SENSEX
NIFTY
GOLD
USD/INR

Weather

23    C
...

1ನೇ ತರಗತಿ ದಾಖಲಾತಿ: 6 ವರ್ಷ ತುಂಬಿರಬೇಕು ಎಂಬ ನಿಯಮವನ್ನು ಕೊಂಚ ಸಡಿಲಿಕೆ ಮಾಡಿದ ಸರ್ಕಾರ

ಬೆಂಗಳೂರು: ರಾಜ್ಯದಲ್ಲಿ ತಮ್ಮ ಮಕ್ಕಳ ಶಾಲಾ ದಾಖಲಾತಿಯ ಬಗ್ಗೆ ತೀವ್ರ ಚಿಂತೆಯಲ್ಲಿದ್ದ ಲಕ್ಷಾಂತರ ಪೋಷಕರಿಗೆ ಕರ್ನಾಟಕ ಸರ್ಕಾರ ಭರ್ಜರಿ ಸಿಹಿಸುದ್ದಿ ನೀಡಿದೆ. ಒಂದನೇ ತರಗತಿಗೆ (1st Standard) ದಾಖಲಾಗಲು ಮಗುವಿಗೆ ಕಡ್ಡಾಯವಾಗಿ 6 ವರ್ಷ ತುಂಬಿರಬೇಕು ಎಂಬ ನಿಯಮವನ್ನು ಸರ್ಕಾರ ಕೊಂಚ ಸಡಿಲಿಕೆ ಮಾಡಿದ್ದು, ವಯೋಮಿತಿಯಲ್ಲಿ 60 ದಿನಗಳ (ಎರಡು ತಿಂಗಳು) ವಿನಾಯಿತಿಯನ್ನು ಘೋಷಿಸಿದೆ. ಪ್ರಾಥಮಿಕ ಮತ್ತು

ಒನ್ ಇ೦ಡಿಯ 27 Mar 2026 9:22 am

ಕಲಿಯುವಿಕೆಗೆ ಹೆದರಬೇಡಿ , ಕಾವ್ಯಕ್ಕೆ ಉಸಿರು ನೀಡುವ ಗಮಕದತ್ತ ಮುಖ ಮಾಡಿ !

ವೃತ್ತಿಯಲ್ಲಿ ಪ್ರಾಧ್ಯಾಪಕಿಯಾಗಿರುವ ಡಾ.ಸಹನಾ ಪ್ರಸಾದ್ ಅವರು ಲೇಖಕಿಯೂ ಆಗಿದ್ದು, ನೂರಾರು ಸಣ್ಣ ಕಥೆ, ಲೇಖನ, ಕಾದಂಬರಿಗಳನ್ನು, ಧಾರವಾಹಿಗಳನ್ನೂ ಬರೆದಿದ್ದಾರೆ. ಈವರೆಗೂ 15 ಸಾವಿರ ಲೇಖನಗಳು ಪ್ರಕಟಗೊಂಡಿವೆ. ಇದೀಗ ಅವರು ಬರೆದಿರುವ ಗಮಕ ಕಲಿಕೆಯ ಲೇಖನ ಇಲ್ಲಿದೆ .

ವಿಜಯ ಕರ್ನಾಟಕ 27 Mar 2026 8:58 am

ಮಾ.30ರಂದು ನಡೆಯಬೇಕಿದ್ದ SSLC ಹಿಂದಿ ಪರೀಕ್ಷೆ ದಿಢೀರ್ ಮುಂದೂಡಿಕೆ: ಕಾರಣವೇನು?

ಬೆಂಗಳೂರು: ರಾಜ್ಯದಾದ್ಯಂತ ಈಗಾಗಲೇ ಎಸ್‌ಎಸ್‌ಎಲ್‌ಸಿ (SSLC) ಪರೀಕ್ಷೆಗಳು ಭರದಿಂದ ಸಾಗುತ್ತಿದ್ದು, ಲಕ್ಷಾಂತರ ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದಾರೆ. ಈ ನಡುವೆ 10ನೇ ತರಗತಿ ವಿದ್ಯಾರ್ಥಿಗಳಿಗೆ ಮತ್ತು ಪೋಷಕರಿಗೆ ಒಂದು ಪ್ರಮುಖ ಮಾಹಿತಿಯನ್ನು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ (KSEAB) ನೀಡಿದೆ. 2026ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆ-1ರ ವೇಳಾಪಟ್ಟಿಯಲ್ಲಿ ಇದೀಗ ದಿಢೀರ್ ಹಾಗೂ ಮಹತ್ವದ ಬದಲಾವಣೆ ಮಾಡಲಾಗಿದ್ದು,

ಒನ್ ಇ೦ಡಿಯ 27 Mar 2026 8:56 am

ಕೊಡಗಿಗೆ ಎಲ್-ನಿನೋ ಎಫೆಕ್ಟ್: ಹೆಚ್ಚುತ್ತಿರುವ ತಾಪಮಾನ, ವಾಡಿಕೆಯ ಮುಂಗಾರು ಅನುಮಾನ

ಬೇಸಿಗೆ ಮಳೆ ಅಲ್ಲಲ್ಲಿ ಸುರಿಯುತ್ತಿದ್ದರೂ, ಬಿಸಿಲಿನ ತಾಪ ಹೆಚ್ಚಿದ್ದು, ಈ ಬಾರಿ ವಾಡಿಕೆಗಿಂತ ಕಡಿಮೆ ಮಳೆ ಸುರಿಯುವ ಮುನ್ಸೂಚನೆ ಇದೆ.

ವಿಜಯ ಕರ್ನಾಟಕ 27 Mar 2026 8:06 am

Gold Rate: ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಮಾರುಕಟ್ಟೆಯಲ್ಲಿಂದು ಕೊಂಚ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ

ಬೆಂಗಳೂರು: ಮನೆಗಳಲ್ಲಿ ಶುಭ ಸಮಾರಂಭಗಳಿಗೆ, ಹಬ್ಬ ಹರಿದಿನಗಳಿಗೆ ಚಿನ್ನ ಬೆಳ್ಳಿ ಖರೀದಿ ಮಾಡುವುದು ಸಾಮಾನ್ಯ. ಆದರೆಚಿನ್ನ-ಬೆಳ್ಳಿ ಬೆಲೆಯಲ್ಲಿ ಪ್ರತಿದಿನ ಬದಲಾವಣೆಗಳು ಆಗುತ್ತಿರುತ್ತವೆ. ಖರೀದಿಗೂ ಮುನ್ನ ನಮಗೆ ಇವುಗಳ ನಿಖರ ಬೆಲೆ ಗೊತ್ತಿರಬೇಕು. ಇಂದು ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ ನಿನ್ನೆಗಿಂತ ಕೊಂಚ ಇಳಿಕೆ ಕಂಡುಬಂದಿದೆ. ಮದುವೆ ಸೀಸನ್ ಅಥವಾ ಹೂಡಿಕೆ ಉದ್ದೇಶಕ್ಕಾಗಿ ನೀವು ಇಂದು ಚಿನ್ನ

ಒನ್ ಇ೦ಡಿಯ 27 Mar 2026 8:04 am

10 ತೈಲ ಟ್ಯಾಂಕರ್‌ಗಳಿಗೆ ಹಾರ್ಮುಝ್ ಜಲಸಂಧಿಯಲ್ಲಿ ಅವಕಾಶ ಮಾಡಿಕೊಟ್ಟ ಇರಾನ್: ಟ್ರಂಪ್

ವಾಷಿಂಗ್ಟನ್/ಟೆಹ್ರಾನ್: ಯುದ್ಧ ಅಂತ್ಯಗೊಳಿಸುವ ಮಾತುಕತೆಗಳ ಬಗ್ಗೆ ತನ್ನ ಗಂಭೀರತೆಯನ್ನು ತೋರಿಸಲು ಇರಾನ್ 10 ತೈಲ ಟ್ಯಾಂಕರ್‌ ಗಳನ್ನು ಹಾರ್ಮುಝ್ ಜಲಸಂಧಿಯ ಮೂಲಕ ಹಾದುಹೋಗಲು ಅವಕಾಶ ನೀಡಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿಳಿಸಿದ್ದಾರೆ. ಈ ಕ್ರಮವನ್ನು ಟ್ರಂಪ್ ‘ಉಡುಗೊರೆ’ ಎಂದು ವರ್ಣಿಸಿದ್ದಾರೆ. ಈ ವಾರದ ಆರಂಭದಲ್ಲಿ ಈ ಕುರಿತು ನೀಡಿದ್ದ ನಿಗೂಢ ಹೇಳಿಕೆಗಳನ್ನು ಉಲ್ಲೇಖಿಸಿದ ಅವರು, ಇರಾನ್ ಮೊದಲಿಗೆ ಎಂಟು “ದೊಡ್ಡ ತೈಲ ಹಡಗುಗಳನ್ನು” ಸಾಗಲು ಅವಕಾಶ ನೀಡಿತು ಎಂದು ಹೇಳಿದರು. ಬಳಿಕ ಇನ್ನೂ ಎರಡು ಹಡಗುಗಳಿಗೆ ಅನುಮತಿ ನೀಡಲಾಗಿದೆ ಎಂದು ವಿವರಿಸಿದರು. ಈ ಟ್ಯಾಂಕರ್‌ ಗಳಲ್ಲಿ ಪಾಕಿಸ್ತಾನದ ಧ್ವಜ ಹೊಂದಿರುವ ಕೆಲವು ಹಡಗುಗಳೂ ಸೇರಿವೆ ಎಂದು ಟ್ರಂಪ್ ತಿಳಿಸಿದ್ದಾರೆ.

ವಾರ್ತಾ ಭಾರತಿ 27 Mar 2026 7:47 am

ಇರಾನ್ ಇಂಧನ ಕೇಂದ್ರಗಳ ಮೇಲಿನ ದಾಳಿ ಗಡುವು ಮತ್ತೆ 10 ದಿನಗಳ ಕಾಲ ವಿಸ್ತರಣೆ: ಡೊನಾಲ್ಡ್ ಟ್ರಂಪ್ ಘೋಷಣೆ

ವಾಷಿಂಗ್ಟನ್, ಮಾ. 27: ಇರಾನ್‌ ನ ಇಂಧನ ಮೂಲಸೌಕರ್ಯಗಳ ಮೇಲಿನ ದಾಳಿಯನ್ನು ಏಪ್ರಿಲ್ 6ರವರೆಗೆ ಮುಂದೂಡುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿಳಿಸಿದ್ದಾರೆ. ಇರಾನ್ ನ ವಿನಂತಿಯನ್ನು ಪರಿಗಣಿಸಿ, ಸುಮಾರು 10 ದಿನಗಳ ಕಾಲ ದಾಳಿಗೆ ವಿರಾಮ ನೀಡಲಾಗಿದೆ ಎಂದು ಅವರು ಹೇಳಿದ್ದಾರೆ. ಈ ಕುರಿತು ಸಾಮಾಜಿಕ ಮಾಧ್ಯಮ ಟ್ರುತ್ ಸೋಷಿಯಲ್‌ ನಲ್ಲಿನ ಪೋಸ್ಟ್ ನಲ್ಲಿ ಅವರು ಮಾಹಿತಿ ಹಂಚಿಕೊಂಡಿದ್ದಾರೆ. ಇರಾನ್ ಜೊತೆ ನಡೆಯುತ್ತಿರುವ ಮಾತುಕತೆಗಳು ‘ತುಂಬಾ ಚೆನ್ನಾಗಿ’ ಸಾಗುತ್ತಿವೆ ಎಂದು ಟ್ರಂಪ್ ಹೇಳಿದ್ದಾರೆ. ಆದರೆ, ಮಾತುಕತೆಗಳು ಯಶಸ್ವಿಯಾಗುತ್ತವೆಯೇ ಎಂಬುದರ ಬಗ್ಗೆ ಇರಾನ್‌ನ ನಿಲುವು ಸ್ಪಷ್ಟವಾಗಿಲ್ಲವೆಂದೂ ತಿಳಿಸಿದ್ದಾರೆ. ಈ ಮೊದಲು, ಸೋಮವಾರ ಟ್ರಂಪ್ ಅವರು ಇರಾನ್‌ನ ಪರಮಾಣು ಕೇಂದ್ರಗಳ ಮೇಲೆ ದಾಳಿ ನಡೆಸುವ ಬೆದರಿಕೆಯನ್ನು ಶುಕ್ರವಾರದವರೆಗೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸುವುದಾಗಿ ಘೋಷಿಸಿದ್ದರು. ಇದೀಗ ಆ ಗಡುವನ್ನು ಮತ್ತೆ ಏಪ್ರಿಲ್ 6ರವರೆಗೆ ವಿಸ್ತರಿಸಿದ್ದಾರೆ. ‘ಮಾತುಕತೆಗಳು ನಡೆಯುತ್ತಿವೆ. ನಕಲಿ ಸುದ್ದಿ ಮಾಧ್ಯಮಗಳು ತಪ್ಪು ಮಾಹಿತಿಯನ್ನು ಹರಡುತ್ತಿದ್ದರೂ, ವಾಸ್ತವದಲ್ಲಿ ಅವು ಉತ್ತಮವಾಗಿ ಸಾಗುತ್ತಿವೆ,’ ಎಂದು ಟ್ರಂಪ್ ಅವರು ‘ಟ್ರುತ್ ಸೋಶಿಯಲ್’ನಲ್ಲಿ ಪ್ರಕಟಿಸಿದ ಸಂದೇಶದಲ್ಲಿ ತಿಳಿಸಿದ್ದಾರೆ.

ವಾರ್ತಾ ಭಾರತಿ 27 Mar 2026 7:20 am

Mangaluru | ತೊಕ್ಕೊಟ್ಟಿನಲ್ಲಿ ವ್ಯಕ್ತಿಯೋರ್ವನ ಹತ್ಯೆ

ಮಂಗಳೂರು, ಮಾ.27: ನಗರದ ಹೊರವಲಯದ ತೊಕ್ಕೊಟ್ಟು ಫ್ಲೈಓವರ್ ಮೇಲ್ಭಾಗದಲ್ಲಿ ಶುಕ್ರವಾರ ಬೆಳಿಗ್ಗೆ ವ್ಯಕ್ತಿಯೋರ್ವನನ್ನು ಮಾರಕಾಸ್ತ್ರಗಳಿಂದ ಕಡಿದು ಹತ್ಯೆ ಮಾಡಿರುವ ಘಟನೆ ನಡೆದಿದೆ. ಕೊಲೆಯಾದ ವ್ಯಕ್ತಿಯನ್ನು ಮುಳ್ಳುಗುಡ್ಡೆ ಹೌಸ್, ತಲಪಾಡಿ ನಿವಾಸಿ ಆರಿಫ್ ಯಾನೆ ‘ಟಾಬ್ಲೆಟ್ ಆರಿಫ್’ (46) ಎಂದು ಗುರುತಿಸಲಾಗಿದೆ. ಪೊಲೀಸರ ಪ್ರಾಥಮಿಕ ಮಾಹಿತಿಯ ಪ್ರಕಾರ, ಆರಿಫ್ ಬೈಕ್‌ ನಲ್ಲಿ ತೆರಳುತ್ತಿದ್ದ ವೇಳೆ ಹಿಂಬದಿಯಿಂದ ಕಾರಿನಲ್ಲಿ ಬಂದ ದುಷ್ಕರ್ಮಿಗಳು ಢಿಕ್ಕಿ ಹೊಡೆದಿದ್ದಾರೆ. ಢಿಕ್ಕಿಯಿಂದ ರಸ್ತೆಗೆ ಬಿದ್ದ ತಕ್ಷಣವೇ, ಮಾರಕಾಸ್ತ್ರಗಳಿಂದ ಕಡಿದು ಹತ್ಯೆ ಮಾಡಲಾಗಿದೆ ಎನ್ನಲಾಗಿದೆ. ಕೃತ್ಯ ಎಸಗಿದ ಬಳಿಕ ದುಷ್ಕರ್ಮಿಗಳು ಕಾರಿನಲ್ಲಿ ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ. ಮಂಗಳೂರು ದಕ್ಷಿಣ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗೆ ಶೋಧ ಕಾರ್ಯ ಆರಂಭಿಸಿದ್ದಾರೆ ಎಂದು ತಿಳಿದು ಬಂದಿದೆ.

ವಾರ್ತಾ ಭಾರತಿ 27 Mar 2026 7:10 am

Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ

ಬೆಂಗಳೂರು: ರಾಜ್ಯದಲ್ಲಿ ದಿನೇ ದಿನೇ ಬಿಸಿಲಿನ ತಾಪಮಾನ ಏರಿಕೆಯಾಗುತ್ತಿದ್ದು, ಜನರು ಸೆಖೆಯಿಂದ ಹೈರಾಣಾಗಿದ್ದಾರೆ. ಆದರೆ, ಬೇಸಿಗೆಯ ಬಿಸಿಯಿಂದ ಕಂಗೆಟ್ಟಿದ್ದ ರಾಜ್ಯದ ಜನತೆಗೆ ಭಾರತೀಯ ಹವಾಮಾನ ಇಲಾಖೆ (IMD) ಕೊಂಚ ನೆಮ್ಮದಿಯ ಸುದ್ದಿ ನೀಡಿದೆ. ಹವಾಮಾನ ಇಲಾಖೆಯ ಅಧಿಕೃತ ವರದಿಯ ಪ್ರಕಾರ, ರಾಜ್ಯದ ಹಲವು ಜಿಲ್ಲೆಗಳಲ್ಲಿ ಮುಂದಿನ ಕೆಲವು ದಿನಗಳ ಕಾಲ ಗುಡುಗು, ಮಿಂಚು ಮತ್ತು ಆಲಿಕಲ್ಲು ಸಹಿತ

ಒನ್ ಇ೦ಡಿಯ 27 Mar 2026 6:55 am

ಇರಾನ್‌ ಮನವಿ ಮೇರೆಗೆ ಏಪ್ರಿಲ್‌ 6 ರವರೆಗೆ ದಾಳಿ ಮುಂದೂಡಿದ್ದೇನೆ: ಸಂಧಾನ ಮಾತುಕತೆ ಬಗ್ಗೆ ಡೊನಾಲ್ಡ್‌ ಟ್ರಂಪ್ ಮಹತ್ವದ ಹೇಳಿಕೆ

ಅಮೆರಿಕ ಜೊತೆಗೆ ಸಂಧಾನ ಮಾತುಕತೆ ಚೆನ್ನಾಗಿ ನಡೆಯುತ್ತಿದೆ. ಇರಾನ್ ಸರಕಾರದ ಮನವಿ ಮೇರೆಗೆ 10 ದಿನಗಳ ಗಡುವು ಕೊಟ್ಟಿದ್ದು, ಇಂಧನ ಸಂಪನ್ಮೂಲಗಳನ್ನು ನಾಶ ಪಡಿಸುವ ಗಡುವನ್ನು ಏಪ್ರಿಲ್ 6 ರವರೆಗೆ ವಿಸ್ತರಿಸಲಾಗಿದೆ ಎಂದು ಟ್ರಂಪ್ ಹೇಳಿದ್ದಾರೆ.

ವಿಜಯ ಕರ್ನಾಟಕ 27 Mar 2026 6:51 am

ಬೆಂಗಳೂರಿನ ಕಂಟೋನ್ಮೆಂಟ್‌, ಯಶವಂತಪುರ ರೈಲ್ವೆ ನಿಲ್ದಾಣ ಕಾಮಗಾರಿ 2026 ವರ್ಷಾಂತ್ಯಕ್ಕೆ ಪೂರ್ಣ: ಹೊಸ ಸೌಲಭ್ಯಗಳು ಏನೆಲ್ಲಾ ಗೊತ್ತಾ?

ಬೆಂಗಳೂರಿನ ಪಾರಂಪರಿಕ ಕಟ್ಟಡವಾದ ಕಂಟೋನ್ಮೆಂಟ್ ರೈಲ್ವೆ ನಿಲ್ದಾಣವನ್ನು 484.58 ಕೋಟಿ ರೂ ವೆಚ್ಚದಲ್ಲಿ ಹಾಗೂ ಮೆಜೆಸ್ಟಿಕ್ ಬಳಿಕ ಅತಿಹೆಚ್ಚು ಜನನಿಬಿಡ ಇರುವ ಬೆಂಗಳುರಿನ ಯಶವಂತಪುರ ರೈಲ್ವೇ ನಿಲ್ದಾಣವನ್ನು ಬರೋಬ್ಬರಿ 377.86 ಕೋಟಿ ರೂ ವೆಚ್ಚದಲ್ಲಿ ಅತ್ಯಾಧುನಿಕ ಸೌಲಭ್ಯಗಳೊಂದಿಗೆ ಅಭಿವೃದ್ಧಿ ಪಡಿಸಲಾಗುತ್ತಿದ್ದು, ಕಾಮಗಾರಿ ವಿಳಂಬವಾಗಿದೆ.

ವಿಜಯ ಕರ್ನಾಟಕ 27 Mar 2026 5:29 am

RCB ತವರಿನ 2 ಪಂದ್ಯಗಳನ್ನು ರಾಯಪುರದಲ್ಲಿ ಆಡಲು ಏನು ಕಾರಣ? ಚಿನ್ನಸ್ವಾಮಿಯಲ್ಲಿ ಯಾಕೆ ಕೇವಲ 5 ಮ್ಯಾಚ್?

RCB Home Matches- ಐಪಿಎಲ್ 2026 ವೇಳಾಪಟ್ಟಿಯಂತೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ತವರಿನಲ್ಲಿ ಆಡುವ ಗುಂಪು ಹಂತದ 7 ಪಂದ್ಯಗಳನ್ನು 5ನ್ನು ಮಾತ್ರ ಬೆಂಗಳೂರಿನಲ್ಲಿ ಆಡಲಿದೆ. ಇನ್ನುಳಿದ 2 ಪಂದ್ಯಗಳು ರಾಯಪುರದ ಶಹೀದ್ ಮೀರ್ ನಾರಾಯಣ್ ಸಿಂಗ್ ಕ್ರೀಡಾಂಗಣದಲ್ಲಿ ನಡೆಯಲಿವೆ. ಇದಕ್ಕೆ ಕಾರಣ ತಮ್ಮ ಸಾಂಪ್ರದಾಯಿಕ ತವರು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಡುವ ಅವಕಾಶ ಸಿಗವುದೋ ಇಲ್ಲವೋ ಎಂಬ ಅನುಮಾನದಿಂದ ಫ್ರಾಂಚೈಸಿಯು ಛತ್ತೀಸ್ ಗಢ ಮುಖ್ಯಮಂತ್ರಿಗಳ ಜೊತೆ ಮಾಡಿಕೊಂಡ ಒಪ್ಪಂದ. ಇದೀಗ ಕೊನೇ ಗಳಿಗೆಯಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಡಲು ಅವಕಾಶ ಸಿಕ್ಕಿದಾಗ ಫ್ರಾಂಚೈಸಿ ಖುಷಿಪಟ್ಟರೂ ಈ ಹಿಂದೆ ಕೊಟ್ಟ ಮಾತಿನಂತೆ 2 ಪಂದ್ಯಗಳನ್ನು ರಾಯಪುರದಲ್ಲಿ ಆಡಲು ನಿರ್ಧರಿಸಿದೆ.

ವಿಜಯ ಕರ್ನಾಟಕ 27 Mar 2026 12:43 am

Mysuru | ಐಷಾರಾಮಿ ಕಾರುಗಳನ್ನು ಖರೀದಿಸಿ ವಂಚನೆ: ಮೂವರ ಬಂಧನ

1.10 ಕೋಟಿ ರೂ. ಮೌಲ್ಯದ 8 ಕಾರುಗಳು ವಶ

ವಾರ್ತಾ ಭಾರತಿ 27 Mar 2026 12:43 am

‘ಸೌಜನ್ಯ ಪ್ರಕರಣ’ ನಿಷ್ಪಕ್ಷಪಾತ ಮರುತನಿಖೆಗೆ ಆಗ್ರಹ

ಬೆಂಗಳೂರು : ಸುಪ್ರೀಂಕೋರ್ಟ್‍ನಲ್ಲಿ ವಿಚಾರಣೆಗೆ ಬಂದಿರುವ ಸೌಜನ್ಯ ಪ್ರಕರಣದ ಮರು ತನಿಖೆ ಅರ್ಜಿ ವಿಚಾರದಲ್ಲಿ ರಾಜ್ಯ ಸರಕಾರವು ಮರು ತನಿಖೆಗೆ ಬದ್ಧವಾಗಿ ನಡೆದುಕೊಳ್ಳಬೇಕು ಮತ್ತು ಯಾವ ಕಾರಣಕ್ಕೂ ಮರು ತನಿಖೆಯನ್ನು ವಿರೋಧಿಸಬಾರದು ಎಂದು ‘ಕೊಂದುವರು ಯಾರು?’ ತಂಡ ಆಗ್ರಹಿಸಿದೆ. ಗುರುವಾರ ನಗರದ ಪ್ರೆಸ್‍ಕ್ಲಬ್‍ನಲ್ಲಿ ಜನವಾದಿ ಮಹಿಳಾ ಸಂಘಟನೆಯ ಗೌರಮ್ಮ, ಎನ್‍ಎಫ್‍ಐಡಬ್ಲ್ಯೂನ ಜ್ಯೋತಿ, ನಾವೆದ್ದು ನಿಲ್ಲದಿದ್ದರೆ ಮಮತಾ ಯಜಮಾನ್, ಮಹಿಳಾ ಮುನ್ನಡೆಯ ಮಲ್ಲಿಗೆ, ವಕೀಲೆ ಪೂರ್ಣಾ ಆರ್., ಜನವಾದಿ ಮಹಿಳಾ ಸಂಘಟನೆಯ ಶೈಲಾ ಜಂಟಿ ಪತ್ರಿಕಾಗೋಷ್ಠಿ ನಡೆಸಿ, ಧರ್ಮಸ್ಥಳದಲ್ಲಿ ನಡೆದಿರುವ ಅತ್ಯಾಚಾರ, ಕೊಲೆ, ಅಸಹಜ ಸಾವು, ನಾಪತ್ತೆ ಪ್ರಕರಣಗಳ ತನಿಖೆಯ ವಿವರಗಳನ್ನು ಬಹಿರಂಗಪಡಿಸಬೇಕು ಎಂದರು. ಧರ್ಮಸ್ಥಳದಲ್ಲಿ 2012ರಲ್ಲಿ ನಡೆದಿದ್ದ ಸೌಜನ್ಯಳ ಭೀಕರ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ಮರುತನಿಖೆ ಮಾಡಬೇಕೆಂದು ಕೋರಿ ಆಕೆಯ ತಾಯಿ ಕುಸುಮಾವತಿ ಸಲ್ಲಿಸಿದ್ದ ವಿಶೇಷ ಅರ್ಜಿಯನ್ನು (ಎಸ್‍ಎಲ್‍ಪಿ) ಸುಪ್ರೀಂಕೋರ್ಟ್ ವಿಚಾರಣೆಗೆ ಸ್ವೀಕರಿಸಿ, ಈ ಕುರಿತು ತಮ್ಮ ನಿಲುವನ್ನು ಸಲ್ಲಿಸುವಂತೆ ಸಿಬಿಐ ಮತ್ತು ರಾಜ್ಯ ಸರಕಾರಕ್ಕೆ ನೋಟಿಸ್ ನೀಡಲು ನಿರ್ದೇಶನ ನೀಡಿರುವುದನ್ನು ‘ಕೊಂದವರು ಯಾರು?’ ಆಂದೋಲನವು ಸ್ವಾಗತಿಸುತ್ತದೆ ಎಂದು ಹೋರಾಟಗಾರರು ತಿಳಿಸಿದರು. ಸುಪ್ರೀಂಕೋರ್ಟ್‍ನ ವಿಭಾಗೀಯ ಪೀಠವು ಮಾ.23 ರಂದು ನೀಡಿರುವ ನಿರ್ದೇಶನವು ಈ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆಯಾಗಿದ್ದು, ಅತ್ಯಾಚಾರಿಗಳು ಮತ್ತು ಕೊಲೆಗಾರರನ್ನು ಪತ್ತೆ ಹಚ್ಚುವಂತೆ ಆಗ್ರಹಿಸಿ ನಡೆಯುತ್ತಿರುವ ದೀರ್ಘಕಾಲದ ಹೋರಾಟಕ್ಕೆ ಸಂದ ಮನ್ನಣೆಯಾಗಿದೆ. ಕರ್ನಾಟಕ ಹೈಕೋರ್ಟ್‍ನ ಆದೇಶದಂತೆ 74 ಅಸಹಜ ಸಾವುಗಳಿಗೆ ಸಂಬಂಧಿಸಿದ ಎಲ್ಲ ಮಾಹಿತಿಗಳನ್ನೂ ಶೀಘ್ರದಲ್ಲೇ ನ್ಯಾಯಾಲಯಕ್ಕೆ ಸಲ್ಲಿಸಬೇಕು ಹಾಗೂ ಸಾರ್ವಜನಿಕ ಪರಿಶೀಲನೆಗೆ ಒದಗಿಸಬೇಕು ಎಂದು ಅವರು ಒತ್ತಾಯಿಸಿದರು. ಸೌಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ನ್ಯಾಯಾಲಯವು ತನ್ನ 2023ರ ತೀರ್ಪಿನಲ್ಲಿ ಹೇಳಿದಂತ ‘ತಪ್ಪಿತಸ್ಥ ಅಧಿಕಾರಿಗಳು’ ಯಾರು ಎಂಬುದನ್ನು ಅಕ್ವಿಟಲ್ ಸಮಿತಿ ತಕ್ಷಣವೇ ಗುರುತಿಸಿ ಸರಕಾರಕ್ಕೆ ಸಲ್ಲಿಸಬೇಕು. ಸಾಕ್ಷ್ಯನಾಶ ಮಾಡಿದವರ ಮತ್ತು ಪ್ರಕರಣವನ್ನು ದಿಕ್ಕುತಪ್ಪಿಸಿದವರ ವಿರುದ್ಧ ಸರಕಾರ ಕಾನೂನು ರೀತಿಯಲ್ಲಿ ಕಠಿಣ ಕ್ರಮ ಜರುಗಿಸಬೇಕು ಎಂದು ಮುಖಂಡರು ಆಗ್ರಹಿಸಿದರು. ಧರ್ಮಸ್ಥಳದ ಸುತ್ತಮುತ್ತ ನಡೆದಿರುವ ಮಹಿಳೆಯರ ಮತ್ತು ಯುವತಿಯರ ಕೊಲೆ, ನಾಪತ್ತೆ, ಅಸಹಜ ಸಾವುಗಳ ಪ್ರಕರಣಗಳ ತನಿಖೆಯನ್ನು ಕೈಗೊಂಡಿರುವ ಬಗ್ಗೆ ವರದಿ ನೀಡುವಂತೆ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ 2025ರ ಅ.31 ರಂದು ಎಸ್‍ಐಟಿ ಮುಖ್ಯಸ್ಥರಿಗೆ ಪತ್ರ ಬರೆದು ಕೋರಿದ್ದರು. ಸದರಿ ವರದಿಯನ್ನು ಕೂಡಲೇ ಸಾರ್ವಜನಿಕಗೊಳಿಸಬೇಕು. ಸಂತ್ರಸ್ತ ಕುಟುಂಬಗಳ ಮತ್ತು ಕಾಳಜಿಯುಳ್ಳ ನಾಗರಿಕರ ಜೊತೆಗೆ ನಿಂತಿರುವ ನಮ್ಮ ಆಂದೋಲನವು ನ್ಯಾಯ ಸಿಗುವವರೆಗೂ ಹೋರಾಟವನ್ನು ಮುಂದುವರಿಸಲಿದೆ ಎಂದು ಮಹಿಳಾ ಹೋರಾಟಗಾರ್ತಿಯರು ತಿಳಿಸಿದರು.  

ವಾರ್ತಾ ಭಾರತಿ 27 Mar 2026 12:20 am

ಸ್ಯಾಫ್ ಅಂಡರ್-20 ಚಾಂಪಿಯನ್‌ಶಿಪ್| ಪಾಕಿಸ್ತಾನದ ವಿರುದ್ಧ ಭಾರತಕ್ಕೆ ಜಯ, ಸೆಮಿ ಫೈನಲ್‌ಗೆ ಲಗ್ಗೆ

ಹೊಸದಿಲ್ಲಿ, ಮಾ.26: ಮಾಲೆಯ ನ್ಯಾಶನಲ್ ಸ್ಟೇಡಿಯಂನಲ್ಲಿ ಗುರುವಾರ ನಡೆದ ಸ್ಯಾಫ್ ಅಂಡರ್-20 ಚಾಂಪಿಯನ್‌ಶಿಪ್ ಹಣಾಹಣಿಯಲ್ಲಿ ಭಾರತ ತಂಡವು ಪಾಕಿಸ್ತಾನ ತಂಡವನ್ನು 3-0 ಗೋಲುಗಳ ಅಂತರದಿಂದ ಮಣಿಸಿತು. ಈ ಮೂಲಕ ಸಾಂಪ್ರದಾಯಿಕ ಎದುರಾಳಿಯನ್ನು ಪಂದ್ಯಾವಳಿಯಿಂದ ಹೊರಗಟ್ಟಿದ ಭಾರತ ತಂಡವು ಸೆಮಿ ಫೈನಲ್‌ನಲ್ಲಿ ಸ್ಥಾನ ಗಿಟ್ಟಿಸಿಕೊಂಡಿತು. ಭಾರತ ತಂಡವು ವಿಶಾಲ್ ಯಾದವ್ ಗಳಿಸಿದ ಗೋಲಿನ ನೆರವಿನಿಂದ ಮೂರನೇ ನಿಮಿಷದಲ್ಲಿ 1-0 ಮುನ್ನಡೆ ಸಾಧಿಸಿತು. ಹೆಚ್ಚಿನ ಅವಧಿಯಲ್ಲಿ ಪ್ರಾಬಲ್ಯ ಸಾಧಿಸಿದ್ದ ಭಾರತ ತಂಡವು ತನ್ನ ಮುನ್ನಡೆಯನ್ನು ಹೆಚ್ಚಿಸಿಕೊಳ್ಳಲು ದ್ವಿತೀಯಾರ್ಧದ ತನಕ ಕಾದಿತು. 64ನೇ ನಿಮಿಷದಲ್ಲಿ ಒಮಾಂಗ್ ಡೊಡುಮ್ ಅವರು ಭಾರತದ ಮುನ್ನಡೆಯನ್ನು 2-0ಗೆ ವಿಸ್ತರಿಸಿದರು. 84ನೇ ನಿಮಿಷದಲ್ಲಿ ಸ್ಪಾಟ್ ಕಿಕ್ ಮೂಲಕ ಮತ್ತೊಂದು ಗೋಲು ಗಳಿಸಿದ ಒಮಾಂಗ್ ಡೊಡುಮ್ ಭಾರತ ತಂಡಕ್ಕೆ ಸುಲಭ ಗೆಲುವನ್ನು ದೃಢಪಡಿಸಿದರು. ಈ ಫಲಿತಾಂಶದಿಂದಾಗಿ ಭಾರತ ತಂಡ ಅಂತಿಮ-8ರ ಘಟ್ಟ ಪ್ರವೇಶಿಸಿದರೆ, ಪಾಕಿಸ್ತಾನ ತಂಡದ ಅಭಿಯಾನ ಅಂತ್ಯವಾಯಿತು. ಭಾರತ ಫುಟ್ಬಾಲ್ ತಂಡವು ಮಾರ್ಚ್ 28ರಂದು ಬಾಂಗ್ಲಾದೇಶದ ವಿರುದ್ಧ ಆಡಲಿದೆ.

ವಾರ್ತಾ ಭಾರತಿ 27 Mar 2026 12:17 am

ಹನೂರು : ಕಾಡ್ಗಿಚ್ಚಿಗೆ 15 ಎಕರೆ ಅರಣ್ಯ ನಾಶ

ಹನೂರು : ತಾಲೂಕಿನ ಪಿಜಿಪಾಳ್ಯ ಗ್ರಾಮ ಪಂಚಾಯತ್ ವ್ಯಾಪ್ತಿಯ ನೆಲ್ಲಿಕತ್ರಿ ಬಳಿಯ ಬೈಲೂರು ವಲಯದಲ್ಲಿ ಗುರುವಾರ ಬೆಳಗ್ಗೆ ಕಾಡ್ಗಿಚ್ಚು ಸಂಭವಿಸಿ, ಸುಮಾರು 15 ಎಕರೆ ಅರಣ್ಯ ಸಂಪೂರ್ಣವಾಗಿ ಬೆಂಕಿಗೆ ಭಸ್ಮವಾಗಿರುವುದಾಗಿ ವರದಿಯಾಗಿದೆ. ಘಟನೆಯ ಬಗ್ಗೆ ಮಾಹಿತಿ ಲಭ್ಯವಾದ ತಕ್ಷಣ, ಅರಣ್ಯ ಇಲಾಖೆಯ ಸಿಬ್ಬಂದಿ ಮತ್ತು ಆಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿ ನಿಯಂತ್ರಣ ಕಾರ್ಯಾಚರಣೆ ನಡೆಸಿದರು. ನಿರಂತರ ಪ್ರಯತ್ನದ ಫಲವಾಗಿ ಬೆಂಕಿ ಹೆಚ್ಚಿನ ಪ್ರದೇಶಕ್ಕೆ ಹರಡದೆ ನಿಯಂತ್ರಣಕ್ಕೆ ಬಂದಿದೆ. ಸ್ಥಳೀಯ ಅರಣ್ಯಾಧಿಕಾರಿಗಳ ಪ್ರಕಾರ, ತಕ್ಷಣ ಕ್ರಮ ಕೈಗೊಂಡದ್ದರಿಂದ 200 ಎಕರೆ ಅರಣ್ಯದ ಪ್ರಮುಖ ಭಾಗವನ್ನು ಉಳಿಸಲು ಸಾಧ್ಯವಾಯಿತು. ಸ್ಥಳೀಯರು ಘಟನೆಗೆ ತೀವ್ರ ಬಿಸಿಲು, ಒಣಗಾದ ಪರಿಸ್ಥಿತಿ ಮತ್ತು ಕೆಲವೊಂದು ಮಾನವ ಚಟುವಟಿಕೆಗಳು ಕಾರಣವಾಗಬಹುದು ಎಂದು ಹೇಳಿದ್ದಾರೆ. ಅರಣ್ಯ ಇಲಾಖೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಎಚ್ಚರಿಕೆ ವಹಿಸಿ, ಅಗತ್ಯ ಬೆಂಕಿ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳಲು ಸೂಚನೆ ನೀಡಿದೆ.  

ವಾರ್ತಾ ಭಾರತಿ 27 Mar 2026 12:14 am

IPL| ಸಿಎಸ್‌ಕೆ ಆರಂಭಿಕ ಜೋಡಿ ಬಹಿರಂಗಪಡಿಸಿದ ಋತುರಾಜ್ ಗಾಯಕ್ವಾಡ್

ಹೊಸದಿಲ್ಲಿ, ಮಾ.26: ಈ ವರ್ಷದ ಐಪಿಎಲ್ ಟಿ-20 ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಸೇರಿರುವ ಸಂಜು ಸ್ಯಾಮ್ಸನ್ ಅವರೊಂದಿಗೆ ನಾಯಕ ಋತುರಾಜ್ ಗಾಯಕ್ವಾಡ್ ಹಾಗೂ ಭಾರತದ ಅಂಡರ್-19 ಸ್ಟಾರ್ ಆಯುಷ್ ಮ್ಹಾತ್ರೆ ಪೈಕಿ ಯಾರು ಇನಿಂಗ್ಸ್ ಆರಂಭಿಸುತ್ತಾರೆಂಬ ಪ್ರಮುಖ ಪ್ರಶ್ನೆಗೆ ಕೊನೆಗೂ ಉತ್ತರ ಲಭಿಸಿದೆ. ಮುಂಬೈನಲ್ಲಿ ಬುಧವಾರ ನಡೆದಿದ್ದ ಕ್ಯಾಪ್ಟನ್ ಡೇ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಗಾಯಕ್ವಾಡ್, ಸಿಎಸ್‌ಕೆ ತನ್ನ ಆರಂಭಿಕ ಜೋಡಿ ಯಾರೆಂದು ನಿರ್ಧರಿಸಿದೆ ಎಂದು ಬಹಿರಂಗಪಡಿಸಿದರು. ರಿತು ಹಾಗೂ ಸಂಜು ಸಿಎಸ್‌ಕೆ ಇನಿಂಗ್ಸ್ ಆರಂಭಿಸುತ್ತಾರೆ ಎಂದರು. 2025ರ ಐಪಿಎಲ್ ಟೂರ್ನಿಯಲ್ಲಿ ಇನಿಂಗ್ಸ್ ಆರಂಭಿಸಿದ್ದ ಮುಂಬೈ ಬ್ಯಾಟರ್ ಆಯುಷ್ ಏಳು ಇನಿಂಗ್ಸ್‌ಗಳಲ್ಲಿ 188.97ರ ಸ್ಟ್ರೈಕ್‌ರೇಟ್‌ನಲ್ಲಿ ಒಟ್ಟು 240 ರನ್ ಗಳಿಸಿದ್ದರು. ಗಾಯಕ್ವಾಡ್ ಗಾಯಗೊಂಡಾಗ ಬದಲಿ ಆಟಗಾರನಾಗಿ ಸಿಎಸ್‌ಕೆ ಪಾಳಯ ಸೇರಿದ್ದ 18ರ ವಯಸ್ಸಿನ ಆಯುಷ್ ಉತ್ತಮ ಪ್ರದರ್ಶನದಿಂದ ಗಮನ ಸೆಳೆದಿದ್ದರು. ಫೆಬ್ರವರಿಯಲ್ಲಿ ಭಾರತದ ಅಂಡರ್-19 ವಿಶ್ವಕಪ್ ಪ್ರಶಸ್ತಿ ಗೆಲ್ಲುವಲ್ಲಿ ನಾಯಕತ್ವವಹಿಸಿದ್ದ ಆಯುಷ್ ಮ್ಹಾತ್ರೆ ಅವರನ್ನು 2026ರ ಐಪಿಎಲ್‌ಗಿಂತ ಮೊದಲು ಸಿಎಸ್‌ಕೆ ಫ್ರಾಂಚೈಸಿ ತನ್ನಲ್ಲೇ ಉಳಿಸಿಕೊಂಡಿತ್ತು. 2026ರ ಋತುವಿಗಿಂತ ಮೊದಲು ಸ್ಯಾಮ್ಸನ್‌ರನ್ನು ಸೇರಿಸಿಕೊಂಡ ನಂತರ ಸಿಎಸ್‌ಕೆ ಆರಂಭಿಕ ಜೋಡಿ ಆಯ್ಕೆಯ ಕುರಿತು ಗೊಂದಲಕ್ಕೆ ಸಿಲುಕಿತ್ತು. ಸ್ಯಾಮ್ಸನ್ ಇತ್ತೀಚೆಗೆ ನಡೆದಿದ್ದ ಟಿ-20 ವಿಶ್ವಕಪ್‌ನಲ್ಲಿ ಅಮೋಘ ಪ್ರದರ್ಶನ ನೀಡಿದ್ದರು. ವಿಶ್ವಕಪ್‌ನ ಕೊನೆಯ ಮೂರು ಪಂದ್ಯಗಳಲ್ಲಿ 89, 89 ಹಾಗೂ ಔಟಾಗದೆ 97 ರನ್ ಗಳಿಸಿ ಸರಣಿಶ್ರೇಷ್ಠ ಪ್ರಶಸ್ತಿ ಗೆದ್ದುಕೊಂಡಿದ್ದರು.

ವಾರ್ತಾ ಭಾರತಿ 27 Mar 2026 12:08 am

ಏಶ್ಯಕಪ್ ಸ್ಟೇಜ್-1 ಆರ್ಚರಿ ಪಂದ್ಯಾವಳಿ| ಚಿಕಿಥಾ, ರಜತ್ ಫೈನಲ್‌ಗೆ: ಭಾರತಕ್ಕೆ ಮತ್ತೊಂದು ಪದಕ ಖಚಿತ

ಹೊಸದಿಲ್ಲಿ, ಮಾ.26: ಬ್ಯಾಂಕಾಕ್‌ನಲ್ಲಿ ಗುರುವಾರ ನಡೆದ ಏಶ್ಯ ಕಪ್ ಸ್ಟೇಜ್-1 ಆರ್ಚರಿ ಪಂದ್ಯಾವಳಿಯಲ್ಲಿ ಭಾರತವು ಮತ್ತೊಂದು ಪದಕವನ್ನು ಖಚಿತಪಡಿಸಿಕೊಂಡಿತು. ಚಿಕಿಥಾ ತನಿಪರ್ಥಿ ಹಾಗೂ ರಜತ್ ಚೌಹಾಣ್ ಕಾಂಪೌಂಡ್ ಮಿಕ್ಸೆಡ್ ಟೀಮ್ ವಿಭಾಗದಲ್ಲಿ ಫೈನಲ್‌ಗೆ ಲಗ್ಗೆ ಇಟ್ಟಿದ್ದಾರೆ. ಅಗ್ರ ಶ್ರೇಯಾಂಕದ ಜೋಡಿ ಚಿಕಿಥಾ ಹಾಗೂ ರಜತ್ ಮೊದಲ ಸುತ್ತಿನಲ್ಲಿ ಬೈ ಪಡೆದಿದ್ದರು. ಚೈನೀಸ್ ತೈಪೆ ವಿರುದ್ಧ 159-155 ಹಾಗೂ ಕಝಕ್‌ಸ್ತಾನದ ವಿರುದ್ಧ 157-153 ಅಂತರದಿಂದ ಜಯಶಾಲಿಯಾಗಿರುವ ಭಾರತವು ಮಲೇಶ್ಯದ ವಿರುದ್ಧ ಫೈನಲ್ ಪಂದ್ಯಕ್ಕೆ ಸಜ್ಜಾಗಿದೆ. ರಿಧಿ ಫೋರ್ ಹಾಗೂ ದೇವಾಂಗ್ ಗುಪ್ತಾ ಅವರನ್ನೊಳಗೊಂಡ ಭಾರತದ ಮಿಕ್ಸೆಡ್ ಟೀಮ್ ವಿಯೆಟ್ನಾಂ ವಿರುದ್ಧ 0-6 ಅಂತರದಿಂದ ಸೋಲುವ ಮೂದಲು ಮೊದಲ ಸುತ್ತಿನಲ್ಲಿ ಬೈ ಪಡೆದಿದ್ದರು.

ವಾರ್ತಾ ಭಾರತಿ 27 Mar 2026 12:05 am

ಗಾಯಗೊಂಡಿರುವ ಸ್ಪೆನ್ಸರ್ ಜಾನ್ಸನ್‌ರನ್ನು ಬದಲಿ ಆಟಗಾರನಾಗಿ ನೇಮಿಸಿದ ಸಿಎಸ್‌ಕೆ!

ಹೊಸದಿಲ್ಲಿ, ಮಾ.26: ಗಾಯದಿಂದಾಗಿ 2026ರ ಆವೃತ್ತಿಯ ಐಪಿಎಲ್ ಟೂರ್ನಿಯಿಂದ ಹೊರಗುಳಿದಿರುವ ನಾಥನ್ ಎಲ್ಲಿಸ್ ಬದಲಿಗೆ ಗಾಯದಿಂದ ಸಂಪೂರ್ಣ ಚೇತರಿಸಿಕೊಳ್ಳದ ಸ್ಪೆನ್ಸರ್ ಜಾನ್ಸನ್‌ರನ್ನು ಬದಲಿ ಆಟಗಾರನಾಗಿ ನೇಮಿಸಿರುವ ಚೆನ್ನೈ ಸೂಪರ್ ಕಿಂಗ್ಸ್(ಸಿಎಸ್‌ಕೆ)ಅಚ್ಚರಿಯ ನಿರ್ಧಾರ ತೆಗೆದುಕೊಂಡಿದೆ. ಬದಲಿ ಆಟಗಾರನಾಗಿ ಜಾನ್ಸನ್ ಸಹಿಯ ಸುತ್ತಲೂ ನಿಗೂಢತೆ ಇದೆ. 30ರ ಹರೆಯದ ಜಾನ್ಸನ್ ಈ ಹಿಂದೆ ಪಾಕಿಸ್ತಾನ ಸೂಪರ್ ಲೀಗ್‌ನ(ಪಿಎಸ್‌ಎಲ್)ಕ್ವೆಟ್ಟಾ ಗ್ಲಾಡಿಯೇಟರ್ಸ್‌ನೊಂದಿಗೆ ಸಹಿ ಹಾಕಿದ್ದರು. ಆದರೆ ವೈಯಕ್ತಿಕ ಕಾರಣದಿಂದಾಗಿ ಆ ಟೂರ್ನಿಯಿಂದ ಹಿಂದೆ ಸರಿದಿದ್ದರು. ಕೆಲವು ದಿನಗಳ ನಂತರ ಐದು ಬಾರಿಯ ಐಪಿಎಲ್ ಚಾಂಪಿಯನ್ ಸಿಎಸ್‌ಕೆಯೊಂದಿಗೆ 1.5 ಕೋ.ರೂ.ಗೆ ಸಹಿ ಹಾಕಿದರು. ಐಪಿಎಲ್ ಒಪ್ಪಂದಕ್ಕಿಂತ ಜಾನ್ಸನ್ ಅವರ ಪಿಎಸ್‌ಎಲ್ ಸಂಭಾವನೆ ಅಧಿಕವಾಗಿತ್ತು. ಜಾನ್ಸನ್ ಅವರು ಗ್ಲಾಡಿಯೇಟರ್ಸ್‌ನೊಂದಿಗೆ ಸುಮಾರು 56 ಮಿಲಿಯನ್ ಪಾಕಿಸ್ತಾನ ರೂಪಾಯಿಗೆ(ಅಂದಾಜು 1.87 ಕೋ.ರೂ.)ಒಪ್ಪಂದಕ್ಕೆ ಸಹಿ ಹಾಕಿದ್ದರು. ಬುಧವಾರ ಎಕ್ಸ್‌ನಲ್ಲಿ ಪೋಸ್ಟ್ ಹಾಕಿರುವ ಸಿಎಸ್‌ಕೆ, ಎಡಗೈ ವೇಗದ ಬೌಲರ್ ಜಾನ್ಸನ್ ಎಪ್ರಿಲ್ 21 ಹಾಗೂ 23ರ ನಡುವೆ ತಂಡವನ್ನು ಸೇರಿಸಿಕೊಳ್ಳಲಿದ್ದಾರೆ ಎಂದು ಬುಧವಾರ ಎಕ್ಸ್‌ನಲ್ಲಿ ಸಿಎಸ್‌ಕೆ ಪೋಸ್ಟ್ ಹಾಕಿತ್ತು. ಇದಕ್ಕೆ ಕಾರಣ ನಿಗೂಢವಾಗಿದೆ. ಸಿಎಸ್‌ಕೆ ಸಿಇಒ ಕಾಶಿವಿಶ್ವನಾಥನ್ ಈ ಕುರಿತು ಉತ್ತರ ನೀಡಿಲ್ಲ. ಕಳೆದ ವರ್ಷದ ಐಪಿಎಲ್ ನಂತರ ಜಾನ್ಸನ್ ಯಾವುದೇ ಸ್ಪರ್ಧಾತ್ಮಕ ಕ್ರಿಕೆಟ್ ಆಡಿಲ್ಲ. ಕಳೆದ ಬಾರಿ ಕೋಲ್ಕತಾ ನೈಟ್ ರೈಡರ್ಸ್ ತಂಡದಲ್ಲಿದ್ದರು. ಕೆಕೆಆರ್ 2.80 ಕೋ.ರೂ.ಗೆ ಜಾನ್ಸನ್‌ರನ್ನು ತನ್ನ ತೆಕ್ಕೆಗೆ ಸೇರಿಸಿಕೊಂಡಿತ್ತು. ನೀಳಕಾಯದ ವೇಗದ ಬೌಲರ್ ನಾಲ್ಕು ಪಂದ್ಯಗಳನ್ನು ಆಡಿದ್ದು, ಕೇವಲ ಒಂದು ವಿಕೆಟ್ ಪಡೆದಿದ್ದರು. 2026ರ ಮಿನಿ ಹರಾಜಿಗಿಂತ ಮೊದಲು ಅವರನ್ನು ಬಿಡುಗಡೆ ಮಾಡಲಾಗಿತ್ತು. ಜಾನ್ಸನ್ ಅವರು ಆಸ್ಟ್ರೇಲಿಯದ ಪರ ಐದು ಏಕದಿನ ಹಾಗೂ ಎಂಟು ಟಿ-20 ಪಂದ್ಯಗಳನ್ನು ಆಡಿದ್ದು, ಸದ್ಯ ಬೆನ್ನುನೋವಿನಿಂದ ಚೇತರಿಸಿಕೊಂಡಿದ್ದಾರೆ. ಜಾನ್ಸನ್ ಅವರು ಪಿಎಸ್‌ಎಲ್‌ನೊಂದಿಗೆ ಒಪ್ಪಂದ ಮಾಡಿಕೊಂಡಿದ್ದರೂ ಐಪಿಎಲ್‌ನೊಂದಿಗೆ ಸಹಿ ಹಾಕಿರುವ ಮೂರನೇ ಆಟಗಾರನಾಗಿದ್ದಾರೆ. ಝಿಂಬಾಬ್ವೆಯ ಬ್ಲೆಸ್ಸಿಂಗ್ ಮುಝರ್ಬಾನಿ ಹಾಗೂ ಶ್ರೀಲಂಕಾದ ದಸುನ್ ಶನಕ ಐಪಿಎಲ್‌ಗೋಸ್ಕರ ಪಿಎಸ್‌ಎಲ್ ತೊರೆದಿದ್ದರು. ಸಿಎಸ್‌ಕೆ ಗುವಾಹಟಿಯಲ್ಲಿ ಮಾರ್ಚ್ 30ರಂದು ರಾಜಸ್ಥಾನ ರಾಯಲ್ಸ್ ತಂಡವನ್ನು ಎದುರಿಸುವ ಮೂಲಕ ತನ್ನ ಅಭಿಯಾನ ಆರಂಭಿಸಲಿದೆ.

ವಾರ್ತಾ ಭಾರತಿ 27 Mar 2026 12:00 am

ಜಿ7 ಶೃಂಗಸಭೆ: ಭಾರತ, ದಕ್ಷಿಣ ಕೊರಿಯಾಕ್ಕೆ ಆಹ್ವಾನ

ಪ್ಯಾರಿಸ್, ಮಾ.26: ಫ್ರಾನ್ಸ್‌ನಲ್ಲಿ ಜೂನ್‍ನಲ್ಲಿ ನಡೆಯಲಿರುವ ಜಿ7 ನಾಯಕರ ಶೃಂಗಸಭೆಯಲ್ಲಿ ಭಾರತ, ದಕ್ಷಿಣ ಕೊರಿಯಾ, ಬ್ರೆಝಿಲ್ ಮತ್ತು ಕೆನ್ಯಾದ ನಾಯಕರು ಪಾಲ್ಗೊಳ್ಳಲಿದ್ದಾರೆ. ಆದರೆ ಚೀನಾ ಪಾಲ್ಗೊಳ್ಳುವುದಿಲ್ಲ ಎಂದು ಫ್ರಾನ್ಸ್ ಸರಕಾರ ಗುರುವಾರ ಹೇಳಿದೆ. ಜೂನ್ 15ರಿಂದ 17ರವರೆಗೆ ನಡೆಯಲಿರುವ ಶೃಂಗಸಭೆಯಲ್ಲಿ ಚೀನಾ ಭಾಗವಹಿಸುವುದಿಲ್ಲ ಮತ್ತು `ಶ್ರಿಮಂತ ದೇಶಗಳ ಕ್ಲಬ್' ಎಂದು ಕೆಲವರು ಟೀಕಿಸುವ ಜಿ7ರ ನ್ಯಾಯಸಮ್ಮತತೆಯನ್ನು ಪ್ರಶ್ನಿಸುವುದನ್ನು ಮುಂದುವರಿಸಿದೆ ಎಂದು ಫ್ರಾನ್ಸ್‌ನ ಅಧಿಕಾರಿಗಳು ಹೇಳಿದ್ದಾರೆ.

ವಾರ್ತಾ ಭಾರತಿ 27 Mar 2026 12:00 am

ವೇತನಸಹಿತ ಋತುಚಕ್ರದ ರಜೆ; ಸರಕಾರದ ಆದೇಶ ಪ್ರಶ್ನಿಸಿ ಮಹಿಳಾ ಉದ್ಯೋಗಿಗಳಿಂದ ಹೈಕೋರ್ಟ್‌‌ಗೆ ಅರ್ಜಿ

ಬೆಂಗಳೂರು : ರಾಜ್ಯದಲ್ಲಿ ವಿವಿಧ ಕಾರ್ಮಿಕ ಕಾಯ್ದೆಗಳಡಿ ನೋಂದಣಿಯಾಗಿರುವ ಉದ್ದಿಮೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಮಹಿಳಾ ನೌಕರರಿಗೆ ಅವರ ಋತುಚಕ್ರದ ಸಮಯದಲ್ಲಿ ಮಾಸಿಕ ಒಂದು ದಿನದ ವೇತನಸಹಿತ ರಜೆ ನೀಡುವ ಸಂಬಂಧ ರಾಜ್ಯ ಸರಕಾರದ ಹೊರಡಿಸಿರುವ ಅಧಿಸೂಚನೆ ಪ್ರಶ್ನಿಸಿ ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿರುವ ಮಹಿಳಾ ಉದ್ಯೋಗಿಗಳು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ರಾಜ್ಯ ಕಾರ್ಮಿಕ ಇಲಾಖೆ 2025ರ ನವೆಂಬರ್‌ 20ರಂದು ಹೊರಡಿಸಿರುವ ಅಧಿಸೂಚನೆ ಪ್ರಶ್ನಿಸಿ ಖಾಸಗಿ ಕಂಪನಿಗಳ ಪ್ರಮುಖ ಹುದ್ದೆಗಳಲ್ಲಿರುವ 17 ಮಹಿಳೆಯರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿಯಲ್ಲಿ ರಾಜ್ಯ ಕಾರ್ಮಿಕ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅವರನ್ನು ಪ್ರತಿವಾದಿ ಮಾಡಲಾಗಿದೆ. ಅರ್ಜಿ ಇನ್ನಷ್ಟೇ ವಿಚಾರಣೆಗೆ ನಿಗದಿಯಾಗಬೇಕಿದೆ. ಸರಕಾರದ ನೀತಿಯು ಪ್ರತಿ ಮಹಿಳೆಗೂ ಋತುಚಕ್ರ ರಜೆ ಅಗತ್ಯ ಎಂಬ ಊಹೆ ಸೃಷ್ಟಿಸುತ್ತದೆ. ಆದರೆ, ಋತುಚಕ್ರದ ಕಾರಣಕ್ಕೆ ಕಡ್ಡಾಯ ರಜೆ ನೀಡುವ ಅಗತ್ಯವಿಲ್ಲ. ಮತ್ತೊಂದೆಡೆ, ಈ ನೀತಿ ರೂಪಿಸುವಾಗ ಸರಕಾರ ಮಹಿಳೆಯರ ಅಭಿಪ್ರಾಯ ಪಡೆದಿಲ್ಲ. ಇದು ಸಹಜ ನ್ಯಾಯದ ಉಲ್ಲಂಘನೆಯಾಗಿದ್ದು, ರಾಜ್ಯ ಸರಕಾರದ ಅಧಿಸೂಚನೆ ವಜಾಗೊಳಿಸಬೇಕು ಎಂದು ಅರ್ಜಿದಾರರು ಮನವಿ ಮಾಡಿದ್ದಾರೆ. ಆಕ್ಷೇಪವೇನು? ಮಹಿಳಾ ನೌಕರರಿಗೆ ಅವರ ಋತುಚಕ್ರದ ಸಮಯದಲ್ಲಿ ಮಾಸಿಕ ಒಂದು ದಿನದ ವೇತನಸಹಿತ ರಜೆ ನೀಡುವ ಸಂಬಂಧ ರಾಜ್ಯ ಕಾರ್ಮಿಕ ಇಲಾಖೆ ಹೊರಡಿಸಿರುವ ಅಧಿಸೂಚನೆ ಪರೋಪಕಾರಿ ದೃಷ್ಟಿಯಿಂದ ಕೂಡಿದೆ‌‌‌. ಆದರೆ, ನೈಜವಾಗಿ ಹೇಳುವುದಾದರೆ ರಾಜ್ಯ ಸರಕಾರದ ಈ ಆದೇಶ ಸಂವಿಧಾನದ 14ನೇ ವಿಧಿ ಅಡಿಯ ಸಮಾನತೆ ಹಕ್ಕಿಗೆ ವಿರುದ್ಧವಾಗಿದೆ. ಲಿಂಗ ತಾರತಮ್ಯಕ್ಕೆ ಎಡೆ ಮಾಡಿಕೊಡುತ್ತದೆ. ಮಹಿಳೆಯರು ಪುರುಷರಿಗಿಂತ ದುರ್ಬಲರು ಎಂಬ ಭಾವನೆಯನ್ನು ಉದ್ಯೋಗದಾತರಲ್ಲಿ ಮೂಡಿಸುತ್ತದೆ. ಇದರಿಂದ, ಮಹಿಳಾ ಉದ್ಯೋಗಿಗಳನ್ನು ನೇಮಕ ಮಾಡಲು ಹಾಗೂ ಬಡ್ತಿ ನೀಡಲು ಕಂಪನಿಗಳು ಹಿಂದೇಟು ಹಾಕುತ್ತವೆ ಎಂದು ಅರ್ಜಿದಾರರು ಆಕ್ಷೇಪಿಸಿದ್ದಾರೆ. ಋತುಚಕ್ರದ ಸಮಯದಲ್ಲಿ ಮಾಸಿಕ‌ ಒಂದು ದಿನ ಕಡ್ಡಾಯ ರಜೆ ನೀಡುವುದರಿಂದ ಸ್ಪರ್ಧಾತ್ಮಕ ವೃತ್ತಿ ಜೀವನದಲ್ಲಿ ಮಹಿಳೆಯರಿಗೆ ಹಿನ್ನಡೆಯಾಗುವ ಸಾಧ್ಯತೆಯಿದೆ. ಉದ್ಯೋಗದಾತರಿಗೆ ಹೊರೆ ಹೆಚ್ಚುತ್ತದೆ. ಮಹಿಳಾ ಉದ್ಯೋಗಿಗಳ ದಕ್ಷತೆ ಕಡಿಮೆ ಮಾಡುತ್ತದೆ. ಮಹಿಳಾ ನೌಕರರ ಸಬಲೀಕರಣಕ್ಕೂ ಅಡ್ಡಿಯಾಗುತ್ತದೆ ಎಂದು ಅರ್ಜಿಯಲ್ಲಿ ಆಕ್ಷೇಪಿಸಲಾಗಿದೆ.

ವಾರ್ತಾ ಭಾರತಿ 26 Mar 2026 11:58 pm

ಮಧ್ಯಪ್ರದೇಶ| ಟೆಕ್ಕಿಯನ್ನು ಕಾರು ಹರಿಸಿ ಹತ್ಯೆ: ಪ್ರಕರಣ ದಾಖಲು

ಇಂದೋರ್‌ (ಮ.ಪ್ರ),ಮಾ.26: ಬುಧವಾರ ತಡರಾತ್ರಿ ನಗರದ ಐಷಾರಾಮಿ ವಸತಿ ಸೊಸೈಟಿಯೊಂದರಲ್ಲಿ ಹದಿಹರೆಯದ ಯುವಕನೋರ್ವ ಅತಿವೇಗದಿಂದ ಚಲಾಯಿಸುತ್ತಿದ್ದ ಕಾರು ಢಿಕ್ಕಿ ಹೊಡೆದ ಪರಿಣಾಮ ಮಹಿಳೆಯೋರ್ವರು ಮೃತಪಟ್ಟಿದ್ದಾರೆ. ಇನ್ಫೋಸಿಸ್‌ನಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ ಶಂಪಾ ಪಾಠಕ್ (ಪಾಂಡೆ) ಮೃತ ಮಹಿಳೆಯಾಗಿದ್ದು, ಚಾಲಕ ಮೋಹಿತ್ ಚೌಧರಿ (18) ಮತ್ತು ಆತನ ತಂದೆ, ಖಾಸಗಿ ಕಂಪೆನಿಯಲ್ಲಿ ಇಲೆಕ್ಟ್ರಿಕಲ್ ಇಂಜಿನಿಯರ್ ಆಗಿರುವ ಕುಲದೀಪ ಚೌಧರಿ ವಿರುದ್ಧ ಕೊಲೆ ಪ್ರಕರಣವನ್ನು ದಾಖಲಿಸಿಕೊಂಡಿರುವ ಪೊಲೀಸರು ಅವರನ್ನು ಬಂಧಿಸಿದ್ದಾರೆ. ಬುಧವಾರ ರಾತ್ರಿ 10:30ರ ಸುಮಾರಿಗೆ ಶಿವ ವಾಟಿಕಾ ಸಮೃದ್ಧಿ ಎನ್‌ಕ್ಲೇವ್‌ನಲ್ಲಿ ಈ ಘಟನೆ ನಡೆದಿದೆ. ಕುಲದೀಪ್ ವಸತಿ ಸಂಕೀರ್ಣದಲ್ಲಿ ಪೆಂಟ್‌ಹೌಸ್ ಹೊಂದಿದ್ದು,ಅದನ್ನು ಆಗಾಗ್ಗೆ ಅಲ್ಪಾವಧಿಗೆ ವಿದೇಶಿಯರು ಸೇರಿದಂತೆ ಹೊರಗಿನವರಿಗೆ, ವಿಶೇಷವಾಗಿ ಯುವಕರು ಮತ್ತು ಯುವತಿಯರಿಗೆ ಬಾಡಿಗೆ ನೀಡುತ್ತಿದ್ದ. ಇದನ್ನು ವಿರೋಧಿಸಿದ್ದ ಸೊಸೈಟಿಯ ನಿವಾಸಿಗಳು ಪೆಂಟ್‌ಹೌಸ್‌ನ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಿದ್ದರು. ಇದರಿಂದ ಕುಪಿತಗೊಂಡಿದ್ದ ಕುಲದೀಪ್ ಮತ್ತು ಮೋಹಿತ್ ಇಡೀ ಸೊಸೈಟಿಯ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಿದ್ದರು. ಈ ವಿಷಯದಲ್ಲಿ ತಂದೆ-ಮಗ ಮತ್ತು ಸೊಸೈಟಿ ನಿವಾಸಿಗಳ ನಡುವೆ ವಾಗ್ವಾದವುಂಟಾಗಿ ಅದು ಹೊಡೆದಾಟಕ್ಕೆ ತಿರುಗಿತ್ತು. ಅಲ್ಲಿಂದ ಪಾರಾಗಲು ಕುಲದೀಪ್ ಮತ್ತು ಮೋಹಿತ್ ಪ್ರಯತ್ನಿಸಿದಾಗ ನಿವಾಸಿಗಳು ಅವರನ್ನು ತಡೆಯಲು ಪ್ರಯತ್ನಿಸಿದ್ದರು. ಈ ವೇಳೆ ಮೋಹಿತ್ ಕಾರನ್ನು ಗುಂಪಿನ ನಡುವೆಯೇ ವೇಗವಾಗಿ ಚಲಾಯಿಸಿ ಶಂಪಾಗೆ ಢಿಕ್ಕಿ ಹೊಡೆದಿದ್ದು, ಅವರನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ತಲೆಗೆ ಗಾಯಗೊಂಡಿದ್ದ ಅವರು ತೀವ್ರ ರಕ್ತಸ್ರಾವದಿಂದಾಗಿ ಉಸಿರು ಚೆಲ್ಲಿದ್ದಾರೆ. ಘಟನೆಯಲ್ಲಿ ಇನ್ನೋರ್ವ ಮಹಿಳೆ ಗಾಯಗೊಂಡಿದ್ದಾರೆ. ಉತ್ತರ ಪ್ರದೇಶದ ಅಯೋಧ್ಯೆ ಮೂಲದ ಶಂಪಾ ತನ್ನ ಪತಿ ಮತ್ತು ಇಬ್ಬರು ಮಕ್ಕಳೊಂದಿಗೆ ಕಳೆದ 3-4 ವರ್ಷಗಳಿಂದಲೂ ಇಂದೋರ್‌ನಲ್ಲಿ ವಾಸವಾಗಿದ್ದು, ಮಾ.13ರಂದಷ್ಟೇ ಶಿವ ವಾಟಿಕಾ ಸಮೃದ್ಧಿ ಎನ್‌ಕ್ಲೇವ್‌ನಲ್ಲಿ ಹೊಸದಾಗಿ ಖರೀದಿಸಿದ್ದ ಫ್ಲ್ಯಾಟ್‌ಗೆ ಸ್ಥಳಾಂತರಗೊಂಡಿದ್ದರು.

ವಾರ್ತಾ ಭಾರತಿ 26 Mar 2026 11:55 pm

ಕೊಪ್ಪಳ | ಸೊಸೆ ನಾಪತ್ತೆಯಾದ ಆಘಾತಕ್ಕೆ ಮಾವ ಮೃತ್ಯು

ಕೊಪ್ಪಳ : ಮದುವೆಯಾದ ತಿಂಗಳಲ್ಲೇ ನವವಿವಾಹಿತೆಯೊಬ್ಬಳು ದಿಢೀರ್ ನಾಪತ್ತೆಯಾಗಿದ್ದು, ಆಘಾತ ತಾಳಲಾರದೆ ಆಕೆಯ ಮಾವ ಹೃದಯಾಘಾತದಿಂದ ಮೃತಪಟ್ಟಿರುವ ವಿಷಾದನೀಯ ಘಟನೆ ನಗರದ ಗೌರಿ ಅಂಗಳದಲ್ಲಿ ವರದಿಯಾಗಿದೆ. ಘಟನೆಯ ವಿವರ : ಕೊಪ್ಪಳದ ನಿವಾಸಿ ನಾಗರಾಜ್ ಹಾಗೂ ರಾಯಚೂರು ಜಿಲ್ಲೆಯ ಸಿಂಧನೂರಿನ ಸಂಜನಾ ಅವರ ವಿವಾಹ ಕಳೆದ ಫೆ.8ರಂದು ನಡೆದಿತ್ತು. ಮಾ. 21ರಂದು ರಾತ್ರಿ ಸುಮಾರು 8:30ರ ಸುಮಾರಿಗೆ ಸಂಜನಾ ಅವರಿಗೆ ಅಸ್ವಸ್ಥತೆ ಕಾಣಿಸಿಕೊಂಡಿದೆ ಎಂದು ಪತಿ ನಾಗರಾಜ್‌ಗೆ ತಿಳಿಸಿದ್ದಾರೆ. ಪತ್ನಿಗಾಗಿ ಔಷಧ ತರಲು ನಾಗರಾಜ್ ಮಾರುಕಟ್ಟೆಗೆ ತೆರಳಿದ್ದರು. ಕೇವಲ 15 ನಿಮಿಷಗಳಲ್ಲಿ ಮನೆಗೆ ವಾಪಸ್ ಬಂದಾಗ ಪತ್ನಿ ಸಂಜನಾ ನಾಪತ್ತೆಯಾಗಿರುವುದು ಗಮನಕ್ಕೆ ಬಂದಿದೆ. ತಕ್ಷಣವೇ ಆತಂಕಗೊಂಡ ಅವರು ಸಂಬಂಧಿಕರು ಹಾಗೂ ಪರಿಚಿತರ ಬಳಿ ವಿಚಾರಿಸಿದರೂ ಯಾವುದೇ ಸುಳಿವು ಸಿಗಲಿಲ್ಲ. ಸೊಸೆ ನಾಪತ್ತೆಯಾದ ಸುದ್ದಿ ತಿಳಿದ ನಾಗರಾಜ್ ಅವರ ತಂದೆ ಖಂಡೆಪ್ಪ ಅವರು ಮಾನಸಿಕವಾಗಿ ತೀವ್ರವಾಗಿ ನೊಂದಿದ್ದರು. ಈ ಆಘಾತವನ್ನು ತಾಳಲಾರದೆ ಅದೇ ರಾತ್ರಿ ಹೃದಯಾಘಾತಕ್ಕೊಳಗಾಗಿ ಕೊನೆಯುಸಿರೆಳೆದಿದ್ದಾರೆ. ಮದುವೆಯ ಸಂಭ್ರಮದ ಕಳೆ ಇನ್ನೂ ಮಾಸುವ ಮುನ್ನವೇ ಮನೆಗೆ ದುಃಖದ ನೆರಳು ಆವರಿಸಿದ್ದು, ಸ್ಥಳೀಯರಲ್ಲಿ ಮರುಕ ಮೂಡಿಸಿದೆ. ನಾಪತ್ತೆಯಾಗಿರುವ ಸಂಜನಾ ಅವರ ಕೈಮೇಲೆ ‘ರವಿ’ ಎಂಬ ಹೆಸರಿನ ಟ್ಯಾಟೂ ಇರುವುದಾಗಿ ಪೊಲೀಸ್ ದೂರಿನಲ್ಲಿ ಉಲ್ಲೇಖಿಸಲಾಗಿದೆ. ಈ ಹೆಸರಿಗೂ ಯುವತಿಯ ನಾಪತ್ತೆಗೆ ಸಂಬಂಧವಿದೆಯೇ ಎಂಬ ನಿಟ್ಟಿನಲ್ಲಿ ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ಸಂಜನಾ ಪೋಷಕರ ಮನೆಗೂ ಹೋಗದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಪತ್ನಿಯ ನಾಪತ್ತೆ ಕುರಿತು ನಾಗರಾಜ್ ಕೊಪ್ಪಳ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದು, ಯುವತಿಯ ಪತ್ತೆಗೆ ಶೋಧ ಕಾರ್ಯ ಚುರುಕುಗೊಳಿಸಿದ್ದಾರೆ.

ವಾರ್ತಾ ಭಾರತಿ 26 Mar 2026 11:49 pm

ಲೋಕಾಯುಕ್ತ ಎಡಿಜಿಪಿ ಎಂ.ಚಂದ್ರಶೇಖರ್‌‌ಗೆ ಬೆದರಿಕೆ ಆರೋಪ; ಮಧ್ಯಸ್ಥಿಕೆದಾರರ ನೇಮಕಕ್ಕೆ ಎಚ್‌ಡಿಕೆ ಸಮ್ಮತಿ

ಬೆಂಗಳೂರು: ಲೋಕಾಯುಕ್ತ ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕ ಹಾಗೂ ವಿಶೇಷ ಪೊಲೀಸ್‌ ತನಿಖಾ ದಳದ (ಎಸ್‌ಐಟಿ) ಮುಖ್ಯಸ್ಥ ಎಂ. ಚಂದ್ರಶೇಖರ್‌ ಅವರಿಗೆ ಬೆದರಿಕೆಯೊಡ್ಡಿದ ಆರೋಪದಲ್ಲಿ ತಮ್ಮ ವಿರುದ್ಧ ದಾಖಲಾಗಿರುವ ಪ್ರಕರಣದಲ್ಲಿ ಮಧ್ಯಸ್ಥಿಕೆದಾರರನ್ನು ನೇಮಿಸಲು ಸಮ್ಮತಿ ಇದೆ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಪರ ವಕೀಲರು ಹೈಕೋರ್ಟ್‌ಗೆ ತಿಳಿಸಿದರು. ಬೆಂಗಳೂರಿನ ಸಂಜಯನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್ಐಆರ್ ಹಾಗೂ ನಗರದ 42ನೇ ಎಸಿಎಂಎಂ ನ್ಯಾಯಾಲಯದ (ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ) ವಿಚಾರಣೆ ರದ್ದು ಕೋರಿ ಎಚ್.ಡಿ. ಕುಮಾರಸ್ವಾಮಿ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಸುನೀಲ್‌ ದತ್‌ ಯಾದವ್‌ ಅವರಿದ್ದ ಏಕಸದಸ್ಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿತು. ಕುಮಾರಸ್ವಾಮಿ ಪರ ಹಾಜರಾದ ಹಿರಿಯ ವಕೀಲ ಹಷ್ಮತ್‌ ಪಾಷಾ ಅವರು, ಪ್ರಕರಣದಲ್ಲಿ ಮಧ್ಯಸ್ಥಿಕೆದಾರರನ್ನು ನೇಮಿಸುವುದಕ್ಕೆ ಅರ್ಜಿದಾರರು ಒಪ್ಪಿದ್ದಾರೆ. ಆದರೆ, ಮಧ್ಯಸ್ಥಿಕೆದಾರರ ಮುಂದೆ ಚಂದ್ರಶೇಖರ್‌ ಅವರ ಎದುರು ಬದುರು ಕೂರಲು ಸಿದ್ಧರಿಲ್ಲ. ಮಧ್ಯಸ್ಥಿಕೆದಾರರು ಇಬ್ಬರ ಅಭಿಪ್ರಾಯ ಪಡೆಯಬಹುದು ಎಂದರು. ದೂರುದಾರರಾದ ಎಂ. ಚಂದ್ರಶೇಖರ್‌ ಪರ ವಕೀಲರು, ಕುಮಾರಸ್ವಾಮಿ ಪ್ರಭಾವಿಯಾಗಿದ್ದಾರೆ. ಚಂದ್ರಶೇಖರ್‌ ಅಧಿಕಾರಿಯಷ್ಟೇ. ನ್ಯಾಯಾಲಯ ನಮ್ಮ ಆತಂಕವನ್ನು ಪರಿಗಣಿಸಬೇಕು ಎಂದರು. ಆಗ ನ್ಯಾಯಪೀಠ, ಮಧ್ಯಸ್ಥಿಕೆದಾರರು ಯಾರಿರಬೇಕು ಎಂಬುದನ್ನು ನ್ಯಾಯಾಲಯ ನಿರ್ಧರಿಸಲಿದೆ. ಇಬ್ಬರಿಗೂ ಒಪ್ಪಿಗೆಯಾಗುವ ಮಧ್ಯಸ್ಥಿಕೆದಾರರನ್ನು ನೇಮಿಸಲಾಗುವುದು. ಮಧ್ಯಸ್ಥಿಕೆದಾರರನ್ನು ನೇಮಿಸುವ ಕೆಲಸವನ್ನು ನ್ಯಾಯಾಲಯಕ್ಕೆ ಬಿಡಿ. ದೂರುದಾರ ಅಧಿಕಾರಿ ಚಂದ್ರಶೇಖರ್ ಅವರ ಆತಂಕದ ಬಗ್ಗೆ ಅರಿವಿದೆ ಎಂದು ಹೇಳಿತು. ಅಂತಿಮವಾಗಿ, ದೂರುದಾರ ಚಂದ್ರಶೇಖರ್‌ ಪರ ವಕೀಲರ ಕೋರಿಕೆಯಂತೆ ರಾಜ್ಯ ಹೆಚ್ಚುವರಿ ಸರ್ಕಾರಿ ಅಭಿಯೋಜಕ ಬಿ.ಎನ್‌. ಜಗದೀಶ್‌ ಅವರಿಗೆ ಚಂದ್ರಶೇಖರ್‌ ಜತೆ ಸಮಾಲೋಚಿಸುವಂತೆ ಸೂಚಿಸಿ, ವಿಚಾರಣೆಯನ್ನು ಏಪ್ರಿಲ್‌ 2ಕ್ಕೆ ಮುಂದೂಡಿತು. ಅರ್ಜಿಯ ಕಳೆದ ವಿಚಾರಣೆ ವೇಳೆ ನ್ಯಾಯಪೀಠ, ಉಭಯ ಪಕ್ಷಕಾರರು ಒಪ್ಪಿದರೆ ಮಧ್ಯಸ್ಥಿಕೆದಾರರನ್ನು ನೇಮಿಸಲಾಗುವುದು. ಅರ್ಜಿದಾರರು ಹಾಗೂ ಪ್ರತಿವಾದಿಗಳು ಆನ್‌ಲೈನ್‌ ಅಥವಾ ಭೌತಿಕವಾಗಿ ತಮಗೆ ಅನುಕೂಲವಾಗುವ ರೀತಿಯಲ್ಲಿ ಮಧ್ಯಸ್ಥಿಕೆದಾರರ ಮುಂದೆ ಹಾಜರಾಗಬಹುದು ಎಂದು ಸಲಹೆ ನೀಡಿತ್ತಲ್ಲದೆ, ಮಧ್ಯಸ್ಥಿಕೆದಾರರ ಉಪಸ್ಥಿತಿಯಲ್ಲಿ ಪ್ರಕರಣಕ್ಕೆ ಇತಿಶ್ರೀ ಹಾಡುವ ಇಂಗಿತ ವ್ಯಕ್ತಪಡಿಸಿತ್ತು.

ವಾರ್ತಾ ಭಾರತಿ 26 Mar 2026 11:49 pm

IPL: ಲೀಗ್ ಹಂತದ ಸಂಪೂರ್ಣ ವೇಳಾಪಟ್ಟಿ ಪ್ರಕಟ

ಹೊಸದಿಲ್ಲಿ, ಮಾ.26: ಈ ವರ್ಷದ ಇಂಡಿಯನ್ ಪ್ರೀಮಿಯರ್ ಲೀಗ್ ಟಿ-20 ಪಂದ್ಯಾವಳಿಯ ಎರಡನೇ ಹಂತದ ಪಂದ್ಯಗಳ ಸಂಪೂರ್ಣ ವೇಳಾಪಟ್ಟಿಯನ್ನು ಬಿಸಿಸಿಐ ಗುರುವಾರ ಪ್ರಕಟಿಸಿದೆ. ಎರಡನೇ ಹಂತದ ಲೀಗ್ ಪಂದ್ಯಗಳು ಎಪ್ರಿಲ್ 13ರಿಂದ ಮೇ 24ರ ತನಕ ನಡೆಯಲಿದೆ ಎಂದು ಬಿಸಿಸಿಐ ಖಚಿತಪಡಿಸಿದೆ. ಅಸ್ಸಾಂ, ಪಶ್ಚಿಮಬಂಗಾಳ ಹಾಗೂ ತಮಿಳುನಾಡಿನ ವಿಧಾನಸಭಾ ಚುನಾವಣೆಯ ದಿನಾಂಕ ಘೋಷಣೆ ಬಾಕಿ ಇದ್ದ ಕಾರಣ ಬಿಸಿಸಿಐ ಈ ಹಿಂದೆ ಮೊದಲ 20 ಪಂದ್ಯಗಳ ವೇಳಾಪಟ್ಟಿಯನ್ನು ಪ್ರಕಟಿಸಿತ್ತು. ಚುನಾವಣೆಯಿಂದ ಪಂದ್ಯಾವಳಿಗೆ ಕಡಿಮೆ ಅಡಚಣೆಯನ್ನು ಖಚಿತಪಡಿಸಿಕೊಂಡ ನಂತರ ಗುರುವಾರ ಪ್ಲೇ ಆಫ್ ಪಂದ್ಯಗಳನ್ನು ಹೊರತುಪಡಿಸಿ ಉಳಿದ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ. ಪಶ್ಚಿಮ ಏಶ್ಯದಲ್ಲಿ ಈಗ ನಡೆಯುತ್ತಿರುವ ಯುದ್ದದಿಂದಾಗಿ ಇಂಧನ ಬಿಕ್ಕಟ್ಟಿನಿಂದಾಗಿ ಸಾರಿಗೆ ವ್ಯವಸ್ಥೆ ಅಥವಾ ಪ್ರೇಕ್ಷಕರ ಹಾಜರಾತಿಯ ಮೇಲೆ ಸಂಭಾವ್ಯಪರಿಣಾಮದ ಸುತ್ತ ಕಳವಳ ಆವರಿಸಿದ ಹೊರತಾಗಿಯೂ ಪಂದ್ಯಗಳನ್ನು ಕಡಿತಗೊಳಿಸದೆ ಪಂದ್ಯಾವಳಿಯನ್ನು ಆಯೋಜಿಸಲು ಬಿಸಿಸಿಐ ನಿರ್ಧರಿಸಿದೆ. ಮಾರ್ಚ್ 28ರಿಂದ ಎಪ್ರಿಲ್ 11 ರ ತನಕ ಮೊದಲ ಹಂತದಲ್ಲಿ 20 ಲೀಗ್ ಪಂದ್ಯಗಳು ನಡೆಯಲಿವೆ. ಹಾಲಿ ಚಾಂಪಿಯನ್ ಆರ್‌ಸಿಬಿ ತಂಡವು ಸನ್‌ರೈಸರ್ಸ್ ಹೈದರಾಬಾದ್ ತಂಡದ ವಿರುದ್ಧ ಮಾ.28ರಂದು ಉದ್ಘಾಟನಾ ಪಂದ್ಯವನ್ನು ಆಡಲಿದೆ. ಇಂದಿನ ವೇಳಾಪಟ್ಟಿಯ ಪ್ರಕಾರ ಎಪ್ರಿಲ್ 13ರಿಂದ ಮೇ 24ರ ತನಕ ದೇಶದ 12 ತಾಣಗಳಲ್ಲಿ ಒಟ್ಟು 50 ಪಂದ್ಯಗಳು ನಡೆಯಲಿವೆ. ಬೆಂಗಳೂರು, ಮುಂಬೈ, ಚೆನ್ನೈ, ಕೋಲ್ಕತಾ, ಹೊಸದಿಲ್ಲಿ, ಅಹ್ಮದಾಬಾದ್, ಹೈದರಾಬಾದ್, ಲಕ್ನೊ, ಜೈಪುರ, ಧರ್ಮಶಾಲಾ, ರಾಯ್ಪುರ ಹಾಗೂ ನ್ಯೂ ಚಂಡಿಗಡದಲ್ಲಿ ಲೀಗ್ ಪಂದ್ಯಗಳು ನಡೆಯಲಿವೆ. ಎ.13ರಂದು ಸನ್‌ರೈಸರ್ಸ್ ಹೈದರಾಬಾದ್ ತಂಡವು ರಾಜಸ್ಥಾನ ರಾಯಲ್ಸ್ ತಂಡವನ್ನು ಎದುರಿಸುವ ಮೂಲಕ ಎರಡನೇ ಹಂತದ ಲೀಗ್ ಪಂದ್ಯಗಳು ಆರಂಭವಾಗಲಿವೆ. ಆರ್‌ಸಿಬಿ, ರಾಯ್ಪುರವನ್ನು ತನ್ನ ಎರಡನೇ ತವರು ಮೈದಾನವಾಗಿ ಆಯ್ಕೆ ಮಾಡಿಕೊಂಡಿದೆ. ಧರ್ಮಶಾಲಾದಲ್ಲಿ ಈ ಬಾರಿ ಐಪಿಎಲ್ ಪಂದ್ಯ ನಡೆಯಲಿದೆ. ಕಳೆದ ವರ್ಷ ಗಡಿ ಭಾಗದಲ್ಲಿ ಉದ್ವಿಗ್ನ ಪರಿಸ್ಥಿತಿ ತಲೆತೋರಿದ ಕಾರಣ ಡೆಲ್ಲಿ ಹಾಗೂ ಪಂಜಾಬ್ ನಡುವಿನ ಪಂದ್ಯ ರದ್ದಾಗಿತ್ತು. ಈ ವರ್ಷ ಮೇ 11ರಂದು ಹಿಮಾಚಲ ಪ್ರದೇಶ ಕ್ರಿಕೆಟ್ ಸಂಸ್ಥೆಯು ಡೆಲ್ಲಿ-ಪಂಜಾಬ್ ನಡುವಿನ ಐಪಿಎಲ್ ಪಂದ್ಯವನ್ನೇ ಆಯೋಜಿಸಲಿದೆ. ಐಪಿಎಲ್ 2026 ಸಂಪೂರ್ಣ ವೇಳಾಪಟ್ಟಿ ದಿನಾಂಕ ತಂಡಗಳು ಸಮಯ ಸ್ಥಳ ಮಾ.28 ಹೈದರಾಬಾದ್-ಆರ್‌ಸಿಬಿ ರಾತ್ರಿ 7:30 ಬೆಂಗಳೂರು ಮಾ.29 ಕೆಕೆಆರ್-ಮುಂಬೈ ರಾತ್ರಿ 7:30 ಮುಂಬೈ ಮಾ.30 ಚೆನ್ನೈ-ರಾಜಸ್ಥಾನ ರಾತ್ರಿ 7:30 ಗುವಾಹಟಿ ಮಾ.31 ಗುಜರಾತ್-ಪಂಜಾಬ್ ರಾತ್ರಿ 7:30 ನ್ಯೂ ಚಂಡಿಗಡ ಎ.1 ಡೆಲ್ಲಿ-ಲಕ್ನೊ ರಾತ್ರಿ 7:30 ಲಕ್ನೊ ಎ.2 ಹೈದರಾಬಾದ್-ಕೆಕೆಆರ್ ರಾತ್ರಿ 7:30 ಕೋಲ್ಕತಾ ಎ.3 ಪಂಜಾಬ್-ಚೆನ್ನೈ ರಾತ್ರಿ 7:30 ಚೆನ್ನೈ ಎ.4 ಮುಂಬೈ-ಡೆಲ್ಲಿ ಮಧ್ಯಾಹ್ನ 3:30 ಹೊಸದಿಲ್ಲಿ ಎ.4 ರಾಜಸ್ಥಾನ-ಗುಜರಾತ್ ರಾತ್ರಿ 7:30 ಅಹ್ಮದಾಬಾದ್ ಎ.5 ಲಕ್ನೊ-ಹೈದರಾಬಾದ್ ಮಧ್ಯಾಹ್ನ 3:30 ಹೈದರಾಬಾದ್ ಎ.5 ಚೆನ್ನೈ-ಆರ್‌ಸಿಬಿ ರಾತ್ರಿ 7:30 ಬೆಂಗಳೂರು ಎ.6 ಪಂಜಾಬ್-ಕೆಕೆಆರ್ ರಾತ್ರಿ 7:30 ಕೋಲ್ಕತಾ ಎ.7 ಮುಂಬೈ-ರಾಜಸ್ಥಾನ ರಾತ್ರಿ 7:30 ಗುವಾಹಟಿ ಎ.8 ಗುಜರಾತ್-ಡೆಲ್ಲಿ ರಾತ್ರಿ 7:30 ಹೊಸದಿಲ್ಲಿ ಎ.9 ಲಕ್ನೊ-ಕೆಕೆಆರ್ ರಾತ್ರಿ 7:30 ಕೋಲ್ಕತಾ ಎ.10 ಆರ್‌ಸಿಬಿ-ರಾಜಸ್ಥಾನ ರಾತ್ರಿ 7:30 ಗುವಾಹಟಿ ಎ.11 ಹೈದರಾಬಾದ್-ಪಂಜಾಬ್ ಮಧ್ಯಾಹ್ನ 3:30 ನ್ಯೂ ಚಂಡಿಗಡ ಎ.11 ಡೆಲ್ಲಿ-ಚೆನ್ನೈ ರಾತ್ರಿ 7:30 ಚೆನ್ನೈ ಎ.12 ಗುಜರಾತ್-ಲಕ್ನೊ ಮಧ್ಯಾಹ್ನ 3:30 ಲಕ್ನೊ ಎ.12 ಆರ್‌ಸಿಬಿ-ಮುಂಬೈ ರಾತ್ರಿ 7:30 ಮುಂಬೈ ಎ.13 ರಾಜಸ್ಥಾನ-ಹೈದರಾಬಾದ್ ರಾತ್ರಿ 7:30 ಹೈದರಾಬಾದ್ ಎ.14 ಕೆಕೆಆರ್-ಚೆನ್ನೈ ರಾತ್ರಿ 7:30 ಚೆನ್ನೈ ಎ.15 ಲಕ್ನೊ-ಆರ್‌ಸಿಬಿ ರಾತ್ರಿ 7:30 ಬೆಂಗಳೂರು ಎ.16 ಪಂಜಾಬ್-ಮುಂಬೈ ರಾತ್ರಿ 7:30 ಮುಂಬೈ ಎ.17 ಕೆಕೆಆರ್-ಗುಜರಾತ್ ರಾತ್ರಿ 7:30 ಅಹ್ಮದಾಬಾದ್ ಎ.18 ಡೆಲ್ಲಿ-ಆರ್‌ಸಿಬಿ ಮಧ್ಯಾಹ್ನ 3:30 ಬೆಂಗಳೂರು ಎ.18 ಚೆನ್ನೈ-ಹೈದರಾಬಾದ್ ರಾತ್ರಿ 7:30 ಹೈದರಾಬಾದ್ ಎ.19 ರಾಜಸ್ಥಾನ-ಕೆಕೆಆರ್ ಮಧ್ಯಾಹ್ನ 3:30 ಕೋಲ್ಕತಾ ಎ.19 ಲಕ್ನೊ-ಪಂಜಾಬ್ ರಾತ್ರಿ 7:30 ನ್ಯೂ ಚಂಡಿಗಡ ಎ.20 ಮುಂಬೈ-ಗುಜರಾತ್ ರಾತ್ರಿ 7:30 ಅಹ್ಮದಾಬಾದ್ ಎ.21 ಡೆಲ್ಲಿ-ಹೈದರಾಬಾದ್ ರಾತ್ರಿ 7:30 ಹೈದರಾಬಾದ್ ಎ.22 ರಾಜಸ್ಥಾನ-ಲಕ್ನೊ ರಾತ್ರಿ 7:30 ಲಕ್ನೊ ಎ.23 ಚೆನ್ನೈ-ಮುಂಬೈ ರಾತ್ರಿ 7:30 ಮುಂಬೈ ಎ.24 ಗುಜರಾತ್-ಆರ್‌ಸಿಬಿ ರಾತ್ರಿ 7:30 ಬೆಂಗಳೂರು ಎ.25 ಪಂಜಾಬ್-ಡೆಲ್ಲಿ ಮಧ್ಯಾಹ್ನ 3:30 ಹೊಸದಿಲ್ಲಿ ಎ.25 ಹೈದರಾಬಾದ್-ರಾಜಸ್ಥಾನ ರಾತ್ರಿ 7:30 ಜೈಪುರ ಎ.26 ಚೆನ್ನೈ-ಗುಜರಾತ್ ಮಧ್ಯಾಹ್ನ 3:30 ಅಹ್ಮದಾಬಾದ್ ಎ.26 ಕೆಕೆಆರ್-ಲಕ್ನೊ ರಾತ್ರಿ 7:30 ಲಕ್ನೊ ಎ.27 ಆರ್‌ಸಿಬಿ-ಡೆಲ್ಲಿ ರಾತ್ರಿ 7:30 ಹೊಸದಿಲ್ಲಿ ಎ.28 ರಾಜಸ್ಥಾನ-ಪಂಜಾಬ್ ರಾತ್ರಿ 7:30 ನ್ಯೂ ಚಂಡಿಗಡ ಎ.29 ಹೈದರಾಬಾದ್-ಮುಂಬೈ ರಾತ್ರಿ 7:30 ಮುಂಬೈ ಎ.30 ಆರ್‌ಸಿಬಿ-ಗುಜರಾತ್ ರಾತ್ರಿ 7:30 ಅಹ್ಮದಾಬಾದ್ ಮೇ 1 ಡೆಲ್ಲಿ-ರಾಜಸ್ಥಾನ ರಾತ್ರಿ 7:30 ಜೈಪುರ ಮೇ2 ಮುಂಬೈ-ಚೆನ್ನೈ ರಾತ್ರಿ 7:30 ಚೆನ್ನೈ ಮೇ 3 ಕೆಕೆಆರ್-ಹೈದರಾಬಾದ್ ಮಧ್ಯಾಹ್ನ 3:30 ಹೈದರಾಬಾದ್ ಮೇ 3 ಪಂಜಾಬ್-ಗುಜರಾತ್ ರಾತ್ರಿ 7:30 ಅಹ್ಮದಾಬಾದ್ ಮೇ 4 ಲಕ್ನೊ-ಮುಂಬೈ ರಾತ್ರಿ 7:30 ಮುಂಬೈ ಮೇ 5 ಚೆನ್ನೈ-ಡೆಲ್ಲಿ ರಾತ್ರಿ 7:30 ಹೊಸದಿಲ್ಲಿ ಮೇ 6 ಪಂಜಾಬ್-ಹೈದರಾಬಾದ್ ರಾತ್ರಿ 7:30 ಹೈದರಾಬಾದ್ ಮೇ 7 ಆರ್‌ಸಿಬಿ-ಲಕ್ನೊ ರಾತ್ರಿ 7:30 ಲಕ್ನೊ ಮೇ 8 ಕೆಕೆಆರ್-ಡೆಲ್ಲಿ ರಾತ್ರಿ 7:30 ಹೊಸದಿಲ್ಲಿ ಮೇ 9 ಗುಜರಾತ್-ರಾಜಸ್ಥಾನ ರಾತ್ರಿ 7:30 ಜೈಪುರ ಮೇ 10 ಲಕ್ನೊ-ಚೆನ್ನೈ ಮಧ್ಯಾಹ್ನ 3:30 ಚೆನ್ನೈ ಮೇ 10 ಮುಂಬೈ-ಆರ್‌ಸಿಬಿ ರಾತ್ರಿ 7:30 ರಾಯ್ಪುರ ಮೇ 11 ಡೆಲ್ಲಿ-ಪಂಜಾಬ್ ರಾತ್ರಿ 7:30 ಧರ್ಮಶಾಲಾ ಮೇ 12 ಹೈದರಾಬಾದ್-ಗುಜರಾತ್ ರಾತ್ರಿ 7:30 ಅಹ್ಮದಾಬಾದ್ ಮೇ 13 ಕೆಕೆಆರ್-ಆರ್‌ಸಿಬಿ ರಾತ್ರಿ 7:30 ರಾಯ್ಪುರ ಮೇ 14 ಮುಂಬೈ-ಪಂಜಾಬ್ ರಾತ್ರಿ 7:30 ಧರ್ಮಶಾಲಾ ಮೇ 15 ಚೆನ್ನೈ-ಲಕ್ನೊ ರಾತ್ರಿ 7:30 ಲಕ್ನೊ ಮೇ 16 ಗುಜರಾತ್-ಕೆಕೆಆರ್ ರಾತ್ರಿ 7:30 ಕೋಲ್ಕತಾ ಮೇ 17 ಆರ್‌ಸಿಬಿ-ಪಂಜಾಬ್ ಮಧ್ಯಾಹ್ನ 3:30 ಧರ್ಮಶಾಲಾ ಮೇ 17 ರಾಜಸ್ಥಾನ-ಡೆಲ್ಲಿ ರಾತ್ರಿ 7:30 ಹೊಸದಿಲ್ಲಿ ಮೇ 18 ಹೈದರಾಬಾದ್-ಚೆನ್ನೈ ರಾತ್ರಿ 7:30 ಚೆನ್ನೈ ಮೇ19 ಲಕ್ನೊ-ರಾಜಸ್ಥಾನ ರಾತ್ರಿ 7:30 ಜೈಪುರ ಮೇ20 ಮುಂಬೈ-ಕೆಕೆಆರ್ ರಾತ್ರಿ 7:30 ಕೋಲ್ಕತಾ ಮೇ 21 ಗುಜರಾತ್-ಚೆನ್ನೈ ರಾತ್ರಿ 7:30 ಚೆನ್ನೈ ಮೇ 22 ಆರ್‌ಸಿಬಿ-ಹೈದರಾಬಾದ್ ರಾತ್ರಿ 7:30 ಹೈದರಾಬಾದ್ ಮೇ 23 ಪಂಜಾಬ್-ಲಕ್ನೊ ರಾತ್ರಿ 7:30 ಲಕ್ನೊ ಮೇ 24 ರಾಜಸ್ಥಾನ-ಮುಂಬೈ ಮಧ್ಯಾಹ್ನ 3:30 ಮುಂಬೈ ಮೇ 24 ಡೆಲ್ಲಿ-ಕೆಕೆಆರ್ ರಾತ್ರಿ 7:30 ಕೋಲ್ಕತಾ

ವಾರ್ತಾ ಭಾರತಿ 26 Mar 2026 11:44 pm

ಕಪ್ಪು ಸಮುದ್ರದಲ್ಲಿ ತುರ್ಕಿಯೆ ತೈಲ ಟ್ಯಾಂಕರ್ ಮೇಲೆ ದಾಳಿ

ಅಂಕಾರ, ಮಾ.26: ಗುರುವಾರ ತುರ್ಕಿಯೆ ರಾಷ್ಟ್ರದ ಇಸ್ತಾಂಬುಲ್ ಬಳಿ ಕಪ್ಪು ಸಮುದ್ರದಲ್ಲಿ ತುರ್ಕಿಯೆ ನಿರ್ವಹಿಸುವ, ರಶ್ಯದ ಕಚ್ಛಾ ತೈಲವನ್ನು ಸಾಗಿಸುತ್ತಿದ್ದ ತೈಲ ಟ್ಯಾಂಕರ್ ಮೇಲೆ ದಾಳಿ ನಡೆದಿರುವುದಾಗಿ ವರದಿಯಾಗಿದೆ. ಕಪ್ಪು ಸಮುದ್ರದನ್ನು ಮೆಡಿಟರೇನಿಯನ್‍ಗೆ ಸಂಪರ್ಕಿಸುವ ಪ್ರಮುಖ ಹಡಗು ಮಾರ್ಗ ಬೋಸ್ಫೊರಸ್‍ನಿಂದ ಸುಮಾರು 33 ಕಿ.ಮೀ ದೂರದಲ್ಲಿ, ಟರ್ಕಿಯ ಪ್ರಾದೇಶಿಕ ನೀರಿನ ಹೊರಗೆ ದಾಳಿ ಸಂಭವಿಸಿದೆ. ಸಿಯೆರಾ ಲಿಯೋನ್ ದೇಶದ ಧ್ವಜ ಹೊಂದಿದ್ದ ಟ್ಯಾಂಕರ್‌ನಲ್ಲಿ ಸುಮಾರು 10 ಲಕ್ಷ ಬ್ಯಾರೆಲ್‍ಗಳಷ್ಟು ಕಚ್ಛಾ ತೈಲವಿತ್ತು ಮತ್ತು ರಶ್ಯದ ನೊವೊರೊಸಿಯಿಸ್ಕ್ ನಗರದಿಂದ ಪ್ರಯಾಣ ಆರಂಭಿಸಿತ್ತು. ದಾಳಿಯ ಸಂದರ್ಭ ತುರ್ಕಿಯೆ 27 ಸಿಬ್ಬಂದಿಗಳು ಹಡಗಿನಲ್ಲಿದ್ದು ಯಾವುದೇ ಸಾವು-ನೋವು ಸಂಭವಿಸಿಲ್ಲ. ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತಿದ್ದು ರಕ್ಷಣಾ ತಂಡವನ್ನು ಸ್ಥಳಕ್ಕೆ ರವಾನಿಸಲಾಗಿದೆ ಎಂದು ಟರ್ಕಿಯ ಸಾರಿಗೆ ಇಲಾಖೆ ಹೇಳಿದೆ.

ವಾರ್ತಾ ಭಾರತಿ 26 Mar 2026 11:42 pm

ವಂದೇ ಭಾರತ್ ರೈಲಿನಲ್ಲಿ ಪೂರೈಸಿದ ಮೊಸರಿನಲ್ಲಿ ಹುಳು ಪತ್ತೆ: ಐಆರ್‌ಸಿಟಿಸಿಗೆ 10 ಲಕ್ಷ ರೂ.ದಂಡ

ಹೊಸದಿಲ್ಲಿ, ಮಾ. 26: ಪಾಟ್ನಾ-ಟಾಟಾನಗರ್ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಪೂರೈಸಲಾದ ಪ್ಯಾಕೇಟ್ ಮೊಸರಿನಲ್ಲಿ ಪ್ರಯಾಣಿಕರೋರ್ವರು ಹುಳಗಳನ್ನು ಪತ್ತೆ ಮಾಡಿದ ಬಳಿಕ ರೈಲ್ವೆ ಆಹಾರ ಪೂರೈಕೆದಾರನ ಗುತ್ತಿಗೆಯನ್ನು ರದ್ದುಗೊಳಿಸಿದೆ ಹಾಗೂ ಆತನ ಕಂಪೆನಿಗೆ 50 ಲಕ್ಷ ರೂ.ದಂಡ ವಿಧಿಸಿದೆ. ಆಹಾರ ಪೂರೈಕೆಯನ್ನು ಸರಿಯಾಗಿ ನಿರ್ವಹಿಸದೇ ಇರುವುದಕ್ಕಾಗಿ ರೈಲ್ವೆ ಸಚಿವಾಲಯ ತನ್ನದೇ ಕಂಪೆನಿ ಭಾರತೀಯ ರೈಲ್ವೆ ಕ್ಯಾಟರಿಂಗ್ ಹಾಗೂ ಪ್ರವಾಸೋದ್ಯಮ ನಿಗಮ (ಐಆರ್‌ಸಿಟಿಸಿ)ಕ್ಕೆ ಕೂಡ 10 ಲಕ್ಷ ರೂ. ದಂಡ ವಿಧಿಸಿದೆ. ಮಾರ್ಚ್ 15ರಂದು ವಂದೇ ಭಾರತ್ ರೈಲಿನಲ್ಲಿದ್ದ ಏಳು ಮಂದಿ ಪ್ರಯಾಣಿಕರ ಗುಂಪಿಗೆ ಭೋಜನದೊಂದಿಗೆ ಪ್ರಸಿದ್ಧ ಬ್ರ್ಯಾಂಡ್‌ನ ಮೊಸರು ಪ್ಯಾಕೇಟ್ ಪೂರೆಸಲಾಗಿತ್ತು. ಅದರಲ್ಲಿ ಒಂದು ಪ್ಯಾಕೇಟ್ ಅನ್ನು ತೆರೆದಾಗ ಜೀವಂತ ಹುಳ ಹಾಗೂ ಕೀಟಗಳು ಪತ್ತೆಯಾಗಿವೆ. ಪ್ರಯಾಣಿಕ ರಿತೇಶ್ ಸಿಂಗ್ ಕೂಡಲೇ ಈ ವಿಷಯವನ್ನು ತನ್ನ ‘ಎಕ್ಸ್’ನ ಹ್ಯಾಂಡಲ್‌ನಲ್ಲಿ ಹಾಕಿ ಗಮನ ಸೆಳೆದರು. ಅಲ್ಲದೆ, ಐಆರ್‌ಸಿಟಿಸಿ, ರೈಲ್ವೆ ಸಚಿವರು ಹಾಗೂ ಇತರರಿಗೆ ಅದನ್ನು ಟ್ಯಾಗ್ ಮಾಡಿದರು. ಘಟನೆಯ ಬಗ್ಗೆ ಹಾಗೂ ಅದಕ್ಕೆ ಸಂಬಂಧಿಸಿ ಕ್ರಮ ತೆಗೆದುಕೊಂಡ ತನ್ನ ವರದಿಯಲ್ಲಿ ಐಆರ್‌ಸಿಟಿಸಿ ಮೊಸರು ಪ್ಯಾಕೇಟ್ ಅನ್ನು ಪಾಟ್ನಾದಿಂದ ತರಲಾಗಿದೆ. ಪ್ಯಾಕೇಟ್‌ನಲ್ಲಿ 2026 ಮಾರ್ಚ್ 9 ಉತ್ಪಾದನಾ ದಿನಾಂಕ ಹಾಗೂ 2026 ಎಪ್ರಿಲ್ 7 ಅವಧಿ ಮುಗಿದ ದಿನಾಂಕವೆಂದು ದಾಖಲಾಗಿದೆ ಎಂದು ಕಂಡು ಹಿಡಿದಿದೆ. ಮೊಸರಿನಲ್ಲಿ ಹುಳು ಹಾಗೂ ಕೀಟಗಳು ಕಂಡು ಬಂದ ಹಿನ್ನೆಲೆಯಲ್ಲಿ ಅಧಿಕಾರಿಗಳು ಪ್ರಯಾಣಿಕರಲ್ಲಿ ಕ್ಷಮೆ ಕೋರಿದ್ದಾರೆ. ಅವರಿಗೆ ಒಣ ಹಣ್ಣುಗಳ ಮಿಶ್ರಣ ಹಾಗೂ ಕೆಲವು ಸಿಹಿ ತಿಂಡಿಗಳನ್ನು ನೀಡಿದ್ದಾರೆ ಎಂದು ವರದಿ ಹೇಳಿದೆ. ವರದಿಯ ಪ್ರಕಾರ, ಐಆರ್‌ಸಿಟಿಸಿ ಆಹಾರ ಪೂರೈಕೆ ಕಂಪೆನಿ ಕೃಷ್ಣ ಎಂಟರ್‌ಪ್ರೈಸಸ್‌ಗೆ 25,000 ದಂಡ ವಿಧಿಸಿತ್ತು. ಅಲ್ಲದೆ, ಆಹಾರ ಪದಾರ್ಥಗಳ ನಿರ್ವಹಣೆಯಲ್ಲಿ ನಿರ್ಲಕ್ಷ್ಯದ ಕುರಿತು ಎಚ್ಚರಿಸಿತ್ತು. ಆದರೆ, ಐಆರ್‌ಸಿಟಿಸಿ ಕ್ರಮದಿಂದ ಅಸಮಾಧಾನಗೊಂಡ ರೈಲ್ವೆ ಸಚಿವಾಲಯ ಬುಧವಾರ ಕೃಷ್ಣ ಎಂಟರ್‌ಪ್ರೈಸಸ್‌ನ ಗುತ್ತಿಗೆಯನ್ನು ರದ್ದುಗೊಳಿಸಿದೆ ಹಾಗೂ ದಂಡವನ್ನು 25 ಸಾವಿರ ರೂಪಾಯಿಯಿಂದ 50 ಲಕ್ಷ ರೂಪಾಯಿಗೆ ಏರಿಕೆ ಮಾಡಿದೆ.

ವಾರ್ತಾ ಭಾರತಿ 26 Mar 2026 11:40 pm

ಇನ್ವೆಸ್ಟ್ ಕರ್ನಾಟಕ ಸಮಾವೇಶ-2026 | 51,469 ಕೋಟಿ ಹೂಡಿಕೆ ಒಪ್ಪಂದಗಳಿಗೆ ಸಹಿ : ಸಚಿವ ಎಂ.ಬಿ.ಪಾಟೀಲ್

100ಕ್ಕೂ ಹೆಚ್ಚು ಉದ್ಯಮಗಳ ಪ್ರತಿನಿಧಿಗಳು ಭಾಗಿ

ವಾರ್ತಾ ಭಾರತಿ 26 Mar 2026 11:38 pm

‘‘ಸ್ವಯಂಘೋಷಿತ ವಿಶ್ವಗುರು’’ವಿನ ವೈಫಲ್ಯಗಳೇ ಪಾಕಿಸ್ತಾನವನ್ನು ಮಧ್ಯವರ್ತಿಯಾಗಿ ಮಾಡಿವೆ: ಕಾಂಗ್ರೆಸ್

ಹೊಸದಿಲ್ಲಿ, ಮಾ. 26: ಪಶ್ಚಿಮ ಏಶ್ಯ ಬಿಕ್ಕಟ್ಟಿನಲ್ಲಿ ಮಧ್ಯಸ್ಥಿಕೆ ವಹಿಸುತ್ತಿರುವ ಪಾಕಿಸ್ತಾನವನ್ನು ‘‘ದಲ್ಲಾಳಿ ದೇಶ’’ ಎಂಬುದಾಗಿ ಕರೆದಿರುವ ಕೇಂದ್ರ ಸರಕಾರದ ಕಾಲೆಳೆದಿರುವ ಕಾಂಗ್ರೆಸ್, ‘‘ನಮ್ಮ ಸ್ವಯಂಘೋಷಿತ ವಿಶ್ವಗುರು’’ವಿನ ರಾಜತಾಂತ್ರಿಕತೆ ಮತ್ತು ವ್ಯಾಖ್ಯಾನದ ವೈಫಲ್ಯಗಳು ‘‘ಕುಸಿಯುತ್ತಿರುವ ದೇಶವೊಂದನ್ನು ಮಧ್ಯಸ್ಥಿಕೆಯ ದೇಶವನ್ನಾಗಿ’’ ಮಾಡಿದೆ ಎಂದು ಹೇಳಿದೆ. ‘‘ಹಾಲಿ ಪಶ್ಚಿಮ ಏಶ್ಯ ಸಂಘರ್ಷವನ್ನು ಕೊನೆಗೊಳಿಸುವ ಉದ್ದೇಶದ ಮಾತುಕತೆಗಳ ಸಂಘಟಕ ಹಾಗೂ ಮಧ್ಯಸ್ಥಿಕೆದಾರನಾಗಿ ಪಾಕಿಸ್ತಾನ ಹೊರಹೊಮ್ಮುತ್ತಿದೆ. ಇದು ಭಾರತದ ಪ್ರಾದೇಶಿಕ ರಾಜತಾಂತ್ರಿಕತೆಗೆ ದೊರೆತ ತೀವ್ರ ಹಿನ್ನಡೆಯಾಗಿದೆ. ಇದರಿಂದಾಗಿ ಭಾರತ ಅನುಭವಿಸಿರುವ ತೀವ್ರ ಮುಜುಗರವನ್ನು ಮುಚ್ಚಿಹಾಕಲು ಅನುಭವಿ ವಿದೇಶ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ತನ್ನಿಂದಾಗುವ ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದ್ದಾರೆ’’ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಹೇಳಿದ್ದಾರೆ. ‘‘ಈ ಪಾತ್ರಕ್ಕೆ ಪಾಕಿಸ್ತಾನ ಸೂಕ್ತ ದೇಶ ಎಂಬುದಾಗಿ ಪರಿಗಣಿಸಿರುವುದು ನಿಜವಾಗಿಯೂ ಆಘಾತಕರವಾಗಿದೆ’’ ಎಂದು ಅವರು ಹೇಳಿದರು. ಪರಮಾಣು ಪ್ರಸರಣ ಕಾನೂನುಗಳನ್ನು ಸಾರಾಸಗಟಾಗಿ ಉಲ್ಲಂಘಿಸಿ ಇತರ ದೇಶಗಳು ಪರಮಾಣು ಅಸ್ತ್ರಗಳನ್ನು ಪಡೆಯಲು ನೆರವು ನೀಡಿರುವ ದೇಶ ಪಾಕಿಸ್ತಾನವಾಗಿದೆ. ಇಂಥ ಪಾಕಿಸ್ತಾನವನ್ನು ಮಧ್ಯಸ್ಥಿಕೆಯ ಪಾತ್ರಕ್ಕಾಗಿ ಪರಿಗಣಿಸುವುದು ಪ್ರಧಾನಿ ನರೇಂದ್ರ ಮೋದಿಗೆ ಹಿನ್ನೆಡೆಯಾಗಿದೆ. ಪೊಳ್ಳು ಮಾತುಗಳು ಮತ್ತು ಹೇಡಿತನವೇ ಮೋದಿಯ ರಾಜತಾಂತ್ರಿಕತೆಯಾಗಿದೆ’’ ಎಂದು ಹೇಳಿದರು.

ವಾರ್ತಾ ಭಾರತಿ 26 Mar 2026 11:36 pm

ಕನಕಗಿರಿ | ನವಲಿ ದೇವಸ್ಥಾನದ ಆವರಣದಲ್ಲಿ ಯುವಕರ ನಡುವೆ ಮಾರಾಮಾರಿ

ಕನಕಗಿರಿ: ಹಳೆಯ ದ್ವೇಷದ ಹಿನ್ನೆಲೆಯಲ್ಲಿ ಎರಡು ಗುಂಪಿನ ಯುವಕರು ಹೊಡೆದಾಡಿಕೊಂಡ ಘಟನೆ ಸಮೀಪದ ನವಲಿ ಗ್ರಾಮದ ಬೋಗಾಪುರೇಶ ದೇವಸ್ಥಾನದ ಆವರಣದಲ್ಲಿ ಬುಧವಾರ ಸಂಜೆ ನಡೆದಿದೆ. ಭೋಗಾಪುರೇಶನ ರಥೋತ್ಸವ ನಡೆಯುವ ಮುಂಚೆ ಲಂಬಾಣಿ ಹಾಗೂ ಗಂಗಾಮತ ಸಮಾಜದ ಯುವಕರು ಪರಸ್ಪರ ಕೈ‌ ಕೈ ಮಿಲಾಯಿಸಿದ್ದು ಎರಡು ಗುಂಪಿನವರಿಗೂ ಗಾಯಗಳಾಗಿವೆ. ಕೆಲ ಹೊತ್ತು ಜಾತ್ರೆಯ ಪರಿಸರದಲ್ಲಿ ಆತಂಕದ ವಾತಾವರಣ ತಲೆದೋರಿತ್ತು, ಪೊಲೀಸರು ಸ್ಥಳಕ್ಕೆ ಭೇಟಿ‌ ನೀಡಿ ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ ಎಂದು ಪ್ರತ್ಯಕ್ಷಿದರ್ಶಿಗಳು‌ ತಿಳಿಸಿದ್ದಾರೆ. ಘಟನೆಯಲ್ಲಿ ಸಾಕಷ್ಟು ಯುವಕರು ಭಾಗಿಯಾಗಿದ್ದು, ಈ ಪೈಕಿ ಒಟ್ಟು 10 ಜನರು ಸಿಕ್ಕಿದ್ದು ಅವರನ್ನು ವಶಕ್ಕೆ ಪಡೆದುಕೊಂಡು ನೋಟಿಸ್ ನೀಡಲಾಗಿದೆ. ಈ ಕುರಿತು ಇಲ್ಲಿನ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಪಿಐ ವಿ. ನಾರಾಯಣ ತಿಳಿಸಿದ್ದಾರೆ.

ವಾರ್ತಾ ಭಾರತಿ 26 Mar 2026 11:35 pm

ಪಶ್ಚಿಮ ಬಂಗಾಳ| ಚುನಾವಣಾ ಕರ್ತವ್ಯದ ಮಧ್ಯೆ ಇಫ್ತಾರ್‌ ಕೂಟದಲ್ಲಿ ಭಾಗಿಯಾದ ಆರೋಪ : 7 ಭದ್ರತಾ ಸಿಬ್ಬಂದಿ ವಿರುದ್ಧ ಕ್ರಮಕೈಗೊಂಡ ಚುನಾವಣಾ ಆಯೋಗ

ಹೊಸದಿಲ್ಲಿ,ಮಾ.26: ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ಜಿಲ್ಲೆಯಲ್ಲಿ ಚುನಾವಣಾ ಕತ್ಯವ್ಯಕ್ಕೆ ನಿಯೋಜಿತ ಏಳು ಅರೆಸೇನಾ ಪಡೆ ಸಿಬ್ಬಂದಿಗಳು ಮಾರ್ಗಸೂಚಿಗಳನ್ನು ಉಲ್ಲಂಘಿಸಿ ಇಫ್ತಾರ್ ಕೂಟದಲ್ಲಿ ಪಾಲ್ಗೊಂಡಿದ್ದಕ್ಕಾಗಿ ಅವರ ವಿರುದ್ಧ ಚುನಾವಣಾ ಆಯೋಗವು (ಇಸಿ) ಶಿಸ್ತುಕ್ರಮವನ್ನು ಜರುಗಿಸಿದೆ ಎಂದು ಹಿರಿಯ ಅಧಿಕಾರಿಯೋರ್ವರು ತಿಳಿಸಿದರು. ಇಬ್ಬರು ಸಿಬ್ಬಂದಿಗಳನ್ನು ಕೇಂದ್ರೀಯ ಪಡೆಗಳ ಕಸ್ಟಡಿಯಲ್ಲಿ ಇರಿಸಲಾಗಿದ್ದು,ಉಳಿದ ಐವರನ್ನು ರಾಜ್ಯದಿಂದ ಹೊರಗೆ ವರ್ಗಾಯಿಸಲಾಗಿದೆ ಎಂದರು. ಒಂದು ವಾರದ ಹಿಂದೆ ರಮಝಾನ್ ಮಾಸದಲ್ಲಿ ಮುರ್ಷಿದಾಬಾದ್‌ನ ನಿಮಿಟ್ಟಾದಲ್ಲಿ ನಡೆದಿದ್ದ ಇಫ್ತಾರ್ ಕೂಟದಲ್ಲಿ ಈ ಸಿಬ್ಬಂದಿಗಳು ಭಾಗವಹಿಸಿದ್ದರು ಎಂದು ಅಧಿಕಾರಿ ತಿಳಿಸಿದರು. ಚುನಾವಣಾ ಆಯೋಗವು ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದೆ. ಚುನಾವಣಾ ಕರ್ತವ್ಯಕ್ಕೆ ನಿಯೋಜಿತ ಸಿಬ್ಬಂದಿಗಳು ಸಾಮಾಜಿಕ ಸಮಾರಂಭಗಳಲ್ಲಿ ಭಾಗವಹಿಸಲು ಅಥವಾ ಸ್ಥಳೀಯ ವ್ಯಕ್ತಿಗಳಿಂದ ಯಾವುದೇ ಆತಿಥ್ಯವನ್ನು ಸ್ವೀಕರಿಸಲು ಅನುಮತಿಯಿಲ್ಲ ಎಂದು ಚುನಾವಣಾ ಆಯೋಗದ ಅಧಿಕಾರಿಯೋರ್ವರು ತಿಳಿಸಿದರು. ಸ್ಥಳೀಯ ಪಂಚಾಯತ್ ಪ್ರಧಾನರ ಪತಿ ಇಫ್ತಾರ್ ಕೂಟವನ್ನು ಆಯೋಜಿಸಿದ್ದರು ಎನ್ನಲಾಗಿದೆ. ಕೂಟದ ಛಾಯಾಚಿತ್ರಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು,ಚುನಾವಣಾ ಆಯೋಗದ ಗಮನ ಸೆಳೆದಿವೆ. ಆದರೆ ಆರೋಪಗಳನ್ನು ನಿರಾಕರಿಸಿರುವ ಸಿಬ್ಬಂದಿ, ಇಫ್ತಾರ್ ಕೂಟವನ್ನು ಬಿಎಸ್‌ಎಫ್ ಶಿಬಿರದಲ್ಲಿ ಆಯೋಜಿಸಲಾಗಿತ್ತು ಮತ್ತು ಸ್ಥಳೀಯ ಜನಪ್ರತಿನಿಧಿಗಳನ್ನು ಆಹ್ವಾನಿಸಲಾಗಿತ್ತು ಎಂದು ಪ್ರತಿಪಾದಿಸಿದ್ದಾರೆ. ‘ಈ ವಿಷಯ ನಮ್ಮ ಗಮನಕ್ಕೆ ಬಂದ ಬಳಿಕ ಇಲಾಖಾ ವಿಚಾರಣೆಯನ್ನು ಆರಂಭಿಸಲಾಗಿದೆ. ಲಭ್ಯ ಮಾಹಿತಿಗಳ ಆಧಾರದಲ್ಲಿ ಅರೆಸೇನಾ ಪಡೆ ನಿಯಮಗಳಿಗೆ ಅನುಗುಣವಾಗಿ ಕ್ರಮವನ್ನು ಕೈಗೊಳ್ಳಲಾಗಿದೆ ಎಂದು ಅಧಿಕಾರಿ ತಿಳಿಸಿದರು. ಚುನಾವಣಾ ಕರ್ತವ್ಯಗಳಿಗೆ ನಿಯೋಜಿತ ಕೇಂದ್ರೀಯ ಪಡೆಗಳು ಕಟ್ಟುನಿಟ್ಟಾದ ತಟಸ್ಥತೆಯನ್ನು ಕಾಯ್ದುಕೊಳ್ಳಬೇಕು ಮತ್ತು ಸ್ಥಳೀಯರಿಂದ ಅಂತರ ಕಾಯ್ದುಕೊಳ್ಳಬೇಕು ಎಂದು ಚುನಾವಣಾ ಆಯೋಗವು ಹೇಳಿದೆ. 294 ಸದಸ್ಯ ಬಲದ ಪ.ಬಂಗಾಳ ವಿಧಾನಸಭಾ ಚುನಾವಣೆ ಎ.23 ಮತ್ತು ಎ.29ರಂದು ಎರಡು ಹಂತಗಳಲ್ಲಿ ನಡೆಯಲಿದ್ದು,ಮೇ 4ರಂದು ಮತಗಳ ಎಣಿಕೆ ನಡೆಯಲಿದೆ.

ವಾರ್ತಾ ಭಾರತಿ 26 Mar 2026 11:31 pm

ಗ್ಯಾರಂಟಿಗಳ ಸಹಾಯ ಅನುದಾನ ಹೆಚ್ಚಳದಿಂದ ರಾಜಸ್ವ ಕೊರತೆ : ಸಿಎಜಿ ವರದಿ

ಬೆಂಗಳೂರು : ಗ್ಯಾರಂಟಿ ಯೋಜನೆಗಳಿಗೆ ಸಹಾಯ ಅನುದಾನ ಹೆಚ್ಚಳದ ಹಿನ್ನೆಲೆಯಲ್ಲಿ ರಾಜ್ಯ ರಾಜಸ್ವ ಹೆಚ್ಚುವರಿಯಿಂದ ರಾಜಸ್ವ ಕೊರತೆಯಾಗಿ ಬದಲಾಗಿದೆ. ಈ ಕೊರತೆಯನ್ನು ಸಾಲದ ಮೊತ್ತದಿಂದ ಭರಿಸಲಾಗುತ್ತಿದೆ ಎಂಬ ಅಂಶವನ್ನು ಭಾರತ ಲೆಕ್ಕನಿಯಂತ್ರಕರು ಮತ್ತು ಮಹಾಲೆಕ್ಕಪರಿಶೋಧಕರ(ಸಿಎಜಿ) ವರದಿಯಲ್ಲಿ ಉಲ್ಲೇಖಿಸಲಾಗಿದೆ. ಗುರುವಾರ ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪರವಾಗಿ ಸಚಿವ ದಿನೇಶ್ ಗುಂಡೂರಾವ್ ವರದಿ ಮಂಡಿಸಿದರು. ‘2024-25ರಲ್ಲಿ ರಾಜ್ಯದ ಸಾಲದಲ್ಲಿ ಶೇ.62.12ರಷ್ಟನ್ನು ಮಾತ್ರ ಅಭಿವೃದ್ಧಿ ಉದ್ದೇಶಕ್ಕಾಗಿ ಬಳಸಲಾಗಿದೆ. ಉಳಿದ ಭಾಗವನ್ನು ಆದಾಯ ಕೊರತೆ ಮತ್ತು ಹಿಂದಿನ ಸಾಲಗಳ ಮರುಪಾವತಿಯನ್ನು ಸರಿದೂಗಿಸಲು ಬಳಕೆ ಮಾಡಲಾಗಿದೆ ಎಂದು ವರದಿ ತಿಳಿಸಿದೆ. ಒಟ್ಟು ಐದು ಗ್ಯಾಂಟಿ ಯೋಜನೆಗಳ ವೆಚ್ಚ 52,525 ಕೋಟಿ ರೂ.ಗಳಾಗಿದ್ದು, ಇದು ವರ್ಷದಲ್ಲಿ ರಾಜಸ್ವ ವೆಚ್ಚದ ಶೇ.19ರಷ್ಟಿದೆ. 2023-24ರಲ್ಲಿ ಗ್ಯಾರಂಟಿ ಯೋಜನೆಗಳನ್ನು ಪರಿಚಯಿಸುವುದರಿಂದ 2023-24 ಹಾಗೂ 2024-25ರಲ್ಲಿ ರಾಜ್ಯ ರಾಜಸ್ವ ಹೆಚ್ಚುವರಿಯಿಂದ ರಾಜಸ್ವ ಕೊರತೆಗೆ ಬದಲಾಯಿತು. ಇದು ಭವಿಷ್ಯದ ಸಾಲ ಮತ್ತು ಬಡ್ಡಿ ಹೊರೆಯನ್ನು ಹೆಚ್ಚಿಸುತ್ತದೆ ಎಂದು ಸಿಎಜಿ ವರದಿಯಲ್ಲಿ ಎಚ್ಚರಿಕೆ ನೀಡಲಾಗಿದೆ. ಮುದ್ರಾಂಕ ಸುಂಕ ಮತ್ತು ಆರ್‍ಟಿಓಗಳ ತೆರಿಗೆ ಸಂಗ್ರಹ ವಿಷಯದಲ್ಲಿ ಲೋಪಗಳನ್ನು ಗುರುತಿಸಿರುವ ಸಿಎಜಿ, ಆಸ್ತಿಗಳ ಕಡಿಮೆ ಮೌಲ್ಯಮಾಪನದಿಂದಾಗಿ ರಾಜ್ಯಕ್ಕೆ 9 ಕೋಟಿ ರೂ.ಗಳಷ್ಟು ನಷ್ಟವಾಗಿದೆ. ಹಸಿರು ತೆರಿಗೆ ಸಂಗ್ರಹ ಪ್ರಕ್ರಿಯೆಯಲ್ಲಿನ ಲೋಪದಿಂದಾಗಿ 90 ಕೋಟಿ ರೂ.ಗಳಷ್ಟು ನಷ್ಟ ಸಂಭವಿಸಿದೆ. ಆರ್‍ಟಿಓಗಳಲ್ಲಿ ಡಿಟಿಜಲ್ ಅರ್ಜಿಗಳನ್ನು ಕಡ್ಡಾಯಗೊಳಿಸಿದ್ದರ ಹೊರತಾಗಿಯೂ ಕೇವಲ ಶೇ.3.5ರಷ್ಟು ಮಾತ್ರ ಅರ್ಜಿಗಳನ್ನು ಆನ್‍ಲೈನ್ ಪ್ರಕ್ರಿಯೆಗೆ ಒಳಪಡಿಸಲಾಗಿದೆ ಎಂದು ಉಲ್ಲೇಖಿಸಿದೆ. 2023-24ರಲ್ಲಿ ರಾಜ್ಯದ ಒಟ್ಟು ಆದಾಯ ಸ್ವೀಕೃತಿಗಳ ಪ್ರಮಾಣ 2,33,342 ಕೋಟಿ ರೂ.ಗಳು. ಹಿಂದಿನ ವರ್ಷದಲ್ಲಿ ಇದರ ಪ್ರಮಾಣ 2,29,079 ಕೋಟಿ ರೂ.ಗಳಷ್ಟಿತ್ತು. ಇದರಿಂದ ರಾಜ್ಯದಲ್ಲಿ ಶೇ.1.86ರಷ್ಟು ಬೆಳವಣಿಗೆ ದರ ದಾಖಲಾಗಿದೆ. ಆದಾಯದಲ್ಲಿ ಶೇ.70.07ರಷ್ಟು (1.63 ಲಕ್ಷ ಕೋಟಿ ರೂ.) ತೆರಿಗೆ ಮೂಲಕ ಬಂದಿದೆ. ತೆರಿಗೆಯೇತರ ವರಮಾನದ ಮೂಲಕ ಶೇ.5.62ರಷ್ಟು (13.11 ಲಕ್ಷ ಕೋಟಿ ರೂ.) ಮಾತ್ರ ಬೊಕ್ಕಸಕ್ಕೆ ಬಂದಿದೆ ಎಂದು ಸಿಎಜಿ ತಿಳಿಸಿದೆ. 2024-25ರ ಅವಧಿಯಲ್ಲಿ, ರಾಜ್ಯವು ಇ-ಖಾತಾವನ್ನು ಪರಿಚಯಿಸಿತು. ಇದು ಸ್ಥಿರಗೊಳ್ಳಲು ಕಾಲಾವಕಾಶ ತೆಗೆದುಕೊಂಡಿತು. ಇದು ಆಸ್ತಿಗಳ ನೋಂದಣಿಯಲ್ಲಿ ಕುಸಿತಕ್ಕೆ ಕಾರಣವಾಯಿತು. ಆದುದರಿಂದ ಮುದ್ರಾಂಕ ಸುಂಕ ಮತ್ತು ನೋಂದಣಿ ಶುಲ್ಕಗಳಲ್ಲಿ ಇಳಿಕೆ ಕಂಡುಬಂದಿದೆ ಎಂದು ಸಿಎಜಿ ಗಮನಿಸಿದೆ.  

ವಾರ್ತಾ ಭಾರತಿ 26 Mar 2026 11:31 pm

Ballari | ಒಳ ಮೀಸಲಾತಿ ಜಾರಿಗೆ ಆಗ್ರಹಿಸಿ ಸಂಡೂರು ಸಂಪೂರ್ಣ ಬಂದ್

ಸಂಡೂರು (ಬಳ್ಳಾರಿ ) : ಪರಿಶಿಷ್ಟ ಜಾತಿಗಳ ಒಳ ಮೀಸಲಾತಿ ಜಾರಿಗೆ ಆಗ್ರಹಿಸಿ ಇಂದು ಸಂಡೂರಿನಲ್ಲಿ ಸಂಪೂರ್ಣ ಬಂದ್ ನಡೆಸಲಾಗಿದ್ದು, ಸಾರ್ವಜನಿಕ ಜೀವನ ಬಹುತೇಕ ಸ್ಥಗಿತಗೊಂಡಿತ್ತು. ಆಸ್ಪತ್ರೆಗಳು ಮತ್ತು ಮೆಡಿಕಲ್ ಅಂಗಡಿಗಳನ್ನು ಹೊರತುಪಡಿಸಿ ಉಳಿದ ಎಲ್ಲಾ ವಾಣಿಜ್ಯ ಹಾಗೂ ಆಡಳಿತಾತ್ಮಕ ಚಟುವಟಿಕೆಗಳು ಸಂಪೂರ್ಣ ಬಂದ್ ಆಗಿದ್ದವು. ಬ್ಯಾಂಕುಗಳು, ಸಾರಿಗೆ ವ್ಯವಸ್ಥೆ, ತಾಲೂಕು ಪಂಚಾಯಿತಿ ಕಚೇರಿ, ವಿವಿಧ ಸರ್ಕಾರಿ ಕಚೇರಿಗಳು, ಮೈನಿಂಗ್ ಚಟುವಟಿಕೆಗಳು ಹಾಗೂ ಅಂಗಡಿಗಳು ಬಂದ್‌ಗೆ ಬೆಂಬಲ ಸೂಚಿಸಿದವು. ಮಾದಿಗ ಸಮುದಾಯದ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ನಡೆದ ಈ ಹೋರಾಟದಲ್ಲಿ ಒಳ ಮೀಸಲಾತಿ ಜಾರಿಗಾಗಿ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಯಿತು. ಫೆ.27ರ, 2026ರಂದು ಹೊರಡಿಸಿರುವ ಒಳ ಮೀಸಲಾತಿಯಿಲ್ಲದ ನೇಮಕಾತಿ ಆದೇಶವನ್ನು ಕೂಡಲೇ ಹಿಂಪಡೆಯಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು. ಹೋರಾಟದ ಮುಖಂಡರು ಮಾತನಾಡಿ, ಪರಿಶಿಷ್ಟ ಜಾತಿಗಳ ಒಳ ಮೀಸಲಾತಿಗೆ ಸಂಬಂಧಿಸಿದಂತೆ ಹಲವು ದಶಕಗಳ ಹೋರಾಟದ ನಂತರ ಕಾನೂನು ಮಾನ್ಯತೆ ದೊರೆತಿದ್ದರೂ, ಅದನ್ನು ಜಾರಿಗೆ ತರದೆ ಸಾವಿರಾರು ಉದ್ಯೋಗಾವಕಾಶಗಳನ್ನು ಕಳೆದುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಆರೋಪಿಸಿದರು. ಸುಮಾರು 3,387ಕ್ಕೂ ಹೆಚ್ಚು ಹುದ್ದೆಗಳು ಹಾಗೂ ಮಾದಿಗ ಸಮುದಾಯಕ್ಕೆ ಸೇರಬೇಕಾದ ಸಾವಿರಾರು ಉದ್ಯೋಗಗಳು ಅನ್ಯಾಯವಾಗಿ ಕಳೆದುಹೋಗುವ ಸಾಧ್ಯತೆ ಇದೆ ಎಂದು ತಿಳಿಸಿದರು. ಇದಲ್ಲದೆ, ಪರಿಶಿಷ್ಟ ಜಾತಿಗಳ ಮೀಸಲಾತಿಯೊಳಗೆ ನ್ಯಾಯಸಮ್ಮತ ಒಳ ಮೀಸಲಾತಿ ಕಲ್ಪಿಸುವುದು, ಒಟ್ಟು 56% ಮೀಸಲಾತಿಯನ್ನು ಸಂವಿಧಾನದ 9ನೇ ಅನುಸೂಚಿಗೆ ಸೇರಿಸುವುದು ಹಾಗೂ ಶಿಕ್ಷಣದಿಂದ ಉದ್ಯೋಗದವರೆಗೆ ಎಲ್ಲಾ ಕ್ಷೇತ್ರಗಳಲ್ಲಿ ಒಳ ಮೀಸಲಾತಿ ಜಾರಿಗೊಳಿಸುವಂತೆ ಒತ್ತಾಯಿಸಿದರು. ನಾಳೆ ನಡೆಯಲಿರುವ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ಈಗಾಗಲೇ ನಡೆದ ಸಮೀಕ್ಷೆಯ ಆಧಾರದ ಮೇಲೆ ABC ವರ್ಗೀಕರಣದ ಒಳ ಮೀಸಲಾತಿಯನ್ನು ಜಾರಿಗೊಳಿಸಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು. ಈ ವೇಳೆ ಶಿವಲಿಂಗಪ್ಪ, ರಾಮಕೃಷ್ಣ ಹೆಗಡೆ, ದೇವದಾಸ್, ರಾಜೇಶ್ ಹೆಗಡೆ, ಸತೀಶ್ ಹೆಗಡೆ, ಮಲಿಯಪ್ಪ, ತಾಯಪ್ಪ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು ಹಾಗೂ ಯುವಕರು ಭಾಗವಹಿಸಿದ್ದರು. ಸರ್ಕಾರ ತಕ್ಷಣ ಸ್ಪಂದಿಸದಿದ್ದಲ್ಲಿ ರಾಜ್ಯಾದ್ಯಂತ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲಾಗುವುದು ಎಂದು ಸಂಘಟನೆಗಳು ಎಚ್ಚರಿಕೆ ನೀಡಿವೆ.

ವಾರ್ತಾ ಭಾರತಿ 26 Mar 2026 11:31 pm

Bengaluru | ಇಬ್ಬರನ್ನು ಕೊಲೆಗೈದ ಅಪ್ರಾಪ್ತ

ಬೆಂಗಳೂರು : ಅಪ್ರಾಪ್ತನೊಬ್ಬ ಇಬ್ಬರನ್ನು ಕೊಲೆಗೈದಿರುವ ಘಟನೆ ಇಲ್ಲಿನ ಪೀಣ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗುರುವಾರ ವರದಿಯಾಗಿದೆ. ಯಮುನಾ(36), ಆಕೆಯ ಸಹೋದರ ಸುದೀಪ್ (34) ಕೊಲೆಯಾದವರು ಎಂದು ಗುರುತಿಸಲಾಗಿದೆ. ಯಮುನಾಳ ಪತಿ ಮಲ್ಲೇಗೌಡ ಎಂಬಾತ  ಛಾಯಾ ಎಂಬಾಕೆಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಎಂದು ಆರೋಪಿಸಲಾಗಿತ್ತು. ಇದನ್ನು ಕೇಳಲು ಯಮುನಾ ಮತ್ತು ಆಕೆಯ ಸಹೋದರ ಸುದೀಪ್ ಗುರುವಾರ ಬೆಳಗ್ಗೆ ಛಾಯಾ ಮನೆ ಬಳಿ ತೆರಳಿದ್ದರು. ಅಕ್ರಮ ಸಂಬಂಧ ವಿಚಾರ ಪ್ರಸ್ತಾಪಿಸುತ್ತಿದ್ದಾಗ ವಾಗ್ವಾದ ಬೆಳೆದಿತ್ತು. ಈ ವೇಳೆ ಮನೆಯಲ್ಲೇ ಇದ್ದ ಛಾಯಾಳ ಅಪ್ರಾಪ್ತ ಪುತ್ರ, ಇಬ್ಬರನ್ನೂ ಮಚ್ಚಿನಿಂದ ಹಲ್ಲೆ ನಡೆಸಿ ಕೊಲೆ ಮಾಡಿದ್ದಾನೆ ಎಂದು ತಿಳಿದು ಬಂದಿದೆ. ಸದ್ಯ, ಪೀಣ್ಯ ಠಾಣೆಯಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಅಪ್ರಾಪ್ತನನ್ನು ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆ ನಡೆಸುತ್ತಿರುವುದಾಗಿ ಮೂಲಗಳು ತಿಳಿಸಿವೆ.

ವಾರ್ತಾ ಭಾರತಿ 26 Mar 2026 11:28 pm

ವಿಜಯನಗರ | ಎ.14ರಂದು ಅಂಬೇಡ್ಕರ್, ಬಾಬು ಜಗಜೀವನರಾಂ ಜಯಂತಿ ಆಚರಣೆ: ಡಿಸಿ ಕವಿತಾ ಮನ್ನಿಕೇರಿ

ವಿಜಯನಗರ (ಹೊಸಪೇಟೆ)  :ಹಸಿರು ಕ್ರಾಂತಿಯ ಹರಿಕಾರ ಹಾಗೂ ಮಾಜಿ ಉಪ ಪ್ರಧಾನಿ ಡಾ. ಬಾಬು ಜಗಜೀವನರಾಂ ಅವರ 119ನೇ ಜಯಂತಿ ಹಾಗೂ ಭಾರತ ರತ್ನ, ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ 135ನೇ ಜಯಂತಿಯನ್ನು ಏಪ್ರಿಲ್ 14ರಂದು ವಿಜೃಂಭಣೆಯಿಂದ ಹಾಗೂ ಅರ್ಥಪೂರ್ಣವಾಗಿ ಆಚರಿಸಲಾಗುವುದು ಎಂದು ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ ತಿಳಿಸಿದ್ದಾರೆ. ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯಾದ್ಯಂತ ಮಹನೀಯರ ಜಯಂತಿಯನ್ನು ಹಬ್ಬದ ರೀತಿಯಲ್ಲಿ ಆಚರಿಸಲು ತೀರ್ಮಾನಿಸಲಾಗಿದೆ ಎಂದರು. ಎ.5ರಂದು ಡಾ. ಬಾಬು ಜಗಜೀವನರಾಂ ಅವರ ಜಯಂತಿಯನ್ನು ಸಾಂಕೇತಿಕವಾಗಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಆಚರಿಸಲಾಗುವುದು. ಬಳಿಕ ಎ.14ರಂದು ಅಂಬೇಡ್ಕರ್ ಹಾಗೂ ಬಾಬು ಜಗಜೀವನರಾಂ ಜಯಂತಿಗಳನ್ನು ಭವ್ಯವಾಗಿ ಆಚರಿಸಲು ಸಭೆಯಲ್ಲಿ ನಿರ್ಧರಿಸಲಾಯಿತು. ಜಿಲ್ಲಾ ಕೇಂದ್ರ ಸೇರಿದಂತೆ ಎಲ್ಲಾ ತಾಲ್ಲೂಕು ಕೇಂದ್ರಗಳಲ್ಲಿ ಸರ್ಕಾರದ ಶಿಷ್ಟಾಚಾರದಂತೆ ಕಾರ್ಯಕ್ರಮಗಳನ್ನು ಆಯೋಜಿಸಿ, ಆಹ್ವಾನ ಪತ್ರಿಕೆ ಮುದ್ರಿಸಿ ಗಣ್ಯರನ್ನು ಆಹ್ವಾನಿಸಬೇಕು. ನಗರದ ಪ್ರಮುಖ ವೃತ್ತಗಳನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಬೇಕು. ಜಯಂತಿ ಕೇವಲ ಮೆರವಣಿಗೆಗೆ ಸೀಮಿತವಾಗದೆ, ಯುವಜನತೆಗೆ ಮಹನೀಯರ ಆದರ್ಶಗಳು, ಸಂವಿಧಾನಾತ್ಮಕ ಮೌಲ್ಯಗಳು ಹಾಗೂ ಕೃಷಿ-ಆಡಳಿತ ಸುಧಾರಣೆಗಳ ಕುರಿತು ಅರಿವು ಮೂಡಿಸಲು ಉಪನ್ಯಾಸಗಳು, ಪ್ರಬಂಧ ಮತ್ತು ಭಾಷಣ ಸ್ಪರ್ಧೆಗಳು ಶಾಲಾ-ಕಾಲೇಜುಗಳಲ್ಲಿ ಕಡ್ಡಾಯವಾಗಿ ಆಯೋಜಿಸಬೇಕು ಎಂದು ಸೂಚಿಸಿದರು. ಜಯಂತಿಯ ಅಂಗವಾಗಿ ಹಂಪಿಯಿಂದ ಭವ್ಯ ಜ್ಯೋತಿ ತರಲಾಗುತ್ತದೆ. ಬಳ್ಳಾರಿ ರಸ್ತೆಯ ಜೈಭೀಮ್ ವೃತ್ತದಲ್ಲಿ ಜ್ಯೋತಿ ಹಸ್ತಾಂತರದೊಂದಿಗೆ ಮೆರವಣಿಗೆಗೆ ಚಾಲನೆ ನೀಡಲಾಗುವುದು. ಮೆರವಣಿಗೆಯು ಜೈಭೀಮ್ ವೃತ್ತ, ಮಸೀದಿ ವೃತ್ತ, ಪುಣ್ಯಮೂರ್ತಿ ವೃತ್ತ ಹಾಗೂ ಪುನೀತ್ ರಾಜ್ ಕುಮಾರ್ ವೃತ್ತ ಮಾರ್ಗವಾಗಿ ಅಂಬೇಡ್ಕರ್ ವೃತ್ತದವರೆಗೆ ಸಾಗಲಿದೆ. ವಿವಿಧ ಕಲಾ ತಂಡಗಳು ಮೆರವಣಿಗೆಯಲ್ಲಿ ಭಾಗವಹಿಸಲಿವೆ. ಕಾರ್ಯಕ್ರಮ ಶಾಂತಿಯುತವಾಗಿ ಹಾಗೂ ಸೌಹಾರ್ದಯುತವಾಗಿ ನಡೆಯಲು ಎಲ್ಲರೂ ಸಹಕರಿಸಬೇಕು. ದಲಿತ ಮತ್ತು ಪ್ರಗತಿಪರ ಸಂಘಟನೆಗಳೊಂದಿಗೆ ಸಮನ್ವಯ ಸಾಧಿಸಿ ಕಾರ್ಯಕ್ರಮ ಯಶಸ್ವಿಗೊಳಿಸಲಾಗುವುದು ಎಂದು ಅವರು ಹೇಳಿದರು. ಜಯಂತಿಯಂದು ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪ್ರತಿಭಾನ್ವಿತ ವಿದ್ಯಾರ್ಥಿಗಳು ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ಸನ್ಮಾನಿಸಲಾಗುವುದು. ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್. ಜಾಹ್ನವಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಮಂಜುನಾಥ್, ಅಪರ ಜಿಲ್ಲಾಧಿಕಾರಿ ಇ. ಬಾಲಕೃಷ್ಣ, ಪೊಲೀಸ್ ಉಪಾಧೀಕ್ಷಕ ಡಾ. ಮಂಜುನಾಥ್, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ವೈ.ಎ. ಕಾಳೆ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು, ಸಂಘ ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಉಪಸ್ಥಿತರಿದ್ದರು.

ವಾರ್ತಾ ಭಾರತಿ 26 Mar 2026 11:27 pm

Iran ಮೇಲಿನ ಯುದ್ಧ | ಅಮೆರಿಕ ಯಾವ ಪಡೆಗಳನ್ನು ಗಲ್ಫ್‌ ನಲ್ಲಿ ನಿಯೋಜಿಸುತ್ತಿದೆ?

ಆಪರೇಷನ್ ಎಪಿಕ್ ಫ್ಯೂರಿ ಆರಂಭವಾಗಿ ಸುಮಾರು ನಾಲ್ಕು ವಾರಗಳ ನಂತರ, ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಮೆರಿಕ ಇರಾನ್ ಜೊತೆ ಮಾತುಕತೆಗಳಲ್ಲಿ ತೊಡಗಿಸಿಕೊಂಡಿದೆ ಎಂದು ಹೇಳಿದ್ದಾರೆ. ಆದರೆ ಇದನ್ನು ಇರಾನ್ ನಿರಾಕರಿಸಿದೆ. ಈ ರಾಜತಾಂತ್ರಿಕ ಬಿಕ್ಕಟ್ಟು ಪ್ರಮುಖ ಮಿಲಿಟರಿ ಜಮಾವಣೆಯ ನಡುವೆಯೂ ಮುಂದುವರೆದಿದೆ; ಅಮೆರಿಕವು ಮಧ್ಯಪ್ರಾಚ್ಯದಾದ್ಯಂತ ಸಾವಿರಾರು ಸೈನಿಕರನ್ನು ತ್ವರಿತವಾಗಿ ನಿಯೋಜಿಸುತ್ತಿದೆ. ಫೆಬ್ರವರಿ 28 ರಂದು ಇರಾನಿನ ಮಿಲಿಟರಿ ನೆಲೆಗಳ ವಿರುದ್ಧ ಅಮೆರಿಕ–ಇಸ್ರೇಲಿ ವಾಯುದಾಳಿಯಾಗಿ ಪ್ರಾರಂಭವಾದದ್ದು, ಮಾರ್ಚ್ ಅಂತ್ಯದ ವೇಳೆಗೆ ಇರಾಕ್ ಯುದ್ಧದ ನಂತರ ಮಧ್ಯಪ್ರಾಚ್ಯಕ್ಕೆ ಅತ್ಯಂತ ಬೃಹತ್ ಪಡೆಗಳ ನಿಯೋಜನೆಯಾಗಿ ವಿಕಸನಗೊಂಡಿದೆ. ಯುಎಸ್ಎಸ್ ಅಬ್ರಹಾಂ ಲಿಂಕನ್ ವಿಮಾನವಾಹಕ ನೌಕೆಯೊಂದಿಗೆ ಸಂಯೋಜಿತವಾಗಿರುವ ಒಂದು ದಾಳಿ ಗುಂಪು ಪ್ರಸ್ತುತ ಯುದ್ಧ ವಲಯದಲ್ಲಿ ಕಾರ್ಯಾಚರಣೆಯಲ್ಲಿ ಸಕ್ರಿಯವಾಗಿದೆ. ಯುಎಸ್ಎಸ್ ಜೆರಾಲ್ಡ್ ಆರ್ ಫೋರ್ಡ್ ವಾಹಕ ನೌಕೆಯು ಮೆಡಿಟರೇನಿಯನ್‌ನಲ್ಲಿ ದುರಸ್ತಿಗಾಗಿ ತಾತ್ಕಾಲಿಕವಾಗಿ ಕಾರ್ಯನಿರ್ವಹಿಸುತ್ತಿಲ್ಲ. ಅಮೆರಿಕದ ಸೆಂಟ್ರಲ್ ಕಮಾಂಡ್ (CENTCOM) ಪ್ರಕಾರ, ಮಾಜಿ ಸುಪ್ರೀಂ ನಾಯಕ ಆಯತೊಲ್ಲಾ ಅಲಿ ಖಾಮಿನೈ, ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಪ್ರಧಾನ ಕಚೇರಿ, ಬ್ಯಾಲಿಸ್ಟಿಕ್ ಕ್ಷಿಪಣಿ ಸೌಲಭ್ಯಗಳು, ಡ್ರೋನ್ ಉತ್ಪಾದನಾ ಕೇಂದ್ರಗಳು ಮತ್ತು ನೌಕಾ ಸ್ವತ್ತುಗಳಿಗೆ ಸಂಬಂಧಿಸಿದ ತಾಣಗಳು ಸೇರಿದಂತೆ ಇರಾನ್‌ನಾದ್ಯಂತ 9,000 ಕ್ಕೂ ಹೆಚ್ಚು ಗುರಿಗಳ ಮೇಲೆ ವೈಮಾನಿಕ ದಾಳಿಗಳನ್ನು ನಡೆಸಲಾಗಿದೆ. 140 ಕ್ಕೂ ಹೆಚ್ಚು ಇರಾನಿನ ಹಡಗುಗಳು ಹಾನಿಗೊಳಗಾಗಿವೆ ಅಥವಾ ನಾಶವಾಗಿವೆ ಎಂದು ಅಮೆರಿಕದ ಅಧಿಕಾರಿಗಳು ತಿಳಿಸಿದ್ದಾರೆ. ಇಸ್ರೇಲ್, ಗಲ್ಫ್ ಅರಬ್ ರಾಷ್ಟ್ರಗಳು ಮತ್ತು ಅಮೆರಿಕದ ಮಿಲಿಟರಿ ನೆಲೆಗಳನ್ನು ಗುರಿಯಾಗಿಸಿಕೊಂಡು ಇರಾನ್ ದಿನನಿತ್ಯ ಕ್ಷಿಪಣಿ ಮತ್ತು ಡ್ರೋನ್ ದಾಳಿಗಳೊಂದಿಗೆ ಪ್ರತಿಕ್ರಿಯಿಸುತ್ತಿದೆ. ಹಾರ್ಮುಝ್ ಜಲಸಂಧಿಯನ್ನು ಹೆಚ್ಚಿನ ವಾಣಿಜ್ಯ ಹಡಗು ಸಾಗಣೆಗೆ ಪರಿಣಾಮಕಾರಿಯಾಗಿ ಮುಚ್ಚಲಾಗಿದೆ. ಪ್ರಪಂಚದ ಸುಮಾರು ಶೇಕಡಾ 20 ರಷ್ಟು ತೈಲ ವಹಿವಾಟು ಪ್ರತಿದಿನ ಹಾದುಹೋಗುವ ಈ ಕಿರಿದಾದ ಜಲಮಾರ್ಗವು ಸಂಘರ್ಷದ ಕೇಂದ್ರ ಕಾರ್ಯತಂತ್ರದ ಒತ್ತಡದ ಬಿಂದುವಾಗಿದೆ. ಈ ಹಿನ್ನೆಲೆಯಲ್ಲಿಯೇ ಅಮೆರಿಕ ಈಗ ತನ್ನ ನೆಲದ ಉಪಸ್ಥಿತಿಯನ್ನು ಬಲಪಡಿಸುತ್ತಿದೆ. “ನಮ್ಮಲ್ಲಿ ಇರಾನ್ ಕಡೆಗೆ ದೊಡ್ಡ ಪಡೆಯೇ ಹೋಗುತ್ತಿದೆ. ನಮ್ಮಲ್ಲಿ ಆ ದಿಕ್ಕಿನಲ್ಲಿ ಸಾಕಷ್ಟು ಹಡಗುಗಳಿವೆ. ಒಂದು ವೇಳೆ ಆ ದಿಕ್ಕಿನಲ್ಲಿ ನಮಗೆ ದೊಡ್ಡ ನೌಕಾಪಡೆ ಇದ್ದರೆ ಏನಾಗುತ್ತದೆ ಎಂದು ನೋಡೋಣ,” ಎಂದು ಜನವರಿ ಅಂತ್ಯದಲ್ಲಿ ಅಮೆರಿಕ ಅಧ್ಯಕ್ಷ ಟ್ರಂಪ್ ಹೇಳಿದ್ದರು. ಈ ತಿಂಗಳ ಆರಂಭದಲ್ಲಿ ಅಮೆರಿಕದ ಯುದ್ಧವಿಮಾನಗಳು ಖಾರ್ಗ್ ದ್ವೀಪದ ಮೇಲೆ ದಾಳಿ ಮಾಡಿದ ನಂತರ, ಟ್ರಂಪ್ ತಮ್ಮ ಪಡೆಗಳು ಅಲ್ಲಿನ ಮಿಲಿಟರಿ ಗುರಿಗಳನ್ನು ನಾಶಪಡಿಸಿವೆ ಎಂದು ತಿಳಿಸಿದ್ದಾರೆ. ಇರಾನ್ ಜಲಸಂಧಿಯನ್ನು ಮತ್ತೆ ತೆರೆಯದಿದ್ದರೆ ದ್ವೀಪದ ತೈಲ ಮೂಲಸೌಕರ್ಯವು ಮುಂದಿನ ಹಂತಕ್ಕೆ ತಲುಪಬಹುದು ಎಂದು ಅವರು ಎಚ್ಚರಿಸಿದ್ದರು. ಮಂಗಳವಾರ, ಪೆಂಟಗನ್ ಯುಎಸ್ ಸೇನೆಯ 82ನೇ ವಾಯುಗಾಮಿ ವಿಭಾಗದ ಸುಮಾರು 2,000 ಸೈನಿಕರನ್ನು ಮಧ್ಯಪ್ರಾಚ್ಯಕ್ಕೆ ನಿಯೋಜಿಸಲು ಆದೇಶಿಸಿದೆ ಎಂದು ಯುಎಸ್ ಮಾಧ್ಯಮ ವರದಿಗಳು ತಿಳಿಸಿವೆ. ಪೆಸಿಫಿಕ್‌ ನ ವಿರುದ್ಧ ಬದಿಗಳಿಂದ ಈಗಾಗಲೇ ಮಾರ್ಗದಲ್ಲಿರುವ ಎರಡು ಮೆರೈನ್ ಎಕ್ಸ್‌ ಪೆಡಿಷನರಿ ಯೂನಿಟ್‌ಗಳಿಗೆ ಈ ನಿಯೋಜನೆ ಸೇರ್ಪಡೆಯಾಗಿದೆ. ಕಾರ್ಯಾಚರಣೆಯ ಆಯ್ಕೆಗಳನ್ನು ವಿಸ್ತರಿಸಲು ಬಲವರ್ಧನೆಗಳನ್ನು ವಿನಂತಿಸಲಾಗಿದೆ ಎಂದು ಯುಎಸ್ ರಕ್ಷಣಾ ಕಾರ್ಯದರ್ಶಿ ಪೀಟ್ ಹೆಗ್ಸೆತ್ ದೃಢಪಡಿಸಿದ್ದಾರೆ. ಯಾವುದೇ ನೆಲದ ಕಾರ್ಯಾಚರಣೆಗೆ ಇನ್ನೂ ಅಧಿಕಾರ ನೀಡಲಾಗಿಲ್ಲವಾದರೂ, ಅಮೆರಿಕದ ಸಾಗರ ಉಭಯಚರ ಪಡೆಗಳು, ಅಮೆರಿಕದ ಸೇನಾ ಪ್ಯಾರಾಟ್ರೂಪರ್‌ ಗಳು ಮತ್ತು ವಿಭಾಗ ಮಟ್ಟದ ಕಮಾಂಡ್ ರಚನೆಯ ಒಮ್ಮುಖವು ಅಮೆರಿಕದ ಮಿಲಿಟರಿ ಆಯ್ಕೆಗಳ ಗಮನಾರ್ಹ ವಿಸ್ತರಣೆಯನ್ನು ಸೂಚಿಸುತ್ತದೆ. ಮೂರು ಪಡೆಗಳು ಗಲ್ಫ್ ಕಡೆಗೆ ಹೋಗುವ ಪಡೆ ಮೂರು ವಿಭಿನ್ನ ರಚನೆಗಳನ್ನು ಒಳಗೊಂಡಿದೆ. ಪ್ರತಿಯೊಂದೂ ವಿಭಿನ್ನ ಮೂಲ, ಮಾರ್ಗ ಮತ್ತು ಸಮಯವನ್ನು ಹೊಂದಿದೆ. ಮೊದಲನೆಯದು ಟ್ರಿಪೋಲಿ ಆಂಫಿಬಿಯಸ್ ರೆಡಿ ಗ್ರೂಪ್, ಇದು ಅಮೆರಿಕ-ವರ್ಗದ ಆಕ್ರಮಣ ಹಡಗು USS ಟ್ರಿಪೋಲಿ ಮತ್ತು 31ನೇ ಮೆರೈನ್ ಎಕ್ಸ್‌ಪೆಡಿಷನರಿ ಯೂನಿಟ್ (MEU) ಅನ್ನು ಕೇಂದ್ರೀಕರಿಸಿದೆ. ಮಾರ್ಚ್ 13 ರಂದು ಜಪಾನ್‌ನ ಸಸೆಬೊದಿಂದ ಹೊರಟ ಈ ಗುಂಪು ಮಲಕ್ಕಾ ಜಲಸಂಧಿಯನ್ನು ದಾಟಿ ಮಾರ್ಚ್ 23ರ ವೇಳೆಗೆ ಬ್ರಿಟಿಷ್ ಹಿಂದೂ ಮಹಾಸಾಗರ ಪ್ರದೇಶದ ಡಿಯಾಗೋ ಗಾರ್ಸಿಯಾದಲ್ಲಿತ್ತು. ಇದು ಮಾರ್ಚ್ ಅಂತ್ಯ ಅಥವಾ ಏಪ್ರಿಲ್ ಆರಂಭದ ವೇಳೆಗೆ CENTCOM ಪ್ರದೇಶವನ್ನು ಪ್ರವೇಶಿಸುವ ನಿರೀಕ್ಷೆಯಿದೆ. ಎರಡನೆಯದು ಬಾಕ್ಸರ್ ಆಂಫಿಬಿಯಸ್ ರೆಡಿ ಗ್ರೂಪ್, ಇದನ್ನು ವಾಸ್ಪ್-ಕ್ಲಾಸ್ ಅಸಾಲ್ಟ್ ಹಡಗು USS ಬಾಕ್ಸರ್ ಮತ್ತು 11ನೇ MEU ಸುತ್ತಲೂ ನಿರ್ಮಿಸಲಾಗಿದೆ. ಇದು ಅಮೆರಿಕದ ದಕ್ಷಿಣ ಕ್ಯಾಲಿಫೋರ್ನಿಯಾದಲ್ಲಿದೆ. ಈ ಗುಂಪು ಮಾರ್ಚ್ 19 ಮತ್ತು 20ರ ನಡುವೆ ಸ್ಯಾನ್ ಡಿಯಾಗೋದಿಂದ ಹೊರಟಿತು. ಸರಿಸುಮಾರು 22,200 ಕಿಮೀ (13,800 ಮೈಲುಗಳು) ದೂರವನ್ನು ಕ್ರಮಿಸುವ ಈ ಪಡೆ ಏಪ್ರಿಲ್ ಮಧ್ಯಭಾಗದಲ್ಲಿ ಯುದ್ಧ ವಲಯವನ್ನು ತಲುಪುವ ನಿರೀಕ್ಷೆಯಿದೆ. ಮೂರನೆಯದು ಉತ್ತರ ಕೆರೊಲಿನಾದ ಫೋರ್ಟ್ ಬ್ರಾಗ್‌ ನಲ್ಲಿರುವ 82ನೇ ಏರ್‌ಬೋರ್ನ್ ವಿಭಾಗದ ತಕ್ಷಣದ ಪ್ರತಿಕ್ರಿಯೆ ಪಡೆಯಿಂದ ಸುಮಾರು 2,000 ಸೈನಿಕರ ತುಕಡಿಯಾಗಿದೆ; ಇದು ಈ ಪ್ರದೇಶಕ್ಕೆ ಅಮೆರಿಕ ಮಿಲಿಟರಿ ಬಲವರ್ಧನೆಗಳ ಸಾಲಿನಲ್ಲಿ ಇತ್ತೀಚಿನದು. ಒಟ್ಟಾಗಿ, ಎರಡು ಮೆರೈನ್ ಗುಂಪುಗಳು ಈ ಪ್ರದೇಶದಲ್ಲಿ ಅಮೆರಿಕಗೆ 4,500 ಮೆರೈನ್‌ಗಳು ಮತ್ತು ನಾವಿಕರನ್ನು ನೀಡುತ್ತವೆ. 82ನೇ ಏರ್‌ಬೋರ್ನ್ ತುಕಡಿಯೊಂದಿಗೆ ಸೇರಿ, ಸಂಘರ್ಷ ಪ್ರಾರಂಭವಾದಾಗಿನಿಂದ ಸುಮಾರು 7,000 ಹೆಚ್ಚುವರಿ ಪಡೆಗಳನ್ನು ನಿಯೋಜಿಸಲಾಗಿದೆ. USS ಟ್ರಿಪೋಲಿ ಮತ್ತು 31ನೇ MEU ಯುಎಸ್ಎಸ್ ಟ್ರಿಪೋಲಿ, ಅಮೆರಿಕ ದರ್ಜೆಯ ಉಭಯಚರ ದಾಳಿ ಹಡಗು, ಕೊಲ್ಲಿಗೆ ಹೋಗುತ್ತಿರುವ ಎರಡು ಸಾಗರ ಹಡಗುಗಳಲ್ಲಿ ದೊಡ್ಡದಾಗಿದೆ. ಯುಎಸ್ಎಸ್ ನ್ಯೂ ಓರ್ಲಿಯನ್ಸ್ ಜೊತೆಗೆ ಸಸೆಬೊದಲ್ಲಿ ನೆಲೆಗೊಂಡಿರುವ ಈ ಗುಂಪು ಪಶ್ಚಿಮ ಪೆಸಿಫಿಕ್‌ ನಲ್ಲಿ ಯುಎಸ್ ನೌಕಾಪಡೆಯ ಮುಂದಕ್ಕೆ ನಿಯೋಜಿಸಲಾದ ಉಪಸ್ಥಿತಿಯ ಭಾಗವಾಗಿದೆ. ಏತನ್ಮಧ್ಯೆ, 31ನೇ MEU ಸುಮಾರು 2,200 ನೌಕಾಪಡೆಗಳು ಮತ್ತು ನಾವಿಕರನ್ನು ಒಳಗೊಂಡಿದೆ; ಇದನ್ನು ಫಿರಂಗಿ, ಉಭಯಚರ ವಾಹನಗಳು ಮತ್ತು ವಿಶೇಷ ಘಟಕಗಳೊಂದಿಗೆ ಬಲವರ್ಧಿತ ಬೆಟಾಲಿಯನ್ ಸುತ್ತಲೂ ನಿರ್ಮಿಸಲಾಗಿದೆ. 261 ಮೀಟರ್ (856 ಅಡಿ) ಉದ್ದ ಮತ್ತು 45,000 ಟನ್ ತೂಕವಿರುವ USS ಟ್ರಿಪೋಲಿ, F-35B ಜೆಟ್‌ಗಳಿಗೆ ಹಗುರ ವಿಮಾನವಾಹಕವಾಗಿ ಕಾರ್ಯನಿರ್ವಹಿಸಬಲ್ಲದು ಮತ್ತು ಅದೇ ಸಮಯದಲ್ಲಿ ವಾಯು ಹಾಗೂ ಸಮುದ್ರದ ಮೂಲಕ ನೌಕಾಪಡೆಗಳನ್ನು ನಿಯೋಜಿಸಬಹುದು. 31ನೇ MEU ಮೆರೈನ್ ಕಾರ್ಪ್ಸ್ ಈ ಹಿಂದೆ 1998ರಲ್ಲಿ ಆಪರೇಷನ್ ಡೆಸರ್ಟ್ ಫಾಕ್ಸ್‌ ನಲ್ಲಿ ಭಾಗವಹಿಸಿತ್ತು. ಆಪರೇಷನ್ ಡೆಸರ್ಟ್ ಫಾಕ್ಸ್ ಡಿಸೆಂಬರ್ 1998ರಲ್ಲಿ ಇರಾಕ್ ವಿರುದ್ಧ ನಾಲ್ಕು ದಿನಗಳ ಯುಎಸ್ ಮತ್ತು ಬ್ರಿಟಿಷ್ ಬಾಂಬ್ ದಾಳಿ ಕಾರ್ಯಾಚರಣೆಯಾಗಿತ್ತು; ಇದನ್ನು ಆಗಿನ ಯುಎಸ್ ಅಧ್ಯಕ್ಷ ಬಿಲ್ ಕ್ಲಿಂಟನ್ ಮತ್ತು ಬ್ರಿಟಿಷ್ ಪ್ರಧಾನಿ ಟೋನಿ ಬ್ಲೇರ್ ಆದೇಶಿಸಿದ್ದರು. USS ಬಾಕ್ಸರ್ ಮತ್ತು 11ನೇ MEU ಎರಡನೇ ಉಭಯಚರ ಗುಂಪು ಕ್ಯಾಲಿಫೋರ್ನಿಯಾದ ಸ್ಯಾನ್ ಡಿಯಾಗೋದಲ್ಲಿರುವ ವಾಸ್ಪ್-ಕ್ಲಾಸ್ ಆಕ್ರಮಣ ಹಡಗಾದ USS ಬಾಕ್ಸರ್ ಅನ್ನು ಕೇಂದ್ರೀಕರಿಸಿದೆ. ಬಾಕ್ಸರ್ ಆಂಫಿಬಿಯಸ್ ರೆಡಿ ಗ್ರೂಪ್ ಯುಎಸ್ಎಸ್ ಕಾಮ್‌ಸ್ಟಾಕ್ ಮತ್ತು ಯುಎಸ್ಎಸ್ ಪೋರ್ಟ್‌ಲ್ಯಾಂಡ್ ಅನ್ನು ಸಹ ಒಳಗೊಂಡಿದೆ. ಇದು ಕ್ಯಾಲಿಫೋರ್ನಿಯಾದ ಕ್ಯಾಂಪ್ ಪೆಂಡಲ್ಟನ್‌ನಲ್ಲಿರುವ 11ನೇ MEU ಅನ್ನು ಒಯ್ಯುತ್ತದೆ. ಯುಎಸ್ಎಸ್ ಬಾಕ್ಸರ್ ಮಾರ್ಚ್ 19ರಂದು ಸ್ಯಾನ್ ಡಿಯಾಗೋದಿಂದ ಹೊರಟಿದೆ. ಅಮೆರಿಕದ ಅಧಿಕಾರಿಗಳ ಪ್ರಕಾರ, ನಿಯೋಜನೆಯನ್ನು ಮೂಲತಃ ನಿಗದಿಪಡಿಸಿದ ದಿನಾಂಕದಿಂದ ಸುಮಾರು ಮೂರು ವಾರಗಳಷ್ಟು ವೇಗಗೊಳಿಸಲಾಗಿದೆ. ಒಮಾನ್ ಕೊಲ್ಲಿಯಿಂದ ಸರಿಸುಮಾರು 22,200 ಕಿಮೀ (13,800 ಮೈಲುಗಳು) ದೂರದಲ್ಲಿರುವ ಈ ಗುಂಪು ಏಪ್ರಿಲ್ ಮಧ್ಯದ ಮೊದಲು ತಲುಪುವ ಸಾಧ್ಯತೆ ಕಡಿಮೆ. ಯುಎಸ್ಎಸ್ ಟ್ರಿಪೋಲಿಯಂತೆ, ಯುಎಸ್ಎಸ್ ಬಾಕ್ಸರ್ ಹೆಲಿಕಾಪ್ಟರ್‌ಗಳು ಮತ್ತು ಇತರ ಬೆಂಬಲ ವೇದಿಕೆಗಳೊಂದಿಗೆ F-35B ವಿಮಾನಗಳನ್ನು ನಿಯೋಜಿಸಬಹುದು. 11ನೇ MEU ಸುಮಾರು 2,200 ನೌಕಾಪಡೆ ಹಾಗೂ ನಾವಿಕರನ್ನು ಒಳಗೊಂಡಿದ್ದು, ಮೂರು ಹಡಗುಗಳಲ್ಲಿ ಸುಮಾರು 2,000 ಹೆಚ್ಚುವರಿ ನಾವಿಕರು ಸೇರಿದ್ದಾರೆ. 82ನೇ ವಾಯುಗಾಮಿ ವಿಭಾಗ ಫೋರ್ಟ್ ಬ್ರಾಗ್‌ನಲ್ಲಿ ನೆಲೆಗೊಂಡಿರುವ 82ನೇ ವಾಯುಗಾಮಿ ವಿಭಾಗವು ಅಮೆರಿಕ ಸೈನ್ಯದ XVIII ವಾಯುಗಾಮಿ ದಳದ ಕೇಂದ್ರಬಿಂದುವಾಗಿದೆ. ಅದರ ತಕ್ಷಣದ ಪ್ರತಿಕ್ರಿಯೆ ಪಡೆಯಿಂದ ಸುಮಾರು 2,000 ಸೈನಿಕರನ್ನು ಈಗ ಮಧ್ಯಪ್ರಾಚ್ಯಕ್ಕೆ ಕಳುಹಿಸಲಾಗಿದೆ. ಸುಮಾರು 3,000 ಸೈನಿಕರನ್ನು ಹೊಂದಿರುವ ಈ ಬ್ರಿಗೇಡ್ ಗಾತ್ರದ ರಚನೆ 18 ಗಂಟೆಗಳೊಳಗೆ ಜಗತ್ತಿನ ಎಲ್ಲಿಯಾದರೂ ನಿಯೋಜಿಸಬಹುದಾಗಿದೆ. 82ನೇ ಸೈನ್ಯವು ಪ್ಯಾರಾಚೂಟ್ ದಾಳಿಗಳನ್ನು ನಡೆಸಲು, ವಾಯುನೆಲೆಗಳನ್ನು ವಶಪಡಿಸಿಕೊಳ್ಳಲು ಮತ್ತು ಭೂಪ್ರದೇಶವನ್ನು ಸುರಕ್ಷಿತಗೊಳಿಸಲು ತರಬೇತಿ ಪಡೆದಿದೆ. ಈ ಪಡೆಗಳು ಏನು ಮಾಡಬಹುದು? ತಜ್ಞರ ಪ್ರಕಾರ, ಈ ಕಾರ್ಯಾಚರಣೆಯು ಯಾವುದೇ ರೀತಿಯ ಸಂಪೂರ್ಣ ನೆಲದ ಯುದ್ಧಕ್ಕಿಂತ ಸೀಮಿತ ಕಾರ್ಯಾಚರಣೆಗಳ ಮೇಲೆ ಗಮನ ಕೇಂದ್ರೀಕರಿಸಿದೆ. ಇಂಟರ್ನ್ಯಾಷನಲ್ ಇನ್‌ಸ್ಟಿಟ್ಯೂಟ್ ಫಾರ್ ಸ್ಟ್ರಾಟೆಜಿಕ್ ಸ್ಟಡೀಸ್ (IISS) ನ ಮಿಲಿಟರಿ ಕಾರ್ಯಾಚರಣೆಗಳ ಹಿರಿಯ ಸಹೋದ್ಯೋಗಿ ರೂಬೆನ್ ಸ್ಟೀವರ್ಟ್ ಅವರ ಪ್ರಕಾರ, ಈ ಹಂತದಲ್ಲಿ ಸಂಪೂರ್ಣ ನೆಲದ ಕಾರ್ಯಾಚರಣೆಯ ಸಾಧ್ಯತೆ ಕಡಿಮೆ. 2003ರ ಇರಾಕ್ ಆಕ್ರಮಣಕ್ಕೆ ಸುಮಾರು 160,000 ಸೈನಿಕರು ಅಗತ್ಯವಿದ್ದರು. ಆದರೆ ಪ್ರಸ್ತುತ ನಿಯೋಜಿಸಲಾದ ಪಡೆಗಳಲ್ಲಿ ಎರಡು ಬೆಟಾಲಿಯನ್ ಯುಎಸ್ ಮೆರೈನ್‌ಗಳು ಮತ್ತು ಎರಡು ಬೆಟಾಲಿಯನ್ ಪ್ಯಾರಾಟ್ರೂಪರ್‌ಗಳು ಮಾತ್ರ ಸೇರಿವೆ; ಪ್ರತಿಯೊಂದೂ ಸುಮಾರು 800 ಸೈನಿಕರನ್ನು ಹೊಂದಿದೆ. ಈ ಪಡೆಗಳು ನಿರಂತರ ಯುದ್ಧಕ್ಕಿಂತ, ಪ್ರತ್ಯೇಕ ಹಾಗೂ ಸಮಯ-ಸೀಮಿತ ಕಾರ್ಯಾಚರಣೆಗಳಿಗೆ ಸೂಕ್ತವಾಗಿವೆ. ಇವು ತ್ವರಿತ-ಪ್ರತಿಕ್ರಿಯೆ, ಮಾಡ್ಯುಲರ್ ಪಡೆಗಳಾಗಿದ್ದು, ದಾಳಿಗಳು, ಪ್ರಮುಖ ಭೂಪ್ರದೇಶದ ವಶಪಡಿಸಿಕೊಳ್ಳುವಿಕೆ ಮತ್ತು ಅಲ್ಪಾವಧಿಯ ಉಪಸ್ಥಿತಿಗೆ ವಿನ್ಯಾಸಗೊಳಿಸಲಾಗಿದೆ ಎಂದು ಸ್ಟೀವರ್ಟ್ ತಿಳಿಸಿದ್ದಾರೆ. ಯಾವುದೇ ಮಿಲಿಟರಿ ಕಾರ್ಯಾಚರಣೆಯನ್ನು ಇನ್ನೂ ಅಧಿಕೃತವಾಗಿ ಆದೇಶಿಸಲಾಗಿಲ್ಲವಾದರೂ, ಪಡೆಗಳ ಪ್ರಮಾಣ ಮತ್ತು ಸಂಯೋಜನೆ ಕನಿಷ್ಠ ಮೂರು ಸನ್ನಿವೇಶಗಳನ್ನು ಸೂಚಿಸುತ್ತದೆ. ಇವುಗಳಲ್ಲಿ ಖಾರ್ಗ್ ದ್ವೀಪವನ್ನು ವಶಪಡಿಸಿಕೊಳ್ಳುವುದು ಅಥವಾ ದಿಗ್ಬಂಧನ ಮಾಡುವುದು, ಹಾರ್ಮುಝ್ ಜಲಸಂಧಿಯನ್ನು ಮತ್ತೆ ತೆರೆಯಲು ಇರಾನ್ ಕರಾವಳಿಯನ್ನು ತೆರವುಗೊಳಿಸುವುದು ಮತ್ತು ಅತ್ಯಂತ ತೀವ್ರ ಸನ್ನಿವೇಶದಲ್ಲಿ ಇರಾನ್‌ ನ ಪರಮಾಣು ಸಾಮಗ್ರಿಯನ್ನು ಭದ್ರಪಡಿಸುವುದು ಸೇರಿವೆ. ಇರಾನ್‌ ನ ನೈಋತ್ಯ ಕರಾವಳಿಯಿಂದ ಸುಮಾರು 26 ಕಿಮೀ (16 ಮೈಲುಗಳು) ದೂರದಲ್ಲಿರುವ ಖಾರ್ಗ್ ದ್ವೀಪವು ದೇಶದ ತೈಲ ರಫ್ತಿನ ಅಂದಾಜು 90% ಅನ್ನು ನಿರ್ವಹಿಸುತ್ತದೆ. ಈ ತಿಂಗಳ ಆರಂಭದಲ್ಲಿ ಅಮೆರಿಕದ ವಾಯುದಾಳಿಗಳು ಅಲ್ಲಿನ ವಾಯುನೆಲೆ ಸೇರಿದಂತೆ ಮಿಲಿಟರಿ ಮೂಲಸೌಕರ್ಯವನ್ನು ಹಾನಿಗೊಳಿಸಿವೆ. ಖಾರ್ಗ್‌ನ ಆಚೆ, ಅಮೆರಿಕದ ನೌಕಾಪಡೆಗಳು ಹಾರ್ಮುಝ್ ಜಲಸಂಧಿಯ ಉದ್ದಕ್ಕೂ ಇರಾನಿನ ಕ್ಷಿಪಣಿ ತಾಣಗಳು, ಗಣಿ ದಾಸ್ತಾನುಗಳು ಮತ್ತು ವೇಗದ ದಾಳಿ ನೌಕೆಗಳ ವಿರುದ್ಧ ಹೆಲಿಕಾಪ್ಟರ್ ಮೂಲಕ ದಾಳಿ ನಡೆಸಬಹುದು. ಮೂರು ಆಯ್ಕೆಗಳಲ್ಲಿ, ಹಾರ್ಮುಝ್ ಜಲಸಂಧಿಯನ್ನು ಸುರಕ್ಷಿತಗೊಳಿಸುವುದು ಅತ್ಯಂತ ವಾಸ್ತವಿಕ ಕಾರ್ಯಾಚರಣೆ ಎಂದು ಸ್ಟೀವರ್ಟ್ ಹೇಳಿದ್ದಾರೆ. ಈ ಮಿಲಿಟರಿ ಜಮಾವಣೆಯು ಯುದ್ಧಕ್ಕೆ ಮುನ್ನುಡಿಯಾಗುವುದಕ್ಕಿಂತ ಬಲವಂತದ ಹತೋಟಿಗಾಗಿ ಬಳಸುವ ತಂತ್ರವಾಗಿದೆ. ಪಡೆಗಳನ್ನು ಅಲ್ಲಿಗೆ ಕಳುಹಿಸುವ ಮೂಲಕ ಅಮೆರಿಕ ತನ್ನ ಚೌಕಾಶಿ ಶಕ್ತಿಯನ್ನು ಹೆಚ್ಚಿಸುತ್ತಿದೆ; ರಾಜತಾಂತ್ರಿಕತೆ ವಿಫಲವಾದರೆ ತನ್ನ ಬಳಿ ಪರ್ಯಾಯಗಳಿವೆ ಎಂಬುದನ್ನು ಸೂಚಿಸುತ್ತಿದೆ ಎಂದು ಅವರು ಹೇಳಿದ್ದಾರೆ. ಆದಾಗ್ಯೂ, ಇದು ಸೂಕ್ಷ್ಮ ಸಮತೋಲನ. ಒಮ್ಮೆ ಸೈನ್ಯವು ತ್ವರಿತ ಪ್ರತಿಕ್ರಿಯೆ ಪಡೆಯನ್ನು ಮೀರಿಸಿ ನಿರಂತರ ರಚನೆಗಳಾಗಿ ವಿಸ್ತರಿಸಿದರೆ, ಹಿಂದಕ್ಕೆ ಸರಿಯುವುದು ಕಷ್ಟವಾಗುತ್ತದೆ. ಜಮಾವಣೆ ಮುಂದುವರಿದಂತೆ ಯುದ್ಧ ಆರಂಭಿಸುವ “ಕಿಡಿ”ಯ ಅಪಾಯ ಹೆಚ್ಚಾಗುತ್ತದೆ ಮತ್ತು ಶಾಂತಿಯುತ ಪರಿಹಾರದ ಅವಕಾಶ ಕಡಿಮೆಯಾಗುತ್ತದೆ ಎಂದು ಅವರು ಎಚ್ಚರಿಸಿದ್ದಾರೆ. ಮಾರ್ಚ್ 24ರಂದು ಟ್ರಂಪ್, ಯುಎಸ್ ಮತ್ತು ಇರಾನ್ ಸಂಘರ್ಷವನ್ನು ಕೊನೆಗೊಳಿಸುವ ಗುರಿಯನ್ನು ಹೊಂದಿರುವ 15 ಅಂಶಗಳ ಒಪ್ಪಂದವನ್ನು ತಲುಪಿವೆ ಎಂದು ಹೇಳಿದ್ದಾರೆ. ಆದರೆ ಇರಾನ್ ಯಾವುದೇ ನೇರ ಮಾತುಕತೆಗಳನ್ನು ನಿರಾಕರಿಸಿದೆ. ವಿದೇಶಾಂಗ ಸಚಿವಾಲಯದ ವಕ್ತಾರ ಇಸ್ಮಾಯಿಲ್ ಬಘೈ ಅವರು, “ಯುದ್ಧವನ್ನು ಕೊನೆಗೊಳಿಸಲು ಮಾತುಕತೆಗಾಗಿ ಅಮೆರಿಕದ ವಿನಂತಿಯನ್ನು ತಿಳಿಸುವ ಕೆಲವು ಸ್ನೇಹಪರ ರಾಷ್ಟ್ರಗಳಿಂದ ಟೆಹ್ರಾನ್‌ ಗೆ ಸಂದೇಶಗಳು ಬಂದಿವೆ; ಅವಕ್ಕೆ ಸೂಕ್ತ ಪ್ರತಿಕ್ರಿಯೆಗಳನ್ನು ನೀಡಲಾಗಿದೆ,” ಎಂದು ತಿಳಿಸಿದ್ದಾರೆ.

ವಾರ್ತಾ ಭಾರತಿ 26 Mar 2026 11:27 pm

ವಿಜಯನಗರ | ಪಂಚ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನೆ ಸಭೆ

ಕೊಟ್ಟೂರು (ವಿಜಯನಗರ )  :ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಹೊಸಮನಿ ಅನಿಲ್ ಅವರ ಅಧ್ಯಕ್ಷತೆಯಲ್ಲಿ ಪ್ರಗತಿ ಪರಿಶೀಲನೆ ಸಭೆ ಜರುಗಿತು. ಸಭೆಯಲ್ಲಿ ಪಂಚ ಗ್ಯಾರಂಟಿ ಯೋಜನೆಗಳಾದ ಗೃಹಲಕ್ಷ್ಮಿ, ಗೃಹಜ್ಯೋತಿ, ಶಕ್ತಿ, ಯುವ ನಿಧಿ ಹಾಗೂ ಅನ್ನಭಾಗ್ಯ ಯೋಜನೆಗಳ ಅನುಷ್ಠಾನ ಕುರಿತು ಚರ್ಚೆ ನಡೆಯಿತು. ಜಿಲ್ಲಾ ಮಟ್ಟದ ಸಭೆಗೆ ನೀಡಿರುವ ಅಂಕಿ-ಅಂಶಗಳು ಹಾಗೂ ತಾಲೂಕು ಮಟ್ಟದ ಅಂಕಿ-ಅಂಶಗಳಲ್ಲಿ ವ್ಯತ್ಯಾಸ ಕಂಡುಬಂದ ಹಿನ್ನೆಲೆಯಲ್ಲಿ ಅಧ್ಯಕ್ಷರು ಅಧಿಕಾರಿಗಳನ್ನು ಪ್ರಶ್ನಿಸಿದರು. ಸರಿಯಾದ ಮಾಹಿತಿ ನೀಡದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಅವರು, ಮುಂದಿನ ಸಭೆಗೆ ಮುನ್ನ ಅಂಕಿ-ಅಂಶಗಳನ್ನು ಸರಿಪಡಿಸುವಂತೆ ಸೂಚಿಸಿದರು. ಗ್ರಾಮಗಳಲ್ಲಿ ವಿದ್ಯುತ್ ತಂತಿಗಳಿಗೆ ಅನಧಿಕೃತ ಸಂಪರ್ಕ ಹೊಂದಿರುವವರಿಗೂ ಗೃಹಜ್ಯೋತಿ ಸೌಲಭ್ಯ ಒದಗಿಸಲು ಕ್ರಮ ಕೈಗೊಳ್ಳುವಂತೆ ಜೆಸ್ಕಾಂ ಅಧಿಕಾರಿಗಳಿಗೆ ಸೂಚನೆ ನೀಡಿದರು. ಗೃಹಲಕ್ಷ್ಮಿ ಯೋಜನೆಯ ಹಣ ನವೆಂಬರ್ ತಿಂಗಳವರೆಗೆ ಫಲಾನುಭವಿಗಳ ಖಾತೆಗೆ ಜಮೆಯಾಗಿದ್ದು, ಇನ್ನೂ ಮೂರು ತಿಂಗಳ ಹಣ ಬಾಕಿಯಿದೆ ಎಂದು ಸಿಡಿಪಿಒ ಶ್ರೀಮತಿ ಮಾಲುಂಬಿ ಮಾಹಿತಿ ನೀಡಿದರು. ಮರಣ ಹೊಂದಿದ ಫಲಾನುಭವಿಗಳನ್ನು ಗುರುತಿಸಿ, ಅವರ ಖಾತೆಗೆ ಹಣ ಜಮೆಯಾಗದಂತೆ ಕ್ರಮ ಕೈಗೊಳ್ಳಲಾಗುತ್ತಿದೆ. ಈಗಾಗಲೇ 240 ಮರಣ ಹೊಂದಿದ ಫಲಾನುಭವಿಗಳ ಖಾತೆಗಳಲ್ಲಿ ಜಮೆಯಾದ ಹಣವನ್ನು ಬ್ಯಾಂಕ್ ಮೂಲಕ ಸರ್ಕಾರಕ್ಕೆ ಹಿಂತಿರುಗಿಸುವ ಪ್ರಕ್ರಿಯೆ ನಡೆದಿದೆ ಎಂದು ತಿಳಿಸಿದರು. ಜಿಲ್ಲಾ ಕೇಂದ್ರಕ್ಕೆ ಸಂಪರ್ಕ ಕಲ್ಪಿಸಲು ಹೆಚ್ಚುವರಿ ಬಸ್ ವ್ಯವಸ್ಥೆ ಕುರಿತು ಹಿಂದಿನ ಸಭೆಯಲ್ಲಿ ನೀಡಿದ ಸೂಚನೆಗಳ ಕುರಿತು ಅಧ್ಯಕ್ಷರು ಸಾರಿಗೆ ಇಲಾಖೆಯ ಅಧಿಕಾರಿಗಳನ್ನು ಪ್ರಶ್ನಿಸಿದರು. ಬೆಳಿಗ್ಗೆ ಹಾಗೂ ಸಂಜೆ ಕೊಟ್ಟೂರು-ಹೊಸಪೇಟೆ ನಡುವೆ ಬಸ್ ವ್ಯವಸ್ಥೆ, ವಿಶೇಷವಾಗಿ ರಾತ್ರಿ ಬಸ್ ವ್ಯವಸ್ಥೆ ಕಲ್ಪಿಸುವಂತೆ ಸದಸ್ಯರು ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಾರಿಗೆ ಘಟಕದ ಮೇಲ್ವಿಚಾರಕ ಎಚ್.ಕೆ. ವಿಶ್ವನಾಥ್ ಅವರು, ಕೂಡ್ಲಿಗಿ ಡಿಪೋ ವ್ಯಾಪ್ತಿಯಲ್ಲಿ ಪ್ರತಿದಿನ ಸುಮಾರು 20 ಸಾವಿರ ಮಹಿಳೆಯರು ಶಕ್ತಿ ಯೋಜನೆಯಡಿ ಪ್ರಯಾಣಿಸುತ್ತಿದ್ದು, ಸಿಬ್ಬಂದಿ ಕೊರತೆಯಿಂದ ಹೆಚ್ಚುವರಿ ಬಸ್ ವ್ಯವಸ್ಥೆ ಕಲ್ಪಿಸಲು ಅಡಚಣೆ ಉಂಟಾಗಿದೆ ಎಂದು ತಿಳಿಸಿದರು. ಕೂಡ್ಲಿಗಿ-ಕೊಟ್ಟೂರು-ಹರಪನಹಳ್ಳಿ ಮಾರ್ಗದಲ್ಲಿ ಬಸ್ ಸಂಚಾರ ಹೆಚ್ಚಿಸುವ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳುವಂತೆ ಅಧ್ಯಕ್ಷರು ಸೂಚಿಸಿದರು. ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಡಾ.ಬಿ.ಆನಂದಕುಮಾರ್ ಮಾತನಾಡಿ, ಸಾರಿಗೆ ಇಲಾಖೆಯೊಂದಿಗೆ ಸಮನ್ವಯ ಸಾಧಿಸಿ ಸೂಕ್ತ ಬಸ್ ವ್ಯವಸ್ಥೆ ಕಲ್ಪಿಸುವುದಾಗಿ ತಿಳಿಸಿದರು. ಸಭೆಯಲ್ಲಿ ಸಮಿತಿ ಸದಸ್ಯರು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.

ವಾರ್ತಾ ಭಾರತಿ 26 Mar 2026 11:24 pm

ವಿಜಯನಗರ | ಕೊಟ್ಟೂರಿನ ವನಜಾ ಬಸಾಪುರ್‌ ಅವರಿಗೆ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ

ವಿಜಯನಗರ : ಕರ್ನಾಟಕ ರಾಜ್ಯ ಸರ್ಕಾರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ವತಿಯಿಂದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮಹಿಳೆಯರಿಗೆ ಪ್ರತಿವರ್ಷ ನೀಡುವ ಕಿತ್ತೂರು ರಾಣಿ ಚೆನ್ನಮ್ಮ ಪುರಸ್ಕಾರಕ್ಕೆ ಕೊಟ್ಟೂರಿನ ಪ್ರಸ್ತುತ ಶಿವಮೊಗ್ಗ ನಿವಾಸಿ ವನಜಾ ಬಸಾಪುರ್ ಭಾಜನರಾಗಿದ್ದಾರೆ. ಕರ್ನಾಟಕ ಸರ್ಕಾರವು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮೂಲಕ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸುವ ಮಹಿಳೆಯರನ್ನು ಗುರುತಿಸಿ ಈ ಪ್ರಶಸ್ತಿಯನ್ನು ನೀಡುತ್ತಾ ಬಂದಿದೆ. ಈ ಸಾಲಿನ ಪ್ರಶಸ್ತಿಯನ್ನು ಅನೇಕ ಸಂಘ ಸಂಸ್ಥೆಗಳು ಹಾಗೂ ಮಹಿಳೆಯರು ಪಡೆದಿದ್ದು, ಕಲೆ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ವನಜಾ ಬಸಾಪುರ್ ಆಯ್ಕೆಯಾಗಿದ್ದಾರೆ. ಬೆಂಗಳೂರು ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಪ್ರಶಸ್ತಿ ಪ್ರದಾನ ಮಾಡಿದರು. ಪ್ರಶಸ್ತಿಯು 25,000 ರೂ. ನಗದು, ಪ್ರಶಸ್ತಿ ಪತ್ರ ಹಾಗೂ ಸ್ಮರಣಿಕೆಯನ್ನು ಒಳಗೊಂಡಿದೆ. ಕೊಟ್ಟೂರಿನ ಬಸಾಪುರದ ಸೋಮಶೇಖರಪ್ಪ ಹಾಗೂ ವೀರಮ್ಮ ದಂಪತಿಗಳ ಪುತ್ರಿಯಾದ ವನಜಾ ಬಸಾಪುರ್ ಅವರು “ಶಾಂತಾ ಆನಂದ್” ಎಂಬ ಹೆಸರಿನಿಂದಲೂ ಪ್ರಸಿದ್ಧರಾಗಿದ್ದಾರೆ. 2008ರಲ್ಲಿ ಕರ್ನಾಟಕ ಸರ್ಕಾರದ ರಾಜ್ಯೋತ್ಸವ ಪ್ರಶಸ್ತಿಗೂ ಭಾಜನರಾಗಿದ್ದರು. ಸುಗಮ ಸಂಗೀತ, ನಿರೂಪಣೆ ಹಾಗೂ ಸಾಮಾಜಿಕ ಸೇವಾ ಕ್ಷೇತ್ರಗಳಲ್ಲಿ ಸಕ್ರಿಯರಾಗಿರುವ ಅವರು, ಶಿವಮೊಗ್ಗದ ವೀರಶೈವ ಸಮಾಜದ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದು, ಅನೇಕ ಸಂಘ ಸಂಸ್ಥೆಗಳಲ್ಲಿ ನಿರ್ದೇಶಕರಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ. ರಂಭಾಪುರಿ ಜಗದ್ಗುರುಗಳ ದಸರಾ ದರ್ಬಾರ್ ಕಾರ್ಯಕ್ರಮದ ಖಾಯಂ ನಿರೂಪಕರಾಗಿರುವ ಅವರು, ಹಂಪಿ ಉತ್ಸವದಲ್ಲಿಯೂ ಅನೇಕ ಬಾರಿ ಸುಗಮ ಸಂಗೀತ ಕಾರ್ಯಕ್ರಮಗಳನ್ನು ನೀಡಿದ್ದಾರೆ. ವನಜಾ ಬಸಾಪುರ್ ಅವರಿಗೆ ಈ ಪ್ರಶಸ್ತಿ ಲಭಿಸಿರುವುದು ಕುಟುಂಬದವರು ಹಾಗೂ ಹಿತೈಷಿಗಳಲ್ಲಿ ಸಂತಸ ಮೂಡಿಸಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಸಾಧನೆ ಮಾಡಿ ಹೆಚ್ಚಿನ ಪ್ರಶಸ್ತಿಗಳನ್ನು ಪಡೆಯಲಿ ಎಂಬುದು ಎಲ್ಲರ ಆಶಯವಾಗಿದೆ.

ವಾರ್ತಾ ಭಾರತಿ 26 Mar 2026 11:21 pm

ಇರಾನ್‌ ಜನರು ನನ್ನನ್ನು ಸರ್ವೋಚ್ಚ ನಾಯಕನನ್ನಾಗಿ ಮಾಡಲು ಬಯಸಿದ್ದರು: ಡೊನಾಲ್ಡ್ ಟ್ರಂಪ್

ವಾಶಿಂಗ್ಟನ್, ಮಾ.26: ಇರಾನ್‍ನ ಜನತೆ ತನ್ನನ್ನು ಅವರ ಸರ್ವೋಚ್ಛ ನಾಯಕನನ್ನಾಗಿ ಮಾಡಲು ಬಯಸಿದ್ದರು. ಆದರೆ ಆ ಹುದ್ದೆ ಪಡೆಯಲು ತನಗೆ ಆಸಕ್ತಿಯಿಲ್ಲ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ವಾಶಿಂಗ್ಟನ್‍ನಲ್ಲಿ ರಿಪಬ್ಲಿಕನ್ ಪಕ್ಷದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು `ಆಯತೊಲ್ಲಾ ಅಲಿ ಖಾಮಿನೈ ಅಮೆರಿಕ-ಇಸ್ರೇಲ್ ಮಿಲಿಟರಿ ಕಾರ್ಯಾಚರಣೆಯಲ್ಲಿ ಹತರಾದ ಬಳಿಕ ಇರಾನ್‍ನ ನಾಯಕತ್ವವು ತನ್ನನ್ನು ಮುಂದಿನ ಸರ್ವೋಚ್ಛ ನಾಯಕನನ್ನಾಗಿಸುವ ಪರಿಕಲ್ಪನೆಯನ್ನು ಮುಂದಿರಿಸಿತ್ತು. ` ಇಲ್ಲ. ಧನ್ಯವಾದಗಳು. ನನಗೆ ಅದು ಬೇಡ' ಎಂದು ನಿರಾಕರಿಸಿದ್ದೆ ಎಂದು ಹೇಳಿರುವುದಾಗಿ ವರದಿಯಾಗಿದೆ. ಈ ಹೇಳಿಕೆಗೆ ಸಾಮಾಜಿಕ ಮಾಧ್ಯಮದಲ್ಲಿ ತಮಾಷೆಯ ಪ್ರತಿಕ್ರಿಯೆ ವ್ಯಕ್ತವಾಗಿದೆ. ಓರ್ವ ಬಳಕೆದಾರರು ಟ್ರಂಪ್ ಅವರ ಫೋಟೋವನ್ನು `ಎಕ್ಸ್'ನಲ್ಲಿ ಪೋಸ್ಟ್ ಮಾಡಿ `ಅಯತೊಲ್ಲಾ ಡೊನಾಲ್ಡ್ ಜೆ.ಟ್ರಂಪ್' ಎಂದು ಕ್ಯಾಪ್ಷನ್ ನೀಡಿದ್ದಾರೆ.

ವಾರ್ತಾ ಭಾರತಿ 26 Mar 2026 11:18 pm

ಪೆಟ್ರೋಲ್, ಡೀಸೆಲ್‌ ದರ ಏರಿಕೆ ಮಾಡಿದ ಭಾರತದ ಅತಿ ದೊಡ್ಡ ಖಾಸಗಿ ತೈಲ ಮಾರಾಟ ಸಂಸ್ಥೆ ನಯಾರಾ

ಹೊಸದಿಲ್ಲಿ,ಮಾ.26: ಸರಕಾರಿ ಸ್ವಾಮ್ಯದ ತೈಲ ಮಾರುಕಟ್ಟೆ ಕಂಪೆನಿಗಳು ತಮ್ಮ ರಿಟೇಲ್ ಮಾರಾಟ ದರಗಳಲ್ಲಿ ಸ್ಥಿರತೆಯನ್ನು ಕಾಪಾಡಿಕೊಂಡಿವೆಯಾದರೂ, ಭಾರತದ ಅತಿ ದೊಡ್ಡ ರಿಟೇಲ್ ತೈಲ ಮಾರಾಟ ಸಂಸ್ಥೆ ‘ನಯಾರಾ ಎನರ್ಜಿ’ ಯು ಪೆಟ್ರೋಲ್ ಹಾಗೂ ಡೀಸೆಲ್ ದರಗಳಲ್ಲಿ ಏರಿಕೆ ಮಾಡಿದೆ. ನಯಾರಾ ಎನರ್ಜಿ ಗುರುವಾರ ಪೆಟ್ರೋಲ್ ದರದಲ್ಲಿ ಲೀಟರ್‌ಗೆ 5 ರೂ. ಹಾಗೂ ಡೀಸೆಲ್ ದರದಲ್ಲಿ ಲೀಟರ್‌ಗೆ 3 ರೂ. ಏರಿಕೆ ಮಾಡಿದೆ. ವ್ಯಾಟ್‌ನಂತಹ ಸ್ಥಳೀಯ ತೆರಿಗೆಗಳಿಂದಾಗಿ ತೈಲ ದರ ಏರಿಕೆಯು ವಿವಿಧ ರಾಜ್ಯಗಳಲ್ಲಿ ವಿಭಿನ್ನವಾಗಿರಲಿದ್ದು, 5.30ರೂ.ವರೆಗೆ ಹೆಚ್ಚಾಗುವ ಸಾಧ್ಯತೆಯಿದೆ. ಪಶ್ಚಿಮ ಏಶ್ಯ ಸಂಘರ್ಷದ ಬಳಿಕ ಜಾಗತಿಕ ಕಚ್ಚಾ ತೈಲದರಗಳಲ್ಲಿ ತೀವ್ರ ಏರಿಕೆಯಾಗಿರುವ ಹಿನ್ನೆಲೆಯಲ್ಲಿ ‘ನಯಾರಾ ಎನರ್ಜಿ’ ಈ ಕ್ರಮವನ್ನು ಕೈಗೊಂಡಿದೆ. ಫೆಬ್ರವರಿ 28ರಂದು ಇರಾನ್ ವಿರುದ್ಧ ಅಮೆರಿಕ ಹಾಗೂ ಇಸ್ರೇಲ್ ಜಂಟಿ ಮಿಲಿಟರಿ ದಾಳಿಗಳನ್ನು ಆರಂಭಿಸಿದ ಬಳಿಕ ಪಶ್ಚಿಮ ಏಶ್ಯದಲ್ಲಿ ಸಂಘರ್ಷ ಭುಗಿಲೆದ್ದಿದ್ದು ಜಾಗತಿಕ ಇಂಧನ ಮಾರುಕಟ್ಟೆಗಳಲ್ಲಿ ದೇಶಾದ್ಯಂತ ತೈಲ ಹಾಗೂ ನೈಸರ್ಗಿಕ ಅನಿಲ ಪೂರೈಕೆಯಲ್ಲಿ ಅಡಚಣೆಯುಂಟಾಗಿದೆ. ನಯಾರಾ ಎನರ್ಜಿ ಒಡೆತನದ 7 ಸಾವಿರ ಪೆಟ್ರೋಲ್ ಪಂಪ್‌ಗಳು ಕಾರ್ಯಾಚರಿಸುತ್ತಿವೆ. ಜಾಗತಿಕ ಮಟ್ಟದಲ್ಲಿ ತೈಲದರದಲ್ಲಿ ತೀವ್ರ ಏರಿಕೆಯಾಗಿರುವ ಹೊರತಾಗಿಯೂ ಸಾರ್ವಜನಿಕ ರಂಗದ ತೈಲಕಂಪೆನಿಗಳಾದ ಭಾರತ್ ಪೆಟ್ರೋಲಿಯಂ ಹಿಂದೂಸ್ತಾನ್ ಪೆಟ್ರೋಲಿಯಂ, ಇಂಡಿಯನ್ ಆಯಿಲ್ ಸಂಸ್ಥೆಗಳು ಪೆಟ್ರೋಲಿಯಂ ಹಾಗೂ ತೈಲ ಮಾರಾಟ ದರಗಳಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಈ ಸಾರ್ವಜನಿಕ ರಂಗದ ಕಂಪೆನಿಗಳು ಭಾರತದ ತೈಲಮಾರುಕಟ್ಟೆಯ ಶೇ.90ರಷ್ಟನ್ನು ನಿಯಂತ್ರಿಸುತ್ತಿವೆ.

ವಾರ್ತಾ ಭಾರತಿ 26 Mar 2026 11:18 pm

Budget Session 2026 | ಮೇಲ್ಮನೆಯಲ್ಲಿ ಮೋಟಾರು ವಾಹನಗಳ ತೆರಿಗೆ ನಿರ್ಧರಣೆ(ತಿದ್ದುಪಡಿ) ವಿಧೇಯಕ ಅಂಗೀಕಾರ

ಬೆಂಗಳೂರು : ರಾಜ್ಯದ ಸಾರಿಗೆ ಕ್ಷೇತ್ರದಲ್ಲಿ ಮಹತ್ವದ ಬದಲಾವಣೆ ತರುವ ಹಾಗೂ ಸಂಪನ್ಮೂಲ ಕ್ರೋಢೀಕರಣಕ್ಕೆ ಒತ್ತು ನೀಡುವ ಉದ್ದೇಶದಿಂದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ವಿಧಾನಸಭೆಯಿಂದ ಅಂಗೀಕಾರವಾದ ರೂಪದಲ್ಲಿರುವ ‘ಕರ್ನಾಟಕ ಮೋಟಾರು ವಾಹನಗಳ ತೆರಿಗೆ ನಿರ್ಧರಣೆ (ತಿದ್ದುಪಡಿ) ವಿಧೇಯಕ-2026’ಅನ್ನು ಗುರುವಾರ ವಿಧಾನ ಪರಿಷತ್ತಿನಲ್ಲಿ ಮಂಡಿಸಿದರು. ಬಳಿಕ ಈ ವಿಧೇಯಕದ ಕುರಿತು ಮಾತನಾಡಿದ ಅವರು, ತೆರಿಗೆ ಸಂಗ್ರಹಣೆಯನ್ನು ಪರಿಣಾಮಕಾರಿಯಾಗಿಸಲು ಮತ್ತು ರಾಜ್ಯದ ಬೊಕ್ಕಸಕ್ಕೆ ತೆರಿಗೆ ಬಾಕಿದಾರರನ್ನು ಕಡಿಮೆಯಾಗಿಸಲು ಹಾಗೂ ಇತರೆ ಆನುಷಂಗಿಕ ತಿದ್ದುಪಡಿಗಳನ್ನು ಸಹ ಮಾಡಲು ಕರ್ನಾಟಕ ಮೋಟಾರು ವಾಹನಗಳ ತೆರಿಗೆ ನಿರ್ಧರಣೆ ಅಧಿನಿಯಮ, 1957 (1957ರ ಕರ್ನಾಟಕ ಅಧಿನಿಯಮ 35)ನ್ನು ಮತ್ತಷ್ಟು ತಿದ್ದುಪಡಿ ಮಾಡುವುದು ಅವಶ್ಯಕವೆಂದು ಪರಿಗಣಿಸಿ ಈ ವಿಧೇಯಕ ಜಾರಿಗೆ ಮಂಡಿಸಲಾಗಿದೆ ಎಂದರು. ರಾಜ್ಯದಲ್ಲಿ ಸಂಚರಿಸುವ ಬಾಡಿಗೆ ವಾಹನಗಳು, ಪ್ರವಾಸಿ ವಾಹನಗಳು ಹಾಗೂ ಖಾಸಗಿ ಸೇವಾ ವಾಹನಗಳ ಜೀವಿತಾವಧಿ ತೆರಿಗೆಯನ್ನು ಈ ತಿದ್ದುಪಡಿಯ ಮೂಲಕ ಪರಿಷ್ಕರಿಸಲಾಗಿದೆ. ಪ್ರಮುಖವಾಗಿ ಕಾರು, ಜೀಪು ಮತ್ತು ಓಮ್ನಿ ವಾಹನಗಳ ನೋಂದಣಿ ತೆರಿಗೆಯಲ್ಲಿ ಬದಲಾವಣೆ ಮಾಡಲಾಗಿದೆ ಎಂದು ರಾಮಲಿಂಗಾರೆಡ್ಡಿ ತಿಳಿಸಿದರು. ಪಕ್ಕದ ರಾಜ್ಯಗಳಲ್ಲಿ ತೆರಿಗೆ ಪ್ರಮಾಣ ಕಡಿಮೆ ಇರುವುದರಿಂದ ಅನೇಕ ವಾಹನ ಮಾಲಕರು ಅನ್ಯ ರಾಜ್ಯಗಳಲ್ಲಿ ವಾಹನ ನೋಂದಣಿ ಮಾಡುತ್ತಿದ್ದರು. ಇದನ್ನು ತಡೆಗಟ್ಟಲು ಮತ್ತು ಕರ್ನಾಟಕದಲ್ಲೇ ನೋಂದಣಿ ಪ್ರಕ್ರಿಯೆಯನ್ನು ಪ್ರೋತ್ಸಾಹಿಸಲು ತೆರಿಗೆ ದರಗಳನ್ನು ವೈಜ್ಞಾನಿಕವಾಗಿ ಮರು-ಹೊಂದಾಣಿಕೆ ಮಾಡಲಾಗಿದೆ ಎಂದು ರಾಮಲಿಂಗಾರೆಡ್ಡಿ ಹೇಳಿದರು. ಹೊಸ ವಾಹನಗಳ ನೋಂದಣಿ ಸಮಯದಲ್ಲಿ ಸಾರಿಗೆ ಕಾರ್ಮಿಕರ ಕಲ್ಯಾಣಕ್ಕಾಗಿ ವಿಶೇಷ ಸೆಸ್ ವಿಧಿಸಲಾಗುವುದು. ದ್ವಿಚಕ್ರ ವಾಹನಗಳಿಗೆ 500 ರೂ. ನಾಲ್ಕು ಚಕ್ರದ ವಾಹನಗಳಿಗೆ(ಕಾರು) 1,000 ರೂ. ಈ ಹಣವನ್ನು ಚಾಲಕರು, ಕ್ಲೀನರ್‍ಗಳು ಮತ್ತು ಮೆಕ್ಯಾನಿಕ್‍ಗಳಂತಹ ಸಾರಿಗೆ ಕ್ಷೇತ್ರದ ಅಸಂಘಟಿತ ಕಾರ್ಮಿಕರ ಕಲ್ಯಾಣ ಮತ್ತು ವಿಮಾ ಸೌಲಭ್ಯಗಳಿಗಾಗಿ ಬಳಸಲಾಗುವುದು ಎಂದು ರಾಮಲಿಂಗಾರೆಡ್ಡಿ ತಿಳಿಸಿದರು. ಪರಿಸರ ಸ್ನೇಹಿ ಸಾರಿಗೆಯನ್ನು ಉತ್ತೇಜಿಸಲು ವಿದ್ಯುತ್ ಚಾಲಿತ ವಾಹನಗಳಿಗೆ ಈ ಹಿಂದಿನಂತೆಯೇ ತೆರಿಗೆ ವಿನಾಯಿತಿ ಮತ್ತು ರಿಯಾಯಿತಿಗಳನ್ನು ಮುಂದುವರಿಸಲು ನಿರ್ಧರಿಸಲಾಗಿದೆ. 15 ವರ್ಷ ಮೀರಿದ ಹಳೆಯ ಸರಕಾರಿ ವಾಹನಗಳನ್ನು ಕಡ್ಡಾಯವಾಗಿ ಗುಜರಿ ಮಾಡುವ ಪ್ರಕ್ರಿಯೆಗೆ ಈ ವಿಧೇಯಕದ ಮೂಲಕ ವೇಗ ನೀಡಲಾಗುವುದು. ಇದು ಪರಿಸರ ಮಾಲಿನ್ಯ ತಡೆಗಟ್ಟಲು ಸಹಕಾರಿಯಾಗಲಿದೆ ಎಂದು ರಾಮಲಿಂಗಾರೆಡ್ಡಿ ತಿಳಿಸಿದರು. ಈ ತಿದ್ದುಪಡಿ ವಿಧೇಯಕವು ಕೇವಲ ಆದಾಯ ಸಂಗ್ರಹಕ್ಕಾಗಿ ಅಲ್ಲ, ಬದಲಾಗಿ ಲಕ್ಷಾಂತರ ಸಾರಿಗೆ ಕಾರ್ಮಿಕರ ಕುಟುಂಬಗಳಿಗೆ ಸಾಮಾಜಿಕ ಭದ್ರತೆ ನೀಡುವ ಮಾನವೀಯ ದೃಷ್ಟಿಕೋನವನ್ನು ಹೊಂದಿದೆ. ಅಲ್ಲದೆ, ಅನ್ಯ ರಾಜ್ಯಗಳ ನೋಂದಣಿ ಪೈಪೋಟಿಯನ್ನು ಸಮರ್ಥವಾಗಿ ಎದುರಿಸಲು ಇದು ಸಹಕಾರಿಯಾಗಲಿದೆ ಎಂದು ರಾಮಲಿಂಗಾರೆಡ್ಡಿ ತಿಳಿಸಿದರು. ನಂತರ ಕರ್ನಾಟಕ ಮೋಟಾರು ವಾಹನಗಳ ತೆರಿಗೆ ನಿರ್ಧರಣೆ (ತಿದ್ದುಪಡಿ) ವಿಧೇಯಕವು ವಿಧಾನಪರಿಷತ್ತಿನಲ್ಲಿ ಅಂಗೀಕಾರವಾಯಿತು.  

ವಾರ್ತಾ ಭಾರತಿ 26 Mar 2026 11:15 pm

ವಿಜಯನಗರ | ಸಫಾಯಿ ಕಾರ್ಮಿಕರಿಗೆ ಸರ್ಕಾರದ ಯೋಜನೆಗಳು ಸಕಾಲಕ್ಕೆ ತಲುಪಲಿ : ಡಿಸಿ ಕವಿತಾ ಎಸ್.ಮನ್ನಿಕೇರಿ ಸೂಚನೆ

ವಿಜಯನಗರ (ಹೊಸಪೇಟೆ) :ಜಿಲ್ಲೆಯಲ್ಲಿನ ಸಫಾಯಿ ಕರ್ಮಚಾರಿ ಕಾರ್ಮಿಕರನ್ನು ಗುರುತಿಸಿ, ಅವರಿಗೆ ಸರ್ಕಾರದ ಯೋಜನೆಗಳನ್ನು ಸಕಾಲಕ್ಕೆ ಒದಗಿಸುವ ಮೂಲಕ ಸಾಮಾಜಿಕ ಮತ್ತು ಆರ್ಥಿಕವಾಗಿ ಮುನ್ನಲೆಗೆ ತರಲು ಅಧಿಕಾರಿಗಳು ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ ಕಟ್ಟುನಿಟ್ಟಿನ ಸೂಚನೆ ನೀಡಿದರು. ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ ಮ್ಯಾನ್ಯುಯಲ್ ಸ್ಕಾವೆಂಜರ್ ಅನುಷ್ಠಾನ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಮ್ಯಾನ್ಯುಯಲ್ ಸ್ಕಾವೆಂಜರ್ ಕಾರ್ಮಿಕರಿಗೆ ಕಾಲಕಾಲಕ್ಕೆ ಆರೋಗ್ಯ ತಪಾಸಣೆ ನಡೆಸಬೇಕು. ಅವರ ಆರೋಗ್ಯದ ಹಿತದೃಷ್ಟಿಯಿಂದ ಗ್ಲೌಸ್, ಬೂಟು ಸೇರಿದಂತೆ ಅತ್ಯಾಧುನಿಕ ಸುರಕ್ಷತಾ ಪರಿಕರಗಳನ್ನು ಒದಗಿಸಬೇಕು. ಈ ವೃತ್ತಿಯಲ್ಲಿರುವ ಕಾರ್ಮಿಕರನ್ನು ಗುರುತಿಸಿ ಸರ್ಕಾರದ ಯೋಜನೆಗಳು, ಶೈಕ್ಷಣಿಕ ಸಾಲ ಹಾಗೂ ಇತರೆ ಸೌಲಭ್ಯಗಳನ್ನು ನೀಡುವ ಮೂಲಕ ಅವರನ್ನು ಸಮಾಜದ ಮುಖ್ಯವಾಹಿನಿಗೆ ತರಬೇಕಿದೆ. ಈ ನಿಟ್ಟಿನಲ್ಲಿ ಅಧಿಕಾರಿಗಳು ಸಮನ್ವಯತೆಯಿಂದ ಕಾರ್ಯನಿರ್ವಹಿಸಬೇಕು ಎಂದು ನಿರ್ದೇಶಿಸಿದರು. ಇತ್ತೀಚೆಗೆ ಸ್ಥಳೀಯ ಆಡಳಿತ ಸಂಸ್ಥೆಗಳಲ್ಲಿ ಅನಧಿಕೃತವಾಗಿ ಕಾರ್ಮಿಕರ ಗುರುತಿನ ಚೀಟಿ ಬಳಸಿಕೊಂಡು ಅನಾಮಿಕ ವ್ಯಕ್ತಿಗಳು ಕೆಲಸ ನಿರ್ವಹಿಸುತ್ತಿರುವುದು ಗಮನಕ್ಕೆ ಬಂದಿದೆ. ಇದು ಕಾನೂನಾತ್ಮಕ ಅಪರಾಧವಾಗಿದ್ದು, ಇಂತಹ ಪ್ರಕರಣಗಳು ಕಂಡುಬಂದಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು. ಸಭೆಯಲ್ಲಿ ಸದಸ್ಯರೊಬ್ಬರು ಜಿಲ್ಲೆಯ 8 ಮ್ಯಾನ್ಯುಯಲ್ ಸ್ಕಾವೆಂಜರ್ ಕಾರ್ಮಿಕರಲ್ಲಿ ಕೆಲವರಿಗೆ ರಾಜೀವ್ ಗಾಂಧಿ ವಸತಿ ಯೋಜನೆಯಡಿ ಮನೆ ಮಂಜೂರಾಗಿದ್ದರೂ ನಿವೇಶನ ಕೊರತೆಯಿಂದ ಮನೆ ನಿರ್ಮಾಣ ಸಾಧ್ಯವಾಗುತ್ತಿಲ್ಲ ಎಂದು ಗಮನಕ್ಕೆ ತಂದರು. ಇದಕ್ಕೆ ಪ್ರತಿಕ್ರಿಯಿಸಿದ ಅಧಿಕಾರಿಗಳು ಮಲಪನಗುಡಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಅರ್ಹ ಫಲಾನುಭವಿಗಳಿಗೆ ನಿವೇಶನ ಗುರುತಿಸಿ ಹಂಚಿಕೆ ಮಾಡುವುದಾಗಿ ತಿಳಿಸಿದರು. ಇದಲ್ಲದೆ, ಹೊರಗುತ್ತಿಗೆ ಆಧಾರದಡಿ ಕೆಲಸ ಮಾಡುತ್ತಿರುವ ಕಾರ್ಮಿಕರಿಗೆ ಸಕಾಲಕ್ಕೆ ವೇತನ, ಇಎಸ್‌ಐ ಮತ್ತು ಭವಿಷ್ಯ ನಿಧಿ ಸೌಲಭ್ಯ ಸಿಗುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ. ಮರಿಯಮ್ಮನಹಳ್ಳಿ ಹೋಬಳಿಯಲ್ಲಿ ಕೆಲಸ ಮಾಡುತ್ತಿರುವ 8 ಕಾರ್ಮಿಕರಿಗೆ ಕಳೆದ 9 ತಿಂಗಳಿಂದ ವೇತನ ಪಾವತಿಯಾಗಿಲ್ಲ ಎಂಬುದರ ಬಗ್ಗೆ ಜಿಲ್ಲಾಧಿಕಾರಿಗಳು ಸಮಗ್ರ ಪರಿಶೀಲನೆ ನಡೆಸಲಾಗುವುದು ಎಂದು ತಿಳಿಸಿದರು. ಆರೋಪ ಸಾಬೀತಾದಲ್ಲಿ ಸಂಬಂಧಿಸಿದ ಸಂಸ್ಥೆಗೆ ಶೋಕಾಸ್ ನೋಟಿಸ್ ನೀಡಲಾಗುವುದು ಹಾಗೂ ಅಗತ್ಯವಿದ್ದರೆ ಕಪ್ಪುಪಟ್ಟಿಗೆ ಸೇರಿಸುವ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು. ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಾಹ್ನವಿ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ವೈ.ಎ. ಕಾಳೆ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

ವಾರ್ತಾ ಭಾರತಿ 26 Mar 2026 11:15 pm

371 (ಜೆ) ಆದೇಶಗಳ ಅನುಷ್ಠಾನ ಕುರಿತ ಸಂಪುಟ ಉಪಸಮಿತಿ ಸಭೆ | ಪ್ರಾಂಶುಪಾಲರ 310 ಹುದ್ದೆ ಆಯ್ಕೆ ಪಟ್ಟಿ ಪುನರ್ ಪರಿಶೀಲನೆಗೆ ಸೂಚನೆ

ಬೆಂಗಳೂರು : ಉನ್ನತ ಶಿಕ್ಷಣ ಇಲಾಖೆ ಮೂಲಕ ಪ್ರಥಮ ದರ್ಜೆ ಕಾಲೇಜುಗಳ 310 ಪ್ರಾಂಶುಪಾಲರ ಹುದ್ದೆಗಳ ಆಯ್ಕೆ ಇತ್ತೀಚೆಗೆ ನಡೆದಿದ್ದು, ಆಯ್ಕೆ ಪ್ರಕ್ರಿಯೆಯಲ್ಲಿ ಡಿಪಿಎಆರ್ ನೀಡಿರುವ ಸ್ಪಷ್ಟ ನಿರ್ದೇಶನಗಳನ್ನು ಪಾಲಿಸುವಲ್ಲಿ ಲೋಪವಾಗಿದೆ ಎಂಬುದನ್ನು ಮನಗಂಡ ಆಯ್ಕೆ ಸಮಿತಿಯು ಆಯ್ಕೆ ಪಟ್ಟಿಯನ್ನು ಮರು ಪರಿಶೀಲಿಸಲು ಅಧಿಕಾರಿಗಳಿಗೆ ಸೂಚಿಸಿತು. ಗುರುವಾರ ವಿಧಾನಸೌಧದಲ್ಲಿ ಕಲ್ಯಾಣ ಕರ್ನಾಟಕ ಭಾಗದಲ್ಲಿ ಸ್ಥಳೀಯ ವೃಂದ ಮತ್ತು ಉಳಿಕೆ ಮೂಲ ವೃಂದದಲ್ಲಿನ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡುವ ಸಂದರ್ಭದಲ್ಲಿ ವಿವಿಧ ನೇಮಕಾತಿ ಪ್ರಾಧಿಕಾರಗಳು ಅನುಸರಿಸಬೇಕಾದ ಕ್ರಮಗಳ ಬಗ್ಗೆ 371 (ಜೆ) ಅಡಿ ಹೊರಡಿಸಲಾಗಿರುವ ಆದೇಶಗಳ ಅನುಷ್ಠಾನದ ಪ್ರಗತಿ ಪರಿಶೀಲನೆ ಮತ್ತು ಪರಾಮರ್ಶೆ ಕುರಿತ ಸಂಪುಟ ಉಪ ಸಮಿತಿ ಅಧ್ಯಕ್ಷ ಪ್ರಿಯಾಂಕ್ ಖರ್ಗೆ ಅಧ್ಯಕ್ಷತೆಯಲ್ಲಿ ಸಭೆ ನಡೆಸಿತು. ಉನ್ನತ ಶಿಕ್ಷಣ ಇಲಾಖೆ ಮೂಲಕ ಪ್ರಥಮ ದರ್ಜೆ ಕಾಲೇಜುಗಳ 310 ಹುದ್ದೆಗಳ ಆಯ್ಕೆ ಇತ್ತೀಚೆಗೆ ನಡೆದಿದ್ದು, ಆಯ್ಕೆ ಪ್ರಕ್ರಿಯೆಯಲ್ಲಿ ಲೋಪವಾಗಿದೆ ಎಂದು ಕೆಲವು ಅಭ್ಯರ್ಥಿಗಳು ಉಪಸಮಿತಿಯ ಅಧ್ಯಕ್ಷ ಪ್ರಿಯಾಂಕ್ ಖರ್ಗೆ ಅವರಿಗೆ ದೂರು ನೀಡಿದ್ದು, ಈ ಸಂಬಂಧ ಸಚಿವ ಸಂಪುಟದ ಉಪ ಸಮಿತಿ ಸಭೆಯನ್ನು ನಡೆಸಲಾಯಿತು. ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಹೊರಡಿಸಿರುವ ಸುತ್ತೋಲೆಗಳನ್ನು ಕಡ್ಡಾಯವಾಗಿ ಪಾಲಿಸಲು ಅಧಿಕಾರಿಗಳಿಗೆ ಸೂಚಿಸಿದ ಸಮಿತಿಯು, ತಪ್ಪಿದಲ್ಲಿ ಸಂಬಂಧಪಟ್ಟ ನೇಮಕಾತಿ ಪ್ರಾಧಿಕಾರಗಳನ್ನೆ ನೇರ ಹೊಣೆಗಾರರನ್ನಾಗಿ ಮಾಡಲಾಗುವುದು ಎಂಬ ಎಚ್ಚರಿಕೆಯನ್ನು ನೀಡಿತು. ಸಭೆಯಲ್ಲಿ ಸಚಿವ ಸಂಪುಟ ಉಪ ಸಮಿತಿಯ ಸದಸ್ಯರಾದ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ್ ಪಾಟೀಲ್, ಭಾಗವಹಿಸಿ ಹಲವು ಸಲಹೆ ಸೂಚನೆಗಳನ್ನು ನೀಡಿದರು. ಸಭೆಯಲ್ಲಿ ಉನ್ನತ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಖುಷ್ಬು ಚೌಧರಿ, ಡಿಪಿಎಆರ್ ಪ್ರಧಾನ ಕಾರ್ಯದರ್ಶಿ ಕೆ.ಜಿ.ಜಗದೀಶ್, ಉನ್ನತ ಶಿಕ್ಷಣ ಇಲಾಖೆಯ ಆಯುಕ್ತೆ ಮಂಜುಶ್ರೀ ಭಾಗವಹಿಸಿದ್ದರು.

ವಾರ್ತಾ ಭಾರತಿ 26 Mar 2026 11:13 pm

ಇರಾನ್ ಬಳಸುತ್ತಿರುವ ಭಾಷೆಯು ಶಾಂತಿಯ ಸನ್ನಿಹಿತವನ್ನು ಸೂಚಿಸುತ್ತಿಲ್ಲ: ಶಶಿ ತರೂರ್

ಕೊಲ್ಲಂ,ಮಾ.26: ಪಶ್ಚಿಮ ಏಶ್ಯದಲ್ಲಿ ಉದ್ವಿಗ್ನ ಪರಿಸ್ಥಿತಿ ಮುಂದುವರಿದಿದ್ದು, ಪ್ರಸಕ್ತ ನಡೆಯುತ್ತಿರುವ ಸಂಘರ್ಷಕ್ಕೆ ಶೀಘ್ರ ಪರಿಹಾರವನ್ನು ಕಂಡುಕೊಳ್ಳುವ ಉದ್ದೇಶವನ್ನು ಇರಾನ್ ಹೊಂದಿಲ್ಲವೆಂಬುದು ಅದರ ಹೇಳಿಕೆಗಳಿಂದಲೇ ವ್ಯಕ್ತವಾಗುತ್ತಿದೆ ಎಂದು ಕಾಂಗ್ರೆಸ್ ಸಂಸದ ಶಶಿ ತರೂರ್ ಗುರುವಾರ ಅಭಿಪ್ರಾಯಿಸಿದ್ದಾರೆ. ಅಮೆರಿಕದ ಜೊತೆ ಇರಾನ್ ಶಾಂತಿ ಮಾತುಕತೆ ಸಾಧ್ಯತೆ ಕುರಿತ ವರದಿಗಳ ಬಗ್ಗೆ ಅವರು ಹೀಗೆ ಪ್ರತಿಕ್ರಿಯಿಸಿದ್ದಾರೆ. ಭಾರತವು ತನಗೆ ಅಗತ್ಯವಿರುವ ಎಲ್‌ಪಿಜಿ ಇಂಧನದ ಶೇ.60ರಷ್ಟನ್ನು ವಿದೇಶಗಳಿಂದ ಅಮದು ಮಾಡಿಕೊಳ್ಳುತ್ತಿದ್ದು, ಅದರಲ್ಲಿ ಶೇ. 90ರಷ್ಟು ಖತರ್ ಹಾಗೂ ಮಧ್ಯಪ್ರಾಚ್ಯದ ರಾಷ್ಟ್ರಗಳಿಂದಲೇ ಆಗಮಿಸುತ್ತಿದ್ದು, ಪಶ್ಚಿಮ ಏಶ್ಯ ಸಂಘರ್ಷವು ಅತ್ಯಂತ ಮಹತ್ವದ್ದಾದ ಇಂಧನ ಪೂರೈಕೆ ಜಾಲಗಳಿಗೆ ನಿರಂತರ ಅಡಚಣೆಯನ್ನುಂಟು ಮಾಡಬಲ್ಲದು ಎಂದು ಎಚ್ಚರಿಕೆ ನೀಡಿದ್ದಾರೆ. ಎಎನ್‌ಐ ಸುದ್ದಿಸಂಸ್ಥೆ ಜೊತೆ ಮಾತನಾಡಿದ ತರೂರ್ ಅವರು, ಅಮೆರಿಕ ಉಪಾಧ್ಯಕ್ಷ ಜೆ.ಡಿ.ವಾನ್ಸ್ ಅವರನ್ನೊಳಗೊಂಡು ಶಾಂತಿ ಮಾತುಕತೆ ನಡೆಯುವ ಸಾಧ್ಯತೆಯಿದೆ. ಆದರೆ ಇರಾನ್ ಹೊರಬರುತ್ತಿರುವ ಭಾಷೆಯು ಶಾಂತಿಯು ಸನ್ನಿಹಿತವಾಗಿರುವುದನ್ನು ಸೂಚಿಸುತ್ತಿಲ್ಲ ಹಾಗೂ ಸುಮಾರು 4,500 ಅಮೆರಿಕನ್ ಮೆರೈನ್ ಯೋಧರು ಆ ಪ್ರದೇಶದೆಡೆಗೆ ಧಾವಿಸುತ್ತಿದ್ದಾರೆ. ಇವೆಲ್ಲವುಗಳಿಂದಾಗಿ ಕೆಲವು ಸಂಗತಿಗಳು ಹದಗೆಡುವ ಅಪಾಯವೂ ಇದೆ. ಒಂದು ರಾಷ್ಟ್ರವಾಗಿ ಭಾರತವು ಪಶ್ಚಿಮ ಏಶ್ಯ ಯುದ್ಧದಿಂದಾಗಿ ಹಲವು ವಿಷಯಗಳಲ್ಲಿ ತೀವ್ರವಾಗಿ ಬಾಧಿತವಾಗಿದೆ. ಈ ಯುದ್ಧದ ಕಾರಣದಿದಾಗಿ ನಮ್ಮ ಅಡುಗೆಮನೆಗಳು, ರೆಸ್ಟಾರೆಂಟ್‌ಗಳು, ಢಾಬಾಗಳಲ್ಲಿ ಗ್ಯಾಸ್‌ಸಿಲಿಂಡರ್‌ಗಳ ಅಭಾವವುಂಟಾಗಿದೆ. ಈವರೆಗೆ ಡೀಸೆಲ್ ಹಾಗೂ ಪೆಟ್ರೋಲ್ ದರಗಳು ಒಂದು ಮಟ್ಟದವರೆಗೆ ನಿಯಂತ್ರಣದಲ್ಲಿದೆಯಾದರೂ, ಯುದ್ಧ ದೀರ್ಘಕಾಲದವರೆಗೆ ಸಾಗಿದಲ್ಲಿ ಅವುಗಳ ಬೆಲೆಯು ಮೇಲಕ್ಕೇರಲೂಬಹುದು ಎಂದೂ ತರೂರ್ ಕಳವಳ ವ್ಯಕ್ತಪಡಿಸಿದ್ದಾರೆ. ‘‘ಪಶ್ಚಿಮ ಏಶ್ಯಾ ಸಂಘರ್ಷದ ಕುರಿತಾಗಿ ನಾವು (ಭಾರತ) ಒಂದು ನಿಲುವನ್ನು ತೆಗೆದುಕೊಳ್ಳಬೇಕೆಂದು ಎರಡೂ ಮೂರು ವಾರಗಳಿಂದಲೂ ಹೇಳುತ್ತಾ ಬಂದಿದ್ದೇನೆ. ನಾವು ಶಾಂತಿಯ ಪರವಾಗಿದ್ದರೂ, ಹಾಲಿ ಸನ್ನಿವೇಶದಲ್ಲಿ ಶಾಂತಿಯನ್ನು ಉತ್ತೇಜಿಸುವಲ್ಲಿ ನಾವು ಸಕ್ರಿಯವಾಗಿ ಭಾಗಿಯಾಗಿಲ್ಲ ’’ ಎಂದು ಶಶಿ ತರೂರ್‌ ಹೇಳಿದ್ದಾರೆ.  

ವಾರ್ತಾ ಭಾರತಿ 26 Mar 2026 11:13 pm

ಬಂಟ್ವಾಳ| ದ.ಕ.ಜಿಲ್ಲಾ ಸಾಹಿತ್ಯ ಸಮ್ಮೇಳನಕ್ಕೆ ಅದ್ದೂರಿ ಚಾಲನೆ

ಬಂಟ್ವಾಳ : ಬಿ.ಸಿ.ರೋಡಿನ ಸ್ಪರ್ಶಾ ಕಲಾ ಮಂದಿರದ ರಾಣಿ ಅಬ್ಬಕ್ಕ ವೇದಿಕೆಯ ಪಂಜೆ ಮಂಗೇಶರಾಯ ಸಭಾಂಗಣದಲ್ಲಿ ಮಾರ್ಚ್ 26 ರಿಂದ 28 ರ ತನಕ ನಡೆಯಲಿರುವ ದ.ಕ.ಜಿಲ್ಲಾ ಮಟ್ಟದ 28 ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಗುರುವಾರ ಅದ್ಧೂರಿ ಚಾಲನೆ ದೊರೆಯಿತು. ಬಿ.ಸಿ.ರೋಡ್ - ಕೈಕಂಬ ಪೊಳಲಿ ದ್ವಾರದ ಬಳಿ ಕನ್ನಡ ಸಾಂಸ್ಕೃತಿಕ ದಿಬ್ಬಣ ಮೆರವಣಿಗೆಯನ್ನು ಸಂಚಯಗಿರಿ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ಅಧ್ಯಕ್ಷ ಪ್ರೊ.ತುಕರಾಮ ಪೂಜಾರಿ ಉದ್ಘಾಟಿಸಿದರು. ಸಮ್ಮೇಳನಾಧ್ಯಕ್ಷ ಚಿದಂಬರ ಬೈಕಂಪಾಡಿ ಬೆಳ್ಳಿ ರಥದಲ್ಲಿ ಕುಳಿತು ಮೆರವಣಿಗೆಯಲ್ಲಿ ಸಾಗಿ ಬಂದರು. ಈ ಸಂದರ್ಭ ದ.ಕ.ಜಿಲ್ಲಾ ಕ.ಸಾ.ಪ. ಅಧ್ಯಕ್ಷ ಎಂ.ಪಿ.ಶ್ರೀನಾಥ್, ಬಂಟ್ವಾಳ ತಾಲೂಕು ಅದ್ಯಕ್ಷ ವಿಶ್ವನಾಥ ಬಂಟ್ವಾಳ ಉಪಸ್ಥಿತರಿದ್ದರು. ಮೆರವಣಿಗೆಯಲ್ಲಿ ಕೊಂಬು, ಚೆಂಡೆ, ಬೇಂಡ್, ಕೀಲು ಕುದುರೆ, ಡೊಳ್ಳು ಕುಣಿತ, ಸ್ಕೌಟ್ಸ್, ಕುಣಿತ ಭಜನೆ, ಚಿಂಪಾಂಜಿ, ಬೆಂಕಿ ಉಗುಳುವ ಆಟ, ಕಲಶ ಹಿಡಿದ ಮಹಿಳೆಯರ ತಂಡಗಳು ಗಮನ ಸೆಳೆಯಿತು. ಸಾಂಸ್ಕೃತಿಕ ಕಾರ್ಯಕ್ರಮವನ್ನು ಉದ್ಘಾಟಿಸಿದ ಸಮ್ಮೇಳನ ಸ್ವಾಗತ ಸಮಿತಿ ಅಧ್ಯಕ್ಷ ರಘುನಾಥ ಸೋಮಯಾಜಿ ಎರಕಳ ಮಾತನಾಡಿ, ಇಂತಹ‌ ಸಮ್ಮೇಳನಗಳಿಂದ ಸಹೋದರತ್ವ ಭಾವನೆ ಬೆಳೆಸುವಂತಹ ಕಾರ್ಯಕ್ರಮ ಆಗಲಿ ಎಂದರು. ಪ್ರಧಾನ ಕಾರ್ಯದರ್ಶಿ ಅಬೂಬಕರ್ ಅಮ್ಮುಂಜೆ, ಕಾರ್ಯದರ್ಶಿಗಳಾದ ದೇವಪ್ಪ ಕುಲಾಲ್, ರಾಮದಾಸ್ ಬಂಟ್ವಾಳ್, ಚಂದ್ರಹಾಸ ಶೆಟ್ಟಿ, ಕೋಶಾಧಿಕಾರಿ ಸುಭಾಶ್ಚಂದ್ರ ಜೈನ್, ಪ್ರಮುಖರಾದ ಹರಿಕೃಷ್ಣ ಬಂಟ್ವಾಳ್, ಅಶೋಕ್ ಶೆಟ್ಟಿ ಸರಪಾಡಿ ಮೊದಲಾದವರು ಉಪಸ್ಥಿತರಿದ್ದರು. ಬಳಿಕ ಸತೀಶ್ ಪೈ ಕುಳ್ಳಪ್ಪು ನಿರ್ದೇಶನದ ಮೂರು ಮುತ್ತು ಕನ್ನಡ ಹಾಸ್ಯಮಯ ನಾಟಕ ಪ್ರದರ್ಶನಗೊಂಡಿತು. ರವೀಂದ್ರ ಕುಕ್ಕಾಜೆ ಹಾಗೂ ಎಚ್ಕೆ ನಯನಾಡು ಕಾರ್ಯಕ್ರಮ ನಿರೂಪಿಸಿದರು.

ವಾರ್ತಾ ಭಾರತಿ 26 Mar 2026 11:13 pm

ವಿಜಯನಗರ | ಎಸ್‌ಸಿ-ಎಸ್‌ಟಿ ಸಂತ್ರಸ್ತರಿಗೆ 26.55 ಲಕ್ಷ ರೂ. ಪರಿಹಾರ: ಡಿಸಿ ಕವಿತಾ ಎಸ್ ಮನ್ನಿಕೇರಿ

ವಿಜಯನಗರ (ಹೊಸಪೇಟೆ) : ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಜಾತಿ ನಿಂದನೆ, ಹಲ್ಲೆ ಹಾಗೂ ಲೈಂಗಿಕ ಕಿರುಕುಳ ಸೇರಿದಂತೆ ವಿವಿಧ ಪ್ರಕರಣಗಳಲ್ಲಿ ಸಂತ್ರಸ್ತರಾದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ 15 ಮಂದಿಗೆ ಒಟ್ಟು 26,55,000 ರೂ. ಪರಿಹಾರ ಧನವನ್ನು ಶೀಘ್ರವಾಗಿ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ ತಿಳಿಸಿದ್ದಾರೆ. ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಗುರುವಾರ ಆಯೋಜಿಸಿದ್ದ ದೌರ್ಜನ್ಯ ತಡೆ ಕುರಿತ ಜಿಲ್ಲಾ ಮಟ್ಟದ ಜಾಗೃತಿ ಹಾಗೂ ಉಸ್ತುವಾರಿ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು. ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಜಾತಿ ನಿಂದನೆ, ಹಲ್ಲೆ, ಲೈಂಗಿಕ ಕಿರುಕುಳ ಹಾಗೂ ಜಮೀನು ವಿವಾದಗಳಿಗೆ ಸಂಬಂಧಿಸಿದ ಪ್ರಕರಣಗಳು ಹೆಚ್ಚಾಗಿ ದಾಖಲಾಗುತ್ತಿವೆ. ಕಳೆದ ಮೂರು ತಿಂಗಳಲ್ಲಿ ಹೊಸಪೇಟೆ ತಾಲೂಕಿನಲ್ಲಿ 5, ಹರಪನಹಳ್ಳಿ ಮತ್ತು ಕೂಡ್ಲಿಗಿ ತಲಾ 1, ಹಡಗಲಿ 2 ಹಾಗೂ ಡಿ.ಸಿ.ಆರ್.ಇ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 4 ಪ್ರಕರಣಗಳು ಸೇರಿ ಒಟ್ಟು 13 ಪ್ರಕರಣಗಳು ದಾಖಲಾಗಿವೆ. ಇದರಲ್ಲಿ 7 ಪ್ರಕರಣಗಳಿಗೆ ಅಂತಿಮ ವರದಿ ಸಲ್ಲಿಸಲಾಗಿದ್ದು, ಉಳಿದವು ತನಿಖಾ ಹಂತದಲ್ಲಿವೆ. ಇನ್ನೂ ಇದೇ ಅವಧಿಯಲ್ಲಿ 5 ಪ್ರಕರಣಗಳಿಗೆ ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ. 2025 ಡಿಸೆಂಬರ್‌ನಿಂದ ಮಾರ್ಚ್ 18ರವರೆಗೆ ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳಲ್ಲಿ ದಾಖಲಾದ 97 ಪ್ರಕರಣಗಳು ನ್ಯಾಯಾಲಯದಲ್ಲಿ ಬಾಕಿ ಇರುವುದಾಗಿ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು. ಈ ಕುರಿತು ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ, ದೌರ್ಜನ್ಯ ತಡೆ ಕಾಯ್ದೆ ಬಗ್ಗೆ ಜಾಗೃತಿ ಕಾರ್ಯಕ್ರಮಗಳನ್ನು ನಿರಂತರವಾಗಿ ಹಮ್ಮಿಕೊಂಡರೂ ಪ್ರಕರಣಗಳು ಕಡಿಮೆಯಾಗದಿರುವುದಕ್ಕೆ ಬೇಸರ ವ್ಯಕ್ತಪಡಿಸಿದರು. ಗ್ರಾಮೀಣ ಭಾಗಗಳಲ್ಲಿ ಬೀದಿ ನಾಟಕಗಳು, ಜಾಗೃತಿ ಶಿಬಿರಗಳ ಮೂಲಕ ಅರಿವು ಮೂಡಿಸಲು ಅಧಿಕಾರಿಗಳಿಗೆ ಸೂಚಿಸಿದರು. ಕಾಯ್ದೆಯನ್ನು ದುರುಪಯೋಗಪಡಿಸಿಕೊಳ್ಳುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ ಅವರು, ಪ್ರಕರಣಗಳ ತನಿಖೆಯನ್ನು ವಿಳಂಬವಿಲ್ಲದೆ ಪೂರ್ಣಗೊಳಿಸಿ, ನಿಗದಿತ ಅವಧಿಯಲ್ಲಿ ದೋಷಾರೋಪ ಪಟ್ಟಿ ಸಲ್ಲಿಸಬೇಕು ಹಾಗೂ ಸಂತ್ರಸ್ತರಿಗೆ ಪರಿಹಾರ ಧನವನ್ನು ತಕ್ಷಣ ತಲುಪಿಸಬೇಕು ಎಂದು ಸೂಚಿಸಿದರು. ಅಸ್ಪೃಶ್ಯತೆ ಮತ್ತು ಸಾಮಾಜಿಕ ಬಹಿಷ್ಕಾರ ನಿರ್ಮೂಲನೆಗೆ ಕ್ರಮ ಕೈಗೊಳ್ಳಬೇಕು. ಎಸ್‌ಸಿ/ಎಸ್‌ಟಿ ಕಾಲೋನಿಗಳಲ್ಲಿ ಕುಡಿಯುವ ನೀರು, ರಸ್ತೆ ಮತ್ತು ಸ್ಮಶಾನ ಭೂಮಿ ಸೇರಿದಂತೆ ಮೂಲಭೂತ ಸೌಲಭ್ಯಗಳನ್ನು ಆದ್ಯತೆಯ ಮೇರೆಗೆ ಒದಗಿಸಲು ಅಧಿಕಾರಿಗಳಿಗೆ ನಿರ್ದೇಶಿಸಿದರು. ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಾಹ್ನವಿ, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರು ವೈ.ಎ. ಕಾಳೆ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

ವಾರ್ತಾ ಭಾರತಿ 26 Mar 2026 11:12 pm

ತಾಂತ್ರಿಕ ದೋಷ: ಲಂಡನ್‌ಗೆ ಹೋಗುತ್ತಿದ್ದ ಏರ್ ಇಂಡಿಯಾ ವಿಮಾನ ದಿಲ್ಲಿಗೆ ವಾಪಾಸ್‌

ಹೊಸದಿಲ್ಲಿ, ಮಾ. 26: 300ಕ್ಕೂ ಅಧಿಕ ಪ್ರಯಾಣಿಕರನ್ನು ಹೊತ್ತು ಗುರುವಾರ ಬೆಳಗ್ಗೆ ಹೊಸದಿಲ್ಲಿಯ ಇಂದಿರಾ ಗಾಂಧಿ ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಲಂಡನ್‌ನ ಹೀತ್ರು ವಿಮಾನ ನಿಲ್ದಾಣಕ್ಕೆ ಹಾರುತ್ತಿದ್ದ ಏರ್ ಇಂಡಿಯಾ ವಿಮಾನವೊಂದು ತಾಂತ್ರಿಕ ದೋಷದ ಹಿನ್ನೆಲೆಯಲ್ಲಿ ಸುಮಾರು ಏಳು ಗಂಟೆಗಳ ಬಳಿಕ ಹಾರಾಟ ಆರಂಭಿಸಿದ ವಿಮಾನ ನಿಲ್ದಾಣಕ್ಕೆ ಮರಳಿದೆ. ಸೌದಿ ಅರೇಬಿಯದ ಮೇಲೆ ಹಾರುತ್ತಿದ್ದಾಗ ವಿಮಾನವು ಹಿಮ್ಮುಖ ಯಾನವನ್ನು ಆರಂಭಿಸಿತು. ಏರ್‌ಬಸ್ ಎ350-941 ವಿಮಾನವು ಇಂದಿರಾ ಗಾಂಧಿ ವಿಮಾನ ನಿಲ್ದಾಣದ ಟರ್ಮಿನಲ್ 3ರಲ್ಲಿ ಬೆಳಗ್ಗೆ 5:43ಕ್ಕೆ ಹಾರಾಟ ಆರಂಭಿಸಿತು ಹಾಗೂ ಮಧ್ಯಾಹ್ನ 12:52ಕ್ಕೆ ಅದು ಅದೇ ವಿಮಾನ ನಿಲ್ದಾಣದಲ್ಲಿ ಇಳಿಯಿತು. ಹಿಂದಿರುಗುವ ಮುನ್ನ ವಿಮಾನವು ಒಮಾನ್ ದೇಶವನ್ನು ದಾಟಿ ಸೌದಿ ಅರೇಬಿಯವನ್ನು ಪ್ರವೇಶಿಸಿತ್ತು. ‘‘ಮಾರ್ಚ್ 26ರಂದು ದಿಲ್ಲಿಯಿಂದ ಲಂಡನ್‌ಗೆ ಹಾರುತ್ತಿದ್ದ ಏರ್ ಇಂಡಿಯಾ ಎಐ111 ವಿಮಾನವು, ಶಂಕಿತ ತಾಂತ್ರಿಕ ದೋಷವೊಂದರ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ದಿಲ್ಲಿಗೆ ಹಿಂದಿರುಗಿತು’’ ಎಂದು ಏರ್ ಇಂಡಿಯಾ ಹೇಳಿಕೆಯೊಂದರಲ್ಲಿ ತಿಳಿಸಿದೆ.

ವಾರ್ತಾ ಭಾರತಿ 26 Mar 2026 11:08 pm

ಕೊಟ್ಟೂರು | ವಾರ್ತಾಭಾರತಿ ವರದಿ ಫಲಶ್ರುತಿ : ಸಿಸಿ ರಸ್ತೆ ಕಾಮಗಾರಿ ಮತ್ತೆ ಆರಂಭ

ಕೊಟ್ಟೂರು (ವಿಜಯನಗರ ಜಿಲ್ಲೆ) :ಪಟ್ಟಣದ ಉಜ್ಜಿನಿ ರಸ್ತೆ ಜೋಳದ ಕೂಡ್ಲಿಗಿ ಕ್ರಾಸ್ ಬಳಿ ಸಿ.ಸಿ. ರಸ್ತೆ ಕಾಮಗಾರಿ ಅಪೂರ್ಣಗೊಂಡಿದ್ದರಿಂದ ಸಾರ್ವಜನಿಕರಿಗೆ ತೀವ್ರ ತೊಂದರೆ ಉಂಟಾಗಿ, ಹಲವು ಮಂದಿ ಬಿದ್ದು ಗಾಯಗೊಂಡ ಘಟನೆಗಳು ಸಂಭವಿಸಿದ್ದವು. ಶ್ರೀಗುರು ಕೊಟ್ಟೂರೇಶ್ವರ ಜಾತ್ರೆಯ ನಿಮಿತ್ತ ಈ ರಸ್ತೆಯನ್ನು ತರಾತುರಿಯಲ್ಲಿ ಡಾಂಬರೀಕರಣ ಮಾಡಿ, ಸಿಸಿ ರಸ್ತೆಯ ಒಂದು ಭಾಗವನ್ನು ಮಾತ್ರ ಸಂಚಾರಕ್ಕೆ ಯೋಗ್ಯವಾಗಿ ನಿರ್ಮಿಸಿ, ಮತ್ತೊಂದು ಭಾಗದಲ್ಲಿ 8 ಎಂಎಂ ಕಲ್ಲು ಹಾಸಿ ತಾತ್ಕಾಲಿಕ ರಸ್ತೆ ಸಿದ್ಧಪಡಿಸಲಾಗಿತ್ತು. ಅಪೂರ್ಣ ಕಾಮಗಾರಿಯಿಂದ ವಾಹನ ಸವಾರರು ಹಾಗೂ ಪಾದಚಾರಿಗಳು “ಉಳಿದ ಸಿಸಿ ರಸ್ತೆ ಯಾವಾಗ ಪೂರ್ಣಗೊಳ್ಳುತ್ತದೆ?” ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದರು. ಈ ಸಂಬಂಧ ಮಾ.14 ರಂದು ವಾರ್ತಾಭಾರತಿಯಲ್ಲಿ ಪ್ರಕಟವಾದ ವರದಿಯನ್ನು ಗಮನಿಸಿದ ಗುತ್ತಿಗೆದಾರರು ಇದೀಗ ಎಚ್ಚೆತ್ತುಕೊಂಡು, ಅಪೂರ್ಣಗೊಂಡಿದ್ದ ಸಿಸಿ ರಸ್ತೆ ಕಾಮಗಾರಿಯನ್ನು ಪುನಃ ಪ್ರಾರಂಭಿಸಿದ್ದು, ಕಾಮಗಾರಿ ಭರದಿಂದ ಸಾಗುತ್ತಿದೆ.  

ವಾರ್ತಾ ಭಾರತಿ 26 Mar 2026 11:08 pm

ಕಚ್ಚಾವಸ್ತುಗಳ ಕೊರತೆಯಿಂದ ಔಷಧ ಬೆಲೆಗಳಲ್ಲಿ ಹೆಚ್ಚಳ: ಹಿಮಾಚಲ ಔಷಧ ತಯಾರಕರ ಸಂಘದಿಂದ ಎಚ್ಚರಿಕೆ

ಹೊಸದಿಲ್ಲಿ, ಮಾ. 26: ಪಶ್ಚಿಮ ಏಶ್ಯದಲ್ಲಿ ನಡೆಯುತ್ತಿರುವ ಯುದ್ಧದ ಹಿನ್ನೆಲೆಯಲ್ಲಿ, ಔಷಧ ಕಚ್ಚಾವಸ್ತುಗಳ ಪೂರೈಕೆ ಸರಣಿ ವ್ಯತ್ಯಯಗೊಂಡಿದ್ದು, ಕೇವಲ 15 ದಿನಗಳಲ್ಲಿ ಪ್ರಮುಖ ಕಚ್ಚಾವಸ್ತುಗಳ ಬೆಲೆ 200-300 ಶೇಕಡದಷ್ಟು ಹೆಚ್ಚಿದೆ ಎಂದು ಮಾರುಕಟ್ಟೆ ಮೂಲಗಳು ತಿಳಿಸಿವೆ. ಹಾಗಾಗಿ, ಇದೇ ಪರಿಸ್ಥಿತಿ ಮುಂದುವರಿದರೆ ಔಷಧಗಳ ಬೆಲೆಗಳಲ್ಲಿ ಏರಿಕೆಯಾಗಬಹುದು ಅಥವಾ ಔಷಧಗಳ ಪೂರೈಕೆಯಲ್ಲಿ ಕೊರತೆ ತಲೆದೋರಬಹುದು ಎಂಬ ಎಚ್ಚರಿಕೆಯನ್ನು ಔಷಧ ತಯಾರಕರು ನೀಡಿದ್ದಾರೆ. ಹಿಮಾಚಲಪ್ರದೇಶದಲ್ಲಿ 650 ಔಷಧ ತಯಾರಿಕಾ ಕಾರ್ಖಾನೆಗಳಿದ್ದು, ಅವುಗಳು ದೇಶಾದ್ಯಂತ ಪೂರೈಕೆಯಾಗುವ ಒಟ್ಟು ಔಷಧಿಗಳ 25 ಶೇಕಡದಷ್ಟನ್ನು ಉತ್ಪಾದಿಸುತ್ತವೆ. ಉದ್ಯಮದ ಪ್ರತಿನಿಧಿಗಳನ್ನು ಒಳಗೊಂಡ ತುರ್ತು ಕಾರ್ಯಪಡೆಯೊಂದನ್ನು ರಚಿಸಿ 1956ರ ಅಗತ್ಯ ವಸ್ತುಗಳ ಕಾಯ್ದೆಯನ್ನು ತಕ್ಷಣ ಜಾರಿಗೊಳಿಸುವಂತೆ ಹಿಮಾಚಲ ಔಷಧ ಉತ್ಪಾದಕರ ಸಂಘ (ಎಚ್‌ಡಿಎಮ್‌ಎ) ಕೇಂದ್ರ ಸರಕಾರವನ್ನು ಕೋರಿದೆ. ಪಶ್ಚಿಮ ಏಶ್ಯದಲ್ಲಿನ ಈಗನ ಸಂಘರ್ಷ ಮುಂದುವರಿದರೆ, ಕಚ್ಚಾವಸ್ತುಗಳ ಕೊರತೆಯಿಂದಾಗಿ ಔಷಧಗಳ ಕೊರತೆ ತಲೆದೋರುವುದು ನಿಶ್ಚಿತ ಎಂದು ಹಿಮಾಚಲ ಔಷಧ ತಯಾರಕರ ಸಂಘದ ವಕ್ತಾರ ಸಂಜಯ್ ಶರ್ಮಾ ಹೇಳುತ್ತಾರೆ. ಪ್ರಸಕ್ತ 40 ಶೇಕಡ ಪೂರೈಕೆ ಕಡಿತಗೊಂಡಿದೆ ಹಾಗೂ ಕಚ್ಚಾವಸ್ತುಗಳ ಬೆಲೆ 150-200 ಶೇಕಡದಷ್ಟು ಹೆಚ್ಚಳವಾಗಿದೆ ಎಂದು ಅವರು ಹೇಳಿದರು. 

ವಾರ್ತಾ ಭಾರತಿ 26 Mar 2026 11:04 pm

ಅಫಜಲಪುರ | ನಿಧಿಯ ಆಸೆಯಿಂದ ದೇಗುಲ ಧ್ವಂಸ

ಅಫಜಲಪುರ, ಮಾ. 26: ತಾಲೂಕಿನ ಬಡದಾಳ ಗ್ರಾಮದಲ್ಲಿ ಪುರಾತನ ಕಾಲದ ಬನದ ಬಸವಣ್ಣ ದೇಗುಲದಲ್ಲಿ ದುಷ್ಕರ್ಮಿಗಳು ನಿಧಿಗಾಗಿ ಶೋಧ ನಡೆಸಿ ದೇಗುಲದಲ್ಲಿನ ಶಿವಲಿಂಗ, ನಂದಿ, ಆಂಜನೇಯ ಮೂರ್ತಿಗಳನ್ನು ಧ್ವಂಸಗೊಳಿಸಿದ ಘಟನೆ ನಡೆದಿದೆ. ಇದು ಊರಿನ ಪುರಾತನ ಕಾಲದ ಐತಿಹಾಸಿಕ ದೇಗುಲವಾಗಿದೆ. ಈ ದೇಗುಲ ಚಾಲುಕ್ಯರ ಕಾಲದ್ದು ಎಂದು ಹೇಳಲಾಗುತ್ತದೆ. ಈ ದೇಗುಲದಲ್ಲಿ ಸಾಕಷ್ಟು ನಿಧಿ ಇದೆ, ಬನದ ಬಸವಣ್ಣ ದೇವಸ್ಥಾನದಿಂದ ಆಜಾತಲಿಂಗ ದೇವಸ್ಥಾನದ ತನಕ ನೆಲಮಾರ್ಗವು ಇದೆ ಎಂದು ಹೇಳಲಾಗುತ್ತದೆ ಎಂದು ಗ್ರಾಮಸ್ಥರು ಹೇಳಿದ್ದಾರೆ. ನಿಧಿ ಇದೆ ಎನ್ನುವುದನ್ನು ನೆಪ ಮಾಡಿಕೊಂಡು ಈ ಹಿಂದೊಮ್ಮೆ ದೇವಸ್ಥಾನದ ಮುಂದಿನ ಕಟ್ಟೆ ಅಗೆದು ಹಾಕಲಾಗಿತ್ತು. ಅಲ್ಲದೆ ಹಳೆ ದೇವಸ್ಥಾನ ಪಾಳು ಬಿದ್ದಿದ್ದು ಅಲ್ಲೂ ಕೂಡ ಅನೇಕ ಬಾರಿ ನೆಲ ಅಗೆಯಲಾಗಿತ್ತು. ಈಗ ದೇಗುಲದ ಪ್ರಾಂಗಣದಲ್ಲಿನ ನಂದಿ ಮೂರ್ತಿ ವಿಘ್ನಗೊಳಿಸಿ ಮೂರರಿಂದ ನಾಲ್ಕು ಅಡಿಗಳಷ್ಟು ಆಳಕ್ಕೆ ಅಗೆದು ಹಾಕಿದ್ದಲ್ಲದೆ ನಿಂಬೆ ಹಣ್ಣು ಕುಂಕುಮ, ಅರಿಸಿನ ಹಾಕಿ ಪೂಜೆ ಮಾಡಲಾಗಿದೆ. ಅಲ್ಲದೆ ಗರ್ಭ ಗುಡಿಯಲ್ಲಿನ ಶಿವಲಿಂಗವನ್ನು ಆಯುಧಗಳಿಂದ ಕಿತ್ತು ಹಾಕಲು ಪ್ರಯತ್ನ ನಡೆಸಿದ್ದರಿಂದ ಶಿವಲಿಂಗ ವಿಘ್ನಗೊಂಡಿದೆ. ಈ ದೇಗುಲದಲ್ಲಿ ನಿಧಿಯಾಸೆಗೆ ಮೂರ್ತಿಗಳನ್ನು ಭಗ್ನಗೊಳಿಸಿರುವುದು ನಮ್ಮ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದೆ. ಇನ್ನೂ ಮುಂದೆ ಇಂತಹ ಕೃತ್ಯಗಳು ನಡೆಯದಂತೆ ತಡೆಯಲು ಪಾಳು ಬಿದ್ದ ದೇಗುಲವನ್ನು ಸಂಬಂಧ ಪಟ್ಟವರು ನಿರ್ಮಿಸಿ ಭದ್ರತೆ ಕಲ್ಪಿಸಬೇಕು. ನೆಲ ಅಗೆದ ಕಳ್ಳರನ್ನು ಬೇಗ ಬಂಧಿಸಿ ಕಾನೂನುಕ್ರಮ ಕೈಗೊಳ್ಳಬೇಕು. ನಿಧಿ ಲಭ್ಯವಾಗಿದ್ದರೆ ಅದನ್ನು ಮರಳಿ ಪಡೆದು ದೇವಸ್ಥಾನದ ಜೀರ್ಣೋದ್ಧಾರ ಕೆಲಸಗಳಿಗೆ ಬಳಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ವಾರ್ತಾ ಭಾರತಿ 26 Mar 2026 11:01 pm

ಸಾಮಾಜಿಕ ಜಾಲತಾಣಗಳಲ್ಲಿ ಮೂಲಭೂತವಾದ ಪ್ರಚಾರ ಆರೋಪ : ಬಳ್ಳಾರಿ ಯುವಕನ ಬಂಧನ

ಬಳ್ಳಾರಿ : ಮೂಲಭೂತವಾದಿ ವಿಚಾರಧಾರೆಗಳನ್ನು ಸಾಮಾಜಿಕ ಜಾಲತಾಣಗಳ ಮೂಲಕ ಪ್ರಚಾರ ಮಾಡುತ್ತಿದ್ದರೆಂಬ ಆರೋಪದ ಹಿನ್ನೆಲೆಯಲ್ಲಿ, ಬಳ್ಳಾರಿ ಮೂಲದ ಓರ್ವ ಯುವಕ ಸೇರಿದಂತೆ ದೇಶದ ವಿವಿಧ ರಾಜ್ಯಗಳ 12 ಮಂದಿಯನ್ನು ಆಂಧ್ರ ಪ್ರದೇಶದ ವಿಜಯವಾಡ ಪೊಲೀಸರು ಬಂಧಿಸಿದ್ದಾರೆ. ಬಂಧಿತರಲ್ಲಿ ಬಳ್ಳಾರಿ ನಗರದ ಕೌಲ್ ಬಜಾರ್ ನಿವಾಸಿ ಅಬ್ದುಲ್ ಸಲಾಮ್ (36) ಸೇರಿದ್ದಾನೆ. ಉಗ್ರ ಸಂಘಟನೆಗಳೊಂದಿಗೆ ಸಂಪರ್ಕ ಹೊಂದಿದ್ದಾನೆ ಎಂಬ ಆರೋಪದ ಮೇರೆಗೆ ಆಂಧ್ರ ಪೊಲೀಸರು ಬಳ್ಳಾರಿಯಲ್ಲಿ ಕಾರ್ಯಾಚರಣೆ ನಡೆಸಿ, ತಡರಾತ್ರಿ ಮನೆ ಮೇಲೆ ದಾಳಿ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ. ಈ ವೇಳೆ ಸ್ಥಳೀಯ ಕೌಲ್ ಬಜಾರ್ ಪೊಲೀಸ್ ಠಾಣೆಯ ಸಿಬ್ಬಂದಿಯ ಸಹಕಾರದಿಂದ ಪಂಚನಾಮೆ ನಡೆಸಲಾಗಿದ್ದು, ಬಳಿಕ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಆಂಧ್ರ ಪ್ರದೇಶಕ್ಕೆ ಕರೆದೊಯ್ಯಲಾಗಿದೆ ಎಂದು ತಿಳಿದು ಬಂದಿದೆ. ಪ್ರಕರಣದ ಹಿನ್ನೆಲೆ : ಮಾ.23ರಂದು ವಿಜಯವಾಡ ಟೌನ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಎಫ್‌ಐಆರ್ ಆಧರಿಸಿ ಈ ಕಾರ್ಯಾಚರಣೆ ಕೈಗೊಳ್ಳಲಾಗಿದೆ. ಸಾಮಾಜಿಕ ಮಾಧ್ಯಮಗಳ ಮೂಲಕ ಉಗ್ರ ಸಂಘಟನೆಗಳ ವಿಚಾರಧಾರೆಗಳನ್ನು ಹರಡುವುದು ಹಾಗೂ ಭಯೋತ್ಪಾದನಾ ಚಟುವಟಿಕೆಗಳಿಗೆ ಬೆಂಬಲ ನೀಡುತ್ತಿರುವ ಬಗ್ಗೆ ಪ್ರಕರಣ ದಾಖಲಾಗಿತ್ತು. ಈ ತನಿಖೆಯಲ್ಲಿ ವಿಜಯವಾಡದ ವಿಂಚ್‌ಪೇಟ್ ಪ್ರದೇಶದಲ್ಲಿ ಪ್ರಮುಖ ಆರೋಪಿಮುಹಮ್ಮದ್ ರೆಹಮತುಲ್ಲಾ ಶರೀಫ್ (23) ಬಂಧನಕ್ಕೊಳಗಾಗಿದ್ದಾನೆ. ಈತನಿಂದ ಲಭಿಸಿದ ಮಾಹಿತಿಯ ಆಧರಿಸಿ ಕರ್ನಾಟಕ, ಆಂಧ್ರ ಪ್ರದೇಶ, ಬಿಹಾರ ಮತ್ತು ಮಹಾರಾಷ್ಟ್ರ ಸೇರಿದಂತೆ ಹಲವು ರಾಜ್ಯಗಳಲ್ಲಿ ಸಮನ್ವಯಿತ ಕಾರ್ಯಾಚರಣೆ ನಡೆಸಿ ಒಟ್ಟು 12 ಮಂದಿಯನ್ನು ಬಂಧಿಸಲಾಗಿದೆ. ಪೊಲೀಸರ ಮಾಹಿತಿ ಪ್ರಕಾರ, ಆರೋಪಿಗಳು ಸಾಮಾಜಿಕ ಜಾಲತಾಣಗಳ ಮೂಲಕ ನಿಷೇಧಿತ ಉಗ್ರ ಸಂಘಟನೆಗಳ ವಿಚಾರಧಾರೆಗಳನ್ನು ಪ್ರಚಾರ ಮಾಡುತ್ತಿದ್ದು, ಯುವಕರನ್ನು ಪ್ರೇರೇಪಿಸುವ ಕೆಲಸದಲ್ಲಿ ತೊಡಗಿಕೊಂಡಿದ್ದರು ಎಂಬ ಶಂಕೆ ವ್ಯಕ್ತವಾಗಿದೆ. ಪ್ರಕರಣದ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ.

ವಾರ್ತಾ ಭಾರತಿ 26 Mar 2026 10:57 pm

ಬೀದರ್ | 10 ದಿನಗಳಲ್ಲಿ TOFEI ನೋಂದಣಿ ಕಡ್ಡಾಯ: ಶಿಕ್ಷಣ ಸಂಸ್ಥೆಗಳನ್ನು ತಂಬಾಕು ಮುಕ್ತಗೊಳಿಸಲು ಸೂಚನೆ

ಬೀದರ್ : ಜಿಲ್ಲೆಯ ಎಲ್ಲಾ ಶೈಕ್ಷಣಿಕ ಸಂಸ್ಥೆಗಳನ್ನು ತಂಬಾಕು ಮುಕ್ತ ಸಂಸ್ಥೆಗಳನ್ನಾಗಿ ಮಾಡಲು ಸರ್ಕಾರದ TOFEI ತಂತ್ರಾಂಶದಲ್ಲಿ 10 ದಿನಗಳೊಳಗಾಗಿ ನೋಂದಾಯಿಸಿ, ಶಾಲೆಯ 100 ಮೀಟರ್ ವ್ಯಾಪ್ತಿಯಲ್ಲಿ ತಂಬಾಕು ಉತ್ಪನ್ನ ಮಾರಾಟ ಮಾಡುವ ಅಂಗಡಿಗಳ ವಿವರವನ್ನು ಸಂಬಂಧಪಟ್ಟ ಅಧಿಕಾರಿಗಳಿಗೆ ಸಲ್ಲಿಸುವಂತೆ ಅಪರ ಜಿಲ್ಲಾಧಿಕಾರಿ ಶಿವಾನಂದ್ ಕರಾಳೆ ಆದೇಶಿಸಿದರು. ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗುರುವಾರ ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮದ ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಕೋಟ್ಪಾ 2003 ಕಾಯ್ದೆಯಡಿ ಪ್ರತಿ ತಿಂಗಳು ತಂಬಾಕು ದಾಳಿಗಳನ್ನು ಹಮ್ಮಿಕೊಂಡು ಕನಿಷ್ಠ 20 ಪ್ರಕರಣಗಳನ್ನು ದಾಖಲಿಸಬೇಕು. ತಹಶೀಲ್ದಾರರ ಅಧ್ಯಕ್ಷತೆಯಲ್ಲಿ ಪ್ರತಿ ಮೂರು ತಿಂಗಳಿಗೊಮ್ಮೆ ಪ್ರಗತಿ ಪರಿಶೀಲನೆ ನಡೆಸಿ ಯುವಜನತೆ ತಂಬಾಕು ಸೇವನೆಗೆ ಬಲಿಯಾಗದಂತೆ ಕ್ರಮವಹಿಸಬೇಕು ಎಂದು ಸೂಚಿಸಿದರು. ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ತಂಬಾಕು ಉತ್ಪನ್ನ ಉದ್ಯಮ ಪರವಾನಿಗೆ ನೀತಿಯನ್ನು ಅನುಷ್ಠಾನಗೊಳಿಸದ ಬಸವಕಲ್ಯಾಣ ಮತ್ತು ಔರಾದ್ ಸ್ಥಳೀಯ ಸಂಸ್ಥೆಗಳ ಮುಖ್ಯಸ್ಥರಿಗೆ ಕಾರಣ ಕೇಳಿ ನೋಟಿಸ್ ನೀಡಲು ಸೂಚಿಸಿದರು. ಉಳಿದ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳು ಈ ನೀತಿಯನ್ನು ಕಟ್ಟುನಿಟ್ಟಾಗಿ ಜಾರಿಗೆ ತಂದು ಶಿಕ್ಷಣ ಸಂಸ್ಥೆಗಳನ್ನು ತಂಬಾಕು ಮುಕ್ತಗೊಳಿಸಬೇಕು ಎಂದರು. ಎಲ್ಲ ಬಾರ್ ಹಾಗೂ ರೆಸ್ಟೋರೆಂಟ್‌ಗಳಲ್ಲಿ ಧೂಮಪಾನ ತಡೆಯಲು ಅಬಕಾರಿ ಅಧಿಕಾರಿಗಳಿಗೆ ಕೋಟ್ಪಾ ಕಾಯ್ದೆಯ ತರಬೇತಿ ನೀಡಿ, ಆರೋಗ್ಯ ಮತ್ತು ಅಬಕಾರಿ ಇಲಾಖೆಗಳು ಜಂಟಿಯಾಗಿ ದಾಳಿ ನಡೆಸಬೇಕು. ತಾಲೂಕುವಾರು ಗ್ರಾಮಗಳನ್ನು ಆಯ್ಕೆ ಮಾಡಿ ಮಾರ್ಗಸೂಚಿಯಂತೆ 30 ಗ್ರಾಮಗಳನ್ನು ತಂಬಾಕು ಮುಕ್ತ ಗ್ರಾಮಗಳಾಗಿ ಘೋಷಿಸಲು ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು. ರಾಜ್ಯ ತಂಬಾಕು ನಿಯಂತ್ರಣ ಘಟಕದ ವಿಭಾಗೀಯ ಸಂಯೋಜಕ ಮಾಹಾತೇಂಶ್ ಬಿ. ಉಳ್ಳಾಗಡ್ಡಿ ಅವರು ಮಾತನಾಡಿ, ಸೆಕ್ಷನ್-4 ಅಡಿಯಲ್ಲಿ 579 ಪ್ರಕರಣಗಳು ದಾಖಲಿಸಿ 48,610 ರೂ. ದಂಡ, ಸೆಕ್ಷನ್ 6(ಎ) ಅಡಿಯಲ್ಲಿ 54 ಪ್ರಕರಣಗಳಿಗೆ 9,700 ರೂ. ದಂಡ ಹಾಗೂ ಸೆಕ್ಷನ್ 6(ಬಿ) ಅಡಿಯಲ್ಲಿ 101 ಪ್ರಕರಣಗಳಿಗೆ 19,500 ರೂ. ದಂಡ ವಿಧಿಸಲಾಗಿದೆ. ಒಟ್ಟು 734 ಪ್ರಕರಣಗಳಲ್ಲಿ 77,810 ರೂ. ದಂಡ ವಿಧಿಸಲಾಗಿದೆ ಎಂದು ಮಾಹಿತಿ ನೀಡಿದರು. ಈ ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ, ಜಿಲ್ಲಾ ಜಾರಿ ಅಧಿಕಾರಿಗಳು, ಶಿಕ್ಷಣ ಇಲಾಖೆ ಹಾಗೂ ಅಬಕಾರಿ ಇಲಾಖೆ ಸೇರಿದಂತೆ ಇತರೆ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

ವಾರ್ತಾ ಭಾರತಿ 26 Mar 2026 10:51 pm

ಇಸ್ರೇಲ್| ಇರಾನ್ ಕ್ಷಿಪಣಿ ದಾಳಿಯಲ್ಲಿ 6 ಮಂದಿಗೆ ಗಾಯ

ಜೆರುಸಲೇಂ, ಮಾ.26: ಗುರುವಾರ ಇರಾನ್‍ನ ಕ್ಷಿಪಣಿ ದಾಳಿಯಲ್ಲಿ ಮಧ್ಯ ಇಸ್ರೇಲ್‍ನಲ್ಲಿ ಕನಿಷ್ಠ 6 ಮಂದಿ ಗಾಯಗೊಂಡಿದ್ದು ಅಲ್ಪ ಪ್ರಮಾಣದಲ್ಲಿ ಹಾನಿ ಸಂಭವಿಸಿದೆ ಎಂದು ಇಸ್ರೇಲ್ ಮಿಲಿಟರಿ ಹೇಳಿದೆ. ಗುರುವಾರ ಇಸ್ರೇಲ್ ಭೂಪ್ರದೇಶದ ಕಡೆಗೆ ಧಾವಿಸಿ ಬರುತ್ತಿದ್ದ ಹಲವು ಕ್ಷಿಪಣಿಗಳನ್ನು ನಮ್ಮ ವಾಯು ರಕ್ಷಣಾ ವ್ಯವಸ್ಥೆ ಗಮನಿಸಿವೆ. ಬೆದರಿಕೆಯನ್ನು ತಡೆಯಲು ರಕ್ಷಣಾತ್ಮಕ ವ್ಯವಸ್ಥೆಗಳನ್ನು ಸಕ್ರಿಯಗೊಳಿಸಲಾಗಿದ್ದು 6 ಕ್ಷಿಪಣಿಗಳನ್ನು ತುಂಡರಿಸಲಾಗಿದೆ. ಕ್ಲಸ್ಟರ್ ಬಾಂಬ್‍ಗಳಿಂದಾಗಿ ಕಾಫರ್ ಕಸ್ಸೆಮ್ ನಗರದಲ್ಲಿ ಹಲವು ಮನೆಗಳಿಗೆ ಹಾನಿಯಾಗಿದೆ. ಜೆರುಸಲೆಮ್ ಮತ್ತು ಆಕ್ರಮಿತ ಪಶ್ಚಿಮದಂಡೆಯಲ್ಲಿನ ಇಸ್ರೇಲಿ ವಸಾಹತುಗಳನ್ನು ಒಳಗೊಂಡಂತೆ ಮಧ್ಯ ಇಸ್ರೇಲ್‍ನಾದ್ಯಂತ ವಾಯುದಾಳಿ ಸೈರನ್ ಮೊಳಗಿದೆ. ಟೆಲ್ ಅವೀವ್‍ನಲ್ಲಿ ಸ್ಫೋಟದ ಸದ್ದು ಕೇಳಿಬಂದಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ವಾರ್ತಾ ಭಾರತಿ 26 Mar 2026 10:47 pm

ಕದನ ವಿರಾಮ ಮಾತುಕತೆ ತಿರಸ್ಕರಿಸಿದ ಹಿಜ್ಬುಲ್ಲಾ: ವರದಿ

ಬೈರುತ್, ಮಾ.26: ದಾಳಿ ನಡೆಯುತ್ತಿರುವಾಗ ಇಸ್ರೇಲ್ ಜೊತೆ ಮಾತುಕತೆ ನಡೆಸಿದರೆ ಅದು ಶರಣಾಗತಿಯಾಗುತ್ತದೆ ಎಂದು ಹಿಜ್ಬುಲ್ಲಾ ಮುಖ್ಯಸ್ಥ ನಯಿಮ್ ಕಾಸ್ಸೆಮ್ ಹೇಳಿದ್ದಾರೆ. ಇರಾನ್ ಬೆಂಬಲಿತ ಹಿಜ್ಬುಲ್ಲಾ ಗುಂಪು ಮಾರ್ಚ್ 2ರಂದು ಇಸ್ರೇಲ್ ಮೇಲೆ ಕ್ಷಿಪಣಿ ದಾಳಿ ನಡೆಸಿದ ಬಳಿಕ ಲೆಬನಾನ್ ಮೇಲೆ ಇಸ್ರೇಲ್ ನಿರಂತರ ಪ್ರತಿದಾಳಿ ನಡೆಸುತ್ತಿದೆ. ಸಂಘರ್ಷ ಕೊನೆಗೊಳಿಸುವ ನಿಟ್ಟಿನಲ್ಲಿ ಇಸ್ರೇಲ್ ಜೊತೆ ನೇರ ಮಾತುಕತೆ ನಡೆಸಲು ಸಿದ್ಧ ಎಂದು ಲೆಬನಾನ್ ಅಧ್ಯಕ್ಷರು ಬುಧವಾರ ಹೇಳಿದ್ದರು. ಈ ಹೇಳಿಕೆಗೆ ಪ್ರತಿಕ್ರಿಯಿಸಿರುವ ಹಿಜ್ಬುಲ್ಲಾ ಮುಖ್ಯಸ್ಥ ಕಾಸ್ಸೆಮ್, ದಾಳಿ ಮುಂದುವರಿಯುತ್ತಿರುವಾಗ ಮಾತುಕತೆ ನಡೆಸುವುದು ಶರಣಾಗತಿಗೆ ಸಮವಾಗುತ್ತದೆ ಎಂದಿದ್ದಾರೆ. ಈ ಮಧ್ಯೆ, ಇಸ್ರೇಲ್ ಮಿಲಿಟರಿ ಈಗಾಗಲೇ ಲೆಬನಾನ್‍ನಲ್ಲಿ ನಿಜವಾದ ಭದ್ರತಾ ವಲಯವನ್ನು ರಚಿಸಿದೆ ಮತ್ತು ಲೆಬನಾನ್‍ನ ಆಳಕ್ಕೆ ಅದನ್ನು ವಿಸ್ತರಿಸಲು ನಿರ್ಧರಿಸಿದೆ. ವಿಸ್ತರಿತ ಭದ್ರತಾ ವಲಯವನ್ನು ನಿರ್ಮಿಸುವ ಮೂಲಕ ಇಸ್ರೇಲನ್ನು ನೆಲದ ದಾಳಿ ಮತ್ತು ಕ್ಷಿಪಣಿ ದಾಳಿಯನ್ನು ತಡೆಯುವ ಉದ್ದೇಶವಿದೆ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹೇಳಿದ್ದಾರೆ.

ವಾರ್ತಾ ಭಾರತಿ 26 Mar 2026 10:41 pm

ಗೆಳತಿ ಬೇರೆಯವರ ಜತೆ ಮದುವೆಯಾದ ಸಿಟ್ಟಿಗೆ ಖಾಸಗಿ ಫೋಟೋ, ವಿಡಿಯೋ ವೈರಲ್‌: ಬೆಂಗಳೂರು ಯುವಕನಿಗೆ 1 ವರ್ಷ ಜೈಲು, ದಂಡ

ಗೆಳತಿ ಬೇರೆಯವರನ್ನು ವಿವಾಹವಾದ ಸಿಟ್ಟಿಗೆ ಆಕೆಯ ಖಾಸಗಿ ವಿಡಿಯೋಗಳನ್ನು ಅಶ್ಲೀಲ ವೆಬ್‌ಸೈಟ್‌ಗೆ ಅಪ್‌ಲೋಡ್ ಮಾಡಿದ್ದ ಬೆಂಗಳೂರಿನ ಯುವಕನಿಗೆ ನ್ಯಾಯಾಲಯ ಒಂದು ವರ್ಷ ಜೈಲು ಮತ್ತು ₹1 ಲಕ್ಷ ದಂಡ ವಿಧಿಸಿದೆ. ವಾಟ್ಸ್ಯಾಪ್ ಕರೆಗಳನ್ನು ಗುಟ್ಟಾಗಿ ರೆಕಾರ್ಡ್ ಮಾಡಿದ್ದ ಈತನ ವಿರುದ್ಧ ಸೈಬರ್ ಪೊಲೀಸರು ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಮಾಹಿತಿ ತಂತ್ರಜ್ಞಾನ ಕಾಯಿದೆಯಡಿ ದೋಷಿ ಎಂದು ಪರಿಗಣಿಸಿ ನ್ಯಾಯಾಲಯ ಈ ತೀರ್ಪು ನೀಡಿದೆ.

ವಿಜಯ ಕರ್ನಾಟಕ 26 Mar 2026 10:36 pm

2026-27ರ ಸ್ವದೇಶಿ ಸರಣಿಯ ವೇಳಾಪಟ್ಟಿ ಪ್ರಕಟಿಸಿದ ಬಿಸಿಸಿಐ| ಜನವರಿ 27ರಿಂದ ಪ್ರತಿಷ್ಠಿತ ಬಾರ್ಡರ್-ಗವಾಸ್ಕರ್ ಟ್ರೋಫಿಗಾಗಿ ಟೆಸ್ಟ್ ಟೂರ್ನಿ

ಹೊಸದಿಲ್ಲಿ, ಮಾ.26: ಭಾರತದ ಕ್ರಿಕೆಟ್ ನಿಯಂತ್ರಣ ಮಂಡಳಿಯು(ಬಿಸಿಸಿಐ)2026-27ರ ಋತುವಿನ ಟೀಮ್ ಇಂಡಿಯಾದ ಅಂತರ್‌ರಾಷ್ಟ್ರೀಯ ಸ್ವದೇಶಿ ಸರಣಿಯ ಸಂಪೂರ್ಣ ವೇಳಾಪಟ್ಟಿಯನ್ನು ಗುರುವಾರ ಪ್ರಕಟಿಸಿದೆ. 17 ನಗರಗಳಲ್ಲಿ ಒಟ್ಟು 22 ಪಂದ್ಯಗಳು ನಡೆಯಲಿವೆ. ಮುಂಬರುವ ಋತುವಿನಲ್ಲಿ ನಾಲ್ಕು ಪ್ರವಾಸಿ ತಂಡಗಳಾದ- ವೆಸ್ಟ್‌ಇಂಡೀಸ್, ಶ್ರೀಲಂಕಾ, ಝಿಂಬಾಬ್ವೆ ಹಾಗೂ ಆಸ್ಟ್ರೇಲಿಯದ ವಿರುದ್ಧ ಎಲ್ಲ ಮಾದರಿ ಕ್ರಿಕೆಟ್‌ನಲ್ಲಿ ವಿಶಾಲ ವ್ಯಾಪ್ತಿಯ ಸ್ಪರ್ಧೆ ನಡೆಯುವ ನಿರೀಕ್ಷೆ ಇದ್ದು, ದೇಶಾದ್ಯಂತ ಕ್ರಿಕೆಟ್ ಅಭಿಮಾನಿಗಳಿಗೆ ಅಗ್ರ ಅಂತರ್‌ರಾಷ್ಟ್ರೀಯ ಕ್ರಿಕೆಟ್‌ಗೆ ಸಾಕ್ಷಿಯಾಗುವ ಅವಕಾಶ ಲಭಿಸಿದೆ. ಬಿಡುವಿಲ್ಲದ ಋತುವಿಗೆ ನಾಂದಿ ಹಾಡಲಿದೆ ವೆಸ್ಟ್‌ಇಂಡೀಸ್ ತಂಡ 2026ರ ಸೆಪ್ಟಂಬರ್ 27ರಂದು ವೆಸ್ಟ್‌ಇಂಡೀಸ್ ಕ್ರಿಕೆಟ್ ತಂಡದ ಪ್ರವಾಸದೊಂದಿಗೆ ಭಾರತದ ಸ್ವದೇಶಿ ಋತು ಆರಂಭವಾಗಲಿದೆ. ವಿಂಡೀಸ್ ತಂಡವು ಮೂರು ಏಕದಿನ ಹಾಗೂ ಐದು ಪಂದ್ಯಗಳ ಟಿ-20 ಸರಣಿಯನ್ನಾಡಲಿದೆ. ಏಕದಿನ ಪಂದ್ಯಗಳು ತಿರುವನಂತಪುರ, ಗುವಾಹಟಿ ಹಾಗೂ ನ್ಯೂ ಚಂಢೀಗಡದಲ್ಲಿ ನಡೆಯಲಿದೆ. ಟಿ-20 ಸರಣಿಯು ಲಕ್ನೊ, ರಾಂಚಿ, ಇಂದೋರ್, ಹೈದರಾಬಾದ್ ಹಾಗೂ ಬೆಂಗಳೂರಿನಲ್ಲಿ ನಿಗದಿಯಾಗಿದೆ. ಡಿಸೆಂಬರ್‌ನಲ್ಲಿ ಶ್ರೀಲಂಕಾ ಸರಣಿ ಭಾರತವು 2026ರ ಡಿಸೆಂಬರ್‌ನಲ್ಲಿ ಶ್ರೀಲಂಕಾದ ವಿರುದ್ಧ ಮೂರು ಏಕದಿನ ಹಾಗೂ ಮೂರು ಟಿ-20 ಪಂದ್ಯಗಳನ್ನು ಒಳಗೊಂಡ ಸೀಮಿತ ಓವರ್ ಸರಣಿಯ ಆತಿಥ್ಯ ವಹಿಸಲಿದೆ. ಹೊಸದಿಲ್ಲಿ, ಬೆಂಗಳೂರು ಹಾಗೂ ಅಹ್ಮದಾಬಾದ್ ಏಕದಿನ ಸರಣಿಯ ಆತಿಥ್ಯ ವಹಿಸಲಿವೆ. ರಾಜ್‌ಕೋಟ್, ಕಟಕ್ ಹಾಗೂ ಪುಣೆ ಟಿ-20 ಪಂದ್ಯಗಳನ್ನು ಆಯೋಜಿಸಲಿದೆ. ಹೊಸ ವರ್ಷಕ್ಕೆ ಝಿಂಬಾಬ್ವೆ ತಂಡದ ಆಗಮನ 2027ರ ಆರಂಭದಲ್ಲಿ ಝಿಂಬಾಬ್ವೆ ತಂಡವು ಭಾರತಕ್ಕೆ ಮೂರು ಪಂದ್ಯಗಳ ಏಕದಿನ ಸರಣಿಯನ್ನಾಡಲು ಆಗಮಿಸಲಿದೆ. ಪಂದ್ಯಗಳು ಜನವರಿಯಲ್ಲಿ ಕೋಲ್ಕತಾ, ಹೈದರಾಬಾದ್ ಹಾಗೂ ಮುಂಬೈನಲ್ಲಿ ನಡೆಯಲಿದೆ. ಬಾರ್ಡರ್-ಗವಾಸ್ಕರ್ ಟ್ರೋಫಿ ಪ್ರಧಾನ ಆಕರ್ಷಣೆ ಭಾರತ ಹಾಗೂ ಆಸ್ಟ್ರೇಲಿಯ ತಂಡಗಳ ನಡುವಿನ 2026-27ರ ಸಾಲಿನ ಪ್ರತಿಷ್ಠಿತ ಐದು ಟೆಸ್ಟ್ ಪಂದ್ಯಗಳ ಬಾರ್ಡರ್-ಗವಾಸ್ಕರ್ ಟ್ರೋಫಿ ಟೂರ್ನಿಯು ಮುಂದಿನ ವರ್ಷದ ಜನವರಿ 21ರಂದು ನಾಗ್ಪುರದಲ್ಲಿ ಆರಂಭವಾಗಲಿದೆ. ಎರಡನೇ ಟೆಸ್ಟ್ ಪಂದ್ಯವು ಚೆನ್ನೈನಲ್ಲಿ ಜನವರಿ 29ರಿಂದ ಫೆ.2ರ ತನಕ ನಡೆಯಲಿದೆ. ಮೂರನೇ ಪಂದ್ಯವು ಗುವಾಹಟಿಯಲ್ಲಿ ಫೆಬ್ರವರಿ 11ರಿಂದ 15ರ ತನಕ ನಡೆಯುವುದು. ಫೆಬ್ರವರಿ 19ರಿಂದ ನಾಲ್ಕನೇ ಟೆಸ್ಟ್ ಪಂದ್ಯಕ್ಕಾಗಿ ರಾಂಚಿ ಆತಿಥ್ಯವಹಿಸಲಿದೆ. ಅಹ್ಮದಾಬಾದ್‌ನಲ್ಲಿ ಫೆಬ್ರವರಿ 27ರಂದು ಸರಣಿಯ ಕೊನೆಯ ಪಂದ್ಯವು ನಡೆಯಲಿದೆ. 2022-23ರಲ್ಲಿ ಕೊನೆಯ ಬಾರಿ ಭಾರತ ನೆಲದಲ್ಲಿ ಬಾರ್ಡರ್-ಗವಾಸ್ಕರ್ ಟ್ರೋಫಿ ಟೂರ್ನಿಯನ್ನು ಆಯೋಜಿಸಲಾಗಿತ್ತು. ಆಗ ಭಾರತ ತಂಡವು 2-1 ಅಂತರದಿಂದ ಸರಣಿ ಗೆದ್ದುಕೊಂಡಿತ್ತು. ಭಾರತದ 2026-27ರ ಸ್ವದೇಶಿ ಸರಣಿಯ ಸಂಪೂರ್ಣ ವೇಳಾಪಟ್ಟಿ ವೆಸ್ಟ್‌ಇಂಡೀಸ್ ತಂಡದ ಭಾರತ ಪ್ರವಾಸ ದಿನಾಂಕ ಪಂದ್ಯ ಸಮಯ ಸ್ಥಳ ಸೆ.27 ಮೊದಲ ಏಕದಿನ ಮಧ್ಯಾಹ್ನ 2:00 ತಿರುವನಂತಪುರ ಸೆ.30 ಎರಡನೇ ಏಕದಿನ ಮಧ್ಯಾಹ್ನ 2:00 ಗುವಾಹಟಿ ಅ.3 ಮೂರನೇ ಏಕದಿನ ಮಧ್ಯಾಹ್ನ 2:00 ನ್ಯೂ ಚಂಡಿಗಡ ಅ.6 ಮೊದಲ ಟಿ-20 ರಾತ್ರಿ 7:00 ಲಕ್ನೊ ಅ.9 ಎರಡನೇ ಟಿ-20 ರಾತ್ರಿ 7:00 ರಾಂಚಿ ಅ.11 ಮೂರನೇ ಟಿ-20 ರಾತ್ರಿ 7:00 ಇಂದೋರ್ ಅ.14 ನಾಲ್ಕನೇ ಟಿ-20 ರಾತ್ರಿ 7:00 ಹೈದರಾಬಾದ್ ಅ.17 ಐದನೇ ಟಿ-20 ರಾತ್ರಿ 7:00 ಬೆಂಗಳೂರು ಶ್ರೀಲಂಕಾದ ಭಾರತ ಪ್ರವಾಸ ದಿನಾಂಕ ಪಂದ್ಯ ಸಮಯ ಸ್ಥಳ ಡಿ.13 ಮೊದಲ ಏಕದಿನ ಮಧ್ಯಾಹ್ನ 2:00 ಹೊಸದಿಲ್ಲಿ ಡಿ.16 ಎರಡನೇ ಏಕದಿನ ಮಧ್ಯಾಹ್ನ 2:00 ಬೆಂಗಳೂರು ಡಿ.19 ಮೂರನೇ ಏಕದಿನ ಮಧ್ಯಾಹ್ನ 2:00 ಅಹ್ಮದಾಬಾದ್ ಡಿ.22 ಮೊದಲ ಟಿ-20 ರಾತ್ರಿ 7:00 ರಾಜ್‌ಕೋಟ್ ಡಿ.24 ಎರಡನೇ ಟಿ-20 ರಾತ್ರಿ 7:00 ಕಟಕ್ ಡಿ.27 ಮೂರನೇ ಟಿ-20 ರಾತ್ರಿ 7:00 ಪುಣೆ ಝಿಂಬಾಬ್ವೆಯ ಭಾರತ ಪ್ರವಾಸ ದಿನಾಂಕ ಪಂದ್ಯ ಸಮಯ ಸ್ಥಳ ಜ.3-2027 ಮೊದಲ ಏಕದಿನ ಮಧ್ಯಾಹ್ನ 2:00 ಕೋಲ್ಕತಾ ಜ.6-2027 ಎರಡನೇ ಏಕದಿನ ಮಧ್ಯಾಹ್ನ 2:00 ಹೈದರಾಬಾದ್ ಜ.9-2027 ಮೂರನೇ ಏಕದಿನ ಮಧ್ಯಾಹ್ನ 2:00 ಮುಂಬೈ ಆಸ್ಟ್ರೇಲಿಯದ ಭಾರತ ಪ್ರವಾಸ ದಿನಾಂಕ ಪಂದ್ಯ ಸಮಯ ಸ್ಥಳ ಜ.21-2027 ಮೊದಲ ಟೆಸ್ಟ್ ಬೆಳಗ್ಗೆ 9:30 ನಾಗ್ಪುರ ಜ.29-2027 ಎರಡನೇ ಟೆಸ್ಟ್ ಬೆಳಗ್ಗೆ 9:30 ಚೆನ್ನೈ ಫೆ.11-2027 ಮೂರನೇ ಟೆಸ್ಟ್ ಬೆಳಗ್ಗೆ 9:00 ಗುವಾಹಟಿ ಫೆ.19-2027 ನಾಲ್ಕನೇ ಟೆಸ್ಟ್ ಬೆಳಗ್ಗೆ 9:30 ರಾಂಚಿ ಫೆ.27-2027 ಐದನೇ ಟೆಸ್ಟ್ ಬೆಳಗ್ಗೆ 9:30 ಅಹ್ಮದಾಬಾದ್

ವಾರ್ತಾ ಭಾರತಿ 26 Mar 2026 10:36 pm

ಮಂಗಳೂರು: ರೊಸಾರಿಯೊ ಕ್ಯಾಥೆಡ್ರೆಲ್‌ನಲ್ಲಿ ‘ಕ್ರಿಸಮ್ ಬಲಿಪೂಜೆ ’

ಮಂಗಳೂರು: ಮುಂಬರುವ ಪವಿತ್ರ ವಾರದ ಆಚರಣೆಗಳಿಗೆ ಮುನ್ನುಡಿಯಾಗಿ ಮಂಗಳೂರು ಧರ್ಮಕ್ಷೇತ್ರದ ವಾರ್ಷಿಕ ‘ಕ್ರಿಸಮ್ ಬಲಿಪೂಜೆ’(ತೈಲ ಪವಿತ್ರಿಕರಿಸುವ ಪೂಜೆ) ಗುರುವಾರ ಸಂಜೆ ನಗರದ ರೊಸಾರಿಯೊ ಕ್ಯಾಥೆಡ್ರೆಲ್‌ನಲ್ಲಿ ಭಕ್ತಿಪೂರ್ವಕವಾಗಿ ನೆರವೇರಿತು. ಮಂಗಳೂರು ಧರ್ಮಕ್ಷೇತ್ರದ ಧರ್ಮಾಧ್ಯಕ್ಷ ಪರಮ ಪೂಜ್ಯ ಡಾ. ಪೀಟರ್ ಪಾವ್ಲ್ ಸಲ್ಡಾನ್ಹಾ ಅವರು ಈ ಪವಿತ್ರ ಬಲಿಪೂಜೆಯ ನೇತೃತ್ವ ವಹಿಸಿದ್ದರು. ಈ ಪ್ರಧಾನ ಧಾರ್ಮಿಕ ವಿಧಿಯಲ್ಲಿ, ಮುಂಬರುವ ವರ್ಷದಲ್ಲಿ ಧರ್ಮಕ್ಷೇತ್ರದಾದ್ಯಂತ ಎಲ್ಲಾ ಚರ್ಚ್‌ಗಳಲ್ಲಿ ವಿವಿಧ ಸಂಸ್ಕಾರಗಳನ್ನು ನೀಡಲು ಬಳಸುವ ಪವಿತ್ರ ತೈಲಗಳನ್ನು ಧರ್ಮಾಧ್ಯಕ್ಷರು ಆಶೀರ್ವದಿಸಿದರು. ಇದೇ ವೇಳೆ ಧರ್ಮಕ್ಷೇತ್ರದ ಎಲ್ಲಾ ಯಾಜಕರು ಬಲಿಪೀಠದ ಸುತ್ತ ಒಂದೆಡೆ ಸೇರಿ, ತಮ್ಮ ಯಾಜಕ ದೀಕ್ಷೆಯ ವಾಗ್ದಾನಗಳನ್ನು ನವೀಕರಿಸಿಕೊಂಡರು. ತಮ್ಮ ಪ್ರವಚನದಲ್ಲಿ ಧರ್ಮಾಧ್ಯಕ್ಷರಾದ ಡಾ. ಪೀಟರ್ ಪಾವ್ಲ್ ಸಲ್ಡಾನ್ಹಾ ಅವರು, ‘ಕ್ರಿಸಮ್ ತೈಲ’ ಮಹತ್ವವನ್ನು ವಿವರಿಸಿದರು. ರೋಗಿಗಳ ತೈಲ ಮತ್ತು ದೀಕ್ಷಾರ್ಥಿಗಳ ತೈಲವನ್ನು ಆಶೀರ್ವದಿಸಲಾಗುತ್ತದೆ, ಆದರೆ ಸುಗಂಧ ಭರಿತವಾದ ‘ಪವಿತ್ರ ಕ್ರಿಸಮ್’ ತೈಲವನ್ನು ವಿಶೇಷವಾಗಿ ಪವಿತ್ರಿಕರಿಸಲಾಗುತ್ತದೆ ಎಂದು ಅವರು ತಿಳಿಸಿದರು. ‘ಕ್ರಿಶ್ಚಿಯನ್’ ಎಂಬ ಪದವು ‘ಕ್ರಿಸಮ್’ ಮತ್ತು ‘ಕ್ರಿಸ್ಟೋಸ್’ (ಅಭಿಷಿಕ್ತನು) ಎಂಬ ಪದಗಳಿಂದಲೇ ಹುಟ್ಟಿಕೊಂಡಿದೆ. ಪವಿತ್ರಾತ್ಮರ ಸಂಕೇತವಾಗಿರುವ ಈ ಕ್ರಿಸಮ್ ತೈಲವು, ಯಾಜಕರ ಮತ್ತು ಧರ್ಮಾಧ್ಯಕ್ಷರ ದೀಕ್ಷಾಭಿಷೇಕದಲ್ಲಿ ಹಾಗೂ ಚರ್ಚ್‌ಗಳ ಪವಿತ್ರೀಕರಣದಲ್ಲಿ ಅತ್ಯಗತ್ಯವಾಗಿದೆ ಎಂದು ಅವರು ವಿವರಿಸಿದರು. ಬಲಿಪೂಜೆಯಲ್ಲಿ ಮಂಗಳೂರು ಧರ್ಮಕ್ಷೇತ್ರದ ಶ್ರೇಷ್ಠಗುರು ವಂ. ಮ್ಯಾಕ್ಸಿಮ್ ಎಲ್. ನೊರೊನ್ಹಾ, ಚಾನ್ಸೆಲರ್ ಅತಿ ವಂ. ವಿಕ್ಟರ್ ಜಾರ್ಜ್ ಡಿಸೋಜಾ, ಪ್ರೊಕ್ಯುರೇಟರ್ ಅತಿ ವಂ. ಜಗದೀಶ್ ಪಿಂಟೊ, ಧಾರ್ಮಿಕರ ಎಪಿಸ್ಕೋಪಲ್ ವಿಕಾರ್ ಅತಿ ವಂ. ಡೇನಿಯಲ್ ವೇಗಾಸ್ ಒ.ಪಿ., ಜುಡಿಷಿಯಲ್ ವಿಕಾರ್ ಅತಿ ವಂ. ನವೀನ್ ಪಿಂಟೊ ಮತ್ತು ರೊಸಾರಿಯೊ ಕ್ಯಾಥೆಡ್ರಲ್‌ನ ಪ್ರಧಾನ ಯಾಜಕರಾದ ವಂ. ವಲೇರಿಯನ್ ಡಿ ಸೋಜ ಅವರು ಸಹ- ಯಾಜಕರಾಗಿ ಪಾಲ್ಗೊಂಡಿದ್ದರು.  

ವಾರ್ತಾ ಭಾರತಿ 26 Mar 2026 10:34 pm

Bidar | ಎ.5 ರಂದು ಡಾ.ಬಾಬು ಜಗಜೀವನರಾಂ ಜಯಂತಿ ಅರ್ಥಪೂರ್ಣವಾಗಿ ಆಚರಿಸೋಣ : ಎಡಿಸಿ ಶಿವಾನಂದ್ ಕರಾಳೆ

ಬೀದರ್ : ಎ.5ರಂದು ಹಸಿರು ಕ್ರಾಂತಿಯ ಹರಿಕಾರ ಡಾ. ಬಾಬು ಜಗಜೀವನರಾಂ ಅವರ 119ನೇ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸೋಣ ಎಂದು ಅಪರ ಜಿಲ್ಲಾಧಿಕಾರಿ ಶಿವಾನಂದ್ ಕರಾಳೆ ತಿಳಿಸಿದ್ದಾರೆ. ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗುರುವಾರ ಜಯಂತಿ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಅಂದು ಬೆಳಿಗ್ಗೆ 9:30ಕ್ಕೆ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಡಾ. ಜಗಜೀವನರಾಂ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಗುವುದು. ನಂತರ 10 ಗಂಟೆಗೆ ಭಾವಚಿತ್ರದ ಮೆರವಣಿಗೆ ನಡೆಯಲಿದೆ ಎಂದರು. ಮೆರವಣಿಗೆ ಬಸವೇಶ್ವರ್ ವೃತ್ತ, ಭಗತ್ ಸಿಂಗ್ ವೃತ್ತ, ಅಂಬೇಡ್ಕರ್ ವೃತ್ತ, ಕರಿಯಪ್ಪ ವೃತ್ತ ಮಾರ್ಗವಾಗಿ ಸಾಗಿದ್ದು, ಚನ್ನಬಸವ ಪಟ್ಟದೇವರು ರಂಗಮಂದಿರದಲ್ಲಿ ಬೆಳಿಗ್ಗೆ 11ಕ್ಕೆ ವೇದಿಕೆ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು. ಅಂದು ನಗರದ ಎಲ್ಲಾ ಮಹನೀಯರ ವೃತ್ತಗಳಿಗೆ ದೀಪಾಲಂಕಾರ ಮಾಡುವುದು, ಗ್ರಾಮ ಪಂಚಾಯತ್‌ಗಳಲ್ಲಿ ಭಾವಚಿತ್ರ ಪೂಜೆ ನಡೆಸುವುದು, ಮೆರವಣಿಗೆ ಮಾರ್ಗದಲ್ಲಿ ಸ್ವಚ್ಚತೆ ಮತ್ತು ಕುಡಿಯುವ ನೀರಿನ ವ್ಯವಸ್ಥೆಯನ್ನು ನಗರಸಭೆಯಿಂದ ಒದಗಿಸುವುದು, ಪೊಲೀಸ್ ಬಂದೋಬಸ್ತ್ ಕಲ್ಪಿಸುವುದು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಕಲಾ ತಂಡಗಳ ವ್ಯವಸ್ಥೆ ಮಾಡುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು. ಈ ಸಭೆಯಲ್ಲಿ ಮಹಾನಗರ ಪಾಲಿಕೆ ಆಯುಕ್ತ ಮುಕುಲ್ ಜೈನ್, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಶರಣಪ್ಪಾ ಕೋಟಪ್ಪಗೋಳ್, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಯೋಗೇಶ್, ಜಿಲ್ಲಾ ಮಟ್ಟದ ಅಧಿಕಾರಿಗಳು ಸೇರಿದಂತೆ ಸಮಾಜದ ಮುಖಂಡರಾದ ಚಂದ್ರಕಾಂತ್ ಹಿಪ್ಪಳಗಾಂವ್, ರಾಜು ಕಡ್ಯಾಳ್, ಫರ್ನಾಂಡಿಸ್ ಹಿಪ್ಪಳಗಾಂವ್, ಜಾಪಟ್ ಕಡ್ಯಾಳ್, ಜಯಶೀಲ್ ಮಿರಾಗಂಜ್, ಮಾರುತಿ ಶಾಖಾ ಹಾಗೂ ರೋಹಿದಾಸ್ ಗೋಡೆ ಸೇರಿದಂತೆ ಇತರರು ಉಪಸ್ಥಿತರಿದ್ದರು.

ವಾರ್ತಾ ಭಾರತಿ 26 Mar 2026 10:33 pm

ಉಪಚುನಾವಣೆ ನೀತಿ ಸಂಹಿತೆ ಕುರಿತು ಸಂಪುಟ ಸಭೆಯಲ್ಲಿ ಚರ್ಚೆ : ಎಚ್.ಕೆ.ಪಾಟೀಲ್

ಬೆಂಗಳೂರು : ಬಾಗಲಕೋಟೆ ಹಾಗೂ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯ ಮಾದರಿ ನೀತಿ ಸಂಹಿತೆ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಲಾಗಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ್ ತಿಳಿಸಿದರು. ಗುರುವಾರ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಒಳ ಮೀಸಲಾತಿ ವಿಚಾರದ ಕುರಿತು ಚರ್ಚಿಸಲು ಮಾ.27ರಂದು ವಿಶೇಷ ಸಚಿವ ಸಂಪುಟ ಸಭೆ ನಿಗದಿ ಮಾಡಲಾಗಿತ್ತು ಎಂದು ಹೇಳಿದರು. ಆದರೆ, ಈ ವಿಷಯ ಸಾರ್ವತ್ರಿಕವಾಗಿರುವುದರಿಂದ ಯಾವುದೆ ನಿರ್ಧಾರ ಕೈಗೊಂಡರು ಮಾದರಿ ನೀತಿ ಸಂಹಿತೆ ಉಲ್ಲಂಘನೆಯಾಗುತ್ತದೆ ಎಂದು ಅಡ್ವೊಕೇಟ್ ಜನರಲ್ ಅಭಿಪ್ರಾಯ ವ್ಯಕ್ತಪಡಿಸಿರುವುದರಿಂದ ನಾವು ವಿಶೇಷ ಸಚಿವ ಸಂಪುಟ ಸಭೆಯನ್ನು ಮುಂದೂಡಿದ್ದೇವೆ ಎಂದು ಎಚ್.ಕೆ.ಪಾಟೀಲ್ ತಿಳಿಸಿದರು. ಇತರ ನಿರ್ಣಯಗಳು: ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮ(ಆರ್‍ಬಿಎಸ್‍ಕೆ) ಯೋಜನೆಯಡಿ ಅನುಮತಿಸಲಾದ 148 ಚಿಕಿತ್ಸಾ ಕಾರ್ಯವಿಧಾನಗಳು, ಅಲ್ಲದೇ ಆರ್‍ಬಿಎಸ್‍ಕೆ ಒಡಂಬಡಿಕೆಯಲ್ಲಿ ಸೇರಿಲ್ಲದ ಹೆಚ್ಚಿನ ಚಿಕಿತ್ಸೆಗಳನ್ನು ಕೈಗೊಂಡಿದ್ದಕ್ಕಾಗಿ, 2015-16 ರಿಂದ 2018-19ನೆ ಆರ್ಥಿಕ ವರ್ಷದ ಬಾಕಿ ಇರುವ 23.30 ಕೋಟಿ ರೂ. ಮೊತ್ತದ ಬಿಲ್ಲುಗಳನ್ನು ಎಸ್‍ಎಎಸ್‍ಟಿ ಅನುದಾನದಿಂದ ಪಾವತಿಸಲು ನಿರ್ಧರಿಸಲಾಗಿದೆ ಎಂದು ಅವರು ಹೇಳಿದರು. ಜಲಸಂಪನ್ಮೂಲ ಇಲಾಖೆಯಲ್ಲಿ 2003ರ ಪೂರ್ವದಲ್ಲಿ ನೇಮಕಾತಿ ಹೊಂದಿ ಇಲಾಖಾ ಬೇರ್ಪಡಿಕೆ ಸಂದರ್ಭದಲ್ಲಿ ಯಾವ ಇಲಾಖೆಗೆ ಸೇರುತ್ತೇವೆಂದು ಅಭಿಮತ ಸಲ್ಲಿಸದೇ, ಜಲಸಂಪನ್ಮೂಲ ಇಲಾಖೆಯಲ್ಲೆ ಮುಂದುವರೆದಿರುವ 379 ಅಧಿಕಾರಿ, ನೌಕರರನ್ನು ಜಲ ಸಂಪನ್ಮೂಲ ಇಲಾಖೆಯ ಆಯಾ ವೃಂದದ ಜ್ಯೇಷ್ಠತಾ ಪಟ್ಟಿಯಲ್ಲಿ ಪರಿಗಣಿಸಲು ನಿರ್ಧರಿಸಲಾಗಿದೆ ಎಂದು ಎಚ್.ಕೆ.ಪಾಟೀಲ್ ತಿಳಿಸಿದರು.   ಘಟನೋತ್ತರ ಅನುಮೋದನೆ : 2026ನೆ ಸಾಲಿನ ಕರ್ನಾಟಕ ಸರಕಾರಿ ಶೈಕ್ಷಣಿಕ ಸಂಸ್ಥೆಯ ಭೂಮಿಗಳ(ರಕ್ಷಣೆ ಮತ್ತು ಸಕ್ರಮಾತಿ) ವಿಧೇಯಕ, ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳು(ಶಿಕ್ಷಕರ ವರ್ಗಾವಣೆ ನಿಯಂತ್ರಣ)(ತಿದ್ದುಪಡಿ)ವಿಧೇಯಕ, ಕರ್ನಾಟಕ ಮೋಟಾರು ವಾಹನಗಳ ತೆರಿಗೆ ನಿರ್ಧರಣೆ(ತಿದ್ದುಪಡಿ) ವಿಧೇಯಕಕ್ಕೆ ಸಂಪುಟ ಸಭೆಯು ಘಟನೋತ್ತರ ಅನುಮೋದನೆ ನೀಡಿದೆ.  -ಎಚ್.ಕೆ.ಪಾಟೀಲ್, ಕಾನೂನು ಸಚಿವ  

ವಾರ್ತಾ ಭಾರತಿ 26 Mar 2026 10:30 pm

ಹುಮನಾಬಾದ್ | ಅಖಿಲ ಭಾರತೀಯ ಟೊಕ್ರಿ ಕೋಳಿ ಸಮಾಜದ ತಾಲೂಕು ಘಟಕದ ಪದಾಧಿಕಾರಿಗಳ ಆಯ್ಕೆ

ಹುಮನಾಬಾದ್ : ತಾಲೂಕಿನಲ್ಲಿ ಅಖಿಲ ಭಾರತೀಯ ಟೋಕ್ರಿ ಕೋಳಿ ಸಮಾಜದ ತಾಲೂಕು ಘಟಕ ಹಾಗೂ ತಾಲೂಕು ಯುವ ಘಟಕದ ಪದಾಧಿಕಾರಿಗಳ ನೇಮಕ ಹಾಗೂ ಸನ್ಮಾನ ಕಾರ್ಯಕ್ರಮ ಗುರುವಾರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಜಿಲ್ಲಾಧ್ಯಕ್ಷ ಅಶೋಕ್ ಕೋಳಿ ಹಣಕುಣಿ ಹಾಗೂ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗೋವಿಂದ್ ಜಾಲಿ ಹಾಗೂ ಎಲ್ಲಾ ಸಮಾಜದ ಮುಖಂಡರ, ಯುವಕರ ಸಮ್ಮುಖದಲಿ ಜರುಗಿತು. ನೂತನವಾಗಿ ತಾಲೂಕು ಗೌರವಾಧ್ಯಕ್ಷರಾಗಿ ಅನಿಲ್ ಪಲ್ಲೇರಿ, ತಾಲೂಕಾಧ್ಯಕ್ಷರಾಗಿ ಶರಣಪ್ಪಾ ಏಖ್ಯೆಳಿ, ಉಪಾಧ್ಯಕ್ಷರಾಗಿ ಈಶ್ವರ್ ಮಾನಕರೆ, ಸುಧಾಮ್ ಘಂಟೆ, ಪ್ರಧಾನ ಕಾರ್ಯದರ್ಶಿಯಾಗಿ ಸುನೀಲ್ ರಾಜೇಶ್ವರ್, ಸಹ ಕಾರ್ಯದರ್ಶಿಯಾಗಿ ಚಂದ್ರಕಾಂತ್ ಬೋರಂಪಳ್ಳಿ, ಸಂಘಟನಾ ಕಾರ್ಯದರ್ಶಿಯಾಗಿ ಬಸವರಾಜ್ ಗಾಂಧಿನಗರ್, ಖಜಾಂಚಿಯಾಗಿ ಅಮೃತ ಹಲಬುರ್ಗಿ ಅವರನ್ನು ನೇಮಿಸಲಾಯಿತು. ಹಾಗೆಯೇ ಯುವ ಘಟಕ ತಾಲೂಕಾಧ್ಯಕ್ಷರಾಗಿ ದಯಾನಂದ್ ಮೇತ್ರಿ ಹುಡಗಿ, ಗೌರವಾಧ್ಯಕ್ಷರಾಗಿ ರಾಜು ಡೇಬ್ಬಿ, ಉಪಾಧ್ಯಕ್ಷರಾಗಿ ಸಿದ್ದಲಿಂಗ ಅಯ್ಯನೋರ್, ಅಣವೀರ್ ಪದ್ಮ, ಪ್ರಧಾನ ಕಾರ್ಯದರ್ಶಿಯಾಗಿ ಲಖನ್ ಎಸ್.ಕೋಳಿವಾಡ್, ಸಹ ಕಾರ್ಯದರ್ಶಿಯಾಗಿ ಶಿವಕುಮಾರ್ ದುಬಲಗುಂಡಿ, ಸಂಘಟನಾ ಕಾರ್ಯದರ್ಶಿಯಾಗಿ ಉಮೇಶ್ ಜಮಾದಾರ್, ಖಜಾಂಚಿಯಾಗಿ ರೇವಣ್ಣಸಿದ್ಧ ಭೂತಾಳೆ, ನಿರ್ದೇಶಕರಾಗಿ ಜಗದೀಶ್ ವಾಂಜರಿ ಅವರನ್ನು ನೇಮಕ ಮಾಡಲಾಯಿತು. ಈ ಸಂದರ್ಭದಲ್ಲಿ ಟೋಕ್ರಿ ಕೋಳಿ ಸಮಾಜದ ಮುಖಂಡರಾದ ನಾರಾಯಣರಾವ್ ಭಂಗಿ, ಶಂಕರ್ ಜಮಾದಾರ್, ರವೀಂದ್ರ ಬಾಲೆಬಾಯ್, ಷಣ್ಮುಖ್ ಕೆ, ಶಿವರಾಜ್ ಜಾಗಿರ್ದಾರ್ ಉಪಸ್ಥಿತರಿದ್ದರು.

ವಾರ್ತಾ ಭಾರತಿ 26 Mar 2026 10:30 pm

ಕಲಬುರಗಿ | ವಿಶೇಷಚೇತನರ ವಸತಿ ಶಾಲೆಗಳ ಎಸೆಸೆಲ್ಸಿ ಫಲಿತಾಂಶ ಹೆಚ್ಚಿಸಲು ಕಟ್ಟುನಿಟ್ಟಿನ ಸೂಚನೆ

ಕಲಬುರಗಿ : ಜಿಲ್ಲೆಯ ವಿಶೇಷಚೇತನರ ವಸತಿ ಶಾಲೆಗಳಲ್ಲಿನ ಎಸೆಸೆಲ್ಸಿ ವಿದ್ಯಾರ್ಥಿಗಳ ಪರೀಕ್ಷಾ ಫಲಿತಾಂಶವನ್ನು ಉತ್ತಮಗೊಳಿಸುವ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಸಾದಿಕ್ ಹುಸೇನ್ ಖಾನ್ ಅವರು ವಾರ್ಡನ್‌ಗಳು ಹಾಗೂ ಶಿಕ್ಷಕರಿಗೆ ಸೂಚನೆ ನೀಡಿದ್ದಾರೆ. ವೀಡಿಯೋ ಸಂವಾದ ಸಭೆಯಲ್ಲಿ ಮಾತನಾಡಿದ ಅವರು, ಇಲಾಖೆಯ ಸರ್ಕಾರಿ ಅಂಧಬಾಲಕರ ಶಾಲೆ, ಜಿಲ್ಲಾ ಪಂಚಾಯತ್ ಅನುದಾನಿತ ಅಂಧ ಮತ್ತು ಶ್ರವದೋಷವುಳ್ಳ ವಿದ್ಯಾರ್ಥಿಗಳ ವಸತಿ ಶಾಲೆಗಳು ಹಾಗೂ ಶಿಶುಕೇಂದ್ರೀಕೃತ HI ಮತ್ತು VI ಶಾಲೆಗಳಲ್ಲಿನ ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ವಿಶೇಷವಾಗಿ ರಾತ್ರಿ ತರಗತಿಗಳನ್ನು ನಡೆಸುವ ಮೂಲಕ ಅವರ ವಿದ್ಯಾಭ್ಯಾಸದ ಗುಣಮಟ್ಟವನ್ನು ಹೆಚ್ಚಿಸಬೇಕೆಂದು ತಿಳಿಸಿದರು. ಎಲ್ಲಾ ವಾರ್ಡನ್‌ಗಳು ಕಡ್ಡಾಯವಾಗಿ ವಸತಿ ನಿಲಯಗಳಲ್ಲಿ ವಾಸ್ತವ್ಯವಿರಬೇಕು ಎಂದು ಸೂಚಿಸಿದ ಅವರು, ಪ್ರತಿದಿನ ಬೆಳಗ್ಗೆ ಮತ್ತು ರಾತ್ರಿ ವಿದ್ಯಾರ್ಥಿಗಳು ಓದುತ್ತಿರುವ ದೃಶ್ಯಗಳನ್ನು ಜಿಪಿಎಸ್ ಸೌಲಭ್ಯ ಹೊಂದಿದ ಫೋಟೋ ರೂಪದಲ್ಲಿ ದಾಖಲಿಸಿ ವಾಟ್ಸಪ್ ಮೂಲಕ ಕಳುಹಿಸುವುದನ್ನು ಕಡ್ಡಾಯಗೊಳಿಸಿದರು. ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಹೆಚ್ಚಿನ ಆದ್ಯತೆ ನೀಡಬೇಕು ಹಾಗೂ ಪರೀಕ್ಷಾ ಫಲಿತಾಂಶ ಸುಧಾರಣೆಗೆ ಅಗತ್ಯ ಕ್ರಮಗಳನ್ನು ತಕ್ಷಣ ಜಾರಿಗೆ ತರಬೇಕು ಎಂದು ಅವರು ಖಡಕ್ ಎಚ್ಚರಿಕೆ ನೀಡಿದರು.

ವಾರ್ತಾ ಭಾರತಿ 26 Mar 2026 10:26 pm

ಅಬುಧಾಬಿ| ಭದ್ರತಾ ಪಡೆಗಳು ಹೊಡೆದುರುಳಿಸಿದ ಕ್ಷಿಪಣಿಯ ಅವಶೇಷ ಬಿದ್ದು ಭಾರತೀಯ ಪ್ರಜೆ ಸಹಿತ ಇಬ್ಬರು ಮೃತ್ಯು

ಅಬುಧಾಬಿ, ಮಾ.26: ಗುರುವಾರ ಯುಎಇ ವಾಯುರಕ್ಷಣಾ ವ್ಯವಸ್ಥೆ ಬ್ಯಾಲಿಸ್ಟಿಕ್ ಕ್ಷಿಪಣಿಯನ್ನು ಪ್ರತಿಬಂಧಿಸಿದ ಬಳಿಕ ಕ್ಷಿಪಣಿಯ ಅವಶೇಷವು ರಸ್ತೆಯ ಮೇಲೆ ಬಿದ್ದು ಓರ್ವ ಭಾರತೀಯ ಮತ್ತು ಒಬ್ಬ ಪಾಕಿಸ್ತಾನ ಪ್ರಜೆಗಳು ಮೃತಪಟ್ಟಿದ್ದು ಇತರ ಹಲವರು ಗಾಯಗೊಂಡಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ. ನಮ್ಮ ವಾಯುರಕ್ಷಣಾ ವ್ಯವಸ್ಥೆಯು ಬ್ಯಾಲಿಸ್ಟಿಕ್ ಕ್ಷಿಪಣಿಯೊಂದನ್ನು ಯಶಸ್ವಿಯಾಗಿ ಪ್ರತಿಬಂಧಿಸಿದೆ. ಆದರೆ ಕ್ಷಿಪಣಿಯ ಅವಷೇಶಗಳು ರಸ್ತೆಯ ಮೇಲೆ ಬಿದ್ದು ಪಾಕಿಸ್ತಾನ ಮತ್ತು ಭಾರತದ ಪ್ರಜೆಗಳು ಮೃತಪಟ್ಟಿದ್ದಾರೆ' ಎಂದು ಅಬುಧಾಬಿಯ ಮಾಧ್ಯಮ ಕಚೇರಿ `ಎಕ್ಸ್'ನಲ್ಲಿ ಪೋಸ್ಟ್ ಮಾಡಿದೆ. ಈ ಮಧ್ಯೆ, ಇಂಧನ ಸ್ಥಳಗಳು ಹಾಗೂ ನಾಗರಿಕ ಪ್ರದೇಶಗಳ ಮೇಲೆ ಇರಾನ್ ಮುಂದುವರಿಸಿರುವ ದಾಳಿಗಳ ಬಗ್ಗೆ ಹಲವು ಗಲ್ಫ್ ರಾಷ್ಟ್ರಗಳು ವಿಶ್ವಸಂಸ್ಥೆಯಲ್ಲಿ ಕಳವಳ ವ್ಯಕ್ತಪಡಿಸಿವೆ. ಇಂತಹ ಕ್ರಮಗಳು ಸಾರ್ವಭೌಮತ್ವ ಮತ್ತು ಅಂತಾರಾಷ್ಟ್ರೀಯ ಕಾನೂನನ್ನು ದುರ್ಬಲಗೊಳಿಸುತ್ತವೆ ಎಂದು ಕುವೈತ್‌ನ ರಾಯಭಾರಿ ಹೇಳಿದ್ದಾರೆ.

ವಾರ್ತಾ ಭಾರತಿ 26 Mar 2026 10:26 pm

ಕಲಬುರಗಿ | ಜೆಸ್ಕಾಂನ ಪ್ರಭಾರಿ ನಿರ್ದೇಶಕಿಯಾಗಿ ಪ್ರಾದೇಶಿಕ ಆಯುಕ್ತೆ ಝಹೀರಾ ನಸೀಮ್ ನಿಯೋಜನೆ

ಕಲಬುರಗಿ: ಪ್ರಸ್ತುತ ಕಲಬುರಗಿ ಕಂದಾಯ ವಿಭಾಗದ ಪ್ರಾದೇಶಿಕ ಆಯುಕ್ತರಾಗಿ ಕಾರ್ಯನಿರ್ವಹಿಸುತ್ತಿರುವ ಝಹೀರಾ ನಸೀಮ್ ಅವರಿಗೆ ಕಲಬುರಗಿಯ ಗುಲ್ಬರ್ಗ ವಿದ್ಯುತ್ ಸರಬರಾಜು ಕಂಪನಿ ಲಿಮಿಟೆಡ್ (ಜೆಸ್ಕಾಂ) ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕಿ ಹುದ್ದೆಯ ಪ್ರಭಾರಿ ಉಸ್ತುವಾರಿ ವಹಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಈ ಕುರಿತು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಟಿ.ಮಹಾಂತೇಶ್ ಅವರು ಆದೇಶ ಹೊರಡಿಸಿದ್ದು, ಈ ಹಿಂದೆ ಜೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದ ಕೃಷ್ಣ ಬಾಜಪೇಯಿ ಅವರನ್ನು ಕೇಂದ್ರ ನಿಯೋಜನೆ ಮಾಡಲಾಗಿದೆ. ಅವರ ಸ್ಥಾನಕ್ಕೆ ಪ್ರಭಾರಿಯಾಗಿ ಝಹೀರಾ ನಸೀಮ್ ಅವರಿಗೆ ಹೊಣೆ ನೀಡಲಾಗಿದೆ. ಈ ನೇಮಕಾತಿ ತಕ್ಷಣದಿಂದ ಜಾರಿಗೆ ಬರಲಿದ್ದು, ಮುಂದಿನ ಆದೇಶದವರೆಗೆ ಮುಂದುವರಿಯಲಿದೆ ಎಂದು ಅವರು ತಿಳಿಸಿದ್ದಾರೆ.

ವಾರ್ತಾ ಭಾರತಿ 26 Mar 2026 10:23 pm

ಮಹಾರಾಷ್ಟ್ರ ಸಚಿವ ನರಹರಿ ಜಿರ್ವಾಲ್ ವಿವಾದಿತ ವಿಡಿಯೋ ವೈರಲ್; ತೃತೀಯಲಿಂಗಿ ಜತೆ ಮಂತ್ರಿ! ರಾಜಕೀಯ ಸಂಚಲನ

ಮಹಾರಾಷ್ಟ್ರ ಸಚಿವ ನರಹರಿ ಜಿರ್ವಾಲ್ ಅವರ ಆಕ್ಷೇಪಾರ್ಹ ವಿಡಿಯೋ ವೈರಲ್ ಆಗಿದ್ದು, ರಾಜಕೀಯ ಸಂಚಲನ ಮೂಡಿಸಿದೆ. ಸರ್ಕಾರಿ ನಿವಾಸದಲ್ಲಿ ತೃತೀಯಲಿಂಗಿಯೊಬ್ಬರ ಜೊತೆಗಿರುವ ಈ ವಿಡಿಯೋ ಕುರಿತು ವಿರೋಧ ಪಕ್ಷಗಳು ರಾಜೀನಾಮೆಗೆ ಆಗ್ರಹಿಸಿವೆ. ಆದರೆ, ಎನ್‌ಸಿಪಿ ಇದನ್ನು ಸಚಿವರ ತೇಜೋವಧೆ ಮಾಡುವ ಸಂಚು ಎಂದು ಕರೆದಿದ್ದು, ವಿಡಿಯೋದಲ್ಲಿದ್ದ ವ್ಯಕ್ತಿಯ ವಿರುದ್ಧ ಸುಲಿಗೆ ಪ್ರಕರಣ ದಾಖಲಾಗಿದೆ. ಈ ಹಗರಣ ರಾಜ್ಯ ರಾಜಕಾರಣದಲ್ಲಿ ತೀವ್ರ ವಿವಾದಕ್ಕೆ ಕಾರಣವಾಗಿದೆ.

ವಿಜಯ ಕರ್ನಾಟಕ 26 Mar 2026 10:23 pm

ಜನಸ್ಪಂದನದಲ್ಲಿ ಅಹವಾಲು ಸಲ್ಲಿಸಿ ತ್ವರಿತ ಪರಿಹಾರ ಪಡೆಯಿರಿ: ತಹಶೀಲ್ದಾರ ನಾಗೇಂದ್ರ ಕೋಳಶೆಟ್ಟಿ

ಭಟ್ಕಳ: ಸಾರ್ವಜನಿಕರು ತಮ್ಮ ಸಮಸ್ಯೆಗಳ ಪರಿಹಾರಕ್ಕಾಗಿ ಅಲೆದಾಡುವ ಬದಲು, ಸರ್ಕಾರ ರೂಪಿಸಿರುವ ಜನಸ್ಪಂದನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ವಿವಿಧ ಇಲಾಖೆಗಳ ಸಂಬಂಧಿತ ಅಹವಾಲುಗಳನ್ನು ಸಲ್ಲಿಸಿ ತ್ವರಿತ ಪರಿಹಾರ ಪಡೆಯಬಹುದು ಎಂದು ತಹಶೀಲ್ದಾರ ನಾಗೇಂದ್ರ ಕೋಳಶೆಟ್ಟಿ ಹೇಳಿದರು. ತಾಲೂಕಿನ ಹಾಡವಳ್ಳಿ ಗ್ರಾಮಪಂಚಾಯತ್ ವ್ಯಾಪ್ತಿಯ ಪದ್ಮಾವತಿ ರಂಗಮಂದಿರದಲ್ಲಿ ಆಯೋಜಿಸಲಾದ ತಾಲೂಕು ಮಟ್ಟದ ಜನಸ್ಪಂದನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ರಾಜ್ಯ ಸರ್ಕಾರದ ನಿರ್ದೇಶನದಂತೆ ಪ್ರತಿ ತಿಂಗಳು ಜನಸ್ಪಂದನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತಿದ್ದು, ಗ್ರಾಮೀಣ ಭಾಗದ ಸಮಸ್ಯೆಗಳನ್ನು ಸ್ಥಳದಲ್ಲಿಯೇ ಪರಿಶೀಲಿಸಿ ಪರಿಹಾರ ನೀಡಲಾಗುತ್ತದೆ. ಸಾರ್ವಜನಿಕರು ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡು ತಮ್ಮ ಅಹವಾಲುಗಳನ್ನು ಸಲ್ಲಿಸಬೇಕು ಎಂದು ಅವರು ಮನವಿ ಮಾಡಿದರು. ಕಾರ್ಯಕ್ರಮದಲ್ಲಿ ತಾಲೂಕಿನ ವಿವಿಧ ಗ್ರಾಮಗಳಿಂದ ಆಗಮಿಸಿದ ಸಾರ್ವಜನಿಕರು ಮೂಲಭೂತ ಸೌಲಭ್ಯಗಳು ಹಾಗೂ ಅಭಿವೃದ್ಧಿ ಕಾಮಗಾರಿಗಳ ಕುರಿತಂತೆ ಹಲವು ಬೇಡಿಕೆಗಳನ್ನು ಮುಂದಿಟ್ಟರು. ಪ್ರಮುಖವಾಗಿ ಆಧಾರ್ ಕಾರ್ಡ್ ತಿದ್ದುಪಡಿ, ಶಾಲೆಗಳ ಮೇಲ್ಛಾವಣಿ ದುರಸ್ತಿ, ಅಂಗವಿಕಲರಿಗೆ ದ್ವಿಚಕ್ರ ವಾಹನ ವಿತರಣೆ, ಮನೆ ನಂಬರ್ ನೀಡಿಕೆ ಸೇರಿದಂತೆ ಹಲವು ಆಡಳಿತಾತ್ಮಕ ಸಮಸ್ಯೆಗಳ ಪರಿಹಾರಕ್ಕಾಗಿ ಮನವಿ ಸಲ್ಲಿಸಲಾಯಿತು. ಇದೇ ವೇಳೆ ಹಾಡವಳ್ಳಿ ಅಂಗನವಾಡಿ ಕಾರ್ಯಕರ್ತೆ ನೇಮಕ, ಕುಡಿಯುವ ನೀರಿನ ವ್ಯವಸ್ಥೆ ಸುಧಾರಣೆ, ಹಲ್ಯಾಣಿ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ರಸ್ತೆ ನಿರ್ಮಾಣ, ವಿದ್ಯುತ್ ಲೈನ್ ಸಮಸ್ಯೆಗಳ ಪರಿಹಾರಕ್ಕೂ ಆಗ್ರಹ ವ್ಯಕ್ತವಾಯಿತು. ಜೊತೆಗೆ ಹಾಡವಳ್ಳಿ ಭಾಗದ ಆರೋಗ್ಯ ಕೇಂದ್ರದಲ್ಲಿ ಶುಶ್ರೂಷಕಿಯರ ನೇಮಕ, ಶಾಲಾ ಚರಂಡಿ ನಿರ್ಮಾಣ ಹಾಗೂ ಹೇಜಿಲ್ ಗ್ರಾಮದಲ್ಲಿ ಸೇತುವೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು. ಕಾರ್ಯಕ್ರಮದ ಬಳಿಕ ತಹಶೀಲ್ದಾರ ನಾಗೇಂದ್ರ ಕೋಳಶೆಟ್ಟಿ ಅವರು ಹಾಡವಳ್ಳಿ ಕಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ ವಿದ್ಯಾರ್ಥಿಗಳಿಗೆ ಪಾಠ ಬೋಧಿಸಿದರು. ಈ ಸಂದರ್ಭದಲ್ಲಿ ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಸುನೀಲ್ ಕುಮಾರ್, ಹಾಡವಳ್ಳಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ, ಮೀನುಗಾರಿಕೆ ಸಹಾಯಕ ನಿರ್ದೇಶಕ ರೇಣುಕಾಸ್ವಾಮಿ ಉಪಸ್ಥಿತರಿದ್ದರು. ಗ್ರಾಮ ಆಡಳಿತಾಧಿಕಾರಿ ಚಾಂದಬಾಷಾ ಸ್ವಾಗತಿಸಿದರು. ಶಿಕ್ಷಕ ಸುರೇಶ್ ಮುರುಡೇಶ್ವರ ಕಾರ್ಯಕ್ರಮ ನಿರೂಪಿಸಿದರು.

ವಾರ್ತಾ ಭಾರತಿ 26 Mar 2026 10:22 pm

ಕಲಬುರಗಿ | ವಿಕಲಚೇತನರಿಗೆ 62 ಲಕ್ಷ ರೂ. ಮೌಲ್ಯದ ಸಾಧನ ವಿತರಣೆ

ಕಲಬುರಗಿ : ಹೌಸಿಂಗ್ ಆಂಡ್ ಅರ್ಬನ್ ಡೆವಲಪ್‍ಮೆಂಟ್ ಕಾರ್ಪೋರೇಶನ್ ಲಿಮಿಟೆಡ್ (HUDCO) ಸಂಸ್ಥೆಯ ಸಿ.ಎಸ್.ಆರ್ ಯೋಜನೆಯಡಿ ಅಲಿಂಕೋ (ALIMCO) ಘಟಕ ಕಲಬುರಗಿ, ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಹಾಗೂ ಜಿಲ್ಲಾ ಅಂಗವಿಕಲರ ಪುನರ್‍ವಸತಿ ಕೇಂದ್ರ (DDRC)ಗಳ ಸಹಯೋಗದಲ್ಲಿ ವಿಕಲಚೇತನರಿಗೆ ಸಾಧನ ಸಲಕರಣೆ ವಿತರಣಾ ಕಾರ್ಯಕ್ರಮವನ್ನು ಗುರುವಾರ ಹಮ್ಮಿಕೊಳ್ಳಲಾಯಿತು. ನಗರದ ಅಲಿಂಕೋ ಘಟಕ ಹಾಗೂ ಡಿ.ಡಿ.ಆರ್.ಸಿ ಕೇಂದ್ರ ಟ್ರಾಮಾ ಕೇರ್ ಸೆಂಟರ್ ನೆಲಮಹಡಿಯಲ್ಲಿ ನಡೆದ ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿ ಫೌಝಿಯಾ ತರನ್ನುಮ್ ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭಂವರ್ ಸಿಂಗ್ ಮೀನಾ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಜಿಲ್ಲೆಯ ವಿವಿಧ ತಾಲೂಕಿನ 104 ವಿಕಲಚೇತನ ಫಲಾನುಭವಿಗಳಿಗೆ ವಿವಿಧ ಬಗೆಯ ಸುಮಾರು 62 ಲಕ್ಷ ರೂ. ಮೌಲ್ಯದ ಸಾಧನ ಸಲಕರಣೆಗಳನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ಕಲಬುರಗಿ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಸಾಧಿಕ ಹುಸೇನ್ ಖಾನ್, ವೈದ್ಯಕೀಯ ಅಧೀಕ್ಷಕ ಡಾ.ಶಿವಕುಮಾರ. ಆರ್, ಡಾ. ರಾಜಶೇಖರ ಮಾಲಿಪಾಟೀಲ್, ಡಾ.ನಿಶ್ಯಾಂತ ಪಾಣಿಗಾಂವ, ಡಿಡಿಆರ್‍ಸಿ ಕಾರ್ಯದರ್ಶಿ ಅಬ್ದುಲ್ ವಾಹಿದ್ ಮುನೀರ್, ಅಲಿಂಕೋ ಸಂಸ್ಥೆಯ ಸಿಬ್ಬಂದಿ ಅಭಿಷೇಕಕುಮಾರ, ಆನಂದ ಮತ್ತು ಡಿ.ಡಿ.ಆರ್.ಸಿ ಕಚೇರಿಯ ಸಿಬ್ಬಂದಿಗಳು, ವಿಕಲಚೇತನ ಕ್ಷೇತ್ರದಲ್ಲಿ ಕಾರ್ಯನಿರ್ವಸುತ್ತಿರುವ ಸ್ವಯಂ ಸೇವಾ ಸಂಸ್ಥೆಗಳ ಅಧ್ಯಕ್ಷರು/ಕಾರ್ಯದರ್ಶಿಗಳು ಹಾಗೂ ಕಲಬುರಗಿ ಜಿಲ್ಲೆಯ ವಿವಿಧ ತಾಲೂಕಿನ ಎಂ.ಆರ್.ಡಬ್ಲ್ಯೂ ಅವರು ಉಪಸ್ಥಿತರಿದ್ದರು.

ವಾರ್ತಾ ಭಾರತಿ 26 Mar 2026 10:21 pm

ಒಳಮೀಸಲಾತಿ ಕುರಿತು ಚರ್ಚೆ; ವಿಶೇಷ ಸಚಿವ ಸಂಪುಟ ಸಭೆ ಮುಂದೂಡಿಕೆ

ಬೆಂಗಳೂರು  : ಬಾಗಲಕೋಟೆ ಹಾಗೂ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆ ಹಿನ್ನೆಲೆಯಲ್ಲಿ ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ, ಪರಿಶಿಷ್ಟ ಜಾತಿಗಳಲ್ಲಿ ಒಳ ಮೀಸಲಾತಿ ನೀಡುವ ಬಗ್ಗೆ ಚರ್ಚಿಸಲು ಮಾ.27ರಂದು ಮಧ್ಯಾಹ್ನ 12 ಗಂಟೆಗೆ ಕರೆಯಲಾಗಿದ್ದ ವಿಶೇಷ ಸಚಿವ ಸಂಪುಟ ಸಭೆಯನ್ನು ಮುಂದೂಡಲಾಗಿದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.

ವಾರ್ತಾ ಭಾರತಿ 26 Mar 2026 10:18 pm

ಕಲಬುರಗಿ | ಒಲುಮೆ, ಹೊಂದಾಣಿಕೆಯೇ ಸುಖಿ ದಾಂಪತ್ಯದ ಗುಟ್ಟು : ಡಾ.ಶಿವರಂಜನ ಸತ್ಯಂಪೇಟೆ

ಕಲಬುರಗಿ : ಶರಣರ ದೃಷ್ಟಿಯಲ್ಲಿ ದಾಂಪತ್ಯವು ಕೇವಲ ಲೌಕಿಕ ಭೋಗವಲ್ಲ. ಬದಲಿಗೆ ಕಾಯಕ‌ ಮತ್ತು ದಾಸೋಹ ತತ್ವಗಳ ಮೂಲಕ ಆತ್ಮೋದ್ಧಾರ ಮಾಡಿಕೊಳ್ಳುವ ಪವಿತ್ರ ಅನುಬಂಧವಾಗಿದೆ ಎಂದು ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದ ಉಪಾಧ್ಯಕ್ಷ ಡಾ.ಶಿವರಂಜನ ಸತ್ಯಂಪೇಟೆ ಅಭಿಪ್ರಾಯಪಟ್ಟರು. ಬಸವರಾಜ ಮತ್ತು ಸುಶೀಲಾ ಮೊರಬದ ಅವರ ಮದುವೆಯ ಸುವರ್ಣೋತ್ಸವ ಹಾಗೂ ರಿಷಭ ನ ಲಿಂಗದೀಕ್ಷಾ ಕಾರ್ಯಕ್ರಮ ನಿಮಿತ್ತ ಜಯನಗರದ ಅನುಭವ ಮಂಟಪದಲ್ಲಿ ಬುಧವಾರ ಆಯೋಜಿಸಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ 'ಸತಿ ಪತಿಗಳೊಂದಾದ ಭಕ್ತಿ' ವಿಷಯ ಕುರಿತು ಮಾತನಾಡಿದ ಅವರು, ಗಂಡ-ಹೆಂಡತಿ ಮಧ್ಯೆ ಪ್ರೀತಿ, ಹೊಂದಾಣಿಕೆ, ಸಾಮರಸ್ಯ ಮುಖ್ಯ ಎಂದು ಹೇಳಿದರು. ಸಾನ್ನಿಧ್ಯ ವಹಿಸಿದ್ದ ಬಸವಕಲ್ಯಾಣ ಅನುಭವ ಮಂಟಪದ ನಾಡೋಜ ಡಾ.ಬಸವಲಿಂಗ ಪಟ್ಟದ್ದೇವರು ಮಾತನಾಡಿದರು. ಕಲಬುರಗಿಯ ಅಕ್ಕ ಮಹಾದೇವಿ ಆಶ್ರಮದ ಪೂಜ್ಯ ಪ್ರಭುಶ್ರೀ ತಾಯಿ ಸಾನ್ನಿಧ್ಯ, ಬಸವ ಕಲ್ಯಾಣ ಗುರುಬಸವ ಯೋಗ ಕೇಂದ್ರದ ಪೂಜ್ಯ ಗಾಯತ್ರಿ ತಾಯಿ ಸಮ್ಮುಖ ವಹಿಸಿದ್ದರು. ಬೀದರ್ ವಚನ ಸಮೂಹ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಅಲ್ಲಮಪ್ರಭು ನಾವದಗೆರೆ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಕಲಬುರಗಿ ಜಿಲ್ಲಾ ಘಟಕದ ಅಧ್ಯಕ್ಷ ಬಾಬುರಾವ ಯಡ್ರಾಮಿ, ಬೀದರ್ ನ ಶರಣ ಚಿಂತಕ ಪ್ರಕಾಶ ಗಂದಿಗುಡೆ, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಕಲಬುರಗಿ ಜಿಲ್ಲಾ ಘಟಕದ ಅಧ್ಯಕ್ಷ ಡಾ. ಮಲ್ಲಿಕಾರ್ಜುನ ವಡ್ಡನಕೇರಿ, ಜಾಗತಿಕ ಲಿಂಗಾಯತ ಮಹಾಸಭಾ ಕಲಬುರಗಿ ಕಲಬುರಗಿ ಜಿಲ್ಲಾ ಘಟಕದ ಅಧ್ಯಕ್ಷ ಆರ್.ಜಿ. ಶೆಟಗಾರ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಕಲಬುರಗಿ ಬಸವ ಸಮಿತಿ ಅಧ್ಯಕ್ಷೆ ಡಾ. ವಿಲಾಸವತಿ ಖೂಬಾ ಉದ್ಘಾಟಿಸಿದರು. ನಗರ ಬಸವ ಕೇಂದ್ರದ ಅಧ್ಯಕ್ಷ ರವೀಂದ್ರ ಶಾಬಾದಿ ಅಧ್ಯಕ್ಷತೆ ವಹಿಸಿದ್ದರು. ಬೀದರ್ ನವರಸ ಕಲಾಲೋಕದ ವೈಜನಾಥ ಸಜ್ಜನಶೆಟ್ಟಿ ವಚನ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ಮಕ್ಕಳಿಗೆ ಉತ್ತಮ ಸಂಸ್ಕಾರ ಮತ್ತು ಸಂಸ್ಕೃತಿ ಕಲಿಸಿಕೊಡುವಲ್ಲಿ ಪಾಲಕರ ಪಾತ್ರ ಬಹಳ ಮಹತ್ವದ್ದಾಗಿದೆ. ಬಸವ ಸಂಸ್ಕೃತಿ ಶ್ರಮ ಸಂಸ್ಕೃತಿಯ ಪ್ರತೀಕವಾಗಿದ್ದು, ಕಾಯಕ- ದಾಸೋಹ ಭಾವ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು. -ನಾಡೋಜ ಡಾ. ಬಸವಲಿಂಗ ಪಟ್ಟದ್ದೇವರು, ಅಧ್ಯಕ್ಷರು, ಅನುಭವ ಮಂಟಪ, ಬಸವಕಲ್ಯಾಣ.

ವಾರ್ತಾ ಭಾರತಿ 26 Mar 2026 10:16 pm

ಪಶ್ಚಿಮ ಬಂಗಾಳ: ಟಿಎಂಸಿ ಕಾರ್ಯಕರ್ತನನ್ನು ಗುಂಡಿಕ್ಕಿ ಹತ್ಯೆ

ಕೋಲ್ಕತಾ, ಮಾ. 26: ವಿಧಾನಸಭಾ ಚುನಾವಣೆ ನಡೆಯಲಿರುವ ಪಶ್ಚಿಮ ಬಂಗಾಳದಲ್ಲಿ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (ಟಿಎಂಸಿ)ನ ಕಾರ್ಯಕರ್ತರೊಬ್ಬರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಗುಂಡು ಹಾರಾಟದಲ್ಲಿ, ಸುಮಾರು 35 ವರ್ಷ ವಯಸ್ಸಿನ ರಾಹುಲ್ ಡೇ ಮೃತಪಟ್ಟಿದ್ದಾರೆ ಹಾಗೂ ಇನ್ನೋರ್ವ ಟಿಎಂಸಿ ಕಾರ್ಯಕರ್ತ ಜೀತ್ ಮುಖರ್ಜಿ ಗಾಯಗೊಂಡಿದ್ದಾರೆ. ಅವರು ಪ್ರಸಕ್ತ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗುರುವಾರ ಮುಂಜಾನೆ ಸುಮಾರು 12:30ರ ಹೊತ್ತಿಗೆ ಕೋಲ್ಕತದ ಬಾಘಜತಿನ್ ಪ್ರದೇಶದಲ್ಲಿರುವ ನಾಲ್ಕು ಮಹಡಿಯ ವಸತಿ ಕಟ್ಟಡವೊಂದರಲ್ಲಿ ಈ ಘಟನೆ ಸಂಭವಿಸಿದೆ. ಕಟ್ಟಡದ ಮೇಲ್ಛಾವಣಿಯಿಂದ ಕನಿಷ್ಠ ಮೂರು ಬಾರಿ ಗುಂಡಿನ ಸದ್ದನ್ನು ಕೇಳಿದೆವು ಎಂದು ಅಲ್ಲಿನ ನಿವಾಸಿಗಳು ತಿಳಿಸಿದ್ದಾರೆ. ಸ್ಥಳಕ್ಕೆ ಧಾವಿಸಿದ ಪತುಲಿ ಪೊಲೀಸ್ ಠಾಣೆಯ ಪೊಲೀಸರು ಕಟ್ಟಡದ ಮೇಲ್ಭಾಗದಲ್ಲಿ ರಾಹುಲ್ ಡೇ ಮತ್ತು ಜೀತ್ ಮುಖರ್ಜಿ ಇಬ್ಬರೂ ರಕ್ತದ ಮಡುವಿನಲ್ಲಿ ಬಿದ್ದಿರುವುದನ್ನು ಕಂಡರು. ರಾಹುಲ್ ಸ್ಥಳದಲ್ಲೇ ಮೃತಪಟ್ಟರೆ, ಜೀತ್ ಗಂಭೀರ ಸ್ಥಿತಿಯಲ್ಲಿದ್ದರು. ಹಲವು ಅಪರಿಚಿತ ವ್ಯಕ್ತಿಗಳು ಫ್ಲ್ಯಾಟ್ ಪ್ರವೇಶಿಸಿ ಅವರ ಮೇಲೆ ಗುಂಡು ಹಾರಿಸಿ ಪರಾರಿಯಾಗಿದ್ದಾರೆ ಎಂದು ಜೀತ್ ಮುಖರ್ಜಿಯ ಪತ್ನಿ ಪೊಲೀಸರಿಗೆ ತಿಳಿಸಿದ್ದಾರೆ.

ವಾರ್ತಾ ಭಾರತಿ 26 Mar 2026 10:15 pm

ಶಹಾಬಾದ್‌ | ಇನ್ನೋವಾ ವಾಹನದ ಎರಡು ಟೈರ್ ಕಳ್ಳತನ

ಶಹಾಬಾದ್‌ : ನಗರದ ಅಶೋಕ ನಗರ ಬಡಾವಣೆಯ ರಾಯಲ್ ಫಂಕ್ಷನ್ ಹಾಲ್ ಮುಂಭಾಗದ ಮನೆಯ ಮುಂದೆ ನಿಲ್ಲಿಸಿದ್ದ ಇನ್ನೋವಾ ವಾಹನದ ಎರಡು ವ್ಹೀಲ್ ಸೆಟ್ ಜತೆ ಟಯರ್‌ಗಳನ್ನು ಕಳ್ಳತನ ಮಾಡಿದ ಘಟನೆ ಬುಧವಾರ ರಾತ್ರಿ ನಡೆದಿದೆ. ಅಶೋಕ ನಗರ ಬಡಾವಣೆಯ ಮುಹಮ್ಮದ್ ರಶೀದ್ ಅವರ ವಾಹನ ಇದಾಗಿದ್ದು, ಎಂದಿನಂತೆ ಮನೆ ಮುಂಭಾಗದಲ್ಲೇ ವಾಹನವನ್ನು ನಿಲ್ಲಿಸಿ ಮಲಗಿದ್ದರು. ಬೆಳಿಗ್ಗೆ ಸುಮಾರು 4 ಗಂಟೆ ಸುಮಾರಿಗೆ ರಫಿಕ್ ಅವರ ಗೆಳೆಯ ಗೋಳಾ(ಕೆ) ಗ್ರಾಮಕ್ಕೆ ತೆರಳುವಾಗ ವಾಹನವನ್ನು ಗಮನಿಸಿದಾಗ ಟೈರ್‌ಗಳು ಇರಲಿಲ್ಲ. ಕೂಡಲೇ ರಫಿಕ್‌ಗೆ ಮಾಹಿತಿ ನೀಡಿದ್ದಾರೆ. ಮನೆ ಹೊರಗೆ ಬಂದು ಪರಿಶೀಲಿಸಿದಾಗ ಇನ್ನೋವಾ ವಾಹನದ ಹಿಂಭಾಗದಲ್ಲಿ ಕಲ್ಲುಗಳನ್ನು ಹಾಕಿ, ಎರಡು ವ್ಹೀಲ್ ಸೆಟ್‌ಗಳೊಂದಿಗೆ ಟಯರ್‌ಗಳನ್ನು ಕಳ್ಳತನ ಮಾಡಿರುವುದು ಬೆಳಕಿಗೆ ಬಂದಿದೆ. ತಕ್ಷಣವೇ 112ಕ್ಕೆ ಕರೆ ಮಾಡಿದ ನಂತರ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು. ಇದೇ ವೇಳೆ ಸಿಸಿ ಟಿವಿ ದೃಶ್ಯಾವಳಿಯಲ್ಲಿ ಇಬ್ಬರು ಕಳ್ಳರು ಕಳ್ಳತನ ನಡೆಸಿ ಆಟೋದಲ್ಲಿ ಟಯರ್‌ಗಳನ್ನು ತೆಗೆದುಕೊಂಡು ಹೋಗುತ್ತಿರುವುದು ಸೆರೆಯಾಗಿದ್ದು, ಅದರ ಆಧಾರದಲ್ಲಿ ಆರೋಪಿಗಳನ್ನು ಗುರುತಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ವಾರ್ತಾ ಭಾರತಿ 26 Mar 2026 10:14 pm

ಅಕ್ರಮ ಗೋಸಾಗಾಟ ಆರೋಪ: ಮೂವರ ಬಂಧನ

ಸುಳ್ಯ: ಅಕ್ರಮವಾಗಿ ಗೋವುಗಳನ್ನು ಸಾಗಾಟ ಮಾಡುತ್ತಿರುವ ವೇಳೆ ಪೊಲೀಸರು ಕಾರ್ಯಾಚರಣೆ ನಡೆಸಿ ಮೂವರನ್ನು ಬಂಧಿಸಿದ ಘಟನೆ ಸುಳ್ಯ ಠಾಣಾ ವ್ಯಾಪ್ತಿಯಲ್ಲಿ ಬುಧವಾರ ರಾತ್ರಿ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಪಿಕಪ್ ಚಾಲಕ ಕೇರಳ ಮೂಲದ ಇಸಾಕ್ (40), ಸುಳ್ಯದ ನಾವೂರು ನಿವಾಸಿ ಇಬ್ರಾಹಿಂ ಎಂಬವರು ಗೋವುಗಳನ್ನು ಅಮರಮುಡ್ನೂರು ಗ್ರಾಮದ ಸಂತೋಷ್ ಭಟ್ ಎಂಬವರಿಂದ ಖರೀದಿಸಿ, ಪರವಾನಿಗೆ ಪಡೆಯದೇ ವಧೆ ಮಾಡುವ ಸಲುವಾಗಿ ಸಾಗಿಸಲಾಗುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.  ಆಲೆಟ್ಟಿ ಮಾರ್ಗವಾಗಿ ಕೇರಳದ ಕಡೆಗೆ ಪಿಕಪ್ ವಾಹನದಲ್ಲಿ ಗೋವುಗಳನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿಯಂತೆ ಸುಳ್ಯ ಪೊಲೀಸರು ಪಿಕಪ್ ವಾಹನವನ್ನು ಹಿಂಬಾಲಿಸಿ, ನಾರ್ಕೊಡು ಮಿತ್ತಡ್ಕ ಎಂಬಲ್ಲಿ ವಾಹನವನ್ನು ಅಡ್ಡಹಾಕಿ ಪರಿಶೀಲನೆ ನಡೆಸಿದಾಗ ವಾಹನದಲ್ಲಿ ಮೂರು ಗೋವುಗಳನ್ನು ಹಿಂಸಾತ್ಮಕ ರೀತಿಯಲ್ಲಿ ಕಟ್ಟಿ ಸಾಗಿಸುತ್ತಿರುವುದು ಕಂಡು ಬಂದಿದೆ. ಈ ಹಿನ್ನಲೆಯಲ್ಲಿ ಮೂವರನ್ನು ಪೊಲೀಸರು ಬಂಧಿಸಿ ಕೇಸು ದಾಖಲಿಸಿಕೊಂಡಿದ್ದಾರೆ. 

ವಾರ್ತಾ ಭಾರತಿ 26 Mar 2026 10:12 pm

ಭಾರತ ಸೇರಿ 5 ಮಿತ್ರದೇಶಗಳಿಗೆ ಹಾರ್ಮುಝ್ ಮೂಲಕ ಹಾದುಹೋಗಲು ಅವಕಾಶ: ಇರಾನ್

ಹೊಸದಿಲ್ಲಿ, ಮಾ. 26: ಪಶ್ಚಿಮ ಏಶ್ಯ ಸಂಘರ್ಷ ಮುಂದುವರಿದಿರುವಂತೆಯೇ, ಭಾರತ ಸೇರಿದಂತೆ ಆಯ್ದ ಮಿತ್ರ ದೇಶಗಳ ಹಡಗುಗಳಿಗೆ ಹಾರ್ಮುಝ್ ಜಲಸಂಧಿಯ ಮೂಲಕ ಹಾದುಹೋಗಲು ಅನುಮತಿ ನೀಡುವುದಾಗಿ ಇರಾನ್ ಹೇಳಿದೆ. ಇತರ ದೇಶಗಳ ಮೇಲಿನ ನಿರ್ಬಂಧ ಮುಂದುವರಿಯುವುದು ಎಂದು ಅದು ತಿಳಿಸಿದೆ. ಸಂಘರ್ಷಪೀಡಿತ ವಲಯದಲ್ಲಿ ಆಂಶಿಕ ನಿರ್ಬಂಧವನ್ನು ಇರಾನ್ ಮುಂದುವರಿಸಿರುವಂತೆಯೇ, ತನ್ನೊಂದಿಗೆ ನಿಕಟ ಸಂಬಂಧ ಹೊಂದಿರುವ ದೇಶಗಳಿಗೆ ಜಲಸಂಧಿಯನ್ನು ತೆರೆದಿದೆ. ಹಾರ್ಮುಝ್ ಜಲಸಂಧಿಯನ್ನು ಹಾದುಹೋಗಲು ಅನುಮತಿ ಪಡೆದಿರುವ ದೇಶಗಳೆಂದರೆ- ಭಾರತ, ರಶ್ಯ, ಚೀನಾ, ಪಾಕಿಸ್ತಾನ ಮತ್ತು ಇರಾಕ್. ಈ ಜಲಸಂಧಿಯನ್ನು ಸಂಪೂರ್ಣವಾಗಿ ಮುಚ್ಚಲಾಗಿಲ್ಲ ಎಂದು ಇರಾನ್‌ನ ಸರಕಾರಿ ಟೆಲಿವಿಶನ್‌ಗೆ ನೀಡಿದ ಸಂದರ್ಶನವೊಂದರಲ್ಲಿ ದೇಶದ ವಿದೇಶ ಸಚಿವ ಅಬ್ಬಾಸ್ ಅರಾಗ್ಚಿ ಹೇಳಿದರು. ಈ ಏರ್ಪಾಡಿನ ಪ್ರಯೋಜನವನ್ನು ಭಾರತೀಯ ಹಡಗುಗಳು ಈಗಾಗಲೇ ಪಡೆದುಕೊಂಡಿವೆ ಎಂದು ತಿಳಿಸಿದರು. ‘‘ಹಲವು ಹಡಗುಗಳ ಮಾಲೀಕರು ಅಥವಾ ಈ ಹಡಗುಗಳ ಮಾಲೀಕತ್ವ ಹೊಂದಿರುವ ದೇಶಗಳು ನಮ್ಮನ್ನು ಸಂಪರ್ಕಿಸಿ, ಹೋರ್ಮುಝ್ ಜಲಸಂಧಿಯ ಮೂಲಕ ಸುರಕ್ಷಿತವಾಗಿ ಹಾದು ಹೋಗಲು ಅವಕಾಶ ನೀಡುವಂತೆ ಕೋರಿದ್ದಾರೆ. ಮಿತ್ರ ದೇಶಗಳೆಂದು ನಾವು ಭಾವಿಸುವ ಕೆಲವು ದೇಶಗಳಿಗೆ ಹಾಗೂ ಇತರ ಕಾರಣಗಳಿಗಾಗಿ ವಿನಾಯಿತಿ ನೀಡಲು ನಾವು ನಿರ್ಧರಿಸಿರುವ ದೇಶಗಳಿಗೆ ಸುರಕ್ಷಿತವಾಗಿ ಸಾಗಲು ನಮ್ಮ ಸಶಸ್ತ್ರ ಪಡೆಗಳು ಅವಕಾಶ ನೀಡಿವೆ’’ ಎಂದು ಅರಾಗ್ಚಿ ಹೇಳಿದ್ದಾರೆ. ಆದರೆ, ‘‘ಶತ್ರು ದೇಶಗಳು’’ ಮತ್ತು ಅವುಗಳ ಮಿತ್ರದೇಶಗಳಿಗೆ ಹಾರ್ಮುಝ್ ಜಲಸಂಧಿಯು ನಿರ್ಬಂಧಿತ ಪ್ರದೇಶವಾಗಿಯೇ ಮುಂದುವರಿಯುತ್ತದೆ ಎಂದು ಅವರು ಹೇಳಿದರು. ಅಮೆರಿಕ, ಇಸ್ರೇಲ್ ಹಾಗೂ ಈ ಸಂಘರ್ಷದಲ್ಲಿ ಒಳಗೊಂಡಿರುವ ಕೆಲವು ಕೊಲ್ಲಿ ದೇಶಗಳ ಹಡಗುಗಳಿಗೆ ಈ ಜಲಸಂಧಿಯನ್ನು ಹಾದು ಹೋಗಲು ಅವಕಾಶ ನೀಡುವುದಿಲ್ಲ ಎಂದು ಅವರು ಘೋಷಿಸಿದರು.

ವಾರ್ತಾ ಭಾರತಿ 26 Mar 2026 10:09 pm

ಕಂಪ್ಯೂಟರ್, ಇಲೆಕ್ಟ್ರಾನಿಕ್ ಸಾಮಗ್ರಿ ಖರೀದಿಸಿ ವಂಚನೆ: ಪ್ರಕರಣ ದಾಖಲು

ಮಂಗಳೂರು: ನಗರದ ಬಿಜೈ ನ್ಯೂರೋಡ್ ಆನೆಗುಂಡಿ ಬಳಿಯ ಸಂಸ್ಥೆಯೊಂದರಿಂದ ಕಂಪ್ಯೂಟರ್ ಮತ್ತು ಸಿಸಿಟಿವಿ ಕ್ಯಾಮೆರಾಗಳನ್ನು ಖರೀದಿಸಿ ಹಣ ನೀಡದೆ ವಂಚಿಸಿರುವ ಬಗ್ಗೆ ಉರ್ವ ಪೊಲೀಸರು ಪ್ರಕರಣ ದಾಖಲಾಗಿದೆ. ಫಿಕ್ಸಿಫಿ ಇಲೆಕ್ಟಾನಿಕ್ಸ್ ಹೋಲ್‌ಸೇಲ್ ಮಾರಾಟ ಮಳಿಗೆಯಾಗಿದೆ. ಈ ಮಳಿಗೆಯಿಂದ ನಗರದ ಸ್ಟೇಟ್‌ ಬ್ಯಾಂಕ್‌ ನಲ್ಲಿರುವ ಗ್ಲೋಬಲ್ ಐಟಿ ವರ್ಲ್ಡ್ ಎಂಬ ಹೆಸರಿನ ಕಂಪನಿಯ ಮಾಲಕ ಪ್ರವೀಣ್ ಸುಭಾಷ್ ಪಾಟೀಲ್ ಎಂಬವರು ಫಿಕ್ಸಿಫಿ ಸಂಸ್ಥೆಯೊಂದಿಗೆ ವ್ಯವಹಾರ ಮಾಡಿಕೊಂಡು ಬಂದಿದ್ದರು. ಪ್ರವೀಣ್ ಕೆಲ ದಿನಗಳ ಹಿಂದೆ ಮುಂಗಡ ಹಣ ನೀಡದೆ ಕಂಪ್ಯೂಟರ್ ಮತ್ತು ಇಲೆಕ್ಟ್ರಾನಿಕ್ ಸೊತ್ತುಗಳ ಸಹಿತ 13,81,353 ರೂ. ಮೌಲ್ಯದ ಸೊತ್ತುಗಳನ್ನು ಪಡೆದುಕೊಂಡು ಹೋಗಿದ್ದರು. ಅದಲ್ಲದೆ ಶೆಣೈ ಕಂಪ್ಯೂಟರ್ಸ್‌ನಿಂದ 5,79,161 ರೂ. ಮೌಲ್ಯದ ಸೊತ್ತುಗಳನ್ನು ಹಾಗೂ ಆರ್‌ಟಿ ಕಂಪ್ಯೂಟರ್ಸ್ ಮತ್ತು ಸರ್ವಿಸಸ್ ಅಬ್ಬಕ್ಕ ನಗರ ಸಂಸ್ಥೆಯಿಂದ 4,57,222 ರೂ. ಮೌಲ್ಯದ ವಸ್ತುಗಳನ್ನು ಖರೀದಿಸಿದ್ದರು. ಆದರೆ ಖರೀದಿ ಮಾಡಿ ಹಲವು ಸಮಯವಾದರೂ ಇನ್ನೂ ಹಣ ಪಾವತಿ ಮಾಡಿಲ್ಲ ಎಂದು ಫಿಕ್ಸಿಫಿ ಸಂಸ್ಥೆಯ ಮಾಲಕರು ದೂರಿನಲ್ಲಿ ತಿಳಿಸಿದ್ದಾರೆ.

ವಾರ್ತಾ ಭಾರತಿ 26 Mar 2026 10:08 pm

ಕಲಬುರಗಿ | ದೊಡ್ಡ ಲಿಖಿತ ಸಂವಿಧಾನವಿದ್ದರೂ ಮಾನವ ಹಕ್ಕುಗಳ ಉಲ್ಲಂಘನೆ : ಪ್ರೊ.ಎಚ್.ಟಿ. ಪೋತೆ ಕಳವಳ

ಕಲಬುರಗಿ : ಭಾರತ ದೇಶವು ವಿಶ್ವದ ಅತಿ ದೊಡ್ಡ ಲಿಖಿತ ಸಂವಿಧಾನ ಹೊಂದಿದ್ದರೂ ಸಹ ಇಂದಿಗೂ ಮಾನವ ಹಕ್ಕುಗಳ ಉಲ್ಲಂಘನೆ ನಿತ್ಯ ನಡೆಯುತ್ತಿರುವುದು ದುರಾದೃಷ್ಟಕರ ಸಂಗತಿಯಾಗಿದೆ ಎಂದು ಗುಲ್ಬರ್ಗಾ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥರು ಹಾಗೂ ಪ್ರಸಾರಾಂಗದ ನಿರ್ದೇಶಕರಾದ ಪ್ರೊ. ಹೆಚ್.ಟಿ. ಪೋತೆ ಅವರು ಕಳವಳ ವ್ಯಕ್ತಪಡಿಸಿದರು. ನಗರದ ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಶ್ರೀಮತಿ ವೀರಮ್ಮ ಗಂಗಸಿರಿ ಮಹಿಳಾ ಮಹಾವಿದ್ಯಾಲಯ ಹಾಗೂ ಸರಕಾರಿ ಕಾಲೇಜುಗಳ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾದ “ಭಾರತೀಯ ಸಾಹಿತ್ಯದಲ್ಲಿ ಮಾನವ ಹಕ್ಕುಗಳು” ಕುರಿತ ಒಂದು ದಿನದ ಅಂತರಾಷ್ಟ್ರೀಯ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಇಂದಿನ ಜಗತ್ತಿನಲ್ಲಿ ಬಸವಾದಿ ಶರಣರ ಚಿಂತನೆಗಳ ಅವಶ್ಯಕತೆ ಅತ್ಯಂತ ಮಹತ್ವದ್ದಾಗಿದೆ ಎಂದು ಅವರು ಅಭಿಪ್ರಾಯಪಟ್ಟರು. ಸಮಾಜದಲ್ಲಿ ಸಫಾಯಿ ಕರ್ಮಚಾರಿಗಳಲ್ಲಿ ತಾಯಿತನದ ಗುಣ ಕಾಣಿಸಿಕೊಳ್ಳುತ್ತದೆ. ಆದರೆ, ಉನ್ನತ ಸ್ಥಾನಮಾನದಲ್ಲಿರುವವರಲ್ಲಿ ಅಂಥ ಗುಣ ಕಾಣಿಸಿಕೊಳ್ಳದಿರುವುದು ವಿಷಾದನೀಯ ಸಂಗತಿ ಎಂದರು. ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವದ ಮೌಲ್ಯಗಳನ್ನು ಪ್ರತಿಯೊಬ್ಬರೂ ಪಾಲಿಸಿಕೊಂಡು ಬಂದಾಗ ಮಾತ್ರ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ದೊರೆಯುತ್ತದೆ. ಈ ನಿಟ್ಟಿನಲ್ಲಿ ಲೇಖಕರು, ವಿದ್ವಾಂಸರು ಮತ್ತು ಚಿಂತಕರು ಹೆಚ್ಚಿನ ಹೊಣೆಗಾರಿಕೆಯನ್ನು ಹೊತ್ತುಕೊಳ್ಳಬೇಕಾಗಿದೆ ಎಂದು ಅವರು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯರು ಹಾಗೂ ಪದವಿ ಮತ್ತು ಪದವಿ ಪೂರ್ವ ಕಾಲೇಜುಗಳ ಸಂಚಾಲಕರಾದ ನಾಗಣ್ಣ ಘಂಟಿ ವಹಿಸಿದ್ದರು. ವೇದಿಕೆಯ ಮೇಲೆ ಆಡಳಿತ ಮಂಡಳಿ ಸದಸ್ಯರಾದ ಅನಿಲ್ ಕುಮಾರ್ ಮರಗೋಳ ಉಪಸ್ಥಿತರಿದ್ದರು. ಮಹಾವಿದ್ಯಾಲಯಗಳ ಪ್ರಾಚಾರ್ಯರಾದ ಡಾ.ಆರ್.ಬಿ.ಕೊಂಡ, ಡಾ.ಸವಿತಾ ತಿವಾರಿ, ಸರಕಾರಿ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ.ಶಾರದಾ ಜಾಧವ್, ವಿ.ಜಿ. ಕಾಲೇಜಿನ ಹಿಂದಿ ವಿಭಾಗದ ಮುಖ್ಯಸ್ಥರಾದ ಡಾ.ಪ್ರೇಮಚಂದ್ ಚವ್ಹಾಣ, ಡಾ.ಶಂಕರ್, ಕವಿತಾ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಕೇಂದ್ರೀಯ ವಿಶ್ವವಿದ್ಯಾಲಯದ ಪ್ರೊ.ವಿಕ್ರಮ ವಿಸಾಜಿ, ಹಿಂದಿ ವಿಭಾಗದ ಮುಖ್ಯಸ್ಥರಾದ ಪ್ರೊ.ಸಂದೀಪ್ ರಣಬೀರ್ಕರ್, ನಿವೃತ್ತ ಪ್ರಾಧ್ಯಾಪಕರಾದ ಡಾ.ವಿಜಯಕುಮಾರ್ ಪರುತೆ, ಪ್ರೊ.ಧನ್ಯಕುಮಾರ ಬಿರಾಜದಾರ, ಡಾ.ಮಹೇಶ್ ಗಂವ್ಹಾರ ಸೇರಿದಂತೆ ದೇಶದ ವಿವಿಧ ಭಾಗಗಳಿಂದ ಆಗಮಿಸಿದ ಅಧ್ಯಾಪಕರು ಹಾಗೂ ಪ್ರತಿನಿಧಿಗಳು ಭಾಗವಹಿಸಿದ್ದರು. ಡಾ.ರಾಜೇಂದ್ರ ಕೊಂಡ ಅವರು ಅತಿಥಿಗಳನ್ನು ಸ್ವಾಗತಿಸಿದರು. ಅಂತರರಾಷ್ಟ್ರೀಯ ಸಮ್ಮೇಳನದ ಕುರಿತು ಡಾ.ಪ್ರೇಮಚಂದ್ ಚವ್ಹಾಣ ಮತ್ತು ಡಾ.ಶಾರದಾ ಜಾಧವ್ ಪ್ರಾಸ್ತಾವಿಕವಾಗಿ ಮಾತನಾಡಿದರು.

ವಾರ್ತಾ ಭಾರತಿ 26 Mar 2026 10:08 pm

ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಬಾಲಕನಿಗೆ ಕಿವಿ ಮರುಜೋಡಣೆ ಶಸ್ತ್ರಚಿಕಿತ್ಸೆ

ಮಂಗಳೂರು, ಮಾ.26: ಹದಿಮೂರರ ಹರೆಯದ ಬಾಲಕನಿಗೆ ನಗರದ ಫಾದರ್ ಮುಲ್ಲರ್ ವೈದ್ಯಕೀಯ ಕಾಲೇಜು ಆಸ್ಪತ್ರೆಯ ಪ್ಲಾಸ್ಟಿಕ್ ಸರ್ಜರಿ ವಿಭಾಗದ ವೈದ್ಯರು ಅತ್ಯಂತ ಸಂಕೀರ್ಣವಾದ ಕಿವಿ ಮರುಜೋಡನೆ ಶಸ್ತ್ರಚಿಕಿತ್ಸೆ ಯನ್ನು ಯಶಸ್ವಿಯಾಗಿ ನೆರವೇರಿಸಿದ್ದಾರೆ. ಘಟನೆಯ ವಿವರ: ಹುಟ್ಟಿನಿಂದ ‘ಮೈಕ್ರೋಟಿಯಾ’ ಸಮಸ್ಯೆಯಿಂದ ಬಳಲುತ್ತಿದ್ದ 13 ವರ್ಷದ ಬಾಲಕನೊಬ್ಬನಿಗೆ ಒಂದು ಕಿವಿಯ ಗಾತ್ರ ಚಿಕ್ಕದಾಗಿತ್ತು. ಇದು ಕೇವಲ ದೈಹಿಕ ರೂಪದ ಮೇಲಲ್ಲದೆ, ಬಾಲಕನ ಆತ್ಮವಿಶ್ವಾಸದ ಮೇಲೂ ಪರಿಣಾಮ ಬೀರಿತ್ತು. ಸುಧಾರಿತ ಚಿಕಿತ್ಸೆಗಾಗಿ ಕುಟುಂಬವು ಫಾದರ್ ಮುಲ್ಲರ್ ಆಸ್ಪತ್ರೆಯನ್ನು ಸಂಪರ್ಕಿ ಸಿತ್ತು. ಇಲ್ಲಿನ ನುರಿತ ಪ್ಲಾಸ್ಟಿಕ್ ಸರ್ಜರಿ ತಂಡವು ಬಾಲಕನ ಸ್ವಂತ ಪಕ್ಕೆಲುಬಿನ ಮೃದ್ವಸ್ಥಿಯನ್ನು ಬಳಸಿ ಕಿವಿಯನ್ನು ಮರುಸೃಷ್ಟಿಸುವ ಸವಾಲಿನ ಕಾರ್ಯವನ್ನು ಕೈಗೆತ್ತಿಕೊಂಡಿತು. ಶಸ್ತ್ರಚಿಕಿತ್ಸೆಯ ಹಂತಗಳು:ಈ ಸಂಕೀರ್ಣ ಪ್ರಕ್ರಿಯೆಯನ್ನು ಎರಡು ಹಂತಗಳಲ್ಲಿ ಪೂರ್ಣಗೊಳಿಸಲಾಗಿತ್ತು. ಮೊದಲ ಹಂತದಲ್ಲಿ ರೋಗಿಯ ಪಕ್ಕೆಲುಬಿನಿಂದ ಮೃದ್ವಸ್ಥಿಯನ್ನು ತೆಗೆದು, ಅದನ್ನು ನೈಜ ಕಿವಿಯ ಆಕಾರಕ್ಕೆ ತಕ್ಕಂತೆ ಅತ್ಯಂತ ಸೂಕ್ಷ್ಮವಾಗಿ ಕತ್ತರಿಸಿ, ಕಿವಿಯ ಚೌಕಟ್ಟನ್ನು ಸಿದ್ಧಪಡಿಸಲಾಗಿತ್ತು.ಬಳಿಕ ಚರ್ಮದ ಗ್ರಾಫ್ಟ್ ಮೂಲಕ ಮೃದ್ವಸಿ ತೆಗೆದ ಜಾಗವನ್ನು ಮುಚ್ಚಲಾಗಿತ್ತು.. ಪ್ಲಾಸ್ಟಿಕ್ ಸರ್ಜರಿ ವಿಭಾಗದ ಮುಖ್ಯಸ್ಥರಾದ ಡಾ. ಅರವಿಂದ್ ರಾವ್ ನೇತೃತ್ವದಲ್ಲಿ ಈ ಶಸ್ತ್ರಚಿಕಿತ್ಸೆ ನಡೆಯಿತು. ಇವರಿಗೆ ಕನ್ಸಲ್ಟೆಂಟ್‌ಗಳಾದ ಡಾ. ಕಾರ್ತಿಕ್ ಐತಾಳ್ ಮತ್ತು ಡಾ. ಸಾಯಿ ಅನಂತಲಕ್ಷ್ಮಿ ಸಹಕರಿಸಿದ್ದರು. ಅರಿವಳಿಕೆ ವಿಭಾಗದ ಮುಖ್ಯಸ್ಥ ಡಾ. ರಾಧೇಶ್ ಹೆಗ್ಡೆ ಮತ್ತು ಡಾ. ಅಭಿರಾಮ್ ಶಾಸ್ತ್ರಿ ಅರಿವಳಿಕೆ ಸೇವೆ ನೀಡಿದರು. ಒಟಿ ಇನ್-ಚಾರ್ಜ್ ತಿ ರೇಷ್ಮಾ ನೇತೃತ್ವದ ಶುಶ್ರೂಷಕಿಯರ ತಂಡವು ಶಸ್ತ್ರಚಿಕಿತ್ಸೆಯ ಯಶಸ್ವಿಯಾಗಲು ಸಹಕಾರ ನೀಡಿದ್ದರು ಎಂದು ಫಾದರ್ ಮುಲ್ಲರ್‌ ಕಾಲೇಜು ಆಸ್ಪತ್ರೆಯ ಪ್ರಕಟನೆ ತಿಳಿಸಿದೆ.

ವಾರ್ತಾ ಭಾರತಿ 26 Mar 2026 10:06 pm

ಕಲಬುರಗಿ | ಲಾರಿ -ಬೈಕ್ ಢಿಕ್ಕಿ : ಬೈಕ್ ಸವಾರ ಮೃತ್ಯು

ಕಲಬುರಗಿ: ಲಾರಿ ಹಾಗೂ ಬೈಕ್ ಮಧ್ಯೆ ಸಂಭವಿಸಿದ ಭೀಕರ ಅಪಘಾತದಲ್ಲಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದು, ಇನ್ನೋರ್ವ ಗಂಭೀರವಾಗಿ ಗಾಯಗೊಂಡಿರುವ ಘಟನೆ ನಗರದ ಹೊರವಲಯದ ಫರಹತಾಬಾದ ಸಮೀಪ ಗುರುವಾರ ನಡೆದಿದೆ. ಮೃತರನ್ನು ಜೇವರ್ಗಿ ಪಟ್ಟಣದ ಲಕ್ಷ್ಮಿ ಚೌಕ್ ನಿವಾಸಿಗಳಾದ ಗಂಗಾರಾಮ ಶರಣಪ್ಪ(29) ಎಂದು ಗುರುತಿಸಲಾಗಿದ್ದು, ಗಾಯಗೊಂಡಿರುವ ತಿಪ್ಪಣ್ಣ ಸುಭಾಷ್ ಅವರನ್ನು ನಗರದ ಜಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ಸಂಚಾರಿ ಠಾಣೆ 1ರಲ್ಲಿ ನಡೆದಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ವಾರ್ತಾ ಭಾರತಿ 26 Mar 2026 10:02 pm

ಭಾರತದ ನ್ಯಾಯಾಂಗ ನೀಡಿದ ಅಮೂಲ್ಯ ಕೊಡುಗೆ ಅನ್ಯಾಯದ ವಿರುದ್ಧ ಸಾರ್ವಜನಿಕ ಹಿತಾಸಕ್ತಿ ದಾವೆ (ಪಿಐಎಲ್): ಡಾ.ರವೀಂದ್ರನಾಥ ಶ್ಯಾನುಭಾಗ್

ಉಡುಪಿ, ಮಾ.26: ಸಂವಿಧಾನದಲ್ಲಿ ನೀಡಲಾದ ಮೂಲಭೂತ ಹಕ್ಕುಗಳನ್ನು ರಕ್ಷಿಸಲು ಹಾಗೂ ಅಸಹಾಯಕರು ತಮಗಾಗುತ್ತಿರುವ ಅನ್ಯಾಯ ಗಳ ವಿರುದ್ಧ ದಾವೆ ಹೂಡಲು 80ರ ದಶಕದಲ್ಲಿ ಭಾರತೀಯ ನ್ಯಾಯಾಂಗವು ಜನಸಾಮಾನ್ಯರಿಗೆ ನೀಡಿದ ಅಮೂಲ್ಯ ಅಸ್ತ್ರವೇ ಸಾರ್ವಜನಿಕ ಹಿತಾಸಕ್ತಿ ದಾವೆ (ಪಿಐಎಲ್) ಎಂದು ಉಡುಪಿಯ ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನದ ಅಧ್ಯಕ್ಷ ಡಾ.ರವೀಂದ್ರನಾಥ ಶ್ಯಾನುಭಾಗ್ ಹೇಳಿದ್ದಾರೆ. ಉಡುಪಿಯ ಮಾನವ ಹಕ್ಕುಗಳ ಪ್ರತಿಷ್ಠಾನ ಹಾಗೂ ವೈಕುಂಠ ಬಾಳಿಗಾ ಕಾನೂನು ಮಹಾವಿದ್ಯಾಲಯಗಳ ಜಂಟಿ ಆಶ್ರಯದಲ್ಲಿ ಕಾಲೇಜಿನ ಸಭಾಂಗಣದಲ್ಲಿ ನಡೆದ ಪರಿಸರ ಸಂರಕ್ಷಣೆ ಕುರಿತ ಕಾರ್ಯಾಗಾರದಲ್ಲಿ ಸಾರ್ವಜನಿಕ ಹಿತಾಸಕ್ತಿ ದಾವೆ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಿ ಮಾತನಾಡುತಿದ್ದರು. ಆಗಿನ ಸರ್ವೋಚ್ಛ ನ್ಯಾಯಾಲಯದ ನ್ಯಾಯಮೂರ್ತಿ ಗಳಾದ ಪಿ.ಎನ್.ಭಗವತಿ ಹಾಗೂ ವಿ.ಆರ್.ಕೃಷ್ಣ ಅಯ್ಯರ್ ಅವರೇ ಈ ಪರಿಕಲ್ಪನೆಯ ಜನಕರು ಎಂದವರು ವಿವರಿಸಿದರು. 1970ಕ್ಕೆ ಪೂರ್ವದಲ್ಲಿ ಭಾರತೀಯ ಜೈಲುಗಳನ್ನು ಕೈದಿಗಳನ್ನು ಅಮಾನುಷವಾಗಿ ನಡೆಸಿಕೊಳ್ಳಲಾಗುತ್ತಿತ್ತು. ವಿಚಾರಣಾಧೀನ ಕೈದಿಗಳು ಯಾವುದೇ ನ್ಯಾಯಾಂಗ ವಿಚಾರಣೆ ಇಲ್ಲದೇ ವರ್ಷಗಟ್ಟಲೆ ಕಾರಾಗೃಹದಲ್ಲಿ ಕೊಳೆಯು ತಿದ್ದ ವರದಿಗಳು ಆಗೊಮ್ಮೆ, ಈಗೊಮ್ಮೆ ಪ್ರಕಟವಾಗುತಿದ್ದವು. ಬಿಹಾರದ ಬಾಗಲ್ಪುರದಲ್ಲಿ ಪದೇ ಪದೇ ಅಪರಾಧ ವೆಸಗಿ ಶಿಕ್ಷೆಗೊಳಗಾಗುವ ಕೈದಿಗಳನ್ನು ಜೈಲು ಅಧಿಕಾರಿಗಳ ಅಂಧರನ್ನಾಗಿ ಮಾಡಿದ ಪ್ರಕರಣ ಪತ್ರಿಕೆಗಳ ಮೂಲಕ ಬಹಿರಂಗ ಪಡಿಸಿದಾಗ ಇಡೀ ದೇಶವೇ ಆಘಾತಕ್ಕೊಳಗಾಗಿತ್ತು ಎಂದು ಅವರು ವಿವರಿಸಿದರು. 1975ರಲ್ಲಿ ಜಾರಿಯಾದ ತುರ್ತು ಪರಿಸ್ಥಿತಿಯ ಅವಧಿಯಲ್ಲಿ ಲಕ್ಷಾಂತರ ಮಂದಿ ಜೈಲು ಪಾಲಾದಾಗ ಈ ದುರವ ಸ್ಥೆಯ ಸಂಪೂರ್ಣ ಚಿತ್ರಣ ಜನಸಾಮಾನ್ಯರಿಗೂ ತಿಳಿಯುವಂತಾಯಿತು. ಇದೇ ಸಂದರ್ಭದಲ್ಲಿ ಉತ್ತರ ಪ್ರದೇಶದ ಹುಸೈನಾರಾ ಖಾತೂನ್ ಎಂಬ ಮಹಿಳೆಯ ಗಂಡ ಯಾವುದೋ ಪ್ರಕರಣದಲ್ಲಿ ಆಪಾದಿತನಾಗಿ ಜೈಲು ಪಾಲಾದಾಗ ಆತನ ಪರವಾಗಿ ಜಾಮೀನು ನೀಡಲು ಸಾಧ್ಯವಾಗಿರಲಿಲ್ಲ. ವಕೀಲರನ್ನು ನೇಮಕ ಮಾಡಿಕೊಳ್ಳಲೂ ಪತ್ನಿ ಅಸಮರ್ಥಳಾಗಿದ್ದಳು ಎಂದು ಪಿಐಎಲ್‌ನ ಹಿಂದಿನ ಕತೆಯನ್ನು ತಿಳಿಸಿದರು. ಆಗ ಸಾರ್ವಜನಿಕ ಹಿತಾಸಕ್ತಿ ಸಂಘಟನೆಯೊಂದು ಈ ವಿಚಾರವನ್ನು ಪತ್ರದ ಮೂಲಕ ನ್ಯಾಯಮೂರ್ತಿ ಪಿ.ಎನ್. ಭಗವತಿ ಅವರ ಗಮನಕ್ಕೆ ತಂದಾಗ ಅದನ್ನು ಸಾರ್ವಜನಿಕ ಹಿತಾಸಕ್ತಿ ದಾವೆ ಎಂದು ಪರಿಗಣಿಸಿ ವಿಚಾರಣೆಗೆ ಕೈಗೆತ್ತಿ ಕೊಂಡರು. ಈ ಪ್ರಕರಣದ ವಿಚಾರಣೆ ನಡೆಯುತ್ತಿರುವಾಗ 40,000 ಕ್ಕಿಂತಲೂ ಅಧಿಕ ಕೈದಿಗಳು ವಿಚಾರಣೆ ಇಲ್ಲದೇ ಜೈಲುಗಲಲ್ಲಿ ವರ್ಷಗಟ್ಟಲೆ ಕೊಳೆಯುತ್ತಿರುವ ವಿಚಾರ ನ್ಯಾಯಮೂರ್ತಿಗಳ ಗಮನಕ್ಕೆ ಬಂತು. ಈ ನಡುವೆ ಹೊಸದಿಲ್ಲಿಯ ಏಷ್ಯಾಡ್ ಕ್ರೀಡಾಕೂಟ ನಡೆಯುತ್ತಿರುವ ವೇಳೆ ಕ್ರೀಡಾಂಗಣಗಳನ್ನು ಸಜ್ಜುಗೊಳಿಸಲು ಗುತ್ತಿಗೆದಾರರು ಬಾಲಕಾರ್ಮಿಕ ರನ್ನು ದುಡಿಸಿಕೊಳ್ಳುತ್ತಿರುವ ವಿಷಯವನ್ನು ‘ಇಂಡಿಯನ್ ಎಕ್ಸ್‌ಪ್ರೆಸ್’ನ ವರದಿಗಾರ ರೊಬ್ಬರು ವಿಶೇಷ ವರದಿಯ ಮೂಲಕ ಬಹಿರಂಗ ಪಡಿಸಿದರು. ಈ ವರದಿಯನ್ನಾಧರಿಸಿ ಸಾರ್ವಜನಿಕ ಹಿತಾಸಕ್ತಿ ದಾವೆಯನ್ನು ಹಾಕಲಾಯಿತು ಎಂದು ಡಾ.ಶ್ಯಾನುಭಾಗ್ ತಿಳಿಸಿದರು. ಉಡುಪಿಯ ಕೊಡುಗೆ: 1981ರಲ್ಲಿ ಉಡುಪಿಯ ಬಳಕೆದಾರರ ರಕ್ಷಣಾ ಪ್ರತಿಷ್ಠಾನ, ಪಿ.ಎನ್. ಭಗವತಿ ಅವರಿಗೆ ಪತ್ರ ಬರೆದು ಮಂಗಳೂರಿನ 280 ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಅವರವರ ಪ್ರಾವಿಡೆಂಟ್ ಸಂಚಯವನ್ನು ಶಿಕ್ಷಣ ಇಲಾಖೆ ವಿನಾ ಕಾರಣ ತಡೆಹಿಡಿದಿರುವುದನ್ನು ಸರ್ವೋಚ್ಛ ನ್ಯಾಯಾಲಯದ ಗಮನಕ್ಕೆ ತಂದಾಗ ಅದನ್ನು ಸಾರ್ವಜನಿಕ ಹಿತಾಸಕ್ತಿ ದಾವೆಯೆಂದು ಪರಿಗಣಿಸಿ ಆರೇ ತಿಂಗಳಲ್ಲಿ ಎಲ್ಲಾ ಶಿಕ್ಷಕರಿಗೂ ಚಕ್ರಬಡ್ಡಿ ಸಮೇತ ಪ್ರಾವಿಡೆಂಟ್ ಪಂಡ್ ಸಂಚಯವನ್ನು ನೀಡಲು ಆದೇಶ ಹೊರಡಿಸಿದರು. ದಾಖಲುಗೊಂಡ ಅಸಂಖ್ಯಾತ ಪ್ರಕರಣ: ಈ ಪ್ರಕರಣದಿಂದ ಜಾಗೃತಗೊಂಡ, ಸ್ಪೂರ್ತಿ ಪಡೆದ ಸಾವಿರಾರು ನಾಗರಿಕರು ತಮ್ಮ ಸಂಕಷ್ಟಗಳನ್ನು ತೋಡಿಕೊಂಡು ಪತ್ರ ಬರೆದಾಗ ಸುಪ್ರೀಂ ಕೋರ್ಟ್ ಸಾರ್ವಜನಿಕ ಹಿತಾಸಕ್ತಿ ದಾವೆ ಹೇಗಿರಬೇಕು, ಯಾರು ಹೂಡಬಹುದು ಮುಂತಾದ ವಿಷಯಗಳ ಕುರಿತು ಸೂಕ್ತ ನಿಯಮಾವಳಿಗಳನ್ನು ತಯಾರಿಸಲು ಮಂಡಳಿಯೊಂದನ್ನು ರಚಿಸಿತು. ಮುಂದಿನ ದಿನಗಳಲ್ಲಿ ರಾಜ್ಯ ಹೈಕೋರ್ಟ್ ಗಳಲ್ಲೂ, ಹಸಿರು ನ್ಯಾಯಮಂಡಳಿ (ಎನ್‌ಜಿಟಿ)ಗಳಲ್ಲೂ ಇಂತಹ ದಾವೆಗಳನ್ನು ಸಲ್ಲಿಸಬಹುದು ಎಂದು ನ್ಯಾಯಾಂಗ ನಿರ್ಧರಿಸಿತು ಎಂದರು. ನ್ಯಾಯ ಪಡೆಯಲು ಜನಸಾಮಾನ್ಯನಿಗೂ ಹಕ್ಕು ನೀಡಿದ ಪರಿಕಲ್ಪನೆಯಲ್ಲಿ ಪತ್ರ ಬರೆಯುವಾಗ ಭಾರತೀಯ ನ್ಯಾಯ ಸಂಹಿತೆಯಲ್ಲಿ ಸೂಚಿಸಿದ ಯಾವ ನಿಯಮಗಳನ್ನೂ ಕಟ್ಟುನಿಟ್ಟಾಗಿ ಪಾಲಿಸಬೇಕಾಗಿಲ್ಲ. ಆದರೆ ಆದ ಅನ್ಯಾಯಕ್ಕೆ ಪರಿಪೂರ್ಣ ಸಾಕ್ಷಿ ಒದಗಿಸಬೇಕಾದುದನ್ನು ನ್ಯಾಯ ಮಂಡಳಿ ಕಡ್ಡಾಯ ಗೊಳಿಸಿತು. ಅಲ್ಲದೇ ಸಾಕ್ಷಿ ಒದಗಿಸದೇ ಇದ್ದಲ್ಲಿ ದೂರುದಾರರಿಗೆ ಶಿಕ್ಷೆ ನೀಡುವ ಪರಿಪಾಠವನ್ನೂ ಪ್ರಾರಂಭಿಸಲಾಯಿತು ಎಂದರು. ಸಾಂವಿಧಾನಿಕ ಬೆಂಬಲ: ಭಾರತೀಯ ಸಂವಿಧಾನದ 32ನೇ ವಿಧಿಯ ಪ್ರಕಾರ ಮೂಲಭೂತ ಹಕ್ಕಿಗೆ ದಾಳಿಯಾ ದಾಗ ನಾಗರೀಕರನ್ನು ರಕ್ಷಿಸಲು ಸುಪ್ರೀಂಕೋರ್ಟ್‌ಗೆ ಅಧಿಕಾರ ನೀಡಲಾಗುತ್ತದೆ. ಅದೇ ರೀತಿ ಸಂವಿಧಾನದ 226ನೇ ವಿಧಿ ಇಂತಹದೇ ಅಧಿಕಾರವನ್ನು ಪ್ರತಿ ರಾಜ್ಯದ ಉಚ್ಛ ನ್ಯಾಯಾಲಯಗಳಿಗೂ ನೀಡುತ್ತದೆ. ಪ್ರಸ್ತುತ ಚಾಲ್ತಿಯಲ್ಲಿರುವ ನಿಯಮಗಳಂತೆ ಅಸಹಾಯಕರ, ಕೈದಿಗಳ, ಅಪ್ರಾಪ್ತ ಮಕ್ಕಳ, ಆದಿವಾಸಿಗಳ ಹಾಗೂ ಪರಿಶಿಷ್ಟ ಜನಾಂಗದವರಿಗಾಗು ತ್ತಿರುವ ಅನ್ಯಾಯಗಳ ಕುರಿ ದೂರುಗಳಿಗೆ ಮೊದಲ ಪ್ರಾಶಸ್ತ್ಯ ನೀಡಲಾಗುತ್ತದೆ ಎಂದವರು ಹೇಳಿದರು. ಯಾರು ಅರ್ಜಿ ಸಲ್ಲಿಸಬಹುದು?: ನಾಗರಿಕರ ಮೂಲಭೂತ ಹಕ್ಕುಗಳಿಗೆ ದಾಳಿಯಾದಾಗ, ಅಂತರ ಅಸಹಾಯಕರ ಪರವಾಗಿ ಯಾವುದೇ ನಾಗರಿಕ, ಸಾರ್ವಜನಿಕ ಹಿತಾಸಕ್ತಿ ಸಂಘಟನೆಗಳು ನ್ಯಾಯಾಲಯಗಳಿಗೆ ಅರ್ಜಿ ಸಲ್ಲಿಸ ಬಹುದು.ಕೆಲವೊಮ್ಮೆ ನ್ಯಾಯಾಲಯಗಳು ಸ್ವಯಂಪ್ರೇರಿತವಾಗಿಯೂ ಇಂತಹ ಪ್ರಕರಣಗಳನ್ನು ವಿಚಾರಣೆಗಾಗಿ ಕೈಗೆತ್ತಿಕೊಳ್ಳಬಹುದು. ಈ ಕುರಿತು ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಸರಕಾರದ ವಿವಿಧ ಇಲಾಖೆಗಳಿಗೂ ಆದೇಶ ನೀಡಬಹುದು. ಅನ್ಯಾಯಕ್ಕೊಳಗಾದವರ ಪರವಾಗಿ ವಾದಿಸಲು ನ್ಯಾಯವಾದಿಗಳನ್ನು ನೇಮಿಸಬಹುದು ಎಂದರು. ಉಡುಪಿಯ ಮಾನವ ಹಕ್ಕುಗಳ ಪ್ರತಿಷ್ಠಾನ ಕಳೆದ 46 ವರ್ಷಗಳಲ್ಲಿ ಅನ್ಯಾಯಕ್ಕೊಳಗಾದ ನಾಗರಿಕರ ಪರವಾಗಿ 17 ಪ್ರಕರಣಗಳ ದಾವೆಯನ್ನು ಸುಪ್ರೀಂ ಕೋಟ್, ಹೈಕೋರ್ಟ್ ಹಾಗೂ ರಾಷ್ಟ್ರೀಯ ಹಸಿರು ನ್ಯಾಯ ಪೀಠಗಳಲ್ಲಿ ದಾಖಲಿಸಿದೆ. ಇವುಗಳಲ್ಲಿ ಎಂಡೋಸಲ್ಫಾನ್ ಸಂತ್ರಸ್ತರ ಪರವಾಗಿ ಹಾಗೂ ಪಶ್ಚಿಮಘಟ್ಟದ ಪರಿಸರ ಸಂರಕ್ಷಣೆಗಾಗಿ ಸಲ್ಲಿಸಿದ ಪ್ರಕರಣಗಳು ಪ್ರಮುಖವಾಗಿದೆ ಎಂದು ಡಾ.ರವೀಂದ್ರನಾಥ ಶ್ಯಾನುಭಾಗ್ ವಿವರಿಸಿದರು.

ವಾರ್ತಾ ಭಾರತಿ 26 Mar 2026 10:00 pm

Andhra Pradesh| ಬಸ್-ಟಿಪ್ಪರ್ ಲಾರಿ ನಡುವೆ ಭೀಕರ ಅಪಘಾತ: ಕನಿಷ್ಠ 14 ಮಂದಿ ಮೃತ್ಯು, 23 ಜನರಿಗೆ ಗಾಯ

ಹೊಸದಿಲ್ಲಿ,ಮಾ.26: ಆಂಧ್ರಪ್ರದೇಶದ ಮರಕಪುರಂ ಪ್ರದೇಶದಲ್ಲಿ ಗುರವಾರ 37ಕ್ಕೂ ಅಧಿಕ ಪ್ರಯಾಣಿಕರಿದ್ದ ಬಸ್ಸೊಂದು ಜಲ್ಲಿ ತುಂಬಿದ ಟಿಪ್ಪರ್ ಲಾರಿಗೆ ಢಿಕ್ಕಿ ಹೊಡೆದು ಸಂಭವಿಸಿದ ಭೀಕರ ಅಪಘಾತದಲ್ಲಿ ಕನಿಷ್ಠ 14 ಮಂದಿ ಮೃತಪಟ್ಟಿದ್ದಾರೆ ಹಾಗೂ 23 ಮಂದಿ ಗಾಯಗೊಂಡಿದ್ದಾರೆ. ಅವಘಡದ ತೀವ್ರತೆಯಿದಾಗಿತ ಬಸ್‌ಗೆ ಬೆಂಕಿ ಹತ್ತಿಕೊಂಡಿದ್ದರಿಂದ ಹಲವಾರು ಪ್ರಯಾಣಿಕರು ಸಜೀವದಹನಗೊಂಡಿದ್ದಾರೆಂದು ವರದಿಗಳು ತಿಳಿಸಿವೆ. ಈ ನತದೃಷ್ಟ ಬಸ್ ತೆಲಂಗಾಣದ ಜಗತಿಯಾಲ್‌ನಿಂದ ನೆಲ್ಲೂರ್ ಜಿಲ್ಲೆಯ ಕಾಲಿಗಿರಿಗೆತ ಪ್ರಯಾಣಿಸುತ್ತಿದ್ದಾಗ ಅವಘಡ ಸಂಭವಿಸಿದೆ. ಘಟನೆಯ ಸುದ್ದಿತಿಳಿಯುತ್ತಿದ್ದಂತೆಯೇ ಜಿಲ್ಲಾಳಿತವು ದುರಂತದ ಸ್ಥಳಕ್ಕೆ ಹಲವಾರು ರಕ್ಷಣಾ ತಂಡಗಳನ್ನು ರವಾನಿಸಿದೆ. ಹೊತ್ತಿ ಉರಿಯುತ್ತಿದ್ದ ಬಸ್‌ನೊಳಗೆ ಸಿಲುಕಿಕೊಂಡಿದ್ದ ಹಲವಾರು ಮಂದಿಯನ್ನು ರಕ್ಷಣಾ ತಂಡಗಳು ಸ್ಥಳೀಯರ ನೆರವಿನೊಂದಿಗೆ ಹೊರಕ್ಕೆ ತಂದಿದ್ದು, ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. 23 ಮಂದಿ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಘಟನೆಯ ಪೂರ್ಣ ವಿವರಗಳನ್ನು ಕಲೆಹಾಕಲು ಪ್ರಯತ್ನಿಸಲಾಗುತ್ತಿದೆ ಎಂದು ಮರ್ಕಪುರಂ ಪೊಲೀಸ್ ಅಧೀಕ್ಷಕ ವಿ.ಹರ್ಷವರ್ಧನ ರಾಜು ಅವರು ತಿಳಿಸಿದ್ದಾರೆ. ಮೃತರ ಬಂಧುಗಳ ವಿವರಗಳನ್ನು ಸಂಗ್ರಹಿಸಲು ರಕ್ಷಣಾ ತಂಡಗಳು ಶ್ರಮಿಸುತ್ತಿವೆ. ಎಲ್ಲಾ ವಿವರಗಳನ್ನು ಹಾಗೂ ವಿಧಿವಿಧಾನಗಳನ್ನು ಪೂರ್ಣಗೊಳಿಸಿದ ಬಳಿಕ ಮೃತದೇಹಗಳನ್ನು ಬಂಧುಗಳಿಗೆ ಹಸ್ತಾಂತರಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಾರ್ತಾ ಭಾರತಿ 26 Mar 2026 9:58 pm

ಹೋಂ ಶಾಪ್, ಮ್ಯಾಟ್ ಶಾಪ್ ಪಂಪ್‌ವೆಲ್‌ಗೆ ಸ್ಥಳಾಂತರ: ಶೇ.20ರವರೆಗೆ ವಿಶೇಷ ರಿಯಾಯಿತಿಯ ಗ್ರ್ಯಾಂಡ್ ಲಾಂಚ್ ಆಫರ್

ಮಂಗಳೂರು, ಮಾ.26: ಹೋಮ್ ಶಾಪ್ ದಿ ಮ್ಯಾಟ್ ಶಾಪ್ ಇದೀಗ ನಗರದ ಪಂಪ್‌ವೆಲ್ ಸರ್ವಿಸ್ ರಸ್ತೆಯಲ್ಲಿ ರುವ ಗೋಷೆನ್‌ಗೆ ಸ್ಥಳಾಂತರಗೊಂಡಿದೆ. ಶೇ.20ವರೆಗೆ ವಿಶೇಷ ರಿಯಾಯಿತಿಯ ಗ್ರ್ಯಾಂಡ್ ಲಾಂಚ್ ಆಫರ್ ಮಾ.23ರಿಂದ ಆರಂಭಗೊಂಡಿದ್ದು, ಎ.18ರವರೆಗೆ ಲಭ್ಯವಿರಲಿದೆ. ಮನೆಯ ಅಲಂಕಾರ ವಸ್ತುಗಳ ಕ್ಷೇತ್ರದಲ್ಲಿ 28 ವರ್ಷದ ಯಶಸ್ವಿ ಪ್ರಯಾಣವನ್ನು ಸಂಸ್ಥೆ ಸಂಭ್ರಮಿಸುತ್ತಿವೆ. ಗ್ರಾಹಕರ ಬೆಂಬಲವೇ ನಮಗೆ ಮಾರ್ಗದರ್ಶನವಾಗಿದೆ.ಗ್ರಾಹಕರ ಅಭಿರುಚಿ ಮತ್ತು ಅಗತ್ಯಗಳಿಗೆ ಅನುಗುಣವಾಗಿ ಸೇವೆಗಳನ್ನು ಮತ್ತಷ್ಟು ಉತ್ತಮಗೊಳಿಸಲು ಪ್ರೇರಣೆ ನೀಡಿದೆ ಎಂದು ಪ್ರವರ್ತಕ ಲೆಸ್ಲಿ ರೋಗೊ ತಿಳಿಸಿದ್ದಾರೆ. 1998ರಲ್ಲಿ ಜೆಪ್ಪುವಿನಲ್ಲಿ ಜಾಸ್ ಮಾರ್ಕೆಟಿಂಗ್ ಎಂಬ ಹೆಸರಿನಲ್ಲಿ ಗೃಹ ಉಪಯೋಗಿ ವಸ್ತುಗಳ ಮಾರಾಟ ಆರಂಭವಾಯಿತು. 2004ರಲ್ಲಿ ದಿ ಮ್ಯಾಟ್ ಶಾಪ್ ಎಂಬ ವಿಶೇಷ ವಿಭಾಗವನ್ನು ಪ್ರಾರಂಭಿಸಿ ಡೋರ್ ಮ್ಯಾಟ್ಸ್, ಫ್ಲೋರಿಂಗ್ ಮತ್ತು ಕಾರ್ಪೆಟ್ಸ್‌ನಲ್ಲಿ ಪರಿಣತಿ ಹೊಂದಿತು. 2009ರಲ್ಲಿ ಹೋಟೆಲ್ ಗೋಲ್ಡ್ ಫಿಂಚ್ ಕಾಂಪ್ಲೆಕ್ಸ್‌ನಲ್ಲಿ ಶೋರೂಮ್ ಸ್ಥಾಪನೆಗೆ ದಾರಿ ಮಾಡಿಕೊಟ್ಟಿತು. ಗ್ರಾಹಕರ ಹೆಚ್ಚುತ್ತಿರುವ ಬೇಡಿಕೆಯನ್ನು ಗಮನಿಸಿ 2016ರಲ್ಲಿ ಅದೇ ಸ್ಥಳದಲ್ಲಿ ಫರ್ನಿಶಿಂಗ್ ವಿಭಾಗ ಆರಂಭಿಸಿದೆ. ಕಳೆದ 10 ವರ್ಷಗಳಲ್ಲಿ ಸಾಫ್ಟ್ ಫರ್ನಿಶಿಂಗ್ ಕ್ಷೇತ್ರದಲ್ಲಿ ವಿಶಾಲ ಅನುಭವ ಮತ್ತು ಪರಿಣತಿಯನ್ನು ಸಂಸ್ಥೆ ಗಳಿಸಿದೆ. ಅನುಭವ ಹೊಂದಿದ ಇನ್‌ಸ್ಟಾಲರ್‌ಗಳು, ಕರ್ಟನ್ ತಯಾರಕರು, ಬ್ಲೈಂಡ್ ಮೇಕರ್‌ಗಳು, ಫ್ಲೋರಿಂಗ್ ಲೇಯರ್ ಮುಂತಾದವರ ಅನುಭವಸ್ಥ ಟೀಮ್ ನಮ್ಮೊಂದಿಗೆ ಬ್ಯಾಕ್‌ಅಪ್‌ನಲ್ಲಿ ಸದಾ ಕಾರ್ಯನಿರ್ವಹಿಸುತ್ತಲೇ ಇದೆ ಎಂದು ಪ್ರವರ್ತಕರು ತಿಳಿಸಿದ್ದಾರೆ. *ಹೊಸ ಸ್ಥಳ... ಅದೇ ನಂಬಿಕೆಯ ವ್ಯವಹಾರ ಪಂಪ್‌ವೆಲ್ ಜಂಕ್ಷನ್ ನಗರಕ್ಕೆ ಪ್ರವೇಶ ದ್ವಾರವಾಗಿರುವುದರಿಂದ ಹೊಸ ಶೋರೂಮ್ ಸುಲಭವಾಗಿ ತಲುಪು ವಂತಹ ಸ್ಥಳದಲ್ಲಿದೆ. 7400 ಚದರ ಅಡಿ ವ್ಯಾಪ್ತಿಯ ವಿಶಾಲ ಶೋರೂಮ್ ಇದಾಗಿದ್ದು, ಪ್ರತಿಯೊಂದು ವರ್ಗದ ಫರ್ನಿಶಿಂಗ್‌ಗಳ ಸಮೃದ್ಧ ಪ್ರದರ್ಶನ, ವಿಭಿನ್ನ ಆಯ್ಕೆಗಳು, ಸಾಕಷ್ಟು ಪಾರ್ಕಿಂಗ್ ಸೌಲಭ್ಯವಿದೆ. ಬೆಳಿಗ್ಗೆ 9:30ರಿಂದ ರಾತ್ರಿ 8:00ರವರೆಗೆ ಮಳಿಗೆಯು ತೆರೆದಿರುತ್ತದೆ. *ಕಿಂಗ್ ಕಾಯಿಲ್, ರೆಸ್ಟೋಲೆಕ್ಸ್, ಒಬ್ಸೆಷನ್ಸ್, ಜೆಎಂಟಿ, ಕೆಸಿ ಫ್ಯಾಬ್, ಡಿಡೇಕೋರ್, ಸ್ಪೇಸಸ್, ಹಿಮೇಯಾ, ಡೋನೇರ್, ಮಾರ್ಕ್ ಕ್ರಿಯೇಷನ್, ಹೀಗೋ, ಎಕ್ಸೆಲ್ ಸೇರಿದಂತೆ ಇನ್ನೂ ಅನೇಕ ಬ್ರಾಂಡ್‌ಗಳು ಇಲ್ಲಿ ಲಭ್ಯವಿದೆ ಎಂದು ಪ್ರಕಟನೆ ತಿಳಿಸಿದೆ.

ವಾರ್ತಾ ಭಾರತಿ 26 Mar 2026 9:51 pm

ಡೆಹ್ರಾಡೂನ್| ಕಾರಿನೊಳಗೆ ವೈದ್ಯಕೀಯ ವಿದ್ಯಾರ್ಥಿನಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ: ಹಿರಿಯ ವೈದ್ಯನ ವಿರುದ್ಧ ಕಿರುಕುಳ ಆರೋಪಿಸಿದ ಕುಟುಂಬಸ್ಥರು

ಡೆಹ್ರಾಡೂನ್, ಮಾ. 26: ಡೆಹ್ರಾಡೂನ್‌ನ ಪಟೇಲ್ ನಗರ ಪ್ರದೇಶದಲ್ಲಿ ನಿಲ್ಲಿಸಿದ್ದ ಕಾರಿನಲ್ಲಿ 23 ವರ್ಷದ ಸ್ನಾತಕೋತ್ತರ ವೈದ್ಯಕೀಯ ವಿದ್ಯಾರ್ಥಿನಿ ಪ್ರಜ್ಞಾ ಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಅನಂತರ ಅವರು ಆಸ್ಪತ್ರೆಯಲ್ಲಿ ಮೃತಪಟ್ಟಿರುವುದಾಗಿ ಪೊಲೀಸರು ಮಂಗಳವಾರ ತಿಳಿಸಿದ್ದಾರೆ. ವೈದ್ಯಕೀಯ ಕಾಲೇಜಿನ ಹಿರಿಯ ವೈದ್ಯರೊಬ್ಬರ ಕಿರುಕುಳ ಹಾಗೂ ಪ್ರಚೋದನೆ ಅವರ ಸಾವಿಗೆ ಕಾರಣ ಎಂದು ಕುಟುಂಬದ ಸದಸ್ಯರು ಆರೋಪಿಸಿದ್ದಾರೆ. ಮೃತಪಟ್ಟ ಸ್ನಾತಕೋತ್ತರ ವೈದ್ಯಕೀಯ ವಿದ್ಯಾರ್ಥಿನಿಯನ್ನು ಹರ್ಯಾಣದ ಅಂಬಾಲ ನಗರದ ನಿವಾಸಿ ತನ್ವಿ ಎಂದು ಗುರುತಿಸಲಾಗಿದೆ. ಅವರು ಪಟೇಲ್ ನಗರದಲ್ಲಿರುವ ಎಸ್‌ಜಿಆರ್‌ಆರ್ ವೈದ್ಯಕೀಯ ಕಾಲೇಜಿನಲ್ಲಿ 2023 ಸೆಪ್ಟಂಬರ್‌ನಿಂದ ನೇತ್ರ ವಿಜ್ಞಾನದಲ್ಲಿ ಎಂಎಸ್ ಪದವಿ ಓದುತ್ತಿದ್ದರು. ಡೆಹ್ರಾಖಾಸ್‌ನಲ್ಲಿ ತನ್ನ ತಾಯಿಯೊಂದಿಗೆ ವಾಸವಾಗಿದ್ದರು. ಅವರ ತಂದೆ ಲಲಿತ್ ಮೋಹನ್ ಅವರು ಪಟೇಲ್ ನಗರ ಪೊಲೀಸ್ ಠಾಣೆಯಲ್ಲಿ ನೀಡಿದ ದೂರಿನ ಪ್ರಕಾರ, ಇತ್ತೀಚೆಗೆ ತನ್ವಿ ತೀವ್ರ ಒತ್ತಡದಲ್ಲಿದ್ದರು. 2025 ಡಿಸೆಂಬರ್‌ನಲ್ಲಿ ವಿಭಾಗದ ಮುಖ್ಯಸ್ಥರ ಬದಲಾವಣೆಯಾಗಿತ್ತು. ಹೊಸ ಮುಖ್ಯಸ್ಥರು ತಮ್ಮ ಪುತ್ರಿಗೆ ಮಾನಸಿಕ, ಶೈಕ್ಷಣಿಕ ಹಾಗೂ ಆರ್ಥಿಕ ಕಿರುಕುಳ ನೀಡಿದ್ದಾರೆ ಎಂದು ಅವರು ದೂರಿನಲ್ಲಿ ಆರೋಪಿಸಿದ್ದಾರೆ. ಘಟನೆ ನಡೆದ ರಾತ್ರಿ ತನ್ವಿ ತನ್ನ ತಂದೆಯೊಂದಿಗೆ ಸುಮಾರು ಒಂದು ಗಂಟೆ ಮಾತನಾಡಿದ್ದಾಳೆ. ತಾನು 12.30ರ ವೇಳೆಗೆ ಮನೆಗೆ ತಲುಪುವುದಾಗಿ ಅವರು ರಾತ್ರಿ 11.15ರ ಸುಮಾರಿಗೆ ಸಂದೇಶ ಕಳುಹಿಸಿದ್ದಾರೆ. ಅನಂತರ ಅವರ ಫೋನ್ ಕಡಿತಗೊಂಡಿತು ಎಂದು ವರದಿ ಹೇಳಿದೆ. ಅವರ ತಂದೆ ತಡರಾತ್ರಿ ಅಂಬಾಲದಿಂದ ಡೆಹ್ರಾಡೂನ್‌ಗೆ ಪ್ರಯಾಣಿಸಿದರು. ಆಸ್ಪತ್ರೆಯ ರಸ್ತೆಯಲ್ಲಿ ಹುಡುಕುತ್ತಿದ್ದಾಗ ರಸ್ತೆ ಬದಿಯಲ್ಲಿ ನಿಂತಿದ್ದ ಅವರ ಕಾರನ್ನು ಕುಟುಂಬದ ಸದಸ್ಯರು ಪತ್ತೆ ಹಚ್ಚಿದ್ದಾರೆ. ಆ ಕಾರಿನ ಚಾಲಕನ ಸೀಟಿನಲ್ಲಿ ತನ್ವಿ ಪ್ರಜ್ಞಾ ಹೀನ ಸ್ಥಿತಿಯಲ್ಲಿ ಇದ್ದರು. ಕಾರನ್ನು ಒಳಗಿನಿಂದ ಲಾಕ್ ಮಾಡಲಾಗಿತ್ತು. ಕುಟುಂಬದ ಸದಸ್ಯರು ಕಾರಿನ ಬಾಗಿಲು ಒಡೆದರು. ಆಕೆಯನ್ನು ಮಹಂತ ಇಂದಿರೇಶ್ ಆಸ್ಪತ್ರೆಗೆ ಕರೆದೊಯ್ದರು. ಆದರೆ, ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದರು. ಲಲಿತ್ ಮೋಹನ್ ಅವರ ದೂರಿನ ಆಧಾರದಲ್ಲಿ ವಿಭಾಗದ ಮುಖ್ಯಸ್ಥರ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ವಾರ್ತಾ ಭಾರತಿ 26 Mar 2026 9:42 pm

ಯುಎಇಯಲ್ಲಿ ಮುಂದುವರಿದ ಮಳೆಯ ಆರ್ಭಟ: ಜನರ ಪರದಾಟ; ನಾಳೆ ಭಾರೀ ಮಳೆಯ ಸಾಧ್ಯತೆ

ದುಬೈ: ಯುಎಇಯಲ್ಲಿ ಮಳೆಯ ಆರ್ಭಟ ಗುರುವಾರವೂ ಮುಂದುವರಿದಿದೆ. ದೇಶದ ವಿವಿಧೆಡೆ ಸುರಿದ ಭಾರೀ ಮಳೆಗೆ ಪ್ರಮುಖ ರಸ್ತೆಗಳು ಸೇರಿದಂತೆ ಹಲವೆಡೆ ಕೃತಕ ಪ್ರವಾಹ ಉಂಟಾಗಿದ್ದು, ಜನರು ಪರದಾಡುವಂತಾಗಿದೆ. ಗುರುವಾರ ಮಧ್ಯಾಹ್ನದಿಂದ ಆರಂಭಗೊಂಡ ಭಾರಿ ಮಳೆಯಿಂದ ದುಬೈ, ಶಾರ್ಜಾ, ಅಜ್ಮಾನ್ ಸೇರಿದಂತೆ ಯುಎಇಯ ನಾನಾ ಭಾಗಗಳಲ್ಲಿ ನೀರು ತುಂಬಿದ್ದು, ರಸ್ತೆಗಳು ಸಂಪೂರ್ಣ ನೀರಿನಿಂದ ಜಲಾವೃತವಾಗಿತ್ತು. ಇದರಿಂದ ವಾಹನಗಳು ಕೂಡ ಮುಳುಗಡೆಯ ಭೀತಿಯನ್ನು ಎದುರಿಸಿದ್ದು, ಸುಗಮ ಸಂಚಾರಕ್ಕೆ ಅಡಚಣೆ ಉಂಟಾಗಿದ್ದು, ವಾಹನ ಸವಾರರು, ಜನರು ಸಂಕಷ್ಟವನ್ನು ಎದುರಿಸಬೇಕಾಯಿತು. ಭಾರೀ ಮಳೆ ಮತ್ತು ರಸ್ತೆಗಳ ಮೇಲೆ ನೀರು ತುಂಬಿರುವ ಕಾರಣದಿಂದ ಶಾರ್ಜಾ ಮತ್ತು ಅಜ್ಮಾನ್‌ ಕಡೆ ತೆರಳುವ ದುಬೈಯ ಬಸ್ ಸೇವೆಯನ್ನು ಗುರುವಾರ ಸಂಜೆ 7 ಗಂಟೆಯಿಂದ ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ ಎಂದು ದುಬೈನ ರೋಡ್ಸ್ ಆ್ಯಂಡ್ ಟ್ರಾನ್ಸ್‌ಪೋರ್ಟ್ ಅಥಾರಿಟಿ(RTA) ತಿಳಿಸಿದೆ.  ಗುರುವಾರ ರಾತ್ರಿಯಿಂದ ಶುಕ್ರವಾರದವರಗೆ ಭಾರಿ ಮಳೆ, ಗಾಳಿ ಬೀಸುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದ್ದು, ಜನರ ಸುರಕ್ಷತೆಗೆ ಬೇಕಾದ ಎಲ್ಲ ರೀತಿಯ ಮುನ್ನಚ್ಚರಿಕೆ ವಹಿಸುವಂತೆ ಸೂಚಿಸಿದೆ. ಯುಎಇಯಲ್ಲಿ ಮಳೆಯ ಸಮಯದಲ್ಲಿ ನಿಯಮ ಉಲ್ಲಂಘನೆ ಮಾಡುವವರ ವಿರುದ್ಧ ಹಾಗು ವಾಹನಗಳ ಮೇಲೆ ಭಾರಿ ದಂಡವಿಧಿಸುವುದಾಗಿ ಯುಎಇ ಆಂತರಿಕ ವಿಷಯಗಳ ಸಚಿವಾಲಯ (UAE Ministry of Interior) ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದೆ. ಯುಎಇ ಆಂತರಿಕ ವಿಷಯಗಳ ಸಚಿವಾಲಯ ಸುರಕ್ಷತೆ ಮತ್ತು ಸಮುದಾಯ ಪಾಲನೆಯ ಮಹತ್ವವನ್ನು ಗಮನ ದಲ್ಲಿ ಇಟ್ಟುಕೊಂಡು ಕಣಿವೆ, ಪ್ರವಾಹ ಪೀಡಿತ ಪ್ರದೇಶಗಳತ್ತ ವಾಹನವನ್ನು ಚಲಾಯಿಸಿಕೊಂಡು ಹೋಗುವವರಿಗೆ 1 ರಿಂದ 2 ಸಾವಿರ ದಿರ್ಹಾಮ್ ವರಗೆ ದಂಡ, 6 ರಿಂದ 23ರ ವರಗೆ ಟ್ರಾಫಿಕ್ ಪಾಯಿಂಟ್‌ಗಳು, ಚಾಲನಾ ಪರವಾನಗಿಯನ್ನು 60 ದಿನಗಳ ಕಾಲ ಸ್ಥಗಿತಗೊಳಿಸುವ ಎಚ್ಚರಿಕೆಯನ್ನೂ ನೀಡಲಾಗಿದೆ. ಭಾರೀ ಮಳೆಯ ಹಿನ್ನೆಲೆಯಲ್ಲಿ ಶಾರ್ಜಾ ನಿವಾಸಿಗಳಿಗೆ ಅನಿವಾರ್ಯವಾಗದಿದ್ದರೆ ಮನೆಗಳಲ್ಲಿ ಇರುವಂತೆ ಸೂಚನೆ ನೀಡಲಾಗಿದೆ. ಮಳೆಯ ಸಮಯದಲ್ಲಿ ಅಪಾಯದ ಪ್ರದೇಶಗಳಿಗೆ ಹೋಗದೇ, ಸುರಕ್ಷಿತವಾಗಿರುವಂತೆ ಸಾರ್ವಜನಿಕರಲ್ಲಿ ಅಧಿಕಾರಿಗಳು ಮನವಿ ಮಾಡಿದ್ದಾರೆ.

ವಾರ್ತಾ ಭಾರತಿ 26 Mar 2026 9:31 pm

ಬೆಂಗಳೂರು ನಮ್ಮ ಮೆಟ್ರೋ ನೀಲಿ ಮಾರ್ಗಕ್ಕೆ ಶೀಘ್ರ 2 ರೈಲು; ಸಿಲ್ಕ್‌ ಬೋರ್ಡ್‌- ಕೆಆರ್‌ ಪುರ ನಡುವೆ ಸಂಚಾರಕ್ಕೆ ಬಳಕೆ

ಬೆಂಗಳೂರು ನಮ್ಮ ಮೆಟ್ರೋ ನೀಲಿ ಮಾರ್ಗಕ್ಕೆ ಶೀಘ್ರ 2 ರೈಲುಗಳು ಪೂರೈಕೆಯಾಗಲಿವೆ. ಸಿಲ್ಕ್‌ ಬೋರ್ಡ್‌- ಕೆಆರ್‌ ಪುರ ನಡುವೆ ಸಂಚಾರಕ್ಕೆ ಬಳಕೆ ಮಾಡಲಾಗುತ್ತದೆ. ಬಿಇಎಂಎಲ್‌ ಈ ಚಾಲಕ ರಹಿತ ರೈಲುಗಳನ್ನು ನಿರ್ಮಿಸಿದೆ. ವರ್ಷಾಂತ್ಯಕ್ಕೆ ನೀಲಿ ಮಾರ್ಗದಲ್ಲಿ ಸಂಚಾರ ಆರಂಭಿಸಲು ಉದ್ದೇಶಿಸಲಾಗಿದ್ದು, ರೈಲು ಪರೀಕ್ಷೆಯನ್ನು ಶೀಘ್ರವೇ ಪ್ರಾರಂಭ ಮಾಡಲು ಮುಂದಾಗಿದೆ.

ವಿಜಯ ಕರ್ನಾಟಕ 26 Mar 2026 9:10 pm

ಇನ್ನೆರಡು ವರ್ಷದಲ್ಲಿ ಮೇಕೆದಾಟುವಿಗೆ ಶಂಕುಸ್ಥಾಪನೆ : ಡಿಸಿಎಂ ಡಿ.ಕೆ.ಶಿವಕುಮಾರ್

ಬೆಂಗಳೂರು : ಮುಂದಿನ ಎರಡು ವರ್ಷಗಳಲ್ಲಿ ಮೇಕೆದಾಟು ಅಣೆಕಟ್ಟು ಯೋಜನೆಗೆ ಭೂಮಿ ಪೂಜೆ ಮಾಡುತ್ತೇನೆ ಎಂಬ ಆತ್ಮವಿಶ್ವಾಸ ಇದ್ದು, ಇದಕ್ಕೆ ವಿಪಕ್ಷಗಳು ಸಹಕರಿಸಬೇಕು ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಗುರುವಾರ ವಿಧಾನಸಭೆಯಲ್ಲಿ ಗ್ರೇಟರ್ ಬೆಂಗಳೂರು ವಿಚಾರವಾಗಿ ನಡೆದ ಚರ್ಚೆಗೆ ಉತ್ತರಿಸಿದ ಅವರು, ಮೇಕೆದಾಟು ಸಮತೇಲಿನ ಅಣೆಕಟ್ಟು ನಿರ್ಮಾಣದ ವಿಚಾರವಾಗಿ ಸುಪ್ರೀಂ ಕೋರ್ಟ್ ರಾಜ್ಯದ ಪರವಾಗಿ ಐತಿಹಾಸಿಕ ತೀರ್ಪು ನೀಡಿದ್ದು, ಆ ಪೀಠಕ್ಕೆ ಈ ಸದನದ ಮೂಲಕ ದೊಡ್ಡ ಧನ್ಯವಾದ ಅರ್ಪಿಸುತ್ತೇನೆ. ನಾವು ಪರಿಷ್ಕೃತ ಡಿಪಿಆರ್ ತಯಾರಿಸುತ್ತಿದ್ದು, ಮೇಕೆದಾಟು ಯೋಜನೆ ಆಗುತ್ತಿದ್ದಂತೆ ಬೆಂಗಳೂರಿಗೆ ಮುಂದಿನ 25ರಿಂದ 30 ವರ್ಷ ಯಾವುದೇ ರೀತಿಯ ನೀರಿನ ಸಮಸ್ಯೆ ಎದುರಾಗುವುದಿಲ್ಲ ಎಂದರು. ಈ ಯೋಜನೆ ಅತ್ಯಂತ ಕಡಿಮೆ ವೆಚ್ಚದ ಯೋಜನೆಯಾಗಿದೆ. ಸುಮಾರು 600 ಎಕರೆ ಭೂಸ್ವಾಧೀನಪಡಿಸಿಕೊಳ್ಳಬೇಕಿದ್ದು, ಉಳಿದಂತೆ ಮುಳುಗಡೆಯಾಗುವ ಅರಣ್ಯ ಪ್ರದೇಶಕ್ಕೆ ಪರ್ಯಾಯ ಭೂಮಿ ನೀಡಲಾಗುವುದು. ಈ ಯೋಜನೆಯಲ್ಲಿ 400 ಮೆ.ವ್ಯಾಟ್ ವಿದ್ಯುತ್ ಉತ್ಪಾದನೆ ಮಾಡಲಾಗುವುದು. ಈ ಯೋಜನೆಗೆ ನಮ್ಮ ಕ್ಷೇತ್ರದಲ್ಲಿ ನನ್ನ ಜಮೀನು ಮುಳುಗಡೆಯಾಗುತ್ತದೆ. ಏನು ಮಾಡಲು ಆಗುವುದಿಲ್ಲ.ಆದರೆ, ಮುಂದಿನ 2 ವರ್ಷಗಳಲ್ಲಿ ಮೇಕೆದಾಟು ಯೋಜನೆಗೆ ಭೂಮಿ ಪೂಜೆ ಮಾಡುತ್ತೇನೆ ಎಂಬ ಆತ್ಮವಿಶ್ವಾಸ ಇದೆ. ಇದಕ್ಕೆ ವಿರೋಧ ಪಕ್ಷಗಳು ಸಹಕರಿಸಬೇಕು ಎಂದು ಅವರು ಹೇಳಿದರು. ಅಪಾರ್ಟ್‌ಮೆಂಟ್ ಕಾಯ್ದೆ:  ಅಪಾರ್ಟ್‌ಮೆಂಟ್ ಕಾಯ್ದೆ ವಿಚಾರವಾಗಿ ಪ್ರಸ್ತಾಪ ಮಾಡಿದ ಅವರು, ಈ ವಿಚಾರವಾಗಿ ವಿರೋಧ ಪಕ್ಷಗಳ ಶಾಸಕರ ಜತೆ ಚರ್ಚೆ ಮಾಡುತ್ತೇನೆ. ನಿಮ್ಮ ಅಭಿಪ್ರಾಯ ಸಂಗ್ರಹಿಸಲಾಗುವುದು. ನಂತರ ಸುಗ್ರೀವಾಜ್ಞೆ ಮೂಲಕವಾದರೂ ಕಾಯ್ದೆ ಜಾರಿಗೆ ತರಲಾಗುವುದು. ವಾಹನ ನಿಲುಗಡೆ ನೀತಿ ಅಗತ್ಯವಿದ್ದು, ಇದಕ್ಕೆ ನೀತಿ ರೂಪಿಸಲಾಗುವುದು. ಎಲ್ಲೆಂದರಲ್ಲಿ ವಾಹನ ನಿಲುಡಗಡೆ ಮಾಡಲಾಗುತ್ತಿದ್ದು, ಪಿಪಿಪಿ ಮಾದರಿಯಲ್ಲಿ ಹಾಗೂ ಖಾಸಗಿ ಜಾಗದಲ್ಲಿ ವಾಹನ ನಿಲುಗಡೆಗೆ ಅವಕಾಶ ಕಲ್ಪಿಸಲು ಅಭಿಪ್ರಾಯ ಸಂಗ್ರಹಿಸಲಾಗುತ್ತಿದೆ. ನಿಮ್ಮ ಸಲಹೆಗಳೇನೆ ಇದ್ದರೂ ನನಗೆ ಲಿಖಿತ ರೂಪದಲ್ಲಿ ನೀಡಿ ಎಂದು ಅವರು ತಿಳಿಸಿದರು. ಬೆಂಗಳೂರಿನಲ್ಲಿ ಸ್ಕೈಡೆಕ್ ಮಾಡಲು ಮುಂದಾಗಿದ್ದೇವೆ. ಹೆಮ್ಮಿಗೆಪುರದ ಬಳಿ ನಿರ್ಮಾಣ ಮಾಡಲು ಎಲ್ಲರೂ ಒಪ್ಪಿದ್ದರು. ಆದರೆ ನೈಸ್ ಸಂಸ್ಥೆಯವರು ಅವಕಾಶ ನೀಡಲಿಲ್ಲ. ಅವರು ಅನುಮತಿ ನೀಡಲು ನಿರಾಕರಿಸಿದರು. ನನಗೂ ಅವರಿಗೂ ತಿಕ್ಕಾಟವಾಯಿತು. ವಿಮಾನ ನಿಲ್ದಾಣದ ಸುತ್ತಮುತ್ತ ನಿರ್ದಿಷ್ಟ ದೂರದವರೆಗೆ ಎತ್ತರದ ಕಟ್ಟಡಗಳಿಗೆ ನಿರ್ಬಂದ ಇರುವ ಕಾರಣ ಎನ್‍ಜಿಎಫ್ ಬಳಿ ನಿರ್ಮಾಣ ಮಾಡುವ ಯೋಜನೆ ಕೈಬಿಡಲಾಯಿತು. ಬೆಂಗಳೂರು ವಿವಿ ಆವರಣದಲ್ಲಿ ನಿರ್ಮಾಣ ಮಾಡಿದರೆ ಗಲಾಟೆಗಳು ಆಗುತ್ತವೆ ಎಂದು ಶಿಕ್ಷಣ ಸಚಿವರು ಹೇಳಿದರು. ಹೀಗಾಗಿ ಈಗ ಅದನ್ನು ಕೆಂಪೇಗೌಡ ಬಡಾವಣೆಯಲ್ಲಿ ಮಾಡಲು ನಿರ್ಧರಿಸಿದ್ದು ಟೆಂಡರ್ ಕರೆಯಲು ಸಿದ್ಧತೆ ನಡೆಯುತ್ತಿದೆ. ಆದಷ್ಟು ಬೇಗ ಇದನ್ನು ಪ್ರಾರಂಭಿಸಲಾಗುವುದು ಎಂದು ಅವರು ಉಲ್ಲೇಖಿಸಿದರು. ಬೆಂಗಳೂರಿಗೆ ಕೇಂದ್ರದಿಂದ ಅನುದಾನ ಬರುತ್ತಿಲ್ಲ : ‘ಇಡೀ ದೇಶ ಬೆಂಗಳೂರನ್ನು ನೋಡುತ್ತಿದೆ. ಇಲ್ಲಿ ನಾವು ನಾವುಗಳು ಕೂತು ದಿನಬೆಳಗಾದರೆ ಟೀಕೆ ಮಾಡುವುದಲ್ಲ. ನಾನು ದಾವೋಸ್ ಸಮಿಟ್‍ಗೆ ಹೋದಾಗ ಅಲ್ಲಿ ಬೆಂಗಳೂರಿಗೆ ನೀಡಲಾಗುತ್ತಿದ್ದ ಅದ್ಯತೆ ನೋಡಿದೆ. ಆದರೆ ಈಗ ಬೆಂಗಳೂರು ನಗರದ ಅಭಿವೃದ್ಧಿಗೆ ಕೇಂದ್ರದಿಂದ ಯಾವುದೇ ಅನುದಾನ ಬರುತ್ತಿಲ್ಲ. ನಾನು ಈ ವಿಚಾರವಾಗಿ ಪ್ರಧಾನಮಂತ್ರಿಗಳನ್ನು ಭೇಟಿ ಮಾಡಿ ಮನವಿ ಮಾಡಿದ್ದೆ’ -ಡಿ.ಕೆ.ಶಿವಕುಮಾರ್, ಉಪಮುಖ್ಯಮಂತ್ರಿ

ವಾರ್ತಾ ಭಾರತಿ 26 Mar 2026 9:07 pm

ಸಾರ್ವಜನಿಕ ಸ್ಥಳದಲ್ಲಿ ಗಲಾಟೆ: 8 ಮಂದಿ ವಶಕ್ಕೆ

ಕೋಟ, ಮಾ.26: ಬಿಲ್ಲಾಡಿ ಗ್ರಾಮದ ಅರ್ಭಕದಾರಕೇಶ್ವರ ದೇವಸ್ಥಾನದ ಎದುರು ಮಾ.25ರಂದು ಬೆಳಗ್ಗೆ ಪರಸ್ಪರ ಮೈ ಕೈ ಮೇಲಾಯಿಸಿ ಗಲಾಟೆ ಮಾಡುತ್ತಿದ್ದ ಎಂಟು ಮಂದಿಯನ್ನು ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಗಣೇಶ ಶೆಟ್ಟಿ , ಭಾಸ್ಕರ ಹೆಗ್ಡೆ , ಚಂದ್ರ ಶೆಟ್ಟಿ, ಅಶೋಕ ಶೆಟ್ಟಿ, ಶಂಕರ ಶೆಟ್ಟಿ, ಅಭಿಷೇಕ್, ಚಂದ್ರ ಮಾಸ್ಟರ್, ಸಂದೇಶ ಎಂಬವರು ಸಾರ್ವಜನಿಕ ಸ್ಥಳದಲ್ಲಿ ಮೈ, ಕೈ ಮಿಲಾಯಿಸಿ ಗಲಾಟೆ ಮಾಡಿ ಸಾರ್ವಜನಿಕ ನೆಮ್ಮದಿಗೆ ಭಂಗವನ್ನುಂಟು ಮಾಡಿದ್ದಾರೆಂದು ದೂರಲಾಗಿದೆ.

ವಾರ್ತಾ ಭಾರತಿ 26 Mar 2026 9:06 pm

ಪ್ರತ್ಯೇಕ ಪ್ರಕರಣ: ಮೂವರು ಮಹಿಳೆಯರು ಆತ್ಮಹತ್ಯೆ

ಬ್ರಹ್ಮಾವರ, ಮಾ.26: ಮಾನಸಿಕ ಖಿನ್ನತೆ ಹಾಗೂ ಅನಾರೋಗ್ಯದಿಂದ ಬಳಲುತ್ತಿದ್ದ ಆರೂರು ಗ್ರಾಮದ ಕುಂಜಾಲು ನಿವಾಸಿ ರಾಮಚಂದ್ರ ಎಂಬವರ ಪತ್ನಿ ಸುಶೀಲಾ ಶೆಟ್ಟಿ,(60) ಎಂಬವರು ಜೀವನದಲ್ಲಿ ಜೀಗುಪ್ಸೆ ಗೊಂಡು ಮಾ.25ರಂದು ರಾತ್ರಿ ಮನೆಯ ಹಿಂಭಾಗದ ಹಾಡಿಯಲ್ಲಿರುವ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಗಂಗೊಳ್ಳಿ: ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ನೂಜಾಡಿ ಗ್ರಾಮದ ನಾಗು ಮೊಗವೀರ್ತಿ(90) ಎಂಬವರು ಜೀವನದಲ್ಲಿ ಜಿಗುಪ್ಸೆ ಗೊಂಡು ಮಾ.24ರಂದು ಬೆಳಗ್ಗೆಯಿಂದ ಮಾ.25ರ ಬೆಳಗ್ಗಿನ ಮಧ್ಯಾವಧಿ ಯಲ್ಲಿ ಮನೆಯ ಎದುರುಗಡೆಯ ಚಕ್ರಾ ನದಿಗೆ ಹಾರಿ ಆತ್ಮಹತ್ಯೆ ಮಾಡಿ ಕೊಂಡಿದ್ದಾರೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಶಿರ್ವ: ವೈಯಕ್ತಿಕ ಕಾರಣದಿಂದ ಮನನೊಂದ ಬೆಳಪು ಗ್ರಾಮದ ನಿವಾಸಿ ಮೋಹನ್ ಪೂಜಾರಿ ಎಂಬವರ ಪತ್ನಿ ರಂಜಿನಿ(30) ಎಂಬವರು ಮಾ.25ರಂದು ಮಧ್ಯಾಹ್ನ ಮನೆಯ ರೂಮಿನಲ್ಲಿ ಫ್ಯಾನಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಾರ್ತಾ ಭಾರತಿ 26 Mar 2026 9:05 pm

ಯುದ್ದ ಪೀಡಿತ ಇಸ್ರೇಲ್’ನ ಟೆಲ್ ಅವಿವ್ ಆಗಸದಲ್ಲಿ ಕಾಗೆಗಳ ಹಿಂಡು : ವಿನಾಶದ ಮುನ್ಸೂಚನೆಯೇ?

West Asia War Between Iran and Israel : ಕದನ ವಿರಾಮದ ಮುನ್ಸೂಚನೆಯಿದ್ದರೂ, ಅದಕ್ಕೆ ಒಂದಲ್ಲಾ ಒಂದು ಅಡೆತಡೆ ಎದುರಾಗುತ್ತಲೇ ಇದೆ. ಇರಾನ್ ಕೂಡ ತನ್ನ ಪ್ರತಿರೋಧವನ್ನು ಹೆಚ್ಚಿಸುತ್ತಿರುವುದು, ಯುದ್ದದ ಕಾರ್ಮೋಡದ ಭೀತಿ ಇನ್ನಷ್ಟು ಹೆಚ್ಚಾಗುವಂತೆ ಮಾಡಿದೆ. ಈ ನಡುವೆ, ಇಸ್ರೇಲ್’ನ ಪ್ರಮುಖ ನಗರ ಟೆಲ್ ಅವಿವ್ ಆಗಸದಲ್ಲಿ ಕಾಗೆಗಳ ಹಿಂಡು ಹಾರುತ್ತಿವ ವಿಡಿಯೋ ಹರಿದಾಡುತ್ತಿರುವುದು ಅಪಶಕುನದ ಮಾತುಗಳು ಜೋರಾಗಿ ಕೇಳಿ ಬರುತ್ತಿದೆ.

ವಿಜಯ ಕರ್ನಾಟಕ 26 Mar 2026 9:05 pm

ವಾರ್ಷಿಕ ಅನುದಾನ ಹೆಚ್ಚಳಕ್ಕೆ ಮೇಲ್ಮನೆ ಸದಸ್ಯರ ಮನವಿ: ಪರಿಶೀಲಿಸಿ ಕ್ರಮ ಎಂದ ಸಿಎಂ ಸಿದ್ದರಾಮಯ್ಯ

ಬೆಂಗಳೂರು : ಪ್ರತಿ ವರ್ಷ ಶಾಸಕರ ನಿಧಿಯಿಂದ ಮೇಲ್ಮನೆ ಸದಸ್ಯರಿಗೆ ನೀಡಲಾಗುವ 2 ಕೋಟಿ ಅನುದಾನವನ್ನು 4 ಕೋಟಿಗೆ ಏರಿಸಬೇಕೆಂದು ಸದನದಲ್ಲಿ ವಿಧಾನಪರಿಷತ್‍ನ ವಿಪಕ್ಷ ಸದಸ್ಯರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಒತ್ತಾಯಿಸಿದರು. ಗುರುವಾರ ಮೇಲ್ಮನೆಯಲ್ಲಿ ಬಜೆಟ್ ಮೇಲಿನ ಚರ್ಚೆ ಕುರಿತಂತೆ ಸರಕಾರದ ಉತ್ತರ ಬಳಿಕ ಪ್ರಸ್ತಾಪಿಸಿದ ಜೆಡಿಎಸ್ ಸದಸ್ಯ ಎಸ್.ಎಲ್.ಭೋಜೇಗೌಡ, ಮೇಲ್ಮನೆ ಸದಸ್ಯರಿಗೆ ಪ್ರತಿ ವರ್ಷ ನೀಡಲಾಗುವ 2 ಕೋಟಿ ಅನುದಾನ ಸಾಲುತ್ತಿಲ್ಲ. ನಾಲ್ಕು ಜಿಲ್ಲೆಗಳಿಂದ ಪ್ರತಿನಿಧಿಯಾಗಿ ಬಂದಿರುತ್ತೇವೆ. ನೀಡಲಾಗುವ ಅನುದಾನವನ್ನು ಮೂಲಸೌಕರ್ಯ ಅಭಿವೃದ್ಧಿಗೆ ಬಳಸಲಾಗುತ್ತದೆ. ಹೀಗಾಗಿ ಶಾಸಕರ ನಿಧಿಯನ್ನು 4 ಕೋಟಿಗೆ ಏರಿಸಬೇಕು ಎಂದು ಆಗ್ರಹಿಸಿದರು. ವಿಧಾನಸಭೆಯ ಶಾಸಕರಿಗೆ ಪ್ರತಿ ವರ್ಷ 25ರಿಂದ 50 ಕೋಟಿ ಅನುದಾನ ನೀಡುತ್ತೀರಾ? ನಮಗೆ 5 ಕೋಟಿ ವಿಶೇಷ ಅನುದಾನ ನೀಡಿ ಎಂದು ಭೋಜೇಗೌಡ ಒತ್ತಾಯಿಸಿದರು. ಪರಿಷತ್ ಸದಸ್ಯರ ಪರವಾಗಿ ಸಭಾಪತಿ ಬಸವರಾಜ ಹೊರಟ್ಟಿ ಅವರು, ಮೇಲ್ಮನೆ ಸದಸ್ಯರಿಗೆ ವಾರ್ಷಿಕ ಅನುದಾನ ಏರಿಸಬೇಕೆಂದು ಮನವಿ ಮಾಡಿದರು. ಇದೇ ವೇಳೆ ಶಶಿಲ್ ನಮೋಶಿ, ಸುನೀಲ್ ವಲ್ಯಾಪುರೆ ಮಾತನಾಡಿ, ಕಲ್ಯಾಣ ಕರ್ನಾಟಕ ಅಭಿವೃದ್ದಿ ಮಂಡಳಿಯಿಂದ ನೀಡಲಾಗುವ ಅನುದಾನವನ್ನು ಆ ಭಾಗದ ಪರಿಷತ್ ಸದಸ್ಯರಿಗೆ ಅನುದಾನ ನೀಡುವಂತೆ ಮನವಿ ಮಾಡಿದರು. ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ, ಮೇಲ್ಮನೆ ಸದಸ್ಯರಿಗೆ ಶಾಸಕರ ನಿಧಿಯಿಂದ ಅನುದಾನ ಹೆಚ್ಚಿಸುವ ಬಗ್ಗೆ ಪರಿಶೀಲಿಸಲಾಗುವುದು ಎಂದರು.  

ವಾರ್ತಾ ಭಾರತಿ 26 Mar 2026 9:03 pm

ಸ್ಕೂಟರ್ ಸಮೇತ ವ್ಯಕ್ತಿ ನಾಪತ್ತೆ

ಶಿರ್ವ, ಮಾ.26: ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ಬೆಳಪು ಗ್ರಾಮದ ನಿವಾಸಿ ಬಿ.ಚಂದ್ರಶೇಖರ ರಾವ್(54) ಎಂಬವರು ಮಾ.25ರಂದು ಬೆಳಗ್ಗೆೆ ಮನೆಯಿಂದ ಕಪ್ಪು ಪ್ಯಾಂಟ್ ಮತ್ತು ಅರ್ಧ ತೋಳಿನ ಬಿಳಿ ಶರ್ಟ್ ಧರಿಸಿ ಕೆಎ20 2652 ನೇ ಸಂಖ್ಯೆಯ ಸ್ಕೂಟರ್‌ನಲ್ಲಿ ಅಯ್ಯಪ್ಪನಗರದಿಂದ ಬೆಳಪು ಕಡೆಗೆ ಹೋದವರು ಈತನಕ ವಾಪಾಸ್ಸು ಬಾರದೆ ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಶಿರ್ವ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.

ವಾರ್ತಾ ಭಾರತಿ 26 Mar 2026 9:02 pm

ಉಡುಪಿ: ಜಿಲ್ಲಾಸ್ಪತ್ರೆಯ ಬಡರೋಗಿಗಳಿಗೆ ಆಹಾರ ಕಿಟ್ ವಿತರಣೆ

ಉಡುಪಿ, ಮಾ.26:ನಗರದ ಅಜ್ಜರಕಾಡಿನ ಜಿಲ್ಲಾ ಆಸ್ಪತ್ರೆಯಲ್ಲಿ ಬುಧವಾರ ಎಂ.ಸಿ.ಕೆ.ಎಸ್ ಫುಡ್ ಫಾರ್ ದಿ ಹಂಗ್ರೀ ಫೌಂಡೇಶನ್ ವತಿಯಿಂದ 65 ಬಡ ರೋಗಿಗಳಿಗೆ ಆಹಾರ ಪದಾರ್ಥಗಳ ಕಿಟ್ ಹಾಗೂ ಮಕ್ಕಳಿಗೆ ನೋಟ್ ಪುಸ್ತಕಗಳನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾ ಸರ್ಜನ್ ಡಾ.ಹೆಚ್ ಅಶೋಕ್ ಮಾತನಾಡಿ, ಈ ತರಹದ ಕಾರ್ಯಕ್ರಮಗಳಿಂದ ಆಸ್ಪತ್ರೆಗೆ ಬರುವ ಬಡ ರೋಗಿಗಳಿಗೆ ಬಹಳಷ್ಟು ಉಪಯೋಗವಾಗಲಿದೆ. ದಾನಗಳಲ್ಲಿ ಶ್ರೇಷ್ಠದಾನ ಎಂದರೆ ರಕ್ತದಾನ ಎಂದು ಹೇಳಲಾಗುತ್ತದೆ. ಅದೇ ರೀತಿ ಒಬ್ಬರಿಗೆ ಆಹಾರ ನೀಡುವುದು ಸಹ ಅತ್ಯಂತ ಮಹಾದಾನ ಎಂದರು. ಎಂ.ಸಿ.ಕೆ.ಎಸ್ ಸಂಚಾಲಕಿ ನಿಧಿ ಮಾತನಾಡಿ, ಈ ಹಿಂದೆ ಸಂಸ್ಥೆಯ ವತಿಯಿಂದ ಕ್ಯಾನ್ಸರ್ ಹಾಗೂ ಕ್ಷಯರೋಗಿ ಗಳಿಗೆ ಆಹಾರ ಕಿಟ್ ವಿತರಿಸಿದ್ದು, ಅದೇ ರೀತಿ ಫೌಂಡೇಶನ್‌ನ ಸಂಸ್ಥಾಪಕರಾದ ಗ್ರಾಂಡ್ ಮಾಸ್ಟರ್ ಚೋವಾ ಕೋಕ್ ಸುಯಿ ಇವರ ಸನೆನಪಿಗಾಗಿ ಇಂದು ಬಡ ರೋಗಿಗಳಿಗೆ ಆಹಾರ ಕಿಟ್ ತರಿಸಲಾಗಿದೆ ಎಂದರು. ಕಾರ್ಯಕ್ರಮದಲ್ಲಿ ಜಿಲ್ಲಾ ಆಸ್ಪತ್ರೆ ಎಆರ್‌ಟಿ ಕೇಂದ್ರದ ವೈದ್ಯಾಧಿಕಾರಿ ಡಾ.ಶ್ರೀನಾಥ್, ಎ.ಆರ್.ಟಿ ಕೇಂದ್ರದ ಸಿಬ್ಬಂದಿಗಳು ಉಪಸ್ಥಿತರಿದ್ದರು. ಜಿಲ್ಲಾ ಆಸ್ಪತ್ರೆ ಆಪ್ತ ಸಮಾಲೋಚಕ ಮನು ಎಸ್.ಬಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

ವಾರ್ತಾ ಭಾರತಿ 26 Mar 2026 9:00 pm

Budget Session 2026 | ಮೇಲ್ಮನೆಯಲ್ಲಿ ‘ಕರ್ನಾಟಕ ಧನ ವಿನಿಯೋಗ ವಿಧೇಯಕ-2026' ಅಂಗೀಕಾರ

ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗುರುವಾರ ವಿಧಾನಪರಿಷತ್ತಿನಲ್ಲಿ ಕರ್ನಾಟಕ ವಿಧಾನಸಭೆಯಿಂದ ಅಂಗೀಕಾರವಾದ ರೂಪದಲ್ಲಿರುವ ಕರ್ನಾಟಕ ಧನ ವಿನಿಯೋಗ ವಿಧೇಯಕ-2026 ಅನ್ನು ಮಂಡಿಸಿದರು. ನಂತರ ಸದನವು ಈ ವಿಧೇಯಕಕ್ಕೆ ಧ್ವನಿಮತದ ಮೂಲಕ ಅಂಗೀಕಾರ ನೀಡಿತು. ಈ ಮೂಲಕ 2026-27ನೇ ಹಣಕಾಸು ವರ್ಷದ ಸರಕಾರದ ಒಟ್ಟು ವೆಚ್ಚಗಳಿಗೆ ಅನುಮೋದನೆ ದೊರೆತಂತಾಗಿದೆ. ಉದ್ದೇಶ-ಕಾರಣಗಳು: 2026-27ನೇ ಹಣಕಾಸು ವರ್ಷದಲ್ಲಿ ಸಂದಾಯ ಮಾಡುವಾಗ ಒದಗಿಬರುವ ಹಲವಾರು ಖರ್ಚುಗಳನ್ನು ವಹಿಸುವುದಕ್ಕಾಗಿ ರಾಜ್ಯದ ಸಂಚಿತ ನಿಧಿಯೊಳಗಿನಿಂದ ವಿನಿಯೋಗಿಸಲು ಸಂವಿಧಾನದ 204ನೇ ಅನುಚ್ಛೇದದ ಉಪಬಂಧಗಳಿಗನುಸಾರವಾಗಿ ಈ ವಿಧೇಯಕವನ್ನು ಮಂಡಿಸಲಾಯಿತು. ನಂತರ ವಿಧೇಯಕವನ್ನು ಅಂಗೀಕರಿಸಲಾಯಿತು.  

ವಾರ್ತಾ ಭಾರತಿ 26 Mar 2026 8:59 pm