ಸಾಮಾಜಿಕ ಬಹಿಷ್ಕಾರ ನಿಷೇಧ ವಿಧೇಯಕಕ್ಕೆ ರಾಜ್ಯಪಾಲರ ಅಂಕಿತ
ಸಾಮಾಜಿಕ ಬಹಿಷ್ಕಾರ ವಿಧಿಸುವ ಅಪರಾಧಿಗೆ 3 ವರ್ಷಗಳ ಜೈಲು ಶಿಕ್ಷೆ, 1 ಲಕ್ಷ ರೂ. ದಂಡ
Blinkit ಗಿಗ್ ಕಾರ್ಮಿಕರೊಂದಿಗೆ ದಿನ ಕಳೆದ ರಾಜ್ಯಸಭಾ ಸಂಸದ
ಹೊಸದಿಲ್ಲಿ: ರಾಜ್ಯಸಭಾ ಸಂಸದ ರಾಘವ್ ಚಡ್ಡಾ ಒಂದು ದಿನದ ಮಟ್ಟಿಗೆ ಬ್ಲಿಂಕಿಟ್ ವಿತರಣಾ ರೈಡರ್ ಆಗಿ ಕೆಲಸ ಮಾಡುವ ಅನುಭವವನ್ನು ಪಡೆದಿದ್ದಾರೆ. ಈ ಸಂಬಂಧ ಅವರು ತಮ್ಮ ಎಕ್ಸ್ ಖಾತೆಯಲ್ಲಿ ‘ಸ್ಟೇ ಟ್ಯೂನ್ಡ್’ ಎಂಬ ಸಂದೇಶದೊಂದಿಗೆ ಟೀಸರ್ ವೀಡಿಯೊವನ್ನು ಹಂಚಿಕೊಂಡಿದ್ದಾರೆ. Away from boardrooms, at the grassroots. I lived their day. Stay tuned! pic.twitter.com/exGBNFGD3T — Raghav Chadha (@raghav_chadha) January 12, 2026 ವೀಡಿಯೊದಲ್ಲಿ ಬ್ಲಿಂಕಿಟ್ ಟಿ–ಶರ್ಟ್ ಹಾಗೂ ಜಾಕೆಟ್ ಧರಿಸಿರುವ ಚಡ್ಡಾ, ವಿತರಣಾ ರೈಡರ್ ಔನಿಂದ ಡೆಲಿವರಿ ಬ್ಯಾಗ್ ಸ್ವೀಕರಿಸುವುದು ಕಾಣುತ್ತದೆ. ಬಳಿಕ ಅವರು ವಿತರಣಾ ಪಾಲುದಾರರೊಂದಿಗೆ ಸ್ಕೂಟರ್ನಲ್ಲಿ ಹಿಂಬದಿ ಸವಾರಿ ಮಾಡುತ್ತಾರೆ. ವಸ್ತುಗಳನ್ನು ಸಂಗ್ರಹಿಸಲು ಅಂಗಡಿಯಲ್ಲಿ ನಿಲ್ಲುವುದು, ನಂತರ ವಿತರಣಾ ಸ್ಥಳದತ್ತ ತೆರಳುವ ದೃಶ್ಯಗಳೂ ವೀಡಿಯೊದಲ್ಲಿವೆ. ಗ್ರಾಹಕರ ಮನೆ ಬಾಗಿಲಿನ ಬಳಿ ರೈಡರ್ ಲಿಫ್ಟ್ನಿಂದ ಹೊರಬಂದು ಕರೆಗಂಟೆ ಒತ್ತುವಾಗ ಚಡ್ಡಾ ಅವರನ್ನು ನಿಕಟವಾಗಿ ಹಿಂಬಾಲಿಸುತ್ತಾರೆ. ವೀಡಿಯೊ ‘ಸ್ಟೇ ಟ್ಯೂನ್ಡ್’ ಎಂಬ ಪದಗಳೊಂದಿಗೆ ಕ್ಲಿಫ್ಹ್ಯಾಂಗರ್ನಲ್ಲಿ ಅಂತ್ಯಗೊಳ್ಳುತ್ತದೆ. ಈ ಪೋಸ್ಟ್ಗೆ ಚಡ್ಡಾ, “ಬೋರ್ಡ್ ರೂಮ್ಗಳಿಂದ ದೂರ, ತಳಮಟ್ಟದಲ್ಲಿ. ನಾನು ಅವರೊಂದಿಗೆ ಒಂದು ದಿನ ಕಳೆದೆ. ಟ್ಯೂನ್ ಆಗಿರಿ,” ಎಂದು ಶೀರ್ಷಿಕೆ ನೀಡಿದ್ದಾರೆ. ಗಿಗ್ ಹಾಗೂ ಡೆಲಿವರಿ ಪ್ಲಾಟ್ಫಾರ್ಮ್ ಕಾರ್ಮಿಕರು ಎದುರಿಸುತ್ತಿರುವ ಕಡಿಮೆ ವೇತನ, ದೀರ್ಘ ಕೆಲಸದ ಅವಧಿ ಮತ್ತು ಸಾಮಾಜಿಕ ಭದ್ರತೆಯ ಕೊರತೆ ಕುರಿತು ಚಡ್ಡಾ ಇತ್ತೀಚೆಗೆ ಸಂಸತ್ತಿನಲ್ಲಿ ಪ್ರಶ್ನೆ ಎತ್ತಿದ್ದರು. ಈ ಹಿನ್ನೆಲೆಯಲ್ಲೇ ಅವರ ಈ ಕ್ರಮ, ರಾಜಕೀಯ ಮತ್ತು ಸಾಮಾಜಿಕ ವಲಯಗಳಲ್ಲಿ ಚರ್ಚೆಗೆ ಕಾರಣವಾಗಿದೆ. ಡಿಸೆಂಬರ್ 2025ರಲ್ಲಿ ಬ್ಲಿಂಕಿಟ್ ವಿತರಣಾ ಕಾರ್ಯನಿರ್ವಾಹಕರೊಬ್ಬರು ತಮ್ಮ ಆದಾಯದ ಕುರಿತು ಹಂಚಿಕೊಂಡ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಗಿತ್ತು. ಸಂಸತ್ತಿನ ಚಳಿಗಾಲದ ಅಧಿವೇಶನದ ನಂತರ, ಉತ್ತರಾಖಂಡದ ಥಪ್ಲಿಯಾಲ್ ಜಿ ಎಂದು ಗುರುತಿಸಲಾದ ಡೆಲಿವರಿ ಬಾಯ್ ಅವರನ್ನು ಚಡ್ಡಾ ತಮ್ಮ ನಿವಾಸಕ್ಕೆ ಊಟಕ್ಕೆ ಆಹ್ವಾನಿಸಿದ್ದರು.
ಉಡುಪಿ: ಕಾಪು ತಾಲೂಕು ನಡ್ಸಾಲು ಗ್ರಾಮದ ಬಾಡಿಗೆ ಮನೆಯೊಂದರಲ್ಲಿ ವಾಸವಿದ್ದ ಮಲ್ಲಿಕಾ (34) ಎಂಬ ಮಹಿಳೆ ಜನವರಿ 05 ರಂದು ತನ್ನ ತಾಯಿ ಮನೆಯಾದ ರಾಮನಗರಕ್ಕೆ ಹೋಗುವುದಾಗಿ ಹೇಳಿ ಹೋದವರು, ತಾಯಿ ಮನೆಗೂ ಹೋಗದೇ, ವಾಪಾಸು ಮನೆಗೂ ಬಾರದೇ ನಾಪತ್ತೆಯಾಗಿದ್ದಾರೆ. 5 ಅಡಿ ಎತ್ತರ, ಬಿಳಿ ಮೈಬಣ್ಣ, ಸಪೂರ ಶರೀರ ಹೊಂದಿದ್ದು, ಕನ್ನಡ, ತುಳು, ಮರಾಠಿ ಹಾಗೂ ಮಲಯಾಳಂ ಭಾಷೆ ಮಾತನಾಡುತ್ತಾರೆ. ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಪಡುಬಿದ್ರಿ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರು ಮೊ.ನಂ: 0820-2555452, ಮೊ.ನಂ: 9480805450, ಕಾಪು ಪೊಲೀಸ್ ವೃತ್ತ ನಿರೀಕ್ಷಕರು ದೂ.ಸಂಖ್ಯೆ: 0820-2552133, ಮೊ.ನಂ: 9480805431 ಹಾಗೂ ಪೊಲೀಸ್ ಕಂಟ್ರೋಲ್ ರೂಂ ದೂ. ಸಂಖ್ಯೆ;0820-2525444ಅನ್ನು ಸಂಪರ್ಕಿಸಬಹುದು ಎಂದು ಪಡುಬಿದ್ರಿ ಪೊಲೀಸ್ ಠಾಣೆಯ ಉಪನಿರೀಕ್ಷಕರು ಪ್ರಕಟಣೆ ತಿಳಿಸಿದೆ.
ಬೆಂಗಳೂರು : ರಾಮಮೂರ್ತಿನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸಂಭವಿಸಿದ್ದ ಮಂಗಳೂರು ಮೂಲದ ಯುವತಿ ಶರ್ಮಿಳಾ ನಿಗೂಢ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಫೋಟಕ ತಿರುವು ಸಿಕ್ಕಿದೆ. ಆರಂಭದಲ್ಲಿ ನಿಗೂಢ ಸಾವು ಎಂದು ಪರಿಗಣಿಸಲಾಗಿದ್ದ ಈ ಪ್ರಕರಣ, ಪೊಲೀಸರ ತನಿಖೆ ವೇಳೆ ಹತ್ಯೆಯೆಂದು ದೃಢಪಟ್ಟಿದೆ. ಶರ್ಮಿಳಾ ಕೊಲೆಯಾಗಿರುವುದು ತನಿಖೆಯಿಂದ ದೃಢಪಟ್ಟಿದ್ದು, ಕರ್ಣಲ್ ಕುರೈ(18) ಎಂಬಾತನೇ ಈ ಕೃತ್ಯ ಎಸಗಿರುವುದಾಗಿ ಬಯಲಾಗಿದೆ. ಸುಬ್ರಮಣ್ಯ ಲೇಔಟ್ನಲ್ಲಿ ಶರ್ಮಿಳಾ ವಾಸವಿದ್ದ ಮನೆಯ ಎದುರು ಮನೆಯಲ್ಲಿ ನೆಲೆಸಿದ್ದ ಕರ್ಣಲ್ ಕುರೈ, ಶರ್ಮಿಳಾರನ್ನು ಪ್ರೀತಿಸುತ್ತಿದ್ದ. ಆದರೆ, ಈ ವಿಷಯ ಶರ್ಮಿಳಾಗೆ ತಿಳಿದಿರಲಿಲ್ಲ ಎನ್ನಲಾಗಿದೆ. ಜನವರಿ 3ರಂದು ರಾತ್ರಿ 9 ಗಂಟೆಗೆ ಶರ್ಮಿಳಾರ ಮನೆಗೆ ಕರ್ಣಲ್ ನುಗ್ಗಿದ್ದಾನೆ. ಮನೆಯೊಳಗೆ ಪ್ರವೇಶಿಸುತ್ತಿದ್ದಂತೆ ಆತ ಏಕಾಏಕಿ ಶರ್ಮಿಳಾಳನ್ನು ತಬ್ಬಿಕೊಂಡು ಅನುಚಿತವಾಗಿ ವರ್ತಿಸಲಾರಂಭಿಸಿದ್ದಾನೆ. ಇದರಿಂದ ಆಕ್ರೋಶಗೊಂಡ ಶರ್ಮಿಳಾ, ಆತನನ್ನು ತಳ್ಳಿ ದೂರ ಸರಿಯಲು ಯತ್ನಿಸಿದ್ದಾರೆ. ಅದಕ್ಕೆ ಕೋಪಗೊಂಡ ಆರೋಪಿ, ಶರ್ಮಿಳಾ ಮೇಲೆ ಹಲ್ಲೆ ನಡೆಸಿ, ಬಳಿಕ ತಲೆದಿಂಬಿನಿಂದ ಉಸಿರುಗಟ್ಟಿಸಿ ಕ್ರೂರವಾಗಿ ಹತ್ಯೆ ಮಾಡಿದ್ದಾನೆ. ಘಟನೆ ಬಳಿಕ ಯಾರಿಗೂ ಅನುಮಾನ ಬಾರದಂತೆ ಮೃತ ಶರ್ಮಿಳಾ ಮಲಗಿದ್ದ ಬೆಡ್ ರೂಂಗೆ ಬೆಂಕಿ ಹಚ್ಚಿ ಸ್ಥಳದಿಂದ ಪರಾರಿಯಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಈ ಕುರಿತು ರಾಮಮೂರ್ತಿನಗರ ಪೊಲೀಸ್ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದಾಗ ಮೊದಲಿಗೆ ಕೊಲೆ ಎನ್ನುವ ರೀತಿ ಯಾವುದೇ ಅನುಮಾನ ಬಂದಿರಲಿಲ್ಲ. ಆದರೆ, ಶರ್ಮಿಳಾ ಮೃತಪಟ್ಟ ಮೂರು ದಿನಗಳ ಬಳಿಕ ಆಕೆಯ ಮೊಬೈಲ್ ಆನ್ ಆಗಿತ್ತು. ಆ ಮೊಬೈಲ್ನ ಟವರ್ ಲೊಕೇಶನ್ ಪರಿಶೀಲಿಸಿದಾಗ ಶರ್ಮಿಳಾ ವಾಸವಿದ್ದ ಮನೆಯ ಪಕ್ಕದ ಮನೆ ತೋರಿಸಿತ್ತು. ತಕ್ಷಣ ಆರೋಪಿ ಕರ್ಣಲ್ ಕುರೈನನ್ನು ವಶಕ್ಕೆ ಪಡೆದು, ತೀವ್ರ ವಿಚಾರಣೆ ನಡೆಸಿದಾಗ ಸತ್ಯ ಬಾಯ್ಬಿಟ್ಟಿದ್ದಾನೆ ಎಂದು ಪೊಲೀಸರು ವಿವರಿಸಿದ್ದಾರೆ. ಮಂಗಳೂರು ಮೂಲದ ಶರ್ಮಿಳಾ, ಎರಡು ವರ್ಷಗಳಿಂದ ರಾಮಮೂರ್ತಿ ನಗರದ ಸುಬ್ರಮಣ್ಯ ಲೇಔಟ್ನಲ್ಲಿ ವಾಸವಾಗಿದ್ದರು. ಅವರು ನಗರದ ಖಾಸಗಿ ಕಂಪೆನಿಯೊಂದರಲ್ಲಿ ಸಾಫ್ಟ್ವೇರ್ ಉದ್ಯೋಗಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಆರಂಭದಲ್ಲಿ, ಮನೆಗೆ ಬೆಂಕಿ ಬಿದ್ದಿದ್ದರಿಂದ ಉಸಿರುಗಟ್ಟಿ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿತ್ತು.
ಉಡುಪಿ: ಗಣರಾಜ್ಯೋತ್ಸವ ಸಿದ್ಧತೆಗೆ ಪೂರ್ವಭಾವಿ ಸಭೆ
ಉಡುಪಿ: ಪ್ರತೀ ವರ್ಷದಂತೆ ಈ ಬಾರಿಯೂ ಜನವರಿ 26 ರಂದು ನಡೆಯಲಿರುವ ಜಿಲ್ಲಾ ಮಟ್ಟದ ಗಣರಾಜ್ಯೋತ್ಸವ ಕಾರ್ಯಕ್ರಮವನ್ನು ಅತ್ಯಂತ ವಿಜೃಂಭಣೆಯಿಂದ ಅರ್ಥಪೂರ್ಣವಾಗಿ ಆಯೋಜಿಸಲು ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಸೂಚನೆಗಳನ್ನು ನೀಡಿದ್ದಾರೆ. ಸೋಮವಾರ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಗಣರಾಜ್ಯೋತ್ಸವ ಆಚರಣೆ ಕುರಿತ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು. ಜಿಲ್ಲಾ ಮಟ್ಟದ ಗಣರಾಜ್ಯೋತ್ಸವ ದಿನಾಚರಣೆ ಜ.26ರಂದು ನಗರದ ಅಜ್ಜರಕಾಡು ಮಹಾತ್ಮ ಗಾಂಧೀ ಜಿಲ್ಲಾ ಕ್ರೀಡಾಂಗಣದಲ್ಲಿ ಬೆಳಗ್ಗೆ 8:30ಕ್ಕೆ ಆರಂಭವಾಗಲಿದೆ. 8:30ರಿಂದ 8:50ರವರೆಗೆ ದೇಶ ಭಕ್ತಿಗೀತೆ, ನಂತರ ಹುತಾತ್ಮ ಯೋಧರಿಗೆ ಗೌರವ ಸಮರ್ಪಣೆ ನಡೆಯಲಿದೆ. ಬೆಳಗ್ಗೆ 9:00ಕ್ಕೆ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಆರ್. ಹೆಬ್ಬಾಳ್ಕರ್ ಅವರು ಧ್ವಜಾರೋಹಣ ನೆರವೇರಿಸಿ, ಗೌರವ ರಕ್ಷೆ ಸ್ವೀಕಾರ ಮಾಡಿ ಗಣರಾಜ್ಯೋತ್ಸವ ಸಂದೇಶ ನೀಡಲಿದ್ದಾರೆ. ನಂತರ ಶಾಲಾ- ಕಾಲೇಜು ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿವೆ ಎಂದರು. ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪೊಲೀಸ್, ಅರಣ್ಯ, ಗೃಹ ರಕ್ಷಕ, ಎನ್ಸಿಸಿ, ಸ್ಕೌಟ್ ಮತ್ತು ಗೈಡ್ಸ್, ಸೇವಾದಳ ಸೇರಿದಂತೆ ವಿವಿಧ ಶಾಲಾ ವಿದ್ಯಾರ್ಥಿಗಳಿಂದ ಪಥಸಂಚಲನ ನಡೆಯಲಿದೆ. ಇದಕ್ಕಾಗಿ ಮೂರು ದಿನ ಮುಂಚಿತವಾಗಿ ಪೂರ್ವ ತಯಾರಿ ಮಾಡಿಕೊಳ್ಳಬೇಕು. ವೇದಿಕೆಯ ಸಿದ್ಧತೆ, ಸ್ವಾತಂತ್ರ್ಯ ಹೋರಾಟಗಾರರು, ಗಣ್ಯರು ಹಾಗೂ ಇತರರು ಆಸೀನರಾಗಲು ಪ್ರತ್ಯೇಕ ಆಸನ ವ್ಯವಸ್ಥೆ, ಧ್ವನಿವರ್ಧಕ, ಕುಡಿಯುವ ನೀರಿನ ವ್ಯವಸ್ಥೆ, ಸಿಹಿತಿಂಡಿ ವಿತರಣೆ, ಆಂಬುಲೆನ್ಸ್ ನಿಯೋಜನೆ ಸೇರಿದಂತೆ ಮೂಲ ಸೌಕರ್ಯ ಒದಗಿಸಲು ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಅಗತ್ಯ ಕ್ರಮ ವಹಿಸಬೇಕು ಎಂದರು. ಗಣರಾಜ್ಯೋತ್ಸವ ಆಚರಣೆಗೆ ಸಂಬಂಧಪಟ್ಟಂತೆ ಸ್ವಾಗತ, ನಿರೂಪಣೆ, ಶಿಷ್ಟಾಚಾರ ಹಾಗೂ ವೇದಿಕೆ ಸಮಿತಿ, ಪೆರೇಡ್ ಸಮಿತಿ, ಸಾಂಸ್ಕೃತಿಕ ಕಾರ್ಯಕ್ರಮಗಳ ಸಮಿತಿ ಸೇರಿದಂತೆ ವಿವಿಧ ಸಮಿತಿಗಳನ್ನು ರಚಿಸಲಾಗಿದ್ದು, ಆಯಾ ಸಮಿತಿಯಲ್ಲಿರುವ ಅಧಿಕಾರಿಗಳು ತಮಗೆ ವಹಿಸಿದ ಜವಾಬ್ದಾರಿಯನ್ನು ಸರಿಯಾಗಿ ನಿರ್ವಹಿಸಬೇಕು ಎಂದು ತಿಳಿಸಿದರು. ಭಾರತದ ಸಂವಿಧಾನ ಆಚರಣೆಯ ಪ್ರತೀಕವಾಗಿರುವ ಭಾರತದ ಗಣರಾಜ್ಯೋತ್ಸವ ದಿನಾಚರಣೆಯ ಜಿಲ್ಲಾ ಮಟ್ಟದ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಆಚರಿಸಲು ವಿವಿಧ ಇಲಾಖೆಗಳು ಸಮನ್ವಯತೆಯಿಂದ ಕಾರ್ಯನಿರ್ವಹಿಸಬೇಕು. ಎಲ್ಲರೂ ತಮ್ಮ ಜವಾಬ್ದಾರಿಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿ, ಯಾವುದೇ ಲೋಪವಾಗದಂತೆ ಎಚ್ಚರ ವಹಿಸಬೇಕು ಎಂದರು. ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸುಧಾಕರ್ ನಾಯಕ್, ನಗರಸಭೆ ಪೌರಾಯುಕ್ತ ಮಹಾಂತೇಶ ಹಂಗರಗಿ, ವಿವಿಧ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಇತರರು ಉಪಸ್ಥಿತ ರಿದ್ದರು.
ಬಳ್ಳಾರಿ | ಜ.12ರಿಂದ ವಾಣಿಜ್ಯ ಪರೀಕ್ಷೆ; ಪರೀಕ್ಷಾ ಕೇಂದ್ರದ ಸುತ್ತ ನಿಷೇಧಾಜ್ಞೆ ಜಾರಿ : ಜಿಲ್ಲಾಧಿಕಾರಿ ಆದೇಶ
ಬಳ್ಳಾರಿ, ಜ.12 : ನಗರದ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯಲ್ಲಿ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ವತಿಯಿಂದ ಜನವರಿ 12ರಿಂದ 20ರವರೆಗೆ ವಾಣಿಜ್ಯ ಪರೀಕ್ಷೆಗಳು ನಡೆಯಲಿವೆ. ಪರೀಕ್ಷೆಗಳ ಸುಸೂತ್ರ ಹಾಗೂ ಪಾರದರ್ಶಕ ನಿರ್ವಹಣೆಯ ದೃಷ್ಟಿಯಿಂದ, ಪರೀಕ್ಷಾ ಕೇಂದ್ರದ ಸುತ್ತಲಿನ 200 ಮೀಟರ್ ವ್ಯಾಪ್ತಿಯ ಪ್ರದೇಶವನ್ನು ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ–2023ರ ಕಲಂ 163ರಡಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ನಿಷೇಧಿತ ಪ್ರದೇಶವೆಂದು ಘೋಷಿಸಿ, ಜಿಲ್ಲಾ ದಂಡಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್ ಕೆ. ಅವರು ಆದೇಶ ಹೊರಡಿಸಿದ್ದಾರೆ. ಪರೀಕ್ಷಾ ಕೇಂದ್ರಗಳ ಸುತ್ತಮುತ್ತ ಇರುವ ಜೆರಾಕ್ಸ್ ಸೆಂಟರ್ಗಳು ಹಾಗೂ ಇಂಟರ್ನೆಟ್ ಸೆಂಟರ್ಗಳನ್ನು ಪರೀಕ್ಷಾ ಅವಧಿಯಲ್ಲಿ ಕಾರ್ಯನಿರ್ವಹಿಸದಂತೆ ನಿರ್ಬಂಧ ವಿಧಿಸಲಾಗಿದೆ. ಜೊತೆಗೆ, ನಿಷೇಧಿತ ಪ್ರದೇಶದಲ್ಲಿ ಅನಧಿಕೃತ ವ್ಯಕ್ತಿಗಳು ಹಾಗೂ ವ್ಯಕ್ತಿಗಳ ಗುಂಪುಗಳಿಗೆ ಪ್ರವೇಶವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಆದರೆ ಈ ಆದೇಶವು ಪರೀಕ್ಷಾ ಮೇಲ್ವಿಚಾರಣಾ ಕಾರ್ಯದಲ್ಲಿ ನಿರತರಾಗಿರುವ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ಅನ್ವಯಿಸುವುದಿಲ್ಲ ಎಂದು ಜಿಲ್ಲಾಧಿಕಾರಿಗಳು ತಮ್ಮ ಆದೇಶದಲ್ಲಿ ಸ್ಪಷ್ಟಪಡಿಸಿದ್ದಾರೆ.
ಹೈಕೋರ್ಟ್ ಕಟ್ಟಡಕ್ಕೆ ಭೂಮಿ ಮಂಜೂರಾತಿಗೆ ಕೋರಿ ಪಿಐಎಲ್; ರಾಜ್ಯ ಸರಕಾರ, ರಿಜಿಸ್ಟ್ರಾರ್ ಜನರಲ್ಗೆ ನೋಟಿಸ್
ಬೆಂಗಳೂರು : ರಾಜ್ಯ ಹೈಕೋರ್ಟ್ನ ಹೊಸ ಕಟ್ಟಡ ಸಂಕೀರ್ಣ ನಿರ್ಮಾಣಕ್ಕಾಗಿ ನಗರದ ಕೇಂದ್ರ ಭಾಗದಲ್ಲಿ 30 ಎಕರೆ ಅಥವಾ ಅದಕ್ಕಿಂತ ಅಧಿಕ ಭೂಮಿ ನೀಡಲು ನಿರ್ದೇಶನ ಕೋರಿ ಸಲ್ಲಿಕೆಯಾಗಿರುವ ಅರ್ಜಿ ಸಂಬಂಧ ರಾಜ್ಯ ಸರಕಾರ ಮತ್ತು ರಿಜಿಸ್ಟ್ರಾರ್ ಜನರಲ್ಗೆ ಹೈಕೋರ್ಟ್ ನೋಟಿಸ್ ಜಾರಿಗೊಳಿಸಿದೆ. ಬೆಂಗಳೂರಿನ ಶರಣ್ ದೇಸಾಯಿ ಎಂಬುವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಕುರಿತು ಸೋಮವಾರ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಹಾಗೂ ನ್ಯಾಯಮೂರ್ತಿ ಸಿ.ಎಂ. ಪೂಣಚ್ಚ ಅವರಿದ್ದ ವಿಭಾಗೀಯ ನ್ಯಾಯಪೀಠ, ಪ್ರತಿವಾದಿಗಳಿಗೆ ನೋಟಿಸ್ ಜಾರಿಗೊಳಿಸಿ ವಿಚಾರಣೆಯನ್ನು ಮಾರ್ಚ್ 23ಕ್ಕೆ ಮುಂದೂಡಿತು. ಇದಕ್ಕೂ ಮುನ್ನ ಖುದ್ದು ವಾದ ಮಂಡಿಸಿದ ಅರ್ಜಿದಾರರು, ಇತ್ತೀಚೆಗೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಹೈಕೋರ್ಟ್ನ ನೂತನ ಸಂಕೀರ್ಣ ನಿರ್ಮಾಣ ಮಾಡಲು ನಗರದ ಸೆಂಟ್ರಲ್ ಬಿಸಿನೆಸ್ ಜಿಲ್ಲೆಯಲ್ಲಿ(ಸಿಬಿಡಿ) ಭೂಮಿ ಮಂಜೂರು ಮಾಡುವ ಬಗ್ಗೆ ಹೇಳಿಕೆ ನೀಡಿದ್ದಾರೆ ಎಂದು ನ್ಯಾಯಪೀಠಕ್ಕೆ ತಿಳಿಸಿದರು. ಕಬ್ಬನ್ ಪಾರ್ಕ್ನಲ್ಲಿ 2025ರ ಅಕ್ಟೋಬರ್ 26ರಂದು ನಡೆದ 'ವಾಕ್ ವಿತ್ ಬೆಂಗಳೂರು' ನಾಗರಿಕ ಸಂಪರ್ಕ ಕಾರ್ಯಕ್ರಮದ ಸಂದರ್ಭದಲ್ಲಿ ಶಿವಕುಮಾರ್ ಅವರು ಪ್ರಸ್ತುತ ಹೈಕೋರ್ಟ್ ಆವರಣದಲ್ಲಿ ಸ್ಥಳಾವಕಾಶದ ಕೊರತೆ ಇದೆ. ಆದ್ದರಿಂದ, ಕರ್ನಾಟಕ ಹೈಕೋರ್ಟನ್ನು ಹೊಸ ಮತ್ತು ದೊಡ್ಡ ಸ್ಥಳಕ್ಕೆ ಸ್ಥಳಾಂತರಿಸುವ ಸಾಧ್ಯತೆಯನ್ನು ಸರಕಾರ ಪರಿಶೀಲಿಸುತ್ತಿದೆ ಎಂದು ಹೇಳಿದ್ದರೆಂದು ವರದಿಯಾಗಿತ್ತು.
ಬಳ್ಳಾರಿ | ದೇಶದ ಪ್ರಗತಿ ಯುವ ಸಮುದಾಯದ ಕೊಡುಗೆಯ ಮೇಲೆ ಅವಲಂಬಿತ : ಜಯಚಂದ್ರ ರೆಡ್ಡಿ
ಬಳ್ಳಾರಿ, ಜ.12: ಯಾವುದೇ ಒಂದು ರಾಷ್ಟ್ರದ ಅಭಿವೃದ್ಧಿ ಮತ್ತು ಪ್ರಗತಿಯು ಅಲ್ಲಿನ ಯುವ ಸಮುದಾಯದ ಕೊಡುಗೆಯನ್ನು ಅವಲಂಬಿಸಿರುತ್ತದೆ ಎಂದು ಐಡಿಪಿಎಸ್ ಸ್ವತಂತ್ರ ಪದವಿ ಪೂರ್ವ ಕಾಲೇಜಿನ ಅಧ್ಯಕ್ಷರಾದ ಜಯಚಂದ್ರ ರೆಡ್ಡಿ ಅವರು ಅಭಿಪ್ರಾಯಪಟ್ಟರು. ಭಾರತ ಸರ್ಕಾರದ 'ಮೇರಾ ಯುವ ಭಾರತ' ಹಾಗೂ ಐಡಿಪಿಎಸ್ ಸ್ವತಂತ್ರ ಪದವಿ ಪೂರ್ವ ಕಾಲೇಜಿನ ಸಂಯುಕ್ತಾಶ್ರಯದಲ್ಲಿ ನಗರದ ಕಾಲೇಜು ಆವರಣದಲ್ಲಿ ಸೋಮವಾರ ಆಯೋಜಿಸಿದ್ದ 'ಸ್ವಾಮಿ ವಿವೇಕಾನಂದರ 164ನೇ ಜಯಂತಿ' ಹಾಗೂ 'ರಾಷ್ಟ್ರೀಯ ಯುವ ದಿನ' ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ದೇಶವು ಅಭಿವೃದ್ಧಿಯ ಪಥದಲ್ಲಿ ಸಾಗಲು ಯುವಶಕ್ತಿ ಬಹಳ ಮುಖ್ಯ. ಯುವ ಸಮೂಹದ ಶಕ್ತಿ ಮತ್ತು ಸಾಮರ್ಥ್ಯದ ಬಗ್ಗೆ ಇಡೀ ವಿಶ್ವಕ್ಕೆ ಸಾರಿ ಹೇಳಿದವರಲ್ಲಿ ಸ್ವಾಮಿ ವಿವೇಕಾನಂದರು ಮೊದಲಿಗರು. ಅವರ ವಿಚಾರಧಾರೆಗಳು ಇಂದಿಗೂ ಪ್ರಸ್ತುತ ಎಂದು ಅವರು ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ತಿಪ್ಪಾರೆಡ್ಡಿ ಮಾತನಾಡಿ, ದೇಶದ ಉನ್ನತಿ ಯುವಕರಿಂದ ಮಾತ್ರ ಸಾಧ್ಯ ಎಂದು ನಂಬಿದ್ದ ವಿವೇಕಾನಂದರು, ತಮ್ಮ ಚಿಂತನೆಗಳ ಮೂಲಕ ಯುವಕರನ್ನು ಒಗ್ಗೂಡಿಸಲು ಶ್ರಮಿಸಿದರು. ಯುವಕರ ಪಾಲಿನ ಸ್ಫೂರ್ತಿಯ ಚಿಲುಮೆಯಾಗಿರುವ ಅವರ ಜನ್ಮದಿನದ ಸವಿ ನೆನಪಿಗಾಗಿ ಪ್ರತಿವರ್ಷ ಜನವರಿ 12 ರಂದು 'ರಾಷ್ಟ್ರೀಯ ಯುವ ದಿನ'ವನ್ನು ಆಚರಿಸಲಾಗುತ್ತದೆ ಎಂದರು. ಈ ಸಂದರ್ಭದಲ್ಲಿ ಐಡಿಪಿಎಸ್ ಕಾಲೇಜಿನ ಶಿವಪ್ರಸಾದ್, ಎ.ಜಿ.ಎಂ ವೆಂಕಟಕೃಷ್ಣ ಸೇರಿದಂತೆ ಕಾಲೇಜಿನ ಬೋಧಕ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.
ಈ ಹೆದ್ದಾರಿಗೆ ಬೆಂಗಳೂರು-ಅಮರಾವತಿ ಎಕ್ಸ್ಪ್ರೆಸ್ ಎಂದು ಹೆಸರಿಡಲು ಆಂಧ್ರ ಸಿಎಂ ಮನವಿ
ಬೆಂಗಳೂರು-ಕಡಪ-ವಿಜಯವಾಡ ಎಕನಾಮಿಕ್ ಕಾರಿಡಾರ್ ಹೆದ್ದಾರಿ ಯೋಜನೆಯು ಗಿನ್ನಿಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ನಲ್ಲಿ ನಾಲ್ಕು ದಾಖಲೆಗಳನ್ನು ತನ್ನದಾಗಿಸಿಕೊಂಡಿದೆ. ಈ ಸಾಧನೆಯ ಹಿನ್ನೆಲೆಯಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಮತ್ತು ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ವರ್ಚುವಲ್ ಮೂಲಕ ಭಾಗವಹಿಸಿ ಯೋಜನೆಗೆ ಕೈಜೋಡಿಸಿದ ಎಲ್ಲ ಅಧಿಕಾರಿಗಳು, ಇಂಜಿನಿಯರ್ಗಳು
ಕೇಂದ್ರ ಸರಕಾರದಿಂದ ನರೇಗಾ ಕಾಯ್ದೆ ವಿರೂಪಗೊಳಿಸುವ ಹುನ್ನಾರ : ಸಂಸದ ಜಿ.ಕುಮಾರ ನಾಯಕ
ರಾಯಚೂರು : ನರೇಗಾ ಕಾಯ್ದೆಯನ್ನು ವಿರೂಪಗೊಳಿಸಿರುವ ಕೇಂದ್ರ ಸರ್ಕಾರ ಕೂಲಿ ಕಾರ್ಮಿಕರ ದುಡಿಯುವ ಹಕ್ಕನ್ನು ಕಸಿದುಕೊಂಡಿದೆ. ಸಂವಿಧಾನದ ಆಶಯಕ್ಕೆ ವಿರುದ್ಧವಾಗಿದೆ ಎಂದು ಸಂಸದ ಜಿ.ಕುಮಾರನಾಯಕ ದೂರಿದರು. ಸೋಮವಾರ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಅವರು, ನೂರು ದಿನ ಉದ್ಯೋಗ ಖಾತ್ರಿ ಯೋಜನೆಯನ್ನು 125 ದಿನಗಳಿಗೆ ಹೆಚ್ಚಿಸುವುದಾಗಿ ಸಮರ್ಥಿಸಿಕೊಳ್ಳುವ ಕೇಂದ್ರ ಸರ್ಕಾರ ವರ್ಷವಿಡಿ ಉದ್ಯೋಗ ದೊರೆಯುವುದನ್ನು ತಡೆದಿದೆ. ಅಲ್ಲದೇ ಬೇಡಿಕೆ ಆಧಾರದ ಯೋಜನೆಯನ್ನು ಅವಶ್ಯಕತೆ ಆಧಾರದ ಮೇಲೆ ರೂಪಿತಗೊಳಿಸಿರುವುದು ಕಾರ್ಮಿಕರಿಗೆ ಉದ್ಯೋಗ ಖಾತ್ರಿ ಇಲ್ಲದಂತೆ ಮಾಡಿದೆ ಎಂದರು. ಸಂಸದೀಯ ಮಂಡಳಿಯ ಶಿಫಾರಸ್ಸುಗಳನ್ನು ಕಡೆಗಣಿಸಿ ಹೊಸ ಮಸೂದೆ ರೂಪಿಸಿ ಉದ್ಯೋಗ ಖಾತ್ರಿ ಯೋಜನೆಗೆ ಇದ್ದ ಘನತೆಗೆ ಕುಂದು ತರುವ ಪ್ರಯತ್ನವಾಗಿದೆ. ಯುಪಿಎ ಸರ್ಕಾರದ ಅವಧಿಯಲ್ಲಿ ಉದ್ಯೋಗ ಖಾತ್ರಿ, ಮಾಹಿತಿ ಹಕ್ಕು, ಶಿಕ್ಷಣ ಹಕ್ಕು ಕಾಯ್ದೆಯನ್ನು ರೂಪಿಸಿರುವ ಕ್ರಾಂತಿಕಾರಿ ಹೆಜ್ಜೆಯನ್ನು ಎನ್ಡಿಎ ಸರ್ಕಾರ ದಿಕ್ಕುತಪ್ಪಿಸುವ ಕಾರ್ಪೋರೇಟ್ ವಲಯಕ್ಕೆ ಪೂರಕವಾಗುವ ಚಿಂತನೆ ಹೊಂದಿದೆ. ರಾಮನ ಕುರಿತು ತುಟಿ ಪ್ರೀತಿ ತೋರಿಸುವ ಸರ್ಕಾರ ಜನರ ಹೃದಯದಲ್ಲಿರುವ ರಾಮನನ್ನು ಕಡೆಗಣಿಸಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ನಗರ ವಿಧಾನಸಭಾ ಕ್ಷೇತ್ರದ ಪರಾಜಿತ ಅಭ್ಯರ್ಥಿ ಮುಹಮ್ಮದ್ ಶಾಲಂ, ಪಾಲಿಕೆಯ ಸದಸ್ಯ ಜಯಣ್ಣ, ಕಾಂಗ್ರೆಸ್ ಮುಖಂಡ ರವಿಬೋಸರಾಜ, ಕೆ.ಶಾಂತಪ್ಪ, ಜಯವಂತರಾವ ಪತಂಗೆ, ಎನ್.ಶ್ರೀನಿವಾಸರೆಡ್ಡಿ, ಜಿ.ಶಿವಮೂರ್ತಿ, ಅಮರೇಗೌಡ ಹಂಚಿನಾಳ, ಯುವ ಕಾಂಗ್ರೆಸ್ ಅಧ್ಯಕ್ಷ ಮರಿಸ್ವಾಮಿ ಗಟ್ಟುಬಿಚ್ಚಾಲಿ ಸೇರಿದಂತೆ ಅನೇಕರಿದ್ದರು.
ಜನಾರ್ದನ ರೆಡ್ಡಿ ಜತೆ ಬಿಜೆಪಿ ಕೈಜೋಡಿಸಿದ್ದೇಕೆ? : ಎಂ.ಬಿ.ಪಾಟೀಲ್
ಬೆಂಗಳೂರು : ‘ಅಕ್ರಮ ಗಣಿಗಾರಿಕೆಯ ಮೂಲಕ ಕುಖ್ಯಾತಿ ಗಳಿಸಿದಂತಹ ಗಾಲಿ ಜನಾರ್ದನ ರೆಡ್ಡಿ ಅವರನ್ನು ಬಿಜೆಪಿ ಹೊರ ಹಾಕಿತ್ತು. ಇದೀಗ ಅವರ ಜೊತೆಯಲ್ಲೆ ಕೈಜೋಡಿಸಿದ್ದು ಏಕೆ?. ರೆಡ್ಡಿ ಬಳಿ ಇರುವ ದುಡ್ಡಿಗಾಗಿಯೇ? ಅಥವಾ ಅಕ್ರಮ ಗಣಿಗಾರಿಕೆಯ ಪಾಲುದಾರಿಕೆಗಾಗಿಯೇ?’ ಎಂದು ಬೃಹತ್ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಪ್ರಶ್ನಿಸಿದ್ದಾರೆ. ಸೋಮವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಜನಾರ್ದನ ರೆಡ್ಡಿ ಮತ್ತವರ ಬೆಂಬಲಿಗರು ಆಕ್ರಮ ಗಣಿಗಾರಿಕೆ ಮಾಡಿದ್ದಕ್ಕಾಗಿ ಬಿಜೆಪಿ ಅವರನ್ನು ಹೊರ ಹಾಕಿತ್ತು. ಈಗ ರೆಡ್ಡಿಯ ಬೆಂಬಲಕ್ಕೆ ಬಿಜೆಪಿ ನಾಯಕರು ನಿಲ್ಲುತ್ತಿದ್ದು, ಇದರ ಗೂಡಾರ್ಥ ಜನರಿಗೆ ಅರ್ಥವಾಗುತ್ತದೆ ಎಂದು ಟೀಕಿಸಿದರು. ಈ ಹಿಂದೆ ಅಕ್ರಮ ಗಣಿಗಾರಿಕೆ ವಿರೋಧಿಸಿ ಕಾಂಗ್ರೆಸ್ ಪಕ್ಷ ಬೆಂಗಳೂರಿನಿಂದ ಬಳ್ಳಾರಿಯ ವರೆಗೂ ಪಾದಯಾತ್ರೆ ಮಾಡಿತ್ತು. ಈಗ ಬಿಜೆಪಿ ಯಾವ ಕಾರಣಕ್ಕೂ ಪಾದಯಾತ್ರೆ ಮಾಡುತ್ತಿದೆ. ಬಳ್ಳಾರಿ ಬ್ಯಾನರ್ ಗಲಾಟೆ ಇಬ್ಬರು ವ್ಯಕ್ತಿಗಳ ನಡುವಿನ ಜಗಳ. ಅದಕ್ಕಾಗಿ ಪಾದಯಾತ್ರೆ ಮಾಡುವುದು ಉಚಿತವೇ? ಎಂದು ಎಂ.ಬಿ.ಪಾಟೀಲ್ ಕೇಳಿದರು. ಜನಾರ್ದನ ರೆಡ್ಡಿ ಸಚಿವರಾಗಿದ್ದಾಗ ತಮ ದುರಾಸೆಗಾಗಿ ‘ರಿಪಬ್ಲಿಕ್ ಆಫ್ ಬಳ್ಳಾರಿ’ ಮಾಡಿಕೊಂಡಿದ್ದರು. ರಾಜ್ಯದ ಗಡಿಯನ್ನೇ ಧ್ವಂಸ ಮಾಡಿ ಅಕ್ರಮ ಗಣಿಗಾರಿಕೆ ಮಾಡಿದ್ದರು. ಗಣಿಗಾರಿಕೆ ನಡೆಸುವವರಿಂದ ಪಾಲು ಪಡೆಯುತ್ತಿದ್ದರು. ಅರಣ್ಯದಲ್ಲೂ ಗಣಿಗಾರಿಕೆ ಮಾಡಿದ ಅರೋಪಕ್ಕೆ ಗುರಿಯಾಗಿದ್ದರು ಎಂದು ಅವರು ವಾಗ್ದಾಳಿ ನಡೆಸಿದರು. ಉದ್ಯೋಗ ಖಾತರಿ ಯೋಜನೆ ವಿಚಾರವಾಗಿ ಕೇಂದ್ರ ಸಚಿವ ಕುಮಾರಸ್ವಾಮಿ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಅವರೊಂದಿಗೆ ಬಹಿರಂಗ ಚರ್ಚೆಗೆ ಬರಲಿ. ಯಾವುದಾದರೂ ಸಭಾಂಗಣದಲ್ಲಿ ಚರ್ಚೆ ನಡೆಯಲಿ. ಕುಮಾರಸ್ವಾಮಿ ಬಹಿರಂಗ ಚರ್ಚೆಗೆ ಬರಲು ಸಿದ್ದರಿದ್ದಾರೆಯೇ? ಎಂದು ಪಾಟೀಲ್ ಸವಾಲು ಹಾಕಿದರು.
ಬಳ್ಳಾರಿ | ವಿವೇಕಾನಂದರು ಇಡೀ ವಿಶ್ವಕ್ಕೆ ಮಾದರಿ: ಪ್ರೊ.ರಾಬರ್ಟ್ ಜೋಸ್
164ನೇ ಸ್ವಾಮಿ ವಿವೇಕಾನಂದರ ಜನ್ಮ ದಿನಾಚರಣೆ
Mangaluru | ವಲಸೆ ಕಾರ್ಮಿಕನ ಮೇಲೆ ಹಲ್ಲೆ: ಕಠಿಣ ಕ್ರಮಕ್ಕೆ ಸಿಐಟಿಯು ಅಗ್ರಹ
ಮಂಗಳೂರು: ಕಾವೂರು ಪೊಲೀಸ್ ಠಾಣಾ ವ್ಯಾಪ್ತಿಯ ಕೂಳೂರು ಬಳಿ ಜಾರ್ಖಂಡ್ ಮೂಲದ ವಲಸೆ ಕಾರ್ಮಿಕನ ಮೇಲೆ ನಡೆದ ಜನಾಂಗೀಯ ಹಲ್ಲೆಯನ್ನು ಸಿಐಟಿಯು ದ.ಕ ಜಿಲ್ಲಾ ಸಮಿತಿ ಖಂಡಿಸಿದೆ. ಸಂಘ ಪರಿವಾರ ದೇಶದಲ್ಲಿ ಹಬ್ಬಿಸುವ ಸುಳ್ಳು ಸುದ್ದಿಗಳನ್ನು ಸಂಘಿ ಮನಸ್ಥಿತಿಯ ತಳಮಟ್ಟದ ಕಾರ್ಯಕರ್ತರು ಯಾವ ರೀತಿಯಲ್ಲಿ ಸ್ವೀಕರಿಸುತ್ತಾರೆ ಎಂಬುದಕ್ಕೆ ಕೂಳೂರಿನ ಈ ಘಟನೆ ಸಾಕ್ಷಿಯಾಗಿದೆ. ತಕ್ಷಣ ಪೊಲೀಸ್ ಇಲಾಖೆಯು ಜನಾಂಗೀಯ ದಾಳಿ ನಡೆಸಿದ ಹಲ್ಲೆ ಆರೋಪಿಗಳನ್ನು ತಕ್ಷಣ ಬಂಧಿಸಬೇಕು. ಸರಕಾರ ಕೂಡ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ವಲಸೆ ಕಾರ್ಮಿಕರನ್ನು ರಕ್ಷಣೆ ಮಾಡಲು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸಿಐಟಿಯು ಜಿಲ್ಲಾ ಉಪಾಧ್ಯಕ್ಷ ಬಿ.ಕೆ. ಇಮ್ತಿಯಾಝ್ ಒತ್ತಾಯಿಸಿದ್ದಾರೆ.
ಟೆಕ್ಕಿಗಳಿಗೆ ಶಾಕ್ ನೀಡಿದ ಟಾಟಾ ಕಂಪನಿ, ಮೂರೇ ತಿಂಗಳಲ್ಲಿ 11,151 ಉದ್ಯೋಗಿಗಳಿಗೆ ಗೇಟ್ಪಾಸ್!
ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ ಡಿಸೆಂಬರ್ ತ್ರೈಮಾಸಿಕದಲ್ಲಿ 11,151 ಉದ್ಯೋಗಿಗಳನ್ನು ಕಡಿತಗೊಳಿಸಿದೆ. ತಂತ್ರಜ್ಞಾನ ಬದಲಾವಣೆ ಮತ್ತು ವೆಚ್ಚ ಕಡಿತದ ಕಾರಣದಿಂದ ಈ ಕ್ರಮ ಕೈಗೊಳ್ಳಲಾಗಿದೆ. ಆದಾಗ್ಯೂ, ಇದೇ ವೇಳೆ ಎಚ್ಸಿಎಲ್ ಟೆಕ್ 261 ಹೊಸ ಉದ್ಯೋಗಿಗಳನ್ನು ಸೇರಿಸಿಕೊಂಡಿದೆ.
ಹೊಸದಿಲ್ಲಿ, ಜ.12: ಮಹಾರಾಷ್ಟ್ರ ನವನಿರ್ಮಾಣ ಸೇನೆ (MNS) ಮುಖ್ಯಸ್ಥ ರಾಜ್ ಠಾಕ್ರೆ ಅವರ ‘ರಸ್ಮಲೈ’ ಟೀಕೆಗೆ ಪ್ರತಿಕ್ರಿಯಿಸಿರುವ ಭಾರತೀಯ ಜನತಾ ಪಕ್ಷದ (ಬಿಜೆಪಿ) ನಾಯಕ ಕೆ. ಅಣ್ಣಾಮಲೈ, “ಮುಂಬೈಗೆ ಬರುತ್ತೇನೆ; ನನ್ನ ಕಾಲುಗಳನ್ನು ಕತ್ತರಿಸಲು ಪ್ರಯತ್ನಿಸಿ” ಎಂದು ಸವಾಲು ಹಾಕಿದ್ದಾರೆ. ಚೆನ್ನೈನಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಂಬೈಗೆ ಬಂದರೆ ಕಾಲು ಕತ್ತರಿಸುವುದಾಗಿ ಕೆಲವರು ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿದರು. “ನನ್ನನ್ನು ಬೆದರಿಸಲು ಆದಿತ್ಯ ಠಾಕ್ರೆ ಮತ್ತು ರಾಜ್ ಠಾಕ್ರೆ ಯಾರು? ನಾನು ರೈತನ ಮಗನಾಗಿರುವುದಕ್ಕೆ ಹೆಮ್ಮೆಪಡುತ್ತೇನೆ. ಇಂತಹ ಬೆದರಿಕೆಗಳಿಗೆ ನಾನು ಹೆದರಿದ್ದರೆ ಹಳ್ಳಿಯಲ್ಲಿಯೇ ಉಳಿದಿರುತ್ತಿದ್ದೆ. ನಾನು ಮುಂಬೈಗೆ ಬರುತ್ತೇನೆ,” ಎಂದು ಅಣ್ಣಾಮಲೈ ಹೇಳಿದರು. “ಕಾಮರಾಜ್ ಭಾರತದ ಶ್ರೇಷ್ಠ ನಾಯಕರಲ್ಲಿ ಒಬ್ಬರು ಎಂದರೆ ಅವರು ತಮಿಳರಲ್ಲವೇ? ಮುಂಬೈ ವಿಶ್ವದರ್ಜೆಯ ನಗರ ಎಂದರೆ ಮಹಾರಾಷ್ಟ್ರೀಯರು ಅದನ್ನು ನಿರ್ಮಿಸಲಿಲ್ಲವೇ? ಇಂತಹ ಮಾತುಗಳು ಅಜ್ಞಾನವನ್ನು ತೋರಿಸುತ್ತವೆ,” ಎಂದರು. ಇದಕ್ಕೂ ಒಂದು ದಿನ ಮೊದಲು ಮುಂಬೈನಲ್ಲಿ ನಡೆದ ಯುಬಿಟಿ–ಎಂಎನ್ಎಸ್ ಜಂಟಿ ರ್ಯಾಲಿಯಲ್ಲಿ ರಾಜ್ ಠಾಕ್ರೆ, “ತಮಿಳುನಾಡಿನಿಂದ ಒಬ್ಬ ‘ರಸ್ಮಲೈ’ ಬಂದಿದ್ದಾನೆ. ಇಲ್ಲಿಗೂ ನಿಮಗೂ ಏನು ಸಂಬಂಧ?” ಎಂದು ವ್ಯಂಗ್ಯವಾಡಿದ್ದರು. ಇದೇ ವೇಳೆ 1960–70ರ ದಶಕಗಳಲ್ಲಿ ತಮ್ಮ ಚಿಕ್ಕಪ್ಪ ಬಾಲ್ ಠಾಕ್ರೆ ನೀಡಿದ್ದ ‘ಹಟಾವೊ ಲುಂಗಿ, ಬಜಾವೊ ಪುಂಗಿ’ ಘೋಷಣೆಯನ್ನು ಅವರು ಉಲ್ಲೇಖಿಸಿದ್ದರು. ಇದಲ್ಲದೆ, ಬಿಹಾರ ಮತ್ತು ಉತ್ತರ ಪ್ರದೇಶದಿಂದ ಬಂದವರು ಹಿಂದಿಯನ್ನು ಹೇರಲು ಯತ್ನಿಸಿದರೆ “ಒದೆಯುತ್ತೇನೆ” ಎಂದು ರಾಜ್ ಠಾಕ್ರೆ ಹೇಳಿರುವುದಾಗಿ ಸುದ್ದಿ ಸಂಸ್ಥೆ ANI ವರದಿ ಮಾಡಿದೆ. “ಭಾಷೆಯನ್ನು ದ್ವೇಷಿಸುವುದಿಲ್ಲ; ಆದರೆ ಹೇರಿಕೆ ಸಹಿಸುವುದಿಲ್ಲ. ಭೂಮಿ ಮತ್ತು ಭಾಷೆ ಹೋದರೆ ಎಲ್ಲವೂ ಮುಗಿಯುತ್ತದೆ,” ಎಂದು ಅವರು ಹೇಳಿದ್ದಾರೆ. ಈ ರ್ಯಾಲಿಯಲ್ಲಿ ಶಿವಸೇನೆ (ಯುಬಿಟಿ) ಮುಖ್ಯಸ್ಥ ಉದ್ಧವ್ ಠಾಕ್ರೆ ಮತ್ತು ರಾಜ್ ಠಾಕ್ರೆ, ಬಿಜೆಪಿಯ ‘ನಕಲಿ ಹಿಂದುತ್ವ’ ವಿರುದ್ಧ ಜಂಟಿ ದಾಳಿ ನಡೆಸಿದರು. ಮುಂಬೈ ಎದುರಿಸುತ್ತಿರುವ ‘ಅಪಾಯ’ವೇ ತಾವು ರಾಜಕೀಯವಾಗಿ ಸಮೀಪವಾಗಿ ಕಾರಣ ಎಂದು ಅವರು ಹೇಳಿದರು. ಮರಾಠಿ ಮನುಷ್ಯ, ಹಿಂದೂಗಳು ಹಾಗೂ ಮಹಾರಾಷ್ಟ್ರದ ಹಿತಾಸಕ್ತಿಗಾಗಿ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟಿದ್ದೇವೆ ಎಂದು ಉದ್ಧವ್ ಹೇಳಿದರು. ಮಹಾರಾಷ್ಟ್ರ ರಾಜ್ಯ ಚುನಾವಣಾ ಆಯೋಗವು ರಾಜ್ಯದಾದ್ಯಂತ 29 ಮಹಾನಗರ ಪಾಲಿಕೆಗಳಿಗೆ ಚುನಾವಣೆ ಘೋಷಿಸಿದೆ. ಬೃಹನ್ಮುಂಬೈ ಮಹಾನಗರ ಪಾಲಿಕೆ, ಪುಣೆ ಮಹಾನಗರ ಪಾಲಿಕೆ ಹಾಗೂ ಪಿಂಪ್ರಿ-ಚಿಂಚ್ವಾಡ್ ಮಹಾನಗರ ಪಾಲಿಕೆ ಸೇರಿ ವಿವಿಧ ಪಾಲಿಕೆಗಳಿಗೆ ಜನವರಿ 15ರಂದು ಮತದಾನ ನಡೆಯಲಿದ್ದು, ಜನವರಿ 16ರಂದು ಮತಎಣಿಕೆ ನಡೆಯಲಿದೆ.
ವಿಜಯನಗರ | ಕಟ್ಟಕಡೆಯ ವ್ಯಕ್ತಿಗೂ ಸರಕಾರದ ಸೌಲಭ್ಯ ತಲುಪಲಿ : ಸಂಸದ ಈ. ತುಕಾರಾಂ
569 ವಿಶೇಷ ಚೇತನರಿಗೆ ಸಾಧನ ಸಲಕರಣೆ ವಿತರಣೆ
ಗ್ರೇಟರ್ ಬೆಂಗಳೂರು ಚುನಾವಣೆ: ಡಿಕೆಶಿಗೆ ಅಗ್ನಿಪರೀಕ್ಷೆ, 5 ಪಾಲಿಕೆಗಳಲ್ಲಿ ಕೈ ಶಕ್ತಿ ಪ್ರದರ್ಶನಕ್ಕೆ ಸಜ್ಜಾದ ವೇದಿಕೆ
ಗ್ರೇಟರ್ ಬೆಂಗಳೂರು ಪಾಲಿಕೆ ಚುನಾವಣೆಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಮಹತ್ವದ ಆದೇಶ ಹೊರಬೀಳುತ್ತಿದ್ದಂತೇ, ಆಡಳಿತ ಮತ್ತು ವಿರೋಧ ಪಕ್ಷಗಳು ಚುನಾವಣೆಗೆ ತಯಾರಿ ಆರಂಭಿಸಿವೆ. ಈ ಬಾರಿಯ ಜಿಬಿಎ ಚುನಾವಣೆ ಬೆಂಗಳೂರು ಉಸ್ತುವಾರಿ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರಿಗೆ ಅಗ್ನಿಪರೀಕ್ಷೆ ಎಂದೇ ಹೇಳಲಾಗುತ್ತಿದ್ದು, ಕೈ ಅಭ್ಯರ್ಥಿಗಳನ್ನು ಗೆಲ್ಲಿಸುವ ಅನಿವಾರ್ಯತೆ ಅವರಿಗಿದೆ. ಒಟ್ಟು ಐದು ಪಾಲಿಕೆಗಳನ್ನು ತೆಕ್ಕೆಗೆ ತೆಗೆದುಕೊಳ್ಳಬೇಕಾದ ಟಾಸ್ಕ್ ಜೊತೆಗೆ ಡಿಕೆ ಶಿವಕುಮಾರ್ ಮತ್ತು ಕಾಂಗ್ರೆಸ್ ಕೆಲಸ ಮಾಡಬೇಕಿದೆ. ಇಲ್ಲಿದೆ ಮಾಹಿತಿ.
ಬೆಂಗಳೂರು : ಭೂಮಿಯೊಳಗೆ ಯಾವುದೇ ಬೆಲೆ ಬಾಳುವ ವಸ್ತುಗಳು ಸಿಕ್ಕಿದರೆ ಅದು ಸರಕಾರದ ಆಸ್ತಿ ಆಗಿದೆ ಎಂದು ಕಾನೂನು ಸಚಿವ ಎಚ್.ಕೆ.ಪಾಟೀಲ್ ತಿಳಿಸಿದ್ದಾರೆ. ಲಕ್ಕುಂಡಿಯಲ್ಲಿ ನಿಧಿ ಸಿಕ್ಕ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಮವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭೂಮಿಯ ಒಳ ಯಾವುದೇ ಮೌಲ್ಯಯುತವಾದ ವಸ್ತುಗಳು ಸಿಕ್ಕರೆ ಅದು ಸರಕಾರದ್ದಾಗಿರುತ್ತದೆ. ಲಕ್ಕುಂಡಿಯಲ್ಲಿ ನಿಧಿ ಸಂಬಂಧ ಜಿಲ್ಲಾ ಆಡಳಿತ ಆ ಬಂಗಾರವನ್ನು ಖಜಾನೆಯಲ್ಲಿ ಭದ್ರವಾಗಿ ಇರಿಸಿದೆ. ಅದು ಆ ಕುಟುಂಬಕ್ಕೆ ಸೇರಿದ್ದಾ? ಆ ಜಾಗದ ಮೂಲ ಮಾಲಿಕರಿಗೆ ಸೇರಿದ್ದ? ಹಾಗೂ ರಾಷ್ಟ್ರ ಕೂಟರ ಕಾಲದ್ದಾ ಚಾಲುಕ್ಯರ ಕಾಲದ್ದಾ ಎಲ್ಲವೂ ಪರಿಶೀಲನೆ ಮಾಡಲಾಗುತ್ತದೆ ಎಂದರು. ಕುಟುಂಬದ ಪ್ರಾಮಾಣಿಕತೆಯನ್ನು ನಾನು ಗೌರವಿಸುತ್ತೇವೆ. ಜತೆಗೆ, ಸರಕಾರದ ವತಿಯಿಂದಲೂ ಆ ಕುಟುಂಬವನ್ನು ಗೌರವಿಸುವ ಕೆಲಸ ಮಾಡುತ್ತೇವೆ. ಸಾಂದರ್ಭಿಕವಾಗಿ ಅವರಿಗೆ ಏನು ಗೌರವಿಸಬೇಕೋ ಅದನ್ನು ಗೌರವಿಸುತ್ತೇವೆ. ಇನ್ನೊಂದೆಡೆ, ಅದು ನಿಧಿ ಅಲ್ಲ ಕುಟುಂಬದ ಬಂಗಾರ ಎಂದು ಅನಗತ್ಯ ಗೊಂದಲ ಉಂಟು ಮಾಡುತ್ತಿದ್ದಾರೆ. ಈ ಬಗ್ಗೆ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದರು.
ಕನಕಗಿರಿ | ವರ್ನಖೇಡ ಸರಕಾರಿ ಶಾಲೆಯ ಸಮಸ್ಯೆ ಬಗೆಹರಿಸಲು ಗ್ರಾಮಸ್ಥರಿಂದ ಪ್ರತಿಭಟನೆ
ಕನಕಗಿರಿ : ತಾಲ್ಲೂಕಿನ ಹುಲಿಹೈದರ ಗ್ರಾಮ ಪಂಚಾಯತ್ ವ್ಯಾಪ್ತಿಯ ವರ್ನಖೇಡ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಸಮಸ್ಯೆಗಳನ್ನು ತಕ್ಷಣ ಬಗೆಹರಿಸಬೇಕೆಂದು ಒತ್ತಾಯಿಸಿ ಗ್ರಾಮಸ್ಥರು ವಿದ್ಯಾರ್ಥಿಗಳೊಂದಿಗೆ ಇಲ್ಲಿನ ತಹಶೀಲ್ದಾರ್ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು. ಈ ವೇಳೆ ಮಾತನಾಡಿದ ಗ್ರಾಮಸ್ಥರು, ಕಳೆದ ಎರಡು ವರ್ಷಗಳಿಂದ ಶಾಲೆಯಲ್ಲಿ ಕಾಯಂ ಶಿಕ್ಷಕರು ಇಲ್ಲದೆ ಶಾಲಾ ಆಡಳಿತ ಹಾಗೂ ಪಾಠ ಪ್ರವಚನಗಳು ಅತಿಥಿ ಶಿಕ್ಷಕರಿಂದಲೇ ನಡೆಯುತ್ತಿವೆ ಎಂದು ಆರೋಪಿಸಿದರು. ಇಲ್ಲಿಗೆ ಸೇವೆ ಸಲ್ಲಿಸಿ ವರ್ಗಾವಣೆಯಾದ ಶಿಕ್ಷಕಿ ಸರೋಜಾ ಅವರನ್ನು ಇನ್ನೂ ಬಿಡುಗಡೆ ಮಾಡದೇ, ಶಾಲೆಯ ಬಿಸಿಯೂಟ ಯೋಜನೆಯ ಅಡುಗೆದಾರರ ಪತಿಯೊಬ್ಬರು ಹಣಕ್ಕಾಗಿ ತಡೆಹಿಡಿದಿದ್ದಾರೆ ಎಂದು ದೂರಿದರು. ಶಾಲಾ ದೃಢೀಕರಣ ಪ್ರಮಾಣಪತ್ರ ಸೇರಿದಂತೆ ಇತರೆ ಶಾಲಾ ದಾಖಲಾತಿಗಳನ್ನು ಪಡೆಯಲು ಗ್ರಾಮಸ್ಥರು ಬೇರೆ ಊರಿಗೆ ಹೋಗಬೇಕಾದ ದುಸ್ಥಿತಿ ಉಂಟಾಗಿದೆ. ಇಲ್ಲಿಗೆ ನಿಯೋಜನೆಗೊಂಡ ಶಿಕ್ಷಕರಿಗೆ ಮುಖ್ಯಶಿಕ್ಷಕ ಹುದ್ದೆಯ ಚಾರ್ಜ್ ನೀಡಬಾರದು ಹಾಗೂ ಶಿಕ್ಷಕಿ ಸರೋಜಾ ಅವರನ್ನು ಬಿಡುಗಡೆ ಮಾಡಬಾರದು ಎಂದು ಗ್ರಾಮದ ಹನುಮೇಶ ಎಂಬವರು ತಾಕೀತು ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಇತ್ತೀಚೆಗೆ ಹುಲಿಹೈದರ ಶಾಲೆಯ ಶಿಕ್ಷಕ ಶಾಮಮೂರ್ತಿ ಅವರು ವರ್ನಖೇಡ ಶಾಲೆಗೆ ನಿಯೋಜನೆಗೊಂಡು ಚಾರ್ಜ್ ಸ್ವೀಕರಿಸಲು ಬಂದ ಸಂದರ್ಭದಲ್ಲಿ, ಹನುಮೇಶ ಅವರು ಕ್ರಿಮಿಕೀಟ ನಾಶಕ ಔಷಧಿಯ ಖಾಲಿ ಬಾಟಲಿಯಲ್ಲಿ ನೀರು ತುಂಬಿಕೊಂಡು ವಿಷಸೇವನೆ ಮಾಡಿರುವಂತೆ ನಾಟಕವಾಡಿದ್ದಾರೆ. ಈ ವಿಷಯವನ್ನು ನೆಪ ಮಾಡಿಕೊಂಡು ಹನುಮೇಶನ ಪತ್ನಿ ಹಾಗೂ ಬಿಸಿಯೂಟ ಅಡುಗೆದಾರರಾದ ಶ್ರೀದೇವಿ ಅವರು ಶಾಲಾ ದಾಖಲಾತಿಗಳನ್ನು ಎತ್ತಿಕೊಂಡು ಸುಡುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಗ್ರಾಮಸ್ಥರು ವಿವರಿಸಿದರು. ನನ್ನ ಪತಿ ಸತ್ತರೆ ಅದಕ್ಕೆ ಅಧಿಕಾರಿಗಳು ಮತ್ತು ಗ್ರಾಮಸ್ಥರೇ ಕಾರಣ ಎಂದು ಬೆದರಿಕೆ ಹಾಕಿರುವ ವಿಡಿಯೋ ಕೂಡ ಇದೆ. ಜೊತೆಗೆ ಗ್ರಾಮಸ್ಥರ ವಿರುದ್ಧ ದೂರು ನೀಡಿ ಪ್ರಕರಣ ದಾಖಲಿಸುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಹೇಳಿದರು. ಇಡೀ ಗ್ರಾಮ ಶಾಲೆಯ ಪರವಾಗಿದ್ದರೂ, ಅಡುಗೆದಾರ ಹಾಗೂ ಅವರ ಪತಿ ಶಿಕ್ಷಣ ಇಲಾಖೆ ಅಧಿಕಾರಿಗಳು, ಗ್ರಾಮಸ್ಥರು ಮತ್ತು ಶಿಕ್ಷಕರ ಮೇಲೆ ದೌರ್ಜನ್ಯ ಎಸಗಿಸುತ್ತಿದ್ದಾರೆ. ಆದ್ದರಿಂದ ಶ್ರೀದೇವಿ ಅವರನ್ನು ಕೆಲಸದಿಂದ ವಜಾಗೊಳಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದರು. ಶಾಲೆಗೆ ಕಾಯಂ ಶಿಕ್ಷಕರನ್ನು ನೇಮಿಸಿ ವಿದ್ಯಾರ್ಥಿಗಳ ಶೈಕ್ಷಣಿಕ ಮಟ್ಟವನ್ನು ಹೆಚ್ಚಿಸಿದರೆ ಮಾತ್ರ ಮಕ್ಕಳನ್ನು ಶಾಲೆಗೆ ಕಳುಹಿಸುತ್ತೇವೆ ಎಂದು ಮನವಿಯಲ್ಲಿ ಸ್ಪಷ್ಟಪಡಿಸಿದರು. ಈ ಸಂದರ್ಭದಲ್ಲಿ ಎಸ್ಡಿಎಂಸಿ ಅಧ್ಯಕ್ಷ ಯಮನೂರಪ್ಪ, ಉಪಾಧ್ಯಕ್ಷ ಲಕ್ಷ್ಮಣ, ಗ್ರಾಮ ಪಂಚಾಯಿತಿ ಸದಸ್ಯ ಕನಕಪ್ಪ, ಮಾಜಿ ಉಪಾಧ್ಯಕ್ಷ ಹನುಮೇಶ ದೇವೇಂದ್ರಪ್ಪ, ಎಸ್ಡಿಎಂಸಿ ಮಾಜಿ ಅಧ್ಯಕ್ಷ ಮಾರುತಿ, ಎಸ್ಎಫ್ಐ ಜಿಲ್ಲಾಧ್ಯಕ್ಷ ಶಿವಕುಮಾರ ಈಚನಾಳ, ಗ್ರಾಮದ ಪ್ರಮುಖರಾದ ನಾಗರಾಜ, ಪರಪ್ಪ, ಶರಣಪ್ಪ, ವಿರುಪಣ್ಣ ಸೇರಿದಂತೆ ಇತರರು ಉಪಸ್ಥಿತರಿದ್ದರು. ತಹಶೀಲ್ದಾರ್ ವಿಶ್ವನಾಥ ಮುರುಡಿ ಅವರಿಗೆ ಗ್ರಾಮಸ್ಥರು ಮನವಿ ಸಲ್ಲಿಸಿದರು.
ಕಾನೂನು ಸುವ್ಯವಸ್ಥೆ ವಿಚಾರ : ರಾಜ್ಯಪಾಲರಿಗೆ ದೂರು ಸಲ್ಲಿಸಿದ ಬಿಜೆಪಿ ನಿಯೋಗ
ಬಳ್ಳಾರಿ ಪ್ರಕರಣ ಸಿಬಿಐಗೆ ವಹಿಸುವ ಬಗ್ಗೆ ಹಾಗೂ ದ್ವೇಷ ಭಾಷಣ ಮಸೂದೆಗೆ ಸಹಿ ಹಾಕದಂತೆ ಮನವಿ
ಸೇನೆಯಲ್ಲಿ 2026ರ ಲೆಫ್ಟಿನಂಟ್ ರ್ಯಾಂಕ್ ನ ಶಾರ್ಟ್ ಸರ್ವಿಸ್ ಕಮಿಷನ್ ಹುದ್ದೆಗಳಿಗೆ ಅರ್ಜಿ ಆಹ್ವಾನ
ಭಾರತೀಯ ಸೇನಾ ಎಸ್ಎಸ್ಸಿ ತಾಂತ್ರಿಕ 67ನೇ ಪುರುಷರ ಎಪ್ರಿಲ್ ಅಧಿಸೂಚನೆಯ ಪ್ರಕಾರ ಯಾವುದೇ ಪದವಿಯನ್ನು ಪಡೆದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ತಾಂತ್ರಿಕ ಹುದ್ದೆಗಳಿಗೆ ಸಂಬಂಧಿಸಿದ ಎಂಜಿನಿಯರಿಂಗ್ ಪದವಿಯ ಅಗತ್ಯವಿದೆ. ಭಾರತೀಯ ಸೇನೆಯನ್ನು ಸೇರುವ ಸುವರ್ಣವಕಾಶ ದೊರೆತಿದೆ. ಭಾರತೀಯ ಸೇನೆ ಅಧಿಕೃತ ವೆಬ್ತಾನದಲ್ಲಿ ನೀಡಿರುವ ಇತ್ತೀಚೆಗಿನ ಅಧಿಸೂಚನೆಯಲ್ಲಿ 67ನೇ ಪುರುಷರ ಎಪ್ರಿಲ್ 2026 ತಂಡ 2026 ನೇಮಕಾತಿಯನ್ನು ಘೋಷಿಸಿದೆ. ಈ ಬಾರಿ 350 ಸ್ಥಾನಗಳಿಗೆ ನೇಮಕಾತಿ ಘೋಷಿಸಲಾಗಿದೆ. ಭಾರತೀಯ ನೌಕಾಸೇನೆಗೆ 20206 ಜನವರಿ 07ರಿಂದ ಅರ್ಜಿ ಆಹ್ವಾನಿಸಲಾಗಿದೆ. ಅಭ್ಯರ್ಥಿಗಳು 2026 ಫೆಬ್ರವರಿ 05ರಿಂದ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಕನಿಷ್ಠ ವಯಸ್ಸು 2026 ಅಕ್ಟೊಬರ್ 01ಕ್ಕೆ ಸರಿಯಾಗಿ 20 ವರ್ಷಗಳು ಮತ್ತು ಗರಿಷ್ಠ ವಯಸ್ಸು 27 ವರ್ಷಗಳು. ಅಭ್ಯರ್ಥಿಗಳು ಸಂಪೂರ್ಣ ವಿವರವನ್ನು Indian Army SSC Technical 67th Men Recruitment 2026 ಅಧಿಸೂಚನೆಯಲ್ಲಿ ನೋಡಬಹುದಾಗಿದೆ. ಪ್ರಮುಖ ದಿನಾಂಕಗಳು • ಆನ್ಲೈನ್ ಅರ್ಜಿ ಸಲ್ಲಿಸುವ ಆರಂಭಿಕ ದಿನಾಂಕ : 07 ಜನವರಿ 2026 • ಆನ್ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 05 ಫೆಬ್ರವರಿ 2026 • ಶುಲ್ಕ ಪಾವತಿಗೆ ಕೊನೆಯ ದಿನಾಂಕ: 05 ಫೆಬ್ರವರಿ 2026 • ಪರೀಕ್ಷೆ ದಿನಾಂಕ : ಶೀಘ್ರವೇ ಸೂಚಿಸಲಾಗುವುದು • ಭರ್ತಿ ಕಾರ್ಡ್ : ಪರೀಕ್ಷೆಗೆ ಮೊದಲು • ಫಲಿತಾಂಶ ದಿನಾಂಕ : ಶೀಘ್ರವೇ ಅಪ್ಡೇಟ್ ಮಾಡಲಾಗುವುದು. • ವಿವರಗಳಿಗೆ ಅಭ್ಯರ್ಥಿಗಳು ಭಾರತೀಯ ಸೇನೆಯ ಅಧಿಕೃತ ವೆಬ್ತಾಣವನ್ನು ಪರೀಕ್ಷಿಸಬಹುದು. ಅರ್ಜಿ ಶುಲ್ಕ • ಯಾವುದೇ ಅಭ್ಯರ್ಥಿಗೆ ಅರ್ಜಿ ಶುಲ್ಕ ಇರುವುದಿಲ್ಲ ಭಾರತೀಯ ಸೇನೆ ಎಸ್ಎಸ್ಸಿ ತಾಂತ್ರಿಕ 67ನೇ ಪುರುಷರ ಎಪ್ರಿಲ್ ಅಧಿಸೂಚನೆ 2026: ವಯೋಮಿತಿ 2026 ಅಕ್ಟೋಬರ್ 1ಕ್ಕೆ ಸರಿಯಾಗಿ, ಕನಿಷ್ಠ ವಯಸ್ಸು 20 ವರ್ಷಗಳು ಮತ್ತು ಗರಿಷ್ಠ ವಯಸ್ಸು 27 ವರ್ಷಗಳು. 1999 ಅಕ್ಟೋಬರ್ 1ರಿಂದ 2006 ಸೆಪ್ಟೆಂಬರ್ 30ರ ನಡುವೆ ಜನಿಸಿದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಸೇನೆಯ ನಿಯಮಗಳಿಗೆ ಅನುಗುಣವಾಗಿ ವಯೋಮಿತಿ ಸಡಿಲಿಕೆ ಇರುತ್ತದೆ. ಹುದ್ದಗಳ ವಿವರ ಒಟ್ಟು ಹುದ್ದೆಗಳು 350 ಸಿವಿಲ್ ಹುದ್ದೆಗಳು 75 ಕಂಪ್ಯೂಟರ್ ಸೈನ್ಸ್ 60 ಎಲೆಕ್ಟ್ರಿಕಲ್ 33 ಎಲೆಕ್ಟ್ರಾನಿಕ್ಸ್ 64 ಮೆಕಾನಿಕಲ್ 101 ಇತರೆ ಎಂಜಿನಿಯರಿಂಗ್ ಹುದ್ದೆಗಳು 17 ಅಭ್ಯರ್ಥಿಗಳ ಅರ್ಹತೆ ಭಾರತೀಯ ಸೇನಾ ಎಸ್ಎಸ್ಸಿ ತಾಂತ್ರಿಕ 67ನೇ ಪುರುಷರ ಎಪ್ರಿಲ್ ಅಧಿಸೂಚನೆಯ ಪ್ರಕಾರ ಯಾವುದೇ ಪದವಿಯನ್ನು ಪಡೆದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ತಾಂತ್ರಿಕ ಹುದ್ದೆಗಳಿಗೆ ಸಂಬಂಧಿಸಿದ ಎಂಜಿನಿಯರಿಂಗ್ ಪದವಿಯ ಅಗತ್ಯವಿದೆ. ಪದವಿಯ ಅಂತಿಮ ವರ್ಷದಲ್ಲಿದ್ದವರೂ (2026 ಅಕ್ಟೋಬರ್ 1ರೊಳಗೆ ಪದವಿ ಮುಗಿಸುವವರು) ಅರ್ಜಿ ಸಲ್ಲಿಸಬಹುದು. ಶೈಕ್ಷಣಿಕ ಅಂಕಗಳನ್ನು ಪರಿಗಣಿಸಿ ಆಯ್ಕೆ ಮಾಡಲಾಗುವುದು. ದೈಹಿಕ ಅರ್ಹತೆ ಕನಿಷ್ಠ ಅಗತ್ಯ ಹತ್ತು ನಿಮಿಷಗಳಲ್ಲಿ 2.4 ಕಿಮೀ ಓಟ, 40 ಪುಷ್-ಅಪ್ಗಳು, 6 ಪುಲ್-ಅಪ್ಗಳು, 30 ಸಿಟಪ್ಗಳು, ಈಜಿನ ಜ್ಞಾನ ಇತ್ಯಾದಿ. ರಾಷ್ಟ್ರೀಯತೆ ಭಾರತೀಯ ಪ್ರಜೆ, ನೇಪಾಳಿ ಪ್ರಜೆ ಅಥವಾ ಆಯ್ದ ದೇಶಗಳಲ್ಲಿರುವ ಭಾರತೀಯ ಸಂಜಾತರು. ಆಸಕ್ತಿ ಅಭ್ಯರ್ಥಿಗಳು 2026 ಫೆಬ್ರವರಿ 05ರ ಒಳಗೆ ಅರ್ಜಿ ಸಲ್ಲಿಸಬಹುದು. ಆಯ್ಕೆಯಾದ ಅಭ್ಯರ್ಥಿಗಳಿಗೆ ಎಸ್ಎಸ್ ಸಂದರ್ಶನ, ದಾಖಲೆ ಪರಿಶೀಲನೆ ಮತ್ತು ವೈದ್ಯಕೀಯ ಪರಿಶೀಲನೆ ಇರುತ್ತದೆ. ಎಸ್ಎಸ್ಬಿ ಸಂದರ್ಶನ ಎರಡು ಹಂತದಲ್ಲಿ ಐದು ದಿನಗಳ ಕಾಲ ನಡೆಯುತ್ತದೆ, ಅಲಹಾಬಾದ್, ಭೋಪಾಲ್, ಬೆಂಗಳೂರು ಮತ್ತು ಕಪುರ್ತಲದಲ್ಲಿ ಸಂದರ್ಶನ ಇರಲಿದೆ. ಸಂದರ್ಶನ ಪಾಸಾದ ಮೇಲೆ ವೈದ್ಯಕೀಯ ಪರೀಕ್ಷೆ ಇರುತ್ತದೆ. ನಂತರ ಅಂತಿಮ ಮೆರಿಟ್ ಪಟ್ಟಿ ಮಾಡಲಾಗುತ್ತದೆ. ವೇತನ ಮತ್ತು ಲಾಭಗಳು ಅರ್ಹ ಅಭ್ಯರ್ಥಿಗಳಿಗೆ ಲೆಫ್ಟಿನಂಟ್ ರ್ಯಾಂಕ್ನ ಶಾರ್ಟ್ ಸರ್ವಿಸ್ ಕಮಿಷನ್ (ಎಸ್ಎಸ್ಸಿ) ಹುದ್ದೆಗೆ ನೇಮಿಸಿಕೊಳ್ಳಲಾಗುವುದು. ಇದು ಶಾಶ್ವತ ಉದ್ಯೋಗವಾಗಿರುತ್ತದೆ. ತರಬೇತಿ ಸಂದರ್ಭದಲ್ಲಿ ಮಾಸಿಕ 56,100 ರೂ. ಸ್ಟೈಪೆಂಡ್ ಇರುತ್ತದೆ. ಲೆಫ್ಟಿನಂಟ್ ವೇತನ 56,100–1,77,500 ರೂ ಮತ್ತು ಭತ್ಯೆಗಳು ಸೇರಿರುತ್ತವೆ. ಇತರ ಕ್ಷೇತ್ರವಾರು ಭತ್ಯೆ, ಪ್ರಯಾಣ, ಆಹಾರ, ಉಡುಪು, ಮಕ್ಕಳ ಶಿಕ್ಷಣ, ವಸತಿ ಸಬ್ಸಿಡಿಗೆ 15,500 ರೂ. ಮಾಸಿಕ ಭತ್ಯೆ ಇರುತ್ತದೆ. ಸೇನಾ ಗ್ರೂಪ್ ವಿಮೆ ನಿಧಿಯ ಅಡಿಯಲ್ಲಿ 1.25 ಕೋಟಿಯ ವಿಮಾ ರಕ್ಷಣೆ ಇರುತ್ತದೆ. ಈ ಕೆಳಗಿನ ಲಿಂಕ್ನಲ್ಲಿ ಅರ್ಜಿ ಸಲ್ಲಿಸಬಹುದು. https://joinindianarmy.nic.in/Authentication.aspx
ಕೊಪ್ಪಳ | ಮಹಿಳಾ ಸುರಕ್ಷತೆಗೆ ಅಕ್ಕಪಡೆ ಬಲವಾಗಲಿ: ಜ್ಯೋತಿ ಎಂ.ಗೊಂಡಬಾಳ
ಕೊಪ್ಪಳ : ರಾಜ್ಯ ಕಾಂಗ್ರೆಸ್ ಸರ್ಕಾರದ ಮಹಿಳಾ ಪರ ಮತ್ತೊಂದು ಮಹತ್ವಾಕಾಂಕ್ಷಿ ಕಾರ್ಯಕ್ರಮವಾಗಿರುವ ಅಕ್ಕಪಡೆ, ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಆದರ್ಶ ಹಾಗೂ ದಿಟ್ಟತನದಂತೆ ಕಾರ್ಯನಿರ್ವಹಿಸಲಿ ಎಂದು ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಜ್ಯೋತಿ ಎಂ. ಗೊಂಡಬಾಳ ಅವರು ಮನವಿ ಮಾಡಿದರು. ಅವರು ಇಲ್ಲಿನ ಶ್ರೀ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವದ ಪೊಲೀಸ್ ಔಟ್ಪೋಸ್ಟ್ ಹತ್ತಿರ, ರಾಜ್ಯ ಕಾಂಗ್ರೆಸ್ ಸರ್ಕಾರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಹಯೋಗದೊಂದಿಗೆ ಆರಂಭಿಸಲಾದ ಮಹಿಳೆಯರ ಸಂರಕ್ಷಣಾ ಕಾರ್ಯಕ್ರಮ ಅಕ್ಕಪಡೆ ಸಿಬ್ಬಂದಿಯನ್ನು ಗೌರವಿಸಿ ಮಾತನಾಡಿದರು. ಗ್ಯಾರಂಟಿ ಯೋಜನೆಗಳ ಮೂಲಕ ಮಹಿಳೆಯರ ಆರ್ಥಿಕ ಸಬಲೀಕರಣ ಮಾಡಿರುವಂತೆ, ದೌರ್ಜನ್ಯ ಹಾಗೂ ಸಂಕಷ್ಟಕ್ಕೆ ಒಳಗಾಗುವ ಮಹಿಳೆಯರಿಗೆ ತುರ್ತು ಸಹಾಯ ಒದಗಿಸಲು ಅಕ್ಕಪಡೆ ಸದಾ ಸನ್ನದ್ಧವಾಗಿರುತ್ತದೆ. ಮಹಿಳೆಯರ ಸುರಕ್ಷತೆಗೆ ಅಗ್ರ ಆದ್ಯತೆ ನೀಡಲಾಗಿದ್ದು, ರಾಜ್ಯಾದ್ಯಂತ ಇರುವ ಸಹಾಯವಾಣಿ ವ್ಯವಸ್ಥೆಯ ಮೂಲಕ ಮಹಿಳೆಯರನ್ನು ತಲುಪಲು ಅಕ್ಕಪಡೆ ಲಭ್ಯವಿರುತ್ತದೆ. ದೂರದ ಪ್ರದೇಶಗಳಿಂದ ಕರೆ ಬಂದರೂ ತಕ್ಷಣ ಸ್ಪಂದಿಸಿ ಸಹಾಯ ಒದಗಿಸಲಾಗುತ್ತದೆ ಎಂದು ಹೇಳಿದರು. ದೂರುಗಳಿಗೆ ತಂಡವು ತ್ವರಿತವಾಗಿ ಪ್ರತಿಕ್ರಿಯಿಸಲಿದೆ. ಗಂಭೀರ ಪ್ರಕರಣಗಳಲ್ಲಿ ಆರೋಪಿಗಳನ್ನು ಸ್ಥಳೀಯ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗುತ್ತದೆ. ಅಕ್ಕಪಡೆಯ ಸದಸ್ಯರಿಗೆ ಹಿಂಸಾಚಾರ ಪ್ರಕರಣಗಳ ನಿರ್ವಹಣೆ, ಸಾರ್ವಜನಿಕ ಸುವ್ಯವಸ್ಥೆ ಕಾಪಾಡುವುದು ಸೇರಿದಂತೆ ವಿಶೇಷ ತರಬೇತಿ ನೀಡಲಾಗಿದೆ ಎಂದು ತಿಳಿಸಿದರು. ಅಲ್ಲದೇ ವಿದ್ಯಾರ್ಥಿಗಳು ಮತ್ತು ಮಹಿಳೆಯರಲ್ಲಿ ಬಾಲ್ಯವಿವಾಹ ನಿಷೇಧ, ಪೋಕ್ಸೊ ಕಾಯಿದೆ, ಮಹಿಳಾ ಸುರಕ್ಷತೆ ಹಾಗೂ ಮೊಬೈಲ್ ಸುರಕ್ಷತಾ ನಿಯಮಗಳ ಕುರಿತು ಜಾಗೃತಿ ಮೂಡಿಸಲಾಗುತ್ತದೆ. ಜೊತೆಗೆ 1098, 112 ಮತ್ತು 1930 ಸಹಾಯವಾಣಿ ಸಂಖ್ಯೆಗಳ ಕುರಿತು ಮಾಹಿತಿ ನೀಡಲಾಗುತ್ತದೆ ಎಂದು ಹೇಳಿದರು. ಇಷ್ಟೆಲ್ಲಾ ಸಮಾಜಮುಖಿ ಕೆಲಸ ಮಾಡುತ್ತಿರುವ ಅಕ್ಕಪಡೆಗೆ ಮಹಿಳಾ ಕಾಂಗ್ರೆಸ್ ಸಂಪೂರ್ಣ ಸಹಕಾರ ನೀಡಲಿದೆ. ಗಾಂಧೀಜಿ ಅವರ ಕನಸಿನಂತೆ ಮಹಿಳೆ ಸ್ವಾಭಿಮಾನದಿಂದ ಹಾಗೂ ಸ್ವತಂತ್ರವಾಗಿ ಬದುಕಲು ಅಗತ್ಯವಾದ ಸುರಕ್ಷತೆಯನ್ನು ನೂತನ ಅಕ್ಕಪಡೆ ಇನ್ನಷ್ಟು ಬಲಪಡಿಸುವುದು ಖುಷಿಯ ಸಂಗತಿಯಾಗಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಅಕ್ಕಪಡೆ ಸಿಬ್ಬಂದಿಗಳಾದ ಪೊಲೀಸ್ ಇಲಾಖೆಯ ಸಾವಿತ್ರಿ ಡಿ. ಮತ್ತು ಈರಣ್ಣ ತಾವರಗೇರಾ, ಹೋಮ್ ಗಾರ್ಡ್ಗಳಾದ ಯಲ್ಲಮ್ಮ ಎನ್. (ಕೊಪ್ಪಳ), ನಾಗರತ್ನ (ಗಂಗಾವತಿ), ಭಾಗ್ಯ (ಗಂಗಾವತಿ) ಹಾಗೂ ತಾಯೇರಾ ಬೇಗಂ ಅವರನ್ನು ಹೂಗುಚ್ಛ ನೀಡಿ ಸನ್ಮಾನಿಸಲಾಯಿತು. ಕೆಪಿಸಿಸಿ ಸದಸ್ಯೆ ಗಿರಿಜಾ ಸಂಗಟಿ, ಮುಖಂಡರಾದ ಕಿಶೋರಿ ಬೂದನೂರ್, ಜಯಶ್ರೀ ಕಂದಕೂರ್, ಕೆಡಿಪಿ ಸದಸ್ಯೆ ನಾಗರತ್ನ ಹುಲಿಗಿ, ರೇಷ್ಮಾ ಖಾಜಾವಲಿ, ಸುಮಂಗಲಾ ನಾಯಕ್, ಸೌಭಾಗ್ಯ ಗೊರವರ್, ಶರಣಮ್ಮ ಪೂಜಾರಿ, ಜಯಶ್ರೀ ಅರಕೇರಿ, ಶಿಲ್ಪಾ ಗುಡ್ಲಾನೂರ್, ಅನಿತಾ ಅಳ್ಳಮ್ಮನವರ, ಗ್ಯಾರಂಟಿ ಸಮಿತಿ ಸದಸ್ಯೆ ರೇಣುಕಮ್ಮ ಕಾರಟಗಿ, ಮುತ್ತಮ್ಮ ಕಾರಟಗಿ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಕೊಪ್ಪಳ ಜಿಲ್ಲಾ ಆಸ್ಪತ್ರೆಗೆ ಜಿಲ್ಲಾಧಿಕಾರಿ ಡಾ. ಸುರೇಶ್ ಬಿ. ಇಟ್ನಾಳ ದಿಢೀರ್ ಭೇಟಿ
ಕೊಪ್ಪಳ : ಕೊಪ್ಪಳ ಜಿಲ್ಲಾ ಆಸ್ಪತ್ರೆಗೆ ಜಿಲ್ಲಾಧಿಕಾರಿ ಡಾ.ಸುರೇಶ್ ಬಿ.ಇಟ್ನಾಳ ಅವರು ಸೋಮವಾರ ದಿಢೀರ್ ಭೇಟಿ ನೀಡಿ ಆಸ್ಪತ್ರೆಯಲ್ಲಿನ ಸ್ಥಿತಿಗತಿಗಳನ್ನು ಪರಿಶೀಲಿಸಿದರು. ಈ ವೇಳೆ ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿಗಳ ಹಾಜರಾತಿಯನ್ನೂ ಪರಿಶೀಲನೆ ನಡೆಸಿದರು. ಈ ವೇಳೆ ಮಾತನಾಡಿದ ಜಿಲ್ಲಾಧಿಕಾರಿಗಳು, ಆಸ್ಪತ್ರೆಯಲ್ಲಿ ಸ್ವಚ್ಛತೆ ಕಡ್ಡಾಯವಾಗಿ ಕಾಪಾಡಬೇಕು ಎಂದು ಸೂಚಿಸಿದರು. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಸರತಿ ಸಾಲಿನಲ್ಲಿ ನಿಂತು ಚೀಟಿ ಪಡೆಯುವ ವೇಳೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳಬೇಕು. ಈ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಬೇಗನೆ ಚೀಟಿ ನೀಡಲು ಇನ್ನಷ್ಟು ಕೌಂಟರ್ಗಳನ್ನು ತೆರೆಯುವ ಜೊತೆಗೆ ಹೆಚ್ಚು ಸಿಬ್ಬಂದಿಯನ್ನು ನಿಯೋಜಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ತಕ್ಷಣ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು. ಜಿಲ್ಲಾ ಆಸ್ಪತ್ರೆಯ ಸೈಕಿಯಾಟ್ರಿ ವಿಭಾಗದಲ್ಲಿ ರೋಗಿಗಳ ಚಿಕಿತ್ಸೆಗೆ ಪ್ರತ್ಯೇಕ ವ್ಯವಸ್ಥೆ ಇದೆಯೇ ಎಂಬುದನ್ನು ಪರಿಶೀಲಿಸಿದ ಜಿಲ್ಲಾಧಿಕಾರಿಗಳು, ಡ್ರಗ್ ಅಡಿಕ್ಟ್ಗಳಿಗೆ ದುಶ್ಚಟಗಳನ್ನು ಬಿಡಿಸಲು ಯಾವ ರೀತಿಯ ಕೌನ್ಸಿಲಿಂಗ್ ನೀಡಲಾಗುತ್ತಿದೆ ಎಂಬುದರ ಕುರಿತು ಮಾಹಿತಿ ಪಡೆದರು. ಡ್ರಗ್ ಅಡಿಕ್ಶನ್ನಂತಹ ದುಶ್ಚಟಗಳಿಗೆ ಜನರು ಬಲಿಯಾಗದಂತೆ ಹೆಚ್ಚಿನ ಜಾಗೃತಿ ಮೂಡಿಸುವಂತೆ ಜಿಲ್ಲಾ ಆಸ್ಪತ್ರೆಯ ವೈದ್ಯಾಧಿಕಾರಿಗಳಿಗೆ ಸೂಚಿಸಿದರು. ಇದೇ ಸಂದರ್ಭದಲ್ಲಿ ಆಸ್ಪತ್ರೆಯ ವಿವಿಧ ವಿಭಾಗಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ಆಸ್ಪತ್ರೆಯ ವೈದ್ಯರು, ಸಿಬ್ಬಂದಿಗಳು ಸೇರಿದಂತೆ ಇತರೆ ಹಲವರು ಉಪಸ್ಥಿತರಿದ್ದರು.
ಕುಷ್ಟಗಿ | ಪಿಎಂ ವಿಶ್ವಕರ್ಮ ಯೋಜನೆ ಕಿಟ್ ವಿತರಣೆಯಲ್ಲಿ ಅವ್ಯವಸ್ಥೆ ಆರೋಪ : ಯುವಕರಿಂದ ಪ್ರತಿಭಟನೆ
ಕುಷ್ಟಗಿ : ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆ ಅಡಿಯಲ್ಲಿ ವಿತರಿಸಬೇಕಾದ 15,000 ರೂ. ಮೌಲ್ಯದ ಕಟಿಂಗ್ (ಸಲೂನ್) ಕಿಟ್ ವಿತರಣೆಯಲ್ಲಿ ಭಾರೀ ಅವ್ಯವಸ್ಥೆ ನಡೆದಿದೆ ಎಂದು ಆರೋಪಿಸಿ, ಕಟಿಂಗ್ ಸಲೂನ್ ಹಾಗೂ ಹಡಪದ ಸಮುದಾಯದ ಯುವಕರು ಸೋಮವಾರ ಹನುಮಸಾಗರ ಪೋಸ್ಟ್ ಆಫೀಸ್ ಮುಂದೆ ಪ್ರತಿಭಟನೆ ನಡೆಸಿದರು. ಪಿಎಂ ವಿಶ್ವಕರ್ಮ ಯೋಜನೆಯಡಿ ಆಯ್ಕೆಯಾದ ಲಾಭಾರ್ಥಿಗಳಿಗೆ 15 ದಿನಗಳ ತರಬೇತಿ, ತರಬೇತಿ ಅವಧಿಯಲ್ಲಿ 15,000 ರೂ. ಗೌರವಧನ, ನಂತರ ಸಬ್ಸಿಡಿ ಸಾಲ ಸೌಲಭ್ಯ ಹಾಗೂ 15,000 ರೂ. ಮೌಲ್ಯದ ವೃತ್ತಿ ಸಂಬಂಧಿತ ಕಿಟ್ ವಿತರಿಸುವುದಾಗಿ ಕೇಂದ್ರ ಸರ್ಕಾರ ಘೋಷಿಸಿದೆ. ಅದರಂತೆ ಕಟಿಂಗ್ ಕಿಟ್ಗಳನ್ನು ಪೋಸ್ಟ್ ಆಫೀಸ್ ಮೂಲಕ ವಿತರಿಸಬೇಕಾಗಿತ್ತು. ಆದರೆ, ಹನುಮಸಾಗರ ಪೋಸ್ಟ್ ಆಫೀಸ್ನಲ್ಲಿ ವಿತರಿಸಲಾದ ಕಿಟ್ಗಳಲ್ಲಿ ಪೂರ್ಣ ಸಾಮಾನುಗಳೇ ಇಲ್ಲ. ಒಂದು ಕಿಟ್ನಲ್ಲಿ ಬರಬೇಕಾದ 15,000 ರೂ. ಮೌಲ್ಯದ ಉಪಕರಣಗಳ ಬದಲು ಕೇವಲ 1,000 ರೂ. ರಿಂದ 1,500 ರೂ. ಮೌಲ್ಯದ ಕೆಲವೇ ಸಾಮಾನುಗಳು ಮಾತ್ರ ದೊರೆತಿವೆ ಎಂದು ಪ್ರತಿಭಟನಾಕಾರರು ಆರೋಪಿಸಿದರು. ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಸುರೇಶ ಹಡಪದ, ಭರತ ಹಡಪದ, ರುದ್ರಪ್ಪ ಹೊನ್ನಪ್ಪ ಹಡಪದ, ಮಂಜುನಾಥ ಶಂಕ್ರರಪ್ಪ ಹಡಪದ, ಮಲ್ಲಪ್ಪ ಹಡಪದ, ಶಾಣಪ್ಪ ಹಡಪದ, ವರುಣ ಹಡಪದ ಹಾಗೂ ಯಮನೂರಪ್ಪ ಹಡಪದ ಮಾತನಾಡಿ, ನಿಯಮಾನುಸಾರ ಟ್ರೈನರ್ ಅಥವಾ ಅಧಿಕಾರಿಗಳ ಸಮ್ಮುಖದಲ್ಲೇ ಕಿಟ್ನ ಸೀಲ್ ತೆರೆಯಬೇಕು. ಆದರೆ ಇಲ್ಲಿ ನಾವು ಬರುವುದಕ್ಕೂ ಮುಂಚೆಯೇ ಕಿಟ್ಗಳನ್ನು ತೆರೆಯಲಾಗಿದ್ದು, ಅಪೂರ್ಣ ಸಾಮಾನುಗಳನ್ನು ವಿತರಿಸಲಾಗಿದೆ. ಕೆಲವರಿಗೆ ಸಂಪೂರ್ಣ ಕಿಟ್ ನೀಡಲಾಗಿದ್ದು, ನಮಗೆ ಮಾತ್ರ ಅಲ್ಪ ಪ್ರಮಾಣದ ಸಾಮಾನುಗಳು ಸಿಕ್ಕಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಈ ಕುರಿತು ಪೋಸ್ಟ್ ಆಫೀಸ್ ಅಧಿಕಾರಿಗಳನ್ನು ಪ್ರಶ್ನಿಸಿದಾಗ, “ಮೇಲಿನಿಂದ ಬಂದಿರುವಂತೆ ವಿತರಿಸಲಾಗಿದೆ” ಎಂಬ ಜವಾಬ್ದಾರಿ ತಪ್ಪಿಸುವ ಉತ್ತರ ನೀಡುತ್ತಿದ್ದಾರೆ. ಯಾವುದೇ ಸ್ಪಷ್ಟ ಮಾಹಿತಿ ನೀಡದೆ ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂದು ಪ್ರತಿಭಟನಾಕಾರರು ದೂರಿದರು.
ಯಲಬುರ್ಗಾ | ವಾಲ್ಮೀಕಿ ನಾಯಕ ಸಮಾಜದ ಹಿತಕ್ಕಾಗಿ ಸಂಘಟನೆ ಅತ್ಯಗತ್ಯ : ರಾಮಣ್ಣ ಕಲ್ಲಣ್ಣವರ
ಯಲಬುರ್ಗಾ : ವಾಲ್ಮೀಕಿ ನಾಯಕ ಸಮಾಜದ ಹಿತಕ್ಕಾಗಿ ಸಂಘಟನೆ ಅತ್ಯಗತ್ಯವಾಗಿದ್ದು, ಸಮ ಸಮಾಜ ನಿರ್ಮಾಣ, ಆರ್ಥಿಕ ಸಬಲೀಕರಣ, ಅಭಿವೃದ್ಧಿ ಹಾಗೂ ಸಮಸ್ಯೆಗಳ ಪರಿಹಾರಕ್ಕೆ ಸಂಘಟನೆ ಸಹಕಾರಿಯಾಗುತ್ತದೆ. ಸಂಘಟನೆಯಿಂದ ಸಮುದಾಯವು ತನ್ನ ಹಕ್ಕುಗಳನ್ನು ಪಡೆಯಲು ಶಕ್ತಿಯನ್ನುಗಳಿಸುತ್ತದೆ ಎಂದು ವಾಲ್ಮೀಕಿ ಗುರುಪೀಠದ ಕೊಪ್ಪಳ ಜಿಲ್ಲಾ ಪ್ರತಿನಿಧಿ ರಾಮಣ್ಣ ಕಲ್ಲಣ್ಣವರ ಹೇಳಿದರು. ಪಟ್ಟಣದ ಪ್ರವಾಸಿ ಮಂದಿರದಲ್ಲಿ ಜಿಲ್ಲಾ ವಾಲ್ಮೀಕಿ ನಾಯಕ ಸಮಾಜದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ 'ವಾಲ್ಮೀಕಿ ಜಾತ್ರೆ'ಯ ಪೂರ್ವಭಾವಿ ಸಭೆ ಹಾಗೂ ತಾಲೂಕು ಪದಾಧಿಕಾರಿಗಳ ಆಯ್ಕೆ ಸಭೆಯಲ್ಲಿ ಅವರು ಮಾತನಾಡಿದರು. ಭಾರತೀಯ ಸಂಸ್ಕೃತಿಗೆ ವಾಲ್ಮೀಕಿ ಸಮಾಜದ ಕೊಡುಗೆ ಅಪಾರ. ನಮ್ಮ ಇತಿಹಾಸವನ್ನು ಯುವಪೀಳಿಗೆ ಅರ್ಥಮಾಡಿಕೊಳ್ಳಬೇಕು. ವಿವಿಧ ರಾಜಕೀಯ ಪಕ್ಷಗಳಲ್ಲಿ ಗುರುತಿಸಿಕೊಂಡಿದ್ದರೂ, ಚುನಾವಣೆ ಮುಗಿದ ನಂತರ ಸಮಾಜದ ಅಭಿವೃದ್ಧಿಗಾಗಿ ಎಲ್ಲರೂ ಒಂದಾಗಬೇಕು. ವೈಯಕ್ತಿಕ ಭಿನ್ನಾಭಿಪ್ರಾಯಗಳನ್ನು ಮರೆತು 'ವಾಲ್ಮೀಕಿ' ಎಂಬ ಭಾವನೆಯಡಿ ಸಾಗಬೇಕು ಎಂದು ಕರೆ ನೀಡಿದರು. ಇದೇ ಸಂದರ್ಭದಲ್ಲಿ ಜಿಲ್ಲಾ ಅಧ್ಯಕ್ಷ ಡಾ. ಕೆ.ಎನ್. ರಾಜಣ್ಣ, ಮಾಜಿ ಅಧ್ಯಕ್ಷ ಮಾನಪ್ಪ ಪೂಜಾರ, ಮುಖಂಡರಾದ ಹನಮೇಶ ನಾಯಕ, ಶರಣಪ್ಪ ಹೊಸಕೇರಿ ಸೇರಿದಂತೆ ಕಾರಟಗಿ ಹಾಗೂ ಕನಕಗಿರಿ ತಾಲೂಕಿನ ಮುಖಂಡರು ಸಂಘಟನೆಯ ಮಹತ್ವದ ಕುರಿತು ಮಾತನಾಡಿದರು. ಸಭೆಯಲ್ಲಿ ಸರ್ವಾನುಮತದಿಂದ ತಾಲೂಕಿನ ಮಠದ ಧರ್ಮದರ್ಶಿಯಾಗಿ ಫಕೀರಪ್ಪ ತಳವಾರ ಅವರನ್ನು ಆಯ್ಕೆ ಮಾಡಲಾಯಿತು. ಯಲಬುರ್ಗಾ ತಾಲೂಕಿನ ಅಧ್ಯಕ್ಷರಾಗಿ ಯಲ್ಲಪ್ಪ ವೀರಪ್ಪ ಹಡಗಲಿ, ಉಪಾಧ್ಯಕ್ಷರಾಗಿ ದೇವಿಂದ್ರಗೌಡ ಮಾಲಿ ಪಾಟೀಲ, ಚನ್ನಬಸಪ್ಪ ಗುಮಗೇರಿ, ಮುದಿಯಪ್ಪ ಆಡಿನ್ ಹಾಗೂ ಮಾನಪ್ಪ ವಾಲ್ಮೀಕಿ (ಬೇವೂರು) ಅವರನ್ನು ಆಯ್ಕೆ ಮಾಡಲಾಯಿತು. ಪ್ರಧಾನ ಕಾರ್ಯದರ್ಶಿಯಾಗಿ ಶ್ರೀಕಾಂತಗೌಡ ಪಾಟೀಲ, ಸಹ ಕಾರ್ಯದರ್ಶಿಯಾಗಿ ಶಶಿ ನಾಯಕ, ಗೌರವ ಅಧ್ಯಕ್ಷರಾಗಿ ಹಂಚಾಳಪ್ಪ ಪೂಜಾರರನ್ನು ನೇಮಕ ಮಾಡಲಾಯಿತು. ಸಂಘಟನಾ ಕಾರ್ಯದರ್ಶಿಗಳಾಗಿ ದೇವಪ್ಪ ಪೂಜಾರ (ತಳವಾರ), ಕನಕರಾಯ ಯಾಪಲದಿನ್ನಿ, ಶರಣಪ್ಪ ಗಚ್ಚಿನಮನಿ, ವೆಂಕನಗೌಡ ಪೋಲಿಸ್ ಪಾಟೀಲ, ಬಸವರಾಜ ಜಮಂಬಳ್ಳಿ ಸೇರಿದಂತೆ ಇತರರನ್ನು ಆಯ್ಕೆ ಮಾಡಲಾಯಿತು. ಜಾತ್ರಾ ಸಮಿತಿ ಅಧ್ಯಕ್ಷರಾಗಿ ಯಮನೂರಪ್ಪ ತಳವಾರ ಹಾಗೂ ಸದಸ್ಯರಾಗಿ ದ್ಯಾಮಣ್ಣ ಗೌಡ್ರ, ಶಂಕ್ರಗೌಡ ಪಾಟೀಲ ಸಾಲಭಾವಿ, ಶರಣಗೌಡ ಹೊಸಗೌಡ್ರ, ಬಸವರಾಜ ಪೂಜಾರ, ದುರಗನಗೌಡ ಪೋಲಿಸ್ ಪಾಟೀಲ, ಪರಮೇಶ್ ಚಾಕ್ರಿ, ಹನಮಗೌಡ ಕೋರಿ ಸೇರಿದಂತೆ ಇನ್ನಿತರರನ್ನು ಆಯ್ಕೆ ಮಾಡಲಾಯಿತು. ಈ ಸಂದರ್ಭದಲ್ಲಿ ತಾಲೂಕಿನ ನೂರಾರು ಮುಖಂಡರು ಹಾಗೂ ಸಮಾಜದ ಬಂಧುಗಳು ಉಪಸ್ಥಿತರಿದ್ದರು.
ಛೂ ಬಾಣ – ಪಿ. ಮೊಹಮ್ಮದ್ ಕಾರ್ಟೂನ್
ಪಾಕಿಸ್ತಾನದ ಉನ್ನತ ನಾಯಕತ್ವ ಇಡೀ ಜಗತ್ತಿನ ಜನರು ತನ್ನ ನಾಗರಿಕರ ರೀತಿಯಲ್ಲೇ ಮುಗ್ಧರು, ಅಲ್ಲಲ್ಲ ಮೂರ್ಖರು ಎಂದು ಭಾವಿಸಿದಂತಿದೆ. ಆಪರೇಷನ್ ಸಿಂಧೂರ ಸೇನಾ ಕಾರ್ಯಾಚರಣೆಯಲ್ಲಿ ಭಾರತವನ್ನು ಸೋಲಿಸಿರುವುದಾಗಿ ತನ್ನ ಜನರನ್ನು ನಂಬಿಸಿರುವ ಪಾಕಿಸ್ತಾನ, ಇದೀಗ ತನ್ನ JF-17 ಯುದ್ಧ ವಿಮಾನ ಮಾರಾಟ ಮಾಡುವ ಮೂಲಕ ಭವಿಷ್ಯದಲ್ಲಿ ಐಎಂಎಫ್ ಸಾಲವೇ ಬೇಡ ಎನ್ನುವಷ್ಟು ಲಾಭಗಳಿಸುವುದಾಗಿ ಹೇಳಿಕೊಂಡಿದೆ. ಪಾಕಿಸ್ತಾನದ ರಕ್ಷಣಾ ಸಚಿವರ ಹೇಳಿಕೆಯನ್ನು ಪಾಕಿಸ್ತಾನಿ ವಿಶ್ಲೇಷಕರೇ ಪ್ರಶ್ನಿಸಿದ್ದಾರೆ. ಈ ಕುರಿತು ಇಲ್ಲಿದೆ ಮಾಹಿತಿ.
ಟಿಸಿಎಸ್ ಲಾಭದಲ್ಲಿ 14% ಕುಸಿತ, ಹೀಗಿದ್ದೂ ಷೇರುದಾರರಿಗೆ ಭರ್ಜರಿ ಲಾಭಾಂಶ ಘೋಷಿಸಿದ ಟಾಟಾ ಕಂಪನಿ
ದೇಶದ ಅತಿದೊಡ್ಡ ಐಟಿ ಕಂಪನಿ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್, 2026ನೇ ಆರ್ಥಿಕ ವರ್ಷದ ಮೂರನೇ ತ್ರೈಮಾಸಿಕ ಫಲಿತಾಂಶ ಪ್ರಕಟಿಸಿದೆ. ಅಮೆರಿಕದಲ್ಲಿನ ಕಾನೂನು ವ್ಯಾಜ್ಯ ಮತ್ತು ಭಾರತದ ಹೊಸ ಕಾರ್ಮಿಕ ನೀತಿಗಳ ಜಾರಿಯಿಂದ ಉಂಟಾದ ಅನಿರೀಕ್ಷಿತ ವೆಚ್ಚಗಳಿಂದಾಗಿ ಕಂಪನಿಯ ನಿವ್ವಳ ಲಾಭದಲ್ಲಿ ಶೇಕಡಾ 14ರಷ್ಟು ಕುಸಿತ ಕಂಡುಬಂದಿದೆ. ಆದರೆ, ಕಂಪನಿಯ ಕಾರ್ಯಾಚರಣೆಯ ಆದಾಯದಲ್ಲಿ ಸ್ಥಿರತೆ ಕಾಯ್ದುಕೊಳ್ಳಲಾಗಿದ್ದು, ಈ ಹಿನ್ನೆಲೆಯಲ್ಲಿ, ಹೂಡಿಕೆದಾರರಿಗೆ ಪ್ರತಿ ಷೇರಿಗೆ 46 ರೂಪಾಯಿ ವಿಶೇಷ ಲಾಭಾಂಶ ಸೇರಿದಂತೆ ಒಟ್ಟು 57 ರೂಪಾಯಿ ಡಿವಿಡೆಂಡ್ ನೀಡಲು ಆಡಳಿತ ಮಂಡಳಿ ನಿರ್ಧರಿಸಿದೆ.
ಗಾಯಾಳು ವಾಶಿಂಗ್ಟನ್ ಸುಂದರ್ ಬದಲಿಗೆ ಈಗ ದಿಲ್ಲಿಯ ಆಯುಷ್ ಬದೋನಿಗೆ ಬುಲಾವ್! ಇದು ವರ್ಕೌಟ್ ಆಗುತ್ತಾ?
India Vs New Zealand- ಭಾರತ ತಂಡದಲ್ಲಿ ಗಾಯದ ಸಮಸ್ಯೆ ಮುಂದುವರಿದಿದ್ದು ಇದೀಗ ಆಲ್ರೌಂಡರ್ ವಾಷಿಂಗ್ಟನ್ ಸುಂದರ್ ಅವರು ನ್ಯೂಜಿಲೆಂಡ್ ವಿರುದ್ಧ ಏಕದಿನ ಸರಣಿಯಿಂದ ಹೊರಬಿದ್ದಿದ್ದಾರೆ. ಅವರ ಬದಲಿಗೆ ದಿಲ್ಲಿಯ ಬ್ಯಾಟರ್ ಆಯುಷ್ ಬದೋನಿ ತಂಡವನ್ನು ಸೇರಿಕೊಳ್ಳಲಿದ್ದಾರೆ. ಈ ಹಿಂದೆ ತಿಲಕ್ ವರ್ಮಾ ಮತ್ತು ರಿಷಬ್ ಪಂತ್ ಕೂಡ ಗಾಯಗೊಂಡಿದ್ದರು. ಇದೀಗ ವಾಶಿಂಗ್ಟನ್ ಸುಂದರ್ ಅವರು ಸಹ ಗಾಯಗೊಂಡಿರುವುದು ಟೀಂ ಇಂಡಿಯಾ ಡ್ರೆಸ್ಸಿಂಗ್ ರೂಂನಲ್ಲಿ ಆತಂಕಕ್ಕೆ ಕಾರಣವಾಗಿದೆ. ಎರಡನೇ ಏಕದಿನ ಪಂದ್ಯ ಜನವರಿ 14ರಂದು ರಾಜ್ಕೋಟ್ನಲ್ಲಿ ನಡೆಯಲಿದೆ.
ಮೊಂಟೆಪದವು: ಸ್ವಲಾತ್ ವಾರ್ಷಿಕ - ಮಾದರಿ ಮದುವೆ, ನಶೆ ಮುಕ್ತ ಸಮಾಜ ಕಾರ್ಯಾಗಾರ
ಮಂಗಳೂರು: ಉಳ್ಳಾಲ ತಾಲೂಕಿನ ಮೊಂಟೆಪದವು ಬದ್ರಿಯಾ ಜುಮಾ ಮಸ್ಜಿದ್ ಇದರ 34ನೇ ವಾರ್ಷಿಕ ಸ್ವಲಾತ್ ಅಂಗವಾಗಿ ಮಾದರಿ ಮದುವೆ ಮತ್ತು ನಶೆ ಮುಕ್ತ ಸಮಾಜ ಕಾರ್ಯಾಗಾರ ನಡೆಯಿತು. ಮೂರು ದಿನಗಳ ಕಾರ್ಯಕ್ರಮದಲ್ಲಿ ಮೊದಲನೇ ದಿನ ನಶೆ ಮುಕ್ತ ಸಮಾಜ ಎಂಬ ವಿಷಯದಲ್ಲಿ ವಿಶೇಷ ಕಾರ್ಯಾಗಾರವನ್ನು ಇಕ್ಬಾಲ್ ಬಾಳಿಲ ನಡೆಸಿಕೊಟ್ಟರು. ಮಕ್ಕಳ ಬಗ್ಗೆ ತಂದೆ ತಾಯಿಗಳ ಜವಾಬ್ದಾರಿ ಮತ್ತು ಮಕ್ಕಳು ಸುಲಭವಾಗಿ ಪೆಡ್ಲರ್ಗಳಿಗೆ ಬಲಿಯಾಗುವುದರ ಬಗ್ಗೆ ವಿವರಿಸಿದರು. ಧಾರ್ಮಿಕ ಉಪನ್ಯಾಸ ವೇದಿಕೆಯಲ್ಲಿ ಕಾಲದ ಬೇಡಿಕೆಗೆ ಅನುಗುಣವಾಗಿ ಇಂತಹ ಕಾರ್ಯಕ್ರಮವನ್ನು ಸಂಘಟಿಸಿದ್ದಕ್ಕೆ ಇದೊಂದು ಮಾದರಿ ಹೆಜ್ಜೆ ಎಂದು ಜಮಾಅತ್ ಆಡಳಿತ ಸಮಿತಿಯನ್ನು ಶ್ಲಾಘಿಸಿದರು. ಇನ್ನೊರ್ವ ಸಂಪನ್ಮೂಲ ವ್ಯಕ್ತಿ ಕೆ. ಎಂ. ಸಿದ್ದೀಕ್ ಮೊಂಟುಗೋಳಿ ಮಾತನಾಡಿ, ಮದುವೆ ಹೆಸರಲ್ಲಿ ನಡೆಯುವ ಅನಾಚಾರಗಳು ಇಸ್ಲಾಂ ಸಂಸ್ಕೃತಿ ವಿರೋಧವಾಗಿದೆ ಮತ್ತು ಸರಳ ವಿವಾಹ ಮುಂದಿನ ತಲೆಮಾರಿಗೆ ಮಾದರಿ ಮತ್ತು ಆರ್ಥಿಕ ನಿಯಂತ್ರಣ ಸಾಧಿಸಲಿದೆ ಎಂದು ತಿಳಿಸಿದರು. ಕಾರ್ಯಕ್ರಮದ ಎರಡನೇ ದಿನ ಮಂಜನಾಡಿ ಜಮಾಅತ್ ಖತೀಬ್ ಪಿ. ಎ. ಅಹ್ಮದ್ ಬಾಖವಿ ಉಚ್ಚಿಲ ಅವರು ನಶಿಸುತ್ತಿವ ಇಸ್ಲಾಮಿನ ಸಂಸ್ಕೃತಿಯನ್ನು ಕಾಪಾಡುವ ಜವಾಬ್ದಾರಿ ಬಗ್ಗೆ ಉಪನ್ಯಾಸ ನೀಡಿದರು. ಕಾರ್ಯಕ್ರಮದ ಕೊನೆಯ ದಿನ ಅಸಯ್ಯದ್ ಅಶ್ರಫ್ ತಂಙಳ್ ಅದೂರು ದುಆ ನೆರವೇರಿಸಿದರು. ಕಾರ್ಯಕ್ರಮದಲ್ಲಿ ಮಸೀದಿ ಖತೀಬ್ ಬಹು ಸಿದ್ದೀಕ್ ಸಅದಿ ಮಿತ್ತೂರು , ಮಸೀದಿ ಅಧ್ಯಕ್ಷ ಕೆ. ಖಾದರ್ ಮಸೀದಿ ಮತ್ತು ಮದರಸದ ಎಲ್ಲಾ ಉಸ್ತಾದರುಗಳು, ಆಡಳಿತ ಮಂಡಳಿಯ ಸದಸ್ಯರು ಭಾಗವಹಿಸಿದ್ದರು.
10 ವರ್ಷಗಳಲ್ಲಿ ಕಲ್ಯಾಣ ಕರ್ನಾಟಕದಲ್ಲಿ ಅಸಮಾನತೆ ಹೋಗಿ ಸಮಾನತೆ ಬರಲಿದೆ : ಸಿಎಂ ಸಿದ್ದರಾಮಯ್ಯ
ಯಡ್ರಾಮಿಯಲ್ಲಿ 906 ಕೋಟಿ ರೂ. ಮೊತ್ತದ ಕಾಮಗಾರಿಗಳಿಗೆ ಚಾಲನೆ
ಕುತ್ತಿಗೆ- ಕಂಕುಳದಲ್ಲಿ ಕಪ್ಪು ಕಲೆಯೆ? ತಕ್ಷಣವೇ ಆರೋಗ್ಯ ಪರೀಕ್ಷೆ ಅಗತ್ಯ!
ಇತ್ತೀಚೆಗೆ ‘ಎಕ್ಸ್’ ಸಾಮಾಜಿಕ ಜಾಲತಾಣದಲ್ಲಿ ವೈದ್ಯರು ಅಕಾಂಥೊಸಿಸ್ ನೈಗ್ರಿಕನ್ಸ್ ಎನ್ನುವ ರೋಗವೊಂದರೆ ಬಗ್ಗೆ ಚರ್ಚಿಸುತ್ತಿದ್ದಾರೆ. ಏನಿದು ಅಕಾಂಥೊಸಿಸ್ ನೈಗ್ರಿಕನ್ಸ್. ಹೈದರಾಬಾದ್ ನ ವೈದ್ಯರಾಗಿರುವ ಮಧುಮೇಹಿ/ಬೊಜ್ಜು/ಕರುಳು ಸಂಬಂಧಿತ ಲೈಂಗಿಕ ಆರೋಗ್ಯದ ತಜ್ಞರಾಗಿರುವ ಸುನೀತಾ ಸಯಮ್ಮಗಾರು ಇತ್ತೀಚೆಗೆ ‘ಎಕ್ಸ್’ ಸಾಮಾಜಿಕ ಜಾಲತಾಣದಲ್ಲಿ ಚರ್ಮದ ಮಡಿಕೆಗಳಲ್ಲಿ ಅಂದರೆ, ಕುತ್ತಿಗೆ, ಕಂಕುಳ, ತೊಡೆಸಂದು, ಒಳ ತೊಡೆಗಳು ಮತ್ತು ಸ್ತನಗಳ ಕೆಳಗೆ, ಹೊಟ್ಟೆಯ ಮೇಲೆ ಚರ್ಮ ಕಂದು ಅಥವಾ ಕಪ್ಪು ಬಣ್ಣಕ್ಕೆ ತಿರುವುದರ ಬಗ್ಗೆ ಚರ್ಚಿಸಿದ್ದಾರೆ. ಏನಿದು ಅಕಾಂಥೊಸಿಸ್ ನೈಗ್ರಿಕನ್ಸ್? ಅಕಾಂಥೊಸಿಸ್ ನೈಗ್ರಿಕನ್ಸ್ ಎಂದು ಹೇಳಲಾಗುವ ಈ ಸಮಸ್ಯೆಯನ್ನು ಮೆಟ್ರೋದಲ್ಲಿ ಪ್ರಯಾಣಿಸುವಾಗ ಶೇ 50ರಷ್ಟು ಮಂದಿಗೆ ಇದ್ದುದನ್ನು ನೋಡಿದ್ದೇನೆ ಎಂದು ಅವರು ಬರೆದುಕೊಂಡಿದ್ದಾರೆ. “ನನಗೆ ಕುತ್ತಿಗೆ ಮಾತ್ರ ಕಾಣಿಸುತ್ತದೆ. ಹೀಗಾಗಿ ಕುತ್ತಿಗೆಯ ಕಲೆಗಳ ಬಗ್ಗೆ ಹೇಳುತ್ತಿದ್ದೇನೆ. ಕೆಲವರಿಗೆ ಮಂದವಾದ ಮತ್ತು ಇನ್ನು ಕೆಲವರಿಗೆ ಕಡು ಕಪ್ಪಾದ ಕಲೆಗಳು ಇರುತ್ತವೆ. ಯುವಕರು, ಹಿರಿಯರು, ಮಹಿಳೆಯರು, ಪುರುಷರು, ಮಕ್ಕಳು ಮತ್ತು ಹದಿಹರೆಯದವರಲ್ಲಿ ಎಲ್ಲರಲ್ಲೂ ಈ ಸಮಸ್ಯೆ ಗುರುತಿಸಿದ್ದೇನೆ. ಹೆಚ್ಚು ಬೊಜ್ಜಿಲ್ಲದ ವ್ಯಕ್ತಿಗಳಲ್ಲೂ ಕಂಡಿದ್ದೇನೆ. ಅವರನ್ನು ಮುಂಭಾಗದಿಂದ ನೋಡಿದಾಗ ಹೊಟ್ಟೆ ಉಬ್ಬರಿಸಿರುತ್ತದೆ. ಹೀಗಾಗಿ ಖಂಡಿತಾ ಇದು ಅಕಾಂಥೊಸಿಸ್ ನೈಗ್ರಿಕನ್ಸ್ ಎನ್ನುವುದು ಖಚಿತವಾಗುತ್ತದೆ” ಎಂದು ಅವರು ಹೇಳಿದ್ದಾರೆ. ಅದಕ್ಕೆ ಪರಿಹಾರವನ್ನೂ ಸೂಚಿಸಿದ್ದಾರೆ. “ಸಂಸ್ಕರಿತ ಆಹಾರವನ್ನು ತೊರೆಯಿರಿ, ಕೊಬ್ಬು ನಿವಾರಿಸಿ, ಪ್ರೊಟೀನ್ ಸೇವನೆ ಹೆಚ್ಚಿಸಿ, ತೂಕ ಇಳಿಸಿ. ಸಾಕಷ್ಟು ಚಲನೆ ಇರಲಿ, ನಿದ್ರೆ ಚೆನ್ನಾಗಿ ಮಾಡಿ, ಒತ್ತಡ ಕಡಿಮೆ ಮಾಡಿಕೊಳ್ಳಿ” ಎಂದು ಅವರು ಹೇಳಿದ್ದಾರೆ. ಮಾರಕ ರೋಗಗಳಿಗೆ ಚಿಹ್ನೆಯಾಗಿರಬಹುದು? ಸುನೀತಾ ಅವರ ಪೋಸ್ಟ್ ಗೆ ಪ್ರತಿಕ್ರಿಯೆ ನೀಡಿದ ಡಾ. ಪ್ರಿಯಂ ಬೊಡ್ಡೊಲೊಯಿ, “ಕುತ್ತಿಗೆ ಸುಳ್ಳು ಹೇಳುವುದಿಲ್ಲ. ಹೀಗೆ ಕಂದು ಬಣ್ಣದ ಕಲೆಗಳು ಇದ್ದರೆ ಚಯಾಪಚಯ ಕ್ರಿಯೆ ಸಮಸ್ಯೆಯಲ್ಲಿದೆ ಎಂದು ಅರ್ಥಮಾಡಿಕೊಳ್ಳಬೇಕು. ಇಂಟರ್ನಲ್ ಮೆಡಿಸಿನ್ ನಲ್ಲಿ ನಾವು ಚಿಕಿತ್ಸೆ ನೀಡುವ ಅನೇಕ ಮಾರಕ ರೋಗಗಳಿಗೆ ಇದು ಚಿಹ್ನೆಯಾಗಿರುತ್ತದೆ. ಇಂತಹ ಕಲೆಗಳನ್ನು ಅಲಕ್ಷಿಸಬಾರದು. ಅದು ಇನ್ಸುಲಿನ್ ರೆಸಿಸ್ಟನ್ಸ್ : ಟೈಪ್ 2 ಮಧುಮೇಹ, ಮೆಲಿಟಸ್, ಬೊಜ್ಜು, ಮೆಟಬಾಲಿಕ್ ಸಿಂಡ್ರೋಮ್ ಸೂಚಕವಾಗಬಹುದು. ಅಲ್ಲದೆ, ಯುವತಿಯರಲ್ಲಿ ಪಿಸಿಒಎಸ್ ನ ಮೊದಲ ಸೂಚನೆಯಾಗಿರಬಹುದು. ಎಂಡೋಕ್ರೈನ್ ಸಮಸ್ಯೆಯಾಗಿದ್ದು, ಅಕ್ರೊಮೆಗಲಿ, ಹೈಪೊಥೈರಾಯ್ಡಿಸಮ್ನ ಸೂಚನೆಯಾಗಿರಬಹುದು ಎಂದು ಬರೆದುಕೊಂಡಿದ್ದಾರೆ. “ಗಡ್ಡೆಗಳ ಆರಂಭದ ಸೂಚನೆಯಾಗಬಹುದು. ಹಠಾತ್ ಆಗಿ ಕಾಣಿಸಿಕೊಂಡರೆ ಗ್ಯಾಸ್ಟ್ರಿಕ್ ಕ್ಯಾನ್ಸರ್ ನ ಚಿಹ್ನೆಯೂ ಆಗಿರಬಹುದು. ಕೆಲವೊಮ್ಮೆ ಔಷಧಿಯಿಂದಲೂ ಬರುತ್ತದೆ. ಸ್ಟೆರಾಯ್ಡ್ಗಳು, ಒಸಿಪಿಗಳು ಅಥವಾ ಹೈ-ಡೋಸ್ ನಿಯಾಸಿನ್ ಸೇವನೆಯಿಂದಲೂ ಕಂಡುಬರಬಹುದು” ಎಂದು ವಿವರಿಸಿದ್ದಾರೆ. ಈ ಕಲೆಗಳನ್ನು ಅಲಕ್ಷಿಸಲು ಹೋಗಬೇಡಿ ರೋಗಪರಿಶೀಲನೆ ಮಾಡಿಸಿಕೊಳ್ಳಿ. ಕುತ್ತಿಗೆ ಸುಳ್ಳು ಹೇಳುವುದಿಲ್ಲ ಎಂದು ಅವರು ಎಚ್ಚರಿಸಿದ್ದಾರೆ. ಸೌಂದರ್ಯ ಸಮಸ್ಯೆಯೆಂದು ಅಲಕ್ಷಿಸಬೇಡಿ: ಸುನೀತಾ ಅವರ ಪೋಸ್ಟ್ ಗೆ ಉತ್ತರಿಸಿರುವ ಕೊಲ್ಲಾಪುರದ ಹೋಮಿಯೋಪತಿ ವೈದ್ಯರಾಗಿರುವ ಡಾ. ಸಯಾಜಿರಾವ್ ಗಾಯಕ್ವಾಡ್ ಅವರೂ ಇದು ಕುತ್ತಿಗೆ ಕೊಳಕಾಗಿರುವುದಲ್ಲ, ಇನ್ಸುಲಿನ್ ರೆಸಿಸ್ಟನ್ಸ್ ಅಕಾಂಥೊಸಿಸ್ ನೈಗ್ರಿಕನ್ಸ್ ಎಂದು ಹೇಳಿದ್ದಾರೆ. ಅವರು ಮುಂದುವರಿದು, “ಹೀಗೆ ಕಂಕುಳ, ಕುತ್ತಿಗೆಯ ಸುತ್ತ ಇರುವ ಕಂದು- ಕಪ್ಪು ಕಲೆಗಳು ಸ್ಪಷ್ಟವಾಗಿ ಇನ್ಸುಲಿನ್ ರೆಸಿಸ್ಟನ್ಸ್ ಚಿಹ್ನೆಯಾಗಿದೆ. ಇನ್ಸುಲಿನ್ ರೆಸಿಸ್ಟ್ ಎಂದರೆ ದೇಹ ಇನ್ನಷ್ಟು ಇನ್ಸುಲಿನ್ ಉತ್ಪಾದಿಸುವುದಾಗಿರುತ್ತದೆ. ಹೀಗೆ ಹೆಚ್ಚುವರಿ ಇನ್ಸುಲಿನ್ ಚರ್ಮದ ಕೋಶಗಳು ಮತ್ತು ದಪ್ಪನಾದ ವರ್ಣದ್ರವ್ಯಗಳಲ್ಲಿ ಕಾಣಿಸಿಕೊಳ್ಳುತ್ತದೆ” ಎಂದು ಹೇಳಿದ್ದಾರೆ. ಸಯಾಜಿರಾವ್ ಅವರ ಪ್ರಕಾರ, ಇದು ಸೌಂದರ್ಯಕ್ಕೆ ಸಂಬಂಧಿಸಿದ ಸಮಸ್ಯೆಯಲ್ಲ. ಮಧುಮೇಹದ ಪೂರ್ವದ ಚಿಹ್ನೆಯಾಗಿರಬಹುದು. ಟೈಪ್ 2 ಮಧುಮೇಹ, ಪಿಸಿಒಎಸ್, ಕೊಬ್ಬಿದ ಲಿವರ್ ಮತ್ತು ಚಯಾಪಚಯ ಸಿಂಡ್ರೋಮ್ನ ಸಂಕೇತವಾಗಿರಬಹುದು. ಪರಿಹಾರವೆಂದರೆ ಜೀವನಶೈಲಿಯನ್ನು ಬದಲಿಸಿಕೊಂಡು ಇನ್ಸುಲಿನ್ ಕಡಿಮೆ ಮಾಡಬೇಕಾಗುತ್ತದೆ. ಮೊದಲನೆಯದಾಗಿ ಕಾರ್ಬೋಹೈಡ್ರೇಟ್ ಸೇವನೆ ಕಡಿಮೆ ಮಾಡಬೇಕು. ಪ್ರೊಟೀನ್ ಸೇವನೆ, ಆರೋಗ್ಯಕರ ಕೊಬ್ಬು ಸೇವಿಸಬೇಕು. ತೂಕ ಇಳಿಸಬೇಕು. ನಿದ್ರೆ ಸರಿಯಾಗಿ ಮಾಡಬೇಕು. ಕಪ್ಪು ಕುತ್ತಿಗೆ ಚಯಾಪಚಯ ಕ್ರಿಯೆಯ ಎಚ್ಚರಿಕೆಯ ಗುರುತು ಎಂದು ವೈದ್ಯರು ಹೇಳಿದ್ದಾರೆ. ಈ ಲೇಖನವನ್ನು ಸಾಮಾಜಿಕ ಜಾಲತಾಣಗಳಲ್ಲಿರುವ ಮಾಹಿತಿಯಿಂದ ಬರೆಯಲಾಗಿದೆ. ಯಾವುದೇ ದೈಹಿಕ ಬದಲಾವಣೆಗಳಿಗೆ ಮೊದಲು ವೈದ್ಯರನ್ನು ಸಂಪರ್ಕಿಸಿ.
ಜೂ.30ರೊಳಗೆ ಜಿಬಿಎ ಚುನಾವಣೆ ಮುಗಿಸಿ: ಸರಕಾರಕ್ಕೆ ಸುಪ್ರೀಂ ಕೋರ್ಟ್ ನಿರ್ದೇಶನ
ಬೆಂಗಳೂರು : ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಜಿಬಿಎ) ಚುನಾವಣೆಯನ್ನು ಜೂನ್ ಅಂತ್ಯದೊಳಗೆ ಮುಗಿಸಬೇಕು ಎಂದು ರಾಜ್ಯ ಸರಕಾರ ಮತ್ತು ಚುನಾವಣಾ ಆಯೋಗಕ್ಕೆ ಸುಪ್ರೀಂಕೋರ್ಟ್ ಸೋಮವಾರ ನಿರ್ದೇಶನ ನೀಡಿದೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಅಡಿಯಲ್ಲಿ ಬರುವ ಐದು ನಗರ ಪಾಲಿಕೆಗಳ ಚುನಾವಣಾ ಪ್ರಕ್ರಿಯೆಯನ್ನು ಜೂನ್ 30 ರೊಳಗೆ ಪೂರ್ಣಗೊಳಿಸುವಂತೆ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಮತ್ತು ನ್ಯಾಯಮೂರ್ತಿ ಜೋಯ್ಮಲ್ಯ ಬಾಗ್ಚಿ ಅವರಿದ್ದ ಪೀಠವು ಗಡುವು ವಿಧಿಸಿ ಆದೇಶಿಸಿದ ಹೊರಡಿಸಿದೆ.
83ನೇ ಗೋಲ್ಡನ್ ಗ್ಲೋಬ್ಸ್ ಪ್ರಶಸ್ತಿ ಪ್ರದಾನ ಸಮಾರಂಭವು ಜನವರಿ 11ರಂದು ಬೆವರ್ಲಿ ಹಿಲ್ಟನ್ ಹೋಟೆಲ್ನಲ್ಲಿ ನಡೆಯಿತು. ಈ ಬಾರಿ ಭಾರತೀಯ ಚಿತ್ರಗಳಿಗೆ ಯಾವುದೇ ಪ್ರಶಸ್ತಿ ಲಭಿಸದಿದ್ದರೂ, ಜಾಗತಿಕವಾಗಿ ಗಮನ ಸೆಳೆದ ಹಲವು ಚಿತ್ರಗಳು ಹಾಗೂ ಟಿವಿ ಸರಣಿಗಳು ಪ್ರಶಸ್ತಿ ಬಾಚಿಕೊಂಡಿವೆ. ಹೆಲೆನ್ ಮಿರ್ರೆನ್ ಮತ್ತು ಸಾರಾ ಜೆಸ್ಸಿಕಾ ಪಾರ್ಕರ್ ವಿಶೇಷ ಗೌರವಕ್ಕೆ ಪಾತ್ರರಾದರು.
ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಇಂದು(ಜನವರಿ 12) ಬೆಳಿಗ್ಗೆ 10:18 ಕ್ಕೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) 16 ಉಪಗ್ರಹಗಳನ್ನು ಹೊತ್ತೊಯ್ದ PSLV-C62 ರಾಕೆಟ್ ನ್ನು ಉಡಾವಣೆ ಮಾಡಿದೆ. 2026ರ ಮೊದಲ ಉಡಾವಣೆಗೆ ಇದಾಗಿದೆ. 260 ಟನ್ ತೂಕದ ಉಪಗ್ರಹಗಳನ್ನು ಹೊತ್ತು ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್ (PSLV)ಸಿ-62 ರಾಕೆಟ್ ನಭಕ್ಕೆ ಚಿಮ್ಮಿದ್ದು, ಮೂರನೇ ಹಂತದಲ್ಲಿ ತಾಂತ್ರಿಕ ದೋಷದಿಂದಾಗಿ ಪಥ ಬದಲಾಯಿಸಿದೆ. ಪಿಎಸ್ಎಲ್ವಿಯ ಮೂರನೇ ಹಂತದಲ್ಲಿ ಯಾವುದೇ ಅಡಚಣೆ ಬಹುತೇಕ ಸಂಪೂರ್ಣ ಮಿಷನ್ ವೈಫಲ್ಯಕ್ಕೆ ಕಾರಣವಾಗುತ್ತದೆ. PSLV-C62 ಕಾರ್ಯಾಚರಣೆ ವಿಫಲವಾಗಿದ್ದು ಇದರೊಂದಿಗೆ ಉಡಾವಣೆಯಲ್ಲಿ ಹೊತ್ತೊಯ್ಯಲಾದ ಎಲ್ಲಾ 16 ಉಪಗ್ರಹಗಳು ಬಾಹ್ಯಾಕಾಶದಲ್ಲೇ ನಿಯಂತ್ರಣ ಕಳೆದುಕೊಂಡಿವೆ. ವೈಫಲ್ಯ ವರದಿಯಾಗುತ್ತಿದ್ದಂತೆ ಪ್ರತಿಕ್ರಯಿಸಿದ ಇಸ್ರೊ ಅಧ್ಯಕ್ಷ ಡಾ. ವಿ ನಾರಾಯಣನ್, ಇಂದು ನಾವು PSLV-C62/EOS-N1 ಮಿಷನ್ ಅನ್ನು ಪ್ರಯತ್ನಿಸಿದ್ದೇವೆ. PSLV ಎರಡು ಘನ ಹಂತಗಳು ಮತ್ತು ಎರಡು ದ್ರವ ಹಂತಗಳನ್ನು ಹೊಂದಿರುವ ನಾಲ್ಕು ಹಂತದ ವಾಹನವಾಗಿದೆ. ಮೂರನೇ ಹಂತದ ಅಂತ್ಯದವರೆಗೆ ವಾಹನದ ಕಾರ್ಯಕ್ಷಮತೆ ನಿರೀಕ್ಷೆಯಂತೆ ಇತ್ತು, ಮೂರನೇ ಹಂತದ ಅಂತ್ಯದ ವೇಳೆಗೆ ರಾಕೆಟ್ ಅನಿರೀಕ್ಷಿತವಾಗಿ ತಿರುಗಲು ಶುರುವಾಯಿತು.ತರುವಾಯ ಪಥ ಬದಲಾವಣೆ ಆಗಿದೆ. ನಾವು ಈ ಬಗ್ಗೆ ವಿಶ್ಲೇಷಿಸುತ್ತಿದ್ದು, ಈ ಬಗ್ಗೆ ಶೀಘ್ರದಲ್ಲೇ ಮಾಹಿತಿ ನೀಡುತ್ತೇವೆ ಎಂದು ಹೇಳಿದ್ದಾರೆ. ಈ ಬಗ್ಗೆ Xನಲ್ಲಿ ಪೋಸ್ಟ್ ಮಾಡಿರುವ ಇಸ್ರೊ, ಪಿಎಸ್ಎಲ್ ವಿ- 62 ಕಾರ್ಯಾಚರಣೆಯ ಮೂರನೇ ಹಂತದಲ್ಲಿ ಅಸಹಜತೆ ಕಂಡು ಬಂದಿದೆ. ಈ ಬಗ್ಗೆ ವಿಶ್ಲೇಷಣೆ ಆರಂಭವಾಗಿದೆ ಎಂದು ಮಾಹಿತಿ ನೀಡಿದೆ. 22.5 ಗಂಟೆಗಳ ಕೌಂಟ್ಡೌನ್ ನಂತರ, ಭಾರತ ಮತ್ತು ವಿದೇಶಗಳ ಸ್ಟಾರ್ಟ್ಅಪ್ಗಳು ಮತ್ತು ಶಿಕ್ಷಣ ತಜ್ಞರು ಅಭಿವೃದ್ಧಿಪಡಿಸಿದ EOS-N1 ಉಪಗ್ರಹ ಮತ್ತು 15 ಇತರ ಉಪಗ್ರಹಗಳನ್ನು ಹೊಂದಿರುವ PSLV-C62 ಅನ್ನು ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಸೋಮವಾರ ಬೆಳಿಗ್ಗೆ 10.18 ಕ್ಕೆ ಉಡಾವಣೆ ಮಾಡಲಾಗಿದೆ. EOS-N1 ಭೂಸರ್ವೇಕ್ಷಣಾ ಉಪಗ್ರಹವನ್ನು ಕಾರ್ಯತಂತ್ರದ ಉದ್ದೇಶಗಳಿಗಾಗಿ ನಿರ್ಮಿಸಲಾಗಿದೆ . ಇಸ್ರೊ ಅಂಗಸಂಸ್ಥೆಯಾದ ನ್ಯೂಸ್ಪೇಸ್ ಇಂಡಿಯಾ ಲಿಮಿಟೆಡ್ (NSIL) ನೇತೃತ್ವದಲ್ಲಿ ದೇಶೀಯ ಮತ್ತು ವಿದೇಶದ 14 ಉಪಗ್ರಹಗಳನ್ನು ಕಕ್ಷೆಗೆ ಸೇರಿಸುವ ಗುರಿ ಈ PSLVಯದ್ದಾಗಿತ್ತು. ಪಿಎಸ್ಎಲ್ವಿ ಇದುವರೆಗೆ 63 ಹಾರಾಟಗಳನ್ನು ಪೂರ್ಣಗೊಳಿಸಿದೆ. ಇದು ಚಂದ್ರಯಾನ-1, ಮಂಗಳಯಾನ, ಆದಿತ್ಯ-ಎಲ್1 ಮತ್ತು ಆಸ್ಟ್ರೋಸ್ಯಾಟ್ ಮಿಷನ್ನಂತಹ ಬಾಹ್ಯಾಕಾಶ ನೌಕೆಗಳನ್ನು ಉಡಾವಣೆ ಮಾಡಿದೆ. 2017 ರಲ್ಲಿ, ಪಿಎಸ್ಎಲ್ವಿ ಒಂದೇ ಕಾರ್ಯಾಚರಣೆಯಲ್ಲಿ 104 ಉಪಗ್ರಹಗಳನ್ನು ಉಡಾವಣೆ ಮಾಡುವ ಮೂಲಕ ವಿಶ್ವ ದಾಖಲೆ ಮಾಡಿತ್ತು. 15 ಉಪಗ್ರಹಗಳು: ಥೈಲ್ಯಾಂಡ್ ಮತ್ತು ಯುಕೆ SSTL (UK) ಜಂಟಿಯಾಗಿ ನಿರ್ಮಿಸಿದ ಥಿಯೋಸ್-2 ಸರ್ವೇಕ್ಷಣಾ ಉಪಗ್ರಹ, ಧ್ರುವ ಸ್ಪೇಸ್ (ಭಾರತ) ನಿಂದ CGUSAT, ಧ್ರುವ ಸ್ಪೇಸ್ ನಿಂದ DSUSAT, ಧ್ರುವ ಸ್ಪೇಸ್ ಮತ್ತು Takeme2Space (ಭಾರತ) ನಿಂದ MOI-1, ಧ್ರುವ ಸ್ಪೇಸ್ ನಿಂದ LACHIT, ಧ್ರುವ ಸ್ಪೇಸ್ ಮತ್ತು ಡಾನ್ ಬಾಸ್ಕೋ ವಿಶ್ವವಿದ್ಯಾಲಯ (ಭಾರತ) ನಿಂದ ಥೈಬೋಲ್ಟ್-3, ನೇಪಾಳ ವಿಶ್ವವಿದ್ಯಾಲಯದ ಅಂತರಕ್ಷ್ಯ ಪ್ರತಿಷ್ಠಾನ (ನೇಪಾಳ) ಮತ್ತು MEA ನಿಂದ ಮುನಾಲ್, ಆರ್ಬಿಟಲ್ ಪ್ಯಾರಡೈಮ್ (ಸ್ಪೇನ್) ನಿಂದ KID ಮತ್ತು RIDE! (ಫ್ರಾನ್ಸ್), ಆಲ್ಟೋಸ್ಪೇಸ್ (ಬ್ರೆಜಿಲ್) ನಿಂದ ಎಡುಸ್ಯಾಟ್, ಆಲ್ಟೋಸ್ಪೇಸ್ ನಿಂದ Uaisat, ಆಲ್ಟೋಸ್ಪೇಸ್ ನಿಂದ ಗ್ಯಾಲಕ್ಸಿ ಎಕ್ಸ್ಪ್ಲೋರರ್, ಆಲ್ಟೋಸ್ಪೇಸ್ ನಿಂದ ಆರ್ಬಿಟಲ್ ಟೆಂಪಲ್, ಆಲ್ಟೋಸ್ಪೇಸ್ ನಿಂದ ಅಲ್ಡೆಬರನ್-1, ಲಕ್ಷ್ಮಣ್ ಜ್ಞಾನಪೀಠ್ (ಭಾರತ) ನಿಂದ SanskarSat-1 ಮತ್ತು ಆರ್ಬಿಟ್ಏಡ್ (ಭಾರತ) ನಿಂದ ಆಯುಲ್ಸ್ಯಾಟ್. PSLV-C62 / EOS-N1 ಮಿಷನ್ ಯಾವುದರ ಬಗ್ಗೆ? PSLV-C62/EOS-N1 ಮಿಷನ್ ಅನ್ವೇಷಾ, EOS-N1 ಎಂಬ ಹೆಸರಿನ ಭೂ ಸರ್ವೇಕ್ಷಣಾ ಉಪಗ್ರಹ ಮತ್ತು ಇತರ 15 ಉಪಗ್ರಹಗಳನ್ನು ಭೂಮಿಯ ಮೇಲ್ಮೈಯಿಂದ ಕನಿಷ್ಠ ನೂರು ಕಿಲೋಮೀಟರ್ ಎತ್ತರದಲ್ಲಿರುವ Sun-Synchronous Orbit ಗೆ ಕೊಂಡೊಯ್ಯುತ್ತದೆ. PSLV-C62/EOS-N1 ಮಿಷನ್ ಆರಂಭದಲ್ಲಿ ಥೈಲ್ಯಾಂಡ್ ಮತ್ತು ಯುನೈಟೆಡ್ ಕಿಂಗ್ಡಮ್ ನಿರ್ಮಿಸಿದ ಭೂ ಸರ್ವೇಕ್ಷಣಾ ಉಪಗ್ರಹವನ್ನು ನಿಯೋಜಿಸುತ್ತದೆ, ನಂತರ 14 ಇತರ ಸಹ- ಉಪಗ್ರಹಗಳನ್ನು ಉಡಾವಣೆಯಾದ ಸುಮಾರು 17 ನಿಮಿಷಗಳ ನಂತರ ಸನ್-ಸಿಂಕ್ರೊನಸ್ ಕಕ್ಷೆಗೆ ನಿಯೋಜಿಸುತ್ತದೆ ಎಂದು ಇಸ್ರೊ ಹೇಳಿತ್ತು. ಅನ್ವೇಷಾ ಉಪಗ್ರಹ ಈ ಬಾರಿ PSLV-C62 ರಾಕೆಟ್ ಹೊತ್ತೊಯ್ದ ಪ್ರಮುಖ ಉಪಗ್ರಹದ ಹೆಸರು 'ಅನ್ವೇಷಾ'. ಇದನ್ನು EOS-N1 ಎಂದೂ ಕರೆಯಲಾಗುತ್ತದೆ. ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO) ಅಭಿವೃದ್ಧಿಪಡಿಸಿರುವ ಇದು 100 ರಿಂದ 150 ಕಿಲೋಗ್ರಾಂಗಳಷ್ಟು ತೂಕವಿರುವ ಸಣ್ಣ-ಉಪಗ್ರಹವಾಗಿದೆ ಇದು. ಅನ್ವೇಷಾ ಉಪಗ್ರಹ ಹೈಪರ್ ಸ್ಪೆಕ್ಟಲ್ ಇಮೇಜಿಂಗ್ ತಂತ್ರಜ್ಞಾನವನ್ನು ಬಳಸುತ್ತಿದ್ದು, ಮನುಷ್ಯರ ಕಣ್ಣಿಗೆ ಕಾಣದ ವಿವರವನ್ನೂ ಕಲೆಹಾಕುವ ಸಾಮರ್ಥ್ಯ ಹೊಂದಿದೆ. ಇದು ಸೂಪರ್-ಸ್ಮಾರ್ಟ್ ಕ್ಯಾಮೆರಾದಂತಿದ್ದು ಕೇವಲ ಫೋಟೋಗಳನ್ನು ಕ್ಲಿಕ್ ಮಾಡುವುದಿಲ್ಲ, ನೇರವಾಗಿ ನೋಡುತ್ತದೆ. ಇದು ಗಡಿ ಭದ್ರತೆ, ಕರಾವಳಿ ತಪಾಸಣೆ, ಕೃಷಿ, ನಗರ ಯೋಜನೆ ಮತ್ತು ಪರಿಸರ ಅಧ್ಯಯನಗಳಲ್ಲಿ ಸಹಾಯ ಮಾಡುತ್ತದೆ. ಇದು ಕಾಡು ಮತ್ತು ಅಲ್ಲಿ ಮುಚ್ಚಿಟ್ಟಿರುವ ಯುದ್ಧ ಟ್ಯಾಂಕ್ಗಳ ನಡುವಿನ ವ್ಯತ್ಯಾಸಗಳನ್ನು ನಿಖರವಾಗಿ ಗುರುತಿಸಬಲ್ಲದು .ಈ ಹೈಪರ್ಸ್ಪೆಕ್ಟ್ರಲ್ ಉಪಗ್ರಹವು ಅದಕ್ಕೆ ಕಾಣುವ ವಸ್ತುಗಳು ಏನು? ಅದು ಯಾವ ವಸ್ತುಗಳಿಂದ ಮಾಡಲ್ಪಟ್ಟಿದೆ ಎಂಬುದನ್ನು ಪತ್ತೆ ಮಾಡುತ್ತದೆ. ಇದು ಗುಪ್ತ ಮಾಹಿತಿಗಳನ್ನು ನೀಡಲು ಸಹಕರಿಸುತ್ತದೆ. PSLV ಉಡಾವಣೆಯಲ್ಲಿನ ವೈಫಲ್ಯ ಚಂದ್ರಯಾನ-1 ಹಾಗೂ ಮಂಗಳಯಾನದಂತಹ ಕಾರ್ಯಾಚರಣೆಗಳ ಯಶಸ್ವಿಯಾಗುವಲ್ಲಿ ಪ್ರಮುಖ ಪಾತ್ರವಹಿಸಿದ್ದ PSLV ರಾಕೆಟ್ ಅನ್ನು ಇಸ್ರೊದ 'ವರ್ಕ್ ಹಾರ್ಸ್ ' ಕರೆಯಲಾಗುತ್ತದೆ. 1993 ರಲ್ಲಿ ಪ್ರಾರಂಭವಾದಾಗಿನಿಂದ PSLV ಇಸ್ರೊದ ಅತ್ಯಂತ ವಿಶ್ವಾಸಾರ್ಹ ಉಡಾವಣಾ ವಾಹನವಾಗಿದ್ದು, 50 ಕ್ಕೂ ಹೆಚ್ಚು ಯಶಸ್ವಿ ಕಾರ್ಯಾಚರಣೆಗಳನ್ನು ಮಾಡಿದೆ. PSLV-C61 2025 ಮೇ 18, ರಂದು ಭೂ ಸರ್ವೇಕ್ಷಣೆಯ ಉದ್ದೇಶದಿಂದ ಉಡಾವಣೆ ಮಾಡಲಾಗಿದ್ದ PSLV-C61 ರಾಕೆಟ್ ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡು ಕಕ್ಷೆ ಸೇರುವಲ್ಲಿ ವಿಫಲವಾಗಿತ್ತು. ಇದು ಇಸ್ರೊದ 101ನೇ ಉಡ್ಡಯನವಾಗಿತ್ತು . ಮೇ 18ರಂದು ಬೆಳಗ್ಗೆ 5.59ಕ್ಕೆ ರಾಕೆಟ್ ಉಡಾವಣೆ ಆಗಿತ್ತು. ಒಟ್ಟು ನಾಲ್ಕು ಹಂತದಲ್ಲಿ ನಡೆಯುವ ಕಾರ್ಯಾಚರಣೆ ಇದಾಗಿತ್ತು. ಎರಡು ಹಂತಗಳವರೆಗೆ ಎಲ್ಲವೂ ಸುಸೂತ್ರವಾಗಿತ್ತು. ಮೂರನೇ ಹಂತದಲ್ಲಿ ಕಾರ್ಯಾಚರಣೆ ವಿಫಲವಾಗಿತ್ತು. ಇನ್ನಷ್ಟು ಮೇಲೆ ಹೋಗಲು ರಾಕೆಟ್ ನ ಎಂಜಿನ್ ಗೆ ಬೇಕಾದ ಒತ್ತಡ ಸೃಷ್ಟಿಯಾಗಲಿಲ್ಲ. ಎಂಜಿನ್ ಗೆ ಒತ್ತಡ ಸೃಷ್ಟಿಸಿಕೊಡಬೇಕಿದ್ದ ಇಂಧನ ಟ್ಯಾಂಕ್ ನಲ್ಲಿಯೂ ಒತ್ತಡ ಸೃಷ್ಟಿಯಾಗಲಿಲ್ಲ.ಆದ್ದರಿಂದ ನೆಲಮಟ್ಟದಿಂದ 450 ಕಿಮೀನಷ್ಟು ಎತ್ತರಕ್ಕೆ ಹಾರಿದ್ದ ರಾಕೆಟ್ ಸಮುದ್ರ ಸೇರಿತ್ತು PSLV-C39 2017 ಆಗಸ್ಟ್ 31 ರಂದು ಉಡಾವಣೆಯಾದ PSLV-C39 ಮಿಷನ್ ಅಪರೂಪದ ವೈಫಲ್ಯವನ್ನು ಎದುರಿಸಿತು. ರಾಕೆಟ್ ಎಲ್ಲಾ ನಾಲ್ಕು ಹಂತಗಳ ಪ್ರೊಪಲ್ಷನ್ ಮೂಲಕ ದೋಷರಹಿತವಾಗಿ ಕಾರ್ಯನಿರ್ವಹಿಸಿದರೂ, ಶಾಖ ಕವಚ (heat shield) ಹಾರಾಟದ 3 ನಿಮಿಷ ಮತ್ತು 23 ಸೆಕೆಂಡುಗಳ ನಿಗದಿತ ಸಮಯದಲ್ಲಿ ಬೇರ್ಪಡಿಸಲು ವಿಫಲವಾಯಿತು. ಉಪಗ್ರಹವು ರಾಕೆಟ್ನ ನಾಲ್ಕನೇ ಹಂತದಿಂದ ಆಂತರಿಕವಾಗಿ ಬೇರ್ಪಟ್ಟಿದ್ದರೂ, ಶಾಖ ಶೀಲ್ಡ್ನ ಹೆಚ್ಚುವರಿ ತೂಕವು ಉದ್ದೇಶಿತ ಕಕ್ಷೆಯನ್ನು ತಲುಪುವುದನ್ನು ತಡೆಯಿತು. ಇದರಿಂದ ಉಂಟಾದ ನಷ್ಟ ₹250-ಕೋಟಿ . ನಂತರದ ವಿಶ್ಲೇಷಣೆಯು ಪೈರೋ ಸಾಧನಗಳಲ್ಲಿನ (ಸ್ಫೋಟಕ ಬೋಲ್ಟ್ಗಳು) ಅಸಮರ್ಪಕ ಕಾರ್ಯವು ಕವಚ ಹೊರಹಾಕಲು ಉದ್ದೇಶಿಸಲಾದ ಲೋಹದ ಪಿನ್ ಮುರಿಯಲು ಸಾಕಷ್ಟು ಒತ್ತಡವನ್ನು ಉತ್ಪಾದಿಸುವಲ್ಲಿ ವಿಫಲವಾಗಿದೆ ಎಂದು ಬಹಿರಂಗಪಡಿಸಿತು. PSLV-D1 1993 ಸೆಪ್ಟೆಂಬರ್ 20 ರಂದು, ಭಾರತದ ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್, PSLV-D1 ನ ಮೊದಲ ಉಡಾವಣೆ ಆಗಿತ್ತು.ರಾಕೆಣ್ ಉಡಾವಣೆಯಾದ ಸುಮಾರು 12 ನಿಮಿಷಗಳ ನಂತರ ಮಾರ್ಗದರ್ಶನ ಮತ್ತು ನಿಯಂತ್ರಣ ವ್ಯವಸ್ಥೆಯಲ್ಲಿನ ಸಾಫ್ಟ್ವೇರ್ ದೋಷದಿಂದಾಗಿ ರಾಕೆಟ್ ಸಮತೋಲನವನ್ನು ಕಳೆದುಕೊಂಡಿತು. ಮೊದಲ ಎರಡು ಹಂತಗಳು ಸರಿಯಾಗಿ ಕಾರ್ಯನಿರ್ವಹಿಸಿದರೂ, ಆನ್ಬೋರ್ಡ್ ಕಂಪ್ಯೂಟರ್ನಲ್ಲಿ ಲಾಜಿಕ್ ದೋಷ ಕಂಡು ಬಂದು ಇದು ಎರಡನೇ ಹಂತದ ಬೇರ್ಪಡುವಿಕೆಯ ಸಮಯದಲ್ಲಿ ತಪ್ಪಾದ ಆದೇಶವನ್ನು ನೀಡತೊಡಗಿತು. ಈ ಅಡಚಣೆಯು ವಾಹನವನ್ನು ಅದರ ಉದ್ದೇಶಿತ ಪಥದಿಂದ ದೂರಕ್ಕೆ ಒಯ್ದಿದ್ದು, IRS-1E ಉಪಗ್ರಹವನ್ನು ಕಕ್ಷೆಗೆ ತರಲು ಅಗತ್ಯವಾದ ಎತ್ತರ ಮತ್ತು ವೇಗವನ್ನು ತಲುಪುವುದನ್ನು ತಡೆಯಿತು. ಪರಿಣಾಮವಾಗಿ ರಾಕೆಟ್ ಮತ್ತು ಅದರ ಪೇಲೋಡ್ ಬಂಗಾಳಕೊಲ್ಲಿಗೆ ಬಿದ್ದಿತ್ತು.
ಎಸ್ಐಆರ್: ಉತ್ತರ ಬಂಗಾಳದಲ್ಲಿ ಚಹಾತೋಟಗಳ ಕಾರ್ಮಿಕರ ಉದ್ಯೋಗ ದಾಖಲೆಗಳಿಗೆ ಗುರುತಿನ ಚೀಟಿಯಾಗಿ ಮಾನ್ಯತೆ
ಹೊಸದಿಲ್ಲಿ: ಪಶ್ಚಿಮ ಬಂಗಾಳದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆಗಾಗಿ (ಎಸ್ಐಆರ್) ಉತ್ತರ ಬಂಗಾಳದಲ್ಲಿ ಚಹಾತೋಟಗಳು ಮತ್ತು ಸಿಂಕೋನಾ ನೆಡುತೋಪುಗಳ ಕಾರ್ಮಿಕರ ಅಧಿಕೃತ ಉದ್ಯೋಗ ದಾಖಲೆಗಳನ್ನು ಅವರ ಗುರುತನ್ನು ಸಾಬೀತುಗೊಳಿಸಲು ಮಾನ್ಯ ದಾಖಲೆಯಾಗಿ ಪರಿಗಣಿಸಲಾಗುವುದು ಎಂದು ಚುನಾವಣಾ ಆಯೋಗವು ಹೇಳಿದೆ. ಇದು ಡಾರ್ಜಿಲಿಂಗ್,ಕಾಲಿಂಪಾಂಗ್, ಜಲಪೈಗುರಿ, ಕೂಚ್ಬೆಹಾರ್, ಅಲಿಪುರ್ದುರ್,ಉತ್ತರ ದಿನಾಜ್ಪುರ ಮತ್ತು ದಕ್ಷಿಣ ದಿನಾಜ್ಪುರ;ಈ ಏಳು ಜಿಲ್ಲೆಗಳಲ್ಲಿನ ಕಾರ್ಮಿಕರಿಗೆ ಅನ್ವಯವಾಗುತ್ತದೆ ಎಂದು ಚು.ಆಯೋಗವು ಪ.ಬಂಗಾಳದ ಮುಖ್ಯ ಚುನಾವಣಾಧಿಕಾರಿಗೆ ಬರೆದಿರುವ ಪತ್ರದಲ್ಲಿ ತಿಳಿಸಿದೆ. ಈ ಕಾರ್ಮಿಕರ ಪೈಕಿ ಹೆಚ್ಚಿನವರು ಎಸ್ಐಆರ್ಗಾಗಿ ಚುನಾವಣಾ ಆಯೋಗವು ಕಡ್ಡಾಯಗೊಳಿಸಿರುವ ದಾಖಲೆಗಳನ್ನು ಹೊಂದಿಲ್ಲ. ಜಿಲ್ಲಾ ಚುನಾವಣಾ ಅಧಿಕಾರಿಗಳು ಚಹಾ ಎಸ್ಟೇಟ್ಗಳ ಕಾರ್ಮಿಕರ ಪರಿಶೀಲನೆಯನ್ನು ನಡೆಸುತ್ತಾರೆ ಎಂದು ಆಯೋಗವು ಈ ಹಿಂದೆ ಹೇಳಿತ್ತು. ಬಿಜೆಪಿಯ ನಾಯಕರು ಕಳೆದ ವರ್ಷದ ಅಕ್ಟೋಬರ್ನಿಂದಲೇ ಈ ವಿಷಯದಲ್ಲಿ ಚು.ಆಯೋಗಕ್ಕೆ ಅಹವಾಲುಗಳನ್ನು ಸಲ್ಲಿಸುತ್ತಿದ್ದರು. ಉತ್ತರ ಬಂಗಾಳದಲ್ಲಿಯ ಚಹಾತೋಟಗಳ ಕಾರ್ಮಿಕರು ಮತ್ತು ಅರಣ್ಯವಾಸಿ ಸಮುದಾಯಗಳು ಹಲವಾರು ವರ್ಷಗಳಿಂದಲೂ ಮತದಾರರ ಪಟ್ಟಿಗಳಿಂದ ಹೊರಗುಳಿದಿದ್ದಾರೆ. ಐತಿಹಾಸಿಕವಾಗಿ ಬ್ರಿಟಿಷ್ ಯುಗದಿಂದಲೂ ಮತ್ತು ಸ್ವಾತಂತ್ರ್ಯಾನಂತರದ ದಶಕಗಳಲ್ಲಿಯೂ ಚಹಾ ಮತ್ತು ಸಿಂಕೋನಾ ತೋಟಗಳ ಕಾರ್ಮಿಕರು ತಮ್ಮ ಉದ್ಯೋಗ ದಾಖಲೆಗಳನ್ನು ಹೊರತುಪಡಿಸಿ ಇತರ ಯಾವುದೇ ಅಧಿಕೃತ ದಾಖಲೆಗಳನ್ನು ಹೊಂದಿಲ್ಲ,ಅವರಲ್ಲಿ ಹಲವರು ಭೂ ಹಕ್ಕುಗಳನ್ನೂ ಹೊಂದಿಲ್ಲ ಎಂದು ದಾರ್ಜಿಲಿಂಗ್ನ ಬಿಜೆಪಿ ಸಂಸದ ರಾಜು ಬಿಷ್ಟಾ ಅವರು ಚುನಾವಣಾ ಆಯೋಗಕ್ಕೆ ಬರೆದಿದ್ದ ಪತ್ರಗಳಲ್ಲಿ ಎತ್ತಿ ತೋರಿಸಿದ್ದರು. ಈ ಕಾರ್ಮಿಕರ ಉದ್ಯೋಗ ದಾಖಲೆಗಳನ್ನು ಗುರುತಿನ ಪುರಾವೆಯಾಗಿ ಸ್ವೀಕರಿಸುವ ಚುನಾವಣಾ ಆಯೋಗದ ನಿರ್ಧಾರದಿಂದ ಸುದೀರ್ಘ ಕಾಲದಿಂದಲೂ ಮೂಲಭೂತ ದಾಖಲಾತಿ ಮತ್ತು ಮತದಾರರ ಪಟ್ಟಿಗಳಲ್ಲಿ ನೋಂದಣಿ ನಿರಾಕರಿಸಲ್ಪಟ್ಟಿರುವ ಸಾವಿರಾರು ನಾಗರಿಕರಿಗೆ ಪ್ರಯೋಜನವಾಗಲಿದೆ ಎಂದು ಬಿಷ್ಟಾ ಹೇಳಿದರು. ಪ.ಬಂಗಾಳದ ಕರಡು ಮತದಾರರ ಪಟ್ಟಿಗಳನ್ನು ಡಿ.16ರಂದು ಪ್ರಕಟಿಸಲಾಗಿದ್ದು,ಮೃತಪಟ್ಟಿರುವ,ಸ್ಥಳಾಂತರಗೊಂಡಿರುವ ಅಥವಾ ಗೈರುಹಾಜರಾದ 58 ಲಕ್ಷಕ್ಕೂ ಅಧಿಕ ಮತದಾರರನ್ನು ಕೈಬಿಡಲಾಗಿದೆ. 2026ರ ಪೂರ್ವಾರ್ಧದಲ್ಲಿ ಪ.ಬಂಗಾಳ ವಿಧಾನಸಭಾ ಚುನಾವಣೆಗಳು ನಡೆಯುವ ನಿರೀಕ್ಷೆಯಿದೆ.
WPL 2026 RCB: ಯುಪಿ ವಾರಿಯರ್ಸ್ ವಿರುದ್ಧ ಆರ್ಸಿಬಿ ಸಂಭಾವ್ಯ ಪ್ಲೇಯಿಂಗ್ 11
WPL 2026 RCB: ಈಗಾಗಲೇ ಡಬ್ಲ್ಯೂಪಿಎಲ್ 2026 ಉದ್ಘಾಟನಾ ಪಂದ್ಯದಲ್ಲಿ ಆರ್ಸಿಬಿಯು ಮುಂಬೈ ಇಂಡಿಯನ್ಸ್ ವಿರುದ್ಧ ಗೆದ್ದು ಬೀಗಿದೆ. ಇನ್ನೂ ಇಂದು (ಜನವರಿ 12) ಎರಡನೇ ಪಂದ್ಯವನ್ನು ಯುಪಿ ವಾರಿಯರ್ಸ್ ಮೇಲೆ ಆಡಲಿದೆ. ಹಾಗಾದ್ರೆ ಪ್ಲೇಯಿಂಗ್ 11 ಹೇಗಿರಲಿದೆ ಹಾಗೂ ಸ್ಥಳ, ಸಮಯಗಳ ಕುರಿತು ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ. ಡಬ್ಲ್ಯೂಪಿಎಲ್ 2026 ಚೊಚ್ಚಲ ಪಂದ್ಯದಲ್ಲಿ ಆರ್ಸಿಬಿಯು
ಜಿಬಿಎ ಚುನಾವಣೆಯಲ್ಲಿ ಈ ಕಾರಣಕ್ಕೆ ಕಾಂಗ್ರೆಸ್ ಸೋಲು ಖಚಿತ: ಆರ್ ಅಶೋಕ್
ಬೆಂಗಳೂರು: ಆದಷ್ಟು ಬೇಗ ಜಿಬಿಎ ಚುನಾವಣೆ ನಡೆಯಬೇಕು. ಬೆಂಗಳೂರಿನಲ್ಲಿ ಬಿದ್ದಿರುವ ಗುಂಡಿಗಳು, ಕಸದ ರಾಶಿ, ಕಾನೂನು ಸುವ್ಯವಸ್ಥೆ ಹಾಳಾಗಿರುವುದನ್ನು ನೋಡಿದರೆ ಕಾಂಗ್ರೆಸ್ ಚುನಾವಣೆಯಲ್ಲಿ ನೆಲ ಕಚ್ಚುವುದು ಖಚಿತವಾಗಿದೆ. ಇನ್ನೂ ಮೈತ್ರಿಗೆ ಸಂಬಂಧಿಸಿದಂತೆ ವರಿಷ್ಠರು ತೀರ್ಮಾನಿಸಲಿದ್ದಾರೆ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕರಾದ ಆರ್ ಅಶೋಕ್ ಹೇಳಿದರು. ರಾಜಭವನದಲ್ಲಿ ರಾಜ್ಯಪಾಲರಿಗೆ ಮನವಿ ಸಲ್ಲಿಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದ
ಭಾರತದ ಗ್ರಾಮೀಣ ಉದ್ಯೋಗ ನೀತಿಯಲ್ಲಿ ಕ್ರಾಂತಿಕಾರಿ ಬದಲಾವಣೆ ತರುವ ನಿಟ್ಟಿನಲ್ಲಿ, ಕೇಂದ್ರ ಸರ್ಕಾರವು 2005ರ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆಯನ್ನು ರದ್ದುಗೊಳಿಸಿ, ಅದರ ಬದಲಿಗೆ 'ವಿಕಸಿತ ಭಾರತ - ರೋಜ್ಗಾರ್ ಮತ್ತು ಅಜೀವಿಕಾ ಮಿಷನ್ (ಗ್ರಾಮೀಣ)'- ಉದ್ಯೋಗ ಮತ್ತು ಜೀವನೋಪಾಯ ಮಿಷನ್ ಅಥವಾ 'ವಿಬಿ-ಜಿ ರಾಮ್ ಜಿ' (VB-G RAM G) ಕಾಯ್ದೆ, 2025 ಅನ್ನು ಜಾರಿಗೆ ತಂದಿದೆ. ಅಂದರೆ, ಈ ಹಿಂದೆ ಇದ್ದೆ ಎಂಜಿನರೇಗಾ ಯೋಜನೆಯ ಬದಲು ವಿಬಿ-ಜಿ ರಾಮ್ ಜಿ ಯೋಜನೆ ಜಾರಿಗೆ ಬಂದಿದೆ. ರಾಷ್ಟ್ರಪತಿಗಳ ಅಂಕಿತ ಪಡೆದಿರುವ ಈ ಹೊಸ ಕಾಯ್ದೆಯು ಗ್ರಾಮೀಣ ಭಾಗದ ಆರ್ಥಿಕತೆಯನ್ನು ಬಲಪಡಿಸುವ ಮತ್ತು 2047ರ ವೇಳೆಗೆ 'ವಿಕಸಿತ ಭಾರತ' ನಿರ್ಮಾಣದ ಗುರಿಯನ್ನು ಹೊಂದಿದೆ. ಈ ಕಾಯ್ದೆಯ ಕುರಿತಾದ ಸಮಗ್ರ ಮಾಹಿತಿ ಇಲ್ಲಿದೆ.
ಮಧ್ಯಪ್ರಾಚ್ಯದಲ್ಲಿ ಮತ್ತೊಂದು ತಲ್ಲಣ: ಇರಾನ್ನ ಪ್ರತಿಭಟನೆಯಲ್ಲಿ 500 ಸಾವು, ಅಮೆರಿಕಾ - ಇಸ್ರೇಲ್ ಅಲರ್ಟ್
ಇಸ್ರೇಲ್ - ಇರಾನ್ ಹಾಗೂ ಅಮೆರಿಕಾದ ನಡುವೆ ಮತ್ತೊಂದು ಸುತ್ತಿನ ಸಂಘರ್ಷ ಏರ್ಪಡುವ ಎಲ್ಲಾ ಲಕ್ಷಣಗಳು ಸಹ ಕಾಣಿಸುತ್ತಿವೆ. ಇರಾನ್ನಲ್ಲಿ ಆಂತರಿಕ ಗಲಭೆಗಳು ಹೆಚ್ಚಾಗಿವೆ. ಇಸ್ರೇಲ್ ಹಾಗೂ ಇರಾನ್ನ ನಡುವೆ ಸುದೀರ್ಘ ಅವಧಿಗೆ ನಡೆದಿದ್ದ ಸಂಘರ್ಷ ಹಾಗೂ ಯುದ್ಧಗಳಿಂದ ಇಲ್ಲಿನ ಜನರು ಈಗಾಗಲೇ ಹೈರಾಣಾಗಿದ್ದಾರೆ. ಈ ರೀತಿ ಇರುವಾಗಲೇ ಆತಂರಿಕ ಗಲಭೆಗಳು ತೀವ್ರ ಸ್ವರೂಪವನ್ನು ಪಡೆದುಕೊಂಡಿದ್ದು, ಈ
ಎಸ್ಬಿಐ ಗ್ರಾಹಕರ ಜೇಬಿಗೆ ಬೀಳಲಿದೆ ಕತ್ತರಿ, ವಿವಿಧ ಸೇವಾ ಶುಲ್ಕಗಳನ್ನು ಏರಿಕೆ ಮಾಡಿದ ಬ್ಯಾಂಕ್
ದೇಶದ ಅತಿದೊಡ್ಡ ಬ್ಯಾಂಕ್ ಆಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ತನ್ನ ಎಟಿಎಂ ಸೇವಾ ಶುಲ್ಕಗಳನ್ನು ಹೆಚ್ಚಿಸುವ ಮೂಲಕ ಗ್ರಾಹಕರಿಗೆ ಬಿಸಿ ಮುಟ್ಟಿಸಿದೆ. 2025ರ ಡಿಸೆಂಬರ್ 1ರಿಂದ ಜಾರಿಗೆ ಬರುವಂತೆ, ಇತರೆ ಬ್ಯಾಂಕ್ಗಳ ಎಟಿಎಂಗಳಲ್ಲಿ ಉಚಿತ ಮಿತಿಯನ್ನು ಮೀರಿ ನಡೆಸುವ ವ್ಯವಹಾರಗಳಿಗೆ ಹೆಚ್ಚಿನ ಶುಲ್ಕ ವಿಧಿಸಲಾಗುತ್ತಿದೆ. ಹಣ ಹಿಂಪಡೆಯುವಿಕೆಯ ಶುಲ್ಕವನ್ನು 21 ರೂ. ನಿಂದ 23 ರೂ. ಗೆ ಹಾಗೂ ಹಣಕಾಸೇತರ ವ್ಯವಹಾರಗಳ ಶುಲ್ಕವನ್ನು 10 ರೂ. ನಿಂದ 11 ರೂ. ಗೆ ಏರಿಸಲಾಗಿದೆ.
ಮುಖ್ಯ ಚುನಾವಣಾ ಆಯುಕ್ತ, ಇಸಿಗಳಿಗೆ ಕಾನೂನು ರಕ್ಷಣೆ ವಿರುದ್ಧ ಅರ್ಜಿ: ಕೇಂದ್ರ, ಚುನಾವಣಾ ಆಯೋಗಕ್ಕೆ ಸುಪ್ರೀಂ ನೋಟಿಸ್
ಹೊಸದಿಲ್ಲಿ: ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಮತ್ತು ಚುನಾವಣಾ ಆಯುಕ್ತರಿಗೆ (ಇಸಿ) ಜೀವಮಾನವಿಡೀ ಕಾನೂನು ಕ್ರಮಗಳಿಂದ ವಿನಾಯಿತಿಯನ್ನು ನೀಡಿ ಸಂಸತ್ತು ತಂದಿರುವ ಕಾನೂನಿನ ಸಿಂಧುತ್ವವನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಯ ಕುರಿತು ಸರ್ವೋಚ್ಚ ನ್ಯಾಯಾಲಯವು ಸೋಮವಾರ ಕೇಂದ್ರ ಮತ್ತು ಚುನಾವಣಾ ಆಯೋಗಕ್ಕೆ ನೋಟಿಸ್ ಹೊರಡಿಸಿದೆ. ಅರ್ಜಿಯ ವಿಚಾರಣೆಯನ್ನು ನಡೆಸಿದ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ ನೇತೃತ್ವದ ಪೀಠವು,‘ನಾವು ಅದನ್ನು ಪರಿಶೀಲಿಸಲು ಬಯಸುತ್ತೇವೆ,ನಾವು ನೋಟಿಸ್ಗಳನ್ನು ಹೊರಡಿಸುತ್ತಿದ್ದೇವೆ’ ಎಂದು ಹೇಳಿತು. ಮುಖ್ಯ ಚುನಾವಣಾ ಆಯುಕ್ತರು ಮತ್ತು ಇತರ ಚುನಾವಣಾ ಆಯುಕ್ತರ (ನೇಮಕಾತಿ,ಸೇವಾ ಷರತ್ತುಗಳು ಮತ್ತು ಅಧಿಕಾರಾವಧಿ) ಮಸೂದೆ,೨೦೨೩ರ ನಿಬಂಧನೆಯೊಂದನ್ನು ಅರ್ಜಿಯು ಪ್ರಶ್ನಿಸಿದೆ. ಕಾನೂನು ಸಿಇಸಿ ಮತ್ತು ಇಸಿಗಳು ತಮ್ಮ ಅಧಿಕೃತ ಕರ್ತವ್ಯಗಳ ನಿರ್ವಹಣೆ ವೇಳೆ ಕೈಗೊಳ್ಳುವ ಯಾವುದೇ ಕ್ರಮಕ್ಕೆ ಸಂಬಂಧಿಸಿದಂತೆ ಸಿವಿಲ್ ಮತ್ತು ಕ್ರಿಮಿನಲ್ ಕ್ರಮಗಳ ವಿರುದ್ಧ ಜೀವಮಾನವಿಡೀ ಅಭೂತಪೂರ್ವ ರಕ್ಷಣೆಯನ್ನು ಒದಗಿಸಿದೆ ಎಂದು ಅರ್ಜಿಯು ಆರೋಪಿಸಿದೆ. ಮಸೂದೆಯು ಸಂವಿಧಾನ ನಿರ್ಮಾತೃರು ನ್ಯಾಯಾಧೀಶರಿಗೂ ನೀಡಿರದಷ್ಟು ರಕ್ಷಣೆಯನ್ನು ಸಿಇಸಿ ಮತ್ತು ಇಸಿಗಳಿಗೆ ನೀಡಲು ಸಾಧ್ಯವಿಲ್ಲ. ಸಂವಿಧಾನ ರಚನಾಕಾರರು ಇತರ ಗಣ್ಯರಿಗೆ ನೀಡಿರದ ಇಂತಹ ಹೆಚ್ಚಿನ ರಕ್ಷಣೆಯನ್ನು ಸಂವಿಧಾನವು ಒದಗಿಸುವಂತಿಲ್ಲ ಎಂದು ಅರ್ಜಿದಾರರ ಪರ ವಕೀಲರು ಹೇಳಿದರು.
ಟಿ20 ವಿಶ್ವಕಪ್ 2026 - ಈ ಎರಡು ಕ್ರೀಡಾಂಗಣಗಳಿಗೆ ಬಾಂಗ್ಲಾದೇಶದ ಪಂದ್ಯಗಳು ಸ್ಥಳಾಂತರ ಸಾಧ್ಯತೆ
2026ರ ಟಿ20 ವಿಶ್ವಕಪ್ ಪಂದ್ಯಗಳನ್ನು ಭಾರತದಿಂದ ಬೇರೆಡೆಗೆ ಸ್ಥಳಾಂತರಿಸುವ ಬಾಂಗ್ಲಾದೇಶದ ಮನವಿಗೆ ಐಸಿಸಿ ಪ್ರತಿಕ್ರಿಯೆ ನೀಡಲಿದೆ. ಶ್ರೀಲಂಕಾಗೆ ಬದಲಾಗಿ ಚೆನ್ನೈ ಮತ್ತು ತಿರುವನಂತಪುರಂ ಪರ್ಯಾಯ ಸ್ಥಳಗಳಾಗಿ ಸೂಚಿಸಲಾಗಿದೆ. ಭದ್ರತಾ ಕಾರಣಗಳನ್ನು ಮುಂದಿಟ್ಟು ಬಾಂಗ್ಲಾದೇಶ ಈ ಮನವಿ ಮಾಡಿತ್ತು. ಐಸಿಸಿ ಶೀಘ್ರದಲ್ಲೇ ಅಂತಿಮ ನಿರ್ಧಾರ ಪ್ರಕಟಿಸಲಿದೆ.
ಬಹುನಿರೀಕ್ಷಿತ ವಂದೇ ಭಾರತ್ ಸ್ಲೀಪರ್ ರೈಲು ಸೇವೆಗೆ ಸಜ್ಜಾಗಿದ್ದು, ಜನವರಿ ಅಂತ್ಯದಲ್ಲಿ ಗುವಾಹಟಿ ಮತ್ತು ಕೋಲ್ಕತ್ತಾ ನಡುವೆ ಸಂಚಾರ ಆರಂಭಿಸಲಿದೆ. ಈ ಐಷಾರಾಮಿ ರೈಲು ಸಾಮಾನ್ಯ ಜನರಿಗಾಗಿ ಮೀಸಲಾಗಿದ್ದು, ವಿಐಪಿ ಕೋಟಾ ಇರುವುದಿಲ್ಲ. ಟಿಕೆಟ್ ದರ ಪ್ರತಿ ಕಿ.ಮೀಗೆ 2.4 ರೂ.ನಿಂದ 3.8 ರೂ. ವರೆಗೆ ನಿಗದಿಪಡಿಸಲಾಗಿದೆ.
ಇಒಎಸ್-ಎನ್1 ಕಣ್ಗಾವಲು ಉಪಗ್ರಹದ ಜೊತೆಗೆ ಒಟ್ಟು 16 ಇತರ ಉಪಗ್ರಹಗಳನ್ನು ಹೊತ್ತು ಕಕ್ಷೆಗೆ ಹೊರಟಿದ್ದ ಇಸ್ರೋದ ಪಿಎಸ್ಎಲ್ವಿ-ಸಿ62 ರಾಕೆಟ್, ಮೂರನೇ ಹಂತದಲ್ಲಿ ಪಥ ಬದಲಿಸಿದ ಕಾರಣ ಕಾರ್ಯಾಚರಣೆಯನ್ನು ಪೂರ್ಣಗೊಳಿಸುವಲ್ಲಿ ವಿಫಲವಾಗಿದೆ. ಇಸ್ರೋದ ಹೊಸ ವರ್ಷದ ಮೊದಲ ಬಾಹ್ಯಾಕಾಶ ಕಾರ್ಯಾಚರಣೆ ಯಶಸ್ವಿಯಾಗದಿರುವುದು ಅನೇಕ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಇಸ್ರೋ ಕೊಂಚ ನಿಧಾನಗತಿಯನ್ನು ಅನುಸರಿಸಬೇಕೆ ಎಂಬುದು ಕೂಡ ಇಂತಹ ಪ್ರಶ್ನೆಗಳಲ್ಲಿ ಒಂದಾಗಿದೆ. ಈ ಕುರಿತು ನಾಡಿನ ಖ್ಯಾತ ಬಾಹ್ಯಾಕಾಶ ಬರಹಗಾರ ಗಿರೀಶ್ ಲಿಂಗಣ್ಣ ಅವರು ತಮ್ಮ ಲೇಖನದಲ್ಲಿ ವಿಸ್ತೃತವಾಗಿ ಚರ್ಚಿಸಿದ್ದಾರೆ.
ಅಣ್ಣಾಮಲೈಯನ್ನು ‘ರಸಮಲೈ’ ಎಂದು ಕರೆದ ರಾಜ್ ಠಾಕ್ರೆ
ಮುಂಬೈ ಕುರಿತು ಮಾತನಾಡುವ ಅವರ ಹಕ್ಕು ಪ್ರಶ್ನಿಸಿದ ಎಂಎನ್ಎಸ್ ನಾಯಕ
ಕೋಗಿಲು ಪ್ರಕರಣ; 2 ಲಕ್ಷಕ್ಕೂ ಹೆಚ್ಚು ಬಾಂಗ್ಲಾದವರಿಗೆ ಮನೆ: ಎನ್ಐಎ ತನಿಖೆಗೆ ಬಿಜೆಪಿ ಆಗ್ರಹ
ಬೆಂಗಳೂರು: ಕೋಗಿಲು ಪ್ರಕರಣದಲ್ಲಿ 2 ಲಕ್ಷಕ್ಕೂ ಹೆಚ್ಚು ರೋಹಿಂಗ್ಯಾಗಳು ಮತ್ತು ಬಾಂಗ್ಲಾದವರಿದ್ದಾರೆ ಎಂದು ನಮಗೆ ವರದಿಗಳು ಬಂದಿವೆ. ಅವೆಲ್ಲವನ್ನೂ ಪರಿಶೀಲಿಸಿ, ಅಂಥವರನ್ನು ಬಂಧಿಸಬೇಕು. ಅವರ ದೇಶಕ್ಕೆ ಕಳಿಸುವುದು ಅಥವಾ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಬಿಜೆಪಿ ಶಾಸಕ ಎಸ್.ಆರ್. ವಿಶ್ವನಾಥ್ ಅವರು ಒತ್ತಾಯಿಸಿದರು. ತರಾತುರಿಯಲ್ಲಿ ಹೊರದೇಶದವರಿಗೆ ಮನೆ ಕೊಡಲು ಹೊರಟಿದೆ. ವಿದೇಶದವರು ಇರುವ ಕಾರಣ ಎನ್ಐಎ ತನಿಖೆ
2026 ಗೋಲ್ಡನ್ ಗ್ಲೋಬ್ ಪ್ರಶಸ್ತಿ; ವಿಜೇತರ ಪೂರ್ಣ ವಿವರ
83ನೇ ಗೋಲ್ಡನ್ ಗ್ಲೋಬ್ಸ್ ಪ್ರಶಸ್ತಿಗಳನ್ನು ಘೋಷಿಸಲಾಗಿದೆ. ಯಾರಿಗೆ ಗೌರವ ದೊರೆತಿದೆ ಎಂಬ ವಿವರ ಇಲ್ಲಿದೆ
ಕೆಎಲ್ ರಾಹುಲ್- ವಾಶಿಂಗ್ಟನ್ ಸುಂದರ್ ತಮಿಳು ಸಂವಾದ; ಹಿಂದಿ ರಾಷ್ಟ್ರೀಯ ಭಾಷೆ ಎಂದು ಸಂಜಯ್ ಬಂಗಾರ್ ಅನಗತ್ಯ ವಿವಾದ
India Vs New Zealand- ಭಾರತದ ರಾಷ್ಟ್ರೀಯ ಭಾಷೆ ಹಿಂದಿ ಎಂದು ಮಾಜಿ ಕ್ರಿಕೆಟ್ ಕೋಚ್ ಸಂಜಯ್ ಬಂಗಾರ್ ಅವರು ಕ್ರಿಕೆಟ್ ಕಾಮೆಂಟರಿ ಮಾಡುತ್ತಿದ್ದ ವೇಳೆ ನೀಡಿರುವ ಹೇಳಿಕೆ ತೀವ್ರ ವಿವಾದಕ್ಕೆ ಕಾರಣವಾಗಿದೆ. ನ್ಯೂಜಿಲೆಂಡ್ ವಿರುದ್ಧದ ಪಂದ್ಯದ ವೇಳೆ ನೀಡಿದ ಈ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಭಾರತಕ್ಕೆ ಯಾವುದೇ ರಾಷ್ಟ್ರೀಯ ಭಾಷೆಯಿಲ್ಲ ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದು ಸಂಜಯ್ ಬಂಗಾರ್ ಅವರು ತಮ್ಮ ವೃತ್ತಿಗೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
IMD Weather Forecast: ದಟ್ಟ ಮಂಜು, ಶೀತಗಾಳಿ ನಡುವೆ ಈ ಭಾಗಗಳಲ್ಲಿ ಎರಡು ದಿನ ಭಾರೀ ಮಳೆ ಸಾಧ್ಯತೆ
IMD Weather Forecast: ದೇಶದ ಬಹುತೇಕ ರಾಜ್ಯಗಳಲ್ಲಿ ದಟ್ಟ ಮಂಜಿನ ಜೊತೆ ಭೀಕರ ಚಳಿ ಮುಂದುವರೆದಿದೆ. ಈ ನಡುವೆಯೇ ಹಲವು ಭಾಗಗಳಲ್ಲಿ ಭಾರೀ ಮಳೆ ಸುರಿಯುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಹಾಗಾದ್ರೆ, ಎಲ್ಲೆಲ್ಲಿ ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ. ಭಾರತೀಯ ಹವಾಮಾನ ಇಲಾಖೆ ಪ್ರಕಾರ, ಮುಂದಿನ ಹಲವು
ಮತ್ತೆ ರಾಜ್ಯ ರಾಜಕಾರಣಕ್ಕೆ ಕುಮಾರಸ್ವಾಮಿ ಎಂಟ್ರಿ: ಡಿ ಕೆ ಶಿವಕುಮಾರ್ ಏನಂದ್ರು ಗೊತ್ತಾ?
ಬೆಂಗಳೂರು: 2024 ರ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನ ಸೋಲಿಸಲು ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿಯಾಗಿತ್ತು. ಇದೀಗ ಮುಂಬರುವ ವಿಧಾನಸಭಾ ಹಾಗೂ ಲೋಕಸಭಾ ಚುನಾವಣೆಯಲ್ಲಿಯೂ ಮೈತ್ರಿ ಧರ್ಮ ಪಾಲನೆಗೆ ಕಮಲ-ದಳ ಮುಂದಾಗಿದ್ದು, ಮುಂಬರುವ ದಿನಗಳಲ್ಲಿ ಕೇಂದ್ರ ಸಚಿವರಾದ ಹೆಚ್ ಡಿ ಕುಮಾರಸ್ವಾಮಿ ಅವರು ಮತ್ತೆ ರಾಜ್ಯ ರಾಜಕರಣಕ್ಕೆ ಎಂಟ್ರಿಯಾಗಲಿದ್ದಾರೆ ಎಂಬ ಚರ್ಚೆ ರಾಜಕೀಯ ವಲಯದಲ್ಲಿ ಕೇಳಿ
Adani: ಕಚ್ನಲ್ಲಿ ₹1.5 ಲಕ್ಷ ಕೋಟಿ ಹೂಡಿಕೆಗೆ ಅದಾನಿ ಗ್ರೂಪ್ ಬದ್ಧ: ಕರಣ್ ಅದಾನಿ
ಗುಜರಾತ್ ನಲ್ಲಿ ನಡೆದ 'ವೈಬ್ರಂಟ್ ಗುಜರಾತ್ ಗ್ಲೋಬಲ್ ಶೃಂಗಸಭೆ 2026'ಯು ದೇಶದ ಭಾರತದ ಅತ್ಯಂತ ಶಕ್ತಿಶಾಲಿ ಬೆಳವಣಿಗೆಯ ಎಂಜಿನ್ಗಳಲ್ಲಿ ಅದಾನಿ ಗ್ರೂಪ್ ಒಂದಾಗಿ ಹೊರ ಹೊಮ್ಮಿದ್ದನ್ನು ಪ್ರಚುರಪಡಿಸಿತು. ಅದಾನಿ ಗ್ರೂಪ್ ರಾಜ್ಯದ ಕೈಗಾರಿಕಾ, ಮೂಲಸೌಕರ್ಯ ಮತ್ತು ನವೀಕರಿಸಬಹುದಾದ ಇಂಧನ ಹೂಡಿಕೆ, ಅಭಿವೃದ್ಧಿಯಲ್ಲಿ ಬದ್ಧತೆ ಹೊಂದಿದ್ದನ್ನು ಪುನರುಚ್ಚರಿಸಿದೆ. ಈ ಶೃಂಗಸಭೆಯಲ್ಲಿ ಮಾತನಾಡಿದ ಬಂದರುಗಳು ಮತ್ತು ಎಸ್ಇಝಡ್ ಕಂಪನಿ ನಿರ್ದೇಶಕ
ಭಾರತದಲ್ಲಿ ಮೊದಲ ದಿನವೇ ಸರ್ಗಿಯೋ ಗೊರ್ ಸಂಚಲನ, ಟ್ರಂಪ್ ಆಪ್ತನ ಒಂದೇ ಮಾತಿಗೆ ಪುಟಿದೆದ್ದ ಷೇರುಪೇಟೆ
ಸೋಮವಾರದ ಆರಂಭಿಕ ವಹಿವಾಟಿನಲ್ಲಿ ತೀವ್ರ ಕುಸಿತ ಕಂಡಿದ್ದ ಭಾರತೀಯ ಷೇರುಪೇಟೆ, ಮಧ್ಯಾಹ್ನದ ವೇಳೆಗೆ ಅಮೆರಿಕದ ನೂತನ ರಾಯಭಾರಿ ಸರ್ಗಿಯೋ ಗೊರ್ ಅವರ ಹೇಳಿಕೆಯಿಂದ ದಿಢೀರ್ ಚೇತರಿಕೆ ಕಂಡಿತು. ಭಾರತ ಮತ್ತು ಅಮೆರಿಕ ವಾಣಿಜ್ಯ ಒಪ್ಪಂದದ ಕುರಿತು ಸಕ್ರಿಯವಾಗಿ ಮಾತುಕತೆ ನಡೆಸುತ್ತಿವೆ ಮತ್ತು ಅಮೆರಿಕಕ್ಕೆ ಭಾರತ ಅತ್ಯಂತ ಅಗತ್ಯ ಪಾಲುದಾರ ರಾಷ್ಟ್ರ, ಎಂದು ಗೊರ್ ಹೇಳುತ್ತಿದ್ದಂತೆಯೇ ಹೂಡಿಕೆದಾರರ ವಿಶ್ವಾಸ ಹೆಚ್ಚಾಯಿತು. ಸೆನ್ಸೆಕ್ಸ್ ಮತ್ತು ನಿಫ್ಟಿ ತಮ್ಮ ದಿನದ ಕನಿಷ್ಠ ಮಟ್ಟದಿಂದ ಮೇಲೇರಿದವು.
ಪ್ರಕಾಶಕರ ಹಿತ ಕಾಯಲು ಪುಸ್ತಕ ಪ್ರಾಧಿಕಾರಕ್ಕೆ ಹೆಚ್ಚಿನ ಅನುದಾನ : ಸಚಿವ ಶಿವರಾಜ ತಂಗಡಗಿ
ಬೆಂಗಳೂರು : ರಾಜ್ಯದ ಪ್ರಕಾಶಕರ ಸಂಕಷ್ಟಗಳು ನನ್ನ ಗಮನಕ್ಕೆ ಬಂದಿದೆ, ಪ್ರಕಾಶಕರ ಹಿತಕಾಯಲು ಸಗಟು ಖರೀದಿ ಯೋಜನೆಗಾಗಿ ಮುಂದಿನ ದಿನಗಳಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರಕ್ಕೆ ಹೆಚ್ಚಿನ ಅನುದಾನ ಒದಗಿಸಲಾಗುವುದು ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ ಹೇಳಿದ್ದಾರೆ. ಅವರು ಇಂದು ತಮ್ಮ ಗೃಹ ಕಚೇರಿಯಲ್ಲಿ ಪುಸ್ತಕ ಪ್ರಾಧಿಕಾರದ ಮನೆಗೊಂದು ಗ್ರಂಥಾಲಯ ಯೋಜನೆಯಡಿ ಗ್ರಂಥಾಲಯ ಅನುಷ್ಠಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡುತ್ತಿದ್ದರು. ಕನ್ನಡ ಪುಸ್ತಕ ಪ್ರಾಧಿಕಾರ ಮನೆಗೊಂದು ಗ್ರಂಥಾಲಯ ಯೋಚನೆಯಡಿ ಉತ್ತಮ ಕೆಲಸ ಮಾಡುತ್ತಿದೆ, ಪುಸ್ತಕ ಪ್ರೀತಿ ಎಂಬುದನ್ನು ಪ್ರತಿಯೊಬ್ಬರು ಬೆಳೆಸಿಕೊಳ್ಳಬೇಕು, ಅವು ನಮ್ಮ ಜ್ಞಾನಾರ್ಜನೆಗೆ ನೆರವಾಗುತ್ತದೆ. ಇಂತಹ ಪುಸ್ತಕ ಪ್ರೀತಿಯ ಫಲವಾಗಿಯೇ ಸಾಹಿತಿಗಳು ಪ್ರಕಾಶಕರು ಹಾಗೂ ಪುಸ್ತಕೋದ್ಯಮ ಜೀವಂತವಾಗಿರಲು ಸಾಧ್ಯ .ಆ ನಿಟ್ಟಿನಲ್ಲಿ ಪುಸ್ತಕ ಪ್ರೇಮ ದೊಡ್ಡ ರೀತಿಯಲ್ಲಿ ಆಂದೋಲನವಾಗಿ ಬೆಳೆಯಬೇಕಿದೆ, ಅದಕ್ಕೆ ಪುಸ್ತಕ ಪ್ರಾಧಿಕಾರದ ಈ ಯೋಜನೆ ಪೂರಕವಾಗಲಿ ಎಂದು ಹಾರೈಸಿದರು. ಸಚಿವರ ಮನೆಯ ಗ್ರಂಥಾಲಯ ಅನುಷ್ಠಾನದ ಪ್ರಶಂಸಾ ಪತ್ರವನ್ನು ಸಚಿವರಿಗೆ ನೀಡಿದ ಹಿರಿಯ ಸಾಹಿತಿ ಹಾಗೂ ಮಾಜಿ ಸಚಿವೆ ಡಾ.ಬಿ.ಟಿ.ಲಲಿತ ನಾಯಕ್ ಅವರು ಮಾತನಾಡಿ, ಪುಸ್ತಕ ಮನುಷ್ಯನನ್ನು ಮೃಗತ್ವದಿಂದ ಮಾನವತ್ವದ ಕಡೆಗೆ ಕೊಂಡೊಯುತ್ತದೆ. ಪಾಶ್ಚತ್ಯ ದೇಶಗಳಲ್ಲಿರುವ ಪುಸ್ತಕ ಪ್ರೀತಿ ನಮಗೆ ಮಾದರಿಯಾಗಿದೆ, ನಮ್ಮದು ಧರ್ಮಾಧಾರಿತ ಸಮಾಜವಾಗಿದೆ. ಇದನ್ನು ಮಾನವ ಧರ್ಮವಾಗಿ ರೂಪಿಸುವ ಹೊಣೆಗಾರಿಕೆ ಪುಸ್ತಕಗಳ ಮೇಲಿದೆ ಎಂದರು. ಭಾನು ಮುಷ್ತಾಕ್ ಅವರ ಎದೆಯ ಹಣತೆ ಕೃತಿ ಯುರೋಪ್ ದೇಶಗಳಲ್ಲಿ ದೊಡ್ಡ ಸಂಖ್ಯೆಯಲ್ಲಿ ಮಾರಾಟವಾಗುತ್ತಿದೆ ಕನ್ನಡದಲ್ಲಿಯೂ ಅಂತಹ ಪುಸ್ತಕ ಸಂಸ್ಕೃತಿ ಬರಬೇಕಿದೆ ಎಂದು ಅವರು ಹೇಳಿದರು. ಸಮಾರಂಭದಲ್ಲಿ ಬೆಂಗಳೂರು ನಗರ ಜಿಲ್ಲೆಯ ಗ್ರಂಥಾಲಯ ಜಾಗೃತಿ ಸಮಿತಿ ಸದಸ್ಯರಿಗೆ ಸಚಿವ ಶಿವರಾಜ ತಂಗಡಗಿ ಅರ್ಹತಾ ಪತ್ರಗಳನ್ನು ವಿತರಣೆ ಮಾಡಿದರು. ಆರಂಭದಲ್ಲಿ ಈ ಯೋಜನೆಯ ಕುರಿತಂತೆ ಹಾಗೂ ಪ್ರಕಾಶಕರ ಸಂಕಷ್ಟಗಳನ್ನು ಕುರಿತಂತೆ ಪ್ರಾಧಿಕಾರದ ಆಡಳಿತಾಧಿಕಾರಿ ಕೆ ಬಿ ಕಿರಣ್ ಸಿಂಗ್ ಮಾತನಾಡಿದರು. ಪ್ರಾಧಿಕಾರದ ಸದಸ್ಯರಾದ ಲಕ್ಷ್ಮಣ ಕೊಡಸೆ ಹಾಗೂ ಡಾ.ಬಿ ಸಿ ಕುಶಾಲ ಅವರು ಉಪಸ್ಥಿತರಿದ್ದರು.
ಬ್ಲಿಂಕಿಟ್ ಡೆಲಿವರಿ ಬಾಯ್ ಆದ ರಾಜ್ಯಸಭಾ ಸಂಸದ ರಾಘವ್ ಚಡ್ಡಾ; ಗಿಗ್ ಕಾರ್ಮಿಕರ ನೋವು ಅರಿಯಲು ಅಖಾಡಕ್ಕೆ ಎಂಟ್ರಿ
ಗಿಗ್ ಕಾರ್ಮಿಕರ ದಿನನಿತ್ಯದ ಸಂಕಷ್ಟಗಳನ್ನು ಹತ್ತಿರದಿಂದ ಅರಿಯಲು 'ಬ್ಲಿಂಕಿಟ್' ಡೆಲಿವರಿ ಪಾರ್ಟ್ನರ್ ಆಗಿ ರಾಜ್ಯಸಭಾ ಸಂಸದ ರಾಘವ್ ಚಡ್ಡಾ ಅವರು ಅಖಾಡಕ್ಕೆ ಇಳಿದು, ಡೆಲಿವರಿ ಬಾಯ್ ಆಗಿ ಸೇವೆ ಸಲ್ಲಿಸಲು ಮುಂದಾಗಿದ್ದಾರೆ. ಎಕ್ಸ್ನಲ್ಲಿ ಈ ಕುರಿತು ಪೋಸ್ಟ್ ಹಂಚಿಕೊಂಡಿದ್ದಾರೆ. ಒಂದು ಮನೆಗೆ ಡೆಲಿವರಿ ಕೊಡಲು ಹೋದ ಅವರಿಗೆ ಮುಂದೇನಾಯ್ತು ಎನ್ನುವುದನ್ನು ಸಸ್ಪೆನ್ಸ್ ಆಗಿ ಇಟ್ಟಿದ್ದಾರೆ. ಆ ಬಗ್ಗೆ ಇನ್ನಷ್ಟೇ ಮಾಹಿತಿ ಹೊರ ಬೀಳಬೇಕಾಗಿದೆ
ಭಾರತದ ವಿಜ್ಞಾನಯಾನ: ಪ್ರಾಚೀನ ಬುದ್ಧಿವಂತಿಕೆಯಿಂದ ಜಾಗತಿಕ ನಾಯಕತ್ವದವರೆಗಿನ ಪಯಣ
ಜಾಗತಿಕ ಭೂಪಟದಲ್ಲಿ ಆಧುನಿಕ ಭಾರತದ ಸ್ಥಾಣಮಾನ ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಅದರಲ್ಲೂ ವಿವಿಧ ಕ್ಷೇತ್ರಗಳಲ್ಲಿ ಭಾರತದ ಸಾಮರ್ಥ್ಯವನ್ನು ಮನಗಂಡಿರುವ ಜಗತ್ತು, ಭಾರತಕ್ಕೆ ಬಹುಪರಾಕ್ ಹಾಕುತ್ತಿದೆ. ವಿಶೇಷವಾಗಿ ವಿಜ್ಞಾನ, ಬಾಹ್ಯಾಕಾಶ ಮತ್ತು ರಕ್ಷಣಾ ಕ್ಷೇತ್ರಗಳಲ್ಲಿ ಭಾರತ ಮಾಡುತ್ತಿರುವ ಸಾಧನೆಗಳು ಇಡೀ ಜಗತ್ತಿನ ಗಮನ ಸೆಳೆದಿವೆ. ಈ ಕುರಿತು ಯುವ ವಿಜ್ಞಾನಿ ಮತ್ತು ಬರಹಗಾರ ದೀಪಕ್ ಎಎಸ್ ಅವರು ಭಾರತದ ವಿಜ್ಞಾನ ಮತ್ತು ರಕ್ಷಣಾ ಕ್ಷೇತ್ರದ ಬೆಳವಣಿಗೆಯ ಕುರಿತು ತಮ್ಮ ಲೇಖನದಲ್ಲಿ ಸುದೀರ್ಘವಾಗಿ ಚರ್ಚಿಸಿದ್ದಾರೆ.
ಸಂಸದರ ನಿಧಿ ಅನುದಾನ ಬಳಕೆಯಲ್ಲಿ ರಾಜ್ಯದ ಯಾವ ಎಂಪಿ ಟಾಪ್ : ಇಲ್ಲಿದೆ ಪ್ರೊಗ್ರೆಸ್ ಕಾರ್ಡ್
MP Fund Utilization : ಸಂಸದರಿಗೆ ಕೇಂದ್ರ ಸರ್ಕಾರ ಬಿಡುಗಡೆ ಮಾಡುವ ಕ್ಷೇತ್ರಾಭಿವೃದ್ದಿ ಅನುದಾನವನ್ನು ಕರ್ನಾಟಕದ ಕೆಲವು ಸಂಸದರು ಸರಿಯಾಗಿ ಬಳಸಿಕೊಂಡಿದ್ದಾರೆ. ಆದರೆ, ಕೆಲವು ಸಂಸದರು ಇದರ ಲಾಭವನ್ನು ಪಡೆದುಕೊಳ್ಳುವಲ್ಲಿ ವಿಫಲರಾಗಿದ್ದಾರೆ. ಲಿಸ್ಟ್ ನಲ್ಲಿ ಟಾಪ್ ನಲ್ಲಿ ದಕ್ಷಿಣ ಕನ್ನಡ ಸಂಸದರು ಇದ್ದರೆ, ಜಗದೀಶ್ ಶೆಟ್ಟರ್, ಅನುದಾನವನ್ನು ಬಳಕೆ ಮಾಡಿಕೊಂಡಿಲ್ಲ.
ಕಾಂಗ್ರೆಸ್ನ ರಾಜಕೀಯ ಸೇಡಿನಿಂದ ಕಾರ್ಕಳದ ಪರಶುರಾಮ ಥೀಂ ಪಾರ್ಕ್ ನೆನೆಗುದಿಗೆ : ಬಿಜೆಪಿ ಆರೋಪ
ಕಾರ್ಕಳ:
2020 ಹಾಗೂ 2021ರ ಚಲನಚಿತ್ರ ಸಾಹಿತ್ಯ ವಾರ್ಷಿಕ ಪ್ರಶಸ್ತಿ ಪ್ರಕಟ
ಬೆಂಗಳೂರು : ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು 2020 ಹಾಗೂ 2021ನೇ ಕ್ಯಾಲೆಂಡರ್ ವರ್ಷಗಳ ರಾಜ್ಯ ಚಲನಚಿತ್ರ ಸಾಹಿತ್ಯ ವಾರ್ಷಿಕ ಪ್ರಶಸ್ತಿಗಳನ್ನು ಪ್ರಕಟಿಸಿದೆ. 2020ನೇ ಕ್ಯಾಲೆಂಡರ್ ವರ್ಷದ ಚಲನಚಿತ್ರ ಸಾಹಿತ್ಯ ಪ್ರಶಸ್ತಿಗೆ ಬಳ್ಳಾರಿ ಜಿಲ್ಲೆ ಸಿರಿಗೇರಿಯ ಅನ್ನಪೂರ್ಣ ಪ್ರಕಾಶನ ಪ್ರಕಟಿಸಿದ, ಹಿರಿಯ ಪತ್ರಕರ್ತ ರಘುನಾಥ ಚ.ಹ.ಅವರು ಆಯ್ದ 20 ಸಿನೆಮಾಗಳ ಕುರಿತು ಬರೆದ ಲೇಖನಗಳ ಸಂಗ್ರಹ ನಮೋ ವೆಂಕಟೇಶ ಕೃತಿ ಆಯ್ಕೆಯಾಗಿದೆ. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತರಾದ ಹೇಮಂತ್ ಎಂ.ನಿಂಬಾಳ್ಕರ್ ಅವರ ಅಧ್ಯಕ್ಷತೆಯ ಆಯ್ಕೆ ಸಮಿತಿಯಲ್ಲಿದ್ದ ಹಿರಿಯ ಪತ್ರರ್ತರಾದ ಡಾ.ರಾಜಶೇಖರ ಹತಗುಂದಿ ಹಾಗೂ ಬಸವರಾಜ ಮೇಗಲಕೇರಿ ಅವರು 2020ನೇ ಕ್ಯಾಲೆಂಡರ್ ವರ್ಷದ ಕೃತಿಯನ್ನು ಆಯ್ಕೆ ಮಾಡಿದ್ದರು. 2021ನೇ ಕ್ಯಾಲೆಂಡರ್ ವರ್ಷದ ಚಲನಚಿತ್ರ ವಾರ್ಷಿಕ ಸಾಹಿತ್ಯ ಪ್ರಶಸ್ತಿಗೆ ಬೆಂಗಳೂರಿನ ಸಿರಿಗಂಧ ಪ್ರಕಾಶನ ಪ್ರಕಟಿಸಿರುವ, ಲೇಖಕ ಹಾಗೂ ಚಲನಚಿತ್ರ ನಿರ್ದೇಶಕ ಪ್ರಕಾಶರಾಜ್ ಮೇಹು ಅವರು ಬರೆದ ಡಾ.ರಾಜಕುಮಾರ್ ಬದುಕಿನ ಕುರಿತ ಅಂತರಂಗದ ಅಣ್ಣ ಕೃತಿ ಆಯ್ಕೆಯಾಗಿದೆ. ಸಾಹಿತಿ ಡಾ.ಚಿದಾನಂದ ಸಾಲಿ ಹಾಗೂ ಪತ್ರಕರ್ತ ಡಾ.ಶರಣು ಹುಲ್ಲೂರು ಅವರು ಪ್ರಶಸ್ತಿ ಆಯ್ಕೆ ಸಮಿತಿಯ ಸದಸ್ಯರಾಗಿದ್ದರು. ಪ್ರಶಸ್ತಿಯು ಲೇಖಕರು ಹಾಗೂ ಪ್ರಕಾಶಕರಿಬ್ಬರಿಗೂ ತಲಾ 20 ಸಾವಿರ ರೂ.ನಗದು ಹಾಗೂ 50 ಗ್ರಾಂ ಬೆಳ್ಳಿ ಪದಕಗಳನ್ನು ಒಳಗೊಂಡಿದೆ ಎಂದು ಎಂದು ವಾರ್ತಾ ಇಲಾಖೆ ಜಂಟಿ ನಿರ್ದೇಶಕ, ಆಯ್ಕೆ ಸಮಿತಿಯ ಸದಸ್ಯ ಕಾರ್ಯದರ್ಶಿ ಮಂಜುನಾಥ ಡೊಳ್ಳಿನ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮಾಸ್ಟರ್ಶೆಫ್ ಇಂಡಿಯಾ ಸೀಸನ್ 10 ರಲ್ಲಿ ಕರ್ನಾಟಕದ ಕಾಸರಗೋಡು ಮೂಲದ ಅವನಿ ಶರ್ಮ ಮತ್ತು ಅವರ ತಂದೆ ವೇಣು ಶರ್ಮ ಜೋಡಿಯಾಗಿ ಸ್ಪರ್ಧಿಸುತ್ತಿದ್ದಾರೆ. ಚಿತ್ರಕಲಾ ಶಿಕ್ಷಕಿ, ಕಲಾ ನಿರ್ದೇಶಕಿ ಹಾಗೂ ಫುಡ್ ಸ್ಟೈಲಿಸ್ಟ್ ಆಗಿರುವ ಅವನಿ ತಮ್ಮ 'ಕರಾಡ ಸ್ಪೈಸ್ ಬಾಕ್ಸ್' ಚಾನೆಲ್ ಮೂಲಕ ಖ್ಯಾತಿ ಪಡೆದಿದ್ದು, ಸದ್ಯ ಪ್ರಾದೇಶಿಕ ಶೈಲಿಗಳನ್ನು ರಾಷ್ಟ್ರೀಯ ಮಟ್ಟದಲ್ಲಿ ಪರಿಚಯಿಸಲು ಸಜ್ಜಾಗಿದ್ದಾರೆ.
ಬೆಂಗಳೂರು ನಮ್ಮ ಮೆಟ್ರೋ ಟಿಕೆಟ್ ದರ ಶೀಘ್ರದಲ್ಲೇ ಮತ್ತೆ ಏರಿಕೆ ಮುಂದಾದ BMRCL; ಯಾವಾಗ? ಯಾಕೆ? ಎಷ್ಟು?
ಬೆಂಗಳೂರಿನ ನಮ್ಮ ಮೆಟ್ರೋ ಪ್ರಯಾಣಿಕರಿಗೆ ಶೀಘ್ರದಲ್ಲೇ ಮತ್ತೊಂದು ದರ ಏರಿಕೆ ಎದುರಾಗಲಿದೆ. ಫೆಬ್ರವರಿಯಿಂದ ಟಿಕೆಟ್ ದರ ಶೇಕಡಾ 5 ರಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ. ಈ ಹೆಚ್ಚಳದಿಂದ ಪ್ರಯಾಣಿಕರ ಮೇಲಿನ ಆರ್ಥಿಕ ಭಾರ ಹೆಚ್ಚಾಗಲಿದೆ. ಮೆಟ್ರೋ ಪ್ರಯಾಣಿಕರ ಸಂಖ್ಯೆ ತಗ್ಗುವ ನಿರೀಕ್ಷೆಯಿದೆ. ನಗರದಲ್ಲಿ ಸಂಚಾರ ದಟ್ಟಣೆ ಹೆಚ್ಚಾಗುವ ಸಾಧ್ಯತೆ ಇದೆ. ಪ್ರಯಾಣಿಕರು ಈ ದರ ಏರಿಕೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ಅಮೆರಿಕಕ್ಕೆ ಬಹುಶ ಮಗುವನ್ನು ಚಿವುಟುವುದೂ ಗೊತ್ತು, ತೊಟ್ಟಿಲನ್ನು ತೂಗುವುದೂ ಗೊತ್ತು. ದ್ವಿಪಕ್ಷೀಯ ವ್ಯಾಪಾರ ಒಪ್ಪಂದ ವಿಚಾರವಾಗಿ ಭಾರತದೊಂದಿಗೆ ಸಂಬಂಧ ಹಾಳುಮಾಡಿಕೊಂಡಿರುವ ಅಮೆರಿಕ, ಈಗ ಮತ್ತೆ ಭಾರತದ ಸ್ನೇಹದ ಅವಶ್ಯಕತೆಯ ಜಪ ಮಾಡಿದೆ. ಭಾರತಕ್ಕೆ ಅಮೆರಿಕದ ರಾಯಭಾರಿಯಾಗಿ ನೇಮಕಗೊಂಡಿರುವ ಸೆರ್ಗಿಯೊ ಗೋರ್ ಅವರು, ಭಾರತದಷ್ಟು ಪ್ರಮುಖ ದೇಶ ಅಮೆರಿಕಕ್ಕೆ ಬೇರೆ ಯಾವುದೂ ಇಲ್ಲ ಎಂದು ಹೇಳಿಕೆ ನೀಡಿದ್ದಾರೆ. ಅಲ್ಲದೇ 2027ರಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ದೆಹಲಿಗೆ ಕರೆತರುವುದಾಗಿ ವಾಗ್ದಾನ ಮಾಡಿದ್ದಾರೆ.
ಕೋಗಿಲು ಪ್ರಕರಣ | ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರಗೆ ವರದಿ ಸಲ್ಲಿಸಿದ ಸತ್ಯಶೋಧನಾ ತಂಡ
ಬೆಂಗಳೂರು : ಕೋಗಿಲು ಬಡಾವಣೆಯ ಅಕ್ರಮ ಒತ್ತುವರಿ ತೆರವಿಗೆ ಸಂಬಂಧಿಸಿದಂತೆ ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರಿಗೆ ಸತ್ಯಶೋಧನಾ ತಂಡವು ಇಂದು ವರದಿ ಸಲ್ಲಿಸಿತು. ಘಟನಾವಳಿಗಳನ್ನು ಪರಿಶೀಲಿಸಿ ವರದಿ ಕೊಡಲು ಯಲಹಂಕ ಶಾಸಕ ಎಸ್.ಆರ್.ವಿಶ್ವನಾಥ್ ನೇತೃತ್ವದ ಸತ್ಯಶೋಧನಾ ತಂಡವನ್ನು ನೇಮಿಸಲಾಗಿತ್ತು. ಈ ತಂಡವು ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ವರದಿಯನ್ನು ಸಲ್ಲಿಸಿತು. ಈ ಸಂದರ್ಭದಲ್ಲಿ ಶಾಸಕ ಎಸ್.ಮುನಿರಾಜು, ರಾಜ್ಯ ಉಪಾಧ್ಯಕ್ಷೆ ಮಾಳವಿಕ ಅವಿನಾಶ್, ರಾಜ್ಯ ಕಾರ್ಯದರ್ಶಿ ಹೆಚ್.ಸಿ. ತಮ್ಮೇಶ್ ಗೌಡ, ಬೆಂಗಳೂರು ಉತ್ತರ ಜಿಲ್ಲಾಧ್ಯಕ್ಷ ಎಸ್. ಹರೀಶ್, ನಿವೃತ್ತ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್ ಉಪಸ್ಥಿತರಿದ್ದರು.
IND Vs NZ- ವಾಶಿಂಗ್ಟನ್ ಸುಂದರ್ ಗಾಯದಿಂದಾಗಿ ಆತಂಕದ ಛಾಯೆ: ಕೆಎಲ್ ರಾಹುಲ್ ಪರಿಸ್ಥಿತಿ ನಿಭಾಯಿಸಿದ್ದು ಹೇಗೆ?
KL Rahul On Washington Sundar Injury- ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಪ್ರಥಮ ಏಕದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಮತ್ತು ಶ್ರೇಯಸ್ ಅಯ್ಯರ್ ವಿಕೆಟ್ ಬಳಿಕ ಭಾರತದ ಮೇಲೆ ಒತ್ತಡ ಹೆಚ್ಚಿತ್ತು. ಅನುಭವಿ ಕೆಎಲ್ ರಾಹುಲ್ ಮತ್ತು ಹರ್ಷಿತ್ ರಾಣಾ ಪರಿಸ್ಥಿತಿಯನ್ನು ಚೆನ್ನಾಗಿ ನಿಭಾಯಿಸಿದರು. ಬಳಿಕ ರಾಹುಲ್ ಅವರು ಬೆನ್ನುನೋವಿನಿಂದ ಬಳಲುತ್ತಿದ್ದ ವಾಷಿಂಗ್ಟನ್ ಸುಂದರ್ ಅವರ ಜೊತೆಗೂಡಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಈ ವೇಳೆ ಅವರಿಗಾದ ಅಡೆತಡೆಗಳ ಬಗ್ಗೆ ಕೆಎಲ್ ರಾಹುಲ್ ಮಾತನಾಡಿದ್ದಾರೆ.
ಕಲಬುರಗಿ ನಗರದಲ್ಲಿ ಗುಂಡಿಗಳದ್ದೇ ದರ್ಬಾರ್!
ಡಿಸಿ ಕಚೇರಿ ಎದುರೇ ತೆರೆದ ಚರಂಡಿ: ಅಸ್ತವ್ಯಸ್ತ ಕಾಮಗಾರಿ
ತುಂಗಭದ್ರಾ ಹಂಗಾಮಿ ನೌಕರರಿಗೆ 8 ತಿಂಗಳ ಬಾಕಿ ವೇತನ ಪಾವತಿಗೆ ವಿಳಂಬ; ಜಿಲ್ಲಾ ಉಸ್ತುವಾರಿ ಸಚಿವರಿಗೆ ಘೇರಾವ್ ಎಚ್ಚರಿಕೆ
ರಾಯಚೂರು: ತುಂಗಭದ್ರಾ ನೀರಾವರಿ ವಲಯದ ಹಂಗಾಮಿ ನೌಕರರಿಗೆ ಕಳೆದ ಎಂಟು ತಿಂಗಳಿನಿಂದ ವೇತನ ಪಾವತಿಯಾಗದೆ ಇರುವುದರ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತವಾಗಿದೆ. ಕೆಲಸವೂ ಇಲ್ಲ, ವೇತನವೂ ಇಲ್ಲದ ಸ್ಥಿತಿ ನಿರ್ಮಾಣವಾಗಿದ್ದು, ತಕ್ಷಣ ಸಮಸ್ಯೆ ಪರಿಹರಿಸದಿದ್ದರೆ ಜಿಲ್ಲಾ ಉಸ್ತುವಾರಿ ಸಚಿವರಿಗೆ ಘೇರಾವ್ ನಡೆಸುವುದಾಗಿ ತುಂಗಭದ್ರಾ ನೀರಾವರಿ ವಲಯ ಹಂಗಾಮಿ ಕಾರ್ಮಿಕರ ಸಂಘ ಎಚ್ಚರಿಕೆ ನೀಡಿದೆ. ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಆರ್. ಮಾನಸಯ್ಯ, “ಉಸ್ತುವಾರಿ ಸಚಿವರು ಬಾಕಿ ವೇತನ ಪಾವತಿಸಲು ಅಧಿಕಾರಿಗಳಿಗೆ ಪತ್ರ ಬರೆದಿದ್ದರೂ, ನೀರಾವರಿ ನಿಗಮದಲ್ಲಿ ಅದಕ್ಕೆ ಬೆಲೆ ಇಲ್ಲದಂತಾಗಿದೆ. ನಮಗೆ ಉತ್ಸವ ಸಚಿವರು ಬೇಡ, ಸಮಸ್ಯೆ ಪರಿಹರಿಸುವ ಉಸ್ತುವಾರಿ ಸಚಿವರು ಬೇಕು” ಎಂದು ಆಕ್ರೋಶ ವ್ಯಕ್ತಪಡಿಸಿದರು. ತುಂಗಭದ್ರಾ ಯೋಜನೆಯಡಿ ಕ್ರಸ್ಟ್ಗೇಟ್ ಅಳವಡಿಕೆಯಿಂದ ನೀರು ಹರಿವು ಸ್ಥಗಿತಗೊಂಡಿದ್ದು, ಇದರಿಂದ ಕಾರ್ಮಿಕರಿಗೆ ಕೆಲಸವೂ ಇಲ್ಲದಂತಾಗಿದೆ. ವರ್ಷಪೂರ್ತಿ ಕೆಲಸ ನೀಡುವುದಾಗಿ ನಿಗಮ ಭರವಸೆ ನೀಡಿದ್ದರೂ, ಪ್ರಸ್ತುತ ಕೆಲಸವೂ ಇಲ್ಲ, ವೇತನವೂ ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅವರು ಹೇಳಿದರು. ಬಾಕಿ ವೇತನವನ್ನು ತಕ್ಷಣ ಪಾವತಿಸದಿದ್ದರೆ ಜನವರಿ 26ರಂದು ಗಣರಾಜ್ಯೋತ್ಸವದ ಧ್ವಜಾರೋಹಣಕ್ಕೆ ಅವಕಾಶ ನೀಡುವುದಿಲ್ಲ. ಕಪ್ಪುಪಟ್ಟಿ ಪ್ರದರ್ಶಿಸಿ ಹಂಗಾಮಿ ಕಾರ್ಮಿಕರು ಪ್ರತಿಭಟನೆ ನಡೆಸಲಿದ್ದಾರೆ ಎಂದು ಎಚ್ಚರಿಸಿದರು. ಹೊರಗುತ್ತಿಗೆ, ಗುತ್ತಿಗೆ ನೌಕರರು, ಅತಿಥಿ ಶಿಕ್ಷಕರು ಸೇರಿದಂತೆ ಅನೇಕ ಇಲಾಖೆಗಳಲ್ಲೂ ವೇತನ ಪಾವತಿಯಲ್ಲಿ ವಿಳಂಬವಾಗುತ್ತಿದೆ. ತುಂಗಭದ್ರಾ ಯೋಜನೆ 6 ಲಕ್ಷ ಎಕರೆ ಕೃಷಿಭೂಮಿಗೆ ನೀರು ಒದಗಿಸುತ್ತಿದ್ದು, ಎರಡು ಮಹಾನಗರ ಪಾಲಿಕೆಗಳು, ಮೂರು ಪಟ್ಟಣ ಪಂಚಾಯತ್ಗಳು ಹಾಗೂ 180 ಗ್ರಾಮಗಳ ಕುಡಿಯುವ ನೀರು ಸರಬರಾಜು ಇದರ ಮೇಲೆ ಅವಲಂಬಿತವಾಗಿದೆ. ಇಂತಹ ಮಹತ್ವದ ಯೋಜನೆಯಲ್ಲಿ ಕಾರ್ಮಿಕರನ್ನು ವೇತನವಿಲ್ಲದೇ ಕೆಲಸಕ್ಕೆ ನಿಲ್ಲಿಸಿರುವುದು ಅನ್ಯಾಯಕರ ಎಂದು ಅವರು ಹೇಳಿದರು. ಈ ವೇಳೆ ಸಂಘದ ಪ್ರಧಾನ ಕಾರ್ಯದರ್ಶಿ ಅಡವಿರಾವ್ ಸೇರಿದಂತೆ ಲೋಕಪ್ಪ, ರಾಧಾಕೃಷ್ಣ, ಮುದುಕಪ್ಪ, ಸಿದ್ದಪ್ಪ, ಶಂಕರಪ್ಪ, ನಾಗರಾಜ ಹಾಗೂ ಮಹದ ಸಫಿಯುದ್ದೀನ್ ಉಪಸ್ಥಿತರಿದ್ದರು.
ಯುವ ಹೃತ್ಕಮಲವಾಸ ಧೀರ ಸಂನ್ಯಾಸಿ ವಿವೇಕಾನಂದರು
ಜಗದ ಬಂಧನಗಳಿಂದ ಮುಕ್ತರಾದ ಯುವ ಸನ್ಯಾಸಿ ಸ್ವಾಮಿ ವಿವೇಕಾನಂದರು ತಮ್ಮ ದೇಶದ ಅವನತಿಯನ್ನು ಕಂಡು ದುಃಖಿಸಿದರು. 'ಏಳಿ ಎದ್ದೇಳಿ ಗುರಿ ಮುಟ್ಟುವ ತನಕ ನಿಲ್ಲದಿರಿ' ಎಂಬ ಅವರ ಸಂದೇಶ, ಭವದಿಂದ ಮುಕ್ತಿ ಹಾಗೂ ದೇಶ ಸೇವೆಯ ಮಹತ್ವವನ್ನು ಸಾರುತ್ತದೆ. ಯೋಗ ಮಾರ್ಗದ ಮೂಲಕ ಸ್ವರೂಪ ಅರಿತು, ಹಿಂದುಳಿದವರನ್ನು ನಾರಾಯಣನೆಂದು ಕರೆದ ಅವರ ಆದರ್ಶ ಜೀವನ ಭಾರತೀಯರಿಗೆ ಪ್ರೇರಣೆಯಾಗಿದೆ.
Gold: ನಿಧಿ ಒಪ್ಪಿಸಿ ಬೀದಿಪಾಲಾದ ಕುಟುಂಬದ ಕಣ್ಣೀರಿನ ಕಥೆ, ಪ್ರಾಮಾಣಿಕತೆಗೆ ಸಿಕ್ಕ ಬಹುಮಾನವೇ
ಗದಗ: ಕರ್ನಾಟಕದಲ್ಲಿ ಈಗ ನಿಧಿ ವಿಚಾರವು ಭಾರೀ ಚರ್ಚೆ ಆಗುತ್ತಿದೆ. ಇಲ್ಲಿನ ಗದಗ ತಾಲ್ಲೂಕಿನ ಲಕ್ಕುಂಡಿ ಗ್ರಾಮದಲ್ಲಿ ಮನೆ ಕಟ್ಟುವುದಕ್ಕೆ ಅಡಿಪಾಯ ತೆಗೆಯುವ ಸಂದರ್ಭದಲ್ಲಿ ನಿಧಿ ಪತ್ತೆಯಾಗಿದೆ. ತಂಬಿಗೆಯಲ್ಲಿ ಅಂದಾಜು ಒಂದು ಕೆಜಿ ನಿಧಿ ಪತ್ತೆಯಾಗಿದೆ. ಗಂಗವ್ವ ಬಸವರಾಜ ರಿತ್ತಿ ಮನೆ ಜಾಗದಲ್ಲಿ ಈ ನಿಧಿ ಪತ್ತೆಯಾಗಿದ್ದು, ಇದೀಗ ನಿಧಿಯೋ ಅಲ್ಲವೋ ಎನ್ನುವ ಚರ್ಚೆಯೂ ನಡೆದಿದೆ. ಪ್ರಾಮಾಣಿಕವಾಗಿ
ಎಸ್ಪಿ, ಕಮಿಷನರ್ ವರ್ಗಾವಣೆಯ ಪ್ರಮೇಯವೇ ಇಲ್ಲ: ಪದ್ಮರಾಜ್
ಮಂಗಳೂರು : ದ.ಕ. ಜಿಲ್ಲೆಯಲ್ಲಿ ಆರೇಳು ತಿಂಗಳ ಹಿಂದೆ ಅಶಾಂತಿಯಿಂದ ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದಾಗ ಇಲ್ಲಿನ ಕಾಂಗ್ರೆಸ್ ಅಧಿಕಾರಿಗಳ ಆಗ್ರಹದ ಮೇರೆಗೆ ದಕ್ಷ ಪೊಲೀಸ್ ಅಧಿಕಾರಿಗಳನ್ನು ನೇಮಕ ಮಾಡಲಾಗಿತ್ತು. ಇಆದರೆ ಇದೀಗ ಕೆಲವೊಂದು ಧಾರ್ಮಿಕ ವಿಚಾರಗಳನ್ನು ಮುಂದಿಟ್ಟು ಅವರ ವರ್ಗಾವಣೆಯ ಕುರಿತಂತೆ ಗೊಂದಲ ಸೃಷ್ಟಿಸುವ ಕೆಲಸ ಬಿಜೆಪಿಯವರು ಮಾಡುತ್ತಿದ್ದಾರೆ ಎಂದು ಕೆಪಿಸಿಸಿ ಮಾಜಿ ಪ್ರಧಾನ ಕಾರ್ಯದರ್ಶಿ ಪದ್ಮರಾಜ್ ಆರ್. ಪೂಜಾರಿ ಆಕ್ಷೇಪಿಸಿದ್ದಾರೆ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ಪೊಲೀಸ್ ಕಮಿಷನರ್ ಮತ್ತು ಎಸ್ಪಿಯವರ ವರ್ಗಾವಣೆ ಆರೋಪದ ಕುರಿತಂತೆ ಈಗಾಗಲೇ ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿ ಸ್ಪಷ್ಟಪಡಿಸಿದ್ದಾರೆ. ಅವರನ್ನು ವರ್ಗಾವಣೆ ಮಾಡುವ ಪ್ರಮೇಯವೇ ಇಲ್ಲ ಎಂದರು. ಕಳೆದ ಏಳೆಂಟು ತಿಂಗಳಿನಿಂದ ಜಿಲ್ಲೆಯಲ್ಲಿ ಶಾಂತಿ ನೆಲೆಸಿದೆ. ಅಹಿತಕರ ಘಟನೆಗಳು ನಡೆದಿಲ್ಲ. ಅನೈತಿಕ ಚಟುವಟಿಕೆಗಳು ನಿಂತಿವೆ. ಡ್ರಗ್ಸ್ಗೆ ಸಂಬಂಧಿಸಿ ಜಿಲ್ಲೆಯ ಪೋಷಕರಲ್ಲಿದ್ದ ಭಯದ ವಾತಾವರಣ ಕಡಿಮೆಯಾಗಿದೆ. ಡ್ರಗ್ಸ್ ದಂಧೆಗೆ ತೊಡಗಿದವರ ಶೇ 90ರಷ್ಟು ಬಂಧನಾಗಿದೆ. ನಮ್ಮದು ಕೇವಲ ಚುನಾವಣೆ ಗೆಲ್ಲುವುದು ಮಾತ್ರವೇ ಆಶಯವಲ್ಲ. ಬದಲಾಗಿ ಜನ ನೆಮ್ಮದಿಂದ ಬದುಕುವುದು, ಸಮಾಜದ ಕಲ್ಯಾಣ ನಮ್ಮ ಉದ್ದೇಶವಾಗಿದೆ. ಆದರೆ ಬಿಜೆಪಿ ಧಾರ್ಮಿಕ ವಿಚಾರಗಳನ್ನು ಮುಂದಿಟ್ಟು ಗೊಂದಲ ಸೃಷ್ಟಿಸುತ್ತಿದೆ. ಸಾಂಪ್ರದಾಯಿಕ ಕೋಳಿ ಅಂಕಕ್ಕೆ ಸಂಬಂಧಿಸಿ ಪೊಲೀಸ್ ಅಧಿಕಾರಿಗಳು ರಿಯಾಯಿತಿ ನೀಡಿದ್ದಾರೆ. ಅದು ವಿವಾದದ ವಿಚಾರವೇ ಅಲ್ಲ. ಅದಕ್ಕೆ ಯಾರೂ ಅಡ್ಡ ಬಂದಿಲ್ಲ. ಆದರೆ ಜೂಜಿಗೆ ಮಾತ್ರವೇ ತಡೆಯಾಗಿದೆ. ಇದರಿಂದ ಅದೆಷ್ಟೋ ಜನರು ಉದ್ಯೋಗಕ್ಕೆ ಹೋಗುವ ಊಲಕ ಮನೆಯವರು ನೆಮ್ಮದಿ ಕಾಣುವಂತಾಗಿದೆ. ಧಾರ್ಮಿಕ ಆಚರಣೆಗೆ ಕಾಂಗ್ರೆಸ್ ಯಾವತ್ತೂ ಅಡ್ಡಿಪಡಿಸಿಲ್ಲ ಎಂದು ಅವರು ಹೇಳಿದರು. ದ್ವೇಷ ಭಾಷಣ ವಿರುದ್ಧದ ಕಾನೂನು ಮಂಜೂರಾಗಿದೆ. ಅದನ್ನು ವಿರೋಧಿಸುವ ಮೂಲಕ ತಾವು ದ್ವೇಷ ಭಾಷಣ ಮಾಡುತ್ತಿರುವುದನ್ನು ಒಪ್ಪಿಕೊಳ್ಳುತ್ತೀರಾ, ನಿಮಗೆ ಯಾಕೆ ಭಯ ಎಂದು ಬಿಜೆಪಿ ನಾಯಕರನ್ನು ಪ್ರಶ್ನಿಸಿದ ಪದ್ಮರಾಜ್, ಇದಕ್ಕೆ ಉತ್ತರ ನೀಡಬೇಕು ಎಂದು ಆಗ್ರಹಿಸಿದರು. ರಾಜ್ಯ ಸರಕಾರದಿಂದ ಮಂಗಳೂರಿನಲ್ಲಿ ನಡೆದ ಕರಾವಳಿ ಕರ್ನಾಟಕ ಪ್ರವಾಸೋದ್ಯಮ ಸಮಾವೇಶದಲಿ ಸಂಸದರು, ಶಾಸಕರು ಪಕ್ಷಬೇಧವಿಲ್ಲದೆ ಭಾಗವಹಿಸಿರುವುದು ಸ್ವಾಗತಾರ್ಹ. ಅಭಿವೃದ್ಧಿ ವಿಚಾರದಲ್ಲಿ ಈ ರೀತಿಯ ನಡೆಯನ್ನು ರಾಜಕಾರಣಿಗಳು ತೋರಿಸಬೇಕಾಗಿದೆ. ಈ ಮೂಲಕ ಚುನಾವಣೆಯಲ್ಲಿ ತಮ್ಮನ್ನು ಆಯ್ಕೆ ಮಾಡಿ ಕಳುಹಿಸಿದ ಜನರಿಗೆ ನ್ಯಾಯ ಒದಗಿಸಬೇಕಾಗಿದೆ. ಅದು ಬಿಟ್ಟು ಜನರ ನಡುವೆ ಇಲ್ಲಸಲ್ಲದ ವಿಚಾರ ಹಿಡಿದು ಚಿಲ್ಲರೆ ರಾಜಕೀಯ ಮಾಡುವುದು, ಅಭಿವೃದ್ಧಿ ಕಾರ್ಯಗಳಿಗೆ ಟೀಕೆ ಮಾಡುವುದು ಸರಿಯಲ್ಲ ಎಂದು ಅವರು ಹೇಳಿದರು. ಪ್ರವಾಸೋದ್ಯಮ ಸಮಾವೇಶದಲ್ಲಿ ರಾಜ್ಯ ಸರಕಾರದ ಮಾಸ್ಟರ್ ಪ್ಲಾನ್ಗೆ ಸ್ಪಂದಿಸಿ ಹೂಡಿಕೆದಾರರನ್ನು ಆಕರ್ಷಿತರಾಗಿದ್ದಾರೆ. ಏಕ ಗವಾಕ್ಷಿ ಮಾದರಿಯಲ್ಲಿ ಮೂರು ಜಿಲ್ಲೆಗಳಿಗೆ ಅನ್ವಯ ಆಗುವಂತೆ ನೋಡಲ್ ಅಧಿಕಾರಿ ನೇಮಕ ಮಾಡುವ ಬಗ್ಗೆ ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿ ತಿಳಿಸಿದ್ದಾರೆ. ಕೇಂದ್ರ ಸರಕಾರದ ಸಹಕಾರವೂ ಅಗತ್ಯವಾಗಿದ್ದು, ಕರಾವಳಿಯ ಶಾಸಕರು, ಸಂಸದರು ಭಗಾವಹಿಸುವ ಮೂಲಕ ಸಹಕಾರ ಭರವಸೆ ನೀಡಿದ್ದಾರೆ. ಈ ಮೂಲಕ ನಾವು ಕಂಡ ಕರಾವಳಿ ಕರ್ನಾಟಕದ ಅಭಿವೃದ್ಧಿಯ ಕನಸು ಈಡೇರಲಿದೆ ಎಂದು ಹೇಳಿದರು. ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ಪದ್ಮರಾಜ್, ಅಭಿವೃದ್ಧಿಗೆ ಅನುದಾನ ಬಿಡುಗಡೆಯಾಗುತ್ತಿಲ್ಲ ಎನ್ನುವ ಸ್ಥಳೀಯ ಶಾಸಕರು ಕಾಮಗಾರಿಯ ಫ್ಲೆಕ್ಸ್ ಹಾಕಿಸಿಕೊಳ್ಳುವುದು ಹೇಗೆ ? ಎಂದು ಮರು ಪ್ರಶ್ನಿಸಿದರಲ್ಲದೆ, ಅನುದಾನ ಬಿಡುಗಡೆಗಾಗಿ ಶಾಸಕರು ಯಾವ ರೀತಿಯಲ್ಲಿ ಸರಕಾರ ಹಾಗೂ ಸಚಿವರನ್ನು ಸಂಪರ್ಕಿಸಿದ್ದಾರೆ ಎಂಬುದನ್ನು ಅವಲಂಬಿಸಿರುತ್ತದೆ ಎಂದರು. ಜಿಲ್ಲೆಯ ಕೆಲ ಬಿಜೆಪಿ ಶಾಸಕರು ‘ರಾಜ್ಯದಲ್ಲೀಗ ಅವರ ಸರಕಾರ ಇರುವುದು. ನಮಗೆ ಏನೂ ಮಾಡಲಾಗುತ್ತಿಲ್ಲ’ ಎಂಬ ಮಾತುಗಳನಾಡುತ್ತಿದ್ದಾರೆ. ನಿಮಗೆ ಆಗದಿದ್ದರೆ ರಾಜೀನಾಮೆ ನೀಡಿ ಮನೆಯಲ್ಲಿರಿ. ಇಲ್ಲ ಎಂದಾದಲ್ಲಿ ಜಿಲ್ಲೆಯ ಸಮಸ್ಯೆ, ಕುಂದುಕೊರತೆಗಳ ಬಗ್ಗೆ ಸಚಿವರಿಗೆ ಮನವರಿಕೆ ಮಾಡುವ ಕಾರ್ಯ ಮಾಡಿ ಎಂದರು. ಬಿಜೆಪಿ ಅವಧಿಯಲ್ಲಿ ಕೆಲವೊಂದು ಟಂಡರ್ ಇಲ್ಲದೆ ನಡೆದ ಕಾಮಗಾರಿಗಳಿಗೆ ಬಿಲ್ ಬಂದಿಲ್ಲ. ಅದನ್ನೇ ಅನುದಾನ ಬಂದಿಲ್ಲ ಎಂದು ಬಿಂಬಿಸಲಾಗುತ್ತಿದೆ. ಆದರೆ ಸರಕಾರದ ಎಲ್ಲಾ ಗ್ಯಾರಂಟಿ ಯೋಜನೆಗಳು ಚಾಲ್ತಿಯಲ್ಲಿವೆ. ಒಂದು ವೇಳೆ ಸ್ಥಳೀಯ ಶಾಸಕರಿಗೆ ತಮ್ಮಿಂದ ಜಿಲ್ಲೆಗೆ ಪೂರಕವಾಗಿ ಅನುದಾನ ತರಿಸಿಕೊಲ್ಳಲು ಸಾಧ್ಯ ಆಗದಿದ್ದರೆ ನಮ್ಮನ್ನು ಜತೆಗೆ ಕರಿಸಿಕೊಳ್ಳಿ. ನಾವು ಸಚಿವರಿಗೆ ಮನವರಿಗೆ ಮಾಡುತ್ತೇವೆ ಎಂದರು. ಗೋಷ್ಟಿಯಲ್ಲಿ ಪ್ರಕಾಶ್ ಸಾಲಿಯಾನ್, ಅಪ್ಪಿ, ನವೀನ್ ಡಿಸೋಜಾ, ವಿಕಾಸ್ ಶೆಟ್ಟಿ, ಪದ್ಮನಾಭ, ಶುಭೋದಯ ಆಳ್ವ ಉಪಸ್ಥಿತರಿದ್ದರು.
ಅವಶ್ಯಕತೆ ಇದ್ದಾಗ ಸಿದ್ದು, ಡಿಕೆಶಿಗೆ ದೆಹಲಿ ಬುಲಾವ್: ನಾಯಕತ್ವ ಬದಲಾವಣೆ ಪ್ರಶ್ನೆಗೆ ಖರ್ಗೆ ಖಡಕ್ ಪ್ರತಿಕ್ರಿಯೆ
ಕರ್ನಾಟಕ ಕಾಂಗ್ರೆಸ್ ನಾಯಕರಲ್ಲಿ ನಾಯಕತ್ವ ಬದಲಾವಣೆ ಚರ್ಚೆ ಬೂದಿ ಮುಚ್ಚಿದ ಕೆಡಂದಂತಿದೆ. ಇದರ ಬಗ್ಗೆ ಮಲ್ಲಿಕಾರ್ಜುನ್ ಖರ್ಗೆಯವರು ಮಾಯನಾಡಿದ್ದು, ಅಗತ್ಯವಿದ್ದಾಗ ರಾಜ್ಯ ನಾಯಕರನ್ನು ದೆಹಲಿಗೆ ಕರೆಸಿಕೊಳ್ಳುವುದಾಗಿ ತಿಳಿಸಿದ್ದಾರೆ. ಮನರೇಗಾ ಯೋಜನೆಯನ್ನು ಬಿಜೆಪಿ ಸರ್ಕಾರ ದುರುದ್ದೇಶದಿಂದ ಹತ್ಯೆ ಮಾಡುತ್ತಿದೆ., ಬಡವರ ಹಿತಾಸಕ್ತಿಗೆ ಧಕ್ಕೆ ತರುತ್ತಿದೆ ಎಂದು ಕೇಂದ್ರ ಸರ್ಕಾರದ ನಡೆ ವಿರುದ್ಧ ಕಿಡಿಕಾರಿದರು. ಈ ಹೋರಾಟವನ್ನು ಕೊನೆಯವರೆಗೂ ಮುಂದುವರಿಸುವುದಾಗಿ ಎಚ್ಚರಿಕೆ ನೀಡಿದರು.
ಅಳಿವಿನಂಚಿನಲ್ಲಿದೆ ಕರಾವಳಿಯ ರಾಮಪತ್ರೆ
100ಕ್ಕೂ ಅಧಿಕ ಗಿಡಗಳನ್ನು ನೆಟ್ಟು, ಪೋಷಣೆ ಮಾಡುತ್ತಿರುವ ಪುತ್ತೂರಿನ ಪದ್ಮನಾಭ ನಾಯ್ಕ
ವಿದೇಶದಲ್ಲಿ ಓದುವ ಭಾರತೀಯ ವಿದ್ಯಾರ್ಥಿಗಳಿಗೆ ಮತ್ತೆ ಶಾಕ್ ಎದುರಾಗಿದ್ದು, ಆಸ್ಟ್ರೇಲಿಯಾ ಸರ್ಕಾರ ಭಾರತ ಸೇರಿದಂತೆ ಕೆಲವು ದೇಶಗಳ ವಿದ್ಯಾರ್ಥಿಗಳನ್ನು ಎವಿಡೆನ್ಸ್ ಲೆವಲ್ 3 ಎಂಬ ಅತ್ಯಂತ ಅಪಾಯಕಾರಿ ವರ್ಗದಲ್ಲಿ ಸೇರಿಸಿದ್ದು, ವೀಸಾ ನಿಯಮಗಳನ್ನು ಕಠಿಣಗೊಳಿಸಿದೆ. ಇದರಿಂದಾಗಿ ಹೆಚ್ಚಿನ ದಾಖಲೆಗಳು ಬೇಕಾಗಿದ್ದು, ವೀಸಾ ಪ್ರಕ್ರಿಯೆ ವಿಳಂಬವಾಗಲಿದೆ. ಇದು ವಿದ್ಯಾರ್ಥಿಗಳ ಕನಸುಗಳಿಗೆ ಅಡ್ಡಿಯಾಗುವ ಸಾಧ್ಯತೆ ಇದೆ. ಏನಿದು ಎವಿಡೆನ್ಸ್ ಲೆವಲ್3 ಎಂಬುದರ ಕಂಪ್ಲೀಟ್ ಡಿಟೇಲ್ಸ್ ತಿಳಿಯಿರಿ..
ಕಲಬುರಗಿ | ಮುಖ್ಯಮಂತ್ರಿಗಳ ಕಾರ್ಯಕ್ರಮದ ವೇದಿಕೆಯ ಬೋರ್ಡ್ನಲ್ಲಿ ಎಡವಟ್ಟು: ತಪ್ಪು ಅಂಶಗಳ ನಮೂದು
ಕಲಬುರಗಿ: ಜಿಲ್ಲೆಯ ಯಡ್ರಾಮಿಯಲ್ಲಿ ಸೋಮವಾರ ಮಧ್ಯಾಹ್ನ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಗವಹಿಸಲಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನಾ ಕಾರ್ಯಕ್ರಮದ ಮುಖ್ಯ ವೇದಿಕೆಯಲ್ಲಿ ಅಳವಡಿಸಲಾಗಿದ್ದ ಫಲಕಗಳಲ್ಲಿ ಕಂಡುಬಂದ ತಪ್ಪು ಮಾಹಿತಿಯಿಂದ ಜನರಲ್ಲಿ ಗೊಂದಲ ಉಂಟಾಯಿತು. ಯಡ್ರಾಮಿಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ವಿವಿಧ ಇಲಾಖೆಗಳ ಆಶ್ರಯದಲ್ಲಿ ರೂ.163.55 ಕೋಟಿ ವೆಚ್ಚದಲ್ಲಿ 17 ಹೊಸ ಪ್ರಜಾಸೌಧಗಳ ನಿರ್ಮಾಣಕ್ಕೆ ಅಡಿಗಲ್ಲು ಹಾಕಲಾಗುತ್ತಿದೆ. ಆದರೆ ಕಾರ್ಯಕ್ರಮದ ಬ್ಯಾನರ್ನಲ್ಲಿ 16 ಪ್ರಜಾಸೌಧಗಳ ನಿರ್ಮಾಣಕ್ಕೆ ಅಡಿಗಲ್ಲು ಎಂದು ಉಲ್ಲೇಖಿಸಲಾಗಿದೆ. ಅದೇ ರೀತಿ, ಅಂದಾಜು ರೂ.600ರಿಂದ 900 ಕೋಟಿ ವೆಚ್ಚದಲ್ಲಿ 300 ಕೆಪಿಎಸ್ ಶಾಲೆಗಳ ಶಂಕುಸ್ಥಾಪನೆ ನಡೆಯುತ್ತಿದ್ದರೂ, ಬ್ಯಾನರ್ನಲ್ಲಿ ‘ರೂ.600 ರಿಂದ 900 ರೂ. ವೆಚ್ಚದಲ್ಲಿ 300 ಶಾಲೆಗಳ ಶಂಕುಸ್ಥಾಪನೆ’ ಎಂದು ತಪ್ಪಾಗಿ ನಮೂದಿಸಲಾಗಿದೆ. ಮುಖ್ಯಮಂತ್ರಿ ಭಾಗವಹಿಸುವಂತಹ ಮಹತ್ವದ ಕಾರ್ಯಕ್ರಮದಲ್ಲಿ ಈ ರೀತಿಯ ತಪ್ಪು ಹಾಗೂ ಅಪೂರ್ಣ ಮಾಹಿತಿಯನ್ನು ಪ್ರದರ್ಶಿಸಿರುವುದು ಅಸಮಾಧಾನಕ್ಕೆ ಕಾರಣವಾಗಿದ್ದು, ಸ್ಥಳೀಯರು ಆಡಳಿತದ ನಿರ್ಲಕ್ಷ್ಯದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ತನ್ನನ್ನು ‘ವೆನೆಝುವೆಲಾದ ಹಂಗಾಮಿ ಅಧ್ಯಕ್ಷ’ ಎಂದು ಹೇಳಿಕೊಂಡ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್!
ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ತಮ್ಮ ಸಾಮಾಜಿಕ ಮಾಧ್ಯಮ ವೇದಿಕೆಯಾದ ಟ್ರುತ್ ಸೋಶಿಯಲ್ನಲ್ಲಿ ತಮ್ಮನ್ನು ‘ವೆನೆಝುವೆಲಾದ ಹಂಗಾಮಿ ಅಧ್ಯಕ್ಷ’ ಎಂದು ಬಣ್ಣಿಸಿಕೊಂಡಿರುವುದು ಅಂತರರಾಷ್ಟ್ರೀಯ ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ. ರವಿವಾರ ಹಂಚಿಕೊಂಡಿರುವ ಪೋಸ್ಟ್ನಲ್ಲಿ, “ವೆನೆಝುವೆಲಾದ ಹಂಗಾಮಿ ಅಧ್ಯಕ್ಷ – ಜನವರಿ 2026ರಿಂದ ಅಧಿಕಾರ ವಹಿಸಿಕೊಂಡವರು” ಎಂಬ ಪದನಾಮದೊಂದಿಗೆ ಟ್ರಂಪ್ ಅವರ ಅಧಿಕೃತ ಭಾವಚಿತ್ರವನ್ನು ಪ್ರಕಟಿಸಲಾಗಿದೆ. ಚಿತ್ರದಲ್ಲಿ ಅವರನ್ನು ಅಮೆರಿಕದ 45ನೇ ಹಾಗೂ 47ನೇ ಅಧ್ಯಕ್ಷರೆಂದು ಉಲ್ಲೇಖಿಸಲಾಗಿದ್ದು, ಜನವರಿ 20, 2025ರಂದು ಅಧಿಕಾರ ಸ್ವೀಕರಿಸಿದ್ದಾರೆ ಎಂದು ವಿವರಿಸಲಾಗಿದೆ. ಇತ್ತೀಚೆಗೆ ಅಮೆರಿಕ ವೆನೆಝುವೆಲಾದಲ್ಲಿ ನಡೆಸಿದ ಭಾರೀ ಸೇನಾ ಕಾರ್ಯಾಚರಣೆಯ ನಂತರ ಈ ಬೆಳವಣಿಗೆ ನಡೆದಿದೆ. ಆ ಕಾರ್ಯಾಚರಣೆಯಲ್ಲಿ ವೆನೆಝುವೆಲಾದ ಅಧ್ಯಕ್ಷ ನಿಕೋಲಸ್ ಮಡುರೊ ಹಾಗೂ ಅವರ ಪತ್ನಿ ಸಿಲಿಯಾ ಫ್ಲೋರ್ಸ್ ಅವರನ್ನು ಬಂಧಿಸಿ ನ್ಯೂಯಾರ್ಕ್ಗೆ ಕರೆದೊಯ್ಯಲಾಗಿದೆ. ಅವರ ವಿರುದ್ಧ ಮಾದಕ ದ್ರವ್ಯ–ಭಯೋತ್ಪಾದನಾ ಪಿತೂರಿ ಆರೋಪಗಳಡಿ ಪ್ರಕರಣ ದಾಖಲಿಸಲಾಗಿದೆ ಎಂದು ಅಮೆರಿಕ ಅಧಿಕಾರಿಗಳು ತಿಳಿಸಿದ್ದಾರೆ. ವೆನೆಝುವೆಲಾದಲ್ಲಿ “ಸುರಕ್ಷಿತ ಹಾಗೂ ಸರಿಯಾದ ಆಡಳಿತ ಪರಿವರ್ತನೆ” ಸಾಧ್ಯವಾಗುವವರೆಗೆ ಅಮೆರಿಕ ಮೇಲ್ವಿಚಾರಣೆ ವಹಿಸಿಕೊಳ್ಳಲಿದೆ ಎಂದು ಟ್ರಂಪ್ ಹೇಳಿದ್ದಾರೆ. ನಾಯಕತ್ವದ ನಿರ್ವಾತವು ದೇಶದ ಹಿತಾಸಕ್ತಿಗಳಿಗೆ ಧಕ್ಕೆಯಾಗಲಿದೆ ಎಂಬುದನ್ನು ಅವರು ಉಲ್ಲೇಖಿಸಿದ್ದಾರೆ. ಮಡುರೊ ಅವರನ್ನು ತೆಗೆದುಹಾಕಿದ ನಂತರ, ವೆನೆಝುವೆಲಾದ ಉಪಾಧ್ಯಕ್ಷೆ ಡೆಲ್ಸಿ ರೊಡ್ರಿಗಸ್ ಅವರನ್ನು ಕಳೆದ ವಾರ ಮಧ್ಯಂತರ ಅಧ್ಯಕ್ಷೆಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಮಧ್ಯಂತರ ಆಡಳಿತವು 30ರಿಂದ 50 ಮಿಲಿಯನ್ ಬ್ಯಾರೆಲ್ಗಳಷ್ಟು ತೈಲವನ್ನು ಅಮೆರಿಕಕ್ಕೆ ಹಸ್ತಾಂತರಿಸಲಿದೆ ಎಂದು ಟ್ರಂಪ್ ಹೇಳಿದ್ದಾರೆ. ಮಾರುಕಟ್ಟೆ ದರದಲ್ಲಿ ತೈಲ ಮಾರಾಟ ಮಾಡಿ, ಅದರ ಆದಾಯವನ್ನು ಎರಡೂ ದೇಶಗಳಿಗೆ ಲಾಭವಾಗುವಂತೆ ನಿರ್ವಹಿಸಲಾಗುತ್ತದೆ ಎಂದು ಅವರು ಹೇಳಿದ್ದಾರೆ. ಯೋಜನೆಯನ್ನು ತಕ್ಷಣ ಜಾರಿಗೊಳಿಸುವಂತೆ ಇಂಧನ ಕಾರ್ಯದರ್ಶಿಗೆ ಸೂಚನೆ ನೀಡಲಾಗಿದೆ. ಇದಲ್ಲದೆ, ಟ್ರಂಪ್ ತಮ್ಮ ಪೋಸ್ಟ್ನಲ್ಲಿ ಕ್ಯೂಬಾಗೆ ಎಚ್ಚರಿಕೆ ನೀಡಿದ್ದು, ವೆನೆಝುವೆಲಾದಿಂದ ಅಲ್ಲಿಗೆ ಸಾಗುತ್ತಿದ್ದ ತೈಲ ಸರಬರಾಜು ಮತ್ತು ಹಣಕಾಸು ಸಹಾಯವನ್ನು ಕಡಿತಗೊಳಿಸುವುದಾಗಿ ತಿಳಿಸಿದ್ದಾರೆ. ಆದರೆ ಈ ಘೋಷಣೆಯ ಹೊರತಾಗಿಯೂ, ಟ್ರಂಪ್ ಅವರನ್ನು ವೆನೆಝುವೆಲಾದ ಹಂಗಾಮಿ ಅಧ್ಯಕ್ಷ ಎಂದು ಯಾವುದೇ ಅಧಿಕೃತ ಅಥವಾ ಸಾರ್ವಜನಿಕ ದಾಖಲೆಗಳಲ್ಲಿ ಪಟ್ಟಿ ಮಾಡಲಾಗಿಲ್ಲ. ವಿಕಿಪೀಡಿಯಾ ಸೇರಿದಂತೆ ಲಭ್ಯವಿರುವ ದಾಖಲೆಗಳಲ್ಲಿ ಅಮೆರಿಕದ ಸೇನಾ ಕಾರ್ಯಾಚರಣೆ, ಮಡುರೊ ಬಂಧನ ಹಾಗೂ ಕ್ಯಾರಕಾಸ್ನಲ್ಲಿ ಜಾರಿಯಲ್ಲಿರುವ ವಿವಾದಿತ ಮಧ್ಯಂತರ ಆಡಳಿತದ ಕುರಿತ ಮಾಹಿತಿಯೇ ಉಲ್ಲೇಖವಾಗಿದೆ.
ಕೋಗಿಲಿನಲ್ಲಿ ಬಾಂಗ್ಲಾ ವಲಸಿಗರು, ಎನ್ಐಎ ತನಿಖೆಯೇ ಪರಿಹಾರ: ಬಿಜೆಪಿ ಸತ್ಯಶೋಧನಾ ಸಮಿತಿಯಿಂದ 5 ಶಿಫಾರಸುಗಳು
ಕೋಗಿಲು ಬಡಾವಣೆ ಅಕ್ರಮ ತೆರವು ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಸತ್ಯಶೋಧನಾ ಸಮಿತಿ ವರದಿ ಸಲ್ಲಿಸಿದೆ. 108 ಪುಟಗಳ ವರದಿಯಲ್ಲಿ 5 ಶಿಫಾರಸುಗಳಿದ್ದು, ಪ್ರಕರಣದ ತನಿಖೆಯನ್ನು ಎನ್ಐಎಗೆ ನೀಡಬೇಕೆಂದು ಆಗ್ರಹಿಸಿದೆ. ಅಕ್ರಮ ಬಾಂಗ್ಲಾ ವಲಸಿಗರನ್ನು ಸ್ಥಳಾಂತರಿಸಿ, ಸ್ಥಳೀಯ ಮುಸ್ಲಿಮರನ್ನು ಅಲ್ಲಿಗೆ ಕರೆತರಲಾಗಿದೆ ಎಂದು ಸಮಿತಿ ಆರೋಪಿಸಿದೆ.
ISRO: ಪಿಎಸ್ಎಲ್ವಿಗೆ ದ್ವಿತೀಯ ವಿಘ್ನ: ಭಾರತದ ನಂಬಿಕಾರ್ಹ ರಾಕೆಟ್ ಮುಗ್ಗರಿಸಿದಾಗ
ಇಸ್ರೋದ 16 ಉಪಗ್ರಹ ಉಡಾವಣೆ ಪ್ರಮುಖ ಯೋಜನೆ ವಿಫಲವಾಗಿದೆ. ಈ ಬಗ್ಗೆ ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ ಗಿರೀಶ್ ಲಿಂಗಣ್ಣ ಅವರ ಬರಹ ಇಲ್ಲಿದೆ. ಇಂದು ಬೆಳಿಗ್ಗೆ ಶ್ರೀಹರಿಕೋಟಾದಲ್ಲಿ ಅತ್ಯಂತ ವಿಷಾದಕರ ಸಂಗತಿ ನಡೆದಿದೆ. ಕೇವಲ ಎಂಟು ತಿಂಗಳ ಅವಧಿಯಲ್ಲಿ, ಭಾರತದ ಅತ್ಯಂತ ನಂಬಿಕಾರ್ಹ ರಾಕೆಟ್ ಆಗಿರುವ ಪಿಎಸ್ಎಲ್ವಿ ಎರಡನೇ ಬಾರಿಗೆ ತನ್ನ ಹಾರಾಟದ ಮಧ್ಯದಲ್ಲಿ
ಉತ್ತರ ಕರ್ನಾಟಕದಲ್ಲಿಯೇ ಮೊಟ್ಟ ಮೊದಲು ಸ್ಟ್ರಾಬೆರಿ ಬೆಳೆದು ಯಶಸ್ಸು ಕಂಡ ಬೀದರ್ ರೈತ
ಬೀದರ್: ಬಿಸಿಲು ನಾಡು ಎಂದೇ ಖ್ಯಾತಿ ಪಡೆದ ಉತ್ತರ ಕರ್ನಾಟಕ ಭಾಗದ ಬೀದರಿನಲ್ಲಿ ಮೊಟ್ಟ ಮೊದಲ ಬಾರಿಗೆ ರೈತರೊಬ್ಬರು ಸ್ಟ್ರಾಬೆರಿ ಬೆಳೆದು ಆದಾಯ ಗಳಿಸುವ ಮೂಲಕ ಯಶಸ್ಸು ಕಂಡಿದ್ದಾರೆ. ಮೂಲತಃ ಬೀದರ್ ಜಿಲ್ಲೆಯ ಔರಾದ್ ತಾಲೂಕಿನ ನಿಡೋದಾ ಗ್ರಾಮದವರಾದ ರೈತ ವೈಜಿನಾಥ್ ನಿಡೋದಾ ಅವರು, ಜಿಲ್ಲೆಯ ಕಮಠಾಣಾ ಗ್ರಾಮದ ತಮ್ಮ ಹೊಲದಲ್ಲಿ ಸ್ಟ್ರಾಬೆರಿ ಬೆಳೆದು ಯಶಸ್ಸು ಕಂಡ ಪ್ರಗತಿಪರ ರೈತರಾಗಿದ್ದಾರೆ. ಸ್ಟ್ರಾಬೆರಿ ಶೀತ ಪ್ರದೇಶದಲ್ಲಿ ಬೆಳೆಯುವ ಅತೀ ನಾಜೂಕಿನ ಬೆಳೆಯಾಗಿದ್ದರಿಂದ ಬರೀ ಬಿಸಿಲು ಇರುವ ಉತ್ತರ ಕರ್ನಾಟಕ ಭಾಗದಲ್ಲಿ ಸ್ಟ್ರಾಬೆರಿ ಬೆಳೆಯುವ ಯೋಚನೆ ಕೂಡ ಯಾರು ಮಾಡಲಿಕ್ಕಿಲ್ಲ. ಆದರೆ ರೈತ ವೈಜಿನಾಥ್ ಅವರು ಬಾಗಲಕೋಟೆಯಲ್ಲಿ ರೈತರೊಬ್ಬರು ಸ್ಟ್ರಾಬೆರಿ ಬೆಳೆದದ್ದು ಸಾಮಾಜಿಕ ಜಾಲತಾಣಗಳಲ್ಲಿ ಗಮನಿಸಿದ್ದರು. ಬಾಗಲಕೋಟೆಯ ವಾತಾವರಣಕ್ಕಿಂತ ಬೀದರ್ ವಾತಾವರಣ ಚೆನ್ನಾಗಿದೆ. ಹಾಗಾಗಿ ನಮ್ಮಲ್ಲಿಯೂ ಸ್ಟ್ರಾಬೆರಿ ಬೆಳೆಯಬಹುದು ಎಂದು ಯೋಚಿಸಿ, ಪ್ರಾಯೋಗಿಕವಾಗಿ ಮೊದಲಿಗೆ ಅರ್ಧ ಎಕರೆ ಜಮೀನಿನಲ್ಲಿ ಸ್ಟ್ರಾಬೆರಿ ಪ್ಲಾಂಟೇಷನ್ ಮಾಡಿದ್ದರು. 2024ರಲ್ಲಿ ಮೊಟ್ಟ ಮೊದಲಿಗೆ ಪ್ರಾಯೋಗಿಕವಾಗಿ ಇವರು ತಮ್ಮ ಅರ್ಧ ಎಕರೆ ಜಮೀನಿನಲ್ಲಿ 3 ಲಕ್ಷ ರೂ. ಹಣ ಭರಿಸಿ ಸ್ಟ್ರಾಬೆರಿ ಬೆಳೆಯ ಪ್ಲಾಂಟೇಷನ್ ಮಾಡುತ್ತಾರೆ. ಈ ಅರ್ಧ ಎಕರೆ ಜಮೀನಿನಲ್ಲಿ ಬೆಳೆದ ಸ್ಟ್ರಾಬೆರಿಯಿಂದ ಬಂದ ಹಣ 6 ಲಕ್ಷ ರೂ. ಆಗಿತ್ತು. ಎಂದರೆ 3 ಲಕ್ಷ ರೂ. ಖರ್ಚು ಹೋಗಿ 3 ಲಕ್ಷ ರೂ. ಆದಾಯ ಗಳಿಸುತ್ತಾರೆ. ಹಾಗಾಗಿ ಸ್ಟ್ರಾಬೆರಿ ಬೆಳೆಯಲು ವಾತಾ ವರಣ ಹಾಗೂ ಅದಕ್ಕೆ ತಕ್ಕಂತೆ ಮಣ್ಣಿನ ಫಲವತ್ತತೆ ನಮ್ಮಲ್ಲಿ ಇದೆ ಎಂದು ಗಮನಿಸಿದ ಅವರು 2025 ರಲ್ಲಿ 2 ಎಕರೆ ಜಮೀನಿನಲ್ಲಿ ಸ್ಟ್ರಾಬೆರಿ ಪ್ಲಾಂಟೇಷನ್ ಮಾಡುತ್ತಾರೆ. ಇದೀಗ ಆ ಪ್ಲಾಂಟೇಷನ್ ಮಾಡಿದ ಸ್ಟ್ರಾಬೆರಿ ಬೆಳೆಯ ಫಸಲು ಬಂದಿದ್ದು, ದಿನಾಲೂ ಸುಮಾರು 15 ರಿಂದ 16 ಸಾವಿರ ರೂ. ಆದಾಯ ಗಳಿಸುತ್ತಿದ್ದಾರೆ. 2024ರಲ್ಲಿ ಅರ್ಧ ಎಕರೆ ಭೂಮಿಯಲ್ಲಿ 10 ಸಾವಿರ ಸ್ಟ್ರಾಬೆರಿ ಸಸಿಗಳು ಪ್ಲಾಂಟೇಷನ್ ಮಾಡಿದ್ದೆ. ಅದರಲ್ಲಿ 3 ಸಾವಿರ ಸಸಿಗಳು ಎಂದರೆ ಶೇ.30ರಷ್ಟು ಸಸಿಗಳು ಸತ್ತು ಹೋಗಿದ್ದವು. ಹಾಗಾಗಿ ಹೋದ ವರ್ಷ ಎಲ್ಲಿ ತಪ್ಪಿದ್ದೆವು ಎಂದು ಅರಿತು ಈ ವರ್ಷ ಸುಧಾರಿಸಿಕೊಂಡೆವು. ಈ ವರ್ಷ ಬರೀ ಶೇ.5ರಷ್ಟು ಮಾತ್ರ ಸಸಿಗಳ ಡೆತ್ ರೇಟ್ ಇದೆ. ಮುಂದಿನ ದಿನ ಗಳಲ್ಲಿ ಈ ಡೆತ್ ರೇಟ್ ಕೂಡ ತಪ್ಪಿಸುವ ಪ್ರಯತ್ನ ಮಾಡುತ್ತೇವೆ ಎಂದು ಅವರು ಭರವಸೆಯ ಮಾತುಗಳನ್ನಾಡುತ್ತಾರೆ. ಈ ವರ್ಷ ಎರಡು ಎಕರೆ ಭೂಮಿ ಯಲ್ಲಿ 30 ಸಾವಿರ ಸ್ಟ್ರಾಬೆರಿ ಸಸಿಗಳನ್ನು ಪ್ಲಾಂಟೇಷನ್ ಮಾಡಿದ್ದೇವೆ. ಪ್ರತಿ ಸಸಿಗೆ 13 ರೂ. ನಂತೆ 3.9 ಲಕ್ಷ ರೂ. ಬರೀ ಸಸಿ ತರುವುದಕ್ಕೆ ವೆಚ್ಚವಾಗಿದೆ. ಎಕರೆಗೆ 4 ರಿಂದ 5 ಲಕ್ಷ ರೂ. ವೆಚ್ಚದಲ್ಲಿ ಈ ಸ್ಟ್ರಾಬೆರಿ ಪ್ಲಾಂಟೇಷನ್ ಮಾಡಿದ್ದೇವೆ. ಶೇ. 90 ರಷ್ಟು ಸಾವಯವ ಪದ್ಧತಿ ಅಳವಡಿಸಿದ್ದರಿಂದ ಖರ್ಚು ಕಡಿಮೆಯಾಗಿದೆ. ಎರಡು ಎಕರೆ ಜಮೀನಿನಲ್ಲಿ ಒಟ್ಟು 10 ಲಕ್ಷ ರೂ. ಖರ್ಚಾದರೂ ಇದಕ್ಕೆ ಒಂದು ಪಟ್ಟು ಹೆಚ್ಚು ಹಣ (20ಲಕ್ಷ ರೂ.) ಬರುವ ನಿರೀಕ್ಷೆ ಇದೆ ಎಂದು ತಿಳಿಸಿದ ಅವರು, 10 ಲಕ್ಷ ರೂ. ವೆಚ್ಚ ಕಳೆದರೂ ಕೂಡ 10 ಲಕ್ಷ ರೂ. ಆದಾಯವಾಗಬಹುದು ಎನ್ನುವ ನಿರೀಕ್ಷೆಯಲ್ಲಿದ್ದಾರೆ. ಸ್ಟ್ರಾಬೆರಿ ಬೆಳೆಗೆ ನಮ್ಮ ಬೀದರ್ ಜಿಲ್ಲೆಯ ವಾತಾವರಣ, ಮಣ್ಣು, ನೀರು ಉತ್ತಮವಾಗಿದೆ. ಹಾಗಾಗಿ ಜಿಲ್ಲೆಯ ಯಾವುದೇ ರೈತರು ಈ ಬೆಳೆ ಬೆಳೆಯಬಹುದು. ಸ್ಟ್ರಾಬೆರಿ ಬೆಳೆಯಲು 15 ಡಿಗ್ರಿ ಯಿಂದ 30 ಡಿಗ್ರಿ ವರೆಗೆ ತಾಪಮಾನ ಇರಬೇಕು. ಈ ವರ್ಷ ನಮ್ಮ ಜಿಲ್ಲೆಯಲ್ಲಿ ತುಂಬಾ ಮಳೆಯಾಗಿದ್ದರಿಂದ ಈ ಚಳಿಗಾಲದಲ್ಲಿ ಕೆಲ ದಿನ 7 ಡಿಗ್ರಿ ತಾಪಮಾನ ಬಂದಿತ್ತು. ಹಾಗಾಗಿ ನಮ್ಮ ಸ್ಟ್ರಾಬೆರಿ ಇಳುವರಿಯಲ್ಲಿ ಸ್ವಲ್ಪ ಕುಂಠಿತವಾಗಿತ್ತು. ಆದರೆ ಈವಾಗ ಪರವಾಗಿಲ್ಲ, ವಾತಾವರಣ ಚೆನ್ನಾಗಿದೆ. ಹಾಗಾಗಿ ಇಳುವರಿ ಚೆನ್ನಾಗಿ ಬರುತ್ತಿದೆ ಎಂದು ಅವರು ಹೇಳುತ್ತಾರೆ. ಭಾರತದಲ್ಲಿ ‘ಮದರ್ ಆಫ್ ಸ್ಟ್ರಾಬೆರಿ’ ಎಂದು ಮಹಾರಾಷ್ಟ್ರದ ‘ಮಹಾಬಲೇಶ್ವರ್’ ನಗರಕ್ಕೆ ಕರೆಯುತ್ತಾರೆ. ಸ್ಟ್ರಾಬೆರಿ ಬೆಳೆಗೆ ಅಲ್ಲಿನ ವಾತಾವರಣ ತುಂಬಾ ಚೆನ್ನಾಗಿರುವುದರಿಂದ ಅಲ್ಲಿ ಹೆಚ್ಚಾಗಿ ಸ್ಟ್ರಾಬೆರಿ ಬೆಳೆಯುತ್ತಾರೆ. ನಾವು ಕೂಡ ಮಹಾಬಲೇಶ್ವರ್ದಿಂದಲೇ ಸಸಿಗಳು ತಂದಿದ್ದೇವೆ. ಇವಾಗ ಮಹಾಬಲೇಶ್ವರ್ ಕ್ಕಿಂತಲೂ ಚೆನ್ನಾಗಿ ನಮ್ಮಲ್ಲಿ ಫಸಲು ಬರುತ್ತಿದೆ. ಉತ್ತರ ಭಾರತದ ತಂಪು ಪ್ರದೇಶಗಳಲ್ಲಿಯೂ (ಹಿಮಾಚಲ, ಕಾಶ್ಮೀರ) ಸ್ಟ್ರಾಬೆರಿ ಬೆಳೆಯುತ್ತಾರೆ. ಉತ್ತರ ಭಾರತದ ಕಡೆಗೆ ಹೋಗಿ ಅಲ್ಲಿ ಬೆಳೆದ ಸ್ಟ್ರಾಬೆರಿ ಬಗ್ಗೆ ಅಧ್ಯಯನ ಮಾಡಿ, ನಮ್ಮಲ್ಲಿ ಏನು ಬದಲಾವಣೆ ಮಾಡಬೇಕು ಅದು ಮುಂದಿನ ದಿನಗಳಲ್ಲಿ ಮಾಡುತ್ತೇನೆ ಎಂದು ಅವರು ತಿಳಿಸಿದ್ದಾರೆ. ಸೆ.15 ರಿಂದ ಅ.15 ರಲ್ಲಿ ಸ್ಟ್ರಾಬೆರಿ ಪ್ಲಾಂಟೇಷನ್ ಮಾಡುವುದಕ್ಕೆ ಒಳ್ಳೆಯ ಸಮಯವಾಗಿರುತ್ತದೆ. ಯಾಕೆಂದರೆ ಚಳಿಗಾಲ ಪ್ರಾರಂಭವಾಗುವ ಮುಂಚೆ ಸ್ಟ್ರಾಬೆರಿ ಪ್ಲಾಂಟೇಷನ್ ಮಾಡಬೇಕು. ಕಾರಣ, ಚಳಿಗಾಲದಲ್ಲಿಯೇ ಅದು ಹೂ ಮತ್ತು ಹಣ್ಣು ಬಿಡುವುದಕ್ಕೆ ಪ್ರಾರಂಭ ಮಾಡುತ್ತದೆ. ಚಳಿಗಾಲ ಎಷ್ಟು ದಿವಸ ಇರುತ್ತದೆಯೋ ಅಷ್ಟು ದಿವಸ ಅದು ಒಳ್ಳೆಯ ಹಣ್ಣುಗಳು ಬಿಡುತ್ತದೆ. ಮಾರ್ಚ್ ತಿಂಗಳಲ್ಲಿ ಬೇಸಿಗೆ ಪ್ರಾರಂಭವಾಗುವುದರಿಂದ ಇಳುವರಿ ಕಡಿಮೆಯಾಗಿತ್ತದೆ ಎಂದು ಅವರು ವಿವರಿಸುತ್ತಾರೆ. ವೈಜಿನಾಥ್ ನಿಡೋದಾ ಅವರು ಜಿಲ್ಲಾ ಪಂಚಾಯತ್ನಲ್ಲಿ ಸರಕಾರಿ ಹುದ್ದೆಯಲ್ಲಿದ್ದರು. ಇವರಿಗೆ ಮೊದಲಿನಿಂದಲೇ ಕೃಷಿಯಲ್ಲಿ ಆಸಕ್ತಿ ಇತ್ತು. ಎರಡು ವರ್ಷದ ಹಿಂದೆ ಸರಕಾರಿ ಹುದ್ದೆಯಿಂದ ನಿವೃತ್ತಿ ಪಡೆದ ಇವರು ಸಂಪೂರ್ಣವಾಗಿ ಕೃಷಿ ಮಾಡುವುದರಲ್ಲಿಯೇ ತೊಡಗಿಸಿಕೊಂಡಿದ್ದಾರೆ. ಇವರ ಮಗನೊಬ್ಬ ಸಿವಿಲ್ ಇಂಜಿನಿಯರ್ ಪದವೀಧರನಾಗಿದ್ದರು ಕೂಡ ಕೃಷಿಯಲ್ಲಿನ ಆಸಕ್ತಿಯಿಂದ ಕೃಷಿ ಕೆಲಸದಲ್ಲಿಯೇ ತೊಡಗಿದ್ದಾರೆ. ಹಾಗೆಯೇ ವೈಜಿನಾಥ್ ನಿಡೋದಾ ಅವರ ಪತ್ನಿ ಹಾಗೂ ಇನ್ನೊಬ್ಬ ಮಗ ಕೂಡ ಇವರ ಕೃಷಿ ಕೆಲಸಕ್ಕೆ ಸಾಥ್ ನೀಡುತ್ತಿದ್ದಾರೆ. ಸಾವಯವ ಕೃಷಿ ಪದ್ಧತಿಯೇ ಬೇಕು: ಈ ಸ್ಟ್ರಾಬೆರಿ ಬೆಳೆಗೆ ಸಾವಯವ ಕೃಷಿ ಪದ್ಧತಿಯೇ ಬೇಕು. ಕೆಮಿಕಲ್ ಹೆಚ್ಚಾಗಿ ಈ ಬೆಳೆಗೆ ನಡೆಯುವುದಿಲ್ಲ. ಆದ್ದರಿಂದ ನಾವು ಇದಕ್ಕೆ ಎಂಟು ದಿವಸಕ್ಕೆ ಒಂದು ಸಲ ಜೀವಾಮೃತವೆ ನೀಡುತ್ತೇವೆ. ದೇಸಿ ಗೋಮೂತ್ರ, ಸೆಗಣಿ, ದೇಸಿ ಬೆಲ್ಲ ಹಾಗೂ ಹೊಲದಲ್ಲಿನ ಒಂದಿಷ್ಟು ಮಣ್ಣು ಸೇರಿಸಿ ಒಂದು ವಾರ ಇಟ್ಟಾಗ ಅದು ಜೀವಾಮೃತವಾಗಿ ತಯಾರಾಗುತ್ತದೆ. ಅದನ್ನೇ ಈ ಬೆಳೆಗೆ ಸಿಂಪಡಣೆ ಮಾಡುತ್ತೇವೆ. ಸ್ಟ್ರಾಬೆರಿ ಬೆಳೆಯುವುದಕ್ಕೆ ಮಣ್ಣಿನ ಪರೀಕ್ಷೆ ತುಂಬಾ ಮಹತ್ವದ್ದಾಗಿರುತ್ತದೆ. ಅದಕ್ಕೆ ಮಣ್ಣಿನ ಗುಣಮಟ್ಟ 6 ರಿಂದ 6.5 ಮಾತ್ರ ಇರಬೇಕು. ಅದಕ್ಕಿಂತ ಹೆಚ್ಚು ಕಡಿಮೆಯಾದರೂ ಸ್ಟ್ರಾಬೆರಿ ಬೆಳೆಯುವುದಿಲ್ಲ. ನಮ್ಮ ಹೊಲದಲ್ಲಿ ಮಣ್ಣಿನ ಗುಣಮಟ್ಟ 6.5 ಇದೆ. ಸ್ಟ್ರಾಬೆರಿ ಬೆಳೆಯುವುದಕ್ಕೆ ನಮ್ಮ ಜಿಲ್ಲೆಯ ಮಣ್ಣು ಅತ್ತ್ಯುತ್ತಮವಾಗಿದೆ ಎಂದು ಅವರು ಮಾಹಿತಿ ನೀಡಿದರು. ಹೊಲದಲ್ಲಿಯೇ ವೆದರ್ ರಿಪೋರ್ಟ್ ಯಂತ್ರ: ಅವರ ಹೊಲದಲ್ಲಿಯೇ ವೆದರ್ ರಿಪೋರ್ಟ್ ಯಂತ್ರ ಅಳವಡಿಸಲಾಗಿದ್ದು, ಆ ವೆದರ್ ರಿಪೋರ್ಟ್ ಯಂತ್ರವು ಸ್ಟ್ರಾಬೆರಿ ಬೆಳೆಗೆ ಎಷ್ಟು ಪ್ರಮಾಣದ ನೀರು ಬೇಕು, ಎಷ್ಟು ತೇವಾಂಶ ಇದೆ, ಮಳೆ ಬರುವ ಮುನ್ಸೂಚನೆ ಎಲ್ಲವೂ ತಿಳಿಸುತ್ತದೆ. ನನ್ನ ಪ್ರಯೋಗ ನೋಡಿ ಬೇರೆ ರೈತರು ಕೂಡ ಸ್ಟ್ರಾಬೆರಿ ಬೆಳೆಯಬಹುದು. ಆದರೆ ಇದಕ್ಕೆ ವೆಚ್ಚ ಹೆಚ್ಚಾಗಿರುತ್ತದೆ. ಹಾಗಾಗಿ ಬೆಳೆ ಬಾರದೇ ಇದ್ದರೆ ರೈತರಿಗೆ ನಷ್ಟವಾಗಬಾರದು. ಯಾರಿಗಾದರೂ ಇದರ ಬಗ್ಗೆ ಮಾಹಿತಿ ಬೇಕಿದ್ದಲ್ಲಿ ನನ್ನ ಮೊಬೈಲ್ ಸಂಖ್ಯೆ 9242982494ಗೆ ಕರೆ ಮಾಡಬಹುದು. - ವೈಜೀನಾಥ್ ನಿಡೋದಾ, ಸ್ಟ್ರಾಬೆರಿ ಬೆಳೆದ ರೈತ.
ಮೌಲಾನಾ ಸಗೀರ್ ಅಹ್ಮದ್ ಖಾನ್ ರಶಾದಿ ನಿಧನ | ತಮ್ಮ ಜೀವನವನ್ನು ʼಸಬೀಲುರ್ರಶಾದ್ʼಗೆ ಮುಡಿಪಾಗಿಟ್ಟದ್ದ ʼಅಮೀರೆ ಶರೀಅತ್ʼ
ಬೆಂಗಳೂರು : ರಾಜ್ಯದ ಪ್ರಖ್ಯಾತ ಇಸ್ಲಾಮೀ ವಿದ್ಯಾಲಯ, ಬೆಂಗಳೂರಿನ ದಾರುಲ್ ಉಲೂಮ್ ಸಬೀಲುರ್ರಶಾದ್ ಮುಖ್ಯಸ್ಥ, ಅಮೀರೆ ಶರೀಅತ್ ಕರ್ನಾಟಕ ಶೇಖುಲ್ ಹದೀಸ್ ಹಝ್ರತ್ ಮೌಲಾನಾ ಸಗೀರ್ ಅಹ್ಮದ್ ಖಾನ್ ರಶಾದಿ(75) ಅವರು ಇಂದು ಮುಂಜಾನೆ ನಿಧನರಾಗಿದ್ದಾರೆ. ದೀರ್ಘಕಾಲದಿಂದ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದ ಮೌಲಾನಾ ಸಗೀರ್ ಅಹ್ಮದ್ ಖಾನ್ ರಶಾದಿ ಅವರು ಇಂದು ಮುಂಜಾನೆ ಫಜರ್ ನಮಾಝ್ ಬಳಿಕ ತಮ್ಮ ಮನೆಯಲ್ಲಿ ಇಹಲೋಕವನ್ನು ತ್ಯಜಿಸಿದರು. ಕಳೆದ ಮೂರು ತಿಂಗಳಿನಿಂದ ಅವರ ಆರೋಗ್ಯ ತೀವ್ರ ಹದಗೆಟ್ಟಿತು. ಈ ಹಿನ್ನೆಲೆಯಲ್ಲಿ ನಗರದ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿತ್ತು. ಆನಂತರ, ವೈದ್ಯರ ಸಲಹೆ ಮೇರೆಗೆ ಒಂದು ತಿಂಗಳಿನಿಂದ ಗೋವಿಂದಪುರದಲ್ಲಿರುವ ಅವರ ಮನೆಯಲ್ಲಿಯೇ ವೈದ್ಯಕೀಯ ಆರೈಕೆ ನೀಡಲಾಗುತ್ತಿತ್ತು. ಇಂದು ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ. ಸಾರ್ವಜನಿಕರು ಇಂದು ಹಝ್ರತ್ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಮಾಡಲು ಅನುಕೂಲವಾಗುವಂತೆ ಸಬೀಲುರ್ರಶಾದ್ ನಲ್ಲಿ ವ್ಯವಸ್ಥೆ ಮಾಡಲಾಗಿದೆ. ಮಂಗಳವಾರ ಬೆಳಗ್ಗೆ 10 ಗಂಟೆಗೆ ಸಬೀಲುರ್ರಶಾದ್ ಆವರಣದಲ್ಲಿ ನಮಾಝೆ ಜನಾಝ ನೆರವೇರಿಸಿ, ಅಲ್ಲಿಯೇ ದಫನ್ ಕಾರ್ಯ ನಡೆಯಲಿದೆ. ಹಝ್ರತ್ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ಬೆಳಗ್ಗೆಯಿಂದಲೇ ಸಾರ್ವಜನಿಕರು ಸಬೀಲುರ್ರಶಾದ್ ನತ್ತ ಹೆಜ್ಜೆ ಹಾಕುತ್ತಿದ್ದಾರೆ. ಹಝ್ರತ್ ಅವರ ಅಂತಿಮ ದರ್ಶನಕ್ಕೆ ಲಕ್ಷಾಂತರ ಸಂಖ್ಯೆಯಲ್ಲಿ ರಾಜ್ಯ ಹಾಗೂ ದೇಶದ ವಿವಿಧ ಭಾಗಗಳಿಂದ ಸಾರ್ವಜನಿಕರು ಹಾಗೂ ಗಣ್ಯರು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಸಬೀಲುರ್ರಶಾದ್ ಸುತ್ತ ಮುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗುತ್ತಿದೆ. ಹಝ್ರತ್ ಮುಫ್ತಿ ಮುಹಮ್ಮದ್ ಅಶ್ರಫ್ ಅಲಿ ಬಾಖವಿ ಅವರ ನಿಧನದ ನಂತರ ಅವರ ನೆಚ್ಚಿನ ಶಿಷ್ಯರಾಗಿದ್ದ ಸಗೀರ್ ಅಹ್ಮದ್ ಖಾನ್ ಅವರನ್ನು ಮೂರನೇ ಅಮೀರೆ ಶರೀಅತ್ ಆಗಿ ಸರ್ವಾನುಮತದಿಂದ ಆಯ್ಕೆ ಮಾಡಲಾಗಿತ್ತು. ಕೇಂದ್ರ ಸರಕಾರದ ಸಿಎಎ, ಎನ್ ಆರ್ ಸಿ ವಿರೋಧಿ ಹೋರಾಟ, ಆಲ್ ಇಂಡಿಯಾ ಮುಸ್ಲಿಮ್ ಪರ್ಸನಲ್ ಲಾ ಬೋರ್ಡ್ ದೇಶವ್ಯಾಪಿ ಹಮ್ಮಿಕೊಂಡಿರುವ ವಕ್ಫ್ ಉಳಿಸಿ, ಸಂವಿಧಾನ ಉಳಿಸಿ ಚಳವಳಿಯ ಸಂಚಾಲಕರಾಗಿ ರಾಜ್ಯದಲ್ಲಿ ಮುನ್ನಡೆಸುತ್ತಿದ್ದರು. ಜೀವನ ಮತ್ತು ಸೇವೆಗಳು: ಮೌಲಾನಾ ಸಗೀರ್ ಅಹ್ಮದ್ ಖಾನ್ ರಶಾದಿ ಅವರು ಮೈಸೂರು ಜಿಲ್ಲೆಯಲ್ಲಿ ಜನಿಸಿದರು. ಅವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಗ್ರಾಮದ ಮಖ್ತಬ್ನಲ್ಲಿ ಪೂರೈಸಿದ ನಂತರ, ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ದಾರುಲ್ ಉಲೂಮ್ ಸಬೀಲುರ್ರಶಾದ್ ಗೆ ಸೇರಿದರು. ಅಲ್ಲಿ ಅವರು ಪವಿತ್ರ ಕುರ್ ಆನ್ ಅನ್ನು ಕಂಠಪಾಠ (ಹಿಫ್ಝ್) ಮಾಡಿದರು ಮತ್ತು ನಂತರ ಅದೇ ಸಂಸ್ಥೆಯಲ್ಲಿ ಆಲಿಮಿಯತ್ ಹಾಗೂ ಫಝಿಲತ್ ಪದವಿಗಳನ್ನು ಅತ್ಯುತ್ತಮ ಶ್ರೇಣಿಯಲ್ಲಿ ಪೂರೈಸಿದರು. ವಿದ್ಯಾಭ್ಯಾಸದ ನಂತರ, ಅವರ ಪ್ರತಿಭೆಯನ್ನು ಗುರುತಿಸಿ ಅದೇ ಸಂಸ್ಥೆಯಲ್ಲಿ ಅಧ್ಯಾಪಕರನ್ನಾಗಿ ನೇಮಿಸಲಾಯಿತು. ಅವರು ಪ್ರಾಥಮಿಕ ಹಂತದ ಪುಸ್ತಕಗಳಿಂದ ಬೋಧನೆಯನ್ನು ಆರಂಭಿಸಿ, ಹಂತಹಂತವಾಗಿ ಉನ್ನತ ಸ್ಥಾನಕ್ಕೇರಿದರು. ತಮ್ಮ ಅಗಾಧವಾದ ಜ್ಞಾನದಿಂದಾಗಿ ಅವರು ಸಬೀಲುರ್ರಶಾದ್ನ 'ಶೇಖ್-ಉಲ್-ತಫ್ಸೀರ್' (ಕುರ್ ಆನ್ ವ್ಯಾಖ್ಯಾನಕಾರರ ಮುಖ್ಯಸ್ಥರು) ಮತ್ತು 'ಶೇಖ್-ಉಲ್-ಹದೀಸ್' (ಪ್ರವಾದಿ ವಚನಗಳ ಬೋಧನಾ ಮುಖ್ಯಸ್ಥರು) ಎಂಬ ಅತ್ಯುನ್ನತ ಸ್ಥಾನಗಳನ್ನು ಅಲಂಕರಿಸಿದರು. ಹಝ್ರತ್ ಮುಫ್ತಿ ಮುಹಮ್ಮದ್ ಅಶ್ರಫ್ ಅಲಿ ಬಾಖವಿ ಅವರ ನಿಧನದ ನಂತರ, ಮೌಲಾನಾ ಸಗೀರ್ ಅಹ್ಮದ್ ರಶಾದಿ ಅವರನ್ನು ದಾರುಲ್ ಉಲೂಮ್ ಸಬೀಲುರ್ರಶಾದ್ನ ಮುಖ್ಯಸ್ಥರನ್ನಾಗಿ (ಮೊಹ್ತಮಿಮ್) ನೇಮಿಸಲಾಯಿತು. ಇದರೊಂದಿಗೆ ರಾಜ್ಯದ ಮುಸ್ಲಿಮ್ ಸಮುದಾಯದ ಅತ್ಯುನ್ನತ ಧಾರ್ಮಿಕ ಹುದ್ದೆಯಾದ 'ಅಮೀರ್-ಎ-ಶರೀಅತ್' ಆಗಿ ಅವರು ಸರ್ವಾನುಮತದಿಂದ ಆಯ್ಕೆಯಾದರು. ರಾಷ್ಟ್ರೀಯ ಮಟ್ಟದ ಕೊಡುಗೆಗಳು: ಅವರು ಕೇವಲ ಕರ್ನಾಟಕಕ್ಕೆ ಸೀಮಿತವಾಗಿರದೆ, ರಾಷ್ಟ್ರೀಯ ಮಟ್ಟದಲ್ಲೂ ಸಕ್ರಿಯರಾಗಿದ್ದರು. ಅವರು ಅಖಿಲ ಭಾರತ ಮುಸ್ಲಿಮ್ ವೈಯಕ್ತಿಕ ಕಾನೂನು ಮಂಡಳಿಯ (AIMPLB) ಕಾರ್ಯಕಾರಿ ಸಮಿತಿಯ ಪ್ರಭಾವಿ ಸದಸ್ಯರಾಗಿದ್ದರು. ಅಖಿಲ ಭಾರತ ಮಿಲ್ಲಿ ಕೌನ್ಸಿಲ್ನ ಮಾರ್ಗದರ್ಶಕರಾಗಿ ಸಮುದಾಯದ ಏಳಿಗೆಗಾಗಿ ಶ್ರಮಿಸಿದರು. ಧಾರ್ಮಿಕ ಜಾಗೃತಿಗಾಗಿ ಅವರು 'ಸಲ್ಸಬೀಲ್' ಎಂಬ ಮಾಸಿಕ ಪತ್ರಿಕೆಯನ್ನು ಮರುಪ್ರಾರಂಭಿಸಿ ಅದರ ಸಂಪಾದಕರಾಗಿ ಸೇವೆ ಸಲ್ಲಿಸಿದರು. ಮೌಲಾನಾ ಅವರು ಅತ್ಯಂತ ಸರಳ ಸಜ್ಜನಿಕೆಯ ವ್ಯಕ್ತಿಯಾಗಿದ್ದರು. ಅವರು ಕರ್ನಾಟಕದ ಮುಸ್ಲಿಮ್ ಸಮುದಾಯದ ಒಗ್ಗಟ್ಟಿಗಾಗಿ ಮತ್ತು ಶೈಕ್ಷಣಿಕ ಪ್ರಗತಿಗಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದರು. ಅವರ ಮಾರ್ಗದರ್ಶನದಲ್ಲಿ ಸಾವಿರಾರು ವಿದ್ಯಾರ್ಥಿಗಳು ಧಾರ್ಮಿಕ ಶಿಕ್ಷಣವನ್ನು ಪಡೆದು ದೇಶದಾದ್ಯಂತ ಸೇವೆ ಸಲ್ಲಿಸುತ್ತಿದ್ದಾರೆ. ತಮ್ಮ ಜೀವನವನ್ನು ʼಸಬೀಲುರ್ರಶಾದ್ʼ ಗೆ ಮುಡಿಪಾಗಿಟ್ಟ ಅಮೀರೆ ಶರೀಅತ್ ಮೌಲಾನಾ ಸಗೀರ್ ಅಹ್ಮದ್ ಖಾನ್ ರಶಾದಿ: ಅಮೀರೆ ಶರೀಅತ್ ಮೌಲಾನಾ ಸಗೀರ್ ಅಹ್ಮದ್ ಖಾನ್ ರಶಾದಿ ಅವರು ತಮ್ಮ ಜೀವನವನ್ನು ಸಬೀಲುರ್ರಶಾದ್ ಸಂಸ್ಥೆಗೆ ಮುಡಿಪಾಗಿಟ್ಟಿದ್ದರು. ಅವರ ಸಾವಿರಾರು ಶಿಷ್ಯರ ಪೈಕಿ ತಾನು ಒಬ್ಬ. ಹಝ್ರತ್ ಮುಫ್ತಿ ಮುಹಮ್ಮದ್ ಅಶ್ರಫ್ ಅಲಿ ಬಾಖವಿ ಅವರ ನಿಧನದ ಬಳಿಕ ಸಬೀಲುರ್ರಶಾದ್ ಸಂಸ್ಥೆಯ ಮುಖ್ಯಸ್ಥರನ್ನಾಗಿ ಅವರ ಪುತ್ರ ಮೌಲಾನ ಅಹ್ಮದ್ ಮಾಝ್ ಅವರನ್ನು ನೇಮಿಸಲಾಗಿತ್ತು. ಆದರೆ, ಅವರ ನಿಧನದಿಂದ ತೆರವಾದ ಸ್ಥಾನಕ್ಕೆ ಸಗೀರ್ ಅಹ್ಮದ್ ಖಾನ್ ಅವರನ್ನು ನೇಮಿಸಲಾಯಿತು. ತಮ್ಮ ಜೀವನದ ಕೊನೆಯ ಉಸಿರು ಇರುವವರೆಗೆ ಅವರು ಸಬೀಲುರ್ರಶಾದ್ ಸಂಸ್ಥೆಯ ಜವಾಬ್ದಾರಿಯನ್ನು ನಿರ್ವಹಿಸಿದರು ► ಮೌಲಾನಾ ಮಕ್ಸೂದ್ ಇಮ್ರಾನ್, ಖತೀಬ್ ಒ ಇಮಾಮ್, ಜಾಮಿಯಾ ಮಸೀದಿ, ಸಿಟಿ ಮಾರುಕಟ್ಟೆ, ಬೆಂಗಳೂರು .
ಬೆಂಗಳೂರು ವಾಹನ ಸವಾರರೇ ಎಚ್ಚರ; ಕಣ್ಣು ಕುಕ್ಕುವಂತಹ ಹೆಡ್ಲೈಟ್ಸ್ ಬಳಸಿದ್ರೆ ಬೀಳುತ್ತೆ ದಂಡ
ಮೋಟಾರು ವಾಹನ ಕಾಯ್ದೆ ನಿಯಮ ಮೀರಿ ಖಾಸಗಿ ವಾಹನಗಳಿಗೆ ಹೆಚ್ಚು ವ್ಯಾಟ್ ಇರುವ ಹೈ ಬೀಮ್ ಹೆಡ್ಲೈಟ್ ಧರಿಸಿ ಇತರ ವಾಹನ ಸವಾರರಿಗೆ ಸಮಸ್ಯೆಯನ್ನುಂಟು ಮಾಡುವ ವಾಹನ ಮಾಲೀಕರ ವಿರುದ್ಧ ಬೆಂಗಳೂರು ಸಂಚಾರ ಪೊಲೀಸರು ಕ್ರಮ ಕೈಗೊಂಡಿದ್ದಾರೆ. ಶನಿವಾರ ಒಂದೇ ದಿನ 4,994 ಪ್ರಕರಣ ದಾಖಲಾಗಿದ್ದು, ಬೆಂಗಳೂರು ಪಶ್ಚಿಮ ಈ ಪ್ರಕರಣದಲ್ಲಿ ಹೆಚ್ಚು ಕೇಸ್ ಉಲ್ಲಂಘಿಸಿದ್ದಾಗಿದೆ.
ಜಿಬಿಎ ಚುನಾವಣೆಗೆ ಕೊನೆಗೂ ಮುಹೂರ್ತ ಫಿಕ್ಸ್, ಸುಪ್ರೀಂ ಕೋರ್ಟ್ ಮಹತ್ವದ ಆದೇಶ
ಗ್ರೇಟರ್ ಬೆಂಗಳೂರು ಅಥಾರಿಟಿ ಅಡಿಯಲ್ಲಿ ಬರುವ ಐದು ಮಹಾನಗರ ಪಾಲಿಕೆಗಳ ವಾರ್ಡ್ ಮರುವಿಂಗಡಣೆಯನ್ನು ಅಂತಿಮಗೊಳಿಸಲು ಕರ್ನಾಟಕ ಸರ್ಕಾರಕ್ಕೆ 2026ರ ಫೆಬ್ರವರಿ 20ರವರೆಗೆ ಸುಪ್ರೀಂ ಕೋರ್ಟ್ ಕಾಲಾವಕಾಶ ನೀಡಿದೆ. ಅಲ್ಲದೆ, ಶಾಲಾ ಪರೀಕ್ಷೆಗಳು ಮುಗಿದ ನಂತರ ಮೇ ತಿಂಗಳಲ್ಲಿ ಚುನಾವಣಾ ಪ್ರಕ್ರಿಯೆ ಆರಂಭಿಸಿ, ಜೂನ್ 30, 2026 ರೊಳಗೆ ಚುನಾವಣೆ ಮುಗಿಸುವಂತೆ ಮುಖ್ಯ ನ್ಯಾಯಮೂರ್ತಿಗಳ ಪೀಠ ಸ್ಪಷ್ಟ ಸೂಚನೆಯನ್ನು ನೀಡಿದೆ.
Iran ವಿರುದ್ಧ ಮಿಲಿಟರಿ ಬಲಪ್ರಯೋಗಕ್ಕೆ ಅಮೆರಿಕ ಚಿಂತನೆ: ಡೊನಾಲ್ಡ್ ಟ್ರಂಪ್
ವಾಷಿಂಗ್ಟನ್: ಇರಾನ್ ನಲ್ಲಿ ಸರ್ಕಾರ ವಿರೋಧಿ ಪ್ರತಿಭಟನೆಗಳ ಮೇಲೆ ನಡೆಯುತ್ತಿರುವ ದಮನಕ್ಕೆ ಪ್ರತಿಕ್ರಿಯೆಯಾಗಿ, ಇರಾನ್ ವಿರುದ್ಧ ಅಮೆರಿಕ “ಬಹಳ ಬಲವಾದ ಆಯ್ಕೆಗಳನ್ನು” ಪರಿಗಣಿಸುತ್ತಿದೆ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಈ ಆಯ್ಕೆಗಳಲ್ಲಿ ಸಂಭಾವ್ಯ ಮಿಲಿಟರಿ ದಾಳಿಯೂ ಸೇರಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ರವಿವಾರ ತಡರಾತ್ರಿ ಏರ್ ಫೋರ್ಸ್ ಒನ್ ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಟ್ರಂಪ್, “ನಾವು ಇದನ್ನು ಅತ್ಯಂತ ಗಂಭೀರವಾಗಿ ಪರಿಗಣಿಸುತ್ತಿದ್ದೇವೆ. ಮಿಲಿಟರಿ ಬಳಕೆಯ ಬಗ್ಗೆಯೂ ಪರಿಶೀಲಿಸಲಾಗುತ್ತಿದೆ. ಹಲವು ಬಲವಾದ ಆಯ್ಕೆಗಳು ನಮ್ಮ ಮುಂದೆ ಇವೆ. ಶೀಘ್ರವೇ ತೀರ್ಮಾನ ಕೈಗೊಳ್ಳಲಾಗುತ್ತದೆ” ಎಂದು ಹೇಳಿದರು. ಮಿಲಿಟರಿ ಕ್ರಮದ ಬೆದರಿಕೆಗಳ ನಂತರ ಇರಾನ್ ನಾಯಕತ್ವವು ಮಾತುಕತೆಗೆ ಮುಂದಾಗಿದೆ ಎಂದು ಟ್ರಂಪ್ ತಿಳಿಸಿದರು. “ಸಭೆಯನ್ನು ನಿಗದಿಪಡಿಸಲಾಗುತ್ತಿದೆ. ಆದರೆ ಸಭೆಗೆ ಮೊದಲು ಕ್ರಮ ಕೈಗೊಳ್ಳಬೇಕಾದ ಪರಿಸ್ಥಿತಿಯೂ ಎದುರಾಗಬಹುದು” ಎಂದು ಅವರು ಎಚ್ಚರಿಕೆ ನೀಡಿದರು. ಈ ಹೇಳಿಕೆಗಳಿಗೆ ಟೆಹ್ರಾನ್ನಿಂದ ತಕ್ಷಣದ ಪ್ರತಿಕ್ರಿಯೆ ಲಭ್ಯವಾಗಿಲ್ಲ. ಇದಕ್ಕೂ ಮೊದಲು ಇರಾನ್ ನಾಯಕರು ಅಮೆರಿಕದ ಮಿಲಿಟರಿ ಹಸ್ತಕ್ಷೇಪದ ವಿರುದ್ಧ ಕಠಿಣ ಎಚ್ಚರಿಕೆ ನೀಡಿದ್ದರು. “ಇರಾನ್ ಮೇಲೆ ದಾಳಿ ನಡೆದರೆ ಇಸ್ರೇಲ್ ಆಕ್ರಮಿತ ಪ್ರದೇಶಗಳು, ಜೊತೆಗೆ ಎಲ್ಲಾ ಅಮೆರಿಕ ಸೇನಾ ನೆಲೆಗಳು ಹಾಗೂ ಹಡಗುಗಳು ನಮ್ಮ ಕಾನೂನುಬದ್ಧ ಗುರಿಯಾಗುತ್ತವೆ” ಎಂದು ಸಂಸತ್ ಸ್ಪೀಕರ್ ಮೊಹಮ್ಮದ್ ಬಕರ್ ಖಲಿಬಾಫ್ ಹೇಳಿದ್ದಾರೆ. ಡಿಸೆಂಬರ್ 28ರಂದು ಟೆಹ್ರಾನ್ ನ ಗ್ರ್ಯಾಂಡ್ ಬಝಾರ್ ನಲ್ಲಿ ವ್ಯಾಪಾರಿಗಳು ಇರಾನಿನ ರಿಯಾಲ್ ಮೌಲ್ಯ ಕುಸಿತದ ವಿರುದ್ಧ ಅಂಗಡಿಗಳನ್ನು ಮುಚ್ಚಿದ ಬಳಿಕ ದೇಶದಲ್ಲಿ ಪ್ರತಿಭಟನೆಗಳು ಆರಂಭವಾಗಿದ್ದವು. ಹೆಚ್ಚುತ್ತಿರುವ ಜೀವನ ವೆಚ್ಚದ ವಿರುದ್ಧದ ಅಸಮಾಧಾನ, ಸರಕಾರದ ವಿರುದ್ಧ ವ್ಯಾಪಕ ವಿರೋಧಕ್ಕೆ ಕಾರಣವಾಗಿ, ಪ್ರತಿಭಟನೆಗಳು ದೇಶಾದ್ಯಂತ ಹರಡಿವೆ. ಇರಾನಿನ ರಾಷ್ಟ್ರೀಯ ಮಾಧ್ಯಮಗಳ ಪ್ರಕಾರ, ಈಗ ಉಂಟಾಗಿರುವ ಪ್ರತಿಭಟನೆಯಲ್ಲಿ ಕನಿಷ್ಠ 109 ಭದ್ರತಾ ಸಿಬ್ಬಂದಿ ಸಾವನ್ನಪ್ಪಿದ್ದಾರೆ. ಆದರೆ ವಿದೇಶದಲ್ಲಿರುವ ಕಾರ್ಯಕರ್ತರು, ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚಿದ್ದು ನೂರಾರು ಪ್ರತಿಭಟನಾಕಾರರು ಮೃತಪಟ್ಟಿದ್ದಾರೆ ಎಂದು ಹೇಳುತ್ತಿದ್ದಾರೆ. ಮೇಲ್ವಿಚಾರಣಾ ಸಂಸ್ಥೆಗಳ ಮಾಹಿತಿ ಪ್ರಕಾರ, ದೇಶಾದ್ಯಂತ ಇಂಟರ್ನೆಟ್ ಸಂಪರ್ಕ ಕಡಿತವು 72 ಗಂಟೆಗಳಿಗೂ ಹೆಚ್ಚು ಕಾಲ ಮುಂದುವರೆದಿದೆ. ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ರವಿವಾರ, ತಮ್ಮ ಸರ್ಕಾರ ಪ್ರತಿಭಟನಾಕಾರರ ಮಾತುಗಳನ್ನು ಕೇಳಲು ಸಿದ್ಧವಾಗಿದೆ ಎಂದು ಹೇಳಿದರು. ಆದರೆ ಗಲಭೆಕೋರರು ವಿನಾಶಕಾರಿ ಚಟುವಟಿಕೆಗಳಲ್ಲಿ ತೊಡಗುವುದನ್ನು ತಡೆಯುವಂತೆ ಸಾರ್ವಜನಿಕರನ್ನು ಅವರು ಮನವಿ ಮಾಡಿದರು. ಕಳೆದ ವರ್ಷದ ಜೂನ್ ನಲ್ಲಿ ಇರಾನ್ ವಿರುದ್ಧ 12 ದಿನಗಳ ಯುದ್ಧ ನಡೆಸಿದ ಇಸ್ರೇಲ್ ಮತ್ತು ಅಮೆರಿಕವೇ ಈ ಅಶಾಂತಿಯ ಹಿಂದೆ ಇರುವ ಶಕ್ತಿಗಳು ಎಂದು ಅವರು ಆರೋಪಿಸಿದರು. ಇರಾನ್ ವಿರುದ್ಧ ಯಾವ ರೀತಿಯ ಕ್ರಮ ಕೈಗೊಳ್ಳಬೇಕು ಎಂಬುದನ್ನು ಚರ್ಚಿಸಲು ಟ್ರಂಪ್ ಮಂಗಳವಾರ ಹಿರಿಯ ಸಲಹೆಗಾರರನ್ನು ಭೇಟಿಯಾಗಲಿದ್ದಾರೆ ಎಂದು ಅಮೆರಿಕದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಮಿಲಿಟರಿ ದಾಳಿಗಳು, ರಹಸ್ಯ ಸೈಬರ್ ಕಾರ್ಯಾಚರಣೆಗಳು, ನಿರ್ಬಂಧಗಳ ವಿಸ್ತರಣೆ ಹಾಗೂ ಸರ್ಕಾರ ವಿರೋಧಿ ಗುಂಪುಗಳಿಗೆ ಆನ್ಲೈನ್ ಬೆಂಬಲ ನೀಡುವುದು ಸೇರಿದಂತೆ ಹಲವು ಆಯ್ಕೆಗಳು ಪರಿಶೀಲನೆಯಲ್ಲಿವೆ. ಇದೇ ವೇಳೆ, ಇರಾನ್ ನಲ್ಲಿ ಇಂಟರ್ನೆಟ್ ಸಂಪರ್ಕ ಮರುಸ್ಥಾಪನೆ ಕುರಿತು ಬಿಲಿಯನೇರ್ ಎಲಾನ್ ಮಸ್ಕ್ ಅವರೊಂದಿಗೆ ಮಾತನಾಡಲು ಯೋಜನೆ ಇದೆ ಎಂದು ಟ್ರಂಪ್ ತಿಳಿಸಿದ್ದಾರೆ.
ವೆನೆಜುವೆಲಾದ ಹಂಗಾಮಿ ಅಧ್ಯಕ್ಷ ನಾನೇ ಎಂದು ಘೋಷಿಸಿಕೊಂಡ ಟ್ರಂಪ್!
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ತಮ್ಮನ್ನು ವೆನೆಜುವೆಲಾದ ಹಂಗಾಮಿ ಅಧ್ಯಕ್ಷ ಎಂದು ಘೋಷಿಸಿಕೊಂಡು, 2026ರ ಜನವರಿಯಲ್ಲಿ ಅಧಿಕಾರ ವಹಿಸಿಕೊಳ್ಳುವುದಾಗಿ 'ಟ್ರುತ್ ಸೋಷಿಯಲ್'ನಲ್ಲಿ ತಿಳಿಸಿದ್ದಾರೆ. ಈ ಬೆನ್ನಲ್ಲೇ, ಅಮೆರಿಕ ಸೇನೆ ಅಧ್ಯಕ್ಷ ಮಡೂರೊ ಮತ್ತು ಪತ್ನಿ ಸಿಲಿಯಾ ಫ್ಲೋರ್ಸ್ ಅವರನ್ನು ವಶಕ್ಕೆ ತೆಗೆದುಕೊಂಡು, ಮಾದಕ ವಸ್ತು ಕಳ್ಳಸಾಗಣೆ ಆರೋಪ ಹೊರಿಸಿದೆ.
ದೇಶದ ವಿಜ್ಞಾನ ಕ್ಷೇತ್ರಕ್ಕೆ ಅಮೂಲ್ಯ ಕೊಡುಗೆಯನ್ನಿತ್ತು ಏಷ್ಯಾದಲ್ಲೇ ಪ್ರಥಮ ಬಾರಿಗೆ ವಿಜ್ಞಾನ ಕ್ಷೇತ್ರದಲ್ಲಿ ನೊಬೆಲ್ ಪ್ರಶಸ್ತಿ ಪಡೆದ ವಿಜ್ಞಾನಿ ಸರ್ ಸಿವಿ ರಾಮನ್ ಎಂದರೆ ನಿಜಕ್ಕೂ ಭಾರತರತ್ನವೇ ಹೌದು .. ಅವರು ಓಡಾಡಿದ, ಜೀವಿಸಿದ ಬಂಗಲೆಗೆ ವಿಜಯ ಕರ್ನಾಟಕ ತಂಡ ಭೇಟಿ ನೀಡಿ ಅದರ ಮಾಹಿತಿಯನ್ನು ಇಲ್ಲಿ ಕೊಡಲಾಗಿದೆ ಓದಿ..
ದಲಿತ ಚಳವಳಿಯಿಂದ ನಾನು ಉಸಿರಾಡುತ್ತಿದ್ದೇನೆ
ಒಮ್ಮೆ ಪುಸ್ತಕದ ಪ್ರೀತಿ ಬಂದುಬಿಟ್ಟರೆ ನಮ್ಮೊಳಗೆ ಸಂತಸ ಹೆಚ್ಚಾಗುತ್ತಾ ಹೋಗುತ್ತದೆ. ಲೋಕದ ಹಿತ ಬಯಸುವ ಮತ್ತು ಜೀವ ಪ್ರೀತಿ ಉಳ್ಳ ಪುಸ್ತಕಗಳಿಂದ ವಿಶ್ವಮಾನವ ಪ್ರಜ್ಞೆ ಜಾಗೃತವಾಗುತ್ತದೆ. ಓದುವ ಲಹರಿಯ ಖುಷಿ ಓದುಗರಿಗೆ ಮಾತ್ರ ದಕ್ಕುತ್ತದೆ. ಈ ಮಾತನ್ನು ಏಕೆ ಹೇಳುತ್ತಿದ್ದೇನೆಂದರೆ ‘ಎಡ್ವನ್ ಆರ್ನಾಲ್ಡ್’ ಅವರ ‘ದಿ ಲೈಟ್ ಆಫ್ ಏಶ್ಯ’ ಇದು ಬುದ್ಧನ ಕುರಿತಿರುವ ಒಂದು ಅದ್ಭುತ ಕಾವ್ಯ ಪುಸ್ತಕವನ್ನು ಮತ್ತೆ ಮತ್ತೆ ಓದುತ್ತಿದ್ದೇನೆ. ಇದೊಂದು ಬೆಳದಿಂಗಳ ಭಾವಲಹರಿ. ಇದನ್ನು ಕನ್ನಡಕ್ಕೆ ಡಾ. ಮಹಾದೇವರವರು ಭಾಷಾಂತರಿಸಿದ್ದಾರೆ. ಇದನ್ನು ಓದಿ ಮುಗಿಸಿದ ಮೇಲೆ ಇದರ ಕುರಿತು ಬರೆಯುತ್ತೇನೆ. ಈಗ ಕಳೆದ ವಾರ ಎರಡು ಮುಖ್ಯ ಕಾರ್ಯಕ್ರಮಗಲ್ಲಿ ಭಾಗವಹಿಸಿದ್ದೆ. ಅದನ್ನು ಹಂಚಿಕೊಳ್ಳುವ ಇರಾದೆ ನನಗೆ. ಒಂದು ಭೀಮಾ ಕೋರೆಗಾಂವ್ ವಿಜಯೋತ್ಸವ ನಮ್ಮ ಸಕಲೇಶಪುರದಲ್ಲಿ ನಡೆದಿದ್ದು, ಇನ್ನೊಂದು ಕರ್ನಾಟಕ ಸಾಹಿತ್ಯ ಅಕಾಡಮಿ ಹಮ್ಮಿಕೊಂಡಿದ್ದ ‘ಸಾಹಿತ್ಯ ಮತ್ತು ಚಳವಳಿ’ ಕುರಿತ ಮೂರು ದಿನಗಳ ಶಿಬಿರ. ನಾಡಿನೆಲ್ಲೆಡೆಯಿಂದ ಬಂದಿದ್ದ ಸುಮಾರು 80 ಶಿಬಿರಾರ್ಥಿಗಳಿಗೆ ಒಂದು ಬೋಧನಾ ಪ್ರಧಾನವಾದ ಭಾಷಣಗಳು ಮತ್ತು ದಲಿತ ಸಂಘರ್ಷ ಸಮಿತಿಯಲ್ಲಿ ಕಳೆದ ನಾಲ್ಕೈದು ದಶಕಗಳಿಂದ ಅದರಲ್ಲಿ ತೊಡಗಿಸಿಕೊಂಡು ತಮ್ಮ ಬದುಕನ್ನೇ ಶೋಷಿತ ಸಮುದಾಯಕ್ಕಾಗಿ ಒತ್ತೆ ಇಟ್ಟ ಹೋರಾಟಗಾರರ ಕಥನವನ್ನು ಒಳಗೊಂಡಿದ್ದು. ಒಂದು ಅಪರೂಪದ ಶಿಬಿರದಲ್ಲಿ ಭಾಗವಹಿಸಿದ ಖುಷಿ ನನಗೆ. ಈ ಎರಡು ಕಾರ್ಯಕ್ರಮಗಳ ಆಶಯ ಒಂದೇ ಆಗಿದೆ. ಭೀಮಾ ಕೋರೆಗಾಂವ್ ವಿಜಯೋತ್ಸವದ ಸಂಭ್ರಮ ಕಳೆದ ಎಂಟು ವರ್ಷಗಳಿಂದ ಹೊಸ ತಲೆಮಾರಿನ ಉತ್ಸಾಹದ ತರುಣರು ಮತ್ತು ಹಳೆ ತಲೆಮಾರಿನ ಮಾಗಿದ ಮನಸ್ಸಿನ ದಸಂಸ ಕಾರ್ಯಕರ್ತರು ಸೇರಿ ಇಡೀ ತಾಲೂಕಿನ ಶೋಷಿತ ಸಮುದಾಯದ ಜನರನ್ನು ಒಂದೆಡೆ ಸೇರಿಸಿ ಒಂದು ರೀತಿಯ ಸಮುದಾಯದ ಹಬ್ಬವೆನ್ನುವಂತೆ ಕುಣಿದು ಕುಪ್ಪಳಿಸಿ ಸಂತೋಷವನ್ನು ಪರಸ್ಪರ ಹಂಚಿಕೊಳ್ಳುತ್ತಾರೆ. ಇದಕ್ಕೆ ಮೂಲ ಕಾರಣ ಮಹಾರ್ ಸಮುದಾಯದ ವೀರ ಸೈನಿಕರಾದರೆ, ಇದನ್ನು ಜಗತ್ತಿಗೆ ಪರಿಚಯಿಸಿದ್ದು ಡಾ. ಬಾಬಾ ಸಾಹೇಬ್ ಅಂಬೇಡ್ಕರ್. ಬಹುಶಃ ಉಳಿದ ಸಮುದಾಯದ ಜನ ಏನೇನಕ್ಕೆಲ್ಲಾ ಸಂತೋಷ, ಖುಷಿಗಾಗಿ ಹಬ್ಬ ಮಾಡುತ್ತಾರೆ. ಆದರೆ ಈ ಜನ ಮಾತ್ರ ಸಂತೋಷ ಪಡುವ, ಹೆಮ್ಮೆ ಪಡುವ, ಸ್ವಾಭಿಮಾನದಿಂದ ಬದುಕುವ ನೂರೆಂಟು ಕಾರಣಗಳಿಗೆ ಬಾಬಾ ಸಾಹೇಬ್ ಅಂಬೇಡ್ಕರ್ರವರು ಅನೇಕ ಕಾಣ್ಕೆಗಳನ್ನು ಕೊಟ್ಟು ಹೋಗಿದ್ದಾರೆ. ಅದನ್ನು ನಾವು ಈಗ ಅನುಭವಿಸುತ್ತಿದ್ದೇವೆ. ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಅನೇಕ ಮಹನೀಯರು ಬಂದಿದ್ದರು. ಅದರಲ್ಲಿ ವಿಶೇಷವಾಗಿ ಈ ನಾಡಿನ ಹೆಸರಾಂತ ಲೇಖಕರು, ಕವಿಗಳು, ಚಿಂತಕರು ಮತ್ತು ವೈದ್ಯರಾದ ಡಾ. ಅನುಪಮಾ ಇದ್ದರು. ಅವರು ಭೀಮಾ ಕೋರೆಗಾಂವ್ ನೆನಪಿನ ಸ್ತಂಭವನ್ನು ಎಳೆಯುವುದರ ಮೂಲಕ ಉದ್ಘಾಟಿಸಿದರು. ನಂತರ ಬೆಳಗ್ಗೆ 11:30ರಿಂದ ಪ್ರಾರಂಭವಾದ ಮೆರವಣಿಗೆ, ಕುಣಿತ, ಜೈ ಭೀಮ್ ಘೋಷಣೆಗಳು, ಅಂಬೇಡ್ಕರ್ ಕುರಿತ ಹಾಡುಗಳು ಮುಗಿಲು ಮುಟ್ಟಿದ್ದವು. ಈ ಮೆರವಣಿಗೆ ಮತ್ತು ಈ ಕುಣಿತ ಕೊನೆಗೊಂಡಿದ್ದು ಸಂಜೆ 4:30ಕ್ಕೆ. ಈ ಮೆರವಣಿಗೆಯಲ್ಲಿ ಹೆಣ್ಣುಮಕ್ಕಳು, ವಿದ್ಯಾರ್ಥಿಗಳು, ಎಲ್ಲಾ ವಯೋಮಾನದ ಜನರು ಕುಣಿದಿದ್ದನ್ನು ಗಮನಿಸಿದ ಡಾ.ಎಚ್.ಎಸ್.ಅನುಪಮಾರವರು ಇವರಿಗೆ ಸುಸ್ತೇ ಆಗಿಲ್ಲವೇ? ಇವರ ಕಾಲುಗಳು ನೋಯುವುದಿಲ್ಲವೇ? ಎಂದು ಪ್ರಶ್ನೆ ಮಾಡುತ್ತಲೇ ಉತ್ತರವನ್ನು ಅವರೇ ಹೇಳಿದ್ದರು. ಶತಮಾನಗಳಿಂದಲೂ ಜಾತಿ-ಧರ್ಮದ ದೌರ್ಜನ್ಯಕ್ಕೆ ತುತ್ತಾಗಿ ತಮ್ಮೊಳಗಿನ ಅಭಿವ್ಯಕ್ತಿಯನ್ನೇ ಹಿಂದೂ ಧರ್ಮ ನಾಶ ಮಾಡಿತ್ತು. ಆ ಅಸಹನೆಯ ಸಲುವಾಗಿಯೇ ಈ ಕುಣಿತ ಪ್ರತಿಭಟನೆಯ ರೂಪಕವಾಗಿರಬಹುದು ಮತ್ತು ಈ ಕುಣಿತದಿಂದ ಈ ನೆಲ ಇನ್ನಷ್ಟು ಪುಳಕಿತವಾಗಿರಬಹುದು. ಅದಕ್ಕೆ ಅವರು ಎಷ್ಟು ಕುಣಿದರೂ ಸಾಕೆನಿಸುತ್ತಿಲ್ಲ. ಮುಚ್ಚಿಟ್ಟ ಸತ್ಯದ ಇತಿಹಾಸವನ್ನು ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ತೆರೆದು ತೋರಿಸಿದ್ದರಿಂದ ಈ ಎಲ್ಲಾ ಸಂತೋಷಗಳನ್ನು ಈ ಸಮುದಾಯ ಅನುಭವಿಸುತ್ತಿದೆ. ಇದನ್ನು ನೋಡುವುದೇ ಒಂದು ರೀತಿಯ ಸೋಜಿಗ. ನನಗೂ ಕೂಡ ಹಾಗೆಯೇ ಅನಿಸಿದ್ದು ಸುಳ್ಳಲ್ಲ. ಆ ಭಾಗದಲ್ಲಿ ಕಾಫಿ ತೋಟಗಳಲ್ಲಿ ಒಂದು ರೀತಿಯ ಜೀತದ ಹಾಗೇ ಕೆಲಸ ಮಾಡುವ ನಮ್ಮ ಜನ ಅನೇಕ ವಿಷಯಗಳಲ್ಲಿ ವಂಚಿತರಾಗಿದ್ದಾರೆ. ಆದರೆ ಈ ಕಾಫಿ ಬೆಳೆಗಾರರಿಗೆ ಇವರ ಕಷ್ಟ-ಸುಖ ಸಂತೋಷಗಳು ಅರ್ಥವಾಗಿರುವುದಿಲ್ಲ. ಅವರು ಯಾವಾಗಲೂ ಇಂತಹ ಸಮುದಾಯವನ್ನು ಶೋಷಣೆ ಮಾಡುತ್ತಲೇ ಸಂಪಾದನೆ ಮತ್ತು ಲಾಭದ ಕಡೆಗೆ ಯೋಚನೆ ಮಾಡುತ್ತಿರುತ್ತಾರೆ. ಇವರಿಗೆ ಕಾಫಿ ಬೆಳೆಯುವ ಲಾಭನಷ್ಟಗಳು, ಇದರ ಸಮ್ಮೇಳನಗಳಲ್ಲೇ ಮುಳುಗಿ ಹೋಗಿರುತ್ತಾರೆ. ಕಾಫಿ ಗಿಡದ ಒಗ್ಗು ಮಾಡುವುದರಿಂದ ಹಿಡಿದು ಆ ಗಿಡ ಹೂವಾಗಿ, ಹಣ್ಣಾಗಿ, ಫಸಲು ಬರುವವರೆಗೂ ಕೃಷಿ ಕೂಲಿ ಕಾರ್ಮಿಕರ ಪಾಲೇ ಹೆಚ್ಚಿರುತ್ತದೆ. ಮಾಲಕರಿಗೆ ಇವರ ಬದುಕು ಬವಣೆಗಳ ಬಗ್ಗೆ ಅಷ್ಟು ಆಸಕ್ತಿ ಇರುವುದಿಲ್ಲ. ಈ ಕೃಷಿ ಕೂಲಿ ಕಾರ್ಮಿಕರು, ಕಾಫಿ ಎಸ್ಟೇಟ್ ಮಾಲಕರು ಲೈನ್ ಮನೆಗಳನ್ನು ನಿರ್ಮಿಸಿರುತ್ತಾರೆ. ಆ ಮನೆಗಳನ್ನು ನೋಡಿದರೆ ಹಂದಿ-ನಾಯಿಗಳು ಬದುಕಲೂ ಯೋಗ್ಯವಾಗಿರುವುದಿಲ್ಲ. ಅಂತಹ ಮನೆಗಳಲ್ಲಿ ಈ ಕಾರ್ಮಿಕರ ಬದುಕು ದುಸ್ಥಿತಿಯಲ್ಲಿದೆ. ಇವರ ಮಕ್ಕಳ ಶಿಕ್ಷಣ, ಇವರ ಆರೋಗ್ಯ, ಯಾರಿಗೂ ಬೇಕಾಗಿಲ್ಲ. ಕಾಫಿ ಕುಡಿಯುವವರಿಗೆ ಅದರ ವಾಸನೆ ಘಮ ಘಮ ಅನಿಸುತ್ತದೆ. ಒಂದೊಳ್ಳೆಯ ರುಚಿಯೂ ಕೊಡುತ್ತದೆ. ಆದರೆ ಅಲ್ಲಿ ದುಡಿಯುವವರಿಗೆ ಮಾತ್ರ ಕಾಫಿ ಪರಿಮಳದ ಬದುಕಿಲ್ಲ. ಅವರ ಬದುಕಿನ ಕುರಿತಾಗಲಿ, ಕಷ್ಟಗಳ ಬಗ್ಗೆ ಆಗಲಿ, ಮಾಲಕರನ್ನು ಪ್ರಶ್ನಿಸುವಂತಿಲ್ಲ. ಏನೇ ಪ್ರಶ್ನೆ ಮಾಡಿದ್ದರೂ ಆ ಎಸ್ಟೇಟ್ನಿಂದ ನಾಳೆಗೆ ಕೂಲಿ ಇಲ್ಲದಂತಾಗುತ್ತದೆ. ಹೀಗೆ ಎಲ್ಲವನ್ನೂ ಸಹಿಸಿಕೊಂಡು ಇಂದಿಗೂ ಬದುಕುತ್ತಿದ್ದಾರೆ. ಈ ಕುರಿತು ಒಂದೆರೆಡು ಮಾತುಗಳನ್ನು ನಾನು ಆಡಿದೆ. ಆ ಸಭೆಯಲ್ಲಿ ಮಾತನಾಡಿದೆ. ನಾವು ಜಯದ ಸಂಭ್ರಮದಲ್ಲಿ ಮುಳುಗಿದ್ದೇವೆ. ಆದರೆ ನಮ್ಮ ಬದುಕು ಜಯದ ಹಾದಿಯಲ್ಲಿ ಇಲ್ಲ. ದಿನವೂ ಯುದ್ಧದಲ್ಲಿ ಗೆಲ್ಲುವ ಮತ್ತು ದಿನಬೆಳಗಾದರೆ ಜಯಿಸುವ ಕನಸುಗಳೊಂದಿಗೆ ಬದುಕಬೇಕಾಗಿದೆ. ಆದ್ದರಿಂದ ನಿನ್ನೆಯ ಇತಿಹಾಸವನ್ನು ನೆನಪು ಮಾಡಿಕೊಳ್ಳುತ್ತಲೇ ವರ್ತಮಾನದಲ್ಲಿ ಎಚ್ಚರಿಕೆಯಿಂದಿರಬೇಕಾದ ಮತ್ತು ನಾಳೆಯ ಬಗ್ಗೆ ಹೆಚ್ಚು ಜಾಗೃತವಾಗಿರುವ ಅಗತ್ಯ ಮತ್ತು ಅನಿವಾರ್ಯತೆ ವಿಶೇಷವಾಗಿ ದಲಿತರಿಗೆ ಬೇಕಾಗಿದೆ. ಇಂತಹದ್ದೇ ವಿಷಯಗಳನ್ನಿಟ್ಟುಕೊಂಡೇ ದಲಿತ ಸಾಹಿತ್ಯ ಮತ್ತು ಚಳವಳಿ-50 ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿಯ ವೆಂಕಟಗಿರಿ ಸಭಾಂಗಣದಲ್ಲಿ ನಡೆದದ್ದು ವಿಶೇಷವಾಗಿತ್ತು. ಈ ಚಳವಳಿಗೆ ಪ್ರಮುಖ ಕಾರಣಕರ್ತರಲ್ಲೊಬ್ಬರಾದ ಡಾ. ಸಿದ್ದಲಿಂಗಯ್ಯ, ಡಾ.ಡಿ.ಆರ್.ನಾಗರಾಜ್, ಬರಗೂರು ರಾಮಚಂದ್ರಪ್ಪ ಈ ವಿಶ್ವವಿದ್ಯಾಲಯದಲ್ಲಿಯೇ ಕಲಿತವರು ಮತ್ತು ಕಲಿಸಿದವರು ಆಗಿದ್ದರು. ಇದನ್ನು ಆಯೋಜಿಸಿದ್ದವರು ಕರ್ನಾಟಕ ಸಾಹಿತ್ಯ ಅಕಾಡಮಿ ಮತ್ತು ಕನ್ನಡ ಅಧ್ಯಯನ ಕೇಂದ್ರ ಬೆಂಗಳೂರು ವಿಶ್ವವಿದ್ಯಾಲಯ. ಕಳೆದ 50 ವರ್ಷಗಳಿಂದ ನಾವು ಏನು ಮಾತನಾಡುತ್ತಾ ಬಂದಿದ್ದೇವೋ, ಆ ಮಾತುಗಳನ್ನೇ ಅಲ್ಲಿ ಬಂದಿದ್ದ ಬಹುತೇಕ ಮುಖ್ಯ ಭಾಷಣಕಾರರು ಮಾತನಾಡಿದರು. ಹಿಂದಿನ ತಲೆಮಾರಿನ ದಲಿತ ಚಳವಳಿಯ ಹೋರಾಟಗಾರರು ಬರಹಗಾರರು ಆಗಿದ್ದರು. ಬಹುಶಃ ಕನ್ನಡ ಚರಿತ್ರೆಯಲ್ಲೇ ಹೋರಾಟಗಾರರು ಬರಹಗಾರರಾಗಿರುವುದು, ಬರಹಗಾರರು ಹೋರಾಟಗಾರರಾಗಿರುವುದು ದಲಿತ ಸಂಘರ್ಷ ಸಮಿತಿಯಲ್ಲಿ ಮಾತ್ರ. ಇದು ಒಂದು ರೀತಿಯ 12ನೇ ಶತಮಾನದಲ್ಲಿ ನಡೆದ ವಚನ ಚಳವಳಿಯ ಮುಂದುವರಿದ ಭಾಗವೇ ಎಂದು ಬಹುತೇಕರಿಗೆ ಗೊತ್ತಿರುವ ವಿಷಯವೇ ಆಗಿದೆ. ಅಲ್ಲಿ ಕೂಡ ಸಂಸದೀಯ ವ್ಯವಸ್ಥೆ ಮತ್ತು ಪ್ರಜಾಪ್ರಭುತ್ವ ಮನಸ್ಥಿತಿಯ ಚಿಂತಕರು ಒಂದೆಡೆಯಾದರೆ ಇದನ್ನು ದಮನ ಮಾಡುವ ಜಾತಿ ಮತ್ತು ಧಾರ್ಮಿಕ ಮನಸ್ಥಿತಿಯರ ನಡುವೆ ದೊಡ್ಡ ಕ್ರಾಂತಿಯೇ ನಡೆದಿದ್ದು ಇತಿಹಾಸ. ಆದರೆ ಈಗ ಲಿಖಿತ ಸಂವಿಧಾನವಿದ್ದು, ಸಮಸಮಾಜದ ಕನಸಿಗಾಗಿ ಸಂವಿಧಾನ ಕೂಡ ಒತ್ತಾಸೆಯಾಗಿದ್ದರೂ ಇವತ್ತಿಗೂ ಅದೇ ಧಾರ್ಮಿಕ ಮನಸ್ಥಿತಿಯ ಸನಾತಿಗಳ ಬಿಗಿಮುಷ್ಟಿಯಿಂದ ಶೋಷಿತ ಸಮುದಾಯಗಳು ಒದ್ದಾಡುವಂತಾಗಿದೆ. ಇದಕ್ಕಾಗಿ ಕಳೆದ 5 ದಶಕಗಳಿಂದ ದಲಿತ ಚಳವಳಿ ನಡೆಯುತ್ತಾ ಬಂದಿದೆ. ಇದನ್ನು ಶಿಕ್ಷಿತ ಸಮುದಾಯದ ಹೊಸತಲೆಮಾರಿಗೆ ದಾಟಿಸುವುದಕ್ಕಾಗಿ ರೂಪಿಸಿದ್ದ ಈ ಕಾರ್ಯಕ್ರಮ ಅರ್ಥಪೂರ್ಣವಾಗಿತ್ತು. 90ರ ಶಕದ ನಂತರ ದಲಿತ ಚಳವಳಿ ಬೇರೆ ಬೇರೆ ಕಾರಣಕ್ಕೆ ಪಲ್ಲಟಗೊಂಡಿತು. ಅದು ವಿಭಜನೆಯಲ್ಲ: ಒಂದೇ ಕುಟುಂಬದಲ್ಲೇ ಭಿನ್ನ ಆಲೋಚನೆಗಳು, ನಡೆನುಡಿಗಳು ಇರುತ್ತವೆ. ಯಾರು ಯಾರಿಗೂ ಯಾವುದನ್ನು ಹೇರಿ ಸಂಕೋಲೆಗಳಿಂದ ಕಟ್ಟಿ ಹಾಕಲಾಗುವುದಿಲ್ಲ. ಆದರೂ ಒಂದು ಕೌಟುಂಬಿಕ ವ್ಯವಸ್ಥೆಯಲ್ಲಿ ಎಲ್ಲರನ್ನು ಒಳಗೊಳ್ಳುವುದು ಸಹಜವೇ ಆದರೂ ಮಕ್ಕಳು ತಂದೆ-ತಾಯಿಯಿಂದ ಸ್ವತಂತ್ರವಾಗಿ ಬದುಕುವುದನ್ನು ಹಂಬಲಿಸುತ್ತಾರೆ. ಹಾಗಂತ ಸಂಬಂಧಗಳನ್ನು ಬಿಟ್ಟು ಇರಲಾಗುವುದಿಲ್ಲ. ಹಾಗೇಯೇ ದಲಿತ ಸಂಘರ್ಷ ಸಮಿತಿಯ ಕನಸುಗಳು ಮತ್ತು ಆಶೋತ್ತರಗಳು ಒಂದೇ ಕಡೆ ನಿಂತ ನೀರಾಗಿರುವುದಿಲ್ಲ. ಅದು ಕೂಡ ಚಲನೆಯಲ್ಲಿರುತ್ತದೆ. ದಲಿತ ಸಮುದಾಯ ಎಂದರೆ ನೂರೊಂದು ಜಾತಿಗಳು, ಬಯಲಲ್ಲಿ ಬೆಳೆದದ್ದು. ಅನೇಕ ಸಣ್ಣಪುಟ್ಟ ಜಾತಿಗಳು ಈ ಸಮುದಾಯಕ್ಕೆ ಸೇರುತ್ತವೆಯಾದರೂ ಈಗಲೂ ಅವು ದಲಿತ ಸಂಘರ್ಷ ಸಮಿತಿಯೊಂದಿಗೆ ಒಳಗೊಂಡಿಲ್ಲ ಎನ್ನುವುದು ಬೇಸರದ ಸಂಗತಿಯೇ ಆದರೂ ಅವರೆಲ್ಲರ ಪರವಾಗಿ ದಲಿತ ಸಂಘರ್ಷ ಸಮಿತಿ ಮುನ್ನಡೆಯುತ್ತಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಒಳಮೀಸಲಾತಿ ಕಾರಣ ಗೆರೆ ಎಳೆದಂತೆ ಆಯಾಯ ಜಾತಿಗಳು ತಮ್ಮ ಪಾಲನ್ನು ಕೇಳಲಾರಂಭಿಸಿದಾಗ ಪ್ರಾರಂಭದ ದಿನಗಳ ಆಶಯಕ್ಕೆ ಧಕ್ಕೆಯಾಯಿತು ಎನ್ನುವ ಆತಂಕ ಸರಿಯೆನಿಸಿದರೂ ಸಮುದಾಯಗಳ ಬದುಕಿನ ಪ್ರಶ್ನೆ ಬಂದಾಗ ಆಯಾಯ ಜಾತಿಗಳು ತಮ್ಮ ಹಕ್ಕುಗಳನ್ನು ಕೇಳಿದ್ದು ನ್ಯಾಯವೇ. ಆದರೆ ದಲಿತ ಸಂಘರ್ಷ ಸಮಿತಿ ಎಂದೂ ಒಡೆದು ಹೋಗಿಲ್ಲ ಅಥವಾ ಬಿಡಿಬಿಡಿಯಾಗಿಲ್ಲ. ಇದರ ಆಶಯ ಕಟ್ಟಕಡೆಯ ಮನುಷ್ಯನ ಬಿಡುಗಡೆ. ಆ ಆಶಯ ಇವತ್ತಿಗೂ ಗಟ್ಟಿಯಾಗಿದೆ. ಇಂತಹ ಎಲ್ಲಾ ಆಲೋಚನೆಗಳು ಚರ್ಚೆ, ಸಂವಾದಗಳು, ಅನುಭವದ ಮಾತುಗಳು ಇಲ್ಲಿ ಬಂದು ಹೋದವು. ವಿಶೇಷವಾಗಿ ಗಮನ ಸೆಳೆದಿದ್ದು ದಲಿತ ಚಳವಳಿ ಮತ್ತು ಮಹಿಳೆಯರು. ದಲಿತ ಚಳವಳಿಯಲ್ಲಿ ಹೆಣ್ಣಿನ ಒಳಗೊಳ್ಳುವಿಕೆಯನ್ನು ನೋಡಿದರೆ ನಮ್ಮೊಳಗಿನ ಕಣ್ಣೇ ತೆರೆದಿಲ್ಲ ಎನ್ನುವುದು ಈ ಗೋಷ್ಠಿಯಲ್ಲಿ ಮಾತನಾಡಿದ ಬಹುತೇಕ ಎಲ್ಲಾ ಮಹಿಳೆಯರ ಮಾತುಗಳಲ್ಲಿ ಅಭಿವ್ಯಕ್ತಗೊಂಡಿತು. ದಲಿತ ಸಂಘರ್ಷ ಸಮಿತಿ ಕೂಡ ಮುಂದಿನ ದಿನಗಳಲ್ಲಿ ಇದರ ಅರಿವನ್ನು ಪಡೆದುಕೊಂಡು ಮಹಿಳೆಯರನ್ನು ಮತ್ತು ವಿದ್ಯಾರ್ಥಿಗಳನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳದೆ ಮುಂದಿನ ದಿನಗಳಲ್ಲಿ ದಲಿತ ಸಂಘರ್ಷ ಸಮಿತಿ ಮುನ್ನೆಡೆಯುವುದು ಕಷ್ಟಸಾಧ್ಯವಾಗಬಹುದು. ಇನ್ನೊಂದು ಪ್ರಮುಖ ಗೋಷ್ಠಿ ‘ದಲಿತ ಚಳವಳಿ ಮತ್ತು ನಾನು’ ಹಾಗೂ ಮುಂದಿನ ಹಾದಿ. ಈ ಗೋಷ್ಠಿಯಲ್ಲಿ ಮಾತನಾಡಿದ ಕುಂದೂರ್ ತಿಮ್ಮಯ್ಯನವರ ಮಾತುಗಳಿಂದ ಇಡೀ ಸಭಾಂಗಣ ರೋಮಾಂಚನಗೊಂಡಿತು. ಹೇಳಿಕೇಳಿ ನಾನು ಶ್ರೀರಾಂಪುರದ ರೌಡಿಯಾಗಿದ್ದೆ. ಜನರಿಗೆ ಹಿಂಸೆ ಕೊಡುತ್ತಾ ಆನಂದಿಸುತ್ತಿದ್ದೆ. ಇದೇ ನನ್ನ ಬದುಕು ಎಂದುಕೊಂಡಿದ್ದೆ. ಆದರೆ ನಾನು ಇವತ್ತು ಮನುಷ್ಯನಾಗಿ ನಿಂತಿರುವುದಕ್ಕೆ ದಲಿತ ಸಂಘರ್ಷ ಸಮಿತಿಯೇ ಕಾರಣ ಎಂದಾಗ ಶಿಬಿರಾರ್ಥಿಗಳು ಸೇರಿದಂತೆ ಚಪ್ಪಾಳೆ ತಟ್ಟುವ ಮೂಲಕ ಅವರನ್ನು ಅಭಿನಂದಿಸಿದರು. ಇದನ್ನು ಹೇಳುವಾಗ ನಾನು ಕಾಲೇಜು ದಿನಗಳಲ್ಲಿ ಹಾಸನದಲ್ಲಿರುವಾಗ ಬಿ. ಕೃಷ್ಣಪ್ಪನವರ ಭಾಷಣ ಕೇಳಿದ್ದು ನೆನಪಾಯಿತು. ಅವರು ಮಾತನಾಡುತ್ತಾ, ದಲಿತ ಸಂಘರ್ಷ ಸಮಿತಿ ಕಾರ್ಯಕರ್ತ ಎಂದರೆ ಆತ ಮೊದಲು ಮನುಷ್ಯನಾಗಬೇಕು, ಆಮೇಲೆ ಸಮಾಜವನ್ನು ಮಾನವೀಕರಣಗೊಳಿಸಬೇಕು ಎಂದು ಹೇಳಿದರು. ಈ ಮಾತು ಕಳೆದ 5 ದಶಕಗಳಿಂದ ಈ ನಾಡಿನಲ್ಲಿ ನಡೆದ ಮಾನವೀಕರಣಗೊಳ್ಳುವ ದಲಿತ ಚಳವಳಿ ಕರ್ನಾಟಕದ ಆಧುನಿಕ ಸಂದರ್ಭದ ಎಲ್ಲಾ ಚಳವಳಿಗಳ ತಾಯಿಯ ಸ್ಥಾನದಲ್ಲಿ ನಿಂತಿದೆ ಅನಿಸುತ್ತದೆ. ಇದನ್ನು ಮುಂದುವರಿಸಿಕೊಂಡು ಹೋಗುವ ಜವಾಬ್ದಾರಿ ಎಲ್ಲಾ ಪ್ರಜ್ಞಾವಂತರ ಕೈಯಲ್ಲಿದೆ. ಸ್ವಾತಂತ್ರ್ಯದ ನಂತರ ನಮ್ಮ ನಾಡಿನಲ್ಲಿ ಅನೇಕ ಚಳವಳಿಗಳು ರೂಪುಗೊಂಡು ಮನುಷ್ಯರ ಹಕ್ಕುಗಳಿಗಾಗಿ ಹೋರಾಡಿವೆ. ಅದರಲ್ಲೂ ತುರ್ತು ಪರಿಸ್ಥಿತಿಯ ನಂತರದ ಕರ್ನಾಟಕದಲ್ಲಿ ರೈತ ಚಳವಳಿ, ಬಂಡಾಯ ಚಳವಳಿ, ಕಾರ್ಮಿಕ ಚಳವಳಿ... ಹೀಗೆ ಹಲವು ಚಳವಳಿಗಳು ಮನುಷ್ಯರ ಹಕ್ಕು ಶ್ರಮಕ್ಕೆ ಪ್ರತಿಫಲ ದೊರಕಿಸಿ ಕೊಡುವುದಕ್ಕಾಗಿ ಮತ್ತು ಬದುಕನ್ನು ಸುಧಾರಿಸುವ ಅಗತ್ಯಗಳಿಗಾಗಿ ಹೋರಾಟ ನಡೆಸಿವೆ. ಭಾಷೆ ಮತ್ತು ಸಾಂಸ್ಕೃತಿಕ ಸುಧಾರಣೆಗಾಗಿಯೂ ಪ್ರತಿಭಟನೆಗಳಾಗಿವೆ. ಇವೆಲ್ಲಕ್ಕೂ ತಾಯಿಬೇರು ದಲಿತ ಚಳವಳಿ ಮತ್ತು ಅದನ್ನು ರಚಿಸಿದ ದಲಿತ ಸಂಘರ್ಷ ಸಮಿತಿ. ಏಕೆಂದರೆ ಮನುಷ್ಯನ ಘನತೆ ಮತ್ತು ಸಾಮಾಜಿಕ ಸಮತೆಗಾಗಿ ಹೋರಾಟ ಮಾಡಿದ ಏಕೈಕ ಚಳವಳಿ ದಲಿತ ಚಳವಳಿ. ನಾವು ಮನುಜರು ಎನ್ನುವ ನೆಲದಲ್ಲಿ ಅಸ್ಪಶ್ಯತೆಯನ್ನು ಆಚರಿಸಲಾಗುತ್ತಿದೆ ಎಂದರೆ ಅದಕ್ಕಿಂತ ಮನುಕುಲದ ಹೇಯ ಮತ್ತೊಂದಿಲ್ಲ. ಇದನ್ನು ಹೋಗಲಾಡಿಸಲು ದಸಂಸ ಇನ್ನಿಲ್ಲದಂತೆ ಹೋರಾಡಿದೆ, ಹೋರಾಡುತ್ತಿದೆ. ಅದಕ್ಕಾಗಿಯೇ ಹೇಳಿದ್ದು ದಲಿತ ಚಳವಳಿ ಎಂದರೆ ಮನುಷ್ಯರನ್ನು ವಿಶ್ವಮಾನವರನ್ನಾಗಿಸುವ ಚಳವಳಿ. ಇವತ್ತು ನನ್ನಂಥವರು ಉಸಿರಾಡುತ್ತಿದ್ದರೆ ಅದಕ್ಕೆ ದಸಂಸವೇ ಮುಖ್ಯ ಕಾರಣ, ಅಷ್ಟೇ ಏಕೆ Dalith organization is a oxygen bank of this society ಎಂದು ನಿಸ್ಸಂಶಯವಾಗಿ ಹೇಳುತ್ತೇನೆ. ದಲಿತ ಚಳವಳಿ ಎಂದರೆ ಈ ಸಮಾಜದ ಕಟ್ಟಕಡೆಯ ಮನುಷ್ಯನ ಬದುಕಿನ ಚಳವಳಿ. ಇನ್ನಾದರೂ ಈ ನೆಲದ ಪ್ರಾಜ್ಞರು ಅಸ್ಪೃಶ್ಯತೆಯನ್ನು ತೊಳೆದು ವಿಶ್ವಮಾನವರಾಗಲಿ ಎಂದು ನನ್ನ ಮನಮಿಡಿಯುತ್ತಿದೆ.
ದಿಲ್ಲಿಯ ಕೆಂಪು ಕೋಟೆ: ಮೊಗಲರ ವೈಭವ, ಇತಿಹಾಸ, ಸಂಸ್ಕೃತಿಯ ಜೀವಂತ ಸ್ಮಾರಕ
ದಿಲ್ಲಿ: ಭಾರತದ ರಾಜಧಾನಿ ದಿಲ್ಲಿಯ ಹೃದಯಭಾಗದಲ್ಲಿರುವ ಕೆಂಪು ಕೋಟೆ(ಲಾಲ್ ಕಿಲಾ-ರೆಡ್ ಫೋರ್ಟ್) ಭಾರತದ ಅತ್ಯಂತ ಮಹತ್ವದ ಐತಿಹಾಸಿಕ ಸ್ಮಾರಕಗಳಲ್ಲಿ ಒಂದಾಗಿದೆ. ಮೊಗಲ್ ಸಾಮ್ರಾಜ್ಯದ ವೈಭವ, ಶಿಲ್ಪಕಲೆಯ ಶ್ರೇಷ್ಠತೆ, ಭಾರತದ ಇತಿಹಾಸ, ಸಂಸ್ಕೃತಿ, ಸ್ವಾತಂತ್ರ್ಯ ಹೋರಾಟದ ಜೀವಂತ ಸಾಕ್ಷಿಯಾಗಿ ಈ ಕೋಟೆ ನಮ್ಮ ಮುಂದೆ ನಿಂತಿದೆ. ಸುಮಾರು 378 ವರ್ಷಗಳ ನಂತರವೂ ಈ ಕೋಟೆ ದೇಶ, ವಿದೇಶಗಳ ಪ್ರವಾಸಿಗರನ್ನು ತನ್ನತ್ತ ಆಕರ್ಷಿಸುತ್ತಿದೆ. ಮೊಗಲ್ ಚಕ್ರವರ್ತಿ ಜಲಾಲುದ್ದೀನ್ ಮುಹಮ್ಮದ್ ಅಕ್ಬರ್ ನಿಧನದ ನಂತರ ಪಟ್ಟಕ್ಕೇರಿದ ಆತನ ಪುತ್ರ ಶಾಹಜಹಾನ್, ಮೊಗಲ್ ಸಾಮ್ರಾಜ್ಯದ ರಾಜಧಾನಿಯನ್ನು ಉತ್ತರಪ್ರದೇಶದ ಆಗ್ರಾದಿಂದ ದಿಲ್ಲಿಗೆ ಸ್ಥಳಾಂತರಿಸಿದರು. ತನ್ನ ನೂತನ ರಾಜಧಾನಿ ಶಾಹಜಹಾನಬಾದ್(ಇಂದಿನ ದಿಲ್ಲಿ)ಗೂ ಆಗ್ರಾದಲ್ಲಿರುವ ಕೆಂಪುಕೋಟೆಯಂತೆ ಭವ್ಯವಾದ ಕೋಟೆ ನಿರ್ಮಾಣ ಮಾಡಲು ಆದೇಶಿಸಿದರು. ಅದರಂತೆ, ಕ್ರಿ.ಶ.1638ರಲ್ಲಿ ಆರಂಭವಾದ ಕೋಟೆ ನಿರ್ಮಾಣ ಕಾರ್ಯವು 1648ರಲ್ಲಿ ಪೂರ್ಣಗೊಂಡಿತು. ಶಾಹಜಹಾನ್ ಈ ಕೋಟೆಯನ್ನು ‘ಕಿಲಾ-ಎ-ಮುಬಾರಕ್’ (ಶುಭ ಹಾರೈಕೆಯ ಕೋಟೆ) ಎಂದು ಕರೆದಿದ್ದರು. ಕ್ರಿ.ಶ.1648 ರಿಂದ ಸರಿ ಸುಮಾರು 200 ವರ್ಷಗಳ ಕಾಲ ಈ ಕೋಟೆಯೂ ಮೊಗಲ್ ಚಕ್ರವರ್ತಿಗಳ ನಿವಾಸ ಹಾಗೂ ಆಡಳಿತದ ಶಕ್ತಿ ಕೇಂದ್ರವಾಗಿತ್ತು. ವಿಶ್ವಪ್ರಸಿದ್ಧ ತಾಣ ‘ತಾಜ್ ಮಹಲ್’ ನಿರ್ಮಾಣದ ವಾಸ್ತುಶಿಲ್ಪಿ ಉಸ್ತಾದ್ ಅಹ್ಮದ್ ಲಾಹೋರಿ ಉಸ್ತುವಾರಿಯಲ್ಲಿ ಇಂಡೋ-ಇಸ್ಲಾಮಿಕ್, ಪರ್ಷಿಯನ್ ವಾಸ್ತುಶಿಲ್ಪಶೈಲಿಯೊಂದಿಗೆ ಕೆಂಪು ಕೋಟೆಯನ್ನು ನಿರ್ಮಿಸಲಾಯಿತು. ಆಗ್ರಾದಿಂದ ಕೆಂಪು ಮರಳುಗಲ್ಲನ್ನು ತರಿಸಿ ನಿರ್ಮಿ ಸಿರುವ ಈ ಕೋಟೆಯ ಒಳಗಡೆ ‘ದಿವಾನ್ ಎ ಖಾಸ್’ ಹಾಗೂ ‘ದಿವಾನ್ ಎ ಆಮ್’, ‘ಮೋತಿ ಮಸೀದಿ’, ‘ರಂಗ ಮಹಲ್’, ‘ಹಮಾಮ್’ ಆಕರ್ಷಣೀಯವಾಗಿದೆ. ಇದಲ್ಲದೆ, ರಾಜಸ್ಥಾನದ ಮಖ್ರಾನದಿಂದ ತರಿಸಿರುವ ಬಿಳಿ ಅಮೃತಶಿಲೆಗಳಿಂದ ಮೊಗಲ್ ಚಕ್ರವರ್ತಿಗಳು ಹಾಗೂ ಅವರ ಕುಟುಂಬ ಸದಸ್ಯರ ನಿವಾಸಗಳನ್ನು ನಿರ್ಮಿಸಲಾಗಿದೆ. ಯಮುನಾ ನದಿಯ ದಡದಲ್ಲಿರುವ ಈ ಕೋಟೆಯ ಗೋಡೆಗಳು ಸುಮಾರು 33 ಮೀಟರ್ ಎತ್ತರವಿದ್ದು, ಆಗ್ರಾದಲ್ಲಿರುವ ಕೋಟೆಯಂತೆಯೆ ಭದ್ರತೆಗೆ ಹೆಚ್ಚಿನ ಒತ್ತು ನೀಡಲಾಗಿದೆ. ದಿವಾನ್ ಎ ಆಮ್ನಲ್ಲಿ ಸಾಮಾನ್ಯ ಜನರ ಅಹವಾಲುಗಳನ್ನು ಮೊಗಲ್ ಚಕ್ರವರ್ತಿಗಳು ಆಲಿಸುತ್ತಿದ್ದರು. ಅರಸರು ಆಸೀನರಾಗಲು ಬಿಳಿ ಅಮೃತಶಿಲೆಯಿಂದ ನಿರ್ಮಿಸಿರುವ ಎತ್ತರದ ಆಸನವು ಆಕರ್ಷಕವಾಗಿದೆ. ದಿವಾನ್ ಎ ಖಾಸ್ ನಲ್ಲಿ ದೇಶ, ವಿದೇಶದಿಂದ ಬರುವಂತಹ ರಾಯಭಾರಿಗಳು, ಅತಿಗಣ್ಯ ವಕ್ತಿಗಳು, ಅತಿಥಿಗಳೊಂದಿಗೆ ಸಭೆ, ಸಮಾರಂಭಗಳನ್ನು ನಡೆಸಲಾಗುತ್ತಿತ್ತು. ರಂಗ ಮಹಲ್ ರಾಜಕುಟುಂಬದ ಮಹಿಳೆಯರ ನಿವಾಸವಾಗಿತ್ತು. ಅಲ್ಲಿ ಮಹಿಳೆಯರ ಮನರಂಜನೆಯ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿತ್ತು. ಲಾಹೋರಿ ಗೇಟ್: ಕೆಂಪು ಕೋಟೆಯ ಪ್ರಮುಖ ಪ್ರವೇಶ ದ್ವಾರ ಲಾಹೋರಿ ಗೇಟ್. ಈ ದ್ವಾರದಿಂದ ಉತ್ತರ ದಿಕ್ಕಿನ ಲಾಹೋರ್ ಕಡೆಗೆ ಹೋಗುವ ಮಾರ್ಗ ಇದ್ದುದರಿಂದ ಇದನ್ನು ಲಾಹೋರಿ ಗೇಟ್ ಎಂದು ಕರೆಯಲಾಗುತ್ತಿತ್ತು. ಕೆಂಪುಮರಳುಗಲ್ಲಿನಿಂದ ನಿರ್ಮಿತವಾಗಿರುವ ಈ ಪ್ರವೇಶ ದ್ವಾರದ ಮೇಲೆ ಮೊಗಲ್ ಶೈಲಿಯ ಕಮಾನುಗಳು, ಅಲಂಕಾರಿಕ ವಿನ್ಯಾಸಗಳನ್ನು ಕೆತ್ತಲಾಗಿದೆ. ಲಾಹೋರಿ ಗೇಟ್ ಕೇವಲ ಒಂದು ದ್ವಾರ ಮಾತ್ರವಲ್ಲ, ಅದು ಭಾರತದ ಭೂತ, ವರ್ತಮಾನ ಮತ್ತು ಭವಿಷ್ಯವನ್ನು ಒಂದೇ ರೇಖೆಯಲ್ಲಿ ಜೋಡಿಸುವ ಜೀವಂತ ಸ್ಮಾರಕವಾಗಿದೆ. ಪ್ರತಿವರ್ಷ ಆಗಸ್ಟ್ 15ರಂದು ಭಾರತದ ಪ್ರಧಾನಮಂತ್ರಿ ಈ ಪ್ರವೇಶ ದ್ವಾರದ ಬಳಿಯೆ ರಾಷ್ಟ್ರಧ್ವಜಾರೋಹಣ ನೆರವೇರಿಸಿ, ದೇಶವನ್ನು ಉದ್ದೇಶಿಸಿ ಭಾಷಣ ಮಾಡುತ್ತಾರೆ. ಹಮಾಮ್: ರಾಜಮನೆತನದವರ ಸ್ನಾನಕ್ಕಾಗಿ ನಿರ್ಮಿಸಲಾಗಿರುವ ಸ್ನಾನಗೃಹ(ಹಮಾಮ್)ರಚನೆಯನ್ನು ಅತಂತ್ಯ ವೈಜ್ಞಾನಿಕವಾಗಿ ರೂಪಿಸಲಾಗಿದೆ. ಇದರಲ್ಲಿ ಬೇಸಿಗೆ, ಚಳಿ ಹಾಗೂ ಮಳೆಗಾಲದ ವಾತಾವರಣಕ್ಕೆ ಅನುಗುಣವಾಗಿ ಸ್ನಾನಕ್ಕೆ ನೀರು ಲಭ್ಯವಿರುವಂತೆ ವಿನ್ಯಾಸಗೊಳಿಸಲಾಗಿದೆ. ನೆಲದ ಒಳಭಾಗದಲ್ಲಿ ಹರಿಯುವ ನೀರಿನ ಕಾಲುವೆಗಳು ಹಾಗೂ ಬಿಸಿ ನೀರನ್ನು ಒದಗಿಸುವ ವ್ಯವಸ್ಥೆಗಳು, ಮೊಗಲರಲ್ಲಿನ ವೈಜ್ಞಾನಿಕ ದೃಷ್ಟಿಕೋನವನ್ನು ಬಿಂಬಿಸುತ್ತದೆ. ಹಮಾಮ್ನ ಒಳಾಂಗಣದಲ್ಲಿ ಬಿಳಿ ಅಮೃತಶಿಲೆಯ ನೆಲ, ಬಣ್ಣ ಬಣ್ಣದ ಅಲಂಕಾರಗಳು ಹಾಗೂ ಗೋಡೆಗಳ ಮೇಲೆ ಕಂಡು ಬರುವಂತಹ ಸೂಕ್ಷ್ಮ ಚಿತ್ರಣಗಳು ಗಮನ ಸೆಳೆಯುತ್ತವೆ. ಗಾಳಿ, ಬೆಳಕಿನ ಸಂಚಲನಕ್ಕಾಗಿ ಚಿಕ್ಕ ಚಿಕ್ಕ ಕಿಟಕಿಗಳನ್ನು ನಿರ್ಮಿಸಲಾಗಿದೆ. ರಂಗ್ ಮಹಲ್: ರಾಜಕುಟುಂಬದ ಮಹಿಳೆಯರು ವಾಸ ಮಾಡುತ್ತಿದ್ದ ಸ್ಥಳ ‘ರಂಗ್ ಮಹಲ್’. ಈ ಅರಮನೆಯ ಗೋಡೆಗಳು ಮತ್ತು ಮೇಲ್ಛಾವಣಿಯನ್ನು ಬಣ್ಣ ಬಣ್ಣದ ಚಿತ್ತಾರಗಳು, ಹೂವಿನ ಚಿತ್ರಗಳು ಹಾಗೂ ಅಮೂಲ್ಯ ರತ್ನಗಳಿಂದ ಅಲಂಕರಿಸಲಾಗಿತ್ತು. ರಂಗ್ ಮಹಲ್ನ ವಾಸ್ತುಶಿಲ್ಪವು ಪ್ರವಾಸಿಗರನ್ನು ಆಕರ್ಷಿಸುತ್ತದೆ. ಅರಮನೆಯ ನೆಲಭಾಗದಲ್ಲಿ ಹರಿಯುವ ನೀರಿನ ಕಾಲುವೆಯಿಂದಾಗಿ ಕೊಠಡಿಗಳಲ್ಲಿ ತಂಪಾದ ವಾತಾವರಣ ನಿರ್ಮಾಣವಾಗುತ್ತಿತ್ತು. ಇಲ್ಲಿ ರಾಜಕುಟುಂಬದ ಸದಸ್ಯರಿಗಾಗಿ ಮನರಂಜನಾ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿತ್ತು. ಮೋತಿ ಮಸೀದಿ ಕೆಂಪು ಕೋಟೆಯ ಸಂಕೀರ್ಣದೊಳಗೆ ನಿರ್ಮಿಸಲಾಗಿರುವ ಮೋತಿ ಮಸೀದಿಯು ಮೊಗಲ್ ವಾಸ್ತಶಿಲ್ಪದ ಸೌಂದರ್ಯವನ್ನು ಸರಳತೆಯ ಮೂಲಕ ವ್ಯಕ್ತಪಡಿಸುವ ಅಪರೂಪದ ಸ್ಮಾರಕವಾಗಿದೆ. ಮೋತಿ ಮಸೀದಿಯನ್ನು ಮೊಗಲ್ ಚಕ್ರವರ್ತಿ ಔರಂಗಜೇಬ್ ನಿರ್ಮಿಸಿದರು. ಸಂಪೂರ್ಣವಾಗಿ ಬಳಿ ಅಮೃತಶಿಲೆಯಿಂದ ನಿರ್ಮಿಸಲಾದ ಈ ಮಸೀದಿ, ತನ್ನ ಹೊಳಪು ಮತ್ತು ಶಿಲ್ಪಕಲೆಯಿಂದಲೇ ಮೋತಿ(ಮುತ್ತು) ಎಂಬ ಹೆಸರನ್ನು ಪಡೆದಿದೆ. ಮೊಗಲ್ ಅರಮನೆಯ ಖಾಸಗಿ ಆರಾಧನಾ ಸ್ಥಳವಾಗಿ ಈ ಮಸೀದಿ ಬಳಸಲ್ಪಡುತ್ತಿತ್ತು. ಮೂರು ಗುಂಬಝ್ಗಳು, ಕಮಾನುಗಳು, ಒಳಾಂಗಣದಲ್ಲಿನ ಅಮೃತಶಿಲೆಯ ನೆಲ ಹಾಗೂ ಗೋಡೆಗಳು, ಪ್ರಾರ್ಥನೆಗೆ ಅಗತ್ಯವಾದ ಶಾಂತ ವಾತಾವರಣವನ್ನು ಒದಗಿಸುತ್ತದೆ. ಕಾಲಾನುಕ್ರಮದಲ್ಲಿ ಕೆಂಪುಕೋಟೆಯಲ್ಲಿ ಅನೇಕ ಬದಲಾವಣೆಗಳು ಕಂಡರೂ ಮೋತಿ ಮಸೀದಿ ತನ್ನ ಸರಳ ಸೌಂದರ್ಯ, ಧಾರ್ಮಿಕ ಗುರುತನ್ನು ಕಳೆದುಕೊಳ್ಳದೆ ಉಳಿದಿದೆ. ಇಂದಿಗೂ ಕೆಂಪು ಕೋಟೆ ವೀಕ್ಷಿಸಲು ಬರುವಂತಹ ಪ್ರವಾಸಿಗರಿಗೆ ಮೋತಿ ಮಸೀದಿ ಆಕರ್ಷಣೆಯ ಕೇಂದ್ರ ಬಿಂದುವಾಗಿದೆ. ವಿಶ್ವ ಪಾರಂಪರಿಕ ತಾಣ 2007ರಲ್ಲಿ ಯುನೆಸ್ಕೋ ಸಂಸ್ಥೆಯು ದಿಲ್ಲಿಯ ಕೆಂಪು ಕೋಟೆಯನ್ನು ವಿಶ್ವ ಪಾರಂಪರಿಕ ತಾಣವೆಂದು ಘೋಷಿಸುವ ಮೂಲಕ, ಈ ಕಟ್ಟಡದ ಐತಿಹಾಸಿಕ ಹಾಗೂ ಸಾಂಸ್ಕೃತಿಕ ಮಹತ್ವವನ್ನು ಮತ್ತಷ್ಟು ಹೆಚ್ಚಿಸಿತು. ಪ್ರತಿ ದಿನ ಸಂಜೆ ನಡೆಯುವ ಬೆಳಕು ಮತ್ತು ಧ್ವನಿಯ ಪ್ರದರ್ಶನ(ಲೈಟ್ ಮತ್ತು ಸೌಂಡ್ ಶೋ)ದ ಮೂಲಕ ಕೋಟೆಯ ಇತಿಹಾಸ, ಮೊಗಲರ ಆಡಳಿತವನ್ನು ಜನರಿಗೆ ಹಿಂದಿ ಹಾಗೂ ಇಂಗ್ಲಿಷ್ ಭಾಷೆಯಲ್ಲಿ ಮನಮುಟ್ಟುವ ರೀತಿಯಲ್ಲಿ ಪರಿಚಯಿಸಲಾಗುತ್ತದೆ. ಅಲ್ಲದೇ, ಕೋಟೆಯ ಒಳಗಡೆ ಇರುವಂತಹ ವಸ್ತು ಸಂಗ್ರಹಾಲಯವು ಮೊಗಲರ ಇತಿಹಾಸ, ಸಂಸ್ಕೃತಿಯ ಸೊಬಗನ್ನು ಪರಿಚಯಿಸುತ್ತದೆ.
ತ್ರಿಪುರಾದಲ್ಲಿ ಕೋಮು ಹಿಂಸಾಚಾರ | ಅಂಗಡಿಗಳು, ಮನೆಗಳು, ಮಸೀದಿಗೆ ಬೆಂಕಿ: 10 ಮಂದಿ ಬಂಧನ
ಅಗರ್ತಲಾ: ಸ್ಥಳೀಯ ದೇವಸ್ಥಾನಕ್ಕೆ ನಿಧಿ ಸಂಗ್ರಹಿಸುವ ವಿಚಾರದಲ್ಲಿ ಉಂಟಾದ ವಾಗ್ವಾದದ ಬಳಿಕ ತ್ರಿಪುರಾದ ಉನಕೋಟಿ ಜಿಲ್ಲೆಯಲ್ಲಿ ಕೋಮು ಹಿಂಸಾಚಾರ ಸಂಭವಿಸಿದೆ. ಬಲಪಂಥೀಯ ಗುಂಪುಗಳು ಮುಸ್ಲಿಂ ಸಮುದಾಯಕ್ಕೆ ಸೇರಿದ ಅಂಗಡಿಗಳು, ಮನೆಗಳು ಹಾಗೂ ಮಸೀದಿಗೆ ಬೆಂಕಿ ಹಚ್ಚಿದ್ದಾರೆ ಎಂದು ವರದಿಯಾಗಿದೆ. ಕುಮಾರ್ಘಾಟ್ ಉಪವಿಭಾಗದ ಸೈದರ್ಪರ್ ಪ್ರದೇಶದಲ್ಲಿ ನಡೆದ ದಾಳಿಯಲ್ಲಿ ಪೊಲೀಸ್ ಸಿಬ್ಬಂದಿ ಸೇರಿ ಕನಿಷ್ಠ ಹತ್ತು ಮಂದಿ ಗಾಯಗೊಂಡಿದ್ದಾರೆ. ಘಟನೆ ನಡೆಯುವ ವೇಳೆ ಪೊಲೀಸರು ಸ್ಥಳದಲ್ಲಿದ್ದರೂ ಮಧ್ಯಪ್ರವೇಶಿಸಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ. “ಪರಿಸ್ಥಿತಿ ನಿಯಂತ್ರಣದಲ್ಲಿದೆ. ಸೂಕ್ಷ್ಮ ಪ್ರದೇಶಗಳಲ್ಲಿ ಅರೆಸೈನಿಕ ಪಡೆಗಳು ರೂಟ್ ಮಾರ್ಚ್ ಮೂಲಕ ಗಸ್ತು ತಿರುಗುತ್ತಿವೆ. ಹಿಂಸಾಚಾರದಲ್ಲಿ ಭಾಗಿಯಾಗಿದ್ದಾರೆಂದು ಆರೋಪಿಸಿ ಹತ್ತು ಮಂದಿಯನ್ನು ಬಂಧಿಸಲಾಗಿದೆ. ಹೊಸ ಹಿಂಸಾಚಾರದ ವರದಿಗಳಿಲ್ಲ,” ಎಂದು ಪೊಲೀಸ್ ವರಿಷ್ಠಾಧಿಕಾರಿ ಅವಿನಾಶ್ ಕುಮಾರ್ ರೈ ಅವರು ತಿಳಿಸಿದ್ದಾರೆ. ಶನಿವಾರ ಬೆಳಿಗ್ಗೆ ಹಿಂದುತ್ವ ಕಾರ್ಯಕರ್ತರ ಗುಂಪೊಂದು ಮುಸ್ಲಿಂ ವ್ಯಾಪಾರಿಯೊಬ್ಬರ ಅಂಗಡಿಗೆ ಬಂದು ಸ್ಥಳೀಯ ದೇವಸ್ಥಾನಕ್ಕೆ ದೇಣಿಗೆ ಕೇಳಿದ ಸಂದರ್ಭದಲ್ಲೇ ವಿವಾದ ಆರಂಭವಾಗಿದೆ ಎಂದು ವರದಿಯಾಗಿದೆ. ವ್ಯಾಪಾರಿ ತಾನು ಈಗಾಗಲೇ ಸ್ವಲ್ಪ ಮೊತ್ತ ನೀಡಿದ್ದು, ನಂತರ ಹೆಚ್ಚಿನ ಹಣ ನೀಡುವುದಾಗಿ ತಿಳಿಸಿದ್ದರೂ, ತಕ್ಷಣ ಹಣ ನೀಡುವಂತೆ ಒತ್ತಡ ಹೇರಲಾಗಿದೆ ಎನ್ನಲಾಗಿದೆ. ಈ ವೇಳೆ ನಡೆದ ಹಲ್ಲೆಯ ಬಳಿಕ ಅವರ ಅಂಗಡಿ ಹಾಗೂ ಮನೆಗೆ ಬೆಂಕಿ ಹಚ್ಚಲಾಗಿದೆ ಎಂದು ಆರೋಪಿಸಲಾಗಿದೆ. ಐದಾರು ಮನೆಗಳು, ಹಲವು ಅಂಗಡಿಗಳು ಹಾಗೂ ಸೈದೂರ್ ಪಾರಾ ಮಸೀದಿಗೆ ಬೆಂಕಿ ಹಚ್ಚಲಾಗಿದೆ. ಸಮಾಧಿಗಳಿಗೂ ಹಾನಿಯಾಗಿದೆ ಎಂದು ಸ್ಥಳೀಯ ನಿವಾಸಿಗಳು ತಿಳಿಸಿದ್ದಾರೆ. ಬೈಕ್, ಕಾರು ಹಾಗೂ ಟ್ರ್ಯಾಕ್ಟರ್ಗಳು ಸುಟ್ಟುಹೋಗಿವೆ ಎಂದು ತಿಳಿಸಿದ್ದಾರೆ. ಹಿಂಸಾಚಾರ ಪೀಡಿತ ಪ್ರದೇಶಕ್ಕೆ ಭೇಟಿ ನೀಡಲು ಯತ್ನಿಸಿದ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಬಿರಾಜಿತ್ ಸಿನ್ಹಾ ಅವರನ್ನು ಭದ್ರತಾ ಕಾರಣಗಳನ್ನು ಮುಂದಿಟ್ಟು ಪೊಲೀಸರು ತಡೆದಿದ್ದಾರೆ. ಇದನ್ನು ಅವರು ತೀವ್ರವಾಗಿ ಖಂಡಿಸಿದ್ದಾರೆ. ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರ ಅಲ್ಪಸಂಖ್ಯಾತರ ಜೀವ ಮತ್ತು ಆಸ್ತಿಗಳನ್ನು ರಕ್ಷಿಸುವಲ್ಲಿ ವಿಫಲವಾಗಿದೆ ಎಂದು ವಿರೋಧ ಪಕ್ಷದ ನಾಯಕ ಜಿತೇಂದ್ರ ಚೌಧರಿ ಆರೋಪಿಸಿದ್ದಾರೆ. ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯ ಸೆಕ್ಷನ್ 163ರ ಅಡಿಯಲ್ಲಿ ನಿಷೇಧಾಜ್ಞೆ ಜಾರಿಯಲ್ಲಿದ್ದು, ಇಂಟರ್ನೆಟ್ ಸೇವೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಪರಿಸ್ಥಿತಿಯನ್ನು ಪರಿಶೀಲಿಸಿ ನಿರ್ಬಂಧಗಳನ್ನು ಸಡಿಲಿಸುವ ಕುರಿತು ನಿರ್ಧಾರ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ISRO: ಇಸ್ರೋಗೆ ವೈಫಲ್ಯಗಳು ಹೊಸದಲ್ಲ, ಕುಸಿದಾಗ ಬಲವಾಗಿ ನಿಂತಿದ್ದು ಇತಿಹಾಸ
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೋ) ಈ ವರ್ಷದ ಮೊದಲ ಉಪಗ್ರಹ ಉಡಾವಣೆಯು ಕೊನೆಯ ಕ್ಷಣಗಳಲ್ಲಿ ವಿಫಲವಾಗಿದೆ. ಇಂದಿನ ಪಿಎಸ್ಎಲ್ವಿ-ಸಿ62 ಮಿಷನ್ ವಿಫಲವಾಗಿರುವುದು ಸಹಜವಾಗಿಯೇ ನಿರಾಸೆ ಮೂಡಿಸಬಹುದು. ಆದರೆ ಇಸ್ರೋ ಇತಿಹಾಸವನ್ನು ಒಮ್ಮೆ ಹಿಂದಿರುಗಿ ನೋಡಿದರೆ, ವೈಫಲ್ಯವೇ ಅದರ ದೊಡ್ಡ ಶಕ್ತಿಯಾಗಿ ಪರಿವರ್ತನೆಯಾದ ಅನೇಕ ಕ್ಷಣಗಳು ಕಾಣಿಸುತ್ತವೆ. ಪ್ರತಿ ಬಾರಿ ಕುಸಿದಾಗಲೂ ಇನ್ನಷ್ಟು ಬಲವಾಗಿ ನಿಂತಿದೆ ಇಸ್ರೋ.
ನಾಡ ಪಿಎಚ್ಸಿಯನ್ನು ಮೇಲ್ದರ್ಜೆಗೇರಿಸುವ ಬೇಡಿಕೆ ಮತ್ತೆ ಮುನ್ನೆಲೆಗೆ
ಕುಂದಾಪುರ : ಕುಂದಾಪುರ ಹಾಗೂ ಬೈಂದೂರು ತಾಲೂಕಿನಲ್ಲಿ ಪ್ರತಿದಿನ ಸರಾಸರಿ ನೂರಕ್ಕೂ ಮಿಕ್ಕಿ ರೋಗಿಗಳು ಆಗಮಿಸಿ ಆಗತ್ಯ ಆರೋಗ್ಯ ಚಿಕಿತ್ಸೆ ಪಡೆಯುವ ಗ್ರಾಮೀಣ ಭಾಗದ ಜನರ ಆಶಾಕಿರಣವಾಗಿರುವ ನಾಡ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸಮುದಾಯ ಆರೋಗ್ಯ ಕೇಂದ್ರವನ್ನಾಗಿ ಮೇಲ್ದರ್ಜೆಗೇರಿಸಬೇಕು ಎನ್ನುವುದು ಬಹುವರ್ಷಗಳ ಬೇಡಿಕೆ ಮತ್ತೆ ಮುನ್ನೆಲೆಗೆ ಬಂದಿದೆ. ಹಿಂದೆ ಬಹಳಷ್ಟು ಸಲ ಈ ಬೇಡಿಕೆ ಸಾರ್ವಜನಿಕರಿಂದ ಕೇಳಿಬಂದಿದ್ದರೂ, ಪ್ರತಿಬಾರಿಯೂ ಒಂದಿಲ್ಲೊಂದು ಕಾರಣದಿಂದ ಹಿನ್ನೆಲೆಗೆ ಸರಿದು ಬಿಡುತ್ತಿತ್ತು. ಹೀಗಾಗಿ ಅದಿನ್ನೂ ಈಡೇರಿಲ್ಲ. ಅದಕ್ಕೆ ಅಗತ್ಯದಷ್ಟು ಜನರ ಬೆಂಬಲದ ಕೊರತೆಯೂ ಕಾರಣವಾಗಿತ್ತು. ಆದರೆ ಈಗ ಬೇಡಿಕೆ ಮುನ್ನೆಲೆಗೆ ಬರಲು ಮುಖ್ಯ ಕಾರಣ ಸದ್ಯ ಪ್ರಾಥಮಿಕ ಆರೋಗ್ಯಕ್ಕೆ ಅಗತ್ಯದಷ್ಟು ಸಿಬ್ಬಂದಿ ಇಲ್ಲದೇ, ಗ್ರಾಮೀಣ ಭಾಗದ ಜನರಿಗೆ ನಿರಂತರ ಆರೋಗ್ಯ ಸೇವೆ ಒದಗಿಸಲು ತೊಡಕಾಗುತ್ತಿದೆ. ಇದರಿಂದ ಜನರು ದುಬಾರಿಯಾದ ಖಾಸಗಿ ವ್ಯವಸ್ಥೆಯನ್ನು ನೆಚ್ಚಿ ಕೊಳ್ಳಬೇಕಾದ ಅನಿವಾರ್ಯತೆ ಉಂಟಾಗಿರುವುದು. ನಾಡ, ಬಡಾಕೆರೆ, ಹಡವು, ಸೇನಾಪುರ ಗ್ರಾಮಗಳಿಗೆ ಸಂಬಂಧಪಡುವ ಆಸ್ಪತ್ರೆ ಇದಾಗಿದ್ದು, ಇದಲ್ಲದೆ ಮೊವಾಡಿ, ಪಡುಕೋಣೆ, ಮೊವಾಡಿ, ಮರವಂತೆ ಸಹಿತ ಹತ್ತಾರು ಊರುಗಳ ಜನರಿಗೆ ಅನಾರೋಗ್ಯ ಉಂಟಾದಾಗ ಇಲ್ಲಿಗೆ ಬರುತ್ತಾರೆ. 50 ವರ್ಷಗಳಿಗೂ ಹೆಚ್ಚು ಕಾಲದಿಂದ ಇರುವ ಈ ಆಸ್ಪತ್ರೆಯು ಮೊದಲು ದಿನದ 24ಗಂಟೆಯೂ ಕಾರ್ಯಾಚರಿಸುತ್ತಿದ್ದು, ರೋಗಿಗಳು ಬರುವುದು ಕಡಿಮೆಯಾಗಿದ್ದರಿಂದ ಈಗ ಅದು ಸ್ಥಗಿತಗೊಂಡು ಹಲವು ವರ್ಷಗಳೇ ಸಂದಿವೆ. 4 ಗ್ರಾಮಗಳ 12,228 ಜನರು ಈ ಆಸ್ಪತ್ರೆ ವ್ಯಾಪ್ತಿಗೆ ಬರುತ್ತಾರೆ. ನಾಡ ಸುತ್ತಮುತ್ತಲಿನ ಹತ್ತಾರು ಊರುಗಳಿಗೆ ಇದೇ ಆಸ್ಪತ್ರೆ ಆಸರೆಯಾಗಿದ್ದು, ದಿನವೊಂದಕ್ಕೆ ಸರಾಸರಿ 80ರಿಂದ 90 ಮಂದಿ ರೋಗಿಗಳು ಇಲ್ಲಿಗೆ ಚಿಕಿತ್ಸೆಗಾಗಿ ಬರುತ್ತಾರೆ. ಕೆಲವೊಮ್ಮೆ ಈ ಸಂಖ್ಯೆ 100-120ರ ಗಡಿಯೂ ದಾಟುತ್ತದೆ. ಸಿಬ್ಬಂದಿ ಕೊರತೆ ನಡುವೆಯೂ ಇರುವಂತಹ ವೈದ್ಯರು, ಸಿಬ್ಬಂದಿ ಉತ್ತಮ ಆರೋಗ್ಯ ಸೇವೆ ಒದಗಿಸುತ್ತಿದ್ದಾರೆ. ಪ್ರಮುಖವಾಗಿ ಮಧುಮೇಹ, ಅಧಿಕ ರಕ್ತದೊತ್ತಡ, ಜ್ವರ, ಕೆಮ್ಮು, ಶೀತ ಇನ್ನಿತರ ಕಾಯಿಲೆಗಳಿರುವ ರೋಗಿಗಳು ಇಲ್ಲಿಗೆ ಬಂದು ತಪಾಸಣೆ ಮಾಡಿಸಿಕೊಳ್ಳುತ್ತಾರೆ. ಹುದ್ದೆಗಳು ಖಾಲಿ ಖಾಲಿ: ಈ ಆಸ್ಪತ್ರೆಗೆ ಮಂಜೂರಾದ ಹುದ್ದೆಗಳು ಒಟ್ಟು 17. ಒಬ್ಬ ವೈದ್ಯಾಧಿಕಾರಿ, ಫಾರ್ಮಾಸಿಸ್ಟ್, ಪ್ರಥಮ ದರ್ಜೆ ಸಹಾಯಕ ಹುದ್ದೆ ಖಾಲಿಯಿದ್ದು, ಹೊರಗಿನಿಂದ ನಿಯೋಜಿಸಲಾಗಿದೆ. ಲ್ಯಾಬ್ ಟೆಕ್ನೀಶಿಯನ್ ಇದ್ದಾರೆ. ಹಿರಿಯ ಪ್ರೈಮರಿ ಹೆಲ್ತ್ ಕೇರ್ ಅಧಿಕಾರಿಯಿದ್ದರೂ, ಅವರಿಗೆ ತಾಲೂಕು ಜವಾಬ್ದಾರಿ ನೀಡಲಾಗಿದೆ. ಆರೋಗ್ಯ ನಿರೀಕ್ಷಣಾಧಿಕಾರಿ 1 ಹುದ್ದೆ ಖಾಲಿ, ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ 5ರಲ್ಲಿ ಇಬ್ಬರು ಇದ್ದಾರೆ. ಇನ್ನು 4 ಉಪ ಆರೋಗ್ಯ ಕೇಂದ್ರಗಳಿಗೆ 4 ಸಿಎಚ್ಒ ಗಳಿದ್ದಾರೆ. 1 ಸ್ಟಾಫ್ ನರ್ಸ್ ಇದ್ದು, ಇನ್ನೊಂದು ಖಾಲಿಯಿದೆ. ಡಾಟಾ ಎಂಟ್ರಿ ಆಪರೇಟರ್ ಒಬ್ಬರಿದ್ದಾರೆ. ಈ ಆಸ್ಪತ್ರೆಯು ತಾಲೂಕು ಕೇಂದ್ರದಿಂದ ಸುಮಾರು 20 ಕಿ.ಮೀ.ಗೂ ಹೆಚ್ಚು ದೂರವಿದೆ. ಅದಲ್ಲದೇ ಅತೀ ಹೆಚ್ಚು ರೋಗಿಗಳು ಬರುವ ಆಸ್ಪತ್ರೆಯೂ ಆಗಿರುವುದರಿಂದ ಯಾರಿಗಾದರೂ ತುರ್ತು ಅನಾರೋಗ್ಯ ಉಂಟಾದರೆ ಕುಂದಾಪುರಕ್ಕೆ ತೆರಳಬೇಕು. ಅದಕ್ಕಾಗಿ ಗ್ರಾಮೀಣ ಭಾಗದ ಈ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸಬೇಕು ಎನ್ನುವ ಬೇಡಿಕೆ ಅನೇಕ ವರ್ಷಗಳಿಂದ ಇದೆ. ಎಲ್ಲ ಸವಲತ್ತುಗಳಿದ್ದರೂ ಕೂಡ ಸಿಬ್ಬಂದಿ ಕೊರತೆಯಿಂದ ಸ್ಥಳೀಯರಿಗೆ ತೊಂದರೆ ಆಗುತ್ತಿದೆ. ನಿವೃತ್ತಿ ಹೊಂದಿದ ಮತ್ತು ಇಲ್ಲಿಂದ ಬೇರೆ ಕಡೆ ವರ್ಗಾವಣೆಗೊಂಡ ಸಿಬ್ಬಂದಿಯ ಬದಲು ಹೊಸಬರ ಭರ್ತಿ ಆಗಿಲ್ಲ. ಹೊರಗುತ್ತಿಗೆ ಆಧಾರದ ಮೇಲೆ ಇರುವ ಸ್ಟಾಪ್ ನರ್ಸ್ ಮತ್ತು ಡಿ ಗ್ರೂಪ್, ಲ್ಯಾಬ್ ಟೆಕ್ನೀಶಿಯನ್ ನೌಕರರು ಹೊರತುಪಡಿಸಿ ಬೇರೆ ಯಾರು ಕಾಣುತ್ತಿಲ್ಲ. ಜನಪ್ರತಿನಿಧಿಗಳು ಈ ಬಗ್ಗೆ ಗಮನಹರಿಸುತ್ತಿಲ್ಲ. ಆದಷ್ಟು ಬೇಗ ಸಿಬ್ಬಂದಿ ನೇಮಕಾತಿ ಆಗಲಿ. -ಗೋಪಾಲಕೃಷ್ಣ ನಾಡ, ಸ್ಥಳೀಯರು. ಸಮುದಾಯ ಆರೋಗ್ಯ ಕೇಂದ್ರವಾದರೆ ಅನುಕೂಲ ಸಮುದಾಯ ಆರೋಗ್ಯ ಕೇಂದ್ರವಾದರೆ ಈಗಿರುವ ಹಳೆಯ ಕಟ್ಟಡದ ಬದಲು ಹೊಸ ಕಟ್ಟಡ ಆಗಲಿದ್ದು, 30 ಬೆಡ್ಗಳು ಹೆಚ್ಚುವರಿಯಾಗಿ ಸಿಗಲಿವೆ. ಇದರೊಂದಿಗೆ ಈಗಿರುವ ವೈದ್ಯರೊಂದಿಗೆ ಹೆರಿಗೆ ತಜ್ಞರು, ಮಕ್ಕಳ ತಜ್ಞರು, ಅರಿವಳಿಕೆ ತಜ್ಞರ ನೇಮಕಾತಿಯಾಗುತ್ತದೆ. ಹೆಚ್ಚಿನ ಸಿಬ್ಬಂದಿಯು ನೇಮಕವಾಗಲಿದ್ದಾರೆ. ಇದಕ್ಕೆ ಮುಖ್ಯವಾಗಿ ಆಸ್ಪತ್ರೆ ವ್ಯಾಪ್ತಿಯಲ್ಲಿ ಒಂದು ಲಕ್ಷ ಜನಸಂಖ್ಯೆ ಬೇಕಿದ್ದು, ಈಗಿರುವ ಗ್ರಾಮಗಳ ಪ್ರಕಾರ ಇಲ್ಲಿರುವುದು 12 ಸಾವಿರ ಜನ. ಆಸುಪಾಸಿನ ಕೆಲ ಗ್ರಾಮಗಳನ್ನು ಸೇರಿಸಿಕೊಂಡರೆ ಇದು ತಲುಪಬಹುದು. ಆದರೆ ಈ ಪ್ರಸ್ತಾವ ಈಗ ನನೆಗುದಿಗೆ ಬಿದ್ದಿದೆ. ಸಮುದಾಯ ಆರೋಗ್ಯ ಕೇಂದ್ರಕ್ಕೆ 2 ಎಕರೆ ಜಾಗದ ಅಗತ್ಯವಿದ್ದು, ಇಲ್ಲಿ ಕೇವಲ 60 ಸೆಂಟ್ಸ್ ಜಾಗ ಮಾತ್ರವಿದೆ. ಸೇನಾಪುರದಲ್ಲಿ ಜಾಗವಿದ್ದರೂ, ಅದು ದೂರವಾಗುತ್ತದೆ. ನಾಡದಲ್ಲಿಯೇ ಗ್ರಾಪಂ ಜಾಗ ಒದಗಿಸುವ ಕಾರ್ಯವನ್ನು ಸಂಬಂಧಪಟ್ಟವರು ಮಾಡಬೇಕಿದೆ.
ಚಳಿಯ ತೀವ್ರತೆಗೆ ನಡುಗುತ್ತಿರುವ ದೆಹಲಿ ಜನತೆ: 13 ವರ್ಷಗಳ ಬಳಿಕ ದಾಖಲಾಯ್ತು 2.9 ಡಿಗ್ರಿ ಕನಿಷ್ಠ ತಾಪಮಾನ
ದೆಹಲಿಯಲ್ಲಿ 77ನೇ ಗಣರಾಜ್ಯೋತ್ಸವದ ಸಿದ್ಧತೆಗಳು ಭರದಿಂದ ಸಾಗುತ್ತಿರುವಾಗ, ತೀವ್ರ ಚಳಿ ಆವರಿಸಿದೆ. ಅಯಾನಗರ್ನಲ್ಲಿ ಕನಿಷ್ಠ ತಾಪಮಾನ 2.9 ಡಿಗ್ರಿ ಸೆಲ್ಸಿಯಸ್ಗೆ ಕುಸಿದಿದ್ದು, ಇದು 13 ವರ್ಷಗಳಲ್ಲೇ ಅತ್ಯಂತ ಕಡಿಮೆ ತಾಪಮಾನ ದಾಖಲಾಗಿದೆ. ಇದರೊಂದಿಗೆ ವಾಯು ಗುಣಮಟ್ಟ ಸೂಚ್ಯಂಕವೂ (AQI) 293ಕ್ಕೆ ಏರಿದ್ದು, ಜನತೆ ತೀವ್ರ ಅಸ್ವಸ್ಥತೆ ಎದುರಿಸುತ್ತಿದ್ದಾರೆ.

21 C