ಆಕ್ರೋಶ ವ್ಯಕ್ತಪಡಿಸಿದ ಜನರು
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಕೆಂಗಣ್ಣಿಗೆ ಗುರಿಯಾಗಿ ಇರಾನ್ ಈಗ ದೊಡ್ಡ ಮಟ್ಟದ ಸಂಕಷ್ಟಕ್ಕೆ ಸಿಲುಕಿ ಒದ್ದಾಡುತ್ತಿದೆ. ಇರಾನ್ ನಾಯಕರು ಒಬ್ಬೊಬ್ಬರಾಗಿ ಜೀವ ಬಿಡುತ್ತಿದ್ದು, ತೈಲ &ಅನಿಲ ನಿಕ್ಷೇಪಗಳ ಮೇಲೆ ಕೂಡ ದೊಡ್ಡ ಮಟ್ಟದಲ್ಲಿ ದಾಳಿ ಮುಂದುವರಿಸಿವೆ ಇಸ್ರೇಲ್ &ಅಮೆರಿಕ ಸೇನೆಗಳು. ಹೀಗಿದ್ದಾಗ ಪರಿಸ್ಥಿತಿ ಯಾವುದೇ ಕ್ಷಣದಲ್ಲಿ ಮತ್ತೊಂದು ಮಹಾಯುದ್ಧದ ರೂಪ ಪಡೆದು
‘ತುಳು ಶೀಘ್ರವೇ 2ನೇ ಅಧಿಕೃತ ಭಾಷೆ ಆಗಲಿದೆ : ಪುರುಷೋತ್ತಮ ಬಿಳಿಮಲೆ
ಮಂಗಳೂರು : ಕರ್ನಾಟಕದಲ್ಲಿ ತುಳು ಶೀಘ್ರದಲ್ಲೇ ಎರಡನೇ ಅಧಿಕೃತ ಭಾಷೆಯ ಸ್ಥಾನ ಪಡೆಯುವುದು ಖಚಿತ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ತಿಳಿಸಿದರು. ತುಳು ವಿದ್ಯಾರ್ಥಿ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಮೋಹನ ಆಳ್ವ ನೇತೃತ್ವದ ಸಮಿತಿ ಮತ್ತು ತಾರಾನಾಥ ಗಟ್ಟಿ ನೇತೃತ್ವದ ಸಮಿತಿಗಳು ಈಗಾಗಲೇ ವರದಿ ಸಲ್ಲಿಸಿವೆ. ಸರ್ಕಾರದ ಮೇಲೆ ಒತ್ತಡ ಇರುವುದರಿಂದ 2ನೇ ಅಧಿಕೃತ ಭಾಷೆಯನ್ನಾಗಿ ಮಾಡದೇ ಇರಲು ಸಾಧ್ಯವಿಲ್ಲ ಎಂದರು. ದೇಶದ ವಿವಿಧ ರಾಜ್ಯಗಳಲ್ಲಿ ಒಂದಕ್ಕಿಂತ ಹೆಚ್ಚು ಅಧಿಕೃತ ಭಾಷೆಗಳು ಇವೆ. ಪಶ್ಚಿಮ ಬಂಗಾಳದಲ್ಲಿ ರಾಜ್ಯಭಾಷೆ ಹೊರತುಪಡಿಸಿ ಇತರ 5 ಅಧಿಕೃತ ಭಾಷೆಗಳು ಇವೆ. ಅಧಿಕೃತ ಭಾಷೆಯಾದರೂ ಎಂಟನೇ ಪರಿಚ್ಛೇದಕ್ಕೆ ಸೇರಿದರೂ ಭಾಷೆಯನ್ನು ಬಳಸದೇ ಇದ್ದರೆ ಉಳಿಯುವುದು ಕಷ್ಟ. ಆದ್ದರಿಂದ ಯುವಜನತೆ ಸ್ಥಳೀಯ ಭಾಷೆಯನ್ನು ಬಳಸಲು ಮುಂದಾಗಬೇಕು. ಹೆಚ್ಚು ಬಳಕೆಯಲ್ಲಿರುವ ಭಾಷೆಗಳು ವೇಗವಾಗಿ ಬೆಳೆಯುತ್ತಿವೆ ಎಂದು ಅವರು ಹೇಳಿದರು. ಪರಿಸರ ಪ್ರವಾಸೋದ್ಯಮ ಮಂಡಳಿ ಅಧ್ಯಕ್ಷೆ ಶಾಲೆಟ್ ಪಿಂಟೊ, ಪ್ರಾಂತ ರೈತ ಸಂಘದ ಅಧ್ಯಕ್ಷ ಯಾದವ ಶೆಟ್ಟಿ, ರೈತ ಸಂಘದ ಮುಖಂಡ ದೇವದಾಸ್ ಪಾಲ್ಗೊಂಡಿದ್ದರು.
ಭಟ್ಕಳ | ಅಕ್ರಮ ಜಾನುವಾರು ಸಾಗಾಟ ಪ್ರಕರಣ : ಪೊಲೀಸರು ನಡೆಸಿದ 2 ದಿನಗಳ ಕಾರ್ಯಾಚರಣೆಯಲ್ಲಿ 23 ಜಾನುವಾರುಗಳ ರಕ್ಷಣೆ
ಭಟ್ಕಳ: ಅಕ್ರಮವಾಗಿ ಸಾಗಾಟ ಮಾಡಲಾಗುತ್ತಿದ್ದ ಜಾನುವಾರುಗಳನ್ನು ಪೊಲೀಸರು ರಕ್ಷಿಸಿದ ಘಟನೆ ಭಟ್ಕಳದಲ್ಲಿ ಬೆಳಕಿಗೆ ಬಂದಿದೆ. ಗುರುವಾರ ಹಾಗೂ ಶುಕ್ರವಾರ ಎರಡು ದಿನಗಳ ಕಾಲ ನಡೆಸಿದ ಪ್ರತ್ಯೇಕ ಕಾರ್ಯಾಚರಣೆಯಲ್ಲಿ ಒಟ್ಟು 23 ಜಾನುವಾರುಗಳನ್ನು ರಕ್ಷಿಸಲಾಗಿದೆ. ಗುರುವಾರ ಜಾಗಟೆಬಾಲಿ ಸಮೀಪದ ಮ್ಯಾಂಗೋ ಫಾರ್ಮ್ ಪ್ರದೇಶದಲ್ಲಿ ಜಾನುವಾರುಗಳನ್ನು ಅಕ್ರಮವಾಗಿ ಸಂಗ್ರಹಿಸಿ ಇಡಲಾಗಿದೆ ಎಂಬ ಮಾಹಿತಿ ಆಧರಿಸಿ ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ವೆಂಕಟೇಶ್ ಮುರನಾಳ ಅವರ ನೇತೃತ್ವದಲ್ಲಿ ದಾಳಿ ನಡೆಸಲಾಯಿತು. ಈ ವೇಳೆ ಅಂದಾಜು 9 ಲಕ್ಷ ರೂ. ಮೌಲ್ಯದ 9 ಜಾನುವಾರುಗಳನ್ನು ರಕ್ಷಿಸಿ, ಅವುಗಳಿಗೆ ಅಗತ್ಯ ಆರೈಕೆ ಒದಗಿಸಲಾಯಿತು. ಪ್ರಕರಣ ಸಂಬಂಧ ಆರೋಪಿಯ ವಿರುದ್ಧ ದೂರು ದಾಖಲಾಗಿದೆ. ಶುಕ್ರವಾರ ಶಿರಾಲಿಯಿಂದ ಭಟ್ಕಳದತ್ತ ಬರುತ್ತಿದ್ದ ಲಾರಿಯನ್ನು ತಪಾಸಣೆ ಮಾಡಿದ ಪೊಲೀಸರು, ಅದರಲ್ಲಿ ಅಕ್ರಮವಾಗಿ ಸಾಗಿಸಲಾಗುತ್ತಿದ್ದ 14 ಜಾನುವಾರುಗಳನ್ನು ಪತ್ತೆಹಚ್ಚಿದರು. ಅವುಗಳ ಮೌಲ್ಯ ಅಂದಾಜು 14 ಲಕ್ಷ ರೂ. ಎಂದು ತಿಳಿದುಬಂದಿದೆ. ಜಾನುವಾರುಗಳಿಗೆ ಸಮರ್ಪಕ ಆಹಾರ ಹಾಗೂ ನೀರು ನೀಡದೆ ಸಾಗಾಟ ಮಾಡಲಾಗುತ್ತಿದ್ದುದನ್ನು ಪೊಲೀಸರು ಗಮನಿಸಿದ್ದಾರೆ. ಈ ವೇಳೆ ಮುಖ್ಯ ಆರೋಪಿ ಸ್ಥಳದಿಂದ ಪರಾರಿಯಾಗಿದ್ದು, ಮತ್ತೊಬ್ಬ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಕರಣ ಸಂಬಂಧ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಬೆಂಗಳೂರಿನಲ್ಲಿ ಹೊಸ ನಿಯಮಗಳು: ಬೀದಿಬದಿ ವ್ಯಾಪಾರ ಬಂದ್; ಫ್ಲೆಕ್ಸ್ ಹಾಕಿದ್ರೆ 1 ಲಕ್ಷ ರೂ. ದಂಡ; ಟೋಯಿಂಗ್ ಆರಂಭ
ಬೆಂಗಳೂರು ನಗರದಲ್ಲಿ ರಸ್ತೆ ಸುರಕ್ಷತೆ ನಿಟ್ಟಿನಲ್ಲಿ ಹಲವು ಮಹತ್ವದ ನಿಯಮಗಳನ್ನು ಜಾರಿಗೆ ತರಲು ಬೆಂಗಳೂರು ಅಭಿವೃದ್ಧಿ ಸಚಿವ ಡಿಕೆ ಶಿವಕುಮಾರ್ ಮುಂದಾಗಿದ್ದಾರೆ. ಬೀದಿಬದಿ ವ್ಯಾಪಾರ ಬಂದ್, ಫ್ಲೆಕ್ಸ್ ಹಾಕಿದ್ರೆ 1 ಲಕ್ಷ ರೂ. ದಂಡ ಹಾಗೂ ಟೋಯಿಂಗ್ ಆರಂಭ ಮಾಡುವುದಾಗಿ ಹೇಳಿದ್ದಾರೆ. ಈ ಬಗ್ಗೆ ಸಂಪೂರ್ಣ ವಿವರ ಇಲ್ಲಿದೆ.
ಬೆಂಗಳೂರು, ಮಾ. 20: ವಿಪಕ್ಷ ನಾಯಕ ರಾಹುಲ್ ಗಾಂಧಿ ವಿರುದ್ಧ ಅಸಭ್ಯ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ಬಿಜೆಪಿ ಸಂಸದೆ ಕಂಗನಾ ರಣಾವತ್ ಅವರನ್ನು ವೈದ್ಯಕೀಯ ಚಿಕಿತ್ಸೆಗೆ ಒಳಪಡಿಸಲು ಕ್ರಮ ಕೈಗೊಳ್ಳುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಎಚ್.ಎಸ್.ಮಂಜುನಾಥ್ ಗೌಡ ಮನವಿ ಮಾಡಿದ್ದಾರೆ. ಈ ಕುರಿತು ಪತ್ರ ಬರೆದಿರುವ ಮಂಜುನಾಥ್ ಗೌಡ, ‘ಕಂಗನಾ ರಣಾವತ್ ಅವರನ್ನು ತಕ್ಷಣ ಬೆಂಗಳೂರಿನ ನಿಮ್ಹಾನ್ಸ್ಗೆ ಕಳುಹಿಸಿ ವೈದ್ಯಕೀಯ ಪರೀಕ್ಷೆ ನಡೆಸಬೇಕು. ಅವರ ಚಿಕಿತ್ಸಾ ವೆಚ್ಚವನ್ನು ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ (ಕೆಪಿವೈಸಿ) ಸಂಪೂರ್ಣವಾಗಿ ಭರಿಸಲು ಸಿದ್ಧವಾಗಿದೆ’ ಎಂದು ತಿಳಿಸಿದ್ದಾರೆ. ರಾಹುಲ್ ಗಾಂಧಿ ವಿರುದ್ಧ ಕಂಗನಾ ರಣಾವತ್ ಇತ್ತೀಚೆಗೆ ನೀಡಿರುವ ಹೇಳಿಕೆಗಳು ಅಸಭ್ಯ ಮತ್ತು ಬೇಜವಾಬ್ದಾರಿಯುತವಾಗಿವೆ. ಅವುಗಳಲ್ಲಿ ಆಧಾರರಹಿತ ಆರೋಪಗಳ ಜೊತೆಗೆ ಅವಮಾನಕಾರಿ ಭಾಷೆ ಬಳಕೆಗೊಂಡಿದೆ. ಇದು ಅಗ್ಗದ ಪ್ರಚಾರಕ್ಕಾಗಿ ಸಂಸತ್ತಿನ ಗೌರವ ಹಾಳು ಮಾಡುವ ಪ್ರಯತ್ನವಾಗಿದೆ ಎಂದು ಅವರು ಆರೋಪಿಸಿದ್ದಾರೆ. ರಾಹುಲ್ ಗಾಂಧಿ ಉಪಸ್ಥಿತಿ ಮಹಿಳಾ ಸಂಸದರಲ್ಲಿ ಅಭದ್ರತೆ ಉಂಟುಮಾಡುತ್ತದೆ ಎಂಬ ಹೇಳಿಕೆಯನ್ನು ಮಂಜುನಾಥ್ ಗೌಡ ತೀವ್ರವಾಗಿ ಖಂಡಿಸಿದ್ದಾರೆ. ಇಂತಹ ಆರೋಪಗಳು ಮಾನಹಾನಿಕಾರಕವಾಗಿದ್ದು, ಮಹಿಳೆಯರ ಗೌರವಕ್ಕೆ ಸಂಬಂಧಿಸಿದ ಗಂಭೀರ ವಿಷಯವಾಗಿದೆ ಎಂದು ಹೇಳಿದ್ದಾರೆ. ಸಂಸದರಿಂದ ನಿರೀಕ್ಷಿಸಲಾದ ಪ್ರೌಢತೆ, ಜವಾಬ್ದಾರಿ ಮತ್ತು ಸಾರ್ವಜನಿಕ ನಡವಳಿಕೆಯ ಕೊರತೆ ಈ ಹೇಳಿಕೆಗಳಲ್ಲಿ ಕಾಣಿಸುತ್ತದೆ. ಇದು ಸಾಮಾನ್ಯ ರಾಜಕೀಯ ಟೀಕೆಯನ್ನು ಮೀರಿ ಅಸಭ್ಯ ಸಾರ್ವಜನಿಕ ವರ್ತನೆಯ ಉದಾಹರಣೆಯಾಗಿದೆ. ಇದರಿಂದ ಅವರ ವಿವೇಕ ಹಾಗೂ ಮಾನಸಿಕ ಸ್ಥಿತಿಯ ಬಗ್ಗೆ ಅನುಮಾನಗಳು ಮೂಡುತ್ತವೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಒಬ್ಬ ಸಂಸದರು ಜವಾಬ್ದಾರಿಯುತ ಚರ್ಚೆ ಮತ್ತು ವೈಯಕ್ತಿಕ ದಾಳಿಗಳ ನಡುವಿನ ವ್ಯತ್ಯಾಸ ಅರಿಯದಿದ್ದರೆ, ಸೂಕ್ತ ವೈದ್ಯಕೀಯ ಮೌಲ್ಯಮಾಪನವಿಲ್ಲದೆ ಸಾರ್ವಜನಿಕ ಹುದ್ದೆ ನಿರ್ವಹಿಸುವ ಯೋಗ್ಯತೆಯನ್ನೇ ಪ್ರಶ್ನಿಸುವ ಅಗತ್ಯವಿದೆ ಎಂದು ಹೇಳಿದ್ದಾರೆ. ರಾಜಕೀಯ ಭಿನ್ನಾಭಿಪ್ರಾಯಗಳಿದ್ದರೂ, ವಿರೋಧ ಪಕ್ಷದ ನಾಯಕನ ವಿರುದ್ಧ ಇಂತಹ ಭಾಷೆ ಬಳಸುವುದು ಆಘಾತಕಾರಿ. ಇಂತಹ ವರ್ತನೆಯನ್ನು ಸಹಿಸುವುದು ಸರ್ಕಾರದ ಮಾನದಂಡಗಳಿಗೆ ಕಳಂಕ ತರುತ್ತದೆ ಎಂದು ತಿಳಿಸಿದ್ದಾರೆ. ‘ಪ್ರಧಾನಿ ಅವರೇ, ನಿಮ್ಮ ಸಂಸದರನ್ನು ನಿಯಂತ್ರಿಸಿ. ರಾಜಕೀಯ ಸಂಭಾಷಣೆಗೆ ಸೌಜನ್ಯ ಮರಳಿ ತರಬೇಕು. ಕ್ರಮ ಕೈಗೊಳ್ಳದಿದ್ದರೆ, ಇಂತಹ ವರ್ತನೆಗೆ ಮೌನ ಅನುಮೋದನೆ ಇದೆ ಎಂಬ ಸಂದೇಶ ಹೋಗುತ್ತದೆ’ ಎಂದು ಮಂಜುನಾಥ್ ಗೌಡ ಎಚ್ಚರಿಸಿದ್ದಾರೆ.
ಕರಾವಳಿಯ ತುಳು ಭಾಷೆಗೆ ಮಾನ್ಯತೆ ನೀಡಿ ಉಳಿಸುವ ಜವಾಬ್ದಾರಿ ವಿದ್ಯಾರ್ಥಿ ಸಮುದಾಯದ ಮೇಲಿದೆ : ಪ್ರೀತಮ್ ನಾಯಕ್
ಮಂಗಳೂರು : ಭಾಷೆಗಳಿಗೆ ಗೌರವ ನೀಡುವುದರೊಂದಿಗೆ ನಮ್ಮ ಕರಾವಳಿಯ ತುಳು ಭಾಷೆಗೆ ಹೆಚ್ಚಿನ ಮಾನ್ಯತೆ ನೀಡಿ ಅದನ್ನು ಉಳಿಸುವ ಜವಾಬ್ದಾರಿ ವಿದ್ಯಾರ್ಥಿ ಸಮುದಾಯದ ಮೇಲಿದೆ ಎಂದು ನಿಟ್ಟೆ ಶಿಕ್ಷಣ ಸಂಸ್ಥೆ ವಿದ್ಯಾರ್ಥಿ ಪ್ರೀತಮ್ ನಾಯಕ್ ಹೇಳಿದರು. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮತ್ತು ತುಳು ಪರಿಷತ್ ಆಶ್ರಯದಲ್ಲಿ ಶುಕ್ರವಾರ ಇಲ್ಲಿನ ತುಳು ಭವನದಲ್ಲಿ ಮೂರನೇ ವಿದ್ಯಾರ್ಥಿ ತುಳು ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು. ಕರಾವಳಿಯಲ್ಲಿ ಕಂಡುಬರುವ ಗಲಭೆ, ಅನ್ಯಾಯಗಳನ್ನು ನಿಲ್ಲಿಸುವ ತಾಕತ್ತು ಕೂಡ ವಿದ್ಯಾರ್ಥಿ ಶಕ್ತಿಗೆ ಇದೆ. ತುಳುವರದ್ದು ಒಂದೇ ಮನಸ್ಥಿತಿ ಆಗಿದ್ದು, ತುಳು ಸಂಸ್ಕೃತಿಯನ್ನು ಉಳಿಸಿ ಮುಂದುವರಿಸಬೇಕಾಗಿದೆ. ತಲಾ ಐದು ಕಿ.ಮೀ. ದೂರಕ್ಕೊಂದು ಭಾಷೆ, ಸಂಸ್ಕೃತಿ, ಆಹಾರ ವ್ಯತ್ಯಾಯಗೊಳ್ಳುತ್ತಲೇ ಹೋಗುತ್ತಿದೆ. ಆದರೆ ತುಳು ಭಾಷೆ ಎಲ್ಲ ಕಡೆಯೂ ಪಸರಿಸುತ್ತಿರಬೇಕು ಎಂದು ಅವರು ಅಭಿಪ್ರಾಯಿಸಿದರು. ಸಮ್ಮೇಳನಾಧ್ಯಕ್ಷ ಭಾಷಣ ಮಾಡಿದ ಬ್ರಹ್ಮಾವರ ಎಸ್ಎಂಎಸ್ ಕಾಲೇಜು ವಿದ್ಯಾರ್ಥಿನಿ ಅಭಿಜ್ಞಾ, ಆಧುನಿಕತೆಯ ಭರಾಟೆಯಲ್ಲಿ ತುಳು ಭಾಷೆ ಮರೆಗೆ ಸರಿಯುವ ಭೀತಿ ಎದುರಾಗಿದೆ. ವಿದ್ಯಾರ್ಥಿಗಳ ಮೂಲಕ ತುಳು ತೇರು ಎಳೆಯುವ ಕೆಲಸವನ್ನು ಅಕಾಡೆಮಿ ಮತ್ತು ಪರಿಷತ್ ಮಾಡುತ್ತಿದೆ. ಟಿ.ವಿ, ಮೊಬೈಲ್ನ ದಾಸರಾಗಿರುವ ಇಂದಿನ ದಿನಗಳಲ್ಲಿ ಮಕ್ಕಳಲ್ಲಿ ತುಳು ಭಾಷೆ, ಸಂಸ್ಕೃತಿಯ ಬಗ್ಗೆ ಅರಿವು ಮೂಡಿಸುವ ಕೆಲಸ ಆಗಬೇಕು ಎಂದರು. ತುಳುನಾಡಿನಲ್ಲಿ ಅನೇಕ ಹಬ್ಬಗಳು ನಡೆಯುತ್ತಿದ್ದು, ಪ್ರತಿಯೊಂದರಲ್ಲೂ ಸಾಮಾಜಿಕ ಸಾಮರಸ್ಯದ ಸಂದೇಶ ಇದೆ. ಇದು ಸಂಸ್ಕೃತಿ ಸೌಹಾರ್ದತೆಯ ದ್ಯೋತಕ. ಸಾಹಿತ್ಯ, ಸಂಸ್ಕೃತಿಗೆ ತುಳುನಾಡಿನ ಕೊಡುಗೆ ಅನನ್ಯವಾಗಿದೆ ಎಂದರು. ಬಂಟ್ವಾಳ ರಾಣಿ ಅಬ್ಬಕ್ಕ ಅಧ್ಯಯನ ಕೇಂದ್ರ ಮುಖ್ಯಸ್ಥ ಡಾ.ತುಕರಾಮ ಪೂಜಾರಿ ದಿಕ್ಸೂಚಿ ಭಾಷಣ ಮಾಡಿದರು. ತುಳು ಪರಿಷತ್ ಅಧ್ಯಕ್ಷ ಶುಭೋದಯ ಆಳ್ವ ಪ್ರಾಸ್ತಾವಿಕ ಮಾತನಾಡಿದರು. ನಿಡುಸೋಸಿ ಶ್ರೀಜಗದ್ಗುರು ದುರುದುಂಡೀಶ್ವರ ಸಿದ್ಧಸಂಸ್ಥಾನ ಮಠದ ಶ್ರೀನಿಜಲಿಂಗೇಶ್ವರ ಸ್ವಾಮೀಜಿ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್, ಕರ್ನಾಟಕ ಗೇರು ಅಭಿವೃದ್ಧಿ ನಿಗಮ ಅಧ್ಯಕ್ಷೆ ಮಮತಾ ಗಟ್ಟಿ, ತುಳು ಪರಿಷತ್ ಗೌರವಾಧ್ಯಕ್ಷ ಡಾ.ಪ್ರಭಾಕರ ನೀರುಮಾರ್ಗ, ತುಳು ಅಕಾಡೆಮಿ ರಿಜಿಸ್ಟ್ರಾರ್ ಪೂರ್ಣಿಮಾ, ಪ್ರಮುಖರಾದ ಬೆನೆಟ್ ಅಮ್ಮಣ್ಣ, ಸುಮತಿ ಹೆಗ್ಡೆ, ಅಮಿತ್ ಅಶ್ವಿತ್, ಕಲಾ ಸಿರಿ ಸಂಚಾಲಕರಾದ ಚಂದ್ರಕಲಾ ರಾವ್, ದುರ್ಗಾ ಪ್ರಸಾದ್ ಮತ್ತಿತರರಿದ್ದರು. ಸನ್ನಿಧಿ ಸ್ವಾಗತಿಸಿದರು. ದಿಯಾ ಪರಿಚಯಿಸಿದರು. ರಾಹುಲ್ ಶೆಟ್ಟಿ ವಂದಿಸಿದರು. ಮೇಘಶ್ರೀ ನಿರೂಪಿಸಿದರು. ಬಳಿಕ ವಿವಿಧ ಗೋಷ್ಠಿ ನಡೆಯಿತು. ತುಳು ಸಮ್ಮೇಳನದಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳಿಗೆ ವಿಧಾನಸಭೆ ಅಧಿವೇಶನ ವೀಕ್ಷಿಸಲು ಅವಕಾಶ ಒದಗಿಸಲಾಗುವುದು ಎಂದು ಸಮ್ಮೇಳನದಲ್ಲಿ ಭಾಗವಹಿಸಿದ ವಿಧಾನಸಭೆ ಸ್ಪೀಕರ್ ಯು.ಟಿ ಖಾದರ್ ಹೇಳಿದರು. ಭಾಷೆಯನ್ನು ಮರೆತರೆ ಸಂಸ್ಕೃತಿಯನ್ನೇ ಬಲಿಕೊಟ್ಟಂತೆ. ಸಂಸ್ಕೃತಿ ನಾಶವಾದರೆ ಪ್ರೀತಿಯೂ ಮಾನವ ಬಂಧುತ್ವವೂ ನಾಶವಾಗುತ್ತದೆ ಎಂದ ಅವರು ಜನಿಸುವಾಗ ರಕ್ತ, ಭಾವನೆ, ಪ್ರೀತಿ, ದ್ವೇಷ ಇತ್ಯಾದಿ ಎಲ್ಲದರಲ್ಲೂ ಮನುಷ್ಯ ಒಂದೇ. ಹಾಗಿರುವಾಗ ಜಾತಿ ಧರ್ಮ ಬೇಧ, ದ್ವೇಷದ ಅಗತ್ಯವೇನಿದೆ ಎಂದು ಅವರು ಪ್ರಶ್ನಿಸಿದರು.
Udupi | ಮೂರು ದಿನಗಳ ಸಮಾಧಾನ ಮಹೋತ್ಸವಕ್ಕೆ ಅದ್ದೂರಿ ಚಾಲನೆ
ಉಡುಪಿ: ಸಮಾಧಾನ ಮಹೋತ್ಸವ ಹೃದಯಗಳ ಪರಿವರ್ತನೆ, ನಂಬಿಕೆಯ ನವೀಕರಣ ಮತ್ತು ಶಾಂತಿಯ ಅನುಭವಕ್ಕೆ ದೇವರು ನೀಡಿದ ಅಪೂರ್ವ ಅವಕಾಶ ಎಂದು ಉಡುಪಿ ಕಥೊಲಿಕ ಧರ್ಮಪ್ರಾಂತ್ಯದ ಪ್ರೆಷೀತ ಆಡಳಿತಾಧಿಕಾರಿ ಅತಿ ವಂ. ಡಾ.ಜೆರಾಲ್ಡ್ ಐಸಾಕ್ ಲೋಬೊ ಅಭಿಪ್ರಾಯಪಟ್ಟರು. ಅವರು ಶುಕ್ರವಾರ ನಗರದ ಮಿಷನ್ ಕಂಪೌಂಡ್ ಮೈದಾನದಲ್ಲಿ ಉಡುಪಿ ಜಿಲ್ಲೆಯ ಫೆಲೋಶಿಪ್ ಚರ್ಚಸ್ ಇವರ ವತಿಯಿಂದ ಆಯೋಜಿಸಲಾಗಿದ್ದ ಮೂರು ದಿನಗಳ ಸಮಾಧಾನ ಮಹೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು. ಬೈಬಲ್ ಶ್ರೀಗಂಥ ಪ್ರತಿಯೊಬ್ಬರಿಗೂ ಶಾಂತಿಯ ಆಳವಾದ ಅರ್ಥವನ್ನು ಭೋಧಿಸುತ್ತದೆ ಯೇಸು ಸ್ವಾಮಿಯ ಜನನದ ಸಂದರ್ಭದಲ್ಲಿ ಕೂಡ ಶಾಂತಿ ಸಮಾಧಾನದ ಉಲ್ಲೇಖವಿದ್ದು, ಇದು ದೇವರು ಮಾನವ ಕುಲದ ಮೇಲೆ ತೋರಿದ ಪ್ರೀತಿಯ ಸಂಕೇತವಾಗಿದೆ. ಲೋಕದ ಶಾಂತಿ ತಾತ್ಕಾಲಿಕವಾದರೆ ಕ್ರಿಸ್ತನ ಶಾಂತಿ ಶಾಶ್ವತವಾದುದಾಗಿದೆ. ಆದ್ದರಿಂದ ಶಾಂತಿಗಾಗಿ ಶ್ರಮಿಸವವರು ಸದಾ ಧನ್ಯರು ಎಂದು ಯೇಸು ಸ್ವಾಮಿ ಹೇಳಿದ್ದು, ಅವರ ಸಂದೇಶವನ್ನು ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಪಾಲಿಸೋಣ ಎಂದರು. ಮುಖ್ಯ ಅತಿಥಿಯಾಗಿ ಆಗಮಿಸಿದ ವಿಧಾನಪರಿಷತ್ ಸದಸ್ಯ ಐವನ್ ಡಿಸೋಜಾ ಮಾತನಾಡಿ, ಪ್ರತಿಯೊಂದು ಧರ್ಮಗಳಿಗೂ ತಮ್ಮ ತಮ್ಮ ಆಚರಣೆಗಳಿಗೆ ದೇಶದಲ್ಲಿ ಮುಕ್ತ ಅವಕಾಶವಿದ್ದು ನಮ್ಮ ಧರ್ಮವನ್ನು ಪ್ರೀತಿಸುವುದರೊಂದಿಗೆ ಇತರ ಧರ್ಮಗಳನ್ನು ಗೌರವಿಸಿದಾಗ ಶಾಂತಿಯ ಸಂದೇಶ ಸಾರ್ಥಕತೆಯನ್ನು ಪಡೆಯುತ್ತದೆ ಎಂದರು. ಸಿಎಸ್ ಐ ಕರ್ನಾಟಕ ಸದರ್ನ್ ಡಯಾಸಿಸ್ ಇದರ ಧರ್ಮಾಧ್ಯಕ್ಷರಾದ ಅತಿ ವಂ|ಹೇಮಚಂದ್ರ ಕುಮಾರ್ ಮಾತನಾಡಿ, ಮೂರು ದಿನಗಳ ಸಮಾಧಾನ ಮಹೋತ್ಸವ ನಮ್ಮಲ್ಲಿನ ಆಧ್ಯಾತ್ಮಿಕ ಶಕ್ತಿಯನ್ನು ಬಲಗೊಳಿಸಲು ಸಹಕಾರಿಯಾಗಲಿ ಎಂದು ಶುಭ ಹಾರೈಸಿದರು. ಕಾರ್ಯಕ್ರಮಕ್ಕೂ ಮುನ್ನ ಸುಮಾರು 200ಕ್ಕೂ ಅಧಿಕ ಮಂದಿ ಗಾಯನ ತಂಡದ ನೇತೃತ್ವದಲ್ಲಿ ಸ್ತುತಿಗೀತೆಗಳ ಗಾಯನ ಜರುಗಿತು. ಕಾರ್ಯಕ್ರಮದಲ್ಲಿ ಮೂರು ದಿನಗಳ ಕಾಲ ಭಕ್ತಿ ಸಂಜೀವನ ಕೂಟಗಳನ್ನು ನಡೆಸಿಕೊಡಲಿರುವ ಘನ ಮೋಹನ್ ಸಿ.ಲಾಝರಸ್, ಪಾಸ್ಟರ್ ಟಿ ವಿ ಗೋಪಿನಾಥನ್, ಲೊಂಬಾರ್ಡ್ ಮೆಮೋರಿಯಲ್ ಆಸ್ಪತ್ರೆಯ ಆಡಳಿತ ನಿರ್ದೇಶಕ ಡಾ. ಸುಶೀಲ್ ಜತ್ತನ್ನ, ಕರ್ನಾಟಕ ರಾಜ್ಯ ಕ್ರೈಸ್ತ ಅಭಿವೃದ್ಧಿ ಮಂಡಳಿಯ ನಿರ್ದೇಶಕ ಪ್ರಶಾಂತ್ ಜತ್ತನ್ನ ವೇದಿಕೆಯಲ್ಲಿ ಉಪಸ್ಥೀತರಿದ್ದರು.
ಮಧ್ಯಪ್ರಾಚ್ಯಕ್ಕೆ ಸಾವಿರಾರು ಹೆಚ್ಚುವರಿ ಸೈನಿಕರನ್ನು ನಿಯೋಜಿಸಲಿರುವ ಅಮೆರಿಕ: ವರದಿ
ವಾಷಿಂಗ್ಟನ್: ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಅಮೆರಿಕವು ಸಾವಿರಾರು ಹೆಚ್ಚುವರಿ ಸೈನಿಕರನ್ನು ಅಲ್ಲಿಗೆ ನಿಯೋಜಿಸಲು ಮುಂದಾಗಿದೆ ಎಂದು ವರದಿಯಾಗಿದೆ. ಅಮೆರಿಕದ ಮೂವರು ಅಧಿಕಾರಿಗಳು ರಾಯಿಟರ್ಸ್ ಸುದ್ದಿ ಸಂಸ್ಥೆಗೆ ಈ ಮಾಹಿತಿ ನೀಡಿದ್ದಾರೆ. ಹೆಸರು ಬಹಿರಂಗಪಡಿಸಲು ಇಚ್ಛಿಸದ ಅಧಿಕಾರಿಗಳಲ್ಲಿ ಒಬ್ಬರು, ‘ಯುಎಸ್ಎಸ್ ಬಾಕ್ಸರ್’ ಹೆಸರಿನ ಯುದ್ಧ ನೌಕೆ ಮೆರೀನ್ ಸೈನಿಕರನ್ನು ಹೊತ್ತು ನಿಗದಿತ ಸಮಯಕ್ಕಿಂತ ಮೂರು ವಾರಗಳ ಮುಂಚಿತವಾಗಿ ಅಮೆರಿಕದ ಪಶ್ಚಿಮ ಕರಾವಳಿಯಿಂದ ಹೊರಟಿದೆ ಎಂದು ತಿಳಿಸಿದ್ದಾರೆ. ಮಧ್ಯಪ್ರಾಚ್ಯದಲ್ಲಿನ ಪರಿಸ್ಥಿತಿ ತೀವ್ರವಾಗುತ್ತಿರುವ ಕಾರಣದಿಂದ ಈ ಕ್ರಮ ಕೈಗೊಳ್ಳಲಾಗಿದೆ. ಅಲ್ಲಿನ ಸೈನಿಕ ಬಲವನ್ನು ಹೆಚ್ಚಿಸುವುದು ಇದರ ಉದ್ದೇಶವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ ಎಂದು Aljazeera ವರದಿ ಮಾಡಿದೆ.
ಮಹಿಳೆಯರೊಂದಿಗೆ ಅಸಭ್ಯ ವರ್ತನೆ ಪ್ರಕರಣ : ಇನ್ಸ್ಪೆಕ್ಟರ್ ದುರ್ನಡತೆ ವಿರುದ್ಧ ಶಿಸ್ತು ಕ್ರಮ ಆಗಿದೆ: ಕಮಿಷನರ್
ಮಂಗಳೂರು : ಮೂಡುಬಿದಿರೆ ಇನ್ಸ್ಪೆಕ್ಟರ್ ಸಂದೇಶ ಪಿ.ಜಿ ದುರ್ನಡತೆಯ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ. ಇನ್ಸ್ಪೆಕ್ಟರ್ ವಿರುದ್ಧ ಕೇಳಿ ಬಂದಿರುವ ಲೈಂಗಿಕ ಕಿರುಕುಳದ ಆರೋಪಗಳು ದುರುದ್ದೇಶಪೂರಿತವಾಗಿದೆ. ಮಂಗಳೂರು ನಗರ ಉಪವಿಭಾಗ ಎಸಿಪಿ ಶ್ರೀಕಾಂತ್ ಅವರು ಪ್ರಕರಣಕ್ಕೆ ಸಂಬಂಧಿಸಿ ಪ್ರಾಥಮಿಕ ತನಿಖೆ ವರದಿ ನೀಡಿದ್ದು, ಅದರಲ್ಲಿ ಸುಮತಿ ನಾಯಕ್ ಮತ್ತು ಅವಿತಾ ಮಿನೇಜಸ್ ಮಾಡಿದ ಆರೋಪಕ್ಕೆ ಪೂರಕವಾಗಿ ಯಾವುದೇ ಸತ್ಯಾಂಶ ಹಾಗೂ ಪೂರಕವಾದ ಸಾಕ್ಷ್ಯಾಧಾರಗಳು ಕಂಡು ಬಂದಿಲ್ಲ ಎಂದು ತಿಳಿಸಿದ್ದಾರೆ. ವೈರಲ್ ವಿಡಿಯೋ ಬಗ್ಗೆ ದೂರು ನೀಡಿಲ್ಲ : ಪ್ರಕರಣಕ್ಕೆ ಸಂಬಂಧಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಆಡಿಯೋ ಮತ್ತು ವಿಡಿಯೋ ತಮ್ಮದೆಂದು ಮಹಿಳೆಯರು ಒಪ್ಪಿಕೊಂಡಿದ್ದಾರೆ. ಆದರೆ ಯಾವುದೇ ದೂರು ನೀಡಿಲ್ಲ. ಅಧಿಕಾರಿಯ ವಿರುದ್ಧ ಆಡಿಯೋ, ವಿಡಿಯೋಗಳಲ್ಲಿ ಕಂಡು ಬಂದಿರುವ ದುರ್ನಡತೆ ಗಂಭೀರವಾಗಿ ಪರಿಗಣಿಸಿ ಈಗಾಗಲೇ ಶಿಸ್ತು ಕ್ರಮ ಕೈಗೊಳ್ಳಲಾಗಿದೆ. ವೈಯಕ್ತಿಕ ದ್ವೇಷಕ್ಕಾಗಿ ಸುಳ್ಳು ದೂರುಗಳನ್ನು ನೀಡಿ ತನಿಖೆಯ ಹಾದಿ ತಪ್ಪಿಸುವವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಕಮಿಷನರ್ ಎಚ್ಚರಿಕೆ ನೀಡಿದ್ದಾರೆ. ಠಾಣೆಗೆ ಬರುವ ಮಹಿಳೆಯರ ರಕ್ಷಣೆ ಮತ್ತು ಅವರೊಂದಿಗೆ ಗೌರವಯುತವಾಗಿ ವರ್ತಿಸುವುದು ಪೊಲೀಸರ ಆದ್ಯ ಕರ್ತವ್ಯ. ಈ ಘಟನೆಯಿಂದ ಇಡೀ ಇಲಾಖೆಗೆ ಪಾಠವಾಗಿದ್ದು, ಮುಂದಿನ ದಿನಗಳಲ್ಲಿ ಇಂತಹ ವರ್ತನೆಗಳು ಮರುಕಳಿಸದಂತೆ ಎಚ್ಚರಿಕೆ ವಹಿಸಲಾಗುವುದು ಎಂದು ಕಮಿಷನರ್ ತಿಳಿಸಿದ್ದಾರೆ.
IAS, IPS ವರ್ಗಾವಣೆ | ಹೈಕೋರ್ಟ್ ಮೆಟ್ಟಿಲೇರಿದ TMC ಸಂಸದ ಕಲ್ಯಾಣ್ ಬ್ಯಾನರ್ಜಿ
ಕೋಲ್ಕತ್ತಾ: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆ ಘೋಷಣೆಯಾದ ತಕ್ಷಣವೇ ಹಲವು ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿದ ಚುನಾವಣಾ ಆಯೋಗದ ಕ್ರಮವನ್ನು ಪ್ರಶ್ನಿಸಿ ಟಿಎಂಸಿ ಸಂಸದ ಹಾಗೂ ಹಿರಿಯ ವಕೀಲ ಕಲ್ಯಾಣ್ ಬ್ಯಾನರ್ಜಿ ಶುಕ್ರವಾರ ಕಲ್ಕತ್ತಾ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದರು. ಅವರು ತಮ್ಮ ಅರ್ಜಿಯಲ್ಲಿ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರನ್ನು ಪ್ರತಿವಾದಿಯಾಗಿ ಸೇರಿಸಿದ್ದಾರೆ. ಈ ವಿಚಾರವನ್ನು ಮುಖ್ಯ ನ್ಯಾಯಮೂರ್ತಿ ಸುಜೋಯ್ ಪಾಲ್ ನೇತೃತ್ವದ ವಿಭಾಗೀಯ ಪೀಠದ ಮುಂದೆ ಪ್ರಸ್ತಾಪಿಸಿದ ವಕೀಲರು, ಅರ್ಜಿಯನ್ನು ತುರ್ತಾಗಿ ವಿಚಾರಣೆ ನಡೆಸುವಂತೆ ಮನವಿ ಮಾಡಿದರು. ರಾಜ್ಯ ಸರ್ಕಾರವನ್ನು ಕೇಳದೇ ಚುನಾವಣಾ ಆಯೋಗವು ಅಧಿಕಾರಿಗಳನ್ನು ವರ್ಗಾವಣೆ ಮಾಡಿರುವುದನ್ನು ಅರ್ಜಿಯಲ್ಲಿ ಪ್ರಶ್ನಿಸಲಾಗಿದೆ. ಈ ಅರ್ಜಿಯನ್ನು ಮುಂದಿನ ವಾರದ ಆರಂಭದಲ್ಲಿ ವಿಚಾರಣೆಗೆ ತೆಗೆದುಕೊಳ್ಳುವ ಸಾಧ್ಯತೆ ಇದೆ ಎಂದು ಪ್ರಕರಣಕ್ಕೆ ಸಂಬಂಧಿಸಿದ ವಕೀಲರು ತಿಳಿಸಿದ್ದಾರೆ. ಮಾರ್ಚ್ 15ರಂದು ವಿಧಾನಸಭಾ ಚುನಾವಣೆಯ ವೇಳಾಪಟ್ಟಿ ಪ್ರಕಟವಾದ ಕೆಲವೇ ಗಂಟೆಗಳಲ್ಲಿ, ರಾಜ್ಯದ ಮುಖ್ಯ ಕಾರ್ಯದರ್ಶಿ, ಗೃಹ ಕಾರ್ಯದರ್ಶಿ ಮತ್ತು ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಸೇರಿದಂತೆ ಹಲವು ಹಿರಿಯ ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳನ್ನು ಚುನಾವಣಾ ಆಯೋಗ ವರ್ಗಾವಣೆ ಮಾಡಿತ್ತು. 294 ಸದಸ್ಯರ ಪಶ್ಚಿಮ ಬಂಗಾಳ ವಿಧಾನಸಭೆಗೆ ಎರಡು ಹಂತಗಳಲ್ಲಿ ಮತದಾನ ನಡೆಯಲಿದೆ. ಏಪ್ರಿಲ್ 23 ಮತ್ತು 29ರಂದು ಮತದಾನ ನಡೆಯಲಿದ್ದು, ಮೇ 4ರಂದು ಮತ ಎಣಿಕೆ ನಡೆಯಲಿದೆ.
ಬೆಂಗಳೂರು: ಐದು ದಶಕಗಳ ಹಿಂದೆ ಕಾಲುವೆ ಇತ್ತು ಎಂಬ ಕಾರಣಕ್ಕೆ ಆನೇಕಲ್ ತಾಲೂಕಿನ ಅಳಿಬೊಮ್ಮಸಂದ್ರ ಮತ್ತು ಮುತಾನಲ್ಲೂರು ಅಮಾನಿಕೆರೆ ಗ್ರಾಮದ ನಡುವೆ ಹಾದುಹೋಗುವ ರಸ್ತೆ ತೆರವಿಗೆ ಮುಂದಾಗಿದ್ದ ಬೆಂಗಳೂರು ನಗರ ಜಿಲ್ಲಾಧಿಕಾರಿ ಮತ್ತು ಆನೇಕಲ್ ತಹಶೀಲ್ದಾರ್ ಕ್ರಮಕ್ಕೆ ತಡೆ ನೀಡಿರುವ ಹೈಕೋರ್ಟ್, ರಸ್ತೆ ತೆರವು ಕಾರ್ಯಚರಣೆ ಮುಂದುವರಿಸದಂತೆ ಮಧ್ಯಂತರ ಆದೇಶ ಮಾಡಿದೆ. ಆನೇಕಲ್ ತಹಶೀಲ್ದಾರ್ ಅವರು ರಸ್ತೆ ತೆರವಿಗೆ ಮುಂದಾದ ಹಿನ್ನೆಲೆಯಲ್ಲಿ ಬೆಂಗಳೂರು ನಗರ ಜಿಲ್ಲೆಯ ಸರ್ಜಾಪುರ ಹೋಬಳಿಯ ಅಳಿಬೊಮ್ಮಸಂದ್ರ ಗ್ರಾಮದ ಆರ್. ಸುಜಾತಾ ಮತ್ತಿತರರು ಮೇಲ್ಮನವಿ ಸಲ್ಲಿಸಿ, ತುರ್ತು ವಿಚಾರಣೆಗೆ ಕೋರಿದ್ದರು. ಯುಗಾದಿ ಹಬ್ಬದ ಹಿನ್ನೆಲೆಯಲ್ಲಿ ರಜೆಯಿದ್ದರೂ ಮೇಲ್ಮನವಿದಾರರ ಮನವಿ ಮೇರೆಗೆ ಮಾ.19ರಂದು ಮಧ್ಯಾಹ್ನ 3.30ಕ್ಕೆ ತುರ್ತು ಕಲಾಪ ನಡೆಸಿದ ನ್ಯಾಯಮೂರ್ತಿ ಬಿ.ಎಂ.ಶ್ಯಾಮ್ ಪ್ರಸಾದ್ ಮತ್ತು ನ್ಯಾಯಮೂರ್ತಿ ಅನಂತ ರಾಮನಾಥ ಹೆಗಡೆ ಅವರಿದ್ದ ವಿಭಾಗೀಯ ನ್ಯಾಯಪೀಠ ಈ ಮಧ್ಯಂತರ ಆದೇಶ ಮಾಡಿದೆ. ಮೇಲ್ಮನವಿದಾರರ ಪರ ವಕೀಲ ಎ.ಮಧುಸೂದನ ರಾವ್ ವಾದ ಮಂಡಿಸಿ, ಮೇಲ್ಮನವಿದಾರರು ಅಳಿಬೊಮ್ಮಸಂದ್ರ ಗ್ರಾಮದ ಸರ್ವೇ ಸಂಖ್ಯೆ 21ರಲ್ಲಿನ 3 ಎಕರೆ 15 ಗುಂಟೆ ಜಮೀನಿನ ಮಾಲಕರಾಗಿದ್ದಾರೆ. ಜಮೀನು ದಕ್ಷಿಣ ಕಡೆಯಿಂದ ಮುತಾನಲ್ಲೂರು ಅಮಾನಿಕೆರೆ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ 30 ಅಡಿ ವಿಸ್ತೀರ್ಣದ ರಸ್ತೆ ಹಾದು ಹೋಗಲಿದೆ. ಆದರೆ, ಈ ರಸ್ತೆಯ ಜಾಗದಲ್ಲಿ 50 ವರ್ಷಗಳ ಹಿಂದೆ ಕಾಲುವೆ ಇತ್ತು. ಕಾಲುವೆ ಜಾಗದಲ್ಲಿ ರಸ್ತೆ ನಿರ್ಮಾಣ ಮಾಡಲಾಗಿದ್ದು, ಅದನ್ನು ತೆರವುಗೊಳಿಸುವಂತೆ ಸೂಚಿಸಿ ಬೆಂಗಳೂರು ನಗರ ಜಿಲ್ಲಾಧಿಕಾರಿ ಆನೇಕಲ್ ತಹಶೀಲ್ದಾರ್ಗೆ 2026ರ ಜನವರಿ 20ರಂದು ಪತ್ರ ಬರೆದಿದ್ದರು ಎಂದು ವಿವರಿಸಿದರು. ಜಿಲ್ಲಾಧಿಕಾರಿಗಳ ಈ ಪತ್ರವನ್ನು ಹೈಕೋರ್ಟ್ನಲ್ಲಿ ಪ್ರಶ್ನಿಸಲಾಗಿತ್ತು. ಅರ್ಜಿ ವಿಚಾರಣೆ ನಡೆಸಿದ ಏಕಸದಸ್ಯ ನ್ಯಾಯಪೀಠ, ಪತ್ರವು ಜಿಲ್ಲಾಧಿಕಾರಿ ಮತ್ತು ತಹಶೀಲ್ದಾರ್ ನಡುವಿನ ಆಂತರಿಕ ಸಂವಹನವಾಗಿದೆ. ರಸ್ತೆಯ ಜಾಗವು ಕಾಲುವೆಗೆ ಸೇರಿದ್ದಾಗಿದ್ದು, ರಸ್ತೆ ತೆರವುಗೊಳಿಸಬೇಕು ಎಂಬ ಉದ್ದೇಶವು ಅಧಿಕಾರಿಗಳು ಹೊಂದಿದ್ದರೆ, ಆ ಸಂಬಂಧ ಕಾನೂನು ಪ್ರಕಾರ ಕ್ರಮ ಜರುಗಿಸಬಹುದು ಎಂದು ತಿಳಿಸಿ 2026ರ ಮಾ.10ರಂದು ಅರ್ಜಿ ಇತ್ಯರ್ಥಪಡಿಸಿದೆ ಎಂದು ತಿಳಿಸಿದರು. ನ್ಯಾಯಾಲಯದ ವಿಸ್ತೃತ ಆದೇಶ ಇನ್ನೂ ಬಿಡುಗಡೆಯಾಗದಿದ್ದರೂ ಯುಗಾದಿ ಹಬ್ಬದ ಹಿನ್ನೆಲೆಯಲ್ಲಿ ಹೈಕೋರ್ಟ್ ಕಾರ್ಯ ನಿರ್ವಹಿಸುವುದಿಲ್ಲ ಎಂಬ ಉದ್ದೇಶದಿಂದ ಅಧಿಕಾರಿಗಳು ರಸ್ತೆ ತೆರವುಗೊಳಿಸುತ್ತಿದ್ದಾರೆ. ಈಗಾಗಲೇ, ರಸ್ತೆಯ ಡಾಂಬರು ಕಿತ್ತುಹಾಕಲಾಗಿದೆ. ವಾಸ್ತವವಾಗಿ ರಸ್ತೆ ಜಾಗದಲ್ಲಿ ಕಾಲುವೆ ಇರಲಿಲ್ಲ. ಇದೀಗ ರಸ್ತೆ ತೆರವುಗೊಳಿಸಿದರೆ ಸಾರ್ವಜನಿಕರ ಸಂಚಾರಕ್ಕೆ ಅಡ್ಡಿಯುಂಟಾಗುತ್ತದೆ. ಈಗಾಗಲೇ ಈ ಸುತ್ತಲಿನ ಜಾಗದಲ್ಲಿ ಸರ್ಕಾರದ ಅನುಮೋದನೆಯೊಂದಿಗೆ ಲೇಔಟ್ ನಿರ್ಮಿಸಲಾಗಿದೆ ಎಂದು ವಿವರಿಸಿ ಪೋಟೋಗಳನ್ನು ನ್ಯಾಯಪೀಠಕ್ಕೆ ಸಲ್ಲಿಸಿದರು. ಸರ್ಕಾರದ ಪರ ವಕೀಲರು, ಪ್ರಕರಣ ಕುರಿತು ಸಂಬಂಧಪಟ್ಟ ಅಧಿಕಾರಿಗಳಿಂದ ಅಗತ್ಯ ಮಾಹಿತಿ ಪಡೆದು ಸಲ್ಲಿಸಿದ ನಂತರ ಮೇಲ್ಮನವಿ ವಿಚಾರಣೆ ನೆಡಸಬೇಕು ಎಂದು ಕೋರಿದರು. ಮೇಲ್ಮನವಿದಾರರು ಸಲ್ಲಿಸಿದ ಪೋಟೋಗಳನ್ನು ಪರಿಶೀಲಿಸಿದ ನ್ಯಾಯಪೀಠ, ಏಕಸದಸ್ಯ ನ್ಯಾಯಪೀಠದ ಆದೇಶ ಪ್ರತಿಗೆ ಕಾಯದೆಯೇ, ರಸ್ತೆ ತೆರವಿಗೆ ಕೋರ್ಟ್ ಕಲಾಪ ನಡೆಯದ ದಿನಾಂಕವನ್ನೇ ಏಕೆ ಆಯ್ಕೆ ಮಾಡಿಕೊಳ್ಳಲಾಯಿತು ಎಂಬ ಬಗ್ಗೆ ವಿವರಣೆ ನೀಡಿ ತಹಶೀಲ್ದಾರ್ ಅವರು ಮುಂದಿನ ವಿಚಾರಣೆ ವೇಳೆ ನ್ಯಾಯಾಲಯಕ್ಕೆ ಪ್ರಮಾಣಪತ್ರ ಸಲ್ಲಿಸಬೇಕು. ಜಿಲ್ಲಾಧಿಕಾರಿ, ತಹಶೀಲ್ದಾರ್ ಅಥವಾ ಸಂಬಂಧಪಟ್ಟ ಪೊಲೀಸರಾಗಲಿ ಮುಂದಿನ ವಿಚಾರಣೆವರೆಗೆ ಪ್ರಕರಣದಲ್ಲಿ ಯಾವುದೇ ಬಲವಂತದ ಕ್ರಮವನ್ನು ಕೈಗೊಳ್ಳಬಾರದು. ತಹಶೀಲ್ದಾರ್ ಅವರು ಈ ರಸ್ತೆಯು ಸಂಚಾರಯೋಗ್ಯವಾಗಿದೆಯೇ ಎಂಬುದನ್ನು ಖಾತ್ರಿಪಡಿಸಿಕೊಳ್ಳಲು ಸ್ವತಂತ್ರರಿದ್ದಾರೆ ಎಂದು ಮಧ್ಯಂತರ ಆದೇಶ ನೀಡಿ, ವಿಚಾರಣೆಯನ್ನು ಮಾ.25ಕ್ಕೆ ಮುಂದೂಡಿತು.
ಮೇ ಅಂತ್ಯದೊಳಗೆ ತುಂಗಭದ್ರಾ ಜಲಾಶಯದ 33 ಕ್ರೆಸ್ಟ್ ಗೇಟ್ ಅಳವಡಿಕೆ ಪೂರ್ಣ : ಸಚಿವ ಬೋಸರಾಜು
ವಿಜಯನಗರ (ಹೊಸಪೇಟೆ) : ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್. ಬೋಸರಾಜು ಅವರು ಶುಕ್ರವಾರ ತುಂಗಭದ್ರಾ ಜಲಾಶಯದ ಮೇಲ್ಭಾಗಕ್ಕೆ ಭೇಟಿ ನೀಡಿ, ಕ್ರೆಸ್ಟ್ ಗೇಟ್ ಅಳವಡಿಕೆ ಕಾಮಗಾರಿಯನ್ನು ಖುದ್ದಾಗಿ ವೀಕ್ಷಿಸಿದರು. ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಚಿವರು, ಈಗಾಗಲೇ 18 ನೂತನ ಕ್ರೆಸ್ಟ್ ಗೇಟ್ಗಳ ಅಳವಡಿಕೆ ಕಾರ್ಯ ಪೂರ್ಣಗೊಂಡಿದ್ದು, ಇನ್ನೂ 5 ಗೇಟ್ಗಳ ಕೆಲಸ ಪ್ರಗತಿಯಲ್ಲಿದೆ ಎಂದು ತಿಳಿಸಿದರು. ಮಾರ್ಚ್ ಅಂತ್ಯದೊಳಗೆ ಒಟ್ಟು 23 ಗೇಟ್ಗಳ ಅಳವಡಿಕೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ ಎಂದರು. ಏಪ್ರಿಲ್ ತಿಂಗಳಲ್ಲಿ ಉಳಿದ 10 ಗೇಟ್ಗಳನ್ನು ಅಳವಡಿಸುವ ಮೂಲಕ, ಮೇ ಅಂತ್ಯದೊಳಗೆ ಎಲ್ಲಾ 33 ಕ್ರೆಸ್ಟ್ ಗೇಟ್ಗಳ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಕಾಮಗಾರಿಯು ನಿರೀಕ್ಷಿತ ಅವಧಿಗಿಂತ ವೇಗವಾಗಿ ಸಾಗುತ್ತಿದ್ದು, ಜೂನ್ನಲ್ಲಿ ಆರಂಭವಾಗುವ ಮುಂಗಾರು ಮಳೆಯ ವೇಳೆಗೆ ಜಲಾಶಯ ಸಂಪೂರ್ಣ ಸಿದ್ಧವಾಗಲಿದೆ ಎಂದರು. ಹಳೆಯ ಅಣೆಕಟ್ಟಿನ ರಚನೆಗೆ ಯಾವುದೇ ಹಾನಿಯಾಗಿಲ್ಲ ಎಂದು ತಾಂತ್ರಿಕ ತಜ್ಞರು ಮತ್ತು ಮುಖ್ಯ ಇಂಜಿನಿಯರ್ಗಳು ದೃಢಪಡಿಸಿರುವುದಾಗಿ ಸಚಿವರು ಹೇಳಿದರು. ಇದೇ ವೇಳೆ ಜಲಾಶಯದಲ್ಲಿ ಹೂಳು ಸಂಗ್ರಹ ಸಮಸ್ಯೆಗೆ ಪರಿಹಾರವಾಗಿ ‘ನವಲಿ’ ಯೋಜನೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಸಂಬಂಧಿತ ರಾಜ್ಯಗಳೊಂದಿಗೆ ಸಮನ್ವಯ ಸಾಧಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು. ತೆಲಂಗಾಣ ಸರ್ಕಾರದೊಂದಿಗೆ ಚರ್ಚೆಗಳು ನಡೆಯುತ್ತಿದ್ದು, ತಾಂತ್ರಿಕ ಕಾರಣಗಳಿಂದ ಸ್ವಲ್ಪ ವಿಳಂಬವಾಗುತ್ತಿದೆ ಎಂದರು. ನವದೆಹಲಿಯಲ್ಲಿ ಜಲಶಕ್ತಿ ಸಚಿವಾಲಯ ಹಾಗೂ ವಿವಿಧ ರಾಜ್ಯಗಳ ಪ್ರತಿನಿಧಿಗಳೊಂದಿಗೆ ಚರ್ಚೆ ನಡೆದಿದ್ದು, ಕೇಂದ್ರ ಸರ್ಕಾರದಿಂದ ಸಕಾರಾತ್ಮಕ ಸ್ಪಂದನೆ ದೊರೆತಿದೆ. ಚುನಾವಣಾ ನೀತಿ ಸಂಹಿತೆ ಬಳಿಕ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿಯ ಅಧ್ಯಕ್ಷರು ಹಾಗೂ ಮಸ್ಕಿ ಶಾಸಕರಾದ ಬಸವನಗೌಡ ತುರುವಿಹಾಳ, ಉಪವಿಭಾಗಾಧಿಕಾರಿ ಕ್ಯಾಪ್ಟನ್ ಮಹೇಶ ಮಾಲಗಿತ್ತಿ, ಪೊಲೀಸ್ ಅಧಿಕಾರಿಗಳು ಹಾಗೂ ಟಿಬಿ ಬೋರ್ಡ್ ಮತ್ತು ಕೆಎನ್ಎನ್ಎಲ್ ಅಧಿಕಾರಿಗಳು ಉಪಸ್ಥಿತರಿದ್ದರು.
ವಿಜಯನಗರ | ತುಂಗಭದ್ರಾ ಜಲಾಶಯದ ಕ್ರಸ್ಟ್ ಗೇಟ್ ಕಾಮಗಾರಿ ಪರಿಶೀಲಿಸಿದ ಸಚಿವ ಬೋಸರಾಜು
ವಿಜಯನಗರ: ಜಿಲ್ಲೆಯ ಹೊಸಪೇಟೆ ಹೊರವಲಯದಲ್ಲಿರುವ ತುಂಗಭದ್ರಾ ಜಲಾಶಯದಲ್ಲಿ ನಡೆಯುತ್ತಿರುವ ಕ್ರಸ್ಟ್ ಗೇಟ್ ಅಳವಡಿಕೆ ಕಾಮಗಾರಿಯನ್ನು ಸಚಿವ ಬೋಸರಾಜು ಭೇಟಿ ನೀಡಿ ಪರಿಶೀಲಿಸಿದರು. ಜಲಾಶಯದ ಸುರಕ್ಷತೆ ಮತ್ತು ನೀರಿನ ಸಂಗ್ರಹ ಸಾಮರ್ಥ್ಯ ಹೆಚ್ಚಿಸುವ ಉದ್ದೇಶದಿಂದ ಕೈಗೊಳ್ಳಲಾಗುತ್ತಿರುವ ಕಾಮಗಾರಿಯ ಪ್ರಗತಿ ಕುರಿತು ಅಧಿಕಾರಿಗಳಿಂದ ಸಂಪೂರ್ಣ ಮಾಹಿತಿ ಪಡೆದ ಸಚಿವರು, ಕಾಮಗಾರಿಯನ್ನು ಗುಣಮಟ್ಟದೊಂದಿಗೆ ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಲು ಕಟ್ಟುನಿಟ್ಟಿನ ಸೂಚನೆ ನೀಡಿದರು. ಈ ವೇಳೆ ಅಧಿಕಾರಿಗಳು ತಾಂತ್ರಿಕ ಅಂಶಗಳು, ಈಗಾಗಲೇ ಪೂರ್ಣಗೊಂಡ ಹಂತಗಳು ಹಾಗೂ ಮುಂದಿನ ಕಾರ್ಯಯೋಜನೆ ಕುರಿತು ವಿವರಿಸಿದರು. ಕ್ರಸ್ಟ್ ಗೇಟ್ ಅಳವಡಿಕೆಯಿಂದ ಜಲಾಶಯದ ನೀರಿನ ಮಟ್ಟವನ್ನು ಸಮರ್ಪಕವಾಗಿ ನಿಯಂತ್ರಿಸಲು ಸಾಧ್ಯವಾಗಲಿದೆ ಎಂದು ತಿಳಿಸಿದರು. ಸಚಿವರು ಕಾಮಗಾರಿಯ ವೇಗವನ್ನು ಹೆಚ್ಚಿಸಲು ಸೂಚಿಸಿ, ರೈತರು ಹಾಗೂ ಜನತೆಗೆ ನೀರಿನ ಲಭ್ಯತೆ ಸುಧಾರಿಸಲು ಈ ಯೋಜನೆ ಮಹತ್ವದ್ದಾಗಿದೆ ಎಂದು ಹೇಳಿದರು. ಯಾವುದೇ ತಾಂತ್ರಿಕ ದೋಷಗಳಿಲ್ಲದೆ ಸುರಕ್ಷಿತವಾಗಿ ಕಾಮಗಾರಿ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಈ ಸಂದರ್ಭದಲ್ಲಿ ಸ್ಥಳೀಯ ಜನಪ್ರತಿನಿಧಿಗಳು ಮತ್ತು ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ರಮಝಾನ್ ಹಬ್ಬದ ಹಿನ್ನೆಲೆ : ವಿಜಯನಗರ ಜಿಲ್ಲೆಯಲ್ಲಿ ಕಠಿಣ ಪೊಲೀಸ್ ಬಂದೋಬಸ್ತ್
ವಿಜಯನಗರ/ಹೊಸಪೇಟೆ: ನಾಳೆ ನಡೆಯಲಿರುವ ರಮಝಾನ್ ಹಬ್ಬದ ಹಿನ್ನೆಲೆ ವಿಜಯನಗರ ಜಿಲ್ಲೆಯಾದ್ಯಂತ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಬಂದೋಬಸ್ತ್ ಕೈಗೊಂಡಿದೆ. ಹಬ್ಬದ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ಮುಂಜಾಗ್ರತಾ ಕ್ರಮಗಳನ್ನು ಬಲಪಡಿಸಲಾಗಿದ್ದು, ಜಿಲ್ಲೆಯ ಸುಮಾರು 60 ಈದ್ಗಾ ಮೈದಾನಗಳಲ್ಲಿ ಪ್ರಾರ್ಥನೆ ನಡೆಯಲಿದೆ. ಭಕ್ತರ ಸುರಕ್ಷತೆಗೆ ವ್ಯಾಪಕ ಪೊಲೀಸ್ ವ್ಯವಸ್ಥೆ ಮಾಡಲಾಗಿದೆ. ಭದ್ರತಾ ಕ್ರಮಗಳ ಭಾಗವಾಗಿ ಒಬ್ಬ ಪೊಲೀಸ್ ಅಧೀಕ್ಷಕರು (ಎಸ್ಪಿ), 3 ಡಿವೈಎಸ್ಪಿಗಳು, 14 ಪೊಲೀಸ್ ಇನ್ಸ್ಪೆಕ್ಟರ್ಗಳು, 30 ಪಿಎಸ್ಐಗಳು ಹಾಗೂ 600ಕ್ಕೂ ಹೆಚ್ಚು ಹೆಡ್ ಕಾನ್ಸ್ಟೇಬಲ್ ಮತ್ತು ಕಾನ್ಸ್ಟೇಬಲ್ಗಳನ್ನು ನಿಯೋಜಿಸಲಾಗಿದೆ. ಜೊತೆಗೆ 300 ಗೃಹ ರಕ್ಷಕ ದಳದ ಸಿಬ್ಬಂದಿಯನ್ನೂ ಕರ್ತವ್ಯಕ್ಕೆ ನಿಯೋಜಿಸಲಾಗಿದೆ. ಜಿಲ್ಲೆಯ ವಿವಿಧ ಭಾಗಗಳಲ್ಲಿ 112 ವಾಹನಗಳ ಮೂಲಕ ಗಸ್ತು ಹೆಚ್ಚಿಸಲಾಗಿದ್ದು, ಡಿಎಆರ್ ಹಾಗೂ ಕೆಎಸ್ಆರ್ಪಿ ಪಡೆಗಳನ್ನು ಸೂಕ್ಷ್ಮ ಪ್ರದೇಶಗಳಲ್ಲಿ ನಿಯೋಜಿಸಲಾಗಿದೆ. ಈ ಕುರಿತು ಮಾಹಿತಿ ನೀಡಿದ ಜಿಲ್ಲಾ ಪೊಲೀಸ್ ಅಧೀಕ್ಷಕಿ ಜಾಹ್ನವಿ ಎಸ್. ಅವರು, ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡಲು ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಸಾರ್ವಜನಿಕರು ಸಹಕರಿಸಿ ಶಾಂತಿಯುತವಾಗಿ ಹಬ್ಬ ಆಚರಿಸಬೇಕು ಎಂದು ಮನವಿ ಮಾಡಿದ್ದಾರೆ.
ಕೋಲಾರ | ರೇಣುಕಾ ಯಲ್ಲಮ್ಮ ದೇವಿ ಹೂವಿನ ಕರಗ ಮಹೋತ್ಸವ
ಕೋಲಾರ: ನಗರದ ಗಾಂಧಿ ನಗರದಲ್ಲಿ ರೇಣುಕಾ ಯಲ್ಲಮ್ಮ ದೇವಿ ಬಳಗದ ವತಿಯಿಂದ ಭಾನುವಾರ ರೇಣುಕಾ ಯಲ್ಲಮ್ಮ ದೇವಿ ಹೂವಿನ ಕರಗ ಮಹೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ರೇಣುಕಾ ಯಲ್ಲಮ್ಮ ದೇವಾಲಯದಲ್ಲಿ ಮುಂಜಾನೆಯಿಂದಲೇ ಅಭಿಷೇಕ, ಕುಂಕುಮಾರ್ಚನೆ ಹಾಗೂ ಹೂವಿನ ಅಲಂಕಾರ ಸೇರಿದಂತೆ ವಿಶೇಷ ಪೂಜೆಗಳು ನಡೆದವು. ಬಳಿಕ ರಾತ್ರಿ ಕರಗ ಮಹೋತ್ಸವ ಜರುಗಿದ್ದು, ತಮಟೆ ವಾದ್ಯದ ತಾಳಕ್ಕೆ ಕರಗ ನೃತ್ಯಗಳು ಭಕ್ತರನ್ನು ಆಕರ್ಷಿಸಿತು. ಭಕ್ತರು ಭಕ್ತಿ ಸಾಗರದಲ್ಲಿ ಮಿಂದೆದ್ದರು. ಕರಗ ನೃತ್ಯದ ನಂತರ ರೇಣುಕಾ ಯಲ್ಲಮ್ಮ, ಮಾರಿಯಮ್ಮ, ಸತ್ಯಮ್ಮ ದೇವಿ, ಮದ್ದೂರಮ್ಮ ಹಾಗೂ ಸಂಚುದಾಸರ ಪಲ್ಲಕ್ಕಿ ಮೆರವಣಿಗೆ ನಡೆಯಿತು. ಸಂಜೆಯಿಂದಲೇ ಗಾಂಧಿನಗರ ಮುಖ್ಯ ದ್ವಾರದ ಬಳಿ ಬೃಹತ್ ವೇದಿಕೆಯಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಯುಗಾದಿ ಹಬ್ಬದ ಪ್ರಯುಕ್ತ ವಿಶೇಷ ಮಾಂಸಾಹಾರ ಹಬ್ಬ ಹಾಗೂ ಆಂಜನೇಯ ಸ್ವಾಮಿ ದೇವಸ್ಥಾನದ ಸಮೀಪ ವಸಂತೋತ್ಸವವೂ ಅದ್ದೂರಿಯಾಗಿ ನೆರವೇರಿತು. ಜಾತ್ರಾ ಮಹೋತ್ಸವದಲ್ಲಿ ಕೋಲಾರ ಜಿಲ್ಲೆಯ ವಿವಿಧ ಭಾಗಗಳಿಂದ ಸಾವಿರಾರು ಭಕ್ತರು ಭಾಗವಹಿಸಿ ತಾಯಿ ದೇವಿಯ ದರ್ಶನ ಪಡೆದು ಪೂಜೆ ಸಲ್ಲಿಸಿದರು. ಎರಡು ದಿನಗಳ ಈ ಕಾರ್ಯಕ್ರಮದಲ್ಲಿ ಶಾಸಕ ಕೊತ್ತೂರು ಮಂಜುನಾಥ್, ಎಂ ಎಲ್ ಸಿ ಅನಿಲ್ ಕುಮಾರ್, ಕೆಜಿಎಫ್ ಮಾಜಿ ಶಾಸಕ ವೈ.ಸಂಪಂಗಿ, ಕೋಲಾರ ಜೆಡಿಎಸ್ ಮುಖಂಡ ಸಿಎಂಆರ್ ಶ್ರೀನಾಥ್, ಕಾಂಗ್ರೆಸ್ ಮುಖಂಡ ಮೈಲಾಂಡಹಳ್ಳಿ ಮುರಳಿ, ನಗರಸಭಾ ಸದಸ್ಯ ಪ್ರವೀಣ್ , ವಿ.ಕೆ.ರಾಜೇಶ್ ಭಾಗವಹಿಸಿ ವಿಶೇಷ ಮೆರಗು ನೀಡಿದರು. ಸಾಂಸ್ಕೃತಿಕ ಕಾರ್ಯಕ್ರಮಗಳು, ಕೆರೆಗೆ ಮಹೋತ್ಸವ, ದೇವರ ಪಲ್ಲಕ್ಕಿಗಳು, ವಸಂತೋತ್ಸವ ಹಾಗೂ ಜಾತ್ರಾ ಮಹೋತ್ಸವವನ್ನು ಪಿ.ಡಬ್ಲ್ಯುಡಿ ನಿವೃತ್ತ ಇಂಜಿನಿಯರ್ ಜೆವಿಎಚ್, ಮಂಜುನಾಥ್ ಪೊಲೀಸ್ ಸುರೇಶ್ ಬಾಬು, ವಿ.ಕೆ.ರಾಜೇಶ್, ಮಾರುತಿ ಕುಮಾರ್, ಶ್ರೀನಿವಾಸ್, ರವಿಕುಮಾರ್, ಶಂಕರ್, ಆರ್.ಟಿ.ಐ ಲಕ್ಷ್ಮಣ್, ವೆಂಕಟಸ್ವಾಮಿ, ಪೋಗಲು ನಾರಾಯಣಸ್ವಾಮಿ, ಪಂಡರಪ್ಪ , ಗಂಗೂಲಿ, ದೋಸಕಾಯಿ ವೆಂಕಟೇಶ್, ನಾಗರಾಜ್ ಹುಚ್ಚಪ್ಪ, ಶರತ್, ಪೆಟ್ರೋಲ್ ಬಂಕ್ ಕಿಟ್ಟಪ್ಪ, ಸೇರಿದಂತೆ ಭಕ್ತಾದಿಗಳ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿತ್ತು.
Bidar | 9 ಲಕ್ಷ 78 ಸಾವಿರ ರೂ. ಮೌಲ್ಯದ 15 ಬೈಕ್ ವಶ : ಓರ್ವನ ಬಂಧನ
ಬೀದರ್: ನಗರದಲ್ಲಿ ನಡೆದ ಬೈಕ್ ಕಳ್ಳತನ ಪ್ರಕರಣವನ್ನು ಪೊಲೀಸರು ಭೇದಿಸಿದ್ದು, ಸುಮಾರು 9.78 ಲಕ್ಷ ರೂ. ಮೌಲ್ಯದ 15 ಬೈಕ್ಗಳನ್ನು ವಶಕ್ಕೆ ಪಡೆದು ಒರ್ವ ಆರೋಪಿಯನ್ನು ಬಂಧಿಸಿದ್ದಾರೆ ಎಂದು ಜಿಲ್ಲಾ ಪೊಲೀಸ್ ಇಲಾಖೆ ತಿಳಿಸಿದೆ. ಭಾಲ್ಕಿ ತಾಲೂಕಿನ ಗಣೇಶಪುರ್ ವಾಡಿಯ ನಿವಾಸಿ ಗಣಪತಿ ಅವರ ಬೈಕ್ ಕಳವಾಗಿರುವ ಕುರಿತು ಗಾಂಧಿಗಂಜ್ ಪೊಲೀಸ್ ಠಾಣೆಗೆ ದೂರು ನೀಡಲಾಗಿತ್ತು. ಈ ದೂರಿನ ಆಧಾರದ ಮೇಲೆ ತನಿಖೆ ಆರಂಭಿಸಿದ ಪೊಲೀಸರು ಆರೋಪಿಯನ್ನು ಪತ್ತೆಹಚ್ಚಿ ಬಂಧಿಸಿದರು. ಆರೋಪಿಯಿಂದ ನಗರದಲ್ಲಿ ಕಳುವಾದ 14 ಬೈಕ್ಗಳು ಹಾಗೂ ಹುಮನಾಬಾದ್ನಲ್ಲಿ ಕಳುವಾದ 1 ಬೈಕ್ ಸೇರಿ ಒಟ್ಟು 15 ಬೈಕ್ಗಳನ್ನು ವಶಕ್ಕೆ ಪಡೆಯಲಾಗಿದೆ. ಬಂಧಿತ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಕಳ್ಳತನವಾದ ವಾಹನಗಳ ಮಾಲಕರು ಅಗತ್ಯ ದಾಖಲಾತಿಗಳೊಂದಿಗೆ ಗಾಂಧಿಗಂಜ್ ಪೊಲೀಸ್ ಠಾಣೆಗೆ ಭೇಟಿ ನೀಡಿ, ಕಾನೂನು ಕ್ರಮದಂತೆ ತಮ್ಮ ವಾಹನಗಳನ್ನು ಪಡೆದುಕೊಳ್ಳುವಂತೆ ಪೊಲೀಸ್ ಇಲಾಖೆ ಸೂಚಿಸಿದೆ.
ಅಮೆರಿಕ ಮತ್ತು ಇಸ್ರೇಲ್ ಇರಾನ್ ಮೇಲೆ ದಾಳಿ ಮಾಡಿದ ನಂತರ ಪಶ್ಚಿಮ ಏಷ್ಯಾದಲ್ಲಿ ಭುಗಿಲೆದ್ದಿರುವ ಸಂಘರ್ಷದಿಂದಾಗಿ, ಈ ಪ್ರದೇಶದ ಏಳು ದೇಶಗಳಲ್ಲಿ 10 ಮತ್ತು 12ನೇ ತರಗತಿಯ ಬೋರ್ಡ್ ಪರೀಕ್ಷೆಗಳನ್ನು ಸಿಬಿಎಸ್ಇ ರದ್ದು ಮಾಡಿದೆ. ಈ ದೇಶಗಳಲ್ಲಿ 10 ಮತ್ತು 12ನೇ ತರಗತಿ ಪರೀಕ್ಷೆಗಳಿಗೆ ಸುಮಾರು 52,000 ವಿದ್ಯಾರ್ಥಿಗಳು ನೋಂದಣಿ ಮಾಡಿದ್ದರು. ಎಲ್ಲ ಪರೀಕ್ಷೆಗಳಿಗೆ ಹಾಜರಾಗಲು ಸಾಧ್ಯವಾಗದ ವಿದ್ಯಾರ್ಥಿಗಳಿಗೆ ಅಂಕಗಳನ್ನು ನೀಡಲು ಸಿಬಿಎಸ್ಇ ಯಾವ ವಿಧಾನವನ್ನು ಬಳಸುತ್ತದೆ? ಅಂದಹಾಗೆ, ಸಿಬಿಎಸ್ಇ ಪರೀಕ್ಷೆಗಳನ್ನು ರದ್ದು ಮಾಡಿದ್ದು ಇದೇ ಮೊದಲಲ್ಲ. 2020 ಮತ್ತು 2021ರಲ್ಲಿ COVID ಸಾಂಕ್ರಾಮಿಕದಿಂದಾಗಿ ಪರೀಕ್ಷೆಗಳು ರದ್ದಾಗಿದ್ದವು. ಇಲ್ಲಿಯವರೆಗೆ ಪರೀಕ್ಷೆಗಳಲ್ಲಿ ಏನಾಗಿದೆ? ಸಿಬಿಎಸ್ಇ 10 ಮತ್ತು 12ನೇ ತರಗತಿಯ ಬೋರ್ಡ್ ಪರೀಕ್ಷೆಗಳು ಫೆಬ್ರವರಿ 17ರಂದು ಪ್ರಾರಂಭವಾದವು. ಫೆಬ್ರವರಿ 28ರಂದು ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ ಇರಾನ್ ಮೇಲೆ ದಾಳಿ ಮಾಡಿ ಸಂಘರ್ಷವು ಪಶ್ಚಿಮ ಏಷ್ಯಾದ ಇತರ ದೇಶಗಳಿಗೆ ಹರಡಿದ ಕಾರಣ, ಮಂಡಳಿಯು ಮಾರ್ಚ್ 1ರಂದು ಯುಎಇ, ಇರಾನ್, ಕುವೈತ್, ಖತರ್, ಬಹರೇನ್, ಒಮಾನ್ ಮತ್ತು ಸೌದಿ ಅರೇಬಿಯಾದಲ್ಲಿ ಮರುದಿನ ನಡೆಯಬೇಕಿದ್ದ ಬೋರ್ಡ್ ಪರೀಕ್ಷೆಗಳನ್ನು ಮುಂದೂಡಲಾಗುವುದು ಎಂದು ಘೋಷಿಸಿತು. ಸಂಘರ್ಷ ಮುಂದುವರಿಯುತ್ತಿದ್ದಂತೆ ಮಂಡಳಿಯು ಮಾರ್ಚ್ 5ರಂದು 10ನೇ ತರಗತಿಗೆ ಮತ್ತು ಮಾರ್ಚ್ 15ರಂದು 12ನೇ ತರಗತಿಗೆ ಉಳಿದ ಎಲ್ಲಾ ಪರೀಕ್ಷೆಗಳನ್ನು ರದ್ದುಗೊಳಿಸಲಾಗುವುದು ಎಂದು ಘೋಷಿಸುವ ಮೊದಲು, ಮಾರ್ಚ್ನಲ್ಲಿ ನಿಗದಿಯಾಗಿದ್ದ ಬೋರ್ಡ್ ಪರೀಕ್ಷೆಗಳನ್ನು ಮುಂದೂಡುವುದಾಗಿ ತಿಳಿಸಿತು. ಈ ದೇಶಗಳಲ್ಲಿ 10ನೇ ತರಗತಿಯಲ್ಲಿ ಸುಮಾರು 29,000 ವಿದ್ಯಾರ್ಥಿಗಳು ಮತ್ತು 12ನೇ ತರಗತಿಯಲ್ಲಿ 23,000 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದರು. ಯುಎಇಯಲ್ಲಿ ಸುಮಾರು 13,669 ವಿದ್ಯಾರ್ಥಿಗಳು 10ನೇ ತರಗತಿ ಮತ್ತು 10,918 ವಿದ್ಯಾರ್ಥಿಗಳು 12ನೇ ತರಗತಿಯ ಪರೀಕ್ಷೆಗೆ ಹಾಜರಾಗುವ ನಿರೀಕ್ಷೆಯಿತ್ತು. ಕುವೈತ್ನಲ್ಲಿ 10ನೇ ತರಗತಿಯಲ್ಲಿ 3,052 ವಿದ್ಯಾರ್ಥಿಗಳು ಮತ್ತು 12ನೇ ತರಗತಿಯಲ್ಲಿ 2,578 ವಿದ್ಯಾರ್ಥಿಗಳು, ಬಹರೇನ್ನಲ್ಲಿ 10ನೇ ತರಗತಿಯಲ್ಲಿ ಸುಮಾರು 1,881 ಮತ್ತು 12ನೇ ತರಗತಿಯಲ್ಲಿ 1,383 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದರು ಎಂದು ಅಂಕಿಅಂಶಗಳು ತೋರಿಸುತ್ತವೆ. ಈ ದೇಶಗಳಲ್ಲಿನ ಸಿಬಿಎಸ್ಇ ಶಾಲೆಗಳಲ್ಲಿ ಹೆಚ್ಚಾಗಿ ಭಾರತೀಯ ವಲಸೆಗಾರರು ಇದ್ದಾರೆ. ಈ ಶಾಲೆಗಳು ಭಾರತದ ಶಾಲೆಗಳಂತೆಯೇ ಅದೇ ಪಠ್ಯಕ್ರಮವನ್ನು ಅನುಸರಿಸುತ್ತವೆ. ಮಂಡಳಿಯ ಅಂಗಸಂಸ್ಥೆ ಶಾಲೆಗಳ ಪಟ್ಟಿಯ ಪ್ರಕಾರ, ಇರಾನ್ನ ರಾಜಧಾನಿ ಟೆಹ್ರಾನ್ನಲ್ಲಿರುವ ಕೇಂದ್ರೀಯ ವಿದ್ಯಾಲಯ ಸೇರಿದಂತೆ ಈ ಏಳು ದೇಶಗಳಲ್ಲಿ 220 ಸಿಬಿಎಸ್ಇ-ಸಂಯೋಜಿತ ಶಾಲೆಗಳಿವೆ. ಅತಿ ಹೆಚ್ಚು ಶಾಲೆಗಳು ಯುಎಇಯಲ್ಲಿವೆ—ಇಲ್ಲಿ 110 ಶಾಲೆಗಳಿವೆ. ಸೌದಿ ಅರೇಬಿಯಾದಲ್ಲಿ 41, ಕುವೈತ್ನಲ್ಲಿ 22, ಖತರ್ನಲ್ಲಿ 20, ಒಮಾನ್ನಲ್ಲಿ 18 ಮತ್ತು ಬಹರೇನ್ನಲ್ಲಿ 8 ಶಾಲೆಗಳಿವೆ. ಈ ದೇಶಗಳಲ್ಲಿ ಸಿಬಿಎಸ್ಇ-ಸಂಯೋಜಿತ ಶಾಲೆಗಳ ಸಂಖ್ಯೆ ಒಂದು ದಶಕದ ಹಿಂದೆ 166 ರಷ್ಟಿತ್ತು. ಈಗ ಅವುಗಳ ಸಂಖ್ಯೆ ಹೆಚ್ಚಾಗಿದೆ. 2016ರಲ್ಲಿ 77 ಸಿಬಿಎಸ್ಇ ಶಾಲೆಗಳಿದ್ದ ಯುಎಇ ಮತ್ತು ಕೇವಲ 9 ಇದ್ದ ಖತರ್ನಲ್ಲಿಯೂ ಈ ಸಂಖ್ಯೆಯಲ್ಲಿ ಏರಿಕೆ ಕಂಡುಬಂದಿದೆ. ಮಂಡಳಿಯು ಈಗ ಯಾವ ರೀತಿ ಮೌಲ್ಯಮಾಪನ ಮಾಡಲಿದೆ? 10ನೇ ತರಗತಿಗೆ, ಮಂಡಳಿಯು ಮಾರ್ಚ್ 18ರಂದು ಅಂತಿಮ ಅಂಕಗಳನ್ನು ತಲುಪಲು ಹೊಸ ವಿಧಾನವನ್ನು ಘೋಷಿಸಿತು. ಆದರೆ 12ನೇ ತರಗತಿಗೆ ಮೌಲ್ಯಮಾಪನ ಹೇಗೆ ಮಾಡಬೇಕು ಎಂಬುದರ ಬಗ್ಗೆ ಚಿಂತನೆ ನಡೆಯುತ್ತಿದೆ ಎಂದು ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ. 10ನೇ ತರಗತಿಯ ವಿದ್ಯಾರ್ಥಿಗಳು ಐದು ಮುಖ್ಯ ವಿಷಯಗಳಲ್ಲಿ ಪರೀಕ್ಷೆಗಳನ್ನು ಬರೆಯುತ್ತಾರೆ. ಇದರಲ್ಲಿ ಎರಡು ಭಾಷೆಗಳು, ವಿಜ್ಞಾನ, ಸಮಾಜ ವಿಜ್ಞಾನ ಮತ್ತು ಗಣಿತ ವಿಷಯವಿದ್ದು, ಕೆಲವರು ಕೌಶಲ್ಯ ವಿಷಯವಾಗಿ ಆರನೇ ವಿಷಯವನ್ನು ಆಯ್ಕೆ ಮಾಡುತ್ತಾರೆ. ಫಲಿತಾಂಶವನ್ನು ಐದು ಪರೀಕ್ಷೆಗಳಲ್ಲಿನ ಅತ್ಯುತ್ತಮ ಅಂಕಗಳ ಆಧಾರದ ಮೇಲೆ ಲೆಕ್ಕಹಾಕಲಾಗುತ್ತದೆ. ವಿಷಯಗಳ ಆಯ್ಕೆಯನ್ನು ಅವಲಂಬಿಸಿ ಪಶ್ಚಿಮ ಏಷ್ಯಾದ ದೇಶಗಳಲ್ಲಿ ಕೆಲವು ವಿದ್ಯಾರ್ಥಿಗಳು ನಾಲ್ಕು ಪರೀಕ್ಷೆಗಳಿಗೆ ಹಾಜರಾಗಿರಬಹುದು, ಇನ್ನು ಕೆಲವರು ಅದಕ್ಕಿಂತ ಕಡಿಮೆ ಪರೀಕ್ಷೆಗಳಿಗೆ ಹಾಜರಾಗಿರಬಹುದು. ವಿದ್ಯಾರ್ಥಿಯು ಪರೀಕ್ಷೆಗೆ ಹಾಜರಾಗದ ವಿಷಯದಲ್ಲಿ, ಆ ವಿದ್ಯಾರ್ಥಿಯು ಹಾಜರಾದ ಪರೀಕ್ಷೆಗಳಲ್ಲಿ ಪಡೆದ ಅತ್ಯುತ್ತಮ ಅಂಕಗಳ ಸರಾಸರಿಯನ್ನು ಅಂಕಗಳಾಗಿ ಲೆಕ್ಕಹಾಕಲಾಗುತ್ತದೆ ಎಂದು ಸಿಬಿಎಸ್ಇ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಉದಾಹರಣೆಗೆ, ಒಬ್ಬ ವಿದ್ಯಾರ್ಥಿಯು ನಾಲ್ಕು ವಿಷಯಗಳಲ್ಲಿ ಪರೀಕ್ಷೆ ಬರೆದಿದ್ದರೆ, ಐದನೇ ವಿಷಯದ ಅಂಕವನ್ನು ಆ ವಿದ್ಯಾರ್ಥಿಯು ಮೂರು ವಿಷಯಗಳಲ್ಲಿ ಗಳಿಸಿದ ಅತ್ಯುತ್ತಮ ಅಂಕಗಳ ಸರಾಸರಿಯಿಂದ ಲೆಕ್ಕಹಾಕಲಾಗುತ್ತದೆ ಎಂದು ಅಧಿಕಾರಿ ತಿಳಿಸಿದ್ದಾರೆ. ಇದರೊಂದಿಗೆ ಅಂತಿಮ ಫಲಿತಾಂಶವನ್ನು ಘೋಷಿಸಲಾಗುತ್ತದೆ. ಮೂರು ಪರೀಕ್ಷೆಗಳನ್ನು ಬರೆದ ವಿದ್ಯಾರ್ಥಿಗಳಿಗೆ, ಎರಡು ವಿಷಯಗಳಲ್ಲಿ ಪಡೆದ ಅತ್ಯುತ್ತಮ ಅಂಕಗಳ ಸರಾಸರಿಯನ್ನು ಪರಿಗಣಿಸಲಾಗುತ್ತದೆ ಮತ್ತು ಎರಡು ಪರೀಕ್ಷೆಗಳಿಗೆ ಹಾಜರಾದವರಿಗೆ, ಆ ಎರಡರ ಸರಾಸರಿಯನ್ನು ತೆಗೆದುಕೊಳ್ಳಲಾಗುತ್ತದೆ. ಈ ದೇಶಗಳ ವಿದ್ಯಾರ್ಥಿಗಳ ಫಲಿತಾಂಶಗಳನ್ನು ಉಳಿದ ದೇಶಗಳ ಜೊತೆಗೆ ಘೋಷಿಸಲಾಗುತ್ತದೆ. ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಮತ್ತೊಂದು ಅವಕಾಶವನ್ನು ಪಡೆಯುತ್ತಾರೆಯೇ? ಈ ವರ್ಷ ಮಂಡಳಿಯು ಮೇ ತಿಂಗಳಲ್ಲಿ 10ನೇ ತರಗತಿಗೆ ಎರಡನೇ ಹಂತದ ಪರೀಕ್ಷೆಗಳನ್ನು ನಡೆಸುತ್ತಿದ್ದು, ವಿದ್ಯಾರ್ಥಿಗಳಿಗೆ ತಮ್ಮ ಕಾರ್ಯಕ್ಷಮತೆಯನ್ನು ಸುಧಾರಿಸಿಕೊಳ್ಳಲು ಅವಕಾಶ ನೀಡುತ್ತಿದೆ. ವಿದ್ಯಾರ್ಥಿಗಳು ವಿಜ್ಞಾನ, ಸಮಾಜ ವಿಜ್ಞಾನ, ಗಣಿತ ಮತ್ತು ಭಾಷೆ ವಿಷಯಗಳ ಪೈಕಿ ಗರಿಷ್ಠ ಮೂರು ವಿಷಯಗಳಲ್ಲಿ ಎರಡನೇ ಬಾರಿ ಪರೀಕ್ಷೆ ಬರೆಯಬಹುದು. ಆದಾಗ್ಯೂ, ಮೊದಲ ಸೆಟ್ ಪರೀಕ್ಷೆಗಳಲ್ಲಿ ಕನಿಷ್ಠ ಮೂರು ಪರೀಕ್ಷೆಗಳನ್ನು ಬರೆದ ವಿದ್ಯಾರ್ಥಿಗಳು ಮಾತ್ರ ಮೇ ತಿಂಗಳಲ್ಲಿ ಸುಧಾರಣಾ ಪರೀಕ್ಷೆಗಳಿಗೆ ಹಾಜರಾಗಬಹುದು ಎಂದು ಮಂಡಳಿಯು ಈ ಹಿಂದೆ ತಿಳಿಸಿದೆ. ಪಶ್ಚಿಮ ಏಷ್ಯಾದ ದೇಶಗಳಲ್ಲಿ ತಮ್ಮ ಪರೀಕ್ಷೆ ಬರೆಯಲು ಸಾಧ್ಯವಾಗದ ವಿದ್ಯಾರ್ಥಿಗಳಿಗೆ ಮೇ ತಿಂಗಳಲ್ಲಿ ಸುಧಾರಣಾ ಪರೀಕ್ಷೆಗಳನ್ನು ಬರೆಯಲು ಅವಕಾಶ ನೀಡಲಾಗುತ್ತದೆ. ಫಲಿತಾಂಶಗಳು ಪ್ರಕಟವಾದ ನಂತರ, ಈ ವಿದ್ಯಾರ್ಥಿಗಳನ್ನು ಎಲ್ಲ ಪರೀಕ್ಷೆ ಬರೆದ ವಿದ್ಯಾರ್ಥಿಗಳಂತೆಯೇ ಪರಿಗಣಿಸಲಾಗುತ್ತದೆ ಎಂದು ಅಧಿಕಾರಿ ತಿಳಿಸಿದ್ದಾರೆ. ಇದರಿಂದಾಗಿ ಮೊದಲ ಬಾರಿ ಪರೀಕ್ಷೆ ಬರೆಯಲು ಸಾಧ್ಯವಾಗದ ವಿದ್ಯಾರ್ಥಿಗಳಿಗೆ ಎರಡನೇ ಸೆಟ್ ಪರೀಕ್ಷೆಗಳನ್ನು ಬರೆಯಲು ಅವಕಾಶ ಸಿಗುತ್ತದೆ. ಮಾರ್ಚ್ 7ರಂದು ನಿಗದಿಯಾಗಿದ್ದ ಸಮಾಜ ವಿಜ್ಞಾನ ಪರೀಕ್ಷೆಯನ್ನು ಬರೆಯಲು ಸಾಧ್ಯವಾಗದ ವಿದ್ಯಾರ್ಥಿಗಳು ಮೇ ತಿಂಗಳಲ್ಲಿ ಆ ವಿಷಯದ ಪರೀಕ್ಷೆಯನ್ನು ಬರೆಯಬಹುದು. ಆದರೆ ಅವರು ಗರಿಷ್ಠ ಮೂರು ವಿಷಯಗಳಲ್ಲಿ ಮಾತ್ರ ಸುಧಾರಣಾ ಪರೀಕ್ಷೆ ಬರೆಯಬಹುದು ಎಂದು ಅಧಿಕಾರಿ ತಿಳಿಸಿದ್ದಾರೆ. ಪರೀಕ್ಷೆಗಳನ್ನು ರದ್ದುಗೊಳಿಸುವ ಇಂತಹ ಸಂದರ್ಭಗಳಲ್ಲಿ ಪೂರ್ವನಿದರ್ಶನವೇನು? ಕೋವಿಡ್-ಸಾಂಕ್ರಾಮಿಕ ಸಂಬಂಧಿತ ನಿರ್ಬಂಧಗಳು ಮಂಡಳಿಯನ್ನು 2020 ಮತ್ತು 2021ರಲ್ಲಿ ಪರೀಕ್ಷೆಗಳನ್ನು ಮುಂದೂಡಲು ಮತ್ತು ಅಂತಿಮವಾಗಿ ರದ್ದುಗೊಳಿಸಲು ಪ್ರೇರೇಪಿಸಿತು. 2020ರಲ್ಲಿ ವಿದ್ಯಾರ್ಥಿಗಳು ಕೆಲವು ಪರೀಕ್ಷೆಗಳನ್ನು ಬರೆದಿದ್ದರು. ಉಳಿದ ಪರೀಕ್ಷೆಗಳು ರದ್ದಾದ ಕಾರಣ, ಅದಕ್ಕಾಗಿ ಒಂದು ಯೋಜನೆಯನ್ನು ಅಭಿವೃದ್ಧಿಪಡಿಸಲಾಯಿತು. ಕೋವಿಡ್ನ ಮುಂಚೆಯೇ, ಗಲಭೆ ಪೀಡಿತ ಈಶಾನ್ಯ ದಿಲ್ಲಿಯ ವಿದ್ಯಾರ್ಥಿಗಳಿಗೆ ಪರೀಕ್ಷೆಗಳನ್ನು ಮುಂದೂಡಲಾಗಿತ್ತು ಮತ್ತು ನಂತರ ರದ್ದುಗೊಳಿಸಲಾಗಿತ್ತು. 2020ರಲ್ಲಿ ಸಿಬಿಎಸ್ಇ 10 ಮತ್ತು 12ನೇ ತರಗತಿ ವಿದ್ಯಾರ್ಥಿಗಳಿಗೆ ಬಳಸಿದ ವಿಧಾನವು ಈಗ ಪಶ್ಚಿಮ ಏಷ್ಯಾದ 10ನೇ ತರಗತಿ ವಿದ್ಯಾರ್ಥಿಗಳಿಗೆ ಘೋಷಿಸಲಾದ ವಿಧಾನದಂತೆಯೇ ಇದೆ. ವಿದ್ಯಾರ್ಥಿ ಪರೀಕ್ಷೆಗೆ ಗೈರಾದ ವಿಷಯಗಳಿಗೆ, ಆತ ಹಾಜರಾಗಿದ್ದ ವಿಷಯಗಳಲ್ಲಿ ಪಡೆದ ಅತ್ಯುತ್ತಮ ಅಂಕಗಳ ಸರಾಸರಿಯನ್ನು ನೀಡಲಾಗಿತ್ತು. ರದ್ದತಿಗೆ ಮೊದಲು ಒಂದು ಅಥವಾ ಎರಡು ಪರೀಕ್ಷೆಗಳಿಗೆ ಹಾಜರಾದ ಈಶಾನ್ಯ ದಿಲ್ಲಿಯ ಕೆಲವು 12ನೇ ತರಗತಿ ವಿದ್ಯಾರ್ಥಿಗಳಿಗೆ, ಅವರು ಬರೆದ ಪರೀಕ್ಷೆಗಳು ಮತ್ತು ಆಂತರಿಕ ಮೌಲ್ಯಮಾಪನ ಹಾಗೂ ಯೋಜನೆಗಳಲ್ಲಿನ ಅವರ ಕಾರ್ಯಕ್ಷಮತೆಯ ಆಧಾರದ ಮೇಲೆ ಫಲಿತಾಂಶಗಳನ್ನು ಘೋಷಿಸಲಾಗಿತ್ತು. 2021ರಲ್ಲಿ ಯಾವುದೇ ಬೋರ್ಡ್ ಪರೀಕ್ಷೆಗಳನ್ನು ನಡೆಸಲಾಗಿಲ್ಲ. ಫಲಿತಾಂಶಗಳನ್ನು ಘೋಷಿಸಲು ಪ್ರತ್ಯೇಕ ವಿಧಾನವನ್ನು ಘೋಷಿಸಲಾಯಿತು. 10ನೇ ತರಗತಿಯ ಅಂಕಗಳು ಶಾಲೆಗಳು ನಡೆಸಿದ ಯೂನಿಟ್ ಪರೀಕ್ಷೆಗಳು, ಮಧ್ಯಾವಧಿ ಪರೀಕ್ಷೆಗಳು ಮತ್ತು ಪ್ರೀ-ಬೋರ್ಡ್ ಪರೀಕ್ಷೆಗಳ ಅಂಕಗಳ ಆಧಾರದ ಮೇಲೆ ನಿರ್ಧರಿಸಲಾಯಿತು. ಒಟ್ಟು 80 ಅಂಕಗಳಲ್ಲಿ (ಉಳಿದ 20 ಆಂತರಿಕ ಮೌಲ್ಯಮಾಪನಕ್ಕೆ), 10 ಅಂಕಗಳನ್ನು ಯೂನಿಟ್ ಪರೀಕ್ಷೆಗಳ ಆಧಾರದ ಮೇಲೆ, 30 ಅಂಕಗಳನ್ನು ಮಧ್ಯಾವಧಿ ಪರೀಕ್ಷೆಗಳ ಆಧಾರದ ಮೇಲೆ ಮತ್ತು 40 ಅಂಕಗಳನ್ನು ಪ್ರೀ-ಬೋರ್ಡ್ ಪರೀಕ್ಷೆಗಳ ಆಧಾರದ ಮೇಲೆ ನೀಡಲಾಗಿತ್ತು. 12ನೇ ತರಗತಿಗೆ, ಯೂನಿಟ್ ಪರೀಕ್ಷೆಗಳ ಅಂಕಗಳು, 12ನೇ ತರಗತಿಯ ಪ್ರೀ-ಬೋರ್ಡ್ ಮತ್ತು ಮಧ್ಯಾವಧಿ ಪರೀಕ್ಷೆಗಳ ಅಂಕಗಳು, 11ನೇ ತರಗತಿಯ ಅಂತಿಮ ಪರೀಕ್ಷೆಯ ಅಂಕಗಳು ಹಾಗೂ 10ನೇ ತರಗತಿಯ ಅತ್ಯುತ್ತಮ ಮೂರು ವಿಷಯಗಳ ಅಂಕಗಳ ಸರಾಸರಿಯನ್ನು ಬಳಸಿಕೊಂಡು ಫಲಿತಾಂಶಗಳನ್ನು ಲೆಕ್ಕಹಾಕಲಾಯಿತು. 12ನೇ ತರಗತಿಯ ಫಲಿತಾಂಶಕ್ಕೆ 10ನೇ ತರಗತಿಯ ಅಂಕಗಳನ್ನು ಬಳಸಲಾಗಿದೆ, ಏಕೆಂದರೆ ಅದು ಮಂಡಳಿ ನಡೆಸಿದ ಏಕೈಕ ಸಾರ್ವಜನಿಕ ಪರೀಕ್ಷೆಯಾಗಿತ್ತು. ಯೂನಿಟ್ ಪರೀಕ್ಷೆ/ಮಧ್ಯಂತರ/ಪ್ರೀ-ಬೋರ್ಡ್ ಪರೀಕ್ಷೆಗಳ ಅಂಕಗಳನ್ನು ಮಾತ್ರ ಬಳಸದೇ ಇರಲು ಮಂಡಳಿ ನಿರ್ಧರಿಸಿತ್ತು. ಏಕೆಂದರೆ ಇವು ಶಾಲಾ ಆಧಾರಿತ ಮೌಲ್ಯಮಾಪನಗಳಾಗಿದ್ದು, ಎಲ್ಲಾ ವಿದ್ಯಾರ್ಥಿಗಳಿಗೆ ಒಂದೇ ರೀತಿಯ ಪರಿಸ್ಥಿತಿಯಲ್ಲಿ ನಡೆಯದ ಆನ್ಲೈನ್ ಪರೀಕ್ಷೆಗಳಾಗಿದ್ದವು. ಅವು ವಿದ್ಯಾರ್ಥಿಗಳ ಕಾರ್ಯಕ್ಷಮತೆಯನ್ನು ನಿಖರವಾಗಿ ಪ್ರತಿಬಿಂಬಿಸುವ ಪ್ರಮಾಣೀಕೃತ ಪರೀಕ್ಷೆಗಳಲ್ಲ ಎಂದು ಸಿಬಿಎಸ್ಇ ತಿಳಿಸಿತ್ತು.
RCB IPL Ticket Booking: ಐಪಿಎಲ್ 19ನೇ ಸೀಸನ್ ಮಾರ್ಚ್ 28ರಂದು ಆರಂಭವಾಗಲಿದ್ದು, ಎಂ.ಚಿನ್ನಸ್ವಾಮಿಯಲ್ಲಿ ನಡೆಯುವ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಆರ್ಸಿಬಿ ಹಾಗೂ ಎಸ್ಆರ್ಎಚ್ ತಂಡಗಳು ಮುಖಾಮುಖಿಯಾಗಲಿವೆ. ಈ ಪಂದ್ಯ ವೀಕ್ಷಣೆ ಮಾಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಹಾಗಾದ್ರೆ, ಟಿಕೆಟ್ ಬುಕಿಂಗ್ ಮಾಡುವುದು ಹೇಗೆ ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ. ಕಳೆದ ವರ್ಷ ಜೂನ್
NCERT 8ನೇ ತರಗತಿ ಸಮಾಜ ವಿಜ್ಞಾನ ಪಠ್ಯ ಪರಿಷ್ಕರಣೆಗೆ ತ್ರಿಸದಸ್ಯ ಸಮಿತಿ ರಚಿಸಿದ ಕೇಂದ್ರ
ನವದೆಹಲಿ: 8ನೇ ತರಗತಿಯ ಎನ್ಸಿಇಆರ್ಟಿ (NCERT) ಸಮಾಜ ವಿಜ್ಞಾನ ಪಠ್ಯಪುಸ್ತಕದಲ್ಲಿ ನ್ಯಾಯಾಂಗ ವ್ಯವಸ್ಥೆಯ ಬಗ್ಗೆ ಇದ್ದ ವಿವಾದಾತ್ಮಕ ಪಾಠವನ್ನು ಮರುಬರೆಯಲು ಮೂವರು ಸದಸ್ಯರ ಉನ್ನತ ಮಟ್ಟದ ತಜ್ಞರ ಸಮಿತಿಯನ್ನು ರಚಿಸಲಾಗಿದೆ ಎಂದು ಕೇಂದ್ರ ಸರ್ಕಾರವು ಸುಪ್ರೀಂ ಕೋರ್ಟ್ಗೆ ಅಧಿಕೃತವಾಗಿ ಮಾಹಿತಿ ನೀಡಿದೆ. ಈ ಮಹತ್ವದ ಬೆಳವಣಿಗೆಯ ಬೆನ್ನಲ್ಲೇ, ಈ ವಿಷಯಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ತಾನಾಗಿಯೇ ದಾಖಲಿಸಿಕೊಂಡಿದ್ದ
ವರ್ಗಾವಣೆಯಲ್ಲಿ ಸಿಎಂ ಹಸ್ತಪ್ಷೇಪಕ್ಕೆ ಕರ್ನಾಟಕ ಹೈಕೋರ್ಟ್ ಗರಂ; ಮಾಡಬೇಕಾದ ಕೆಲಸಗಳು ಬೇರೆ ಇವೆ ಎಂದ ನ್ಯಾಯಪೀಠ
ವರ್ಗಾವಣೆಯಲ್ಲಿ ಸಿಎಂ ಹಸ್ತಕ್ಷೇಪಕ್ಕೆ ಕರ್ನಾಟಕ ಹೈಕೋರ್ಟ್ ಕಿಡಿಕಾರಿದೆ. ವರ್ಗಾವಣೆಗಿಂತಲೂ ಇನ್ನೂ ಮುಖ್ಯವಾದ ಕೆಲಸಗಳು ಬೇರೆ ಇವೆ ಎಂದು ನ್ಯಾಯಪೀಠ ಹೇಳಿದೆ. ಬೆಸ್ಕಾಂ ಸಹಾಯಕ ಎಂಜಿನಿಯರ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಡಿ.ಕೆ.ಸಿಂಗ್ ಮತ್ತು ಟಿ.ಎಂ.ನದಾಫ್ ಅವರಿದ್ದ ವಿಭಾಗೀಯ ಪೀಠವು ಈ ಆದೇಶ ನೀಡಿದೆ. ಈ ಪ್ರಕರಣದ ಹಿನ್ನೆಲೆ ಏನು? ಹೆಚ್ಚಿನ ವಿವರ ಇಲ್ಲಿದೆ.
ಖಮೇನಿ ಆಯ್ತು, ಅಲಿ ಲಾರಿಜಾನಿ ಆಯ್ತು: US, ಇಸ್ರೇಲ್ ಟಾರ್ಗೆಟ್ ಲಿಸ್ಟ್ನಲ್ಲಿರುವ ಮುಂದಿನ ಇರಾನ್ ನಾಯಕರು ಯಾರು?
ಅಯಾತೊಲ್ಲಾ ಅಲಿ ಖಮೇನಿ ಆಯ್ತು, ಅಲಿ ಲಾರಿಜಾನಿ ಹಾಗೂ ಸೈಯದ್ ಇಸ್ಮಾಯಿಲ್ ಖತೀಬ್ ಕಥೆ ಕೂಡ ಮುಗೀತು. ಸದ್ಯ ಇರಾನ್ನಲ್ಲಿ ಬದುಕುಳಿದಿರುವ ಟಾಪ್ ಲೀಡರ್ಸ್ ಯಾರ್ಯಾರು? ಇಸ್ರೇಲ್ ಹಾಗೂ ಅಮೆರಿಕದ ಮುಂದಿನ ಹೈ ವಾಲ್ಯೂ ಟಾರ್ಗೆಟ್ ಲಿಸ್ಟ್ನಲ್ಲಿ ಯಾರ್ಯಾರ ಹೆಸರಿದೆ? ಇಲ್ಲಿದೆ ನೋಡಿ ಮಾಹಿತಿ…
ಮುಖ್ಯಮಂತ್ರಿಗಳಿಗೆ ಅಧಿಕಾರಿಗಳ ವರ್ಗಾವಣೆಯಲ್ಲಿ ಹಸ್ತಕ್ಷೇಪ ಮಾಡುವುದಕ್ಕಿಂತಲೂ ಮಹತ್ವದ ಕೆಲಸಗಳಿವೆ : ಹೈಕೋರ್ಟ್
ಬೆಂಗಳೂರು: ರಾಜ್ಯದ ಮುಖ್ಯಮಂತ್ರಿಗೆ ಸರ್ಕಾರಿ ಅಧಿಕಾರಿಗಳ ವರ್ಗಾವಣೆ ಮತ್ತು ಸ್ಥಳ ನಿಯುಕ್ತಿ ವಿಚಾರದಲ್ಲಿ ಹಸ್ತಕ್ಷೇಪ ಮಾಡುವುದಕ್ಕಿಂತಲೂ ಬೇರೆ ಮಹತ್ವದ ಕೆಲಸಗಳಿವೆ. ಸರ್ಕಾರಿ ನೌಕರರು ಮತ್ತು ಅಧಿಕಾರಿಗಳ ವರ್ಗಾವಣೆ ಮತ್ತು ನಿಯೋಜನೆಗಾಗಿ ಬರುವ ಮನವಿಗಳನ್ನು ಮುಖ್ಯಮಂತ್ರಿಗಳ ಕಚೇರಿ ಸ್ವೀಕರಿಸಬಾರದು ಎಂದಿರುವ ಹೈಕೋರ್ಟ್, ಮುಖ್ಯಮಂತ್ರಿಗಳು ತಮ್ಮ ಕಚೇರಿಯ ಅಧಿಕಾರಿಗಳಿಗೆ ಅಗತ್ಯ ನಿರ್ದೇಶನ ನೀಡಬೇಕು ಎಂದು ಸೂಚಿಸಿದೆ. ಇಬ್ಬರು ಅಧಿಕಾರಿಗಳ ಪರಸ್ಪರ ವರ್ಗಾವಣೆಗೆ ಮುಖ್ಯಮಂತ್ರಿಗಳ ಕಚೇರಿ ನೀಡಿರುವ ಶಿಫಾರಸು ನಿರ್ಲಕ್ಷಿಸಿ ತನ್ನನ್ನು ವರ್ಗಾವಣೆ ಮಾಡಿದ ಕ್ರಮ ಪ್ರಶ್ನಿಸಿ ಅಂಗವಿಕಲರೂ ಆಗಿರುವ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿಯ (ಬೆಸ್ಕಾಂ) ವೈಟ್ಫೀಲ್ಡ್ ವಿಭಾಗದ ಸಹಾಯಕ ಇಂಜಿನಿಯರ್ ಎಸ್.ಚೇತನ್ ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಡಿ.ಕೆ.ಸಿಂಗ್ ಹಾಗೂ ನ್ಯಾಯಮೂರ್ತಿ ಟಿ.ಎಂ.ನದಾಫ್ ಅವರಿದ್ದ ವಿಭಾಗೀಯ ನ್ಯಾಯಪೀಠ ಈ ಸೂಚನೆ ನೀಡಿದೆ. ಹೈಕೋರ್ಟ್ ಹೇಳಿದ್ದೇನು? : ಸರ್ಕಾರಿ ಅಧಿಕಾರಿಗಳ ವರ್ಗಾವಣೆ ಅಥವಾ ಸ್ಥಳ ನಿಯುಕ್ತಿ ಮನವಿಗಳನ್ನು ಮುಖ್ಯಮಂತ್ರಿಗಳ ಕಚೇರಿಯು ನೇರವಾಗಿ ಪರಿಗಣಿಸಬಾರದು. ಇಲಾಖಾ ಹಂತದಲ್ಲೇ ಈ ವಿಚಾರಗಳು ಮುಗಿಯಬೇಕು. ಸರ್ಕಾರಿ ಅಧಿಕಾರಿಗಳು ಮತ್ತು ಸರ್ಕಾರಿ ಉದ್ಯಮದಲ್ಲಿ ಕೆಲಸ ಮಾಡುವ ಅಧಿಕಾರಿಗಳ ವರ್ಗಾವಣೆ ಮತ್ತು ಸ್ಥಳ ನಿಯುಕ್ತಿಗಿಂತ ಉತ್ತಮವಾದ ಮತ್ತು ಮಹತ್ವದ ಕೆಲಸ ಮಾಡುವ ಜವಾಬ್ದಾರಿ ಮುಖ್ಯಮಂತ್ರಿಗಳ ಮೇಲಿದೆ. ತಮ್ಮ ಕಚೇರಿಗೆ ಅಗತ್ಯ ನಿರ್ದೇಶನ ನೀಡುವುದಕ್ಕಾಗಿ ನ್ಯಾಯಾಲಯದ ಈ ಆದೇಶವನ್ನು ಮುಖ್ಯಮಂತ್ರಿಗಳ ಮುಂದೆ ಇಡಬೇಕು ಎಂದು ಹೈಕೋರ್ಟ್ ಆದೇಶದಲ್ಲಿ ಹೇಳಿದೆ. ಶಿಫಾರಸಷ್ಟೇ, ವರ್ಗಾವಣೆ ಆದೇಶವಲ್ಲ : ಅರ್ಜಿಗೆ ಆಕ್ಷೇಪಣೆ ಸಲ್ಲಿಸುವಂತೆ 2026ರ ಫೆ.24ರಂದು ಹೈಕೋರ್ಟ್ ನೀಡಿದ್ದ ನಿರ್ದೇಶನದಂತೆ ಮಾ.3ರಂದು ಮುಖ್ಯ ಕಾರ್ಯದರ್ಶಿ ನ್ಯಾಯಾಲಯಕ್ಕೆ ಆಕ್ಷೇಪಣೆ ಸಲ್ಲಿಸಿದ್ದರು. ಅದರಲ್ಲಿ, ಮುಖ್ಯಮಂತ್ರಿಗಳ ಕಚೇರಿ ನೀಡಿರುವ ಟಿಪ್ಪಣಿ ಕೇವಲ ಶಿಫಾರಸಿನ ರೂಪದಲ್ಲಿದ್ದು, ಅದು ವರ್ಗಾವಣೆ ಆದೇಶ ಅಥವಾ ವರ್ಗಾವಣೆಗೆ ಒಪ್ಪಿಗೆ ನೀಡುವುದಾಗಿರುವುದಿಲ್ಲ. ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ರೂಪಿಸಿರುವ ವೃಂದ ಮತ್ತು ನೇಮಕಾತಿ ನಿಯಮಗಳು ಮತ್ತು ಸಾಮಾನ್ಯ ವರ್ಗಾವಣೆ ಮಾರ್ಗಸೂಚಿಗಳನ್ನು ಆಧರಿಸಿ ಸಕ್ಷಮ ಇಲಾಖೆಗಳು ಶಿಫಾರಸುಗಳನ್ನು ಪರಿಶೀಲಿಸಬೇಕು ಎಂದು ವಿವರಿಸಲಾಗಿತ್ತು. ಹಾಲಿ ಪ್ರಕರಣದಲ್ಲಿ ಒಪ್ಪಿತ ವರ್ಗಾವಣೆಗೆ ಮುಖ್ಯಮಂತ್ರಿ ಕಾರ್ಯಾಲಯವು ಮಾಡಿರುವ ಶಿಫಾರಸು/ಟಿಪ್ಪಣಿಯು ಶಿಫಾರಸಿನ ರೂಪದಲ್ಲಿದ್ದು, ಅದು ಒಪ್ಪಿತ ವರ್ಗಾವಣೆ ಆದೇಶವಲ್ಲ. ಏಕಸದಸ್ಯ ನ್ಯಾಯಪೀಠ 2024ರ ಸೆಪ್ಟೆಂಬರ್ 9ರಂದು ಮಾಡಿರುವ ತೀರ್ಪನ್ನು ಮುಖ್ಯಮಂತ್ರಿ ಗಮನಕ್ಕೆ ತರಲಾಗಿದೆ. ಮುಖ್ಯಮಂತ್ರಿ ಕಾರ್ಯಾಲಯ ಮತ್ತು ವರ್ಗಾವಣೆ ಮನವಿಗಳ ಬಗ್ಗೆ ನೋಡಿಕೊಳ್ಳುವ ಅಧಿಕಾರಿಗಳಿಗೆ ಈ ಕುರಿತು ಅರಿವು ಮೂಡಿಸಲಾಗಿದೆ ಎಂದು ಮುಖ್ಯ ಕಾರ್ಯದರ್ಶಿ ವಿವರಿಸಿದ್ದರು. ವರ್ಗಾವಣೆ ಶಿಫಾರಸು/ಮನವಿಯನ್ನು ಸಂಬಂಧಿತ ಆಡಳಿತಾತ್ಮಕ ಇಲಾಖೆಯಲ್ಲಿ ಪರಿಶೀಲಿಸಲಿದ್ದು, ವರ್ಗಾವಣೆ ಮಾರ್ಗಸೂಚಿಯ ನಿಬಂಧನೆಗಳ ಅನುಗುಣವಾಗಿ ಹಾಗೂ ಸಕ್ಷಮ ಪ್ರಾಧಿಕಾರದ ಒಪ್ಪಿಗೆಯ ಮೇರೆಗೆ ಆಡಳಿತಾತ್ಮಕ ಇಲಾಖೆಯು ವರ್ಗಾವಣೆ ಆದೇಶವನ್ನು ಹೊರಡಿಸುತ್ತದೆ ಎಂದು ಮುಖ್ಯ ಕಾರ್ಯದರ್ಶಿ ಹೇಳಿದ್ದಾರೆ ಎಂದು ನ್ಯಾಯಾಲಯ ಆದೇಶದಲ್ಲಿ ದಾಖಲಿಸಿದೆ. ಪ್ರಕರಣವೇನು? : ಮುಖ್ಯಮಂತ್ರಿ ಅನುಮೋದನೆ ನೀಡಿದ್ದರೂ ಬೆಸ್ಕಾಂ ನನ್ನನ್ನು ನಿರ್ದಿಷ್ಟ ಉಪವಿಭಾಗಕ್ಕೆ ನಿಯೋಜಿಸಿಲ್ಲ. ಆದ್ದರಿಂದ, ಮುಖ್ಯಮಂತ್ರಿಗಳು ಸೂಚಿಸಿದಂತೆ ನನ್ನನ್ನು ನಿಯೋಜನೆ ಮಾಡಲು ನಿರ್ದೇಶಿಸಬೇಕು ಎಂದು ಕೋರಿ ಚೇತನ್ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ್ದ ಏಕಸದಸ್ಯ ನ್ಯಾಯಪೀಠ, ಮುಖ್ಯಮಂತ್ರಿಗಳ ಕಚೇರಿಯಿಂದ ಗ್ರೂಪ್ 'ಬಿ' ಹಾಗೂ 'ಸಿ' ವರ್ಗದ ನೌಕರರ ವರ್ಗಾವಣೆಗೆ ಹಲವು ಪತ್ರಗಳು ಬರುತ್ತಿರುವುದು ಹೈಕೋರ್ಟ್ ಗಮನಕ್ಕೆ ಬಂದಿದೆ. ಈ ಎಲ್ಲ ಆದೇಶಗಳು ಕಚೇರಿಯಿಂದ ಪಡೆದು ಹೊರಡಿಸಿರುವ ಆದೇಶಗಳು ಎಂಬುದರ ಬಗ್ಗೆ ಮುಖ್ಯಮಂತ್ರಿಗಳಿಗೆ ತಿಳಿದಿದೆಯೇ ಎಂಬ ಅನುಮಾನ ಸೃಷ್ಟಿಯಾಗಿದೆ. ಮುಖ್ಯಮಂತ್ರಿ ಕಚೇರಿಯಲ್ಲಿ ಕುಳಿತಿರುವ ಯಾರೋ ಒಬ್ಬರು ಯಾಂತ್ರಿಕವಾಗಿ ಅಂತಹ ಆದೇಶಗಳನ್ನು ಹೊರಡಿಸುತ್ತಿದ್ದಾರೆ. ಆದ್ದರಿಂದ, ನೌಕರರು ಆತಂಕಿತರಾಗಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸುತ್ತಿದ್ದಾರೆ ಎಂದು ತಿಳಿಸಿ 2024ರ ಸೆ.9ರಂದು ಅರ್ಜಿ ವಜಾಗೊಳಿಸಿ ಆದೇಶಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ಚೇತನ್ ವಿಭಾಗೀಯ ನ್ಯಾಯಪೀಠಕ್ಕೆ ಮೇಲ್ಮನವಿ ಸಲ್ಲಿಸಿದ್ದರು.
ಪೋಷಕರು ಒಪ್ಪುತ್ತಿಲ್ಲವೆಂದು ಹೈಕೋರ್ಟ್ ಮೊರೆ ಹೋದ ಪ್ರೇಮಿಗಳು: ಆನಂತರ ಸರಾಗವಾಗಿ ನೆರವೇರಿತು ಅಂತರ್ಜಾತಿ ಮದುವೆ
ಪ್ರೇಮಿಗಳು ಹೈಕೋರ್ಟ್ ಮೊರೆ ಹೋಗಿ ಪೊಲೀಸರ ಸಮ್ಮುಖದಲ್ಲಿ ಅಂತರ್ಜಾತಿ ಮದುವೆ ಮಾಡಿಕೊಂಡ ಘಟನೆ ಬೆಂಗಳೂರಿನಲ್ಲಿ ನಡೆದಿದೆ. 5 ವರ್ಷಗಳ ಕಾಲ ಪ್ರೀತಿದ್ದು, ಪೋಷಕರು ಬೆದರಿಕೆ ಹಾಕಿತ್ತಿದ್ದಾರೆ ಎಂದು ಯುವಕ ಕೋರ್ಟ್ ಗಮನಕ್ಕೆ ತಂದನು. ಪೋಷಕರನ್ನು ಕರೆದು ಮುಚ್ಚಳಿಕೆ ಬರೆಸಿಕೊಂಡು ಪೊಲೀಸರು ತಮ್ಮ ಭದ್ರತೆಯಲ್ಲಿಯೇ ವಿವಾಹ ನೆರವೇರಿಸಿದ್ದಾರೆ.
ಸೌಹಾರ್ದತೆ ಬೆಳೆಸುವುದು ಈದ್ ಹಬ್ಬದ ಗುರಿ : ಸ್ಪೀಕರ್ ಯುಟಿ ಖಾದರ್
ಉಳ್ಳಾಲ ಕೇಂದ್ರ ಮಸೀದಿಯಲ್ಲಿ ಸಂಭ್ರಮದ ಈದ್ ಹಬ್ಬ ಆಚರಣೆ
ಚುನಾವಣೆಗೆ ಮುನ್ನ ಅಧಿಕಾರಿಗಳ ವರ್ಗಾವಣೆ: ಮಮತಾ ಬ್ಯಾನರ್ಜಿ ಚುನಾವಣಾ ಆಯೋಗವನ್ನು ಟೀಕಿಸಿದ್ದೇಕೆ?
ಮಾರ್ಚ್ 15ರಂದು ಸಂಜೆ 4 ಗಂಟೆಗೆ ಚುನಾವಣಾ ಆಯೋಗದ ಪತ್ರಿಕಾಗೋಷ್ಠಿಯಲ್ಲಿ ಮುಂಬರುವ ಐದು ವಿಧಾನಸಭಾ ಚುನಾವಣೆಗಳ ವೇಳಾಪಟ್ಟಿಯನ್ನು ಘೋಷಿಸಿದ ನಂತರ ಮಾದರಿ ನೀತಿ ಸಂಹಿತೆ (MCC) ಜಾರಿಗೆ ಬಂದಿದೆ. ಅದರೊಂದಿಗೆ, ಚುನಾವಣೆಗಳನ್ನು ಸುಗಮವಾಗಿ ನಡೆಸಲು ಚುನಾವಣಾ ಆಯೋಗವು ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲು ಮತ್ತು ಅಧಿಕಾರಿಗಳನ್ನು ನೇಮಿಸಲು ಪ್ರಾರಂಭಿಸಿದೆ. ಮಾದರಿ ನೀತಿ ಸಂಹಿತೆಯು ಪಕ್ಷಗಳು ಮತ್ತು ಅಭ್ಯರ್ಥಿಗಳಿಗೆ ನೀತಿ-ನಿಯಮಗಳನ್ನು ಉಲ್ಲೇಖಿಸುತ್ತದೆ. ಇದು ಮೇ 4ರಂದು ಚುನಾವಣಾ ಫಲಿತಾಂಶಗಳು ಪ್ರಕಟವಾಗುವವರೆಗೆ ಜಾರಿಯಲ್ಲಿರುತ್ತದೆ. ತನ್ನ ಕಾರ್ಯಾಚರಣೆಯ ಮೊದಲ ಮೂರು ದಿನಗಳಲ್ಲಿ, ಚುನಾವಣಾ ಆಯೋಗವು ಪಶ್ಚಿಮ ಬಂಗಾಳ, ಅಸ್ಸಾಂ, ಕೇರಳ ಮತ್ತು ತಮಿಳುನಾಡಿನಲ್ಲಿ ಉನ್ನತ ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳ ನೇಮಕಾತಿ ಹಾಗೂ ವರ್ಗಾವಣೆಗಳನ್ನು ಮಾಡಿದೆ. ಬಂಗಾಳದಲ್ಲಿ ಹೆಚ್ಚಿನ ಬದಲಾವಣೆಗಳು ನಡೆದಿರುವುದರಿಂದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಚುನಾವಣಾ ಆಯೋಗವನ್ನು ಟೀಕಿಸಿದ್ದಾರೆ. ಈ ಸಂಬಂಧ ಮಮತಾ ಅವರು ಮುಖ್ಯ ಚುನಾವಣಾ ಆಯುಕ್ತ (CEC) ಜ್ಞಾನೇಶ್ ಕುಮಾರ್ ಅವರಿಗೆ ಪತ್ರ ಬರೆದು, ಈ ಕ್ರಮವನ್ನು ಗಂಭೀರ ಕಳವಳ ಮತ್ತು ಆಶ್ಚರ್ಯದ ವಿಷಯವೆಂದು ಹೇಳಿ, ಭವಿಷ್ಯದಲ್ಲಿ ಇಂತಹ ಏಕಪಕ್ಷೀಯ ಕ್ರಮಗಳನ್ನು ಅಳವಡಿಸಿಕೊಳ್ಳಬಾರದು ಎಂದು ತಿಳಿಸಿದ್ದಾರೆ. ಚುನಾವಣಾ ಆಯೋಗ ಇಲ್ಲಿಯವರೆಗೆ ಯಾವ ಕ್ರಮ ಕೈಗೊಂಡಿದೆ? ಸೋಮವಾರದಿಂದ ಚುನಾವಣಾ ಆಯೋಗವು ರಾಜ್ಯ ಸರ್ಕಾರಗಳು ಮತ್ತು ಪೊಲೀಸರ ವಿವಿಧ ಹಂತಗಳಲ್ಲಿ ನೇಮಕಾತಿಗಳನ್ನು ಮಾಡುತ್ತಿದೆ. ಸೋಮವಾರ ಬೆಳಿಗ್ಗೆ, ಬಂಗಾಳದಲ್ಲಿ ಮುಖ್ಯ ಕಾರ್ಯದರ್ಶಿ ಹಾಗೂ ಗೃಹ ಮತ್ತು ಬೆಟ್ಟ ವ್ಯವಹಾರಗಳ ಪ್ರಧಾನ ಕಾರ್ಯದರ್ಶಿಯ ವರ್ಗಾವಣೆಯನ್ನು ಚುನಾವಣಾ ಆಯೋಗ ಘೋಷಿಸಿತು. ಒಟ್ಟಾರೆಯಾಗಿ, ರಾಜ್ಯದ ಡಿಜಿಪಿ ಮತ್ತು ಕೋಲ್ಕತ್ತಾ ಪೊಲೀಸ್ ಆಯುಕ್ತರು ಸೇರಿದಂತೆ ಕನಿಷ್ಠ 21 ಉನ್ನತ ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳನ್ನು ಆಯೋಗವು ವರ್ಗಾಯಿಸಿದೆ. ವರ್ಗಾವಣೆಗಳಿಗೆ ಕಾರಣವನ್ನು ಆದೇಶಗಳಲ್ಲಿ ಉಲ್ಲೇಖಿಸದಿದ್ದರೂ, ಚುನಾವಣಾ ಆಯೋಗವು ಪಾರದರ್ಶಕ, ಭಯಮುಕ್ತ, ಹಿಂಸಾಚಾರಮುಕ್ತ ಮತ್ತು ಪ್ರಚೋದನೆ-ಮುಕ್ತ ಚುನಾವಣೆಗಳನ್ನು ನಡೆಸಲು ಬದ್ಧವಾಗಿದೆ ಎಂದು ಸಿಇಸಿ ಜ್ಞಾನೇಶ್ ಕುಮಾರ್ ಆದೇಶಗಳ ಜೊತೆಗೆ ನೀಡಿದ ಲಿಖಿತ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಅಸ್ಸಾಂನಲ್ಲಿ ಚುನಾವಣಾ ಆಯೋಗವು 10 ಹಿರಿಯ ಅಧಿಕಾರಿಗಳನ್ನು ಬದಲಾಯಿಸಿದೆ. ಇದರಲ್ಲಿ ಐದು ಪೊಲೀಸ್ ವರಿಷ್ಠಾಧಿಕಾರಿಗಳು ಮತ್ತು ಐದು ಜಿಲ್ಲಾ ಚುನಾವಣಾ ಅಧಿಕಾರಿಗಳು (ಅಂದರೆ ಜಿಲ್ಲಾ ಮ್ಯಾಜಿಸ್ಟ್ರೇಟ್ಗಳು) ಸೇರಿದ್ದಾರೆ. ಅದೇ ರೀತಿ, ಕೇರಳದಲ್ಲಿ ಐದು ಮತ್ತು ತಮಿಳುನಾಡಿನಲ್ಲಿ ನಾಲ್ಕು ವರ್ಗಾವಣೆಗಳನ್ನು ಮಾಡಲಾಗಿದೆ. ಚುನಾವಣೆಯ ಸಮಯದಲ್ಲಿ ಅಧಿಕಾರಿಗಳ ವರ್ಗಾವಣೆಗೆ ಕಾನೂನು ನಿಬಂಧನೆಗಳು ಯಾವುವು? ಚುನಾವಣೆ ಮತ್ತು ಮತದಾರರ ಪಟ್ಟಿ ಪರಿಷ್ಕರಣೆಯ ಸಮಯದಲ್ಲಿ, ಸಂಬಂಧಿತ ಕಾರ್ಯಗಳಿಗೆ ಸಂಬಂಧಿಸಿದ ಎಲ್ಲಾ ಅಧಿಕಾರಿಗಳನ್ನು ಚುನಾವಣಾ ಆಯೋಗಕ್ಕೆ ನಿಯೋಜನೆಯಲ್ಲಿರುವಂತೆ ಪರಿಗಣಿಸಲಾಗುತ್ತದೆ. ಇದು 1950ರ ಜನತಾ ಪ್ರಾತಿನಿಧ್ಯ ಕಾಯ್ದೆಯ ಸೆಕ್ಷನ್ 13CC ಪ್ರಕಾರ, ಮುಖ್ಯ ಚುನಾವಣಾ ಅಧಿಕಾರಿಗಳು, ಜಿಲ್ಲಾ ಚುನಾವಣಾ ಅಧಿಕಾರಿಗಳು ಇತ್ಯಾದಿಗಳನ್ನು ಚುನಾವಣಾ ಆಯೋಗಕ್ಕೆ ನಿಯೋಜನೆಯಲ್ಲಿರುವಂತೆ ಪರಿಗಣಿಸಲಾಗುತ್ತದೆ ಎಂದು ಹೇಳುತ್ತದೆ. ಈ ಭಾಗದಲ್ಲಿ ಉಲ್ಲೇಖಿಸಲಾದ ಅಧಿಕಾರಿಗಳು ಹಾಗೂ ಎಲ್ಲಾ ಚುನಾವಣೆಗಳಿಗಾಗಿ ಮತದಾರರ ಪಟ್ಟಿಗಳ ತಯಾರಿಕೆ, ಪರಿಷ್ಕರಣೆ ಮತ್ತು ತಿದ್ದುಪಡಿ ಹಾಗೂ ನಡವಳಿಕೆಗೆ ಸಂಬಂಧಿಸಿದಂತೆ ನೇಮಕಗೊಂಡ ಯಾವುದೇ ಇತರ ಅಧಿಕಾರಿ ಅಥವಾ ಸಿಬ್ಬಂದಿಯನ್ನು ಅವರು ನೇಮಕಗೊಂಡ ಅವಧಿಗೆ ಚುನಾವಣಾ ಆಯೋಗಕ್ಕೆ ನಿಯೋಜನೆಯಲ್ಲಿರುವಂತೆ ಪರಿಗಣಿಸಲಾಗುತ್ತದೆ. ಅಂತಹ ಅಧಿಕಾರಿಗಳು ಮತ್ತು ಸಿಬ್ಬಂದಿ ಆ ಅವಧಿಯಲ್ಲಿ ಚುನಾವಣಾ ಆಯೋಗದ ನಿಯಂತ್ರಣ, ಮೇಲ್ವಿಚಾರಣೆ ಮತ್ತು ಶಿಸ್ತಿಗೆ ಒಳಪಡುತ್ತಾರೆ ಎಂದು ಅದು ಹೇಳುತ್ತದೆ. ಈ ವಿಭಾಗವನ್ನು 1989ರಲ್ಲಿ ತಿದ್ದುಪಡಿಯ ಮೂಲಕ ಸೇರಿಸಲಾಗಿದ್ದರೂ, ಶಿಸ್ತು ಎಂದರೆ ಏನು ಎಂಬುದರ ಕುರಿತು ಚುನಾವಣಾ ಆಯೋಗ ಮತ್ತು ಸರ್ಕಾರದ ನಡುವೆ ಭಿನ್ನಾಭಿಪ್ರಾಯವಿತ್ತು. 1993ರಲ್ಲಿ ಟಿ.ಎನ್. ಶೇಷನ್ ನೇತೃತ್ವದ ಚುನಾವಣಾ ಆಯೋಗವು ಈ ಬಗ್ಗೆ ಸ್ಪಷ್ಟೀಕರಣಕ್ಕಾಗಿ ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿತ್ತು. ಪರಿಣಾಮವಾಗಿ, ಚುನಾವಣಾ ಆಯೋಗ ಮತ್ತು ಸರ್ಕಾರವು 2000ರಲ್ಲಿ ಇತ್ಯರ್ಥದ ನಿಯಮಗಳಿಗೆ ಒಪ್ಪಿಕೊಂಡವು. ಇದರಿಂದ ಚುನಾವಣಾ ಆಯೋಗವು ಕರ್ತವ್ಯಲೋಪಕ್ಕಾಗಿ ಅಧಿಕಾರಿಗಳನ್ನು ಅಮಾನತುಗೊಳಿಸಬಹುದು ಮತ್ತು ಬದಲಿಯಾಗಿ ನೇಮಿಸಬಹುದು ಎಂದು ಸ್ಪಷ್ಟಪಡಿಸಲಾಯಿತು. ಈ ನಿಬಂಧನೆಗಳ ಅಡಿಯಲ್ಲಿ ಚುನಾವಣಾ ಆಯೋಗವು ಅಧಿಕಾರಿಗಳ ವರ್ಗಾವಣೆಯನ್ನು ಚುನಾವಣೆಗಳು ಮತ್ತು ಪರಿಷ್ಕರಣೆ ಪ್ರಕ್ರಿಯೆಗಳ ಸಮಯದಲ್ಲಿ ಮುಂದುವರಿಸುತ್ತದೆ. ಮಮತಾ ಬ್ಯಾನರ್ಜಿ ಅವರ ಆರೋಪವೇನು? ಮೊದಲ ಆದೇಶಗಳನ್ನು ಸಾರ್ವಜನಿಕಗೊಳಿಸಿದ ಕೂಡಲೇ, ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಸೋಮವಾರ ಭಾರತದ ಮುಖ್ಯ ಚುನಾವಣಾ ಆಯುಕ್ತರಿಗೆ ಪತ್ರ ಬರೆದು, ಯಾವುದೇ ಸ್ಪಷ್ಟ ಕಾರಣವಿಲ್ಲದೆ ಅಥವಾ ಚುನಾವಣೆಗಳಿಗೆ ಸಂಬಂಧಿಸಿದ ಅಧಿಕಾರಿಗಳ ದುಷ್ಕೃತ್ಯ ಅಥವಾ ಲೋಪದ ಆರೋಪವಿಲ್ಲದೆ ವ್ಯಾಪಕ ಬದಲಾವಣೆಗಳನ್ನು ಮಾಡಲಾಗಿದೆ ಎಂದು ಹೇಳಿದರು. ಕ್ರಮ ಕೈಗೊಳ್ಳಲು ಚುನಾವಣಾ ಆಯೋಗದ ಅಧಿಕಾರವನ್ನು ಒಪ್ಪಿಕೊಂಡರೂ, ಅಂತಹ ಬದಲಾವಣೆಗಳನ್ನು ಮಾಡುವ ಮೊದಲು ಆಯೋಗವು ರಾಜ್ಯ ಸರ್ಕಾರದೊಂದಿಗೆ ಸಮಾಲೋಚಿಸಬೇಕಿತ್ತು ಎಂದು ಮುಖ್ಯಮಂತ್ರಿ ಬರೆದಿದ್ದಾರೆ. ಸಾಮಾನ್ಯವಾಗಿ ಆಯೋಗವು ಅಧಿಕಾರಿಯನ್ನು ಬದಲಾಯಿಸುವಾಗ ರಾಜ್ಯ ಸರ್ಕಾರದಿಂದ ಅಧಿಕಾರಿಗಳ ಸಮಿತಿಯನ್ನು ಕೋರುತ್ತದೆ. ಆದರೆ ಕಾನೂನಿನಲ್ಲಿ ಅದನ್ನು ಕಡ್ಡಾಯಗೊಳಿಸುವ ಯಾವುದೇ ನಿಬಂಧನೆ ಇಲ್ಲ. ಪಶ್ಚಿಮ ಬಂಗಾಳ ವಿಧಾನಸಭೆಯ 2026ರ ಸಾರ್ವತ್ರಿಕ ಚುನಾವಣೆಯನ್ನು ಘೋಷಿಸಿದ ಪತ್ರಿಕಾ ಪ್ರಕಟಣೆಯ ಕೆಲವೇ ಗಂಟೆಗಳಲ್ಲಿ ರಾಜ್ಯದ ಆಡಳಿತದ ಮುಖ್ಯಸ್ಥರನ್ನು ತೆಗೆದುಹಾಕಲಾಗಿದೆ ಎಂಬುದು ತೀವ್ರ ಕಳವಳ ಮತ್ತು ಆಶ್ಚರ್ಯದ ವಿಷಯವಾಗಿದೆ. ಇದನ್ನು ರಾಜ್ಯ ಸರ್ಕಾರದಿಂದ ಅಧಿಕಾರಿಗಳ ಸಮಿತಿಯನ್ನು ಕೋರದೆ, ಅನಿಯಂತ್ರಿತ ರೀತಿಯಲ್ಲಿ ಮಾಡಲಾಗಿದೆ ಎಂದು ಮಮತಾ ಪತ್ರದಲ್ಲಿ ಬರೆದಿದ್ದಾರೆ. ಚುನಾವಣೆಗಳ ಔಪಚಾರಿಕ ಅಧಿಸೂಚನೆಗೂ ಮುನ್ನವೇ ಮುಖ್ಯ ಕಾರ್ಯದರ್ಶಿ, ಗೃಹ ಕಾರ್ಯದರ್ಶಿ, ಡಿಜಿಪಿ, ಎಡಿಜಿಗಳು, ಐಜಿಗಳು, ಡಿಐಜಿಗಳು, ಜಿಲ್ಲಾ ಮ್ಯಾಜಿಸ್ಟ್ರೇಟ್ಗಳು ಮತ್ತು ಪೊಲೀಸ್ ವರಿಷ್ಠಾಧಿಕಾರಿಗಳು ಸೇರಿದಂತೆ 50ಕ್ಕೂ ಹೆಚ್ಚು ಹಿರಿಯ ಅಧಿಕಾರಿಗಳನ್ನು ತೆಗೆದುಹಾಕಲಾಗಿದೆ. ಇದು ಆಡಳಿತಾತ್ಮಕ ಕ್ರಮವಲ್ಲ; ಬದಲಾಗಿ ಇದು ಅತ್ಯುನ್ನತ ಮಟ್ಟದ ರಾಜಕೀಯ ಹಸ್ತಕ್ಷೇಪ ಎಂದು ತೃಣಮೂಲ ಕಾಂಗ್ರೆಸ್ ಅಧ್ಯಕ್ಷೆ ಮಮತಾ ಹೇಳಿದ್ದಾರೆ. ಚುನಾವಣಾ ಆಯೋಗದ ಕ್ರಮಗಳಲ್ಲಿ ವಿರೋಧಾಭಾಸಗಳಿವೆ ಎಂದು ಹೇಳಿದ ಮಮತಾ, ತಮ್ಮ ಹುದ್ದೆಗಳಿಂದ ತೆಗೆದುಹಾಕಲಾದ ಅಧಿಕಾರಿಗಳನ್ನು ಚುನಾವಣಾ ವೀಕ್ಷಕರಾಗಿ ನಿಯೋಜಿಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ. ಇದು ಆಡಳಿತವಲ್ಲ; ಇದು ಅವ್ಯವಸ್ಥೆ, ಗೊಂದಲ ಮತ್ತು ಸಂಪೂರ್ಣ ಅಸಮರ್ಥತೆಯನ್ನು ಪ್ರತಿಬಿಂಬಿಸುತ್ತದೆ ಎಂದು ಅವರು ಸಾಮಾಜಿಕ ಮಾಧ್ಯಮದಲ್ಲಿ ಬರೆದಿದ್ದಾರೆ. ವರ್ಗಾವಣೆಗಳು ಆಕಸ್ಮಿಕವಲ್ಲ; ಬದಲಾಗಿ ಬಲವಂತ ಮತ್ತು ಸಾಂಸ್ಥಿಕ ಕುಶಲತೆಯ ಮೂಲಕ ಪಶ್ಚಿಮ ಬಂಗಾಳದ ನಿಯಂತ್ರಣವನ್ನು ವಶಪಡಿಸಿಕೊಳ್ಳಲು ಉದ್ದೇಶಪೂರ್ವಕವಾಗಿ ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ. ಮಂಗಳವಾರ (ಮಾರ್ಚ್ 17) ಮುಂಬರುವ ವಿಧಾನಸಭಾ ಚುನಾವಣೆಗೆ ತಮ್ಮ ಪಕ್ಷದ ಅಭ್ಯರ್ಥಿಗಳ ಪಟ್ಟಿಯನ್ನು ಘೋಷಿಸುವ ವೇಳೆ, ವರ್ಗಾವಣೆಯನ್ನು ವಿರೋಧಿಸಿದ ಮಮತಾ, ಚುನಾವಣಾ ಆಯೋಗವು ಬಿಜೆಪಿ ಪರ ಪ್ರಚಾರ ಮಾಡುತ್ತಿದೆ ಎಂದು ಆರೋಪಿಸಿದರು. ಪಶ್ಚಿಮ ಬಂಗಾಳದ ಜನರು ಅಘೋಷಿತ ತುರ್ತು ಪರಿಸ್ಥಿತಿ ಮತ್ತು ಪ್ರಜಾಪ್ರಭುತ್ವ ತತ್ವಗಳಿಂದಲ್ಲ, ರಾಜಕೀಯ ದ್ವೇಷದಿಂದ ನಡೆಸಲ್ಪಡುವ ರಾಷ್ಟ್ರಪತಿ ಆಡಳಿತದ ಅಘೋಷಿತ ರೂಪವನ್ನು ನೋಡುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ. ಬಂಗಾಳದ ಜನರ ವಿಶ್ವಾಸವನ್ನು ಗಳಿಸಲು ವಿಫಲವಾದ ಬಿಜೆಪಿ ಈಗ ಬಲವಂತ, ಬೆದರಿಕೆ, ಕುಶಲತೆ ಮತ್ತು ಸಂಸ್ಥೆಗಳ ದುರುಪಯೋಗದ ಮೂಲಕ ರಾಜ್ಯವನ್ನು ವಶಪಡಿಸಿಕೊಳ್ಳಲು ಪ್ರಯತ್ನಿಸುತ್ತಿದೆ ಎಂದು ಮಮತಾ ಆರೋಪಿಸಿದ್ದಾರೆ. ಬಂಗಾಳ ಎಂದಿಗೂ ಬೆದರಿಕೆಗೆ ತಲೆಬಾಗಿಲ್ಲ. ಅದು ಎಂದಿಗೂ ತಲೆಬಾಗುವುದಿಲ್ಲ. ಬಂಗಾಳ ಹೋರಾಡುತ್ತದೆ, ಬಂಗಾಳ ವಿರೋಧಿಸುತ್ತದೆ ಮತ್ತು ತನ್ನ ನೆಲದಲ್ಲಿ ವಿಭಜಕ ಹಾಗೂ ವಿನಾಶಕಾರಿ ಕಾರ್ಯಸೂಚಿಯನ್ನು ಹೇರುವ ಪ್ರತಿಯೊಂದು ಪ್ರಯತ್ನವನ್ನು ನಿರ್ಣಾಯಕವಾಗಿ ಸೋಲಿಸುತ್ತದೆ ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ. ಈ ಹಿಂದೆಯೂ ಅಧಿಕಾರಿಗಳನ್ನು ತೆಗೆದುಹಾಕಲಾಗಿತ್ತು ಚುನಾವಣೆಯ ಸಮಯದಲ್ಲಿ ಅಧಿಕಾರಿಗಳನ್ನು ಬದಲಾಯಿಸುವ ಪದ್ಧತಿ ಹೊಸದಲ್ಲ. ರಾಜಕೀಯ ಪಕ್ಷಪಾತಕ್ಕೆ ಹತ್ತಿರವಿರುವ ಅಧಿಕಾರಿಗಳನ್ನು ತೆಗೆದುಹಾಕುವ ಮೂಲಕ ಸಮಾನ ಅವಕಾಶವನ್ನು ಕಾಯ್ದುಕೊಳ್ಳಲು ಇದನ್ನು ಮಾಡಲಾಗುತ್ತದೆ ಎಂದು ಚುನಾವಣಾ ಆಯೋಗದ ಮೂಲಗಳು ಹೇಳುತ್ತವೆ. 2024ರ ಲೋಕಸಭಾ ಚುನಾವಣೆಯ ಸಮಯದಲ್ಲಿ, ಚುನಾವಣಾ ಆಯೋಗವು ಆಗಿನ ಪಶ್ಚಿಮ ಬಂಗಾಳದ ಡಿಜಿಪಿ ರಾಜೀವ್ ಕುಮಾರ್ ಅವರನ್ನು ಚುನಾವಣೆಯ ಅವಧಿಗೆ ತೆಗೆದುಹಾಕಿತ್ತು. ನಂತರ ಮಮತಾ ಬ್ಯಾನರ್ಜಿ ಅವರನ್ನು ಮತ್ತೆ ನೇಮಿಸಿದರು. ಐಪಿಎಸ್ನಿಂದ ನಿವೃತ್ತರಾದ ನಂತರ, ಕುಮಾರ್ ಇತ್ತೀಚೆಗೆ ಟಿಎಂಸಿ ಸೇರಿ ರಾಜ್ಯಸಭೆಗೆ ಆಯ್ಕೆಯಾದರು. ಇದಲ್ಲದೆ, 2024ರ ಚುನಾವಣೆಯ ವೇಳೆ ಉತ್ತರ ಪ್ರದೇಶ ಮತ್ತು ಗುಜರಾತ್ ಸೇರಿದಂತೆ ಆರು ರಾಜ್ಯಗಳ ಗೃಹ ಕಾರ್ಯದರ್ಶಿಗಳನ್ನು ಚುನಾವಣಾ ಆಯೋಗವು ತೆಗೆದುಹಾಕಿತ್ತು. ಪಶ್ಚಿಮ ಬಂಗಾಳ ವಿಧಾನಸಭೆಗೆ ಏಪ್ರಿಲ್ 23 ಮತ್ತು 29ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ಮೇ 4ರಂದು ಮತ ಎಣಿಕೆ ನಡೆಯಲಿದೆ.
ಯಾದಗಿರಿ | ಒಳಮೀಸಲಾತಿ ವಿರೋಧಿಸಿ ಮಾ.25ರಂದು ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ
ಯಾದಗಿರಿ: ಒಳಮೀಸಲಾತಿ ವಿಚಾರದಲ್ಲಿ ನಾಗಮೋಹನ್ ದಾಸ್ ಸಮಿತಿ ನೀಡಿರುವ ವರದಿ ಅವೈಜ್ಞಾನಿಕವಾಗಿದ್ದು, ಹಂಚಿಕೆ ಹಾಗೂ ರೋಸ್ಟರ್ ವ್ಯವಸ್ಥೆಯಲ್ಲಿ ಬಲಗೈ ಸಮುದಾಯಕ್ಕೆ ಅನ್ಯಾಯವಾಗುತ್ತಿದೆ ಎಂದು ಛಲವಾದಿ ಮಹಾಸಭೆ ಯಾದಗಿರಿ ಜಿಲ್ಲಾ ಅಧ್ಯಕ್ಷ ವೀರಭದ್ರಪ್ಪ ಯಡ್ಡಳ್ಳಿ ಆರೋಪಿಸಿದರು. ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇದೇ ಮಾರ್ಚ್ 25ರಂದು ಬೆಂಗಳೂರಿನಲ್ಲಿ ಜ್ಞಾನಪ್ರಕಾಶ ಸ್ವಾಮೀಜಿ ಅವರ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಯಲಿದೆ ಎಂದು ತಿಳಿಸಿದರು. ರಾಜ್ಯ ಸರ್ಕಾರ ನಾಗಮೋಹನ್ ದಾಸ್ ವರದಿಯನ್ನು ತಿರಸ್ಕರಿಸಿ, ಮತ್ತೊಮ್ಮೆ ಸಮಗ್ರ ಜಾತಿ ಜನಗಣತಿ ಸಮೀಕ್ಷೆ ನಡೆಸಬೇಕು. ರೋಸ್ಟರ್ ಪದ್ಧತಿಯ ಒಳಮೀಸಲಾತಿಯನ್ನು ಯಾವುದೇ ಕಾರಣಕ್ಕೂ ಜಾರಿಗೆ ತರಬಾರದು ಎಂದು ಅವರು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಒಕ್ಕೂಟ ಸಮಿತಿಯ ಯಾದಗಿರಿ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಪೂಜಾರಿ ಮಾತನಾಡಿ, ಕಾಂಗ್ರೆಸ್ ಸರ್ಕಾರ ಪರಿಶಿಷ್ಟ ಜಾತಿಯ ಬಲಗೈ ಪಂಗಡದವರ ಮತದ ಆಧಾರದಲ್ಲಿ ಅಧಿಕಾರಕ್ಕೆ ಬಂದಿದ್ದರೂ, ಒಳಮೀಸಲಾತಿ ಜಾರಿಗೆ ಸಂಬಂಧಿಸಿದ ಭರವಸೆಯನ್ನು ಎರಡು ವರ್ಷಗಳಾದರೂ ಈಡೇರಿಸಿಲ್ಲ. ಬದಲಾಗಿ ಬಲಗೈ ಮತ್ತು ಎಡಗೈ ಜಾತಿಗಳ ನಡುವೆ ಭಿನ್ನತೆ ಉಂಟುಮಾಡುವ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದರು. ಸರ್ವೋಚ್ಚ ನ್ಯಾಯಾಲಯವು 2024ರ ಆ.1ರಂದು ನೀಡಿದ ತೀರ್ಪಿನಲ್ಲಿ ಒಳಮೀಸಲಾತಿ ಜಾರಿಗೆ ರಾಜ್ಯಗಳಿಗೆ ಅಧಿಕಾರವಿದೆ ಎಂದರೂ, ಅದು ಸಮರ್ಪಕ ಅಂಕಿಅಂಶಗಳ ಆಧಾರದಲ್ಲಿಯೇ ಜಾರಿಯಾಗಬೇಕು ಎಂದು ಸ್ಪಷ್ಟಪಡಿಸಿದೆ. ಆದರೆ, ರಾಜ್ಯ ಸರ್ಕಾರ ಈ ಮಾರ್ಗಸೂಚಿಗಳನ್ನು ಪಾಲಿಸದೇ ಕ್ರಮ ಕೈಗೊಂಡಿದೆ ಎಂದು ಅವರು ಹೇಳಿದರು. ಮಾರ್ಚ್ 25ರಂದು ನಡೆಯುವ ಪ್ರತಿಭಟನೆಯಲ್ಲಿ ಯಾದಗಿರಿ ಜಿಲ್ಲೆಯಿಂದ ಸಾವಿರಾರು ಜನರು ಭಾಗವಹಿಸಲಿದ್ದು, ಪ್ರಗತಿಪರ ಚಿಂತಕರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಕರೆ ನೀಡಿದರು. ಸುದ್ದಿಗೋಷ್ಠಿಯಲ್ಲಿ ಸಮಿತಿಯ ಗೌರವಾಧ್ಯಕ್ಷ ಡಾ. ಭಗವಂತ ಅನ್ವಾರ್, ಸಂಚಾಲಕ ಶ್ರೀಶೈಲ ಹೊಸ್ಮನಿ, ಉಪಾಧ್ಯಕ್ಷ ಮಾನಪ್ಪ ಕಟ್ಟಿಮನಿ, ಪ್ರಧಾನ ಕಾರ್ಯದರ್ಶಿ ಮರೆಪ್ಪ ಚಟ್ಟೇರಕರ್, ಕಾರ್ಯದರ್ಶಿ ಡಾ. ಗಾಳೆಪ್ಪ ಪೂಜಾರಿ, ಸಹ ಕಾರ್ಯದರ್ಶಿ ಚಂದಪ್ಪ ಮುನಿಪನೋರ, ಸಂಘಟನಾ ಕಾರ್ಯದರ್ಶಿ ಶರಣು ಎಸ್. ನಾಟೇಕಾರ್, ಭೀಮಣ್ಣ ಹೊಸ್ಮನಿ, ನಾಗಣ್ಣ ಬಡಿಗೇರ, ಬಾಬರಾವ್ ಕಾಡ್ಲೂರ್, ಶಿವುಪುತ್ರ ಜವಳಿ, ಕಾಶೀನಾಥ್ ನಾಟೇಕಾರ್, ನೀಲಕಂಠ ಬಡಿಗೇರ, ಭೀಮರಾಯ ಸಿಂದಿಗೇರಿ, ಹೊನಪ್ಪ ಗಂಗನಾಳ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಕುಡಿಯುವ ನೀರಿನ ಸಮಸ್ಯೆ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮ : ಸಚಿವ ಪ್ರಿಯಾಂಕ್ ಖರ್ಗೆ
ಬೆಂಗಳೂರು: ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿನ ಅಭಾವವನ್ನು ಸಮರ್ಪಕವಾಗಿ ನಿಭಾಯಿಸಲು ರಾಜ್ಯ ಸರ್ಕಾರ ಹಲವು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ. ಮುಂದಿನ ಮೂರು ತಿಂಗಳುಗಳ ಕಾಲ ಪ್ರತಿ 2ನೇ ಹಾಗೂ 4ನೇ ಸೋಮವಾರ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ (ಪಿಡಿಒ) ಜೊತೆ ಕಡ್ಡಾಯ ಸಭೆ ನಡೆಸಿ ಕುಡಿಯುವ ನೀರಿನ ಸಮಸ್ಯೆಗಳ ವಾಸ್ತವ ಸ್ಥಿತಿ ಪರಿಶೀಲಿಸಲು ಸೂಚಿಸಲಾಗಿದೆ. ಇದೇ ವೇಳೆ ಪ್ರತಿ 2ನೇ ಹಾಗೂ 4ನೇ ಮಂಗಳವಾರ ಪತ್ರಿಕಾ ಗೋಷ್ಠಿ ನಡೆಸಿ ಕೈಗೊಂಡ ಕ್ರಮಗಳ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡಲು ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ. ಕುಡಿಯುವ ನೀರಿನ ಸಮಸ್ಯೆಯನ್ನು ತ್ವರಿತವಾಗಿ ನಿರ್ವಹಿಸಲು ಎಲ್ಲಾ ಜಿಲ್ಲಾ ಪಂಚಾಯಿತಿಗಳಲ್ಲಿ 24/7 ನಿಯಂತ್ರಣ ಕೊಠಡಿಗಳನ್ನು ತೆರೆಯಲಾಗುತ್ತಿದ್ದು, ತಾಲ್ಲೂಕು ಮಟ್ಟದಲ್ಲಿ ಕ್ಷಿಪ್ರ ಕಾರ್ಯಪಡೆ (ರ್ಯಾಪಿಡ್ ಟಾಸ್ಕ್ ಫೋರ್ಸ್) ರಚಿಸಲು ಸೂಚಿಸಲಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿನ ನೀರಿನ ಮೂಲಗಳನ್ನು ಶೇಕಡಾ 100ರಷ್ಟು ಪರಿಶೀಲಿಸಿ, ಕೊಳವೆಬಾವಿಗಳ ಸುತ್ತಮುತ್ತ ಕಲುಷಿತ ನೀರು ಸೇರುವುದನ್ನು ತಡೆಯಲು ಚರಂಡಿ ವ್ಯವಸ್ಥೆ, ಕಾಂಕ್ರೀಟ್ ಕಟ್ಟೆ ನಿರ್ಮಾಣ ಸೇರಿದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕಟ್ಟುನಿಟ್ಟಾಗಿ ಅನುಸರಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಇದೇ ವೇಳೆ, ನೀರಿನ ಮೂಲಗಳ ಸಂರಕ್ಷಣೆ ಹಾಗೂ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಕೆಲಸಕ್ಕೂ ಒತ್ತು ನೀಡಲಾಗಿದೆ. ಬೇಸಿಗೆ ಹಿನ್ನೆಲೆಯಲ್ಲಿ ಹಲವೆಡೆ ಜಲಮೂಲಗಳು ಬತ್ತುತ್ತಿರುವುದು ಹಾಗೂ ಕೊಳವೆಬಾವಿಗಳ ಇಳುವರಿ ಕಡಿಮೆಯಾಗುತ್ತಿರುವುದರಿಂದ ಸಮಸ್ಯೆ ಉಂಟಾಗಿರುವುದಾಗಿ ಸಚಿವರು ತಿಳಿಸಿದ್ದಾರೆ. ಒಟ್ಟಿನಲ್ಲಿ, ಗ್ರಾಮೀಣ ಜನರಿಗೆ ಕುಡಿಯುವ ನೀರಿನ ಕೊರತೆ ಎದುರಾಗದಂತೆ ಸಮಗ್ರ ಯೋಜನೆ ರೂಪಿಸಿ ಕ್ರಮ ಕೈಗೊಳ್ಳಲಾಗಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ದೈನಂದಿನ ಜೀವನಶೈಲಿ ಅರಿವಿನ ಕ್ಷೀಣತೆಗೆ ಕಾರಣವಾಗಬಹುದು!
ಜೀವನಶೈಲಿಯ ಈ ಅಭ್ಯಾಸಗಳನ್ನು ಬೇಗನೇ ತಿಳಿದುಕೊಳ್ಳುವುದರಿಂದ ಅರಿವಿನ ಕುಸಿತವನ್ನು ತಡೆದು ಆರೋಗ್ಯವನ್ನು ದೀರ್ಘಕಾಲ ರಕ್ಷಿಸಿಕೊಳ್ಳಬಹುದು.
ದಾವಣಗೆರೆ ದಕ್ಷಿಣ ಉಪಚುನಾವಣೆ: ಬಿ-ಫಾರಂ ಇಲ್ಲದೆ ನಾಮಪತ್ರ ಸಲ್ಲಿಸಿದ ಕಾಂಗ್ರೆಸ್ ಅಭ್ಯರ್ಥಿಗಳು
ಬಿಜೆಪಿಯಿಂದ ಶ್ರೀನಿವಾಸ ದಾಸಕರಿಯಪ್ಪ ನಾಮಪತ್ರ ಸಲ್ಲಿಕೆ
Zomato: ಹಸಿದ ಹೊಟ್ಟೆಗೆ ಜೊಮ್ಯಾಟೋ ಬರೆ.. ಆನ್ಲೈನ್ ಊಟ ಬಲು ದುಬಾರಿ
Zomato Raises Platform Fee: ದೇಶದ ಪ್ರಮುಖ ಫುಡ್ ಡೆಲಿವರಿ ಸಂಸ್ಥೆಯಾದ ಜೊಮ್ಯಾಟೋ ಗ್ರಾಹಕರಿಗೆ ಬಿಗ್ ಶಾಕ್ ನೀಡಿದೆ. ತನ್ನ ಪ್ಲಾಟ್ಫಾರ್ಮ್ ಶುಲ್ಕವನ್ನು ಮತ್ತೆ ಹೆಚ್ಚಳ ಮಾಡಿದ್ದು, ಈ ಮೂಲಕ ಗ್ರಾಹಕರಿಗೆ ಬೆಲೆ ಏರಿಕೆಯ ಬರೆ ಎಳೆದಿದೆ. ಹಾಗಾದ್ರೆ ಎಷ್ಟು ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ. ಜೊಮಾಟೋ ಸಂಸ್ಥೆಯು ಪ್ಲಾಟ್ಫಾರ್ಮ್ ಶುಲ್ಕವನ್ನು ಪರಿಚಯಿಸಿದ ಈ
ಭಾರತದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಕೇವಲ ವಾಹನ ಸವಾರರನ್ನಷ್ಟೇ ಅಲ್ಲ, ಇಡೀ ದೇಶದ ಆರ್ಥಿಕತೆಯನ್ನೇ ನಿಯಂತ್ರಿಸುವ ಪ್ರಮುಖ ಅಂಶಗಳಾಗಿವೆ. ಕಳೆದ ಎರಡು ದಶಕಗಳಲ್ಲಿ ಭಾರತದಲ್ಲಿ ಪೆಟ್ರೋಲ್ ದರಗಳು ಊಹಿಸಲಾಗದಷ್ಟು ಏರಿಳಿತಗಳನ್ನು ಕಂಡಿವೆ. 2000ನೇ ಇಸವಿಯ ಆರಂಭದಲ್ಲಿ ಸಾಮಾನ್ಯ ಜನರ ಕೈಗೆಟುಕುತ್ತಿದ್ದ ಪೆಟ್ರೋಲ್ ದರ, 2025ರ ಹೊತ್ತಿಗೆ ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ತಲುಪಿದೆ. 1947ರಲ್ಲಿ ಕೇವಲ ಪೈಸೆಗಳಲ್ಲಿದ್ದ
ಆನೇಕಲ್ | ಸರಣಿ ಅಪಘಾತ : 8 ಮಂದಿ ಮೃತ್ಯು
ಆನೇಕಲ್/ತಮಿಳುನಾಡು: ಭೀಕರ ರಸ್ತೆ ಅಪಘಾತ ಸಂಭವಿಸಿ 8 ಮಂದಿ ಮೃತಪಟ್ಟಿರುವ ಘಟನೆ ತಮಿಳುನಾಡಿನ ಈರೋಡ್–ಸೇಲಂ ರಸ್ತೆಯಲ್ಲಿ ನಡೆದಿದೆ. ಗರ್ಭಿಣಿ, 11 ತಿಂಗಳ ಮಗು ಹಾಗೂ 5 ವರ್ಷದ ಬಾಲಕ ಸೇರಿದಂತೆ ಒಟ್ಟು 8 ಮಂದಿ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಸರ್ಕಾರಿ ಬಸ್ ಚಾಲಕನ ನಿಯಂತ್ರಣ ತಪ್ಪಿದ ಪರಿಣಾಮ ಸರಣಿ ಅಪಘಾತ ಸಂಭವಿಸಿದ್ದು, ಈರೋಡ್ನಿಂದ ಸೇಲಂ ಕಡೆಗೆ ತೆರಳುತ್ತಿದ್ದ ಬಸ್ ದ್ವಿಚಕ್ರ ವಾಹನ ಮತ್ತು ಟಿಟಿ ವಾಹನಕ್ಕೆ ಢಿಕ್ಕಿ ಹೊಡೆದಿದೆ. ಘಟನೆಯಲ್ಲಿ ದ್ವಿಚಕ್ರ ವಾಹನದಲ್ಲಿ ಪ್ರಯಾಣಿಸುತ್ತಿದ್ದ ತಾಯಿ ಮತ್ತು ಮಗು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇನ್ನು ಕುಲದೇವತೆ ದೇವಸ್ಥಾನಕ್ಕೆ ತೆರಳಿ ಮರಳುತ್ತಿದ್ದ ಟಿಟಿ ವಾಹನದಲ್ಲಿದ್ದ 6 ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅಪಘಾತದ ಭೀಕರ ದೃಶ್ಯಾವಳಿ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಘಟನೆಯಲ್ಲಿ ಗಾಯಗೊಂಡವರನ್ನು ತಕ್ಷಣವೇ ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನಾ ಸ್ಥಳಕ್ಕೆ ಜಿಲ್ಲಾ ಮ್ಯಾಜಿಸ್ಟ್ರೇಟ್ ಬೃಂದಾ ದೇವಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಪಘಾತ ಕುರಿತು ತನಿಖೆ ಮುಂದುವರಿದಿದೆ.
ಆಲಿಕಲ್ಲು ಮಳೆ : ಸಿರುಗುಪ್ಪದಲ್ಲಿ 200 ಎಕರೆ ಬೆಳೆ ನಾಶ
ಸಿರುಗುಪ್ಪ: ದೇಶನೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ವಿನಾಯಕ ನಗರ ಕ್ಯಾಂಪ್ನಲ್ಲಿ ಸೋಮವಾರ ಮತ್ತು ಮಂಗಳವಾರ ಸುರಿದ ಧಾರಾಕಾರ ಮಳೆ, ಬಿರುಗಾಳಿ, ಗುಡುಗು–ಸಿಡಿಲು ಹಾಗೂ ಆಲಿಕಲ್ಲು ಮಳೆಯ ಅಬ್ಬರಕ್ಕೆ ಸುಮಾರು 200 ಎಕರೆ ಭತ್ತ, ಕಬ್ಬು, ಬಾಳೆ ಮತ್ತು ತೆಂಗು ಬೆಳೆಗಳು ಭಾರೀ ಹಾನಿಗೊಳಗಾಗಿವೆ. ಮುಖ್ಯವಾಗಿ ಭತ್ತದ ಬೆಳೆ ಸಂಪೂರ್ಣವಾಗಿ ನಾಶವಾಗಿದ್ದು, ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಗಾಳಿಯ ತೀವ್ರತೆಗೆ ಗುಡಿಸಲುಗಳ ತಗಡಿನ ಛಾವಣಿಗಳು ಹಾರಿ ಹೋಗಿದ್ದು, ಮರಗಳು ವಿದ್ಯುತ್ ಕಂಬಗಳ ಮೇಲೆ ಬಿದ್ದ ಪರಿಣಾಮ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಘಟನಾ ಸ್ಥಳಕ್ಕೆ ಗ್ರಾಮ ಆಡಳಿತಾಧಿಕಾರಿ ಎಂ. ರಾಮಪ್ಪ ಹಾಗೂ ಕೃಷಿ ಅಧಿಕಾರಿ ಎ.ಒ. ಪುರುಷೋತ್ತಮ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸರ್ವೆ ಸಂಖ್ಯೆ 416/A12, 416/1B1, 416/1, 417/D, 377/C, 377/B, 370 ಪ್ರದೇಶಗಳಲ್ಲಿ ಬೆಳೆ ಹಾನಿ ಉಂಟಾಗಿದೆ ಎಂದು ತಿಳಿದುಬಂದಿದೆ. ಈ ಸಂದರ್ಭದಲ್ಲಿ ಸಾಮಾಜಿಕ ಕಾರ್ಯಕರ್ತ ಅಬ್ದುಲ್ ನಬಿ ಸೇರಿದಂತೆ ರೈತರಾದ ಯಂಕಣ್ಣ, ಮಂಜುನಾಥ, ಯೋಗೇಶ, ಚಂದ್ರಪ್ಪ, ದೇವೇಂದ್ರ, ವೆಂಕಟರಮಣ, ವೀರೇಶ, ಗೋಪಾಲಕೃಷ್ಣ, ಬಾಬಯ್ಯ, ವೇಣುಗೋಪಾಲ, ಪಾಂಡುರಂಗ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಹಾನಿಗೊಳಗಾದ ಬೆಳೆಗಳಿಗೆ ಸರ್ಕಾರದಿಂದ ತಕ್ಷಣ ಪರಿಹಾರ ನೀಡುವಂತೆ ರೈತರು ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಅಧಿಕಾರಿಗಳು, ರೈತರ ಮನವಿ ಸ್ವೀಕರಿಸಿ ಮೇಲಾಧಿಕಾರಿಗಳಿಗೆ ವರದಿ ಸಲ್ಲಿಸುವುದಾಗಿ ಭರವಸೆ ನೀಡಿದರು.
ವಿಟ್ಲ | ಸಂಭ್ರಮದ ಈದುಲ್ ಫಿತ್ರ್ ಆಚರಣೆ
ವಿಟ್ಲ: ಪಟ್ಟಣದ ಕೇಂದ್ರ ಜುಮಾ ಮಸೀದಿಯಲ್ಲಿ ಶುಕ್ರವಾರ ಈದುಲ್ ಫಿತ್ರ್ ಹಬ್ಬವನ್ನು ಆಚರಿಸಲಾಯಿತು. ಮಸೀದಿ ಖತೀಬ್ ಆರೀಫ್ ಬಾಖವಿ ಅವರು ಪ್ರಾರ್ಥನೆಗೆ ನೇತೃತ್ವ ನೀಡಿ, ಬಳಿಕ ಈದ್ ಸಂದೇಶ ನೀಡಿದರು. “ಸಾಮರಸ್ಯದಿಂದ ಬದುಕಿದಾಗ ದೇವರ ಕೃಪೆ ನಮ್ಮ ಮೇಲೆ ಇರುತ್ತದೆ. ಪರಸ್ಪರ ಸೌಹಾರ್ಧತೆ ಕಾಪಾಡಿಕೊಳ್ಳುವುದು ಮುಖ್ಯ. ಜೀವನದಲ್ಲಿ ನಿಯಂತ್ರಣ ಅತ್ಯಗತ್ಯ. ಹಬ್ಬದ ಸಂಭ್ರಮದ ವೇಳೆ ವಾಹನ ಚಾಲನೆ ಮಾಡುವಾಗ ವಿಶೇಷ ಎಚ್ಚರಿಕೆ ವಹಿಸಬೇಕು ಎಂದು ಅವರು ತಿಳಿಸಿದರು. ಪ್ರಾರ್ಥನೆ ಬಳಿಕ ಮುಸ್ಲಿಂ ಬಾಂಧವರು ಪರಸ್ಪರ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡು ಹಬ್ಬದ ಸಂಭ್ರಮ ಹಂಚಿಕೊಂಡರು. ಇದಲ್ಲದೆ, ವಿಟ್ಲ ಟೌನ್ ಅಶ್ ಅರಿಯ್ಯ ಜುಮಾ ಮಸೀದಿಯಲ್ಲಿ ಖತೀಬ್ ಅಬ್ಬಾಸ್ ಮದನಿ ಅವರ ನೇತೃತ್ವದಲ್ಲಿ ವಿಶೇಷ ಈದ್ ಪ್ರಾರ್ಥನೆ ಸಲ್ಲಿಸಲಾಯಿತು.
Summer Drinks: ಎಳನೀರು ಅಥವಾ ಕಬ್ಬಿನ ರಸ – ಬೇಸಿಗೆಯಲ್ಲಿ ಯಾವುದು ಉತ್ತಮ?
ಬೇಸಿಗೆ ಕಾಲ ಶುರುವಾಗುತ್ತಿದ್ದಂತೆ ಬಿಸಿಲಿನಿಂದ ದೇಹವನ್ನು ತಂಪಾಗಿಡಲು ಮತ್ತು ಹೈಡ್ರೇಟ್(ನೀರಿನಾಂಶ)ನಿಂದ ಇರಲು ಜನರು ವಿವಿಧ ಪಾನಿಯಗಳತ್ತ ಮುಖ ಮಾಡುತ್ತಾರೆ. ವಿಶೇಷವಾಗಿ ಭಾರತದಲ್ಲಿ ಎಳನೀರು ಹಾಗೂ ಕಬ್ಬಿನ ರಸ ಆರೋಗ್ಯಕರ ಮತ್ತು ಜನಪ್ರಿಯ ಪಾನೀಯಗಳಾಗಿವೆ. ಆದರೆ ಈ ಎರಡರಲ್ಲಿ ಯಾವುದು ಆರೋಗ್ಯಕರ? ಯಾವುದು ಹೆಚ್ಚು ದೇಹಕ್ಕೆ ನಿರಿನಾಂಶವನ್ನು ನೀಡುತ್ತದೆ? ಇಲ್ಲಿದೆ ಅದರ ಸಂಪೂರ್ಣ ಮಾಹಿತಿ. ಎಳನೀರು ಪ್ರಕೃತಿ ಹೈಡ್ರೇಶನ್
ದಾವಣಗೆರೆ ಉಪ ಚುನಾವಣೆ: B ಫಾರಂ ಇಲ್ಲದೇ ಸಮರ್ಥ್ ನಾಮಪತ್ರ ಸಲ್ಲಿಕೆ - ನನಗೆ ಮಾಹಿತಿನೇ ಇಲ್ಲವೆಂದ ಡಿಕೆ ಶಿವಕುಮಾರ್!
ದಾವಣಗೆರೆ ದಕ್ಷಿಣ ಕ್ಷೇತ್ರದಿಂದ ಸಚಿವ ಎಸ್ಎಸ್ ಮಲ್ಲಿಕಾರ್ಜುನ ಹಾಗೂ ಸಂಸದೆ ಪ್ರಭಾ ಪುತ್ರ ಸಮರ್ಥ್ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಆದರೆ, ಈ ಬಗ್ಗೆ ಕಾಂಗ್ರೆಸ್ ಪಕ್ಷದ ರಾಜ್ಯಾಧ್ಯಕ್ಷರಿಗೆ ಮಾಹಿತಿ ಇಲ್ಲ. ಈ ಬಗ್ಗೆ ಸ್ವತಃ ಡಿಕೆ ಶಿವಕುಮಾರ್ ಅವರೇ ಪ್ರತಿಕ್ರಿಯೆ ನೀಡಿದ್ದು, ನನಗೆ ಮಾಹಿತಿನೇ ಇಲ್ಲ ಎಂದಿದ್ದಾರೆ. ಇನ್ನು ಅವಸರದಲ್ಲಿ ನಾಮಪತ್ರ ಸಲ್ಲಿಕೆಗೆ ಸಮರ್ಥ್ ಕಾರಣ ನೀಡಿದ್ದಾರೆ.
IMD Weather Forecast: ದೇಶದ ಈ ಭಾಗಗಳಲ್ಲಿ ಮಾರ್ಚ್ ಅಂತ್ಯದಲ್ಲಿ ಭಾರೀ ಮಳೆ ಮುನ್ಸೂಚನೆ: ಐಎಂಡಿ ಎಚ್ಚರಿಕೆ
IMD Weather Forecast: ಇದೀಗ ಬೇಸಿಗೆ ಆರಂಭವಾಗಿದ್ದರೂ ಸಹ ಈ ನಡುವೆಯೇ ದೇಶದ ಹಲವೆಡೆ ಆಲಿಕಲ್ಲು ಮಳೆಯಾಗುತ್ತಿದೆ. ಹಾಗೆಯೇ ಮಾರ್ಚ್ ಅಂತ್ಯದಲ್ಲಿ ಕೆಲವು ಭಾಗಗಳಲ್ಲಿ ಉತ್ತಮ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಹಾಗಾದ್ರೆ, ಎಲ್ಲೆಲ್ಲಿ ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ. ಕಳೆದ ಕೆಲವು ದಿನಗಳಿಂದ ಉತ್ತರ ಭಾರತದಾದ್ಯಂತ ಗುಡುಗು
Tamil Nadu ವಿಧಾನಸಭೆ ಚುನಾವಣೆ | ಎಐಎಡಿಎಂಕೆ ಮೈತ್ರಿ ಸೀಟು ಹಂಚಿಕೆ ನಾಲ್ಕು ದಿನಗಳಲ್ಲಿ ಅಂತಿಮ: ಇ. ಪಳನಿಸ್ವಾಮಿ
ಹೊಸದಿಲ್ಲಿ: ತಮಿಳುನಾಡು ವಿಧಾನಸಭೆ ಚುನಾವಣೆಗೆ ಸಂಬಂಧಿಸಿದಂತೆ ಎಐಎಡಿಎಂಕೆ ನೇತೃತ್ವದ ಮೈತ್ರಿಕೂಟದಲ್ಲಿ ಸೀಟು ಹಂಚಿಕೆ ಮಾತುಕತೆಗಳು ಅಂತಿಮ ಹಂತ ತಲುಪಿದ್ದು, ಇನ್ನೂ ನಾಲ್ಕು ದಿನಗಳಲ್ಲಿ ಪ್ರಕ್ರಿಯೆ ಮುಕ್ತಾಯಗೊಳ್ಳಲಿದೆ ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ಇ. ಪಳನಿಸ್ವಾಮಿ ತಿಳಿಸಿದ್ದಾರೆ. ಶುಕ್ರವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈತ್ರಿಯಲ್ಲಿನ ಪಕ್ಷಗಳ ನಡುವೆ ಯಾವುದೇ ತೊಡಕು ಇಲ್ಲದೆ ಸಮನ್ವಯದ ವಾತಾವರಣದಲ್ಲಿ ಮಾತುಕತೆ ನಡೆಯುತ್ತಿದೆ ಎಂದರು. “ಪರಸ್ಪರ ಹೊಂದಾಣಿಕೆಯನ್ನು ಆಧರಿಸಿ, ಗೆಲುವಿನ ಸಾಧ್ಯತೆ ಇರುವ ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಪ್ರತಿಯೊಂದು ಪಕ್ಷಕ್ಕೂ ಅವಕಾಶ ಕಲ್ಪಿಸುವುದು ನಮ್ಮ ಉದ್ದೇಶ,” ಎಂದು ಹೇಳಿದರು. ಇನ್ನೊಂದು ವಾರದೊಳಗೆ ಪಕ್ಷದ ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡಲಾಗುವುದು ಎಂದೂ ಅವರು ತಿಳಿಸಿದರು. ಎನ್ಡಿಎ ಮೈತ್ರಿಕೂಟಕ್ಕೆ ಹೊಸ ಪಕ್ಷಗಳ ಸೇರ್ಪಡೆಗೆ ಸಂಬಂಧಿಸಿದಂತೆ ಯಾವುದೇ ಸೂಚನೆಗಳಿಲ್ಲ ಎಂದು ಸ್ಪಷ್ಟಪಡಿಸಿದರು. ಸೀಟು ಹಂಚಿಕೆ ಕುರಿತ ಮಾತುಕತೆ ಮುಂದುವರಿಸಲು ಕೇಂದ್ರ ಸಚಿವ ಪಿಯೂಷ್ ಗೋಯಲ್ ಶನಿವಾರ ಚೆನ್ನೈಗೆ ಭೇಟಿ ನೀಡಲಿದ್ದಾರೆ ಎಂದು ಹೇಳಿದರು. ತಮಿಳುನಾಡಿನ ರಾಜಕೀಯ ಪರಿಸ್ಥಿತಿ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೊಂದಿಗೆ ಚರ್ಚೆ ನಡೆಸಿರುವುದಾಗಿ ಪಳನಿಸ್ವಾಮಿ ಹೇಳಿದರು.
ಭಾರತದಲ್ಲಿ ಅಭಿವೃದ್ಧಿಪಡಿಸಿದ DMEಯು, LPG ಅವಲಂಬನೆಯನ್ನು ಕಡಿಮೆ ಮಾಡಲು ಹೇಗೆ ಸಹಾಯ ಮಾಡುತ್ತದೆ?
ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಬಿಕ್ಕಟ್ಟು ಭಾರತದ ಇಂಧನ ಆಮದುಗಳ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ. ಆಮದುಗಳ ಮೇಲೆ ಹೆಚ್ಚಿನ ಅವಲಂಬನೆ ಹೊಂದಿರುವುದರಿಂದ ದೇಶದಲ್ಲಿ ಎಲ್ಪಿಜಿ ಗ್ಯಾಸ್ ಸಿಲಿಂಡರ್ಗಳ ಅಭಾವವೂ ಕಂಡುಬರುತ್ತಿದೆ. 2024ರಲ್ಲಿ ಭಾರತವು ಸುಮಾರು 21 ಮಿಲಿಯನ್ ಟನ್ ಎಲ್ಪಿಜಿಯನ್ನು, ಅಂದರೆ ಒಟ್ಟು ಅಗತ್ಯದ ಸುಮಾರು 65% ಅನ್ನು ಆಮದು ಮಾಡಿಕೊಂಡಿದೆ. ಈ ಬಿಕ್ಕಟ್ಟಿನಿಂದ ಎಲ್ಪಿಜಿ ಬೆಲೆಗಳು ಏರಿಕೆಯಾಗಿದ್ದು, ಸಾಮಾನ್ಯ ಗ್ರಾಹಕರಿಗೆ ಇಂಧನದ ಲಭ್ಯತೆ ಮತ್ತು ಕೈಗೆಟುಕುವಿಕೆ ಮೇಲೆ ಪರಿಣಾಮ ಬೀರಿದೆ. ಇಂತಹ ಸಮಸ್ಯೆಗೆ ಪರಿಹಾರವಾಗಿ ಸ್ಥಳೀಯ ಪರ್ಯಾಯದ ಅಗತ್ಯತೆಯ ನಡುವೆ, ಪುಣೆಯ ಕೌನ್ಸಿಲ್ ಆಫ್ ಸೈಂಟಿಫಿಕ್ ಅಂಡ್ ಇಂಡಸ್ಟ್ರಿಯಲ್ ರಿಸರ್ಚ್ನ ನ್ಯಾಷನಲ್ ಕೆಮಿಕಲ್ ಲ್ಯಾಬೊರೇಟರಿ (CSIR-NCL) ಡೈಮಿಥೈಲ್ ಈಥರ್ (DME) ಅನ್ನು ಅಭಿವೃದ್ಧಿಪಡಿಸಿದೆ. ಇದನ್ನು ಪರ್ಯಾಯ ಶುದ್ಧ ಇಂಧನವಾಗಿ ಎಲ್ಪಿಜಿಯೊಂದಿಗೆ ಮಿಶ್ರಣ ಮಾಡಬಹುದು. CSIR-NCLನ ಕ್ಯಾಟಲಿಸಿಸ್ ವಿಭಾಗದ ಮುಖ್ಯ ವಿಜ್ಞಾನಿ ಟಿ. ರಾಜಾ ಮತ್ತು ಅವರ ತಂಡವು ಡಿಎಂಇ ಉತ್ಪಾದನೆಗೆ ಪೇಟೆಂಟ್ ಹೊಂದಿದ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದೆ. ಇದು ಕಡಿಮೆ ವೆಚ್ಚದ ವೇಗವರ್ಧಕವನ್ನು ಬಳಸಿ ಮೆಥನಾಲ್ ಅನ್ನು ಪರಿಣಾಮಕಾರಿಯಾಗಿ ಡಿಎಂಇಗೆ ಪರಿವರ್ತಿಸುತ್ತದೆ. ಸಂಸ್ಥೆಯ ನಿರ್ದೇಶಕ ಆಶಿಶ್ ಲೆಲೆ ಅವರ ಪ್ರಕಾರ, ಡಿಎಂಇ ಶುದ್ಧವಾಗಿ ಸುಡುವ ಇಂಧನವಾಗಿದ್ದು, ಅಡುಗೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಕ್ರಾಂತಿ ತರಬಲ್ಲದು. ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ ಪರ್ಯಾಯ ಇಂಧನ ಎಲ್ಪಿಜಿ ಮುಖ್ಯವಾಗಿ ಪ್ರೋಪೇನ್ ಮತ್ತು ಬ್ಯುಟೇನ್ನಿಂದ ಕೂಡಿದ್ದು, ಮನೆ ಮತ್ತು ಕೈಗಾರಿಕೆಗಳಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ. ಆದರೆ ಆಮದು ಅವಲಂಬನೆ ಮತ್ತು ಬೆಲೆ ಏರಿಳಿತಗಳು ಸವಾಲುಗಳನ್ನುಂಟುಮಾಡುತ್ತವೆ. ಈ ಹಿನ್ನೆಲೆ ಡಿಎಂಇ ಸ್ಥಳೀಯ, ಪರಿಸರ ಸ್ನೇಹಿ ಮತ್ತು ಸುಸ್ಥಿರ ಪರ್ಯಾಯವಾಗಿ ಹೊರಹೊಮ್ಮಿದೆ. ಡಿಎಂಇ ಅನ್ನು ಮೆಥನಾಲ್, ಕಲ್ಲಿದ್ದಲು, ಜೈವಿಕ ಇಂಧನ ಅಥವಾ ಇಂಗಾಲದ ಡೈಆಕ್ಸೈಡ್ನಂತಹ ಮೂಲಗಳಿಂದ ದೇಶೀಯವಾಗಿ ಉತ್ಪಾದಿಸಬಹುದು. ಇದನ್ನು ಎಲ್ಪಿಜಿಯೊಂದಿಗೆ ಮಿಶ್ರಣ ಮಾಡಿ ಹೆಚ್ಚಿನ ಮಾರ್ಪಾಡುಗಳಿಲ್ಲದೆ ಸ್ಟೌವ್ಗಳಲ್ಲಿ ಬಳಸಬಹುದಾಗಿದೆ. ಈ ಮಿಶ್ರಣವನ್ನು CSIR-NCL ಮತ್ತು ಎಲ್ಪಿಜಿ ಸಲಕರಣೆ ಸಂಶೋಧನಾ ಕೇಂದ್ರದ ಸಹಯೋಗದಲ್ಲಿ ಯಶಸ್ವಿಯಾಗಿ ಪರೀಕ್ಷಿಸಲಾಗಿದೆ. ತಂತ್ರಜ್ಞಾನ ಅಭಿವೃದ್ಧಿ ಹೇಗೆ? ಈ ತಂತ್ರಜ್ಞಾನವನ್ನು ವೇಗವರ್ಧಕ ಮತ್ತು ಎಂಜಿನಿಯರಿಂಗ್ ವಿನ್ಯಾಸ ಎರಡನ್ನೂ ಸುಧಾರಿಸುವ ಮೂಲಕ ಅಭಿವೃದ್ಧಿಪಡಿಸಲಾಗಿದೆ. ತಂಡವು ಮೆಥನಾಲ್ ಅನ್ನು ವೇಗವಾಗಿ ಡಿಎಂಇಗೆ ಪರಿವರ್ತಿಸುವ ವಿಶೇಷ ವೇಗವರ್ಧಕವನ್ನು ರೂಪಿಸಿದೆ. ಜೊತೆಗೆ, 10 ಬಾರ್ ಒತ್ತಡದಲ್ಲಿ ಕಾರ್ಯನಿರ್ವಹಿಸುವ ಪ್ರಕ್ರಿಯೆಯನ್ನು ವಿನ್ಯಾಸಗೊಳಿಸಿದ್ದು, ಡಿಎಂಇ ಅನ್ನು ನೇರವಾಗಿ ಸಿಲಿಂಡರ್ಗಳಲ್ಲಿ ತುಂಬುವ ವ್ಯವಸ್ಥೆ ಸಾದ್ಯವಾಗಿದೆ. ಮೆಥನಾಲ್ ಮೂಲ ಏನು? ಪ್ರಸ್ತುತ ಭಾರತವು ಇರಾನ್ ಸೇರಿದಂತೆ ಕೆಲವು ದೇಶಗಳಿಂದ ಮೆಥನಾಲ್ ಅನ್ನು ಆಮದು ಮಾಡಿಕೊಳ್ಳುತ್ತಿದೆ. ಆದರೆ ಕಲ್ಲಿದ್ದಲು, ಕೃಷಿ ತ್ಯಾಜ್ಯ ಮತ್ತು ಇಂಗಾಲದ ಡೈಆಕ್ಸೈಡ್ನಂತಹ ದೇಶೀಯ ಮೂಲಗಳಿಂದ ಮೆಥನಾಲ್ ಉತ್ಪಾದನೆ ಸಾಧ್ಯವಾಗಿದೆ. ಮೀಥೇನ್ ನೈಸರ್ಗಿಕ ಅನಿಲದ ಮುಖ್ಯ ಅಂಶವಾಗಿದ್ದು, ಇದು ನೇರವಾಗಿ ಡಿಎಂಇ ಉತ್ಪಾದಿಸುವುದಿಲ್ಲ. ಮೊದಲು ಇದನ್ನು ಸಿಂಗ್ಯಾಸ್ (CO ಮತ್ತು H₂) ಆಗಿ, ನಂತರ ಮೆಥನಾಲ್ ಆಗಿ ಪರಿವರ್ತಿಸಿ, ಅಂತಿಮವಾಗಿ ಡಿಎಂಇ ಉತ್ಪಾದಿಸಲಾಗುತ್ತದೆ. ಇದರಿಂದ ಭವಿಷ್ಯದಲ್ಲಿ ಭಾರತ ತನ್ನದೇ ಮೆಥನಾಲ್ ಉತ್ಪಾದಿಸಿ ಆಮದು ಅವಲಂಬನೆಯನ್ನು ಕಡಿಮೆ ಮಾಡಬಹುದು. ಅಲ್ಪಾವಧಿಯಲ್ಲಿ ಎಲ್ಪಿಜಿಯೊಂದಿಗೆ 8% ಡಿಎಂಇ ಮಿಶ್ರಣ ಮಾಡಿದರೂ ಆಮದು ಪ್ರಮಾಣ ಕಡಿಮೆಯಾಗುತ್ತದೆ. ಡಿಎಂಇ ಉತ್ಪಾದನಾ ವೆಚ್ಚವು ಮುಖ್ಯವಾಗಿ ಮೆಥನಾಲ್ ಬೆಲೆಯ ಮೇಲೆ ಅವಲಂಬಿತವಾಗಿದೆ. ಪ್ರಸ್ತುತ ಡಿಎಂಇ ವೆಚ್ಚವು ಮೆಥನಾಲ್ ಬೆಲೆಯ ಸುಮಾರು 1.8 ಪಟ್ಟು ಹೆಚ್ಚಾಗಿದೆ. ಆದರೆ ದೇಶೀಯ ಉತ್ಪಾದನೆ ಹೆಚ್ಚಿದಂತೆ ಇದು ಕಡಿಮೆಯಾಗುವ ಸಾಧ್ಯತೆಯಿದೆ. ಎಲ್ಪಿಜಿ ಆಮದು ಕಡಿಮೆಯಾದರೆ ಭಾರತ ವರ್ಷಕ್ಕೆ ಸುಮಾರು 9,500 ಕೋಟಿ ರೂಪಾಯಿ ವಿದೇಶಿ ವಿನಿಮಯವನ್ನು ಉಳಿಸಬಹುದು. ಜೊತೆಗೆ ಡಿಎಂಇ ಶುದ್ಧ ದಹನದಿಂದ ಮಾಲಿನ್ಯ ಕಡಿಮೆಯಾಗುತ್ತದೆ. ಡಿಎಂಇ ಪ್ರಯೋಜನಗಳು ಡಿಎಂಇ ಕಡಿಮೆ ಮಸಿ, NOx ಮತ್ತು SOx ಹೊರಸೂಸುವ ಶುದ್ಧ ಇಂಧನವಾಗಿದೆ. ಅಡುಗೆ, ವಾಹನ ಇಂಧನ ಮತ್ತು ಕೈಗಾರಿಕಾ ಬಳಕೆಗಳಿಗೆ ಇದು ಸೂಕ್ತವಾಗಿದೆ. ಇದು ಏರೋಸಾಲ್ ಪ್ರೊಪೆಲ್ಲಂಟ್ಗಳಲ್ಲಿ CFCಗಳಿಗೆ ಪರ್ಯಾಯವಾಗಿಯೂ ಬಳಕೆಯಾಗುತ್ತದೆ. ಭಾರತೀಯ ಮಾನದಂಡಗಳ ಬ್ಯೂರೋ (BIS) IS 18698:2024 ಪ್ರಕಾರ ಎಲ್ಪಿಜಿಯೊಂದಿಗೆ 20% ವರೆಗೆ ಡಿಎಂಇ ಮಿಶ್ರಣಕ್ಕೆ ಅನುಮತಿ ನೀಡಲಾಗಿದೆ. 8% ವರೆಗೆ ಮಿಶ್ರಣ ಮಾಡಿದರೆ ಈಗಿನ ಮೂಲಸೌಕರ್ಯದಲ್ಲಿ ಯಾವುದೇ ಬದಲಾವಣೆ ಅಗತ್ಯವಿಲ್ಲ. ಉಜ್ವಲ ಯೋಜನೆಯಡಿಯಲ್ಲಿ 10.5 ಕೋಟಿ ಸಂಪರ್ಕಗಳಿಗೆ 8% ಮಿಶ್ರಣ ಜಾರಿಗೆ ತರಲು ದಿನಕ್ಕೆ ಸುಮಾರು 1,300 ಟನ್ ಡಿಎಂಇ ಉತ್ಪಾದನೆ ಅಗತ್ಯವಿದೆ. ಪ್ರಸ್ತುತ CSIR-NCL ದಿನಕ್ಕೆ 2.5 ಟನ್ ಸಾಮರ್ಥ್ಯದ ಘಟಕ ಅಭಿವೃದ್ಧಿಗೆ ಮುಂದಾಗಿದೆ. ಮುಂದಿನ ಹಂತದಲ್ಲಿ 50–100 ಟನ್ ಸಾಮರ್ಥ್ಯದ ಘಟಕಗಳ ಸ್ಥಾಪನೆಗೆ ಯೋಜನೆ ರೂಪಿಸಲಾಗಿದೆ. ಇದಲ್ಲದೆ, 100% ಎಲ್ಪಿಜಿ, 100% ಡಿಎಂಇ ಅಥವಾ ಮಿಶ್ರಣ ಬಳಕೆಗಾಗಿ ಫ್ಲೆಕ್ಸ್-ಇಂಧನ ಬರ್ನರ್ ಅನ್ನು ಅಭಿವೃದ್ಧಿಪಡಿಸಲಾಗಿದೆ. ಒಟ್ಟಿನಲ್ಲಿ, ಡಿಎಂಇ ವ್ಯಾಪಕ ಬಳಕೆ ಭಾರತದಲ್ಲಿ ಇಂಧನ ಆಮದು ಅವಲಂಬನೆಯನ್ನು ಕಡಿಮೆ ಮಾಡಿ, ಇಂಧನ ಭದ್ರತೆ ಹಾಗೂ ಪರಿಸರ ಸಂರಕ್ಷಣೆಗೆ ನೆರವಾಗಲಿದೆ.
ಮಲೆನಾಡಿನಲ್ಲಿ ಕಾಡಾನೆಗಳ ಹಾವಳಿ : ಬೆಳೆ ಹಾನಿ, ಜನರಲ್ಲಿ ಆತಂಕ
ಆಲ್ದೂರು: ಹಾಂದಿ ಸಮೀಪದ ಸತ್ತಿಹಳ್ಳಿ ಗ್ರಾಮದಲ್ಲಿ ಎರಡು ಕಾಡಾನೆಗಳು ಕಾಣಿಸಿಕೊಂಡಿದ್ದು, ಸ್ಥಳೀಯರಲ್ಲಿ ಆತಂಕ ಉಂಟಾಗಿದೆ. ರಾತ್ರಿ ವೇಳೆ ಕಾಡಾನೆಗಳು ಸಂಚರಿಸುತ್ತಿರುವ ದೃಶ್ಯಗಳು ಸಿಸಿಟಿವಿಯಲ್ಲಿ ದಾಖಲಾಗಿದ್ದು, ಕಾಫಿ ತೋಟದ ಬೆಳೆಗಾರರೊಬ್ಬರ ಕಾಂಪೌಂಡ್ ಗೋಡೆಯನ್ನು ಸಂಪೂರ್ಣವಾಗಿ ಧ್ವಂಸಗೊಳಿಸಿವೆ. ಅಲ್ಲದೆ ಕಾಫಿ ಗಿಡಗಳು ಸೇರಿದಂತೆ ಇತರ ಬೆಳೆಗಳಿಗೂ ಹಾನಿ ಉಂಟಾಗಿದೆ. ಸತ್ತಿಹಳ್ಳಿ ನಿವಾಸಿ ಕೃಷ್ಣ ಅವರ ನರ್ಸರಿಗೂ ನುಗ್ಗಿದ ಆನೆಗಳು ಸಾವಿರಾರು ಗಿಡಗಳನ್ನು ನಾಶಪಡಿಸಿದ್ದು, ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ ಎಂದು ತಿಳಿದುಬಂದಿದೆ. ಘಟನಾ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಆನೆ ಕ್ರಿಯಾಪಡೆ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಾಡಾನೆಗಳ ಚಲನವಲನಗಳ ಮೇಲೆ ನಿಗಾ ವಹಿಸಲಾಗಿದ್ದು, ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕು ಎಂದು ಸೂಚಿಸಲಾಗಿದೆ.
ತುಂಗಭದ್ರಾ ಜಲಾಶಯಕ್ಕೆ ಹೊಸ ಗೇಟ್ ಅಳವಡಿಕೆ ಮೇ ಅಂತ್ಯದೊಳಗೆ ಪೂರ್ಣ : ಶಾಸಕ ಬಾದರ್ಲಿ
ಸಿಂಧನೂರು : ತುಂಗಭದ್ರಾ ಜಲಾಶಯಕ್ಕೆ ಹೊಸ ಗೇಟ್ ಅಳವಡಿಕೆ ಕಾರ್ಯ ಭರದಿಂದ ಸಾಗುತ್ತಿದ್ದು, ಮೇ ಅಂತ್ಯದೊಳಗೆ ಪೂರ್ಣಗೊಳ್ಳುವ ವಿಶ್ವಾಸವಿದೆ ಎಂದು ಶಾಸಕ ಹಂಪನಗೌಡ ಬಾದರ್ಲಿ ತಿಳಿಸಿದ್ದಾರೆ. ನಗರದ ಪತ್ರಿಕಾಭವನದಲ್ಲಿ ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ತುಂಗಭದ್ರಾ ಮಂಡಳಿ ಹಾಗೂ ಮೂರು ರಾಜ್ಯಗಳ ಸಹಯೋಗದಲ್ಲಿ ಈ ಕಾಮಗಾರಿ ನಡೆಯುತ್ತಿದೆ. ಒಟ್ಟು 33 ಗೇಟ್ಗಳಲ್ಲಿ 18 ಗೇಟ್ಗಳು ಶೇ.90 ರಷ್ಟು ಪೂರ್ಣಗೊಂಡಿದ್ದು, ಉಳಿದವುಗಳ ಕಾಮಗಾರಿ ಪ್ರಗತಿಯಲ್ಲಿದೆ. ಏಪ್ರಿಲ್ 15ರೊಳಗೆ ಗೇಟ್ ಅಳವಡಿಕೆ ಪೂರ್ಣಗೊಳ್ಳಲಿದ್ದು, ಮೇ 15ರವರೆಗೆ ಚೈನ್ ಅಳವಡಿಸುವ ಕಾರ್ಯ ನಡೆಯಲಿದೆ ಎಂದರು. ತುಂಗಭದ್ರಾ ಎಡದಂಡೆ ನಾಲೆಯ 13ನೇ ಮೈಲ್ ಬಸ್ಸಾಪುರ ಹತ್ತಿರ ಕಾಲುವೆ ಹೊಡೆದ ಪರಿಣಾಮ ಕೆರೆಗಳಿಗೆ ನೀರು ತುಂಬಿಸುವಲ್ಲಿ ಸಮಸ್ಯೆ ಉಂಟಾಗಿದೆ. ಈಗಾಗಲೇ ಅಧಿಕಾರಿಗಳ ಸಭೆ ನಡೆಸಿ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ. ಮುಖ್ಯ ಕಾಲುವೆ ದುರಸ್ತಿಗೆ ಕನಿಷ್ಠ ಒಂದು ತಿಂಗಳು ಬೇಕಾಗಿದ್ದು, ತಾತ್ಕಾಲಿಕವಾಗಿ ಬಂಡ್ ನಿರ್ಮಿಸಿ 2000 ಕ್ಯೂಸೆಕ್ ನೀರು ಹರಿಸುವ ಮೂಲಕ ಸಮಸ್ಯೆ ಪರಿಹರಿಸಲು ಚರ್ಚೆ ನಡೆದಿದೆ ಎಂದು ಹೇಳಿದರು. ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳದ ಅಧಿಕಾರಿಗಳ ನಿರ್ಲಕ್ಷ್ಯದಿಂದಲೇ ಕಾಲುವೆ ಹಾನಿಯಾಗಿದೆ ಎಂದು ಆರೋಪಿಸಿದ ಅವರು, ಸಂಬಂಧಪಟ್ಟ ಅಧಿಕಾರಿಗಳನ್ನು ತಕ್ಷಣ ಅಮಾನತುಗೊಳಿಸುವಂತೆ ಒತ್ತಾಯಿಸಿದರು. ಸಿಂಧನೂರಿನಲ್ಲಿ ಕೆಲವರು ಏಕಪಾತ್ರಾಭಿನಯದಂತೆ ವರ್ತಿಸುತ್ತಿದ್ದು, ಪ್ರತಿಭಟನೆ ನಡೆಸಿ ಮತ್ತೆ ಖರೀದಿ ಕೇಂದ್ರ ಆರಂಭಿಸಲು ಒತ್ತಾಯಿಸುತ್ತಿದ್ದಾರೆ ಎಂದು ಟೀಕಿಸಿದ ಶಾಸಕ, ಜೋಳ ಖರೀದಿ ಕೇಂದ್ರಗಳಲ್ಲಿ ಇರುವ ಗೊಂದಲಗಳನ್ನು ಸರಿಪಡಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
ಚಿತ್ತಾಪುರ | ಸಿಡಿಲು ಬಡಿದು ಅದಾನಿ ಸಿಮೆಂಟ್ ಕಾರ್ಖಾನೆಗೆ ಹಾನಿ
ಚಿತ್ತಾಪುರ: ತಾಲೂಕಿನ ಇಟಗಾ ಗ್ರಾಮದ ಸಮೀಪದಲ್ಲಿರುವ ಅದಾನಿ ಗ್ರೂಪ್ಗೆ ಸೇರಿದ ಒರಿಯಂಟ್ ಸಿಮೆಂಟ್ ಕಾರ್ಖಾನೆಯಲ್ಲಿ ಇತ್ತೀಚೆಗೆ ಸಿಡಿಲು ಅಪ್ಪಳಿಸಿ ಕಲ್ಲುಪುಡಿ ಸಾಗಿಸುವ ಬೆಲ್ಟ್ಗೆ ಬೆಂಕಿ ಹತ್ತಿದ ಘಟನೆ ನಡೆದಿದೆ. ಸಿಡಿಲಿನ ಅಪ್ಪಳಿಕೆಯಿಂದ ಬೆಲ್ಟ್ ಭಾಗದಲ್ಲಿ ಬೆಂಕಿ ಕಾಣಿಸಿಕೊಂಡು ಕೆಲ ಉಪಕರಣಗಳು ಹಾಗೂ ಯಂತ್ರಗಳಿಗೆ ಹಾನಿಯಾಗಿದೆ. ಇದರಿಂದ ಕಾರ್ಖಾನೆಯ ಕಾರ್ಯಾಚರಣೆಗೆ ತಾತ್ಕಾಲಿಕ ಅಡಚಣೆ ಉಂಟಾಗಿದೆ ಎಂದು ಕಾರ್ಖಾನೆಯ ಮುಖ್ಯ ವ್ಯವಸ್ಥಾಪಕ ಅಜಯ್ ಶರ್ಮಾ ತಿಳಿಸಿದ್ದಾರೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಅಥವಾ ಗಾಯಗಳ ಪ್ರಕರಣಗಳು ಸಂಭವಿಸಿಲ್ಲ. ಆದರೆ ಮಳೆಯ ಪರಿಣಾಮವಾಗಿ ಸುತ್ತಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಿದ್ದು, ಕೆಲ ರೈತರ ಬೆಳೆಗಳಿಗೆ ಹಾನಿಯಾಗಿದೆ ಎಂದು ತಿಳಿದುಬಂದಿದೆ. ಘಟನೆ ಬಳಿಕ ಕಾರ್ಖಾನೆಯಲ್ಲಿ ಸುರಕ್ಷತಾ ಕ್ರಮಗಳನ್ನು ಹೆಚ್ಚಿಸಲಾಗಿದ್ದು, ಹಾನಿ ಪರಿಶೀಲನೆ ಕಾರ್ಯ ಮುಂದುವರಿದಿದೆ.
Summer Camp: ಶೃಂಗೇರಿ ಶಾರದಾ ಪೀಠದಿಂದ ವಟುಗಳಿಗಾಗಿ 15 ದಿನಗಳ ಉಚಿತ 'ಸಂಸ್ಕಾರ' ಬೇಸಿಗೆ ಶಿಬಿರ
ಬೇಸಿಗೆ ರಜೆ ಶುರುವಾಗುತ್ತಿದ್ದಂತೆ ಮಕ್ಕಳಿಗೆ ಸಂಸ್ಕಾರ, ಸಂಸ್ಕೃತಿ ಹಾಗೂ ಸದಾಚಾರವನ್ನು ಕಲಿಸಲು ಪೋಷಕರು ಉತ್ತಮ ಶಿಬಿರಗಳ ಹುಡುಕಾಟದಲ್ಲಿರುತ್ತಾರೆ. ಅಂಥವರಿಗಾಗಿ ದಕ್ಷಿಣಾಮ್ನಾಯ ಶೃಂಗೇರಿ ಶಾರದಾ ಪೀಠದ ಅಧೀನದಲ್ಲಿರುವ 'ಶ್ರೀ ಸದ್ವಿದ್ಯಾ ಸಂಜೀವಿನಿ ಸಂಸ್ಕೃತ ಮಹಾಪಾಠಶಾಲಾ' ವತಿಯಿಂದ ಪರಾಭವ ಸಂವತ್ಸರದ ವಿಶೇಷ 'ಸಂಸ್ಕಾರ' ಬೇಸಿಗೆ ಶಿಬಿರವನ್ನು ಆಯೋಜಿಸಲಾಗಿದೆ. ಇಂದಿನ ಆಧುನಿಕ ಯುಗದಲ್ಲಿ ಮಕ್ಕಳಿಗೆ ಕೇವಲ ಶಾಲಾ ಶಿಕ್ಷಣ ಮಾತ್ರವಲ್ಲದೆ, ನಮ್ಮ
BTSನ ಬಹುನಿರೀಕ್ಷಿತ Arirang ಆಲ್ಬಂ ಮಾ.20ರಂದು ಬಿಡುಗಡೆಯಾಗಿದ್ದು, ಈ ಮೂಲಕ BTS ಸುಮಾರು 4 ವರ್ಷಗಳ ಬಳಿಕ ಕಂಬ್ಯಾಕ್ ಮಾಡಿದ್ದಾರೆ. ಈ ಆಲ್ಬಂನಲ್ಲಿ ಸುಮಾರು 14 ಟ್ರ್ಯಾಕ್ ಗಳಿದ್ದು, ಇದರ ಜೊತೆಗೆ ಆಲ್ಬಂ ನ ಟೈಟಲ್ ಸಾಂಗ್ Swimನ ಮ್ಯೂಸಿಕಲ್ ವಿಡಿಯೋ ಸಹ ಬಿಡುಗಡೆಯಾಗಿದೆ. ಈ ಕುರಿತ ವರದಿ ಇಲ್ಲಿದೆ..
Premium Petrol Price: ಭಾರತದಲ್ಲಿ ಪ್ರೀಮಿಯಂ ಪೆಟ್ರೋಲ್ ದರ ಏರಿಕೆ
Petrol Price: ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆಯಿಂದಾಗಿ ಜಾಗತಿಕ ಇಂಧನ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ. ಇದರ ನೇರ ಪರಿಣಾಮವಾಗಿ ಭಾರತದಲ್ಲಿ ಪ್ರೀಮಿಯಂ ಪೆಟ್ರೋಲ್ ಬೆಲೆಯನ್ನು ಪ್ರತಿ ಲೀಟರ್ಗೆ 2.35 ರೂಪಾಯಿವರೆಗೆ ಏರಿಕೆ ಮಾಡಲಾಗಿದೆ. ಈ ಪರಿಷ್ಕೃತ ದರಗಳು ಇಂದಿನಿಂದ ಮಾರ್ಚ್ 20, 2026ರಿಂದ ಜಾರಿಗೆ ಬಂದಿವೆ ಎಂದು ತಿಳಿದುಬಂದಿದೆ. ಮೂಲಗಳ ಪ್ರಕಾರ, ಭಾರತದ ಪ್ರಮುಖ ತೈಲ ಕಂಪನಿಗಳು ತಮ್ಮ
‘ಧುರಂದರ್ 2’ ಚಿತ್ರ ಭಾರೀ ನಿರಾಸೆ ಮೂಡಿಸಿದೆ, ಥಿಯೇಟರ್ನಲ್ಲಿ ನೋಡಿ ದುಡ್ಡು-ಟೈಮ್ ವೇಸ್ಟ್ ಮಾಡಬೇಡಿ - ರಮ್ಯಾ
‘ಧುರಂದರ್ 2’ ಚಿತ್ರದ ಬಗ್ಗೆ ನಟಿ ರಮ್ಯಾ ನೆಗೆಟಿವ್ ಅಭಿಪ್ರಾಯ ನೀಡಿದ್ದಾರೆ. ‘’ಧುರಂದರ್ 2 ಚಿತ್ರದಲ್ಲಿ ಹಿಂಸಾಚಾರ ಹೆಚ್ಚಿದೆ. ಸುತ್ತಮುತ್ತ ಇರುವ ವಸ್ತುಗಳನ್ನೇ ಆಯುಧವಾಗಿಸಿದ್ದಾರೆ. ಇದು ಥಿಯೇಟರ್ನಲ್ಲಿ ನೋಡುವ ಚಿತ್ರವಲ್ಲ. ನೋಡಲೇಬೇಕು ಅಂತಿದ್ದರೆ ಒಟಿಟಿಯಲ್ಲಿ ನೋಡಿ’’ ಎಂದು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ ರಮ್ಯಾ.
ಎರಡೂ ಉಪ ಚುನಾವಣೆಯಲ್ಲಿ ಬಿಜೆಪಿಗೆ ದೊಡ್ಡ ಅಂತರದ ಗೆಲುವು: ವಿಜಯೇಂದ್ರ ವಿಶ್ವಾಸ
ಕಲಬುರ್ಗಿ: ಉಪ ಚುನಾವಣೆ ನಡೆಯುವ ರಾಜ್ಯದ ಎರಡೂ ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ದೊಡ್ಡ ಅಂತರದಲ್ಲಿ ಗೆಲುವು ಸಾಧಿಸಲಿದೆ ಎಂದು ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಮಾಧ್ಯಮ ಪ್ರತಿನಿಧಿಗಳ ಜೊತೆ ಇಂದು ಮಾತನಾಡಿದ ಅವರು ಪ್ರಶ್ನೆಗೆ ಉತ್ತರ ನೀಡಿದರು. ಬಾಗಲಕೋಟೆ ಮತ್ತು ದಾವಣಗೆರೆ ದಕ್ಷಿಣ ವಿಧಾನಸಭೆ ಕ್ಷೇತ್ರದ ಉಪ ಚುನಾವಣೆಗಳಿಗೆ ಸಂಬಂಧಿಸಿ ನಮ್ಮ ಪಕ್ಷದ ವರಿಷ್ಠರು ಅಭ್ಯರ್ಥಿ ಗಳನ್ನು ಘೋಷಿಸಿದ್ದಾರೆ. ಬಾಗಲಕೋಟೆಗೆ ಮಾಜಿ ಶಾಸಕ ವೀರಣ್ಣ ಚರಂತಿಮಠ್, ದಾವಣಗೆರೆ ದಕ್ಷಿಣಕ್ಕೆ ಶ್ರೀನಿವಾಸ ದಾಸ್ ಕರಿಯಪ್ಪ ಅವರ ಹೆಸರನ್ನು ಘೋಷಿಸಲಾಗಿದೆ ಎಂದು ತಿಳಿಸಿದರು. ಕಾರ್ಯಕರ್ತರು ಬಹಳ ಉತ್ಸಾಹದಲ್ಲಿದ್ದಾರೆ. ಮತದಾರರೂ ಈ ಬಡವರ ವಿರೋಧಿ, ಜನವಿರೋಧಿ ಕಾಂಗ್ರೆಸ್ ಸರಕಾರಕ್ಕೆ ಪಾಠ ಕಲಿಸಲು, ಆ ನಿಟ್ಟಿನಲ್ಲಿ ಬಿಜೆಪಿ ಗೆಲ್ಲಿಸಬೇಕೆಂಬ ಉತ್ಸಾಹದಲ್ಲಿ ಇರುವುದನ್ನು ನಾವು ನೋಡುತ್ತಿದ್ದೇವೆ ಎಂದು ನುಡಿದರು. ಡಿನ್ನರ್ ರಾಜಕಾರಣ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಕಳೆದ ಆರೆಂಟು ತಿಂಗಳುಗಳಿಂದ ಆಡಳಿತ ಪಕ್ಷದ ಆಂತರಿಕ ಕಚ್ಚಾಟ, ಬೇಗುದಿಯನ್ನು ನಾವು ನೋಡುತ್ತಿದ್ದೇವೆ. ಅದು ಕ್ಲೈಮ್ಯಾಕ್ಸ್ ಹಂತಕ್ಕೆ ಬಂದಿದೆ. ಮೊನ್ನೆ ವಿಧಾನ ಸೌಧದಲ್ಲಿ ಆಡಳಿತ ಪಕ್ಷದ ಶಾಸಕರ ಜೊತೆ ಮಾತನಾಡಿದ ವೇಳೆ, ನಿಶ್ಚಿತವಾಗಿ ಒಂದು ಫಲಿತಾಂಶ ಬರಲಿದೆ; ಮುಖ್ಯಮಂತ್ರಿಗಳು ರಾಜೀನಾಮೆ ಕೊಟ್ಟೇ ಕೊಡುತ್ತಾರೆ ಎಂಬ ವಿಶ್ವಾಸದ ಮಾತನ್ನು ಅವರು ಆಡಿದ್ದಾರೆ. ಆದರೆ, ಯಾರು ಮುಖ್ಯಮಂತ್ರಿ ಆಗಲಿದ್ದಾರೆ ಎಂಬುದು ಯಕ್ಷಪ್ರಶ್ನೆ. ಅವರಿಂದಲೇ ಉತ್ತರ ಪಡೆದುಕೊಳ್ಳಬೇಕು ಎಂದು ತಿಳಿಸಿದರು. ಪಂಚಾಯತ್ರಾಜ್ ವ್ಯವಸ್ಥೆಗೆ ಕೊಡಲಿ ಪೆಟ್ಟು ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಚುನಾವಣೆ ಕುರಿತು ಮೊನ್ನೆಯೂ ಸದನದಲ್ಲಿ ಒತ್ತಾಯ ಮಾಡಿದ್ದೇವೆ. ಪಂಚಾಯಿತಿಯಿಂದ ಸಂಸತ್ತಿನವರೆಗೆ ಕಲ್ಯಾಣ ಕರ್ನಾಟಕ ಯಾರ ಹಿಡಿತದಲ್ಲಿದೆ ಎಂಬುದು ನಿಮಗೆ ಗೊತ್ತಿದೆ. ಆದರೂ ಅಲ್ಲಿ ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ; ಮತ್ತೊಂದು ಕಡೆ ಪಂಚಾಯತ್ರಾಜ್ ವ್ಯವಸ್ಥೆಗೆ ಕೊಡಲಿ ಪೆಟ್ಟು ಕೊಡುವ ಕೆಲಸವನ್ನು ಕಾಂಗ್ರೆಸ್ ಮಾಡಿದೆ. ಇದರ ಪರಿಣಾಮ ಏನೆಂದರೆ, ಗ್ರಾಮ ಪಂಚಾಯಿತಿ ಅಥವಾ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸದೇ ಕೇಂದ್ರದಿಂದ ಬರಬೇಕಾದ ಕನಿಷ್ಠ 14-15 ಸಾವಿರ ಕೋಟಿ ರೂ. ಬಂದಿಲ್ಲ. ರಾಜ್ಯ ಸರಕಾರದ ಧೋರಣೆ ರಾಜ್ಯದ ಹಿನ್ನಡೆಗೆ ಕಾರಣ ಆಗಿದೆ ಎಂದು ಸ್ಪಷ್ಟವಾಗಿದೆ ಎಂಬುದಾಗಿ ಇನ್ನೊಂದು ಪ್ರಶ್ನೆಗೆ ಉತ್ತರ ನೀಡಿದರು. ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸದೇ ಇರುವ ಕಾರಣ ಪ್ರತಿವರ್ಷ 14-15 ಸಾವಿರ ಕೋಟಿ ರೂ. ಲುಕ್ಸಾನು ಆಗುತ್ತಿರುವ ಕುರಿತು ಸದನದಲ್ಲಿ ಪ್ರಸ್ತಾಪ ಮಾಡಿದ್ದೇವೆ ಎಂದು ತಿಳಿಸಿದರು. ಈಗಲಾದರೂ ದೇವರು ಬುದ್ಧಿ ಕೊಟ್ಟು ಚುನಾವಣೆಗೆ ರಾಜ್ಯ ಸರಕಾರ ಮುಂದಾಗಲಿ ಎಂದು ಆಶಿಸಿದರು.
ಕೇಂದ್ರೀಯ ವಿದ್ಯಾಲಯ 1ನೇ ತರಗತಿ ಪ್ರವೇಶಾತಿ 2026: ಇಂದಿನಿಂದಲೇ ಅರ್ಜಿ ಸಲ್ಲಿಕೆ ಶುರು, ಪೋಷಕರೇ ಈಗಲೇ ಗಮನಿಸಿ
ಕೇಂದ್ರೀಯ ವಿದ್ಯಾಲಯ ಸಂಘಟನೆಯು (KVS) 2026-27ನೇ ಶೈಕ್ಷಣಿಕ ಸಾಲಿನ 1ನೇ ತರಗತಿ ಮತ್ತು ಬಾಲವಾಟಿಕಾ ಪ್ರವೇಶಾತಿಗೆ ಅಧಿಕೃತ ಅಧಿಸೂಚನೆ ಹೊರಡಿಸಿದ್ದು, ಇಂದಿನಿಂದಲೇ (ಮಾರ್ಚ್ 20, 2026) ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದೆ. ತಮ್ಮ ಮಕ್ಕಳಿಗೆ ಅತ್ಯುತ್ತಮ ಗುಣಮಟ್ಟದ ಶಿಕ್ಷಣ ನೀಡಬೇಕು, ಅವರನ್ನು ಕೇಂದ್ರೀಯ ವಿದ್ಯಾಲಯಕ್ಕೆ ಸೇರಿಸಬೇಕು ಎಂದು ಕನಸು ಕಾಣುತ್ತಿದ್ದ ಲಕ್ಷಾಂತರ ಪೋಷಕರಿಗೆ ಇದು ಅತ್ಯಂತ ಮಹತ್ವದ
ಶಿವಮೊಗ್ಗ|ಖಾಸಗಿ ಬಸ್ - ಆಟೋ ಢಿಕ್ಕಿ: ಯುವಕ ಮೃತ್ಯು; ಮೂವರಿಗೆ ಗಂಭೀರ ಗಾಯ
ಶಿವಮೊಗ್ಗ : ಖಾಸಗಿ ಬಸ್ ಹಾಗೂ ಆಟೋ ಮುಖಾಮುಖಿ ಢಿಕ್ಕಿಯಾದ ಪರಿಣಾಮ ಓರ್ವ ಯುವಕ ಮೃತಪಟ್ಟಿದ್ದು, ಮೂವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ತಾಲೂಕಿನ ಗಾಜನೂರಿನ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಕ್ರಾಸ್ ಬಳಿ ನಡೆದಿದೆ. ಶಿವಮೊಗ್ಗದ ಬುದ್ಧನಗರದ ನಿವಾಸಿ ಪ್ರೇಮ್ ಕುಮಾರ್ (24) ಅಪಘಾತದಲ್ಲಿ ಮೃತಪಟ್ಟ ಯುವಕ ಎಂದು ಗುರುತಿಸಲಾಗಿದೆ. ಆಟೋದಲ್ಲಿದ್ದ ಮನೋಜ್ (21), ಪವನ್ (21) ಹಾಗೂ ಗಿರೀಶ್ (21) ಎಂಬುವವರಿಗೆ ತೀವ್ರ ಗಾಯಗಳಾಗಿದ್ದು, ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ನಾಲ್ವರು ಪ್ರಯಾಣಿಕರಿದ್ದ ಆಟೋ ಶಿವಮೊಗ್ಗದಿಂದ ಸಕ್ರೇಬೈಲು ಕಡೆಗೆ ತೆರಳುತಿತ್ತು. ಈ ವೇಳೆ ತೀರ್ಥಹಳ್ಳಿಯಿಂದ ಶಿವಮೊಗ್ಗಕ್ಕೆ ಬರುತ್ತಿದ್ದ ಖಾಸಗಿ ಬಸ್ ಡಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ಆಟೋ ಸಂಪೂರ್ಣವಾಗಿ ಜಖಂಗೊಂಡಿದೆ. ತುಂಗಾನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರೀಮಿಯಂ ದರ್ಜೆಯ ಪೆಟ್ರೋಲ್ ಬೆಲೆ ಏರಿಕೆ! ಸರ್ಕಾರಿ ಸ್ವಾಮ್ಯದ ತೈಲ ಮಾರುಕಟ್ಟೆ ಕಂಪನಿಗಳು ನಿರ್ಧಾರ
ದೇಶಾದ್ಯಂತ ಪ್ರೀಯಂ ದರ್ಜೆಯ ಪೆಟ್ರೋಲ್ ಬೆಲೆ ಏರಿಕೆ ಮಾಡಲು ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ನಿರ್ಧಾರ ಮಾಡಿವೆ. ಈ ಮೂಲಕ ಯುದ್ಧದ ಎಫೆಕ್ಟ್ ಎಲ್ಪಿಜಿ ಗ್ಯಾಸ್ನಿಂದ ಈಗ ಪೆಟ್ರೋಲ್ ತನಕ ತಟ್ಟಿದೆ. ಪ್ರತಿ ಲೀಟರ್ಗೆ 2.35 ರೂ. ಹೆಚ್ಚಳವಾಗಿದೆ. ಇನ್ನು ಸಾಮಾನ್ಯ ಪೆಟ್ರೋಲ್, ಡೀಸೆಲ್ ದರ ಮಾತ್ರ ಬದಲಾವಣೆಯಾಗಿಲ್ಲ.
ಹಾಸನ: ಅಶ್ಲೀಲ ವೀಡಿಯೋಗಳುಳ್ಳ ಪೆನ್ಡ್ರೈವ್ ಹಂಚಿಕೆ ಪ್ರಕರಣ ರಾಜ್ಯ ರಾಜಕೀಯದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿರುವ ನಡುವೆಯೇ, ಈ ಪ್ರಕರಣದ ಚಾರ್ಜ್ಶೀಟ್ನಲ್ಲಿ ಜೆಡಿಎಸ್ ಕಾರ್ಯಕರ್ತರನ್ನು ಸೇರಿಸಿರುವುದು ರಾಜಕೀಯ ಪಿತೂರಿಯ ಭಾಗವಾಗಿದ್ದು, ಈ ಬಗ್ಗೆ ಹೋರಾಟದ ಹಾದಿ ಹಿಡಿಯಬೇಕಾಗುತ್ತದೆ ಎಂದು ಕ್ಷೇತ್ರದ ಜೆಡಿಎಸ್ ಶಾಸಕ ಎಚ್.ಪಿ. ಸ್ವರೂಪ್ ಪ್ರಕಾಶ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿದ ಅವರು, ಪ್ರಕರಣದ ತನಿಖೆ ನಡೆಸಿದ ವಿಶೇಷ ತನಿಖಾ ತಂಡ (ಎಸ್ಐಟಿ) ಸಂಪೂರ್ಣ ನಿಷ್ಪಕ್ಷಪಾತವಾಗಿ ಕೆಲಸ ಮಾಡಿಲ್ಲ ಎಂಬ ಅನುಮಾನ ವ್ಯಕ್ತಪಡಿಸಿದರು. ಈ ಪ್ರಕರಣವನ್ನು ನ್ಯಾಯಯುತವಾಗಿ ತನಿಖೆ ಮಾಡುವ ಬದಲು, ರಾಜಕೀಯ ಉದ್ದೇಶಗಳಿಗೆ ಬಳಸಿಕೊಳ್ಳಲಾಗಿದೆ. ವಿಶೇಷವಾಗಿ ಜೆಡಿಎಸ್ ಪಕ್ಷವನ್ನು ದುರ್ಬಲಗೊಳಿಸಲು ಹಾಗೂ ನಾಯಕರು ಮತ್ತು ಕಾರ್ಯಕರ್ತರ ನಡುವಿನ ನಂಬಿಕೆಯನ್ನು ಹಾಳುಮಾಡಲು ಪ್ರಯತ್ನ ನಡೆದಿದೆ ಎಂದು ಆರೋಪಿಸಿದರು. ತಮ್ಮ ಹಾಗೂ ಮಾಜಿ ಸಚಿವ ಎಚ್.ಡಿ. ರೇವಣ್ಣ ಅವರ ಕುಟುಂಬದ ನಡುವಿನ ಸಂಬಂಧಕ್ಕೆ ಧಕ್ಕೆ ತರುವ ಉದ್ದೇಶ ದಿಂದಲೇ ಈ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗಿದೆ. “ನಮ್ಮ ನಡುವೆ ಭಿನ್ನಾಭಿಪ್ರಾಯ ಉಂಟುಮಾಡಿ ರಾಜಕೀಯ ಲಾಭ ಪಡೆಯುವ ಹುನ್ನಾರ ಇದರ ಹಿಂದೆ ಇದೆ ಎಂದು ಅವರು ಸ್ಪಷ್ಟಪಡಿಸಿದರು. ಈ ಪ್ರಕರಣದಲ್ಲಿ ಜೆಡಿಎಸ್ ಕಾರ್ಯಕರ್ತರನ್ನು ಯಾವುದೇ ಸ್ಪಷ್ಟ ಸಾಕ್ಷ್ಯವಿಲ್ಲದೆ ಸೇರಿಸಲಾಗಿದೆ ಎಂದು ಹೇಳಿದ ಅವರು, ಇದರಿಂದ ಕಾರ್ಯಕರ್ತರು ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ ಎಂದು ಭರವಸೆ ನೀಡಿದರು. ಜೆಡಿಎಸ್ ಪಕ್ಷ ತನ್ನ ಕಾರ್ಯ ಕರ್ತರ ಬೆಂಬಲಕ್ಕೆ ಸದಾ ನಿಂತಿರುತ್ತದೆ. ಅವರಿಗೆ ಯಾವುದೇ ಅನ್ಯಾಯವಾಗದಂತೆ ಕಾನೂನು ಮಟ್ಟದಲ್ಲಿ ಹೋರಾಟ ನಡೆಸಲಾಗುವುದು ಎಂದು ಹೇಳಿದರು. ಇದೇ ವೇಳೆ, ಪ್ರಕರಣದಲ್ಲಿ ಕೆಲವು ಪ್ರಭಾವಿ ವ್ಯಕ್ತಿಗಳ ಹೆಸರನ್ನು ಉದ್ದೇಶಪೂರ್ವಕವಾಗಿ ಚಾರ್ಜ್ಶೀಟ್ನಿಂದ ಹೊರಗಿಟ್ಟಿರುವ ಬಗ್ಗೆ ಗಂಭೀರ ಆರೋಪ ಮಾಡಿದರು. “ನಿಜವಾದ ಆರೋಪಿಗಳನ್ನು ರಕ್ಷಿಸುವ ಪ್ರಯತ್ನ ನಡೆಯುತ್ತಿದೆ. ಸತ್ಯ ಹೊರಬರುವಂತೆ ನಾವು ನ್ಯಾಯಾಲಯದ ಮೊರೆ ಹೋಗುತ್ತೇವೆ” ಎಂದು ತಿಳಿಸಿದರು. ಈ ಸಂಬಂಧ ಪಕ್ಷದ ವರಿಷ್ಠರೊಂದಿಗೆ ಚರ್ಚಿಸಿ ಮುಂದಿನ ಹೋರಾಟದ ರೂಪರೇಷೆ ತಯಾರಿಸಲಾಗುವುದು ಎಂದು ತಿಳಿಸಿದ ಅವರು, ಅಗತ್ಯವಿದ್ದರೆ ರಾಜ್ಯಮಟ್ಟದಲ್ಲಿ ಹೋರಾಟವನ್ನು ತೀವ್ರಗೊಳಿಸಲಾಗುವುದು ಎಂದರು. ನ್ಯಾಯ ಕ್ಕಾಗಿ ನಾವು ಹಿಂತಿರುಗುವುದಿಲ್ಲ. ಈ ಪ್ರಕರಣದಲ್ಲಿ ಸತ್ಯ ಬಹಿರಂಗವಾಗುವವರೆಗೂ ನಮ್ಮ ಹೋರಾಟ ಮುಂದುವ ರಿಯುತ್ತದೆ. ಕೆಲ ದಿನಗಳಿಂದ ಕೆಲ ಮಾಧ್ಯಮಗಳಲ್ಲಿ ಶಾಸಕ ಸ್ವರೂಪ್ ಪ್ರಕಾಶ್ ಸಂಬಂಧಿ ಇರಬಹುದು ಮತ್ತು ಚಿಕ್ಕಪ್ಪನ ಮಗ ಇರಬಹುದು, ಪಕ್ಷದ ಪ್ರಮುಖರು ಹಾಗೂ ಕಾರ್ಯಕರ್ತರು ಮಾಜಿ ಸಂಸದ ಪ್ರಜ್ವಲ್ ರೇವಣ್ಣ ರವರ ಪೆನ್ ಡ್ರೈವ್ ವಿಚಾರವಾಗಿ ಇವರು ಕೂಡ ಸೇರಿರುವುದಾಗಿ ಹೇಳಿರುವುದು ಖಂಡಿತವಾಗಿಯೂ ಸತ್ಯಕ್ಕೆ ದೂರವಾಗಿದೆ. ಈ ಬಗ್ಗೆ ಸತ್ಯಾಂಶ ಹೊರ ತರುವುದಾಗಿ ಎಸ್.ಐ.ಟಿ. ತನಿಖೆ ಮಾಡಿದ್ದಾರೆ ಈ ತನಿಖೆಯಲ್ಲಿ ಕೆಲ ಪ್ರಮುಖರು, ಪ್ರಭಾವಿ ಮುಖಂಡರನ್ನು ಏಕೆ ಕೈಬಿಡಲಾಗಿದೆ ಎಂಬುದನ್ನು ಪ್ರಶ್ನೆ ಮಾಡುತ್ತೇನೆ. ಎ-1 ಅಪರಾಧಿ ಆಗಿರುವ ನವೀನ್, ಈಗ ಟೆಕ್ನಾಲಜಿ ಮುಂದುವರೆದಿದ್ದು, ಯಾವ ರೀತಿ ಬೇಕಾದರೂ ಮಾಡಬಹುದು, ಸತ್ಯ ಕಂಡುಹಿಡಿಯುವುದಕ್ಕೆ ದೊಡ್ಡ ವಿಚಾರವೇನಲ್ಲ. ನವೀನನ್ನು ಬಂಪರ್ ಪರೀಕ್ಷೆಗೆ ಒಳಪಡಿಸಿದರೇ ಯಾರಾರು ಈ ಪೆನ್ ಡ್ರೈವ್ ಹಂಚಿಕೆ ಹಗರಣದಲ್ಲಿ ಯಾರಾರು ಬಾಗಿಯಾಗಿದ್ದಾರೆ ತಿಳಿಯುತ್ತದೆ. ಎಸ್.ಐ.ಟಿ. ಅವರು ಸರಿಯಾಗಿ ತನಿಖೆ ಮಾಡಿದ್ದರೇ ಸತ್ಯತೆ ಹೊರ ಬರುತಿತ್ತು. ಎಲ್ಲೊ ಒಂದು ಕಡೆ ಈ ಸರಕಾರ ಲೋಕಸಭೆ ಚುನಾವಣೆ ಗೆಲ್ಲಲು ಯಾವ ರೀತಿ ವಾಮ ಮಾರ್ಗ ಹಿಡಿದಿದ್ದಾರೆ ಎಂಬುದು ಎಲ್ಲಾರಿಗೂ ತಿಳಿದಿದೆ. ಈ ಹಗರಣದಲ್ಲಿ ಲೋಕಸಭಾ ಸದಸ್ಯರು ಸೇರಿದಂತೆ ಹಲವಾರು ಪ್ರಮುಖರು ಇದ್ದರು. ಈ ತನಿಖೆ ದಿಕ್ಕು ತಪ್ಪಿಸಲು ಜೆಡಿಎಸ್ ಪಕ್ಷದವರೇ ಈ ಪೆನ್ ಡ್ರೈವ್ ಹಂಚಿಕೆ ಮಾಡಿದ್ದಾರೆ ಎಂದು ಹೇಳಿರುವುದನ್ನು ಎಲ್ಲಾರೂ ಕೂಡ ಖಂಡಿಸುತ್ತೇವೆ. ಪೆನ್ ಡ್ರೈವ್ ವಿಚಾರದಲ್ಲಿ ಸತ್ಯಸತ್ಯತೆ ಹೊರತರಲು ಮುಂದಾಗಬೇಕು. ಈ ಪ್ರಕರಣವು ಈಗಾಗಲೇ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದ್ದು, ಮುಂದಿನ ದಿನಗಳಲ್ಲಿ ಇದರ ಸುತ್ತ ರಾಜಕೀಯ ಚಟುವಟಿಕೆಗಳು ಮತ್ತಷ್ಟು ತೀವ್ರಗೊಳ್ಳುವ ಸಾಧ್ಯತೆ ಇದೆ ಎಂದು ಅವರು ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಜೆಡಿಎಸ್ ತಾಲೂಕು ಅಧ್ಯಕ್ಷ ಎಸ್. ದ್ಯಾವೇಗೌಡ, ಸಮೀರ್, ಮಾಧ್ಯಮ ವಕ್ತಾರರು ಹೊಂಗೆರೆ ರಘು, ಶಿವಣ್ಣ, ಮಧುಪಟೇಲ್, ವಿಜಯಕುಮಾರ್ ಇತರರು ಉಪಸ್ಥಿತರಿದ್ದರು.
ಭಟ್ಕಳ| ನೈಜ ಇಸ್ಲಾಂ ಬೋಧನೆಗಳ ಪಾಲನೆಗೆ ಖ್ವಾಜಾ ಮುಈನುದ್ದೀನ್ ನದ್ವಿ ಕರೆ
ಭಟ್ಕಳ: ಇಸ್ಲಾಂ ಧರ್ಮವು ಕೇವಲ ಆಚರಣೆಗಳಿಗೆ ಸೀಮಿತವಲ್ಲ; ಅದು ಮಾನವೀಯತೆ, ನೈತಿಕತೆ ಮತ್ತು ಶಾಂತಿಯ ಮಾರ್ಗವಾಗಿದ್ದು, ಪ್ರತಿಯೊಬ್ಬ ಮುಸ್ಲಿಂ ತನ್ನ ನಡತೆ ಮತ್ತು ಚಾರಿತ್ರ್ಯದ ಮೂಲಕ ಧರ್ಮದ ಸತ್ಯತೆ ಯನ್ನು ಸಮಾಜಕ್ಕೆ ತೋರಿಸಬೇಕು ಎಂದು ಮರ್ಕಝಿ ಖಲೀಫಾ, ಜಮಾಅತುಲ್ ಮುಸ್ಲಿಮೀನ್ ಪ್ರಧಾನ ಖಾಝಿ ಮೌಲಾನ ಖ್ವಾಜಾ ಮುಈನುದ್ದೀನ್ ಅಕ್ರಮಿ ಮದನಿ ನದ್ವಿ ಕರೆ ನೀಡಿದರು. ನಗರದ ಬಂದರ್ ರಸ್ತೆಯ ಈದ್ಗಾ ಮೈದಾನದಲ್ಲಿ ಶುಕ್ರವಾರ ನಡೆದ ಸಾಮೂಹಿಕ ಪ್ರಾರ್ಥನೆಯ ನಂತರ ಅವರು ಈದ್ ಸಂದೇಶ ನೀಡಿದರು. ಧಾರ್ಮಿಕ ಮಾರ್ಗದಲ್ಲಿ ನಡೆಯುವುದೇ ಶ್ರೇಷ್ಠ ಜೀವನವೆಂದು ತಿಳಿಸಿದ ಅವರು, ನಮಾಜ್, ರೋಜಾ, ಝಕಾತ್ ಮತ್ತು ಹಜ್ ಸೇರಿದಂತೆ ಧಾರ್ಮಿಕ ಕರ್ತವ್ಯಗಳನ್ನು ನಿರ್ಲಕ್ಷಿಸಬಾರದು ಎಂದು ಹೇಳಿದರು. ಧಾರ್ಮಿಕ ವಿಚಾರ ಗಳಿಗೆ ಸಾಮಾಜಿಕ ಜಾಲತಾಣಗಳ ಬದಲು ಉಲೇಮಾಗಳನ್ನು ಸಂಪರ್ಕಿಸಿ ಸರಿಯಾದ ಮಾರ್ಗದರ್ಶನ ಪಡೆಯುವಂತೆ ಸಲಹೆ ನೀಡಿದರು. ಕುಟುಂಬವೇ ಸಮಾಜದ ಅಡಿಪಾಯವಾಗಿದ್ದು, ಪೋಷಕರೊಂದಿಗೆ ಮೃದುವಾಗಿ ನಡೆದುಕೊಳ್ಳುವುದು ಮಹತ್ತರ ಇಬಾದತ್ ಎಂದು ಹೇಳಿದರು. ದಂಪತಿಗಳ ಪರಸ್ಪರ ಹಕ್ಕು-कर्तವ್ಯಗಳನ್ನು ಗೌರವಿಸುವುದು ಕುಟುಂಬ ಶಾಂತಿಗೆ ಅವಶ್ಯಕವೆಂದು ತಿಳಿಸಿದರು. ದೇಶದಲ್ಲಿ ಸಹಬಾಳ್ವೆ ಮತ್ತು ಸೌಹಾರ್ದತೆ ಕಾಪಾಡುವ ಜವಾಬ್ದಾರಿಯನ್ನು ಪ್ರತಿಯೊಬ್ಬರೂ ಹೊತ್ತುಕೊಳ್ಳಬೇಕು. ತಮ್ಮ ನಡವಳಿಕೆಯ ಮೂಲಕವೇ ಇಸ್ಲಾಂನ ಶಾಂತಿ ಸಂದೇಶವನ್ನು ಸಮಾಜಕ್ಕೆ ತಲುಪಿಸಬೇಕು ಎಂದು ಕರೆ ನೀಡಿದರು. ಈ ಸಂದರ್ಭದಲ್ಲಿ ಹಬ್ಬದ ಪ್ರಾರ್ಥನೆಗೆ ಅಗತ್ಯ ಸೌಲಭ್ಯ ಹಾಗೂ ಭದ್ರತೆ ಒದಗಿಸಿದ ಪೊಲೀಸ್ ಇಲಾಖೆ ಮತ್ತು ಅಧಿಕಾರಿಗಳಿಗೆ ಧನ್ಯವಾದ ಸಲ್ಲಿಸಲಾಯಿತು. ಸಾವಿರಾರು ಭಕ್ತರು ಭಾಗವಹಿಸಿ ಪರಸ್ಪರ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು. ವ್ಯಸನಗಳಿಂದ ದೂರವಿರಿ ಮಾದಕ ವಸ್ತುಗಳು ಸಮಾಜಕ್ಕೆ ಮಾರಕವಾಗಿದ್ದು, ಯುವಜನತೆ ಇವುಗಳಿಂದ ದೂರವಿರಬೇಕು ಎಂದು ಖಾಝಿ ಎಚ್ಚರಿಸಿದರು. ಅನ್ಯರ ಸೊತ್ತನ್ನು ಕಬಳಿಸುವುದು ಮತ್ತು ಪಡೆದ ಸಾಲವನ್ನು ಮರಳಿಸದೇ ಇರುವುದು ಇಸ್ಲಾಂ ಬೋಧನೆಗಳಿಗೆ ವಿರುದ್ಧವೆಂದು ಹೇಳಿದರು.
ಇಸ್ರೇಲ್ ನಿಷೇಧದ ಮಧ್ಯೆ ಅಲ್-ಅಕ್ಸಾ ಮಸೀದಿ ಬಳಿ ಪ್ಯಾಲೆಸ್ತೀನ್ ಗುಂಪು ಜಮಾವಣೆ: ಈದ್ ಪ್ರಾರ್ಥನೆ ವೇಳೆ ಘರ್ಷಣೆ!
ಮಧ್ಯಪ್ರಾಚ್ಯದಲ್ಲಿ ಯುದ್ದ ಆರಂಭವಾದಾಗಿನಿಂದ ಇಸ್ರೇಲ್ ಅಲ್-ಅಕ್ಸಾ ಮಸೀದಿಯನ್ನು ಬಂದ್ ಮಾಡಿದ್ದು, ಸಾಮೂಹಿಕ ಪ್ರಾರ್ಥನೆಗಳನ್ನು ನಿಷೇಧಿಸಿದೆ. ಆದಾಗ್ಯೂ, ಪ್ಯಾಲೆಸ್ತೀನಿಯನ್ ಗುಂಪು ಈದ್ ಅಲ್-ಫಿತರ್ ಪ್ರಾರ್ಥನೆ ನಡೆಸುವುದಕ್ಕೆ ಅಲ್ಲಿ ಜಮಾಯಿಸಿದ್ದು, ಇದರಿಂದಾಗಿ ಇಸ್ರೇಲಿ ಪೊಲೀಸರು ಹಾಗೂ ಗುಂಪಿನ ನಡುವೆ ಘರ್ಷಣೆ ಉಂಟಾಗಿದೆ. ಇತ್ತ ಇಸ್ರೇಲ್ ದಾಳಿಗೆ ಇರಾನ್ ನ IRGC ನಾಯಕ ಅಲಿ ಮೊಹಮ್ಮದ್ ನೈನಿಯನ್ನು ಸಾವನ್ನಪ್ಪಿದ್ದು, ಲೆಬನಾನ್ ನಲ್ಲಿ 2 ಸಾವನ್ನಪ್ಪಿದ್ದಾರೆಂದು ವರದಿಯಾಗಿದೆ.
ಜಿಬಿಎ ಪಾಲಿಕೆಗಳ ವಾರ್ಡ್ವಾರು ಮೀಸಲಾತಿಯಲ್ಲಿ ತಾರತಮ್ಯ: ಶಾಸಕ ಶರವಣ ಆರೋಪ
ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯಲ್ಲಿ ಐದು ನಗರ ಪಾಲಿಕೆಗಳ ಚುನಾವಣೆಗಾಗಿ ಸರ್ಕಾರ ಘೋಷಿಸಿದ ವಾರ್ಡ್ವಾರು ಮೀಸಲಾತಿ ಪಟ್ಟಿಯಲ್ಲಿ ತಾರತಮ್ಯವಾಗಿದೆ ಎಂದು ಆರೋಪಿಸಿರುವ ವಿಧಾನ ಪರಿಷತ್ ಶಾಸಕ ಟಿ.ಎ.ಶರವಣ ಅವರು ಅವುಗಳನ್ನು ಸರಿಪಡಿಸಬೇಕು ಎಂದು ಒತ್ತಾಯಿಸಿದರು. ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆದ ಜಿಬಿಎ ವ್ಯಾಪ್ತಿಯ ನಗರ ಪಾಲಿಕೆಗಳ ಬಜೆಟ್ ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಂಡ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಲವು ವಾರ್ಡ್ಗಳ ಮೀಸಲಾತಿಯಲ್ಲಿ ಗೊಂದಲಗಳಿವೆ. ಎಲ್ಲ ವಾರ್ಡ್ಗಳಿಗೂ ನ್ಯಾಯ ಒದಗಿಸುವ ಕೆಲಸವಾಗಬೇಕಿದೆ ಎಂದರು. ಜಿಬಿಎ ಚುನಾವಣೆಗೆ ಸಂಬಂಧಿಸಿದಂತೆಯೂ ಬಿಜೆಪಿ-ಜೆಡಿಎಸ್ ಮೈತ್ರಿ ಆಗಬೇಕು ಎಂಬುದು ನಮ್ಮ ಅಪೇಕ್ಷೆ ಇದೆ. ಆದರೆ, ಮೈತ್ರಿಯ ವಿಚಾರವನ್ನು ವರಿಷ್ಠರು ನಿರ್ಧಾರ ಮಾಡಲಿದ್ದಾರೆ. ಅಲ್ಲಿಯವರೆಗೆ ಜಿಬಿಎ ವ್ಯಾಪ್ತಿಯ 28 ವಿಧಾನ ಸಭಾ ಕ್ಷೇತ್ರದ ಐದು ನಗರ ಪಾಲಿಕೆಗಳ ಒಟ್ಟು 369 ವಾರ್ಡ್ಗಳಲ್ಲಿಯೂ ಜೆಡಿಎಸ್ ಪಕ್ಷ ಬಲಪಡಿಸುವ ಕೆಲಸ ವರಿಷ್ಠರ ಸೂಚನೆಯಂತೆ ನಡೆಯುತ್ತಿದೆ. ಪಕ್ಷದ ವರಿಷ್ಠರು ಜಿಬಿಎ ಚುನಾವಣೆ ಸಂಬಂಧ ಹೈಪವರ್ ಕಮಿಟಿ ರಚಿಸಿ, ನಾನು ಸೇರಿ ಇನ್ನೂ ಹಲವರು ಅದರಲ್ಲಿ ಕೆಲಸ ಮಾಡಲು ಅವಕಾಶ ನೀಡಿದ್ದಾರೆ. ಯಾವಾಗಲೇ ಚುನಾವಣೆ ಬಂದರೂ ಅದನ್ನು ಎದುರಿಸಲು ಸಿದ್ಧರಾಗಿದ್ದೇವೆ ಎಂದರು. ಬೆಂಗಳೂರು ನಗರದ ರಸ್ತೆಗಳಲ್ಲಿ ಗುಂಡಿಗಳು ಹೆಚ್ಚುತ್ತಿವೆ. ಅವುಗಳನ್ನು ಮುಚ್ಚಿ ರಸ್ತೆ, ದುರಸ್ತಿ ಮಾಡಬೇಕು. ಪಾರ್ಕ್ ಗಳಲ್ಲಿ ಬೇರೆ, ಬೇರೆ ರೀತಿಯ ಚಟುವಟಿಕೆ ನಡೆಯುತ್ತಿವೆ. ಹಿರಿಯ ನಾಗರಿಕರು ಮುಜುಗರಪಡುವಂಥ ಪರಿಸ್ಥಿತಿ ಇದೆ. ಅದನ್ನು ತಡೆಯಬೇಕು. ಬೆಂಗಳೂರಿನ ಟ್ರಾಫಿಕ್ ಸಮಸ್ಯೆ ಬಗೆಹರಿಸಲು ಕ್ರಮ ವಹಿಸಬೇಕು. ಫುಟ್ಪಾತ್ನಲ್ಲಿ ಪಾದಚಾರಿಗಳ ಸುಲಭ ಸಂಚಾರಕ್ಕೆ ಅವಕಾಶ ಮಾಡಿಕೊಡಬೇಕು. ಬಿ ಖಾತಾದಿಂದ ಎ ಖಾತಾ ನೀಡುವ ಪ್ರಕ್ರಿಯೆಯಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ. ಆ ಪ್ರಕ್ರಿಯೆ ಪಾರದರ್ಶಕವಾಗಿ ನಡೆಯುತ್ತಿಲ್ಲ. ಅದನ್ನು ಸರಿಪಡಿಸುವ ಕೆಲಸವಾಗಬೇಕು ಎಂದು ಒತ್ತಾಯಿಸಿದ್ದೇನೆ ಎಂದರು. ಜಿಬಿಎ ವ್ಯಾಪ್ತಿಯ ಬೆಂಗಳೂರು ದಕ್ಷಿಣ ನಗರ ಪಾಲಿಕೆ ಬಜೆಟ್ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿದ ವಿಧಾನ ಪರಿಷತ್ ಶಾಸಕ ಟಿ.ಎ.ಶರವಣ ಅವರು ವಿವಿಧ ಸಲಹೆಗಳನ್ನು ನೀಡಿದರು. ಅನುಮೋದಿತ ನಕ್ಷೆ ಉಲ್ಲಂಘಿಸಿ ನಿರ್ಮಾಣ ಆಗಿರುವ ಕಟ್ಟಡಗಳು ಭ್ರಷ್ಟಾಚಾರದ ಮೂಲವಾಗುತ್ತಿವೆ. ಅದನ್ನು ಕಾನೂನು ಬದ್ಧವಾಗಿ ಸರಿಪಡಿಸಲು ಭೂಗಳ್ಳರನ್ನು ಮಟ್ಟ ಹಾಕುವ ರೀತಿಯಲ್ಲಿ ಹಾಗೂ ಎಲ್ಲರೂ ಒಪ್ಪುವಂಥಹ ಪ್ರತ್ಯೇಕ ನೀತಿಯನ್ನು ತರಬೇಕು. ಕಸ ವಿಲೇವಾರಿ ವ್ಯವಸ್ಥೆ ಸರಿಪಡಿಸಲು, ಕಿಯಾಸ್ಕ್ಗಳ ಕಾರ್ಯವೈಖರಿ ಹಾಗೂ ಮೇಲ್ವಿಚಾರಣೆ ಅಗತ್ಯವಿದೆ. ಅದಕ್ಕಾಗಿ ಯೋಜನೆಗಳನ್ನು ಘೋಷಿಸಬೇಕು. ಅಲ್ಲದೇ, ಕಸದ ಬ್ಲಾಕ್ ಸ್ಪಾಟ್ ನಿರ್ಮೂಲನೆಗೆ ಕ್ರಮ ವಹಿಸಬೇಕು. ಇ-ಖಾತಾ ಹಾಗೂ ಆಸ್ತಿ ದಾಖಲೆ ವ್ಯವಸ್ಥೆ ಭ್ರಷ್ಟಾಚಾರದ ಕೂಪವಾಗಿದೆ. ಅದನ್ನು ತಡೆಯಲು, ಪಾರದರ್ಶಕವಾಗಿ ನಡೆಯುವಂತೆ ಮಾಡಲು ನೀತಿಯನ್ನು ಘೋಷಿಸಬೇಕು. ಉದ್ಯಾನವನ ಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ನಿರ್ಮಾಣ ಮಾಡಬೇಕು. ಹಾಗೂ ಹಾಲಿ ಇರುವ ಉದ್ಯಾನಗಳ ನಿರ್ವಹಣೆ ಹಾಗೂ ಅಭಿವೃದ್ಧಿಗೆ ಹೆಚ್ಚಿನ ಅನುದಾನ ಬಿಡುಗಡೆ ಮಾಡಬೇಕು. ಬೆಂಗಳೂರು ದಕ್ಷಿಣದಲ್ಲಿ ತುಂಬಾ ಪಾರ್ಕಿಂಗ್ ಅವ್ಯವಸ್ಥೆ ಇದೆ. ಪಾಲಿಕೆ ವ್ಯಾಪ್ತಿಯ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿ ಇರುವ ಜಾಗಗಳನ್ನು ಗುರುತಿಸಿ ಪಾರ್ಕಿಂಗ್ ವ್ಯವಸ್ಥೆ ಮಾಡಬೇಕು ಮತ್ತು ಇತರ ಮೂಲಭೂತ ಸೌಕರ್ಯ ಕಲ್ಪಿಸಬೇಕು. ಆದರೆ, ಎಲ್ಲೆಡೆ ಪಾರ್ಕಿಂಗ್ ಶುಲ್ಕ ವಸೂಲಿ ಮಾಡಿ, ಜನರ ಕಿಸೆಗೆ ಕತ್ತರಿ ಹಾಕುವ ಕೆಲಸಬಾಗಬಾರದು. ಆಸ್ತಿ ತೆರಿಗೆಯನ್ನು ಯಾವುದೇ ಕಾರಣಕ್ಕೆ ಹೆಚ್ಚಿಸ ಬಾರದರು ಎಂದು ಟಿ.ಎ.ಶರವಣ ಅವರು ಒತ್ತಾಯಿಸಿದರು.
ಕೇರಳ ವಿಧಾನಸಭೆ ಚುನಾವಣೆ ಘೋಷಣೆಯಾಗಿರುವ ಹಿನ್ನೆಲೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ತಮ್ಮ ನಾಮಪತ್ರದೊಂದಿಗೆ ಆಸ್ತಿ ವಿವರಗಳನ್ನು ಸಲ್ಲಿಸಿದ್ದಾರೆ. ಕೇರಳದ ಧರ್ಮಡಂ ವಿಧಾನಸಭಾ ಕ್ಷೇತ್ರದಿಂದ ಸತತ ಮೂರನೇ ಬಾರಿಗೆ ಸ್ಪರ್ಧಿಸುತ್ತಿರುವ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಗುರುವಾರ ತಮ್ಮ ನಾಮಪತ್ರವನ್ನು ಸಲ್ಲಿಸಿದ್ದಾರೆ. ಈ ಸಂದರ್ಭದಲ್ಲಿ ಸಲ್ಲಿಸಿರುವ ಅಫಿಡವಿಟ್ನಲ್ಲಿ ಅವರು ತಮ್ಮ ಒಟ್ಟು ಆಸ್ತಿಯ ಮೌಲ್ಯ 1 ಕೋಟಿ
ಬೆಳಗಾವಿ ಕಾಶ್ಮೀರವಾಗಿ ಬದಲಾಗಿರುವುದೇಕೆ? ಆಲಿಕಲ್ಲು ಮಳೆಯ ಹಿಂದಿನ ಗುಟ್ಟೇನು?
ಭಾರತೀಯ ಹವಾಮಾನ ಇಲಾಖೆಯು ಕರ್ನಾಟಕದ ಉತ್ತರ ಮತ್ತು ದಕ್ಷಿಣ ಭಾಗಗಳಲ್ಲಿ ಮಾರ್ಚ್ 22ರವರೆಗೆ ಸ್ಥಳೀಯವಾಗಿ ಕೆಲವೆಡೆ ಆಲಿಕಲ್ಲು ಮಳೆಗಳು ಮತ್ತು ಬಿರುಗಾಳಿ ಬೀಸುವ ಸಾಧ್ಯತೆಯನ್ನು ಸೂಚಿಸಿದೆ. ಬೆಂಗಳೂರು ಹಾಗೂ ಕರ್ನಾಟಕದ ಉತ್ತರ ಮತ್ತು ಮಧ್ಯಭಾಗದಲ್ಲಿ ಕಳೆದ ಕೆಲವು ದಿನಗಳಿಂದ ಆಲಿಕಲ್ಲು ಮಳೆಯಾಗುತ್ತಿದೆ. ಅನೇಕ ಹವಾಮಾನ ಅಂಶಗಳು ಏಕಕಾಲದಲ್ಲಿ ಹೊಂದಿಕೊಂಡಿರುವುದು ಇದಕ್ಕೆ ಮುಖ್ಯ ಕಾರಣ. ವಾರಗಳ ಕಾಲ ಅಧಿಕ ತಾಪಮಾನದ ನಂತರ ತೀವ್ರವಾದ ಮೇಲ್ಮೈ ತಾಪನವು ಬೆಚ್ಚಗಿನ ಗಾಳಿಯನ್ನು ತ್ವರಿತವಾಗಿ ಮೇಲೇರಿಸುತ್ತದೆ. ಹೀಗಾಗಿ ಗುಡುಗು-ಮೋಡಗಳು ಸೃಷ್ಟಿಯಾಗುತ್ತಿವೆ. ಅದೇ ಸಮಯದಲ್ಲಿ ಬಂಗಾಳ ಕೊಲ್ಲಿ ಹಾಗೂ ಸುತ್ತಲಿನ ಸಮುದ್ರಗಳಿಂದ ತೇವಾಂಶವು ಮೋಡಗಳಿಗೆ ಪೂರಕ ವಾತಾವರಣ ಒದಗಿಸುತ್ತಿದೆ. ಆದರೆ ವಾಯು ಮಾದರಿಗಳು ಎತ್ತರಕ್ಕೆ ಹೋಗುತ್ತಿದ್ದಂತೆ ಬದಲಾಗುತ್ತಿವೆ. ಬಿರುಗಾಳಿಗಳು ಬಲಗೊಂಡು ಹೆಚ್ಚು ಸಂಘಟಿತವಾಗುತ್ತಿವೆ. ಹವಾಮಾನ ತಜ್ಞರು ವಿವರಿಸುವಂತೆ, ಶಾಖ, ತೇವಾಂಶ ಮತ್ತು ಗಾಳಿಯ ತೀಕ್ಷ್ಣತೆಯ ಸಂಯೋಜನೆಯು ಮುಂಗಾರು ಪೂರ್ವ ಋತುವಿನಂತೆ ಇದೆ. ಆದರೆ ಈ ವರ್ಷ ಅವು ಇನ್ನಷ್ಟು ತೀವ್ರವಾಗಿದ್ದು, ಬೆಂಗಳೂರು, ಧಾರವಾಡ ಮತ್ತು ಇತರ ಜಿಲ್ಲೆಗಳಲ್ಲಿ ಸಣ್ಣ ಆದರೆ ಬಲಿಷ್ಠ ಆಲಿಕಲ್ಲು ಮಳೆಯಾಗಿದೆ. ಸ್ಥಳೀಯ ಹವಾಮಾನ ವ್ಯತ್ಯಾಸಗಳ ಕಾರಣದಿಂದ ಒಂದು ಪ್ರದೇಶ ಮಿನಿ ಕಾಶ್ಮೀರದಂತೆ ಕಂಡರೆ, ಮತ್ತೊಂದು ಪ್ರದೇಶದಲ್ಲಿ ಕೇವಲ ಮಳೆಯಷ್ಟೇ ದಾಖಲಾಗಿದೆ. ಆಲಿಕಲ್ಲು ಮಳೆ ಏಕೆ ಆಗುತ್ತದೆ? ಮುಖ್ಯವಾಗಿ ಕರ್ನಾಟಕದಲ್ಲಿ ಮಾರ್ಚ್-ಮೇ ಅವಧಿಯಲ್ಲಿ ಶಾಖದಿಂದ ಗಾಳಿ ಎತ್ತರಕ್ಕೆ ಏರುತ್ತದೆ. ತೇವಾಂಶ ಮೋಡಗಳಿಗೆ ಬೆಂಬಲ ನೀಡುತ್ತದೆ. ಗಾಳಿ ಅವುಗಳನ್ನು ತೀಕ್ಷ್ಣವಾಗಿ ತಿರುಗುವಂತೆ ಮಾಡುತ್ತದೆ. ಮಳೆಯುಂಟಾಗಲು ಅಗತ್ಯವಾದ ಈ ಬೆಳವಣಿಗೆ ಗುಡುಗು ಸಹಿತ ಮಳೆಯನ್ನೂ, ಆಲಿಕಲ್ಲುಗಳ ರೂಪುಗೊಳ್ಳುವುದಕ್ಕೂ ಸೂಕ್ತ ಪರಿಸ್ಥಿತಿಯನ್ನು ಸೃಷ್ಟಿಸುತ್ತದೆ. ಆಲಿಕಲ್ಲು ಮಳೆ ಬೀಳಬೇಕೆಂದರೆ ಮೋಡಗಳು ಸುಮಾರು 10,000 ಅಡಿ ಎತ್ತರಕ್ಕಿಂತ ಮೇಲಿನ ಘನೀಕರಿಸುವ (ಫ್ರೀಜಿಂಗ್) ಗಾಳಿಯ ಮಟ್ಟಕ್ಕೆ ಏರಬೇಕು. ಶಾಖದಿಂದ ಉಂಟಾಗುವ ಮೇಲ್ಮುಖ ಹರಿವು ಮೋಡಗಳನ್ನು ಅತಿ ಎತ್ತರಕ್ಕೆ ದೂಡುತ್ತದೆ. ಮಳೆಹನಿಗಳು ಈ ಘನೀಕರಿಸುವ ಮಟ್ಟ ತಲುಪಿದಾಗ ಮಂಜುಗಡ್ಡೆಯಾಗಿ ಬದಲಾಗುತ್ತವೆ ಮತ್ತು ಆಲಿಕಲ್ಲುಗಳಾಗಿ ಕೆಳಗೆ ಬೀಳುತ್ತವೆ. ಹವಾಮಾನ ಬದಲಾವಣೆಗೆ ಕಾರಣವೇನು? ದಕ್ಷಿಣ ಭಾರತದಲ್ಲಿ ಮಾರ್ಚ್ನಿಂದ ಮೇ ಅವಧಿ ಚಳಿಗಾಲದಿಂದ ಮಳೆಗಾಲಕ್ಕೆ ಬದಲಾಗುವ ಸಂಕ್ರಮಣ ಕಾಲವಾಗಿರುತ್ತದೆ. ಮುಂಗಾರು ತಲುಪುವ ಮೊದಲು ನೆಲದ ತಾಪಮಾನ ಅತ್ಯಧಿಕ ಮಟ್ಟಕ್ಕೆ ಏರುತ್ತದೆ. ಬಂಗಾಳ ಕೊಲ್ಲಿಯಿಂದ ತೇವಾಂಶವೂ ಹೆಚ್ಚಾಗುತ್ತದೆ. ಗಾಳಿಯ ಮಾದರಿಗಳು ಅಸ್ಥಿರಗೊಳ್ಳುತ್ತವೆ. ಈ ಮೂರು ಅಂಶಗಳು ಮುಂಗಾರು ಪೂರ್ವ ತಿಂಗಳಲ್ಲಿ ಒಂದಕ್ಕೊಂದು ಹೊಂದಿಕೊಳ್ಳುತ್ತವೆ. ಮುಂಗಾರು ಪೂರ್ವ ಋತುವಿನಲ್ಲಿ ಒಳನಾಡಿನಲ್ಲಿ ಅನಿಯಮಿತ ಹವಾಮಾನ ಹಾಗೂ ಪ್ರಬಲ ಗುಡುಗು ಸಹಿತ ಮಳೆಯು ಸಾಮಾನ್ಯ. ಶಾಖ ಏರಿಕೆಯಾಗುತ್ತಿದ್ದಂತೆ ಹವಾಮಾನ ಅಸ್ಥಿರಗೊಳ್ಳುತ್ತದೆ. ತೇವಾಂಶ ನಿಧಾನವಾಗಿ ಹೆಚ್ಚಾಗುತ್ತದೆ. ಉತ್ತರದ ಮೈದಾನಗಳಿಂದ ಬರುವ ಪಶ್ಚಿಮ ಗಾಳಿಗಳು ದಕ್ಷಿಣ ಭಾಗಗಳ ಮೇಲೂ ಆಗಾಗ್ಗೆ ಪ್ರಭಾವ ಬೀರುತ್ತವೆ. ಇದರಿಂದ ಮಳೆಯ ತೀವ್ರತೆ ಹೆಚ್ಚಾಗುತ್ತದೆ. ಕೆಲವೆಡೆ ಮಾತ್ರ ಆಲಿಕಲ್ಲು ಮಳೆ ಏಕೆ? ಭಾರತೀಯ ಹವಾಮಾನ ಇಲಾಖೆಯು ಮಾರ್ಚ್ 22ರವರೆಗೆ ಕರ್ನಾಟಕದ ಕೆಲವು ಭಾಗಗಳಲ್ಲಿ ಮಾತ್ರ ಆಲಿಕಲ್ಲು ಮಳೆ ಸಾಧ್ಯತೆಯನ್ನು ಸೂಚಿಸಿದೆ. ಉಪಗ್ರಹ ದತ್ತಾಂಶ ಮತ್ತು ಹವಾಮಾನ ಮಾದರಿಗಳ ಆಧಾರದ ಮೇಲೆ ಈ ಮುನ್ಸೂಚನೆ ನೀಡಲಾಗಿದೆ. ಆಲಿಕಲ್ಲು ಮಳೆ ಕೆಲವು ಪ್ರದೇಶಗಳಿಗೆ ಮಾತ್ರ ಸೀಮಿತವಾಗಿರುವುದು, ಮೇಲ್ಮುಖ ಹರಿವು ಮತ್ತು ಗಾಳಿಯ ತೀಕ್ಷ್ಣತೆ ಸ್ಥಳಾನುಸಾರ ಬದಲಾಗುವುದರಿಂದ. ಉದಾಹರಣೆಗೆ, ಸಂಜಯನಗರದಲ್ಲಿ ಆಲಿಕಲ್ಲು ಮಳೆಯಾದರೆ ಸಮೀಪದ ಪ್ರದೇಶಗಳಲ್ಲಿ ಕೇವಲ ಮಳೆಯಷ್ಟೇ ಆಗಿರಬಹುದು. ಮಾಚಾಪುರ ಗ್ರಾಮವಿಡೀ ಬಿಳಿಯಾಗಿ ಮಾರ್ಪಟ್ಟರೆ, ಹತ್ತಿರದ ಗ್ರಾಮಗಳಲ್ಲಿ ಸಾಮಾನ್ಯ ಮಳೆಯಷ್ಟೇ ಕಂಡುಬರುತ್ತದೆ. ಇದು ಮುಂಗಾರು ಪೂರ್ವ ಗುಡುಗು ಸಹಿತ ಮಳೆಯ ವಿಶೇಷ ಲಕ್ಷಣವಾಗಿದೆ. ಬಹುತೇಕ ಆಲಿಕಲ್ಲು ಮಳೆ ಮಧ್ಯಾಹ್ನದ ನಂತರದಿಂದ ಸಂಜೆ ವೇಳೆಗೆ ಕಂಡುಬರುತ್ತದೆ. ಏಕೆಂದರೆ ಆ ಸಮಯದಲ್ಲಿ ಶಾಖ ಗರಿಷ್ಠವಾಗಿದ್ದು, ಗಾಳಿ ವೇಗವಾಗಿ ಮೇಲೇರಿಸುತ್ತದೆ. ಬೆಳಗಿನ ವೇಳೆಯಲ್ಲಿ ನೆಲ ಹೆಚ್ಚು ಬಿಸಿಯಾಗಿರದ ಕಾರಣ ಆಲಿಕಲ್ಲು ರೂಪುಗೊಳ್ಳುವ ಸಾಧ್ಯತೆ ಕಡಿಮೆ. ರಾತ್ರಿ ವೇಳೆ ಶಾಖ ಇಳಿಕೆಯಾಗಿರುವುದರಿಂದ ಆಲಿಕಲ್ಲು ಮಳೆ ವಿರಳ. ಜಾಗತಿಕ ತಾಪಮಾನ ಏರಿಕೆಯಿಂದ ಸಣ್ಣ ಅವಧಿಯ ಆದರೆ ತೀವ್ರ ಗುಡುಗು ಸಹಿತ ಮಳೆಯು ಹೆಚ್ಚಾಗುವ ಸಾಧ್ಯತೆ ಇದೆ. ಬೆಚ್ಚಗಿನ ವಾತಾವರಣ ಹೆಚ್ಚು ತೇವಾಂಶವನ್ನು ಹಿಡಿದಿಡುತ್ತದೆ. ಇದರಿಂದ ಬಲಿಷ್ಠ ಬಿರುಗಾಳಿಗಳಿಗೆ ಪೂರಕ ವಾತಾವರಣ ನಿರ್ಮಾಣವಾಗುತ್ತದೆ. ಮಾರ್ಚ್ ನಲ್ಲಿ ಘನೀಕರಿಸುವ ಮಟ್ಟವು ಸಾಮಾನ್ಯವಾಗಿ 12,000 ರಿಂದ 15,000 ಅಡಿ ಎತ್ತರದಲ್ಲಿರುತ್ತದೆ. ಬಲಿಷ್ಠ ಮೇಲ್ಮುಖ ಹರಿವು ಮಂಜುಗಡ್ಡೆಯ ಕಣಗಳನ್ನು ಈ ಪದರದಲ್ಲಿ ಅನೇಕ ಬಾರಿ ಮೇಲೇರಿಸುತ್ತದೆ. ಪ್ರತಿಯೊಂದು ಸುತ್ತಿನಲ್ಲಿ ಮತ್ತೊಂದು ಮಂಜುಗಡ್ಡೆ ಪದರ ಸೇರುತ್ತದೆ. ಹೀಗಾಗಿ ಆಲಿಕಲ್ಲುಗಳು ದೊಡ್ಡದಾಗಿ ರೂಪುಗೊಳ್ಳುತ್ತವೆ.
ಬಜೆಟ್ ಬಗ್ಗೆ ಸರ್ಕಾರದಲ್ಲೇ ವಿರೋಧ ವ್ಯಕ್ತವಾಗಿದೆ: ಬಿ.ವೈ ವಿಜಯೇಂದ್ರ ಆರೋಪ
ಕಲಬುರಗಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದ ಬಜೆಟ್ ಬಗ್ಗೆ ಆಡಳಿತ ಪಕ್ಷದಲ್ಲಿಯೇ ವಿರೋಧ ವ್ಯಕ್ತವಾಗಿದ್ದು, ಸರ್ಕಾರದೊಳಗೆ ನಿರುತ್ಸಾಹ ಕಂಡುಬರುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಹೇಳಿದ್ದಾರೆ. ಶುಕ್ರವಾರ ನಗರದಲ್ಲಿ ಸುದ್ದಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿಎಂ ಮಂಡಿಸಿದ 17ನೇ ಬಜೆಟ್ ರಾಜ್ಯದ ಜನರಲ್ಲಿ ಹೆಚ್ಚಿನ ನಿರೀಕ್ಷೆ ಮೂಡಿಸಿತ್ತು. ಆದರೆ, ಆ ನಿರೀಕ್ಷೆಯನ್ನು ಈ ಬಜೆಟ್ ಪೂರೈಸಲು ವಿಫಲವಾಗಿದೆ. ರಾಜ್ಯದ ಅಭಿವೃದ್ಧಿಗೆ ಇದು ಪೂರಕವಾಗಿಲ್ಲದೆ, ರೈತರಿಗೆ ಸಹ ಯಾವುದೇ ವಿಶೇಷ ಅನುಕೂಲ ಕಲ್ಪಿಸಿಲ್ಲ ಎಂದು ಅವರು ಆರೋಪಿಸಿದರು. ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿ ಇನ್ನೂ ಹಿಂದುಳಿದಿದ್ದು, ಈ ಪ್ರದೇಶದ ಮೇಲಿನ ಹಿಡಿತ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಇದ್ದರೂ ಸಮರ್ಪಕ ಅಭಿವೃದ್ಧಿ ಆಗಿಲ್ಲ ಎಂದು ಟೀಕಿಸಿದರು. ಪ್ರಿಯಾಂಕ್ ಖರ್ಗೆ ಅವರು ತಮ್ಮ ಕ್ಷೇತ್ರದ ಸಮಸ್ಯೆಗಳಿಗಿಂತ ಅಂತರಾಷ್ಟ್ರೀಯ ವಿಚಾರಗಳ ಬಗ್ಗೆ ಹೆಚ್ಚು ಮಾತನಾಡುತ್ತಾರೆ ಎಂದು ಆರೋಪಿಸಿದರು. ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ಹೆಚ್ಚಿನ ಗಮನ ಹರಿಸಬೇಕು ಎಂದು ಅವರು ಸಲಹೆ ನೀಡಿದರು. ಇದೇ ವೇಳೆ ಬಾಗಲಕೋಟೆ ಮತ್ತು ದಾವಣಗೆರೆ ದಕ್ಷಿಣ ಕ್ಷೇತ್ರಗಳ ಉಪಚುನಾವಣೆ ಬಗ್ಗೆ ಮಾತನಾಡಿದ ಅವರು, ಎರಡೂ ಕ್ಷೇತ್ರಗಳಿಗೆ ಬಿಜೆಪಿ ಅಭ್ಯರ್ಥಿಗಳನ್ನು ಘೋಷಣೆ ಮಾಡಲಾಗಿದೆ. ಈ ಕ್ಷೇತ್ರಗಳಲ್ಲಿ ಭರ್ಜರಿ ಗೆಲುವು ಸಾಧಿಸುವ ವಿಶ್ವಾಸ ವ್ಯಕ್ತಪಡಿಸಿದರು. ಕಳೆದ ಆರು ರಿಂದ ಎಂಟು ತಿಂಗಳ ಅವಧಿಯಲ್ಲಿ ರಾಜ್ಯ ಸರ್ಕಾರದ ಕಾರ್ಯವೈಖರಿ ಬಗ್ಗೆ ಅಸಮಾಧಾನ ವ್ಯಕ್ತವಾಗಿದ್ದು, ಸರ್ಕಾರದೊಳಗಿನ ಕುರ್ಚಿ ಕಿತ್ತಾಟ ಮುಂದುವರಿದಿದೆ ಎಂದು ವಿಜಯೇಂದ್ರ ಕುಟುಕಿದರು.
13 ಸಾವಿರದೊಳಗೆ ಬಂದ ಪ್ರತಿ ಗ್ರಾಂ ಆಭರಣ ಚಿನ್ನದ ಬೆಲೆ; ಇಂದಿನ ದರವೆಷ್ಟು?
ದುಬಾರಿ ಡಾಲರ್ ಎದುರು ಹೂಡಿಕೆದಾರರು ಚಿನ್ನ ಮತ್ತು ಬೆಳ್ಳಿ ಖರೀದಿಗೆ ಹಿಂದೇಟು ಹಾಕುತ್ತಿದ್ದಾರೆ. ಜನವರಿಯಲ್ಲಿ ಅತ್ಯಧಿಕ ಏರಿಕೆ ಕಂಡಿದ್ದ ಚಿನ್ನದ ಬೆಲೆ ಬಳಿಕ ಕುಸಿತ ಕಂಡು, ಫೆಬ್ರವರಿ ತಿಂಗಳಿಡೀ ಸ್ಥಿರವಾಗಿತ್ತು. ಆದರೆ ಮಾರ್ಚ್ ತಿಂಗಳಲ್ಲಿ ಮತ್ತೆ ಕುಸಿತದ ಹಾದಿಯಲ್ಲಿದೆ. ಕಳೆದ ವಾರ ಗುರುವಾರ, ಶುಕ್ರವಾರ ಮತ್ತು ಶನಿವಾರ ಸತತ ಕುಸಿತ ಕಂಡ ಬಳಿಕ ಶುದ್ಧ ಚಿನ್ನದ ಬೆಲೆ 15 ಸಾವಿರದೊಳಗೆ ಬಂದು ನಿಂತಿದೆ. ಸೋಮವಾರವೂ ತೀವ್ರ ಕುಸಿತ ಕಂಡಿದ್ದ ಬೆಲೆ, ಬುಧವಾರ ಮತ್ತು ಗುರುವಾರವೂ ಇಳಿಕೆಯನ್ನು ಮುಂದುವರಿಸಿದೆ. ಗುರುವಾರ ಶೇ.5ರಷ್ಟು ಕುಸಿತ ಕಂಡಿದ್ದ ಚಿನ್ನದ ಬೆಲೆ, ಶುಕ್ರವಾರ ಶೇ.2ರಷ್ಟು ಏರಿಕೆ ಕಂಡಿದೆ. ಆಭರಣ ಚಿನ್ನದ ಬೆಲೆಯೂ ಸತತ ಕುಸಿತದಲ್ಲಿದ್ದು, ಜನವರಿಯಲ್ಲಿ ಪ್ರತಿ ಗ್ರಾಂಗೆ 16 ಸಾವಿರದ ಮೇಲೆ ಇದ್ದ ಬೆಲೆ ಇದೀಗ 13 ಸಾವಿರದೊಳಗೆ ಬಂದಿದೆ. ಎರಡು ತಿಂಗಳಲ್ಲಿ ಪ್ರತಿ ಗ್ರಾಂಗೆ ಮೂರು ಸಾವಿರಕ್ಕೂ ಹೆಚ್ಚು ಕುಸಿತ ಕಂಡಿದೆ. ಅಮೆರಿಕದ ಫೆಡರಲ್ ರಿಸರ್ವ್ ಕೈಗೊಂಡ ನಿರ್ಧಾರಗಳಿಂದ ಚಿನ್ನ-ಬೆಳ್ಳಿ ದರದಲ್ಲಿ ಏರಿಳಿತ ಕಾಣುತ್ತಿದೆ. ಜೊತೆಗೆ ಪ್ರಬಲ ಡಾಲರ್ ಎದುರು ಚಿನ್ನ-ಬೆಳ್ಳಿ ಖರೀದಿ ದುಬಾರಿಯಾಗಿದೆ. ಫೆಡರಲ್ ರಿಸರ್ವ್ ದರ ಕಡಿತ ಮಾಡುವ ನಿರೀಕ್ಷೆಯಿಲ್ಲದಿರುವುದು ಗುರುವಾರದ ಶೇ.5ರಷ್ಟು ಕುಸಿತಕ್ಕೆ ಪ್ರಮುಖ ಕಾರಣವಾಗಿದೆ. ಇಂದಿನ ಚಿನ್ನದ ದರ ಹೇಗಿದೆ? ಮಾರ್ಚ್ 20ರಂದು ಶುಕ್ರವಾರ ಬೆಂಗಳೂರಿನ ಮಾರುಕಟ್ಟೆಯಲ್ಲಿ 24 ಕ್ಯಾರೆಟ್ ಶುದ್ಧ ಚಿನ್ನದ ಬೆಲೆ, ಗುರುವಾರದ ಸಂಜೆಯ ದರಕ್ಕೆ ಹೋಲಿಸಿದರೆ ಪ್ರತಿ ಗ್ರಾಂಗೆ 65 ರೂ. ಏರಿಕೆಯಾಗಿ, 10 ಗ್ರಾಂಗೆ 1,50,930 ರೂ.ಗೆ ತಲುಪಿದೆ. 22 ಕ್ಯಾರೆಟ್ ಆಭರಣ ಚಿನ್ನದ ಬೆಲೆ ಪ್ರತಿ ಗ್ರಾಂಗೆ 60 ರೂ. ಏರಿಕೆಯಾಗಿ 10 ಗ್ರಾಂಗೆ 1,38,350 ರೂ.ಗೆ ತಲುಪಿದೆ. 18 ಕ್ಯಾರೆಟ್ ಚಿನ್ನವು ಪ್ರತಿ ಗ್ರಾಂಗೆ 49 ರೂ. ಏರಿಕೆಯಾಗಿ 10 ಗ್ರಾಂಗೆ 1,13,200 ರೂ.ಗೆ ಏರಿದೆ. ಮಂಗಳೂರಿನಲ್ಲಿ ಚಿನ್ನದ ದರ ಎಷ್ಟು? ಮಾರ್ಚ್ 20ರಂದು ಶುಕ್ರವಾರ ಬೆಳಿಗ್ಗೆ 11 ಗಂಟೆಯ ವಹಿವಾಟಿನಲ್ಲಿ ಮಂಗಳೂರಿನಲ್ಲಿ ಚಿನ್ನದ ದರ ಅಲ್ಪ ಏರಿಕೆ ಕಂಡಿದೆ. ಪ್ರತಿ ಗ್ರಾಂ 24 ಕ್ಯಾರೆಟ್ ಚಿನ್ನದ ದರ 15,093 ರೂ. (+65), 22 ಕ್ಯಾರೆಟ್ ಚಿನ್ನ 13,835 ರೂ. (+60), 18 ಕ್ಯಾರೆಟ್ ಚಿನ್ನ 11,320 ರೂ. (+49) ಆಗಿದೆ. ಸತತ ಕುಸಿತ ಕಾಣುತ್ತಿರುವ ಬೆಳ್ಳಿ ಮಾರ್ಚ್ ಆರಂಭದಲ್ಲಿ ಸ್ಥಿರವಾಗಿದ್ದ ಬೆಳ್ಳಿ ದರ, ಮಾರ್ಚ್ 9ರಿಂದ ಕುಸಿತದ ಹಾದಿಯಲ್ಲಿದೆ. ಮಾರ್ಚ್ 10ರಂದು ಪ್ರತಿ ಗ್ರಾಂಗೆ 10 ರೂ. ಏರಿಕೆಯಾಗಿ ಪ್ರತಿ ಕೆಜಿಗೆ 2,90,000 ರೂ.ಗೆ ಏರಿಕೆಯಾದುದು ಹೊರತುಪಡಿಸಿ, ಬಳಿಕ ದಿನನಿತ್ಯ ಕುಸಿತ ಕಂಡಿದೆ. ಕಳೆದ ವಾರ ಗುರುವಾರ ಪ್ರತಿ ಗ್ರಾಂಗೆ 10 ರೂ. ಇಳಿದು 2,80,000 ರೂ.ಗೆ ತಲುಪಿದೆ. ಶನಿವಾರ 5 ರೂ. ಇಳಿದು 2,75,000 ರೂ.ಗೆ ಕುಸಿದಿದೆ. ಮಾರ್ಚ್ 16ರಂದು ಮತ್ತೆ 5 ರೂ. ಇಳಿದು 2,70,000 ರೂ.ಗೆ ತಲುಪಿದರೆ, ಮಂಗಳವಾರ 5 ರೂ. ಏರಿಕೆಯಾಗಿ 2,75,000 ರೂ.ಗೆ ಏರಿದೆ. ಬುಧವಾರ 10 ರೂ. ಕುಸಿತ, ಗುರುವಾರ ಮತ್ತು ಶುಕ್ರವಾರ ತಲಾ 5 ರೂ. ಕುಸಿತ ಕಂಡು ಪ್ರತಿ ಕೆಜಿಗೆ 2,55,000 ರೂ.ಗೆ ಇಳಿದಿದೆ. ವಿವಿಧ ನಗರಗಳಲ್ಲಿ 1 ಗ್ರಾಂ ಚಿನ್ನದ ದರ (ಬೆಳಗಿನ ವಹಿವಾಟು) ದಿಲ್ಲಿ: 24 ಕ್ಯಾರೆಟ್ 15,108 ರೂ. (+65), 22 ಕ್ಯಾರೆಟ್ 13,850 ರೂ. (+60) ಮುಂಬೈ: 24 ಕ್ಯಾರೆಟ್ 15,093 ರೂ. (+65), 22 ಕ್ಯಾರೆಟ್ 13,835 ರೂ. (+60) ಅಹಮದಾಬಾದ್: 24 ಕ್ಯಾರೆಟ್ 15,098 ರೂ. (+65), 22 ಕ್ಯಾರೆಟ್ 13,840 ರೂ. (+60) ಚೆನ್ನೈ: 24 ಕ್ಯಾರೆಟ್ 15,163 ರೂ. (-1), 22 ಕ್ಯಾರೆಟ್ 13,899 ರೂ. (-1) ಕೋಲ್ಕತ್ತಾ: 24 ಕ್ಯಾರೆಟ್ 15,093 ರೂ. (+65), 22 ಕ್ಯಾರೆಟ್ 13,835 ರೂ. (+60) ಹೈದರಾಬಾದ್: 24 ಕ್ಯಾರೆಟ್ 15,093 ರೂ. (+65), 22 ಕ್ಯಾರೆಟ್ 13,835 ರೂ. (+60) ಜೈಪುರ: 24 ಕ್ಯಾರೆಟ್ 15,108 ರೂ. (+65), 22 ಕ್ಯಾರೆಟ್ 13,850 ರೂ. (+60) ಚಂಡೀಗಢ: 24 ಕ್ಯಾರೆಟ್ 15,108 ರೂ. (+65), 22 ಕ್ಯಾರೆಟ್ 13,850 ರೂ. (+60) ಲಖನೌ: 24 ಕ್ಯಾರೆಟ್ 15,108 ರೂ. (+65), 22 ಕ್ಯಾರೆಟ್ 13,850 ರೂ. (+60)
ರೈಲ್ವೇ ಬೋರ್ಡ್ನಿಂದ ಕರ್ನಾಟಕದ 19 ವಿಶೇಷ ರೈಲುಗಳು ಖಾಯಂ; ಟಿಕೆಟ್ ದರವು ಇಳಿಕೆ! 15 ಜಿಲ್ಲೆಗೆ ಅನುಕೂಲ
ರಾಜ್ಯದ ರೈಲು ಪ್ರಯಾಣಿಕರಿಗೆ ಗುಡ್ನ್ಯೂಸ್ ಸಿಕ್ಕಿದೆ. 6 ವಿಶೇಷ ಎಕ್ಸ್ಪ್ರೆಸ್ ಸೇರಿದಂತೆ ಕರ್ನಾಟಕದಲ್ಲಿ ಸಂಚರಿಸುವ 19 ವಿಶೇಷ ರೈಲುಗಳನ್ನು ರೈಲ್ವೆ ಮಂಡಳಿಯು ಖಾಯಂ ಮಾಡಿದೆ. ಈ ಮೂಲಕ ಪ್ರಯಾಣಿಕರ ಟಿಕೆಟ್ ದರವು ಇಳಿಕೆಯಾಗಲಿದ್ದು, ರೈಲು ರದ್ದಾಗುತ್ತದೆ ಎಂಬ ಭಯ ಇಲ್ಲದೇ ಮುಂಗಡ ಬುಕ್ಕಿಂಗ್ ಮಾಡಿಕೊಂಡು ಅರಾಮದಾಯಕವಾಗಿ ಸಂಚಾರ ನಡೆಸಬಹುದು. ಯಾವೆಲ್ಲಾ ರೈಲು ಖಾಯಂ ಎಂಬ ಸಂಪೂರ್ಣ ಪಟ್ಟಿ ಇಲ್ಲಿದೆ.
15ರ ಬಾಲಕನ AI ಕಂಪೆನಿ: 38ರ ವ್ಯಕ್ತಿಗೆ ಮೊದಲ ಉದ್ಯೋಗ!
15ರ ಬಾಲಕನ AI ಕಂಪೆನಿ: 38ರ ವ್ಯಕ್ತಿಗೆ ಮೊದಲ ಉದ್ಯೋಗ! ಹೊಸದಿಲ್ಲಿ: ಸಾಧನೆಗೆ ವಯಸ್ಸಿನ ಅಡ್ಡಿಯಿಲ್ಲ ಎಂಬ ಮಾತನ್ನು ಸಾಬೀತುಪಡಿಸುವ ಘಟನೆಯೊಂದು ನಡೆದಿದೆ. 15 ವರ್ಷದ ಥಾಮಸ್ ಗುತ್ರಿ ಕೃತಕ ಬುದ್ಧಿಮತ್ತೆ (ಎಐ) ಕ್ಷೇತ್ರದಲ್ಲಿ ‘ರನ್ ವೈಸ್’ ಎಂಬ ಸಂಸ್ಥೆಯನ್ನು ಸ್ಥಾಪಿಸಿ ಗಮನ ಸೆಳೆದಿದ್ದಾನೆ. ಈತ ತನ್ನ ಸಂಸ್ಥೆಗೆ 38 ವರ್ಷದ ವ್ಯಕ್ತಿಯೊಬ್ಬರನ್ನು ಮೊದಲ ಉದ್ಯೋಗಿಯಾಗಿ ನೇಮಕ ಮಾಡಿಕೊಂಡಿರುವುದು ವಿಶೇಷವಾಗಿದೆ. ಈ ವಿಚಾರ ಸಾಮಾಜಿಕ ಮಾಧ್ಯಮದ ಪೋಸ್ಟ್ ಮೂಲಕ ಬೆಳಕಿಗೆ ಬಂದಿದೆ. “ನಾನು ಈಗಷ್ಟೇ ನನ್ನ ಮೊದಲ ಉದ್ಯೋಗಿಯನ್ನು ನೇಮಕ ಮಾಡಿಕೊಂಡೆ. ಅವರಿಗೆ 38 ವರ್ಷ, ನನಗೆ 15 ವರ್ಷ” ಎಂದು ಥಾಮಸ್ ಗುತ್ರಿ ಬರೆದುಕೊಂಡಿದ್ದಾನೆ. ಜೊತೆಗೆ, “ಅಂತರ್ಜಾಲವು ಸಾಂಪ್ರದಾಯಿಕ ವೃತ್ತಿಪರ ಏಣಿಯನ್ನು ಮುರಿದಿದೆ” ಎಂಬ ಅಭಿಪ್ರಾಯವನ್ನೂ ವ್ಯಕ್ತಪಡಿಸಿದ್ದಾನೆ. ಮಾಲಕ ಮತ್ತು ಉದ್ಯೋಗಿಯ ನಡುವಿನ ವಯಸ್ಸಿನ ದೊಡ್ಡ ಅಂತರವೇ ಈ ಘಟನೆಗೆ ಹೆಚ್ಚು ಗಮನ ಸೆಳೆಯುವಂತೆ ಮಾಡಿದೆ. ಡಿಜಿಟಲ್ ಯುಗದಲ್ಲಿ ವಯಸ್ಸಿಗಿಂತ ಸಾಮರ್ಥ್ಯ, ಕೌಶಲ್ಯ ಹಾಗೂ ಉತ್ಪಾದಕತೆಯೇ ಪ್ರಮುಖ ಎಂಬುದನ್ನು ಈ ಬೆಳವಣಿಗೆ ತೋರಿಸಿದೆ. ಹಿರಿತನ, ಅನುಭವ ಹಾಗೂ ಸಾಂಪ್ರದಾಯಿಕ ಅಧಿಕಾರದ ಆಧಾರದ ಮೇಲೆ ರೂಪುಗೊಂಡಿದ್ದ ವೃತ್ತಿಪರ ವ್ಯವಸ್ಥೆಯಲ್ಲಿ ಬದಲಾವಣೆಗಳು ನಡೆಯುತ್ತಿರುವ ಲಕ್ಷಣಗಳು ಇದರಿಂದ ಗೋಚರಿಸುತ್ತಿವೆ. ಸಾಂಪ್ರದಾಯಿಕ, ರೇಖಾತ್ಮಕ ವೃತ್ತಿಪರ ಪ್ರಗತಿ ಮಾದರಿ ನಿಧಾನವಾಗಿ ಅಸ್ತಮಿಸುತ್ತಿದೆ ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ. ಈ ವಿಷಯಕ್ಕೆ ಸಾಮಾಜಿಕ ಮಾಧ್ಯಮಗಳಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಲವರು ಯುವ ಉದ್ಯಮಿಯ ಸಾಧನೆಯನ್ನು ಮೆಚ್ಚಿ ಬೆಂಬಲ ಸೂಚಿಸಿದ್ದರೆ, ಇನ್ನೂ ಕೆಲವರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ವಯಸ್ಸಿಗಿಂತ ಸಾಮರ್ಥ್ಯ ಮತ್ತು ಉತ್ಪಾದಕತೆಯೇ ಮುಖ್ಯ ಎಂಬ ಅಭಿಪ್ರಾಯವನ್ನು ಹಲವರು ವ್ಯಕ್ತಪಡಿಸಿದ್ದಾರೆ. “ವಯಸ್ಸು ಕೇವಲ ಅನುಭವದ ಛಾಯೆ ಮಾತ್ರ; ಅಂತರ್ಜಾಲವು ಅದನ್ನು ಅಪ್ರಸ್ತುತಗೊಳಿಸಿದೆ” ಎಂದು ಬಳಕೆದಾರರೊಬ್ಬರು ಪ್ರತಿಕ್ರಿಯಿಸಿದ್ದಾರೆ.
ಮಾರ್ಚ್ 20ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ
Petrol, Diesel Price: ಶಕ್ತಿಯ ಮೂಲಗಳು ಎನಿಸಿಕೊಂಡಿರುವ ಪೆಟ್ರೋಲ್ ಮತ್ತು ಡೀಸೆಲ್ ಇಂಧನ ಅತ್ಯವಶ್ಯಕವಾಗಿ ಬೇಕಾಗುವ ಸಂಪನ್ಮೂಲಗಳಾಗಿವೆ. ಹಾಗಾದ್ರೆ, ಬೆಂಗಳೂರು ಸೇರಿದಂತೆ ಕರ್ನಾಟಕದ ಇತರ ಜಿಲ್ಲೆಗಳಲ್ಲಿ ಇಂದು (ಮಾರ್ಚ್ 20) ಲೀಟರ್ ಪೆಟ್ರೋಲ್, ಡೀಸೆಲ್ ಬೆಲೆ ಎಷ್ಟಿದೆ ಎಂದು ಇಲ್ಲಿ ತಿಳಿಯಿರಿ. ಇತ್ತೀಚಿನ ದಿನಗಳಲ್ಲಿ ಎಲೆಕ್ಟ್ರಿಕ್ ವಾಹನಗಳು ಹೆಚ್ಚಾಗುತ್ತಿವೆ. ಹಾಗಂತ ಇಂಧನದ ಬೇಡಿಕೆ ಏನು ಕಡಿಮೆ ಆಗಿಲ್ಲ.
ಕಳೆದ ಮೂರ್ನಾಲ್ಕು ದಿನ ಸುರಿದ ಆಲಿಕಲ್ಲು ಮಳೆಯ ಅಬ್ಬರ, ಗುಡು ಸಿಡಿಲು , ಬಿರುಗಾಳಿ ಭಾನುವಾರದಿಂದ ತಗ್ಗಲಿದೆ. ಸೋಮವಾರದಿಂದ ಒಣಹವೆ ಇರಲಿದ್ದು, ಬಿಸಿಲಿನ ಪ್ರಖರತೆ ಹೆಚ್ಚಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಕಾಂಗ್ರೆಸ್ ಆಡಳಿತವಿದ್ದಾಗ ವಿದೇಶಗಳ ಜೊತೆ ಸಮತೋಲನ ಸಾಧಿಸುವ ನೀತಿ ಇತ್ತು. ಆದರೆ ಈಗ ಟ್ರಂಪ್ ಚುನಾವಣೆಗೂ ಪ್ರಚಾರಕ್ಕೆ ಹೋಗಿ, ಅತಿಯಾದ ಸ್ನೇಹ ಅಮೆರಿಕದ ಜೊತೆ ತೋರಿಸಿದ್ದರಿಂದ ಭಾರತಕ್ಕೆ ಸಂಕಷ್ಟ ಎದುರಾಗಿದೆ. ಅಮೆರಿಕದ ಪ್ರಭಾವ ಬೀರುತ್ತಿದೆ ಎಂದು ಎನ್ಎಸ್ ಬೋಸರಾಜು ಗಂಭೀರ ಆರೋಪ ಮಾಡಿದ್ದಾರೆ.
ಇರಾನ್ ನ ಹೊಸ ಸುಪ್ರೀಂ ಲೀಡರ್ ಮೊಜ್ತಬಾ ಖಮೇನಿಯವರ ಆರೋಗ್ಯ ಹಾಗೂ ಅಸ್ತಿತ್ವದ ಕುರಿತು ಸಾಕಷ್ಟ ಊಹಾಪೋಹಗಳು ಹರಡುತ್ತಿದ್ದ ಬೆನ್ನಲ್ಲೇ, ಈ ಕುರಿತು ಅಧಿಕೃತ ಹೇಳಿಕೆ ನೀಡಿರುವ ಇರಾನ್ ಮೊಜ್ತಬಾ ಖಮೇನಿ ನಿಧನದ ವಾರ್ತೆ ಸುಳ್ಳು. ಇದು ಇಸ್ರೇಲ್ ಹಾಗೂ ಅಮೆರಿಕಾ ಹರಡುತ್ತಿರುವ ತಪ್ಪುಮಾಹಿತಿ ಎಂದು ತಿಳಿಸಿದೆ. ಅಲ್ಲದೆ, ಇರಾನ್ ನ ಹೊಸವರ್ಷಾಚರಣೆ ನೌರುಜ್ ದಿನದಂದು ಸಂಪ್ರಾದಾಯಿಕವಾಗಿ ಸುಪ್ರೀಂ ಲೀಡರ್ ಗಳು ದೇಶವನ್ನುದ್ದೇಶಿಸಿ ನಡೆಸುವ ಭಾಷಣವನ್ನು ಮೊಜ್ತಬಾ ಸಹ ಮಾಡಲಿದ್ದಾರೆ ಎಂದು ಇರಾನ್ ನ ಸರ್ಕಾರಿ ಮಾಧ್ಯಮ ತಿಳಿಸಿದೆ.
RCB Jitesh Sharma: ಐಪಿಎಲ್ 19ನೇ ಸೀಸನ್ ಮಾರ್ಚ್ 28ರಿಂದ ಆರಂಭ ಆಗಲಿದ್ದು, ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಆರ್ಸಿಬಿ ಹಾಗೂ ಸನ್ ರೈಸರ್ಸ್ ಹೈದರಾಬಾದ್ ಮುಖಾಮುಖಿಯಾಗಲಿವೆ. ಇದಕ್ಕೂ ಮುನ್ನ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸ್ಟಾರ್ ಆಟಗಾರ ಗಲ್ಲಿ ಕ್ರಿಕೆಟ್ ಆಡಿ ಕೇವಲ 15 ಎಸೆತಗಳಲ್ಲಿ 40 ರನ್ ಸಿಡಿಸಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ
ಸ್ಟಾಕ್ ಟ್ರೇಡಿಂಗ್ ಚಟ: ಪತ್ನಿ ಹೆಸರಲ್ಲಿ 93 ಲಕ್ಷ ರೂಪಾಯಿ ಸಾಲ ಮಾಡಿದ ಭೂಪ!
ಬೆಂಗಳೂರಿನಲ್ಲಿ ಷೇರು ವಹಿವಾಟು ವ್ಯಸನಕ್ಕೊಳಗಾದ ವ್ಯಕ್ತಿಯೊಬ್ಬ ಪತ್ನಿ ಹೆಸರಿನಲ್ಲಿ ಸಾಲ ಪಡೆದು ಬರೋಬ್ಬರಿ 93 ಲಕ್ಷ ರೂಪಾಯಿ ವಂಚನೆ ನಡೆಸಿದ ಪ್ರಕರಣ ಬೆಳಕಿಗೆ ಬಂದಿದೆ. ಪತ್ನಿಯ ಮೊಬೈಲ್ ಬಳಸಿ ಆಕೆಗೆ ತಿಳಿಯದೇ ಸಾಲದ ಆ್ಯಪ್ಗಳ ಮೂಲಕ ಹಣ ಪಡೆದು, ಆಕೆಯ ತಲೆ ಮೇಲೆ ಸಾಲದ ಹೊರೆ ಹೊರಿಸಿದ್ದಾನೆ.
ಮಳೆ.. ಮಳೆ.. ಮುಂದಿನ 48 ಗಂಟೆಯಲ್ಲಿ ಮಳೆ ಬಗ್ಗೆ ಹವಾಮಾನ ಇಲಾಖೆ ಮಹತ್ವದ ಮಾಹಿತಿ... Karnataka Rain
ಮಳೆ.. ಮಳೆ.. ಮಳೆ.. ಎಲ್ಲಿ ನೋಡಿದರೂ &ಎಲ್ಲಿ ಕೇಳಿದರೂ ಬರೀ ಆಲಿಕಲ್ಲು ಸಹಿತ ಬಿರುಗಾಳಿ ಮಳೆ ಬಗ್ಗೆ ಕನ್ನಡಿಗರು ಚರ್ಚೆ ಮಾಡುತ್ತಿದ್ದಾರೆ. ಅದರಲ್ಲೂ ಬಿಸಿ ಬಿಸಿ ಬೇಸಿಗೆ ನಡುವೆಯೇ ಭರ್ಜರಿ ಮಳೆ ಬಿದ್ದು ಒಂದಷ್ಟು ತಂಪಾಗಿದೆ ಕನ್ನಡ ನಾಡು. ಆದರೆ ಇದೇ ಸಮಯದಲ್ಲಿ ಅಕಾಲಿಕ ಎಂದರೆ ಬೇಸಿಗೆ ಸಮಯದಲ್ಲಿ ಸುರಿದ ಮಳೆ ಪರಿಣಾಮ ಮಾವಿನ ಬೆಳೆ,
ಮುಲ್ಕಿ: ಸಂಭ್ರಮದ ಈದುಲ್ ಫಿತ್ರ್ ಆಚರಣೆ
ಮುಲ್ಕಿ: ಪರಿಸರದಲ್ಲಿ ಈದುಲ್ ಫಿತ್ರ್ ಆಚರಣೆ ಸಂಭ್ರಮದಿಂದ ನಡೆಯಿತು. ಬೆಳಗಿನಿಂದಲೇ ಮಸೀದಿಗೆ ತೆರಳಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಮುಲ್ಕಿ ಕೇಂದ್ರ ಜುಮ್ಮಾ ಮಸೀದಿಯಲ್ಲಿ ಮಸೀದಿಯ ಧರ್ಮಗುರುಗಳಾದ ಉಸ್ಮಾನ್ ಫೈಝೀ ತೋಡಾರ್ ಹಾಗೂ ಕಾರ್ನಾಡ್ ಮಸೀದಿಯ ಧರ್ಮಗುರುಗಳಾದ ರಿಯಾಝ್ ಫೈಝಿ ವಿಶೇಷ ಉಪನ್ಯಾಸ ನೀಡಿದರು. ಈ ಸಂದರ್ಭ ಮಸೀದಿಯ ಗೌರವಾಧ್ಯಕ್ಷ ಇನಾಯತ್ ಅಲಿ, ಅಧ್ಯಕ್ಷ ಸೊಹೈಲ್ ಹೈದರ್, ಉಪಾಧ್ಯಕ್ಷ ಪುತ್ತುಭಾವ, ಕೋಶಾಧಿಕಾರಿ ಇಕ್ಬಾಲ್ ಅಹ್ಮದ್, ಎಂ.ಕೆ. ಹಸೈನ್ ಕಾರ್ನಾಡ್, ಲಿಯಾಕತ್ ಆಲಿ, ಫಾರೂಕ್ ಹಾಜಿ ಇಬ್ರಾಹಿಂ ಮತ್ತಿತರರು ಉಪಸ್ಥಿತರಿದ್ದರು. ಮುಲ್ಕಿ ಪರಿಸರದ ಹಳೆಯಂಗಡಿ, ಕಿನ್ನಿಗೋಳಿ, ಪಕ್ಷಿಕೆರೆ, ಅಂಗರಗುಡ್ಡೆ, ಪುನರೂರು, ಕರ್ನಿರೆ, ಕದಿಕೆ ಮತ್ತಿತರ ಕಡೆಗಳಲ್ಲಿ ಈದುಲ್ ಫಿತ್ರ್ ಆಚರಣೆ ಸಂಭ್ರಮದಿಂದ ನಡೆಯಿತು.
ಮೂಡುಬಿದಿರೆ ಪೊಲೀಸ್ ಇನ್ಸ್ಪೆಕ್ಟರ್ ಸಂದೇಶ್ ಬಂಧಿಸಿ, ತನಿಖೆ ನಡೆಸಿ: ಸುಮತಿ ನಾಯಕ್ ಒತ್ತಾಯ
ಮಂಗಳೂರು, ಮಾ. 20: ಮೂಡುಬಿದಿರೆ ಪೊಲೀಸ್ ಇನ್ಸ್ಪೆಕ್ಟರ್ ಸಂದೇಶ್ ಅವರು ನನಗೆ, ನನ್ನ ಅಕ್ಕನ ಮಗ ಹಾಗೂ ನನ್ನ ಮಗನಿಗೆ ಮಾನಸಿಕ ಹಿಂಸೆ, ಜೀವಹಾನಿ ಬೆದರಿಕೆ, ಮಾನ ಹಾನಿ ಹಾಗೂ ಲೈಂಗಿಕ ಕಿರುಕುಳ ನೀಡಿದ್ದಾರೆ. ಸದ್ಯ ಅಮಾನತ್ತಿನಲ್ಲಿರುವ ಇನ್ಸ್ಪೆಕ್ಟರ್ ಸಂದೇಶ್ ಅವರನ್ನು ಬಂಧಿಸಿ ತನಿಖೆಗೆ ಒಳಪಡಿಸಬೇಕು ಎಂದು ಕಾರ್ಕಳದ ಸುಮತಿ ನಾಯಕ್ ಒತ್ತಾಯಿಸಿದ್ದಾರೆ. ನಗರದ ಪ್ರೆಸ್ ಕ್ಲಬ್ ನಲ್ಲಿ ಶುಕ್ರವಾರ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿದ ಅವರು, ಸಹೋದರಿ ಪ್ರಫುಲ್ಲ ಅವರ ಸಹಕಾರದಿಂದ ನಮ್ಮ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಲಾಗಿದೆ ಎಂದು ಆರೋಪಿಸಿದರು. ಈ ಸಂಬಂಧವಾಗಿ ಅಕ್ಕನ ಮಗನೇ ತಮಗಾದ ಅನ್ಯಾಯದ ವಿರುದ್ಧ ಕಾನೂನು ಪ್ರಾಧಿಕಾರದಲ್ಲಿ ದೂರು ಸಲ್ಲಿಸಿದ್ದು, ಮಾನ್ಯ ನ್ಯಾಯಾಲಯದ ನ್ಯಾಯಾಧೀಶರು ಇನ್ಸ್ಪೆಕ್ಟರ್ ವಿರುದ್ಧ ಎಫ್ಐಆರ್ ದಾಖಲಿಸಲು ನಿರ್ದೇಶಿಸಿದ್ದಾರೆ. ಆದರೆ ಇನ್ಸ್ಪೆಕ್ಟರ್ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಹೇಳಿದರು. ಕೆಲ ದಿನಗಳ ಹಿಂದೆ ಪ್ರೆಸ್ ಮೀಟ್ ಕರೆದ ಪ್ರಫುಲ್ಲ ಅವರು ನನ್ನ ಬಗ್ಗೆ ಹೇಳಿದ ಎಲ್ಲಾ ಮಾತುಗಳು ಸುಳ್ಳುಗಳಾಗಿವೆ. ಇದರ ಬಗ್ಗೆ ದಾಖಲೆಗಳನ್ನು ನಾನು ಒದಗಿಸುವುದಾಗಿ ಹೇಳಿದರು. ಇನ್ಸ್ಪೆಕ್ಟರ್ ಸಂದೇಶ್ ಅವರ ಮೊಬೈಲ್ ಪರಿಶೀಲನೆ, ಬ್ಯಾಂಕ್ ಸ್ಟೇಟ್ಮೆಂಟ್ ಹಾಗೂ ಅವರ ಐಬಿ ಗುಂಪಿನಲ್ಲಿ ಇರುವ ಎಲ್ಲಾ ಸಂಪರ್ಕಗಳ ಮೇಲೂ ತನಿಖೆ ನಡೆಯಬೇಕು. ಹಾಗೆಯೇ ಪ್ರಫುಲ್ಲ ಅವರ ಮೊಬೈಲ್ ಮತ್ತು ಬ್ಯಾಂಕ್ ಸ್ಟೇಟ್ಮೆಂಟ್ಗಳನ್ನೂ ಪರಿಶೀಲಿಸಬೇಕು ಎಂದು ಅವರು ಆಗ್ರಹಿಸಿದರು.
ದಾವಣಗೆರೆ ಚುನಾವಣೆಗೆ ಹೊಸ ಟ್ವಿಸ್ಟ್ : ಕೈ ಟಿಕೆಟ್ ಘೋಷಣೆ ಮುನ್ನವೇ ಸಮರ್ಥ್ ಶಾಮನೂರು ನಾಮಪತ್ರ ಸಲ್ಲಿಕೆ
ದಾವಣಗೆರೆ ದಕ್ಷಿಣ ಉಪಚುನಾವಣೆ: ಜಿಲ್ಲಾ ಕಾಂಗ್ರೆಸ್ಸಿನಲ್ಲಿ ಮಹತ್ವದ ವಿದ್ಯಮಾನ ನಡೆದಿದ್ದು, ಕಾಂಗ್ರೆಸ್ ತನ್ನ ಅಧಿಕೃತ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡುವ ಮೊದಲೇ ಸಮರ್ಥ್ ಶಾಮನೂರು ನಾಮಪತ್ರವನ್ನು ಸಲ್ಲಿಸಿದ್ದಾರೆ. ತಾಯಿ, ಡಾ.ಪ್ರಭಾ ಮಲ್ಲಿಕಾರ್ಜುನ ಜೊತೆ ಆಗಮಿಸಿ ಸಮರ್ಥ್ ನಾಮಪತ್ರ ಸಲ್ಲಿಸಿದ್ದರೆ.
ಕುವೈತ್: ಕೊಲ್ಲಿ ರಾಷ್ಟ್ರಗಳನ್ನು ಗುರಿಯಾಗಿಸಿಕೊಂಡು ಇರಾನ್ ನಡೆಸುತ್ತಿರುವ ಕ್ಷಿಪಣಿ ಹಾಗೂ ಡ್ರೋನ್ ದಾಳಿಗಳ ಪರಿಣಾಮವಾಗಿ ಕುವೈತ್ನ ಮೀನಾ ಅಲ್-ಅಹ್ಮದಿ ತೈಲ ಸಂಸ್ಕರಣಾ ಘಟಕದಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ಕುವೈತ್ ಸರ್ಕಾರದ ಮಾಧ್ಯಮ ವರದಿ ಮಾಡಿದೆ. ಇರಾನ್ ದಾಳಿಗೆ ಪ್ರತಿಕ್ರಿಯೆ ನೀಡುತ್ತಿರುವುದಾಗಿ ವಿವಿಧ ಕೊಲ್ಲಿ ರಾಷ್ಟ್ರಗಳ ಅಧಿಕಾರಿಗಳು ತಿಳಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಕೊಲ್ಲಿ ರಾಷ್ಟ್ರಗಳ ಇಂಧನ ಮೂಲಸೌಕರ್ಯಗಳ ಮೇಲೆ ಇರಾನ್ ತನ್ನ ದಾಳಿಗಳನ್ನು ಹೆಚ್ಚಿಸಿದೆ. ಖತರ್ನಲ್ಲಿರುವ ಬೃಹತ್ ಅನಿಲ ತಾಣದ ಮೇಲೆಯೂ ದಾಳಿ ನಡೆಸಲಾಗಿದೆ. ದಕ್ಷಿಣ ಪಾರ್ಸ್ ಅನಿಲ ಬಾವಿಯ ಮೇಲೆ ಇಸ್ರೇಲ್ ನಡೆಸಿದ ದಾಳಿಗೆ ಪ್ರತಿಯಾಗಿ ಇರಾನ್ ಈ ದಾಳಿಗಳನ್ನು ನಡೆಸುತ್ತಿದೆ. ಈ ಕುರಿತು ರಾಷ್ಟ್ರೀಯ ತೈಲ ಕಂಪನಿಯನ್ನು ಉಲ್ಲೇಖಿಸಿ ಪ್ರತಿಕ್ರಿಯಿಸಿರುವ ಕುವೈತ್ ನ್ಯೂಸ್ ಏಜೆನ್ಸಿ ಅಧಿಕಾರಿಯೊಬ್ಬರು, ಶತ್ರುವಿನ ಹಲವು ಡ್ರೋನ್ಗಳು ಮೀನಾ ಅಲ್-ಅಹ್ಮದಿ ತೈಲ ಸಂಸ್ಕರಣಾ ಘಟಕದ ಮೇಲೆ ದಾಳಿ ನಡೆಸಿದ್ದು, ಬೆಂಕಿ ಹೊತ್ತಿಕೊಂಡಿದೆ ಎಂದು ತಿಳಿಸಿದ್ದಾರೆ. ಆದರೆ, ಈ ದಾಳಿಯಲ್ಲಿ ಯಾವುದೇ ಸಾವುನೋವು ಸಂಭವಿಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಹಲವು ತೈಲ ಸಂಸ್ಕರಣಾ ಘಟಕಗಳನ್ನು ಮುಚ್ಚಲಾಗಿದ್ದು, ಬೆಂಕಿಯನ್ನು ನಿಯಂತ್ರಿಸಲು ಅಗ್ನಿಶಾಮಕ ದಳದ ವಾಹನಗಳು ಕಾರ್ಯಾಚರಣೆ ಮುಂದುವರಿಸಿವೆ ಎಂದು ವರದಿ ತಿಳಿಸಿದೆ. ಇಂದು (ಶುಕ್ರವಾರ) ಮುಂಜಾನೆ ಇರಾನ್ ನಡೆಸಿದ ದಾಳಿಯಲ್ಲಿ ಶಾರ್ಪ್ನೆಲ್ ಬಿದ್ದು ಗೋದಾಮೊಂದರಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಅದನ್ನು ನಿಯಂತ್ರಿಸಲಾಗಿದೆ. ಈ ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ ಎಂದು ಬಹ್ರೈನ್ ನ ಆಂತರಿಕ ಭದ್ರತಾ ಸಚಿವಾಲಯ ತಿಳಿಸಿದೆ.
ಅಹಮದಾಬಾದ್: ಆಧ್ಯಾತ್ಮಿಕ ಚಟುವಟಿಕೆಗಳ ಸೋಗಿನಲ್ಲಿ ಕಾರ್ಯಾಚರಿಸುತ್ತಿದ್ದ ಖೋಟಾ ನೋಟು ಜಾಲವನ್ನು ಅಹಮದಾಬಾದ್ ಅಪರಾಧ ವಿಭಾಗದ ಪೊಲೀಸರು ಭೇದಿಸಿದ್ದು, ಪ್ರಮುಖ ಆರೋಪಿ ಸೇರಿ ಆರು ಮಂದಿಯನ್ನು ಬಂಧಿಸಿದ್ದಾರೆ. ಬಂಧಿತರಿಂದ ಒಟ್ಟು 2.9 ಕೋಟಿ ರೂಪಾಯಿ ಮೌಲ್ಯದ ಖೋಟಾ ನೋಟುಗಳನ್ನು ವಶಪಡಿಸಿಕೊಳ್ಳಲಾಗಿದೆ. ಅಮರಾಯಿವಾಡಿ ಪ್ರದೇಶದಲ್ಲಿ ದೊಡ್ಡ ಪ್ರಮಾಣದಲ್ಲಿ ಖೋಟಾ ನೋಟುಗಳು ಚಲಾವಣೆಯಾಗುತ್ತಿದೆ ಎಂಬ ಖಚಿತ ಮಾಹಿತಿಯ ಆಧಾರದಲ್ಲಿ ಪೊಲೀಸರು ಗುಪ್ತ ಕಾರ್ಯಾಚರಣೆ ನಡೆಸಿದರು. ರಾತ್ರಿ ಪೂರ್ತಿ ಕಟ್ಟೆಚ್ಚರ ವಹಿಸಿದ್ದ ತಂಡಗಳು ಸಂಶಯಾಸ್ಪದ ಚಲನವಲನಗಳನ್ನು ಗಮನಿಸಿ, ಶಂಕಿತರನ್ನು ಅಡ್ಡಗಟ್ಟಿ ಬಂಧಿಸಿವೆ. ತನಿಖೆಯ ವೇಳೆ ‘ಸತ್ಯಂ ಯೋಗ ಫೌಂಡೇಷನ್’ಗೆ ಸಂಬಂಧಿಸಿದ ವಾಹನದಲ್ಲಿ ಖೋಟಾ ನೋಟುಗಳನ್ನು ಸಾಗಣೆ ಮಾಡಲಾಗುತ್ತಿರುವುದು ಪತ್ತೆಯಾಯಿತು. ವಾಹನದ ಮೇಲೆ ಭಾರತ ಸರ್ಕಾರ ಹಾಗೂ ಆಯುಷ್ ಸಚಿವಾಲಯದ ಚಿಹ್ನೆಗಳನ್ನು ಅಂಟಿಸಲಾಗಿದ್ದು, ಶಂಕೆಯಿಂದ ತಪ್ಪಿಸಿಕೊಳ್ಳಲು ಹಾಗೂ ನಿರ್ಬಂಧವಿಲ್ಲದೆ ಸಂಚರಿಸಲು ಅವುಗಳನ್ನು ಬಳಸಲಾಗುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಬಂಧಿತರ ಬಳಿಯಿಂದ ಮೊದಲ ಹಂತದಲ್ಲಿ 2 ಕೋಟಿ ರೂಪಾಯಿ ಮೌಲ್ಯದ 500 ರೂ. ಮುಖಬೆಲೆಯ ಖೋಟಾ ನೋಟುಗಳನ್ನು ವಶಪಡಿಸಿಕೊಳ್ಳಲಾಗಿದೆ. ನಂತರ ತನಿಖೆಯನ್ನು ವಿಸ್ತರಿಸಿದ ಪೊಲೀಸರು, ಸೂರತ್ ಪೊಲೀಸರ ಸಮನ್ವಯದಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ಇನ್ನೂ 80 ಲಕ್ಷ ರೂಪಾಯಿ ಮೌಲ್ಯದ ಖೋಟಾ ನೋಟುಗಳನ್ನು ಪತ್ತೆಹಚ್ಚಿದರು. ಈ ಮೂಲಕ ಒಟ್ಟು ವಶಪಡಿಸಿಕೊಂಡ ಮೊತ್ತ 2.9 ಕೋಟಿ ರ. ಗೆ ಏರಿಕೆಯಾಗಿದೆ. ಪ್ರಕರಣದ ಪ್ರಮುಖ ಆರೋಪಿ ಪ್ರದೀಪ್ ಜೊಟಾಂಗಿಯಾ ಅಲಿಯಾಸ್ ‘ಪ್ರದೀಪ್ ಗುರೂಜಿ’ಯನ್ನು ಬಂಧಿಸಲಾಗಿದ್ದು, ಆತನೇ ಈ ಜಾಲದ ‘ಕಿಂಗ್ಪಿನ್’ ಎಂಬುದು ತನಿಖೆಯಲ್ಲಿ ಬಹಿರಂಗವಾಗಿದೆ. ಆಧ್ಯಾತ್ಮಿಕ ಚಟುವಟಿಕೆಗಳ ಹೆಸರಿನಲ್ಲಿ ಜಾಲವನ್ನು ನಡೆಸಿ ಖೋಟಾ ನೋಟುಗಳ ವಿತರಣೆ ಮಾಡುತ್ತಿದ್ದನು ಎಂದು ಪೊಲೀಸರು ಆರೋಪಿಸಿದ್ದಾರೆ. ಈ ಜಾಲವು ಅಹಮದಾಬಾದ್ ನಿಂದ ಸೂರತ್ ವರೆಗೆ ವಿಸ್ತರಿಸಿರಬಹುದೆಂಬ ಶಂಕೆ ವ್ಯಕ್ತವಾಗಿದ್ದು, ಪ್ರಕರಣದ ಕುರಿತು ಪೊಲೀಸರು ಹೆಚ್ಚಿನ ತನಿಖೆ ಮುಂದುವರೆಸಿದ್ದಾರೆ.
ಮಾ.21ರಂದು ಬೆಂಗಳೂರಿನಾದ್ಯಂತ ಹಲವಡೆ ರಂಜಾನ್ ಉಪವಾಸ ತಿಂಗಳ ಅಂತ್ಯವನ್ನು ಸೂಚಿಸಲು ಆಚರಿಸುವ ಈದ್-ಉಲ್-ಫಿತ್ರ್ ಸಾಮೂಹಿಕ ಪ್ರಾರ್ಥನಾ ಸಭೆಗಳು ನಡೆಯಲಿದ್ದು, ಈ ಸಮಯದಲ್ಲಿ ಸಂಚಾರ ವ್ಯವಸ್ಥೆಯಲ್ಲಿ ಉಂಟಾಗುವ ಅಡಚಣೆಗಳನ್ನು ತಪ್ಪಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲು ನಗರದೆಲ್ಲಡೆ ಕೆಲ ಮಾರ್ಗಗಳ ಸಂಚಾರವನ್ನು ನಿರ್ಬಂಧಿಸಿದ್ದು, ಪರ್ಯಾಯ ಸಂಚಾರಿ ಮಾರ್ಗಗಳನ್ನು ಬಳಸುವಂತೆ ಅಧಿಕಾರಿಗಳು ಸಲಹೆ ನೀಡಿದ್ದಾರೆ. ಈ ಹಿನ್ನಲ್ಲೆ ಯಾವ್ಯಾವ ಮಾರ್ಗಗಳಲ್ಲಿ ಪರ್ಯಾಯ ಸಂಚಾರ ವ್ಯವಸ್ಥೆ ಕಲ್ಪಿಸಲಾಗಿದೆ ಎಂಬ ಮಾಹಿತಿ ಇಲ್ಲಿದೆ..
ಅಯ್ಯಯ್ಯೋ.. 93 ರೂಪಾಯಿಗೆ ಕುಸಿತ ಕಂಡ ಭಾರತದ ಕರೆನ್ಸಿ, ಡಾಲರ್ ಎದುರು ಮಹಾ ಪತನ.. Rupee And Dollar
ಭಾರತೀಯ ರೂಪಾಯಿ ದೊಡ್ಡ ಮಟ್ಟದಲ್ಲಿ ಕುಸಿತ ಕಂಡಿದೆ, ಯುದ್ಧದ ಆಘಾತದ ನಡುವೆ ಒಂದು ಕಡೆ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಹೆಚ್ಚಾಗುತ್ತಾ ಇದೆ. ಹೀಗಿದ್ದಾಗ ಗ್ಯಾಸ್ ಸಿಲಿಂಡರ್ ಸಮಸ್ಯೆ ಕಾರಣಕ್ಕೆ ಜನರು ಕೂಡ ರೊಚ್ಚಿಗೆದ್ದು, ನಿತ್ಯದ ಬದುಕು ಕೂಡ ಕಷ್ಟವಾಗುತ್ತಿದೆ ಎಂದು ಆಕ್ರೋಶದ ಬೆಂಕಿ ಹೊರ ಹಾಕುತ್ತಿದ್ದಾರೆ. ಆದರೆ ಬೇರೆ ದೇಶಗಳಿಗೆ ಹೋಲಿಕೆ ಮಾಡಿದರೆ ಭಾರತದಲ್ಲಿ ಪೆಟ್ರೋಲ್
Iran- Israel conflict: 9 ವಾಯುಪ್ರದೇಶಗಳಲ್ಲಿ ವಿಮಾನ ಹಾರಾಟ ನಿಷೇಧಿಸುವಂತೆ ಡಿಜಿಸಿಎ ಸಲಹೆ
ಇರಾನ್ ಮೇಲೆ ಇಸ್ರೇಲ್-ಅಮೆರಿಕ ದಾಳಿ, ಹಾಗೂ ಇರಾನ್ ಪ್ರತಿದಾಳಿಯಿಂದಾಗಿ ಮಧ್ಯಪ್ರಾಚ್ಯ ಪ್ರದೇಶಗಳಲ್ಲಿ ನಾಗರಿಕ ವಿಮಾನ ಹಾರಾಟ ಅಪಾಯಕಾರಿಯಾಗಿದೆ ಎಂದು ಭಾರತೀಯ ನಾಗರಿಕ ವಿಮಾನಯಾನ ನಿರ್ದೇಶನಾಲಯ ವಿಮಾನಯಾನ ಸಂಸ್ಥೆಗಳಿಗೆ ಎಚ್ಚರಿಕೆನೀಡಿದ್ದು, ಮಾರ್ಚ್ 28 ರವರೆಗೂ ಪಾಲಿಸುವಂತೆ ಕೆಲವು ಸೂಚನೆಗಳನ್ನು ನೀಡಿದೆ.
ಊಹಾಪೋಹಗಳ ನಡುವೆಯೇ ಮೊಜ್ತಬಾ ಖಮೇನಿ ವಿಡಿಯೋ ಬಿಡುಗಡೆ ಮಾಡಿದ ಇರಾನ್!
ಇರಾನ್ನ ಹೊಸ ಸುಪ್ರೀಂ ಲೀಡರ್ ಮೊಜ್ತಬಾ ಖಮೇನಿ ಅವರ ಆರೋಗ್ಯದ ಬಗ್ಗೆ ಊಹಾಪೋಹಗಳು ಹೆಚ್ಚುತ್ತಿರುವ ನಡುವೆ ಐಆರ್ಐಪಿ ವಿಡಿಯೋವೊಂದನ್ನ ಬಿಡುಗಡೆ ಮಾಡಿದೆ. ಅದರಲ್ಲಿ ಮೊಜ್ತಬಾ ಖಮೇನಿ ಧಾರ್ಮಿಕ ಪಾಠ ಮಾಡುತ್ತಿದ್ದಾರೆ. ಆದರೆ ವಿಡಿಯೋ ಯಾವಾಗಿನದ್ದು ಎಂಬುದರ ಬಗ್ಗೆ ಸ್ಪಷ್ಟತೆ ಇಲ್ಲ.
ಇರಾನ್ ನಲ್ಲಿ ಯುದ್ದದ ತೀವ್ರತೆ ಹೆಚ್ಚಾಗಿದ್ದು, ಈ ನಡುವೆ ಜನವರಿಯಲ್ಲಿ ನಡೆದ ಸರ್ಕಾರಿ ವಿರೋಧಿ ಪ್ರತಿಭಟನೆಗಳಲ್ಲಿ ಭಾಗಿಯಾಗಿದ್ದ 3 ಜನರನ್ನು ದೇವರ ವಿರುದ್ದದ ಯುದ್ದದ ಆರೋಪದಡಿಯಲ್ಲಿ ಇರಾನ್ ಸರ್ಕಾರ ಮಾ.19ರಂದು ಕೋಮ್ ನಗರಲ್ಲಿ ಸಾರ್ವಜನಿಕವಾಗಿ ಗಲ್ಲಿಗೇರಿಸಿದೆ. ಇದರಲ್ಲಿ ಇರಾನ್ ಅನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರತಿನಿಧಿಸಿದ್ದ 19 ವರ್ಷದ ಕುಸ್ತಿಪಟು ಸಲೇಹ್ ಮೊಹಮ್ಮದಿ ಎಂಬಾತ ಸಹ ಇದ್ದು, ಇರಾನ್ ಪ್ರತಿಭಟನಾಕಾರರಲ್ಲಿ ಸದ್ಯ ಸಾಮೂಹಿಕ ಮರಣದಂಡನೆಯ ಆತಂಕ ಎದುರಾಗಿದೆ.
ಪುಂಜಾಲಕಟ್ಟೆ: ಸಂಭ್ರಮದ ಈದುಲ್ ಫಿತ್ರ್ ಆಚರಣೆ
ಪುಂಜಾಲಕಟ್ಟೆ, ಮಾ.20: ಬದ್ರಿಯಾ ಜುಮಾ ಮಸೀದಿ ಪುಂಜಾಲಕಟ್ಟೆಯಲ್ಲಿ ಈದುಲ್ ಫಿತ್ರ್ ಆಚರಣೆ ಸಂಭ್ರಮ ಸಡಗರದಿಂದ ನಡೆಯಿತು. ಇಂದು ಬೆಳಿಗ್ಗೆ 8 ಗಂಟೆಗೆ ನಡೆದ ಸಾಮೂಹಿಕ ಈದ್ ನಮಾಝ್ ಖತೀಬ್ ಇಸ್ಮಾಯಿಲ್ ಫೈಝಿ ನೇತೃತ್ವದಲ್ಲಿ ನಡೆಯಿತು. ಅದಕ್ಕೂ ಮೊದಲು ಮಾತನಾಡಿದ ಅವರು ಈದುಲ್ ಫಿತರ್ ಆಚರಣೆಯು ವಿಶ್ವಾಸಿಗಳ ಪಾಲಿಗೆ ಬಹು ಪ್ರಮುಖ ಆಚರಣೆಯಾಗಿದೆ. ಈ ದಿನ ಎಲ್ಲಾ ಮುಸ್ಲಿಂ ಬಾಂಧವರು ಪರಸ್ಪರ ಈದ್ ಆಸಂಸಗಳನ್ನು ವಿನಿಮಯಿಸುತ್ತಾ ಕುಟುಂಬ ಸಂಬಂಧವನ್ನು ಬಲಪಡಿಸುವ ಜೊತೆಗೆ ನಮ್ಮ ಸಹೋದರ ಧರ್ಮದ ಬಾಂಧವರಿಗೆ ಇಸ್ಲಾಮಿನ ನೈಜ ಸಂದೇಶಗಳನ್ನು ತಿಳಿಸುತ್ತಾ ಪರಸ್ಪರ ಭ್ರಾತೃತ್ವವನ್ನು ಬಲಪಡಿಸಬೇಕು ಎಂದರು. ಮಾತ್ರವಲ್ಲ ಜಗತ್ತಿನಲ್ಲಿ ಶಾಶ್ವತವಾಗಿ ಶಾಂತಿ ಸ್ಥಾಪನೆಯಾಗಲಿ ಎಂದು ಈ ಶುಭ ದಿನದಲ್ಲಿ ಹಾರೈಸಿದರು.
PM Modi appears in Dhurandhar 2 : ಈ ವರ್ಷದ ಭಾರೀ ನಿರೀಕ್ಷೆಯ ಸಿನಿಮಾ ಧುರಂಧರ್ - ದಿ ರಿವೆಂಜ್ ಸಿನಿಮಾ, ಯುಗಾದಿಯ ದಿನವಾದ ಮಾರ್ಚ್ 19ರಂದು ಬಿಡುಗಡೆಯಾಗಿದೆ. ಚಿತ್ರದ ಎರಡು ಸನ್ನಿವೇಶಗಳಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಕಾಣಿಸಿಕೊಳ್ಳುತ್ತಾರೆ. ಆವೇಳೆ, ಪ್ರೇಕ್ಷಕರಿಂದ ಭಾರೀ ಕರತಾಡನ ವ್ಯಕ್ತವಾಗುವ ದೃಶ್ಯಗಳು ಇಂಟರ್ನೆಟ್’ನಲ್ಲಿ ಭಾರೀ ಸದ್ದನ್ನು ಮಾಡುತ್ತಿದೆ.
ಈ ಸಂವತ್ಸರಕ್ಕೇಕೆ ಈ ಹೆಸರು? ‘ಪರಾಭವ’ ಅಂದ್ರೆ ‘ಸೋಲು’ ಎಂಬ ಅರ್ಥವಲ್ಲವೇ?
ಈ ಸಂವತ್ಸರಕ್ಕೆ 'ಪರಾಭವ' ಅದರ ನಿಜವಾದ ಅರ್ಥವೇನು? ಎಂಬ ಪ್ರಶ್ನೆಗಳು ಅನೇಕರ ಮನಸ್ಸಿನಲ್ಲಿ ಮೂಡುತ್ತದೆ. 'ಪರಾಭವ' ಎಂದರೆ ಸೋಲು ಎಂಬ ಅರ್ಥವಲ್ಲವೇ ಎಂಬ ಗೊಂದಲವೂ ಕೊಡ ಇದೆ. ಆದರೆ ಇದರ ಹಿಂದೆ ಇರುವ ಸಂಸ್ಕೃತ ಮತ್ತು ಜ್ಯೋತಿಷ್ಯ ಶಾಸ್ತ್ರದ ಅರ್ಥ ತುಂಬಾ ಆಳವಾಗಿದೆ. ಈ ಕುರಿತು ಶ್ರೀಪ್ರಸಾದ್ ಬೆಳಕವಾಡಿ ವಿವರಿಸುತ್ತಾರೆ. ಬೆಳಗಿನಿಂದ ಅನೇಕರದ್ದು ಒಂದೇ ಪ್ರಶ್ನೆ -
ಬೆಂಗಳುರು ನಗರ, ಕೋಲಾರ ಜಿಲ್ಲೆ,ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ರಾಮನಗರ , ತುಮಕೂರು , ಚಿತ್ರದುರ್ಗ ಜಿಲ್ಲೆ, ದಾವಣಗೆರೆ ಜಿಲ್ಲೆಯಲ್ಲಿ ಯಾವುದೇ ವಿದ್ಯುತ್ ಅವಘಡಗಳು ಉಂಟಾದಾಗ, ಅಥವಾ ಮಳೆಯಿಂದ ವಿದ್ಯುತ್ ವ್ಯತ್ಯಯಗೊಂಡಾಗ ಸಹಾಯವಾಣಿಗೆ ಕರೆಮಾಡಲು ಸೂಚಿಸಲಾಗಿದ್ದು, ವಾಟ್ಸ್ ಅಪ್ ನಂಬರ್ಗಳನ್ನೂ ಕೊಡಲಾಗಿದೆ.
Clay Pot: ಮಣ್ಣಿನ ಮಡಕೆ ನೀರು ಕುಡಿಯುತ್ತೀರಾ? ಈ ಲಾಭಗಳನ್ನು ತಿಳಿದರೆ ಆಶ್ಚರ್ಯಪಡುವಿರಿ
ಬೇಸಿಗೆ ಕಾಲ ಆರಂಭವಾಗುತ್ತಿದಂತೆ ದೇಹದಲ್ಲಿ ನೀರಿನ ಅಂಶದ ಅಗತ್ಯತೆ ಹೆಚ್ಚಾಗುತ್ತದೆ. ಹೆಚ್ಚುತ್ತಿರುವ ಬಿಸಿಲಿನಿಂದ ನಮ್ಮ ದೇಹವು ನಿರ್ಜಲೀಕರಣದಿಂದ ರಕ್ಷಿಸಿಕೊಳ್ಳವುದು ಬಹಳ ಮುಖ್ಯ. ಈ ಸಂದರ್ಭದಲ್ಲಿ ಜನರು ಹೆಚ್ಚಾಗಿ ಫ್ರಿಡ್ಜ್ ನೀರು ಅಥವಾ ಐಸ್ಡ್ ಪಾನೀಯಗಳನ್ನು ಕುಡಿಯುವುದಕ್ಕೆ ಆಯ್ಕೆ ಮಾಡಿಕೊಳ್ಳತ್ತಾರೆ. ಆದರೆ ತಜ್ಙರ ಪ್ರಕಾರ ಮಣ್ಣಿನ ಮಡಕೆಯಲ್ಲಿ ಸಂಗ್ರಹಿಸಿದ ನೀರು ಕುಡಿಯುವುದು ಆರೋಗ್ಯಕ್ಕೆ ಹೆಚ್ಚು ಅನೂಕೂಲಕರ. ನೈಸರ್ಗಿಕ ತಂಪು
ವೇಣೂರು| ಪಡ್ಡoದಡ್ಕ ಮಸೀದಿಯಲ್ಲಿ ಸಂಭ್ರಮದ ಈದುಲ್ ಫಿತ್ರ್
ವೇಣೂರು: ಪಡ್ಡoದಡ್ಕ ನೂರುಲ್ ಹುದಾ ಜುಮಾ ಮಸೀದಿಯಲ್ಲಿ ಸಂಭ್ರಮದಿಂದ ಈದುಲ್ ಫಿತ್ರ್ ಶುಕ್ರವಾರದಂದು ಆಚರಿಸಲಾಯಿತು. ಖತೀಬ್ ಖಲಂದರ್ ಶಾಫಿ ಬಾಕವಿ ಅಲ್ ಮನ್ನಾನಿ ಕುತುಬಾ ಪಾರಾಯಣ, ನಮಾಝ್ ನೇತೃತ್ವ ವಹಿಸಿದರು. ಆಡಳಿತ ಸಮಿತಿ ಅಧ್ಯಕ್ಷ ಇಸ್ಮಾಯಿಲ್ ಕೆ ಪೆರಿಂಜೆ, ಪತ್ರಕರ್ತ ಎಚ್ ಮಹಮ್ಮದ್ ವೇಣೂರು, ಪ್ರ. ಕಾರ್ಯದರ್ಶಿ ರಫೀಕ್ ಪಡ್ಡ, ಪ್ರಮುಖರಾದ ಖಾಲಿದ್ ಪುಲಬೆ, ಮಹಮೂದ್ ಪಿಜೆ, ಅಬ್ದು ಸಲಾಂ ಶಾಂತಿ ನಗರ, ನಝೀರ್ ಪೆರಿಂಜೆ, ಇರ್ಫಾನ್ ಯುಕೆ, ಅಶ್ರಫ್ ಶಾಂತಿನಗರ, ಅಶ್ರಫ್ ಗಾಂಧಿನಗರ, ಶರಫುದ್ದೀನ್ ತಂಙಳ್, ಮೊಹಮ್ಮದ್ ಶಾಫಿ ಕಿರೋಡಿ, ಅಶ್ರಫ್ ಕಿರೋಡಿ, ಇಸ್ಮಾಯಿಲ್ ಎಚ್ ಗಾಂಧಿ ನಗರ , ಯಾಕೂಬ್ ಪುಲಾಬೆ ಸೇರಿದಂತೆ ಗಣ್ಯರು, ಜಮಾತಿನ ಸದಸ್ಯರು ಉಪಸ್ಥಿತರಿದ್ದರು.
Tamil Nadu | ಲೈಂಗಿಕ ಕಿರುಕುಳ ಆರೋಪಿ ಮಾತೂರ್ ಸತ್ಯನನ್ನು ಬಂಧಿಸಿದ ಚೆನ್ನೈ ಪೊಲೀಸರು
ಚೆನ್ನೈ: ಪಕ್ಷದಿಂದ ಉಚ್ಚಾಟನೆಗೊಂಡಿರುವ ಸಿಪಿಐ ಸದಸ್ಯ ಹಾಗೂ ಲೈಂಗಿಕ ಕಿರುಕುಳ ಆರೋಪಿ ಮಾತೂರ್ ಸತ್ಯನನ್ನು ಗುರುವಾರ ಚೆನ್ನೈ ಪೊಲೀಸರು ಬಂಧಿಸಿದ್ದಾರೆ. ಸತ್ಯರನ್ನು ಬೆಂಗಳೂರಿನಲ್ಲಿ ಬಂಧಿಸಲಾಗಿದ್ದು, ಮುಂದಿನ ತನಿಖೆಗಾಗಿ ಚೆನ್ನೈಗೆ ಕರೆತರಲಾಗಿದೆ. ಪತ್ರಿಕೋದ್ಯಮಿ ಹಾಗೂ ತಮ್ಮ ಪ್ರಗತಿಪರ ದೃಷ್ಟಿಕೋನಗಳಿಗೆ ಹೆಸರಾಗಿದ್ದ ಮಾತೂರ್ ಸತ್ಯನನ್ನು, ಲೈಂಗಿಕ ದುರ್ನಡತೆಯ ಆರೋಪದ ಮೇಲೆ ಮಾರ್ಚ್ 14ರಂದು ಸಿಪಿಐ ಪಕ್ಷದಿಂದ ಉಚ್ಚಾಟಿಸಲಾಗಿತ್ತು. ಇದರ ಬೆನ್ನಿಗೇ, ಅವರ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಹೊರಿಸಿದ್ದ ಮಹಿಳೆಯ ಪರವಾಗಿ ಗ್ರೇಟರ್ ಚೆನ್ನೈ ನಗರದ ಪೊಲೀಸ್ ಆಯುಕ್ತರಿಗೆ ದೂರನ್ನು ನೀಡಲಾಗಿತ್ತು. ಇದಕ್ಕೂ ಮುನ್ನ, ಮಾರ್ಚ್ 14ರಂದು ನಡೆದ ಸಭೆಯಲ್ಲಿ ಮಾತೂರ್ ಸತ್ಯ ವಿರುದ್ಧದ ಲೈಂಗಿಕ ಕಿರುಕುಳ ಆರೋಪದ ಕುರಿತು ಚರ್ಚಿಸಿದ ಬಳಿಕ, ಸಿಪಿಐ ಹಾಗೂ ಅದರ ಸಹ ಸಂಸ್ಥೆಗಳಾದ ಆಲ್ ಇಂಡಿಯಾ ಯೂತ್ ಫೆಡರೇಷನ್ ಮತ್ತು ಇಂಡಿಯನ್ ಸೊಸೈಟಿ ಫಾರ್ ಕಲ್ಚರಲ್ ಕೋ-ಆಪರೇಷನ್ ಆ್ಯಂಡ್ ಫ್ರೆಂಡ್ಶಿಪ್ನಿಂದ ಮಾತೂರ್ ಸತ್ಯನನ್ನು ಉಚ್ಚಾಟಿಸಲಾಗಿದೆ ಎಂದು ದಕ್ಷಿಣ ಚೆನ್ನೈನ ಸಿಪಿಐ ಜಿಲ್ಲಾ ಕಾರ್ಯದರ್ಶಿ ಎಸ್.ಕೆ. ಶಿವ ಪ್ರಕಟಿಸಿದ್ದರು. ಮೂರನೇ ವ್ಯಕ್ತಿ ನೀಡಿದ ದೂರಿನ ಮೂಲಕ ಈ ಆರೋಪಗಳು ನಮ್ಮ ಗಮನಕ್ಕೆ ಬಂದಿವೆ ಎಂದು ಸಿಪಿಐ ತಿಳಿಸಿದೆ. ಸೇಲಂ ಮೂಲದ ಮಾತೂರ್ ಸತ್ಯ, ತಮ್ಮ ಸಾಮಾಜಿಕ ನ್ಯಾಯ ಹಾಗೂ ಸಾರ್ವಜನಿಕ ನೀತಿಗಳ ಕುರಿತ ಕೆಲಸಗಳ ಮೂಲಕ ಗಮನ ಸೆಳೆದವರು. ಇಂಜಿನಿಯರಿಂಗ್ ಪದವೀಧರರಾದ ಅವರು, 2019ರಲ್ಲಿ ಕಾರ್ಪೊರೇಟ್ ಉದ್ಯೋಗವನ್ನು ತೊರೆದು, ಚಿತ್ರ ನಿರ್ದೇಶಕ ಪಾ. ರಂಜಿತ್ ಸ್ಥಾಪಿಸಿದ್ದ ನೀಲಂ ಸಾಮಾಜಿಕ ವೇದಿಕೆಯೊಂದಿಗೆ ಗುರುತಿಸಿಕೊಂಡಿದ್ದರು. ಅಲ್ಲಿ ಅವರು ಜಾತಿ, ಅಸಮಾನತೆ ಮತ್ತು ರಾಜಕೀಯದ ಕುರಿತು ವಿವರಿಸುವ ವಿಡಿಯೊಗಳನ್ನು ನಿರ್ಮಿಸಿದ್ದರು. ಅಲ್ಲದೆ, ಬಿ.ಆರ್. ಅಂಬೇಡ್ಕರ್, ಪೆರಿಯಾರ್ ಮತ್ತು ಕಾರ್ಲ್ ಮಾರ್ಕ್ಸ್ ಅವರ ಚಿಂತನೆಗಳನ್ನು ಕೇಂದ್ರೀಕರಿಸಿದ ಅಧ್ಯಯನ ಗುಂಪುಗಳು ಹಾಗೂ ಚರ್ಚೆಗಳಲ್ಲಿ ಭಾಗವಹಿಸಿ, ಸಾಮಾಜಿಕ ನ್ಯಾಯಕ್ಕೆ ಸಂಬಂಧಿಸಿದ ಪ್ರತಿಭಟನೆಗಳು ಮತ್ತು ತಳಮಟ್ಟದ ಉಪಕ್ರಮಗಳಲ್ಲಿ ಪಾಲ್ಗೊಂಡಿದ್ದರು. “ನನ್ನ ವಿರುದ್ಧದ ಆರೋಪಗಳಿಗೆ ಕಾನೂನು ಮಾರ್ಗಗಳ ಮೂಲಕ ಪ್ರತಿಕ್ರಿಯಿಸುತ್ತೇನೆ,” ಎಂದು ಸತ್ಯ ಹೇಳಿದ್ದಾರೆ.
Dhurandhar 2 Review: ಸೇಡು, ಕಿಚ್ಚು, ರಾಷ್ಟ್ರಪ್ರೇಮ.. ಪ್ರೇಕ್ಷಕರಿಗೆ ಬ್ಲಾಕ್ಬಸ್ಟರ್ ಅನುಭವ!
ಆದಿತ್ಯ ಧರ್ ನಿರ್ದೇಶನದ ರಣ್ವೀರ್ ಸಿಂಗ್ ಅಭಿನಯದ ‘ಧುರಂದರ್’ ಚಿತ್ರ ಕಳೆದ ವರ್ಷವಷ್ಟೇ.. ಅಂದ್ರೆ ಡಿಸೆಂಬರ್ 5 ರಂದು ರಿಲೀಸ್ ಆಗಿತ್ತು. ಇದೀಗ ‘ಧುರಂದರ್ 2’ () ತೆರೆಗೆ ಅಪ್ಪಳಿಸಿದೆ. ಈ ಸೀಕ್ವೆಲ್ ಸಂಪೂರ್ಣವಾಗಿ ರಣ್ವೀರ್ ಸಿಂಗ್ ಅವರ ಒನ್ ಮ್ಯಾನ್ ಶೋ ಆಗಿ ರೂಪುಗೊಂಡಿದೆ. ‘ಧುರಂದರ್’ ಭಾಗ 2 ಚಿತ್ರದಲ್ಲಿ ಹೆಚ್ಚು ಆಕ್ಷನ್ ಇದೆ, ಹೆಚ್ಚು ವೈಲೆನ್ಸ್ ಇದೆ, ಹೆಚ್ಚು ಭಾವನಾತ್ಮಕ ಅಂಶಗಳಿದೆ. ಈ ರಿವೆಂಜ್ ಕಥಾನಕದಲ್ಲಿ ಎಲ್ಲವೂ ಡಬಲ್ ಡಬಲ್ ಡೋಸ್ ಇದೆ. ‘ಧುರಂದರ್ 2’ ಚಿತ್ರದ ಕಥೆ ಏನು? ‘’ ಚಿತ್ರದಲ್ಲಿರುವುದು ಜಸ್ಕಿರತ್ ಸಿಂಗ್ ರಂಗಿ ಕಥೆ. 2002ರ ಫ್ಲ್ಯಾಶ್ಬ್ಯಾಕ್ನಲ್ಲಿ ಬರುವ ಈ ಕಥೆ, ವೈಯಕ್ತಿಕ ಪ್ರತೀಕಾರದಿಂದ ಆರಂಭವಾಗಿ, ರಾಷ್ಟ್ರದ ಮಿಷನ್ ಆಗಿ ರೂಪಾಂತರಗೊಳ್ಳುತ್ತದೆ. ಜಸ್ಕಿರತ್ ಸಿಂಗ್ ರಂಗಿ (ರಣವೀರ್ ಸಿಂಗ್) ಎಂಬ ಯುವಕ ಹೇಗೆ ಹಮ್ಜಾ ಅಲಿ ಮಜಾರಿ ಎಂಬ ಭಯಾನಕ ಅಂಡರ್ಕವರ್ ಏಜೆಂಟ್ ಆಗಿ ಬದಲಾಗುತ್ತಾನೆ ಎಂಬುದರ ಸುತ್ತ ಕಥೆ ಹೆಣೆಯಲಾಗಿದೆ. ನಿರ್ದೇಶಕ ಆದಿತ್ಯ ಧರ್ ಈ ಕಥೆಯನ್ನು ದೊಡ್ಡ ಕ್ಯಾನ್ವಾಸ್ನಲ್ಲಿ, ರಿಯಲ್ ಮತ್ತು ರೀಲ್ ಮಿಶ್ರಣ ಶೈಲಿಯಲ್ಲಿ ಹೇಳಲು ಪ್ರಯತ್ನಿಸಿದ್ದಾರೆ. ನೈಜ ಘಟನೆಗಳ ಚಿತ್ರಣ ‘ 2’ ಚಿತ್ರದಲ್ಲಿ ಪಾಕಿಸ್ತಾನದ ಭೂಗತಲೋಕ, ಭಯೋತ್ಪಾದನೆ, ನಕಲಿ ನೋಟು ಜಾಲ, ಡ್ರಗ್ಸ್ ಸಮಸ್ಯೆ, ಖಲಿಸ್ತಾನಿ ಅಂಶಗಳು ಸೇರಿದಂತೆ ಹಲವಾರು ವಿಷಯಗಳ ಬಗ್ಗೆ ಬೆಳಕು ಚೆಲ್ಲುತ್ತದೆ. 26/11 ದಾಳಿ, ಸರ್ಜಿಕಲ್ ಸ್ಟ್ರೈಕ್, ನೋಟು ಅಮಾನ್ಯೀಕರಣ ಮುಂತಾದ ನೈಜ ಘಟನೆಗಳನ್ನು ಕಥೆಯಲ್ಲಿ ಬೆರೆಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಕೇಮಿಯೋ, ‘ಬಡೆ ಸಾಬ್’ ಎಂಟ್ರಿ ಸೇರಿದಂತೆ ಹಲವು ರಿಯಲ್ ಲೈಫ್ ರೆಫರೆನ್ಸ್ ಜನರ ಎದೆಬಡಿತವನ್ನ ಹೆಚ್ಚಿಸುತ್ತದೆ. ರಣ್ವೀರ್ ಸಿಂಗ್ ಬರೀ ನಟ ಅಲ್ಲ! ಈ ಸಿನಿಮಾದಲ್ಲಿ ರಣ್ವೀರ್ ಸಿಂಗ್ ಬರೀ ನಟನಾಗಿ ಮಾತ್ರ ಕಾಣಿಸಿಲ್ಲ. ಸಂಪೂರ್ಣ ಪಾತ್ರವಾಗಿಬಿಟ್ಟಿದ್ದಾರೆ. ಇಡೀ ಪಾತ್ರ ಅವರನ್ನ ಆವರಿಸಿಕೊಂಡುಬಿಟ್ಟಿದೆ. ಭಾವನಾತ್ಮಕ ದೃಶ್ಯಗಳಲ್ಲಿ ರಣ್ವೀರ್ ಸಿಂಗ್ ಮನಮಿಡಿಯುವ ಅಭಿನಯ ನೀಡಿದ್ದಾರೆ. ಆಕ್ಷನ್ ದೃಶ್ಯಗಳಲ್ಲಿ ಅಬ್ಬರಿಸಿ ಬೊಬ್ಬಿರಿದಿದ್ದಾರೆ. ಇದು ರಣ್ವೀರ್ ಸಿಂಗ್ ಅವರ ವೃತ್ತಿ ಜೀವನದಲ್ಲೇ ಬೆಸ್ಟ್ ಪರ್ಫಾಮೆನ್ಸ್ ಅಂದರೂ ಅತಿಶಯೋಕ್ತಿ ಅಲ್ಲ. ಆ ರೇಂಜ್ಗೆ ಅವರ ಅಭಿನಯ ಇದೆ. ಇತರರ ಅಭಿನಯ ಹೇಗಿದೆ? ಅಜಯ್ ಸಾನ್ಯಾಲ್ ಆಗಿ ಆರ್ ಮಾಧವನ್ ಗಂಭೀರವಾಗಿ ಕಾಣಿಸಿಕೊಂಡಿದ್ದಾರೆ. ಗಾಡ್ ಫಾದರ್ ಆಗಿ ಆರ್ ಮಾಧವನ್ ಇಷ್ಟವಾಗುತ್ತಾರೆ. ಮೇಜರ್ ಇಕ್ಬಾಲ್ ಆಗಿ ಅರ್ಜುನ್ ರಾಂಪಾಲ್ ಭಯ ಹುಟ್ಟಿಸುವಂತೆ ನಟಿಸಿದ್ದಾರೆ. ಮೊದಲ ಭಾಗದಲ್ಲಿ ಅಕ್ಷಯ್ ಖನ್ನಾ ನೀಡಿದ್ದ ಇಂಪ್ಯಾಕ್ಟ್ ಇಲ್ಲಿ ಮಿಸ್ ಆಗಿದೆ. ಸಂಜಯ್ ದತ್ ತಮ್ಮ ಸ್ವಾಗ್ನಿಂದ ಜನರ ಮನ ಕದಿಯುತ್ತಾರೆ. ಸಾರಾ ಅರ್ಜುನ್ ತಮ್ಮ ಕಣ್ಣುಗಳ ಮೂಲಕವೇ ಭಾವನೆಗಳನ್ನ ಹೊರಹಾಕಿದ್ದಾರೆ. ಡಿಫರೆಂಟ್ ಫೀಲ್ ಕೊಡುವ ಸಂಗೀತ ಖಲೀದ್ ಅವರ ಜನಪ್ರಿಯ ಗೀತೆ ‘ದೀದಿ’, ನುಸ್ರತ್ ಫತೇಹ್ ಅಲಿ ಖಾನ್ ಅವರ ‘ಕವ್ವಾಲಿ’, ಕಿಶೋರ್ ಕುಮಾರ್ ಹಾಡುಗಳು ಮತ್ತು ಬೋನಿ ಎಂ ಆಲ್ಬಂನ ‘ರಾಸ್ಪುಟಿನ್’ - ಈ ಎಲ್ಲಾ ಸೂಪರ್ ಹಿಟ್ ಹಾಡುಗಳೂ ಈ ಚಿತ್ರದಲ್ಲಿವೆ. ಈ ಮಿಶ್ರಣ ಈ ಚಿತ್ರಕ್ಕೆ ಡಿಫರೆಂಟ್ ಫೀಲ್ ನೀಡಿದೆ. ಟೆಕ್ನಿಕಲಿ ಚಿತ್ರ ಹೇಗಿದೆ? ಈ ಚಿತ್ರದ ಅವಧಿ ಹತ್ತತ್ರ ನಾಲ್ಕು ಗಂಟೆ (3 ಗಂಟೆ 55 ನಿಮಿಷ). ತುಂಬಾ ದೊಡ್ಡ ಸಿನಿಮಾ ಎಂದು ಭಾಸವಾಗುತ್ತದೆ. ಸಂಕಲನ ಕೊಂಚ ಚುರುಕಾಗಿದ್ದಿದ್ದರೆ, ಅವಧಿ ಕಮ್ಮಿಯಾಗುತ್ತಿತ್ತು. ವೇಗವೂ ಹೆಚ್ಚುತ್ತಿತ್ತು. ಚಿತ್ರದಲ್ಲಿ ಭಯೋತ್ಪಾದನೆ - ರಾ ಏಜೆಂಟ್ ಕಥೆ ಇರುವುದಿಂದ ಹಿಂಸಾಚಾರ ಮತ್ತು ವೈಲೆನ್ಸ್ಗೆ ಹೆಚ್ಚಿನ ಪ್ರಾಮುಖ್ಯತೆ ಕೊಡಲಾಗಿದೆ. ರಕ್ತಪಾತ ಕೊಂಚ ಜಾಸ್ತಿಯೇ ಹರಿದಿದೆ. ಫೈನಲ್ ಸ್ಟೇಟ್ಮೆಂಟ್ ‘ 2’ ಚಿತ್ರ ಪ್ರೇಕ್ಷಕರಿಗೆ ಒಂದು ದೊಡ್ಡ ಥಿಯೇಟ್ರಿಕಲ್ ಅನುಭವ ನೀಡುತ್ತದೆ. ಆಕ್ಷನ್ ಹಾಗೂ ರಾಷ್ಟ್ರಪ್ರೇಮ ಮೆರೆದಿರುವ ಈ ಚಿತ್ರ ಪ್ರೇಕ್ಷಕರನ್ನ ಸೆಳೆಯುತ್ತದೆ. ಆಕ್ಷನ್ ಪ್ರಿಯರಿಗೆ ಇದು ಹೇಳಿ ಮಾಡಿಸಿದ ಸಿನಿಮಾ. ರಣ್ವೀರ್ ಸಿಂಗ್ ಅಭಿಮಾನಿಗಳು ಹಾಗೂ ರಾಷ್ಟ್ರಪ್ರೇಮಿಗಳು ನೋಡಲೇಬೇಕಾದ ಚಿತ್ರವಿದು.
ಉಡುಪಿ ಜಿಲ್ಲೆಯಾದ್ಯಂತ ಮಸೀದಿಗಳಲ್ಲಿ ಈದುಲ್ ಫಿತ್ರ್ ಆಚರಣೆ ನೆರವೇರಿಸಲಾಗಿದೆ. ಕುಂದಾಪುರ ಈದ್ಗಾ ಮೈದಾನದಲ್ಲಿ ವಿಶೇಷ ನಮಾಜ್ ನೆರವೆರಿಸಲಾಯಿತು, ಧರ್ಮಗುರುಗಳು ಶಾಂತಿಯ ಸಂದೇಶ ರವಾನಿಸಿದರು.
ಉಗ್ರರನ್ನು ಪೋಷಿಸುತ್ತಾ ಭಾರತದ ಮೇಲೆ ವಿಷಕಾರುವ ಪಾಕಿಸ್ತಾನ ಇದೀಗ ತನ್ನದೇ ಬಲೆಯಲ್ಲಿ ಬಿದ್ದಿದ್ದು, ಭಯೋತ್ಪಾದಕ ದಾಳಿಗಳು ಹಾಗೂ ಅದರಿಂದ ಸಂಭವಿಸುವ ಸಾವುಗಳು ಪಾಕಿಸ್ತಾನದಲ್ಲಿ ಶೇ.6ರಷ್ಟು ಹೆಚ್ಚಳವಾಗಿದ್ದು, ಈ ಮೂಲಕ ಜಗತ್ತಿನಲ್ಲಿ ಉಗ್ರ ದಾಳಿಯಿರುವ ದೇಶಗಳ ಪೈಕಿ ಮೊದಲ ಸ್ಥಾನ ಪಾಕಿಸ್ತಾನ ಪಡೆದುಕೊಂಡಿದೆ ಎಂದು ಜಾಗತಿಕ ಭಯೋತ್ಪಾದನಾ ಸೂಚ್ಯಂಕ ವರದಿಮಾಡಿದೆ. ಈ ಮೂಲಕ ಜಾಗತಿಕವಾಗಿ ಭಯೋತ್ಪಾದಕ ಘಟನೆಗಳು ಮತ್ತು ಅದರ ಪರಿಣಾಮಗಳ ಸಂಖ್ಯೆ ಕಡಿಮೆಯಾಗುತ್ತಿದ್ದರೂ ಸಹ ಪಾಕಿಸ್ತಾನದಲ್ಲಿ ಏರಿಕೆಯಾಗುತ್ತಿದೆ.
ಹೆನ್ನಾಬೈಲ್| ಈದ್ಗಾ ಮೈದಾನದಲ್ಲಿ ಸಂಭ್ರಮದ ಈದುಲ್ ಫಿತ್ರ್ ಆಚರಣೆ
ಹೆನ್ನಾಬೈಲ್: ಈದ್ಗಾ ಮೈದಾನದಲ್ಲಿ ಈದುಲ್ ಫಿತ್ರ್ ಪ್ರಾರ್ಥನೆಯು ಧರ್ಮಗುರು ಮೌಲಾನಾ ಅಬ್ದುಲ್ ಹಫೀಝ್ ರಝ್ವಿ ಅವರ ನೇತೃತ್ವದಲ್ಲಿ ನಡೆಯಿತು. ಈ ಸಂದರ್ಭ ಪ್ರಾರ್ಥನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು ರಮಝಾನ್ ತಿಂಗಳ ಉಪವಾಸ, ದಾನ, ಆರಾಧನೆಗಳೆಲ್ಲವೂ ಆರಾಧಕನನ್ನು ಆರಾಧ್ಯನ ಸಂಪರ್ಕಕ್ಕೆ ತಂದು ಸಂತುಷ್ಟಗೊಳಿಸುವ ಪ್ರಕ್ರಿಯೆಗಳು. ಆಧ್ಯಾತ್ಮದಲ್ಲಿ ದೇವನ ಸಂತೋಷ- ಸಂಪ್ರೀತಿಗಳು, ಆತನು ಸೃಷ್ಟಿಸಿದ ಸೃಷ್ಟಿಗೆ ನಾವು ಹೇಗೆ ಸ್ಪಂದಿಸುತ್ತೇವೆ ಮತ್ತು ಸೃಷ್ಟಿಯ ಭಾಗವಾಗಿ ನಮ್ಮನ್ನು ಸೃಷ್ಟಿಸಿ ಸಲಹಿದ್ದಕ್ಕಾಗಿ ಕೃತಜ್ಞತೆಯನ್ನು ಹೇಗೆ ಅರ್ಪಿಸುತ್ತೇವೆ ಎಂಬುದರ ಮೇಲಿದೆ. ದೇವನೊಂದಿಗಿನ ಅನುಸಂಧಾನವು ಅನುಸರಣೆಯ ಪಕ್ವತೆಯನ್ನು ಅವಲಂಬಿಸಿದೆ. ದಾನದಿಂದ ಸಂಪತ್ತು ಬರಿದಾಗುವುದಿಲ್ಲ, ಅದು ಅವಘಡಗಳಿಂದಲೂ ಮನುಷ್ಯನನ್ನು ರಕ್ಷಿಸುತ್ತದೆ ಎನ್ನುವುದು ದೇವವಾಣಿ. ದಾನವನ್ನು ಇಸ್ಲಾಮ್ ಧರ್ಮ ಬೋಧಿಸಿದ ರೀತಿಯಲ್ಲಿ ಗಂಭೀರವಾಗಿ ಪರಿಗಣಿಸಿ ನೀಡಿದರೆ ಅದರ ಪ್ರತಿಫಲ ಪ್ರತ್ಯಕ್ಷವಾಗಿ ಕಾಣಬಹುದು. ದೇವನ ಅಸ್ತಿತ್ವ ಮತ್ತು ಪ್ರಭಾವವನ್ನು ಪ್ರಾಯೋಗಿಕವಾಗಿ ಅರಿಯಬೇಕಿದ್ದರೆ, ದೇವ ನಿಯಮಗಳನ್ನು ಸುಸೂತ್ರವಾಗಿ ಪಾಲಿಸುವುದು ಅಗತ್ಯವಾಗಿರುತ್ತದೆ. ಉಪವಾಸ ಕೇವಲ ದೇಹದ ಬಳಲಿಕೆಗೆ ಇರುವುದಲ್ಲ. ಅದು ದೇಹ ಮತ್ತು ಮನಸ್ಸನ್ನು ಶುದ್ಧೀಕರಿಸಿ ದೇವನ ನೀತಿಗಳನ್ನು ಪಾಲಿಸಲು ಬೇಕಾದ ಪ್ರೇರಣೆಗೆ ಪೂರಕತೆಯನ್ನು ಒದಗಿಸುವ ಒಂದು ಪ್ರಾಯೋಗಿಕ ಪರಿಕ್ರಮ. ಹೀಗಿನ ಜೀವಪರ ಸಿದ್ಧಾಂತವನ್ನು ಹೊಂದಿರುವ ಧರ್ಮವು ಮನುಷ್ಯ ಬದುಕನ್ನು ಸುಸೂತ್ರವಾಗಿಸುವ ಮಾರ್ಗದರ್ಶಿ ಸೂತ್ರ. ಅದರಲ್ಲಿ ಕಾಠಿಣ್ಯವನ್ನು ಸೃಷ್ಟಿಸಿಕೊಳ್ಳುವುದು, ಭೇದ ಮಾಡುವುದು ಅಧರ್ಮವಾಗುತ್ತದೆ. ಎಲ್ಲರನ್ನೂ ಒಳಗೊಳ್ಳದ ಧರ್ಮ ಧರ್ಮವೇ ಅಲ್ಲ. ಧರ್ಮದ ಅರಿವು ಒಂದು ಯೋಗ್ಯತೆ. ಅದೆಷ್ಟೋ ಜನರಿಗೆ ಆ ಯೋಗವೇ ಇರುವುದಿಲ್ಲ. ಬದುಕಿನ ಧಾವಂತ- ಭ್ರಮೆಗಳಲ್ಲಿ ಹುಟ್ಟಿಗೊಂದು ಉದ್ದೇಶ ಮತ್ತು ಸಾವಿದೆ ಎಂಬ ಸತ್ಯದ ಗಾಢತೆ ಅರಿಯಬೇಕಿದ್ದರೆ ಉಪವಾಸ, ಪಾರಾಯಣ, ದಾನ-ಧರ್ಮಗಳ ಮೂಲಕ ದೇವನ ಸನ್ನಿಧಾನಕ್ಕೆ ನಮ್ಮನ್ನು ನಾವು ಅರ್ಪಿಸಿಕೊಳ್ಳುವ ಅನಿವಾರ್ಯತೆ ಇರುತ್ತದೆ. ಇಲ್ಲದಿದ್ದರೆ ಸುಮ್ಮನೆ ಹುಟ್ಟಿಕೊಂಡು ಬಿಟ್ಟಿದ್ದೇವೆ ಎಂಬ ಅಜ್ಞಾನದಲ್ಲೇ ಬದುಕೊಂದು ನಿರರ್ಥಕ ವರ್ಷಗಳನ್ನು ಸವೆಸಿ ಸುಮ್ಮನೆ ಸತ್ತು ಹೋಗುತ್ತದೆ. ರಮಝಾನ್ ತಿಂಗಳ ಸಮಸ್ತ ಧಾರ್ಮಿಕ ಪ್ರಕ್ರಿಯೆಗಳ ಹಿಂದೆ ಒಂದು ದೊಡ್ಡ ಉದ್ದೇಶ ಮತ್ತು ಅರ್ಥ ಇದೆ. ಇದನ್ನು ಅರಿತು ಇತರರಿಗೆ ಅರಿಯಿಸುವ ದೊಡ್ಡ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ ಎಂದು ಅವರು ಹೇಳಿದರು. ಸಭೆಯಲ್ಲಿ ಅಲಿಯಬ್ಬಾ ತೋಟದಮನೆ, ಸೈಯದ್ ಅಬ್ಬಾಸ್, ಹಸನ್ ಸಾಹೇಬ್, ಸೈಯದ್ ರಫೀಖ್, ಹಯಾತ್ ಭಾಷಾ, ಇಕ್ಬಾಲ್ ಬಾಪು, ಆದಮ್ ಸಾಹೇಬ್, ಇಬ್ರಾಹಿಮ್ ಸೈಯದ್, ಅಷ್ಪಾಕ್ ಸಾಬ್ಜನ್, ಅಮಾನ್ ಜಮಾಲ್, ಖಲೀಲ್ ತವಕ್ಕಲ್, ಸೈಯದ್ ಆರೀಫ್, ಮುಹಮ್ಮದ್ ರಫೀಕ್, ಶಬೀರ್ ಸಾಹೇಬ್, ಯೂಸುಫ್ ಸಾಹೇಬ್, ಅಲ್ತಾಫ್ ಆಲಿ, ನಝೀರ್ ಸೈಯದ್, ಗುಡ್ಡೆ ಅಬ್ದುಲ್ ಹಮೀದ್, ಸಲೀಮ್ ಅಹಮದ್ ಮುಂತಾದವರು ಉಪಸ್ಥಿತರಿದ್ದರು.
ಶಿವಮೊಗ್ಗ| ನೀರಾನೆ ದಾಳಿಗೆ ಪಶುವೈದ್ಯೆ ಮೃತ್ಯು: ಉನ್ನತ ಮಟ್ಟದ ತನಿಖೆಗೆ ಅರಣ್ಯ ಸಚಿವ ಈಶ್ವರ್ ಖಂಡ್ರೆ ಆದೇಶ
ಶಿವಮೊಗ್ಗ: ನಗರದ ಹೊರವಲಯದಲ್ಲಿರುವ ತ್ಯಾವರೆಕೊಪ್ಪ ಹುಲಿ ಮತ್ತು ಸಿಂಹ ಸಫಾರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪಶು ವೈದ್ಯೆಯೊಬ್ಬರು ನೀರಾನೆ ದಾಳಿಯಿಂದ ಮೃತಪಟ್ಟ ಘಟನೆ ನಡೆದಿದೆ. ಬೆಂಗಳೂರು ಮೂಲದ ಡಾ. ಸಮೀಕ್ಷಾ ರೆಡ್ಡಿ (27) ಮೃತರು ಎಂದು ಗುರುತಿಸಲಾಗಿದೆ. ಡಾ. ಸಮೀಕ್ಷಾ ಅವರು ಸಫಾರಿಯಲ್ಲಿ ಪಶುವೈದ್ಯ ಅಧಿಕಾರಿಯಾಗಿ ಆಯ್ಕೆಯಾಗಿ ತರಬೇತಿ ಪಡೆಯುತ್ತಿದ್ದರು. ಗುರುವಾರ ರಾತ್ರಿ 10:30ರ ಸುಮಾರಿಗೆ ಅವರು ಸನ್ ಕಾನರ್ ಹಕ್ಕಿಯ ಚಿಕಿತ್ಸೆಗಾಗಿ ಮೃಗಾಲಯದ ಆಸ್ಪತ್ರೆಗೆ ತೆರಳಿದ್ದರು. ಬಳಿಕ ರಾತ್ರಿ 11:45ರ ಸುಮಾರಿಗೆ ಗರ್ಭಿಣಿ ನೀರಾನೆಯ ದೇಹದ ಉಷ್ಣತೆಯನ್ನು ಥರ್ಮಲ್ ಕ್ಯಾಮೆರಾ ಮೂಲಕ ಪರೀಕ್ಷಿಸಲು ಅದರ ಆವರಣದ ಒಳಗೆ ಹೋದಾಗ, ನೀರಾನೆ ಹಠಾತ್ತಾಗಿ ಅವರ ಮೇಲೆ ದಾಳಿ ಮಾಡಿದೆ. ದಾಳಿಯಿಂದ ತೀವ್ರವಾಗಿ ಗಾಯಗೊಂಡಿದ್ದ ಅವರನ್ನು ತಕ್ಷಣವೇ ಶಿವಮೊಗ್ಗದ ಆಸ್ಪತ್ರೆಗೆ ದಾಖಲಿಸಿ ಶಸ್ತ್ರಚಿಕಿತ್ಸೆಗೆ ಒಳಪಡಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಿಗ್ಗೆ 6:30ರ ಸುಮಾರಿಗೆ ಅವರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಉನ್ನತ ಮಟ್ಟದ ತನಿಖೆಗೆ ಸಚಿವರ ಆದೇಶ:- ನೀರಾನೆ ದಾಳಿಯಿಂದ ಪಶು ವೈದ್ಯೆ ಡಾ. ಸಮೀಕ್ಷಾ ರೆಡ್ಡಿ ಮೃತಪಟ್ಟ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಅರಣ್ಯ ಸಚಿವ ಈಶ್ವರ ಖಂಡ್ರೆ, ಘಟನೆಯ ಬಗ್ಗೆ ಉನ್ನತ ಮಟ್ಟದ ತನಿಖೆಗೆ ಆದೇಶಿಸಿದ್ದಾರೆ. ದುರಂತದ ಕುರಿತು ಹಿರಿಯ ಪಶುವೈದ್ಯರು ಹಾಗೂ ಅರಣ್ಯಾಧಿಕಾರಿಗಳ ತಂಡವು ಕೂಲಂಕಷವಾಗಿ ತನಿಖೆ ನಡೆಸಿ, ಘಟನೆ ಸಂಭವಿಸಲು ಕಾರಣಗಳೇನು ಮತ್ತು ಸುರಕ್ಷತಾ ಲೋಪಗಳಿವೆಯೇ ಎಂಬ ಬಗ್ಗೆ ಪರಾಮರ್ಶಿಸಿ, ಮುಂದಿನ 7 ದಿನಗಳಲ್ಲಿ ವರದಿ ಸಲ್ಲಿಸಬೇಕು ಎಂದು ಸಚಿವರು ಸೂಚಿಸಿದ್ದಾರೆ. ವನ್ಯಜೀವಿಗಳಿಗೆ ಚಿಕಿತ್ಸೆ ನೀಡುವ ಸಂದರ್ಭ ಪಾಲಿಸಬೇಕಾದ ಪ್ರಮಾಣಿತ ಕಾರ್ಯಚರಣೆ ವಿಧಾನವನ್ನು ರಾಜ್ಯದ ಎಲ್ಲಾ ಮೃಗಾಲಯಗಳಲ್ಲಿ ಕಡ್ಡಾಯವಾಗಿ ಜಾರಿಗೊಳಿಸಬೇಕು. ವೈದ್ಯರು ಮತ್ತು ಸಿಬ್ಬಂದಿ ವನ್ಯಜೀವಿಗಳ ಹತ್ತಿರ ಹೋಗುವಾಗ ಹೆಚ್ಚಿನ ಜಾಗರೂಕತೆ ವಹಿಸಬೇಕು ಎಂದು ನಿರ್ದೇಶನ ನೀಡಿದ್ದಾರೆ. ಮೃತ ವೈದ್ಯೆಯ ಕುಟುಂಬಕ್ಕೆ ನಿಯಮಾನುಸಾರ ತಕ್ಷಣವೇ ಪರಿಹಾರ ವಿತರಿಸುವಂತೆ ಸಚಿವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಇದು ದುರದೃಷ್ಟಕರ ಘಟನೆ. ಪ್ರತಿ ಜೀವವೂ ಅಮೂಲ್ಯ. ಸರ್ಕಾರವು ಮೃತ ವೈದ್ಯರ ಕುಟುಂಬದ ಪರವಾಗಿ ನಿಲ್ಲಲಿದೆ ಎಂದು ಸಂತಾಪ ಸೂಚಿಸಿದ್ದಾರೆ.

24 C