ಎಚ್ಚರಿಕೆ… ಸ್ಮಾರ್ಟ್ ಗ್ಲಾಸ್ ಗಳ ಮೂಲಕ ರಹಸ್ಯವಾಗಿ ಮಹಿಳೆಯರ ಚಿತ್ರೀಕರಣ!
ಬೇಕಿದೆ ಕಾನೂನು ಕಣ್ಗಾವಲು…
ಔರಾದ್ | ಬಿಸಿಯೂಟ ಸೇವಿಸಿ 69 ವಿದ್ಯಾರ್ಥಿಗಳು ಅಸ್ವಸ್ಥ : ಆಸ್ಪತ್ರೆಗೆ ದಾಖಲು
ಔರಾದ್ : ತಾಲೂಕಿನ ಜಮಲಾಪುರ್ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಬಿಸಿಯೂಟ ಸೇವಿಸಿದ ನಂತರ 69 ವಿದ್ಯಾರ್ಥಿಗಳು ಅಸ್ವಸ್ಥಗೊಂಡ ಘಟನೆ ಮಂಗಳವಾರ ನಡೆದಿದೆ. ಅಸ್ವಸ್ಥರಾದ ವಿದ್ಯಾರ್ಥಿಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದು ಬಂದಿದೆ. ಜಮಲಾಪುರ್ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಒಟ್ಟು 94 ವಿದ್ಯಾರ್ಥಿಗಳ ದಾಖಲೆ ಇದ್ದು, ಮಂಗಳವಾರ 69 ವಿದ್ಯಾರ್ಥಿಗಳು ಹಾಜರಿದ್ದರು. ಬಿಸಿಯೂಟ ಸೇವಿಸಿದ ಬಳಿಕ 2–3 ವಿದ್ಯಾರ್ಥಿಗಳಿಗೆ ತಲೆನೋವು, ಹೊಟ್ಟೆನೋವು ಹಾಗೂ ವಾಂತಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರನ್ನು ತಕ್ಷಣ ಔರಾದ್ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು. ನಂತರ ಇತರ ವಿದ್ಯಾರ್ಥಿಗಳಲ್ಲಿಯೂ ಆರೋಗ್ಯದಲ್ಲಿ ಏರುಪೇರು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಎಲ್ಲ ವಿದ್ಯಾರ್ಥಿಗಳಿಗೆ ಆರೋಗ್ಯ ತಪಾಸಣೆ ನಡೆಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ. ಅಸ್ವಸ್ಥಗೊಂಡ ವಿದ್ಯಾರ್ಥಿಗಳ ಪೈಕಿ ಒಬ್ಬರನ್ನು ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದೆ. ಉಳಿದ ವಿದ್ಯಾರ್ಥಿಗಳಿಗೆ ಔರಾದ್ ತಾಲ್ಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದು ಬಂದಿದೆ.
ಡಾ.ಕೆ.ವಿ.ರಾವ್ಗೆ ಜೀವಮಾನ ಸಾಧನಾ ಪ್ರಶಸ್ತಿ
ಮಂಗಳೂರು : ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರದ ನಿರ್ದೇಶಕ ಡಾ.ಕೆ.ವಿ.ರಾವ್ ಅವರಿಗೆ ವಿಜ್ಞಾನ ಮತ್ತು ಶಿಕ್ಷಣಕ್ಕಾಗಿ ಅವರ ಸೇವೆಯನ್ನು ಪರಿಗಣಿಸಿ ಭಾರತೀಯ ಭೌತಶಾಸ್ತ್ರ ಅಧ್ಯಾಪಕರ ಸಂಘವು ಜೀವಮಾನ ಸಾಧನಾ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಬೆಂಗಳೂರಿನ ಆರ್.ವಿ.ಇಂಜಿನಿಯರಿಂಗ್ ಕಾಲೇಜಿನಲ್ಲಿ ನಡೆದ ‘ಕ್ವಾಂಟಂ ವಿಜ್ಞಾನ ಮತ್ತು ತಂತ್ರಜ್ಞಾನ’ಸಮ್ಮೇಳನದ ಸಂದರ್ಭದಲ್ಲಿ ಡಾ. ಕೆ.ವಿ.ರಾವ್ ಅವರು ವಿವಿಧ ಜವಾಬ್ದಾರಿಯುತ ಸ್ಥಾನಗಳಲ್ಲಿ ಕಾರ್ಯನಿರ್ವಹಿಸಿದ್ದರು. ಕರ್ತವ್ಯ ನಿರ್ವಹಿಸಿದ ಎಲ್ಲಾ ಶೈಕ್ಷಣಿಕ ಕ್ಷೇತ್ರಗಳಲ್ಲಿ ವಿಜ್ಞಾನ ಸಂವಹನದ ನಾನಾ ಆಯಾಮಗಳ ಕಾರ್ಯಕ್ರಮಗಳ ಮೂಲಕ ನೀಡಿರುವ ಸೇವೆಗೆ ಜೀವಮಾನ ಸಾಧನಾ ಪ್ರಶಸ್ತಿ ನೀಡಲಾಗಿದೆ ಎಂದು ಪ್ರಶಸ್ತಿ ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಅಬಕಾರಿ ಲಂಚ ಪ್ರಕರಣ ಮರೆಮಾಚಲು ‘ವಿಬಿ-ಜಿ ರಾಮ್ ಜಿ’ ಕಾಯ್ದೆ ವಿರುದ್ಧ ನಿರ್ಣಯ ಮಂಡನೆ : ಆರ್.ಅಶೋಕ್
ಬೆಂಗಳೂರು : ‘ಅಬಕಾರಿ ಇಲಾಖೆಯಲ್ಲಿನ ಲಂಚ ಪ್ರಕರಣ, ವರ್ಗಾವಣೆ ದಂಧೆಯನ್ನು ಮರೆಮಾಚಲು ‘ವಿಬಿ-ಜಿ ರಾಮ್ ಜಿ’ ಕಾಯ್ದೆ ವಿರುದ್ಧ ನಿರ್ಣಯ ಮಂಡಿಸುವ ಮೂಲಕ ಕೇಂದ್ರ ಸರಕಾರವನ್ನು ನಿಂದಿಸುವ ಕೆಲಸ ಮಾಡುತ್ತಿದ್ದು, ಇದರ ವಿರುದ್ದ ಹೋರಾಟ ಮಾಡುತ್ತೇವೆ’ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ತಿಳಿಸಿದ್ದಾರೆ. ಮಂಗಳವಾರ ವಿಧಾನಸಭೆ ಮೊಗಸಾಲೆಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ಮುಖ್ಯಮಂತ್ರಿ ಸಿದ್ದರಾಮಯ್ಯ ಸದನದ ನಿಯಮಾವಳಿಗಳನ್ನು ಮೀರಿ ಕೇಂದ್ರ ಸರಕಾರವನ್ನು ತೆಗಳುವ ನಿರ್ಣಯವನ್ನು ಮಂಡಿಸಿದ್ದಾರೆ. ನಿಯಮ ಪ್ರಕಾರ ಎಲ್ಲರಿಗೂ 7 ದಿನ ಮುನ್ನ ನೋಟಿಸ್ ನೀಡಬೇಕು. ಇದು ಸದನದ ನಿರ್ಣಯವಲ್ಲ, ಬದಲಿಗೆ ಕಾಂಗ್ರೆಸ್ ಪಕ್ಷದ ಸರಕಾರದ ನಿರ್ಣಯ’ ಎಂದು ಹೇಳಿದರು. ‘ಮಾಜಿ ಸಿಎಂ ಎಸ್.ಎಂ.ಕೃಷ್ಣ ರಾಜ್ಯಕ್ಕೆ ವಿಮಾನ ನಿಲ್ದಾಣ, ನಮ್ಮ ಮೆಟ್ರೊ ತಂದರು. ಇದನ್ನು ಮುತ್ಸದ್ಧಿತನ ಎನ್ನುತ್ತಾರೆ. ಆದರೆ, ಸಿಎಂ ಸಿದ್ದರಾಮಯ್ಯನವರಿಗೆ ರಾಜ್ಯದ ಅಭಿವೃದ್ಧಿ ಬೇಕಿಲ್ಲ. ಅವರ ಅಭಿವೃದ್ಧಿ ಹಾಗೂ ಪಕ್ಷದ ಅಭಿವೃದ್ಧಿ ಮಾತ್ರ ಬೇಕಿದೆ. ಹೀಗಾಗಿ ‘ವಿಬಿ-ಜಿ ರಾಮ್ ಜಿ’ ಕಾಯ್ದೆ ವಿರುದ್ದ ನಿರ್ಣಯ ಮಂಡಿಸಲಾಗಿದೆ’ ಎಂದು ಅಶೋಕ್ ದೂರಿದರು. ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ನಾಯಕ ಹಾಗೂ ರಾಜ್ಯಸಭಾ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆಯವರಿಗೆ ಅಲ್ಲಿ ಮಾತನಾಡಲು ಆಗಿಲ್ಲ. ಹೀಗಾಗಿ ಇಲ್ಲಿನ ಕಲಾಪದಲ್ಲಿ ಉತ್ತರನ ಪೌರುಷ ತೋರಿಸಿದ್ದಾರೆ. ಈ ನಿರ್ಣಯ ಸದನದ ನಿರ್ಣಯವಲ್ಲ ಎಂದ ಅವರು, ಸಿಎಂ ಸಿದ್ದರಾಮಯ್ಯ ಜಿಎಸ್ಟಿ ಸಭೆಗೆ ಹೋಗುವುದಿಲ್ಲ, ಪ್ರಧಾನಿಯವರು ಕರೆದ ಸಭೆಗೆ ತೆರಳುವುದಿಲ್ಲ. ಇದೀಗ ಸೋನಿಯಾ ಗಾಂಧಿ ಮೆಚ್ಚಿಸಲು ನಿರ್ಣಯ ಮಂಡನೆ ಮಾಡಿದ್ದಾರೆ ಎಂದು ಆರೋಪಿಸಿದರು.
ಹೊಸದಿಲ್ಲಿ: ಇತ್ತೀಚೆಗೆ ಪ್ರಕಟವಾದ ಕೇಂದ್ರ ಬಜೆಟ್ನಲ್ಲಿ ಅಂಗವೈಕಲ್ಯ ಪಿಂಚಣಿ ಪಡೆಯುವ ರಕ್ಷಣಾ ಸಿಬ್ಬಂದಿಗೆ ಲಭ್ಯವಿದ್ದ ಆದಾಯ ತೆರಿಗೆ ವಿನಾಯಿತಿಯನ್ನು ಸ್ಥಗಿತಗೊಳಿಸುವ ಸರ್ಕಾರದ ನಿರ್ಧಾರಕ್ಕೆ ದೇಶದಾದ್ಯಂತ ಮಾಜಿ ಸೈನಿಕರಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಈ ಕ್ರಮವು ಅಂಗವಿಕಲ ಯೋಧರ ಹಕ್ಕುಗಳನ್ನು ಘಾಸಿಗೊಳಿಸುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ ಎಂದು thewire.in ವರದಿ ಮಾಡಿದೆ. ಬಜೆಟ್ನ ಪ್ರಕಾರ, ಇನ್ನು ಮುಂದೆ ದೈಹಿಕ ಅಂಗವೈಕಲ್ಯದಿಂದಾಗಿ ಸೇವೆಯಿಂದ “ಅಮಾನ್ಯಗೊಳಿಸಲ್ಪಟ್ಟ” ಸಶಸ್ತ್ರ ಪಡೆಗಳ ಸಿಬ್ಬಂದಿಗೆ ಮಾತ್ರ ತೆರಿಗೆ ವಿನಾಯಿತಿ ಲಭ್ಯವಾಗಲಿದೆ. ಆದರೆ ಅಂಗವೈಕಲ್ಯ ಹೊಂದಿದ್ದರೂ ತಮ್ಮ ಪೂರ್ಣ ಸೇವಾ ಅವಧಿ (ಸೂಪರ್ಅನ್ಯುಯೇಷನ್) ಪೂರ್ಣಗೊಳಿಸಿ ನಿವೃತ್ತರಾದ ಸಿಬ್ಬಂದಿಗೆ ಈ ಸೌಲಭ್ಯ ಅನ್ವಯವಾಗುವುದಿಲ್ಲ ಎಂದು ವರದಿಗಳು ತಿಳಿಸಿವೆ. ಈ ನಿರ್ಧಾರವು ಅಂಗವಿಕಲ ಪಿಂಚಣಿದಾರರ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆಯಿದೆ ಎಂದು ಸೇನೆಯಿಂದ ನಿವೃತ್ತರಾದವರು ಕಳವಳ ವ್ಯಕ್ತಪಡಿಸಿದ್ದಾರೆ. ಸೇವೆಯಿಂದ ಅಮಾನ್ಯಗೊಂಡವರಿಗಿಂತ ಸೇವಾವಧಿ ಪೂರ್ಣಗೊಳಿಸಿ ನಿವೃತ್ತರಾದ ಅಂಗವಿಕಲ ಸೈನಿಕರ ಸಂಖ್ಯೆ ಹೆಚ್ಚಿನದಿರುವುದರಿಂದ ದೊಡ್ಡ ವರ್ಗದ ಯೋಧರು ನೇರವಾಗಿ ನಷ್ಟ ಅನುಭವಿಸಲಿದ್ದಾರೆ ಎಂಬ ಆತಂಕ ವ್ಯಕ್ತವಾಗಿದೆ. ಈ ಕುರಿತು ಸಾಮಾಜಿಕ ಜಾಲತಾಣ X ನಲ್ಲಿ ಪ್ರತಿಕ್ರಿಯಿಸಿದ ಮಾಜಿ ಮೇಜರ್ ಜನರಲ್ ಶೈಲ್ ಝಾ ಅವರು, “ಅಗ್ನಿವೀರ್ ಯೋಜನೆಯಿಂದ ದೇಶದ ಭದ್ರತೆ ಮೊದಲು ಹದಗೆಟ್ಟಿತು. ಈಗ ಅಂಗವೈಕಲ್ಯ ಪಿಂಚಣಿಯ ಮೇಲಿನ ದಾಳಿಯಿಂದ ವೃತ್ತಿಪರ ಸೈನಿಕರ ಬದ್ಧತೆಯ ನೀತಿಯನ್ನೇ ಕುಗ್ಗಿಸಲಾಗುತ್ತಿದೆ. ರಾಷ್ಟ್ರದ ರಕ್ಷಣೆಯ ಶವಪೆಟ್ಟಿಗೆಯ ಮೇಲಿನ ಕೊನೆಯ ಮೊಳೆ ಹೊಡೆಯಲಾಗುತ್ತಿದೆ,” ಎಂದು ಕಿಡಿಕಾರಿದ್ದಾರೆ. ಇಲ್ಲಿಯವರೆಗೆ ಸೇವೆಯ ವೇಳೆ ಅಂಗವಿಕಲರಾದ ಸೈನಿಕರನ್ನು ಆಡಳಿತಾತ್ಮಕ ಹುದ್ದೆಗಳ ಮೂಲಕ ಸೇವೆಯಲ್ಲಿ ಮುಂದುವರಿಸಲಾಗುತ್ತಿತ್ತು. ಕರ್ತವ್ಯದ ಸಮಯದಲ್ಲಿ ಗಾಯಗೊಂಡು ಅಂಗವೈಕಲ್ಯಕ್ಕೊಳಗಾದ ಸೈನಿಕರಿಗೆ ಅಂಗವೈಕಲ್ಯ ಪಿಂಚಣಿ, ಜೀವಾವಧಿ ವೈದ್ಯಕೀಯ ಚಿಕಿತ್ಸೆ ಹಾಗೂ ಹೆಚ್ಚುವರಿ ತೆರಿಗೆಮುಕ್ತ ಪಿಂಚಣಿ ಸೇರಿದಂತೆ ಹಲವು ಸೌಲಭ್ಯಗಳು ಲಭ್ಯವಾಗುತ್ತಿವೆ. “ಹಣಕಾಸು ಮಸೂದೆ 2026ರಲ್ಲಿ ಸರ್ಕಾರವು ಯುದ್ಧದಲ್ಲಿ ಗಾಯಗೊಂಡು ಅಂಗವಿಕಲರಾದ ಮಾಜಿ ಸೈನಿಕರು ಮತ್ತು ಸೇವಾ ಸಿಬ್ಬಂದಿಗೆ ನೀಡಲಾಗುತ್ತಿದ್ದ ಆದಾಯ ತೆರಿಗೆ ವಿನಾಯಿತಿಯ ಎಲ್ಲಾ ಪ್ರಯೋಜನಗಳನ್ನು ತೆಗೆದುಹಾಕಿದೆ. ನಿವೃತ್ತಿಯವರೆಗೂ ಸೇವೆ ಸಲ್ಲಿಸಿದ ಧೈರ್ಯಶಾಲಿಗಳ ವಿರುದ್ಧ ಇದು ನಿರ್ದಯಿ ಕ್ರಮ— ವಾಹ್!” ಎಂದು ನಿವೃತ್ತ ಮೇಜರ್ ಜನರಲ್ ಬೀರೇಂದರ್ ಧನೋವಾ ಅವರು ಸಹ X ನಲ್ಲಿ ಪೋಸ್ಟ್ ಮಾಡಿದ್ದಾರೆ. “ನೀವು ಕರ್ತವ್ಯದ ವೇಳೆ ಗಾಯಗೊಂಡು ಅಮಾನ್ಯರಾದರೆ ಪಿಂಚಣಿ ಸೂಚ್ಯಂಕ ಸಿಗುವುದಿಲ್ಲ ಆದರೆ ತೆರಿಗೆ ವಿನಾಯಿತಿ ಸಿಗುತ್ತದೆ. ನೀವು ನಿವೃತ್ತಿಯವರೆಗೂ ಸೇವೆ ಮುಂದುವರಿಸಿದರೆ ಪಿಂಚಣಿ ಸೂಚ್ಯಂಕ ಸಿಗುತ್ತದೆ ಆದರೆ ತೆರಿಗೆ ವಿನಾಯಿತಿ ಸಿಗುವುದಿಲ್ಲ. ಯಾವ ದಾರಿ ನೋಡಿದರೂ ಕೊನೆಗೆ ಸರ್ಕಾರವೇ ಗೆಲ್ಲುತ್ತದೆ,” ಎಂದು ಅವರು ಪೋಸ್ಟ್ ನಲ್ಲಿ ತಿಳಿಸಿದ್ದಾರೆ. ಈಗ ರದ್ದುಗೊಂಡಿರುವ ತೆರಿಗೆ ವಿನಾಯಿತಿ 1922ರಿಂದ ಜಾರಿಯಲ್ಲಿತ್ತು ಎಂಬುದನ್ನೂ ಅವರು ಉಲ್ಲೇಖಿಸಿದ್ದಾರೆ. ಇನ್ನೊಂದೆಡೆ, ಅಂಗವಿಕಲ ಪಿಂಚಣಿದಾರ ಸೈನಿಕರಲ್ಲಿ ಎರಡು ಪ್ರತ್ಯೇಕ ವರ್ಗಗಳನ್ನು ಸೃಷ್ಟಿಸಿ ತೆರಿಗೆ ವಿನಾಯಿತಿಯನ್ನು ವಿಭಿನ್ನವಾಗಿ ಅನ್ವಯಿಸುವುದು ಹೇಗೆ ನ್ಯಾಯಸಮ್ಮತ ಎಂಬ ಪ್ರಶ್ನೆಯನ್ನು ಮಾಜಿ ಕರ್ನಲ್ ಒಬ್ಬರು ಎತ್ತಿದ್ದಾರೆ. “ದೇಶ ಸೇವೆ ಮಾಡುವಾಗ ಅಂಗವೈಕಲ್ಯಕ್ಕೊಳಗಾದ ಸೈನಿಕರ ವಿರುದ್ಧ ಸರ್ಕಾರ ಮತ್ತೆ ತಾರತಮ್ಯ ಮಾಡುತ್ತಿರುವುದು ಆಘಾತಕಾರಿ,” ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ದ.ಕ. ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಸಭೆ
ಮಂಗಳೂರು : ಗೃಹಲಕ್ಷ್ಮಿ ಯೋಜನೆಯಡಿ ಮೊತ್ತವನ್ನು ನಿಗದಿತವಾಗಿ ಜಮೆ ಮಾಡಬೇಕು. ಬ್ಯಾಂಕ್ ಅಕೌಂಟ್ ಸೀಡಿಂಗ್ ಮಾಡಲು ಬಾಕಿ ಇರುವ ಬಗ್ಗೆ ಆದಷ್ಟು ಶೀಘ್ರವಾಗಿ ಕ್ರಮವಹಿಸುವಂತೆ ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಭರತ್ ಮುಂಡೋಡಿ ಸೂಚಿಸಿದ್ದಾರೆ. ಅವರು ಮಂಗಳವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. 2,668 ಫಲಾನುಭವಿಗಳ ಪೈಕಿ 1,422 ಫಲಾನುಭವಿಗಳ ಅಕೌಂಟ್ ಸೀಡಿಂಗ್ ಮಾಡಲಾಗಿದ್ದು, 1246 ಸೀಡಿಂಗ್ ಮಾಡಲು ಬಾಕಿ ಇರುತ್ತದೆ. ಈವರೆಗೆ ಗೃಹಲಕ್ಷ್ಮಿ ಯೋಜನೆಯಡಿ ಒಟ್ಟು 3,80,408 ಫಲಾನುಭವಿಗಳು ಯೋಜ ನೆಗೆ ನೋಂದಾಯಿಸಿಕೊಂಡಿದ್ದಾರೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕರು ಸಭೆಗೆ ತಿಳಿಸಿದರು. ಅದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷರು ಮರಣ ಹೊಂದಿದ ಗೃಹಲಕ್ಷ್ಮಿ ಯೋಜನೆ ಫಲಾನುಭವಿಗಳ ಮಾಹಿತಿ ಪಡೆದು ಕೊಂಡು ಪರಿಶೀಲನೆ ನಡೆಸಬೇಕು ಎಂದರು. ಪಡಿತರ ಚೀಟಿ ತಿದ್ದುಪಡಿಗೆ ಸಂಬಂಧಿಸಿದಂತೆ ಗ್ರಾಮ ಒನ್ ಹಾಗೂ ಕರ್ನಾಟಕ ಒನ್ಗಳಲ್ಲಿ ಅರ್ಜಿ ಸಲ್ಲಿಸಿದಲ್ಲಿ ಅನುಮೋದನೆಯಾಗುವ ತನಕ ರೇಶನ್ ಕಾರ್ಡ್ ಪ್ರತಿಯನ್ನು ನೀಡದಂತೆ ಗ್ರಾಮ ಒನ್ ನವರಿಗೆ ಸೂಕ್ತ ನಿರ್ದೇಶನ ನೀಡುವಂತೆ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರ ಇಲಾಖೆಯ ಉಪ ನಿರ್ದೇಶಕರಿಗೆ ಅಧ್ಯಕ್ಷರು ತಿಳಿಸಿದರು. ಕಡಬದಲ್ಲಿ ಕೆಎಸ್ಆರ್ಟಿಸಿ ಡಿಪೋ ರಚಿಸಲು 3 ಕಡೆಗಳಲ್ಲಿ ತಹಶೀಲ್ದಾರ್ ಮತ್ತು ವಿಭಾಗೀಯ ನಿಯಂತ್ರಣಾಧಿ ಕಾರಿಯವರ ಸಮ್ಮುಖದಲ್ಲಿ ಪರಿಶೀಲನೆ ನಡೆಸಿ ಜಾಗವನ್ನು ಗುರುತಿಸಲಾಗಿದ್ದು, ಈ ಬಗ್ಗೆ ಶೀಘ್ರದಲ್ಲೇ ನಿರ್ಧರಿಸು ವಂತೆ ಕಡಬ ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷರು ತಿಳಿಸಿದರು. ಮಾಣಿಯಲ್ಲಿ ಫ್ಲೈ ಓವರ್ನ ಕೆಳಗೆ ಕೆಎಸ್ಆರ್ಟಿಸಿ ಎಕ್ಸ್ಪ್ರೆಸ್ ಬಸ್ಸುಗಳು ನಿಲುಗಡೆ ಮಾಡುವುದಿಲ್ಲವೆಂದು ತಿಳಿಸಿದಾಗ, ಈ ಬಗ್ಗೆ ಮತ್ತೊಮ್ಮೆ ಪರಿಶೀಲನೆ ನಡೆಸಲು ಜಿಲ್ಲಾಧ್ಯಕ್ಷರು ಕೆಎಸ್ಆರ್ಟಿಸಿ. ಅಧಿಕಾರಿಗಳಿಗೆ ಸೂಚಿಸಿದರು. ಯುವನಿಧಿ ಯೋಜನೆಯಡಿ ನೈಜತೆ ಪರಿಶೀಲನೆ ನಡೆಸಿ, ಉದ್ಯೋಗದಲ್ಲಿರುವ ಅಭ್ಯರ್ಥಿಗಳ ಅರ್ಜಿಗಳನ್ನು ತಿರಸ್ಕತಗೊಳಿಸಲು ಸೂಕ್ತ ಕ್ರಮ ಕೈಗೊಳ್ಳುವಂತೆ ಭರತ್ ಮುಂಡೋಡಿ ಸಲಹೆ ನೀಡಿದರು. ಸಭೆಯಲ್ಲಿ ದ.ಕ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ನರ್ವಾಡೆ ವಿನಾಯಕ್ ಕಾರ್ಬಾರಿ, ಜಿಲ್ಲಾ ಪಂಚಾಯತ್ ಯೋಜನಾ ಅಂದಾಜು ಮತ್ತು ಮೌಲ್ಯಮಾಪನ ಅಧಿಕಾರಿ ಸುಷ್ಮಾ ಕೆ. ಎಸ್, ಸಮಿತಿ ಉಪಾಧ್ಯಕ್ಷೆ ಸುರೇಖಾ ಚಂದ್ರಹಾಸ್, ನಾರಾಯಣ ನಾಯ್ಕ್, ಸದಸ್ಯರಾದ ಆಲ್ವಿನ್ ಕ್ಲೆಮೆಂಟ್ ಕುಟಿನ್ಹ, ಜಯಂತಿ ಬಿ.ಎ, ಉಮಾನಾಥ ಶೆಟ್ಟಿ, ಬಿ.ಪದ್ಮನಾಭ ಸಾಲ್ಯಾನ್ ಮತ್ತಿತರರು ಇದ್ದರು.
ರಾಯಚೂರು | ಟಿಪ್ಪರ್–ಬೈಕ್ ಮುಖಾಮುಖಿ ಢಿಕ್ಕಿ: ಯುವಕ ಸ್ಥಳದಲ್ಲೇ ಮೃತ್ಯು
ರಾಯಚೂರು : ಟಿಪ್ಪರ್ ಹಾಗೂ ದ್ವಿಚಕ್ರ ವಾಹನದ ನಡುವೆ ಮುಖಾಮುಖಿ ಢಿಕ್ಕಿ ಸಂಭವಿಸಿ ಯುವಕನೊಬ್ಬ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ರಾಯಚೂರು ಜಿಲ್ಲೆಯ ಸಿರವಾರ ತಾಲೂಕಿನ ಕವಿತಾಳ ಪಟ್ಟಣದ ಸಮೀಪ ನಡೆದಿದೆ. ಮೃತರನ್ನು ಚಡಕಲ್ ಗುಡ್ಡ ಗ್ರಾಮದ ನಿವಾಸಿ ಬಸವರಾಜ್ (32) ಎಂದು ಗುರುತಿಸಲಾಗಿದೆ. ಮೃತ ಬಸವರಾಜ್ ಅವರು ಸಿರವಾರದಿಂದ ಪಾಮನಕಲ್ಲೂರಿಗೆ ತಮ್ಮ ಬೈಕ್ನಲ್ಲಿ ತೆರಳುತ್ತಿದ್ದ ವೇಳೆ, ಲಿಂಗಸುಗೂರಿನಿಂದ ರಾಯಚೂರು ಕಡೆಗೆ ಹೊರಟಿದ್ದ ಟಿಪ್ಪರ್ ಎದುರಿನಿಂದ ಬಂದು ಢಿಕ್ಕಿ ಹೊಡೆದಿದೆ. ಢಿಕ್ಕಿಯ ತೀವ್ರತೆಗೆ ಬಸವರಾಜ್ ರಸ್ತೆ ಮೇಲೆ ಬಿದ್ದು ಗಂಭೀರ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಟಿಪ್ಪರ್ ಚಾಲಕನ ಅತಿವೇಗ ಮತ್ತು ನಿರ್ಲಕ್ಷ್ಯದ ಚಾಲನೆಯೇ ಅಪಘಾತಕ್ಕೆ ಪ್ರಮುಖ ಕಾರಣ ಎನ್ನಲಾಗಿದೆ. ಅಪಘಾತದ ಬಳಿಕ ಚಾಲಕ ಟಿಪ್ಪರ್ ಅನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾನೆ ಎಂದು ತಿಳಿದುಬಂದಿದೆ.
ಆ್ಯಪ್ ಮೂಲಕ ಆಧಾರ್ ಅಪ್ಡೇಟ್ | ನೀವು ತಿಳಿದುಕೊಳ್ಳಬೇಕಾಗಿರುವುದು ಏನು?
ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರದ ನೂತನ ಅಪ್ಲಿಕೇಶನ್ ಮೂಲಕ ನಿಮ್ಮ ಆಧಾರ್ ದತ್ತಾಂಶವನ್ನು ರಕ್ಷಿಸಬಹುದು. ಆಫ್ಲೈನ್ ಬಳಕೆಗೂ ಆ್ಯಪ್ ಲಭ್ಯವಿದೆ. ಆಧಾರ್ ಬಳಕೆ ಇತ್ತೀಚೆಗೆ ಅಧಿಕವಾಗುತ್ತಿದೆ. ಹೋಟೇಲ್, ಆಸ್ಪತ್ರೆ, ಮೊಬೈಲ್ ಅಂಗಡಿ, ಸರ್ಕಾರಿ ಕಚೇರಿ ಸೇರಿದಂತೆ ಇತರೆ ಎಲ್ಲಾ ಸೇವಾ ವಲಯಗಳಲ್ಲಿ ಗುರುತಿನ ದಾಖಲೆಯಾಗಿ ಆಧಾರ್ ಕಾರ್ಡ್ನ ನಕಲಿ ಪ್ರತಿ ನೀಡುತ್ತೇವೆ. ಇದರಿಂದ ಹೆಸರು, ವಿಳಾಸ, ಮೊಬೈಲ್ ಸಂಖ್ಯೆ ಸೇರಿದಂತೆ ಇತರೆ ವೈಯಕ್ತಿಕ ಮಾಹಿತಿಗಳು ಬಹಿರಂಗವಾಗುತ್ತಿವೆ. ಆದ್ದರಿಂದ ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ ನೂತನ ಅಪ್ಲಿಕೇಶನ್ ಮೂಲಕ ಆಧಾರ್ ದತ್ತಾಂಶವನ್ನು ರಕ್ಷಿಸಲಿದೆ. ಆಫ್ಲೈನ್ ಬಳಕೆಗೂ ಅಪ್ಲಿಕೇಶನ್ ಲಭ್ಯವಿದೆ. ‘ಒಂದೇ ಕುಟುಂಬ- ಒಂದು ಅಪ್ಲಿಕೇಶನ್’ ಯೋಜನೆಯಡಿ ಆಧಾರ್ ಅಪ್ಲಿಕೇಶನ್ ಕಾರ್ಯನಿರ್ವಹಿಸುತ್ತಿದೆ. ಒಂದು ಮೊಬೈಲ್ ಫೋನ್ ಬಳಸಿಕೊಂಡು 5 ಪ್ರೊಫೈಲ್ಗಳನ್ನು ಸೃಷ್ಟಿಸಬಹುದು. ಅಂದರೆ ಒಂದೇ ಸಾಧನದಲ್ಲಿ ಕುಟುಂಬದ 5 ಸದಸ್ಯರ ಆಧಾರ್ ಮಾಹಿತಿ ಇರಿಸಿಕೊಳ್ಳಬಹುದು. ಕ್ಯುಆರ್ ಕೋಡ್ ಸ್ಕ್ಯಾನ್ ಅಥವಾ ಪಿಡಿಎಫ್ ಮೂಲಕ ಆಧಾರ್ ಮಾಹಿತಿ ಹಂಚಿಕೊಳ್ಳಬಹುದು. ಕಾಗದ ರಹಿತ ಸೇವೆ ಇನ್ನು ಮುಂದೆ ವಿವಿಧ ಕೆಲಸಗಳಿಗಾಗಿ ದಾಖಲೆ ಸಲ್ಲಿಸುವ ಸಂದರ್ಭದಲ್ಲಿ ಆಧಾರ್ನ ಭೌತಿಕ ಪ್ರತಿ ನೀಡಬೇಕಾಗಿಲ್ಲ. ಆನ್ಲೈನ್ನಲ್ಲಿಯೇ 2 ಪ್ರಕಾರದಲ್ಲಿ ಹಂಚಿಕೊಳ್ಳಬಹುದು. ಅವುಗಳೆಂದರೆ, ಹಂಚಿಕೆ ಐಡಿ: ಬಳಕೆದಾರರು ‘ಪಾಸ್ವರ್ಡ್-ರಕ್ಷಿತ ಆಧಾರ್ ಪಿಡಿಎಫ್’ ರಚಿಸಬಹುದು. ಅವಶ್ಯಕತೆಗೆ ಅನುಗುಣವಾಗಿ ಹೆಸರು ಮತ್ತು ವಯಸ್ಸಿನಂತಹ ಆಯ್ಡ ವಿವರಗಳನ್ನು ಮಾತ್ರ ಹಂಚಿಕೊಳ್ಳಬಹುದು. ಕ್ಯುಆರ್ ಕೋಡ್ ಸ್ಕ್ಯಾನ್: ಅಪ್ಲಿಕೇಶನ್ನಲ್ಲಿ ನಿಮ್ಮ ಆಧಾರ್ ಕ್ಯುಆರ್ ಕೋಡ್ ಲಭ್ಯವಿರಲಿದೆ. ಅಗತ್ಯವಿದ್ದಾಗ ಆಧಾರ್ ಪರಿಶೀಲನೆಗೆ ಇದನ್ನು ಬಳಸಬಹುದು. ಕ್ಯುಆರ್ ಕೋಡ್ ಸ್ಕ್ಯಾನ್ ಮಾಡಿದರೆ ನಿಮ್ಮ ಮಾಹಿತಿ ಆನ್ಲೈನ್ ಮೂಲಕ ಹಸ್ತಾಂತರಗೊಳಿಸಬಹುದು. ಹೊಸ ಅಪ್ಲಿಕೇಶನ್, ಸಮಯ ಹಾಗೂ ಶ್ರಮ ಎರಡನ್ನೂ ಉಳಿಸಲಿದೆ. ಈ ಹಿಂದೆ ಮೊಬೈಲ್ ಸಂಖ್ಯೆ ಸೇರ್ಪಡೆ ಅಥವಾ ನವೀಕರಣಕ್ಕೆ ಆಧಾರ್ ಸೇವಾ ಕೇಂದ್ರಗಳಿಗೆ ಹೋಗಬೇಕಿತ್ತು. ಆಧಾರ್ ಅಪ್ಲಿಕೇಶನ್ನಲ್ಲಿ ಒಟಿಪಿ ಮತ್ತು ಮುಖ ಪರಿಶೀಲನೆ ಮಾಡುವ ಮೂಲಕ ಸುಲಭವಾಗಿ ಬದಲಿಸಬಹುದಾಗಿದೆ. ಆಧಾರ್ ಅಪ್ಲಿಕೇಶನ್ ಡೌನ್ಲೋಡ್ ಗೂಗಲ್ ಪ್ಲೇ ಸ್ಟೋರ್ ಅಥವಾ ಆ್ಯಪಲ್ ಸ್ಟೋರ್ನಲ್ಲಿ ಆ್ಯಪ್ ಉಚಿತವಾಗಿ ಲಭ್ಯವಿದೆ. ಡೌನ್ಲೋಡ್ ಮಾಡಿಕೊಂಡು ಆ್ಯಪ್ ತೆರೆಯಬೇಕು. ಅಲ್ಲಿ ಗೋಚರಿಸುವ ನಿಬಂಧನೆಗಳಿಗೆ ಅನುಮತಿ ನೀಡಬೇಕು. ಬಳಿಕ ‘ಬಿಗಿನ್ ಜರ್ನಿ’ ಆಯ್ಕೆ ಮಾಡಿ. ನಂತರ ‘ಕಂಟಿನ್ಯೂ ರಿಜಿಸ್ಟರ್’ ಮೇಲೆ ಕ್ಲಿಕ್ ಮಾಡಿ. ‘ರಿಜಿಸ್ಟರ್ ವಿತ್ ಜಸ್ಟ್ 3 ಸ್ಟೆಪ್ಸ್’ ಪುಟ ತೆರೆದುಕೊಳ್ಳುತ್ತದೆ. ಅಲ್ಲಿ ‘ಎಂಟರ್ ಯುವರ್ ಆಧಾರ್ ನಂಬರ್’ ಆಯ್ಕೆ ಮಾಡಿ. ನಿಮ್ಮ ಆಧಾರ್ ಸಂಖ್ಯೆಯನ್ನು ನಮೂದಿಸಿ. ‘ಕನ್ಫರ್ಮ್ ಆಧಾರ್ ನಂಬರ್’ ಮೇಲೆ ಕ್ಲಿಕ್ ಮಾಡಿ. ‘ಟರ್ಮ್ಸ್ ಆ್ಯಂಡ್ ಕಂಡೀಷನ್ಸ್’ ಪುಟ ತೆರೆದುಕೊಳ್ಳುತ್ತದೆ. ‘ಕಂಟಿನ್ಯೂ’ ಆಯ್ಕೆ ಮಾಡಿ. ಈಗ ಮೊಬೈಲ್ ಸಂಖ್ಯೆ ಪರೀಕ್ಷೆಯಾಗುfತದೆ. ಬಳಿಕ ‘ಫೇಸ್ ಅಥೆಂಟಿಫಿಕೇಶನ್’ ಪುಟ ತೆರೆದುಕೊಳ್ಳುತ್ತದೆ. ಅಲ್ಲಿ ‘ಸ್ಟಾರ್ಟ್ ಫೇಸ್ ಅಥೆಂಟಿಫಿಕೇಶನ್’ ಕ್ಲಿಕ್ ಮಾಡಿ ನಿಮ್ಮ ಮುಖ ಸ್ಕ್ಯಾನ್ ಮಾಡಿ. ನಿಮ್ಮ ಆಧಾರ್ ಅಪ್ಲಿಕೇಶನ್ ದೃಢೀಕರಣವಾಗುತ್ತದೆ. ಆಧಾರ್ ಅಪ್ಲಿಕೇಶನ್ಗೆ ಪಾಸ್ವರ್ಡ್ ಹೊಂದಿಸಬಹುದು. ಈಗ ಆಧಾರ್ ಅಪ್ಲಿಕೇಶಣ್ ಸಂಪೂರ್ಣ ಸೇವೆಗೆ ಸಿದ್ಧವಾಗುತ್ತದೆ. ಸೌಲಭ್ಯ ಪಡೆಯುವುದು ಹೇಗೆ? ಅಪ್ಲಿಕೇಶನ್ ಮುಖಪುಟ ತೆರೆಯಿರಿ. ಇದರಲ್ಲಿ ಹಲವು ಆಯ್ಕೆಗಳಿವೆ. ಕೆಳಭಾಗದಲ್ಲಿ ‘ಸೆಲೆಕ್ಟಿವ್ ಶೇರ್, ಡೌನ್ಲೋಡ್ ಆಧಾರ್, ಬಯೊಮೆಟ್ರಿಕ್ ಅನ್ಲಾಕ್ಡ್, ಹೋಮ್, ಸೆಕ್ಯುರಿಟಿಮ ಸರ್ವಿಸಸ್ ಮತ್ತು ಹೆಲ್ಪ್ ಸೇರಿದಂತೆ ನಿಮ್ಮ ಭಾಷೆಯನ್ನು ಆರಿಸಬಹುದು. ಸೆಲೆಕ್ಟ್ ಶೇರ್ ಆರಿಸಿದರೆ, ನಿಮ್ಮ ಆಧಾರ್ ಮಾಹಿತಿಯನ್ನು ಬೇರೆಯವರಿಗೆ ಕಳುಹಿಸಬಹುದು. ಇದರಲ್ಲಿ ನಿಮಗೆ ಅಗತ್ಯವಿರುವ ಮಾಹಿತಿ ಆರಿಸಿಕೊಳ್ಳಬಹುದು. (ಫೋಟೋ ಮತ್ತು ವಿಳಾಸ ಮಾತ್ರ ಅಗತ್ಯವಿದ್ದರೆ ಅದನ್ನು ಆಯ್ಕೆ ಮಾಡಿ ಕಳುಹಿಸಬಹುದು). ಶೇರ್ ಕಸ್ಟಮ್ ಐಡಿ ಆಯ್ಕೆ ಮಾಡಿ ಮಾಹಿತಿ ಹಂಚಿಕೊಳ್ಳಬಹುದು. ಡೌನ್ಲೋಡ್ ಆಧಾರ್ ಆಯ್ಕೆ ಮಾಡಿಕೊಂಡು ಎಲ್ಲೆಡೆ ಯಾವಾಗ ಬೇಕಾದರೂ ಡೌನ್ಲೋಡ್ ಮಾಡಬಹುದು. ಆಧಾರ್ ಪಿಡಿಎಫ್ಗೆ ಸುರಕ್ಷಿತ ಪಾಸ್ವರ್ಡ್ ರಚಿಸುವ ಅವಕಾಶವಿದೆ. ಸೆಕ್ಯುರಿಟಿ ಆಯ್ಕೆಯನ್ನು ಕ್ಲಿಕ್ ಮಾಡಿದರೆ ನೀವು ಈವರೆಗೆ ಆಧಾರ್ನಲ್ಲಿ ಮಾಡಿರುವ ಎಲ್ಲ ಬದಲಾವಣೆಗಳ ಇತಿಹಾಸ ಕಾಣಬಹುದು. ಜೊತೆಗೆ ನಿಮ್ಮ ಆಧಾರ್ ಅಪ್ಲಿಕೇಶನ್ನ ಪಾಸ್ವರ್ಡ್ ಬದಲಿಸಲು ಅವಕಾಶವಿದೆ. ಸರ್ವಿಸಸ್ ಆಯ್ಕೆಯನ್ನು ಕ್ಲಿಕ್ ಮಾಡಿದರೆ ಮೊಬೈಲ್ ನಂಬರ್ ಅಪ್ಡೇಟ್ ಹಾಗೂ ಅಡ್ರೆಸ್ ಅಪ್ಡೇಟ್ ಸೇವೆಗಳು ಲಭ್ಯವಾಗುತ್ತವೆ. ಮೊಬೈಲ್ ಸಂಖ್ಯೆ ನವೀಕರಣ ಮೊಬೈಲ್ ಸಂಖ್ಯೆಯನ್ನು ನವೀಕರಿಸಲು ಬಯಸಿದರೆ ‘ಮೊಬೈಲ್ ನಂಬರ್ ಅಪ್ಡೇಟ್’ ಆಯ್ಕೆಯನ್ನು ಕ್ಲಿಕ್ ಮಾಡಿ. ಬಳಿಕ ‘ಕಂಟಿನ್ಯೂ ಟು ಅಪ್ಡೇಟ್ ಮೊಬೈಲ್ ನಂಬರ್’ ಆಯ್ಕೆ ಮಾಡಿ. ಆಧಾರ್ನೊಂದಿಗೆ ಜೋಡಣೆಯಾಗಿರುವ ಮೊಬೈಲ್ ಸಂಖ್ಯೆಗೆ ಒಟಿಪಿ ಬರುತ್ತದೆ. ನವೀಕರಿಸಬೇಕಾದ ಹೊಸ ಮೊಬೈಲ್ ಸಂಖ್ಯೆಯನ್ನು ನಮೂದಿಸಿ ಹೊಸ ಸಂಖ್ಯೆಗೆ ಒಟಿಪಿ ಪಡೆಯಿರಿ. ನಂತರ ಯುಪಿಐ ಮೂಲಕ ನಿಗದಿತ ಶುಲ್ಕ ಪಾವತಿಸಿದರೆ ಮೊಬೈಲ್ ಸಂಖ್ಯೆ ನಿಗದಿತ ಅವಧಿಯೊಳಗೆ ನವೀಕರಣಗೊಳ್ಳುತ್ತದೆ. ವಿಳಾಸ ಅಪ್ಡೇಟ್ ಮಾಡುವುದು ವಿಳಾಸವನ್ನು ಬದಲಿಸಲು ಬಯಸಿದರೆ ‘ಅಡ್ರೆಸ್ ಅಪ್ಡೇಟ್’ ಆಯ್ಕೆ ಮಾಡಿ. ‘ಮೈ ಡಾಕ್ಯುಮೆಂಟ್ಸ್’ ಆಯ್ಕೆ ಮಾಡಿ. ‘ಕಂಟಿನ್ಯೂ ಟು ಅಪ್ಡೇಟ್ ಅಡ್ರೆಸ್’ ಕ್ಲಿಕ್ ಮಾಡಿ. ‘ಒಟಿಪಿ’ ದೃಢೀಕರಿಸಿ. ‘ಕಂಟಿನ್ಯೂ’ ಆಯ್ಕೆಮಾಡಿ. ಯಾವುದಾದರೂ ದಾಖಲೆ ಆಯ್ಕೆಮಾಡಿ. ದಾಖಲೆ ಆಯ್ಕೆ ಮಾಡಿದ ನಂತರ ‘ಕಂಟಿನ್ಯೂ’ ಮೇಲೆ ಕ್ಲಿಕ್ ಮಾಡಿ. ‘ಪಿಡಿಎಫ್’ ರೂಪದಲ್ಲಿರುವ ನಿಮ್ಮ ದಾಖಲೆ ಅಪ್ಲೋಡ್ ಮಾಡಬಹುದು. ಅಥವಾ ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಬಹುದು. ನಿಮ್ಮ ಲಭ್ಯತೆಗೆ ಅನುಗುಣವಾಗಿ ‘ಸ್ಕ್ಯಾನ್ ಡಾಕ್ಯುಮೆಂಟ್ ಡೈರೆಕ್ಟರಿ’ ಅಥವಾ ‘ಸೆಲೆಕ್ಟ್ ಫೈಲ್ ಟು ಅಪ್ಲೋಡ್’ ಯಾವುದಾದರೂ ಒಂದನ್ನು ಆರಿಸಿ ದಾಖಲೆ ಸಲ್ಲಿಸಿ. ‘ಕಂಟಿನ್ಯೂ ಟು ಆಡ್ ನ್ಯೂ ಅಡ್ರೆಸ್’ ಆಯ್ಕೆ ಮಾಡಿ. ಬಳಿಕ ನಿಮ್ಮ ಮನೆ ವಿಳಾಸ, ಪಿನ್ಕೋಡ್ ಜಿಲ್ಲೆ, ರಾಜ್ಯ, ಹಳ್ಳಿ, ಅಂಚೆ ಕಚೇರಿಯ ಮಾಹಿತಿ ಭರ್ತಿ ಮಾಡಿ. ಮುಖ ಪರಿಶೀಲನೆ ಮಾಡಿ. ನಿಗದಿತ ಶುಲ್ಕ ಪಾವತಿಸಿದರೆ ನಿಮ್ಮ ವಿಳಾಸ ಬದಲಾಗುತ್ತದೆ. ಕುಟುಂಬಸ್ಥರ ಪ್ರೊಫೈಲ್ ಸೇರಿಸುವುದು ಆಧಾರ್ ಅಪ್ಲಿಕೇಶಣ್ ಮುಖಪುಟದ ಮೂಲೆಯಲ್ಲಿ ‘ಆಡ್ ಪ್ರೊಫೈಲ್’ ಕಾಣಿಸುತ್ತದೆ. ಅಲ್ಲಿ ನಿಮ್ಮ ಫೋಟೋ ಮೇಲೆ ಕ್ಲಿಕ್ ಮಾಡಿ. ಬಳಿಕ ‘ಆಡ್ ಎ ನ್ಯೂ ಪ್ರೊಫೈಲ್ ಇನ್ 2 ಸ್ಟೆಪ್’ ಪುಟ ತೆರೆದುಕೊಳ್ಳುತ್ತದೆ. ಅಲ್ಲಿ ‘ಎಂಟರ್ ಆಧಾರ್ ನಂಬರ್’ ಆಯ್ಕೆ ಮಾಡಿ. ನಂತರ ಕುಟುಂಬದ ಸದಸ್ಯರ ಆಧಾರ್ ಸಂಖ್ಯೆ ನಮೂದಿಸಿ. ಅವರ ಮುಖ ಪರಿಶೀಲನೆ ಮಾಡಿದರೆ ಅಪ್ಲಿಕೇಶನ್ ಜೊತೆ ಅವರ ಪ್ರೊಫೈಲ್ ಲಿಂಕ್ ಆಗುತ್ತದೆ. ಹೀಗೆ ಮನೆಯ 5 ಸದಸ್ಯರ ಆಧಾರ್ ಮಾಹಿತಿ ಸೇರಿಸಬಹುದು. ಜೊತೆಗೆ ಅವರ ಮೊಬೈಲ್ ನಂಬರ್ ಮತ್ತು ವಿಳಾಸವನ್ನು ನವೀಕರಿಸಬಹುದು. ಕ್ಯುಆರ್ ಕೋಡ್ ಪಡೆಯುವುದು ಅಪ್ಲಿಕೇಶನ್ ಮುಖಪುಟದ ಮೇಲ್ಭಾಗದಲ್ಲಿರುವ ನಿಮ್ಮ ಪ್ರೊಫೈಲ್ ಚಿತ್ರದ ಮೇಲೆ ಕ್ಲಿಕ್ ಮಾಡಿದರೆ ನಿಮ್ಮ ಆಧಾರ್ನ ಕ್ಯುಆರ್ ಕೋಡ್ ಸೃಷ್ಟಿಯಾಗುತ್ತದೆ.
ರೈಲ್ವೆ ಪರೀಕ್ಷೆಗಳಲ್ಲಿ ಕನ್ನಡಕ್ಕೆ ಮತ್ತೆ ಅನ್ಯಾಯ, ಆದೇಶ ಹಿಂಪಡೆಯದಿದ್ದರೆ ರಾಜ್ಯಾದ್ಯಂತ ಹೋರಾಟ: ಕರವೇ ಎಚ್ಚರಿಕೆ
ಬೆಂಗಳೂರು: ರೈಲ್ವೇ ಪರೀಕ್ಷೆಗಳನ್ನು ಕನ್ನಡದಲ್ಲಿ ನಡೆಸಬೇಕೆಂಬ ಬೇಡಿಕೆಯನ್ನು ಮತ್ತೆ ಕೈಬಿಟ್ಟಿರುವ ರೈಲ್ವೇ ಇಲಾಖೆಯ ಕ್ರಮಕ್ಕೆ ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಇದು ಕೇವಲ ಭಾಷಾ ಅನ್ಯಾಯವಲ್ಲ, ಕನ್ನಡಿಗರ ಸ್ವಾಭಿಮಾನ ಮತ್ತು ಹಕ್ಕುಗಳ ಮೇಲಿನ ನೇರ ದಾಳಿ ಎಂದು ಕರವೇ ಅಧ್ಯಕ್ಷ ಟಿ.ಎ.ನಾರಾಯಣಗೌಡ ಖಂಡಿಸಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರು,
ಮಂಗಳೂರು ನಗರದಲ್ಲಿ ರಸ್ತೆ ಸುರಕ್ಷತಾ ಜಾಥಾ
ಮಂಗಳೂರು, ಫೆ.3: ದ.ಕ. ಜಿಲ್ಲಾಡಳಿತ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಸಾರಿಗೆ ಇಲಾಖೆ, ಪೊಲೀಸ್ ಇಲಾಖೆ ಇವರ ಸಹಯೋಗದಲ್ಲಿ ಉಪಸಾರಿಗೆ ಆಯುಕ್ತರು ಮತ್ತು ಹಿರಿಯ ಪ್ರಾದೇಶಿಕ ಸಾರಿಗೆ ಅಧಿಕಾರಿಯವರ ಕಚೇರಿ ಹಾಗೂ ದಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಇವರ ಸಂಯುಕ್ತ ಆಶ್ರಯದಲ್ಲಿ 37ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚರಣೆ -2026 ಅಂಗವಾಗಿ ನಗರದಲ್ಲಿ ಮಂಗಳವಾರ ರಸ್ತೆ ಸುರಕ್ಷತಾ ಜಾಥಾ ನಡೆಯಿತು. ಕುದ್ಮುಲ್ ರಂಗರಾವ್ ಪುರಭವನದ ಬಳಿಯಿಂದ ಸ್ಟೇಟ್ ಬ್ಯಾಂಕ್ ತನಕ ನಡೆದ ಜಾಥಾಕ್ಕೆ ದ.ಕ. ಜಿಲ್ಲಾ ಹಿರಿಯ ಸಿವಿಲ್ ನ್ಯಾಯಾಧೀಶೆ ಮತ್ತು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಜೈಬುನ್ನಿಸಾ ಚಾಲನೆ ನೀಡಿದರು. ಮಂಗಳೂರು ನಗರದ ಸಂಚಾರ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತೆ ನಜ್ಮಾ ಫಾರೂಕಿ, ಮಂಗಳೂರು ಉಪಸಾರಿಗೆ ಆಯುಕ್ತರು ಮತ್ತು ಹಿರಿಯ ಪ್ರಾದೇಶಿಕ ಸಾರಿಗೆ ಅಧಿಕಾರಿ (ಪ್ರಭಾರ)ಮುರುಗೇಂದ್ರ ಬಸವರಾಜ ಶಿರೋಳಕರ , ಪೊಲೀಸ್, ಸಾರಿಗೆ ಇಲಾಖಾ ಅಧಿಕಾರಿಗಳು, ಶಿಕ್ಷಕರು ಶಾಲಾ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಜಾಥಾದಲ್ಲಿ ಭಾಗವಹಿಸಿದ್ದರು.
ʼಅಧಿಕಾರ ಸಿಕ್ಕರೆ ಮೀಸಲಾತಿ ಬೇಕು ಎನ್ನುವವರನ್ನು ಜೈಲಿಗೆ ಹಾಕ್ತೇನೆʼ : ಬಿಜೆಪಿ ಮುಖಂಡ ಮಣಿಕಂಠ ರಾಠೋಡ್ ಹೇಳಿಕೆ ವೈರಲ್
ಕಲಬುರಗಿ : ʼಅಧಿಕಾರ ಸಿಕ್ಕರೆ ಮೀಸಲಾತಿ ಬೇಕು ಎನ್ನುವವರನ್ನು ಜೈಲಿಗೆ ಹಾಕ್ತೇನೆʼ ಎಂದು ಹೇಳಿಕೆ ನೀಡಿದ್ದ ಚಿತ್ತಾಪುರ ವಿಧಾನಸಭಾ ಕ್ಷೇತ್ರದ ಪರಾಜಿತ ಬಿಜೆಪಿ ಅಭ್ಯರ್ಥಿ ಮಣಿಕಂಠ ರಾಠೋಡ್ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗುತ್ತಿದ್ದು, ಸಾರ್ವಜನಿಕ ವಲಯದಲ್ಲಿ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ವಿಡಿಯೋದಲ್ಲಿ ಏನಿದೆ? : ‘ಮಣಿಕಂಠ ರಾಠೋಡ್ ಬಿಜೆಪಿ’ ಎಂಬ ಫೇಸ್ಬುಕ್ ಪೇಜ್ ನಲ್ಲಿ ಹಂಚಿಕೊಂಡಿರುವ ಈ ವಿಡಿಯೋದಲ್ಲಿ ಮೀಸಲಾತಿ ಕುರಿತಾಗಿ ನೀಡಿರುವ ಹೇಳಿಕೆ ವ್ಯಾಪಕವಾಗಿ ಹರಿದಾಡುತ್ತಿದೆ. ನನಗೆ ಪ್ರಧಾನಿ ಆಗಲು ಅವಕಾಶ ಸಿಕ್ಕರೆ ಅದೆಂತ ಚಮತ್ಕಾರ ಮಾಡುತ್ತೇನೆಂದರೆ ಅಮೆರಿಕಾ, ಬ್ರಿಟನ್ ದೇಶದ ಜನರು ಬಂದು ಭಾರತೀಯ ಪೌರತ್ವ ಕೇಳಬೇಕು. ಇದು ಸಾಧ್ಯವಾಗಿಸಲು ದೇಶದಲ್ಲಿ ಮೀಸಲಾತಿ ವ್ಯವಸ್ಥೆಯನ್ನು ಬದಲಾವಣೆ ಮಾಡಬೇಕಾಗಿದೆ. ಕೇವಲ ಬಡವರಿಗಷ್ಟೇ ಮೀಸಲಾತಿ ಸಿಗಬೇಕು. ಜಾತಿ ಆಧಾರದಲ್ಲಿ ಮೀಸಲಾತಿ ರದ್ದಾಗಬೇಕು. ದೇಶದಲ್ಲಿ ಜಾತಿಯ ಆಧಾರದಲ್ಲಿ ಮೀಸಲಾತಿ ಜಾರಿಯಲ್ಲಿದೆ. ಅದನ್ನು ಮೊದಲು ರದ್ದು ಮಾಡಬೇಕಾಗಿದೆ. ಇದರ ಬದಲಾಗಿ ಬಡವರಿಗೆ ಹಂಚಿಕೆ ಮಾಡುತ್ತೇನೆ. ಶ್ರೀಮಂತರಿಗೆ ಇದರ ಸೌಲಭ್ಯ ಸಿಗದ ಹಾಗೆ ಮಾಡುತ್ತೇನೆ. ಹೀಗೆ ಮಾಡಿದರೆ ಮುಂದಿನ ಹತ್ತು ವರ್ಷಗಳಲ್ಲಿ ಭಾರತ ವಿಶ್ವದಲ್ಲಿ ಪ್ರಕಾಶಿಸಲಿದೆ ಹಾಗೂ ಭಾರತೀಯ ರೂಪಾಯಿ ಮೌಲ್ಯ ಡಾಲರ್ ಗೂ ಹೆಚ್ಚಾಗಲಿದೆ ಎಂದಿದ್ದಾರೆ. ನಾನು ಆ ಜಾತಿ ಈ ಜಾತಿ ಎಂದು ಹೇಳುವವರಿಗೆ ಭಾರತೀಯ ಪೌರತ್ವ ಕೊಡಬಾರದು. ಮೀಸಲಾತಿ ಬೇಕು ಎನ್ನುವವರನ್ನು ಜೈಲಿಗೆ ಹಾಕುತ್ತೇನೆ ಎಂದು ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ. ಮಣಿಕಂಠ ರಾಠೋಡ್ ಚಿತ್ತಾಪುರ ವಿಧಾನಸಭೆ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋಲನ್ನು ಕಂಡಿದ್ದರು. ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಸ್ಪರ್ಧಿಸಿ ಸೋಲು ಅನುಭವಿಸಿದ್ದರು. ಅಲ್ಲದೆ ಹಲವು ವಿವಾದಗಳಲ್ಲಿ ಅವರು ಸಿಲುಕಿಕೊಂಡಿದ್ದರು. ಪ್ರಿಯಾಂಕ್ ಖರ್ಗೆಗೆ ಬೆದರಿಕೆ ಪ್ರಕರಣ : ಆರೆಸ್ಸೆಸ್ ಕುರಿತಂತೆ ಸಚಿವ ಪ್ರಿಯಾಂಕ್ ಖರ್ಗೆ ಅವರು ನೀಡಿದ್ದ ಹೇಳಿಕೆಗೆ ಪ್ರತಿಕ್ರಿಯೆ ನೀಡುವ ವೇಳೆ ಪತ್ರಿಕಾಗೋಷ್ಠಿಯಲ್ಲಿ, ಇಂದು ಬೆದರಿಕೆ ಕರೆಗಳು ಬರುತ್ತಿವೆ, ನಾಳೆ ನಿಮ್ಮ ಮನೆವರೆಗೂ ಬರಬಹುದು” ಎಂದು ಹೇಳಿದ್ದ ಹಿನ್ನೆಲೆಯಲ್ಲಿ, ಜೀವ ಬೆದರಿಕೆ ಆರೋಪದಡಿ ಮಣಿಕಂಠ ರಾಠೋಡ್ ವಿರುದ್ಧ ದೂರು ದಾಖಲಾಗಿತ್ತು. ಇದೀಗ ಅವರ ಮೀಸಲಾತಿ ವಿರೋಧಿ ಹೇಳಿಕೆಗಳು ಸಂವಿಧಾನಬದ್ಧ ಹಕ್ಕುಗಳಿಗೆ ವಿರುದ್ಧವಾಗಿವೆ ಎಂಬ ಆರೋಪಗಳು ಕೇಳಿಬಂದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆ ಹಾಗೂ ಆಕ್ರೋಶ ವ್ಯಕ್ತವಾಗುತ್ತಿದೆ.
ಮಂಗಳೂರು ಮೂಲದ ಅಹ್ಯಾನ್ ಅನ್ವರ್ ಅಂತರ್ರಾಷ್ಟ್ರೀಯ ರೋಲರ್ ಸ್ಕೇಟಿಂಗ್ ಕ್ರೀಡಾ ಪ್ರಮೋಷನ್ ಪಂದ್ಯಾಟಕ್ಕೆ ಆಯ್ಕೆ
ಮಂಗಳೂರು: ಮಂಗಳೂರು ಮೂಲದ ಅಹ್ಯಾನ್ ಅನ್ವರ್ ಗೋವಾದ ಪಣಜಿ ಯಲ್ಲಿ ನಡೆದ ರಾಜ್ಯ ಮಟ್ಟದ ಮಿನಿ /ಸೆಕೆಂಡರಿ ಶಾಲಾ ಕ್ರೀಡೆ ಯಲ್ಲಿ U-11 ಬಾಲಕರ ರೋಲರ್ ಸ್ಕೇಟಿಂಗ್ ನಲ್ಲಿ ಚಿನ್ನದ ಪದಕ ಹಾಗೂ ರಿಂಕ್ 1 ರಲ್ಲಿ ಮೂರನೇ ಸ್ಥಾನ ಪಡೆದು ಕಂಚಿನ ಪದಕ ವಿಜೇತರಾಗಿದ್ದಾರೆ. ಜೊತೆಗೆ ದಕ್ಷಿಣ ಗೋವಾದ ಮಡಗಾoವ್ ನಲ್ಲಿ ಫೆಬ್ರವರಿ 1 ರಂದು ನಡೆದ ಗೋವಾ ಸ್ಕೇಟಿಂಗ್ ಫೆಸ್ಟಿವಲ್ ಟೂರ್ನಮೆಂಟ್ ನಲ್ಲಿ, 11 ವರ್ಷ ದೊಳಗಿನ ಬಾಲಕರ ವಿಭಾಗ ದಲ್ಲಿ 1000 ಮೀಟರ್ ಮತ್ತು 800 ಮೀಟರ್ ಸ್ಕೇಟಿಂಗ್ ನಲ್ಲಿ ಎರಡು ಚಿನ್ನದ ಪದಕ ಪಡೆದು ಈ ವರ್ಷ ಇಂಡೋನೇಷ್ಯಾದಲ್ಲಿ ನಡೆಯುವ ಅಂತರ್ ರಾಷ್ಟ್ರೀಯ ರೋಲರ್ ಸ್ಕೇಟಿಂಗ್ ಕ್ರೀಡಾ ಪ್ರಮೋಷನ್ ಪಂದ್ಯಾಟಕ್ಕೆ ಆಯ್ಕೆ ಯಾಗಿರುತ್ತಾನೆ. ಅಬ್ದುಲ್ ಅನ್ವರ್ ಕುತ್ತೆತ್ತೂರು ಹಾಗೂ ಹಸೀನಾ ದಂಪತಿಯ ಪುತ್ರನಾಗಿರುವ ಇವನು ಪ್ರಸ್ತುತ ಯೂನಿವರ್ಸಲ್ ರೋಲರ್ ಸ್ಕೇಟಿಂಗ್ ಕ್ಲಬ್ ಮಡಗಾoವ್ ಗೋವಾ ಇದರ ಪ್ರತಿನಿಧಿಯಾಗಿರುತ್ತಾನೆ.
India Russia: ರಷ್ಯಾ ಜೊತೆಗಿನ ತೈಲ ಖರೀದಿ ಒಪ್ಪಂದಕ್ಕೆ ಗುಡ್ಬೈ ಹೇಳಿದ ಭಾರತ, ಇದರ ಪರಿಣಾಮ ಏನು ತಿಳಿಯಿರಿ
ಭಾರತ ಮತ್ತು ರಷ್ಯಾ ನಡುವೆ ಅತ್ಯಂತ ಗಟ್ಟಿಯಾದ ಸಂಬಂಧ ಇದ್ದು, ಎರಡೂ ದೇಶಗಳು ಭಾರಿ ದೊಡ್ಡ ಮಟ್ಟದಲ್ಲಿ ದ್ವಿಪಕ್ಷೀಯ ಸಂಬಂಧ ಬೆಳೆಸಿಕೊಂಡು ಬಂದಿವೆ. ಇದೇ ಕಾರಣಕ್ಕೆ ಭಾರತ &ರಷ್ಯಾ ಸ್ನೇಹ ಕಂಡು ಬೇಸರ ಹೊರ ಹಾಕುವವರ ಸಂಖ್ಯೆ ಕೂಡ ಹೆಚ್ಚಾಗಿದೆ. ಇಷ್ಟೆಲ್ಲಾ ಇದ್ದರೂ ಎರಡೂ ದೇಶಗಳು ಅತ್ಯುತ್ತಮವಾಗಿ ಸಂಬಂಧ ಉಳಿಸಿಕೊಂಡು ಹೋಗುತ್ತಿವೆ, ಆದರೂ ದಿಢೀರ್ ಭಾರತ
ಭಾರತೀಯ ಅಂಚೆ ಇಲಾಖೆಯಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ; ಯಾರು ಅರ್ಜಿ ಸಲ್ಲಿಸಬಹದು?
ಅಭ್ಯರ್ಥಿಗಳು 10ನೇ ತರಗತಿಯನ್ನು ಗಣಿತ, ಇಂಗ್ಲಿಷ್ ಭಾಷೆಯ ಜೊತೆಗೆ ಸ್ಥಳೀಯ ಭಾಷೆಯಲ್ಲಿ ಪಾಸಾಗಿರಬೇಕು. ವಿವರಗಳಿಗೆ ಅಧಿಕೃತ ಅಧಿಸೂಚನೆಯನ್ನು ಗಮನಿಸಿ. ಭಾರತ ಅಂಚೆ ಇಲಾಖೆಯು ಇಂಡಿಯಾ ಪೋಸ್ಟ್ ಗ್ರಾಮೀಣ್ ಡಾಕ್ ಸೇವಾ ಜಿಡಿಎಸ್ ಪೋಸ್ಟ್ ಗೆ ನೇಮಕಾತಿಗಾಗಿ ಅಧಿಕೃತ ವೆಬ್ಸೈಟ್ನಲ್ಲಿ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಈ ನೇಮಕಾತಿ ಸುಮಾರು 28000+ ಹುದ್ದೆಗಳಿಗೆ ಆಗುತ್ತಿದೆ. ಭಾರತ ಅಂಚೆ ಹುದ್ದೆಗಳಿಗೆ ಅರ್ಜಿ ಸಲ್ಲಿಕೆಯು 2026 ಜನವರಿ 31ರಂದು ಪ್ರಾರಂಭವಾಗಿದೆ ಮತ್ತು ಅಭ್ಯರ್ಥಿಗಳು 2026 ಫೆಬ್ರವರಿ 14ರವರೆಗೆ ಅರ್ಜಿ ಸಲ್ಲಿಸಬಹುದು. ಅಗತ್ಯವಿರುವ ಕನಿಷ್ಠ ವಯಸ್ಸು 2026 ಜನವರಿ 01ರಂತೆ 18 ವರ್ಷಗಳು ಮತ್ತು ಗರಿಷ್ಠ ವಯಸ್ಸು 40 ವರ್ಷಗಳು. ಅಭ್ಯರ್ಥಿಗಳು ಭಾರತ ಅಂಚೆ ಜಿಡಿಎಸ್ ನೇಮಕಾತಿ 2026 ಗಾಗಿ ಸಂಪೂರ್ಣ ವಿವರಗಳನ್ನು ಕೆಳಗೆ ಪರಿಶೀಲಿಸಬೇಕು. ಆಸಕ್ತ ಅಭ್ಯರ್ಥಿಗಳು ಈ ಕೆಳಗಿನ ಲಿಂಕ್ನಲ್ಲಿ ಅರ್ಜಿ ಸಲ್ಲಿಸಬಹುದು: https://indiapost.gov.in/gdsonlineengagement ► ಪ್ರಮುಖ ದಿನಾಂಕಗಳು * ಅಧಿಸೂಚನೆ ದಿನಾಂಕ: 30 ಜನವರಿ 2026 * ಆನ್ಲೈನ್ ಅರ್ಜಿ ಆರಂಭ: 31 ಜನವರಿ 2026 * ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 14 ಫೆಬ್ರವರಿ 2026 * ಶುಲ್ಕ ಪಾವತಿಗೆ ಕೊನೆಯ ದಿನಾಂಕ: 16 ಫೆಬ್ರವರಿ 2026 * ತಿದ್ದುಪಡಿ ದಿನಾಂಕ: 18 - 19 ಫೆಬ್ರವರಿ 2026 * ಮೆರಿಟ್ ಪಟ್ಟಿ: ಶೀಘ್ರವೇ ಅಪ್ಡೇಟ್ ಮಾಡಲಾಗುವುದು. * ವಿವರಗಳಿಗೆ ಅಭ್ಯರ್ಥಿಗಳು ಇಂಡಿಯಾ ಪೋಸ್ಟ್ ಜಿಡಿಎಸ್ ಅಧಿಕೃತ ವೆಬ್ತಾಣವನ್ನು ಪರೀಕ್ಷಿಸಿ ದೃಢಪಡಿಸಬಹುದು. ► ಅರ್ಜಿ ಶುಲ್ಕ ಜನರಲ್/ಒಬಿಸಿ:100 ರೂ. ಎಸ್ಸಿ/ಎಸ್ಟಿ/ ಪಿಡಬ್ಲ್ಯುಡಿ/ಮಹಿಳೆಯರು: 0 ರೂ. ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್, ಇಂಟರ್ನೆಟ್ ಬ್ಯಾಂಕಿಂಗ್, ಐಎಂಪಿಎಸ್, ಕ್ಯಾಶ್ ಕಾರ್ಡ್/ ಮೊಬೈಲ್ ವಾಲೆಟ್ ಮೂಲಕ ಪಾವತಿಸುವ ಅವಕಾಶವಿದೆ. ► ವಯೋಮಿತಿ * ಕನಿಷ್ಠ ವಯಸ್ಸು- 18 ವರ್ಷಗಳು * ಗರಿಷ್ಠ ವಯಸ್ಸು 40 ವರ್ಷಗಳು 2026 ಜನವರಿ 1ಕ್ಕೆ ಅನ್ವಯಿಸುವಂತೆ ವಯೋಮಿತಿ ನಿರ್ಧರಿಸಲಾಗುವುದು. ಹೆಚ್ಚುವರಿ ವಯೋಮಿತಿ ಸಡಿಲಿಕೆಯನ್ನು ಗ್ರಾಮೀಣ್ ಡಾಕ್ ಸೇವಕ್ ಜಿಡಿಎಸ್ 2026 ನೇಮಕಾತಿ ನಿಯಮಗಳಿಗೆ ತಕ್ಕಂತೆ ನೀಡಲಾಗುವುದು. ► ಒಟ್ಟು ಹುದ್ದೆಗಳು ಸುಮಾರು 28000+ ಹುದ್ದೆಗಳು ► ಹುದ್ದೆಯ ಹೆಸರು ಗ್ರಾಮೀಣ್ ಡಾಕ್ ಸೇವಕ್ ಜಿಡಿಎಸ್ 2026 ಬ್ರಾಂಚ್ ಪೋಸ್ಟ್ಮಾಸ್ಟರ್ (ಬಿಪಿಎಂ), ಅಸಿಸ್ಟಂಟ್ ಬ್ರಾಂಚ್ ಪೋಸ್ಟ್ಮಾಸ್ಟರ್ (ಎಬಿಪಿಎಂ), ಡಾಕ್ ಸೇವಕ್ ► ವಿದ್ಯಾರ್ಹತೆ ಅಭ್ಯರ್ಥಿಗಳು 10ನೇ ತರತಿಯನ್ನು ಗಣಿತ, ಇಂಗ್ಲಿಷ್ ಭಾಷೆಯ ಜೊತೆಗೆ ಸ್ಥಳೀಯ ಭಾಷೆಯಲ್ಲಿ ಪಾಸಾಗಿರಬೇಕು. ವಿವರಗಳಿಗೆ ಅಧಿಕೃತ ಅಧಿಸೂಚನೆಯನ್ನು ಗಮನಿಸಿ. ► ಆಯ್ಕೆ ಪ್ರಕ್ರಿಯೆ ಮೆರಿಟ್ ಪಟ್ಟಿಯ ಆಧಾರದಲ್ಲಿ ಆಯ್ಕೆ ದಾಖಲೆ ಪರಿಶೀಲನೆ ಅಂತಿಮ ಆಯ್ಕೆ
ಜನರು ಮರೆತರೂ ಸರ್ಕಾರ ಎನ್ಪಿಆರ್ ಅನ್ನು ಮರೆತಿಲ್ಲ. ದೇಶದ ಸಾಮಾನ್ಯ ನಿವಾಸಿಗಳ ಪಟ್ಟಿಯಾಗಿರುವ ರಾಷ್ಟ್ರೀಯ ಜನಸಂಖ್ಯಾ ನೋಂದಣಿಯಲ್ಲಿ (NPR) ಭಾರತದಲ್ಲಿ ವಾಸಿಸುವ ಪ್ರತಿಯೊಬ್ಬ ನಿವಾಸಿಗಳ ಬಯೋಮೆಟ್ರಿಕ್ ಮತ್ತು ಜನಸಂಖ್ಯಾ ವಿವರಗಳನ್ನು ಸಂಗ್ರಹಿಸಲಾಗುತ್ತದೆ. ಆರು ವರ್ಷಗಳ ಹಿಂದೆ CAA, NRC ಜೊತೆಗೆ NPR ವಿರುದ್ಧವೂ ದೇಶದಾದ್ಯಂತ ಭಾರೀ ಪ್ರತಿಭಟನೆಗಳು ನಡೆದಿದ್ದವು. ಆದಾಗ್ಯೂ ರಾಷ್ಟ್ರೀಯ ಜನಸಂಖ್ಯಾ ನೋಂದಣಿಗಾಗಿ ಅಧಿಸೂಚನೆ ಇನ್ನೂ ಬಂದಿಲ್ಲ. ಆದರೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಫೆ.1 ರವಿವಾರ ಮಂಡಿಸಿದ 2026-27 ರ ಕೇಂದ್ರ ಬಜೆಟ್ ನಲ್ಲಿ ಎನ್ಪಿಆರ್ ಮತ್ತು 2027 ರ ಜನಗಣತಿಗೆ ರೂ. 6,000 ಕೋಟಿ ಅನುದಾನ ನೀಡಲಾಗಿದೆ. ಜನಗಣತಿ ನಿಯಮಗಳ ಅಡಿಯಲ್ಲಿ ಎನ್ಪಿಆರ್ ಅನ್ನು ಜನಗಣತಿಯಲ್ಲಿ ಮನೆಗಳ ಪಟ್ಟಿ ಹಂತದ ಪ್ರಕ್ರಿಯೆಯೊಂದಿಗೆ ನಡೆಸಲಾಗುವುದು. ಮನೆಗಳ ಪಟ್ಟಿ ಹಂತದಲ್ಲಿ ದೇಶದ ಪ್ರತಿಯೊಂದು ಕಟ್ಟಡಕ್ಕೆ ಭೇಟಿ ನೀಡಿ ಕಟ್ಟಡಗಳು ಮತ್ತು ಮನೆಗಳು ಯಾವ ರೀತಿಯದ್ದು ಎಂಬುದನ್ನು ದಾಖಲಿಸಲಾಗುತ್ತದೆ. ಈ ವರ್ಷ ಎಪ್ರಿಲ್ 1 ರಿಂದ ಸೆಪ್ಟೆಂಬರ್ 30 ರ ನಡುವೆ ಮನೆಗಳ ಪಟ್ಟಿ ಹಂತವನ್ನು ಕೈಗೊಳ್ಳಲು ಸೂಚಿಸಲಾಗಿದೆ. ಈ ಅಧಿಸೂಚನೆಯಲ್ಲಿ NPR ಬಗ್ಗೆ ಯಾವುದೇ ಉಲ್ಲೇಖವಿಲ್ಲ. ಜನಗಣತಿ, ಸಮೀಕ್ಷೆ ಮತ್ತು ಅಂಕಿಅಂಶಗಳು/ಭಾರತದ ರಿಜಿಸ್ಟ್ರಾರ್ ಜನರಲ್ (RGI) ಶೀರ್ಷಿಕೆಯಡಿಯಲ್ಲಿ, ಕೇಂದ್ರ ಬಜೆಟ್ 6,000 ಕೋಟಿ ರೂ. ಅನುದಾನ ನೀಡಲಾಗಿದೆ. ಅದರಲ್ಲಿ 218 ಕೋಟಿ ರೂ.ಗಳು ಬಂಡವಾಳ ವೆಚ್ಚವಾಗಿದೆ. ಬಜೆಟ್ ಈ ಅನುದಾನವನ್ನು ಭಾರತದ ರಿಜಿಸ್ಟ್ರಾರ್ ಜನರಲ್ ಮತ್ತು ಜನಗಣತಿ ಆಯುಕ್ತರ ಕಚೇರಿಗೆ ನಿಬಂಧನೆಗಳು ಮತ್ತು ರಾಷ್ಟ್ರೀಯ ಜನಸಂಖ್ಯಾ ನೋಂದಣಿ (NPR) ಮತ್ತು ಜನಗಣತಿ, 2027 ರ ವೆಚ್ಚ ಸೇರಿದಂತೆ RGI ಯ ವಿವಿಧ ಯೋಜನೆಗಳು ಎಂದು ವಿವರಿಸುತ್ತದೆ. ಮೇಲೆ ಹೇಳಿದಂತೆ ದೇಶದ “ಸಾಮಾನ್ಯ ನಿವಾಸಿಗಳ” ಪಟ್ಟಿ ಎನ್ಪಿಆರ್. ಇದರಲ್ಲಿ ಪೋಷಕರು, ಕುಟುಂಬ (ಹೆಂಡತಿ ಮತ್ತು ಮಕ್ಕಳು), ಹುಟ್ಟಿದ ದಿನಾಂಕ, ರಾಷ್ಟ್ರೀಯತೆ, ಮನೆಯ ಪ್ರಸ್ತುತ ವಿಳಾಸ ಮತ್ತು ಶಾಶ್ವತ ವಿಳಾಸ, ಉದ್ಯೋಗ ಮತ್ತು ಶೈಕ್ಷಣಿಕ ಅರ್ಹತೆಗಳ ಬಗ್ಗೆ ಮಾಹಿತಿ ಕೇಳಲಾಗುತ್ತದೆ. ಇದು ಸ್ವಯಂ ಘೋಷಣೆಯಾಗಿದ್ದು, ಇದರಲ್ಲಿ ಯಾವುದೇ ದಾಖಲೆಗಳ ಅಗತ್ಯವಿಲ್ಲ. 2019 ರಲ್ಲಿ ಸಂಸತ್ತಿನಲ್ಲಿ ಪೌರತ್ವ ತಿದ್ದುಪಡಿ ಮಸೂದೆ ಅಂಗೀಕಾರವಾದ ನಂತರ ಇದಕ್ಕೆ ಭಾರೀ ವಿರೋಧ ವ್ಯಕ್ತವಾಗಿತ್ತು. ಇದು ರಾಷ್ಟ್ರೀಯ ನಾಗರಿಕರ ನೋಂದಣಿ (NRC) ನಡೆಸಲು ದಾರಿ ಮಾಡಿಕೊಡುತ್ತದೆ . ಅಲ್ಪಸಂಖ್ಯಾತರ ಪೌರತ್ವವನ್ನು ಕಸಿದುಕೊಳ್ಳಲು ಇದನ್ನು ಪ್ರಸ್ತಾಪಿಸಲಾಗುತ್ತಿದೆ ಎಂದು ವಿರೋಧ ಪಕ್ಷದ ನಾಯಕರು ಆರೋಪಿಸಿದ್ದಾರೆ. ರಾಷ್ಟ್ರೀಯ ಜನಸಂಖ್ಯಾ ನೋಂದಣಿಗೆ ಸಾರ್ವಜನಿಕರಿಂದ ವ್ಯಾಪಕ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಹಲವಾರು ರಾಜ್ಯಗಳು ತಮ್ಮ ತಮ್ಮ ವಿಧಾನಸಭೆಗಳಲ್ಲಿ ಎನ್ಪಿಆರ್ ಪ್ರಕ್ರಿಯೆಯನ್ನು ವಿರೋಧಿಸಿ ನಿರ್ಣಯಗಳನ್ನು ಅಂಗೀಕರಿಸಿದವು. ಆಮೇಲೆ ಕೇಂದ್ರ ಸರ್ಕಾರ ಈ ಪ್ರಕ್ರಿಯೆಯನ್ನು ಪಕ್ಕಕ್ಕಿರಿಸಿದ್ದರೂ NPR ಪ್ರಕ್ರಿಯೆಗೆ ಆಗ 3,941.35 ಕೋಟಿ ರೂ.ಗಳನ್ನು ಅನುಮೋದಿಸಿತ್ತು. ಎನ್ಪಿಆರ್ ಪ್ರಕ್ರಿಯೆ 2020 ರಲ್ಲಿ ಜನಗಣತಿಯ ಮನೆ ಪಟ್ಟಿ ಹಂತದ ಜೊತೆಗೆ ನಡೆಯಬೇಕಿತ್ತು, ಆದರೆ ಕೋವಿಡ್ -19 ಸಾಂಕ್ರಾಮಿಕ ರೋಗದಿಂದಾಗಿ ಅದನ್ನು ಮುಂದೂಡಲಾಯಿತು. ಈ ಬಾರಿಯ ಕೇಂದ್ರ ಬಜೆಟ್ನಲ್ಲಿ ಎನ್ಪಿಆರ್ಗೆ ಹಂಚಿಕೆ ಮಾಡಿರುವ ಬಗ್ಗೆ ಗೃಹ ಸಚಿವಾಲಯದ ಅಧಿಕಾರಿಯೊಬ್ಬರು, ಎನ್ಪಿಆರ್ ನಡೆಸುವ ಬಗ್ಗೆ ಇನ್ನೂ ಯಾವುದೇ ನಿರ್ಧಾರ ತೆಗೆದುಕೊಳ್ಳಲಾಗಿಲ್ಲ. ಎನ್ಪಿಆರ್ ನಡೆಸಲು ಯಾವುದೇ ಅಧಿಸೂಚನೆ ಬಂದಿಲ್ಲ. 2020-21 ರಿಂದ ಹಿಂದಿನ ಬಜೆಟ್ಗಳಲ್ಲಿ ಮಾಡಲಾದ ಮೊತ್ತಕ್ಕೆ ಅನುಗುಣವಾಗಿ ಹಂಚಿಕೆ ಮಾಡಲಾಗಿದೆ. ಸರ್ಕಾರವು ಎನ್ಪಿಆರ್ ನಡೆಸಲು ನಿರ್ಧರಿಸಿದಾಗ, ಅಲ್ಲಿ ಅದಕ್ಕಾಗಿ ನಿಧಿ ಇರುತ್ತದೆ ಎಂಬುದನ್ನು ಗಮನದಲ್ಲಿಟ್ಟುಕೊಂಡು ಅನುದಾನ ನೀಡಲಾಗಿದೆ ಎಂದು ಹೇಳಿರುವುದಾಗಿ ʼಇಂಡಿಯನ್ ಎಕ್ಸ್ ಪ್ರೆಸ್ʼ ವರದಿ ಮಾಡಿದೆ. ಕಾನೂನಿನಲ್ಲಿ ಏನು ಹೇಳಲಾಗಿದೆ? NPR ಎಂಬುದು ರಾಷ್ಟ್ರೀಯ ನಾಗರಿಕರ ನೋಂದಣಿಗೆ ಅಗತ್ಯವಿರುವ ಮೊದಲ ಹೆಜ್ಜೆಯಾಗಿದ್ದು, ಕಾನೂನಿನಲ್ಲಿಯೂ ಅದನ್ನೇ ಹೇಳಲಾಗಿದೆ. ಎನ್ಪಿಆರ್ ಅನ್ನು ಪೌರತ್ವ (ನಾಗರಿಕರ ನೋಂದಣಿ ಮತ್ತು ರಾಷ್ಟ್ರೀಯ ಗುರುತಿನ ಚೀಟಿಗಳ ವಿತರಣೆ) ನಿಯಮಗಳು, 2003 ರಿಂದ ನಿಯಂತ್ರಿಸಲಾಗುತ್ತದೆ. ನಿಯಮಗಳನ್ನು 1955 ರ ಪೌರತ್ವ ಕಾಯ್ದೆಯ ಸೆಕ್ಷನ್ 18 ರ ಉಪವಿಭಾಗಗಳು (1) ಮತ್ತು (3) ರ ಅಡಿಯಲ್ಲಿ ರೂಪಿಸಲಾಗಿದೆ. ಎನ್ಆರ್ ಸಿಗೆ ಅವಕಾಶ ನೀಡುವ ನಿಯಮ 3 ಮತ್ತು ಉಪ-ನಿಯಮ (4) ರ ಪ್ರಕಾರ, ಕೇಂದ್ರ ಸರ್ಕಾರವು ಈ ನಿಟ್ಟಿನಲ್ಲಿ ಹೊರಡಿಸಲಾದ ಆದೇಶದ ಮೂಲಕ, ಸಾಮಾನ್ಯವಾಗಿ ಸ್ಥಳೀಯ ನೋಂದಣಿದಾರರ ವ್ಯಾಪ್ತಿಯಲ್ಲಿ ವಾಸಿಸುವ ಎಲ್ಲಾ ವ್ಯಕ್ತಿಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಸಂಗ್ರಹಿಸಿ ಜನಸಂಖ್ಯಾ ನೋಂದಣಿಯನ್ನು ಸಿದ್ಧಪಡಿಸುವ ದಿನಾಂಕವನ್ನು ನಿರ್ಧರಿಸಬಹುದು. ನಿಯಮದ ಉಪ-ನಿಯಮ (5) “ಭಾರತೀಯ ನಾಗರಿಕರ ಸ್ಥಳೀಯ ನೋಂದಣಿಯು ಜನಸಂಖ್ಯಾ ನೋಂದಣಿಯಿಂದ ಸರಿಯಾದ ಪರಿಶೀಲನೆಯ ನಂತರ ವ್ಯಕ್ತಿಗಳ ವಿವರಗಳನ್ನು ಹೊಂದಿರಬೇಕು ಎಂದು ಹೇಳುತ್ತದೆ. ಭಾರತೀಯ ನಾಗರಿಕರ ರಾಷ್ಟ್ರೀಯ ನೋಂದಣಿಯ ಸಿದ್ಧತೆ ಎಂಬ ಶೀರ್ಷಿಕೆಯ ನಿಯಮ 4 ರ ಅಡಿಯಲ್ಲಿ, ಉಪ-ನಿಯಮ 4 ಹೀಗೆ ಹೇಳುತ್ತದೆ- ಪರಿಶೀಲನಾ ಪ್ರಕ್ರಿಯೆಯ ಸಮಯದಲ್ಲಿ, ಪೌರತ್ವ ಸಂದೇಹಾಸ್ಪದವಾಗಿರುವ ವ್ಯಕ್ತಿಗಳ ವಿವರಗಳನ್ನು ಸ್ಥಳೀಯ ನೋಂದಣಿದಾರರು ಹೆಚ್ಚಿನ ವಿಚಾರಣೆಗಾಗಿ ಜನಸಂಖ್ಯಾ ನೋಂದಣಿಯಲ್ಲಿ ಸೂಕ್ತ ಟಿಪ್ಪಣಿಯೊಂದಿಗೆ ನಮೂದಿಸಬೇಕು. ಸಂದೇಹಾಸ್ಪದ ಪೌರತ್ವದ ಸಂದರ್ಭದಲ್ಲಿ, ಪರಿಶೀಲನಾ ಪ್ರಕ್ರಿಯೆ ಮುಗಿದ ತಕ್ಷಣ ವ್ಯಕ್ತಿ ಅಥವಾ ಕುಟುಂಬಕ್ಕೆ ನಿರ್ದಿಷ್ಟಪಡಿಸಿದ ಫಾರ್ಮ ನಲ್ಲಿ ತಿಳಿಸಬೇಕು. ನಿಯಮ 7 ರ ಅಡಿಯಲ್ಲಿ, ಕುಟುಂಬದ ಮುಖ್ಯಸ್ಥರು ಎನ್ಪಿಆರ್ ಪ್ರಕ್ರಿಯೆಯ ಸಮಯದಲ್ಲಿ ಗಣತಿದಾರರಿಗೆ ಸರಿಯಾದ ಮಾಹಿತಿಯನ್ನು ಒದಗಿಸಬೇಕು. ಮಾಹಿತಿ ನೀಡಲು ವಿಫಲವಾದರೆ ಅವರಿಗೆ (ನಿಯಮ 17 ರ ಅಡಿಯಲ್ಲಿ) 1,000 ರೂ.ಗಳವರೆಗೆ ದಂಡ ವಿಧಿಸಲಾಗುತ್ತದೆ. 2011 ರ ಜನಗಣತಿಯ ಮನೆ ಪಟ್ಟಿ ಹಂತದ ಜೊತೆಗೆ ಎನ್ಪಿಆರ್ಗಾಗಿ ಡೇಟಾವನ್ನು ಮೊದಲು 2010 ರಲ್ಲಿ ಸಂಗ್ರಹಿಸಲಾಯಿತು. 2015 ರಲ್ಲಿ, ಮನೆ-ಮನೆ ಸಮೀಕ್ಷೆಯಲ್ಲಿ ಈ ಡೇಟಾವನ್ನು ಮತ್ತಷ್ಟು ನವೀಕರಿಸಲಾಯಿತು. 2016 ರಲ್ಲಿ, ಮೋದಿ ಸರ್ಕಾರವು ಕಲ್ಯಾಣ ಸವಲತ್ತುಗಳನ್ನು ನೀಡಲು ಆಧಾರ್ ಅನ್ನು ಪ್ರಮುಖ ಮಾರ್ಗವಾಗಿ ಬಳಸಲು ನಿರ್ಧರಿಸಿತು. ಎಲ್ಲದಕ್ಕೂ ಆಧಾರ್ ಸಂಖ್ಯೆಯನ್ನೇ ಆಧಾರವಾಗಿರಿಸಿದ ಕಾರಣ ಎನ್ಪಿಆರ್ ಗೆ ನೀಡುತ್ತಿದ್ದ ಆದ್ಯತೆಯೂ ಕಡಿಮೆ ಆಯಿತು. ಆಗಸ್ಟ್ 3, 2019 ರಂದು ಅಧಿಸೂಚನೆಯ ಮೂಲಕ, ಭಾರತದ ರಿಜಿಸ್ಟ್ರಾರ್ ಜನರಲ್ (RGI) ಅದನ್ನು ಪುನರುಜ್ಜೀವನಗೊಳಿಸಿದರು. RGI ಈಗಾಗಲೇ ಎನ್ಪಿಆರ್ ಪ್ರೊಫಾರ್ಮಾವನ್ನು ಸಿದ್ಧಪಡಿಸಿದ್ದು 2015 ರ ದತ್ತಾಂಶದ ಡಿಜಿಟಲೀಕರಣ ಪೂರ್ಣಗೊಂಡಿದೆ. ►ಪ್ರತಿಭಟನೆಗಳು ಸಿಎಎ, ಪ್ರಸ್ತಾವಿತ ರಾಷ್ಟ್ರವ್ಯಾಪಿ ಎನ್ಆರ್ಸಿ ಮತ್ತು ಅಸ್ಸಾಂನಲ್ಲಿ 19 ಲಕ್ಷ ಜನರನ್ನು ಪಟ್ಟಿಯಿಂದ ಹೊರಗಿಟ್ಟ ಎನ್ಆರ್ಸಿ ಪ್ರಕ್ರಿಯೆಯ ವಿರುದ್ಧ ದೇಶಾದ್ಯಂತ ನಡೆದ ಪ್ರತಿಭಟನೆ ನಡೆದಿತ್ತು. ಇದು ದೇಶದಲ್ಲಿ ಪೌರತ್ವದ ಕಲ್ಪನೆಯ ಸುತ್ತಲಿನ ಆತಂಕವನ್ನು ಹೆಚ್ಚಿಸಿತು. ಆ ಸಮಯದಲ್ಲಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಪದೇ ಪದೇ ರಾಷ್ಟ್ರವ್ಯಾಪಿ ಎನ್ಆರ್ ಸಿ ಇರುತ್ತದೆ ಎಂದು ಹೇಳುತ್ತಿದ್ದರು. ಸಿಎಎ ಮೊದಲು ಬಂದು ನಂತರ ಎನ್ಆರ್ಸಿ ಜಾರಿಗೆ ಬರುವ ಕ್ರೊನೋಲಜಿಯನ್ನು ಅವರು ವಿವರಿಸಲು ಪ್ರಯತ್ನಿಸಿದರು. ಆದಾಗ್ಯೂ, ಸಿಎಎ ವಿರುದ್ಧದ ಪ್ರತಿಭಟನೆಗಳ ನಂತರ, ಪ್ರಧಾನಿ ನರೇಂದ್ರ ಮೋದಿ ಡಿಸೆಂಬರ್ 2019 ರಲ್ಲಿ ಸರ್ಕಾರವು ಎನ್ಆರ್ಸಿ ನಡೆಸುವ ಬಗ್ಗೆ ಇನ್ನೂ ನಿರ್ಧರಿಸಿಲ್ಲ ಎಂದು ಹೇಳಿದರು.
ಇಷ್ಟೆಲ್ಲಾ ಆಗಿರುವಾಗ ಟಿ20 ವಿಶ್ವಕಪ್ ಆಡೋ ರಿಸ್ಕ್ ಬೇಕಾ?: ಆಸೀಸ್ ನಾಯಕ ಪ್ಯಾಟ್ ಕಮಿನ್ಸ್ ಮಾರ್ಮಿಕ ಹೇಳಿಕೆ
Pat Cummins Injury- ಟಿ20 ಕ್ರಿಕೆಟ್ ಗಾಗಿ ಟೆಸ್ಟ್ ಕ್ರಿಕೆಟ್ ಅನ್ನು ನಿರ್ಲಕ್ಷಿಸಿದ ಬಹಳಷ್ಟು ಮಹಾನುಭಾವರಿದ್ದಾರೆ. ಅದೇ ಟೆಸ್ಟ್ ಗಾಗಿ ಟಿ20 ತೊರೆದವರು ಬಹಳ ಕಡಿಮೆ. ಆಸ್ಟ್ರೇಲಿಯಾದ ನಾಯಕ ಪ್ಯಾಟ್ ಕಮಿನ್ಸ್ ಇದೀಗ ಟಿ20 ವಿಶ್ವಕಪ್ನಿಂದ ಹೊರಗುಳಿದಿದ್ದಾರೆ. ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಪಂದ್ಯಗಳು ಮುಖ್ಯವಾಗಿರುವುದರಿಂದ ಅವರು ಇದೀಗ ಟಿ20 ವಿಶ್ವಕಪ್ ನಲ್ಲಿ ಆಡುವ ರಿಸ್ಕ್ ತೆಗೆದುಕೊಳ್ಳಲು ಮುಂದಾಗಿಲ್ಲ. ಕಮಿನ್ಸ್ ಅನುಪಸ್ಥಿತಿಯಲ್ಲಿ ಕ್ರಿಕೆಟ್ ಆಸ್ಟ್ರೇಲಿಯಾವು ಬೆನ್ ಡ್ವಾರ್ಶುಯಿಸ್ ಅವರನ್ನು ಆಯ್ಕೆ ಮಾಡಿದೆ.
ಸಿದ್ದಾಪುರ| ವಿವಾಹಿತೆಯ ಜೊತೆ ಜ್ಯೋತಿಷಿ ಅಕ್ರಮ ಸಂಬಂಧ ಆರೋಪ: ಪ್ರಶ್ನಿಸಿದ್ದಕ್ಕೆ ತಂಡದಿಂದ ಹಲ್ಲೆ; ಓರ್ವ ಮೃತ್ಯು
ಜ್ಯೋತಿಷಿ ಕಮಲಾಕರ ಭಟ್ ಸಹಿತ ಏಳು ಮಂದಿ ಆರೋಪಿಗಳ ಬಂಧನ
Japan Snowfall: 30 ಜೀವಕ್ಕೆ ಕುತ್ತು ತಂದ ಭಾರಿ ಹಿಮಪಾತ, ಜಪಾನ್ ಪರಿಸ್ಥಿತಿ ಕಂಡು ಪ್ರಪಂಚದ ಕಂಬನಿ
ಜೋರು ಮಳೆ, ಮೈ ಸುಡುವಷ್ಟು ಬಿಸಿಲು, ನಿಂತಲ್ಲೇ ಹೆಪ್ಪುಗಟ್ಟುವ ಚಳಿ... ಹೀಗೆ ಮನುಷ್ಯ ತಾನು ಮಾಡಿಕೊಂಡ ತಪ್ಪಿಗೆ ಇದೀಗ ಪ್ರಕೃತಿ ಮಾತೆಯ ಮುನಿಸಿನ ಮೂಲಕ ನೂರಾರು ಸಮಸ್ಯೆ ಎದುರಿಸುತ್ತಿದ್ದಾನೆ. ಸಾಲು ಸಾಲು ಪ್ರಾಕೃತಿಕ ವಿಕೋಪಗಳು ಇದೀಗ ಮನುಷ್ಯರನ್ನು ದೊಡ್ಡದಾದ ಕಂಟಕಕ್ಕೆ ಸಿಲುಕಿಸಿದೆ. ಇದೇ ರೀತಿ ಜಪಾನ್ ನೆಲದಲ್ಲೂ ಪ್ರಕೃತಿಯ ಮುನಿಸಿಗೆ ದೊಡ್ಡ ಅವಾಂತರ ಈಗ ಸೃಷ್ಟಿಯಾಗಿದೆ, ಅಂದಹಾಗೆ
ಯುಗಾದಿಯ ಸಂಭ್ರಮದ ನಡುವೆ ಬಾಕ್ಸ್ ಆಫೀಸ್ ನಲ್ಲಿ ಯಶ್ vs ರಣವೀರ್ ಸಿಂಗ್!
‘ಧುರಂಧರ್’ ಸಿನಿಮಾ ಬಿಡುಗಡೆಯಾಗುವ ದಿನವೇ ಯಶ್ ಅಭಿನಯದ ‘ಟಾಕ್ಸಿಕ್’ ಸಿನಿಮಾ ಬಿಡುಗಡೆಯಾಗುತ್ತಿದೆ. ಹೀಗಾಗಿ ಎರಡು ದಿಗ್ಗಜ ಸಿನಿಮಾಗಳ ನಡುವೆ ನೇರ ಹಣಾಹಣಿ ನಡೆಯಲಿದೆ. ಬಹು ನಿರೀಕ್ಷಿತ ಸೀಕ್ವೆಲ್ ನಿಂದಾಗಿ ಬಾಲಿವುಡ್ ಮತ್ತು ಸ್ಯಾಂಡಲ್ ವುಡ್ ನಡುವೆ ದೊಡ್ಡ ಸಮರಕ್ಕೆ ವೇದಿಕೆ ಸಿದ್ಧವಾಗಿದೆ. ಯಶ್ ಅಭಿನಯದ ‘ಟಾಕ್ಸಿಕ್’ ಸಿನಿಮಾದ ಟೀಸರ್ ವಿವಾದಕ್ಕೆ ಎಡೆಮಾಡಿಕೊಟ್ಟಿರುವ ಸಂದರ್ಭದಲ್ಲಿ ಮಾರ್ಚ್ 19ರಂದೇ ಬಿಡುಗಡೆಯಾಗುವ ಸಿನಿಮಾ ‘ಧುರಂಧರ್: ದಿ ರಿವೆಂಜ್’ ಟೀಸರ್ ಕೂಡ ಬಿಡುಗಡೆಯಾಗಿದೆ. ಧುರಂಧರ್ ಸೀಕ್ವೆಲ್ ಟೀಸರ್ ಬಿಡುಗಡೆ ಹೊಸ ದಾಖಲೆ ಬರೆದ ‘ಧುರಂಧರ್’ ಚಿತ್ರದ ಸೀಕ್ವೆಲ್ ‘ಧುರಂಧರ್: ದಿ ರಿವೆಂಜ್’ ಟೀಸರ್ ಇಂದು ಬಿಡುಗಡೆಯಾಗಿದೆ. ಮೊದಲ ಭಾಗದ ಯಶಸ್ಸಿನ ಕಾರಣದಿಂದ ಎರಡನೇ ಭಾಗದ ಯಶಸ್ಸಿನ ನಿರೀಕ್ಷೆಗಳನ್ನು ಮೂಡಿಸಿದೆ. ಆದರೆ ವಿಶೇಷವೆಂದರೆ ಈ ಸೀಕ್ವೆಲ್ ಸಿನಿಮಾ ಬಿಡುಗಡೆಯಾಗುವ ದಿನವೇ ಯಶ್ ಅಭಿನಯದ ‘ಟಾಕ್ಸಿಕ್’ ಸಿನಿಮಾ ಬಿಡುಗಡೆಯಾಗುತ್ತಿದೆ. ಹೀಗಾಗಿ ಎರಡು ಸಿನಿಮಾಗಳ ನಡುವೆ ನೇರ ಹಣಾಹಣಿ ನಡೆಯಲಿದೆ. ಬಹು ನಿರೀಕ್ಷಿತ ಸೀಕ್ವೆಲ್ನಿಂದಾಗಿ ಬಾಲಿವುಡ್ ಮತ್ತು ಸ್ಯಾಂಡಲ್ ವುಡ್ ನಡುವೆ ದೊಡ್ಡ ಸಮರಕ್ಕೆ ವೇದಿಕೆ ಸಿದ್ಧವಾಗಿದೆ. ಯುಗಾದಿಯಂದು ಬಿಡುಗಡೆಯಾಗುವ ‘ಟಾಕ್ಸಿಕ್’ ಇತ್ತ ‘ಟ್ಯಾಕ್ಸಿಕ್’ ಸಿನಿಮಾದಲ್ಲಿ ಯಶ್ ನಾಯಕರಾಗಿ ನಟಿಸಿದ್ದು, ಮಹಿಳಾ ನಟಿಯರ ಸಾಲೇ ಇದೆ. ಚಿತ್ರದಲ್ಲಿ ಗೀತು ಮೋಹನ್ ದಾಸ್ ನಿರ್ದೇಶನವಿದೆ. ಕಿಯಾರಾ ಆಡ್ವಾಣಿ, ನಯನತಾರ, ಹುಮಾ ಖುರೇಶಿ, ತಾರಾ ಸುತೈರಾ, ರುಕ್ಮಿಣಿ ವಸಂತ್ ಮೊದಲಾದವರು ಸಿನಿಮಾದಲ್ಲಿ ನಾಯಕಿಯರ ಪಾತ್ರ ನಿರ್ವಹಿಸಿದ್ದಾರೆ. ‘ಟಾಕ್ಸಿಕ್’ ಸಿನಿಮಾವನ್ನು ಕನ್ನಡ ಮತ್ತು ಇಂಗ್ಲಿಷ್ ಲ್ಲಿ ಚಿತ್ರೀಕರಿಸಲಾಗಿದ್ದು, ನಂತರ ಹಿಂದಿ, ತೆಲುಗು, ತಮಿಳು ಮತ್ತು ಮಲಯಾಳಂ ಭಾಷೆಗಳಿಗೆ ಡಬ್ಬಿಂಗ್ ಮಾಡಲಾಗಿದೆ. 2026 ಮಾರ್ಚ್ 19ರಂದು ‘ಟ್ಯಾಕ್ಸಿಕ್’ ಸಿನಿಮಾ ಬಿಡುಗಡೆಯಾಗುತ್ತಿದ್ದು, ಆದಿತ್ಯ ಧರ್ ನಿರ್ದೇಶನದ “ಧುರಂಧರ್: ದಿ ರಿವೆಂಜ್’” ಕೂಡ ಅದೇ ದಿನ ಬಿಡುಗಡೆಯಾಗುತ್ತಿದೆ. ಹೀಗಾಗಿ ಎರಡು ದಿಗ್ಗಜರ ಸಿನಿಮಾಗಳು ಒಂದೇ ದಿನ ʼಕ್ಲ್ಯಾಷ್ʼ ಆಗಲಿದೆ. ಅಭೂತಪೂರ್ವ ಗಳಿಕೆಯ ದಾಖಲೆ 2025 ಡಿಸೆಂಬರ್ 5ರಂದು ಬಿಡುಗಡೆಯಾದ ‘ಧುರಂಧರ್’ ಮೊದಲ ಭಾಗವು 56 ದಿನಗಳಲ್ಲಿ ವಿಶ್ವಾದ್ಯಂತ 1,347 ಕೋಟಿ ರೂ. ಮೀರಿ ಗಳಿಕೆ ಮಾಡಿದೆ. ಈ ಸಿನಿಮಾದಲ್ಲಿ ರಣವೀರ್ ಸಿಂಗ್ ನಾಯಕರಾಗಿ ನಟಿಸಿದ್ದು, ಸಂಜಯ್ ದತ್, ಅರ್ಜುನ್ ರಾಂಪಾಲ್, ಅಕ್ಷಯ್ ಖನ್ನಾ, ಆರ್ ಮಾಧವನ್ ಸೇರಿದಂತೆ ಖ್ಯಾತ ನಟರು ನಟಿಸಿದ್ದರು. ಸದ್ಯ ಈ ಸಿನಿಮಾ ನೆಟ್ಫ್ಲಿಕ್ಸ್ನಲ್ಲಿ ಪ್ರಸಾರವಾಗುತ್ತಿದ್ದು, ಎರಡನೇ ಭಾಗದ ಟೀಸರ್ ಬಿಡುಗಡೆಯಾಗಿದೆ. ಸೀಕ್ವೆಲ್ನಲ್ಲಿ ನಿರ್ದೇಶಕ ಆದಿತ್ಯ ಧರ್ ಕೆಲವು ಪ್ರಮುಖ ಬದಲಾವಣೆಗಳನ್ನು ಮಾಡಿದ್ದಾರೆ. ಈ ಬಾರಿ ಡಿಜಿಟಲ್ ಹಕ್ಕುಗಳನ್ನು ‘ಜಿಯೋ ಹಾಟ್ಸ್ಟಾರ್’ ಖರೀದಿಸಿದೆ. ಚಿತ್ರವು ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಎಂಟು ವಾರಗಳ ನಂತರ 2026 ಮೇ 16ರಂದು ಒಟಿಟಿಯಲ್ಲಿ ಲಭ್ಯವಾಗುವ ಸಾಧ್ಯತೆಯಿದೆ.
ಭಾರತವನ್ನು ಹೆಲಿಕಾಪ್ಟರ್ ಹಬ್ ಆಗಿಸುವ ಗುರಿ: ಅದಾನಿ ಡಿಫೆನ್ಸ್–ಲಿಯೋನಾರ್ಡೊ ನಡುವೆ ಮಹತ್ವದ ಒಪ್ಪಂದ
ನವದೆಹಲಿ: ಭಾರತದ ರಕ್ಷಣಾ ಸ್ವಾವಲಂಬನೆಯನ್ನು ಮತ್ತಷ್ಟು ಬಲಪಡಿಸುವ ದಿಕ್ಕಿನಲ್ಲಿ ಮಹತ್ವದ ಹೆಜ್ಜೆಯಾಗಿ, ಅದಾನಿ ಡಿಫೆನ್ಸ್ &ಏರೋಸ್ಪೇಸ್ ಮತ್ತು ಜಾಗತಿಕ ಏರೋಸ್ಪೇಸ್ ದೈತ್ಯ ಸಂಸ್ಥೆ ಲಿಯೋನಾರ್ಡೊ (Leonardo) ತಂತ್ರಾತ್ಮಕ ಸಹಭಾಗಿತ್ವಕ್ಕೆ ಮುಂದಾಗಿವೆ. ಭಾರತದಲ್ಲೇ ಸಂಪೂರ್ಣ ಹೆಲಿಕಾಪ್ಟರ್ ಉತ್ಪಾದನೆಯ ಉದ್ದೇಶದೊಂದಿಗೆ ಎರಡೂ ಕಂಪನಿಗಳು ಒಪ್ಪಂದ ಪತ್ರಕ್ಕೆ ಸಹಿ ಹಾಕಿವೆ. ಭಾರತೀಯ ಸಶಸ್ತ್ರ ಪಡೆಗಳ ಹೆಚ್ಚುತ್ತಿರುವ ಅವಶ್ಯಕತೆಗಳನ್ನು ಪೂರೈಸಲು ಭಾರತದಲ್ಲಿ
ಸದನದಲ್ಲಿ ಅಬಕಾರಿ ಹಗರಣ ಕಿಕ್! ಆರ್ ಬಿ ತಿಮ್ಮಾಪೂರ ರಾಜೀನಾಮೆಗೆ ಬಿಗಿಪಟ್ಟು
ಅಬಕಾರಿ ಇಲಾಖೆಯ ಹಗರಣ ವಿಧಾನಸಭೆಯಲ್ಲಿ ತೀವ್ರ ಚರ್ಚೆಗೆ ಕಾರಣವಾಯಿತು. ವಿಪಕ್ಷಗಳು ಸಚಿವ ಆರ್.ಬಿ. ತಿಮ್ಮಾಪುರ ರಾಜೀನಾಮೆಗೆ ಆಗ್ರಹಿಸಿದವು, ಆಡಳಿತ ಮತ್ತು ವಿಪಕ್ಷಗಳ ನಡುವೆ ತೀವ್ರ ವಾಕ್ಸಮರ ನಡೆಯಿತು. ತನಿಖೆ ಪೂರ್ಣಗೊಳ್ಳುವವರೆಗೂ ಸಚಿವರು ರಾಜೀನಾಮೆ ನೀಡಬೇಕೆಂದು ವಿಪಕ್ಷ ನಾಯಕ ಆರ್. ಅಶೋಕ್ ಒತ್ತಾಯಿಸಿದರು.
10ನೇ ತರಗತಿ ಮಕ್ಕಳಿಗೆ ಕನ್ನಡವೇ ಕಬ್ಬಿಣದ ಕಡಲೆ: ಸಂತೋಷ್ಕುಮಾರ್ ಎಲ್. ಎಂ ಬರಹ
10ನೇ ತರಗತಿ ಮಕ್ಕಳಿಗೆ ಕನ್ನಡವೇ ಕಬ್ಬಿಣದ ಕಡಲೆ ಆಗಿರುವ ಬಗ್ಗೆ ಹವ್ಯಾಸಿ ಬರಹಗಾರ ಸಂತೋಷ್ಕುಮಾರ್ ಎಲ್.ಎಂ ಅವರ ಬರಹ ಇಲ್ಲಿದೆ. 10ನೇ ತರಗತಿಯಲ್ಲಿ ಓದುತ್ತಿರುವ ನನ್ನ ಮಗಳಿಗೆ ಕನ್ನಡ ಪರೀಕ್ಷೆ ಇದೆ. ಹಾಗಾಗಿ ಈ ಪಾಠ ಅರ್ಥವಾಗುತ್ತಿಲ್ಲ ಅಂತ ನನ್ನ ಹತ್ತಿರ ಬಂದಳು. ಇದೇ ಮೊದಲ ಬಾರಿಗೆ ಆ ಪಾಠವನ್ನು ಓದಲು ಶುರುವಿಟ್ಟುಕೊಂಡ ನನಗೆ ತಲೆ ಕೂದಲನ್ನು
Fake SSLC Question Paper : ಇನ್ಸ್ಟಾಗ್ರಾಮ್ನಲ್ಲಿ ನಕಲಿ ಪ್ರಶ್ನೆಪತ್ರಿಕೆ ಹರಿಬಿಟ್ಟ ಖದೀಮರ ವಿರುದ್ಧ ಎಫ್ಐಆರ್
ಬೆಂಗಳೂರು: ಪರೀಕ್ಷಾ ಸಮಯದಲ್ಲಿ ವಿದ್ಯಾರ್ಥಿಗಳ ಆತಂಕವನ್ನೇ ಬಂಡವಾಳವಾಗಿಸಿಕೊಂಡು ಹಣ ಗಳಿಸಲು ಯತ್ನಿಸುವ ಜಾಲವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿದ್ದು, ಇದೀಗ ಎಸ್ಎಸ್ಎಲ್ಸಿ ಪೂರ್ವಸಿದ್ಧತಾ ಪರೀಕ್ಷೆಯ ನಕಲಿ ಪ್ರಶ್ನೆಪತ್ರಿಕೆಗಳನ್ನು ಇನ್ಸ್ಟಾಗ್ರಾಮ್ನಲ್ಲಿ ಹರಿಬಿಟ್ಟ ಎರಡು ಖಾತೆಗಳ ವಿರುದ್ಧ ಪೊಲೀಸ್ ತನಿಖೆ ಚುರುಕುಗೊಂಡಿದೆ. ರಾಜ್ಯದ ಲಕ್ಷಾಂತರ ವಿದ್ಯಾರ್ಥಿಗಳಲ್ಲಿ ಗೊಂದಲ ಮೂಡಿಸಿ, ಅವರಿಂದ ಹಣ ಸುಲಿಗೆ ಮಾಡಲು ಯತ್ನಿಸಿದ ಆರೋಪದ ಮೇಲೆ ಶಾಲಾ ಶಿಕ್ಷಣ
Russia Military: 450 ಡ್ರೋನ್ ಮತ್ತು 70 ಕ್ಷಿಪಣಿ ಹಾರಿಸಿದ ರಷ್ಯಾ ಸೇನೆ, ಶಾಂತಿ ಮಾತುಕತೆಗೂ ಮೊದಲೇ ಆಘಾತ
ರಷ್ಯಾ ಮತ್ತು ಉಕ್ರೇನ್ ನಡುವೆ ಸಾಧ್ಯವಾದಷ್ಟು ಬೇಗ ಮಾತುಕತೆ ನಡೆಸಿ, ಯುದ್ಧವನ್ನ ನಿಲ್ಲಿಸಿ ಶಾಂತಿ ಸ್ಥಾಪನೆ ಮಾಡಬೇಕು ಎಂದು ಅಮೆರಿಕ ಕಾಯುತ್ತಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ವಿಚಾರದಲ್ಲಿ ಎಲ್ಲಾ ರೀತಿಯ ಪ್ರಯತ್ನ ಮಾಡುತ್ತಾ ಒದ್ದಾಡುತ್ತಿದ್ದಾರೆ. ಒಂದು ಕಡೆ ಕೊನೇ ಹಂತಕ್ಕೆ ಬರುತ್ತಿರುವ ಶಾಂತಿ ಒಪ್ಪಂದ ನಂತರ ನಿಂತು ಹೋಗುತ್ತಿದೆ. ಹೀಗಾಗಿ ಹೇಗಾದರು ಮಾಡಿ ಈ
ಅಕ್ರಮ ಸಂಬಂಧ ಗುಟ್ಟು ರಟ್ಟಾಗಿ ಕೊಲೆ: ಜ್ಯೋತಿಷಿ ಕಮಲಾಕರ್ ಭಟ್ ಸೇರಿ 7 ಮಂದಿ ಬಂಧನ! ಉತ್ತರ ಕನ್ನಡದಲ್ಲಿ ಘಟನೆ
ಉತ್ತರ ಕನ್ನಡದಲ್ಲಿ ಅನೈತಿಕ ಸಂಬಂಧದ ಗಲಾಟೆ ಕೊಲೆಗೆ ಕಾರಣವಾಗಿದೆ. ಜ್ಯೋತಿಷಿ ಕಮಲಾಕರ್ ಭಟ್ ಸೇರಿದಂತೆ 7 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಪತ್ನಿಯ ಅಕ್ರಮ ಸಂಬಂಧವನ್ನು ಪ್ರಶ್ನಿಸಿದ್ದಕ್ಕೆ ನಡೆದ ಗಲಾಟೆಯಲ್ಲಿ ವಸಂತ್ ನಾಯ್ಕ್ ಎಂಬುವರು ಸಾವನ್ನಪ್ಪಿದ್ದಾರೆ. ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಭಾರತ- ಅಮೆರಿಕ ವ್ಯಾಪಾರ ಒಪ್ಪಂದ ಬೆನ್ನಲ್ಲೇ ಷೇರು ಮಾರುಕಟ್ಟೆ ಜಿಗಿತ
ಸೆನ್ಸೆಕ್ಸ್ ಶೇ 4.5 ಏರಿಕೆ, ರೂಪಾಯಿ ಮೌಲ್ಯ ಹೆಚ್ಚಳ
ಚಿಕ್ಕಬಳ್ಳಾಪುರ: ಕೋಲಾರ ಚಿನ್ನದ ಗಣಿಯಿಂದ (ಕೆಜಿಎಫ್) ಒಂದು ಕಾಲದಲ್ಲಿ ಅಗಾಧವಾದ ಚಿನ್ನವನ್ನು ಹೊರತೆಗೆದಿರುವುದು ಇತಿಹಾಸದ ಪುಟಗಳಲ್ಲಿ ದಾಖಲಾಗಿದೆ. ಇದೇ ಕೆಜಿಎಫ್ ಚಿನ್ನದ ಕುರಿತು ಹಿಟ್ ಸಿನಿಮಾ ಕೂಡ ಬಂದಿದೆ. ಇದೀಗ ಬೆಂಗಳೂರಿನ ಸಮೀಪದಲ್ಲೇ ಮತ್ತೊಂದು ಕೆಜಿಎಫ್ ಉದಯಿಸುವ ಎಲ್ಲ ಲಕ್ಷಣಗಳು ಕಂಡುಬರುತ್ತಿವೆ. ಇದಕ್ಕಾಗಿ ಭಾರತೀಯ ಭೂವೈಜ್ಞಾನಿಕ ಸರ್ವೇಕ್ಷಣಾ ಇಲಾಖೆಯು ಹೆಲಿಕಾಪ್ಟರ್ ಬಳಸಿ ವೈಮಾನಿಕ ಸಮೀಕ್ಷೆ ನಡೆಸುತ್ತಿರುವ ವಿಡಿಯೋಗಳು
ಕಾವೇರಿ 2.0: ಇನ್ಮುಂದೆ ಆಸ್ತಿ ನೋಂದಣಿ ಸಂಪೂರ್ಣ ಕಾಗದ ರಹಿತ! ಕೇವಲ 10 ನಿಮಿಷದಲ್ಲಿ ನೋಂದಣಿ ಪೂರ್ಣ! ನೋಂದಣಿ ಹೇಗೆ?
ಇನ್ನು ಮುಂದೆ ಆಸ್ತಿ ನೋಂದಣಿಗೆ ಉಪನೋಂದಣಾಧಿಕಾರಿಗಳ ಕಚೇರಿಯಲ್ಲಿ ಕಾಯುವ ಅಗತ್ಯವಿಲ್ಲ. ಕರ್ನಾಟಕ ಸರ್ಕಾರದ ನೋಂದಣಿ ಮತ್ತು ಮುದ್ರಾಂಕ ಇಲಾಖೆಯು ಕಾವೇರಿ 2.0 ತಂತ್ರಾಂಶದ ಮೂಲಕ ಕಾಗದರಹಿತ ಆಸ್ತಿ ನೋಂದಣಿ ವ್ಯವಸ್ಥೆಯನ್ನು ಪರಿಚಯಿಸಿದೆ. ಇದರಿಂದ ನೋಂದಣಿ ಪ್ರಕ್ರಿಯೆ ಕೇವಲ 10 ನಿಮಿಷಗಳಲ್ಲಿ ಪೂರ್ಣಗೊಳ್ಳಲಿದೆ. ಡಿಜಿಟಲ್ ದಾಖಲೆಗಳು ಲಭ್ಯವಾಗಲಿದ್ದು, ಮಧ್ಯವರ್ತಿಗಳ ಹಾವಳಿ ತಪ್ಪಲಿದೆ.
ಕೆ-ಪಾಪ್ ಡಿಮನ್ ಹಂಟರ್ಸ್ನ 'ಗೋಲ್ಡನ್' ಹಾಡು 68ನೇ ಗ್ರ್ಯಾಮಿ ಪ್ರಶಸ್ತಿ ಪ್ರೀಮಿಯರ್ ಸಮಾರಂಭದಲ್ಲಿ 'ಬೆಸ್ಟ್ ಸಾಂಗ್ ರಿಟನ್ ಫಾರ್ ವಿಶ್ಯುಯಲ್ ಮೀಡಿಯಾ' ಪ್ರಶಸ್ತಿ ಪಡೆದು, ಕೆ-ಪಾಪ್ ಇಂಡಸ್ಟ್ರಿಯಿಂದ ಮೊದಲ ಗ್ರ್ಯಾಮಿ ಗೆದ್ದ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಹಾಡು ಈಗಾಗಲೇ ಹಲವು ಜಾಗತಿಕ ಪ್ರಶಸ್ತಿಗಳನ್ನು ಬಾಚಿಕೊಂಡಿದ್ದು, ಇದೀಗ ಆಸ್ಕರ್ ಪ್ರಶಸ್ತಿಗೂ ನಾಮನಿರ್ದೇಶನಗೊಂಡಿದೆ.
ಧರ್ಮರಾಯಸ್ವಾಮಿ ದೇವಾಲಯದ ಚಿನ್ನದ ನೆಕ್ಲೆಸ್ ಕಳವು: ಮುಜರಾಯಿ ಇಲಾಖೆ ಅಧಿಕಾರಿ ಸಸ್ಪೆಂಡ್
ಐತಿಹಾಸಿಕ ಕರಗ ನಡೆಯುವ ಧರ್ಮರಾಯ ಸ್ವಾಮಿ ದೇವಾಲಯದಲ್ಲಿ ನೆಕ್ಲೆಸ್ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ , ಆರೋಪ ಹೊತ್ತಿರುವ ಕೆ.ನಾಗರಾಜು ಅವರನ್ನು ಅಮಾನತುಗೊಳಿಸಲಾಗಿದೆ.
ಉಡುಪಿ ಜಿಪಂ ಮಾಜಿ ಉಪಾಧ್ಯಕ್ಷ ರಾಜು ದೇವಾಡಿಗ ನಿಧನ
ಕುಂದಾಪುರ: ಉಡುಪಿ ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷ ರಾಜು ದೇವಾಡಿಗ(66) ಸೋಮವಾರ ತಡರಾತ್ರಿ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ತ್ರಾಸಿ ಮಂಡಲ ಪಂಚಾಯತ್ ಅಧ್ಯಕ್ಷರಾಗಿದ್ದ ರಾಜು ದೇವಾಡಿಗ, ಕುಂದಾಪುರ ತಾಲೂಕು ಪಂಚಾಯತ್ ಅಧ್ಯಕ್ಷ ಹಾಗೂ ಉಡುಪಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾಗಿ, ಹೆಮ್ಮಾಡಿ ಪಂಚಗಂಗಾ ಸಹಕಾರಿ ಬ್ಯಾಂಕ್ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ, ಸಹಕಾರಿ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಸುದೀರ್ಘ ಸೇವೆ ಸಲ್ಲಿಸಿದ್ದ ಅವರು, ದೇವಾಡಿಗ ಸಮಾಜ ಸೇವಾ ಸಂಘಟನೆ ಸೇರಿದಂತೆ ಹಲವು ಸಂಘಟನೆಗಳಲ್ಲಿ ಪದಾಧಿಕಾರಿಗಳಾಗಿ ಸೇವೆ ಸಲ್ಲಿಸಿದ್ದಾರೆ. ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರಾಗಿದ್ದ ಅವರು ಬ್ಲಾಕ್ ಹಾಗೂ ಜಿಲ್ಲಾ ಮಟ್ಟದಲ್ಲಿ ಜವಾಬ್ದಾರಿಗಳನ್ನು ನಿರ್ವಹಿಸಿದ್ದರು. ಮೃತರು ಪತ್ನಿ, ಮೂವರು ಪುತ್ರರು, ಓವಧ ಪುತ್ರಿ ಸಹಿತ ಅಪಾರ ಬಂಧುಬಳಗವನ್ನು ಅಗಲಿದ್ದಾರೆ. ಮಂಗಳವಾರ ಮಧ್ಯಾಹ್ನ ತ್ರಾಸಿಯ ಅವರ ಸ್ವಗೃಹದಲ್ಲಿ ಸಾರ್ವಜನಿಕರಿಗೆ ಹಾಗೂ ಅಭಿಮಾನಿಗಳಿಗೆ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಿ, ನಂತರ ಮೃತ ದೇಹದ ಅಂತಿಮ ಸಂಸ್ಕಾರ ನೆರವೇರಿಸಲಾಯಿತು. ಮಾಜಿ ಮುಖ್ಯಮಂತ್ರಿ ಎಂ.ವೀರಪ್ಪ ಮೊಯ್ಲಿ, ಮಾಜಿ ಸಚಿವ ಕೆ.ಜಯಪ್ರಕಾಶ್ ಹೆಗ್ಡೆ, ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ, ಶಾಸಕ ಗುರುರಾಜ್ ಗಂಟಿಹೊಳೆ, ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಎಸ್.ರಾಜು ಪೂಜಾರಿ ಸೇರಿದಂತೆ ಅನೇಕರು ರಾಜು ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.
ರಾಹುಲ್ ಗಾಂಧಿ ಭಾಷಣ ವೇಳೆ ಸದನದಲ್ಲಿ ಗದ್ದಲ; ಸ್ಪೀಕರ್ ಕಡೆ ಪೇಪರ್ ಎಸೆದ 7 ಸಂಸದರ ಅಮಾನತು
ಲೋಕಸಭೆಯಲ್ಲಿ ರಾಹುಲ್ ಗಾಂಧಿ ಮಾಜಿ ಸೇನಾ ಮುಖ್ಯಸ್ಥರ ಆತ್ಮಕಥೆಯ ಉಲ್ಲೇಖ ಮಾಡುತ್ತಿದ್ದಂತೆ ಗದ್ದಲ ಉಂಟಾಯಿತು. ಬಿಜೆಪಿ ಮತ್ತು ಕಾಂಗ್ರೆಸ್ ಸದಸ್ಯರ ನಡುವೆ ಮಾತಿನ ಚಕಮಕಿ ನಡೆದು, ಸಭಾಧ್ಯಕ್ಷರು ಕಲಾಪವನ್ನು ಮುಂದೂಡಬೇಕಾಯಿತು. ಈ ಘಟನೆಯಿಂದಾಗಿ 7 ಸಂಸದರನ್ನು ಅಮಾನತುಗೊಳಿಸಲಾಗಿದೆ.
Budget Session| ಲೋಕಸಭೆಯಲ್ಲಿ ಗದ್ದಲ: ವಿಪಕ್ಷಗಳ 8 ಸಂಸದರನ್ನು ಅಮಾನತುಗೊಳಿಸಿದ ಸ್ಪೀಕರ್
ಹೊಸದಿಲ್ಲಿ: ಸಂಸತ್ತಿನ ಬಜೆಟ್ ಅಧಿವೇಶನದಲ್ಲಿ ಲೋಕಸಭೆಯ ಸ್ಪೀಕರ್ ಪೀಠದ ಕಡೆಗೆ ಕಾಗದಗಳನ್ನು ಎಸೆದು ಗದ್ದಲವನ್ನು ಸೃಷ್ಟಿಸಿದ ವಿಪಕ್ಷಗಳ 8 ಸಂಸದರನ್ನು ಸ್ಪೀಕರ್ ಓಂ ಬಿರ್ಲಾ ಅವರು ಅಧಿವೇಶನದ ಮುಂದಿನ ಅವಧಿಗೆ ಅಮಾನತು ಮಾಡಿ ಆದೇಶಿಸಿದ್ದಾರೆ. ಲೋಕಸಭೆಯಲ್ಲಿನ ಗದ್ದಲ ಮತ್ತು ಪೀಠದ ಕಡೆಗೆ ಕಾಗದಗಳನ್ನು ಎಸೆದ ಘಟನೆಗೆ ಸಂಬಂಧಿಸಿದಂತೆ, ಸಂಸದ ಹಿಬಿ ಈಡನ್, ಅಮರಿಂದರ್ ಸಿಂಗ್, ರಾಜಾ ವಾರಿಂಗ್, ಮಾಣಿಕ್ಕಂ ಟ್ಯಾಗೋರ್, ಗುರ್ಜೀತ್ ಸಿಂಗ್ ಔಜ್ಲಾ, ಕಿರಣ್ ಕುಮಾರ್ ರೆಡ್ಡಿ, ಎಸ್ ವೆಂಕಟೇಶ್ ಸೇರಿದಂತೆ 8 ವಿರೋಧ ಪಕ್ಷದ ಸಂಸದರನ್ನು ಈ ಅಧಿವೇಶನದ ಉಳಿದ ಅವಧಿಗೆ ಅಮಾನತುಗೊಳಿಸಲಾಗಿದೆ. ಪೀಠದ ಎದುರು ಕಾಗದಗಳನ್ನು ಎಸೆದ ವಿರೋಧ ಪಕ್ಷದ ಸಂಸದರ ವಿರುದ್ಧ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ನಿರ್ಣಯ ಮಂಡಿಸಿದ್ದರು.
ರಾಹುಲ್ ಗಾಂಧಿ ಭಾಷಣಕ್ಕೆ ಆಕ್ಷೇಪ
ಕಡೆಗೂ ಸಿಕ್ತು ಉದ್ಯಮಿ ಸಿಜೆ ರಾಯ್ ಡೆತ್ ನೋಟ್ - ಒಂಭತ್ತು ಪುಟಗಳ ಆ ಸುಸೈಡ್ ನೋಟ್ ನಲ್ಲೇನಿದೆ?
ಬೆಂಗಳೂರಿನಲ್ಲಿ ಆತ್ಮಹತ್ಯೆ ಮಾಡಿಕೊಂಡ ಕಾನ್ಪಿಡೆಂಟ್ ಗ್ರೂಪ್ ಅಧ್ಯಕ್ಷ ಸಿ.ಜೆ. ರಾಯ್ ಅವರ 9 ಪುಟಗಳ ಡೆತ್ ನೋಟ್ ಪತ್ತೆಯಾಗಿದೆ. ಕುಟುಂಬಸ್ಥರಿಗೆ ಕ್ಷಮೆಯಾಚಿಸಿ, ಹಣಕಾಸಿನ ವಿವರ ಹಾಗೂ ಉತ್ತರಾಧಿಕಾರಿಗಳ ಬಗ್ಗೆ ಉಲ್ಲೇಖಿಸಿದ್ದಾರೆ. ಹಿಂದಿನ ನಂಬಿಕಸ್ಥರನ್ನೂ ಕೈಬಿಡಬಾರದೆಂದು ಸೂಚಿಸಿದ್ದಾರೆ. ಎಸ್ಐಟಿ ಅಧಿಕಾರಿಗಳು ತನಿಖೆ ಮುಂದುವರಿಸಿದ್ದಾರೆ.
ʼಜನ ನಾಯಗನ್ʼ ವಿಳಂಬ | 100 ಕೋಟಿ ರೂ. ನಷ್ಟ ಎದುರಿಸುತ್ತಿರುವ ತಮಿಳು ಚಿತ್ರರಂಗ!
ಏನಿದು ತಮಿಳು ಚಿತ್ರರಂಗದ ಬಿಕ್ಕಟ್ಟು?
ದ್ವೇಷ ಭಾಷಣ ಪ್ರಕರಣ: ಮಹೇಶ್ ಶೆಟ್ಟಿ ತಿಮರೋಡಿಗೆ ಜಾಮೀನು
ಬೆಳ್ತಂಗಡಿ: ದ್ವೇಷ ಭಾಷಣಕ್ಕೆ ಸಂಬಂಧಿಸಿದಂತೆ ಜಾರಿಯಾಗಿದ್ದ ಜಾಮೀನುರಹಿತ ವಾರೆಂಟ್ ಪ್ರಕರಣದಲ್ಲಿ ಮಹೇಶ್ ಶೆಟ್ಟಿ ತಿಮರೋಡಿ ಅವರಿಗೆ ಬಂಟ್ವಾಳ ನ್ಯಾಯಾಲಯ ಜಾಮೀನು ಮಂಜೂರು ಮಾಡಿ ಆದೇಶ ಹೊರಡಿಸಿದೆ. ದ್ವೇಷ ಭಾಷಣ ಮಾಡಿದ ಆರೋಪದಡಿ ಬೆಳ್ತಂಗಡಿ ಪೊಲೀಸರು ದಾಖಲಿಸಿದ್ದ ಪ್ರಕರಣದಲ್ಲಿ, ಮಹೇಶ್ ಶೆಟ್ಟಿ ತಿಮರೋಡಿ ಅವರು ನ್ಯಾಯಾಲಯಕ್ಕೆ ಹಾಜರಾಗದೇ ಇದ್ದ ಹಿನ್ನೆಲೆಯಲ್ಲಿ ಬೆಳ್ತಂಗಡಿ ನ್ಯಾಯಾಲಯ ಅವರ ವಿರುದ್ಧ ಜಾಮೀನುರಹಿತ ವಾರೆಂಟ್ ಜಾರಿ ಮಾಡಿತ್ತು. ಈ ಹಿನ್ನೆಲೆಯಲ್ಲಿ ಮಹೇಶ್ ಶೆಟ್ಟಿ ತಿಮರೋಡಿ ಅವರು ಬಂಟ್ವಾಳ ನ್ಯಾಯಾಲಯದಲ್ಲಿ ಜಾಮೀನು ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ ಜಾಮೀನು ಮಂಜೂರು ಮಾಡಿ ಆದೇಶ ನೀಡಿದೆ. ಈ ಪ್ರಕರಣದಲ್ಲಿ ಮಹೇಶ್ ಶೆಟ್ಟಿ ಪರವಾಗಿ ನ್ಯಾಯವಾದಿ ಸಿರಾಜುದ್ದೀನ್ ಜೋಗಿಬೆಟ್ಟು ವಾದ ಮಂಡಿಸಿದ್ದರು.
ಅಬಕಾರಿ ಗದ್ದಲದ ನಡುವೆ ಸದನದಲ್ಲಿ ಮನರೇಗಾ ನಿರ್ಣಯ: ಕೇಂದ್ರದ ನಡೆ ಸಂವಿಧಾನದ ಉಲ್ಲಂಘನೆ ಎಂದ ಸಿದ್ದರಾಮಯ್ಯ
ಅಬಕಾರಿ ಇಲಾಖೆ ಹಗರಣದ ಆರೋಪದ ನಡುವೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೇಂದ್ರದ 'ವಿಬಿ-ಗ್ರಾಮ್ ಜಿ' ಕಾಯ್ದೆಯ ವಿರುದ್ಧ ನಿರ್ಣಯ ಮಂಡಿಸಿದರು. ಇದು ಒಕ್ಕೂಟ ತತ್ವ, ಗ್ರಾಮೀಣ ಜನರ ಬದುಕಿನ ಹಕ್ಕು ಹಾಗೂ ಪಂಚಾಯತ್ ರಾಜ್ ವ್ಯವಸ್ಥೆಗೆ ಧಕ್ಕೆ ತರುತ್ತದೆ ಎಂದು ಆರೋಪಿಸಿದರು. ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಕಾಯ್ದೆಯನ್ನು ಅದರ ಮೂಲ ಸ್ವರೂಪದಲ್ಲಿ ಮರುಸ್ಥಾಪಿಸಲು ಒತ್ತಾಯಿಸಿದರು. ಈ ಕುರಿತಂತೆ ಸಿದ್ದರಾಮಯ್ಯ ಮಂಡಿಸಿದ ನಿರ್ಣಯದಲ್ಲಿ ಪ್ರಮುಖ ಅಂಶಗಳ ಕುರಿತ ವರದಿ ಇಲ್ಲಿದೆ..
DAVANAGERE | ಆಸ್ತಿ ವಿವಾದ: ವೃದ್ಧ ಸಹೋದರರ ಜಗಳ ಓರ್ವನ ಕೊಲೆಯಲ್ಲಿ ಅಂತ್ಯ
ದಾವಣಗೆರೆ: ಆಸ್ತಿ ವಿವಾದದ ಹಿನ್ನೆಲೆಯಲ್ಲಿ ವೃದ್ಧ ಸಹೋದರರಿಬ್ಬರ ಮಧ್ಯೆ ನಡೆದ ಜಗಳ ಓರ್ವನ ಕೊಲೆಯಲ್ಲಿ ಅಂತ್ಯಗೊಂಡ ಘಟನೆ ದಾವಣಗೆರೆ ತಾಲೂಕಿನ ಮಾಯಕೊಂಡ ಎಂಬಲ್ಲಿ ನಡೆದಿದೆ. ಕೊಲೆಯಾದವರನ್ನು ನೀಲಪ್ಪ (65) ಎಂದು ಗುರುತಿಸಲಾಗಿದೆ. ಅವರ ಅಣ್ಣ ಚಂದ್ರಪ್ಪ (68) ಕೊಲೆ ಆರೋಪಿಯಾಗಿದ್ದಾನೆ. ಆಸ್ತಿ ವಿಚಾರವಾಗಿ ಇವರಿಬ್ಬರ ನಡುವೆ ಅಡಿಕೆ ತೋಟದಲ್ಲಿ ಸೋಮವಾರ ಮಾತಿನ ಚಕಮಕಿ ನಡೆದಿದೆ. ಬಳಿಕ ಈ ಗಲಾಟೆ ತೀವ್ರ ಸ್ವರೂಪ ಪಡೆದಿದ್ದು, ಆರೋಪಿ ಚಂದ್ರಪ್ಪ ಮಚ್ಚಿನಿಂದ ನೀಲಪ್ಪರ ಮೇಲೆ ಹಲ್ಲೆ ನಡೆಸಿದ್ದಾನೆನ್ನಲಾಗಿದೆ. ಹಲ್ಲೆಯಿಂದ ಗಂಭೀರವಾಗಿ ಗಾಯಗೊಂಡ ನೀಲಪ್ಪ ರಕ್ತಸ್ರಾವದಿಂದ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಘಟನೆಯ ಮಾಹಿತಿ ಪಡೆದ ಮಾಯಕೊಂಡ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿ ಚಂದ್ರಪ್ಪನನ್ನು ಬಂಧಿಸಿದ್ದಾರೆ.
ಸಂಸತ್ತಿನಲ್ಲಿ ಸತ್ಯ ಎದುರಿಸಲು ‘56 ಇಂಚಿನ ಎದೆ’ ಸಾಲದು: ಬಿ.ಕೆ. ಹರಿಪ್ರಸಾದ್
ನರವಣೆ ಪುಸ್ತಕದ ಆಧಾರದಲ್ಲಿ ಚೀನಾ ಅತಿಕ್ರಮಣ ಕುರಿತ ಚರ್ಚೆಗೆ ಅವಕಾಶ ನೀಡದಿರುವುದು ಕೇಂದ್ರ ಸರ್ಕಾರದ ಹೇಡಿತನ
ಕಾವ್ಯಕ್ಕೆ ಪ್ರತಿಭಟಿಸುವ ನಾಲಿಗೆಯೂ ಉಂಟು!
ಕನ್ನಡ ಸಾಹಿತ್ಯದ ಸಮಕಾಲೀನ ವಲಯದಲ್ಲಿ ಪ್ರೊ. ಎಸ್.ಜಿ. ಸಿದ್ಧರಾಮಯ್ಯ ಅವರ ಹೆಸರು ಒಂದು ವಿಶಿಷ್ಟ ಸ್ಥಾನವನ್ನು ಪಡೆದಿದೆ. ಅವರ ಕಾವ್ಯಯಾನವು ಕೇವಲ ಪದಗಳ ಸಂಯೋಜನೆಯಲ್ಲ; ಅದು ಬದುಕಿನ ತೀವ್ರ ಅನುಭವಗಳು, ಸಾಮಾಜಿಕ ಹೊಣೆಗಾರಿಕೆ, ತಾತ್ವಿಕ ಚಿಂತನೆ ಮತ್ತು ಮಾನವೀಯ ಸಂವೇದನೆಯ ಸಮನ್ವಯವಾಗಿದೆ. ದೀರ್ಘಕಾಲದ ಅಧ್ಯಯನ, ಬೋಧನೆ ಹಾಗೂ ಸಾಹಿತ್ಯಸಾಧನೆಯ ಮೂಲಕ ಅವರು ರೂಪಿಸಿಕೊಂಡ ಕಾವ್ಯಪ್ರಜ್ಞೆ, ಇಂದಿನ ಕನ್ನಡ ಕಾವ್ಯಧಾರೆಗೆ ಮಹತ್ವದ ಕೊಡುಗೆಯಾಗಿದೆ. ಪ್ರೊ. ಸಿದ್ಧರಾಮಯ್ಯ ಅವರ ಕವಿತೆಗಳು ಮೇಲ್ನೋಟಕ್ಕೆ ಸರಳವಾಗಿ ಕಾಣಿಸಿಕೊಂಡರೂ, ಅವುಗಳೊಳಗೆ ಅರ್ಥದ ಅನೇಕ ಪದರಗಳು ಅಡಗಿವೆ. ಪುರಾಣ, ಇತಿಹಾಸ, ತತ್ವ, ಸಮಕಾಲೀನ ಸಮಾಜ ಮತ್ತು ವೈಯಕ್ತಿಕ ಅನುಭವಗಳು ಅವರ ಕಾವ್ಯದಲ್ಲಿ ಸಹಜವಾಗಿ ಬೆರೆತು ಹೋಗಿವೆ. ಅವರು ಬಳಸುವ ಭಾಷೆ ಅಲಂಕಾರಪ್ರಿಯವಾಗಿಲ್ಲ; ಆದರೆ ಅತ್ಯಂತ ಶಕ್ತಿಯುತ, ನೇರ ಮತ್ತು ಹೃದಯಸ್ಪರ್ಶಿ. ಈ ಕಾರಣದಿಂದಲೇ ಅವರ ಕವಿತೆಗಳು ಓದುಗರ ಮನಸ್ಸಿನಲ್ಲಿ ತಕ್ಷಣ ಸ್ಪಂದನೆ ಹುಟ್ಟಿಸುತ್ತವೆ. ಸಿದ್ಧರಾಮಯ್ಯ ಅವರ ಕಾವ್ಯದ ಮುಖ್ಯ ಲಕ್ಷಣವೆಂದರೆ ಪ್ರಶ್ನಿಸುವ ಮನೋಭಾವ. ಸಮಾಜದಲ್ಲಿ ಆಳವಾಗಿ ಬೇರೂರಿರುವ ಅಸಮಾನತೆ, ಜಾತಿ, ಮತದ ಹೆಸರಿನ ವಿಭಜನೆ, ಅಧಿಕಾರದ ಅಹಂಕಾರ, ಮೌಲ್ಯಗಳ ಕುಸಿತ ಇವೆಲ್ಲವನ್ನೂ ಅವರು ಕವಿತೆಯ ಮೂಲಕ ಧೈರ್ಯವಾಗಿ ಪ್ರಶ್ನಿಸುತ್ತಾರೆ. ಆದರೆ ಅವರ ಪ್ರಶ್ನೆಗಳು ಕಟುವಾಗಿಲ್ಲ; ಅವು ಮಾನವೀಯತೆಯ ನೆಲೆಯಿಂದ ಹೊರಹೊಮ್ಮುವ ಚಿಂತನೆಯ ಪ್ರಶ್ನೆಗಳು. ಇದೇ ಸಂದರ್ಭದಲ್ಲಿ ಪ್ರೀತಿ, ಸಹಾನುಭೂತಿ, ಸಂಬಂಧಗಳ ನಾಜೂಕು, ಆತ್ಮಪರಿಶೀಲನೆ, ಮೌನದ ತತ್ವಗಳೂ ಅವರ ಕಾವ್ಯದಲ್ಲಿ ಸಮಾನ ಮಹತ್ವವನ್ನು ಪಡೆಯುತ್ತವೆ. ಅಧ್ಯಾಪಕರಾಗಿ ಅವರು ಬೆಳೆಸಿದ ತಾರ್ಕಿಕ ದೃಷ್ಟಿ ಮತ್ತು ಸಂಶೋಧನಾತ್ಮಕ ಮನೋಭಾವ, ಅವರ ಕಾವ್ಯಕ್ಕೂ ಬಲ ತುಂಬಿದೆ. ಪುರಾಣಕಥೆಗಳು ಮತ್ತು ಸಾಂಸ್ಕೃತಿಕ ಸಂಕೇತಗಳನ್ನು ಅವರು ಪುನರ್ವ್ಯಾಖ್ಯಾನ ಮಾಡುವ ರೀತಿಯೂ ಗಮನಾರ್ಹ. ಪುರಾಣವು ಅವರಲ್ಲಿ ಭಕ್ತಿಯ ವಸ್ತುವಾಗಿಲ್ಲ; ಅದು ಮಾನವೀಯತೆಯನ್ನು ಅಳೆಯುವ ಒಂದು ತತ್ವೋಪಕರಣವಾಗಿದೆ. ಈ ದೃಷ್ಟಿಕೋನವು ಅವರ ಕಾವ್ಯವನ್ನು ಕೇವಲ ಭಾವನಾತ್ಮಕವಾಗಿರದೆ, ವಿಚಾರಪ್ರಧಾನವಾಗಿಯೂ ರೂಪಿಸುತ್ತದೆ. ಪ್ರೊ. ಸಿದ್ಧರಾಮಯ್ಯ ಅವರ ಕಾವ್ಯದಲ್ಲಿ ಮೊದಲಿಗೆ ಗಮನಸೆಳೆಯುವುದು ಅವರ ಭಾಷೆಯ ಸರಳತೆ ಮತ್ತು ತಾತ್ವಿಕ ಗಂಭೀರತೆ ನಡುವಿನ ಸಮತೋಲನ. ಉದಾಹರಣೆಗೆ, ‘ಹೇಳಲಾರೆ ಶುಭಾಶಯ’ ಕವಿತೆಯಲ್ಲಿ ಅವರು ಸಂಭ್ರಮದ ಆಚರಣೆಗಳ ಹಿಂದೆ ಅಡಗಿರುವ ಸಾಮಾಜಿಕ ವೈರುಧ್ಯಗಳನ್ನು ಪ್ರಶ್ನಿಸುತ್ತಾರೆ. ಇಲ್ಲಿ ‘ಶುಭಾಶಯ’ ಎಂಬ ಪದವು ಕೇವಲ ವೈಯಕ್ತಿಕ ಭಾವವಲ್ಲ; ಅದು ವ್ಯವಸ್ಥೆಯೊಡನೆ ಹೊಂದಾಣಿಕೆ ಮಾಡಿಕೊಂಡಿರುವ ಮೌನದ ಸಂಕೇತವಾಗುತ್ತದೆ. ಈ ಕವಿತೆ, ಸಮಾಜದಲ್ಲಿ ಅನ್ಯಾಯ ನಡೆಯುತ್ತಿದ್ದರೂ ಸಂಭ್ರಮಿಸುತ್ತಿರುವ ಮನಸ್ಥಿತಿಯ ಮೇಲಿನ ಸೂಕ್ಷ್ಮ ಟೀಕೆಯಾಗಿ ಕಾಣಿಸುತ್ತದೆ. ಇದೇ ರೀತಿಯಲ್ಲಿ ‘ಕನ್ಯಾದಾನ’ ಎಂಬ ಕವಿತೆ ಪುರಾಣಕಥೆಯನ್ನು ಆಧಾರವಾಗಿಟ್ಟುಕೊಂಡು, ಪಿತೃತ್ವಾಧಾರಿತ ಸಾಮಾಜಿಕ ವ್ಯವಸ್ಥೆಯನ್ನು ವಿಮರ್ಶಾತ್ಮಕವಾಗಿ ಅನಾವರಣಗೊಳಿಸುತ್ತದೆ. ಇಲ್ಲಿ ಪುರಾಣವು ಭಕ್ತಿಯ ವಸ್ತುವಾಗದೆ, ವಿಮರ್ಶೆಯ ಉಪಕರಣವಾಗುತ್ತದೆ. ಈ ವಿಧಾನವು ಆಧುನಿಕ ಕನ್ನಡ ಕಾವ್ಯದಲ್ಲಿ ಕಂಡುಬರುವ ಪುನರ್ವ್ಯಾಖ್ಯಾನಾತ್ಮಕ (reinterpretative) ಪ್ರವೃತ್ತಿಗೆ ಪ್ರಾತಿನಿಧ್ಯ ವಹಿಸುತ್ತದೆ. ಪುರಾಣದ ಪಾತ್ರಗಳು ಸಮಕಾಲೀನ ಪ್ರಶ್ನೆಗಳೊಂದಿಗೆ ಮುಖಾಮುಖಿಯಾಗುತ್ತವೆ; ಇದರಿಂದ ಕವಿತೆಯೂ ಇತಿಹಾಸಾತೀತವಾಗದೆ, ಸಮಕಾಲೀನವಾಗುತ್ತದೆ. ಪ್ರೊ. ಸಿದ್ಧರಾಮಯ್ಯ ಅವರ ಕಾವ್ಯದಲ್ಲಿ ಮತ್ತೊಂದು ಪ್ರಮುಖ ಅಂಶವೆಂದರೆ ಮೌನ ಮತ್ತು ಪ್ರತಿರೋಧದ ಸಂಬಂಧ. ‘ನತ್ತು’ ಕವಿತೆಯಲ್ಲಿ ಕಾಣಿಸುವ ಮೌನವು ಶರಣಾಗತಿಯ ಸಂಕೇತವಲ್ಲ; ಅದು ಒಳಗೊಳ್ಳುವ, ಪ್ರಶ್ನಿಸುವ ಮತ್ತು ಪ್ರತಿರೋಧಿಸುವ ಶಕ್ತಿಯನ್ನು ಹೊತ್ತಿದೆ. ಈ ಮೌನವು ಶಂಕರಶಿಷ್ಯ ಪರಂಪರೆಯ ತಾತ್ವಿಕ ನೆಲೆಯನ್ನು ನೆನಪಿಸುತ್ತಲೇ, ಆಧುನಿಕ ಮಾನವನ ಅಂತರ್ದ್ವಂದ್ವವನ್ನೂ ಪ್ರತಿಬಿಂಬಿಸುತ್ತದೆ. ಇಲ್ಲಿ ಕವಿ ಧಾರ್ಮಿಕ ಸಂಕೇತವನ್ನು ಮಾನಸಿಕ ಮತ್ತು ತತ್ವಶಾಸ್ತ್ರೀಯ ಅನುಭವವಾಗಿ ಪರಿವರ್ತಿಸುತ್ತಾರೆ. ಸಾಮಾಜಿಕ ಜಾಗೃತಿಯ ದೃಷ್ಟಿಯಿಂದ ‘ನಮ್ಮ ಸಂಗಡ’ ಮತ್ತು ‘ಕನ್ನಡಿ’ ಮೊದಲಾದ ಕವಿತೆಗಳು ಗಮನಾರ್ಹವಾಗಿವೆ. ಕನ್ನಡಿಯಲ್ಲಿ ಕವಿ ವ್ಯಕ್ತಿಯ ಆತ್ಮಪರಿಶೀಲನೆಯನ್ನು ಸಮಾಜದ ಪ್ರತಿಬಿಂಬವಾಗಿ ರೂಪಿಸುತ್ತಾರೆ. ಕನ್ನಡಿ ಇಲ್ಲಿ ಕೇವಲ ವಸ್ತುವಲ್ಲ; ಅದು ಸತ್ಯವನ್ನು ಎದುರುಗಾಣಿಸುವ ತತ್ವವಾಗಿದೆ. ಈ ಕವಿತೆ ಓದುಗರನ್ನು ‘ನಾನು ಯಾರು?’ ಎಂಬ ಅಸ್ತಿತ್ವಾತ್ಮಕ ಪ್ರಶ್ನೆಯೊಂದಿಗೆ ಮುಖಾಮುಖಿಯಾಗಿಸುತ್ತದೆ. ಇನ್ನು ‘ವೃತ್ತಿ ಕಲ್ಚರ್’ ಹಾಗೂ ‘ಅಧಿಕಾರ’ ಕವಿತೆಗಳಲ್ಲಿ ಕಾಣಿಸುವ ವ್ಯಂಗ್ಯ, ಸಮಕಾಲೀನ ವ್ಯವಸ್ಥೆಗಳ ಮೇಲಿನ ಗಂಭೀರ ವಿಮರ್ಶೆಯಾಗಿದೆ. ಅಧಿಕಾರದ ಅಹಂಕಾರ, ನೈತಿಕ ಕುಸಿತ ಮತ್ತು ಮಾನವೀಯ ಮೌಲ್ಯಗಳ ಕ್ಷಯವನ್ನು ಕವಿ ನೇರವಾದ ಮತ್ತು ತತ್ವಬದ್ಧ ಭಾಷೆಯಲ್ಲಿ ಬರೆಯುತ್ತಾರೆ. ಈ ಕವಿತೆಗಳು ಮಾರ್ಕ್ಸೀಯ ಅಥವಾ ದಲಿತ ಸಂವೇದನೆಯ ನೇರ ಘೋಷಣೆಯಾಗದೆ, ಮಾನವೀಯ ನೈತಿಕತೆಯ ನೆಲೆಯಲ್ಲಿ ನಿಂತ ವಿಮರ್ಶೆಯಾಗಿ ಹೊರಹೊಮ್ಮುತ್ತವೆ. ಪ್ರೊ. ಸಿದ್ಧರಾಮಯ್ಯ ಅವರ ಕಾವ್ಯವು ಭಾವಪ್ರಧಾನವಾಗಿರುವಷ್ಟೇ ಅಲ್ಲ, ಕಾವ್ಯವಿಮರ್ಶೆಗೆ ಸಮೃದ್ಧ ಅವಕಾಶವನ್ನು ಒದಗಿಸುತ್ತದೆ. ಅವರ ಕವಿತೆಗಳಲ್ಲಿ ಕಾಣಿಸುವ ಪುರಾಣ, ತತ್ವ, ಸಮಾಜ ಮತ್ತು ವೈಯಕ್ತಿಕ ಅನುಭವಗಳ ಸಂಯೋಜನೆ, ಸಮಕಾಲೀನ ಕನ್ನಡ ಕಾವ್ಯವನ್ನು ಅರ್ಥಮಾಡಿಕೊಳ್ಳಲು ಒಂದು ಮಹತ್ವದ ಅಧ್ಯಯನ ಕ್ಷೇತ್ರವಾಗಿದೆ. ಅಧ್ಯಾಪಕರಾಗಿ ಅವರಿಗಿರುವ ಪಠ್ಯಜ್ಞಾನ ಮತ್ತು ವಿಮರ್ಶಾತ್ಮಕ ದೃಷ್ಟಿ, ಅವರ ಕಾವ್ಯದಲ್ಲಿ ಸಹಜವಾಗಿ ವ್ಯಕ್ತವಾಗಿದೆ. ಈ ಸಂಕಲನವು ಕೇವಲ ಕಾವ್ಯಾಸ್ವಾದನೆಗೆ ಮಾತ್ರವಲ್ಲ; ಸಾಹಿತ್ಯದ ವಿದ್ಯಾರ್ಥಿಗಳು, ಸಂಶೋಧಕರು ಮತ್ತು ವಿಚಾರಪರ ಓದುಗರಿಗೆ ವಿಶ್ಲೇಷಣಾತ್ಮಕ ಪಠ್ಯವಾಗಿಯೂ ಉಪಯುಕ್ತವಾಗಿದೆ. ಪ್ರೊ. ಎಸ್.ಜಿ. ಸಿದ್ಧರಾಮಯ್ಯ ಅವರ ಕಾವ್ಯಸಾಧನೆ, ಕನ್ನಡ ಸಾಹಿತ್ಯದಲ್ಲಿ ವಿಚಾರಪ್ರಧಾನ ಕಾವ್ಯದ ಶಕ್ತಿಯನ್ನು ಮತ್ತೊಮ್ಮೆ ದೃಢಪಡಿಸುತ್ತದೆ. ‘ಹೇಳಲಾರೆ ಶುಭಾಶಯ’ ಸೇರಿದಂತೆ ಅವರ ಕವಿತಾಸಂಕಲನಗಳಲ್ಲಿ ಕಾಣಿಸುವ ಮೌನ, ವಿರೋಧ, ವ್ಯಂಗ್ಯ ಮತ್ತು ಆಂತರಿಕ ಸಂವಾದಗಳು ಓದುಗರನ್ನು ಸುಮ್ಮನೆ ಓದಿ ಮುಗಿಸುವ ಹಂತದಲ್ಲೇ ಬಿಡುವುದಿಲ್ಲ. ಅವು ಓದುಗರನ್ನು ಪ್ರಶ್ನೆ ಮಾಡುವಂತೆ, ಒಳಗೆ ನೋಡಿಕೊಳ್ಳುವಂತೆ ಮತ್ತು ಸಮಾಜದತ್ತ ಹೊಸ ದೃಷ್ಟಿಯಿಂದ ನೋಡುವಂತೆ ಪ್ರೇರೇಪಿಸುತ್ತವೆ. ಈ ಅರ್ಥದಲ್ಲಿ ಅವರ ಕಾವ್ಯ ಓದುಗರ ಪಾಲಿಗೆ ಒಂದು ಅನುಭವ, ಒಂದು ಚಿಂತನೆಯ ಪ್ರಯಾಣ. ಪ್ರೊ. ಎಸ್.ಜಿ. ಸಿದ್ಧರಾಮಯ್ಯ ಅವರು ಸಾಹಿತ್ಯವನ್ನು ಕೇವಲ ಸೌಂದರ್ಯದ ವಸ್ತುವೆಂದು ಕಾಣದೆ, ಸಮಾಜದೊಂದಿಗೆ ಸಂವಾದ ನಡೆಸುವ ಶಕ್ತಿಯುತ ಮಾಧ್ಯಮವೆಂದು ನಂಬಿದ ಕವಿ. ಅವರ ಈ ನಿಷ್ಠೆ, ಪ್ರಾಮಾಣಿಕತೆ ಮತ್ತು ನಿರಂತರ ಸೃಜನಶೀಲತೆ ಕನ್ನಡ ಸಾಹಿತ್ಯಕ್ಕೆ ದೀರ್ಘಕಾಲದ ಶಕ್ತಿಯಾಗಲಿದೆ ಎಂಬುದರಲ್ಲಿ ಸಂದೇಹವಿಲ್ಲ. ಈ ಕೃತಿ ಕನ್ನಡ ಕಾವ್ಯವನ್ನು ಪ್ರೀತಿಸುವ ಎಲ್ಲ ಓದುಗರಿಗೂ, ವಿಶೇಷವಾಗಿ ವಿಚಾರಪರ ಕಾವ್ಯವನ್ನು ಆಸ್ವಾದಿಸುವವರಿಗೆ, ಅರ್ಥಪೂರ್ಣ ಸಂಗಾತಿಯಾಗಲಿದೆ ಎಂಬ ವಿಶ್ವಾಸವಿದೆ.
ಸಂಪಾದಕೀಯ | ಮಾಹಿತಿ ಹಕ್ಕು ಕಾಯ್ದೆ ಸಮಾಧಿಗೆ ಮಸಲತ್ತು
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಮೈಸೂರಿನ ಸೌಂದರ್ಯಕ್ಕೆ 'ಇಕಿಗಾಯ್ ಕೆಫೆ' ಮೆರುಗು : ಸಾಂಸ್ಕೃತಿಕ ನಗರದ ಲೇಟೆಸ್ಟ್ ಅಡ್ಡಾ
Food Fun And Laughter - Ikigai Cafe : ಸಾಂಸ್ಕೃತಿಕ ನಗರ ನಮ್ಮ ಹೆಮ್ಮೆಯ ಮೈಸೂರಿನಲ್ಲಿ ಹೊಸ ಕೆಫೆಯೊಂದು ಆರಂಭವಾಗಿದೆ. ಈ ರೆಸ್ಟೋರೆಂಟ್ ಹೆಸರು ಇಕಿಗಾಯ್ ಕೆಫೆ. ಇಕೆಗಾಯ್ ಎನ್ನುವುದು ಜಪಾನ್ ದೇಶದ ಭಾಷೆ. ಇದನ್ನು ಶುಭ ಸೂಚಕ ಪದ ಎಂದು ಆ ದೇಶದಲ್ಲಿ ಕರೆಯುವುದುಂಟು. ಮೈಸೂರಿಗರು ಈ ಕೆಫೆಗೊಮ್ಮೆ ಭೇಟಿ ಕೊಡಿ
Gold Price: ಚಿನ್ನದ ಬೆಲೆ 1,50,000 ರೂಪಾಯಿಗೆ ಕುಸಿತ, ಇನ್ನು ಎಷ್ಟು ಕಡಿಮೆ ಆಗಬಹುದು ಬಂಗಾರ?
ಚಿನ್ನದ ಬೆಲೆ ಭಾರಿ ದೊಡ್ಡ ಪ್ರಮಾಣದಲ್ಲಿ ಕುಸಿತ ಕಾಣುತ್ತಿದೆ, ಚಿನ್ನದ ಬೆಲೆಯಲ್ಲಿ ಭಾರಿ ದೊಡ್ಡ ಮಟ್ಟದಲ್ಲಿ ಕುಸಿತ ಆಗುತ್ತಿರುವ ಹಿನ್ನೆಲೆ ಆಭರಣ ಪ್ರಿಯರು ಕೂಡ ಖುಷಿಯಾಗಿದ್ದಾರೆ. ಅಲ್ಲದೆ, ಚಿನ್ನ ಖರೀದಿಗೆ ಪ್ಲಾನ್ ಕೂಡ ಮಾಡುತ್ತಿದ್ದಾರೆ. ಚಿನ್ನದ ರೀತಿಯಲ್ಲೇ ಬೆಳ್ಳಿ ಬೆಲೆ ಕೂಡ ಇದೀಗ ಭಾರಿ ದೊಡ್ಡ ಮಟ್ಟದಲ್ಲಿ ಕುಸಿದು ಬೀಳುತ್ತಿದೆ. ಮದುವೆ ಸೇರಿದಂತೆ ಹಲವು ಶುಭಕಾರ್ಯ ಬರುವ
Uttar Pradesh | ಪೈಪ್ ಒಡೆದ ಆರೋಪದಲ್ಲಿ ಶಾಲೆಯಲ್ಲಿ ದಲಿತ ಬಾಲಕನ ಮೇಲೆ ದೌರ್ಜನ್ಯ: ಪ್ರಕರಣ ದಾಖಲು
ಆಗ್ರಾ: ಉತ್ತರ ಪ್ರದೇಶದ ಶಾಲೆಯೊಂದರಲ್ಲಿ ಪೈಪ್ ಒಡೆದ ಆರೋಪದಲ್ಲಿ 8ನೇ ತರಗತಿಯ ವಿದ್ಯಾರ್ಥಿಯ ಮೇಲೆ ಶಿಕ್ಷಕ ಮತ್ತು ಶಾಲಾ ಸಮಿತಿ ಸದಸ್ಯ ಥಳಿಸಿದ್ದಲ್ಲದೆ ನಿಂದಿಸಿ ದೌರ್ಜನ್ಯ ಎಸಗಿರುವ ಬಗ್ಗೆ ವರದಿಯಾಗಿದೆ. ಹಲ್ಲೆಯಿಂದಾಗಿ 14 ವರ್ಷದ ದಲಿತ ಬಾಲಕನ ಬೆನ್ನು ಮತ್ತು ಕೈಕಾಲುಗಳಿಗೆ ಗಾಯಗಳಾಗಿದೆ. ಆತನಿಗೆ ನಡೆದಾಡಲು ಕಷ್ಟವಾಗುತ್ತಿದೆ ಎಂದು ಹೇಳಲಾಗಿದೆ. ಇದಲ್ಲದೆ ಆರೋಪಿಗಳು ಆತನಿಗೆ ಶಾಲೆಗೆ ಬರದಂತೆ ತಾಕೀತು ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. “ಮೈನ್ಪುರಿಯ ಕುರವಲಿ ಪ್ರದೇಶದಲ್ಲಿ ಶುಕ್ರವಾರ ಈ ಘಟನೆ ನಡೆದಿದೆ. ಶಾಲಾ ಸಮಿತಿ ಸದಸ್ಯ ರಾಜೀವ್ ವರ್ಮಾ ಮತ್ತು ಶಿಕ್ಷಕ ಸುಖ್ಬೀರ್ ಸಿಂಗ್ ವಿರುದ್ಧ ಎಸ್ಸಿ, ಎಸ್ಟಿ ಕಾಯ್ದೆಯಡಿ ಎಫ್ಐಆರ್ ದಾಖಲಿಸಲಾಗಿದೆ ಎಂದು ಸ್ಥಳೀಯ ಠಾಣೆಯ ಎಸ್ಎಚ್ಒ ಲಲಿತ್ ಭಾಟಿ ತಿಳಿಸಿದ್ದಾರೆ. ನನಗೆ ಬಾಯಾರಿಕೆಯಾಗುತ್ತಿತ್ತು, ನಾನು ನೀರು ಕುಡಿಯಲು ಹೋದಾಗ ನೀರಿನ ಟ್ಯಾಂಕ್ ಪೈಪ್ ಮುರಿದಿರುವುದು ಕಂಡು ಬಂದಿದೆ. ಪೈಪ್ ಒಡೆದಿರುವುದಾಗಿ ನನ್ನ ಮೇಲೆ ಆರೋಪ ಹೊರಿಸಲಾಯಿತು. ನಾನು ಪೈಪ್ ಒಡೆದಿಲ್ಲ ಎಂದು ಪದೇ ಪದೇ ಹೇಳಿದೆ. ಆದರೆ ಯಾರೂ ನನ್ನ ಮಾತನ್ನು ಕೇಳಲಿಲ್ಲ. ನನಗೆ ಥಳಿಸಿ ಜಾತಿ ನಿಂದನೆ ಮಾಡಿದರು. ಶಾಲೆಯ ಆವರಣದಲ್ಲಿ ಮತ್ತೆ ಕಂಡರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದರು ಎಂದು ಸಂತ್ರಸ್ತ ಬಾಲಕ ಹೇಳಿದ್ದಾನೆ. ಪೈಪ್ಗೆ ಮತ್ತೊಬ್ಬ ಬಾಲಕ ಹಾನಿ ಮಾಡಿದ್ದಾನೆ ಮತ್ತು ನಮ್ಮ ಮಗನನ್ನು ಅನ್ಯಾಯವಾಗಿ ಗುರಿಯಾಗಿಸಿಕೊಳ್ಳಲಾಗಿದೆ ಎಂದು ಬಾಲಕನ ಕುಟುಂಬ ಹೇಳಿಕೊಂಡಿದೆ. ಬಾಲಕನ ಅಣ್ಣ ನೀಡಿದ ದೂರಿನಂತೆ ಆರೋಪಿಗಳ ವಿರುದ್ಧ ಎಸ್ಸಿ, ಎಸ್ಟಿ ದೌರ್ಜನ್ಯ ತಡೆ ಕಾಯ್ದೆ ಸೇರಿದಂತೆ ಭಾರತೀಯ ನ್ಯಾಯ ಸಂಹಿತೆಯ ವಿವಿಧ ಸೆಕ್ಷನ್ಗಳಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ತನ್ನ ವಿರುದ್ಧದ ಆರೋಪಗಳನ್ನು ತಳ್ಳಿಹಾಕಿದ ಶಾಲಾ ಸಮಿತಿ ಸದಸ್ಯ ರಾಜೀವ್ ವರ್ಮಾ, ಇದು ಸುಳ್ಳು ಆರೋಪ, ನಾನು ಘಟನೆಯ ವೇಳೆ ಅಲ್ಲಿ ಇರಲೇ ಇಲ್ಲ. ಶಿಕ್ಷಕರು ಹಾಜರಿದ್ದರಬಹುದು, ನನಗೆ ತಿಳಿದಿಲ್ಲ. ನಾನು ಶೀಘ್ರದಲ್ಲೇ ಪೊಲೀಸ್ ಅಧಿಕಾರಿಗಳನ್ನು ಭೇಟಿಯಾಗುತ್ತೇನೆ. ಪ್ರಕರಣದಲ್ಲಿ ನ್ಯಾಯಯುತ ತನಿಖೆ ನಡೆಯಲಿದೆ ಎಂದು ನಾನು ಭಾವಿಸುತ್ತೇನೆ ಎಂದು ಹೇಳಿದ್ದಾರೆ.
ಲೋಕಸಭೆ ಅಧಿವೇಶನ | ಅನುರಾಗ್ ಠಾಕೂರ್ ಧರಿಸಿದ್ದ ʼಐಷಾರಾಮಿ Louis Vuitton ಬೆಲ್ಟ್ʼ ವೈರಲ್!
ಅವರೇಕೆ ಬೆಲ್ಟ್ ಅನ್ನು ಮರೆಮಾಚಿದರು ಎಂದು ಪ್ರಶ್ನಿಸಿದ ಜನರು
ಫೆ. 6: ನಾನ್ವೆಜ್ ತುಳು ಸಿನಿಮಾ ಬಿಡುಗಡೆ
ಮಲ್ಪಿಪ್ಲೆಕ್ಸ್ನಲ್ಲಿ ಕೇವಲ 99 ರೂಪಾಯಿ ಟಿಕೇಟ್ ದರ!
ಅಣ್ಣಾಮಲೈ ಫುಲ್ ರೆಬೆಲ್, ಬಿಜೆಪಿ ಹೈಕಮಾಂಡ್ ಕೊಟ್ಟಿದ್ದ ಹುದ್ದೆಗೆ ಗುಡ್ಬೈ... K Annamalai
ತಮಿಳುನಾಡು ವಿಧಾನಸಭೆ ಚುನಾವಣೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಇದ್ದು, ಈ ಬಾರಿಯ ಎಲೆಕ್ಷನ್ ಗೆದ್ದೇ ಗೆಲ್ಲಬೇಕು ಎಂಬ ಗುರಿಯೊಂದಿಗೆ ಬಿಜೆಪಿ ನಾಯಕರು ಮುಂದೆ ನುಗ್ಗಿದ್ದಾರೆ. ಈ ಪೈಕಿ ಘಟಾನುಘಟಿ ನಾಯಕರೇ ತಮಿಳುನಾಡು ರಾಜ್ಯದಲ್ಲಿ ಭರ್ಜರಿ ಚುನಾವಣಾ ಪ್ರಚಾರ ನಡೆಸಿ ಮತಬೇಟೆ ಶುರು ಮಾಡಲು ಸಜ್ಜಾಗಿದ್ದಾರೆ. ಅದರಲ್ಲೂ ದಕ್ಷಿಣ ಭಾರತದ ಶಕ್ತಿಶಾಲಿ ರಾಜ್ಯದಲ್ಲಿ ಅಧಿಕಾರ ಹಿಡಿದೇ ತೀರಬೇಕು
ಕೆನಡಾದಲ್ಲಿ ಮತ್ತೆ ಗುಂಡಿನ ಮೊರೆತ, 3 ಭಾರತೀಯರು ಅರೆಸ್ಟ್: ಕೆನಡಿಯನ್ನರಲ್ಲಿ ಹೆಚ್ಚುತ್ತಿದೆ ವಲಸೆ ವಿರೋಧಿ ಭಾವನೆ!
ಕೆನಡಾದಲ್ಲಿ ಗುಂಡಿನ ದಾಳಿ ಪ್ರಕರಣಗಳು ಹೆಚ್ಚಾಗುತ್ತಿವೆ. ಇತ್ತೀಚೆಗೆ ಸರ್ರೆ ಪ್ರದೇಶದಲ್ಲಿ ನಡೆದ ಘಟನೆಯಲ್ಲಿ ಮೂವರು ಭಾರತೀಯ ಮೂಲದ ಯುವಕರನ್ನು ಬಂಧಿಸಲಾಗಿದೆ. ಇವರ ಮೇಲೆ ಬಂದೂಕು ಅಪರಾಧದ ಆರೋಪ ಹೊರಿಸಲಾಗಿದೆ. ಕೆನಡಾದಲ್ಲಿ ಇಂತಹ ಪ್ರಕರಣಗಳು ಹೆಚ್ಚುತ್ತಿರುವುದು ಅಲ್ಲಿನ ಜನರಲ್ಲಿ ಆತಂಕ ಮೂಡಿಸುತ್ತಿದ್ದು, ವಲಸಿಗರಿಂದ ದೇಶದ ಮೇಲೆ ನಕರಾತ್ಮಕ ಪರಿಣಾಮ ಬೀಳುತ್ತಿದೆ ಎಂದು ದೇಶದ ಶೇ.48% ಪ್ರಜೆಗಳು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಇದರಿಂದಾಗಿ ವಲಸೆ ನಿಯಮಗಳನ್ನು ಕಠಿಣಗೊಳಿಸುವ ಸಾಧ್ಯತೆ ಇದೆ.
ಭಾರತ–ಅಮೆರಿಕ ವ್ಯಾಪಾರ ಒಪ್ಪಂದ ವಿವಾದ: ರಾಜ್ಯಸಭೆಯಲ್ಲಿ ವಿಪಕ್ಷಗಳ ಸಭಾತ್ಯಾಗ
ಲೋಕಸಭೆಯಲ್ಲಿ ‘ಸರಂಡರ್ ಮೋದಿ’ ಘೋಷಣೆ
ಫೆ.7-8: ಉಚಿತ ಶ್ರವಣ ತಪಾಸಣಾ ಶಿಬಿರ
ಮಂಗಳೂರು, ಫೆ.3: ಟೀಮ್ ಈಶ್ವರ್ ಮಲ್ಪೆ ಅವರ ವೈದ್ಯಕೀಯ ತಂಡ ದಕ್ಷಿಣ ಕನ್ನಡ ಕಾರ್ಯನಿರತ ಪತ್ರಕರ್ತರ ಸಂಘದ ಸಹಯೋಗದಲ್ಲಿ, ಮಂಗಳೂರು ಪ್ರೆಸ್ ಕ್ಲಬ್ ಮತ್ತು ಪತ್ರಿಕಾ ಭವನ ಟ್ರಸ್ಟ್ ಸಹಕಾರದೊಂದಿಗೆ 7 ಮತ್ತು 8 ಫೆಬ್ರವರಿ 2026 ರಂದು ಉಚಿತ ಶ್ರವಣ ತಪಾಸಣಾ ಶಿಬಿರ ಆಯೋಜಿಸಲಾಗಿದೆ. ಬೆಳಗ್ಗೆ 9.30ರಿಂದ ಸಂಜೆ 4.30ರವರೆಗೆ ಮಂಗಳೂರು ಪತ್ರಿಕಾ ಭವನದಲ್ಲಿ ಶಿಬಿರ ನಡೆಯಲಿದೆ ಎಂದು ಸಂಚಾಲಕ ಲವ ಬಂಗೇರಾ ತಿಳಿಸಿದ್ದಾರೆ. ಈ ಶಿಬಿರದಲ್ಲಿ ಕಿವಿಯ ಶ್ರವಣ ತಪಾಸಣೆ, ಶ್ರವಣ ಯಂತ್ರಕ್ಕೆ ಸಹಾಯಧನ ಹಾಗೂ ವಿತರಣೆ ಕಾರ್ಯಕ್ರಮಗಳು ನಡೆಯಲಿವೆ. ಪತ್ರಕರ್ತರ ಕುಟುಂಬದ ಸದಸ್ಯರು, ಹಿರಿಯ ನಾಗರಿಕರು ಸೇರಿದಂತೆ ಎಲ್ಲಾ ಸಾರ್ವಜನಿಕರು ಉಚಿತ ತಪಾಸಣೆ ಪಡೆಯಬಹುದಾಗಿದೆ. ಶ್ರವಣದ ಸಮಸ್ಯೆಯಿಂದ ಬಳಲುತ್ತಿರುವ ರೋಗಿಗಳಿಗೆ ಟೀಮ್ ಈಶ್ವರ್ ಮಲ್ಪೆ ಶ್ರವಣ ಯಂತ್ರದ (Hearing Machine) ವೆಚ್ಚದ 40% ಮೊತ್ತವನ್ನು ಭರಿಸುತ್ತಿದೆ. ಮೊದಲ 30 ನೋಂದಾಯಿತ ವ್ಯಕ್ತಿಗಳು ಮಾತ್ರ ಈ ಸೌಲಭ್ಯವನ್ನು ಬಳಸಿಕೊಳ್ಳಬಹುದು. ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ ನಡೆದ ಹಿಂದಿನ ಶಿಬಿರದಲ್ಲಿ 68 ಮಂದಿ ತಪಾಸಣೆಗೆ ಒಳಗಾಗಿದ್ದರು. ಅಂತಾರಾಷ್ಟ್ರೀಯ ಸಂಸ್ಥೆಯಲ್ಲಿ ಅನುಭವ ಪಡೆದಿರುವ ವೈದ್ಯರು ಈ ಶಿಬಿರದಲ್ಲಿ ಪಾಲ್ಗೊಳ್ಳಲಿದ್ದಾರೆ. ಹೆಚ್ಚಿನ ಮಾಹಿತಿಗಾಗಿ +91 89518 04399 ಕ್ಕೆ ಕರೆಮಾಡಬಹುದಾಗಿದೆ. ಸಾರ್ವಜನಿಕರು ಈ ಸೌಲಭ್ಯವನ್ನು ಬಳಸಿಕೊಳ್ಳಬಹುದಾಗಿದೆ ಎಂದು ಲವ ಬಂಗೇರಾ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ದಕ್ಷಿಣ ಕನ್ನಡ ಕಾರ್ಯನಿರತ ಪತ್ರಕರ್ತ ರ ಸಂಘದ ಅಧ್ಯಕ್ಷ ಪುಷ್ಪರಾಜ್ ಬಿ.ಎನ್,ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ.ಹರೀಶ್ ರೈ,ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಶ್ರೀನಿವಾಸ ನಾಯಕ್ ಇಂದಾಜೆ,ಶ್ರವಣ ತಜ್ಞೆ ಡಾ. ಅಂಕಿತಾ ಉಪಸ್ಥಿತರಿದ್ದರು.
ಅಂತಾರಾಷ್ಟ್ರೀಯ ನ್ಯಾಯಾಲಯದ ಸಿಂಧೂ ಜಲ ಒಪ್ಪಂದ ವಿಚಾರಣೆಯಲ್ಲಿ ಭಾಗವಹಿಸಲು ಭಾರತ ನಕಾರ
ಭಾರತದ ಸಿಂಧೂ ಜಲ ಒಪ್ಪಂದ ರದ್ದತಿ ಪ್ರಶ್ನಿಸಿ ಪಾಕಿಸ್ತಾನವು ಹೇಗ್ನಲ್ಲಿರುವ ಅಂತಾರಾಷ್ಟ್ರೀಯ ನ್ಯಾಯಾಲಯದ ಮೆಟ್ಟಿಲೇರಿದೆ. ಈ ಕುರಿತ ವಿಚಾರಣೆಯನ್ನು ಐಸಿಜೆ ಮುಂದುವರೆಸಿದ್ದು, ಭಾರತ ಈ ವಿಚಾರಣೆಯ ಸಿಂಧುತ್ವ ಪ್ರಶ್ನಿಸಿದೆ. ಅಲ್ಲದೇ ಯಾವುದೇ ವಿಚಾರಣಾ ಪ್ರಕ್ರಿಯೆಯಲ್ಲಿ ಭಾಗವಹಿಸುವಿಲ್ಲ ಎಂದು ಸ್ಪಷ್ಟಪಡಿಸಿದೆ. ಭಾರತದ ಈ ಕಠಿಣ ನಿಲುವು ಮತ್ತು ಯಾವುದೇ ಒತ್ತಡಕ್ಕೆ ಮಣಿಯದಿರುವ ದೃಢ ನಿರ್ಧಾರ, ಪಾಕಿಸ್ತಾನಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಪಾಕಿಸ್ತಾನ ಈಗ ಐಸಿಜೆ ವಿಚಾರಣೆ ಭರವಸೆಯ ಮೇಲೆ ದಿನ ದೂಡುತ್ತಿದೆ.
ಶಿವಮೊಗ್ಗ: ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅಸ್ವಸ್ಥ; ಆಸ್ಪತ್ರೆಗೆ ದಾಖಲು
ಶಿವಮೊಗ್ಗ: ಸಾಗರ ಮಾರಿಕಾಂಬ ದೇವಿ ಜಾತ್ರೆಯ ಹಿನ್ನೆಲೆಯಲ್ಲಿ ದೇವಿಯ ದರ್ಶನಕ್ಕೆ ತೆರಳಿದ್ದ ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅವರು ಅಸ್ವಸ್ಥಗೊಂಡು ಕುಸಿದು ಬಿದ್ದ ಘಟನೆ ಮಂಗಳವಾರ ನಡೆದಿದೆ. ಉಸಿರಾಟದ ತೊಂದರೆ ಹಾಗೂ ಮಧುಮೇಹ ಸಮಸ್ಯೆಯಿಂದಾಗಿ ಅವರು ಅಚಾನಕ್ ಕುಸಿದು ಬಿದ್ದಿದ್ದಾರೆ ಎಂದು ತಿಳಿದು ಬಂದಿದೆ. ತಕ್ಷಣವೇ ಅವರನ್ನು ಸಾಗರದ ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಉಪ ವಿಭಾಗೀಯ ಆಸ್ಪತ್ರೆಯ ವೈದ್ಯ ಡಾ. ವಿಕ್ರಂ ಅವರು ಪ್ರಾಥಮಿಕ ಚಿಕಿತ್ಸೆ ನೀಡಿದ್ದಾರೆ. ದೇವಸ್ಥಾನದಲ್ಲಿ ಉಂಟಾಗಿದ್ದ ಭಾರಿ ಜನಸಂದಣಿಯಿಂದ ಉಸಿರಾಟ ಸಮಸ್ಯೆ ಉಂಟಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಪ್ರಸ್ತುತ ಕಾಗೋಡು ತಿಮ್ಮಪ್ಪ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದ್ದು, ಆತಂಕಕ್ಕೆ ಕಾರಣವಿಲ್ಲ ಎಂದು ಆಸ್ಪತ್ರೆ ಮೂಲಗಳು ಮಾಹಿತಿ ನೀಡಿವೆ.
ಭಾರತದ ಗೌಪ್ಯತೆಯ ಹಕ್ಕಿನೊಂದಿಗೆ ಆಟವಾಡಲು ಸಾಧ್ಯವಿಲ್ಲ: ವಾಟ್ಸಾಪ್, ಮೆಟಾಗೆ ಸುಪ್ರೀಂ ಕೋರ್ಟ್ ಎಚ್ಚರಿಕೆ
ಸುಪ್ರೀಂಕೋರ್ಟ್ ವಾಟ್ಸಾಪ್ ಮತ್ತು ಮೆಟಾಗೆ ಬಳಕೆದಾರರ ಡೇಟಾ ಹಂಚಿಕೆ ಬಗ್ಗೆ ಕಠಿಣ ಎಚ್ಚರಿಕೆ ನೀಡಿದೆ. ಭಾರತದ ಗೌಪ್ಯತೆಯ ಜೊತೆ ಆಟವಾಡಲು ಸಾಧ್ಯವಿಲ್ಲ ಎಂದು ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಹೇಳಿದ್ದಾರೆ. ಬಳಕೆದಾರರ ಡೇಟಾವನ್ನು ವಾಣಿಜ್ಯ ಉದ್ದೇಶಗಳಿಗೆ ಬಳಸಲು ಅವಕಾಶ ನೀಡುವುದಿಲ್ಲ. ದಂಡದ ಮೊತ್ತ ಠೇವಣಿ ಮಾಡಲಾಗಿದೆ. ಪ್ರಕರಣಗಳ ವಿಚಾರಣೆ ಮುಂದುವರಿಯಲಿದೆ.
ನಾಗರಿಕರ ಗೌಪ್ಯತೆಯ ಹಕ್ಕುಗಳನ್ನು ಉಲ್ಲಂಘಿಸಲು ಅವಕಾಶ ನೀಡುವುದಿಲ್ಲ: ವಾಟ್ಸ್ಆ್ಯಪ್ ಗೆ ಸುಪ್ರೀಂ ಕೋರ್ಟ್ ತರಾಟೆ
ಹೊಸದಿಲ್ಲಿ: ಬಳಕೆದಾರರ ದತ್ತಾಂಶ ಹಂಚಿಕೆಯ ಕಳವಳಗಳಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಮಂಗಳವಾರ ವಾಟ್ಸ್ಆ್ಯಪ್ ಮತ್ತು ಅದರ ಪೋಷಕ ಕಂಪೆನಿ ಮೆಟಾವನ್ನು ತರಾಟೆಗೆ ತೆಗೆದುಕೊಂಡಿದೆ. ತಂತ್ರಜ್ಞಾನ ಅಥವಾ ವ್ಯವಹಾರದ ಹೆಸರಿನಲ್ಲಿ ನಾಗರಿಕರ ಗೌಪ್ಯತೆಯ ಹಕ್ಕಿನೊಂದಿಗೆ ರಾಜಿ ಮಾಡಿಕೊಳ್ಳಲು ಅವಕಾಶ ನೀಡುವುದಿಲ್ಲ ಎಂದು ಹೇಳಿದೆ. ದತ್ತಾಂಶ ಹಂಚಿಕೆಯ ಹೆಸರಿನಲ್ಲಿ ದೇಶದ ನಾಗರಿಕರ ಗೌಪ್ಯತೆಯ ಹಕ್ಕಿನೊಂದಿಗೆ ನೀವು ಆಟವಾಡಲು ಸಾಧ್ಯವಿಲ್ಲ ಎಂದು ನ್ಯಾಯಾಲಯವು ತಂತ್ರಜ್ಞಾನ ದೈತ್ಯ ಸಂಸ್ಥೆ ವಾಟ್ಸ್ಆ್ಯಪ್ ಮತ್ತು ಅದರ ಪೋಷಕ ಕಂಪೆನಿ ಮೆಟಾಗೆ ತಿಳಿಸಿದೆ. ಪ್ರಕರಣದಲ್ಲಿ ನ್ಯಾಯಾಲಯವು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವನ್ನು ವಿಚಾರಣೆಯಲ್ಲಿ ಒಂದು ಪಕ್ಷವನ್ನಾಗಿ ಮಾಡಿದೆ. ಫೆಬ್ರವರಿ 9ರಂದು ಈ ಕುರಿತು ಮಧ್ಯಂತರ ಆದೇಶಗಳನ್ನು ಹೊರಡಿಸುವುದಾಗಿ ಹೇಳಿದೆ.
ಬಿಸಿಸಿ ಪ್ರೀಮಿಯರ್ ಲೀಗ್ 2026: ಪ್ಯಾರಡೈಸ್ ತಂಡ ಚಾಂಪಿಯನ್
ಮೂಡಬಿದ್ರಿ: ಬೆಳ್ವಾಯಿ ಕಮ್ಯೂನಿಟಿ ಸೆಂಟರ್ (ಬಿಸಿಸಿ) ಆಯೋಜಿಸಿದ್ದ ಬಿಸಿಸಿ ಪ್ರೀಮಿಯರ್ ಲೀಗ್ 2026 (ಸೀಸನ್–3) ಅಂಡರ್ಆರ್ಮ್ ಕ್ರಿಕೆಟ್ ಟೂರ್ನಮೆಂಟ್ ಜ.31 ಮತ್ತು ಫೆ.1 ರಂದು ಎಸ್ಎಂಪಿ ಹೈಸ್ಕೂಲ್ ಮೈದಾನದಲ್ಲಿ ನಡೆಯಿತು. ಜ.31ರಂದು ನಡೆದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಬಿಸಿಸಿ ಅಧ್ಯಕ್ಷ ಅನ್ವರ್ ಹುಸೇನ್ ಇಸ್ಮಾಯಿಲ್ ವಹಿಸಿದ್ದರು. ಹಸ್ದುಲ್ಲಾ ಇಸ್ಮಾಯಿಲ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಬಿಸಿಸಿ ಕಾರ್ಯದರ್ಶಿ ಶೇಖ್ ಫಹಾದ್ ಕಾರ್ಯಕ್ರಮವನ್ನು ನಿರೂಪಿಸಿದರು. ಟೂರ್ನಮೆಂಟ್ ಅನ್ನು ಈವೆಂಟ್ಸ್ ಮ್ಯಾನೇಜರ್ ಜಾಹಿದ್ ಹುಸೇನ್ ಹಾಗೂ ಸಹಾಯಕ ಈವೆಂಟ್ಸ್ ಮ್ಯಾನೇಜರ್ ಮುಹಮ್ಮದ್ ಸಿರಾಜ್ ನಿರ್ವಹಿಸಿದರು. ಉದ್ಘಾಟನಾ ಸಮಾರಂಭದಲ್ಲಿ ಮುಹಮ್ಮದ್ ಸಾಹೇಬ್ ಉಸ್ಮಾನ್, ನಾಸಿರ್ ಶೇಖ್ ಗುಲಾಂ ಹುಸೇನ್, ಅನ್ವರ್ ಎ. ಕರೀಂ, ಶೌಕತ್ ಅಲಿ, ಅಮೀರ್ ಗೌಸ್, ಹುಸೇನ್ ಸಾಹೇಬ್, ನಾಸಿರ್ ನ್ಯೂ ಮಾಸ್ಟರ್, ಮುನೀರ್ ಯೂಸುಫ್, ನಾಸಿರ್ ಎ. ಕರೀಂ, ಅಬ್ದುಲ್ ಕಯ್ಯುಮ್ ಮತ್ತು ಅಝೀಮ್ ಜಾಫರ್ ಸಾಹೇಬ್ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಪ್ಯಾರಡೈಸ್ ತಂಡ ಚಾಂಪಿಯನ್ ಪಟ್ಟವನ್ನು ಅಲಂಕರಿಸಿತು. ಟೀಮ್ ಬೆಳ್ವಾಯಿ ಫ್ರೆಂಡ್ಸ್ ರನ್ನರ್-ಅಪ್ ಆಗಿ ಹೊರಹೊಮ್ಮಿತು. ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅಧ್ಯಕ್ಷರು, ಇಂತಹ ಕ್ರೀಡಾ ಟೂರ್ನಮೆಂಟ್ಗಳು ಸೌಹಾರ್ದತೆ, ಶಿಸ್ತು ಮತ್ತು ತಂಡಭಾವನೆ ಬೆಳೆಸಲು ಸಹಕಾರಿಯಾಗುತ್ತವೆ ಎಂದು ಹೇಳಿದರು. ಪ್ರಮುಖ ಪ್ರಾಯೋಜಕರಾದ ALS ಬಾರ್ಡರ್ಲೆಸ್ ಲಾಜಿಸ್ಟಿಕ್ಸ್, ಎಕ್ಸ್ಪರ್ಟೈಸ್, AR ಅರೇಬಿಯನ್ ಲಾಜಿಸ್ಟಿಕ್ಸ್ ಮತ್ತು ಟೀಮ್ ಟೆನ್ ರೇಸಿಂಗ್ ಸಂಸ್ಥೆಗಳಿಗೆ ಹಾಗೂ ಎಲ್ಲಾ ದಾನಿಗಳು, ಹಿತೈಷಿಗಳು, ಬಿಸಿಸಿ ಸದಸ್ಯರು, ಸ್ವಯಂಸೇವಕರು, ತಂಡದ ಮಾಲೀಕರು, ಕ್ರಿಕೆಟ್ ಆಟಗಾರರು ಹಾಗೂ ಆಯೋಜನಾ ಸಮಿತಿಯ ಸದಸ್ಯರಿಗೆ ಧನ್ಯವಾದಗಳನ್ನು ಸಲ್ಲಿಸಿದರು.
BELAGAVI | ಸವದತ್ತಿ: ರಸ್ತೆ ಮಧ್ಯೆ ವ್ಯಕ್ತಿಯ ಬರ್ಬರ ಹತ್ಯೆ
ಬೆಳಗಾವಿ: ವ್ಯಕ್ತಿಯೊಬ್ಬರನ್ನು ಸಾರ್ವಜನಿಕ ರಸ್ತೆಯಲ್ಲೇ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ಸವದತ್ತಿ ತಾಲೂಕಿನ ಹೂಲಿಕಟ್ಟಿ ಗ್ರಾಮದ ಸಮೀಪ ಮಂಗಳವಾರ ಸಂಜೆ ನಡೆದಿದೆ. ಬಸಡೋಣಿ ಗ್ರಾಮದ ಬಸಪ್ಪ ಹೊಸಮನಿ (51) ಕೊಲೆಯಾದವರು. ಕೊಲೆ ಆರೋಪಿ ಈರಯ್ಯ ಮಠಪತಿ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಮಂಗಳವಾರ ಸಂಜೆ ರಸ್ತೆಯಲ್ಲಿ ನಡೆದುಕೊಂಡು ಬರುತ್ತಿದ್ದ ಬಸಪ್ಪರನ್ನು ಆರೋಪಿ ಈರಯ್ಯ ತಡೆದು ಮಚ್ಚಿನಿಂದ ಸುಮಾರು 16 ಬಾರಿ ಇರಿದು ಕೊಲೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಕೊಲೆ ಬಳಿಕ ಆರೋಪಿಯು ಮೃತದೇಹದ ಮೇಲೆ ಕಾಲಿಟ್ಟು ನಿಂತು ಅಟ್ಟಹಾಸ ಮೆರೆದಿರುವ ವೀಡಿಯೊ ವೈರಲ್ ಆಗಿದೆ. ನಂತರ ಆರೋಪಿ ಈರಯ್ಯ ಪೊಲೀಸರಿಗೆ ಕರೆ ಮಾಡಿ ಕೊಲೆ ಮಾಡಿರುವುದಾಗಿ ತಿಳಿಸಿದ್ದಾನೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಹತ್ತು ವರ್ಷಗಳ ಹಿಂದೆ ಈರಯ್ಯನ ತಾಯಿಯೊಂದಿಗೆ ಬಸಪ್ಪ,ಊರು ಬಿಟ್ಟು ಹೋಗಿದ್ದರು. ಇದೇ ವಿಚಾರಕ್ಕೆ ಸಂಬಂಧಿಸಿ ಬಸಪ್ಪನ ವಿರುದ್ಧ ದ್ವೇಷ ಹೊಂದಿದ್ದನೆನ್ನಲಾಗಿದೆ. ಇತ್ತೀಚೆಗೆ ಬಸಪ್ಪ ಮರಳಿ ಗ್ರಾಮಕ್ಕೆ ಬಂದಿದ್ದರಿಂದ ಹಳೆಯ ವೈಷಮ್ಯ ತೀವ್ರಗೊಂಡು ಈ ಆತ ಕೊಲೆ ಎಸಗಿರುವ ಶಂಕೆ ವ್ಯಕ್ತವಾಗಿದೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಸವದತ್ತಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಸೆಲ್ಫಿ ಎಂಬ ಈ ಹುಚ್ಚನ್ನು ಜನರು ತನ್ನಷ್ಟಕ್ಕೆ ಕಂಡು ಕೊಂಡಿಲ್ಲ. ಇದರ ಹಿಂದೆ ಬಹು ದೊಡ್ಡ ವ್ಯಾಪಾರಿ ಲೋಕ ಟೊಂಕ ಕಟ್ಟಿ ನಿಂತಿದೆ. ಮೊಬೈಲ್ ಎನ್ನುವುದೇ ಬಹು ದೊಡ್ಡ ಆಕರ್ಷಣೆಯಾದರೆ, ಅದರಲ್ಲಿ ಸ್ಮಾರ್ಟ್ ಫೋನ್ ಎಂಬ ಮಾಯಾವಿ ಪ್ರಚಂಡ ಸಂಯಮಿಗಳನ್ನು ಕ್ಷಣ ಹೊತ್ತಾದರೂ ಅಲುಗಾಡಿಸದೆ ಇರಲಾರದು. ಆಧುನಿಕ ತಂತ್ರಜ್ಞಾನದ ಈ ಎಲ್ಲ ಆವಿಷ್ಕಾರಗಳು ತನ್ನಷ್ಟಕ್ಕೆ ಹಾನಿಕಾರಕವಲ್ಲ. ಅವುಗಳು ಅನಿಷ್ಟವೆಂತಲೂ ಅಲ್ಲ. ತಂತ್ರಜ್ಞಾನ ಮಾನವ ಬದುಕಿಗೆ ಮಹತ್ತರ ಕೊಡುಗೆ ಮಾತ್ರವಲ್ಲ; ಭವಿಷ್ಯದ ಬದುಕಿನ ದಿಕ್ಸೂಚಿಯೂ ಹೌದು. ಆದರೆ ಅದನ್ನು ನಿಯಂತ್ರಿಸುತ್ತಿರುವವರ ನಿಯತ್ತು ಇದೆಯಲ್ಲ! ಇದುವೇ ಮಾನವ ಸಮುದಾಯಗಳಿಗೆ ವರವಾಗುವ ಬದಲು ಕಂಟಕವಾಗಿ ಪರಿಣಮಿಸುತ್ತದೆ. ಗಣರಾಜ್ಯೋತ್ಸವದ ದಿನ ಭಾರತೀಯರಾದ ನಮಗೆ ಹೆಮ್ಮೆಯ ದಿನವಷ್ಟೇ ಅಲ್ಲ ಪ್ರತಿಯೊಬ್ಬ ಭಾರತೀಯರೂ ತಮ್ಮ ಅಸ್ಮಿತೆಯನ್ನು ಅಧಿಕೃತವಾಗಿ ಘೋಷಿಸಿಕೊಂಡು ಆಚರಿಸಿಕೊಂಡು ಬರಲಾಗುತ್ತಿರುವ ಸುವರ್ಣ ದಿನ. ಅತಿ ದೊಡ್ಡ ದೇಶದ ಅತ್ಯಂತ ಮಹತ್ವದ ಮೌಲಿಕವೂ ಆದ ಸಂವಿಧಾನವನ್ನು ಸಿದ್ಧಪಡಿಸಿ (ಬಾಬಾಸಾಹೇಬ ಕೃತ) ಅರ್ಪಿಸಿಕೊಂಡು ಪ್ರತಿನಿತ್ಯವೂ ಅನುಷ್ಠಾನಗೊಳಿಸಿಕೊಳ್ಳಲು ಕಟಿಬದ್ಧರಾದ ದಿನವೆಂದು ಹಲವು ವರ್ಷಗಳಿಂದಲೂ ಆಚರಿಸಿಕೊಂಡು ಬರುತ್ತಿದ್ದೇವೆ. ಪ್ರಾಯಶಃ ಇನ್ನು ಮುಂದೆಯೂ ಸಾವಿರಾರು ವರ್ಷಗಳವರೆಗೆ ಆಚರಿಸಿಕೊಂಡು ಬರುತ್ತೇವೇನೋ ಗೊತ್ತಿಲ್ಲ. ನಾಳಿನ ಭವಿಷ್ಯವನ್ನು ಕರಾರುವಾಕ್ಕಾಗಿ ಬಲ್ಲವರಾರು? ಅರುವತ್ತು ವರ್ಷಗಳ ಹಿಂದೆ ಗಣರಾಜ್ಯೋತ್ಸವ ಎಂದರೆ ಮನೆ ಮನೆಗಳಲ್ಲಿ ಹಬ್ಬದ ವಾತಾವರಣ. ಶಾಲಾ, ಕಾಲೇಜು, ಕಚೇರಿ, ಗ್ರಾಮ ಪಂಚಾಯತ್, ಅಂಗಡಿ ಮುಂಗಟ್ಟು, ಓಣಿಯ ವೃತ್ತ ಎಲ್ಲೆಂದರಲ್ಲಿ ಧ್ವಜನೆಟ್ಟು ಅದನ್ನು ಫರಾರಿಯಿಂದ ಶೃಂಗರಿಸಿ, ರಂಗೋಲಿ ಚಿತ್ತಾರ ಬಿಡಿಸಿ, ಮಕ್ಕಳಾದಿಯಾಗಿ ಎಲ್ಲರೂ ಇಸ್ತ್ರಿ ಮಾಡಿದ ಶುಭ್ರ ಪೋಷಾಕು ಅಥವಾ ಅವರವರ ಶಾಲಾ ಕಾಲೇಜುಗಳ ಸಮವಸ್ತ್ರ ಧರಿಸಿ ನಸುಕಿನ ಚಳಿಯಲ್ಲಿ ನಸು ನಡುಗುತ್ತಲೇ ಕವಾಯತ್ತು ನಡೆಸುವುದು ಇತ್ತು. ಅದನ್ನು ನೋಡುವುದೇ ಒಂದು ಸಂಭ್ರಮ. ಸೂರ್ಯೋದಯದ ಹೊಸ್ತಿಲಿಲ್ಲ ಝೇಂಡಾ ಹಾರಿಸಿ ‘ಬೊಲೊ ಭಾರತ್ ಮಾತಾ ಕೀ ಜೈ’ ’ವಂದೇ ಮಾತರಂ’ ಇತ್ಯಾದಿ ಘೋಷಣೆಗಳನ್ನು ಕೂಗುತ್ತಾ ಆಯಾ ಊರಿನ ಪೊಲೀಸ್ ಗ್ರೌಂಡ್ಗಳಿಗೆ ತೆರಳಿ ಅಲ್ಲಿ ಪರೇಡ್ ನೋಡುವ ಖುಷಿಯಂತೂ ಹೇಳ ತೀರಲಾಗದು. ಚಬ್ಬೀಸ್ ಜನವರಿ ಅಂದರೆ ಹಿಂದಿನ ದಿನ ರಾತ್ರಿಯೇ ಮಕ್ಕಳ ತಯಾರಿ. ಇದ್ದ ಬಟ್ಟೆಗಳನ್ನೇ ಶುಭ್ರವಾಗಿ ತೊಳೆದುಕೊಂಡು. ಚೆಂಬು, ತಂಬಿಗಿಯಲ್ಲಿ ನಿಗಿನಿಗಿ ಕೋಳಸಿ (ಇದ್ದಿಲು) ಕೆಂಡ ಹಾಕಿ ಇಸ್ತ್ರಿ ತಿದ್ದುವ ಭರಾಟೆ. ಆಗಿನ್ನೂ ಬಡಬಗ್ಗರಾದಿ ಮಧ್ಯಮ ವರ್ಗದವರು ರೊಕ್ಕ ಕೊಟ್ಟು ಇಸ್ತ್ರಿ ಮಾಡಿಸಿಕೊಳ್ಳುವುದು ಇರಲಿಲ್ಲ. ಹೀಗೆ ಇಸ್ತ್ರಿ ತೀಡುವಾಗ ಕೈ ಸುಟ್ಟುಕೊಳ್ಳುವುದು ಇತ್ತು. ಸುಟ್ಟುಕೊಂಡರೂ ಪಾಲಕರಿಗೆ ಹೇಳುವಂತಿರಲಿಲ್ಲ. ಹೇಳಿದರೆ ಅಷ್ಟು ಇಸ್ತ್ರಿಗೂ ಸಂಚಕಾರ ಬರುವುದಿತ್ತು. ಹುಡುಗಿಯರು ರಿಬ್ಬನ್ ಒಗೆದು ಮಡಿ ಮಾಡಿಕೊಳ್ಳುವುದೇ ಒಂದು ಹಬ್ಬವಾಗಿರುತ್ತಿತ್ತು. ಅಂತೂ ಅಪರೂಪಕ್ಕೆ ಬಿಳಿ ಬೂಟು ಸಿಕ್ಕರಂತೂ ಸ್ವರ್ಗಕ್ಕೆ ಮೂರಲ್ಲ ಒಂದೇ ಗೇಣು. ಯಾವಾಗ ಬೆಳಗಾಗುವುದೆಂಬ ತವಕದಲ್ಲಿ ರಾತ್ರಿ ನಿದ್ದೆ ಮಾಡುವುದು ಕೂಡ ದುಸ್ತರವೇ ಆಗುವುದಿತ್ತು. ಹೊತ್ತು ಮೂಡಿದ್ದೇ ಸಾಕು. ಲಗುಬಗೆಯಿಂದ ಆದರೆ ತುಂಬು ಸಂಭ್ರಮದಲ್ಲಿ ತಯಾರಾಗಿ ನಡೆಯುತ್ತ ಶಾಲೆ, ಕಾಲೇಜುಗಳಿಗೆ ಮಕ್ಕಳು, ಕಚೇರಿ, ಅಂಗಡಿ, ಸಂಘ, ಸಂಸ್ಥೆಗಳಿಗೆ ದೊಡ್ಡವರು ಹೋಗುವ ಸರದಿ ರಸ್ತೆಯ ತುಂಬ ಸಾಲು ದೀಪಗಳಂತೆ ಕಂಗೊಳಿಸುವುದಿತ್ತು. ಅಲ್ಲಿ ಸರದಿಯಲ್ಲಿ ನಿಂತು ಧ್ವಜಕ್ಕೆ ಸೆಲ್ಯೂಟ್ ಹೊಡೆಯುವುದೆಂದರೆ ಅದು ಮಾಮೂಲಿಯಲ್ಲ. ಅದೊಂದು ಅಗ್ದಿ ಹೆಮ್ಮೆಯ, ಪೂರ್ಣ ಸ್ವಾಭಿಮಾನದ ಕ್ರಿಯೆಯಾಗಿರುತ್ತಿತ್ತು. ಅಟೆನ್ಸೆನ್ ಸ್ಟ್ಯಾಂಡರ್ಸಿಸ್ ಇತ್ಯಾದಿ ಆದೇಶಗಳ ಶಬ್ದಶಃ ಅರ್ಥ ತಿಳಿಯುತ್ತಿರಲಿಲ್ಲ. ಆದರೆ ಆದೇಶಗಳನ್ನು ಭಯ ಭಕ್ತಿಯಿಂದ ಪಾಲಿಸುವ ಕ್ರಿಯೆ ಮಾತ್ರ ಪ್ರೀತಿಯದಾಗಿತ್ತು. ನಂತರ ರಾಷ್ಟ್ರಗೀತೆ ಹಾಡಿ ಜೈಕಾರ ಹಾಕಿದರೆ ಒಂದು ಪೆಪ್ಪರ್ಮೆಂಟ್ ಡೆಫನೆಂಟ್ ಸಿಗುತ್ತಿತ್ತು. ಒಂದು ಅರ್ಧ ಚಂದ್ರದ ನಿಂಬಿ ಹುಳಿ ಪೆಪ್ಪರ್ಮೆಂಟ್ ಅದೆಷ್ಟು ರುಚಿಯಾಗಿರುತ್ತೆಂದರೆ ಇನ್ನೂವರೆಗೂ ಅದರ ಸ್ವಾದ ರಸನೇಂದ್ರಿಯದ ರಸಾತಳದಲ್ಲಿ ಕೈದುವಾಗಿದೆ. ಕುವೆಂಪುವಿನ ‘ಇದು ದೇವರು ತಿನ್ನುವ ಪೆಪ್ಪರ್ಮೆಂಟು’ ಎಂಬ ಕವನವನ್ನು ಗುನುಗುನುಸುವುದು ಮಜವೇ ಆಗಿತ್ತು. ಆದರೆ ಈಗ ಹೊಳೆ-ಹಳ್ಳಗಳಲ್ಲಿ ಸಾಕಷ್ಟು ನೀರು ಹರಿದು ಹೋಗಿದೆ. ಈಗ ಗಣರಾಜ್ಯೋತ್ಸವದಲ್ಲಿ ಎಂದಿನಂತೆ ಶಾಲಾ, ಕಾಲೇಜು, ಕಚೇರಿ ಎಲ್ಲೆಂದರಲ್ಲಿ ಗಣರಾಜ್ಯೋತ್ಸವದ ಆಚರಣೆ ಏನೋ ನಡೆದಿದೆ. ಮೊದಲಿನ ಸಂಭ್ರಮ, ಕುತೂಹಲ ಅಸಲಿಗೆ ಆ ಖದರು, ಡೌಲುಗಳು ಇಲ್ಲವೇ ಇಲ್ಲ. ಹೀಗೆಂದು ಅಲವತ್ತುಕೊಂಡರೆ ಹಣ್ಣೆಲೆಗಳ ಹಳವಂಡವಾದಾತು! ಹಾಗೆ ನೋಡಿದರೆ ಈಗ ಮೊದಲಿಗಿಂತ ಭರ್ ಭರಾಟೆ ಇದೆ. ತರಹೇವಾರಿ ಶೃಂಗಾರದ ವಸ್ತುಗಳು, ಗರಿಗರಿ ದಿರಿಸು. ಖಾಸ್ ಝೇಂಡಾ ವಂದನೆಗೆಂದೇ ಹೊಲಿಸಿದ ಪೋಷಾಕು. ವಿವಿಧ ನಮೂನೆ ಧ್ವಜಗಳು, ಸರ್ ಭರ್ ಹರಿದಾಡುವ ವಾಹನಗಳು, ಕಿವಿಗಡಚಿಕ್ಕುವ ಮೈಕು, ಡಿಜೆ ಒಂದೇ ಎರಡೇ ಎಣಿಸಲಾಗದ ಆಧುನಿಕ ಸೌಲಭ್ಯಗಳು. ಇಷ್ಟಲಿರಲಿಕ್ಕಾಗಿಯೂ ಮಕ್ಕಳಾದಿ ದೊಡ್ಡವರಲ್ಲಿಯೂ ಆ ಮೊದಲಿನ ಸಂಭ್ರಮ, ಕುತೂಹಲ ನಾಪತ್ತೆ. ಕಾರಣ ಬೇಕೆನಿಸಿದ್ದೆಲ್ಲ ಕ್ಷಣ ಮಾತ್ರದಲ್ಲೇ ಅಂಗೈಯಲ್ಲಿ ದೊರೆಯುವಾಗ ಕುತೂಹಲಕ್ಕೆ ಜಾಗವಾದರೂ ಎಲ್ಲಿದೆ? ಆದ್ದರಿಂದ ಇಂದಿನ ರಾಷ್ಟ್ರೀಯ ಹಬ್ಬಗಳೆಂದರೆ ಅವು ಸೆಲ್ಫಿ ಕ್ಲಿಕ್ಕಿಸಿಕೊಳ್ಳುವ ವರಾತಗಳೆಂದೇ ಹೇಳಬೇಕು. ಇಂದು ಕಂಡದ್ದು ಸೆಲ್ಫೋತ್ಸವವೇ ಹೊರತು ಗಣರಾಜ್ಯೋತ್ಸವವಲ್ಲ. ಸುಮ್ಮನೆ ಮೊನ್ನೆಯ ಧ್ವಜಾರೋಹಣದ ಪ್ರಸಂಗದ ಮೇಲೆ ಕಣ್ಣು ಹಾಯಿಸಿದರೂ ಸಾಕು. ಎಲ್ಲರೂ ತಮ್ಮ ತಮ್ಮ ಫೋಟೊಗಳನ್ನು ಕ್ಲಿಕ್ಕಿಸಿಕೊಳ್ಳುವಲ್ಲಿ ಅದೆಷ್ಟು ವ್ಯಸ್ತರಾಗಿದ್ದರೆಂದರೆ ಅವರ್ಯಾರಿಗೂ ಅಲ್ಲಿ ಮಾತಾಡುತ್ತಿರುವವರು ಯಾರು? ಏನು ಮಾತಾಡುತ್ತಿದ್ದಾರೆ? ಅಲ್ಲಿ ನಮ್ಮ ಭವಿಷ್ಯದ ಬಗೆಗೆ ಏನಾದರೂ ಇದೆಯೇ? ದೇಶಕ್ಕಾಗಿ ಬಲಿದಾನ ಕೊಟ್ಟವರು ಯಾರು? ಅವರ ತ್ಯಾಗ, ನೋವು ಇತ್ಯಾದಿ ಯಾವುದರ ಬಗೆಗೂ ಕುತೂಹಲ ಹುಟ್ಟುತ್ತಿಲ್ಲ. ಹಾಗಾದರೆ ಅವರ ಸ್ವಾದ ಕೆಟ್ಟಿದೆಯೆ? ಅದಕ್ಕೆ ಕಾರಣಗಳು ಏನಾದರೂ ಇವೆಯೇ? ಎಂಬುದರ ಕುರಿತು ಮಂಥನ ನಡೆಸುವುದು ಹೆಚ್ಚು ಸೂಕ್ತವೆಂದು ತೋರುತ್ತದೆ. ಇಲ್ಲವಾದರೆ ಅದೇ ಹಳೆಯ ರಾಗದಂತೆ ‘‘ನಮ್ಮ ಕಾಲ ಛಲೋ ಇತ್ತು. ಈಗ ಕಾಲ ಕೆಟ್ಟಿದೆ’’ ಎಂದು ವೃಥಾ ಹಳಹಳಿಸುವ ಮೂರ್ಖತನವಾದೀತು. ಜನರೀಗ ಯಾವುದೆ ತತ್ವ, ಆದರ್ಶ ಅಥವಾ ಮಹಾನ್ ವ್ಯಕ್ತಿ-ಶಕ್ತಿಗಳ ಕೈಯಲ್ಲಿ ಇಲ್ಲ. ಅವರೀಗ ಅತ್ಯಂತ ಆಕರ್ಷಕವಾದ ಡಿಜಿಟಲ್ ಲೋಕದ ಅನಭಿಷಕ್ತ ದೊರೆಗಳಾಗಿದ್ದಾರೆ. ಕ್ಷಣ ಮಾತ್ರದಲ್ಲಿ ಇಡೀ ಬ್ರಹ್ಮಾಂಡವನ್ನೇ ಅಂಗೈಗೆ ನಿಲುಕಿಸುವ ಭ್ರಮೆ ಹುಟ್ಟಿಸುತ್ತಿರುವ ಡಿಜಿಟಲ್ ಪ್ರಪಂಚವನ್ನು ಹಿಂದೆ ಹಾಕುವ ಯಾವ ಟೂಲ್ಸ್ಗಳು ನಮ್ಮಲ್ಲಿ ಇಲ್ಲ. ಡಿಜಿಟಲ್ ಲೋಕವನ್ನು ನಿಯಂತ್ರಿಸುತ್ತಿರುವವರು ಯಾರು? ಯಾತಕ್ಕಾಗಿ ಅವರು ಅದರ ಮೇಲೆ ಏಕಸ್ವಾಮ್ಯ ಸ್ಥಾಪಿಸಿಕೊಂಡಿದ್ದಾರೆ? ಎಂಬ ಗಂಭೀರ ಚರ್ಚೆ ಒತ್ತಟ್ಟಿಗಿರಲಿ, ಅದರ ಲಾಭದಾಯಕ ನವ ಆರ್ಥಿಕತೆಯ ಕಬಂಧ ಬಾಹುಗಳ ವಿಶ್ಲೇಷಣೆಯನ್ನು ಬದಿಗಿಟ್ಟು ಅದರಿಂದಾಗುತ್ತಿರುವ ಚಿಕ್ಕ ಪರಿಣಾಮವೊಂದನ್ನೇ ನೋಡಿದರೂ ಸಾಕು. ಅದರ ಬಲಾಢ್ಯ ಬಾಹುವಿನ ಆಕ್ರಾಂತ ನಡೆ ಕಾಣಿಸದೆ ಇರದು. ಸೆಲ್ಫಿ ಎಂಬ ಒಂದೇ ಕಾರನಾಮೆ ನೋಡಿದರೂ ಸಾಕು. ಮೊಬೈಲ್ ಎಂಬ ಮಾಂತ್ರಿಕ ಡಬ್ಬಿ (ಈ ಮೊದಲು ಟಿ.ವಿ.ಗೆ ಹಾಗೆಂದು ಕರೆಯುತ್ತಿದ್ದೇವಷ್ಟೆ) ಕೈವಶವಾದಂದಿನಿಂದ ಮನುಷ್ಯರಲ್ಲಿ ಸ್ವಾಭಾವಿಕವಾಗಿಯೇ ಇದ್ದ ಆತ್ಮರತಿಗೆ ಉಕ್ಕು ಬಂದಿದೆ. ಮೊಬೈಲ್ನಿಂದ ಅರ್ಥಪೂರ್ಣ ಬದುಕು ಅದೆಷ್ಟು ದಕ್ಕಿತೊ? ಬಿಟ್ಟಿತೊ? ಬೇಕಿಲ್ಲ. ದಕ್ಕಿದ್ದು ಮಾತ್ರ ಸ್ವವಿಜೃಂಭಣೆ. ಹೋದಲ್ಲಿ ಬಂದಲ್ಲಿ, ನಿಂತರೂ ಕುಂತರೂ ಅಷ್ಟೇ ಏಕೆ ಸತ್ತರೂ ಶವದ ಒಂದೆರಡು ಫೋಟೊ ಕ್ಲಿಕ್ಕಿಸದಿದ್ದರೆ ಸಮಾಧಾನವಿಲ್ಲ. ಚಿಕ್ಕ ಮಕ್ಕಳಿಂದ ಮುದುಕರವರೆಗೆ, ಭಿಕ್ಷುಕರಿಂದ ಕೋಟ್ಯಧೀಶರವರೆಗೆ ಸೆಲ್ಫಿಗಳಲ್ಲಿ ತಲ್ಲೀನ. ಗುಂಪು ಫೋಟೊಗಳಂತೂ ಸೈ. ಅದರೊಟ್ಟಿಗೆ ಸೆಲ್ಫಿ ತೆಗೆದುಕೊಳ್ಳದಿದ್ದರೆ ಸಮಾಧಾನವಿಲ್ಲ. ಮದುವೆ, ಸೀಮಂತ, ತೊಟ್ಟಿಲು, ಹುಟ್ಟುಹಬ್ಬ, ಸಭೆ, ಸಮಾರಂಭ, ವಿಚಾರ ಸಂಕಿರಣ, ಸಮ್ಮೇಳನ ಏನೇ ಕಾರ್ಯಕ್ರಮವಿರಲಿ ಅಲ್ಲೊಂದು ಸೆಲ್ಫಿ ಪಾಯಿಂಟ್ ನಿರ್ಮಿಸಲಾಗುತ್ತಿದೆ. ಹೋಟೆಲ್, ಮಾಲ್, ಸಿನೆಮಾ ಥಿಯೆಟರ್, ಮದುವೆ ಮಂಟಪ ಮುಂತಾದ ಎಲ್ಲ ಸಾರ್ವಜನಿಕ ಸ್ಥಳಗಳಲ್ಲಿ ಸೆಲ್ಫಿ ಪಾಯಿಂಟ್ ಇರಲೇಬೇಕು. ವೇದಿಕೆ ಮೇಲೆ ಭಗವಂತನೇ ಪ್ರತ್ಯಕ್ಷನಾಗಿದ್ದರೂ ಜನರು ಮಾತ್ರ ಒಂದೆರಡು ಸೆಲ್ಫಿ ತೆಗೆದುಕೊಳ್ಳದೆ ಅವನೊಂದಿಗೆ ಮಾತನಾಡಲಾರರು. ಸೆಲ್ಫಿಯ ಗರ್ದಿ ಗಮ್ಮತ್ ಬೇರೆ. ವಿವಿಧ ಭಂಗಿ, ಭಾವ, ಸ್ಥಳಗಳಲ್ಲಿ ಸೆಲ್ಫಿಗಳನ್ನು ತೆಗೆದುಕೊಳ್ಳಬೇಕಾದುದು ಅನಧಿಕೃತವಾಗಿ ಕಡ್ಡಾಯವಾಗಿದೆ. ಪಾಯಿಖಾನೆ ಸಮಯ ಒಂದು ಬಿಟ್ಟರೆ ಪ್ರಾಯಶಃ ಎಲ್ಲ ಅವಸರದಲ್ಲಿಯೂ ಫೋಟೊ ಕ್ಲಿಕ್ಕಿಸಿಕೊಳ್ಳಲಾಗುತ್ತದೆ. ಸೆಲ್ಫಿ ತೆಗೆದುಕೊಳ್ಳಲು ಹೋಗಿ ಸತ್ತವರಿಗೂ ಕಡಿಮೆ ಇಲ್ಲ. ಪ್ರಿವೆಡ್ಡಿಂಗ್ ಫೋಟೊಗ್ರಫಿ ಇನ್ನೊಂದು ಗೋಳು. ಹೀಗೆ ತೆಗೆದುಕೊಂಡ ಚಿತ್ರಗಳನ್ನು ದಾಖಲು ಮಾಡಿ ಇಡಲಾಗುತ್ತಿದೆಯೇ ಎಂದರೆ ಇಲ್ಲ. ಏಕೆಂದರೆ ತಾವು ಹೊಡೆದುಕೊಂಡ ಎಲ್ಲ ಸೆಲ್ಫಿಗಳನ್ನು ಪ್ರಿಂಟ್ ಹಾಕಿಸಿಕೊಂಡರೆ ಅವುಗಳನ್ನಿಡಲು ಕೋಟೆಯೊಂದನ್ನು ಕಟ್ಟಿಸಬೇಕಾಗಬಹುದು. ಆದ್ದರಿಂದ ಹೋದವಾರ ತೆಗೆದ ಫೋಟೊ ಈ ವಾರ ಡಿಲೀಟ್. ಈ ಇವೆಂಟ್ ಫೋಟೊ ಮುಂದಿನ ಇವೆಂಟ್ಗೆ ಡಿಲೀಟ್. ಮೊಬೈಲ್ಗೂ ಒಂದು ಮಿತಿ ಇದೆ. ಫೋಟೊಗಳು ತುಂಬಿ ತುಳುಕಿದೊಡನೆ ಅದು ಮುಂದಿನವುಗಳನ್ನು ಇಂಬಿಟ್ಟುಕೊಳ್ಳಲಾಗದೆ ಒದ್ದಾಡುತ್ತದೆ. ಆಗ ಹಿಂದಿನವುಗಳನ್ನು ಅಳಿಸಿ ಹಾಕದೆ ಗತ್ಯಂತರವಿಲ್ಲ. ಸೆಲ್ಫಿಗಳಿಗಾಗಿಯೇ ಪ್ರಾಣ ತೆತ್ತವರು ಉಂಟು. ತಮ್ಮ ಫೋಟೊಗಳನ್ನು ವಿರಾಮದ ಹೊತ್ತಿನಲ್ಲಿ ತಾವೇ ನೋಡಿ ಖುಷಿ ಪಟ್ಟವರಂತೆ ವಿಷಾದ, ದುಃಖ ಪಟ್ಟು ನರಳುವವರು ಇಲ್ಲದಿಲ್ಲ. ತಮ್ಮ ಫೋಟೊಗಳನ್ನೇ ಕ್ಲಿಕ್ಕಿಸಿಕೊಳ್ಳುವ ಗುಂಗಿನಲ್ಲಿ ಕಳೆದು ಹೋದವರಿಗೆ ಸ್ವಾತಂತ್ರ್ಯೋತ್ಸವ ಅಥವಾ ಗಣರಾಜ್ಯೋತ್ಸವ ಗಮನಿಸಲು ಪುರುಸೊತ್ತಾದರೂ ಎಲ್ಲಿದೆ. ಹುಡುಗರಂತೂ ಗೆಳೆಯ, ಗೆಳತಿಯರೊಂದಿಗೆ ಸೆಲ್ಫಿ ತೆಗೆದುಕೊಳ್ಳುವಲ್ಲಿ ಪ್ರಚಂಡ ಪ್ರತಿಭೆಯನ್ನು ವಿನಿಯೋಗಿಸುವುದನ್ನು ನೋಡಬೇಕು. ಫೋಟೊ ತೆಗೆಯುವ ಆ್ಯಂಗಲ್, ಹಿನ್ನೆಲೆ ಸೀನರಿ, ಬಣ್ಣಗಳ ಕಾಂಬಿನೇಷನ್ ಏನೇನೋ! ಅವರಿಂದಲೇ ಕೇಳಿ ಕಲಿಯಬೇಕು. ವಿದ್ಯಾರ್ಥಿಗಳು ಧ್ವಜಕ್ಕಿಂತ ಹೆಚ್ಚು ಭಕ್ತಿ ಭಾವದಿಂದ ಸೆಲ್ಫಿ ತೆಗೆಯುವುದು ಮತ್ತು ನೋಡುವುದರಲ್ಲಿ ಬಿಝಿಯಾಗಿದ್ದರೆ ಶಿಕ್ಷಕರಿಗೆ ಅವರನ್ನು ನಿಯಂತ್ರಿಸುವುದೇ ದೊಡ್ಡ ಕೆಲಸ. ಕೊರೋನ ಕಾಲದಲ್ಲಿ ಮೊಬೈಲ್ ಬಳಕೆ ಕಡ್ಡಾಯ ಮಾಡಿದವರೇ ಶಿಕ್ಷಕರು. ಈಗ ಅದನ್ನು ಹಿಡಿಯಬೇಡಿರಿ ಎಂದರೆ ನಡೆದೀತೆ? ಮಜವೆಂದರೆ ಇತರರ ಫೋಟೊ ನೋಡಲು ಯಾರಿಗೂ ಮನಸ್ಸಿಲ್ಲ. ತಮ್ಮ ಫೋಟೊ ತಾವು ನೋಡಿಕೊಳ್ಳುವುದರಲ್ಲೇ ಸುಖವಿದೆ. ಇದಕ್ಕೆ ಕೆಲವು ಅಪವಾದಗಳಿರಬಹುದು. ಆದರೆ ಪ್ರತಿಯೊಬ್ಬ ವ್ಯಕ್ತಿಗೂ ತಾನು ಹೇಗೆ ಕಾಣುತ್ತೇನೆ ಎಂಬ ಕುತೂಹಲ ಇದೆಯಲ್ಲ? ಇದಕ್ಕಿಂತ ಪ್ರಖರವಾದ ಕುತೂಹಲ ಇನ್ನೊಂದಿಲ್ಲವಂತೆ. ಸೆಲ್ಫಿ ಹಾವಳಿಯಿಂದಾಗಿ ಮೇಕಪ್ ಪಿಡುಗು ಉಲ್ಬಣಿಸಿದೆ. ಪ್ರಸಾಧನ ವಸ್ತುಗಳು, ಶೃಂಗಾರ ಸಾಧನಗಳಿಗೆ ಸಿಕ್ಕಾಪಟ್ಟೆ ವ್ಯಾಪಾರ. ಜನರು ತಿನ್ನುವ ಅಥವಾ ಜ್ಞಾನಾರ್ಜನೆ ಗೈಯುವ ಸಾಧನಗಳಿಗಿಂತ ಪ್ರಸಾಧನ ಮತ್ತು ಫ್ಯಾಷನ್ ವಸ್ತುಗಳಿಗೆ ಹೆಚ್ಚು ಹಣ ವಿನಿಯೋಗಿಸುವಂತೆ ಮಾಡಿದೆ ಆಧುನಿಕ ಮಾರುಕಟ್ಟೆ. ಸೆಲ್ಫಿ ಎಂಬ ಈ ಹುಚ್ಚನ್ನು ಜನರು ತನ್ನಷ್ಟಕ್ಕೆ ಕಂಡು ಕೊಂಡಿಲ್ಲ. ಇದರ ಹಿಂದೆ ಬಹು ದೊಡ್ಡ ವ್ಯಾಪಾರಿ ಲೋಕ ಟೊಂಕ ಕಟ್ಟಿ ನಿಂತಿದೆ. ಮೊಬೈಲ್ ಎನ್ನುವುದೇ ಬಹು ದೊಡ್ಡ ಆಕರ್ಷಣೆಯಾದರೆ, ಅದರಲ್ಲಿ ಸ್ಮಾರ್ಟ್ ಫೋನ್ ಎಂಬ ಮಾಯಾವಿ ಪ್ರಚಂಡ ಸಂಯಮಿಗಳನ್ನು ಕ್ಷಣ ಹೊತ್ತಾದರೂ ಅಲುಗಾಡಿಸದೆ ಇರಲಾರದು. ಆಧುನಿಕ ತಂತ್ರಜ್ಞಾನದ ಈ ಎಲ್ಲ ಆವಿಷ್ಕಾರಗಳು ತನ್ನಷ್ಟಕ್ಕೆ ಹಾನಿಕಾರಕವಲ್ಲ. ಅವುಗಳು ಅನಿಷ್ಟವೆಂತಲೂ ಅಲ್ಲ. ತಂತ್ರಜ್ಞಾನ ಮಾನವ ಬದುಕಿಗೆ ಮಹತ್ತರ ಕೊಡುಗೆ ಮಾತ್ರವಲ್ಲ; ಭವಿಷ್ಯದ ಬದುಕಿನ ದಿಕ್ಸೂಚಿಯೂ ಹೌದು. ಆದರೆ ಅದನ್ನು ನಿಯಂತ್ರಿಸುತ್ತಿರುವವರ ನಿಯತ್ತು ಇದೆಯಲ್ಲ! ಇದುವೇ ಮಾನವ ಸಮುದಾಯಗಳಿಗೆ ವರವಾಗುವ ಬದಲು ಕಂಟಕವಾಗಿ ಪರಿಣಮಿಸುತ್ತದೆ. ಮೊಬೈಲ್, ಕಂಪ್ಯೂಟರ್, ಲ್ಯಾಪ್ಟಾಪ್ ಇತ್ಯಾದಿಗಳ ಮೂಲಕ ಒದಗಿ ಬರುವ ಫೇಸ್ಬುಕ್, ಇನ್ಸ್ಟಾಗ್ರಾಂ, ಎಐ ಮುಂತಾದವುಗಳು ಮಾನವ ಶ್ರಮವನ್ನು ಕಡಿಮೆ ಮಾಡುವುದರೊಂದಿಗೆ ಅವರ ಬುದ್ಧಿಮತ್ತೆಯನ್ನು ಇನ್ನೂ ಉತ್ಕೃಷ್ಟವಾಗಿ ಬಳಸಿಕೊಳ್ಳುವಂತೆ ಪ್ರೇರೇಪಿಸುತ್ತವೆ. ಮನುಷ್ಯರು ತಮ್ಮ ಬುದ್ಧಿಯನ್ನು ಹೊಸ ಹೊಸ ಬಗೆಯಲ್ಲಿ ದುಡಿಸಿಕೊಳ್ಳುವ ಮೂಲಕ ಹೊಸ ಲೋಕವನ್ನೇ ನಿರ್ಮಿಸಲು ಶಕ್ತರು ಎಂಬುದನ್ನು ಇವು ಸಾಬೀತು ಮಾಡಿವೆ. ಮನುಷ್ಯರು ಬೇರೆ ಗ್ರಹಗಳಿಗೆ ಲಗ್ಗೆಯಿಟ್ಟು ಅಲ್ಲಿಯೂ ನೆಲೆಸುವ ದಿನ ದೂರವಿಲ್ಲ. ದೇದಿಪ್ಯಮಾನ ವಿಜ್ಞಾನ, ತಂತ್ರಜ್ಞಾನಗಳ ಆವಿಷ್ಕಾರಗಳು ಒಂದೆಡೆ ಇದ್ದರೆ, ಅವುಗಳನ್ನು ಕೆಲವೇ ಜನರು ತಮ್ಮ ಕಬ್ಜಾದಲ್ಲಿ ಇಟ್ಟುಕೊಂಡು ಆರ್ಥಿಕ ಲಾಭದ ಲಾಯಕ್ಕೆ ಬಿಗಿದು ಮನುಷ್ಯರನ್ನು ಬಲಿ ಪಡೆಯುತ್ತಿರುವ ವಿದ್ಯಮಾನ ಇನ್ನೊಂದೆಡೆ ಇದೆ. ಸಮಸ್ಯೆ ಡಿಜಿಟಲ್ ಆವಿಷ್ಕಾರಗಳಲ್ಲಿ ಇಲ್ಲ. ಅವುಗಳನ್ನು ತಮಗಾಗಿ ಮಾತ್ರ ದುಡಿಸಿಕೊಳ್ಳುತ್ತಿರುವ ಬಂಡವಾಳಶಾಹಿಗಳ ಕುತಂತ್ರದಲ್ಲಿ ಇದೆ. ಬಂಡವಾಳಿಗರು ತಮಗೆ ಲಾಭ ತರುವ ವಸ್ತು, ವಿಷಯಗಳ ಬಗೆಗೆ ಜನರಲ್ಲಿ ಮೋಹ ಹುಟ್ಟಿಸಿ ಅವರು ಅವುಗಳ ಚಟಗಾರರಾಗುವಂತೆ ಮಾಡುತ್ತಾರೆ. ಫೋಟೊ ತೆಗೆಸಿಕೊಳ್ಳುವುದು ತಪ್ಪಲ್ಲ. ಅದನ್ನೊಂದು ವ್ಯಸನ ಮಾಡಿಕೊಳ್ಳುವುದು ತಪ್ಪು. ಹಾಗಾದರೆ ಇದರಲ್ಲಿ ವ್ಯಾಪಾರಿಗಳದೇನು ತಪ್ಪು? ಜನರೇಕೆ ಅವುಗಳನ್ನು ದುರ್ಬಳಕೆ ಮಾಡಿಕೊಳ್ಳಬೇಕು? ಬಡವರೇಕೆ ಅದ್ದೂರಿ ಮದುವೆ ಮಾಡಿಕೊಂಡು ಸಾಲಗಾರರಾಗಬೇಕು? ಅವರಿಗೆ ಸ್ವಂತ ಬುದ್ಧಿಯಿಲ್ಲವೆ? ಎಂಬ ಪ್ರಶ್ನೆಗಳು ಹೊಟ್ಟೆ ತುಂಬಿದ ದೃಷ್ಟಿಹೀನರಿಂದ ಪುಂಖಾನುಪುಂಖವಾಗಿ ಬರುವುದುಂಟು. ತಾರ್ಕಿಕವಾಗಿ ಕೇಳಿದ ಪ್ರಶ್ನೆಗಳು ಸರಿಯಾಗಿವೆ. ಆದರೆ ತಾತ್ವಿಕವಾಗಿ ಅಂಥ ಪ್ರಶ್ನೆಗಳು ಮೂಡಿದ ವಸ್ತುಸ್ಥಿತಿಯ ಅರಿವು ಅವುಗಳನ್ನು ಕೇಳುವವರಿಗೆ ಇಲ್ಲ ಎಂದೇ ಹೇಳಬೇಕಾಗುತ್ತದೆ. ಮನುಷ್ಯರು ಸ್ವಭಾವತಃ ಅನುಕರಣಶೀಲರು ಮತ್ತು ಭಯಾವಹರು. ಅವರು ಯಾವತ್ತೂ ಭೌತಿಕವಾಗಿ ತಮಗಿಂತ ಮೇಲು ವರ್ಗದವರನ್ನು ಅನುಕರಿಸುವರಲ್ಲದೆ ಅದನ್ನೇ ಆದರ್ಶವೆಂದುಕೊಳ್ಳುತ್ತಾರೆ. ಮನುಷ್ಯರಲ್ಲಿ ವಿವೇಚನೆ ಬೆಳೆಯುವುದಕ್ಕಿಂತ ಮುಂಚೆ ಜೀವನೋತ್ಸಾಹ ಮೊಳೆದಿದೆ. ಪ್ರಚಂಡ ಜೀವನೋತ್ಸಾಹವೇ ಅವರನ್ನು ಎಂಥ ಪ್ರತಿಕೂಲ ಪರಿಸ್ಥಿತಿಯಲ್ಲಿಯೂ ಕೈ ಹಿಡಿದು ನಡೆಸಿದೆ. ಆದರೆ ಈ ಜೀವನೋತ್ಸಾಹಕ್ಕೆ ಚಿಮ್ಮು ಹಲಗೆಯಾಗಿ ಒದಗಿ ಬರುವುದೇ ಈ ಭೌತ ಪ್ರಪಂಚ. ತನ್ನ ಸುತ್ತಲಿನ ಭೌತ ಪ್ರಪಂಚದ ವಿದ್ಯಮಾನಗಳು ಮನುಷ್ಯರನ್ನು ಇನ್ನಿಲ್ಲದಂತೆ ಪ್ರಭಾವಿಸುತ್ತವೆ. ಮನುಷ್ಯರ ಈ ಮಿತಿಯನ್ನು ಯಾರೂ ಬಳಸಿಕೊಳ್ಳಬಹುದು. ಪ್ರವಾಹದಗುಂಟ ಈಸುವುದು ಸುಲಭ. ಪ್ರವಾಹದ ವಿರುದ್ಧ ಈಸಿ ಜೈಸುವುದು ಕಷ್ಟ ಸಾಧ್ಯ. ಹೀಗಾಗಿ ಮನುಷ್ಯರಿಗೆ ಸಂಭ್ರಮಿಸಲು ನೆಪ ಬೇಕು. ನೆಪಕ್ಕೆ ಒದಗಿ ಬರುವ ವಸ್ತು ವಿಷಯಗಳಿಂದ ದೂರ ನಿಲ್ಲುವುದು ಎಲ್ಲರಿಗೂ ಸಾಧ್ಯವಿಲ್ಲ. ಅಂತೆಯೇ ಅಣ್ಣ ಬಸವಣ್ಣನವರು ‘‘ವಿಷಯವೆಂಬ ಹಸುರೆನೆನ್ನ ಮುಂದೆ ತಂದು ಪಸರಿಸದಿರಯ್ಯಾ ಪಶುವೇನು ಬಲ್ಲದು? ಹಸುರೆಂದೆಳೆಸುವುದು. ವಿಷಯರಹಿತನ ಮಾಡಿ, ಭಕ್ತಿರಸವ ದಣಿಯೆ ಮೇಯಿಸಿ, ಸುಬುದ್ಧಿಯೆಂಬ ಉದಕವನ್ನೆರೆದು ನೋಡಿ ಸಲಹಯ್ಯಾ ಕೂಡಲಸಂಗಮದೇವಾ’’ ಎಂದು ಹೇಳಿದ್ದಾರೆ. ಮನುಷ್ಯರಲ್ಲಿ ಸ್ವಭಾವ ಜನ್ಯವಾಗಿರುವ ವಸ್ತು ಮೋಹವನ್ನು ಬಂಡವಾಳ ಮಾಡಿಕೊಂಡಿರುವ ವ್ಯಾಪಾರಿ ಲೋಕವೇ ಸೆಲ್ಫಿಯಂಥ ಕಡಿಮೆ ಉಪಯೋಗಿ ಹೆಚ್ಚು ಹಾನಿಕಾರಕ ಚಟಗಳನ್ನು ಬಿತ್ತಿ ಬೆಳೆಯುತ್ತಿದೆ. ಹೀಗಾಗಿಯೇ ನಮ್ಮ ರಾಷ್ಟ್ರೀಯ ಹಬ್ಬಗಳೆಲ್ಲವೂ ಮುಂಚಿನ ಆಕರ್ಷಣೆ ಮತ್ತು ಕುತೂಹಲ ಕಳೆದುಕೊಂಡು ಔಪಚಾರಿಕ ಸಂಪ್ರದಾಯಗಳಾಗಿ ನಿಲ್ಲುತ್ತಿವೆ. ಅಷ್ಟಕ್ಕೂ ಹೊಸ ಪೀಳಿಗೆಗೆ ಸ್ವಾತಂತ್ರ್ಯ ಸಂಘರ್ಷದ ಬ್ಯಾನಿ ಗೊತ್ತಿಲ್ಲವಷ್ಟೆ.
ದ್ವೇಷ ಭಾಷಣ ಮಸೂದೆ ರಾಷ್ಟ್ರಪತಿ ಅಂಗಳಕ್ಕೆ: ಸರ್ಕಾರ v/s ರಾಜ್ಯಪಾಲ ಮತ್ತೊಂದು ಸುತ್ತಿನ ಸಂಘರ್ಷ
ರಾಜ್ಯ ಸರ್ಕಾರ ಮಂಡಿಸಿದ್ದ ದ್ವೇಷ ಭಾಷಣ ಮಸೂದೆಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅಂಕಿತ ಹಾಕಲು ನಿರಾಕರಿಸಿದ್ದಾರೆ. ಉಭಯ ಸದನದಲ್ಲಿ ಅಂಗೀಕಾರವಾಗಿರುವ ಮಸೂದೆಗೆ ಅಂಕಿತ ಹಾಕಲು ನಿರಾಕರಿಸಿದ್ದು, ಸ್ಪಷ್ಟನೆ ನೀಡುವ ನಿಟ್ಟಿನಲ್ಲಿ 29 ಕಾರಣಗಳನ್ನು ನೀಡಿ ರಾಷ್ಟ್ರಪತಿಗಳಿಗೆ ಪತ್ರವನ್ನು ಬರೆದಿದ್ದಾರೆ. ರಾಜ್ಯಪಾಲರ ಈ ನಿರ್ಧಾರದಿಂದ ಸರ್ಕಾರ ಮತ್ತು ರಾಜ್ಯಪಾಲರ ನಡುವೆ ಸಂಘರ್ಷ ಉಂಟಾಗಿದೆ. ಮಸೂದೆಗೆ ಅಂಕಿತ ಹಾಕದೇ ಇರಲು ರಾಜ್ಯಪಾಲರು ಕೊಟ್ಟ ಪ್ರಮುಖ ಕಾರಣಗಳೇನು? ಈ ವಿಧೇಯಕದಲ್ಲಿರುವ ಪ್ರಮುಖ ಹೈಲೈಟ್ಸ್ ಏನು ಎಂಬುದರ ಕುರಿತ ಮಾಹಿತಿ ಇಲ್ಲಿದೆ.
Viral Post: ಹಿಂದಿ ಮಾತನಾಡುವವರು ಇಂಡಿಯನ್ಸ್: ದಕ್ಷಿಣ ಭಾರತದವರು ಜೋಕರ್ಸ್, ಕಿಡಿ ಹೊತ್ತಿಸಿದ ಪೋಸ್ಟ್
Hindi Speakers: ಸೋಷಿಯಲ್ ಮೀಡಿಯಾದಲ್ಲಿ ಹಿಂದಿ - ಕನ್ನಡವೂ ಸೇರಿದಂತೆ ದಕ್ಷಿಣ ಭಾರತದ ಭಾಷೆಗಳ ವಿಚಾರವಾಗಿ ಮಾಡಿರುವ ಪೋಸ್ಟ್ ಕನ್ನಡಿಗರ ಕೋಪಕ್ಕೆ ಕಾರಣವಾಗಿದೆ. ಸೋಷಿಯಲ್ ಮೀಡಿಯಾ ಎಕ್ಸ್ನಲ್ಲಿ ಹಂಚಿಕೊಳ್ಳಲಾದ ಪೋಸ್ಟ್ನಲ್ಲಿ ಹಿಂದಿ ಮಾತನಾಡುವವರು ಇಂಡಿಯನ್ಸ್ ಎಂದು ಬರೆದುಕೊಳ್ಳಲಾಗಿದೆ. ಇದಕ್ಕೆ ಕನ್ನಡಿಗರು ಸಹ ಸರಿಯಾಗಿಯೇ ತಿರುಗೇಟು ಕೊಟ್ಟಿದ್ದಾರೆ. ಸೋಷಿಯಲ್ ಮೀಡಿಯಾ ಎಕ್ಸ್ನಲ್ಲಿ Priya Meh ♑️ / @PRIYAME60820600
“ತಾಳ್ಮೆ ಫಲ ನೀಡಿತು”: ಅಮೆರಿಕ ಜೊತೆಗಿನ ವ್ಯಾಪಾರ ಒಪ್ಪಂದದ ಕುರಿತು ಪ್ರಧಾನಿ ಮೋದಿ ಪ್ರತಿಕ್ರಿಯೆ
ಹೊಸದಿಲ್ಲಿ: ಅಮೆರಿಕ ಜೊತೆಗಿನ ಭಾರತದ ಐತಿಹಾಸಿಕ ವ್ಯಾಪಾರ ಒಪ್ಪಂದವು ನಿರಂತರ ತಾಳ್ಮೆಯ ಫಲಿತಾಂಶವಾಗಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಸುಂಕ ಮಾತುಕತೆಗಳ ಬಗ್ಗೆ ಹಿಂದಿನ ಟೀಕೆಗಳು ಸಕಾರಾತ್ಮಕ ಫಲಿತಾಂಶಕ್ಕೆ ದಾರಿ ಮಾಡಿಕೊಟ್ಟಿವೆ ಎಂದು ಹೇಳಿದ್ದಾರೆ. ಎನ್ಡಿಎ ಸಂಸದೀಯ ಸಭೆಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, ವ್ಯಾಪಾರ ಒಪ್ಪಂದವು ಅನುಕೂಲಕರ ಆರ್ಥಿಕ ವಾತಾವರಣವನ್ನು ಸೃಷ್ಟಿಸಿದೆ. ಜಾಗತಿಕ ವ್ಯಾಪಾರ ಮಾತುಕತೆಯಲ್ಲಿ ಸರಕಾರ ಅನುಸರಿಸುತ್ತಿರುವ ನಿರಂತರ, ಸಮತೋಲನಯುತ ಮತ್ತು ಸೂಕ್ತ ನಿಲುವನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿದರು. ಜನರು ಸುಂಕಗಳ ಬಗ್ಗೆ ಟೀಕಿಸಿದರು, ನಾವು ತಾಳ್ಮೆಯಿಂದ ಮುಂದುವರಿದೆವು, ಅದರ ಫಲಿತಾಂಶಗಳು ಈಗ ಸ್ಪಷ್ಟವಾಗಿ ಕಂಡುಬಂದಿದೆ ಎಂದು ಪ್ರಧಾನಿ ಮೋದಿ ಹೇಳಿದರು. ವಿಶ್ವದ ಕ್ರಮವು ಬದಲಾಗುತ್ತಿದೆ. ಅದರ ಪಥವು ಭಾರತದ ಕಡೆಗೆ ಹೆಚ್ಚು ಹೆಚ್ಚು ವಾಲುತ್ತಿದೆ. ನಾನು ಇದನ್ನು ವಿವಿಧ ಜಾಗತಿಕ ವೇದಿಕೆಗಳಲ್ಲಿ ಹೇಳುತ್ತಾ ಬಂದಿದ್ದೇನೆ. ಇಂದು ಅನೇಕ ದೇಶಗಳಲ್ಲಿ ವ್ಯಾಪಾರ ಉದ್ವಿಗ್ನತೆಗಳ ನಡುವೆಯೂ ಭಾರತವು ಪ್ರಯೋಜನ ಪಡೆಯುವುದನ್ನು ನಾವು ನೋಡುತ್ತಿದ್ದೇವೆ ಎಂದು ಹೇಳಿದರು. ಸಭೆಗೆ ಮುಂಚಿತವಾಗಿ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಪ್ರಧಾನಿ ಮೋದಿ, ವಿಶ್ವಾಸವು ಎಲ್ಲಾ ಪ್ರಗತಿಯ ಹಿಂದಿನ ಪ್ರೇರಕ ಶಕ್ತಿಯಾಗಿದೆ. ನಮ್ಮ ನಾಗರಿಕರ ಈ ಶಕ್ತಿಯು, ಅಭಿವೃದ್ಧಿ ಹೊಂದಿದ ಭಾರತದ ಕನಸನ್ನು ನನಸಾಗಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತದೆ ಎಂದು ಹೇಳಿದ್ದಾರೆ.
ಮುಲ್ತಾನಿ ಮಿಟ್ಟಿ ಚಿಕಿತ್ಸೆಯನ್ನು ನಾನಾರ್ಥಗಳ ರೂಪಕವಾಗಿ ನೋಡಿದರೆ, ದೇಶದೇಶಗಳ ನಡುವೆ ಹುಟ್ಟಿಕೊಳ್ಳುವ ಕಿರಿಕಿರಿಗಳ ನಡುವೆಯೂ ಸಂಸ್ಕೃತಿಗಳ ಕೊಡುಕೊಳ್ಳುವಿಕೆಯ ಬಗ್ಗೆ ನಾವು ಮುಕ್ತವಾಗಿ ಯೋಚಿಸಬೇಕಾದ ಅಗತ್ಯವನ್ನು ಈ ರೂಪಕ ಸೂಚಿಸುತ್ತದೆ. ಅಮರ ಪ್ರೇಮದ ಸ್ಮಾರಕವಾದ ತಾಜ್ಮಹಲ್ ಕಟ್ಟಿಸಿದವನು ಮೊಗಲ್ ದೊರೆ ಶಹಜಹಾನ್. ಅದರ ಚಿಕಿತ್ಸೆಗೆ ಬೇಕಾದ ಮಣ್ಣಿನ ವಿವರಗಳಿರುವುದು ಹದಿನಾರನೇ ಶತಮಾನದ ಮೊಗಲ್ ಜರ್ನಲ್ನಲ್ಲಿ. ತಾಜ್ಮಹಲ್ ಕಳೆಗುಂದಿದಾಗ ಅದಕ್ಕೆ ಹೊಸ ಹೊಳಪು ಬರುವುದು ಪಾಕಿಸ್ತಾನದ ಮುಲ್ತಾನಿ ಮಣ್ಣಿನಿಂದ! ದೇಶಗಳ ಆಳುವ ವರ್ಗಗಳು, ಸಂಕುಚಿತ ರಾಜಕಾರಣಿಗಳು, ಆಕ್ರಮಣಕಾರಿಗಳು ಏನಾದರೂ ಹೇಳುತ್ತಿರಲಿ, ಎಲ್ಲ ಸಂಸ್ಕೃತಿಗಳಲ್ಲೂ ಕಲಾವಿದರು, ಸೂಕ್ಷ್ಮಜೀವಿಗಳು ಮಾತ್ರ ಇತರ ಸಂಸ್ಕೃತಿಗಳಿಂದ ಪ್ರೇರಣೆಗಳನ್ನು ಪಡೆಯುತ್ತಲೇ ಇರುತ್ತಾರೆ. ಯುರೋಪ್ನ ವಸಾಹತುಕಾರ ಥಿಯರಿಸ್ಟರು ಆಫ್ರಿಕಾವನ್ನು ‘ಅನಾಗರಿಕ’, ‘ಹಿಂದುಳಿದ’ ಖಂಡ ಎಂದು ಕರೆಯುತ್ತಿದ್ದರೂ, ಯುರೋಪಿನ ಕಲಾವಿದರು ಈ ಥಿಯರಿಯ ಹುಳಗಳನ್ನು ತಮ್ಮ ತಲೆಯೊಳಕ್ಕೆ ಬಿಟ್ಟುಕೊಳ್ಳಲಿಲ್ಲ! ಯುರೋಪಿನ ದೊಡ್ಡ ಕಲಾವಿದರು ಇಪ್ಪತ್ತನೆಯ ಶತಮಾನದ ಶುರುವಿನಲ್ಲಿ ಆಫ್ರಿಕಾದ ಬುಡಕಟ್ಟುಗಳ ಜನ ರೂಪಿಸುತ್ತಿದ್ದ ಮುಖವಾಡಗಳು ಹಾಗೂ ಶಿಲ್ಪಗಳ ಸಾಂಕೇತಿಕ ಅರ್ಥಗಳನ್ನು ನೋಡಿ ಚಕಿತರಾದರು; ಅವನ್ನು ಅಭ್ಯಾಸ ಮಾಡುತ್ತಾ ‘ಕ್ಯೂಬಿಸಂ’ ಎಂಬ ಹೊಸ ಕಲಾಮಾದರಿಯನ್ನೇ ಬೆಳೆಸಿದರು. ಅಷ್ಟೊತ್ತಿಗಾಗಲೇ ‘ಆಫ್ರಿಕನ್ ನಾಡುಗಳನ್ನು ನಾಗರಿಕೀಕರಣಗೊಳಿಸುತ್ತೇವೆ’ ಎಂಬ ಪಿಳ್ಳೆ ನೆವದಲ್ಲಿ ಆಫ್ರಿಕಾವನ್ನು ಆಕ್ರಮಿಸಿಕೊಂಡಿದ್ದ ಬಿಳಿಯರು, ವಸಾಹತು ಅಧಿಕಾರಿಗಳು, ಸೇನೆಯವರು ಅಲ್ಲಿ ಸಿಕ್ಕಿದ್ದನ್ನೆಲ್ಲ ದೋಚಿಕೊಂಡು ವಾಪಸ್ ಬರುತ್ತಿದ್ದರು. ಅವರಲ್ಲಿ ಕೆಲವರು ಆಫ್ರಿಕಾದ ಕಲಾಕೃತಿಗಳನ್ನೂ ಹಡಗಿನಲ್ಲಿ ಹೇರಿಕೊಂಡು ಬರುತ್ತಿದ್ದರು. ಕೆಲವು ಫ್ರೆಂಚ್ ಆಡಳಿತಗಾರರು ಆಫ್ರಿಕಾದ ಬುಡಕಟ್ಟುಗಳು ಮಾಡಿದ್ದ ವಿಶಿಷ್ಟ ಮುಖವಾಡಗಳನ್ನು ಪ್ಯಾರಿಸ್ಗೂ ಹೊತ್ತೊಯ್ದಿದ್ದರು. ಯುರೋಪಿನ ಸೂಕ್ಷ್ಮ ಕಲಾವಿದರು ಆಫ್ರಿಕಾವನ್ನು ಈ ಲಾಭಕೋರ ವಸಾಹತುಕಾರರಂತೆ ನೋಡದೆ, ಅಲ್ಲಿನ ಆದಿಮ ಕಲೆಯ ದಿವ್ಯ ಸ್ಫೂರ್ತಿಗಾಗಿ ಅತ್ತ ತಿರುಗಿದರು. ಸ್ಪೇನ್ನ ಮಹಾನ್ ಕಲಾವಿದ ಪಾಬ್ಲೋ ಪಿಕಾಸೋಗೆ ಒಂದು ಘಟ್ಟದಲ್ಲಿ ತಾನು ಬಳಸುತ್ತಿದ್ದ ಪಶ್ಚಿಮದ ವಾಸ್ತವವಾದಿ ಕಲೆ ಯಾಕೋ ಮಾನವ ಸತ್ಯಗಳನ್ನು, ಮನುಷ್ಯರ ಒಳಮುಖಗಳನ್ನು ಹಿಡಿದಿಡಲು ಸಾಲದು ಎನ್ನಿಸಿರಬೇಕು. ಪಿಕಾಸೋ ಪ್ಯಾರಿಸ್ನ ಮ್ಯೂಸಿಯಂಗೆ ಭೇಟಿ ಕೊಟ್ಟ ಅಮೃತ ಘಳಿಗೆ ಅವನ ಕಲೆಗೆ ಹೊಸ ತಿರುವನ್ನೇ ಕೊಟ್ಟಿತು. ಸದಭಿರುಚಿಯ ಫ್ರೆಂಚ್ ಅಧಿಕಾರಿಯೊಬ್ಬ ಆಫ್ರಿಕಾದ ಬುಡಕಟ್ಟುಗಳು ಮಾಡಿದ್ದ ವಿಶಿಷ್ಟ ಮುಖವಾಡಗಳನ್ನು ಪ್ಯಾರಿಸ್ ಮ್ಯೂಸಿಯಂನಲ್ಲಿ ತಂದಿಟ್ಟಿದ್ದ. ಪಿಕಾಸೋ ಈ ಆಫ್ರಿಕನ್ ಮುಖವಾಡಗಳನ್ನು ನೋಡನೋಡುತ್ತಾ, ಶಿಲ್ಪಗಳ ಹೊಸ ಸಾಧ್ಯತೆಯನ್ನು ಅರಿಯತೊಡಗಿದ. ಪಿಕಾಸೋ ಹಾಗೂ ಅವನ ವಾರಗೆಯ ಕಲಾವಿದರು ಪಶ್ಚಿಮ ಆಫ್ರಿಕಾ ಹಾಗೂ ಸೆಂಟ್ರಲ್ ಆಫ್ರಿಕಾದ ಮುಖವಾಡಗಳು ಹಾಗೂ ಶಿಲ್ಪಗಳನ್ನು ಆಳವಾಗಿ ಅಧ್ಯಯನ ಮಾಡತೊಡಗಿದರು. ಈ ಅಧ್ಯಯನದ ಫಲವಾಗಿ, ಪಿಕಾಸೋನಂಥ ಮಹಾಪ್ರತಿಭೆಯ ನೋಟ, ಸಂವೇದನೆ ಹಾಗೂ ಕೈಗಳಲ್ಲಿ ಪಶ್ಚಿಮದಲ್ಲಿ ‘ಕ್ಯೂಬಿಸಂ’ ಎಂಬ ಕಲಾ ಚಳವಳಿಯೇ ಶುರುವಾಯಿತು. ವಸ್ತುಗಳನ್ನು ಬೇರೆ ಬೇರೆ ಕೋನಗಳಿಂದ ಮಂಡಿಸುವ ಕ್ಯೂಬಿಸಂ ಎಂಬ ಸೂಕ್ಷ್ಮ ಕಲೆ ಹುಟ್ಟಿದ್ದು ಆಫ್ರಿಕನ್ ಕಲೆಯ ಪ್ರೇರಣೆಯಿಂದ. ವಸಾಹತುಕಾರರ ಪೂರ್ವಗ್ರಹಗಳಿಂದ ಬಿಡಿಸಿಕೊಂಡು, ಯುರೋಪಿನ ಕಲಾವಿದರು ಮುಕ್ತವಾಗಿ ಆಫ್ರಿಕನ್ ಸಂಸ್ಕೃತಿಯನ್ನು ನೋಡಿದ್ದರಿಂದ ಪಶ್ಚಿಮದ ಕಲೆಯ ದಿಕ್ಕು ಬದಲಾಯಿತು. ಆಫ್ರಿಕಾದ ಕಾಂಗೋ ನದಿಯ ದಂಡೆಯ ಶಿಲ್ಪ ಕಲೆಯಿಂದ ಯುರೋಪಿಯನ್ ಶಿಲ್ಪಕಲೆ ಮರುಜೀವ ಪಡೆಯತೊಡಗಿತು. ಚರಿತ್ರೆಯ ಇಂಥ ಘಟನೆಗಳು ಸೂಚಿಸುತ್ತಿರುವ ಸತ್ಯ ಇದು: ಕಲಾವಿದರು, ಸೂಕ್ಷ್ಮಜೀವಿಗಳು, ಲೇಖಕರು, ಪತ್ರಕರ್ತರು, ಒಟ್ಟಾರೆಯಾಗಿ ಆರೋಗ್ಯಕರ ಮನಸ್ಸುಳ್ಳವರು ದೇಶದೇಶಗಳ ನಡುವಣ ಸಂಬಂಧಗಳನ್ನು ಅಧಿಕಾರಸ್ಥರ ಕಾಲಕಾಲದ ನಿಲುವುಗಳನ್ನು ಮೀರಿ ಸ್ವತಂತ್ರವಾಗಿ ನೋಡುತ್ತಿರಬೇಕಾಗುತ್ತದೆ. ಭಾರತದ ಮಹಾನ್ ಕಲಾಸ್ಮಾರಕ ತಾಜ್ಮಹಲ್ ಕಳೆಗುಂದಿ, ಒಮ್ಮೊಮ್ಮೆ ಹಳದಿ ಬಣ್ಣಕ್ಕೆ ತಿರುಗುವ ಸುದ್ದಿಯನ್ನು ನೀವು ಕೇಳಿರಬಹುದು. ಆಗ್ರಾದ ತಾಜ್ಮಹಲ್ನ ಅಮೃತಶಿಲೆ ಹಳದಿ ಬಣ್ಣಕ್ಕೆ ತಿರುಗಿದಾಗಲೆಲ್ಲ ಅದಕ್ಕೊಂದು ಚಿಕಿತ್ಸೆ ಕೊಡುತ್ತಾರೆ. ಈ ಚಿಕಿತ್ಸೆಯ ಹೆಸರು ಮುಲ್ತಾನಿ ಮಿಟ್ಟಿ ಚಿಕಿತ್ಸೆ. ಮುಲ್ತಾನಿ ಮಣ್ಣಿನ ಚಿಕಿತ್ಸೆ ಪಡೆಯಲು ತಾಜ್ಮಹಲ್ ಆಗಾಗ ಸಿದ್ಧವಾಗುತ್ತಿರುತ್ತದೆ. 1994, 2001, 2008ರಲ್ಲಿ ತಾಜ್ಮಹಲ್ಗೆ ಈ ಮುಲ್ತಾನಿ ಮಣ್ಣಿನ ಚಿಕಿತ್ಸೆ ಕೊಡಿಸಲಾಗಿತ್ತು. 2022ರ ಸುಮಾರಿನಲ್ಲೂ ಈ ಚಿಕಿತ್ಸೆ ನಡೆಯಿತು. ಈ ಮುಲ್ತಾನಿ ಮಣ್ಣಿನ ಚಿಕಿತ್ಸೆಯ ವಿವರಗಳು 16ನೆಯ ಶತಮಾನದ ‘Ain-i-Akbary’ ಎಂಬ ಮೊಗಲ್ ಜರ್ನಲ್ನಲ್ಲಿದ್ದವು ಎಂದು ‘ಸಂಡೇ ಟೆಲಿಗ್ರಾಫ್’ ವರದಿ ಸೂಚಿಸುತ್ತದೆ. ಪಾಕಿಸ್ತಾನದ ಚಿನಾಬ್ ನದಿ ದಂಡೆಯಲ್ಲಿರುವ ಮುಲ್ತಾನಿ ನಗರ ಸೂಫಿ ಸಂತರ ನಗರ ಎಂದೂ ಖ್ಯಾತವಾಗಿದೆ. ಮುಲ್ತಾನಿಯಲ್ಲಿ ದೊರಕುವ ಮಣ್ಣಿನಲ್ಲಿ ಸುಣ್ಣದ ಅಂಶ ಇರುತ್ತದೆ. ಮುಖದ ಸೌಂದರ್ಯವನ್ನು ಕಾಪಾಡಲು ಮುಲ್ತಾನಿಯ ಮಹಿಳೆಯರು ಮನೆಗಳಲ್ಲೂ ಈ ಮಣ್ಣನ್ನು ಬಳಸುತ್ತಾರೆ. ಬ್ಯೂಟಿ ಪಾರ್ಲರುಗಳಲ್ಲೂ ಈ ಮಣ್ಣನ್ನು ಬಳಸುತ್ತಾರೆ. ಕೊಳೆ ತೊಳೆಯುವ ವಿಶೇಷ ಗುಣ ಮುಲ್ತಾನಿ ಮಿಟ್ಟಿಗೆ ಇದೆ. ತಾಜ್ಮಹಲ್ ಎಲ್ಲೆಲ್ಲಿ ಹಳದಿ ಬಣ್ಣಕ್ಕೆ ತಿರುಗಿದೆಯೋ ಅಲ್ಲೆಲ್ಲ ಎರಡು ಮಿಲಿಮೀಟರ್ ದಪ್ಪಕ್ಕೆ ಮುಲ್ತಾನಿ ಮಣ್ಣನ್ನು ಮೆತ್ತಲಾಗುತ್ತದೆ. ಅಂದರೆ ತಾಜ್ಮಹಲ್ಗೂ ಒಂದು ಫೇಸ್ ಪ್ಯಾಕ್! ಹೀಗೆ ಈ ಮುಲ್ತಾನಿ ಮಿಟ್ಟಿ ಚಿಕಿತ್ಸೆ ನಡೆಯುತ್ತದೆ. ಮುಲ್ತಾನಿ ಮಿಟ್ಟಿ ಚಿಕಿತ್ಸೆಯನ್ನು ನಾನಾರ್ಥಗಳ ರೂಪಕವಾಗಿ ನೋಡಿದರೆ, ದೇಶದೇಶಗಳ ನಡುವೆ ಹುಟ್ಟಿಕೊಳ್ಳುವ ಕಿರಿಕಿರಿಗಳ ನಡುವೆಯೂ ಸಂಸ್ಕೃತಿಗಳ ಕೊಡುಕೊಳ್ಳುವಿಕೆಯ ಬಗ್ಗೆ ನಾವು ಮುಕ್ತವಾಗಿ ಯೋಚಿಸಬೇಕಾದ ಅಗತ್ಯವನ್ನು ಈ ರೂಪಕ ಸೂಚಿಸುತ್ತದೆ. ಅಮರ ಪ್ರೇಮದ ಸ್ಮಾರಕವಾದ ತಾಜ್ಮಹಲ್ ಕಟ್ಟಿಸಿದವನು ಮೊಗಲ್ ದೊರೆ ಶಹಜಹಾನ್. ಅದರ ಚಿಕಿತ್ಸೆಗೆ ಬೇಕಾದ ಮಣ್ಣಿನ ವಿವರಗಳಿರುವುದು ಹದಿನಾರನೇ ಶತಮಾನದ ಮೊಗಲ್ ಜರ್ನಲ್ನಲ್ಲಿ. ತಾಜ್ಮಹಲ್ ಕಳೆಗುಂದಿದಾಗ ಅದಕ್ಕೆ ಹೊಸ ಹೊಳಪು ಬರುವುದು ಪಾಕಿಸ್ತಾನದ ಮುಲ್ತಾನಿ ಮಣ್ಣಿನಿಂದ! ಈ ಮುಲ್ತಾನಿ ಮಿಟ್ಟಿ ಚಿಕಿತ್ಸೆಯನ್ನು ಸ್ಟಡಿ ಮಾಡಲು ಇಟಲಿಯಿಂದ ಪಾರಂಪರಿಕ ಕಟ್ಟಡಗಳ ಸಂರಕ್ಷಣೆ ಮಾಡುವ ರೋಮ್ ಸಂಸ್ಥೆಯೊಂದರ ವಿಜ್ಞಾನಿಗಳು 2022ರಲ್ಲಿ ಆಗ್ರಾಕ್ಕೆ ಬಂದರು. ತಾಜ್ಮಹಲ್ಗೆ ಮುಲ್ತಾನಿ ಮಿಟ್ಟಿ ಚಿಕಿತ್ಸೆ ನಡೆಯುತ್ತಿದ್ದಾಗ ಈ ವಿಜ್ಞಾನಿಗಳು ಆಗ್ರಾದಲ್ಲಿದ್ದು, ಚಿಕಿತ್ಸೆ ಹೇಗೆ ಕೆಲಸ ಮಾಡುತ್ತದೆಂದು ನೋಡಿದರು. ಇಟಲಿಯಲ್ಲಿ ಕಪ್ಪಾಗುತ್ತಿರುವ ಅಮೃತಶಿಲೆಯ ಪ್ರತಿಮೆಗಳಿಗೆ ಮುಲ್ತಾನಿ ಮಿಟ್ಟಿ ಚಿಕಿತ್ಸೆ ಕೊಡುವ ಕಲೆಯನ್ನು ಭಾರತದಲ್ಲಿ ಕಲಿಯತೊಡಗಿದರು. ನಾಲ್ಕು ವರ್ಷಗಳ ಕೆಳಗೆ, ತಾಜ್ಮಹಲ್ನ ಮುಲ್ತಾನಿ ಮಿಟ್ಟಿ ಚಿಕಿತ್ಸೆ ಆಗ್ರಾದ ಹಲವು ಬಗೆಯ ಮಾಲಿನ್ಯಗಳಿಂದ ಕೂಡ ತಾಜ್ಮಹಲನ್ನು ರಕ್ಷಿಸಿದ್ದನ್ನು ಕಂಡ ತಾಜ್ಮಹಲ್ನ ಉಸ್ತುವಾರಿಗಳು ನೆಮ್ಮದಿಗೊಂಡರು. ಆದ್ದರಿಂದಲೇ ಸಂಸ್ಕೃತಿಗಳ ನಡುವಣ ಸ್ವೀಕಾರಗಳ ಬಗ್ಗೆ ನಾವು ನಾಡುಗಳ ಗಡಿಗಳ ಸಂಕುಚಿತ ಗೆರೆಗಳನ್ನು ದಾಟಿ ಯೋಚಿಸಬೇಕಾಗುತ್ತದೆ. ಜಗತ್ತಿನ ವಿವಿಧ ದಿಕ್ಕುಗಳಿಂದ ಸಂಗೀತ, ಕಲೆ, ಆಟ, ಊಟ ಎಲ್ಲವನ್ನೂ ಪಡೆದು ಆನಂದಿಸುವ ನಾವು ದೇಶದೇಶಗಳ ಮನುಷ್ಯ- ಮನುಷ್ಯರ ನಡುವೆ ಕೃತಕ ಗೋಡೆಗಳನ್ನು ನಿರ್ಮಿಸಲು ಹೊರಡುತ್ತೇವೆ; ಒಂದು ಸಂಸ್ಕೃತಿ ಮತ್ತೊಂದರಿಂದ ಪಡೆದು ಸಮೃದ್ಧವಾಗುವ ಸಾಧ್ಯತೆಯನ್ನು ಕೈಬಿಟ್ಟು ಪೂರ್ವಗ್ರಹಗಳನ್ನು ನಿರ್ಮಿಸಿಕೊಳ್ಳುತ್ತೇವೆ. ಪಶ್ಚಿಮದ ಸಂಗೀತ ಏಕತಾನತೆಯಿಂದ ದಣಿದಿದ್ದಾಗ ಅದು ಆಫ್ರಿಕಾದ ಬುಡಕಟ್ಟು ಸಂಗೀತದಿಂದ ಹೊಸ ಜೀವ ಪಡೆಯಿತು. ಇವತ್ತು ನಾವು ಕೇಳುವ ಜಾಸ್ ಸಂಗೀತ ಆಫ್ರಿಕನ್ ಮೂಲದಿಂದ ಬಂದದ್ದು. ಪ್ರಖ್ಯಾತ ಸಂಗೀತ ನಿರ್ದೇಶಕ ಎ.ಆರ್. ರಹಮಾನ್ ತಮ್ಮ ಸಿನೆಮಾ ಸಂಗೀತ ಒಮ್ಮೆ ಪುನರಾವರ್ತನೆಯ ಜಾಡಿಗೆ ಬಿದ್ದಾಗ, ಭಾರತದ ವಿವಿಧ ಭಾಗಗಳ ಗುಡ್ಡಗಾಡುಗಳ ಸಂಗೀತದ ಮಟ್ಟುಗಳನ್ನು ಹುಡುಕಿಕೊಂಡು ಹೋದರು; ಅವನ್ನು ಬಳಸಿ ಜನಪ್ರಿಯ ಸಂಗೀತದ ಹೊಸ ಲಯಗಳನ್ನು ರೂಪಿಸಿದರು; ಪಶ್ಚಿಮದ ಸಂಗೀತದಿಂದಲೂ ರಹಮಾನ್ ಅನೇಕ ಅಂಶಗಳನ್ನು ಬೆಸೆಯುತ್ತಾ ಬಂದರು. ನಮ್ಮ ಸಂಗೀತ ನಿರ್ದೇಶಕ ಹಂಸಲೇಖ ತಮ್ಮ ಸಂಗೀತಕ್ಕೆ ಹೊಸ ಜೀವ ತುಂಬಲು ಕನ್ನಡನಾಡಿನ ಮೂಲೆ ಮೂಲೆಗಳ ದೇಶೀ ಮಟ್ಟುಗಳನ್ನು ಹುಡುಕಿಕೊಂಡು ಹೋದರು. ಇದರಿಂದ ದೇಶೀ ಸಂಗೀತವೂ ಮರುಜೀವ ಪಡೆಯಿತು; ದೇಶೀ ಮಟ್ಟುಗಳಿಂದ ಹಂಸಲೇಖರು ಸೃಷ್ಟಿಸುವ ಸಂಗೀತಕ್ಕೂ ಹೊಸ ಜೀವ ಬಂತು. ಇದಕ್ಕೂ ಮೊದಲು, ಆರ್.ಡಿ. ಬರ್ಮನ್ ಕೂಡ ದೇಶಿ ಲಯಗಳನ್ನು ಹುಡುಕಿಕೊಂಡು ಹೋಗಿದ್ದನ್ನು ಗೆಳೆಯರೊಬ್ಬರು ನೆನಪಿಸಿದರು. ದೇಶಿಯಿರಲಿ, ವಿದೇಶಿಯಿರಲಿ, ಒಂದು ಸಂಸ್ಕೃತಿಯ ಆರೋಗ್ಯಕ್ಕೆ ಬೇಕಾದದ್ದನ್ನು ನಾವು ತೆರೆದ ಮನಸ್ಸಿನಿಂದ ನೋಡುತ್ತಿರಬೇಕು ಎಂದು ಈ ಪ್ರಸಂಗಗಳು ಸೂಚಿಸುತ್ತವೆ. ತಾಜ್ಮಹಲ್ ಕಳೆಗುಂದಿದಾಗ ಅದು ಪಾಕಿಸ್ತಾನದ ಸೂಫಿ ಸಂತರ ನಗರ ಮುಲ್ತಾನಿಯ ಮಣ್ಣಿನಿಂದ ಹೊಸ ಕಳೆ ಪಡೆಯುತ್ತದೆ ಎನ್ನುವುದು ಹಲವು ಆರೋಗ್ಯಕರ ಅರ್ಥಗಳನ್ನು ಹೊರಡಿಸಬಲ್ಲದು. ಮುಕ್ತ ಸಂಸ್ಕೃತಿಗಳಂತೆ ಹುಲುಮಾನವರು ಕೂಡ ಮುಕ್ತ ಮನಸ್ಸಿನಿಂದ ಪಡೆಯುವ, ಬೆಳೆಯುವ, ಉಳಿಯುವ ಕಲೆಯನ್ನು ನಿತ್ಯ ನವೀಕರಿಸಿಕೊಂಡರೆ ಎಷ್ಟು ಚಂದ!
ನಿಖಿಲ್ ಕುಮಾರಸ್ವಾಮಿ ರಾಜಕೀಯ ಭವಿಷ್ಯಕ್ಕೆ ವೇದಿಕೆ ಸಜ್ಜು : ಭಾವನಾತ್ಮಕ ಸಂಬಂಧದ ಕ್ಷೇತ್ರವೇ ಫೈನಲ್ ಆಯ್ತು
Ramanagara Assembly Constituency : ಪಕ್ಷದ ಹಿರಿಯ ಮುಖಂಡರಿದ್ದಾರೆ ಮತ್ತು ನಮ್ಮ ಕುಟುಂಬವನ್ನು ಪ್ರೀತಿಸುವ ಒಂದು ದೊಡ್ಡ ವರ್ಗವೇ ಅಲ್ಲಿದೆ. ಜಾತಿಗಣತಿಯು ಕೇವಲ ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಅಭಿವೃದ್ಧಿಯ ಹಿತದೃಷ್ಟಿಯಿಂದ ನಡೆಯಬೇಕೇ ಹೊರತು, ಇದು ರಾಜಕೀಯ ಉದ್ದೇಶದ ತಂತ್ರವಾಗಬಾರದು ಎಂದು ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ. ಆ ಮೂಲಕ, ಯಾವ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದೇನೆ ಎನ್ನುವ ಮಾಹಿತಿಯನ್ನು ಅವರು ನೀಡಿದ್ದಾರೆ.
ಚಿತ್ತಾಪುರ ಬಿಜೆಪಿ ಅಭ್ಯರ್ಥಿ ಮಣಿಕಂಠ ರಾಥೋಡ್ ಅವರ ಹೇಳಿಕೆ ವೈರಲ್ ಆಗಿದೆ. ಅಧಿಕಾರ ಸಿಕ್ಕರೆ ಮೀಸಲಾತಿ ಬೇಕು ಎನ್ನುವವರನ್ನು ಜೈಲಿಗೆ ಹಾಕುವುದಾಗಿ ಹೇಳಿದ್ದಾರೆ. ಬಡವರಿಗೆ ಮಾತ್ರ ಮೀಸಲಾತಿ ನೀಡಬೇಕು, ಜಾತಿ ಆಧಾರಿತ ಮೀಸಲಾತಿ ರದ್ದು ಮಾಡಬೇಕು ಎಂದಿದ್ದಾರೆ. ಈ ಹಿಂದೆ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಜೀವ ಬೆದರಿಕೆ ಹಾಕಿದ್ದ ಆರೋಪವೂ ಅವರ ಮೇಲಿದೆ.
ಪಾಕಿಸ್ತಾನದ ಬುದ್ದಿ ತನ್ನ ಮೊಣಕಾಲಿನಲ್ಲಿದೆ ಎಂಬ ವಿಚಾರವನ್ನು ಮತ್ತೆ ಸಾಬೀತು ಮಾಡುವಂತಹ ವಿಚಿತ್ರ ಘಟನೆ ಪಾಕಿಸ್ತಾನದ ರಾವಲ್ಪಿಂಡಿಯಲ್ಲಿ ನಡೆದಿದೆ. ಹೌದು, ಪಾಕ್ ನಲ್ಲಿ ಜಿನ್ಗಳು ಬಾಲಕನ ಅಪಹರಣ ಮಾಡಿದ್ದಾರೆಂದು ಪ್ರಕರಣ ದಾಖಲಾಗಿದೆ. ಬಾಲಕ 10 ದಿನಗಳಿಂದ ಕಾಣೆಯಾಗಿದ್ದಾನೆ. ಈ ಹಿಂದೆ ಕೂಡ ಜಿನ್ಗಳು ಅಪಹರಿಸಿದ್ದವು ಎಂದು ತಂದೆ ದೂರು ನೀಡಿದ್ದಾರೆ. ಪೊಲೀಸರು ಪ್ರಕರಣವನ್ನು ವಿಲಕ್ಷಣ ಖಾತೆಯಡಿಯಲ್ಲಿ ದಾಖಲಿಸಿಕೊಂಡಿದ್ದಾರೆ.
ತಿಂಗಳುಗಟ್ಟಲೆ ತೆರಿಗೆ ಇಳಿಸಲ್ಲ ಅಂತ ಹಠ ಹಿಡಿದಿದ್ದ ಅಮೆರಿಕ ಏಕಾಏಕಿ ಪಟ್ಟು ಸಡಿಲಿಸಿದ್ದೇಕೆ? ಅಂಥಾದ್ದೇನಾಯ್ತು?
ಅಮೆರಿಕ ಅಧ್ಯಕ್ಷ ಟ್ರಂಪ್ ಭಾರತದೊಂದಿಗೆ ದಿಢೀರ್ ವ್ಯಾಪಾರ ಒಪ್ಪಂದ ಘೋಷಿಸಿದ್ದಾರೆ. ತಿಂಗಳುಗಳ ಮಾತುಕತೆ ಬಳಿಕ, ಭಾರತ ರಷ್ಯಾದಿಂದ ತೈಲ ಆಮದು ನಿಲ್ಲಿಸಲು ಒಪ್ಪಿಕೊಂಡಿದೆ. ಭಾರತ-ಇಯು ಮುಕ್ತ ವ್ಯಾಪಾರ ಒಪ್ಪಂದದ ಮಾತುಕತೆಗಳು ಅಮೆರಿಕದ ಮೇಲೆ ಒತ್ತಡ ತಂದಿವೆ. ಇದು ಇಂಧನ ನೀತಿ ಮತ್ತು ಭೌಗೋಳಿಕ ರಾಜಕೀಯದ ಲೆಕ್ಕಾಚಾರವಾಗಿದೆ. ಭಾರತಕ್ಕೆ ಸುಂಕ ರಿಯಾಯಿತಿ, ಅಮೆರಿಕಕ್ಕೆ ರಷ್ಯಾದ ಆದಾಯ ನಿಯಂತ್ರಣ ಲಾಭವಾಗಿದೆ.
ಮ್ಯಾಂಡೆಲ್ಸನ್ ವಿರುದ್ಧ ತನಿಖೆಗೆ ಆದೇಶಿಸಿದ ಯುಕೆ ಪ್ರಧಾನಿ
ಕುಪ್ಪೆಪದವು: ಸಾರ್ವಜನಿಕ ರಕ್ತದಾನ ಶಿಬಿರ
ಮಂಗಳೂರು : ಬಡಜನ ಸೇವಾ ಫ್ರೆಂಡ್ಸ್ ಹಾಗೂ ಅಲ್-ಫತಹ್ ಫ್ರೆಂಡ್ಸ್ ಮತ್ತು ವಿವಿಧ ಸಂಘ–ಸಂಸ್ಥೆಗಳ ಜಂಟಿ ಆಶ್ರಯದಲ್ಲಿ, ಸೇವ್ ಲೈಫ್ ಚಾರಿಟೇಬಲ್ ಟ್ರಸ್ಟ್ (ರಿ.) ಹಾಗೂ ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ (ರಿ.) ಸಹಯೋಗದಲ್ಲಿ, ಫಾದರ್ ಮುಲ್ಲರ್ ಆಸ್ಪತ್ರೆ ಮಂಗಳೂರು ಅವರ ಸಹಭಾಗಿತ್ವದಲ್ಲಿ ಫೆಬ್ರವರಿ 1, 2026 (ಆದಿತ್ಯವಾರ)ರಂದು ಕಾವೇರಿ ವಿದ್ಯಾಲಯ, ಕುಪ್ಪೆಪದವಿನಲ್ಲಿ ಸಾರ್ವಜನಿಕ ರಕ್ತದಾನ ಶಿಬಿರ ಯಶಸ್ವಿಯಾಗಿ ನಡೆಯಿತು. ಶಿಬಿರದಲ್ಲಿ ಒಟ್ಟು 55 ಯುನಿಟ್ ರಕ್ತ ಸಂಗ್ರಹಿಸಲಾಯಿತು. ಕಾರ್ಯಕ್ರಮದಲ್ಲಿ ಅರ್ಜುನ್ ಭಂಡಾರ್ಕರ್, ಗಿರೀಶ್ ಆಳ್ವ, ನಿಜಾಮ್ ತೋಕೂರು, ಪ್ರಕಾಶ್ ಕೆ., ಹಸನ್ ಭಾವ ಮಣಿಪಲ್ಲ, ನೌಷಾದ್ ಮುತ್ತೂರು, ಅಜೀಜ್ ನಡುಪಲ್ಲ, ಜೋಯ್ ಕುಟಿನ್ಹ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. ಕಾರ್ಯಕ್ರಮದ ನಿರೂಪಣೆಯನ್ನು ಸಂದೀಪ್ ಆಳ್ವ ಅವರು ನೆರವೇರಿಸಿದ್ದು, ಶಫೀಕ್ ಅವರು ವಂದಿಸಿದರು.
ಕೇಂದ್ರ ಸರ್ಕಾರವು ರೈತರ ಆದಾಯ ಹೆಚ್ಚಿಸಲು ಮತ್ತು ಕೃಷಿಯನ್ನು ಆಧುನೀಕರಿಸಲು 'ಭಾರತ್-ವಿಸ್ತಾರ್' ಎಂಬ ಬಹುಭಾಷಾ AI ಉಪಕರಣವನ್ನು ಪರಿಚಯಿಸಲಿದೆ. ಶೀಘ್ರದಲ್ಲೇ ಈ ತಂತ್ರಾಂಶ ರೈತರ ಕೈ ಸೇರಲಿದೆ. ಇದು ರೈತರಿಗೆ ತಮ್ಮ ಭಾಷೆಯಲ್ಲಿ ನಿಖರವಾದ ಕೃಷಿ ಸಲಹೆಗಳನ್ನು ನೀಡುತ್ತದೆ. ಹವಾಮಾನ, ಕೀಟ ಬಾಧೆಗಳ ಬಗ್ಗೆ ಮುಂಚಿತವಾಗಿ ಎಚ್ಚರಿಕೆ ನೀಡುವ ಮೂಲಕ ಬೆಳೆ ನಷ್ಟವನ್ನು ತಡೆಯಲು ಸಹಾಯ ಮಾಡುತ್ತದೆ. ಇದರಿಂದ ರೈತರು ಉತ್ತಮ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಾಧ್ಯವಾಗುತ್ತದೆ.
ದೇರಳಕಟ್ಟೆ : ಶಾಂತಿಭಾಗ್ ದಾರುಸ್ಸಲಾಂ ಜುಮಾ ಮಸೀದಿಯ ನೂತನ ಸಮಿತಿ ಅಸ್ತಿತ್ವಕ್ಕೆ
ಹಾಜಿ ಮಹಮ್ಮದ್ ಪರಪ್ಪು 10ನೇ ಬಾರಿ ಅಧ್ಯಕ್ಷರಾಗಿ ಆಯ್ಕೆ
ಬೇಸಿಗೆಗೂ ಮುನ್ನವೇ ಬೆಲೆ ಏರಿಕೆ ಬಿಸಿ: ಗಗನಕ್ಕೇರಿದ ಅಕ್ಕಿ, ಬೇಳೆ, ಮೆಣಸಿನಕಾಯಿ ದರ
ಬೆಂಗಳೂರು: ರಾಜ್ಯದ ಜನತೆಗೆ ಮತ್ತೊಂದು ಬೆಲೆ ಏರಿಕೆಯ ಬಿಸಿ ತಟ್ಟಿದೆ. ಈಗಾಗಲೇ ತರಕಾರಿ, ಹಣ್ಣು, ಚಿನ್ನ ಮತ್ತು ಬೆಳ್ಳಿ ದರಗಳ ಏರಿಕೆಯಿಂದ ಕಂಗೆಟ್ಟಿರುವ ಸಾಮಾನ್ಯ ಜನರಿಗೆ, ಇದೀಗ ದಿನನಿತ್ಯದ ಅನಿವಾರ್ಯ ವಸ್ತುಗಳಾದ ಅಕ್ಕಿ, ಬೇಳೆ ಮತ್ತು ಮೆಣಸಿನಕಾಯಿ ಬೆಲೆ ಗಗನಕ್ಕೇರಿರುವುದು ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಬೇಸಿಗೆ ಕಾಲ ಅಧಿಕೃತವಾಗಿ ಆರಂಭವಾಗುವ ಮುನ್ನವೇ ಮಾರುಕಟ್ಟೆಯಲ್ಲಿ ಅಗತ್ಯ ವಸ್ತುಗಳ ಬೆಲೆ
ಕನಕೋತ್ಸವ ನೆಪದಲ್ಲಿ ಡಿಕೆ ಬ್ರದರ್ಸ್ ಶಕ್ತಿ ಪ್ರದರ್ಶನ! ವೇದಿಕೆಯಲ್ಲಿ ಕಾಣಿಸಿಕೊಂಡ 50ಕ್ಕೂ ಅಧಿಕ ಶಾಸಕರು
ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಚರ್ಚೆ ನಡುವೆ, ಡಿಸಿಎಂ ಡಿಕೆ ಶಿವಕುಮಾರ್ ಕನಕಪುರದಲ್ಲಿ 'ಕನಕೋತ್ಸವ' ಹೆಸರಿನಲ್ಲಿ ಅದ್ದೂರಿ ಕಾರ್ಯಕ್ರಮ ಅದೇ ನೆಪದಲ್ಲಿ ಆಯೋಜಿಸಿ ಶಕ್ತಿ ಪ್ರದರ್ಶನವನ್ನೂ ಮಾಡಿದರು. ಐದು ದಿನಗಳ ಈ ಕಾರ್ಯಕ್ರಮದಲ್ಲಿ 50ಕ್ಕೂ ಹೆಚ್ಚು ಶಾಸಕರು, ಸಚಿವರು, ಹಾಗೂ ಗಣ್ಯರು ಭಾಗವಹಿಸಿ ಗಮನ ಸೆಳೆದರು. ಎರಡು ಬಣದ ಶಾಸಕರ ಉಪಸ್ಥಿತಿ ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದ್ದು, ಈ ಕುರಿತ ಚರ್ಚೆ ಸದನದಲ್ಲೂ ನಡೆದಿದ್ದು, ವಿಪಕ್ಷಗಳ ಟೀಕೆಗೆ ಡಿಕೆಶಿವಕುಮಾರ್ ನನ್ನ ಜೊತೆಗೆ 139 ಮಂದಿ ಶಾಸಕರು ಇದ್ದಾರೆ ಎಂದು ಹೇಳುವ ಮೂಲಕ ತಿರುಗೇಟು ನೀಡಿದ್ದಾರೆ.
ಬೆಂಗಳೂರು-ಮೈಸೂರು ದಶಪಥ ರಸ್ತೆಯಲ್ಲಿ ಕಳೆದ ಮೂರು ವರ್ಷಗಳಲ್ಲಿ 215 ಮಂದಿ ಸಾವನ್ನಪ್ಪಿದ್ದು, 1674 ಅಪಘಾತಗಳು ಸಂಭವಿಸಿವೆ. ಹೆದ್ದಾರಿಯ ಎರಡನೇ ಹಂತದಲ್ಲಿ ಅತಿಹೆಚ್ಚು ಸಾವುಗಳು ಸಂಭವಿಸಿವೆ. ಅತಿ ವೇಗ, ಅಜಾಗರೂಕತೆ ಮತ್ತು ವೈದ್ಯಕೀಯ ಕೇಂದ್ರಗಳ ಕೊರತೆ ಸಾವಿನ ಸಂಖ್ಯೆ ಹೆಚ್ಚಳಕ್ಕೆ ಕಾರಣವಾಗಿದೆ.
ಸತತ ಕುಸಿತದ ಹಾದಿಯಲ್ಲಿರುವ ಚಿನ್ನ-ಬೆಳ್ಳಿ; ಇಂದಿನ ದರವೆಷ್ಟು?
ಪ್ರಧಾನಿ ಮೋದಿ ಮತ್ತು ಡೊನಾಲ್ಡ್ ಟ್ರಂಪ್ ಫೋನ್ ಸಂಭಾಷಣೆ ನಡೆಸಿದ ನಂತರ ಅಮೆರಿಕ ಸುಂಕವನ್ನು ಶೇ 18ಕ್ಕೆ ಇಳಿದಿದೆ. ಹೀಗಾಗಿ ಬಂಗಾರದ ಬೆಲೆಯಲ್ಲಿ ಭಾರೀ ಬದಲಾವಣೆಯಾಗುವ ಸಾಧ್ಯತೆಯಿದೆ. ಇಂದು ಮಂಗಳವಾರ ಫೆಬ್ರವರಿ 3ರಂದು ಬಂಗಾರ ಸ್ವಲ್ಪ ಮಟ್ಟಿಗೆ ಕುಸಿದಿದೆ. ಭಾರತ ಮತ್ತು ಅಮೆರಿಕದ ನಡುವೆ ವ್ಯಾಪಾರ ಒಪ್ಪಂದದ ನಂತರ ಚಿನ್ನದ ಬೆಲೆಯಲ್ಲಿ ಏರಿಳಿತವಾಗಿದೆ. ಪ್ರಧಾನಿ ಮೋದಿ ಮತ್ತು ಡೊನಾಲ್ಡ್ ಟ್ರಂಪ್ ಫೋನ್ ಸಂಭಾಷಣೆ ನಡೆಸಿದ ನಂತರ ಅಮೆರಿಕ ಸುಂಕವನ್ನು ಶೇ 18ಕ್ಕೆ ಇಳಿದಿದೆ. ಹೀಗಾಗಿ ಬಂಗಾರದ ಬೆಲೆಯಲ್ಲಿ ಭಾರೀ ಬದಲಾವಣೆಯಾಗುವ ಸಾಧ್ಯತೆಯಿದೆ. ಜನವರಿ 29ರಂದು ಗುರುವಾರ 22 ಕ್ಯಾರೆಟ್ ನ ಪ್ರತಿ ಗ್ರಾಂ ಚಿನ್ನ 17,885 ರೂ.ಗೆ ಏರಿತ್ತು. ಆದರೆ ನಂತರ ಸತತ ಕುಸಿಯುತ್ತಾ ಬಂದು ಇದೀಗ 15,175 ರೂ.ಗೆ ಬಂದು ನಿಂತಿದೆ. ಅಮೆರಿಕದ ಡಾಲರ್, ಯುದ್ಧ, ಭೌಗೋಳಿಕ ರಾಜಕೀಯಗಳು ಹಾಗೂ ಸುಂಕದ ರಾಜಕೀಯ ಚಿನ್ನದ ಬೆಲೆಯಲ್ಲಿ ಬದಲಾವಣೆ ತರುತ್ತಿದೆ. ಮಂಗಳೂರಿನಲ್ಲಿ ಇಂದಿನ ಚಿನ್ನದ ದರವೆಷ್ಟು? ಮಂಗಳವಾರ ಫೆಬ್ರವರಿ 03ರಂದು ಬೆಳಗಿನ 11 ಗಂಟೆಯ ವಹಿವಾಟಿನಲ್ಲಿ ಮಂಗಳೂರಿನಲ್ಲಿ ಚಿನ್ನದ ಬೆಲೆ ಮತ್ತೆ ಕುಸಿತ ಕಂಡಿದೆ. ಬೆಳಗಿನ ವಹಿವಾಟಿನಲ್ಲಿ ಒಂದು ಗ್ರಾಂ 24 ಕ್ಯಾರೆಟ್ ಚಿನ್ನದ ದರ 15,175 (-142) ರೂ. ಗೆ ಕುಸಿದಿದೆ. ಒಂದು ಗ್ರಾಂ 22 ಕ್ಯಾರೆಟ್ ಚಿನ್ನದ ದರ 13,910 (-130) ರೂ. ಮತ್ತು ಒಂದು ಗ್ರಾಂ 18 ಕ್ಯಾರೆಟ್ ಚಿನ್ನದ ದರ 11,381 (-107) ರೂ. ಬೆಲೆಗೆ ತಲುಪಿದೆ. ಬೆಳ್ಳಿಯ ಬೆಲೆಯಲ್ಲೂ ಕುಸಿತ ಮಂಗಳವಾರ ಮಾರುಕಟ್ಟೆ ತೆರೆದ ತಕ್ಷಣ ಬೆಳ್ಳಿಯ ಬೆಲೆ ಇನ್ನಷ್ಟು ಕುಸಿತ ಕಂಡಿದೆ. ಇಂದು ಗ್ರಾಂಗೆ 20 ರೂ.ನಷ್ಟು ಕುಸಿದ ಬೆಳ್ಳಿ ಕೆಜಿಗೆ 2,80,000 ಲಕ್ಷ ರೂ. ತಲುಪಿದೆ. ವಿವಿಧ ನಗರಗಳಲ್ಲಿ 1 ಗ್ರಾಮ್ ಚಿನ್ನದ ದರ (ಬೆಳಗಿನ ವಹಿವಾಟು) ಹೇಗಿದೆ? ದಿಲ್ಲಿ: 24 ಕ್ಯಾರೆಟ್ ಚಿನ್ನದ ದರ 15,190 (-142) ರೂ., 22 ಕ್ಯಾರೆಟ್ ಚಿನ್ನದ ದರ 13,925 (-130) ರೂ. ಮುಂಬೈ: 24 ಕ್ಯಾರೆಟ್ ಚಿನ್ನದ ದರ 15,175 (-142) ರೂ., 22 ಕ್ಯಾರೆಟ್ ಚಿನ್ನದ ದರ 13,910 (-130) ರೂ. ಅಹಮದಾಬಾದ್: 24 ಕ್ಯಾರೆಟ್ ಚಿನ್ನದ ದರ 15,180 (-142) ರೂ., 22 ಕ್ಯಾರೆಟ್ ಚಿನ್ನದ ದರ 13,915 (-130) ರೂ. ಚೆನ್ನೈ: 24 ಕ್ಯಾರೆಟ್ ಚಿನ್ನದ ದರ 15,306 (+88) ರೂ., 22 ಕ್ಯಾರೆಟ್ ಚಿನ್ನದ ದರ 14,030 (+ 80) ರೂ. ಕೋಲ್ಕತ್ತಾ: 24 ಕ್ಯಾರೆಟ್ ಚಿನ್ನದ ದರ 15,175 (-142) ರೂ., 22 ಕ್ಯಾರೆಟ್ ಚಿನ್ನದ ದರ 13,910 (-130) ರೂ. ಹೈದರಾಬಾದ್: 24 ಕ್ಯಾರೆಟ್ ಚಿನ್ನದ ದರ 15,175 (-142) ರೂ., 22 ಕ್ಯಾರೆಟ್ ಚಿನ್ನದ ದರ 13,910 (-130) ರೂ. ಜೈಪುರ: 24 ಕ್ಯಾರೆಟ್ ಚಿನ್ನದ ದರ 15,190 (-142) ರೂ., 22 ಕ್ಯಾರೆಟ್ ಚಿನ್ನದ ದರ 13,925 (-130) ರೂ. ಭೋಪಾಲ್: 24 ಕ್ಯಾರೆಟ್ ಚಿನ್ನದ ದರ 15,180 (-142) ರೂ., 22 ಕ್ಯಾರೆಟ್ ಚಿನ್ನದ ದರ 13,915 (-130) ರೂ. ಲಖನೌ: 24 ಕ್ಯಾರೆಟ್ ಚಿನ್ನದ ದರ 15,190 (-142) ರೂ., 22 ಕ್ಯಾರೆಟ್ ಚಿನ್ನದ ದರ 13,925 (-130) ರೂ. ಚಂಡೀಗಢ: 24 ಕ್ಯಾರೆಟ್ ಚಿನ್ನದ ದರ 15,190 (-142) ರೂ., 22 ಕ್ಯಾರೆಟ್ ಚಿನ್ನದ ದರ 13,925 (-130) ರೂ.
Gold Price Feb 03: ಚಿನ್ನ ಪ್ರಿಯರಿಗೆ ಕೊನೆಗೂ ಗುಡ್ನ್ಯೂಸ್: ಚಿನ್ನ - ಬೆಳ್ಳಿ ಬೆಲೆ ದಾಖಲೆಯ ಇಳಿಕೆ
Gold Price Feb 03: ಬಹಳ ದಿನಗಳ ನಂತರ ಚಿನ್ನದ ಬೆಲೆಯಲ್ಲಿ ಭರ್ಜರಿ ಇಳಿಕೆ ಆಗಿದೆ. ಕಳೆದ ಒಂದು ವಾರದಿಂದಲೂ ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಏರಿಳಿತವಾಗುತ್ತಿದೆ. 18 ಕ್ಯಾರೆಟ್, 22 ಕ್ಯಾರೆಟ್ ಹಾಗೂ 24 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಭರ್ಜರಿ ಇಳಿಕೆಯಾಗಿದೆ. ಅಮೆರಿಕ ಮತ್ತು ಭಾರತದ ನಡುವಿನ ಆರ್ಥಿಕ ಗೊಂದಲಗಳಿಗೆ ತೆರೆ ಬಿದ್ದಿರುವುದು. ಷೇರುಮಾರುಕಟ್ಟೆ ಚೇತರಿಕೆ,
ಅಡ್ಡೂರು ಸರಕಾರಿ ಶಾಲೆಯಲ್ಲಿ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ
ಮಂಗಳೂರು : ಅಡ್ಡೂರಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 2025-2026ನೇ ಸಾಲಿನ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ 'ಸಂಭ್ರಮ' ಶನಿವಾರ ಶಾಲಾ ಮೈದಾನದಲ್ಲಿ ನಡೆಯಿತು. ಗುರುಪುರ ಗ್ರಾಮ ಪಂಚಾಯತ್ ಅಧ್ಯಕ್ಷೆ ಸಫರಾ ನಾಸಿರ್ ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭ ಹಾರೈಸಿದರು. ಪ್ರಾಸ್ತಾವಿಕವಾಗಿ ಮಾತನಾಡಿದ ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ಹಿದಾಯತ್ ಶಾಲೆಯ ಭವಿಷ್ಯದ ಬೆಳವಣಿಗೆಯ ಬಗ್ಗೆ ಬೆಳಕು ಚೆಲ್ಲಿದರು. ಮಂಗಳೂರು ಶಿಕ್ಷಣ ವಿಭಾಗದ ಬಿಇಒ ಮತ್ತು ಸಿಆರ್ ಪಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು. ಯು.ಪಿ.ಇಬ್ರಾಹೀಂ ಮತ್ತು ಅಶ್ರಫ್ ನಡುಗುಡ್ಡೆ ಅತಿಥಿಗಳಾಗಿ ಭಾಗವಹಿಸಿದ್ದರು. ಮಕ್ಕಳ ಸಾಂಸ್ಕೃತಿಕ ಕಲಾ ಪ್ರತಿಭೆಯು ಕಾರ್ಯಕ್ರಮಕ್ಕೆ ಮೆರಗು ನೀಡಿತು. ಕ್ರೀಡೆ ಮತ್ತು ಇತರ ಸ್ಪರ್ಧೆಗಳಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಪುರಸ್ಕಾರ ನೀಡಲಾಯಿತು. ಕ್ರೀಡೆಯಲ್ಲಿ ವಿಶೇಷ ಸಾಧನೆಗಾಗಿ ಶಿಕ್ಷಕಿ ನಮೃತಾ, ಅನಿವಾಸಿ ಉದ್ಯಮಿ ಬಿಸಿಸಿಐ ಅಧ್ಯಕ್ಷ ಹಿದಾಯತ್, ಅಹ್ಮದ್ ಬಾವ ತೋಕೂರ್ ಅವರನ್ನು ಸನ್ಮಾನಿಸಲಾಯಿತು. ಎಸ್ ಡಿಎಂಸಿ ಕಮರುದ್ದೀನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕರಾದ ತನುಶ್ರೀ ಸ್ವಾಗತಿಸಿದರು. ಶ್ವೇತಾ ವಂದಿಸಿದರು. ನಮೃತಾ ಕಾರ್ಯಕ್ರಮ ನಿರೂಪಿಸಿದರು.
ವಾಷಿಂಗ್ಟನ್: ದಿಲ್ಲಿಯಲ್ಲಿರುವ ವಿಜಯ ಕಮಾನು ಇಂಡಿಯಾ ಗೇಟ್ ಫೋಟೊ ಹಂಚಿಕೊಂಡ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, “ನಾವು ಇದಕ್ಕಿಂತ ಅದ್ಭುತವಾದ ವಿಜಯ ಕಮಾನನ್ನು ವಾಷಿಂಗ್ಟನ್ ಡಿಸಿಯಲ್ಲಿ ನಿರ್ಮಿಸುತ್ತೇವೆ” ಎಂದು ಘೋಷಿಸಿದ್ದಾರೆ. ಇಂಡಿಯಾ ಗೇಟ್ ನ ಭಾವಚಿತ್ರವನ್ನು ಟ್ರೂತ್ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಹಂಚಿಕೊಂಡಿರುವ ಡೊನಾಲ್ಡ್ ಟ್ರಂಪ್, “ಭಾರತದ ಸುಂದರವಾದ ವಿಜಯ ಕಮಾನು. ನಮ್ಮದು ಅವರಿಗಿಂತ ಅದ್ಭುತವಾಗಿರಲಿದೆ!” ಎಂದು ಘೋಷಿಸಿದ್ದಾರೆ. ಅಮೆರಿಕ ರಾಜಧಾನಿ ವಾಷಿಂಗ್ಟನ್ ನಲ್ಲಿ ಕಮಾನನ್ನು ನಿರ್ಮಿಸಬೇಕು ಎಂಬ ಪರಿಷ್ಕೃತ ಪ್ರಯತ್ನ ಇದಾಗಿದ್ದು, ಈ ಕಮಾನನ್ನು ಸ್ವಾತಂತ್ರ್ಯ ಕಮಾನು ಎಂದು ಡೊನಾಲ್ಡ್ ಟ್ರಂಪ್ ಬಣ್ಣಿಸಿದ್ದಾರೆ. ಅಮೆರಿಕದಲ್ಲಿ ವಿಶ್ವದ ಅತಿ ದೊಡ್ಡ ವಿಜಯ ಕಮಾನನ್ನು ನಿರ್ಮಿಸಬೇಕು ಎಂಬ ತಮ್ಮ ಮಾತನ್ನು ಪುನರುಚ್ಚರಿಸಿರುವ ಡೊನಾಲ್ಡ್ ಟ್ರಂಪ್, ಇದು ದೇಶದ ಹೆಮ್ಮೆಯ ಸಂಕೇತವಾಗಿದೆ ಎಂದು ಹೇಳಿದ್ದಾರೆ. ಏರ್ ಫೋರ್ಸ್ ಒನ್ ವಿಮಾನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡೊನಾಲ್ಡ್ ಟ್ರಂಪ್, ಸುಮಾರು 200 ವರ್ಷಗಳಿಂದ ಇಂತಹ ಸ್ಮಾರಕವನ್ನು ನಿರ್ಮಿಸಬೇಕು ಎಂಬ ಯೋಜನೆಯಿದೆ. 200 ವರ್ಷಗಳಿಂದ ಕಮಾನೊಂದನ್ನು ನಿರ್ಮಿಸಬೇಕು ಎಂಬ ಬಯಕೆ ಇದೆ. ವಿಶ್ವದ ಕನಿಷ್ಠ 57 ನಗರಗಳಲ್ಲಿ ಈಗಾಗಲೇ ವಿಜಯ ಕಮಾನುಗಳಿವೆ. ಆದರೆ, ಅಂತಹ ಕಮಾನಿಲ್ಲದ ಪ್ರಮುಖ ನಗರವಾಗಿ ವಾಷಿಂಗ್ಟನ್ ಉಳಿದಿದೆ” ಎಂದೂ ತಿಳಿಸಿದ್ದಾರೆ. ಇದಕ್ಕೂ ಮುನ್ನ, ಪ್ರಸ್ತಾವಿತ ಕಮಾನಿನ ನಿರ್ಮಾಣ ಮುಂದಿನ ಕೆಲ ತಿಂಗಳಲ್ಲಿ ಪ್ರಾರಂಭಗೊಳ್ಳಲಿದೆ ಎಂದು ಅವರು ಪ್ರಕಟಿಸಿದ್ದರು.
Gold Price Drop: ಭಾರತ - ಅಮೆರಿಕ ಭಾಯಿ ಭಾಯಿ: ಷೇರುಮಾರುಕಟ್ಟೆಯಲ್ಲಿ ಹೊಸ ಹುಮ್ಮಸ್ಸು , ಚಿನ್ನದ ಬೆಲೆ ಇಳಿಕೆ!
Gold Price Drop: ಭಾರತ ಹಾಗೂ ಅಮೆರಿಕದ ನಡುವೆ ಆರ್ಥಿಕ ಸಂಬಂಧ ಸುಧಾರಿಸುತ್ತಿರುವ ಬೆನ್ನಲ್ಲೇ ಭಾರತದ ಷೇರುಮಾರುಕಟ್ಟೆ ಚೇತರಿಸಿಕೊಂಡಿದೆ. ಭಾರತದ ಮೇಲೆ ವಿಧಿಸಲಾಗಿದ್ದ ಆಮದು ಸುಂಕದ ಪ್ರಮಾಣವನ್ನು ಶೇ25 ರಿಂದ ಶೇ18 ಇಳಿಸಿರುವುದಾಗಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಹೇಳಿದ್ದಾರೆ. ಈ ಬಗ್ಗೆ ಸೋಷಿಯಲ್ ಮೀಡಿಯಾ ಎಕ್ಸ್ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಟ್ವೀಟ್ ಮಾಡಿದ್ದಾರೆ.
ಕರ್ನಾಟಕದಲ್ಲಿ ಸಿಜೆ ರಾಯ್ ಸಾವು, ಕೇರಳ ರಾಜಕೀಯದಲ್ಲಿ ಶುರುವಾಯ್ತು ಸಂಚಲನ... Political Repercussions
ಕರ್ನಾಟಕ ರಿಯಲ್ ಎಸ್ಟೇಟ್ ಸೇರಿದಂತೆ ಹಲವು ಉದ್ಯಮಗಳಲ್ಲಿ ದೊಡ್ಡ ಹೆಸರು ಮಾಡಿದ್ದ &ಜಗತ್ತಿನ ಹಲವು ಭಾಗದಲ್ಲಿ ಬ್ಯುಸಿನೆಸ್ ಹೊಂದಿದ್ದ ಉದ್ಯಮಿ ಸಿ.ಜೆ. ರಾಯ್ ಸಾವಿನ ಸುದ್ದಿ ಭಾರಿ ದೊಡ್ಡ ಕಲಹ ಎಬ್ಬಿಸಿದೆ. ಕಾನ್ಫಿಡೆಂಟ್ ಗ್ರೂಪ್ ಸಂಸ್ಥಾಪಕ ಸಿ.ಜೆ. ರಾಯ್ ಆತ್ಮಹತ್ಯೆ ಕೇಸ್ ಇದೀಗ ದಿನಕ್ಕೊಂದು ತಿರುವು ಪಡೆಯುತ್ತಿದೆ. ಸಾವಿರಾರು ಕೋಟಿ ರೂಪಾಯಿ ಆಸ್ತಿ ಹೊಂದಿದ್ದ, ಅತ್ಯಂತ
T20 World Cup : ಬಾಯ್ಕಾಟ್ ಬೆದರಿಕೆ ಹಾಕಿದ್ದ ಪಾಕ್ಗೆ, ಐಸಿಸಿ ’ರೈಟಿಂಗ್’ ಶಾಕ್ - ಪಿಸಿಬಿ ಫುಲ್ ಉಲ್ಟಾ!
Pakistan New Drama : ಮೊದಲು ವಿಶ್ವಕಪ್ ನಿಂದ ಹೊರ ನಡೆಯುತ್ತೇವೆ ಎಂದು ನಾಟಕವಾಡಿ, ಅದಕ್ಕೆ ಐಸಿಸಿ ಸೊಪ್ಪು ಹಾಕದೇ ಇದ್ದಾಗ, ಭಾರತದ ವಿರುದ್ದ ಪಂದ್ಯ ಬಹಿಷ್ಕರಿಸುವುದಾಗಿ ಹೇಳುತ್ತಿರುವ ಪಾಕಿಸ್ತಾನ, ಶ್ರೀಲಂಕಾಗೆ ತೆರಳಿದೆ. ಭಾರತದ ವಿರುದ್ದದ ಪಂದ್ಯ ಬಹಿಷ್ಕರಿಸುವ ನಿರ್ಧಾರವನ್ನು ರೈಟಿಂಗ್ ನಲ್ಲಿ ಕೊಡಿ ಎಂದು ಐಸಿಸಿ ಸೂಚನೆಗೆ ಪಾಕಿಸ್ತಾನ ನೋ ಎಂದಿದೆ.
India-US Trade Deal: ನಮ್ದೇ ಜಮಾನಾ; ನರೇಂದ್ರ ಮೋದಿ ಅವರಿಗೆ ಎನ್ಡಿಎ ಸಂಸದೀಯ ಸಭೆಯಲ್ಲಿ ಸನ್ಮಾನ
ಭಾರತದ ಜೊತೆಗಿನ ವಾಣಿಜ್ಯ ಸಂಬಂಧದಲ್ಲಿ ಅಮೆರಿಕವು ಕ್ರಾಂತಿಕಾರಿ ಬದಲಾವಣೆ ಮಾಡಿಕೊಂಡಿದೆ. ಜಾಗತಿಕ ಸುಂಕ ಸಮರದ ಭಾಗವಾಗಿ ಭಾರತದ ಮೇಲೆ ಹೇರಲಾಗಿದ್ದ ಸುಂಕವನ್ನು, ಶೇ. 50ರಿಂದ ಶೇ. 18ಕ್ಕೆ ಟ್ರಂಪ್ ಆಡಳಿತ ಇಳಿಕೆ ಮಾಡಿದೆ. ಇಷ್ಟೇ ಅಲ್ಲದೇ ಭಾರತ-ಅಮೆರಿಕ ವ್ಯಾಪಾರ ಒಪ್ಪಂದದ ಬಗ್ಗೆಯೂ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಹತ್ವದ ಘೋಷಣೆ ಮಾಡಿದ್ದಾರೆ. ಸುಂಕ ಸಮರದಲ್ಲಿ ಭಾರತದ ಗೆಲುವನ್ನು ಸಂಭ್ರಮಿಸಲು, ಎನ್ಡಿಎ ಸಂಸದೀಯ ಸಭೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಸನ್ಮಾನಿಸಲಾಗಿದೆ.
ಗುಂಪು ದಾಳಿ ತಡೆಯಲು ಪ್ರಯತ್ನಿಸಿದ ಕನಿಷ್ಠ ಆರು ಪೊಲೀಸ್ ಸಿಬ್ಬಂದಿಗೆ ಗಾಯ
Gold Rate Fall : ಚಿನ್ನ ಬೆಳ್ಳಿ ದರದಲ್ಲಿ ಮತ್ತೆ ಕುಸಿತ: ಈ ವಾರ ಭಾರಿ ಏರಿಳಿತ ಸಾಧ್ಯತೆ
ಚಿನ್ನ ಬೆಳ್ಳಿ ಮಾರುಕಟ್ಟೆಯಲ್ಲಿ ಕ್ಷಿಪ್ರ ಬದಲಾವಣೆಗಳಾಗುತ್ತಿದ್ದು, ಹೂಡಿಕೆದಾರರು ಹೆಚ್ಚು ಮಾರಾಟದಲ್ಲಿ ತೊಡಗಿರುವುದರಿಂದ ಹಾಗೂ ಡಾಲರ್ ಮೌಲ್ಯ ಬಲಗೊಳ್ಳುತ್ತಿರುವುದರಿಂದ ಚಿನ್ನದ ಬೆಲೆ ಇಳಿಕೆಯಾಗುತ್ತಿದೆ. ಆದರೆ ಸದ್ಯದಲ್ಲೇ ಏರಿಳಿತ ಕಾಣುವ ಸಾಧ್ಯತೆಗಳೂ ದಟ್ಟವಾಗಿವೆ.
KASARGOD | ತೂಮಿನಾಡು ಕುಟುಂಬ ಕಲಹದಲ್ಲಿ ಕೊಲೆಗೀಡಾದವರ ಸಂಖ್ಯೆ 2ಕ್ಕೆ ಏರಿಕೆ
ಗಂಭೀರವಾಗಿ ಗಾಯಗೊಂಡಿದ್ದ ಶೇಕುಂಞಿ ಆಸ್ಪತ್ರೆಯಲ್ಲಿ ಕೊನೆಯುಸಿರು
Pakistan Army: ಪಾಕಿಸ್ತಾನಕ್ಕೆ ಆಘಾತ ನೀಡಿದ ಬಲೂಚ್ ಬಂಡುಕೋರರು, 177 ಜೀವ ಹಾನಿ ವರದಿ
ಪಾಕಿಸ್ತಾನ ತನ್ನ ನಿಜರೂಪ ತೋರಿಸುತ್ತಾ, ಉಗ್ರರಿಗೆ ಪದೇ ಪದೇ ಬೆಂಬಲ ನೀಡುತ್ತಾ ಬಂದಿದೆ. ಅಲ್ಲದೆ ತಾನು ಮಾಡಿದ ತಪ್ಪಿಗೆ ಸರಿಯಾದ ಶಿಕ್ಷೆ ಕೂಡ ಅನುಭವಿಸುತ್ತಿದೆ ಪಾಕಿಸ್ತಾನ. ಉಗ್ರರಿಗೆ ಬೆಂಬಲ ಕೊಟ್ಟ ಕಾರಣಕ್ಕೆ ಅದೇ ಉಗ್ರರಿಂದ ನಾಶವಾಗಿ ಹೋಗುವ ಹಂತಕ್ಕೆ ಬಂದಿದೆ ಭಾರತದ ಶತ್ರು ದೇಶ. ಇಂತಹ ಪರಿಸ್ಥಿತಿಯಲ್ಲೇ ಪಾಕಿಸ್ತಾನ ಸೇನೆ ದಂಗೆ ಪೀಡಿತ ಅಫ್ಘಾನಿಸ್ತಾನ ನೈಋತ್ಯ ಗಡಿಯಲ್ಲಿ
ಭ್ರಷ್ಟ ಅಧಿಕಾರಿಗಳ ನಿದ್ದೆಗೆಡಿಸಿದ ಲೋಕಾಯುಕ್ತ ಸಂಸ್ಥೆ: 3 ವರ್ಷಗಳಲ್ಲಿ 255 ಮಂದಿ ಬಲೆಗೆ, ಕೋಟ್ಯಂತರ ಆಸ್ತಿ ಜಪ್ತಿ
ಕಳೆದ ಮೂರು ವರ್ಷಗಳಲ್ಲಿ ಲೋಕಾಯುಕ್ತ ಅಧಿಕಾರಿಗಳು 255 ದಾಳಿಗಳನ್ನು ನಡೆಸಿ, ಹಲವು ಭ್ರಷ್ಟ ಸರ್ಕಾರಿ ನೌಕರರು ಮತ್ತು ಅಧಿಕಾರಿಗಳ ಬಣ್ಣ ಬಯಲು ಮಾಡಿದ್ದಾರೆ. ಈ ದಾಳಿಗಳಲ್ಲಿ ಅಪಾರ ಪ್ರಮಾಣದ ನಗದು, ಚಿನ್ನಾಭರಣ ಮತ್ತು ಆಸ್ತಿ ವಶಪಡಿಸಿಕೊಳ್ಳಲಾಗಿದೆ. ಆರೋಪಿತರ ವಿರುದ್ಧ ಭ್ರಷ್ಟಾಚಾರ ತಡೆ ಅಧಿನಿಯಮದಡಿ ಕ್ರಮ ಕೈಗೊಳ್ಳಲಾಗುತ್ತಿದೆ. ಹಾಗಾದ್ರೆ 3 ವರ್ಷಗಳಲ್ಲಿ ಯಾವೆಲ್ಲಾ ಭ್ರಷ್ಟ ಅಧಿಕಾರಿಗಳ ಮೇಲೆ ಲೋಕಾಯುಕ್ತ ದಾಳಿ ನಡೆಸಿದೆ ಎಂಬ ವಿವರ ಇಲ್ಲಿದೆ..
DK Shivakumar Tweet: ಕರ್ನಾಟಕ ರಾಜಕೀಯದಲ್ಲಿ ಸಂಚಲನ ಮೂಡಿಸಿದ ಡಿಸಿಎಂ ಡಿ.ಕೆ ಶಿವಕುಮಾರ್ ಟ್ವೀಟ್
DK Shivakumar Tweet: ಕರ್ನಾಟಕದಲ್ಲಿ ಮುಖ್ಯಮಂತ್ರಿ ಹುದ್ದೆ - ರಾಜಕೀಯ ಚರ್ಚೆಯು ಸದ್ದಿಲ್ಲದೆ ಕಾವು ಪಡೆದುಕೊಳ್ಳುತ್ತಿದೆ. ಮುಖ್ಯಮಂತ್ರಿಯಾಗಿ ಡಿ.ಕೆ ಶಿವಕುಮಾರ್ ಅವರು ಅಧಿಕಾರ ಸ್ವೀಕರಿಸಲಿದ್ದಾರೆ ಎನ್ನುವ ವಿಚಾರವು ಭಾರೀ ಚರ್ಚೆಗೆ ಕಾರಣವಾಗಿದೆ. ಇದೀಗ ಉಪ ಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ ಶಿವಕುಮಾರ್ ಅವರು ಸೋಷಿಯಲ್ ಮೀಡಿಯಾ ಎಕ್ಸ್ನಲ್ಲಿ ಮಾಡಿರುವ ಟ್ವೀಟ್ ಭಾರೀ ಚರ್ಚೆಗೆ ಕಾರಣವಾಗಿದೆ.
ಜನತಾಪಕ್ಷ ಮತ್ತು ಜನತಾದಳ ರಾಷ್ಟ್ರೀಯ ಪಕ್ಷಗಳೇ ಆಗಿದ್ದರೂ ಕರ್ನಾಟಕದಲ್ಲಿ ನೆಲೆ ಕಂಡುಕೊಂಡದ್ದು ‘ನಮ್ಮ ಆಡಳಿತ ದಿಲ್ಲಿಯಿಂದಲ್ಲ’ ಎಂದು ಹೇಳುವ ಮೂಲಕ. ಅವುಗಳ ಅಸ್ತಿತ್ವ ಉಳಿದಿದ್ದೇ ಪ್ರಾದೇಶಿಕ ಹಿತಾಸಕ್ತಿಗಳನ್ನು ಕಾಪಾಡುವ ಗುಣ ಅಂತರ್ಗತವಾಗಿದ್ದ ಕಾರಣಕ್ಕಾಗಿ. ಇದೇ ರೀತಿ 1999ರಲ್ಲಿ ಜನತಾದಳ ವಿಭಜನೆಯಾಗಿ ಜನ್ಮತಾಳಿದ ಜನತಾದಳ (ಜಾತ್ಯತೀತ) ಕೂಡ ಪೂರ್ಣ ಪ್ರಮಾಣದ ಪ್ರಾದೇಶಿಕ ಪಕ್ಷವಾಗುವ ನಿರೀಕ್ಷೆಗಳನ್ನು ಹುಟ್ಟುಹಾಕಿತ್ತು. ಆದರೆ 26 ವರ್ಷಗಳ ಬಳಿಕವೂ ನಿರೀಕ್ಷೆ ನಿಜವಾಗಿಲ್ಲ. 25 ವರ್ಷದಲ್ಲಿ ಆಚರಿಸಿಕೊಳ್ಳಬೇಕಾಗಿದ್ದ ಬೆಳ್ಳಿಹಬ್ಬವನ್ನು ಜೆಡಿಎಸ್ 26 ವರ್ಷಕ್ಕೆ ಆಚರಿಸಿಕೊಂಡಿದೆ. ಇದು ಆ ಪಕ್ಷದ ನಾಯಕರಾದ ಎಚ್.ಡಿ. ದೇವೇಗೌಡ ಮತ್ತು ಎಚ್.ಡಿ. ಕುಮಾರಸ್ವಾಮಿಯ ಅನುಕೂಲ ಸಿಂಧು ರಾಜಕಾರಣವಲ್ಲದೆ ಬೇರೇನೂ ಅಲ್ಲ. 25 ವರ್ಷ ತುಂಬಿದಾಗ ಅವರಿಗೆ ಬೆಳ್ಳಿಹಬ್ಬ ನೆನಪಾಗಿರಲಿಲ್ಲ ಎಂದಲ್ಲ, ಅವರಿಗೆ ಬೇಕಾಗಿರಲಿಲ್ಲ. ಆಗ ರಾಜ್ಯ ರಾಜಕಾರಣದ ಬಗ್ಗೆ ಸ್ಪಷ್ಟತೆ ಇರಲಿಲ್ಲ. ಬಿಜೆಪಿ-ಜೆಡಿಎಸ್ ಮೈತ್ರಿ ಮುಂದುವರಿಯುವ ಬಗ್ಗೆ ಬಲವಾದ ವಿಶ್ವಾಸವಿರಲಿಲ್ಲ. ಈಗ 26 ವರ್ಷ ತುಂಬುವ ಹೊತ್ತಿಗೆ ಬಿಹಾರದ ಫಲಿತಾಂಶ ಭರವಸೆ ಮೂಡಿಸಿದೆ. ಬಿಜೆಪಿ ರಾಷ್ಟ್ರೀಯ ನಾಯಕರಿಗೆ ಮೈತ್ರಿ ಅನಿವಾರ್ಯವೆನಿಸಿದೆ. ದಿಲ್ಲಿ ನಾಯಕತ್ವ ಇನ್ನಷ್ಟು ಹತ್ತಿರವಾಗಿದೆ. ರಾಜ್ಯ ಬಿಜೆಪಿ ನಾಯಕತ್ವ ಹಳ್ಳ ಹಿಡಿದಿದೆ. ಕುಮಾರಸ್ವಾಮಿಗೆ ಕರ್ನಾಟಕದ ಕನಸುಗಳು ಬೀಳಲಾರಂಭಿಸಿವೆ. ಜೆಡಿಎಸ್ ಪಕ್ಷದ ಬೆಳ್ಳಿಹಬ್ಬಕ್ಕೂ ಕುಮಾರಸ್ವಾಮಿ ರಾಜ್ಯ ರಾಜಕಾರಣಕ್ಕೆ ಮರಳುವ ಇಂಗಿತ ವ್ಯಕ್ತಪಡಿಸುವುದಕ್ಕೂ ಸಂಬಂಧ ಇಲ್ಲ ಎಂದು ಹೇಳಲು ಸಾಧ್ಯವೇ? ಬೆಳ್ಳಿಹಬ್ಬದ ಸಂದರ್ಭದಲ್ಲಾದರೂ ಜೆಡಿಎಸ್ ನಾಯಕರು ತಮ್ಮ ಪಕ್ಷಕ್ಕೆ ಇರುವ ಪ್ರಾಮುಖ್ಯತೆ ಏನು ಎನ್ನುವ ಬಗ್ಗೆ ಪರಾಮರ್ಶೆ ನಡೆಸಬೇಕಾಗಿತ್ತು. ಜೆಡಿಎಸ್ ಅನ್ನು ನಿಜವಾದ ಅರ್ಥದಲ್ಲಿ ಪ್ರಾದೇಶಿಕ ಪಕ್ಷವನ್ನಾಗಿ ರೂಪಿಸುವುದು ಹೇಗೆ ಎಂಬ ಚಿಂತನೆ ನಡೆಸಬೇಕಾಗಿತ್ತು. ಆದರೆ ಎಚ್.ಡಿ. ದೇವೇಗೌಡ ಮತ್ತು ಎಚ್.ಡಿ. ಕುಮಾರಸ್ವಾಮಿಗೆ ತಮ್ಮದು ಪ್ರಾದೇಶಿಕ ಪಕ್ಷ ಎಂಬುದೇ ಮರೆತುಹೋಗಿದೆ. ನೆನಪಿದ್ದರೆ ಬೆಳ್ಳಿಹಬ್ಬ ಉದ್ದೇಶಿಸಿ ಮಾತನಾಡಿದ ದೇವೇಗೌಡರು ಪ್ರಾದೇಶಿಕ ಪಕ್ಷದ ಅತ್ಯಗತ್ಯದ ಬಗ್ಗೆ ಹೇಳುವುದನ್ನು ಮರೆಯುತ್ತಿದ್ದರೆ? ದೇವೇಗೌಡರು ಮಾತನಾಡಿದ್ದು ತಮ್ಮ ಮೊಮ್ಮಗ ಪ್ರಜ್ವಲ್ ರೇವಣ್ಣನ ಲೈಂಗಿಕ ದೌರ್ಜನ್ಯದ ಬಗ್ಗೆ. ಸಣ್ಣದೊಂದು ವಿಷಾದವನ್ನೂ ವ್ಯಕ್ತಪಡಿಸದೆ ಪರೋಕ್ಷವಾಗಿ ಆತ ಮಾಡಿದ್ದೇ ಸರಿ ಎನ್ನುವ ರೀತಿಯಲ್ಲಿ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮ ಪುತ್ರ ಎಚ್.ಡಿ. ರೇವಣ್ಣಗೆ ಕಿರುಕುಳ ನೀಡಲಾಯಿತು ಎನ್ನುವ ಬಗ್ಗೆ ಹಾಗೂ ಇನ್ನೊಬ್ಬ ಮಗ ಕುಮಾರಸ್ವಾಮಿಯನ್ನು ಮತ್ತೊಮ್ಮೆ ಮುಖ್ಯಮಂತ್ರಿ ಮಾಡುವ ಬಗ್ಗೆ. ಪ್ರಜ್ವಲ್ ರೇವಣ್ಣನ ಲೈಂಗಿಕ ದೌರ್ಜನ್ಯದ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದೇ ತಪ್ಪು, ತನಿಖೆ ಮಾಡಿದ್ದೇ ತಪ್ಪು, ಪರೋಕ್ಷವಾಗಿ ನೆರವಾಗಿದ್ದ ಪುತ್ರನನ್ನು ಬಂಧಿಸಿ ವಿಚಾರಣೆ ನಡೆಸಿದ್ದೇ ತಪ್ಪು ಎಂದು ಆಕ್ರೋಶ ವ್ಯಕ್ತಪಡಿಸಿದ್ದ ದೇವೇಗೌಡರು ಅದಕ್ಕೋಸ್ಕರನಾ ಜೆಡಿಎಸ್ ಪಕ್ಷದ ಬೆಳ್ಳಿಹಬ್ಬವನ್ನು ಆಯೋಜನೆ ಮಾಡಿದ್ದು? ಒಬ್ಬ ಮಗನ ಬಗ್ಗೆ ಮರುಗಿ ಮತ್ತೊಬ್ಬ ಮಗನನ್ನು ಮುಖ್ಯಮಂತ್ರಿ ಮಾಡುವ ಪಣತೊಡಲೆಂದೇ ಆಯೋಜಿಸಿದ್ದ ಬೆಳ್ಳಿಹಬ್ಬದಲ್ಲಿ ಬಂಗಾರದಂಥ ಆಲೋಚನೆ ನಿರೀಕ್ಷಿಸುವುದು ದುಬಾರಿಯಾದೀತು. ಆದರೆ ಪ್ರಾದೇಶಿಕ ಪಕ್ಷ ದೇವೇಗೌಡ ಮತ್ತು ಕುಮಾರಸ್ವಾಮಿಗೆ ಬೇಡವಾಗಿದ್ದರೂ ರಾಜ್ಯಕ್ಕೆ ಬೇಕಾಗಿದೆ. ಪ್ರಾದೇಶಿಕ ಪಕ್ಷ ಏಕೆ ಬೇಕು ಎನ್ನುವುದಕ್ಕೆ ಅಕ್ಕಪಕ್ಕದ ತಮಿಳುನಾಡು ಮತ್ತು ಆಂಧ್ರ ಪ್ರದೇಶದ ಕಡೆ ನೋಡಬೇಕು. ದೂರದ ಪಶ್ಚಿಮ ಬಂಗಾಳ ಮತ್ತು ಗುಜರಾತ್ ಕಡೆಗೂ ನೋಡಬೇಕು. ತಮಿಳುನಾಡಿಗೆ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಒಪ್ಪಿಕೊಳ್ಳುವುದಿಲ್ಲ ಎಂದು ಕೇಂದ್ರ ಸರಕಾರದ ಮುಖಕ್ಕೆ ಹೊಡೆದಂತೆ ಹೇಳುವ ತಾಕತ್ತು ಇದೆ. ದಿಲ್ಲಿವಾಲಾಗಳು ಹಿಂದಿಯಲ್ಲಿ ಪತ್ರಬರೆದರೆ ತಮಿಳಿನಲ್ಲಿ ಉತ್ತರಿಸುವ ತಂತ್ರಗಾರಿಕೆ ಇದೆ. ರಾಜ್ಯಪಾಲ ಹುದ್ದೆಯೇ ಬೇಡ, ರಾಜ್ಯಪಾಲರೇ ಬೇಡ ಎನ್ನುವ ಎದೆಗಾರಿಕೆ ಇದೆ. ಅನುದಾನ ಹಂಚಿಕೆಯಲ್ಲಿ ಅನ್ಯಾಯ ಮಾಡಿದರೆ ಸುಪ್ರೀಂ ಕೋರ್ಟ್ ಕದ ತಟ್ಟುವ ಬದ್ಧತೆ ಇದೆ. ಕೇಂದ್ರ ಸರಕಾರ ಹೇಳಿದ್ದೆಲ್ಲವನ್ನೂ ಪರಾಮರ್ಶೆ ಮಾಡದೆ ಕೇಳಲು ಸಾಧ್ಯವಿಲ್ಲ ಎಂದು ಸೆಟೆದು ನಿಲ್ಲುವ ಧೈರ್ಯವೂ ಇದೆ. ಏಕೆಂದರೆ ಅಲ್ಲಿ ಆಳುತ್ತಿರುವುದು ಪ್ರಾದೇಶಿಕ ಪಕ್ಷಗಳು. ಆಂಧ್ರದ ವಿಷಯ ನೋಡುವುದಾದರೆ ಇದೇ ಜನವರಿ 19ರಂದು ರಾಷ್ಟ್ರೀಯ ಪ್ರಕೃತಿ ವಿಕೋಪ ನಿರ್ವಹಣಾ ಸಂಸ್ಥೆಯ (ಎನ್ಐಡಿಎಂ) ದಕ್ಷಿಣ ವಲಯದ ಕ್ಯಾಂಪಸ್ ಉದ್ಘಾಟನೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅಮಿತ್ ಶಾ ‘‘ಕೇಂದ್ರ ಸರಕಾರ ಕಳೆದ 6 ತಿಂಗಳ ಅವಧಿಯಲ್ಲಿ ಆಂಧ್ರದ ಬೆಳವಣಿಗೆಯ ದೃಷ್ಟಿಯಿಂದ 3 ಲಕ್ಷ ಕೋಟಿ ರೂ.ಗೂ ಹೆಚ್ಚು ಮೌಲ್ಯದ ಯೋಜನೆಗಳಿಗೆ ಅನುಮೋದನೆ ನೀಡಿದೆ’’ ಎಂದು ಹೇಳಿದ್ದಾರೆ. 3 ಲಕ್ಷ ಕೋಟಿ ರೂ. ಎಂದರೆ ಕರ್ನಾಟಕದ ಬಜೆಟ್ನ ಮುಕ್ಕಾಲು ಭಾಗ. ಈ ಸಲದ ಕೇಂದ್ರ ಬಜೆಟ್ ನಲ್ಲೂ ಕರ್ನಾಟಕಕ್ಕಿಂತ ಜಾಸ್ತಿ ಆಂಧ್ರಕ್ಕೆ ತೆರಿಗೆ ಮತ್ತು ಸುಂಕದ ಪಾಲಿನ ಹಣ ಹಂಚಿಕೆಯಾಗಿದೆ. ಅದು ಏಕೆ ಸಾಧ್ಯವಾಯಿತು ಎಂದರೆ ಅಲ್ಲಿರುವುದು ಟಿಡಿಪಿ ಎಂಬ ಪ್ರಾದೇಶಿಕ ಪಕ್ಷದ ಸರಕಾರ. ಆ ಸರಕಾರದಲ್ಲಿ ಬಿಜೆಪಿಯ ಪಾಲುದಾರಿಕೆಯೂ ಇದೆ, ಆದರೆ ಪ್ರಾಮುಖ್ಯತೆ ಕಮ್ಮಿ. ಇದೇ ರೀತಿ ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಪ್ರಾದೇಶಿಕ ಅಸ್ಮಿತೆಯ ರಾಜಕೀಯ ಮಾಡುತ್ತಿದ್ದಾರೆ. ಭಾರತ ಎಂಬುದು ಹಲವು ರಾಜ್ಯಗಳ ಒಕ್ಕೂಟ ಎನ್ನುವುದನ್ನೇ ಮರೆತು ದಿಲ್ಲಿ ಆದೇಶಗಳನ್ನು ಪಾಲಿಸಬೇಕೆಂಬ ಕೇಂದ್ರ ಸರಕಾರದ ಸರ್ವಾಧಿಕಾರಿ ನಡೆಯನ್ನು ಅಡಿಗಡಿಗೂ ಖಂಡಿಸುತ್ತಿದ್ದಾರೆ. ಆಪರೇಷನ್ ಕಮಲ, ತೆರಿಗೆ ಹಂಚಿಕೆಗೆ ಕತ್ತರಿ, ಅನುದಾನಗಳ ಕಡಿತ, ರಾಜ್ಯಪಾಲರ ಮೂಲಕ ಕಿರುಕುಳ ಮತ್ತು ಐಟಿ-ಈ.ಡಿ.-ಸಿಬಿಐ ದಾಳಿಗಳೆಲ್ಲವನ್ನೂ ದಿಟ್ಟವಾಗಿ ಎದುರಿಸುತ್ತಿದ್ದಾರೆ. ಏಕೆಂದರೆ ಅವರಿಗೆ ಅವರೇ ಹೈಕಮಾಂಡ್. ಮಮತಾ ಬ್ಯಾನರ್ಜಿ ‘ಜಿದ್ದಿ’ಯಾಗಿರುವ ಕಾರಣಕ್ಕಾಗಿ ಪ್ರಸಕ್ತ ಸಾಲಿನ ಬಜೆಟ್ನಲ್ಲಿ ಕೇಂದ್ರ ಸರಕಾರ ರಾಜ್ಯಗಳಿಗೆ ಹಂಚಿಕೆ ಮಾಡುವ ತೆರಿಗೆ ಪಾಲು ಮತ್ತು ಅನುದಾನಗಳ ವಿಷಯದಲ್ಲಿ ಪಶ್ಚಿಮ ಬಂಗಾಳ ನಾಲ್ಕನೇ ಸ್ಥಾನದಲ್ಲಿದೆ (ಉತ್ತರ ಪ್ರದೇಶ ಒಂದು, ಬಿಹಾರ ಎರಡು ಮತ್ತು ಮಧ್ಯಪ್ರದೇಶ ಮೂರನೇ ಸ್ಥಾನದಲ್ಲಿವೆ). ಗುಜರಾತ್ ಉದಾಹಣೆಯನ್ನು ಭಿನ್ನ ಆಯಾಮದಲ್ಲಿ ನೋಡಬೇಕು. ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ ರಾಜ್ಯಗಳನ್ನು ಗೆಲ್ಲಲು ‘ಡಬಲ್ ಇಂಜಿನ್’ ಎಂಬ ಅಭಿವೃದ್ಧಿಯ ಹುಸಿ ಕಲ್ಪನೆಯನ್ನು ಹೇಳುತ್ತದೆ. ಆದರೆ ಇದೇ ಬಿಜೆಪಿ ತನ್ನ ಪ್ಲಾನ್ ಬಿ (ಪ್ಲಾನ್ ಎ- ಕೋಮುವಾದ) ‘ಅಭಿವೃದ್ಧಿ’ ಬಗ್ಗೆ ಹೇಳಲು ಹೊರಟಿದ್ದು ‘ಗುಜರಾತ್ ಮಾಡೆಲ್’ ಮೂಲಕ. ಗುಜರಾತ್ ಅಭಿವೃದ್ಧಿ ಸಾಧಿಸಿರುವುದು ನಿಜವೇ ಆಗಿದ್ದರೆ ಬಿಜೆಪಿ ಆ ರಾಜ್ಯವನ್ನು ಆಳಿದ ಅವಧಿಯ ಪೈಕಿ ಕೇಂದ್ರದಲ್ಲಿ ಬಹುತೇಕ ಅಧಿಕಾರದಲ್ಲಿದ್ದದ್ದು ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರ. ಡಬಲ್ ಇಂಜನ್ ಸರಕಾರ ಇದ್ದರೆ ಮಾತ್ರ ಅಭಿವೃದ್ಧಿ ಎನ್ನುವುದು ನಿಜವಾಗಿದ್ದರೆ ‘ಬಿಮಾರು’ ರಾಜ್ಯಗಳಾದ ಬಿಹಾರ, ಮಧ್ಯಪ್ರದೇಶ, ರಾಜಸ್ಥಾನ ಮತ್ತು ಉತ್ತರ ಪ್ರದೇಶಗಳು ಈಗಲೂ ಇಷ್ಟು ದೈನೇಸಿ ಸ್ಥಿತಿಯಲ್ಲಿ ಇರುತ್ತಿರಲಿಲ್ಲ. ಹಾಗೆಯೇ ಕರ್ನಾಟಕ, ತಮಿಳುನಾಡು, ತೆಲಂಗಾಣ, ಆಂಧ್ರ ಮತ್ತು ಕೇರಳ ರಾಜ್ಯಗಳು ಇಷ್ಟು ಮುಂದುವರಿಯುವುದಕ್ಕೂ ಸಾಧ್ಯವಾಗುತ್ತಿರಲಿಲ್ಲ. ಈ ಉದಾಹರಣೆಗಳು ಕರ್ನಾಟಕಕ್ಕೆ ಪ್ರಾದೇಶಿಕ ಪಕ್ಷವೊಂದು ಅತ್ಯಗತ್ಯ ಎನ್ನುವುದನ್ನು ಒತ್ತಿ ಒತ್ತಿ ಹೇಳುತ್ತವೆ. ಅದು ಜೆಡಿಎಸ್ ಮೂಲಕ ಸಾಧ್ಯವಾಗಬೇಕು ಅಥವಾ ಹೊಸ ಪಕ್ಷವೊಂದು ಹುಟ್ಟಿ ಬೆಳೆಯಬೇಕು. ಆದರೆ ರಾಜ್ಯದಲ್ಲಿ ಪ್ರಾದೇಶಿಕ ಪಕ್ಷಗಳ ಪ್ರಯೋಗ ಹಿಂದಿನಿಂದಲೂ ಯಶಸ್ವಿಯಾಗಿಲ್ಲ. ಡಿ. ದೇವರಾಜ ಅರಸು ಮತ್ತು ಎಸ್. ಬಂಗಾರಪ್ಪ ಅವರಂಥ ಜನನಾಯಕರಿಂದಲೇ ಸಾಧ್ಯವಾಗಲಿಲ್ಲ. ಅಖಿಲ ಭಾರತ ಪ್ರಗತಿಪರ ಜನತಾದಳ ಹುಟ್ಟುಹಾಕಿದ್ದ ಸಿದ್ದರಾಮಯ್ಯ ಅದನ್ನು ಬೆಳೆಸುವ ಧೈರ್ಯ ತೋರದೆ ಕಾಂಗ್ರೆಸ್ ಪಾಲಾಗಿಬಿಟ್ಟರು. ಆತುರಗಾರ ಬಿ.ಎಸ್. ಯಡಿಯೂರಪ್ಪ ಪ್ರಾದೇಶಿಕ ಪಕ್ಷ ಕಟ್ಟುವ ಮತ್ತು ಕೆಡವುವ ಎರಡೂ ವಿಷಯದಲ್ಲೂ ಅವಸರವನ್ನೇ ಮಾಡಿದರು. ಇದರಿಂದಾಗಿ ಇರುವ ಜೆಡಿಎಸ್ ಪಕ್ಷವೇ ಸುಧಾರಣೆಯಾಗಬೇಕು. ಜೆಡಿಎಸ್ ಪಕ್ಷವೇ ಸುಧಾರಣೆಯಾಗಬೇಕು ಎಂದರೆ ಜೆಡಿಎಸ್ ನಾಯಕರಾದ ಎಚ್.ಡಿ. ದೇವೇಗೌಡ ಮತ್ತು ಎಚ್.ಡಿ. ಕುಮಾರಸ್ವಾಮಿ ಸುಧಾರಿಸಬೇಕು. ದೇವೇಗೌಡರಿಗೆ ಈಗಲೂ ಮಗನನ್ನು ಸಿಎಂ ಮಾಡುವುದೇ ಮುಖ್ಯವಾಗುವುದಾದರೆ, ಕುಮಾರಸ್ವಾಮಿಗೆ ನಿಖಿಲ್ ಕುಮಾರಸ್ವಾಮಿಯನ್ನು ಪಕ್ಷದ ರಾಜ್ಯಾಧ್ಯಕ್ಷ ಮಾಡುವುದೇ ಪ್ರಾಮುಖ್ಯವಾದರೆ ಜೆಡಿಎಸ್ ಕುಟುಂಬದ ಪಕ್ಷ ಎಂಬುದರಾಚೆಗೆ ಎಂದೂ ಬೆಳೆಯದು. ಇದಕ್ಕೂ ಮಿಗಿಲಾಗಿ ದೇವೇಗೌಡ ಮತ್ತು ಕುಮಾರಸ್ವಾಮಿ ತಮ್ಮದು ಪ್ರಾದೇಶಿಕ ಪಕ್ಷ ಎನ್ನುವುದನ್ನೇ ಮರೆತಿರುವುದು ಇನ್ನೂ ಹೆಚ್ಚು ಅಪಾಯಕಾರಿ. ಜೆಡಿಎಸ್ ಬಿಜೆಪಿಯ ಪಾಲುದಾರ ಪಕ್ಷ ಮಾತ್ರ, ಪಾಲುದಾರನಾದ ಮಾತ್ರಕ್ಕೆ ಎಲ್ಲವನ್ನೂ ಸಹಿಸಿಕೊಳ್ಳಬೇಕಾದ ಅಗತ್ಯ ಇರುವುದಿಲ್ಲ. ತಮ್ಮ ಅಸ್ತಿತ್ವವನ್ನು ಬಿಟ್ಟುಕೊಡಬೇಕಾದ ಅನಿವಾರ್ಯತೆಗಳೂ ಇರುವುದಿಲ್ಲ. ಕಾಲಾಳುವಿನಂತೆ ವರ್ತಿಸುವ ದರ್ದು ಖಂಡಿತಕ್ಕೂ ಇರುವುದಿಲ್ಲ. ಆದರೂ ಜೆಡಿಎಸ್ ಕೇಂದ್ರದ ಬಿಜೆಪಿ ನೇತೃತ್ವದ ಎನ್ಡಿಎ ಸರಕಾರ ಕರ್ನಾಟಕಕ್ಕೆ ಮಾಡುತ್ತಿರುವ ಘೋರ ಅನ್ಯಾಯದ ಬಗ್ಗೆ ಒಂದೇ ಒಂದು ಮಾತನಾಡುತ್ತಿಲ್ಲ. ಕೇಂದ್ರ ಸರಕಾರ ಕರ್ನಾಟಕಕ್ಕೆ ಮಾಡುತ್ತಿರುವ ಅನ್ಯಾಯಗಳ ಬಗ್ಗೆ ಸಿದ್ದರಾಮಯ್ಯ ತಮ್ಮ ‘ಘಿ’ ಖಾತೆಯಲ್ಲಿ ನೀಡಿರುವ ವಿವರಗಳ ಪ್ರಕಾರ 14ನೇ ಹಣಕಾಸು ಆಯೋಗ ಕರ್ನಾಟಕಕ್ಕೆ ಶೇ. 4.71ರಷ್ಟು ತೆರಿಗೆ ಪಾಲು ನೀಡುವಂತೆ ಶಿಫಾರಸು ಮಾಡಿತ್ತು. 15ನೇ ಹಣಕಾಸು ಆಯೋಗ ಇದನ್ನು ಶೇ. 3.64ರಷ್ಟಕ್ಕೆ ಇಳಿಸಿತು. ಇದರಿಂದ ಕರ್ನಾಟಕಕ್ಕೆ ಸುಮಾರು 80 ಸಾವಿರ ಕೋಟಿ ರೂ. ನಷ್ಟವಾಗುತ್ತಿದೆ. 80 ಸಾವಿರ ಕೋಟಿ ರೂ. ಅಂದರೆ ರಾಜ್ಯದ ಎಲ್ಲಾ ಗ್ಯಾರಂಟಿ ಯೋಜನೆಗಳಿಗೆ ಬಹುತೇಕ ಎರಡು ವರ್ಷಕ್ಕೆ ಬೇಕಾಗುವ ಹಣ. ಈಗ 16ನೇ ಹಣಕಾಸು ಆಯೋಗದ ಶಿಫಾರಸಿನಂತೆ ರಾಜ್ಯಕ್ಕೆ ನಿಗದಿಯಾಗಿರುವ ತೆರಿಗೆ ಪಾಲು ಶೇ. 4.1ರಷ್ಟು. ಹಿಂದೆ ನರೇಂದ್ರ ಮೋದಿ ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ರಾಜ್ಯಗಳ ಪಾಲನ್ನು ಶೇ. 5ಕ್ಕೆ ಏರಿಸುವಂತೆ ಆಗ್ರಹಿಸಿದ್ದರು. ಕರ್ನಾಟಕದ ವಾದ ಕೂಡ ಅದೇ ಆಗಿತ್ತು. ಆದರೀಗ ಕರ್ನಾಟಕ ಶೇ. 4.1ಕ್ಕೆ ತೃಪ್ತಿ ಪಟ್ಟುಕೊಳ್ಳಬೇಕಾಗಿದೆ. ಏಕೆಂದರೆ ಇಲ್ಲಿ ಪ್ರಾದೇಶಿಕ ಪಕ್ಷ ಜೆಡಿಎಸ್ ಇದ್ದೂ ಸತ್ತಂತಿದೆ. ಕೇಂದ್ರ ಸರಕಾರ ಕರ್ನಾಟಕದಿಂದ ತೆರಿಗೆ, ಸೆಸ್ ಮತ್ತಿತರ ರೂಪದಲ್ಲಿ ವರ್ಷಕ್ಕೆ ಸುಮಾರು 4.5 ಲಕ್ಷ ಕೋಟಿಯಿಂದ 5 ಲಕ್ಷ ಕೋಟಿ ರೂ.ವರೆಗೆ ಸಂಗ್ರಹ ಮಾಡುತ್ತಿದೆ. ಇಷ್ಟು ಹಣ ಪಡೆದೂ ಕರ್ನಾಟಕಕ್ಕೆ ಅನ್ಯಾಯ ಮಾಡುತ್ತಿದೆ. ಇದರ ಬಗ್ಗೆ ರಾಜ್ಯ ಸರಕಾರ ಮಾತ್ರ ಹೋರಾಟ ನಡೆಸಬೇಕೇ? ರಾಜ್ಯದ ಸಂಸದರಿಗೆ ಜವಾಬ್ದಾರಿ ಇಲ್ಲವೇ? ಅವರಿಗಿಂತಲೂ ಜಾಸ್ತಿ ಹೊಣೆಗಾರಿಕೆ ಇರುವುದು ತಮ್ಮದು ಪ್ರಾದೇಶಿಕ ಪಕ್ಷ ಎಂದು ಹೇಳಿಕೊಳ್ಳುವ ಜೆಡಿಎಸ್ ನಾಯಕರಿಗೆ. ಒಂದೋ ಅವರು ಕರ್ನಾಟಕದ ಇಂಥ ಜ್ವಲಂತ ಸಮಸ್ಯೆಗಳಿಗೆ ದನಿಯಾಗಬೇಕು. ಇಲ್ಲದಿದ್ದರೆ ತಮ್ಮದು ಕುಟುಂಬದ ಪಕ್ಷ ಎಂದು ಅಧಿಕೃತವಾಗಿ ಘೋಷಿಸಿಬಿಡಬೇಕು. 2028ಕ್ಕೆ ಅತಂತ್ರ ವಿಧಾನಸಭೆ ನಿರ್ಮಾಣವಾದರೆ ಜೆಡಿಎಸ್ ನಿರ್ಣಾಯಕ ಆಗಲೂಬಹುದು. ಆಗದೆಯೂ ಇರಬಹುದು. ಆದರೆ 2004ರಲ್ಲಿ 58, 2008ರಲ್ಲಿ 28, 2013ರಲ್ಲಿ 40 ಮತ್ತು 2018ರಲ್ಲಿ 37 ಸ್ಥಾನ ಗೆದ್ದಿದ್ದ ಜೆಡಿಎಸ್ 2023ರಲ್ಲಿ 19 ಸ್ಥಾನಕ್ಕೆ ಕುಸಿದಿತ್ತು. 19 ಸ್ಥಾನಕ್ಕೆ ಕುಸಿದ ಪಕ್ಷ ಸಿಂಗಲ್ ಡಿಜಿಟ್ಗೆ ಕುಸಿಯುವುದಿಲ್ಲ ಎನ್ನುವುದಕ್ಕೆ ಏನು ಗ್ಯಾರಂಟಿ? 2004ರಲ್ಲಿ 58 ಸ್ಥಾನ ಗೆಲ್ಲಲು ದೇವೇಗೌಡ ಮತ್ತು ಸಿದ್ದರಾಮಯ್ಯ ಎಂಬ ಪ್ರಬಲ ಜೋಡಿ ಜೆಡಿಎಸ್ ಬಂಡಿ ಎಳೆದಿತ್ತು. ಮುಂದೆ ಕುಮಾರಸ್ವಾಮಿ ಜೊತೆ ಅಥವಾ ನಿಖಿಲ್ ಜೊತೆ ಜೆಡಿಎಸ್ ರಥ ಎಳೆಯುವವರು ಯಾರು? ಸಿಂಗಲ್ ಡಿಜಿಟ್ಗೆ ಕುಸಿದರೆ ಪಕ್ಷ ಮತ್ತೆ ಪುಟಿದೇಳುತ್ತದೆ ಎನ್ನುವುದಕ್ಕೆ ಏನು ಗ್ಯಾರಂಟಿ? ಹಾಗಾದರೆ, ಅದು ದೇವೇಗೌಡ ಮತ್ತು ಕುಮಾರಸ್ವಾಮಿ ಕುಟುಂಬಕ್ಕೆ ಮಾತ್ರವಲ್ಲ ರಾಜ್ಯಕ್ಕೆ ಆಗುವ ನಷ್ಟ. ರಾಜ್ಯಕ್ಕೆ ಪ್ರಾದೇಶಿಕ ಪಕ್ಷದ ಅಗತ್ಯ ಈಗ ಹಿಂದಿಗಿಂತ ಹೆಚ್ಚಿದೆ. ಇದರ ಬಗ್ಗೆ ದೇವೇಗೌಡ ಮತ್ತು ಕುಮಾರಸ್ವಾಮಿ ಯೋಚಿಸಬೇಕು. ಇಲ್ಲದಿದ್ದರೆ ಕಾಲವೇ ಪ್ರಾದೇಶಿಕ ಪಕ್ಷದ ಹುಟ್ಟಿಗೆ ಕಾರಣವಾಗಬೇಕು. ಆಫ್ ದಿ ರೆಕಾರ್ಡ್! ಸಚಿವ ಸಂಪುಟ ಪುನರ್ ರಚನೆ ಯಾವಾಗ ಆಗುತ್ತದೆ ಎನ್ನುವ ಸುಳಿವೇ ಇಲ್ಲ. ಆದರೆ ಪುನರ್ ರಚನೆ ಆದಾಗ ಕೆ.ಎನ್. ರಾಜಣ್ಣಗೆ ಜಾಗ ಸಿಗದಿದ್ದರೆ ಅವರು ಕಾಂಗ್ರೆಸ್ ಪಕ್ಷದಿಂದಲೇ ಜಾಗ ಖಾಲಿ ಮಾಡುತ್ತಾರೆ ಎನ್ನುವ ಪುಕಾರು ಎದ್ದಿದೆ. ಈಗಾಗಲೇ ಕೆ.ಎನ್. ರಾಜಣ್ಣಗೆ ದೇವೇಗೌಡ ಫೋನ್ ಮಾಡಿದ್ದಾರೆ ಎನ್ನುವ ಮಾಹಿತಿಯೂ ಇದೆ. ಬೇರೆ ಪಕ್ಷಗಳಲ್ಲಿ ಮುನಿದವರನ್ನು ದೇವೇಗೌಡ ಮಾತನಾಡಿಸುವುದು ಹೊಸದಲ್ಲ.
ಸುಂಕ ಸಮರ ಗೆದ್ದ ಭಾರತ, ಮುಂಬೈ ಷೇರು ಮಾರುಕಟ್ಟೆಯಲ್ಲಿ ಹೊಸ ಹುರುಪು; ಹೇಗಿದೆ ವಹಿವಾಟು?
ಭಾರತ-ಅಮೆರಿಕ ವಾಣಿಜ್ಯ ಸಂಬಂಧದಲ್ಲಿ ಕ್ರಾಂತಿಕಾರಿ ಬದಲಾವಣೆಗಳು ನಡೆದಿದ್ದು, ಪ್ರಮುಖವಾಗಿ ಭಾರತದ ಮೇಲಿನ ಸುಂಕವನ್ನು ಅಮೆರಿಕವು ಶೇ. 25ರಿಂದ ಶೇ. 18ಕ್ಕೆ ಇಳಿಕೆ ಮಾಡಿದೆ. ಅದೇ ರೀತಿ ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಾರತದೊಂದಿಗಿನ ದ್ವಿಪಕ್ಷೀಯ ವ್ಯಾಪಾರ ಒಪ್ಪಂದ ಜಾರಿಗೆ ಬಂದಿದೆ ಎಂದೂ ಘೋಷಿಸಿದ್ದಾರೆ. ಈ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಮುಂಬೈ ಷೇರು ಮಾರುಕಟ್ಟೆಯಲ್ಲಿ ಹೊಸ ಹುರುಪು ಕಂಡುಬಂದಿದೆ. ಸೆನ್ಸೆಕ್ಸ್ ಮತ್ತು ನಿಫ್ಟಿ ಉತ್ತಮ ವಹಿವಾಟು ನಡೆಸುತ್ತಿವೆ. ಇಲ್ಲಿದೆ ಹೆಚ್ಚಿನ ಮಾಹಿತಿ.
ಅಮೆರಿಕಾ ಮತ್ತು ಇರಾನ್ ನಡುವಿನ ಉದ್ವಿಗ್ನ ಪರಿಸ್ಥಿತಿ ಶಮನಗೊಳ್ಳುವ ಲಕ್ಷಣಗಳು ಕಾಣುತ್ತಿವೆ. ಪ್ರಾದೇಶಿಕ ಶಕ್ತಿಗಳ ಮಧ್ಯಸ್ಥಿಕೆಯ ಬಳಿಕ ಉಭಯ ದೇಶಗಳು ಫೆಬ್ರವರಿ 6 ರಂದು ಟರ್ಕಿಯಲ್ಲಿ ಮಾತುಕತೆ ನಡೆಸಲು ಸಿದ್ಧವಾಗಿದ್ದು, ಶುಕ್ರವಾರ ಇಸ್ತಾನ್ ಬುಲ್ ನಲ್ಲಿ ಸಂಭಾವ್ಯ ಮಾತುಕತೆಗಳು ನಡೆಯಲಿವೆ ಎಂದು ಅರಬ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈ ಬೆಳವಣಿಗೆಯು ಪಶ್ಚಿಮ ಏಷ್ಯಾದಲ್ಲಿ ಯುದ್ಧದ ವಾತಾವರಣವನ್ನು ತಗ್ಗಿಸುವ ನಿರೀಕ್ಷೆ ಮೂಡಿಸಿದೆ. ಆದಾಗ್ಯೂ, ಈವರೆಗೂ ಈ ಕುರಿತಾಗಿ ಇರಾನ್-ಅಮೆರಿಕಾದಿಂದ ಯಾವುದೇ ಅಧಿಕೃತ ಹೇಳಿಕೆಗಳು ಬಂದಿಲ್ಲ.

27 C