ಏರ್ ಆ್ಯಂಬುಲೆನ್ಸ್ ಪತನ | 8 ಲಕ್ಷ ಸಾಲ ಮಾಡಿ ವಿಮಾನವನ್ನು ಬಾಡಿಗೆಗೆ ಪಡೆದಿದ್ದ ಕುಟುಂಬ!
► ಘಟನೆಗೆ ಹವಾಮಾನ ವೈಪರೀತ್ಯವೇ ಕಾರಣ?
ಲಿಂಗಸುಗೂರು: ಈಜಲು ಹೋಗಿದ್ದ ಯುವಕ ಕೆರೆಯಲ್ಲಿ ಮುಳುಗಿ ಮೃತ್ಯು
ಲಿಂಗಸುಗೂರು, ಫೆ.24: ತಾಲೂಕಿನ ಖೈರವಾಡಗಿ ಗ್ರಾಮದ ಕೆರೆಯಲ್ಲಿ ಈಜಲು ತೆರಳಿದ್ದ ಯುವಕ ನೀರುಪಾಲಾಗಿದ್ದು, ಇಂದು ಮೃತದೇಹ ಪತ್ತೆಯಾಗಿದೆ. ಖೈರವಾಡಗಿ ಗ್ರಾಮದ ಪರಶುರಾಮ ಗುಂಡಪ್ಪ ಅಕ್ಕಿ (22) ಮೃತ ಯುವಕನಾಗಿದ್ದಾನೆ. ಸ್ನೇಹಿತರೊಂದಿಗೆ ಈಜಲು ತೆರಳಿದ್ದ ಆತ ದಡಕ್ಕೆ ಮರಳದೆ ನಾಪತ್ತೆಯಾಗಿದ್ದರಿಂದ ಆತಂಕಗೊಂಡ ಗೆಳೆಯರು ಪೊಲೀಸರಿಗೆ ಹಾಗೂ ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದರು. ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಲಿಂಗಸುಗೂರು ಅಗ್ನಿಶಾಮಕ ದಳದ ಸಿಬ್ಬಂದಿ ಶೋಧ ಕಾರ್ಯಾಚರಣೆ ನಡೆಸಿದರು. ನಿರಂತರ ಶೋಧದ ಬಳಿಕ ಯುವಕನ ಮೃತದೇಹ ಪತ್ತೆಯಾಗಿ, ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಈ ಸಂಬಂಧ ಮುದಗಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಶೋಧ ಕಾರ್ಯಾಚರಣೆ ವೇಳೆ ಪಿಎಸ್ಐ ವೆಂಕಟೇಶ ಮಾಡಗಿರಿ ಸೇರಿದಂತೆ ಪೊಲೀಸ್ ಸಿಬ್ಬಂದಿ ಸ್ಥಳದಲ್ಲಿ ಉಪಸ್ಥಿತರಿದ್ದರು.
ಪ್ರಶ್ನೆಗಳಿಗೆ ಉತ್ತರಿಸಲಾಗದೇ ಅರ್ಧಲ್ಲೇ ಕಾರ್ಯಕ್ರಮ ಮೊಟಕುಗೊಳಿಸಿ ತೆರಳಿದ ಚಿತ್ರತಂಡ
Shivamogga |ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಯ ಕೊಲೆ ಪ್ರಕರಣ; ಪರಿಹಾರ ಘೋಷಿಸಿದ ಸಿಎಂ ಸಿದ್ದರಾಮಯ್ಯ
ಶಿವಮೊಗ್ಗ: ಶಿವಮೊಗ್ಗದ ಬಡಾವಣೆಯೊಂದರಲ್ಲಿ ನಡೆದ 10ನೇ ತರಗತಿಯ ಅಪ್ರಾಪ್ತ ಬಾಲಕನ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರವು ಮೃತನ ಕುಟುಂಬಕ್ಕೆ ಪರಿಹಾರ ಘೋಷಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದೂರವಾಣಿ ಕರೆ ಮೂಲಕ ಸಂತ್ರಸ್ತ ಕುಟುಂಬಕ್ಕೆ ಸಾಂತ್ವನ ಹೇಳಿದ್ದು, ಒಟ್ಟು 15 ಲಕ್ಷ ರೂಪಾಯಿಗಳ ಆರ್ಥಿಕ ನೆರವು ನೀಡುವುದಾಗಿ ಭರವಸೆ ನೀಡಿದ್ದಾರೆ. ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಅವರು ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರ ಸೂಚನೆಯ ಮೇರೆಗೆ ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಘೋಷಿತ ಪರಿಹಾರದಲ್ಲಿ 10 ಲಕ್ಷ ರೂಪಾಯಿಗಳು ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಹಾಗೂ ಉಳಿದ 5 ಲಕ್ಷ ರೂಪಾಯಿಗಳನ್ನು ಶಿಕ್ಷಣ ಇಲಾಖೆಯ ವತಿಯಿಂದ ನೀಡಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ. ಹತ್ಯೆ ನಡೆದ ಬಡಾವಣೆ ಸೇರಿದಂತೆ ನಗರದಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ. ಮುಂಬರುವ ಜಾತ್ರೆ ಹಾಗೂ ಹಬ್ಬಗಳ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
ಕಾಡು ಪ್ರಾಣಿ ಡಿಕ್ಕಿ: ಬೈಕ್ ಸವಾರ ಸಾವು, ಮಗನ ಶವ ಕಂಡು ಜೀವ ಬಿಟ್ಟ ತಂದೆ
ಶಿವಮೊಗ್ಗ: ವಿಧಿಯಾಟ ಬಲ್ಲವರಾರು ಎಂಬ ಮಾತಿನಂತೆ ಒಂದೇ ಒಂದು ಕ್ಷಣದ ಅಂತರದಲ್ಲಿ ಇಡೀ ಕುಟುಂಬವೇ ಅನಾಥವಾಗಿರುವ ಅತ್ಯಂತ ಹೃದಯವಿದ್ರಾವಕ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ರಾತ್ರಿ ಪಾಳಯದ ಕೆಲಸ ಮುಗಿಸಿಕೊಂಡು ಮನೆಗೆ ಮರಳುತ್ತಿದ್ದ ಯುವಕನ ಬೈಕ್ಗೆ ಕಾಡು ಪ್ರಾಣಿಯೊಂದು ಡಿಕ್ಕಿ ಹೊಡೆದ ಪರಿಣಾಮ ಆತ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಹೆತ್ತ ಮಗನ ಶವವನ್ನು ನೋಡಿ ತೀವ್ರ
ಅಸ್ಸಾಂ ಚುನಾವಣೆ 2026: 'ಹಿಮಂತ ಯಾರು?' ತಂದೆ ಹಾದಿಯಲ್ಲಿ ಮಗ ಗೌರವ್ ಗೊಗೊಯ್, ಬಿಜೆಪಿಗೆ ಬಿಸ್ವಾ ವರದಾನ
ಅಸ್ಸಾಂ ವಿಧಾನಸಭಾ ಚುನಾವಣೆ 2026 ಹಿನ್ನೆಲೆ ರಾಜ್ಯದಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಯಾರು ಈ ಹಿಮಂತ ಬಿಸ್ವಾ ಶರ್ಮಾ? ಎಂದು ಪ್ರಶ್ನಿಸುವ ಮೂಲಕ ಕಾಂಗ್ರೆಸ್ ಸಂಸದ ಗೌರವ್ ಗೊಗೊಯ್ ಅವರು ಅಸ್ಸಾಂ ರಾಜಕೀಯದಲ್ಲಿ ಹೊಸ ಸಂಚಲನ ಮೂಡಿಸಿದ್ದಾರೆ. ಸಂಸದರ ತಂದೆ ದಿವಂಗತ ಮಾಜಿ ಮುಖ್ಯಮಂತ್ರಿ ತರುಣ್ ಗೊಗೊಯ್ ಅವರು 2011ರ ಚುನಾವಣೆಯ ಸಮಯದಲ್ಲಿ ಯಾರು ಈ ಬದ್ರುದ್ದೀನ್
ಸುಪ್ರೀಂ ಕೋರ್ಟ್ ಯುವಜನರಿಗೆ ನೀಡಿರುವ ಎಚ್ಚರಿಕೆ ಏಕೆ ಸಮಯೋಚಿತ?
ವಿವಾಹಪೂರ್ವ ದೈಹಿಕ ಸಂಬಂಧಗಳ ಬಗ್ಗೆ ಸುಪ್ರೀಂ ಕೋರ್ಟ್ ಇತ್ತೀಚೆಗೆ ಎಚ್ಚರಿಕೆ ನೀಡಿದೆ. ಸಂಬಂಧಗಳು ಆತುರದಲ್ಲಿ ಬೆಳೆಯುವ ಮತ್ತು ಬದ್ಧತೆ ಕಡಿಮೆಯಿರುವ ಈ ಹೊತ್ತಿನಲ್ಲಿ ಸುಪ್ರೀಂ ಕೋರ್ಟ್ ಯುವಜನರಿಗೆ ನೀಡಿರುವ ಎಚ್ಚರಿಕೆ ಬಹಳ ಮುಖ್ಯವಾಗಿ ಕಾಣುತ್ತಿದೆ. ಯುವಕರು ಮತ್ತು ಯುವತಿಯರಿಗೆ ಎಚ್ಚರಿಕೆ ನೀಡಿರುವ ಕೋರ್ಟ್, ಒಬ್ಬ ಹುಡುಗ ಮತ್ತು ಹುಡುಗಿ ಮದುವೆಗೆ ಮೊದಲು ಸಂಪೂರ್ಣ ಅಪರಿಚಿತರಂತೆ ಇರುವುದು ಒಳ್ಳೆಯದು ಮತ್ತು ವಿವಾಹಪೂರ್ವ ಸಂಬಂಧಗಳಲ್ಲಿ ತೊಡಗಿಸಿಕೊಳ್ಳುವ ಮೊದಲು ಎಚ್ಚರಿಕೆ ಅಗತ್ಯ ಎಂದಿದೆ. ಮದುವೆಗೆ ಮೊದಲು ದೈಹಿಕ ಸಂಬಂಧದಿಂದ ದೂರವಿರುವುದು ಸೂಕ್ತ ಎಂದು ನ್ಯಾಯಾಧೀಶರಾದ ಬಿ.ವಿ. ನಾಗರತ್ನ ಮತ್ತು ಉಜ್ಜಲ್ ಭುಯಾನ್ ಅವರನ್ನೊಳಗೊಂಡ ಪೀಠ ಹೇಳಿದೆ. ಮದುವೆಯ ಸುಳ್ಳು ಭರವಸೆ ನೀಡಿ ಅತ್ಯಾಚಾರ ಎಸಗಿದ ಆರೋಪ ಹೊತ್ತಿರುವ ವ್ಯಕ್ತಿಯೊಬ್ಬರ ಜಾಮೀನು ಅರ್ಜಿ ವಿಚಾರಣೆ ವೇಳೆ, ಸುಪ್ರೀಂ ಕೋರ್ಟ್ ಈ ಅಭಿಪ್ರಾಯ ವ್ಯಕ್ತಪಡಿಸಿದೆ. ಮದುವೆಗೆ ಮೊದಲು ಪರಸ್ಪರರು ಸಂಪೂರ್ಣ ಅಪರಿಚಿತರಾಗಿರುತ್ತಾರೆ ಎಂಬುದನ್ನು ಮರೆಯಬಾರದು ಎಂದು ಕೋರ್ಟ್ ಹೇಳಿದೆ. ಸಂಬಂಧ ಎಷ್ಟೇ ಗಾಢವಾಗಿದ್ದರೂ, ವಿವಾಹಕ್ಕೂ ಮುನ್ನ ಇಂತಹ ದೈಹಿಕ ಸಂಬಂಧಗಳಲ್ಲಿ ತೊಡಗುವುದು ಅಪಾಯಕಾರಿ ಎಂಬ ಎಚ್ಚರಿಕೆಯನ್ನು ಕೋರ್ಟ್ ನೀಡಿದೆ. ಮದುವೆಯಾಗುವುದಾಗಿ ನಂಬಿಸಿದ್ದ ವ್ಯಕ್ತಿಯ ಜೊತೆ ಮಹಿಳೆ ದುಬೈಗೆ ಜೊತೆಯಾಗಿ ಪ್ರಯಾಣಿಸಿದ್ದಾಗ, ಅಲ್ಲಿ ಆತ ಮದುವೆಯಾಗುವ ಭರವಸೆ ನೀಡಿ ದೈಹಿಕ ಸಂಬಂಧ ಬೆಳೆಸಿದ್ದಾಗಿ ದೂರಲಾಗಿದೆ. ಆತನೊಂದಿಗೆ ದುಬೈಗೆ ಪ್ರಯಾಣಿಸುವಷ್ಟು ಮಟ್ಟಿಗೆ ಆಕೆ ಅವನನ್ನು ನಂಬಿದ್ದಾದರೂ ಹೇಗೆ ಎಂಬ ಪ್ರಶ್ನೆಯನ್ನು ಕೂಡ ಕೋರ್ಟ್ ಎತ್ತಿದೆ. ಪ್ರಕರಣದ ಸ್ವರೂಪವನ್ನು ಗಮನಿಸಿದ ಪೀಠ, ಇದು ಮೇಲ್ನೋಟಕ್ಕೆ ಪರಸ್ಪರ ಒಪ್ಪಿಗೆಯಿಂದ ನಡೆದ ಸಂಬಂಧದಂತೆ ಕಾಣುತ್ತಿದೆ ಎಂದು ಅಭಿಪ್ರಾಯಪಟ್ಟಿದೆ. ಒಂದು ವೇಳೆ ಮದುವೆಯ ವಿಚಾರದಲ್ಲಿ ಅಷ್ಟೊಂದು ಕಟ್ಟುನಿಟ್ಟು ಪಾಲಿಸುವುದಾಗಿದ್ದರೆ ಮದುವೆಗೆ ಮೊದಲೇ ದುಬೈಗೆ ಹೋಗುವ ಅಗತ್ಯವಿರಲಿಲ್ಲ ಎಂದು ನ್ಯಾಯಮೂರ್ತಿ ನಾಗರತ್ನಾ ಹೇಳಿದ್ದಾರೆ. ನಾವು ಹಳೆಯ ಸಂಪ್ರದಾಯದವರಾಗಿರಬಹುದು. ಆದರೆ, ಸಂಬಂಧ ಎಷ್ಟೇ ಗಾಢವಾಗಿದ್ದರೂ, ಮದುವೆಗೆ ಮುನ್ನ ದೈಹಿಕ ಸಂಬಂಧದಲ್ಲಿ ತೊಡಗಿಸಿಕೊಳ್ಳಲು ಹೇಗೆ ಒಬ್ಬರಿಗೊಬ್ಬರು ಒಪ್ಪಿಕೊಳ್ಳುತ್ತಾರೆ ಎನ್ನುವುದು ಅರ್ಥವಾಗುತ್ತಿಲ್ಲ ಎಂದು ನ್ಯಾಯಮೂರ್ತಿ ನಾಗರತ್ನಾ ಹೇಳಿದ್ದಾರೆ. ನಾವು ಹಳೆಯ ಕಾಲದವರೇ ಆಗಿರಬಹುದು. ಆದರೆ ನೀವು ತುಂಬಾ ಜಾಗರೂಕರಾಗಿರಬೇಕು, ಮದುವೆಗೆ ಮೊದಲು ಯಾರೂ ಯಾರನ್ನೂ ನಂಬಬಾರದು ಎಂದು ಅವರು ಯುವಜನರಿಗೆ ಎಚ್ಚರಿಕೆ ನೀಡಿದ್ದಾರೆ. ಅಲ್ಲದೆ, ಇಂತಹ ಪ್ರಕರಣಗಳಲ್ಲಿ ಕೇವಲ ಶಿಕ್ಷೆಯ ಮೇಲೆ ಗಮನಹರಿಸುವ ಬದಲು, ಮಧ್ಯಸ್ಥಿಕೆ ಮೂಲಕ ಪರಿಹಾರ ಕಂಡುಕೊಳ್ಳುವುದು ಸೂಕ್ತ ಎಂದು ಸಲಹೆ ನೀಡಿದ್ದಾರೆ. ಯಾರನ್ನೂ ಮದುವೆಗೆ ಮುಂಚಿತವಾಗಿ ಕುರುಡಾಗಿ ನಂಬಬಾರದು ಎಂದು ಎಚ್ಚರಿಸಿರುವ ಕೋರ್ಟ್, ಆರೋಪಿ ಮತ್ತು ಸಂತ್ರಸ್ತೆ ನಡುವೆ ಸಂಧಾನದ ಸಾಧ್ಯತೆಗಳ ಬಗ್ಗೆ ಪರಿಶೀಲಿಸಲು ಸೂಚಿಸಿದೆ. ಸುಪ್ರೀಂ ಕೋರ್ಟ್ ಇಲ್ಲಿ ಸ್ವತಃ ಶಿಕ್ಷೆ ನೀಡಲು ನಿರಾಕರಿಸಿದ್ದು, ಸಂಧಾನದ ದಾರಿಯನ್ನು ಸೂಚಿಸಿದೆ ಎಂಬುದನ್ನು ಗಮನಿಸಬೇಕು. ಸಮಾಜದಲ್ಲಿ ಶಾಂತಿ ಮತ್ತು ನೈತಿಕತೆ ಬಯಸುವ ಯಾರಿಗೇ ಆದರೂ ಸುಪ್ರೀಂ ಕೋರ್ಟ್ನ ಈ ಎಚ್ಚರಿಕೆ ಸಮಯೋಚಿತ ಮತ್ತು ಪ್ರಸ್ತುತ ಎಂದು ಸಹಜವಾಗಿಯೇ ಅನ್ನಿಸುತ್ತದೆ. ಅದರಲ್ಲೂ ಅಕ್ರಮ ಸಂಬಂಧಗಳು ಹೆಚ್ಚಾಗಿ ಕುಟುಂಬಗಳು ಒಡೆಯುವ, ಸಾಮಾಜಿಕ ಅವ್ಯವಸ್ಥೆ ತಲೆದೋರುತ್ತಿರುವ, ಕೊಲೆಗಳಂಥ ಅಪರಾಧ ನಡೆಯುತ್ತಿರುವ ಹೊತ್ತಿನಲ್ಲಿ ವಹಿಸಬೇಕಾದ ಎಚ್ಚರಿಕೆಯ ಬಗ್ಗೆ ಈ ತೀರ್ಪು ನೆನಪಿಸುತ್ತದೆ. ಉದಾರವಾದ ಮತ್ತು ಪ್ರಗತಿಪರತೆಯ ಸೋಗಿನಲ್ಲಿ ನಡೆಯುತ್ತಿರುವ ಲೈಂಗಿಕ ಅವ್ಯವಸ್ಥೆಯ ಬಗ್ಗೆ ಕಂಡರೂ ಕಾಣದಂತಿರಲು ಸಾಧ್ಯವಿಲ್ಲ. ಹಾಗೆ ನಟಿಸುವುದು ಆತ್ಮವಂಚನೆಗೆ ಸಮಾನವಾಗುತ್ತದೆ. ಸಾಂಪ್ರದಾಯಿಕ ಕುಟುಂಬ ಸಂಬಂಧಗಳಲ್ಲಿ ಬದಲಾವಣೆಗಳು ಒಂದು ನಿರ್ದಿಷ್ಟ ಮಟ್ಟಿಗೆ ಸಹಜ. ಆದರೆ ಯಾರನ್ನೋ ಇಷ್ಟಪಟ್ಟು ಮಕ್ಕಳು ಓಡಿಹೋಗುವ ಪ್ರವೃತ್ತಿ ಹೆಚ್ಚುತ್ತಿದೆ. ಹೆತ್ತವರನ್ನು, ಕಷ್ಟಪಟ್ಟು ಬೆಳೆಸಿದ ಪೋಷಕರನ್ನು ಧಿಕ್ಕರಿಸಿ ಅಥವಾ ಅವರಿಗೆ ತಿಳಿಸದೆ ಹೋಗುವ ಆತಂಕಕಾರಿ ಮಟ್ಟವನ್ನು ಯುವಜನತೆ ಮುಟ್ಟಿದೆ. ಕಡೆಗೆ, ಎಲ್ಲವನ್ನೂ ಕಳೆದುಕೊಂಡಾಗ ಆತ್ಮಹತ್ಯೆಯಲ್ಲಿ ಮುಗಿದುಹೋಗುವ ದುರಂತವನ್ನೂ ನೋಡುತ್ತಿದ್ದೇವೆ. ಇದೆಲ್ಲವೂ ಯೋಚಿಸದೆ, ವಿವೇಚನೆಯಿಲ್ಲದೆ, ಆತುರದಲ್ಲಿ, ಎಂಥದೋ ಆಕರ್ಷಣೆಯಲ್ಲಿ ತೆಗೆದುಕೊಂಡ ನಿರ್ಧಾರದ ಘೋರ ಪರಿಣಾಮಗಳಾಗಿರುತ್ತವೆ. ಕಡೆಗೆ ಒಂದು ತಪ್ಪು ನಿರ್ಧಾರ ಕಡೆಯವರೆಗೂ ದೊಡ್ಡ ಗಾಯವಾಗಿ ಕಾಡುವ, ಆ ಹೊರೆ ಹೊತ್ತುಕೊಂಡೇ ಬದುಕುವ ಸ್ಥಿತಿಯೂ ಇದೆ. ಭವಿಷ್ಯದ ಪರಿಣಾಮಗಳನ್ನು ಯೋಚಿಸದೆ, ಯುವಕರು ಮತ್ತು ಯುವತಿಯರು ಮದುವೆಗೆ ಮೊದಲೇ ದೈಹಿಕ ಸಂಬಂಧ ಹೊಂದುತ್ತಾರೆ. ಕಡೆಗೆ ವಿಷಯ ಬೇರೆಯದೇ ತಿರುವು ಪಡೆದಾಗ, ದಿಕ್ಕು ತೋಚದಂತಾಗುತ್ತಾರೆ. ಮದುವೆಯಾಗುವುದಾಗಿ ನಂಬಿಸಿದವನು ಕೈಕೊಟ್ಟು ಯುವತಿಯನ್ನು ತಿರಸ್ಕರಿಸಿದ ಎಷ್ಟೋ ಘಟನೆಗಳಿವೆ. ಆಗ ಬೇರೆ ದಾರಿ ಕಾಣದೆ ವಂಚನೆಗೊಳಗಾದ ಯುವತಿ ಕೋರ್ಟ್ ಮೆಟ್ಟಿಲು ಹತ್ತುತ್ತಾಳೆ. ದ್ರೋಹವಾಗಿದೆ ಎಂದು ದೂರಿ, ತನಗಾದ ವಂಚನೆಗೆ ಕಾನೂನಾತ್ಮಕ ಪರಿಹಾರ ಪಡೆಯುವುದು ಒಂದು ಮಾರ್ಗ. ಆದರೆ, ತೀರ್ಪು ಎಲ್ಲರ ವಿಷಯದಲ್ಲೂ ಒಂದೇ ರೀತಿ ಇರುವುದಿಲ್ಲ. ಒಮ್ಮೊಮ್ಮೆ ತಡವಾಗಿ ಬರುವ ತೀರ್ಪು ವಂಚನೆಗೊಳಗಾದವಳ ಪರವಾಗಿಲ್ಲದಿದ್ದರೆ, ಅಲ್ಲಿಗೆ ಆಕೆ ದೊಡ್ಡ ಸಂಕಟ ಎದುರಿಸಬೇಕಾಗುತ್ತದೆ. ಮೇಲ್ಮನವಿ ಎಂದೆಲ್ಲ ಕೋರ್ಟ್ಗೆ ಅಲೆಯುವುದರಲ್ಲೇ ಹಲವು ವರ್ಷಗಳು ಕಳೆದುಹೋಗಬಹುದು. ಅಂತಿಮ ತೀರ್ಪು ಕೂಡ ಅವಳ ಪರವಾಗಿರದೇ ಹೋದರೆ, ಅವಳ ಜೀವನ ಸರಿಪಡಿಸಲಾಗದಷ್ಟು ಹಾನಿಗೊಳಗಾಗಬಹುದು. ಸುಪ್ರೀಂ ಕೋರ್ಟ್ ಈಗ ನೀಡಿರುವ ಎಚ್ಚರಿಕೆ ಇಂಥ ಸಂಕಟದ ಸ್ಥಿತಿಯನ್ನು ಗಮನದಲ್ಲಿ ಇಟ್ಟುಕೊಂಡಿದೆ. ಪ್ರತಿಯೊಂದು ಸಂಬಂಧವೂ ಹೀಗೆ ಕೆಟ್ಟದಾಗಿ ಕೊನೆಗೊಳ್ಳುತ್ತದೆ ಎಂದೇನಲ್ಲ. ಆದರೂ, ಅನೇಕರು ಇಂತಹ ದುಃಖಕರ ಸ್ಥಿತಿಯನ್ನು ಅನುಭವಿಸಿದ ಸಾಕಷ್ಟು ಉದಾಹರಣೆಗಳಿವೆ. ಹಾಗಾಗಿಯೇ, ಕೋರ್ಟ್ ತನ್ನದು ಹಳೆಯ ಕಾಲದ ಆಲೋಚನೆಯಾಗಿರಬಹುದು ಎಂದು ಹೇಳಿಕೊಳ್ಳುತ್ತಲೇ, ಯುವಜನತೆ ಎಚ್ಚರದಿಂದ ಬದುಕಿನಲ್ಲಿ ಹೆಜ್ಜೆ ಇಡಬೇಕೆಂದು ಸೂಚಿಸಿದೆ. ಅಕ್ರಮ ಸಂಬಂಧಗಳಿಂದ ಜನಿಸಿದ ಶಿಶುಗಳನ್ನು ನಿರ್ದಯವಾಗಿ ಕೊಲ್ಲುವುದು, ತ್ಯಜಿಸುವುದು ಇಂಥ ವರದಿಗಳು ಎಲ್ಲೆಡೆಯಿಂದಲೂ ಪ್ರತಿದಿನ ಬರುತ್ತಲೇ ಇರುತ್ತವೆ. ಹೊಸ ಕಾಲದವರು ಎಂದುಕೊಳ್ಳುತ್ತ, ಸ್ವಾತಂತ್ರ್ಯದ ಹೆಸರಲ್ಲಿ ಸ್ವತಃ ಶೋಷಣೆಗೆ ತುತ್ತಾಗಿ ಜೀವನದುದ್ದಕ್ಕೂ ಪರಿತಾಪ ಪಡಬೇಕಾದ ಸ್ಥಿತಿ ತಂದುಕೊಳ್ಳಬಾರದು ಎಂಬ ಎಚ್ಚರಿಕೆ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪಿನಲ್ಲಿದೆ. ಬದುಕಿನಲ್ಲಿ ಮುಂದಿನ ಹೆಜ್ಜೆ ಇಡಬೇಕಾದ ಕಾಳಜಿ ಮತ್ತು ಒಂದು ನೈತಿಕ ಎಚ್ಚರ ಅಗತ್ಯ. ಇದಿಲ್ಲದೆ ಹೋದಾಗ ಇಡೀ ಬದುಕೇ ಸೂತ್ರ ಹರಿದ ಗಾಳಿಪಟವಾಗಬಹುದು. ಬದುಕು ಹಾಗಾಗಲು ಬಿಡಬೇಡಿ ಎಂಬ ಎಚ್ಚರವನ್ನೂ ಕೋರ್ಟ್ ಈ ಮೂಲಕ ಯುವಜನತೆಗೆ ಸ್ಪಷ್ಟವಾಗಿ ಹೇಳಿದೆ. ಸಂಪ್ರದಾಯ ಎನ್ನುವುದು ಮೌಢ್ಯವಾಗಿದ್ದರೆ ಅದನ್ನು ಮೀರುವುದು ಸರಿ. ಆದರೆ ಅದು ನೈತಿಕ ಚೌಕಟ್ಟನ್ನು ಸೂಚಿಸುತ್ತಿದ್ದರೆ, ಅದನ್ನು ಅರ್ಥ ಮಾಡಿಕೊಳ್ಳುವುದು ಮುಖ್ಯ. ಯಾಕೆಂದರೆ, ನೈತಿಕ ಚೌಕಟ್ಟನ್ನು ಮೀರಿದರೆ, ಮೌಲ್ಯ ಎನ್ನುವುದು ಮರೆತುಹೋಗುತ್ತದೆ. ಅದು ತಮ್ಮನ್ನೇ ತಾವು ಬಚಾವು ಮಾಡಿಕೊಳ್ಳಲಾಗದ ಅತಿರೇಕಕ್ಕೆ ಯುವಜನತೆಯನ್ನು ತಳ್ಳಬಹುದು. ಹಾಗಾಗಿಯೇ ತಪ್ಪು ಹೆಜ್ಜೆ ತೆಗೆದುಕೊಳ್ಳದೆ, ಸಂಯಮದಿಂದಲೇ ಎಲ್ಲವನ್ನೂ ನಿಭಾಯಿಸಿದಾಗ, ಕೌಟುಂಬಿಕ ಸಂಬಂಧವೂ ಗಟ್ಟಿಯಾಗುತ್ತದೆ, ಸಮಾಜದ ಕ್ಷೇಮವೂ ಸಾಧ್ಯವಿದೆ.
Heat Wave: ಕರ್ನಾಟಕಕ್ಕೆ ಶಾಖದ ಅಲೆಯ ಭೀತಿ; ಸುಡುವ ಬಿಸಿಲಿನಿಂದ ನಿಮ್ಮ ಆರೋಗ್ಯ ಕಾಪಾಡಿಕೊಳ್ಳಲು ಇಲ್ಲಿದೆ ಟಿಪ್ಸ್
ಕರ್ನಾಟಕದಲ್ಲಿ ಈ ವರ್ಷದ ಬೇಸಿಗೆಯು ವಾಡಿಕೆಗಿಂತ ಹೆಚ್ಚು ಬಿಸಿಯಾಗಿರಲಿದ್ದು, ರಾಜ್ಯದ ಹಲವು ಜಿಲ್ಲೆಗಳಲ್ಲಿ ತೀವ್ರ ಶಾಖದ ಅಲೆ (Heat Wave) ಎದುರಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮುನ್ಸೂಚನೆ ನೀಡಿದೆ. ರಾಜ್ಯದಲ್ಲಿ ಈ ಬಾರಿ ಬೇಸಿಗೆಯ ತಾಪಮಾನವು ವಾಡಿಕೆಗಿಂತ 2ರಿಂದ 6 ಡಿಗ್ರಿ ಸೆಲ್ಸಿಯಸ್ ಹೆಚ್ಚಾಗುವ ಸಾಧ್ಯತೆಯಿದೆ. ಮುಖ್ಯವಾಗಿ ಉತ್ತರ ಒಳನಾಡು ಮತ್ತು ಕರಾವಳಿ ಜಿಲ್ಲೆಗಳಲ್ಲಿ
ಭ್ರಷ್ಟಾಚಾರ, ಬಾಕಿ ಪ್ರಕರಣಗಳ ರಾಶಿ, ನ್ಯಾಯಾಧೀಶರ ಕೊರತೆ: ನ್ಯಾಯಾಂಗದ 'ಕಟು ಸತ್ಯ' ಬಿಚ್ಚಿಟ್ಟ NCERT ಪಠ್ಯಪುಸ್ತಕ
ನವದೆಹಲಿ: ಭ್ರಷ್ಟಾಚಾರ, ನ್ಯಾಯಾಲಯಗಳಲ್ಲಿ ದಶಕಗಳಿಂದ ಬಾಕಿ ಉಳಿದಿರುವ ಲಕ್ಷಾಂತರ ಪ್ರಕರಣಗಳು ಮತ್ತು ಅಗತ್ಯವಿರುವಷ್ಟು ನ್ಯಾಯಾಧೀಶರ ಕೊರತೆ.. ಇವು ಭಾರತೀಯ ನ್ಯಾಯಾಂಗ ವ್ಯವಸ್ಥೆ ಪ್ರಸ್ತುತ ಎದುರಿಸುತ್ತಿರುವ ಅತ್ಯಂತ ಪ್ರಮುಖ ಸವಾಲುಗಳು ಎಂದು 8ನೇ ತರಗತಿಯ ಹೊಸ ಎನ್ಸಿಇಆರ್ಟಿ (NCERT) ಸಮಾಜ ವಿಜ್ಞಾನ ಪಠ್ಯಪುಸ್ತಕದಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ಶಾಲಾ ಹಂತದಲ್ಲಿಯೇ ವಿದ್ಯಾರ್ಥಿಗಳಿಗೆ ದೇಶದ ಪ್ರಜಾಪ್ರಭುತ್ವದ ಆಧಾರ ಸ್ತಂಭಗಳ ನೈಜ ಸ್ಥಿತಿಗತಿಗಳನ್ನು
5,00,000 ಕೋಟಿ ರೂಪಾಯಿ ಕಳೆದುಕೊಂಡ ಭಾರತೀಯ ಷೇರು ಮಾರುಕಟ್ಟೆ ಹೂಡಿಕೆದಾರರು... Stock Market
ಜಾಗತಿಕ ಷೇರು ಮಾರುಕಟ್ಟೆಯಲ್ಲಿ ಭಾರಿ ದೊಡ್ಡ ನಡುಕ ಉಂಟಾಗಿದೆ, ಇದರ ಪರಿಣಾಮ ಭಾರತ ಕೂಡ ಎದುರಿಸುವಂತೆ ಆಗಿದೆ. ಅದರಲ್ಲೂ ಭಾರತೀಯ ಷೇರುಪೇಟೆ ಇಂದು ದೊಡ್ಡ ನಷ್ಟ ಅನುಭವಿಸಿ, ಹೂಡಿಕೆದಾರರಿಗೆ ಆಘಾತ ತಂದಿದೆ. ಅಮೆರಿಕ ಅಧ್ಯಕ್ಷರ ತೆರಿಗೆ ನೀತಿ ಪರಿಣಾಮ ಇದೀಗ ಷೇರುಪೇಟೆ ಸಂಕಷ್ಟಕ್ಕೆ ಸಿಲುಕಿದ್ದು, ಇಂದು ಒಂದೇ ದಿನ 5,00,000 ಕೋಟಿ ರೂಪಾಯಿ ಕಳೆದುಕೊಂಡ ಭಾರತೀಯ ಷೇರು
ನಮ್ ಕಂಪನಿ ಕ್ಯಾರೆ ಅನ್ನಲ್ಲಾ ಗುರು..! ನಮ್ ಕಂಪನಿಗೆ ನಾವು ಇದ್ದರೆಷ್ಟು ಬಿಟ್ಟರೆಷ್ಟು? ನಮ್ ಕಂಪನಿಗೆ ನಾನಿರೋದೆ ಗೊತ್ತಿಲ್ಲ..ಇವು ಬಹುತೇಕ ಕಾರ್ಪೋರೇಟ್ ಕಂಪನಿಗಳ ಉದ್ಯೋಗಿಗಳಾಡುವ ಮಾತುಗಳು. ಇನ್ನೂ ಕೆಲವರಿಗೆ ತಮ್ಮ ಕಂಪನಿಯ ಎಂಪ್ಲಾಯ್ ಫ್ರೆಂಡ್ಲಿ ವ್ಯವಸ್ಥೆಯನ್ನು ಹೊಗಳಲು ಪದಗಳು ಸಾಲುವುದಿಲ್ಲ. ಅಮೆರಿಕದಲ್ಲೂ ಹೆಚ್ಚು ಕಡಿಮೆ ಇದೇ ವ್ಯವಸ್ಥೆ ಇದೆ. ಆದಾಗ್ಯೂ, ಟೆಕ್ ಕಂಪನಿಯೊಂದು ಡ್ರಗ್ ಲಾರ್ಡ್ ಎಲ್ ಮೆಂಚೊ ಹತ್ಯೆಯಿಂದ ಹೊತ್ತಿ ಉರಿಯುತ್ತಿರುವ ಮೆಕ್ಸಿಕೋದಿಂದ ತನ್ನ ಉದ್ಯೋಗಿಯನ್ನು ಸುರಕ್ಷಿತವಾಗಿ ಕರೆತರಲು, ಮೆಕ್ಸಿಕೋದಿಂದ ಅಮೆರಿಕಕ್ಕೆ ಬರುತ್ತಿದ್ದ ಎಲ್ಲಾ ವಿಮಾನಗಳ ಟಿಕೆಟ್ ಬುಕ್ ಮಾಡಿ ಗಮನ ಸೆಳೆದಿದೆ.
ಬಜಾಲ್ ಅಂಚೆ ಕಚೇರಿಯ ಪೋಸ್ಟ್ಮ್ಯಾನ್ ಉಮೇಶ ಅವರಿಗೆ ವಿದಾಯ ಸಮಾರಂಭ
ಮಂಗಳೂರು: ಬಜಾಲ್ ಅಂಚೆ ಕಚೇರಿಯಲ್ಲಿ ಸುಮಾರು 27 ವರ್ಷಗಳ ಕಾಲ ಡಾಕ್ ಸೇವಕ್ (ಪೋಸ್ಟ್ಮ್ಯಾನ್) ಆಗಿ ನಿಷ್ಠೆಯಿಂದ ಸೇವೆ ಸಲ್ಲಿಸಿದ ಉಮೇಶ ಅವರ ನಿವೃತ್ತಿ ಅಂಗವಾಗಿ ಸೋಮವಾರ ( ಫೆ.23) ಬಜಾಲ್ ಚರ್ಚ್ ಹಾಲ್ನಲ್ಲಿ ವಿಶೇಷ ಗೌರವ ಸಮಾರಂಭ ನಡೆಯಿತು. ಈ ಸಂದರ್ಭದಲ್ಲಿ ಉಮೇಶ ಅವರನ್ನು ಶಾಲು ಹೊದಿಸಿ, ಸನ್ಮಾನಿಸಿ, ಸ್ಮರಣಿಕೆ ಹಾಗೂ ಗೌರವಪತ್ರ ನೀಡಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಮಾತನಾಡಿದ ಹಿರಿಯ ಅಂಚೆ ಅಧೀಕ್ಷಕರಾದ ದಿನೇಶ್ ಪಿ. ಅವರು, ಉಮೇಶ್ ಅವರು ತಮ್ಮ ಸೇವಾ ಅವಧಿಯಲ್ಲಿ ನಿಷ್ಠೆ ಹಾಗೂ ಪ್ರಾಮಾಣಿಕತೆಯಿಂದ ಕೆಲಸ ನಿರ್ವಹಿಸಿದ್ದು, ವಿನಮ್ರ ಸ್ವಭಾವದ ಉತ್ತಮ ವ್ಯಕ್ತಿಯಾಗಿದ್ದಾರೆ ಎಂದು ಶ್ಲಾಘಿಸಿದರು. ಅವರ ನಿವೃತ್ತ ಜೀವನ ಸುಖಮಯವಾಗಿರಲೆಂದು ಹಾರೈಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬಜಾಲ್ ಅಂಚೆ ಕಚೇರಿಯ ಪೋಸ್ಟ್ ಮಾಸ್ಟರ್ ಪುಷ್ಪಾ ವಿನೋದ್ ಪುದು ಅವರು ಮಾತನಾಡಿ, ಪೋಸ್ಟ್ಮ್ಯಾನ್ ಕೆಲಸವು ಸುಲಭದ ಕೆಲಸವಲ್ಲ, ಬಿಸಿಲು, ಮಳೆ ಮತ್ತು ದೂರದ ಪ್ರದೇಶಗಳಲ್ಲಿಯೂ ಜನರಿಗೆ ಅಂಚೆ ಸೇವೆ ತಲುಪಿಸುವ ಮಹತ್ತರ ಜವಾಬ್ದಾರಿಯಿದೆ ಎಂದು ತಿಳಿಸಿದರು. ಆ ಜವಾಬ್ದಾರಿಯನ್ನು ಉಮೇಶ ಅವರು ಎಂದಿಗೂ ಲಘುವಾಗಿ ತೆಗೆದುಕೊಳ್ಳದೆ ಶಿಸ್ತು, ಶ್ರದ್ಧೆ ಹಾಗೂ ಪ್ರಾಮಾಣಿಕತೆಯಿಂದ ಸೇವೆ ಸಲ್ಲಿಸಿರುವುದಾಗಿ ಪ್ರಶಂಸಿಸಿದರು. ಕಾರ್ಯಕ್ರಮದಲ್ಲಿ ಮಂಗಳೂರು ದಕ್ಷಿಣ ಉಪವಿಭಾಗದ ಅಂಚೆ ನಿರೀಕ್ಷಕರಾದ ಸುಪ್ರಿಯಾ ಎಸ್. ಎನ್., ಕೊಡಿಯಾಲಬೈಲ್ ಅಂಚೆ ಕಚೇರಿಯ ಪೋಸ್ಟ್ ಮಾಸ್ಟರ್ (HSG–I) ಶೈಲೇಶ್ ಕುಮಾರ್, ಹೋಲಿ ಸ್ಪಿರಿಟ್ ಚರ್ಚ್ ಬಜಾಲ್ನ ಧರ್ಮಗುರು ಫಾ. ಲಿಯೋ ಲೋಬೋ, ನಿವೃತ್ತ ಹಿರಿಯ ಅಂಚೆ ಅಧೀಕ್ಷಕರಾದ ಟಿ.ಜಿ. ನಾಯಕ್ ಹಾಗೂ ಡಾ. ಐ.ಬಿ. ಪಲ್ಲಾಡೆ ಅವರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಚಿರಾಗ್ ಅವರು ನಿರ್ವಹಿಸಿದರು.
Shivam Dube: ಮುಸ್ಲಿಂ ಮಹಿಳೆಯನ್ನು ವಿವಾಹವಾಗಿರುವ ಶಿವಂ ದುಬೆ ರಂಜಾನ್ಗೆ ಉಪವಾಸ ಮಾಡುತ್ತಾರಾ?; ಇಲ್ಲಿದೆ ಮಾಹಿತಿ
Shivam Dube: ಟಿ20 ವಿಶ್ವಕಪ್ 2026 ಟೂರ್ನಿ ನಡುವೆಯೂ ವೈಯಕ್ತಿಕ ವಿಚಾರಲ್ಲಿ ಸಖತ್ ಸದ್ದು ಮಾಡುತ್ತಿರುವ ಭಾರತೀಯ ಕ್ರಿಕೆಟಿಗರಲ್ಲಿ ಶಿವಂ ದುಬೆ ಕೂಡ ಒಬ್ಬರಾಗಿದ್ದಾರೆ. ಅದರಲ್ಲೂ ಇದೀಗ ರಂಜಾನ್ ಸಮಯವಾಗಿದ್ದು, ಮುಸ್ಲಿಂ ಸಮುದಾಯದ ಮಹಿಳೆಯನ್ನು ವಿವಾಹ ಆಗಿರುವ ಕಾರಣ ಈ ವೇಳೆ ಅವರು ಉಪವಾಸ ಇರುತ್ತಾರಾ ಎನ್ನುವ ಪ್ರಶ್ನೆಗಳು ಎದ್ದಿವೆ. ಹಾಗಾದ್ರೆ ಈ ಕುರಿತು ವರದಿಗಳು ಹೇಳುವುದೇನು
ರೈತರೇ ಗಮನಿಸಿ ; ಫೆ. 26 ರೊಳಗಾಗಿ ಕಡ್ಡಾಯವಾಗಿ ಇ-ಕೆವೈಸಿ ಮಾಡಿಸಲು ಕೃಷಿ ಇಲಾಖೆ ಸೂಚನೆ
ಕೇಂದ್ರ ಸರಕಾರದ ಹಣಕಾಸು ಸಚಿವಾ ಲಯದ ವೆಚ್ಚ ಇಲಾಖೆಯು ಆಗ್ರಿಸ್ಟಾಕ್ ಘಟಕದಡಿ ರಾಜ್ಯದ ಎಲ್ಲಾ ಭೂ ಹಿಡುವಳಿದಾರರ ವಿವರ ಒಳಗೊಂಡ ರಾಜ್ಯ ರೈತ ನೋಂದಣಿ ಸ್ಥಾಪಿಸಲು ಯೋಜಿಸಿದೆ. ಫ್ರೂಟ್ಸ್(ರಾಜ್ಯ ರೈತ ನೋಂದಣಿ) ಹಾಗೂ ಭೂಮಿ (ಭೂ ದತ್ತಾಂಶ ವ್ಯವಸ್ಥೆ)ಯನ್ನು ಒಂದುಗೂಡಿಸ ಲಾಗುತ್ತಿದೆ. ಫ್ರೂಟ್ಸ್ ತಂತ್ರಾಂಶದಲ್ಲಿರೈತರ ಇ-ಕೆವೈಸಿ ಮತ್ತು ರೈತರ ಸಹಮತಿ ಪತ್ರವನ್ನು ವಿದ್ಯುನ್ಮಾನ ರೀತಿಯಲ್ಲಿ ತೆಗೆದುಕೊಳ್ಳುವುದು ಕಡ್ಡಾಯವಾಗಿದೆ.
Recruitment: 1600 ಅಗ್ನಿಶಾಮಕ ಹುದ್ದೆಗಳ ಭರ್ತಿ, ವಸತಿ ಗೃಹ ನಿರ್ಮಾಣ: ಜಿ. ಪರಮೇಶ್ವರ ಗುಡ್ನ್ಯೂಸ್
ಬೆಂಗಳೂರು: ಕರ್ನಾಟಕ ರಾಜ್ಯ ಅಗ್ನಿಶಾಮಕ ಮತ್ತು ತುರ್ತುಸೇವೆಗಳ ಇಲಾಖೆಯು ಉತ್ತಮ ಕೆಲಸದ ಮೂಲಕ ರಾಷ್ಟ್ರ ಮಟ್ಟದಲ್ಲಿ ಜನಮನ್ನಣೆ ಪಡೆದಿದೆ ಎಂದಿರುವ ಗೃಹ ಸಚಿವ ಡಾ. ಜಿ.ಪರಮೇಶ್ವರ ಅವರು, ಈ ವಲಯದಲ್ಲಿ ಖಾಲಿ ಇರುವ 1600 ಹುದ್ದೆಗಳ ಭರ್ತಿ, ಹೊಸ ಅಗ್ನಿಶಾಮಕ ಠಾಣೆ, ಸಿಬ್ಬಂದಿಗೆ ವಸತಿ ಗೃಹ ನಿರ್ಮಾಣ ಕುರಿತು ಗುಡ್ ನ್ಯೂಸ್ ನೀಡಿದ್ದಾರೆ. ಬೆಂಗಳೂರಿನ ಬನ್ನೇರುಘಟ್ಟ ರಸ್ತೆಯ
7 ಮಂದಿ ಪ್ರಯಾಣಿಕರಿದ್ದ ಪವನ್ ಹನ್ಸ್ ಹೆಲಿಕಾಪ್ಟರ್ ಮಾಯಾಬಂದರ್ ಬಳಿ ಸಮುದ್ರದಲ್ಲಿ ಪತನ
ಪೋರ್ಟ್ ಬ್ಲೇರ್: ಕೇಂದ್ರ ಅಂಡಮಾನ್ ದ್ವೀಪದ ಉತ್ತರ ಭಾಗದಲ್ಲಿರುವ ಪೋರ್ಟ್ ಬ್ಲೇರ್ ನಿಂದ ಟೇಕಫ್ ಆದ ಕೆಲವೇ ಕ್ಷಣಗಳಲ್ಲಿ ಪವನ್ ಹನ್ಸ್ ಹೆಲಿಕಾಪ್ಟರ್ ಸಮುದ್ರದಲ್ಲಿ ಪತನಗೊಂಡಿರುವ ಬಗ್ಗೆ ವರದಿಯಾಗಿದೆ. ಈ ಹೆಲಿಕಾಪ್ಟರ್ ನಲ್ಲಿದ್ದ ಏಳು ಮಂದಿ ಪ್ರಯಾಣಿಕರು ಕೂಡ ಸುರಕ್ಷಿತವಾಗಿದ್ದಾರೆ ಎಂದು ಹೇಳಲಾಗಿದೆ. ನ್ಯಾಷನಲ್ ಚಾಪರ್ ಕ್ಯಾರಿಯರ್ ಸಂಸ್ಥೆಗೆ ಸೇರಿದ ಹೆಲಿಕಾಪ್ಟರ್ ಮಂಗಳವಾರ ಬೆಳಗ್ಗೆ 9.30ಕ್ಕೆ ಪತನಗೊಂಡಿದೆ. ಅಂಡಮಾನ್ ಮತ್ತು ನಿಕೋಬಾರ್ ದ್ವೀಪದ ಮಾಯಾಬಂದರ್ ಬಳಿ ಕೊಂಚ ದೂರದಲ್ಲಿ ಹೆಲಿಕಾಪ್ಟರ್ ಭೂಸ್ಪರ್ಶ ಮಾಡಿದ್ದರಿಂದ ಈ ಘಟನೆ ನಡೆದಿದೆ ಎಂದು ಪವನ್ ಹನ್ಸ್ ವಕ್ತಾರರು ತಿಳಿಸಿದ್ದಾರೆ. ಇಬ್ಬರು ಸಿಬ್ಬಂದಿಗಳು ಹಾಗೂ ಐವರು ಪ್ರಯಾಣಿಕರಿದ್ದ ಹೆಲಿಕಾಪ್ಟರ್ ಪೋರ್ಟ್ ಬ್ಲೇರ್ ನಿಂದ ಹಾರಾಟ ಕೈಗೊಂಡಿತ್ತು. ಎಲ್ಲರನ್ನೂ ರಕ್ಷಿಸಲಾಗಿದ್ದು, ಅವರೆಲ್ಲರೂ ಸುರಕ್ಷಿತರಾಗಿದ್ದಾರೆ. ಯಾವುದೇ ಗಾಯಾಳು ವರದಿಯಾಗಿಲ್ಲ ಎಂದು ಹೇಳಿದ್ದಾರೆ. ಮಂಗಳವಾರ ಬೆಳಗ್ಗೆ ಸುಮಾರು 9.30 ಗಂಟೆಗೆ ಮಾಯಾಬಂದರ್ ನಲ್ಲಿ ಭೂಸ್ಪರ್ಶ ಮಾಡಬೇಕಿದ್ದ ಹೆಲಿಕಾಪ್ಟರ್ ರನ್ ವೇಗಿಂತ 300 ಮೀಟರ್ ದೂರದಲ್ಲಿ ಸಮುದ್ರಕ್ಕೆ ಪತನಗೊಂಡಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಜಾರ್ಖಂಡ್ ನ ಛಾತ್ರಾದಲ್ಲಿ ಏರ್ ಆ್ಯಂಬುಲೆನ್ಸ್ ವಿಮಾನ ಪತನಗೊಂಡ ಬೆನ್ನಲ್ಲೆ ಈ ಘಟನೆ ನಡೆದಿದೆ. ಈ ಘಟನೆಯಲ್ಲಿ ಎಲ್ಲಾ 7 ಮಂದಿ ಪ್ರಯಾಣಿಕರು ಮೃತಪಟ್ಟಿದ್ದರು.
ಸರ್ಕಾರಿ ಉದ್ಯೋಗ ನೇಮಕಾತಿ ವಿಳಂಬ ಧಾರವಾಡದಲ್ಲಿ ವಿದ್ಯಾರ್ಥಿಗಳಿಂದ ಮತ್ತೆ ಬೃಹತ್ ಪ್ರತಿಭಟನೆ
ಧಾರವಾಡ: ರಾಜ್ಯದಲ್ಲಿ ಖಾಲಿ ಇರುವ ಲಕ್ಷಾಂತರ ಸರ್ಕಾರಿ ಹುದ್ದೆಗಳನ್ನು ತಕ್ಷಣವೇ ಭರ್ತಿ ಮಾಡಬೇಕು ಹಾಗೂ ಸ್ಥಗಿತಗೊಂಡಿರುವ ನೇಮಕಾತಿ ಪ್ರಕ್ರಿಯೆಗಳನ್ನು ಕೂಡಲೇ ಆರಂಭಿಸಬೇಕು ಎಂದು ಆಗ್ರಹಿಸಿ ಧಾರವಾಡದಲ್ಲಿ ಸಾವಿರಾರು ವಿದ್ಯಾರ್ಥಿಗಳು ಹಾಗೂ ಉದ್ಯೋಗಾಕಾಂಕ್ಷಿಗಳು ಬೀದಿಗಿಳಿದು ಬೃಹತ್ ಪ್ರತಿಭಟನೆ ನಡೆಸಿದ್ದಾರೆ. ಅಖಿಲ ಕರ್ನಾಟಕ ವಿದ್ಯಾರ್ಥಿಗಳ ಸಂಘಟನೆ (ಅಕ್ಸಾ - AKSA) ಹಾಗೂ ಬಿಜೆಪಿ ನೇತೃತ್ವದಲ್ಲಿ ಧಾರವಾಡದ ಶ್ರೀನಗರ ವೃತ್ತದಿಂದ ಈ ಬೃಹತ್ ಪ್ರತಿಭಟನಾ ರ್ಯಾಲಿ ಆರಂಭವಾಗಿದೆ.
ಧುರಂಧರ್ 2 Vs ಟಾಕ್ಸಿಕ್ : ರಣವೀರ್ ಮತ್ತು ಯಶ್ ನಡುವೆ ಭರ್ಜರಿ ಪೈಪೋಟಿ? ಸಿನಿಮಾ ಪಂಡಿತರು ಹೇಳುವುದೇನು?
Dhurandhar 2 Vs Toxic : ರಣ್ವೀರ್ ಸಿಂಗ್ ಪ್ರಮುಖ ಭೂಮಿಕೆಯಲ್ಲಿರುವ ಧುರಂಧರ್ - 2 ಮತ್ತು ಯಶ್ ಅಭಿನಯದ ಟಾಕ್ಸಿಕ್ ಸಿನಿಮಾ, ಮಾರ್ಚ್ 19ರಂದು ತೆರೆಗೆ ಅಪ್ಪಳಿಸಲಿದೆ. ಯುಗಾದಿ ಮತ್ತು ಈದ್ ಹಬ್ಬದ ರಜೆ ಇರುವುದರಿಂದ, ವರ್ಷದ ಎರಡು ಬಹು ಚರ್ಚಿತ ಸಿನಿಮಾಗಳು ಒಂದೇ ದಿನ, ಬಿಡುಗಡೆಗೆ ಸಿದ್ದವಾಗಿದೆ. ಟ್ರೇಡ್ ಎಕ್ಸಪರ್ಟ್’ಗಳು ಬಾಕ್ಸಾಫೀಸ್ ನಲ್ಲಿ ಏನಾಗಬಹುದು ಎನ್ನುವುದರ ಬಗ್ಗೆ ಭವಿಷ್ಯವನ್ನು ನುಡಿಯುತ್ತಿದ್ದಾರೆ.
ಕೇರಳ ಹೆಸರನ್ನು \ಕೇರಳಂ\ ಎಂದು ಬದಲಾಯಿಸುವ ಬೇಡಿಕೆ: ಕೇಂದ್ರದಿಂದ ಗ್ರೀನ್ ಸಿಗ್ನಲ್ ಸಾಧ್ಯತೆ
ಕೇರಳ ರಾಜ್ಯದ ಹೆಸರನ್ನು ಅದರ ಮೂಲ ಮಲಯಾಳಂ ಉಚ್ಚಾರಣೆಗೆ ಅನುಗುಣವಾಗಿ 'ಕೇರಳಂ' ಎಂದು ಬದಲಾಯಿಸಬೇಕೆಂಬ ದಶಕಗಳ ಬೇಡಿಕೆಗೆ ಕೊನೆಗೂ ಚಾಲನೆ ಸಿಗುವ ಲಕ್ಷಣಗಳು ಕಾಣುತ್ತಿವೆ. ರಾಜ್ಯ ವಿಧಾನಸಭೆಯು ಸರ್ವಾನುಮತದಿಂದ ಅಂಗೀಕರಿಸಿದ್ದ ನಿರ್ಣಯಕ್ಕೆ ಕೇಂದ್ರ ಸಚಿವ ಸಂಪುಟವು ಶೀಘ್ರದಲ್ಲೇ ಅಸ್ತು ಎನ್ನುವ ಸಾಧ್ಯತೆಯಿದೆ. ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಮಂಡಿಸಿದ್ದ ಈ ನಿರ್ಣಯಕ್ಕೆ ಪ್ರತಿಪಕ್ಷಗಳು ಮಾತ್ರವಲ್ಲದೆ, ಪ್ರಸ್ತುತ ಶಾಸಕರನ್ನು
ಕಾರ್ಖಾನೆಗಳ ವಿಸ್ತರಣೆ ವಿರೋಧಿಸಿ ಕೊಪ್ಪಳದಲ್ಲಿ 2 ನೇ ಬಾರಿ ಬಂದ್ ; ಸಂಪೂರ್ಣ ಬೆಂಬಲ
ಕೊಪ್ಪಳ ಬಂದ್ಗೆ ಬೆಂಬಲ ಸೂಚಿಸಿ ಹೋಟೆಲ್ಗಳು, ಅಂಗಡಿ-ಮುಂಗಟ್ಟುಗಳು, ಖಾಸಗಿ ಶಾಲೆಗಳು, ಆಟೋ ಚಾಲಕರು, ಬೀದಿ ಬದಿ ವ್ಯಾಪಾರಸ್ಥರು, ನೇಕಾರರು ಸೇರಿದಂತೆ ಸಾವಿರಾರು ಮಂದಿ ಸ್ವಯಂ ಪ್ರೇರಿತವಾಗಿ ತಮ್ಮ ಉದ್ಯಮಗಳನ್ನು ಒಂದು ದಿನ ಸ್ಥಗಿತಗೊಳಿಸಿದರು. ಖಾಸಗಿ ಶಾಲೆಗಳಿಗೆ ರಜೆ ಘೋಷಿಸಲಾಯಿತು.
Delhi | ಇಂಜಿನ್ ವಿಫಲಗೊಂಡು ತುರ್ತು ಭೂಸ್ಪರ್ಶ ಮಾಡಿದ 150 ಮಂದಿ ಪ್ರಯಾಣಿಕರಿದ್ದ ಸ್ಪೈಸ್ ಜೆಟ್ ವಿಮಾನ
ʼಮೇ ಡೇʼ, ʼಮೇ ಡೇʼ ಎಂದು ಕೂಗಿಕೊಂಡ ಪೈಲಟ್!
► CBFCಗೆ ಕೇರಳ ಹೈಕೋರ್ಟ್ ಕಠಿಣ ಪ್ರಶ್ನೆ ►ಟೀಸರ್ ವಾಪಸ್ ಪಡೆಯಲು ಒಪ್ಪಿಕೊಂಡ ಚಿತ್ರತಂಡ
ಆಲಮೇಲ: ಕರ್ಕಶ ಹಾರ್ನ್, ಸೈಲೆನ್ಸರ್ ಹಾವಳಿ; ಕಠಿಣ ಕ್ರಮಕ್ಕೆ ಸಾರ್ವಜನಿಕರ ಆಗ್ರಹ
ಆಲಮೇಲ: ಪಟ್ಟಣ ಮತ್ತು ತಾಲೂಕಿನ ವಿವಿಧ ಪ್ರದೇಶಗಳಲ್ಲಿ ಅನಧಿಕೃತ ಸೈಲೆನ್ಸರ್ ಹಾಗೂ ಕರ್ಕಶ ಹಾರ್ನ್ಗಳ ಬಳಕೆ ಹೆಚ್ಚಾಗಿದ್ದು, ಸಾರ್ವಜನಿಕರ ನೆಮ್ಮದಿ ಭಂಗವಾಗಿದೆ. ರಸ್ತೆಯಲ್ಲಿ ಸಂಚರಿಸುವಾಗ ಏಕಾಏಕಿ ಗುಂಡು ಸಿಡಿದಂತೆಯೇ ಕೇಳಿಬರುವ ಭೀಕರ ಸದ್ದು ಜನರಲ್ಲಿ ಭಯ ಹುಟ್ಟಿಸುತ್ತಿದೆ. ತಮ್ಮ ಬೈಕ್ಗಳಿಗೆ ‘ಸ್ಟೈಲ್’ ಹೆಚ್ಚಿಸಿಕೊಳ್ಳಲು ಕೆಲ ಯುವಕರು ಕಂಪೆನಿ ನೀಡುವ ಸೈಲೆನ್ಸರ್ಗಳನ್ನು ತೆಗೆದು ಅತಿಯಾದ ಶಬ್ದ ಮಾಡುವ ಸೈಲೆನ್ಸರ್ಗಳನ್ನು ಅಳವಡಿಸಿಕೊಳ್ಳುತ್ತಿದ್ದಾರೆ. ವಿಶೇಷವಾಗಿ ಬುಲೆಟ್ ಹಾಗೂ ಹೈ-ಸ್ಪೀಡ್ ಸ್ಪೋರ್ಟ್ಸ್ ಬೈಕ್ಗಳಲ್ಲಿ ಮಲ್ಟಿ-ಟೋನ್ ಮತ್ತು ಅಧಿಕ ಡೆಸಿಬಲ್ ಹೊಂದಿರುವ ಏರ್ ಹಾರ್ನ್ಗಳ ಬಳಕೆ ಫ್ಯಾಶನ್ ಆಗಿಬಿಟ್ಟಿದೆ. ಆರೋಗ್ಯದ ಮೇಲೆ ಪರಿಣಾಮ: ಭೀಕರ ಶಬ್ದಗಳಿಂದ ವೃದ್ಧರು, ಗರ್ಭಿಣಿಯರು, ಹೃದ್ರೋಗಿಗಳು ಹಾಗೂ ಮಕ್ಕಳು ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ. ಶಾಲೆ, ಆಸ್ಪತ್ರೆ ಹಾಗೂ ನಿಶ್ಶಬ್ದ ವಲಯಗಳಲ್ಲಿಯೂ ಇಂತಹ ಕರ್ಕಶ ಶಬ್ದ ಮುಂದುವರಿಯುತ್ತಿರುವುದು ಆತಂಕಕಾರಿ ಸಂಗತಿಯಾಗಿದೆ. ‘‘ಶಾಂತವಾಗಿ ವಾಹನ ಚಲಾಯಿಸುವಾಗ ಹಿಂದಿನಿಂದ ಬರುವ ಸವಾರರು ಏಕಾಏಕಿ ಭೀಕರ ಶಬ್ದ ಮಾಡುತ್ತಾರೆ. ಇದರಿಂದ ಗಾಬರಿಯಾಗಿ ನಿಯಂತ್ರಣ ತಪ್ಪಿ ಬಿದ್ದ ಘಟನೆಗಳಿವೆ’’ ಎಂದು ಕೆಲ ವಾಹನ ಸವಾರರು ಅಳಲು ತೋಡಿಕೊಂಡಿದ್ದಾರೆ. ಒಟ್ಟಾರೆ, ಶಬ್ದ ಮಾಲಿನ್ಯ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಕಠಿಣ ಕ್ರಮ ಕೈಗೊಳ್ಳುವ ಅಗತ್ಯವಿದೆ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. ಸಾರ್ವಜನಿಕ ಮನವಿ ಏನು? ಶಬ್ದ ಮಾಲಿನ್ಯ ತಡೆಯಲು ಸಾರ್ವಜನಿಕರು ಕೆಳಕಂಡ ಕ್ರಮಗಳನ್ನು ಕೈಗೊಳ್ಳುವಂತೆ ಪೊಲೀಸ್ ಇಲಾಖೆಗೆ ಮನವಿ ಮಾಡಿದ್ದಾರೆ. ಪಟ್ಟಣ ಹಾಗೂ ತಾಲೂಕಿನಾದ್ಯಂತ ವಿಶೇಷ ಕಾರ್ಯಾಚರಣೆ ನಡೆಸಿ ಅನಧಿಕೃತ ಸೈಲೆನ್ಸರ್ ಮತ್ತು ಹಾರ್ನ್ ಹೊಂದಿರುವ ವಾಹನಗಳನ್ನು ಜಪ್ತಿ ಮಾಡಬೇಕು. ಕೇವಲ ನಾಮಮಾತ್ರದ ದಂಡವಲ್ಲದೆ, ಮೋಟಾರು ವಾಹನ ಕಾಯ್ದೆಯಡಿ ಭಾರಿ ಮೊತ್ತದ ದಂಡ ವಿಧಿಸಿ, ಪದೇಪದೇ ನಿಯಮ ಉಲ್ಲಂಘಿಸುವವರ ಪರವಾನಗಿ ರದ್ದುಪಡಿಸಬೇಕು. ನಿಷೇಧಿತ ಸೈಲೆನ್ಸರ್ ಮತ್ತು ಹಾರ್ನ್ ಗಳನ್ನು ಮಾರಾಟ ಮಾಡುವ ಮಳಿಗೆಗಳು ಹಾಗೂ ಅವುಗಳನ್ನು ಅಳವಡಿಸುವ ಗ್ಯಾರೇಜ್ಗಳ ಮೇಲೆ ದಾಳಿ ನಡೆಸಿ ಕಾನೂನು ಕ್ರಮ ಜರುಗಿಸಬೇಕು. ಕೆಲ ಯುವಕರು ಜನನಿಬಿಡ ರಸ್ತೆಗಳಲ್ಲಿ ಉದ್ದೇಶಪೂರ್ವಕವಾಗಿ ಶಬ್ದ ಮಾಡಿ ಪಾದಚಾರಿಗಳನ್ನು ಹೆದರಿಸುತ್ತಿರುವುದಾಗಿ ಸಾರ್ವಜನಿಕರು ಆರೋಪಿಸಿದ್ದಾರೆ. ಸೈಲೆನ್ಸರ್ ಹಾಗೂ ಹಾರ್ನ್ ಎರಡರ ಮೇಲೆಯೂ ಏಕಕಾಲಕ್ಕೆ ಕ್ರಮ ಕೈಗೊಳ್ಳಬೇಕು.
ಖಾಲಿ ಹುದ್ದೆಗಳ ಭರ್ತಿಗೆ ಆಗ್ರಹ: ಧಾರವಾಡದಲ್ಲಿ ಬೀದಿಗಿಳಿದ ಸಾವಿರಾರು ವಿದ್ಯಾರ್ಥಿಗಳು
ಧಾರವಾಡ: ಖಾಲಿಯಿರುವ ಸರಕಾರ ಹುದ್ದೆಗಳ ಭರ್ತಿಗೆ ಆಗ್ರಹಿಸಿ ಅಖಿಲ ಕರ್ನಾಟಕ ವಿದ್ಯಾರ್ಥಿ ಸಂಘಟನೆ AKSA) ನೇತೃತ್ವದಲ್ಲಿ ಉದ್ಯೋಗಾಕಾಂಕ್ಷಿಗಳು ಧಾರವಾಡ ನಗರದಲ್ಲಿ ಇಂದು ಧರಣಿ ನಡೆಸುತ್ತಿದ್ದಾರೆ. ಧಾರವಾಡ ಶ್ರೀನಗರ ವೃತ್ತದಲ್ಲಿ ಭಾರೀ ಸಂಖ್ಯೆಯಲ್ಲಿ ಜಮಾಯಿಸಿದ್ದ ಧರಣಿನಿರತರು ಖಾಲಿ ಇರುವ ಹುದ್ದೆಗಳನ್ನು ಕೂಡಲೇ ಭರ್ತಿ ಮಾಡುವಂತೆ ಘೋಷಣೆ ಕೂಗಿದರು. ಧರಣಿನಿರತರನ್ನು ನಿಯಂತ್ರಿಸಲು ಧಾರವಾಡ ಪೊಲೀಸರ ಹರಸಾಹಸ ಪಡುತ್ತಿದ್ದಾರೆ. ಇಂದು ಧರಣಿ ನಡೆಸಲುದ್ದೇಶಿಸಿದ್ದ ಅಖಿಲ ಕರ್ನಾಟಕ ವಿದ್ಯಾರ್ಥಿ ಸಂಘಟನೆ ಈ ಬಗ್ಗೆ ಅನುಮತಿ ಕೇಳಿದ್ದು, ಪೊಲೀಸರು ನಿರಾಕರಿಸಿದ್ದರು. ಈ ಬಗ್ಗೆ ಸಂಘಟನೆ ಹೈಕೋರ್ಟ್ ಮೊರೆ ಹೋಗಿತ್ತು. ಪೊಲೀಸರೊಂದಿಗೇ ಈ ಬಗ್ಗೆ ಚರ್ಚಿಸುವಂತೆ ಸೂಚಿಸಿದ್ದ ಹೈಕೋರ್ಟ್, ವಿಚಾರಣೆಯನ್ನು ಮಾರ್ಚ್ 3ಕ್ಕೆ ಮುಂದೂಡಿತ್ತು. ಈ ನಡುವೆ ಇಂದು ನಗರದಲ್ಲಿ ಬಿಜೆಪಿಗೆ ಪ್ರತಿಭಟನೆ ನಡೆಸಲು ಪೊಲೀಸರು ಅನುಮತಿ ನೀಡಿರುವುದು ವಿದ್ಯಾರ್ಥಿ ಸಂಘಟನೆಯನ್ನು ಕೆರಳಿಸಿತ್ತು. ಈ ಹಿನ್ನೆಲೆಯಲ್ಲಿ ಅನುಮತಿ ಇಲ್ಲದಿದ್ದರೂ ಬೀದಿಗೆ ಇಳಿದು ಧರಣಿ ನಡೆಸುತ್ತಿದ್ದಾರೆ.
ಫೆಬ್ರವರಿ 24ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ
Petrol, Diesel Price: ಪೆಟ್ರೋಲ್, ಡೀಸೆಲ್ ದರದಲ್ಲಿ ಜಾಸ್ತಿ ಅಲ್ಲದಿದ್ದರೂ, ಸ್ವಲ್ಪ ಪ್ರಮಾಣದಲ್ಲಾದರೂ, ಏರಿಳಿತ ಆಗುತ್ತಿರುತ್ತದೆ. ಹಾಗಾದರೆ, ಫೆಬ್ರವರಿ 24ರ ಮಂಗಳವಾರ ಬೆಂಗಳೂರು ಸೇರಿದಂತೆ ರಾಜ್ಯದ ಉಳಿದ ಜಿಲ್ಲೆಗಳಲ್ಲಿ ಲೀಟರ್ ಪೆಟ್ರೋಲ್, ಡೀಸೆಲ್ ಬೆಲೆ ಎಷ್ಟಿದೆ ಎನ್ನುವ ಅಂಕಿಅಂಶಗಳನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ. ಶಕ್ತಿಯ ಮೂಲಗಳು ಎನಿಸಿಕೊಂಡಿರುವ ಪೆಟ್ರೋಲ್ ಮತ್ತು ಡೀಸೆಲ್ ಇಂಧನ ಅತ್ಯವಶ್ಯಕವಾಗಿ ಬೇಕಾಗುವ ಸಂಪನ್ಮೂಲಗಳಾಗಿವೆ.
ಆಘಾತಕಾರಿ ಬೆಳವಣಿಗೆಯೊಂದರಲ್ಲಿ ಸ್ಪೈಸ್ಜೆಟ್ಗೆ ಸೇರಿದ ವಿಮಾನವೊಂದು ಹಾರಾಟದ ಮಧ್ಯದಲ್ಲಿ ಇಂಜಿನ್ ವೈಫಲ್ಯಕ್ಕೆ ಗುರಿಯಾಗಿದ್ದರಿಂದ, ಹೊಸದಿಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿದ ಘಟನೆ ನಡೆದಿದೆ. ನವದೆಹಲಿಯಿಂದ ಲೇಹ್ಗೆ ಹೊರಟಿದ್ದ ಸ್ಪೈಸ್ಜೆಟ್ ವಿಮಾನದಲ್ಲಿ ತಾಂತ್ರಿಕ ದೋಷ ಕಂಡುಬಂದ ಪರಿಣಾಮವಾಗಿ, ಏರ್ ಟ್ರಾಫಿಕ್ ಕಂಟ್ರೋಲ್ (ಎಟಿಸಿ)ಗೆ ಪೈಲಟ್ ಮೇ ಡೇ ಕಾಲ್ ಮಾಡಿ, ವಿಮಾನವನ್ನು ಮರಳಿ ದೆಹಲಿ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿಸಿದ್ದಾರೆ. ಈ ಕುರಿತು ಇಲ್ಲಿದೆ ಹೆಚ್ಚಿನ ಮಾಹಿತಿ.
ಅಮೆರಿಕ ಜೊತೆ ಒಪ್ಪಂದ ಮಾಡಿಕೊಳ್ಳದಿದ್ದರೆ ಇರಾನ್ ವಿರುದ್ಧ ಸೇನಾ ಕಾರ್ಯಾಚರಣೆ... Donald Trump
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಮತ್ತೊಮ್ಮೆ ಇರಾನ್ಗೆ ಎಚ್ಚರಿಕೆ ಸಂದೇಶ ರವಾನಿಸಿ, ಪರಮಾಣು ಒಪ್ಪಂದ ಮಾಡಿಕೊಳ್ಳದಿದ್ದರೆ ಮುಂದಿನ ಪರಿಸ್ಥಿತಿ ಎದುರಿಸಲು ಸಜ್ಜಾಗಿ ಎಂದಿದ್ದಾರೆ. ಆ ಮೂಲಕ ಅಮೆರಿಕ ಹಾಗೂ ಇರಾನ್ ನಡುವೆ ಪರಿಸ್ಥಿತಿ ಇನ್ನಷ್ಟು ಸೂಕ್ಷ್ಮ ಹಂತಕ್ಕೆ ತಲುಪಿದ್ದು, ಈ ಎರಡೂ ದೇಶಗಳ ನಡುವೆ ಯಾವುದೇ ಕ್ಷಣದಲ್ಲಿ ಯುದ್ಧ ಶುರುವಾಗುವ ಭೀತಿ ಮತ್ತೆ ಆವರಿಸಿಬಿಟ್ಟಿದೆ. ಈಗಾಗಲೇ
ಯಾದಗಿರಿ ರೈಲು ನಿಲ್ದಾಣದ ಅವ್ಯವಸ್ಥೆ ಒಂದೆರಡಲ್ಲ ..!
ಹೆಚ್ಚು ಆದಾಯ, ಕಡಿಮೆ ಮೂಲಸೌಕರ್ಯ
ಭೂಮಿಗೆ ಸಂಬಂಧಿಸಿದ ಎಲ್ಲ ಸೇವೆ ಒಂದೇ ಕಡೆ: ಯುಎಲ್ಎಂಎಸ್ ಯೋಜನೆ ಜಾರಿಗೆ ಸರ್ಕಾರ ಮಹತ್ವದ ಹೆಜ್ಜೆ
ಬೆಂಗಳೂರು: ಭೂಮಿಗೆ ಸಂಬಂಧಿಸಿದ ಸರ್ಕಾರದ ಎಲ್ಲ ಸೇವೆಗಳನ್ನು ಒಂದೇ ವ್ಯವಸ್ಥೆಯ ಅಡಿಯಲ್ಲಿ ತರಲು ಉದ್ದೇಶಿಸಿರುವ ಮಹತ್ವಾಕಾಂಕ್ಷಿ ಏಕೀಕೃತ ಭೂ ನಿರ್ವಹಣಾ ವ್ಯವಸ್ಥೆ (ULMS) ಯೋಜನೆ ಜಾರಿಗೆ ಸರ್ಕಾರ ಕ್ರಮ ಕೈಗೊಂಡಿದೆ. ಈ ಸಂಬಂಧ ಕಂದಾಯ ಸಚಿವ ಕೃಷ್ಣಬೈರೇಗೌಡ ಅವರ ಅಧ್ಯಕ್ಷತೆಯಲ್ಲಿ ಕಂದಾಯ, ನಗರಾಭಿವೃದ್ಧಿ, ನೋಂದಣಿ, ಲೋಕೋಪಯೋಗಿ, ನೀರಾವರಿ, ವಸತಿ, ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸೇರಿದಂತೆ ವಿವಿಧ
ರಾಜ್ಯದಲ್ಲಿ ಅಹಿಂದ ನಾಯಕತ್ವಕ್ಕಾಗಿ ತೆರೆಮರೆಯಲ್ಲಿ ಕಸರತ್ತು ಜೋರಾಗಿ ನಡೆಯುತ್ತಿದೆ. ಸಿದ್ದರಾಮಯ್ಯ ಬಳಿಕ ಅಹಿಂದ ನಾಯಕತ್ವ ಯಾರ ಕೈಯಲ್ಲಿ? ಎಂಬ ಪ್ರಶ್ನೆ ಎದ್ದಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ - ಸತೀಶ್ ಜಾರಕಿಹೊಳಿ ಭೇಟಿ ವೇಳೆ ಈ ಬಗ್ಗೆ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.
ದೇಶಾದ್ಯಂತ 32 ವಿಶ್ವವಿದ್ಯಾಲಯಗಳು ನಕಲಿ ಎಂದು ಘೋಷಿಸಿದ UGC: ಕರ್ನಾಟಕದ ವಿವಿ ಕೂಡ ಲಿಸ್ಟ್ನಲ್ಲಿದೆ
ನವದೆಹಲಿ: ಕಾಲೇಜು ಪ್ರವೇಶಾತಿ ಪ್ರಕ್ರಿಯೆಗಳು ಆರಂಭವಾಗುತ್ತಿರುವ ಬೆನ್ನಲ್ಲೇ ವಿಶ್ವವಿದ್ಯಾಲಯ ಧನಸಹಾಯ ಆಯೋಗ (UGC) ಅಚ್ಚರಿಯ ವರದಿಯನ್ನು ಬಹಿರಂಗಪಡಿಸಿದೆ. ಫೆಬ್ರವರಿ 2026 ರ ಹೊಸ ಅಪ್ಡೇಟ್ ಪ್ರಕಾರ, ಯುಜಿಸಿ ದೇಶಾದ್ಯಂತ ಕಾರ್ಯನಿರ್ವಹಿಸುತ್ತಿರುವ ನಕಲಿ ವಿಶ್ವವಿದ್ಯಾಲಯಗಳ (Fake Universities) ಪಟ್ಟಿಯನ್ನು ಬಿಡುಗಡೆ ಮಾಡಿದೆ. ಭಾರತದ 12 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಒಟ್ಟು 32 ಶಿಕ್ಷಣ ಸಂಸ್ಥೆಗಳನ್ನು ಅನಧಿಕೃತ ಹಾಗೂ
21 ವರ್ಷದ ಮಗನಿಗೆ ಓದುವಂತೆ ಅಪ್ಪನ ಒತ್ತಡ, 50 ವರ್ಷದ ತಂದೆಯನ್ನೇ ಮುಗಿಸಿದ ಮಗ... NEET Exam
ಅಪ್ಪ ಮತ್ತು ಮಕ್ಕಳ ಪವಿತ್ರ ಸಂಬಂಧ ಆಧುನಿಕ ಕಾಲದಲ್ಲಿ ಹಾಳಾಗಿ ಹೋಗುತ್ತಿದೆ. ಅದರಲ್ಲೂ ಈ ಹೊಸ ತಲೆಮಾರಿನ ಮಕ್ಕಳಿಗೆ ಅಪ್ಪ ಹಾಗೂ ಅಮ್ಮ ಬುದ್ಧಿ ಹೇಳಲು ಕೂಡ ಭಯಪಡುವ ವಾತಾವರಣ ಈಗ ನಿರ್ಮಾಣ ಆಗಿದೆ. ಸಣ್ಣಪುಟ್ಟ ವಿಚಾರಕ್ಕೆ ಈಗಿನ ಕಾಲದ ಮಕ್ಕಳು ಜೀವ ಕಳೆದುಕೊಳ್ಳುವ ಹಂತಕ್ಕೆ ಹೋಗುತ್ತಿದ್ದಾರೆ ಎಂಬುದು ಭಯಾನಕ ಸಂಗತಿ. ಅದರಲ್ಲೂ ಓದುವ ವಿಚಾರಕ್ಕೆ ಒತ್ತಡ
ಚಿನ್ನದ ಬೆಲೆ ಏರಲು ಕಾರಣವೇನು? ಹಣಕಾಸು ಸಚಿವರು ಹೇಳಿದ್ದೇನು?
ಅಮೆರಿಕ ಮತ್ತು ಇರಾನ್ ನಡುವಿನ ಸಂಘರ್ಷದ ಹೊರತಾಗಿಯೂ ಅಮೆರಿಕದಲ್ಲಿ ಡಾಲರ್ ಬಲಿಷ್ಠವಾಗಿರುವ ಕಾರಣದಿಂದ ಚಿನ್ನ ಮತ್ತು ಬೆಳ್ಳಿ ದರಗಳಲ್ಲಿ ಇತ್ತೀಚೆಗೆ ಹೆಚ್ಚು ಏರಿಕೆ ಕಂಡುಬರುತ್ತಿಲ್ಲ. ಫೆಬ್ರವರಿಯಲ್ಲಿ ಬಹುತೇಕ ಕುಸಿತದಲ್ಲೇ ಮುಂದುವರಿದ ಚಿನ್ನ ಮತ್ತು ಬೆಳ್ಳಿಯ ಬೆಲೆಗಳು ಫೆಬ್ರವರಿ 23 ಸೋಮವಾರದಿಂದ ಮತ್ತೆ ಏರು ಹಾದಿಯಲ್ಲಿದೆ. 15 ಸಾವಿರದಿಂದ 16 ಸಾವಿರದ ನಡುವೆ ಏರಳಿತ ಕಾಣುತ್ತಾ ಬಂದಿದ್ದ ಚಿನ್ನ, ಸೋಮವಾರ ಫೆಬ್ರವರಿಯಲ್ಲೇ ಮೊದಲ ಬಾರಿಗೆ 16 ಸಾವಿರದ ಗಡಿ ದಾಟಿದೆ. ಮಂಗಳವಾರವೂ ಚಿನ್ನದ ಬೆಲೆ ಅಲ್ಪ ಏರಿಕೆ ಕಂಡಿದೆ. ಆದರೆ ಬೆಳ್ಳಿ ಬೆಲೆಯಲ್ಲಿ ಕುಸಿತ ಕಂಡುಬಂದಿದೆ. ಅಮೆರಿಕ ಮತ್ತು ಇರಾನ್ ನಡುವಿನ ಸಂಘರ್ಷದ ಹೊರತಾಗಿಯೂ ಅಮೆರಿಕದಲ್ಲಿ ಡಾಲರ್ ಬಲಿಷ್ಠವಾಗಿರುವ ಕಾರಣದಿಂದ ಚಿನ್ನ ಮತ್ತು ಬೆಳ್ಳಿ ದರಗಳಲ್ಲಿ ಇತ್ತೀಚೆಗೆ ಹೆಚ್ಚು ಏರಿಕೆ ಕಂಡುಬರುತ್ತಿಲ್ಲ. ಆದರೆ ಈಗಾಗಲೇ ಚಿನ್ನದ ದರ ಮಿತಿಮೀರಿ ಏರಿಕೆಯಾಗಿದೆ. ಹೀಗೆ ಏರಿಕೆಯಾಗಲು ಕಾರಣವೇನು? ಸೋಮವಾರ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿರುವ ಪ್ರಕಾರ, “ಚಿನ್ನದ ದರ ಏರಿಕೆಯಾಗಿದೆ. ಆದರೆ ಮಿತಿಮೀರಿಲ್ಲ. ಸರ್ಕಾರ ಬೆಲೆ ಏರಿಕೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ. ಅಮೆರಿಕ-ಇರಾನ್ ನಡುವಿನ ಉದ್ವಿಗ್ನತೆ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೊಸ ಸುಂಕ ಬೆದರಿಕೆಗಳು ಮತ್ತು ಜಾಗತಿಕ ಭೌಗೋಳಿಕ ರಾಜಕೀಯ ಅನಿಶ್ಚಿತತೆಯಿಂದ ಹೂಡಿಕೆದಾರರು ಚಿನ್ನದತ್ತ ಮುಖ ಮಾಡಿದ್ದಾರೆ. ಚಿನ್ನವನ್ನು ಸುರಕ್ಷಿತ ಹೂಡಿಕೆಯಾಗಿ ಪರಿಗಣಿಸಲಾಗುತ್ತದೆ. ಕರೆನ್ಸಿ ಚಂಚಲತೆ, ಷೇರು ಮಾರುಕಟ್ಟೆಯ ಏರಿಳಿತಗಳ ವಿರುದ್ಧ ಚಿನ್ನದ ಮೇಲೆ ಹೂಡಿಕೆ ಹೆಚ್ಚಾಗುತ್ತಿದೆ.” ಅಲ್ಲದೆ, ವಿಶ್ವಾದ್ಯಂತ ಕೇಂದ್ರೀಯ ಬ್ಯಾಂಕುಗಳು ಅತಿಯಾಗಿ ಚಿನ್ನ ಸಂಗ್ರಹಿಸುತ್ತಿರುವುದು ಚಿನ್ನದ ಬೆಲೆ ಏರಿಕೆಗೆ ಪ್ರಮುಖ ಕಾರಣ ಎಂದು ಸೀತಾರಾಮನ್ ಹೇಳಿದ್ದಾರೆ. ಫೆಬ್ರವರಿ 24ರಂದು ಮಂಗಳವಾರ ಮಾರುಕಟ್ಟೆಗಳಲ್ಲಿ 24 ಕ್ಯಾರೆಟ್ ಶುದ್ಧ ಚಿನ್ನದ ಬೆಲೆ ಗ್ರಾಂಗೆ 43 ರೂ. ಏರಿಕೆಯಾಗಿ ಹತ್ತು ಗ್ರಾಂ ಬೆಲೆ 1,61,780 ರೂ.ಗೆ ಬಂದು ನಿಂತಿದೆ. ಆಭರಣ ಚಿನ್ನವಾದ 22 ಕ್ಯಾರೆಟ್ ಬೆಲೆಯು ಗ್ರಾಂಗೆ 40 ರೂ. ಏರಿಕೆಯಾಗಿ ಹತ್ತು ಗ್ರಾಂಗೆ 1,48,300 ರೂ.ಗೆ ತಲುಪಿದೆ. 18 ಕ್ಯಾರೆಟ್ ಚಿನ್ನವು ಪ್ರತಿ ಗ್ರಾಂಗೆ 33 ರೂ. ಏರಿಕೆಯಾಗಿ ಹತ್ತು ಗ್ರಾಂಗೆ 1,21,340 ರೂ. ಗೆ ತಲುಪಿದೆ. ಮಂಗಳೂರಿನಲ್ಲಿ ಚಿನ್ನದ ದರವೆಷ್ಟಿದೆ? ಫೆಬ್ರವರಿ 24ರಂದು ಮಂಗಳವಾರ ಬೆಳಗಿನ 11 ಗಂಟೆಯ ವಹಿವಾಟಿನಲ್ಲಿ ಮಂಗಳೂರಿನಲ್ಲಿ ಚಿನ್ನದ ಬೆಲೆ ಮತ್ತೆ ಅಲ್ಪ ಏರಿಕೆ ಕಂಡಿದೆ. ಒಂದು ಗ್ರಾಂ 24 ಕ್ಯಾರೆಟ್ ಚಿನ್ನದ ದರ 16,178 (+43) ರೂ. ನಷ್ಟಿದೆ. ಒಂದು ಗ್ರಾಂ 22 ಕ್ಯಾರೆಟ್ ಚಿನ್ನದ ದರ 14,830 (+40) ರೂ. ಮತ್ತು ಒಂದು ಗ್ರಾಂ 18 ಕ್ಯಾರೆಟ್ ಚಿನ್ನದ ದರ 12,134 (+33) ರೂ. ಬೆಲೆಗೆ ತಲುಪಿದೆ. ಮತ್ತೆ ಕುಸಿದ ಬೆಳ್ಳಿ ದರ ಫೆಬ್ರವರಿ ಆರಂಭದಿಂದಲೇ ಸತತ ಕುಸಿತ ಕಂಡಿದ್ದ ಬೆಳ್ಳಿ ಫೆಬ್ರವರಿ 19ರ ಗುರುವಾರದಿಂದ ಬೆಳ್ಳಿ ಏರುಹಾದಿಯಲ್ಲಿತ್ತು. ಗುರುವಾರ ಮತ್ತು ಶುಕ್ರವಾರ ಕೆಜಿಗೆ 2,70,000 ರೂ. ಗೆ ಸ್ಥಿರವಾಗಿ ನಿಂತಿದ್ದ ಬೆಳ್ಳಿ ಬೆಲೆ, ಶನಿವಾರ 5 ರೂ. ಏರಿಕೆಯಾಗಿ 2,75,000ಗೆ ಬಂದು ತಲುಪಿತ್ತು. ನಂತರ ಸೋಮವಾರ ಬರೋಬ್ಬರಿ ಪ್ರತಿ ಗ್ರಾಂಗೆ 25 ರೂ. ಏರಿಕೆ ಕಂಡ ಚಿನ್ನ ಅಂತಿಮವಾಗಿ ಕೆಜಿಗೆ 3,00,000ಕ್ಕೆ ತಲುಪಿತ್ತು. ಆದರೆ ಇದೀಗ ಮಂಗಳವಾರ ಪ್ರತಿ ಗ್ರಾಂಗೆ 15 ರೂ. ಕುಸಿದು ಕೆಜಿಗೆ 2,85,000 ರೂ.ಗೆ ತಲುಪಿದೆ. ವಿವಿಧ ನಗರಗಳಲ್ಲಿ 1 ಗ್ರಾಮ್ ಚಿನ್ನದ ದರ (ಬೆಳಗಿನ ವಹಿವಾಟು) ಹೇಗಿದೆ? ದಿಲ್ಲಿ: 24 ಕ್ಯಾರೆಟ್ ಚಿನ್ನದ ದರ 16,193 (+43) ರೂ., 22 ಕ್ಯಾರೆಟ್ ಚಿನ್ನದ ದರ 14,845 (+40) ರೂ. ಮುಂಬೈ: 24 ಕ್ಯಾರೆಟ್ ಚಿನ್ನದ ದರ 16,178 (+43) ರೂ., 22 ಕ್ಯಾರೆಟ್ ಚಿನ್ನದ ದರ 14,830 (+40) ರೂ. ಅಹಮದಾಬಾದ್: 24 ಕ್ಯಾರೆಟ್ ಚಿನ್ನದ ದರ 16,183 (+43) ರೂ., 22 ಕ್ಯಾರೆಟ್ ಚಿನ್ನದ ದರ 14,835 (+40) ರೂ. ಚೆನ್ನೈ: 24 ಕ್ಯಾರೆಟ್ ಚಿನ್ನದ ದರ 16,244 (+33) ರೂ., 22 ಕ್ಯಾರೆಟ್ ಚಿನ್ನದ ದರ 14,890 (+30) ರೂ. ಕೋಲ್ಕತ್ತಾ: 24 ಕ್ಯಾರೆಟ್ ಚಿನ್ನದ ದರ 16,178 (+43) ರೂ., 22 ಕ್ಯಾರೆಟ್ ಚಿನ್ನದ ದರ 14,830 (+40) ರೂ. ಹೈದರಾಬಾದ್: 24 ಕ್ಯಾರೆಟ್ ಚಿನ್ನದ ದರ 16,178 (+43) ರೂ., 22 ಕ್ಯಾರೆಟ್ ಚಿನ್ನದ ದರ 14,830 (+40) ರೂ. ಜೈಪುರ: 24 ಕ್ಯಾರೆಟ್ ಚಿನ್ನದ ದರ 16,193 (+43) ರೂ., 22 ಕ್ಯಾರೆಟ್ ಚಿನ್ನದ ದರ 14,845 (+40) ರೂ. ಚಂಡೀಗಢ: 24 ಕ್ಯಾರೆಟ್ ಚಿನ್ನದ ದರ 16,193 (+43) ರೂ., 22 ಕ್ಯಾರೆಟ್ ಚಿನ್ನದ ದರ 14,845 (+40) ರೂ. ಲಕ್ನೋ: 24 ಕ್ಯಾರೆಟ್ ಚಿನ್ನದ ದರ 16,193 (+43) ರೂ., 22 ಕ್ಯಾರೆಟ್ ಚಿನ್ನದ ದರ 14,845 (+40) ರೂ.
ಮಂಗಳೂರು: ಅಲೋಶಿಯಸ್ ಕ್ಯಾಂಪಸ್ನಲ್ಲಿ 32 ಪಕ್ಷಿ ಪ್ರಭೇದಗಳ ದಾಖಲೀಕರಣ
ಮಂಗಳೂರು, ಫೆ. 24: ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾಲಯದಲ್ಲಿ ಫೆಬ್ರವರಿ 13 ರಿಂದ 16 ರವರೆಗೆ ರಾಷ್ಟ್ರವ್ಯಾಪಿ ಗ್ರೇಟ್ ಬ್ಯಾಕ್ಯಾರ್ಡ್ ಬರ್ಡ್ ಕೌಂಟ್ನ ಭಾಗವಾಗಿ ನಡೆದ ಕ್ಯಾಂಪಸ್ ಬರ್ಡ್ ಕೌಂಟ್ನಲ್ಲಿ 32 ಪಕ್ಷಿ ಪ್ರಭೇದಗಳ ದಾಖಲೀಕರಣ ನಡೆಸಲಾಗಿದೆ. ನಾಲ್ಕು ದಿನಗಳ ಜೀವವೈವಿಧ್ಯ ಸಮೀಕ್ಷೆಯು ನಗರದ ಹೃದಯಭಾಗದಲ್ಲಿರುವ ಸಂಸ್ಥೆಯ 146 ವರ್ಷ ಹಳೆಯದಾದ, 37 ಎಕರೆ ವಿಸ್ತೀರ್ಣದ ಹಸಿರು ಕ್ಯಾಂಪಸ್ನಲ್ಲಿ ನಡೆಯಿತು. ಬರ್ಡ್ ಕೌಂಟ್ ಇಂಡಿಯಾ ಇಬರ್ಡ್ ಸಹಯೋಗದೊಂದಿಗೆ ಈ ಕ್ಯಾಂಪಸ್ ಬರ್ಡ್ ಕೌಂಟ್ 2026 ನಡೆದಿದೆ. 2019ರಿಂದ ಕ್ಯಾಂಪಸ್ ಬರ್ಡ್ ಕೌಂಟ್ ಉಪಕ್ರಮದಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿರುವ ಈ ಸಂಸ್ಥೆಯು ರಾಷ್ಟ್ರೀಯ ನಾಗರಿಕ ವಿಜ್ಞಾನ ದತ್ತಸಂಚಯಗಳಿಗೆ ಸ್ಥಿರವಾಗಿ ಕೊಡುಗೆ ನೀಡುತ್ತಿದೆ. ಕ್ಯಾಂಪಸ್ ಬರ್ಡ್ ಕೌಂಟ್ 2026 ಅನ್ನು ಪ್ರಾಣಿಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಕಿರಣ್ ವಾಟಿ ಮತ್ತು ಗ್ಲಾವಿನ್ ಥಾಮಸ್ ರೊಡ್ರಿಗಸ್ ಮಾರ್ಗದರ್ಶನದಲ್ಲಿ, ಪ್ರಾಣಿಶಾಸ್ತ್ರ ವಿಭಾಗದ ಅಧ್ಯಾಪಕ ಸದಸ್ಯರು ಮತ್ತು ವಿದ್ಯಾರ್ಥಿಗಳ ಸಕ್ರಿಯ ಭಾಗವಹಿಸುವಿಕೆಯೊಂದಿಗೆ ನಡೆಸಲಾಯಿತು. ದಾಖಲಾದ ಜಾತಿಗಳಲ್ಲಿ ರಾಕ್ ಪಿಜನ್, ಗ್ರೇಟರ್ ಕೂಕಲ್, ಏಷ್ಯನ್ ಕೋಯೆಲ್ ಮತ್ತು ಏಷ್ಯನ್ ಪಾಮ್ ಸ್ವಿಫ್ಟ್ನಂತಹ ಸಾಮಾನ್ಯ ನಗರ ಮತ್ತು ಅರಣ್ಯ ಪಕ್ಷಿಗಳು ಸೇರಿವೆ. ಬ್ಲ್ಯಾಕ್ ಕೈಟ್ ಮತ್ತು ಬ್ರಾಹ್ಮಿನಿ ಕೈಟ್ ಸೇರಿದಂತೆ ರಾಪ್ಟರ್ಗಳು ಕ್ಯಾಂಪಸ್ನಲ್ಲಿರುವುದನ್ನು ಗಮನಿಸಲಾಯಿತು. ಲಿಟಲ್ ಕಾರ್ಮೊರಂಟ್ ಮತ್ತು ಈಸ್ಟರ್ನ್ ಕ್ಯಾಟಲ್ ಎಗ್ರೆಟ್ಗಳ ಉಪಸ್ಥಿತಿಯು ಕ್ಯಾಂಪಸ್ ಭೂದೃಶ್ಯದ ಪರಿಸರ ಸಂಪರ್ಕವನ್ನು ಮತ್ತಷ್ಟು ಪ್ರತಿಬಿಂಬಿಸುತ್ತದೆ. ಬಿಳಿ ಗಂಟಲಿನ ಕಿಂಗ್ಫಿಷರ್, ಬಿಳಿ ಕೆನ್ನೆಯ ಬಾರ್ಬೆಟ್, ಮಲಬಾರ್ ಫ್ಲೇಮ್ಬ್ಯಾಕ್ ಮತ್ತು ಗುಲಾಬಿ- ರಿಂಗ್ಡ್ ಪ್ಯಾರಕೀಟ್ನಂತಹ ಮರ-ವಾಸಿಸುವ ಜಾತಿಗಳನ್ನು ಸಹ ದಾಖಲಿಸಲಾಗಿದೆ. ಎಣಿಕೆಯ ಅವಧಿಯಲ್ಲಿ ಆಶಿ ಡ್ರೊಂಗೊ ಮತ್ತು ಗ್ರೀನ್ ವಾರ್ಬ್ಲರ್ ಸೇರಿದಂತೆ ವಲಸೆ ಮತ್ತು ಕಾಲೋಚಿತ ಸಂದರ್ಶಕರನ್ನು ದಾಖಲಿಸಲಾಗಿದೆ. ಕ್ಯಾಂಪಸ್ನಾದ್ಯಂತ ಹಲವಾರು ಗೂಡುಕಟ್ಟುವ ಪಕ್ಷಿಗಳನ್ನು ಗಮನಿಸಲಾಯಿತು, ಇದು ಸಕ್ರಿಯ ಸಂತಾನೋತ್ಪತ್ತಿ ಚಟುವಟಿಕೆಯನ್ನು ಸೂಚಿಸುತ್ತದೆ. ರೆಡ್-ವಿಸ್ಕರ್ಡ್ ಬುಲ್ಬುಲ್ನ ಗೂಡುಗಳನ್ನು ದಾಖಲಿಸಲಾಗಿದೆ. ಪರ್ಯಾಯ ದ್ವೀಪ ಭಾರತಕ್ಕೆ ಕಾಲೋಚಿತ ಸಂತಾನೋತ್ಪತ್ತಿಗೆ ಭೇಟಿ ನೀಡುವ ಇಂಡಿಯನ್ ಗೋಲ್ಡನ್ ಓರಿಯೊಲ್ ಅನ್ನು ಸಹ ಕ್ಯಾಂಪಸ್ನೊಳಗೆ ಸೂಕ್ತವಾದ ಆವಾಸಸ್ಥಾನವನ್ನು ಬಳಸುವುದನ್ನು ಗಮನಿಸಲಾಗಿದೆ. ಉದ್ಯಾನಗಳು ಮತ್ತು ಮರಗಳ ಹೊದಿಕೆಯು ಕೀಟನಾಶಕ ಮತ್ತು ಮಕರಂದ ತಿನ್ನುವ ಪಕ್ಷಿಗಳಾದ ಕಾಮನ್ ಟೈಲರ್ಬರ್ಡ್, ಗ್ರೇ-ಬ್ರೆಸ್ಟೆಡ್ ಪ್ರಿನಿಯಾ, ಪೇಲ್-ಬಿಲ್ಡ್ ಫ್ಲವರ್ಪೆಕರ್, ಮತ್ತು ಪರ್ಪಲ್-ರಂಪ್ಡ್ ಸನ್ಬರ್ಡ್, ಪರ್ಪಲ್ ಸನ್ಬರ್ಡ್ ಮತ್ತು ಲೋಟೆನ್ಸ್ ಸನ್ಬರ್ಡ್ ಸೇರಿದಂತೆ ಸನ್ಬರ್ಡ್ ಪ್ರಭೇದಗಳಿಗೆ ಆಶ್ರಯ ನೀಡಿವೆ. ಚೆಸ್ಟ್ನಟ್-ಟೈಲ್ಡ್ ಸ್ಟಾರ್ಲಿಂಗ್, ಕಾಮನ್ ಮೈನಾ, ಜಂಗಲ್ ಮೈನಾ, ಆರೆಂಜ್-ಹೆಡೆಡ್ ಥ್ರಷ್, ಓರಿಯಂಟಲ್ ಮ್ಯಾಗ್ಪಿ-ರಾಬಿನ್ ಮತ್ತು ವೈಟ್-ರಂಪ್ಡ್ ಮುನಿಯಾ ಮೊದಲಾದ ಪ್ರಬೇಧಗಳು ಕ್ಯಾಂಪಸ್ನಲ್ಲಿ ಪತ್ತೆಯಾಗಿವೆ ಎಂದು ಅಲೋಶಿಯಸ್ ವಿವಿ ಪ್ರಕಟನೆ ತಿಳಿಸಿದೆ.
ಇದು ಆಧುನಿಕ ಪ್ರಜಾಪ್ರಭುತ್ವದಲ್ಲಿ ವಸಾಹತುಶಾಹಿ ಯುಗದ ಚೌಕಟ್ಟನ್ನು ಮರಳಿ ತರುವ ನಡೆಯೇ?
ಈಗ, ಮಾಹಿತಿ ಸೋರಿಕೆ ಮಾಡುವವರನ್ನೇ ಮೊದಲು ಅಪರಾಧಿ ಎಂದು ಪರಿಗಣಿಸಲಾಗುತ್ತದೆ. ನಂತರ ಪತ್ರಕರ್ತರನ್ನು ಸಹ ಅಪರಾಧಿ ಎಂದು ಪರಿಗಣಿಸಲಾಗುತ್ತದೆ. ಮೂಲಭೂತವಾಗಿ, ಈ ಸೆಕ್ಷನ್ ತನಿಖಾ ಪತ್ರಿಕೋದ್ಯಮವನ್ನೇ ನೇರವಾಗಿ ಅಪರಾಧೀಕರಿಸುತ್ತದೆ. ಬ್ರಿಟಿಷರು ಈ ಕಾನೂನನ್ನು ಜಾರಿಗೆ ತಂದಾಗ, ವಸಾಹತುಶಾಹಿ ಮತ್ತು ಪ್ರಜಾಪ್ರಭುತ್ವ ವಿರೋಧಿ ಶಕ್ತಿ ಸಾರ್ವಜನಿಕರ ಮೇಲೆ ಸಂಪೂರ್ಣ ನಿಯಂತ್ರಣ ಕಾಯ್ದುಕೊಳ್ಳಲು ರೂಪಿಸಿದ್ದ ಕಾನೂನು ಅದಾಗಿತ್ತು. ಇಂದಿನ ಸಾರ್ವಭೌಮ ಮತ್ತು ಪ್ರಜಾಪ್ರಭುತ್ವ ದೇಶದಲ್ಲಿ ಇದನ್ನು ಜಾರಿಗೊಳಿಸುವುದು ನೈತಿಕ ವಿಪತ್ತಾಗಿದೆ. ಸೇನೆಯ ಮಾಜಿ ಮುಖ್ಯಸ್ಥರ ಅಪ್ರಕಟಿತ ಆತ್ಮಚರಿತ್ರೆಯ ಉಲ್ಲೇಖಗಳ ಕುರಿತು ಸಂಸತ್ತಿನಲ್ಲಿ ಭಾರೀ ಕೋಲಾಹಲದ ನಂತರ, ಗೃಹ ಸಚಿವಾಲಯ ಹಿರಿಯ ಅಧಿಕಾರಿಗಳು ನಿವೃತ್ತಿಯ ನಂತರ 20 ವರ್ಷಗಳ ಕಾಲ ಪುಸ್ತಕಗಳು ಅಥವಾ ಆತ್ಮಚರಿತ್ರೆಗಳನ್ನು ಬರೆಯುವುದನ್ನು ನಿರ್ಬಂಧಿಸುವ ಹೊಸ ನಿರ್ದೇಶನ ಹೊರಡಿಸಿರುವುದಾಗಿ ವರದಿಯಾಗಿದೆ. ಸೇನೆಯ ಮಾಜಿ ಮುಖ್ಯಸ್ಥ ನರವಣೆಯವರ ಪುಸ್ತಕದಲ್ಲಿನ ಆಗಸ್ಟ್ 2020ರ ಕೈಲಾಶ್ ರೇಂಜ್ ಘಟನೆಯ ಬಗೆಗಿನ ಉಲ್ಲೇಖದ ಬಗ್ಗೆ ಸದನದಲ್ಲಿ ಚರ್ಚಿಸಲು ಸಾಧ್ಯವಾಗಲಿಲ್ಲ. ಅಪ್ರಕಟಿತ ಪುಸ್ತಕದಲ್ಲಿನ ಉಲ್ಲೇಖ ಪ್ರಸ್ತಾಪಿಸುವಂತಿಲ್ಲ ಎನ್ನಲಾಯಿತು. ಚೀನಾದ ಟ್ಯಾಂಕ್ಗಳು ಗಡಿಯಲ್ಲಿ ಮುನ್ನಡೆಯುತ್ತಿರುವಾಗ ಮತ್ತು ಅವರ ಸೈನಿಕರು ನುಗ್ಗಿ ಬರುತ್ತಿದ್ದಾಗ, ಮುಂದೇನು ಮಾಡಬೇಕು ಎಂಬ ಸೂಚನೆ ಪಡೆಯಲು ಅವರು ರಕ್ಷಣಾ ಸಚಿವರಿಗೆ ಕರೆ ಮಾಡಿದ್ದರು. ಅದರ ಬಗ್ಗೆ ನರವಣೆ ತಮ್ಮ ಪುಸ್ತಕದಲ್ಲಿ ಬರೆದಿದ್ದಾರೆ ಎಂದು ಹಲವಾರು ಮಾಧ್ಯಮ ವರದಿಗಳು ಹೇಳುತ್ತವೆ. ರಕ್ಷಣಾ ಸಚಿವರಿಂದ ಗಂಟೆಗಟ್ಟಲೆ ಉತ್ತರ ಬರಲಿಲ್ಲ ಮತ್ತು ಅವರ ಕರೆಗಳನ್ನು ನಿರ್ಲಕ್ಷಿಸಲಾಯಿತು ಮತ್ತು ಅಂತಿಮವಾಗಿ ಪ್ರತಿಕ್ರಿಯೆ ಬಂದಾಗ, ಅವರಿಗೆ ಸರಿ ಎಂದು ಭಾವಿಸಿದ್ದನ್ನು ಮಾಡಲು ಹೇಳಲಾಯಿತು. ರಾಹುಲ್ ಗಾಂಧಿ ಈ ಸಾಲುಗಳನ್ನು ಸದನದಲ್ಲಿ ಓದಲು ಬಯಸಿದ್ದರು. ಆದರೆ ಗೃಹ ಸಚಿವರು ಸೇರಿದಂತೆ ಇಡೀ ಆಡಳಿತ ಪಕ್ಷ ಅದಕ್ಕೆ ಅಡ್ಡಿಪಡಿಸಿತು. ಸರಕಾರದ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯದ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಬಹುದು ಎಂದು ಆಡಳಿತ ಪಕ್ಷದವರು ಭಯಪಟ್ಟರು. ಆದ್ದರಿಂದ, ಒಂದು ಕೋಲಾಹಲವೇ ಸೃಷ್ಟಿಯಾಯಿತು ಮತ್ತು ನರವಣೆಯವರ ಪುಸ್ತಕದಲ್ಲಿನ ಉಲ್ಲೇಖವನ್ನು ಓದಲು ಅವಕಾಶ ನೀಡಲಿಲ್ಲ. ಈಗ, ಗೃಹ ಸಚಿವಾಲಯ ಪ್ರತೀ ಸಚಿವಾಲಯಕ್ಕೂ ರಹಸ್ಯ ಟಿಪ್ಪಣಿ ಕಳುಹಿಸಿರುವುದಾಗಿ ‘ಹಿಂದೂಸ್ತಾನ್ ಟೈಮ್ಸ್’ ವರದಿ ಬಹಿರಂಗಪಡಿಸಿದೆ. ನಿವೃತ್ತ ಅಧಿಕಾರಿಯೊಬ್ಬರು ನಿವೃತ್ತಿಯ ನಂತರ 20 ವರ್ಷಗಳವರೆಗೆ ಪುಸ್ತಕ ಅಥವಾ ಆತ್ಮಚರಿತ್ರೆ ಬರೆಯಬಾರದು ಎಂದು ಅದು ಹೇಳಿದೆಯೆನ್ನಲಾಗಿದೆ. ಇದಲ್ಲದೆ, ಸರಕಾರ ಈಗ ಮಾಧ್ಯಮಗಳಿಗೆ ಸರಕಾರಿ ಫೈಲ್ಗಳನ್ನು ಸೋರಿಕೆ ಮಾಡುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತಿದೆ. ಇದರರ್ಥ ಪತ್ರಕರ್ತರೊಂದಿಗೆ ಸೂಕ್ಷ್ಮ ಅಥವಾ ವರ್ಗೀಕೃತ ಮಾಹಿತಿ ಹಂಚಿಕೊಳ್ಳುವವರು ಅಧಿಕೃತ ರಹಸ್ಯ ಕಾಯ್ದೆ (OSA) ಅಡಿಯಲ್ಲಿ ಕಾನೂನು ಕ್ರಮ ಎದುರಿಸಬೇಕಾಗುತ್ತದೆ. ಮಾಹಿತಿ ಹಂಚಿಕೊಳ್ಳುವುದು ರಾಷ್ಟ್ರೀಯ ಭದ್ರತೆಗೆ ಅಪಾಯವನ್ನುಂಟುಮಾಡುತ್ತದೆ ಎಂದು ಸರಕಾರ ನಂಬಿದರೆ, ಮಾಹಿತಿ ರಹಸ್ಯವಾಗಿದೆಯೇ ಅಥವಾ ಇಲ್ಲವೇ ಎಂಬುದರ ವ್ಯಾಖ್ಯಾನ ಸ್ಪಷ್ಟವಿಲ್ಲ. ಅದನ್ನು ಸರಕಾರಿ ಅಧಿಕಾರಿ ನಿರ್ಧರಿಸುತ್ತಾರೆ. 2019ರಲ್ಲಿ ರಫೇಲ್ ಒಪ್ಪಂದ ನಡೆದಾಗ, ‘ದಿ ಹಿಂದೂ’ ಪತ್ರಿಕೆ ರಕ್ಷಣಾ ಸಚಿವಾಲಯದಿಂದ ಕೆಲವು ರಹಸ್ಯ ದಾಖಲೆಗಳನ್ನು ಪ್ರಕಟಿಸಿತು. ಸರಕಾರ ಸುಪ್ರೀಂ ಕೋರ್ಟ್ನಲ್ಲಿ ಈ ದಾಖಲೆಗಳನ್ನು ಕದಿಯಲಾಗಿದೆ ಮತ್ತು ಅವು OSA ಅನ್ನು ಉಲ್ಲಂಘಿಸುತ್ತಿವೆ ಎಂದು ಹೇಳುವ ಅಫಿಡವಿಟ್ ಅನ್ನು ಸಲ್ಲಿಸಿತು. ಆದರೂ, ಆ ವರದಿ ಪ್ರಕಟಿಸಿದ ಪತ್ರಕರ್ತ ಎನ್. ರಾಮ್ ಅವರು ತಮ್ಮ ಮಾಹಿತಿ ಮೂಲವನ್ನು ಎಂದಿಗೂ ಬಹಿರಂಗಪಡಿಸಲಿಲ್ಲ. ಈ ಪ್ರಕರಣ ರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಯನ್ನು ಹುಟ್ಟುಹಾಕಿತು. ಸರಕಾರ ಭ್ರಷ್ಟಾಚಾರವನ್ನು ಬಹಿರಂಗಪಡಿಸುವವರನ್ನು OSA, NSA ಅಥವಾ UAPA ಅಡಿಯಲ್ಲಿ ಶಿಕ್ಷಿಸುವ ಮೂಲಕ ಮೌನಗೊಳಿಸಲು ಸಾಧ್ಯವೇ? 2002ರಲ್ಲಿ ಪತ್ರಕರ್ತ ಸೈಯದ್ ಇಫ್ತಿಕಾರ್ ಗೀಲಾನಿ ಪ್ರಕರಣವೂ ಇದೇ ರೀತಿಯದ್ದಾಗಿತ್ತು. ಅವರನ್ನು OSA ಕಾಯ್ದೆಯಡಿಯಲ್ಲಿಯೂ ಬಂಧಿಸಲಾಯಿತು.ಅವರ ಬಳಿ ಕೆಲ ಗೌಪ್ಯ ದಾಖಲೆಗಳು ಕಂಡುಬಂದಿವೆ ಎಂಬ ಕಾರಣ ನೀಡಿ ಗೂಢಚಾರ ಮತ್ತು ದೇಶದ್ರೋಹಿ ಎಂದು ಹಣೆಪಟ್ಟಿ ಕಟ್ಟಲಾಯಿತು. ಆದರೆ ನಂತರ, ಆ ದಾಖಲೆಗಳು ವಾಸ್ತವವಾಗಿ ವರ್ಷಗಳ ಕಾಲ ಸಾರ್ವಜನಿಕ ವಲಯದಲ್ಲಿ ಲಭ್ಯವಿದ್ದ ವರದಿಯ ಭಾಗವಾಗಿದ್ದುದು ಬಹಿರಂಗವಾಯಿತು. ಆದರೆ ಗೀಲಾನಿ ಏಳು ತಿಂಗಳು ಜೈಲಿನಲ್ಲಿದ್ದರು. ನಂತರ, ಸರಕಾರ ಪ್ರಕರಣವನ್ನು ಹಿಂದೆಗೆದುಕೊಳ್ಳಬೇಕಾಯಿತು. ಹಾಗಾದರೆ ಪ್ರಶ್ನೆ, ಈ ಕಾನೂನು ಏನು? ಮತ್ತು ಅದು ಏಕೆ ಅಸ್ತಿತ್ವದಲ್ಲಿದೆ? ಮತ್ತು ಅದನ್ನು ಕಠಿಣ ಕಾನೂನು ಎಂದು ಏಕೆ ಕರೆಯಲಾಗುತ್ತದೆ? ಅಲ್ಲದೆ, ಮಾಹಿತಿ ಹಕ್ಕು ಕಾಯ್ದೆಯಂತಹ ಪ್ರಜಾಪ್ರಭುತ್ವ ಕಾನೂನಿಗೆ ಸಮಾನಾಂತರವಾಗಿ ಇದನ್ನು ಹೇಗೆ ಕಾರ್ಯಗತಗೊಳಿಸಬಹುದು? ಆರ್ಟಿಐ ಸಲ್ಲಿಸಿದರೆ, ಅಧಿಕಾರಿ ಪ್ರತಿಕ್ರಿಯೆ ನೀಡುತ್ತಾರೆಯೇ? ಇಂಥ ಹಲವು ಪ್ರಶ್ನೆಗಳಿವೆ. ವಾಸ್ತವವಾಗಿ, ಈ ಹೊಸ ಟಿಪ್ಪಣಿ 1998ರ ಡಿಸೆಂಬರ್ನಲ್ಲಿ ಹೊರಡಿಸಲಾಗಿದ್ದ ಹಳೆಯ ಸುತ್ತೋಲೆಯ ನವೀಕರಿಸಿದ ಆವೃತ್ತಿಯಾಗಿದೆ. ಆದರೆ ಎರಡರ ನಡುವೆ ಅಗಾಧ ವ್ಯತ್ಯಾಸವಿದೆ. ಆ ಸಮಯದಲ್ಲಿ, ಸುತ್ತೋಲೆ ಕೇವಲ ಸಲಹೆಯಾಗಿತ್ತು. ಅದರಲ್ಲಿ ಎಲ್ಲಿಯೂ ಔSಂ ಬಗ್ಗೆ ಉಲ್ಲೇಖವಿರಲಿಲ್ಲ, ಅಥವಾ ಯಾವುದೇ ಗೌಪ್ಯ ಅಥವಾ ರಹಸ್ಯ ಮಾಹಿತಿಯೂ ಇರಲಿಲ್ಲ. ಈಗ, ಈ OSA ಟಿಪ್ಪಣಿಯನ್ನು ಜನವರಿ ಎರಡನೇ ವಾರದಲ್ಲಿ ನೀಡಲಾಗಿದೆ. ಪತ್ರಕರ್ತರು ಪ್ರಶ್ನೆ ಕೇಳಿದರೆ, ಅಧಿಕಾರಿಗಳು ತಮ್ಮದೇ ಆದ ತೀರ್ಪನ್ನು ಬಳಸಬಾರದು ಮತ್ತು ಮಾಹಿತಿ ಒದಗಿಸಬಾರದು ಎಂದು ಟಿಪ್ಪಣಿ ಒತ್ತಿಹೇಳುತ್ತದೆ. ಬದಲಾಗಿ, ಅವರು ಪ್ರಶ್ನೆಯನ್ನು ನೇರವಾಗಿ ಪತ್ರಿಕಾ ಮಾಹಿತಿ ಬ್ಯೂರೋ (PIB)ಗೆ ರವಾನಿಸಬೇಕು. ಒಬ್ಬ ಅಧಿಕಾರಿ ಪ್ರತಿಕ್ರಿಯಿಸಬೇಕಾದರೆ, ಮೊದಲು ತಮ್ಮ ಕಾರ್ಯದರ್ಶಿಯಿಂದ ಲಿಖಿತ ಅನುಮತಿ ಪಡೆಯಬೇಕು. ಮಾಹಿತಿ ಒದಗಿಸಬೇಕೇ ಅಥವಾ ಬೇಡವೇ ಎಂಬುದರ ಕುರಿತು ಈ ಅಧಿಕಾರಿ ಸಲಹೆ ನೀಡುತ್ತಾರೆ. ಇದಲ್ಲದೆ, ಸರಕಾರ ಈಗ ಸರಕಾರಿ ಕಚೇರಿಗಳಲ್ಲಿ ಮಾಧ್ಯಮ ಸಂವಹನಕ್ಕಾಗಿ ಮೀಸಲಾದ ವಿಭಾಗವನ್ನು ಗೊತ್ತುಪಡಿಸಿದೆ ಅಥವಾ ಗೊತ್ತುಪಡಿಸುತ್ತದೆ. ಈ ವಿಭಾಗವನ್ನು ಮೇಲ್ವಿಚಾರಣೆ ಮಾಡುವ ಸಾಧ್ಯತೆಯಿದೆ. ಯಾರು ಬರುತ್ತಿದ್ದಾರೆ ಮತ್ತು ಹೋಗುತ್ತಿದ್ದಾರೆ ಎಂಬುದರ ಸಂಪೂರ್ಣ ದಾಖಲೆಯನ್ನು ನಿರ್ವಹಿಸಲಾಗುತ್ತದೆ. ಉನ್ನತ ಅಧಿಕಾರಿಗಳಿಗೆ ಸರಕಾರ 20 ವರ್ಷಗಳ ಕೂಲಿಂಗ್-ಆಫ್ ಅವಧಿ ಜಾರಿಗೊಳಿಸುತ್ತಿದೆ. ಕಾರ್ಯದರ್ಶಿಗಳು, ಸೇನಾ ಮುಖ್ಯಸ್ಥರು ಅಥವಾ ಸಂಸ್ಥೆಗಳ ಅಧ್ಯಕ್ಷರು ಮುಂತಾದ ಉನ್ನತ ಹುದ್ದೆಗಳನ್ನು ಹೊಂದಿರುವ ಜನರು ನಿವೃತ್ತರಾದ ನಂತರ, 20 ವರ್ಷಗಳ ಕಾಲ ಸರಕಾರಕ್ಕೆ ಸಂಬಂಧಿಸಿದಂತೆ ಯಾವುದೇ ವಿಷಯ ಬಹಿರಂಗಪಡಿಸುವ ಪುಸ್ತಕ ಬರೆಯಬಾರದು ಎಂಬುದು ಇದರ ಅರ್ಥ. 20 ವರ್ಷಗಳ ಕೂಲಿಂಗ್-ಆಫ್ ಅವಧಿಯ ನಂತರ ಮಾತ್ರ ಅವರು ಪುಸ್ತಕ ಅಥವಾ ಆತ್ಮಚರಿತ್ರೆ ಬರೆಯಲು ಸಾಧ್ಯವಾಗುತ್ತದೆ. 60 ಅಥವಾ 65ನೇ ವಯಸ್ಸಿನಲ್ಲಿ ನಿವೃತ್ತರಾದವರು 85ನೇ ವಯಸ್ಸಿನಲ್ಲಿ ಏನು ಬರೆಯಲು ಸಾಧ್ಯ? ಆಶ್ಚರ್ಯಕರ ವಿಷಯವೆಂದರೆ 100 ವರ್ಷಗಳ ಹಿಂದೆ ಭಾರತದಲ್ಲಿ ಇದೇ ರೀತಿಯ ನಿಯಮ ಅಸ್ತಿತ್ವದಲ್ಲಿತ್ತು. ಅಧಿಕೃತ ರಹಸ್ಯ ಕಾಯ್ದೆ 1923 ಅನ್ನು ಬ್ರಿಟಿಷರು ಪರಿಚಯಿಸಿದ್ದರು. ಈ ಕಾನೂನು ಭಾರತ ಬ್ರಿಟಿಷ್ ರಾಜ್ಯವಾಗಿದ್ದ ಹೊತ್ತಿನದು. ಅದು ಸರ್ವಾಧಿಕಾರವಾಗಿತ್ತು. ವಸಾಹತುಶಾಹಿ ಆಳ್ವಿಕೆಯಾಗಿತ್ತು. ಬ್ರಿಟಿಷ್ ಯುಗದ ಈ ಕಾನೂನು ಇಂದಿನ ಕಾಲದಲ್ಲಿ ಪತ್ರಿಕೋದ್ಯಮ ಮತ್ತು ಪಾರದರ್ಶಕತೆ ರೂಪಿಸುವಲ್ಲಿ ನಿರ್ಣಾಯಕ ಹೆಜ್ಜೆಯಾಗಿದೆ. ಆದರೆ ಅದು ರಾಷ್ಟ್ರೀಯ ಭದ್ರತೆಯ ಸೋಗಿನಲ್ಲಿ, ನೇರವಾಗಿ ಮಾಧ್ಯಮ ಸ್ವಾತಂತ್ರ್ಯದ ವಿರುದ್ಧ ಇದೆಯೆಂಬುದು ಸ್ಪಷ್ಟ. ಗುಲಾಮಗಿರಿಯಲ್ಲಿದ್ದ ಭಾರತದ ಜನರನ್ನು ಮೂರ್ಖರನ್ನಾಗಿ ಮಾಡಲು, ಗುಲಾಮರನ್ನಾಗಿಯೇ ಇರಿಸಲು ಮತ್ತು ಪತ್ರಿಕಾ ಮಾಧ್ಯಮವನ್ನು ನಿಗ್ರಹಿಸಲು ಬ್ರಿಟಿಷರು ಈ ಕಾನೂನನ್ನು ಜಾರಿಗೆ ತಂದರು. ಈ ಕಾನೂನು ಎರಡು ಮುಖ್ಯ ವಿಭಾಗಗಳನ್ನು ಹೊಂದಿತ್ತು. ಬೇಹುಗಾರಿಕೆ ಮತ್ತು ಮಾಹಿತಿಯ ದುರುಪಯೋಗ. ಕಾನೂನಿನ ಸೆಕ್ಷನ್ 3 ಬೇಹುಗಾರಿಕೆಯ ಅಡಿಯಲ್ಲಿ ಬರುವ ಚಟುವಟಿಕೆಗಳನ್ನು ನಿರ್ವಹಿಸುತ್ತಿತ್ತು. ಉದಾಹರಣೆಗೆ ನಿಷೇಧಿತ ಸ್ಥಳದ ಬಳಿ ಹೋಗುವುದು ಅಥವಾ ಅದನ್ನು ಪರಿಶೀಲಿಸುವುದು, ಶತ್ರುಗಳಿಗೆ ಉಪಯುಕ್ತವಾಗಬಹುದಾದ ಯಾವುದೇ ಫೈಲ್, ಯೋಜನೆ, ನಕ್ಷೆ ಅಥವಾ ಟಿಪ್ಪಣಿ ಸಿದ್ಧಪಡಿಸುವುದು ಮತ್ತು ಯಾವುದೇ ರಹಸ್ಯ ಸರಕಾರಿ ಕೋಡ್, ಪಾಸ್ವರ್ಡ್ ಅಥವಾ ಮಾಹಿತಿ ಪಡೆಯುವುದು ಮತ್ತು ಪ್ರಸಾರ ಮಾಡುವುದು ಎಲ್ಲವೂ ಈ ವಿಭಾಗದ ಅಡಿಯಲ್ಲಿ ಬರುತ್ತಿತ್ತು. ಕಾನೂನು ಚೆನ್ನಾಗಿ ರಚಿಸಲ್ಪಟ್ಟಂತೆ ತೋರುತ್ತದೆ. ಆದರೆ ಈಗ ನಿಷೇಧಿತ ಸ್ಥಳಗಳು ಯಾವುವು? ಮಿಲಿಟರಿ ನೆಲೆಗಳು, ನೌಕಾ ಡಾಕ್ಯಾರ್ಡ್ಗಳು ಮತ್ತು ವಾಯುಪಡೆ ಕೇಂದ್ರಗಳು. ನಮಗೆ ತಿಳಿದಿಲ್ಲದ ಇನ್ನೂ ಹೆಚ್ಚಿನವು ಇರಬಹುದೇ? ಇದ್ದಿರಬಹುದು. ಇದು ಔSಂಯಲ್ಲಿರುವ ಲೋಪದೋಷ. ಈ ಕಾನೂನು ಸರಕಾರ ಅಲ್ಲಿನ ಮಾಹಿತಿ ಶತ್ರುಗಳಿಗೆ ಉಪಯುಕ್ತವಾಗಬಹುದು ಎಂದು ನಂಬಿದರೆ ಯಾವುದೇ ಸ್ಥಳವನ್ನು ನಿಷೇಧಿತ ಸ್ಥಳವೆಂದು ಘೋಷಿಸುವ ಅಧಿಕಾರ ನೀಡುತ್ತದೆ. ಕಾನೂನಿನಲ್ಲಿರುವ ಈ ಅಸ್ಪಷ್ಟತೆಯಿಂದಾಗಿ, ಸರಕಾರ ಯಾವುದೇ ಸಾಮಾನ್ಯ ನಾಗರಿಕನನ್ನು ಗೂಢಚಾರ ಎಂದು ಹಣೆಪಟ್ಟಿ ಕಟ್ಟಿ ಜೈಲಿಗೆ ಹಾಕಬಹುದು. ಇನ್ನು ಸೆಕ್ಷನ್ 5, ಪತ್ರಕರ್ತರು, ಮಾಹಿತಿದಾರರು ಮತ್ತು ಸರಕಾರಿ ನೌಕರರ ಮೇಲೆ ಕಠಿಣ ಕ್ರಮ ಕೈಗೊಳ್ಳುತ್ತದೆ. ಒಂದು ತನಿಖಾ ವರದಿ ಬರಬೇಕಾದರೆ, ಪತ್ರಕರ್ತರು ಇಲಾಖೆಯ ಅಧಿಕಾರಿಗಳನ್ನು ಭೇಟಿಯಾಗಿ ಮಾಹಿತಿ ಪಡೆಯುತ್ತಾರೆ. ಇದೇ ಅಧಿಕಾರಿಗಳು ಸರಕಾರದ ಭ್ರಷ್ಟಾಚಾರದ ಪ್ರಮಾಣ ಮತ್ತು ಭ್ರಷ್ಟ ರಾಜಕಾರಣಿಗಳ ಬಗ್ಗೆ ಮಾಹಿತಿ ಬಹಿರಂಗಪಡಿಸುತ್ತಾರೆ. ಆದರೆ ಈಗ, ಮಾಹಿತಿ ಸೋರಿಕೆ ಮಾಡುವವರನ್ನೇ ಮೊದಲು ಅಪರಾಧಿ ಎಂದು ಪರಿಗಣಿಸಲಾಗುತ್ತದೆ. ನಂತರ ಪತ್ರಕರ್ತರನ್ನು ಸಹ ಅಪರಾಧಿ ಎಂದು ಪರಿಗಣಿಸಲಾಗುತ್ತದೆ. ಮೂಲಭೂತವಾಗಿ, ಈ ಸೆಕ್ಷನ್ ತನಿಖಾ ಪತ್ರಿಕೋದ್ಯಮವನ್ನೇ ನೇರವಾಗಿ ಅಪರಾಧೀಕರಿಸುತ್ತದೆ. ಬ್ರಿಟಿಷರು ಈ ಕಾನೂನನ್ನು ಜಾರಿಗೆ ತಂದಾಗ, ವಸಾಹತುಶಾಹಿ ಮತ್ತು ಪ್ರಜಾಪ್ರಭುತ್ವ ವಿರೋಧಿ ಶಕ್ತಿ ಸಾರ್ವಜನಿಕರ ಮೇಲೆ ಸಂಪೂರ್ಣ ನಿಯಂತ್ರಣ ಕಾಯ್ದುಕೊಳ್ಳಲು ರೂಪಿಸಿದ್ದ ಕಾನೂನು ಅದಾಗಿತ್ತು. ಇಂದಿನ ಸಾರ್ವಭೌಮ ಮತ್ತು ಪ್ರಜಾಪ್ರಭುತ್ವ ದೇಶದಲ್ಲಿ ಇದನ್ನು ಜಾರಿಗೊಳಿಸುವುದು ನೈತಿಕ ವಿಪತ್ತಾಗಿದೆ. ಈ ಕಾನೂನು ಮಾಹಿತಿ ಹಕ್ಕಿನ ಮೂಲಭೂತ ತತ್ವಗಳಿಗೆ ಸಂಪೂರ್ಣ ವಿರುದ್ಧವಾಗಿದೆ. ಏಕೆಂದರೆ ರಹಸ್ಯ ಎಂಬ ಪದವನ್ನು ಅದರಲ್ಲಿ ಎಲ್ಲಿಯೂ ವ್ಯಾಖ್ಯಾನಿಸಲಾಗಿಲ್ಲ. ಯಾವ ಮಾಹಿತಿ ನಿಜವಾಗಿಯೂ ರಹಸ್ಯ ಎಂದು ಪರಿಗಣಿತವಾಗುತ್ತದೆ ಎಂಬುದು ಅಸ್ಪಷ್ಟವಾಗಿದೆ. ಇದನ್ನು ಯಾರು ನಿರ್ಧರಿಸುತ್ತಾರೆ? ಕಚೇರಿ ಸ್ಟೇಷನರಿಗಳನ್ನು ಬದಲಾಯಿಸುವ ಬಗೆಗಿನ ಜ್ಞಾಪಕ ಪತ್ರ ಕೂಡ ರಹಸ್ಯ ಎಂದಾಗುತ್ತದೆಯೇ? ಒಂದು ರಾಜ್ಯದಲ್ಲಿ ಅಪೌಷ್ಟಿಕತೆಯ ಬಗ್ಗೆ ಅಥವಾ ಸರಕಾರಿ ಶಾಲೆಗಳ ಸ್ಥಿತಿಯ ಬಗ್ಗೆ ವರದಿ ಮಾಡುವುದನ್ನು ರಹಸ್ಯವೆಂದು ಪರಿಗಣಿಸಲಾಗುತ್ತದೆಯೇ? ರಫೇಲ್ ಒಪ್ಪಂದದಂತಹ ಹೊಸ ಮಿಲಿಟರಿ ಶಸ್ತ್ರಾಸ್ತ್ರದ ಯೋಜನೆಗಳನ್ನು ಚರ್ಚಿಸುವುದನ್ನು ರಹಸ್ಯವೆಂದು ಪರಿಗಣಿಸಲಾಗುತ್ತದೆಯೇ? ಸರಕಾರಿ ಅಧಿಕಾರಿಯೊಬ್ಬರು ಅದನ್ನು ರಹಸ್ಯವೆಂದು ಭಾವಿಸಿದರೆ, ವರದಿಗಾರರು ಅದರ ವಿರುದ್ಧ ಮಾತಾಡದ ಸ್ಥಿತಿ ತಲೆದೋರುತ್ತದೆ. ಹಾಗಾದರೆ, ಈ ಕಾಯ್ದೆ ಭ್ರಷ್ಟಾಚಾರವನ್ನು ಮರೆಮಾಚುವ ಉದ್ದೇಶ ಹೊಂದಿದೆಯೇ? ಬಹುಕೋಟಿ ಹಗರಣಗಳ ವರದಿಗಳನ್ನು ಮರೆಮಾಚಲು, ಸರಕಾರದ ವೈಫಲ್ಯಗಳನ್ನು ಮರೆಮಾಚಲು ಇದನ್ನು ಪರಿಚಯಿಸಲಾಗಿದೆಯೆ? ಸರಕಾರಿ ಯೋಜನೆ ವೈಫಲ್ಯಗಳ ಡೇಟಾವನ್ನು ರಹಸ್ಯವಾಗಿಡಲು ಈ ಕಾಯ್ದೆಯನ್ನು ಬಳಸುವ ಸಾಧ್ಯತೆಯೂ ಇದೆ. ಸರಕಾರಕ್ಕೆ ಅಪಖ್ಯಾತಿ ಬರುವುದನ್ನು ತಪ್ಪಿಸಲು ಯಾರಾದರೂ ಇದನ್ನು ಬಳಸಬಹುದೇ? ಸಚಿವರ ಪ್ರತಿಷ್ಠೆಗೆ ಕಳಂಕ ತರಬಹುದೆಂಬ ಭಯದಿಂದ ಈ ಕಾಯ್ದೆ ಪರಿಚಯಿಸಲಾಗಿದೆಯೇ? ಯಾರೂ ಸಚಿವರ ಬಗ್ಗೆ ಕೆಟ್ಟದಾಗಿ ಮಾತನಾಡದಂತೆ ಮಾಡಲು ಇದನ್ನು ಬಳಸಲಾಗುತ್ತದೆಯೆ? 2005ರಲ್ಲಿ ಒಂದು ಕ್ರಾಂತಿಕಾರಿ ಕಾನೂನನ್ನು ಅಂಗೀಕರಿಸಲಾಯಿತು. ಅದು ಆರ್ಟಿಐ ಕಾಯ್ದೆ. ಈ ಕಾಯ್ದೆ ಯಾವುದೇ ನಾಗರಿಕ ಯಾವುದೇ ಸರಕಾರಿ ಸಂಸ್ಥೆಯಿಂದ ಯಾವುದೇ ಮಾಹಿತಿ ಪಡೆಯಲು ಅಧಿಕಾರ ನೀಡುತ್ತದೆ. ಸರಕಾರದಿಂದ ನೇಮಿಸಲ್ಪಟ್ಟ ಉನ್ನತ ಮಟ್ಟದ ಸಂಸ್ಥೆಯಾದ ಎರಡನೇ ಆಡಳಿತ ಸುಧಾರಣಾ ಆಯೋಗ (ಎಆರ್ಸಿ) 2006ರಲ್ಲಿ ಅಧಿಕೃತವಾಗಿ 1923ರ ಅಧಿಕೃತ ರಹಸ್ಯ ಕಾಯ್ದೆ ರದ್ದುಗೊಳಿಸಲು ಶಿಫಾರಸು ಮಾಡಿತು. ಏಕೆಂದರೆ ಅದು ಹಳೆಯದಾಗಿದೆ ಮತ್ತು ಆಧುನಿಕ ಪ್ರಜಾಪ್ರಭುತ್ವಕ್ಕೆ ಹೊಂದಿಕೆಯಾಗುವುದಿಲ್ಲ ಎಂದಿತು. ಪತ್ರಕರ್ತರನ್ನು ನಿಯಂತ್ರಿಸಲು ನಮ್ಮಲ್ಲಿ ಯುಎಪಿಎನಂತಹ ಇತರ ಕಾನೂನುಗಳಿವೆ. ಇಂದು, ಯುಎಪಿಎ ಅಡಿಯಲ್ಲಿ ಅನೇಕ ಪತ್ರಕರ್ತರು ಜೈಲಿನಲ್ಲಿದ್ದಾರೆ. ಹೀಗಿರುವಾಗ, 100 ವರ್ಷಗಳಷ್ಟು ಹಳೆಯದಾದ ವಸಾಹತುಶಾಹಿ ಕಾನೂನಿಗೆ ಆಧುನಿಕ ಪ್ರಜಾಪ್ರಭುತ್ವದಲ್ಲಿ ಸ್ಥಾನವಿರಬೇಕೇ? ಅಥವಾ ಸಂಕೀರ್ಣ ಭದ್ರತಾ ಬೆದರಿಕೆಗಳ ಜಗತ್ತಿನಲ್ಲಿ ಅದನ್ನು ರದ್ದುಗೊಳಿಸುವುದು ತುಂಬಾ ಅಪಾಯಕಾರಿಯಾಗಿದೆಯೆ? ಇದು ಅಗತ್ಯ ರಕ್ಷಣೆಯೇ ಅಥವಾ ಆಧುನಿಕ ಪ್ರಜಾಪ್ರಭುತ್ವದಲ್ಲಿ ವಸಾಹತುಶಾಹಿ ಯುಗದ ಚೌಕಟ್ಟನ್ನು ಮರಳಿ ತರುವ ನಡೆಯಾಗಿದೆಯೇ?
Delhi High Court: ಮಹಿಳೆಯೊಂದಿಗೆ ದೈಹಿಕ ಸಂಬಂಧ ಬೆಳೆಸಿ ಬಳಿಕ ಜಾತಕ ಸೇರಿದಂತೆ ಹಲವು ನೆಪಗಳನ್ನೊಡ್ಡಿ ವಿವಾಹ ಮುರಿದುಕೊಂಡ ಘಟನೆಗಳು ನಡೆದಿರುವ ಉದಾಹರಣೆಗಳಿವೆ. ಅದರಲ್ಲೂ ಉತ್ತರ ಭಾರತದ ಭಾಗದಲ್ಲೇ ಇಂತಹ ಪ್ರಕರಣಗಳು ಹೆಚ್ಚಾಗಿ ಬೆಳಕಿಗೆ ಬರುತ್ತಿವೆ. ಇನ್ನೂ ಇದನ್ನು ಗಂಭೀರವಾಗಿ ಪರಿಗಣಿಸಿದ ದೆಹಲಿ ಹೈಕೋರ್ಟ್ ಮಹತ್ವದ ಆದೇಶ ಹೊರಡಿಸಿದೆ. ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ. ಪ್ರೀತಿ ಮತ್ತು
ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆಗೆ ಇನ್ನೂ ಸಾಕಷ್ಟು ಸಮಯಬಾಕಿ ಇದೆ. ಆದರೆ,2028ರಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿರುವ ಜೆಡಿಎಸ್ 40-50 ಕ್ಷೇತ್ರಗಳಲ್ಲಿ ಗೆದ್ದು ತಮ್ಮ ಪ್ರಾಬಲ್ಯವನ್ನು ಸಾಧಿಸುವ ಮೂಲಕ ಕಿಂಗ್ ಮೇಕರ್ ಆಗಿ ಹೊರಹೊಮ್ಮಲು ಈಗಿನಿಂದಲೇ ತಯಾರಿ ಮಾಡಿಕೊಳ್ಳುತ್ತಿದೆ. ಈಗಾಗಲೇ ಬಿಜೆಪಿಯೊಂದಿಗೆ ಮೈತ್ರಿಮಾಡಿಕೊಂಡು ಹೆಚ್.ಡಿ ಕುಮಾರಸ್ವಾಮಿ ಕೇಂದ್ರ ಸಚಿವರಾಗಿ ಕಾರ್ಯನಿರ್ವಹಿಸುತ್ತಿದ್ದು, ರಾಜ್ಯದಲ್ಲಿ ಪಕ್ಷಸಂಘಟನೆಯ ಜವಾಬ್ದಾರಿಯನ್ನು ಅವರ ಪುತ್ರ ನಿಖಿಲ್ ಕುಮಾರಸ್ವಾಮಿಯವರು ಹೊತ್ತುಕೊಂಡು ತಳಮಟ್ಟದಿಂದ ಬಲವರ್ಧನೆಗೆ ಮುಂದಾಗಿದ್ದಾರೆ. ಹಾಗಿದ್ರೆ ಪಕ್ಷದ ಸಂಘಟನೆಗೆ ನಿಖಿಲ್ ಕುಮಾರಸ್ವಾಮಿ ಮಾಡುತ್ತಿರುವ ತಂತ್ರಗಳೇನಿದೆ? ಮೈತ್ರಿಯಲ್ಲಿ ಜೆಡಿಎಸ್ ಪಕ್ಷದ ಪ್ರಾಬಲ್ಯವನ್ನು ಸಾಧಿಸಲು ಹಾಕಿಕೊಂಡಿರುವ ರೂಪುರೇಷೆಗಳೇನು? ಎಂಬುದರ ಕುರಿತ ಮಾಹಿತಿ ಇಲ್ಲಿದೆ.
AI ಶೃಂಗಸಭೆಯಲ್ಲಿ ಪ್ರತಿಭಟನೆ | ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಉದಯ್ ಭಾನು ಬಂಧನ
ಹೊಸದಿಲ್ಲಿ: ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ ನಡೆದ ಇಂಡಿಯಾ AI ಇಂಪ್ಯಾಕ್ಟ್ ಶೃಂಗಸಭೆಯಲ್ಲಿ ಶರ್ಟ್ ಬಿಚ್ಚಿ ಪ್ರತಿಭಟನೆಗೆ ಸಂಬಂಧಿಸಿ ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಉದಯ್ ಭಾನು ಚಿಬ್ ಅವರನ್ನು ಮಂಗಳವಾರ ದಿಲ್ಲಿ ಪೊಲೀಸರು ಬಂಧಿಸಿದ್ದಾರೆ. AI ಶೃಂಗಸಭೆ ವಿಷಯವನ್ನು ಪ್ರಸ್ತಾಪಿಸಿದ ಭಾನು, ದೇಶದ ಯುವಕರು ಇನ್ನು ಮುಂದೆ ಮೌನವಾಗಿರುವುದಿಲ್ಲ 'ಪ್ರಧಾನಿ ರಾಜಿ ಮಾಡಿಕೊಂಡಿದ್ದಾರೆ' ಎಂಬುದು ಕೇವಲ ಘೋಷಣೆಯಲ್ಲ, ಬದಲಾಗಿ ಲಕ್ಷಾಂತರ ನಿರುದ್ಯೋಗಿ ಯುವಕರ ಆಕ್ರೋಶವಾಗಿದೆ. ಅಮೆರಿಕದೊಂದಿಗಿನ ವ್ಯಾಪಾರ ಒಪ್ಪಂದವು ನಮ್ಮ ರೈತರು ಮತ್ತು ಸಾರ್ವಜನಿಕರ ಹಿತಾಸಕ್ತಿಗಳಿಗೆ ಬಗೆದ ದ್ರೋಹವಾಗಿದೆ, ಇದು ಅಮೆರಿಕಕ್ಕೆ ಮಾತ್ರ ಪ್ರಯೋಜನವನ್ನು ನೀಡುತ್ತದೆ. ಪ್ರಜಾಪ್ರಭುತ್ವದಲ್ಲಿ ಶಾಂತಿಯುತ ಪ್ರತಿಭಟನೆ ನಮ್ಮ ಹಕ್ಕು ಮತ್ತು ನಾವು ಯುವಜನತೆಯ ಪರವಾಗಿ ಧ್ವನಿಯನ್ನು ಎತ್ತುವುದನ್ನು ಮುಂದುವರಿಸುತ್ತೇವೆ ಎಂದು ಹೇಳಿದ್ದರು. ಉದಯ್ ಭಾನು ಚಿಬ್ ಅವರ ಬಂಧನವನ್ನು ಕಾಂಗ್ರೆಸ್ ಖಂಡಿಸಿದೆ. ಈ ಕುರಿತು ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಛತ್ತೀಸ್ಗಡದ ಮಾಜಿ ಮುಖ್ಯಮಂತ್ರಿ ಭೂಪೇಶ್ ಬಘೇಲ್, ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಉದಯ್ ಭಾನು ಚಿಬ್ ಮತ್ತು ಇತರರನ್ನು ಅಕ್ರಮವಾಗಿ ಬಂಧಿಸಿರುವುದನ್ನು ನಾನು ಬಲವಾಗಿ ಖಂಡಿಸುತ್ತೇನೆ. ಪ್ರಜಾಪ್ರಭುತ್ವದಲ್ಲಿ ಅತಿ ದೊಡ್ಡ ಅಸ್ತ್ರವೆಂದರೆ ಯುವಜನರು ಧ್ವನಿ ಎತ್ತುವುದಾಗಿದೆ. ಪ್ರತಿಭಟನೆ ನಡೆಸುವುದು ಅಪರಾಧವಲ್ಲ ಎಂದು ಹೇಳಿದ್ದಾರೆ.
ಕುಂದಾಪುರ | ಎನ್ನೆಸ್ಸೆಸ್ ಕ್ಯಾಂಪ್ ಗೆ ತೆರಳುತ್ತಿದ್ದ ಕಾಲೇಜ್ ಬಸ್ ಪಲ್ಟಿ
ಕುಂದಾಪುರ: ಕಾಲೇಜು ವಿದ್ಯಾರ್ಥಿಗಳಿದ್ದ ಬಸ್ಸೊಂದು ಚಾಲಕನ ನಿಯಂತ್ರಣ ತಪ್ಪಿ ಅಪಘಾತಕ್ಕೀಡಾದ ಘಟನೆ ಹಳ್ಳಿಹೊಳೆ ಸಮೀಪದ ಶೆಟ್ಟಿಪಾಲು ಎಂಬಲ್ಲಿ ಸೋಮವಾರ ನಡೆದಿದೆ. ಘಟನೆಯಲ್ಲಿ ವಿದ್ಯಾರ್ಥಿಗಳು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. ಹಳ್ಳಿಹೊಳೆ ಗ್ರಾಮದ ಸುಳಗೊಡು ಶಾಲೆಯಲ್ಲಿ ನಡೆಯುತ್ತಿದ್ದ ಎನ್ನೆಸ್ಸೆಸ್ ಶಿಬಿರಕ್ಕೆ ಖಾಸಗಿ ಕಾಲೇಜಿನ ವಿದ್ಯಾರ್ಥಿಗಳನ್ನು ಕರೆದೊಯ್ಯುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ. ಚಾಲಕನ ನಿಯಂತ್ರಣ ತಪ್ಪಿದ ಬಸ್ ಉರುಳಿ ಬಿದ್ದಿದೆ. ಈ ವೇಳೆ ಬಸ್ ತೆಂಗಿನ ಮರಕ್ಕೆ ಢಿಕ್ಕಿಯಾಗಿ ನಿಂತಿದ್ದರಿಂದ ಭಾರೀ ಅನಾಹು ತಪ್ಪಿದೆ. ವಿದ್ಯಾರ್ಥಿಗಳು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. ಬಸ್ಸಿನ ಮುಂಭಾಗಕ್ಕೆ ಹಾನಿಯಾಗಿದೆ. ಈ ಬಗ್ಗೆ ಯಾವುದೇ ದೂರು ದಾಖಲಾಗಿಲ್ಲ ಎಂದು ತಿಳಿದುಬಂದಿದೆ.
ಶಬರಿಮಲೆ ಮಹಿಳೆಯರಿಗೆ ನಿರ್ಬಂಧ : ಎಡಪಂಥೀಯ ಪಿಣರಾಯಿ ಸರ್ಕಾರದ ರಾಜಕೀಯ ನಿಲುವು ’ಬಲಕ್ಕೆ’ ತಿರುಗುವ ಮುನ್ಸೂಚನೆ?
Sabarimala Temple and Kerala Election : ಇನ್ನೇನು ಕೆಲವೇ ದಿನಗಳಲ್ಲಿ ಕೇರಳ ವಿಧಾನಸಭಾ ಚುನಾವಣೆಗೆ ದಿನಾಂಕ ಘೋಷಣೆಯಾಗುವ ಸಾಧ್ಯತೆಯಿದೆ. ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಕಾಂಗ್ರೆಸ್ ಮೈತ್ರಿಕೂಟದ ವಿರುದ್ದ ಮುಗ್ಗರಿಸಿರುವ ಪಿಣರಾಯಿ ವಿಜಯನ್ ಸರ್ಕಾರ, ಶಬರಿಮಲೆ ವಿಚಾರದಲ್ಲಿ ಬಿಜೆಪಿ ಪರ ನಿಲ್ಲುವ ಮುನ್ಸೂಚನೆಯನ್ನು ನೀಡಿದೆ.
ಇಳಿಕೆಯತ್ತ ಮುಖ ಮಾಡಿದ ಸೆನ್ಸೆಕ್ಸ್, ನಿಫ್ಟಿ; ಐಟಿ ಕಂಪನಿಗಳ ಷೇರು ಮೌಲ್ಯ ಕುಸಿತಕ್ಕೆ ಕಾರಣವೇನು?
ಅಮೆರಿಕದ ಸುಪ್ರೀಂಕೋರ್ಟ್ ಆದೇಶದ ಹೊರತಾಗಿಯೂ ಸುಂಕ ಸಮರವನ್ನು ಮುಂದುವರೆಸುವುದಾಗಿ ಘೋಷಿಸಿರುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಯುಎಸ್ ಜಾಗತಿಕ ಸುಂಕವನ್ನು ಶೇ. 15ಕ್ಕೆ ನಿಗದಿಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಯುಎಸ್ ಸುಪ್ರೀಂಕೋರ್ಟ್ ತೀರ್ಪಿನ ಬಳಿಕ ತುಸು ಸುಧಾರಿಸಿದ್ದ ಜಾಗತಿಕ ಮಾರುಕಟ್ಟೆ, ಇಂದು (ಫೆ.24-ಮಂಗಳವಾರ) ಮತ್ತೆ ಕುಸಿತದ ಹಾದಿ ಹಿಡಿದಿದೆ. ಭಾರತೀಯ ಷೇರು ಮಾರುಕಟ್ಟೆ ಕೂಡ ಇಳಿಕೆಯತ್ತ ಮುಖ ಮಾಡಿದ್ದು, ಪ್ರಮುಖವಾಗಿ ಐಟಿ ಕಂಪನಿಗಳ ಷೇರು ಮೌಲ್ಯ ಕಡಿಮೆಯಾಗಿವೆ. ಇಂದಿನ ಬಿಎಸ್ಇ ವಹಿವಾಟು ಮಾಹಿತಿ ಇಲ್ಲಿದೆ.
ಸೇವಾತೀರ್ಥದಲ್ಲಿ ಮೋದಿ ಮೊದಲ ಸಂಪುಟ ಸಭೆ: ಸಚಿವರಲ್ಲಿ ʼಒಳ್ಳೆ ಮಾತಿನʼ ಬಲ ತುಂಬಲು ಹೊಸ ಪದ್ಧತಿಗೆ ಮುಂದಾದ ಪ್ರಧಾನಿ!
ಪ್ರಧಾನಿ ನರೇಂದ್ರ ಮೋದಿಯವರು ಸೌತ್ ಬ್ಲಾಕ್ ನಲ್ಲಿರುವ ತಮ್ಮ ಹಳೆಯ ಪ್ರಧಾನಿ ಕಚೇರಿಯಿಂದ ಸದ್ಯ ನೂತನ ಸೇವಾತೀರ್ಥ ಭವನಕ್ಕೆ ಇತ್ತೀಚೆಗಷ್ಟೇ ಸ್ಥಳಾಂತರವಾಗಿದ್ದು, ಇಂದು ಐತಿಹಾಸಿಕ ಮೊದಲ ಕ್ಯಾಬಿನೆಟ್ ಮೀಟಿಂಗ್ ನಡೆಯಲಿದೆ. ಈ ಸಭೆಯನ್ನು ಕೇವಲ ಔಪಚಾರಿಕವಾಗಿ ಮಾತ್ರ ನಡೆಸದೆ ಇದನ್ನು ಇನ್ನಷ್ಟು ಸ್ಪೇಷಲ್ ಮಾಡಲು ಪ್ರಧಾನಿಗಳು ಒಳ್ಳೆ ಸುದ್ದಿ ಎಂಬ ವಿನೂತನ ಪದ್ದತಿಯನ್ನು ಪ್ರಾರಂಭಿಸಲು ಮುಂದಾಗಿದ್ದು, ಇದರಲ್ಲಿ ಎಲ್ಲಾ ಸಂಪುಟ ಸದಸ್ಯರು ಸಚಿವಾಲಯಕ್ಕೆ ಸಂಬಂಧಿಸಿದ ಔಪಚಾರಿಕ ವಿಚಾರಗಳ ಕುರಿತ ಒಳ್ಳೆ ಸುದ್ದಿ ಅಥವಾ ತಮ್ಮ ವೈಯಕ್ತಿಕ ವಿಚಾರದಲ್ಲಿ ಸ್ಪೂರ್ತಿದಾಯವಾಗುವ ಒಳ್ಳೆ ಸುದ್ದಿಗಳನ್ನು ಹಂಚಿಕೊಳ್ಳಲು ನಿರೀಕ್ಷಿಸಿದ್ದಾರೆ ಎಂದು ವರದಿಯಾಗಿದ್ದು, ಇಂದಿನ ಸಭೆ ಅತ್ಯಂತ ವಿಭಿನ್ನವಾಗಿರಲಿದೆ.
ಬೋಳಂಗಡಿ : ಅಮ್ಮ ಸ್ವೀಟ್ಸ್ ವತಿಯಿಂದ ವಿಶೇಷ ಚೇತನ ಮಕ್ಕಳಿಗೆ ಸಹಾಯಧನ ವಿತರಣೆ, ಸೇವಾ ರತ್ನ ಪ್ರಶಸ್ತಿ ಪ್ರದಾನ
ಬಂಟ್ವಾಳ : ಸಮಾಜಸೇವೆ, ಪರೋಪಕಾರ, ದಾನ ಧರ್ಮದಂತಹ ಪುಣ್ಯ ಕಾರ್ಯಗಳನ್ನು ಮಾಡಲು ಸಂಪತ್ತು ಮುಖ್ಯ ಅಲ್ಲ. ನಿಷ್ಕಲ್ಮಶ ಹೃದಯ ವೈಶಾಲ್ಯತೆ ಬೇಕು ಅದು ಅಮ್ಮ ಸ್ವೀಟ್ಸ್ ಮಾಲಕ ಜನಾರ್ದನ ಅವರಲ್ಲಿ ಕಾಣುತ್ತಿದ್ದೇವೆ ಎಂದು ಲಯನ್ ದಾಮೋದರ್ ಬಿ.ಎಂ. ಹೇಳಿದರು. ಮೆಲ್ಕಾರ್ ಸಮೀಪದ ಬೋಳಂಗಡಿಯ ಅಮ್ಮ ಸ್ವೀಟ್ಸ್ ಇದರ 17 ನೇ ವಾರ್ಷಿಕೋತ್ಸವದ ಪ್ರಯುಕ್ತ ಬೋಳಂಗಡಿ ಶಾಲಾ ವಠಾರದಲ್ಲಿ ನಡೆದ ವಿಶೇಷ ಚೇತನ ಮಕ್ಕಳಿಗೆ ಸಹಾಯಧನ ವಿತರಣೆ ಹಾಗೂ ಸೇವಾ ರತ್ನ ಪ್ರಶಸ್ತಿ ಪ್ರದಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ತೀರಾ ಬಡತನದಲ್ಲಿ ಬೆಳೆದು ಬಂದ ಜನಾರ್ದನ ಅವರು ತಮ್ಮ ಉದ್ಯಮದಲ್ಲಿ ಬಂದಂತಹ ಲಾಭಾಂಶದಲ್ಲಿ ಒಂದಂಶವನ್ನು ಜನರ ಸೇವೆಗಾಗಿ ಮೀಸಲಿಟ್ಟಿರುವುದು ಪ್ರಶಂಸನೀಯವಾಗಿದ್ದು ಇದು ಎಲ್ಲರಿಗೂ ಮಾದರಿಯಾಗಲಿ ಎಂದು ಹಾರೈಸಿದರು. ಕಾರ್ಯಕ್ರಮವನ್ನು ಉದ್ಯಮಿ ಸತೀಶ್ ಆಚಾರ್ಯ ಉದ್ಘಾಟಿಸಿದರು. ತಾಲೂಕು ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ರೇಖಾ, ಪತ್ರಕರ್ತ ಲತೀಫ್ ನೇರಳಕಟ್ಟೆ, ನಾಗ ಸುಜ್ಞಾನ ಫ್ರೆಂಡ್ಸ್ ನ ಸ್ಥಾಪಕಾಧ್ಯಕ್ಷ ನಾಗರಾಜ ಕಲ್ಲಡ್ಕ, ಪ್ರಮುಖರಾದ ಜನಾರ್ದನ ಕುಲಾಲ್ ಬೊಂಡಾಲ, ಉದ್ಯಮಿಗಳಾದ ಎಂ.ಎನ್. ಮೆಲ್ಕಾರ್, ದುರ್ಗಾದಾಸ್ ಕಾಮತ್ ಅತಿಥಿಗಳಾಗಿ ಭಾಗವಹಿಸಿದ್ದರು. ಇದೇ ವೇಳೆ ನಿವೃತ್ತ ಶಿಕ್ಷಕ ಕೇಶವ ಮಾಸ್ತರ್, ಶಂಭೂರು ಅಂಗನವಾಡಿ ಕೇಂದ್ರದ ಸಹಾಯಕಿ ಸುನೀತಾ, ಪನೋಲಿಬೈಲು ಅಂಗನವಾಡಿ ಕೇಂದ್ರದ ಸಹಾಯಕಿ ಯಮುನಾ ಹಾಗೂ ಗುಡ್ಡೆಯಂಗಡಿ ಅಂಗನವಾಡಿ ಕೇಂದ್ರದ ಸಹಾಯಕಿ ಶಕುಂತಲಾ ಅವರಿಗೆ 2026 ರ ಅಮ್ಮ ಸೇವಾ ರತ್ನ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಜಿಲ್ಲೆಯ ಆಯ್ದ ವಿಶೇಷ ಚೇತನ ಮಕ್ಕಳಿಗೆ ಸಹಾಯಧನ ವಿತರಿಸಲಾಯಿತು. ಬಂಟ್ವಾಳ ಪುರಸಭಾ ಮಾಜಿ ಸದಸ್ಯೆ ವಸಂತಿ ಗಂಗಾಧರ್, ಅಮ್ಮ ಸ್ವೀಟ್ಸ್ ಮಾಲಕ ಜನಾರ್ದನ, ಅವರ ಪತ್ನಿ ವನಿತಾ ಸಹೋದರ ರವೀಂದ್ರ, ಪುತ್ರಿ ಜಿಶಾ ಉಪಸ್ಥಿತರಿದ್ದರು. ನಿತಿನ್ ಶೆಟ್ಟಿ ಶಂಭೂರು ಪ್ರಾಸ್ತಾವಿಕ ಮಾತನಾಡಿ ವಂದಿಸಿದರು. ಚೇತನ್ ಶೆಟ್ಟಿ ಮಂಗಳೂರು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.
ಹಿಂದೂ-ಮುಸ್ಲಿಮ್ ಬಂಧುತ್ವ ಸಾರಿದ ಕೋವಾಬನ್ ಪ್ರಕರಣ
ತೇಜಸ್ವಿ ನ್ಯೂಸ್ ಯೂಟ್ಯೂಬ್ ಚಾನೆಲ್ನ ವೀಡಿಯೊಗಳನ್ನು ಪರಿಶೀಲಿಸಿದ ನೆಟಿಜೆನ್ಸ್ ಈ ವಿವಾದ ನಿಜಕ್ಕೂ ಕೋಮುದ್ವೇಷವನ್ನು ಹರಡುವ ವ್ಯವಸ್ಥಿತ ಸಂಚು ಎಂದು ಅರಿತಿದ್ದಾರೆ. ಈ ವಿಷಯ ಬಹಿರಂಗವಾದ ನಂತರ ಆಂಧ್ರ ಮತ್ತು ತೆಲಂಗಾಣದ ಸಾಮಾನ್ಯ ಜನರು ಜಾತಿ ಧರ್ಮಗಳನ್ನು ಮರೆತು ಮಾನವೀಯವಾಗಿ ಸ್ಪಂದಿಸಿದ್ದಾರೆ. ಈ ಬಗೆಯ ಕೋಮುದ್ವೇಷ ಹರಡುವ ‘ಫುಡ್ ಜಿಹಾದ್’ ಪೊಳ್ಳುತನವನ್ನು ಬಯಲುಗೊಳಿಸಿದ್ದಾರೆ. ದೇಶದ ಜನರು ಕೋಮುವಾದಿಗಳಾಗಿದ್ದಾರೆ ಎನ್ನುವ ನಂಬಿಕೆಯನ್ನು ಕೋವಾಬನ್ ವಿವಾದ ಸುಳ್ಳಾಗಿಸಿದೆ. ತೆಲಂಗಾಣ ಮತ್ತು ಆಂಧ್ರ ಪ್ರದೇಶ ಅವಳಿ ರಾಜ್ಯಗಳಲ್ಲಿ ಕಳೆದ ಫೆಬ್ರವರಿ 13ರಿಂದ ಕೋವಾಬನ್ ವಿವಾದ ವ್ಯಾಪಕವಾಗಿದೆ. ಫೇಸ್ಬುಕ್, ವಾಟ್ಸ್ಆ್ಯಪ್, ಇನ್ಸ್ಟಾಗ್ರಾಮ್ ಟ್ರೆಂಡ್ ಆಗಿ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಚರ್ಚೆಯನ್ನು ಹುಟ್ಟುಹಾಕಿದೆ. ಈ ಇಡೀ ವಿವಾದ ದೇಶಕ್ಕೆ ಕೋಮುಸೌಹಾರ್ದದ, ಜಾತಿ, ಧರ್ಮಗಳನ್ನು ಮೀರಿದ ಮಾನವೀಯತೆಯ ದೊಡ್ಡ ಸಂದೇಶವನ್ನು ಕೊಟ್ಟಿದೆ. ಏನಿದು ಕೋವಾಬನ್ ಪ್ರಕರಣ? ತೆಲಂಗಾಣ ರಾಜ್ಯದ ಮುಲುಗು ಜಿಲ್ಲೆಯ ತಡ್ವಾಯಿ ಮಂಡಲದ ಮೇದಾರಂ ಗ್ರಾಮದ ಸಮ್ಮಕ್ಕ ಸರಳಮ್ಮ ಜಾತ್ರೆಯು ಬಹುದೊಡ್ಡ ಬುಡಕಟ್ಟು ಜಾತ್ರೆಯಾಗಿದೆ. ಲಕ್ಷಾಂತರ ಜನ ಸೇರುತ್ತಾರೆ. ತೆಲಂಗಾಣದಲ್ಲಿ ಈ ಜಾತ್ರೆಯನ್ನು ದಕ್ಷಿಣ ಭಾರತದ ಕುಂಭಮೇಳ ಎನ್ನುತ್ತಾರೆ. ಈ ಜಾತ್ರೆಯಲ್ಲಿ ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ಮುಸ್ಲಿಮ್ ಸಮುದಾಯದ ಶೇಕ್ ಶಾವಾಲಿ ಎಂಬ ಬೀದಿ ವ್ಯಾಪಾರಿಯು ಕೋವಾಬನ್ ಮಾರುತ್ತಿರುತ್ತಾರೆ. ಫೆಬ್ರವರಿ 13ರಂದು ತೇಜಸ್ವಿ ನ್ಯೂಸ್ ಎನ್ನುವ ಯೂಟ್ಯೂಬ್ ಚಾನೆಲ್ ಶಾವಾಲಿಯವರನ್ನು ಸಂದರ್ಶನ ಮಾಡಿ ಕೋವಾಬನ್ ಹೆಸರಲ್ಲಿ ‘ಫುಡ್ ಜಿಹಾದ್’ ಮಾಡುತ್ತಿದ್ದೀರೆಂದು ಆರೋಪಿಸುತ್ತದೆ. ಈ ಬನ್ಗಳ ಮೇಲೆ ಮ್ಯಾನುಪ್ಯಾಕ್ಚರಿಂಗ್ ಮತ್ತು ಎಕ್ಸಪರಿ ದಿನಾಂಕಗಳಿಲ್ಲ. ಇದರಿಂದ ಜನರ ಆರೋಗ್ಯ ಕೆಡುತ್ತದೆ. ಹೀಗೆ ಮಾರಾಟ ಮಾಡುವ ಮೂಲಕ ‘ಆಹಾರ ಜಿಹಾದ್’ ಮಾಡುತ್ತಿದ್ದೀರಿ ಎಂದು ದಾಳಿ ಮಾಡುತ್ತದೆೆ. ಈ ಬಗೆಯ ಏಕಾಏಕಿ ದಾಳಿಗೆ ಶೇಕ್ ಶಾವಾಲಿ ಭಯಗೊಳ್ಳುತ್ತಾರೆ. ಈ ಆರೋಪವನ್ನು ಅಲ್ಲಗಳೆದ ಶಾವಾಲಿಯು ಕೋವಾಬನ್ನಲ್ಲಿ ಯಾವುದೇ ಕಲಬೆರಕೆ ಇಲ್ಲ ಎಂದು ತಾನೇ ಎಲ್ಲರ ಎದುರು ತಿಂದು ತೋರಿಸುತ್ತಾರೆ. ಈ ವೀಡಿಯೋ ವ್ಯಾಪಕವಾಗಿ ವೈರಲ್ ಆಗಿ ಸದ್ದು ಮಾಡುತ್ತದೆ. ಈ ಬಗೆಯ ದಾಳಿಗೆ ಹೆದರಿದ ಶಾವಾಲಿ ‘‘ನನ್ನ ಜೀವನದಲ್ಲಿ ನಾನು ಎಂದಿಗೂ ಇಂತಹ ಪರಿಸ್ಥಿತಿಯನ್ನು ಎದುರಿಸಿರಲಿಲ್ಲ. ನಮ್ಮ ಕುಟುಂಬವು ದಶಕಗಳಿಂದ ಕೋವಾಬನ್ಗಳನ್ನು ಮಾರಾಟ ಮಾಡುತ್ತಿದೆ. ಈ ತನಕ ಯಾರೂ ಹೀಗೆ ಪ್ರಶ್ನೆ ಮಾಡಿಲ್ಲ. ಯಾರ ಆರೋಗ್ಯದ ಮೇಲೂ ಪರಿಣಾಮ ಬೀರಿಲ್ಲ, ಆದರೆ ಈ ಬಗೆಯ ದಾಳಿ ನನಗೆ ಜೀವಭಯವನ್ನು ಹುಟ್ಟಿಸಿತು’’ ಎಂದು ಹೇಳಿಕೊಂಡಿದ್ದಾರೆ. ಮುಂದುವರಿದು ‘‘ನನ್ನ ತಾಯಿ ಮನೆಯಲ್ಲಿ ಬಹಳ ಸ್ವಚ್ಛವಾಗಿ ಅಚ್ಚುಕಟ್ಟಾಗಿ ಕೋವಾ ತಯಾರಿಸುತ್ತಾರೆ. ಬೇಕರಿಯಿಂದ ಬನ್ಗಳನ್ನು ಖರೀದಿಸುತ್ತೇವೆ. ಮೂರ್ನಾಲ್ಕು ದಿನಗಳಲ್ಲಿ ಕೊಂಡ ಬನ್ಗಳು ಖರ್ಚಾಗುವುದರಿಂದ ಉತ್ಪಾದನೆ ಎಕ್ಸಪರಿ ಡೇಟ್ ಹಾಕುವ ಪ್ರಶ್ನೆಯೇ ಬರುವುದಿಲ್ಲ. ನಾವು ಮನೆಯವರೆಲ್ಲಾ ಈ ಕೋವಾ ಬನ್ ತಿನ್ನುತ್ತೇವೆ. ಈತನಕ ಯಾರಿಗೂ ಕೋವಾ ಬನ್ನಿಂದಾಗಿ ಆರೋಗ್ಯ ಕೆಟ್ಟಿಲ್ಲ, ಯಾವ ಜನರೂ ಈ ಬಗ್ಗೆ ಈ ತನಕ ಆರೋಪಿಸಿಲ್ಲ ಎಂದು ವಿವರಿಸುತ್ತಾರೆ. ಮೇಲಾಗಿ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ಫಾರಂ ‘ಸಿ ಪ್ರಮಾಣಪತ್ರವನ್ನು ಹೊಂದಿದ್ದು ಇದನ್ನು ಈಚೆಗೆ ಡಿಸೆಂಬರ್ 9, 2025ರಂದು ನವೀಕರಿಸಲಾಗಿದೆ. ಈ ಪ್ರಮಾಣ ಪತ್ರವು ‘ಮೆಸರ್ಸ್ ಕ್ವಾಲಿಟಿ ಸ್ವೀಟ್ಸ್ ಆಂಡ್ ಕೋವಾಬನ್’ ಹೆಸರಿನಲ್ಲಿದೆ. ಹೀಗೆ ಶಾವಾಲಿಯವರನ್ನು ತೇಜಸ್ವಿ ನ್ಯೂಸ್ ದಾಳಿ ಮಾಡಿದ ವೀಡಿಯೊ ಮತ್ತು ಶಾವಾಲಿಯವರ ಈ ಮಾತುಕತೆಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆದವು. ಇದನ್ನು ಗಮನಿಸಿದ ಆಂಧ್ರ ಮತ್ತು ತೆಲಂಗಾಣ ಎರಡೂ ರಾಜ್ಯಗಳ ಸಾಮಾನ್ಯ ಜನರು ತಾವಾಗಿಯೇ ಪ್ರತಿಕ್ರಿಯಿಸುತ್ತಾರೆ. ಬಹುಪಾಲು ಜನರು ತೇಜಸ್ವಿ ನ್ಯೂಸ್ ಚಾನೆಲ್ಗೆ ಛೀಮಾರಿ ಹಾಕಿ ಕೋವಾಬನ್ ವ್ಯಾಪಾರಿ ಶಾವಾಲಿಯವರನ್ನು ಬೆಂಬಲಿಸುತ್ತಾರೆ. ತೆಲುಗು ಜನ ಸಂಸ್ಕೃತಿಯಲ್ಲಿ ಈ ರೀತಿಯ ಕೋಮುದ್ವೇಷಕ್ಕೆ ಅವಕಾಶವಿಲ್ಲ ಎನ್ನುವುದನ್ನು ಅನೇಕರು ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೊ ಮೀಮ್ಸ್ ಮಾಡಿ ಮಾನವೀಯತೆಯನ್ನು ಎತ್ತಿಹಿಡಿಯುತ್ತಾರೆ. ಈ ಪ್ರಕರಣದಲ್ಲಿ ಜಾತಿ-ಧರ್ಮಕ್ಕಿಂತ ದುಡಿದು ತಿನ್ನುವ ಒಬ್ಬ ಶ್ರಮಜೀವಿಯನ್ನು ಅಪಮಾನಿಸಲಾಗಿದೆ ಎನ್ನುವ ಸಂಗತಿ ಮುನ್ನೆಲೆಗೆ ಬಂದಿದೆ. ಹಾಗಾಗಿ ಎಲ್ಲಾ ಬೀದಿ ವ್ಯಾಪಾರಿಗಳನ್ನು ಈ ಪ್ರಕರಣ ಒಂದುಗೂಡಿಸಿದೆ. ಬಡ ವ್ಯಾಪಾರಿಯನ್ನು ಪ್ರಶ್ನಿಸುವ ಯೂಟ್ಯೂಬ್ ಚಾನೆಲ್ನವರು ಇದೇ ಪ್ರಶ್ನೆಗಳನ್ನು ಸ್ಟಾರ್ ಹೋಟೆಲ್ ಮಾಲಕರಿಗೆ ಕೇಳುತ್ತಾರೆಯೇ? ಎನ್ನುವ ನೆಲೆಯ ನೂರಾರು ರೀಲ್ಸ್ ವೀಡಿಯೊಗಳು ಹುಟ್ಟಿಕೊಂಡಿವೆ. ಹೀಗೆ ಸುದ್ದಿ ಮಾಡಿದ ತೇಜಸ್ವಿ ನ್ಯೂಸ್ನ ಯೂಟ್ಯೂಬರ್ ಬಾಲು ಬಾಲಾಜಿ ಗೌಡ್ ಅವರ ಹಿನ್ನೆಲೆಯನ್ನು ಗಮನಿಸಿದರೆ ಈ ಪ್ರಕರಣದ ಮೂಲ ತಿಳಿಯುತ್ತದೆ. ಜುಲೈ 25, 2025ರಂದು ಚಾಲನೆಗೊಂಡ ಈ ಯೂಟ್ಯೂಬ್ ಚಾನೆಲ್ಗೆ ಎಂಟು ಸಾವಿರ ಚಂದಾದಾರರಿದ್ದಾರೆ. ಬಾಲಾಜಿಗೌಡ ಹಿಂದೆ ತೆಲುಗು ಸುದ್ದಿವಾಹಿನಿ ಸುಮನ್ ಟಿ.ವಿ.ಯಲ್ಲಿದ್ದರು. ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ತೆಲಂಗಾಣದ ಬಿಜೆಪಿ ನಾಯಕರುಗಳೊಂದಿಗೆ ಸಂಪರ್ಕ ಇರುವ ವೀಡಿಯೊಗಳನ್ನು ಪೋಸ್ಟ್ ಮಾಡಿದ್ದಾರೆ. ಈ ಯೂಟ್ಯೂಬ್ ಚಾನೆಲ್ನಲ್ಲಿ ಈ ತನಕ 143 ವೀಡಿಯೊಗಳು ಅಪ್ಲೋಡ್ ಆಗಿದ್ದು ಬಹುಪಾಲು ಬಲಪಂಥೀಯ ಹಿಂದುತ್ವ ಮತ್ತು ಬಿಜೆಪಿ ಪಕ್ಷವನ್ನು ಬೆಂಬಲಿಸುವಂತಿವೆ. ಈ ವಿವಾದ ಸೃಷ್ಟಿಯ ಎರಡು ವಾರಗಳ ಹಿಂದೆ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಅಂಗ ಸಂಸ್ಥೆ ಭಾಗ್ಯನಗರ ಗಣೇಶ ಉತ್ಸವ ಸಮಿತಿಯ ಯುವ ವಿಭಾಗ ಗಣೇಶ ಸೇನೆಯು ರಂಗಾರೆಡ್ಡಿ ಜಿಲ್ಲೆಯ ಬಲಾಪುರದಲ್ಲಿ ಜನವರಿ 24ರಂದು ‘ಧರ್ಮ ರಕ್ಷಣಾ ಸಭೆ’ಯನ್ನು ಆಯೋಜಿಸಿತ್ತು. ಕೋಮುಗಲಭೆಗೆ ಪ್ರಚೋದನೆ ಕೊಡದ ಹಾಗೆ ಸಾಂವಿಧಾನಿಕವಾಗಿ ಶಾಂತಿಯುತವಾಗಿ ಕಾರ್ಯಕ್ರಮ ಆಯೋಜಿಸುವ ಬಗ್ಗೆ ಹೈಕೋರ್ಟ್ ಷರತ್ತುಬದ್ಧ ಅನುಮತಿ ನೀಡಿತ್ತು. ಈ ಸಭೆಯಲ್ಲಿ ರೊಹಿಂಗ್ಯಾ ಮುಸ್ಲಿಮರು ಮತ್ತು ಅಕ್ರಮ ಬಾಂಗ್ಲಾ ವಲಸಿಗರು ಮತ್ತು ‘ಲವ್ ಜಿಹಾದ್’ ಬಗ್ಗೆ ಚರ್ಚೆಯಾಗಿತ್ತು. ಈ ಎಲ್ಲವನ್ನೂ ತೇಜಸ್ವಿ ನ್ಯೂಸ್ ಚಾನೆಲ್ ವರದಿ ಮಾಡಿತ್ತು. ಕೋವಾಬನ್ ಪ್ರಕರಣ ಬೆಳಕಿಗೆ ಬಂದ ನಂತರ ‘ಫುಡ್ ಜಿಹಾದ್’ ಎಂದು ವಿಶ್ವಹಿಂದೂ ಪರಿಷತ್ ಬೆಂಬಲಿಸಿತ್ತು. ಹೀಗಾಗಿ ಸಾಮಾಜಿಕ ಜಾಲತಾಣಗಳಲ್ಲಿ ಈ ಸಭೆಗೂ ‘ಫುಡ್ ಜಿಹಾದ್’ ಪ್ರಕರಣಕ್ಕೂ ನೇರ ಸಂಬಂಧವಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಕರ್ನಾಟಕದಲ್ಲಿಯೂ ಮುಸ್ಲಿಮ್ ವ್ಯಾಪಾರಿಗಳನ್ನು ಗುರಿಯಾಗಿಸಿಕೊಂಡು ದಾಳಿಗಳು ನಡೆದಿವೆ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ನಡೆಯುವ ಜಾತ್ರೆಗಳಲ್ಲಿ ಮುಸ್ಲಿಮ್ ವ್ಯಾಪಾರಿಗಳಿಗೆ ನಿಷೇಧ ಹೇರುವ ಘಟನೆಗಳು ವರದಿಯಾಗಿದ್ದವು. ಜಾತ್ರೆಗಳಲ್ಲಿ ಹಾಕುವ ಅಂಗಡಿಗಳ ಮೇಲೆ ಹಿಂದೂಗಳ ಅಂಗಡಿಗಳೆಂದು ಗುರುತಿಸಲು ಕೇಸರಿ ಧ್ವಜಗಳನ್ನು ಹಾಕಿರುವುದನ್ನು ಕೆಲವು ಜಾತ್ರೆಗಳಲ್ಲಿ ಗಮನಿಸಿದ್ದೇನೆ. ಕೊರೋನ ಸಂದರ್ಭದಲ್ಲಿಯೂ ಮುಸ್ಲಿಮ್ ವ್ಯಾಪಾರಿಗಳು ತಾವು ಮಾರಾಟ ಮಾಡುವ ವಸ್ತುಗಳಿಂದ ಹಿಂದೂಗಳಿಗೆ ಕೊರೋನ ಸೋಂಕನ್ನು ಹಬ್ಬಿಸುತ್ತಿದ್ದಾರೆ ಎನ್ನುವ ಸುದ್ದಿ ವ್ಯಾಪಕವಾಗಿ ಹರಡಲಾಗಿತ್ತು. 2022ರಲ್ಲಿ ಧಾರವಾಡದ ನುಗ್ಗೆಕೇರಿಯಲ್ಲಿ ಮುಸ್ಲಿಮ್ ವ್ಯಾಪಾರಿ ನಬೀಸಾಬ್ ಅವರ ಕಲ್ಲಂಗಡಿ ಹಣ್ಣಿನ ಅಂಗಡಿಯನ್ನು ಧ್ವಂಸ ಮಾಡಲಾಗಿತ್ತು. ಇದಕ್ಕೆ ಸಮತೆಯಲ್ಲಿ ನಂಬಿಕೆ ಇಟ್ಟವರಿಂದ ವ್ಯಾಪಕ ಪ್ರತಿರೋಧ ಹುಟ್ಟಿತ್ತು. ತೀರಾ ಈಚೆಗೆ ಮಹಾರಾಷ್ಟ್ರದ ಅಹಿಲ್ಯಾನಗರ ಜಿಲ್ಲೆಯ ಪಥ್ರಾಡಿ ತಾಲೂಕಿನ ಮಢಿ ಗ್ರಾಮದಲ್ಲಿ ನಡೆದ ಗ್ರಾಮಸಭೆಯಲ್ಲಿ ಮುಸ್ಲಿಮ್ ವ್ಯಾಪಾರಿಗಳನ್ನು ಬಹಿಷ್ಕರಿಸುವ ನಿರ್ಣಯ ತೆಗೆದುಕೊಂಡಿದ್ದಾರೆ. ಹೀಗೆ ದೇಶವ್ಯಾಪಿ ಧಾರ್ಮಿಕ ಬಲಪಂಥೀಯರಿಂದ ನಡೆಯುತ್ತಿರುವ ಈ ಎಲ್ಲಾ ಘಟನೆಗಳ ಆಳದಲ್ಲಿರುವ ಗುರಿ ಮುಸ್ಲಿಮರನ್ನು ಆರ್ಥಿಕವಾಗಿ ಕುಗ್ಗಿಸುವುದಾಗಿದೆ. ಅವರ ವ್ಯವಹಾರಗಳ ಮೇಲೆ ದಾಳಿ ಮಾಡಿದರೆ ಆರ್ಥಿಕ ಶಕ್ತಿ ಕುಂದುತ್ತದೆ, ಆಗ ಮುಸ್ಲಿಮರನ್ನು ಮಣಿಸಬಹುದು ಎನ್ನುವುದಾಗಿದೆ. ಆದರೆ ಮುಸ್ಲಿಮರ ಬಗೆಗಿನ ಈ ಆರೋಪಗಳು ಕೋಮುವಾದಿ ಅಜೆಂಡಾದ ಭಾಗವೆಂದು ಜನರಿಗೆ ಅರ್ಥವಾಗಿ ನಂತರದಲ್ಲಿ ಈ ಸ್ಥಿತಿಗಳು ಬದಲಾಗಿವೆ. ತೆಲಂಗಾಣ ರಾಜ್ಯದಲ್ಲಿ ನಡೆದ ಕೋವಾಬನ್ ಪ್ರಕರಣ ಕೂಡ ಇದರ ಮುಂದುವರಿದ ಭಾಗವಾಗಿದೆ. ಆದರೆ ಈ ಬಗೆಯ ಮುಸ್ಲಿಮರ ವ್ಯಾಪಾರವನ್ನು ವಿರೋಧಿಸಿ ನಡೆದ ಕೋಮುವಾದಿ ವ್ಯವಸ್ಥಿತ ದಾಳಿಗೆ ತೆಲಂಗಾಣ ಮತ್ತು ಆಂಧ್ರ ಪ್ರದೇಶದ ಜನರು ಕೊಟ್ಟ ಉತ್ತರ ಮಾತ್ರ ದೇಶದಲ್ಲಿಯೇ ಮಾದರಿಯಾಗಿದೆ. ಈಚಿನ ಐದಾರು ವರ್ಷಗಳಲ್ಲಿ ಕೋಮುದ್ವೇಷಕ್ಕೆ ಕೊಟ್ಟ ಬಹುದೊಡ್ಡ ಹೊಡೆತ ಇದಾಗಿದೆ. ವಿಶೇಷವೆಂದರೆ ಈ ಪ್ರಕರಣದಲ್ಲಿ ಶೇಕ್ ಶಾವಾಲಿಯವರಿಗೆ ರಾಜಕೀಯ ಬೆಂಬಲವೂ ದೊರೆಯಿತು. ಆಂಧ್ರ ಪ್ರದೇಶದ ಐಟಿ ಮತ್ತು ಶಿಕ್ಷಣ ಮತ್ತು ಮಾನವ ಅಭಿವೃದ್ಧಿ ಸಚಿವರಾದ ಆಂಧ್ರದ ಮುಖ್ಯಮಂತ್ರಿ ಚಂದ್ರುಬಾಬು ನಾಯ್ಡು ಅವರ ಮಗ ನಾರಾ ಲೋಕೇಶ್ ಅವರು ‘‘ಸಾಮರಸ್ಯ ಮತ್ತು ಪರಸ್ಪರ ಗೌರವವನ್ನು ಪ್ರತಿನಿಧಿಸುವ ತೆಲುಗು ಸಮಾಜದಲ್ಲಿ ವಿಭಜಕ ನಡೆಗಳಿಗೆ ಅವಕಾಶವಿಲ್ಲ, ಶೀಘ್ರದಲ್ಲೇ ಶಾವಾಲಿಯವರ ಕೋವಾಬನ್ ತಿನ್ನಲು ಉತ್ಸುಕನಾಗಿದ್ದೇನೆ’’ ಎಂದು ಹೇಳಿಕೊಂಡಿದ್ದಾರೆ. ತೆಲುಗು ದೇಶಂ ಪಕ್ಷದ (ಟಿಡಿಪಿ) ನಾಯಕ ಪರಿಟಾಲ ಶ್ರೀರಾಮ್ ಈ ಘಟನೆಗೆ ಪ್ರತಿಕ್ರಿಯಿಸಿ ‘‘ಒಂದು ಬ್ರೆಡ್ ಮಾರುವ ಬಡ ಸಣ್ಣ ವ್ಯಾಪಾರಿಯ ಜೀವನವನ್ನು ಈ ರೀತಿ ಬೀದಿಗೆ ತಂದಿರುವುದು ಅಮಾನವೀಯ ಕ್ರೌರ್ಯ. ಕೆಲವು ಯೂಟ್ಯೂಬರ್ಗಳು ನ್ಯೂಸ್ ಮತ್ತು ಲೈಕ್ಗಳಿಗಾಗಿ ಇಂತಹ ಕೆಲಸ ಮಾಡುತ್ತಾರೆ. ಸಾಧ್ಯವಾದರೆ ನಾವು ಬಡವರ ಪರವಾಗಿ ನಿಲ್ಲಬೇಕೇ ಹೊರತು ಅವರ ಸ್ಥಿತಿಯನ್ನು ಅಪಮಾನಿಸುವುದು ಸರಿಯಲ್ಲ’’ ಎಂದಿದ್ದಾರೆ. ನಂದ್ಯಾಳ ಕ್ಷೇತ್ರದ ಸಂಸದೆ ಸ್ವತಃ ವೈದ್ಯೆಯೂ ಆಗಿರುವ ಟಿಡಿಪಿಯ ಡಾ. ಬೈರೆಡ್ಡಿ ಶಬರಿ ಅವರು ‘‘ಹಸಿವಿಗೆ ಜಾತಿ ಇಲ್ಲ, ಸ್ವಾಭಿಮಾನಕ್ಕೆ ಧರ್ಮವಿಲ್ಲ’’ ಎಂದು ಜನರ ಮಾನವೀಯ ನಡೆಯನ್ನು ಬೆಂಬಲಿಸಿದ್ದಾರೆ. ಇಂತಹ ಪ್ರತಿಕ್ರಿಯೆಯಿಂದಾಗಿ ಆಂಧ್ರ ಸರಕಾರವು ಬಿಜೆಪಿ ಬೆಂಬಲವನ್ನು ಹಿಂದೆಗೆದುಕೊಳ್ಳಲಿ ಎಂದು ಜನತೆ ಒತ್ತಾಯಿಸಿದ್ದಾರೆ. ತೇಜಸ್ವಿ ನ್ಯೂಸ್ ಯೂಟ್ಯೂಬ್ ಚಾನೆಲ್ನ ವೀಡಿಯೊಗಳನ್ನು ಪರಿಶೀಲಿಸಿದ ನೆಟಿಜೆನ್ಸ್ ಈ ವಿವಾದ ನಿಜಕ್ಕೂ ಕೋಮುದ್ವೇಷವನ್ನು ಹರಡುವ ವ್ಯವಸ್ಥಿತ ಸಂಚು ಎಂದು ಅರಿತಿದ್ದಾರೆ. ಈ ವಿಷಯ ಬಹಿರಂಗವಾದ ನಂತರ ಆಂಧ್ರ ಮತ್ತು ತೆಲಂಗಾಣದ ಸಾಮಾನ್ಯ ಜನರು ಜಾತಿ ಧರ್ಮಗಳನ್ನು ಮರೆತು ಮಾನವೀಯವಾಗಿ ಸ್ಪಂದಿಸಿದ್ದಾರೆ. ಈ ಬಗೆಯ ಕೋಮುದ್ವೇಷ ಹರಡುವ ‘ಫುಡ್ ಜಿಹಾದ್’ ಪೊಳ್ಳುತನವನ್ನು ಬಯಲುಗೊಳಿಸಿದ್ದಾರೆ. ದೇಶದ ಜನರು ಕೋಮುವಾದಿಗಳಾಗಿದ್ದಾರೆ ಎನ್ನುವ ನಂಬಿಕೆಯನ್ನು ಈ ವಿವಾದ ಸುಳ್ಳಾಗಿಸಿದೆ. ವಿಶೇಷವಾಗಿ ಆಂಧ್ರ, ತೆಲಂಗಾಣ ಮತ್ತು ಹೈದರಾಬಾದ್ ಕರ್ನಾಟಕ ಭಾಗದ ಜನರಲ್ಲಿ ಕೋಮು ಸೌಹಾರ್ದ ಸಹಜವಾಗಿಯೇ ನೆಲೆಗೊಂಡಿದೆ ಎನ್ನುವುದಕ್ಕೂ ಈ ಪ್ರಕರಣ ಸಾಕ್ಷಿಯಾಗಿದೆ. ಈಚಿನ ದಿನಗಳಲ್ಲಿ ಈ ಕೋವಾಬನ್ ವಿವಾದವು ದೇಶಕ್ಕೆ ಹಿಂದೂ-ಮುಸ್ಲಿಮ್ ಬಂಧುತ್ವ ಬೆಸೆಯುವ ಕೋಮು ಸೌಹಾರ್ದದ ಮಾನವೀಯ ಸಂದೇಶ ನೀಡಿದೆ.
ಸಜಿಪನಡು : ಮಸ್ಜಿದ್ ಬಿಲಾಲ್ ಇದರ ನೂತನ ಅಧ್ಯಕ್ಷರಾಗಿ ಜಾಬಿರ್, ಕಾರ್ಯದರ್ಶಿಯಾಗಿ ಇರ್ಶಾದ್ ಆಯ್ಕೆ
ಬಂಟ್ವಾಳ : ಸಜಿಪನಡು ಮಸ್ಜಿದ್ ಬಿಲಾಲ್ ಸಲಫಿ ಜುಮಾ ಮಸೀದಿ ಇದರ ವಾರ್ಷಿಕ ಮಹಾಸಭೆ ಸಿದ್ದೀಕ್ ಸಜಿಪ ಇವರ ಅಧ್ಯಕ್ಷತೆಯಲ್ಲಿ ರವಿವಾರ ನಡೆಯಿತು. ಮೊಹಮ್ಮದ್ ಸಿರಾಜ್ ವಾರ್ಷಿಕ ವರದಿ ವಾಚಿಸಿದರು, ಶಫೀಕ್ ಲೆಕ್ಕ ಪತ್ರ ಮಂಡಿಸಿದರು. ಮಹಾಸಭೆಯಲ್ಲಿ ನೂತನ ಆಡಳಿತ ಸಮಿತಿಯ ಆಯ್ಕೆ ನಡೆಯಿತು. ಅಧ್ಯಕ್ಷರಾಗಿ ಜಾಬಿರ್ ಬೊಳಮೆ, ಉಪಾಧ್ಯಕ್ಷರಾಗಿ ನೌಶಾದ್, ಪ್ರಧಾನ ಕಾರ್ಯದರ್ಶಿಯಾಗಿ ಇರ್ಶಾದ್, ಜೊತೆ ಕಾರ್ಯದರ್ಶಿಯಾಗಿ ಶಫೀಕ್ , ಕೋಶಾಧಿಕಾರಿಯಾಗಿ ಸಿದ್ದೀಕ್ ಅವರನ್ನು ಆಯ್ಕೆ ಮಾಡಲಾಯಿತು. ಕಾರ್ಯಕಾರಿ ಸಮಿತಿ ಸದಸ್ಯರಾಗಿ ಸಿರಾಜ್, ಅಲ್ತಾಫ್, ಇಲ್ಯಾಸ್, ಹಬೀಬ್, ರಹಮಾನ್, ಫಯಾಝ್ ಅವರನ್ನು ನೇಮಕ ಮಾಡಲಾಯಿತು.
ಭಾರತದ ಸಾಮಾಜಿಕ ರಚನೆಯಲ್ಲಿ ಬಿರುಕುಗಳು ಆಳವಾಗಿ ಅಡಗಿದೆ : ನ್ಯಾಯಮೂರ್ತಿ ಉಜ್ಜಲ್ ಭುಯಾನ್
ಮುಸ್ಲಿಂ ವಿದ್ಯಾರ್ಥಿನಿಗೆ ಮನೆ ನಿರಾಕರಣೆ, ದಲಿತ ಮಹಿಳೆ ತಯಾರಿಸಿದ ಶಾಲಾ ಊಟ ಮಾಡುವುದಕ್ಕೆ ವಿರೋಧ ಘಟನೆ ಉಲ್ಲೇಖಿಸಿದ ನ್ಯಾಯಮೂರ್ತಿ
ಸಿದ್ದು ಪ್ರಶ್ನೆಗೆ ಉತ್ತರಿಸುವರೇ ಎಚ್ಡಿಕೆ?
ಬಹಳ ದಿನಗಳ ನಂತರ ಮತ್ತೆ ಸಿದ್ದರಾಮಯ್ಯ ಮತ್ತು ಎಚ್.ಡಿ. ಕುಮಾರಸ್ವಾಮಿ ನಡುವೆ ವಾಕ್ಸಮರ ಶುರುವಾಗಿದೆ. ಹಾಗೆಯೇ ಬಹಳ ದಿನಗಳ ನಂತರ ಅಧಿಕಾರ ಹಂಚಿಕೆ ಬದಲು ಬೇರೊಂದು ಚರ್ಚೆ ಹುಟ್ಟಿಕೊಂಡಿದೆ. ನಾಯಕತ್ವದ ಬದಲಾವಣೆ ಎಂಬ ಸವಕಲು ಚರ್ಚೆಯ ಬದಲು ‘ಯಾರು, ಯಾವ ಸಮುದಾಯಕ್ಕೆ ಏನು ಮಾಡಿದ್ದಾರೆ?’ ಎನ್ನುವ ಹೊಸ ಚರ್ಚೆ ಅಗತ್ಯ ಎಂದೇ ಅನಿಸುತ್ತದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಸಾಮಾಜಿಕ ನ್ಯಾಯದ ದಿನ (ಫೆಬ್ರವರಿ 20) ಪತ್ರಿಕೆಯೊಂದಕ್ಕೆ ಬರೆದ ಲೇಖನ ಚರ್ಚೆಯ ಮೂಲ. ವಿಶೇಷ ಎಂದರೆ ಅಂದು ರಾಜ್ಯದ ಬೇರೆ ಯಾವ ರಾಜಕಾರಣಿಯೂ ಸಾಮಾಜಿಕ ನ್ಯಾಯದ ದಿನ ಕುರಿತು ಒಂದೇ ಒಂದು ಶಬ್ದ ಮಾತನಾಡಿಲ್ಲ. ಲೇಖನದಲ್ಲಿ ‘‘ನನ್ನ ಮೇಲೆ ಮಾಡುತ್ತಿರುವ ಟೀಕೆಗಳಿಗೆ ಜಾತಿ ಕೂಡ ಕಾರಣ. ಕುರಿ ಕಾಯುತ್ತಿದ್ದವನು ಸಿಎಂ ಆದದ್ದೇ ಪಟ್ಟಭದ್ರರ ಕಣ್ಣು ಕೆಂಪಗಾಗಲು ಕಾರಣ. ನಾನು ಬಡವರು, ಶೋಷಿತರು ಮತ್ತು ಅವಕಾಶ ವಂಚಿತರ ಪರ ಮಾತನಾಡುತ್ತೇನೆ, ಕೆಲಸ ಮಾಡುತ್ತೇನೆ ಎನ್ನುವ ಕಾರಣಕ್ಕಾಗಿಯೇ ಪಟ್ಟಭದ್ರರು ನನ್ನನ್ನು ಗುರಿ ಮಾಡಿಕೊಂಡಿದ್ದಾರೆ. ಯಾರು, ಏನೇ ಮಾಡಿದರೂ ನಾನು ಕಡೆಯವರೆಗೂ ಸಾಮಾಜಿಕ ನ್ಯಾಯದ ಪರ ನಿಲ್ಲುತ್ತೇನೆ. ಓಡಿ ಹೋಗಲು ರಣಹೇಡಿಯಲ್ಲ’’ ಎಂದು ಸಿದ್ದರಾಮಯ್ಯ ಹೇಳಿದ್ದರು. ಈ ಮಾತುಗಳು ‘ನಾಯಕತ್ವದ ಬದಲಾವಣೆ ಹಿನ್ನೆಲೆಯಲ್ಲೇ ಬಂದಿವೆ’. ರಾಹುಲ್ ಗಾಂಧಿ ಹೆಸರನ್ನು ಉಲ್ಲೇಖ ಮಾಡಿರುವುದರಿಂದ ‘ಹೈಕಮಾಂಡ್ಗೆ ಸಂದೇಶ ಕೊಡಲೆಂದೇ ಬಂದಿವೆ’. ‘ಮಾರ್ಮಿಕವಾಗಿ ಮಾತನಾಡುತ್ತಿದ್ದ ಡಿ.ಕೆ. ಶಿವಕುಮಾರ್ಗೆ ಅವರದೇ ಧಾಟಿಯಲ್ಲಿ ಉತ್ತರಿಸಲು ಈ ರೀತಿ ಹೇಳಲಾಗಿದೆ’ ಎಂಬಿತ್ಯಾದಿ ವ್ಯಾಖ್ಯಾನವಾಗುತ್ತಿತ್ತು. ಇದಕ್ಕೆ ಡಿ.ಕೆ. ಶಿವಕುಮಾರ್ ಯಾವ ರೀತಿ ಪ್ರತಿಕ್ರಿಯಿಸಬಹುದು ಎನ್ನುವ ಕುತೂಹಲವೂ ಹುಟ್ಟಿಕೊಂಡಿತು. ಆದರೆ ಡಿ.ಕೆ. ಶಿವಕುಮಾರ್ ಆಗಲಿ, ಬಿಜೆಪಿ ನಾಯಕರಾಗಲಿ ಪ್ರತಿಕ್ರಿಯಿಸಲಿಲ್ಲ. ಪ್ರತಿಕ್ರಿಯಿಸಿದವರು ಅದರಲ್ಲೂ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದವರು ಎಚ್.ಡಿ. ಕುಮಾರಸ್ವಾಮಿ. ಸಿದ್ದರಾಮಯ್ಯ ಯಾವುದೇ ಜಾತಿ ಮತ್ತು ನಾಯಕನ ಹೆಸರನ್ನು ಹೇಳಿರಲಿಲ್ಲ. ಆದರೂ ಕುಮಾರಸ್ವಾಮಿ ನೇರವಾಗಿ ‘‘ಕುರ್ಚಿ ಉಳಿಸಿಕೊಳ್ಳಲು ಸಿದ್ದರಾಮಯ್ಯ ಜಾತಿ ಅಸ್ತ್ರ ಬಳಸುತ್ತಿದ್ದಾರೆ. ಕಾಂಗ್ರೆಸ್ನ ಹಿರಿಯರನ್ನು ಮೂಲೆಗುಂಪು ಮಾಡಿದ್ದಾರೆ. ಅಹಿಂದ ಉದ್ಧಾರಕ್ಕಾಗಿ ಮುಖ್ಯಮಂತ್ರಿ ಆಗಿಲ್ಲ. ಅವರು ಮುಖ್ಯಮಂತ್ರಿ ಆಗಲು ಕುರುಬರಷ್ಟೇ ಕಾರಣರಲ್ಲ’’ ಎಂದು ಸಿದ್ದರಾಮಯ್ಯ ಹೆಸರನ್ನೂ ಹೇಳಿದರು. ಜೊತೆಗೆ ಕುರುಬ ಜಾತಿಯ ಬಗೆಗೂ ಮಾತನಾಡಿದರು. ಇದಾದ ಮೇಲೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ ಸಿದ್ದರಾಮಯ್ಯ, ‘ಕುಮಾರಸ್ವಾಮಿ ಮತ್ತು ಎಚ್.ಡಿ. ದೇವೇಗೌಡ ಜಾತಿವಾದಿಗಳಲ್ಲ, ಸ್ವಜಾತಿ ವಿರೋಧಿಗಳು. ಕುಟುಂಬವಾದಿಗಳು. ಕುಟುಂಬಕ್ಕಾಗಿ ಸ್ವಜಾತಿ ನಾಯಕರನ್ನು ಮುಗಿಸಿದ್ದಾರೆ’ ಎಂದಿದ್ದಾರೆ. ಜೊತೆಗೆ ದೇವೇಗೌಡ ಎಷ್ಟು ಮಂದಿ ಒಕ್ಕಲಿಗ ನಾಯಕರನ್ನು ಬೆಳೆಸಿದ್ದಾರೆ? ಎಂಬ ಪ್ರಶ್ನೆ ಎತ್ತಿದ್ದಾರೆ. ಈ ಪ್ರಶ್ನೆಗೆ ಕುಮಾರಸ್ವಾಮಿ ಉತ್ತರಿಸಬೇಕಾಗಿತ್ತು. ಏಕೆಂದರೆ ‘ಕಾದಾಟ’ ಶುರು ಮಾಡಿದವರು ಅವರೇ ಆಗಿದ್ದರು. ಆದರೆ ದೇವೇಗೌಡ ಇಲ್ಲದಿದ್ದರೆ ಸಿದ್ದರಾಮಯ್ಯ ಉಲ್ಲೇಖ ಮಾಡಿರುವ ನಾಯಕರು ಶಾಸಕ, ಸಂಸದರೇ ಆಗುತ್ತಿರಲಿಲ್ಲ ಎಂದು ಹಾರಿಕೆಯ ಉತ್ತರ ನೀಡಿದ್ದಾರೆ. ದೇವೇಗೌಡ ಇಲ್ಲದೆಯೂ ಪುಟ್ಟಸ್ವಾಮಿಗೌಡ, ವೈ.ಕೆ. ರಾಮಯ್ಯ, ಬಚ್ಚೇಗೌಡ ಸಂಸದರಾದರು. ಬೈರೇಗೌಡರ ಪುತ್ರ ಕೃಷ್ಣ ಬೈರೇಗೌಡ ಈಗ ಸಚಿವ. ಇನ್ನೊಬ್ಬ ನಾಯಕ ಚೆಲುವರಾಯಸ್ವಾಮಿ ಮಂತ್ರಿ. ಇದೇ ರೀತಿ ಮುಖ್ಯಮಂತ್ರಿಯಾಗುವಂತಹ ದಲಿತ ನಾಯಕರು ಇರುವುದು ಕೂಡಾ ಕಾಂಗ್ರೆಸ್ ಪಕ್ಷದಲ್ಲಿಯೇ ಎಂಬ ಸಿದ್ದರಾಮಯ್ಯ ಮಾತಿಗೆ ಪ್ರತಿಕ್ರಿಯಿಸಿರುವ ಕುಮಾರಸ್ವಾಮಿ, ‘‘ಮಲ್ಲಿಕಾರ್ಜುನ ಖರ್ಗೆ ಅವರನ್ನು ಮುಖ್ಯಮಂತ್ರಿ ಮಾಡಬೇಕಿತ್ತು’’ ಎಂದು ಹೇಳಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ಅವರ ಬಗ್ಗೆ ಕಾಳಜಿ ವ್ಯಕ್ತಪಡಿಸಿದ್ದಾರೆ. ಆದರೆ 2008ರಲ್ಲಿ ಅಂಥದೊಂದು ಅವಕಾಶ ದೇವೇಗೌಡರ ಮುಂದೆ ಇತ್ತು ಎನ್ನುವುದನ್ನು ಮರೆತಿದ್ದಾರೆ. ಕುಮಾರಸ್ವಾಮಿ ಮೊದಲು ಸಿದ್ದರಾಮಯ್ಯ ಪ್ರಶ್ನೆಗಳಿಗೆ ಉತ್ತರಿಸಿ ನಂತರ ಅವರಿಗೂ ಪ್ರಶ್ನೆಗಳನ್ನು ಕೇಳಬೇಕು. ಅಷ್ಟು ಮಾತ್ರವಲ್ಲ, ಉತ್ತರಕ್ಕೆ ಒತ್ತಾಯಿಸಬೇಕು. ವಾಸ್ತವದಲ್ಲಿ ಇಂಥ ಚರ್ಚೆ ನಡೆಯುವುದು ಒಳ್ಳೆಯದೇ. ದೇವೇಗೌಡ, ಕುಮಾರಸ್ವಾಮಿ ಒಕ್ಕಲಿಗ ಸಮುದಾಯಕ್ಕೆ ಏನು ಮಾಡಿದರು? ಬೇರೆ ಸಮುದಾಯಗಳಿಗೆ ಏನು ಮಾಡಿದರು? ಹಾಗೆಯೇ ಸಿದ್ದರಾಮಯ್ಯ ಕುರುಬ ಸಮುದಾಯಕ್ಕೆ ಏನು ಮಾಡಿದ್ದಾರೆ? ಬೇರೆ ಸಮುದಾಯಗಳಿಗೆ ಏನು ಮಾಡಿದ್ದಾರೆ? ಯಾರು ಸಾಮಾಜಿಕ ನ್ಯಾಯದ ಪರ? ಯಾರು ವಿರುದ್ಧ? ಯಾರನ್ನು ಯಾರು ಬೆಳೆಸಿದರು? ಯಾರನ್ನು ಯಾರು ಬಳಸಿಕೊಂಡು ಬಿಸಾಡಿದರು? ಎಲ್ಲವೂ ಚರ್ಚೆಯಾಗಬೇಕು. ಆರೋಗ್ಯಕರ ಸಮಾಜದ ನಿರ್ಮಾಣಕ್ಕೆ ಆರೋಗ್ಯಕರ ಚರ್ಚೆ ಬಹಳ ಅಗತ್ಯ. ಡಿಕೆಶಿ ಪರವಾದರೆ ಎಚ್ಡಿಕೆ? ಸಿದ್ದರಾಮಯ್ಯ ವಿರುದ್ಧ ಸಮರಕ್ಕಿಳಿದಿರುವ ಕುಮಾರಸ್ವಾಮಿ ಅನಿವಾರ್ಯವಾಗಿ ಈಗ ಡಿ.ಕೆ. ಶಿವಕುಮಾರ್ ಪರ ನಿಲ್ಲುವಂತಾಗಿದೆ. ಇಷ್ಟು ದಿನ ಸಿದ್ದರಾಮಯ್ಯ ಬೇಕಾದರೂ ಮುಖ್ಯಮಂತ್ರಿಯಾಗಿ ಮುಂದುವರಿಯಲಿ, ಪರಮೇಶ್ವರ್ಗೆ ಬೇಕಾದರೂ ಪಟ್ಟ ಸಿಗಲಿ, ಡಿ.ಕೆ. ಶಿವಕುಮಾರ್ ಮಾತ್ರ ಮುಖ್ಯಮಂತ್ರಿ ಆಗಬಾರದು ಎನ್ನುವ ನಿಲುವಿನಲ್ಲಿದ್ದ ಕುಮಾರಸ್ವಾಮಿ ಈಗ ‘ಸಿದ್ದರಾಮಯ್ಯಗೆ ಒಕ್ಕಲಿಗರ ಮೇಲೆ ಪ್ರೀತಿ ಇದ್ದರೆ ಡಿ.ಕೆ. ಶಿವಕುಮಾರ್ ಅವರನ್ನು ಮುಖ್ಯಮಂತ್ರಿ ಮಾಡಲಿ’ ಎಂದು ಸವಾಲು ಹಾಕಿದ್ದಾರೆ. ಈ ಮೂಲಕ ಸಿದ್ದರಾಮಯ್ಯ ‘ನಮ್ಮಲ್ಲಿ ಡಿ.ಕೆ. ಶಿವಕುಮಾರ್ ಮಾತ್ರವಲ್ಲ, ಟಿ.ಬಿ. ಜಯಚಂದ್ರ, ಕಿಮ್ಮನೆ ರತ್ನಾಕರ್, ಎಂ. ಕೃಷ್ಣಪ್ಪ, ಕೃಷ್ಣಬೈರೇಗೌಡ, ಪಿರಿಯಾಪಟ್ಟಣ ವೆಂಕಟೇಶ್ ಸೇರಿದಂತೆ ಇನ್ನೂ ಅನೇಕ ಒಕ್ಕಲಿಗರ ನಾಯಕರಿದ್ದಾರೆ’ ಎಂದು ಹೇಳುವಂತೆ ಪ್ರಚೋದಿಸಿದ್ದಾರೆ. ಇದರಿಂದ ಅಂತಿಮವಾಗಿ ಲಾಭವಾಗುವುದು ಸಿದ್ದರಾಮಯ್ಯ ಅವರಿಗೇನೇ. ಏಕೆಂದರೆ ಅವರೀಗ ಒಂದೆಡೆ ದೊಡ್ಡ ಪಟ್ಟಿ ಬಿಡುಗಡೆ ಮಾಡಿ ‘ಡಿ.ಕೆ. ಶಿವಕುಮಾರ್ ಒಕ್ಕಲಿಗರ ಏಕಮೇವ ನಾಯಕ ಅಲ್ಲ’ ಎನ್ನುವ ಸಂದೇಶ ಕೊಟ್ಟಿದ್ದಾರೆ. ಜೊತೆಗೆ ದೇವೇಗೌಡ ಮತ್ತು ಕುಮಾರಸ್ವಾಮಿ ಹೊರತುಪಡಿಸಿ ಜೆಡಿಎಸ್ ಪಕ್ಷದಲ್ಲಿ ಇರುವ ಒಕ್ಕಲಿಗ ನಾಯಕರು ಯಾರು ಎಂದು ಪ್ರಶ್ನೆ ಮಾಡಿದ್ದಾರೆ. ಪಿಕ್ ಆಂಡ್ ಪಾರ್ಕ್! ಸಿದ್ದರಾಮಯ್ಯ ಕಾಂಗ್ರೆಸ್ ಸೇರಲು ಎಸ್.ಎಂ. ಕೃಷ್ಣ ಕಾರಣ. He Is Unpolished ಎಂಬುದಾಗಿ ಹೇಳಿ ಸಿದ್ದರಾಮಯ್ಯ ಕಾಂಗ್ರೆಸ್ ಸೇರ್ಪಡೆಗೆ ಸೋನಿಯಾ ಗಾಂಧಿ ಅವರನ್ನು ಒಪ್ಪಿಸಿದ್ದು ಎಸ್.ಎಂ. ಕೃಷ್ಣ ಎಂದು ಕುಮಾರಸ್ವಾಮಿ ಹೇಳಿದ್ದಾರೆ. ಆದರೆ ರಾಜಕೀಯವನ್ನು ಏಕಮುಖವಾಗಿ ನೋಡಲು ಸಾಧ್ಯವಿಲ್ಲ. ದೇವೇಗೌಡರ ವೈರಿ ಎನ್ನುವ ಕಾರಣಕ್ಕೆ ಸಿದ್ದರಾಮಯ್ಯ ಕಾಂಗ್ರೆಸ್ಗೆ ಬರಲಿ ಎನ್ನುವ ಅಭಿಪ್ರಾಯ ಎಸ್.ಎಂ. ಕೃಷ್ಣಗೆ ಇತ್ತಾದರೂ ಬಂದಮೇಲೆ ಅವರಿಗೆ ಹೆಚ್ಚಿನ ಪ್ರಾಶಸ್ತ್ಯ ಕೊಡುವುದು ಬೇಡ ಎನ್ನುವ ನಿಲುವನ್ನೂ ಹೊಂದಿದ್ದರು. ಅದೇ ಕಾರಣಕ್ಕೆ ಸಿದ್ದರಾಮಯ್ಯ ಅವರನ್ನು ಕಾಂಗ್ರೆಸ್ಗೆ ಸೇರಿಸಿಕೊಳ್ಳಬೇಕು ಎನ್ನುವ ಪ್ರಸ್ತಾವವನ್ನು ರಾಜ್ಯದ ನಾಯಕರು ಎಸ್.ಎಂ. ಕೃಷ್ಣ ಎದುರು ಇಟ್ಟಾಗ Pick And Park (ಕರೆದು ಮೂಲೆಗೆ ಕೂರಿಸಿ) ಎಂದಷ್ಟೇ ಹೇಳಿ ಎದ್ದು ಹೋಗಿದ್ದರಂತೆ. ಈ ಘಟನೆಗೆ ಬಿ.ಎಲ್. ಶಂಕರ್, ಎಚ್.ಎಂ. ರೇವಣ್ಣ, ಎಚ್. ವಿಶ್ವನಾಥ್, ಆರ್.ವಿ. ದೇವರಾಜ್ ಸಾಕ್ಷಿಯಾಗಿದ್ದರು ಎನ್ನುತ್ತಾರೆ ಕಾಂಗ್ರೆಸ್ ನಾಯಕರು. ಬಿಜೆಪಿ ನಾಯಕರ ಬಣ್ಣನೆಯೇ ಬೇರೆ! ಇನ್ನೊಂದೆಡೆ ಬಿಜೆಪಿ ನಾಯಕರು ಸಿದ್ದರಾಮಯ್ಯ-ಕುಮಾರಸ್ವಾಮಿ ಜಗಳವನ್ನು ಬೇರೆ ರೀತಿ ನೋಡುತ್ತಿದ್ದಾರೆ. ಬಿಜೆಪಿ-ಜೆಡಿಎಸ್ ಮೈತ್ರಿಯಲ್ಲಿ ಸಮಸ್ಯೆ ಶುರುವಾಗಿದೆ. ಹಾಸನದಲ್ಲಿ ಪ್ರೀತಮ್ ಗೌಡ, ಮಂಡ್ಯದಲ್ಲಿ ನಾರಾಯಣಗೌಡ ಜೆಡಿಎಸ್ ಜೊತೆ ಕಿರಿಕಿರಿ ಶುರು ಮಾಡಿದ್ದಾರೆ. ಇತ್ತೀಚೆಗೆ ಛಲವಾದಿ ನಾರಾಯಣಸ್ವಾಮಿ 113 ಸ್ಥಾನ ಪಡೆದವರು ಮುಖ್ಯಮಂತ್ರಿ ಆಗುತ್ತಾರೆ ಎಂದು ಹೇಳಿದ್ದರು. ಆ ಮೂಲಕ ಜೆಡಿಎಸ್ ಕನಸು ಕಾಣಬಾರದು ಎಂಬ ಸಂದೇಶ ನೀಡಿದ್ದರು. ಇದರ ಬೆನ್ನಲ್ಲೇ ಮೊನ್ನೆ ಮೊನ್ನೆ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಪಾಲ್ಗೊಂಡಿದ್ದ ಎಲ್ಲರೂ ‘ಸ್ವತಂತ್ರವಾಗಿ ಗೆಲ್ಲಬೇಕು’ ಎನ್ನುವ ಮಾತನ್ನಾಡಿದ್ದಾರೆ. ಜೆಡಿಎಸ್ ಎಂಬ ಮಿತ್ರ ಪಕ್ಷ ಇದೆ ಎನ್ನುವುದನ್ನು ಉದ್ದೇಶಪೂರ್ವಕವಾಗಿಯೇ ಮರೆತಿದ್ದಾರೆ. ಇವೆಲ್ಲವೂ ಕುಮಾರಸ್ವಾಮಿಗೆ ಇರಿಸುಮುರಿಸು ಉಂಟುಮಾಡಿವೆ. ಅವರು ಹತಾಶೆಯಿಂದ ಸಿದ್ದರಾಮಯ್ಯ ವಿರುದ್ಧ ಮಾತನಾಡಿದ್ದಾರೆ. ಈ ಹಂತದಲ್ಲಿ ಡಿ.ಕೆ. ಶಿವಕುಮಾರ್ ಏನನ್ನಾದರೂ ಮಾತನಾಡಿದರೆ ಅವರ ವಿರುದ್ಧವೂ ತಿರುಗಿ ಬೀಳುತ್ತಿದ್ದರು ಎನ್ನುವುದು ಬಿಜೆಪಿ ನಾಯಕರ ವಾದ. ----ಆಫ್ ದಿ ರೆಕಾರ್ಡ್!---- 2028ರ ಚುನಾವಣೆಗೆ ಸುನೀಲ್ ಕನಗೋಲುರನ್ನು ಮುಂದುವರಿಸುವ ಬಗ್ಗೆ ಕಾಂಗ್ರೆಸ್ ಇನ್ನೂ ಏನೂ ನಿರ್ಧಾರ ಮಾಡಿಲ್ಲ. ಅಷ್ಟು ಬೇಗ ಮಾಡುವುದು ಅದರ ಜಾಯಮಾನವೂ ಅಲ್ಲ. ಇದರ ನಡುವೆ ಇನ್ನೊಬ್ಬ ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್ ಮುಂದಿನ ಬಾರಿ ರಾಜ್ಯ ಪ್ರವೇಶ ಮಾಡುತ್ತಾರೆ ಎನ್ನುವ ಸುದ್ದಿ ಕೇಳಿಬರುತ್ತಿದೆ. ಯಾವ ಪಕ್ಷಕ್ಕೆ ಕೆಲಸ ಮಾಡುತ್ತಾರೆ ಎನ್ನುವುದು ಖಾತ್ರಿಯಾಗಿಲ್ಲ. ಅವರು ಚುನಾವಣಾ ತಂತ್ರಜ್ಞನಾಗಿ ಕೆಲಸ ಶುರು ಮಾಡಿದ್ದೇ ಬಿಜೆಪಿ ಮೂಲಕ, ಮತ್ತೆ ಬಿಜೆಪಿಗೆ ಹೋಗಲ್ಲ ಎಂದು ಹೇಳಲು ಸಾಧ್ಯವಿಲ್ಲ. ಇತ್ತೀಚೆಗೆ ಅವರು ಪ್ರಿಯಾಂಕಾ ಗಾಂಧಿಯವರನ್ನು ಭೇಟಿ ಮಾಡಿದ್ದರಿಂದ ಕಾಂಗ್ರೆಸ್ ಬಾಗಿಲು ತಟ್ಟುತ್ತಿದ್ದಾರೆ ಎನ್ನುವುದೂ ಸುಳ್ಳಲ್ಲ. ಎರಡೂ ಪ್ರಬಲ ಪಕ್ಷಗಳ ನಡುವೆ ಅಸ್ತಿತ್ವ ಉಳಿಸಿಕೊಳ್ಳಲು ಹೆಣಗಾಡುತ್ತಿರುವ ಜೆಡಿಎಸ್ ಪಿಕೆಯನ್ನು ಕರೆತಂದರೆ ಅಚ್ಚರಿ ಪಡಬೇಕಾಗಿಲ್ಲ. ಒಟ್ಟಿನಲ್ಲಿ ಈ ಬೆಳವಣಿಗೆಯಿಂದ ಹೆಚ್ಚು ಖುಷಿ ಪಡಬೇಕಾದವರು ರಾಜಕೀಯ ವರದಿ ಮಾಡುವ ಪತ್ರಕರ್ತರು. ಏಕೆಂದರೆ ಈಗಾಗಲೇ ಪ್ರಶಾಂತ್ ಕಿಶೋರ್ ತಂಡ ರಾಜಕೀಯ ವಿಶ್ಲೇಷಕರಿಗಾಗಿ ಹುಡುಕಾಟ ನಡೆಸುತ್ತಿದೆಯಂತೆ.
ಟ್ರಂಪ್ ಸುಂಕಕ್ಕೆ US ಸುಪ್ರೀಂ ಬ್ರೇಕ್ ಬೆನ್ನಲ್ಲೇ ಭಾರತ-ಅಮೆರಿಕಾ ವ್ಯಾಪಾರ ಮಾತುಕತೆ ಅತಂತ್ರ!
ಸುಂಕನಾಯಕನಂತೆ ಎಲ್ಲಾ ದೇಶಗಳನ್ನು ತನ್ನ ಅಣತಿಯಂತೆ ನಡೆಸಿಕೊಳ್ಳಲು ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸುಂಕವನ್ನು ಬ್ರಹ್ಮಾಸ್ತ್ರದಂತೆ ಬಳಸುತ್ತಾ ಬೆದರಿಕೆ ಹಾಕುತ್ತಿದ್ದರು. ಆದರೆ, ಇದಕ್ಕೆ ಬ್ರೇಕ್ ಹಾಕಿದ ಯುಎಸ್ ಸುಪ್ರೀಂ ಕೋರ್ಟ್ ಸುಂಕ ನೀತಿಯನ್ನು ಕಾನೂನುಬಾಹಿರ ಎಂದು ತೀರ್ಪು ನೀಡಿದೆ. ಈ ಬೆನ್ನಲ್ಲೇ, ಮಾರ್ಚ್ ತಿಂಗಳಿನಲ್ಲಿ ಘೋಷಣೆಯಾಗಲಿದೆ ಎಂದು ನಿರೀಕ್ಷಿಸಲಾಗಿದ್ದ ಭಾರತದ ನಡುವೆ ಅಮೆರಿಕಾ ನಡುವಿನ ವ್ಯಾಪಾರ ಒಪ್ಪಂದ ಅತಂತ್ರ ಸ್ಥಿತಿಗೆ ತಲುಪಿದ್ದು, ಮಾತುಕತೆಗಳನ್ನು ಮುಂದೂಡಲಾಗಿದೆ ಎಂದು ಉಭಯಕಡೆಗಳು ತಿಳಿಸಿರುವುದು ಈ ವ್ಯಾಪಾರ ಒಪ್ಪಂದ ಇನ್ನಷ್ಟು ವಿಳಂಬವಾಗುವ ಸಾಧ್ಯತೆಗಳಿವೆ ಎಂಬುದನ್ನು ಸೂಚಿಸುವಂತಿದೆ.
Uttar Pradesh | ಮೀರತ್ನಲ್ಲಿ ಮನೆಗೆ ಬೆಂಕಿ: ಐವರು ಮಕ್ಕಳು ಸಹಿತ ಆರು ಮಂದಿ ಮೃತ್ಯು
ಮೀರತ್: ಉತ್ತರ ಪ್ರದೇಶದ ಮೀರತ್ ಲಿಸಾಡಿ ಗೇಟ್ ಪ್ರದೇಶದ ಮನೆಯೊಂದರಲ್ಲಿ ಸೋಮವಾರ ಬೆಂಕಿ ಕಾಣಿಸಿಕೊಂಡಿದ್ದು, ಐವರು ಮಕ್ಕಳು ಸೇರಿದಂತೆ ಆರು ಜನರು ಮೃತಪಟ್ಟಿದ್ದಾರೆ. ಈ ದುರಂತ ಘಟನೆಯಲ್ಲಿ ಮತ್ತೊಬ್ಬ ಮಹಿಳೆ ಕೂಡ ಗಾಯಗೊಂಡಿದ್ದಾರೆ. ಮೃತರನ್ನು ರುಖ್ಸರ್ (25), ಮಹ್ಬಿಶ್ (12), ಹಮ್ಮದ್ (4), ಅಕ್ದಾಸ್ (4) ಮತ್ತು ಪುಟ್ಟ ಕಂದಮ್ಮಗಳಾದ ನಬಿಯಾ ಮತ್ತು ಇನಾಯತ್ ಎಂದು ಗುರುತಿಸಲಾಗಿದೆ. ಅಮೀರ್ ಬಾನೋ (55) ಗಾಯಗೊಂಡಿದ್ದು, ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸೋಮವಾರ ರಾತ್ರಿ ಘಟನೆ ನಡೆದಿದೆ. ಗಾಯಾಳುಗಳನ್ನು ಸಿವಿಲ್ ಆಸ್ಪತ್ರೆಗೆ ದಾಖಲಿಸಲಾಯಿತು. ಘಟನೆಯಲ್ಲಿ ಆರು ಮಂದಿ ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದ್ದಾರೆ ಎಂದು ಎಸ್ಪಿ ಅವಿನಾಶ್ ಪಾಂಡೆ ಹೇಳಿದ್ದಾರೆ. ಇಕ್ಬಾಲ್ ಅಹ್ಮದ್ ಅವರ ಮನೆಯಲ್ಲಿ ಅಗ್ನಿ ಅವಘಡ ಸಂಭವಿಸಿದೆ. ಪ್ರಾಥಮಿಕ ತನಿಖೆಯಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಕಾಣಿಸಿಕೊಂಡಿದೆ ಎಂದು ಹೇಳಲಾಗಿದೆ. ಈ ಬಗ್ಗೆ ವಿವರವಾದ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮನೆಯಲ್ಲಿ ಟೈಲರಿಂಗ್ ಕೆಲಸ ನಡೆಯುತ್ತಿತ್ತು. ಇದರಿಂದಾಗಿ ಹೆಚ್ಚಿನ ಪ್ರಮಾಣದ ಬಟ್ಟೆಗಳನ್ನು ಸಂಗ್ರಹಿಸಿಡಲಾಗಿತ್ತು. ಇದು ಬೆಂಕಿ ವೇಗವಾಗಿ ಹರಡಲು ಕಾರಣವಾಗಿದೆ ಎಂದು ತಿಳಿದು ಬಂದಿದೆ.
ಬಿಜೆಪಿಯ ವಂಶಪಾರಂಪರ್ಯ ಫಲಾನುಭವಿಗಳ ಪಟ್ಟಿ ಬಿಡುಗಡೆ ಮಾಡಿದ ಪ್ರಿಯಾಂಕ್ ಖರ್ಗೆ
BJP Dynasty Politicians : ವಿಧಾನ ಪರಿಷತ್ತಿನಲ್ಲಿ ಪ್ರತಿಪಕ್ಷದ ನಾಯಕರಾದ ಛಲವಾದಿ ನಾರಾಯಣಸ್ವಾಮಿ ಮತ್ತು ಐಟಿಬಿಟಿ ಖಾತೆಯ ಸಚಿವ ಪ್ರಿಯಾಂಕ್ ಖರ್ಗೆಯವರ ನಡುವೆ ಟ್ವೀಟ್ ಸಮರ ಜೋರಾಗಿ ನಡೆಯುತ್ತಿದೆ. ಪ್ರಿಯಾಂಕ್ ಖರ್ಗೆಯವರನ್ನು ರಾಜಕೀಯದ ಹಸುಗೂಸು ಎಂದು ಕರೆದಿರುವ ಛಲವಾದಿಗೆ, ನಾನು ಜನರಿಂದ ಆಯ್ಕೆಯಾಗಿದ್ದೇನೆಯೇ ಹೊರತು ಚಡ್ಡಿ ಹೊತ್ತು ಹುದ್ದೆ ಪಡೆಯಲಿಲ್ಲ ಎಂದು ಖರ್ಗೆ ತಿರುಗೇಟು ನೀಡಿದ್ದಾರೆ.
ಮೆಕ್ಸಿಕೋ ದೇಶದಲ್ಲಿ ಅಲ್ಲೋಲ ಕಲ್ಲೋಲ, ಅಮೆರಿಕ ಪಕ್ಕದ ದೇಶದಲ್ಲಿ ಘೋರ ಪರಿಸ್ಥಿತಿ | Mexico Situation
ಅಮೆರಿಕ ಮತ್ತು ಮೆಕ್ಸಿಕೋ ಅಕ್ಕಪಕ್ಕದ ದೇಶಗಳಾಗಿದ್ದು, ಮೆಕ್ಸಿಕೋ ಜೊತೆಗೆ ಅಮೆರಿಕ ಅಷ್ಟೊಂದು ಉತ್ತಮ ಸಂಬಂಧ ಉಳಿಸಿಕೊಂಡಿಲ್ಲ. ಇತ್ತೀಚೆಗೆ ನೇರವಾಗಿ ಮೆಕ್ಸಿಕೋ ಮೇಲೆ ದಾಳಿ ಮಾಡುವ ಬಗ್ಗೆ ಕೂಡ ಅಮೆರಿಕ ಚಿಂತನೆ ನಡೆಸಿದೆ ಎಂಬ ಆರೋಪ ಕೇಳಿಬಂದಿತ್ತು. ಹಾಗೇ ಎರಡೂ ದೇಶಗಳ ಮಧ್ಯೆ ತಿಕ್ಕಾಟ ಕೂಡ ಹೆಚ್ಚಾಗುತ್ತಾ ಸಾಗಿತ್ತು. ಇಂತಹ ಪರಿಸ್ಥಿತಿಯಲ್ಲಿ ದಿಢೀರ್ ಮೆಕ್ಸಿಕೋ ದೇಶದಲ್ಲಿ ಅಲ್ಲೋಲ ಕಲ್ಲೋಲವೇ
ಬಲ್ಡೋಟಾ ಕಾರ್ಖಾನೆ ವಿಸ್ತರಣೆ ವಿರೋಧಿಸಿ ಕೊಪ್ಪಳ ಬಂದ್: ತೆರೆಯದ ಅಂಗಡಿ ಮುಂಗಟ್ಟುಗಳು
ಕೊಪ್ಪಳ: ಬಲ್ಡೋಟಾ ಕಾರ್ಖಾನೆ ವಿಸ್ತರಣೆ ವಿರೋಧಿಸಿ ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನ ಸಮಿತಿ ನೀಡಿರುವ ಇಂದಿನ ಕೊಪ್ಪಳ ಬಂದ್ ಕರೆಗೆ ಉತ್ತಮ ಸ್ಪಂದನ ವ್ಯಕ್ತವಾಗಿದೆ. ಬೆಳಗ್ಗೆಯಿಂದಲೇ ವ್ಯಾಪಾರಿಗಳು ತಮ್ಮ ಅಂಗಡಿ ಮುಂಗಟ್ಟುಗಳನ್ನು ತೆರೆಯದೆ 'ಬಂದ್'ಗೆ ಬೆಂಬಲ ಸೂಚಿಸಿದ್ದಾರೆ. ಕೊಪ್ಪಳ ಬಂದ್ ಗೆ ಅನೇಕ ಸಂಘ-ಸಂಸ್ಥೆಗಳು, ರಾಜಕೀಯ ಪಕ್ಷಗಳು ಬೆಂಬಲ ಸೂಚಿಸಿದ್ದು, ಈಗಾಗಲೇ ಖಾಸಗಿ ಶಾಲೆಗಳು ರಜೆ ಘೋಷಣೆ ಮಾಡಿವೆ. ಕೊಪ್ಪಳ ವಿಶ್ವವಿದ್ಯಾನಿಲಯವು ಮಂಗಳವಾರ ನಿಗದಿಯಾಗಿದ್ದ ತನ್ನ ಸ್ನಾತಕೋತ್ತರ ಪರೀಕ್ಷೆ ಗಳನ್ನು ಮುಂದೂಡಿದೆ. ಕಳೆದ ವರ್ಷವೂ ಇದೆ ದಿನ ಕೊಪ್ಪಳ ಬಂದ್ ಮಾಡಿ ಬಲ್ದೋಟಾ ಕಾರ್ಖಾನೆ ಬೇಡವೆಂದು ಜಿಲ್ಲೆಯ ಜನರು ಸರಕಾರಕ್ಕೆ ಸಂದೇಶವನ್ನು ಕೊಟ್ಟಿದ್ದರು. ಆದರೂ ಸರಕಾರ ಜಿಲ್ಲೆಯ ಜನರ ಬೇಡಿಕೆಗೆ ಪೂರಕವಾಗಿ ಸ್ಪಂದಿಸಿಲ್ಲ. ಈ ಹಿನ್ನೆಲೆಯಲ್ಲಿ ಕಾರ್ಖಾನೆ ವಿಸ್ತರಣೆ ನಿಲ್ಲಿಸುವಂತೆ ಆಗ್ರಹಿಸಿ ಕಳೆದ 116 ದಿನಗಳಿಂದ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಮುಂದುವರಿದಿದೆ.
ಜಿಂಬಾಬ್ವೆ ವಿರುದ್ಧ ದೈತ್ಯ ಗೆಲುವು ದಾಖಲಿಸಿದ ವೆಸ್ಟ್ ಇಂಡೀಸ್; ಭಾರತದ ಸೆಮಿಫೈನಲ್ ಕನಸಿನ ಗತಿ ಏನು?
ಟಿ-20 ವಿಶ್ವಕಪ್ 2026ರಲ್ಲಿ ತನ್ನ ಪಯಣ ಮುಂದುವರೆಸಲು ಅನ್ಯ ತಂಡಗಳ ಫಲಿತಾಂಶದ ಮೇಲೆ ಅವಲಂಬಿತವಾಗಿರುವ ಭಾರತಕ್ಕೆ, ವೆಸ್ಟ್ ಇಂಡೀಸ್ ತಂಡ ಭಾರೀ ಆಘಾತ ನೀಡಿದೆ. ಜಿಂಬಾಬ್ವೆ ವಿರುದ್ಧ ಭರ್ಜರಿ ಜಯಗಳಿಸಿರುವ ವೆಸ್ಟ್ ಇಂಡೀಸ್, ಭಾರತದ ವಿಶ್ವಕಪ್ ಪಯಣವನ್ನು ಮತ್ತಷ್ಟು ದುಸ್ತರವಾಗಿಸಿದೆ. ವಾಂಖೆಡೆ ಕ್ರೀಡಾಂಗಣದಲ್ಲಿ ವೆಸ್ಟ್ ಇಂಡೀಸ್ ತಂಡ ಜಿಂಬಾಬ್ವೆ ತಂಡವನ್ನು ಬರೋಬ್ಬರಿ 107 ರನ್ಗಳ ಅಂತರದಿಂದ ಸೋಲಿಸಿದೆ. ಈ ಪಂದ್ಯ ಭಾರತದ ಸೆಮಿಫೈನಲ್ ಕನಸನ್ನು ಹೇಗೆ ಛಿದ್ರಗೊಳಿಸಬಹುದು? ಇಲ್ಲಿದೆ ಮಾಹಿತಿ.
ವೆಸ್ಟ್ಇಂಡೀಸ್ ಭರ್ಜರಿ ಗೆಲುವಿನ ಬಳಿಕ ಭಾರತದ ಸೆಮೀಸ್ ಹಾದಿ ಹೇಗೆ?
ಹೊಸದಿಲ್ಲಿ: ಟಿ20 ವಿಶ್ವಕಪ್ ಟೂರ್ನಿಯ ಗುಂಪು ಹಂತದಲ್ಲಿ ಅಜೇಯವಾಗಿ ಉಳಿದಿದ್ದ ಭಾರತ ತಂಡ ಎರಡನೇ ಹಂತದ ಮೊದಲ ಪಂದ್ಯದಲ್ಲೇ ದಕ್ಷಿಣ ಆಫ್ರಿಕಾ ವಿರುದ್ಧ 76 ರನ್ ಗಳ ಸೋಲಿನೊಂದಿಗೆ ಅಂಕಪಟ್ಟಿಯಲ್ಲಿ ದಿಢೀರ್ ಕುಸಿತ ಕಂಡಿತ್ತು. ದಕ್ಷಿಣ ಆಫ್ರಿಕಾ, ವೆಸ್ಟ್ಇಂಡೀಸ್ ಮತ್ತು ಜಿಂಬಾಬ್ವೆ ಜತೆ ಒಂದನೇ ಗುಂಪಿನಲ್ಲಿರುವ ಭಾರತ ಇದೀಗ ಸಂಕಷ್ಟಕ್ಕೆ ಸಿಲುಕಿದೆ. ಇದೇ ಗುಂಪಿನಲ್ಲಿರುವ ವೆಸ್ಟ್ಇಂಡೀಸ್ ತನ್ನ ಆರಂಭಿಕ ಪಂದ್ಯದಲ್ಲಿ ಜಿಂಬಾಬ್ವೆ ವಿರುದ್ಧ 107 ರನ್ ಗಳ ಭರ್ಜರಿ ಜಯ ಸಾಧಿಸಿದ್ದು, ಗುಂಪಿನಲ್ಲಿ ಅಗ್ರಸ್ಥಾನಕ್ಕೇರಿದೆ. ದಕ್ಷಿಣ ಆಫ್ರಿಕಾ ಎರಡನೇ ಸ್ಥಾನದಲ್ಲಿದ್ದು, ಭಾರತ ನಿವ್ವಳ ರನ್ ರೇಟ್ ಆಧಾರದಲ್ಲಿ ಮೂರನೇ ಸ್ಥಾನದಲ್ಲಿದೆ. ಭಾರತ ವಿರುದ್ಧದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಬೌಲಿಂಗ್ ಹಾಗೂ ಬ್ಯಾಟಿಂಗ್ ಎರಡರಲ್ಲೂ ಭಾರತವನ್ನು ಮಣಿಸಿ ಸರ್ವಾಂಗೀಣ ಪ್ರದರ್ಶನ ತೋರುವ ಮೂಲಕ ಎರಡು ಪ್ರಮುಖ ಅಂಕಗಳನ್ನು ಗಿಟ್ಟಿಸಿಕೊಂಡಿದೆ. ಜತೆಗೆ ಭಾರತದ ನಿವ್ವಳ ರನ್ ರೇಟ್ -3.800ಕ್ಕೆ ಇಳಿದಿದೆ. ಇದರಿಂದಾಗಿ ಭಾರತ ಉಳಿದ ಎರಡೂ ಪಂದ್ಯಗಳನ್ನು ಗೆಲ್ಲಲೇಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಭಾರತ ತಂಡ ವೆಸ್ಟ್ಇಂಡೀಸ್ ಹಾಗೂ ಜಿಂಬಾಬ್ವೆ ವಿರುದ್ಧದ ಎರಡೂ ಪಂದ್ಯಗಳನ್ನು ಗೆದ್ದಲ್ಲಿ ನಾಲ್ಕು ಅಂಕಗಳು ಲಭ್ಯವಾಗುತ್ತವೆ. ದಕ್ಷಿಣ ಆಫ್ರಿಕಾ ತನ್ನೆರಡೂ ಉಳಿಕೆ ಪಂದ್ಯಗಳನ್ನು ಗೆದ್ದಲ್ಲಿ ದಕ್ಷಿಣ ಆಫ್ರಿಕಾ ಹಾಗೂ ಭಾರತ ಅಂತಿಮ ನಾಲ್ಕರ ಘಟ್ಟಕ್ಕೆ ತೇರ್ಗಡೆಯಾಗುತ್ತವೆ. ಭಾರತ ಎರಡೂ ಪಂದ್ಯಗಳನ್ನು ಗೆದ್ದು ದಕ್ಷಿಣ ಆಫ್ರಿಕಾ ಒಂದನ್ನು ಸೋತಲ್ಲಿ ಎರಡೂ ತಂಡಗಳು ತಲಾ 4 ಅಂಕ ಪಡೆಯುತ್ತವೆ. ಆಗ ನಿವ್ವಳ ರನ್ ರೇಟ್ ಆಧಾರದಲ್ಲಿ ಅರ್ಹತೆ ನಿರ್ಧರಿಸಲ್ಪಡುತ್ತದೆ. ಭಾರತ ಎರಡೂ ಪಂದ್ಯ ಗೆದ್ದು, ಆಫ್ರಿಕಾ ತನ್ನೆರಡೂ ಪಂದ್ಯಗಳನ್ನು ಸೋತಲ್ಲಿ ಭಾರತ ಹಾಗೂ ವೆಸ್ಟ್ಇಂಡೀಸ್ ಸೆಮೀಸ್ ತಲುಪುತ್ತವೆ. ಆದರೆ ಭಾರತ ಒಂದು ಪಂದ್ಯ ಸೋತಲೂ ಭಾರತ ಟೂರ್ನಿಯಿಂದ ನಿರ್ಗಮಿಸಬೇಕಾಗುತ್ತದೆ. ಇದರಿಂದಾಗಿ ಭಾರತ ತಂಡ ಯಾವುದೇ ಪ್ರಮಾದ ಎಸಗದೇ ಎಚ್ಚರಿಕೆಯ ಹೆಜ್ಜೆ ಇಡಬೇಕಾಗಿದೆ.
ಜಗತ್ಪ್ರಸಿದ್ಧ ಶ್ರೀಶೈಲ ಮಲ್ಲಿಕಾರ್ಜುನ ದೇವಸ್ಥಾನಕ್ಕೆ ಈ ಬಾರಿ ವಿಶೇಷ ಕೊಡುಗೆಯೊಂದು ಸಲ್ಲಿಕೆಯಾಗುತ್ತಿದೆ. ಉತ್ತರ ಕರ್ನಾಟಕದ ಮರಗಾಲು ಮಲ್ಲಯ್ಯಗಳ ಸಂಘ ಮತ್ತು ಬೆಂಗಳೂರಿನ ಅಮ್ಮ ಫೌಂಡೇಶನ್ ವತಿಯಿಂದ ಸಿದ್ಧಪಡಿಸಲಾದ 151 ಕೆ.ಜಿ ತೂಕದ ಬೃಹತ್ ಪಂಚಲೋಹದ ಗಂಟೆಯನ್ನು ಮಾರ್ಚ್ 14ರಂದು ಮಲ್ಲಿಕಾರ್ಜುನ ಸ್ವಾಮಿಗೆ ಸಮರ್ಪಿಸಲಾಗುತ್ತಿದೆ. ಬಾಗಲಕೋಟೆ ಹಾಗೂ ವಿಜಯಪುರ ಸೇರಿದಂತೆ ಉತ್ತರ ಕರ್ನಾಟಕದ ವಿವಿಧ ಜಿಲ್ಲೆಗಳ ಸುಮಾರು 150ಕ್ಕೂ
ಅಮೆರಿಕ ಮತ್ತು ಇರಾನ್ ನಡುವಿನ ಉದ್ವಿಗ್ನತೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಎರಡೂ ರಾಷ್ಟ್ರಗಳು ಪರಸ್ಪರ ಬಂದೂಕು ಗುರಿಯಿಟ್ಟು ದಶಕಗಳೇ ಕಳೆದಿದ್ದರೂ, ಇತ್ತೀಚಿನ ಬೆಳವಣಿಗೆಗಳನ್ನು ಗಮನಿಸಿದರೆ, ಅವು ಈ ಬಾರಿ ಟ್ರಿಗರ್ ಒತ್ತುವುದು ಖಚಿತ ಎಂಬ ಮುನ್ಸೂಚನೆಗಳು ಕಂಡುಬರುತ್ತಿವೆ. ಅಮೆರಿಕ ಮತ್ತು ಇರಾನ್ ಪರಸ್ಪರ ಸರ್ವನಾಶದ ಎಚ್ಚರಿಕೆಗಳನ್ನು ನೀಡುತ್ತಿದ್ದು, ಈ ಹಿನ್ನೆಲೆಯಲ್ಲಿ ಭಾರತವು ಇರಾನ್ನಲ್ಲಿರುವ ಎಲ್ಲಾ ಭಾರತೀಯರಿಗೆ ಲಭ್ಯವಿರುವ ಸಾರಿಗೆ ವಿಧಾನಗಳ ಮೂಲಕ ದೇಶ ತೊರೆಯಿರಿ ಎಂದು ಸೂಚಿಸಿದೆ. ಹಾಗಿದ್ದರೆ ಭಾರತೀಯರು ಇರಾನ್ನಿಂದ ಭಾರತಕ್ಕೆ ಬರುವ ಮಾರ್ಗಗಳೇನು? ಇಲ್ಲಿದೆ ಸಂಪೂರ್ಣ ಮಾಹಿತಿ.
ಮಳೆ ಹಾನಿಯ ದಾಖಲೆಗಳು ಇಲ್ಲದಿದ್ದರೂ ಅಧಿಕ ಮೊತ್ತದ ಪರಿಹಾರ!
ಸಿಎಜಿ ಲೆಕ್ಕ ಪರಿಶೋಧನೆಯಲ್ಲಿ ಬಹಿರಂಗ
ಟೀಂ ಇಂಡಿಯಾ ಕಂಗೆಡಿಸಿದ ಹರಿಣಗಳ ದಾಳಿ : ತಂಡಕ್ಕೆ ಕಾಡುತ್ತಿದೆ ವಿರಾಟ್ ಕೊಹ್ಲಿ ಅನುಪಸ್ಥಿತಿಯ ಗಾಳಿ
T20 World Cup Matches : ದಕ್ಷಿಣ ಆಫ್ರಿಕಾ ವಿರುದ್ದದ ಪಂದ್ಯದಲ್ಲಿನ ಹೀನಾಯ ಸೋಲು, ಟೀಂ ಇಂಡಿಯಾವನ್ನು ಕಂಗೆಡಿಸಿದೆ. ತಂಡದಲ್ಲಿ ವಿರಾಟ್ ಕೊಹ್ಲಿ ಏನಾದರೂ ಇದ್ದಿದ್ದರೆ, ಸಿಂಗಲ್ ಸಿಂಗಲ್ ತೆಗೆದುಕೊಂಡೇ ತಂಡವನ್ನು ದಡ ಸೇರಿಸುತ್ತಿದ್ದರು ಎಂದು ಸಾಮಾಜಿಕ ಜಾಲತಾಣದಲ್ಲಿ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಚೇಸಿಂಗ್ ನಲ್ಲಿ ಅಸಾಮಾನ್ಯ ರೆಕಾರ್ಡ್ ಹೊಂದಿರುವ ಕೊಹ್ಲಿಯನ್ನು ಕ್ರಿಕೆಟ್ ಅಭಿಮಾನಿಗಳು ಬಹಳಷ್ಟು ನೆನಪಿಸಿಕೊಳ್ಳುತ್ತಿದ್ದಾರೆ.
Shivamogga | ಸ್ನೇಹಿತರ ನಡುವಿನ ಗಲಾಟೆ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಯ ಕೊಲೆಯಲ್ಲಿ ಅಂತ್ಯ
ಶಾಲೆ ತೊರೆದಿದ್ದ ಬಾಲಕರಿಂದ ಕೃತ್ಯ ಶಂಕೆ, ಇಬ್ಬರು ಅಪ್ರಾಪ್ತರು ವಶಕ್ಕೆ
ಖಾಲಿ ಹುದ್ದೆಗಳಿಗೆ ಅರ್ಹರು ನೇಮಕವಾಗಲಿ
ಇತ್ತೀಚಿನ ವರ್ಷಗಳಲ್ಲಿ ನವ ಉದಾರೀಕರಣದ ಆರ್ಥಿಕ ನೀತಿಯ ದುಷ್ಪರಿಣಾಮದಿಂದಾಗಿ ಶಿಕ್ಷಣ ಇಲಾಖೆ ಕೂಡ ಹಳಿ ತಪ್ಪುತ್ತಿದೆ.ಖಾಲಿ ಹುದ್ದೆಗಳಿಗೆ, ಅದರಲ್ಲೂ ಉಪನ್ಯಾಸಕರ ಹುದ್ದೆಗಳಿಗೆ ತಾತ್ಕಾಲಿಕ ನೇಮಕಾತಿ ಈಗ ಸಾಮಾನ್ಯವಾಗಿದೆ. ತುರಿಕೆ ಬಿಟ್ಟಾಗ ಕೆರೆದುಕೊಳ್ಳುವಂತೆ ಇಂಥ ತಾತ್ಕಾಲಿಕ ನೇಮಕಾತಿಗಳಿಂದ ಅರ್ಹ ಅಭ್ಯರ್ಥಿಗಳು ಬರಬೇಕಾದ ಜಾಗಗಳಲ್ಲಿ ಅನರ್ಹರು ಬರುತ್ತಿದ್ದಾರೆ. ಇಂಥವರು ನಕಲಿ ಪ್ರಮಾಣಪತ್ರ ಸಲ್ಲಿಸಿ ನೇಮಕಗೊಳ್ಳುತ್ತಾರೆ ಎಂಬುದು ಬರೀ ದೂರಲ್ಲ. ಅದರ ಹಗರಣ ಇತ್ತೀಚೆಗೆ ಬಯಲಿಗೆ ಬಂದಿದೆ. ರಾಜ್ಯ ಸರಕಾರದ ಪದವಿ ಕಾಲೇಜುಗಳಲ್ಲಿ ಸೇರಿಕೊಂಡಿದ್ದ 200ಕ್ಕೂ ಹೆಚ್ಚು ಅತಿಥಿ ಉಪನ್ಯಾಸಕರು ಇತ್ತೀಚೆಗೆ ತಮ್ಮ ಹುದ್ದೆಗಳಿಗೆ ತಾವಾಗಿ ರಾಜೀನಾಮೆ ನೀಡಿದ್ದಾರೆ. ಇದು ಸಹಜವಾಗಿ ನೀಡಿದ ರಾಜೀನಾಮೆ ಅಲ್ಲ. ಇದರ ಹಿಂದೆ ಭಾರೀ ಹಗರಣವೊಂದು ನಡೆದಿರುವ ಸಂದೇಹ ಉಂಟಾಗಿದೆ. ನೌಕರಿ ಸೇರುವುದಕ್ಕಾಗಿ ಕೆಲವರು ಸಲ್ಲಿಸಲಾಗಿದ್ದ ನಕಲಿ ಪ್ರಮಾಣಪತ್ರಗಳು ಅಸಲಿಯಾಗಿವೆಯೇ ಎಂಬ ಬಗ್ಗೆ ರಾಜ್ಯದ ಉನ್ನತ ಶಿಕ್ಷಣ ಇಲಾಖೆ ಪರಿಶೀಲನೆಯನ್ನು ನಡೆಸುತ್ತಿದೆ. ಈ ಪ್ರಕ್ರಿಯೆ ಶುರುವಾಗುತ್ತಿದ್ದಂತೆ ಒಂದೊಂದಾಗಿ ರಾಜೀನಾಮೆಗಳು ಬರುತ್ತಿವೆ. ವಾಸ್ತವವಾಗಿ ರಾಷ್ಟ್ರೀಯ ಅರ್ಹತಾ ಪರೀಕ್ಷೆ (ಎನ್ಇಟಿ) ಹಾಗೂ ರಾಜ್ಯ ಅರ್ಹತಾ ಪರೀಕ್ಷೆ (ಕೆ-ಸೆಟ್) ಯಲ್ಲಿ ಪಾಸಾಗಿದ್ದರೆ ಮಾತ್ರ ಪದವಿ ಕಾಲೇಜುಗಳಲ್ಲಿ ಉಪನ್ಯಾಸಕರಾಗಿ ಕೆಲಸಕ್ಕೆ ಸೇರಬಹುದು ಎಂಬ ನಿಯಮ ಇದೆ. ಪಿಎಚ್.ಡಿ. ಪ್ರಮಾಣಪತ್ರ ಇದ್ದರೆ ರಾಷ್ಟ್ರೀಯ ರಾಜ್ಯ ಪ್ರಮಾಣಪತ್ರ ಗಳ ಅವಶ್ಯಕತೆ ಇರುವುದಿಲ್ಲ. ಹೀಗಾಗಿ ಇದನ್ನು ದುರುಪಯೋಗ ಮಾಡಿಕೊಂಡ ಕೆಲವರು ನಕಲಿ ಪ್ರಮಾಣಪತ್ರ ಸಲ್ಲಿಸಿ ನೌಕರಿಗೆ ಸೇರಿಕೊಂಡಿದ್ದಾರೆಂಬ ದೂರುಗಳು ಇವೆ. ಇದರಿಂದಾಗಿ ಸಹಜವಾಗಿ ಆತಂಕ ಉಂಟಾಗುತ್ತದೆ. ಸಮರ್ಪಕವಾಗಿ ಪರಿಶೀಲನೆ ನಡೆಸದೆ ಇಂಥ ಪ್ರಮಾಣಪತ್ರಗಳನ್ನು ನಂಬಿ ನೇಮಕಾತಿ ಪ್ರಕ್ರಿಯೆ ನಡೆದದ್ದು ಹೇಗೆ ಎಂಬ ಪ್ರಶ್ನೆಗೆ ಉತ್ತರ ಬೇಕಾಗಿದೆ. ನಕಲಿ ಪ್ರಮಾಣಪತ್ರ ಸಲ್ಲಿಸಿ ನೇಮಕಗೊಂಡಿರುವುದು ಮಾತ್ರವಲ್ಲ, ತಮಗಿಂಥ ಅರ್ಹರಾಗಿದ್ದ ಇತರ ಅಭ್ಯರ್ಥಿಗಳಿಗೆ ಸಿಗಬಹುದಾಗಿದ್ದ ಅವಕಾಶ ವನ್ನು ಕಿತ್ತುಕೊಂಡಿದ್ದು ಇವರ ಅಕ್ಷಮ್ಯ ಅಪರಾಧವಾಗಿದೆ. ಇದು ಬಯಲಿಗೆ ಬರುವ ಸುಳಿವು ಸಿಗುತ್ತಿದ್ದಂತೆ, ಇಂಥವರು ತರಾತುರಿಯಲ್ಲಿ ರಾಜೀನಾಮೆ ನೀಡುವ ದಾರಿ ಹಿಡಿದಿದ್ದಾರೆ. ಇಂಥವರು ರಾಜೀನಾಮೆ ನೀಡಿದರೆಂಬ ಕಾರಣಕ್ಕಾಗಿ ಶಿಕ್ಷೆಯಿಂದ ಪಾರಾಗಲು ಅವಕಾಶ ಕೊಡಬಾರದು. ಪೊಲೀಸರ ಮೂಲಕ ತನಿಖೆ ನಡೆಸಿ ನಕಲಿ ಪ್ರಮಾಣ ಪತ್ರವನ್ನು ಹೇಗೆ ಪಡೆದರೆಂಬ ಬಗ್ಗೆ ಪತ್ತೆ ಹಚ್ಚುವುದು ಅಗತ್ಯವಾಗಿದೆ. ಇದರ ಹಿಂದೆ ಬಹುದೊಡ್ಡ ಜಾಲ ಇದ್ದಂತೆ ಕಾಣುತ್ತದೆ. ಕೆಲವು ವಿಶ್ವವಿದ್ಯಾನಿಲಯಗಳು, ಅವುಗಳಲ್ಲಿನ ಕೆಲವು ವಿಭಾಗಗಳ ಅಧಿಕಾರಿಗಳು ಇದರಲ್ಲಿ ಶಾಮೀಲಾಗದೆ ಇಂಥದೆಲ್ಲ ನಡೆಯುವುದಿಲ್ಲ. ಇದರ ಬಗ್ಗೆ ಸಮಗ್ರ ತನಿಖೆ ನಡೆದರೆ ಸತ್ಯ ಸಂಗತಿ ಬಯಲಿಗೆ ಬರಬಹುದು. ಈ ಬಗ್ಗೆ ಸಮಗ್ರವಾದ ತನಿಖೆ ನಡೆಸುವುದಾಗಿ ಶಿಕ್ಷಣ ಆಯುಕ್ತರು ಹೇಳಿದ್ದಾರೆ. ಈ ವಿಳಂಬವನ್ನು ಗಮನಿಸಿದರೆ ಊರು ಕೊಳ್ಳೆ ಹೊಡೆದು ಕೊಂಡು ಹೋದ ಮೇಲೆ ಮುಖ್ಯ ದ್ವಾರವನ್ನು ಭದ್ರ ಪಡಿಸುವ ಕೆಲಸ ನಡೆದಂತೆ ಕಾಣುತ್ತದೆ. ಇದು ಕೇವಲ ತಮ್ಮ ಸಮಾಧಾನಕ್ಕಾಗಿ ಮಾಡಿದ ಕೆಲಸ ಎಂಬ ಭಾವನೆ ಸಹಜವಾಗಿ ಬರುತ್ತದೆ. ನಕಲಿ ದಾಖಲೆಗಳನ್ನು ನೀಡಿದ ಕಾರಣಕ್ಕಾಗಿ 40 ಮಂದಿ ಸಹಾಯಕ ಪ್ರಾಧ್ಯಾಪಕರನ್ನು 2017ರಲ್ಲಿ ವಜಾ ಮಾಡಲಾಗಿತ್ತು.ಆದರೂ ಕೂಡ ನಕಲಿ ದಾಖಲೆಗಳನ್ನು ಸಲ್ಲಿಸುವುದು ನಿಂತಿಲ್ಲ. ಇಂಥವನ್ನು ತಡೆಯಬೇಕಾದರೆ ವಿಶ್ವವಿದ್ಯಾನಿಲಯಗಳು ಪಿಎಚ್.ಡಿ. ಹಾಗೂ ಎಂ.ಫಿಲ್. ಪಡೆದವರ ಮಾಹಿತಿಯನ್ನು ತಮ್ಮ ವೆಬ್ಸೈಟ್ಗಳ ಮೂಲಕ ಬಹಿರಂಗ ಪಡಿಸುವ ವ್ಯವಸ್ಥೆ ಅನುಷ್ಠಾನಕ್ಕೆ ಬರಬೇಕು. ಅಂಕಪಟ್ಟಿ, ಪದವಿ ಪ್ರಮಾಣಪತ್ರ ಸೇರಿದಂತೆ ಎಲ್ಲಾ ಪ್ರಮಾಣಪತ್ರಗಳನ್ನು ಡಿಜಿಟಲೈಸ್ ಮಾಡಬೇಕು. ಇಂಥ ಕ್ರಮಗಳಿಂದ ಅಕ್ರಮ ವ್ಯವಹಾರಗಳಿಗೆ ಕಡಿವಾಣ ಹಾಕಬಹುದು. ಅಷ್ಟೇ ಅಲ್ಲ ಪ್ರಮಾಣಪತ್ರವನ್ನು ಕಳೆದುಕೊಂಡ ವಿದ್ಯಾರ್ಥಿಗಳಿಗೆ ಅದನ್ನು ಪಡೆಯುವುದಕ್ಕೆ ಅನುಕೂಲವಾಗುತ್ತದೆ. ಸೇವೆಯಲ್ಲಿ ಇರುವ ಉಪನ್ಯಾಸಕರು ನಿವೃತ್ತರಾಗುತ್ತಿದ್ದಂತೆ ಅವರ ಹುದ್ದೆಗಳು ಖಾಲಿಯಾಗುತ್ತ ಬರುತ್ತವೆ. ಅಂಥ ಸಂದರ್ಭಗಳಲ್ಲಿ ಅತಿಥಿ ಉಪನ್ಯಾಸಕರಾಗಿ ನೇಮಕ ಮಾಡಿಕೊಳ್ಳುತ್ತ ಬರಲಾಗಿದೆ. ಇದೇ ಈ ಸಮಸ್ಯೆಗೆ ಮೂಲ ಕಾರಣವಾಗಿದೆ ಅಂದರೆ ತಪ್ಪಿಲ್ಲ. ಇಂಥ ತಾತ್ಕಾಲಿಕ ನೇಮಕ ಮಾಡಿಕೊಳ್ಳುವ ಪ್ರವೃತ್ತಿ ಸರಿಯಲ್ಲ. ಬೋಧಕ ಹುದ್ದೆಗಳು ಖಾಲಿಯಾದಂತೆಲ್ಲ ಅವುಗಳನ್ನು ಸಕಾಲಕ್ಕೆ ಭರ್ತಿ ಮಾಡಿಕೊಳ್ಳುವ ಕೆಲಸವನ್ನು ಸರಕಾರ ವಿಳಂಬವಿಲ್ಲದೆ ಮಾಡಬೇಕು. ನಕಲಿ ಪ್ರಮಾಣಪತ್ರಗಳನ್ನು, ನಕಲಿ ಪಿಎಚ್.ಡಿ.ಗಳನ್ನು ಸೃಷ್ಟಿಸಿ ಕೆಲಸಕ್ಕೆ ಸೇರುವವರು ವಿದ್ಯಾರ್ಥಿಗಳಿಗೆ ಎಂಥ ಪಾಠವನ್ನು ಮಾಡುತ್ತಾರೆ ಎಂಬುದನ್ನು ವಿವರಿಸಬೇಕಾಗಿಲ್ಲ. ಇಂತಹ ನಕಲಿಗಳು ಸಿಕ್ಕಿ ಬಿದ್ದಾಗ ಮಾನವೀಯ ಅನುಕಂಪದಿಂದ ಕೆಲಸವನ್ನು ಉಳಿಸಿಕೊಳ್ಳಲು ಅಂಗಲಾಚುತ್ತಾರೆ.ಆದರೆ ಅಂಥದ್ದಕ್ಕೆ ಸರಕಾರ ಮಣಿಯ ಬಾರದು. ಇದರಿಂದಾಗಿ ಅರ್ಹ ವಿದ್ಯಾರ್ಥಿಗಳ ಭವಿಷ್ಯ ಹಾಳಾಗುತ್ತದೆ. ನಕಲಿ ಪ್ರಮಾಣ ಪತ್ರಗಳು ಮಾತ್ರವಲ್ಲ ನಕಲಿ ಪಿಎಚ್.ಡಿ.ಗಳು, ಎಂ.ಫಿಲ್.ಗಳ ಹಾವಳಿಯೂ ವ್ಯಾಪಕವಾಗಿದೆ. ಇಂಥವರು ರಾಜಕೀಯ ಪ್ರಭಾವವನ್ನು ಬಳಸಿಕೊಂಡು ಕೆಲಸಕ್ಕೆ ಸೇರುವುದು ಮಾತ್ರವಲ್ಲ, ಅದನ್ನು ಕಾಪಾಡಿಕೊಳ್ಳಲು ಯತ್ನಿಸುತ್ತಾರೆ. ಇವರು ಯಾವುದೇ ಕಾರಣಕ್ಕೂ ಕ್ಷಮಾರ್ಹರಲ್ಲ. ಶಿಕ್ಷಣ ಕ್ಷೇತ್ರವನ್ನು ಇಂಥ ಅಪಾಯಕಾರಿ ಶಕ್ತಿಗಳ ಹಾವಳಿಯಿಂದ ಮುಕ್ತ ಗೊಳಿಸಬೇಕಾಗಿದೆ. ಇವುಗಳ ಜೊತೆಗೆ ಬಹುತೇಕ ವಿಶ್ವವಿದ್ಯಾನಿಲಯಗಳು ಕಂಡ ಕಂಡವರಿಗೆಲ್ಲ ನೀಡುವ ಗೌರವ ಡಾಕ್ಟರೇಟ್ಗಳ ಹಾವಳಿ ಕೂಡ ವಿಪರೀತವಾಗಿದೆ. ಇದಷ್ಟೇ ಅಲ್ಲ ವಿಶ್ವವಿದ್ಯಾನಿಲಯವೊಂದು ನೀಡುವ ನಾಡೋಜ ಪ್ರಶಸ್ತಿ ಕೂಡ ಅಪಾತ್ರರಿಗೆ ಸಲ್ಲುತ್ತಿದೆ. ಸಕ್ಕರೆ ಕಾರ್ಖಾನೆಯ ಮಾಲಕರು, ರಿಯಲ್ ಎಸ್ಟೇಟ್ ಮಂದಿ, ಅಧಿಕಾರದಲ್ಲಿರುವ ರಾಜಕಾರಣಿಗಳು, ಮಠಾಧೀಶರು ಗೌರವ ಡಾಕ್ಟರೇಟ್ ಪದವಿ ಪಡೆದು ಸಂಭ್ರಮಿಸುತ್ತಿದ್ದಾರೆ.ತಮ್ಮ ಹೆಸರಿನ ಮುಂದೆ ಡಾಕ್ಟರ್ ಎಂದು ಬರೆದುಕೊಳ್ಳುತ್ತಿದ್ದಾರೆ. ಇನ್ನು ಮುಂದೆ ಇಂಥದ್ದಕ್ಕೆ ಸರಕಾರ ಅವಕಾಶ ನೀಡಬಾರದು. ಕರ್ನಾಟಕದ ಶಿಕ್ಷಣ ಇಲಾಖೆಗೆ ಒಂದು ಘನತೆಯಿದೆ ಯಾವುದೇ ಕಾರಣಕ್ಕೂ ಅದನ್ನು ಕಳೆದುಕೊಳ್ಳಬಾರದು.
ಎರಡು ಎಐ ಡಾಟಾ ಸೋರಿಕೆ ಪ್ರಕರಣ: ಕೋಟ್ಯಂತರ ಮಂದಿಯ ಕೆವೈಸಿ ದಾಖಲೆ ಬಹಿರಂಗ
ಹೊಸದಿಲ್ಲಿ: ಎರಡು ಎಐ ಸಂಬಂಧಿತ ಆ್ಯಪ್ ಗಳಿಂದ ಬೃಹತ್ ಪ್ರಮಾಣದ ದತ್ತಾಂಶಗಳು ಸೋರಿಕೆಯಾಗಿರುವುದನ್ನು ಸೈಬರ್ ಭದ್ರತಾ ತಜ್ಞರು ಪತ್ತೆ ಮಾಡಿದ್ದು, ಇದರಿಂದ ಜಾಗತಿಕವಾಗಿ ಕೋಟ್ಯಂತರ ಬಳಕೆದಾರರ ಸೂಕ್ಷ್ಮ ವೈಯಕ್ತಿಕ ಹಾಗೂ ಮಾಧ್ಯಮ ಕಡತಗಳು ಬಹಿರಂಗಗೊಂಡಿವೆ. ಸೈಬರ್ ನ್ಯೂಸ್ ಈ ಎರಡು ಪ್ರತ್ಯೇಕ ಸೋರಿಕೆಗಳನ್ನು ವರದಿ ಮಾಡಿದ್ದು, ಕೋಟ್ಯಂತರ ದಾಖಲೆಗಳ ವಿಚಾರದಲ್ಲಿ ರಾಜಿ ಮಾಡಿಕೊಳ್ಳಬೇಕಾಗಿದೆ ಎಂದು ಭದ್ರತಾ ಸಂಶೋಧಕರು ಹೇಳಿದ್ದಾರೆ. ಎಐ ಚಾಲಿತ ಕೆವೈಸಿ ಸಾಧನದ ಆ್ಯಪ್ ನಲ್ಲಿ ಮೊದಲ ಸೋರಿಕೆ ವರದಿಯಾಗಿದೆ. ಡಿಜಿಟಲ್ ಗುರುತಿಸುವಿಕೆ ದೃಢೀಕರಣ ಸೇವಾ ಪೂರೈಕೆದಾರ ಕಂಪನಿ ಐಡಿಮೆರಿಟ್ ಇದನ್ನು ಬಳಸುತ್ತಿತ್ತು. ಈ ಕಂಪನಿ ಎಐ-ಚಾಲಿತ ಡಿಜಿಟಲ್ ಗುರುತಿಸುವಿಕೆ ದೃಢೀಕರಣ ಸೊಲ್ಯೂಶನ್ ಪೂರೈಕೆದಾರ ಕಂಪನಿಯಾಗಿದ್ದು, ಫಿನ್ ಟೆಕ್ ಮತ್ತು ಇತರ ಹಣಕಾಸು ಸೇವಾ ವಲಯಗಳಿಗೆ ನೈಜ-ಸಮಯದ ದೃಢೀಕರಣ ಸಾಧನಗಳನ್ನು ಒದಗಿಸುತ್ತದೆ. 2025ರ ನವೆಂಬರ್ 11ರಂದು ದತ್ತಾಂಶ ಸೋರಿಕೆಯಾಗಿರುವುದನ್ನು ನಮ್ಮ ಸಂಶೋಧಕರು ಪತ್ತೆ ಮಾಡಿ ತಕ್ಷಣವೇ ಕಂಪನಿಯನ್ನು ಸಂಪರ್ಕಿಸಿದ್ದರು. ಇದುವರೆಗೆ ಇದನ್ನು ದುರ್ಬಳಕೆ ಮಾಡಿಕೊಂಡ ಬಗ್ಗೆ ಪುರಾವೆಗಳು ಲಭ್ಯವಾಗಿಲ್ಲ ಎಂದು ಸಂಶೋಧಕರು ಹೇಳಿದ್ದಾರೆ. ಈ ಸೋರಿಕೆಯಲ್ಲಿ 26 ದೇಶಗಳ 100 ಕೋಟಿ ಮಂದಿಯ ಸೂಕ್ಷ್ಮ ವೈಯಕ್ತಿಕ ಮಾಹಿತಿಗಳು ಬಹಿರಂಗಗೊಂಡಿವೆ, ಅಮೆರಿಕದ 203 ದಶಲಕ್ಷ ದಾಖಲೆಗಳು ಬಹಿರಂಗವಾಗಿದ್ದು, ಮೆಕ್ಸಿಕೊ (124 ದಶಲಕ್ಷ), ಫಿಲಿಫೀನ್ಸ್ (72 ದಶಲಕ್ಷ) ಮುಂದಿನ ಸ್ಥಾನಗಳಲ್ಲಿವೆ. ಎರಡನೇ ಸೋರಿಕೆ ವಿಡಿಯೊ ಎಐ ಆರ್ಟ್ ಜನರೇಟರ್ ಅಂಡ್ ಮೇಕರ್ ಹೆಸರಿನ ಆ್ಯಂಡ್ರಾಯ್ಡ್ ಆ್ಯಪ್ ಗೆ ಸಂಬಂದಿಸಿದ್ದು, ಇದು ಗೂಗಲ್ ಪ್ಲೇನಲ್ಲಿ 5 ಲಕ್ಷ ಬಾರಿ ಡೌನ್ಲೋಡ್ ಆಗಿದೆ ಹಾಗೂ 11000 ವಿಮರ್ಶೆಯೊಂದಿಗೆ 4.3 ರೇಟಿಂಗ್ ಹೊಂದಿದೆ. ಈ ಸೋರಿಕೆಯಲ್ಲಿ ಸುಮಾರು 15 ಲಕ್ಷ ಬಳಕೆದಾರರ ಚಿತ್ರಗಳು ಹಾಗೂ 3.85 ಲಕ್ಷ ವಿಡಿಯೊಗಳು, ಎಐ ಬಳಸಿ ಬಳಕೆದಾರರು ಸೃಷ್ಟಿಸಿದ್ದ ಲಕ್ಷಾಂತರ ಮೀಡಿಯಾ ಫೈಲ್ ಗಳು ಸೋರಿಕೆಯಾಗಿವೆ ಎಂದು ಸಂಶೋಧಕರು ತಿಳಿಸಿದ್ದಾರೆ.
ಮೈಸೂರಲ್ಲಿ ಡ್ರಗ್ಸ್ ಜಾಲ ಭೇದಿಸಿದ ಪೊಲೀಸರು: ಮಾದಕ ವಸ್ತು ಸಾಗಿಸುತ್ತಿದ್ದ ನಾಲ್ವರ ಬಂಧನ
ಡ್ರಗ್ಸ್ ಮುಕ್ತ ಮೈಸೂರನ್ನಾಗಿ ಮಾಡಲು, ಹಲವು ತಿಂಗಳಿಂದ ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದು ಸೋಮಾರವೂ ಡ್ರಗ್ಸ್ ಸಾಗಿಸುತ್ತಿದ್ದ ನಾಲ್ವರನ್ನು ಬಂಧಿಸಲಾಗಿದೆ. 10 ಲಕ್ಷ ಮೌಲ್ಯದ ಡ್ರಗ್ಸ್, 8 ಲಕ್ಷ ಮೌಲ್ಯದ ಕಾರು, ಹಾಗೂ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ.
Credit Card: ಕೇಂದ್ರ ಸರ್ಕಾರವು ಕ್ರೆಡಿಟ್ ಕಾರ್ಡ್ ವಿಚಾರದಲ್ಲಿ ಹಲವು ಮಹತ್ವದ ಬದಲಾವಣೆಗಳನ್ನು ಮಾಡಲು ಮುಂದಾಗಿದೆ. ಆನ್ಲೈನ್ ಖರೀದಿ ಹಾಗೂ ಯಾವುದಾದರೂ ದೂರದ ಪ್ರಯಾಣ ಬುಕಿಂಗ್ಗಳಿಂದ ಹಿಡಿದು ದುಬಾರಿ ವಸ್ತುಗಳು ಹಾಗೂ ಅತ್ಯಗತ್ಯವಾದ ವಸ್ತುಗಳನ್ನು ಖರೀದಿ ಮಾಡುವುದಕ್ಕೆ ಕ್ರೆಡಿಟ್ ಕಾರ್ಡ್ಗಳು ಅತ್ಯಂತ ಸಹಕಾರಿಯಾಗಿವೆ. ಭಾರತೀಯರು ಇಎಂಐ ಹಾಗೂ ಕ್ರೆಡಿಟ್ ಕಾರ್ಡ್ನ ಮೇಲೆ ಹೆಚ್ಚು ಅವಲಂಬಿತರಾಗಿದ್ದಾರೆ. ಅಲ್ಲದೆ ಕ್ರೆಡಿಟ್
Jharkhand | ಏರ್ ಆ್ಯಂಬುಲೆನ್ಸ್ ಪತನ : ಏಳು ಮಂದಿಯೂ ಮೃತ್ಯು
ಹೊಸದಿಲ್ಲಿ: ಜಾರ್ಖಂಡ್ ನ ಚಾತ್ರ ಜಿಲ್ಲೆಯ ಸಿಮಾರಿಯಾ ಎಂಬಲ್ಲಿ ಸೋಮವಾರ ಸಂಜೆ ಸಂಭವಿಸಿದ ಅಪಘಾತದಲ್ಲಿ ರಾಂಚಿ-ದೆಹಲಿ ಏರ್ ಆ್ಯಂಬುಲೆನ್ಸ್ನಲ್ಲಿದ್ದ ಎಲ್ಲ ಎಳು ಮಂದಿ ಮೃತಪಟ್ಟಿದ್ದಾರೆ. ಅಪಘಾತಕ್ಕೀಡಾದ ಏರ್ ಆ್ಯಂಬುಲೆನ್ಸ್ನಲ್ಲಿದ್ದ ಎಲ್ಲ ಏಳು ಮಂದಿ ಮೃತಪಟ್ಟಿದ್ದಾರೆ. ವಿಮಾನ ರಾಂಚಿಯಿಂದ ದೆಹಲಿಗೆ ತೆರಳುತ್ತಿತ್ತು ಎಂದು ಚಾತ್ರ ಜಿಲ್ಲಾಧಿಕಾರಿ ಕೀರ್ತಿಶ್ರೀ ಜಿ ಹೇಳಿದ್ದಾರೆ. ರೆಡ್ಬರ್ಡ್ ಏರ್ವೇಸ್ ಪ್ರೈವೇಟ್ ಲಿಮಿಟೆಡ್ ನಿರ್ವಹಿಸುತ್ತಿದ್ದ ಬೀಚ್ಕ್ರಾಫ್ಟ್ ಸಿ90 (ವಿಐ-ಎಜೆವಿ) ರಾಂಚಿ ವಿಮಾನ ನಿಲ್ದಾಣದಿಂದ ರಾತ್ರಿ 7.11ಕ್ಕೆ ಟೇಕಾಫ್ ಆಗಿತ್ತು. 7.30ರ ವೇಳೆಗೆ ಸಂಪರ್ಕ ಕಡಿದುಕೊಂಡು ನಾಪತ್ತೆಯಾಗಿದ್ದ ವಿಮಾನ ಸಿಮಾರಿಯಾ ಬಳಿಯ ಬರಿಯಾಟ್ ಪಂಚಾಯ್ತಿ ಪ್ರದೇಶದಲ್ಲಿ ದಟ್ಟ ಕಾಡಿನ ಒಳಗೆ ಅಪಘಾತಕ್ಕೀಡಾಗಿತ್ತು. ಮೃತಪಟ್ಟ ಎಲ್ಲ ಏಳು ಮಂದಿಯ ಮೃತದೇಹಗಳನ್ನು ಪತ್ತೆ ಮಾಡಲಾಗಿದೆ. ಕ್ಯಾಪ್ಟನ್ ವಿವೇಕ್ ವಿಕಾಸ್ ಭಗತ್, ಕ್ಯಾಪ್ಟನ್ ಸೌರಜ್ದೀಪ್ ಸಿಂಗ್, ಸಂಜಯ್ ಕುಮಾರ್, ಡಾ.ವಿಕಾಸ್ ಕುಮಾರ್ ಗುಪ್ತಾ, ಸಚಿನ್ ಕುಮಾರ್ ಮಿಶ್ರಾ, ಅರ್ಚನಾದೇವಿ ಮತ್ತು ಧುರು ಕುಮಾರ್ ಮೃತ ದುರ್ದೈವಿಗಳು. ಎಂದು ಎಸ್ಡಿಪಿಓ ಶುಭಂ ಖಂಡೇವಾಲ್ ತಿಳಿಸಿದ್ದಾರೆ. ರಾಡಾರ್ ಸಂಪರ್ಕದಿಂದ ಕಡಿದುಕೊಳ್ಳುವ ಮುನ್ನ ಈ ವಿಮಾನ ಕೊಲ್ಕತ್ತಾ ವಾಯು ಸಂಚಾರ ನಿಯಂತ್ರಣ ವ್ಯವಸ್ಥೆಯನ್ನು ರಾತ್ರಿ 7.34ಕ್ಕೆ ಸಂಪರ್ಕಿಸಿತ್ತು. ಹವಾಮಾನ ವೈಪರೀತ್ಯ ಪರಿಸ್ಥಿತಿಯಿಂದಾಗಿ ಬೇರೆ ಮಾರ್ಗವಾಗಿ ತೆರಳಲು ಮನವಿ ಮಾಡಿಕೊಂಡ ತಕ್ಷಣವೇ ಸಂಪರ್ಕ ಕಡಿತಗೊಂಡಿತು ಎಂದು ನಾಗರಿಕ ವಿಮಾನಯಾನ ನಿರ್ದೇಶನಾಲಯ ವಿವರಿಸಿದೆ. ಟೇಕಾಫ್ ಆದ 20 ನಿಮಿಷಗಳಲ್ಲಿ ವಿಮಾನ ಏರ್ ಟ್ರಾಫಿಕ್ ಕಂಟ್ರೋಲ್ನಿಮದ ಸಂಪರ್ಕ ಕಡಿದುಕೊಂಡಿತ್ತು ಎಂದು ರಾಂಚಿ ವಿಮಾನ ನಿಲ್ದಾಣ ನಿರ್ದೇಶಕ ವಿನೋದ್ ಕುಮಾರ್ ಹೇಳಿದ್ದಾರೆ. ಪ್ರತೀಕೂಲ ಹವಾಮಾನ ದುರಂತಕ್ಕೆ ಕಾರಣವಾಗಿರಬೇಕು. ಆದರೆ ತನಿಖೆಯ ಬಳಿಕ ನೈಜ ಕಾರಣ ತಿಳಿಯಲಿದೆ ಎಂದು ಅವರು ತಿಳಿಸಿದ್ದಾರೆ.
ನವದೆಹಲಿ: ಬ್ಯಾಂಕಿಂಗ್ ವಲಯದಲ್ಲಿ ಇತ್ತೀಚೆಗೆ ಕಂಡುಬರುತ್ತಿರುವ ತಪ್ಪು ಮಾಹಿತಿ ನೀಡಿ ಉತ್ಪನ್ನ ಮಾರಾಟ ಮಾಡುವ (ಮಿಸ್-ಸೆಲ್ಲಿಂಗ್) ಮತ್ತು ಅತಿಯಾದ ಸಾಲ ವಿತರಣೆಯ ಬಗ್ಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕಳವಳ ವ್ಯಕ್ತಪಡಿಸಿದ್ದಾರೆ. ಬ್ಯಾಂಕುಗಳು ತಮ್ಮ ಮೂಲ ಉದ್ದೇಶವಾದ ಕೋರ್ ಬ್ಯಾಂಕಿಂಗ್ (Core Banking) ಚಟುವಟಿಕೆಗಳಿಗೆ ಮರಳಬೇಕು ಎಂದು ಅವರು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಸೋಮವಾರ ದೆಹಲಿಯಲ್ಲಿ
ಪ್ರತ್ಯಕ್ಷ ಕಂಡರೂ ಪ್ರಮಾಣಿಸಿ ನೋಡು ಅಂತಾರೆ ನಮ್ಮ ಹಿರಿಯರು. ಅದೇ ರೀತಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುವ ಎಲ್ಲಾ ವಿಡಿಯೋಗಳು ಸತ್ಯವಾಗಿರುವುದಿಲ್ಲ. ವ್ಯಕ್ತಿಗಳ ಅಥವಾ ಸಂಸ್ಥೆಗಳ ತೇಜೋವಧೆ ಮಾಡುವ ಇಂತಹ ಸುಳ್ಳು ವಿಡಿಯೋಗಳನ್ನು ನಂಬುವುದಕ್ಕೂ ಮೊದಲು, ಅದರ ಸತ್ಯಾಸತ್ಯತೆಯನ್ನು ಪರಿಶೀಲಿಸಿಕೊಳ್ಳುವುದು ಒಳಿತು. ಇದಕ್ಕೆ ಸಾಕ್ಷಿ 2018ರಲ್ಲಿ ಕಳ್ಳಸಾಗಾಣೆದಾರರಿಂದ ಲಂಚ ಸ್ವೀಕರಿಸಿ ಸಿಕ್ಕಿಬದ್ದ ಬಿಎಸ್ಎಫ್ ಕಮಾಂಡೆಂಟ್ ಜಿಬು ಡಿ. ಮ್ಯಾಥ್ಯೂ ಮತ್ತು ಕಾನ್ಪುರ್ ಬಿಲ್ಡರ್ ಮನೆಯಲ್ಲಿ ದೊರೆತ 96 ಕೋಟಿ ರೂ. ಹಣದ ಸುಳ್ಳು ವಿಡಿಯೋ ವೈರಲ್ ಆಗಿರುವುದು ಸಾಕ್ಷಿ.
ಬೆಂಗಳೂರು: ಫೆಬ್ರವರಿ ಅಂತ್ಯ ಸಮೀಪಿಸುತ್ತಿದ್ದಂತೆ ಕರ್ನಾಟಕದಲ್ಲಿ ಚಳಿಯ ವಾತಾವರಣ ಬಹುತೇಕ ಸಂಪೂರ್ಣವಾಗಿ ಮಾಯವಾಗಿ, ಬೇಸಿಗೆಯ ಬಿಸಿಲು ಹೆಚ್ಚಾಗತೊಡಗಿದೆ. ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಮಳೆಯಾಗುವ ಮುನ್ಸೂಚನೆ ಹಿಂದೆ ಇದ್ದರೂ, ಈಗ ಬಹುತೇಕ ಜಿಲ್ಲೆಗಳಲ್ಲಿ ಒಣ ಹವೆ ಮುಂದುವರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಮುನ್ಸೂಚನೆ ನೀಡಿದೆ. ಮಂಗಳವಾರ, ಫೆಬ್ರವರಿ 24, 2026ರ ಹವಾಮಾನ ವರದಿಯ ಪ್ರಕಾರ, ರಾಜ್ಯದ
ಹುಬ್ಬಳ್ಳಿ-ಧಾರವಾಡ ವಾಹನ ದಟ್ಟನೆ ನಿಯಂತ್ರಣಕ್ಕೆ ರಿಂಗ್ ರೋಡ್ ಅಗತ್ಯ :ಯೋಜನೆಗೆ ಬಜೆಟ್ನಲ್ಲಿ ಪರಿಹಾರದ ನಿರೀಕ್ಷೆ
ರಿಂಗ್ ರೋಡ್ ನಿರ್ಮಾಣದ ಯೋಜನೆಗೆ ಒಟ್ಟು 489 ಎಕರೆ ಜಾಗದ ಅವಶ್ಯಕತೆ ಇದ್ದು, ಅಂದಾಜು 876-900 ಕೋಟಿ ವೆಚ್ಚವಾಗಲಿದೆ ಎಂದು ಈ ಹಿಂದೆ ಹುಡಾ ಸರಕಾರಕ್ಕೆ ಸಲ್ಲಿಸಿದ ಡಿಪಿಆರ್ ವರದಿಯಲ್ಲಿ ಉಲ್ಲೇಖಿಸಿದೆ.
Air Ambulance Crash: ಜಾರ್ಖಂಡ್ನಲ್ಲಿ ಏರ್ ಆಂಬ್ಯುಲೆನ್ಸ್ ಪತನ; ರೋಗಿ ಸೇರಿ ಏಳು ಮಂದಿ ದುರ್ಮರಣ
ರಾಂಚಿ: ಜಾರ್ಖಂಡ್ನಿಂದ ದೆಹಲಿಗೆ ರೋಗಿಯನ್ನು ಹೊತ್ತೊಯ್ಯುತ್ತಿದ್ದ ಏರ್ ಆಂಬ್ಯುಲೆನ್ಸ್ ವಿಮಾನವೊಂದು ಸೋಮವಾರ ರಾತ್ರಿ ಭೀಕರ ಅಪಘಾತಕ್ಕೀಡಾಗಿದ್ದು, ವಿಮಾನದಲ್ಲಿದ್ದ ಎಲ್ಲಾ ಏಳು ಮಂದಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ರೆಡ್ಬರ್ಡ್ ಏವಿಯೇಷನ್ ಸಂಸ್ಥೆಗೆ ಸೇರಿದ ಈ ವಿಮಾನವು ಸೋಮವಾರ ಸಂಜೆ 7:11ಕ್ಕೆ ರಾಂಚಿಯಿಂದ ಟೇಕ್ ಆಫ್ ಆಗಿತ್ತು. ಆದರೆ, ಸಂಜೆ 7:34ರ ಸುಮಾರಿಗೆ ಕೋಲ್ಕತ್ತಾದ ಏರ್ ಟ್ರಾಫಿಕ್ ಕಂಟ್ರೋಲ್ (ATC)
ಶಾಲೆಗೆ ಬರಲು ಆರೇಳು ಕಿಮೀ ನಡಿಗೆ; ಬಸ್ ಸೌಲಭ್ಯ ಒದಗಿಸಿದರೆ ಸಾಕು ಬೆಳಗಲಿದೆ ಮಕ್ಕಳ ಭವಿಷ್ಯದ ದೀವಿಗೆ
ಕೋಲಾರ ಜಿಲ್ಲೆ ಮಾಲೂರು ತಾಲೂಕಿನ ಗ್ರಾಮೀಣ ಭಾಗದ ಶಾಲಾ ವಿದ್ಯಾರ್ಥಿಗಳು, ಸೂಕ್ತ ಬಸ್ ಸೌಲಭ್ಯವಿಲ್ಲದೇ, ನಿತ್ಯವೂ ಶಾಲೆಗೆ ನಡೆದುಕೊಂಡು ಬರುವ ಪರಿಸ್ಥಿತಿ ಇದೆ. ಈ ಅಲೆದಾಟದಲ್ಲೇ ದಿನದ ಹೆಚ್ಚಿನ ಸಮಯ ಕಳೆದು ಹೋಗುತ್ತಿರುವುದರಿಂದ, ಇದರಿಂದ ಮಕ್ಕಳ ಶಿಕ್ಷಣದ ಮೇಲೂ ದುಷ್ಪರಿಣಾಮ ಬೀರುತ್ತಿದೆ. ಸ್ಥಳೀಯ ಆಡಳಿತ ಈಗಲಾದರೂ ಈ ಸಮಸ್ಯೆಯನ್ನು ಬಗೆಹರಿಸಿ, ಮಕ್ಕಳು ಸರಿಯಾಗಿ ಶಾಲೆ ತಲುಪುವಂತೆ ಸೂಕ್ತ ಬಸ್ ಸೌಲಭ್ಯವನ್ನು ಒದಗಿಸಿ ಕೊಡಬೇಕಿದೆ. ಈ ಕುರಿತು ಇಲ್ಲಿದೆ ಹೆಚ್ಚಿನ ಮಾಹಿತಿ.
Air Ambulance Crash: ಜಾರ್ಖಂಡ್ನಿಂದ ದೆಹಲಿಗೆ 7 ಜನರನ್ನು ಹೊತ್ತೊಯ್ಯುತ್ತಿದ್ದ ವಿಮಾನ ಪತನ
Air Ambulance Crash: ಜಾರ್ಖಂಡ್ನಿಂದ ದೆಹಲಿಗೆ 7 ಜನರನ್ನು ಹೊತ್ತೊಯ್ಯುತ್ತಿದ್ದ ಏರ್ ಆಂಬ್ಯುಲೆನ್ಸ್ ರಾಂಚಿ ಬಳಿ ಸೋಮವಾರ (ಫೆಬ್ರವರಿ 23) ರಾತ್ರಿ ಪತನವಾಗಿದೆ. ಈ ಕುರಿತು ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) ಅಧಿಕೃತ ಮಾಹಿತಿ ನೀಡಿದೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ವಿಮಾನದಲ್ಲಿ ವೈದ್ಯಕೀಯ ಸಿಬ್ಬಂದಿ ಹಾಗೂ ರೋಗಿ ಸೇರಿದಂತೆ ಒಟ್ಟು ಏಳು ಮಂದಿ ಇದ್ದರು ಎನ್ನಲಾಗಿದೆ. ಇನ್ನೂ
ಜಾರ್ಖಂಡ್ನ ಚಾತ್ರದಲ್ಲಿ ಏರ್ ಆ್ಯಂಬುಲೆನ್ಸ್ ಪತನ, ಓರ್ವ ಮೃತ್ಯು
ರಾಂಚಿ, ಫೆ. 23: ಇಬ್ಬರು ಸಿಬ್ಬಂದಿ ಸೇರಿದಂತೆ 7 ಮಂದಿ ಇದ್ದ ಏರ್ ಆ್ಯಂಬುಲೆನ್ಸ್ ಚಾತ್ರ ಜಿಲ್ಲೆಯ ಸಿಮರಿಯ ಸಮೀಪ ಪತನಗೊಂಡಿದ್ದು, ಓರ್ವ ಮೃತಪಟ್ಟಿರುವುದಾಗಿ ನಾಗರಿಕ ವಿಮಾನ ಯಾನ ಮಹಾ ನಿರ್ದೇಶನಾಲಯ (ಡಿಜಿಸಿಎ) ಸೋಮವಾರ ತಿಳಿಸಿದೆ. ಈ ಏರ್ ಆ್ಯಂಬುಲೆನ್ಸ್ ರಾಂಚಿ ವಿಮಾನ ನಿಲ್ದಾಣದಿಂದ ಹಾರಾಟ ಆರಂಭಿಸಿದ ಕೂಡಲೇ ರಾಡರ್ ನಿಂದ ಸಂಪರ್ಕ ಕಳೆದುಕೊಂಡಿತ್ತು ಎಂದು ಅದು ಹೇಳಿದೆ. ರೆಡ್ ಬರ್ಡ್ ಏರ್ವೇಸ್ ನಿರ್ವಹಿಸುತ್ತಿದ್ದ ಈ ಏರ್ ಆ್ಯಂಬುಲೆನ್ಸ್ ರಾಂಚಿ ಹಾಗೂ ದಿಲ್ಲಿ ನಡುವೆ ಹಾರಾಟ ನಡೆಸುತ್ತಿತ್ತು. ಅಪಘಾತಕ್ಕೀಡಾದ ವಿಮಾನದಲ್ಲಿ ರೋಗಿ, ವೈದ್ಯರು, ಅರೆವೈದ್ಯಕೀಯ ಸಿಬ್ಬಂದಿ ಹಾಗೂ ವಿಮಾನದ ಸಿಬ್ಬಂದಿ ಇದ್ದರೆಂದು ತಿಳಿದುಬಂದಿದೆ. ಅವಘಡದಲ್ಲಿ ಮೃತಪಟ್ಟವರನ್ನು ಸಂಜಯ್ ಕುಮಾರ್ ಎಂದು ಗುರುತಿಸಲಾಗಿದೆ. ಸುಟ್ಟಗಾಯಗಳ ಚಿಕಿತ್ಸೆಗಾಗಿ ಅವರನ್ನು ದಿಲ್ಲಿಗೆ ಕರೆದೊಯ್ಯಲಾಗುತ್ತಿತ್ತು. ಶೋಧ ಮತ್ತು ರಕ್ಷಣಾ ತಂಡ ಸ್ಥಳದಲ್ಲಿ ಕಾರ್ಯಾಚರಣೆ ನಡೆಸುತ್ತಿದೆ ಎಂದು ನಾಗರಿಕ ವಿಮಾನ ಯಾನ ಮಹಾ ನಿರ್ದೇಶನಾಲಯ ತಿಳಿಸಿದೆ.
ರಾಯಚೂರು | ಎಸ್ಡಿಟಿಯುನಿಂದ ಆಟೋ ಚಾಲಕರಿಗೆ ನೆರವು : ಮುದ್ರಾ ಯೋಜನೆಯಿಂದ 50 ಆಟೋ ಖರೀದಿ
ರಾಯಚೂರು : ಸಾಮಾಜಿಕ ಪ್ರಜಾಪ್ರಭುತ್ವ ಕಾರ್ಮಿಕ ಸಂಘ (SDTU) ತಂಡದಿಂದ ಸೋಮವಾರ ರಾಯಚೂರಿನ ಎಲ್.ಬಿ.ಎಸ್.ನಗರದ ಆಟೋ ಚಾಲಕ ಮುಹಮ್ಮದ್ ಇಸ್ಮಾಯಿಲ್ ಅವರಿಗೆ ಮುದ್ರಾ ಯೋಜನೆಯಡಿ ಹೊಸ ಆಟೋ ಖರೀದಿಸಲು ನೆರವು ಒದಗಿಸಲಾಯಿತು. ಎಸ್ಡಿಟಿಯು ರಾಜ್ಯ ಘಟಕದ ಜಂಟಿ ಸಂಯೋಜಕ ಮುಹಮ್ಮದ್ ಶಾಫಿ ಹಾಗೂ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (SDPI) ಜಿಲ್ಲಾ ಅಧ್ಯಕ್ಷ ಸೈಯದ್ ಇರ್ಫಾನ್ ಅವರ ಮಾರ್ಗದರ್ಶನದಲ್ಲಿ ಮುದ್ರಾ ಯೋಜನೆಯ ಮೂಲಕ ಇಸ್ಮಾಯಿಲ್ ಅವರಿಗೆ ಆಟೋ ಖರೀದಿಸಲು ಸಹಾಯ ಮಾಡಲಾಗಿದೆ. ಇದರ ಫಲವಾಗಿ 1.5 ಲಕ್ಷದಿಂದ 2 ಲಕ್ಷದವರೆಗೆ ಉಳಿತಾಯ ಸಾಧ್ಯವಾಯಿತು ಎಂದು ಮುಹಮ್ಮದ್ ಇಸ್ಮಾಯಿಲ್ ಸಂತಸ ವ್ಯಕ್ತಪಡಿಸಿದರು. ಕಳೆದ ವರ್ಷ ಮುಹಮ್ಮದ್ ಶಾಫಿ, ಬಿ. ಶ್ರೀನಿವಾಸ್, ಎಜಾಜ್ ರಾಣಾ ಹಾಗೂ ಸಯೀದ್ ಫಾರೂಕ್ ಅವರ ನೇತೃತ್ವದಲ್ಲಿ ಎಸ್ಡಿಟಿಯು ತಂಡವು 50 ಆಟೋ ಚಾಲಕರಿಗೆ ಮುದ್ರಾ ಯೋಜನೆಯಡಿ ಹೊಸ ಆಟೋಗಳನ್ನು ಖರೀದಿಸಲು ನೆರವಾಗಿತ್ತು. ಅಸಂಘಟಿತ ವಲಯದ ಕಾರ್ಮಿಕರ ಸಶಕ್ತೀಕರಣ ಹಾಗೂ ಆರ್ಥಿಕ ಅಭಿವೃದ್ಧಿಗೆ ಸರ್ಕಾರಿ ಯೋಜನೆಗಳ ಲಾಭ ಪಡೆಯುವುದು ಮುಖ್ಯವಾಗಿದೆ. ಎಸ್ಡಿಪಿಐ ಮತ್ತು ಎಸ್ಡಿಟಿಯು ಈ ದಿಸೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ತಳಸ್ತರದ ಸಮುದಾಯಗಳನ್ನು ಮೇಲಕ್ಕೆತ್ತುವ ಪ್ರಯತ್ನ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಜಾರ್ಖಂಡ್ನಲ್ಲಿ ವಿಮಾನ ಪತನ: ರೋಗಿ, ವೈದ್ಯ ಸೇರಿ 7 ಮಂದಿಯನ್ನು ಸಾಗಿಸುತ್ತಿದ್ದ ಏರ್ ಆಂಬ್ಯುಲೆನ್ಸ್!
ಜಾರ್ಖಂಡ್ನಲ್ಲಿ 7 ಜನರನ್ನು ಹೊತ್ತೊಯ್ಯುತ್ತಿದ್ದ ವಿಮಾನ ಪತನಗೊಂಡಿದೆ. ಈ ಬಗ್ಗೆ ನಾಗರಿಕ ವಿಮಾನಯಾನ ನಿರ್ದೇಶನಾಲಯ ತಿಳಿಸಿದೆ. ರೆಡ್ಬರ್ಡ್ ಏರ್ವೇಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆ ಸೇರಿದ ವಿಮಾನ ಇದಾಗಿದ್ದು, ಇಬ್ಬರು ಪೈಲಟ್, ರೋಗಿಗಳು ಸಹಾಯಕರು ಮೃತಪಟ್ಟಿದ್ದಾರೆ. ಈ ಬಗ್ಗೆ ಹೆಚ್ಚಿನ ವಿವರ ಇಲ್ಲಿದೆ.
ಅಫಜಲಪುರ | ಸಂಪರ್ಕ ರಸ್ತೆಗಳ ಅಭಿವೃದ್ಧಿಯಿಂದ ದೇಶ ಅಭಿವೃದ್ಧಿ : ಶಾಸಕ ಎಂ.ವೈ.ಪಾಟೀಲ್
ನೂತನ ಬಸ್ ನಿಲ್ದಾಣಕ್ಕೆ ಶಂಕುಸ್ಥಾಪನೆ
ಕೆಂಭಾವಿ | ಎತ್ತು ಕಳವು ಆರೋಪಿಯ ಬಂಧನ
ಕೆಂಭಾವಿ : ಎತ್ತುಗಳನ್ನು ಕಳವು ಮಾಡಿದ ಆರೋಪದಲ್ಲಿ ವ್ಯಕ್ತಿಯೋರ್ವನನ್ನು ಕೆಂಭಾವಿ ಪೊಲೀಸರು ಬಂಧಿಸಿದ್ದಾರೆ. ಕೆಂಭಾವಿ ನಿವಾಸಿ ಶರಣಪ್ಪ ಜಟೆಪ್ಪ ಕಟ್ಟಿಮನಿ ಬಂಧಿತ ಆರೋಪಿ. ಕೆಂಭಾವಿ ನಿವಾಸಿ ಮಲ್ಲಣ್ಣ ಎಂಬವರಿಗೆ ಸೇರಿದ ಸುಮಾರು 75,000 ರೂ. ಬೆಲೆಬಾಳುವ ಎತ್ತು ಫೆ. 20ರಂದು ರಾತ್ರಿ ಕಳುವಾಗಿತ್ತು. ರೈತ ಮಲ್ಲಣ್ಣ ಅವರು ಯಡ್ರಾಮಿ, ದೇವದುರ್ಗ ಸೇರಿದಂತೆ ಸುತ್ತಮುತ್ತಲಿನ ಸಂತೆ ಮತ್ತು ಜಾತ್ರೆಗಳಲ್ಲಿ ಹುಡುಕಾಡಿದರೂ ಎತ್ತು ಪತ್ತೆಯಾಗಿರಲಿಲ್ಲ. ಈ ಕುರಿತು ಅವರು ಕೆಂಭಾವಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ರೈತನ ದೂರಿನ ಗಂಭೀರತೆಯನ್ನು ಅರಿತ ಕೆಂಭಾವಿ ಕ್ರೈಮ್ ಪಿಎಸ್ಐ ಹಣಮಂತ್ರಾಯ ಸಿದ್ದಾಪುರ ಅವರು ತಕ್ಷಣ ಕಾರ್ಯಪ್ರವೃತ್ತರಾಗಿ ತಮ್ಮ ತಂಡದೊಂದಿಗೆ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದು, ಎತ್ತನ್ನು ವಶಪಡಿಸಿಕೊಂಡಿದ್ದಾರೆ. ರೈತ ಮಲ್ಲಣ್ಣ ಸಾಕಿದ ಎತ್ತನ್ನು ಮರಳಿ ಕೊಡಿಸಿದ ಕೆಂಭಾವಿ ಪೊಲೀಸರ ಕೆಲಸಕ್ಕೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಬಳ್ಳಾರಿ | ವಿವಿಧ ಯೋಜನೆಗಳ ಸೌಲಭ್ಯ ವಿತರಣೆ
ಬಳ್ಳಾರಿ : ಪಟ್ಟಣದ ಸಂಡೂರು ತಾಲೂಕು ಪಂಚಾಯಿತಿ ಆವರಣದಲ್ಲಿ ಇಂದು ಸಂಡೂರು ತಾಲೂಕಿನ ವಿವಿಧ ಸರ್ಕಾರಿ ಯೋಜನೆಗಳ ಫಲಾನುಭವಿಗಳಿಗೆ ಸೌಲಭ್ಯ ವಿತರಣೆ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಸಂಡೂರು ವಿಧಾನಸಭಾ ಕ್ಷೇತ್ರದ ಶಾಸಕಿ ಅನ್ನಪೂರ್ಣ ಈ ತುಕಾರಾಮ್ ಹಾಗೂ ಅಖಂಡ ಬಳ್ಳಾರಿ ಜಿಲ್ಲಾ ಸಂಸದ ಈ ತುಕಾರಾಮ್ ಭಾಗವಹಿಸಿ ಫಲಾನುಭವಿಗಳಿಗೆ ನೇರವಾಗಿ ಸೌಲಭ್ಯಗಳನ್ನು ವಿತರಿಸಿದರು. ಈ ಸಂದರ್ಭದಲ್ಲಿ ಸಾರ್ವಜನಿಕರ ಕುಂದುಕೊರತೆಗಳು ಮತ್ತು ಅಹವಾಲುಗಳನ್ನು ಸ್ವೀಕರಿಸಿದ ಜನಪ್ರತಿನಿಧಿಗಳು, ಜನರ ಸಮಸ್ಯೆಗಳನ್ನು ಮನಗಂಡು ಸಂಬಂಧಿಸಿದ ಅಧಿಕಾರಿಗಳಿಗೆ ತಕ್ಷಣ ಕ್ರಮ ಕೈಗೊಳ್ಳುವಂತೆ ಸೂಚಿಸಿದರು. ಸರ್ಕಾರದ ವಿವಿಧ ಯೋಜನೆಗಳು ನಿಜವಾದ ಅರ್ಹ ಫಲಾನುಭವಿಗಳಿಗೆ ತಲುಪುವಂತೆ ನಿರಂತರ ಪರಿಶೀಲನೆ ನಡೆಸಲಾಗುತ್ತಿದೆ ಎಂದು ತಿಳಿಸಿದರು. “ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸುವುದು ನಮ್ಮ ಮೊದಲ ಆದ್ಯತೆ. ಜನಸೇವೆ ನಮ್ಮ ಧ್ಯೇಯವಾಗಿದ್ದು, ಇನ್ನಷ್ಟು ಜನಪರ ಕಾರ್ಯಕ್ರಮಗಳನ್ನು ಕೈಗೊಳ್ಳುವ ಸಂಕಲ್ಪ ಹೊಂದಿದ್ದೇವೆ” ಎಂದು ಶಾಸಕಿ ಹಾಗೂ ಸಂಸದರು ಅಭಿಪ್ರಾಯಪಟ್ಟರು. ಕಾರ್ಯಕ್ರಮದಲ್ಲಿ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಮಡಗಿನಬಸಪ್ಪ, ಅಕ್ಷಯ್ ಲಾಡ್, ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
ವಿಜಯನಗರ | ಸಂಪೂರ್ಣ ಒಳಮೀಸಲಾತಿ ಜಾರಿಗೆ ಆಗ್ರಹಿಸಿ ಪ್ರತಿಭಟನೆ
ವಿಜಯನಗರ : ರಾಜ್ಯಾದ್ಯಂತ ಸಂಪೂರ್ಣ ಒಳಮೀಸಲಾತಿ ಜಾರಿಗೆ ಕರೆ ನೀಡಿರುವ ಹಿನ್ನೆಲೆ, ವಿಜಯನಗರ ಜಿಲ್ಲೆಯಲ್ಲಿ ಸಾಮಾಜಿಕ ನ್ಯಾಯಕ್ಕಾಗಿ ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಜಾರಿ ಹೋರಾಟ ಸಮಿತಿಯ ನೇತೃತ್ವದಲ್ಲಿ ವಿವಿಧ ಸಂಘಟನೆಗಳ ಮುಖಂಡರು ಜಿಲ್ಲಾ ಆಡಳಿತ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದರು. ರಾಜ್ಯ ಸಂಚಾಲಕ ಕರಿಯಪ್ಪ ಗುಡಿಮನಿ ಮಾತನಾಡಿ, ಸರ್ಕಾರ ಒಳಮೀಸಲಾತಿ ಜಾರಿ ಮಾಡಿದರೂ ಕಳೆದ ಆರು ತಿಂಗಳಾದರೂ ಸಂಪೂರ್ಣವಾಗಿ ಜಾರಿಯಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಸಮಾಜ ಕಲ್ಯಾಣ ಇಲಾಖೆ ಸಚಿವ ಎಚ್.ಸಿ.ಮಹದೇವಪ್ಪ ಒಳಮೀಸಲಾತಿ ವಿಚಾರದಲ್ಲಿ ಸ್ವಜಾತಿ ಪರ ನಿಲುವು ತಾಳಿದ್ದಾರೆ ಎಂದು ಆರೋಪಿಸಿದರು. ಒಳಮೀಸಲಾತಿ ವಿರೋಧಿ ಬಲಗೈ ವಿದ್ಯಾರ್ಥಿ ಒಕ್ಕೂಟ ರಚನೆಗೂ ಸಚಿವರು ಕಾರಣರಾಗಿದ್ದಾರೆ ಎಂದು ದೂರಿದರು. ಮಾದಿಗರ ಒಳಮೀಸಲಾತಿ ಹೋರಾಟವು ಕೇವಲ ಒಂದು ಜಾತಿಗಾಗಿ ಅಲ್ಲದೆ ರಾಜ್ಯದ 101 ಪರಿಶಿಷ್ಟ ಜಾತಿ ಸಮುದಾಯಗಳಿಗೆ ನ್ಯಾಯ ಒದಗಿಸುವ ಉದ್ದೇಶದಿಂದ ನಡೆದದ್ದಾಗಿದೆ. ವಿಶೇಷವಾಗಿ ಬಿಕ್ಷಕ ಸಮುದಾಯಕ್ಕೆ ಮೊದಲು ನ್ಯಾಯ ನೀಡಬೇಕಾಗಿತ್ತು, ಆದರೆ ಸರ್ಕಾರ ದ್ರೋಹ ಮಾಡಿದೆ ಎಂದು ಹೇಳಿದರು. ಸರ್ಕಾರವು ನ್ಯಾಯಮೂರ್ತಿ ಎಚ್.ಎನ್. ನಾಗಮೋಹನ ದಾಸ್ ಅವರ ಅಧ್ಯಕ್ಷತೆಯಲ್ಲಿ ಆಯೋಗ ರಚಿಸಿತ್ತು. ಆಗಸ್ಟ್ 19 ಮತ್ತು 20ರಂದು ನಡೆದ ಅಧಿವೇಶನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜಕೀಯ ತೀರ್ಮಾನ ಕೈಗೊಂಡು ಒಳಮೀಸಲಾತಿ ಜಾರಿ ಮಾಡಿದರು. ಆದರೆ ಅಲೆಮಾರಿ ಸಮುದಾಯಕ್ಕೆ ನಿರೀಕ್ಷಿತ ನ್ಯಾಯ ಸಿಗಲಿಲ್ಲ ಎಂದು ಆರೋಪಿಸಿದರು. ಬೆಂಗಳೂರು ವಿಧಾನಸೌಧ ಹಾಗೂ ಬೆಳಗಾವಿ ಸರ್ಕ್ಯೂಟ್ ಹೌಸ್ನಲ್ಲಿ ನಡೆದ ಸಭೆಗಳಲ್ಲಿ ಅಲೆಮಾರಿ ಸಮುದಾಯಕ್ಕೆ ವಿಶೇಷ ಪ್ಯಾಕೇಜ್ ಘೋಷಿಸುವ ಭರವಸೆ ನೀಡಲಾಗಿತ್ತು. ಆದರೆ ಇದುವರೆಗೆ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಹೇಳಿದರು. ಬರುವ ಮಾ.6ರ ಬಜೆಟ್ ಅಧಿವೇಶನದಲ್ಲೇ ಸಂಪೂರ್ಣ ಒಳಮೀಸಲಾತಿ ಜಾರಿ ಮಾಡಿ, ಅಲೆಮಾರಿ ಸಮುದಾಯಕ್ಕೆ ವಿಶೇಷ ಪ್ಯಾಕೇಜ್ ಘೋಷಿಸಬೇಕು ಎಂದು ಒತ್ತಾಯಿಸಿದರು. ಮನವಿ ಪತ್ರದಲ್ಲಿ ಉಲ್ಲೇಖಿಸಿರುವ ಏಳು ಬೇಡಿಕೆಗಳನ್ನು ಈಡೇರಿಸುವಂತೆ ಉಸ್ತುವಾರಿ ಸಚಿವರ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು. ಹೋರಾಟದಲ್ಲಿ ನಗರಸಭೆ ಮಾಜಿ ಸದಸ್ಯ ಗೋವಿಂದರಾಜ್ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು ಮಾತನಾಡಿದರು. ನೂರಾರು ಸಂಖ್ಯೆಯಲ್ಲಿ ಕಾರ್ಯಕರ್ತರು ಭಾಗವಹಿಸಿ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದರು.
ಫಾದರ್ ಮುಲ್ಲರ್ ವೈದ್ಯಕೀಯ ಕಾಲೇಜಿನಲ್ಲಿ ಪ್ರಸೂತಿ ಶಾಸ್ತ್ರ ಕಾರ್ಯಾಗಾರ
ಮಂಗಳೂರು: ಕಂಕನಾಡಿಯ ಫಾದರ್ ಮುಲ್ಲರ್ ವೈದ್ಯಕೀಯ ಕಾಲೇಜಿನ ಪ್ರಸೂತಿ ಮತ್ತು ಸ್ತ್ರೀರೋಗ ಶಾಸ್ತ್ರ ವಿಭಾಗದ ವತಿಯಿಂದ ಸ್ನಾತಕೋತ್ತರ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಳ್ಳಲಾಗಿದ್ದ ಎಫ್ಒಸಿಐಎಲ್ 2026 ಕಾರ್ಯಾಗಾರ ಇತ್ತೀಚೆಗೆ ಕಾಲೇಜಿನ ದಶಮಾನೋತ್ಸವ ಸ್ಮಾರಕ ಸಭಾಂಗಣದಲ್ಲಿ ಶನಿವಾರ ಯಶಸ್ವಿಯಾಗಿ ನಡೆಯಿತು. ಕಾರ್ಯಕ್ರಮವನ್ನು ಧಾರವಾಡದ ಎಸ್ಡಿಎಮ್ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಪ್ರೊಫೆಸರ್ ಡಾ. ರತ್ನಮಾಲಾ ಎಂ. ದೇಸಾಯಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ವೈದ್ಯಕೀಯ ಕ್ಷೇತ್ರದಲ್ಲಿ ನಿರಂತರ ಕಲಿಕೆ ಮತ್ತು ಪ್ರಾಯೋಗಿಕ ನೈಪುಣ್ಯತೆ ಅತ್ಯಗತ್ಯ ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಫಾದರ್ ಮುಲ್ಲರ್ ಚಾರಿಟೇಬಲ್ ಸಂಸ್ಥೆಗಳ ನಿರ್ದೇಶಕ ಫಾ. ಫಾಸ್ಟಿನ್ ಲ್ಯೂಕಾಸ್ ಲೋಬೋ ಸಮಾರಂಭದ ಅಧ್ಯಕ್ಷತೆ ವಹಿಸಿ ಆಶೀರ್ವಚನ ನೀಡಿದರು. ಹೈದರಾಬಾದ್ನ ಫರ್ನಾಂಡಿಸ್ ಆಸ್ಪತ್ರೆಯ ಡಾ. ಕಾಮೇಶ್ವರಿ ಸುರಂಪುಡಿ ಮತ್ತು ಡಾ. ವಿಶಾಖಾ ನಾಗರಾಜ್ ಗೌರವ ಅತಿಥಿಗಳಾಗಿ ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ವಿಭಾಗದ ಹಿರಿಯ ನಿವೃತ್ತ ಪ್ರಾಧ್ಯಾಪಕಿ ಡಾ. ಪ್ರೇಮಾ ಡಿಕುನ್ಹಾ ಅವರನ್ನು ಅವರ ಸುದೀರ್ಘ ಮತ್ತು ಸಮರ್ಪಣಾ ಮನೋಭಾವದ ಸೇವೆಯನ್ನು ಗುರುತಿಸಿ ಸನ್ಮಾನಿಸಲಾಯಿತು. *ಶೈಕ್ಷಣಿಕ ಗೋಷ್ಠಿ, ಕಾರ್ಯಾಗಾರ: ದಿನವಿಡೀ ನಡೆದ ಕಾರ್ಯಕ್ರಮದಲ್ಲಿ ವಿವಿಧ ವಿಷಯಗಳ ಕುರಿತು ತಜ್ಞರಿಂದ ಮಾಹಿತಿ ವಿನಿಮಯ ನಡೆಯಿತು. ಅಲ್ಟ್ರಾಸೌಂಡ್ ಮತ್ತು ಪೆಲ್ವಿಕ್ ಅನ್ಯಾಟಮಿ ಬಗ್ಗೆ ಡಾ. ಮಹೇಶ್, ಡಾ. ಪ್ರತಿಮಾ ಮತ್ತು ಡಾ. ಅಂಜುಮ್ ಇಫ್ತಿಕರ್, ಸಿಟಿಜಿ ಮತ್ತು ದಾಖಲಾತಿ: ಡಾ. ರತ್ನಮಾಲಾ ದೇಸಾಯಿ ಮತ್ತು ಡಾ. ಸುಜಯಾ ವಿ. ರಾವ್ ಮಾಹಿತಿ ನೀಡಿದರು. ಪ್ರಾಯೋಗಿಕ ತರಬೇತಿಯಲ್ಲಿ ಡಾ. ಶ್ರದ್ಧಾ ಶೆಟ್ಟಿ, ಡಾ. ಜಾಯ್ಲಿನ್ ಡಾಲ್ಮಿಡಾ, ಡಾ. ಶಾನನ್ ಫೆರ್ನಾಂಡಿಸ್, ಡಾ. ಚೇತನಾ ಬೋಳಂತಕೋಡಿ ಮತ್ತು ಡಾ. ಅಲ್ವೀರಾ ಡಿಸೋಜ, ಒತ್ತಡ ನಿರ್ವಹಣೆ ಬಗ್ಗೆ ಖ್ಯಾತ ಮನೋವೈದ್ಯೆ ಡಾ. ಕ್ಯಾರೋಲಿನ್ ಡಿಸೋಜ ಅವರು ಮಾನಸಿಕ ಒತ್ತಡ ನಿರ್ವಹಣೆಯ ಕುರಿತು ಮಾರ್ಗದರ್ಶನ ನೀಡಿದರು. ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿ ಹೈದರಾಬಾದ್ನ ತಜ್ಞರಿಂದ ‘ಪೆರಿನಿಯಲ್ ಟಿಯರ್ ರಿಪೇರ್’ ಕುರಿತು ಕಾರ್ಯಾಗಾರ ನಡೆಯಿತು. ವಿಭಾಗದ ಮುಖ್ಯಸ್ಥ ಡಾ. ಮಹೇಶ ನಾವಡ ಸ್ವಾಗತಿಸಿದರು. ಸಂಘಟನಾ ಕಾರ್ಯದರ್ಶಿ ಡಾ. ಏಕ್ತಾ ಎಂ. ಶೆಟ್ಟಿ ವಂದಿಸಿದರು, ಡಾ. ಜ್ಯೋತ್ಸ್ನಾ ಕೋಯೆಲ್ಹೊ ಸಹಕರಿಸಿದರು. ಡಾ. ಲಿಜಾ ಮೆಲಿಟಾ ಪಿಂಟೊ , ಡಾ. ನಿಶ್ಮಿತಾ ರೊಡ್ರಿಗಸ್ ಮತ್ತು ಡಾ. ನಿಕಿತಾ ಜೇಮ್ಸ್ ಕಾರ್ಯಕ್ರಮ ನಿರೂಪಿಸಿದರು. ಸುಮಾರು 100ಕ್ಕೂ ಹೆಚ್ಚು ಸ್ನಾತಕೋತ್ತರ ವಿದ್ಯಾರ್ಥಿಗಳು ಈ ಶಿಬಿರದ ಪ್ರಯೋಜನ ಪಡೆದರು.
Bengaluru | ಅಧಿಕಾರಿಗಳ ಸೋಗಿನಲ್ಲಿ 24 ಲಕ್ಷ ರೂ. ಸುಲಿಗೆ ಆರೋಪ: ಒಂಬತ್ತು ಮಂದಿಯ ಬಂಧನ
ಬೆಂಗಳೂರು, ಫೆ.23 : ಮಾನವ ಹಕ್ಕುಗಳ ಸಂರಕ್ಷಣೆ ಮತ್ತು ಭ್ರಷ್ಟಾಚಾರ ನಿಗ್ರಹ ದಳ ಅಧಿಕಾರಿಗಳ ಸೋಗಿನಲ್ಲಿ 24 ಲಕ್ಷ ರೂ., ಹಣ ಸುಲಿಗೆ ಮಾಡಿರುವ ಆರೋಪದಡಿ 9 ಆರೋಪಿಗಳನ್ನು ದೇವನಹಳ್ಳಿ ಠಾಣಾ ಪೊಲೀಸರು ಬಂಧಿಸಿದ್ದಾರೆ. ದೇವನಹಳ್ಳಿ ಹೊರವಲಯದ ಪ್ರಸನ್ನಹಳ್ಳಿ ರಸ್ತೆಯಲ್ಲಿ ಈ ಘಟನೆ ನಡೆದಿದ್ದು, ಸದ್ಯ ಪ್ರಕರಣಕ್ಕೆ ಸಂಬಂಧಿದಂತೆ 12 ಜನರ ಪೈಕಿ ಕೃಷ್ಣಕುಮಾರ್, ವೇಣುಗೋಪಾಲ್, ಸಂಪಂಗಿ ರಾಮ, ನಾರಾಯಣಸ್ವಾಮಿ, ವೆಂಕಟೇಶ, ಮುರುಗೇಶನ್, ಶಿವ ಸೇರಿದಂತೆ 9 ಮಂದಿಯನ್ನು ಬಂಧಿಸಿ ಹಣವನ್ನು ಜಪ್ತಿ ಮಾಡಲಾಗಿದೆ. ಶಂಕರಪ್ಪ ಎಂಬುವವರಿಗೆ ಹಣ ದುಪ್ಪಟ್ಟು ಮಾಡಿಕೊಡುವುದಾಗಿ ಆರೋಪಿ ಕೃಷ್ಣ ಕುಮಾರ್ ಹೇಳಿದ್ದು, ಅದರಂತೆ ಶಂಕರಪ್ಪ ಚಿನ್ನಾಭರಣ ಅಡವಿಟ್ಟು 24 ಲಕ್ಷ ರೂ ಹಣವನ್ನು ತಂದಿದ್ದಾರೆ. ಇತ್ತ ಮೊದಲೇ ಮಾಡಿಕೊಂಡಿದ್ದ ಸಂಚಿನಂತೆ ಖಾಸಗಿ ಕಾರಿನಲ್ಲಿ ಕೃಷ್ಣ ಕುಮಾರ್ ಸಹಚರರು ಮಾನವ ಹಕ್ಕುಗಳ ಸಂರಕ್ಷಣೆ ಮತ್ತು ಭ್ರಷ್ಟಾಚಾರ ನಿಗ್ರಹ ದಳ ಹೆಸರಿನಲ್ಲಿ ಖಾಸಗಿ ಕಾರ್ಗೆ ಫಲಕ ಹಾಕಿಕೊಂಡು ಅಧಿಕಾರಿಗಳ ಸೋಗಿನಲ್ಲಿ ಬಂದು 24 ಲಕ್ಷ ರೂ ಹಣವನ್ನು ದೋಚಿ ಪರಾರಿಯಾಗಿದ್ದಾರೆ. ಹಣ ಎಗರಿಸಿದ ನಂತರ ಆರೋಪಿ ಕೃಷ್ಣಕುಮಾರ್ ಪೊಲೀಸ್ ಠಾಣೆಗೆ ಬಂದು ತಾನೇ ದೂರು ನೀಡಿದ್ದ. ಪೊಲೀಸರ ವಿಚಾರಣೆ ವೇಳೆ ದೂರು ನೀಡಿದ್ದ ಆರೋಪಿಯೇ ದರೋಡೆಕೋರ ಎನ್ನುವುದು ಬಯಲಾಗಿದೆ. ಸದ್ಯ ದೇವನಹಳ್ಳಿ ಠಾಣೆ ಪೊಲೀಸರು 12 ಜನರಲ್ಲಿ 9 ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಆಂಧ್ರಪ್ರದೇಶ| ಶಂಕಿತ ಕಲಬೆರಕೆ ಹಾಲು ಕುಡಿದು ನಾಲ್ವರು ಮೃತ್ಯು
ರಾಜಮುಂಡ್ರಿ, ಫೆ. 23: ರಾಜಮುಂಡ್ರಿಯಲ್ಲಿ ಶಂಕಿತ ಕಲಬೆರಕೆ ಹಾಲು ಕುಡಿದು ನಾಲ್ವರು ಮೃತಪಟ್ಟಿದ್ದಾರೆ. 12 ಮಂದಿ ಹಲವು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಸಂತ್ರಸ್ತರಾದ ಎಲ್ಲರೂ 65 ವರ್ಷಕ್ಕಿಂತ ಮೇಲಿನ ವಯಸ್ಸಿನವರು. ಈ ಘಟನೆಗೆ ಸಂಬಂಧಿಸಿ ಅಧಿಕಾರಿಗಳು ಕೊರುಕುಂಡ ಮಂಡಲ್ನ ನರಸಪುರಂ ಗ್ರಾಮದ ಹಾಲು ಮಾರಾಟಗಾರರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ತನಿಖೆಯ ಭಾಗವಾಗಿ ಅನಧಿಕೃತ ಡೈರಿಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ನಿರ್ದಿಷ್ಟ ಹಾಲು ಮಾರಾಟಗಾರ ಹಾಲು ಪೂರೈಸಿದ 105 ಕುಟುಂಬಗಳ ಪೈಕಿ 75 ಕುಟುಂಬಗಳಿಂದ ಹಾಲಿನ ಮಾದರಿಗಳನ್ನು ಸಂಗ್ರಹಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಶಂಕಿತ ಅನಾರೋಗ್ಯದ ಕಾರಣವನ್ನು ಕಂಡು ಹಿಡಿಯಲು ಪರೀಕ್ಷೆ ನಡೆಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ. ಪರಿಸ್ಥಿತಿ ಅವಲೋಕಿಸಲು ವಿಜಯವಾಡದಿಂದ ವಿಶೇಷ ತಂಡಗಳು ಆಗಮಿಸಿವೆ ಹಾಗೂ ವೈದ್ಯಕೀಯ, ಪ್ರತಿಬಂಧಕ ಕ್ರಮಗಳ ಮೇಲ್ವಿಚಾರಣೆ ನಡೆಸುತ್ತಿವೆ ಎಂದು ಅವರು ತಿಳಿಸಿದ್ದಾರೆ.
ಪಾಟ್ನಾ: ಮಕ್ಕಳಲ್ಲಿ ಹಿಂಸಾಪ್ರವೃತ್ತಿ ತಲೆದೋರುವುದನ್ನು ತಪ್ಪಿಸಲು ಧಾರ್ಮಿಕ ಸ್ಥಳಗಳು, ಶೈಕ್ಷಣಿಕ ಸಂಸ್ಥೆಗಳು ಹಾಗೂ ಜನನಿಬಿಡ ಪ್ರದೇಶಗಳಲ್ಲಿ ಮಾಂಸ ಮಾರಾಟ ಮಾಡುವುದನ್ನು ಬಿಹಾರದಲ್ಲಿ ನಿಷೇಧಿಸಲಾಗಿದೆ ಎಂದು ಬಿಹಾರ ಉಪ ಮುಖ್ಯಮಂತ್ರಿ ವಿಜಯ್ ಕುಮಾರ್ ಸಿನ್ಹಾ ಹೇಳಿದ್ದಾರೆ. ಪಟ್ಟಣ ಪ್ರದೇಶಗಳಲ್ಲಿ ಮುಕ್ತವಾಗಿ ಕಾರ್ಯಾಚರಿಸುತ್ತಿರುವ ಮಾಂಸ ಮಾರಾಟ ಮಳಿಗೆಗಳನ್ನು ಮುಚ್ಚುವಂತೆ ನಗರ ಪಾಲಿಕೆ ಆಯುಕ್ತರಿಗೆ ಬರೆದಿರುವ ಪತ್ರವನ್ನು ಉಲ್ಲೇಖಿಸಿ ಅವರು ಈ ಹೇಳಿಕೆ ನೀಡಿದ್ದಾರೆ. “ಇದು ಹೊಸ ಸರಕಾರದ ನೂತನ ಉಪಕ್ರಮವಾಗಿದೆ. ಬಿಹಾರದ ಬದಲಾಗುತ್ತಿರುವ ಮುಖ ಸ್ಪಷ್ಟವಾಗಿ ಗೋಚರವಾಗುತ್ತಿದೆ. ನಾವು ಸಭೆ ನಡೆಸಿ ಎತ್ತಲಾದ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಿದ್ದೇವೆ. ಆರೋಗ್ಯದ ದೃಷ್ಟಿಯಿಂದ, ಸಾಮಾಜಿಕ ಸಂವಹನ ಹಾಗೂ ಮಕ್ಕಳಲ್ಲಿ ಹಿಂಸಾಪ್ರವೃತ್ತಿಯನ್ನು ತಡೆಯಲು ನಾವು ಶೈಕ್ಷಣಿಕ ಸಂಸ್ಥೆಗಳು, ಧಾರ್ಮಿಕ ಸ್ಥಳಗಳು ಹಾಗೂ ಜನನಿಬಿಡ ಪ್ರದೇಶಗಳಲ್ಲಿ ಮಾಂಸ ಮತ್ತು ಮೀನು ಮಾರಾಟವನ್ನು ನಿಷೇಧಿಸಲಿದ್ದೇವೆ” ಎಂದು ಅವರು ರವಿವಾರ ಹೇಳಿದ್ದಾರೆ. ನಗರಾಭಿವೃದ್ಧಿ ಮತ್ತು ವಸತಿ ಸಚಿವರೂ ಆದ ವಿಜಯ್ ಕುಮಾರ್ ಸಿನ್ಹಾ, ಇಲಾಖೆಯ ಪ್ರಧಾನ ಕಾರ್ಯದರ್ಶಿ ವಿನಯ್ ಕುಮಾರ್ ಅವರಿಗೆ ಬರೆದಿರುವ ಪತ್ರವನ್ನು ಉಲ್ಲೇಖಿಸಿ ಮಾತನಾಡುತ್ತಿದ್ದರು. ಆದರೆ, ಜನರ ಆಹಾರ ಆಯ್ಕೆಯ ಬಗ್ಗೆ ಸರಕಾರಕ್ಕೆ ಯಾವುದೇ ತಕರಾರಿಲ್ಲ ಎಂದು ಸ್ಪಷ್ಟಪಡಿಸಿದ ವಿಜಯ್ ಕುಮಾರ್ ಸಿನ್ಹಾ, ಸಾಮಾಜಿಕ ಸಂವಹನ ಮತ್ತು ಶುದ್ಧತೆಯ ಚೈತನ್ಯ ಉಲ್ಲಂಘನೆಯಾಗದಿರುವುದನ್ನು ಖಾತರಿಪಡಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ. “ಯಾರೊಬ್ಬರ ಭಾವನೆಗಳನ್ನೂ ಘಾಸಿಗೊಳಿಸಬಾರದು ಹಾಗೂ ಪರಿಸರವನ್ನು ಕಲುಷಿತಗೊಳಿಸಬಾರದು” ಎಂದೂ ಅವರು ಹೇಳಿದ್ದಾರೆ. ಬಿಹಾರ ನಗರಾಡಳಿತ ಕಾಯ್ದೆ, 2007ರ ಅಡಿಯಲ್ಲಿ ಸೆಕ್ಷನ್ 345 ಅನ್ನು ಉಲ್ಲಂಘಿಸಿ ವಿವಿಧ ನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ಕಾನೂನುಬಾಹಿರವಾಗಿ ಮಾಂಸ ಮತ್ತು ಮೀನು ಮಳಿಗೆಗಳು ಕಾರ್ಯಾಚರಿಸುತ್ತಿವೆ ಎಂದು ಎಲ್ಲ ನಗರ ಪಾಲಿಕೆ ಆಯುಕ್ತರಿಗೆ ಅವರು ಪತ್ರ ಬರೆದಿದ್ದಾರೆ. ಆದರೆ, ಮಾಂಸ ಮಾರಾಟ ಮಳಿಗೆಗಳಿಂದ ಮಕ್ಕಳಲ್ಲಿ ಹಿಂಸಾಪ್ರವೃತ್ತಿ ತಲೆದೋರುತ್ತದೆ ಎಂದು ಅವರು ಈ ಪತ್ರದಲ್ಲಿ ಉಲ್ಲೇಖಿಸಿಲ್ಲ.
Prakash Raj: ವಿಭಿನ್ನ ಆಹಾರ - ವಿಭಿನ್ನ ರುಚಿಯೊಂದಿಗೆ ಸೌಹಾರ್ದತೆಯಿಂದ ಬದುಕೋಣ: ನಟ ಪ್ರಕಾಶ್ ರಾಜ್ ಟ್ವೀಟ್ ವೈರಲ್
Prakash Raj: ನಟ ಪ್ರಕಾಶ್ ರಾಜ್ ಅವರು ಆಹಾರಕ್ಕೆ ಸಂಬಂಧಿಸಿದಂತೆ ಸೋಷಿಯಲ್ ಮೀಡಿಯಾ ಎಕ್ಸ್ನಲ್ಲಿ ಮಾಡಿರುವ ಟ್ವೀಟ್ ವೈರಲ್ ಆಗುತ್ತಿದೆ. ಕೇರಳ ಸ್ಟೋರಿ 2 ಸಿನಿಮಾವೂ ಕೇರಳದಲ್ಲಿ ವಿವಾದ ಸ್ವರೂಪವನ್ನು ಪಡೆದುಕೊಂಡಿದೆ. ದೇಶದಾದ್ಯಂತ ಪರ - ವಿರೋಧ ಚರ್ಚೆಗಳು ನಡೆದಿವೆ. ಈ ಸಿನಿಮಾದಲ್ಲಿ ಒತ್ತಾಯ ಪೂರ್ವಕವಾಗಿ ಬೀಫ್ ತಿನ್ನಿಸುವ ದೃಶ್ಯವಿದ್ದು, ಇದಕ್ಕೆ ವಿರೋಧ ವ್ಯಕ್ತವಾಗಿದೆ. ಭಾನುವಾರ ಆಹಾರ
ಮಾ.28ರಿಂದ ಗಂಜಿಮಠದಲ್ಲಿ ರಾಷ್ಟ್ರೀಯ ಮಟ್ಟದ ಮೋಟಾರ್ ರ್ಯಾಲಿ
ಮಂಗಳೂರು, ಫೆ.23: ಇಂಡಿಯನ್ ಮೋಟಾರ್ ಸ್ಪೋರ್ಟ್ಸ್ ಕ್ಲಬ್ ಆಶ್ರಯದಲ್ಲಿ ರಾಷ್ಟ್ರೀಯ ಮಟ್ಟದ 400ನೇ ‘ಐಎಂಎಸ್ಸಿ ಆಫ್ ರೋಡ್ ಟ್ರೋಫಿ-2026’ ಮೋಟಾರ್ ರ್ಯಾಲಿ ಮಾ.28 ಮತ್ತು 29ರಂದು ಬೆಳಗ್ಗೆ 9ರಿಂದ ಸಂಜೆ 5.30ರವರೆಗೆ ಮಂಗಳೂರಿನ ಗಂಜಿಮಠದ ಒಡ್ಡೂರು ಫಾರ್ಮ್ನಲ್ಲಿ ಆಯೋಜಿಸಲಾಗಿದೆ ಎಂದು ಇಂಡಿಯನ್ ಮೋಟಾರ್ ಸ್ಪೋರ್ಟ್ಸ್ ಕ್ಲಬ್ ಕಾರ್ಯದರ್ಶಿ ಅಶ್ವಿನ್ ನಾಯಕ್ ತಿಳಿಸಿದ್ದಾರೆ. ಮಂಗಳೂರು ಪ್ರೆಸ್ ಕ್ಲಬ್ನಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಕ್ಲಬ್ 25ನೇ ವರ್ಷ ಪೂರೈಸುತ್ತಿರುವ ಸಂದರ್ಭದಲ್ಲಿ ಈ ರಾಷ್ಟ್ರಮಟ್ಟದ ಸ್ಪರ್ಧೆಯನ್ನು ಏರ್ಪಡಿಸಲಾಗಿದ್ದು, ಈ ರೋಮಾಂಚನಕಾರಿ ರ್ಯಾಲಿಯಲ್ಲಿ ಮಹಾರಾಷ್ಟ್ರ, ಗೋವಾ, ತಮಿಳುನಾಡು ಸೇರಿದಂತೆ ಹಲವು ರಾಜ್ಯಗಳ 400ಕ್ಕೂ ಅಧಿಕ ಸ್ಪರ್ಧಾಳುಗಳು ಭಾಗವಹಿಸುವ ನಿರೀಕ್ಷೆ ಇದೆ ಎಂದರು. ಮೊದಲ ದಿನವಾದ ಮಾ.28ರಂದು ಮಹಿಳಾ ವಿಭಾಗ, ಜೂನಿಯರ್ ವಿಭಾಗ, ಮಾಸ್ಟರ್ಸ್ ವಿಭಾಗ, ಜಿಮ್ನಿ ವಿಭಾಗ, ಥಾರ್ 2020, ಎಸ್ಯುವಿ, ಸ್ಟಾಕ್ ಡೀಸೆಲ್, ಸ್ಟಾಕ್ ಪೆಟ್ರೋಲ್ ವಿಭಾಗಗಳಲ್ಲಿ, ಎರಡನೇ ದಿನವಾದ ಮಾ.29ರಂದು ಮೋಡಿಫೈಡ್ ಪೆಟ್ರೋಲ್, ಮೋಡಿಫೈಡ್ ಡೀಸೆಲ್, ಓಪನ್ ಕ್ಲಾಸ್ ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದೆ ಎಂದರು. 15 ಲಕ್ಷ ರೂ. ಮೊತ್ತದ ಬಹುಮಾನ: ರಾಷ್ಟ್ರೀಯ ಮಟ್ಟದ 400ನೇ ‘ಐಎಂಎಸ್ಸಿ ಆಫ್ ರೋಡ್ ಟ್ರೋಫಿ-2026’ ರ್ಯಾಲಿಯಲ್ಲಿ ವಿಜೇತರಿಗೆ ಒಟ್ಟು 15 ಲಕ್ಷ ರೂ. ನಗದು ಬಹುಮಾನ, ಟ್ರೋಫಿಯನ್ನು ನೀಡಲಾಗುವುದು. ಸುಮಾರು 5 ಸಾವಿರಕ್ಕೂ ಅಧಿಕ ಪ್ರೇಕ್ಷಕರು ಪಾಲ್ಗೊಳ್ಳುವ ಸಾಧ್ಯತೆ ಇದೆ. ಮಹಿಳೆಯರಿಗಾಗಿ ಎರೈವ್ ಆ್ಯಂಡ್ ಡ್ರೈವ್ ವ್ಯವಸ್ಥೆ ಇದ್ದು ವಾಹನ ಇಲ್ಲದವರು ಕೂಡ ಆಗಮಿಸಬಹುದು. ಅವರಿಗೆ ಸ್ಪರ್ಧೆಗಾಗಿ ವಾಹನವನ್ನು ಸ್ಥಳದಲ್ಲಿಯೇ ಒದಗಿಸಲಾಗುವುದು ಎಂದು ಮಾಹಿತಿ ನೀಡಿದರು. ಕ್ಲಬ್ನ ಅಧ್ಯಕ್ಷ ಮೂಸಾ ಶರೀಫ್ ಮಾತನಾಡಿ, ಮಂಗಳೂರನ್ನು ಕೇಂದ್ರವಾಗಿಸಿಕೊಂಡು ಕಾರ್ಯನಿರ್ವಹಿಸುತ್ತಿರುವ ಐಎಂಎಸ್ಸಿ ಕಳೆದ 25 ವರ್ಷಗಳಿಂದ ಭಾರತೀಯ ಮೋಟಾರ್ ಸ್ಪೋರ್ಟ್ಸ್ ಕ್ಷೇತ್ರದಲ್ಲಿ ಮಹತ್ವದ ಪಾತ್ರ ವಹಿಸಿದೆ. ರ್ಯಾಲಿ, ಆಟೋಕ್ರಾಸ್, ಹಿಲ್ ಕ್ಲೈಂಬ್, ಮೋಟೋ ಕ್ರಾಸ್ ಸೇರಿದಂತೆ ವಿವಿಧ ಮಾದರಿಯ ಸ್ಪರ್ಧೆಗಳ ಮೂಲಕ ಜಮ್ಮು ಕಾಶ್ಮೀರ ಸೇರಿದಂತೆ ದೇಶದಾದ್ಯಂತ ಪ್ರತಿಭಾವಂತರಿಗೆ ವೇದಿಕೆ ಒದಗಿಸುತ್ತಿದ್ದು ಸುರಕ್ಷಿತ ಹಾಗೂ ವೃತ್ತಿಪರ ಕ್ರೀಡಾ ಸಂಸ್ಕೃತಿಗೆ ಉತ್ತೇಜನ ನೀಡುತ್ತಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಇಂಡಿಯನ್ ಮೋಟಾರ್ ಸ್ಪೋರ್ಟ್ಸ್ ಕ್ಲಬ್ನ ಸದಸ್ಯ ಸಂಜಯ್ ಉಪಸ್ಥಿತರಿದ್ದರು.
Raichur | ರಾಜ್ಯ ಬಜೆಟ್ನಲ್ಲಿ ಲೈಂಗಿಕ ಅಲ್ಪಸಂಖ್ಯಾತರಿಗೆ 200 ಕೋಟಿ ರೂ. ಮೀಸಲಿಡಲು ಒತ್ತಾಯ
ರಾಯಚೂರು : 2026-27ನೇ ಸಾಲಿನ ರಾಜ್ಯ ಬಜೆಟ್ನಲ್ಲಿ ಲಿಂಗತ್ವ ಮತ್ತು ಲೈಂಗಿಕ ಅಲ್ಪಸಂಖ್ಯಾತರ ಅಭಿವೃದ್ಧಿಗಾಗಿ ಪ್ರತ್ಯೇಕವಾಗಿ 200 ಕೋಟಿ ರೂ. ಮೀಸಲಿಡಬೇಕು ಎಂದು ಲಿಂಗತ್ವ ಮತ್ತು ಲೈಂಗಿಕ ಬಹುತ್ವಕ್ಕಾಗಿ ಚಳುವಳಿಯ ಹೋರಾಟಗಾರ ಮಹೇಶ ಪಾಟೀಲ ಒತ್ತಾಯಿಸಿದರು. ಸೋಮವಾರ ಪತ್ರಿಕಾಭವನದಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಲಿಂಗತ್ವ ಮತ್ತು ಲೈಂಗಿಕ ಅಲ್ಪಸಂಖ್ಯಾತರ ಅಭಿವೃದ್ಧಿಗಾಗಿ ವಾರ್ಷಿಕ ರೂ.200 ಕೋಟಿ ಮೀಸಲಿಡುವುದಾಗಿ ಘೋಷಿಸಿತ್ತು. ಆದ್ದರಿಂದ ಸರ್ಕಾರ ತನ್ನ ವಾಗ್ದಾನವನ್ನು ಈಡೇರಿಸಬೇಕು ಎಂದು ಹೇಳಿದರು. 2026ರ ಮಾರ್ಚ್ ಮೊದಲ ವಾರದಲ್ಲಿ ಆರಂಭವಾಗಲಿರುವ ಬಜೆಟ್ ಅಧಿವೇಶನದಲ್ಲಿ ಪ್ರತ್ಯೇಕ ಅನುದಾನ ಘೋಷಿಸಿ, ಕರ್ನಾಟಕ ಲಿಂಗತ್ವ ಮತ್ತು ಲೈಂಗಿಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮವನ್ನು ಸ್ಥಾಪಿಸಬೇಕು. ಸರ್ವತೋಮುಖ ಅಭಿವೃದ್ಧಿಗಾಗಿ ರೂ.250 ಕೋಟಿ ಪ್ರತ್ಯೇಕ ಬಜೆಟ್ ನೀಡಬೇಕು ಎಂದು ಆಗ್ರಹಿಸಿದರು. ಪ್ರತಿ ವರ್ಷ ಕನಿಷ್ಠ 500 ಮನೆಗಳನ್ನು ಹಂಚಿಕೆ ಮಾಡಬೇಕು. ಕೃಷಿಯಲ್ಲಿ ಆಸಕ್ತಿ ಹೊಂದಿರುವವರಿಗೆ 2 ಎಕರೆ ಕೃಷಿಯೋಗ್ಯ ಭೂಮಿ ನೀಡಬೇಕು. ಮೈತ್ರಿ ಪಿಂಚಣಿಯನ್ನು ತಿಂಗಳಿಗೆ ರೂ.2 ಸಾವಿರಕ್ಕೆ ಹೆಚ್ಚಿಸಬೇಕು. ಲಿಂಗತ್ವ ಅಲ್ಪಸಂಖ್ಯಾತರಿಗೆ ತಿಂಗಳಿಗೆ ರೂ.5 ಸಾವಿರ ವೃದ್ಧಾಪ್ಯ ಪಿಂಚಣಿ ನೀಡಬೇಕು. ಶೇ 1ರಷ್ಟು ಮೀಸಲಾತಿಯನ್ನು ಘೋಷಣೆಯಷ್ಟೇ ಅಲ್ಲದೆ ಜಾರಿಗೆ ತರಬೇಕು ಎಂದರು. ಸರ್ಕಾರಿ ಉದ್ಯೋಗಗಳಿಗೆ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ನೀಡಬೇಕು. ಉಚಿತ ಲಿಂಗತ್ವ ದೃಢೀಕರಣ ಶಸ್ತ್ರಚಿಕಿತ್ಸೆಗಳನ್ನು ಸರ್ಕಾರಿ ಆಸ್ಪತ್ರೆಗಳಲ್ಲಿ ಜಾರಿಗೊಳಿಸಿ, ಶಸ್ತ್ರಚಿಕಿತ್ಸೆಯ ನಂತರ 6 ತಿಂಗಳು ಪ್ರತಿ ತಿಂಗಳು ರೂ.5 ಸಾವಿರ ಪುನರ್ವಸತಿ ನೆರವು ನೀಡಬೇಕು. ಪ್ರತಿಯೊಂದು ಜಿಲ್ಲೆಯಲ್ಲಿ ಕನಿಷ್ಠ ಒಂದು ವಿಶೇಷ ಆರೋಗ್ಯ ಕೇಂದ್ರ ಸ್ಥಾಪಿಸಬೇಕು ಎಂದು ಒತ್ತಾಯಿಸಿದರು. ಪತ್ರಿಕಾಗೋಷ್ಠಿಯಲ್ಲಿ ಅಂಬಮ್ಮ, ವಿದ್ಯಾ ಪಾಟೀಲ, ಎಂ.ಆರ್. ಬೇರಿ ಹಾಗೂ ಅನಿಲಕುಮಾರ ಉಪಸ್ಥಿತರಿದ್ದರು.
‘ಮಿಷನ್ ಪ್ರಕೃತಿ’ ರಾಜ್ಯದ ಹತ್ತು ಶಾಲೆಗಳಿಗೆ ‘ಅತ್ಯುತ್ತಮ ಶಾಲೆ' ಪ್ರಶಸ್ತಿ ಪ್ರದಾನ
ಬೆಂಗಳೂರು, ಫೆ. 23 : ಸಮಗ್ರ ಶಿಕ್ಷಣ ಕರ್ನಾಟಕ ಹಾಗೂ ಡಬ್ಲ್ಯೂಡಬ್ಲ್ಯೂಎಫ್ ಇಂಡಿಯಾ ಸಹಯೋಗದಲ್ಲಿ ಆಯೋಜಿಸಲಾಗಿದ್ದ ‘ಮಿಷನ್ ಪ್ರಕೃತಿ: ತರಗತಿಯಿಂದ ಸಂರಕ್ಷಣೆಯತ್ತ' ಕಾರ್ಯಕ್ರಮದಡಿಯಲ್ಲಿ ರಾಜ್ಯದ ಹತ್ತು ಅತ್ಯುತ್ತಮ ಶಾಲೆಗಳಿಗೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಸಚಿವ ಮಧು ಬಂಗಾರಪ್ಪ ಪ್ರಶಸ್ತಿ ಪ್ರದಾನ ಮಾಡಿದರು. ಸೋಮವಾರ ಇಲ್ಲಿನ ವಿಕಾಸಸೌಧದಲ್ಲಿ ನಡೆದ ಈ ಸಮಾರಂಭದಲ್ಲಿ ಇಲಾಖೆಯ ಆಯುಕ್ತ ವಿಕಾಸ್ ಕಿಶೋರ್ ಸುರಳ್ಕರ್, ಡಬ್ಲ್ಯೂಡಬ್ಲ್ಯೂಎಫ್ ಇಂಡಿಯಾದ ಸಿಇಒ ಕರಣ್ ಭಲ್ಲಾ ಹಾಗೂ ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು. ಈ ವೇಳೆ ಮಾತನಾಡಿದ ಸಚಿವ ಮಧು ಬಂಗಾರಪ್ಪ, ವಿದ್ಯಾರ್ಥಿಗಳು ಕೇವಲ ಅಂಕಗಳಿಗಾಗಿ ಓದಬಾರದು. ವಿಷಯವನ್ನು ಆಳವಾಗಿ ಅರ್ಥೈಸಿಕೊಳ್ಳುವುದರ ಕಡೆಗೆ ಗಮನ ಹರಿಸಬೇಕು. ಅರಿವು ಮೂಡಿದರೆ ಫಲಿತಾಂಶ ತಾನಾಗಿಯೇ ಉತ್ತಮವಾಗುತ್ತದೆ ಎಂದು ಕಿವಿಮಾತು ಹೇಳಿದರು. ತ್ಯಾಜ್ಯ ನಿರ್ವಹಣೆ ಕುರಿತು ಜಪಾನ್ನ ಉದಾಹರಣೆ ನೀಡಿದ ಅವರು, ಅಲ್ಲಿ ಕಸದ ಬುಟ್ಟಿಗಳು ಕಡಿಮೆ ಇದ್ದರೂ ಜನರು ತಮ್ಮ ಕಸವನ್ನು ತಾವೇ ಮನೆಗೆ ತೆಗೆದುಕೊಂಡು ಹೋಗಿ ವಿಲೇವಾರಿ ಮಾಡುತ್ತಾರೆ. ಅಂತಹ ಶಿಸ್ತು ನಮ್ಮಲ್ಲಿಯೂ ಬರಬೇಕು ಎಂದು ಆಶಯ ವ್ಯಕ್ತಪಡಿಸಿದರು. ಮುಂದಿನ ವರ್ಷದಿಂದ 1 ರಿಂದ 10ನೇ ತರಗತಿಯ ವರೆಗೆ ‘ನೈತಿಕ ವಿಜ್ಞಾನ' ಪಠ್ಯ ಪುಸ್ತಕವನ್ನು ಪರಿಚಯಿಸಲಾಗುವುದು. ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಳ್ಳುವುದು ಶಿಕ್ಷಣದ ಮೊದಲ ಮೆಟ್ಟಿಲು ಎಂದು ಅವರು ಪ್ರತಿಪಾದಿಸಿದರು. ಸರಕಾರಿ ಶಾಲಾ ಶಿಕ್ಷಕರ ಮೆರಿಟ್ ಮತ್ತು ಕಾರ್ಯಕ್ಷಮತೆಯನ್ನು ಶ್ಲಾಘಿಸಿದ ಸಚಿವರು, ವಿದ್ಯಾರ್ಥಿಗಳಿಗೆ ಸರಕಾರ ನೀಡುತ್ತಿರುವ ಬಿಸಿಯೂಟ, ರಾಗಿಮಾಲ್ಟ್, ಹಾಲು, ಮೊಟ್ಟೆ/ಬಾಳೆಹಣ್ಣು, ಪಠ್ಯಪುಸ್ತಕ ಮತ್ತು ಸಮವಸ್ತ್ರಗಳ ಸೌಲಭ್ಯವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಾದ ನಾಗಭೂಷಣ್ ಮತ್ತು ರೆಹಮಾನ್ ಬಿ. ಮಿಷನ್ ಪ್ರಕೃತಿಯಲ್ಲಿನ ತಮ್ಮ ಅನುಭವಗಳನ್ನು ಹಂಚಿಕೊಂಡರು. ವನ್ಯಜೀವಿಗಳ ರಕ್ಷಣೆ ಮತ್ತು ಪರಿಸರ ಸಂರಕ್ಷಣೆಯ ಮಹತ್ವವನ್ನು ಈ ಅಭಿಯಾನವು ತಮಗೆ ಹೇಗೆ ಕಲಿಸಿಕೊಟ್ಟಿತು ಎಂಬುದನ್ನು ವಿವರಿಸಿದರು. ಇದೇ ವೇಳೆ ಪ್ರಶಸ್ತಿ ವಿಜೇತ ಶಾಲೆಗಳಿಗೆ ಅಭಿನಂದನೆ ಸಲ್ಲಿಸಿದ ಸಚಿವ ಮಧು ಬಂಗಾರಪ್ಪ, ಇಲ್ಲಿ ಕಲಿತ ವಿಷಯಗಳನ್ನು ಇತರ ವಿದ್ಯಾರ್ಥಿಗಳಿಗೂ ಹಂಚಿಕೊಳ್ಳುವಂತೆ ಕರೆ ನೀಡಿದರು. ಪ್ರಶಸ್ತಿ ವಿಜೇತ 10 ಶಾಲೆಗಳನ್ನು ಈ ವೇಳೆ ಪರಿಸರ ಜಾಗೃತಿ ಮತ್ತು ಸುಸ್ಥಿರ ಅಭ್ಯಾಸಗಳಲ್ಲಿ ಅತ್ಯುತ್ತಮ ಸಾಧನೆ ಮಾಡಿದ್ದಕ್ಕಾಗಿ ಗೌರವಿಸಲಾಯಿತು: ಪ್ರಶಸ್ತಿ ವಿಜೇತ ಶಾಲೆಗಳು: ಜಿ.ಎಂ.ಪಿ.ಎಚ್.ಎಸ್, ಎಮ್ಮಿಗನೂರು, ಬಳ್ಳಾರಿ. ಜಿ.ಕೆ.ಎಚ್.ಪಿ.ಎಸ್, ಕಾತ್ರಾಳ, ಕಾಗವಾಡ, ಬೆಳಗಾವಿ. ಜಿ.ಎಚ್.ಎಸ್, ಅಲಿಪುರ, ಚಿಕ್ಕಬಳ್ಳಾಪುರ. ಜಿ.ಎಚ್.ಪಿ.ಎಸ್, ಹಿರೇಗೋಣಿಗೆರೆ, ದಾವಣಗೆರೆ. ಜಿ.ಎಚ್.ಪಿ.ಎಸ್, ಜೋಡಳ್ಳಿ, ಕಲಘಟಗಿ. ಕೆ.ಪಿ.ಎಸ್, ಕೋಟೇಶ್ವರ, ಕುಂದಾಪುರ, ಉಡುಪಿ. ಡಿ.ಕೆ.ಜೆಡ್.ಪಿ, ಅಳಿಯೂರು, ದಕ್ಷಿಣ ಕನ್ನಡ. ಕೆ.ಎಸ್.ಎಸ್ ಜಿ.ಎಚ್.ಎಸ್, ಹಕ್ಲಾಡಿ, ಬೈಂದೂರು, ಉಡುಪಿ. ಕೆ.ಜಿ.ಬಿ.ವಿ, ಯಳಂದೂರು, ಚಾಮರಾಜನಗರ ಹಾಗೂ ಜಿ.ಎಚ್.ಪಿ.ಎಸ್, ಮಲ್ಲೂರು, ಉಡುಪಿ.
ದೇವದುರ್ಗ | ಅಗ್ನಿ ಅವಘಡ ತಡೆ ಕುರಿತು ಅಣಕು ಪ್ರದರ್ಶನ
ದೇವದುರ್ಗ : ಪಟ್ಟಣದ ಪ್ರಾದೇಶಿಕ ಅರಣ್ಯ ವಲಯದ ವತಿಯಿಂದ ಸೋಮವಾರ ತಳವಾರ್ ದೊಡ್ಡಿ ಚಿಣ್ಣರ ಆಟದ ಮೈದಾನದಲ್ಲಿ ಕರ್ನಾಟಕ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆ ಸಹಯೋಗದಲ್ಲಿ ಆಕಸ್ಮಿಕ ಅಗ್ನಿ ಅವಘಡ ಸಂಭವಿಸಿದಾಗ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಅಣಕು ಪ್ರದರ್ಶನ ನಡೆಸಲಾಯಿತು. ಅರಣ್ಯ ವಲಯಾಧಿಕಾರಿ ಅಲಿಮುದ್ದೀನ್ ಮಾತನಾಡಿ, ಆಕಸ್ಮಿಕ ಅಗ್ನಿ ಅವಘಡ ಸಂಭವಿಸಿದಾಗ ಅಗ್ನಿಶಾಮಕ ಸಿಬ್ಬಂದಿಗಳ ಸೇವೆ ಶ್ಲಾಘನೀಯವಾಗಿದೆ. 24x7 ಹಗಲಿರುಳು ಸೇವೆಯಲ್ಲಿ ತೊಡಗಿರುವ ಅಗ್ನಿಶಾಮಕ ಸಿಬ್ಬಂದಿ ಅನಾಹುತಗಳನ್ನು ತಡೆಗಟ್ಟಲು ಪ್ರಾಣಪಣವಾಗಿ ಕಾರ್ಯನಿರ್ವಹಿಸುತ್ತಾರೆ. ಅಗ್ನಿ ಅವಘಡಗಳಿಗೆ ತಕ್ಷಣ ಸ್ಪಂದಿಸಿ ಜೀವ ರಕ್ಷಿಸುವ ಇಲಾಖೆಯೇ ಅಗ್ನಿಶಾಮಕ ಠಾಣೆ ಎಂದು ಹೇಳಿದರು. ಠಾಣಾಧಿಕಾರಿ ರವಿ ಕುಮಾರ ಮಾತನಾಡಿ, ಫೆಬ್ರವರಿ 23ನ್ನು ಅಗ್ನಿ ಅವಘಡ ಅರಿವು ಮತ್ತು ತಡೆ ದಿನವಾಗಿ ಆಚರಿಸಲಾಗುತ್ತದೆ. ಸುತ್ತಮುತ್ತ ಅಗ್ನಿ ಅವಘಡ ಸಂಭವಿಸಿದರೆ ತಕ್ಷಣ 108 ಸಂಖ್ಯೆಗೆ ಕರೆ ಮಾಡಿ ಮಾಹಿತಿ ನೀಡಬೇಕು. ಕಟ್ಟಡಗಳಲ್ಲಿ ಬೆಂಕಿ ಕಾಣಿಸಿಕೊಂಡರೆ ಜನರನ್ನು ಮೊದಲು ಸುರಕ್ಷಿತ ಸ್ಥಳಕ್ಕೆ ಕರೆದೊಯ್ಯಬೇಕು ಎಂದು ತಿಳಿಸಿದರು. ಎಲ್ಲ ತರಹದ ಬೆಂಕಿಯನ್ನು ನೀರಿನಿಂದ ನಂದಿಸಲಾಗುವುದಿಲ್ಲ. ಕೆಲವು ಸಂದರ್ಭಗಳಲ್ಲಿ ನೀರು ಬಳಸಿದರೆ ಬೆಂಕಿ ಹೆಚ್ಚಾಗುವ ಸಾಧ್ಯತೆಯೂ ಇದೆ. ಆದ್ದರಿಂದ ಅಗ್ನಿ ಅವಘಡ ಸಂಭವಿಸಿದ ತಕ್ಷಣ ಅಗ್ನಿಶಾಮಕ ಠಾಣೆಗೆ ಮಾಹಿತಿ ನೀಡಬೇಕು ಎಂದು ಸಲಹೆ ನೀಡಿದರು. ಈ ಸಂದರ್ಭದಲ್ಲಿ ಸಾಲಾರ್ ಹುಸೇನ್, ಹನುಮೇಶ ಯಾದವ್, ಬಸವರಾಜ್, ಆಂಜಿನಯ್ಯ, ಸಂಗಮೇಶ ಸೇರಿದಂತೆ ಸಿಬ್ಬಂದಿಗಳು ಉಪಸ್ಥಿತರಿದ್ದರು.
ವನ್ಯಜೀವಿ ಸಂಚಾರದ ಬಗ್ಗೆ ಸ್ಥಳೀಯರಿಗೆ ತಕ್ಷಣ ಮಾಹಿತಿ ನೀಡಿ : ಈಶ್ವರ್ ಖಂಡ್ರೆ
ಬೆಂಗಳೂರು, ಫೆ.23 : ಅರಣ್ಯದಂಚಿನ ಜಮೀನುಗಳಲ್ಲಿ ವನ್ಯಜೀವಿಗಳ ಸಂಚಾರದ ಬಗ್ಗೆ ಕಮಾಂಡ್ ಕೇಂದ್ರಕ್ಕೆ ಮಾಹಿತಿ ಬಂದ ಕೂಡಲೇ ತೋಟದ ಬೆಳೆಗಾರರ ಸಂಘಟನೆ ಮತ್ತು ಕಾರ್ಮಿಕ ಸಂಘಟನೆಗಳಿಗೆ, ಸ್ಥಳೀಯ ಮುಖಂಡರಿಗೆ ಮಾಹಿತಿ ರವಾನಿಸಲು ಕ್ರಮ ವಹಿಸುವಂತೆ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ್ ಖಂಡ್ರೆ ಸೂಚನೆ ನೀಡಿದ್ದಾರೆ. ಚಿಕ್ಕಮಗಳೂರು ತಾಲೂಕು ಹುಣಸೆಹಳ್ಳಿ ಬಳಿಯ ತೋಟದಲ್ಲಿ ಕಳೆದ 7 ದಿನಗಳ ಅಂತರದಲ್ಲಿ ಇಬ್ಬರು ಕಾರ್ಮಿಕರು ಮೃತಪಟ್ಟಿರುವ ಹಿನ್ನೆಲೆಯಲ್ಲಿ ಸೋಮವಾರ ಉನ್ನತಾಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ತುರ್ತು ಸಭೆ ನಡೆಸಿದ ಅವರು, ವನ್ಯಜೀವಿ-ಮಾನವ ಸಂಘರ್ಷ ಇರುವ ಪ್ರದೇಶಗಳ ಸ್ಥಳೀಯ ಮುಖಂಡರ, ಗ್ರಾಮಗಳ ಜಮೀನು ಮಾಲಕರ ವಾಟ್ಸ್ ಅಪ್ ಗ್ರೂಪ್ ಮಾಡಿ ಮಾಹಿತಿ ಪ್ರಸಾರ ಮಾಡುವಂತೆ ಸೂಚಿಸಿದರು. ಮಾನವ ಜೀವ ಅತ್ಯಮೂಲ್ಯವಾದ್ದು, ಒಂದು ಜೀವಹಾನಿ ಆದ ಬಳಿಕ ಮತ್ತೊಂದು ಜೀವ ಹಾನಿ ಆಗಿರುವುದು ಅತ್ಯಂತ ನೋವಿನ ಸಂಗತಿ. ಅಧಿಕಾರಿಗಳು ಮತ್ತು ಸಿಬ್ಬಂದಿ ಇಂತಹ ಘಟನೆ ಮರುಕಳಿಸದಂತೆ 24/7 ನಿಗಾ ಇಡಬೇಕು. ಕಡ್ಡಾಯವಾಗಿ ಸೆಕ್ಷನ್ 144 ಜಾರಿ ಮಾಡಿ ವನ್ಯಜೀವಿ ಸರೆ ಕಾರ್ಯಾಚರಣೆ ನಡೆಸಬೇಕು. ಅತ್ಯಾಧುನಿಕ ಸಲಕರಣೆಗಳಾದ ಥರ್ಮಲ್ ಡ್ರೋನ್ ಬಳಕೆ ಮಾಡಬೇಕು ಎಂದು ಈಶ್ವರ್ ಖಂಡ್ರೆ ಸೂಚಿಸಿದರು. ಚಿಕ್ಕಮಗಳೂರಿನಲ್ಲಿ ಕಳೆದ ವಾರ ಆನೆ ದಾಳಿಯಿಂದ ವ್ಯಕ್ತಿ ಮೃತಪಟ್ಟ ಬಳಿಕ, ಆನೆ ಸೆರೆಗೆ ಕ್ರಮ ಕೈಗೊಳ್ಳಲಾಗಿತ್ತು. ಸ್ಥಳೀಯರಿಗೆ ತೋಟಕ್ಕೆ ಹೋಗದಂತೆ ಮಾಹಿತಿ ನೀಡಲಾಗಿತ್ತು. ಆದಾಗ್ಯೂ ತೋಟಕ್ಕೆ ಹೋದ ಕಾರಣ ಈ ಸಾವು ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿರುವುದಾಗಿ ಅವರು ಹೇಳಿದರು. ಅರಣ್ಯ ಇಲಾಖೆ ಮುನ್ನೆಚ್ಚರಿಕೆ ನೀಡಿದ ಬಳಿಕವೂ ತೋಟದ ಮಾಲಕರು ಕಾರ್ಮಿಕರನ್ನು ತೋಟಕ್ಕೆ ಕಳಿಸಿದರೆ ಅಂತಹ ಮಾಲಕರಿಗೆ ಎಚ್ಚರಿಕೆ ನೀಡಿ, ತೋಟದ ಮಾಲಕರಿಗೂ ಜವಾಬ್ದಾರಿ ಇರಬೇಕು. ನಿರ್ಲಕ್ಷ್ಯ ತೋರಿದರೆ ದೂರು ದಾಖಲಿಸಿ ಎಂದು ಈಶ್ವರ್ ಖಂಡ್ರೆ ತಿಳಿಸಿದರು. ಮಾಹಿತಿಯ ಪ್ರಕಾರ ಚಿಕ್ಕಮಗಳೂರು ಜಿಲ್ಲೆಯಲ್ಲಿ ಅರಣ್ಯದ ಹೊರಗೆ 35 ಆನೆಗಳು 3 ಗುಂಪಿನಲ್ಲಿ ಸಂಚರಿಸುತ್ತಿದ್ದು, ಬೇಸಿಗೆಯಲ್ಲಿ ಅವುಗಳು ಕಾಡಿನಿಂದ ಹೊರಬರುವುದು ಸಾಮಾನ್ಯ. ಆದಾಗ್ಯೂ ಸಿಬ್ಬಂದಿ ಮತ್ತು ಅಧಿಕಾರಿಗಳು ವನ್ಯಜೀವಿ-ಮಾನವ ಸಂಘರ್ಷ ಆಗದಂತೆ ನಿಗಾ ಇಡಬೇಕು. ಪ್ರತಿ ವರ್ಷ ವನ್ಯಜೀವಿ-ಮಾನವ ದಾಳಿಯಲ್ಲಿ ಆಗುತ್ತಿರುವ ಸಾವಿನ ಸಂಖ್ಯೆ ಇಳಿಕೆಯಾಗಬೇಕೇ ಹೊರತು, ಹೆಚ್ಚಳ ಆಗಬಾರದು ನೀವೆಲ್ಲರೂ ಪ್ರಾಮಾಣಿಕ ಪ್ರಯತ್ನ ಮಾಡಿ ಎಂದು ಅವರು ತಿಳಿಸಿದರು. ಹಿರಿಯ ಅಧಿಕಾರಿಗಳು ಕ್ಷೇತ್ರಕ್ಕೆ ಹೋಗುವಂತೆ ಸೂಚನೆ: ಬೇಸಿಗೆ ಹಿನ್ನೆಲೆಯಲ್ಲಿ ಮುಂದಿನ 2-3 ತಿಂಗಳು ಅತ್ಯಂತ ಕ್ಲಿಷ್ಟಕರವಾಗಿದ್ದು, ಹಿರಿಯ ಅಧಿಕಾರಿಗಳು ವನ್ಯಜೀವಿ-ಮಾನವ ಸಂಘರ್ಷ ಇರುವ ಪ್ರದೇಶಕ್ಕೆ ತೆರಳಿ, ಅಧಿಕಾರಿ, ಸಿಬ್ಬಂದಿಗೆ ಮಾರ್ಗದರ್ಶನ ಮಾಡಬೇಕು ಎಂದು ಈಶ್ವರ್ ಖಂಡ್ರೆ ಸೂಚಿಸಿದರು. ಸಭೆಯಲ್ಲಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ಅರಣ್ಯ ಪಡೆ ಮುಖ್ಯಸ್ಥರಾದ ಮೀನಾಕ್ಷಿ ನೇಗಿ, ಮುಖ್ಯ ವನ್ಯಜೀವಿ ಪರಿಪಾಲಕ ಕುಮಾರ್ ಪುಷ್ಕರ್, ಎಪಿಸಿಸಿಎಫ್ ಬಿಸ್ವಜಿತ್ ಮಿಶ್ರ, ಮನೋಜ್ ರಾಜನ್, ಸಿಎಫ್ ಪ್ರಭಾಕರನ್, ಕೊಪ್ಪ ವಲಯದ ಡಿಸಿಎಫ್ ಶಿವಶಂಕರ್ ಮತ್ತಿತರರು ಪಾಲ್ಗೊಂಡಿದ್ದರು. ‘ಸಫಾರಿ ಪುನಾರಂಭ: ಕಾಡಿನಂಚಿನ ಗ್ರಾಮಗಳಲ್ಲಿ ಸಭೆ ನಡೆಸಲು ಸೂಚನೆ’ ನಾಗರಹೊಳೆ ಮತ್ತು ಬಂಡೀಪುರದಲ್ಲಿ ಸಫಾರಿ ಪುನಾರಂಭ ಮಾಡಿರುವ ಬಗ್ಗೆ ಕೆಲವರು ಮಾತ್ರವೇ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ರಾಜ್ಯ ಸರಕಾರ ಸಫಾರಿಯಿಂದ ಬರುವ ಆದಾಯದಲ್ಲಿ ಶೇ.35ರಷ್ಟನ್ನು ಕಾಡಿನಂಚಿನ ಗ್ರಾಮದ ಜನರ ಕಲ್ಯಾಣಕ್ಕಾಗಿ ಬಳಸಲು ತೀರ್ಮಾನಿಸಿದ್ದು, ಗ್ರಾಮಗಳಲ್ಲಿ ಸಭೆ ನಡೆಸಿ, ಸ್ಥಳೀಯರ ಅಗತ್ಯಕ್ಕೆ ಅನುಗುಣವಾಗಿ ಕಾರ್ಯಕ್ರಮ ರೂಪಿಸಬೇಕು. ಯುವಜನರಿಗೆ ಕೌಶಲ್ಯ ತರಬೇತಿ ನೀಡಬೇಕು, ಕಾಡಿನಂಚಿನ ಶಾಲೆ ಕಾಲೇಜುಗಳಿಗೆ ಅಗತ್ಯ ಸಲಕರಣೆ ನೀಡಬೇಕು. ವನ್ಯಜೀವಿಗಳು ನಾಡಿಗೆ ಬಂದಾಗ ಹೇಗೆ ನಡೆದುಕೊಳ್ಳಬೇಕು ಎಂಬ ಬಗ್ಗೆ ಅರಿವು ಮೂಡಿಸಲು ಅಧಿಕಾರಿಗಳಿಗೆ ಈಶ್ವರ್ ಖಂಡ್ರೆ ಸೂಚಿಸಿದರು.
ನನಗೆ ‘ದಿ ಕೇರಳ ಸ್ಟೋರಿ 2’ ಚಿತ್ರ ನೋಡುವ ಆಸಕ್ತಿಯಿಲ್ಲ’: ಕೇರಳ ಬಿಜೆಪಿ ಅಧ್ಯಕ್ಷ ರಾಜೀವ್ ಚಂದ್ರಶೇಖರ್
ಕೊಚ್ಚಿ, ಫೆ.23: ‘ದಿ ಕೇರಳ ಸ್ಟೋರಿ 2: ಗೋಸ್ ಬಿಯಾಂಡ್’ ಬಾಲಿವುಡ್ ಚಲನಚಿತ್ರ ವೀಕ್ಷಿಸುವ ಯಾವುದೇ ಯೋಜನೆ ಇಲ್ಲ ಎಂದು ಬಿಜೆಪಿ ಕೇರಳ ಘಟಕದ ಅಧ್ಯಕ್ಷ ರಾಜೀವ್ ಚಂದ್ರಶೇಖರ್ ಸೋಮವಾರ ಹೇಳಿದರು. ಚಿತ್ರದ ಟ್ರೇಲರ್ ಕೇರಳವನ್ನು ಕೆಟ್ಟದಾಗಿ ಚಿತ್ರಿಸುತ್ತದೆ ಎಂಬ ಆರೋಪದ ಹಿನ್ನೆಲೆಯಲ್ಲಿ ರಾಜಕೀಯ ಚರ್ಚೆ ತೀವ್ರಗೊಂಡಿರುವ ಸಂದರ್ಭದಲ್ಲಿ ಅವರು ಈ ನಿಲುವು ವ್ಯಕ್ತಪಡಿಸಿದರು. ಕೊಚ್ಚಿಯ ತ್ರಿಕ್ಕಾಕರದಲ್ಲಿ NDA ವಲಯ ಕಚೇರಿಯನ್ನು ಉದ್ಘಾಟಿಸಿದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, “ನನಗೆ ‘ದಿ ಕೇರಳ ಸ್ಟೋರಿ 2’ ಚಿತ್ರ ವೀಕ್ಷಿಸಲು ಆಸಕ್ತಿ ಇಲ್ಲ” ಎಂದು ಸ್ಪಷ್ಟಪಡಿಸಿದರು. “ಚಿತ್ರವನ್ನು ನೋಡಲು ಬಯಸುವವರು ನೋಡಬಹುದು. ಆಸಕ್ತಿ ಇಲ್ಲದವರು ನೋಡಬೇಕಾಗಿಲ್ಲ,” ಎಂದು ಹೇಳಿದರು. ಸಂವಿಧಾನ ಖಾತರಿಪಡಿಸಿರುವ ವಾಕ್ ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಉಲ್ಲೇಖಿಸಿದ ಅವರು, ಚಿತ್ರದಲ್ಲಿ ‘ಕಾನೂನುಬಾಹಿರ’ ಅಂಶಗಳಿದ್ದರೆ ಅದರ ಕುರಿತು ತೀರ್ಮಾನಿಸುವುದು ನ್ಯಾಯಾಲಯಗಳ ಕೆಲಸ ಎಂದು ಹೇಳಿದರು. “ಪ್ರತಿಯೊಬ್ಬರಿಗೂ ಚಲನಚಿತ್ರ ನಿರ್ಮಿಸುವ ಹಕ್ಕಿದೆ. ಅದರಲ್ಲಿ ಏನಾದರೂ ಕಾನೂನುಬಾಹಿರವಾಗಿದ್ದರೆ, ನ್ಯಾಯಾಲಯ ಅದನ್ನು ರದ್ದುಗೊಳಿಸುತ್ತದೆ,” ಎಂದು ರಾಜೀವ್ ಚಂದ್ರಶೇಖರ್ ಅಭಿಪ್ರಾಯಪಟ್ಟರು. ಈ ಹಿಂದೆ ‘ಎಂಪುರಾನ್’ ಚಿತ್ರದ ಸುತ್ತಲೂ ಉದ್ಭವಿಸಿದ್ದ ವಿವಾದದ ಸಂದರ್ಭದಲ್ಲಿಯೂ ತಾವು ಇದೇ ರೀತಿಯ ನಿಲುವು ತಾಳಿದ್ದಾಗಿ ಅವರು ಹೇಳಿದರು. ಮೋಹನ್ ಲಾಲ್ ಅಭಿನಯದ ಈ ಚಿತ್ರದಲ್ಲಿ ಗೋಧ್ರಾ ಗಲಭೆಗಳ ಚಿತ್ರಣವಿತ್ತು ಎಂದು ಹೇಳಲಾಗಿತ್ತು. ಬಳಿಕ ಅದು ಬಲಪಂಥೀಯ ಬೆಂಬಲಿಗರಿಂದ ಟೀಕೆಗೆ ಗುರಿಯಾಗಿ ಮರು–ಸೆನ್ಸಾರ್ ಪ್ರಕ್ರಿಯೆಗೆ ಒಳಗಾಗಬೇಕಾಯಿತು. ‘ದಿ ಕೇರಳ ಸ್ಟೋರಿ 2’ ಟ್ರೇಲರ್ ನಲ್ಲಿನ ವಿಷಯದ ಬಗ್ಗೆ ತಮಗೆ ಆಕ್ಷೇಪಣೆ ಇದೆಯೇ ಎಂಬ ಪ್ರಶ್ನೆಗೆ ನೇರ ಉತ್ತರ ನೀಡದೆ, “ನಾನು ಅದನ್ನು ನೋಡುವುದಿಲ್ಲ ಎಂದು ಹೇಳಿದ್ದೇನೆ,” ಎಂದು ಪುನರುಚ್ಚರಿಸಿದರು. ಜೊತೆಗೆ, “ನನಗೆ ‘ಧುರಂಧರ್’ ಚಿತ್ರ ಇಷ್ಟವಾಯಿತು. ಅದನ್ನು ಎರಡು ಬಾರಿ ನೋಡಿದ್ದೇನೆ,” ಎಂದು ರಾಜೀವ್ ಚಂದ್ರಶೇಖರ್ ಹೇಳಿದರು. ಈ ಬ್ಲಾಕ್ಬಸ್ಟರ್ ಸ್ಪೈ ಥ್ರಿಲ್ಲರ್ ಚಿತ್ರವು ಬಿಜೆಪಿಯ ರಾಜಕೀಯ ಹಿತಾಸಕ್ತಿಗಳಿಗೆ ಪೂರಕವಾಗಿದೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ ಚರ್ಚೆಗೆ ಕಾರಣವಾಗಿತ್ತು.
ಲಿಂಗಸುಗೂರು |ವಿದ್ಯಾರ್ಥಿಗಳಿಗೆ ಬಸ್ ಸೌಲಭ್ಯಕ್ಕೆ ಒತ್ತಾಯಿಸಿ ಮನವಿ
ಲಿಂಗಸುಗೂರು : ತಾಲೂಕಿನ ಗ್ರಾಮೀಣ ಭಾಗಗಳಾದ ಟಮಣಕಲ್ ಹಾಗೂ ರಾಯದುರ್ಗದಿಂದ ಗುರುಗುಂಟಾಕ್ಕೆ ಶಾಲಾ ಸಮಯದಲ್ಲಿ ಬಸ್ ಸೌಲಭ್ಯ ಕಲ್ಪಿಸಬೇಕೆಂದು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ತಾಲ್ಲೂಕು ಘಟಕದ ನೇತೃತ್ವದಲ್ಲಿ ವಿದ್ಯಾರ್ಥಿಗಳು ಘಟಕ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಿದರು. ಟಮಣಕಲ್ ಹಾಗೂ ರಾಯದುರ್ಗ ಗ್ರಾಮಗಳಿಂದ ಗುರುಗುಂಟಾಕ್ಕೆ ಬಸ್ ಸೌಲಭ್ಯವಿಲ್ಲದೇ ಸುಮಾರು 50-60 ವಿದ್ಯಾರ್ಥಿಗಳು ದಿನವೂ ಸುಮಾರು 10 ಕಿ.ಮೀ ನಡೆದುಕೊಂಡು ಶಾಲೆಗೆ ತೆರಳುತ್ತಿದ್ದಾರೆ. ಇದರಿಂದ ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆ ಉಂಟಾಗುತ್ತಿದ್ದು, ಸಮಯಕ್ಕೆ ಸರಿಯಾಗಿ ಶಾಲೆಗೆ ಹಾಜರಾಗಲು ಸಾಧ್ಯವಾಗುತ್ತಿಲ್ಲ ಎಂದು ಮನವಿಯಲ್ಲಿ ತಿಳಿಸಲಾಗಿದೆ. ಪರೀಕ್ಷಾ ಅವಧಿ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಿಗೆ ಹೆಚ್ಚಿನ ಸಂಕಷ್ಟ ಎದುರಾಗುತ್ತಿದೆ ಎಂದು ಸಂಘಟನೆಯವರು ಆತಂಕ ವ್ಯಕ್ತಪಡಿಸಿದರು. ವಿದ್ಯಾರ್ಥಿಗಳ ವಿದ್ಯಾಭ್ಯಾಸದ ಹಿತದೃಷ್ಟಿಯಿಂದ ಬೆಳಿಗ್ಗೆ 9.00 ಗಂಟೆಗೆ ಹಾಗೂ ಸಂಜೆ 4.30 ಗಂಟೆಗೆ ಗುರುಗುಂಟಾದಿಂದ ಟಮಣಕಲ್ ಮತ್ತು ರಾಯದುರ್ಗ ಗ್ರಾಮಗಳಿಗೆ ಬಸ್ ಸೌಲಭ್ಯ ಒದಗಿಸಬೇಕು ಎಂದು ಮನವಿ ಮಾಡಲಾಗಿದೆ. ಈ ಸಂದರ್ಭದಲ್ಲಿ ತಾಲೂಕು ಅಧ್ಯಕ್ಷ ದುರ್ಗಾಪ್ರಸಾದ ಸೇರಿದಂತೆ ಬಸವರಾಜ, ರಾಮಣ್ಣ, ಹನುಮನಗೌಡ, ಮುದಿಯಪ್ಪ, ನಾಗಪ್ಪ, ಸೋಮರೆಡ್ಡಿ ಹಾಗೂ ವಿದ್ಯಾರ್ಥಿನಿಯರಾದ ಸೋಮಮ್ಮ, ಚನ್ನಮ್ಮ, ಅಕ್ಷತಾ, ಅಂಬಮ್ಮ, ದುರುಗಮ್ಮ ಸೇರಿದಂತೆ ಹಲವರು ಉಪಸ್ಥಿತರಿದ್ದರು.

30 C