ಮಳೆ.. ಮಳೆ.. ಮುಂದಿನ 48 ಗಂಟೆಯಲ್ಲಿ ಮಳೆ ಬಗ್ಗೆ ಹವಾಮಾನ ಇಲಾಖೆ ಮಹತ್ವದ ಮಾಹಿತಿ... Karnataka Rain
ಮಳೆ.. ಮಳೆ.. ಮಳೆ.. ಎಲ್ಲಿ ನೋಡಿದರೂ &ಎಲ್ಲಿ ಕೇಳಿದರೂ ಬರೀ ಆಲಿಕಲ್ಲು ಸಹಿತ ಬಿರುಗಾಳಿ ಮಳೆ ಬಗ್ಗೆ ಕನ್ನಡಿಗರು ಚರ್ಚೆ ಮಾಡುತ್ತಿದ್ದಾರೆ. ಅದರಲ್ಲೂ ಬಿಸಿ ಬಿಸಿ ಬೇಸಿಗೆ ನಡುವೆಯೇ ಭರ್ಜರಿ ಮಳೆ ಬಿದ್ದು ಒಂದಷ್ಟು ತಂಪಾಗಿದೆ ಕನ್ನಡ ನಾಡು. ಆದರೆ ಇದೇ ಸಮಯದಲ್ಲಿ ಅಕಾಲಿಕ ಎಂದರೆ ಬೇಸಿಗೆ ಸಮಯದಲ್ಲಿ ಸುರಿದ ಮಳೆ ಪರಿಣಾಮ ಮಾವಿನ ಬೆಳೆ,
ಮುಲ್ಕಿ: ಸಂಭ್ರಮದ ಈದುಲ್ ಫಿತ್ರ್ ಆಚರಣೆ
ಮುಲ್ಕಿ: ಪರಿಸರದಲ್ಲಿ ಈದುಲ್ ಫಿತ್ರ್ ಆಚರಣೆ ಸಂಭ್ರಮದಿಂದ ನಡೆಯಿತು. ಬೆಳಗಿನಿಂದಲೇ ಮಸೀದಿಗೆ ತೆರಳಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಮುಲ್ಕಿ ಕೇಂದ್ರ ಜುಮ್ಮಾ ಮಸೀದಿಯಲ್ಲಿ ಮಸೀದಿಯ ಧರ್ಮಗುರುಗಳಾದ ಉಸ್ಮಾನ್ ಫೈಝೀ ತೋಡಾರ್ ಹಾಗೂ ಕಾರ್ನಾಡ್ ಮಸೀದಿಯ ಧರ್ಮಗುರುಗಳಾದ ರಿಯಾಝ್ ಫೈಝಿ ವಿಶೇಷ ಉಪನ್ಯಾಸ ನೀಡಿದರು. ಈ ಸಂದರ್ಭ ಮಸೀದಿಯ ಗೌರವಾಧ್ಯಕ್ಷ ಇನಾಯತ್ ಅಲಿ, ಅಧ್ಯಕ್ಷ ಸೊಹೈಲ್ ಹೈದರ್, ಉಪಾಧ್ಯಕ್ಷ ಪುತ್ತುಭಾವ, ಕೋಶಾಧಿಕಾರಿ ಇಕ್ಬಾಲ್ ಅಹ್ಮದ್, ಎಂ.ಕೆ. ಹಸೈನ್ ಕಾರ್ನಾಡ್, ಲಿಯಾಕತ್ ಆಲಿ, ಫಾರೂಕ್ ಹಾಜಿ ಇಬ್ರಾಹಿಂ ಮತ್ತಿತರರು ಉಪಸ್ಥಿತರಿದ್ದರು. ಮುಲ್ಕಿ ಪರಿಸರದ ಹಳೆಯಂಗಡಿ, ಕಿನ್ನಿಗೋಳಿ, ಪಕ್ಷಿಕೆರೆ, ಅಂಗರಗುಡ್ಡೆ, ಪುನರೂರು, ಕರ್ನಿರೆ, ಕದಿಕೆ ಮತ್ತಿತರ ಕಡೆಗಳಲ್ಲಿ ಈದುಲ್ ಫಿತ್ರ್ ಆಚರಣೆ ಸಂಭ್ರಮದಿಂದ ನಡೆಯಿತು.
ಮೂಡುಬಿದಿರೆ ಪೊಲೀಸ್ ಇನ್ಸ್ಪೆಕ್ಟರ್ ಸಂದೇಶ್ ಬಂಧಿಸಿ, ತನಿಖೆ ನಡೆಸಿ: ಸುಮತಿ ನಾಯಕ್ ಒತ್ತಾಯ
ಮಂಗಳೂರು, ಮಾ. 20: ಮೂಡುಬಿದಿರೆ ಪೊಲೀಸ್ ಇನ್ಸ್ಪೆಕ್ಟರ್ ಸಂದೇಶ್ ಅವರು ನನಗೆ, ನನ್ನ ಅಕ್ಕನ ಮಗ ಹಾಗೂ ನನ್ನ ಮಗನಿಗೆ ಮಾನಸಿಕ ಹಿಂಸೆ, ಜೀವಹಾನಿ ಬೆದರಿಕೆ, ಮಾನ ಹಾನಿ ಹಾಗೂ ಲೈಂಗಿಕ ಕಿರುಕುಳ ನೀಡಿದ್ದಾರೆ. ಸದ್ಯ ಅಮಾನತ್ತಿನಲ್ಲಿರುವ ಇನ್ಸ್ಪೆಕ್ಟರ್ ಸಂದೇಶ್ ಅವರನ್ನು ಬಂಧಿಸಿ ತನಿಖೆಗೆ ಒಳಪಡಿಸಬೇಕು ಎಂದು ಕಾರ್ಕಳದ ಸುಮತಿ ನಾಯಕ್ ಒತ್ತಾಯಿಸಿದ್ದಾರೆ. ನಗರದ ಪ್ರೆಸ್ ಕ್ಲಬ್ ನಲ್ಲಿ ಶುಕ್ರವಾರ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿದ ಅವರು, ಸಹೋದರಿ ಪ್ರಫುಲ್ಲ ಅವರ ಸಹಕಾರದಿಂದ ನಮ್ಮ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಲಾಗಿದೆ ಎಂದು ಆರೋಪಿಸಿದರು. ಈ ಸಂಬಂಧವಾಗಿ ಅಕ್ಕನ ಮಗನೇ ತಮಗಾದ ಅನ್ಯಾಯದ ವಿರುದ್ಧ ಕಾನೂನು ಪ್ರಾಧಿಕಾರದಲ್ಲಿ ದೂರು ಸಲ್ಲಿಸಿದ್ದು, ಮಾನ್ಯ ನ್ಯಾಯಾಲಯದ ನ್ಯಾಯಾಧೀಶರು ಇನ್ಸ್ಪೆಕ್ಟರ್ ವಿರುದ್ಧ ಎಫ್ಐಆರ್ ದಾಖಲಿಸಲು ನಿರ್ದೇಶಿಸಿದ್ದಾರೆ. ಆದರೆ ಇನ್ಸ್ಪೆಕ್ಟರ್ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಹೇಳಿದರು. ಕೆಲ ದಿನಗಳ ಹಿಂದೆ ಪ್ರೆಸ್ ಮೀಟ್ ಕರೆದ ಪ್ರಫುಲ್ಲ ಅವರು ನನ್ನ ಬಗ್ಗೆ ಹೇಳಿದ ಎಲ್ಲಾ ಮಾತುಗಳು ಸುಳ್ಳುಗಳಾಗಿವೆ. ಇದರ ಬಗ್ಗೆ ದಾಖಲೆಗಳನ್ನು ನಾನು ಒದಗಿಸುವುದಾಗಿ ಹೇಳಿದರು. ಇನ್ಸ್ಪೆಕ್ಟರ್ ಸಂದೇಶ್ ಅವರ ಮೊಬೈಲ್ ಪರಿಶೀಲನೆ, ಬ್ಯಾಂಕ್ ಸ್ಟೇಟ್ಮೆಂಟ್ ಹಾಗೂ ಅವರ ಐಬಿ ಗುಂಪಿನಲ್ಲಿ ಇರುವ ಎಲ್ಲಾ ಸಂಪರ್ಕಗಳ ಮೇಲೂ ತನಿಖೆ ನಡೆಯಬೇಕು. ಹಾಗೆಯೇ ಪ್ರಫುಲ್ಲ ಅವರ ಮೊಬೈಲ್ ಮತ್ತು ಬ್ಯಾಂಕ್ ಸ್ಟೇಟ್ಮೆಂಟ್ಗಳನ್ನೂ ಪರಿಶೀಲಿಸಬೇಕು ಎಂದು ಅವರು ಆಗ್ರಹಿಸಿದರು.
ಮಂಗಳೂರು| ಎ.ಆರ್.ಎಂ ಕಿಯಾ ಆರು ವರ್ಷದ ಯಶಸ್ಸು: 9,000ನೇ ಕಾರು ವಿತರಣೆ
ಮಂಗಳೂರು: ಕರಾವಳಿ ಕರ್ನಾಟಕ ಹಾಗೂ ಕೊಡಗು ಜಿಲ್ಲೆಯ ಗ್ರಾಹಕರಿಗೆ ನಿರಂತರ ಸೇವೆ ಸಲ್ಲಿಸುತ್ತಿರುವ ಎ.ಆರ್.ಎಂ ಕಿಯಾ, ತನ್ನ ಆರು ವರ್ಷದ ಯಶಸ್ವಿ ಪಯಣವನ್ನು ಪೂರ್ಣಗೊಳಿಸಿ ಮಹತ್ವದ ಮೈಲುಗಲ್ಲನ್ನು ಸಾಧಿಸಿದೆ. ಉಡುಪಿ, ಕುಶಾಲನಗರ (ಕೂರ್ಗ್), ಪುತ್ತೂರು ಹಾಗೂ ಮಂಗಳೂರು ನಗರಗಳಲ್ಲಿ ಶಾಖೆಗಳೊಂದಿಗೆ, ಈ ಡೀಲರ್ಶಿಪ್ ಪ್ರದೇಶದ ವಿಶ್ವಾಸಾರ್ಹ ವಾಹನ ಸಂಸ್ಥೆಗಳಲ್ಲೊಂದಾಗಿ ಬೆಳೆಯುತ್ತಿದೆ. ಈ ಸಂಭ್ರಮದ ಅಂಗವಾಗಿ, ಮಂಗಳೂರಿನ ಕದ್ರಿ ಶೋರೂಮ್ನಲ್ಲಿ ಎ.ಆರ್.ಎಂ ಕಿಯಾ ತನ್ನ 9,000ನೇ ಕಾರನ್ನು ಮಂಗಳೂರು ತಾಲೂಕಿನ ಖ್ಯಾತ ಚಾರ್ಟರ್ಡ್ ಅಕೌಂಟೆಂಟ್ ಶ್ರೀನಿವಾಸ್ ಕಾಮತ್ ಅವರಿಗೆ ವಿತರಿಸಿದೆ. ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಅರೂರ್ ಗಣೇಶ್ ರಾವ್ ಅವರು ಕಾರಿನ ಕೀಲಿಯನ್ನು ಹಸ್ತಾಂತರಿಸಿದರು. ನಿರ್ದೇಶಕರಾದ ಅರೂರ್ ವರುಣ್ ರಾವ್ ಹಾಗೂ ಅರೂರ್ ವಿಕ್ರಂ ರಾವ್ ಉಪಸ್ಥಿತರಿದ್ದರು. ಈ ಸಂದರ್ಭ ಹಿರಿಯ ಉಪಾಧ್ಯಕ್ಷರಾದ ಪ್ರದೀಪ್ ಪೈ, ಎಜಿಎಂ ಶ್ರೀ ಕನಕ್ ಕುಮಾರ್, ಮಾರಾಟ ವಿಭಾಗದ ಎಜಿಎಂ ಶ್ರೀ ಹರೀಶ್ ರಾವ್ ಹಾಗೂ ಸೇಲ್ಸ್ ಮ್ಯಾನೇಜರ್ ಜಯಪ್ರಕಾಶ್ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕಳೆದ ಆರು ವರ್ಷಗಳಲ್ಲಿ, ಎ.ಆರ್.ಎಂ ಕಿಯಾ ಅತ್ಯುತ್ತಮ ಗ್ರಾಹಕ ಸೇವೆಗಾಗಿ ಕಿಯಾ ಇಂಡಿಯಾದಿಂದ ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದು, ಗ್ರಾಹಕ ತೃಪ್ತಿಯಲ್ಲಿ ಪ್ರಮುಖ ಸ್ಥಾನವನ್ನು ಪಡೆದಿದೆ. ಈ ಸಾಧನೆ ಸಂಸ್ಥೆಯ ಗುಣಮಟ್ಟದ ಸೇವೆ ಹಾಗೂ ಗ್ರಾಹಕರೊಂದಿಗೆ ಹೊಂದಿರುವ ಬಲವಾದ ನಂಟಿನ ಪ್ರತಿಬಿಂಬವಾಗಿದೆ. ಡೀಲರ್ಶಿಪ್ ಶೀಘ್ರದಲ್ಲೇ 10,000 ಕಾರುಗಳ ಮೈಲುಗಲ್ಲನ್ನು ತಲುಪುವ ವಿಶ್ವಾಸ ವ್ಯಕ್ತಪಡಿಸಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಸಾಧನೆಗಳತ್ತ ಪಯಣ ಮುಂದುವರಿಸಲು ಸಜ್ಜಾಗಿದೆ ಎಂದು ಪ್ರಕಟನೆ ತಿಳಿಸಿದೆ.
ದಾವಣಗೆರೆ ಚುನಾವಣೆಗೆ ಹೊಸ ಟ್ವಿಸ್ಟ್ : ಕೈ ಟಿಕೆಟ್ ಘೋಷಣೆ ಮುನ್ನವೇ ಸಮರ್ಥ್ ಶಾಮನೂರು ನಾಮಪತ್ರ ಸಲ್ಲಿಕೆ
ದಾವಣಗೆರೆ ದಕ್ಷಿಣ ಉಪಚುನಾವಣೆ: ಜಿಲ್ಲಾ ಕಾಂಗ್ರೆಸ್ಸಿನಲ್ಲಿ ಮಹತ್ವದ ವಿದ್ಯಮಾನ ನಡೆದಿದ್ದು, ಕಾಂಗ್ರೆಸ್ ತನ್ನ ಅಧಿಕೃತ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡುವ ಮೊದಲೇ ಸಮರ್ಥ್ ಶಾಮನೂರು ನಾಮಪತ್ರವನ್ನು ಸಲ್ಲಿಸಿದ್ದಾರೆ. ತಾಯಿ, ಡಾ.ಪ್ರಭಾ ಮಲ್ಲಿಕಾರ್ಜುನ ಜೊತೆ ಆಗಮಿಸಿ ಸಮರ್ಥ್ ನಾಮಪತ್ರ ಸಲ್ಲಿಸಿದ್ದರೆ.
ಕುವೈತ್: ಕೊಲ್ಲಿ ರಾಷ್ಟ್ರಗಳನ್ನು ಗುರಿಯಾಗಿಸಿಕೊಂಡು ಇರಾನ್ ನಡೆಸುತ್ತಿರುವ ಕ್ಷಿಪಣಿ ಹಾಗೂ ಡ್ರೋನ್ ದಾಳಿಗಳ ಪರಿಣಾಮವಾಗಿ ಕುವೈತ್ನ ಮೀನಾ ಅಲ್-ಅಹ್ಮದಿ ತೈಲ ಸಂಸ್ಕರಣಾ ಘಟಕದಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ಕುವೈತ್ ಸರ್ಕಾರದ ಮಾಧ್ಯಮ ವರದಿ ಮಾಡಿದೆ. ಇರಾನ್ ದಾಳಿಗೆ ಪ್ರತಿಕ್ರಿಯೆ ನೀಡುತ್ತಿರುವುದಾಗಿ ವಿವಿಧ ಕೊಲ್ಲಿ ರಾಷ್ಟ್ರಗಳ ಅಧಿಕಾರಿಗಳು ತಿಳಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಕೊಲ್ಲಿ ರಾಷ್ಟ್ರಗಳ ಇಂಧನ ಮೂಲಸೌಕರ್ಯಗಳ ಮೇಲೆ ಇರಾನ್ ತನ್ನ ದಾಳಿಗಳನ್ನು ಹೆಚ್ಚಿಸಿದೆ. ಖತರ್ನಲ್ಲಿರುವ ಬೃಹತ್ ಅನಿಲ ತಾಣದ ಮೇಲೆಯೂ ದಾಳಿ ನಡೆಸಲಾಗಿದೆ. ದಕ್ಷಿಣ ಪಾರ್ಸ್ ಅನಿಲ ಬಾವಿಯ ಮೇಲೆ ಇಸ್ರೇಲ್ ನಡೆಸಿದ ದಾಳಿಗೆ ಪ್ರತಿಯಾಗಿ ಇರಾನ್ ಈ ದಾಳಿಗಳನ್ನು ನಡೆಸುತ್ತಿದೆ. ಈ ಕುರಿತು ರಾಷ್ಟ್ರೀಯ ತೈಲ ಕಂಪನಿಯನ್ನು ಉಲ್ಲೇಖಿಸಿ ಪ್ರತಿಕ್ರಿಯಿಸಿರುವ ಕುವೈತ್ ನ್ಯೂಸ್ ಏಜೆನ್ಸಿ ಅಧಿಕಾರಿಯೊಬ್ಬರು, ಶತ್ರುವಿನ ಹಲವು ಡ್ರೋನ್ಗಳು ಮೀನಾ ಅಲ್-ಅಹ್ಮದಿ ತೈಲ ಸಂಸ್ಕರಣಾ ಘಟಕದ ಮೇಲೆ ದಾಳಿ ನಡೆಸಿದ್ದು, ಬೆಂಕಿ ಹೊತ್ತಿಕೊಂಡಿದೆ ಎಂದು ತಿಳಿಸಿದ್ದಾರೆ. ಆದರೆ, ಈ ದಾಳಿಯಲ್ಲಿ ಯಾವುದೇ ಸಾವುನೋವು ಸಂಭವಿಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಹಲವು ತೈಲ ಸಂಸ್ಕರಣಾ ಘಟಕಗಳನ್ನು ಮುಚ್ಚಲಾಗಿದ್ದು, ಬೆಂಕಿಯನ್ನು ನಿಯಂತ್ರಿಸಲು ಅಗ್ನಿಶಾಮಕ ದಳದ ವಾಹನಗಳು ಕಾರ್ಯಾಚರಣೆ ಮುಂದುವರಿಸಿವೆ ಎಂದು ವರದಿ ತಿಳಿಸಿದೆ. ಇಂದು (ಶುಕ್ರವಾರ) ಮುಂಜಾನೆ ಇರಾನ್ ನಡೆಸಿದ ದಾಳಿಯಲ್ಲಿ ಶಾರ್ಪ್ನೆಲ್ ಬಿದ್ದು ಗೋದಾಮೊಂದರಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಅದನ್ನು ನಿಯಂತ್ರಿಸಲಾಗಿದೆ. ಈ ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ ಎಂದು ಬಹ್ರೈನ್ ನ ಆಂತರಿಕ ಭದ್ರತಾ ಸಚಿವಾಲಯ ತಿಳಿಸಿದೆ.
ಮಾ.21ರಂದು ಬೆಂಗಳೂರಿನಾದ್ಯಂತ ಹಲವಡೆ ರಂಜಾನ್ ಉಪವಾಸ ತಿಂಗಳ ಅಂತ್ಯವನ್ನು ಸೂಚಿಸಲು ಆಚರಿಸುವ ಈದ್-ಉಲ್-ಫಿತ್ರ್ ಸಾಮೂಹಿಕ ಪ್ರಾರ್ಥನಾ ಸಭೆಗಳು ನಡೆಯಲಿದ್ದು, ಈ ಸಮಯದಲ್ಲಿ ಸಂಚಾರ ವ್ಯವಸ್ಥೆಯಲ್ಲಿ ಉಂಟಾಗುವ ಅಡಚಣೆಗಳನ್ನು ತಪ್ಪಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲು ನಗರದೆಲ್ಲಡೆ ಕೆಲ ಮಾರ್ಗಗಳ ಸಂಚಾರವನ್ನು ನಿರ್ಬಂಧಿಸಿದ್ದು, ಪರ್ಯಾಯ ಸಂಚಾರಿ ಮಾರ್ಗಗಳನ್ನು ಬಳಸುವಂತೆ ಅಧಿಕಾರಿಗಳು ಸಲಹೆ ನೀಡಿದ್ದಾರೆ. ಈ ಹಿನ್ನಲ್ಲೆ ಯಾವ್ಯಾವ ಮಾರ್ಗಗಳಲ್ಲಿ ಪರ್ಯಾಯ ಸಂಚಾರ ವ್ಯವಸ್ಥೆ ಕಲ್ಪಿಸಲಾಗಿದೆ ಎಂಬ ಮಾಹಿತಿ ಇಲ್ಲಿದೆ..
ಅಯ್ಯಯ್ಯೋ.. 93 ರೂಪಾಯಿಗೆ ಕುಸಿತ ಕಂಡ ಭಾರತದ ಕರೆನ್ಸಿ, ಡಾಲರ್ ಎದುರು ಮಹಾ ಪತನ.. Rupee And Dollar
ಭಾರತೀಯ ರೂಪಾಯಿ ದೊಡ್ಡ ಮಟ್ಟದಲ್ಲಿ ಕುಸಿತ ಕಂಡಿದೆ, ಯುದ್ಧದ ಆಘಾತದ ನಡುವೆ ಒಂದು ಕಡೆ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಹೆಚ್ಚಾಗುತ್ತಾ ಇದೆ. ಹೀಗಿದ್ದಾಗ ಗ್ಯಾಸ್ ಸಿಲಿಂಡರ್ ಸಮಸ್ಯೆ ಕಾರಣಕ್ಕೆ ಜನರು ಕೂಡ ರೊಚ್ಚಿಗೆದ್ದು, ನಿತ್ಯದ ಬದುಕು ಕೂಡ ಕಷ್ಟವಾಗುತ್ತಿದೆ ಎಂದು ಆಕ್ರೋಶದ ಬೆಂಕಿ ಹೊರ ಹಾಕುತ್ತಿದ್ದಾರೆ. ಆದರೆ ಬೇರೆ ದೇಶಗಳಿಗೆ ಹೋಲಿಕೆ ಮಾಡಿದರೆ ಭಾರತದಲ್ಲಿ ಪೆಟ್ರೋಲ್
Iran- Israel conflict: 9 ವಾಯುಪ್ರದೇಶಗಳಲ್ಲಿ ವಿಮಾನ ಹಾರಾಟ ನಿಷೇಧಿಸುವಂತೆ ಡಿಜಿಸಿಎ ಸಲಹೆ
ಇರಾನ್ ಮೇಲೆ ಇಸ್ರೇಲ್-ಅಮೆರಿಕ ದಾಳಿ, ಹಾಗೂ ಇರಾನ್ ಪ್ರತಿದಾಳಿಯಿಂದಾಗಿ ಮಧ್ಯಪ್ರಾಚ್ಯ ಪ್ರದೇಶಗಳಲ್ಲಿ ನಾಗರಿಕ ವಿಮಾನ ಹಾರಾಟ ಅಪಾಯಕಾರಿಯಾಗಿದೆ ಎಂದು ಭಾರತೀಯ ನಾಗರಿಕ ವಿಮಾನಯಾನ ನಿರ್ದೇಶನಾಲಯ ವಿಮಾನಯಾನ ಸಂಸ್ಥೆಗಳಿಗೆ ಎಚ್ಚರಿಕೆನೀಡಿದ್ದು, ಮಾರ್ಚ್ 28 ರವರೆಗೂ ಪಾಲಿಸುವಂತೆ ಕೆಲವು ಸೂಚನೆಗಳನ್ನು ನೀಡಿದೆ.
ಊಹಾಪೋಹಗಳ ನಡುವೆಯೇ ಮೊಜ್ತಬಾ ಖಮೇನಿ ವಿಡಿಯೋ ಬಿಡುಗಡೆ ಮಾಡಿದ ಇರಾನ್!
ಇರಾನ್ನ ಹೊಸ ಸುಪ್ರೀಂ ಲೀಡರ್ ಮೊಜ್ತಬಾ ಖಮೇನಿ ಅವರ ಆರೋಗ್ಯದ ಬಗ್ಗೆ ಊಹಾಪೋಹಗಳು ಹೆಚ್ಚುತ್ತಿರುವ ನಡುವೆ ಐಆರ್ಐಪಿ ವಿಡಿಯೋವೊಂದನ್ನ ಬಿಡುಗಡೆ ಮಾಡಿದೆ. ಅದರಲ್ಲಿ ಮೊಜ್ತಬಾ ಖಮೇನಿ ಧಾರ್ಮಿಕ ಪಾಠ ಮಾಡುತ್ತಿದ್ದಾರೆ. ಆದರೆ ವಿಡಿಯೋ ಯಾವಾಗಿನದ್ದು ಎಂಬುದರ ಬಗ್ಗೆ ಸ್ಪಷ್ಟತೆ ಇಲ್ಲ.
ಇರಾನ್ ನಲ್ಲಿ ಯುದ್ದದ ತೀವ್ರತೆ ಹೆಚ್ಚಾಗಿದ್ದು, ಈ ನಡುವೆ ಜನವರಿಯಲ್ಲಿ ನಡೆದ ಸರ್ಕಾರಿ ವಿರೋಧಿ ಪ್ರತಿಭಟನೆಗಳಲ್ಲಿ ಭಾಗಿಯಾಗಿದ್ದ 3 ಜನರನ್ನು ದೇವರ ವಿರುದ್ದದ ಯುದ್ದದ ಆರೋಪದಡಿಯಲ್ಲಿ ಇರಾನ್ ಸರ್ಕಾರ ಮಾ.19ರಂದು ಕೋಮ್ ನಗರಲ್ಲಿ ಸಾರ್ವಜನಿಕವಾಗಿ ಗಲ್ಲಿಗೇರಿಸಿದೆ. ಇದರಲ್ಲಿ ಇರಾನ್ ಅನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರತಿನಿಧಿಸಿದ್ದ 19 ವರ್ಷದ ಕುಸ್ತಿಪಟು ಸಲೇಹ್ ಮೊಹಮ್ಮದಿ ಎಂಬಾತ ಸಹ ಇದ್ದು, ಇರಾನ್ ಪ್ರತಿಭಟನಾಕಾರರಲ್ಲಿ ಸದ್ಯ ಸಾಮೂಹಿಕ ಮರಣದಂಡನೆಯ ಆತಂಕ ಎದುರಾಗಿದೆ.
Gold Rate Today: ಬೆಂಗಳೂರಿನಲ್ಲಿ ಚಿನ್ನದ ದರ ಮತ್ತೆ ಏರಿಕೆ: 15,000 ರೂಪಾಯಿ ಗಡಿ ದಾಟಿದ 24 ಕ್ಯಾರೆಟ್ ಚಿನ್ನ
ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಚಿನ್ನದ ಬೆಲೆ ಇಂದು ಮತ್ತೆ ದಿಢೀರ್ ಏರಿಕೆ ಕಂಡಿದೆ. ಪ್ರಮುಖವಾಗಿ 24 ಕ್ಯಾರೆಟ್ ಶುದ್ಧ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹15,000 ಮೊತ್ತವನ್ನು ದಾಟುವ ಮೂಲಕ ಹೊಸ ದಾಖಲೆ ಬರೆದಿದೆ. ಕಳೆದ ಕೆಲವು ದಿನಗಳಿಂದ ಸ್ಥಿರವಾಗಿದ್ದ ಚಿನ್ನದ ದರವು ಇಂದು ಹಠಾತ್ ಏರಿಕೆ ಕಂಡಿದ್ದು, 24 ಕ್ಯಾರೆಟ್ ಚಿನ್ನಕ್ಕೆ ಗ್ರಾಂ ಮೇಲೆ ₹65
ಪುಂಜಾಲಕಟ್ಟೆ: ಸಂಭ್ರಮದ ಈದುಲ್ ಫಿತ್ರ್ ಆಚರಣೆ
ಪುಂಜಾಲಕಟ್ಟೆ, ಮಾ.20: ಬದ್ರಿಯಾ ಜುಮಾ ಮಸೀದಿ ಪುಂಜಾಲಕಟ್ಟೆಯಲ್ಲಿ ಈದುಲ್ ಫಿತ್ರ್ ಆಚರಣೆ ಸಂಭ್ರಮ ಸಡಗರದಿಂದ ನಡೆಯಿತು. ಇಂದು ಬೆಳಿಗ್ಗೆ 8 ಗಂಟೆಗೆ ನಡೆದ ಸಾಮೂಹಿಕ ಈದ್ ನಮಾಝ್ ಖತೀಬ್ ಇಸ್ಮಾಯಿಲ್ ಫೈಝಿ ನೇತೃತ್ವದಲ್ಲಿ ನಡೆಯಿತು. ಅದಕ್ಕೂ ಮೊದಲು ಮಾತನಾಡಿದ ಅವರು ಈದುಲ್ ಫಿತರ್ ಆಚರಣೆಯು ವಿಶ್ವಾಸಿಗಳ ಪಾಲಿಗೆ ಬಹು ಪ್ರಮುಖ ಆಚರಣೆಯಾಗಿದೆ. ಈ ದಿನ ಎಲ್ಲಾ ಮುಸ್ಲಿಂ ಬಾಂಧವರು ಪರಸ್ಪರ ಈದ್ ಆಸಂಸಗಳನ್ನು ವಿನಿಮಯಿಸುತ್ತಾ ಕುಟುಂಬ ಸಂಬಂಧವನ್ನು ಬಲಪಡಿಸುವ ಜೊತೆಗೆ ನಮ್ಮ ಸಹೋದರ ಧರ್ಮದ ಬಾಂಧವರಿಗೆ ಇಸ್ಲಾಮಿನ ನೈಜ ಸಂದೇಶಗಳನ್ನು ತಿಳಿಸುತ್ತಾ ಪರಸ್ಪರ ಭ್ರಾತೃತ್ವವನ್ನು ಬಲಪಡಿಸಬೇಕು ಎಂದರು. ಮಾತ್ರವಲ್ಲ ಜಗತ್ತಿನಲ್ಲಿ ಶಾಶ್ವತವಾಗಿ ಶಾಂತಿ ಸ್ಥಾಪನೆಯಾಗಲಿ ಎಂದು ಈ ಶುಭ ದಿನದಲ್ಲಿ ಹಾರೈಸಿದರು.
PM Modi appears in Dhurandhar 2 : ಈ ವರ್ಷದ ಭಾರೀ ನಿರೀಕ್ಷೆಯ ಸಿನಿಮಾ ಧುರಂಧರ್ - ದಿ ರಿವೆಂಜ್ ಸಿನಿಮಾ, ಯುಗಾದಿಯ ದಿನವಾದ ಮಾರ್ಚ್ 19ರಂದು ಬಿಡುಗಡೆಯಾಗಿದೆ. ಚಿತ್ರದ ಎರಡು ಸನ್ನಿವೇಶಗಳಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಕಾಣಿಸಿಕೊಳ್ಳುತ್ತಾರೆ. ಆವೇಳೆ, ಪ್ರೇಕ್ಷಕರಿಂದ ಭಾರೀ ಕರತಾಡನ ವ್ಯಕ್ತವಾಗುವ ದೃಶ್ಯಗಳು ಇಂಟರ್ನೆಟ್’ನಲ್ಲಿ ಭಾರೀ ಸದ್ದನ್ನು ಮಾಡುತ್ತಿದೆ.
ಬೆಂಗಳುರು ನಗರ, ಕೋಲಾರ ಜಿಲ್ಲೆ,ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ರಾಮನಗರ , ತುಮಕೂರು , ಚಿತ್ರದುರ್ಗ ಜಿಲ್ಲೆ, ದಾವಣಗೆರೆ ಜಿಲ್ಲೆಯಲ್ಲಿ ಯಾವುದೇ ವಿದ್ಯುತ್ ಅವಘಡಗಳು ಉಂಟಾದಾಗ, ಅಥವಾ ಮಳೆಯಿಂದ ವಿದ್ಯುತ್ ವ್ಯತ್ಯಯಗೊಂಡಾಗ ಸಹಾಯವಾಣಿಗೆ ಕರೆಮಾಡಲು ಸೂಚಿಸಲಾಗಿದ್ದು, ವಾಟ್ಸ್ ಅಪ್ ನಂಬರ್ಗಳನ್ನೂ ಕೊಡಲಾಗಿದೆ.
Clay Pot: ಮಣ್ಣಿನ ಮಡಕೆ ನೀರು ಕುಡಿಯುತ್ತೀರಾ? ಈ ಲಾಭಗಳನ್ನು ತಿಳಿದರೆ ಆಶ್ಚರ್ಯಪಡುವಿರಿ
ಬೇಸಿಗೆ ಕಾಲ ಆರಂಭವಾಗುತ್ತಿದಂತೆ ದೇಹದಲ್ಲಿ ನೀರಿನ ಅಂಶದ ಅಗತ್ಯತೆ ಹೆಚ್ಚಾಗುತ್ತದೆ. ಹೆಚ್ಚುತ್ತಿರುವ ಬಿಸಿಲಿನಿಂದ ನಮ್ಮ ದೇಹವು ನಿರ್ಜಲೀಕರಣದಿಂದ ರಕ್ಷಿಸಿಕೊಳ್ಳವುದು ಬಹಳ ಮುಖ್ಯ. ಈ ಸಂದರ್ಭದಲ್ಲಿ ಜನರು ಹೆಚ್ಚಾಗಿ ಫ್ರಿಡ್ಜ್ ನೀರು ಅಥವಾ ಐಸ್ಡ್ ಪಾನೀಯಗಳನ್ನು ಕುಡಿಯುವುದಕ್ಕೆ ಆಯ್ಕೆ ಮಾಡಿಕೊಳ್ಳತ್ತಾರೆ. ಆದರೆ ತಜ್ಙರ ಪ್ರಕಾರ ಮಣ್ಣಿನ ಮಡಕೆಯಲ್ಲಿ ಸಂಗ್ರಹಿಸಿದ ನೀರು ಕುಡಿಯುವುದು ಆರೋಗ್ಯಕ್ಕೆ ಹೆಚ್ಚು ಅನೂಕೂಲಕರ. ನೈಸರ್ಗಿಕ ತಂಪು
ವೇಣೂರು| ಪಡ್ಡoದಡ್ಕ ಮಸೀದಿಯಲ್ಲಿ ಸಂಭ್ರಮದ ಈದುಲ್ ಫಿತ್ರ್
ವೇಣೂರು: ಪಡ್ಡoದಡ್ಕ ನೂರುಲ್ ಹುದಾ ಜುಮಾ ಮಸೀದಿಯಲ್ಲಿ ಸಂಭ್ರಮದಿಂದ ಈದುಲ್ ಫಿತ್ರ್ ಶುಕ್ರವಾರದಂದು ಆಚರಿಸಲಾಯಿತು. ಖತೀಬ್ ಖಲಂದರ್ ಶಾಫಿ ಬಾಕವಿ ಅಲ್ ಮನ್ನಾನಿ ಕುತುಬಾ ಪಾರಾಯಣ, ನಮಾಝ್ ನೇತೃತ್ವ ವಹಿಸಿದರು. ಆಡಳಿತ ಸಮಿತಿ ಅಧ್ಯಕ್ಷ ಇಸ್ಮಾಯಿಲ್ ಕೆ ಪೆರಿಂಜೆ, ಪತ್ರಕರ್ತ ಎಚ್ ಮಹಮ್ಮದ್ ವೇಣೂರು, ಪ್ರ. ಕಾರ್ಯದರ್ಶಿ ರಫೀಕ್ ಪಡ್ಡ, ಪ್ರಮುಖರಾದ ಖಾಲಿದ್ ಪುಲಬೆ, ಮಹಮೂದ್ ಪಿಜೆ, ಅಬ್ದು ಸಲಾಂ ಶಾಂತಿ ನಗರ, ನಝೀರ್ ಪೆರಿಂಜೆ, ಇರ್ಫಾನ್ ಯುಕೆ, ಅಶ್ರಫ್ ಶಾಂತಿನಗರ, ಅಶ್ರಫ್ ಗಾಂಧಿನಗರ, ಶರಫುದ್ದೀನ್ ತಂಙಳ್, ಮೊಹಮ್ಮದ್ ಶಾಫಿ ಕಿರೋಡಿ, ಅಶ್ರಫ್ ಕಿರೋಡಿ, ಇಸ್ಮಾಯಿಲ್ ಎಚ್ ಗಾಂಧಿ ನಗರ , ಯಾಕೂಬ್ ಪುಲಾಬೆ ಸೇರಿದಂತೆ ಗಣ್ಯರು, ಜಮಾತಿನ ಸದಸ್ಯರು ಉಪಸ್ಥಿತರಿದ್ದರು.
Tamil Nadu | ಲೈಂಗಿಕ ಕಿರುಕುಳ ಆರೋಪಿ ಮಾತೂರ್ ಸತ್ಯನನ್ನು ಬಂಧಿಸಿದ ಚೆನ್ನೈ ಪೊಲೀಸರು
ಚೆನ್ನೈ: ಪಕ್ಷದಿಂದ ಉಚ್ಚಾಟನೆಗೊಂಡಿರುವ ಸಿಪಿಐ ಸದಸ್ಯ ಹಾಗೂ ಲೈಂಗಿಕ ಕಿರುಕುಳ ಆರೋಪಿ ಮಾತೂರ್ ಸತ್ಯನನ್ನು ಗುರುವಾರ ಚೆನ್ನೈ ಪೊಲೀಸರು ಬಂಧಿಸಿದ್ದಾರೆ. ಸತ್ಯರನ್ನು ಬೆಂಗಳೂರಿನಲ್ಲಿ ಬಂಧಿಸಲಾಗಿದ್ದು, ಮುಂದಿನ ತನಿಖೆಗಾಗಿ ಚೆನ್ನೈಗೆ ಕರೆತರಲಾಗಿದೆ. ಪತ್ರಿಕೋದ್ಯಮಿ ಹಾಗೂ ತಮ್ಮ ಪ್ರಗತಿಪರ ದೃಷ್ಟಿಕೋನಗಳಿಗೆ ಹೆಸರಾಗಿದ್ದ ಮಾತೂರ್ ಸತ್ಯನನ್ನು, ಲೈಂಗಿಕ ದುರ್ನಡತೆಯ ಆರೋಪದ ಮೇಲೆ ಮಾರ್ಚ್ 14ರಂದು ಸಿಪಿಐ ಪಕ್ಷದಿಂದ ಉಚ್ಚಾಟಿಸಲಾಗಿತ್ತು. ಇದರ ಬೆನ್ನಿಗೇ, ಅವರ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಹೊರಿಸಿದ್ದ ಮಹಿಳೆಯ ಪರವಾಗಿ ಗ್ರೇಟರ್ ಚೆನ್ನೈ ನಗರದ ಪೊಲೀಸ್ ಆಯುಕ್ತರಿಗೆ ದೂರನ್ನು ನೀಡಲಾಗಿತ್ತು. ಇದಕ್ಕೂ ಮುನ್ನ, ಮಾರ್ಚ್ 14ರಂದು ನಡೆದ ಸಭೆಯಲ್ಲಿ ಮಾತೂರ್ ಸತ್ಯ ವಿರುದ್ಧದ ಲೈಂಗಿಕ ಕಿರುಕುಳ ಆರೋಪದ ಕುರಿತು ಚರ್ಚಿಸಿದ ಬಳಿಕ, ಸಿಪಿಐ ಹಾಗೂ ಅದರ ಸಹ ಸಂಸ್ಥೆಗಳಾದ ಆಲ್ ಇಂಡಿಯಾ ಯೂತ್ ಫೆಡರೇಷನ್ ಮತ್ತು ಇಂಡಿಯನ್ ಸೊಸೈಟಿ ಫಾರ್ ಕಲ್ಚರಲ್ ಕೋ-ಆಪರೇಷನ್ ಆ್ಯಂಡ್ ಫ್ರೆಂಡ್ಶಿಪ್ನಿಂದ ಮಾತೂರ್ ಸತ್ಯನನ್ನು ಉಚ್ಚಾಟಿಸಲಾಗಿದೆ ಎಂದು ದಕ್ಷಿಣ ಚೆನ್ನೈನ ಸಿಪಿಐ ಜಿಲ್ಲಾ ಕಾರ್ಯದರ್ಶಿ ಎಸ್.ಕೆ. ಶಿವ ಪ್ರಕಟಿಸಿದ್ದರು. ಮೂರನೇ ವ್ಯಕ್ತಿ ನೀಡಿದ ದೂರಿನ ಮೂಲಕ ಈ ಆರೋಪಗಳು ನಮ್ಮ ಗಮನಕ್ಕೆ ಬಂದಿವೆ ಎಂದು ಸಿಪಿಐ ತಿಳಿಸಿದೆ. ಸೇಲಂ ಮೂಲದ ಮಾತೂರ್ ಸತ್ಯ, ತಮ್ಮ ಸಾಮಾಜಿಕ ನ್ಯಾಯ ಹಾಗೂ ಸಾರ್ವಜನಿಕ ನೀತಿಗಳ ಕುರಿತ ಕೆಲಸಗಳ ಮೂಲಕ ಗಮನ ಸೆಳೆದವರು. ಇಂಜಿನಿಯರಿಂಗ್ ಪದವೀಧರರಾದ ಅವರು, 2019ರಲ್ಲಿ ಕಾರ್ಪೊರೇಟ್ ಉದ್ಯೋಗವನ್ನು ತೊರೆದು, ಚಿತ್ರ ನಿರ್ದೇಶಕ ಪಾ. ರಂಜಿತ್ ಸ್ಥಾಪಿಸಿದ್ದ ನೀಲಂ ಸಾಮಾಜಿಕ ವೇದಿಕೆಯೊಂದಿಗೆ ಗುರುತಿಸಿಕೊಂಡಿದ್ದರು. ಅಲ್ಲಿ ಅವರು ಜಾತಿ, ಅಸಮಾನತೆ ಮತ್ತು ರಾಜಕೀಯದ ಕುರಿತು ವಿವರಿಸುವ ವಿಡಿಯೊಗಳನ್ನು ನಿರ್ಮಿಸಿದ್ದರು. ಅಲ್ಲದೆ, ಬಿ.ಆರ್. ಅಂಬೇಡ್ಕರ್, ಪೆರಿಯಾರ್ ಮತ್ತು ಕಾರ್ಲ್ ಮಾರ್ಕ್ಸ್ ಅವರ ಚಿಂತನೆಗಳನ್ನು ಕೇಂದ್ರೀಕರಿಸಿದ ಅಧ್ಯಯನ ಗುಂಪುಗಳು ಹಾಗೂ ಚರ್ಚೆಗಳಲ್ಲಿ ಭಾಗವಹಿಸಿ, ಸಾಮಾಜಿಕ ನ್ಯಾಯಕ್ಕೆ ಸಂಬಂಧಿಸಿದ ಪ್ರತಿಭಟನೆಗಳು ಮತ್ತು ತಳಮಟ್ಟದ ಉಪಕ್ರಮಗಳಲ್ಲಿ ಪಾಲ್ಗೊಂಡಿದ್ದರು. “ನನ್ನ ವಿರುದ್ಧದ ಆರೋಪಗಳಿಗೆ ಕಾನೂನು ಮಾರ್ಗಗಳ ಮೂಲಕ ಪ್ರತಿಕ್ರಿಯಿಸುತ್ತೇನೆ,” ಎಂದು ಸತ್ಯ ಹೇಳಿದ್ದಾರೆ.
Dhurandhar 2 Review: ಸೇಡು, ಕಿಚ್ಚು, ರಾಷ್ಟ್ರಪ್ರೇಮ.. ಪ್ರೇಕ್ಷಕರಿಗೆ ಬ್ಲಾಕ್ಬಸ್ಟರ್ ಅನುಭವ!
ಆದಿತ್ಯ ಧರ್ ನಿರ್ದೇಶನದ ರಣ್ವೀರ್ ಸಿಂಗ್ ಅಭಿನಯದ ‘ಧುರಂದರ್’ ಚಿತ್ರ ಕಳೆದ ವರ್ಷವಷ್ಟೇ.. ಅಂದ್ರೆ ಡಿಸೆಂಬರ್ 5 ರಂದು ರಿಲೀಸ್ ಆಗಿತ್ತು. ಇದೀಗ ‘ಧುರಂದರ್ 2’ () ತೆರೆಗೆ ಅಪ್ಪಳಿಸಿದೆ. ಈ ಸೀಕ್ವೆಲ್ ಸಂಪೂರ್ಣವಾಗಿ ರಣ್ವೀರ್ ಸಿಂಗ್ ಅವರ ಒನ್ ಮ್ಯಾನ್ ಶೋ ಆಗಿ ರೂಪುಗೊಂಡಿದೆ. ‘ಧುರಂದರ್’ ಭಾಗ 2 ಚಿತ್ರದಲ್ಲಿ ಹೆಚ್ಚು ಆಕ್ಷನ್ ಇದೆ, ಹೆಚ್ಚು ವೈಲೆನ್ಸ್ ಇದೆ, ಹೆಚ್ಚು ಭಾವನಾತ್ಮಕ ಅಂಶಗಳಿದೆ. ಈ ರಿವೆಂಜ್ ಕಥಾನಕದಲ್ಲಿ ಎಲ್ಲವೂ ಡಬಲ್ ಡಬಲ್ ಡೋಸ್ ಇದೆ. ‘ಧುರಂದರ್ 2’ ಚಿತ್ರದ ಕಥೆ ಏನು? ‘’ ಚಿತ್ರದಲ್ಲಿರುವುದು ಜಸ್ಕಿರತ್ ಸಿಂಗ್ ರಂಗಿ ಕಥೆ. 2002ರ ಫ್ಲ್ಯಾಶ್ಬ್ಯಾಕ್ನಲ್ಲಿ ಬರುವ ಈ ಕಥೆ, ವೈಯಕ್ತಿಕ ಪ್ರತೀಕಾರದಿಂದ ಆರಂಭವಾಗಿ, ರಾಷ್ಟ್ರದ ಮಿಷನ್ ಆಗಿ ರೂಪಾಂತರಗೊಳ್ಳುತ್ತದೆ. ಜಸ್ಕಿರತ್ ಸಿಂಗ್ ರಂಗಿ (ರಣವೀರ್ ಸಿಂಗ್) ಎಂಬ ಯುವಕ ಹೇಗೆ ಹಮ್ಜಾ ಅಲಿ ಮಜಾರಿ ಎಂಬ ಭಯಾನಕ ಅಂಡರ್ಕವರ್ ಏಜೆಂಟ್ ಆಗಿ ಬದಲಾಗುತ್ತಾನೆ ಎಂಬುದರ ಸುತ್ತ ಕಥೆ ಹೆಣೆಯಲಾಗಿದೆ. ನಿರ್ದೇಶಕ ಆದಿತ್ಯ ಧರ್ ಈ ಕಥೆಯನ್ನು ದೊಡ್ಡ ಕ್ಯಾನ್ವಾಸ್ನಲ್ಲಿ, ರಿಯಲ್ ಮತ್ತು ರೀಲ್ ಮಿಶ್ರಣ ಶೈಲಿಯಲ್ಲಿ ಹೇಳಲು ಪ್ರಯತ್ನಿಸಿದ್ದಾರೆ. ನೈಜ ಘಟನೆಗಳ ಚಿತ್ರಣ ‘ 2’ ಚಿತ್ರದಲ್ಲಿ ಪಾಕಿಸ್ತಾನದ ಭೂಗತಲೋಕ, ಭಯೋತ್ಪಾದನೆ, ನಕಲಿ ನೋಟು ಜಾಲ, ಡ್ರಗ್ಸ್ ಸಮಸ್ಯೆ, ಖಲಿಸ್ತಾನಿ ಅಂಶಗಳು ಸೇರಿದಂತೆ ಹಲವಾರು ವಿಷಯಗಳ ಬಗ್ಗೆ ಬೆಳಕು ಚೆಲ್ಲುತ್ತದೆ. 26/11 ದಾಳಿ, ಸರ್ಜಿಕಲ್ ಸ್ಟ್ರೈಕ್, ನೋಟು ಅಮಾನ್ಯೀಕರಣ ಮುಂತಾದ ನೈಜ ಘಟನೆಗಳನ್ನು ಕಥೆಯಲ್ಲಿ ಬೆರೆಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಕೇಮಿಯೋ, ‘ಬಡೆ ಸಾಬ್’ ಎಂಟ್ರಿ ಸೇರಿದಂತೆ ಹಲವು ರಿಯಲ್ ಲೈಫ್ ರೆಫರೆನ್ಸ್ ಜನರ ಎದೆಬಡಿತವನ್ನ ಹೆಚ್ಚಿಸುತ್ತದೆ. ರಣ್ವೀರ್ ಸಿಂಗ್ ಬರೀ ನಟ ಅಲ್ಲ! ಈ ಸಿನಿಮಾದಲ್ಲಿ ರಣ್ವೀರ್ ಸಿಂಗ್ ಬರೀ ನಟನಾಗಿ ಮಾತ್ರ ಕಾಣಿಸಿಲ್ಲ. ಸಂಪೂರ್ಣ ಪಾತ್ರವಾಗಿಬಿಟ್ಟಿದ್ದಾರೆ. ಇಡೀ ಪಾತ್ರ ಅವರನ್ನ ಆವರಿಸಿಕೊಂಡುಬಿಟ್ಟಿದೆ. ಭಾವನಾತ್ಮಕ ದೃಶ್ಯಗಳಲ್ಲಿ ರಣ್ವೀರ್ ಸಿಂಗ್ ಮನಮಿಡಿಯುವ ಅಭಿನಯ ನೀಡಿದ್ದಾರೆ. ಆಕ್ಷನ್ ದೃಶ್ಯಗಳಲ್ಲಿ ಅಬ್ಬರಿಸಿ ಬೊಬ್ಬಿರಿದಿದ್ದಾರೆ. ಇದು ರಣ್ವೀರ್ ಸಿಂಗ್ ಅವರ ವೃತ್ತಿ ಜೀವನದಲ್ಲೇ ಬೆಸ್ಟ್ ಪರ್ಫಾಮೆನ್ಸ್ ಅಂದರೂ ಅತಿಶಯೋಕ್ತಿ ಅಲ್ಲ. ಆ ರೇಂಜ್ಗೆ ಅವರ ಅಭಿನಯ ಇದೆ. ಇತರರ ಅಭಿನಯ ಹೇಗಿದೆ? ಅಜಯ್ ಸಾನ್ಯಾಲ್ ಆಗಿ ಆರ್ ಮಾಧವನ್ ಗಂಭೀರವಾಗಿ ಕಾಣಿಸಿಕೊಂಡಿದ್ದಾರೆ. ಗಾಡ್ ಫಾದರ್ ಆಗಿ ಆರ್ ಮಾಧವನ್ ಇಷ್ಟವಾಗುತ್ತಾರೆ. ಮೇಜರ್ ಇಕ್ಬಾಲ್ ಆಗಿ ಅರ್ಜುನ್ ರಾಂಪಾಲ್ ಭಯ ಹುಟ್ಟಿಸುವಂತೆ ನಟಿಸಿದ್ದಾರೆ. ಮೊದಲ ಭಾಗದಲ್ಲಿ ಅಕ್ಷಯ್ ಖನ್ನಾ ನೀಡಿದ್ದ ಇಂಪ್ಯಾಕ್ಟ್ ಇಲ್ಲಿ ಮಿಸ್ ಆಗಿದೆ. ಸಂಜಯ್ ದತ್ ತಮ್ಮ ಸ್ವಾಗ್ನಿಂದ ಜನರ ಮನ ಕದಿಯುತ್ತಾರೆ. ಸಾರಾ ಅರ್ಜುನ್ ತಮ್ಮ ಕಣ್ಣುಗಳ ಮೂಲಕವೇ ಭಾವನೆಗಳನ್ನ ಹೊರಹಾಕಿದ್ದಾರೆ. ಡಿಫರೆಂಟ್ ಫೀಲ್ ಕೊಡುವ ಸಂಗೀತ ಖಲೀದ್ ಅವರ ಜನಪ್ರಿಯ ಗೀತೆ ‘ದೀದಿ’, ನುಸ್ರತ್ ಫತೇಹ್ ಅಲಿ ಖಾನ್ ಅವರ ‘ಕವ್ವಾಲಿ’, ಕಿಶೋರ್ ಕುಮಾರ್ ಹಾಡುಗಳು ಮತ್ತು ಬೋನಿ ಎಂ ಆಲ್ಬಂನ ‘ರಾಸ್ಪುಟಿನ್’ - ಈ ಎಲ್ಲಾ ಸೂಪರ್ ಹಿಟ್ ಹಾಡುಗಳೂ ಈ ಚಿತ್ರದಲ್ಲಿವೆ. ಈ ಮಿಶ್ರಣ ಈ ಚಿತ್ರಕ್ಕೆ ಡಿಫರೆಂಟ್ ಫೀಲ್ ನೀಡಿದೆ. ಟೆಕ್ನಿಕಲಿ ಚಿತ್ರ ಹೇಗಿದೆ? ಈ ಚಿತ್ರದ ಅವಧಿ ಹತ್ತತ್ರ ನಾಲ್ಕು ಗಂಟೆ (3 ಗಂಟೆ 55 ನಿಮಿಷ). ತುಂಬಾ ದೊಡ್ಡ ಸಿನಿಮಾ ಎಂದು ಭಾಸವಾಗುತ್ತದೆ. ಸಂಕಲನ ಕೊಂಚ ಚುರುಕಾಗಿದ್ದಿದ್ದರೆ, ಅವಧಿ ಕಮ್ಮಿಯಾಗುತ್ತಿತ್ತು. ವೇಗವೂ ಹೆಚ್ಚುತ್ತಿತ್ತು. ಚಿತ್ರದಲ್ಲಿ ಭಯೋತ್ಪಾದನೆ - ರಾ ಏಜೆಂಟ್ ಕಥೆ ಇರುವುದಿಂದ ಹಿಂಸಾಚಾರ ಮತ್ತು ವೈಲೆನ್ಸ್ಗೆ ಹೆಚ್ಚಿನ ಪ್ರಾಮುಖ್ಯತೆ ಕೊಡಲಾಗಿದೆ. ರಕ್ತಪಾತ ಕೊಂಚ ಜಾಸ್ತಿಯೇ ಹರಿದಿದೆ. ಫೈನಲ್ ಸ್ಟೇಟ್ಮೆಂಟ್ ‘ 2’ ಚಿತ್ರ ಪ್ರೇಕ್ಷಕರಿಗೆ ಒಂದು ದೊಡ್ಡ ಥಿಯೇಟ್ರಿಕಲ್ ಅನುಭವ ನೀಡುತ್ತದೆ. ಆಕ್ಷನ್ ಹಾಗೂ ರಾಷ್ಟ್ರಪ್ರೇಮ ಮೆರೆದಿರುವ ಈ ಚಿತ್ರ ಪ್ರೇಕ್ಷಕರನ್ನ ಸೆಳೆಯುತ್ತದೆ. ಆಕ್ಷನ್ ಪ್ರಿಯರಿಗೆ ಇದು ಹೇಳಿ ಮಾಡಿಸಿದ ಸಿನಿಮಾ. ರಣ್ವೀರ್ ಸಿಂಗ್ ಅಭಿಮಾನಿಗಳು ಹಾಗೂ ರಾಷ್ಟ್ರಪ್ರೇಮಿಗಳು ನೋಡಲೇಬೇಕಾದ ಚಿತ್ರವಿದು.
ಉಡುಪಿ ಜಿಲ್ಲೆಯಾದ್ಯಂತ ಮಸೀದಿಗಳಲ್ಲಿ ಈದುಲ್ ಫಿತ್ರ್ ಆಚರಣೆ ನೆರವೇರಿಸಲಾಗಿದೆ. ಕುಂದಾಪುರ ಈದ್ಗಾ ಮೈದಾನದಲ್ಲಿ ವಿಶೇಷ ನಮಾಜ್ ನೆರವೆರಿಸಲಾಯಿತು, ಧರ್ಮಗುರುಗಳು ಶಾಂತಿಯ ಸಂದೇಶ ರವಾನಿಸಿದರು.
ಉಗ್ರರನ್ನು ಪೋಷಿಸುತ್ತಾ ಭಾರತದ ಮೇಲೆ ವಿಷಕಾರುವ ಪಾಕಿಸ್ತಾನ ಇದೀಗ ತನ್ನದೇ ಬಲೆಯಲ್ಲಿ ಬಿದ್ದಿದ್ದು, ಭಯೋತ್ಪಾದಕ ದಾಳಿಗಳು ಹಾಗೂ ಅದರಿಂದ ಸಂಭವಿಸುವ ಸಾವುಗಳು ಪಾಕಿಸ್ತಾನದಲ್ಲಿ ಶೇ.6ರಷ್ಟು ಹೆಚ್ಚಳವಾಗಿದ್ದು, ಈ ಮೂಲಕ ಜಗತ್ತಿನಲ್ಲಿ ಉಗ್ರ ದಾಳಿಯಿರುವ ದೇಶಗಳ ಪೈಕಿ ಮೊದಲ ಸ್ಥಾನ ಪಾಕಿಸ್ತಾನ ಪಡೆದುಕೊಂಡಿದೆ ಎಂದು ಜಾಗತಿಕ ಭಯೋತ್ಪಾದನಾ ಸೂಚ್ಯಂಕ ವರದಿಮಾಡಿದೆ. ಈ ಮೂಲಕ ಜಾಗತಿಕವಾಗಿ ಭಯೋತ್ಪಾದಕ ಘಟನೆಗಳು ಮತ್ತು ಅದರ ಪರಿಣಾಮಗಳ ಸಂಖ್ಯೆ ಕಡಿಮೆಯಾಗುತ್ತಿದ್ದರೂ ಸಹ ಪಾಕಿಸ್ತಾನದಲ್ಲಿ ಏರಿಕೆಯಾಗುತ್ತಿದೆ.
ಹೆನ್ನಾಬೈಲ್| ಈದ್ಗಾ ಮೈದಾನದಲ್ಲಿ ಸಂಭ್ರಮದ ಈದುಲ್ ಫಿತ್ರ್ ಆಚರಣೆ
ಹೆನ್ನಾಬೈಲ್: ಈದ್ಗಾ ಮೈದಾನದಲ್ಲಿ ಈದುಲ್ ಫಿತ್ರ್ ಪ್ರಾರ್ಥನೆಯು ಧರ್ಮಗುರು ಮೌಲಾನಾ ಅಬ್ದುಲ್ ಹಫೀಝ್ ರಝ್ವಿ ಅವರ ನೇತೃತ್ವದಲ್ಲಿ ನಡೆಯಿತು. ಈ ಸಂದರ್ಭ ಪ್ರಾರ್ಥನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು ರಮಝಾನ್ ತಿಂಗಳ ಉಪವಾಸ, ದಾನ, ಆರಾಧನೆಗಳೆಲ್ಲವೂ ಆರಾಧಕನನ್ನು ಆರಾಧ್ಯನ ಸಂಪರ್ಕಕ್ಕೆ ತಂದು ಸಂತುಷ್ಟಗೊಳಿಸುವ ಪ್ರಕ್ರಿಯೆಗಳು. ಆಧ್ಯಾತ್ಮದಲ್ಲಿ ದೇವನ ಸಂತೋಷ- ಸಂಪ್ರೀತಿಗಳು, ಆತನು ಸೃಷ್ಟಿಸಿದ ಸೃಷ್ಟಿಗೆ ನಾವು ಹೇಗೆ ಸ್ಪಂದಿಸುತ್ತೇವೆ ಮತ್ತು ಸೃಷ್ಟಿಯ ಭಾಗವಾಗಿ ನಮ್ಮನ್ನು ಸೃಷ್ಟಿಸಿ ಸಲಹಿದ್ದಕ್ಕಾಗಿ ಕೃತಜ್ಞತೆಯನ್ನು ಹೇಗೆ ಅರ್ಪಿಸುತ್ತೇವೆ ಎಂಬುದರ ಮೇಲಿದೆ. ದೇವನೊಂದಿಗಿನ ಅನುಸಂಧಾನವು ಅನುಸರಣೆಯ ಪಕ್ವತೆಯನ್ನು ಅವಲಂಬಿಸಿದೆ. ದಾನದಿಂದ ಸಂಪತ್ತು ಬರಿದಾಗುವುದಿಲ್ಲ, ಅದು ಅವಘಡಗಳಿಂದಲೂ ಮನುಷ್ಯನನ್ನು ರಕ್ಷಿಸುತ್ತದೆ ಎನ್ನುವುದು ದೇವವಾಣಿ. ದಾನವನ್ನು ಇಸ್ಲಾಮ್ ಧರ್ಮ ಬೋಧಿಸಿದ ರೀತಿಯಲ್ಲಿ ಗಂಭೀರವಾಗಿ ಪರಿಗಣಿಸಿ ನೀಡಿದರೆ ಅದರ ಪ್ರತಿಫಲ ಪ್ರತ್ಯಕ್ಷವಾಗಿ ಕಾಣಬಹುದು. ದೇವನ ಅಸ್ತಿತ್ವ ಮತ್ತು ಪ್ರಭಾವವನ್ನು ಪ್ರಾಯೋಗಿಕವಾಗಿ ಅರಿಯಬೇಕಿದ್ದರೆ, ದೇವ ನಿಯಮಗಳನ್ನು ಸುಸೂತ್ರವಾಗಿ ಪಾಲಿಸುವುದು ಅಗತ್ಯವಾಗಿರುತ್ತದೆ. ಉಪವಾಸ ಕೇವಲ ದೇಹದ ಬಳಲಿಕೆಗೆ ಇರುವುದಲ್ಲ. ಅದು ದೇಹ ಮತ್ತು ಮನಸ್ಸನ್ನು ಶುದ್ಧೀಕರಿಸಿ ದೇವನ ನೀತಿಗಳನ್ನು ಪಾಲಿಸಲು ಬೇಕಾದ ಪ್ರೇರಣೆಗೆ ಪೂರಕತೆಯನ್ನು ಒದಗಿಸುವ ಒಂದು ಪ್ರಾಯೋಗಿಕ ಪರಿಕ್ರಮ. ಹೀಗಿನ ಜೀವಪರ ಸಿದ್ಧಾಂತವನ್ನು ಹೊಂದಿರುವ ಧರ್ಮವು ಮನುಷ್ಯ ಬದುಕನ್ನು ಸುಸೂತ್ರವಾಗಿಸುವ ಮಾರ್ಗದರ್ಶಿ ಸೂತ್ರ. ಅದರಲ್ಲಿ ಕಾಠಿಣ್ಯವನ್ನು ಸೃಷ್ಟಿಸಿಕೊಳ್ಳುವುದು, ಭೇದ ಮಾಡುವುದು ಅಧರ್ಮವಾಗುತ್ತದೆ. ಎಲ್ಲರನ್ನೂ ಒಳಗೊಳ್ಳದ ಧರ್ಮ ಧರ್ಮವೇ ಅಲ್ಲ. ಧರ್ಮದ ಅರಿವು ಒಂದು ಯೋಗ್ಯತೆ. ಅದೆಷ್ಟೋ ಜನರಿಗೆ ಆ ಯೋಗವೇ ಇರುವುದಿಲ್ಲ. ಬದುಕಿನ ಧಾವಂತ- ಭ್ರಮೆಗಳಲ್ಲಿ ಹುಟ್ಟಿಗೊಂದು ಉದ್ದೇಶ ಮತ್ತು ಸಾವಿದೆ ಎಂಬ ಸತ್ಯದ ಗಾಢತೆ ಅರಿಯಬೇಕಿದ್ದರೆ ಉಪವಾಸ, ಪಾರಾಯಣ, ದಾನ-ಧರ್ಮಗಳ ಮೂಲಕ ದೇವನ ಸನ್ನಿಧಾನಕ್ಕೆ ನಮ್ಮನ್ನು ನಾವು ಅರ್ಪಿಸಿಕೊಳ್ಳುವ ಅನಿವಾರ್ಯತೆ ಇರುತ್ತದೆ. ಇಲ್ಲದಿದ್ದರೆ ಸುಮ್ಮನೆ ಹುಟ್ಟಿಕೊಂಡು ಬಿಟ್ಟಿದ್ದೇವೆ ಎಂಬ ಅಜ್ಞಾನದಲ್ಲೇ ಬದುಕೊಂದು ನಿರರ್ಥಕ ವರ್ಷಗಳನ್ನು ಸವೆಸಿ ಸುಮ್ಮನೆ ಸತ್ತು ಹೋಗುತ್ತದೆ. ರಮಝಾನ್ ತಿಂಗಳ ಸಮಸ್ತ ಧಾರ್ಮಿಕ ಪ್ರಕ್ರಿಯೆಗಳ ಹಿಂದೆ ಒಂದು ದೊಡ್ಡ ಉದ್ದೇಶ ಮತ್ತು ಅರ್ಥ ಇದೆ. ಇದನ್ನು ಅರಿತು ಇತರರಿಗೆ ಅರಿಯಿಸುವ ದೊಡ್ಡ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ ಎಂದು ಅವರು ಹೇಳಿದರು. ಸಭೆಯಲ್ಲಿ ಅಲಿಯಬ್ಬಾ ತೋಟದಮನೆ, ಸೈಯದ್ ಅಬ್ಬಾಸ್, ಹಸನ್ ಸಾಹೇಬ್, ಸೈಯದ್ ರಫೀಖ್, ಹಯಾತ್ ಭಾಷಾ, ಇಕ್ಬಾಲ್ ಬಾಪು, ಆದಮ್ ಸಾಹೇಬ್, ಇಬ್ರಾಹಿಮ್ ಸೈಯದ್, ಅಷ್ಪಾಕ್ ಸಾಬ್ಜನ್, ಅಮಾನ್ ಜಮಾಲ್, ಖಲೀಲ್ ತವಕ್ಕಲ್, ಸೈಯದ್ ಆರೀಫ್, ಮುಹಮ್ಮದ್ ರಫೀಕ್, ಶಬೀರ್ ಸಾಹೇಬ್, ಯೂಸುಫ್ ಸಾಹೇಬ್, ಅಲ್ತಾಫ್ ಆಲಿ, ನಝೀರ್ ಸೈಯದ್, ಗುಡ್ಡೆ ಅಬ್ದುಲ್ ಹಮೀದ್, ಸಲೀಮ್ ಅಹಮದ್ ಮುಂತಾದವರು ಉಪಸ್ಥಿತರಿದ್ದರು.
ಕೇರಳ ವಿಧಾನಸಭಾ ಚುನಾವಣೆ: ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಪ್ರಕಟ
ಸಂಸದರು, ಲೈಂಗಿಕ ದೌರ್ಜನ್ಯ ಆರೋಪಿಗಳಿಗೆ ಟಿಕೆಟ್ ನಿರಾಕರಣೆ
ನೀರಾನೆ ದಾಳಿಯಿಂದ ಶಿವಮೊಗ್ಗದಲ್ಲಿ ಪಶುವೈದ್ಯೆ ಸಾವು: ಸಚಿವ ಈಶ್ವರ ಖಂಡ್ರೆ ಸಂತಾಪ
ಗುತ್ತಿಗೆ ಆಧಾರದಲ್ಲಿ ನೇಮಕ ಆಗಿದ್ದ, ಬೆಂಗಳೂರು ಮೂಲದ ಡಾ ಸಮೀಕ್ಷಾ ರೆಡ್ಡಿ, ನೀರಾನೆಯನ್ನು ಚಿಕಿತ್ಸೆ ಮಾಡಲು ಹೋಗಿ ದಾಳಿಗೊಳಗಾಗಿ ಉಸಿರು ಚೆಲ್ಲಿದ್ದಾರೆ. ಅರಣ್ಯ ಇಲಾಖೆಯಿಂದ ಪರಿಹಾರ ಘೋಷಿಸಿ, ಸಾವಿಗೆ ಸಚಿವರು ಸಂತಾಪ ಸೂಚಿಸಿದ್ದಾರೆ.
ಮಂಜೇಶ್ವರ: ಸಂಭ್ರಮದ ಈದುಲ್ ಫಿತ್ರ್ ಆಚರಣೆ
ಮಂಜೇಶ್ವರ: ಪವಿತ್ರ ರಮಝಾನ್ನ ವೃತಗಳನ್ನು ಅನುಷ್ಠಾನಗೊಳಿಸಿದ ಮಂಜೇಶ್ವರದ ಮುಸ್ಲಿಮರು ಇಂದು ಅತ್ಯಂತ ಸಡಗರ, ಸಂಭ್ರಮದಿಂದ 'ಈದುಲ್ ಫಿತ್ರ್' ಆಚರಿಸಿದರು. ಮಂಜೇಶ್ವರ ತಾಲೂಕಿನಾದ್ಯಂತ ಎಲ್ಲಾ ಜುಮಾ ಮಸೀದಿ, ಈದ್ಗಾಗಳಲ್ಲಿ ಸಾಮೂಹಿಕ ನಮಾಝ್, ಈದ್ ಖುತ್ಬಾ ಈದ್ ಸಂದೇಶ, ಪ್ರವಚನ, ಈದ್ ಶುಭಾಶಯ, ನೆರೆಮನೆ ಹಾಗೂ ಸಂಬಂಧಿಕರ ಮನೆಗೆ ಸೌಹಾರ್ದ ಭೇಟಿ ನೀಡುವ ಮೂಲಕ ಹಬ್ಬಕ್ಕೆ ಸಂಭ್ರಮ ತಂದರು. ಶುಕ್ರವಾರ ಮುಂಜಾನೆಯೇ ಹೊಸ ವಸ್ತ್ರ ಧರಿಸಿದ ಮುಸ್ಲಿಮರು ಮಂಜೇಶ್ವರದ ಪ್ರಸಿದ್ಧ ಮಸೀದಿಗಳಾದ ಉದ್ಯಾವರ ಜುಮಾ ಮಸೀದಿ, ದಾರುಸ್ಸಲಾಂ ಸಲಫಿ ಮಸೀದಿ, ಕುಂಜತ್ತೂರು ಮಸ್ಜಿದುನ್ನೂರು, ಪೊಸೋಟು ಜುಮಾ ಮಸೀದಿ, ಹೊಸಬೆಟ್ಟು, ಹೊಸಂಗಡಿ ಸೇರಿದಂತೆ ವಿವಿಧ ಈದ್ಗಾ ಮೈದಾನಗಳಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ನೂರಾರು ಸಂಖ್ಯೆಯಲ್ಲಿ ನೆರೆದಿದ್ದ ಭಕ್ತಾದಿಗಳು ಅಲ್ಲಾಹನಿಗೆ ಕೃತಜ್ಞತೆ ಸಲ್ಲಿಸಿ, ವಿಶ್ವ ಶಾಂತಿ ಮತ್ತು ಸಮೃದ್ಧಿಗಾಗಿ ಪ್ರಾರ್ಥಿಸಿದರು. ಕುಂಜತ್ತೂರು ದಾರುಸ್ಸಲಾಂ ಸಲಫಿ ಮಸೀದಿಯ ಅಧೀನದ ಈದ್ಗಾ ದಲ್ಲಿ ನಡೆದ ಈದ್ ನಮಾಝ್ ಗೆ ಮೊಹಮ್ಮದಲಿ ಸಲಫಿ ನೇತೃತ್ವ ನೀಡಿ ಖುತ್ಬಾ ನಿರ್ವಹಿಸಿದರು. ಈ ಹಬ್ಬವು ಕೇವಲ ಆಚರಣೆಯಲ್ಲ, ಇದು ತಾಳ್ಮೆ, ದಾನ ಮತ್ತು ಮಾನವೀಯತೆಯ ಸಂದೇಶವನ್ನು ಸಾರುವ ಪವಿತ್ರ ದಿನವಾಗಿದೆ, ಎಂದು ಈ ಸಂದರ್ಭದಲ್ಲಿ ಅವರು ಹಿತವಚನ ನೀಡಿದರು. ಪ್ರಾರ್ಥನೆಯ ನಂತರ ಪರಸ್ಪರ ಆಲಿಂಗಿಸಿಕೊಳ್ಳುವ ಮೂಲಕ ಈದ್ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡ ದೃಶ್ಯಗಳು ಎಲ್ಲೆಡೆ ಕಂಡುಬಂದವು. ಜಾತಿ-ಧರ್ಮದ ಭೇದವಿಲ್ಲದೆ ಗೆಳೆಯರು, ಹಿತೈಷಿಗಳು ಮನೆಗಳಿಗೆ ಭೇಟಿ ನೀಡಿ ಶುಭ ಹಾರೈಸಿದರು. ಹಬ್ಬದ ಅಂಗವಾಗಿ ಬಡವರಿಗೆ 'ಫಿತರ್ ಝಕಾತ್' ಹೆಸರಿನಲ್ಲಿ ದಾನವನ್ನು ವಿತರಿಸಲಾಯಿತು. ಹೊಸ ಬಟ್ಟೆ ಧರಿಸಿ, ಹಿರಿಯರಿಂದ 'ಈದಿ' (ಹಣ) ಪಡೆದ ಮಕ್ಕಳು ಸಂಭ್ರಮಿಸಿದರು. ಮಂಜೇಶ್ವರ ಪಟ್ಟಣವು ಹಬ್ಬದ ಪ್ರಯುಕ್ತ ಮದುವಣಗಿತ್ತಿಯಂತೆ ಕಂಗೊಳಿಸುತ್ತಿತ್ತು. ಒಟ್ಟಾರೆಯಾಗಿ ಮಂಜೇಶ್ವರದ ಈದುಲ್ ಫಿತ್ರ್ ಆಚರಣೆಯು ಭಾವೈಕ್ಯತೆ ಮತ್ತು ಪ್ರೀತಿಯ ಸಂಕೇತವಾಗಿ ಮೂಡಿಬಂತು.
40,000 ಹೋಟೆಲ್ ಮಾಲೀಕರಿಗೆ ಭರ್ಜರಿ ಸುದ್ದಿ, ಎಲ್ಪಿಜಿ ಸಿಲಿಂಡರ್ ನಿಯಮ ಬದಲಾವಣೆ... LPG Cylinder Supply
ಗ್ಯಾಸ್ ಸಿಗುತ್ತಿಲ್ಲ, ಹೋಟೆಲ್ ನಡೆಸಲು ಕೂಡ ಆಗುತ್ತಿಲ್ಲ ಎಂದು ಈಗಾಗಲೇ ಸಾವಿರಾರು ಹೋಟೆಲ್ ಮಾಲೀಕರು ಬಾಗಿಲು ಬಂದ್ ಮಾಡಿ ಬೀಗ ಹಾಕಿದ್ದಾರೆ. ಕರ್ನಾಟಕ ರಾಜ್ಯ ಒಂದರಲ್ಲೇ, ಸುಮಾರು 40,000 ಹೋಟೆಲ್ ಇದ್ದು ಲಕ್ಷಾಂತರ ಜನರು ಜೀವನ ಕಂಡುಕೊಂಡಿದ್ದಾರೆ ಈ ಹೋಟೆಲ್ ಉದ್ಯಮ ನಂಬಿ. ಆದರೆ ಇದೀಗ ಎಲ್ಪಿಜಿ ಸಿಗದೆ, ಗ್ಯಾಸ್ ಸಿಲಿಂಡರ್ ಇಲ್ಲದೆ ಹೋಟೆಲ್ ಒಲೆ ಉರಿಸುವುದೇ
ಬಂಟ್ವಾಳ| ಬೋಳಂಗಡಿ ಜುಮಾ ಮಸೀದಿಯಲ್ಲಿ ಸಂಭ್ರಮದ ಈದುಲ್ ಫಿತ್ರ್
ಬಂಟ್ವಾಳ: ಪವಿತ್ರ ರಮಝಾನ್ ತಿಂಗಳ ಉಪವಾಸ ಮುಗಿದ ಬಳಿಕ ಮುಸ್ಲಿಮರು ಸಡಗರ, ಸಂಭ್ರಮದಿಂದ ಆಚರಿಸುವ ಈದುಲ್ ಫಿತ್ರ್ ಹಬ್ಬವನ್ನು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಬೋಳಂಗಡಿ ಹವ್ವಾ ಜುಮಾ ಮಸೀದಿಯಲ್ಲಿ ಆಚರಿಸಲಾಯಿತು. ಬೋಳಂಗಡಿ ಹವ್ವಾ ಜುಮಾ ಮಸೀದಿಯ ಖತೀಬ್ ಮೌಲಾನಾ ಯಹ್ಯಾ ತಂಙಳ್ ಮದನಿಯವರು ನೆರೆದಿದ್ದ ಜನರನ್ನು ಉದ್ದೇಶಿಸಿ ಈದುಲ್ ಫಿತ್ರ್ ಸಂದೇಶವನ್ನು ನೀಡಿದರು.
West Asia War: ಭಾರತಕ್ಕೆ ಮಾತ್ರವಲ್ಲ ಇದು ಇಡೀ ಜಗತ್ತಿಗೆ ಪರೀಕ್ಷೆಯ ಸಮಯ- MEA ವಕ್ತಾರ ರಣಧೀರ್ ಜೈಸ್ವಾಲ್
ಮಧ್ಯಪ್ರಾಚ್ಯದಲ್ಲಿ ಸಂಘರ್ಷದಿಂದಾಗಿ ತೈಲ ಅನಿಶ್ಚಿತತೆ ಕೇಲವ ದೇಶಕ್ಕೆ ಮಾತ್ರವಲ್ಲ ಬದಲಾಗಿ ಇಡೀ ವಿಶ್ವಕ್ಕೆ ಒಂದು ಸವಾಲಿನ ಸಮಯವಾಗಿದೆ ಎಂದು ಭಾರತದ ವಿದೇಶಾಂಗ ಸಚಿವಾಲಯ ತಿಳಿಸಿದೆ. ಇನ್ನು, ಇಂಧನ ಭದ್ರತೆ ಹಾಗೂ ಗಲ್ಫ್ ರಾಷ್ಟ್ರಗಳಲ್ಲಿನ ಭಾರತೀಯರ ಸುರಕ್ಷತೆಗಾಗಿ ಆ ಪ್ರದೇಶದಲ್ಲಿನ ನಾಯಕರೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇವೆ ಎಂದು ಭಾರತದ ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ತಿಳಿಸಿದ್ದಾರೆ. ಅಲ್ಲದೆ, ಇಂಧನ ಮೂಲ ಸೌಕರ್ಯಗಳ ಮೇಲಿನ ದಾಳಿ ಸ್ವೀಕಾರಾರ್ಹವಲ್ಲ ಎಂದು ತಿಳಿಸಿದ್ದಾರೆ.
ಟ್ರಕ್ ಗೆ ಡಿಕ್ಕಿ ಹೊಡೆದು ಹೆದ್ದಾರಿಯಲ್ಲಿ ಉರುಳಿದ ಕಾರು: ಮೂವರು ಐಐಟಿ ವಿದ್ಯಾರ್ಥಿಗಳು ಮೃತ್ಯು
ನವಿಮುಂಬೈ: ಸೂರ್ಯೋದಯದ ದೃಶ್ಯ ಸೆರೆಹಿಡಿಯಲು ಲೋನಾವಳಿಗೆ ತೆರಳಿ ವಾಪಸ್ಸಾಗುತ್ತಿದ್ದ ಮುಂಬೈ ಐಐಟಿಯ ಮೂವರು ವಿದ್ಯಾರ್ಥಿಗಳು ಪುಣೆ–ಮುಂಬೈ ಎಕ್ಸ್ಪ್ರೆಸ್ ಹೆದ್ದಾರಿಯಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಬೇರೆ ವಾಹನವನ್ನು ಹಿಂದಿಕ್ಕುವ ಭರದಲ್ಲಿ ಇವರು ಪ್ರಯಾಣಿಸುತ್ತಿದ್ದ ಕಾರು ಟ್ರಕ್ ಗೆ ಅಪ್ಪಳಿಸಿ ಹಲವು ಸುತ್ತು ತಿರುಗಿ ಹೆದ್ದಾರಿಯಲ್ಲಿ ಉರುಳಿ ಬಿದ್ದ ಪರಿಣಾಮ ಈ ದುರಂತ ಸಂಭವಿಸಿದೆ. ಟ್ರಕ್ ಚಾಲಕ ಪರಾರಿಯಾಗಿದ್ದಾನೆ. ಅಜಾಗರೂಕತೆ ಮತ್ತು ನಿರ್ಲಕ್ಷ್ಯದ ಚಾಲನೆ ಆರೋಪದಲ್ಲಿ ಆತನ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ಈ ವಿದ್ಯಾರ್ಥಿಗಳೊಂದಿಗೆ ಇತರ ಮೂವರು ವಿದ್ಯಾರ್ಥಿಗಳು ಪ್ರತ್ಯೇಕ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಮದ್ಯಪಾನ ಮಾಡಿ ಚಾಲನೆ ಮಾಡಿದ ಸಾಧ್ಯತೆಯನ್ನು ಪೊಲೀಸರು ಅಲ್ಲಗಳೆದಿದ್ದು, ಅಟಾಪ್ಸಿ ವರದಿಗಾಗಿ ಕಾಯಲಾಗುತ್ತಿದೆ. ವಿದ್ಯಾರ್ಥಿಗಳು ಸೀಟ್ ಬೆಲ್ಟ್ ಧರಿಸಿದ್ದರೇ ಅಥವಾ ಅತಿವೇಗದಲ್ಲಿ ಕಾರು ಚಲಾಯಿಸಿದ್ದರೇ ಎಂಬುದು ಆರ್ಟಿಒ ಅಧಿಕಾರಿಗಳ ವರದಿಯಿಂದ ತಿಳಿಯಲಿದೆ ಎಂದು ಹೇಳಿದ್ದಾರೆ. ಎಕ್ಸ್ಪ್ರೆಸ್ ಹೆದ್ದಾರಿಯನ್ನು ನಿರ್ವಹಿಸುವ ಐಆರ್ಬಿ ಇನ್ಫ್ರಾಸ್ಟ್ರಕ್ಚರ್ಗೆ ಸೇರಿದ ಸಿಸಿಟಿವಿ ದೃಶ್ಯಾವಳಿಯನ್ನು ಕೇಳಲಾಗಿದೆ. ಆದರೆ ಈ ಘಟನೆ ಸಂಭವಿಸಿದ ಸ್ಥಳದ ಸಮೀಪದ ಸಿಸಿಟಿವಿ ಕ್ಯಾಮೆರಾ ನಿಷ್ಕ್ರಿಯವಾಗಿತ್ತು ಎಂದು ಪನ್ವೇಲ್ ಠಾಣೆಯ ಇನ್ಸ್ಪೆಕ್ಟರ್ ಆನಂದ್ ಕಾಂಬ್ಳೆ ತಿಳಿಸಿದ್ದಾರೆ. ಮೃತ ವಿದ್ಯಾರ್ಥಿಗಳ ಪೈಕಿ ಇಬ್ಬರು ಮಹಾರಾಷ್ಟ್ರದವರು. ಮೂರನೇ ವರ್ಷದ ಏರೋಸ್ಪೇಸ್ ಎಂಜಿನಿಯರಿಂಗ್ ವಿದ್ಯಾರ್ಥಿ ಓಂಕುಮಾರ್ ಬೋರ್ಸೆ (23) ನಾಸಿಕ್ನವರಾಗಿದ್ದು, ಲೇ ದೇಶ್ಭ್ರತರ್ (20) ನಾಗ್ಪುರದವರು. ಮೂರನೇ ವಿದ್ಯಾರ್ಥಿ ಶ್ರೇಯಾಂಸ್ ಶರ್ಮಾ (22) ಜೈಪುರದವರಾಗಿದ್ದು, ಮೆಕ್ಯಾನಿಕಲ್ ಎಂಜಿನಿಯರಿಂಗ್ ನಾಲ್ಕನೇ ವರ್ಷದ ವಿದ್ಯಾರ್ಥಿ.
ವಿಶ್ವಸಂಸ್ಥೆಯು 'ವಿಶ್ವ ಸಂತೋಷ ಸೂಚ್ಯಂಕ-2026' ವರದಿ ಬಿಡುಗಡೆ ಮಾಡಿದ್ದು, ಯುರೋಪಿನ ಪುಟ್ಟ ದೇಶ ಫಿನ್ಲೆಂಡ್ ಸತತ ಒಂಬತ್ತನೇ ಬಾರಿಗೆ ವಿಶ್ವದ ಅತ್ಯಂತ ಸಂತೋಷದಾಯಕ ರಾಷ್ಟ್ರವಾಗಿ ಹೊರಹೊಮ್ಮಿದೆ. 147 ದೇಶಗಳ ಪಟ್ಟಿಯಲ್ಲಿ ಭಾರತವು 116ನೇ ಸ್ಥಾನ ಪಡೆದಿದೆ. ಕಳೆದ ವರ್ಷ (2025) 118ನೇ ಸ್ಥಾನದಲ್ಲಿದ್ದ ಭಾರತ, ಈ ಬಾರಿ ಎರಡು ಸ್ಥಾನಗಳ ಏರಿಕೆ ಕಂಡು ಅಲ್ಪ ಸುಧಾರಣೆ ಕಂಡಿದೆ.
ಕರಾವಳಿಯಲ್ಲಿ ಸಂಭ್ರಮದ ‘ಈದುಲ್ ಫಿತ್ರ್’ ಆಚರಣೆ
ಮಂಗಳೂರು: ಪವಿತ್ರ ರಮಝಾನ್ನ ವೃತಗಳನ್ನು ಅನುಷ್ಠಾನಗೊಳಿಸಿದ ಕರಾವಳಿಯ ಮುಸ್ಲಿಮರು ಇಂದು ಅತ್ಯಂತ ಸಡಗರ, ಸಂಭ್ರಮದಿಂದ ‘ಈದುಲ್ ಫಿತ್ರ್’ ಆಚರಿಸಿದರು. ದ.ಕ. ಮತ್ತು ಉಡುಪಿ ಜಿಲ್ಲೆಯ ಎಲ್ಲಾ ಜುಮಾ ಮಸೀದಿ, ಈದ್ಗಾಗಳಲ್ಲಿ ಸಾಮೂಹಿಕ ನಮಾಝ್, ಈದ್ ಖುತ್ಬಾ, ಈದ್ ಸಂದೇಶ, ಪ್ರವಚನ, ಈದ್ ಶುಭಾಶಯ, ನೆರೆಮನೆ ಹಾಗೂ ಸಂಬಂಧಿಕರ ಮನೆಗೆ ಸೌಹಾರ್ದ ಭೇಟಿ ನೀಡುವ ಮೂಲಕ ಹಬ್ಬಕ್ಕೆ ಸಂಭ್ರಮದ ಕಳೆ ತಂದರು. ಈದ್ ನಮಾಝ್-ಖುತ್ಬಾದ ಬಳಿಕ ದಫನ ಭೂಮಿಗೆ ತೆರಳಿ ಅಗಲಿದ ಕುಟುಂಬದ ಸದಸ್ಯರ ಮಗ್ಫಿರತ್ಗಾಗಿ ಪ್ರಾರ್ಥಿಸಿದರು. ಹಾಗೇ ಕುಟುಂಬಸ್ಥರು, ಸ್ನೇಹಿತರು, ಸಮೀಪದ ನಿವಾಸಿಗಳ ಮನೆಗೆ ತೆರಳಿ ಈದ್ ಶುಭಾಶಯ ಕೋರಿದರು. ಜಿಲ್ಲೆಯ ಬಹುತೇಕ ಎಲ್ಲಾ ಮಸೀದಿ-ಈದ್ಗಾಗಳಲ್ಲಿ ವಿಶೇಷ ನಮಾಝ್, ಪ್ರವಚನ ಬಳಿಕ ಪರಸ್ಪರ ಹಸ್ತಲಾಘವ, ಆಲಿಂಗನ ಮೂಲಕ ಹಬ್ಬದ ಶುಭಾಶಯ ವಿನಿಮಯ ಹಾಗೂ ಮನೆಗಳಲ್ಲಿ ಹಬ್ಬದ ಸಂಭ್ರಮ ಕಂಡು ಬಂತು. ಎಳೆಯ ಮಕ್ಕಳಿಂದ ಹಿಡಿದು ಹಿರಿಯರ ಸಹಿತ ಉಪವಾಸಿಗರು ಹೊಸ ಬಟ್ಟೆಬರೆ ಧರಿಸಿ, ಅತ್ತರ್ ಹಚ್ಚಿ, ವಿಶಿಷ್ಟ ಬಗೆಯ ತಿಂಡಿ-ತಿನಿಸು ತಿಂದು ಹಬ್ಬವನ್ನು ಅತ್ಯಂತ ಶ್ರದ್ಧೆಯಿಂದ ಸಂಭ್ರಮಿಸಿದರು. ನಗರದ ಬಾವುಟಗುಡ್ಡದ ಈದ್ಗಾ ಜುಮಾ ಮಸ್ಜಿದ್ನಲ್ಲಿ ದ.ಕ.ಜಿಲ್ಲಾ ಖಾಝಿ ಅಲ್ಹಾಜ್ ತ್ವಾಕಾ ಅಹ್ಮದ್ ಮುಸ್ಲಿಯಾರ್ ಖುತ್ಬಾ ಪಾರಾಯಣಗೈದರು. ಬಂದರ್ ಝೀನತ್ ಬಕ್ಷ್ ಕೇಂದ್ರ ಜುಮಾ ಮಸೀದಿಯ ಖತೀಬ್ ಸೈಯದ್ ಶಂಸುದ್ದೀನ್ ಬಾಸಿತ್ ಬಾ ಅಲವಿ ತಂಳ್ ಅಲ್ ಅನ್ಸಾರಿ ನೇತೃತ್ವದಲ್ಲಿ ಈದ್ ನಮಾಝ್ ನಡೆಯಿತು. ಈ ಸಂದರ್ಭ ಬಂದರ್ ಝೀನತ್ ಬಕ್ಷ್ ಕೇಂದ್ರ ಜುಮಾ ಮಸೀದಿ ಮತ್ತು ಈದ್ಗಾ ಜುಮಾ ಮಸೀದಿಯ ಅಧ್ಯಕ್ಷ ಅಲ್ಹಾಜ್ ಯೆನೆಪೊಯ ಅಬ್ದುಲ್ಲಾ ಕುಂಞಿ, ಉಪಾಧ್ಯಕ್ಷ ಕೆ. ಅಶ್ರಫ್, ಕೋಶಾಧಿಕಾರಿ ಎಸ್.ಎಂ.ರಶೀದ್ ಹಾಜಿ ಮತ್ತಿತರರು ಪಾಲ್ಗೊಂಡಿದ್ದರು. ರಾಜ್ಯ ವಿಧಾನಸಭೆಯ ಅಧ್ಯಕ್ಷ ಯು.ಟಿ.ಖಾದರ್ ಫರೀದ್, ವಿಧಾನ ಪರಿಷತ್ ಶಾಸಕ ಐವನ್ ಡಿಸೋಜ, ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಮತ್ತಿತರ ಅಧಿಕಾರಿಗಳು ಸೌಹಾರ್ದ ಭೇಟಿ ನೀಡಿ ಶುಭ ಹಾರೈಸಿದರು. *ಉಳ್ಳಾಲ ಕೇಂದ್ರ ಜುಮಾ ಮಸ್ಜಿದ್ನಲ್ಲಿ ಖತೀಬ್ ಹಾಫಿಲ್ ಅಬ್ದುಲ್ ಮಜೀದ್ ಫಾಳಿಲಿ ಹಿಕಮಿ ಸಖಾಫಿ ನೇತೃತ್ವದಲ್ಲಿ ಈದ್ ನಮಾಝ್ ಮತ್ತು ಖುತ್ಬಾ ಪಾರಾಯಣ ನಡೆಯಿತು. ಉಳ್ಳಾಲ ದರ್ಗಾ ಅಧ್ಯಕ್ಷ ಬಿ.ಜೆ. ಹನೀಫ್ ಹಾಜಿ ಮತ್ತಿತರರು ಪಾಲ್ಗೊಂಡಿದ್ದರು.
ಇಸ್ರೇಲ್ನ ಹೈಫಾ ತೈಲ ಘಟಕದ ಮೇಲೆ IRGC ದಾಳಿ: ಸೌತ್ ಪಾರ್ಸ್ ಅನಿಲ ಘಟಕದ ಮೇಲಿನ ದಾಳಿಗೆ ಪ್ರತೀಕಾರ!
ಪಶ್ಚಿಮ ಏಷ್ಯಾದಲ್ಲಿ ಉದ್ವಿಗ್ನತೆ ಹೆಚ್ಚಾಗುತ್ತಿದ್ದು,ಇರಾನ್ ನ ಸೌತ್ ಪಾರ್ಸ್ ಅನಿಲ ಕ್ಷೇತ್ರದ ಮೇಲಿನ ಇಸ್ರೇಲ್ ನ ಹೈಫಾ ನಗರದಲ್ಲಿನ ತೈಲ ಸಂಸ್ಕರಾಣಾಗಾರದ ಮೇಲೆ ಪ್ರತಿದಾಳಿ ಮಾಡಿದೆ. ಈ ಕುರಿತು ಇಸ್ರೇಲ್ ಸಹ ದೃಢಪಡಿಸಿದ್ದು, ಯಾವುದೇ ಹೆಚ್ಚಿನ ಹಾನಿ ಹಾಗೂ ಸಾವುನೋವು ಸಂಭವಿಸಿಲ್ಲ ಎಂದು ತಿಳಿಸಿದ್ದಾರೆ. ಇಷ್ಟೇ ಅಲ್ಲದೆ, ಇರಾನ್ ಗಲ್ಫ್ ರಾಷ್ಟ್ರಗಳ ಮೇಲಿನ ತೈಲ ಸಂಸ್ಕರಾಣಾಗಾರಗಳ ಮೇಲೆ ದಾಳಿ ಮಾಡುತ್ತಿದೆ. ಈ ಕುರಿತ ಮಾಹಿತಿ ಇಲ್ಲಿದೆ..
ಇರಾನ್ ಯುದ್ಧ | ಅಮೆರಿಕ ಕಳೆದುಕೊಂಡ ಯುದ್ಧ ವಿಮಾನಗಳೆಷ್ಟು?
ಟೆಹ್ರಾನ್: ಇರಾನ್ ನಡೆಸುತ್ತಿರುವ ಪ್ರತಿದಾಳಿಯಿಂದಾಗಿ ಯುದ್ಧಾರಂಭದ ಬಳಿಕ ಇದುವರೆಗೆ ಅಮೆರಿಕ 16 ಯುದ್ಧವಿಮಾನಗಳನ್ನು ಕಳೆದುಕೊಂಡಿದೆ. ಇದರಲ್ಲಿ 10 ಎಂಕ್ಯೂ-9 ರೀಪರ್ ಡ್ರೋನ್ ಗಳೂ ಸೇರಿವೆ. ದಾಳಿ ಹಾಗೂ ಕಾರ್ಯಾಚರಣೆ ವೇಳೆ ಇತರ ಹಲವು ವಿಮಾನಗಳಿಗೆ ಹಾನಿಯಾಗಿದೆ ಎಂದು ಉನ್ನತ ಮೂಲಗಳು ತಿಳಿಸಿವೆ. ಆದರೆ ಬಹುತೇಕ ವಿಮಾನಗಳು ಅಪಘಾತಗಳಿಂದ ನಾಶವಾಗಿವೆ ಎಂದು ಅಮೆರಿಕ ಹೇಳಿದೆ. ಮೂರು ಅಮೆರಿಕನ್ ಎಫ್-15 ಯುದ್ಧವಿಮಾನಗಳು ಕುವೈತ್ ನ ವಾಯುನೆಲೆಯಲ್ಲಿಯೇ ತಪ್ಪಾದ ದಾಳಿಯ ವೇಳೆ ನಾಶವಾಗಿದ್ದು, ವಾಯು ಕಾರ್ಯಾಚರಣೆ ಮಧ್ಯೆ ಕೆಸಿ-135 ಮರುಪೂರಣ ಟ್ಯಾಂಕರ್ ಗಳು ನಾಶವಾಗಿ, ವಿಮಾನದಲ್ಲಿದ್ದ ಆರು ಮಂದಿ ಜೀವ ಕಳೆದುಕೊಂಡಿದ್ದಾರೆ.
ಇಸ್ರೇಲ್ ಟ್ರ್ಯಾಪ್ಗೆ ಬಿದ್ದರೇ ಟ್ರಂಪ್ : ಖಮೇನಿ ಹತ್ಯೆಯೇ ದೊಡ್ಡ ಎಡವಟ್ಟು - ಇರಾನ್ ಯುದ್ದದಲ್ಲಿ US ಏಕಾಂಗಿ?
West Asia Crisis : ಇರಾನ್ ಜೊತೆಗಿನ ಇಸ್ರೇಲ್ ಯುದ್ದದಲ್ಲಿ ಮಧ್ಯಪ್ರವೇಶಿಸಿ, ಬೆಂಜಮಿನಿ ನೆತನ್ಯಾಹು ಬೆನ್ನಿಗೆ ನಿಂತಿದ್ದ ಅಮೆರಿಕಗೆ ಪಶ್ಚಿಮ ಏಷ್ಯಾದ ಸಂಘರ್ಷ ಮುಳುವಾಗುತ್ತಿದೆಯಾ? ಇಸ್ರೇಲ್ ದಾಳಕ್ಕೆ ಡೊನಾಲ್ಡ್ ಟ್ರಂಪ್ ಬಿದ್ದರೇ ಎನ್ನುವ ಮಾತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಅಯತೊಲ್ಲಾ ಖಮೇನಿ ಹತ್ಯೆಯ ನಂತರ, ಇರಾನ್ ಯುದ್ದ ಇನ್ನಷ್ಟು ತೀವ್ರಗೊಳ್ಳುವ ಸಾಧ್ಯತೆಯಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಹೊಸತೊಡಕು: ಮಧ್ಯರಾತ್ರಿಯಿಂದಲೇ ಮಾಂಸ ಖರೀದಿ ಭರಾಟೆ, ಎಷ್ಟಿದೆ ಇಂದಿನ ಚಿಕನ್-ಮಟನ್ ದರ?
ಯುಗಾದಿ ಹಬ್ಬದ ಮರುದಿನ ಬರುವ ಈ 'ವರ್ಷತೊಡಕು' ಅಥವಾ 'ಹೊಸತೊಡಕು' ಕರ್ನಾಟಕದ ಸಾಂಸ್ಕೃತಿಕ ಮತ್ತು ಸಾಮಾಜಿಕ ಪರಂಪರೆಯಲ್ಲಿ ಬಹಳ ಮಹತ್ವದ್ದಾಗಿದೆ. ಕರ್ನಾಟಕದಲ್ಲಿ 'ಯುಗಾದಿ'ಯನ್ನು ಹೊಸ ವರ್ಷವಾಗಿ ಆಚರಿಸಿದರೆ, ಅದರ ಮರುದಿನ ಆಚರಿಸಲಾಗುವ ಹಬ್ಬವೇ 'ವರ್ಷತೊಡಕು'. ಇದು ಹೊಸ ವರ್ಷದ ಮೊದಲ 'ತೊಡಕು' ಅಥವಾ ಕೆಲಸದ ಆರಂಭವನ್ನು ಸೂಚಿಸುವ ದಿನವಾಗಿದೆ. 'ಹೊಸತೊಡಕು' ಹಬ್ಬದ ಪ್ರಯುಕ್ತ ರಾಜ್ಯಾದ್ಯಂತ ಮಾಂಸಾಹಾರದ ಔತಣಕ್ಕೆ
ಗಲ್ಫ್ ಸಂಘರ್ಷ ತೀವ್ರ: ಭದ್ರತಾ ಮಂಡಳಿ ತುರ್ತು ಸಭೆ
ನ್ಯೂಯಾರ್ಕ್: ಇಸ್ರೇಲ್ ಹಾಗೂ ಅಮೆರಿಕದ ದಾಳಿಗೆ ಪ್ರತಿಯಾಗಿ ಗಲ್ಫ್ ದೇಶಗಳ ತೈಲ ಸೌಕರ್ಯಗಳನ್ನು ಗುರಿಯಾಗಿಸಿ ಇರಾನ್ ದಾಳಿ ನಡೆಸುತ್ತಿರುವ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿರುವ ವಿಶ್ವಸಂಸ್ಥೆಯ ಭದ್ರತಾ ಮಂಡಳಿ, ಈ ವಿಷಯದ ಬಗ್ಗೆ ಚರ್ಚಿಸಲು ತುರ್ತು ಸಭೆ ನಡೆಸಿತು. ಸಭೆಯಲ್ಲಿ ಮಾತನಾಡಿದ ಬಹರೈನ್ ರಾಯಭಾರಿ ಜಮಾಲ್ ಅಲ್ ರೋವಿ ಅವರು, ಗಲ್ಫ್ ದೇಶಗಳು ಹಾಗೂ ಜೋರ್ಡಾನ್ ಮೇಲಿನ ಇರಾನ್ ನ ದಾಳಿಯನ್ನು ಅಮಾನುಷ ಎಂದರು. ಗಲ್ಫ್ ದೇಶಗಳ ಮೇಲೆ ಇರಾನ್ ನಡೆಸುತ್ತಿರುವ ದಾಳಿಯನ್ನು ತಕ್ಷಣವೇ ನಿಲ್ಲಿಸಬೇಕು ಎಂದು ಆಗ್ರಹಿಸುವ ಮಾರ್ಚ್ 11ರ ನಿರ್ಣಯವನ್ನು ಇರಾನ್ ಗೌರವಿಸಬೇಕು ಎಂದು ಹೇಳಿದರು. ಈ ಸಂಬಂಧದ ನಿರ್ಣಯವನ್ನು 13-0 ಮತಗಳಿಂದ ಅಂಗೀಕರಿಸಲಾಯಿತು. ರಷ್ಯಾ ಹಾಗೂ ಚೀನಾ ಮತದಾನದಿಂದ ದೂರ ಉಳಿದವು. ಜೊತೆಗೆ ಹಾರ್ಮುಝ್ ಜಲಸಂಧಿಯಲ್ಲಿ ಹಡಗುಗಳ ಸರಾಗ ಸಂಚಾರಕ್ಕೆ ತಡೆಯೊಡ್ಡುವುದನ್ನೂ ಇರಾನ್ ನಿಲ್ಲಿಸಬೇಕು ಎಂದು ಆಗ್ರಹಿಸಲಾಗಿದೆ. ಜಾಗತಿಕ ತೈಲ ಸರಬರಾಜಿನ ಶೇಕಡ 20ರಷ್ಟು ತೈಲ ಉತ್ಪನ್ನಗಳು ಈ ಮಾರ್ಗದ ಮೂಲಕ ಸಾಗಾಣಿಕೆಯಾಗುತ್ತವೆ.
ರಾಜಸ್ಥಾನ ರಾಯಲ್ಸ್ ನಾಯಕತ್ವ ಬಗ್ಗೆ ಅಚ್ಚರಿ; ವೈಭವ್ ಸೂರ್ಯವಂಶಿಗೆ ಕಿವಿಮಾತು ಹೇಳಿದ ಬೌಲರ್!
ಜೈಪುರ: ಐಪಿಎಲ್ನಲ್ಲಿ ರಾಜಸ್ಥಾನ ರಾಯಲ್ಸ್ ತಂಡವನ್ನು ಮುನ್ನಡೆಸುವ ಅವಕಾಶವನ್ನು ರಿಯಾನ್ ಪರಾಗ್ ಅವರಿಗೆ ನೀಡಿದ ಬಗ್ಗೆ ಭಾರತ ತಂಡದ ಮಾಜಿ ವೇಗಿ ಲಕ್ಷ್ಮೀಪತಿ ಬಾಲಾಜಿ ತೀವ್ರ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಯಶಸ್ವಿ ಜೈಸ್ವಾಲ್, ರವೀಂದ್ರ ಜಡೇಜಾ, ಇಂಗ್ಲೆಂಡ್ನ ಆಲ್ರೌಂಡರ್ ಸ್ಯಾಮ್ ಕರನ್ ಅವರಂಥ ದಿಗ್ಗಜರಿದ್ದರೂ, ಪರಾಗ್ಗೆ ಅವಕಾಶ ನೀಡಿರುವ ಕ್ರಮವನ್ನು ಬಾಲಾಜಿ ಪ್ರಶ್ನಿಸಿದ್ದಾರೆ. ಜಿಯೋಸ್ಟಾರ್ ಜತೆ ಮಾತನಾಡಿದ ಅವರು, ಈ ಕ್ರಮ ಒಂದು ಬಗೆಯ ಜೂಜು ಎಂದು ಬಣ್ಣಿಸಿದ್ದಾರೆ. ಆದಾಗ್ಯೂ ಮುಖ್ಯ ಕೋಚ್ ಕುಮಾರ್ ಸಂಗಕ್ಕಾರ ಅವರ ನೇತೃತ್ವದಲ್ಲಿ ತಂಡ ಹಲವು ಧನಾತ್ಮಕ ಅಂಶಗಳನ್ನು ಹೊಂದಿದೆ ಎಂದು ವಿಶ್ಲೇಷಿಸಿದ್ದಾರೆ. ಐಪಿಎಲ್ ತಂಡದ ನಾಯಕತ್ವ ಕೇವಲ ಮೈದಾನದ ನಿರ್ಧಾರಗಳಿಗೆ ಮಾತ್ರ ಸಂಬಂಧಿಸಿದ್ದಲ್ಲ; ಡ್ರೆಸ್ಸಿಂಗ್ ರೂಂ ನಿಭಾಯಿಸುವುದೂ ಕೂಡ ಮುಖ್ಯ. ಧ್ವನಿ ಹಾಗೂ ವಿಶ್ವಾಸಾರ್ಹತೆ ಇಲ್ಲಿ ಪ್ರಮುಖ. ಒಂದರ್ಥದಲ್ಲಿ ಇದು ಎರಡು ಅಲುಗಿನ ಕತ್ತಿ. ಆದಾಗ್ಯೂ ಸಂಗಕ್ಕಾರ ಅವರ ಮಾರ್ಗದರ್ಶನದಲ್ಲಿ ಇದು ಯುವ ಆಟಗಾರನಿಗೆ ಮೌಲಿಕ ಕಲಿಕೆಯ ಅವಕಾಶ. ಸಾಧನೆ ಮತ್ತು ನಾಯಕತ್ವದ ಸಮತೋಲನವನ್ನು ನಿಭಾಯಿಸುವಲ್ಲಿ ಯಶಸ್ವಿಯಾದರೆ, ಅದು ನಿಜಕ್ಕೂ ಆತನಿಗೆ ನೆರವಾಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಯುವ ಆಟಗಾರರಾದ ವೈಭವ್ ಸೂರ್ಯವಂಶಿಯಂಥವರು ಆಟದಲ್ಲಿ ನಿರಂತರತೆ ಕಾಯ್ದುಕೊಳ್ಳುವ ಅಗತ್ಯವಿದೆ ಎಂದೂ ಅವರು ಕಿವಿಮಾತು ಹೇಳಿದ್ದಾರೆ. ವೈಭವ್ ಅವರ ಪ್ರತಿಭೆಯನ್ನು ನಾವು ನೋಡಿದ್ದೇವೆ. ಗುಜರಾತ್ ಟೈಟನ್ಸ್ ವಿರುದ್ಧದ ಅವರ ಶತಕ ಅದ್ಭುತ. ಆದರೆ ಎರಡನೇ ಸೀಸನ್ ಸದಾ ಕಠಿಣ. ವಿರೋಧಿ ತಂಡಗಳು ಅವರ ಆಟದ ಬಗ್ಗೆ ಅಧ್ಯಯನ ಮಾಡಿರುತ್ತವೆ. ಸಾಧನೆಯನ್ನು ಉಳಿಸಿಕೊಂಡು ಹೋಗುವುದು ಸವಾಲಿನದ್ದು. ನಿರಂತರತೆಯನ್ನು ಕಾಪಾಡಿಕೊಳ್ಳುವಲ್ಲಿ ಅವರಿಗೆ ಸಂಗಕ್ಕಾರ ಅವರ ಮಾರ್ಗದರ್ಶನ ಮಹತ್ವದ್ದು ಎಂದು ಹೇಳಿದ್ದಾರೆ.
ಅಮೆರಿಕ- ಇಸ್ರೇಲ್ ದಾಳಿಗೆ ಪ್ರತಿ ದಾಳಿಯಾಗಿ ಇರಾನ್ ಹರ್ಮುಜ್ ಜಲಸಂಧಿಯನ್ನು ಮುಚ್ಚಿರುವುದು ಜಾಗತಿಕ ತೈಲ ಸಮಸ್ಯೆಗೆ ಕಾರಣವಾಗಿದೆ. ಹೀಗಾಗಿ ಪ್ರಮುಖ ರಾಷ್ಟ್ರಗಳು ಮುಂದೆ ಬಂದು ಹಾರ್ಮುಜ್ನಲ್ಲಿ ಹಡಗುಗಳ ಸುರಕ್ಷಿತ ಸಂಚಾರಕ್ಕೆ ನೆರವಾಗಲು ನಿರ್ಧರಿಸಿವೆ.
ಇರಾನ್ ಆಡಳಿತ ವ್ಯವಸ್ಥೆ, ಶಸ್ತ್ರಾಸ್ತ್ರ-ಪರಮಾಣ ಅಸ್ತ್ರಗಳನ್ನು ತಯಾರಿಸುವ ವ್ಯವಸ್ಥೆಯನ್ನು ನಾಶಪಡಿಸಿದ್ದೇವೆ, ನಮ್ಮ ಬಳಿ ಉತ್ತಮವಾದ ವಾಯುಪಡೆ, ಗುಪ್ತಚರ ಮಾಹಿತಿಗಳು ಇವೆ ಎಂದು ಬೆಂಜಮಿನ್ ನೆತನ್ಯಾಹು ಮಾಧ್ಯಮಗಳಿಗೆ ಹೇಳಿದ್ದಾರೆ. ಅಲ್ಲದೆ ನಮ್ಮ ಮಿಲಿಟರಿ ಕಾರ್ಯಾಚರಣೆ ಸ್ವತಂತ್ರವಾದುದು, ಹಾಗೆಯೇ ಅಮೆರಿಕವೂ ಅವರಿಗೆ ಸರಿ ಅನಿಸಿದ್ದನ್ನು ಮಾಡುತ್ತಾರೆ. ನಾವು ಃಏಳಿಕೊಡಲು ಸಾಧ್ಯವಿಲ್ಲ ಎಂದಿದ್ದಾರೆ.
ಗಲ್ಫ್ ರಾಷ್ಟ್ರಗಳ ಸಂಕಷ್ಟ: ವಿಮಾನ ರದ್ದತಿಯಿಂದ ಹಬ್ಬ- ಈದ್ಗೆ ಬರಲಾಗದೆ ಪರದಾಟ, ಕನ್ನಡಿಗಾಸ್ ಹೆಲ್ಪ್ ಲೈನ್ ನೆರವು
ಉದ್ಯೋಗ ನಂಬಿ ಪರವೂರು ಸೇರಿರುವ ಕನ್ನಡಗಿರಲ್ಲಿ ಹಲವರು ಯುದ್ಧ ಸ್ಥಿತಿಯಿಂದಾಗಿ ಕಂಗಾಲಾದಾಗ ಅವರಿಗೆ ಕನ್ನಡಿಗಾಸ್ ಹೆಲ್ಪ್ಲೈನ್ ಸಂಘಟನೆ ವಿಶೇಷ ರಕ್ಷಣೆ ನೀಡುತ್ತಿದೆ. ಈವರೆಗೂ ವಿಮಾನ ಪ್ರಯಾಣದ ವ್ಯವಸ್ಥೆ, ಆಹಾರ ಕಿಟ್, ವೈದ್ಯಕೀಯ ಕಿಟ್ಗಳನ್ನು ಪೂರೈಸಿದೆ.
ಮಹಿಳೆ ಯನ್ನು ಬೆದರಿಸಿ ಅತ್ಯಾಚಾರ ಆರೋಪ: 67 ವರ್ಷದ ನಾಸಿಕ್ ಜ್ಯೋತಿಷಿಯ ಬಂಧನ; ಮಹಾರಾಷ್ಟ್ರ ರಾಜಕೀಯದಲ್ಲಿ ಸಂಚಲನ!
'ಕ್ಯಾಪ್ಟನ್' ಎಂದೇ ಖ್ಯಾತನಾದ ನಾಸಿಕ್ ನ ಪ್ರಭಾವಿ ಜ್ಯೋತಿಷಿಯೊಬ್ಬ 35 ವರ್ಷದ ಮಹಿಳೆಯ ಮೇಲೆ ಸತತ ಅತ್ಯಾಚಾರ ಎಸಗಿದ ಆರೋಪದಡಿ ಬಂಧಿತನಾಗಿದ್ದಾನೆ. ನಾಸಿಕ್ ನ ಗಂಗಾಪುರ ಪೊಲೀಸರು ಕೇಸು ದಾಖಲಿಸಿ ತನಿಖೆ ನಡೆಸಿದಾಗ ಈತ 58 ಮಹಿಳೆಯರಿಗೆ ವಂಚಿಸಿ ದೌರ್ಜನ್ಯ ಎಸಗಿರುವುದು ಪತ್ತೆಯಾಗಿದೆ. ಈತ ಆಡಳಿತಾರೂಢ ಶಿವಸೇನೆ (ಶಿಂಧೆ ಬಣ) ಜೊತೆ ಗುರುತಿಸಿಕೊಂಡಿರುವುದು ಮಹಾರಾಷ್ಟ್ರ ರಾಜಕಾರಣದಲ್ಲಿ ತೀವ್ರ ಸಂಚಲನ ಮೂಡಿಸಿದ್ದು, ವಿರೋಧ ಪಕ್ಷಗಳು ಆಡಳಿತ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿವೆ.
‘ಸಮಾಧಾನ ಮಹೋತ್ಸವ’ ಕಾರ್ಯಕ್ರಮ ನಡೆಸಲು ಹೈಕೋರ್ಟ್ ಅನುಮತಿ: ಪ್ರಶಾಂತ್ ಜತ್ತನ್ನ
ಉಡುಪಿ: ಘನ ಮೋಹನ್ ಸಿ.ಲಾಝರಸ್ ನೇತೃತ್ವದಲ್ಲಿ ಮಾ.20ರಿಂದ 22ರವರೆಗೆ ಉಡುಪಿಯ ಮಿಷನ್ ಕಾಂಪೌಂಡಿನಲ್ಲಿ ಆಯೋಜಿಸಿರುವ ‘ಸಮಾಧಾನ ಮಹೋತ್ಸವ’ ಕಾರ್ಯಕ್ರಮ ನಡೆಸಲು ರಾಜ್ಯ ಹೈಕೋರ್ಟ್ ಹಸಿರು ನಿಶಾನೆ ತೋರಿದೆ ಎಂದು ಭಾರತೀಯ ಕ್ರೈಸ್ತ ಒಕ್ಕೂಟ ಇದರ ರಾಜ್ಯಾಧ್ಯಕ್ಷರಾದ ಪ್ರಶಾಂತ್ ಜತ್ತನ್ನ ತಿಳಿಸಿದ್ದಾರೆ. ಮೂರು ದಿನಗಳ ಸಮಾಧಾನ ಮಹೋತ್ಸವ ಕಾರ್ಯಕ್ರಮವನ್ನು ಫೆಲೋಶಿಪ್ ಓಫ್ ಉಡುಪಿ ಚರ್ಚಸ್ ಇದರ ವತಿಯಿಂದ ಆಯೋಜಿಸಲು ನಿರ್ಧರಿಸಲಾಗಿದ್ದು, ಸುಮಾರು ಐದಾರು ತಿಂಗಳುಗಳಿಂದ ಇದಕ್ಕಾಗಿ ಸಂಪೂರ್ಣ ತಯಾರಿಯನ್ನು ಕೂಡ ನಡೆಸಲಾಗಿದೆ. ಇದರಲ್ಲಿ ಮುಖ್ಯ ಪ್ರವಚನಕಾರರಾಗಿ ಘನ ಮೋಹನ್ ಸಿ.ಲಾಝರಸ್ ಅವರು ಆಗಮಿಸಲಿದ್ದಾರೆ. ಅವರು ಉಡುಪಿಗೆ ಈ ಹಿಂದೆ ಕೂಡ ಎರಡು ಬಾರಿ ಪ್ರವಚನಕಾರರಾಗಿ ಆಗಮಿಸಿದ್ದಾರೆ. ಕ್ರೈಸ್ತರಿಗೆ ಪ್ರಸ್ತುತ ತಪಸ್ಸು ಕಾಲವಾಗಿದ್ದು ಈ ಸಂದರ್ಭದಲ್ಲಿ ಬಹಳಷ್ಟು ಭಕ್ತಿ ಸಂಜೀವನ ಕೂಟಗಳನ್ನು ಆಯೋಜಿಸ ಲಾಗುತ್ತದೆ. ಅದೇ ನಿಟ್ಟಿನಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಿದ್ದು ಅಧಿಕಾರಿಗಳಿಗೆ ಕೂಡ 20 ದಿನಗಳ ಮೊದಲೇ ಮಾಹಿತಿ ನೀಡಲಾಗಿತ್ತು. ಆದರೆ ಕೆಲವೊಂದು ಸಂಘಟನೆಗಳು ಬಂದು ಸಮಾಧಾನ ಮಹೋತ್ಸವ ಮಾಡಲು ಬಿಡು ವುದಿಲ್ಲ ಎಂಬ ಬೆದರಿಕೆಯ ಮಾತುಗಳನ್ನು ಮಾಧ್ಯಮದ ಮೂಲಕ ನೀಡಿದ್ದರು. ಈ ಕುರಿತು ಪೊಲೀಸ್ ಇಲಾಖೆಯ ವರನ್ನು ಸಂಪರ್ಕಿಸಿದಾಗಿ ಸಂದೇಶ ನೀಡುವ ವ್ಯಕ್ತಿಯನ್ನು ಬದಲಾಯಿಸಲು ಪೊಲೀಸರು ಮನವಿ ಮಾಡಿದ್ದರು. ಆದರೆ ಈಗಾಗಲೇ ಪೂರ್ಣ ತಯಾರಿ ಆಗಿದ್ದು ಯಾವುದೇ ರೀತಿಯ ಸಮಸ್ಯೆ ಆಗಬಾರದು ಎಂಬ ನಿಟ್ಟಿನಲ್ಲಿ ಸಂಘಟಕರು ಮಾನ್ಯ ಉಚ್ಚ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದು ವಾದ ವಿವಾದಗಳನ್ನು ಆಲಿಸಿ ಕೊನೆಗೆ ಕಾರ್ಯ ಕ್ರಮವನ್ನು ನಡೆಸಲು ನ್ಯಾಯಾಲಯ ಪರವಾನಿಗೆಯನ್ನು ನೀಡಿದೆ. ಈ ಮೂಲಕ ನ್ಯಾಯಾಲಯ ನಮ್ಮ ಮೂಲಭೂತ ಹಕ್ಕುಗಳನ್ನು ಎತ್ತಿ ಹಿಡಿದು ಕಾರ್ಯಕ್ರಮಕ್ಕೆ ಸೂಕ್ತ ಭದ್ರತೆಯನ್ನು ಒದಗಿಸುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸೂಚನೆ ನೀಡಿದೆ. ನ್ಯಾಯಾಲಯದ ಆದೇಶದಂತೆ ಈಗಾಗಲೇ ತಯಾರಿ ಕೊನೆಯ ಹಂತದಲ್ಲಿದ್ದು ಕಾರ್ಯಕ್ರಮ ಯಶಸ್ವಿಯಾಗಿ ಜರುಗಲಿದೆ. ಸಾರ್ವಜನಿಕ ಕ್ರೈಸ್ತ ಬಂಧುಗಳು ಗಾಳಿಸುದ್ದಿಗೆ ಕಿವಿಗೊಡದೆ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಪ್ರಶಾಂತ್ ಜತ್ತನ್ನ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.
ಇರಾನ್ ಸಂಘರ್ಷ ಪರಿಣಾಮ ತೈಲ ಸಂಸ್ಕರಣಾ ಘಟಕಗಳೇ ಉಡೀಸ್, ಜಗತ್ತಿನಾದ್ಯಂತ ತೈಲ ಬೆಲೆ ಏರಿಕೆಯ ಭೀತಿ... Iran Conflict
ಮಧ್ಯಪ್ರಾಚ್ಯ ಪರಿಸ್ಥಿತಿ ಈಗ ಹೇಗೆ ಆಗಿದೆ ಎಂದರೆ, ಒಂದು ಕಡೆ ಯುದ್ಧ ನಿಲ್ಲದೇ ಇದ್ದರೆ ಸರ್ವನಾಶ ಗ್ಯಾರಂಟಿ. ಇನ್ನೊಂದು ಕಡೆ ಯುದ್ಧ ನಿಲ್ಲಿಸಬೇಕು ಎಂದರೆ ನೂರಾರು ಅಡ್ಡಿ ಆತಂಕದ ಜೊತೆಯಲ್ಲೇ ಅಮೆರಿಕ ಅಧ್ಯಕ್ಷರ ಪ್ರತಿಷ್ಠೆಯ ಪ್ರಶ್ನೆ ಎದುರಾಗಿದೆ. ಹೀಗಾಗಿ ಇರಾನ್ ಮತ್ತು ಅಮೆರಿಕ ನಡುವಿನ ಈ ಯುದ್ಧ ಬಿಸಿ ತುಪ್ಪವಾಗಿ ಪರಿಣಮಿಸಿದೆ ಗಲ್ಫ್ ದೇಶಗಳಿಗೆ. ಹೀಗಿದ್ದಾಗ ಇಸ್ರೇಲ್
‘ಮುಹಮ್ಮದ್’ ದೀಪಕ್ ಗೆ ಉತ್ತರಾಖಂಡ ಹೈಕೋರ್ಟ್ ತರಾಟೆ!
“ಶಂಕಿತ ಆರೋಪಿಯಾಗಿರುವ ನೀವು ಹೇಗೆ ರಕ್ಷಣೆ ಕೇಳುತ್ತೀರಿ?”
ಯಾರನ್ನು ಗುರಿಯಾಗಿರಿಸಿ ಸಂಜೀವ್ ಗೋಯೆಂಕಾ ಎಕ್ಸ್ ಪೋಸ್ಟ್? ಕೆಎಲ್ ರಾಹುಲ್ ಅಥವಾ ರಿಷಬ್ ಪಂತ್?
ಐಪಿಎಲ್ 2026ರ ಆರಂಭಕ್ಕೂ ಮುನ್ನ ಲಖನೌ ಸೂಪರ್ ಜೈಂಟ್ಸ್ ಮಾಲೀಕ ಸಂಜೀವ್ ಗೋಯೆಂಕಾ ಅವರು ``ನಾನು ಜನರನ್ನು ಫಲಿತಾಂಶದ ಮೇಲೆಯೇ ಅಳೆಯುತ್ತೇನೆ'' ಎಂದು ಹಾಕಿರುವ ಎಕ್ಸ್ ಪೋಸ್ಟ್ ಇದೀಗ ಭಾರಿ ಚರ್ಚೆ ಹುಟ್ಟುಹಾಕಿದೆ. ಅವರು ತಮ್ಮ ಪೋಸ್ಟ್ ನಲ್ಲಿ ನಿರ್ದಿಷ್ಟವಾಗಿ ಯಾರ ಹೆಸರನ್ನೂ ಉಲ್ಲೇಖಿಸಿಲ್ಲ. ಕ್ರಿಕೆಟ್ ಬಗ್ಗೆ ಎಂದೂ ಎಲ್ಲೂ ಹೇಳಿಲ್ಲ. ಆದರೂ ಇದು ಮಾಜಿ ನಾಯಕ ಕೆ.ಎಲ್. ರಾಹುಲ್ ಅವರಿಗೆ ನೀಡಿದ ಟಾಂಗ್ ಅಥವಾ ನಾಯಕ ರಿಷಬ್ ಪಂತ್ ಅವರಿಗೆ ನೀಡಿದ ಎಚ್ಚರಿಕೆಯೇ ಎಂಬ ಬಗ್ಗೆ ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ.
ಪ್ಯೋಂಗ್ಯಾಂಗ್: ಉತ್ತರ ಕೊರಿಯಾದಲ್ಲಿ ಮಾರ್ಚ್ 15ರಂದು ನಡೆದ 15ನೇ ಸುಪ್ರೀಂ ಪೀಪಲ್ಸ್ ಅಸೆಂಬ್ಲಿ ಚುನಾವಣೆಯಲ್ಲಿ ನಾಯಕ ಕಿಮ್ ಜಾಂಗ್ ಉನ್ ನೇತೃತ್ವದ ಆಡಳಿತ ಪಕ್ಷ ವರ್ಕರ್ಸ್ ಪಾರ್ಟಿ ಆಫ್ ಕೊರಿಯಾ ಹಾಗೂ ಅದರ ಮಿತ್ರಪಕ್ಷಗಳು ಬಹುತೇಕ ಎಲ್ಲಾ ಮತಗಳನ್ನು ಪಡೆದುಕೊಂಡಿವೆ. ರಾಜ್ಯ ಮಾಧ್ಯಮ ಕೊರಿಯನ್ ಸೆಂಟ್ರಲ್ ನ್ಯೂಸ್ ಏಜೆನ್ಸಿ (ಕೆಸಿಎನ್ಎ) ಪ್ರಕಾರ, ಶೇ.99.93 ಮತಗಳು ಆಡಳಿತ ಪಕ್ಷದ ಪರವಾಗಿ ಚಲಾಯಿಸಲ್ಪಟ್ಟಿವೆ. ಪ್ರತಿ ಕ್ಷೇತ್ರದಲ್ಲೂ ಆಡಳಿತ ಪಕ್ಷದ ಪೂರ್ವಾನುಮೋದಿತ ಅಭ್ಯರ್ಥಿಯೊಬ್ಬನೇ ಇದ್ದಿದ್ದರಿಂದ, ಎಲ್ಲಾ ಸ್ಥಾನಗಳಲ್ಲೂ ಅದೇ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಚುನಾವಣೆಯಲ್ಲಿ ಯಾವುದೇ ವಿರೋಧ ಪಕ್ಷದ ಅಭ್ಯರ್ಥಿಗಳು ಸ್ಪರ್ಧಿಸಲಿಲ್ಲ. ಒಟ್ಟು ಮತದಾನ ಪ್ರಮಾಣ ಶೇ.99.99 ಆಗಿದ್ದು, ನೋಂದಾಯಿತ ಮತದಾರರಲ್ಲಿ ಶೇ.0.0037 ಜನರು ವಿದೇಶದಲ್ಲಿ ಅಥವಾ ಸಮುದ್ರ ಪ್ರದೇಶದಲ್ಲಿ ಕೆಲಸ ಮಾಡುತ್ತಿದ್ದ ಕಾರಣ ಮತ ಚಲಾಯಿಸಲು ಸಾಧ್ಯವಾಗಲಿಲ್ಲ. ಜೊತೆಗೆ, ಶೇ.0.00003 ಜನರು ಮಾತ್ರ ಮತದಾನದಲ್ಲಿ ಭಾಗವಹಿಸಿಲ್ಲ ಎಂದು ವರದಿ ತಿಳಿಸಿದೆ. 0.07% ಮತಗಳು ಯಾರಿಗೆ ಹೋದವು? ಈ ಚುನಾವಣೆಯಲ್ಲಿ ಮತದಾರರಿಗೆ ‘ಹೌದು’ ಅಥವಾ ‘ಇಲ್ಲ’ ಎಂಬ ಎರಡು ಆಯ್ಕೆಗಳು ಮಾತ್ರ ಇದ್ದವು. ಹೀಗಾಗಿ ಶೇ.0.07 ಮತಗಳು ಯಾವುದೇ ವಿರೋಧ ಪಕ್ಷಕ್ಕೆ ಹೋಗಿಲ್ಲ. ಬದಲಾಗಿ, ಅಧಿಕೃತ ಅಭ್ಯರ್ಥಿಯನ್ನು ತಿರಸ್ಕರಿಸಿ ‘ಇಲ್ಲ’ ಎಂದು ಮತ ಚಲಾಯಿಸಿದವರ ಸಂಖ್ಯೆಯನ್ನು ಸೂಚಿಸುತ್ತವೆ. ದಶಕಗಳ ಬಳಿಕ ಇದೇ ಮೊದಲ ಬಾರಿಗೆ ಸಂಸತ್ತಿನ ಚುನಾವಣೆಯಲ್ಲಿ ‘ಇಲ್ಲ’ ಮತಗಳ ಉಪಸ್ಥಿತಿಯನ್ನು ರಾಜ್ಯ ಮಾಧ್ಯಮವೇ ಬಹಿರಂಗವಾಗಿ ಒಪ್ಪಿಕೊಂಡಿದೆ. 1957ರಿಂದ ಇಂತಹ ಮಾಹಿತಿಯನ್ನು ಸಾರ್ವಜನಿಕವಾಗಿ ಪ್ರಕಟಿಸಲಾಗಿರಲಿಲ್ಲ ಎಂದು ವರದಿಗಳು ತಿಳಿಸಿವೆ. ಚುನಾವಣಾ ನಿಯಮಗಳ ಪ್ರಕಾರ, ಕಾರ್ಮಿಕರು, ರೈತರು, ಬುದ್ಧಿಜೀವಿಗಳು, ಸೈನಿಕರು ಮತ್ತು ಅಧಿಕಾರಿಗಳನ್ನು ಒಳಗೊಂಡು ಒಟ್ಟು 687 ಪ್ರತಿನಿಧಿಗಳನ್ನು ಸುಪ್ರೀಂ ಪೀಪಲ್ಸ್ ಅಸೆಂಬ್ಲಿಗೆ ಆಯ್ಕೆ ಮಾಡಲಾಗಿದೆ. ಕಿಮ್ ಜಾಂಗ್ ಉನ್ ಅವರು 2011ರಲ್ಲಿ ತಮ್ಮ ತಂದೆ ಕಿಮ್ ಜೊಂಗ್ ಇಲ್ ನಿಧನದ ಬಳಿಕ ಅಧಿಕಾರಕ್ಕೆ ಬಂದರು. 2019ರಲ್ಲಿ ಸಂವಿಧಾನ ತಿದ್ದುಪಡಿ ಮೂಲಕ ಅವರನ್ನು ಅಧಿಕೃತವಾಗಿ ರಾಷ್ಟ್ರದ ಮುಖ್ಯಸ್ಥರನ್ನಾಗಿ ಘೋಷಿಸಲಾಗಿದ್ದು, ಸರ್ಕಾರ ಮತ್ತು ಸೈನ್ಯದ ಮೇಲಿನ ಅವರ ಅಧಿಕಾರವನ್ನು ಇನ್ನಷ್ಟು ಬಲಪಡಿಸಲಾಗಿದೆ.
ಇರಾನ್ ದಾಳಿಯಿಂದ ಖತರ್ ನ ಶೇ.17 ರಷ್ಟು LNG ಉತ್ಪಾದನಾ ಸಾಮರ್ಥ್ಯಕ್ಕೆ ಹಾನಿ; ಮರುಸ್ಥಾಪನೆಗೆ ಬೇಕು 3–5 ವರ್ಷ!
ದೋಹಾ: ಇರಾನ್ ನಡೆಸಿದ ದಾಳಿಗಳ ಪರಿಣಾಮವಾಗಿ ಖತರ್ ನ ದ್ರವೀಕೃತ ನೈಸರ್ಗಿಕ ಅನಿಲ (LNG) ಉತ್ಪಾದನಾ ಸಾಮರ್ಥ್ಯದ ಸುಮಾರು 17 ಪ್ರತಿಶತವನ್ನು ಒದಗಿಸುವ ಪ್ರಮುಖ ಸೌಲಭ್ಯಗಳು ಗಂಭೀರವಾಗಿ ಹಾನಿಗೊಳಗಾಗಿವೆ ಎಂದು ಖತರ್ ಎನರ್ಜಿ ಸಂಸ್ಥೆಯ ಸಿಇಒ ಸಾದ್ ಅಲ್-ಕಾಬಿ ತಿಳಿಸಿದ್ದಾರೆ. ಹಾನಿಗೊಳಗಾದ ಮೂಲಸೌಕರ್ಯವನ್ನು ಸಂಪೂರ್ಣವಾಗಿ ಮರುಸ್ಥಾಪಿಸಲು ಕನಿಷ್ಠ ಮೂರುರಿಂದ ಐದು ವರ್ಷಗಳು ಬೇಕಾಗುತ್ತದೆ ಎಂದು ಅವರು ಹೇಳಿದ್ದಾರೆ. ರಮಝಾನ್ ತಿಂಗಳಲ್ಲಿ ಸಹೋದರ ಮುಸ್ಲಿಂ ದೇಶದಿಂದ ಈ ರೀತಿಯ ದಾಳಿ ನಡೆಯುತ್ತದೆ ಎಂದು ಕನಸಿನಲ್ಲಿಯೂ ನಿರೀಕ್ಷಿಸಿರಲಿಲ್ಲ ಎಂದು ಅಲ್-ಕಾಬಿ ವಿಷಾದ ವ್ಯಕ್ತಪಡಿಸಿದ್ದಾರೆ ಎಂದು ರಾಯಿಟರ್ಸ್ ಗೆ ನೀಡಿದ ಸಂದರ್ಶನದಲ್ಲಿ ಅವರು ಪ್ರತಿಕ್ರಿಯಿಸಿದ್ದಾರೆ. ಸರ್ಕಾರಿ ಸ್ವಾಮ್ಯದ ಖತರ್ ಎನರ್ಜಿ, ಇಟಲಿ, ಬೆಲ್ಜಿಯಂ, ದಕ್ಷಿಣ ಕೊರಿಯಾ ಮತ್ತು ಚೀನಾಕ್ಕೆ LNG ಪೂರೈಕೆಗೆ ಮಾಡಿಕೊಂಡಿರುವ ದೀರ್ಘಾವಧಿಯ ಒಪ್ಪಂದಗಳ ಮೇಲೆ ‘ಬಲವಂತದ ನಿರ್ಬಂಧ’ ಘೋಷಿಸುವ ಪರಿಸ್ಥಿತಿ ಎದುರಾಗಬಹುದು ಎಂದು ಅಲ್-ಕಾಬಿ ತಿಳಿಸಿದ್ದಾರೆ. “ಇವು ದೀರ್ಘಾವಧಿಯ ಒಪ್ಪಂದಗಳು. ಈ ಹಿನ್ನೆಲೆಯಲ್ಲಿ ನಾವು ಬಲವಂತದ ನಿರ್ಬಂಧವನ್ನು ಘೋಷಿಸಬೇಕಾಗಬಹುದು. ನಾವು ಈಗಾಗಲೇ ಅಲ್ಪಾವಧಿಗೆ ಅದನ್ನು ಘೋಷಿಸಿದ್ದೇವೆ. ಈಗ ಅವಧಿ ಹೇಗಿರುತ್ತದೆ ಎಂಬುದು ಮುಂದಿನ ಬೆಳವಣಿಗೆಗಳ ಮೇಲೆ ಅವಲಂಬಿತ,” ಎಂದು ಅವರು ಹೇಳಿದ್ದಾರೆ. ಹಾನಿಗೊಳಗಾದ LNG ಮೂಲಸೌಕರ್ಯವನ್ನು ನಿರ್ಮಿಸಲು ಸುಮಾರು 26 ಬಿಲಿಯನ್ ಡಾಲರ್ ವೆಚ್ಚವಾಗಿತ್ತು ಎಂದು ಅಲ್-ಕಾಬಿ ತಿಳಿಸಿದ್ದಾರೆ.
ಮಾ.20ರಂದು ಉಡುಪಿ ಜಿಲ್ಲೆಗೆ ಸಾರ್ವತ್ರಿಕ ರಜೆ: ಡಿಸಿ ಸ್ವರೂಪ ಟಿ.ಕೆ
ಉಡುಪಿ: ಇಂದು ಚಂದ್ರ ದರ್ಶನವಾದ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲೆಯಲ್ಲಿ ಶುಕ್ರವಾರ ಈದುಲ್ ಫಿತ್ರ್ ಆಚರಿಸಲಿರುವುದರಿಂದ ಉಡುಪಿ ಜಿಲ್ಲೆಯಾದ್ಯಂತ ಮಾರ್ಚ್ 20ರಂದು ಸಾರ್ವತ್ರಿಕ ರಜೆ ಘೋಷಿಸಿ ಜಿಲ್ಲಾಧಿಕಾರಿ ಸ್ವರೂಪ ಟಿ ಕೆ ಆದೇಶ ಹೊರಡಿಸಿದ್ದಾರೆ.
APSEZ ಕೊಲಂಬೊ ಟರ್ಮಿನಲ್: ಮೊದಲ ವರ್ಷದಲ್ಲೇ 10 ಲಕ್ಷ ಕಂಟೈನರ್ಗಳ ನಿರ್ವಹಣೆಯ ದಾಖಲೆ
ಕೊಲಂಬೊ: ಅದಾನಿ ಪೋರ್ಟ್ಸ್ ಅಂಡ್ ಸ್ಪೆಷಲ್ ಎಕನಾಮಿಕ್ ಜೋನ್ ಲಿಮಿಟೆಡ್ (APSEZ) ಶ್ರೀಲಂಕಾದಲ್ಲಿ ಮಹತ್ವದ ಮೈಲಿಗಲ್ಲೊಂದನ್ನು ತಲುಪಿದೆ. ತಾನು ನಿರ್ವಹಿಸುತ್ತಿರುವ 'ಕೊಲಂಬೊ ಪಶ್ಚಿಮ ಅಂತರಾಷ್ಟ್ರೀಯ ಟರ್ಮಿನಲ್' (CWIT) ನಲ್ಲಿ ಕಾರ್ಯಾಚರಣೆ ಆರಂಭಿಸಿದ ಕೇವಲ ಒಂದು ವರ್ಷದೊಳಗೆ ಬರೋಬ್ಬರಿ 1 ಮಿಲಿಯನ್ (10 ಲಕ್ಷ) ಟಿಇಯು (ಇಪ್ಪತ್ತು ಅಡಿ ಸಮಾನಾವಧಿಯ ಘಟಕಗಳು - TEUs) ಕಂಟೇನರ್ಗಳನ್ನು ನಿರ್ವಹಿಸುವ ಮೂಲಕ
8ನೇ ತರಗತಿಯ ಸಮಾಜ ವಿಜ್ಞಾನ ಪಠ್ಯಪುಸ್ತಕದಿಂದ ಮರಾಠಾ ಸಾಮ್ರಾಜ್ಯದ ನಕ್ಷೆ ತೆಗೆದು ಹಾಕಿದ NCERT; ಏನಿದು ವಿವಾದ?
ಐತಿಹಾಸಿಕ ನಿಖರತೆಯ ಬಗ್ಗೆ ಟೀಕೆಗಳನ್ನು ಎದುರಿಸಿದ ನಂತರ, ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ (NCERT) ತನ್ನ 8 ನೇ ತರಗತಿಯ ಸಮಾಜ ವಿಜ್ಞಾನ ಪಠ್ಯಪುಸ್ತಕ 'ಎಕ್ಸ್ಪ್ಲೋರಿಂಗ್ ಸೊಸೈಟಿ: ಇಂಡಿಯಾ ಮತ್ತು ಬಿಯಾಂಡ್ ಪಾರ್ಟ್-I' ನಿಂದ ವಿವಾದಾತ್ಮಕ ನಕ್ಷೆಯನ್ನು ಸದ್ದಿಲ್ಲದೆ ಹಿಂತೆಗೆದುಕೊಂಡಿದೆ. ನಕ್ಷೆಯು ಪ್ರಾದೇಶಿಕ ಇತಿಹಾಸವನ್ನು ತಪ್ಪಾಗಿ ಪ್ರತಿನಿಧಿಸುತ್ತದೆ ಎಂದು ರಾಜಸ್ಥಾನದ ಹಿಂದಿನ ರಾಜಮನೆತನದ ಸದಸ್ಯರು ಮತ್ತು ರಾಜಕೀಯ ಪ್ರತಿನಿಧಿಗಳು ಆಕ್ಷೇಪಣೆಗಳನ್ನು ಎತ್ತಿದ ನಂತರ ಎನ್ಸಿಇಆರ್ಟಿ ಈ ಕ್ರಮ ಕೈಗೊಂಡಿದೆ. ಏನಿದು ವಿವಾದ? ಈ ವಿಷಯವು ಜುಲೈ 2025 ರ ಆವೃತ್ತಿಯ ಪಠ್ಯಪುಸ್ತಕದ 3 ನೇ ಘಟಕ (ಪುಟ 71) ನಲ್ಲಿರುವ ನಕ್ಷೆಯ ಬಗ್ಗೆ ಆಗಿದೆ. ಈ ನಕ್ಷೆ 1759 ರಲ್ಲಿ ಮರಾಠಾ ಸಾಮ್ರಾಜ್ಯದ ಪ್ರಾದೇಶಿಕ ವ್ಯಾಪ್ತಿಯನ್ನು ಚಿತ್ರಿಸಿದೆ. ನಕ್ಷೆಯು ಜೈಸಲ್ಮೇರ್ ರಾಜಪ್ರಭುತ್ವದ ರಾಜ್ಯ ಮತ್ತು ವಿಸ್ತರಣೆಯ ಮೂಲಕ ರಾಜಸ್ಥಾನದ ಕೆಲವು ಭಾಗಗಳನ್ನು ಮರಾಠಾ ನಿಯಂತ್ರಣಕ್ಕೆ ಒಳಪಡಿಸಲಾಗಿದೆ ಎಂದು ವಿಮರ್ಶಕರು ವಾದಿಸಿದ್ದಾರೆ. 2025 ಆಗಸ್ಟ್ ರಲ್ಲಿ ಜೈಸಲ್ಮೇರ್ನ 44 ನೇ ಮಹಾರಾವಲ್ ಚೈತನ್ಯ ರಾಜ್ ಸಿಂಗ್ ಭಾಟಿ ಈ ವಿವಾದವನ್ನು ಎತ್ತಿದ್ದು, ಇದು ಇತಿಹಾಸವನ್ನು ದಾರಿತಪ್ಪಿಸುವ ಮತ್ತು ವಾಸ್ತವಿಕವಾಗಿ ಆಧಾರರಹಿತ ನಕ್ಷೆ ಎಂದಿದ್ದಾರೆ. ತಮ್ಮ ಆರಂಭಿಕ ಪ್ರತಿಕ್ರಿಯೆಯಲ್ಲಿ ಅವರು ಎನ್ಸಿಇಆರ್ಟಿ 8ನೇ ತರಗತಿಯ ಸಮಾಜ ವಿಜ್ಞಾನ ಪಠ್ಯಪುಸ್ತಕವು ಜೈಸಲ್ಮೇರ್ ಅನ್ನು ಅಂದಿನ ಮರಾಠಾ ಸಾಮ್ರಾಜ್ಯದ ಭಾಗವಾಗಿ ಚಿತ್ರಿಸುತ್ತದೆ. ಇದು ಇತಿಹಾಸವನ್ನು ದಾರಿತಪ್ಪಿಸುವ, ವಾಸ್ತವಿಕವಾಗಿ ಆಧಾರರಹಿತ ಮತ್ತು ತೀವ್ರವಾಗಿ ಆಕ್ಷೇಪಾರ್ಹವಾಗಿದೆ. ಜೈಸಲ್ಮೇರ್ನಲ್ಲಿ ಮರಾಠಾ ಪ್ರಾಬಲ್ಯ, ತೆರಿಗೆ ಅಥವಾ ಹಸ್ತಕ್ಷೇಪದ ಹಕ್ಕುಗಳನ್ನು ಯಾವುದೇ ವಿಶ್ವಾಸಾರ್ಹ ಐತಿಹಾಸಿಕ ದಾಖಲೆಗಳು ಬೆಂಬಲಿಸುವುದಿಲ್ಲ ಎಂದು ವಾದಿಸಿದ್ದಾರೆ. 2025 ಆಗಸ್ಟ್ ನಲ್ಲಿ ಅವರು ಎಕ್ಸ್ ನಲ್ಲಿ ಮಾಡಿದ ಪೋಸ್ಟ್ ನಲ್ಲಿ, ಭಾಟಿ ಅವರು ಇಂತಹ ಪರಿಶೀಲಿಸದ ಮತ್ತು ಐತಿಹಾಸಿಕವಾಗಿ ಆಧಾರರಹಿತ ಮಾಹಿತಿಯು ಎನ್ಸಿಇಆರ್ಟಿಯಂತಹ ಸಂಸ್ಥೆಗಳ ವಿಶ್ವಾಸಾರ್ಹತೆಯ ಮೇಲೆ ಅನುಮಾನವನ್ನು ಹುಟ್ಟುಹಾಕುವುದಲ್ಲದೆ, ನಮ್ಮ ಅದ್ಭುತ ಇತಿಹಾಸ ಮತ್ತು ಸಾರ್ವಜನಿಕ ಭಾವನೆಗಳಿಗೆ ಧಕ್ಕೆಯುಂಟು ಮಾಡುತ್ತದೆ. ಈ ವಿಷಯವು ಕೇವಲ ಪಠ್ಯಪುಸ್ತಕದಲ್ಲಿನ ದೋಷವಲ್ಲ. ಇದು ನಮ್ಮ ಪೂರ್ವಜರ ತ್ಯಾಗ, ಸಾರ್ವಭೌಮತ್ವ ಮತ್ತು ವೀರರ ಸಾಹಸಗಾಥೆಯನ್ನು ಕಳಂಕಗೊಳಿಸುವ ಪ್ರಯತ್ನವಾಗಿ ಕಂಡುಬರುತ್ತದೆ ಎಂದು ಬರೆದಿದ್ದಾರೆ. ಈ ಪೋಸ್ಟ್ ಬೆನ್ನಲ್ಲೇ ರಾಜಸ್ಥಾನದ ಇತರ ಹಿಂದಿನ ರಾಜಮನೆತನಗಳು ಸಹ ತಮ್ಮ ಪ್ರದೇಶಗಳನ್ನು ಮರಾಠ ಸಾಮ್ರಾಜ್ಯದ ಭಾಗವಾಗಿ ಚಿತ್ರಿಸುವುದನ್ನು ವಿರೋಧಿಸಿದವು. ಬಿಜೆಪಿ ಸಂಸದೆ ಮಹಿಮಾ ಕುಮಾರಿ ಮೇವಾರ್, ಶಾಸಕ ವಿಶ್ವರಾಜ್ ಸಿಂಗ್ ಮೇವಾರ್, ಹಿಂದಿನ ಅಲ್ವಾರ್ ರಾಜಮನೆತನದ ಮಾಜಿ ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಮತ್ತು ಬುಂಡಿಯ ಬ್ರಿಗೇಡಿಯರ್ (ನಿವೃತ್ತ) ಭೂಪೇಶ್ ಸಿಂಗ್ ಹಾಡಾ ಕೂಡಾ ಈ ವಿರೋಧಕ್ಕೆ ದನಿಗೂಡಿಸಿದ್ದರು. ನಕ್ಷೆಯು ಇತಿಹಾಸವನ್ನು ಆಧರಿಸಿದ್ದಲ್ಲ. ಇಲ್ಲಿ ರಾಜಸ್ಥಾನದಾದ್ಯಂತ ಅನೇಕ ಪ್ರದೇಶಗಳನ್ನು ತಪ್ಪಾಗಿ ನಿರೂಪಿಸಲಾಗಿದೆ ಎಂದು ವಾದಿಸಿ ಅವರು ಕೇಂದ್ರ ಸರ್ಕಾರದ ಮೊರೆ ಹೋಗಿದ್ದರು. ಅಂತಹ ಚಿತ್ರಣಗಳು ಪ್ರಾದೇಶಿಕ ಇತಿಹಾಸಗಳ ಬಗ್ಗೆ ವಿದ್ಯಾರ್ಥಿಗಳ ತಿಳುವಳಿಕೆಯನ್ನು ತಪ್ಪಾಗಿಸುತ್ತದೆ ಎಂಬ ಕಳವಳ ಅವರದ್ದಾಗಿತ್ತು. ಬಿಜೆಪಿ ಶಾಸಕ ಮತ್ತು ಹಿಂದಿನ ಮೇವಾರ್ ರಾಜಮನೆತನದ ಸದಸ್ಯ ವಿಶ್ವರಾಜ್ ಸಿಂಗ್ ಮೇವಾರ್ ಮತ್ತು ಅವರ ಪತ್ನಿ ಮತ್ತು ರಾಜ್ಸಮಂದ್ ಸಂಸದೆ ಮಹಿಮಾ ಕುಮಾರಿ ಕೂಡ ನಕ್ಷೆಯಲ್ಲಿನ ಚಿತ್ರಣವನ್ನು ಆಕ್ಷೇಪಿಸಿದರು. ಮೊದಲು ಬ್ರಿಟಿಷರ ಅಡಿಯಲ್ಲಿ, ಈಗ ಮರಾಠರ ಅಡಿಯಲ್ಲಿ ಎಂದು ತಪ್ಪಾಗಿ ನಿರೂಪಿಸಲಾಗಿದೆ. ಎನ್ಸಿಇಆರ್ಟಿನಲ್ಲಿ ಶಿಕ್ಷಣತಜ್ಞರಿಗೆ ಶಿಕ್ಷಣ ನೀಡುವವರು ಯಾರು?! ಅವರು ಭಾರತದ ವಾಸ್ತವಿಕ ಇತಿಹಾಸವನ್ನು ಪ್ರಸ್ತುತಪಡಿಸಲು ಸಮರ್ಥರಾಗಿದ್ದಾರೆಯೇ ಎಂದು ಅವರು X ನಲ್ಲಿ ಪೋಸ್ಟ್ ಮಾಡಿದ್ದಾರೆ. ಮಾಜಿ ಕೇಂದ್ರ ಸಚಿವ ಮತ್ತು ಕಾಂಗ್ರೆಸ್ ನಾಯಕ, ಅಲ್ವಾರ್ನ ಹಿಂದಿನ ರಾಜಮನೆತನದ ಸದಸ್ಯ ಭನ್ವರ್ ಜಿತೇಂದ್ರ ಸಿಂಗ್, ಇತಿಹಾಸವನ್ನು ಪ್ರಾದೇಶಿಕ ಅಥವಾ ರಾಜಕೀಯ ಕಾರ್ಯಸೂಚಿಗಳ ಮೂಲಕ ಅಲ್ಲ, ಪರಿಶೀಲಿಸಬಹುದಾದ ಸಂಗತಿಗಳ ಆಧಾರದ ಮೇಲೆ ಪ್ರಸ್ತುತಪಡಿಸಬೇಕು ಎಂದಿದ್ದರು. ಅಚ್ಚರಿಯ ವಿಷಯವೆಂದರೆ ಈ ನಕ್ಷೆಯು ರಾಜಸ್ಥಾನದ ಬಹುತೇಕ ಇಡೀ ಪ್ರದೇಶವನ್ನು ಮರಾಠರ ನಿಯಂತ್ರಣದಲ್ಲಿ ಚಿತ್ರಿಸುತ್ತದೆ, ಇದು ಎಂದಿಗೂ ಸಂಭವಿಸದ ಸಂಗತಿ. ಮರಾಠಾ ಇತಿಹಾಸವು ಯಾವಾಗಲೂ ಶಾಲಾ ಪಠ್ಯಕ್ರಮದ ಭಾಗವಾಗಿದ್ದರೂ, ಈ ನಿರ್ದಿಷ್ಟ ನಕ್ಷೆಯು ಇಡೀ ರಾಜಸ್ಥಾನವನ್ನು ಮರಾಠರ ಪ್ರಭಾವದಲ್ಲಿ ತೋರಿಸುತ್ತದೆ.18 ನೇ ಶತಮಾನದಲ್ಲಿ, ಮಾರ್ವಾರ್, ಮೇವಾರ್, ಬಿಕನೇರ್, ಜೈಪುರ, ಭರತ್ಪುರ, ಜೈಸಲ್ಮೇರ್ ಮತ್ತು ಅಲ್ವಾರ್ ಸೇರಿದಂತೆ ರಾಜಸ್ಥಾನದ ರಾಜಪ್ರಭುತ್ವದ ರಾಜ್ಯಗಳು ತಮ್ಮ ಸ್ವಾತಂತ್ರ್ಯ ಮತ್ತು ಸ್ವಾಯತ್ತತೆಯನ್ನು ಉಳಿಸಿಕೊಂಡಿವೆ ಎಂದು ಐತಿಹಾಸಿಕ ದಾಖಲೆಗಳು ಸ್ಪಷ್ಟವಾಗಿ ತೋರಿಸುತ್ತವೆ. ಪ್ರಬಲ ರಜಪೂತ ರಾಜ್ಯಗಳು ಮತ್ತು ಭರತ್ಪುರ ಜಾಟ್ ರಾಜ್ಯವು ತಮ್ಮ ಸ್ವ-ಆಡಳಿತ, ಮಿಲಿಟರಿ ಶಕ್ತಿ ಮತ್ತು ಶ್ರೀಮಂತ ಸಾಂಸ್ಕೃತಿಕ ಗುರುತಿಗೆ ಹೆಸರುವಾಸಿಯಾಗಿದ್ದವು. ಈ ಆಡಳಿತಗಾರರು ಮೊಘಲರು, ಮರಾಠರು ಅಥವಾ ನಂತರ ಬ್ರಿಟಿಷರಿಂದ ಪ್ರಾಬಲ್ಯವನ್ನು ನಿರಂತರವಾಗಿ ವಿರೋಧಿಸಿದರು. ಧಾರ್ಮಿಕ ಅಥವಾ ಪ್ರಾದೇಶಿಕ ಮಾರ್ಗಗಳಲ್ಲಿ ಇತಿಹಾಸವನ್ನು ವಿರೂಪಗೊಳಿಸುವುದು ಸತ್ಯಗಳನ್ನು ಫಿಕ್ಷನ್ ಆಗಿ ಪರಿವರ್ತಿಸುತ್ತದೆ. ಪಠ್ಯಪುಸ್ತಕದಲ್ಲಿನ ಈ ದೋಷವು ರಾಜಸ್ಥಾನದ ಯೋಧ ಆಡಳಿತಗಾರರ ಶೌರ್ಯ, ಸ್ವಾತಂತ್ರ್ಯ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಕಡಿಮೆ ಮಾಡುವ ಉದ್ದೇಶಪೂರ್ವಕ ಪ್ರಯತ್ನವೆಂದು ತೋರುತ್ತದೆ ಎಂದು ಸಿಂಗ್ ಹೇಳಿದ್ದಾರೆ. ಹಿಂದಿನ ಬುಂಡಿ ರಾಜಮನೆತನದ ಸದಸ್ಯ ಬ್ರಿಗೇಡಿಯರ್ (ನಿವೃತ್ತ) ಭೂಪೇಶ್ ಸಿಂಗ್ ಹಾಡಾ ಇದನ್ನು ಒಂದು ಕಾಲ್ಪನಿಕ ಸಾಮ್ರಾಜ್ಯ ಎಂದು ಕರೆದರು. ನಾವು ಎಂದಿಗೂ ಮರಾಠರ ನಿಯಂತ್ರಣದಲ್ಲಿ ಇರಲಿಲ್ಲ. ನಮ್ಮ ಹೆಮ್ಮೆಯನ್ನು ಕಟ್ಟುಕಥೆಗಳಿಂದ ಅವಮಾನಿಸಬೇಡಿ. ಲೂಟಿ ಮಾಡುವುದು ಮತ್ತು ದಬ್ಬಾಳಿಕೆ ಮಾಡುವುದನ್ನು ಸಾಮ್ರಾಜ್ಯ ನಿರ್ಮಾಣ ಎಂದು ಕರೆಯಲಾಗುವುದಿಲ್ಲ ಎಂದಿದ್ದಾರೆ ಸಿಂಗ್ ಈಗ ಏನು ಬದಲಾಗಿದೆ? ಇತ್ತೀಚೆಗೆ ಪಠ್ಯಪುಸ್ತಕದ ಹಿಂದಿ ಡಿಜಿಟಲ್ ಆವೃತ್ತಿಯಿಂದ (ನವೆಂಬರ್ 2025 ಆವೃತ್ತಿ) ನಕ್ಷೆಯನ್ನು ತೆಗೆದುಹಾಕಲಾಗಿದೆ ಎಂದು ಭಾಟಿ ದೃಢಪಡಿಸಿದ್ದು, ಇದು ಸ್ವಾಗತಾರ್ಹ ಹೆಜ್ಜೆ ಎಂದಿದ್ದಾರೆ. ಭವಿಷ್ಯದಲ್ಲಿಯೂ ಸಹ, ಸತ್ಯಗಳ ಸತ್ಯಾಸತ್ಯತೆ ಮತ್ತು ಐತಿಹಾಸಿಕ ನಿಖರತೆಗೆ ವಿಶೇಷ ಗಮನ ನೀಡಲಾಗುವುದು ಎಂದು ನಾವು ಭಾವಿಸುತ್ತೇವೆ. ಇತಿಹಾಸವು ನಮ್ಮ ಸಾಂಸ್ಕೃತಿಕ ಪರಂಪರೆ, ಸ್ವಾಭಿಮಾನ ಮತ್ತು ಸಾರ್ವಜನಿಕ ಭಾವನೆಗಳಿಗೆ ಆಳವಾಗಿ ಸಂಪರ್ಕ ಹೊಂದಿದ ವಿಷಯವಾಗಿದೆ. ಆದ್ದರಿಂದ, ಯಾವುದೇ ಪ್ರಸ್ತುತಿಯು ಕಾರ್ಯಸೂಚಿ ಆಧಾರಿತವಾಗಿರದೆ, ನಿಷ್ಪಕ್ಷಪಾತ ಮತ್ತು ಸತ್ಯ ಆಧಾರಿತವಾಗಿರಬೇಕು ಎಂದಿದ್ದಾರೆ ಭಾಟಿ. ಆದಾಗ್ಯೂ, ತೆಗೆದುಹಾಕುವಿಕೆಯ ಹಿಂದಿನ ತಾರ್ಕಿಕತೆಯನ್ನು ವಿವರಿಸುವ ವಿವರವಾದ ಸಾರ್ವಜನಿಕ ಸ್ಪಷ್ಟೀಕರಣವನ್ನು ಎನ್ಸಿಇಆರ್ಟಿ ನೀಡಿಲ್ಲ. ಪಠ್ಯಪುಸ್ತಕದ ಹಿಂದಿ ಆವೃತ್ತಿಯ ಡಿಜಿಟಲ್ ಆವೃತ್ತಿಯಿಂದ ನಕ್ಷೆಯನ್ನು ತೆಗೆದುಹಾಕಲಾಗಿದೆ. ಪುಟ 70 ರ ಅಡಿಟಿಪ್ಪಣಿಯು ಈಗ ನಕ್ಷೆ 3.11 ರ ಪರಿಷ್ಕೃತ ಆವೃತ್ತಿಯನ್ನು ಮುಂದಿನ ಆವೃತ್ತಿಯಲ್ಲಿ ಸೇರಿಸಲಾಗುವುದು ಎಂದು ಹೇಳುತ್ತದೆ. ಮತ್ತೊಂದೆಡೆ, ಮೂಲ ನಕ್ಷೆಯು ಪಠ್ಯಪುಸ್ತಕದ ಇಂಗ್ಲಿಷ್ ಆವೃತ್ತಿಯಲ್ಲಿ ಹಾಗೇ ಉಳಿದುಕೊಂಡಿದೆ. NCERT ವಿವಾದಕ್ಕೀಡಾಗಿದ್ದು ಇದೇ ಮೊದಲಲ್ಲ: ‘ಎಕ್ಸ್ಪ್ಲೋರಿಂಗ್ ಸೊಸೈಟಿ: ಇಂಡಿಯಾ ಅಂಡ್ ಬಿಯಾಂಡ್’ ಪುಸ್ತಕ ವಿವಾದಕ್ಕೆ ಕಾರಣವಾಗುತ್ತಿರುವುದು ಇದೇ ಮೊದಲಲ್ಲ. ಇದಕ್ಕೂ ಮೊದಲು, ನ್ಯಾಯಾಂಗದ ತೀವ್ರ ಆಕ್ಷೇಪಣೆಗಳ ನಂತರ ಎನ್ಸಿಇಆರ್ಟಿ 8 ನೇ ತರಗತಿಯ ಪಠ್ಯಪುಸ್ತಕದ ಸಂಪೂರ್ಣ ಭಾಗ-II ಅನ್ನು ಹಿಂತೆಗೆದುಕೊಳ್ಳಬೇಕಾಯಿತು. ನ್ಯಾಯಾಂಗದೊಳಗಿನ “ವಿವಿಧ ಹಂತಗಳಲ್ಲಿ” ಭ್ರಷ್ಟಾಚಾರವನ್ನು ಮತ್ತು ಭಾರತದ ನ್ಯಾಯಾಲಯಗಳ ಮೇಲೆ ಪರಿಣಾಮ ಬೀರುವ ರಚನಾತ್ಮಕ ಸಮಸ್ಯೆಗಳನ್ನು ಎತ್ತಿ ತೋರಿಸಿದ್ದಕ್ಕಾಗಿ ಪಠ್ಯಪುಸ್ತಕವು ಟೀಕೆಗೆ ಗುರಿಯಾಗಿತ್ತು. ಸುಪ್ರೀಂ ಕೋರ್ಟ್ ಶೀಘ್ರದಲ್ಲೇ ಮಧ್ಯಪ್ರವೇಶಿಸಿ, ಪುಸ್ತಕದ ಮೇಲೆ ಸಂಪೂರ್ಣ ನಿಷೇಧ ಹೇರಿತು. ಇದಕ್ಕೆ ಪ್ರತಿಕ್ರಿಯೆಯಾಗಿ, ಪಠ್ಯಪುಸ್ತಕದ ಸಂಪೂರ್ಣ ಭಾಗ-II ಅನ್ನು ಹಿಂಪಡೆಯಲು ಮಂಡಳಿ ನಿರ್ಧರಿಸಿತು. ಆ ಅಧ್ಯಾಯಕ್ಕೆ ಎನ್ಸಿಇಆರ್ಟಿ ಸಾರ್ವಜನಿಕ ಕ್ಷಮೆಯಾಚಿಸಿತ್ತು..
ಸುಂಕಗಳು, AI, ಯುದ್ಧ, ತೈಲ: ಭಾರತೀಯ ಷೇರು ಮಾರುಕಟ್ಟೆಗಳಿಗೆ ಮುಂದೇನು ಕಾದಿದೆ?
2026 ರ ಆರಂಭದ ವಾರಗಳು ಭಾರತದ ಆರ್ಥಿಕ ನಿರೂಪಣೆಗೆ ನಾಟಕೀಯ ತಿರುವು ನೀಡಿವೆ. 2025 ರ ಪ್ರಕ್ಷುಬ್ಧತೆಯ ನಂತರ, ಫೆಬ್ರವರಿ ತಿಂಗಳು ಕೇಂದ್ರ ಬಜೆಟ್ ಮತ್ತು ಅಮೆರಿಕ ಜೊತೆ ಮಧ್ಯಂತರ ವ್ಯಾಪಾರ ಒಪ್ಪಂದದಿಂದಾಗಿ ಮಹತ್ತರವಾಗಿತ್ತು. ಯುರೋಪಿಯನ್ ಒಕ್ಕೂಟದೊಂದಿಗೆ ಸಮಗ್ರ ವ್ಯಾಪಾರ ಒಪ್ಪಂದವನ್ನು ಮಾಡಿಕೊಂಡ ಕೆಲವೇ ದಿನಗಳಲ್ಲಿ, ಭಾರತವು ಯುಎಸ್ ಜೊತೆ ಮಧ್ಯಂತರ ಒಪ್ಪಂದವನ್ನು ಅಂತಿಮಗೊಳಿಸಿತು. ಇದು ದಂಡದ 25% ಸುಂಕವನ್ನು ತೆಗೆದುಹಾಕಿತು ಮತ್ತು ಪ್ರತಿ ಸುಂಕ ದರವನ್ನು 18% ಕ್ಕೆ ಇಳಿಸಿತು. ಈ ಆ ವೇಗವನ್ನು AI ಇಂಪ್ಯಾಕ್ಟ್ ಶೃಂಗಸಭೆಯು ಮತ್ತಷ್ಟು ಬಲಪಡಿಸಿತು. ಹೊಸ ಗ್ರಾಹಕ ಬೆಲೆ ಸೂಚ್ಯಂಕ (CPI) ಸರಣಿಯ ಪ್ರಕಾರ ಹಣದುಬ್ಬರ ಕಡಿಮೆಯಾಗಿತ್ತು, ಆದರೆ ಪರಿಷ್ಕೃತ GDP ಲೆಕ್ಕಾಚಾರದ ವಿಧಾನವು 7.6% ರಷ್ಟು ದೃಢವಾದ ಬೆಳವಣಿಗೆಯನ್ನು ವರದಿ ಮಾಡಿದೆ. ಅಮೆರಿಕ ಮತ್ತು ಇಸ್ರೇಲ್ ಇರಾನ್ ಮೇಲೆ ದಾಳಿ ಮಾಡಿದ ನಂತರ ಮತ್ತು ಅದು ಇತರ ಗಲ್ಫ್ ರಾಷ್ಟ್ರಗಳ ಮೇಲೆ ದಾಳಿ ಮಾಡಿ ಹಾರ್ಮುಜ್ ಜಲಸಂಧಿಯ ನಿರ್ಣಾಯಕ ಜಲಮಾರ್ಗವನ್ನು ಮುಚ್ಚುವ ಮೂಲಕ ಪ್ರತೀಕಾರ ತೀರಿಸಿಕೊಂಡ ನಂತರ ಎಲ್ಲವೂ ಅಸ್ತವ್ಯಸ್ತಗೊಂಡಿತು. ಭಾರತೀಯ ಷೇರು ಮಾರುಕಟ್ಟೆ ಬಹಳಷ್ಟು ಒಳ್ಳೆಯ ಸುದ್ದಿಗಳನ್ನು ಗ್ರಹಿಸಿದೆ ಮತ್ತು ಅವುಗಳನ್ನು ನಿರ್ಲಕ್ಷಿಸಿದೆ ಎಂದು ಅಮೆರಿಕದ ಹೂಡಿಕೆ ಬ್ಯಾಂಕ್ ಮಾರ್ಗನ್ ಸ್ಟಾನ್ಲಿಯ ವಿಶ್ಲೇಷಕರು ಹೇಳಿದ್ದಾರೆ. ಭಾರತೀಯ ಮಾರುಕಟ್ಟೆಯು ಗಮನಾರ್ಹವಾದ ಕೆಳಮುಖ ಒತ್ತಡವನ್ನು ಎದುರಿಸಿದೆ. ಈ ವಾರ ಸುಮಾರು 3% ಚೇತರಿಕೆಯೊಂದಿಗೆ, ಸೆನ್ಸೆಕ್ಸ್ ಮತ್ತು ನಿಫ್ಟಿ 4.4% ರಷ್ಟು ಕುಸಿದಿವೆ. ಮಧ್ಯಪ್ರಾಚ್ಯ ಸಂಘರ್ಷದ ವ್ಯಾಪಕ ಪರಿಣಾಮವು ಇನ್ನೂ ಹೆಚ್ಚು ಸ್ಪಷ್ಟವಾಗಿದೆ. ಯುದ್ಧ ಪ್ರಾರಂಭವಾದಾಗಿನಿಂದ ಎರಡೂ ಸೂಚ್ಯಂಕಗಳು 5.6% ರಷ್ಟು ಕುಸಿದಿವೆ. ಈ ಕುಸಿತವು 12 ತಿಂಗಳ ಕಾರ್ಯಕ್ಷಮತೆಯ ಅವಧಿಯನ್ನು ಅನುಸರಿಸುತ್ತದೆ, ಇದು ಇತಿಹಾಸದಲ್ಲಿ ಅತ್ಯಂತ ಕೆಟ್ಟದಾಗಿದೆ ಎಂದು ವಿಶ್ಲೇಷಕರು ಹೇಳಿದ್ದಾರೆ ಕಳೆದ ಒಂದೂವರೆ ವರ್ಷದಿಂದ ಭಾರತೀಯ ಷೇರುಪೇಟೆಗಳು ಹಲವಾರು ಜಾಗತಿಕ ಅಂಶಗಳಿಂದ ಹೊಡೆತ ತಿಂದಿವೆ. ಟ್ರಂಪ್ ಆಡಳಿತದ ಪುನರಾಗಮನ ಮತ್ತು ಅದರ ನಂತರದ ಸುಂಕ ಯುದ್ಧಗಳು ಆರಂಭಿಕ ಏರಿಳಿತವನ್ನು ಸೃಷ್ಟಿಸಿದವು. ಆದರೆ ಜಾಗತಿಕ AI ಹೂಡಿಕೆ ಉತ್ಕರ್ಷವು ಬಂಡವಾಳವನ್ನು ಸ್ಪರ್ಧಾತ್ಮಕ ಮಾರುಕಟ್ಟೆಗಳಿಗೆ ತಿರುಗಿಸಿತು. ಭಾರತಕ್ಕೆ ಸಮಾಧಾನಕರ ಸಂಗತಿ ಎಂದರೆ ಅದು 'ರಿವರ್ಸ್ AI ವ್ಯಾಪಾರ'ವಾಗಿ ಕಾರ್ಯನಿರ್ವಹಿಸಬಹುದು. ಈಗ, ಹೆಚ್ಚುತ್ತಿರುವ ಮಧ್ಯಪ್ರಾಚ್ಯ ಸಂಘರ್ಷ ಮತ್ತು ಪರಿಣಾಮವಾಗಿ ಪೂರೈಕೆ ಆಘಾತಗಳು ಜಾಗತಿಕ ಇಂಧನ ಬೆಲೆಗಳನ್ನು ಏರಿಕೆ ಮಾಡಿದ್ದು ಇದು ಮಾರುಕಟ್ಟೆ ಸ್ಥಿರತೆಯನ್ನು ಮತ್ತಷ್ಟು ಕುಗ್ಗಿಸಿದೆ. ಕಂಪನಿ ಗಳಿಕೆಯ ಬಗ್ಗೆ ಕಳವಳ: ಯುದ್ಧ ಯಾವಾಗ ಕೊನೆಗೊಳ್ಳುತ್ತದೆ ಎಂಬುದರ ಕುರಿತು ಸ್ಪಷ್ಟತೆ ಇಲ್ಲದಿದ್ದರೂ, ಮುಂದೆ ಪ್ರತಿಕೂಲ ಪರಿಸ್ಥಿತಿಗಳು ಎದುರಾಗಲಿವೆ. ಅವುಗಳಲ್ಲಿ ಮೊದಲನೆಯದು ಪ್ರಸಕ್ತ ತ್ರೈಮಾಸಿಕದ ಆರ್ಥಿಕ ಫಲಿತಾಂಶಗಳು.ಕಚ್ಚಾ ತೈಲ ಬೆಲೆಗಳಲ್ಲಿನ ಏರಿಕೆಯು ಹಲವಾರು ವಲಯಗಳ ಲಾಭದ ಮೇಲೆ ಪರಿಣಾಮ ಬೀರುವ ನಿರೀಕ್ಷೆಯಿದೆ. ತೈಲ ಮಾರುಕಟ್ಟೆ ಕಂಪನಿಗಳು ಸೇರಿದಂತೆ, ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಮತ್ತು ಅವುಗಳ ಮೇಲಿನ ಅಬಕಾರಿ ಸುಂಕವು ಬದಲಾಗದೆ ಇರುವುದರಿಂದ ಅವುಗಳ ಲಾಭವು ನಾಲ್ಕು ವರ್ಷಗಳಲ್ಲಿ ಅತ್ಯಂತ ಕಡಿಮೆ ಮಟ್ಟಕ್ಕೆ ಕುಸಿದಿದೆ. ರಸಗೊಬ್ಬರಗಳು, ಪೇಂಟ್ಸ್, ರಾಸಾಯನಿಕಗಳು ಮತ್ತು ಪ್ಲಾಸ್ಟಿಕ್ಗಳು ಸೇರಿದಂತೆ ತೈಲವನ್ನು ಇನ್ಪುಟ್ ಆಗಿ ಬಳಸುವ ಯಾವುದೇ ವಲಯದ ಮೇಲೆ ಇದು ಪರಿಣಾಮ ಬೀರುತ್ತದೆ. ವಿಮಾನಯಾನ ಕಂಪನಿಗಳು ಹೆಚ್ಚಿನ ಇಂಧನ ವೆಚ್ಚಗಳ ಹೊಡೆತಗಳನ್ನು ಎದುರಿಸುತ್ತಿವೆ.ಇದನ್ನು ಈಗ ಇಂಧನ ಸರ್ಚಾರ್ಜ್ ಮೂಲಕ ವಿಮಾನದ ಪ್ರಯಾಣಿಕರಿಗೆ ವರ್ಗಾಯಿಸಲಾಗುತ್ತಿದೆ. ಇದು ಕಾರ್ಯಾಚರಣೆಗಳ ಮೇಲೆ ಪರಿಣಾಮ ಬೀರುತ್ತದೆ. ಉದಾಹರಣೆಗೆ, ಭಾರತದ ಅತಿದೊಡ್ಡ ವಿಮಾನಯಾನ ಸಂಸ್ಥೆ ಇಂಡಿಗೋ ತನ್ನ ಆದಾಯದ ಸುಮಾರು 20% ಅನ್ನು ಪಶ್ಚಿಮ ಏಷ್ಯಾ ಪ್ರದೇಶದಿಂದ ಪಡೆಯುತ್ತದೆ. ಹೆಚ್ಚಿನ ತೈಲ ಬೆಲೆಗಳು ಆರ್ಥಿಕ ಚಟುವಟಿಕೆಯ ಮೇಲೆ ಪರಿಣಾಮ ಬೀರಿದರೆ , ಸಾಲದ ಬೇಡಿಕೆ ಕಡಿಮೆಯಾಗಲು ಕಾರಣವಾದರೆ ಮತ್ತು ಕಾರ್ಪೊರೇಟ್ ಲಾಭದಾಯಕತೆಯು ದುರ್ಬಲಗೊಂಡರೆ ಬ್ಯಾಂಕುಗಳು ಇದರಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ►ಆರ್ಥಿಕತೆಯ ಪ್ರತಿಕ್ರಿಯೆ ಕಂಪನಿಯ ಫಲಿತಾಂಶಗಳೊಂದಿಗೆ ಆರ್ಥಿಕತೆಯ ಸ್ಕೋರ್ಕಾರ್ಡ್ ಕೂಡಾ ಬರುತ್ತದೆ. ಇವುಗಳಲ್ಲಿ ಮೊದಲನೆಯದು ಭಾರತೀಯ ರಿಸರ್ವ್ ಬ್ಯಾಂಕ್ (RBI) ಹಣಕಾಸು ನೀತಿ ಸಮಿತಿಯಿಂದ (MPC) ಬರಲಿದ್ದು, ಅದು ಎಪ್ರಿಲ್ 8 ರಂದು ತನ್ನ ಬಡ್ಡಿದರ ನಿರ್ಧಾರವನ್ನು ಪ್ರಕಟಿಸಲಿದೆ. ಕೇಂದ್ರ ಬ್ಯಾಂಕ್ 2025 ರಲ್ಲಿ ನೀತಿ ರೆಪೊ ದರವನ್ನು 125 ಬೇಸಿಸ್ ಪಾಯಿಂಟ್ಗಳಷ್ಟು (bps) ಕಡಿತಗೊಳಿಸಿದೆ. ಆದರೆ ಹಠಾತ್ ಇಂಧನ ಬೆಲೆ ಆಘಾತವು ಈಗ ಭಾರತದ ಗೋಲ್ಡಿಲಾಕ್ಸ್ ಆರ್ಥಿಕತೆಯನ್ನು ಅಪಾಯಕ್ಕೆ ಸಿಲುಕಿಸುತ್ತದೆ. ಹೆಚ್ಚುತ್ತಿರುವ ಹಣದುಬ್ಬರ ಮತ್ತು ನಿಧಾನಗತಿಯ ಬೆಳವಣಿಗೆಯ ಉಭಯ ಒತ್ತಡಗಳು ಹೆಚ್ಚಾಗಲು ಪ್ರಾರಂಭಿಸಿದಾಗ ಈ ಸ್ಥಿರತೆಗೆ ಅಪಾಯವಿದೆ ಎಂದು ಅರ್ಥಶಾಸ್ತ್ರಜ್ಞರು ಎಚ್ಚರಿಸಿದ್ದಾರೆ. ಹಣದುಬ್ಬರ ಏರಿಕೆಯಿಂದಾಗಿ MPC ದರ ಕಡಿತದ ಸಾಧ್ಯತೆ ಕಡಿಮೆಯಾಗುವುದರಿಂದ ಮಾರುಕಟ್ಟೆ ನಿರೀಕ್ಷೆಗಳು ಇನ್ನೂ ನಿರಾಶಾದಾಯಕವಾಗಿವೆ. RBI ಯ 2026-27ರ ಮುನ್ಸೂಚನೆಯಲ್ಲಿ ದೃಢೀಕರಣಕ್ಕಾಗಿ ಕಾಯುತ್ತಿರುವ ಬೆಳವಣಿಗೆಗೆ ನಿರೀಕ್ಷಿತ ಹೊಡೆತವು ಮತ್ತಷ್ಟು ಷೇರು ಕುಸಿತಕ್ಕೆ ಬೆದರಿಕೆ ಹಾಕುತ್ತದೆ. ಪರಿಣಾಮವು ಈಗಾಗಲೇ ಸ್ಪಷ್ಟವಾಗಿದೆ. ಗ್ಯಾಸ್ ಸಿಲಿಂಡರ್ಗಳ ಕೊರತೆಯಿಂದಾಗಿ ಸಣ್ಣ ವ್ಯವಹಾರಗಳು ಮತ್ತು ಹೋಟೆಲ್ ಮುಚ್ಚುತ್ತಿವೆ, ಉತ್ಪಾದನಾ ವಲಯಕ್ಕೆ ಅನಿಲ ಪೂರೈಕೆಯಲ್ಲಿನ 80% ರಷ್ಟು ಕಡಿತವು ವಲಯದ ಉತ್ಪಾದನೆಯಲ್ಲಿ ಪ್ರತಿಫಲಿಸಬೇಕು. ಮಾರ್ಚ್ ತಿಂಗಳ ಪ್ರಮುಖ ವಲಯ ಮತ್ತು ಕೈಗಾರಿಕಾ ಉತ್ಪಾದನಾ ದತ್ತಾಂಶ ಕ್ರಮವಾಗಿ ಏಪ್ರಿಲ್ 20 ಮತ್ತು ಏಪ್ರಿಲ್ 28 ರಂದು ಬಿಡುಗಡೆಯಾಗಲಿದೆ. ಜನವರಿ-ಮಾರ್ಚ್ ತಿಂಗಳವರೆಗಿನ ಜಿಡಿಪಿ ಸಂಪೂರ್ಣ ಕಥೆಯನ್ನು ಹೇಳುತ್ತದೆ. ಭಾರತೀಯ ಆರ್ಥಿಕತೆಯು ಇಂಧನ ಬೆಲೆ ಆಘಾತವನ್ನು ತಡೆದುಕೊಳ್ಳುವಲ್ಲಿ ಯಶಸ್ವಿಯಾದರೂ, ಜಾಗತಿಕ ಆರ್ಥಿಕತೆಯ ಬಗ್ಗೆ ಅದೇ ರೀತಿ ಹೇಳಲಾಗುವುದಿಲ್ಲ. ಇತ್ತ ಹಣದುಬ್ಬರವು ಕಳವಳವನ್ನುಂಟು ಮಾಡುತ್ತಿದೆ. ವಿದೇಶಗಳಲ್ಲಿ ದುರ್ಬಲ ಬೆಳವಣಿಗೆಯು ಭಾರತದ ರಫ್ತುಗಳ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ಅನಿರೀಕ್ಷಿತವಾಗಿ ವಿಷಯಗಳು ಉತ್ತಮ ತಿರುವು ಪಡೆಯದ ಹೊರತು, ಭಾರತೀಯ ಮಾರುಕಟ್ಟೆಗಳು ಒಂದರ ನಂತರ ಒಂದರಂತೆ ಯುದ್ಧಗಳನ್ನು ಎದುರಿಸಬೇಕಾಗುತ್ತದೆ.
ಪಶ್ಚಿಮ ಏಷ್ಯಾ ಸಂಘರ್ಷವು ಇಂಧನ ಮಾತ್ರವಲ್ಲ ಜಾಗತಿಕ ಆಹಾರ ಬಿಕ್ಕಟ್ಟನ್ನುಂಟು ಮಾಡಬಹುದು, ಹೇಗೆ ಗೊತ್ತೇ?
ಪಶ್ಚಿಮ ಏಷ್ಯಾ ಸಂಘರ್ಷದಿಂದ ಹಾರ್ಮುಜ್ ಜಲಸಂಧಿಯ ಮೂಲಕ ಸಾಗಣೆ ಸ್ಥಗಿತಗೊಂಡಾಗಿನಿಂದ ತೈಲದ ಬೆಲೆ ಏರಿಕೆ ದೊಡ್ಡ ಆತಂಕವನ್ನುಂಟು ಮಾಡಿದೆ. ಮಾರ್ಚ್ 2 ರಂದು, ಇರಾನ್ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ನ ಕಮಾಂಡರ್-ಇನ್-ಚೀಫ್ನ ಹಿರಿಯ ಸಲಹೆಗಾರ ಇಬ್ರಾಹಿಂ ಜಬಾರಿ, ವಿಶ್ವದ ತೈಲ ಮತ್ತು ಅನಿಲದ ಶೇಕಡಾ 20 ರಷ್ಟು ಸಾಗಿಸಲ್ಪಡುವ ಹಾರ್ಮುಜ್ ಜಲಸಂಧಿಯನ್ನು ಮುಚ್ಚಲಾಗಿದೆ ಎಂದು ಘೋಷಿಸಿದರು. ಇದರ ಬೆನ್ನಲ್ಲೇ ತೈಲ ಬೆಲೆಗಳು ಬ್ಯಾರೆಲ್ಗೆ 100 ಡಾಲರ್ ಗಿಂತ ಹೆಚ್ಚಾಯಿತು. ಪ್ರಸ್ತುತ ಸವಾಲುಗಳ ಜೊತೆಗೆ, ಅಗತ್ಯ ರಸಗೊಬ್ಬರಗಳ ಕೊರತೆಯಿಂದ ಜಾಗತಿಕ ಆಹಾರ ಭದ್ರತೆಯ ಬೆದರಿಕೆಯನ್ನು ವಿಶ್ಲೇಷಕರು ಎತ್ತಿ ತೋರಿಸುತ್ತಾರೆ. ►ರಸಗೊಬ್ಬರ ಕೊರತೆ ವಿಶ್ವದ ವ್ಯಾಪಾರವಾಗುವ ಯೂರಿಯಾದ ಅರ್ಧದಷ್ಟು ಮತ್ತು ಹೆಚ್ಚಿನ ಪ್ರಮಾಣದ ಇತರ ರಸಗೊಬ್ಬರಗಳನ್ನು ಹಾರ್ಮುಜ್ ಜಲಸಂಧಿಯ ಮೂಲಕ ಗಲ್ಫ್ ದೇಶಗಳಿಂದ ರಫ್ತು ಮಾಡಲಾಗುತ್ತದೆ. ಅನಿಲ ಪೂರೈಕೆ ಮತ್ತು ಸಾಗಣೆಗೆ ಇತ್ತೀಚಿನ ಅಡಚಣೆಗಳು ಗಲ್ಫ್ ಮತ್ತು ಅದರಾಚೆಗಿನ ರಸಗೊಬ್ಬರಗಳನ್ನು ತಯಾರಿಸಲು ನೈಸರ್ಗಿಕ ಅನಿಲವನ್ನು ಬಳಸುವ ರಸಗೊಬ್ಬರ ಸ್ಥಾವರಗಳನ್ನು ಈಗಾಗಲೇ ಮುಚ್ಚುವಂತೆ ಮಾಡಿವೆ. ಎಲ್ಎನ್ಜಿ ಸೌಲಭ್ಯಗಳ ಮೇಲೆ ದಾಳಿಯಾದ ನಂತರ ಖತರ್ನ ಸರ್ಕಾರಿ ಸ್ವಾಮ್ಯದ ಇಂಧನ ಸಂಸ್ಥೆ ಖತರ್ ಎನರ್ಜಿ ಅನಿಲ ಉತ್ಪಾದನೆಯನ್ನು ಸ್ಥಗಿತಗೊಳಿಸಿದ ನಂತರ ವಿಶ್ವದ ಅತಿದೊಡ್ಡ ಯೂರಿಯಾ ಸ್ಥಾವರದಲ್ಲಿ ಉತ್ಪಾದನೆಯನ್ನು ಸ್ಥಗಿತಗೊಳಿಸಿತು. ಖತರ್ನಿಂದ ಎಲ್ಎನ್ಜಿ ಉತ್ಪಾದನೆ ಕುಸಿದ ಕಾರಣ, ಭಾರತವು ತನ್ನದೇ ಆದ ಮೂರು ಯೂರಿಯಾ ಸ್ಥಾವರಗಳಿಂದ ಉತ್ಪಾದನೆಯನ್ನು ಕಡಿತಗೊಳಿಸಿದೆ. ಬಾಂಗ್ಲಾದೇಶವು ತನ್ನ ಐದು ರಸಗೊಬ್ಬರ ಕಾರ್ಖಾನೆಗಳಲ್ಲಿ ನಾಲ್ಕನ್ನು ಮುಚ್ಚಿದೆ. ಅಮೆರಿಕ ಈಗಾಗಲೇ ರಸಗೊಬ್ಬರ ಪೂರೈಕೆಯಲ್ಲಿ ಶೇಕಡಾ 25 ರಷ್ಟು ಕೊರತೆಯನ್ನು ಹೊಂದಿದೆ. ಇಂಧನ ಮತ್ತು ಸರಕುಗಳ ಬೆಲೆ ವರದಿ ಮಾಡುವ ವಿಶೇಷ ಸಂಸ್ಥೆಯಾದ ಆರ್ಗಸ್ ಪ್ರಕಾರ ಮಧ್ಯಪ್ರಾಚ್ಯದಿಂದ ಯೂರಿಯಾ ರಫ್ತು ಬೆಲೆಗಳು ಸುಮಾರು 40 ಪ್ರತಿಶತದಷ್ಟು ಏರಿಕೆಯಾಗಿದೆ. ಇದು ಕಳೆದ ಶುಕ್ರವಾರದ ವೇಳೆಗೆ ಪ್ರತಿ ಮೆಟ್ರಿಕ್ ಟನ್ಗೆ 500 ಡಾಲರ್ ಇದ್ದದ್ದು 700 ಡಾಲರ್ ದಾಟಿದೆ. ಕಳೆದ ವರ್ಷಕ್ಕಿಂತ ಪ್ರಸ್ತುತ ಬೆಲೆ ಶೇಕಡಾ 60 ರಷ್ಟು ಹೆಚ್ಚಾಗಿದೆ. ►ವಿಶ್ವದ ರಸಗೊಬ್ಬರದಲ್ಲಿ ಎಷ್ಟು ಭಾಗ ಕೊಲ್ಲಿಯಲ್ಲಿ ಉತ್ಪಾದನೆಯಾಗುತ್ತದೆ? ಸಿಗ್ನಲ್ ಗ್ರೂಪ್ ಎಂಬ ಹಡಗು ಸೇವಾ ಕಂಪನಿ ಪ್ರಕಾರ, ವಿಶ್ವದ ರಸಗೊಬ್ಬರಗಳಲ್ಲಿ ಶೇ. 20 ರಷ್ಟು ಕೊಲ್ಲಿಯಲ್ಲಿ ಉತ್ಪಾದನೆಯಾಗುತ್ತಿದ್ದು ಜಾಗತಿಕ ಯೂರಿಯಾ ಪೂರೈಕೆಯಲ್ಲಿ ಶೇ. 46 ರಷ್ಟು ಕೊಲ್ಲಿಯಿಂದ ಬರುತ್ತದೆ. ವಿಶ್ವದ ಅತಿದೊಡ್ಡ ಯೂರಿಯಾ ಪೂರೈಕೆದಾರ ಎಂದು ಪರಿಗಣಿಸಲಾದ ಖತರ್ ರಸಗೊಬ್ಬರ ಕಂಪನಿ (QAFCO) ಮಾತ್ರ ವಿಶ್ವದ ಯೂರಿಯಾದ ಶೇ. 14 ರಷ್ಟು ಪೂರೈಕೆ ಮಾಡುತ್ತದೆ. ಡೇಟಾ ಮತ್ತು ವಿಶ್ಲೇಷಣಾ ಕಂಪನಿಯಾದ ಕೆಪ್ಲರ್ ನಡೆಸಿದ ವಿಶ್ಲೇಷಣೆಯ ಪ್ರಕಾರ, ಹಾರ್ಮುಜ್ ಜಲಸಂಧಿಯ ಮುಚ್ಚುವಿಕೆ ಮುಂದುವರಿದರೆ ಜಾಗತಿಕ ರಸಗೊಬ್ಬರ ವ್ಯಾಪಾರದ ಮೂರನೇ ಒಂದು ಭಾಗದಷ್ಟು ಅಡ್ಡಿಯಾಗಬಹುದು. ಇತ್ತೀಚಿನ ದಿನಗಳಲ್ಲಿ ಭಾರತ, ಪಾಕಿಸ್ತಾನ ಮತ್ತು ಚೀನಾ ಧ್ವಜ ಹೊಂದಿರುವ ಕೆಲವೇ ಹಡಗುಗಳಿಗೆ ಸುರಕ್ಷಿತವಾಗಿ ಸಾಗಲು ಅವಕಾಶ ನೀಡಲಾಗಿದೆ. ಮಾರ್ನಿಂಗ್ಸ್ಟಾರ್ ವಿಶ್ಲೇಷಕ ಸೇಥ್ ಗೋಲ್ಡ್ಸ್ಟೈನ್ ಪ್ರಕಾರ, ಸಾರಜನಕ ರಸಗೊಬ್ಬರಗಳ ಬೆಲೆಗಳು ಪ್ರಸ್ತುತ ಮಟ್ಟಕ್ಕಿಂತ ದ್ವಿಗುಣವಾಗಬಹುದು. ಫಾಸ್ಫೇಟ್ ಬೆಲೆಗಳು ಸುಮಾರು ಶೇ. 50 ರಷ್ಟು ಏರಿಕೆಯಾಗಬಹುದು ಎಂದು ರಾಯಿಟರ್ಸ್ ಸುದ್ದಿ ಸಂಸ್ಥೆ ವರದಿ ಮಾಡಿದೆ. ►ಯಾವ ದೇಶಗಳು ರಸಗೊಬ್ಬರದ ಮೇಲೆ ಹೆಚ್ಚು ಅವಲಂಬಿತವಾಗಿವೆ? 2024 ರ ಹೊತ್ತಿಗೆ ಏಷ್ಯಾದ ದೇಶಗಳು ಗಲ್ಫ್ ರಸಗೊಬ್ಬರ ರಫ್ತಿನ ಮೇಲೆ ಹೆಚ್ಚು ಅವಲಂಬಿತವಾಗಿದ್ದವು. ಕೆಪ್ಲರ್ ಪ್ರಕಾರ ಈ ದೇಶಗಳು ಗಲ್ಫ್ ನಿಂದ ಯೂರಿಯಾ ರಫ್ತಿನ ಶೇಕಡಾ 35, ಸಲ್ಫರ್ ರಫ್ತಿನ ಶೇಕಡಾ 53 ಮತ್ತು ಅಮೋನಿಯಾ ರಫ್ತಿನ ಶೇಕಡಾ 64 ರಷ್ಟು ಪಡೆಯುತ್ತವೆ. ಭಾರತ, ಬ್ರೆಝಿಲ್ ಮತ್ತು ಚೀನಾದ ಕೃಷಿ ಮಾರುಕಟ್ಟೆ ಈ ಸರಬರಾಜುಗಳ ಮೇಲೆ ಹೆಚ್ಚು ಅವಲಂಬಿತವಾಗಿದೆ. ರಸಗೊಬ್ಬರ ಗಮನಾರ್ಹ ಪ್ರಮಾಣದಲ್ಲಿ ಮೊರಾಕೊ, ಯುನೈಟೆಡ್ ಸ್ಟೇಟ್ಸ್, ಆಸ್ಟ್ರೇಲಿಯಾ ಮತ್ತು ಇಂಡೋನೇಷ್ಯಾಕ್ಕೂ ಹೋಗುತ್ತವೆ. ಭಾರತವು ರಸಗೊಬ್ಬರಗಳಿಗಾಗಿ ಮಧ್ಯಪ್ರಾಚ್ಯವನ್ನು ವಿಶೇಷವಾಗಿ ಅವಲಂಬಿಸಿದೆ. ಯೂರಿಯಾ ಮತ್ತು ಫಾಸ್ಫೇಟ್ ರಸಗೊಬ್ಬರಗಳಲ್ಲಿ 40 ಪ್ರತಿಶತಕ್ಕಿಂತ ಹೆಚ್ಚಿನದನ್ನು ಈ ಪ್ರದೇಶದಿಂದಲೇ ಪಡೆಯುತ್ತದೆ. ಏತನ್ಮಧ್ಯೆ, ಬ್ರೆಝಿಲ್ ತನ್ನ ರಸಗೊಬ್ಬರ ಪೂರೈಕೆಗಾಗಿ ಬಹುತೇಕ ಸಂಪೂರ್ಣವಾಗಿ ಆಮದುಗಳ ಮೇಲೆ ಅವಲಂಬಿತವಾಗಿದೆ. ಅದರಲ್ಲಿ ಸುಮಾರು ಅರ್ಧದಷ್ಟು ಹಾರ್ಮುಜ್ ಜಲಸಂಧಿಯ ಮೂಲಕ ಸಾಗುತ್ತದೆ. ►ರಸಗೊಬ್ಬರ ಕೊರತೆಯು ಆಹಾರ ಉತ್ಪಾದನೆಯ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ? ಈ ಅಡಚಣೆಯ ಸಮಯವು ನಿರ್ಣಾಯಕವಾಗಿದೆ, ಏಕೆಂದರೆ ಇದು ಬಿತ್ತನೆಯ ಸಮಯ. ವಾಣಿಜ್ಯ ಕೃಷಿಗಾಗಿ, ಬೆಳೆಗಾರರು ಹೆಚ್ಚಿನ ಇಳುವರಿಯನ್ನು ಬಯಸಿದರೆ ಬಹುತೇಕ ಎಲ್ಲಾ ಬೆಳೆಗಳಿಗೆ ರಸಗೊಬ್ಬರ ಅತ್ಯಗತ್ಯ. ಆದರೆ ವಿಭಿನ್ನ ಬೆಳೆಗಳಿಗೆ ವಿಭಿನ್ನ ರೀತಿಯ ಮತ್ತು ಪ್ರಮಾಣದ ರಸಗೊಬ್ಬರಗಳು ಬೇಕಾಗುತ್ತವೆ. ಹಾರ್ಮುಜ್ ಜಲಸಂಧಿಯ ದಿಗ್ಬಂಧನ ಮುಂದುವರಿದರೆ, ಜೂನ್ನಲ್ಲಿ ಪ್ರಾರಂಭವಾಗುವ ಮುಂದಿನ ಖಾರಿಫ್ ಋತುವಿನಲ್ಲಿ ಭಾರತವು ರಸಗೊಬ್ಬರ ಮತ್ತು ಕಚ್ಚಾ ವಸ್ತುಗಳ ಸರಬರಾಜಿನಲ್ಲಿ ಗಂಭೀರ ಅಡಚಣೆಗಳನ್ನು ಎದುರಿಸಬೇಕಾಗುತ್ತದೆ. ಮುಂಬರುವ ವಾರಗಳಲ್ಲಿ ಯೂರಿಯಾ ತಯಾರಕರಿಗೆ ದ್ರವೀಕೃತ ನೈಸರ್ಗಿಕ ಅನಿಲ (LNG) ಪೂರೈಕೆಯಲ್ಲಿನ ಯಾವುದೇ ಕಡಿತವು ಖಾರಿಫ್ ನಾಟಿ ಋತುವಿಗೆ ಮುಂಚಿತವಾಗಿ ಪ್ರಮುಖ ಮಣ್ಣಿನ ಪೋಷಕಾಂಶದ ಉತ್ಪಾದನೆಯ ಮೇಲೆ ಪರಿಣಾಮ ಬೀರಬಹುದು ಎಂದು ರಸಗೊಬ್ಬರ ಕಂಪನಿಯ ಕಾರ್ಯನಿರ್ವಾಹಕ ಅಧಿಕಾರಿಯೊಬ್ಬರು ಹೇಳಿರುವುದಾಗಿ ʼಟೈಮ್ಸ್ ಆಫ್ ಇಂಡಿಯಾʼ ವರದಿ ಮಾಡಿದೆ. ಖಾರಿಫ್ ಬೆಳೆಗಳು ಭಾರತದ ಆಹಾರ ಧಾನ್ಯ ಉತ್ಪಾದನೆಯ ಅರ್ಧಕ್ಕಿಂತ ಹೆಚ್ಚಿನದನ್ನು ಹೊಂದಿವೆ. ಪ್ರಮುಖ ಬೆಳೆಗಳಾದ ಅಕ್ಕಿ, ದ್ವಿದಳ ಧಾನ್ಯಗಳು, ಎಣ್ಣೆಬೀಜಗಳು, ಹತ್ತಿ ಮತ್ತು ಕಬ್ಬು ಈ ಋತುವಿನಲ್ಲಿ ಬಿತ್ತಲಾಗುತ್ತದೆ. ರಸಗೊಬ್ಬರ ಕಂಪನಿಗಳು ತಿಂಗಳಿಗೆ ಸುಮಾರು 2.5 ಮಿಲಿಯನ್ ಟನ್ ಮಣ್ಣಿನ ಪೋಷಕಾಂಶಗಳನ್ನು ಉತ್ಪಾದಿಸುತ್ತವೆ. ಎಲ್ಎನ್ಜಿ ಸರಬರಾಜು ವ್ಯತ್ಯಯವಾದರೆ ಉತ್ಪಾದನೆಯ ಮೇಲೆ ತೀವ್ರ ಪರಿಣಾಮ ಬೀರಬಹುದು ಎಂದು ಉದ್ಯಮ ವೀಕ್ಷಕರು ಹೇಳಿದ್ದಾರೆ, ಸುಗಮ ವಿತರಣೆಯನ್ನು ಖಚಿತಪಡಿಸಿಕೊಳ್ಳಲು ಸಾಮಾನ್ಯವಾಗಿ ಮಾರ್ಚ್ನಿಂದ ರಸಗೊಬ್ಬರಗಳ ಉತ್ಪಾದನೆ ಮತ್ತು ದಾಸ್ತಾನು ಪ್ರಾರಂಭವಾಗುತ್ತದೆ. 2022 ರಲ್ಲಿ ಉಕ್ರೇನ್ ಮೇಲೆ ರಷ್ಯಾ ಯುದ್ಧ ಆರಂಭಿಸಿದ ನಂತರ, ಅಗ್ಗದ ರಷ್ಯಾದ ಅನಿಲದ ಪ್ರವೇಶವನ್ನು ಕಳೆದುಕೊಂಡ ನಂತರ ಯುರೋಪ್ ತನ್ನ ಸರಬರಾಜನ್ನು ಕಡಿತಗೊಳಿಸಬೇಕಾಯಿತು. ಆಗಲೇ ಜಗತ್ತು ಯೂರಿಯಾ ಕೊರತೆಯಿಂದ ತತ್ತರಿಸಿತ್ತು. ಹೆಚ್ಚುವರಿಯಾಗಿ, ಚೀನಾದ ರೈತರಿಗೆ ಮೊದಲು ಸರಬರಾಜುಗಳನ್ನು ಖಚಿತಪಡಿಸಿಕೊಳ್ಳಲು ಬೀಜಿಂಗ್ ಯೂರಿಯಾ ಸೇರಿದಂತೆ ರಸಗೊಬ್ಬರ ರಫ್ತನ್ನು ನಿರ್ಬಂಧಿಸಿತು. ► ಈ ಬೆದರಿಕೆ ವಿಶ್ವದ ಆಹಾರ ಪೂರೈಕೆಯನ್ನು ಹೇಗೆ ಅಪಾಯಕ್ಕೆ ಸಿಲುಕಿಸುತ್ತದೆ? ಭಾರತ, ಬ್ರೆಝಿಲ್ ಮತ್ತು ಚೀನಾ ಸೇರಿದಂತೆ ಗಲ್ಫ್ ರಸಗೊಬ್ಬರಗಳ ಹಲವಾರು ದೊಡ್ಡ ಆಮದುದಾರರು ವಿಶ್ವದ ಅತಿದೊಡ್ಡ ಆಹಾರ ಉತ್ಪಾದಕರೂ ಆಗಿದ್ದಾರೆ. ಜಾಗತಿಕ ಕೃಷಿ ಶಕ್ತಿ ಕೇಂದ್ರವಾಗಿ, ಭಾರತವು ಅಕ್ಕಿ, ಗೋಧಿ, ದ್ವಿದಳ ಧಾನ್ಯಗಳು ಮತ್ತು ಹಣ್ಣುಗಳಂತಹ ಪ್ರಧಾನ ಉತ್ಪನ್ನಗಳ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿದೆ. 2024 ರ ಹೊತ್ತಿಗೆ, ವಿಶ್ವದ ಒಟ್ಟು ಅಕ್ಕಿ ರಫ್ತಿನಲ್ಲಿ ಭಾರತೀಯ ಅಕ್ಕಿ ಮಾತ್ರ ಸರಿಸುಮಾರು 25% ರಷ್ಟಿತ್ತು. ಯುಎಸ್ ಕೃಷಿ ಇಲಾಖೆಯ ಪ್ರಕಾರ, ಬ್ರೆಝಿಲ್ ಈಗ ಜಾಗತಿಕ ಸೋಯಾಬೀನ್ ರಫ್ತಿನ ಸುಮಾರು 60 ಪ್ರತಿಶತದಷ್ಟಿದೆ. ದೇಶವು ಸಕ್ಕರೆ ಮತ್ತು ಜೋಳವನ್ನು ಸಹ ರಫ್ತು ಮಾಡುತ್ತದೆ. ಚೀನಾ ಪ್ರಮುಖ ಚಹಾ ಉತ್ಪಾದಕವಾಗಿದ್ದು, ವಿಶ್ವಾದ್ಯಂತ ಚಹಾ ಎಲೆಗಳನ್ನು ಹಾಗೂ ಬೆಳ್ಳುಳ್ಳಿ, ಅಣಬೆಗಳಂತಹ ಇತರ ಕೃಷಿ ಪ್ರಧಾನ ವಸ್ತುಗಳನ್ನು ಪೂರೈಸುತ್ತದೆ. ಆದ್ದರಿಂದ, ದೀರ್ಘಕಾಲದ ರಸಗೊಬ್ಬರ ಕೊರತೆ ಮತ್ತು ರಸಗೊಬ್ಬರ ಬೆಲೆಯಲ್ಲಿನ ಏರಿಕೆ ಕೆಲವು ರೈತರು ರಸಗೊಬ್ಬರ ಬಳಕೆಯನ್ನು ಸಂಪೂರ್ಣವಾಗಿ ಬಿಟ್ಟುಬಿಡಲು ಕಾರಣವಾಗಬಹುದು. ಇದು ಬೆಳೆ ಇಳುವರಿಯನ್ನು ಕಡಿಮೆ ಮಾಡುತ್ತದೆ. ಇದು ಅಕ್ಕಿ, ಗೋಧಿ, ಮೆಕ್ಕೆಜೋಳ ಮತ್ತು ಸೋಯಾಬೀನ್ಗಳಂತಹ ಅಗತ್ಯ ವಸ್ತುಗಳ ಇಳುವರಿಯನ್ನು ಕಡಿಮೆ ಮಾಡುವ ಮೂಲಕ ಜಾಗತಿಕ ಆಹಾರ ಭದ್ರತೆಗೆ ಅಪಾಯವನ್ನುಂಟು ಮಾಡುತ್ತದೆ. ಪೂರೈಕೆಯಲ್ಲಿನ ಈ ಕೊರತೆ ಅನಿವಾರ್ಯವಾಗಿ ಆಹಾರದ ಬೆಲೆಗಳನ್ನು ಹೆಚ್ಚಿಸುವುದು ಮಾತ್ರವಲ್ಲದೆ , ವಿಶೇಷವಾಗಿ ಆಮದುಗಳ ಮೇಲೆ ಹೆಚ್ಚು ಅವಲಂಬಿತವಾಗಿರುವ ರಾಷ್ಟ್ರಗಳಲ್ಲಿ ಸ್ಥಳೀಯ ಕೊರತೆಯನ್ನು ಉಂಟುಮಾಡುವ ಸಾಧ್ಯತೆಯಿದೆ.
ಇರಾನ್- ಇಸ್ರೇಲ್ ಯುದ್ಧದಿಂದ ಇಂಗ್ಲೆಂಡ್ ನಲ್ಲಿ ಕ್ರಿಕೆಟ್ ಗೂ ಹೊಡೆತ; ದುಬಾರಿಯಾಗಿವೆ 'ಡ್ಯೂಕ್ಸ್' ಬಾಲ್ಗಳು!
War Impact On Cricket- ಮಧ್ಯಪ್ರಾಚ್ಯದ ಇರಾನ್-ಇಸ್ರೇಲ್ ಸಂಘರ್ಷದ ಪರಿಣಾಮ ಕ್ರೀಡಾಲೋಕವನ್ನೂ ಬಿಟ್ಟಿಲ್ಲ. ಇದರಿಂದಾಗಿ ಇಂಗ್ಲೆಂಡ್ ಸೇರಿದಂತೆ ಕೆಲ ದೇಶಗಳಲ್ಲಿ ವ್ಯಾಪಕವಾಗಿ ಬಳಸುವ 'ಡ್ಯೂಕ್ಸ್' ಚೆಂಡುಗಳ ತೀವ್ರ ಕೊರತೆ ಮತ್ತು ಬೆಲೆ ಏರಿಕೆಗೆ ಕಾರಣವಾಗಿದೆ. ಕೆಂಪು ಸಮುದ್ರ ಮತ್ತು ವರ್ಷಿಯನ್ ಕೊಲ್ಲಿ ಮೂಲಕ ಹಡಗು ಸಂಚಾರಕ್ಕೆ ಅಡ್ಡಿಯಾಗಿರುವುದರಿಂದ ಕಚ್ಚಾ ವಸ್ತುಗಳ ಆಮದು ಮತ್ತು ರಫ್ತು ಸ್ಥಗಿತಗೊಂಡಿದೆ. ಇದರಿಂದಾಗಿ ಇಂಗ್ಲೆಂಡ್ನ ಕೌಂಟಿ ಕ್ರಿಕೆಟ್ ಸೇರಿದಂತೆ ಅಂತರಾಷ್ಟ್ರೀಯ ಪಂದ್ಯಗಳ ಮೇಲೆ ಗಂಭೀರ ಪರಿಣಾಮ ಬೀರಿದೆ.
Hospital Bill: ವೈದ್ಯಕೀಯ ಚಿಕಿತ್ಸೆಯ ನಂತರ ಪ್ರತಿಯೊಂದು ವಸ್ತುವಿನ ವಿವರವಾದ ಪಟ್ಟಿ ಇರುವ ಬಿಲ್ ಕೇಳುವ ಮೂಲಕ ರೋಗಿಯೊಬ್ಬರು ಬರೋಬ್ಬರಿ 44,000 ರೂಪಾಯಿಗಳನ್ನು ಉಳಿಸಿದ್ದಾರೆ. ಆಶ್ಚರ್ಯಕರ ವಿಷಯವೆಂದರೆ, ತಮಗೆ ನಡೆಯದ ಶಸ್ತ್ರಚಿಕಿತ್ಸೆಗೂ ಆಸ್ಪತ್ರೆಯವರು ಬಿಲ್ ಹಾಕುತ್ತಿರುವುದು ವಿವರವಾದ ಪಟ್ಟಿಯನ್ನು ಪರಿಶೀಲಿಸಿದಾಗ ಈ ಘಟನೆ ಬೆಳಕಿಗೆ ಬಂದಿದೆ. ಸಾಮಾಜಿಕ ಜಾಲತಾಣದಲ್ಲಿ ಈ ಕಹಿ ಅನುಭವವನ್ನು ಹಂಚಿಕೊಂಡಿರುವ ರೋಗಿಯು, ಮೊದಲು
ಶುಕ್ರವಾರ (ಮಾ.20) ದ.ಕ. ಜಿಲ್ಲೆಗೆ ಸಾರ್ವತ್ರಿಕ ರಜೆ: ಡಿಸಿ ಎಚ್.ವಿ ದರ್ಶನ್
ಮಂಗಳೂರು: ಚಂದ್ರ ದರ್ಶನ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈದುಲ್ ಫಿತ್ರ್ ಶುಕ್ರವಾರ ನಡೆಯಲಿರುವುದರಿಂದ ದ.ಕ. ಜಿಲ್ಲೆಯಾದ್ಯಂತ ಮಾರ್ಚ್ 20ರಂದು ಸಾರ್ವತ್ರಿಕ ರಜೆ ಘೋಷಿಸಿ ಜಿಲ್ಲಾಧಿಕಾರಿ ಎಚ್.ವಿ ದರ್ಶನ್ ಆದೇಶಿಸಿದ್ದಾರೆ.
ಕಾರ್ಕಳ: ಟಿಪ್ಪರ್ ಹರಿದು ಬೈಕ್ ಸವಾರ ಸ್ಥಳದಲ್ಲೇ ಮೃತ್ಯು
ಕಾರ್ಕಳ: ಅತಿವೇಗದಿಂದ ಧಾವಿಸಿ ಬಂದ ಟಿಪ್ಪರ್ ಲಾರಿಯೊಂದು ಮುಂದೆ ಹೋಗುತ್ತಿದ್ದ ಮೋಟಾರು ಬೈಕ್ಗೆ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತ ಪಟ್ಟ ಘಟನೆ ಗುರುವಾರ ಬೆಳಗ್ಗೆ ಕಾರ್ಕಳದಲ್ಲಿ ನಡೆದಿದೆ. ಗಣೇಶ್ ನಾಯಕ್ ಎಂಬವರು ತನ್ನ ಬೈಕ್ನಲ್ಲಿ ಹಂಪನಕಟ್ಟೆ ಕಡೆಗೆ ಹೋಗುತ್ತಿರುವಾಗ ಆರೋಪಿ ತನ್ನ ಟಿಪ್ಪರ ಲಾರಿಯನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಮೋಟಾರ್ ಸೈಕಲ್ನ ಹಿಂಬದಿಗೆ ಡಿಕ್ಕಿ ಹೊಡೆದಿದ್ದು ಪರಿಣಾಮ ಗಣೇಶ ನಾಯಕ್ ಇವರು ಮೋಟಾರ್ ಸೈಕಲ್ ಸಮೇತ ರಸ್ತೆಯಲ್ಲಿ ಬಿದ್ದರು. ಇದೇ ವೇಳೆ ಟಿಪ್ಪರ್ ಲಾರಿಯ ಹಿಂಬದಿಯ ಟಯರ್ ಹೆಲ್ಮೆಟ್ ಹಾಕಿದ ಗಣೇಶ ನಾಯಕ್ ಇವರ ತಲೆಯ ಮೇಲೆ ಹತ್ತಿ ಹೋಗಿದ್ದು, ಇದರ ಪರಿಣಾಮ ಗಂಭೀರ ಸ್ವರೂಪದ ಗಾಯಗೊಂಡ ಗಣೇಶ ನಾಯಕ್ ಇವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆ ಪ್ರಕರಣ ದಾಖಲಾಗಿದೆ.
ಬಸ್ಸುಗಳಲ್ಲಿ 11 ಹೊಸ ಸುರಕ್ಷತಾ ಕ್ರಮಗಳನ್ನ ಅಳವಡಿಸಲು ಗಡುವು ವಿಸ್ತರಣೆ, ಮಾರ್ಚ್ 31 ಡೆಡ್ಲೈನ್
ಬೆಂಗಳೂರು: ರಾಜ್ಯದಲ್ಲಿ ಸಂಚರಿಸುವ ಸರ್ಕಾರಿ ಹಾಗೂ ಖಾಸಗಿ ಬಸ್ಗಳಲ್ಲಿ ಪ್ರಯಾಣಿಕರ ಸುರಕ್ಷತೆಯನ್ನು ಮತ್ತಷ್ಟು ಖಚಿತಪಡಿಸುವ ನಿಟ್ಟಿನಲ್ಲಿ ಕರ್ನಾಟಕ ಸಾರಿಗೆ ಇಲಾಖೆ ಮಹತ್ವದ ಹೆಜ್ಜೆಯಿಟ್ಟಿದೆ. ರಾಜ್ಯದ ಎಲ್ಲಾ ಬಸ್ ಮಾಲೀಕರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿರುವ ಇಲಾಖೆಯು, ಬಸ್ಸುಗಳಲ್ಲಿ ಒಟ್ಟು 11 ಹೊಸ ಸುರಕ್ಷತಾ ಕ್ರಮಗಳನ್ನು ಕಡ್ಡಾಯವಾಗಿ ಅಳವಡಿಸಿಕೊಳ್ಳುವಂತೆ ಆದೇಶ ಹೊರಡಿಸಿದೆ. ಈ ಹೊಸ ನಿಯಮಗಳನ್ನು ಪಾಲಿಸಲು 2026ರ ಮಾರ್ಚ್
ಮಧ್ಯಪ್ರಾಚ್ಯ ಸಂಘರ್ಷ ಜಗತ್ತನ್ನು 2026ರ ಆರ್ಥಿಕ ಹಿಂಜರಿತದತ್ತ ಹೇಗೆ ತಳ್ಳುತ್ತಿದೆ?
ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಸಂಘರ್ಷವು ಇನ್ನೂ ನಾಲ್ಕು ವಾರಗಳ ಕಾಲ ಮುಂದುವರಿದರೆ ಜಾಗತಿಕ ಆರ್ಥಿಕತೆಯನ್ನು ಆರ್ಥಿಕ ಹಿಂಜರಿತದತ್ತ ತಳ್ಳಬಹುದು ಎಂದು ಆಕ್ಸಿಸ್ ಬ್ಯಾಂಕ್ನ ಮುಖ್ಯ ಅರ್ಥಶಾಸ್ತ್ರಜ್ಞ ಮತ್ತು ಆಕ್ಸಿಸ್ ಕ್ಯಾಪಿಟಲ್ನ ಜಾಗತಿಕ ಸಂಶೋಧನಾ ಮುಖ್ಯಸ್ಥ ನೀಲಕಂಠ ಮಿಶ್ರಾ ಹೇಳಿದ್ದಾರೆ. ಸಿಎನ್ಬಿಸಿ ಟಿವಿ 18 ಜತೆ ಮಾತನಾಡಿದ ಮಿಶ್ರಾ, ಜಾಗತಿಕ ಇಂಧನ ಪೂರೈಕೆಯಲ್ಲಿನ ಪ್ರಸ್ತುತ ಅಡಚಣೆ ಈಗಾಗಲೇ ಮಹತ್ವದ್ದಾಗಿದೆ. ಪರಿಸ್ಥಿತಿ ಶೀಘ್ರದಲ್ಲೇ ಸುಧಾರಿಸದಿದ್ದರೆ ಇನ್ನಷ್ಟು ಹದಗೆಡಬಹುದು. ವಿಶ್ವದ ಇಂಧನ ಪೂರೈಕೆಯಲ್ಲಿ ಶೇ.7 ರಷ್ಟು ಅಡಚಣೆ ಉಂಟಾಗಿರುವುದು ಇದು ಜಾಗತಿಕ ಬೆಳವಣಿಗೆಗೆ ಪ್ರಮುಖ ಕಳವಳವಾಗಿದೆ. ಇದು ನಾಲ್ಕು ವಾರಗಳಿಗಿಂತ ಹೆಚ್ಚು, ಇನ್ನೂ ನಾಲ್ಕು ವಾರಗಳು ಮುಂದುವರಿದರೆ, ಗಮನಾರ್ಹ ಜಾಗತಿಕ ಆರ್ಥಿಕ ಹಿಂಜರಿತದ ಅಪಾಯವಿರುತ್ತದೆ ಎಂದು ನಾನು ಭಾವಿಸುತ್ತೇನೆ ಎಂದಿದ್ದಾರೆ. ಬಿಕ್ಕಟ್ಟು ಕೇವಲ ತೈಲ ಬೆಲೆ ಏರಿಕೆಯ ಬಗ್ಗೆ ಅಲ್ಲ, ಬದಲಾಗಿ ವ್ಯವಸ್ಥೆಯಲ್ಲಿನ ನಿಜವಾದ ಇಂಧನ ಕೊರತೆಯ ಬಗ್ಗೆ ಆಗಿದೆ. ಜಾಗತಿಕ ಇಂಧನ ಪೂರೈಕೆಯಲ್ಲಿ 4% ರಿಂದ 5% ರಷ್ಟು ಅಡಚಣೆ ಉಂಟಾದರೆ, ಜಾಗತಿಕ ಜಿಡಿಪಿಯ ಇದೇ ರೀತಿಯ ಪ್ರಮಾಣವು ಅಪಾಯದಲ್ಲಿರಬಹುದು ಎಂದು ಅವರು ಹೇಳಿದರು, 4% ರಿಂದ 5% ನಿವ್ವಳ ಇಂಧನ ಪೂರೈಕೆ ಸಮಸ್ಯೆಯಿದ್ದರೆ, ವಿಶ್ವ ಜಿಡಿಪಿಯ 4% ರಿಂದ 5% ರಷ್ಟು ಅಪಾಯದಲ್ಲಿದೆ ಎಂದಿದ್ದಾರೆ ಮಿಶ್ರಾ. ಜಾಗತಿಕ ಮಾರುಕಟ್ಟೆಗಳು ಇನ್ನೂ ಸಂಪೂರ್ಣವಾಗಿ ಭಯಭೀತರಾಗಿಲ್ಲ ಏಕೆ? ಈ ಅಪಾಯಗಳ ಹೊರತಾಗಿಯೂ, ಮಾರುಕಟ್ಟೆಗಳು ಇಲ್ಲಿಯವರೆಗೆ ತೀವ್ರವಾಗಿ ಪ್ರತಿಕ್ರಿಯಿಸಿಲ್ಲ. ಕಂಪನಿಗಳು ಮತ್ತು ಆರ್ಥಿಕತೆಗಳು ಇನ್ನೂ ದಾಸ್ತಾನುಗಳನ್ನು ಹೊಂದಿವೆ. ಅನೇಕರು ಸಂಘರ್ಷ ಶೀಘ್ರದಲ್ಲೇ ಕೊನೆಗೊಳ್ಳುತ್ತದೆ ಎಂದು ನಂಬುತ್ತಾರೆ ಆದಾಗ್ಯೂ, ಇದು ಅದೇ ರೀತಿ ಮುಂದುವರಿಯುವುದಿಲ್ಲ. ಈ ದಾಸ್ತಾನುಗಳು ಶಾಶ್ವತವಾಗಿ ಉಳಿಯುವುದಿಲ್ಲ. ಸರಬರಾಜು ಸರಪಳಿ ಅಡಚಣೆಗಳು ಪ್ರತಿ ದಿನ ಕಳೆದಂತೆ ತೀವ್ರವಾಗುತ್ತವೆ. ಭೀತಿ ಉಂಟಾದಾಗ ಮಾತ್ರ ಮಾರುಕಟ್ಟೆಗಳು ಬಲವಾಗಿ ಪ್ರತಿಕ್ರಿಯಿಸಬಹುದು ಮತ್ತು ಅದು ಉಲ್ಬಣವನ್ನು ಕಡಿಮೆ ಮಾಡಲು ಕಾರ್ಯನಿರ್ವಹಿಸಬಹುದು ಈಗಾಗಲೇ ಎಲ್ಲಾ ವಲಯಗಳಲ್ಲಿ ಇದರ ಪರಿಣಾಮ ಕಂಡುಬರುತ್ತಿದೆ. ಟೈಲ್ಸ್ನಂತಹ ವಸ್ತುಗಳ ಕೊರತೆ, ಕಾರ್ಬನ್ ಬ್ಲಾಕ್ ಮತ್ತು ಎಲ್ಎನ್ಜಿಯಂತಹ ಪ್ರಮುಖ ಒಳಹರಿವಿನ ಕೊರತೆಯಿಂದಾಗಿ ಆಟೋ ಉತ್ಪಾದನೆಯಲ್ಲಿ ಪೂರೈಕೆ ಸಮಸ್ಯೆಗಳಿಂದಾಗಿ ರಿಯಲ್ ಎಸ್ಟೇಟ್ ಯೋಜನೆಗಳಲ್ಲಿನ ವಿಳಂಬವಾಗುತ್ತಿದೆ. ಭಾರತದಲ್ಲಿ, ಸೂರತ್ನ ಜವಳಿ ವಲಯದ ಕಾರ್ಮಿಕರು ಎಲ್ಪಿಜಿ ಸಿಲಿಂಡರ್ಗಳ ಕೊರತೆಯಿಂದಾಗಿ ಈಗಾಗಲೇ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಈ ಬದಲಾವಣೆಗಳು ಬಿಕ್ಕಟ್ಟು ಇಂಧನ ವಲಯವನ್ನು ಮೀರಿ ಜಾಗತಿಕ ಆರ್ಥಿಕ ಚಟುವಟಿಕೆಯತ್ತ ಸಾಗುತ್ತಿದೆ ಎಂದು ತೋರಿಸುತ್ತದೆ ಅಂತಾರೆ ಮಿಶ್ರಾ ಯುದ್ಧ ಯಾವಾಗ ಕೊನೆಗೊಳ್ಳಬಹುದು? ಸಂಘರ್ಷವು ಬಹಳ ಕಾಲ ಮುಂದುವರಿಯುವ ಸಾಧ್ಯತೆಯಿಲ್ಲ. ಏಕೆಂದರೆ ಇದರಲ್ಲಿ ಒಳಗೊಂಡಿರುವ ಎಲ್ಲಾ ದೇಶಗಳಿಗೆ ಆರ್ಥಿಕ ವೆಚ್ಚವು ತುಂಬಾ ಹೆಚ್ಚಾಗಿರುತ್ತದೆ. ಆದಾಗ್ಯೂ, ಹಣಕಾಸು ಮಾರುಕಟ್ಟೆಗಳು ಒತ್ತಡಕ್ಕೆ ಒಳಗಾದಾಗ ಮಾತ್ರ ತಿರುವು ಬರಬಹುದು .ಹಣಕಾಸು ಮಾರುಕಟ್ಟೆಗಳಿಂದ ಒತ್ತಡವನ್ನು ಕಂಡರೆ ಮಾತ್ರ ಈ ದೇಶಗಳು ಯುದ್ಧದಿಂದ ಹಿಂದೆ ಸರಿಯಬಹುದು ಎಂದು ಮಿಶ್ರಾ ಹೇಳಿದ್ದಾರೆ. ಸಂಘರ್ಷದ ಸಮಯದಲ್ಲಿಪ್ರಮುಖ ಇಂಧನ ಮೂಲಸೌಕರ್ಯಕ್ಕೆ ಹಾನಿಯು ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸಬಹುದು. ಇದರ ಚೇತರಿಕೆ ವಿಳಂಬವಾಗಬಹುದು. ಮಾರುಕಟ್ಟೆಗಳು ಒಳ್ಳೆಯ ಸುದ್ದಿಗೆ ಮತ್ತು ಕೆಟ್ಟ ಸುದ್ದಿಗೆ ಸಕಾರಾತ್ಮಕವಾಗಿ ಪ್ರತಿಕ್ರಿಯಿಸುವ ಸಾಧ್ಯತೆಯಿದೆ. ಇದು ಪರಿಸ್ಥಿತಿಯ ಸುತ್ತಲಿನ ಅನಿಶ್ಚಿತತೆಯನ್ನು ಪ್ರತಿಬಿಂಬಿಸುತ್ತದೆ. ತೈಲ ಬೆಲೆಗಳ ಮೇಲೆ ಸಂಘರ್ಷದ ಪರಿಣಾಮವು ಒಂದೇ ರೀತಿಯಾಗಿರುವುದಿಲ್ಲ, ದೀರ್ಘಾವಧಿಯ ಅಡಚಣೆಗಳು ದೀರ್ಘಾವಧಿಯ ಚೇತರಿಕೆಯ ಅವಧಿಗಳಿಗೆ ಕಾರಣವಾಗಬಹುದು ಎಂದಿದ್ದಾರೆ ಮಿಶ್ರಾ. ಸಂಘರ್ಷ ತೀವ್ರಗೊಳ್ಳುತ್ತಿದ್ದಂತೆ ಜಾಗತಿಕ ಆರ್ಥಿಕತೆಯಲ್ಲಿ ವ್ಯವಸ್ಥಿತ ಬದಲಾವಣೆಯನ್ನು ಸೂಚಿಸುವ ನಿರ್ಣಾಯಕ ಸೂಚಕಗಳು: ►ಇಂಧನ ಬೆಲೆಗಳು ಫೆಬ್ರವರಿ 28 ರಂದು ಇರಾನ್ ಮೇಲೆ ಅಮೆರಿಕ-ಇಸ್ರೇಲಿ ದಾಳಿಗಳು ಪ್ರಾರಂಭವಾದಾಗಿನಿಂದ, ಟೆಹ್ರಾನ್ ಇಸ್ರೇಲ್, ಅಮೆರಿಕದ ಮಿಲಿಟರಿ ನೆಲೆಗಳು, ತೈಲ ಡಿಪೋಗಳು ಮತ್ತು ಗಲ್ಫ್ ಪ್ರದೇಶದಾದ್ಯಂತ ಇತರ ಮೂಲಸೌಕರ್ಯಗಳನ್ನು ಗುರಿಯಾಗಿಸಿಕೊಂಡು ಬ್ಯಾಲಿಸ್ಟಿಕ್ ಕ್ಷಿಪಣಿ ದಾಳಿ ನಡೆಸಿದೆ. ಹಾರ್ಮುಜ್ ಜಲಸಂಧಿಯಲ್ಲಿನ ಅಡಚಣೆ ತೈಲ ಬೆಲೆಗಳು ಗಗನಕ್ಕೇರಲು ಕಾರಣವಾಯಿತು. ಕೆಪ್ಲರ್ನ ಹಿರಿಯ ಕಚ್ಚಾ ತೈಲ ವಿಶ್ಲೇಷಕಿ ಮುಯು ಕ್ಸು ಪ್ರಕಾರ, ಯುದ್ಧ ಪ್ರಾರಂಭವಾದಾಗಿನಿಂದ ದ್ರವೀಕೃತ ನೈಸರ್ಗಿಕ ಅನಿಲ (LNG) ಬೆಲೆಗಳು ಇನ್ನೂ ತೀವ್ರವಾಗಿ ಏರಿದೆ. ಮಾರ್ಚ್ 2 ರಂದು, ಇರಾನಿನ ಡ್ರೋನ್ ದಾಳಿಯ ನಂತರ ಖತರ್ ಎನರ್ಜಿ ತನ್ನ ಎಲ್ಎನ್ಜಿ ಉತ್ಪಾದನೆಯನ್ನು ಸ್ಥಗಿತಗೊಳಿಸಿತು. ಇದು ಜಾಗತಿಕ ಎಲ್ಎನ್ಜಿ ಮಾರುಕಟ್ಟೆಯನ್ನು ಸಂಕಷ್ಟಕ್ಕೆ ಸಿಲುಕಿಸಿತು. ಖತರ್ ವಿಶ್ವದ ಎಲ್ಎನ್ಜಿಯ 20 ಪ್ರತಿಶತವನ್ನು ಪೂರೈಸುತ್ತದೆ.. ಹಾರ್ಮುಜ್ ಜಲಸಂಧಿಯ ಮೂಲಕ ಇಂಧನ ಹರಿವು ಹೆಚ್ಚಾಗಿ ಮುಚ್ಚಲ್ಪಟ್ಟರೆ ಆ ಪ್ರವೃತ್ತಿ ಮುಂದುವರಿಯುವ ನಿರೀಕ್ಷೆಯಿದೆ ಎಂದು ಮುಯು ಹೇಳಿದರು. ಮಧ್ಯಪ್ರಾಚ್ಯ ಕೊಲ್ಲಿಯಿಂದ ಕಚ್ಚಾ ತೈಲ ಮತ್ತು ಸಂಸ್ಕರಿಸಿದ ಉತ್ಪನ್ನಗಳು ಖರೀದಿದಾರರನ್ನು ತಲುಪಲು ಸಾಧ್ಯವಾಗದ ಕಾರಣ, ವಿಶೇಷವಾಗಿ ಏಷ್ಯಾದ ದೇಶಗಳು ಹೆಚ್ಚಿನ ಬೆಲೆಗೆ ಪರ್ಯಾಯ ಸರಬರಾಜುಗಳನ್ನು ಪಡೆಯಲು, ದಾಸ್ತಾನು ಮತ್ತು ಬೇಡಿಕೆಯನ್ನು ನಿರ್ವಹಿಸಲು ತುರ್ತು ಕ್ರಮಗಳನ್ನು ಅಳವಡಿಸಿಕೊಳ್ಳಲು ಪರದಾಡುತ್ತಿವೆ ಎಂದು ʼಅಲ್ ಜಝೀರಾʼ ಜತೆ ಮಾತಾಡಿದ ಮುಯು ಹೇಳಿದ್ದಾರೆ. 2024 ರಲ್ಲಿ ಜಲಸಂಧಿಯ ಮೂಲಕ ಹಾದುಹೋದ ಕಚ್ಚಾ ತೈಲದ ಸುಮಾರು 84 ಪ್ರತಿಶತ ಮತ್ತು ಎಲ್ಎನ್ಜಿಯ 83 ಪ್ರತಿಶತ ಏಷ್ಯಾಕ್ಕೆ ಸಾಗಿಸಲ್ಪಟ್ಟವು ಎಂದು ಯುಎಸ್ ಇಂಧನ ಮಾಹಿತಿ ಆಡಳಿತದ ದತ್ತಾಂಶಗಳು ತಿಳಿಸಿವೆ. ಏಜೆನ್ಸಿಯ ಪ್ರಕಾರ, ಚೀನಾ, ಭಾರತ, ಜಪಾನ್ ಮತ್ತು ದಕ್ಷಿಣ ಕೊರಿಯಾಗಳು ಆ ತೈಲ ಸಾಗಣೆಯಲ್ಲಿ ಸುಮಾರು 70 ಪ್ರತಿಶತವನ್ನು ಹೊಂದಿದ್ದು, ಸುಮಾರು 15 ಪ್ರತಿಶತ ಏಷ್ಯಾದ ಉಳಿದ ಭಾಗಗಳಿಗೆ ಸಾಗಿಸಲ್ಪಟ್ಟಿವೆ. ಜಾಗತಿಕ ಮ್ಯಾಕ್ರೋ ಇಕಾನಮಿಕ್ ಸಂಸ್ಥೆ ಕ್ಯಾಪಿಟಲ್ ಎಕನಾಮಿಕ್ಸ್ನ ನೀಲ್ ಶಿಯರಿಂಗ್ ಮತ್ತು ಅವರ ಅರ್ಥಶಾಸ್ತ್ರಜ್ಞರ ತಂಡದ ಮಾರ್ಚ್ 9 ರ ವರದಿಯ ಪ್ರಕಾರ, ಸಂಘರ್ಷ ಅಲ್ಪಕಾಲಿಕವಾಗಿದ್ದರೆ ಮತ್ತು ಗಲ್ಫ್ ದೇಶಗಳು ಮತ್ತು ಹಾರ್ಮುಜ್ ಜಲಸಂಧಿಯಲ್ಲಿ ಇರಾನಿನ ದಾಳಿಗಳು ನಿಂತರೆ ವರ್ಷಾಂತ್ಯದ ವೇಳೆಗೆ ಬ್ರೆಂಟ್ ಕಚ್ಚಾ ತೈಲದ ಬೆಲೆ 65 ಡಾಲರ್ (ಪ್ರತಿ ಬ್ಯಾರೆಲ್ಗೆ) ತಲುಪುವುದರೊಂದಿಗೆ ತೈಲ ಮತ್ತು ಎಲ್ಎನ್ಜಿ ಬೆಲೆಗಳು ತೀವ್ರವಾಗಿ ಕುಸಿಯುತ್ತವೆ. ಆದರೆ ದೀರ್ಘಾವಧಿಯ ಯುದ್ಧದ ಸಂದರ್ಭದಲ್ಲಿ ತೈಲ ಬೆಲೆಗಳು ಎರಡನೇ ತ್ರೈಮಾಸಿಕದಲ್ಲಿ ಸುಮಾರು 130 ಡಾಲರ್ ಗೆ ಏರುತ್ತವೆ. ಹಾರ್ಮುಜ್ ಜಲಸಂಧಿಯ ಮೂಲಕ ಸಾಗಣೆಗಳು ಎರಡನೇ ತ್ರೈಮಾಸಿಕದಲ್ಲಿ ಪುನರಾರಂಭಗೊಳ್ಳುತ್ತವೆ, ಆದರೆ ವರ್ಷಾಂತ್ಯದ ವೇಳೆಗೆ ಬೆಲೆಗಳು ಹೆಚ್ಚಿರುತ್ತವೆ. ಸಂಘರ್ಷವು ಮೂರು ತಿಂಗಳವರೆಗೆ ನಿಯಂತ್ರಿಸಲ್ಪಟ್ಟರೂ ಸಹ, ಮುಂದಿನ ಆರು ತಿಂಗಳವರೆಗೆ ಬ್ರೆಂಟ್ ಕಚ್ಚಾ ತೈಲ ಬೆಲೆಗಳು ಸರಾಸರಿ 150 ಡಾಲರ್ ಗೆ ಗೆ ಏರಬಹುದು ಎಂದು ನಾವು ಭಾವಿಸುತ್ತೇವೆ” ಎಂದು ಅರ್ಥಶಾಸ್ತ್ರಜ್ಞರು ಹೇಳಿದ್ದಾರೆ. ►ಕಡಿಮೆ ಉತ್ಪಾದಕತೆ ಇಂಧನವನ್ನು ಅತಿಯಾಗಿ ಬಳಸುವ ಆರ್ಥಿಕತೆಗಳ ಆಮದು ವೆಚ್ಚಗಳು ಹೆಚ್ಚುತ್ತಿರುವಂತೆ, ಅವುಗಳ ಆರ್ಥಿಕ ಉತ್ಪಾದಕತೆಯೂ ಕುಸಿಯಲು ಪ್ರಾರಂಭಿಸಿದೆ. ಸುಮಾರು 150 ದೇಶಗಳಲ್ಲಿ ಚಿಲ್ಲರೆ ಇಂಧನ ಬೆಲೆಗಳನ್ನು ಪತ್ತೆಹಚ್ಚುವ ಮತ್ತು ಪ್ರಕಟಿಸುವ ದತ್ತಾಂಶ ವೇದಿಕೆಯಾದ ಗ್ಲೋಬಲ್ ಪೆಟ್ರೋಲ್ ಪ್ರೈಸಸ್ನಿಂದ ವಿಶ್ಲೇಷಿಸಲಾದ ಮಾಹಿತಿಯ ಪ್ರಕಾರ, ಫೆಬ್ರವರಿ 28 ರಿಂದ ಕನಿಷ್ಠ 85 ದೇಶಗಳು ಪೆಟ್ರೋಲ್ ಬೆಲೆಯಲ್ಲಿ ಹೆಚ್ಚಳವನ್ನು ವರದಿ ಮಾಡಿವೆ. ಕೆಲವು ರಾಷ್ಟ್ರಗಳು ಪ್ರತಿ ತಿಂಗಳ ಕೊನೆಯಲ್ಲಿ ಮಾತ್ರ ಬೆಲೆ ಬದಲಾವಣೆಗಳನ್ನು ಘೋಷಿಸುತ್ತವೆ. ಆದ್ದರಿಂದ ಎಪ್ರಿಲ್ನಲ್ಲಿ ಇತರ ಹಲವು ದೇಶಗಳಿಗೆ ಹೆಚ್ಚಿನ ಬೆಲೆಗಳು ನಿರೀಕ್ಷಿಸಲಾಗಿದೆ. ಇಲ್ಲಿಯವರೆಗೆ, ಕಾಂಬೋಡಿಯಾ ಸುಮಾರು 68 ಪ್ರತಿಶತದಷ್ಟು ಅತ್ಯಧಿಕ ಪೆಟ್ರೋಲ್ ಬೆಲೆ ಏರಿಕೆಯನ್ನು ದಾಖಲಿಸಿದೆ. ವಿಯೆಟ್ನಾಂ 50 ಪ್ರತಿಶತ, ನೈಜೀರಿಯಾ 35 ಪ್ರತಿಶತ, ಲಾವೋಸ್ 33 ಪ್ರತಿಶತ ಮತ್ತು ಕೆನಡಾ 28 ಪ್ರತಿಶತ ಏರಿಕೆ ಮಾಡಿವೆ. ಪಾಕಿಸ್ತಾನವು ಸರ್ಕಾರಿ ನೌಕರರಿಗೆ ವಾರದಲ್ಲಿ ನಾಲ್ಕು ದಿನಗಳ ಕೆಲಸವನ್ನು ಪರಿಚಯಿಸಿದೆ. ಅದರಲ್ಲಿ 50 ಪ್ರತಿಶತದಷ್ಟು ಸಿಬ್ಬಂದಿ ಮನೆಯಿಂದ ಸರದಿಯ ಮೇಲೆ ಕೆಲಸ ಮಾಡುತ್ತಾರೆ. ಫಿಲಿಪೈನ್ಸ್ನ ಸರ್ಕಾರಿ ಕಚೇರಿಗಳು ಸಹ ವಾರಕ್ಕೆ ನಾಲ್ಕು ದಿನಗಳ ಕೆಲಸದ ಅವಧಿಗೆ ಬದಲಾಯಿಸಲ್ಪಟ್ಟಿವೆ. ಥೈಲ್ಯಾಂಡ್ ಸರ್ಕಾರಿ ಅಧಿಕಾರಿಗಳಿಗೆ ಮನೆಯಿಂದಲೇ ಕೆಲಸ ಮಾಡುವುದನ್ನು ಕಡ್ಡಾಯಗೊಳಿಸಿದೆ. ಮ್ಯಾನ್ಮಾರ್ ಸರ್ಕಾರವು ಕಾರುಗಳು ಪರ್ಯಾಯ ದಿನಗಳಲ್ಲಿ ಮಾತ್ರ ಚಲಿಸಬಹುದು ಎಂಬ ನಿಯಮವನ್ನು ವಿಧಿಸಿದೆ. ಶ್ರೀಲಂಕಾದಲ್ಲಿ, ವಾಹನ ಮಾಲಕರು ಇಂಧನವನ್ನು ಖರೀದಿಸಲು ಆನ್ಲೈನ್ನಲ್ಲಿ ನೋಂದಾಯಿಸಿಕೊಳ್ಳಬೇಕು, ನಂತರ ಪೆಟ್ರೋಲ್ ಅಥವಾ ಡೀಸೆಲ್ ಖರೀದಿಸಲು ಪಂಪ್ನಲ್ಲಿ QR ಕೋಡ್ ಅನ್ನು ಬಳಸಬೇಕು. ಪ್ರತಿಯೊಬ್ಬ ಗ್ರಾಹಕರು ಎಷ್ಟು ಖರೀದಿಸುತ್ತಾರೆ ಎಂಬುದನ್ನು ನಿಯಂತ್ರಿಸುವ ಗುರಿಯನ್ನು ಈ ಕ್ರಮ ಹೊಂದಿದೆ. ಇದೆಲ್ಲವೂ ಆರ್ಥಿಕತೆಯ ಉತ್ಪಾದಕತೆಯ ಮೇಲೆ ಪರಿಣಾಮ ಬೀರುತ್ತದೆ ಎಂದು ಅರ್ಥಶಾಸ್ತ್ರಜ್ಞರು ಹೇಳಿದ್ದಾರೆ. ಬಂಕರಿಂಗ್ ಬೆಲೆಗಳು ಪ್ರತಿದಿನ ಹೊಸ ಗರಿಷ್ಠ ಮಟ್ಟವನ್ನು ತಲುಪುತ್ತಿದ್ದಂತೆ ಹಡಗು ಮಾಲಕರು ಹೊಸ ಆದೇಶಗಳನ್ನು ತೆಗೆದುಕೊಳ್ಳಲು ಹಿಂಜರಿಯುತ್ತಿದ್ದಾರೆ. ಅವರು ಪಡೆಯುವ ಸರಕು ದರಗಳು ಹೆಚ್ಚುತ್ತಿರುವ ಇಂಧನ ವೆಚ್ಚಗಳನ್ನು ಸರಿದೂಗಿಸಲು ಸಾಕಾಗುವುದಿಲ್ಲ ಎಂದು ಅವರು ಚಿಂತಿಸುತ್ತಾರೆ. ಮುಂಬರುವ ವಾರಗಳಲ್ಲಿ, ಏರುತ್ತಿರುವ ಇಂಧನ ಬೆಲೆಗಳು, ನಿರ್ಬಂಧಿತ ಬೇಡಿಕೆ ಮತ್ತು ಅಂತಿಮವಾಗಿ ಹಣದುಬ್ಬರದಂತಹ ಪರಿಣಾಮಗಳ ಹೆಚ್ಚಿನ ಪುರಾವೆಗಳನ್ನು ನಾವು ನಿರೀಕ್ಷಿಸುತ್ತಿದ್ದೇವೆ ಎಂದಿದ್ದಾರೆ ಮುಯು. ►ಹಣದುಬ್ಬರ ಮತ್ತು ಆರ್ಥಿಕ ನಿಶ್ಚಲತೆಯ ಭಯ ಯುದ್ಧವು ದೀರ್ಘಕಾಲದವರೆಗೆ ಮುಂದುವರಿದರೆ, ಅದು ಜಾಗತಿಕ ಆರ್ಥಿಕತೆಯ ಮೇಲೆ ಹಣದುಬ್ಬರದ ಅಪಾಯವನ್ನುಂಟುಮಾಡುತ್ತದೆ ಎಂದು ಅಂತರರಾಷ್ಟ್ರೀಯ ಹಣಕಾಸು ನಿಧಿಯ ವ್ಯವಸ್ಥಾಪಕ ನಿರ್ದೇಶಕಿ ಕ್ರಿಸ್ಟಲಿನಾ ಜಾರ್ಜಿವಾ ಎಚ್ಚರಿಸಿದ್ದಾರೆ. ತೈಲ ಬೆಲೆ ಏರಿಕೆ ಸಾಂಪ್ರದಾಯಿಕವಾಗಿ ಬೆಲೆಗಳನ್ನು ಹೆಚ್ಚಿಸುವ ಮೂಲಕ ಮತ್ತು ಕಾರ್ಮಿಕ ಮಾರುಕಟ್ಟೆಯನ್ನು ಸ್ಥಗಿತಗೊಳಿಸುವ ಮೂಲಕ ನಿಶ್ಚಲತೆಯನ್ನು ಪ್ರಚೋದಿಸುತ್ತವೆ. 1973, 1978 ಮತ್ತು 2008 ರ ಬಿಕ್ಕಟ್ಟುಗಳನ್ನು ಉಲ್ಲೇಖಿಸಿ, ತೈಲ ಬೆಲೆಗಳಲ್ಲಿನ ಗಮನಾರ್ಹ ಏರಿಕೆಯು ಜಾಗತಿಕ ಹಿಂಜರಿತದ ಸೂಚಕವಾಗಿದೆ ಎಂದು ಅರ್ಥಶಾಸ್ತ್ರಜ್ಞರು ವಾದಿಸುತ್ತಾರೆ. ಹಣದುಬ್ಬರವನ್ನು ಎದುರಿಸಲು ಜಾಗತಿಕ ಉತ್ತರದಲ್ಲಿ ಬಡ್ಡಿದರಗಳನ್ನು ಹೆಚ್ಚಿಸಿದರೆ ಸಾಲದಿಂದ ಬಳಲುತ್ತಿರುವ ಜಾಗತಿಕ ದಕ್ಷಿಣ ದೇಶಗಳು ಸಾಲ ಬಿಕ್ಕಟ್ಟನ್ನು ಎದುರಿಸಬಹುದು ಎಂದು ಜಾಗತಿಕ ವ್ಯವಹಾರಗಳ ಮಧ್ಯಪ್ರಾಚ್ಯ ಮಂಡಳಿಯಲ್ಲಿ ಷ್ನೇಯ್ಡರ್ ಎಚ್ಚರಿಸಿದ್ದಾರೆ. ಚೀನಾದ ದೀರ್ಘಕಾಲೀನ ಇಂಧನ ತಂತ್ರವು ಈಗ ಫಲ ನೀಡುತ್ತಿದೆ. ನವೀಕರಿಸಬಹುದಾದ ಇಂಧನ ಮೂಲಗಳು, ಪರಮಾಣು ಶಕ್ತಿ ಮತ್ತು ಕಲ್ಲಿದ್ದಲನ್ನು ಆಕ್ರಮಣಕಾರಿಯಾಗಿ ಹೆಚ್ಚಿಸುವ ಮೂಲಕ, ಅದೇ ಸಮಯದಲ್ಲಿ ತನ್ನ ಹೈಡ್ರೋಕಾರ್ಬನ್ ಪೂರೈಕೆದಾರ ನೆಲೆಯನ್ನು ವಿಸ್ತರಿಸುವ ಮೂಲಕ ಮತ್ತು ಬೃಹತ್ ಕಾರ್ಯತಂತ್ರದ ಮೀಸಲು ಸಂಗ್ರಹಿಸುವ ಮೂಲಕ ಬೀಜಿಂಗ್ ಜಾಗತಿಕ ಚಂಚಲತೆಯ ವಿರುದ್ಧ ಅಸಾಧಾರಣ ದಾಸ್ತಾನು ಅನ್ನು ನಿರ್ಮಿಸಿದೆ ಎಂದು ಷ್ನೇಯ್ಡರ್ ಹೇಳಿದರು ಯುರೋಪ್ನ ಕೈಗಾರಿಕೆಗಳು ಈಗಾಗಲೇ ಹೆಚ್ಚಿನ ಇಂಧನ ವೆಚ್ಚಗಳಿಂದ ಬಳಲುತ್ತಿವೆ . ಈ ಯುದ್ಧವು ದೀರ್ಘಾವಧಿಯ ಕುಸಿತದ ಬೆಳವಣಿಗೆಯಿಂದ ಬಳಲುತ್ತಿರುವ ಆರ್ಥಿಕತೆಯಲ್ಲಿ ಖಂಡಿತವಾಗಿಯೂ ಮತ್ತೊಂದು ಒತ್ತಡವನ್ನು ಹೇರುತ್ತದೆ. ಅಮೆರಿಕ ಇಂಧನ ಸ್ವಾವಲಂಬಿಯಾಗಿದೆ. ಆದರೆ ಪೆಟ್ರೋಲ್ ಬೆಲೆಗಳು ಸಾರ್ವಜನಿಕ ಅಸಮಾಧಾನದ ಒಂದು ಪ್ರಮುಖ ಅಂಶವಾಗಿದೆ ಎಂದಿದ್ದಾರೆ ಅವರು. ►ಜಿಡಿಪಿ ಬೆಳವಣಿಗೆ ದರ ಶಿಯರಿಂಗ್ ಮತ್ತು ಕ್ಯಾಪಿಟಲ್ ಎಕನಾಮಿಕ್ಸ್ನ ಅವರ ಅರ್ಥಶಾಸ್ತ್ರಜ್ಞರ ತಂಡವು ತಮ್ಮ ವರದಿಯಲ್ಲಿ, ಯುದ್ಧ ಕೆಲವು ವಾರಗಳಲ್ಲಿ ಕೊನೆಗೊಂಡರೆ, ಗಲ್ಫ್ ಆರ್ಥಿಕತೆಗಳ ಹೊರಗೆ, ಜಿಡಿಪಿ, ಹಣದುಬ್ಬರ ಮತ್ತು ಹಣಕಾಸು ನೀತಿಯ ಮೇಲಿನ ಪರಿಣಾಮ ಸೀಮಿತವಾಗಿರುತ್ತದೆ ಎಂದು ಮುನ್ಸೂಚನೆ ನೀಡಿದೆ. ಈ ಬಿಕ್ಕಟ್ಟಿನ ಮುಂಚೂಣಿಯಲ್ಲಿ ಏಷ್ಯಾ ಮತ್ತು ಯುರೋಪ್ ಇದ್ದರೂ, ಜಾಗತಿಕ ಆರ್ಥಿಕ ಮುನ್ಸೂಚನೆಗಳು ಸದ್ಯಕ್ಕೆ ಸ್ಥಿರವಾಗಿವೆ. ಪಾಕಿಸ್ತಾನ ಮತ್ತು ಟರ್ಕಿಯಂತಹ ದುರ್ಬಲ ಹಣಕಾಸಿನ ಅಡಿಪಾಯ ಹೊಂದಿರುವವರು ಮಾತ್ರ ಹೆಚ್ಚಿನ ಬಡ್ಡಿದರ ಏರಿಕೆಗೆ ಒತ್ತಾಯಿಸಲ್ಪಡುವ ಸಾಧ್ಯತೆಯಿದೆ. ಆದಾಗ್ಯೂ, ಯುದ್ಧವು ಹಲವಾರು ತಿಂಗಳುಗಳ ಕಾಲ ಮುಂದುವರಿದರೆ, ಯೂರೋ-ವಲಯದಲ್ಲಿ ಜಿಡಿಪಿ ಬೆಳವಣಿಗೆ ವರ್ಷದಿಂದ ವರ್ಷಕ್ಕೆ ಕೇವಲ 0.5 ಪ್ರತಿಶತಕ್ಕೆ ನಿಧಾನವಾಗುವ ಸಾಧ್ಯತೆಯಿದೆ. ಆದರೆ ಚೀನಾದಲ್ಲಿ ಆರ್ಥಿಕ ಬೆಳವಣಿಗೆ ವರ್ಷದಿಂದ ವರ್ಷಕ್ಕೆ 3 ಪ್ರತಿಶತಕ್ಕಿಂತ ಕಡಿಮೆಯಾಗುವ ಸಾಧ್ಯತೆಯಿದೆ. 2026 ರಲ್ಲಿ ಅಮೆರಿಕವು ಶೇಕಡಾ 2.25 ರಷ್ಟು ಬೆಳವಣಿಗೆ ಹೊಂದುವ ಮೂಲಕ ಇತರ ಆರ್ಥಿಕತೆಗಳಿಗಿಂತ ಉತ್ತಮ ಸಾಧನೆ ಮಾಡುತ್ತದೆ ಎಂದು ಅರ್ಥಶಾಸ್ತ್ರಜ್ಞರು ಭವಿಷ್ಯ ನುಡಿದಿದ್ದಾರೆ. ಯೂರೋ ವಲಯದಲ್ಲಿ ಹಣದುಬ್ಬರವು ವರ್ಷದಿಂದ ವರ್ಷಕ್ಕೆ ಶೇಕಡಾ 4 ಕ್ಕಿಂತ ಹೆಚ್ಚು, ಯುಎಸ್ನಲ್ಲಿ ವರ್ಷದಿಂದ ವರ್ಷಕ್ಕೆ ಶೇಕಡಾ 3 ಮತ್ತು ಜಪಾನ್ನಲ್ಲಿ ವರ್ಷದಿಂದ ವರ್ಷಕ್ಕೆ ಶೇಕಡಾ 2.5 ರಷ್ಟು ಗರಿಷ್ಠ ಮಟ್ಟದಲ್ಲಿ ಮುಂದುವರಿಯುತ್ತದೆ. ಇದು ಯುರೋಪಿಯನ್ ಸೆಂಟ್ರಲ್ ಬ್ಯಾಂಕ್ ಬಡ್ಡಿದರಗಳನ್ನು ಹೆಚ್ಚಿಸಲು ಮತ್ತು ಬ್ಯಾಂಕ್ ಆಫ್ ಜಪಾನ್ ತನ್ನ ನೀತಿಯನ್ನು ಬಿಗಿಗೊಳಿಸಲು ಕಾರಣವಾಗುತ್ತದೆ ಎಂದು ಅವರು ಹೇಳಿದ್ದಾರೆ. ► ಪ್ರಯಾಣ ಮತ್ತು ವಾಯುಯಾನ ಯುದ್ಧವು ತೈಲ ಬೆಲೆಗಳನ್ನು ಹೆಚ್ಚಿಸಿದ್ದು ಮಾತ್ರವಲ್ಲದೆ ಜಾಗತಿಕ ಪ್ರಯಾಣವನ್ನು ಹೆಚ್ಚಿಸಿದೆ.ಸಂಘರ್ಷ ಆರಂಭವಾಗಿ ಎರಡು ವಾರಗಳಲ್ಲಿ, ಗಲ್ಫ್ನ ಪ್ರಮುಖ ವಿಮಾನಯಾನ ಸಂಸ್ಥೆಗಳು ಯುದ್ಧಪೂರ್ವ ಹಾರಾಟದ ಪ್ರಮಾಣಕ್ಕೆ ಮರಳಲು ಹೆಣಗಾಡುತ್ತಿವೆ. ಪ್ರಾದೇಶಿಕ ವಾಯುಪ್ರದೇಶಗಳು ಮುಚ್ಚಲ್ಪಟ್ಟಿವೆ ಅಥವಾ ಕ್ಷಿಪಣಿಗಳು ಮತ್ತು ಡ್ರೋನ್ಗಳ ನಿರಂತರ ಬೆದರಿಕೆಯೊಂದಿಗೆ ಪ್ರಮುಖ ನಿರ್ಬಂಧಗಳ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿವೆ. ಆಸ್ಟ್ರೇಲಿಯಾದ ಕ್ವಾಂಟಾಸ್ ಏರ್ವೇಸ್, ಸ್ಕ್ಯಾಂಡಿನೇವಿಯಾದ SAS, ಏರ್ ನ್ಯೂಝಿಲೆಂಡ್ ಮತ್ತು ಭಾರತದ ಎರಡು ದೊಡ್ಡ ವಾಹಕಗಳಾದ ಇಂಡಿಗೊ ಮತ್ತು ಏರ್ ಇಂಡಿಯಾ, ಇಂಧನ ವೆಚ್ಚದಲ್ಲಿನ ಹಠಾತ್ ಏರಿಕೆಯಿಂದಾಗಿ ವಿಮಾನ ದರ ಹೆಚ್ಚಳವನ್ನು ಘೋಷಿಸಿವೆ. ಇರಾನ್ ಮೇಲಿನ ದಾಳಿಯ ಮೊದಲು ಪ್ರತಿ ಬ್ಯಾರೆಲ್ಗೆ ಸುಮಾರು 85 ಡಾಲರ್ ರಿಂದ 90 ಡಾಲರ್ ರಷ್ಟಿದ್ದ ಜೆಟ್ ಇಂಧನ ಬೆಲೆಗಳು ಬ್ಯಾರೆಲ್ಗೆ 150 ಡಾಲರ್ ನಿಂದ 200 ಡಾಲರ್ ಗೆ ಏರಿವೆ ಎಂದು ನ್ಯೂಝಿಲೆಂಡ್ ಕಳೆದ ವಾರ ಹೇಳಿದೆ. ಗಲ್ಫ್ ವಾಯುಪ್ರದೇಶವನ್ನು ಬೈಪಾಸ್ ಮಾಡುವ ಮಾರ್ಗ ಬದಲಾವಣೆಯು ಏಷ್ಯಾ/ಆಸ್ಟ್ರೇಲಿಯಾ ಮತ್ತು ಪಾಶ್ಚಿಮಾತ್ಯ ತಾಣಗಳ ನಡುವೆ ಪ್ರಯಾಣಿಸುವ ವಿಮಾನಯಾನ ಸಂಸ್ಥೆಗಳಿಗೆ ಹಾರಾಟದ ಅವಧಿಯನ್ನು ಗಮನಾರ್ಹವಾಗಿ ವಿಸ್ತರಿಸಿದೆ. ಇದು ವಿಮಾನ ಟಿಕೆಟ್ ಬೆಲೆಗಳನ್ನು ಮತ್ತಷ್ಟು ಹೆಚ್ಚಿಸಿದೆ. ರಷ್ಯಾದ ವಾಯುಪ್ರದೇಶದಿಂದ ಈಗಾಗಲೇ ಸ್ಥಗಿತಗೊಂಡಿರುವ ಯುರೋಪಿಯನ್ ವಿಮಾನಯಾನ ಸಂಸ್ಥೆಗಳಿಗೆ ವಿಮಾನಯಾನ ಮಾರ್ಗ ಬದಲಾವಣೆಯು ಒಳ್ಳೆಯ ಸುದ್ದಿಯಲ್ಲ. ಇದು ಏಷ್ಯಾಕ್ಕೆ ವಿಮಾನಗಳನ್ನು ಇನ್ನಷ್ಟು ದೀರ್ಘ ಮತ್ತು ದುಬಾರಿಯನ್ನಾಗಿ ಮಾಡುತ್ತದೆ. ಈ ಬಿಕ್ಕಟ್ಟು ಪ್ರವಾಸೋದ್ಯಮದ ದೃಷ್ಟಿಕೋನ ಕುಂಠಿತಗೊಂಡು ಜೀವನ ವೆಚ್ಚದ ಬಿಕ್ಕಟ್ಟಿನೊಂದಿಗೆ ವರ್ಷದ ಉಳಿದ ಭಾಗಕ್ಕೂ ಹರಡಬಹುದು ಎಂದಿದ್ದಾರೆ ಷ್ನೇಯ್ಡರ್ .
ಲೆಬನಾನ್ ನಲ್ಲಿ ಯುದ್ಧದ ವರದಿಯ ವೇಳೆ ವರದಿಗಾರನ ಸಮೀಪಕ್ಕೆ ಬಾಂಬ್ ಹಾಕಿದ ಇಸ್ರೇಲ್!
ಭೀಕರ ಕ್ಷಣ ಕ್ಯಾಮೆರಾದಲ್ಲಿ ಸೆರೆ
ವಿಜಯನಗರ | ಭ್ರಷ್ಟಾಚಾರ ನಿರ್ಮೂಲನ ಸಮಿತಿಗೆ ಕೆ.ರಾಮಪ್ಪ ಜಿಲ್ಲಾಧ್ಯಕ್ಷರಾಗಿ ಆಯ್ಕೆ
ಹೊಸಪೇಟೆ: ರಾಷ್ಟ್ರೀಯ ಭ್ರಷ್ಟಾಚಾರ ನಿರ್ಮೂಲನ ಹಾಗೂ ಕಾರ್ಯಾಚರಣೆ ಸಮಿತಿಯ ವಿಜಯನಗರ ಜಿಲ್ಲಾ ಘಟಕದ ಅಧ್ಯಕ್ಷರಾಗಿ ಹಿರಿಯ ವಕೀಲ ಕೆ.ರಾಮಪ್ಪ ಅವರು ಆಯ್ಕೆಯಾಗಿದ್ದಾರೆ. ಸಮಿತಿಯ ಮುಖ್ಯ ಉದ್ದೇಶ ಸಮಾಜ ಹಾಗೂ ವಿವಿಧ ಇಲಾಖೆಗಳಲ್ಲಿ ಬೇರೂರಿರುವ ಭ್ರಷ್ಟಾಚಾರವನ್ನು ಬುಡಮೂಲ ಸಮೇತ ನಿರ್ಮೂಲನೆ ಮಾಡುವುದಾಗಿದೆ. ಈ ನಿಟ್ಟಿನಲ್ಲಿ ಸಂಘಟನೆ ವಿವಿಧ ಚಟುವಟಿಕೆಗಳನ್ನು ಹಮ್ಮಿಕೊಂಡು ಭ್ರಷ್ಟಾಚಾರ ತಡೆಗೆ ಕಾರ್ಯ ನಿರ್ವಹಿಸಲಿದೆ. ಈ ಸಂದರ್ಭದಲ್ಲಿ ಮಾತನಾಡಿದ ವಿಜಯನಗರ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಗುಜ್ಜಲ ನಾಗರಾಜ ಅವರು, ರಾಮಪ್ಪ ಅವರ ಆಯ್ಕೆ ಸೂಕ್ತವಾಗಿದ್ದು, ಅವರು ಈಗಾಗಲೇ ಹಲವು ಸಂಘ-ಸಂಸ್ಥೆಗಳ ಮೂಲಕ ಭ್ರಷ್ಟಾಚಾರ ವಿರೋಧಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವುದನ್ನು ಶ್ಲಾಘಿಸಿದರು. ಮುಂದೆಯೂ ವಕೀಲರು ಸಹಕಾರ ನೀಡುವುದಾಗಿ ಹೇಳಿದರು. ಕೊಪ್ಪಳ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಕಣವಿ ಮಾತನಾಡಿ, ಭ್ರಷ್ಟಾಚಾರ ನಿರ್ಮೂಲನೆ ಒಂದು ವ್ಯಕ್ತಿ ಅಥವಾ ಒಂದು ಸಂಘಟನೆಯಿಂದ ಸಾಧ್ಯವಿಲ್ಲ. ಪ್ರತಿಯೊಬ್ಬರೂ ಪಾರದರ್ಶಕ ಮನೋಭಾವದಿಂದ ಯೋಧರಂತೆ ಶ್ರಮಿಸಬೇಕು ಎಂದು ಕರೆ ನೀಡಿದರು. ಕಾರ್ಯಕ್ರಮದಲ್ಲಿ ಸಮಿತಿಯ ರಾಜ್ಯಾಧ್ಯಕ್ಷರು, ವಿವಿಧ ಜಿಲ್ಲೆಗಳ ಪದಾಧಿಕಾರಿಗಳು ಹಾಗೂ ಹಿರಿಯ ವಕೀಲರಾದ ಕೆ.ಎಂ. ವಿಜಯಕುಮಾರ್, ಭಾಗ್ಯಲಕ್ಷ್ಮಿ ಬರಾಡೆ, ಕಟಗಿ ಜಂಬಯ್ಯ, ಎ.ಎಂ. ಬಸವರಾಜ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಹೊಸಪೇಟೆಯ ಸಾರ್ವಜನಿಕರು ಕೆ. ರಾಮಪ್ಪ ಅವರ ಆಯ್ಕೆಗೆ ಹರ್ಷ ವ್ಯಕ್ತಪಡಿಸಿ ಶುಭಾಶಯಗಳನ್ನು ತಿಳಿಸಿದ್ದಾರೆ.
Shivamogga | ಬಸ್ -ಆಟೋ ನಡುವೆ ಢಿಕ್ಕಿ; ಓರ್ವ ಮೃತ್ಯು, ಮೂವರಿಗೆ ಗಾಯ
ಶಿವಮೊಗ್ಗ : ಖಾಸಗಿ ಬಸ್ ಹಾಗೂ ಆಟೋ ಮುಖಾಮುಖಿ ಢಿಕ್ಕಿಯಾದ ಪರಿಣಾಮ ಅಪಘಾತದಲ್ಲಿ ಓರ್ವ ಯುವಕ ಮೃತಪಟ್ಟಿದ್ದು, ಮೂವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ತಾಲೂಕಿನ ಗಾಜನೂರಿನ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಕ್ರಾಸ್ ಬಳಿ ನಡೆದಿದೆ. ಶಿವಮೊಗ್ಗದ ಬುದ್ಧನಗರದ ನಿವಾಸಿ ಪ್ರೇಮ್ ಕುಮಾರ್ (24) ಅಪಘಾತದಲ್ಲಿ ಮೃತಪಟ್ಟ ಯುವಕ. ಆಟೋದಲ್ಲಿದ್ದ ಮನೋಜ್ (21), ಪವನ್ (21) ಹಾಗೂ ಗಿರೀಶ್ (21) ಎಂಬುವವರಿಗೆ ತೀವ್ರ ಗಾಯಗಳಾಗಿದ್ದು, ಅವರನ್ನು ಚಿಕಿತ್ಸೆಗಾಗಿ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತ ಪ್ರೇಮ್ ಕುಮಾರ್ ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಮೆಗ್ಗಾನ್ ಆಸ್ಪತ್ರೆಯ ಶವಾಗಾರಕ್ಕೆ ಸ್ಥಳಾಂತರಿಸಲಾಗಿದೆ. ನಾಲ್ವರು ಪ್ರಯಾಣಿಕರಿದ್ದ ಆಟೋ ಶಿವಮೊಗ್ಗದಿಂದ ಸಕ್ರೇಬೈಲು ಕಡೆಗೆ ತೆರಳುತಿತ್ತು. ಈ ವೇಳೆ ತೀರ್ಥಹಳ್ಳಿಯಿಂದ ಶಿವಮೊಗ್ಗಕ್ಕೆ ಬರುತ್ತಿದ್ದ ಖಾಸಗಿ ಬಸ್ ಢಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ಆಟೋ ಸಂಪೂರ್ಣವಾಗಿ ಜಖಂಗೊಂಡಿದೆ. ತುಂಗಾನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಬಾಳೆಹಣ್ಣು ತಿನ್ನುವ ಸರಿಯಾದ ಕ್ರಮ ಯಾವುದು? ಈ ಸಣ್ಣ ತಪ್ಪು ನಿಮ್ಮ ಆರೋಗ್ಯವನ್ನೇ ಹಾಳು ಮಾಡಬಹುದು
ಬಾಳೆಹಣ್ಣುಗಳನ್ನು ಆರೋಗ್ಯಕರ ಮತ್ತು ಶಕ್ತಿದಾಯಕ ಹಣ್ಣು ಎಂದು ಹೇಳಲಾಗುತ್ತದೆ. ಕಡಿಮೆ ಬೆಲೆಯಲ್ಲಿ ಸುಲಭವಾಗಿ ದೊರೆಯುವ ಈ ಹಣ್ಣು ದೇಹಕ್ಕೆ ತಕ್ಷಣ ಶಕ್ತಿಯನ್ನು ನೀಡುವ ಗುಣ ಹೊಂದಿದೆ. ಆನಾರೋಗ್ಯ ಅಥವಾ ಸ್ನಾಯು ಶಕ್ತಿ ದೌರ್ಬಲ್ಯ ಸಮಸ್ಯೆಗಳು ಉಂಟಾದಾಗ ಬಾಳೆಹಣ್ಣು ಸೇವಿಸಿ. ಇದು ದೇಹದಲ್ಲಿ ಶಕ್ತಿ ಹೆಚ್ಚಿಸಲು ಸಹಕಾರಿಯಾಗಲಿದೆ ಎಂದು ಹಲವು ತಜ್ಞರು ಹೇಳುತ್ತಾರೆ. ಆದರೆ, ಈ ಬಾಳೆಹಣ್ಣು ಎಲ್ಲರಿಗೂ
ಮಂಗಳೂರು: ನೆಕ್ಸಾ ಭಾರತ್ ಆಟೋ ಕಾರ್ಸ್ನಲ್ಲಿ ಮೊದಲ ಇ-ವಿಟಾರಾ ಹಸ್ತಾಂತರ
ಮಂಗಳೂರು : ನೆಕ್ಸಾ ಭಾರತ್ ಆಟೋ ಕಾರ್ಸ್ ಪ್ರೈ.ಲಿ.ನಲ್ಲಿ ಕರಾವಳಿ ಕರ್ನಾಟಕದ ಮೊದಲ ಎಲೆಕ್ಟ್ರಿಕ್ ಮಾರುತಿ ಸುಝಕಿ ಇ-ವಿಟಾರಾ ಕಾರಿನ ಮೊದಲ ಗ್ರಾಹಕರಿಗೆ ಕೀ ಹಸ್ತಾಂತರ ಮಾಡಲಾಯಿತು. ಶಂಕರ್ ನಾರಾಯಣ ಕಣ್ಣಂತ ಹಾಗೂ ಅಮರ್ ಇನ್ಫ್ರಾ ಪ್ರಾಜೆಕ್ಟ್ಸ್ ಪ್ರತಿನಿಧಿಗಳಿಗೆ ಇ-ವಿಟಾರಾ ಕಾರಿನ ಕೀಯನ್ನು ಭಾರತ್ ಆಟೋ ಕಾರ್ಸ್ ಪ್ರೈ.ಲಿ.ನ ಜನರಲ್ ಮ್ಯಾನೇಜರ್ ವಿಶ್ವಕುಮಾರ್ ಹಸ್ತಾಂತರಿಸಿದರು. ಶೋರೂಮ್ ಮ್ಯಾನೇಜರ್ ಸೂರಜ್ ಜೈನ್, ಮಾರುತಿ ಸುಝಕಿ ಏರಿಯಾ ಮ್ಯಾನೇಜರ್ ಮಯಾಂಕ್ ಚೇತಿವಾಲ್ ಹಾಗೂ ನೆಕ್ಸಾ ತಂಡದ ಸದಸ್ಯರು ಉಪಸ್ಥಿತರಿದ್ದರು. ಮಂಗಳೂರಿನಲ್ಲಿ ಪರಿಸರ ಸ್ನೇಹಿ ಸಾರಿಗೆ ವ್ಯವಸ್ಥೆಯತ್ತ ಜನರು ಆಸಕ್ತರಾಗುತ್ತಿರುವುದಕ್ಕೆ ಇ - ಕಾರುಗಳ ಬುಕ್ಕಿಂಗ್ ಸಾಕ್ಷಿಯಾಗಿದೆ ಎಂದು ವಿಶ್ವಕುಮಾರ್ ಈ ಸಂದರ್ಭ ಪ್ರತಿಕ್ರಿಯಿಸಿದರು. ಈ ಹೊಸ ಇ-ವಿಟಾರಾ ಕಾರು 543 ಕಿಮೀ ಪ್ರಮಾಣಿತ ಮೈಲೇಜ್, 5-ಸ್ಟಾರ್ ಭದ್ರತಾ ರೇಟಿಂಗ್ ಹಾಗೂ ಬ್ಯಾಟರಿ-ಆಸ್-ಅ-ಸರ್ವೀಸ್ ಮಾದರಿಯನ್ನು ಹೊಂದಿದ್ದು, ಗ್ರಾಹಕರಿಗೆ ಕಡಿಮೆ ವೆಚ್ಚದಲ್ಲಿ ಎಲೆಕ್ಟ್ರಿಕ್ ಕಾರು ಖರೀದಿಸಲು ಸಹಾಯಕವಾಗಲಿದೆ. ಗ್ರಾಹಕರು ಈ ಕಾರಿನ ಬಗ್ಗೆ ಹೆಚ್ಚಿನ ಮಾಹಿತಿ, ಟೆಸ್ಟ್ ಡ್ರೈವ್ ಅಥವಾ ಬುಕ್ಕಿಂಗ್ಗಾಗಿ ಸಂಸ್ಥೆಯನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.
ರಷ್ಯಾದಿಂದ ಎಲ್ಪಿಜಿ ಖರೀದಿಸಲಿದೆಯೇ ಭಾರತ? ಸಿಗುವುದಾದಲ್ಲಿ ಅಲ್ಲಿಗೂ ತೆರಳುವುದಾಗಿ ತಿಳಿಸಿದ ವಿದೇಶಾಂಗ ಸಚಿವಾಲಯ
Middle East Conflict- ಮಧ್ಯಪ್ರಾಚ್ಯ ಸಂಘರ್ಷದಿಂದಾಗಿ ಹಾರ್ಮುಜ್ ಜಲಸಂಧಿಯ ಮೂಲಕ ಎಲ್ ಪಿಜಿ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ. ಹೀಗಾಗಿ ಭಾರತವು ತನ್ನ ಇಂಧನ ಅಗತ್ಯಗಳನ್ನು ಪೂರೈಸಲು ವಿವಿಧ ಮಾರ್ಗಗಳನ್ನು ಕಂಡುಕೊಳ್ಳುತ್ತಿದೆ. ರಷ್ಯಾದಲ್ಲಿ ಲಭ್ಯವಿದ್ದರೆ ಅಲ್ಲಿಂದಲೂ ಆಮದು ಮಾಡಿಕೊಳ್ಳುವುದಾಗಿ ವಿದೇಶಾಂಗ ಸಚಿವಾಲಯ ತಿಳಿಸಿದೆ. ಜನರ ಹಿತದೃಷ್ಟಿಯಿಂದ ಲಭ್ಯವಿರುವ ಎಲ್ಲಾ ಮೂಲಗಳಿಂದ ಇಂಧನ ಪಡೆಯುತ್ತೇವೆ ಎಂದು ಸ್ಪಷ್ಟಪಡಿಸಿದೆ. ದೇಶೀಯವಾಗಿ ಅಡುಗೆ ಅನಿಲದ ಮಿತಬಳಕೆ, ಪಿಎನ್ಜಿ (PNG) ಉತ್ತೇಜನ ನೀಡುತ್ತಿರುವ ಸರ್ಕಾರ, ಕಾಳಸಂತೆಯಲ್ಲಿ ಎಲ್ ಪಿಜಿ ಮಾರಾಟ, ಅಕ್ರಮ ದಾಸ್ತಾನು ತಡೆಯಲು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುತ್ತಿದೆ.
ಈದುಲ್ ಫಿತ್ರ್ ಶುಭಾಶಯ ಕೋರಿದ ಸ್ಪೀಕರ್ ಯು.ಟಿ ಖಾದರ್
ಮಂಗಳೂರು: ನಾಡಿನ ಸಮಸ್ತ ಜನರಿಗೆ ಸ್ಪೀಕರ್ ಯು ಟಿ ಖಾದರ್ ಅವರು ಈದುಲ್ ಫಿತ್ರ್ ಹಬ್ಬದ ಶುಭಾಶಯ ಕೋರಿದ್ದಾರೆ. ಒಂದು ತಿಂಗಳ ಪವಿತ್ರ ರಮಝಾನ್ ಉಪವಾಸದ ಬಳಿಕ ಬಂದಿರುವ ಈದುಲ್ ಫಿತ್ರ್ ಸರ್ವರಿಗೂ ಸುಖ, ಶಾಂತಿ, ನೆಮ್ಮದಿ ತರಲಿ. ಜಾಗತಿಕವಾಗಿ ಇತ್ತೀಚೆಗೆ ಸೃಷ್ಟಿಯಾಗಿರುವ ಸಂಘರ್ಷದ ವಾತಾವರಣ ತಿಳಿಯಾಗಲಿ, ಶಾಂತಿ ನೆಲೆಸಲಿ, ಸಂಕಷ್ಟ ಪೀಡಿತರಿಗೆ ನೆರವು ಸಿಗಲಿ ಎಂದು ಸ್ಪೀಕರ್ ಯು ಟಿ ಖಾದರ್ ಅವರು ಶುಭ ಹಾರೈಸಿದ್ದಾರೆ.
ಕರಾವಳಿ ಜಿಲ್ಲೆ ಹೊರತುಪಡಿಸಿ ರಾಜ್ಯಾದ್ಯಂತ ಮಾ.21ರಂದು ಈದುಲ್ ಫಿತ್ರ್ ಆಚರಣೆ
ಬೆಂಗಳೂರು : ಕರಾವಳಿ ಜಿಲ್ಲೆಗಳನ್ನು ಹೊರತುಪಡಿಸಿ ರಾಜ್ಯಾದ್ಯಂತ ಈದುಲ್ ಫಿತ್ರ್ ಅನ್ನು ಮಾ.21ರಂದು ಆಚರಿಸಲು ರಾಜ್ಯ ಚಂದ್ರ ದರ್ಶನ ಸಮಿತಿ ನಿರ್ಧರಿಸಿದೆ
ರಾಮಚಂದ್ರ ರಾವ್ ಪ್ರಕರಣ: 'ಎಐ' ಅಲ್ಲ ಅಸಲಿ ವಿಡಿಯೋ; ಎಫ್ಎಸ್ಎಲ್ ವರದಿಯಲ್ಲಿ ಬಯಲಾಯ್ತು ಸತ್ಯ
ಬೆಂಗಳೂರು: ಕಚೇರಿಯಲ್ಲಿ ಕರ್ತವ್ಯದಲ್ಲಿದ್ದಾಗಲೇ ಮಹಿಳೆಯರ ಜೊತೆ ಅನುಚಿತವಾಗಿ ವರ್ತಿಸಿರುವ, ಅಮಾನತುಗೊಂಡಿರುವ ಹಿರಿಯ ಐಪಿಎಸ್ ಅಧಿಕಾರಿ ಹಾಗೂ ಡಿಜಿಪಿ ಕೆ. ರಾಮಚಂದ್ರ ರಾವ್ ಅವರ ವೈರಲ್ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ತಿರುವೊಂದು ಎದುರಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದ ಈ ವಿಡಿಯೋಗಳು ಸಂಪೂರ್ಣವಾಗಿ ನಿಜವಾಗಿದ್ದು, ಅವು ಯಾವುದೇ ರೀತಿಯ ಡೀಪ್ಫೇಕ್, ಕೃತಕ ಬುದ್ಧಿಮತ್ತೆ (AI) ನಿರ್ಮಿತ ಅಥವಾ ಎಡಿಟ್
ಭಟ್ಕಳ| ಮಾ.20ರಂದು ಈದುಲ್ ಫಿತ್ರ್: ಖಾಝಿಗಳಿಂದ ಘೋಷಣೆ
ಭಟ್ಕಳ: ಈದುಲ್ ಫಿತ್ರ್ ಮಾ.20 ರಂದು ಭಟ್ಕಳದಲ್ಲಿ ಆಚರಿಸಲಾಗುವುದು ಎಂದು ಭಟ್ಕಳದ ಪ್ರಧಾನ ಕಾಝಿಗಳಾದ ಮೌಲಾನ ಅಬ್ದುಲ್ ರಬ್ ಕತೀಬ್ ನದ್ವಿ ಹಾಗೂ ಮೌಲಾನ ಕ್ವಾಜಾ ಮುಹಿದ್ದೀನ್ ಅಕ್ರಮಿ ನದ್ವಿ ಗುರುವಾರ ಸಂಜೆ ಇಲ್ಲಿ ಘೋಷಿಸಿದ್ದಾರೆ. ಕೇರಳದ ಮಲ್ಲಾಪುರಂ ನಲ್ಲಿ ಈದ್ ಚಂದ್ರದರ್ಶನವಾದ ಹಿನ್ನೆಲೆಯಲ್ಲಿ ಮಾ.20ರ ಶುಕ್ರವಾರ ಭಟ್ಕಳದಲ್ಲಿ ಈದುಲ್ ಫಿತ್ರ್ ಆಚರಿಸಲಾಗುವುದು. ಬೆಳಿಗ್ಗೆ 7.30ಕ್ಕೆ ಈದ್ಗಾ ಮೈದಾನದಲ್ಲಿ ವಿಶೇಷ ಪ್ರಾರ್ಥನೆಯನ್ನು ನೆರವೇರಿಸಲಾಗುವುದು. ಉಡುಪಿ ಮತ್ತು ದ.ಕ.ಜಿಲ್ಲೆಗಳಲ್ಲೂ ಮಾ.20ರಂದು ಈದುಲ್ ಫಿತ್ರ್ ಆಚರಿಸಲಾಗುವುದು ಎಂದು ತಿಳಿದುಬಂದಿದೆ.
Anil Kumble: ವಿರಾಟ್ ಕೊಹ್ಲಿ-ಬೆಂಗಳೂರು ನಡುವಿನ ಅವಿನಾಭಾವ ಸಂಬಂಧದ ಬಗ್ಗೆ ಕನ್ನಡಿಗ ಅನಿಲ್ ಕುಂಬ್ಳೆ ಮನದಾಳದ ಮಾತು
Anil Kumble: ಕೆಲವೇ ದಿನಗಳಲ್ಲಿ ಐಪಿಎಲ್ 2026 ಹಬ್ಬ ಆರಂಭ ಆಗಲಿದ್ದು, ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಆರ್ಸಿಬಿ ಹಾಗೂ ಎಸ್ಆರ್ಎಚ್ ಮುಖಾಮುಖಿಯಾಗಲಿವೆ. ಇದಕ್ಕೂ ಮುನ್ನ ಭಾರತೀಯ ಕ್ರಿಕಟ್ ದಂತಕತೆ, ಕನ್ನಡಿಗ ಅನಿಲ್ ಕುಂಬ್ಳೆ ಅವರು ವಿರಾಟ್ ಕೊಹ್ಲಿ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಿನ ಸಂಬಂಧ ಎಂತಹದ್ದು ಎನ್ನುವ ಮಾಹಿತಿಯನ್ನು ಬಿಚ್ಚಿಟ್ಟಿದ್ದಾರೆ. ಭಾರತೀಯ ಕ್ರಿಕೆಟ್ ಮಾಜಿ
ಇರಾನ್ ಯುದ್ಧದ ನಡುವೆ ಮತ್ತೆ ತೆರೆದ ಗಾಝಾದ ರಫಾ ಗಡಿದಾಟು
ಗಾಝಾ: ಇರಾನ್ ಮೇಲೆ ಇಸ್ರೇಲ್ ಹಾಗೂ ಅಮೆರಿಕ ನಡೆಸಿದ ದಾಳಿಯ ನಡುವೆಯೇ ದಕ್ಷಿಣ ಗಾಝಾದಲ್ಲಿರುವ ಪ್ರಮುಖ ರಫಾ ಗಡಿದಾಟುವನ್ನು ಮತ್ತೆ ತೆರೆಯಲಾಗಿದೆ ಎಂದು ಫೆಲೆಸ್ತೀನಿನ ಸುದ್ದಿ ಸಂಸ್ಥೆ ‘ವಾಫಾ’ ತಿಳಿಸಿದೆ. ಇಸ್ರೇಲ್-ಅಮೆರಿಕ ಜಂಟಿ ದಾಳಿಯ ಮರುದಿನ ಭದ್ರತಾ ಕಾರಣಗಳನ್ನು ಉಲ್ಲೇಖಿಸಿ ಇಸ್ರೇಲ್ ಗಾಝಾ ಪಟ್ಟಿಯ ಗಡಿದಾಟುಗಳನ್ನು ಮುಚ್ಚಿತ್ತು. ಈ ಕ್ರಮದ ಭಾಗವಾಗಿ ರಫಾ ಗಡಿದಾಟುವೂ ಬಂದ್ ಆಗಿತ್ತು. “ಮುಂದಿನ ಸೂಚನೆ ಬರುವವರೆಗೆ ಗಾಝಾ ಪಟ್ಟಿಯ ಗಡಿದಾಟುಗಳನ್ನು ಮುಚ್ಚುವುದು ಸೇರಿದಂತೆ ಹಲವು ಅಗತ್ಯ ಭದ್ರತಾ ಕ್ರಮಗಳನ್ನು ಜಾರಿಗೆ ತರಲಾಗಿದೆ. ರಫಾ ಗಡಿದಾಟುವೂ ಇದರಲ್ಲಿ ಸೇರಿದೆ,” ಎಂದು ಇಸ್ರೇಲ್ ನ ಪ್ರಾಂತ್ಯಗಳಲ್ಲಿನ ಸರ್ಕಾರಿ ಚಟುವಟಿಕೆಗಳ ಸಂಯೋಜಕರು (COGAT) ಮಾರ್ಚ್ 1ರಂದು ನೀಡಿದ ಹೇಳಿಕೆಯಲ್ಲಿ ತಿಳಿಸಿದ್ದರು. ಇದೀಗ ರಫಾ ಗಡಿದಾಟು ಮತ್ತೆ ತೆರೆಯಲಾಗಿದೆ. ಮಾನವೀಯ ನೆರವು ಗಾಝಾಕ್ಕೆ ತಲುಪಿಸಲು ಹಾಗೂ ತೀವ್ರವಾಗಿ ಅಸ್ವಸ್ಥರಾದ ರೋಗಿಗಳನ್ನು ಸ್ಥಳಾಂತರಿಸಲು ರಫಾ ಗಡಿದಾಟು ಪ್ರಮುಖವಾಗಿದ್ದು, ಇದನ್ನು ಮರುತೆರೆಯುವಿಕೆಯಿಂದ ಮಾನವೀಯ ನೆರವು ಕಾರ್ಯಗಳಿಗೆ ಸಹಕಾರಿಯಾಗಲಿದೆ.
ಕೊಳಲು ಹಿಡಿದು ‘ಬೃಂದಾವಿಹಾರಿ’ ಆದ ಗಣೇಶ್; ಯುಗಾದಿಗೆ ಟೈಟಲ್ ಬಿಡುಗಡೆ
ಯುಗಾದಿ ಹಬ್ಬಕ್ಕೆ ಹಾರ್ದಿಕ ಶುಭಾಶಯ ಹೇಳುವ ಮೂಲಕ ಚಿತ್ರತಂಡ ಸಾಮಾಜಿಕ ಜಾಲತಾಣದಲ್ಲಿ ಅಧಿಕೃತವಾಗಿ ಸಿನಿಮಾದ ಶೀರ್ಷಿಕೆ ಬಿಡುಗಡೆ ಮಾಡಿದೆ. ನಿರ್ದೇಶಕ ಶ್ರೀನಿವಾಸರಾಜು ಸಾರಥ್ಯದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಮತ್ತೆ ಕೊಳಲು ಹಿಡಿದಿದ್ದಾರೆ. ಯುಗಾದಿ ಹಬ್ಬಕ್ಕೆ ಗಣೇಶ್ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ. 'ಕೃಷ್ಣಂ ಪ್ರಣಯ ಸಖಿ' ಚಿತ್ರದ ಯಶಸ್ಸಿನ ನಂತರ ಗಣೇಶ್ ಮತ್ತು ನಿರ್ದೇಶಕ ಶ್ರೀನಿವಾಸರಾಜು ಅವರ ಸಂಯೋಜನೆಯಲ್ಲಿ ಹೊಸ ಚಿತ್ರವನ್ನು ಬರುತ್ತಿದೆ. ಈ ಚಲನಚಿತ್ರಕ್ಕೆ ‘ಬೃಂದಾವಿಹಾರಿ’ ಎಂದು ಹೆಸರಿಡಲಾಗಿದ್ದು, ಯುಗಾದಿಯ ಪ್ರಯುಕ್ತ ಟೈಟಲ್ ಬಿಡುಗಡೆ ಮಾಡಲಾಗಿದೆ. ಯುಗಾದಿ ಹಬ್ಬಕ್ಕೆ ಹಾರ್ದಿಕ ಶುಭಾಶಯ ಹೇಳುವ ಮೂಲಕ ಚಿತ್ರತಂಡ ಸಾಮಾಜಿಕ ಜಾಲತಾಣಗಳಲ್ಲಿ ಅಧಿಕೃತವಾಗಿ ಶೀರ್ಷಿಕೆ ಬಿಡುಗಡೆ ಮಾಡಿದೆ. ಸಿನಿಮಾದ ಪೋಸ್ಟರ್ ಜೊತೆಗೆ ಗಣೇಶ್ ಅವರು “ಸಮಸ್ತ ನಾಡಿನ ಜನತೆಗೆ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು. ನಮ್ಮ ಚಿತ್ರದ ಶೀರ್ಷಿಕೆ ‘ಬೃಂದಾವಿಹಾರಿ’ ಹರಿಸಿ ಹಾರೈಸಿ” ಎಂದು ಬರೆದಿದ್ದಾರೆ. ಸಿನಿಮಾದಲ್ಲಿ ಗಣೇಶ್ ಅವರಿಗೆ ಇಬ್ಬರು ನಾಯಕಿಯರು. ದೇವಿಕಾ ಭಟ್ ಮತ್ತು ಮಾಳವಿಕ ಶರ್ಮ ನಾಯಕಿಯಾಗಿ ನಟಿಸಿದ್ದಾರೆ. ಸದ್ಯ ಬಿಡುಗಡೆಯಾಗಿರುವ ಪೋಸ್ಟರ್ಗಳಲ್ಲಿ ಗಣೇಶ್ ಕೊಳಲು ಹಿಡಿದಿದ್ದಾರೆ. ಸಿನಿಮಾದ ಪೋಸ್ಟರ್ ನೋಡಿದರೆ ಮೇಲ್ನೋಟಕ್ಕೆ ಪ್ರೇಮಕತೆ ಇರುವ ಸಿನಿಮಾ ಎನ್ನುವುದು ಸ್ಪಷ್ಟವಾಗುತ್ತದೆ. ವಕೀಲೆ ಮತ್ತು ರೂಪದರ್ಶಿಯಾಗಿರುವ ಮಾಳವಿಕಾ ಶರ್ಮಾರಿಗೆ ಇದು ಚೊಚ್ಚಲ ಕನ್ನಡ ಸಿನಿಮಾ. ತಮಿಳಿನಲ್ಲಿ ಅವರು ‘ನೆಲಾ ಟಿಕೆಟ್’, ರೆಡ್', 'ಕಾಫಿ ವಿಥ್ ಕಾದಲ್', 'ಹರೊಮ್ ಹರಾ' ಮತ್ತು ‘ಭೀಮಾ’ದಂತಹ ಸಿನಿಮಾಗಳಲ್ಲಿ ನಟಿಸಿದ್ದಾರೆ. ಶ್ರೀನಿವಾಸರಾಜು ಮತ್ತು ಗಣೇಶ್ ಜೋಡಿಯ ಸಿನಿಮಾದಲ್ಲಿ ಸಂಗೀತಕ್ಕೆ ಹೆಚ್ಚು ಪ್ರಾಶಸ್ತ್ಯವಿರುತ್ತದೆ. ಇದೀಗ ‘ಬೃಂದಾವಿಹಾರಿ’ ಸಿನಿಮಾಗೆ ಮಲಯಾಳಂನ ಖ್ಯಾತ ಸಂಗೀತ ನಿರ್ದೇಶಕ ಹೇಶಮ್ ಅಬ್ದುಲ್ ವಹಾಬ್ ಸಂಗೀತ ಸಂಯೋಜನೆ ಮಾಡಿದ್ದು, ಸದ್ಯದಲ್ಲಿಯೇ ಸಿನಿಮಾದ ಹಾಡುಗಳನ್ನು ಬಿಡುಗಡೆ ಮಾಡುವ ಯೋಜನೆಯನ್ನು ಚಿತ್ರತಂಡ ಹಾಕಿಕೊಂಡಿದೆ. ಈಗಾಗಲೇ ಹೇಶಮ್ ಅವರ ಹಾಡುಗಳು ಮಲಯಾಳಂನಲ್ಲಿ ಬಹಳ ಜನಪ್ರಿಯತೆ ಪಡೆದಿದೆ. ಹೀಗಾಗಿ ‘ಬೃಂದಾವಿಹಾರಿ’ಗೆ ಹಾಡುಗಳೇ ದೊಡ್ಡ ಪ್ಲಸ್ ಪಾಯಿಂಟ್ ಆಗುವ ಸಾಧ್ಯತೆಯಿದೆ. ವಿರಾಟ್ ಸಾಯಿ ಕ್ರಿಯೇಷನ್ಸ್ ಅರ್ಪಿಸುವ ಚಿತ್ರವನ್ನು ನಿರ್ಮಾಪಕ ಸಮೃದ್ಧಿ ವಿ ಮಂಜುನಾಥ್ ನಿರ್ಮಿಸುತ್ತಿದ್ದಾರೆ. ಇತ್ತೀಚೆಗೆ ಅವರು ‘ಹಯಗ್ರೀವ’ ಸಿನಿಮಾ ನಿರ್ಮಾಣ ಮಾಡಿದ್ದರು.
ರಾಷ್ಟ್ರೀಯ ಜಲ ವಿದ್ಯುತ್ ನಿಗಮದಲ್ಲಿ 81 ಟ್ರೈನಿ ಎಂಜಿನಿಯರ್ ಹುದ್ದೆಗಳಿಗೆ ನೇಮಕಾತಿ; ಅರ್ಜಿ ಸಲ್ಲಿಸುವುದು ಹೇಗೆ?
ನೇಮಕಾತಿ ಅಡಿಯಲ್ಲಿ ಸಿವಿಲ್, ಎಲೆಕ್ಟ್ರಿಕಲ್ ಮತ್ತು ಮೆಕಾನಿಕಲ್ ವಿಭಾಗಗಳಲ್ಲಿ ಟ್ರೈನಿ ಹುದ್ದೆಗಳಿವೆ. ಸರ್ಕಾರಿ ಉದ್ಯೋಗ ಬಯಸುವ ಎಂಜಿನಿಯರಿಂಗ್ ಪದವೀಧರರಿಗೆ ರಾಷ್ಟ್ರೀಯ ಜಲ ವಿದ್ಯುತ್ ನಿಗಮ (NHPC) 81 ಟ್ರೈನಿ ಎಂಜಿನಿಯರ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಈ ನೇಮಕಾತಿ ಅಡಿಯಲ್ಲಿ ಸಿವಿಲ್, ಎಲೆಕ್ಟ್ರಿಕಲ್ ಮತ್ತು ಮೆಕಾನಿಕಲ್ ವಿಭಾಗಗಳಲ್ಲಿ ಟ್ರೈನಿ ಹುದ್ದೆಗಳಿವೆ. ಅರ್ಜಿದಾರರು ಶೇ 60ರಷ್ಟು ಅಂಕಗಳೊಂದಿಗೆ ಪೂರ್ಣ ಸಮಯದ ಎಂಜಿನಿಯರಿಂಗ್ ಪದವಿ ಮತ್ತು ಮಾನ್ಯವಾದ ಗೇಟ್-2024 ಅಥವಾ ಗೇಟ್ 2025 ಅಂಕಗಳನ್ನು ಹೊಂದಿರಬೇಕು. ಆಸಕ್ತ ಅಭ್ಯರ್ಥಿಗಳು ಈ ಮುಂದಿನ ಲಿಂಕ್ನಲ್ಲಿ ವಿವರ ಪರಿಶೀಲಿಸಿ ಅಗತ್ಯ ದಾಖಲೆಗಳನ್ನು ಸಲ್ಲಿಸಿ ಅರ್ಜಿ ಸಲ್ಲಿಸಬಹುದು: https://www.nhpcindia.com/welcome/job.html ಪ್ರಮುಖ ದಿನಾಂಕಗಳು ಅಧಿಸೂಚನೆ ದಿನಾಂಕ: 2026 ಮಾರ್ಚ್ 12 ಅರ್ಜಿ ಸಲ್ಲಿಕೆ ಆರಂಭದ ದಿನಾಂಕ: 2026 ಮಾರ್ಚ್ 16 (ಬೆಳಿಗ್ಗೆ 10 ಗಂಟೆ) ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: 2026 ಎಪ್ರಿಲ್ 6 (ಸಂಜೆ 5 ಗಂಟೆ) ಹುದ್ದೆಗಳು 81 ಟ್ರೈನಿ ಎಂಜಿನಿಯರಿಂಗ್ ಹುದ್ದೆಗಳು (ಸಿವಿಲ್, ಎಲೆಕ್ಟ್ರಿಕಲ್, ಮೆಕ್ಯಾನಿಕಲ್). ಎಸ್ಸಿ/ಎಸ್ಟಿ/ ಒಬಿಸಿ (ಎನ್ಸಿಎಲ್)/ ಪಿಡಬ್ಲ್ಯುಡಿ ಅಭ್ಯರ್ಥಿಗಳಿಗೆ ವಿಶೇಷ ನೇಮಕಾತಿ ಅಧಿಸೂಚನೆಯಾಗಿದೆ. * ಸಿವಿಲ್: 7 ಹುದ್ದೆಗಳು * ಎಲೆಕ್ಟ್ರಿಕಲ್: 26 ಹುದ್ದೆಗಳು * ಮೆಕ್ಯಾನಿಕಲ್: 21 ಹುದ್ದೆಗಳು * ಒಟ್ಟು: 72 (ಬ್ಯಾಕ್ಲಾಗ್) * ಪಿಡಬ್ಲ್ಯೂಬಿಡಿ ವಿಶೇಷ ಡ್ರೈವ್: ವಿವಿಧ ವಿಭಾಗಗಳಲ್ಲಿ 9 ಹುದ್ದೆಗಳನ್ನು ಕಾಯ್ದಿರಿಸಲಾಗಿದೆ. ಶೈಕ್ಷಣಿಕ ಅರ್ಹತೆ ಕನಿಷ್ಠ 60% ಅಂಕಗಳೊಂದಿಗೆ ಎಂಜಿನಿಯರಿಂಗ್/ತಂತ್ರಜ್ಞಾನದಲ್ಲಿ (ಸಿವಿಲ್, ಎಲೆಕ್ಟ್ರಿಕಲ್, ಮೆಕ್ಯಾನಿಕಲ್) ಪೂರ್ಣಾವಧಿ ಪದವಿ. ಮಾನ್ಯವಾದ ಗೇಟ್-2024 ಅಥವಾ ಗೇಟ್-2025 ಅಂಕಗಳು (ಈ ವರ್ಷಗಳು ಮಾತ್ರ ಅನ್ವಯಿಸುತ್ತವೆ). ವಯೋಮಿತಿ ಗರಿಷ್ಠ 30 ವರ್ಷಗಳು (ಮೀಸಲಾತಿ ವರ್ಗಗಳಿಗೆ ಸಡಿಲಿಕೆಯೊಂದಿಗೆ). ಅರ್ಜಿ ಶುಲ್ಕ: ಎಸ್ಸಿ/ಎಸ್ಟಿ/ ಪಿಡಬ್ಲ್ಯುಡಿ: ಶುಲ್ಕವಿಲ್ಲ ಒಬಿಸಿ (ಎನ್ಸಿಎಲ್): 600 ರೂ. + ತೆರಿಗೆ ಅಗತ್ಯವಿರುವ ದಾಖಲೆಗಳು: ಜನನ ಸಾಕ್ಷ್ಯ, ಅಂಕ ಪಟ್ಟಿಗಳು, ಜಾತಿ/ವಿಕಲಚೇತನ ಪ್ರಮಾಣಪತ್ರ, ಗೇಟ್ ಅಂಕಪಟ್ಟಿ, ಫೋಟೋ, ಸಹಿ ಇತ್ಯಾದಿ. ಆಯ್ಕೆ ಪ್ರಕ್ರಿಯೆ GATE-2024/2025 ರ ಆಧಾರದ ಮೇಲೆ ಸಾಮಾನ್ಯೀಕರಿಸಿದ ಅಂಕಗಳು (ಶೇ. 75), ಗುಂಪು ಚರ್ಚೆ (ಶೇ. 5), ಮತ್ತು ವೈಯಕ್ತಿಕ ಸಂದರ್ಶನ (ಶೇ. 20). 1. ಆಯ್ಕೆ: ಖಾಲಿ ಹುದ್ದೆಗಳ ಸಂಖ್ಯೆಯ 5 ಪಟ್ಟು. 2. ಕಟ್-ಆಫ್: ಒಬಿಸಿ-(ಎನ್ಸಿಎಲ್): ಶೇ. 40 ಎಸ್ಸಿ/ಎಸ್ಟಿ/ ಪಿಡಬ್ಲ್ಯುಡಿ: ಶೇ. 30 ಅಂತಿಮ ಮೆರಿಟ್ ಪಟ್ಟಿಯನ್ನು ವರ್ಗವಾರು ಸಿದ್ಧಪಡಿಸಲಾಗುತ್ತದೆ. ವೇತನ ಮತ್ತು ವಿವರ ಸುಮಾರು 15–16 ರೂ. ಲಕ್ಷಗಳ ವಾರ್ಷಿಕ ಪ್ಯಾಕೇಜ್ ನೀಡಲಾಗುತ್ತದೆ. ಆದರೆ, ಅಭ್ಯರ್ಥಿಗಳು ಸೇವಾ ಬಾಂಡ್ಗೆ ಸಹಿ ಹಾಕಬೇಕು. 1. ವೇತನ ಶ್ರೇಣಿ 50,000 ದಿಂದ 1,60,000 ರೂ. (IDA, E2 ದರ್ಜೆ). ವಾರ್ಷಿಕ ಪ್ಯಾಕೇಜ್: ಅಂದಾಜು 15–16 ಲಕ್ಷ ರೂ. 2. ಬಾಂಡ್ ಅವಶ್ಯಕತೆ 4,00,000 ರೂ. + GST (ಒಬಿಸಿ-ಎನ್ಸಿಎಲ್) 2,00,000 ರೂ. + GST (ಎಸ್ಸಿ/ಎಸ್ಟಿ/ ಪಿಡಬ್ಲ್ಯುಡಿ). ಕನಿಷ್ಠ ಸೇವಾ ಅವಧಿ: 4 ವರ್ಷಗಳು (ತರಬೇತಿ ಸೇರಿದಂತೆ). ಉದ್ಯೋಗ: ಆಯ್ಕೆಯಾದ ಅಭ್ಯರ್ಥಿಗಳನ್ನು ಭಾರತ ಅಥವಾ ವಿದೇಶಗಳಾದ್ಯಂತ NHPC ಯೋಜನೆಗಳು, ವಿದ್ಯುತ್ ಕೇಂದ್ರಗಳು, ಕಚೇರಿಗಳು, ಜಂಟಿ ಉದ್ಯಮಗಳು ಅಥವಾ ಅಂಗಸಂಸ್ಥೆಗಳಲ್ಲಿ ನೇಮಿಸಬಹುದು.
ದಾವಣಗೆರೆ ದಕ್ಷಿಣ ಟಿಕೆಟ್: ಬಿಎಸ್ವೈ ಬಣಕ್ಕೆ ಹಿನ್ನಡೆಯೇ, ಏನಂದ್ರು ಎಂಪಿ ರೇಣುಕಾಚಾರ್ಯ?
ದಾವಣಗೆರೆ ದಕ್ಷಿಣ ಟಿಕೆಟ್ ಘೋಷಣೆ ವಿಚಾರವಾಗಿ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಬಣಕ್ಕೆ ಹಿನ್ನಡೆ ಉಂಟಾಗಿದೆ ಎಂದೇ ವಿಶ್ಲೇಷಣೆ ಮಾಡಲಾಗುತ್ತಿದೆ. ಬಿಜೆ ಅಜಯ್ ಕುಮಾರ್ ಗೆ ಟಿಕೆಟ್ ನೀಡಬೇಕು ಎಂದು ಎಂಪಿ ರೇಣುಕಾಚಾರ್ಯ ನೇತೃತ್ವದ ಗುಂಪು ಪಟ್ಟು ಹಿಡಿದಿತ್ತು. ಆದರೆ ಇದಕ್ಕೆ ರೆಬೆಲ್ ಬಣ ವಿರೋಧ ಸೂಚಿಸಿತ್ತು. ಈ ನಡುವೆ ಶ್ರೀನಿವಾಸ್ ದಾಸ ಕರಿಯಪ್ಪ ಅವರನ್ನು ಕಣಕ್ಕಿಳಿಸಲಾಗಿದೆ. ಇದು ಬಿಎಸ್ವೈ ಬಣಕ್ಕೆ ಹಿನ್ನಡೆ ಎಂಬ ಚರ್ಚೆಗಳ ನಡೆಯುತ್ತಿವೆ. ಈ ಬಗ್ಗೆ ಎಂಪಿ ರೇಣುಕಾಚಾರ್ಯ ಏನಂದ್ರು ? ಇಲ್ಲಿದೆ ಮಾಹಿತಿ.
ಉನ್ನತ ಶಿಕ್ಷಣದಲ್ಲಿ 'ಕೇಂದ್ರೀಕರಣ'ದ ಆತಂಕ: ಉದ್ದೇಶಿತ VBSA ಮಸೂದೆ 2025ರ ವಿರುದ್ಧ ಜೈರಾಮ್ ರಮೇಶ್ ವಾಗ್ದಾಳಿ
ನವದೆಹಲಿ: ಕೇಂದ್ರ ಸರ್ಕಾರವು ಮಂಡಿಸಲು ಉದ್ದೇಶಿಸಿರುವ 'ವಿಕ್ಷಿತ್ ಭಾರತ್ ಶಿಕ್ಷಾ ಅಧಿಷ್ಠಾನ (VBSA) ಮಸೂದೆ, 2025'ರ ಕುರಿತು ಕಾಂಗ್ರೆಸ್ ಸಂಸದ ಜೈರಾಮ್ ರಮೇಶ್ ಗುರುವಾರ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಈ ಮಸೂದೆಯು ಉನ್ನತ ಶಿಕ್ಷಣದ ನಿಯಂತ್ರಣವನ್ನು ಸಂಪೂರ್ಣವಾಗಿ ಕೇಂದ್ರೀಕರಿಸುವ ಅಪಾಯವಿದ್ದು, ಶಿಕ್ಷಣ ಸಂಸ್ಥೆಗಳ ಸ್ವಾಯತ್ತತೆಗೆ ಭಾರೀ ಧಕ್ಕೆ ತರಲಿದೆ ಎಂದು ಅವರು ಎಚ್ಚರಿಸಿದ್ದಾರೆ. ಜೊತೆಗೆ, ಮಸೂದೆಯನ್ನು ರೂಪಿಸುವಾಗ
ಶುಕ್ರವಾರ ಈದುಲ್ ಫಿತ್ರ್ ಆಚರಿಸಲು ಉಡುಪಿ ಜಿಲ್ಲಾ ನಾಯಿಬ್ ಖಾಝಿ ಕರೆ
ಉಡುಪಿ, ಮಾ.19: ಶವ್ವಾಲ್ನ ಪ್ರಥಮ ಚಂದ್ರದರ್ಶನ ಇಂದು ಮುಸ್ಸಂಜೆ ಆಗಿರುವುದರಿಂದ ಕರಾವಳಿಯಲ್ಲಿ ಶುಕ್ರವಾರ ಈದುಲ್ ಫಿತ್ರ್ ಆಚರಿಸಲು ಉಡುಪಿ ಜಿಲ್ಲಾ ನಾಯಿಬ್ ಖಾಝಿ ಉಸ್ತಾದ್ ಬಿ ಕೆ ಅಬ್ದುರ್ರಹ್ಮಾನ್ ಮದನಿ ಮೂಳೂರು ಕರೆ ನೀಡಿದ್ದಾರೆ ಎಂದು ಉಡುಪಿ ಸಂಯುಕ್ತ ಜಮಾಅತ್ ಪ್ರಧಾನ ಕಾರ್ಯದರ್ಶಿ ಹಾಜಿ ಎಂ.ಎ ಬಾವು ಮೂಳೂರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
AB de Villiers: ಕ್ರಿಕೆಟ್ ಪ್ರೇಮಿಗಳ ಬಹುನಿರೀಕ್ಷಿತ 19ನೇ ಸೀಸನ್ ಐಪಿಎಲ್ ಹಬ್ಬವು ಮಾರ್ಚ್ 28ರಿಂದ ಆರಂಭವಾಗಲಿದೆ. ಉದ್ಘಾಟನಾ ಪಂದ್ಯ ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಸನ್ರೈಸರ್ಸ್ ಹೈದರಾಬಾದ್ ತಂಡಗಳು ಮುಖಾಮುಖಿಯಾಗಲಿವೆ. ಇದಕ್ಕೂ ಮುನ್ನ ಈ ಬಾರಿಯೂ ಟ್ರೋಫಿ ಗೆಲ್ಲುವ ತಂಡಗಳ ಸಾಲಿನಲ್ಲಿರುವ ಆರ್ಸಿಬಿ ಬಗ್ಗೆ ಎಬಿ ಡಿವಿಲಿಯರ್ಸ್
ಚಿನ್ನದ ಬೆಲೆ 55,000 ರೂಪಾಯಿ ದಿಢೀರ್ ಒಂದೇ ದಿನ ಭರ್ಜರಿ ಕುಸಿತ, ಇಂದಿನ ಬೆಲೆ ತಿಳಿಯಿರಿ... Gold Price
ಚಿನ್ನ ಇರಬೇಕು, ಮನೆಯಲ್ಲಿ ಕೆಜಿ &ಕೆಜಿ ಚಿನ್ನ ತುಂಬಿರಬೇಕು ಅನ್ನೋದು ಪ್ರತಿಯೊಬ್ಬರ ಆಸೆ. ಇನ್ನು ನಮ್ಮ ಭಾರತೀಯರಿಗೆ ಚಿನ್ನದ ಮೇಲೆ ಆಸೆ ಸ್ವಲ್ಪ ಹೆಚ್ಚಾಗಿಯೇ ಇರುತ್ತದೆ. ಏಕೆಂದರೆ ಚಿನ್ನ ಭಾರತ ಮತ್ತು ಭಾರತೀಯರ ಸಂಸ್ಕೃತಿ ಜೊತೆಗೆ ಬೆರೆತು ಹೋಗಿದೆ. ಈ ಮೂಲಕ ಚಿನ್ನ ಖರೀದಿ ಮಾಡುತ್ತಾ ಬಂಗಾರ &ಬೆಳ್ಳಿ ಸಂಗ್ರಹ ಮಾಡುವುದು ಕೂಡ ಭಾರತೀಯ
ಅಪ್ಪನಂತೆಯೇ ಮಗ! ಭಾರದ ಬ್ಯಾಟ್ ನಲ್ಲಿ ಆಡುವ ಅರ್ಜುನ್ ತೆಂಡೂಲ್ಕರ್ ಜೊತೆ ರಿಷಬ್ ಪಂತ್ ಚಿಟ್ ಚಾಟ್
ಮುಂಬೈ ಇಂಡಿಯನ್ಸ್ನಲ್ಲಿದ್ದಾಗ ಮಂಕಾಗಿದ್ದ ಅರ್ಜುನ್ ತೆಂಡೂಲ್ಕರ್ ಇದೀಗ ಲಖನೌ ಸೂಪರ್ ಜೈಂಟ್ಸ್ ಸೇರ್ಪಡೆಯಾದ ಮೇಲೆ ಬಹಳ ಚುರುಕಾಗಿದ್ದಾರೆ. ಯುವರಾಜ್ ಸಿಂಗ್ ಅವರಿಂದ ತರಬೇತಿ ಪಡೆಯುತ್ತಿರುವ ಅವರು ಇನ್ನೊಂದು ವಾರದಲ್ಲಿ ಪ್ರಾರಂಭವಾಗಲಿರುವ ಐಪಿಎಲ್ ಗೆ ಭರದ ತಯಾರಿ ನಡೆಸುತ್ತಿದ್ದಾರೆ. ಈ ನಡುವೆ ಅವರು ಮತ್ತು ನಾಯಕ ರಿಷಬ್ ಪಂತ್ ಸಂಭಾಷಣೆಯ ವಿಡಿಯೋ ವೈರಲ್ ಆಗಿದೆ. ತಂದೆ ಸಚಿನ್ ಅವರಂತೆ ಅರ್ಜುನ್ ಸಹ ಭಾರದ ಬ್ಯಾಟ್ ಗಳನ್ನು ಬಳಸುತ್ತಿದ್ದಾರೆ. ಈ ಬಗ್ಗೆ ರಿಷಬ್ ಪಂತ್ ಅವರು ಪ್ರಶ್ನಿಸಿದಾಗ ಚೆಂಡು ಸ್ವಲ್ಪ ತಾಕಿದರೂ ಬಹಳ ದೂರ ಹೋಗುತ್ತದೆ. ಹೀಗಾಗಿಯೋ ಭಾರದ ಬ್ಯಾಟ್ ಬಳಸುವುದಾಗಿ ತಿಳಿಸಿದ್ದಾರೆ.
ಬಾಗಲಕೋಟೆಯಲ್ಲಿ ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ ಪರವಾಗಿ ಪ್ರಚಾರಕ್ಕೆ ಹೋಗ್ತಾರಾ ಯತ್ನಾಳ್?
ಬಾಗಲಕೋಟೆ ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ ಅವರಿಗೆ ಯಾವ ಸಂದರ್ಭದಲ್ಲಿ ಬೆಂಬಲ ಕೊಡಬೇಕು ಎಂಬುವುದನ್ನು ನಾನು ಯೋಚನೆ ಮಾಡುತ್ತೇನೆ ಎಂದು ಬಿಜೆಪಿ ಉಚ್ಛಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ತಿಳಿಸಿದ್ದಾರೆ. ವಿಜಯಪುರದಲ್ಲಿ ಗುರುವಾರ ಮಾತನಾಡಿದ ಅವರು, ವೀರಣ್ಣ ಚರಂತಿಮಠ ಅವರು ಮಾಡಿರುವ ಆಹ್ವಾನಕ್ಕೆ ಈ ರೀತಿಯಲ್ಲಿ ಪ್ರತಿಕ್ರಿಯೆ ನೀಡಿದರು. ಅಷ್ಟೇ ಅಲ್ಲದೆ, ಇದೇ ಸಂದರ್ಭದಲ್ಲಿ ಚರಂತಿ ಮಠ ಅವರ ಜೊತೆಗಿನ ರಾಜಕೀಯ ಸಂಬಂಧದ ಬಗ್ಗೆಯೂ ಯತ್ನಾಳ್ ಅವರು ಮಾತನಾಡಿದ್ದಾರೆ. ಮತ್ತಷ್ಟು ವಿವರ ಇಲ್ಲಿದೆ.
ದಾವಣಗೆರೆ ಬಿಜೆಪಿ ಟಿಕೆಟ್ ಘೋಷಣೆ : ಬಿಫಾರಂ ಬರೋವರೆಗೆ ಕಾಯಿರಿ ಎಂದ ಯತ್ನಾಳ್ - ಏನಾದ್ರೂ ಸಸ್ಪೆನ್ಸ್ ಕಾದಿದೆಯಾ?
Yatnal Statement surprises BJP : ಮಗನ ಮದುವೆಯ ನಂತರ ಸಕ್ರಿಯ ರಾಜಕಾರಣದಲ್ಲಿ ಸಕ್ರಿಯರಾಗಿರುವ ಬಸನಗೌಡ ಪಾಟೀಲ್ ಯತ್ನಾಳ್, ದಾವಣಗೆರೆ ಬಿಜೆಪಿ ಟಿಕೆಟ್ ಘೋಷಣೆಯ ಬಗ್ಗೆ ಮಾತನಾಡಿದ್ದಾರೆ. ಈಗ ಟಿಕೆಟ್ ಘೋಷಣೆಯಾಗಿದೆ ಎಂದು ಬೀಗಬೇಡಿ, ಬಿಫಾರಂ ಬರುವ ತನಕ ಕಾಯಿರಿ ಎಂದು ಹೇಳಿದ್ದಾರೆ.
ಲಂಡನ್ ಮೆಟ್ರೋಗಿಂತ ಬೆಂಗಳೂರಿನ 'ನಮ್ಮ ಮೆಟ್ರೋ' ಬೆಸ್ಟ್: Viral ಪೋಸ್ಟ್ನಲ್ಲಿ ಅಚ್ಚರಿಯ ಸತ್ಯ ಬಿಚ್ಚಿಟ್ಟ ಯುವತಿ
ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ ಜೀವನಾಡಿ 'ನಮ್ಮ ಮೆಟ್ರೋ' ಕೇವಲ ಕರುನಾಡಿಗೆ ಮಾತ್ರವಲ್ಲ, ಇದೀಗ ಜಾಗತಿಕ ಮಟ್ಟದಲ್ಲೂ ಪ್ರಶಂಸೆಗೆ ಪಾತ್ರವಾಗುತ್ತಿದೆ. ಇತ್ತೀಚೆಗಷ್ಟೇ ಲಂಡನ್ ಪ್ರವಾಸಕ್ಕೆ ತೆರಳಿದ್ದ ಯುವತಿಯೊಬ್ಬರು, ಜಗತ್ತಿನ ಅತ್ಯಂತ ಹಳೆಯ ಹಾಗೂ ಪ್ರಸಿದ್ಧ 'ಲಂಡನ್ ಅಂಡರ್ಗ್ರೌಂಡ್' (ಟ್ಯೂಬ್) ರೈಲಿಗಿಂತ ನಮ್ಮ ಬೆಂಗಳೂರಿನ ಮೆಟ್ರೋ ಎಷ್ಟೋ ಪಾಲು ಉತ್ತಮ ಮತ್ತು ಆರಾಮದಾಯಕ ಎಂದು ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ
ಕೆಂಪೇಗೌಡ ಬಸ್ ನಿಲ್ದಾಣ ಮೆಜೆಸ್ಟಿಕ್ ಸೇರಿದಂತೆ ರಾಜ್ಯದ ವಿವಿಧ ಬಸ್ ನಿಲ್ದಾಣಗಳಲ್ಲಿರುವ ಅಂಗಡಿಗಳಲ್ಲಿ ತಿಂಡಿ- ತಿನಿಸುಗಳಿಗೆ ದುಪ್ಪಟ್ಟು ಹಣ ವಸೂಲಿ ಮಾಡುತ್ತಿರುವುದು ನಿಮ್ಮ ಗಮನಕ್ಕೂ ಬಂದಿರಬಹುದು. ಅಷ್ಟೇ ಅಲ್ಲದೆ, ಅವಧಿ ಮೀರಿದ ಆಹಾರ ಪದಾರ್ಥಗಳನ್ನು ಇಲ್ಲಿ ಮಾರಾಟ ಮಾಡಲಾಗುತ್ತಿದೆ. ಕೆಲವೊಂದು ಅಂಗಡಿಗಳಲ್ಲಿ ಗ್ರಾಹಕರ ಜೊತೆಗೆ ಸೌಜನ್ಯದಿಂದಲೂ ವರ್ತಿಸುವುದಿಲ್ಲ. ಇಂತಹ ಹಲವು ದೂರುಗಳ ಹಿನ್ನೆಲೆಯಲ್ಲಿ 187 ಪ್ರಕರಣಗಳನ್ನು ದಾಖಲು ಮಾಡಲಾಗಿದೆ ಎಂದು ಸಾರಿಗೆ ಇಲಾಖೆ ಮಾಹಿತಿಯನ್ನು ನೀಡಿದೆ. ಯಾವ ಜಿಲ್ಲೆಯಲ್ಲಿ ಎಷ್ಟು ಪ್ರಕರಣ? ಇಲ್ಲಿದೆ ಮಾಹಿತಿ.
ಉಳ್ಳಾಲ ಸೆಂಟ್ರಲ್ ಕಮಿಟಿ ವತಿಯಿಂದ ರಂಝಾನ್ ಕಿಟ್ ವಿತರಣೆ
ಉಳ್ಳಾಲ: ಉಳ್ಳಾಲ ಸೆಂಟ್ರಲ್ ಕಮಿಟಿ ಇದರ ಆಶ್ರಯದಲ್ಲಿ 150 ಕುಟುಂಬಗಳಿಗೆ ರಂಝಾನ್ ಕಿಟ್ ವಿತರಣೆ ಕಾರ್ಯಕ್ರಮ ಮಾಸ್ತಿಕಟ್ಟೆ ಸಂಘಟನೆಯ ಕಚೇರಿಯಲ್ಲಿ ನಡೆಯಿತು. ಸಂಘದ ಅಧ್ಯಕ್ಷ ನವಾಝ್ ಉಳ್ಳಾಲ ಕಾರ್ಯಕ್ರಮ ಉದ್ಘಾಟಿಸಿದರು. ಉಪಾಧ್ಯಕ್ಷ ಹಾಜಿ ಮುಹಮ್ಮದ್ ತ್ವಾಹಾ ಕಾರ್ಯಕ್ರಮ ಉದ್ಘಾಟಿಸಿದರು. ಈ ಸಂದರ್ಭ ಕಾರ್ಯದರ್ಶಿ ಯು.ಕೆ. ಮುಸ್ತಫಾ, ಕೋಶಾಧಿಕಾರಿ ಹಾಜಿ ಅಹ್ಮದ್ ಬಾವ, ಯು.ಎಮ್. ಜಬ್ಬಾರ್, ಮುಸ್ತಫಾ ಬಾವ, ಯುಕೆ ಸಿದ್ದೀಕ್,ಯು.ಕೆ. ಇಜಾಝ್ ಅಡ್ವೊಕೇಟ್, ಇಸ್ಮಾಯೀಲ್ ಮಂಚಿಲ, ರಹ್ಮಾನ್ ಮಂಚಿಲ ಹಾಗು ಇತರರು ಉಪಸ್ಥಿತರಿದ್ದರು.
ಮಂಗಳೂರು| ರಮಝಾನ್ ಪ್ರಯುಕ್ತ ಮಧ್ಯರಾತ್ರಿವರೆಗೆ ಅಂಗಡಿ ಮುಂಗಟ್ಟು ತೆರೆದಿಡಲು ಪೊಲೀಸ್ ಇಲಾಖೆ ಅನುಮತಿ
ಮಂಗಳೂರು, ಮಾ.19: ರಮಝಾನ್ ಹಿನ್ನೆಲೆಯಲ್ಲಿ ಇಂದು (ಗುರುವಾರ) ಮಧ್ಯರಾತ್ರಿ 12 ಗಂಟೆ ತನಕ ಅಂಗಡಿ ಮುಂಗಟ್ಟುಗಳನ್ನು ತೆರೆದಿಡಲು ಅನುಮತಿ ನೀಡಲಾಗಿದೆ ಎಂದು ಮಂಗಳೂರು ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ. ಗುರುವಾರ ಮಧ್ಯರಾತ್ರಿವರೆಗೆ ಅಂಗಡಿಗಳನ್ನು ತೆರೆದಿಡಲು ಹಲವರು ಮನವಿ ಮಾಡಿದ್ದರು. ಅದರಂತೆ ಮಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಇಂದು (ಗುರುವಾರ) ಮಧ್ಯರಾತ್ರಿ 12 ಗಂಟೆಯ ತನಕ ಅಂಗಡಿಗಳನ್ನು ತೆರೆದಿಡಲು ಅವಕಾಶ ಕಲ್ಪಿಸಲಾಗಿದೆ ಎಂದಿದ್ದಾರೆ.
ವಿಮಾನ ಪ್ರಯಾಣದ ದರ ಹೊರೆಯಾಗುತ್ತಿದೆಯೆ?; ಈ 8 ಸಲಹೆಗಳನ್ನು ಅನುಸರಿಸಿ ಅಗ್ಗದ ಪ್ರಯಾಣ ಬೆಳೆಸಿ...
ವಿಮಾನ ಪ್ರಯಾಣ ಮಾಡುವಾಗ ಸ್ಮಾರ್ಟ್ ಅಭ್ಯಾಸಗಳನ್ನು ಬೆಳೆಸಿಕೊಂಡರೆ ಅಗ್ಗದಲ್ಲಿ ಆರಾಮದಾಯಕ ಪ್ರಯಾಣ ಸಾಧ್ಯವಿದೆ ಆರಾಮದಾಯಕ ಪ್ರಯಾಣಕ್ಕೆ ಹೆಚ್ಚು ಬೆಲೆ ತೆರಬೇಕು ಎನ್ನುವ ನಂಬಿಕೆ ಹಲವರಲ್ಲಿದೆ. ಆದರೆ ಯಾವಾಗಲೂ ಅದು ನಿಜವಲ್ಲ. ಆರಾಮದಾಯಕ ಪ್ರಯಾಣಕ್ಕೆ ಪರ್ಯಾಯ ದಾರಿಗಳೂ ಇವೆ. ಕೆಲವೊಂದು ಅರ್ಥಪೂರ್ಣ ಅಭ್ಯಾಸಗಳನ್ನು ಬೆಳೆಸಿಕೊಳ್ಳುವುದರಿಂದ ಬೆಲೆ ಮತ್ತು ಅನುಭವದಲ್ಲಿ ವ್ಯತ್ಯಾಸ ತರಬಹುದು. ವೇಗೊ ಇಂಡಿಯಾದ ಜನರಲ್ ಮ್ಯಾನೇಜರ್ ಬರ್ನಾರ್ಡ್ ಕೊರಯ ಹೇಳುವ ಪ್ರಕಾರ “ಸ್ಮಾರ್ಟ್ ಫ್ಲೈಟ್ ಬುಕಿಂಗ್ ನಿಂದ ಆರಾಮದಾಯಕ ಪ್ರಯಾಣ ಸಾಧ್ಯವಿದೆ!” ಅದಕ್ಕಾಗಿ ಅವರು ಕೆಲವು ಸಲಹೆಗಳನ್ನು ನೀಡಿದ್ದಾರೆ. 1. ದರ ಎಚ್ಚರಿಕೆಗಳನ್ನು ಹೊಂದಿಸಿಕೊಳ್ಳಿ ಅನೇಕ ಬುಕಿಂಗ್ ಅಪ್ಲಿಕೇಶನ್ ಗಳು ವಿಮಾನ ದರದ ಬಗ್ಗೆ ಎಚ್ಚರಿಸುವ ಅಧಿಸೂಚನೆಗಳನ್ನು ಕಳುಹಿಸುತ್ತವೆ. ಬೆಲೆಗಳು ದಿನಕ್ಕೆ ಅನೇಕ ಬಾರಿ ಬದಲಾಗುವುದರಿಂದ ಸಾಧ್ಯವಾದಷ್ಟು ಬೇಗ ದರ ಎಚ್ಚರಿಕೆ ಹೊಂದಿಸಿಕೊಳ್ಳಬೇಕು. ಸಮಂಜಸವಾದ ದರ ಕಾಣಿಸಿಕೊಂಡಾಗ ಪದೇಪದೆ ಪರಿಶೀಲಿಸುವ ಮತ್ತು ತ್ವರಿತವಾಗಿ ಕಾರ್ಯನಿರ್ವಹಿಸುವ ಅಗತ್ಯವಿಲ್ಲದೆ, ಈ ಅಧಿಸೂಚನೆಗಳು ಬೆಲೆ ಕುಸಿತವನ್ನು ಟ್ರ್ಯಾಕ್ ಮಾಡಲು ನೆರವಾಗುತ್ತವೆ. 2. ಪ್ರಯಾಣದ ದಿನಾಂಕ ನಿಖರವಾಗಿ ಇಡಬೇಡಿ ಬಹಳಷ್ಟು ಮಂದಿ ವಾರಾಂತ್ಯದಲ್ಲಿಯೇ ಪ್ರಯಾಣ ಬೆಳೆಸುತ್ತಾರೆ. ಹೀಗಾಗಿ ಬೆಲೆ ಹೆಚ್ಚಾಗಿರುತ್ತದೆ. ವಾರದ ಮಧ್ಯಭಾಗದಲ್ಲಿ ಪ್ರಯಾಣವನ್ನು ಯೋಜಿಸಿಕೊಂಡರೆ ವಾರಾಂತ್ಯದ ಪ್ರಯಾಣಕ್ಕಿಂತ ಹೆಚ್ಚು ಅಗ್ಗವಾಗುತ್ತದೆ. 3. ಸಮೀಪದ ವಿಮಾನ ನಿಲ್ದಾಣವನ್ನು ಹೋಲಿಸಿ ಒಂದಕ್ಕಿಂತ ಹೆಚ್ಚು ವಿಮಾನ ನಿಲ್ದಾಣವಿರುವ ನಗರದಲ್ಲಿ ನೆಲೆಸಿದ್ದರೆ, ವಿಭಿನ್ನ ವಿಮಾನ ನಿಲ್ದಾಣದಿಂದ ಗಮ್ಯ ಸ್ಥಾನಕ್ಕೆ ಬೆಲೆಯನ್ನು ಹೋಲಿಸಿ ನೋಡಬೇಕು. ಪರ್ಯಾಯ ವಿಮಾನ ನಿಲ್ದಾಣದಲ್ಲಿ ಇಳಿಯುವುದು ಅಥವಾ ಹತ್ತುವುದರಿಂದ ಬೆಲೆ ಕಡಿತವಾಗುತ್ತದೆ. ಮುಖ್ಯವಾಗಿ ನಿಬಿಡವಾಗಿರುವ ಪ್ರಾದೇಶಿಕ ಹಾದಿಯಲ್ಲಿ ಒಂದಕ್ಕಿಂತ ಹೆಚ್ಚು ಕೇಂದ್ರಗಳು ಒಂದೇ ಗಮ್ಯಸ್ಥಾನಕ್ಕೆ ಕೊಂಡೊಯ್ಯತ್ತವೆ. 4. ಸರಿಯಾದ ಸಮಯದಲ್ಲಿ ಬುಕ್ ಮಾಡಿ ಬಹಳ ಬೇಗನೇ ಅಥವಾ ಬಹಳ ತಡವಾಗಿ ವಿಮಾನ ಬುಕ್ ಮಾಡಬಾರದು. ಬೆಲೆ, ಸೀಟು ಲಭ್ಯತೆ ಮತ್ತು ಅನುಕೂಲವನ್ನು ಗಮನಿಸಿಕೊಂಡು ಸಮಯಕ್ಕೆ ಸರಿಯಾಗಿ ಬುಕ್ ಮಾಡಬೇಕು. 5. ನಿಬಿಡ ಋತುಗಳನ್ನು ಗಮನಿಸಿ ಶಾಲಾ ರಜಾ ದಿನಗಳು, ದೀರ್ಘ ವಾರಾಂತ್ಯಗಳು ಮತ್ತು ಹಬ್ಬಗಳನ್ನು ಗಮನಿಸಿ. ಅಂತಹ ಸಂದರ್ಭದಲ್ಲಿ ವಾಯುಯಾನ ಹೆಚ್ಚು ನಿಬಿಡವಾಗಿರುತ್ತವೆ. ಆಗ ಬೇಡಿಕೆ ಹೆಚ್ಚಾಗುವ ಮೊದಲೇ ಬುಕ್ ಮಾಡಬೇಕಾಗುತ್ತದೆ. ಅದರಿಂದ ಬೆಲೆಗಳಲ್ಲಿ ಹೆಚ್ಚು ಆಯ್ಕೆಗಳು ಸಿಗಲಿವೆ. 6. ನಿಲ್ದಾಣದಲ್ಲಿ ತಂಗಿ ಸಾಗುವುದು ಹಣ ಉಳಿಸಬೇಕೆಂದರೆ ನೇರ ರಸ್ತೆಯಲ್ಲಿ ಸಾಗುವ ಬದಲು, ಒಂದು ನಿಲ್ದಾಣದಲ್ಲಿ ನಿಂತು ಸಾಗುವ ವಿಮಾನವನ್ನು ಬಳಸಬಹುದು. ಕೆಲವೊಂದು ಸಣ್ಣ ಮತ್ತು ಸೂಕ್ತ ಸಮಯದಲ್ಲಿ ನಿಂತು ಸಾಗುವ ನಿಲ್ದಾಣಗಳಿವೆ. ಅವು ಪ್ರಯಾಣದಲ್ಲಿ ಹೆಚ್ಚು ಹೊರೆಯಾಗದೆ ಸಾಗಲು ನೆರವಾಗುತ್ತದೆ. ಮುಖ್ಯವಾಗಿ ಅಂತಾರಾಷ್ಟ್ರೀಯ ಪ್ರಯಾಣದಲ್ಲಿ ಇಂತಹ ಯೋಜನೆ ಹಾಕಿಕೊಳ್ಳಬಹುದು. 7. ಒಂದೇ ವಿಮಾನ ಬೇಡ ಹೋಗಲು ಮತ್ತು ಮರಳಲು ಬೇರೆ ಬೇರೆ ವೈಮಾನಿಕ ಸಂಸ್ಥೆಗಳನ್ನು ಬಳಸಿಕೊಳ್ಳಬಹುದು. ಇದರಿಂದ ಬೆಲೆ ಕಡಿಮೆ ಮಾಡಬಹುದು ಮತ್ತು ಸಮಯ ಹೊಂದಿಸಿಕೊಳ್ಳಬಹುದು. ಬ್ಯಾಗೇಜ್ ಅಥವಾ ಸೀಟ್ ಆಯ್ಕೆಯನ್ನು ಮುಂಗಡವಾಗಿ ಒಳಗೊಂಡಿರುವ ಆಯ್ಕೆಗಳನ್ನು ಮಾಡಿಕೊಳ್ಳಬಹುದು. ಇದರಿಂದ ಚೆಕ್ ಔಟ್ ನಲ್ಲಿ ಪ್ರತ್ಯೇಕವಾಗಿ ಹೆಚ್ಚುವರಿ ಬೆಲೆ ತೆರುವ ಪ್ರಸಂಗ ತಪ್ಪಿಸಿಕೊಳ್ಳಬಹುದು.
Ballari | ಹಂಪಾದೇವನಹಳ್ಳಿಯಲ್ಲಿ ಭಾವಗೀತೆ, ಬಯಲಾಟ ಸಾಂಸ್ಕೃತಿಕ ಸಂಭ್ರಮ
ಬಳ್ಳಾರಿ/ಕಂಪ್ಲಿ: ತಾಲೂಕಿನ ಹಂಪಾದೇವನಹಳ್ಳಿಯಲ್ಲಿ ಮಾವಿನಹಳ್ಳಿಯ ಶ್ರೀ ಸಿದ್ದೇಶ್ವರ ರಂಗ ಸಂಸ ಕಲ್ಚರಲ್ ಟ್ರಸ್ಟ್ ವತಿಯಿಂದ ಭಾವಗೀತೆಗಳು ಹಾಗೂ ಬಯಲಾಟದ ಪಟ್ಟಾಭಿಷೇಕ ಸನ್ನಿವೇಶವನ್ನು ಒಳಗೊಂಡ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಯಿತು. ಕಾರ್ಯಕ್ರಮವನ್ನು ಬಯಲಾಟ ಹಾರ್ಮೋನಿಯಂ ಮಾಸ್ಟರ್ ಡಿ.ಎಂ. ಮಂಜುನಾಥ ಸಸಿಗೆ ನೀರು ಹಾಕುವ ಮೂಲಕ ಉದ್ಘಾಟಿಸಿದರು. ಭಾವಗೀತೆಗಳ ಮೂಲಕ ಬೇಂದ್ರೆ, ಜಿ.ಎಸ್. ಶಿವರುದ್ರಪ್ಪ ಮುಂತಾದ ಮಹಾನ್ ಕವಿಗಳು ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದ್ದಾರೆ ಎಂದು ಹೇಳಿದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಎಸ್ಡಿಎಂಸಿ ಅಧ್ಯಕ್ಷ ಗುರುಮೂರ್ತಿ ಮಾತನಾಡಿ, ಭಾವಗೀತೆ ಪ್ರಾಚೀನ ಗ್ರೀಕ್ ಸಾಹಿತ್ಯದಿಂದ ಬಂದ ಒಂದು ಗೀತೆಯ ರೂಪವಾಗಿದ್ದು, ಪ್ರೀತಿ, ಪ್ರಕೃತಿ, ಭಕ್ತಿ ಮತ್ತು ತತ್ವಜ್ಞಾನ ಮೊದಲಾದ ವಿಷಯಗಳನ್ನು ಒಳಗೊಂಡಿದೆ ಎಂದು ವಿವರಿಸಿದರು. ಬಯಲಾಟ ಕಲಾವಿದ ಕಂದಾರ್ ತಿಪ್ಪೇಸ್ವಾಮಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಬಲಾ ವಾದಕ ಚಾಗೆವರಬಸಪ್ಪ ವಹಿಸಿದ್ದರು. ಟ್ರಸ್ಟ್ ಕಾರ್ಯದರ್ಶಿ ಕೆ.ಹೇಮೇಶ್ವರ ಅವರು ಮಕ್ಕಳಿಗೆ ಸಂಸ್ಕೃತಿ ಪರಿಚಯಿಸುವ ಮಹತ್ವವನ್ನು ವಿವರಿಸಿದರು. ಭಾವಗೀತೆ ಕಾರ್ಯಕ್ರಮವನ್ನು ಎಚ್.ಲೋಕರಾಜ್ ಮತ್ತು ತಂಡ ನಿರ್ವಹಿಸಿದರು. ಬಯಲಾಟ ಪ್ರದರ್ಶನದಲ್ಲಿ ಕೆ.ಪಂಪಾಪತಿ, ಎಚ್.ಆರ್.ಪ್ರವೀಣ್ ಕುಮಾರ್, ರೇಣುಕಾ ರಾಜ, ಬಿ.ಕೆ.ಸಿದ್ದಪ್ಪ ಹಾಗೂ ಧರ್ಮಪ್ಪ ತಂಡದವರು ಪಾಲ್ಗೊಂಡು ಗಮನಸೆಳೆದರು. ಈ ಸಂದರ್ಭದಲ್ಲಿ ಶಿಕ್ಷಕರು, ಕಲಾವಿದರು, ಗ್ರಾಮಸ್ಥರು ಹಾಗೂ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದು, ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ರಾಯಚೂರು | ಸಹಕಾರಿ ಸಂಸ್ಥೆಗಳಲ್ಲಿ ಅಕ್ರಮ ತಡೆಗೆ ಕಟ್ಟುನಿಟ್ಟಿನ ಕ್ರಮ ಅಗತ್ಯ: ಎ.ವಸಂತಕುಮಾರ ಆಗ್ರಹ
ರಾಯಚೂರು: ರಾಜ್ಯದ ಸಹಕಾರಿ ಸಂಸ್ಥೆಗಳಲ್ಲಿ ಕಟ್ಟುನಿಟ್ಟಿನ ಲೆಕ್ಕಪರಿಶೋಧನೆ (ಆಡಿಟ್) ಹಾಗೂ ಪರಿಣಾಮಕಾರಿ ಮೇಲ್ವಿಚಾರಣೆ ಜಾರಿಗೊಳಿಸುವ ಅಗತ್ಯವಿದೆ ಎಂದು ವಿಧಾನ ಪರಿಷತ್ ಸದಸ್ಯ ಎ. ವಸಂತಕುಮಾರ ಅವರು ಸರ್ಕಾರವನ್ನು ಒತ್ತಾಯಿಸಿದರು. ವಿಧಾನ ಪರಿಷತ್ನಲ್ಲಿ ಬುಧವಾರ ಮಾತನಾಡಿದ ಅವರು, ಸಹಕಾರಿ ವಲಯದಲ್ಲಿ ಇತ್ತೀಚೆಗೆ ಹೆಚ್ಚುತ್ತಿರುವ ಅಕ್ರಮಗಳು ಮತ್ತು ಆಡಳಿತದ ದೌರ್ಬಲ್ಯಗಳಿಂದ ಸಾವಿರಾರು ಠೇವಣಿದಾರರು ಹಾಗೂ ರೈತರು ಸಂಕಷ್ಟಕ್ಕೆ ಸಿಲುಕಿರುವುದನ್ನು ಗಮನಕ್ಕೆ ತಂದರು. ಸಹಕಾರಿ ಸಂಸ್ಥೆಗಳ ಮೇಲೆ ನಂಬಿಕೆ ಇಟ್ಟು ತಮ್ಮ ಜೀವನದ ಉಳಿತಾಯವನ್ನು ಠೇವಣಿ ಇಟ್ಟಿರುವ ಹಿರಿಯ ನಾಗರಿಕರು, ನಿವೃತ್ತರು ಹಾಗೂ ಸಾಮಾನ್ಯ ಜನರು ಇಂದು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. ಹಗರಣಗಳಿಂದ ಅನೇಕ ಕುಟುಂಬಗಳು ಸಂಕಷ್ಟಕ್ಕೆ ತಳ್ಳಲ್ಪಟ್ಟಿದ್ದು, ಹಣ ಸಿಗದೆ ಕೆಲವರು ಪ್ರಾಣ ಕಳೆದುಕೊಂಡಿರುವ ಘಟನೆಗಳೂ ವರದಿಯಾಗಿವೆ ಎಂದು ಹೇಳಿದರು. ಸರ್ಕಾರದ ಅಂಕಿಅಂಶಗಳ ಪ್ರಕಾರ ರಾಜ್ಯದಲ್ಲಿನ 47,736 ಸಹಕಾರಿ ಸಂಘಗಳಲ್ಲಿ 14,798 ಸಂಘಗಳು ನಷ್ಟದಲ್ಲಿವೆ. 125 ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ದಿವಾಳಿಯಾಗಿದ್ದು, 5,373 ಸೌಹಾರ್ದ ಸಹಕಾರ ಸಂಸ್ಥೆಗಳಲ್ಲಿ 1,017 ಸಂಸ್ಥೆಗಳು ನಷ್ಟದಲ್ಲಿವೆ. ಜೊತೆಗೆ 18 ಸಂಸ್ಥೆಗಳಲ್ಲಿ ಅವ್ಯವಹಾರಗಳು ನಡೆದಿರುವುದು ಬೆಳಕಿಗೆ ಬಂದಿದೆ ಎಂದು ವಿವರಿಸಿದರು. ಸಹಕಾರಿ ಸಂಸ್ಥೆಗಳ ಆಡಳಿತದಲ್ಲಿ ಪಾರದರ್ಶಕತೆ ಕೊರತೆ, ಸಮರ್ಪಕ ಮೇಲ್ವಿಚಾರಣೆಯ ಅಭಾವ, ನಿಯಮ ಉಲ್ಲಂಘನೆ ಹಾಗೂ ರಾಜಕೀಯ ಹಸ್ತಕ್ಷೇಪವೇ ಈ ಪರಿಸ್ಥಿತಿಗೆ ಪ್ರಮುಖ ಕಾರಣಗಳಾಗಿವೆ ಎಂದು ಅಭಿಪ್ರಾಯಪಟ್ಟರು. ಠೇವಣಿದಾರರ ಹಿತಾಸಕ್ತಿಯನ್ನು ರಕ್ಷಿಸಲು ದೃಢವಾದ ವ್ಯವಸ್ಥೆ ರೂಪಿಸಬೇಕು. ನೇಮಕಾತಿ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಖಚಿತಪಡಿಸಬೇಕು. ಜೊತೆಗೆ ರಾಜಕೀಯ ಹಸ್ತಕ್ಷೇಪವನ್ನು ಕಡಿಮೆ ಮಾಡಿ ಸಂಸ್ಥೆಗಳ ಸ್ವಾಯತ್ತತೆ ಕಾಪಾಡಬೇಕು ಎಂದು ಸಲಹೆ ನೀಡಿದರು. ರಾಜ್ಯದ ಲಕ್ಷಾಂತರ ಠೇವಣಿದಾರರು ಮತ್ತು ರೈತರ ಬದುಕಿಗೆ ಸಂಬಂಧಿಸಿದ ಈ ಗಂಭೀರ ವಿಷಯವನ್ನು ಸರ್ಕಾರ ತಕ್ಷಣ ಪರಿಗಣಿಸಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.
ಬಾಗಲಕೋಟೆ ಉಪಚುನಾವಣೆ | ಮತದಾರರು ಬಿಜೆಪಿ ಪರವಾಗಿ ಇದ್ದಾರೆ : ಬಿಜೆಪಿ ಅಭ್ಯರ್ಥಿ ಚರಂತಿಮಠ
ಬಾಗಲಕೋಟೆ : ಉಪ ಚುನಾವಣೆ ಕಾವು ದಿನದಿಂದ ದಿನಕ್ಕೆ ಏರುತ್ತಿದ್ದು, ಮಾ.23ರಂದು ನಾಮಪತ್ರ ಸಲ್ಲಿಕೆ ಹಿನ್ನಲೆ ರಾಜಕೀಯ ಚಟುವಟಿಕೆ ಗರಿಗೆದರಿದೆ. ಈ ಮಧ್ಯೆ ಬಿಜೆಪಿ ಹೈಕಮಾಂಡ್ ಬಾಗಲಕೋಟೆ ವಿಧಾನಸಭಾ ಕ್ಷೇತ್ರಕ್ಕೆ ತನ್ನ ಅಭ್ಯರ್ಥಿಯನ್ನು ಘೋಷಣೆ ಮಾಡಿದೆ. ಬಿಜೆಪಿ ಪಕ್ಷದಿಂದ ವೀರಣ್ಣ ಚರಂತಿಮಠ ಅವರಿಗೆ ಟಿಕೆಟ್ ಘೋಷಣೆಯಾಗಿದೆ. ಯುಗಾದಿ ಹಬ್ಬದ ದಿನದಂದೇ ವೀರಣ್ಣ ಚರಂತಿಮಠ ಅವರಿಗೆ ಪಕ್ಷ ಸಿಹಿಸುದ್ದಿ ನೀಡಿದೆ. ಟಿಕೆಟ್ ಘೋಷಣೆ ಬಳಿಕ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದ ಸರಕಾರ ಗ್ಯಾರಂಟಿ ಯೋಜನೆಗಳಿಂದ ಯಾವುದೇ ಅಭಿವೃದ್ಧಿ ಇಲ್ಲದೆ ಜನರು ಬೇಸತ್ತು ಹೋಗಿದ್ದಾರೆ. ಹೀಗಾಗಿ ಜನರು ಬದಲಾವಣೆ ಬಯಸಿದ್ದು, ಮತದಾರರು ಬಿಜೆಪಿ ಪರವಾಗಿ ಇದ್ದಾರೆ. ಕಾಂಗ್ರೆಸ್ ಪಕ್ಷದ ಸರಕಾರ ಮೆಡಿಕಲ್ ಕಾಲೇಜು ಸೇರಿದಂತೆ ಇತರ ವಿಷಯಗಳ ಬಗ್ಗೆ ಗಿಮಿಕ್ ಮಾಡಿದರೂ ಬಾಗಲಕೋಟೆ ಜನತೆ ಇಂತಹ ಗಿಮಿಕ್ ಗಳ ಬಗ್ಗೆ ಗಮನ ಹರಿಸುವುದಿಲ್ಲʼ ಎಂದು ವೀರಣ್ಣ ಚರಂತಿಮಠ ತಿಳಿಸಿದ್ದಾರೆ. ʼಕಾಂಗ್ರೆಸ್ ಪಕ್ಷದ ಸರಕಾರ ಇರುವ ಹಿನ್ನಲೆಯಲ್ಲಿ, ಸಚಿವರು ಶಾಸಕರು ಸೇರಿದಂತೆ ಇತರ ಮುಖಂಡರು ಆಗಮಿಸಿ, ಏನೇ ಕಾರ್ಯತಂತ್ರ ಮಾಡಿದರೂ ಮತದಾರರು ಬಗ್ಗುವುದಿಲ್ಲ. ಹೀಗಾಗಿ ಈ ಬಾರಿ ಬಿಜೆಪಿ ಪಕ್ಷದ ಗೆಲುವು ಖಚಿತವಾಗಿದೆ. ಬಿಜೆಪಿ ಪಕ್ಷ ಬಿಟ್ಟು ಹೋದವವರನ್ನು ಕರೆ ತರುವ ಯತ್ನ ಮಾಡಲಾಗುತ್ತದೆʼ ಎಂದು ರಾಜ್ಯಸಭಾ ಸದಸ್ಯರಾದ ನಾರಾಯಣಸಾ ಭಾಂಡೆಗೆ ತಿಳಿಸಿದ್ದಾರೆ.
ಭಾರತದ ಷೇರು ಮಾರುಕಟ್ಟೆ ಕುಸಿತ; ಒಂದೇ ದಿನದಲ್ಲಿ ಹೂಡಿಕೆದಾರರ 11.2 ಲಕ್ಷ ಕೋಟಿ ರೂ ನಷ್ಟ; ಪತನಕ್ಕೆ 5 ಕಾರಣ
Indian Stock Market Collapse- ಜಾಗತಿಕ ರಾಜಕೀಯ ಉದ್ವಿಗ್ನತೆ ಮತ್ತು ಅಮೆರಿಕದ ಫೆಡರಲ್ ರಿಸರ್ವ್ನ ಕಠಿಣ ನಿಲುವಿನಿಂದಾಗಿ ಭಾರತೀಯ ಷೇರು ಮಾರುಕಟ್ಟೆಯು ಮಾರ್ಚ್ 19ರ ಗುರುವಾರಂದು ಭಾರಿ ಕುಸಿತ ಕಂಡಿದೆ. ದಿನದ ವಹಿವಾಟಿನಲ್ಲಿ ಸೆನ್ಸೆಕ್ಸ್ 2,450 ಅಂಕ ಹಾಗೂ ನಿಫ್ಟಿ 720 ಅಂಕ ಕುಸಿದಿದ್ದು, ಹೂಡಿಕೆದಾರರ 11.2 ಲಕ್ಷ ಕೋಟಿ ರೂ. ಸಂಪತ್ತು ಜಲಹೋಮವಾಗಿದೆ. ಇರಾನ್-ಇಸ್ರೇಲ್ ಸಂಘರ್ಷ, ಕಚ್ಚಾ ತೈಲ ಬೆಲೆ ಏರಿಕೆ, ಎಚ್ಡಿಎಫ್ಸಿ ಬ್ಯಾಂಕ್ ಅಧ್ಯಕ್ಷರ ರಾಜೀನಾಮೆ ಮತ್ತು ವಿದೇಶಿ ಹೂಡಿಕೆದಾರರ ನಿರ್ಗಮನ ಈ ಪತನಕ್ಕೆ ಪ್ರಮುಖ ಕಾರಣಗಳಾಗಿವೆ. ಸದ್ಯಕ್ಕೆ ಮಾರುಕಟ್ಟೆ ಅಸ್ಥಿರವಾಗಿರುವುದರಿಂದ ಹೂಡಿಕೆದಾರರು ಎಚ್ಚರಿಕೆ ವಹಿಸುವಂತೆ ತಜ್ಞರು ಸಲಹೆ ನೀಡಿದ್ದಾರೆ.
ಉನ್ನತ ಶಿಕ್ಷಣಕ್ಕೆ ಭಾರತದ ಯಾವ ನಗರ ಬೆಸ್ಟ್? QS ರ್ಯಾಂಕಿಂಗ್ ಪಟ್ಟಿಯಲ್ಲಿದೆ ಬೆಂಗಳೂರು ಸೇರಿದಂತೆ 4 ನಗರಗಳ ಹೆಸರು
ವಿದ್ಯಾರ್ಥಿ ಜೀವನದಲ್ಲಿ ಸರಿಯಾದ ನಗರವನ್ನು ಆಯ್ಕೆ ಮಾಡುವುದು ಅತ್ಯಂತ ಪ್ರಮುಖ ನಿರ್ಧಾರಗಳಲ್ಲಿ ಒಂದಾಗಿದೆ. ಇದು ಕೇವಲ ಶೈಕ್ಷಣಿಕ ಪ್ರಗತಿಯ ಮೇಲೆ ಮಾತ್ರವಲ್ಲದೆ ದೈನಂದಿನ ಜೀವನ, ಆರ್ಥಿಕ ವೆಚ್ಚಗಳು ಮತ್ತು ಭವಿಷ್ಯದ ಉದ್ಯೋಗಾವಕಾಶಗಳ ಮೇಲೂ ನೇರ ಪರಿಣಾಮ ಬೀರುತ್ತದೆ. ಇತ್ತೀಚಿನ ಕ್ಯೂಎಸ್ ಬೆಸ್ಟ್ ಸ್ಟೂಡೆಂಟ್ ಸಿಟೀಸ್ (QS Best Student Cities) 2026ರ ಜಾಗತಿಕ ರ್ಯಾಂಕಿಂಗ್ ಪ್ರಕಟವಾಗಿದ್ದು, ವಿದ್ಯಾರ್ಥಿಗಳಿಗೆ

30 C