ಅವುಗಳ ಕೊಠಡಿಗಳಿಗೆ ಕೂಲರ್ ಸೌಲಭ್ಯ ಕಲ್ಪಿಸಿರುವ ಜತೆಗೆ ಆಹಾರ ಪದ್ದತಿಯಲ್ಲೂ ಬದಲಾವಣೆ ತರಲಾಗಿದೆ. ಶ್ವಾನಗಳ ಆಹಾರ ರೆಫ್ರಿಜರೇಟರ್ ನಲ್ಲಿ ಇಟ್ಟು ನೀಡಲಾಗುತ್ತಿದೆ. ಬಳ್ಳಾರಿಯಲ್ಲಿ 6, ಬೀದರ್ 4. ವಿಜಯನಗರ 2, ಕೊಪ್ಪಳ 4. ಕಲಬುರಗಿ 5, ರಾಯಚೂರಿನಲ್ಲಿ ಐದು ಸೇರಿ ರಾಜ್ಯದ ನಾನಾ ಜಿಲ್ಲೆಗಳ ಶ್ವಾನದಳದಲ್ಲಿ 270 ನಾಯಿಗಳಿವೆ. ಈ ಪೈಕಿ ಲ್ಯಾಬ್ರಡಾರ್ 98, ಬೆಳ್ಳಿಯಂ ಮೆಲೋನಿಸ್ 74, ಡಾಬರ್ ಮನ್ 61 ಮತ್ತು ಜರ್ಮನ್ ಶೆಫರ್ಡ್ 37 ನಾಯಿಗಳಿವೆ. ಅಪರಾಧಿಗಳನ್ನು ಪತ್ತೆ ಹಚ್ಚುವಲ್ಲಿ ಪೊಲೀಸ್ ಇಲಾಖೆಗೆ ನೆರವಾಗುವ ಈ ನಾಯಿಗಳ ಆರೋಗ್ಯ ಕಾಪಾಡಲು ಪೊಲೀಸ್ ಇಲಾಖೆ ಈ ಬಾರಿ ತುಸು ಹೆಚ್ಚು ಮುತುವರ್ಜಿ ವಹಿಸಿದ್ದು ಕಾಣಬಹುದು. ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿರುವ ಶ್ವಾನದಳದ ಕಟ್ಟಡದಲ್ಲಿ ಸಿರಿ, ಲೂಸಿ, ರೀಟಾ, ಚೆರ್ರಿ, ಡಾರ್ಬಿ ಹೆಸರಿನ ಶ್ವಾನಗಳಿಗೆ ಪ್ರತ್ಯೇಕ ಕೊಠಡಿಗಳಲ್ಲಿ ಐದು ಕೂಲರ್ ವ್ಯವಸ್ಥೆ ಮಾಡಲಾಗಿದೆ. ಲ್ಯಾಬ್ರಡಾರ್ ಬಲು ಸೂಕ್ಷ್ಮ ಮನ್, ಲ್ಯಾಬ್ರಡಾರ್, ಜರ್ಮನ್ ಶೆಫರ್ಡ್, ಗೋಲ್ಡನ್ ರಿಟ್ರೇವರ್ ತಳಿ ಸೇರಿ ಇತರ ನಾಯಿಗಳಿವೆ. ಲ್ಯಾಬ್ರಡಾರ್ ತಳಿ ಹೆಚ್ಚು ಉಷ್ಣಾಂಶ ತಡೆದುಕೊಳ್ಳದಷ್ಟು ಸೂಕ್ಷ್ಮವಾಗಿದೆ. ಲ್ಯಾಬ್ರಡಾರ್ ಸೇರಿ ಇತರ ನಾಯಿಗಳ ಆರೋಗ್ಯ ಕಾಪಾಡಲು ಕೂಲರ್ ಅಳವಡಿಸಿ, ದೇಹ ತಂಪುಗೊಳಿಸಲಾಗುತ್ತಿದೆ. ಮತ್ತೊಂದೆಡೆ ಸುಲಭವಾಗಿ ಜೀರ್ಣವಾಗುವ ಮತ್ತು ಹೆಚ್ಚು ನೀರಿನಾಂಶ ಇರುವ ಆಹಾರವನ್ನು ಈ ಶ್ವಾನಗಳಿಗೆ ನೀಡಲಾಗುತ್ತಿದೆ. ರಾಗಿ ಗಂಜಿ, ಮಜ್ಜಿಗೆ, ಎಳನೀರು, ಕೆಲವೆಡೆ ಸಬ್ಬಕ್ಕಿ, ಶ್ಯಾವಿಗೆ ಪಾಯಸ ನೀಡಲಾಗುತ್ತಿದೆ. ಬಿರುಬೇಸಿಗೆ ಹಿನ್ನೆಲೆ ಆಹಾರ ಮೆನುವಿನಲ್ಲಿ ಮಟನ್ ಪ್ರಮಾಣ ತಗ್ಗಿಸಲಾಗಿದೆ. ಪಶು ವೈದ್ಯರ ಸಲಹೆ ಮೇರೆಗೆ ತಣ್ಣೀರಿನಲ್ಲೇ ಸ್ನಾನ ಮಾಡಿಸಲಾಗುತ್ತಿದೆ. ಪೊಲೀಸ್ ಶ್ವಾನಗಳು ಸ್ಫೋಟಕ ವಸ್ತುಗಳ ಪತ್ತೆ, ಅಪರಾಧ ಪತ್ತೆಗೆ ತರಬೇತಿ ನೀಡಿ ಪರಿಣತಿ ಹೊಂದಿರುತ್ತವೆ. ಅಪರಾಧ ಪ್ರಕರಣಗಳಲ್ಲಿ ಆರೋಪಿಗಳ ಪತ್ತೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಶ್ವಾನಗಳ ಆರೋಗ್ಯ ಕಾಪಾಡುವುದು ನಮ್ಮ ಕರ್ತವ್ಯ. ಪೊಲೀಸ್ ಸಿಬ್ಬಂದಿಗೆ ನೀಡುವ ಗೌರವ ಶ್ವಾನಗಳಿಗೂ ನೀಡಬೇಕು. ಮಾನವೀಯ ನೆಲೆಯಲ್ಲಿ ಅವುಗಳಿಗೆ ಕೂಲರ್ ವ್ಯವಸ್ಥೆ ಮಾಡಲಾಗಿದೆ. -ಅರುಣಾಂಗ್ಷುಗಿರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಯಚೂರು
ಅಂಕಲ್ ಸ್ಯಾಮ್: ವಿಸರ್ಜನಾ ಸಮಾರಂಭ ಆರಂಭವಾಗಿದೆಯೇ?
ಒಂದು ದೊಡ್ಡ ಹಡಗು ಅಷ್ಟು ಸುಲಭವಾಗಿ ಹಠಾತ್ತನೆ ಮುಳುಗಿ ಬಿಡುವುದಿಲ್ಲ. ಹಡಗು ಮುಳುಗತೊಡಗಿದೆ ಎಂಬುದು ದಡದಲ್ಲಿರುವವರಿಗೆ ತಿಳಿಯುವುದೂ ಇಲ್ಲ. ಮುಳುಗುವ ಪ್ರಕ್ರಿಯೆಯು ನಿಧಾನವಾಗಿ, ಮೌನವಾಗಿ ಆರಂಭಗೊಂಡು ಒಂದು ಹಂತದ ಬಳಿಕ ಕ್ಷಿಪ್ರವಾಗತೊಡಗುತ್ತದೆ. ಅಮೆರಿಕದ ಮಟ್ಟಿಗೆ ಮುಳುಗುವ ಪ್ರಕ್ರಿಯೆ ಆರಂಭವಾಗಿದೆ ಎಂಬುದರಲ್ಲಿ ಸಂಶಯವಿಲ್ಲ. ಸಂಪೂರ್ಣ ಮುಳುಗಡೆ ಎಷ್ಟು ಸಮಯ ತೆಗೆದುಕೊಳ್ಳಲಿದೆ ಎಂಬುದು ಮಾತ್ರ ಸದ್ಯ ಚರ್ಚಾ ವಿಷಯವಾಗಿದೆ. ‘ಮೈ ಫ್ರೆಂಡ್ ... ಟ್ರಂಪ್’ ಅವರು 2017ರಲ್ಲಿ ಮೊದಲ ಬಾರಿ ಅಮೆರಿಕದ ಅಧ್ಯಕ್ಷರಾದ ಬೆನ್ನಿಗೇ ದೇಶಕ್ಕೆ MAGA ಎಂಬೊಂದು ಭಾವನಾತ್ಮಕ ಜನಮರುಳು ಘೋಷಣೆ ನೀಡಿದ್ದರು. ‘ಮೇಕ್ ಅಮೆರಿಕ ಗ್ರೇಟ್ ಅಗೈನ್’ ಎಂಬ ಅವರ ಆ ಘೋಷಣೆಯೇ ನಿಜವಾಗಿ ಅಮೆರಿಕ ತನ್ನ ಮಹಾನತೆಯನ್ನು ಈಗಾಗಲೇ ಕಳೆದುಕೊಂಡಿದೆ ಎಂಬ ಸತ್ಯದ ಪ್ರಕಟಣೆಯಾಗಿತ್ತು. ಅಮೆರಿಕವನ್ನು ಮತ್ತೆ ಗತವೈಭವದೆಡೆಗೆ ಒಯ್ಯುತ್ತೇನೆ ಎಂಬ ಟ್ರಂಪ್ ಆಶ್ವಾಸನೆಯು ಅವರ ಇತರ ಆಶ್ವಾಸನೆಗಳಂತೆ ಠುಸ್ಸಾಗಿತ್ತು. ಅವರ ಎರಡನೆಯ ಅಧಿಕಾರಾವಧಿಯಂತೂ ಅಮೆರಿಕವನ್ನು ಬಹಳ ಕ್ಷಿಪ್ರವಾಗಿ ಪತನದ ಹಳ್ಳಕ್ಕೆ ತಳ್ಳಿ ಬಿಟ್ಟಿತು. 1776ರಲ್ಲಿ ಅಕ್ರಮ ವಲಸಿಗರ ದಂಡುಗಳು, ಸಾವಿರಾರು ಮೂಲನಿವಾಸಿಗಳ ಸಮಾಧಿಯ ಮೇಲೆ ಸ್ಥಾಪಿಸಿದ್ದ ಅಮೆರಿಕ (ಅಂಕಲ್ ಸ್ಯಾಮ್) ಈ ವರ್ಷ ಜುಲೈ ತಿಂಗಳಲ್ಲಿ ತನ್ನ ಸ್ಥಾಪನೆಯ 250ನೇ ವಾರ್ಷಿಕೋತ್ಸವವನ್ನು ಆಚರಿಸುವ ಸಿದ್ಧತೆಯಲ್ಲಿದೆ. ಆದರೆ ಇಂದು ಜಗತ್ತು ಟ್ರಂಪ್ರನ್ನು ಅಮೆರಿಕದ ವಿಸರ್ಜನಾ ಸಮಾರಂಭದ ಅಧ್ಯಕ್ಷರಾಗಿ ಕಾಣುತ್ತಿದೆ. ಇತ್ತೀಚೆಗೆ ಇರಾನ್ - ಅಮೆರಿಕ ಯುದ್ಧ ತಾರಕದಲ್ಲಿದ್ದಾಗ ಒಂದು ವ್ಯಂಗ್ಯ ಚಿತ್ರವು ನೆಟ್ನಲ್ಲಿ ತುಂಬಾ ವೈರಲ್ ಆಗಿತ್ತು. ಅದರಲ್ಲಿ 1981ರಲ್ಲಿ ಅಮೆರಿಕದ ಅಧ್ಯಕ್ಷರಾಗಿದ್ದ ರೊನಾಲ್ಡ್ ರೇಗನ್ ಮತ್ತು ಇಂದಿನ ಅಧ್ಯಕ್ಷ ಟ್ರಂಪ್ ಅವರು ಪರಸ್ಪರ ಕೈಕುಲುವ ಕಾಲ್ಪನಿಕ ಚಿತ್ರವಿತ್ತು. ಅದರಲ್ಲಿ ರೇಗನ್ ‘‘ನಾನು ಸೋವಿಯತ್ ಒಕ್ಕೂಟವನ್ನು ನಾಶಮಾಡಿ ಬಿಟ್ಟೆ’’ ಎಂದು ಅಭಿಮಾನದಿಂದ ಹೇಳಿಕೊಳ್ಳುತ್ತಾರೆ. ಅದಕ್ಕುತ್ತರವಾಗಿ ಟ್ರಂಪ್ ‘‘ನಾನು ಯುಎಸ್ಎ ಅನ್ನು ಸರ್ವನಾಶಮಾಡಿದೆ’’ ಎಂದು ಕೊಚ್ಚಿಕೊಳ್ಳುತ್ತಾರೆ. ಟ್ರಂಪ್ ಅವರ ಆ ಮಾತು ಕೇವಲ ಬೊಗಳೆಯಾಗಿರಲಿಲ್ಲ. ಅದು ಅವರು ಅಪರೂಪಕ್ಕೆ ಹೇಳಿದ ಸತ್ಯವಾಗಿತ್ತು. ನಿಜವಾಗಿ ಒಂದು ದೇಶಕ್ಕೆ ಟ್ರಂಪ್ ಥರದ ಉಂಡಾಡಿ, ಹೊಣೆಗೇಡಿ ನಾಯಕ ಸಿಕ್ಕರೆ, ಅಂತಹ ದೇಶವನ್ನು ನಾಶಮಾಡುವುದಕ್ಕೆ ಹೊರಗಿನಿಂದ ಯಾವುದೇ ಶತ್ರು ಬರಬೇಕಾಗಿಲ್ಲ. ಈ ವಿಷಯವು ಅನೇಕ ಭಾರತೀಯರಿಗೆ ಮನವರಿಕೆಯಾಗಿರುವಂತೆ ಹಲವಾರು ಅಮೆರಿಕನ್ನರಿಗೂ ಮನವರಿಕೆಯಾಗಿದೆ. ‘ಜಗತ್ತಿನಲ್ಲಿ ಅಮೆರಿಕದ ಯುಗ ಮುಗಿಯಿತು’ ಎಂದು ಕೆಲವು ಜಾಗತಿಕ ವಿಶ್ಲೇಷಕರು 5 ದಶಕಗಳ ಹಿಂದೆಯೇ ಭವಿಷ್ಯ ನುಡಿಯತೊಡಗಿದ್ದರು. 1991ರಲ್ಲಿ ಸೋವಿಯತ್ ಒಕ್ಕೂಟವು ಕುಸಿದು ಬಿದ್ದ ಬಳಿಕವಂತೂ ಇನ್ನೇನು ಅಮೆರಿಕ ಕೂಡಾ ಬಿದ್ದೇ ಬೀಳುತ್ತದೆಂದು ಹಲವು ಆಶಾವಾದಿಗಳು ಕಾತರದಿಂದ ಕಾಯತೊಡಗಿದ್ದರು. ಆದರೆ ಅಮೆರಿಕ ಬೀಳಲಿಲ್ಲ. ಅದರ ಬಂಡವಾಳಶಾಹಿ ಮತ್ತು ನವ ವಸಾಹತುಶಾಹಿ ಜಾಲವು ನೇರ ಅಥವಾ ಪರೋಕ್ಷವಾಗಿ ಜಗತ್ತಿನ ದೊಡ್ಡ ಭಾಗವನ್ನು ಕಬಳಿಸಿತು ಮತ್ತು ಜಾಗತಿಕ ವ್ಯವಸ್ಥೆಯನ್ನು, ವಿಶೇಷವಾಗಿ ಜಾಗತಿಕ ಆರ್ಥಿಕತೆಯನ್ನು ತನ್ನ ಇಚ್ಛಾನುಸಾರ ಕುಲಗೆಡಿಸಿ ಬಿಟ್ಟಿತು. ವಿಶ್ವ ಶಾಂತಿ, ಸಾಮಾಜಿಕ ನ್ಯಾಯ, ಮಾನವ ಹಕ್ಕುಗಳು ಮತ್ತು ಜನಕಲ್ಯಾಣಕ್ಕಾಗಿ ಸ್ಥಾಪಿಸಲಾಗಿದ್ದ ಎಲ್ಲ ಜಾಗತಿಕ ಸಂಸ್ಥೆಗಳ ಕತ್ತು ಹಿಸುಕಿ ನಿರ್ಜೀವಗೊಳಿಸಲಾಯಿತು. ಕಾರ್ಪೊರೇಟ್ ನಿರ್ದೇಶಿತ ಸರಕಾರೀ ಧೋರಣೆಗಳಿಂದಾಗಿ ಸ್ವತಃ ಅಮೆರಿಕ ಸೇರಿದಂತೆ ಲೋಕದ ಎಲ್ಲೆಡೆಯ ಜನಸಾಮಾನ್ಯರು ದಿವಾಳಿಯಾದರು ಮತ್ತು ಬೆರಳೆಣಿಕೆಯ ಅತಿಶ್ರೀಮಂತರು ಸಾವಿರಾರು ಪಟ್ಟು ಹೆಚ್ಚು ಶ್ರೀಮಂತರಾಗಿ ಬಿಟ್ಟರು. ನಮ್ಮ ಜಾತಿಪ್ರಧಾನ ಸಮಾಜವಾದಿ ಭಾರತದ ಸಹಿತ ಹೆಚ್ಚಿನ ಕಡೆ ಸರಕಾರಗಳು ಶ್ರೀಮಂತರನ್ನು ಉದಾರವಾಗಿ ಪೋಷಿಸುತ್ತಿದ್ದ ಸನ್ನಿವೇಶವು ಬದಲಾಗಿ ಅಮಾನುಷ ಶ್ರೀಮಂತರೇ ಸರಕಾರಗಳನ್ನು ಸಂಪೂರ್ಣವಾಗಿ ನಿಯಂತ್ರಿಸುವ ಭಯಾನಕ ಸನ್ನಿವೇಶ ನಿರ್ಮಾಣವಾಯಿತು. ಹಳೆಯ ವಸಾಹತುಶಾಹಿತ್ವದಲ್ಲಿ ಜನರಿಗೆ ನಾವು ಗುಲಾಮರು ಮತ್ತು ವಸಾಹತುಶಾಹಿಗಳು ನಮ್ಮ ಶತ್ರುಗಳೆಂಬ ಪ್ರಜ್ಞೆ ಇದ್ದುದರಿಂದ ಅಕ್ರಮ ವ್ಯವಸ್ಥೆಯ ವಿರುದ್ಧ ಪ್ರತಿರೋಧಕ್ಕೆ ಅವಕಾಶವಿತ್ತು. ಆದರೆ ನವವಸಾಹತುಶಾಹಿಯ ಪಂಜರದಲ್ಲಿ, ಬಂಡವಾಳಶಾಹಿಗಳು ಪ್ರಜಾಪ್ರಭುತ್ವದ ಹೆಸರಲ್ಲಿ, ತಾವು ಗುಲಾಮರಾಗಿಸಿದ ಜನರ ಮನಸ್ಸುಗಳಲ್ಲಿ ‘ನಾವೇ ಪ್ರಭುಗಳು’ ಮತ್ತು ‘ನಮ್ಮನ್ನಾಳುವವರು ನಮ್ಮದೇ ಪ್ರತಿನಿಧಿಗಳು’ ಎಂಬ ಆತ್ಮೀಯತೆಯ ಹುಸಿ ಭ್ರಮೆಯನ್ನು ಆಳವಾಗಿ ಬಿತ್ತಿದರು. ಆ ಮೂಲಕ ಜನರನ್ನು ನಾಜೂಕಾಗಿ ದೋಚಿ, ಬೋಳಿಸಿ ಬೀದಿಪಾಲಾಗಿಸುವ ಪ್ರಕ್ರಿಯೆಯನ್ನು ತುಂಬಾ ಸರಳ ಹಾಗೂ ಸುಗಮವಾಗಿಸಿಕೊಂಡರು. ಬಹುಕಾಲ ಜಗತ್ತಿನ ಅತ್ಯಂತ ಬಲಿಷ್ಠ ಪ್ರಜಾಪ್ರಭುತ್ವ ಎಂದೇ ತನ್ನನ್ನು ಪರಿಚಯಿಸಿಕೊಂಡಿದ್ದ ಅಮೆರಿಕದಲ್ಲಿಂದು ‘ಪ್ರಭು’ಗಳ ಅಂದರೆ ಜನಸಾಮಾನ್ಯರ ಸ್ಥಿತಿ ದಾರುಣವಾಗಿದೆ. ದೇಶದ ಸುಮಾರು ಶೇ. 32 ಸಂಪತ್ತು ಜನಸಂಖ್ಯೆಯ ಕೇವಲ ಶೇ. 1ರಷ್ಟಿರುವ ಕುಬೇರರ ಮುಷ್ಟಿಯಲ್ಲಿದೆ. ದೇಶದ ಶೇ. 63 ಆಸ್ತಿ ಶೇ. 10 ಕುಬೇರರ ವಶದಲ್ಲಿದೆ. ಅತಿಶ್ರೀಮಂತರ ಸಂಪತ್ತು ಒಂದೇ ವರ್ಷದಲ್ಲಿ ಶೇ. 16 ವೃದ್ಧಿಯಾಗಿದೆ. ಇದಕ್ಕೆ ಹೋಲಿಸಿದರೆ ತಳಮಟ್ಟದ ಶೇ. 50 ಮೂರ್ಖ ಜನಸಾಮಾನ್ಯರ ಒಟ್ಟು ಸಂಪತ್ತು ರಾಷ್ಟ್ರೀಯ ಸಂಪತ್ತಿನ ಶೇ. 2.5 ಮಾತ್ರ! ಆಸ್ತಿಗಳ ರೂಪದಲ್ಲಿರುವ ಶ್ರೀಮಂತರ ಸಂಪತ್ತಿನ ಮೌಲ್ಯವು ಮಿಸೈಲ್ ವೇಗದಲ್ಲಿ ಮೇಲೇರುತ್ತಿರುವಾಗ ವೇತನವನ್ನವಲಂಬಿಸಿರುವ ಜನಸಾಮಾನ್ಯರ ಆದಾಯ ವೃದ್ಧಿಯು ಆಮೆಯನ್ನೂ ನಾಚಿಸುವಷ್ಟು ನಿಧಾನ ಗತಿಯಲ್ಲಿರುತ್ತದೆ. ಜನತೆ ಸಂವೇದನಾಶೀಲರಾಗಿದ್ದರೆ, ತಾವು ತಮ್ಮದೆಂದು ನಂಬಿಕೊಂಡು ಪೋಷಿಸಿದ ವ್ಯವಸ್ಥೆಯು ನಿಜವಾಗಿ ತಮ್ಮ ಪರಮ ಶತ್ರುವಾಗಿದೆ ಎಂಬುದನ್ನು ಮನಗಂಡು ಅದರ ವಿರುದ್ಧ ಬಂಡೇಳುವುದಕ್ಕೆ ಈ ಘೋರ ಅಂತರವೇ ಪರ್ಯಾಪ್ತ ಪ್ರೇರಣೆ ಹಾಗೂ ಪ್ರಚೋದನೆಯಾಗಿದೆ. ಸದ್ಯ ಅಮೆರಿಕ ಸರಕಾರವು 39 ಲಕ್ಷ ಕೋಟಿ ಡಾಲರ್ ಗೂ ಅಧಿಕ ಸಾಲದ ಭಾರದಡಿ ನರಳುತ್ತಿದೆ. ಒಟ್ಟು ಜಾಗತಿಕ ಆದಾಯದ ಪಟ್ಟಿಯಲ್ಲಿ ಅಮೆರಿಕದ ಪಾಲು ಕುಸಿಯುತ್ತಿದೆ. ಇದೀಗ ಜಗತ್ತಿನಲ್ಲಿ ಡಾಲರ್ ಏಕಸ್ವಾಮ್ಯಕ್ಕೆ ಬಂದೆರಗಿರುವ ಅಪಾಯವನ್ನು ಮತ್ತು ಇತರ ಜಾಗತಿಕ ಬೆಳವಣಿಗೆಗಳನ್ನೂ ಗಮನಿಸಿದರೆ ಮುಂದಿನ ದಿನಗಳಲ್ಲಿ ಅಮೆರಿಕದ ಆರ್ಥಿಕತೆ ಮತ್ತಷ್ಟು ಹಿನ್ನಡೆ ಅನುಭವಿಸುವುದು ಖಚಿತ. ತೈಲ ವ್ಯವಹಾರವನ್ನು ಡಾಲರ್ ಮೂಲಕ ಮಾತ್ರವೇ ನಡೆಸಬೇಕೆಂದು ಅಮೆರಿಕ ಹೇರಿದ್ದ ನಿರ್ಬಂಧವು, ಇರಾನ್ ವಿರುದ್ಧ ಯುದ್ಧದ ಬಳಿಕ ಸಡಿಲವಾಗತೊಡಗಿದೆ. ಚೀನಾದ ಕರೆನ್ಸಿ ಪಡೆದು ತೈಲ ಮಾರುವ, ಇರಾನ್ ಆರಂಭಿಸಿದ ಸತ್ಸಂಪ್ರದಾಯಕ್ಕೆ ಕ್ರಮೇಣ ವ್ಯಾಪಕ ಮನ್ನಣೆ ಸಿಗುತ್ತಿದೆ. ಇರಾನ್ನ ಕಟ್ಟಾ ವಿರೋಧಿಯಾಗಿರುವ ಹಾಗೂ ಇರಾನ್ ವಿರುದ್ಧ ಯುದ್ಧದುದ್ದಕ್ಕೂ ಬಹಿರಂಗವಾಗಿ ಇಸ್ರೇಲ್ ಮತ್ತು ಅಮೆರಿಕಗಳ ನಂಬಿಗಸ್ಥ ಬಂಟನಾಗಿ ನಿಂತಿದ್ದ ಯುಎಇ ಕೂಡಾ ಈಗ ಡಾಲರ್ ಬದಲು ಚೀನಾದ ಯುವಾನ್ ಕರೆನ್ಸಿಯನ್ನು ಪಡೆದು ತೈಲ ಮಾರುವ ಒಲವು ಪ್ರಕಟಿಸಿದೆ. ಹೀಗೆ ಪೆಟ್ರೋ ಡಾಲರ್ ಜಾಗದಲ್ಲಿ ಪೆಟ್ರೋ ಯುವಾನ್ ಎಂಬ ಪದ ಹೆಚ್ಚೆಚ್ಚು ಜನಪ್ರಿಯವಾಗುತ್ತಿದೆ. ಅಮೆರಿಕದೊಳಗೆ ಅಪರಾಧಗಳು, ವಲಸಿಗರ ವಿರುದ್ಧ ಹಿಂಸಾಚಾರ, ಜನಾಂಗೀಯ ಹಿಂಸೆ, ಬೆಲೆಯೇರಿಕೆ, ಹಣದುಬ್ಬರ, ನಿರುದ್ಯೋಗ ಇತ್ಯಾದಿ ಸಮಸ್ಯೆಗಳು ಸಾಮಾಜಿಕ ಅತೃಪ್ತಿಯನ್ನು ಹೆಚ್ಚಿಸುತ್ತಿವೆ. ಹಿಟ್ಲರ್, ಸ್ಟಾಲಿನ್ ಮುಂತಾದ ಸರ್ವಾಧಿಕಾರಿಗಳನ್ನು ನಾಚಿಸುವಂತಹ ಉದ್ಧಟತನ ತೋರುತ್ತಿರುವ ಅಮೆರಿಕದ ಅಧ್ಯಕ್ಷರ ಜನಪ್ರಿಯತೆ ಹಳ್ಳ ಹಿಡಿದಿದೆ. ಅಮೆರಿಕವನ್ನು ದೊಡ್ಡಣ್ಣನಾಗಿ ಕಾಣಲು ನಿರಾಕರಿಸುತ್ತಿರುವ ದೇಶಗಳ ಸಂಖ್ಯೆ ಹೆಚ್ಚುತ್ತಿದೆ. ಈ ವರ್ಷ ಜನವರಿಯಲ್ಲಿ ಟ್ರಂಪ್ ಸರಕಾರವು ವಿಶ್ವ ಸಂಸ್ಥೆಯ 31 ಅಂಗ ಸಂಸ್ಥೆಗಳ ಸಹಿತ ಒಟ್ಟು 66 ಜಾಗತಿಕ ಸಂಸ್ಥೆಗಳೊಂದಿಗೆ ತನಗಿದ್ದ ಕೆಲವು ದಶಕಗಳಷ್ಟು ಹಳೆಯ ಸಂಬಂಧವನ್ನು ಮುರಿದಿರುವುದಾಗಿ ಮತ್ತು ಆ ಸಂಸ್ಥೆಗಳಿಗೆ ತಾನು ನೀಡುತ್ತಿದ್ದ ಅನುದಾನವನ್ನು ನಿಲ್ಲಿಸುತ್ತಿರುವುದಾಗಿ ಘೋಷಿಸಿತು. ಇದರಿಂದಾಗಿ ಆಗಲೇ ಆರ್ಥಿಕ ಮುಗ್ಗಟ್ಟನ್ನು ಎದುರಿಸುತ್ತಿದ್ದ ವಿಶ್ವಸಂಸ್ಥೆಗೆ ದೊಡ್ಡ ಹಿನ್ನಡೆಯಾಯಿತು. ಆದರೆ ಅದೇ ವೇಳೆ, 1945ದಿಂದಲೂ ಜಗತ್ತಿನ ಒಂದು ದೊಡ್ಡ ಭಾಗದಲ್ಲಿ ಅಮೆರಿಕಕ್ಕೆ ಪ್ರಾಪ್ತವಿದ್ದ ದೊಡ್ಡಣ್ಣನ ಇಮೇಜಿಗೂ ದೊಡ್ಡ ಪೆಟ್ಟು ಬಿದ್ದಿದೆ. ಟ್ರಂಪ್ರ ಲಗಾಮಿಲ್ಲದ ನಾಲಗೆ ಕೂಡಾ ಎಷ್ಟೋ ಹಳೆಯ ಮಿತ್ರರನ್ನು ಅವರಿಂದ ದೂರ ಮಾಡಿದೆ. ವಿವಿಧ ದೇಶಗಳ ಜೊತೆ ವ್ಯವಹರಿಸುವಾಗ, ‘‘ನಾನು ನೀಡುವ ಎಲ್ಲ ಆದೇಶಗಳನ್ನು ನೀವು ವಿಧೇಯವಾಗಿ ಪಾಲಿಸಬೇಕು, ತಪ್ಪಿದರೆ ನಿಮ್ಮ ದೇಶದ ಮೇಲೆ ದುಬಾರಿ ಟಾರಿಫ್ ಹೊರಿಸುತ್ತೇನೆ’’ ಎಂಬ ಟ್ರಂಪ್ರ ಬೆದರಿಕೆಯ ಭಾಷೆ ಕೂಡಾ ಹಲವು ಸ್ವಾಭಿಮಾನಿ ದೇಶಗಳು ಅವರ ವಿರುದ್ಧ ಸೆಟೆದು ನಿಲ್ಲುವುದಕ್ಕೆ ಕಾರಣವಾಯಿತು. (ಟ್ರಂಪ್ ತೀರಾ ಅಶ್ಲೀಲ ಭಾಷೆಯಲ್ಲಿ ಸೌದಿಯ ಯುವರಾಜನನ್ನು ಅಪಮಾನಿಸಿದರೂ ಯುವರಾಜ ಪ್ರತಿಭಟಿಸಲಿಲ್ಲ. ಟ್ರಂಪ್, ಪಾಕ್ ಪ್ರಧಾನಿ ಶಹಬಾಝ್ ಷರೀಫ್ ಅವರಿಗೆ ಜಾಗತಿಕ ನಾಯಕರ ಮುಂದೆ ‘ಉಟಕ್-ಬೈಠಕ್’ ಮಾಡಿಸಿದರೂ ಆತ ವಿರೋಧಿಸಲಿಲ್ಲ. ಟ್ರಂಪ್, ಭಾರತ ಆರ್ಥಿಕವಾಗಿ ಸತ್ತಿದೆ ಎಂದಾಗ ಮತ್ತು ಭಾರತ ಯಾವಾಗ ಯುದ್ಧ ಮಾಡಬೇಕು, ಯಾವಾಗ ಯುದ್ಧ ನಿಲ್ಲಿಸಬೇಕು, ಯಾರಿಂದ, ಯಾವಾಗ ಎಷ್ಟು ತೈಲ ಖರೀದಿಸಬೇಕು ಎಂಬುದನ್ನೆಲ್ಲ ನಿರ್ಧರಿಸುವವನು ನಾನೇ ಎಂದು ಘೋಷಿಸಿದಾಗ ಭಾರತೀಯ ಪ್ರಧಾನ ಮಂತ್ರಿಗಳಿಗೆ ಕೋಪ ಉಕ್ಕಲಿಲ್ಲ - ಅದು ಬೇರೆ ವಿಷಯ). ಕೆನಡಾ: ತನ್ನ ಅತ್ಯಂತ ನಿಕಟ ನೆರೆಯ ದೇಶ ಕೆನಡಾ ಜೊತೆ ಅಮೆರಿಕದ ಸಂಬಂಧಗಳು ಇಂದು ತೀರಾ ಶಿಥಿಲ ಸ್ಥಿತಿಯಲ್ಲಿವೆ. ಒಮ್ಮೆ ಟ್ರಂಪ್, ಸಂಪೂರ್ಣ ಕೆನಡಾ ದೇಶವನ್ನು ಅಮೆರಿಕದ 51ನೇ ರಾಜ್ಯವಾಗಿಸಿ ಅಮೆರಿಕದ ಜೊತೆ ವಿಲೀನಗೊಳಿಸುತ್ತೇನೆ ಎಂದು ಬೆದರಿಕೆ ಒಡ್ಡಿದ್ದರು. ಅಮೆರಿಕದ ಜೊತೆ ವಿಲೀನಗೊಂಡರೆ ಕೆನಡಾದ ನಾಗರಿಕರಿಗೆ ಏನೆಲ್ಲಾ ಹೊಸ ಸವಲತ್ತುಗಳು ಸಿಗಲಿವೆ ಎಂಬುದನ್ನೂ ಪಟ್ಟಿ ಮಾಡಿದ್ದರು. ಇದನ್ನೆಲ್ಲಾ ಕೆನಡಾ ಅತ್ಯುಗ್ರವಾಗಿ ಪ್ರತಿಭಟಿಸಿತ್ತು. ಕೆನಡಾ, ತನ್ನ ದೇಶದ ಅಭಿವೃದ್ಧಿ ಯೋಜನೆಗಳಲ್ಲಿ ದೇಶದೊಳಗಿನ ಕಂಪೆನಿಗಳಿಗೆ ಪ್ರಾಶಸ್ತ್ಯ ನೀಡುವ ಧೋರಣೆಯನ್ನು ಘೋಷಿಸಿದಾಗ, ಇದು ಅಮೆರಿಕಕ್ಕೆ ಪ್ರತಿಕೂಲವಾದ ಧೋರಣೆ ಎನ್ನುತ್ತಾ, ಟ್ರಂಪ್ ಇದನ್ನು ಹಿಂದೆಗೆದುಕೊಳ್ಳಬೇಕೆಂದು ಕೆನಡಾದ ಮೇಲೆ ಒತ್ತಡ ಹೇರಿದರು. ಇದನ್ನು ತನ್ನ ಆಂತರಿಕ ವ್ಯವಹಾರಗಳಲ್ಲಿ ಹಸ್ತಕ್ಷೇಪವೆಂದು ಸಾರಿದ ಕೆನಡಾ ಸರಕಾರ ಇಂತಹ ವರ್ತನೆಯನ್ನು ತಾನೆಂದೂ ಸಹಿಸುವುದಿಲ್ಲ ಎಂದು ಸ್ಪಷ್ಟವಾಗಿ ಸಾರಿತು. ಕೆನಡಾದಿಂದ ಆಮದಾಗುವ ಸರಕುಗಳ ಮೇಲಿನ ತೆರಿಗೆಗಳನ್ನು ಹೆಚ್ಚಿಸಿದ ಟ್ರಂಪ್ ಕ್ರಮ ಕೂಡಾ ಉಭಯ ದೇಶಗಳ ನಡುವೆ ಉದ್ವಿಗ್ನತೆಯನ್ನು ಹೆಚ್ಚಿಸಿತು. ಟ್ರಂಪ್ ಧೋರಣೆಗಳಿಂದ ಬೇಸತ್ತ ಕೆನಡಾ ಶಾಶ್ವತವಾಗಿ ಎಲ್ಲ ರಂಗಗಳಲ್ಲೂ ಅಮೆರಿಕದ ಹಂಗಿನಿಂದ ಮುಕ್ತವಾಗಲು ನಿರ್ಧರಿಸಿ ಆ ನಿಟ್ಟಿನಲ್ಲಿ ಅನೇಕ ಪರಿಣಾಮಕಾರಿ ಕ್ರಮಗಳನ್ನು ಕೈಗೊಂಡಿತು. ಅದು ಜಗತ್ತಿನ ಹಲವಾರು ದೇಶಗಳ ಜೊತೆ, ವಿಶೇಷವಾಗಿ ಚೀನಾ ಜೊತೆ ಹೊಸ, ನಿರ್ಣಾಯಕ ಒಪ್ಪಂದಗಳನ್ನು ಮಾಡಿಕೊಂಡಿತು. ಮಾತ್ರವಲ್ಲ, ಕೆನಡಾ ಪ್ರಧಾನಿ ಮಾರ್ಕ್ ಕಾರ್ನಿ, ತನ್ನ ದೇಶವು ಈ ತನಕ ಅಮೆರಿಕದ ಜೊತೆ ಇಟ್ಟುಕೊಂಡಿದ್ದ ಮೈತ್ರಿ ಸಂಬಂಧವು ಒಂದು ದೌರ್ಬಲ್ಯವಾಗಿತ್ತು, ಮುಂದಿನ ದಿನಗಳಲ್ಲಿ ನಾವು ಅದನ್ನು ಸರಿಪಡಿಸುತ್ತೇವೆ ಎಂಬ ಕಟ್ಟೆಚ್ಚರವನ್ನೂ ಅಮೆರಿಕಕ್ಕೆ ನೀಡಿದರು. ಯುರೋಪಿಯನ್ ಯೂನಿಯನ್: ಟ್ರಂಪ್ ಯುಗದಲ್ಲಿ ಯುರೋಪಿನ ಹೆಚ್ಚಿನ ದೇಶಗಳ ಜೊತೆಗೂ ಅಮೆರಿಕದ ಸಂಬಂಧಗಳು ತೀವ್ರವಾಗಿ ಹದಗೆಟ್ಟಿವೆ. ಅಮೆರಿಕದ ಬಗ್ಗೆ ಯುರೋಪಿನ ಜನಾಭಿಪ್ರಾಯ ಕೂಡಾ ತುಂಬಾ ಪ್ರತಿಕೂಲವಾಗಿ ಬಿಟ್ಟಿದೆ. ಕಳೆದ ವರ್ಷ ನವೆಂಬರ್ನಲ್ಲಿ ‘ಯುರೋಪಿಯನ್ ಕೌನ್ಸಿಲ್ ಆನ್ ಫಾರೀನ್ ಅಫ್ಫೇರ್ಸ್’ (ECFR) ಸಂಸ್ಥೆಯು ಈ ಕುರಿತು ಯುರೋಪಿನ 13 ದೇಶಗಳಲ್ಲಿ ಒಂದು ಜನಾಭಿಪ್ರಾಯ ಸಮೀಕ್ಷೆ ನಡೆಸಿತು. ಯುರೋಪಿಯನ್ ಒಕ್ಕೂಟದಲ್ಲಿ ಅಮೆರಿಕವನ್ನು ಯುರೋಪಿನ ವಿಶ್ವಾಸಾರ್ಹ ಪಾಲುದಾರನಾಗಿ ಕಾಣುವವರ ಸಂಖ್ಯೆಯು ಶೇ. 16ಕ್ಕೆ ಕುಸಿದಿದೆ ಎಂಬುದು ಈ ಸಮೀಕ್ಷೆಯಿಂದ ಬಹಿರಂಗವಾಯಿತು. ತಾನು ಅಧ್ಯಕ್ಷನಾದರೆ ರಶ್ಯ ಮತ್ತು ಉಕ್ರೇನ್ ನಡುವೆ ನಡೆಯುತ್ತಿರುವ ಯುದ್ಧವನ್ನು 24 ಗಂಟೆಯೊಳಗೆ ನಿಲ್ಲಿಸಿ ಬಿಡುತ್ತೇನೆ ಎಂದು ಟ್ರಂಪ್ ತನ್ನ ಚುನಾವಣಾ ಸಭೆಗಳಲ್ಲಿ ಪದೇ ಪದೇ ಘೋಷಿಸಿದ್ದರು. ಆದರೆ ಅಧ್ಯಕ್ಷರಾಗಿ 15 ತಿಂಗಳು ಕಳೆದ ಬಳಿಕವೂ ಯುದ್ಧ ಇನ್ನಷ್ಟು ತೀವ್ರವಾಯಿತೇ ಹೊರತು ನಿಲ್ಲಲಿಲ್ಲ. ಇದರಿಂದ ನಿರಾಶರಾಗಿರುವ ಯುರೋಪ್ ಜನತೆ ಟ್ರಂಪ್ರಿಗೆ ಥೂಥೂ ಅನ್ನತೊಡಗಿದರು. ಡೆನ್ಮಾರ್ಕ್: ಒಂದು ಹಂತದಲ್ಲಿ ಟ್ರಂಪ್ ಅವರಿಗೆ ಜಗತ್ತಿನ ಅತಿದೊಡ್ಡ ದ್ವೀಪ ಗ್ರೀನ್ ಲ್ಯಾಂಡ್ನಲ್ಲಿರುವ ನೈಸರ್ಗಿಕ ಸಂಪನ್ಮೂಲಗಳನ್ನು ಕಬಳಿಸುವ ಆಶೆ ಉಂಟಾಯಿತು. ಅದಕ್ಕಾಗಿ ಅವರು ಡೆನ್ಮಾರ್ಕ್ ಸಾಮ್ರಾಜ್ಯದ ಜೊತೆ ವ್ಯವಹಾರ ಕುದುರಿಸುವ ಬದಲು ಗ್ರೀನ್ ಲ್ಯಾಂಡ್ ಅನ್ನು ಆಕ್ರಮಿಸುವ ಮತ್ತು ಡೆನ್ಮಾರ್ಕ್ ಕೈಯಿಂದ ಗ್ರೀನ್ ಲ್ಯಾಂಡ್ ಅನ್ನು ಖರೀದಿಸುವ ಕಿಡಿಗೇಡಿ ಮಾತುಗಳನ್ನು ಆಡತೊಡಗಿದರು. ಟ್ರಂಪ್ರ ಈ ವರಸೆ ಡೆನ್ಮಾರ್ಕ್ ಮತ್ತು ಅದರ ನೆರೆಯ ಕೆನಡಾ ಹಾಗೂ ಐಸ್ಲ್ಯಾಂಡ್ ಅನ್ನು ಮಾತ್ರವಲ್ಲ, ಸಂಪೂರ್ಣ ಯುರೋಪ್ ಅನ್ನು ಕೆರಳಿಸಿತು. ಎಂಟು ಯುರೋಪಿಯನ್ ದೇಶಗಳು ಡೆನ್ಮಾರ್ಕ್ ಅನ್ನು ಬೆಂಬಲಿಸಿ ಹಾಗೂ ಅಮೆರಿಕದ ಉದ್ಧಟ ಧೋರಣೆಯನ್ನು ಖಂಡಿಸಿ ಒಂದು ಜಂಟಿ ಹೇಳಿಕೆಯನ್ನು ಹೊರಡಿಸಿದವು. ನಾರ್ವೆ: ತಾನು ನೊಬೆಲ್ ಶಾಂತಿ ಪ್ರಶಸ್ತಿಯನ್ನು ಪಡೆಯುವುದಾಗಿ ಟ್ರಂಪ್ ಮುಂಗಡವಾಗಿಯೇ ಘೋಷಿಸಿದ್ದರು. ತಾನು ಯಾವುದೇ ಯುದ್ಧದಲ್ಲಿ ಪಾಲುಗೊಳ್ಳುವುದಿಲ್ಲ ಎಂಬುದನ್ನು ಅವರು ತನ್ನ ಪ್ರಮುಖ ಚುನಾವಣಾ ಘೋಷಣೆಯಾಗಿಸಿಕೊಂಡ ಉದ್ದೇಶವೂ ಅದೇ ಆಗಿತ್ತು. ಕಳೆದ ವರ್ಷ ಮತ್ತು ಈ ವರ್ಷದ ಆರಂಭದಲ್ಲಿ ಅವರು ನೊಬೆಲ್ ಪ್ರಶಸ್ತಿಗಾಗಿ ಭಾರೀ ಅಭಿಯಾನವನ್ನೂ ನಡೆಸಿದರು. ಈ ವರ್ಷವೂ ನೊಬೆಲ್ ಸಿಗದಿದ್ದಾಗ ಟ್ರಂಪ್ ಸಿಟ್ಟು ಹುಚ್ಚಿನ ರೂಪ ತಾಳಿತು. ನೊಬೆಲ್ ಪುರಸ್ಕಾರ ಯಾರಿಗೆ ಸಿಗಬೇಕೆಂಬುದನ್ನು ನಿರ್ಧರಿಸುವುದು ನಾರ್ವೆ ಸರಕಾರ ಅಲ್ಲ. ಅದಕ್ಕಾಗಿ ತಜ್ಞರ ಒಂದು ಪ್ರತ್ಯೇಕ, ಸ್ವತಂತ್ರ ಸಮಿತಿ ಇದೆ. ಆದರೆ ನಾರ್ವೆ ಸರಕಾರದ ವಿರುದ್ಧ ಕೆರಳಿದ ಟ್ರಂಪ್, ಜನವರಿ 18ರಂದು ಅಲ್ಲಿಯ ಪ್ರಧಾನಿಗೆ ಒಂದು ಸಂದೇಶವನ್ನು ಕಳಿಸಿದರು. ಅದರಲ್ಲಿ ಹೀಗಿತ್ತು: ‘‘ನಿಮ್ಮ ದೇಶವು ನನಗೆ ನೊಬೆಲ್ ಪ್ರಶಸ್ತಿಯನ್ನು ನೀಡಬಾರದೆಂದು ತೀರ್ಮಾನಿಸಿರುವುದರಿಂದ ನನಗೀಗ ಕೇವಲ ಶಾಂತಿಯ ಬಗ್ಗೆ ಚಿಂತಿಸಬೇಕೆಂಬ ಯಾವ ಬದ್ಧತೆಯೂ ಉಳಿದಿಲ್ಲ... ಗ್ರೀನ್ ಲ್ಯಾಂಡ್ ಮೇಲೆ ನಮ್ಮ ಸಂಪೂರ್ಣ ನಿಯಂತ್ರಣ ಸ್ಥಾಪನೆಯಾಗದೆ ಜಗತ್ತು ಸುರಕ್ಷಿತವಾಗಿ ಉಳಿಯುವುದಿಲ್ಲ.’’ ಪೋಲೆಂಡ್: ನೊಬೆಲ್ಗಾಗಿ ಟ್ರಂಪ್, ಪೋಲೆಂಡ್ ಸಹಿತ ವಿವಿಧ ದೇಶಗಳಿಂದ ಶಿಫಾರಸು ಪತ್ರವನ್ನು ಕೇಳಿದ್ದರು. ಪೋಲೆಂಡ್ ಟ್ರಂಪ್ ಅವರ ಮನವಿಯನ್ನು ಮುಲಾಜಿಲ್ಲದೆ ತಿರಸ್ಕರಿಸಿ ಬಿಟ್ಟಿತು. ಟ್ರಂಪ್ ಅವರ ವಿವಿಧ ಧೋರಣೆಗಳನ್ನು ಕಟುವಾಗಿ ಟೀಕಿಸಿದ್ದ ಪೋಲೆಂಡ್ ಸಂಸತ್ತಿನ ಸ್ಪೀಕರ್, ಯಾವ ಕಾರಣಕ್ಕೂ ಟ್ರಂಪ್ ನೊಬೆಲ್ ಪ್ರಶಸ್ತಿಗೆ ಅರ್ಹರಲ್ಲ ಎಂದು ವಾದಿಸಿದ್ದರು. ಇದರಿಂದ ಕೆರಳಿದ ಅಮೆರಿಕ, ಸ್ಪೀಕರ್ ಅವರು ಕ್ಷಮೆಯಾಚಿಸಬೇಕೆಂದು ಆಗ್ರಹಿಸಿತು. ಅವರು ಒಪ್ಪದಿದ್ದಾಗ ಅವರನ್ನು ಬಹಿಷ್ಕರಿಸುವುದಾಗಿ ಅಲ್ಲಿನ ಅಮೆರಿಕ ರಾಯಭಾರಿ ಘೋಷಿಸಿದರು. ಪೋಲೆಂಡ್ ಇದಾವುದನ್ನೂ ಲೆಕ್ಕಿಸಲಿಲ್ಲ. ಇರಾನ್ ಜೊತೆ ಯುದ್ಧದ ವೇಳೆ, ತನ್ನ ನೆಲ ಮತ್ತು ವಾಯುಪ್ರದೇಶವನ್ನು ಬಳಸಬಾರದೆಂದು ಪೋಲೆಂಡ್, ಅಮೆರಿಕಕ್ಕೆ ಸ್ಪಷ್ಟ ಆದೇಶ ನೀಡಿತು. ಹಂಗೇರಿ: ಹಂಗೇರಿಯ ಆಂತರಿಕ ವ್ಯವಹಾರಗಳಲ್ಲಿ ಹಸ್ತಕ್ಷೇಪ ನಡೆಸಿದ ಟ್ರಂಪ್, ಈ ತಿಂಗಳ ಪೂರ್ವಾರ್ಧದಲ್ಲಿ ಅಲ್ಲಿ ನಡೆದ ಸಂಸದೀಯ ಚುನಾವಣೆಯಲ್ಲಿ ಆಡಳಿತ ಪಕ್ಷಕ್ಕೆ ಬಹಿರಂಗ ಬೆಂಬಲ ಪ್ರಕಟಿಸಿದರು. ತಮ್ಮ ಉಪಾಧ್ಯಕ್ಷರನ್ನೂ ಹಂಗೇರಿಗೆ ಕಳಿಸಿಕೊಟ್ಟರು. ತಮ್ಮ ದೇಶದಲ್ಲಿ ಟ್ರಂಪ್ ನಡೆಸಿದ ಈ ಮಟ್ಟದ ಹಸ್ತಕ್ಷೇಪವು ಹಂಗೇರಿಯ ಜನತೆಗೆ ಸ್ವಲ್ಪವೂ ಇಷ್ಟವಾಗಲಿಲ್ಲ. ಪಾಪ, ಅಲ್ಲಿಯ ಪ್ರಧಾನಿ ವಿಕ್ಟರ್ ಒರ್ಬಾನ್ ಅವರು ಟ್ರಂಪ್ರಿಂದ ಬೆಂಬಲ ಪಡೆದ ತಪ್ಪಿಗಾಗಿ ಭಾರೀ ಬೆಲೆ ತೆರಬೇಕಾಯಿತು. 16 ವರ್ಷಗಳಿಂದ ಅಧಿಕಾರದಲ್ಲಿದ್ದ ಅವರು ಈ ಬಾರಿಯ ಚುನಾವಣೆಯಲ್ಲಿ ಹೀನಾಯ ಸೋಲನುಭವಿಸಿದರು. ಇರಾನ್ ಮೇಲೆ ದಾಳಿ ಮಾಡುವ ಮುನ್ನ ಟ್ರಂಪ್ ಆಗಲಿ ಇಸ್ರೇಲ್ ಆಗಲಿ ಯಾವುದೇ ಯುರೋಪಿಯನ್ ದೇಶವನ್ನು ಅಥವಾ ನೇಟೊ (NATO) ದೇಶವನ್ನು ವಿಶ್ವಾಸಕ್ಕೆ ತೆಗೆದುಕೊಂಡಿರಲಿಲ್ಲ. ಇರಾನ್ ಅನ್ನು ವಶಪಡಿಸಿಕೊಳ್ಳುವುದು ಕೇವಲ ಒಂದು ಗಂಟೆಯ ಕಾರ್ಯಾಚರಣೆ ಎಂದು ನಂಬಿದ್ದ ಟ್ರಂಪ್ಗೆ ಅಲ್ಲಿ ಹಲವು ದಿನಗಳ ತನಕ ಬೆನ್ನುಬೆನ್ನಿಗೆ ಮಾರಕ ಏಟು ಬೀಳತೊಡಗಿದಾಗ, ತಾನು ಆಳವಾದ ಕೆಸರಗುಂಡಿಯಲ್ಲಿ ಸಿಲುಕಿದ್ದೇನೆಂಬ ಅರಿವಾಯಿತು. ಅವರು ತನ್ನ ರಕ್ಷಣೆಗಾಗಿ ಬೇರೆ ಬೇರೆ ದೇಶಗಳ ಮೊರೆ ಹೋದರು. ಆದರೆ ಯಾವ ದೇಶವೂ ಆ ಕೆಸರಗುಂಡಿಗೆ ಬೀಳಲು ಒಪ್ಪಲಿಲ್ಲ. ಇದರಿಂದ ಕ್ರುದ್ಧರಾದ ಟ್ರಂಪ್ ಒಂದೊಂದೇ ದೇಶವನ್ನು ಮತ್ತು ಆ ದೇಶಗಳ ಆಡಳಿತಗಾರರನ್ನು ಹೆಸರಿಸಿ ಬಾಯಿಗೆ ಬಂದಂತೆ ಬಯ್ಯಲು, ನಿಂದಿಸಲು ಆರಂಭಿಸಿದರು. ಪರಿಣಾಮವಾಗಿ ಟ್ರಂಪ್ ವರ್ಚಸ್ಸು ಕುಸಿದದ್ದು ಮಾತ್ರವಲ್ಲ, ವಿವಿಧ ದೇಶಗಳು ಅಮೆರಿಕದ ಜೊತೆಗಿನ ತಮ್ಮ ಸಂಬಂಧಗಳ ಕುರಿತು ಮರುಪರಿಶೀಲನೆ ಆರಂಭಿದವು. ಯಾವ ಕಾರಣಕ್ಕೂ ತಾವು ಅಮೆರಿಕವನ್ನು ಅವಲಂಬಿಸಿರಬಾರದು ಎಂಬ ನಿರ್ಧಾರಕ್ಕೆ ಬಂದವು. ಈ ಮೂಲಕ ಅಂತರ್ರಾಷ್ಟ್ರೀಯ ಸಂಬಂಧಗಳ ಸಮೀಕರಣವು ದೊಡ್ಡದಾಗಿ ಬದಲಾಯಿತು. ಎಲ್ಲ ದೇಶಗಳೂ ತನ್ನ ಆದೇಶ ಪಾಲಿಸುವುದಕ್ಕೆ ಕಾಯುತ್ತಿವೆ ಎಂಬ ಟ್ರಂಪ್ ಅವರ ಅಹಂಕಾರದ ಭ್ರಮೆ ಪುಡಿಪುಡಿಯಾಯಿತು. ಸ್ಪೇನ್: ಸ್ಪೇನ್ ದೇಶದೊಳಗಿರುವ ಯಾವುದೇ ಅಮೆರಿಕ - ಸ್ಪೇನ್ ಜಂಟಿ ಸೇನಾನೆಲೆಯನ್ನು, ಹಾಗೆಯೇ, ಸ್ಪೇನ್ನ ವಾಯು ಪ್ರದೇಶವನ್ನು ಅಮೆರಿಕ, ಇರಾನ್ ವಿರುದ್ಧದ ತನ್ನ ಯುದ್ಧಕ್ಕೆ ಸಂಬಂಧಿಸಿದ ಯಾವುದೇ ಚಟುವಟಿಕೆಗಾಗಿ ಬಳಸುವಂತಿಲ್ಲ ಎಂದು ಸ್ಪೇನ್ ಸರಕಾರವು ಕಟ್ಟು ನಿಟ್ಟಿನ ನಿರ್ಬಂಧ ಹೇರಿತು. ಇಟಲಿ: ಇರಾನ್ ಜೊತೆಗಿನ ಯುದ್ಧದ ಅವಧಿಯಲ್ಲಿ ಅಮೆರಿಕದ ಯಾವುದೇ ಸೈನಿಕ ವಿಮಾನವು ಇಟಲಿಯಲ್ಲಿ ಇಳಿಯುವಂತಿಲ್ಲ ಎಂದು ಇಟಲಿ ಸರಕಾರವು ನಿಷೇಧ ಹೇರಿತು. ಒಂದು ಸಂದರ್ಭದಲ್ಲಿ ಒಂದು ಅಮೆರಿಕನ್ ಯುದ್ಧ ವಿಮಾನಕ್ಕೆ ಇಟಲಿಯಲ್ಲಿ ಇಳಿಯುವ ತುರ್ತು ಅಗತ್ಯವಿದೆ ಎಂಬ ಸಂದೇಶ ಬಂದಾಗ ಕೂಡಾ ಇಟಲಿ ಸರಕಾರವು ಅದಕ್ಕೆ ಅನುಮತಿ ನೀಡಲಿಲ್ಲ. ಇರಾನ್ನಲ್ಲಿ ಅಮೆರಿಕ ನಡೆಸಿದ ಕಾರ್ಯಾಚರಣೆಗಳನ್ನು ಖಂಡಿಸಿದ್ದ ಇಟಲಿ, ರೋಮ್ನ ಪೋಪ್ ಅವರ ವಿರುದ್ಧ ಟ್ರಂಪ್ ನೀಡಿದ ಹೇಳಿಕೆಗಳನ್ನು ಅತ್ಯುಗ್ರವಾಗಿ ವಿರೋಧಿಸಿತು. ಫ್ರಾನ್ಸ್: ಇರಾನ್ ವಿರುದ್ಧ ಯುದ್ಧದ ವೇಳೆ ಇಸ್ರೇಲ್ಗಾಗಿ ಶಸ್ತ್ರಾಸ್ತ್ರಗಳನ್ನು ಹೊತ್ತು ಸಾಗಿದ್ದ ಒಂದು ಅಮೆರಿಕನ್ ವಿಮಾನಕ್ಕೆ ಫ್ರಾನ್ಸ್, ತನ್ನ ವಾಯುಪ್ರದೇಶವನ್ನು ಪ್ರವೇಶಿಸದಂತೆ ನಿರ್ಬಂಧ ಹೇರಿತು. ಈ ವಿಷಯದಲ್ಲಿ ಅಮೆರಿಕದ ಎಲ್ಲ ಮನವಿಗಳನ್ನು ಫ್ರಾನ್ಸ್ ಅಧ್ಯಕ್ಷ ಇಮ್ಯಾನುವೆಲ್ ಮ್ಯಾಕ್ರೊನ್ ಅವರು ತಿರಸ್ಕರಿಸಿದರು. ಟ್ರಂಪ್ ಅವರು ತಮ್ಮ ಹತಾಶೆಯಲ್ಲಿ ಫ್ರಾನ್ಸ್ ಸರಕಾರವನ್ನು ಮತ್ತು ವ್ಯಕ್ತಿಗತವಾಗಿ ಮ್ಯಾಕ್ರೊನ್ರನ್ನು ಹಂಗಿಸುವ ಮಾತುಗಳನ್ನಾಡಿದಾಗ ಮ್ಯಾಕ್ರೊನ್ ಅಷ್ಟೇ ತೀಕ್ಷ್ಣವಾದ ಭಾಷೆಯಲ್ಲಿ ಅದಕ್ಕೆ ಉತ್ತರ ನೀಡಿದರು. ಕೊನೆಗೆ ರಾಜತಾಂತ್ರಿಕ ಮಾತುಕತೆಗಾಗಿ ಇರಾನ್ ನ ಮನವೊಲಿಸುವಂತೆ ಟ್ರಂಪ್, ಮ್ಯಾಕ್ರೊನ್ರ ಕಾಲು ಹಿಡಿಯಬೇಕಾಯಿತು. ಜರ್ಮನಿ: ಹಾರ್ಮುಝ್ ಜಲಸಂಧಿಯನ್ನು ಮಿಲಿಟರಿ ಕಾರ್ಯಾಚರಣೆಯ ಮೂಲಕ ತೆರವುಗೊಳಿಸುವುದಾಗಿ ಘೋಷಿಸಿದ ಅಮೆರಿಕ, ಆ ನಿಟ್ಟಿನಲ್ಲಿ ತನಗೆ ನೆರವಾಗಲು ಯುದ್ಧ ನೌಕೆಗಳನ್ನು ಕಳಿಸಿ ಕೊಡಬೇಕೆಂದು ಜರ್ಮನಿಯ ಸರಕಾರವನ್ನು ಬೇಡಿಕೊಂಡಿತು. ಇದಕ್ಕೆ ಜರ್ಮನಿಯ ಉತ್ತರ ತುಂಬಾ ನೇರ ಮತ್ತು ಸರಳವಾಗಿತ್ತು: ‘‘ಇದು ನಮ್ಮ ಯುದ್ಧ ಅಲ್ಲ. ಈ ಯುದ್ಧವನ್ನು ನಾವು ಆರಂಭಿಸಲಿಲ್ಲ.’’ ಆಸ್ಟ್ರಿಯಾ: ಅಮೆರಿಕ, ಇರಾನ್ ವಿರುದ್ಧ ಯುದ್ಧದ ವೇಳೆ ಆಸ್ಟ್ರಿಯಾದ ವಾಯುಪ್ರದೇಶವನ್ನು ಬಳಸುವುದಕ್ಕೆ ಅನುಮತಿ ಕೇಳಿತ್ತು. ತನ್ನ ತಟಸ್ಥ ವಿದೇಶಿ ನೀತಿಯನ್ನು ಮುಂದಿಟ್ಟ ಆಸ್ಟ್ರಿಯಾ, ಅದನ್ನು ಉಲ್ಲಂಘಿಸಲು ತನಗೆ ಸಾಧ್ಯವಿಲ್ಲ ಎನ್ನುತ್ತಾ ಜಾರಿಕೊಂಡು ಟ್ರಂಪ್ರ ಹುಚ್ಚನ್ನು ಹೆಚ್ಚಿಸಿತು. ಬ್ರಿಟನ್: ಆರಂಭದಲ್ಲಿ ಬ್ರಿಟನ್ ತನ್ನ ದೇಶದಲ್ಲಿರುವ ನೆಲೆಗಳನ್ನು ಇರಾನ್ ವಿರುದ್ಧ ಯುದ್ಧದಲ್ಲಿ ಬಳಸಿಕೊಳ್ಳಲು ಅಮೆರಿಕಕ್ಕೆ ಅನುಮತಿ ನೀಡಿದರೂ ಯುದ್ಧದಲ್ಲಿ ಶಾಮೀಲಾಗಲು ಒಪ್ಪಲಿಲ್ಲ. ತಾನು ಅಂತರ್ರಾಷ್ಟ್ರೀಯ ನಿಯಮಗಳನ್ನು ಪಾಲಿಸುವುದಕ್ಕೆ ಬದ್ಧನಾಗಿರುವುದಾಗಿ ಘೋಷಿಸಿದ ಪ್ರಧಾನಿ ಕೇರ್ ಸ್ಟಾರ್ಮರ್ ಅವರು ಟ್ರಂಪ್ ಬಳಿ ಯುದ್ಧಕ್ಕೆ ಸಂಬಂಧಿಸಿದ ಯಾವುದೇ ಸ್ಪಷ್ಟ ಯೋಜನೆಯಾಗಲಿ, ಮಾರ್ಗಸೂಚಿಯಾಗಲಿ ಇಲ್ಲ ಎಂದು ಟೀಕಿಸಿದರು. ಬಹುತೇಕ ಎಲ್ಲ ನೇಟೊ ಸದಸ್ಯ ರಾಷ್ಟ್ರಗಳ ದ್ವೇಷ ಕಟ್ಟಿಕೊಂಡ ಟ್ರಂಪ್, ಜಪಾನ್ ಮತ್ತು ದಕ್ಷಿಣ ಕೊರಿಯಾದ ಬಗ್ಗೆ ಕೂಡಾ ತೀವ್ರ ನಿರಾಸೆಯನ್ನು ಪ್ರಕಟಿಸಿದ್ದಾರೆ. ಕೊಲ್ಲಿಯ ದೇಶಗಳು, ಅಮೆರಿಕ ಆರಂಭಿಸಿದ ಯುದ್ಧದಲ್ಲಿ ತಮಗೆ ಆದ ಅಪಾರ ನಷ್ಟಕ್ಕಾಗಿ ಅಮೆರಿಕದ ಬಳಿ ಪರಿಹಾರ ಕೇಳತೊಡಗಿದ್ದಾರೆ. ಆರ್ಥಿಕ, ವಾಣಿಜ್ಯ, ತಂತ್ರಜ್ಞಾನ ಮತ್ತು ಮಿಲಿಟರಿ ಅಗತ್ಯಗಳಿಗಾಗಿ ಚೀನಾ ಮತ್ತು ರಶ್ಯದ ಕಡೆ ವಾಲುತ್ತಿರುವ ದೇಶಗಳ ಸಂಖ್ಯೆ ಹೆಚ್ಚುತ್ತಿದೆ. ಅಮೆರಿಕದೊಳಗೆ ಟ್ರಂಪ್ ವಿರುದ್ಧ ಬಂಡಾಯ ಬಲಪಡೆಯುತ್ತಿದೆ. ಅಮೆರಿಕ ಒಂದು ದೊಡ್ಡ ಆರ್ಥಿಕ ಹಾಗೂ ಮಿಲಿಟರಿ ಶಕ್ತಿ ಎಂಬ ವಿಷಯದಲ್ಲಿ ಯಾರಿಗೂ ಭಿನ್ನತೆ ಇಲ್ಲ. ಆದರೆ ಜಗತ್ತಿನೆಲ್ಲೆಡೆ ಅಮೆರಿಕ ಏಕಸ್ವಾಮ್ಯದ ವಿರುದ್ಧ ಪ್ರತಿರೋಧ ಹೆಚ್ಚಿದೆ. ಪ್ರಾಬಲ್ಯದ ನಿಯಮಗಳು ಬದಲಾಗುತ್ತಿವೆ. ಸಂಬಂಧ-ಸಮೀಕರಣಗಳು ಹೊಸ ರೂಪ ತಾಳಿವೆ. ನೂತನ ತಂತ್ರಜ್ಞಾನ, ತಂತ್ರಗಾರಿಕೆಗಳು ತಲೆಯೆತ್ತುತ್ತಿವೆ. ಇರಾನ್ - ಅಮೆರಿಕ ಘರ್ಷಣೆಯು, ಅಮೆರಿಕದ ಪಾಲಿಗೆ ಪ್ರತಿಕೂಲವಾದ ಈ ಎಲ್ಲ ಅಂಶಗಳ ಕಡೆಗೆ ಜಗತ್ತಿನ ಗಮನ ಸೆಳೆದಿದೆ. ಒಂದು ದೊಡ್ಡ ಹಡಗು ಅಷ್ಟು ಸುಲಭವಾಗಿ ಹಠಾತ್ತನೆ ಮುಳುಗಿ ಬಿಡುವುದಿಲ್ಲ. ಹಡಗು ಮುಳುಗತೊಡಗಿದೆ ಎಂಬುದು ದಡದಲ್ಲಿರುವವರಿಗೆ ತಿಳಿಯುವುದೂ ಇಲ್ಲ. ಮುಳುಗುವ ಪ್ರಕ್ರಿಯೆಯು ನಿಧಾನವಾಗಿ, ಮೌನವಾಗಿ ಆರಂಭಗೊಂಡು ಒಂದು ಹಂತದ ಬಳಿಕ ಕ್ಷಿಪ್ರವಾಗತೊಡಗುತ್ತದೆ. ಅಮೆರಿಕದ ಮಟ್ಟಿಗೆ ಮುಳುಗುವ ಪ್ರಕ್ರಿಯೆ ಆರಂಭವಾಗಿದೆ ಎಂಬುದರಲ್ಲಿ ಸಂಶಯವಿಲ್ಲ. ಸಂಪೂರ್ಣ ಮುಳುಗಡೆ ಎಷ್ಟು ಸಮಯ ತೆಗೆದುಕೊಳ್ಳಲಿದೆ ಎಂಬುದು ಮಾತ್ರ ಸದ್ಯ ಚರ್ಚಾ ವಿಷಯವಾಗಿದೆ.
Tamil Nadu Assembly Election 2026: ದ್ರಾವಿಡ ರಾಜಕಾರಣದ ಭದ್ರಕೋಟೆ ತಮಿಳುನಾಡಿನಲ್ಲಿ ಈ ಬಾರಿ ಚುನಾವಣಾ ಕಣ ಹಿಂದೆಂದಿಗಿಂತಲೂ ಕುತೂಹಲ ಕೆರಳಿಸಿದೆ. ಅತಿರಥ ಮಹಾರಥರ ನಡುವೆ ಈ ಬಾರಿ ಸಿನಿಮಾ ರಂಗದ ಸೂಪರ್ಸ್ಟಾರ್ ದಳಪತಿ ವಿಜಯ್ ಅವರ ರಾಜಕೀಯ ಪ್ರವೇಶ ಹೊಸ ಸಂಚಲನ ಮೂಡಿಸಿದೆ. ಹಾಗಾದ್ರೆ ಇವರಿಗೆ ಯಾವೆಲ್ಲ ಪಕ್ಷಗಳಿಂದ ತೀವ್ರ ಪೈಪೋಟಿ ಇದೆ ಎನ್ನುವ ಮಾಹಿತಿಯನ್ನು
KCET Exam 2026: ರಾಜ್ಯಾದ್ಯಂತ ಇಂದಿನಿಂದ ಸಿಇಟಿ ಪರೀಕ್ಷೆ ಆರಂಭ
ರಾಜ್ಯಾದ್ಯಂತ ವೃತ್ತಿಪರ ಕೋರ್ಸ್ಗಳ ಪ್ರವೇಶಾತಿಗೆ ನಡೆಸುವ ಸಾಮಾನ್ಯ ಪ್ರವೇಶ ಪರೀಕ್ಷೆ (KCET Exam 2026) ಇಂದಿನಿಂದ (ಏಪ್ರಿಲ್ 23) ಆರಂಭವಾಗಿದೆ. ಎಂಜಿನಿಯರಿಂಗ್, ಕೃಷಿ ವಿಜ್ಞಾನ, ಪಶುವೈದ್ಯಕೀಯ, ಫಾರ್ಮಸಿ ಸೇರಿದಂತೆ ವಿವಿಧ ಕೋರ್ಸ್ಗಳಿಗೆ ಪ್ರವೇಶ ಪಡೆಯಲು ಲಕ್ಷಾಂತರ ವಿದ್ಯಾರ್ಥಿಗಳು ಈ ಪರೀಕ್ಷೆ ಬರೆಯುತ್ತಿದ್ದಾರೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಪರೀಕ್ಷೆಯನ್ನು ಸುಗಮವಾಗಿ ನಡೆಸಲು ಎಲ್ಲಾ ರೀತಿಯ ಸಕಲ ಸಿದ್ಧತೆ ಮಾಡಿಕೊಂಡಿದೆ.
ಇಂದು ಮಧ್ಯಾಹ್ನ 12ಕ್ಕೆ ಎಸ್ಎಸ್ಎಲ್ಸಿ ಫಲಿತಾಂಶ ಪ್ರಕಟ: ಶಿಕ್ಷಣ ಇಲಾಖೆಯಿಂದ ಅಧಿಕೃತ ಘೋಷಣೆ!
ಬೆಂಗಳೂರು: ರಾಜ್ಯದ ಲಕ್ಷಾಂತರ ವಿದ್ಯಾರ್ಥಿಗಳು ಮತ್ತು ಪೋಷಕರು ಕಾತುರದಿಂದ ಕಾಯುತ್ತಿದ್ದ ಎಸ್ಎಸ್ಎಲ್ಸಿ (SSLC) ಪರೀಕ್ಷೆಯ ಫಲಿತಾಂಶ ಇಂದು (ಏಪ್ರಿಲ್ 23, 2026) ಮಧ್ಯಾಹ್ನ 12 ಗಂಟೆಗೆ ಪ್ರಕಟವಾಗಲಿದೆ. ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಸುದ್ದಿಗೋಷ್ಠಿ ನಡೆಸಿ ಅಧಿಕೃತವಾಗಿ ಫಲಿತಾಂಶವನ್ನು ಬಿಡುಗಡೆ ಮಾಡಲಿದ್ದು, ರಾಜ್ಯದ ಒಟ್ಟು 2,870 ಕೇಂದ್ರಗಳಲ್ಲಿ ಪರೀಕ್ಷೆ ಬರೆದಿದ್ದ 8.65 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯ ಇಂದು ನಿರ್ಧಾರವಾಗಲಿದೆ. ಫಲಿತಾಂಶದ ನಂತರ ವಿದ್ಯಾರ್ಥಿಗಳು ಇಲಾಖೆಯ ಅಧಿಕೃತ ವೆಬ್ಸೈಟ್ಗಳಲ್ಲಿ ತಮ್ಮ ಅಂಕಪಟ್ಟಿಗಳನ್ನು ವೀಕ್ಷಿಸಬಹುದಾಗಿದೆ. ಈ […] The post ಇಂದು ಮಧ್ಯಾಹ್ನ 12ಕ್ಕೆ ಎಸ್ಎಸ್ಎಲ್ಸಿ ಫಲಿತಾಂಶ ಪ್ರಕಟ: ಶಿಕ್ಷಣ ಇಲಾಖೆಯಿಂದ ಅಧಿಕೃತ ಘೋಷಣೆ! first appeared on Vistara News .

36 C