ಮಹಿಳಾ ದಿನದಂದು ಸಿಲಿಂಡರ್ ಬೆಲೆ ಹೆಚ್ಚಳ; ಇದು ʼಅಚ್ಚೇದಿನ್ʼ ಎಂದು ಟೀಕಿಸಿದ ಸಚಿವ ಪ್ರಿಯಾಂಕ್ ಖರ್ಗೆ
ಕಲಬುರಗಿ : ಇಂದು ವಿಶ್ವ ಮಹಿಳಾ ದಿನವಾಗಿದೆ. ಇದೇ ದಿನದಂದು ಕೇಂದ್ರ ಸರಕಾರ ಅಡುಗೆ ಅನಿಲದ ಬೆಲೆ ಏರಿಸಿದೆ. ಇದು ʼಅಚ್ಚೇದಿನ್ʼ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಟೀಕಿಸಿದರು. ಚಿತ್ತಾಪುರ ಪಟ್ಟಣದಲ್ಲಿ ನಡೆದ 1069 ಕೋಟಿ ರೂ. ವೆಚ್ಚದ ಕಾಮಗಾರಿಗಳಿಗೆ ಅಡಿಗಲ್ಲು ಹಾಗೂ ಉದ್ಘಾಟನೆ ಸಮಾರಂಭದಲ್ಲಿ ಅವರು ಭಾಷಣ ಮಾಡುತ್ತಿದ್ದರು. ರಾಜ್ಯ ಸರಕಾರದ ಐದು ಗ್ಯಾರಂಟಿ ಯೋಜನೆಗಳಿಂದ ಜನರು ನೆಮ್ಮದಿಯ ಹಾಗೂ ಸ್ವಾಭಿಮಾನದ ಜೀವನ ನಡೆಸುತ್ತಿದ್ದಾರೆ. ನಿಮ್ಮ ದುಡ್ಡನ್ನು ಗ್ಯಾರಂಟಿ ಯೋಜನೆಗಳ ಮೂಲಕ ನಿಮಗೆ ವಾಪಸ್ ಕೊಟ್ಟರೆ, ಬಿಜೆಪಿಯವರು ಟೀಕಿಸುತ್ತಿದ್ದಾರೆ. ಅವರಿಗೆ ಜನರ ದುಡ್ಡು ಜನರಿಗೆ ಮರುಬಳಕೆಯಾಗುವುದು ಬೇಕಾಗಿಲ್ಲ ಎಂದು ಪ್ರಿಯಾಂಕ್ ಹರಿಹಾಯ್ದರು. ಕಲಬುರಗಿ ಜಿಲ್ಲೆಯ ರೈತರಿಗೆ ಅತಿ ಹೆಚ್ಚಿನ ಪರಿಹಾರ ನೀಡಲಾಗಿದೆ. ಕಳೆದ ಎರಡೂವರೆ ವರ್ಷದಲ್ಲಿ 15.50 ಲಕ್ಷ ರೈತರಿಗೆ ಒಟ್ಟು 2590 ಕೋಟಿ ಅನುದಾನವನ್ನು ಪರಿಹಾರದ ರೂಪದಲ್ಲಿ ನೀಡಲಾಗಿದೆ. ನಿಮ್ಮೆಲ್ಲರ ಆಶೀರ್ವಾದದಿಂದ ನಿಮ್ಮ ಸೇವೆ ಮಾಡುತ್ತಿದ್ದೇನೆ. ನೀವು ನನಗೆ ಹೆಚ್ಚಿನ ಆಶೀರ್ವಾದ ಮಾಡಬೇಕು. ನನಗೆ ಇನ್ನೂ ಹೆಚ್ಚಿನ ಕೆಲಸ ಮಾಡಲು ಪ್ರೇರೇಪಿಸಬೇಕು ಎಂದು ಮನವಿ ಮಾಡಿದರು. ರಾಜ್ಯದ ಮುಖ್ಯಮಂತ್ರಿ ಹೊರತುಪಡಿಸಿದರೆ ನಾನೇ ನಂತರದ ಟಾರ್ಗೆಟ್ ಆಗಿದ್ದೇನೆ ಎಂದು ಕೆಲವರು ಹೇಳುತ್ತಾರೆ. ಚಿತ್ತಾಪುರದ ಜನರ ಆಶೀರ್ವಾದ ಇರುವವರೆಗೆ ನನಗೆ ಏನು ಆಗುವುದಿಲ್ಲ ಎಂದರು. ವೇದಿಕೆ ಮೇಲೆ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ, ಡಿಸಿಎಂ ಡಿ.ಕೆ.ಶಿವಕುಮಾರ ಸೇರಿದಂತೆ ಹಲವರಿದ್ದರು.
ಜೆಡಿಯು ಪಕ್ಷಕ್ಕೆ ಸೇರ್ಪಡೆಯಾದ ಬಿಹಾರ ಸಿಎಂ ನಿತೀಶ್ ಕುಮಾರ್ ಪುತ್ರ ನಿಶಾಂತ್ ಕುಮಾರ್
ಪಾಟ್ನಾ: ಪಾಟ್ನಾದಲ್ಲಿರುವ ಜೆಡಿಯು ಮುಖ್ಯ ಕಚೇರಿಯಲ್ಲಿ ಪಕ್ಷಕ್ಕೆ ಸೇರ್ಪಡೆಯಾಗುವ ಮೂಲಕ, ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಪುತ್ರ ನಿಶಾಂತ್ ಕುಮಾರ್ ಅಧಿಕೃತವಾಗಿ ರಾಜಕೀಯಕ್ಕೆ ಪ್ರವೇಶಿಸಿದ್ದಾರೆ. ಸುದೀರ್ಘ ಕಾಲದಿಂದ ರಾಜಕೀಯದಿಂದ ದೂರ ಉಳಿದಿದ್ದ ನಿಶಾಂತ್ ಕುಮಾರ್, ತಮ್ಮ ತಂದೆ ನಿತೀಶ್ ಕುಮಾರ್ ಅವರು ರಾಜ್ಯಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸಿದ ಬೆನ್ನಿಗೇ ರಾಜಕೀಯಕ್ಕೆ ಪದಾರ್ಪಣೆ ಮಾಡಿದ್ದಾರೆ. 50 ವರ್ಷದ ನಿಶಾಂತ್ ಕುಮಾರ್ ರವಿವಾರ ಜೆಡಿಯು ಪಕ್ಷದ ರಾಷ್ಟ್ರೀಯ ಕಾರ್ಯಾಧ್ಯಕ್ಷ ಸಂಜಯ್ ಝಾರಿಂದ ಅಧಿಕೃತವಾಗಿ ಪಕ್ಷದ ಸದಸ್ಯತ್ವವನ್ನು ಸ್ವೀಕರಿಸಿದರು. ಈ ವೇಳೆ ಹಿರಿಯ ನಾಯಕರಾದ ಕೇಂದ್ರ ಸಚಿವ ಲಲನ್ ಸಿಂಗ್, ಬಿಹಾರದ ಉಪ ಮುಖ್ಯಮಂತ್ರಿಯಾದ ವಿಜಯ್ ಚೌಧರಿ ಉಪಸ್ಥಿತರಿದ್ದರು. #WATCH | Patna, Bihar: Nishant Kumar, son of CM Nitish Kumar, joins the Janata Dal (United) party pic.twitter.com/9qKnRMTxCR — ANI (@ANI) March 8, 2026
ಬಳ್ಳಾರಿ ಹಾಸ್ಟೆಲ್ನಲ್ಲಿ ವಿದ್ಯಾರ್ಥಿಗಳ ಗಲಾಟೆ: ಒಬ್ಬ ಸಾವು, ಏಳು ಮಂದಿಯ ಸ್ಥಿತಿ ಗಂಭೀರ
ಬಳ್ಳಾರಿ: ಜಿಲ್ಲೆಯ ಹೊಸಪೇಟೆ ತಾಲ್ಲೂಕಿನ ಮರಿಯಮ್ಮನಹಳ್ಳಿ ಬಳಿ ಇರುವ ಗುರುಕುಲ ಇಂಟರ್ನ್ಯಾಷನಲ್ ಶಾಲೆಯ ವಸತಿ ನಿಲಯದಲ್ಲಿ ತಡರಾತ್ರಿ ಭೀಕರ ಘಟನೆ ಸಂಭವಿಸಿದೆ. ಕ್ಷುಲ್ಲಕ ಕಾರಣಕ್ಕೆ ನಡೆದ ಜಗಳವೊಂದು ವಿಕೋಪಕ್ಕೆ ತಿರುಗಿ, 9ನೇ ತರಗತಿಯ ವಿದ್ಯಾರ್ಥಿಯೊಬ್ಬ ತನ್ನ ಸಹಪಾಠಿಗಳ ಮೇಲೆ ಕಬ್ಬಿಣದ ರಾಡ್ನಿಂದ ಹಲ್ಲೆ ನಡೆಸಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಈ ಘಟನೆಯಲ್ಲಿ ಓರ್ವ ವಿದ್ಯಾರ್ಥಿ ಸಾವನ್ನಪ್ಪಿದ್ದು, ಇತರ
ಅಮೆರಿಕಾ-ಇಸ್ರೇಲ್ ಇರಾನ್ ಮೇಲೆ ಜಂಟಿ ದಾಳಿ ನಡೆಸಿ ಖಮೇನಿ ಹತ್ಯೆ ಮಾಡಿದ್ದು, ಈ ಆಕ್ರೋಶ ಇನ್ನೂ ಇರಾನ್ ನಾಯಕರಲ್ಲಿ ಜೀವಂತವಾಗಿದೆ. ಈ ಕುರಿತು ಇರಾನ್ ಉನ್ನತಾಧಿಕಾರಿ ಅಲಿ ಲಾರಿಜಾನಿ ಖಮೇನಿ ಹತ್ಯಗೆ ಪ್ರತೀಕಾರ ತೀರಿಸಿಕೊಳ್ಳಲಿದ್ದು, ಖಮೇನಿ ರಕ್ತಕ್ಕೆ ಟ್ರಂಪ್ ಬೆಲೆ ತೆರುವಂತೆ ಮಾಡುತ್ತೇವೆ ಎಂದು ಶಪಥ ಮಾಡಿದ್ದಾರೆ. ಇದೇ ವೇಳೆ ಯುದ್ದದಲ್ಲಿ ಸಾವನ್ನಪ್ಪಿರುವ ಅಮೆರಿಕಾದ ಸೈನಿಕರ ವಿಚಾರದಲ್ಲಿ ಟ್ರಂಪ್ ಸುಳ್ಳು ಹೇಳುವ ಮೂಲಕ ಜಗತ್ತಿನ ಹಾದಿ ತಪ್ಪಿಸುತ್ತಿದ್ದು, ಕಾಲ ಕಳೆದಂತೆ ಕಟ್ಟು ಕಥೆಗಳನ್ನು ಹೇಳಿ ಈ ಸಂಖ್ಯೆ ಹೆಚ್ಚಿಸುತ್ತಾರೆ ಎಂದು ಟೀಕೆ ಮಾಡಿದ್ದಾರೆ.
IMD Weather Forecast: 2026ರ ಟಿ20 ವಿಶ್ವಕಪ್ ಅಂತಿಮಘಟ್ಟವನ್ನು ತಲುಪಿದೆ. ಭಾರತ ಹಾಗೂ ನ್ಯೂಜಿಲೆಂಡ್ ಎರಡೂ ತಂಡಕ್ಕೂ ಈ ಪಂದ್ಯವು ಅತ್ಯಂತ ಮಹತ್ವದ್ದಾಗಿದೆ. ಫೆಬ್ರವರಿ 7 ರಿಂದ ಪ್ರಾರಂಭವಾಗಿದ್ದ 2026ರ ಟಿ20 ವಿಶ್ವಕಪ್ ಈಗ ಅಂತಿಮ ಹಂತವನ್ನು ತಲುಪಿದೆ. ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಫೈನಲ್ ಪಂದ್ಯವು ಮಾರ್ಚ್ 8 ರಂದು ಗುಜರಾತ್ನ ಅಹಮದಾಬಾದ್ ನರೇಂದ್ರ ಮೋದಿ
ಗುಡ್ಡಾಪುರದ ಶ್ರೀ ದಾನಮ್ಮ ದೇವಿ ; ಲಿಂಗಮ್ಮನಿಂದ ದಾನಮ್ಮನಾದ ಶಿವ ಶರಣೆಯ ಜೀವನಾಮೃತ
ಸಮಾಜದಲ್ಲಿ ಸಮಾನತೆ ಎನ್ನುವುದು ಇಲ್ಲವಾಗಿ ಅಸಮಾನತೆ ತಾಂಡವ ವಾಡುತ್ತಿದ್ದಾಗ ಲಿಂಗಮ್ಮಳನ್ನು ಬಹಳವಾಗಿ ಸೆಳೆದಿದ್ದು ಬಸವಣ್ಣ ನವರ ಅನುಭವ ಮಂಟಪ. ಸ್ತ್ರೀ ಸಮಾನತೆ, ಲಿಂಗಭೇಧ ನಿಷೇದ, ಅಹಿಂಸೆ ಮುಂತಾದ ವಿಚಾರಗಳಲ್ಲಿ ಆಗಿನ ಸಾಂಪ್ರದಾಯಿಕ ನಿಲುವುಗಳನ್ನು, ಕಟ್ಟಲೆಗಳನ್ನು ಪಕ್ಕಕ್ಕೆ ಸರಿಸಿ ಹೊಸ ಬಗೆಯ ಯೋಚನೆಗಳನ್ನು ಜಾರಿಗೆ ತರುತ್ತಿದ್ದ ಅನುಭವ ಮಂಟಪ ಲಿಂಗಮ್ಮನಂತಹ ಅದೆಷ್ಟೋ ಶರಣರಿಗೆ ತಮ್ಮ ನಿಲುವುಗಳನ್ನು ಸಮಾಜಕ್ಕೆ ತಿಳಿ ಹೇಳಲು ಒಂದು ಸೂಕ್ತ ವೇದಿಕೆಯಾಯಿತು.
ನಿಷೇಧಿತ ಪ್ರದೇಶ, ವಿಮಾನ ನಿಲ್ದಾಣಗಳಲ್ಲಿ ಚಿತ್ರೀಕರಣ ಬೇಡ: ಭಾರತೀಯರಿಗೆ UAE ನಲ್ಲಿನ ರಾಯಭಾರ ಕಚೇರಿ ಸಲಹೆ
ಅಬುಧಾಬಿ: ಘಟನಾ ಸ್ಥಳಗಳು, ನಿಷೇಧಿತ ಪ್ರದೇಶಗಳು ಹಾಗೂ ವಿಮಾನ ನಿಲ್ದಾಣಗಳ ಒಳಗೆ ಅನಧಿಕೃತವಾಗಿ ಛಾಯಾಚಿತ್ರ ಅಥವಾ ವೀಡಿಯೊ ಚಿತ್ರೀಕರಣ ಮಾಡುವುದನ್ನು ಕಟ್ಟುನಿಟ್ಟಾಗಿ ತಪ್ಪಿಸಲು ಭಾರತೀಯ ಪ್ರಜೆಗಳಿಗೆ ಯುನೈಟೆಡ್ ಅರಬ್ ಎಮಿರೇಟ್ಸ್ (UAE)ಯಲ್ಲಿರುವ ಭಾರತೀಯ ರಾಯಭಾರ ಕಚೇರಿ ರವಿವಾರ ಸಲಹೆ ಪ್ರಕಟಿಸಿದೆ. ಇಂತಹ ಚಿತ್ರಗಳು ಅಥವಾ ವೀಡಿಯೊಗಳನ್ನು ಡಿಜಿಟಲ್ ಅಥವಾ ಸಾಮಾಜಿಕ ಮಾಧ್ಯಮ ವೇದಿಕೆಗಳ ಮೂಲಕ ಹಂಚಿಕೊಳ್ಳುವುದು ಅಥವಾ ಪ್ರಕಟಿಸುವುದನ್ನೂ ನಿರ್ಬಂಧಿಸಲಾಗಿದೆ ಎಂದು ರಾಯಭಾರ ಕಚೇರಿ ತಿಳಿಸಿದೆ. ‘ಘಟನಾ ಸ್ಥಳಗಳು ಅಥವಾ ನಿಷೇಧಿತ ಪ್ರದೇಶಗಳು ಅಥವಾ ವಿಮಾನ ನಿಲ್ದಾಣಗಳ ಒಳಗೆ ಅನಧಿಕೃತ ಚಿತ್ರೀಕರಣ ನಡೆಸಿದರೆ ಸಂಬಂಧಿತ ವ್ಯಕ್ತಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು’ ಎಂದು UAE ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ ಎಂದು ರಾಯಭಾರ ಕಚೇರಿ ಸಲಹೆಯಲ್ಲಿ ತಿಳಿಸಿದೆ. ಇತ್ತೀಚಿನ ಭದ್ರತಾ ಪರಿಸ್ಥಿತಿಯ ಹಿನ್ನೆಲೆಯಲ್ಲಿ UAE ಅಧಿಕಾರಿಗಳು ಮುನ್ನೆಚ್ಚರಿಕಾ ಸುರಕ್ಷತಾ ಕ್ರಮಗಳನ್ನು ಜಾರಿಗೆ ತಂದಿದ್ದಾರೆ. ಇದರ ಪರಿಣಾಮವಾಗಿ ದುಬೈನಲ್ಲಿ ಆಗಮನ ಮತ್ತು ನಿರ್ಗಮನ ವಿಮಾನ ಸಂಚಾರಕ್ಕೆ ಅಡ್ಡಿಯುಂಟಾಗಿದೆ. ವಿಶ್ವದ ಅತ್ಯಂತ ಜನನಿಬಿಡ ಅಂತರರಾಷ್ಟ್ರೀಯ ವಾಯುಯಾನ ಕೇಂದ್ರಗಳಲ್ಲಿ ಒಂದಾದ ವಿಮಾನ ಕಾರ್ಯಾಚರಣೆಗಳನ್ನು ಕೆಲಕಾಲ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು. ಭಾರತೀಯ ಪ್ರಜೆಗಳ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ಕಾನೂನು ಪರಿಣಾಮಗಳನ್ನು ತಪ್ಪಿಸಲು ರಾಯಭಾರ ಕಚೇರಿ ಕೆಲವು ಸೂಚನೆಗಳನ್ನು ನೀಡಿದೆ. ಯಾವುದೇ ಎಚ್ಚರಿಕೆ ಸೈರನ್ ಅಥವಾ ಸೂಚನೆ ಕೇಳಿಸಿದಾಗ ತಕ್ಷಣ ಸುರಕ್ಷಿತ ಸ್ಥಳಕ್ಕೆ ತೆರಳಿ, ನಿಮ್ಮ ಪ್ರದೇಶಕ್ಕೆ ನೀಡಿರುವ ಎಚ್ಚರಿಕೆ ತೆಗೆದುಹಾಕುವವರೆಗೆ ಅಲ್ಲಿಯೇ ಇರಬೇಕು. ಈ ಸಂದರ್ಭಗಳಲ್ಲಿ ಛಾಯಾಚಿತ್ರ ಅಥವಾ ವೀಡಿಯೊಗಳನ್ನು ತೆಗೆಯಲು ಹೊರಗೆ ಹೋಗುವ ಪ್ರಯತ್ನ ಮಾಡಬಾರದು ಎಂದು ತಿಳಿಸಿದೆ. ಡಿಜಿಟಲ್ ಅಥವಾ ಸಾಮಾಜಿಕ ಮಾಧ್ಯಮ ವೇದಿಕೆಗಳ ಮೂಲಕ ಸ್ಫೋಟಗಳು ಅಥವಾ ಹಾನಿಗೊಂಡ ಘಟನಾ ಸ್ಥಳಗಳ ಚಿತ್ರಗಳನ್ನು ಹಂಚಿಕೊಳ್ಳುವುದು ಅಥವಾ ಪ್ರಕಟಿಸುವುದನ್ನು ಕಟ್ಟುನಿಟ್ಟಾಗಿ ತಪ್ಪಿಸಬೇಕು ಎಂದು ಸೂಚಿಸಲಾಗಿದೆ. ನಿಮ್ಮ ಸುತ್ತಮುತ್ತ ಅವಶೇಷಗಳು ಬಿದ್ದಿದ್ದರೆ ಅಥವಾ ಅನುಮಾನಾಸ್ಪದ ವಸ್ತುಗಳು ಕಂಡುಬಂದರೆ ತಕ್ಷಣ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು. ಪರಿಸ್ಥಿತಿಯನ್ನು ಸುರಕ್ಷಿತವಾಗಿ ಮತ್ತು ತ್ವರಿತವಾಗಿ ನಿಭಾಯಿಸಲು ಅವರಿಗೆ ಅವಕಾಶ ನೀಡಬೇಕು. ಅಂತಹ ವಸ್ತುಗಳನ್ನು ಮುಟ್ಟಬಾರದು ಎಂದು ಸಲಹೆ ನೀಡಲಾಗಿದೆ. ಇದೇ ವೇಳೆ, ಆಗಮನ ಅಥವಾ ನಿರ್ಗಮನದ ವೇಳೆ ವಿಮಾನ ನಿಲ್ದಾಣದ ಒಳಗೆ ಛಾಯಾಚಿತ್ರ ಅಥವಾ ವೀಡಿಯೊಗಳನ್ನು ದಾಖಲಿಸುವುದನ್ನು ತಪ್ಪಿಸಲು ಸೂಚಿಸಲಾಗಿದೆ. ದುಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣ (DXB) ಮಾರ್ಚ್ 7ರಂದು ಭಾಗಶಃ ಕಾರ್ಯಾಚರಣೆಗಳನ್ನು ಪುನರಾರಂಭಿಸಿದೆ. DXB ಹಾಗೂ ಅಲ್ ಮಕ್ತೌಮ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ (DWC) ಎರಡರಿಂದಲೂ ಆಯ್ದ ವಿಮಾನಗಳ ಸೇವೆ ಮತ್ತೆ ಆರಂಭವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಚುನಾವಣೆಗೆ ಸರ್ಕಾರ ಸಜ್ಜಾಗಿದ್ದು, ವಾರ್ಡ್ ಮೀಸಲಾತಿ ಅಂತಿಮ ಪಟ್ಟಿ ಪ್ರಕಟಿಸಿದೆ. 5 ಪಾಲಿಕೆಗಳ 369 ವಾರ್ಡ್ ಮೀಸಲಾತಿ ಅಂತಿಮವಾಗಿದ್ದು, 185 ವಾರ್ಡ್ ಮಹಿಳೆಯರ ಪಾಲಾಗಿದೆ. ಇನ್ನು ಎಸ್ಸಿ, ಎಸ್ಟಿ, ಹಿಂದುಳಿದ ವರ್ಗ ಎ, ಬಿ ಹಾಗೂ ಸಾಮಾನ್ಯ ವರ್ಗಕ್ಕೆ ಇಂತಿಷ್ಟು ಸ್ಥಾನಗಳನ್ನು ಹಂಚಿಕೆ ಮಾಡಲಾಗಿದೆ. ಈ ಬಗ್ಗೆ ಸಂಪೂರ್ಣ ವಿವರ ಇಲ್ಲಿದೆ.
ಇರಾನ್ ಗೆ ಆರು ತಿಂಗಳು ‘ತೀವ್ರ ಯುದ್ಧ’ ನಡೆಸುವ ಸಾಮರ್ಥ್ಯವಿದೆ: IRGC ಹೇಳಿಕೆ
ಇರಾನಿನ ಎಫ್–14 ಯುದ್ಧವಿಮಾನಗಳನ್ನು ನಾಶಪಡಿಸಲಾಗಿದೆ ಎಂದ ಇಸ್ರೇಲ್
ನ್ಯೂಯಾರ್ಕ್ ಪ್ರತಿಭಟನೆ: ಮೇಯರ್ ಜೋಹ್ರಾನ್ ಮಮ್ದಾನಿ ನಿವಾಸದ ಕಡೆಗೆ ಸ್ಪೋಟಕ ಎಸೆದ ಪ್ರತಿಭಟನಾಕಾರ ಅರೆಸ್ಟ್!
ನ್ಯೂಯಾರ್ಕ್ ನಲ್ಲಿ ಸಾರ್ವಜನಿಕ ಪ್ರದೇಶಗಳಲ್ಲಿ ಮುಸ್ಲಿಂ ಪ್ರಾರ್ಥನೆಯನ್ನು ವಿರೋಧಿಸಿ ಪ್ರತಿಭಟನೆಗಳು ಹಾಗೂ ಈ ಪ್ರತಿಭಟನೆಗಳನ್ನು ವಿರೋಧಿಸಿ ನಡೆಯುತ್ತಿರುವ ಇನ್ನೊಂದು ಪ್ರತಿಭಟನೆಗಳು ಸದ್ಯ ಅಲ್ಲಿನ ಪರಿಸ್ಥಿತಿಯನ್ನು ಉದ್ವಿಗ್ನಗೊಳಿಸಿದೆ. ಈ ಮಧ್ಯೆ ಈ ವಿಚಾರವಾಗಿ ನ್ಯೂಯಾರ್ಕ್ ಮೇಯರ್ ಜೋಹ್ರಾನ್ ಮಮ್ದಾನಿಯವರ ನಿವಾಸದ ಹೊರಗೆ ಪ್ರತಿಭಟನೆಗಳು ನಡೆಯುತ್ತಿದ್ದು, ಈ ವೇಳೆ ಮಮ್ದಾನಿ ನಿವಾಸದ ಹೊರಗೆ ಅನುಮಾಸ್ಪದ ಸ್ಪೋಟಕ ವಸ್ತುಗಳನ್ನು ಎಸೆದ ಘಟನೆ ನಡೆದಿದೆ. ಸದ್ಯ ಈ ಶಂಕಿತ ಸ್ಪೋಟಕಗಳನ್ನು ಎಸೆದಿರುವವರನ್ನು ವಶಪಡೆಯಲಾಗಿದ್ದು, ತನಿಖೆ ನಡೆಯುತ್ತಿದೆ.
ಹೆಣ್ಣು ಮಗು ಹುಟ್ಟಿದರೆ 5,500 ರೂಪಾಯಿ ಠೇವಣಿ, ಜನಪ್ರತಿನಿಧಿಗಳ ಮಹತ್ವದ ನಿರ್ಧಾರ... Baby Girl
ಹೆಣ್ಣು ಕುಟುಂಬದ ಕಣ್ಣು ಅನ್ನೋ ಮಾತು ಇದೆ, ಅದರಲ್ಲೂ ಮನೆ ಎಂದರೆ ಹೆಣ್ಣು ಮಗುವೊಂದು ಇರಲೇಬೇಕು ಎಂಬ ಮಾತು ಹಿರಿಯರದ್ದು. ಮನೆಯಲ್ಲಿ ಕಾಲ್ಗೆಜ್ಜೆ ಹಾಕಿ ಹೆಣ್ಣು ಮಗು ಓಡಾಡುತ್ತಿದ್ದರೆ ಲಕ್ಷ್ಮೀದೇವಿ ಕೂಡ ಆ ಮನೆಯಲ್ಲಿ ನಲಿಯುತ್ತಾ ಇರುತ್ತಾಳೆ ಎಂಬ ನಂಬಿಕೆ ನಮ್ಮಲ್ಲಿದೆ. ಈ ಕಾರಣಕ್ಕೆ ಹೆಣ್ಣು ಮಗು ಹುಟ್ಟಿದ ಸುದ್ದಿ ಕೇಳಿದರೆ, ಲಕ್ಷ್ಮೀ ಬಂದಳು ಅಂತಾ ಸಿಹಿಹಂಚಿ
ಮಾ.17-19: ರೋಶ್ನಿ ನಿಲಯದಲ್ಲಿ ಅಂತಾರಾಷ್ಟ್ರೀಯ ನ್ಯಾಯ ವಿಜ್ಞಾನ ಸಮಾವೇಶ 'ಫೋರೆನ್ಸಿಕ್ ಫ್ಯೂಷನ್
ಮಂಗಳೂರು: ಮಂಗಳೂರಿನ ಸ್ಕೂಲ್ ಆಫ್ ಸೋಶಿಯಲ್ ವರ್ಕ್, ರೋಶ್ನಿ ನಿಲಯದ ಕ್ರಿಮಿನಾಲಜಿ ಮತ್ತು ನ್ಯಾಯ ವಿಜ್ಞಾನ (Forensic Science) ಸ್ನಾತಕೋತ್ತರ ವಿಭಾಗದ ವತಿಯಿಂದ 'CRIFO 2K26 – ಫೋರೆನ್ಸಿಕ್ ಫ್ಯೂಷನ್' ಎಂಬ ಎರಡು ದಿನಗಳ ಅಂತಾರಾಷ್ಟ್ರೀಯ ಸಮಾವೇಶವನ್ನು ಮಾ.17 ಮತ್ತು 18ರಂದು ಕಾಲೇಜಿನ ಮರಿಯಾ ಪೈವಾ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ. ಅಪರಾಧ ತನಿಖೆ ಮತ್ತು ನ್ಯಾಯ ವಿಜ್ಞಾನ ಕ್ಷೇತ್ರದಲ್ಲಿನ ನೂತನ ಆವಿಷ್ಕಾರಗಳ ಬಗ್ಗೆ ಚರ್ಚಿಸಲು ಈ ಸಮಾವೇಶವು ಒಂದು ಜಾಗತಿಕ ವೇದಿಕೆಯನ್ನು ಒದಗಿಸಲಿದೆ. ದೇಶ-ವಿದೇಶಗಳ ಖ್ಯಾತ ತಜ್ಞರು ವಿವಿಧ ಗೋಷ್ಠಿಗಳನ್ನು ನಡೆಸಿಕೊಡಲಿದ್ದಾರೆ. ಕಾರ್ಯಕ್ರಮದ ಪ್ರಮುಖಾಂಶಗಳು: ತಜ್ಞರ ಗೋಷ್ಠಿಗಳು: ಸೈಬರ್ ಸೆಕ್ಯೂರಿಟಿ, ಡಿಜಿಟಲ್ ಫೋರೆನ್ಸಿಕ್ ಮತ್ತು ಫೋರೆನ್ಸಿಕ್ ಟಾಕ್ಸಿಕಾಲಜಿ ಕುರಿತು ವಿಶೇಷ ಉಪನ್ಯಾಸಗಳು. ಸ್ಪರ್ಧೆಗಳು: ನ್ಯಾಯ ವಿಜ್ಞಾನಕ್ಕೆ ಸಂಬಂಧಿಸಿದ ರಸಪ್ರಶ್ನೆ, ಥೀಮ್ಯಾಟಿಕ್ ರೀಲ್ ಮೇಕಿಂಗ್, ಸ್ಟ್ರೆಸ್ ಇಂಟರ್ ವ್ಯೂ ಮತ್ತು ಚರ್ಚಾ ಸ್ಪರ್ಧೆಗಳು. ಪ್ರಬಂಧ ಮಂಡನೆ: ಸಂಶೋಧಕರು ಮತ್ತು ವಿದ್ಯಾರ್ಥಿಗಳಿಂದ ವಿವಿಧ ತಾಂತ್ರಿಕ ವಿಷಯಗಳ ಕುರಿತು ಸಂಶೋಧನಾ ಪ್ರಬಂಧಗಳ ಮಂಡನೆ. ನೋಂದಣಿ ಮಾಡಿಕೊಳ್ಳಲು ಮಾ.13ರಂದು ಕೊನೆಯ ದಿನವಾಗಿದೆ. ಸಮಾವೇಶದಲ್ಲಿ ಭಾಗವಹಿಸುವ ಎಲ್ಲಾ ಪ್ರತಿನಿಧಿಗಳಿಗೆ ಪ್ರಮಾಣಪತ್ರವನ್ನು ನೀಡಲಾಗುವುದು ಹಾಗೂ ಕಾರ್ಯಕ್ರಮದ ದಿನಗಳಂದು ಊಟ ಮತ್ತು ಉಪಹಾರದ ವ್ಯವಸ್ಥೆ ಇರಲಿದೆ. ಕಾಲೇಜಿನ ಪ್ರಾಂಶುಪಾಲ ಡಾ.ಸೋಫಿಯಾ ಎನ್. ಫೆರ್ನಾಂಡಿಸ್ ಮತ್ತು ಸಂಯೋಜಕಿ ಡಾ.ಸರಿತಾ ಡಿಸೋಜ ಮಾರ್ಗದರ್ಶನದಲ್ಲಿ ಕಾರ್ಯಕ್ರಮ ನಡೆಯಲಿದೆ. ಹೆಚ್ಚಿನ ಮಾಹಿತಿಗಾಗಿ ಮೊ.ಸಂ. 9743633882 ಅಥವಾ 8217294693 ಅನ್ನು ಸಂಪರ್ಕಿಸುವಂತೆ ಪ್ರಕಟನೆ ತಿಳಿಸಿದೆ.
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು
T20 World Cup 2026 Final: ಟಿ20 ವಿಶ್ವಕಪ್ ಫೈನಲ್ 2026ರ ಪಂದ್ಯವು ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿದ್ದು, ಭಾರತ ಮತ್ತು ನ್ಯೂಜಿಲ್ಯಾಂಡ್ ತಂಡಗಳು ಮುಖಾಮುಖಿಯಾಗಲಿವೆ. ಇದಕ್ಕೂ ನಡೆದ ಪತ್ರಿಕಾಗೋಷ್ಠಿಯಲ್ಲಿ ಭಾರತ ತಂಡದ ನಾಯಕ ಸೂರ್ಯಕುಮಾರ್ ಯಾದವ್ ಅವರು ನ್ಯೂಜಿಲೆಂಡ್ ಕ್ಯಾಪ್ಟನ್ ಮಿಚೆಲ್ ಸ್ಯಾಂಟ್ನರ್ ಸೈಲೆಂಟ್ ಹೇಳಿಕೆಗೆ ನಗುತ್ತಲೇ ತಿರುಗೇಟು ಕೊಟ್ಟು ಅಭಿಮಾನಿಗಳ ಗಮನ ಸೆಳೆದಿದ್ದಾರೆ.
ಬಳ್ಳಾರಿ ಹಾಸ್ಟೆಲ್ನಲ್ಲಿ ವಿದ್ಯಾರ್ಥಿಗಳ ಸಂಘರ್ಷ ; 9 ನೇ ತರಗತಿ ಬಾಲಕನ ಕೊಲೆ
ಬಳ್ಳಾರಿ ಜಿಲ್ಲೆಯ ಶಾಲಾ ಹಾಸ್ಟೆಲ್ ಒಳಗೆ 9 ನೇ ತರಗತಿಯ ವಿದ್ಯಾರ್ಥಿಯೊಬ್ಬ ಭಾನುವಾರ ತಡರಾತ್ರಿ ಗಲಾಟೆ ನಡೆಸಿದ್ದಾನೆ. ಸಹ ವಿದ್ಯಾರ್ಥಿಗಳ ಮೇಲೆ ಕಬ್ಬಿಣದ ರಾಡ್ನಿಂದ ಹಲ್ಲೆ ನಡೆಸಿದ್ದಾನೆ. ಗಲಾಟೆಯಲ್ಲಿ ಆಂಧ್ರ ಪ್ರದೇಶ ಮೂಲದ ವಿದ್ಯಾರ್ಥಿ ಮೃತಪಟ್ಟಿದ್ದಾನೆ. 7 ಮಂದಿ ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ.
Natekal | ಹ್ಯುಮಾನಿಟಿ ಫೌಂಡೇಶನ್ ವತಿಯಿಂದ ಇಫ್ತಾರ್ ಕೂಟ
ನಾಟೆಕಲ್: ಹ್ಯುಮಾನಿಟಿ ಫೌಂಡೇಶನ್ ಟ್ರಸ್ಟ್ ಆಶ್ರಯದಲ್ಲಿ ಇಫ್ತಾರ್ ಕೂಟ ಮತ್ತು ಉಚಿತವಾಗಿ ದಫನ ಭೂಮಿ ತೋಡುವವರಿಗೆ ಅಭಿನಂದನೆ ಕಾರ್ಯಕ್ರಮ ನಾಟೆಕಲ್ ಮೈದಾನದಲ್ಲಿ ನಡೆಯಿತು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ವಿಧಾನಸಭಾ ಸ್ಪೀಕರ್ ಯು.ಟಿ.ಖಾದರ್, ಮಳೆಗಾಲದಲ್ಲಿ ಕಬರ್ ತೋಡುವವರಿಗೆ ದಫನ ಮಾಡಲು ಅನುಕೂಲ ಆಗುವಂತೆ ರೈನ್ ಕೋಟ್, ಸ್ಟ್ಯಾಂಡ್ ನ ವ್ಯವಸ್ಥೆ ಮಾಡಲಾಗುವುದು ಎಂದು ಭರವಸೆ ನೀಡಿದರು. ಈ ಸಂದರ್ಭದಲ್ಲಿ ಉಚಿತವಾಗಿ ಕಬರ್ ತೋಡುವ ಒಟ್ಟು 15 ಜಮಾಅತ್ ನ 80 ಮಂದಿಯನ್ನು ಸನ್ಮಾನಿಸಲಾಯಿತು. ಹ್ಯುಮಾನಿಟಿ ಫೌಂಡೇಶನ್ ಅಧ್ಯಕ್ಷ ನಾಸಿರ್ ಸಾಮಣಿಗೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಯ್ಯಿದ್ ಅಮೀರ್ ತಂಙಳ್ ದುಆಗೈದರು. ಕಾರ್ಯಕ್ರಮದಲ್ಲಿ ಟಿಎಸ್.ಅಬ್ದುಲ್ಲಾ, ಮೇಲ್ತೆನೆ ಗೌರವ ಅಧ್ಯಕ್ಷ ಆಲಿ ಕುಂಞಿ ಪಾರೆ, ಹೈದರ್ ಪರ್ತಿಪ್ಪಾಡಿ, ಪುಷ್ಟಿ ಮುಹಮ್ಮದ್, ದೇರಳಕಟ್ಟೆ ಮಸೀದಿ ಖತೀಬ್ ತಾಜುದ್ದೀನ್ ರಹ್ಮಾನಿ, ಟಿ.ಎಸ್.ಅಬೂಬಕರ್, ಯೂಸುಫ್ ಬಾವ, ಮೊಹಮ್ಮದ್ ಮೋನು, ಮುಸ್ತಫ ಮಲಾರ್, ಉಪಾಧ್ಯಕ್ಷರಾದ ಖಲಂದರ್, ಆಸಿಫ್ ತಾಜ್, ಕೋಶಾಧಿಕಾರಿ ಇಲ್ಯಾಸ್ ಚಾರ್ಮಾಡಿ, ಮಾಧ್ಯಮ ಕಾರ್ಯದರ್ಶಿ ಬಶೀರ್ ಕಲ್ಕಟ್ಟ, ಕಾರ್ಯದರ್ಶಿ ಸೈಫುಲ್ಲಾ ಸೋಮೇಶ್ವರ ಮತ್ತಿತರರು ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ಹಮೀದ್ ಪಜೀರ್ ಕಾರ್ಯಕ್ರಮ ನಿರೂಪಿಸಿದರು.
ಕಲಬುರಗಿ : ಐಟಿಎಫ್ ಮಹಿಳಾ ಟೆನಿಸ್ ಟೂರ್ನಿ: ಸಿಂಗಲ್ಸ್ ನಲ್ಲಿ ವೈಷ್ಣವಿ ಚಾಂಪಿಯನ್
ಕಲಬುರಗಿ: ಇಲ್ಲಿ ನಡೆಯುತ್ತಿರುವ ಐಟಿಎಫ್ ಮಹಿಳಾ ಟೆನಿಸ್ ಸಿಂಗಲ್ಸ್ ವಿಭಾಗದ ಫೈನಲ್ ಪಂದ್ಯದಲ್ಲಿ ವೈಷ್ಣವಿ ಅಡ್ಕರ್ ಅವರು ಅಂಕಿತಾ ರೈನಾರನ್ನು ಸೋಲಿಸುವುದರ ಮೂಲಕ ಟೂರ್ನಿಯ ಚಾಂಪಿಯನ್ ಪಟ್ಟ ಅಲಂಕರಿಸಿದರು. ನಗರದ ಚಂದ್ರಶೇಖರ್ ಪಾಟೀಲ್ ಕ್ರೀಡಾಂಗಣದಲ್ಲಿ ರವಿವಾರ ಬೆಳಗ್ಗೆ ನಡೆದಿದ್ದ ಐಟಿಎಫ್ ಮಹಿಳಾ ಟೆನಿಸ್ ಟೂರ್ನಿ ಸಿಂಗಲ್ಸ್ ಫೈನಲ್ ಪಂದ್ಯದಲ್ಲಿ ಅಂಕಿತಾ ರೈನಾ ವಿರುದ್ಧ 7-6, 6 -4 ನೇರ ಸೆಟ್ ಗಳ ಗೆಲ್ಲುವ ಮೂಲಕ ವೈಷ್ಣವಿ ಅಡ್ಕರ್ ಗೆಲುವಿನ ನಗೆ ಬೀರಿದರು. ಮೊದಲ ಸೆಟ್ ನಲ್ಲಿ ಟೈ ಬ್ರೇಕರ್ ಆದ ಬಳಿಕ ಭಾರೀ ಪೈಪೋಟಿ ಏರ್ಪಟ್ಟಿತ್ತು. ಕೊನೆಗೆ ವೈಷ್ಣವಿ ಅಂಕ ಗಿಟ್ಟಿಸಿಕೊಂಡು ಮೊದಲ ಸೆಟ್ ಅನ್ನು ತಮ್ಮದಾಗಿಸಿಕೊಂಡರು. ಎರಡನೇ ಸೆಟ್ ನ ಮೊದಲಾರ್ಧದಲ್ಲಿ ವೈಷ್ಣವಿ ಅಡ್ಕರ್ ಅನೇಕ ಶಾಟ್ ಗಳು ನೆಟ್ ಗೆ ಹೊಡೆಯುವ ಮೂಲಕ ಅಂಕಗಳನ್ನು ಅಂಕಿತಾ ರೈನಾಗೆ ಬಿಟ್ಟುಕೊಟ್ಟರು. ಎರಡನೇ ಸೆಟ್ ನಲ್ಲಿ 2 - 4ರಿಂದ ಹಿನ್ನಡೆಯಲ್ಲಿದ್ದ ಅಂಕಿತಾ ರೈನಾ ಅನುಭವಿ ಕೌಶಲ್ಯ ಮೂಲಕ 4 - 4 ಅಂಕಗಳನ್ನು ಸಾಧಿಸುವ ಮೂಲಕ ಅಂಕಗಳನ್ನು ಸಮಗೊಳಿಸಿದರು. ಬಳಿಕ ಅಂಕಿತಾ ವೈದ್ಯಕೀಯ ತಪಾಸಣೆಗೆ ಒಳಗಾದರು. ರನ್ನರ್ ಅಪ್ ಅಂಕಿತಾ ರೈನಾ ಮತ್ತೆ ಪುಟಿದೆದ್ದ ವೈಷ್ಣವಿ ಎರಡನೇ ಸೆಟ್ ನಲ್ಲಿ 6 - 4 ಅಂತರದಲ್ಲಿ ಗೆಲ್ಲುವ ಮೂಲಕ ಸಿಂಗಲ್ಸ್ ವಿಭಾಗದ ಟ್ರೋಫಿ ತಮ್ಮ ಮುಡಿಗೇರಿಸಿಕೊಂಡರು. ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ವಿಧಾನ ಪರಿಷತ್ ಸದಸ್ಯ ಶಶೀಲ್ ನಮೋಶಿ ಅವರು ವೈಷ್ಣವಿ ಅಡ್ಕರ್ ಅವರಿಗೆ ಟ್ರೋಫಿ ಹಸ್ತಾಂತರಿಸಿದರು. ಇದೇ ವೇಳೆಯಲ್ಲಿ ಅಂಕಿತಾ ರೈನಾ ರನ್ನರ್ ಅಪ್ ಪ್ರಶಸ್ತಿಯನ್ನು ಸ್ವೀಕರಿಸಿದರು. ಕರ್ನಾಟಕ ರಾಜ್ಯ ಲಾನ್ ಟೆನಿಸ್ ಅಸೋಶಿಯೇಶನ್ ಜಂಟಿ ಕಾರ್ಯದರ್ಶಿ ಸುನೀಲ್ ಯಜಮಾನ, ಕೈಗಾರಿಕಾ ಇಲಾಖೆಯ ಜಂಟಿ ಕಾರ್ಯದರ್ಶಿ ಅಬ್ದುಲ್ ಅಝೀಮ್, ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಸಂಗಮೇಶ್ವರ, ಸೂಪರ್ ವೈಸರ್ ಸುಪ್ರೀತ್, ಪ್ರವೀಣ್ ಪುಣೆ ಮತ್ತಿತರರು ಉಪಸ್ಥಿತರಿದ್ದರು.
ಪ್ರಜ್ಞೆಯನ್ನೇ ಕಾಡುವ ಅನುಭವ ಕಥನಗಳು
ಸಮಕಾಲೀನ ಸ್ಪರ್ಶ ಕಲ್ಪಿಸುತ್ತಲೇ ಗತ ವಾಸ್ತವವನ್ನು ಬಿಂಬಿಸುವ ‘ಕಾಡು ಕಾಯುವ ಮರ’
Women' s Day Special : ಅಡುಗೆ ಮನೆಯಿಂದ ಆರ್ಥಿಕತೆಯೆಡೆಗೆ... ಸಾಧಕ ನಾರಿಯವರಿವರು
ದಾವಣಗೆರೆ ಜಿಲ್ಲೆಯಲ್ಲಿ 459 ಕ್ಕೂ ಹೆಚ್ಚು ಸ್ತ್ರೀಶಕ್ತಿ ಸಂಘಗಳು ಆರ್ಥಿಕ ಚಟುವಟಿಕೆ ನಡೆಸುತ್ತಿವೆ. ರೊಟ್ಟಿ, ಚಟ್ನಿಪುಡಿ, ಸಾಂಬಾರ್ ಪುಡಿ, ಸಿಹಿ ತಿಂಡಿಗಳು, ಹಪ್ಪಳ, ಚಕ್ಲಿ, ನಿಪ್ಪಟ್ಟು, ಉಪ್ಪಿನಕಾಯಿ ಜತೆ ಎನ್ವಲಪ್ ಕವರ್, ಪೇಪರ್ ಫೈಲ್, ಮಾಸ್ಕ್, ಜೂಟ್ ಬ್ಯಾಗ್, ಫಿನಾಯಿಲ್, ಸೋಪ್, ಊದು ಬತ್ತಿ, ಟೈಲರಿಂಗ್, ಕುರಿ ಸಾಕಾಣಿಕೆ, ಹೈನುಗಾರಿಕೆ ಹೀಗೆ ಆದಾಯೋತ್ಪನದಲ್ಲಿ ತೊಡಗಿವೆ.
ಆರಿದ ಕುಲುಮೆ ಮತ್ತು ಮಾಂಗಲ್ಯದ ಭಾಷೆ!
ಕೊರಳ ಮಾಲೆಯ ಆ ಘಟನೆ ಕೇವಲ ಎ.ಐ. ಮಾಡಿದ ಸಣ್ಣ ತಿದ್ದುಪಡಿ ಅಲ್ಲ; ಅದು ನಮ್ಮ ಕಾಲದ ರೂಪಕ. ಇಂದು ಕೃತಕ ಬುದ್ಧಿಮತ್ತೆ ಸುಲಭವಾಗಿ ಚಿತ್ರ ಬದಲಾಯಿಸುತ್ತದೆ, ಧ್ವನಿ ನಕಲಿಸುತ್ತದೆ, ಹಾಡು-ಕವನ ರಚಿಸುತ್ತದೆ, ಕೃಷಿ ಸಲಹೆ ನೀಡುತ್ತದೆ. ಅದು ಅಳೆಯುತ್ತದೆ, ಹೋಲಿಕೆ ಮಾಡುತ್ತದೆ, ಸರಿಹೊಂದುವ ಉತ್ತರ ಕೊಡುತ್ತದೆ. ಆದರೆ ಅದಕ್ಕೆ ಒಳಗಣ್ಣು ಮತ್ತು ಹೃದಯದ ಅನುಭವದ ಭಾಷೆ ಇದೆಯೇ? ಗೆಳೆಯರೊಬ್ಬರು ತನ್ನ ಹೊಸ ಮನೆಯ ಗೋಡೆಗೇರಿಸಲು ಎ.ಐ.ಗೆ ತನ್ನ ಮಡದಿಯ ಬಣ್ಣದ ಫೋಟೊ ಒಂದನ್ನು ಕೊಟ್ಟು ಅದನ್ನೇ ಹಳೆಯ ಕಪ್ಪು ಬಿಳುಪು ಕಲಾತ್ಮಕ ಚಿತ್ರವನ್ನಾಗಿ ಬದಲಾಯಿಸಲು ಸೂಚನೆ ಕೊಟ್ಟರು. ಕ್ಷಣಾರ್ಧದಲ್ಲಿ ಕೃತಕ ಬುದ್ಧಿಮತ್ತೆ ಅದ್ಭುತ ಚಿತ್ರವೊಂದನ್ನು ರೂಪಿಸಿತು. ಚಿತ್ರ ನೋಡಿದ ಯಾರೇ ಆಗಲಿ ಬೆರಗಾಗುವುದು ಸಹಜ. ಬೆಳಕು, ನೆರಳು, ಮುಖಭಾವ ಎಲ್ಲವೂ ನಿಖರ. ಆದರೆ ಸೂಕ್ಷ್ಮವಾಗಿ ನೋಡಿದಾಗ ಒಂದು ವಿಚಿತ್ರ ಬದಲಾವಣೆ ಇತ್ತು. ಅವರ ಕುತ್ತಿಗೆಯಲ್ಲಿದ್ದ ಎರಡು ಸರಗಳ ಪೈಕಿ ಕರಿಮಣಿಯೊಂದನ್ನು ಕಳಚಿ ಆ ಜಾಗದಲ್ಲಿ ಮತ್ತೊಂದು ಹೊಸ ವಜ್ರದ ನೆಕ್ಲೆಸ್ ಸೇರಿಕೊಂಡಿತ್ತು. ಯಾರೂ ಕೇಳದೇ, ಯಾರೂ ಹೇಳದೇ ಕೃ.ಬು. ತನ್ನ ಕಲ್ಪನೆಯಿಂದ ಸೇರಿಸಿದ ಆಭರಣವದು. ಆ ಹೊಸ ಸರ ಯಾವುದು? ಎಲ್ಲಿಂದ ಬಂತು? ಚಲನಚಿತ್ರ ಪ್ರಿಯೆ ಅವರ ಮಡದಿ ಗಮನವಿಟ್ಟು ನೋಡಿದಾಗ ಗೊತ್ತಾದ ಸತ್ಯ, ಅದು ಈ ದೇಶದ ಪ್ರಮುಖ ಹಿಂದಿ ನಟಿಯೊಬ್ಬಳ ಕುತ್ತಿಗೆಯಲ್ಲಿದ್ದ ವಜ್ರದ ಸರ. ಎ.ಐ. ತನ್ನ ಡೇಟಾ ಸಂಗ್ರಹದೊಳಗೆ ಇದ್ದ ಲಕ್ಷಾಂತರ ಚಿತ್ರಗಳೊಳಗಿಂದ ಗೆಳೆಯನ ಮಡದಿಯ ಮುಖ ಕುತ್ತಿಗೆ ದೇಹಾಂಗಗಳನ್ನು ಅಳತೆ ಮಾಡಿ ಅದಕ್ಕೆ ಸೂಕ್ತವಾಗುವ ಸರವನ್ನು ಆರಿಸಿ ಕುತ್ತಿಗೆಗೆ ಹಾಕಿಬಿಟ್ಟಿದೆ! ಎ.ಐ.ಗೆ ಅದು ಕೇವಲ ವಿನ್ಯಾಸ. ಆಕಾರ. ಹೊಳಪು. ಸೌಂದರ್ಯ. ಆದರೆ ನಮಗೆ? ಕರಿಮಣಿ ಕೇವಲ ಅಲಂಕಾರವಲ್ಲ. ಅದು ವೈವಾಹಿಕ ಸಂಬಂಧದ ಸಂಕೇತ. ಸಂಸ್ಕೃತಿಯ ಗುರುತು. ಕುಟುಂಬದ ಒಳಗಡೆ ಸುಸ್ಥಿರ ಸಾಂಗತ್ಯ ಸಾಗುವ ನೆನಪಿನ ಸರಪಳಿ.ಮದುವೆಯ ಒಪ್ಪಂದ. ಎ.ಐಗೆ ಸದ್ಯ ಆ ಸೂಕ್ಷ್ಮ ಅರಿವು ಇಲ್ಲ. ಅದು ಆಭರಣವನ್ನು ಚಿತ್ರವಾಗಿ ಮಾತ್ರ ನೋಡುತ್ತದೆ. ಅದಕ್ಕೆ ಮಾಲೆಯೊಳಗಿನ ಸಂಸ್ಕೃತಿ, ಭಾವನೆ, ಬಾಂಧವ್ಯ, ನಂಬಿಕೆ - ಯಾವುದೂ ಬಹುಶಃ ಈವರೆಗೆ ಡೇಟಾ ಆಗಿ ದಾಖಲಾಗಿಲ್ಲ. ಆದ್ದರಿಂದ ಅದು ಒಬ್ಬರದ್ದನ್ನು ಇನ್ನೊಬ್ಬರಿಗೆ ಧರಿಸುತ್ತದೆ. ಒಂದು ಸಂಸ್ಕೃತಿಯ ಸಂಕೇತವನ್ನು ಮತ್ತೊಂದು ದೇಹದ ಮೇಲೆ ಅಂಟಿಸುತ್ತದೆ. ಅಲ್ಲಿ ಅರ್ಥ ಇಲ್ಲ. ಕೇವಲ ಬಳಕೆ ಮಾತ್ರ. ಇದು ಜಾಗತೀಕರಣದ ಯಾಂತ್ರೀಕರಣದ ಮೂಲ ಸ್ವಭಾವ. ಅದು ಎಲ್ಲವನ್ನೂ ಸಂಗ್ರಹಿಸುತ್ತದೆ, ಆದರೆ ಅನುಭವಿಸುವುದಿಲ್ಲ. ಎಲ್ಲವನ್ನೂ ಮಿಶ್ರಣ ಮಾಡುತ್ತದೆ, ಆದರೆ ಮೂಲಬೇರು ಉಳಿಸುವುದಿಲ್ಲ. ಅದು ಸಂಸ್ಕೃತಿ, ಭಾವನೆ, ಸಂವೇದನೆ ಎಲ್ಲವನ್ನೂ ವಸ್ತುವಾಗಿ ನೋಡುತ್ತದೆ. ಅಂದರೆ ಅದಕ್ಕೆ ಎಲ್ಲವೂ ಉಪಯೋಗದ ವಸ್ತು, ಪ್ರದರ್ಶನದ ವಸ್ತು, ಮಾರಾಟದ ವಸ್ತು. ಈ ದೃಷ್ಟಿಯಲ್ಲಿ ನೋಡಿದರೆ, ಎ.ಐ. ಕುತ್ತಿಗೆಯಲ್ಲಿ ಸೇರಿಸಿದ ಮೂರನೇ ಸರ ಆ ವಜ್ರದ ನೆಕ್ಲಿಸ್ ಇದೆಯಲ್ಲ? ಅದು ಮತ್ತೊಂದು ದೊಡ್ಡ ರೂಪಕ. ಅದು ಹೇಳುವುದು, ನಮ್ಮ ಸಂಸ್ಕೃತಿಯ ಸಂಕೇತಗಳು ಮುಂದೆ ನಿಧಾನವಾಗಿ ತಮ್ಮ ಅರ್ಥ ಕಳೆದುಕೊಂಡು, ಜಾಗತೀಕರಣದ ಮಾರುಕಟ್ಟೆಯೊಳಗೆ ತೇಲುವ ಅಲಂಕಾರಗಳಾಗುತ್ತಿವೆ ಎಂಬ ಸತ್ಯ. ಇದೇ ಕಥೆಯ ಇನ್ನೊಂದು ಮುಖವನ್ನು ಹೇಳುತ್ತೇನೆ ಕೇಳಿ. ಮಲದೇವಿಹಳ್ಳಿ ಎಂಬುವುದು ಕರ್ನಾಟಕದ ಆ ಚಿಕ್ಕ ಹಳ್ಳಿ. (ಹಾಸನ) ಆ ಹಳ್ಳಿಗೆ ಹಿಂದೊಮ್ಮೆ ಹೋಗಿದ್ದೆ. ಬರೆದಿದ್ದೆ. ಒಂದು ಕಾಲದಲ್ಲಿ ಅಲ್ಲಿಯ ನೆಲದವರ ನಾಟಿ ಜಾಣ್ಮೆ ಈ ದೇಶದ ಕಲಾ ಜಗತ್ತಿಗೆ ಒಂದು ಸುಂದರವಾದ ನಾದವನ್ನು ಕೊಟ್ಟಿತ್ತು. ಅದು ಕೈಚಳಕದ ಜೀವಂತ ಶಾಲೆಯಾಗಿತ್ತು. ಸುಮಾರು ಮೂರ್ನಾಲ್ಕು ದಶಕಗಳ ಹಿಂದೆ ಅಲ್ಲಿಯ ಮೂವತ್ತು-ನಲ್ವತ್ತು ಮನೆಗಳಲ್ಲಿ ಅಡುಗೆಯ ಒಲೆಯ ಬದಿಯಲ್ಲೇ ಪುಟ್ಟ ಪುಟ್ಟ ಕುಲುಮೆಗಳು ಹೊತ್ತಿರುತ್ತಿದ್ದವು. ಆ ಕುಲುಮೆಯಲ್ಲಿ ಹುಟ್ಟುತ್ತಿದ್ದುದು ಶಾಸ್ತ್ರೀಯ ನೃತ್ಯ, ಭರತನಾಟ್ಯದ ಗೆಜ್ಜೆಗಳು, ಗಾಡಿ ಎತ್ತುಗಳ ಕೊರಳಿಗೆ ಕಟ್ಟುವ ಘಂಟೆಗಳು, ದೇವಾಲಯದ ನೃತ್ಯಕ್ಕೆ ಬೇಕಾದ ಲಯದ ನಿನಾದದ ಸಾಧನಗಳು. ನಿಮಗೆ ಶಿವರಾಜ್ ಕುಮಾರ್ ಅವರ ‘ಜನುಮದ ಜೋಡಿ’ ಗೊತ್ತಲ್ಲ? ಆ ಚಲನಚಿತ್ರದಲ್ಲಿ ಒಂದು ಹಳ್ಳಿಯ ಕೆರೆ ದಂಡೆಯ ಮೇಲೆ ನೂರಾರು ಎತ್ತಿನ ಗಾಡಿಗಳು ಸಾಲಾಗಿ ಹೋಗುವಾಗ ‘ಮಣಿ ಮಣಿ ಮಣಿ’ ಎಂಬ ಹಾಡೊಂದಿದೆ. ಆಗ ಸ್ಫುರಿಸುವ ಲಯಬದ್ಧ ಈ ಗೆಜ್ಜೆಗಳ ನಿನಾದ ನಿಮಗೆ ನೆನಪಿರುತ್ತದೆ. ಅದು ಅಲ್ಲಿ ಕೇವಲ ಉತ್ಪಾದನೆ ಅಲ್ಲ. ಅದು ಸಂಸ್ಕೃತಿಯ ಸೃಷ್ಟಿ. ಆ ಬೆಂಕಿಯ ಮುಂದೆ ಕೂತವರು ಕೇವಲ ಕಾರ್ಮಿಕರಲ್ಲ. ಅವರು ಕಲಾವಿದರು. ಅವರ ಕೈಗಳಲ್ಲಿ ಲಯ ಇತ್ತು. ಅವರ ಕಿವಿಗಳಲ್ಲಿ ತಾಳ ಇತ್ತು. ಅವರ ಮನಸ್ಸಿನಲ್ಲಿ ಶ್ರದ್ಧೆ ಇತ್ತು. ನಾಟ್ಯಪಟುಗಳ ಕಾಲಿಗೆ ಕಟ್ಟುವ ಒಂದು ಜೋಡಿ ಗೆಜ್ಜೆ ಆದ ತಕ್ಷಣ ಅವರು ಅದನ್ನು ದೇವರ ಗದ್ದುಗೆಯ ಮೇಲಿಟ್ಟು ಪೂಜಿಸುತ್ತಿದ್ದರು. ಕಿವಿಯ ಹತ್ತಿರ ಹಿಡಿದು ಅಲುಗಾಡಿಸಿ ಅದರ ಲಯವನ್ನು ಪರೀಕ್ಷಿಸುತ್ತಿದ್ದರು. ಕೆಲವೊಮ್ಮೆ ಕಾಲಿಗೆ ಕಟ್ಟಿ ಆಂಗಿಕವಾಗಿ ಅಭಿನಯಿಸಿ ನಾದದ ಪರೀಕ್ಷೆಯೂ ನಡೆಯುತ್ತಿತ್ತು. ಅದರೊಂದಿಗೆ ಆ ಕ್ಷಣ ಅವರು ಏಕಕಾಲದಲ್ಲಿ ಕಲಾವಿದರೂ ಕುಶಲಕರ್ಮಿಗಳೂ ನಾಟ್ಯಪಟುಗಳೂ ಎಲ್ಲವೂ ಆಗಿ ಪಳಗಿದವರೇ ಆಗಿದ್ದರು. ಆದರೆ ಯಾವಾಗ ಆ ಗೆಜ್ಜೆಗಳು ಯಂತ್ರದಲ್ಲಿ ಸೃಷ್ಟಿಯಾಗಲು ಆರಂಭಿಸಿದವೋ ಎಲ್ಲವೂ ಬದಲಾಯಿತು. ಯಂತ್ರದ ಬಾಯಲ್ಲಿ ಸಾವಿರ ಗೆಜ್ಜೆಗಳನ್ನು ಒಂದೇ ಗಂಟೆಯಲ್ಲಿ ತಯಾರಿಸುವ ಸಾಧ್ಯತೆ ಬಂತು. ಮಾರುಕಟ್ಟೆಗೆ ವೇಗ ಬೇಕಿತ್ತು. ಕಡಿಮೆ ಬೆಲೆ ಬೇಕಿತ್ತು. ಪ್ರಮಾಣ ಹೆಚ್ಚು ಬೇಕಿತ್ತು. ಆ ಕ್ಷಣದಲ್ಲಿ ಮಲದೇವಿಹಳ್ಳಿಯ ಕುಲುಮೆ ನಿಧಾನವಾಗಿ ಆರಿತು. ಒಂದು ಊರಿನ ಸಂಸ್ಕೃತಿಯ ಉಸಿರು ನಿಂತುಹೋಯಿತು. ಉದ್ಯೋಗ ಉಳಿಸಿಕೊಳ್ಳಲು, ಬದುಕಲು ಅವರು ಬಿದಿರಿನ ಹಿಂದೆ ಓಡಿದರು. ಹತ್ತಾರು ಕಿಲೋಮೀಟರ್ ದೂರದಿಂದ ಬಿದಿರು ಕಡಿದು ಲಾರಿಗೆ ಏರಿಸಿ ತಂದು ಬುಟ್ಟಿ ಮಾಡಿದರು. ಕೆಲವು ವರ್ಷಗಳ ಕಾಲ ಅದು ಬದುಕಿಗೆ ಆಧಾರವಾಯಿತು. ಆದರೆ ಪ್ಲಾಸ್ಟಿಕ್ ಬಂದಾಗ, ಬಿದಿರಿಗೂ ಮಾರುಕಟ್ಟೆ ಇಲ್ಲವಾಯಿತು. ಆಗ ಅವರು ಊರು ಬಿಟ್ಟು ಬೆಂಗಳೂರು, ಮೈಸೂರು ಕಡೆಗೆ ಕಟ್ಟಡ ಕೆಲಸಕ್ಕೆ ಹೋದರು. ಸೆಂಟ್ರಿಂಗ್, ಕೂಲಿ, ದಿನಗೂಲಿ -ಅವರ ಬದುಕಿನ ಹೊಸ ಅರ್ಥವಾಯಿತು. ಇಲ್ಲಿ ಆದ ಒಂದು ಸೂಕ್ಷ್ಮ ಬದಲಾವಣೆಯನ್ನು ಗಮನಿಸಿ, ಕುಲುಮೆಯ ಮುಂದೆ ಇದ್ದಾಗ ಇವರೆಲ್ಲ ಕಲಾವಿದರು. ಬಿದಿರ ಬುಟ್ಟಿ ಮಾಡುವಾಗ ಕುಶಲಕರ್ಮಿಗಳು. ಈಗ ನಗರದ ಕಟ್ಟಡದ ಮೇಲೆ ಕೇವಲ ಕಾರ್ಮಿಕರು. ಇದು ಕೇವಲ ಉದ್ಯೋಗ ಬದಲಾವಣೆ ಅಲ್ಲ. ಇದು ಮಾನವ ಗೌರವದ ಕುಸಿತದೊಂದಿಗೆ ಕೌಶಲ್ಯದ ನಾಶ. ಸಂಸ್ಕೃತಿಯ ನಿಧಾನ ಮೌಲ್ಯಹೀನತೆ. ಜಾಗತೀಕರಣ ಖಂಡಿತ ನಮಗೆ ಕೆಲಸ ಕೊಟ್ಟಿದೆ. ಸುಖದ ಆವಿಷ್ಕಾರಗಳನ್ನು ಮನೆ ಮನೆಯ ಒಳಗಡೆ ರಾಶಿ ಸುರಿದಿದೆ. ಜಗತ್ತನ್ನೇ ಹಳ್ಳಿಯ ಅಂಗಳದಲ್ಲಿ ಕೂತು ನೋಡುವ ದಾರಿ ಮತ್ತು ಯಂತ್ರವನ್ನು ಮೈಗೆ ಕಟ್ಟಿದೆ. ಆದರೆ ಅದು ನಮ್ಮ ಕುಶಲ ಕುಸುರಿ ಕಲೆಗಳನ್ನು ಕಸಿದುಕೊಂಡಿತು. ನವ ನಾಗರಿಕತೆ ತಲೆಗೆ, ಹೊಟ್ಟೆಗೆ ಅನ್ನ- ಬಣ್ಣ ಕೊಟ್ಟಿತು. ಆದರೆ ಆತ್ಮಕ್ಕೆ ಹಸಿವುಂಟುಮಾಡಿತು. ಎ.ಐ. ಕರಿಮಣಿ ಕಸಿದುಕೊಂಡು ಆ ಜಾಗದಲ್ಲಿಟ್ಟ ಮೂರನೇ ಸರವೂ, ಮಲದೇವಿಹಳ್ಳಿಯ ಆರಿದ ಕುಲುಮೆಯೂ ಒಂದೇ ಕಥೆಯನ್ನು ಹೇಳುತ್ತವೆ. ನಮ್ಮ ಸಂಬಂಧ, ಸೂಕ್ಷ್ಮತೆಗಳನ್ನು ಯಂತ್ರದ ವೇಗದಲ್ಲಿ ನುಚ್ಚು ನೂರಾಗಿಸಲಾದ ವ್ಯಥೆಯ ಕತೆಯದು. ಸಂಸ್ಕೃತಿಯ ಅರ್ಥವನ್ನು ಮಾರುಕಟ್ಟೆಯ ಬೆಲೆಯಲ್ಲಿ ಕರಗಿಸಲಾದ ನೋವದು. ಮಾಲೆ ಕೇವಲ ಈಗ ಅಲಂಕಾರ. ಗೆಜ್ಜೆ ಕೇವಲ ಈಗ ಶಬ್ದ. ಬಿದಿರು ಈಗ ಅಪ್ರಯೋಜಕ ವಸ್ತು. ನಾವು ಕೇಳಬೇಕಾದ ಪ್ರಶ್ನೆ ಏನೆಂದರೆ - ಈ ವೇಗದ ಬದುಕಿನಲ್ಲಿ ನಾವು ಏನನ್ನು ಕಳೆದುಕೊಳ್ಳುತ್ತಿದ್ದೇವೆ? ನಮ್ಮ ಮಣ್ಣಿನ ವಿವೇಕವನ್ನು, ನಮ್ಮ ಸಂಸ್ಕೃತಿಯ ಸೂಕ್ಷ್ಮತೆಯನ್ನು ಉಳಿಸಿಕೊಳ್ಳದೆ ಹೋದರೆ, ಮುಂದಿನ ತಲೆಮಾರಿಗೆ ಉಳಿಯುವುದು ಕೇವಲ ಡೇಟಾ. ಅನುಭವವಿಲ್ಲದ ನೆನಪು. ಅರ್ಥವಿಲ್ಲದ ಪರಂಪರೆ. ಪ್ರೀತಿ ಇಲ್ಲದ ಸಂಬಂಧ. ಒಳಗೊಳ್ಳುವಿಕೆ ಇಲ್ಲದ ಕೆಲಸ. ಇನ್ನು ಕೆಲವೇ ದಿನಗಳಲ್ಲಿ ನಮ್ಮ ಮಕ್ಕಳು ಮಾಂಗಲ್ಯವನ್ನು ಕೇವಲ ಫ್ಯಾಷನ್ ಸರವೆಂದೂ, ಗೆಜ್ಜೆಯನ್ನು ಕೇವಲ ಶಬ್ದವೆಂದೂ ನೋಡಬಹುದು. ಈ ಕಾರಣಕ್ಕಾಗಿಯೇ ಖಂಡಿತವಾಗಿಯೂ ಎ.ಐ. ನಮ್ಮ ಬದುಕನ್ನು ವಿಸ್ತರಿಸಿದೆ, ಆದರೆ ನಮ್ಮ ಆತ್ಮವನ್ನು ಮಾತ್ರ ಸಣ್ಣದು ಮಾಡಿದೆ. ಇದು ತಂತ್ರಜ್ಞಾನ ವಿರೋಧಿ ಮಾತಲ್ಲ. ಇದು ಮನುಷ್ಯನ ಪರವಾದ ಭವಿಷ್ಯದ ಎಚ್ಚರಿಕೆ. ತಂತ್ರಜ್ಞಾನ ಖಂಡಿತವಾಗಿಯೂ ನಮ್ಮ ಬದುಕನ್ನು ಬೆಳಗಿಸಬೇಕು. ಆದರೆ ನಮ್ಮ ಬೇರುಗಳನ್ನು ಸುಡಬಾರದು.ಇಲ್ಲದಿದ್ದರೆ, ಮುಂದೊಂದು ದಿನ ನಮ್ಮದೇ ಸಂಸ್ಕೃತಿಯನ್ನೂ, ನಮ್ಮದೇ ನೆನಪುಗಳನ್ನೂ, ಎ.ಐ. ನಮಗಾಗಿ ಹೊಸದಾಗಿ ರಚಿಸಿ ಕೊಡುವ ದಿನ ಬರುತ್ತದೆ. ಆಗ ನಾವು ನಮ್ಮನ್ನೇ ಗುರುತಿಸಲಾಗದಷ್ಟು ದೂರ ಸರಿದಿರುತ್ತೇವೆ. ಮೊದಲು ಕೃಷಿ ಅನ್ನಕೇಂದ್ರಿತವಾಗಿದ್ದಾಗ, ರೈತನ ಜೀವನವು ಪ್ರಕೃತಿ, ಕಾಲಚಕ್ರ, ಹಬ್ಬ-ಹರಿದಿನ, ದೇವರು-ದೈವ, ಊರಿನ ಸಂಬಂಧಗಳು, ಪರಸ್ಪರ ಅವಲಂಬನೆ ಇವೆಲ್ಲದರ ಜೊತೆ ನೇರವಾಗಿ ಜೋಡಿಗೊಂಡಿತ್ತು. ಬಿತ್ತನೆ, ಕೊಯ್ಲು, ನಾಟಿ, ಕೊಟ್ಟಿಗೆ, ಅಡುಗೆ-ಎಲ್ಲವೂ ಒಂದು ಸಂಸ್ಕೃತಿಯ ಆಚರಣೆಯಾಗಿತ್ತು. ಅನ್ನವು ಕೇವಲ ಆಹಾರವಲ್ಲ, ಅದು ಬದುಕಿನ ತತ್ವ, ಬದುಕಿನ ನೀತಿ, ಬದುಕಿನ ಮೌಲ್ಯವಾಗಿತ್ತು. ಆದರೆ ಕೃಷಿ ಹಣದ ದಾರಿಗೆ ತಿರುಗಿದ ಕ್ಷಣದಿಂದ, ಭೂಮಿ ತಾಯಿ ಅಲ್ಲ; ಉತ್ಪಾದನಾ ಸಾಧನ ಆಗಿಬಿಟ್ಟಳು. ಬೆಳೆ ಆಹಾರವಲ್ಲ; ಮಾರುಕಟ್ಟೆ ಸರಕಾಯಿತು. ರೈತ ಸಂಸ್ಕೃತಿಯ ಪಾಲಕನಲ್ಲ; ಉತ್ಪಾದಕ ಮತ್ತು ವ್ಯಾಪಾರಿ ಆಗಿ ಬದಲಾಯಿಸಲ್ಪಟ್ಟ. ಇಲ್ಲಿಯೇ ನಮ್ಮ ಭಾಷೆ ಬದಲಾಯಿತು. ಭಾವನೆ ಬದಲಾಯಿತು. ಅದರ ಅರ್ಥ ಬದಲಾಯಿತು. ಸಾಂಸ್ಕೃತಿಕ ಪಲ್ಲಟದ ಮೊದಲ ಬಿರುಕು ಗೋಚರಿಸುತ್ತದೆ. ಒಟ್ಟಾಗಿ ಬಿತ್ತೋಣ, ಒಟ್ಟಾಗಿ ಕೊಯ್ಯೋಣ ಎಂಬ ಕೂಡು ಸಂಸ್ಕೃತಿ ಇದ್ದಲ್ಲಿ, ಈಗ ನನ್ನ ಲಾಭ ಎಷ್ಟು? ನನ್ನ ಕೂಲಿ ಎಷ್ಟು? ದುಡಿಮೆ ಎಷ್ಟು ಗಂಟೆ? ಎಂಬ ಲೆಕ್ಕಾಚಾರ ಪ್ರಬಲವಾಗುತ್ತಿದೆ. ಹಂಚಿಕೆ ಸಂಸ್ಕೃತಿಗೆ ಬದಲು ಸ್ಪರ್ಧಾತ್ಮಕ ಮನೋಭಾವ ವಿಜೃಂಭಿಸುತ್ತಿದೆ. ಸಂಧಿ, ಕಥೆ, ಕಬಿತೆ ಹೇಳಲು ಗದ್ದೆಯ ಕೆಸರಲ್ಲಿ ಸಾಲಾಗಿ ನಿಂತವರೆಲ್ಲ ಒಂದು ಗುಂಪಾಗದೆ ಪ್ರತ್ಯೇಕ ಘಟಕಗಳಾಗಿ ಕಾಣಿಸುತ್ತಾರೆ. ಹಬ್ಬಗಳು, ಜಾತ್ರೆಗಳು, ಆಚರಣೆಗಳು - ಇವುಗಳೂ ಅನ್ನದ ಚಕ್ರದಿಂದ ಹಣದ ವೇಳಾಪಟ್ಟಿಗೆ ಸರಿದಿವೆ. ಮೊದಲು ಹಬ್ಬ ಎಂದರೆ ಕೊಯ್ಲಿನ ಸಂತಸ, ಹಳ್ಳಿಯ ಪಾಲಿಗೆ ಕೂಡೂಟ, ದೇವರಿಗೆ ಕೃತಜ್ಞತೆ. ಈಗ ಹಬ್ಬ ಎಂದರೆ ಮಾರುಕಟ್ಟೆ ಆಫರ್, ಶಾಪಿಂಗ್, ಪ್ರದರ್ಶನ. ಹಬ್ಬದೊಳಗಿನ ಆಧ್ಯಾತ್ಮಿಕತೆ ಸಂಭ್ರಮ ಮಸುಕಾಗಿ, ಪ್ರದರ್ಶನ ಮತ್ತು ಖರ್ಚಿನ ಸಂಸ್ಕೃತಿ ಪ್ರಬಲವಾಗುತ್ತದೆ. ಹಳ್ಳಿ ಮನೆಗಳ ಆಹಾರ ಪದ್ಧತಿಯಲ್ಲೂ ಭಾರೀ ಪಲ್ಲಟ. ಸ್ಥಳೀಯ ಬೆಳೆ, ಸಾಂಪ್ರದಾಯಿಕ ಆಹಾರ ಪದ್ಧತಿ ಹಿನ್ನಡೆಯಾಗಿ, ಮಾರುಕಟ್ಟೆ ನಿಯಂತ್ರಿತ ಆಹಾರ ಸಂಸ್ಕೃತಿ ಮೆತ್ತಗೆ ಕೈ ಹಿಡಿಯುತ್ತದೆ. ರಾಗಿ, ಜೋಳ, ತೆಂಗು, ಹಲಸು, ಕಾಡುಸೊಪ್ಪು - ಇವೆಲ್ಲವೂ ನಿಧಾನವಾಗಿ ಮರೆತು, ಅಕ್ಕಿ-ಗೋಧಿ-ಪ್ಯಾಕೆಟ್ ಆಹಾರ ಮೇಲುಗೈ ಪಡೆಯುತ್ತದೆ. ಇದರೊಂದಿಗೆ ದೇಹ ಆರೋಗ್ಯ ಮಾತ್ರವಲ್ಲ, ಸಾಂಸ್ಕೃತಿಕ ಸ್ಮತಿಯೂ ಕ್ಷೀಣಿಸುತ್ತದೆ. ಮೊದಲು ಕೃಷಿ ಸಂಬಂಧಿತ ನುಡಿಗಟ್ಟುಗಳು, ಮಾತು, ಹಾಡುಗಳು ಇದ್ದಲ್ಲಿ, ಈಗ ಮಾರುಕಟ್ಟೆ, ಲಾಭ, ಯೋಜನೆ, ಸಾಲ, ಬಡ್ಡಿ ಇವುಗಳ ಭಾಷೆ ಪ್ರಬಲವಾಗುತ್ತದೆ. ಅತಿದೊಡ್ಡ ಪಲ್ಲಟ ಸಂಭವಿಸುವುದು ರೈತನ ಆತ್ಮಗೌರವದಲ್ಲಿ. ಅನ್ನ ನೀಡುವವನಾಗಿದ್ದ ರೈತ, ಹಣದ ಬಲವಂತದೊಳಗೆ ಸಿಲುಕಿದಾಗ, ತನ್ನನ್ನು ತಾನು ಉತ್ಪಾದನಾ ಯಂತ್ರದ ಒಂದು ಭಾಗವೆಂದು ಕಾಣತೊಡಗುತ್ತಾನೆ. ಇಲ್ಲಿಂದಲೇ ಬೇಸರ, ಅಸಮಾಧಾನ, ಆತಂಕ, ಸಾಲದ ಒತ್ತಡ, ಆತ್ಮಹತ್ಯೆಗಳಂತಹ ದಾರುಣ ಸ್ಥಿತಿಗಳು ಹುಟ್ಟುತ್ತವೆ. ಕೊರಳ ಮಾಲೆಯ ಆ ಘಟನೆ ಕೇವಲ ಎ.ಐ. ಮಾಡಿದ ಸಣ್ಣ ತಿದ್ದುಪಡಿ ಅಲ್ಲ; ಅದು ನಮ್ಮ ಕಾಲದ ರೂಪಕ. ಇಂದು ಕೃತಕ ಬುದ್ಧಿಮತ್ತೆ ಸುಲಭವಾಗಿ ಚಿತ್ರ ಬದಲಾಯಿಸುತ್ತದೆ, ಧ್ವನಿ ನಕಲಿಸುತ್ತದೆ, ಹಾಡು-ಕವನ ರಚಿಸುತ್ತದೆ, ಕೃಷಿ ಸಲಹೆ ನೀಡುತ್ತದೆ. ಅದು ಅಳೆಯುತ್ತದೆ, ಹೋಲಿಕೆ ಮಾಡುತ್ತದೆ, ಸರಿಹೊಂದುವ ಉತ್ತರ ಕೊಡುತ್ತದೆ. ಆದರೆ ಅದಕ್ಕೆ ಒಳಗಣ್ಣು ಮತ್ತು ಹೃದಯದ ಅನುಭವದ ಭಾಷೆ ಇದೆಯೇ? ಕರಿಮಣಿಯ ಜಾಗದಲ್ಲಿ ವಜ್ರದ ಸರ ಹಾಕಿದ್ದು ವಿನ್ಯಾಸದ ದೃಷ್ಟಿಯಿಂದ ತಪ್ಪಲ್ಲ. ಆದರೆ ಜೀವನದ ದೃಷ್ಟಿಯಿಂದ ಅದು ಅರ್ಥದ ಕಳವು. ಯಂತ್ರದ ಮನಸ್ಸಿಗದು ಆಕಾರ, ಹೊಳಪು, ಸೌಂದರ್ಯ ಎಲ್ಲವೂ ಹೌದು. ಆದರೆ ನಮಗದು ಸಂಬಂಧ, ಸಂಸ್ಕೃತಿಯ ನೆನಪು. ಇಂದು ಯಂತ್ರ ಮೃದಂಗ ಬಾರಿಸಬಹುದು, ರಾಗ ರಚಿಸಬಹುದು, ನಾಟ್ಯ ಭಂಗಿ ಕಲಿಸಬಹುದು, ಅನ್ನ ಬೇಯಿಸಬಹುದು. ಆದರೆ ಅದು ನಾದದ ಕಂಪನವನ್ನು ಅನುಭವಿಸುವುದಿಲ್ಲ. ಮಣ್ಣಿನ ವಾಸನೆಯನ್ನು ಒಳಗೊಳ್ಳುವುದಿಲ್ಲ. ಮಳೆ ಬಾರದ ರಾತ್ರಿ ರೈತನ ಮನದ ಆತಂಕವನ್ನು ಸ್ಪರ್ಶಿಸುವುದಿಲ್ಲ. ಅದು ಕೇವಲ ಮಾಹಿತಿ ಸಂಗ್ರಹಿಸುತ್ತದೆ; ಬದುಕನ್ನು ಅನುಭವಿಸುವುದಿಲ್ಲ. ನಮ್ಮ ಕೈಯಲ್ಲಿ ಯಂತ್ರ ಇರಲಿ; ಆದರೆ ಯಂತ್ರದ ಕೈಯಲ್ಲಿ ನಮ್ಮ ಅರ್ಥ ಸಿಕ್ಕಿಹಾಕಿಕೊಳ್ಳಬಾರದು. ನಾಳೆ ಎ.ಐ. ನಮ್ಮ ಅಂಗೈಯಲ್ಲೇ ಕೂತು ನಮ್ಮ ಸಂಸ್ಕೃತಿಯನ್ನು ಸುಂದರವಾಗಿ ಚಿತ್ರಿಸಬಹುದು. ಆದರೆ ನಾವು ಅದನ್ನು ಬದುಕದೇ ಹೋದರೆ, ಆ ಚಿತ್ರ ಸತ್ಯವಾಗುವುದಿಲ್ಲ. ಅದೇ ನಮ್ಮ ಕಾಲದ ಸೂಕ್ಷ್ಮ ಮಿತಿ.
ಸಿಲಿಕಾನ್ ಸಿಟಿಯಲ್ಲಿ ಚಿನ್ನದ ಬೆಲೆಯು ಗಗನಕ್ಕೇರಿದ್ದು, ಗ್ರಾಹಕರಲ್ಲಿ ಆತಂಕ ಮೂಡಿಸಿದೆ. ಕಳೆದ ಕೆಲವು ದಿನಗಳಿಂದ ಚಿನ್ನದ ದರಗಳು ನಿರಂತರವಾಗಿ ಇಳಿಕೆ ಕಂಡಿತ್ತು. ಆದರೆ ಶನಿವಾರ ದರ ದಿಢೀರ್ ಏರಿಕೆ ಕಾಣುವ ಶಾಕ್ ನೀಡಿದೆ. ಬೆಂಗಳೂರಿನಲ್ಲಿ ಇಂದು ಚಿನ್ನದ ದರದಲ್ಲಿ ಯಾವುದೇ ಬದಲಾವಣೆ ಕಾಣಿಸಿಲ್ಲ. 24 ಕ್ಯಾರೆಟ್, 22 ಕ್ಯಾರೆಟ್ ಹಾಗೂ 18 ಕ್ಯಾರೆಟ್ ಚಿನ್ನದ ದರಗಳು ನಿನ್ನೆ
ಉಳ್ಳಾಲ: ಅಜ್ಜಿನಡ್ಕ ನಿವಾಸಿ ಟಿ.ಎ.ಅಬ್ದುಲ್ ಖಾದರ್(63) ಅಲ್ಪಕಾಲದ ಅನಾರೋಗ್ಯದಿಂದ ಸ್ವಗೃಹದಲ್ಲಿ ಶನಿವಾರ ರಾತ್ರಿ ನಿಧನ ಹೊಂದಿದರು. ಮೃತರು ಓರ್ವ ಪುತ್ರ, ಇಬ್ಬರು ಪುತ್ರಿಯರ ಸಹಿತ ಅಪಾರ ಬಂಧುಬಳಗವನ್ನು ಅಗಲಿದ್ದಾರೆ. ಗಲ್ಫ್ ನಲ್ಲಿ ಉದ್ಯೋಗದಲ್ಲಿದ್ದ ಅವರು ಅಜ್ಜಿನಡ್ಕದ ಬದ್ರಿಯಾ ಜಮಾ ಮಸೀದಿಯ ಪ್ರಧಾನ ಕಾರ್ಯದರ್ಶಿಯಾಗಿ, ಬದ್ರಿಯಾ ವೆಲ್ಫೇರ್ ಸೊಸೈಟಿಯ ಅಧ್ಯಕ್ಷರಾಗಿ, ಅಜ್ಜಿನಡ್ಕ ಸರಕಾರಿ ಶಾಲೆಯ ಅಭಿವೃದ್ಧಿ ಸಮಿತಿಯ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು. ಪ್ರಸಕ್ತ ಗಲ್ಫ್ ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷರಾಗಿದ್ದರು.
ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಧುನಿಕ ಯುಗದ ಅಲೆಕ್ಸಾಂಡರ್ ಆಗಲೂ ಹೊರಟಿದ್ದು, ವೆನಿಜುವೆಲಾ ಬಳಿಕ ಇರಾನ್ ಮೇಲೆ ದಾಳಿ ಮಾಡಿ ಮಧ್ಯಪ್ರಾಚ್ಯವನ್ನು ರಣರಂಗವನ್ನಾಗಿ ಪರಿವರ್ತಿಸಿದ್ದಾರೆ. ಹೀಗೆ ಇರಾನ್ ಯುದ್ದದ ನಡುವೆಯೇ ಸದ್ಯ ಕ್ಯೂಬಾ ದೇಶದ ಮೇಲೆ ಟ್ರಂಪ್ ಚಿತ್ತ ನೆಟ್ಟಿದ್ದು, ಕ್ಯೂಬಾ ತನ್ನ ಜೀವನದ ಕೊನೆ ಗಳಿಗೆಯಲ್ಲಿದ್ದು, ಅಲ್ಲಿ ಶೀಘ್ರವೇ ಬದಲಾವಣೆ ಆಗಲಿದ್ದು, ಅದನ್ನು ನಾನು ನೋಡಿಕೊಂಡು ಹೊಸ ಜೀವನವನ್ನು ನೀಡುತ್ತೇನೆ ಎಂದು ಘೋಷಿಸಿದ್ದಾರೆ. ಈ ಮೂಲಕ ಇರಾನ್ ಬಳಿಕ ಟ್ರಂಪ್ ನ ಹಿಟ್ ಲಿಸ್ಟ್ ಕ್ಯೂಬಾ ಎಂದು ಘೋಷಿಸಿದ್ದು, ಸುಲಭವಾಗಿ ಇದನ್ನು ಮಾಡಲಿದ್ದೇವೆ ಎಂದು ತಿಳಿಸಿದ್ದಾರೆ. ಈ ಕುರಿತ ವರದಿ ಇಲ್ಲಿದೆ.
Koppala | ಸಾಲಬಾಧೆ ತಾಳಲಾರದೆ ರೈತ ಆತ್ಮಹತ್ಯೆ
ಕನಕಗಿರಿ: ಸಾಲಬಾಧೆ ತಾಳಲಾರದೆ ರೈತ ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ರಾಮದುರ್ಗ ಗ್ರಾಮದಲ್ಲಿ ನಡೆದಿದೆ. ನಾಗಪ್ಪ ತಳವಾರ (54) ಆತ್ಮಹತ್ಯೆಗೈದ ರೈತ. ನಾಗಪ್ಪ ತಳವಾರ ಮಕ್ಕಳ ಮದುವೆ, ಹೈನುಗಾರಿಕೆಗಾಗಿ ಬ್ಯಾಂಕ್ ಹಾಗೂ ಸಹಕಾರಿ ಸಂಘ ಮತ್ತು ಕೈಸಾಲ ಮಾಡಿಕೊಂಡಿದ್ದರು. ಆದರೆ ಮಳೆ-ಬೆಳೆ ಆಗದೇ ನಷ್ಟವಾಗಿದ್ದರಿಂದ ಮನನೊಂದು ಮಾ.6ರ ರಾತ್ರಿ ಊಟದ ಬಳಿಕ ಜಮೀನಿಗೆ ಹೋಗಿ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆನ್ನಲಾಗಿದೆ. ಮೃತನ ಪತ್ನಿ ಹುಲಿಗೆಮ್ಮ ಸ್ಥಳೀಯ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಆತ್ಮಹತ್ಯೆಯ ಯೋಚನೆ ಬಂದಾಗ ಅದನ್ನು ನಿಗ್ರಹಿಸಲು ರಾಜ್ಯ ಸರಕಾರದ ಅರೋಗ್ಯ ಇಲಾಖೆಯ ಹೆಲ್ಪ್ ಲೈನ್ 104 ಸಹಾಯ ಮಾಡುತ್ತದೆ. ಅದರ ಜೊತೆಗೆ Tele-MANAS ನ 14416 ಅನ್ನೂ ಸಂಪರ್ಕಿಸಬಹುದು.
ಭಾರತದ ಹಿತ್ತಲಿಗೆ ತಲುಪಿದ ಯುದ್ಧ: ಮುಂದೇನು?
ಅಮೆರಿಕ-ಇಸ್ರೇಲ್ ಮತ್ತು ಇರಾನ್ ನಡುವೆ ನಡೆಯುತ್ತಿರುವ ಯುದ್ಧ ಕೇವಲ ಪಶ್ಚಿಮ ಏಶ್ಯ ಮತ್ತು ಕೊಲ್ಲಿ ಪ್ರದೇಶಕ್ಕೆ ಸೀಮಿತವಾಗಬೇಕಿತ್ತು. ಆದರೆ, ಈ ಒಂದು ಟಾರ್ಪಿಡೊ ದಾಳಿಯಿಂದಾಗಿ, ಯುದ್ಧ ಈಗ ಹಿಂದೂ ಮಹಾಸಾಗರಕ್ಕೆ, ಭಾರತದ ನೆರೆಹೊರೆಗೆ ಆಗಮಿಸಿದಂತಾಗಿದೆ. ಈಗ ಎಲ್ಲ ಭಾರತೀಯರೂ ಕೇಳಿಕೊಳ್ಳಬೇಕಾದ ಪ್ರಶ್ನೆಯೆಂದರೆ: ಈ ಘಟನೆಯಿಂದ ಭಾರತದ ಮೇಲಿನ ಪರಿಣಾಮವೇನು? ನಮ್ಮ ಸಮುದ್ರಗಳು ನಿಜಕ್ಕೂ ಸುರಕ್ಷಿತವಾಗಿವೆಯೇ? ಮಾರ್ಚ್ 4ರ ಬುಧವಾರದಂದು, ಶ್ರೀಲಂಕಾ ಬಳಿಯ ಸಮುದ್ರದಲ್ಲಿ ನಡೆದ ಘಟನೆ ಎಲ್ಲ ಭಾರತೀಯರೂ ಚಿಂತಿಸುವಂತೆ ಮಾಡಿದೆ. ಅಮೆರಿಕದ ಒಂದು ಜಲಾಂತರ್ಗಾಮಿ, ಸಮುದ್ರದ ನೀರಿನಾಳದಲ್ಲಿ ಸಾಗಿ, ಗುರಿಗೆ ಅಪ್ಪಳಿಸಿ ಸ್ಫೋಟಿಸುವ ಕ್ಷಿಪಣಿಯಾದ ಟಾರ್ಪಿಡೋ ಒಂದನ್ನು ಪ್ರಯೋಗಿಸಿ, ಐಆರ್ಐಎಸ್ ದೇನಾ ಎನ್ನುವ ಇರಾನಿಯನ್ ಯುದ್ಧ ನೌಕೆಯನ್ನು ಮುಳುಗಿಸಿದೆ. ಈ ಘಟನೆಯಲ್ಲಿ ಕನಿಷ್ಠ 80 ಜನರು ಪ್ರಾಣ ಕಳೆದುಕೊಂಡಿದ್ದಾರೆ ಎನ್ನಲಾಗಿದೆ. ಈ ಘಟನೆ ದೂರದಲ್ಲೆಲ್ಲೋ ಮಧ್ಯ ಪೂರ್ವದಲ್ಲಿ ನಡೆದಿರುವುದಲ್ಲ. ಬದಲಿಗೆ, ಇದು ಹಿಂದೂ ಮಹಾಸಾಗರವನ್ನು ನಮ್ಮೊಡನೆ ಹಂಚಿಕೊಳ್ಳುವ, ನೆರೆಯ ದ್ವೀಪ ರಾಷ್ಟ್ರವಾದ ಶ್ರೀಲಂಕಾದ ಬಳಿ ನಡೆದಿದೆ. ಈ ದಾಳಿ ನಡೆದ ಸಮಯದಲ್ಲಿ, ಐರಿಸ್ ದೇನಾ ಯಾವುದೇ ಅನುಮಾನಾಸ್ಪದ ಕಾರ್ಯದಲ್ಲಿ ತೊಡಗಿರಲಿಲ್ಲ. ಅದು ಕಳೆದ ತಿಂಗಳು ವಿಶಾಖಪಟ್ಟಣಂನಲ್ಲಿ ಭಾರತೀಯ ನೌಕಾಪಡೆ ಆಯೋಜಿಸಿದ್ದ ಮಿಲಾನ್-2026 ಅಂತರ್ರಾಷ್ಟ್ರೀಯ ನೌಕಾ ಅಭ್ಯಾಸದಲ್ಲಿ ಪಾಲ್ಗೊಂಡು ಇರಾನ್ಗೆ ಮರಳುತ್ತಿತ್ತು. ನೌಕೆ ‘ಪೀಸ್ಫುಲ್ ಪ್ಯಾಸೇಜ್’ ಎಂದು ಕರೆಯುವ, ಅಂತರ್ರಾಷ್ಟ್ರೀಯ ಸಮುದ್ರದಲ್ಲಿ ಮೌನವಾಗಿ ಸಾಗುತ್ತಾ, ಯಾರಿಗೂ ತೊಂದರೆ ಉಂಟುಮಾಡದೆ, ಯಾವುದೇ ಕದನದಲ್ಲಿ ಪಾಲ್ಗೊಳ್ಳದೆ ಸಾಗುತ್ತಿತ್ತು. ಆದರೆ, ಈ ನೌಕೆ ಇದ್ದಕ್ಕಿದ್ದಂತೆ ಕಣ್ಮರೆಯಾಗಿತ್ತು! ಈ ಬೆಳವಣಿಗೆಯೇ ಘಟನೆಯನ್ನು ಅತ್ಯಂತ ವಿಷಾದಕರ, ದುಃಖಕರವಾಗಿಸಿದೆ. ಅಮೆರಿಕ-ಇಸ್ರೇಲ್ ಮತ್ತು ಇರಾನ್ ನಡುವೆ ನಡೆಯುತ್ತಿರುವ ಯುದ್ಧ ಕೇವಲ ಪಶ್ಚಿಮ ಏಶ್ಯ ಮತ್ತು ಕೊಲ್ಲಿ ಪ್ರದೇಶಕ್ಕೆ ಸೀಮಿತವಾಗಬೇಕಿತ್ತು. ಆದರೆ, ಈ ಒಂದು ಟಾರ್ಪಿಡೊ ದಾಳಿಯಿಂದಾಗಿ, ಯುದ್ಧ ಈಗ ಹಿಂದೂ ಮಹಾಸಾಗರಕ್ಕೆ, ಭಾರತದ ನೆರೆಹೊರೆಗೆ ಆಗಮಿಸಿದಂತಾಗಿದೆ. ಈಗ ಎಲ್ಲ ಭಾರತೀಯರೂ ಕೇಳಿಕೊಳ್ಳಬೇಕಾದ ಪ್ರಶ್ನೆಯೆಂದರೆ: ಈ ಘಟನೆಯಿಂದ ಭಾರತದ ಮೇಲಿನ ಪರಿಣಾಮವೇನು? ನಮ್ಮ ಸಮುದ್ರಗಳು ನಿಜಕ್ಕೂ ಸುರಕ್ಷಿತವಾಗಿವೆಯೇ? ಸಂಪೂರ್ಣ ಚಿತ್ರಣವನ್ನು ಅರ್ಥ ಮಾಡಿಕೊಳ್ಳಬೇಕಾದರೆ, ನಾವು ಮೊದಲು ಅಂತರ್ರಾಷ್ಟ್ರೀಯ ಸಾಗರ ಕಾನೂನು ಏನು ಹೇಳುತ್ತದೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು. ಯಾಕೆಂದರೆ, ವಿಚಾರಗಳು ಸಂಕೀರ್ಣವಾಗುವುದೇ ಇಲ್ಲಿ. ಜಗತ್ತಿನ ಸಮುದ್ರಗಳಿಗೆ ಸಂಬಂಧಿಸಿದ ಪ್ರಮುಖ ಕಾನೂನು ಪುಸ್ತಕವನ್ನು ಯುಎನ್ಸಿಎಲ್ಒಎಸ್ (ಯುನೈಟೆಡ್ ನೇಶನ್ಸ್ ಕನ್ವೆನ್ಷನ್ ಆನ್ ದ ಲಾ ಆಫ್ ದ ಸೀ) ಎಂದು ಕರೆಯಲಾಗುತ್ತದೆ. ಇದನ್ನು ಸಮುದ್ರಗಳಿಗೆ ಸಂಬಂಧಿಸಿದ ಸಂವಿಧಾನ ಎಂದು ಭಾವಿಸಿಕೊಳ್ಳಿ. ಆದರೆ, ಅಮೆರಿಕ ಮಾತ್ರ ಈ ಒಪ್ಪಂದಕ್ಕೆ ಎಂದೂ ಸಹಿ ಹಾಕಿಲ್ಲ. ಈ ವಿಚಾರವೇ ನಮಗೆ ಒಂದು ಮಹತ್ವದ ವಿಚಾರವನ್ನು ತಿಳಿಸುತ್ತದೆ. ಯುಎನ್ಸಿಎಲ್ಒಎಸ್ ಮುಖ್ಯವಾಗಿ ಶಾಂತಿಯ ಸಮಯದ ನಿಯಮಗಳನ್ನು ಒಳಗೊಂಡಿದೆ. ಅಂದರೆ, ಸಮುದ್ರದ ಯಾವ ಪ್ರದೇಶದ ಮೇಲೆ ಯಾರ ಸ್ವಾಮ್ಯವಿದೆ, ಮೀನುಗಾರಿಕಾ ಹಕ್ಕುಗಳು, ವ್ಯಾಪಾರ ಮಾರ್ಗಗಳು ಹೀಗೆ ಹಲವಾರು ವಿಚಾರಗಳನ್ನು ಇದು ನಿರ್ಧರಿಸುತ್ತದೆ. ಆದರೆ, ಯುದ್ಧದ ಸಂದರ್ಭದಲ್ಲಿ, ಇದರೊಡನೆ ಒಂದು ಪ್ರತ್ಯೇಕ ನೌಕಾ ಯುದ್ಧದ ನಿಯಮಾವಳಿಗಳೂ ಜಾರಿಗೆ ಬರುತ್ತವೆ. ಈ ಕಾನೂನುಗಳ ಅಡಿಯಲ್ಲಿ, ಐರಿಸ್ ದೆೇನಾ ಒಂದು ಇರಾನಿಯನ್ ಯುದ್ಧ ನೌಕೆಯಾಗಿರುವುದರಿಂದ, ಅದು ಎಲ್ಲಿ ಚಲಿಸುತ್ತಿದ್ದರೂ ಅಥವಾ ಆ ಕ್ಷಣದಲ್ಲಿ ಅದು ಏನೇ ಮಾಡುತ್ತಿದ್ದರೂ, ತಾಂತ್ರಿಕವಾಗಿ ಅದು ದಾಳಿಗೆ ಒಂದು ಸೂಕ್ತವಾದ ಮಿಲಿಟರಿ ಗುರಿ ಎಂದು ಪರಿಗಣಿತವಾಗುತ್ತದೆ. ಹಲವಾರು ಭಾರತೀಯ ನೌಕಾಪಡೆಯ ಅಧಿಕಾರಿಗಳೂ ಸಹ ಈ ಅಪ್ರಿಯ ಸತ್ಯವನ್ನು ಒಪ್ಪಿಕೊಂಡಿದ್ದಾರೆ. ವಿಶ್ವಸಂಸ್ಥೆಯ ಚಾರ್ಟರ್ನ ಆರ್ಟಿಕಲ್ 2 (4) ಪ್ರಕಾರ, ಯಾವುದೇ ದೇಶವೂ ಬೇರೆ ದೇಶಗಳ ಮೇಲೆ ಮಿಲಿಟರಿ ಬಲವನ್ನು ಪ್ರಯೋಗಿಸುವಂತಿಲ್ಲ. ಇದು ಸ್ಪಷ್ಟವಾದ ಕಾನೂನಾಗಿದೆ. ಆದರೆ, ಇದೇ ಚಾರ್ಟರ್ನ 51ನೇ ವಿಧಿ ಒಂದು ವಿನಾಯಿತಿಯನ್ನೂ ನೀಡುತ್ತದೆ. ಒಂದು ದೇಶ ಏನಾದರೂ ಸಶಸ್ತ್ರ ಬೆದರಿಕೆ ಹೊಂದಿದ್ದರೆ, ಅದು ಸ್ವರಕ್ಷಣೆಗಾಗಿ ದಾಳಿ ಮಾಡಬಹುದು. ಇದರೊಡನೆ, ವಿಶ್ವಸಂಸ್ಥೆಯ ಭದ್ರತಾ ಮಂಡಳಿಗೂ ಮಿಲಿಟರಿ ದಾಳಿಗೆ ವಿಶೇಷ ಅನುಮತಿ ನೀಡುವ ಅವಕಾಶವಿದ್ದು, 1990ರ ಕೊಲ್ಲಿ ಯುದ್ಧದ ಸಂದರ್ಭದಲ್ಲಿ ಭದ್ರತಾ ಮಂಡಳಿ ಇದನ್ನೇ ಮಾಡಿತ್ತು. ಆದರೆ ಈ ಅನುಮತಿ ಪಡೆಯಲು ಬಹುಮತದ ಅಗತ್ಯವಿದ್ದು, ಅಮೆರಿಕ, ರಶ್ಯ, ಚೀನಾ, ಯುಕೆ ಮತ್ತು ಫ್ರಾನ್ಸ್ ಇದರ ವಿರುದ್ಧ ವಿಟೋ ಚಲಾಯಿಸಬಾರದು. ವಿಟೋ ಅಧಿಕಾರ ಎಂದರೆ, ಈ ಐದು ಭದ್ರತಾ ಮಂಡಳಿಯ ಶಾಶ್ವತ ಸದಸ್ಯ ರಾಷ್ಟ್ರಗಳ ಪೈಕಿ ಯಾವುದೇ ಒಂದು ಸದಸ್ಯನೂ ‘ಇಲ್ಲ’ ಎಂದರೆ, ಆ ಒಟ್ಟಾರೆ ನಿರ್ಧಾರಕ್ಕೆ ತಡೆಯಾಗುತ್ತದೆ. ಇನ್ನೊಂದು ಗಮನಾರ್ಹ ಅಂಶವೆಂದರೆ, ಅಮೆರಿಕದ ಖಜಾನೆ ಇಲಾಖೆ ಐರಿಸ್ ದೇನಾ ಮೇಲೆ 2023ರಲ್ಲಿ ಅಧಿಕೃತ ನಿರ್ಬಂಧ ಹೇರಿದೆ. ನಿರ್ಬಂಧಗಳು ಮೂಲತಃ ಹಣಕಾಸಿನ ದಂಡಗಳು ಮತ್ತು ನಿಬಂಧನೆಗಳಾಗಿದ್ದು, ನೌಕೆಗಳು ಅಥವಾ ದೇಶಗಳ ಮೇಲೆ ವಿಧಿಸಲಾಗುತ್ತದೆ. ನೌಕೆಯ ಮೇಲೆ ನಿರ್ಬಂಧ ಹೇರಲಾಗಿದೆ ಎಂದರೆ, ಅದು ನೌಕೆಯನ್ನು ಚಲಿಸದಂತೆ ಮಾಡುವುದಿಲ್ಲವಾದರೂ, ಅದರ ಕುರಿತು ವ್ಯಾಪಕ ಅನುಮಾನಗಳನ್ನು ಸೃಷ್ಟಿಸುತ್ತದೆ. ಈ ದಾಳಿ ನಡೆದ ಸಂದರ್ಭದಲ್ಲಿ, ಐರಿಸ್ ದೇನಾ ಕ್ಲೋಸ್ ಇನ್ ಆಯುಧ ವ್ಯವಸ್ಥೆಯನ್ನು ಹೊಂದಿತ್ತು. ಅಂದರೆ, ಸನಿಹ ಬರುವ ಕ್ಷಿಪಣಿಗಳು ಅಥವಾ ಡ್ರೋನ್ಗಳನ್ನು ಹೊಡೆದುರುಳಿಸಲು ರ್ಯಾಪಿಡ್ ಫೈರ್ ಗನ್ಗಳನ್ನು ನೌಕೆ ಹೊಂದಿತ್ತು. ಇದರೊಡನೆ, ನೌಕೆಯಲ್ಲಿ ವಿಶಾಲ ವ್ಯಾಪ್ತಿಯ ರಕ್ಷಣಾ ವ್ಯವಸ್ಥೆಗಳಿದ್ದವು. ಇವೆಲ್ಲದರ ಹೊರತಾಗಿಯೂ, ನೌಕೆ ದಾಳಿಯ ವೇಳೆ ಪ್ರತ್ಯುತ್ತರ ಇಲ್ಲದಂತಾಗಿತ್ತು. ಭಾರತೀಯ ನೌಕಾಪಡೆಯ ಮಾಜಿ ಉಪ ಮುಖ್ಯಸ್ಥರು ಮತ್ತು ಭಾರತದ ಮೊದಲ ರಾಷ್ಟ್ರೀಯ ಸಮುದ್ರ ಭದ್ರತಾ ಸಮನ್ವಯಕಾರ ನಿವೃತ್ತ ವೈಸ್ ಅಡ್ಮಿರಲ್ ಜಿ. ಅಶೋಕ್ ಕುಮಾರ್ ಅವರು ಸಾಗರ ವಲಯದಲ್ಲಿ ಯುದ್ಧ ಎಂದಾದಾಗ ಅದಕ್ಕೆ ಯಾವುದೇ ನಿರ್ದಿಷ್ಟ ಗಡಿಗಳು ಇರುವುದಿಲ್ಲ ಎಂದಿದ್ದಾರೆ. ಒಂದು ಬಾರಿ ಚಕಮಕಿ ಆರಂಭಗೊಂಡರೆ, ಅದಕ್ಕೆ ಸಮುದ್ರದಲ್ಲಿ ಯಾವುದೇ ತಡೆಗೋಡೆ ಇಲ್ಲ. ಯುದ್ಧ ನೌಕೆ ಭಾರತೀಯ ತೀರದಿಂದ ತೆರಳಿದಾಗಲೇ ಯುದ್ಧ ಆರಂಭಗೊಂಡಿತ್ತು ಎಂದು ಅವರು ವಿವರಿಸಿದ್ದಾರೆ. ನೌಕೆಯ ಮೇಲಿನ ದಾಳಿ ಶ್ರೀಲಂಕಾದ ವಿಶೇಷ ಆರ್ಥಿಕ ವಲಯದಲ್ಲಿ, ಅಂದರೆ, ಶ್ರೀಲಂಕಾಗೆ ಸಮುದ್ರ ಸಂಪನ್ಮೂಲಗಳ ಮೇಲೆ ವಿಶೇಷ ಅಧಿಕಾರ ಇರುವ ಪ್ರದೇಶದಲ್ಲಿ ನಡೆದಿರುವುದರಿಂದ, ರಕ್ಷಣಾ ತಂಡಗಳಿಗೆ ಕ್ಷಿಪ್ರವಾಗಿ ಕಾರ್ಯಾಚರಣೆ ನಡೆಸಲು ಅನುಕೂಲವಾಯಿತು ಎಂದಿದ್ದಾರೆ. ಆದರೆ, ನಿವೃತ್ತ ರಿಯರ್ ಅಡ್ಮಿರಲ್ ಸುಧೀರ್ ಪಿಳ್ಳೈ ಎನ್.ಎಂ. ಅವರು ಒಂದಷ್ಟು ಕಠಿಣ ಸವಾಲುಗಳನ್ನು ಎತ್ತಿದ್ದಾರೆ. ‘‘ಯಾವುದೇ ಒಂದು ದೇಶಕ್ಕೆ ಸೀಮಿತವಾಗಿರದ ಅಂತರ್ರಾಷ್ಟ್ರೀಯ ಸಮುದ್ರದಲ್ಲಿ ಒಂದು ವಿದೇಶಿ ಯುದ್ಧ ನೌಕೆಯ ಮೇಲೆ ದಾಳಿ ನಡೆಸುವುದನ್ನು ಸ್ಪಷ್ಟವಾಗಿ ಸ್ವಯಂ ರಕ್ಷಣೆ ಎಂದು ಸಾಬೀತುಪಡಿಸದಿದ್ದರೆ, ಅದು ಅಕ್ರಮ ದಾಳಿ ಎಂದೇ ಕರೆಯಲ್ಪಡುತ್ತದೆ’’ ಎಂದಿದ್ದಾರೆ. ಇನ್ನೊರ್ವ ಹಿರಿಯ ನೌಕಾಪಡೆ ಅಧಿಕಾರಿ ಈ ದಾಳಿಯನ್ನು ಪ್ರಮುಖ ಯುದ್ಧ ತೀವ್ರತೆಯ ಹೆಜ್ಜೆ ಎಂದಿದ್ದಾರೆ. ಇರಾನ್ನ ಯುದ್ಧ ನೌಕೆ ಯಾವುದೇ ಚಕಮಕಿಯ ಪ್ರದೇಶದಲ್ಲಿ ಇರಲಿಲ್ಲ. ಅದು ಬೆಳಗಿನ ವೇಳೆಯಲ್ಲಿ, ಶಾಂತವಾಗಿ ಸಾಗುತ್ತಿತ್ತು. ನೌಕೆಯಲ್ಲಿದ್ದ ಯಾವ ಸಿಬ್ಬಂದಿಯೂ ಸಮುದ್ರದ ಆಳದಿಂದ ಒಂದು ಟಾರ್ಪಿಡೋ ಮೌನವಾಗಿ ಬಂದು ದಾಳಿ ಮಾಡಬಹುದು ಎಂದು ಊಹಿಸಿಯೇ ಇರಲಿಲ್ಲ. ಇದು ಆಧುನಿಕ ಯುದ್ಧದ ಒಂದು ಭಯಾನಕ ವಾಸ್ತವ. ಸಮುದ್ರದಲ್ಲಿ ಯಾವುದೇ ಸುರಕ್ಷಿತ ಮಾರ್ಗಗಳಿಲ್ಲ, ಯಾವುದೇ ನಿರ್ದಿಷ್ಟ ಗಡಿಗಳಿಲ್ಲ. ಸಮುದ್ರ ಸದಾ ಮುಕ್ತವಾಗಿದ್ದು, ಇಂದು ಸಮುದ್ರಗಳು ಸಂಪೂರ್ಣ ಊಹೆಗೆ ನಿಲುಕದಂತಾಗಿವೆ. ಭಾರತ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ. ಇನ್ನು ಮುಂದಿನ ಸಾಧ್ಯತೆಗಳೇನು ಎನ್ನುವ ಕುರಿತು ಭಾರತ ಬಹಳ ಜಾಗರೂಕವಾಗಿ ಆಲೋಚಿಸಬೇಕಿದೆ.
Kamal Haasan: ನಟ, ರಾಜ್ಯಸಭಾ ಸದಸ್ಯ ಕಮಲ್ ಹಾಸನ್ ಅವರು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ಗೆ ತಿರುಗೇಟು ನೀಡಿದ್ದು, ನಿಮ್ಮ ಕೆಲಸ ಎಷ್ಟಿದೆಯೋ ಅಷ್ಟು ನೋಡಿಕೊಳ್ಳಿ ಎಂದು ಸೂಕ್ಷ್ಮವಾಗಿ ಹೇಳಿದ್ದಾರೆ. ಸೋಷಿಯಲ್ ಮೀಡಿಯಾ ಎಕ್ಸ್ನಲ್ಲಿ ಡೊನಾಲ್ಡ್ ಟ್ರಂಪ್ ಬಗ್ಗೆ ಕಮಲ್ ಹಾಸನ್ ಅವರು ಬರೆದಿರುವ ಬರಹವು ವೈರಲ್ ಆಗುತ್ತಿದೆ. ಭಾರತವು ತೈಲ ಖರೀದಿ ಮಾಡುವ ವಿಚಾರವಾಗಿ
ಕಲ್ಲಂಗಡಿಗೆ ಮುಳ್ಳಾದ ವೈರಸ್ ಸೋಂಕು; ಕಟಾವು ಹಂತದಲ್ಲಿ ವ್ಯಾಪಿಸಿದ ಬಾಧೆ
ಚಳ್ಳಕೆರೆ ತಾಲೂಕಿನಲ್ಲಿ ಸುಮಾರು 400 ಎಕರೆಯಲ್ಲಿ ರೈತರು ಕಲ್ಲಂಗಡಿ ಬೆಳೆದಿದ್ದು, ಕೆಜಿಗೆ 20 ರೂ. ಬೆಲೆ ಇದೆ. ಆದರೆ, ಬೆಳೆಗೆ ವೈರಸ್ ದಾಳಿಯಿಂದಾಗಿ ಕೈಗೆ ಬಂದ ತುತ್ತು ಬಾಯಿಗೆ ಇಲ್ಲದಂತಾಗಿದೆ. ವೈರಸ್ ಜತೆಗೆ ಹಳದಿ ಎಲೆ ಚುಕ್ಕಿ ರೋಗ ಕೂಡ ಕಾಡುತ್ತಿದೆ.
ಕೆಂಪು ಸುಂದರಿ ಮೆಣಸಿನಕಾಯಿಗೆ ಬಂಪರ್ ಬಂಪರ್ ಬೆಲೆ!
ಈ ಬಾರಿ ಕೆಂಪು ಮೆಣಸಿಗೆ ಉತ್ತಮಬೆಲೆ ಬಂದಿದೆ. ಕಂಪ್ಲಿ ತಾಲೂಕಿನಲ್ಲಿ ಒಣಕಾಯಿ ಕೀಳುವ ಕಾರ್ಯ ಭರದಿಂದ ಸಾಗಿದೆ. ಮಾರುಕಟ್ಟೆಯಲ್ಲಿ ಬೆಲೆಯೆನೋ ಅಧಿಕವಾಗಿದೆ. ಆದರೆ ಇಳುವರಿ ಕಡಿಮೆಯಾಗಿರುವುದು ರೈತರನ್ನು ಚಿಂತೆಗೀಡು ಮಾಡಿದೆ.
ಬಳ್ಳಾರಿ | 9ನೇ ತರಗತಿ ವಿದ್ಯಾರ್ಥಿಯಿಂದ ಹಲ್ಲೆ: ಓರ್ವ ವಿದ್ಯಾರ್ಥಿ ಮೃತ್ಯು, ವಾರ್ಡನ್ ಸಹಿತ ಏಳು ಮಂದಿ ಗಂಭೀರ
♦ 'ಗುರುಕುಲ ಕಾನ್ಸೆಪ್ಟ್ ಸ್ಕೂಲ್ ನಲ್ಲಿ ಆಘಾತಕಾರಿ ಘಟನೆ♦ ಹಲ್ಲೆ ಆರೋಪಿ ಪರಾರಿ
Jaggery: ಬೆಲ್ಲದಲ್ಲಿ ಕಲಬೆರಕೆಯ ಕೆಮಿಕಲ್, ಬಣ್ಣ, ಸಕ್ಕರೆ ಮಿಶ್ರಣ: ಪರಿಶೀಲನೆ ಮಾಡುವ ಸರಳ ವಿಧಾನಗಳು
Jaggery: ಇಂದಿನ ದಿನಗಳಲ್ಲಿ ಬಹುತೇಕ ವಸ್ತುಗಳು ಕಲಬೆರಕೆ ಆಗಿವೆ. ಅದರಲ್ಲೂ ಬೆಣ್ಣೆ, ತುಪ್ಪ ಹಾಗೂ ಬೆಲ್ಲ ಸೇರಿದಂತೆ ಕೆಲವೊಂದು ಪ್ರಮುಖ ಆಹಾರ ಪದಾರ್ಥಗಳಲ್ಲೇ ಕಲಬೆರಕೆ ವಸ್ತುಗಳನ್ನು ಸೇರಿಸಲಾಗುತ್ತಿದ್ದು, ಜನರ ಆರೋಗ್ಯದ ಮೇಲೆ ಗಂಭೀರವಾದ ಪರಿಣಾಮ ಬೀರುತ್ತಿದೆ. ಮುಖ್ಯವಾಗಿ ಭಾರತೀಯರು ಬೆಲ್ಲವನ್ನು ಹಲವು ಸಿಹಿ ಪದಾರ್ಥಗಳಲ್ಲಿ ಬಳಸುತ್ತಾರೆ. ಅಲ್ಲದೆ ಸಕ್ಕರೆಗೆ ಪರ್ಯಾಯವಾಗಿಯೂ ಬೆಲ್ಲವನ್ನು ಬಳಸುವುದು ಇದೆ. ಆದರೆ ಇದೀಗ
ರಾಜ್ಯದಲ್ಲಿ 22 ಜಿಲ್ಲೆಗಳಲ್ಲಿ ಹೊಸದಾಗಿ 605 ಇವಿ ಚಾರ್ಜಿಂಗ್ ಸ್ಟೇಷನ್ ಆರಂಭಕ್ಕೆ ಬೆಸ್ಕಾಂ ಸಿದ್ದತೆ
ರಾಜ್ಯದಲ್ಲಿ ಇವಿ ವಾಹನಗಳ ಬಳಕೆ ಈಗಾಗಲೇ ಹೆಚ್ಚಾಗಿದ್ದು,ಇದನ್ನು ಇನ್ನಷ್ಟು ಉತ್ತೇಜನಗೊಳಿಸಲು ರಾಜ್ಯದಲ್ಲಿ ಹೊಸದಾಗಿ 22 ಜಿಲ್ಲೆಗಳಲ್ಲಿ ಸುಮಾರು 605 ಇವಿ ಚಾರ್ಜಿಂಗ್ ಸ್ಟೇಷನ್ ಆರಂಭಕ್ಕೆ ಸರ್ಕಾರ ಸಿದ್ದತೆ ನಡೆಸುತ್ತಿದ್ದು, ಬೆಸ್ಕಾಂ ಈ ಕಾರ್ಯವನ್ನು ನಿರ್ವಹಿಸಲಿದೆ. ಈ ಮೂಲಕ ಪೆಟ್ರೋಲ್ ಹಾಗೂ ಡೀಸೆಲ್ ವಾಹನದಿಂದ ಉಂಟಾಗುವ ವಾಯುಮಾಲಿನ್ಯವನ್ನು ತಡೆಗಟ್ಟುವ ನಿಟ್ಟಿನಲ್ಲಿ ಪರಿಸರ ಸ್ನೇಹಿ ನಡೆಯನ್ನು ಪ್ರೋತ್ಸಾಹಿಸಲು ಮುಂದಾಗಿದೆ.
ರಷ್ಯಾದ ತೈಲ ಖರೀದಿಗೆ ಭಾರತಕ್ಕೆ ಅನುಮತಿ ಬೇಕಿಲ್ಲ: ಅಮೆರಿಕಕ್ಕೆ ತಿರುಗೇಟು
ಹೊಸದಿಲ್ಲಿ: ಅಮೆರಿಕ ಮತ್ತು ಭಾರತ ನಡುವಿನ ಪ್ರಸ್ತಾವಿತ ವ್ಯಾಪಾರ ಒಪ್ಪಂದ ಚೌಕಟ್ಟಿನಡಿ, ರಷ್ಯಾದಿಂದ ಕಚ್ಚಾತೈಲ ಖರೀದಿಸುವುದನ್ನು ಸ್ಥಗಿತಗೊಳಿವುದಾಗಿ ಭಾರತ ಭರವಸೆ ನೀಡಿದೆ ಎಂಬ ಹೇಳಿಕೆ ನೀಡಿ ಡೊನಾಲ್ಡ್ ಟ್ರಂಪ್ ಅವರು ಶೇ.25ರಷ್ಟು ತೆರಿಗೆಯನ್ನು ರದ್ದುಪಡಿಸಿದ ಬಳಿಕವೂ ರಷ್ಯಾದಿಂದ ಕಚ್ಚಾತೈಲ ಖರೀದಿಯನ್ನು ಭಾರತ ಎಂದೂ ಸ್ಥಗಿತಗೊಳಿಸಿಲ್ಲ ಎಂದು ಉನ್ನತ ಮೂಲಗಳು ಸ್ಪಷ್ಟಪಡಿಸಿವೆ. ರಷ್ಯಾದಿಂದ ತೈಲ ಖರೀದಿಗೆ ಭಾರತಕ್ಕೆ ಯಾವ ದೇಶದ ಅನುಮತಿಯೂ ಬೇಕಿಲ್ಲ ಎಂದು ಮೂಲಗಳು ಹೇಳಿವೆ. ಫೆಬ್ರವರಿಯಲ್ಲಿ ಕೂಡಾ ಭಾರತಕ್ಕೆ ಅತ್ಯಧಿಕ ತೈಲ ಪೂರೈಕೆ ಮಾಡುವ ದೇಶವಾಗಿ ರಷ್ಯಾ ಮುಂದುವರಿದಿದೆ ಎಂದು ಹೇಳಲಾಗಿದೆ. ಭಾರತದ ತೈಲ ಖರೀದಿ ನಿರ್ಧಾರಗಳು ರಾಷ್ಟ್ರೀಯ ಹಿತಾಸಕ್ತಿಯ ತತ್ವದಿಂದ ನಿರ್ದೇಶಿತವಾಗಿವೆ. ಎಲ್ಲಿ ಸ್ಪರ್ಧಾತ್ಮಕ ಬೆಲೆಗೆ ಮತ್ತು ಸರಬರಾಜು ಲಭ್ಯವಿರುತ್ತದೆಯೋ ಅಲ್ಲಿಂದ ಖರೀದಿಸುತ್ತೇವೆ. ಅದನ್ನು ನಾವು ಮುಂದುವರಿಸಲಿದ್ದೇವೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ. ಭಾರತ ರಷ್ಯಾದಿಂದ ತೈಲ ಖರೀದಿಸುವುದಕ್ಕಾಗಿ ವಿಧಿಸಿದ್ದ ಸುಂಕವನ್ನು 30 ದಿನಗಳವರೆಗೆ ಮನ್ನಾ ಮಾಡಲಾಗಿದೆ ಎಂದು ಅಮೆರಿಕದ ಅಧಿಕಾರಿಗಳು ನೀಡಿದ ಹೇಳಿಕೆ ಬಗ್ಗೆ ಗಮನ ಸೆಳೆದಾಗ, ಅದು ಅವರ ದೇಶಿಯ ಪ್ರೇಕ್ಷಕರಿಗೆ ನೀಡಿದ ಹೇಳಿಕೆ ಎಂದು ಉನ್ನತ ಅಧಿಕಾರಿ ಪ್ರತಿಕ್ರಿಯಿಸಿದರು. ಇದು ನಮ್ಮ ಸ್ಥಿರವಾದ ನಿಲುವು ಎಂದು ಸ್ಪಷ್ಟಪಡಿಸಿದರು. ಭಾರತ ಪೆಟ್ರೋಲಿಯಂ ಕ್ಷೇತ್ರದಲ್ಲಿ ಕೈಗೊಳ್ಳುವ ಪ್ರತಿಯೊಂದು ನಿರ್ಧಾರವೂ ಮೂರು ತತ್ವಗಳಿಂದ ನಿರ್ದೇಶಿಸಲ್ಪಟ್ಟಿರುತ್ತವೆ: ಅವುಗಳೆಂದರೆ, ಕೈಗೆಟುಕುವ ಬೆಲೆ, ಲಭ್ಯತೆ ಮತ್ತು ಸುಸ್ಥಿರತೆ ಎಂದು ಹೇಳಿದರು. ಅಮೆರಿಕದ ಖಜಾನೆ ಕಾರ್ಯದರ್ಶಿ ಸ್ಕಾಟ್ ಬೆಸೆಂಟ್ ಗುರುವಾರ ಹೇಳಿಕೆ ನೀಡಿ, ಮಧ್ಯಪ್ರಾಚ್ಯ ಬಿಕ್ಕಟ್ಟು ಹಾಗೂ ಇರಾನ್ ಹೊರ್ಮುಜ್ ಸಂಧಿಯನ್ನು ತಡೆದಿರುವ ಹಿನ್ನೆಲೆಯಲ್ಲಿ ಭಾರತ ರಷ್ಯಾದಿಂದ ತೈಲ ಖರೀದಿಸುವುದಕ್ಕೆ 30 ದಿನಗಳ ಕಾಲ ಸುಂಕ ಮನ್ನಾ ಮಾಡಲು ಅಮೆರಿಕ ನಿರ್ಧರಿಸಿದೆ ಎಂದು ಪ್ರಕಟಿಸಿದ್ದರು.
ಚಿಕ್ಕಬಳ್ಳಾಪುರ : ಚದಲಪುರ ಫ್ಲೈಓವರ್ ಗೆ ಶೀಘ್ರ ಮುಕ್ತಿ
ಚದಲಪುರ ಫ್ಲೈಓವರ್ ಕಾಮಗಾರಿ ಆರಂಭವಾದಾಗಲೇ ಅವೈಜ್ಞಾನಿಕ ಎಂಬ ಕೂಗು ಎದ್ದಿತ್ತು. ಇನ್ನೊಂದೆಡೆ ಕೆಲವು ರೈತರು ನಮ್ಮ ಜಾಗಕ್ಕೆ ಪರಿಹಾರ ಕೊಡಬೇಕು ಎಂದು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು. ಹೀಗಾಗಿ ಕಾಮಗಾರಿ ನಿಂತಲ್ಲೇ ನಿಂತಿತ್ತು. ಈ ವರ್ಷದ ಜುಲೈ ತಿಂಗಳಲ್ಲಿಕೋರ್ಟ್ ಕಾಮಗಾರಿಗಳಿಗೆ ಹಸಿರು ನಿಶಾನೆ ತೋರಿತ್ತು. ಅಂದಿನಿಂದ ಕಾಮಗಾರಿ ಮತ್ತೆ ನಡೆಯುತ್ತಿದೆ. ಆದರೆ ಇದುವರೆಗೂ ಕಾಮಗಾರಿಗೆ ಮುಕ್ತಿ ಹಾಡಲು ಸಾಧ್ಯವಾಗಿಲ್ಲ.
ಯುದ್ಧಪೀಡಿತ ಮಧ್ಯಪ್ರಾಚ್ಯದಿಂದ 52 ಸಾವಿರ ಭಾರತೀಯರು ಸ್ವದೇಶಕ್ಕೆ ವಾಪಾಸು
ಹೊಸದಿಲ್ಲಿ: ಇರಾನ್-ಅಮೆರಿಕ-ಇಸ್ರೇಲ್ ಯುದ್ಧದ ಹಿನ್ನೆಲೆಯಲ್ಲಿ ಸಂಘರ್ಷಪೀಡಿತ ಮಧ್ಯಪ್ರಾಚ್ಯ ದೇಶಗಳಲ್ಲಿ ಸಿಲುಕಿಕೊಂಡಿದ್ದ ಮಾರ್ಚ್ 1-7ರ ಅವಧಿಯಲ್ಲಿ ವಿವಿಧ ವಿಮಾನಗಳಲ್ಲಿ ಸುರಕ್ಷಿತವಾಗಿ 52 ಸಾವಿರ ಭಾರತೀಯರು ತಾಯ್ನಾಡಿಗೆ ವಾಪಾಸ್ಸಾಗಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಪ್ರಕಟಿಸಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಮಂದಿ ವಿಮಾನಗಳಲ್ಲಿ ವಾಪಸ್ಸಾಗಲು ಮುಂದಾಗಿದ್ದಾರೆ ಎಂದು ಹೇಳಿದೆ. ಇರಾನ್ನ ಮೇಲೆ ಕಳೆದ ತಿಂಗಳು ಅಮೆರಿಕ ಹಾಗೂ ಇಸ್ರೇಲ್ ದಾಳಿ ಆರಂಭಿಸಿದ ಬಳಿಕ ಪಶ್ಚಿಮ ಏಷ್ಯಾ ದೇಶಗಳಲ್ಲಿ ನೆಲೆಸಿರುವ ಒಂದು ಕೋಟಿ ಭಾರತೀಯರ ಸುರಕ್ಷತೆ ಬಗ್ಗೆ ಹಾಗೂ ವ್ಯಾಪಾರ ಸರಕುಗಳು ಹಾಗೂ ಇಂಧನ ಪೂರೈಕೆ ಸುವ್ಯವಸ್ಥಿತವಾಗಿ ಮುಂದುವರಿಯಲು ಭಾರತ ಒತ್ತು ನೀಡಿದೆ ಎಂದು ಸಚಿವಾಲಯ ಹೇಳಿದೆ. ಗಲ್ಫ್ ಪ್ರದೇಶದಲ್ಲಿ ಮತ್ತು ಪಶ್ಚಿಮ ಏಷ್ಯಾದ ಪರಿಸ್ಥಿತಿ ಬಗ್ಗೆ ಸರ್ಕಾರ ತೀವ್ರ ನಿಗಾ ಇರಿಸಿದೆ. ಅದರಲ್ಲೂ ಮುಖ್ಯವಾಗಿ ಅಲ್ಪಾವಧಿ ಪ್ರವಾಸಕ್ಕೆ ತೆರಳಿ ಈ ದೇಶಗಳಲ್ಲಿ ಸಿಲುಕಿಕೊಂಡಿರುವ ಭಾರತೀಯರ ಕಲ್ಯಾಣಕ್ಕೆ ಗಮನ ಹರಿಸಿದೆ ಎಂದು ಪ್ರಕಟಣೆಯಲ್ಲಿ ವಿವರಿಸಲಾಗಿದೆ. ಕಳೆದ ಕೆಲ ದಿನಗಳಿಂದ ಪಶ್ಚಿಮ ಏಷ್ಯಾ ವಾಯುಮಾರ್ಗಗಳನ್ನು ಭಾಗಶಃ ತೆರೆದಿರುವ ಹಿನ್ನೆಲೆಯಲ್ಲಿ ಭಾರತದ ಹಾಗೂ ವಿದೇಶಿ ವಿಮಾನಯಾನ ಸಂಸ್ಥೆಗಳು ವಿಮಾನಗಳ ಕಾರ್ಯಾಚರಣೆ ಆರಂಭಿಸಿವೆ. ಇದರಲ್ಲಿ ನಿಗದಿತ ವೇಳಾಪಟ್ಟಿಯಲ್ಲಿ ಇಲ್ಲದ ವಿಮಾನಗಳು ಕೂಡ ಸೇರಿದ್ದು, ಮಧ್ಯಂತರ ಹಾಗೂ ಅಲ್ಪಾವಧಿ ವೀಸಾ ಹೊಂದಿದ ಭಾರತೀಯ ಪ್ರಯಾಣಿಕರು ವಾಪಸ್ಸಾಗಲು ಇದರಿಂದ ಸಾಧ್ಯವಾಗಿದೆ ಎಂದು ಸಚಿವಾಲಯ ತಿಳಿಸಿದೆ.
Karnataka Weather: ಕರ್ನಾಟಕದಲ್ಲಿ ಹೆಚ್ಚಿದ ಬಿಸಿಲ ಧಗೆ: ಬಳ್ಳಾರಿಯಲ್ಲಿ ಗರಿಷ್ಠ ತಾಪಮಾನ ದಾಖಲು, ಬೀದರ್ನಲ್ಲಿ ಚಳಿ
ಬೆಂಗಳೂರು: ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ ಹವಾಮಾನ ವೈಪರೀತ್ಯ ಕಂಡುಬಂದಿದ್ದು, ಉತ್ತರ ಮತ್ತು ದಕ್ಷಿಣ ಒಳನಾಡಿನ ಕೆಲವು ಭಾಗಗಳಲ್ಲಿ ತಾಪಮಾನ ಏರಿಕೆಯಾಗಿದೆ. ರಾಜ್ಯದ ಬಳ್ಳಾರಿಯಲ್ಲಿ 39.9 ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಾಪಮಾನ ದಾಖಲಾಗಿದೆ. ಮತ್ತೊಂದೆಡೆ, ರಾಜ್ಯದ ಬಯಲು ಸೀಮೆಯಾದ ಬೀದರ್ ಜಿಲ್ಲೆಯಲ್ಲಿ ಕನಿಷ್ಠ ತಾಪಮಾನ 15.4 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದು, ಕೊರೆಯುವ ಚಳಿಯ ಅನುಭವವಾಗಿದೆ. ರಾಜ್ಯದ ಒಳನಾಡಿನ
Sanju Samson: ಟಿ20 ವಿಶ್ವಕಪ್ 2026ರ ನಿರ್ಣಾಯಕ ಪಂದ್ಯಗಳಲ್ಲಿ ಸಂಜು ಸ್ಯಾಮ್ಸನ್ ಅದ್ಭುತ ಬ್ಯಾಟಿಂಗ್ ಪ್ರದರ್ಶನ ಮಾಡಿ ಮಿಂಚಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿ ಅಜೇಯ 97 ರನ್ ಮತ್ತು ಇಂಗ್ಲೆಂಡ್ ವಿರುದ್ಧದ ಸೆಮಿಫೈನಲ್ನಲ್ಲಿ 89 ರನ್ ಕಲೆಹಾಕಿ ತಂಡದ ಗೆಲುವಿಗೆ ಪ್ರಮುಖ ಪಾತ್ರವಹಿಸಿದ್ದಾರೆ. ಶತಕದ ಸನಿಹಕ್ಕೆ ಬಂದರೂ ಅದನ್ನು ಪೂರೈಸಲು ಸಾಧ್ಯವಾಗಲಿಲ್ಲ ಎಂಬ ಮಾಧ್ಯಮದವರ ಪ್ರಶ್ನೆಗೆ
ಕೊಡವರ ದಶಕದ ಹೋರಾಟಕ್ಕೆ ಜಯ ; ಅಭಿವೃದ್ಧಿ ನಿಗಮ ಸ್ಥಾಪನೆ ಘೋಷಣೆ
ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರಕಾರ ಹವ್ಯಕ ಭಾಷಾ ಅಕಾಡೆಮಿ ಮತ್ತು ಕೊಡವ ಅಭಿವೃದ್ಧಿ ನಿಗಮ ಘೋಷಣೆ ಜತೆಗೆ ಕುಂಬಾರ, ಈಡಿಗ, ಕಾಡುಗೊಲ್ಲ, ತಿಗಳ, ಗಾಣಿಗ, ಉಪ್ಪಾರ ಸಮುದಾಯಗಳಿಗೆ ಅಭಿವೃದ್ಧಿ ನಿಗಮಗಳನ್ನು ಸ್ಥಾಪಿಸಿರುವುದು ಸಾಂಸ್ಕೃತಿಕ ಪರಂಪರೆಯನ್ನು ರಕ್ಷಿಸುವಲ್ಲಿಮತ್ತು ಸಮುದಾಯದ ಅಭಿವೃದ್ಧಿಯನ್ನು ಉತ್ತೇಜಿಸುವಲ್ಲಿಒಂದು ಮಹತ್ವದ ಹೆಜ್ಜೆಯಾಗಿದೆ ಎಂದು ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆಯ ಅಧ್ಯಕ್ಷ ಎನ್.ಯು.ನಾಚಪ್ಪ ತಿಳಿಸಿದ್ದಾರೆ.
ರಿಚರ್ಡ್ ಕೆಟಲ್ಬರೋ ಔಟ್: ಟಿ20 ವಿಶ್ವಕಪ್ ಫೈನಲ್ಗೂ ಮುನ್ನ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಸಂತಸದ ಸುದ್ದಿ
T20 World Cup 2026 Final: ಅಹಮದಾಬಾದ್ನ ನರೆಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯುವ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಹೈವೋಲ್ಟೇಜ್ ಟಿ20 ವಿಶ್ವಕಪ್ 2026 ಫೈನಲ್ ಪಂದ್ಯಕ್ಕೆ ಐಸಿಸಿ (ICC) ಅಂಪೈರ್ಗಳನ್ನು ಘೋಷಿಸಿದೆ. ಆದರೆ, ಈ ಪಟ್ಟಿಯಲ್ಲಿ ಇಂಗ್ಲೆಂಡ್ನ ರಿಚರ್ಡ್ ಅಲನ್ ಕೆಟಲ್ಬರೋ ಅವರ ಹೆಸರಿಲ್ಲದಿರುವುದು ಭಾರತೀಯ ಕ್ರಿಕೆಟ್ ಅಭಿಮಾನಿಗಳಲ್ಲಿ ಸಂತಸ ಮೂಡಿಸಿದೆ. ಕಳೆದ ಹಲವು ವರ್ಷಗಳಿಂದ,
ವಾಯುಪ್ರದೇಶಕ್ಕೆ ನುಗ್ಗಿದ 8 ಡ್ರೋನ್ ಹೊಡೆದುರುಳಿಸಿದ್ದೇವೆ: ಸೌದಿ ಅರೇಬಿಯಾ
ರಿಯಾದ್: ದೇಶದ ವಾಯುಪ್ರದೇಶವನ್ನು ಪ್ರವೇಶಿಸಿದ ಎಂಟು ಡ್ರೋನ್ಗಳನ್ನು ತಡೆದು ನಾಶಪಡಿಸಲಾಗಿದೆ ಎಂದು ಸೌದಿ ಅರೇಬಿಯಾದ ರಕ್ಷಣಾ ಸಚಿವಾಲಯ ತಿಳಿಸಿದೆ ಎಂದು Aljazeera ವರದಿ ಮಾಡಿದೆ. ಈ ಕುರಿತು ‘ಎಕ್ಸ್’ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ ಹೇಳಿಕೆಯಲ್ಲಿ, ಸೌದಿ ವಾಯು ರಕ್ಷಣಾ ಪಡೆಗಳು ದೇಶದ ವಾಯುಪ್ರದೇಶಕ್ಕೆ ನುಗ್ಗಿದ ಡ್ರೋನ್ಗಳನ್ನು ಹೊಡೆದುರುಳಿಸಿರುವುದಾಗಿ ಸಚಿವಾಲಯದ ವಕ್ತಾರರು ತಿಳಿಸಿದ್ದಾರೆ. ಘಟನೆ ನಡೆದ ಸ್ಥಳದ ಕುರಿತು ಅಥವಾ ಡ್ರೋನ್ ಗಳನ್ನು ಯಾರು ಹಾರಿಸಿದ್ದಾರೆ ಎಂಬುದರ ಕುರಿತು ತಕ್ಷಣವೇ ಹೆಚ್ಚಿನ ವಿವರಗಳನ್ನು ನೀಡಿಲ್ಲ.
ನಮ್ಮ ಮೆಟ್ರೋ 3 ನೇ ಹಂತದ ಕಾಮಗಾರಿ ಡೆಡ್ಲೈನ್ 2031ರ ಮೇವರೆಗೆ ವಿಸ್ತರಣೆ
ಹೆಬ್ಬಾಳ-ಸರ್ಜಾಪುರ ಸಂಪರ್ಕಿಸುವ ಕೆಂಪು ಮಾರ್ಗ 22.14 ಕಿ.ಮೀ. ಎಲಿವೇಟೆಡ್ ಹಾಗೂ 14.45 ಕಿ.ಮೀ. ಸುರಂಗ ಸೇರಿ ಸುಮಾರು 37 ಕಿ.ಮೀ. ಹೊಂದಿದೆ. ಇದರ ಅಂದಾಜು ವೆಚ್ಚ 25,485 ಕೋಟಿ ರೂ. ಈ ವೆಚ್ಚ ಹೆಚ್ಚಳದ ಸಂಬಂಧವೇ ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯವು ಎರಡು ಬಾರಿ ರಾಜ್ಯಕ್ಕೆ ಯೋಜನೆ ಮರುಪರಿಶೀಲಿಸುವಂತೆ ಸೂಚಿಸಿದೆ.
ಖತರ್ ಕಡೆಗೆ ಇರಾನ್ ನಿಂದ 12 ಕ್ಷಿಪಣಿ ದಾಳಿ: ರಕ್ಷಣಾ ಸಚಿವಾಲಯ
ದೋಹಾ, ಮಾ. 8: ಇರಾನ್ ನಿಂದ ಹಾರಿಸಲಾದ ಒಟ್ಟು 12 ಕ್ಷಿಪಣಿಗಳು ಖತರ್ ಪ್ರದೇಶವನ್ನು ಗುರಿಯಾಗಿಸಿಕೊಂಡಿದ್ದವು ಎಂದು ಖತರ್ ರಕ್ಷಣಾ ಸಚಿವಾಲಯ ಶನಿವಾರ ತಿಳಿಸಿದೆ ಎಂದು Aljazeera ವರದಿ ಮಾಡಿದೆ. ಈ ಕುರಿತು ಸಚಿವಾಲಯ ಪ್ರಕಟಿಸಿದ ಹೇಳಿಕೆಯಲ್ಲಿ, 10 ಬ್ಯಾಲಿಸ್ಟಿಕ್ ಕ್ಷಿಪಣಿಗಳು ಹಾಗೂ ಎರಡು ಕ್ರೂಸ್ ಕ್ಷಿಪಣಿಗಳನ್ನು ಖತರ್ ಕಡೆಗೆ ಹಾರಿಸಲಾಗಿದೆ ಎಂದು ವಿವರಿಸಿದೆ. ಖತರ್ ಸಶಸ್ತ್ರ ಪಡೆಗಳ ಪ್ರಕಾರ, ಆರು ಬ್ಯಾಲಿಸ್ಟಿಕ್ ಕ್ಷಿಪಣಿಗಳು ಹಾಗೂ ಎರಡೂ ಕ್ರೂಸ್ ಕ್ಷಿಪಣಿಗಳನ್ನು ವಾಯು ರಕ್ಷಣಾ ವ್ಯವಸ್ಥೆಯ ಮೂಲಕ ಮಧ್ಯದಲ್ಲೇ ತಡೆಹಿಡಿಯಲಾಗಿದೆ. ಉಳಿದ ಎರಡು ಬ್ಯಾಲಿಸ್ಟಿಕ್ ಕ್ಷಿಪಣಿಗಳು ಖತರ್ ನ ಪ್ರಾದೇಶಿಕ ಸಮುದ್ರ ನೀರಿನಲ್ಲಿ ಬಿದ್ದಿವೆ. ಇನ್ನೆರಡು ಕ್ಷಿಪಣಿಗಳು ನಿರ್ಜನ ಪ್ರದೇಶದಲ್ಲಿ ಬಿದ್ದಿದ್ದು, ಈ ಘಟನೆಯಲ್ಲಿ ಯಾವುದೇ ಸಾವು–ನೋವು ಸಂಭವಿಸಿಲ್ಲ ಎಂದು ತಿಳಿಸಲಾಗಿದೆ. ದೇಶದ ಸಾರ್ವಭೌಮತ್ವವನ್ನು ಕಾಪಾಡಲು ಹಾಗೂ ಯಾವುದೇ ಬಾಹ್ಯ ಬೆದರಿಕೆಗೆ ತಕ್ಷಣ ಪ್ರತಿಕ್ರಿಯಿಸಲು ಖತರ್ ಸಶಸ್ತ್ರ ಪಡೆಗಳು ಸಂಪೂರ್ಣವಾಗಿ ಸಮರ್ಥವಾಗಿದ್ದು ಸಿದ್ಧವಾಗಿವೆ ಎಂದು ರಕ್ಷಣಾ ಸಚಿವಾಲಯ ಹೇಳಿದೆ.
ಇಸ್ರೇಲ್ ಗೆ 20 ಸಾವಿರಕ್ಕೂ ಹೆಚ್ಚು ಬಾಂಬ್ ಮಾರಾಟಕ್ಕೆ ಅಮೆರಿಕ ಅನುಮೋದನೆ
ಕಾಂಗ್ರೆಸ್ ಪರಿಶೀಲನೆ ಪ್ರಕ್ರಿಯೆ ಕೈಬಿಟ್ಟ ಟ್ರಂಪ್!
ಗಾಝಾದಲ್ಲಿ ಇಸ್ರೇಲ್ ನಿಂದ ಮುಂದುವರಿದ ನರಮೇಧ: ತಂದೆ–ಮಗಳು ಸೇರಿ ಮೂವರು ಮೃತ್ಯು
ವ್ಯಾಪಕ ಯುದ್ಧದ ನಡುವೆಯೂ ದಾಳಿ; ಪಶ್ಚಿಮ ದಂಡೆಯಲ್ಲೂ ಹಿಂಸಾಚಾರ
ಹರಪನಹಳ್ಳಿ | ಅನೈತಿಕ ಚಟುವಟಿಕೆ ತಾಣವಾಗಿ ಮಾರ್ಪಟ್ಟ ಡಾ.ಅಂಬೇಡ್ಕರ್ ವಸತಿ ಶಾಲೆ
ಹರಪನಹಳ್ಳಿ: ನಗರದ ಐಬಿ ವೃತ್ತದ ಪೋಲೀಸ್ ಠಾಣೆ ಹಿಂಭಾಗದಲ್ಲಿರುವ ಭಾರತರತ್ನ ಡಾ.ಬಿ.ಆರ್ ಅಂಬೇಡ್ಕರ್ ವಸತಿ ಶಾಲೆಯು ನಿರ್ವಹಣೆಯ ಕೊರತೆಯಿಂದ ಹಲವು ವರ್ಷಗಳಿಂದ ಪಾಳು ಬಿದ್ದಿದ್ದು, ಅನೈತಿಕ ಚಟುವಟಿಕೆಗಳ ತಾಣವಾಗಿದೆ. ಇದನ್ನು 1998ರಲ್ಲಿ ಹೈದರಾಬಾದ್ ಕರ್ನಾಟಕ ಅಭಿವೃದ್ಧಿ ಮಂಡಳಿ ಅನುದಾನದಡಿ ಅಂದಿನ ಗ್ರಾಮೀಣ ಅಭಿವೃದ್ದಿ ಮತ್ತು ಪಂಚಾಯತ್ ರಾಜ್ ಸಚಿವ ದಿ.ಎಂ.ಪಿ.ಪ್ರಕಾಶ್ ಉದ್ಘಾಟನೆ ಮಾಡಿದ ನಂತರ 2023ರವರೆಗೆ ಸುಗಮವಾಗಿ ನಡೆದ ಶಾಲೆಯು ಮೇಲ್ಚಾವಣಿಯ ಕುಸಿತದ ನೆಪದಿಂದ ಸಮರ್ಪಕ ನಿರ್ವಹಣೆ ಇಲ್ಲದೆ ಇಂದು ಹಾಳು ಕೊಂಪೆಯಾಗಿ ಬದಲಾಗಿದೆ. ಇಂದು ಶಾಲಾ ಆವರಣದಲ್ಲಿ ಎಲ್ಲೆಂದರಲ್ಲಿ ಗಿಡ ಗಂಟಿಗಳು, ಅಲ್ಲಲ್ಲಿ ಕುಡಿದು ಬಿಸಾಡಿದ ಮದ್ಯದ ಬಾಟಲಿಗಳು, ಧೂಮಪಾನ ಮಾಡಿ ಬಿಸಾಡಿರುವ ಸಿಗರೇಟಿನ ತುಂಡುಗಳು, ಪುಂಡ ಪೋಕರಿಗಳು ಕುಡಿದು ಅಡುಗೆ ಮಾಡಲು ಬಳಸಿರುವ ಕಲ್ಲಿನ ಒಲೆ-ಕಟ್ಟಿಗೆಗಳು ಕಟ್ಟಡದ ಪಾಳು ಕೊಂಪೆಗೆ ಸಾಕ್ಷಿಯಾಗಿವೆ. ದಲಿತ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗಾಗಿ 1ರಿಂದ 5ರವರೆಗೆ ಒಟ್ಟು 250 ಮಕ್ಕಳು ಈ ಶಾಲೆಯಲ್ಲಿ ಶಿಕ್ಷಣ ಪಡೆಯುತ್ತಿದ್ದರು. ಆರಂಭದಿಂದಲೂ ಉತ್ತಮ ನಿರ್ವಹಣೆ ಇತ್ತು. ಬಳಿಕ ಕೊಠಡಿಗಳು ಶಿಥಿಲಾವಸ್ಥೆ ತಲುಪಿವೆ. ಇದಕ್ಕೆ ಹೊಂದಿಕೊಂಡ ಹಿಂದುಳಿದ ವರ್ಗಗಳ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯವಿದ್ದು, ನಿಲಯ ಪಾಲಕ ಜುಂಜಪ್ಪನವರ ಉತ್ತಮ ನಿರ್ವಹಣೆಯಿಂದ 60 ಮಕ್ಕಳು ಈಗಲೂ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಆದರೆ ಇದಕ್ಕೆ ಹೊಂದಿಕೊಂಡ ಅಂಬೇಡ್ಕರ್ ವಸತಿ ಶಾಲೆ ಪಾಳು ಬಿದ್ದಿದೆ. ತಾಲೂಕಿನಾದ್ಯಂತ 15 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಶಿಕ್ಷಣ ಪಡೆಯಲು ನಿತ್ಯ ನಗರಕ್ಕೆ ಬರುತ್ತಾರೆ. ಆದರೆ ಹಾಸ್ಟೆಲ್ ಸೌಲಭ್ಯಗಳು ಬೆರಳೆಣಿಕೆಯಷ್ಟು ವಿದ್ಯಾರ್ಥಿಗಳಿಗೆ ಸಿಕ್ಕರೆ, ಇನ್ನೂ ಸಾವಿರಾರು ವಿದ್ಯಾರ್ಥಿಗಳು ಹಾಸ್ಟೆಲ್ ಸಿಗದೆ, ಊರಿಂದ ಅಲೆದಾಡುವ ಪರಿಸ್ಥಿತಿ ಇದೆ. ದಲಿತ ಮಕ್ಕಳ ಶೈಕ್ಷಣಿಕ ಅಭಿವೃದ್ದಿಗಾಗಿ ನಿರ್ಮಾಣಗೊಂಡಿದ್ದ ಶಾಲೆ ಅನೈತಿಕ ಚಟುವಟಿಕೆ ತಾಣವಾಗಿ ಮಾರ್ಪಟ್ಟಿದೆ. ಮಕ್ಕಳ ಹಾಗೂ ಸಾರ್ವಜನಿಕರ ಹಿತದೃಷ್ಟಿಯಿಂದ ಸೂಕ್ತ ವ್ಯವಸ್ಥೆ ಕಲ್ಪಿಸದೆ ಹೋದಲ್ಲಿ ಉಗ್ರ ಹೋರಾಟ ನಡೆಸಲಾಗುವುದು. -ಕೆ.ಸುಭಾಷ್, ದಲಿತ ಸಂಘರ್ಷ ಸಮಿತಿ ತಾಲೂಕು ಅಧ್ಯಕ್ಷ ಭಾರತರತ್ನ ಡಾ.ಬಿ.ಆರ್ ಅಂಬೇಡ್ಕರ್ ವಸತಿ ಶಾಲೆಯು ಬಳಕೆ ಇಲ್ಲದೆ ಪಾಳುಬಿದ್ದಿದೆ. ಅವುಗಳನ್ನು ನೆಲಸಮಗೊಳಿಸುವ ಕೆಲಸವಾಗಲಿ, ಇಲ್ಲವೇ ನಿರ್ವಹಣೆಯೂ ನಡೆಯದ ಕಾರಣದಿಂದ ಗಿಡಗಂಟಿ ಬೆಳೆದು ಅವು ಸರಿಸೃಪಗಳ ಆವಾಸವಾಗಿ ಪರಿಣಮಿಸಿದೆ. ಅಂಬೇಡ್ಕರ್ ವಸತಿ ಶಾಲೆ ಕೊಠಡಿ ದುರಸ್ತಿಗೆ ಸರಕಾರಕ್ಕೆ ಈಗಾಗಲೆ ಮನವಿ ನೀಡಲಾಗಿದೆ. ಮಕ್ಕಳ ಭದ್ರತೆಯ ದೃಷ್ಟಿಯಿಂದ ಅಲ್ಲಿಯ ಮಕ್ಕಳನ್ನು ನಗರದ ಬಸ್ ಡಿಪೋ ಹಿಂಭಾಗದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಕಟ್ಟಡಕ್ಕೆ ವರ್ಗಾಯಿಸಲಾಗಿದೆ. -ಗಂಗಪ್ಪ, ತಾಲೂಕು ಸಮಾಜ ಕಲ್ಯಾಣಾಧಿಕಾರಿ ಸೂಕ್ತ ನಿರ್ವಹಣೆಯಿಲ್ಲದೆ ಕಟ್ಟಡ ಅವನತಿಗೆ ಕಾರಣವಾಗಿದೆ. ಬಹುತೇಕ ಕೊಠಡಿ, ಕಟ್ಟಡಗಳು ಅವನತಿ ಅಂಚಿನಲ್ಲಿದೆ, ಅಭಿವೃದ್ಧಿಯತ್ತ ಅಧಿಕಾರಿಗಳು ಗಮನ ಹರಿಸಬೇಕು. -ಗುಳೇದಹಟ್ಟಿ ಸಂತೋಷ್ ವಿದ್ಯಾರ್ಥಿ ಸಂಘದ ರಾಜ್ಯ ಸಂಚಾಲಕ
ಯುದ್ಧದ ಅಂತ್ಯಕ್ಕೆ ಒತ್ತಾಯ : ಹಲವು ರಾಷ್ಟ್ರಗಳ ರಾಯಭಾರಿಗಳೊಂದಿಗೆ ಒಮಾನ್ ಚರ್ಚೆ
ಮಸ್ಕತ್, ಮಾ. 8: ಗಲ್ಫ್ ನಲ್ಲಿ ನಡೆಯುತ್ತಿರುವ ಯುದ್ಧವನ್ನು ಅಂತ್ಯಗೊಳಿಸುವ ಉದ್ದೇಶದಿಂದ ರಾಜಕೀಯ ಹಾಗೂ ರಾಜತಾಂತ್ರಿಕ ಒತ್ತಡ ತೀವ್ರಗೊಳಿಸುವ ಅಗತ್ಯವಿದೆ ಎಂದು ಒಮಾನ್ ವಿದೇಶಾಂಗ ಸಚಿವ ಸಯ್ಯಿದ್ ಬದ್ರ್ ಬಿನ್ ಹಮದ್ ಅಲ್ಬುಸೈದಿ ತಿಳಿಸಿದ್ದಾರೆ ಎಂದು Aljazeera ವರದಿ ಮಾಡಿದೆ. ಈ ಹಿನ್ನೆಲೆಯಲ್ಲಿ ಯುರೋಪಿಯನ್ ಒಕ್ಕೂಟದ ಹೊರಗಿನ ಯುರೋಪಿಯನ್ ರಾಷ್ಟ್ರಗಳ ರಾಯಭಾರಿಗಳ ಗುಂಪು, ಅಮೆರಿಕ, ಬ್ರೆಝಿಲ್ ಹಾಗೂ ಟರ್ಕಿ ದೇಶಗಳ ರಾಯಭಾರಿಗಳನ್ನು ಅವರು ಭೇಟಿ ಮಾಡಿ ಪ್ರಸ್ತುತ ಪರಿಸ್ಥಿತಿ ಮತ್ತು ಯುದ್ಧ ಅಂತ್ಯಗೊಳಿಸುವ ಮಾರ್ಗಗಳ ಕುರಿತು ಚರ್ಚಿಸಿದರು ಎಂದು ಒಮಾನ್ ವಿದೇಶಾಂಗ ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ. ಇದಕ್ಕೂ ಮೊದಲು ಈಜಿಪ್ಟ್, ಇರಾಕ್ ಮತ್ತು ಜೋರ್ಡಾನ್ ದೇಶಗಳ ಗಲ್ಫ್ ಸಹಕಾರ ಮಂಡಳಿ (GCC) ರಾಜ್ಯಗಳ ರಾಯಭಾರಿಗಳೊಂದಿಗೆ ಎರಡನೇ ಸುತ್ತಿನ ಸಭೆಯನ್ನೂ ನಡೆಸಲಾಯಿತು. ಯುದ್ಧವನ್ನು ನಿಲ್ಲಿಸಲು ರಾಜಕೀಯ ಮತ್ತು ರಾಜತಾಂತ್ರಿಕ ಒತ್ತಡಗಳನ್ನು ಮುಂದುವರಿಸುವುದು ಹಾಗೂ ಅವನ್ನು ಇನ್ನಷ್ಟು ತೀವ್ರಗೊಳಿಸುವುದು ಅತ್ಯಂತ ಆದ್ಯತೆಯಾಗಿದೆ. ಜೊತೆಗೆ ಯುದ್ಧದಿಂದ ಉಂಟಾಗುತ್ತಿರುವ ಪರಿಣಾಮಗಳನ್ನು ನಿಯಂತ್ರಿಸುವ ಬಗ್ಗೆ ಸಭೆಗಳಲ್ಲಿ ಚರ್ಚಿಸಲಾಗಿದೆ ಎಂದು ಸಚಿವಾಲಯ ಹೇಳಿದೆ. ಯುದ್ಧವನ್ನು ಕೊನೆಗೊಳಿಸುವುದು ಎಲ್ಲರಿಗೂ ಸರ್ವೋಚ್ಚ ರಾಷ್ಟ್ರೀಯ ಹಾಗೂ ಅರಬ್ ರಾಷ್ಟ್ರಗಳ ಹಿತಾಸಕ್ತಿಯ ವಿಷಯವಾಗಿದೆ. ಆದ್ದರಿಂದ ಪ್ರಸ್ತುತ ಪರಿಸ್ಥಿತಿ ವ್ಯಾಪಕ ಪ್ರಾದೇಶಿಕ ಮತ್ತು ಅಂತರರಾಷ್ಟ್ರೀಯ ಮಟ್ಟದ ಕ್ರಮ ಕೈಗೊಳ್ಳುವ ಅಗತ್ಯವಿದೆ ಎಂದು ಅಲ್ಬುಸೈದಿ ಒತ್ತಿ ಹೇಳಿದರು.
ಅಮೆರಿಕದ ಸೈನಿಕರನ್ನು ಸೆರೆಹಿಡಿದಿದ್ದೇವೆ ಎಂಬ ಇರಾನ್ ಹೇಳಿಕೆ ಸುಳ್ಳು: CENTCOM
ವಾಷಿಂಗ್ಟನ್, ಮಾ. 8: ಇರಾನ್ ಯಾವುದೇ ಅಮೆರಿಕದ ಸೈನಿಕರನ್ನು ಸೆರೆಹಿಡಿದಿಲ್ಲ ಎಂದು ಅಮೆರಿಕದ ಕೇಂದ್ರ ಕಮಾಂಡ್ (CENTCOM) ವಕ್ತಾರರು ಸ್ಪಷ್ಟಪಡಿಸಿದ್ದಾರೆ. ಇರಾನ್ ನ ರಾಷ್ಟ್ರೀಯ ಭದ್ರತಾ ಮಂಡಳಿಯ ಮುಖ್ಯಸ್ಥರು ಇರಾನ್ ಅಮೆರಿಕದ ಸೈನಿಕರನ್ನು ಸೆರೆಹಿಡಿದಿದೆ ಎಂದು ಹೇಳಿಕೆ ನೀಡಿದ ಬೆನ್ನಲ್ಲೇ ಈ ಕುರಿತು CENTCOM ಪ್ರತಿಕ್ರಿಯೆ ನೀಡಿದೆ. ‘ಅಮೆರಿಕನ್ ಸೈನಿಕರನ್ನು ಸೆರೆಹಿಡಿದಿರುವುದಾಗಿ ಇರಾನ್ ಆಡಳಿತ ಮಾಡಿರುವ ಹೇಳಿಕೆಗಳು ಅದರ ಸುಳ್ಳು ಮತ್ತು ವಂಚನೆಗಳಿಗೆ ಮತ್ತೊಂದು ಉದಾಹರಣೆ ಮಾತ್ರ’ ಎಂದು CENTCOM ವಕ್ತಾರರು ತಿಳಿಸಿದ್ದಾರೆ. ಈ ಕುರಿತು ಅವರು Al Jazeera ಅರೇಬಿಕ್ ಗೆ ಪ್ರತಿಕ್ರಿಯೆ ನೀಡಿದ್ದು, ಇರಾನ್ ಮಾಡಿರುವ ಆರೋಪಗಳನ್ನು ಅಮೆರಿಕ ಸಂಪೂರ್ಣವಾಗಿ ತಳ್ಳಿಹಾಕಿದೆ.
ರಾಯಚೂರಿನಲ್ಲಿ ಭೂಗರ್ಭ ರಹಸ್ಯಗಳ ಅನ್ವೇಷಣೆ
ಹೆಲಿಬೋನ್ ಏರಿಯಲ್ ಸಮೀಕ್ಷೆ ಆರಂಭ ಕಬ್ಬಿಣ, ಯುರೇನಿಯಂ, ಚಿನ್ನದ ಶೋಧನೆಗೆ ಕೇಂದ್ರದ ಹೆಜ್ಜೆ
ಸೇಡಂ | ವಾರ್ತಾಭಾರತಿ ವರದಿ ಫಲಶ್ರುತಿ : ಮೂತ್ರಾಲಯಗಳ ಸ್ವಚ್ಛತಾ ಕಾರ್ಯ ಆರಂಭ
ಸೇಡಂ: ಪಟ್ಟಣ ಪುರಸಭೆ ಅವಧಿಯಲ್ಲಿ ಸಾರ್ವಜನಿಕರ ಅನುಕೂಲಕ್ಕಾಗಿ ನಿರ್ಮಿಸಲಾದ ಸಾರ್ವಜನಿಕ ಮೂತ್ರಾಲಯಗಳು ಸಮರ್ಪಕ ನಿರ್ವಹಣೆ ಕೊರತೆಯಿಂದ ದುರ್ವಾಸನೆ ಬೀರುತ್ತಿವೆ ಎಂಬ ಸುದ್ದಿ ಫೆ.26ರಂದು ವಾರ್ತಾ ಭಾರತಿ ಪತ್ರಿಕೆಯಲ್ಲಿ ಪ್ರಕಟವಾದ ಹಿನ್ನೆಲೆಯಲ್ಲಿ ನಗರಸಭೆ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದಾರೆ. ನಗರಸಭೆಯ ಹಿರಿಯ ಆರೋಗ್ಯ ನಿರೀಕ್ಷಕರಾದ ಮಲ್ಲಿಕಾರ್ಜುನ ಅವರ ನೇತೃತ್ವದಲ್ಲಿ ಮೂತ್ರಾಲಯಗಳ ಸ್ವಚ್ಛತಾ ಕಾರ್ಯ ಆರಂಭಗೊಂಡಿದ್ದು, ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿ 2024-25ನೇ ಸಾಲಿನಲ್ಲಿ ಆಗಿನ ಪುರಸಭೆ ವತಿಯಿಂದ ಲೋಹಾರಗಲ್ಲಿ, ಕೊಡ್ಲಾ ಕ್ರಾಸ್, ಬಸವೇಶ್ವರ ವೃತ್ತ, ಚಿಂಚೋಳಿ ಕ್ರಾಸ್, ಊಡಗಿ ರಸ್ತೆ, ಹಳೆ ತಹಶೀಲ್ದಾರ್ ಕಚೇರಿ ರಸ್ತೆ, ಐಟಿಐ ಕಾಲೇಜು ರಸ್ತೆ ಹಾಗೂ ತಾಲೂಕು ಕ್ರೀಡಾಂಗಣ ರಸ್ತೆ ಸೇರಿ ಒಟ್ಟು ಎಂಟು ಸ್ಥಳಗಳಲ್ಲಿ ಸಾರ್ವಜನಿಕ ಮೂತ್ರಾಲಯಗಳನ್ನು ನಿರ್ಮಿಸಲಾಗಿತ್ತು.ಆದರೆ ನಿರಂತರ ನಿರ್ವಹಣೆ ಇಲ್ಲದ ಕಾರಣ ಜನರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು. ಈ ಕುರಿತು ‘ನಿರ್ವಹಣೆ ಕೊರತೆಯಿಂದ ಗಬ್ಬೆದ್ದು ನಾರುತ್ತಿರುವ ಮೂತ್ರಾಲಯಗಳು’ ಎಂಬ ಶೀರ್ಷಿಕೆಯಲ್ಲಿ ವರದಿ ಪ್ರಕಟವಾಗಿತ್ತು. ಇದರ ಬೆನ್ನಲ್ಲೇ ಇದೀಗ ತಾಲೂಕು ಕ್ರೀಡಾಂಗಣ ಮುಖ್ಯರಸ್ತೆ, ಬಸವೇಶ್ವರ ವೃತ್ತ ಹಾಗೂ ತಹಶೀಲ್ದಾರ್ ಕಚೇರಿ ರಸ್ತೆಯ ಮೂತ್ರಾಲಯಗಳಲ್ಲಿ ಸ್ವಚ್ಛತಾ ಕಾರ್ಯ ನಡೆಯುತ್ತಿದೆ. ಉಳಿದ ಕಡೆಗಳಲ್ಲೂ ಸ್ವಚ್ಛ ಕಾರ್ಯ ಪೂರ್ಣಗೊಳ್ಳಲಿದೆ ಎಂದು ನಗರ ಆರೋಗ್ಯ ನಿರೀಕ್ಷಕ ಮಲ್ಲಿಕಾರ್ಜುನ ತಿಳಿಸಿದ್ದಾರೆ. ನಗರಸಭೆಯ ಈ ಕ್ರಮಕ್ಕೆ ಸಾರ್ವಜನಿಕರಿಂದ ಸ್ವಾಗತ ವ್ಯಕ್ತವಾಗಿದ್ದು, ಮುಂದಿನ ದಿನಗಳಲ್ಲಿ ನಿಯಮಿತ ಸ್ವಚ್ಛತೆ ಹಾಗೂ ನಿರ್ವಹಣೆ ನಡೆಯಬೇಕು ಎಂಬ ಆಗ್ರಹ ವ್ಯಕ್ತವಾಗಿದೆ. ಸಾರ್ವಜನಿಕ ಮೂತ್ರಾಲಯಗಳಲ್ಲಿ ನೀರಿನ ಪೂರೈಕೆ ಮತ್ತು ಪೈಪ್ಲೈನ್ ದುರಸ್ತಿಸಂಬಂಧಪಟ್ಟ ಅಧಿಕಾರಿಗಳಗಮನಕ್ಕೆ ತರಲಾಗುವುದು. ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ. -ಮಲ್ಲಿಕಾರ್ಜುನ, ಹಿರಿಯ ಆರೋಗ್ಯನಿರೀಕ್ಷಕರು, ಸೇಡಂ
Dubai | ವೈಮಾನಿಕ ದಾಳಿಯ ಅವಶೇಷ ವಾಹನದ ಮೇಲೆ ಬಿದ್ದು ವ್ಯಕ್ತಿ ಮೃತ್ಯು
ದುಬೈ, ಮಾ. 8: ದುಬೈ ನಗರದ ಬರ್ಷಾ ಪ್ರದೇಶದಲ್ಲಿ ವೈಮಾನಿಕ ದಾಳಿಯ ಅವಶೇಷಗಳು ವಾಹನದ ಮೇಲೆ ಬಿದ್ದ ಪರಿಣಾಮ ಪಾಕಿಸ್ತಾನ ಮೂಲದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ದೃಢಪಡಿಸಿದ್ದಾರೆ ಎಂದು Aljazeera ವರದಿ ಮಾಡಿದೆ. ಅವಶೇಷಗಳು ವಾಹನದ ಮೇಲೆ ಬಿದ್ದ ಪರಿಣಾಮ ಈ ಘಟನೆ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದೇ ವೇಳೆ, ದುಬೈ ಮರೀನಾ ಪ್ರದೇಶದಲ್ಲಿರುವ ಗೋಪುರಗಳಲ್ಲಿ ಒಂದರ ಮುಂಭಾಗಕ್ಕೂ ದಾಳಿಯ ಅವಶೇಷಗಳು ಬಿದ್ದ ಘಟನೆ ನಡೆದಿದೆ. ಈ ಘಟನೆಯನ್ನು ಅಧಿಕಾರಿಗಳು ಯಶಸ್ವಿಯಾಗಿ ನಿಭಾಯಿಸಿದ್ದು, ಇದು ವೈಮಾನಿಕ ದಾಳಿಯ ಪರಿಣಾಮವಾಗಿರಬಹುದು ಎಂದು ದುಬೈ ಮಾಧ್ಯಮ ಕಚೇರಿ ತಿಳಿಸಿದೆ. ಈ ಘಟನೆಯಿಂದ ಯಾವುದೇ ಗಾಯಗಳಾಗಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಮತ್ತೊಂದೆಡೆ, ಮರೀನಾ ಪ್ರದೇಶದಲ್ಲಿರುವ ಅಮೆರಿಕದ ಮಿಲಿಟರಿ ನೆಲೆಯನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲಾಗಿದೆ ಎಂದು ಇರಾನ್ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಹೇಳಿಕೆ ನೀಡಿದೆ. سقوط شظايا صاروخية على أحد الأبراج في منطقة دبي مارينا بدولة الإمارات مساء السبت، ما تسبّب في تصاعد ألسنة الدخان. pic.twitter.com/aGCekfzo2n — قناة الجزيرة (@AJArabic) March 7, 2026
ಇಸ್ರೇಲ್ ಗಾಗಿ ಬೇಹುಗಾರಿಕೆ ಆರೋಪ; ಕುದ್ಸ್ ಪಡೆ ಮುಖ್ಯಸ್ಥ ಇಸ್ಮಾಯಿಲ್ ಖಾನಿಗೆ ಗಲ್ಲು: ವರದಿ
ಟೆಹ್ರಾನ್, ಮಾ.7: ಇರಾನ್ ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಕುಡ್ಸ್ ಪಡೆಯ ಮುಖ್ಯಸ್ಥ ಬ್ರಿಗೇಡಿಯರ್ ಜನರಲ್ ಇಸ್ಮಾಯಿಲ್ ಖಾನಿಯನ್ನು ಇಸ್ರೇಲ್ ಪರವಾಗಿ ಬೇಹುಗಾರಿಕೆ ನಡೆಸಿದ್ದ ಆರೋಪದಲ್ಲಿ ಬಂಧಿಸಿ ಗಲ್ಲಿಗೇರಿಸಲಾಗಿದೆ ಎಂಬ ವದಂತಿಗಳು ಸಾಮಾಜಿಕ ಮಾಧ್ಯಮ ಹಾಗೂ ಕೆಲವು ಅರಬ್ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಆದರೆ ಈ ಕುರಿತು ಟೆಹ್ರಾನ್ ಧೃಡಪಡಿಸಿಲ್ಲ. ಅರಬ್ ಮಾಧ್ಯಮ ವರದಿಗಳ ಪ್ರಕಾರ, ಖಾನಿಯನ್ನು ಬೇಹುಗಾರಿಕೆಯ ಶಂಕೆಯಲ್ಲಿ IRGC ಬಂಧಿಸಿ ಗಲ್ಲಿಗೇರಿಸಿರಬಹುದು ಎಂದು ಹೇಳಲಾಗಿದೆ. ಎಮಿರೇಟ್ಸ್ ಮೂಲದ ‘ದಿ ನ್ಯಾಷನಲ್’ ಮಾಧ್ಯಮವು ಈ ಕುರಿತು ಸಾಮಾಜಿಕ ಮಾಧ್ಯಮಗಳಲ್ಲಿ ಹಲವು ಹೇಳಿಕೆಗಳು ಹರಿದಾಡುತ್ತಿರುವುದಾಗಿ ವರದಿ ಮಾಡಿದೆ. ಕುದ್ಸ್ ಪಡೆ ಮುಖ್ಯಸ್ಥರಾಗಿರುವ ಖಾನಿ ಕಳೆದ ಹಲವು ವರ್ಷಗಳಿಂದ ವಿವಿಧ ವದಂತಿಗಳ ಕೇಂದ್ರಬಿಂದುವಾಗಿದ್ದಾರೆ. ತನ್ನ ಸುತ್ತಲಿನ ಉನ್ನತ ನಾಯಕರನ್ನು ಗುರಿಯಾಗಿಸಿಕೊಂಡ ಅನೇಕ ಹತ್ಯೆ ಪ್ರಯತ್ನಗಳಿಂದ ಬದುಕುಳಿದಿರುವುದರಿಂದ ಅವರಿಗೆ ‘ಒಂಭತ್ತು ಜನರ ಜೀವಗಳನ್ನು ಬಲಿ ಪಡೆದ ವ್ಯಕ್ತಿ’ ಎಂಬ ಹೆಸರೂ ಪ್ರಚಲಿತದಲ್ಲಿದೆ ಎಂದು ವರದಿಗಳು ಹೇಳುತ್ತವೆ. ಇತ್ತೀಚೆಗೆ ಇರಾನ್ ನ ಸರ್ವೋಚ್ಚ ನಾಯಕ ಆಯತಲ್ಲಾ ಅಲಿ ಖಾಮಿನೈ ಹಾಗೂ ಹಲವು ಹಿರಿಯ ಸರ್ಕಾರಿ ಅಧಿಕಾರಿಗಳು ಸಾವಿಗೀಡಾದ ದಾಳಿಯಲ್ಲಿ ಖಾನಿ ಮೃತಪಟ್ಟಿಲ್ಲ ಎಂಬ ವರದಿಗಳು ಹೊರಬಂದಿದ್ದವು. ಮಾಹಿತಿಗಳ ಪ್ರಕಾರ, ದಾಳಿ ಸಂಭವಿಸುವ ಕೆಲವೇ ನಿಮಿಷಗಳ ಮೊದಲು ಅವರು ಆ ಸ್ಥಳವನ್ನು ತೊರೆದಿದ್ದರು ಎಂದು ಹೇಳಲಾಗಿದೆ. ಖಾನಿ ದಾಳಿಗಳಿಂದ ಪಾರಾಗಿರುವುದು ಇದೇ ಮೊದಲಲ್ಲ. ಕಳೆದ ಹಲವು ವರ್ಷಗಳಲ್ಲಿ ಅಮೆರಿಕ ಮತ್ತು ಇಸ್ರೇಲ್ ನಡೆಸಿದ ದಾಳಿಗಳಲ್ಲಿ ಸಾವಿಗೀಡಾದ ಅನೇಕ ಉನ್ನತ ನಾಯಕರೊಂದಿಗೆ ಅವರು ನಿಕಟ ಸಂಪರ್ಕ ಹೊಂದಿದ್ದರಿಂದ ಅವರ ಬಗ್ಗೆ ಅನುಮಾನಗಳು ಹೆಚ್ಚಾಗಿದ್ದವು. ಅಕ್ಟೋಬರ್ 2024ರಲ್ಲಿ ಖಾನಿ ಸಾವಿಗೀಡಾದರೆಂದು ಕೆಲವು ಮಾಧ್ಯಮಗಳು ವರದಿ ಮಾಡಿದ್ದರೂ, ಬಳಿಕ ಅವರನ್ನು ವಿಚಾರಣೆಗೆ ಒಳಪಡಿಸಲಾಗಿದೆ ಎಂಬ ಮಾಹಿತಿ ಹೊರಬಂದಿತ್ತು. ನಂತರ ಅವರು ಇರಾನ್ ನ ರಾಷ್ಟ್ರೀಯ ಟಿವಿಯಲ್ಲಿ ಕಾಣಿಸಿಕೊಂಡಿದ್ದರು. 2025ರಲ್ಲಿ ನಡೆದ 12 ದಿನಗಳ ಯುದ್ಧದ ವೇಳೆಯೂ ಹಲವಾರು ಮಾಧ್ಯಮಗಳು ಖಾನಿ ಸಾವಿಗೀಡಾಗಿದ್ದಾರೆ ಎಂದು ವರದಿ ಮಾಡಿದ್ದವು. ಆದರೆ ಬಳಿಕ ಅವರು ಮತ್ತೆ ರಾಷ್ಟ್ರೀಯ ಟಿವಿಯಲ್ಲಿ ಕಾಣಿಸಿಕೊಂಡು ಆ ವರದಿಗಳಿಗೆ ತೆರೆ ಎಳೆದಿದ್ದರು. ಇಸ್ರೇಲಿ ಕ್ಷಿಪಣಿಗಳ ದಾಳಿಗೆ ಗುರಿಯಾದ ಕೆಲವು ಸ್ಥಳಗಳಲ್ಲಿ ಖಾನಿ ಅಪಾಯವಿಲ್ಲದೆ ಪಾರಾಗಿರುವ ಘಟನೆಗಳೂ ನಡೆದಿವೆ. ಈ ಹಿನ್ನೆಲೆಯಲ್ಲಿ ತನಿಖಾಧಿಕಾರಿಗಳಿಗೆ ತನ್ನ ನಿರಪರಾಧಿತ್ವವನ್ನು ಅವರು ಮನವರಿಕೆ ಮಾಡಿಕೊಟ್ಟಿದ್ದರು ಎಂದು ವರದಿಗಳು ಹೇಳುತ್ತವೆ. ಇದರ ನಡುವೆ, ಮೊಸಾದ್ ನೇಮಕ ಮಾಡಿಕೊಂಡ ಆಂತರಿಕ ಏಜೆಂಟ್ ಒಬ್ಬರು ಖಾಮಿನೈ ಮೃತದೇಹದ ವಿಡಿಯೊವನ್ನು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರಿಗೆ ಕಳುಹಿಸಿದ್ದಾನೆ ಎಂಬ ಹೇಳಿಕೆಗಳೂ ಕೇಳಿಬಂದಿದ್ದವು. ಈ ಘಟನೆ ಬಳಿಕ ಖಾನಿ ಕುರಿತು ಮತ್ತಷ್ಟು ಊಹಾಪೋಹಗಳು ಹೆಚ್ಚಾಗಿದ್ದವು. 2025ರಲ್ಲಿ ಮೊಸಾದ್ಗೆ ಸಂಬಂಧಿಸಿದೆ ಎನ್ನಲಾದ ಖಾತೆಯೊಂದರಿಂದ ಪ್ರಕಟವಾದ ಚಿತ್ರದಲ್ಲಿ ಖಾನಿ ರಹಸ್ಯ ಸಭೆಯಲ್ಲಿ ಭಾಗವಹಿಸಿದ್ದಾರೆ ಎಂಬ ಸುಳಿವು ನೀಡಲಾಗಿತ್ತು. ಚಿತ್ರಕ್ಕೆ ಲಗತ್ತಿಸಲಾದ ಶೀರ್ಷಿಕೆಯಲ್ಲಿ ಅವರು ಇಸ್ರೇಲಿ ಗುಪ್ತಚರ ಸಂಸ್ಥೆಯೊಂದಿಗೆ ಸಂಪರ್ಕ ಹೊಂದಿದ್ದಾರೆ ಎಂಬ ಅನುಮಾನ ವ್ಯಕ್ತಪಡಿಸಲಾಗಿತ್ತು. ಆದರೆ ಖಾನಿ ಈ ಆರೋಪಗಳನ್ನು ಸಂಪೂರ್ಣವಾಗಿ ತಳ್ಳಿಹಾಕಿ, ತನ್ನ ಸ್ಥಳವನ್ನು ಪತ್ತೆಹಚ್ಚಲು ಇಸ್ರೇಲ್ ನಡೆಸಿದ ಪ್ರಯತ್ನಗಳ ಭಾಗವಾಗಿಯೇ ಈ ಆರೋಪಗಳು ಹರಡಲಾಗುತ್ತಿವೆ ಎಂದು ಹೇಳಿದ್ದಾರೆ. ಮೊಸಾದ್ ಗೆ ಸಂಬಂಧಿಸಿದೆ ಎನ್ನಲಾದ ಮತ್ತೊಂದು ಸಾಮಾಜಿಕ ಮಾಧ್ಯಮ ಖಾತೆಯು ಕೂಡ ಅದೇ ವರ್ಷ ಖಾನಿ ಗೂಢಚಾರನಲ್ಲ ಎಂದು ಹೇಳಿಕೊಂಡಿತ್ತು. ಇದೀಗ ಇಸ್ರೇಲ್ ಹೆಜ್ಬೊಲ್ಲಾ ನಾಯಕತ್ವದ ವಿರುದ್ಧ ಕ್ರಮ ಕೈಗೊಂಡ ಬಳಿಕ ಸಂಭವನೀಯ ಭದ್ರತಾ ಉಲ್ಲಂಘನೆಗಳ ಕುರಿತು ಇರಾನ್ ಅಧಿಕೃತ ತನಿಖೆ ಆರಂಭಿಸಿದೆ ಎಂಬ ವರದಿಗಳು ಹೊರಬಂದಿವೆ. ಈ ಹಿನ್ನೆಲೆಯಲ್ಲಿ ಖಾನಿಯನ್ನು ಮೊಸಾದ್ ಏಜೆಂಟ್ ಎಂಬ ಅನುಮಾನದಲ್ಲಿ ಐಆರ್ಜಿಸಿ ಬಂಧಿಸಿ ಗಲ್ಲಿಗೇರಿಸಿದೆ ಎಂಬ ಹೇಳಿಕೆಗಳು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗಲು ಆರಂಭಿಸಿವೆ. ಆದರೆ ಈ ಎಲ್ಲ ಹೇಳಿಕೆಗಳನ್ನು ಟೆಹ್ರಾನ್ ಅಧಿಕಾರಿಗಳು ನಿರಾಕರಿಸಿದ್ದಾರೆ ಎಂದು ಕೆಲವು ವರದಿಗಳು ತಿಳಿಸಿವೆ. ಅಮೆರಿಕ 2020ರ ಜನವರಿಯಲ್ಲಿ ಕುದ್ಸ್ ಪಡೆಯ ಹಿಂದಿನ ಮುಖ್ಯಸ್ಥ ಖಾಸಿಮ್ ಸುಲೈಮಾನಿಯನ್ನು ಹತ್ಯೆ ಮಾಡಿದ ಬಳಿಕ ಇಸ್ಮಾಯಿಲ್ ಖಾನಿ ಕುಡ್ಸ್ ಪಡೆಯ ಮುಖ್ಯಸ್ಥರಾಗಿ ನೇಮಕಗೊಂಡಿದ್ದರು.
ಇರಾನ್ ನಿಂದ ಕ್ಷಿಪಣಿ–ಡ್ರೋನ್ ದಾಳಿ ಬೆದರಿಕೆ: ಯುಎಇ ವಾಯು ರಕ್ಷಣಾ ವ್ಯವಸ್ಥೆ ಸಕ್ರಿಯ
ನಿವಾಸಿಗಳಿಗೆ ಸಾಮಾನ್ಯ ಚಟುವಟಿಕೆ ಪುನರಾರಂಭಿಸಬಹುದು ಎಂದು ಅಲರ್ಟ್ ಸಂದೇಶ
ಜಾತಿಧರ್ಮಗಳ ಹೆಸರಿನಲ್ಲಿ ಸಮಾಜವನ್ನು ಒಡೆಯುವ ಪ್ರಯತ್ನಗಳ ಬಗ್ಗೆ ಜಾಗೃತರಾಗಿರಿ: ಜನರಿಗೆ ಸಿಎಂ ಸಿದ್ದರಾಮಯ್ಯ ಕರೆ
ಮೈಸೂರು: ದೇವರೆಂಬ ನಂಬಿಕೆಯು ಜಾತಿಧರ್ಮಗಳನ್ನು ಮೀರಿದಂಥದ್ದು. ಜಾತಿಧರ್ಮಗಳ ಹೆಸರಿನಲ್ಲಿ ಸಮಾಜವನ್ನು ಒಡೆಯುವ ಪ್ರಯತ್ನಗಳ ಬಗ್ಗೆ ಜಾಗೃತರಾಗಿರಬೇಕೆಂದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಅವರು ಇಂದು HD ಕೋಟೆಯ ಶಿರಮಹಳ್ಳಿಯಲ್ಲಿ ಶ್ರೀ ಲಕ್ಷ್ಮಿ ದೇವಿ ಅಮ್ಮನವರ ನೂತನ ದೇವಾಲಯವನ್ನು ಉದ್ಘಾಟಿಸಿ ಮಾತನಾಡಿದರು. HD ಕೋಟೆಯ ಶಿರಮಹಳ್ಳಿಯ ಜನರು ದೈವಭಕ್ತರು. ದೇಗುಲದಲ್ಲಿ ಸ್ಥಾಪಿಸುವ ಪ್ರತಿಮೆಯಲ್ಲಿ ದೇವರನ್ನು ಕಾಣುವುದು ನಮ್ಮ ನಂಬಿಕೆ. ಬಸವಾದಿ ಶರಣರು, ದೇವರು ಎಲ್ಲೆಡೆಯೂ , ಎಲ್ಲರಲ್ಲಿಯೂ ಇದ್ದಾನೆ ಎಂದಿದ್ದರು. ನಮ್ಮ ಪ್ರಾರ್ಥನೆಯಲ್ಲಿ ಇತರರ ಒಳಿತನ್ನೂ ಕೇಳಬೇಕಾಗಿದ್ದು, ದೇವರೆಂಬ ನಂಬಿಕೆಯು ಜಾತಿಧರ್ಮಗಳನ್ನು ಮೀರಿದಂಥದ್ದು. ಯಾವ ಜಾತಿಧರ್ಮಗಳು ಮನುಷ್ಯ ಮನುಷ್ಯನನ್ನು ಪ್ರೀತಿಸಬೇಕೆಂದೇ ತಿಳಿಸುತ್ತದೆ ಎಂದರು. ಜಾತಿಧರ್ಮಗಳ ಮರೆತು ಜನರು ಒಗ್ಗಟ್ಟಾಗಬೇಕು: ಸಮಾಜದ ಪಟ್ಟಭದ್ರಹಿತಾಸಕ್ತಿಗಳು , ಸಮಾಜದ ಜಾತಿವ್ಯವಸ್ಥೆ ಹಾಗೂ ಅಸಮಾನತೆಗಳನ್ನು ಬೆಂಬಲಿಸುತ್ತಾರೆ. ಜಾತಿಧರ್ಮಗಳ ಹೆಸರಿನಲ್ಲಿ ಸಮಾಜವನ್ನು ಒಡೆಯುವ ಪ್ರಯತ್ನಗಳು ನಡೆಯುತ್ತಿವೆ. ಇಂತಹ ಕುಶಕ್ತಿಗಳ ಬಗ್ಗೆ ನಾವು ಜಾಗೃತರಾಗಿರಬೇಕು. ಇಂದು ಲಕ್ಷ್ಮೀ ದೇಗುಲದ ಉದ್ಘಾಟನೆಯನ್ನು ಜಾತ್ರೆಯ ರೀತಿಯಲ್ಲಿ ಆಯೋಜಿಸಿರುವುದು ಸಂತಸದ ವಿಚಾರ. ಜಾತಿಧರ್ಮಗಳ ಬೇಧ ಮರೆದು ಜನರು ಒಗ್ಗಟ್ಟಾಗುವ ಅವಶ್ಯಕತೆ ಹಿಂದಿಂದೆಗಿಂತಲೂ ಹೆಚ್ಚಿದೆ ಎಂದರು. ಜನರ ಆಶೀರ್ವಾದದಿಂದ ಹೆಚ್ಚು ಆಯವ್ಯಯಗಳನ್ನು ಮಂಡಿಸಿದ್ದೇನೆ: ಶಿರಮಳ್ಳಿಯ ಜನರ ಪ್ರೀತಿಯಿಂದ ನನ್ನನ್ನು ಬೆಂಬಲಿಸುತ್ತಿರುವುದಕ್ಕೆ ಅಭಿನಂದನೆಗಳು. ಶಿರಮಳ್ಳಿ ಗ್ರಾಮ ಸೇರಿದಂತೆ ಈ ಭಾಗದ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ. ರಾಜ್ಯದ ಜನರ ಆಶೀರ್ವಾದದಿಂದ ಕರ್ನಾಟಕದ ಇತಿಹಾಸದಲ್ಲಿ ಹೆಚ್ಚು ಆಯವ್ಯಯವನ್ನು ಮಂಡಿಸಿದ ಸಾಧನೆ ಸಾಧ್ಯವಾಗಿದೆ. ಶಿರಮಳ್ಳಿ ಶ್ರೀ ಲಕ್ಷ್ಮಿ ದೇವಿ ಅಮ್ಮನವರು ರಾಜ್ಯದ ಜನರಿಗೆ ಒಳಿತನ್ನು ಮಾಡಲಿ ಎಂದು ಪ್ರಾರ್ಥಿಸುವುದಾಗಿ ತಿಳಿಸಿದರು.
ಚಿತ್ತಾಪುರ | ಮಕ್ಕಳಿಗೆ ಗುಣಮಟ್ಟದ ಶಿಕ್ಷಣದ ಜೊತೆಗೆ ಸಂಸ್ಕಾರ ನೀಡಬೇಕು : ಪಾಟೀಲ್
ಚಿತ್ತಾಪುರ: ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡಿಸುವುದರ ಮೂಲಕ ಸಂಸ್ಕಾರ ನೀಡಬೇಕು ಎಂದು ಡಿವೈಎಸ್ಪಿ ಶಂಕರಗೌಡ ಪಾಟೀಲ್ ಹೇಳಿದರು. ಪಟ್ಟಣದ ಹೊರವಲಯದ ಮಳಖೇಡ ರಸ್ತೆಯಲ್ಲಿರುವ ಜ್ಞಾನಗಂಗಾ ಶಿಕ್ಷಣ ಸಂಸ್ಥೆಯ ವತಿಯಿಂದ ಹಮ್ಮಿಕೊಂಡಿದ್ದ ಗ್ರೇಟ್ ಇಂಡಿಯಾ ಆಂಗ್ಲ ಮಾಧ್ಯಮ ಪ್ರಾಥಮಿಕ ಮತ್ತು ಪ್ರೌಢಶಾಲೆಯ ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಶಾಲೆಯಲ್ಲಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣವನ್ನು ಶಿಕ್ಷರರು ನೀಡುತ್ತಾರೆ. ಅದರ ಜೊತೆಗೆ ಮನೆಯಲ್ಲಿ ಪಾಲಕರಾದವರು ಕೂಡ ಮಕ್ಕಳಿಗೆ ಸಂಸ್ಕಾರವನ್ನು ಕಲಿಸುವುದು ಅಷ್ಟೇ ಮುಖ್ಯ ಎಂದರು. ರಾಯಚೂರಿನ ಕೃಷಿ ವಿಶ್ವವಿದ್ಯಾಲಯದ ನಿವೃತ್ತ ಉಪ ಕುಲಪತಿ ಡಾ.ಮಹಾಂತಗೌಡ ಪಾಟೀಲ್ ಮಾತನಾಡಿ, ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಓದಿನ ಕಡೆ ಹೆಚ್ಚಿನ ಒತ್ತು ನೀಡಬೇಕು. ಗುರುಗಳು ಕಲಿಸಿದ ವಿದ್ಯೆಯನ್ನು ವಿದ್ಯಾರ್ಥಿಗಳು ಚಾಚು ತಪ್ಪದೇ ಕಲಿಯಬೇಕು ಎಂದರು. ಗುಲ್ಬರ್ಗಾ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ಮಲ್ಲಣ್ಣ ಮಡಿವಾಳ ಮಾತನಾಡಿದರು.ಇದೇ ವೆಳೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಸನ್ಮಾನಿಸಿ ಗೌರವಿಸಲಾಯಿತು. ಉಪ-ನಿರ್ದೇಶಕ ಕಚೇರಿಯ ವಿ.ಎಂ.ಪತ್ತಾರ್, ನಿವೃತ್ತ ಕ್ಷೇತ್ರ ಶಿಕ್ಷಣಾಧಿಕಾರಿ ಶಿವಶರಣಪ್ಪ ಬನ್ನಿಕಟ್ಟಿ, ಕರಬಸಪ್ಪ ಮಾಲಿ ಪಾಟೀಲ್, ನಿವೃತ ಮುಖ್ಯಗುರು ಯಶವಂತರಾವ್ ಬಿರಾದಾರ್, ಸಂಸ್ಥೆಯ ಸಂಸ್ಥಾಪಕ ವಿಜಯಕುಮಾರ ಹಂಚಿನಾಳ, ಅಧ್ಯಕ್ಷ ಪ್ರಕಾಶ ಹಂಚಿನಾಳ, ಸಂಸ್ಥೆ ಕಾರ್ಯದರ್ಶಿ ಪ್ರಶಾಂತ್ ಪಾಟೀಲ್, ಆಡಳಿತಾಧಿಕಾರಿ ಶೃತಿ ಪಾಟೀಲ್, ಮುಖ್ಯಗುರ ಗುರುರಾಜ ರಾವೂರ ವೇದಿಕೆಯಲ್ಲಿದ್ದರು. ಕಾರ್ಯಮಕ್ರದಲ್ಲಿ ಬಿಜೆಪಿ ತಾಲೂಕು ಅಧ್ಯಕ್ಷ ರವಿಂದ್ರ ಸಜ್ಜನಶೇಟ್ಟಿ, ರಮೇಶ ಬಟಗೇರಿ, ಶಿವಮುದ್ರಪ್ಪ ಸಣ್ಣೂರಕರ, ಡಿ.ಕೆ.ಪಾಟೀಲ್, ಡಾ.ದಾವೂದ ಪಟೇಲ್, ರಾಜಶೇಖರ ತಿಮ್ಮನಾಯಕ್, ರಾಜಶೇಖರ ಬಳ್ಳಾ, ರವಿ ಅಬ್ಬಿಗೇರಿ, ವಿರಸಂಗಪ್ಪ ಸುಲೇಗಾಂವ, ಶೃತಿ ಡಿ. ಹೆಬ್ಬಾಳ, ಕಾವೇರಿ ದರಪುರ್ ಇದ್ದರು. ಶಿಕ್ಷಕ ಜೋಸೇಫ್ ನಿರೂಪಿಸಿದರು. ನಾಗರತ್ನ ವಂದಿಸಿದರು.
ಬಿಡಿಎ ಅಧಿಕಾರಿಗೆ 4 ಪ್ರತ್ಯೇಕ ಪ್ರಕರಣಗಳಲ್ಲಿ 1ಲಕ್ಷ ರೂ.ದಂಡ ವಿಧಿಸಿದ ಮಾಹಿತಿ ಆಯೋಗ
ಬೆಂಗಳೂರು: ಮಾಹಿತಿ ಹಕ್ಕು ಕಾಯ್ದೆಯಡಿ ಮಾಹಿತಿ ಕೋರಿದ್ದ ಅರ್ಜಿದಾರರಿಗೆ ಮಾಹಿತಿ ನೀಡದೇ ನಿರ್ಲಕ್ಷ್ಯ ತೋರಿದ್ದ ಬೆಂಗಳೂರು ಅಭಿವೃದ್ದಿ ಪ್ರಾಧಿಕಾರ (ಬಿಡಿಎ)ದ ಅಧಿಕಾರಿಗೆ ಕರ್ನಾಟಕ ಮಾಹಿತಿ ಆಯೋಗ 4 ಪ್ರತ್ಯೇಕ ಪ್ರಕರಣಗಳಲ್ಲಿ 1 ಲಕ್ಷ ರೂ. ದಂಡ ವಿಧಿಸಿದೆ. ಅದೇ ರೀತಿ ಮತ್ತೊಬ್ಬ ಅಧಿಕಾರಿಗೆ ಪ್ರಕರಣವೊಂದರಲ್ಲಿ ಮಾಹಿತಿ ನೀಡದಿದ್ದಕ್ಕಾಗಿ 25ಸಾವಿರ ರೂ ದಂಡ ವಿಧಿಸಿದೆ. ಬಿಡಿಎ ಉಪಕಾರ್ಯದರ್ಶಿ-1 ಉಮೇಶ್ ಅವರೇ ಮಾಹಿತಿ ಆಯೋಗದಿಂದ 1ಲಕ್ಷ ರೂ.ದಂಡನೆಗೆ ಒಳಗಾದ ಅಧಿಕಾರಿ. ಅದೇ ರೀತಿ ಬಿಡಿಎ ಕಾರ್ಯದರ್ಶಿ ಸಿ.ಎಲ್.ಶಿವಕುಮಾರ್ಗೆ ಪ್ರತ್ಯೇಕ ಪ್ರಕರಣವೊಂದರಲ್ಲಿ ಆಯೋಗ 25 ಸಾವಿರ ರೂ.ದಂಡ ಹಾಕಿದೆ. ಮಾಹಿತಿ ಹಕ್ಕು ಕಾಯ್ದೆಯಡಿ ಎಲ್ಲ ಸಾರ್ವಜನಿಕ ಪ್ರಾಧಿಕಾರಗಳು ಕಾಯ್ದೆಯ ಕಲಂ 4ರ ಅನ್ವಯ ತಮ್ಮ ಪ್ರಾಧಿಕಾರಗಳ ಹೊಣೆಗಾರಿಕೆಯನ್ನು ಕಾಲಕಾಲಕ್ಕೆ ನಿರ್ವಹಿಸಿದ ಕುರಿತು ತಮ್ಮ ವೆಬ್ಸೈಟ್ನಲ್ಲಿ ಅಧಿಕೃತವಾಗಿ ಪ್ರಕಟಿಸಬೇಕು ಮತ್ತು ನಿರ್ವಹಿಸಿರಬೇಕು. ಈ ಬಗ್ಗೆ ದೇಶದ ಸುಪ್ರೀಂ ಕೋರ್ಟ್ ಮಾಹಿತಿ ಹಕ್ಕು ಕಾಯ್ದೆಯ ಕಲಂ 4ನ್ನು ಜಾರಿಗೊಳಿಸಿ, ನಿರ್ವಹಿಸಬೇಕು, ಕಾಲಕಾಲಕ್ಕೆ ಪರಿಷ್ಕರಿಸಿ ತಮ್ಮ ಅಧಿಕೃತ ಜಾಲತಾಣಗಳಲ್ಲಿ ಕಡ್ಡಾಯವಾಗಿ ಪ್ರಕಟಿಸಬೇಕು ಎಂದು ತೀರ್ಪು ನೀಡಿತ್ತು. ಕಾಯ್ದೆ ಜಾರಿಯಾಗಿ 20ವರ್ಷ ಕಳೆದರೂ ಇನ್ನೂ ಹಲವು ಪ್ರಾಧಿಕಾರಗಳು ಮಾಹಿತಿ ಹಕ್ಕು ಕಾಯ್ದೆಯ ಕಲಂ 4 (1)(ಎ)ಮತ್ತು (ಬಿ)ಯನ್ನು ನಿರ್ವಹಿಸುತ್ತಿಲ್ಲ ಎಂಬ ಕಾರಣಕ್ಕಾಗಿ ಸುಪ್ರೀಂ ಕೋರ್ಟ್ ಈ ಮಹತ್ವದ ತೀರ್ಪು ನೀಡಿತ್ತು. ಅದನ್ನು ಪಾಲಿಸುವುದು ಕಡ್ಡಾಯ ಆಗಿದ್ದರೂ ಇನ್ನೂ ಅಧಿಕಾರಿಗಳು ಪಾಲಿಸದಿರುವುದನ್ನು ಗಂಭೀರವಾಗಿ ಪರಿಗಣಿಸಿ ಮಾಹಿತಿ ಆಯೋಗ ಅಧಿಕಾರಿಗೆ ದಂಡ ವಿಧಿಸಿದೆ. ಬಿಡಿಎ ಉಪಕಾರ್ಯದರ್ಶಿಗೆ ಕಚೇರಿಯಲ್ಲಿ ಆರ್ಟಿಐ ಕಾಯ್ದೆಯ ಕಲಂ 4ರ ನಿರ್ವಹಣೆ ಕುರಿತಂತೆ ನಾಲ್ವರು ಅರ್ಜಿದಾರರು ತಮ್ಮ ಪ್ರತ್ಯೇಕ ಅರ್ಜಿಗಳಲ್ಲಿ ಮಾಹಿತಿ ಕೋರಿದ್ದರು. ಅರ್ಜಿದಾರರು ಸಲ್ಲಿಸಿದ ಕೋರಿಕೆಗೆ ಯಾವುದೇ ಮಾಹಿತಿ ನೀಡದೇ, ಉಪಕಾರ್ಯದರ್ಶಿ ಉಮೇಶ್ ನಿರ್ಲಕ್ಷ್ಯ ತೋರಿದ್ದರು. ಈ ಬಗ್ಗೆ ಅರ್ಜಿದಾರರಾದ ತಕ್ಷಕ್, ತನ್ವಿತಾ ಗೌರ್, ಅಶ್ವಿಜಾ ಪಿ. ಮತ್ತು ಬಾಲಚಂದ್ರ ರಾವ್ ಎಂಬುವರು ಮಾಹಿತಿ ಹಕ್ಕು ಆಯೋಗಕ್ಕೆ ಮೇಲ್ಮನವಿ ಸಲ್ಲಿಸಿದ್ದರು. ಮೇಲ್ಮನವಿ ವಿಚಾರಣೆ ನಡೆಸಿದ ಮಾಹಿತಿ ಆಯೋಗ, ಉಮೇಶ್ಗೆ ಶೋಕಾಸ್ ನೋಟಿಸ್ ಜಾರಿ ಮಾಡಿತ್ತು. ಆದರೂ, ಸದರಿ ಅಧಿಕಾರಿಯವರು ಅರ್ಜಿದಾರರಿಗೆ ಮಾಹಿತಿ ಒದಗಿಸಿರಲಿಲ್ಲ. ಇದನ್ನು ಗಂಭೀರವಾಗಿ ಪರಿಗಣಿಸಿದ ಮಾಹಿತಿ ಆಯೋಗ ನಾಲ್ಕು ಪ್ರತ್ಯೇಕ ಪ್ರಕರಣಗಳಲ್ಲಿ ತಲಾ 25ಸಾವಿರ ರೂ.ನಂತೆ 1 ಲಕ್ಷ ರೂ.ದಂಡ ವಿಧಿಸಿದೆ. ಅಲ್ಲದೇ, ಮಾಹಿತಿ ಹಕ್ಕು ಕಾಯ್ದೆಯನ್ನು ನಿರ್ಲಕ್ಷಿಸಿರುವ ಉಮೇಶ್ ವಿರುದ್ಧ ಶಿಸ್ತು ಕ್ರಮ ಜರುಗಿಸುವಂತೆ ಸರಕಾರಕ್ಕೆ ಏಕೆ ಶಿಫಾರಸು ಮಾಡಬಾರದು ಎಂದು ಕಾರಣ ಕೇಳಿ ನೋಟಿಸ್ ಜಾರಿ ಮಾಡಿದೆ. ಮತ್ತೊಂದು ಪ್ರಕರಣದಲ್ಲಿ, ಬಿಡಿಎ ಹೆಚ್ಚುವರಿ ಭೂ ಸ್ವಾಧೀನಾಧಿಕಾರಿಗಳ ಅಧಿಕಾರ ವ್ಯಾಪ್ತಿಯ ಕುರಿತಂತೆ ಸರಕಾರದ ಆದೇಶದ ಪ್ರತಿಯನ್ನು ಕೋರಿ, ಸುರೇಶ್ ಚಂದ್ರ ಬಾಬು ಎಂಬುವರು, ಬಿಡಿಎ ಕಾರ್ಯದರ್ಶಿ ಶಿವಕುಮಾರ್ಗೆ ಅರ್ಜಿ ಸಲ್ಲಿಸಿದ್ದರು. ಶಿವಕುಮಾರ್ ಕೂಡ ಅರ್ಜಿದಾರರು ಕೋರಿರುವ ದಾಖಲೆ ಒದಗಿಸಿಲ್ಲ. ಹೀಗಾಗಿ ಅರ್ಜಿದಾರರು ಆಯೋಗಕ್ಕೆ ಮೇಲ್ಮನವಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಮಾಹಿತಿ ಆಯೋಗ, ಮಾಹಿತಿ ನೀಡದ ಶಿವಕುಮಾರ್ಗೆ 25ಸಾವಿರ ರೂ.ದಂಡ ವಿಧಿಸಿದೆ. ಒಂದು ವೇಳೆ ಅರ್ಜಿದಾರರು ಕೋರಿರುವ ದಾಖಲೆಯನ್ನು ತಕ್ಷಣ ನೀಡದಿದ್ದಲ್ಲಿ ಶಿವಕುಮಾರ್ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲು ಸರಕಾರಕ್ಕೆ ಶಿಫಾರಸು ಮಾಡುವುದು ಎಂದು ಎಚ್ಚರಿಕೆ ನೀಡಿ ಶೋಕಾಸ್ ನೋಟಿಸ್ ಜಾರಿ ಮಾಡಿದೆ ಎಂದು ಆಯೋಗವು ತಿಳಿಸಿದೆ.
ಅನ್ನ ಮತ್ತು ನೀರು ಸಿಗದ ಪರಿಸ್ಥಿತಿಯಲ್ಲಿ ಅರಬ್ ದೇಶಗಳು, ಸೂಪರ್ ಮಾರ್ಕೆಟ್ ಖಾಲಿ ಖಾಲಿ | Operation Roaring Lion
ಇರಾನ್ ಸರ್ವಾಧಿಕಾರಿ ಖಮೇನಿ ಹತ್ಯೆ ನಂತರ ಅಮೆರಿಕ ಹಾಗೂ ಇಸ್ರೇಲ್ ವಿರುದ್ಧ ರೊಚ್ಚಿಗೆದ್ದು ಇಡೀ ಮಧ್ಯಪ್ರಾಚ್ಯ ಪ್ರದೇಶವನ್ನೇ ಸ್ಮಶಾನ ಮಾಡುತ್ತಿದೆ ಇರಾನ್ನ ಸೇನೆ. ಅದರಲ್ಲೂ ಪೆಟ್ರೋಲ್ &ಡೀಸೆಲ್ ಮಾರಾಟ ಮಾಡಿಕೊಂಡು ಲಕ್ಷಾಂತರ ಕೋಟಿ ರೂಪಾಯಿ ಹಣ ಸಂಪಾದನೆ ಮಾಡಿ, ಜಗತ್ತಿನ ಅತ್ಯಂತ ಶ್ರೀಮಂತ ದೇಶಗಳಲ್ಲಿ ಒಂದಾಗಿವೆ ಅರಬ್ ದೇಶಗಳು. ಆದರೆ ದಿಢೀರ್ ಇರಾನ್ ವಿರುದ್ಧ ಇಸ್ರೇಲ್
2ನೇ ವಾರಕ್ಕೆ ಕಾಲಿಟ್ಟ ಮಧ್ಯಪ್ರಾಚ್ಯ ಸಂಘರ್ಷ: ಅಮೆರಿಕದಿಂದ ಇಸ್ರೇಲ್ಗೆ 12 ಸಾವಿರ ಬಾಂಬ್ ಮಾರಾಟ
Middle East War- ಇರಾನ್ ಮತ್ತು ಅಮೆರಿಕ-ಇಸ್ರೇಲ್ ನಡುವಿನ ಸಮರ ಎರಡನೇ ವಾರಕ್ಕೆ ಕಾಲಿಟ್ಟಿದ್ದು, ಸಾವುನೋವುಗಳ ಸಂಖ್ಯೆ 1,600 ದಾಟಿದೆ. ಏತನ್ಮಧ್ಯೆ ಇಸ್ರೇಲ್ಗೆ ತುರ್ತಾಗಿ 12 ಸಾವಿರ ವೈಮಾನಿಕ ಬಾಂಬ್ಗಳನ್ನು ಪೂರೈಸಲು ಅಮೆರಿಕದ ಟ್ರಂಪ್ ಆಡಳಿತ ಅನುಮೋದನೆ ನೀಡಿದೆ. ಇತ್ತ ಇರಾನ್ನ ಪರಮಾಣು ಕೇಂದ್ರ ಹಾಗೂ ಲೆಬನಾನ್ನ ಹೆಜ್ಬೊಲ್ಲಾ ನೆಲೆಗಳ ಮೇಲೆ ಇಸ್ರೇಲ್ ಭೀಕರ ದಾಳಿ ನಡೆಸಿದೆ. ಪ್ರತಿಯಾಗಿ ಇರಾನ್ ಯುಎಇ ಮತ್ತು ಸೌದಿಯಲ್ಲಿರುವ ಅಮೆರಿಕದ ವಾಯುನೆಲೆಗಳನ್ನು ಗುರಿಯಾಗಿಸಿ ಕ್ಷಿಪಣಿ ದಾಳಿ ನಡೆಸಿದೆ.
ಬ್ಯಾಂಕ್ನಲ್ಲಿ ಗ್ರಾಹಕನ ಕೊಂದು 15 ಲಕ್ಷ ದರೋಡೆ ಮಾಡಿದ್ದ ಪ್ರಕರಣ: ನಾಲ್ವರಿಗೆ ಜೀವಾವಧಿ ಶಿಕ್ಷೆ ವಿಧಿಸಿದ ಹೈಕೋರ್ಟ್
2012ರಲ್ಲಿ ಕಾರ್ಪೋರೇಷನ್ ಬ್ಯಾಂಕಿನ ಚಿಕ್ಕಬಾಣಾವರ ಶಾಖೆಯಲ್ಲಿ ನಡೆದಿದ್ದ ಘಟನೆ
2026ರ ಟಿ20 ವಿಶ್ವಕಪ್ ಫೈನಲ್ ಬಳಿಕ ಸೂರ್ಯಕುಮಾರ್ ಯಾದವ್ ನಿವೃತ್ತಿ?: ಸಾಮಾಜಿಕ ಜಾಲತಾಣಗಳಲ್ಲಿ ವದಂತಿ!
ICC T20 World Cup 2026 - ಅಹ್ಮದಾಬಾದ್ ನಲ್ಲಿ ಮಾರ್ಚ್ 8ರಂದು ನಡೆಯಲಿರುವ ಭಾರತ Vs ನ್ಯೂಜಿಲೆಂಡ್ ಫೈನಲ್ ಬಳಿಕ ಭಾರತ ತಂಡದ ನಾಯಕ ಸೂರ್ಯಕುಮಾರ್ ಯಾದವ್ ಅವರು ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಲಿದ್ದಾರೆ ಎಂಬ ಚರ್ಚೆ ಸಾಮಾಜಿಕ ಜಾಲತಾಣಗಳಲ್ಲಿ ಜೋರಾಗಿದೆ. ಏಕದಿನ ಮತ್ತು ಟೆಸ್ಟ್ ತಂಡದಲ್ಲಿ ಸ್ಥಾನವಿಲ್ಲದಿರುವುದು, ವಯಸ್ಸು, ಫಾರ್ಮ್ ಸಮಸ್ಯೆ, ಯುವ ಆಟಗಾರರ ಪೈಪೋಟಿ ಕಾರಣಗಳಿಂದಾಗಿ ತಂಡದಲ್ಲಿ ಸ್ಥಾನ ನೀಡುವುದು ಬಿಸಿಸಿಐಗೆ ಸಹ ಕಷ್ಟವಾಗಬಹುದು. ಈ ಕಾರಣಕ್ಕಾಗಿ ಅವರು ನಿವೃತ್ತಿ ಪಡೆಯುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ. ಏನಿದ್ದರೂ ಫೈನಲ್ ಪಂದ್ಯದ ಬಳಿಕವೇ ತಿಳಿಯಲಿದೆ.
ಹೆತ್ತ ಮಗಳನ್ನೇ ವೇಶ್ಯಾವಾಟಿಕೆಗೆ ದೂಡಿದ ಆರೋಪ: ಸಂತ್ರಸ್ತೆಯನ್ನು ತಾಯಿಯ ಸುಪರ್ದಿಗೆ ವಹಿಸಲು ಹೈಕೋರ್ಟ್ ನಕಾರ
ಬೆಂಗಳೂರು: ಸ್ವಂತ ಮಗಳನ್ನು ತಾಯಿಯೇ ವೇಶ್ಯಾವಾಟಿಕೆ ದಂಧೆಗೆ ದೂಡಿದ ಆರೋಪ ಹಿನ್ನೆಲೆಯಲ್ಲಿ ವೇಶ್ಯಾವಾಟಿಕೆ ಜಾಲದಿಂದ ರಕ್ಷಿಸಲ್ಪಟ್ಟ ಸಂತ್ರಸ್ತೆಯನ್ನು ತಾಯಿಯ ಸುಪರ್ದಿಗೆ ವಹಿಸಲು ನಿರಾಕರಿಸಿದ್ದ ವಿಚಾರಣಾ ನ್ಯಾಯಾಲಯದ ಆದೇಶವನ್ನು ಹೈಕೋರ್ಟ್ ಎತ್ತಿಹಿಡಿದಿದೆ. ವಿಚಾರಣಾ ನ್ಯಾಯಾಲಯದ ಆದೇಶ ಪ್ರಶ್ನಿಸಿ ಮಹಿಳೆಯೊಬ್ಬರು ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿರುವ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಆದೇಶ ಮಾಡಿದೆ. ವ್ಯಾಜ್ಯದ ವಿಷಯವು ಅಪರಾಧದ ಬಗ್ಗೆ ಅಥವಾ ಸರ್ಕಾರ ಸಲ್ಲಿಸಿರುವ ದೋಷಾರೋಪ ಪಟ್ಟಿಗೆ ಸಂಬಂಧಿಸಿದ್ದಲ್ಲ. ಬದಲಿಗೆ, ಸಂತ್ರಸ್ತೆ ಮತ್ತು ಇತರರ ಹೇಳಿಕೆಗಳು ತಾಯಿಯೇ ತನ್ನ ಮಗಳನ್ನು ವೇಶ್ಯಾವಾಟಿಕೆಗೆ ಒತ್ತಾಯಿಸಿದ್ದಾಳೆ ಎಂಬುದನ್ನು ಮೇಲ್ನೋಟಕ್ಕೆ ಸೂಚಿಸುತ್ತವೆ. ವೇಶ್ಯಾವಾಟಿಕೆ ದಂಧೆಯಿಂದ ಸಂತ್ರಸ್ತೆಯನ್ನು ರಕ್ಷಿಸಿ ಮಕ್ಕಳ ಕಲ್ಯಾಣ ಕೇಂದ್ರದ ವಶದಲ್ಲಿರಿಸಿದ್ದರೆ, ತಾಯಿಯೇ ತನ್ನ ಮಗಳನ್ನು ವೇಶ್ಯಾವಾಟಿಕೆಗೆ ಬಳಸಿಕೊಳ್ಳುತ್ತಿದ್ದಾಳೆ ಎಂಬ ಆರೋಪಗಳಿವೆ. ಇಂಥ ಸಂದರ್ಭದಲ್ಲಿ ಮಗುವನ್ನು ತಾಯಿಯ ವಶಕ್ಕೆ ನೀಡಬಾರದು ಎಂಬ ಹೆಚ್ಚುವರಿ ರಾಜ್ಯ ಸರ್ಕಾರಿ ಅಭಿಯೋಜಕರ ವಾದ ಸರಿಯಾಗಿದೆ ಎಂದು ನ್ಯಾಯಾಲಯ ಆದೇಶದಲ್ಲಿ ಅಭಿಪ್ರಾಯಪಟ್ಟಿದೆ. ಪ್ರಕರಣದ ದೋಷಾರೋಪ ಪಟ್ಟಿ ಸಲ್ಲಿಸುವಾಗ ತಾಯಿಯ ಹೆಸರನ್ನು ಹೇಗೆ ಕೈಬಿಡಲಾಗಿದೆ ಎಂಬುದು ಅರ್ಥವಾಗದ ವಿಷಯವಾಗಿದೆ. ಮೇಲ್ನೋಟಕ್ಕೆ ಆಕೆ ತನ್ನ ಮಗಳನ್ನು ವೇಶ್ಯಾವಾಟಿಕೆಗೆ ತಳ್ಳಿದ್ದಾಳೆ ಎಂಬ ಬಲವಾದ ಅನುಮಾನವಿದ್ದರೂ ಸಹ, ದೋಷಾರೋಪ ಪಟ್ಟಿಯಲ್ಲಿ ಆಕೆಯ ಹೆಸರನ್ನು ಪೊಲೀಸರು ಹೇಗೆ ಬಿಡಲು ಸಾಧ್ಯ ಎಂದು ಪ್ರಶ್ನಿಸಿರುವ ಹೈಕೋರ್ಟ್, ಸಂತ್ರಸ್ತೆಯನ್ನು ಅರ್ಜಿದಾರರ ವಶಕ್ಕೆ ನೀಡುವ ಬದಲು ಆಕೆಗೆ ಸುರಕ್ಷಿತ ವ್ಯವಸ್ಥೆ ಕಲ್ಪಿಸುವುದು ಸರ್ಕಾರದ ಜವಾಬ್ದಾರಿಯಾಗಿದೆ ಎಂದು ಹೇಳಿದೆ. ಮಾನವ ಕಳ್ಳ ಸಾಗಣೆ ಪ್ರಕರಣಗಳಲ್ಲಿ ರಕ್ಷಿಸಲ್ಪಟ್ಟ ವ್ಯಕ್ತಿಗಳನ್ನು ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಿದಾಗ, ಅನೈತಿಕ ಸಾಗಣೆ (ತಡೆ) ಕಾಯ್ದೆ ಸೆಕ್ಷನ್ 17(2)ರ ಅಡಿಯಲ್ಲಿ ವಿಚಾರಣೆ ನಡೆಸಲು ಅವಕಾಶವಿದೆ. ರಕ್ಷಿಸಲ್ಪಟ್ಟ ವ್ಯಕ್ತಿಯ ವಯಸ್ಸು, ನಡತೆ, ಹಿನ್ನೆಲೆ ಮತ್ತು ಆ ವ್ಯಕ್ತಿಯ ಪಾಲನೆಯನ್ನು ವಹಿಸಿಕೊಳ್ಳಲು ಅವರ ಪೋಷಕರು, ಪೋಷಕರು ಅಥವಾ ಪತಿ ಸೂಕ್ತವೇ ಎಂಬುದನ್ನು ಮ್ಯಾಜಿಸ್ಟ್ರೇಟ್ ವಿಚಾರಣೆ ನಡೆಸಬೇಕಾಗುತ್ತದೆ. ರಕ್ಷಿಸಲ್ಪಟ್ಟ ವ್ಯಕ್ತಿಯನ್ನು ಅವರ ಪೋಷಕರು, ಪತಿ ಅಥವಾ ಪೋಷಕರಿಗೆ ಒಪ್ಪಿಸುವ ಆದೇಶವನ್ನು ಹೊರಡಿಸುವ ಮೊದಲು ಮ್ಯಾಜಿಸ್ಟ್ರೇಟ್ ವಿಚಾರಣೆ ನಡೆಸುವುದನ್ನು ಸೆಕ್ಷನ್ 17ಎ ಕಡ್ಡಾಯಗೊಳಿಸುತ್ತದೆ ಎಂದು ಹೈಕೋರ್ಟ್ ಆದೇಶದಲ್ಲಿ ಅಭಿಪ್ರಾಯಪಟ್ಟಿದೆ. ದೆಹಲಿ ಮತ್ತು ಬಾಂಬೆ ಹೈಕೋರ್ಟ್ಗಳ ತೀರ್ಪುಗಳನ್ನು ಉಲ್ಲೇಖಿಸಿರುವ ನ್ಯಾಯಾಲಯ, ರಕ್ಷಿಸಲ್ಪಟ್ಟ ವ್ಯಕ್ತಿಗಳನ್ನು ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಿದಾಗ, ಮ್ಯಾಜಿಸ್ಟ್ರೇಟ್ ಅವರು ಸೆಕ್ಷನ್ 17(2)ರ ಅಡಿಯಲ್ಲಿ ಮೊದಲ ಬಾರಿಗೆ ಹಾಜರುಪಡಿಸಿದಾಗಲೇ ಅವರ ವಯಸ್ಸನ್ನು ಖಚಿತಪಡಿಸಿಕೊಳ್ಳಬೇಕು. ಒಂದು ವೇಳೆ ಆ ವ್ಯಕ್ತಿ 18 ವರ್ಷದೊಳಗಿನವರಾಗಿದ್ದು, ಕಾನೂನಿನ ಸಂಘರ್ಷಕ್ಕೊಳಪಟ್ಟ ಬಾಲಾಪರಾಧಿಯಾಗಿದ್ದರೆ ಬಾಲನ್ಯಾಯ ಮಂಡಳಿಗೆ ಅಥವಾ ಆ ವ್ಯಕ್ತಿಯು ಆರೈಕೆ ಮತ್ತು ರಕ್ಷಣೆಯ ಅಗತ್ಯವಿರುವ ಮಗುವಾಗಿದ್ದರೆ ಮಕ್ಕಳ ಕಲ್ಯಾಣ ಸಮಿತಿಗೆ ಪ್ರಕರಣವನ್ನು ವರ್ಗಾಯಿಸಬೇಕು ಎಂದು ಹೇಳಿದೆ. ಮೇಲಿನ ತೀರ್ಪುಗಳ ಆಧಾರದಲ್ಲಿ, ತನ್ನ ಮಗಳನ್ನೇ ವೇಶ್ಯಾವಾಟಿಕೆ ದಂದೆಯಲ್ಲಿ ಬಳಸಿಕೊಳ್ಳುತ್ತಿದ್ದಾಳೆ ಎಂದು ಆರೋಪಿಸಲಾದ ತಾಯಿಗೆ ಮಗುವನ್ನು ಹಸ್ತಾಂತರಿಸಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟಿರುವ ಹೈಕೋರ್ಟ್, ಯಾವುದೇ ವಿಚಾರಣಾ ಅರ್ಹತೆ (ಮೆರಿಟ್) ಹೊಂದಿರದ ಕಾರಣ ಅರ್ಜಿ ವಜಾಗೊಳಿಸಲಾಗುತ್ತಿದೆ ಎಂದು ಆದೇಶಿಸಿದೆ. ಪ್ರಕರಣದ ಹಿನ್ನೆಲೆ: ಅರ್ಜಿದಾರ ಮಹಿಳೆ ಸಂತ್ರಸ್ತೆಯ ತಾಯಿಯಾಗಿದ್ದು, ವೇಶ್ಯಾವಾಟಿಕೆ ನಡೆಯುತ್ತಿದ್ದ ಲಾಡ್ಜ್ ಒಂದರಿಂದ ಸಂತ್ರಸ್ತೆಯನ್ನು ರಕ್ಷಿಸಲಾಗಿತ್ತು. ಸರ್ಕಾರ ಆಕೆಯನ್ನು ಮಕ್ಕಳ ಕಲ್ಯಾಣ ಕೇಂದ್ರದಲ್ಲಿ ಇರಿಸಿತ್ತು. ಈ ಮಧ್ಯೆ, ಮಗಳಿಗೆ 18 ವರ್ಷ ತುಂಬಿರುವುದರಿಂದ ಆಕೆಯನ್ನು ತನ್ನ ಸುಪರ್ದಿಗೆ ವಹಿಸುವಂತೆ ಕೋರಿ ಆಕೆಯ ತಾಯಿ ವಿಚಾರಣಾ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. 18 ವರ್ಷ ತುಂಬಿದವರನ್ನು ಮಕ್ಕಳ ಕಲ್ಯಾಣ ಕೇಂದ್ರದಲ್ಲಿ ಇರಿಸಲು ಸಾಧ್ಯವಿಲ್ಲ. ಆದ್ದರಿಂದ, ಮಗಳನ್ನು ತನ್ನ ವಶಕ್ಕೆ ಒಪ್ಪಿಸಬೇಕು ಎಂಬುದು ತಾಯಿಯ ವಾದವಾಗಿತ್ತು. ಆದರೆ, ತಾಯಿಯೇ ತನ್ನ ಮಗಳನ್ನು ವೇಶ್ಯಾವಾಟಿಕೆಗೆ ಒತ್ತಾಯಿಸಿದ್ದಳು ಎಂಬ ಆರೋಪದ ಹಿನ್ನೆಲೆಯಲ್ಲಿ ವಿಚಾರಣಾ ನ್ಯಾಯಾಲಯ ಆಕೆಯ ಅರ್ಜಿ ತಿರಸ್ಕರಿಸಿತ್ತು. ಇದರಿಂದ, ಮಹಿಳೆ ಹೈಕೋರ್ಟ್ ಮೆಟ್ಟಿಲೇರಿದ್ದರು.
Gold Price: ಚಿನ್ನ ಬೆಲೆ ಭಾರಿ ಕುಸಿತ ಸಾಧ್ಯತೆ, ಆದರೆ ಇದೊಂದು ದೇಶದ ನಿರ್ಧಾರ ಮುಖ್ಯ
ಚಿನ್ನ.. ಚಿನ್ನ.. ಅಂತಾ ಚಿನ್ನದ ಬಗ್ಗೆ ಸಿಕ್ಕಾಪಟ್ಟೆ ಕುತೂಹಲ ಹೊಂದಿದ್ದ ಆಭರಣ ಪ್ರಿಯರು ಈಗ ಚಿನ್ನ ಖರೀದಿ ಮಾಡುವುದು ಬಿಡಿ ಬಂಗಾರ ಕನಸಲ್ಲಿ ಬಂದರೂ ಭಯಪಡುವ ವಾತಾವರಣ ನಿರ್ಮಾಣ ಆಗಿದೆ. ಏಕೆಂದರೆ ಚಿನ್ನದ ಬೆಲೆ ಭಾರಿ ದೊಡ್ಡ ಪ್ರಮಾಣದಲ್ಲಿ ಏರಿಕೆ ಕಾಣುತ್ತಾ ಸಾಗಿದ್ದು, ಇನ್ನೇನು ಬರೋಬ್ಬರಿ 2,00,000 ರೂಪಾಯಿ ತಲುಪುವ ಸಾಧ್ಯತೆ ಕೂಡ ದಟ್ಟವಾಗಿದೆ. ಇದೇ ಕಾರಣಕ್ಕೆ
ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಾಲ್ವರು ಆರೋಪಿಗಳಿಗೆ ವಿಚಾರಣಾ ನ್ಯಾಯಾಲಯ ಮಂಜೂರು ಮಾಡಿರುವ ಜಾಮೀನು ರದ್ದು ಕೋರಿ ರಾಜ್ಯ ಸರ್ಕಾರ ಸಲ್ಲಿಸಿರುವ ಅರ್ಜಿಗೆ ಆಕ್ಷೇಪಣೆ ಸಲ್ಲಿಸುವಂತೆ ಆರೋಪಿಗಳಿಗೆ ಹೈಕೋರ್ಟ್ ನಿರ್ದೇಶಿಸಿದೆ. ಆರೋಪಿಗಳಾದ ಪುಟ್ಟಸ್ವಾಮಿ ಅಲಿಯಾಸ್ ಪವನ್, ಧನರಾಜ್, ನಂದೀಶ್ ಮತ್ತು ವಿ. ವಿನಯ್ಗೆ ಜಾಮೀನು ಮಂಜೂರು ಮಾಡಿ ನಗರದ 56ನೇ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ 2024ರ ಡಿಸೆಂಬರ್ 23ರಂದು ಆದೇಶಿಸಿತ್ತು. ಈ ಆದೇಶ ಪ್ರಶ್ನಿಸಿ ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು (ರಾಜ್ಯ ಸರ್ಕಾರ) ಸಲ್ಲಿಸಿರುವ ಕ್ರಿಮಿನಲ್ ಅರ್ಜಿಯನ್ನು ನ್ಯಾಯಮೂರ್ತಿ ಎಸ್. ರಾಚಯ್ಯ ಅವರಿದ್ದ ಏಕಸದಸ್ಯ ನ್ಯಾಯಪೀಠ ಶುಕ್ರವಾರ (ಮಾರ್ಚ್ 6) ವಿಚಾರಣೆ ನಡೆಸಿತು. ವಿಶೇಷ ಸರ್ಕಾರಿ ಅಭಿಯೋಜಕ ಪಿ. ಪ್ರಸನ್ನ ಕುಮಾರ್ ವಾದ ಮಂಡಿಸಿ, ಪ್ರಕರಣವು ಅತ್ಯಂತ ಹೀನವಾಗಿದೆ. ನಟ ದರ್ಶನ್, ಪವಿತ್ರಾಗೌಡ ಸೇರಿ ಪ್ರಕರಣದ ಏಳು ಆರೋಪಿಗಳಿಗೆ ಹೈಕೋರ್ಟ್ ಮಂಜೂರು ಮಾಡಿದ್ದ ಜಾಮೀನನ್ನು ಸುಪ್ರೀಂಕೋರ್ಟ್ ರದ್ದುಪಡಿಸಿದೆ. ಇದರಿಂದ, ಆ ಏಳು ಮಂದಿ ಆರೋಪಿಗಳು ಮರಳಿ ಜೈಲು ಸೇರಿದ್ದಾರೆ. ಸುಪ್ರೀಂಕೋರ್ಟ್ ತೀರ್ಪು ಆಧರಿಸಿ ಈ ನಾಲ್ವರು ಆರೋಪಿಗಳಿಗೆ ಮಂಜೂರಾಗಿರುವ ಜಾಮೀನು ರದ್ದುಪಡಿಸಬೇಕು ಎಂದು ಕೋರಿದರು. ಅದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಸುಪ್ರಿಂಕೋರ್ಟ್ ಆದೇಶವಿರುವುದು ನಿಜ. ಆದರೆ, ಅರ್ಜಿದಾರರಿಗೆ ಜಾಮೀನು ರದ್ದುಪಡಿಸಬೇಕೆಂಬ ಪ್ರಾಸಿಕ್ಯೂಷನ್ ಮನವಿ ಕುರಿತಂತೆ ಪರಿಶೀಲನೆ ನಡೆಸಬೇಕಿದೆ. ಅರ್ಜಿ ಸಂಬಂಧ ಆರೋಪಿಗಳ ಪರ ವಕೀಲರು ತಮ್ಮ ಆಕ್ಷೇಪಣೆ ಸಲ್ಲಿಸಲಿ ಎಂದು ಹೇಳಿತು. ಮುಂದುವರಿದು, ಕೊಲೆ ಪ್ರಕರಣಗಳಲ್ಲಿ ಭಾಗಿಯಾದ ಮಾತ್ರಕ್ಕೆ ಆರೋಪಿಗಳಿಗೆ ಜಾಮೀನು ನೀಡಬಾರದು ಎಂದೇನಿಲ್ಲ. ಕೋರ್ಟ್ ಮೆಟ್ಟಿಲೇರಿದ ಎಲ್ಲ ಕೊಲೆ ಪ್ರಕರಣಗಳನ್ನು ಒಂದೇ ರೀತಿ ತಾಳೆ ಹಾಕಲಾಗದು. ಯಾರೋ ಒಬ್ಬರನ್ನು ಗುರಿಯಾಗಿಸಿಕೊಂಡು ಜಾಮೀನು ರದ್ದುಪಡಿಸಿದರೆ, ಸಂವಿಧಾನದಲ್ಲಿ ಕೊಡಮಾಡಲಾಗಿರುವ ಮೂಲಭೂತ ಹಕ್ಕಿಗೆ ಚ್ಯುತಿಯಾಗುವುದಿಲ್ಲವೇ? ಪ್ರತಿಯೊಬ್ಬರಿಗೂ ಜೀವಿಸುವ ಹಕ್ಕು ಇರುತ್ತದೆ. ಜಾಮೀನು ರದ್ದತಿ ವಿಚಾರವವು ಮೂಲಭೂತ ಹಕ್ಕು ಆದ ಜೀವಿಸುವ ಹಕ್ಕಿಗೆ ಸಂಬಂಧಪಟ್ಟಿರುತ್ತದೆ ಎಂದು ನ್ಯಾಯಪೀಠ ಮೌಖಿಕ ಅಭಿಪ್ರಾಯ ವ್ಯಕ್ತಪಡಿಸಿತು. ಜಾಮೀನು ಅರ್ಜಿಗಳ ಕುರಿತು ವಿವೇಚನೆ ಬಳಸಿ ತೀರ್ಮಾನ ಕೈಗೊಳ್ಳುವ ಅಧಿಕಾರ ಹೈಕೋರ್ಟ್ಗೆ ಇರುತ್ತದೆ. ಆದ ಮಾತ್ರಕ್ಕೆ ಈ ಪ್ರಕರಣದಲ್ಲಿ ಆರೋಪಿಗಳಿಗೆ ಜಾಮೀನು ಮಂಜೂರಾತಿ ಆದೇಶ ಎತ್ತಿಹಿಡಿಯಲಾಗುತ್ತದೆ ಎಂದರ್ಥವಲ್ಲ. ವಿಶೇಷವಾಗಿ ಈ ಪ್ರಕರಣ ಮಾಧ್ಯಮಗಳಲ್ಲಿ ಹೆಚ್ಚು ಚರ್ಚೆಯಾಗುತ್ತಿದ್ದು, ನ್ಯಾಯಾಲಯವೂ ಅದರ ಪ್ರಭಾವಕ್ಕೂ ಒಳಗಾಗಬೇಕಿಲ್ಲ ಎಂದು ಮೌಖಿಕವಾಗಿ ಹೇಳಿತು. ಅಂತಿಮವಾಗಿ ಅರ್ಜಿ ಕುರಿತು ಲಿಖಿತ ಆಕ್ಷೇಪಣೆ/ ವಾದಾಂಶ ಸಲ್ಲಿಸುವಂತೆ ಪ್ರತಿವಾದಿಯಾಗಿರುವ ನಾಲ್ವರೂ ಆರೋಪಿಗಳಿಗೆ ನಿರ್ದೇಶಿಸಿದ ಪೀಠ, ವಿಚಾರಣೆಯನ್ನು ಮಾರ್ಚ್ 17ಕ್ಕೆ ಮುಂದೂಡಿತು.
ಮುಂದಿನ ಚುನಾವಣೆಯಲ್ಲಿ ರಮಾನಾಥ ರೈ ಅಭ್ಯರ್ಥಿ, ಅವರನ್ನು ಮತ್ತೆ ಗೆಲ್ಲಿಸಿ: ಸಿಎಂ ಸಿದ್ದರಾಮಯ್ಯ
ಮೂಡೂರು - ಪಡೂರು ಜೋಡುಕರೆ ಕಂಬಳ
ಬಂಗಾಳದಲ್ಲಿ ಮತುವಾ-ಮುಸ್ಲಿಂ ಮತದಾರರ ಅಳಿಸುವಿಕೆ: ಮತದಾರರ ಪಟ್ಟಿ ಪರಿಷ್ಕರಣೆ ವಿರುದ್ಧ ಸಮರ ಸಾರಿದ ಮಮತಾ ಬ್ಯಾನರ್ಜಿ
ಚುನಾವಣಾ ಆಯೋಗದ (EC) ವಿಶೇಷ ತೀವ್ರ ಪರಿಷ್ಕರಣೆ (SIR) ನಂತರ ಪಶ್ಚಿಮ ಬಂಗಾಳದ ಅಂತಿಮ ಮತದಾರರ ಪಟ್ಟಿಯಲ್ಲಿ 63 ಲಕ್ಷಕ್ಕೂ ಹೆಚ್ಚು ಅಥವಾ ಒಟ್ಟು ಮತದಾರರಲ್ಲಿ 9% ರಷ್ಟು ಅಳಿಸುವಿಕೆಗಳು ಕಂಡುಬಂದಿದ್ದು, 60 ಲಕ್ಷಕ್ಕೂ ಹೆಚ್ಚು ಮತದಾರರನ್ನು (8.5%) ‘ವಿಚಾರಣಾ ಹಂತ’ ಎಂಬ ವರ್ಗದಲ್ಲಿ ಇರಿಸಲಾಗಿದೆ. ಏಪ್ರಿಲ್ನಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ಈ ವಿಷಯವು ರಾಜ್ಯದಲ್ಲಿ ಪ್ರಮುಖ ರಾಜಕೀಯ ವಿವಾದವಾಗಿ ಮಾರ್ಪಟ್ಟಿದೆ. ಮತುವಾ ಮತದಾರರು ಹೆಚ್ಚಿರುವ ವಿಧಾನಸಭಾ ಕ್ಷೇತ್ರಗಳಲ್ಲಿ ಹೆಚ್ಚಿನ ಸಂಖ್ಯೆಯ ಹೆಸರುಗಳನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕಲಾಗಿದೆ. ಏತನ್ಮಧ್ಯೆ, ಹೆಚ್ಚಿನ ಮತದಾರರು ಮುಸ್ಲಿಮರಾಗಿರುವ ಪ್ರದೇಶಗಳಲ್ಲಿ ಅವರಿಗೆ ಇನ್ನೂ ಮತ ಚಲಾಯಿಸಲು ಅವಕಾಶವಿದೆಯೇ ಎಂಬುದನ್ನು ನಿರ್ಧರಿಸಲು ನ್ಯಾಯಾಂಗ ಅಧಿಕಾರಿಗಳು ಅನೇಕ ಜನರ ಹೆಸರುಗಳನ್ನು ಪರಿಶೀಲಿಸುತ್ತಿದ್ದಾರೆ. ಬಂಗಾಳದಲ್ಲಿ ನಡೆದ ಎರಡನೇ ಮತ್ತು ಅಂತಿಮ ಹಂತದ ಎಸ್ಐಆರ್ ಪ್ರಕ್ರಿಯೆ ಬಳಿಕ ಫೆಬ್ರವರಿ 28ರಂದು ಚುನಾವಣಾ ಆಯೋಗ ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಿತು. ಇದು ಎಸ್ಐಆರ್ನ ಕರಡು ಪಟ್ಟಿಯಲ್ಲಿ ಮೊದಲ ಹಂತದ ನಂತರ ಕಂಡುಬಂದ ಮತುವಾ ಪ್ರದೇಶಗಳಲ್ಲಿ ಹೆಚ್ಚಿನ ಅಳಿಸುವಿಕೆಗಳ ಮಾದರಿಯನ್ನು ಪ್ರತಿಬಿಂಬಿಸುತ್ತದೆ. ಅಂತಿಮ ಮತದಾರರ ಪಟ್ಟಿಗಳ ಕುರಿತು ಇಂಡಿಯನ್ ಎಕ್ಸ್ಪ್ರೆಸ್ ನಡೆಸಿದ ವಿಶ್ಲೇಷಣೆಯು ದಬ್ಗ್ರಾಮ್-ಫುಲ್ಬರಿ, ಬಾಗ್ಡಾ ಮತ್ತು ಕಲ್ಯಾಣಿ ವಿಧಾನಸಭಾ ಕ್ಷೇತ್ರಗಳಲ್ಲಿ ಹೆಚ್ಚಿನ ಅಳಿಸುವಿಕೆ ಸಂಭವಿಸಿರುವುದನ್ನು ತೋರಿಸುತ್ತದೆ. ಈ ಸ್ಥಾನಗಳಲ್ಲಿ ಮತುವಾಗಳು ಬಹುಸಂಖ್ಯಾತರಾಗಿದ್ದಾರೆ. ಎರಡನೇ ಹಂತದಲ್ಲಿ ವಿಚಾರಣೆಗೆ ಹಾಜರಾಗದವರ ಹೆಸರುಗಳನ್ನು ಅಳಿಸುವ ಪ್ರಕರಣಗಳು ಹೆಚ್ಚಾಗಿ ಕಂಡುಬರುತ್ತಿವೆ. ಈ ಪ್ರವೃತ್ತಿಯ ಅರ್ಥವೇನೆಂದರೆ, ಈ ಮತದಾರರು ಸರಿಯಾದ ದಾಖಲೆಗಳನ್ನು ಸಲ್ಲಿಸುವಷ್ಟು ವಿಶ್ವಾಸ ಹೊಂದಿರಲಿಲ್ಲ ಮತ್ತು ಅದಕ್ಕಾಗಿಯೇ ಅವರು ವಿಚಾರಣೆಗಳನ್ನು ತಪ್ಪಿಸಿಕೊಂಡರು ಎಂಬುದಾಗಿದೆ ಎಂದು ಚುನಾವಣಾ ಆಯೋಗದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಎಸ್ಐಆರ್ಗೂ ಮೊದಲು ಪಶ್ಚಿಮ ಬಂಗಾಳದಲ್ಲಿ 7.66 ಕೋಟಿ ಮತದಾರರಿದ್ದರು. ಆದರೆ ಅಂತಿಮ ಪಟ್ಟಿಯಲ್ಲಿ 63.67 ಲಕ್ಷ ಹೆಸರುಗಳನ್ನು ತೆಗೆದುಹಾಕಲಾಗಿದೆ ಎಂದು ತೋರಿಸಲಾಗಿದೆ. ಇನ್ನೂ 60.07 ಲಕ್ಷ ಹೆಸರುಗಳನ್ನು ‘ವಿಚಾರಣಾ ಹಂತ’ ಎಂಬ ವರ್ಗದಲ್ಲಿ ಇರಿಸಲಾಗಿದೆ. 1.88 ಲಕ್ಷ ಹೊಸ ಹೆಸರುಗಳನ್ನು ಸೇರಿಸಲಾಗಿದ್ದರೂ ರಾಜ್ಯದ ಒಟ್ಟು ಮತದಾರರ ಸಂಖ್ಯೆ ಈಗ 7.04 ಕೋಟಿಯಾಗಿದೆ. ಮತುವಾ ಮತದಾರರ ಅಳಿಸುವಿಕೆ ಮತುವಾ ಸಮುದಾಯವು ಪೂರ್ವ ಬಾಂಗ್ಲಾದೇಶದಲ್ಲಿ ರೈತರಾಗಿ ಕೆಲಸ ಮಾಡುತ್ತಿತ್ತು. 1950ರ ನಂತರ ಅವರು ಪಶ್ಚಿಮ ಬಂಗಾಳಕ್ಕೆ ವಲಸೆ ಹೋಗಲು ಪ್ರಾರಂಭಿಸಿದರು. ಸುಮಾರು ಎರಡು ದಶಕಗಳ ವಲಸೆಯ ಬಳಿಕ ಅವರು ರಾಜ್ಯದ ಎರಡನೇ ಅತಿದೊಡ್ಡ ಪರಿಶಿಷ್ಟ ಜಾತಿ (SC) ಸಮುದಾಯವಾಗಿ ರೂಪುಗೊಂಡರು. ಮತುವಾ ಸಮುದಾಯವು ಹೆಚ್ಚಾಗಿ ಉತ್ತರ 24 ಪರಗಣ ಜಿಲ್ಲೆಯ ಠಾಕೂರ್ ನಗರದ ಸುತ್ತಮುತ್ತ ವಾಸಿಸುತ್ತಿದೆ. ಅವರ ಪ್ರಧಾನ ಕಚೇರಿ ಠಾಕೂರ್ಬರಿಯಲ್ಲಿದ್ದು, ಹೆಚ್ಚಿನ ರಾಜಕೀಯ ಪ್ರಭಾವ ಹೊಂದಿರುವ ಠಾಕೂರ್ ಕುಟುಂಬದ ನೇತೃತ್ವದಲ್ಲಿದೆ. ಮತುವಾಗಳು ರಾಜ್ಯದ ಒಟ್ಟು ಮತದಾರರಲ್ಲಿ ಸುಮಾರು 17% ರಷ್ಟಿದ್ದು, 30 ವಿಧಾನಸಭಾ ಸ್ಥಾನಗಳಲ್ಲಿ ಗಮನಾರ್ಹ ಉಪಸ್ಥಿತಿಯನ್ನು ಹೊಂದಿದ್ದಾರೆ ಎಂದು ಸರ್ಕಾರ ಅಂದಾಜಿಸಿದೆ. ಸಮುದಾಯದ ಅಂದಾಜಿನ ಪ್ರಕಾರ ಅವರ ಮತ ಬ್ಯಾಂಕ್ ಸುಮಾರು 20% ರಷ್ಟಿದ್ದು, 40–45 ಸ್ಥಾನಗಳಲ್ಲಿ ನೇರ ಪರಿಣಾಮ ಬೀರುತ್ತದೆ. ಬಾಗ್ಡಾ, ಬಂಗಾಂವ್ ಉತ್ತರ ಮತ್ತು ಬಂಗಾಂವ್ ದಕ್ಷಿಣ ಕ್ಷೇತ್ರಗಳು ಸೇರಿದಂತೆ ಈ ಪ್ರದೇಶಗಳು ಎಸ್ಐಆರ್ನ ಮೊದಲ ಮತ್ತು ಎರಡನೇ ಹಂತಗಳಲ್ಲಿ ಗಮನಾರ್ಹ ಅಳಿಸುವಿಕೆಗಳನ್ನು ಕಂಡಿವೆ. ಉತ್ತರ ಬಂಗಾಳದ ಮತುವಾ ಪ್ರಾಬಲ್ಯದ ಪ್ರದೇಶಗಳಾದ ಮತಿಗರಾ–ನಕ್ಸಲ್ಬರಿ ಮತ್ತು ದಬ್ಗ್ರಾಮ್–ಫುಲ್ಬರಿ ಕ್ಷೇತ್ರಗಳಲ್ಲಿಯೂ ಹೆಚ್ಚಿನ ಸಂಖ್ಯೆಯ ಅಳಿಸುವಿಕೆಗಳು ಕಂಡುಬಂದಿವೆ. ಮುಸ್ಲಿಂ ಮತದಾರರು ‘ವಿಚಾರಣಾ ಹಂತದಲ್ಲಿ’ ಮಾಲ್ಡಾ, ಮುರ್ಷಿದಾಬಾದ್, ದಕ್ಷಿಣ 24 ಪರಗಣಗಳು ಮತ್ತು ಉತ್ತರ 24 ಪರಗಣಗಳಂತಹ ಮುಸ್ಲಿಂ ಪ್ರಾಬಲ್ಯದ ಜಿಲ್ಲೆಗಳಲ್ಲಿನ ಅನೇಕ ವಿಧಾನಸಭಾ ಕ್ಷೇತ್ರಗಳಲ್ಲಿ 100 ಕ್ಕಿಂತ ಕಡಿಮೆ ಮತದಾರರ ಹೆಸರುಗಳನ್ನು ಮಾತ್ರ ಅಳಿಸಲಾಗಿದೆ. ಅಲ್ಪಸಂಖ್ಯಾತರ ಪ್ರಾಬಲ್ಯದ ಜಿಲ್ಲೆಗಳಲ್ಲಿ ‘ವಿಚಾರಣಾ ಹಂತ’ದಲ್ಲಿ ಇರಿಸಲಾದ ಮತದಾರರ ಸಂಖ್ಯೆ ದೊಡ್ಡದಾಗಿದೆ. ವಿಚಾರಣಾ ಹಂತದಲ್ಲಿ ಇರಿಸಲಾಗಿದೆ ಎಂದರೆ ಮುಂಬರುವ ವಾರಗಳಲ್ಲಿ ಅವರ ಅರ್ಹತೆಯನ್ನು ಕಾನೂನು ಪರಿಶೀಲನೆಯ ಮೂಲಕ ನಿರ್ಧರಿಸಲಾಗುತ್ತದೆ. ಅದಕ್ಕಾಗಿಯೇ ಆ ಜಿಲ್ಲೆಗಳಲ್ಲಿ ಅಳಿಸಬೇಕಾದ ಪ್ರಕರಣಗಳ ಸಂಖ್ಯೆ ಕಡಿಮೆಯಾಗಿದೆ ಎಂದು ಹಿರಿಯ ಚುನಾವಣಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಅಲ್ಪಸಂಖ್ಯಾತರ ಪ್ರಾಬಲ್ಯದ ಮುರ್ಷಿದಾಬಾದ್, ಮಾಲ್ಡಾ, ದಕ್ಷಿಣ 24 ಪರಗಣಗಳು, ಉತ್ತರ 24 ಪರಗಣಗಳು, ಹೌರಾ ಮತ್ತು ಉತ್ತರ ದಿನಾಜ್ಪುರ ಜಿಲ್ಲೆಗಳಲ್ಲಿ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಈ ವರ್ಗದಲ್ಲಿದ್ದಾರೆ ಎಂದು ಡೇಟಾ ತೋರಿಸುತ್ತದೆ. ರಾಜಕೀಯ ಪರಿಣಾಮ ಮತುವಾ ಸಮುದಾಯವನ್ನು ಮುನ್ನಡೆಸುವ ಪ್ರಬಲ ಠಾಕೂರ್ ಕುಟುಂಬವು ಆಡಳಿತಾರೂಢ ಟಿಎಂಸಿ ಮತ್ತು ಪ್ರಮುಖ ವಿರೋಧ ಪಕ್ಷ ಬಿಜೆಪಿ ಎರಡರಲ್ಲೂ ಪ್ರಮುಖ ಸದಸ್ಯರನ್ನು ಹೊಂದಿದೆ. ಮತದಾರರ ಪಟ್ಟಿ ನವೀಕರಣ (SIR) ಸಮಯದಲ್ಲಿ ಎರಡೂ ಪಕ್ಷಗಳು ಮತುವಾ ಮತದಾರರಿಗೆ ಸಹಾಯ ಮಾಡಲು ಶಿಬಿರಗಳನ್ನು ನಡೆಸಿದ್ದವು. ಆದರೆ ಪಶ್ಚಿಮ ಬಂಗಾಳದಾದ್ಯಂತ ಹಿಂದೂ ಮತದಾರರನ್ನು ಒಗ್ಗೂಡಿಸುವ ಯೋಜನೆಯ ಕೇಂದ್ರ ಭಾಗವಾಗಿ ಬಿಜೆಪಿ ನಿರ್ದಿಷ್ಟವಾಗಿ ಮತುವಾ ಸಮುದಾಯವನ್ನು ನೋಡುತ್ತಿದೆ. 2019ರ ಲೋಕಸಭೆ ಚುನಾವಣೆಯಲ್ಲಿ ಬಂಗಾಳದ 42 ಸ್ಥಾನಗಳಲ್ಲಿ 18 ಸ್ಥಾನಗಳನ್ನು ಗೆಲ್ಲಲು ಬಿಜೆಪಿಗೆ ಸಹಾಯ ಮಾಡುವಲ್ಲಿ ಮತುವಾ ಸಮುದಾಯವು ಪ್ರಮುಖ ಪಾತ್ರ ವಹಿಸಿತು. ಆದರೆ ಹೊಸ ಮತದಾರರ ಪಟ್ಟಿಗಳ ಮೊದಲ ಕರಡು ಬಿಡುಗಡೆಯಾದಾಗಿನಿಂದ ಪಕ್ಷವು ಸಮುದಾಯದಿಂದ ಸಾಕಷ್ಟು ಟೀಕೆಗಳನ್ನು ಎದುರಿಸಿದೆ. ಮತುವಾಗಳಲ್ಲಿ ತನ್ನ ಬೆಂಬಲಿಗರನ್ನು ಬಲಪಡಿಸಲು ಬಿಜೆಪಿ ಪೌರತ್ವ ತಿದ್ದುಪಡಿ ಕಾಯ್ದೆ (CAA) ಅನ್ನು ಎತ್ತಿ ತೋರಿಸುತ್ತಿದೆ. ಬಿಜೆಪಿ ಮತ ಬ್ಯಾಂಕ್ ರಾಜಕೀಯವನ್ನು ಬಯಸುವುದಿಲ್ಲ; ದೇಶಕ್ಕೆ ಒಳ್ಳೆಯದು ಎಂಬ ಕಾರಣಕ್ಕೆ ಎಸ್ಐಆರ್ ಪರವಾಗಿ ನಿಂತಿದೆ ಎಂದು ಪಕ್ಷ ಹೇಳಿದೆ. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಉದ್ದೇಶಪೂರ್ವಕವಾಗಿ ಮತುವಾ ಸಮುದಾಯದಲ್ಲಿ ಭಯ ಹುಟ್ಟಿಸಿ ಸಿಎಎ ಅಡಿಯಲ್ಲಿ ಪೌರತ್ವಕ್ಕಾಗಿ ಅರ್ಜಿ ಸಲ್ಲಿಸದಂತೆ ಮಾಡಿದ್ದಾರೆ. ಅವರು ಸಿಎಎಗೆ ಅರ್ಜಿ ಸಲ್ಲಿಸಿದ್ದರೆ ಅವರಿಗೆ ಈಗಾಗಲೇ ಭಾರತದ ಪೌರತ್ವ ಸಿಗುತ್ತಿತ್ತು ಎಂದು ಬಿಜೆಪಿ ಹೇಳಿದೆ. ಟಿಎಂಸಿ ಪಕ್ಷವು ಮತದಾರರ ಪಟ್ಟಿ ನವೀಕರಣವನ್ನು ಟೀಕಿಸಿದ್ದು, ಬಿಜೆಪಿ ಮತ್ತು ಚುನಾವಣಾ ಆಯೋಗ ಮುಸ್ಲಿಂ ಮತದಾರರಲ್ಲಿ ಟಿಎಂಸಿಯ ಬೆಂಬಲವನ್ನು ಹಾಳು ಮಾಡಲು ಒಟ್ಟಾಗಿ ಕೆಲಸ ಮಾಡುತ್ತಿವೆ ಎಂದು ಆರೋಪಿಸಿದೆ. ಆರಂಭದಿಂದಲೂ ಪರಿಶಿಷ್ಟ ಜಾತಿ ಮತ್ತು ಬುಡಕಟ್ಟು ಸಮುದಾಯಗಳು ಹೆಚ್ಚು ತೊಂದರೆ ಅನುಭವಿಸುತ್ತಿವೆ. ಚುನಾವಣಾ ಆಯೋಗವು ಅನೇಕ ಮುಸ್ಲಿಂ ಮತದಾರರನ್ನು ಅಳಿಸಲು ಯೋಜಿಸಿತ್ತು. ಆದರೆ ಮಮತಾ ಬ್ಯಾನರ್ಜಿ ಈ ವಿಷಯವನ್ನು ಸುಪ್ರೀಂ ಕೋರ್ಟ್ಗೆ ಕೊಂಡೊಯ್ದ ನಂತರ ಅದನ್ನು ನಿಲ್ಲಿಸಲಾಯಿತು. ಈಗ ಆ ಪ್ರಕರಣಗಳನ್ನು ನ್ಯಾಯಾಂಗ ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ. ಇದು ಅಲ್ಪಸಂಖ್ಯಾತ ಮತದಾರರನ್ನು ಗುರಿಯಾಗಿಸಲು ಬಿಜೆಪಿ ಮತ್ತು ಚುನಾವಣಾ ಆಯೋಗ ಕೈಗೊಂಡ ಉದ್ದೇಶಪೂರ್ವಕ ನಡೆ ಎಂದು ಟಿಎಂಸಿ ವಕ್ತಾರ ಅರೂಪ್ ಚಕ್ರವರ್ತಿ ಹೇಳಿದ್ದಾರೆ. ಮಮತಾ ಧರಣಿ ಎಸ್ಐಆರ್ ವಿರುದ್ಧ ಕೋಲ್ಕತ್ತಾದಲ್ಲಿ ಶುಕ್ರವಾರ ಧರಣಿ ನಡೆಸುವ ಒಂದು ದಿನ ಮೊದಲು ಮತುವಾ ಪ್ರಾಬಲ್ಯದ ಪ್ರದೇಶಗಳಲ್ಲಿ “ಹೆಚ್ಚಿನ ಮತದಾರರ ಅಳಿಸುವಿಕೆ” ಕುರಿತು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬಿಜೆಪಿಯ ಮೇಲೆ ದಾಳಿ ನಡೆಸಿದ್ದಾರೆ. ಗುರುವಾರ ಮತುವಾ ನಾಯಕಿ ಬಿನಾಪಾಣಿ ದೇವಿ ಅವರ ಪುಣ್ಯತಿಥಿಯಂದು ಮಮತಾ ಬ್ಯಾನರ್ಜಿ ತಮ್ಮ ಎಕ್ಸ್ ಪೋಸ್ಟ್ನಲ್ಲಿ ಕೇಂದ್ರ ಸರ್ಕಾರದ ಕ್ರಮಗಳು ಮತುವಾ ಸಮುದಾಯವನ್ನು ಗೊಂದಲಮಯ ಹಾಗೂ ಅಸ್ಥಿರ ಸ್ಥಿತಿಗೆ ತಳ್ಳಿವೆ ಎಂದು ಹೇಳಿದ್ದಾರೆ. ಬಿಜೆಪಿ ಪೌರತ್ವದೊಂದಿಗೆ ರಾಜಕೀಯ ಮಾಡುತ್ತಿದೆ. ಇದು ಈಗಾಗಲೇ ಭಾರತದ ದೀರ್ಘಕಾಲೀನ ನಾಗರಿಕರಾಗಿರುವ ಜನರ ಗುರುತನ್ನು ಪ್ರಶ್ನಿಸುತ್ತಿದೆ. ಮತದಾರರ ಪಟ್ಟಿ ನವೀಕರಣದ ಮೂಲಕ ಉದ್ದೇಶಪೂರ್ವಕವಾಗಿ ಮತುವಾ ಸಮುದಾಯವನ್ನು ಪಟ್ಟಿಯಿಂದ ಹೊರಹಾಕಲಾಗುತ್ತಿದೆ. ಇದು ಸರ್ಕಾರವನ್ನು ಆಯ್ಕೆ ಮಾಡುವ ಜನರಲ್ಲಿ ಅನಿಶ್ಚಿತತೆಯನ್ನು ಸೃಷ್ಟಿಸುತ್ತದೆ ಎಂದು ಅವರು ಹೇಳಿದ್ದಾರೆ. ಈ “ಅನ್ಯಾಯದ” ವಿರುದ್ಧ ಹೋರಾಡುವುದಾಗಿ ಪ್ರತಿಜ್ಞೆ ಮಾಡಿದ ಮಮತಾ, ಬಂಗಾಳದ ಜನರು ಹಾಗೂ ಅವರ ಮತುವಾ ಸಹೋದರರ ಹಕ್ಕುಗಳನ್ನು ಕಸಿದುಕೊಳ್ಳುವ ಯಾವುದೇ ಪ್ರಯತ್ನದ ವಿರುದ್ಧ ಹೋರಾಟ ಮುಂದುವರಿಸುವುದಾಗಿ ಹೇಳಿದ್ದಾರೆ. ಶುಕ್ರವಾರ ಕೋಲ್ಕತ್ತಾದ ಎಸ್ಪ್ಲೇನೇಡ್ ಮೆಟ್ರೋ ಚಾನೆಲ್ನಲ್ಲಿ ಧರಣಿ ಆರಂಭಿಸಿದ ಮಮತಾ ಬ್ಯಾನರ್ಜಿ, ಮತದಾರರ ಹಕ್ಕುಗಳನ್ನು ಕಸಿದುಕೊಳ್ಳಲು ಬಿಜೆಪಿ ಮತ್ತು ಚುನಾವಣಾ ಆಯೋಗ ಪಿತೂರಿ ನಡೆಸುತ್ತಿವೆ. ಇವರ ಮುಖವಾಡ ಕಳಚುತ್ತೇನೆ. ಹಲವು ಮತದಾರರು ಮೃತಪಟ್ಟಿದ್ದಾರೆ ಎಂದು ಪರಿಷ್ಕೃತ ಮತದಾರರ ಪಟ್ಟಿಯಲ್ಲಿ ತಪ್ಪಾಗಿ ನಮೂದಿಸಲಾಗಿದೆ. ಅಂತಹ ಮತದಾರರನ್ನು ಮಾಧ್ಯಮ ಮತ್ತು ಚುನಾವಣಾ ಆಯೋಗದ ಮುಂದೆ ಹಾಜರುಪಡಿಸಲು ನಾನು ಸಿದ್ಧವಿದ್ದೇನೆ ಎಂದು ಹೇಳಿದ್ದಾರೆ.
ಮಾ.8ರಿಂದ ಮಂಗಳೂರು - ಜಿದ್ದಾ - ಮಸ್ಕತ್ ವಿಮಾನ ಯಾನ ಪುನರಾರಂಭ
ಮಂಗಳೂರು, ಮಾ.7: ಮಂಗಳೂರು - ಜೆದ್ದಾ ಮತ್ತು ಮಂಗಳೂರು - ಮಸ್ಕತ್ ಮಧ್ಯೆ ಮಾ.8ರಿಂದ ವಿಮಾನ ಯಾನ ಪುನರಾರಂಭಗೊಳ್ಳಲಿದೆ ಎಂದು ವಿಮಾನ ನಿಲ್ದಾಣದ ವಕ್ತಾರರು ತಿಳಿಸಿದ್ದಾರೆ. ಮಂಗಳೂರಿನಿಂದ ಜೆದ್ದಾಕ್ಕೆ ಐಎಕ್ಸ್ 845 ವಿಮಾನ ಮುಂಜಾವ 5:20ಕ್ಕೆ ನಿಗದಿಯಾಗಿತ್ತು. ಆದರೆ ಅದು ಬೆಳಗ್ಗೆ 9ಕ್ಕೆ ನಿರ್ಗಮಿಸುವ ಸಾಧ್ಯತೆ ಇದೆ. ಐಎಕ್ಸ್ 846 ವಿಮಾನವು ಜೆದ್ದಾದಿಂದ ಹೊರಟು ಮಂಗಳೂರಿಗೆ ಸಂಜೆ 6:20ಕ್ಕೆ ತಲುಪುವ ಬಗ್ಗೆ ಸಮಯ ನಿಗದಿಯಾಗಿದ್ದರೂ ಅದು ರಾತ್ರಿ 10ಕ್ಕೆ ಮಂಗಳೂರು ತಲುಪುವ ಸಾಧ್ಯತೆ ಇದೆ ಎನ್ನಲಾಗಿದೆ. ಮಾ.8ರಂದು ಬೆಳಗ್ಗೆ 9:25ಕ್ಕೆ ಮಂಗಳೂರಿನಿಂದ ಮಸ್ಕತ್ಗೆ ಏರ್ಇಂಡಿಯಾ ವಿಮಾನ ತೆರಳಲಿದೆ. ಮಸ್ಕತ್ನಿಂದ ಮಂಗಳೂರಿಗೆ ಸಂಜೆ 5:25ಕ್ಕೆ ಏರ್ಇಂಡಿಯಾ ವಿಮಾನ ಆಗಮಿಸಲಿದೆ. *ಮಾ.8ರಂದು ರಾತ್ರಿ 8ಕ್ಕೆ ಮಂಗಳೂರಿನಿಂದ ಬೆಂಗಳೂರಿಗೆ ಹೆಚ್ಚುವರಿಯಾಗಿ ಏರ್ ಇಂಡಿಯಾ ಎಕ್ಸ್ಪ್ರೆಸ್ ಸಂಚರಿಸಲಿದೆ. *ಮಾ.8ರ ಮಂಗಳೂರು-ದುಬೈ (ಐಎಕ್ಸ್ 831), ದುಬೈ-ಮಂಗಳೂರು (ಐಎಕ್ಸ್ 832), ಮಂಗಳೂರು -ದುಬೈ (ಐಎಕ್ಸ್ 813), ಮಾ.9ರ ದುಬೈ-ಮಂಗಳೂರು (ಐಎಕ್ಸ್ 814), ಮಾ.8ರ ಮಂಗಳೂರು-ಬಹರೈನ್ (ಐಎಕ್ಸ್ 841), ಮಾ.9ರ ಬಹರೈನ್- ಮಂಗಳೂರು (ಐಎಕ್ಸ್ 842), ಮಾ.8ರ ಮಂಗಳೂರು-ಅಬುಧಾಬಿ (ಐಎಕ್ಸ್815), ಮಾ.9ರ ಅಬುಧಾಬಿ-ಮಂಗಳೂರು (ಐಎಕ್ಸ್ 816) ವಿಮಾನಗಳ ಸಂಚಾರ ರದ್ದಾಗಿದೆ ಎಂದು ಮೂಲಗಳು ತಿಳಿಸಿವೆ.
ದ್ವೇಷ ರಾಜಕೀಯದ ವಿರುದ್ಧ ಮಹಿಳಾ ಚಳವಳಿ ಬಲಗೊಳ್ಳಲಿ: ತೀಸ್ತಾ ಸೆಟಲ್ವಾಡ್
ಹಾಸನ: ಸಮಾಜದಲ್ಲಿ ಹೆಚ್ಚುತ್ತಿರುವ ದ್ವೇಷ ರಾಜಕೀಯ ಹಾಗೂ ದೌರ್ಜನ್ಯಗಳ ವಿರುದ್ಧ ಮಹಿಳಾ ಚಳವಳಿಗಳು ಇನ್ನಷ್ಟು ಬಲವಾಗಿ ಸಂಘಟಿತರಾಗಿ ಹೋರಾಟ ನಡೆಸಬೇಕು ಎಂದು ನಾಗರಿಕ ಹಕ್ಕುಗಳ ಹೋರಾಟಗಾರ್ತಿ ತೀಸ್ತಾ ಸೆಟಲ್ವಾಡ್ ಕರೆ ನೀಡಿದ್ದಾರೆ. ನಗರದ ಹಾಸನಾಂಬ ಕಲಾಕ್ಷೇತ್ರದಲ್ಲಿ ಕರ್ನಾಟಕ ರಾಜ್ಯ ದೌರ್ಜನ್ಯ ವಿರೋಧಿ ಒಕ್ಕೂಟ ಆಯೋಜಿಸಿದ್ದ ಅಂತರ್ರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ದಿಕ್ಸೂಚಿ ಭಾಷಣ ಮಾಡಿದ ಅವರು, ಮಹಿಳಾ ಚಳವಳಿಗಳು ಹಲವು ಸವಾಲುಗಳನ್ನು ಎದುರಿಸುತ್ತಾ ಮುಂದುವರಿಯುತ್ತಿವೆ. ಜಾತಿಯ ಹೆಸರಿನಲ್ಲಿ ದಲಿತರ ಮೇಲೆ ದೌರ್ಜನ್ಯಗಳು ಹೆಚ್ಚುತ್ತಿರುವುದು ಹಾಗೂ ಮುಸ್ಲಿಮ್ ಮಹಿಳೆಯರ ವಿರುದ್ಧ ಅವಮಾನಕಾರಿ ನಡೆಗಳು ನಡೆಯುತ್ತಿರುವುದು ಆತಂಕಕಾರಿ ಬೆಳವಣಿಗೆ ಎಂದರು. ಲಿಂಗತ್ವ ಹಾಗೂ ಲೈಂಗಿಕ ಅಲ್ಪಸಂಖ್ಯಾತರ ಮೇಲೂ ದಾಳಿಗಳು ಹೆಚ್ಚುತ್ತಿರುವುದಾಗಿ ಅವರು ಉಲ್ಲೇಖಿಸಿದರು. ಜಾಗತಿಕ ಮಟ್ಟದಲ್ಲಿಯೂ ಯುದ್ಧ ಹಾಗೂ ಸಾಮ್ರಾಜ್ಯಶಾಹಿ ರಾಜಕೀಯದ ಪರಿಣಾಮವಾಗಿ ಸಾಮಾನ್ಯ ಜನರು, ವಿಶೇಷವಾಗಿ ಮಕ್ಕಳು ಬಲಿಯಾಗುತ್ತಿರುವುದು ದುಃಖಕರ ಸಂಗತಿ ಎಂದು ಹೇಳಿದರು. ರಮಝಾನ್ ಸಂದರ್ಭದಲ್ಲಿ ಮುಸ್ಲಿಮ್ ವ್ಯಕ್ತಿಯೊಬ್ಬನ ಹತ್ಯೆ ನಡೆದಿರುವ ಘಟನೆ ಉಲ್ಲೇಖಿಸಿದ ಅವರು, ಇಂತಹ ದ್ವೇಷಪರ ಘಟನೆಗಳ ವಿರುದ್ಧ ಮಹಿಳಾ ಚಳವಳಿಗಳು ದೃಢವಾಗಿ ಹೋರಾಟ ಕಟ್ಟಬೇಕು ಎಂದು ಕರೆ ನೀಡಿದರು. ಜನವಾದಿ ಮಹಿಳಾ ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ದೇವಿ ಮಾತನಾಡಿ, ಗ್ರಾಮೀಣ ಮಹಿಳೆಯರಿಗೆ ಸ್ವತಂತ್ರವಾಗಿ ದುಡಿಯಲು ಹಾಗೂ ಪ್ರಶ್ನಿಸಲು ಮಹಾತ್ಮಾ ಗಾಂಧಿ ನ್ಯಾಷನಲ್ ರೂರಲ್ ಎಂಪ್ಲಾಯ್ ಮೆಂಟ್ ಗ್ಯಾರಂಟಿ ಆಕ್ಟ್ ಯೋಜನೆ ಮಾನಸಿಕ ಬಲ ನೀಡಿತ್ತು. ಆದರೆ ಈಗ ವಿವಿಧ ಕಾರಣಗಳಿಂದ ಈ ಯೋಜನೆಯನ್ನು ದುರ್ಬಲಗೊಳಿಸುವ ಪ್ರಯತ್ನಗಳು ನಡೆಯುತ್ತಿವೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಸಾಹಿತಿಗಳಾದ ಸಬಿತಾ ಬನ್ನಾಡಿ, ಅನುಪಮ ಮಾತನಾಡಿದರು. ತೀಸ್ತಾ ಸೆಟಲ್ವಾಡ್ ಅವರಿಗೆ ಕೌದಿ ಹೊದಿಸಿ ಗೌರವಿಸಲಾಯಿತು. ಸಮಾವೇಶಕ್ಕೂ ಮುನ್ನ ಹಾಸನ ನಗರದ ಪ್ರಮುಖ ಬೀದಿಗಳಲ್ಲಿ ನೂರಾರು ಮಹಿಳೆಯರು ಮೆರವಣಿಗೆ ನಡೆಸಿ ಕೋಲಾಟ ಹಾಗೂ ಡೊಳ್ಳು ಬಾರಿಸುವ ಮೂಲಕ ಗಮನ ಸೆಳೆದರು. ಇದೇ ವೇಳೆ ‘ಹಾಸನ ಮಣ್ಣಿನ ಹೆಣ್ಣು ಧ್ವನಿಗಳು’ ಎಂಬ ಪುಸ್ತಕವೂ ಬಿಡುಗಡೆಗೊಂಡಿತು. ಸಮಾವೇಶದ ಅಧ್ಯಕ್ಷತೆಯನ್ನು ಸಾಹಿತಿ ರೂಪ ಹಾಸನ್ ವಹಿಸಿದ್ದರು. ವೇದಿಕೆಯಲ್ಲಿ ಮಮತಾ ನಿರಂಜನ, ಬಾ.ಹ. ರಮಾ, ಅರ್ಚನಾ ಜಯಂತ್, ಪ್ರಭಾವತಿ ದೇಸಾಯಿ, ಸುಜಾತ ಕುಮಾರಸ್ವಾಮಿ, ಶಾನು ಸುಹಾನ ಸಹಿ ಅನೇಕ ಮಹಿಳಾ ನಾಯಕಿಯರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಡಾ.ಶಬಾನ ಮೈಸೂರು ಮತ್ತು ಕೆ.ಬಿ.ಮನು ನಿರ್ವಹಿಸಿದರು. ಮಾಧ್ಯಮಗಳ ಕಾರ್ಪೊರೇಟೀಕರಣದಿಂದ ಅಲ್ಪಸಂಖ್ಯಾತರ ಪ್ರಶ್ನೆಗಳು ಹಿಮ್ಮೆಟ್ಟುತ್ತಿವೆ ಎಂದು ಆರೋಪಿಸಿದ ಅವರು, ಕೆಲವು ಮಾಧ್ಯಮಗಳು ಮುಸ್ಲಿಮ್ ಮಹಿಳೆಯರನ್ನು ತಪ್ಪಾಗಿ ಚಿತ್ರಿಸುವ ಮೂಲಕ ಸಮಾಜದಲ್ಲಿ ತಪ್ಪು ಕಲ್ಪನೆಗಳನ್ನು ಮೂಡಿಸುತ್ತಿವೆ. ದಾಖಲೆಗಳ ಹೆಸರಿನಲ್ಲಿ ದಲಿತ, ಆದಿವಾಸಿ ಹಾಗೂ ಅಲ್ಪಸಂಖ್ಯಾತರ ಹಕ್ಕುಗಳನ್ನು ಕಡಿತಗೊಳಿಸುವ ಪ್ರಯತ್ನಗಳು ನಡೆಯುತ್ತಿವೆ. -ತೀಸ್ತಾ ಸೆಟಲ್ವಾಡ್, ನಾಗರಿಕ ಹಕ್ಕುಗಳ ಹೋರಾಟಗಾರ್ತಿ
ಸಮಾಜದ ಕಟ್ಟಕಡೆಯ ಜನಸಮುದಾಯ ಮುಖ್ಯವಾಹಿನಿಗೆ ಬರಬೇಕು ಎನ್ನುವುದು ಸರಕಾರದ ಗುರಿ: ಸಿಎಂ ಸಿದ್ದರಾಮಯ್ಯ
ಮೂಡೂರು-ಪಡೂರು ಜೋಡುಕರೆ ಕಂಬಳಕ್ಕೆ ಮುಖ್ಯಮಂತ್ರಿ ಆಗಮನ
2023ರ ಗಲಭೆ ಪ್ರಕರಣ | ತೆಹ್ರಿಕೆ ಇನ್ಸಾಫ್ ಪಕ್ಷದ 47 ಮಂದಿಗೆ 10 ವರ್ಷ ಜೈಲು
ಇಸ್ಲಾಮಾಬಾದ್, ಮಾ.7: 2023ರ ಮೇ 9ರಂದು ನಡೆದ ಹಿಂಸಾಚಾರ ಹಾಗೂ ದೊಂಬಿ ಪ್ರಕರಣದಲ್ಲಿ ಶಾಮೀಲಾದ ಆರೋಪದಲ್ಲಿ ಇಲ್ಲಿನ ಭಯೋತ್ಪಾದನಾ ನಿಗ್ರಹ ನ್ಯಾಯಾಲಯವೊಂದು ಇಮ್ರಾನ್ ಖಾನ್ ನೇತೃತ್ವದ ಪಾಕಿಸ್ತಾನ ತೆಹ್ರಿಕೆ ಇನ್ಸಾಫ್ ಪಕ್ಷದ 47 ನಾಯಕರು ಹಾಗೂ ಅವರ ಬೆಂಬಲಿಗರಿಗೆ 10 ವರ್ಷಗಳ ಜೈಲು ಶಿಕ್ಷೆ ಹಾಗೂ 5 ಲಕ್ಷ ಪಾಕ್ ರೂ. ದಂಡವನ್ನು ವಿಧಿಸಿದೆ. ಪಕ್ಷದ ಸಂಸ್ಥಾಪಕ ಇಮ್ರಾನ್ ಖಾನ್ ಅವರ ಬಂಧನದ ಬಳಿಕ ಪಿಟಿಐ ಪಕ್ಷದ ನಾಯಕರು ಹಾಗೂ ಕಾರ್ಯಕರ್ತರು ಪಾಕ್ನಾದ್ಯಂತ ನಡೆಸಿದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿತ್ತು. ಉದ್ರಿಕ್ತ ಪ್ರತಿಭಟನಕಾರರು ರಾವಲ್ಪಿಂಡಿಯಲ್ಲಿ ಸೇನಾ ವರಿಷ್ಠರ ಮಹಾಕಾರ್ಯಾಲಯದ ಮೇಲೆ ದಾಳಿಗೂ ಪ್ರಯತ್ನಿಸಿದ್ದರು. ಘಟನೆ ನಡೆದ ಬೆನ್ನಲ್ಲೇ ರಾವಲ್ಪಿಂಡಿಯ ಆರ್.ಎ. ಬಝಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪಿಟಿಐ ಬೆಂಬಲಿಗರ ವಿರುದ್ಧ ದಂಗೆ, ಮುತ್ತಿಗೆ ಹಾಕುವಿಕೆ, ದಾಂಧಲೆ, ಪೊಲೀಸರ ಮೇಲೆ ದಾಳಿ ಹಾಗೂ ಸರಕಾರಿ ಸೊತ್ತಿಗೆ ಹಾನಿ, ಅದರಲ್ಲೂ ಸೇನಾ ವರಿಷ್ಠರ ಪ್ರಧಾನ ಕಾರ್ಯಾಲಯದ ಪ್ರವೇಶದ್ವಾರ, ಹಂಝಾ ಕ್ಯಾಂಪ್, ಸೇನಾ ಮ್ಯೂಜಿಯಂ ಹಾಗೂ ಮೆಟ್ರೋ ನಿಲ್ದಾಣದ ಮೇಲೆ ದಾಳಿ ನಡೆಸಿದ ಆರೋಪಗಳನ್ನು ಹೊರಿಸಲಾಗಿತ್ತು. ಈ 47 ಆರೋಪಿಗಳನ್ನು ಈಗಾಗಲೇ ಭಯೋತ್ಪಾದನಾ ನಿಗ್ರಹ ನ್ಯಾಯಾಲಯವು ಅಪರಾಧಿಗಳೆಂದು ಘೋಷಿಸಿತ್ತು.
ಹತ್ತನೇ ತರಗತಿ ಉತ್ತೀರ್ಣರಾದ ನಿರುದ್ಯೋಗಿಗಳಿಗೆ 1,500 ರೂ. ಭತ್ಯೆ: ಮಮತಾ ಬ್ಯಾನರ್ಜಿ ಘೋಷಣೆ
ಕೋಲ್ಕತಾ, ಮಾ. 7: ಹತ್ತನೇ ತರಗತಿ ಉತ್ತೀರ್ಣರಾದ ನಿರುದ್ಯೋಗಿ ಯುವ ಉದ್ಯೋಗಾಕಾಂಕ್ಷಿಗಳಿಗೆ ಪ್ರತಿ ತಿಂಗಳು 1,500 ರೂ. ಭತ್ಯೆ ನೀಡಲಾಗುವುದು ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಶನಿವಾರ ಹೇಳಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ವಿಧಾನಸಭೆ ಚುನಾವಣೆ ನಡೆಯುವ ಮುನ್ನ ಮಮತಾ ಬ್ಯಾನರ್ಜಿ ಈ ಘೋಷಣೆ ಮಾಡಿದ್ದಾರೆ. ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್ಐಆರ್) ಸಂದರ್ಭ ಚುನಾವಣಾ ಆಯೋಗ ಮತದಾರರ ಹೆಸರನ್ನು ದೊಡ್ಡ ಸಂಖ್ಯೆಯಲ್ಲಿ ಅಳಿಸಿರುವುದನ್ನು ವಿರೋಧಿಸಿ ನಡೆಸಿದ ಧರಣಿಯಲ್ಲಿ ಅವರು ಈ ಘೋಷಣೆ ಮಾಡಿದರು. ಹತ್ತನೇ ತರಗತಿ ಉತ್ತೀರ್ಣರಾದ 21 ರಿಂದ 40 ವರ್ಷಗಳ ನಡುವಿನ ಯುವಕರು ಹಾಗೂ ಯುವತಿಯರು ಇಂದಿನಿಂದ (ಮಾರ್ಚ್ 7ರಿಂದ) ತಿಂಗಳಿಗೆ 1,500 ರೂ. ಭತ್ಯೆ ಸ್ವೀಕರಿಸಲಿದ್ದಾರೆ ಎಂದು ಅವರು ತಿಳಿಸಿದರು. ಈ ನೆರವು ಎಪ್ರಿಲ್ನಲ್ಲಿ ಆರಂಭಿಸಲು ನಿರ್ಧರಿಸಲಾಗಿತ್ತು. ಆದರೆ ಅದು ಈಗ ತತ್ಕ್ಷಣ ಪ್ರಾರಂಭಿಸಲಾಗಿದೆ ಎಂದು ಬ್ಯಾನರ್ಜಿ ಹೇಳಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯದ ಅಭಿವೃದ್ಧಿಗಾಗಿ ಸಾಲ ಮಾಡಿದ್ದಾರೆ: ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್
ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸುಮ್ಮನೆ ಸಾಲ ಮಾಡಿಲ್ಲ, ರಾಜ್ಯದ ಅಭಿವೃದ್ಧಿಗಾಗಿ ಮಾಡಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು. ನಗರದ ಕಾಂಗ್ರೆಸ್ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿ ನಡೆಸಿ ರಾಜ್ಯ ಬಜೆಟ್ ಕುರಿತು ಬಿಜೆಪಿ ಆರೋಪಕ್ಕೆ ತಿರುಗೇಟು ನೀಡಿದರು. ಸಿದ್ದರಾಮಯ್ಯ ಅವರು ಮಂಡಿಸಿರುವ 2026-27 ನೇ ಸಾಲಿನ ಬಜೆಟ್ ದೂರ ದೃಷ್ಟಿ ಇರುವ ಬಜೆಟ್. ಬಡವರು, ಹಿಂದುಳಿದವರು, ದಲಿತರ ಪರವಾಗಿ ಇರುವ ಬಜೆಟ್ ಎಂದು ಹೇಳಿದರು. ಸಿದ್ದರಾಮಯ್ಯ ಅವರು ಸಾಲ ಮಾಡಿರೋದೇ ಸಾಧನೆ ಅಂತಾ ಹೇಳ್ತೀರಲ್ಲ. ನಿಮ್ಮ ವಿಶ್ವಗುರು ನರೇಂದ್ರ ಮೋದಿ ಮಾಡಿರೋದೇನು? ಸಿದ್ದರಾಮಯ್ಯ ಅವರು ಮಾಡಿರೋ ಸಾಲ 2.86 ಲಕ್ಷ ಕೋಟಿ. ಆದರೆ 4 ವರ್ಷದಲ್ಲಿ ಬಿಜೆಪಿ ಮಾಡಿದ ಸಾಲ 4 ಲಕ್ಷ 48 ಸಾವಿರ ಕೋಟಿ. ಸಿದ್ದರಾಮಯ್ಯ ಅವರು ಸುಮ್ಮನೆ ಸಾಲ ಮಾಡಿಲ್ಲ. ರಾಜ್ಯದ ಅಭಿವೃದ್ಧಿಗಾಗಿ ಸಾಲ ಮಾಡಿದ್ದಾರೆ ಎಂದು ಅವರು ಹೇಳಿದರು. ರಾಜ್ಯದಲ್ಲಿ ಬಜೆಟ್ ಮಂಡನೆಯಾದರೆ ಅತ್ತ ವಿರೋಧ ಪಕ್ಷದ ನಾಯಕರುಗಳಾದ ಆರ್. ಅಶೋಕ್ ಮತ್ತು ಛಲವಾದಿ ನಾರಾಯಣಸ್ವಾಮಿ ಖಾಲಿ ಚೊಂಬು ಹಿಡಿದುಕೊಂಡು ಪ್ರತಿಭಟನೆ ಮಾಡುತ್ತಾರೆ. ಅವರು ತೋರಿಸಿರೋ ಚೊಂಬು ಕೇಂದ್ರ ಬಜೆಟ್ ವಿರುದ್ಧ ಎಂದು ಲಕ್ಷ್ಮಣ್ ಟೀಕಿಸಿದರು. ಮೈಸೂರಿಗೆ ಏನು ಕೊಟ್ಟಿದ್ದಾರೆ ಎಂದು ಪ್ರಶ್ನಿಸುತ್ತಾರಲ್ವಾ? ಈ ಬಾರಿ ಮೈಸೂರಿಗೆ 27 ಯೋಜನೆ ಕೊಟ್ಟಿದ್ದಾರೆ. ತಾಲೂಕುವಾರು 15 ಯೋಜನೆ ಕೊಟ್ಟಿದ್ದಾರೆ. ಜಯದೇವ ಆಸ್ಪತ್ರೆ ಉನ್ನತೀಕರಣಕ್ಕೆ 180 ಕೋಟಿ ರೂ. ಕೊಟ್ಟಿದ್ದಾರೆ ಎಂದರು. ರಾಜ್ಯಕ್ಕೆ ನಯಾ ಪೈಸೆ ತರುವ ಯೋಗ್ಯತೆ ಬಿಜೆಪಿಯವರಿಗೆ ಇಲ್ಲ. ಸಿದ್ದರಾಮಯ್ಯ ಅವರ ಬಜೆಟ್ ಬಗ್ಗೆ ತಲೆ ಬುಡ ಇಲ್ಲದೇ ಮಾತಾಡ್ತಾರೆ. ವಿರೋಧ ಪಕ್ಷದ ನಾಯಕರನ್ನು ರಾಜ್ಯದ ಜನರು ಜೋಕರ್ ಮಾಡಿಕೊಂಡು ಬಿಟ್ಟಿದ್ದಾರೆ ಎಂದು ವ್ಯಂಗ್ಯವಾಡಿದರು. ಸುದ್ದಿಗೋಷ್ಠಿಯಲ್ಲಿ ನಗರ ಕಾಂಗ್ರೆಸ್ ಅಧ್ಯಕ್ಷ ಆರ್.ಮೂರ್ತಿ, ಕಾಂಗ್ರೆಸ್ ಮುಖಂಡರುಗಳಾದ ಬಿ.ಎಂ.ರಾಮು, ಶಿವಣ್ಣ, ಗಿರೀಶ್, ಮಾಧ್ಯಮ ವಕ್ತಾರ ಎಂ.ಮಹೇಶ್ ಉಪಸ್ಥಿತರಿದ್ದರು.
ಇದು ಮಾನವೀಯ ಕೆಲಸ; ಇರಾನ್ ನ ಹಡಗು ನಿಲ್ಲಲು ಭಾರತ ಅವಕಾಶ ನೀಡಿರುವುದನ್ನು ಸಮರ್ಥಿಸಿಕೊಂಡ ಜೈಶಂಕರ್
ಹೊಸದಿಲ್ಲಿ, ಮಾ. 7: ಹಿಂದೂ ಮಹಾಸಾಗರದಲ್ಲಿ ತಾಂತ್ರಿಕ ಸಮಸ್ಯೆ ವರದಿಯಾದ ಬಳಿಕ ಇರಾನ್ ನೌಕಾಪಡೆಯ ಹಡಗಿಗೆ ಕೊಚ್ಚಿ ಬಂದರಿನಲ್ಲಿ ಲಂಗರು ಹಾಕಲು ಭಾರತ ಅನುಮತಿ ನೀಡಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಶನಿವಾರ ಹೇಳಿದ್ದಾರೆ. ಈ ವಲಯದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆಯ ನಡುವೆ ಈ ನಿರ್ಧಾರವನ್ನು ಮಾನವೀಯ ಪ್ರತಿಕ್ರಿಯೆ ಎಂದು ಅವರು ವಿವರಿಸಿದ್ದಾರೆ. ಹೊಸದಿಲ್ಲಿಯಲ್ಲಿ ನಡೆದ ‘ರೈಸಿನಾ ಡಯಲಾಗ್’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇರಾನ್ ನೆರವು ಕೋರಿದ ಬಳಿಕ ಇರಾನ್ನ ಹಡಗು ಐರಿಸ್ ಲಾವನ್ಗೆ ಲಂಗರು ಹಾಕಲು ಭಾರತ ಅನುಮತಿ ನೀಡಿದೆ ಎಂದು ವಿವರಿಸಿದರು. ಫೆಬ್ರವರಿ 15ರಿಂದ ಫೆಬ್ರವರಿ 26ರ ವರೆಗೆ ನಡೆದ ‘ಅಂತರರಾಷ್ಟ್ರೀಯ ಹಡಗು ಪರಿಶೀಲನೆ’ ಹಾಗೂ ಮಿಲನ್ 2026ರಲ್ಲಿ ಇರಾನ್ನ ಪಾಲ್ಗೊಳ್ಳುವಿಕೆಯ ಭಾಗವಾಗಿ ಈ ಹಡಗು ಈ ವಲಯದಲ್ಲಿ ಕಾರ್ಯಾಚರಿಸುತ್ತಿತ್ತು. ಜೈಶಂಕರ್ ಅವರ ಪ್ರಕಾರ, ಐರಿಸ್ ಲಾವನ್ ಭಾರತದ ಜಲಭಾಗದಲ್ಲಿ ಸಂಚರಿಸುತ್ತಿದ್ದಾಗ ತೊಂದರೆ ಎದುರಿಸಿದೆ. ಈ ಹಿನ್ನೆಲೆಯಲ್ಲಿ ಇರಾನ್ ಭಾರತವನ್ನು ಸಂಪರ್ಕಿಸಿದೆ. ಭಾರತ ಈ ಮನವಿಗೆ ಮಾರ್ಚ್ 1ರಂದು ಒಪ್ಪಿಗೆ ನೀಡಿದೆ. ಎಂದು ಬ್ಯಾನರ್ಜಿ ಹೇಳಿದರು.
ಆಳಂದ | 47.50 ಕೋಟಿ ರೂ. ವೆಚ್ಚದ ಸಣ್ಣ ನೀರಾವರಿ ಕಾಮಗಾರಿಗಳಿಗೆ ಸಚಿವ ಭೋಸರಾಜು ಅಡಿಗಲ್ಲು
ಆಳಂದ: ತಾಲೂಕಿನ ರೈತರ ಕೃಷಿಗೆ ನೀರಿನ ಸಿಂಚನ ಒದಗಿಸುವ ಮಹತ್ವದ ಹೆಜ್ಜೆಯಾಗಿ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯಡಿ 2025–26ನೇ ಸಾಲಿನ 4702 ಎಪಿಬಿ ಯೋಜನೆಯಡಿ ಕೈಗೆತ್ತಿಕೊಳ್ಳಲಾದ ಐದು ಪ್ರಮುಖ ಕಾಮಗಾರಿಗಳಿಗೆ ಒಟ್ಟು 47.50 ಕೋಟಿ ರೂ. ವೆಚ್ಚದಲ್ಲಿ ಶಂಕುಸ್ಥಾಪನೆ ನೆರವೇರಿಸಲಾಯಿತು. ಕಾರ್ಯಕ್ರಮಕ್ಕೆ ಸಣ್ಣ ನೀರಾವರಿ ಇಲಾಖೆಯ ಸಚಿವ ಎನ್.ಎಸ್.ಭೋಸರಾಜು ಚಾಲನೆ ನೀಡಿದರು. ಪಟ್ಟಣದ ಎಪಿಎಂಸಿ ಆವರಣದಲ್ಲಿ ಹೊಸ ಬಸ್ ನಿಲ್ದಾಣದ ಸಮೀಪದಲ್ಲಿ ನಡೆದ ಸಮಾರಂಭದಲ್ಲಿ ಯೋಜನೆಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ಪ್ರತಿ ಯೋಜನೆಗೂ ಸುಮಾರು 9.50 ಕೋಟಿ ರೂ. ವೆಚ್ಚ ನಿಗದಿಪಡಿಸಲಾಗಿದ್ದು, ತಾಲೂಕಿನ ವಿವಿಧ ಗ್ರಾಮಗಳಲ್ಲಿ ಕಾಮಗಾರಿಗಳು ಜಾರಿಗೊಳ್ಳಲಿವೆ ಎಂದರು. ಈ ಯೋಜನೆಗಳ ಅನುಷ್ಠಾನದಿಂದ ಸುಮಾರು 2,000 ಹೆಕ್ಟೇರ್ ಕೃಷಿಭೂಮಿ ನೀರಾವರಿ ಸೌಲಭ್ಯಕ್ಕೆ ಒಳಪಡುವುದರಿಂದ ರೈತರ ಕೃಷಿ ಚಟುವಟಿಕೆಗಳಿಗೆ ಮಹತ್ತರ ಉತ್ತೇಜನ ಸಿಗಲಿದೆ ಎಂದು ಸಚಿವರು ತಿಳಿಸಿದರು. ಯೋಜನೆಯಡಿ ಅಣೆಕಟ್ಟು ನಿರ್ಮಾಣ, ನಾಲೆಗಳ ಅಗೆತ ಹಾಗೂ ನೀರಿನ ಹರಿವು ಸುಧಾರಣೆ ಸೇರಿದಂತೆ ಹಲವು ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದೆ. ಖಂಡಾಳ ಗ್ರಾಮದಿಂದ ಮಟಕಿ ನಾಲೆಯವರೆಗೆ ಅಡ್ಡಲಾಗಿ ಅಣೆಕಟ್ಟು ನಿರ್ಮಾಣ, ಬಿಸಿಐಗಳ ನಿರ್ಮಾಣ ಮತ್ತು ನಾಲೆ ಅಗೆತ ಕಾಮಗಾರಿ ನಡೆಯಲಿದೆ. ಇದರಿಂದ ಮಧ್ಯಭಾಗದ ರೈತರಿಗೆ ತಕ್ಷಣದ ಪ್ರಯೋಜನ ದೊರೆಯಲಿದೆ ಎಂದು ಹೇಳಿದರು. ಇದೇ ವೇಳೆ ನಿರಗುಡಿ–ಪಡಸಾವಳಿ ನಾಲೆಯವರೆಗೆ ಐಸಿಐಗಳ ನಿರ್ಮಾಣದೊಂದಿಗೆ ನೀರಿನ ಹರಿವು ಸುಧಾರಣೆ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಬಸವಂತವಾಡಿ ಗ್ರಾಮದಿಂದ ನಿಂಬರ್ಗಾ ನಾಲೆಯವರೆಗೆ ಅಣೆಕಟ್ಟು ನಿರ್ಮಾಣದ ಮೂಲಕ ದಕ್ಷಿಣ ಭಾಗದ ರೈತರ ಭೂಮಿಗಳಿಗೆ ನೀರಿನ ಲಭ್ಯತೆ ಹೆಚ್ಚಾಗಲಿದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಮಾತನಾಡಿದ ರಾಜ್ಯ ನೀತಿ ಮತ್ತು ಯೋಜನಾ ಆಯೋಗದ ಉಪಾಧ್ಯಕ್ಷರು ಹಾಗೂ ಕ್ಷೇತ್ರದ ಶಾಸಕ ಬಿ.ಆರ್.ಪಾಟೀಲ್ ರೈತರಿಗೆ ಸಮರ್ಪಕ ನೀರಾವರಿ ಸೌಲಭ್ಯ ಒದಗಿಸುವುದು ಸರ್ಕಾರದ ಮುಖ್ಯ ಗುರಿಯಾಗಿದೆ. ರೈತರಿಗೆ ನೀರಾವರಿ ದೊರೆತರೆ ಅದಕ್ಕಿಂತ ದೊಡ್ಡ ನೆರವು ಇನ್ನಿಲ್ಲ ಎಂದು ಹೇಳಿದರು. ಜಿಡಗಾ ಶ್ರೀಮಠದ ಕೆರೆ ನಿರ್ಮಾಣಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಜೆಟ್ನಲ್ಲಿ 25 ಕೋಟಿ ರೂ. ಅನುದಾನ ಘೋಷಿಸಿರುವುದನ್ನು ಉಲ್ಲೇಖಿಸಿದ ಅವರು, ಅಂತರ್ಜಲ ಮಟ್ಟ ಹೆಚ್ಚಿಸಲು ಇನ್ನೂ 100 ಕೋಟಿ ಅನುದಾನ ನೀಡುವಂತೆ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದರು. ಪಟ್ಟಣದಲ್ಲಿ ರೈತರ ಬೆಳೆ ಸಂರಕ್ಷಣೆಗೆ ಶೀತಗೃಹ (ಕೋಲ್ಡ್ ಸ್ಟೋರೇಜ್) ನಿರ್ಮಿಸಬೇಕು. ಜೊತೆಗೆ ಎಪಿಎಂಸಿ ಮಾರುಕಟ್ಟೆಯ ಅಭಿವೃದ್ಧಿ ಹಾಗೂ ಸುಧಾರಣೆಗೆ ಹೆಚ್ಚಿನ ಒತ್ತು ನೀಡಬೇಕು ಎಂದು ಅವರು ಅಭಿಪ್ರಾಯಪಟ್ಟರು. ಮಾದನಹಿಪ್ಪರಗಾ ಶ್ರೀ ಶಿವಲಿಂಗೇಶ್ವರ ವಿರಕ್ತ ಮಠದ ಶ್ರೀ ಅಭಿನವ ಶಿವಲಿಂಗ ಮಹಾಸ್ವಾಮಿಗಳು ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು. ಈ ಸಂದರ್ಭದಲ್ಲಿ ಹಿಂದುಳಿದ ವರ್ಗಗಳ ಇಲಾಖೆಯಿಂದ 20 ಮಹಿಳೆಯರಿಗೆ ಹೊಲಿಗೆ ಯಂತ್ರಗಳು ಹಾಗೂ 30 ವಿಕಲಚೇತನರಿಗೆ ತ್ರಿಚಕ್ರ ವಾಹನಗಳನ್ನು ಸಚಿವರು ಹಾಗೂ ಶಾಸಕರು ವಿತರಿಸಿದರು. ಇಲಾಖೆ ರಾಜ್ಯ ಕಾರ್ಯದರ್ಶಿ ಬಿ.ಕೆ. ಪವಿತ್ರಾ, ಮುಖ್ಯ ಇಂಜಿನಿಯರ್ ಹೆಚ್ ಎಲ್. ವೆಂಕಟೇಶ, ಅಧೀಕ್ಷಕ ಸುಭಾಷ ಎಲ್. ಶಿಕ್ಷಣಕರ್, ಅಭಿಯಂತರ ನಾಗನಗೌಡ ವಾಯ್. ಭಾವಿ ಮತ್ತು ಸಹಾಯಕ ಅಭಿಯಂತರ ಶಾಂತಪ್ಪ ಎಸ್. ಜಾಧವ, ಗುತ್ತಿಗೆದಾರ ಎನ್.ವಿ.ಕುಲಕರ್ಣಿ ಆಗಮಿಸಿದ್ದರು. ವೇದಿಕೆಯಲ್ಲಿ ಪಂಚಗ್ಯಾರೆoಟಿ ಸಮಿತಿ ಅಧ್ಯಕ್ಷ ಶಿವುಪುತ್ರಪ್ಪ ಪಾಟೀಲ, ಡಿಸಿಸಿ ನಿರ್ದೇಶಕ ಅಶೋಕ ಸಾವಳೇಶ್ವರ, ತಾಪಂ ಮಾಜಿ ಅಧ್ಯಕ್ಷ ಬಸವರಾಜ ಪವಾಡಶೆಟ್ಟಿ, ಮೋಹನಗೌಡ ಪಾಟೀಲ, ಹಾಪ್ಕಾಮ್ ಅಧ್ಯಕ್ಷ ಗುರುಶಾಂತ ಪಾಟೀಲ ನಿಂಬಾಳ, ಕೃಷಿಕ ಸಮಾಜ ಅಧ್ಯಕ್ಷ ಗುರುಶರಣ ಪಾಟೀಲ ಕೊರಳ್ಳಿ, ತುಕಾರಾಮ ವಗ್ಗೆ, ಶಂಕರರಾವ್ ದೇಶಮುಖ, ಶರಣು ಭೂಸನೂರ, ಮಲ್ಲಪ್ಪ ಹತ್ತರಕಿ, ರಾಜಶೇಖರ ಪಾಟೀಲ ಚಿತಲಿ, ದಯಾನಂದ ಶೇರಿಕಾರ, ಪಾಶಾ ಗುತ್ತೇದಾರ, ಸುಭಾಷ ಫೌಜಿ, ಇಒ ಮಾನಪ್ಪ ಕಟ್ಟಿಮನಿ, ಡಿವೈಎಸ್ಪಿ ತಮರಾಮ ಪಾಟೀಲ ಮತ್ತಿತರರು ಉಪಸ್ಥಿತರಿದ್ದರು. ಜಿಪಂ ಮಾಜಿ ಸದಸ್ಯ ಸಿದ್ಧರಾಮ ಪ್ಯಾಟಿ ಸ್ವಾಗತಿಸಿದರು. ರಾಜಶೇಖರ ಪಾಟೀಲ ನಿರೂಪಿಸಿದರು.
ಭಾರತಕ್ಕಿಲ್ಲ ಇನ್ನು ಇಂಧನ ಕೊರತೆ ಭೀತಿ: ಆಸ್ಪ್ರೇಲಿಯಾ, ಕೆನಡಾದಿಂದ ಹೆಚ್ಚುವರಿ ಕಚ್ಚಾತೈಲ ಪೂರೈಸುವ ಭರವಸೆ
Middle East Conflict- ಮಧ್ಯಪ್ರಾಚ್ಯ ಬಿಕ್ಕಟ್ಟು ಮತ್ತು ಹರ್ಮುಜ್ ಜಲಸಂಧಿ ಬಂದ್ ಆಗಿದ್ದರೂ, ಭಾರತದ ಇಂಧನ ಭದ್ರತೆಗ ಯಾವುದೇ ರೀತಿಯ ಧಕ್ಕೆ ಎದುರಾಗಿಲ್ಲ. ಆಸ್ಟ್ರೇಲಿಯಾ, ಕೆನಡಾ ಸೇರಿದಂತೆ 40ಕ್ಕೂ ಹೆಚ್ಚು ದೇಶಗಳೊಂದಿಗೆ ಭಾರತ ಪೂರೈಕೆ ಜಾಲವನ್ನು ಇದೀಗ ವಿಸ್ತರಿಸಿಕೊಂಡಿದೆ. ನೆರೆರಾಷ್ಟ್ರ ಪಾಕಿಸ್ತಾನ, ಜರ್ಮನಿ ಸೇರಿದಂತೆ ಜಾಗತಿಕವಾಗಿ ಪೆಟ್ರೋಲ್ ಬೆಲೆ ಗಗನಕ್ಕೇರಿದ್ದರೂ, ಭಾರತದಲ್ಲಿ ತೈಲ ಬೆಲೆ ಸ್ಥಿರವಾಗಿರುವುದು ವಿಶೇಷ. ಆದರೆ ಕೇಂದ್ರ ಸರ್ಕಾರದ ದೂರದೃಷ್ಟಿಯ ಕ್ರಮಗಳಿಂದಾಗಿ ದೇಶದಲ್ಲಿ ಇಂಧನ ಬಿಕ್ಕಟ್ಟು ಎದುರಾಗುವ ಸಾಧ್ಯತೆಯಿಲ್ಲ.
Shubman Gill: ಭಾರತೀಯ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರ ಪುತ್ರ ಅರ್ಜುನ್ ತೆಂಡೂಲ್ಕರ್ ಅವರ ವಿವಾಹ ಸಮಾರಂಭಕ್ಕೆ ಟೀಂ ಇಂಡಿಯಾ ತಂಡದ ನಾಯಕ ಶುಭ್ಮನ್ ಗಿಲ್ ಹಾಜರಾಗದಿರುವುದು ಇದೀಗ ಚರ್ಚೆಗೆ ಗ್ರಾಸವಾಗಿದೆ. ಈ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಮತ್ತೊಂದು ಸ್ವರೂಪ ಪಡೆದುಕೊಂಡಿದ್ದು, ನೆಟ್ಟಿಗರು ಹಲವು ರೀತಿಯಲ್ಲಿ ಪ್ರಶ್ನೆ ಮಾಡುತ್ತಿದ್ದಾರೆ. ಅರ್ಜುನ್ ತೆಂಡೂಲ್ಕರ್ ಅವರ ವಿವಾಹ ಸಮಾರಂಭ
ಎಎಫ್ಸಿ ಮಹಿಳಾ ಫುಟ್ಬಾಲ್ ಏಶ್ಯನ್ ಕಪ್ ಪಂದ್ಯಾವಳಿ | ಭಾರತವನ್ನು 11–0 ಗೋಲಿನಿಂದ ಸೋಲಿಸಿದ ಜಪಾನ್
ಪರ್ತ್ (ಆಸ್ಟ್ರೇಲಿಯ), ಮಾ. 7: ಎಎಫ್ಸಿ ಮಹಿಳಾ ಫುಟ್ಬಾಲ್ ಏಶ್ಯನ್ ಕಪ್ ಪಂದ್ಯಾವಳಿಯಲ್ಲಿ ಶನಿವಾರ ಜಪಾನ್ ತಂಡವು ಭಾರತವನ್ನು 11–0 ಗೋಲುಗಳ ಅಂತರದಿಂದ ಸೋಲಿಸಿದೆ. ಆಸ್ಟ್ರೇಲಿಯದ ಪರ್ತ್ ರೆಕ್ಟಾಂಗ್ಯುಲರ್ ಸ್ಟೇಡಿಯಮ್ನಲ್ಲಿ ನಡೆದ ಪಂದ್ಯದಲ್ಲಿ ಭಾರತೀಯ ಮಹಿಳೆಯರು ಯಾವುದೇ ಪ್ರತಿರೋಧ ತೋರಿಸಲು ವಿಫಲರಾದರು. ಇದು ಈ ಪಂದ್ಯಾವಳಿಯ ಇತಿಹಾಸದಲ್ಲಿ ಭಾರತೀಯ ಮಹಿಳೆಯರ ಎರಡನೇ ಅತಿ ದೊಡ್ಡ ಸೋಲಾಗಿದೆ. ಇದಕ್ಕೂ ಮೊದಲು, 2003ರ ಆವೃತ್ತಿಯಲ್ಲಿ ಚೀನಾ ಮಹಿಳೆಯರು ಭಾರತವನ್ನು 12–0 ಗೋಲುಗಳ ಅಂತರದಿಂದ ಸೋಲಿಸಿದ್ದರು. ಮ್ಯಾಂಚೆಸ್ಟರ್ ಯುನೈಟೆಡ್ ತಂಡದ ಆಟಗಾರ್ತಿ ಹಿನಟ ಮಿಯಝಾವ ಮತ್ತು ವೆಸ್ಟ್ ಹ್ಯಾಮ್ ಯುನೈಟೆಡ್ ತಂಡದ ಆಟಗಾರ್ತಿ ರಿಕೊ ಯೂಕಿ ಹ್ಯಾಟ್ರಿಕ್ ಗೋಲುಗಳನ್ನು ಬಾರಿಸಿದರು. ಜಪಾನ್ ತಂಡದ ನಾಯಕಿ ಯೂ ಹಸೆಗವ ಮತ್ತು ಕಿಕೊ ಸೈಕೆ ತಲಾ ಅವಳಿ ಗೋಲುಗಳನ್ನು ಬಾರಿಸಿದರು. ಮಾಯಾ ಹಿಜಿಕಟ ಒಂದು ಗೋಲು ದಾಖಲಿಸಿದರು. 2011ರ ಫಿಫಾ ವಿಶ್ವಕಪ್ ಚಾಂಪಿಯನ್ ಜಪಾನ್ 78 ಶೇಕಡಾ ಸಮಯ ಚೆಂಡಿನ ಮೇಲೆ ನಿಯಂತ್ರಣ ಹೊಂದಿತ್ತು. ಅದು ಗೋಲುಗಳಿಗಾಗಿ 36 ಪ್ರಯತ್ನಗಳನ್ನು ಮಾಡಿತು. ಭಾರತ ಗೋಲಿಗಾಗಿ ಒಂದೂ ಪ್ರಯತ್ನವನ್ನು ಮಾಡಲಿಲ್ಲ.
ಇಂಗ್ಲೆಂಡ್, ದಕ್ಷಿಣ ಆಫ್ರಿಕ ಮತ್ತು ವೆಸ್ಟ್ ಇಂಡೀಸ್ ತಂಡಗಳ ಸ್ವದೇಶ ಪ್ರಯಾಣಕ್ಕೆ ವಿಶೇಷ ವಿಮಾನ
ಮುಂಬೈ, ಮಾ. 7: ಪಶ್ಚಿಮ ಏಶ್ಯದಲ್ಲಿ ನೆಲೆಸಿರುವ ಸಂಘರ್ಷ ಪರಿಸ್ಥಿತಿಯಿಂದಾಗಿ ವಿಮಾನಗಳ ಹಾರಾಟ ಸ್ಥಗಿತವಾಗಿರುವ ಹಿನ್ನೆಲೆಯಲ್ಲಿ, ಭಾರತದಲ್ಲಿ ಸಿಕ್ಕಿಹಾಕಿಕೊಂಡಿರುವ ಇಂಗ್ಲೆಂಡ್, ದಕ್ಷಿಣ ಆಫ್ರಿಕ ಮತ್ತು ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡಗಳ ಸ್ವದೇಶ ಪ್ರಯಾಣಕ್ಕೆ ಅಂತರ್ರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ)ಯು ವಿಶೇಷ ವಿಮಾನಗಳ ಏರ್ಪಾಡು ಮಾಡಿದೆ. ಈ ತಂಡಗಳು ವಾರಾಂತ್ಯದಲ್ಲಿ ತಮ್ಮ ದೇಶಗಳಿಗೆ ಪ್ರಯಾಣಿಸಲಿವೆ. ಅಮೆರಿಕ ಮತ್ತು ಇಸ್ರೇಲ್ ಇರಾನ್ ಮೇಲೆ ನಡೆಸುತ್ತಿರುವ ವಾಯು ದಾಳಿಗಳು ಹಾಗೂ ಅದಕ್ಕೆ ಪ್ರತಿಯಾಗಿ ಇರಾನ್ ತನ್ನ ನೆರೆ ದೇಶಗಳ ಮೇಲೆ ನಡೆಸುತ್ತಿರುವ ಕ್ಷಿಪಣಿ ದಾಳಿಗಳಿಂದಾಗಿ ಪಶ್ಚಿಮ ಏಶ್ಯ ತತ್ತರಿಸಿದ್ದು, ವಿಮಾನಗಳ ಹಾರಾಟ ಸ್ಥಗಿತಗೊಂಡಿದೆ. ಇಂಗ್ಲೆಂಡ್ ತಂಡದ ಸದಸ್ಯರು ಶನಿವಾರ ಸಂಜೆ ವಿಶೇಷ ವಿಮಾನವೊಂದರಲ್ಲಿ ಸ್ವದೇಶಕ್ಕೆ ಪ್ರಯಾಣಿಸಲಿದ್ದಾರೆ ಎಂಬುದಾಗಿ ಮೂಲವೊಂದನ್ನು ಉಲ್ಲೇಖಿಸಿ ಪಿಟಿಐ ವರದಿ ಮಾಡಿದೆ. ಗುರುವಾರ ನಡೆದ ಎರಡನೇ ಸೆಮಿಫೈನಲ್ ನಲ್ಲಿ ಇಂಗ್ಲೆಂಡ್ ತಂಡವು ಭಾರತದ ವಿರುದ್ಧ ಸೋಲನುಭವಿಸಿತ್ತು. ಟಿ20 ವಿಶ್ವಕಪ್ ನಲ್ಲಿ ವೆಸ್ಟ್ ಇಂಡೀಸ್ ಮತ್ತು ದಕ್ಷಿಣ ಆಫ್ರಿಕ ತಂಡಗಳ ಅಭಿಯಾನ ಕೊನೆಗೊಂಡಿದ್ದರೂ, ವಿಮಾನ ಹಾರಾಟ ಸ್ಥಗಿತದ ಹಿನ್ನೆಲೆಯಲ್ಲಿ ಅವುಗಳೂ ಭಾರತದಲ್ಲೇ ಉಳಿದುಕೊಂಡಿವೆ. ಕೋಲ್ಕತಾದಲ್ಲಿ ರವಿವಾರ ನಡೆದ ಸೂಪರ್ ಎಂಟು ಪಂದ್ಯದಲ್ಲಿ ಭಾರತದ ವಿರುದ್ಧ ಸೋಲುವ ಮೂಲಕ ವೆಸ್ಟ್ ಇಂಡೀಸ್ನ ಅಭಿಯಾನ ಕೊನೆಗೊಂಡಿತ್ತು. ಬುಧವಾರ ನಡೆದ ಮೊದಲ ಸೆಮಿಫೈನಲ್ನಲ್ಲಿ ನ್ಯೂಝಿಲ್ಯಾಂಡ್ ವಿರುದ್ಧ ಸೋತ ಬಳಿಕ ದಕ್ಷಿಣ ಆಫ್ರಿಕದ ಅಭಿಯಾನ ಕೊನೆಗೊಂಡಿತ್ತು. ದಕ್ಷಿಣ ಆಫ್ರಿಕ ಮತ್ತು ವೆಸ್ಟ್ ಇಂಡೀಸ್ ಆಟಗಾರರು ಇನ್ನೊಂದು ವಿಶೇಷ ವಿಮಾನದಲ್ಲಿ ಕೋಲ್ಕತಾದಿಂದ ಜೊತೆಯಾಗಿ ಪ್ರಯಾಣಿಸಲಿದ್ದಾರೆ. ಎರಡು ತಂಡಗಳು ಮೊದಲು ಜೊಹಾನ್ಸ್ಬರ್ಗ್ಗೆ ಪ್ರಯಾಣಿಸಲಿವೆ. ಅಲ್ಲಿಂದ ವೆಸ್ಟ್ ಇಂಡೀಸ್ ಆಟಗಾರರು ಆಂಟಿಗಾಗೆ ಪ್ರಯಾಣವನ್ನು ಮುಂದುವರಿಸಲಿದ್ದಾರೆ. ಈ ವಿಮಾನವು ರವಿವಾರ ಕೋಲ್ಕತಾದಿಂದ ಹೊರಡುವ ನಿರೀಕ್ಷೆಯಿದೆ.
38ನೇ ಕಳ್ತೂರು ಸಂತೆಕಟ್ಟೆಯಲ್ಲಿ ಸುಸಜ್ಜಿತ ಸಾರ್ವಜನಿಕ ರುದ್ರಭೂಮಿ ನಿರ್ಮಾಣ: ಮಾ.8ರಂದು ಲೋಕಾರ್ಪಣೆ
ಉಡುಪಿ, ಮಾ.7: ಹೆಬ್ರಿಗೆ ಸಮೀಪದ ಗ್ರಾಮೀಣ ಪ್ರದೇಶವಾದ 38ನೇ ಕಳ್ತೂರು ಸಂತೆಕಟ್ಟೆಯಲ್ಲಿ ದಾನಿಗಳ ನೆರವಿನಿಂದಲೇ ಸುಮಾರು 30 ಲಕ್ಷ ರೂ. ವೆಚ್ಚದಲ್ಲಿ ಸುಸಜ್ಜಿತ ಸಾರ್ವಜನಿಕ ಹಿಂದೂ ರುದ್ರಭೂಮಿ ನಿರ್ಮಾಣ ಗೊಂಡಿದ್ದು ಮಾ.8ರಂದು ರವಿವಾರ ಇದು ಲೋಕಾರ್ಪಣೆಗೊಳ್ಳಲಿದೆ. ಕಳ್ತೂರು ಸಂತೆಕಟ್ಟೆಯಲ್ಲಿ ಈ ಮೊದಲು ಸ್ಮಶಾನ ಇದ್ದಿರಲಿಲ್ಲ. ದೂರದ ಕೊಕ್ಕರ್ಣೆ, ಹೆಬ್ರಿಗೆ ಇದಕ್ಕಾಗಿ ಹೋಗ ಬೇಕಿತ್ತು. ಕಳ್ತೂರು ಸಂತೆಕಟ್ಟೆಯಲ್ಲೂ ಸುಸಜ್ಜಿತವಾದ ರುದ್ರಭೂಮಿಯನ್ನು ನಿರ್ಮಿಸುವ ಸಂಕಲ್ಪ ಈಗ ಈಡೇರಿದೆ. ‘ನಮ್ಮೂರಿನ ಜನರಲ್ಲಿ ಇನ್ನೂ ಕೂಡ ಸ್ಮಶಾನದ ಬಗೆಗೆ ಭಯವಿದೆ. ಹಾಗಾಗಿ ಸ್ಮಶಾನ ಪುಣ್ಯದ ಭೂಮಿ ಎಂಬ ಪರಿಕಲ್ಪನೆಯಲ್ಲಿ ಜನರ ಭಯ ದೂರವಾಗಿಸಲು ಭವ್ಯವಾಗಿ ಸಕಲ ವ್ಯವಸ್ಥೆಯೊಂದಿಗೆ ರುದ್ರಭೂಮಿಯನ್ನು ಎಲ್ಲರ ಸಹಕಾರದೊಂದಿಗೆ ನಿರ್ಮಾಣ ಮಾಡಿದ್ದೇವೆ’ ಎಂದು 38ನೇ ಕಳ್ತೂರು ಸಂತೆಕಟ್ಟೆಯ ಸ್ಮಶಾನ ಅಭಿವೃದ್ಧಿ ಸಮಿತಿ ಅಧ್ಯಕ್ಷ ರುಧ್ರಭೂಮಿ ನಿರ್ಮಾಣದ ರೂವಾರಿ ಬಿ.ಚಂದ್ರಶೇಖರ ಶೆಟ್ಟಿ ತಿಳಿಸಿದರು. 78 ಸೆನ್ಸ್ ಜಾಗವನ್ನು ಸಾರ್ವಜನಿಕ ಹಿಂದೂ ರುದ್ರಭೂಮಿಗಾಗಿಯೇ ಕಾದಿರಿಸಿ ಆದೇ ಜಾಗದಲ್ಲಿ ಸಾರ್ವಜನಿಕ ಹಿಂದೂ ಭೂಮಿಯನ್ನು ನಿರ್ಮಿಸ ಲಾಗಿದೆ. 2005ರಿಂದ 2010 ರ ತನಕ ಗ್ರಾಮ ಪಂಚಾಯಿತಿ ಸದಸ್ಯನಾಗಿ ಸ್ಮಶಾನ ನಿರ್ಮಾಣದ ಕನಸು ಕಂಡಿದ್ದೆ. 2021ರಲ್ಲಿ ಸದಸ್ಯನಾಗಿ ಸ್ಮಶಾನ ನಿರ್ಮಾಣಕ್ಕೆ ವಿಶೇಷ ಯೋಜನೆಯನ್ನು ಸಿದ್ಧಪಡಿಸಿ ದಾನಿಗಳಲ್ಲಿ ಮೂಲಕ ಈ ಯೋಜನೆ ಇದೀಗ ಕಾರ್ಯಗತಗೊಂಡಿರುವುದು ಸಂತೋಷ ತಂದಿದೆ ಎಂದು ಚಂದ್ರಶೇಖರ ಶೆಟ್ಟಿ ನುಡಿದರು. ಸಂತೇಕಟ್ಟೆಯ ಉದ್ಯಮಿಗಳಾದ ಎ.ಪ್ರಶಾಂತ್ ಕಾಮತ್ ಮತ್ತು ಮಾಧವ ಕಾಮತ್ ಅವರು ತಂದೆ ಆರ್ಬೆಟ್ಟು ವೆಂಕಟೇಶ ಕಾಮತ್ರ ನೆನಪಿನಲ್ಲಿ ಸುಸಜ್ಜಿತ ಹಿಂದೂ ರುದ್ರಭೂಮಿಯನ್ನು ನಿರ್ಮಿಸಿಕೊಟ್ಟಿದ್ದಾರೆ. ಕಳ್ತೂರು ಗ್ರಾಪಂ ವತಿಯಿಂದ ಜಾಗದ ಸಮತಟ್ಟು ಕಾರ್ಯ ಮತ್ತು ನೀರಿನ ವ್ಯವಸ್ಥೆ ಯನ್ನು ಮಾಡಲಾಗಿದೆ. ವಿಧಾನಪರಿಷತ್ ಸದಸ್ಯ ಮಂಜುನಾಥ ಭಂಡಾರಿ 2 ಲಕ್ಷ ರೂ. ಅನುದಾನ ನೀಡಿದ್ದಾರೆ. ರುದ್ರಭೂಮಿಯಲ್ಲಿ ಈಗಾಗಲೇ ಒಂದು ಸಿಲಿಕಾನ್ ಛೇಂಬರ್ ಶೆಡ್ನ್ನು ಸುಸಜ್ಜಿತವಾಗಿ ನಿರ್ಮಿಸಲಾಗಿದೆ. ಮತ್ತೊಂದು ಸಿಲಿಕಾನ್ ಛೇಂಬರ್ ಶೆಡ್ನ್ನು ಶ್ರೀಕ್ಷೇತ್ರ ಧರ್ಮಸ್ಥಳ ಯೋಜನೆಯ ವತಿಯಿಂದ ನಿರ್ಮಿಸಲಾಗುತ್ತದೆ. ಯೋಜನೆಯ ಹೆಬ್ರಿ ತಾಲ್ಲೂಕು ಯೋಜನಾಧಿಕಾರಿಯವರು ಸ್ಥಳಕ್ಕೆ ಬೇಟಿ ನೀಡಿ ಪರಿಶೀಲಿಸಿದ್ದಾರೆ. ಅತೀ ಶೀಘ್ರವಾಗಿ ಇದು ನಿರ್ಮಾಣಗೊಳ್ಳಲಿದೆ. ವಿಶಾಲ ಜಾಗದಲ್ಲಿ ದಿ.ಆರ್ಬೆಟ್ಟು ವೆಂಕಟೇಶ ಕಾಮತ್ ಹಿಂದೂ ರುದ್ರಭೂಮಿ ನಿರ್ಮಾಣಗೊಂಡಿದೆ. ಆವರಣ ಗೋಡೆ, ಸುತ್ತಲು ಗಿಡಗಳನ್ನು ನೆಡಲಾಗಿದೆ. ನೀರಿನ ವ್ಯವಸ್ಥೆ, ವಿಶ್ರಾಂತಿ ಕೊಠಡಿ, ಶೌಚಾಲಯ ಸೇರಿ ಸಕಲ ವ್ಯವಸ್ಥೆಯನ್ನು ನಿರ್ಮಾಣ ಮಾಡಲಾಗಿದೆ. ಧಾರ್ಮಿಕ ಕೇಂದ್ರದ ಪರಿಕಲ್ಪನೆಯಲ್ಲೇ ರುದ್ರಭೂಮಿಯ ನಿರ್ಮಾಣ ವಾಗಿದೆ. ರುದ್ರಭೂಮಿಯ ಪ್ರವೇಶದ್ವಾರದಲ್ಲಿ ಕಾವಲುಗಾರನ ಪ್ರತಿಮೆ ನಿರ್ಮಿಸಲಾಗಿದೆ. ಎಡಬದಿ ಯಲ್ಲಿ ಶಿವನ ಮೂರ್ತಿಯನ್ನು ನಿರ್ಮಿಸಲಾಗಿದೆ. ಸ್ಮಶಾನ ಅಭಿವೃದ್ಧಿ ಸಮಿತಿ ನಿರ್ವಹಣೆ: ಸ್ಮಶಾನ ಅಭಿವೃದ್ಧಿ ಸಮಿತಿಯನ್ನು ನಿಯಮನುಸಾರ ನೊಂದಾವಣೆ ಮಾಡಲಾಗಿದ್ದು 38ನೇ ಕಳ್ತೂರು ಗ್ರಾಮ ಪಂಚಾಯಿತಿಯ ಸಹಕಾರದೊಂದಿಗೆ ಸಮಿತಿಯೇ ಸ್ಮಶಾನವನ್ನು ನಿರ್ವಹಣೆ ಮಾಡಲಿದೆ ಎಂದು ಸಮಿತಿಯ ಅಧ್ಯಕ್ಷ ಚಂದ್ರಶೇಖರ ಶೆಟ್ಟಿ ತಿಳಿಸಿದ್ದಾರೆ. ಮಾರ್ಚ್ 8 ಲೋಕಾರ್ಪಣೆ: 38ನೇ ಕಳ್ತೂರು ಗ್ರಾಮ ಪಂಚಾಯಿತಿ ಮತ್ತು ಸ್ಮಶಾನ ಅಭಿವೃದ್ಧಿ ಸಮಿತಿ ಸಹಯೋಗ ದೊಂದಿಗೆ ಕಳ್ತೂರು ಸಂತೆಕಟ್ಟೆ ಕೊಂಬೆ ರಸ್ತೆಯಲ್ಲಿ ನಿರ್ಮಾಣಗೊಂಡ ಆರ್ಬೆಟ್ಟು ವೆಂಕಟೇಶ ಕಾಮತ್ ಸಾರ್ವಜನಿಕ ಹಿಂದೂ ರುದ್ರಭೂಮಿಯ ಉದ್ಘಾಟನೆ ಮಾರ್ಚ್ 8ರಂದು ಸಂಜೆ 4 ಗಂಟೆಗೆ ನಡೆಯಲಿದೆ. ದಾನಿಗಳು, ಜಿಲ್ಲೆಯ ಜನಪ್ರತಿನಿಧಿಗಳು, ಅಧಿಕಾರಿಗಳು, ಗಣ್ಯರು, ಸಂಘಸಂಸ್ಥೆಗಳ ಪ್ರಮುಖರು, ಗ್ರಾಮಸ್ಥರು, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರಮುಖರು ಭಾಗವಹಿಸುವರು ಎಂದು ಸಮಿತಿ ತಿಳಿಸಿದೆ.
Thane | ಸಾಮಾಜಿಕ ಮಾಧ್ಯಮ ಪ್ರಭಾವಿಯ ಹೌಸಿಂಗ್ ಸೊಸೈಟಿ ಮೇಲೆ ಗುಂಡಿನ ದಾಳಿ, ಓರ್ವನ ಬಂಧನ
ಥಾಣೆ, ಮಾ. 7: ಉದ್ಯಮಿ ಹಾಗೂ ಸಾಮಾಜಿಕ ಮಾಧ್ಯಮ ಪ್ರಭಾವಿಯೊಬ್ಬರ ಹೌಸಿಂಗ್ ಸೊಸೈಟಿ ಮೇಲೆ ಶನಿವಾರ ಮುಂಜಾನೆ ದುಷ್ಕರ್ಮಿಗಳು ಗುಂಡು ಹಾರಿಸಿದ ಘಟನೆ ಮಹಾರಾಷ್ಟ್ರದ ಠಾಣೆ ಜಿಲ್ಲೆಯಲ್ಲಿ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಶಹಬಾದ್ ಅಲಿಯಾಸ್ ಶಂಭು ಮುನ್ನಾ ಶಂಶದ್ ಖುರೇಶಿ (28)ಯನ್ನು ಬಂಧಿಸಿದ್ದಾರೆ. ಪೊಲೀಸರ ತಂಡ ಶಿಲ್ ದಾಯಿಗಡ್ ಬೀದಿಯಲ್ಲಿ ಬೆನ್ನಟ್ಟಿದಾಗ ಆತ ಐದು ಸುತ್ತು ಗುಂಡು ಹಾರಿಸಿದ್ದಾನೆ. ಇದರಿಂದ ಬೀದಿಯಲ್ಲಿದ್ದ ಇಬ್ಬರು ಗಾಯಗೊಂಡಿದ್ದಾರೆ ಎಂದು ಅವರು ತಿಳಿಸಿದ್ದಾರೆ. ಖುರೇಶಿ ಹಾಗೂ ಇನ್ನೋರ್ವ ಆರೋಪಿ ಮುಂಬ್ರಾದ ಕೌಸಾ ಪ್ರದೇಶದಲ್ಲಿ ವಾಸಿಸುತ್ತಿರುವ ಉದ್ಯಮಿ ಹಾಗೂ ಸಾಮಾಜಿಕ ಮಾಧ್ಯಮ ಪ್ರಭಾವಿ ನದೀಮ್ ಮೊಯಿನುದ್ದೀನ್ ಖಾನ್ (45) ಅಲಿಯಾಸ್ ಬಾಬಾ ಖಾನ್ ಅವರ ಹೌಸಿಂಗ್ ಸೊಸೈಟಿ ಮೇಲೆ ಗುಂಡು ಹಾರಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಎರಡು ಗುಂಡುಗಳು ಖಾನ್ ಅವರ ಕಾರನ್ನು ಹಾನಿಗೊಳಿಸಿವೆ. ಗಾಳಿಯಲ್ಲಿ ಒಂದು ಗುಂಡು ಹಾರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸ್ಥಳ ಪರಿಶೀಲನೆ ನಡೆಸಿದ ಕೂಡಲೇ ತನಿಖಾ ತಂಡ ಕಾರ್ಯಾಚರಣೆ ಆರಂಭಿಸಿತು ಹಾಗೂ ಖುರೇಶಿಯನ್ನು ಬಂಧಿಸಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಖಿಲ ಭಾರತ ಅಂತರ್ ವಿವಿ ದೇಹದಾರ್ಢ್ಯ ಸ್ಪರ್ಧೆ: ಮಂಗಳೂರು ವಿ.ವಿ ಚಾಂಪಿಯನ್
ಆಳ್ವಾಸ್ ಕಾಲೇಜಿನ ಕಿಶನ್ ಶೆಟ್ಟಿಗೆ ಚಿನ್ನದ ಪದಕ, ಪ್ರಥಮ್ ಪೂಜಾರಿಗೆ ಬೆಳ್ಳಿಯ ಪದಕ
ರೋಗ ಗುರುತಿಸುವಿಕೆ ಹಾಗೂ ಚಿಕಿತ್ಸೆ ಕ್ಷೇತ್ರದಲ್ಲಿ ಮಹತ್ತರ ಬದಲಾವಣೆ ಅಗತ್ಯ: ಡಾ. ಆಶಾ ಕಿಶೋರ್
ಅಂತರರಾಷ್ಟ್ರೀಯ ನರವಿಜ್ಞಾನ ರೋಗನಿರೋಧಕ ಕಾರ್ಯಾಗಾರ
Assam | ಬಾಂಗ್ಲಾದೇಶಿ ವಲಸಿಗ, ವಿದೇಶಿ ಎಂದು ಘೋಷಿಸಲಾಗಿದ್ದ ಮಹಿಳೆಗೆ CAA ಮೂಲಕ ಪೌರತ್ವ!
ಗುವಾಹಟಿ, ಮಾ. 7: ಅಸ್ಸಾಂನ ಕಛಾರ್ ಜಿಲ್ಲೆಯಲ್ಲಿ ವಿದೇಶಿ ಎಂದು ಘೋಷಿಸಿದ ಬಳಿಕ ಎರಡು ವರ್ಷಗಳ ಕಾಲ ಬಂಧನದಲ್ಲಿದ್ದ ಮಹಿಳೆಗೆ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಅಡಿ ಭಾರತೀಯ ಪೌರತ್ವ ನೀಡಲಾಗಿದೆ ಎಂದು ಅವರ ವಕೀಲರು ತಿಳಿಸಿದ್ದಾರೆ. ಈ ಮಹಿಳೆಯನ್ನು 59 ವರ್ಷದ ದೀಪಾಲಿ ದಾಸ್ ಎಂದು ಗುರುತಿಸಲಾಗಿದೆ. ಇವರು ಧೊಲಾಯಿ ವಿಧಾನಸಭಾ ಕ್ಷೇತ್ರದ ಹವಾಯ್ತಾಂಗ್ ಪ್ರದೇಶದ ನಿವಾಸಿ. ಇವರನ್ನು 2019ರ ಫೆಬ್ರವರಿಯಲ್ಲಿ ವಿದೇಶಿಗರ ನ್ಯಾಯಮಂಡಳಿ (ಎಫ್ಟಿ) ಅಕ್ರಮ ವಲಸಿಗರೆಂದು ಘೋಷಿಸಿತ್ತು. ಅಸ್ಸಾಂನಲ್ಲಿ ದೀಪಾಲಿ ಅವರನ್ನು ಮೊಟ್ಟಮೊದಲು ವಿದೇಶಿ ಎಂದು ಘೋಷಿಸಲಾಗಿತ್ತು. ನ್ಯಾಯಮಂಡಳಿ ಘೋಷಿಸಿದ ಬಳಿಕ ಪೊಲೀಸರು ಅವರನ್ನು ಬಂಧಿಸಿದ್ದರು. ಅದೇ ವರ್ಷ ಮೇ 10ರಂದು ಅವರನ್ನು ಸಿಲ್ಚಾರ್ ಬಂಧನ ಕೇಂದ್ರಕ್ಕೆ ಕಳುಹಿಸಿದ್ದರು. ಸುಪ್ರೀಂ ಕೋರ್ಟ್ನ ಆದೇಶದ ಹಿನ್ನೆಲೆಯಲ್ಲಿ 2021ರ ಮೇ 17ರಂದು ಜಾಮೀನಿನಲ್ಲಿ ಬಿಡುಗಡೆಯಾಗುವವರೆಗೆ ಎರಡು ವರ್ಷಗಳ ಕಾಲ ಅವರು ಬಂಧನ ಕೇಂದ್ರದಲ್ಲಿದ್ದರು ಎಂದು ಅವರ ವಕೀಲ ಧರ್ಮಾನಂದ ದೇಬ್ ತಿಳಿಸಿದ್ದಾರೆ. ದೀಪಾಲಿ ಅವರು ಮೂಲತಃ ಬಾಂಗ್ಲಾದೇಶದ ಸಿಲೆಟ್ ಜಿಲ್ಲೆಯ ಧಿರೈ ಪೊಲೀಸ್ ಠಾಣಾ ವ್ಯಾಪ್ತಿಯ ದಿಪ್ಪುರ್ ಗ್ರಾಮದ ನಿವಾಸಿ. ಅವರು ಹಬಿಗಂಜ್ ಜಿಲ್ಲೆಯ ಬನಿಯಾಚೋಂಗ್ ಪೊಲೀಸ್ ಠಾಣಾ ವ್ಯಾಪ್ತಿಯ ಪರಾಯಿ ಗ್ರಾಮದ ಅಭಿಮನ್ಯು ದಾಸ್ ಅವರನ್ನು 1987ರಲ್ಲಿ ವಿವಾಹವಾಗಿದ್ದರು. ಈ ದಂಪತಿ 1988ರಲ್ಲಿ ಭಾರತ ಪ್ರವೇಶಿಸಿದ್ದರು. ಕಛಾರ್ ಜಿಲ್ಲೆಗೆ ತೆರಳಿದ್ದರು. ಅನಂತರ ಅವರು ಅಲ್ಲೇ ವಾಸಿಸುತ್ತಿದ್ದರು ಎಂದು ಅವರು ತಿಳಿಸಿದ್ದಾರೆ.
ರಾಜ್ಯದಲ್ಲಿ ನೋಂದಣಿಯಾದ ಸ್ಟಾರ್ಟಪ್ ಗಳು 4000 ಕ್ಕೂ ಅಧಿಕ, ಸೃಷ್ಟಿಯಾದ ಉದ್ಯೋಗ 8190
ರಾಜ್ಯದಲ್ಲಿ ಸ್ಟಾರ್ಟಪ್ ಉದ್ಯಮಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡಲಾಗುತ್ತದೆ. ಒಂದು ಕಡೆಯಲ್ಲಿ ಯುವಜನರಲ್ಲಿ ನಿರುದ್ಯೋಗ ದೊಡ್ಡ ಪ್ರಮಾಣದಲ್ಲಿದೆ. ಸರ್ಕಾರಿ ನೇಮಕಾತಿಗಳು ಆಗುತ್ತಿಲ್ಲ. ಈ ನಡುವೆ ರಾಜ್ಯದಲ್ಲಿ ನೋಂದಣಿಯಾದ ಸ್ಟಾರ್ಟಪ್ ಗಳು 4000 ಕ್ಕೂ ಅಧಿಕ ಇವೆ. ಸ್ಟಾರ್ಟ್ ಅಪ್ ಗಳಿಂದ 8,190 ರಷ್ಟು ಉದ್ಯೋಗ ಸೃಷ್ಟಿಯಾಗಿವೆ ಎಂದು ಸರ್ಕಾರ ಮಾಹಿತಿ ನೀಡಿದೆ. ಕರ್ನಾಟಕ ನಾವೀನ್ಯತೆ ಮತ್ತು ತಂತ್ರಜ್ಞಾನ ಸೊಸೈಟಿ ಅಧೀನದಲ್ಲಿ 4000 ಕ್ಕೂ ಹೆಚ್ಚು ಸ್ಟಾರ್ಟಪ್ ಗಳು ನೋಂದಾಣಿ ಆಗಿವೆ. ನೋಂದಣಿ ಮಾಡಲು ಕೆಲವೊಂದು ಮಾನದಂಡಗಳು ಇವೆ. ಹಾಗಾದರೆ ಯಾವ ಜಿಲ್ಲೆಯಲ್ಲಿ ಎಷ್ಟು ಉದ್ಯೋಗ ಸೃಷ್ಟಿಯಾಗಿವೆ ಸ್ಟಾರ್ಟ್ ಅಪ್ ಗಳಿಂದ? ಇಲ್ಲಿದೆ ಮಾಹಿತಿ.
ಕಲಬುರಗಿ | ಎಮ್.ಎನ್.ದೇಸಾಯಿ ಕಾಲೇಜಿನಲ್ಲಿ ಕೃತಕ ಬುದ್ಧಿಮತ್ತೆ (ಎಐ) ಕಾರ್ಯಾಗಾರ
ಕಲಬುರಗಿ : ನಗರದ ಎಮ್.ಎನ್.ದೇಸಾಯಿ ಪದವಿ ಮಹಾವಿದ್ಯಾಲಯದಲ್ಲಿ ಇತ್ತೀಚೆಗೆ 'ಕೃತಕ ಬುದ್ಧಿಮತ್ತೆ ಮತ್ತು ಭವಿಷ್ಯದ ತಂತ್ರಜ್ಞಾನ' ಎಂಬ ವಿಶೇಷ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಯತಿಕಾರ್ಪ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ನ ಸಂಸ್ಥಾಪಕ ಮತ್ತು ಸಿಇಒ ಯತೀಶ್ ಕೆ.ಎಸ್. ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಇಂದಿನ ಯುಗದಲ್ಲಿ ಎಐ ಕೇವಲ ಇಂಜಿನಿಯರ್ಗಳಿಗೆ ಸೀಮಿತವಾಗಿಲ್ಲ, ಎಲ್ಲರಿಗೂ ಸಂಬಂಧಿಸಿದ್ದಾಗಿದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಯತಿಕಾರ್ಪ್ ನ ನೂತನ ಎಐ ಕಾರ್ಡ್ ಅನ್ನು ಪರಿಚಯಿಸಲಾಯಿತು. ಯಾವುದೇ ತಾಂತ್ರಿಕ ಹಿನ್ನೆಲೆ ಇಲ್ಲದ ಕಲಾ ಮತ್ತು ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳು ಕೆಲವೇ ಗಂಟೆಗಳಲ್ಲಿ ತಮ್ಮದೇ ಆದ ಸ್ವಂತ ವೆಬ್ಸೈಟ್ ಮತ್ತು ಮೊಬೈಲ್ ಅಪ್ಲಿಕೇಶನ್ಗಳನ್ನು ಯಶಸ್ವಿಯಾಗಿ ರೂಪಿಸಿ ಪ್ರದರ್ಶಿಸಿದರು. ಕೋಡಿಂಗ್ ಜ್ಞಾನವಿಲ್ಲದಿದ್ದರೂ (ಎಐ) ತಂತ್ರಜ್ಞಾನವನ್ನು ಬಳಸಿ ಹೇಗೆ ಸೃಜನಶೀಲವಾಗಿ ಬೆಳೆಯಬಹುದು ಎಂಬುದನ್ನು ವಿದ್ಯಾರ್ಥಿಗಳು ಸಾಬೀತುಪಡಿಸಿದರು. ಕಾರ್ಯಕ್ರಮದಲ್ಲಿ ಯತಿಕಾರ್ಪ್ ನಿರ್ದೇಶಕರಾದ ಪ್ರಖ್ಯಾತ ರೈ, ಜನರಲ್ ಮ್ಯಾನೇಜರ್ ಕೃಪಾ ಕೆ., ಮತ್ತು ಜೆಸ್ಕಾಮ್ನ ಹಿರಿಯ ಕೌಶಲ್ಯ ತರಬೇತಿ ಸಂಯೋಜಕ ರವಿ ಸಂಗಶೆಟ್ಟಿ, ಕಾಲೇಜಿನ ಅಧ್ಯಕ್ಷರಾದ ಸಂದೀಪ್ ದೇಸಾಯಿ ಮತ್ತು ಜಗನ್ನಾಥ್ ನಾಗೂರ್, ಮಂಜುನಾಥ್ ಬನ್ನೂರ್, ನಾಗರಾಜ್ ಪಟ್ಟಣಕರ್, ಶಿವಶರಣಪ್ಪ ಪೂಜಾರಿ, ಅಮರ್ ಹಾಗರಗ, ದೇವೇಂದ್ರಪ್ಪ ಸಜ್ಜನ್, ರಾಧಿಕಾ ಗುತ್ತೇದಾರ್, ಶ್ರೀದೇವಿ ಹಿರೇಮಠ, ಗುರುಬಾಯಿ ವಾಡಿ, ಅಂಬಿಕಾ ಪಟನೆ, ಜ್ಯೋತಿ ಹಂಗರಗಿ, ರೇಷ್ಮಾ ರಾಥೋಡ್, ಜೈಶ್ರೀ ದೇಶಮುಖ್, ಶಿಲ್ಪ ಚೆಟ್ಟಿ, ಗೀತಾ ಇಂಗಿನ್, ಸಂತೋಷ್ ಲಸ್ಕರ್, ಕಾಶಿಬಾಯಿ ವಗ್ಗೆ ಹಾಗೂ ನೂರಾರು ವಿದ್ಯಾರ್ಥಿಗಳು ಇದ್ದರು.
ಹವ್ಯಕ ಭಾಷಾ ಅಕಾಡೆಮಿಯ ರಚನೆಯ ತೀರ್ಮಾನಕ್ಕೆ ಸ್ವಾಗತ: ಎಂ.ಜಿ.ಹೆಗ್ಡೆ
ಮಂಗಳೂರು, ಮಾ.7; ಹವ್ಯಕ ಭಾಷಾ ಅಕಾಡೆಮಿ ರಚನೆಯ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿರುವುದು ಸ್ವಾಗತಾರ್ಹ ಎಂದು ರಾಜ್ಯ ಕಾಂಗ್ರೆಸ್ ವಕ್ತಾರ ಎಂ.ಜಿ.ಹೆಗ್ಡೆ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ. ಹವ್ಯಕ ಭಾಷೆಗೆ ನೂರಾರು ವರುಷಗಳ ಇತಿಹಾಸ ಇದೆ. ಉತ್ತರ ಕನ್ನಡ, ಶಿವಮೊಗ್ಗ, ದ.ಕ, ಕಾಸರಗೋಡು ಹಾಗೂ ಇತರ ಜಿಲ್ಲೆ ಗಳು ಸೇರಿದಂತೆ ಸುಮಾರು ಆರೂವರೆ ಲಕ್ಷ ಜನಸಂಖ್ಯೆಯನ್ನು ಹೊಂದಿದೆ. ಈ ನಿಟ್ಟಿನಲ್ಲಿ ಧಾರ್ಮಿಕ ಪರಿಷತ್ತಿನ ಸದಸ್ಯ ಲಕ್ಷ್ಮೀಶ ಗಬ್ಲ ಲಡ್ಕ ಅವರು ಪ್ರಯತ್ನ ಸ್ಮರಿಸಬೇಕಾಗಿದೆ ಎಂದು ಎಂ.ಜಿ.ಹೆಗ್ಡೆ ತಿಳಿಸಿದ್ದಾರೆ. ಈ ರೀತಿಯ ಅಕಾಡೆಮಿಯ ರಚನೆಯಿಂದ ಭಾಷೆಯ ಬೆಳವಣಿಗೆಗೆ ಸಹಕಾರಿಯಾಗುತ್ತದೆ ಎಂದರು. ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಪದಾಧಿಕಾ ರಿಗಳಾದ ಪ್ರಕಾಶ್ ಸಾಲ್ಯಾನ್,ಯೋಗೀಶ್ ನಾಯ್ಕ್ , ಶುಭೋದಯ ಆಳ್ವ, ನಮಿತಾ ಡಿ ಆಳ್ವ, ಚಂದ್ರಕಲಾ ಮೊದಲಾದವರು ಉಪಸ್ಥಿತರಿದ್ದರು.
ಕಲಬುರಗಿ | ರಾಜ್ಯ ಬಜೆಟ್ ವಿರುದ್ಧ ಸಿಪಿಐಎಂ ಪ್ರತಿಭಟನೆ
ಕಲಬುರಗಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದ 2026–27ನೇ ಸಾಲಿನ ರಾಜ್ಯ ಬಜೆಟ್ ಬಂಡವಾಳ ಪರವಾಗಿದ್ದು, ಉದ್ಯೋಗ ಖಾತ್ರಿ ಯೋಜನೆಗೆ ಸಮರ್ಪಕ ಅನುದಾನ ನೀಡದೇ ಅನ್ಯಾಯ ಮಾಡಲಾಗಿದೆ ಎಂದು ಆರೋಪಿಸಿ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಸಿಪಿಐಎಂ) ಕಾರ್ಯಕರ್ತರು ಶನಿವಾರ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಪ್ರತಿಭಟನೆ ವೇಳೆ ಮಾತನಾಡಿದ ಪಕ್ಷದ ಜಿಲ್ಲಾ ಕಾರ್ಯದರ್ಶಿ ಕೆ. ನೀಲಾ, ಸಮಾಜವಾದಿ ಎನ್ನಿಸಿಕೊಂಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೂರು ಗಂಟೆಗಳ ಕಾಲ ಬಜೆಟ್ ಭಾಷಣ ಮಾಡಿದರೂ ಸಾಮಾನ್ಯ ಜನರ ಆರ್ಥಿಕ ಮಟ್ಟ ಹೆಚ್ಚಿಸುವುದು ಹಾಗೂ ನಿರುದ್ಯೋಗ ನಿವಾರಣೆಗೆ ಅಗತ್ಯವಾದ ಘೋಷಣೆಗಳನ್ನು ಮಾಡಲಿಲ್ಲ ಎಂದು ಆರೋಪಿಸಿದರು. ಕೇಂದ್ರ ಸರ್ಕಾರ ಎರಡು ದಿನಗಳ ಹಿಂದೆ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ (ನರೇಗಾ) ಯೋಜನೆಯ ಹೆಸರನ್ನು ಬದಲಾಯಿಸಿ “ವಿಬಿ ಗ್ರಾಮ್ ಜಿ” ಯೋಜನೆ ಜಾರಿಗೆ ತಂದು ಕಾರ್ಮಿಕರ ಉದ್ಯೋಗ ಅವಕಾಶಗಳನ್ನು ಕಡಿಮೆ ಮಾಡಿದೆ. ಈ ಕ್ರಮವನ್ನು ಕಾಂಗ್ರೆಸ್ ವಿರೋಧಿಸಿದರೂ, ಬಡ ಕೃಷಿ ಕಾರ್ಮಿಕರ ಉದ್ಯೋಗ ಭದ್ರತೆಗೆ ರಾಜ್ಯ ಬಜೆಟ್ನಲ್ಲಿ ಯಾವುದೇ ಭರವಸೆ ನೀಡಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಹೋರಾಟಗಾರ್ತಿ ಮೀನಾಕ್ಷಿ ಬಾಳಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 17ನೇ ಬಜೆಟ್ ಮಂಡಿಸಿರುವ ಸಾಧನೆಯನ್ನು ಹೇಳಿಕೊಂಡರೂ ಉದ್ಯೋಗ ಖಾತ್ರಿ ಯೋಜನೆಗೆ ಹೆಚ್ಚಿನ ಅನುದಾನ ನೀಡಿಲ್ಲ. ಕೇಂದ್ರ ಸರ್ಕಾರ ತಂದಿರುವ ಹೊಸ ಕಾಯ್ದೆಯಿಂದ ಹಿಂದಿನ ಉದ್ಯೋಗ ಖಾತ್ರಿ ಯೋಜನೆ ದುರ್ಬಲಗೊಂಡಿದ್ದು, ಕಾಂಗ್ರೆಸ್ ಸರ್ಕಾರವೂ ಅದೇ ದಾರಿಯಲ್ಲಿ ನಡೆಯುತ್ತಿರುವುದು ವಿಷಾದನೀಯ ಎಂದು ಹೇಳಿದರು. ಪ್ರತಿಭಟನೆಯಲ್ಲಿ ಕೆ. ನೀಲಾ, ಮೀನಾಕ್ಷಿ ಬಾಳಿ, ಸುಧಾಮ ಧನ್ನಿ, ಪಾಂಡುರಂಗ ಮಾವಿನಕರ, ಗೌರಮ್ಮ, ಸರ್ವೇಶ್, ಭೀಮಶೆಟ್ಟಿ ಯಂಪಳ್ಳಿ ಸೇರಿದಂತೆ ಹಲವು ಕಾರ್ಯಕರ್ತರು ಭಾಗವಹಿಸಿದ್ದರು.
ನಾಳೆ(ಮಾ.8) ಐಸಿಸಿ ಟಿ20 ವಿಶ್ವಕಪ್ ಫೈನಲ್; ಸತತ 2ನೇ ಪ್ರಶಸ್ತಿಯ ಮೇಲೆ ಆತಿಥೇಯರ ಕಣ್ಣು
ಪ್ರಶಸ್ತಿಗಾಗಿ ಭಾರತ–ನ್ಯೂಝಿಲ್ಯಾಂಡ್ ಹಣಾಹಣಿ
ಸರಕಾರದ ಯೋಜನೆಗಳಿಗೆ ಕಟ್ಟಡ ಕಾರ್ಮಿಕರ ನಿಧಿ ಬಳಕೆಗೆ ವಿರೋಧ
ಉಡುಪಿ, ಮಾ.7: ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ವತಿಯಿಂದ 600 ಕೋಟಿ ರೂ.ವೆಚ್ಚದಲ್ಲಿ ಜಿಟಿಟಿಸಿ ಕೇಂದ್ರಗಳನ್ನು ಸ್ಥಾಪಿಸಲು ಬಜೆಟ್ನಲ್ಲಿ ಪ್ರಸ್ತಾಪಿಸಿರುವುದನ್ನು ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಷನ್ ತೀವ್ರವಾಗಿ ವಿರೋಧಿಸಿದೆ. ತರಬೇತಿ ಕೇಂದ್ರಗಳ ಸ್ಥಾಪನೆ ರಾಜ್ಯ ಸರಕಾರದ ಕೆಲಸ. ಜೊತೆಗೆ ಈ ತರಬೇತಿ ಕೇಂದ್ರಗಳಲ್ಲಿ ಕೇವಲ ಕಟ್ಟಡ ಕಾರ್ಮಿಕರ ಮಕ್ಕಳು ಮಾತ್ರವಲ್ಲದೇ ಎಲ್ಲರಿಗೂ ಪ್ರವೇಶಾವಕಾಶವಿದೆ. ಆದ್ದರಿಂದ ಕಲ್ಯಾಣ ಮಂಡಳಿಯಿಂದ 600 ಕೋಟಿ ರೂ. ವೆಚ್ಚ ಮಾಡುವ ನಿರ್ಧಾರವು ಕಟ್ಟಡ ಕಾರ್ಮಿಕರಿಗೆ ಬಗೆಯುವ ದ್ರೋಹವಾಗಿರುತ್ತದೆ ಎಂದು ಫೆಡರೇಷನ್ನ ಕರ್ನಾಟಕ ರಾಜ್ಯ ಸಮಿತಿಯ ಅಧ್ಯಕ್ಷ ಬಾಲಕೃಷ್ಣ ಶೆಟ್ಟಿ ಹಾಗೂ ಪ್ರಧಾನ ಕಾರ್ಯದರ್ಶಿ ಕೆ.ಮಹಾಂತೇಶ್ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಇದರೊಂದಿಗೆ ಶ್ರಮಿಕ ವಸತಿ ಶಾಲೆಗಳ ನಿರ್ಮಾಣ ಹಾಗೂ ಹುಬ್ಬಳ್ಳಿ ಮತ್ತು ಮೈಸೂರಿನಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ಕೌಶಲ್ಯ ಅಭಿವೃದ್ಧಿ ಅಕಾಡೆಮಿಗಳನ್ನು ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿ ನಿಧಿಯನ್ನು ಬಳಸಿ ನಿರ್ಮಾಣ ಮಾಡುವ ಪ್ರಸ್ತಾಪವು 1996ರ ಕಟ್ಟಡ ಕಾರ್ಮಿಕರ ಕಾಯ್ದೆಯ ಉದ್ದೇಶವನ್ನೇ ಬುಡಮೇಲು ಮಾಡಲಿದೆ ಎಂದವರು ಅಭಿಪ್ರಾಯಪಟ್ಟರು. ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿಯ ನಿಧಿಯು ಕಾರ್ಮಿಕರಿಗೆ ಸಾಮಾಜಿಕ ಭದ್ರತೆಯನ್ನು ಒದಗಿಸುವುದು ಸೇರಿದಂತೆ ಕಾರ್ಮಿಕರ ಆರೋಗ್ಯ ಸುರಕ್ಷತೆ ಹಾಗೂ ಶಿಕ್ಷಣದ ಅಗತ್ಯತೆಗಳಿಗಾಗಿ ಬಳಸಬೇಕು ಮತ್ತು ಇದನ್ನು ಹೊರತು ಪಡಿಸಿ ಇತರೆ ಯಾವುದೇ ಉದ್ದೇಶಗಳಿಗೆ ಬಳಸಬಾರದೆಂದು ಕಾಯ್ದೆ ಹೇಳುತ್ತದೆ. ಸುಪ್ರೀಂ ಕೋರ್ಟ್ ಸಹ ಇದನ್ನೇ ಎತ್ತಿ ಹಿಡಿದಿದೆ ಎಂದವರು ಹೇಳಿಕೆಯಲ್ಲಿ ಪ್ರತಿಪಾದಿಸಿದ್ದಾರೆ. ಸಿಐಟಿಯು ನೇತೃತ್ವದ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಷನ್ ರಾಜ್ಯ ಸರಕಾರದ ಈ ಮೂರು ಬಜೆಟ್ ಪ್ರಸ್ತಾಪಗಳನ್ನು ತೀವ್ರವಾಗಿ ವಿರೋಧಿಸುತ್ತದೆ. ಹಾಗೂ ಇದನ್ನು ಹಿಂದಕ್ಕೆ ಪಡೆಯುವಂತೆ ಆಗ್ರಹಿಸಿದೆ. ತಪ್ಪಿದಲ್ಲಿ ಮುಂದಿನ ದಿನಗಳಲ್ಲಿ ಇದರ ವಿರುದ್ಧ ತೀವ್ರ ಪ್ರತಿಭಟನೆಗಳನ್ನು ನಡೆಸುವ ಎಚ್ಚರಿಕೆಯನ್ನೂ ನೀಡಿದೆ.
ಮಾ.9: ಕಾರಂತ ಟ್ರಸ್ಟ್ನಿಂದ ಮಹಿಳಾ ದಿನಾಚರಣೆ ಸಪ್ತಾಹ
ಉಡುಪಿ, ಮಾ.7: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಡಾ.ಶಿವರಾಮ ಕಾರಂತ ಟ್ರಸ್ಟ್ ವತಿಯಿಂದ ಉಡುಪಿ ಜಿಲ್ಲಾ ಲೇಖಕಿಯರ ವಾಚಕಿಯರ ಸಂಘ ಹಾಗೂ ಉಡುಪಿ ಜಿಲ್ಲಾ ಭಾರತೀಯ ರೆಡ್ಕ್ರಾಸ್ ಸಂಸ್ಥೆಗಳ ಸಹ ಯೋಗದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣಾ ಸಪ್ತಾಹದ ಉದ್ಘಾಟನಾ ಸಮಾರಂಭವು ಮಾ.9ರಂದು ಸೋಮವಾರ ಅಪರಾಹ್ನ 2:00 ಗಂಟೆಗೆ ಅಜ್ಜರಕಾಡಿನ ಡಾ.ಜಿ.ಶಂಕರ್ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ನಡೆಯಲಿದೆ. ಕಾರ್ಯಕ್ರಮವನ್ನು ಭಾರತೀಯ ರೆಡ್ಕ್ರಾಸ್ ಸಂಸ್ಥೆ ಕರ್ನಾಟಕ ಸಭಾಪತಿ ಬಸರೂರು ರಾಜೀವ ಶೆಟ್ಟಿ ಉದ್ಘಾಟಿಸ ಲಿದ್ದು, ಕಾಲೇಜಿನ ಪ್ರಾಂಶುಪಾಲ ಸೋಜನ್ ಕೆ.ಜಿ. ಅಧ್ಯಕ್ಷತೆ ವಹಿಸಲಿದ್ದಾರೆ. ಹಿರಿಯ ಚಿಂತಕಿ ಮತ್ತು ಲೇಖಕಿ ಬಿ.ಎಂ.ರೋಹಿಣಿ ಕಾರಂತರ ಚಿಂತನೆಗಳ ಕುರಿತು ಮತ್ತು ಸುರತ್ಕಲ್ನ ಪ್ರೊ. ದಿವ್ಯರಾಣಿ ಪ್ರದೀಪ್ ಮಹಿಳಾ ಸಬಲೀಕರಣದ ಸವಾಲುಗಳು ಎಂಬ ವಿಷಯದ ಕುರಿತು ಉಪನ್ಯಾಸ ನೀಡಲಿದ್ದಾರೆ. ಸಪ್ತಾಹದ ಅಂಗವಾಗಿ ಮಾ.8ರಂದು ಮರವಂತೆಯ ಸರಕಾರಿ ಪ್ರೌಢ ಶಾಲೆಯಲ್ಲಿ ರಂಗವಲ್ಲಿಯ ಮೂಲಕ ಮಾನವ ಹಕ್ಕುಗಳ ಪರಿಚಯ, ಮಾ.10ರಂದು ಸರಕಾರಿ ಪ್ರಥಮ ದರ್ಜೆ ಕಾಲೇಜು ಕೋಟ ಪಡುಕೆರೆ ಇಲ್ಲಿ ಉಪನ್ಯಾಸಕಿ ಡಾ.ವಿದ್ಯಾಲತ, 11ರಂದು ಕಾರ್ಕಳದ ಶ್ರೀ ವೆಂಕಟರಮಣ ಕಾಲೇಜಿನಲ್ಲಿ ಡಾ.ನಿಕೇತನ, 12ರಂದು ಮೂಡ್ಲು ಕಟ್ಟೆಯ ಐಎಂಜೆ ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನಲ್ಲಿ ವಸಂತಿ ಶೆಟ್ಟಿ ಬ್ರಹ್ಮಾವರ ಹಾಗೂ ಮಾ.13 ರಂದು ಹೂಡೆಯ ಸಾಲಿಹಾತ್ ಪದವಿ ಪೂರ್ವ ಕಾಲೇಜಿನಲ್ಲಿ ಡಾ. ದುರ್ಗಾ ಮೆನನ್ ಇವರಿಂದ ಕಾರಂತರ ಬರಹಗಳಲ್ಲಿನ ಮಹಿಳಾ ಅಭಿವ್ಯಕ್ತಿ ಕುರಿತು ಉಪನ್ಯಾಸ ನೀಡಲಿದ್ದಾರೆ. ಸಪ್ತಾಹದ ಸಮಾರೋಪ ಸಮಾರಂಭವು ಮಾ.14ರ ಬೆಳಿಗ್ಗೆ 10 ಗಂಟೆಗೆ ಬ್ರಹ್ಮಗಿರಿಯ ರೆಡ್ಕ್ರಾಸ್ ಸಂಸ್ಥೆಯ ಹೆನ್ರಿ ಡುನ್ಯಾಂಟ್ ಸಭಾಂಗಣದಲ್ಲಿ ನಡೆಯಲಿದೆ. ಖ್ಯಾತ ರಂಗನಟಿ ಮತ್ತು ಚಿಂತಕಿ ಗೀತಾ ಸುರತ್ಕಲ್ ಮಹಿಳಾ ಸಬಲೀಕರಣದಲ್ಲಿ ರಂಗಭೂಮಿ ಮತ್ತುಕಾರಂತರು ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಿ ಸಾಧಕರನ್ನು ಸನ್ಮಾನಿಸಲಿದ್ದಾರೆ ಎಂದು ಡಾ. ಶಿವರಾಮ ಕಾರಂತ ಟ್ರಸ್ಟಿನ ಸದಸ್ಯ ಕಾರ್ಯದರ್ಶಿಗಳ ಪ್ರಕಟಣೆ ತಿಳಿಸಿದೆ.
ಮಾ.13ಕ್ಕೆ ಎಚ್.ಪಿ.ವಿ. ಲಸಿಕಾ ಅಭಿಯಾನಕ್ಕೆ ಚಾಲನೆ: ಉಡುಪಿ ಜಿಲ್ಲಾಧಿಕಾರಿ
ಉಡುಪಿ, ಮಾ.7: ಮಹಿಳೆಯರಲ್ಲಿ ಗರ್ಭಕಂಠದ ಕ್ಯಾನ್ಸರನ್ನು ತಡೆಗಟ್ಟಲು 14 ವರ್ಷ ಪೂರ್ಣಗೊಂಡ ಹೆಣ್ಣು ಮಕ್ಕಳಿಗೆ ರಾಷ್ಟ್ರೀಯ ಎಚ್ಪಿವಿ ಲಸಿಕಾ ಅಭಿಯಾನ (ವ್ಯಾಕ್ಸಿನೇಶನ್ ಕ್ಯಾಂಪೇನ್) ಕಾರ್ಯಕ್ರಮವನ್ನು ಆರಂಭಿಸಿದ್ದು, ಎಲ್ಲ ಆರೋಗ್ಯ ಕೇಂದ್ರಗಳಲ್ಲಿ ಲಸಿಕೆಯನ್ನು ಉಚಿತವಾಗಿ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ತಿಳಿಸಿದ್ದಾರೆ. ಮಣಿಪಾಲದ ಜಿಲ್ಲಾಧಿಕಾರಿ ಕಚೇರಿಯ ವಿಡಿಯೋ ಕಾನ್ಫರೆನ್ಸ್ ಸಭಾಂಗಣ ದಲ್ಲಿ ನಡೆದ ಎಚ್ಪಿವಿ ಚುಚ್ಚುಮದ್ದು ಲಸಿಕಾ ಕಾರ್ಯಕ್ರಮದ ಕಾರ್ಯಪಡೆ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು. ಈ ಲಸಿಕೆ ಗರ್ಭಕಂಠದ ಕ್ಯಾನ್ಸರ್ನಿಂದ ಹೆಣ್ಣುಮಕ್ಕಳಿಗೆ ರಕ್ಷಣೆ ನೀಡಲಿದೆ ಎಂದು ಅವರು ಹೇಳಿದರು. 14 ವಷರ್ ಪೂರ್ಣಗೊಂಡ ಆದರೆ 15 ವಷರ್ದೊಳಗಿನ ಹೆಣ್ಣು ಮಕ್ಕಳಿಗೆ ಈ ಲಸಿಕೆಯನ್ನು ಉಚಿತವಾಗಿ ನೀಡಲಾ ಗುವುದು. ಗರ್ಭಕಂಠದ ಕ್ಯಾನ್ಸರ್ ತಡೆಗಟ್ಟಬಹುದಾದ ರೋಗವಾಗಿದ್ದು, ಎಚ್ಪಿವಿ ಚುಚ್ಚುಮದ್ದು ಪಡೆದು ಕೊಳ್ಳುವು ದರಿಂದ ಮಹಿಳೆಯರಲ್ಲಿ ಈ ಕ್ಯಾನ್ಸರ್ನ್ನು ತಡೆಗಟ್ಟಬಹುದು ಎಂದರು. ಜಿಲ್ಲೆಯಲ್ಲಿ 11,274 ಮಕ್ಕಳಿಗೆ ಈ ಲಸಿಕೆ ನೀಡುವ ಗುರಿಯನ್ನು ಹೊಂದಲಾಗಿದೆ. ಲಸಿಕೆಯ 0.5ಎಂಎಲ್ನ ಒಂದು ಡೋಸ್ನ್ನು ನೀಡಲಾ ಗುತ್ತದೆ. ಇದು ಸ್ವಯಂ ಪ್ರೇರಿತವಾಗಿದ್ದು, ಪೋಷಕರು ಅಥವಾ ಪಾಲಕರ ಒಪ್ಪಿಗೆ ಕಡ್ಡಾಯ ವಾಗಿದೆ. ಜಿಲ್ಲೆಯ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರ, ತಾಲೂಕು ಆಸ್ಪತ್ರೆಹಾಗೂ ತಾಯಿ- ಮಕ್ಕಳ ಆಸ್ಪತ್ರೆಯಲ್ಲಿ ಮೂರು ತಿಂಗಳ ಕಾಲ ಲಸಿಕೆ ನೀಡಲಾಗುವುದು ಎಂದರು. ಸಂಸದ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಮಾ.13ರಂದು ಬೆಳಗ್ಗೆ ಉಡುಪಿ ಬೋರ್ಡ್ ಹೈಸ್ಕೂಲ್ನಲ್ಲಿ ವಿದ್ಯಾರ್ಥಿನಿಯರಿಗೆ ಲಸಿಕೆ ನೀಡುವ ಮೂಲಕ ಅಭಿಯಾನಕ್ಕೆ ಅಧಿಕೃತ ಚಾಲನೆ ನೀಡಲಾಗುವುದು. ಈ ಲಸಿಕೆ ಶೇ.93ರಷ್ಟು ಪರಿಣಾಮಕಾರಿಯಾಗಿದ್ದು ಇದರ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯ ಮಾಡಬೇಕು ಎಂದು ಅವರು ಮನವಿ ಮಾಡಿದರು. ಎಚ್ಪಿವಿ ಲಸಿಕಾ ಅಭಿಯಾನಕ್ಕೆ ಫೆ.28ರಂದೇ ರಾಷ್ಟ್ರಮಟ್ಟದಲ್ಲಿ ಚಾಲನೆ ನೀಡಲಾಗಿದೆ.ಮುಂದಿನ ಮೂರು ತಿಂಗಳ ಅವಧಿಯಲ್ಲಿ ಆಯುಷ್ಮಾನ್ ಆರೋಗ್ಯ ಮಂದಿರ ಸೇರಿದಂತೆ ಎಲ್ಲಾ ಸರಕಾರಿ ಆಸ್ಪತ್ರೆಗಳಲ್ಲಿ ಲಸಿಕೆ ಪಡೆಯಲು ಅವಕಾಶವಿದೆ ಎಂದರು. ಮೊದಲ ಹಂತದಲ್ಲಿ 14 ವರ್ಷ ಮೇಲ್ಪಟ್ಟು, 15ವರ್ಷದೊಳಗಿನ ಹೆಣ್ಣು ಮಕ್ಕಳು ಲಸಿಕೆ ಪಡೆಯಲು ಅರ್ಹರಿದ್ದು, ಮುಂದಿನ ಹಂತದಲ್ಲಿ ವಯಸ್ಸಿನ ಪರಿಷ್ಕರಣೆ ನಡೆಯಲಿದೆ. ಎಚ್ಪಿವಿ ವೈರಸ್ನಿಂದ ಬರಬಹುದಾದ ಗರ್ಭಕಂಠ ಕ್ಯಾನ್ಸರ್ನ್ನು ಈ ಲಸಿಕೆಯಿಂದ ನಿಯಂತ್ರಿಸಬಹುದಾಗಿದ್ದು, ಮಧ್ಯ ವಯಸ್ಸಿನ ಮಹಿಳೆಯರಿಗೆ ಆರೋಗ್ಯ ತಪಾಸಣಾಗಳನ್ನು ಮುಂದಿನ ದಿನಗಳಲ್ಲಿ ಆಯೋಜಿಸಲಾಗುತ್ತದೆ. ಇದರ ಪ್ರಯೋಜನವನ್ನು ಎಲ್ಲಾ ಹೆಣ್ಣುಮಕ್ಕಳು ಪಡೆಯಬೇಕು ಎಂದು ಕೋಟ ಮನವಿ ಮಾಡಿದರು. ಸಭೆಯಲ್ಲಿ ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಎಸ್.ಎಸ್, ಕಾದ್ರೋಳ್ಳಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಬಸವರಾಜ್ ಜಿ ಹುಬ್ಬಳ್ಳಿ, ಜಿಲ್ಲಾ ಸರ್ಜನ್ ಡಾ.ಅಶೋಕ್, ಆರ್.ಸಿ.ಎಚ್ ಅಧಿಕಾರಿ ಜ್ಯೋತ್ಸ್ನಾ ಬಿ.ಕೆ ಮತ್ತಿತರರು ಉಪಸ್ಥಿತರಿದ್ದರು.
ದೇಶದಲ್ಲಿ ಮೊದಲ ಬಾರಿ ಡಿಜಿಟಲ್ ರೂಪದಲ್ಲಿ ಜನಗಣತಿ: ಉಡುಪಿ ಡಿಸಿ ಸ್ವರೂಪ ಟಿ.ಕೆ.
ಉಡುಪಿ, ಮಾ.7: ದೇಶದಲ್ಲಿ ಇದೇ ಮೊದಲ ಬಾರಿಗೆ ಸಂಪೂರ್ಣ ಡಿಜಿಟಲ್ ರೂಪದಲ್ಲಿ ಜನಗಣತಿ ನಡೆಯಲಿದೆ. ಸ್ವಯಂ-ಗಣತಿ ಆಯ್ಕೆಯೂ ಇದರಲ್ಲಿ ಲಭ್ಯವಿದೆ. ಮೊದಲ ಹಂತದಲ್ಲಿ ಎಪ್ರಿಲ್ 16ರಿಂದ 30 ದಿನಗಳ ಕಾಲ ಮನೆ ಪಟ್ಟಿ ಕಾರ್ಯ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಹೇಳಿದ್ದಾರೆ. ಮಣಿಪಾಲದಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ 2027ರ ಜನಗಣತಿ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು. ಎರಡನೇ ಹಂತದಲ್ಲಿ ಜನಸಂಖ್ಯಾ ಎಣಿಕೆ ಕಾರ್ಯ 2027ರ ಫೆಬ್ರವರಿಯಿಂದ ಪ್ರಾರಂಭಗೊಳ್ಳಲಿದೆ ಎಂದವರು ತಿಳಿಸಿದರು. ಸರಕಾರದ ಮಾರ್ಗಸೂಚಿಯಂತೆ ಗಣತಿ ಕಾರ್ಯ ಕೈಗೊಳ್ಳಲು ಅಗತ್ಯ ವಿರುವ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ನೇಮಕ ಕಾರ್ಯಗಳನ್ನು ಮಾಡಿಕೊಳ್ಳಬೇಕು. ಮನೆಗಳ ಪಟ್ಟಿ, ದತ್ತಾಂಶ ಸಂಗ್ರಹಣೆ, ಪರಿಶೀಲನೆ ಮತ್ತು ಮೇಲ್ವಿಚಾರಣೆಗಾಗಿ ಮೊಬೈಲ್ ಅಪ್ಲಿಕೇಶನ್ ಮತ್ತು ಕೇಂದ್ರ ಪೋರ್ಟಲ್ ಬಳಸಲಾಗುವುದು ಎಂದು ಅವರು ವಿವರಿಸಿದರು. ಮೊದಲು ಮನೆ ಗಣತಿಗೆ ಅಗತ್ಯವಿರುವ ಸಿಬ್ಬಂದಿಗಳನ್ನು ನೇಮಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದ ಜಿಲ್ಲಾಧಿಕಾರಿ, ಗಣತಿಗಾಗಿ ತರಬೇತುದಾರರ ಅಂತಿಮಗೊಳಿಸುವಿಕೆ, ಜಿಲ್ಲಾ ಜನಗಣತಿ ಅಧಿಕಾರಿಗಳಿಗೆ ತರಬೇತಿ ಮತ್ತು ಕ್ಷೇತ್ರ ಕಾರ್ಯಕರ್ತರ ನೇಮಕಾತಿ ಕುರಿತು ಚರ್ಚಿಸಿ ಅಂತಿಮ ಪಟ್ಟಿ ಸಿದ್ಧಗೊಳಿಸಲು ಸೂಚಿಸಿದರು. ಜಿಪಿಎಸ್ ಆಧಾರಿತ ಮ್ಯಾಪಿಂಗ್ ಪೂರ್ಣಗೊಳಿಸಬೇಕು. ಎಲ್ಲ ಅಗತ್ಯ ಕ್ರಮಗಳನ್ನು ಕಾಲಮಿತಿಯಲ್ಲೇ ನಡೆಸಬೇಕು. ಇದಕ್ಕಾಗಿ ಎಲ್ಲ ಇಲಾಖೆಗಳು ಸಮನ್ವಯದಿಂದ ಕಾರ್ಯ ನಿರ್ವಹಿಸಬೇಕು ಎಂದರು. ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ, ಜಿಲ್ಲಾ ಪಂಚಾಯತ್ ಯೋಜನಾ ನಿರ್ದೇಶಕ ಉದಯಕುಮಾರ್ ಶೆಟ್ಟಿ, ಸಹಾಯಕ ಮಿಷನರ್ ರಶ್ಮಿ, ನಗರಸಭೆ ಪೌರಾಯುಕ್ತ ಮಹಾಂತೇಶ್ ಹಂಗರಗಿ, ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
ಮನೆಗೆ ನುಗ್ಗಿ 14.67 ಲಕ್ಷ ರೂ. ಮೌಲ್ಯದ ನಗನಗದು ಕಳವು: ಪ್ರಕರಣ ದಾಖಲು
ಬ್ರಹ್ಮಾವರ, ಮಾ.7: ಮನೆಯೊಂದಕ್ಕೆ ನುಗ್ಗಿದ ಕಳ್ಳರು ಲಕ್ಷಾಂತರ ರೂ. ಮೌಲ್ಯದ ನಗ ನಗದು ಕಳವು ಮಾಡಿರುವ ಘಟನೆ ಬಾರಕೂರು ಹೇರಾಡಿ ಎಂಬಲ್ಲಿ ಮಾ.6ರಂದು ರಾತ್ರಿ ವೇಳೆ ನಡೆದಿದೆ. ಮಂಜುನಾಥ ರಾವ್ ಎಂಬವರು ತನ್ನ ಪತ್ನಿ ಜೊತೆ ಮನೆಗೆ ಬೀಗ ಹಾಕಿ ಬಾರಕೂರುನಲ್ಲಿ ನಡೆಯುತ್ತಿದ್ದ ನಾಗಮಂಡಲ ಕಾರ್ಯಕ್ರಮಕ್ಕೆ ಹೋಗಿದ್ದರು. ಈ ವೇಳೆ ಮನೆಯ ಎದುರು ಬಾಗಿಲು ಒಡೆದು ಒಳನುಗ್ಗಿದ ಕಳ್ಳರು, ಕಾಪಾಟಿನಲ್ಲಿದ್ದ 1 ಚಿನ್ನದ ಮುತ್ತಿನ ಸರ ಮತ್ತು ಪೆಂಡೆಂಟ್, ಎರಡು ಚಿನ್ನದ ಬಳೆ, ಒಂದು ಜೋತೆ ಚಿನ್ನದ ಬೆಂಡೋಲೆ, 4 ಚಿನ್ನದ ಉಂಗುರ, 3 ಚಿನ್ನದ ಬೆಂಡೋಲೆ, ಬೆಳ್ಳಿಯ ಹರಿವಾಣ ಮತ್ತು ಕವಳಿಗೆ ಹಾಗೂ 49,000ರೂ. ನಗದು ಕಳವು ಮಾಡಿಕೊಂಡು ಹೋಗಿದ್ದಾರೆಂದು ದೂರಲಾಗಿದೆ. ಕಳವಾದ ಒಟ್ಟು ಸೊತ್ತುಗಳ ಒಟ್ಟು ಮೌಲ್ಯ 14,67,000ರೂ. ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

32 C