SENSEX
NIFTY
GOLD
USD/INR

Weather

26    C
... ...View News by News Source

ಕಾರ್ಮಿಕ ಸಂಘಟನೆಗಳ ರಾಷ್ಟ್ರೀಯ ಮುಷ್ಕರ; ಕಾಸರಗೋಡಿನಲ್ಲಿ ಉತ್ತಮ ಸ್ಪಂದನೆ

ಕಾಸರಗೋಡು: ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ನೀತಿಗಳನ್ನು ವಿರೋಧಿಸಿ ಹಾಗೂ ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಕಾರ್ಮಿಕ ಸಂಘಟನೆಗಳ ಸಂಯುಕ್ತ ಒಕ್ಕೂಟ ಕರೆ ನೀಡಿರುವ ರಾಷ್ಟ್ರೀಯ ಮುಷ್ಕರಕ್ಕೆ ಕಾಸರಗೋಡು ಜಿಲ್ಲೆಯಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮುಷ್ಕರದ ಪರಿಣಾಮವಾಗಿ ಜಿಲ್ಲೆಯಲ್ಲಿ ಕೆಎಸ್‌ಆರ್‌ಟಿಸಿ ಹಾಗೂ ಖಾಸಗಿ ಬಸ್‌ಗಳು ರಸ್ತೆಗಿಳಿಯಲಿಲ್ಲ. ಆಟೋ ರಿಕ್ಷಾ ಹಾಗೂ ಟ್ಯಾಕ್ಸಿಗಳ ಸಂಚಾರವೂ ಬಹುತೇಕ ಸ್ಥಗಿತಗೊಂಡಿತ್ತು. ಆದರೆ ದ್ವಿಚಕ್ರ ವಾಹನಗಳು ಮತ್ತು ಖಾಸಗಿ ಕಾರುಗಳು ಕೆಲವೆಡೆ ಸಂಚಾರ ನಡೆಸುತ್ತಿದ್ದವು. ವಾಹನ ಸಂಚಾರದಲ್ಲಿ ವ್ಯತ್ಯಯ ಉಂಟಾದ ಹಿನ್ನೆಲೆ ನಗರದ ವ್ಯಾಪಾರ ಸಂಸ್ಥೆಗಳು ಮುಚ್ಚಲ್ಪಟ್ಟಿದ್ದವು. ನಗರದಾದ್ಯಂತ ಅಂಗಡಿ ಮುಂಗಟ್ಟುಗಳು ಬಂದ್ ಆಗಿದ್ದವು. ಕೆಲ ಗ್ರಾಮೀಣ ಪ್ರದೇಶಗಳಲ್ಲಿ ಮಾತ್ರ ಆಟೋ ರಿಕ್ಷಾಗಳು ಸಂಚಾರ ನಡೆಸುತ್ತಿದ್ದವು ಎಂದು ತಿಳಿದು ಬಂದಿದೆ. ಮುಷ್ಕರದ ಪರಿಣಾಮವಾಗಿ ವಾಹನಗಳ ಕೊರತೆಯಿಂದ ಸರ್ಕಾರಿ ಕಚೇರಿಗಳಲ್ಲೂ ನೌಕರರ ಹಾಜರಾತಿ ವಿರಳವಾಗಿತ್ತು ಎನ್ನಲಾಗಿದೆ.        

ವಾರ್ತಾ ಭಾರತಿ 12 Feb 2026 1:59 pm

Donald Trump: ಅಮೆರಿಕ ಅಧ್ಯಕ್ಷ ಟ್ರಂಪ್ ಅವರಿಗೆ ಹಿನ್ನಡೆ, ಕೆನಡಾಗೆ ತೆರಿಗೆ ತಿಕ್ಕಾಟದಿಂದ ತಾತ್ಕಾಲಿಕ ಮುಕ್ತಿ

ಡೊನಾಲ್ಡ್ ಟ್ರಂಪ್ &ಕೆನಡಾದ ನಡುವೆ ಶುರುವಾಗಿದ್ದ ತೆರಿಗೆ ತಿಕ್ಕಾಟಕ್ಕೆ ಈಗ ತಾತ್ಕಾಲಿಕ ರಿಲೀಫ್ ಸಿಕ್ಕಂತೆ ಆಗಿದ್ದು, ಡೊನಾಲ್ಡ್ ಟ್ರಂಪ್ ಅವರ ನಿರ್ಧಾರಕ್ಕೆ ಅಮೆರಿಕನ್ ಸಂಸತ್ ಸದಸ್ಯರು ತಡೆ ಹಾಕುವ ಮೂಲಕ ಆಘಾತ ನೀಡಿದ್ದಾರೆ. ತಮ್ಮ ನಿರ್ಧಾರಗಳಿಗೆ ಕೆನಡಾ ಬೆಂಬಲ ನೀಡುತ್ತಿಲ್ಲ &ಆ ಮೂಲಕ ಕೆನಡಾ ತಮಗೆ ಅಡ್ಡಿಯಾಗಿದೆ, ಎನ್ನುವ ಕಾರಣ ಹಿನ್ನೆಲೆ ಹಲವು ಬಾರಿ

ಒನ್ ಇ೦ಡಿಯ 12 Feb 2026 1:56 pm

Epstein files | “ಆ ವ್ಯಕ್ತಿ ಯಾರೆಂದು ತಿಳಿದುಕೊಂಡ ಬಳಿಕ ಅಮೆರಿಕನ್ನರೊಂದಿಗಿನ ಸಂಪರ್ಕವನ್ನು ಕಡಿತಗೊಳಿಸಿದೆ”: ಸಚಿವ ಹರ್ದೀಪ್ ಸಿಂಗ್ ಪುರಿ

ಹೊಸದಿಲ್ಲಿ: ಅಮೆರಿಕದ ಲೈಂಗಿಕ ಅಪರಾಧಿ ಜೆಫ್ರಿ ಎಪ್ಸ್ಟೀನ್ ನನ್ನು ಭೇಟಿ ಮಾಡಿದ್ದು ಅಂತರರಾಷ್ಟ್ರೀಯ ಶಾಂತಿ ಸಂಸ್ಥೆ (ಐಪಿಐ)ಯ ಅಧಿಕೃತ ನಿಯೋಗದ ಭಾಗವಾಗಿದ್ದವು ಎಂದು ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಬುಧವಾರ ಸ್ಪಷ್ಟಪಡಿಸಿದ್ದಾರೆ. ಎಪ್ಸ್ಟೀನ್ ಸುತ್ತಲಿನ ಜಾಗತಿಕ ವಿವಾದಕ್ಕೆ ತಮ್ಮನ್ನು ಎಳೆದು ತರುತ್ತಿರುವ ವಿರೋಧ ಪಕ್ಷದ ಆರೋಪಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಎಪ್ಸ್ಟೀನ್ ನ ಖಾಸಗಿ ದ್ವೀಪ ‘ಲಿಟಲ್ ಸೇಂಟ್ ಜೇಮ್ಸ್’ಗೆ ತಾನು ಎಂದಿಗೂ ಭೇಟಿ ನೀಡಿಲ್ಲ ಎಂದು ಹೇಳಿದರು. “ಆ ವ್ಯಕ್ತಿ ಯಾರೆಂದು ಅರಿತುಕೊಂಡ ಬಳಿಕ ಅಮೆರಿಕನ್ನರೊಂದಿಗಿನ ಸಂಪರ್ಕವನ್ನು ಕಡಿತಗೊಳಿಸಿದೆ,” ಎಂದು ಪುರಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಭಾರತೀಯ ಜನತಾ ಪಕ್ಷದ ಪ್ರಧಾನ ಕಚೇರಿಯಲ್ಲಿ ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ ಪುರಿ, ನ್ಯೂಯಾರ್ಕ್ ನಲ್ಲಿ ಐಪಿಐ ಜೊತೆ ಕಾರ್ಯನಿರ್ವಹಿಸುತ್ತಿದ್ದ ಅವಧಿಯಲ್ಲಿ ಅಧಿಕೃತ ನಿಯೋಗದ ಭಾಗವಾಗಿ ಎಪ್ಸ್ಟೀನ್ ನನ್ನು ಕೇವಲ ಮೂರು ಅಥವಾ ನಾಲ್ಕು ಬಾರಿ ಮಾತ್ರ ಭೇಟಿಯಾಗಿದ್ದಾಗಿ ಹೇಳಿದರು. 2014ರಿಂದ 2017ರ ನಡುವೆ ನಡೆದ ಈ ಸಂಪರ್ಕಗಳು ಲಿಂಕ್ಡ್ಇನ್ ಸಹ ಸಂಸ್ಥಾಪಕ ರೀಡ್ ಹಾಫ್ಮನ್ ಸೇರಿದಂತೆ ಸಿಲಿಕಾನ್ ವ್ಯಾಲಿಯ ಹಲವಾರು ವ್ಯಕ್ತಿಗಳೊಂದಿಗೆ ನೆಟ್ವರ್ಕಿಂಗ್ ಭಾಗವಾಗಿದ್ದವು ಎಂದು ವಿವರಿಸಿದರು. ಲೈಂಗಿಕ ಕಳ್ಳಸಾಗಣೆ ಆರೋಪ ಪ್ರಕರಣದಲ್ಲಿ ವಿಚಾರಣೆ ಎದುರಿಸುತ್ತಿದ್ದ ವೇಳೆ 2019ರಲ್ಲಿ ಮೃತಪಟ್ಟ ಎಪ್ಸ್ಟೀನ್ ನ ತನಿಖೆಗೆ ಸಂಬಂಧಿಸಿದ ಸುಮಾರು ಮೂರು ಮಿಲಿಯನ್ ದಾಖಲೆಗಳ ಹೊಸ ಫೈಲ್ ಗಳನ್ನು ಅಮೆರಿಕ ನ್ಯಾಯ ಇಲಾಖೆ ಕಳೆದ ತಿಂಗಳು ಪ್ರಕಟಿಸಿತ್ತು. ಇದರಿಂದ ವಿಶ್ವದ ಅನೇಕ ರಾಜಕಾರಣಿಗಳು, ಸೆಲೆಬ್ರಿಟಿಗಳು ಹಾಗೂ ರಾಜಮನೆತನದವರ ಹೆಸರುಗಳು ಚರ್ಚೆಯ ಮುನ್ನಲೆಗೆ ಬಂದಿದೆ. ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಇಮೇಲ್ ದಾಖಲೆಗಳಲ್ಲಿ ಪುರಿ ಹಾಗೂ ಉದ್ಯಮಿ ಅನಿಲ್ ಅಂಬಾನಿ ಅವರ ಹೆಸರುಗಳಿವೆ ಎಂದು ಹೇಳಿದ ಕೆಲವೇ ಗಂಟೆಗಳಲ್ಲೇ ಪುರಿ ಈ ಪತ್ರಿಕಾಗೋಷ್ಠಿ ನಡೆಸಿದರು. ರಾಹುಲ್ ಗಾಂಧಿ ವಿರುದ್ಧ ತಮ್ಮ ಪಕ್ಷ ಹಕ್ಕುಚ್ಯುತಿ ಮಂಡಿಸುವುದಾಗಿ ಎಚ್ಚರಿಸಿದ ಅವರು, ಆರೋಪಗಳನ್ನು “ಮಾನಹಾನಿ ಅಭಿಯಾನ” ಎಂದು ಹೇಳಿದರು. “ಆಧಾರರಹಿತ ಆರೋಪಗಳನ್ನು ಮಾಡುವ ಅಭ್ಯಾಸ ಹೊಂದಿರುವ ಯುವ ನಾಯಕರೊಬ್ಬರಿದ್ದಾರೆ,” ಎಂದು ರಾಹುಲ್ ಗಾಂಧಿಯವರನ್ನು ಟೀಕಿಸಿದರು. ಐಪಿಐಯಲ್ಲಿನ ತಮ್ಮ ಅವಧಿ ಕುರಿತು ವಿವರಿಸಿದ ಪುರಿ, ವಿಶ್ವಸಂಸ್ಥೆಯ 75ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಅದರ ಕಾರ್ಯಕ್ಷಮತೆ ಪರಿಶೀಲನೆಗಾಗಿ ಸ್ಥಾಪಿಸಲಾದ ‘ಬಹುಪಕ್ಷೀಯತೆಯ ಸ್ವತಂತ್ರ ಆಯೋಗ’ದ ಪ್ರಧಾನ ಕಾರ್ಯದರ್ಶಿಯಾಗಿದ್ದೆ ಎಂದು ಹೇಳಿದರು. ಅದರ ಅಧ್ಯಕ್ಷರು ಆಸ್ಟ್ರೇಲಿಯಾದ ಮಾಜಿ ಪ್ರಧಾನಿಯಾಗಿದ್ದರು ಎಂದೂ ತಿಳಿಸಿದರು. ಇದೇ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾಗ ಎಪ್ಸ್ಟೀನ್ ನನ್ನು ಭೇಟಿಯಾದೆ ಎಂದು, ತಮ್ಮ ಆಗಿನ ಮುಖ್ಯಸ್ಥ ಟೆರ್ಜೆ ರಾಡ್–ಲಾರ್ಸೆನ್ ಅವರಿಗೆ ಎಪ್ಸ್ಟೀನ್ ಪರಿಚಿತರಾಗಿದ್ದರು ಎಂದೂ ಹೇಳಿದರು. “ಐಪಿಐ ಅಥವಾ ಐಸಿಎಂ ನಿಯೋಗದ ಭಾಗವಾಗಿ ಕೆಲವು ಸಂದರ್ಭಗಳಲ್ಲಿ ಮೂರು ಅಥವಾ ಗರಿಷ್ಠ ನಾಲ್ಕು ಬಾರಿ ಎಪ್ಸ್ಟೀನ್ ನನ್ನು ಭೇಟಿಯಾಗಿದ್ದೆ. ಐಸಿಎಂ ಅಂತರರಾಷ್ಟ್ರೀಯ ಹಾಗೂ ವಿಷಯಾಧಾರಿತ ಸಮಸ್ಯೆಗಳನ್ನು ನೋಡುತ್ತಿತ್ತು. ಐಸಿಎಂನಲ್ಲಿ ಆಸ್ಟ್ರೇಲಿಯಾದ ಮಾಜಿ ಪ್ರಧಾನಿ ಕೆವಿನ್ ರುಡ್ ಹಾಗೂ ಈಗ ವಿಶ್ವ ಆರ್ಥಿಕ ವೇದಿಕೆಯ ಸಿಇಒ ಆಗಿರುವ ನಾರ್ವೇಜಿಯನ್ ರಾಜಕಾರಣಿ ಬೋರ್ಜ್ ಬ್ರೆಂಡೆ ಇದ್ದರು,” ಎಂದು ಹೇಳಿದರು. ಹಾಫ್ಮನ್ ಅವರಿಗೆ ತಮ್ಮನ್ನು ಪರಿಚಯ ಮಾಡಿಕೊಟ್ಟದ್ದು ತಮ್ಮ ಸಂಪರ್ಕ ವಲಯದಲ್ಲಿದ್ದವರೇ ಎಂದು ಅವರು ಸ್ಪಷ್ಟಪಡಿಸಿದರು. “ರೀಡ್ ಹಾಫ್ಮನ್ ಅವರೊಂದಿಗೆ ನಡೆದ ಭೇಟಿಯ ನಂತರ ನಾನು ಒಂದು ಸಂದೇಶ ಕಳುಹಿಸಿದ್ದೆ. ನೀವು ತಿಳಿದುಕೊಳ್ಳಬೇಕಾದ ಎಪ್ಸ್ಟೀನ್ ಫೈಲ್ಗಳು ಎಲ್ಲಾ ತಪ್ಪುಗಳು ಹಾಗೂ ಕ್ರಿಮಿನಲ್ ಅಪರಾಧಗಳಿಗೆ ಸಂಬಂಧಿಸಿದವು; ನನ್ನ ಪರಿಚಯಕ್ಕೂ ಅದಕ್ಕೂ ಯಾವುದೇ ಸಂಬಂಧವಿಲ್ಲ,” ಎಂದು ಅವರು ಹೇಳಿದ್ದಾರೆ. ಸಚಿವರು ಹಾಫ್ಮನ್ ಅವರಿಗೆ ಕಳುಹಿಸಿದ್ದ ಇಮೇಲ್ ನ ಅಂಶಗಳನ್ನೂ ಓದಿ ಕೇಳಿಸಿದರು. ಆ ಇಮೇಲ್ಗೆ ಎಪ್ಸ್ಟೀನ್ ಅವರಿಗೆ ʼಕಾರ್ಬನ್ ಕಾಪಿʼ ಹಾಕಲಾಗಿದ್ದು, ಭಾರತವು ಇಂಟರ್ನೆಟ್ ಆಧಾರಿತ ಆರ್ಥಿಕ ಚಟುವಟಿಕೆಗಳಿಗೆ ವಿಶಾಲ ಅವಕಾಶಗಳನ್ನು ಒದಗಿಸುತ್ತಿದ್ದು, 2018ರ ವೇಳೆಗೆ ದೇಶದಲ್ಲಿ 500 ಮಿಲಿಯನ್ ಬಳಕೆದಾರರು ಇರಲಿದ್ದಾರೆ ಎಂದು ಅದರಲ್ಲಿ ಉಲ್ಲೇಖಿಸಲಾಗಿದೆ. “2014ರ ನವೆಂಬರ್ನಲ್ಲಿ ನಾನು ಸರ್ಕಾರದ ಭಾಗವಾಗಿರಲಿಲ್ಲ; ಸಾಮಾನ್ಯ ನಾಗರಿಕನಾಗಿದ್ದೆ. ಯಾರೋ ಅವರು ಭಾರತವನ್ನು ನೋಡಬೇಕು ಎಂದು ಹೇಳಿದರು,” ಎಂದು ತಮ್ಮ ಸಂವಹನವನ್ನು ಸಮರ್ಥಿಸಿಕೊಂಡರು. ತಮ್ಮನ್ನು “ದೂರದೃಷ್ಟಿಯ ಖಾಸಗಿ ನಾಗರಿಕ” ಎಂದು ಉಲ್ಲೇಖಿಸಿದ ಪುರಿ, ‘ಮೇಕ್ ಇನ್ ಇಂಡಿಯಾ’ ಮತ್ತು ‘ಡಿಜಿಟಲ್ ಇಂಡಿಯಾ’ ಮೊದಲಾದ ನೀತಿಗೆ ಮಧ್ಯಸ್ಥಿಕೆ ವಹಿಸುವ ಉದ್ದೇಶದಿಂದ ಸಂವಹನ ನಡೆಸಿದ್ದಾಗಿ ತಿಳಿಸಿದರು. ಎಪ್ಸ್ಟೀನ್ ನೊಂದಿಗೆ ಯಾವುದೇ ಸ್ನೇಹ ಸಂಬಂಧ ಇರಲಿಲ್ಲ ಎಂಬುದಕ್ಕೆ ಉದಾಹರಣೆಯಾಗಿ, ಎಪ್ಸ್ಟೀನ್ ತನ್ನನ್ನು ಇಮೇಲ್ ನಲ್ಲಿ “ಎರಡು ಮುಖಗಳಿರುವ ವ್ಯಕ್ತಿ” ಎಂದು ಬಣ್ಣಿಸಿದ್ದುದನ್ನೂ ಉಲ್ಲೇಖಿಸಿದರು. ಎಐಸಿಸಿ ಮಾಧ್ಯಮ ಮತ್ತು ಪ್ರಚಾರ ವಿಭಾಗದ ಅಧ್ಯಕ್ಷ ಪವನ್ ಖೇರಾ ಅವರು ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಅವರ ಹೇಳಿಕೆಗಳಿಗೆ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಪುರಿ ಅವರು ಜೆಫ್ರಿ ಎಪ್ಸ್ಟೀನ್ ಸಂಬಂಧಿತ ಆರೋಪಗಳ ಬಗ್ಗೆ “ಅಷ್ಟೇ” ಎಂಬ ಪದ ಬಳಸಿ ಮಾತನಾಡಿರುವುದನ್ನು ಅವರು ವಿರೋಧಿಸಿದರು. ಎಪ್ಸ್ಟೀನ್ ವಿರುದ್ಧ 2008ರಲ್ಲಿ ಅಪ್ರಾಪ್ತ ವಯಸ್ಕಳ ಲೈಂಗಿಕ ಶೋಷಣೆ ಪ್ರಕರಣದಲ್ಲಿ ತಪ್ಪೊಪ್ಪಿಕೊಂಡು ಶಿಕ್ಷೆ ಅನುಭವಿಸಿರುವುದಕ್ಕೆ ದಾಖಲೆಗಳಿವೆ. ಇಂತಹ ಗಂಭೀರ ಅಪರಾಧವನ್ನು “ಅಷ್ಟೇ” ಎಂದು ಉಲ್ಲೇಖಿಸುವುದು ಅಪರಾಧದ ತೀವ್ರತೆಯನ್ನು ಕಡಿಮೆ ಮಾಡುವ ಪ್ರಯತ್ನವಾಗುತ್ತದೆ ಎಂದು ಪವನ್ ಖೇರಾ ಅವರು ಟೀಕಿಸಿದರು. ಮಗುವಿನ ಲೈಂಗಿಕ ಶೋಷಣೆಯನ್ನು ಸಾಮಾನ್ಯೀಕರಿಸುವ ರೀತಿಯ ಮಾತುಗಳು ಸಮಾಜಕ್ಕೆ ತಪ್ಪು ಸಂದೇಶ ನೀಡುತ್ತವೆ,” ಎಂದು ಅವರು ಅಭಿಪ್ರಾಯಪಟ್ಟರು. ಎಪ್ಸ್ಟೀನ್ ವಿರುದ್ಧದ ಪ್ರಕರಣಗಳು ಕೇವಲ ವದಂತಿಗಳಲ್ಲ; ಫ್ಲೋರಿಡಾ ನ್ಯಾಯಾಲಯದಲ್ಲಿ ತಪ್ಪೊಪ್ಪಿಕೊಂಡು ಶಿಕ್ಷೆಗೆ ಗುರಿಯಾಗಿರುವುದು ಕಾನೂನುಬದ್ಧವಾಗಿ ಸಾಬೀತಾಗಿದೆ ಎಂಬುದನ್ನು ಖೇರಾ ಉಲ್ಲೇಖಿಸಿದರು. ಆದರೂ “ನಿಮ್ಮಲ್ಲಿ ಅನೇಕರಿಗೆ ಅನುಮಾನಗಳಿದ್ದವು” ಎಂಬ ರೀತಿಯ ಹೇಳಿಕೆಗಳು ಅಪರಾಧದ ವಾಸ್ತವಿಕತೆಯನ್ನು ಪ್ರಶ್ನಿಸುವಂತಾಗುತ್ತದೆ ಎಂದು ಅವರು ಹೇಳಿದರು.

ವಾರ್ತಾ ಭಾರತಿ 12 Feb 2026 1:52 pm

Bidar | ರಾಮನಿಗೆ ಅವಹೇಳನ ಆರೋಪ: ಇಬ್ಬರ ವಿರುದ್ಧ ಪ್ರಕರಣ ದಾಖಲು

ಹುಲಸೂರು/ಮೆಹಕರ್, ಫೆ.12: ಶ್ರೀರಾಮ, ಶ್ರೀಕೃಷ್ಣ ಹಾಗೂ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಕುರಿತು ಅವಹೇಳನಕಾರಿಯಾಗಿ ಮಾತನಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡಲಾಗಿದೆ ಎಂಬ ಆರೋಪ ಸಂಬಂಧ ಕಾಳಿದಾಸ್ ಸೂರ್ಯವಂಶಿ ಹಾಗೂ ರಾಹುಲ್ ಖಂದಾರೆ ಎಂಬ ಇಬ್ಬರ ವಿರುದ್ಧ ಮೆಹಕರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಸಂಬಂಧ ಮೆಹಕರ್ ನಿವಾಸಿ ಭರತ್ ದಯಾನಂದ ಪಾಟೀಲ್ ಅವರು ಫೆ.12ರಂದು ದೂರು ಸಲ್ಲಿಸಿದ್ದಾರೆ. ಫೆ.11ರಂದು ಸಂಜೆ ಫೇಸ್ಬುಕ್ ವೀಕ್ಷಿಸುವ ವೇಳೆ ಶ್ರೀರಾಮ, ಶ್ರೀಕೃಷ್ಣ ಹಾಗೂ ಮಹಾತ್ಮ ಗಾಂಧೀಜಿ ಕುರಿತು ಅವಹೇಳನಕಾರಿಯಾಗಿ ಮಾತನಾಡಿರುವ ವೀಡಿಯೋ ಗಮನಕ್ಕೆ ಬಂದಿದ್ದು, ಅದರಲ್ಲಿ ಮರಾಠಿ ಭಾಷೆಯ ಶಾಹಿರಿಯ ಮೂಲಕ ಅವಮಾನಕಾರಿ ಹೇಳಿಕೆ ನೀಡಲಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಅಟ್ಟರ್ಗಾ ಗ್ರಾಮದ ನಿವಾಸಿಯಾಗಿರುವ ಕಾಳಿದಾಸ್ ಸೂರ್ಯವಂಶಿ ಈ ವೀಡಿಯೋವನ್ನು ಫೇಸ್ಬುಕ್ ನಲ್ಲಿ ಪ್ರಸಾರ ಮಾಡಿದ್ದಾರೆ. ಅಲ್ಲದೆ, ರಾಹುಲ್ ವಿ. ಖಂದಾರೆ ಸೇರಿದಂತೆ ಇತರರು ವೀಡಿಯೋವನ್ನು ತಮ್ಮ ಮೊಬೈಲ್ ಗಳಲ್ಲಿ ಹಂಚಿಕೊಂಡು ಫೇಸ್ಬುಕ್ ಸ್ಟೇಟಸ್ ನಲ್ಲಿ ಪ್ರಕಟಿಸಿದ್ದಾರೆ ಎಂದು ಆರೋಪಿಸಲಾಗಿದೆ. ದೂರುದಾರರ ಪ್ರಕಾರ, ಆರೋಪಿಗಳು ಉದ್ದೇಶಪೂರ್ವಕವಾಗಿ ಧಾರ್ಮಿಕ ಭಾವನೆಗಳನ್ನು ಅವಮಾನಗೊಳಿಸುವುದರ ಜೊತೆಗೆ ಧರ್ಮದ ಆಧಾರದ ಮೇಲೆ ವಿವಿಧ ಸಮುದಾಯಗಳ ನಡುವೆ ದ್ವೇಷ ಉಂಟುಮಾಡುವ ಪ್ರಯತ್ನ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಈ ಕುರಿತು ಮೆಹಕರ್ ಪೊಲೀಸ್ ಠಾಣೆಯಲ್ಲಿ ಗುನ್ನೆ ನಂ.17/2026̧, ಭಾರತೀಯ ನ್ಯಾಯ ಸಂಹಿತೆ (BNS) ಕಲಂ 299, 196, 353 ಅಡಿ ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ವಾರ್ತಾ ಭಾರತಿ 12 Feb 2026 1:46 pm

ಭಾರತದ ಪಂದ್ಯವನ್ನು ’Not A Big Deal' ಎಂದ ಪಾಕ್ ಆಟಗಾರ : ಅಂಕಿಅಂಶ ತಿರುವಿದರೆ ಬೆವರಿಳಿಯುವುದು ಖಚಿತ

India Vs Pakistan Match : ಟಿ20 ವಿಶ್ವಕಪ್ ಕ್ರೀಡಾಕೂಟದ ನಿರ್ಣಾಯಕ ಪಂದ್ಯದಲ್ಲಿ ಭಾರತ ತಂಡ ಪಾಕಿಸ್ತಾನವನ್ನು ಎದುರಿಸಲಿದೆ. ಇದೇ ಬರುವ ಭಾನುವಾರ ಪಂದ್ಯ ನಡೆಯಲಿದ್ದು, ಕ್ರಿಕೆಟ್ ಅಭಿಮಾನಿಗಳ ಕುತೂಹಲ ಗಗನಕ್ಕೇರಿದೆ. ಸಾಂಪ್ರದಾಯಿಕ ಎದುರಾಳಿಯ ನಡುವಿನ ಪಂದ್ಯವನ್ನು ಇದೊಂದು ನಾರ್ಮಲ್ ಮ್ಯಾಚ್ ಎಂದು ಶಾಹಿಬ್’ಜಾದ ಫರ್ಹಾನ್ ಅಭಿಪ್ರಾಯ ಪಟ್ಟಿದ್ದಾರೆ.

ವಿಜಯ ಕರ್ನಾಟಕ 12 Feb 2026 1:28 pm

ಮಸೀದಿ, ದರ್ಗಾಗಳ ವಿರುದ್ಧ ಪದೇ ಪದೇ ಸಾರ್ವಜನಿಕ ಹಿತಾಸಕ್ತಿ ಅರ್ಜಿ: NGOಗೆ ದಿಲ್ಲಿ ಹೈಕೋರ್ಟ್ ತರಾಟೆ

ಹೊಸದಿಲ್ಲಿ: ಮಸೀದಿಗಳು ಮತ್ತು ದರ್ಗಾಗಳ ಅತಿಕ್ರಮಣ ಆರೋಪಿಸಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಗಳನ್ನು ಪದೇ ಪದೇ ಸಲ್ಲಿಸಿದ್ದ NGOಗೆ ದಿಲ್ಲಿ ಹೈಕೋರ್ಟ್ ಬುಧವಾರ ತರಾಟೆಗೆ ತೆಗೆದುಕೊಂಡಿದೆ. ʼಸೇವ್ ಇಂಡಿಯಾ ಫೌಂಡೇಶನ್ʼ ಎಂಬ ಸರಕಾರೇತರ ಸಂಸ್ಥೆಯು ಮಸೀದಿಗಳು, ದರ್ಗಾ ಮತ್ತು ವಕ್ಫ್‌ಗೆ ಸೇರಿದ ಆಸ್ತಿಗಳ ಅತಿಕ್ರಮಣವನ್ನು ಆರೋಪಿಸಿ ಪದೇ ಪದೇ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಿ ನಂತರ ಸಾಮಾಜಿಕ ಮಾಧ್ಯಮಗಳಲ್ಲಿ ಕೂಡ ಈ ವಿಷಯಗಳ ಬಗ್ಗೆ ಹೇಳಿಕೆ ನೀಡುತ್ತಿರುವುದರ ಬಗ್ಗೆ ದಿಲ್ಲಿ ಹೈಕೋರ್ಟ್ ಬುಧವಾರ ಅಸಮಾಧಾನ ವ್ಯಕ್ತಪಡಿಸಿದೆ. ದಿಲ್ಲಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿಕೆ ಉಪಾಧ್ಯಾಯ ಮತ್ತು ನ್ಯಾಯಮೂರ್ತಿ ತೇಜಸ್ ಕರಿಯಾ ಅವರ ಪೀಠವು, ಮೊದಲು PIL ಸಲ್ಲಿಸುವ ಮತ್ತು ನಂತರ ಸಾಮಾಜಿಕ ಮಾಧ್ಯಮಗಳಲ್ಲಿ ಅದರ ಬಗ್ಗೆ ಹೇಳಿಕೆ ನೀಡುವ ಪ್ರವೃತ್ತಿಯನ್ನು ಗುರುತಿಸಿದೆ. ನೀವು ಈಗಾಗಲೇ ನ್ಯಾಯಾಲಯದ ಮುಂದೆ ಇದ್ದೀರಿ. ಹೇಳಬೇಕಾದ ಎಲ್ಲಾ ವಾದಗಳನ್ನು ನ್ಯಾಯಾಲಯದಲ್ಲೇ ಮಂಡಿಸಿ ಎಂದು ಮೌಖಿಕವಾಗಿ ತಿಳಿಸಿದೆ. ಪೀಠವು, ಸೇವ್ ಇಂಡಿಯಾ ಫೌಂಡೇಶನ್ ಸೇರಿದಂತೆ ಇತರ ಸಂಸ್ಥೆಗಳ ವಿರುದ್ಧ ಸಲ್ಲಿಸಿದ ಪ್ರತ್ಯೇಕ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಿಚಾರಣೆ ನಡೆಸಿದೆ. ಅರ್ಜಿಯಲ್ಲಿ ಈ ಸಂಸ್ಥೆಗಳು ರಾಜಕೀಯ ಉದ್ದೇಶಗಳಿಂದ ಧಾರ್ಮಿಕ ಕೇಂದ್ರಗಳನ್ನು ಗುರಿಯಾಗಿಸಿಕೊಂಡು ಪಿಐಎಲ್‌ಗಳನ್ನು ಸಲ್ಲಿಸುತ್ತಿದ್ದು, ಸಮಾಜದಲ್ಲಿ ಧಾರ್ಮಿಕ ಉದ್ವಿಗ್ನತೆಯನ್ನು ಉಂಟುಮಾಡಲು ಪ್ರಯತ್ನಿಸುತ್ತಿವೆ ಎಂದು ಆರೋಪಿಸಲಾಗಿತ್ತು.

ವಾರ್ತಾ ಭಾರತಿ 12 Feb 2026 1:14 pm

ಸಾಂಸ್ಕೃತಿಕ ಮಹಾಕುಂಭಕ್ಕೆ ಹಂಪಿ ಸಜ್ಜು ; ನೋಡಬನ್ನಿ ವೈಭವೋತ್ಸವ

ಸಾಂಸ್ಕೃತಿಕ ಹಬ್ಬಕ್ಕಾಗಿ ಹಂಪಿ ಸಂಪೂರ್ಣ ಸಿದ್ಧವಾಗಿದೆ. ಜಿಲ್ಲಾಡಳಿತ ಮತ್ತು ಪ್ರವಾಸೋದ್ಯಮ ಇಲಾಖೆ ಸಕಲ ಸಿದ್ಧತೆ ಮಾಡಿಕೊಂಡಿದೆ. ಹಂಪಿಯು ತನ್ನ ಗತವೈಭವಕ್ಕೆ ಮರಳಲು ಮದುವಣಗಿತ್ತಿಯಂತೆ ಸಜ್ಜಾಗಿದೆ. ವೇದಿಕೆಗಳಿಗೆ ಅಂತಿಮ ಸ್ಪರ್ಶ, ಕಲಾವಿದರ ತಾಲೀಮು ಮತ್ತಿತರ ದೃಶ್ಯಗಳು ಗತವೈಭವ ನೆನಪಿಸುವಂತಿವೆ.

ವಿಜಯ ಕರ್ನಾಟಕ 12 Feb 2026 1:00 pm

ಬೆಳ್ತಂಗಡಿ: ಶಾಲಾ ಮಕ್ಕಳನ್ನು ಪಿಕಪ್, ಟಿಪ್ಪರ್‌ನಲ್ಲಿ ಅಧ್ಯಯನಕ್ಕೆ ಕರೆದೊಯ್ದ ಮುಖ್ಯೋಪಾಧ್ಯಾಯ; ಪೋಷಕರ ಆಕ್ರೋಶ

ಬೆಳ್ತಂಗಡಿ: ರಸ್ತೆ ಸುರಕ್ಷತಾ ಕ್ರಮಗಳನ್ನು ಮರೆತು ಕಾನೂನುಬಾಹಿರವಾಗಿ ಸರಕು ಸಾಗಣೆ ವಾಹನಗಳಲ್ಲಿ ಶಾಲಾ ಮಕ್ಕಳನ್ನು ಜೇನು ಕೃಷಿ ಅಧ್ಯಯನಕ್ಕೆ ತೆರೆದ ಪಿಕಪ್ ಮತ್ತು ಟಿಪ್ಪರ್‌ನಲ್ಲಿ ಕರೆದುಕೊಂಡು ಹೋದ ಬಗ್ಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ ಘಟನೆ ಬೆಳ್ತಂಗಡಿ ತಾಲೂಕಿನ ಬಳೆಂಜ ಗ್ರಾಮದಲ್ಲಿ ನಡೆದಿರುವ ಬಗ್ಗೆ ವರದಿಯಾಗಿದೆ. ಇತ್ತೀಚೆಗಷ್ಟೇ ಶತಮಾನೋತ್ಸವ ಕಾರ್ಯಕ್ರಮವನ್ನು ಅದ್ದೂರಿಯಾಗಿ ನಡೆಸಿದ ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಬಳೆಂಜದ ಪ್ರಭಾರ ಮುಖ್ಯೋಪಾಧ್ಯಾಯರ ನೇತೃತ್ವದಲ್ಲಿ ಫೆ.10ರಂದು ಬೆಳಿಗ್ಗೆ ಶಾಲಾ ಮಕ್ಕಳನ್ನು ಪಿಕಪ್ ಹಾಗೂ ಟಿಪ್ಪರ್ ವಾಹನದಲ್ಲಿ ಜೇನು ಕೃಷಿ ಅಧ್ಯಯನದ ಹೆಸರಿನಲ್ಲಿ ಸ್ಥಳೀಯ ನಾಲ್ಕೂರು ಬಳಿಯ ಅನಿಲ್ ಫಾರ್ಮ್‌ಗೆ ಕರೆದುಕೊಂಡು ಹೋಗಿ ಬಳಿಕ ವಾಪಸ್ ಶಾಲೆಗೆ ಕರೆದುಕೊಂಡು ಬಂದಿದ್ದಾರೆ ಎನ್ನಲಾಗಿದೆ. ಈ ಘಟನೆ ಬೆಳಕಿಗೆ ಬರುತ್ತಿದ್ದಂತೆಯೇ ಆಕ್ರೋಶ ವ್ಯಕ್ತಪಡಿಸಿದ ವಿದ್ಯಾರ್ಥಿಗಳ ಪೋಷಕರು, ಪಿಕಪ್ ಮತ್ತು ಟಿಪ್ಪರ್ ಸೇರಿದಂತೆ ಸರಕು ಸಾಗಣೆ ವಾಹನಗಳಲ್ಲಿ ಕೂಲಿ ಕಾರ್ಮಿಕರನ್ನೂ ಕರೆದುಕೊಂಡು ಹೋಗಲು ಮೋಟಾರು ವಾಹನ ಕಾಯ್ದೆಯಡಿ ಅವಕಾಶವಿಲ್ಲದಿರುವಾಗ ಶಾಲಾ ಮಕ್ಕಳನ್ನು ಕರೆದುಕೊಂಡು ಹೋಗಿರುವುದು ಏಕೆ? ಅಲ್ಲದೆ, ಈ ರೀತಿ ಕರೆದುಕೊಂಡು ಹೋಗಿ ಶಾಲಾ ಮಕ್ಕಳಿಗೆ ಏನಾದರೂ ಅನಾಹುತ ಸಂಭವಿಸಿದರೆ ಯಾರು ಹೊಣೆ? ಎಂದು ಮುಖ್ಯೋಪಾಧ್ಯಾಯರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಶಾಲಾ ಮಕ್ಕಳನ್ನು ಪಿಕಪ್ ಮತ್ತು ಟಿಪ್ಪರ್‌ನಲ್ಲಿ ಕರೆದುಕೊಂಡು ಹೋಗುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ವೈರಲ್ ಆಗುತ್ತಿದ್ದಂತೆ, ಈ ಬಗ್ಗೆ ಪೊಲೀಸ್ ಇಲಾಖೆ ಮುಖ್ಯೋಪಾಧ್ಯಾಯ ಹಾಗೂ ಎರಡು ವಾಹನಗಳ ಚಾಲಕರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ ಎಂದು ತಿಳಿದು ಬಂದಿದೆ.

ವಾರ್ತಾ ಭಾರತಿ 12 Feb 2026 12:58 pm

ಕಾನ್ಪುರ ಲ್ಯಾಂಬೊರ್ಗಿನಿ ಕಾರು ಅಪಘಾತ ಪ್ರಕರಣ: ತಂಬಾಕು ಉದ್ಯಮಿಯ ಪುತ್ರ ಶಿವಂ ಮಿಶ್ರಾ ಬಂಧನ

ಕಾನ್ಪುರ: ಐಷಾರಾಮಿ ಲ್ಯಾಂಬೊರ್ಗಿನಿ ಕಾರು ಅಪಘಾತ ಪ್ರಕರಣದಲ್ಲಿ ತಂಬಾಕು ಉದ್ಯಮಿ ಕೆ.ಕೆ.ಮಿಶ್ರಾರ ಪುತ್ರ ಶಿವಂ ಮಿಶ್ರಾನನ್ನು ಪೊಲೀಸರು ಬಂಧಿಸಿದ್ದಾರೆ. ಫೆಬ್ರವರಿ 9ರಂದು ಕಾನ್ಪುರದ ಗ್ವಾಲ್ಟೋಲಿ ಪ್ರದೇಶದ ವಿಐಪಿ ರಸ್ತೆಯಲ್ಲಿ ಶಿವಂ ಮಿಶ್ರಾ ಚಾಲನೆ ಮಾಡುತ್ತಿದ್ದ ಲ್ಯಾಂಬೊರ್ಗಿನಿ ಕಾರು ಪಾದಚಾರಿಗಳಿಗೆ ಢಿಕ್ಕಿ ಹೊಡೆದಿತ್ತು. ಈ ಘಟನೆಯಲ್ಲಿ ಆರು ಮಂದಿ ಗಂಭೀರವಾಗಿ ಗಾಯಗೊಂಡಿದ್ದರು. ಈ ಕುರಿತು ಪ್ರತಿಕ್ರಿಯಿಸಿದ್ದ ಮಿಶ್ರಾರ ವಕೀಲ ಮೃತ್ಯುಂಜಯ ಕುಮಾರ್, “ಅಪಘಾತ ನಡೆದಾಗ ಕಾರು ಚಲಾಯಿಸುತ್ತಿದ್ದದ್ದು ಚಾಲಕ ಮೋಹನ್ ಹೊರತು ಶಿವಂ ಮಿಶ್ರಾ ಅಲ್ಲ. ನಾವು ನ್ಯಾಯಾಲಯಕ್ಕೆ ಅಗತ್ಯ ಸಾಕ್ಷ್ಯಗಳನ್ನು ಹಾಜರುಪಡಿಸುತ್ತೇವೆ. ಇದನ್ನು ಕ್ರಿಮಿನಲ್ ಪ್ರಕರಣದ ಬದಲು ಅಪಘಾತ ಪ್ರಕರಣವನ್ನಾಗಿ ಅಧಿಕಾರಿಗಳು ಪರಿಗಣಿಸಬೇಕು” ಎಂದು ಆಗ್ರಹಿಸಿದ್ದರು. ಹೀಗಾಗಿ, ಈ ಪ್ರಕರಣ ವಿವಾದಾತ್ಮಕ ತಿರುವು ಪಡೆದುಕೊಂಡಿತ್ತು. ಇದಕ್ಕೆ ಪ್ರತಿಯಾಗಿ, “ಪ್ರಕರಣದ ಸಂಬಂಧ ಸಿಸಿಟಿವಿ ಕ್ಯಾಮೆರಾದ ದೃಶ್ಯಾವಳಿಗಳ ಪರಿಶೀಲನೆ, ಪ್ರತ್ಯಕ್ಷದರ್ಶಿಗಳ ಹೇಳಿಕೆ ಮತ್ತು ಇತರ ಸಾಕ್ಷ್ಯಗಳನ್ನು ಸಂಗ್ರಹಿಸಲಾಗಿದೆ. ಅಪಘಾತ ನಡೆದಾಗ ಶಿವಂ ಮಿಶ್ರಾನೇ ಕಾರು ಚಲಾಯಿಸುತ್ತಿದ್ದದ್ದು ದೃಢಪಟ್ಟಿದೆ” ಎಂದು ಕಾನ್ಪುರ ಪೊಲೀಸ್ ಆಯುಕ್ತ ರಘುಬೀರ್ ಲಾಲ್ ಸ್ಪಷ್ಟಪಡಿಸಿದ್ದಾರೆ.

ವಾರ್ತಾ ಭಾರತಿ 12 Feb 2026 12:56 pm

ದೇಶದ 54 ಎಸ್ಕಾಮ್‌ ಗಳ ಪೈಕಿ ಬೆಸ್ಕಾಂಗೆ 51ಸ್ಥಾನ: ಕಳಪೆ ಪ್ರದರ್ಶನ ನೀಡಿ Bಯಿಂದ C-ದರ್ಜೆಗೆ ಕುಸಿದ ಬೆಸ್ಕಾಂ

ದೇಶದಲ್ಲಿನ 54 ಎಸ್ಕಾಮ್‌ ಗಳ ಪ್ರದರ್ಶನವನ್ನು ಅಳೆಯಲು ಹಲವು ಮಾನದಂಡಗಳನ್ನೊಳಗೊಂಡತೆ ಕೇಂದ್ರ ವಿದ್ಯುತ್‌ ಸಚಿವಾಲಯ 4 ನೇ ವಾರ್ಷಿಕ ಸಂಯೋಜಿತ ರೇಟಿಂಗ್ ಮತ್ತು ಶ್ರೇಯಾಂಕ ವರದಿಯ ಬಿಡುಗಡೆ ಮಾಡಿದ್ದು, ಇದರಲ್ಲಿ 54 ಎಸ್ಕಾಮ್‌ ಗಳ ಪೈಕಿ ಕರ್ನಾಟಕದ ಬೆಸ್ಕಾಂ 51ಸ್ಥಾನದಲ್ಲಿದೆ. ಈ ವರ್ಷದ ಶ್ರೇಯಾಂಕ ಪಟ್ಟಿಯಲ್ಲಿ ತನ್ನ ಕಳಪೆ ಪ್ರದರ್ಶನದಿಂದ ಸಿ-ರೇಟಿಂಗ್‌ ಪಡೆಯುವ ಮೂಲಕ ರೆಡ್‌ ಕಾರ್ಡ್‌ ಪಡೆದ ಬೆಸ್ಕಾಂ ಕಳೆದ ಸಾಲಿನ ಬಿ-ದರ್ಜೆಯಿಂದ ಸಿ ದರ್ಜೆಗೆ ಜಾರಿದೆ. ಇನ್ನು, ರಾಜ್ಯದ ಯಾವುದೇ ಎಸ್ಕಾಮ್‌ ಗಳು ಸಹ ಟಾಪ್‌ 10-20ಸ್ಥಾನದಲ್ಲಿ ಕಾಣಿಸಿಕೊಂಡಿಲ್ಲ. ಆದಾಗ್ಯೂ, ಮೆಸ್ಕಾಂ 26ಸ್ಥಾನದಲ್ಲಿರುವ ಮೂಲಕ ರಾಜ್ಯದ ಪರವಾಗಿ ಉತ್ತಮ ಪ್ರದರ್ಶನ ನೀಡಿದೆ.

ವಿಜಯ ಕರ್ನಾಟಕ 12 Feb 2026 12:52 pm

ಸುಪ್ರೀಂಕೋರ್ಟ್‌ನಲ್ಲಿ ಬೈರತಿ ಬಸವರಾಜ್‌ಗೆ ಹಿನ್ನಡೆ: ಜಾಮೀನು ಅರ್ಜಿ ವಜಾ, ಸಿಐಡಿಯಿಂದ ಬಂಧನ ಸಾಧ್ಯತೆ

ನಿರೀಕ್ಷಣಾ ಜಾಮೀನು ಪಡೆಯಲು ಶಾಸಕ ಬೈರತಿ ಬಸವರಾಜ್ ನಡೆಸಿದ ಪ್ರಯತ್ನ ವಿಫಲ ಆಗಿದೆ.

ವಿಜಯ ಕರ್ನಾಟಕ 12 Feb 2026 12:50 pm

ರಾಹುಲ್‌ ಗಾಂಧಿ ಎದುರಿಸಲಾಗದೇ ಓಡಿದರು; ಪ್ರಹ್ಲಾದ್‌ ಜೋಶಿ ಜೊತೆಗಿನ ವರ್ತನೆಗೆ ಕರ್ನಾಟಕ ಕಾಂಗ್ರೆಸ್‌ ಭಿನ್ನ ವಿಶ್ಲೇಷಣೆ!

ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್‌ ಗಾಂಧಿ ಮತ್ತು ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ನಡುವಿನ ತಮಾಷೆಯ ಪ್ರಸಂಗ, ಕರ್ನಾಟಕದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ ನಡುವೆ ವಾಕ್ಸಮರಕ್ಕೆ ಕಾರಣವಾಗಿದೆ. ಪ್ರಹ್ಲಾದ್‌ ಜೋಶಿ ಅವರ ಕೈ ಹಿಡಿದೆಳೆದ ರಾಹುಲ್‌ ಗಾಂಧಿ ವಿರುದ್ದ ರಾಜ್ಯ ಬಿಜೆಪಿ ಘಟಕ ಸಿಡಿದೆದ್ದಿದ್ದರೆ, ರಾಹು; ಗಾಂಧಿ ಪರ ಕೆಪಿಸಿಸಿ ಧ್ವನಿ ಎತ್ತಿದೆ. ಆದರೆ ಈ ಕುರಿತು ರಾಹುಲ್‌ ಗಾಂಧಿ ಅವರಾಗಲಿ, ಪ್ರಹ್ಲಾದ್‌ ಜೋಶಿ ಅವರಾಗಲಿ ಯಾವುದೇ ಹೇಳಿಕೆ ನೀಡಿಲ್ಲ.

ವಿಜಯ ಕರ್ನಾಟಕ 12 Feb 2026 12:48 pm

ಅಹ್ಮದಾಬಾದ್ ವಿಮಾನ ದುರಂತ | ‘ಇಂಧನ ಸ್ವಿಚ್‌ಗಳನ್ನು ಪೈಲಟ್ ಉದ್ದೇಶಪೂರ್ವಕವಾಗಿ ಆಫ್ ಮಾಡಿರಬಹುದು: ಇಟಾಲಿಯನ್ ಪತ್ರಿಕೆ ವರದಿ

ಕ್ಲೈವ್ ಕುಂದರ್ ನಿಯಂತ್ರಣ ಯೋಕ್ ಬಳಸಿ ಎತ್ತರ ಮರಳಿ ಪಡೆಯಲು ಯತ್ನಿಸಿದ್ದರೆ, ಸ್ಥಿರವಾಗಿದ್ದ ಕ್ಯಾಪ್ಟನ್ ಸಬರ್ವಾಲ್ ಸ್ವಿಚ್ ಗಳು!

ವಾರ್ತಾ ಭಾರತಿ 12 Feb 2026 12:48 pm

ಹೆಬ್ಬಾಳ-ಸರ್ಜಾಪುರ ಡಬಲ್ ಡೆಕ್ಕರ್ ಮೆಟ್ರೋ ಕಾರಿಡಾರ್‌ ಯೋಜನೆಗೆ ಸಿಗದ ಕೇಂದ್ರದ ಅನುಮೋದನೆ: ರಾಜ್ಯ ಸರ್ಕಾರಕ್ಕೆ ಹಿನ್ನಡೆ

ಹೆಬ್ಬಾಳ-ಸರ್ಜಾಪುರ ಡಬಲ್ ಡೆಕ್ಕರ್ ಮೆಟ್ರೋ ಕಾರಿಡಾರ್‌ ಯೋಜನೆಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಲು ಹಿಂದೇಟು ಹಾಕಿದೆ. ಕೇಂದ್ರದ ಈ ನಡೆ ರಾಜ್ಯ ಸರ್ಕಾರಕ್ಕೆ ಹಿನ್ನಡೆ ಉಂಟು ಮಾಡಿದೆ. ಈ ಕುರಿತಾಗಿ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದ ಪಿವಿ ಮೋಹನ್ ಕೂಡಾ ಟ್ವೀಟ್ ಮಾಡಿ ಮಾಹಿತಿಯನ್ನು ನೀಡಿದ್ದಾರೆ. ಡಬಲ್ ಡೆಕ್ಕರ್ ಯೋಜನೆ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಉದ್ದೇಶಕ್ಕೆ ವಿರುದ್ಧ ಎಂದು ಕೇಂದ್ರ ಕಳವಳ ವ್ಯಕ್ತಪಡಿಸಿದೆ. ಹೀಗಾಗಿ ರಾಜ್ಯ ಸರ್ಕಾರದ ನಡೆ ಏನು ಎಂಬುವುದು ಕುತೂಹಲಕ್ಕೆ ಕಾರಣವಾಗಿದೆ.

ವಿಜಯ ಕರ್ನಾಟಕ 12 Feb 2026 12:47 pm

ಸುಪ್ರೀಂಕೋರ್ಟ್ ನಲ್ಲೂ ಬೈರತಿ ಬಸವರಾಜ್ ಗೆ ಹಿನ್ನಡೆ; ನಿರೀಕ್ಷಣಾ ಜಾಮೀನು ಅರ್ಜಿ ವಜಾ

ಬೆಂಗಳೂರು: ರೌಡಿ ಶೀಟರ್ ಬಿಕ್ಲು ಶಿವ ಅಲಿಯಾಸ್ ಶಿವಕುಮಾರ್ ಕೊಲೆ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಕೋರಿ ಮಾಜಿ ಸಚಿವ ಹಾಗೂ ಬಿಜೆಪಿ ಶಾಸಕ ಬೈರತಿ ಬಸವರಾಜ್ ಸಲ್ಲಿಸಿದ್ದ ಮೇಲ್ಮನವಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ. ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಅವರ ನ್ಯಾಯಪೀಠ ಈ ಮೇಲ್ಮನವಿಯನ್ನು ವಜಾಗೊಳಿಸಿದೆ. ಇದಕ್ಕೂ ಮುನ್ನ, ಕರ್ನಾಟಕ ಹೈಕೋರ್ಟ್ ಕೂಡಾ ಅವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ವಜಾಗೊಳಿಸಿತ್ತು. ಇದರ ಬೆನ್ನಲ್ಲೇ ಬಂಧನ ಭೀತಿ ಎದುರಿಸುತ್ತಿರುವ ಕೆ.ಆರ್.ಪುರ ಶಾಸಕರಾದ ಬೈರತಿ ಬಸವರಾಜ್ ಹೈಕೋರ್ಟ್ ಆದೇಶ ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು. ಬೈರತಿ ಬಸವರಾಜ್ ಪರ ವಾದ ಮಂಡಿಸಿದ ಹಿರಿಯ ವಕೀಲ ಮುಕುಲ್ ರೋಹ್ಟಗಿ, “ಇದೊಂದು ಸಿವಿಲ್ ಪ್ರಕರಣವಾಗಿದ್ದು, ಇದಕ್ಕೂ ನನ್ನ ಕಕ್ಷಿದಾರನಿಗೂ ಯಾವುದೇ ಸಂಬಂಧವಿಲ್ಲ. ನನ್ನ ಕಕ್ಷಿದಾರನನ್ನು ಈ ಪ್ರಕರಣದಲ್ಲಿ ಅನಗತ್ಯವಾಗಿ ಎಳೆದು ತರಲಾಗಿದೆ” ಎಂದು ಹೇಳಿದರು. ಇದಕ್ಕೆ ಪ್ರತಿಯಾಗಿ, “ಭೂ ಮಾಫಿಯಾ ರಾಜಕೀಯ ಶಕ್ತಿಯ ಮೇಲೆ ನಡೆಯುತ್ತಿದೆಯಲ್ಲವೆ?” ಎಂದು ಸುಪ್ರೀಂ ಕೋರ್ಟ್ ಪ್ರಶ್ನಿಸಿತು. “ನನ್ನ ಕಕ್ಷಿದಾರರು ವಿರೋಧ ಪಕ್ಷದ ಶಾಸಕರಾಗಿದ್ದು, ಅವರ ಪಕ್ಷ ಅಧಿಕಾರದಲ್ಲಿಲ್ಲ” ಎಂದು ಬೈರತಿ ಬಸವರಾಜ್ ಪರ ವಕೀಲರು ಪ್ರತಿಕ್ರಿಯಿಸಿದರು. ಬಳಿಕ, ನಿಯಮಿತ ಜಾಮೀನು ಅರ್ಜಿ ಸಲ್ಲಿಸುವಂತೆ ಬೈರತಿ ಬಸವರಾಜ್ ಪರ ವಕೀಲರಿಗೆ ಸುಪ್ರೀಂ ಕೋರ್ಟ್ ಸೂಚನೆ ನೀಡಿತು. ತಲೆಮರೆಸಿಕೊಂಡಿರುವ ಶಾಸಕ ಬೈರತಿ ಬಸವರಾಜ್ ಬಂಧನಕ್ಕೆ ಸಿಐಡಿ ವಿಶೇಷ ತಂಡಗಳನ್ನು ರಚಿಸಿದೆ. ಆ ತಂಡಗಳು ಮಹಾರಾಷ್ಟ್ರಕ್ಕೆ ತೆರಳಿ, ಅವರಿಗಾಗಿ ವಿವಿಧೆಡೆ ಹುಡುಕಾಟ ನಡೆಸುತ್ತಿವೆ ಎಂದು ವರದಿಯಾಗಿದೆ. “ಬೈರತಿ ಬಸವರಾಜ್ ಮಹಾರಾಷ್ಟ್ರದ ತಾರಾ ಹೋಟೆಲ್ ಒಂದರಲ್ಲಿ ವಾಸ್ತವ್ಯ ಹೂಡಿರುವ ಮಾಹಿತಿ ನಮಗೆ ದೊರೆತಿದೆ. ವಿಶೇಷ ತಂಡಗಳು ಅಲ್ಲಿಗೆ ತೆರಳಿದ್ದು, ಅವರು ವಿದೇಶಕ್ಕೆ ಪರಾರಿಯಾಗದಂತೆ ತಡೆಯಲು ಲುಕ್ ಔಟ್ ನೋಟಿಸ್ ಅನ್ನೂ ಜಾರಿಗೊಳಿಸಲಾಗಿದೆ” ಎಂದು ಸಿಐಡಿ ಮೂಲಗಳು ತಿಳಿಸಿವೆ. ಕಳೆದ ಡಿಸೆಂಬರ್ ತಿಂಗಳಲ್ಲೂ ಬೈರತಿ ಬಸವರಾಜ್ ನಿರೀಕ್ಷಣಾ ಜಾಮೀನು ಕೋರಿ ಕರ್ನಾಟಕ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಆಗಲೂ ಹೈಕೋರ್ಟ್ ಅವರ ಜಾಮೀನು ಅರ್ಜಿಯನ್ನು ತಿರಸ್ಕರಿಸಿತ್ತು. ಇದರ ಬೆನ್ನಲ್ಲೇ ಅವರನ್ನು ವಶಕ್ಕೆ ಪಡೆದು, ವಿಚಾರಣೆ ನಡೆಸಲು ಸಿಐಡಿ ಪೊಲೀಸರು ಸಿದ್ಧತೆ ನಡೆಸಿದ್ದರು. ಆ ಸಂದರ್ಭದಲ್ಲಿ ಅವರು ತಲೆಮರೆಸಿಕೊಂಡಿದ್ದರು.

ವಾರ್ತಾ ಭಾರತಿ 12 Feb 2026 12:27 pm

ರೂ. 15-16 ಸಾವಿರದ ನಡುವೆ ಸ್ಥಿರವಾಗಿರುವ ಚಿನ್ನ; ಇಂದಿನ ದರವೆಷ್ಟು?

ಅಮೆರಿಕದಲ್ಲಿ ಜನವರಿಯ ಪ್ರಕಟವಾದ ಉದ್ಯೋಗ ಸಂಬಂಧಿತ ದತ್ತಾಂಶ ಮತ್ತು ಅಮೆರಿಕದ ಫೆಡರಲ್ ರಿಸರ್ವ್ ಶೀಘ್ರದಲ್ಲೇ ಬಡ್ಡಿದರಗಳನ್ನು ಕಡಿಮೆ ಮಾಡುತ್ತದೆ ಎನ್ನುವ ನಿರೀಕ್ಷೆಯಲ್ಲಿ ಡಾಲರ್ ಬಲಗೊಂಡು ಚಿನ್ನದ ಬೆಲೆ ಕುಸಿದಿದೆ. ಈ ವಾರವಿಡೀ ಚಿನ್ನ ವಿಪರೀತ ಏರಿಳಿತ ಕಾಣದೆ ಸ್ಥಿರವಾಗಿ ನಿಂತಿದೆ. ವಾರದ ಆರಂಭದಲ್ಲಿ ಸ್ವಲ್ಪ ಏರಿಕೆ ಕಂಡರೆ ನಂತರದ ದಿನಗಳಲ್ಲಿ ಅಲ್ಪ ಕುಸಿತ ಕಂಡು ಪ್ರತಿ ಗ್ರಾಂಗೆ 15000-16000 ರೂ. ನಡುವೆ ನಿಂತಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅಮೆರಿಕನ್ ಡಾಲರ್ ಬಲ ಪಡೆದುಕೊಂಡಿರುವುದು ಚಿನ್ನದ ಬೆಲೆ ಹೆಚ್ಚು ಏರಿಕೆಯಾಗದೆ ಇರಲು ಪ್ರಮುಖ ಕಾರಣವಾಗಿದೆ. ಜೊತೆಗೆ ಅಮೆರಿಕದಲ್ಲಿ ಜನವರಿಯ ಉದ್ಯೋಗ ಸಂಬಂಧಿತ ದತ್ತಾಂಶ ಪ್ರಕಟವಾಗಿದೆ ಮತ್ತು ಅಮೆರಿಕದ ಫೆಡರಲ್ ರಿಸರ್ವ್ (ಸೆಂಟ್ರಲ್ ಬ್ಯಾಂಕ್) ಶೀಘ್ರದಲ್ಲೇ ಬಡ್ಡಿದರಗಳನ್ನು ಕಡಿಮೆ ಮಾಡುತ್ತದೆ ಎನ್ನುವ ನಿರೀಕ್ಷೆ ಹೂಡಿಕೆದಾರರು ಮತ್ತು ವಿಶ್ಲೇಷಕರಲ್ಲಿದೆ. ಈ ಎಲ್ಲವೂ ಡಾಲರ್ ದೃಢವಾಗಿ ನಿಲ್ಲಲು ಕಾರಣವಾಗಿದ್ದು, ಚಿನ್ನದ ಬೆಲೆ ಕುಸಿತ ಕಂಡಿದೆ. ಗುರುವಾರ ಫೆಬ್ರವರಿ 12ರಂದು ಮಾರುಕಟ್ಟೆಗಳಲ್ಲಿ 24 ಕ್ಯಾರೆಟ್ ಶುದ್ಧ ಚಿನ್ನದ ಬೆಲೆ ಗ್ರಾಂಗೆ 120 ರೂ. ಕುಸಿದು ಹತ್ತು ಗ್ರಾಂ ಬೆಲೆ 1,58,400 ಕ್ಕೆ ಬಂದು ನಿಂತಿದೆ. ಆಭರಣ ಚಿನ್ನವಾದ 22 ಕ್ಯಾರೆಟ್ ಬೆಲೆಯು ಗ್ರಾಂಗೆ 110 ರೂ. ಕುಸಿದು ಹತ್ತು ಗ್ರಾಂಗೆ 1,45,200 ರೂ.ಗೆ ಬಂದು ನಿಂತಿದೆ. 18 ಕ್ಯಾರೆಟ್ ಚಿನ್ನವು ಪ್ರತಿ ಗ್ರಾಂಗೆ 90 ರೂ. ಕುಸಿದು ಹತ್ತು ಗ್ರಾಂಗೆ 11,8800 ರೂ.ಗೆ ಬಂದು ನಿಂತಿದೆ. ಮಂಗಳೂರಿನಲ್ಲಿ ಇಂದಿನ ಚಿನ್ನದ ದರವೆಷ್ಟು? ಗುರುವಾರ ಫೆಬ್ರವರಿ 12ರಂದು ಬೆಳಗಿನ 11 ಗಂಟೆಯ ವಹಿವಾಟಿನಲ್ಲಿ ಮಂಗಳೂರಿನಲ್ಲಿ ಚಿನ್ನದ ಬೆಲೆ ಮತ್ತೆ ಅಲ್ಪ ಕುಸಿತ ಕಂಡಿದೆ. ಬೆಳಗಿನ ವಹಿವಾಟಿನಲ್ಲಿ ಒಂದು ಗ್ರಾಂ 24 ಕ್ಯಾರೆಟ್ ಚಿನ್ನದ ದರ 15,840 (-120) ರೂ. ನಷ್ಟಿದೆ. ಒಂದು ಗ್ರಾಂ 22 ಕ್ಯಾರೆಟ್ ಚಿನ್ನದ ದರ 14,520 (-110) ರೂ. ಮತ್ತು ಒಂದು ಗ್ರಾಂ 18 ಕ್ಯಾರೆಟ್ ಚಿನ್ನದ ದರ 11,880 (-90)ರೂ. ಬೆಲೆಗೆ ತಲುಪಿದೆ. ಬೆಳ್ಳಿಯ ಬೆಲೆಯಲ್ಲಿ ಅಲ್ಪ ಏರಿಕೆ ಕಳೆದ ವಾರ ಸತತ ಕುಸಿತ ಕಂಡಿದ್ದ ಬೆಳ್ಳಿ ಸೋಮವಾರ ಅಲ್ಪ ಏರಿಕೆ ಕಂಡಿತ್ತು. ಆದರೆ ಮಂಗಳವಾರ-ಬುಧವಾರ ಮತ್ತೆ ಕುಸಿದಿದೆ. ಇಂದು ಗುರುವಾರ ಮಾರುಕಟ್ಟೆ ತೆರೆದ ತಕ್ಷಣ ಪ್ರತಿ ಗ್ರಾಂಗೆ 5 ರೂ. ನಷ್ಟು ಅಲ್ಪ ಏರಿದ ಬೆಳ್ಳಿ ಕೆಜಿಗೆ 2,95,000 (+5,000) ಲಕ್ಷ ರೂ. ಗೆ ಬಂದು ನಿಂತಿದೆ. ವಿವಿಧ ನಗರಗಳಲ್ಲಿ 1 ಗ್ರಾಮ್ ಚಿನ್ನದ ದರ (ಬೆಳಗಿನ ವಹಿವಾಟು) ಹೇಗಿದೆ? ದಿಲ್ಲಿ: 24 ಕ್ಯಾರೆಟ್ ಚಿನ್ನದ ದರ 15,855 (-120) ರೂ., 22 ಕ್ಯಾರೆಟ್ ಚಿನ್ನದ ದರ 14,535 (-110) ರೂ. ಮುಂಬೈ: 24 ಕ್ಯಾರೆಟ್ ಚಿನ್ನದ ದರ 15,840 (-120) ರೂ., 22 ಕ್ಯಾರೆಟ್ ಚಿನ್ನದ ದರ 14,520 (-110) ರೂ. ಅಹಮದಾಬಾದ್: 24 ಕ್ಯಾರೆಟ್ ಚಿನ್ನದ ದರ 15,845 (-120) ರೂ., 22 ಕ್ಯಾರೆಟ್ ಚಿನ್ನದ ದರ 14,525 (-110) ರೂ. ಚೆನ್ನೈ: 24 ಕ್ಯಾರೆಟ್ ಚಿನ್ನದ ದರ 15,928 (-207) ರೂ., 22 ಕ್ಯಾರೆಟ್ ಚಿನ್ನದ ದರ 14,600 (-190) ರೂ. ಕೋಲ್ಕತ್ತಾ: 24 ಕ್ಯಾರೆಟ್ ಚಿನ್ನದ ದರ 15,840 (-120) ರೂ., 22 ಕ್ಯಾರೆಟ್ ಚಿನ್ನದ ದರ 14,520 (-110) ರೂ. ಹೈದರಾಬಾದ್: 24 ಕ್ಯಾರೆಟ್ ಚಿನ್ನದ ದರ 15,840 (-120) ರೂ., 22 ಕ್ಯಾರೆಟ್ ಚಿನ್ನದ ದರ 14,520 (-110) ರೂ. ಜೈಪುರ: 24 ಕ್ಯಾರೆಟ್ ಚಿನ್ನದ ದರ 15,855 (-120) ರೂ., 22 ಕ್ಯಾರೆಟ್ ಚಿನ್ನದ ದರ 14,535 (-110) ರೂ. ಭೋಪಾಲ್: 24 ಕ್ಯಾರೆಟ್ ಚಿನ್ನದ ದರ 15,845 (-120) ರೂ., 22 ಕ್ಯಾರೆಟ್ ಚಿನ್ನದ ದರ 14,525 (-110) ರೂ. ಚಂಡೀಗಢ: 24 ಕ್ಯಾರೆಟ್ ಚಿನ್ನದ ದರ 15,855 (-120) ರೂ., 22 ಕ್ಯಾರೆಟ್ ಚಿನ್ನದ ದರ 14,535 (-110) ರೂ. ಲಕ್ನೋ: 24 ಕ್ಯಾರೆಟ್ ಚಿನ್ನದ ದರ 15,855 (-120) ರೂ., 22 ಕ್ಯಾರೆಟ್ ಚಿನ್ನದ ದರ 14,535 (-110) ರೂ.

ವಾರ್ತಾ ಭಾರತಿ 12 Feb 2026 12:13 pm

ನಿರುದ್ಯೋಗಿ ಎಂದು ಹಿಯಾಳಿಸಿದ್ದಕ್ಕೆ ಸಿಟ್ಟಿಗೆದ್ದ ಮಗ; ತಂದೆ, ತಾಯಿಗೆ ಚಾಕುವಿನಿಂದ ಇರಿದು ಕೊಲೆ

ಭಾರತೀಯ ನೌಕಾಪಡೆಯ ನಿವೃತ್ತ ಕ್ಯಾಪ್ಟನ್ ಮತ್ತು ಅವರ ಪತ್ನಿಯನ್ನು ಅವರ ಸ್ವಂತ ಮಗನೇ ಕೊಲೆ ಮಾಡಿದ್ದಾರೆ. ಅವರ ನಿರುದ್ಯೋಗದ ಬಗ್ಗೆ ಅವಹೇಳನ ಮಾಡಿದ್ದಕ್ಕಾಗಿ ಅವರ ಸ್ವಂತ ಮಗನೇ ಕೊಲೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ. ಆದರ್ಶ ವಿಸ್ತಾ ಅಪಾರ್ಟಮೆಂಟ್‌ನ ವಿಲ್ಲಾ ನಿವಾಸಿ ನವೀನ್‌ಚಂದ್ರ ಭಟ್‌ (60) ಹಾಗೂ ಅವರ ಪತ್ನಿ ಡಾ.ಶ್ಯಾಮಲಾ ಭಟ್‌ (55) ಕೊಲೆಯಾದವರು.

ವಿಜಯ ಕರ್ನಾಟಕ 12 Feb 2026 12:13 pm

ಸಿದ್ದು ಬಜೆಟ್ ಸಿದ್ದತೆ ನಡುವೆ ಡಿಕೆಶಿ ದೆಹಲಿ ಭೇಟಿ: ಬಂದಿರೋದೇ ರಾಜಕಾರಣ ಮಾಡಲು, ಕಾಲ ಉತ್ತರ ಕೊಡುತ್ತೆ ಎಂದ ಡಿಸಿಎಂ

ಡಿಸಿಎಂ ಡಿಕೆ ಶಿವಕುಮಾರ್ ಅವರು ದೆಹಲಿಯಲ್ಲಿ ಸಂಸದೆ ಪ್ರಿಯಾಂಕಾ ಗಾಂಧಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ರಾಜ್ಯದಲ್ಲಿ ಸಿಎಂ ಸಿದ್ದರಾಮಯ್ಯ ಅವರು ಬಜೆಟ್ ಸಿದ್ದತೆ ಮಾಡಿಕೊಳ್ಳುತ್ತಿರುವ ಸಂದರ್ಭದಲ್ಲೇ ಡಿಕೆ ಶಿವಕುಮಾರ್ ಅವರು ದೆಹಲಿ ಟೂರ್ ನಲ್ಲಿದ್ದಾರೆ. ಪ್ರಿಯಾಂಕಾ ಗಾಂಧಿ ಅವರ ಜೊತೆಗೆ ಅಸ್ಸಾಂ ಚುನಾವಣೆಗೆ ಸಂಬಂಧಿಸಿದಂತೆ ಚರ್ಚೆ ನಡೆಸಿದ್ದಾರೆ. ಇದೇ ಸಂದರ್ಭದಲ್ಲಿ ಮಾತನಾಡಿದ ಅವರು, ನಾನು ದೆಹಲಿಗೆ ಬಂದಿರುವುದೇ ರಾಜಕಾರಣ ಮಾಡಲು, ಏನೆಲ್ಲಾ ಚರ್ಚೆ ನಡೆಸಿದ್ದೇನೆ ಎಂದು ಬಹಿರಂಗವಾಗಿ ಹೇಳಲು ಸಾಧ್ಯವಿಲ್ಲ ಎಂದರು.

ವಿಜಯ ಕರ್ನಾಟಕ 12 Feb 2026 12:06 pm

Parliament Budget Session| ರಾಹುಲ್ ಗಾಂಧಿ ವಿರುದ್ಧ ಬಿಜೆಪಿಯಿಂದ ನಿಲುವಳಿ ಸೂಚನೆ ಸಲ್ಲಿಕೆ; ಸದಸ್ಯತ್ವ ರದ್ದುಗೊಳಿಸುವಂತೆ ಆಗ್ರಹ

ಹೊಸದಿಲ್ಲಿ: ಸಂಸತ್ತಿನ ಅಧಿವೇಶನದಲ್ಲಿ ಗುರುವಾರ ವಿಪಕ್ಷ ನಾಯಕ ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ನಿಲುವಳಿ ಪ್ರಸ್ತಾವನೆಯನ್ನು ಸಲ್ಲಿಸಿದ್ದು, ಅವರ ಸಂಸತ್ತಿನ ಸದಸ್ಯತ್ವ ರದ್ದುಗೊಳಿಸುವಂತೆ ಕೋರಿದೆ. ಬುಧವಾರ ಭಾರತ-ಅಮೆರಿಕ ವ್ಯಾಪಾರ ಒಪ್ಪಂದ, ಕೇಂದ್ರ ಬಜೆಟ್ ಅನ್ನು ಟೀಕಿಸಿ ರಾಹುಲ್ ಗಾಂಧಿ ಸಂಸತ್ತಿನಲ್ಲಿ ಭಾಷಣ ಮಾಡಿದ್ದರು. ಇದಾದ ಒಂದು ದಿನದ ನಂತರ ಈ ಬೆಳವಣಿಗೆ ನಡೆದಿದೆ. ಈ ಕುರಿತು ಪ್ರತಿಕ್ರಿಯಿಸಿದ ಬಿಜೆಪಿ ಸಂಸದ ನಿಶಿಕಾಂತ್ ದುಬೆ, ಇದು ವಿಶೇಷ ಹಕ್ಕುಚ್ಯುತಿ ನೋಟಿಸ್ ಅಲ್ಲ. ನಾನು ಒಂದು ಪ್ರಮುಖ ಪ್ರಸ್ತಾವನೆಯನ್ನು ಸಲ್ಲಿಸಿದ್ದೇನೆ. ಅದರಲ್ಲಿ ರಾಹುಲ್ ಗಾಂಧಿ ಅವರು ಸೊರೋಸ್ ಫೌಂಡೇಶನ್, ಫೋರ್ಡ್ ಫೌಂಡೇಶನ್, ಯುಎಸ್ಎಐಡಿ ಸಂಸ್ಥೆಗಳೊಂದಿಗೆ ಸಂಪರ್ಕ ಹೊಂದಿದ್ದಾರೆ ಎನ್ನುವ ಆರೋಪಗಳನ್ನು ಉಲ್ಲೇಖಿಸಿದ್ದೇನೆ. ರಾಹುಲ್‌ ಗಾಂಧಿ ಅವರು ಥೈಲ್ಯಾಂಡ್, ಕಂಬೋಡಿಯಾ, ವಿಯೆಟ್ನಾಂ ಹಾಗೂ ಅಮೆರಿಕಾ ಮುಂತಾದ ದೇಶಗಳಿಗೆ ಭೇಟಿ ನೀಡಿರುವುದು ಮತ್ತು ಭಾರತ ವಿರೋಧಿ ಶಕ್ತಿಗಳೊಂದಿಗೆ ಸಂಬಂಧ ಹೊಂದಿರುವ ಬಗ್ಗೆ ಪ್ರಸ್ತಾಪಿಸಿದ್ದೇನೆ. ಅವರ ಸಂಸದೀಯ ಸದಸ್ಯತ್ವವನ್ನು ರದ್ದುಗೊಳಿಸಬೇಕು ಹಾಗೂ ಜೀವಿತಾವಧಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡಬಾರದು ಎಂದು ನಾನು ಆಗ್ರಹಿಸಿದ್ದೇನೆ ಎಂದು ಹೇಳಿದ್ದಾರೆ.

ವಾರ್ತಾ ಭಾರತಿ 12 Feb 2026 12:04 pm

Bharat Bandh: ದೇಶಾದ್ಯಂತ ಕೇಂದ್ರ ಸರ್ಕಾರದ ವಿರುದ್ಧ ಕಾರ್ಮಿಕ ಸಂಘಟನೆಗಳ ಆಕ್ರೋಶ; ಹೇಗಿದೆ ಬಂದ್‌ ಬಿಸಿ?

ಕೇಂದ್ರ ಸರ್ಕಾರದ ಆರ್ಥಿಕ ನೀತಿ ಮತ್ತು ರೈತ ಹಾಗೂ ಕಾರ್ಮಿಕ ನೀತಿಗಳನ್ನು ವಿರೋಧಿಸಿ, ಕೇಂದ್ರ ಕಾರ್ಮಿಕ ಸಂಘಟನೆಗಳ ಜಂಟಿ ವೇದಿಕೆ ಇಂದು (ಫೆ.12-ಗುರುವಾರ) ಭಾರತ್‌ ಬಂದ್‌ ಮುಷ್ಕರ್ ಹಮ್ಮಿಕೊಂಡಿದ್ದು, ಕರ್ನಾಟಕವೂ ಸೇರಿದಂತೆ ದೇಶದ ಎಲ್ಲಾ ರಾಜ್ಯಗಳಲ್ಲಿ ಬಂದ್‌ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಆದರೆ ಪಶ್ಚಿಮ ಬಂಗಾಳ, ಕೇರಳ, ಒಡಿಶಾ ರಾಜ್ಯಗಳಲ್ಲಿ ಬಂದ್‌ ಪರಿಣಾಮಗಳು ತೀವ್ರವಾಗಿದ್ದವು. ಅದೇ ರೀತಿ ಬೆಂಗಳೂರು ಸಮೀಪದ ಆನೇಕಲ್‌ನಲ್ಲಿ ಭಾರತ್‌ ಬಂದ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇಲ್ಲಿದೆ ಮಾಹಿತಿ.

ವಿಜಯ ಕರ್ನಾಟಕ 12 Feb 2026 12:02 pm

ಚಿಂತಕರ ಚಾವಡಿಗಳು ರಾಜಕೀಯದ ಅಖಾಡವಾಗದಿರಲಿ

ಭಾರತೀಯ ಪ್ರಜಾಪ್ರಭುತ್ವದ ಸಂರಚನೆಯಲ್ಲಿ ಸಂಸತ್ತಿನ ರಾಜ್ಯಸಭೆ ಮತ್ತು ರಾಜ್ಯಗಳ ವಿಧಾನ ಪರಿಷತ್ತುಗಳು ಅತ್ಯಂತ ವಿಶಿಷ್ಟ ಸ್ಥಾನವನ್ನು ಹೊಂದಿವೆ. ಇವುಗಳನ್ನು ಕೇವಲ ರಾಜಕೀಯ ವೇದಿಕೆಗಳೆಂದು ಪರಿಗಣಿಸದೆ, ಅನುಭವಿಗಳು ಮತ್ತು ಮೇಧಾವಿಗಳಿಂದ ಕೂಡಿದ ‘ಹಿರಿಯರ ಮನೆ’ ಹಾಗೂ ‘ಚಿಂತಕರ ಚಾವಡಿ’ ಎಂದೇ ಕರೆಯಲಾಗುತ್ತದೆ. ಆದರೆ, ಇತ್ತೀಚಿನ ವರ್ಷಗಳಲ್ಲಿ ಈ ಪವಿತ್ರ ಸದನಗಳಲ್ಲಿ ಮೌಲ್ಯಗಳ ಪತನವಾಗುತ್ತಿರುವುದು ಪ್ರಜಾಪ್ರಭುತ್ವದ ಭವಿಷ್ಯದ ದೃಷ್ಟಿಯಿಂದ ಆತಂಕಕಾರಿ ಬೆಳವಣಿಗೆಯಾಗಿದೆ. ಕಳೆದುಹೋಗುತ್ತಿರುವ ಘನತೆ ಮತ್ತು ಸೌಜನ್ಯ ಒಂದು ಕಾಲದಲ್ಲಿ ಈ ಸದನಗಳು ಜ್ಞಾನದ ಆಗರವಾಗಿದ್ದವು. ರಾಜ್ಯಸಭೆಯಲ್ಲಿ ವಿಜ್ಞಾನಿ ಸತ್ಯೇಂದ್ರನಾಥ್ ಬೋಸ್, ಸಾಹಿತಿಗಳಾದ ರಾಮಧಾರಿ ಸಿಂಗ್ ದಿನಕರ್, ಆರ್.ಕೆ. ನಾರಾಯಣ್, ತತ್ವಶಾಸ್ತ್ರಜ್ಞ ಡಾ.ಎಸ್. ರಾಧಾಕೃಷ್ಣನ್ (ಸಭಾಪತಿಯಾಗಿ), ಅರ್ಥಶಾಸ್ತ್ರಜ್ಞ ಡಾ. ಮನಮೋಹನ್ ಸಿಂಗ್(ಪ್ರಧಾನ ಮಂತ್ರಿ) ಅವರಂತಹ ಗಣ್ಯರು ಭಾಗವಹಿಸಿ ಸದನದ ಘನತೆ ಹೆಚ್ಚಿಸಿದ್ದರು. ಕರ್ನಾಟಕದ ವಿಧಾನ ಪರಿಷತ್ತಿನ ಇತಿಹಾಸವನ್ನು ನೋಡಿದರೆ, ರಾಷ್ಟ್ರಕವಿಗಳಾದ ಕುವೆಂಪು, ಜಿ.ಎಸ್. ಶಿವರುದ್ರಪ್ಪ, ಚಿಂತಕರಾದ ಡಿ.ವಿ. ಗುಂಡಪ್ಪ, ಮಾಸ್ತಿ ವೆಂಕಟೇಶ ಅಯ್ಯಂಗಾರ್, ಶಿಕ್ಷಣ ತಜ್ಞರಾದ ಎಚ್. ನರಸಿಂಹಯ್ಯ ಅವರಂತಹ ಮೇಧಾವಿಗಳು ನಾಡಿನ ಭವಿಷ್ಯದ ಬಗ್ಗೆ ಗಂಭೀರ ಚರ್ಚೆ ನಡೆಸುತ್ತಿದ್ದರು. ಅಂತಹ ಸಜ್ಜನರ ಉಪಸ್ಥಿತಿಯೇ ಸದನಕ್ಕೆ ಒಂದು ಶಿಸ್ತು ಮತ್ತು ಗೌರವವನ್ನು ತರುತ್ತಿತ್ತು. ದೇಶದ ಶ್ರೇಷ್ಠ ಚಿಂತಕರು ಭಾಗವಹಿಸುತ್ತಿದ್ದ ರಾಜ್ಯಸಭೆಯಾಗಿರಲಿ, ಅಲ್ಲಿನ ಚರ್ಚೆಗಳು ಸಮಾಜಕ್ಕೆ ದಾರಿದೀಪವಾಗುತ್ತಿದ್ದವು,ಆದರೆ ಇಂದು ಗಂಭೀರ ಚಿಂತನೆಗಳು ನಡೆಯಬೇಕಾದ ಜಾಗದಲ್ಲಿ ಕೇವಲ ರಾಜಕೀಯ ಕೆಸರೆರಚಾಟ ಮಿತಿಮೀರುತ್ತಿದೆ. ವೈಯಕ್ತಿಕ ದ್ವೇಷ, ಅಸಂಸದೀಯ ಪದಬಳಕೆ ಮತ್ತು ಏಕವಚನದ ನಿಂದನೆಗಳು ಸದನದ ಕನಿಷ್ಠ ಸೌಜನ್ಯವನ್ನೂ ಹರಣ ಮಾಡುತ್ತಿವೆ. ಪ್ರಸ್ತುತದ ಆತಂಕಕಾರಿ ಬೆಳವಣಿಗೆಗಳು ಚರ್ಚೆಯಿಲ್ಲದ ಮಸೂದೆಗಳು: ಸಾಧಕ-ಬಾಧಕಗಳ ಬಗ್ಗೆ ವಿಸ್ತೃತ ಚರ್ಚೆಯಾಗದೆ ಪ್ರಮುಖ ಮಸೂದೆಗಳನ್ನು ಗದ್ದಲದ ನಡುವೆಯೇ ಅಂಗೀಕರಿಸಲಾಗುತ್ತಿದೆ. ಗದ್ದಲ ಮತ್ತು ಅಮಾನತು: ಸಂವಾದದ ಹಾದಿ ಕುಂಠಿತಗೊಂಡು ಪ್ರತಿಭಟನೆಗಳೇ ಪ್ರಧಾನವಾಗುತ್ತಿವೆ. ಸಮಿತಿಗಳ ನಿರ್ಲಕ್ಷ್ಯ: ಮಸೂದೆಗಳನ್ನು ಆಳವಾಗಿ ಪರಿಶೀಲಿಸುವ ಸ್ಥಾಯೀ ಸಮಿತಿಗಳಿಗೆ ಕಳುಹಿಸುವ ಸಂಪ್ರದಾಯ ಕಡಿಮೆಯಾಗುತ್ತಿದೆ. ಸಾರ್ವಜನಿಕ ಹಣ ಮತ್ತು ಜವಾಬ್ದಾರಿ ಸದನದ ಪ್ರತಿಯೊಂದು ನಿಮಿಷವೂ ಸಾರ್ವಜನಿಕರ ತೆರಿಗೆಯ ಹಣದಿಂದ ನಡೆಯುತ್ತದೆ. ಕೆಳಮನೆಯ ಆತುರದ ನಿರ್ಧಾರಗಳನ್ನು ತಿದ್ದಲು ಮತ್ತು ವಿವಿಧ ಕ್ಷೇತ್ರಗಳ ತಜ್ಞರ ಮಾರ್ಗದರ್ಶನ ಪಡೆಯಲು ಈ ಮೇಲ್ಮನೆಗಳನ್ನು ಸೃಷ್ಟಿಸಲಾಗಿದೆ. ಸಾರ್ವಜನಿಕ ಸಮಸ್ಯೆಗಳಿಗಿಂತ ರಾಜಕೀಯ ಸರ್ಕಸ್‌ಗಳೇ ಇಲ್ಲಿ ಪ್ರಾಮುಖ್ಯತೆ ಪಡೆಯುತ್ತಿರುವುದು ಪ್ರಜಾಪ್ರಭುತ್ವದ ಅಸ್ತಿತ್ವಕ್ಕೆ ಮಾರಕ. ಸುಧಾರಣೆಯ ದಾರಿಗಳು ಸಂವಾದಕ್ಕೆ ಆದ್ಯತೆ: ಆಡಳಿತ ಮತ್ತು ವಿರೋಧ ಪಕ್ಷಗಳು ಹಠಮಾರಿ ಧೋರಣೆ ಬಿಟ್ಟು ಸೌಹಾರ್ದಯುತ ಚರ್ಚೆಗೆ ಮುಂದಾಗಬೇಕು. ತಜ್ಞರ ಪ್ರಾತಿನಿಧ್ಯ: ರಾಜಕೀಯ ನಿವೃತ್ತರಿಗೆ ಆಶ್ರಯ ತಾಣವಾಗುವ ಬದಲು, ವಿಜ್ಞಾನ, ಸಾಹಿತ್ಯ, ಕಲೆ ಮತ್ತು ಶಿಕ್ಷಣ,ಕ್ರೀಡೆ ಕ್ಷೇತ್ರದ ನೈಜ ಸಾಧಕರಿಗೆ ಹೆಚ್ಚಿನ ಅವಕಾಶ ನೀಡಬೇಕು. ಕಠಿಣ ಶಿಸ್ತು ಕ್ರಮ: ಸದನದ ಘನತೆಗೆ ಕುಂದು ತರುವ ಸದಸ್ಯರ ವಿರುದ್ಧ ಪಕ್ಷಾತೀತವಾಗಿ ಶಿಸ್ತು ಕ್ರಮ ಜರುಗಿಸಬೇಕು. ಅಧಿಕಾರ ಎನ್ನುವುದು ಶಾಶ್ವತವಲ್ಲ, ಆದರೆ ಸದನದ ಘನತೆ ಮತ್ತು ಸಾಂವಿಧಾನಿಕ ಮೌಲ್ಯಗಳು ಶಾಶ್ವತವಾಗಿ ಉಳಿಯಬೇಕು. ಹಿರಿಯರ ಮನೆಗೆ ಹೊಸ ಚೈತನ್ಯ ಮತ್ತು ಕಾಯಕಲ್ಪ ನೀಡದಿದ್ದರೆ, ಜನಸಾಮಾನ್ಯರಿಗೆ ವ್ಯವಸ್ಥೆಯ ಮೇಲಿರುವ ನಂಬಿಕೆ ಸಡಿಲವಾಗುವ ಅಪಾಯವಿದೆ. ಅಂದಿನ ಗಣ್ಯರು ಹಾಕಿಕೊಟ್ಟ ದಾರಿಯಲ್ಲಿ ಇಂದಿನ ಪ್ರತಿನಿಧಿಗಳು ಸಾಗಲಿ ಎಂಬುದು ದೇಶದ ಪ್ರತಿಯೊಬ್ಬ ನಾಗರಿಕನ ಆಶಯವಾಗಿದೆ.

ವಾರ್ತಾ ಭಾರತಿ 12 Feb 2026 11:58 am

ಬೀದರ್‌ : ರಾಮನಿಗೆ ಅವಹೇಳನ ಆರೋಪ; ಕಾಳಿದಾಸ್ ಸೂರ್ಯವಂಶಿ ಎಂಬ ಯುವಕನ ಬಂಧನಕ್ಕೆ ಆಗ್ರಹ

ಹಿಂದುತ್ವ ಪರ ಸಂಘಟನೆ ಕಾರ್ಯಕರ್ತರಿಂದ ಪ್ರತಿಭಟನೆ

ವಾರ್ತಾ ಭಾರತಿ 12 Feb 2026 11:54 am

ಅತ್ಯಾಚಾರ ಪ್ರಕರಣ| ಶಾಸಕ ರಾಹುಲ್ ಮಾಂಕೂಟತ್ತಿಲ್‌ಗೆ ಕೇರಳ ಹೈಕೋರ್ಟ್ ನಿರೀಕ್ಷಣಾ ಜಾಮೀನು

ತಿರುವನಂತಪುರಂ: ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿ ಪಾಲಕ್ಕಾಡ್ ಶಾಸಕ ರಾಹುಲ್ ಮಾಂಕೂಟತ್ತಿಲ್‌ ಅವರಿಗೆ ಕೇರಳ ಹೈಕೋರ್ಟ್ ಗುರುವಾರ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ. ನೇಮಮ್ ಪೊಲೀಸರು ದಾಖಲಿಸಿರುವ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿ ತಿರುವನಂತಪುರಂ ಸೆಷನ್ಸ್ ನ್ಯಾಯಾಲಯವು ರಾಹುಲ್ ಮಾಂಕೂಟತ್ತಿಲ್‌ ಅವರ ಬಂಧನ ಪೂರ್ವ ಜಾಮೀನು ಅರ್ಜಿಯನ್ನು ತಿರಸ್ಕರಿಸಿತ್ತು. ಬಳಿಕ ಅವರು ಹೈಕೋರ್ಟ್ ಮೊರೆ ಹೋಗಿದ್ದರು. ಈ ಕುರಿತು ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೌಸರ್ ಎಡಪ್ಪಗತ್ ಅವರ ಪೀಠ, ರಾಹುಲ್ ಮಾಂಕ್ಕೂಟತ್ತಿಲ್ ಅವರಿಗೆ ದೇಶವನ್ನು ತೊರೆಯಬಾರದು, ಮ್ಯಾಜಿಸ್ಟ್ರೇಟ್ ಮುಂದೆ ಪಾಸ್‌ಪೋರ್ಟ್‌ ಒಪ್ಪಿಸಬೇಕು, ಸಾಕ್ಷಿಗಳ ಮೇಲೆ ಪ್ರಭಾವ ಬೀರಬಾರದು, ತನಿಖೆಗೆ ಸಹಕರಿಸಬೇಕು ಎಂದು ಷರತ್ತು ಬದ್ಧ ಜಾಮೀನು ಮಂಜೂರು ಮಾಡಿದೆ. ರಾಹುಲ್ ಮಾಂಕೂಟತ್ತಿಲ್‌ ವಿರುದ್ಧ ದಾಖಲಾಗಿರುವ ಮೊದಲ ಪ್ರಕರಣ ಇದಾಗಿದೆ. ನಂತರ ಇಬ್ಬರು ಮಹಿಳೆಯರು ಅವರ ವಿರುದ್ಧ ದೂರು ದಾಖಲಿಸಿದ್ದಾರೆ. ತಿರುವನಂತಪುರದ ಸೆಷನ್ಸ್ ನ್ಯಾಯಾಲಯ ಮತ್ತು ಪತ್ತನಂತಿಟ್ಟದ ಸೆಷನ್ಸ್ ನ್ಯಾಯಾಲಯವು ಮಾಂಕೂಟತ್ತಿಲ್‌ಗೆ ಇತರ ಎರಡು ಪ್ರಕರಣಗಳಲ್ಲಿ ಈಗಾಗಲೇ ಜಾಮೀನು ನೀಡಿದೆ.

ವಾರ್ತಾ ಭಾರತಿ 12 Feb 2026 11:20 am

ಸಂಪಾದಕೀಯ | ‘ಹಿಮಾಲಯನ್ ಬ್ಲಂಡರ್’ನಲ್ಲಿ ಇಲ್ಲದ ‘ಬ್ಲಂಡರ್’ಗಳು ನರವಣೆ ಕೃತಿಯಲ್ಲಿದೆಯೆ?

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

ವಾರ್ತಾ ಭಾರತಿ 12 Feb 2026 11:10 am

ಜಾಹ್ನವಿ ಕಂದುಲಾ ಕೊಂದ ಸಿಯಾಟಲ್‌ ಪೊಲೀಸ್‌ ಕಾರು, ಕುಟುಂಬಕ್ಕೆ 29 ಮಿಲಿಯನ್‌ ಡಾಲರ್‌ ಪರಿಹಾರ; ನೋವು ಮರೆಸೋರು ಯಾರು?

2023ರಲ್ಲಿ ಅಮೆರಿಕದ ಸಿಯಾಟಲ್‌ ಸಿಟಿಯಲ್ ನಡೆದಿದ್ದ ಭೀಕರ ಕಾರು ಅಪಘಾತದಲ್ಲಿ ಭಾರತೀಯ ಮೂಲದ 23 ವರ್ಷದ ಯುವತಿ ಜಾಹ್ನವಿ ಕಂದುಲಾ ಸಾವನ್ನಪ್ಪಿದ್ದರು. ಕ್ರಾಸ್‌ವಾಕ್‌ನಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ ವೇಗವಾಗಿ ಬಂದ ಪೊಲೀಸ್‌ ಕಾರೊಂದು ಜಾಹ್ನವಿ ಕಂದುಲಾ ಅವರಿಗೆ ಡಿಕ್ಕಿ ಹೊಡೆದಿತ್ತು. ಈ ಘಟನೆಗೆ ತೀವ್ರ ಆಕ್ರೋಶ ವ್ಯಕ್ತವಾಗಿತ್ತಲ್ಲದೇ. ಜಾಹ್ನವಿ ಅವರ ಕುಟುಂಬ ಪರಿಹಾರಕ್ಕಾಗಿ ನ್ಯಾಯಾಲಯದ ಮಪೊರೆ ಹೋಗಿತ್ತು. ಇದೀಗ ನ್ಯಾಯಾಲಯದ ಆದೇಶದಂತೆ ಸಿಯಾಟಲ್‌ ಸಿಟಿ ಜಾಹ್ನವಿ ಕಂದುಲಾ ಅವರ ಕುಟುಂಬಕ್ಕೆ 29 ಮಿಲಿಯನ್‌ ಡಾಲರ್‌ ಪರಿಹಾರ ನೀಡಲಿದೆ.

ವಿಜಯ ಕರ್ನಾಟಕ 12 Feb 2026 11:09 am

ಬಾಂಗ್ಲಾದೇಶದ ಭವಿಷ್ಯ ಯಾರ ಕೈಗೆ?

ವರ್ಷಗಳ ಕಾಲ ಬಾಂಗ್ಲಾದೇಶದ ರಾಜಕೀಯ ಎರಡು ಪಕ್ಷಗಳ ಸುತ್ತ ಸುತ್ತುತ್ತಿತ್ತು. ಅವಾಮಿ ಲೀಗ್ ಮತ್ತು ಬಿಎನ್‌ಪಿ ಎರಡೇ ಮುಖ್ಯವಾಗಿದ್ದವು. ಹಸೀನಾ ನಿರ್ಗಮನದ ನಂತರ, ಈಗ ಅವಾಮಿ ಲೀಗ್ ಅನ್ನು ನಿಷೇಧಿಸಿದ್ದು, ಅದರ ಜಾಗವನ್ನು ಜಮಾಅತೆ ಇಸ್ಲಾಮಿ ತುಂಬಿದೆ. ಆರಂಭದಲ್ಲಿ, ವಿದ್ಯಾರ್ಥಿ ನಾಯಕರ ಎನ್‌ಸಿಪಿ ಆ ಜಾಗಕ್ಕೆ ಬರುತ್ತದೆ ಎಂದು ನಂಬಲಾಗಿತ್ತು. ಆದರೆ ಅದು ಆಗಲಿಲ್ಲ ಮತ್ತು ಇದರಿಂದ ಒದಗಿದ ಅವಕಾಶವನ್ನು ಜಮಾಅತೆ ಇಸ್ಲಾಮಿ ಬಳಸಿಕೊಂಡಿತು. ಜಮಾಅತೆ ಇಸ್ಲಾಮಿ ಬಾಂಗ್ಲಾದೇಶದ ಎರಡು ಅತ್ಯಂತ ಶಕ್ತಿಶಾಲಿ ರಾಜಕೀಯ ಪಕ್ಷಗಳಲ್ಲಿ ಒಂದಾಗಿ ಹೊರಹೊಮ್ಮಿದೆ. ಈಗ, ಎರಡರಲ್ಲಿ ಮುಂದಿರುವುದು ಬಿಎನ್‌ಪಿಯೋ ಅಥವಾ ಜಮಾಅತೆ ಇಸ್ಲಾಮಿಯೋ ಎಂಬುದು ಪ್ರಶ್ನೆ. ಬಾಂಗ್ಲಾದೇಶ ನಿರ್ಣಾಯಕ ರಾಜಕೀಯ ಕ್ಷಣದತ್ತ ಸಾಗುತ್ತಿದೆ. ಅವಾಮಿ ಲೀಗ್ ಅನ್ನು ಬದಿಗೆ ತಳ್ಳಲಾಗಿರುವುದರಿಂದ, ಈಗ ರಾಜಕೀಯದ ಮೇಲೆ ಹಿಡಿತ ಸಾಧಿಸಲಿರುವುದು ಬಾಂಗ್ಲಾದೇಶ ನ್ಯಾಷನಲಿಸ್ಟ್ ಪಾರ್ಟಿಯೋ (ಬಿಎನ್‌ಪಿ) ಅಥವಾ ಜಮಾಅತೆ ಇಸ್ಲಾಮಿಯೋ ಎಂಬ ಪ್ರಶ್ನೆ ಎದ್ದಿದೆ. ಖಾಲಿದಾ ಝಿಯಾ ಮತ್ತು ಮೇಜರ್ ಜನರಲ್ ಝಿಯಾವುರ‌್ರಹಮಾನ್ ಅವರ ಮಗ ತಾರೀಕ್ ರಹಮಾನ್ ಈಗ ಬಿಎನ್‌ಪಿ ಚುಕ್ಕಾಣಿ ಹಿಡಿದಿದ್ದಾರೆ. ಫೆಬ್ರವರಿ 12ರಂದು ಬಾಂಗ್ಲಾದೇಶದಲ್ಲಿ ಚುನಾವಣೆಗಳು ನಡೆಯುತ್ತಿವೆ. 2024ರಲ್ಲಿ ಶೇಕ್ ಹಸೀನಾ ನಿರ್ಗಮಿಸಿದ ನಂತರ ಬಾಂಗ್ಲಾದೇಶದಲ್ಲಿ ಇದು ಮೊದಲ ಚುನಾವಣೆಯಾಗಿದೆ. ಶೇಕ್ ಹಸೀನಾ, ಅಲ್ಲಿನ ಅಶಾಂತಿಯ ನಂತರ ಭಾರತಕ್ಕೆ ಬರಬೇಕಾಯಿತು. ಬಾಂಗ್ಲಾದೇಶದಲ್ಲಿ ಅವಾಮಿ ಲೀಗ್ ಅನ್ನು ನಿಷೇಧಿಸಲಾಗಿದೆ. ಬಾಂಗ್ಲಾದೇಶದ ಯುವಕರು ಹೊಸ ವ್ಯವಸ್ಥೆಯನ್ನು ಬಯಸುತ್ತಾರೆ ಎಂದು ಹೇಳಲಾಗಿತ್ತು. ಆದರೆ ಚುನಾವಣಾ ಕಣದಲ್ಲಿ ಪ್ರಸ್ತುತ ಕೇವಲ ಎರಡು ಹಳೆಯ ಪಕ್ಷಗಳು ಮಾತ್ರ ಕಾಣುತ್ತಿವೆ. ಬಿಎನ್‌ಪಿ ಮತ್ತು ಜಮಾಅತೆ ಇಸ್ಲಾಮಿ ಅವೆರಡರದ್ದೇ ಪ್ರಮುಖ ಆಟವಾಗಿದೆ. ಬಿಎನ್‌ಪಿ ನಾಯಕ ತಾರೀಕ್ ದಶಕಗಳಿಂದ ಬಾಂಗ್ಲಾದೇಶ ರಾಜಕೀಯದ ಮೇಲೆ ಪ್ರಬಲ ಹಿಡಿತ ಕಾಯ್ದುಕೊಂಡಿರುವ ರಾಜಕೀಯ ಕುಟುಂಬದಿಂದ ಬಂದವರು. ಮತ್ತೊಂದೆಡೆ, ಸಂಪೂರ್ಣವಾಗಿ ವಿಭಿನ್ನ ರಾಜಕೀಯ ನೆಲೆಯಿರುವ 67 ವರ್ಷದ ಡಾ. ಶಫೀಕುರ‌್ರಹಮಾನ್‌ಇದ್ದಾರೆ ಫೆಬ್ರವರಿ 10ರಂದು ಚುನಾವಣಾ ಪ್ರಚಾರ ಕೊನೆಗೊಂಡ ಬಳಿಕ ಅಲ್ಲಿನ ವಾತಾವರಣದ ಬಗ್ಗೆ ಕುತೂಹಲವಿದೆ. 300 ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, ಸುಮಾರು 2,000 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಇಲ್ಲಿಯವರೆಗೆ, ಬಾಂಗ್ಲಾದೇಶ ರಾಜಕೀಯದಲ್ಲಿ ಎರಡು ಪ್ರಮುಖ ಪಕ್ಷಗಳೆಂದರೆ, ಬಿಎನ್‌ಪಿ ಮತ್ತು ಅವಾಮಿ ಲೀಗ್. ಶೇಕ್ ಹಸೀನಾ ಅವರ ಪಕ್ಷವನ್ನು ಈ ಚುನಾವಣೆಯಲ್ಲಿ ನಿಷೇಧಿಸಲಾಗಿದೆ. ಆದ್ದರಿಂದ, ನಿಜವಾದ ಸ್ಪರ್ಧೆ ಬಿಎನ್‌ಪಿ ಮತ್ತು ಜಮಾಅತೆ ಇಸ್ಲಾಮಿ ನಡುವೆ ಇದೆ. ಬಿಎನ್‌ಪಿ 292 ಸ್ಥಾನಗಳಲ್ಲಿ ಸ್ಪರ್ಧಿಸುತ್ತಿದ್ದರೆ, ಜಮಾಅತೆ ಇಸ್ಲಾಮಿ 224 ಸ್ಥಾನಗಳಲ್ಲಿ ಸ್ಪರ್ಧಿಸುತ್ತಿದೆ. ಇದಲ್ಲದೆ, ಮತ್ತೊಂದು ವಿದ್ಯಾರ್ಥಿ-ಸ್ಥಾಪಿತ ಪಕ್ಷವಾದ ನ್ಯಾಷನಲ್ ಸಿಟಿಝನ್ಸ್ ಪಾರ್ಟಿ ಜಮಾಅತೆ ಇಸ್ಲಾಮಿ ಜೊತೆ ಮೈತ್ರಿ ಮಾಡಿಕೊಂಡು 32 ಸ್ಥಾನಗಳಲ್ಲಿ ಸ್ಪರ್ಧಿಸುತ್ತಿದೆ. ಈ ಪಕ್ಷಗಳಲ್ಲಿ ಪ್ರಬಲ ಸ್ಪರ್ಧಿ ಬಿಎನ್‌ಪಿ ಎಂದು ಹೇಳಲಾಗುತ್ತಿದೆ. ಇದು ಖಾಲಿದಾ ಝಿಯಾ ಮತ್ತು ಝಿಯಾವುರ‌್ರಹಮಾನ್ ಅವರ ಪಕ್ಷ. ಈಗ ಅದರ ನಾಯಕ ಅವರ ಮಗ ತಾರೀಕ್ ರಹಮಾನ್ 17 ವರ್ಷಗಳ ದೇಶಭ್ರಷ್ಟತೆ ನಂತರ ತಾರೀಕ್ ಕಳೆದ ಡಿಸೆಂಬರ್‌ನಲ್ಲಿ ದೇಶಕ್ಕೆ ಮರಳಿದರು. ಬಡ ಕುಟುಂಬಗಳಿಗೆ ಆರ್ಥಿಕ ನೆರವು, ಯಾವುದೇ ನಾಯಕರು 10 ವರ್ಷಗಳಿಗಿಂತ ಹೆಚ್ಚು ಕಾಲ ಪ್ರಧಾನಿಯಾಗಿ ಉಳಿಯದಂತೆ ನೋಡಿಕೊಳ್ಳುವುದು, ವಿದೇಶಿ ಹೂಡಿಕೆಯನ್ನು ಆಕರ್ಷಿಸುವ ಮೂಲಕ ದೇಶದ ಆರ್ಥಿಕತೆ ಸುಧಾರಣೆ, ಭ್ರಷ್ಟಾಚಾರವನ್ನು ಹತ್ತಿಕ್ಕುವುದು ಇವು ಅವರ ಪ್ರಮುಖ ಚುನಾವಣಾ ಭರವಸೆಗಳಾಗಿವೆ. ಬಿಎನ್‌ಪಿಗೆ ಮಾತ್ರ ದೇಶವನ್ನು ನಡೆಸುವ ಅನುಭವವಿದೆ ಎಂದು ತಾರೀಕ್ ರಹಮಾನ್ ಹೇಳುತ್ತಾರೆ. ಅವರು ತಮ್ಮ ಪೋಷಕರಾದ ಝಿಯಾವುರ‌್ರಹಮಾನ್ ಮತ್ತು ಖಾಲಿದಾ ಝಿಯಾ ಅವರನ್ನು ರ್ಯಾಲಿಗಳಲ್ಲಿ ಪದೇ ಪದೇ ಉಲ್ಲೇಖಿಸಿದ್ದಾರೆ. ಇತರ ಪಕ್ಷಗಳಿಗೆ ಬಿಎನ್‌ಪಿ ಹೊಂದಿರುವ ಅನುಭವವಿಲ್ಲ ಎಂದು ಹೇಳಿದ್ದಾರೆ. ತಾರೀಕ್ ರಹಮಾನ್ ಅವರ ಪಕ್ಷ ಬಾಂಗ್ಲಾದೇಶದ ಅತಿದೊಡ್ಡ ಪಕ್ಷವಾದ ಜಮಾಅತೆ ಇಸ್ಲಾಮಿಯಿಂದ ದೊಡ್ಡ ಪೈಪೋಟಿ ಎದುರಿಸುತ್ತಿದೆ. ಅದರ ನಾಯಕ ಶಫೀಕುರ‌್ರಹಮಾನ್ ವಿಶಿಷ್ಟ ರಾಜಕೀಯ ಇಮೇಜ್ ಹೊಂದಿದ್ದಾರೆ. ಮಾಜಿ ಸರಕಾರಿ ವೈದ್ಯರಾಗಿದ್ದ ಶಫೀಕುರ‌್ರಹಮಾನ್ 2019ರಲ್ಲಿ ಜಮಾಅತೆ ಇಸ್ಲಾಮಿಯ ಮುಖ್ಯಸ್ಥರಾದರು. ಡಿಸೆಂಬರ್ 2022ರಲ್ಲಿ ಅವರನ್ನು ಭಯೋತ್ಪಾದನೆಗೆ ಸಂಬಂಧಿಸಿದ ಆರೋಪದ ಮೇಲೆ ಬಂಧಿಸಲಾಯಿತು. 15 ತಿಂಗಳ ನಂತರ ಜಾಮೀನಿನ ಮೇಲೆ ಬಿಡುಗಡೆಯಾದರು. 2025ರ ಮಾರ್ಚ್‌ನಲ್ಲಿ ಮುಹಮ್ಮದ್ ಯೂನುಸ್ ನೇತೃತ್ವದಲ್ಲಿ ಮಧ್ಯಂತರ ಸರಕಾರ ರಚನೆಯಾದಾಗ, ಶಫೀಕುರ‌್ರಹಮಾನ್‌ಹೆಸರನ್ನು ಪ್ರಕರಣದಿಂದ ಕೈಬಿಡಲಾಯಿತು. ಅಂದಿನಿಂದ ಅವರ ಭಾಷಣಗಳು ಮತ್ತು ರ್ಯಾಲಿಗಳು ನಿರಂತರವಾಗಿ ಸುದ್ದಿಗಳಲ್ಲಿವೆ. ಕಳೆದ ವರ್ಷ ಢಾಕಾದಲ್ಲಿ ನಡೆದ ದೊಡ್ಡ ರ್ಯಾಲಿಯಲ್ಲಿ ಅವರು ಬಿಸಿಲಿನ ತಾಪದಿಂದಾಗಿ ವೇದಿಕೆಯಲ್ಲಿ ಎರಡು ಬಾರಿ ಮೂರ್ಛೆ ಹೋದರು. ವೈದ್ಯರ ಸಲಹೆಯ ಹೊರತಾಗಿಯೂ, ಅವರು ಎದ್ದು ತಮ್ಮ ಭಾಷಣ ಪೂರ್ಣಗೊಳಿಸಿದರು. ‘‘ಜೀವ ಇರುವವರೆಗೂ ನಾನು ಜನರಿಗಾಗಿ ಹೋರಾಡುತ್ತಲೇ ಇರುತ್ತೇನೆ’’ ಎಂದರು. ‘‘ಜಮಾಅತೆ ಇಸ್ಲಾಮಿ ಅಧಿಕಾರಕ್ಕೆ ಬಂದರೆ ನಾವು ಆಡಳಿತಗಾರರಾಗಿರದೆ, ಜನರ ಸೇವಕರಾಗುತ್ತೇವೆ’’ ಎಂದು ಅವರು ಹೇಳಿದ್ದಾರೆ. ಯಾವುದೇ ಸುಲಿಗೆ, ಭ್ರಷ್ಟಾಚಾರ ಇರುವುದಿಲ್ಲ, ಯುವಕರೊಂದಿಗೆ ಇರುವುದಾಗಿ ಹೇಳಿದ್ದಾರೆ. ಇಸ್ಲಾಮಿಕ್ ತತ್ವಗಳ ಪ್ರಕಾರ ದೇಶವನ್ನು ನಡೆಸುವುದಾಗಿ ಜಮಾಅತೆ ಇಸ್ಲಾಮಿ ಹೇಳಿಕೊಳ್ಳುತ್ತದೆ. ಇದು ಆರ್ಥಿಕತೆಯನ್ನು ಸುಧಾರಿಸಲು ಪ್ರಯತ್ನಿಸುತ್ತದೆ. ನೆರೆಯ ದೇಶಗಳೊಂದಿಗಿನ ಸಂಬಂಧಗಳು ಉತ್ತಮವಾಗಿವೆ ಮತ್ತು ಜವಳಿ ಉದ್ಯಮದ ಜೊತೆಗೆ, ಪಕ್ಷವು ಚರ್ಮ ಉದ್ಯಮವನ್ನು ಉತ್ತೇಜಿಸಲು ಬಯಸುತ್ತದೆ. ಜಮಾಅತೆ ಇಸ್ಲಾಮಿ ಮತ್ತು ಎನ್‌ಸಿಪಿ ಮೈತ್ರಿ ಗೆದ್ದರೆ ಜಮಾಅತೆ ಇಸ್ಲಾಮಿ ನಾಯಕ ಶಫೀಕುರ‌್ರಹಮಾನ್ ಪ್ರಧಾನಿಯಾಗುತ್ತಾರೆ ಎಂದು ಹೇಳಲಾಗುತ್ತಿದೆ. ಜಮಾಅತೆ ಇಸ್ಲಾಮಿ ಪಕ್ಷ ಧರ್ಮದೊಂದಿಗೆ ತುಂಬಾ ನಿಕಟ ಸಂಬಂಧ ಹೊಂದಿದೆ ಎಂದು ಆಗಾಗ ಹೇಳಲಾಗುತ್ತದೆ. ಆದರೆ ಈಗ ಪಕ್ಷ ಈ ಗ್ರಹಿಕೆಯನ್ನು ಬದಲಾಯಿಸಲು ಪ್ರಯತ್ನಿಸಿದೆ. ಪ್ರಾಥಮಿಕವಾಗಿ, ಅದು ಎನ್‌ಸಿಪಿಯೊಂದಿಗೆ ಮೈತ್ರಿ ಹೊಂದಿದೆ. ವರದಿಗಳ ಪ್ರಕಾರ, ಬಾಂಗ್ಲಾದೇಶದ ಉನ್ನತ ಉದ್ಯಮಿಗಳು ಈ ಹಿಂದೆ ಜಮಾಅತೆ ಇಸ್ಲಾಮಿಯಿಂದ ದೂರವಿದ್ದರು. ಈಗ, ಉದ್ಯಮ ಮುಖಂಡರು ಜಮಾಅತೆ ಇಸ್ಲಾಮಿ ನಾಯಕರನ್ನು ಬಹಿರಂಗವಾಗಿ ಭೇಟಿಯಾಗುತ್ತಿದ್ದಾರೆ. ಕಳೆದ ಕೆಲವು ತಿಂಗಳುಗಳಲ್ಲಿ, ಯುರೋಪ್, ಪಾಶ್ಚಿಮಾತ್ಯ ದೇಶಗಳು ಮತ್ತು ಭಾರತದ ರಾಜತಾಂತ್ರಿಕರು ಜಮಾಅತೆ ಇಸ್ಲಾಮಿ ನಾಯಕ ಶಫೀಕುರ‌್ರಹಮಾನ್ ಅವರನ್ನು ಭೇಟಿ ಮಾಡಿದ್ದಾರೆ. ಇತ್ತೀಚಿನವರೆಗೂ ಪ್ರಪಂಚದ ಅನೇಕ ಭಾಗಗಳಲ್ಲಿ ರಾಜಕೀಯವಾಗಿ ಅಸ್ಪಶ್ಯರೆಂದು ಪರಿಗಣಿಸಲ್ಪಟ್ಟಿದ್ದ ಇದೇ ಶಫೀಕುರ‌್ರಹಮಾನ್ ಅವರ ಕಡೆಗಿನ ದೃಷ್ಟಿ ಈಗ ಸಂಪೂರ್ಣ ಬದಲಾಗಿದೆ. ಶೇಕ್ ಹಸೀನಾ ಪದಚ್ಯುತಿ ಬಳಿಕ ದೇಶದ ಸಂಪೂರ್ಣ ರಾಜಕೀಯ ಬದಲಾಗಿದೆ. ವರ್ಷಗಳ ಕಾಲ ಬಾಂಗ್ಲಾದೇಶದ ರಾಜಕೀಯ ಎರಡು ಪಕ್ಷಗಳ ಸುತ್ತ ಸುತ್ತುತ್ತಿತ್ತು. ಅವಾಮಿ ಲೀಗ್ ಮತ್ತು ಬಿಎನ್‌ಪಿ ಎರಡೇ ಮುಖ್ಯವಾಗಿದ್ದವು. ಹಸೀನಾ ನಿರ್ಗಮನದ ನಂತರ, ಈಗ ಅವಾಮಿ ಲೀಗ್ ಅನ್ನು ನಿಷೇಧಿಸಿದ್ದು, ಅದರ ಜಾಗವನ್ನು ಜಮಾಅತೆ ಇಸ್ಲಾಮಿ ತುಂಬಿದೆ. ಆರಂಭದಲ್ಲಿ, ವಿದ್ಯಾರ್ಥಿ ನಾಯಕರ ಎನ್‌ಸಿಪಿ ಆ ಜಾಗಕ್ಕೆ ಬರುತ್ತದೆ ಎಂದು ನಂಬಲಾಗಿತ್ತು. ಆದರೆ ಅದು ಆಗಲಿಲ್ಲ ಮತ್ತು ಇದರಿಂದ ಒದಗಿದ ಅವಕಾಶವನ್ನು ಜಮಾಅತೆ ಇಸ್ಲಾಮಿ ಬಳಸಿಕೊಂಡಿತು. ಜಮಾಅತೆ ಇಸ್ಲಾಮಿ ಬಾಂಗ್ಲಾದೇಶದ ಎರಡು ಅತ್ಯಂತ ಶಕ್ತಿಶಾಲಿ ರಾಜಕೀಯ ಪಕ್ಷಗಳಲ್ಲಿ ಒಂದಾಗಿ ಹೊರಹೊಮ್ಮಿದೆ. ಈಗ, ಎರಡರಲ್ಲಿ ಮುಂದಿರುವುದು ಬಿಎನ್‌ಪಿಯೋ ಅಥವಾ ಜಮಾಅತೆ ಇಸ್ಲಾಮಿಯೋ ಎಂಬುದು ಪ್ರಶ್ನೆ. ಬಾಂಗ್ಲಾದೇಶದ ಅಂತರ್‌ರಾಷ್ಟ್ರೀಯ ಕಾನೂನು ಮತ್ತು ರಾಜತಾಂತ್ರಿಕ ಸಂಸ್ಥೆಯ ಸಮೀಕ್ಷೆ ಪ್ರಕಾರ, ಬಿಎನ್‌ಪಿ ಮೈತ್ರಿಕೂಟ ಮುನ್ನಡೆ ಸಾಧಿಸುತ್ತದೆ. ಈ ಸಮೀಕ್ಷೆ ಬಿಎನ್‌ಪಿ ಮೈತ್ರಿಕೂಟ ಶೇ. 44.1 ಮತಗಳನ್ನು ಪಡೆಯುತ್ತದೆ ಎಂದು ಅಂದಾಜಿಸಿದೆ. ಜಮಾಅತೆ ಇಸ್ಲಾಮಿ ನೇತೃತ್ವದ 11-ಪಕ್ಷಗಳ ಮೈತ್ರಿಕೂಟ ಶೇ. 43.9 ಮತಗಳೊಂದಿಗೆ ಇದೇ ಮಟ್ಟದಲ್ಲಿದೆ. ತಾರೀಕ್ ರಹಮಾನ್ ಅವರ ಬಿಎನ್‌ಪಿ ಮತ ಹಂಚಿಕೆಯಲ್ಲಿ ಸ್ವಲ್ಪ ಮುಂದಿದೆ. ಇಸ್ಲಾಮಿಸ್ಟ್ ಮೈತ್ರಿಕೂಟ 105 ಸ್ಥಾನಗಳೊಂದಿಗೆ ಬಲವಾದ ಸ್ಥಾನದಲ್ಲಿದೆ, ಆದರೆ ಬಿಎನ್‌ಪಿ 101 ಸ್ಥಾನಗಳನ್ನು ಗೆಲ್ಲುವ ಸಮೀಪದಲ್ಲಿದೆ ಎಂದು ಹೇಳಲಾಗುತ್ತಿದೆ. ಇದಲ್ಲದೆ, 75 ಸ್ಥಾನಗಳಲ್ಲಿ ಎರಡೂ ಪಕ್ಷಗಳ ನಡುವೆ ನಿಕಟ ಸ್ಪರ್ಧೆ ಇರಬಹುದು ಎನ್ನಲಾಗಿದೆ. ಮತ್ತೊಂದು ಸಮೀಕ್ಷೆಯ ಪ್ರಕಾರ, ಬಿಎನ್‌ಪಿ ಸ್ಪಷ್ಟವಾಗಿ ಮುನ್ನಡೆಯಲ್ಲಿದೆ ಮತ್ತು ಸುಮಾರು 208 ಸ್ಥಾನಗಳನ್ನು ಗೆಲ್ಲಬಹುದು. ಅದರ ಅಂದಾಜಿನ ಪ್ರಕಾರ, ಜಮಾಅತೆ ಇಸ್ಲಾಮಿ ಮೈತ್ರಿಕೂಟ ಕೇವಲ 46 ಸ್ಥಾನಗಳನ್ನು ಗೆಲ್ಲಬಹುದು. ಹೆಚ್ಚಿನ ಬಾಂಗ್ಲಾದೇಶಿ ಮತದಾರರು ಈಗಲೂ ಬಿಎನ್‌ಪಿಯನ್ನು ತಮ್ಮ ಮೊದಲ ಆಯ್ಕೆಯಾಗಿ ಪರಿಗಣಿಸುತ್ತಾರೆ ಎಂದು ಸಮೀಕ್ಷೆ ಹೇಳುತ್ತದೆ. ಸುಮಾರು ಶೇ. 66.3 ಜನರು ಬಿಎನ್‌ಪಿ ಪರವಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಸಮೀಕ್ಷೆ ಜಮಾಅತೆ ಇಸ್ಲಾಮಿಗೆ ಕೇವಲ ಶೇ. 11.9 ಬೆಂಬಲ ತೋರಿಸಿದೆ. ವಿದ್ಯಾರ್ಥಿ ನಾಯಕರ ಪಕ್ಷವಾದ ಎನ್‌ಸಿಪಿಗೆ ಶೇ. 1.7ರಷ್ಟು ಬೆಂಬಲ ವ್ಯಕ್ತವಾಗಿದೆ ಎಂದು ಸಮೀಕ್ಷೆ ತೋರಿಸುತ್ತದೆ. ಎಲ್ಲಾ ಅಂದಾಜುಗಳು ಬಿಎನ್‌ಪಿ ಮತ್ತು ಜಮಾಅತೆ ಇಸ್ಲಾಮಿ ಪಕ್ಷಗಳ ನಡುವೆ ನಿಕಟ ಸ್ಪರ್ಧೆಯನ್ನು ಸೂಚಿಸುತ್ತವೆ. ಯಾವುದೇ ಪಕ್ಷ ಅಧಿಕಾರಕ್ಕೆ ಬಂದರೂ ಅದು ಸರಕಾರ ರಚಿಸುವುದಲ್ಲದೆ, ಬಾಂಗ್ಲಾದೇಶ ಭವಿಷ್ಯದಲ್ಲಿ ತನಗಾಗಿ ಮತ್ತು ಭಾರತದೊಂದಿಗಿನ ತನ್ನ ಸಂಬಂಧವನ್ನು ಹೇಗೆ ನಿರ್ಮಿಸಿಕೊಳ್ಳಲು ಬಯಸುತ್ತದೆ ಎಂಬುದರ ಮೇಲೆ ಅವಲಂಬಿತವಾಗಿದೆ. ಬಾಂಗ್ಲಾದೇಶದ ಚುನಾವಣೆಗಳನ್ನು ದೇಶದೊಳಗೆ ಮಾತ್ರವಲ್ಲದೆ ಪ್ರಪಂಚದಾದ್ಯಂತವೂ ವೀಕ್ಷಿಸಲಾಗುತ್ತಿದೆ. ಬಾಂಗ್ಲಾದೇಶಿಗಳು ವಿಶ್ವಸಂಸ್ಥೆಯ ಶಾಂತಿಪಾಲನಾ ಕಾರ್ಯಾಚರಣೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಅಲ್ಲದೆ ಬಾಂಗ್ಲಾದೇಶ ಯಾವಾಗಲೂ ಭಾರತಕ್ಕೆ ಪ್ರಮುಖ ನೆರೆಯ ರಾಷ್ಟ್ರವಾಗಿದೆ. ಎರಡೂ ದೇಶಗಳು 4,000 ಕಿಲೋಮೀಟರ್ ಗಡಿಯನ್ನು ಹಂಚಿಕೊಳ್ಳುತ್ತವೆ. ಆರ್ಥಿಕವಾಗಿ, ಅವೆರಡರ ಹಿತಾಸಕ್ತಿಗಳು ಸಹ ಹೆಣೆದುಕೊಂಡಿವೆ. ರಸ್ತೆಗಳು, ರೈಲ್ವೆಗಳು ಮತ್ತು ಬಂದರುಗಳಂತಹ ಯೋಜನೆಗಳಿಗಾಗಿ ಭಾರತ ಬಾಂಗ್ಲಾದೇಶಕ್ಕೆ ಸುಮಾರು 8 ಬಿಲಿಯನ್ ಡಾಲರ್ ಸಾಲ ನೀಡಿದೆ. ಭಾರತ ಬಾಂಗ್ಲಾಕ್ಕೆ ವಿದ್ಯುತ್ ಅನ್ನು ಸಹ ಪೂರೈಸುತ್ತದೆ. ಆದರೆ ಮುಂಬರುವ ಸರಕಾರ ಈ ಯೋಜನೆಗಳಲ್ಲಿ ಭಾರತದ ಬೆಂಬಲವನ್ನು ಬಯಸುತ್ತದೆಯೇ? ಜಮಾಅತೆ ಇಸ್ಲಾಮಿ ಪಾಕಿಸ್ತಾನದೊಂದಿಗೆ ಬಲವಾದ ಸಂಬಂಧ ಬಯಸುತ್ತದೆ. ಇದಲ್ಲದೆ, 2024ರಲ್ಲಿ ಶೇಕ್ ಹಸೀನಾ ಅಧಿಕಾರ ಪತನದ ನಂತರ, ಬಾಂಗ್ಲಾದೇಶದಲ್ಲಿ ಭಾರತ ವಿರೋಧಿ ಭಾವನೆ ಕೂಡ ಸ್ಪಷ್ಟವಾಗಿದೆ. ವಿಶೇಷವಾಗಿ ಭಾರತ ಹಸೀನಾ ಅವರನ್ನು ತನ್ನ ದೇಶಕ್ಕೆ ಹಿಂದಿರುಗಿಸಲು ನಿರಾಕರಿಸಿದ ನಂತರ ಇದು ಹೆಚ್ಚಿದೆ. ಈ ಸಂದರ್ಭದಲ್ಲಿ, ಜಮಾಅತೆ ಇಸ್ಲಾಮಿ ಮುಖ್ಯಸ್ಥ ಶಫೀಕುರ‌್ರಹಮಾನ್ ಸಂದರ್ಶನವೊಂದರಲ್ಲಿ ಭಾರತೀಯ ರಾಜತಾಂತ್ರಿಕರೊಬ್ಬರು ಡಿಸೆಂಬರ್‌ನಲ್ಲಿ ಅವರನ್ನು ಭೇಟಿ ಮಾಡಿದ್ದಾರೆ ಎಂದು ಹೇಳಿದರು. ಜನವರಿ 10ರಂದು, ಢಾಕಾದಲ್ಲಿ, ಭಾರತೀಯ ಹೈಕಮಿಷನರ್ ಪ್ರಣಯ್ ವರ್ಮಾ ಕೂಡ ಬಿಎನ್‌ಪಿ ನಾಯಕ ತಾರೀಕ್ ರಹಮಾನ್ ಅವರನ್ನು ಭೇಟಿಯಾದರು. ಇದರರ್ಥ ಯಾರು ಸರಕಾರ ರಚಿಸಿದರೂ ಭಾರತ ಎರಡೂ ಪಕ್ಷಗಳೊಂದಿಗೆ ಕೆಲಸ ಮಾಡಲು ಸಿದ್ಧವಾಗಿದೆ ಎಂದು ತೋರುತ್ತದೆ. ಬಾಂಗ್ಲಾದೇಶದ ಚುನಾವಣೆ ಇದೆಲ್ಲದರ ಹಿನ್ನೆಲೆಯಲ್ಲಿ ಈಗಿನ ದೊಡ್ಡ ಕುತೂಹಲವಾಗಿದೆ.

ವಾರ್ತಾ ಭಾರತಿ 12 Feb 2026 11:05 am

Kottureshwara Jathre: ಇಂದು ಭವ್ಯ ರಥೋತ್ಸವ, ಮಾದಿಗ ಮಹಿಳೆಯರ ಆರತಿ ಬಳಿಕವೇ ತೇರು ಮುಂದಕ್ಕೆ, ವಿಶೇಷತೆ ಇಲ್ಲಿದೆ

ವಿಜಯನಗರ: ಕರ್ನಾಟಕ ಮಾತ್ರವಲ್ಲದೇ ಇತರ ರಾಜ್ಯಗಳಲ್ಲೂ ಅಪಾರ ಸಂಖ್ಯೆಯ ಭಕ್ತರನ್ನು ಹೊಂದಿರುವ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಶ್ರೀ ಕೊಟ್ಟೂರು ಗುರು ಬಸವೇಶ್ವರ (ಗುರು ಕೊಟ್ಟೂರೇಶ್ವರ) ಜಾತ್ರೆಯ ಆರಂಭವಾಗಿದೆ. ಇಂದು ಫೆಬ್ರವರಿ 12ರಂದು ಶುಕ್ರವಾರ ಸಂಜೆ ಮೂಲಾ ನಕ್ಷತ್ರದಲ್ಲಿ ಅದ್ಧೂರಿ ರಥೋತ್ಸವ ಜರುಗಲಿದೆ. ಕೊಪ್ಪಳದ ಗವಿಮಠದ ಜಾತ್ರೆ ನಂತರ ಅತ್ಯಧಿಕ ಜನರು ಸೇರುವ ಉತ್ತರ ಕರ್ನಾಟಕದ ಜಾತ್ರೆಗಳಲ್ಲಿ ಕೊಟ್ಟೂರು

ಒನ್ ಇ೦ಡಿಯ 12 Feb 2026 11:01 am

ಮೈಸೂರು ಸ್ಯಾಂಡಲ್ ಸೋಪ್ : ದೀಪಿಕಾ, ಧೋನಿ, ತಮನ್ನಾ ಭಾಟಿಯಾ; ರಾಯಭಾರಿಗಳಿಗೆ ಕೊಟ್ಟ ಸಂಭಾವನೆ ಎಷ್ಟೆಷ್ಟು

ಮೈಸೂರು ಸ್ಯಾಂಡಲ್ ಸೋಪ್ ಸೇರಿದಂತೆ ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತದ ಉತ್ಪನ್ನಗಳ ಪ್ರಚಾರಕ್ಕಾಗಿ ರಾಯಭಾರಿಗಳನ್ನು ನೇಮಕ ಮಾಡಲು ಕೋಟಿ ಕೋಟಿ ವೆಚ್ಚ ಮಾಡಲಾಗಿದೆ. ಈ ಹಿಂದೆ ನಟಿ ದೀಪಿಕಾ ಚಿಖ್ಲಿಯಾ, ಟೀಂ ಇಂಡಿಯಾ ಕ್ಯಾಪ್ಟನ್ ಆಗಿದ್ದ ಮಹೇಂದ್ರ ಸಿಂಗ್ ಧೋನಿ, ದೊಡ್ಡ ಗಣೇಶ್ ಸೇರಿದಂತೆ ಸೆಲೆಬ್ರಿಟಿಗಳು ರಾಯಭಾರಿ ಆಗಿ ನೇಮಕಗೊಂಡಿದ್ದರು. ಇದೀಗ ಬಾಲಿವುಡ್ ನಟಿ ತಮನ್ನಾ ಭಾಟಿಯಾ ಅವರನ್ನು ರಾಯಭಾರಿ ಆಗಿ ನೇಮಕ ಮಾಡಲಾಗಿದೆ. ಹಾಗಾದರೆ ಈ ರಾಯಭಾರಿಗಳಿಗೆ ಕೊಟ್ಟ ಸಂಭಾವನೆ ಎಷ್ಟೆಷ್ಟು?

ವಿಜಯ ಕರ್ನಾಟಕ 12 Feb 2026 10:46 am

ಬೆಂಗಳೂರಿನಲ್ಲಿ ಮತ್ತೊಂದು ರೋಡ್‌ ರೇಜ್‌ ಪ್ರಕರಣ, ಕಾರು ಚಾಲಕ ಅರೆಸ್ಟ್:‌ ಬಾನೆಟ್‌ ಮೇಲೆ ವ್ಯಕ್ತಿಯಿದ್ದರೂ ಬಿಡದೆ 1ಕಿ.ಮೀ ಹೊತ್ತೊಯ್ದ ಅಮಾನುಷ ಘಟನೆ

ಬೆಂಗಳೂರಿನಲ್ಲಿ ಇತ್ತೀಚಿನ ದಿನಗಳಲ್ಲಿ ಚಾಲಕರಲ್ಲಿ ಸಹನೆ ಕಡಿಮೆಯಾಗುತ್ತಿದ್ದು, ರೋಡ್‌ ರೇಜ್‌ ಪ್ರಕರಣಗಳು ಹೆಚ್ಚಾಗುತ್ತಿದೆ. ಇತ್ತೀಚೆಗಷ್ಟೇ ಸ್ನೇಹಿತನ್ನೇ ಬಲಿ ಪಡೆದ ರೋಡ್‌ ರೇಜ್‌ ಪ್ರಕರಣದ ಬಗ್ಗೆ ಕೇಳಿದ್ರಿ.ಆದ್ರೆ ಈಗ ಅಂತದ್ದೇ ಒಂದು ರೋಡ್‌ ರೇಜ್‌ ಪ್ರಕರಣ ಬೆಳಕಿಗೆ ಬಂದಿದ್ದು, ಕಾರು ಹಾಗೂ ಗೂಡ್ಸ್‌ ಚಾಲಕನ ನಡುವೆ ಸಣ್ಣ ಜಗಳ ವಿಕೋಪಕ್ಕೆ ತಿರುಗಿದ್ದು, ಕಾರು ಮುಂಭಾಗದಲ್ಲಿ ನಿಂತಿದ್ದ ಗೂಡ್ಸ್‌ ಚಾಲಕನ ಮೇಲೆ ಕಾರು ಹತ್ತಿಸಿದ್ದು, ಬಾನೆಟ್‌ ಮೇಲಿದ್ದರೂ ಬಿಡದೆ ಸುಮಾರು 1ಕಿ.ಮೀ ತನಕ ಕಾರು ಚಲಾಯಿಸಿ ವಿಕೃತಿ ಮೆರೆದಿರುವ ಘಟನೆ ನಡೆದಿದ್ದು, ಸದ್ಯ, ಕಾರು ಚಾಲಕನನ್ನು ಬಂಧಿಸಲಾಗಿದೆ.

ವಿಜಯ ಕರ್ನಾಟಕ 12 Feb 2026 10:34 am

ಮುಸ್ಲಿಮರನ್ನು ಗುರಿಯಾಗಿಸಿಕೊಂಡ AI ವೀಡಿಯೊ ಪೋಸ್ಟ್‌ : ತೀವ್ರ ಆಕ್ಷೇಪದ ಬೆನ್ನಲ್ಲೆ ಮಾಧ್ಯಮ ವಿಭಾಗದ ಸಹ ಸಂಚಾಲಕನನ್ನು ವಜಾಗೊಳಿಸಿದ ಅಸ್ಸಾಂ ಬಿಜೆಪಿ

ಹೊಸದಿಲ್ಲಿ: ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಮುಸ್ಲಿಮರ ಫೋಟೊಗಳ ಮೇಲೆ ಗುಂಡು ಹಾರಿಸುತ್ತಿರುವ ಎಐ ವೀಡಿಯೊಗೆ ತೀವ್ರ ವಿರೋಧದ ಬೆನ್ನಲ್ಲೆ ಅಸ್ಸಾಂ ಬಿಜೆಪಿ ಸಾಮಾಜಿಕ ಮಾಧ್ಯಮ ವಿಭಾಗದ ಸಹ ಸಂಚಾಲಕನನ್ನು ವಜಾಗೊಳಿಸಿದೆ. ಹಿರಿಯ ನಾಯಕರ ಗಮನಕ್ಕೆ ತರದೆ ಮತ್ತು ಅನುಮತಿ ಪಡೆಯದೆ ಸಾಮಾಜಿಕ ಜಾಲತಾಣದಲ್ಲಿ ವೀಡಿಯೊ ಅಪ್ ಲೋಡ್ ಮಾಡಲಾಗಿದೆ ಎಂದು ರಾನ್ ಬಿಕಾಶ್ ಗೌರವ್ ಎಂಬಾತನನ್ನು ಬಿಜೆಪಿ ಪಕ್ಷದಿಂದ ವಜಾಗೊಳಿಸಿದೆ.   ಫೆಬ್ರವರಿ 7ರಂದು ಈ ವೀಡಿಯೊವನ್ನು ಅಪ್ಲೋಡ್ ಮಾಡಲಾಗಿತ್ತು. ತೀವ್ರ ಆಕ್ಷೇಪ ವ್ಯಕ್ತವಾದ ಬೆನ್ನಲ್ಲಿ ವೀಡಿಯೊವನ್ನು ಡಿಲಿಟ್ ಮಾಡಲಾಗಿತ್ತು. AI ವೀಡಿಯೊದಲ್ಲಿ ಅಸ್ಸಾಂ ಮುಖ್ಯಮಂತ್ರಿ ಇಬ್ಬರು ಮುಸ್ಲಿಂ ಪುರುಷರ ಮೇಲೆ ರೈಫಲ್ ಅನ್ನು ಗುರಿಯಿಡುತ್ತಿರುವುದು ಕಂಡು ಬಂದಿದೆ. ಈ ಬಗ್ಗೆ ಪತ್ರಕರ್ತರು ಸಿಎಂ ಶರ್ಮಾ ಅವರನ್ನು ಪ್ರಶ್ನಿಸಿದಾಗ, ಅಂತಹ ಯಾವುದೇ ವೀಡಿಯೊದ ಬಗ್ಗೆ ನಮಗೆ ತಿಳಿದಿಲ್ಲ ಎಂದು ಹೇಳಿದ್ದಾರೆ. ಈ ಕುರಿತು ಗುವಾಹಟಿಯ ದಿಸ್ಪುರ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಿದ ಕಾಂಗ್ರೆಸ್ ಹಿಮಂತ ಬಿಸ್ವಾ ಶರ್ಮಾ  ಅವರನ್ನು ತಕ್ಷಣ ಬಂಧಿಸುವಂತೆ ಒತ್ತಾಯಿಸಿತ್ತು.

ವಾರ್ತಾ ಭಾರತಿ 12 Feb 2026 10:30 am

Gold Rate Fall : ಸತತ ಎರಡನೇ ದಿನವೂ ಚಿನ್ನದ ಬೆಲೆ ಇಳಿಕೆ: ಬೆಳ್ಳಿ ಬೆಲೆಯಲ್ಲಿ ಅಲ್ಪ ಏರಿಕೆ

ಚಿನ್ನದ ಬೆಲೆಯಲ್ಲಿ ಇಂದು ಬರೋಬ್ಬರಿ 1200 ರೂಪಾಯಿ ಇಳಿಕೆ ಆಗಿದೆ, ಬೆಳ್ಳಿ ಬೆಲೆ 3 ಲಕ್ಷದ ಆಸುಪಾಸಲ್ಲಿ ಏರಿಕೆ ಇಳಿಕೆ ಆಗುತ್ತಿದೆ. ಸದ್ಯ ಜಾಗತಿಕ ರಾಜಕೀಯದಲ್ಲಿ ಉದ್ವಿಗ್ನತೆ ಕಡಿಮೆಯಾಗಿದ್ದು, ಇದು ಚಿನ್ನದ ಬೆಲೆ ಇಳಿಕೆಗೆ ಪೂರಕವಾಗಿದೆ.

ವಿಜಯ ಕರ್ನಾಟಕ 12 Feb 2026 10:13 am

ಇದೆನಾ ಸಂಸ್ಕೃತಿ, ಇದೆನಾ ಸಭ್ಯತೆ? ಪ್ರಹ್ಲಾದ್‌ ಜೋಶಿ ಹಿಡಿದೆಳೆದ ರಾಹುಲ್‌ ಗಾಂಧಿ ವಿರುದ್ಧ ಕರ್ನಾಟಕ ಬಿಜೆಪಿ ಕಿಡಿ!

ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್‌ ಗಾಂಧಿ ಅವರಿಗೂ ವಿವಾದಗಳಿಗೂ ಅವಿನಾಭಾವ ನಂಟು. ಕೆಲವೊಮ್ಮೆ ಅವರೇ ವಿವಾದಗಳನ್ನು ಅರಸಿ ಹೊರಟರೆ, ಮತ್ತೆ ಕೆಲವೊಮ್ಮೆ ವಿವಾದಗಳೇ ಅವರನ್ನು ಹುಡುಕಿಕೊಂಡು ಬರುತ್ತವೆ. ಆದರೆ ಅವರ ಎಲ್ಲಾ ನಡೆಯನ್ನು ವಿವಾದಾತ್ಮಕ ಎನ್ನಲು ಬರುವುದಿಲ್ಲ. ಅದೇ ರೀತಿ ನಿನ್ನೆ (ಫೆ.11-ಬುಧವಾರ) ಸಂಸತ್ತಿನ ಆವರಣದಲ್ಲಿ ಕೇಂದ್ರ ಸಚಿವ ಮತ್ತು ಹಿರಿಯ ಬಿಜೆಪಿ ನಾಯಕ ಪ್ರಹ್ಲಾದ್‌ ಜೋಶಿ ಅವರ ಕೈ ಎಳೆದು, ರಾಹುಲ್‌ ಗಾಂಧಿ ಹೊಸ ವಿವಾದ ಸೃಷ್ಟಿಸಿದ್ದಾರೆ. ಕರ್ನಾಟಕ ಬಿಜೆಪಿ ರಾಹುಲ್‌ ಗಾಂಧಿ ವಿರುದ್ಧ ಹರಿಹಾಯ್ದಿದೆ.

ವಿಜಯ ಕರ್ನಾಟಕ 12 Feb 2026 9:38 am

SWR: ಹೋಳಿ ಪ್ರಯುಕ್ತ ವಿಶೇಷ ರೈಲುಗಳ ಸೇವೆ ವಿಸ್ತರಣೆ, ಬೆಂಗಳೂರು, ಹುಬ್ಬಳ್ಳಿ, ಮೈಸೂರು ಮಾರ್ಗದ ಪ್ರಯಾಣಿಕರಿಗೆ ಸಿಹಿ ಸುದ್ದಿ

ಬೆಂಗಳೂರು: ಮುಂದಿನ ತಿಂಗಳು ಮಾರ್ಚ್‌ ಮೊದಲ ವಾರದ ಬಣ್ಣದ ಹಬ್ಬ ಹೋಳಿ ಆಚರಿಸಲಾಗುತ್ತದೆ. ಈ ವೇಳೆ ರಜೆಗಳು ಇರುವ ಕಾರಣ ಬೇರೆ ಬೇರೆ ಊರುಗಳಿಗೆ ತೆರಳುವವರ ಸಂಖ್ಯೆ ಹೆಚ್ಚಿರುತ್ತದೆ. ಪ್ರಯಾಣಿಕರ ದಟ್ಟಣೆ ನಿವಾರಣೆಗೆ, ಅನುಕೂಲಕ್ಕಾಗಿ ವಿಶೇಷ ರೈಲುಗಳ ಸಂಚಾರ ಅವಧಿ ವಿಸ್ತರಣೆ ಮಾಡಲಾಗಿದೆ. ಮೈಸೂರು, ಹುಬ್ಬಳ್ಳಿ, ಕೊಲ್ಲಂ, ಬೆಂಗಳೂರು ಸೇರಿ ವಿವಿಧ ಮಾರ್ಗದ ಪ್ರಯಾಣಿಕರಿಗೆ ಇದರಿಂದ ಸಾಕಷ್ಟು

ಒನ್ ಇ೦ಡಿಯ 12 Feb 2026 9:36 am

’ಬುಮ್ರಾಕೋ ಚೋಡ್ನಾ ಮತ್, ಸಿಕ್ಸರ್ ಮಾರೋ’: ಪಾಕ್ ಅಭಿಮಾನಿಯ ಕೂಗಿಗೆ ಫರ್ಹಾನ್ ಮ್ಯಾಜಿಕ್ ರಿಯಾಕ್ಷನ್!

T20 World Cup News : ಹಲವು ಬಾರಿ ಭಾರತ ಮತ್ತು ಪಾಕಿಸ್ತಾನ ಅಂತಾರಾಷ್ಟ್ರೀಯ ಕ್ರಿಕೆಟ್’ನಲ್ಲಿ ಮುಖಾಮುಖಿಯಾಗಿದೆ. ತಾಜಾ ಅಂಕಿಅಂಶದ ಪ್ರಕಾರ, ಪಾಕಿಸ್ತಾನವು ಭಾರತದ ವಿರುದ್ದ ಆಡಿದ ಹೆಚ್ಚಿನ ಪಂದ್ಯವನ್ನು ಸೋಲುತ್ತಿದೆ. ವಿಶ್ವಕಪ್ ಸರಣಿಯ ನಿರ್ಣಾಯಕ ಪಂದ್ಯದಲ್ಲಿ ಭಾರತವು, ಪಾಕಿಸ್ತಾನ ತಂಡವನ್ನು ಶ್ರೀಲಂಕಾದಲ್ಲಿ ಎದುರಿಸಲಿದೆ. ಈ ಮ್ಯಾಚ್ ಬಗ್ಗೆ ಅಭಿಮಾನಿಯ ಕೂಗೊಂದು ವೈರಲ್ ಆಗುತ್ತಿದೆ.

ವಿಜಯ ಕರ್ನಾಟಕ 12 Feb 2026 9:29 am

ಬಸವ ಕಲ್ಯಾಣ ಅನುಭವ ಮಂಟಪ ಗುತ್ತಿಗೆದಾರರಿಗೆ ಪಾವತಿಯಾಗದ ಹಣ

ಹೆಚ್ಚುವರಿ ಆರ್ಥಿಕ ನೆರವಿಗೆ ಈಶ್ವರ್ ಖಂಡ್ರೆ ಮನವಿ

ವಾರ್ತಾ ಭಾರತಿ 12 Feb 2026 9:18 am

‘ಹಿಮಾಲಯನ್ ಬ್ಲಂಡರ್’ನಲ್ಲಿ ಇಲ್ಲದ ‘ಬ್ಲಂಡರ್’ಗಳು ನರವಣೆ ಕೃತಿಯಲ್ಲಿದೆಯೆ?

ಮಾಜಿ ಸೇನಾ ಮುಖ್ಯಸ್ಥ ಮನೋಜ್ ಮುಕುಂದ್ ನರವಣೆ ಅವರ ಆತ್ಮಕತೆ ‘ಫೋರ್ ಸ್ಟಾರ್ಸ್‌ ಆಫ್ ಡೆಸ್ಟಿನಿ’ ಪುಸ್ತಕ ಕೇಂದ್ರ ಸರಕಾರದ ವಿಧಿಯನ್ನು ಬದಲಿಸುವ ಮಟ್ಟಕ್ಕೆ ಮಹತ್ವವನ್ನು ಪಡೆದುಕೊಂಡಿದೆ. ಮೊನ್ನೆ ಮೊನ್ನೆಯವರೆಗೂ ಆನ್‌ಲೈನ್‌ನಲ್ಲಿ ಲಭ್ಯವಿದ್ದ ಈ ಪುಸ್ತಕದ ಬಗ್ಗೆ ಪೆಂಗ್ವಿನ್ ರ್ಯಾಂಡಮ್ ಹೌಸ್ ಇಂಡಿಯಾ ಕೊನೆಗೂ ‘ಅದನ್ನು ಪ್ರಕಟಿಸಿಲ್ಲ’ ಎಂಬ ಸ್ಪಷ್ಟೀಕರಣ ನೀಡುವ ಸ್ಥಿತಿಗೆ ಬಂದಿದೆ. ನರವಣೆ ಅವರು ಕೂಡ ‘ಪೆಂಗ್ವಿನ್ ಹೇಳಿಕೆಗೆ’ ಸಮ್ಮತಿ ಸೂಚಿಸಿದ್ದಾರೆ. ಪುಣ್ಯಕ್ಕೆ ಆ ಪುಸ್ತಕವನ್ನೇ ನಾನು ಬರೆದಿಲ್ಲ ಎನ್ನುವ ಹೇಳಿಕೆಯನ್ನು ಅವರು ಈವರೆಗೆ ನೀಡಿಲ್ಲ. ಮುಂದೊಂದು ದಿನ ಅಂತಹದೊಂದು ಹೇಳಿಕೆ ನರವಣೆಯವರಿಂದ ಹೊರ ಬಿದ್ದರೆ ಅಚ್ಚರಿಯೂ ಇಲ್ಲ. ಇಷ್ಟಾದರೂ ‘ಆ ಪುಸ್ತಕದ ಹಕ್ಕುಗಳನ್ನು ನಾನು ಹೊಂದಿದ್ದೇನೆ’ ಎಂದು ಪೆಂಗ್ವಿನ್ ಒಪ್ಪಿಕೊಂಡಿದೆ. ಅಂತಹದೊಂದು ಪುಸ್ತಕ ಅಸ್ತಿತ್ವದಲ್ಲೇ ಇಲ್ಲ ಎಂದು ಸರಕಾರ ವಾದಿಸುವಂತೆ ಇಲ್ಲ. ಈ ಪುಸ್ತಕದ ಬಗ್ಗೆ ನರವಣೆ ಅವರು ಈ ಹಿಂದೆ ಮಾಡಿದ ಟ್ವೀಟ್‌ನ್ನು ಮುಂದಿಟ್ಟುಕೊಂಡು ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರು ‘ನರವಣೆಯವರು ಸುಳ್ಳು ಹೇಳುವುದಿಲ್ಲ’ ಎಂದು ಭಾವಿಸಿದ್ದೇನೆ ಎಂದಿದ್ದಾರೆ. ನಿಯತಕಾಲಿಕವೊಂದು ಈ ಪುಸ್ತಕದ ಆಯ್ದ ಭಾಗಗಳನ್ನು ಈಗಾಗಲೇ ಪ್ರಕಟಿಸಿದ್ದು, ಪುಸ್ತಕದ ಮುಖಪುಟವನ್ನು ರಾಹುಲ್ ಅವರು ಮಾಧ್ಯಮಗಳ ಮುಂದೆ ಪ್ರದರ್ಶಿಸಿದ್ದಾರೆ. ಕೃತಿಯು ರಕ್ಷಣಾ ಇಲಾಖೆಯಿಂದ ಅನುಮತಿಯನ್ನು ಪಡೆದಿಲ್ಲ ಎನ್ನುವುದು ಪುಸ್ತಕ ಪ್ರಕಟಣೆಗೆ ಇರುವ ಪ್ರಮುಖ ಅಡ್ಡಿ. ಅದನ್ನು ಚರ್ಚಿಸುವುದು ರಾಷ್ಟ್ರೀಯ ಭದ್ರತೆಗೆ ತೊಡಕುಂಟು ಮಾಡುತ್ತದೆ ಎನ್ನುವುದು ಕೇಂದ್ರ ಸರಕಾರದ ಅಭಿಪ್ರಾಯವಾಗಿದೆ. ಸರಕಾರದ ವೈಫಲ್ಯಗಳನ್ನು ಪ್ರಶ್ನಿಸುವುದು ಪರೋಕ್ಷವಾಗಿ ದೇಶವನ್ನು ಪ್ರಶ್ನಿಸಿದಂತೆ ಎಂಬ ತರ್ಕವನ್ನು ಸರಕಾರ ಈ ವಿಷಯದಲ್ಲೂ ಮುಂದೆ ತಂದಿದೆ. ಕಳೆದ ಹತ್ತು ವರ್ಷಗಳ ಈಚೆಗೆ ಸೇನೆ ‘ರಾಜಕೀಯ ಕಾರಣ’ಗಳಿಗಾಗಿ ಹೆಚ್ಚು ಸುದ್ದಿಯಲ್ಲಿದೆ. ‘ಸರಕಾರ ಸೇನೆಯನ್ನು ತನ್ನ ರಾಜಕೀಯ ಉದ್ದೇಶಗಳಿಗೆ ಬಳಸಲು ಪ್ರಯತ್ನಿಸುತ್ತಿದೆ, ಇದು ಸೈನಿಕರ ನೈತಿಕ ಸ್ಥೈರ್ಯದ ಮೇಲೆ ಪರಿಣಾಮ ಬೀರುತ್ತಿದೆ’ ಎನ್ನುವ ಆರೋಪಗಳನ್ನು ವಿರೋಧ ಪಕ್ಷಗಳ ನಾಯಕರು ಪದೇ ಪದೇ ಮಾಡುತ್ತಲೇ ಬರುತ್ತಿದ್ದಾರೆ. ಸರ್ಜಿಕಲ್ ಸ್ಟ್ರೈಕ್‌ನ್ನು ತನ್ನ ರಾಜಕೀಯ ದುರುದ್ದೇಶಗಳಿಗೆ ಕೇಂದ್ರ ಸರಕಾರ ಬಳಸಿಕೊಂಡಿದೆ ಎನ್ನುವ ಆರೋಪ ಸಾಕಷ್ಟು ವಿವಾದಗಳಿಗೆ ಕಾರಣವಾಗಿತ್ತು. ಸೇನಾಧಿಕಾರಿಗಳ ಮೂಲಕ ಪತ್ರಿಕಾಗೋಷ್ಠಿಯನ್ನು ಮಾಡಿಸಿ, ಸರ್ಜಿಕಲ್ ಸ್ಟ್ರೈಕ್‌ನ್ನು ಸರಕಾರ ತನಗೆ ಪೂರಕವಾಗಿ ಬಳಸಿಕೊಂಡಿತು. ಪುಲ್ವಾಮಾದಲ್ಲಿ ನಡೆದ ಉಗ್ರರ ಸ್ಫೋಟದಲ್ಲಿ 40ಕ್ಕೂ ಅಧಿಕ ಜವಾನರು ಮೃತಪಟ್ಟಾಗಲೂ ಅದನ್ನು ಚುನಾವಣೆಗೆ ಬಳಸಿಕೊಂಡ ಬಗ್ಗೆ ಆರೋಪ ಕೇಳಿ ಬಂದಿದ್ದವು. ಪುಲ್ವಾಮಾ ಸ್ಫೋಟಕ್ಕೆ ಪರೋಕ್ಷ ಕಾರಣವಾದ ಕೇಂದ್ರ ಸರಕಾರದ ವೈಫಲ್ಯವನ್ನು ಮುಚ್ಚಿ ಹಾಕಲಾಯಿತು. ಬದಲಿಗೆ ಸೇನಾ ಸಮವಸ್ತ್ರವನ್ನು ಧರಿಸಿ ಬಿಜೆಪಿ ಕಾರ್ಯಕರ್ತರು ಚುನಾವಣಾ ಪ್ರಚಾರ ಮಾಡಿರುವುದು ಮಾಧ್ಯಮಗಳಲ್ಲಿ ಸುದ್ದಿಯಾದವು. ಗಲ್ವಾನ್‌ನಲ್ಲಿ ಚೀನಾ ಸೈನಿಕರಿಂದಾಗಿ ಸಂಭವಿಸಿದ ನಾಶ ನಷ್ಟವನ್ನು ಚರ್ಚಿಸುವುದಕ್ಕೆ ಸಿದ್ಧವಿಲ್ಲದ ಸರಕಾರ ‘ಆಪರೇಷನ್ ಸಿಂಧೂರ’ವನ್ನು ತನ್ನ ಸರಕಾರದ ಸಾಧನೆಯಾಗಿ ಬಿಂಬಿಸಲು ಪ್ರಯತ್ನಿಸಿತು. ‘ಪಹಲ್ಗಾಮ್ ದಾಳಿ’ಯ ಹಿಂದಿರುವ ಸರಕಾರದ ವೈಫಲ್ಯವನ್ನು ಪ್ರಶ್ನಿಸಿದಾಗ ‘ರಾಷ್ಟ್ರೀಯ ಭದ್ರತೆ’ಯ ಹೆಸರಿನಲ್ಲಿ ವಿರೋಧ ಪಕ್ಷದ ಬಾಯಿ ಮುಚ್ಚಿ ಸಲಾಯಿತು. ಇದೇ ಸಂದರ್ಭದಲ್ಲಿ ಆಪರೇಷನ್ ಸಿಂಧೂರದಲ್ಲಿ ಭಾಗವಹಿಸಿದ್ದ ಮಹಿಳಾ ಸೇನಾಧಿಕಾರಿಯನ್ನು ‘ಭಯೋತ್ಪಾದಕರ ಸೋದರಿ’ ಎಂದು ಕರೆದ ಸಚಿವನ ವಿರುದ್ಧ ಯಾವ ಕ್ರಮವನ್ನು ತೆಗೆದುಕೊಳ್ಳದೇ ಆತನನ್ನು ಮೌನವಾಗಿ ಬೆಂಬಲಿಸಿತು. ಪ್ರಕರಣ ಸುಪ್ರೀಂಕೋರ್ಟ್ ಮೆಟ್ಟಿಲು ಏರಿದ ಬಳಿಕ ಸಚಿವ ತನ್ನ ಕೃತ್ಯಕ್ಕೆ ಕ್ಷಮೆಯಾಚಿಸಿದರು. ಸೇನೆಯ ಸಾಧನೆಗಳನ್ನು, ಬಲಿದಾನಗಳನ್ನು ತನ್ನ ಸಾಧನೆಗಳಾಗಿ ಬಿಂಬಿಸಲು ಹಿಂಜರಿಯದ ಸರಕಾರ ಇದೀಗ ಒಬ್ಬ ಸೇನಾಧಿಕಾರಿಯ ಆತ್ಮಕಥನವನ್ನು ‘ರಾಷ್ಟ್ರೀಯ ಭದ್ರತೆ’ಯ ಹೆಸರಿನಲ್ಲಿ ಹೊರ ಬರದಂತೆ ತಡೆಯಲು ನೋಡುತ್ತಿರುವುದು ಸಾಕಷ್ಟು ಅನುಮಾನ, ಶಂಕೆಗಳಿಗೆ ಕಾರಣವಾಗುತ್ತಿದೆ. ನಿಜ, ಸೇನಾಧಿಕಾರಿಗಳಿಗೆ ಕೆಲವು ಜವಾಬ್ದಾರಿಗಳಿವೆ. ನಿವೃತ್ತರಾದ ಬಳಿಕ ಏನನ್ನು ಬರೆದರೂ, ಅದು ರಾಷ್ಟ್ರದ ಭದ್ರತೆಗೆ ಧಕ್ಕೆ ತರುವಂತಿರಬಾರದು. ಅದೇ ಸಂದರ್ಭದಲ್ಲಿ, ರಾಜಕಾರಣಿಗಳ ನಿಷ್ಕ್ರಿಯತೆ ಸೇನೆಯ ಕಾರ್ಯತಂತ್ರದ ಮೇಲೆ ಪರಿಣಾಮಗಳನ್ನು ಬೀರಿದಾಗ ಅದನ್ನು ನಿವೃತ್ತಿಯ ಬಳಿಕ ವ್ಯಕ್ತಪಡಿಸಬಾರದು ಎಂದೇನಿಲ್ಲ. ಅದರಿಂದ ದೇಶದ ಭದ್ರತೆಗೆ ಯಾವುದೇ ದುಷ್ಪರಿಣಾಮ ಉಂಟಾಗುವುದಿಲ್ಲ. ಬದಲಿಗೆ ಕೆಲವು ರಾಜಕಾರಣಿಗಳ ಅಧಿಕಾರ ಭದ್ರತೆಯ ಮೇಲೆ ಮಾತ್ರ ಪರಿಣಾಮ ಉಂಟಾಗುತ್ತದೆ. ಬ್ರಿಗೇಡಿಯರ್ ಜೆ.ಬಿ. ದಳ್ವಿ ಅವರು ಬರೆದ ‘ಹಿಮಾಲಯನ್ ಬ್ಲಂಡರ್’ನಲ್ಲಿ 1962ರಲ್ಲಿ ಚೀನಾದ ಜೊತೆಗೆ ನಡೆದ ಯುದ್ಧದಲ್ಲಿ ಭಾರತಕ್ಕಾಗಿರುವ ಭಾರೀ ಹಿನ್ನಡೆಯನ್ನು ಚರ್ಚಿಸಲಾಗಿದೆ. ನೆಹರೂ ಆಡಳಿತ ಕಾಲದಲ್ಲಿ ನಡೆದ ಮಹಾ ಪ್ರಮಾದಗಳನ್ನು ಈ ಪುಸ್ತಕ ಉಲ್ಲೇಖಿಸುತ್ತದೆ. ಈ ಪುಸ್ತಕದಲ್ಲಿರುವ ವಿವರಗಳನ್ನು ಬಳಸಿಕೊಂಡೇ ಬಿಜೆಪಿಯು ಹಲವು ದಶಕಗಳಿಂದ ನೆಹರೂ ಮೇಲೆ ದಾಳಿಗಳನ್ನು ನಡೆಸುತ್ತಾ ಬಂದಿದೆ. ಕಾಂಗ್ರೆಸ್ ನೇತೃತ್ವದ ಸರಕಾರ ಅಧಿಕಾರದಲ್ಲಿರುವಾಗಲೂ ಈ ಪುಸ್ತಕದ ಮೇಲೆ ಯಾವುದೇ ಕ್ರಮವನ್ನು ತೆಗೆದುಕೊಳ್ಳಲಾಗಿಲ್ಲ. ರಾಷ್ಟ್ರೀಯ ಭದ್ರತೆಗೆ ಈ ಪುಸ್ತಕದಿಂದ ಧಕ್ಕೆಯಾಗಿದೆ ಎಂದು ಯಾವ ರಾಜಕಾರಣಿಯೂ ಪ್ರಲಾಪಗಳನ್ನು ಮಾಡಿಲ್ಲ. ಹಾಗಾದರೆ ‘ಹಿಮಾಲಯನ್ ಬ್ಲಂಡರ್’ ಪುಸ್ತಕದಲ್ಲಿ ಇಲ್ಲದೇ ಇರುವಂತಹ ಆಘಾತಕಾರಿ ವಿಷಯಗಳು ಇದೀಗ ನರವಣೆ ಅವರ ಕೃತಿಯಲ್ಲಿದೆಯೇ ಎಂದು ಓದುಗರು ಅನುಮಾನಿಸುವಂತಾಗಿದೆ. ಈ ಹಿಂದೆ ನಿವೃತ್ತ ಜನರಲ್ ವಿ. ಕೆ. ಸಿಂಗ್ ಬರೆದ ‘ಕರೇಜ್ ಎಂಡ್ ಕನ್ವಿಕ್ಷನ್’ ಕೂಡ ಸೇನೆಯೊಳಗಿರುವ ಹಲವು ಭ್ರಷ್ಟಾಚಾರಗಳನ್ನು ಬಹಿರಂಗಪಡಿಸಿತ್ತು. ಕೃತಿ ವಿವಾದವಾಯಿತಾದರೂ ಅಂದಿನ ಸರಕಾರ ಈ ಕೃತಿಗೆ ಯಾವ ಅಡ್ಡಿಯನ್ನೂ ಉಂಟು ಮಾಡಿರಲಿಲ್ಲ. ಸೇನಾಧಿಕಾರಿಗಳು ದೇಶದ ಭದ್ರತೆಗೆ ಸಂಬಂಧಿಸಿದ ರಹಸ್ಯಗಳನ್ನು ಪುಸ್ತಕಗಳಲ್ಲಿ ಬಹಿರಂಗಪಡಿಸಬಾರದು ಎನ್ನುವುದು ಎಷ್ಟು ಅಗತ್ಯವೋ, ದೇಶದ ಭದ್ರತೆಯ ವಿಷಯದಲ್ಲಿ ರಾಜಕಾರಣಿಗಳು ಪ್ರದರ್ಶಿಸಿದ ಬೇಜವಾಬ್ದಾರಿಗಳನ್ನು ದೇಶಕ್ಕೆ ತಿಳಿಸುವುದು ಅಷ್ಟೇ ಅಗತ್ಯವಾಗಿದೆ. ಸಂದರ್ಭ ಬಂದಾಗ ದೇಶದ ರಕ್ಷಣೆಗಾಗಿ ತಮ್ಮ ಪ್ರಾಣವನ್ನು ಅರ್ಪಿಸುವ ಸೇನೆ ಯಾವ ಕಾರಣಕ್ಕೂ ರಾಜಕಾರಣಿಗಳ ರಾಜಕೀಯ ಬಲಿಪಶುಗಳಾಗಿ ಬಳಕೆಯಾಗಬಾರದು. ಆ ಕಾರಣಕ್ಕೆ ನರವಣೆ ಪುಸ್ತಕ ಜನರನ್ನು ತಲುಪಬೇಕು. ಅದಕ್ಕೆ ಇರುವ ಅಡ್ಡಿಗಳನ್ನು ಸರಕಾರವೇ ನಿವಾರಿಸಬೇಕು. ಆ ಮೂಲಕ, ದೇಶದ ವಿಷಯದಲ್ಲಿ ನಾನು ಸೇನೆಯ ಜೊತೆಗಿದ್ದೇನೆ ಎನ್ನುವುದನ್ನು ಸರಕಾರ ಸ್ಪಷ್ಟಪಡಿಸಬೇಕಾಗಿದೆ. ಈ ಹಿಂದೆ, ಸೇನೆಯಲ್ಲಿ ನೀಡುತ್ತಿರುವ ಕಳಪೆ ಆಹಾರದ ಬಗ್ಗೆ ವೀಡಿಯೊ ಮಾಡಿದ ಒಬ್ಬ ಜವಾನನ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳಲಾಯಿತು. ನಿಜಕ್ಕೂ ಕಠಿಣ ಕ್ರಮ ತೆಗೆದುಕೊಳ್ಳಬೇಕಾದುದು ನಮ್ಮ ಜವಾನರಿಗೆ ಕಳಪೆ ಆಹಾರ ನೀಡುತ್ತಿರುವ ಭ್ರಷ್ಟ ವ್ಯವಸ್ಥೆಯ ವಿರುದ್ಧ. ಹಾಗೆಯೇ, ಸೇನೆಯಲ್ಲಿರುವ ಜೀತದ ವಿರುದ್ಧ ಮಾತನಾಡಿದ ಯೋಧನ ವೃತ್ತಿ ಬದುಕು ದಾರುಣವಾಗಿ ಅಂತ್ಯಗೊಂಡಿತು. ಇದೀಗ ಒಬ್ಬ ನಿವೃತ್ತ ಸೇನಾಧಿಕಾರಿ ವ್ಯವಸ್ಥೆಯೊಳಗಿರುವ ಕೆಲವು ಲೋಪಗಳನ್ನು ದೇಶದ ಹಿತಾಸಕ್ತಿಗೆ ಬದ್ಧವಾಗಿ ತನ್ನ ಆತ್ಮಕಥನದಲ್ಲಿ ತೆರೆದಿಟ್ಟಿದ್ದರೆ ಅದು ಜನತೆಗೆ ತಲುಪಬೇಕು. ರಾಷ್ಟ್ರೀಯ ಭದ್ರತೆಯ ಹೆಸರಿನಲ್ಲಿ ಅದನ್ನು ತಲುಪದಂತೆ ಮುಚ್ಚಿಡಲು ಪ್ರಯತ್ನಿಸಿದರೆ, ಪರೋಕ್ಷವಾಗಿ ಆರೋಪಗಳಲ್ಲಿ ನಿಜವಿದೆ ಎಂದು ಸರಕಾರವೇ ಒಪ್ಪಿಕೊಂಡಂತಾಗುತ್ತದೆ.

ವಾರ್ತಾ ಭಾರತಿ 12 Feb 2026 8:20 am

ಬೆಂಗಳೂರಿನಲ್ಲಿ ಹವಾಮಾನ ಪಲ್ಲಟ: ಒಂದೇ ದಿನದಲ್ಲಿ 3-5 ಡಿ.ಸೆ. ಕುಸಿದ ತಾಪಮಾನ, ವೈಪರೀತ್ಯದ ಪ್ರಭಾವ ಉಂಟಾಗುತ್ತಾ?

ಬೆಂಗಳೂರು: ರಾಜಧಾನಿ ಬೆಂಗಳೂರು ಇನ್ನೂ ಕೂಲ್ ಆಗಿದೆ. ಏಕೆಂದರೆ ಈ ಭಾಗದಲ್ಲಿ ಗರಿಷ್ಠ ತಾಪಮಾನದಲ್ಲಿ ಏರಿಳಿತ ಮುಂದುವರಿದಿದೆ. ತಾಪಮಾನದಲ್ಲಿ ಸ್ಥಿರತೆ ಇಲ್ಲ. ಹೀಗಾಗಿ ಬೆಳಗ್ಗೆ ಮತ್ತು ರಾತ್ರಿ ತಂಪು ವಾತಾವರಣ ಮಧ್ಯಾಹ್ನ ಸಹಜ ಬಿಸಿಲು ಕಂಡು ಬರುತ್ತಿದೆ. ಇನ್ನೂಳಿದಂತೆ ಕರಾವಳಿ, ಮಲೆನಾಡು ಮತ್ತು ಒಳನಾಡಿನ ಬಹುತೇಕ ಕಡೆಗಳಲ್ಲಿ ಬಿಸಿಲು ರಾರಾಜಿಸುತ್ತಿದೆ. ಜನರು ತೀವ್ರ ಬಿಸಿಲಿನ ತಾಪ ಎದುರಿಸುವಂತಾಗಿದೆ.

ಒನ್ ಇ೦ಡಿಯ 12 Feb 2026 8:14 am

2024ರ Gen-Z ದಂಗೆ ಬಳಿಕ ಬಾಂಗ್ಲಾದಲ್ಲಿ ಇಂದು ಮೊದಲ ಮತದಾನ

ಢಾಕಾ: ದೇಶವ್ಯಾಪಿ ವಿದ್ಯಾರ್ಥಿ ಪ್ರತಿಭಟನೆಯ ಪರಿಣಾಮವಾಗಿ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರ 15 ವರ್ಷಗಳ ಆಳ್ವಿಕೆ ಅಂತ್ಯಗೊಂಡು 18 ತಿಂಗಳ ಬಳಿಕ ಬಾಂಗ್ಲಾದೇಶದ ಸಂಸತ್ತಿಗೆ ಗುರುವಾರ ಚುನಾವಣೆ ನಡೆಯುತ್ತಿದೆ. ಆ ಬಳಿಕ ಮಧ್ಯಂತರ ಸರ್ಕಾರ ದೇಶದ ಅಧಿಕಾರದ ಚುಕ್ಕಾಣಿ ಹಿಡಿದಿದ್ದು, ಈ ಅವಧಿಯಲ್ಲೂ ಪ್ರತಿಭಟನೆಗಳು,  ದಂಗೆಗಳು ಹಾಗೂ ಅಲ್ಪಸಂಖ್ಯಾತರ ವಿರುದ್ಧದ ಹಿಂಸಾಚಾರ ಮುಂದುವರಿದಿದ್ದವು. ಎಲ್ಲಕ್ಕಿಂತ ಪ್ರಮುಖವಾಗಿ ದೇಶದ ವಿದೇಶಾಂಗ ನೀತಿ ಬದಲಾಗಿದ್ದು, ಭಾರತದಿಂದ ದೂರ ಸರಿದು ಪಾಕಿಸ್ತಾನ ಮತ್ತು ಚೀನಾ ಜತೆಗಿನ ನಂಟು ಬಲಗೊಂಡಿದೆ. ದೇಶದಲ್ಲಿ ಚುನಾಯಿತ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಈ ಎಲ್ಲ ಘಟನೆಗಳು ಬದಲಾಗುವ ನಿರೀಕ್ಷೆ ಇದೆ ಎಂದು ಹೇಳಲಾಗುತ್ತಿದೆ. ಖಲೀದಾ ಝಿಯಾ ಅವರ ಬಾಂಗ್ಲಾದೇಶ ನ್ಯಾಷನಲ್ ಪಕ್ಷ ದೇಶದ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಎಂದು ವಿಶ್ಲೇಷಿಸಲಾಗಿದೆ. ಖಲೀದಾ ನಿಧನದ ಬಳಿಕ ಅವರ ಪುತ್ರ ತಾರಿಕ್ ರಹಮಾನ್ ಪಕ್ಷವನ್ನು ಮುನ್ನಡೆಸುತ್ತಿದ್ದು, ಪ್ರಧಾನಿ ಹುದ್ದೆಯ ರೇಸ್‌ನಲ್ಲಿ ಮುಂಚೂಣಿಯಲ್ಲಿದ್ದಾರೆ. ಮಾಜಿ ಪ್ರಧಾನಿ ಶೇಖ್ ಹಸೀನಾ ಪದಚ್ಯುತಿಯ ಬಳಿಕ ಮಧ್ಯಂತರ ಸರ್ಕಾರದ ಮುಖ್ಯ ಸಲಹೆಗಾರ ಮೊಹಮ್ಮದ್ ಯೂನುಸ್ ಅವರು ಅವಾಮಿ ಲೀಗ್ ಪಕ್ಷವನ್ನು ಅನರ್ಹಗೊಳಿಸಿ ಚುನಾವಣೆಯಲ್ಲಿ ಸ್ಪರ್ಧಿಸದಂತೆ ನಿಷೇಧ ಹೇರಿದ್ದರು. ದೇಶದ ಎಲ್ಲಾ 299 ಸಂಸದೀಯ ಕ್ಷೇತ್ರಗಳಲ್ಲಿ ಬೆಳಿಗ್ಗೆ 7.30ರಿಂದ ಸಂಜೆ 4.30ರವರೆಗೆ ಮತದಾನ ನಡೆಯಲಿದ್ದು, 8 ಲಕ್ಷ ಸಿಬ್ಬಂದಿಯನ್ನು ಚುನಾವಣಾ ಕಾರ್ಯಕ್ಕೆ ನಿಯೋಜಿಸಲಾಗಿದೆ. 50 ಪಕ್ಷಗಳು ಕಣದಲ್ಲಿವೆ. ಮತಪತ್ರದ ಮೂಲಕ ಮತದಾನ ನಡೆಯುತ್ತಿದ್ದು, ಪಾರದರ್ಶಕ ಮತಪೆಟ್ಟಿಗೆಯಲ್ಲಿ ಮತಪತ್ರಗಳನ್ನು ಹಾಕಲಾಗುತ್ತದೆ. ಒಟ್ಟು 2,028 ಅಭ್ಯರ್ಥಿಗಳು ಕಣದಲ್ಲಿದ್ದಾರೆ.

ವಾರ್ತಾ ಭಾರತಿ 12 Feb 2026 7:58 am

Mangaluru Vande Bharat Express: ವಂದೇ ಭಾರತ್ ವಂಚಿತ ಮಂಗಳೂರು: ರೈಲ್ವೆ ಇಲಾಖೆ ಮಲತಾಯಿ ಧೋರಣೆಗೆ ಕರಾವಳಿಗರ ಆಕ್ರೋಶ

Mangaluru Vande Bharat Express: ಮಂಗಳೂರಿನ ಬಗ್ಗೆ ರೈಲ್ವೆ ಇಲಾಖೆಯು ಮಲತಾಯಿ ಧೋರಣೆ ನಿಲ್ಲಿಸಬೇಕು ಎಂದು ಕರಾವಳಿಗರು ಆಕ್ರೋಶ ಹೊರ ಹಾಕಿದ್ದಾರೆ. ಬೆಂಗಳೂರು - ಮಂಗಳೂರು ವಂದೇ ಭಾರತ್ ರೈಲು ಪರಿಚಯ ಮಾಡಿಲ್ಲ. ಅಲ್ಲದೇ ಹಲವು ವಿಚಾರದಲ್ಲಿ ನಿರಂತರ ಅನ್ಯಾಯ ಮುಂದುವರಿದಿದೆ ಎಂದು ಕರಾವಳಿಗರು ಆಕ್ರೋಶ ಹೊರ ಹಾಕಿದ್ದಾರೆ. ಮಂಗಳೂರಿನ ಬಗ್ಗೆ ನೈಋತ್ಯ ರೈಲ್ವೆಯ ಅನ್ಯಾಯದ ವರ್ತನೆ

ಒನ್ ಇ೦ಡಿಯ 12 Feb 2026 7:45 am

ಮೋಟಿ ಮ್ಯಾಜಿಕ್: ಮುಂಬೈನಲ್ಲಿ ಮುಳುಗಿದ ಇಂಗ್ಲೆಂಡ್!

ಮುಂಬೈ: ಎಡಗೈ ಸ್ಪಿನ್ನರ್ ಗುಡಕೇಶ್ ಮೋಟಿಯವರ ಅದ್ಭುತ ಕೈಚಳಕಕ್ಕೆ ಎದುರಾಳಿ ಇಂಗ್ಲೆಂಡ್ ತಂಡದ ಮಧ್ಯಮ ಕ್ರಮಾಂಕ ಕುಸಿದು, ಟಿ20 ವಿಶ್ವಕಪ್ ಲೀಗ್ ಹಂತದಲ್ಲಿ ವೆಸ್ಟ್ಇಂಡೀಸ್ ತಂಡ 30 ರನ್‌ಗಳ ಅಚ್ಚರಿಯ ಜಯ ಸಾಧಿಸಿದೆ. ಶೆರ್ಫನ್ ರುದರ್‌ಫೋರ್ಡ್ ಅವರ ಅಜೇಯ 76 ರನ್‌ಗಳ ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 196 ರನ್‌ಗಳ ಸ್ಪರ್ಧಾತ್ಮಕ ಮೊತ್ತ ಕಲೆ ಹಾಕಿದ ವೆಸ್ಟ್ಇಂಡೀಸ್, ಎದುರಾಳಿಯನ್ನು 19 ಓವರ್‌ಗಳಲ್ಲಿ 166 ರನ್‌ಗಳಿಗೆ ನಿಯಂತ್ರಿಸಿತು. ಇಂಗ್ಲೆಂಡ್ ತಂಡ ಬಿರುಸಿನ ಆರಂಭ ಪಡೆದರೂ, ಮೋಟಿ ಅದ್ಭುತ ಪ್ರದರ್ಶನ ತೋರಿ ಟಾಮ್ ಬಾಂಟನ್, ಜಾಕೋಬ್ ಬೆಥೆಲ್ ಹಾಗೂ ನಾಯಕ ಹ್ಯಾರಿ ಬ್ರೂಕ್ ಅವರ ವಿಕೆಟ್ ಕಿತ್ತರು. 33 ರನ್‌ಗಳಿಗೆ 3 ವಿಕೆಟ್ ಕಿತ್ತ ಎಡಗೈ ಸ್ಪಿನ್ನರ್ ವಿಂಡೀಸ್ ಗೆಲುವಿನ ರೂವಾರಿ ಎನಿಸಿದರು. ಎಂಟನೇ ಓವರ್‌ನಲ್ಲಿ 2 ವಿಕೆಟ್ ನಷ್ಟಕ್ಕೆ 85 ರನ್ ಗಳಿಸಿದ್ದ ಇಂಗ್ಲೆಂಡ್ ಪರ ಹ್ಯಾರಿ ಬ್ರೂಕ್ 17 ರನ್‌ಗಳಿಗೆ ಔಟಾದಾಗ, 14ನೇ ಓವರ್‌ನಲ್ಲಿ 5 ವಿಕೆಟ್ ನಷ್ಟಕ್ಕೆ 131 ರನ್ ಗಳಿಸಿತ್ತು. ಸ್ಯಾಮ್ ಕರನ್ 30 ಎಸೆತಗಳಲ್ಲಿ 43 ರನ್ ಸಿಡಿಸಿ ಇಂಗ್ಲೆಂಡ್ ಗೆಲುವಿನ ಆಸೆಯನ್ನು ಜೀವಂತವಿರಿಸಿದರೂ, ರನ್‌ಔಟ್‌ಗೆ ಬಲಿಯಾದರು. ಸಿ ಗುಂಪಿನಲ್ಲಿ ಆಡಿದ ಎರಡೂ ಪಂದ್ಯಗಳನ್ನು ಗೆದ್ದಿರುವ ವೆಸ್ಟ್ಇಂಡೀಸ್ ತಂಡ ಗುಂಪಿನಲ್ಲಿ ಅಗ್ರಸ್ಥಾನ ಗಳಿಸಿ, ಸೂಪರ್ ಎಂಟು ರೇಸ್‌ನಲ್ಲಿ ಮುಂಚೂಣಿಯಲ್ಲಿದೆ. ಜೇಸನ್ ಹೋಲ್ಡರ್ ಅವರ ಮೊದಲ ಓವರ್‌ನಲ್ಲೇ ಎರಡು ಸಿಕ್ಸರ್ ಹಾಗೂ ಮೂರು ಬೌಂಡರಿ ಸಹಿತ 24 ರನ್ ದೋಚಿದ ಫಿಲ್ ಸಾಲ್ಟ್ ಭರ್ಜರಿ ಆರಂಭ ನೀಡಿದರು. ರೊಮಾರಿಯೊ ಶೆಫರ್ಡ್ ಅವರ ನಾಲ್ಕನೇ ಓವರ್‌ನಲ್ಲಿ ರುದರ್‌ಫೋರ್ಡ್‌ಗೆ ಕ್ಯಾಚ್ ನೀಡಿ ಔಟಾಗುವ ಮುನ್ನ ಸಾಲ್ಟ್ 30 ರನ್ ಗಳಿಸಿದ್ದರು. ಪವರ್‌ಪ್ಲೇ ಕೊನೆಗೊಂಡಾಗ 1 ವಿಕೆಟ್ ನಷ್ಟಕ್ಕೆ 67 ರನ್ ಗಳಿಸಿದ್ದ ಇಂಗ್ಲೆಂಡ್ ತಂಡದ ನಾಗಾಲೋಟಕ್ಕೆ ವೆಸ್ಟ್ಇಂಡೀಸ್ ಸ್ಪಿನ್ನರ್‌ಗಳು ತಡೆ ಹಾಕಿದರು.

ವಾರ್ತಾ ಭಾರತಿ 12 Feb 2026 7:44 am

ಫೆ.12ರಂದು ಬಾಂಗ್ಲಾದೇಶ ರಾಷ್ಟ್ರೀಯ ಚುನಾವಣೆ; ಯಾರ ಹೆಗಲಿಗೆ ಹಿಂದೂಗಳನ್ನು ರಕ್ಷಿಸುವ ಹೊಣೆ?

ನಿರಂತರ ಹಿಂಸಾತ್ಮಕ ಪ್ರತಿಭಟನೆ, ಅಲ್ಪಸಂಖಾತ ಹಿಂದೂಗಳ ಮೇಲಿನ ಅಮಾನವೀಯ ದಾಳಿಗಳಿಂದಲೇ ಸುದ್ದಿಯಲ್ಲಿರುವ ನೆರೆ ರಾಷ್ಟ್ರ ಬಾಂಗ್ಲಾದೇಶದಲ್ಲಿ, ಇಂದು (ಫೆ.12-ಗುರುವಾರ) ರಾಷ್ಟ್ರೀಯ ಚುನಾವಣೆ ನಡೆಯಲಿದೆ. ಬರೋಬ್ಬರಿ 18 ತಿಂಗಳುಗಳ ಬಳಿಕ ಬಾಂಗ್ಲಾದೇಶದ ಮತದಾರನಿಗೆ ಮತ ಚಲಾಯಿಸುವ ಅವಕಾಶ ದೊರೆತಿದ್ದು, ಆತ ಒಂದು ಜಾತ್ಯತೀತ ಮತ್ತು ಸಹಿಷ್ಣು ಸರ್ಕಾರವನ್ನು ಅಸ್ತಿತ್ವಕ್ಕೆ ತರಲಿ ಎಂದು ಭಾರತ ಬಯಸುತ್ತಿದೆ. ಹಾಗಾದರೆ ಬಾಂಗ್ಲಾದೇಶದಲ್ಲಿ ಯಾವ ಸರ್ಕಾರ ಅಸ್ತಿತ್ವಕ್ಕೆ ಬಂದರೆ ಭಾರತಕ್ಕೆ ಅನುಕೂಲ? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.

ವಿಜಯ ಕರ್ನಾಟಕ 12 Feb 2026 7:32 am

8ನೇ ವೇತನ ಆಯೋಗಕ್ಕೆ ಸಲಹೆ ನೀಡಲು ಅವಕಾಶ: ಯಾರು ಅರ್ಹರು? ಫೀಡ್‌ಬ್ಯಾಕ್ ಕಳುಹಿಸುವುದು ಹೇಗೆ? ಇಲ್ಲಿದೆ ಮಾಹಿತಿ

ಕೇಂದ್ರ ಸರ್ಕಾರಿ ನೌಕರರು ಹಾಗೂ ಲಕ್ಷಾಂತರ ಪಿಂಚಣಿದಾರರು (Pensioners) ಕಾತರದಿಂದ ಕಾಯುತ್ತಿದ್ದ 8ನೇ ವೇತನ ಆಯೋಗದ (8th Pay Commission) ಪ್ರಕ್ರಿಯೆಗ ಇದೀಗ ಮತ್ತಷ್ಟು ಚುರುಕುಗೊಂಡಿವೆ. ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ನೌಕರರ ವೇತನ, ಭತ್ಯೆ ಮತ್ತು ಪಿಂಚಣಿ ಪರಿಷ್ಕರಣೆಗಾಗಿ ರಚಿಸಿರುವ 8ನೇ ವೇತನ ಆಯೋಗದ ಅಧಿಕೃತ ವೆಬ್‌ಸೈಟ್ ಇದೀಗ ಲೈವ್ ಆಗಿದೆ. ಆಯೋಗವು ತನ್ನ

ಒನ್ ಇ೦ಡಿಯ 12 Feb 2026 7:00 am

3 Railway New Project: ಗದಗ-ಯಲವಿಗಿ ಲೈನ್ ಸೇರಿ 3 ಹೊಸ ಯೋಜನೆ ಆರಂಭಕ್ಕೆ ಆಗ್ರಹ: ಕೇಂದ್ರಕ್ಕೆ ಬೊಮ್ಮಾಯಿ ಪತ್ರ

ನವದೆಹಲಿ/ಬೆಂಗಳೂರು: ಉತ್ತರ ಕರ್ನಾಟಕದ ಪ್ರಮುಖ ರೈಲು ಯೋಜನೆಗಳಲ್ಲಿ ಒಂದಾಗಿರುವ ಗದಗ ಮತ್ತು ಯಲವಿಗಿ ಮಧ್ಯದ (Gadag-Yalvigi Railway Project) ರೈಲು ಯೋಜನೆ ಇಷ್ಟರಲ್ಲಾಗಲೇ ವಿಸೃತ ಯೋಜನಾ ವರದಿ (ಡಿಪಿಆರ್) ಸಿದ್ಧವಾಗಿ ಕಾಮಗಾರಿ ಆರಂಭವಾಗಬೇಕಿತ್ತು. ವಿಳಂಬ ವಾಗುತ್ತಿರುವ ಕಾರಣ ಈ ಭಾಗದ ಸಂಸದರು ಮತ್ತು ಮಾಜಿ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಅವರು ಕೇಂದ್ರಕ್ಕೆ ಪತ್ರ ಬರೆದು ಆಗ್ರಹಿಸಿದ್ದಾರೆ. ಗದಗ

ಒನ್ ಇ೦ಡಿಯ 12 Feb 2026 6:54 am

ಭಾರತ-ಅಮೆರಿಕ ವ್ಯಾಪಾರ ಒಪ್ಪಂದವನ್ನು ಐತಿಹಾಸಿಕ ಎಂದ ಡೊನಾಲ್ಡ್‌ ಟ್ರಂಪ್;‌ ಖುಷಿಗೆ ಕಾರಣ ಕಲ್ಲಿದ್ದಲು ರಫ್ತು

ಭಾರತದೊಂದಿಗಿನ ದ್ವಿಪಕ್ಷೀಯ ವ್ಯಾಪಾರ ಒಪ್ಪಂದ ಜಾರಿ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಸಂತಸವನ್ನು ಇಮ್ಮಡಿಗೊಳಿಸಿದೆ. ಅಮೆರಿಕಕ್ಕೆ ಅತ್ಯಂತ ಅನಿವಾರ್ಯವಾಗಿದ್ದ ಈ ವ್ಯಾಪಾರ ಒಪ್ಪಂದ ಅಂತಿಮವಾಗಿ ಜಾರಿಗೊಳ್ಳುತ್ತಿರುವುದು ಟ್ರಂಪ್‌ ಅವರ ಈ ಸಂತಸಕ್ಕೆ ಕಾರಣ. ಇದೇ ಕಾರಣಕ್ಕೆ ಈ ವ್ಯಾಪಾರ ಒಪ್ಪಂದವನ್ನು ಐತಿಹಾಸಿಕ ಎಂದು ಬಣ್ಣಿಸಿರುವ ಅವರು, ಭಾರತಕ್ಕೆ ಅಮೆರಿಕದ ಕಲ್ಲಿದ್ದಲು ರಫ್ತು ಪ್ರಮಾಣ ಹೆಚ್ಚಲಿದೆ ಎಂದು ಹೇಳಿದ್ದಾರೆ. ಭಾರತ-ಅಮೆರಿಕ ವ್ಯಾಪಾರ ಒಪ್ಪಂದದ ಕುರಿತ ಡೊನಾಲ್ಡ್‌ ಟ್ರಂಪ್‌ ಹೇಳಿಕೆ ಇಲ್ಲಿದೆ.

ವಿಜಯ ಕರ್ನಾಟಕ 12 Feb 2026 6:48 am

ಕೊನೆಗೂ ಬೆಂಗಳೂರು- ಮಂಗಳೂರು ರಾಷ್ಟ್ರೀಯ ಹೆದ್ದಾರಿ ಶಿರಾಡಿ ಮಾರ್ಗ ಶೀಘ್ರ ಪೂರ್ಣ : ಮಳೆಗಾಲದ ಗುಡ್ಡಕುಸಿತ ಆತಂಕವೂ ಇನ್ನಿಲ್ಲ

ಬರೋಬ್ಬರಿ 15 ವರ್ಷಗಳ ಬಳಿಕ ಶಿರಾಡಿ ಘಾಟ್ ಕಾಮಗಾರಿಗೆ ಮುಕ್ತಿ ಸಿಗುವ ಮುನ್ಸೂಚನೆ ಸಿಕ್ಕಿದೆ. ಬೆಂಗಳೂರಿಂದ ಮಂಗಳೂರು ಕಡೆಗೆ ಪ್ರಯಾಣೀಸುವವರಿಗೆ ಇದು ಶುಭ ಸುದ್ದಿಯಾಗಿದ್ದು, ಈಗಾಗಲೇ 95% ರಸ್ತೆ ಸುಗಮವಾಗಿ ಸಂಚರಿಸಬಹುದಾಗಿದೆ. ಆದರೆ ಸ್ಥಳೀಯ ಭೂಮಾಲೀಕರು ಮಾತ್ರ ಪರಿಹಾರ ಸಿಗದೆ ಪ್ರತಿಭಟನೆ ನಡೆಸುತ್ತಿದ್ದಾರೆ.

ವಿಜಯ ಕರ್ನಾಟಕ 12 Feb 2026 6:42 am

Kodagu | ಜಾನುವಾರುಗಳ ಮೇಲೆ ದಾಳಿ ಮಾಡುತ್ತಿದ್ದ ಹುಲಿ ಸೆರೆ

ಮಡಿಕೇರಿ: ದಕ್ಷಿಣ ಕೊಡಗಿನ ಪೊನ್ನಂಪೇಟೆ ತಾಲೂಕಿನ ವಿವಿಧ ಗ್ರಾಮಗಳಲ್ಲಿ ನಿರಂತರವಾಗಿ ಜಾನುವಾರುಗಳ ಮೇಲೆ ದಾಳಿ ಮಾಡುತ್ತಿದ್ದ ಹುಲಿಯನ್ನು ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಯಶಸ್ವಿಯಾಗಿದೆ. ಕಳೆದ ಒಂದು ತಿಂಗಳಿನಿಂದ 7 ಜಾನುವಾರುಗಳನ್ನು ಮತ್ತು ಬೆಸಗೂರು ಗ್ರಾಮದಲ್ಲಿ ಒಂದೇ ದಿನ 3 ಹಸುಗಳನ್ನು ಬಲಿ ಪಡೆದ ಹುಲಿ ಇಂದು ಬಂಧಿಯಾಗಿದೆ. ಕೊಡಗು ಜಿಲ್ಲಾ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಸೋನಾಲ್ ವೃಷ್ಠಿ ಅವರ ಮಾರ್ಗದರ್ಶನದಲ್ಲಿ ವಿರಾಜಪೇಟೆ ಡಿಸಿಎಫ್ ಜಗನ್ನಾಥ್ ಹಾಗೂ ಎಸಿಎಫ್ ಗೋಪಾಲ್ ಅವರ ನೇತೃತ್ವದಲ್ಲಿ ಮಂಗಳವಾರ ಬೆಳಿಗ್ಗಿನಿಂದಲೇ ಡ್ರೋನ್ ಕ್ಯಾಮೆರಾ ಬಳಸಿ ಆರ್.ಆರ್.ಟಿ ಸಿಬ್ಬಂದಿಗಳ ಮೂಲಕ ಹುಲಿಯ ಚಲನವಲನ ಪತ್ತೆ ಮಾಡಲು ಕೂಂಬಿಂಗ್ ಕಾರ್ಯಾಚರಣೆ ನಡೆಯಿತು. ಕಾರ್ಯಾಚರಣೆಯಲ್ಲಿ ಎಚ್.ಡಿ.ಕೋಟೆ ತಾಲ್ಲೂಕಿನ ಬಳ್ಳೆ ಸಾಕಾನೆ ಶಿಬಿರದಿಂದ ಮಹೇಂದ್ರ ಹಾಗೂ ತಿತಿಮತಿಯ ಮತ್ತಿಗೋಡು ಸಾಕಾನೆ ಶಿಬಿರದಿಂದ ಭೀಮ ಆನೆಯನ್ನು ಬಳಸಿಕೊಳ್ಳಲಾಗಿತ್ತು. ಗ್ರಾಮಸ್ಥರ ತೋಟಗಳು ಹಾಗೂ ಕೀರೆಹೊಳೆಯ ಸುತ್ತಮುತ್ತಲಿನಲ್ಲಿ ಡ್ರೋನ್ ಕ್ಯಾಮರಾ ಬಳಸಿ ಹುಲಿಯ ಚಲನವಲನ ಪತ್ತೆ ಕಾರ್ಯಾಚರಣೆ ನಡೆಸಲಾಯಿತು. ಕೀರೆಹೊಳೆಯ ದಡದಲ್ಲಿ ಬಿದಿರಿನ ಬುಡದಲ್ಲಿ ಮಲಗಿ ವಿಶ್ರಾಂತಿ ಪಡೆಯುತ್ತಿದ್ದ ಹುಲಿ ಸಂಜೆ 6 ಗಂಟೆಯ ಸಮಯದಲ್ಲಿ ಜಾನುವಾರುಗಳ ಕಳೇಬರವಿದ್ದ ಕಡೆಗೆ ಬರುತ್ತಿರುವ ದೃಶ್ಯ ಡ್ರೋನ್ ಕ್ಯಾಮೆರಾದಲ್ಲಿ ಸೆರೆಯಾಯಿತು. ಆದರೆ ಹುಲಿ ಸುಮಾರು 4 ಗಂಟೆಗಳ ಕಾಲ ನಿದ್ದೆಗೆ ಜಾರಿತು. ಡ್ರೋನ್ ಕ್ಯಾಮರಗಳ ಮೂಲಕ ಎಷ್ಟೇ ಪ್ರಯತ್ನ ಪಟ್ಟರೂರು ಮಲಗಿದ್ದ ಹುಲಿಯನ್ನು ನಿದ್ದೆಯಿಂದ ಎಚ್ಚರಿಸಲು ಸಾಧ್ಯವಾಗಲಿಲ್ಲ. ಮತ್ತೆ ಡ್ರೋನ್ ಕ್ಯಾಮರಾದ ಸೂಚನೆಯನ್ನು ಆಧರಿಸಿ, ಭೀಮ ಹಾಗೂ ಮಹೇಂದ್ರ ಸಾಕಾನೆಗಳೊಂದಿಗೆ ಕಾರ್ಯಾಚರಣೆ ತಂಡ ಹುಲಿ ಮಲಗಿದ್ದಲ್ಲಿಗೆ ತೆರಳಿತು. ಅರವಳಿಕೆ ತಜ್ಞ ಡಾ.ರಮೇಶ್ ಅವರು ಹುಲಿಗೆ ಡಾಟ್ ಮಾಡುವ ಮೂಲಕ ಸುಮಾರು 6 ವರ್ಷದ ಗಂಡು ಹುಲಿಯನ್ನು ಸೆರೆ ಹಿಡಿಯಲಾಯಿತು. ಬಂಧಿಯಾದ ಹುಲಿಯನ್ನು ಬೆಂಗಳೂರಿನ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನಕ್ಕೆ ಸ್ಥಳಾಂತರಿಸಲಾಯಿತು. ವಿರಾಜಪೇಟೆ ಎ.ಸಿ.ಎಫ್ ತಾಸಿಂ ಬಾನು, ತಿತಿಮತಿ ಎ.ಸಿ.ಎಫ್ ಗೋಪಾಲ್, ವಿರಾಜಪೇಟೆ ಆರ್ ಎಫ್ ಓ ಶಿವರಾಂ, ತಿತಿಮತಿ ಹಾಗೂ ಪೊನ್ನಂಪೇಟೆ ಆರ್ ಎಫ್ ಒ ಗಂಗಾಧರ್, ಕುಟ್ಟ, ಶ್ರೀಮಂಗಲ, ತಿತಿಮತಿ, ಪೊನ್ನಂಪೇಟೆ, ವಿರಾಜಪೇಟೆ ಡಿ ಆರ್ ಎಫ್ ಒ, ಗಳು, ಶಾರ್ಫ್ ಶೂಟರ್ ಗಳಾದ ರಂಜನ್, ರಮೇಶ್, ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ ನಾಮ ನಿರ್ದೇಶಿತ ಪ್ರತಿನಿಧಿ ಬೋಸ್ ಮಾದಪ್ಪ, ಡ್ರೋನ್ ನಿರ್ವಾಹಕ ಚಕ್ಕೇರ ತಮ್ಮಯ್ಯ, ತಿತಿಮತಿ ಆನೆ ಕಾರ್ಯಾಚರಣೆ ಪಡೆ ಸಿಬ್ಬಂದಿಗಳು, ಪೊನ್ನಂಪೇಟೆ, ತಿತಿಮತಿ, ವಿರಾಜಪೇಟೆ ಆರ್ ಆರ್ ಟಿ ಸಿಬ್ಬಂದಿಗಳು, ಅರಣ್ಯ ಪಾಲಕರು ಮತ್ತಿರರು ಕಾರ್ಯಾಚರಣೆ ನಡೆಸಿ ಹುಲಿಯನ್ನು ಕ್ಷಿಪ್ರಗತಿಯಲ್ಲಿ ಸೆರೆಹಿಡಿಯುವಲ್ಲಿ ಯಶಸ್ವಿಯಾದರು. ಶಾಸಕರ ಶ್ಲಾಘನೆ ಅರಣ್ಯ ಇಲಾಖೆಯ ಯಶಸ್ವೀ ಕಾರ್ಯಾಚರಣೆ ಕುರಿತು ಶ್ಲಾಘನೆ ವ್ಯಕ್ತಪಡಿಸಿರುವ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಅವರು ಹುಲಿ ಸೆರೆ ಹಿಡಿದು ಸ್ಥಳಾಂತರಿಸುತ್ತಿರುವ ವಿಷಯ ತಿಳಿದು ವಿಧಾನಸೌಧದಿಂದ ಮೆಟ್ರೋ ಮೂಲಕ ಕೆಂಗೇರಿಗೆ ತೆರಳಿ ಪರಿಶೀಲಿಸಿದರು. ಅರಣ್ಯಾಧಿಕಾರಿಗಳೊಂದಿಗೆ ಚರ್ಚಿಸಿದ ಶಾಸಕರು ಕ್ಷಿಪ್ರ ಕಾರ್ಯಾಚರಣೆ ಮೂಲಕ ಹುಲಿ ಸೆರೆ ಹಿಡಿದು ಜನರ ಸಮಸ್ಯೆಗೆ ಸ್ಪಂದಿಸಿದ ಅರಣ್ಯ ಇಲಾಖಾಧಿಕಾರಿಗಳ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.    

ವಾರ್ತಾ ಭಾರತಿ 12 Feb 2026 12:22 am

ಮಾದಕ ವಸ್ತುಗಳ ವಿಷಯದಲ್ಲಿ ಕರ್ನಾಟಕ ಮತ್ತೊಂದು ಪಂಜಾಬ್ ಆಗಲು ಬಿಡುವುದಿಲ್ಲ: ಡಾ.ಜಿ. ಪರಮೇಶ್ವರ್

ಬೆಂಗಳೂರು: ಯಾವುದೇ ಕಾರಣಕ್ಕೂ ರಾಜ್ಯವನ್ನು ಮಾದಕ ವಸ್ತುಗಳ ವಿಷಯದಲ್ಲಿ ಕರ್ನಾಟಕವನ್ನು ಮತ್ತೊಂದು ಪಂಜಾಬ್ ರಾಜ್ಯ ಆಗಲು ನಾವು ಬಿಡುವುದಿಲ್ಲ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ. ಬುಧವಾರ ವಿಧಾನಸೌಧದ ಬ್ಯಾಂಕ್ವೆಟ್ ಸಭಾಂಗಣದಲ್ಲಿ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ, ದಿಶಾಭೋದ್ ಫೌಂಡೇಶನ್, ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ಸಹಯೋಗದಲ್ಲಿ ಆಯೋಜಿಸಿದ್ದ ‘ಸ್ವಾಸ್ಥ್ಯ ಭಾರತ, ಶ್ರೇಷ್ಠ ಭಾರತ, ನಶಾ ಮುಕ್ತ ಭಾರತ, ನಶಾ ಮುಕ್ತ ಕರ್ನಾಟಕ, ನಶಾ ಮುಕ್ತ ಕ್ಯಾಂಪಸ್, ಅಂಗಾಂಗ ದಾನ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾಶೆ ಸಮಾಜಕ್ಕೆ ಸಾರ್ವಜನಿಕರೂ ಕೂಡ ಆಸ್ಪದ ನೀಡಬಾರದು. ಎಲ್ಲರೂ ಒಗ್ಗೂಡಿ ಮಾದಕ ದ್ರವ್ಯ ಮುಕ್ತ ಕರ್ನಾಟಕ ಕಟ್ಟಬೇಕಿದೆ ಎಂದು ಕರೆ ನೀಡಿದರು. ನಶಾ ಮುಕ್ತ ರಾಜ್ಯವನ್ನು ಕಟ್ಟಬೇಕಾದರೆ ಮೊದಲು ನಮ್ಮ ಕಾಲೇಜುಗಳು ನಶಾ ಮುಕ್ತವಾಗಬೇಕು. ಈ ನಿಟ್ಟಿನಲ್ಲಿ ರಾಜೀವ್ ಗಾಂಧಿ ವಿವಿ ಕೈಗೊಂಡಿರುವ ಅಭಿಯಾನ ಮಹತ್ವಪೂರ್ಣವಾಗಿದ್ದು, ಇದಕ್ಕೆ ನಮ್ಮ ಸಂಪೂರ್ಣ ಬೆಂಬಲ ಹಾಗೂ ಪ್ರೋತ್ಸಾಹವಿದೆ. ಕರ್ನಾಟಕ ಸಂಪೂರ್ಣ ನಶಾ ಮುಕ್ತಗೊಳಿಸಲು ರಾಜ್ಯ ಸರಕಾರ ಈಗಾಗಲೇ ಗಂಭೀರ ಚಿಂತನೆ ನಡೆಸಿದೆ. ಸರಕಾರದ ಮಟ್ಟದಲ್ಲಿ ಇದನ್ನು ನಿಗ್ರಹಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಉನ್ನತ ಶಿಕ್ಷಣ ಸಚಿವರಿಗೂ ಸೂಚನೆ ನೀಡಲಾಗುವುದು ಎಂದರು. ರಾಜ್ಯದ ಬಹುದೊಡ್ಡ ಹಾಗೂ ಪ್ರತಿಷ್ಠಿತ ಆರೋಗ್ಯ ವಿಶ್ವವಿದ್ಯಾಲವಾಗಿರುವ ರಾಜೀವ್ ಗಾಂಧಿ ವಿಶ್ವವಿದ್ಯಾಲಯದ ಅಡಿಯಲ್ಲಿ ಸುಮಾರು 1500 ಆರೋಗ್ಯ ವಿಜ್ಞಾನಗಳ ಕಾಲೇಜುಗಳು ಕಾರ್ಯ ನಿರ್ವಹಿಸುತ್ತವೆ. ಮಾದಕ ವಸ್ತು ವಿರೋಧಿ ಸಮಿತಿಗಳನ್ನು ರಚಿಸುವಂತೆ ವಿಶ್ವವಿದ್ಯಾಲಯ ಈ ಎಲ್ಲ ಕಾಲೇಜಿಗಳಿಗೆ ಸೂಚನೆ ನೀಡಬೇಕು. ಇದನ್ನು ಗಂಭೀರವಾಗಿ ಪರಿಗಣಿಸದ ಕಾಲೇಜುಗಳ ಪರವಾನಿಗೆಗಳನ್ನು ರದ್ದುಗೊಳಿಸಬೇಕು ಎಂದು ಅವರು ಸೂಚಿಸಿದರು. ರಾಜ್ಯದಲ್ಲಿ ನೂರಾರು ಕೋಟಿ ಮೌಲ್ಯದ ಮಾದಕ ವಸ್ತುಗಳನ್ನು ಜಪ್ತಿಯಾಗುತ್ತಲೇ ಇದೆ. ಹೀಗೆ ಜಪ್ತಿಯಾಗುವ ಮಾದಕ ವಸ್ತುಗಳನ್ನು ಸುಟ್ಟು ಹಾಕುವ ಮೂಲಕ ನಾಶಪಡಿಸಲಾಗುತ್ತಿದೆ. ಆದರೂ ಮತ್ತೆ ಅಷ್ಟೇ ಪ್ರಮಾಣದ ಮಾದಕ ವಸ್ತುಗಳು ರಾಜ್ಯವನ್ನು ಪ್ರವೇಶಿಸುತ್ತಿರುವುದು ಆತಂಕ ಹುಟ್ಟಿಸಿದೆ. ವಿದೇಶಿ ವಿದ್ಯಾರ್ಥಿಗಳ ಸೋಗಿನಲ್ಲಿ ಬಂದು ಮಾದಕ ವಸ್ತುಗಳ ಮಾರಾಟ ಮಾಡುವವರ ಮೇಲೆ ಸರಕಾರ ಕಣ್ಣಿಟ್ಟಿದೆ ಎಂದು ಮಾಹಿತಿ ನೀಡಿದರು. ಇದರ ಜೊತೆ ಜೊತೆಗೇ ಮಾದಕ ವಸ್ತುಗಳ ಸೇವನೆಯನ್ನು ತಡೆಯುವ ಮನಸ್ಥಿಯನ್ನು ವಿದ್ಯಾರ್ಥಿಗಳಲ್ಲಿ ಬೆಳೆಸಬೇಕಾಗಿದೆ. ಅಂತಹ ಕೆಲಸವನ್ನು ರಾಜೀವ್ ಗಾಂಧಿ ವಿವಿ ಮಾಡುತ್ತಿದೆ. ನಶಾ ಮುಕ್ತ ಕ್ಯಾಂಪಸ್ ನಿರ್ಮಿಸುವ ವಿವಿಯ ಸಮಾಜಮುಖಿ ಕಾರ್ಯಕ್ರಮಕ್ಕೆ ಎಲ್ಲರೂ ಕೈಜೋಡಿಸಬೇಕು ಎಂದು ಕರೆ ನೀಡಿದರು.

ವಾರ್ತಾ ಭಾರತಿ 11 Feb 2026 11:58 pm

ಕವಿ, ಅಂಕಣಕಾರ ಕೋ.ಶಿ. ಕಾರಂತ ನಿಧನ

ಕುಂದಾಪುರ, ಫೆ.11: ಹಿರಿಯ ಸಾಹಿತಿ, ಲೇಖಕ ಹಾಗೂ ಅಂಕಣಕಾರ ಕೋ. ಶಿವಾನಂದ ಕಾರಂತ ವಯೋಸಹಜ ಕಾಯಿಲೆಯಿಂದ ಇಂದು ಸಂಜೆ ನಿಧನರಾದರು. ಅವರಿಗೆ 80 ವರ್ಷ ವಯಸ್ಸಾಗಿತ್ತು. ಕಾರಂತ ಅವರು ಪತ್ನಿ ಹಾಗೂ ಪುತ್ರಿಯನ್ನು ಅಗಲಿದ್ದಾರೆ. ಕುಂದಾಪುರ ಸಮೀಪದ ಕೋಣಿಯವರಾದ ಶಿವಾನಂದ ಕಾರಂತರು 1946ರ ಆಗಸ್ಟ್ 30ರಂದು ಜನಿಸಿದ್ದರು. ಲೇಖಕ, ಸಾಹಿತಿಯಾಗಿ ಮಾತ್ರವಲ್ಲದೆ ಸಾಮಾಜಿಕ ಮತ್ತು ಸಾಂಸ್ಕೃತಿಕ ರಂಗದಲ್ಲಿ ಅವರು ಸಕ್ರಿಯರಾಗಿದ್ದರು. ಕುಂದಾಪುರದ 'ಕುಂದಪ್ರಭ' ಪತ್ರಿಕೆಯಲ್ಲಿ ಅವರು 3 ದಶಕಗಳ ಕಾಲ ಅಂಕಣಕಾರರಾಗಿ ಜನಪ್ರಿಯರಾಗಿದ್ದರು. ಗಂಗೊಳ್ಳಿ ಎಸ್.ವಿ ಪಿಯು ಕಾಲೇಜಿನಲ್ಲಿ ಉಪನ್ಯಾಸಕರಾಗಿ ನಾಲ್ಕು ದಶಕಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರ ಬಳಿಕ ಸಾಂಸ್ಕೃತಿಕ ಮತ್ತು ಸಾಹಿತ್ಯ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದರು. ಭಾಷಣಕಾರರಾಗಿ, ನಾಟಕ ನಿರ್ದೇಶಕ ರಾಗಿಯೂ ಗುರುತಿಸಿಕೊಂಡಿದ್ದರು. ಇಲ್ಲಿಯವರೆಗೆ 10ಕ್ಕೂ ಹೆಚ್ಚುಕೃತಿಗಳನ್ನು ಪ್ರಕಟಿಸಿದ್ದಾರೆ. ಅದರಲ್ಲಿ ಪ್ರಮುಖವಾದವುಗಳು ಅಪ್ರಮೇಯ, ಅನಾಮಿಕ, ಅನಿಮಿಷ, ಅರಿವಿನ ಆನಂದ, ಸಂಜೆಗತ್ತಲಲ್ಲಿ ಬಕುಳವೃಕ್ಷ, ಕಲ್ಪನೆಯ ಕಡಲು, ಹಳೆ ತಲೆಮಾರಿನವರು ಮೊದಲಾ ದವು. 2023ರಲ್ಲಿ ಗಂಗೊಳ್ಳಿಯಲ್ಲಿ ನಡೆದ 18ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಕಾರಂತರ ನಿಧನಕ್ಕೆ ಸಂಸದ ಕೋಟ ಶ್ರೀನಿವಾಸ ಪೂಜಾರಿ, ಕುಂದಾಪುರ ಶಾಸಸ ಕಿರಣ್ ಕುಮಾರ್ ಕೊಡ್ಗಿ, ಕಸಾಪ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಸಂತಾಪ ವ್ಯಕ್ತಪಡಿಸಿದ್ದಾರೆ.

ವಾರ್ತಾ ಭಾರತಿ 11 Feb 2026 11:52 pm

ಭೀಮಣ್ಣ ಖಂಡ್ರೆಗೆ ಮರಣೋತ್ತರ ʼಕರ್ನಾಟಕ ರತ್ನʼ ಕೊಡಬೇಕು: ಸಚಿವ ರಾಮಲಿಂಗಾರೆಡ್ಡಿ

ಬೆಂಗಳೂರು: ಸ್ವಾತಂತ್ರ್ಯ ಹೋರಾಟಗಾರ ಶತಾಯುಷಿ ಡಾ.ಭೀಮಣ್ಣ ಖಂಡ್ರೆ ಅವರಿಗೆ ಮರಣೋತ್ತರ ‘ಕರ್ನಾಟಕ ರತ್ನ’ ಕೊಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಮನವಿ ಮಾಡುತ್ತೇನೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ. ಬುಧವಾರ ನಗರದ ಖಾಸಗಿ ಹೊಟೇಲ್‍ನಲ್ಲಿ ಹಮ್ಮಿಕೊಂಡಿದ್ದ ಭೀಮಣ್ಣ ಖಂಡ್ರೆ ನುಡಿನಮನ ಕಾರ್ಯಕ್ರಮದ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಫೆ.14 ರಂದು ಅರಮನೆ ಮೈದಾನ ಗಾಯಿತ್ರಿ ವಿಹಾರದಲ್ಲಿ ನುಡಿನಮನ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದರು. ಭೀಮಣ್ಣ ಖಂಡ್ರೆ ಅವರು ಶಾಸಕರಾಗಿ ಮತ್ತು ಸಚಿವರಾಗಿ ರಾಜ್ಯಕ್ಕೆ ಉತ್ತಮ ಕೊಡುಗೆ ನೀಡಿದ್ದಾರೆ. ಶಿವಾಜಿನಗರ ಬಸ್ ನಿಲ್ದಾಣಕ್ಕೆ ಗುದ್ದಲಿಪೂಜೆ ನೇರವೆರಿಸಿದ್ದರು. ಅವರು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ ಕಾರಣ ಬ್ರಿಟಿಷರು ಅವರ ಸಂಪತ್ತನ್ನು ಜಪ್ತಿ ಮಾಡಿದ್ದರು. ಆರೆಸ್ಸೆಸ್ ಮತ್ತು ವಿಶ್ವ ಹಿಂದೂ ಪರಿಷತ್ತು ನವರು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿಲ್ಲ. ದೇಶ ದ್ರೋಹಿಗಳು ಇಂದು ದೇಶ ಭಕ್ತರು ಎಂದು ಹೊಗಳಿಸಿಕೊಳ್ಳುತ್ತಿದ್ದಾರೆ, ಇದು ದುರಂತ ಎಂದು ಅವರು ತಿಳಿಸಿದರು. ಸೋಷಿಯಲ್ ಮೀಡಿಯದಿಂದ ಅಧಿಕಾರಕ್ಕೆ ಬಂದ ಬಿಜೆಪಿ ಪಕ್ಷಕ್ಕೆ ಅದೇ ಸೋಷಿಯಲ್ ಮೀಡಿಯ ಇಂದು ಬಿಜೆಪಿ ಪಕ್ಷವನ್ನು ತೆಗುಳುತ್ತಿದೆ. ನೆಹರೂರವರ ಆಡಳಿತದಲ್ಲಿ ಬೆಂಗಳೂರಿನಲ್ಲಿ ಹಲವಾರು ಕಾರ್ಖಾನೆ ಸಂಸ್ಥೆಗಳು ಪ್ರಾರಂಭಿಸಿ, ಲಕ್ಷಾಂತರ ಜನರಿಗೆ ಉದ್ಯೋಗ ನೀಡಿದ್ದರು. ಸಾರ್ವಕರ್, ಗೋಡ್ಸೆ ರವರಿಗೆ ಭಾರತ ರತ್ನ ಕೊಡುವ ಯೋಚನೆ ಮಾಡುತ್ತಿದ್ದಾರೆ ಎಂಬುದು ದುರಂತ. ಇಂದಿನ ಯುವಕರಿಗೆ ಕಾಂಗ್ರೆಸ್ ಪಕ್ಷದ ಸಾಧನೆ, ಯೋಜನೆಗಳನ್ನು ತಿಳಿಸಬೇಕು ಎಂದು ರಾಮಲಿಂಗಾರೆಡ್ಡಿ ಕರೆ ನೀಡಿದರು. ಸಭೆಯಲ್ಲಿ ಸಚಿವ ಈಶ್ವರ್ ಖಂಡ್ರೆ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಸ್.ಮನೋಹರ್, ವಕ್ತಾರ ಲಕ್ಷ್ಮಣ್, ಮಾಜಿ ಮಹಾಪೌರ ಜೆ.ಹುಚ್ಚಪ್ಪ, ಮಾಜಿ ಉಪಮಹಾಪೌರ ಬಿ.ಎಸ್.ಪುಟ್ಟರಾಜು, ಬಿಎಚಿಟಿಸಿ ನಿಗಮದ ಅಧ್ಯಕ್ಷ ವಿ.ಎಸ್.ಆರಾಧ್ಯ, ಗ್ಯಾರಂಟಿ ಯೋಜನೆಗಳ ಅನುಷ್ಠಾ ನ ಸಮಿತಿ ನಗರ ಅಧ್ಯಕ್ಷ ಜಿ.ಕೃಷ್ಣಪ್ಪ, ಮಾಜಿ ಪಾಲಿಕೆ ಸದಸ್ಯ ಬಿ.ಟಿ.ಶ್ರೀನಿವಾಸಮೂರ್ತಿ, ಸಾಹಿತಿ ತಲಕಾಡು ಚಿಕ್ಕರಂಗೇಗೌಡ ಸೇರಿದಂತೆ ಹಲವರು ಭಾಗವಹಿಸಿದ್ದರು.

ವಾರ್ತಾ ಭಾರತಿ 11 Feb 2026 11:51 pm

ಬಿಕ್ಲು ಶಿವ ಕೊಲೆ ಪ್ರಕರಣ: ನಾಪತ್ತೆಯಾಗಿರುವ ಶಾಸಕ ಬೈರತಿ ಬಸವರಾಜು ವಿರುದ್ಧ ಈಗ ಸಿಐಡಿಯಿಂದ ಲುಕೌಟ್‌ ನೋಟಿಸ್‌

ಬೆಂಗಳೂರು: ರೌಡಿ ಬಿಕ್ಲು ಶಿವ ಕೊಲೆ ಪ್ರಕರಣದಲ್ಲಿ ಹೈಕೋರ್ಟ್‌ ನಿರೀಕ್ಷಣಾ ಜಾಮೀನು ಅರ್ಜಿ ವಜಾಗೊಳಿಸಿದ ಬೆನ್ನಲ್ಲೇ ಕೆ.ಆರ್‌.ಪುರ ಶಾಸಕ ಬೈರತಿ ಬಸವರಾಜು ಬಂಧನ ಭೀತಿಯಲ್ಲಿ ತಲೆಮರೆಸಿಕೊಂಡಿದ್ದು, ಸಿಐಡಿ ಅಧಿಕಾರಿಗಳು ಅವರ ವಿರುದ್ಧ ಲುಕೌಟ್‌ ನೋಟಿಸ್‌ ಹೊರಡಿಸಿದ್ದಾರೆ.ಬೈರತಿ ಬಸವರಾಜು ಬಂಧನಕ್ಕೆ ಸಿಐಡಿ ವಿಶೇಷ ತಂಡಗಳನ್ನು ರಚಿಸಲಾಗಿದೆ. ಬೈರತಿ ಬಸವರಾಜು ಅವರು ಮಹಾರಾಷ್ಟ್ರದಲ್ಲಿ ತಲೆಮರೆಸಿಕೊಂಡಿರುವ ಶಂಕೆಯಿದ್ದು, ಸಿಐಡಿ ಪೊಲೀಸ್‌ ಅಧಿಕಾರಿಗಳು ಮಹಾರಾಷ್ಟ್ರದ ವಿವಿಧೆಡೆ ಪತ್ತೆ ಕಾರ್ಯ ಮುಂದುವರಿಸಿದ್ದಾರೆ. ಈ ಮಧ್ಯೆ ಬೈರತಿ ಬಸವರಾಜು ಅವರು ವಿದೇಶಕ್ಕೆ ಪರಾರಿಯಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಸಿಐಡಿ ಅಧಿಕಾರಿಗಳು ಅವರ ವಿರುದ್ಧ ಲುಕೌಟ್‌ ನೋಟಿಸ್‌ ಹೊರಡಿಸಿದ್ದಾರೆ. ಮಹಾರಾಷ್ಟ್ರದಲ್ಲಿ ತಂಗಿರುವ ಮಾಹಿತಿ ''ಬೈರತಿ ಬಸವರಾಜು ಅವರು ಮಹಾರಾಷ್ಟ್ರದ ಪ್ರತಿಷ್ಠಿತ ಹೋಟೆಲ್‌ನಲ್ಲಿ ತಂಗಿರುವ ಬಗ್ಗೆ ಮಾಹಿತಿ ಸಿಕ್ಕಿದೆ. ಅವರನ್ನು ಬಂಧಿಸುವ ಉದ್ದೇಶಕ್ಕೆ ವಿಶೇಷ ತಂಡಗಳನ್ನು ಮಹಾರಾಷ್ಟ್ರಕ್ಕೆ ಕಳುಹಿಸಿದ್ದೇವೆ. ಅವರು ವಿದೇಶಕ್ಕೆ ಪರಾರಿಯಾಗದಂತೆ ತಡೆಯಲು ಲುಕ್‌ಔಟ್‌ ನೋಟಿಸ್‌ ಸಹ ಜಾರಿ ಮಾಡಿದ್ದೇವೆ. ದೇಶದ ಎಲ್ಲಾವಿಮಾನ ನಿಲ್ದಾಣಗಳಿಗೆ ಬೈರತಿ ಬಸವರಾಜು ಅವರ ಬಗ್ಗೆ ಫೋಟೊ ಸಮೇತ ಮಾಹಿತಿ ರವಾನಿಸಿದ್ದೇವೆ,'' ಎಂದು ಸಿಐಡಿ ಮೂಲಗಳು ತಿಳಿಸಿವೆ.ರೌಡಿ ಬಿಕ್ಲುಶಿವ ಕೊಲೆ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿರುವ ಗೃಹ ಸಚಿವ ಡಾ.ಜಿ.ಪರಮೇಶ್ವರ್‌, ''ಕೊಲೆ ಪ್ರಕರಣ ಸಂಬಂಧ ಬೈರತಿ ಬಸವರಾಜು ಅವರು ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಹೈಕೋರ್ಟ್‌ ವಜಾಗೊಳಿಸಿದೆ. ಅವರಾಗಿಯೇ ಬಂದು ಪೊಲೀಸರಿಗೆ ಶರಣಾದರೆ ಒಳ್ಳೆಯದು. ಇಲ್ಲವಾದರೆ ಪೊಲೀಸರು ಬಂಧಿಸುತ್ತಾರೆ,'' ಎಂದು ಹೇಳಿದ್ದಾರೆ.ಬೈರತಿ ಬಸವರಾಜು, 2025ರ ಡಿಸೆಂಬರ್‌ನಲ್ಲೂ ನಿರೀಕ್ಷಣಾ ಜಾಮೀನು ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಆಗಲೂ ಹೈಕೋರ್ಟ್‌ ಅವರ ಅರ್ಜಿಯನ್ನು ತಿರಸ್ಕರಿಸಿತ್ತು. ನಂತರ ಸಿಐಡಿ ಪೊಲೀಸರು ಬೈರತಿ ಬಸವರಾಜುರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲು ಮುಂದಾಗಿದ್ದರು. ಆಗಲೂ ಬೈರತಿ ಬಸವರಾಜು ತಲೆಮರೆಸಿಕೊಂಡಿದ್ದರು. ಬಳಿಕ ಅವರು ಮತ್ತೊಮ್ಮೆ ಮೇಲ್ಮನವಿ ಸಲ್ಲಿಸಿದಾಗ ಹೈಕೋರ್ಟ್‌, 'ಶಾಸಕರ ವಿರುದ್ಧ ಬಲವಂತದ ಕ್ರಮ ಬೇಡ' ಎಂದು ಸೂಚಿಸಿ ಅಂತಿಮ ಆದೇಶ ಕಾಯ್ದಿರಿಸಿತ್ತು. ಕೊಲೆಯಾದ ಬಿಕ್ಲು ಶಿವು ಯಾರು? ಬಿಕ್ಲು ಶಿವು ಆಲಿಯಾಸ್ ಶಿವಕುಮಾರ್ ಬೆಂಗಳೂರಿನ ಹಲಸೂರು ವ್ಯಾಪ್ತಿಯಲ್ಲಿ ಸಕ್ರಿಯವಾಗಿದ್ದ ರೌಡಿ ಶೀಟರ್ ಹಾಗೂ ರಿಯಲ್ ಎಸ್ಟೇಟ್ ಉದ್ಯಮಿ. ಶಿವಕುಮಾರ್ ವಿರುದ್ದ ಬೆಂಗಳೂರಿನ ಭಾರತಿನಗರ ಪೊಲೀಸ್ ಠಾಣೆಯಲ್ಲಿ 11 ಕ್ಕೂ ಅಧಿಕ ಕ್ರಿಮಿನಲ್ ಪ್ರಕರಣಗಳು ದಾಖಲಾಗಿದ್ದವು. 2025 ಜುಲೈ 15 ರಂದು ರಾತ್ರಿ ಮನೆಯ ಮುಂದೆ ನಿಂತಿದ್ದ ವೇಳೆ 8ರಿಂದ 12 ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಅವರನ್ನು ಕೊಚ್ಚಿ ಹತ್ಯೆ ಮಾಡಿದ್ದರು. ಅವರ ತಾಯಿ ವಿಜಯಲಕ್ಷ್ಮೀ ಅವರ ಎದುರೇ ಈ ಹತ್ಯೆ ನಡೆದಿತ್ತು. ದುಷ್ಕೃತ್ಯದ ವಿಡಿಯೋಗಳು ಕೂಡಾ ಬಹಿರಂಗಗೊಂಡಿದ್ದವು. ಶಾಸಕ ಬೈರತಿ ಬಸವರಾಜ ಕುಮ್ಮಕ್ಕಿನಿಂದಲೇ ಈ ಕೊಲೆ ನಡೆದಿದೆ ಎಂದು ಬಿಕ್ಲು ಶಿವು ತಾಯಿ ವಿಜಯಲಕ್ಷ್ಮಿ ಅವರು ಆರೋಪಿಸಿದ್ದಾರೆ.

ವಿಜಯ ಕರ್ನಾಟಕ 11 Feb 2026 11:45 pm

Bengaluru | ಚಾಕುವಿನಿಂದ ಇರಿದು ಪುತ್ರನಿಂದಲೇ ತಂದೆ-ತಾಯಿಯ ಹತ್ಯೆ

ಬೆಂಗಳೂರು: ತನ್ನ ತಂದೆ, ತಾಯಿಯನ್ನು ಪುತ್ರನೇ ಕೊಲೆ ಮಾಡಿರುವ ಘಟನೆ ಬೆಂಗಳೂರಿನಲ್ಲಿ ಬುಧವಾರ ನಡೆದಿದೆ. ನವೀನ್ ಚಂದ್ರ ಭಟ್ (60), ಡಾ.ಶ್ಯಾಮಲಾ ಭಟ್(55) ಕೊಲೆಯಾದವರು. ನಗರದ HAL ಪೊಲೀಸ್ ಠಾಣಾ ವ್ಯಾಪ್ತಿಯ ವಿಜ್ಞಾನ ನಗರದ ಆದರ್ಶ ವಿಸ್ತಾ ಅಪಾರ್ಟ್‌ಮೆಂಟ್ ನಲ್ಲಿ ಘಟನೆ ನಡೆದಿದೆ. ಹೆತ್ತವರನ್ನು ಹತ್ಯೆಗೈದ ಆರೋಪಿ ರೋಹನ್ ಭಟ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.  ನಿವೃತ್ತ ನೆವಿ ಕ್ಯಾಪ್ಟನ್ ನವೀನ್ ಚಂದ್ರ ಭಟ್ ಹಾಗೂ ದಂತ ವೈದ್ಯೆಯಾಗಿರುವ ಡಾ.ಶ್ಯಾಮಲಾ ಅವರಿಗೆ ಪುತ್ರ ರೋಹನ್ ಚಾಕುವಿನಿಂದ ಇರಿದಿದ್ದಾನೆ ಎನ್ನಲಾಗಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಿಸದೆ ಇಬ್ಬರೂ ಮೃತಪಟ್ಟಿದ್ದಾರೆ.

ವಾರ್ತಾ ಭಾರತಿ 11 Feb 2026 11:29 pm

ಮಸಾಜ್‌ ಸಲೂನ್‌ ಪ್ರಕರಣ: ಚಿತ್ರನಟ ಸಾಧು ಕೋಕಿಲ, ಮಂಡ್ಯ ರಮೇಶ್‌ ವಿರುದ್ಧದ ಎಫ್‌ಐಆರ್‌ ರದ್ದುಗೊಳಿಸಿದ ಹೈಕೋರ್ಟ್

ಬೆಂಗಳೂರು: ಮೈಸೂರಿನ ಮಸಾಜ್‌ ಸಲೂನ್‌ವೊಂದರ ಮಹಿಳಾ ಸಿಬ್ಬಂದಿಯ ಘನತೆಗೆ ಧಕ್ಕೆ ತಂದ ಆರೋಪ ಸಂಬಂಧ ಕರ್ನಾಟಕ ಚಲನಚಿತ್ರ ಅಕಾಡೆಮಿಯ ಹಾಲಿ ಅಧ್ಯಕ್ಷರೂ ಆದ ನಟ ಸಾಧು ಕೋಕಿಲ ಹಾಗೂ ನಟ ಮಂಡ್ಯ ರಮೇಶ್‌ ವಿರುದ್ಧದ ಎಫ್‌ಐಆರ್‌ ರದ್ದುಪಡಿಸಿ ಹೈಕೋರ್ಟ್‌ ಆದೇಶಿಸಿದೆ. ಪ್ರಕರಣ ಸಂಬಂಧ ತಮ್ಮ ವಿರುದ್ಧ ಮೈಸೂರಿನ ಸರಸ್ವತಿಪುರಂ ಠಾಣಾ ಪೊಲೀಸರು 2017ರಲ್ಲಿ ದಾಖಲಿಸಿರುವ ಎಫ್‌ಐಆರ್‌ ಹಾಗೂ ಅದಕ್ಕೆ ಸಂಬಂಧಿಸಿದ 3ನೇ ಹೆಚ್ಚುವರಿ ಜೆಎಂಎಫ್‌ಸಿ ಕೋರ್ಟ್‌ ವಿಚಾರಣೆ ರದ್ದುಪಡಿಸಬೇಕು ಎಂದು ಕೋರಿ ಸಾಧು ಕೋಕಿಲ ಹಾಗೂ ಮಂಡ್ಯ ರಮೇಶ್‌ 2019ರಲ್ಲಿಹೈಕೋರ್ಟ್‌ಗೆ ಕ್ರಿಮಿನಲ್‌ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ಪುರಸ್ಕರಿಸಿ ನ್ಯಾಯಮೂರ್ತಿ ಎಂ.ಜಿ.ಉಮಾ ಅವರಿಧಿದ್ದ ನ್ಯಾಯಪೀಠ ಬುಧವಾರ ಆದೇಶಿಸಿದೆ. ವಿಸ್ತೃತ ಆದೇಶ ಇನ್ನಷ್ಟೇ ಬಿಡುಗಡೆಯಾಗಬೇಕಿದೆ. ಪ್ರಕರಣವೇನು? ವೇಶ್ಯಾವಾಟಿಕೆ ನಡೆಸಲಾಗುತ್ತಿದೆ ಎಂಬ ಗುಮಾನಿ ಮೇರೆಗೆ 2017ರ ಡಿ.20ರಂದು ಮೈಸೂರಿನ ಸ್ವಾಮಿ ಆರ್ಕೇಡ್‌ ಕಟ್ಟಡದಲ್ಲಿದ್ದ ಲೈಕ್‌ ಟ್ರೆಂಡ್‌ ಫ್ಯಾಮಿಲಿ ಸಲೂನ್‌ ಮೇಲೆ ಸರಸ್ವತಿಪುರಂ ಠಾಣಾ ಪೊಲೀಸರು ದಾಳಿ ನಡೆಸಿದ್ದರು. ಆ ವೇಳೆ ಸಲೂನ್‌ನಲ್ಲಿ ಮಹಿಳಾ ಸಿಬ್ಬಂದಿ ಹಾಗೂ ಸಲೂನ್‌ ಮಾಲೀಕ ರಾಜೇಶ್‌ ಇದ್ದರು. ಮಹಿಳೆಯನ್ನು ವಿಚಾರಣೆ ನಡೆಸಿದಾಗ, ''ಸಲೂನ್‌ ಭೇಟಿ ನೀಡುವ ಗ್ರಾಹಕರ ದೇಹದ ಎಲ್ಲಾ ಭಾಗಗಳಿಗೆ ಮಸಾಜ್‌ ಮಾಡುವಂತೆ ರಮೇಶ್‌ ನನಗೆ ಹೇಳುತ್ತಿದ್ದರು. ನಟ ಸಾಧು ಕೋಕಿಲ ಸಹ ಸಲೂನ್‌ಗೆ ಬರುತ್ತಿದ್ದರು. ಅವರ ದೇಹದ ಎಲ್ಲಾ ಭಾಗಗಳಿಧಿಗೂ ನಾನು ಮಸಾಜ್‌ ಮಾಡಿದೆ,'' ಎಂದು ಹೇಳಿಕೆ ನೀಡಿದ್ದರು.ಆ ಕುರಿತು ತನಿಖೆ ನಡೆಸಿದ್ದ ಪೊಲೀಸರು, ಸಾಧು ಕೋಕಿಲ ವಿರುದ್ಧ ಐಪಿಸಿ ಸೆಕ್ಷನ್‌ 354 ಅನ್ವಯ ಮಹಿಳೆಯ ಘನತೆಗೆ ಧಕ್ಕೆ ತಂದ ಸಂಬಂಧ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಹೈಕೋರ್ಟ್‌ ಮೆಟ್ಟಿಲೇರಿದ ಸಾಧು ಕೋಕಿಲ ತಮ್ಮ ವಿರುದ್ಧದ ಪ್ರಕರಣ ರದ್ದುಪಡಿಸುವಂತೆ ಕೋರಿದ್ದಾರೆ.ಅರ್ಜಿದಾರರ ಪರ ವಕೀಲರು, ಸಲೂನ್‌ನ ಮಹಿಳಾ ಸಿಬ್ಬಂದಿಯ ಘನತೆಗೆ ಧಕ್ಕೆ ತಂದ ಆರೋಪ ಸಂಬಂಧ ಸಾಧು ಕೋಕಿಲ ವಿರುದ್ಧ ಯಾವುದೇ ಸಾಕ್ಷ್ಯಾಧಾರ ಇಲ್ಲ. ಅಧೀನ ನ್ಯಾಯಾಲಯದ ಮುಂದೆ ನೀಡಿದ ಈ ಹೇಳಿಕೆಯಲ್ಲಿ ಮಹಿಳೆಯು ಈ ಆರೋಪ ಮಾಡಿಲ್ಲ. ಆಕೆ ತಿಳಿಸಿದ ದಿನಾಂಕದಂದು ಅರ್ಜಿದಾರರು ಸಲೂನ್‌ಗೆ ಭೇಟಿಯೇ ನೀಡಿರಲಿಲ್ಲ. ಆದರೂ, ಪೊಲೀಸರು ಸುಳ್ಳು ಪ್ರಕರಣ ದಾಖಲಿಸಿದ್ದಾರೆ. ಇದರಿಂದ ಅರ್ಜಿದಾರರಿಗೆ ತೇಜೋವಧೆಯಾಗುತ್ತಿದೆ. ಹಾಗಾಗಿ, ಪ್ರಕರಣ ಹಾಗೂ ಆ ಕುರಿತ ಅಧೀನ ನ್ಯಾಯಾಲಯದ ವಿಚಾರಣೆ ರದ್ದುಪಡಿಸಬೇಕು, ಎಂದು ಕೋರಿದ್ದರು. ಈ ಮನವಿಯನ್ನು ಈಗ ಹೈಕೋರ್ಟ್‌ ಪುರಸ್ಕರಿಸಿದೆ.

ವಿಜಯ ಕರ್ನಾಟಕ 11 Feb 2026 11:25 pm

ಸಬ್ಸಿಡಿ ಬೇಕಾ? ಬೇಡವಾ? ಕನ್ನಡ ಚಿತ್ರರಂಗದಲ್ಲಿ ಬಿಸಿಬಿಸಿ ಚರ್ಚೆ - ಚೇತನ್ ನಾಡಿಗೇರ್ ಬರಹ

ಕನ್ನಡ ಚಿತ್ರರಂಗದಲ್ಲಿ ಕಳೆದ ಕೆಲವು ದಿನಗಳಿಂದ ಗುಣಮಟ್ಟದ ಚಿತ್ರಗಳಿಗೆ ಪ್ರತೀ ವರ್ಷ ಸರ್ಕಾರ ನೀಡುವ 10 ಲಕ್ಷ ರೂ. ಸಬ್ಸಿಡಿ ಕುರಿತು ಮತ್ತೆ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿದೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷೆ ಡಾ. ಜಯಮಾಲಾ ಅವರು ಸಹ ಸಬ್ಸಿಡಿ ಬೇಕೇ ಬೇಕು ಎಂದು ಕೆಲವು ಸಂದರ್ಶನಗಳಲ್ಲಿ ಒತ್ತಿ ಹೇಳುತ್ತಲೇ ಬಂದಿದ್ದಾರೆ. ಇಷ್ಟಕ್ಕೂ ಸಬ್ಸಿಡಿಯ ಕುರಿತು ಈಗೇಕೆ

ಒನ್ ಇ೦ಡಿಯ 11 Feb 2026 11:25 pm

ರಾಹುಲ್ ಗಾಂಧಿ ಗಂಭೀರ ಆರೋಪಗಳಿಗೆ ನಿರ್ಮಲಾ ಸೀತಾರಾಮನ್ ತಿರುಗೇಟು: ಇಡೀ ದಿನ ಸಂಸತ್ತಿನಲ್ಲಿ ನಡೆದದ್ದೇನು?

Indian Parliment Session On Budget- ಲೋಕಸಭೆಯಲ್ಲಿ ಬಜೆಟ್ ಮೇಲಿನ ಚರ್ಚೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಮತ್ತು ಆಡಳಿತಾರೂಢ ಪಕ್ಷದ ನಡುವೆ ಆರೋಪ-ಪ್ರತ್ಯಾರೋಪಗಳಿಗೆ ವೇದಿಕೆಯಾಗಿ ಮಾರ್ಪಟ್ಟಿದೆ. ರಾಹುಲ್ ಗಾಂಧಿ ಅವರ ಪ್ರಧಾನಿ ಮೋದಿ ಅವರು ಭಾರತವನ್ನು ಮಾರಾಟಕ್ಕಿಟ್ಟಿದ್ದೀರಿ ಎಂಬ ಆರೋಪ ಬಿಜೆಪಿಗರನ್ನು ಕೆರಳಿಸಿದೆ. ಇದಕ್ಕೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ಕಿರಣ್ ರಿಜಿಜು ಆದಿಯಾಗಿ ಅನೇಕ ಸಚಿವರು, ಬಿಜೆಪಿ ಸಂಸದರು ತಿರುಗೇಟು ನೀಡಿದ್ದಾರೆ. ಇನ್ನು ಎಪ್ಸ್ಟೀನ್‌ ಭೇಟಿಯನ್ನು ಉಲ್ಲೇಖಿಸಿರುವುದಕ್ಕೆ ರಾಹುಲ್ ಗಾಂಧಿ ಅವರು ಆಧಾರ ರಹಿತ ಆರೋಪಗಳನ್ನು ಮಾಡುವುದರಲ್ಲಿ ಎತ್ತಿದ ಕೈ ಎಂದು ಸಚಿವ ಹರ್ದೀಪ್ ಸಿಂಗ್ ಪುರಿ ಪ್ರತ್ಯಾರೋಪ ಮಾಡಿದ್ದಾರೆ.

ವಿಜಯ ಕರ್ನಾಟಕ 11 Feb 2026 11:12 pm

ಕಲಬುರಗಿ| ಎಸ್‌ ಐಆರ್ ವಿರುದ್ಧ ಸ್ಲಂ ಜನಾಂದೋಲನ ಕರ್ನಾಟಕ ಸಂಘಟನೆ ಪ್ರತಿಭಟನೆ

ಕಲಬುರಗಿ: ಸಂವಿಧಾನಬದ್ಧ ಮತದಾನದ ಹಕ್ಕನ್ನು ಕಸಿದುಕೊಳ್ಳುವ ಕೇಂದ್ರ ಸರಕಾರದ ಕರಾಳ ಎಸ್.ಐ.ಆರ್ ಪ್ರಕ್ರಿಯೆಯನ್ನು ತಕ್ಷಣವೇ ಸ್ಥಗಿತಗೊಳಿಸಿ ಅದರ ವಿರುದ್ಧ ರಾಜ್ಯ ಸರ್ಕಾರ ನಿರ್ಣಯ ಕೈಗೊಳ್ಳಬೇಕು ಎಂದು ಆಗ್ರಹಿಸಿ ಸ್ಲಂ ಜನಾಂದೋಲನ ಕರ್ನಾಟಕ ಕಲಬುರಗಿ ಜಿಲ್ಲಾ ಘಟಕದ ವತಿಯಿಂದ ಬುಧವಾರ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಲಾಯಿತು. ಪ್ರತಿಭಟನಾಕಾರರು ಜಿಲ್ಲಾಧಿಕಾರಿಗಳ ಮುಖಾಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿಪತ್ರ ಸಲ್ಲಿಸಿದರು. ಎಸ್.ಐ.ಆರ್ ಪ್ರಕ್ರಿಯೆಯಿಂದ ಬಡವರು, ಕಾರ್ಮಿಕರು, ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರು ಹಾಗೂ ಮಹಿಳೆಯರ ಮತದಾನದ ಹಕ್ಕಿಗೆ ಧಕ್ಕೆ ಉಂಟಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಚುನಾವಣಾ ಆಯೋಗವು ಈಗಾಗಲೇ 12 ರಾಜ್ಯಗಳಲ್ಲಿ ಎಸ್.ಐ.ಆರ್ ಪ್ರಕ್ರಿಯೆ ಕೈಗೊಂಡಿದ್ದು, ಈ ಪ್ರಕ್ರಿಯೆಯಲ್ಲಿ ಲಕ್ಷಾಂತರ ಮತದಾರರನ್ನು ಪಟ್ಟಿಯಿಂದ ಕೈಬಿಡಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಬಿಹಾರ, ಉತ್ತರ ಪ್ರದೇಶ, ರಾಜಸ್ಥಾನ, ಮಧ್ಯಪ್ರದೇಶ, ತಮಿಳುನಾಡು, ಪಶ್ಚಿಮ ಬಂಗಾಳ ಸೇರಿದಂತೆ ಹಲವು ರಾಜ್ಯಗಳಲ್ಲಿ ಮತದಾರರ ಹೆಸರುಗಳನ್ನು ದೊಡ್ಡ ಪ್ರಮಾಣದಲ್ಲಿ ತೆಗೆದುಹಾಕಲಾಗಿದೆ ಎಂದು ದೂರಿದರು. ಇದೇ ಮಾದರಿಯನ್ನು ಕರ್ನಾಟಕದಲ್ಲಿಯೂ ಜಾರಿಗೆ ತರುವ ಪ್ರಯತ್ನ ನಡೆಯುತ್ತಿದೆ ಎಂಬ ಆತಂಕವನ್ನು ವ್ಯಕ್ತಪಡಿಸಿದರು. ಪಶ್ಚಿಮ ಬಂಗಾಳ ಸೇರಿದಂತೆ ಕೆಲವು ರಾಜ್ಯ ಸರ್ಕಾರಗಳು ಎಸ್.ಐ.ಆರ್ ವಿರುದ್ಧ ಕಾನೂನು ಹೋರಾಟ ಆರಂಭಿಸಿರುವುದನ್ನು ಉಲ್ಲೇಖಿಸಿ ಕರ್ನಾಟಕ ಸರ್ಕಾರವೂ ಇದೇ ರೀತಿಯ ದೃಢ ನಿಲುವು ತಾಳಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.   ಪ್ರತಿಭಟನೆಯಲ್ಲಿ ಸಂಘಟನೆಯ ಜಿಲ್ಲಾಧ್ಯಕ್ಷೆ ಗೌರಮ್ಮ ಮಾಕಾ, ಸಂಚಾಲಕರಾದ ರೇಣುಕಾ ಸರಡಗಿ, ಶರಣು ಕಣ್ಣಿ, ಸುನಿತಾ ಕೊಳ್ಳೂರ, ಸುಗರಾ ಬೇಗಂ, ಕಲಾವತಿ ಸೇರಿದಂತೆ ಹಲವರು ಭಾಗವಹಿಸಿದ್ದರು.

ವಾರ್ತಾ ಭಾರತಿ 11 Feb 2026 11:10 pm

ಸರಕಾರಿ ಆಸ್ಪತ್ರೆಗಳಲ್ಲಿ ಅಂಗಾಂಗ ಶೇಖರಣೆ ಕೇಂದ್ರಕ್ಕೆ ಚಿಂತನೆ: ಸಚಿವ ದಿನೇಶ್ ಗುಂಡೂರಾವ್

ಬೆಂಗಳೂರು: ರಾಜ್ಯದ ಸರಕಾರಿ ಆಸ್ಪತ್ರೆಗಳಲ್ಲಿ ಅಂಗಾಂಗ ಸಂಗ್ರಹ ಕಸಿ ಹಾಗೂ ಅಂಗಾಂಗ ಶೇಖರಣಾ ಘಟಕಗಳನ್ನು ಹೆಚ್ಚು ಹೆಚ್ಚು ಸ್ಥಾಪಿಸಲು ಮತ್ತು ಈಗಾಗಲೇ ಇರುವ ಕೇಂದ್ರಗಳಿಗೆ ಹೆಚ್ಚಿನ ಉತ್ತೇಜನ ನೀಡಲು ರಾಜ್ಯ ಸರಕಾರ ಗಂಭೀರ ಚಿಂತನೆ ನಡೆಸಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು. ಬುಧವಾರ ವಿಧಾನಸೌಧದ ಬ್ಯಾಂಕ್ವೆಟ್ ಸಭಾಂಗಣದಲ್ಲಿ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ, ದಿಶಾಭೋದ್ ಫೌಂಡೇಶನ್, ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ಸಹಯೋಗದಲ್ಲಿ ಆಯೋಜಿಸಿದ್ದ ‘ಸ್ವಾಸ್ಥ್ಯ ಭಾರತ, ಶ್ರೇಷ್ಠ ಭಾರತ, ನಶಾ ಮುಕ್ತ ಭಾರತ, ನಶಾ ಮುಕ್ತ ಕರ್ನಾಟಕ, ನಶಾ ಮುಕ್ತ ಕ್ಯಾಂಪಸ್, ಅಂಗಾಂಗ ದಾನ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅಂಗಾಂಗ ದಾನದ ಬಗ್ಗೆ ಜಾಗೃತಿ ಮೂಡಿಸಲು ರಾಜೀವ್ ಗಾಂಧಿ ವಿವಿ ಕೈಗೊಂಡ ಕ್ರಮಗಳು ಮಹತ್ವಪೂರ್ಣವಾಗಿದ್ದು, ಇಂತಹ ಉದ್ದೇಶಗಳಿಗೆ ನಮ್ಮ ಸಂಪೂರ್ಣ ಬೆಂಬಲ ಹಾಗೂ ಪ್ರೋತ್ಸಾಹ ಇದ್ದೇ ಇರುತ್ತದೆ ಎಂದರು. ಅಂಗಾಂಗ ದಾನದಲ್ಲಿ ನಾವು ದೇಶದಲ್ಲಿ ಮೂರನೆ ಸ್ಥಾನದಲ್ಲಿದ್ದೇವೆ. ಆದರೆ, ಇದು ಮತ್ತಷ್ಟು ಹೆಚ್ಚಾಗಬೇಕು. ಈ ನಿಟ್ಟಿನಲ್ಲಿ ಬಡಜನರಿಗೆ ಅನುಕೂಲ ಆಗಲು ಸರಕಾರದ ಮಟ್ಟದಲ್ಲಿಯೂ ಕ್ರಮ ವಹಿಸಲಾಗುವುದು. ಈಗಾಗಲೇ ನಾವು ಅಂಗಾಂಗ ದಾನ ಮಾಡಿದ ಕುಟುಂಬಕ್ಕೆ ಸನ್ಮಾನಿಸುವ ವಿನೂತನ ಕಾರ್ಯಕ್ರಮವೊಂದನ್ನು ಆಯೋಜನೆ ಮಾಡಿಕೊಂಡು ಬರುತ್ತಿದ್ದೇವೆ. ಇದರಿಂದ ಸಾಮಾಜಿಕ ಜಾಗೃತಿ ಮೂಡಿಸುವ ಕೆಲಸ ಆಗಿದೆ ಎಂದು ಅವರು ಹೇಳಿದರು. ಕರ್ನಾಟಕ ರಾಜ್ಯವನ್ನು ಮಾದಕ ವಸ್ತುಗಳಿಂದ ಮುಕ್ತವಾಗಿಸಲು ಈಗಾಗಲೇ ಹಲವು ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಮುಂದೆ ಪ್ರತಿ ವಿಶ್ವವಿದ್ಯಾಲಯದಲ್ಲಿ ‘ನಶಾ ಮುಕ್ತ ಕ್ಯಾಂಪಸ್' ಕಾರ್ಯಕ್ರಮ ಆಯೋಜಿಸಲಾಗುವುದು ಎಂದ ಅವರು, ಹೆಚ್ಚಿನ ಸಂದರ್ಭದಲ್ಲಿ ಮಾದಕ ವಸ್ತು ಬಳಕೆ ಗೆಳೆಯರ ಒತ್ತಾಯಕ್ಕೊ ಅಥವಾ ಚಿಕ್ಕವಯಸ್ಸಿನಲ್ಲಿನ ಕುತೂಹಲದಿಂದ ಸೇವಿಸುತ್ತಾರೆ. ಆನಂತರ, ಇದು ಚಟವಾಗಿ ಬದಲಾಗುತ್ತದೆ. ಆದರೆ, ಇದನ್ನು ಗಮನದಲ್ಲಿಟ್ಟುಕೊಂಡು ಜಾಗೃತಿ ಮೂಡಿಸಬೇಕಾಗಿದೆ. ಕೆಲ ದಿನಗಳ ಹಿಂದೆ ಮಂಗಳೂರಿನಲ್ಲಿ ಮಾದಕ ವಸ್ತುಗಳ ವಿರುದ್ಧ ಬಹುದೊಡ್ಡ ಅಭಿಯಾನ ನಡೆಸಲಾಗಿತ್ತು. ಇದೇ ಮಾದರಿಯಲ್ಲಿಯೇ ಪ್ರತಿ ವಿಶ್ವವಿದ್ಯಾಲಯದಲ್ಲಿ ‘ನಶಾ ಮುಕ್ತ ಕ್ಯಾಂಪಸ್' ಕಾರ್ಯಕ್ರಮ ಏರ್ಪಡಿಸಲಾಗುವುದು ಎಂದರು. ಇಂದಿನ ಕಾಲಘಟ್ಟದಲ್ಲಿ ಆರೋಗ್ಯಕರ ಸಮಾಜ ನಿರ್ಮಾಣ ಅತೀ ಅಗತ್ಯವಾಗಿದೆ. ಆದರೆ, ಇದೊಂದು ದೊಡ್ಡ ಸವಾಲು ಸಹ ಆಗಿದೆ. ಇನ್ನೊಂದೆಡೆ, ಮಾದಕ ವಸ್ತುಗಳ ಸೇವನೆಯಿಂದಾಗಿ ಯುವಕರೇ ಹೆಚ್ಚಾಗಿ ಜೀವ ಕಳೆದುಕೊಳ್ಳುತ್ತಿರುವುದು ಆತಂಕ ಹೆಚ್ಚಿಸಿದೆ. ಮಾದಕ ವಸ್ತುಗಳ ಸೇವನೆ ಕಾರಣದಿಂದಾಗಿ ಮಾನಸಿಕ ಮತ್ತು ದೈಹಿಕ ಸಮಸ್ಯೆ ಉಲ್ಬಣಗೊಳ್ಳುತ್ತಿದೆ. ಕೇವಲ ಕಾನೂನು ರೂಪಿಸುವುದರಿಂದ ಇದನ್ನು ತಡೆಯಲು ಸಾಧ್ಯವಿಲ್ಲ. ಜನಜಾಗೃತಿಯು ಬಹಳ ಮುಖ್ಯ. ಪೋಷಕರು ಮಕ್ಕಳ ಕುರಿತು ಗಮನಹರಿಸುವುದು ಮುಖ್ಯ ಎಂದು ಅವರು ಸಲಹೆ ನೀಡಿದರು. ವಿಧಾನ ಪರಿಷತ್ತಿನ ಸಭಾಪತಿ ಬಸವರಾಜ ಹೊರಟ್ಟಿ ಮಾತನಾಡಿ, ಮಾದಕ ವಸ್ತುಗಳು ಮಾತ್ರವಲ್ಲದೆ, ಮದ್ಯ ಸೇವನೆ ಇತ್ತೀಚಿನ ದಿನಗಳಲ್ಲಿ ಶೋಕಿ, ಮೋಜು ಆಗಿದೆ. ಸಣ್ಣ ವಯಸ್ಸಿನವರಿಂದ ಹಿಡಿದು ವೃದ್ಧರವರೆಗೂ, ವಿದ್ಯಾವಂತರೂ ಕೂಡ ಆಲ್ಕೋಹಾಲ್ ಸೇವನೆ ಮಾಡುವುದು ರೂಡಿಯಾಗಿದೆ. ಇದು ಕೂಡ ಮನುಷ್ಯನ ಶರೀರದ ಮೇಲೆ ಪರಿಣಾಮ ಬೀರಿ ಹಾನಿಯುಂಟುಮಾಡುತ್ತದೆ. ಸ್ಮರಣಶಕ್ತಿ ಕುಂಠಿತ, ರೋಗನಿರೋಧಕ ಶಕ್ತಿ ಕಡಿಮೆ ಮಾಡುವುದು ಸೇರಿದಂತೆ ಅನೇಕ ಖಾಯಿಲೆಗಳಿಗೆ ದಾರಿ ಮಾಡಿಕೊಡುತ್ತದೆ ಇದರಿಂದ ಜಾಗೃತರಾಗಬೇಕು. ಒಟ್ಟಿನಲ್ಲಿ ಜನರಲ್ಲಿ ಕೆಟ್ಟ ಚಟಗಳ ಕುರಿತು ಜನ ಜಾಗೃತಿ ಮೂಡಿಸಬೇಕು ಎಂದರು. ಗೃಹ ಸಚಿವ ಡಾ.ಜಿ.ಪರಮೇಶ್ವರ್ ಮಾತನಾಡಿ, ಸಮಾಜದ ಸ್ವಾಸ್ಥ್ಯ ಕಾಪಾಡುವ ಜವಾಬ್ದಾರಿ ಪ್ರತಿಯೊಬ್ಬ ನಾಗರಿಕನ ಮೇಲಿದೆ. ಮಾದಕ ವ್ಯಸನ ಮುಕ್ತ ಸಮಾಜ ನಿರ್ಮಾಣಕ್ಕೆ ಎಲ್ಲರೂ ಪಣ ತೊಡಬೇಕು. ಪ್ರತಿಯೊಬ್ಬರೂ ಕಾನೂನು ಪರಿಪಾಲಿಸುವ ಮೂಲಕ ಸಮಾಜದ ಸ್ವಾಸ್ಥ್ಯ ಕಾಪಾಡಬೇಕು. ಸಾಮಾಜಿಕ ಮಾಧ್ಯಮ ಹಾಗೂ ಜಾಲತಾಣಗಳ ಬಗ್ಗೆ ಎಚ್ಚರಿಕೆ ವಹಿಸುವುದು ಅಗತ್ಯ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಶಾಸಕ ರಿಝ್ವಾನ್ ಆರ್ಶದ್, ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ವೈದ್ಯಕೀಯ ಶಿಕ್ಷಣ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಮುಹಮ್ಮದ್ ಮೊಹ್ಸಿನ್, ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಕುಲಪತಿ ಡಾ.ಬಿ.ಸಿ.ಭಗವಾನ್, ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯ ಡಾ.ಬಿ.ಎಲ್.ಸುಜಾತಾ ರಾಥೋಡ್, ಎನ್‍ಸಿಬಿ ವಲಯ ನಿರ್ದೇಶಕ ಸಚಿನ್ ಘೋರ್ಪಡೆ ಸೇರಿದಂತೆ ಪ್ರಮುಖರಿದ್ದರು.

ವಾರ್ತಾ ಭಾರತಿ 11 Feb 2026 11:05 pm

ರಾಯಚೂರು| ಎರಡು ಬೈಕ್ ಗಳು ಮುಖಾಮುಖಿ ಢಿಕ್ಕಿ: ಮೂವರ ಸ್ಥಿತಿ ಗಂಭೀರ

ದೇವದುರ್ಗ: ದೇವದುರ್ಗ ಪಟ್ಟಣದ ಮುಷ್ಟೂರು ಕ್ರಾಸ್ ಬಳಿ ಎರಡು ಬೈಕ್ ಗಳು ಮುಖಾಮುಖಿ ಢಿಕ್ಕಿಯಾಗಿದ್ದು ಮೂವರು ಬೈಕ್ ಸವಾರರು ಗಂಭೀರ ಗಾಯಗೊಂಡ ಘಟನೆ ನಡೆದಿದೆ. ಕಕ್ಕಲದೊಡ್ಡಿಯ ಸುದೀಪ್ ಹಾಗೂ ಅವರ ತಂದೆ ಸೂಗಯ್ಯ ಕಕ್ಕಲದೊಡ್ಡಿ ಗ್ರಾಮದ ಗಾಯಗೊಂಡ ಬೈಕ್ ಸವಾರರು ಎಂದು ಗುರುತಿಸಲಾಗಿದೆ. ಸಂಗಮೇಶ ಎಂಬುವವರು ಮುಷ್ಟೂರಿನಿಂದ ದೇವದುರ್ಗಕ್ಕೆ ಪ್ರಯಾಣಿಸುವ ವೇಳೆ ಬೈಕ್ ಗಳ ಮುಖಾಮುಖಿ ಡಿಕ್ಕಿ ಯಾಗಿದೆ. ಘಟನೆಯಲ್ಲಿ ಸಂಗಮೇಶ ತಲೆಗೆ ಪೆಟ್ಟುಬಿದ್ದು ಸ್ಥಿತಿ ಗಂಭೀರವಾಗಿದ್ದರಿಂದ ಹೆಚ್ಚಿನ ಚಿಕಿತ್ಸೆಗಾಗಿ ರಾಯಚೂರಿನ ರಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ತಿಳಿದುಬಂದಿದೆ. ಈ ಕುರಿತು ಗಬ್ಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಾರ್ತಾ ಭಾರತಿ 11 Feb 2026 10:56 pm

ಮರ್ಕಝುಲ್ ಹುದಾ ಒಮಾನ್ ನಿಝ್ವಾ ಘಟಕ ಅಸ್ತಿತ್ವಕ್ಕೆ

ಪುತ್ತೂರು: ಕುಂಬ್ರ ಮರ್ಕಝುಲ್ ಹುದಾ ಮಹಿಳಾ ಕಾಲೇಜಿನ ಒಮಾನ್ ದೇಶದ ನಿಝ್ವಾ ಘಟಕವನ್ನು ಕೇಂದ್ರ ಸಮಿತಿ ಕಾರ್ಯಾಧ್ಯಕ್ಷ ಡಾ. ಎಮ್ಮೆಸ್ಸೆಮ್ ಅಬ್ದುಲ್ ರಶೀದ್ ಝೈನಿ ಅವರ ನೇತೃತ್ವದಲ್ಲಿ ಕರ್ಷ ಖಲಂದರ್ ಭಾಷಾ ಅವರ ನಿವಾಸದಲ್ಲಿ ರಚನೆ ಮಾಡಲಾಯಿತು. ನೂತನ ಸಮಿತಿಗೆ ಸಲಹೆಗಾರರಾಗಿ ಇಬ್ರಾಹಿಂ ಹಾಜಿ ಮಣಿಪುರ, ಮುಹಮ್ಮದ್ ಕಲ್ಮಿಂಜೆ ಹುದ್ ಹುದ್, ಗೌರವಾಧ್ಯಕ್ಷರಾಗಿ ಖಲಂದರ್ ಭಾಷಾ ತೀರ್ಥಹಳ್ಳಿ, ಅಧ್ಯಕ್ಷರಾಗಿ ಹುಸೈನ್ ತೀರ್ಥಹಳ್ಳಿ, ಪ್ರಧಾನ ಕಾರ್ಯದರ್ಶಿ ಯಾಗಿ ಸಿರಾಜ್ ಪದಿಂಜಾರ್, ಕೋಶಾಧಿಕಾರಿಯಾಗಿ ಆದಂ ಮದನಿ ಆತೂರು, ಉಪಾಧ್ಯಕ್ಷರಾಗಿ ಝಿಯಾದ್ ಮಣಿಪುರ, ಸಾದಿಖ್ ಕೈಕಂಬ ಕಾರ್ಯದರ್ಶಿಗಳಾಗಿ ರಮೀಝ್ ಕಟಪಾಡಿ, ಶರೀಫ್ ಮಾಚಾರ್, ಕಾರ್ಯಕಾರಿ ಸದಸ್ಯರಾಗಿ ಅಬೂಬಕರ್ ಅಳಕೆಮಜಲು, ಖಲೀಲ್ ರಹ್ಮಾನ್ ದಾವಣಗೆರೆ, ಫಯಾಝ್ ಮಲ್ಲೂರು, ಹನೀಫ್ ಕೆಸಿ ರೋಡ್, ಇಮ್ರಾನ್ ಕೈಕಂಬ, ತೌಫೀಖ್ ಸುರಲ್ಪಾಡಿ, ಹೈದರ್ ಬಹ್ಲಾ, ಬಶೀರ್ ಕಣ್ಣಂಗಾರ್, ಬಾಸಿತ್ ಸಜೀಪ, ಮನ್ಸೂರ್ ಅಡ್ಡೂರು, ಲತೀಫ್ ಜಾಲ್ಸೂರ್, ಆಸಿಫ್ ಕಣ್ಣಂಗಾರ್, ರಶೀದ್ ಮಂಜೇಶ್ವರ ಇವರನ್ನು ಆರಿಸಲಾಯಿತು. ಕಾರ್ಯಕ್ರಮದಲ್ಲಿ ಮರ್ಕಝುಲ್ ಹುದಾ ಒಮಾನ್ ರಾಷ್ಟೀಯ ಸಮಿತಿ ಅಧ್ಯಕ್ಷ ಉಮರ್ ಸಖಾಫಿ ಎಡಪ್ಪಾಲ್ ಅಧ್ಯಕ್ಷತೆ ವಹಿಸಿದರು. ವರ್ಕಿಂಗ್ ಸೆಕ್ರೆಟರಿ ಎಂ.ಎಸ್. ಉಬೈದುಲ್ಲಾಹ್ ಸಖಾಫಿ ಪ್ರಾಸ್ತಾವಿಕ ಭಾಷಣ ಮಾಡಿದರು. ಕೆಸಿಎಫ್ ನಿಝ್ವಾ ಝೋನ್ ಅಧ್ಯಕ್ಷ ಆದಂ ಮದನಿ ಆತೂರು ಉದ್ಘಾಟನೆ ಮಾಡಿದರು.

ವಾರ್ತಾ ಭಾರತಿ 11 Feb 2026 10:39 pm

ರಮಝಾನ್‌ ಬಂತು; ಉಪವಾಸಕ್ಕೆ ಸಿದ್ಧತೆ ಹೀಗಿರಲಿ...

ಸಾಂದರ್ಭಿಕ ಚಿತ್ರ | Photo Credit : freepik ಉಪವಾಸ ಧಾರ್ಮಿಕ ಆಚರಣೆಯಾಗಿದ್ದರೂ ತಿಂಗಳು ಪೂರ್ತಿ ಯೋಗಕ್ಷೇಮವನ್ನು ಕಾಪಾಡಿಕೊಳ್ಳಲು ಸಿದ್ಧತೆ ಮತ್ತು ಯೋಜನೆಯನ್ನು ರೂಪಿಸಿಕೊಳ್ಳಬೇಕಾಗುತ್ತದೆ. 2026ರ ರಮದಾನ್ ಸಮೀಪಿಸುತ್ತಿದ್ದಂತೆ ಜಾಗತಿಕವಾಗಿ ಲಕ್ಷಾಂತರ ಮಂದಿ ಉಪವಾಸ ಮಾಡಲು ಆಧ್ಯಾತ್ಮಿಕವಾಗಿ ಮಾತ್ರವಲ್ಲದೆ ದೈಹಿಕವಾಗಿಯೂ ತಯಾರಿ ನಡೆಸುತ್ತಿದ್ದಾರೆ. ಉಪವಾಸ ಧಾರ್ಮಿಕ ಆಚರಣೆಯಾಗಿದ್ದರೂ ತಿಂಗಳು ಪೂರ್ತಿ ಯೋಗಕ್ಷೇಮವನ್ನು ಕಾಪಾಡಿಕೊಳ್ಳಲು ಸಿದ್ಧತೆ ಮತ್ತು ಯೋಜನೆ ಅಗತ್ಯವಾಗುತ್ತದೆ. ಆ ನಿಟ್ಟಿನಲ್ಲಿ ಸ್ಥಳೀಯ ವೈದ್ಯರು ಮತ್ತು ಪ್ರತಿಷ್ಠಿತ ಜಾಗತಿಕ ಆರೋಗ್ಯ ಸಂಸ್ಥೆಗಳು ನೀಡಿರುವ ಒಳನೋಟಗಳು ಇಲ್ಲಿವೆ. ದೇಹದಲ್ಲಿ ಜಲಸಂಚಯನ ಚೆನ್ನಾಗಿರಬೇಕು ಉಪವಾಸದ ಯಶಸ್ಸಿನ ಪ್ರಮುಖ ಅಂಶಗಳಲ್ಲಿ ದೇಹದೊಳಗೆ ಸಮರ್ಪಕ ಜಲಸಂಚಯನವಾಗಿರುವುದು ಮುಖ್ಯ. ವಿಶ್ವ ಆರೋಗ್ಯ ಸಂಸ್ಥೆಯ ಪೂರ್ವ ಮೆಡಿಟರೇನಿಯನ್ ಪ್ರಾದೇಶಿಕ ಕಚೇರಿ ಸಲಹೆ ನೀಡಿರುವಂತೆ, ಉಪವಾಸವಿಲ್ಲದ ಸಮಯದಲ್ಲಿ ಸಾಕಷ್ಟು ನೀರು ಕುಡಿಯಬೇಕು. ಕನಿಷ್ಠ 8–10 ಗ್ಲಾಸ್ ನೀರು ಹಾಗೂ ಸೂಪ್‌ ಗಳಂತಹ ದ್ರವ ಆಹಾರಗಳೊಂದಿಗೆ ಕಲ್ಲಂಗಡಿ ಮತ್ತು ಸಲಾಡ್‌ ಗಳಂತಹ ತಾಜಾ ಹಣ್ಣುಗಳನ್ನು ಸೇವಿಸಬೇಕು. ಕಾಫಿ, ಚಹಾ ಅಥವಾ ಕೋಲಾ ಮೊದಲಾದ ಪಾನೀಯಗಳನ್ನು ಸಾಧ್ಯವಾದಷ್ಟು ತಪ್ಪಿಸುವುದು ಉತ್ತಮ. ಕೆಫೇನ್ ಮೂತ್ರವಿಸರ್ಜನೆಯನ್ನು ಹೆಚ್ಚಿಸಿ ನಿರ್ಜಲೀಕರಣಕ್ಕೆ ಕಾರಣವಾಗಬಹುದು. ಕಾರ್ನೆಲ್ ವಿಶ್ವವಿದ್ಯಾಲಯದ ಆರೋಗ್ಯ ಮತ್ತು ಯೋಗಕ್ಷೇಮ ಸೇವೆಯಾದ ಕಾರ್ನೆಲ್ ಹೆಲ್ತ್ ಕೂಡ ರಾತ್ರಿ ಸಮಯದಲ್ಲಿ ನಿಯಮಿತವಾಗಿ ದ್ರವಾಹಾರ ಸೇವಿಸಲು ಸಲಹೆ ನೀಡಿದೆ. ಆದರೆ ಒಂದೇ ಬಾರಿ ಹೆಚ್ಚು ಸೇವಿಸುವ ಬದಲು ಸ್ವಲ್ಪ ಸ್ವಲ್ಪ ಸೇವಿಸುವುದು ಒಳಿತು. ಒಂದೇ ಬಾರಿ ಅತಿಯಾಗಿ ಜಲಸಂಚಯನ ಮಾಡುವುದರಿಂದ ಎಲೆಕ್ಟ್ರೋಲೈಟ್ ಸಮತೋಲನ ದುರ್ಬಲಗೊಳ್ಳಬಹುದು. ಆಹಾರದಲ್ಲಿ ಪೌಷ್ಠಿಕಾಂಶ ಅಧಿಕವಿರಬೇಕು ಕಾರ್ನೆಲ್ ಹೆಲ್ತ್‌ನ ಪೌಷ್ಠಿಕ ತಜ್ಞರ ಪ್ರಕಾರ ಸಹರಿ ವೇಳೆ ಇಡೀ ಧಾನ್ಯಗಳು, ಪ್ರೋಟೀನ್, ಆರೋಗ್ಯಕರ ಕೊಬ್ಬುಗಳು ಹಾಗೂ ಹಣ್ಣು-ತರಕಾರಿಗಳು ಇರಬೇಕು. ಇದರಿಂದ ಶಕ್ತಿ ದೀರ್ಘಕಾಲ ಉಳಿಯುವುದರ ಜೊತೆಗೆ ರಕ್ತದಲ್ಲಿನ ಸಕ್ಕರೆ ಮಟ್ಟ ಸ್ಥಿರವಾಗಿರಲು ಸಹಕಾರಿ. ಉದಾಹರಣೆಗೆ ಇಡೀ ಧಾನ್ಯಗಳು ಅಥವಾ ಮೊಟ್ಟೆ, ಯೋಗರ್ಟ್ ಜೊತೆಗೆ ಹಣ್ಣುಗಳು ಮತ್ತು ಕಡಲೆಗಳು, ಅಥವಾ ಬ್ರೌನ್ ರೈಸ್ ಜೊತೆಗೆ ತರಕಾರಿಗಳನ್ನು ಸೇವಿಸಬಹುದು. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಸಹರಿ ಹಗುರವಾಗಿದ್ದರೂ ಪೌಷ್ಠಿಕಾಂಶ ಹೆಚ್ಚಿರಬೇಕು. ವಿಶೇಷವಾಗಿ ಹದಿಹರೆಯವರು, ವೃದ್ಧರು, ಗರ್ಭಿಣಿಯರು ಅಥವಾ ಹಾಲುಣಿಸುವ ತಾಯಂದಿರು ಪೌಷ್ಠಿಕ ಆಹಾರಕ್ಕೆ ಹೆಚ್ಚು ಆದ್ಯತೆ ನೀಡಬೇಕು. ಖರ್ಜೂರ ಮತ್ತು ನೀರು ಏಕೆ ಬೇಕು? ರಮದಾನ್ ಉಪವಾಸವನ್ನು ನೀರು ಮತ್ತು ಖರ್ಜೂರದೊಂದಿಗೆ ಮುರಿಯುವುದು ದೀರ್ಘಕಾಲದ ಅಭ್ಯಾಸವಾಗಿದೆ. ಇಫ್ತಾರ್‌ (ಉಪವಾಸ ಮುರಿಯುವ ಸಂಜೆಯ ಊಟ) ಅನ್ನು ನೀರು ಮತ್ತು ಖರ್ಜೂರದೊಂದಿಗೆ ಪ್ರಾರಂಭಿಸುವುದಕ್ಕೆ ಆರೋಗ್ಯದ ಕಾರಣಗಳೂ ಇವೆ. ಖರ್ಜೂರವು ದೇಹಕ್ಕೆ ನೈಸರ್ಗಿಕ ಸಕ್ಕರೆಯನ್ನು ಒದಗಿಸಿ ತಕ್ಷಣದ ಶಕ್ತಿಯನ್ನು ನೀಡುತ್ತದೆ. ನೀರು ಕುಡಿಯುವುದರಿಂದ ದೇಹಕ್ಕೆ ತಕ್ಷಣ ಜಲಸಂಚಯನವಾಗುತ್ತದೆ. ಉಪವಾಸದ ಸಂದರ್ಭದಲ್ಲಿ ಗಮನಿಸಬೇಕಾದ ಅಂಶಗಳು ♦   ಸುರಕ್ಷಿತವಾಗಿ ಮತ್ತು ಬುದ್ಧಿವಂತಿಕೆಯಿಂದ ಪೌಷ್ಠಿಕ ಆಹಾರಗಳನ್ನು ಆರಿಸಬೇಕು. ♦ ಪೌಷ್ಠಿಕ ಆಹಾರದ ಕಡೆ ಹೆಚ್ಚು ಗಮನ ನೀಡಬೇಕು. ♦  ಉಪವಾಸಕ್ಕೆ ಮೊದಲು ಕೆಫೇನ್ ಸೇವನೆಯನ್ನು ಕಡಿಮೆ ಮಾಡಬೇಕು. ♦  ಫ್ರೈಡ್ ಅಥವಾ ಹೆಚ್ಚು ಸಕ್ಕರೆ ಇರುವ ಆಹಾರವನ್ನು ತಪ್ಪಿಸಬೇಕು. ♦  ಉಪವಾಸದ ಸಂದರ್ಭದಲ್ಲಿ ಸಮರ್ಪಕ ವಿಶ್ರಾಂತಿ ಪಡೆಯಬೇಕು. ♦  ಮಧುಮೇಹ ಅಥವಾ ಹೃದಯ ರೋಗ ಇರುವವರು ಉಪವಾಸಕ್ಕೆ ಮೊದಲು ವೈದ್ಯರನ್ನು ಸಂಪರ್ಕಿಸಬೇಕು.

ವಾರ್ತಾ ಭಾರತಿ 11 Feb 2026 10:30 pm

ಕೊಪ್ಪಳ| ವಸತಿ ನಿಲಯದಲ್ಲಿ ವಿದ್ಯಾರ್ಥಿನಿಯೋರ್ವಳು ಮಗುವಿಗೆ ಜನ್ಮ ನೀಡಿದ ಪ್ರಕರಣ: ಅಮಾನತ್ತಾದ ಶಿಕ್ಷಕರ ಮರುನೇಮಕ

ಕುಕನೂರ: ವಸತಿ ನಿಲಯದಲ್ಲಿ ಓದುತ್ತಿದ್ದ ವಿದ್ಯಾರ್ಥಿನಿಯೊಬ್ಬಳು ಮಗುವಿಗೆ ಜನ್ಮ ನೀಡಿದ ಪ್ರಕರಣದ ಹಿನ್ನೆಲೆಯಲ್ಲಿ ಅಮಾನತ್ತುಗೊಂಡಿದ್ದ ಇಬ್ಬರು ಶಿಕ್ಷಕರನ್ನು ಮರು ಕರ್ತವ್ಯಕ್ಕೆ ನೇಮಕ ಮಾಡಲಾಗಿದೆ. ಮಹೇಶ್ವರ ವಿದ್ಯಾವರ್ಧಕ ಸಮಿತಿ(ರಿ) ಇಟಗಿ ಇದರ ಅಧೀನದಲ್ಲಿ ನಡೆಯುತ್ತಿರುವ ಮಹೇಶ್ವರ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಪ್ರೌಢ ಶಾಲಾ ವಿಭಾಗದ ಸಹ ಶಿಕ್ಷಕರಾದ ಪ್ರಭಾಕರ ಮಂಡಲಿಕಪ್ಪ ಭಜಂತ್ರಿ ಹಾಗೂ ಯಂಕಪ್ಪ ರಾಮಪ್ಪ ಅವರನ್ನು ಪ್ರಕರಣದ ತನಿಖೆ ಹಿನ್ನೆಲೆಯಲ್ಲಿ ಆಡಳಿತ ಮಂಡಳಿಯವರು ಅಮಾನತ್ತುಗೊಳಿಸಿದ್ದರು. ಈ ಕ್ರಮವನ್ನು ಕರ್ನಾಟಕ ಶಿಕ್ಷಣ ಅಧಿನಿಯಮದ ಪ್ರಕಾರ ಅನುಮೋದನೆಗಾಗಿ ಸಂಬಂಧಿತ ಅಧಿಕಾರಿಗಳಿಗೆ ಸಲ್ಲಿಸಲಾಗಿತ್ತು. ನಂತರ ಅಮಾನತ್ತುಗೊಂಡ ಶಿಕ್ಷಕರ ಮರು ನೇಮಕ ಕುರಿತು ಪ್ರಸ್ತಾವನೆ ಸಲ್ಲಿಕೆಯಾಗಿತ್ತು. ಇದೀಗ ಕರ್ನಾಟಕ ಶಿಕ್ಷಣ ಸಂಸ್ಥೆಗಳು (ಅನುದಾನಿತ ಖಾಸಗಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಂಸ್ಥೆಗಳ ನೌಕರರ ನೇಮಕಾತಿ ಮತ್ತು ಸೇವಾ ಷರತ್ತುಗಳು) ನಿಯಮಗಳು, 1999ರ ನಿಯಮ 2(1)(ಡಿ) ಪ್ರಕಾರ ಆಡಳಿತ ಮಂಡಳಿಯೇ ಶಿಸ್ತು ಪ್ರಾಧಿಕಾರಿಯಾಗಿರುವ ಹಿನ್ನೆಲೆಯಲ್ಲಿ ಅಗತ್ಯ ಆಡಳಿತಾತ್ಮಕ ಕ್ರಮಗಳ ಬಳಿಕ ಶಿಕ್ಷಕರನ್ನು ಮರು ಕರ್ತವ್ಯಕ್ಕೆ ನೇಮಕ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ. ಪ್ರಕರಣದ ತನಿಖೆ ಮುಂದುವರಿದಿರುವುದಾಗಿ ತಿಳಿದುಬಂದಿದೆ.

ವಾರ್ತಾ ಭಾರತಿ 11 Feb 2026 10:27 pm

ರಾಹುಲ್ ಮಂಕೂಟತ್ತಿಲ್ ಪ್ರಕರಣದ ಸಂತ್ರಸ್ತೆಯ ಮಾನಹಾನಿ: ವಕೀಲೆ ದೀಪಾ ಜೋಸೆಫ್ ರನ್ನು ತರಾಟೆಗೆ ತೆಗೆದುಕೊಂಡ ಸುಪ್ರೀಂ ಕೋರ್ಟ್

ಹೊಸದಿಲ್ಲಿ: ರಾಹುಲ್ ಮಂಕೂಟತ್ತಿಲ್ ಅತ್ಯಾಚಾರ ಪ್ರಕರಣದ ಸಂತ್ರಸ್ತೆಯೊಬ್ಬರ ವಿರುದ್ಧ ತಾನು ಮಾನಹಾನಿಕಾರಕ ಹೇಳಿಕೆ ನೀಡಿದ್ದಕ್ಕೆ ಸಂಬಂಧಿಸಿದಂತೆ ವಕೀಲೆ ದೀಪಾ ಜೋಸೆಫ್ ಸಲ್ಲಿಸಿದ್ದ ರಿಟ್ ಅರ್ಜಿಯನ್ನು ಮಂಗಳವಾರ ಸುಪ್ರೀಂ ಕೋರ್ಟ್ ವಜಾಗೊಳಿಸಿದೆ. ಪಾಲಕ್ಕಾಡ್ ಶಾಸಕರೂ ಆದ ರಾಹುಲ್ ಮಂಕೂಟತ್ತಿಲ್ ಅತ್ಯಾಚಾರ ಪ್ರಕರಣದ ಪ್ರಥಮ ದೂರುದಾರೆ ಸಂತ್ರಸ್ತೆಯೊಬ್ಬಳನ್ನು ಗುರಿಯಾಗಿಸಿಕೊಂಡು ತಾವು ಮಾಡಿದ್ದ ಫೇಸ್‌ಬುಕ್ ಪೋಸ್ಟ್‌ಗೆ ಸಂಬಂಧಿಸಿದಂತೆ ಕೇರಳ ಪೊಲೀಸರಿಂದ ಬಂಧನಕ್ಕೊಳಗಾಗುವ ಭೀತಿಯಿದ್ದು, ತನಗೆ ಬಂಧನದಿಂದ ರಕ್ಷಣೆ ನೀಡಬೇಕು ಎಂದು ದೀಪಾ ಜೋಸೆಫ್ ಸುಪ್ರೀಂ ಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಸಿದ್ದರು. ತಿರುವನಂತಪುರಂ ಸೈಬರ್ ಪೊಲೀಸರು ತಮ್ಮ ವಿರುದ್ಧ ಕೈಗೊಂಡಿದ್ದ ಕ್ರಮವನ್ನು ಪ್ರಶ್ನಿಸಿ ದೀಪಾ ಜೋಸೆಫ್ ಸಲ್ಲಿಸಿದ್ದ ರಿಟ್ ಅರ್ಜಿಯನ್ನು ವಜಾಗೊಳಿಸಿದ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಮತ್ತು ನ್ಯಾ. ಜೋಯ್ ಮಲ್ಯ ಬಾಗ್ಚಿಯವರನ್ನೊಳಗೊಂಡ ನ್ಯಾಯಪೀಠ, ವಿಚಾರಣೆಯ ವೇಳೆ ಅವರನ್ನು ತರಾಟೆಗೆ ತೆಗೆದುಕೊಂಡಿತು. “ನೀವು ಇಂಥ ಭಾಷೆಯಲ್ಲಿ ಬರೆಯುವುದನ್ನು ನಿರೀಕ್ಷಿಸಲು ಸಾಧ್ಯವೇ? ನೀವೊಬ್ಬ ವಕೀಲರು,” ಎಂದು ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಅವರು ದೀಪಾ ಜೋಸೆಫ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. “ನೀವು ನಿಮ್ಮ ನಿಘಂಟಿನಲ್ಲಿರುವ ಒಂದಕ್ಷರವನ್ನೂ ಬಿಟ್ಟಿಲ್ಲ. ಅದಕ್ಕೆ ನೀವೀಗಲೂ ವಿಷಾದಪಡುತ್ತಿಲ್ಲ! ನೀವೇನು ಬರೆದಿದ್ದೀರಿ ಎಂದು ನಾವು ಸಾರ್ವಜನಿಕವಾಗಿ ಓದಿ ಹೇಳೋಣವೇ?” ಎಂದು ಅವರು ಪ್ರಶ್ನಿಸಿದರು. ನಾನು ಓರ್ವ ಮಹಿಳೆ ಎಂಬ ನೆಲೆಯಲ್ಲಿ ನನ್ನ ಅರ್ಜಿಯ ವಿಚಾರಣೆ ನಡೆಸಬೇಕು ಎಂದು ದೀಪಾ ಜೋಸೆಫ್ ಪದೇಪದೇ ಮನವಿ ಮಾಡಿಕೊಂಡರೂ, “ಓರ್ವ ಮಹಿಳೆಯಾಗಿ ನೀವು ಮತ್ತೋರ್ವ ಮಹಿಳೆಯ ವಿರುದ್ಧ ಎಂಥ ಹೇಳಿಕೆಯನ್ನು ನೀಡಿದ್ದೀರಿ?” ಎಂದು ನ್ಯಾ. ಜೋಯ್ ಮಲ್ಯ ಬಾಗ್ಚಿ ಖಾರವಾಗಿ ಪ್ರಶ್ನಿಸಿದರು. ರಾಹುಲ್ ಮಂಕೂಟತ್ತಿಲ್ ಅತ್ಯಾಚಾರ ಪ್ರಕರಣದ ಸಂತ್ರಸ್ತೆಯನ್ನು ‘ಸೆಕ್ಸ್ ಬಾಂಬ್’ ಎಂದು ತಮ್ಮ ಫೇಸ್‌ಬುಕ್‌ನಲ್ಲಿ ನಿಂದಿಸಿದ್ದ ದೀಪಾ ಜೋಸೆಫ್, ಆಕೆ ರಾಹುಲ್ ಮಂಕೂಟತ್ತಿಲ್ ಅವರ ವಿಶ್ವಾಸಾರ್ಹತೆಯನ್ನು ಹಾಳುಗೆಡವುವ ಉದ್ದೇಶ ಹೊಂದಿದ್ದಳು ಎಂದು ಆರೋಪಿಸಿದ್ದರು. ಇದರೊಂದಿಗೆ ಅತ್ಯಾಚಾರ ಸಂತ್ರಸ್ತೆಯ ಚಾರಿತ್ರ್ಯ ಮತ್ತು ವೈವಾಹಿಕ ಸ್ಥಿತಿ ಕುರಿತು ಅಶ್ಲೀಲ ಹೇಳಿಕೆಗಳನ್ನು ನೀಡಿದ್ದರು. ಅಲ್ಲದೆ, “ನಿನ್ನ ಖಾಸಗಿ ವಿಚಾರಗಳನ್ನು ಸಾರ್ವಜನಿಕರ ಮುಂದೆ ಬಹಿರಂಗಪಡಿಸಲಾಗುವುದು” ಎಂದೂ ಆಕೆಗೆ ಬೆದರಿಕೆ ಒಡ್ಡಿದ್ದರು.

ವಾರ್ತಾ ಭಾರತಿ 11 Feb 2026 10:22 pm

CBFC ವಿರುದ್ಧ ಮದ್ರಾಸ್ ಹೈಕೋರ್ಟ್‌ ನಲ್ಲಿ ಅರ್ಜಿ; ವಾಪಸ್ ಪಡೆದ ‘ಜನನಾಯಗನ್’ ನಿರ್ಮಾಣ ಸಂಸ್ಥೆ

ಚೆನ್ನೈ: ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿಯ (ಸಿಬಿಎಫ್‌ಸಿ) ಪ್ರಮಾಣೀಕರಣ ಪ್ರಕ್ರಿಯೆಯನ್ನು ಪ್ರಶ್ನಿಸಿ ತಾನು ಸಲ್ಲಿಸಿದ್ದ ಅರ್ಜಿಯನ್ನು ‘ಜನನಾಯಗನ್’ ಚಿತ್ರ ನಿರ್ಮಾಣ ಸಂಸ್ಥೆ ಮಂಗಳವಾರ ಮದ್ರಾಸ್ ಹೈಕೋರ್ಟ್‌ನಿಂದ ಹಿಂಪಡೆದಿದೆ. ಅರ್ಜಿಯನ್ನು ಹಿಂಪಡೆಯಲು ನ್ಯಾ. ಪಿ.ಟಿ. ಆಶಾ ಅವರು ನಿರ್ಮಾಣ ಸಂಸ್ಥೆಗೆ ಸೋಮವಾರ ಅವಕಾಶ ನೀಡಿದ್ದರು. ‘ಜನನಾಯಗನ್’ ನಿರ್ಮಾಪಕರು ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿಯ ಪರಿಶೀಲನಾ ಸಮಿತಿಯೆದುರು ತಮ್ಮ ವಾದ ಮಂಡಿಸುವ ಸಾಧ್ಯತೆ ಇದೆ ಎಂದು ವರದಿಯಾಗಿದೆ. ಚಲನಚಿತ್ರದ ಕೆಲವು ದೃಶ್ಯಗಳು ಕೋಮು ಸೌಹಾರ್ದತೆಗೆ ಧಕ್ಕೆ ತರುತ್ತವೆ ಎಂಬ ದೂರುಗಳನ್ನು ಉಲ್ಲೇಖಿಸಿ, ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿಯು ಮೂಲತಃ ಜನವರಿ 9ರಂದು ಬಿಡುಗಡೆಯಾಗಬೇಕಿದ್ದ ‘ಜನನಾಯಗನ್’ ಚಲನಚಿತ್ರಕ್ಕೆ ಪ್ರಮಾಣಪತ್ರವನ್ನು ನಿರಾಕರಿಸಿತ್ತು. ಸಮಿತಿಯಲ್ಲಿ ಸಶಸ್ತ್ರ ಪಡೆಗಳ ತಜ್ಞರು ಇಲ್ಲದಿರುವುದು ಮತ್ತೊಂದು ಕಾರಣವೆಂದು ಪ್ರಮಾಣಪತ್ರ ನಿರಾಕರಣೆಗೆ ಉಲ್ಲೇಖಿಸಲಾಗಿತ್ತು. ಪ್ರಮಾಣಪತ್ರ ಕೋರಿ ‘ಜನನಾಯಗನ್’ ಚಲನಚಿತ್ರ ನಿರ್ಮಾಣ ಸಂಸ್ಥೆಯು ಮದ್ರಾಸ್ ಹೈಕೋರ್ಟ್ ಮೆಟ್ಟಿಲೇರಿತ್ತು. ಅರ್ಜಿಯ ವಿಚಾರಣೆ ನಡೆಸಿದ ನ್ಯಾ. ಪಿ.ಟಿ. ಆಶಾ ನೇತೃತ್ವದ ಏಕಸದಸ್ಯ ಪೀಠ, ಜನವರಿ 9ರಂದೇ ಪ್ರಮಾಣಪತ್ರವನ್ನು ವಿತರಿಸುವಂತೆ ಕೇಂದ್ರೀಯ ಚಲನಚಿತ್ರ ಪ್ರಮಾಣೀಕರಣ ಮಂಡಳಿಗೆ ಆದೇಶಿಸಿತ್ತು. ಇದರ ಬೆನ್ನಿಗೇ, ಕೇಂದ್ರೀಯ ಚಲನಚಿತ್ರ ಪ್ರಮಾಣೀಕರಣ ಮಂಡಳಿಯು ಮುಖ್ಯ ನ್ಯಾಯಮೂರ್ತಿ ಮಣೀಂದ್ರ ಮೋಹನ್ ಶ್ರೀವಾಸ್ತವ ಹಾಗೂ ನ್ಯಾ. ಜಿ. ಅರುಳ್ ಮುರುಗನ್ ಅವರನ್ನೊಳಗೊಂಡ ವಿಭಾಗೀಯ ಪೀಠದ ಮುಂದೆ ಮೇಲ್ಮನವಿ ಸಲ್ಲಿಸಿತ್ತು. ‘ಜನನಾಯಗನ್’ ಚಿತ್ರ ನಿರ್ಮಾಣ ಸಂಸ್ಥೆಗೆ ತನ್ನ ರಿಟ್ ಅರ್ಜಿಯನ್ನು ತಿದ್ದುಪಡಿ ಮಾಡಲು ಅವಕಾಶ ನೀಡಿದ್ದ ವಿಭಾಗೀಯ ಪೀಠ, ಏಕಸದಸ್ಯ ಪೀಠದ ಮುಂದೆ ಹೊಸದಾಗಿ ವಿಚಾರಣೆ ನಡೆಸಲು ಅರ್ಜಿಯನ್ನು ಪಟ್ಟಿ ಮಾಡಬೇಕು ಎಂದು ನಿರ್ದೇಶನ ನೀಡಿತ್ತು.

ವಾರ್ತಾ ಭಾರತಿ 11 Feb 2026 10:19 pm

ಪ್ರತಿಭಟನೆ, ಕಠಿಣ ನಿಯಂತ್ರಣ ಕ್ರಮಕ್ಕೆ ಕ್ಷಮೆ ಯಾಚಿಸಿದ ಇರಾನ್ ಅಧ್ಯಕ್ಷ

ಜೆರುಸಲೇಂ, ಫೆ. 11: ದೇಶದಲ್ಲಿ ಇತ್ತೀಚೆಗೆ ನಡೆದ ಪ್ರತಿಭಟನೆ ಮತ್ತು ಅದನ್ನು ನಿಯಂತ್ರಿಸಲು ಕೈಗೊಂಡ ಕಠಿಣ ಕ್ರಮಗಳಿಂದ ತೊಂದರೆಗೀಡಾದವರ ಕ್ಷಮೆ ಯಾಚಿಸುವುದಾಗಿ ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯಾನ್ ಬುಧವಾರ ಹೇಳಿದ್ದಾರೆ. ಇರಾನ್ ತನ್ನ 1979ರ ಇಸ್ಲಾಮಿಕ್ ಕ್ರಾಂತಿಯ ವಾರ್ಷಿಕೋತ್ಸವವನ್ನು ಬುಧವಾರ ಆಚರಿಸಿದ ಸಂದರ್ಭ ದೇಶವನ್ನುದ್ದೇಶಿಸಿ ಮಾತನಾಡಿದ ಪೆಜೆಶ್ಕಿಯಾನ್, `ಪಾಶ್ಚಿಮಾತ್ಯರ ಷಡ್ಯಂತ್ರದಿಂದ ನಡೆದಿದ್ದ ದೇಶವ್ಯಾಪಿ ಪ್ರತಿಭಟನೆ ಮತ್ತು ಅದನ್ನು ನಿಯಂತ್ರಿಸಲು ಕೈಗೊಂಡ ಕಠಿಣ ಕ್ರಮಗಳ ಸಂದರ್ಭ ಜನರು ತೀವ್ರ ನೋವು, ದುಃಖ ಅನುಭವಿಸಿರುವುದು ತನಗೆ ತಿಳಿದಿದೆ. ಈ ಘಟನೆಗಳಲ್ಲಿ ಹಾನಿಗೊಳಗಾದ ಎಲ್ಲರಿಗೂ ಸಹಾಯ ಮಾಡಲು ನಾವು ಬಾಧ್ಯರಾಗಿದ್ದೇವೆ. ನಾವು ಜನರೊಂದಿಗೆ ಸಂಘರ್ಷ ಬಯಸುವುದಿಲ್ಲ’ ಎಂದು ಹೇಳಿದ್ದಾರೆ. ಇರಾನ್ ಪರಮಾಣು ಅಸ್ತ್ರವನ್ನು ಬಯಸುವುದಿಲ್ಲ ಮತ್ತು ಯಾವುದೇ ಪರಿಶೀಲನೆಗೆ ಸಿದ್ಧವಿದೆ ಎಂದು ಇದೇ ಸಂದರ್ಭ ಪೆಜೆಶ್ಕಿಯಾನ್ ಹೇಳಿರುವುದಾಗಿ ವರದಿಯಾಗಿದೆ.

ವಾರ್ತಾ ಭಾರತಿ 11 Feb 2026 10:08 pm

ಕಲಬುರಗಿ| ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪಂಜಿನ ಮೆರವಣಿಗೆ

ಕಲಬುರಗಿ: ಜೆಸಿಟಿಯು (JCTU) ಹಾಗೂ ಎಸ್‌ಕೆಎಂ (SKM) ರೈತ-ಕಾರ್ಮಿಕ ಸಂಘಟನೆಗಳ ನೇತೃತ್ವದಲ್ಲಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನಗರದ ಸೂಪರ್ ಮಾರ್ಕೆಟ್ ಚೌಕ್ ಪೊಲೀಸ್ ಠಾಣೆಯಿಂದ ಜಗತ್ ಸರ್ಕಲ್‌ ವರೆಗೆ ಬುಧವಾರ ರಾತ್ರಿ ಪಂಜಿನ ಮೆರವಣಿಗೆ ನಡೆಯಿತು. ಮೆರವಣಿಗೆಯ ವೇಳೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ವಿರುದ್ಧ ಘೋಷಣೆಗಳು ಮೊಳಗಿದವು. ಜಗತ್ ವೃತ್ತದಲ್ಲಿ ನಡೆದ ಬಹಿರಂಗ ಸಭೆಯಲ್ಲಿ ರೈತ-ಕಾರ್ಮಿಕ ವಿರೋಧಿ ನೀತಿಗಳನ್ನು ಖಂಡಿಸಲಾಯಿತು. ಅತಿವೃಷ್ಟಿಗೆ ಪರಿಹಾರ ತಕ್ಷಣ ನೀಡಬೇಕು, ಬೆಳೆ ವಿಮೆ ಹಣ ಬಿಡುಗಡೆ ಮಾಡಬೇಕು, ತೊಗರಿಗೆ ಪ್ರೋತ್ಸಾಹಧನ ನೀಡಬೇಕು, 4 ಲೇಬರ್ ಕೋಡ್‌ಗಳನ್ನು ರದ್ದುಪಡಿಸಬೇಕು, ವಿ.ಬಿ.ಜಿ–ರಾಮಜಿ ಯೋಜನೆ ರದ್ದುಗೊಳಿಸಬೇಕು, ವಿದ್ಯುತ್ ಮಸೂದೆ ಹಾಗೂ ಬೀಜ ಮಸೂದೆ ಹಿಂಪಡೆಯಬೇಕು, ರೈತರ ಸಾಲ ಮನ್ನಾ ಮಾಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.   ಪ್ರತಿಭಟನೆಯಲ್ಲಿ ಕೆಪಿಆರ್‌ಎಸ್ ಜಿಲ್ಲಾ ಅಧ್ಯಕ್ಷ ಶರಣಬಸಪ್ಪ ಮಮಶೆಟ್ಟಿ, ಎಂ.ಬಿ. ಸಜ್ಜನ್, ಪ್ರಭುದೇವ ಯಳಸಂಗಿ, ವಿ.ಬಿ.ಜಿ–ರಾಮಜಿ, ಎಸ್.ಎಂ. ಶರ್ಮಾ, ಗೌರಮ್ಮ ಪಿ. ಪಾಟೀಲ್, ಜಾವೇದ ಮುಗಳಿ ಪತಕೆ, ನಾಗಯ್ಯ ಸ್ವಾಮಿ, ದಿಲೀಪ್ ಕುಮಾರ್ ನಾಗೂರೆ, ಸೆಖಮ್ಮ ಕುರಿ, ಮಂಜುಳಾ ಪೂಜಾರಿ, ಎಸ್.ಎಚ್. ಪತಕೆ, ನಾಗೇಂದ್ರಪ್ಪ ಥಂಬೆ, ಸಿದ್ದು ಎಸ್.ಎಲ್., ಕರೆಪ್ಪ ಕರಗೊಂಡ, ಪದ್ಮಿನಿ ಕಿರಣಗಿ, ಶಾಂತಾ ಸರಡಗಿ, ಸೇರಿದಂತೆ ಹಲವರು ಉಪಸ್ಥಿತರಿದ್ದರು.  

ವಾರ್ತಾ ಭಾರತಿ 11 Feb 2026 10:05 pm

ಚೆಂಡು ಮುಖಕ್ಕೆ ಬಡಿದು ಗಂಭೀರ ಗಾಯ: ಶಸ್ತ್ರಚಿಕಿತ್ಸೆಗೆ ಒಳಗಾದ ಬೆನ್ ಸ್ಟೋಕ್ಸ್

ಹೊಸದಿಲ್ಲಿ, ಫೆ. 11: ನೆಟ್ ಪ್ರಾಕ್ಟೀಸ್ ವೇಳೆ ಕ್ರಿಕೆಟ್ ಚೆಂಡು ಮುಖಕ್ಕೆ ಬಡಿದು ಗಂಭೀರ ಗಾಯಗೊಂಡ ಇಂಗ್ಲೆಂಡ್ ಟೆಸ್ಟ್ ತಂಡದ ನಾಯಕ ಬೆನ್ ಸ್ಟೋಕ್ಸ್ ಯಶಸ್ವಿ ಶಸ್ತ್ರಚಿಕಿತ್ಸೆಗೆ ಒಳಗಾದರು. ಈ ವಿಚಾರವನ್ನು ಸ್ವತಃ ಸ್ಟೋಕ್ಸ್ ಬಹಿರಂಗಪಡಿಸಿದ್ದಾರೆ. 34 ವರ್ಷದ ಆಲ್‌ರೌಂಡರ್ ಕಳೆದ ವಾರ ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಊದಿಕೊಂಡ ಹಾಗೂ ಮೂಗೇಟಿನಿಂದ ಕೂಡಿದ ಮುಖದ ಚಿತ್ರಗಳನ್ನು ಹಂಚಿಕೊಂಡಿದ್ದರು. ಮಂಗಳವಾರ ಆಸ್ಪತ್ರೆಯಿಂದ ಮತ್ತೊಂದು ಛಾಯಾಚಿತ್ರ ಹಂಚಿಕೊಂಡ ಅವರು ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದೆ ಎಂದು ದೃಢಪಡಿಸಿದರು. ಗಾಯದ ಗಂಭೀರತೆಯನ್ನು ಉಲ್ಲೇಖಿಸಿದ ಸ್ಟೋಕ್ಸ್ ಅಭಿಮಾನಿಗಳಿಗೆ ಧೈರ್ಯ ತುಂಬಿದರು. ಚೆಂಡು ತಗುಲಿದಾಗ ಅವರು ಬ್ಯಾಟಿಂಗ್ ಅಥವಾ ಬೌಲಿಂಗ್ ಮಾಡುತ್ತಿರಲಿಲ್ಲ; ನೆಟ್ ಪಕ್ಕದಲ್ಲಿ ನಿಂತಿದ್ದರು ಎಂದು ವರದಿಯಾಗಿದೆ. ಆಸ್ಟ್ರೇಲಿಯ ವಿರುದ್ಧ ಆ್ಯಶಸ್ ಸರಣಿಯನ್ನು 1–4ರಿಂದ ಸೋತ ನಿರಾಶೆಯಲ್ಲಿರುವ ಸ್ಟೋಕ್ಸ್‌ಗೆ ಈ ಶಸ್ತ್ರಚಿಕಿತ್ಸೆ ಮತ್ತೊಂದು ಸವಾಲಾಗಿದೆ. ನಾಯಕತ್ವ ಕಳೆದುಕೊಳ್ಳುವ ಸಾಧ್ಯತೆಯಿದ್ದರೂ ತಂಡವನ್ನು ಮುನ್ನಡೆಸುವ ಬಯಕೆಯನ್ನು ಪುನರುಚ್ಚರಿಸಿದ್ದಾರೆ. 2023ರ ವಿಶ್ವಕಪ್ ಬಳಿಕ ಸೀಮಿತ ಓವರ್ ಕ್ರಿಕೆಟ್‌ನಿಂದ ದೂರವಿರುವ ಅವರು, ಜೂನ್ 4ರಂದು ಲಾರ್ಡ್ಸ್‌ನಲ್ಲಿ ನ್ಯೂಝಿಲ್ಯಾಂಡ್ ವಿರುದ್ಧದ ಟೆಸ್ಟ್‌ಗೆ ಮುನ್ನ ಡರ್ಹಾಮ್ ಪರ ಕೌಂಟಿ ಕ್ರಿಕೆಟ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ವಾರ್ತಾ ಭಾರತಿ 11 Feb 2026 10:03 pm

ಕಲಬುರಗಿ: ನದಿಗೆ ಹಾರಿ ಯುವಕ ಆತ್ಮಹತ್ಯೆ

ಕಲಬುರಗಿ: ಜೀವನದಲ್ಲಿ ಜಿಗುಪ್ಸೆಗೊಂಡು ಯುವಕನೋರ್ವ ನಗರದ ಹೊರವಲಯದಲ್ಲಿರುವ ಕುರಿಕೋಟಾ ಸೇತುವೆ ಮೇಲಿಂದ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬುಧವಾರ ಬೆಳಕಿಗೆ ಬಂದಿದೆ. ನಗರದ ರೇವಣಸಿದ್ದೇಶ್ವರ ಕಾಲೋನಿಯ ನಿವಾಸಿ ಮಲ್ಲಿಕಾರ್ಜುನ ರಾಚಪ್ಪ ಪಾಟೀಲ್ (36) ಆತ್ಮಹತ್ಯೆ ಮಾಡಿಕೊಂಡ ಯುವಕ.  ಮಲ್ಲಿಕಾರ್ಜುನ್ ಪಾಟೀಲ್ ಸೋಮವಾರ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಎರಡು ದಿನಗಳ ಶೋಧ ಕಾರ್ಯಾಚರಣೆ ಬಳಿಕ ಮೃತದೇಹ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.   ಈ ಕುರಿತು ಮಹಾಗಾಂವ್‌ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಾರ್ತಾ ಭಾರತಿ 11 Feb 2026 10:01 pm

ರಾಜ್ಯಾದ್ಯಂತ 23 ಡಿವೈಎಸ್ಪಿ, 129 ಇನ್ಸ್ಪೆಕ್ಟರ್ಗಳ ವರ್ಗಾವಣೆ! ಪೊಲೀಸ್ ಇಲಾಖೆ ಮಹತ್ವದ ಆದೇಶ; ಯಾರೆಲ್ಲಾ ಬದಲಾವಣೆ?

ಕರ್ನಾಟಕದಾದ್ಯಂತ ಡಿವೈಎಸ್‌ಪಿ ಹಾಗೂ ಪೊಲೀಸ್‌ ಇನ್ಸ್‌ಪೆಕ್ಟರ್‌ಗಳ ವರ್ಗಾವಣೆ ಮಾಡಿ ಪೊಲೀಸ್‌ ಇಲಾಖೆ ಮಹತ್ವದ ಆದೇಶ ಹೊರಡಿಸಿದೆ. ರಾಜ್ಯದ 23 ಡಿವೈಎಸ್‌ಪಿಗಳು, 129 ಇನ್‌ಪೆಕ್ಟರ್‌ಗಳ ಸ್ಥಳ ಬದಲಾವಣೆಯಾಗಿದೆ. ತಕ್ಷಣವೇ ಹೊಸ ಸ್ಥಳಕ್ಕೆ ನಿಯೋಜನೆ ಮಾಡಿಕೊಳ್ಳಬೇಕು ಎಂದು ನಿರ್ದೇಶನ ನೀಡಲಾಗಿದೆ. ವರ್ಗಾವಣೆಗೊಂಡ ಪೊಲೀಸ್‌ ಅಧಿಕಾರಿಗಳ ಸಂಪೂರ್ಣ ಪಟ್ಟಿ ಇಲ್ಲಿದೆ.

ವಿಜಯ ಕರ್ನಾಟಕ 11 Feb 2026 10:00 pm

ICC T20 ರ‍್ಯಾಂಕಿಂಗ್: ಸಿಕಂದರ್ ರಝಾ ವಿಶ್ವದ ನಂ.1 ಆಲ್‌ರೌಂಡರ್

ದುಬೈ, ಫೆ.11: ಝಿಂಬಾಬ್ವೆ ಕ್ರಿಕೆಟ್ ತಂಡದ ನಾಯಕ ಸಿಕಂದರ್ ರಝಾ ಬುಧವಾರ ಬಿಡುಗಡೆಯಾದ ಪುರುಷರ ಟಿ-20 ಆಲ್‌ರೌಂಡರ್‌ಗಳ ರ‍್ಯಾಂಕಿಂಗ್‌ನಲ್ಲಿ ಅಗ್ರ ಸ್ಥಾನವನ್ನು ವಶಪಡಿಸಿಕೊಂಡಿದ್ದು, ಪಾಕಿಸ್ತಾನದ ಸಯೀಮ್ ಅಯ್ಯೂಬ್ ನಂ.1 ಆಲ್‌ರೌಂಡರ್ ಸ್ಥಾನವನ್ನು ಕಳೆದುಕೊಂಡಿದ್ದಾರೆ. ಈಗ ನಡೆಯುತ್ತಿರುವ ಟಿ-20 ವಿಶ್ವಕಪ್ ಟೂರ್ನಿಯಲ್ಲಿ ಝಿಂಬಾಬ್ವೆ ತಂಡವು ಒಮಾನ್ ವಿರುದ್ಧ ಸುಲಭ ಗೆಲುವು ದಾಖಲಿಸುವಲ್ಲಿ ರಝಾ ನೆರವಾಗಿದ್ದರು. ಆಲ್‌ರೌಂಡರ್ ರಝಾ ನಾಲ್ಕು ಓವರ್‌ಗಳಲ್ಲಿ 17 ರನ್‌ಗೆ ಒಂದು ವಿಕೆಟ್ ಪಡೆದಿದ್ದರು. ಗೆಲುವಿನ ರನ್ ದಾಖಲಿಸಿ ಝಿಂಬಾಬ್ವೆಗೆ ಎಂಟು ವಿಕೆಟ್‌ಗಳ ಗೆಲುವು ತಂದುಕೊಟ್ಟಿದ್ದರು. ಅಮೆರಿಕ ವಿರುದ್ಧ ಟಿ-20 ವಿಶ್ವಕಪ್ ಪಂದ್ಯದಲ್ಲಿ 73 ರನ್ ಗಳಿಸಿದ್ದ ಪಾಕಿಸ್ತಾನದ ಆರಂಭಿಕ ಬ್ಯಾಟರ್ ಸಾಹಿಬ್‌ಝದಾ ಫರ್ಹಾನ್ ಟಿ-20 ಬ್ಯಾಟರ್‌ಗಳ ಪಟ್ಟಿಯಲ್ಲಿ ಏಳನೇ ಸ್ಥಾನದಿಂದ ಮೂರನೇ ಸ್ಥಾನಕ್ಕೇರಿದ್ದಾರೆ. ಭಾರತದ ಆರಂಭಿಕ ಬ್ಯಾಟರ್ ಅಭಿಷೇಕ್ ಶರ್ಮಾ ಟಿ-20 ಬ್ಯಾಟರ್‌ಗಳ ಐಸಿಸಿ ರ‍್ಯಾಂಕಿಂಗ್‌ನಲ್ಲಿ ಅಗ್ರ ಸ್ಥಾನವನ್ನು ಕಾಯ್ದುಕೊಂಡಿದ್ದಾರೆ. ಪ್ರಸಕ್ತ ವಿಶ್ವಕಪ್‌ನಲ್ಲಿ ಸತತ ಅರ್ಧಶತಕಗಳನ್ನು ಗಳಿಸಿರುವ ಕಿವೀಸ್‌ನ ಟಿಮ್ ಸೀಫರ್ಟ್ ಒಂದು ಸ್ಥಾನ ಮೇಲಕ್ಕೇರಿ ಎಂಟನೇ ಸ್ಥಾನ ಪಡೆದಿದ್ದಾರೆ. ಭಾರತ ತಂಡದ ಇಶಾನ್ ಕಿಶನ್ ಟಿ-20 ಬ್ಯಾಟರ್‌ಗಳ ಪಟ್ಟಿಯಲ್ಲಿ ಏಳು ಸ್ಥಾನಗಳ ಭಡ್ತಿ ಪಡೆದು 25ನೇ ರ‍್ಯಾಂಕಿಗೆ ತಲುಪಿದ್ದಾರೆ. ಭಾರತದ ಸ್ಪಿನ್ನರ್ ವರುಣ್ ಚಕ್ರವರ್ತಿ ಟಿ-20 ಬೌಲರ್‌ಗಳ ರ‍್ಯಾಂಕಿಂಗ್‌ನಲ್ಲಿ ಈಗಲೂ ಅಗ್ರ ಸ್ಥಾನದಲ್ಲಿದ್ದಾರೆ. ಪಾಕಿಸ್ತಾನದ ಅಬ್ರಾರ್ ಅಹ್ಮದ್ ತೀವ್ರ ಪೈಪೋಟಿ ನೀಡುತ್ತಿದ್ದಾರೆ.

ವಾರ್ತಾ ಭಾರತಿ 11 Feb 2026 9:56 pm

ಕಲಬುರಗಿ| ರಮಝಾನ್ ಪ್ರಯುಕ್ತ ಶಾಸಕರ ನೇತೃತ್ವದಲ್ಲಿ ಸಭೆ

ಕಲಬುರಗಿ:  ರಮಝಾನ್  ಪ್ರಯುಕ್ತ ಉತ್ತರ ಮತಕ್ಷೇತ್ರದ ಶಾಸಕಿ ಕನೀಜ್ ಫಾತೀಮಾ ಮತ್ತು ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ್ ಅವರ ನೇತೃತ್ವದಲ್ಲಿ ಬುಧವಾರ ಐವನ್ ಎ ಶಾಹಿ ಅತಿಥಿಗೃಹದಲ್ಲಿ ಮಹಾನಗರ ಪಾಲಿಕೆ, ಜಿಎಸ್ಕಾಂ ಮತ್ತು ಪೊಲೀಸ್ ಅಧಿಕಾರಿಗಳ ವಿಶೇಷ ಸಭೆ ನಡೆಯಿತು. ರಮಝಾನ್ ಉಪವಾಸ ಬಿಡುವ ಸಂಜೆ ನಾಲ್ಕು ಗಂಟೆಯ ನಂತರ ನಗರ ಪ್ರಮುಖ ಪ್ರದೇಶಗಳಲ್ಲಿ ಜನದಟ್ಟಣೆ ಉಂಟಾಗುತ್ತದೆ. ಸೂಕ್ಷ್ಮ ಬಡಾವಣೆಗಳಲ್ಲಿ ಯಾವುದೇ ರೀತಿ ಅಹಿತಕರ ಘಟನೆಗಳು ಮತ್ತು ಶಾಂತಿ ಸುವ್ಯವಸ್ಥೆಗೆ ಧಕ್ಕೆ ಆಗದಂತೆ ಪೊಲೀಸ್ ಅಧಿಕಾರಿಗಳು ಎಚ್ಚರಿಕೆ ವಹಿಸಬೇಕು ಮತ್ತು ಸಂಚಾರಕ್ಕೆ ವ್ಯತ್ಯಯ ಆಗದಂತೆ ಟ್ರಾಫಿಕ್ ವ್ಯವಸ್ಥೆ ಮಾಡಬೇಕು ಎಂದು ಶಾಸಕರು ಸೂಚನೆ ನೀಡಿದರು. ಮಹಾನಗರ ಪಾಲಿಕೆಯ ಮಹಾಪೌರಾದ ವರ್ಷಾ ಜಾನೆ, ಉಪ ಮೇಯರ್‌ ತೃಪ್ತಿ ಲಾಖೆ ಅವರ ಸಮ್ಮುಖದಲ್ಲಿ ಪಾಲಿಕೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಶಾಸಕರು, ಉಪವಾಸದ ದಿನಗಳಲ್ಲಿ ನಿರಂತರ ವಿದ್ಯುತ್ ಸರಬರಾಜು, ರಾತ್ರಿ ವೇಳೆ ಬೀದಿ ದೀಪಗಳು, ನೀರಿನ ವ್ಯವಸ್ಥೆ, ಸ್ವಚ್ಛತೆ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು ಎಂದು ಪಾಲಿಕೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಸಭೆಯಲ್ಲಿ ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಜಹರ್ ಆಲಂ ಖಾನ್, ಕಾಂಗ್ರೆಸ್ ಮುಖಂಡ ಫರಾಜ್ ಉಲ್ ಇಸ್ಲಾಂ, ಪಾಲಿಕೆ ಸದಸ್ಯ ಸೈಯದ್ ಅಹ್ಮದ್, ಅಜ್ಮಲ್ ಗೋಲಾ ಸೇರಿದಂತೆ ಪಾಲಿಕೆ ಸದಸ್ಯರು ಮತ್ತು ಅಧಿಕಾರಿಗಳು ಉಪಸ್ಥಿತರಿದ್ದರು. 

ವಾರ್ತಾ ಭಾರತಿ 11 Feb 2026 9:56 pm

ಬಿಜೆಪಿಯ ರಿತು ತಾವ್ಡೆ ಮುಂಬೈ ಮೇಯರ್

ಶಿವಸೇನೆಯ ಸಂಜಯ್ ಘಾಡಿ ಉಪ ಮೇಯರ್

ವಾರ್ತಾ ಭಾರತಿ 11 Feb 2026 9:52 pm

ಅಮೆರಿಕ-ಭಾರತ ವ್ಯಾಪಾರ ಒಪ್ಪಂದದ ಫ್ಯಾಕ್ಟ್ ಶೀಟ್‌ ನಲ್ಲಿ ಬದಲಾವಣೆ; ಪರಿಷ್ಕೃತ ಆವೃತ್ತಿಯಲ್ಲಿ ಏನೇನಿದೆ?

ಭಾರತ-ಅಮೆರಿಕ ವ್ಯಾಪಾರ ಒಪ್ಪಂದಕ್ಕೆ ಸಂಬಂಧಿಸಿದ ಫ್ಯಾಕ್ಟ್‌ ಶೀಟ್ ಅನ್ನು ಶ್ವೇತಭವನ ಸೋಮವಾರ ಬಿಡುಗಡೆ ಮಾಡಿತ್ತು. ಉಭಯ ದೇಶಗಳ ನಡುವೆ ಫೆಬ್ರುವರಿ 6ರಂದು ಮಧ್ಯಂತರ ಒಪ್ಪಂದದ ಚೌಕಟ್ಟು ರೂಪುಗೊಂಡಿದ್ದು, ಇದಾದ ಮೂರು ದಿನಗಳಲ್ಲೇ ಫ್ಯಾಕ್ಟ್‌ ಶೀಟ್ ಬಿಡುಗಡೆಯಾಗಿದೆ. ಫ್ಯಾಕ್ಟ್‌ ಶೀಟ್‌ನ ಆರಂಭಿಕ ಆವೃತ್ತಿಯು ಒಪ್ಪಂದದ ಪ್ರಮುಖ ನಿಯಮಗಳನ್ನು ಹೈಲೈಟ್ ಮಾಡಿತ್ತು. ಇದರಲ್ಲಿ ಭಾರತವು ಅಮೆರಿಕದ ಎಲ್ಲ ಕೈಗಾರಿಕಾ ಸರಕುಗಳು ಹಾಗೂ ಒಣ ಡಿಸ್ಟಿಲರ್‌ ಧಾನ್ಯಗಳು (DDGs), ಕೆಂಪು ಜೋಳ, ಬೀಜಗಳು, ತಾಜಾ ಮತ್ತು ಸಂಸ್ಕರಿಸಿದ ಹಣ್ಣುಗಳು, “ಕೆಲವು ದ್ವಿದಳ ಧಾನ್ಯಗಳು”, ಸೋಯಾಬೀನ್ ಎಣ್ಣೆ, ವೈನ್ ಮತ್ತು ಸ್ಪಿರಿಟ್‌ಗಳು ಹಾಗೂ ಹೆಚ್ಚುವರಿ ಉತ್ಪನ್ನಗಳು ಸೇರಿದಂತೆ ವ್ಯಾಪಕ ಶ್ರೇಣಿಯ ಯುಎಸ್ ಆಹಾರ ಮತ್ತು ಕೃಷಿ ಉತ್ಪನ್ನಗಳ ಮೇಲಿನ ಸುಂಕಗಳನ್ನು ತೆಗೆದುಹಾಕುತ್ತದೆ ಅಥವಾ ಕಡಿಮೆ ಮಾಡುತ್ತದೆ ಎಂದು ಉಲ್ಲೇಖಿಸಲಾಗಿತ್ತು. ಮಂಗಳವಾರ (ಫೆಬ್ರವರಿ 10, 2026) ಹೊರಡಿಸಲಾದ ಪರಿಷ್ಕೃತ ಫ್ಯಾಕ್ಟ್‌ ಶೀಟ್ ದ್ವಿದಳ ಧಾನ್ಯಗಳ ಕುರಿತ ಉಲ್ಲೇಖವನ್ನು ತೆಗೆದುಹಾಕಿದ್ದು, ಭಾರತಕ್ಕೆ ಬಳಸಲಾದ “committed” ಪದವನ್ನು “intends” ಎಂದು ಬದಲಾಯಿಸಿದೆ. ಭಾರತವು ಅಮೆರಿಕದ ಎಲ್ಲಾ ಕೈಗಾರಿಕಾ ಸರಕುಗಳು ಮತ್ತು ಸೊಲ್ಯೂಬಲ್ಸ್ ಜೊತೆಗೆ ಒಣಗಿದ ಧಾನ್ಯಗಳು (DDGs), ಕೆಂಪು ಜೋಳ, ಬೀಜಗಳು, ತಾಜಾ ಮತ್ತು ಸಂಸ್ಕರಿಸಿದ ಹಣ್ಣುಗಳು, ಸೋಯಾಬೀನ್ ಎಣ್ಣೆ, ವೈನ್ ಮತ್ತು ಸ್ಪಿರಿಟ್‌ಗಳು ಹಾಗೂ ಹೆಚ್ಚುವರಿ ಉತ್ಪನ್ನಗಳು ಸೇರಿದಂತೆ ವ್ಯಾಪಕ ಶ್ರೇಣಿಯ ಅಮೆರಿಕದ ಆಹಾರ ಮತ್ತು ಕೃಷಿ ಉತ್ಪನ್ನಗಳ ಮೇಲಿನ ಸುಂಕವನ್ನು ತೆಗೆದುಹಾಕುತ್ತದೆ ಅಥವಾ ಕಡಿಮೆ ಮಾಡುತ್ತದೆ ಎಂದು ಇದರಲ್ಲಿದೆ. “ಭಾರತವು ಹೆಚ್ಚಿನ ಅಮೆರಿಕನ್ ಉತ್ಪನ್ನಗಳನ್ನು ಖರೀದಿಸಲು ಮತ್ತು 500 ಶತಕೋಟಿ ಡಾಲರ್‌ಗಿಂತ ಹೆಚ್ಚಿನ ಅಮೆರಿಕನ್ ಇಂಧನ, ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ, ಕಲ್ಲಿದ್ದಲು ಹಾಗೂ ಇತರ ಉತ್ಪನ್ನಗಳನ್ನು ಖರೀದಿಸಲು ಉದ್ದೇಶಿಸಿದೆ” ಎಂದು ಪರಿಷ್ಕೃತ ಫ್ಯಾಕ್ಟ್‌ ಶೀಟ್ ಹೇಳಿದೆ. ವ್ಯಾಪಾರ ಒಪ್ಪಂದದ ಕುರಿತು ಕಳೆದ ವಾರ ಬಿಡುಗಡೆಯಾದ ಜಂಟಿ ಹೇಳಿಕೆಯಲ್ಲಿ ಭಾರತವು ಅಮೆರಿಕದ ಉತ್ಪನ್ನಗಳಿಗೆ ಸುಂಕವನ್ನು ತೆಗೆದುಹಾಕುವ ಅಥವಾ ಕಡಿಮೆ ಮಾಡುವ ವಸ್ತುಗಳಲ್ಲಿ “ದ್ವಿದಳ ಧಾನ್ಯಗಳ” ಬಗ್ಗೆ ಯಾವುದೇ ಉಲ್ಲೇಖ ಮಾಡಿಲ್ಲ. “ಮುಂದಿನ 5 ವರ್ಷಗಳಲ್ಲಿ ಭಾರತವು 500 ಶತಕೋಟಿ ಡಾಲರ್‌ ಮೌಲ್ಯದ ಅಮೆರಿಕನ್ ಇಂಧನ ಉತ್ಪನ್ನಗಳು, ವಿಮಾನ ಭಾಗಗಳು, ಅಮೂಲ್ಯ ಲೋಹಗಳು, ತಂತ್ರಜ್ಞಾನ ಉತ್ಪನ್ನಗಳು ಮತ್ತು ಕೋಕಿಂಗ್ ಕಲ್ಲಿದ್ದಲನ್ನು ಖರೀದಿಸಲು ಉದ್ದೇಶಿಸಿದೆ” ಎಂದು ಜಂಟಿ ಹೇಳಿಕೆಯಲ್ಲಿ ಹೇಳಲಾಗಿದೆ. ಫ್ಯಾಕ್ಟ್ ಶೀಟ್‌ನಲ್ಲಿ ಆಗಿರುವ ಬದಲಾವಣೆಗಳೇನು? ದ್ವಿದಳ ಧಾನ್ಯಗಳ ಮೇಲಿನ ಸುಂಕಗಳು ಅಮೆರಿಕ-ಭಾರತ ವ್ಯಾಪಾರ ಒಪ್ಪಂದದ ಫ್ಯಾಕ್ಟ್‌ ಶೀಟ್‌ನಲ್ಲಿ ಮಾಡಲಾದ ಪ್ರಮುಖ ಪರಿಷ್ಕರಣೆ ದ್ವಿದಳ ಧಾನ್ಯಗಳ ಮೇಲಿನ ಸುಂಕಗಳಿಗೆ ಸಂಬಂಧಿಸಿದೆ. ಆರಂಭಿಕ ಫ್ಯಾಕ್ಟ್‌ ಶೀಟ್‌ ನಲ್ಲಿ ಭಾರತವು ಅಮೆರಿಕದ ಕೆಲವು ದ್ವಿದಳ ಧಾನ್ಯಗಳ ಮೇಲಿನ ಸುಂಕಗಳನ್ನು ಕಡಿಮೆ ಮಾಡುತ್ತದೆ ಅಥವಾ ತೆಗೆದುಹಾಕುತ್ತದೆ ಎಂದು ಉಲ್ಲೇಖಿಸಲಾಗಿತ್ತು. ಆದರೆ ಪರಿಷ್ಕೃತ ಪ್ಯಾರಾಗ್ರಾಫ್‌ನಲ್ಲಿ ದ್ವಿದಳ ಧಾನ್ಯಗಳ ಉಲ್ಲೇಖ ಇಲ್ಲ. ಕೃಷಿ ಆಮದುಗಳು, ವಿಶೇಷವಾಗಿ ದ್ವಿದಳ ಧಾನ್ಯಗಳು, ಭಾರತದ ಕೃಷಿ ವಲಯಕ್ಕೆ ಸೂಕ್ಷ್ಮವಾಗಿವೆ. ಭಾರತವು ವಿಶ್ವದ ಅತಿದೊಡ್ಡ ಉತ್ಪಾದಕ (ಜಾಗತಿಕ ಉತ್ಪಾದನೆಯ ಸುಮಾರು 25–28%) ಮತ್ತು ದ್ವಿದಳ ಧಾನ್ಯಗಳ ಪ್ರಮುಖ ಗ್ರಾಹಕವೂ ಆಗಿದೆ. ಕೆಲವು ತಿಂಗಳ ಹಿಂದೆ ವ್ಯಾಪಾರ ಮಾತುಕತೆಗಳಲ್ಲಿನ ಬಿಕ್ಕಟ್ಟಿನ ನಡುವೆ ಅಮೆರಿಕದ ಇಬ್ಬರು ಸೆನೆಟರ್‌ಗಳು ಟ್ರಂಪ್‌ ಗೆ ಪತ್ರ ಬರೆದು ಭಾರತವು ಅಮೆರಿಕದ ದ್ವಿದಳ ಧಾನ್ಯಗಳ ಮೇಲಿನ 30% ಆಮದು ಸುಂಕವನ್ನು ತೆಗೆದುಹಾಕುವಂತೆ ಒತ್ತಾಯಿಸಿದ್ದರು. ನವೆಂಬರ್ 1ರಿಂದ ಜಾರಿಗೆ ಬಂದ ಈ ಸುಂಕವನ್ನು ಕಳೆದ ವರ್ಷ ಟ್ರಂಪ್ ವಿಧಿಸಿದ್ದ 50% ಸುಂಕಗಳಿಗೆ ಪ್ರತೀಕಾರವಾಗಿ ನೋಡಲಾಗಿತ್ತು. ಆದಾಗ್ಯೂ, ಅದನ್ನು ಈಗ ವ್ಯಾಪಾರ ಒಪ್ಪಂದದ ಭಾಗವಾಗಿ 18%ಕ್ಕೆ ಇಳಿಸಲಾಗಿದೆ. 500 ಶತಕೋಟಿ ಡಾಲರ್ ಖರೀದಿ ಪ್ರಸ್ತಾವನೆ ಫ್ಯಾಕ್ಟ್‌ ಶೀಟ್‌ನಲ್ಲಿನ ಎರಡನೇ ಪ್ರಮುಖ ಬದಲಾವಣೆ ಅಮೆರಿಕದಿಂದ ಭಾರತದ ಪ್ರಸ್ತಾವಿತ ಸರಕುಗಳ ಖರೀದಿಗೆ ಸಂಬಂಧಿಸಿದೆ. ಹಿಂದಿನ ಆವೃತ್ತಿಯಲ್ಲಿ ಭಾರತವು ಐದು ವರ್ಷಗಳಲ್ಲಿ ಅಮೆರಿಕದಿಂದ 500 ಶತಕೋಟಿ ಡಾಲರ್‌ ಮೌಲ್ಯದ ಸರಕು ಮತ್ತು ಸೇವೆಗಳನ್ನು ಖರೀದಿಸಲು “ಬದ್ಧವಾಗಿದೆ” ಎಂದು ಹೇಳಲಾಗಿತ್ತು. ಪರಿಷ್ಕೃತ ಆವೃತ್ತಿಯಲ್ಲಿ “ಬದ್ಧ” ಎಂಬುದನ್ನು “ಉದ್ದೇಶ” ಎಂದು ಬದಲಾಯಿಸಲಾಗಿದೆ. ಹಿಂದಿನ ಫ್ಯಾಕ್ಟ್‌ ಶೀಟ್‌ನಲ್ಲಿ ಕೃಷಿ ಸರಕುಗಳ ಉಲ್ಲೇಖವಿದ್ದರೆ, ಪರಿಷ್ಕೃತ ಆವೃತ್ತಿಯಲ್ಲಿ “ಕೃಷಿ ಸರಕುಗಳು” ಎಂಬ ಉಲ್ಲೇಖವನ್ನು ತೆಗೆದುಹಾಕಲಾಗಿದೆ. ಡಿಜಿಟಲ್ ಸೇವೆಗಳು ಫ್ಯಾಕ್ಟ್‌ ಶೀಟ್‌ನಲ್ಲಿನ ಮತ್ತೊಂದು ಬದಲಾವಣೆ ಭಾರತದ ಡಿಜಿಟಲ್ ಸೇವಾ ತೆರಿಗೆ (DST)ಗೆ ಸಂಬಂಧಿಸಿದೆ. ಹಿಂದಿನ ಆವೃತ್ತಿಯಲ್ಲಿ ಭಾರತ ತನ್ನ ಡಿಜಿಟಲ್ ಸೇವಾ ತೆರಿಗೆಗಳನ್ನು “ತೆಗೆದುಹಾಕಲಾಗುತ್ತದೆ” ಎಂದು ಉಲ್ಲೇಖಿಸಲಾಗಿತ್ತು. ಭಾರತದ ಅಧಿಕೃತ ಹೇಳಿಕೆಯಲ್ಲಿ ಇದಕ್ಕೆ ಉಲ್ಲೇಖ ಇರದ ಕಾರಣ ಗೊಂದಲ ಉಂಟಾಗಿತ್ತು. ಈಗ ಶ್ವೇತಭವನ ತನ್ನ ಇತ್ತೀಚಿನ ಆವೃತ್ತಿಯಲ್ಲಿ ಡಿಜಿಟಲ್ ಸರ್ವಿಸ್ ಟ್ಯಾಕ್ಸ್ ತೆಗೆದುಹಾಕಲಾಗುತ್ತದೆ ಎಂಬ ವಾಕ್ಯವನ್ನು ಕೈಬಿಟ್ಟಿದೆ. ಭಾರತ-ಯುಎಸ್ ತಂತ್ರಜ್ಞಾನ ಸಹಯೋಗ ಹೊಸದಾಗಿ ಘೋಷಿಸಲಾದ ಮಧ್ಯಂತರ ವ್ಯಾಪಾರ ಒಪ್ಪಂದದ ಅಡಿಯಲ್ಲಿ ಎರಡೂ ದೇಶಗಳು ಡಿಜಿಟಲ್ ವ್ಯಾಪಾರ ಮತ್ತು ತಂತ್ರಜ್ಞಾನ ವಲಯದಲ್ಲಿ ಸಹಯೋಗವನ್ನು ಗಾಢಗೊಳಿಸಲು ಮಾರ್ಗಸೂಚಿ ರೂಪಿಸಿವೆ. ಗ್ರಾಫಿಕ್ಸ್ ಪ್ರಾಸೆಸಿಂಗ್ ಯೂನಿಟ್‌ಗಳು (GPUಗಳು) ಸೇರಿದಂತೆ ಪ್ರಮುಖ ತಂತ್ರಜ್ಞಾನ ಉತ್ಪನ್ನಗಳ ಮೇಲೆ ಗಮನ ಕೇಂದ್ರೀಕರಿಸಲಾಗುತ್ತದೆ. ಭಾರತ-ಯುಎಸ್ ವ್ಯಾಪಾರ ಪ್ರಮಾಣ USDA ಬಿಡುಗಡೆ ಮಾಡಿದ ದತ್ತಾಂಶದ ಪ್ರಕಾರ, 2024ರಲ್ಲಿ ಭಾರತಕ್ಕೆ ಅಮೆರಿಕದ ಒಟ್ಟು ಕೃಷಿ ಮತ್ತು ಆಹಾರ ರಫ್ತುಗಳು 2.25 ಬಿಲಿಯನ್ ಡಾಲರ್ ಮೌಲ್ಯದ್ದಾಗಿದ್ದು, ವಿಶೇಷವಾಗಿ ಬಾದಾಮಿ ಪ್ರಮುಖವಾಗಿವೆ. ಭಾರತವು 2024ರಲ್ಲಿ ಅಮೆರಿಕದಿಂದ 1.12 ಬಿಲಿಯನ್ ಡಾಲರ್‌ ಮೌಲ್ಯದ ಬೀಜಗಳನ್ನು ಆಮದು ಮಾಡಿಕೊಂಡಿದೆ. ಇತರ ಆಮದುಗಳಲ್ಲಿ ಎಥೆನಾಲ್, ಹತ್ತಿ, ದ್ವಿದಳ ಧಾನ್ಯಗಳು, ಸಸ್ಯಜನ್ಯ ತೈಲ, ತಾಜಾ ಹಣ್ಣು ಮತ್ತು ಸೋಯಾಬೀನ್ ಎಣ್ಣೆ ಸೇರಿವೆ. 2024ರಲ್ಲಿ ಅಮೆರಿಕಕ್ಕೆ ಭಾರತದ ಕೃಷಿ ಮತ್ತು ಆಹಾರ ರಫ್ತುಗಳು ಸುಮಾರು ಮೂರು ಪಟ್ಟು ಹೆಚ್ಚಾಗಿ 6.2 ಬಿಲಿಯನ್ ಡಾಲರ್ ಆಗಿವೆ. ಸಮುದ್ರ ಉತ್ಪನ್ನಗಳು, ಮಸಾಲೆಗಳು, ಅಕ್ಕಿ ಮತ್ತು ಡೈರಿ ಉತ್ಪನ್ನಗಳು ಇದರಲ್ಲಿ ಸೇರಿವೆ. ಇದು ಭಾರತವು ತನ್ನ ದೇಶೀಯ ಮಾರುಕಟ್ಟೆಯನ್ನು ಮತ್ತಷ್ಟು ತೆರೆಯುವ ವಿಷಯದಲ್ಲಿ ಜಾಗರೂಕತೆಯನ್ನು ವಹಿಸಿರುವುದನ್ನು ಸೂಚಿಸುತ್ತದೆ.

ವಾರ್ತಾ ಭಾರತಿ 11 Feb 2026 9:45 pm

ಆಹಾರದಲ್ಲಿ ದೋಷ: ಅಸ್ವಸ್ಥಗೊಂಡಿದ್ದ ಎನ್‌ಐಟಿಕೆ ವಿದ್ಯಾರ್ಥಿಗಳ ಚೇತರಿಕೆ

ಮಂಗಳೂರು : ಆಹಾರ ಸೇವೆನೆಯಿಂದ ಅಸ್ವಸ್ಥಗೊಂಡಿದ್ದರೆನ್ನಳಾದ ಸುರತ್ಕಲ್‌ನ ರಾಷ್ಟ್ರೀಯ ತಾಂತ್ರಿಕ ಸಂಸ್ಥೆ ಕರ್ನಾಟಕ (ಎನ್‌ಐಟಕೆ ) ವಿದ್ಯಾರ್ಥಿಗಳು ಚೇತರಿಸಿಕೊಂಡಿದ್ದಾರೆ. ಸುಮಾರು 50ಕ್ಕೂ ಅಧಿಕ ಮಂದಿಗೆ ಹೊಟ್ಟೆ ನೋವು, ವಾಂತಿ ಭೇದಿ ಸಮಸ್ಯೆ ಉಂಟಾಗಿತ್ತು ಎಂದು ತಿಳಿದು ಬಂದಿದೆ. ಈ ಘಟನೆಯ ಪ್ರತಿಕ್ರಿಯೆ ನೀಡಿರುವ ಎನ್‌ಐಟಿಕೆ ಯಾರೂ ಗಾಬರಿಪಡಬೇಕಾದ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ. ಎನ್‌ಐಟಕೆಯಲ್ಲಿ ಫೆ.4ರಿಂದ 8ರಿಂದ ವಿರಾಸತ್ ಸಾಂಸ್ಕೃತಿಕ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ವೇಳೆ ಎನ್‌ಐಟಿಕೆ ಆವರಣದಲ್ಲಿ ಆಹಾರ ಮೇಳವನ್ನು ಆಯೋಜಿಸಲಾಗಿತ್ತು. ಇಲ್ಲಿಗೆ ಹೊರಗಿನ ಫುಡ್ ಸ್ಟಾಲ್‌ ಗಳು ಬಂದಿದ್ದವು. ವಿದ್ಯಾರ್ಥಿಗಳು ಅಸ್ವಸ್ಥಗೊಳ್ಳಲು ಸ್ಪಷ್ಟ ಕಾರಣ ತಿಳಿದು ಬಂದಿಲ್ಲ. ವಿದ್ಯಾರ್ಥಿಗಳು ಅಸ್ವಸ್ಥ ಗೊಳ್ಳಲು ಫುಡ್ ಸ್ಟಾಲ್‌ನ ಆಹಾರ, ಮೆಸ್‌ನ ಆಹಾರ ಅಥವಾ ನೀರು ಕಾರಣವೇ ಎನ್ನುವುದನ್ನು ಪತ್ತೆಹಚ್ಚಲು ಆಹಾರ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಿಕೊಡಲಾಗಿದೆ ಎಂದು ಎನ್‌ಐಟಿಕೆ ಮೂಲಗಳು ತಿಳಿಸಿವೆ. ಆಹಾರ ಸೇವೆನೆಯಿಂದ ಅಸ್ವಸ್ಥಗೊಂಡಿದ್ದ ವಿದ್ಯಾರ್ಥಿಗಳ ಪೈಕಿ ಸುಮಾರು 50 ಮಂದಿ ಎನ್‌ಐಟಿಕೆ ಹೆಲ್ತ್ ಕೇರ್ ಸೆಂಟರ್‌ನಲ್ಲಿ ಚಿಕಿತ್ಸೆ ಪಡೆದು ಚೇತರಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಮೊದಲ ಸೆಮಿಸ್ಟರ್‌ನ ವಿದ್ಯಾರ್ಥಿಗಳ ಪೈಕಿ ಕೆಲವರು ಇಂತಹ ಸಮಸ್ಯೆ ಎದುರಿಸಿದ್ದಾರೆ ಎಂದು ತಿಳಿದು ಬಂದಿದೆ. ಎನ್‌ಐಟಕೆ ಸಂಸ್ಥೆಯ ವಿವಿಧ ವಸತಿಗೃಹಗಳಲ್ಲಿ ಸುಮಾರು 7,000 ವಿದ್ಯಾರ್ಥಿಗಳನ್ನು ನೆಲೆಸಿದ್ದಾರೆ. ವಿದ್ಯಾರ್ಥಿ ಸಂಘವು ವರ್ಷಪೂರ್ತಿ ಸಾಂಸ್ಕೃತಿಕ ಮತ್ತು ಕ್ರೀಡಾ ಕಾರ್ಯಕ್ರಮಗಳನ್ನು ಆಯೋಜಿಸುತ್ತದೆ. 2026ಜನವರಿ 31 ರಿಂದ ಫೆ.1ರ ತನಕ ಎಂಡೆವರ್ ಎಂಬ ಮೊದಲ ಕ್ರೀಡಾ ಉತ್ಸವವನ್ನು ಯಶಸ್ವಿಯಾಗಿ ಆಯೋಜಿಸಿತ್ತು.  ಇದಾದ ನಂತರ, ಫೆಬ್ರವರಿ 4ರಿಂದ 8ರ ತನಕ ವಿರಾಸತ್ ಎಂಬ ಸಾಂಸ್ಕೃತಿಕ ಉತ್ಸವವನ್ನು ಆಯೋಜಿಸಲಾಗಿತ್ತು. ವಿರಾಸತ್ ಸಂದರ್ಭದಲ್ಲಿ, ವಿದ್ಯಾರ್ಥಿಗಳ ವಿನಂತಿಯ ಮೇರೆಗೆ ಹೊರಗಿನ ಮಾರಾಟಗಾರರಿಂದ ಫುಡ್ ಸ್ಟಾಲ್‌ ಗಳನ್ನು ಕ್ಯಾಂಪಸ್‌ನ ಸ್ಥಾಪಿಸಲು ಅನುಮತಿ ನೀಡಲಾಗಿತ್ತು. ಇಂತಹ ಕೆಲವು ಸ್ಟಾಲ್‌ಗಳಲ್ಲಿ ಆಹಾರ ಸೇವಿಸಿದವರ ಪೈಕಿ ಕೆಲವು ವಿದ್ಯಾರ್ಥಿಗಳಿಗೆ ಸಮಸ್ಯೆ ಕಾಣಿಸಿಕೊಂಡಿದೆ. ಸಂಸ್ಥೆಯ ಆರೋಗ್ಯ ಕೇಂದ್ರದಲ್ಲಿ ಅಗತ್ಯ ವೈದ್ಯಕೀಯ ಚಿಕಿತ್ಸೆ ನೀಡಲಾಗಿತ್ತು. ಕ್ಯಾಂಪಸ್‌ನಲ್ಲಿ ಕೆಲವು ಆಹಾರ ಮಳಿಗೆಗಳಲ್ಲಿ ಆಹಾರ ಸೇವಿಸಿರುವುದು ಈ ಸಮಸ್ಯೆಗೆ ಕಾರಣ ಎನ್ನುವ ಗುಮಾನಿ ವ್ಯಕ್ತವಾಗಿದೆ. ಮುನ್ನಚ್ಚೆರಿಕೆ ಕ್ರಮವಾಗಿ ಕ್ಯಾಂಸ್‌ನಲ್ಲಿರುವ ಎಲ್ಲಾ ನೀರಿನ ಫಿಲ್ಟರ್‌ಗಳನ್ನು ಸಂಪೂರ್ಣವಾಗಿ ಪರಿಶೀಲಿಸಲಾಗಿದ್ದು, ಅವು ಉತ್ತಮ ಸ್ಥಿತಿಯಲ್ಲಿವೆ ಎಂದು ದೃಢಪಟ್ಟಿದೆ.ನೀರಿನ ಮಾದರಿಗಳನ್ನು ಬಾಹ್ಯ ಪ್ರಯೋಗಾಲಯಗಳಿಗೆ ಕಳುಹಿಸಲಾಗಿದ್ದು, ನಿಖರತೆ ಮತ್ತು ಪಾರದರ್ಶಕತೆಯನ್ನು ಖಚಿತಪಡಿಸಲು ವರದಿಗಳನ್ನು ನಿರೀಕ್ಷಿಸಲಾಗುತ್ತಿ ಎಂದು ಎನ್‌ಐಟಿಕೆ ಮೂಲಗಳು ತಿಳಿಸಿವೆ. ಎಲ್ಲಾ ವಸತಿಗೃಹ ಮೆಸ್‌ಗಳಿಗೆ ಅಡುಗೆ ಮತ್ತು ಕುಡಿಯುವ ನೀರಿಗಾಗಿ ಶುದ್ಧೀಕರಿಸಿದ ನೀರನ್ನೇ ಬಳಸುವಂತೆ ಸೂಚಿಸಲಾಗಿದೆ. ಮೆಸ್‌ಗಳಲ್ಲಿ ಆಹಾರ ತಯಾರಿಕೆಗೆ ನೇರವಾಗಿ ಟ್ಯಾಪ್ ನೀರನ್ನು ಬಳಸುವುದನ್ನು ಮತ್ತು ಕ್ಯಾಂಸ್‌ ನಲ್ಲಿ ನೇರವಾಗಿ ಟ್ಯಾಪ್ ನೀರನ್ನು ಸೇವಿಸುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಹೊರಗಿನ ಆಹಾರ, ಪನೀರ್ ಮತ್ತು ಮಾಂಸಾಹಾರಿ ಪದಾರ್ಥಗಳನ್ನು ಒಂದು ವಾರದವರೆಗೆ ತಾತ್ಕಾಲಿಕವಾಗಿ ನಿಷೇಧಿಸಲಾಗಿದೆ. ಎನ್‌ಐಟಕೆ ಸಂಸ್ಥೆಯ ಕ್ಯಾಂಪಸ್‌ನಲ್ಲಿ ಮತ್ತು ವಸತಿ ಪ್ರದೇಶಗಳಲ್ಲಿಯೂ ಬಳಸುವ ನೀರು ಒಂದೇ ಆಗಿದೆ. ಅಲ್ಲಿ ಯಾವುದೇ ಆರೋಗ್ಯ ಸಮಸ್ಯೆಗಳು ವರದಿಯಾಗಿಲ್ಲ ಎಂದು ಎನ್‌ಐಟಿಕೆ ಸ್ಪಷ್ಟಪಡಿಸಿದೆ. ಸಂಸ್ಥೆಯು ಸ್ಥಳೀಯ ಆರೋಗ್ಯ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ ಸಂಪೂರ್ಣ ತನಿಖೆ ಮತ್ತು ತಡೆಗಟ್ಟುವ ಕ್ರಮಗಳನ್ನು ಕೈಗೊಳ್ಳುತ್ತಿದೆ. ಭವಿಷ್ಯದಲ್ಲಿ ಕ್ಯಾಂಪಸ್ ಕಾರ್ಯಕ್ರಮಗಳಲ್ಲಿ ಆಹಾರ ಸುರಕ್ಷತಾ ಮಾನದಂಡಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುವುದು. ಎನ್‌ಐಟಿಕೆ ತನ್ನ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಯ ಆರೋಗ್ಯ ಕಡೆಗೆ ಹೆಚ್ಚಿನ ಆದ್ಯತೆ ನೀಡುತ್ತದೆ ಎಂದು ಎನ್‌ಐಟಿಕೆ ಸಂಸ್ಥೆಯ ಪ್ರಕಟನೆ ತಿಳಿಸಿದೆ.

ವಾರ್ತಾ ಭಾರತಿ 11 Feb 2026 9:44 pm

ಕಲಬುರಗಿ| ಪ್ರತ್ಯೇಕ ಮನೆಗಳ್ಳತನ ಪ್ರಕರಣ: 16.22 ಲಕ್ಷ ರೂ. ಮೌಲ್ಯದ ಸ್ವತ್ತು ವಶ; ಇಬ್ಬರು ಆರೋಪಿಗಳ ಬಂಧನ

ಕಲಬುರಗಿ: ಸ್ಟೇಷನ್ ಬಝಾರ್ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ದಾಖಲಾಗಿದ್ದ ಪ್ರತ್ಯೇಕ ಕಳ್ಳತನ ಪ್ರಕರಣಗಳಿಗೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸಿ  16.22 ಲಕ್ಷ ಮೌಲ್ಯದ ಚಿನ್ನಾಭರಣ, ನಗದು ವಶಕ್ಕೆ ಪಡೆಯಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಡಾ.ಶರಣಪ್ಪ ಎಸ್.ಡಿ ಹೇಳಿದ್ದಾರೆ. ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಾ.ಶರಣಪ್ಪ ಎಸ್.ಡಿ, ಪ್ರತ್ಯೇಕ ಪ್ರಕರಣಗಳಲ್ಲಿ ಪಂಚಶೀಲ ನಗರದಲ್ಲಿ ವೆಲ್ಡಿಂಗ್ ಕೆಲಸ ಮಾಡುತ್ತಿದ್ದ ರಾಹುಲ್ ಸಿಂಗ್ ಸಾಗರಸಿಂಗ್ ಟಾಕ(19) ಹಾಗೂ ಬೀದರ್ ಜಿಲ್ಲೆಯ ಹುಮನಾಬಾದ್ ತಾಲೂಕಿನ ಸದಾಲಾಪುರದ ಬಸವರಾಜ ಈರಪ್ಪ ಬಿರಾದಾರ(38) ಬಂಧಿತ ಆರೋಪಿಗಳಾಗಿದ್ದಾರೆ ಎಂದು ಹೇಳಿದರು.   ಕಳೆದ ಅಕ್ಟೋಬರ್ 27ರಂದು ಜೇವರ್ಗಿ ರಸ್ತೆಯ ಪಿಡಬ್ಲ್ಯುಡಿ ಕ್ವಾಟ್ರಸ್ ನಿವಾಸಿ ಹಾಗೂ ಪಿಡಬ್ಲ್ಯುಡಿ ಇಲಾಖೆಯ ಮ್ಯಾನೇಜರ್ ರಾಹುಲದೇವ ಧನ್ನ ಅವರು ತಮ್ಮ ಮನೆಯಲ್ಲಿ 170 ಗ್ರಾಂ ಬಂಗಾರದ ಆಭರಣಗಳು, 20 ಗ್ರಾಂ ಬೆಳ್ಳಿಯ ಆಭರಣಗಳು ಹಾಗೂ 50 ಸಾವಿರ ನಗದು ಕಳ್ಳತನವಾಗಿರುವ  ಬಗ್ಗೆ ಸ್ಟೇಷನ್ ಬಝಾರ್ ಠಾಣೆಯಲ್ಲಿ ದೂರು ನೀಡಿದ್ದರು. ಪ್ರಕರಣಕ್ಕೆ ಸಂಬಂಧಿಸಿ ಪಂಚಶೀಲ ನಗರದಲ್ಲಿ ವೆಲ್ಡಿಂಗ್ ಕೆಲಸ ಮಾಡುತ್ತಿದ್ದ ರಾಹುಲ್ ಸಿಂಗ್ ಸಾಗರಸಿಂಗ್ ಟಾಕ ಎಂಬಾತನನ್ನು ವಶಕ್ಕೆ ಪಡೆದು ಆತನ ಬಳಿಯಿದ್ದ 2 ಲಕ್ಷ ನಗದು ಸೇರಿದಂತೆ 8.22 ಲಕ್ಷ ಮೌಲ್ಯದ ಸ್ವತ್ತನ್ನು ವಶಕ್ಕೆ ಪಡೆಯಲಾಗಿದೆ. ಬಳಿಕ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಡಾ.ಶರಣಪ್ಪ ಎಸ್.ಡಿ ಹೇಳಿದರು.   ಸುದ್ದಿಗೋಷ್ಠಿಯಲ್ಲಿ ದಕ್ಷಿಣ ವಿಭಾಗದ ಎಸಿಪಿ ಶರಣಬಸಪ್ಪ ಸುಬೇದಾರ್, ಸ್ಟೇಷನ್ ಬಝಾರ್ ಪಿಐ ಗುರುಲಿಂಗಪ್ಪಗೌಡ ಪಾಟೀಲ್ ಮತ್ತಿತ್ತರರು ಉಪಸ್ಥಿತರಿದ್ದರು.

ವಾರ್ತಾ ಭಾರತಿ 11 Feb 2026 9:42 pm

ಅಮೆರಿಕ ಪಾಕಿಸ್ತಾನವನ್ನು ಟಾಯ್ಲೆಟ್ ಪೇಪರ್‌ಗಿಂತಲೂ ಕೆಟ್ಟದಾಗಿ ನಡೆಸಿಕೊಂಡಿದೆ: ಪಾಕ್ ರಕ್ಷಣಾ ಸಚಿವ ಆಸಿಫ್ ಆರೋಪ

ಇಸ್ಲಾಮಾಬಾದ್, ಫೆ. 11: ಅಮೆರಿಕ ಪಾಕಿಸ್ತಾನವನ್ನು ತನ್ನ ಕಾರ್ಯತಂತ್ರದ ಹಿತಾಸಕ್ತಿಗೆ ಬಳಸಿಕೊಂಡು ಬಳಿಕ ಟಾಯ್ಲೆಟ್ ಪೇಪರ್‌ಗಿಂತಲೂ ಕೆಟ್ಟದಾಗಿ ನಡೆಸಿಕೊಂಡಿದೆ ಎಂದು ಪಾಕಿಸ್ತಾನದ ರಕ್ಷಣಾ ಸಚಿವ ಖ್ಜಾವಾ ಆಸಿಫ್ ಬುಧವಾರ ಆರೋಪಿಸಿದ್ದಾರೆ. ಸಂಸತ್ತಿನಲ್ಲಿ ಮಾತನಾಡಿದ ಅವರು, 1999ರ ಬಳಿಕ ಅಮೆರಿಕದೊಂದಿಗೆ ಮತ್ತೆ ನಿಲ್ಲುವ ಪಾಕಿಸ್ತಾನದ ನಿರ್ಧಾರವು, ವಿಶೇಷವಾಗಿ ಅಫ್ಘಾನಿಸ್ತಾನಕ್ಕೆ ಸಂಬಂಧಿಸಿದಂತೆ, ದೇಶಕ್ಕೆ ದೀರ್ಘಾವಧಿಯ ಹಾನಿಯನ್ನುಂಟು ಮಾಡಿದೆ ಎಂದರು. ಅಫ್ಘಾನಿಸ್ತಾನದ ಎರಡು ಯುದ್ಧಗಳಲ್ಲಿ ಪಾಕಿಸ್ತಾನದ ಪಾತ್ರವನ್ನು ‘ಪ್ರಮಾದ’ ಎಂದು ಬಣ್ಣಿಸಿದ ಆಸಿಫ್, ಪಾಕಿಸ್ತಾನವು ಇಂದು ಎದುರಿಸುತ್ತಿರುವ ಭಯೋತ್ಪಾದನೆ ಆ ಹಿಂದಿನ ನಿರ್ಧಾರಗಳ ಪರಿಣಾಮವಾಗಿದೆ ಎಂದು ಹೇಳಿದರು. 1999ರ ಬಳಿಕ, ವಿಶೇಷವಾಗಿ 2001ರ ಸೆಪ್ಟೆಂಬರ್ 11ರ ದಾಳಿಯ ಬಳಿಕದ ಅವಧಿಯಲ್ಲಿ ಅಮೆರಿಕದೊಂದಿಗೆ ಸಂಬಂಧ ಮರುಸ್ಥಾಪಿಸಿದ್ದಕ್ಕೆ ಪಾಕಿಸ್ತಾನ ಭಾರೀ ಬೆಲೆ ತೆರುತ್ತಿದೆ ಎಂದರು. ವಿದೇಶಿ ಘರ್ಷಣೆಯಲ್ಲಿ ಪಾಕಿಸ್ತಾನವನ್ನೂ ತಳ್ಳಲು ಈ ಹಿಂದಿನ ಮಿಲಿಟರಿ ಆಡಳಿತಗಾರರಾದ ಝಿಯಾ ಉಲ್ ಹಕ್ ಮತ್ತು ಪರ್ವೇಝ್ ಮುಷರ್ರಫ್ ಹೊಣೆಗಾರರು. ಈ ನಿರ್ಧಾರಗಳ ಪರಿಣಾಮವನ್ನು ಪಾಕಿಸ್ತಾನ ಈಗಲೂ ಅನುಭವಿಸುತ್ತಿದೆ. ಪಾಕಿಸ್ತಾನವನ್ನು ತಮಗೆ ಅಗತ್ಯವಿದ್ದಾಗ ಬಳಸಿಕೊಂಡು ಟಾಯ್ಲೆಟ್ ಪೇಪರ್‌ನಂತೆ ಬಿಸಾಡಲಾಗಿದೆ ಎಂದು ಖ್ವಾಜಾ ಆಸಿಫ್ ಆರೋಪಿಸಿದ್ದಾರೆ. 2001ರ ಬಳಿಕ ಅಫ್ಘಾನಿಸ್ತಾನದಲ್ಲಿ ಅಮೆರಿಕ ನೇತೃತ್ವದ ಯುದ್ಧದಲ್ಲಿ ಪಾಕಿಸ್ತಾನ ಮತ್ತೊಮ್ಮೆ ಅಮೆರಿಕದ ಪರ ವಹಿಸುವ ಮೂಲಕ ತಾಲಿಬಾನ್ ವಿರೋಧಿ ನಿಲುವು ತಳೆದಿತು. ಅಮೆರಿಕ ಈ ಪ್ರದೇಶದಿಂದ ಬಳಿಕ ನಿರ್ಗಮಿಸಿದರೂ, ಪಾಕಿಸ್ತಾನ ಹಲವು ವರ್ಷಗಳ ಹಿಂಸಾಚಾರ, ಹೆಚ್ಚುತ್ತಿರುವ ಉಗ್ರವಾದ ಮತ್ತು ಆರ್ಥಿಕ ತೊಂದರೆಗಳನ್ನು ಎದುರಿಸುತ್ತಿದೆ ಎಂದು ಅವರು ಹೇಳಿರುವುದಾಗಿ ವರದಿಯಾಗಿದೆ.

ವಾರ್ತಾ ಭಾರತಿ 11 Feb 2026 9:41 pm

ಪದುವಾ| ಇಂಡಿಯನ್ ಓವರ್ಸೀಸ್ ಬ್ಯಾಂಕಿನ 90ನೇ ಸಂಸ್ಥಾಪಕರ ದಿನಾಚರಣೆ

ಮಂಗಳೂರು; ಪದುವಾ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇಂಡಿಯನ್ ಓವರ್ಸೀಸ್ ಬ್ಯಾಂಕಿನ 90ನೇ ಸಂಸ್ಥಾಪಕರ ದಿನಾಚರಣೆ ನಡೆಯಿತು. ಪದುವಾ ಕ್ಯಾಂಪಸ್ ಡೈರೆಕ್ಟರಾದ ವಂ.ಅರುಣ್ ವಿಲ್ಸನ್ ಲೋಬೋರವರು ಇಂಡಿಯನ್ ಓವರ್ಸೀಸ್ ಬ್ಯಾಂಕ್‌ನ ಗುರಿ ಇಂದು ಮೌಲ್ಯಗಳನ್ನು ನಿರ್ಮಿಸುವ ಸಂಸ್ಥೆಯೇ ನಾಳೆಯ ರಾಷ್ಟ್ರವನ್ನು ನಿರ್ಮಿಸುತ್ತದೆ ಎಂಬ ಎಂ. ಸಿ. ಟಿ. ಚಿದಂಬರಂ ಚೆಟ್ಟಿಯಾರ್ ಅವರ ಮಾತಿನಂತೆ ಸ್ಥಾಪಿತವಾದ ಸಂಸ್ಥೆಯ ಸಾಧನೆಗಳು, ಮೌಲ್ಯಗಳು ಹಾಗೂ ಸಮಾಜಸೇವೆಯ ಬದ್ಧತೆಯ ಬಗ್ಗೆ ಮಾತನಾಡಿದರು. ಎಂ. ಸಿ. ಟಿ. ಚಿದಂಬರಂ ಚೆಟ್ಟಿಯಾರ್ ಅವರಿಂದ ಸ್ಥಾಪಿತವಾದ ಇಂಡಿಯನ್ ಓವರ್ಸೀಸ್ ಬ್ಯಾಂಕ್‌ನ 90ನೇ ಸಂಸ್ಥಾಪಕರ ದಿನಾಚರಣೆ ಪದುವಾ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಚರಿಸಲಾಯಿತು. ಪದುವಾ ಶಿಕ್ಷಣ ಸಂಸ್ಥೆಗಳ ಕ್ಯಾಂಪಸ್ ಡೈರೆಕ್ಟ್ ರಾದ ವಂ. ಅರುಣ್ ವಿಲ್ಸನ್ ಲೋಬೋ, ಮುಖ್ಯಶಿಕ್ಷಕಿ ಮೊಲಿ ಡಿಸೋಜಾ, ಐಒಬಿ ಮುಖ್ಯ ವ್ಯವಸ್ಥಾಪಕಲ ರಾಜೇಶ್ ದಾಸ್, ಪದುವಾ ಶಾಖೆ ವ್ಯವಸ್ಥಾಪಕರಾದ ಷಣ್ಮುಗರಾಮ್, ಹಾಗೂ ಪ್ರಾದೇಶಿಕ ಮಾರುಕಟ್ಟೆ ವ್ಯವಸ್ಥಾಪಕರಾದ ಕ ರವಿ ಶೇಖರ್ ಅವರು ಕಾರ್ಯಕ್ರಮಕ್ಕೆ ಗೌರವಾನ್ವಿತ ಉಪಸ್ಥಿತರಿದ್ದರು. ಸಂಸ್ಥಾಪಕರ ದಿನಾಚರಣೆಯ ಅಂಗವಾಗಿ ಜನ್ಮದಿನ ಕಾರ್ಡ್ ತಯಾರಿಕೆ ಸ್ಪರ್ಧೆ ಹಾಗೂ ಪಕ್ಷಿಗಳ ಗೂಡು ನಿರ್ಮಾಣ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ವಿಜೇತ ವಿದ್ಯಾರ್ಥಿಗಳಿಗೆ ರವಿ ಶೇಖರ್ ಅವರು ಬಹುಮಾನಗಳನ್ನು ವಿತರಿಸಿದರು.

ವಾರ್ತಾ ಭಾರತಿ 11 Feb 2026 9:38 pm

ಒಪ್ಪಂದ ಆಗದಿದ್ದರೆ ಕಠಿಣ ಕ್ರಮ: ಇರಾನ್‌ ಗೆ ಟ್ರಂಪ್ ಎಚ್ಚರಿಕೆ

ವಾಷಿಂಗ್ಟನ್, ಫೆ. 11: ಮಾತುಕತೆ ವಿಫಲಗೊಂಡರೆ ಅಮೆರಿಕಾ ಇರಾನ್ ವಿರುದ್ಧ ಮಿಲಿಟರಿ ದಾಳಿ ನಡೆಸಬಹುದು ಎಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಕೆ ನೀಡಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ. ‘ಒಪ್ಪಂದ ಮಾಡಿಕೊಳ್ಳುವ ಬಗ್ಗೆ ಇರಾನ್ ಉತ್ಸುಕವಾಗಿದೆ. ಮಾತುಕತೆ ಯಶಸ್ವಿಯಾಗುತ್ತದೆ ಎಂದು ಆಶಿಸುತ್ತಿದ್ದೇವೆ. ಇದರ ಜೊತೆಗೆ ಪ್ರದೇಶದಲ್ಲಿ ಅಮೆರಿಕಾದ ಸಮರನೌಕೆಗಳ ಉಪಸ್ಥಿತಿಯನ್ನು ಹೆಚ್ಚಿಸುವ ಬಗ್ಗೆಯೂ ಪರಿಶೀಲಿಸುತ್ತಿದ್ದೇವೆ’ ಎಂದು ಟ್ರಂಪ್ ಹೇಳಿದ್ದಾರೆ. ಪರಮಾಣು ಒಪ್ಪಂದದ ಬಗ್ಗೆ ಇರಾನ್ ಮತ್ತು ಅಮೆರಿಕಾ ನಡುವೆ ಪರೋಕ್ಷ ಮಾತುಕತೆ ಮುಂದುವರಿದಿದೆ. ‘ಒಪ್ಪಂದ ಮಾಡಿಕೊಳ್ಳದಿದ್ದರೆ ಅವರು ಮೂರ್ಖರಾಗುತ್ತಾರೆ. ಯಾವುದೇ ಒಪ್ಪಂದವು ಸಮಗ್ರವಾಗಿರಬೇಕು. ಪರಮಾಣು ಶಸ್ತ್ರಾಸ್ತ್ರ, ಕ್ಷಿಪಣಿಗಳ ಬಗ್ಗೆ ಒಪ್ಪಂದ ಆಗಬೇಕು. ಈ ಹಿಂದಿನ ಅಮೆರಿಕಾ ಆಡಳಿತವು ಇರಾನ್ ಜೊತೆಗೆ ಮಾಡಿಕೊಂಡ ಪರಮಾಣು ಒಪ್ಪಂದ ಅತ್ಯಂತ ಮೂರ್ಖ ಮತ್ತು ಅಪ್ರಾಮಾಣಿಕ ಒಪ್ಪಂದವಾಗಿತ್ತು’ ಎಂದು ಟ್ರಂಪ್ ಟೀಕಿಸಿದ್ದಾರೆ. ಟ್ರಂಪ್ ಎಚ್ಚರಿಕೆಗೆ ಪ್ರತಿಕ್ರಿಯಿಸಿರುವ ಇರಾನ್, ತನ್ನ ಭೂಪ್ರದೇಶಗಳ ವಿರುದ್ಧ ಯಾವುದೇ ಬೆದರಿಕೆಗಳಿಗೆ ದೇಶದ ಸಶಸ್ತ್ರ ಪಡೆಗಳು ಹೆಚ್ಚು ಶಕ್ತಿಯುತ ಮತ್ತು ವ್ಯಾಪಕ ಪ್ರತಿಕ್ರಿಯೆ ನೀಡಲಿವೆ ಎಂದು ಹೇಳಿದೆ. ಜನತೆ ಒಗ್ಗಟ್ಟು ಮತ್ತು ತಾಳ್ಮೆಯನ್ನು ಪ್ರದರ್ಶಿಸುವಂತೆ ಇರಾನ್‌ನ ಸರ್ವೋಚ್ಛ ನಾಯಕ ಆಯತುಲ್ಲಾ ಆಲಿ ಖಾಮಿನೈ ಕರೆ ನೀಡಿರುವುದಾಗಿ ವರದಿಯಾಗಿದೆ. ಈ ಮಧ್ಯೆ, ಕಳೆದ ವಾರ ಮಸ್ಕತ್‌ನಲ್ಲಿ ನಡೆದ ಆರಂಭಿಕ ಸುತ್ತಿನ ಪರೋಕ್ಷ ಮಾತುಕತೆಗೆ ಇರಾನ್‌ನ ಅಧಿಕೃತ ಲಿಖಿತ ಪ್ರತಿಕ್ರಿಯೆಯೊಂದಿಗೆ ಉನ್ನತ ಅಧಿಕಾರಿ ಆಲಿ ಲಾರಿಜಾನಿ ಒಮಾನ್‌ಗೆ ಪ್ರಯಾಣಿಸಿರುವುದಾಗಿ ಉನ್ನತ ಮೂಲಗಳನ್ನು ಉಲ್ಲೇಖಿಸಿ ಎಪಿ ಸುದ್ದಿಸಂಸ್ಥೆ ವರದಿ ಮಾಡಿದೆ.

ವಾರ್ತಾ ಭಾರತಿ 11 Feb 2026 9:38 pm

ಸ್ಪೆಷಲ್ ಒಲoಪಿಕ್ಸ್ ಭಾರತ್ ರಾಷ್ಟ್ರೀಯ ಮಟ್ಟದ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್: 2 ಚಿನ್ನ,1 ಕಂಚು ಪಡೆದ ಸಹಳಾಗೆ, ಶಿಕ್ಷಕಿ ಸುಚಿತ್ರಾಗೆ ಅಭಿನಂದನೆ

ಮೂಡುಬಿದಿರೆ : ಹರಿಯಾಣದ ಮಹರ್ಷಿ ದಯಾನಂದ ವಿಶ್ವವಿದ್ಯಾನಿಲಯದಲ್ಲಿ ನಡೆದ‌ ಸ್ಪೆಷಲ್ ಒಲಿಂಪಿಕ್ಸ್ ಭಾರತ್ ರಾಷ್ಟ್ರಮಟ್ಟದ ಕ್ರೀಡಾಕೂಟದಲ್ಲಿ 2 ಚಿನ್ನ ಮತ್ತು 1ಕಂಚಿನ ಪದಕ ಪಡೆದು ಸ್ಪೂತಿ೯ ವಿಶೇಷ ಮಕ್ಕಳ ಶಾಲೆಯ ವಿದ್ಯಾಥಿ೯ನಿ ಸಹಳಾ ಹಾಗೂ ತರಬೇತಿ ನೀಡಿರುವ ಶಿಕ್ಷಕಿ ಸುಚಿತ್ರಾ ಅವರನ್ನು ಸಂಸ್ಥೆಯ ವತಿಯಿಂದ ಬುಧವಾರ ಅಭಿನಂದಿಸಿ ಸನ್ಮಾನಿಸಲಾಯಿತು. ಉದ್ಯಮಿ ನಂದಕುಮಾರ್ ಕುಡ್ವ, ವಿದ್ಯಾವಧ೯ಕ ಸಂಘದ ಟ್ರಸ್ಟಿ ಯುವರಾಜ್ ಜೈನ್ ಕಲ್ಲೋಳಿ ಮುಖ್ಯ ಅತಿಥಿ ಗಳಾಗಿ ಭಾಗವಹಿಸಿದ್ದರು. ಎಸ್ ಡಿ ಎಂಸಿ ಅಧ್ಯಕ್ಷೆ ಲತಾ ಸುರೇಶ್ ಉಪಸ್ಥಿತರಿದ್ದರು. ಶಿಕ್ಷಕಿ ಅನಿತಾ ರೋಡ್ರಿಗಸ್ ಸ್ವಾಗತಿಸಿದರು. ಶಿಕ್ಷಕಿ ಹಷಾ೯ ಸನ್ಮಾನಿತರನ್ನು ಪರಿಚಯಿಸಿದರು. ಸ್ಪೂತಿ೯ ಸಂಸ್ಥೆಯ ಸ್ಥಾಪಕಾಧ್ಯಕ್ಷ ಪ್ರಕಾಶ್ ಜೆ. ಶೆಟ್ಟಿಗಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಮುಖ್ಯ ಶಿಕ್ಷಕಿ ಶಮಿ೯ಳಾ ವಾಸ್ ಕಾಯ೯ಕ್ರಮ ನಿರೂಪಿಸಿದರು. ಸುಮನಾ ವಂದಿಸಿದರು. ಜೂನಿಯರ್ ವಿಭಾಗದಲ್ಲಿ ಶಾಟ್ ಪುಟ್ ಹಾಗೂ 4×100 ಮೀ ಮಿಕ್ಷೆಡ್ ರಿಲೇ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನಿಯಾಗಿ 2 ಚಿನ್ನದ ಪದಕ ಹಾಗೂ 200 ಮೀ ಓಟದಲ್ಲಿ ತೃತೀಯ ಸ್ಥಾನಿಯಾಗಿ ಕಂಚಿನ ಪದಕ ಪಡೆದು ಬೆಳಿಗ್ಗೆ ಸಂಸ್ಥೆಗೆ ಆಗಮಿಸಿರುವ ಸಹಳಾ ಮತ್ತು ಸುಚಿತ್ರಾ ಅವರನ್ನು ಬ್ಯಾಂಡ್ ಮೂಲಕ ಸ್ವಾಗತಿಸಿ ಪುಷ್ಪಾಪ೯ಣೆ ಮಾಡಲಾಯಿತು.

ವಾರ್ತಾ ಭಾರತಿ 11 Feb 2026 9:37 pm

Ukraine | ರಶ್ಯ ದಾಳಿಯಲ್ಲಿ ಮೂವರು ಮಕ್ಕಳ ಸಹಿತ 4 ಮೃತ್ಯು

ಕೀವ್, ಫೆ. 11: ಉಕ್ರೇನ್‌ನ ಬೊಗೊಡುಖಿವ್ ನಗರದ ಮೇಲೆ ರಷ್ಯಾ ನಡೆಸಿದ ಡ್ರೋನ್ ದಾಳಿಯಲ್ಲಿ ಮೂವರು ಮಕ್ಕಳು ಮತ್ತು ಅವರ ತಂದೆ ಸಾವನ್ನಪ್ಪಿರುವುದಾಗಿ ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ. ಉಕ್ರೇನ್‌ನ ಪೂರ್ವದಲ್ಲಿರುವ, ರಷ್ಯಾ ಗಡಿಭಾಗದ ಸನಿಹದಲ್ಲಿರುವ ಬೊಗೊಡುಖಿವ್ ನಗರದ ಖಾಸಗಿ ಮನೆಯೊಂದರ ಮೇಲೆ ಶತ್ರುಗಳ ಡ್ರೋನ್ ದಾಳಿಯಲ್ಲಿ ಒಂದು ವರ್ಷದ ಇಬ್ಬರು ಬಾಲಕರು ಮತ್ತು ಎರಡು ವರ್ಷದ ಬಾಲಕಿ ಹಾಗೂ ಈ ಮಕ್ಕಳ ತಂದೆ ಮೃತಪಟ್ಟಿದ್ದಾರೆ. ದಾಳಿಯಿಂದಾಗಿ ಮನೆ ಸಂಪೂರ್ಣ ಸುಟ್ಟುಹೋಗಿದ್ದು, ಕುಟುಂಬದ ಸದಸ್ಯರು ಅವಶೇಷಗಳಡಿ ಸಿಲುಕಿದ್ದರು. ಗಂಭೀರವಾಗಿ ಗಾಯಗೊಂಡಿರುವ ಮಕ್ಕಳ ತಾಯಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಹೇಳಿಕೆ ತಿಳಿಸಿದೆ.

ವಾರ್ತಾ ಭಾರತಿ 11 Feb 2026 9:36 pm

Thailand | ಶಾಲೆಯಲ್ಲಿ ವಿದ್ಯಾರ್ಥಿಗಳನ್ನು ಒತ್ತೆಸೆರೆಯಲ್ಲಿರಿಸಿದ್ದ ಆರೋಪಿಯ ಬಂಧನ

ಬ್ಯಾಂಕಾಕ್, ಫೆ.11: ದಕ್ಷಿಣ ಥೈಲ್ಯಾಂಡ್‌ ನ ಹಾಟ್‌ಯಾಯಿ ನಗರದ ಶಾಲೆಯೊಂದರಲ್ಲಿ ಬುಧವಾರ ಗುಂಡಿನ ದಾಳಿ ನಡೆಸಿದ ಬಳಿಕ ವಿದ್ಯಾರ್ಥಿಗಳು ಹಾಗೂ ಶಿಕ್ಷಕರನ್ನು ಒತ್ತೆಸೆರೆಯಲ್ಲಿ ಇರಿಸಿದ್ದ ಯುವಕನನ್ನು ಪೊಲೀಸರು ಬಂಧಿಸಿ ಎಲ್ಲಾ ಒತ್ತೆಯಾಳುಗಳನ್ನು ಬಿಡುಗಡೆಗೊಳಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿಯನ್ನು ಉಲ್ಲೇಖಿಸಿ ರಾಯ್ಟರ್ಸ್ ವರದಿ ಮಾಡಿದೆ. 18 ವರ್ಷದ ಯುವಕನೊಬ್ಬ ಬಂದೂಕು ಹಿಡಿದು ಸಾಂಕ್‌ಖ್ಲಾ ಪ್ರಾಂತದ ಶಾಲೆಯನ್ನು ಪ್ರವೇಶಿಸಿ ಹಲವು ವಿದ್ಯಾರ್ಥಿಗಳು ಹಾಗೂ ಶಿಕ್ಷಕರನ್ನು ಒತ್ತೆಸೆರೆಯಲ್ಲಿ ಇರಿಸಿಕೊಂಡಿದ್ದ. ಸ್ಥಳಕ್ಕೆ ಧಾವಿಸಿದ ಪೊಲೀಸರು ಆರೋಪಿಯನ್ನು ಬಂಧಿಸಿ ಒತ್ತೆಯಾಳುಗಳನ್ನು ಬಿಡುಗಡೆಗೊಳಿಸಿದ್ದಾರೆ. ಈ ಸಂದರ್ಭ ಆರೋಪಿ ನಡೆಸಿದ ಗುಂಡಿನ ದಾಳಿಯಲ್ಲಿ ಇಬ್ಬರು ಮಕ್ಕಳು ಹಾಗೂ ಓರ್ವ ಶಿಕ್ಷಕ ಗಾಯಗೊಂಡಿದ್ದಾರೆ. ಆರೋಪಿಯೂ ಗಾಯಗೊಂಡಿದ್ದು ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿರುವುದಾಗಿ ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ವಾರ್ತಾ ಭಾರತಿ 11 Feb 2026 9:31 pm

ಯಡ್ರಾಮಿ| ಅನಧಿಕೃತ ಗೂಡಂಗಡಿ ತೆರವು ಕಾರ್ಯಾಚರಣೆ: ಪಟ್ಟಣ ಪಂಚಾಯತ್‌ ಅಧಿಕಾರಿಗಳ ವಿರುದ್ಧ ತಾರತಮ್ಯ ಆರೋಪ

ಯಡ್ರಾಮಿ: ಪಟ್ಟಣದಲ್ಲಿ ಅನಧಿಕೃತವಾಗಿ ನಿರ್ಮಿಸಿಕೊಂಡಿರುವ ಗೂಡಂಗಡಿಗಳನ್ನು ತೆರವು ಮಾಡುವಲ್ಲಿ ಪಟ್ಟಣ ಪಂಚಾಯತ್‌ ಅಧಿಕಾರಿಗಳು ತಾರತಮ್ಯ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ನಗರ ಘಟಕದ ಅಧ್ಯಕ್ಷ ಬಾಲರಾಜ ಮಡಿವಾಳ ಆಕ್ರೋಶ ವ್ಯಕ್ತಪಡಿಸಿದರು. ತಹಶೀಲ್ದಾರ್‌ ಕಚೇರಿಯಲ್ಲಿ ತಹಸೀಲ್ದಾ‌ರ್ ಯಲ್ಲಪ್ಪ ಸುಬೇದಾರ ಅವರಿಗೆ ಸೋಮವಾರ ಮನವಿಪತ್ರ ಸಲ್ಲಿಸಿದ ಅವರು, ಡಾ.ಬಿ.ಆ‌ರ್.ಅಂಬೇಡ್ಕರ್ ವೃತ್ತದಿಂದ ಸರ್ದಾರ ಶರಣಗೌಡ ವೃತ್ತದವರೆಗೆ ಸರಕಾರಿ ಕಚೇರಿ ಮುಂಭಾಗದಲ್ಲಿ ಅನಧಿಕೃತವಾಗಿ ನಿರ್ಮಿಸಿಕೊಂಡಿರುವ ಗೂಡಂಗಡಿಗಳನ್ನು ತೆರವುಗೊಳಿಸುವುದಾಗಿ ಪಟ್ಟಣ ಪಂಚಾಯತಿ ಧ್ವನಿವರ್ಧಕ ಮೂಲಕ ಪ್ರಕಟಣೆ ಹೊರಡಿಸಿತ್ತು. ಕಳೆದ ಗುರುವಾರ ಪ್ರೌಢಶಾಲೆ ಮುಂಭಾಗದಲ್ಲಿರುವ ಬಡವರ ಅಂಗಡಿಗಳನ್ನು ಮಾತ್ರ ತೆರವುಗೊಳಿಸಿ ಉಳಿದ ಅಂಗಡಿಗಳನ್ನು ಬಿಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.   ಅಧಿಕಾರಿಗಳು ತಾರತಮ್ಯ ನೀತಿ ಕೈಬಿಡಬೇಕು. ಜಿಲ್ಲಾಧಿಕಾರಿಗಳು ಸಮಗ್ರ ವರದಿ ತರಿಸಿಕೊಂಡು ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಬೇಕು. ಉಳಿದಿರುವ ಎಲ್ಲ ಗೂಡಂಗಡಿಗಳನ್ನು ತೆರವುಗೊಳಿಸಿ, ಸ್ಥಳೀಯ ಆಡಳಿತದಿಂದ ಮಳಿಗೆ ನಿರ್ಮಿಸಿ ನಿಯಮಾನುಸಾರ ಹಂಚಿಕೆ ಮಾಡಬೇಕು. ಇಲ್ಲದಿದ್ದರೆ ಯಡ್ರಾಮಿ ಬಂದ್‌ಗೆ ಕರೆ ನೀಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಈ ವೇಳೆ ಶಿವಶರಣ ಜಂಬೇರಾಳ, ಬಸವರಾಜ ಹೊರಗಿನಮಠ, ಶಿವಕುಮಾರ ಹೆಬ್ಬಾಳ, ಬಶೀರ್ ಮುಲ್ಲಾ, ರಾಜು ಹಡಪದ, ವಿರೇಶ ಹಡಪದ, ಪದ್ಮಾವತಿ, ಭರತ್ ದೊರೆ, ಮಡಿವಾಳಪ್ಪ, ಕಿರಣಕುಮಾರ ಹರನಾಳ, ಅಜ್ರುದ್ದಿನ್ ಮಳ್ಳಿಕ‌ರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.  

ವಾರ್ತಾ ಭಾರತಿ 11 Feb 2026 9:29 pm

ಉಪ್ಪಿನಂಗಡಿ| ಪಿಕಪ್ ಪಲ್ಟಿಯಾಗಿ ಚಾಲಕ ಸ್ಥಳದಲ್ಲೇ ಮೃತ್ಯು

ಉಪ್ಪಿನಂಗಡಿ: ತೆಕ್ಕಾರು ಗ್ರಾಮದ ಕನರಾಜೆ ಎಂಬಲ್ಲಿ ಪಿಕಪ್ ವಾಹನವೊಂದು ಪಲ್ಟಿಯಾಗಿ ಚಾಲಕ ಮೃತಪಟ್ಟ ಘಟನೆ ಫೆ.11ರಂದು ನಡೆದಿದೆ. ಪಿಕಪ್ ವಾಹನದಲ್ಲಿ ಸೆಟ್ರಿಂಗ್ ಕೆಲಸದ ಸಾಮಗ್ರಿಗಳನ್ನು ಸಾಗಿಸಲಾಗುತ್ತಿತ್ತು. ಈ ಸಂದರ್ಭ ಮೇಲ್ಭಾಗದ ರಸ್ತೆ ಯಿಂದ ವಾಹನ ಕೆಳಭಾಗದ ರಸ್ತೆಗೆ ಪಲ್ಟಿಯಾಗಿ ವಾಹನದಲ್ಲಿದ್ದ ಅಳಕ್ಕೆ ನಿವಾಸಿ ಹರಿಶ್ಚಂದ್ರ ಎಂಬವರ ಮಗ ಹೇಮಚಂದ್ರ (32) ಎಂಬವರು ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಹಾಗೂ ಪಿಕಪ್‍ನಲ್ಲಿದ್ದ ಉಮ್ಮರಬ್ಬ (51) ಎಂಬವರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಮೃತ ಹೇಮಚಂದ್ರ ಅವಿವಾಹಿತನಾಗಿದ್ದು, ಇವರೇ ಮನೆಗೆ ಆಧಾರ ಸ್ತಂಭವಾಗಿದ್ದರು. ಘಟನೆಯ ಬಗ್ಗೆ ಪುತ್ತೂರು ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  

ವಾರ್ತಾ ಭಾರತಿ 11 Feb 2026 9:29 pm

Canada | ಶಾಲೆ, ಶಾಲೆಯ ಬಳಿ ಗುಂಡಿನ ದಾಳಿಯಲ್ಲಿ 9 ಮೃತ್ಯು

25 ಮಂದಿಗೆ ಗಾಯ; ಶಂಕಿತ ಆರೋಪಿ ಆತ್ಮಹತ್ಯೆ

ವಾರ್ತಾ ಭಾರತಿ 11 Feb 2026 9:28 pm

ಬಿಜೆಪಿ ನಾಯಕನಿಗೆ ರಾಜ್ಯ ಸರ್ಕಾರದ ಸಚಿವ ದರ್ಜೆ ಸ್ಥಾನಮಾನ : ಶಿವಮೊಗ್ಗ ಕಾಂಗ್ರೆಸ್ ಕೊತಕೊತ - ಆದೇಶ ವಾಪಸ್

Cabinet Status to BJP Karyakarta : ಶಿಕಾರಿಪುರದ ಬಿಜೆಪಿ ನಾಯಕರೊಬ್ಬರಿಗೆ ಸಚಿವ ಸಂಪುಟ ಸ್ಥಾನಮಾನದ ಹುದ್ದೆಯನ್ನು ನೀಡಿರುವುದು, ಶಿವಮೊಗ್ಗ ಕಾಂಗ್ರೆಸ್ ವಲಯದಲ್ಲಿ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ. ಜಿಲ್ಲಾ ಕಾರ್ಯಕರ್ತರ ಆಕ್ರೋಶಕ್ಕೆ ಮಣಿದ ಸರ್ಕಾರ, ಅವರಿಗೆ ನೀಡಿದ್ದ ಸ್ಥಾನಮಾನವನ್ನು ಹಿಂದಕ್ಕೆ ಪಡೆದಿದೆ. ಆದರೂ, ಕಾಂಗ್ರೆಸ್ ನಾಯಕರ ಸಿಟ್ಟು ತಣ್ಣಗಾಯಿತೇ?

ವಿಜಯ ಕರ್ನಾಟಕ 11 Feb 2026 9:25 pm

ಗಾಣಗಾಪುರದ ದತ್ತಾತ್ರೇಯ, ಭಾಗ್ಯವಂತಿ ದೇವಾಲಯಗಳ ಅಭಿವೃದ್ದಿಗೆ ಕ್ರಮ: ಸಚಿವ ಪ್ರಿಯಾಂಕ್ ಖರ್ಗೆ

ಕಲಬುರಗಿ: ಅಫಜಲಪುರ ತಾಲೂಕಿನ ಪ್ರಸಿದ್ಧ ಗಾಣಗಾಪುರದ ದತ್ತಾತ್ರೇಯ ದೇವಾಲಯ ಹಾಗೂ ಘತ್ತರಗಿಯ ಭಾಗ್ಯವಂತಿ ದೇವಾಲಯ ಅಭಿವೃದ್ದಿಪಡಿಸಲು ರೂಪರೇಷಗಳನ್ನು ಸಿದ್ದಪಡಿಸಲಾಗುತ್ತಿದೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ವಿವರ ಹಂಚಿಕೊಂಡಿರುವ ಪ್ರಿಯಾಂಕ್ ಖರ್ಗೆ, ಸುಮಾರು 500 ವರ್ಷಗಳ ಪರಂಪರೆ ಹೊಂದಿರುವ ಶ್ರೀ ಕ್ಷೇತ್ರ ಗಾಣಗಾಪುರದ ದತ್ತಾತ್ರೇಯ ದೇವಾಲಯ ಹಾಗೂ ಘತ್ತರಗಿಯ ಭಾಗ್ಯವಂತಿ ದೇವಾಲಯಕ್ಕೆ ನಿತ್ಯ ನೂರಾರು ಭಕ್ತರು ಆಗಮಿಸುತ್ತಿದ್ದಾರೆ. ಭೀಮಾ ಮತ್ತು ಅಮರ್ಜಾ ನದಿಯ ಸಂಗಮವು ಇಲ್ಲಿನ ಧಾರ್ಮಿಕ ಶ್ರೇಷ್ಠತೆಯನ್ನು ಇನ್ನಷ್ಟು ಹೆಚ್ಚಿಸಿದೆ. ಮುಜರಾಯಿ ಇಲಾಖೆ, ಪ್ರವಾಸೋದ್ಯಮ ಇಲಾಖೆ, ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆಗಳ ಸಹಯೋಗದಲ್ಲಿ ಈ ಎರಡೂ ಧಾರ್ಮಿಕ ಶ್ರದ್ದಾ ಕೇಂದ್ರಗಳ ಅಭಿವೃದ್ಧಿಗೆ ರೂಪುರೇಷೆ ಸಿದ್ಧಪಡಿಸಲಾಗುತ್ತಿದೆ ಎಂದು ಹೇಳಿದ್ದಾರೆ. ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸಲು ಕಾರ್ಯಯೋಜನೆ ರೂಪಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ಅಫಜಲಪುರ ಕ್ಷೇತ್ರದ ಶಾಸಕರಾದ ಎಂ.ವೈ ಪಾಟೀಲ್ ಅವರೊಂದಿಗೆ ಸಭೆ ನಡೆಸಿ, ತಜ್ಞರು ರೂಪಿಸಿರುವ ನೀಲನಕ್ಷೆಯನ್ನು ಅವಲೋಕಿಸಲಾಯಿತು ಎಂದು ಸಚಿವರು ವಿವರಿಸಿದ್ದಾರೆ.

ವಾರ್ತಾ ಭಾರತಿ 11 Feb 2026 9:25 pm

ಸಂಪಾಜೆ ಗ್ರಾಪಂ ವತಿಯಿಂದ ಮುಖ್ಯಮಂತ್ರಿ ವಿಶೇಷ ಅನುದಾನದ ರಸ್ತೆಗಳ ಉದ್ಘಾಟನೆ

ಸುಳ್ಯ, ಫೆ.11: ಗ್ರಾಮಗಳ ಅಭಿವೃದ್ಧಿಯಿಂದ ನಿಜವಾದ ರಾಮ ಸ್ವರಾಜ್ಯ ಮೂಲಕ ಗಾಂಧೀಜಿಯ ಕನಸನ್ನು ನನಸು ಮಾಡಿ ಸಂಪಾಜೆ ಗ್ರಾಪಂ ದೇಶಕ್ಕೆ ಮಾದರಿಯಾಗಿದೆ ಎಂದು ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಂ.ಎ. ಗಫೂರ್ ಹೇಳಿದರು. ಸಂಪಾಜೆ ಗ್ರಾಪಂ ವ್ಯಾಪ್ತಿಯಲ್ಲಿ ಕರ್ನಾಟಕ ಕಾರ್ಮಿಕರ ಕನಿಷ್ಠ ವೇತನ ಸಲಹಾ ಮಂಡಳಿಯ ಅಧ್ಯಕ್ಷ ಟಿ.ಎಂ. ಶಹೀದ್ ತೆಕ್ಕಿಲ್‌ರ ವಿಶೇಷ ಮುತುವರ್ಜಿಯಿಂದ ಮುಖ್ಯಮಂತ್ರಿಯ ವಿಶೇಷ ಅನುದಾನದಲ್ಲಿ ನಿರ್ಮಿಸಿದ ಕಾಂಕ್ರಿಟ್ ರಸ್ತೆಗಳು, ರಾಜ್ಯ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಎಂಎಲ್‌ಸಿ ಅನುದಾನ, ಜಿಪಂ, ಗ್ರಾಪಂ ಸ್ವಂತ ನಿಧಿಯಡಿ ಸುಮಾರು 15 ಕೋ.ರೂ.ವೆಚ್ಚದಲ್ಲಿ ನಿರ್ಮಾಣಗೊಂಡ ವಿವಿಧ ಕಾಮಗಾರಿಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು. ಈ ಸಂದರ್ಭ 500ಕ್ಕೂ ಅಧಿಕ ಫಲಾನುಭವಿಗಳಿಗೆ ಕೃಷಿ ಉಪಕರಣ, ಹೊಲಿಗೆ ಯಂತ್ರಗಳ ವಿತರಣೆ ಮತ್ತು ಗ್ರಂಥಾಲಯ, ಅಕ್ಷರ ದಾಸೋಹ ಕಟ್ಟಡ, ಅಂಗನವಾಡಿ, ವಿಸ್ತ್ರತ ಕಟ್ಟಡಗಳನ್ನೂ ಉದ್ಘಾಟಿಸಲಾಯಿತು. ಸಂಪಾಜೆ ಗ್ರಾಪಂ ಅಧ್ಯಕ್ಷೆ ಸುಮತಿ ಶಕ್ತಿವೇಲು ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕರ್ನಾಟಕ ಪರಿಸರ ಪ್ರವಾಸೋದ್ಯಮ ಮಂಡಳಿಯ ಅಧ್ಯಕ್ಷೆ ಶಾಲೆಟ್ ಪಿಂಟೋ, ಕರ್ನಾಟಕ ಅರೆ ಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡಮಿಯ ಅಧ್ಯಕ್ಷ ಸದಾನಂದ ಮಾವಜಿ, ಸುಳ್ಯ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷ ಶಾಹುಲ್ ಹಮೀದ್ ಕುತ್ತಾಮೊಟ್ಟೆ, ಸುಳ್ಯ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೆ.ಎಂ.ಮುಸ್ತಫ, ತಾಪಂ ಇಒ ರಾಜಣ್ಣ, ಸಂಪಾಜೆ ಪಿಡಿಒ ಸರಿತಾ ಓಲ್ಗಾ ಡಿಸೋಜ, ಜಿಪಂ ಸಹಾಯಕ ಕಾರ್ಯ ಕ್ರಮ ನಿರ್ವಾಹಕ ಇಂಜಿನಿಯರ್ ಫಯಾಝ ಅಹ್ಮದ್, ಕುಡಿಯುವ ನೀರು, ನೈರ್ಮಲ್ಯ ವಿಭಾಗದ ಇಂಜಿನಿಯರ್ ಚೈತ್ರಾ ಮತ್ತಿತರರು ಭಾಗವಹಿಸಿದ್ದರು. ಸಂಪಾಜೆ ಗ್ರಾಪಂ ಮಾಜಿ ಅಧ್ಯಕ್ಷ ಜಿ.ಕೆ. ಹಮೀದ್ ಸ್ವಾಗತಿಸಿದರ. ಉಪಾಧ್ಯಕ್ಷ ಎಸ್.ಕೆ. ಹನೀಫ್ ವಂದಿಸಿದರು.

ವಾರ್ತಾ ಭಾರತಿ 11 Feb 2026 9:25 pm

ಪುಣೆ ಕಾಲೇಜಿನ ಆಹಾರೋತ್ಸವದಲ್ಲಿ ಬಾಂಗ್ಲಾದೇಶದ ಮಳಿಗೆ ಧ್ವಂಸಗೊಳಿಸಿದ ಬಿಜೆಪಿಯ ಯುವ ಘಟಕ

ಪುಣೆ, ಫೆ. 11: ಇಲ್ಲಿನ ಮಹಾರಾಷ್ಟ್ರ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ವರ್ಲ್ಡ್ ಪೀಸ್ ಯುನಿವರ್ಸಿಟಿಯ ಅಂತರರಾಷ್ಟ್ರೀಯ ಆಹಾರೋತ್ಸವದಲ್ಲಿ ಬಾಂಗ್ಲಾದೇಶದ ಆಹಾರದ ಮಳಿಗೆಯನ್ನು ಬಿಜೆಪಿಯ ಯುವ ಘಟಕದ ಸದಸ್ಯರು ಧ್ವಂಸಗೊಳಿಸಿದ್ದಾರೆ. ಭಾರತೀಯ ಜನತಾ ಯುವ ಮೋರ್ಚಾದ ಪುಣೆ ನಗರ ಮುಖ್ಯಸ್ಥ ದುಷ್ಯಂತ ಮೊಹೋಲ್ ಬುಧವಾರ ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊವೊಂದನ್ನು ಪೋಸ್ಟ್ ಮಾಡಿದ್ದಾರೆ. ಈ ವೀಡಿಯೊದಲ್ಲಿ ಸಂಘಟನೆಯ ಸದಸ್ಯರು ಸ್ಟಾಲ್‌ನಲ್ಲಿ ವಿದ್ಯಾರ್ಥಿಗಳೊಂದಿಗೆ ಹಾಗೂ ಭದ್ರತಾ ಸಿಬ್ಬಂದಿಯೊಂದಿಗೆ ವಾಗ್ವಾದ ನಡೆಸುತ್ತಿರುವುದು, ಘೋಷಣೆಗಳನ್ನು ಕೂಗುತ್ತಿರುವುದು, ಸ್ಟಾಲ್ ಧ್ವಂಸಗೊಳಿಸುವುದು ಹಾಗೂ ಬಾಂಗ್ಲಾದೇಶದ ಬಾವುಟಕ್ಕೆ ಬೆಂಕಿ ಹಚ್ಚುತ್ತಿರುವುದು ಕಾಣಿಸಿದೆ. ಈ ಕಾರ್ಯಕ್ರಮದಲ್ಲಿ ಹಲವು ದೇಶಗಳ ಆಹಾರದ ಅಂಗಡಿಗಳು ಇದ್ದವು. ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ವಿದೇಶಿ ವಿದ್ಯಾರ್ಥಿಯೊಬ್ಬರು, ‘‘20ರಿಂದ 30 ಮಂದಿ ಇದ್ದ ಗುಂಪು ಸ್ಟಾಲ್ ಧ್ವಂಸಗೊಳಿಸಿತು. ನಾವು ಅದಕ್ಕಿಂತ ಮೊದಲು ಎಲ್ಲಾ ಬಾಂಗ್ಲಾದೇಶಿ ವಿದ್ಯಾರ್ಥಿಗಳಿಗೆ ಒಳಗೆ ಹೋಗುವಂತೆ ತಿಳಿಸಿದ್ದೆವು. ಆದರೆ ಓರ್ವ ವಿದ್ಯಾರ್ಥಿನಿ ಹೊರಗೆ ಉಳಿದಿದ್ದಳು. ಅವರು ಆಕೆಯ ಮೇಲೂ ದಾಳಿ ನಡೆಸಲು ಪ್ರಯತ್ನಿಸಿದರು’’ ಎಂದಿದ್ದಾರೆ. ವಿಧ್ವಂಸಕರು ಹೊರಗಿನವರು, ಸಂಸ್ಥೆಯವರಲ್ಲ ಎಂದು ವಿಶ್ವವಿದ್ಯಾನಿಲಯದ ರಿಜಿಸ್ಟ್ರಾರ್ ಗಣೇಶ್ ಪೋಕಾಲೆ ತಿಳಿಸಿದ್ದಾರೆ. ಪೊಲೀಸರಿಗೆ ಈ ಘಟನೆ ಬಗ್ಗೆ ತಿಳಿದಿದೆ. ಅವರು ವಿಶ್ವವಿದ್ಯಾನಿಲಯದಿಂದ ಹೆಚ್ಚಿನ ವಿವರಗಳನ್ನು ಕೇಳಿದ್ದಾರೆ ಎಂದು ಹಿರಿಯ ಪೊಲೀಸ್ ಇನ್ಸ್‌ಪೆಕ್ಟರ್ ಸಂದೀಪ್ ದೇಶಮಾನೆ ತಿಳಿಸಿದ್ದಾರೆ.

ವಾರ್ತಾ ಭಾರತಿ 11 Feb 2026 9:23 pm

Delhi | ಲಡ್ಡಿಗೆ ವಿಷ ಬೆರೆಸಿ ಮೂವರ ಹತ್ಯೆಗೈದ ಆರೋಪ; ಸ್ವಘೋಷಿತ ದೇವಮಾನವನ ಬಂಧನ

ಹೊಸದಿಲ್ಲಿ, ಫೆ. 11: ‘ಧನವರ್ಷ’ (ತತ್‌ಕ್ಷಣ ಹಣಕಾಸು ಲಾಭ)ದ ಆಮಿಷ ಒಡ್ಡಿ ಆಚರಣೆ ನಡೆಸುವ ಹೆಸರಿನಲ್ಲಿ ವಿಷ ಬೆರೆಸಿದ ಲಾಡುಗಳನ್ನು ನೀಡಿ ಮಹಿಳೆ ಸೇರಿದಂತೆ ಮೂವರನ್ನು ಹತ್ಯೆಗೈದ ಆರೋಪದಲ್ಲಿ ದಿಲ್ಲಿ ಪೊಲೀಸರು ಸ್ವಘೋಷಿತ ದೇವಮಾನವನೊಬ್ಬನನ್ನು ಬಂಧಿಸಿದ್ದಾರೆ. ಆರೋಪಿ ಕಮರುದ್ದೀನ್ ಅಲಿಯಾಸ್ ಬಾಬಾ ಪ್ರಸ್ತುತ ಲೋನಿ ಹಾಗೂ ಫಿರೋಝಾಬಾದ್ (UP) ನಲ್ಲಿ ‘ತಾಂತ್ರಿಕ ಕೇಂದ್ರ’ ಎಂದು ಕರೆಯಲಾಗುವ ಸಂಸ್ಥೆಯನ್ನು ನಡೆಸುತ್ತಿದ್ದಾನೆ. ವಿಚಾರಣೆ ಸಂದರ್ಭ, ಆರೋಪಿ ಅಮಾಯಕ ಜನರಿಗೆ ತಾಂತ್ರಿಕ ಆಚರಣೆಗಳ ಮೂಲಕ ‘ಧನವರ್ಷ’ದ ಆಮಿಷ ಒಡ್ಡುತ್ತಿದ್ದ ಎಂಬುದು ಬಹಿರಂಗವಾಗಿದೆ. ‘‘ಅವನು ಸಂತ್ರಸ್ತರ ಭರವಸೆಯನ್ನು ಗಳಿಸುತ್ತಿದ್ದ, ಅವರನ್ನು ಮಾನಸಿಕವಾಗಿ ಪ್ರಭಾವಿತಗೊಳಿಸುತ್ತಿದ್ದ, ಹಾಗೂ ಲಾಡಿನಲ್ಲಿ ವಿಷ ಬೆರೆಸಿ ನೀಡಿ ಹತ್ಯೆಗೈಯುತ್ತಿದ್ದ. ಅನಂತರ ಅವರಲ್ಲಿರುವ ನಗದು ಹಾಗೂ ಮೌಲ್ಯಯುತ ವಸ್ತುಗಳನ್ನು ಲೂಟಿ ಮಾಡುತ್ತಿದ್ದ’’ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿ ಪದೇಪದೇ ಅಪರಾಧ ಎಸಗುವ ವ್ಯಕ್ತಿ. ಈ ಹಿಂದೆ ಆತ ಉತ್ತರ ಪ್ರದೇಶ ಹಾಗೂ ರಾಜಸ್ಥಾನದಲ್ಲಿ ಎರಡು ಹೇಯ ಅಪರಾಧಗಳಲ್ಲಿ ಭಾಗಿಯಾಗಿದ್ದ ಎಂದು ಅವರು ತಿಳಿಸಿದ್ದಾರೆ. ಸಂತ್ರಸ್ತರ ವಾಹನಗಳನ್ನು ಪರಿಶೀಲಿಸಿದ ಸಂದರ್ಭ, ಅವುಗಳಲ್ಲಿ ಮೃತದೇಹಗಳು ಪತ್ತೆಯಾಗಿತ್ತು. 

ವಾರ್ತಾ ಭಾರತಿ 11 Feb 2026 9:20 pm

ನೀಲಹಳ್ಳಿ ಗ್ರಾಮದಲ್ಲಿ ಹೊಟೇಲ್‌ಗೆ ಬೆಂಕಿ ಹಚ್ಚಿದ ಪ್ರಕರಣ: 11 ಅಪರಾಧಿಗಳಿಗೆ 3 ವರ್ಷ ಜೈಲು ಶಿಕ್ಷೆ

ಯಾದಗಿರಿ: ತಾಲೂಕಿನ ಸೈದಾಪೂರ ಪೊಲೀಸ್ ಠಾಣೆ ವ್ಯಾಪ್ತಿಯ ನೀಲಹಳ್ಳಿ ಗ್ರಾಮದಲ್ಲಿ 2014ರಲ್ಲಿ ಹೊಟೇಲ್ ಹಾಗೂ ಕಿರಾಣಿ ಅಂಗಡಿಗೆ ಬೆಂಕಿ ಹಚ್ಚಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ 11 ಆರೋಪಿಗಳಿಗೆ ತಲಾ 3 ವರ್ಷ ಕಾರಾಗೃಹ ಶಿಕ್ಷೆ ಹಾಗೂ ಒಟ್ಟು 77 ಸಾವಿರ ರೂ. ದಂಡ ವಿಧಿಸಿ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು ನೀಡಿದೆ. ದೇವಸ್ಥಾನಕ್ಕೆ ಸೇರಿದೆ ಎನ್ನಲಾದ ಜಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಹೊಟೇಲ್ ಹಾಗೂ ಕಿರಾಣಿ ಅಂಗಡಿಗೆ 2014ರ ಮಾರ್ಚ್ 18ರಂದು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಸುಮಾರು 1.20 ಲಕ್ಷ ರೂ. ಮೌಲ್ಯದ ಆಸ್ತಿಯನ್ನು ನಾಶಪಡಿಸಲಾಗಿತ್ತು.   ಈ ಪ್ರಕರಣದಲ್ಲಿ ನೀಲಹಳ್ಳಿ ಗ್ರಾಮದ ನಿವಾಸಿಗಳಾದ ಶಂಕ್ರೆಪ್ಪಗೌಡ, ಶಾಂತುರೆಡ್ಡಿ ಪೊಲೀಸ್ ಪಾಟೀಲ್, ಬಸನಗೌಡ ಗಿರಿಯಪ್ಪನೋರು, ಚೆನ್ನರೆಡ್ಡಿ, ರೆಡ್ಡಪ್ಪ, ಬನ್ನಪ್ಪ, ಹನುಮಂತ, ಹುಸೇನಪ್ಪ, ಮಲ್ಲಪ್ಪ, ಮಾರಾಯ, ಹಾಗೂ ಭೀಮಣ್ಣ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು. ಸರಕಾರದ ಪರವಾಗಿ ಪ್ರಧಾನ ಸರಕಾರಿ ಅಭಿಯೋಜಕ ಗುರುಲಿಂಗಪ್ಪ ಶ್ರೀಮಂತ ತೇಲಿ ವಾದ ಮಂಡಿಸಿದ್ದರು.

ವಾರ್ತಾ ಭಾರತಿ 11 Feb 2026 9:20 pm

ಕಾರು ಸಮೇತ ಕಾರ್ಮಿಕರಿಬ್ಬರು ನಾಪತ್ತೆ

ಅಜೆಕಾರು: ರಬ್ಬರ್ ಟ್ಯಾಪಿಂಗ್ ಕೃಷಿ ಕೆಲಸಕ್ಕೆ ಹೋಗಿದ್ದ ಕಾರ್ಮಿಕರಿಬ್ಬರು ಕಾರು ಸಮೇತ ನಾಪತ್ತೆಯಾಗಿರುವ ಘಟನೆ ವರಂಗ ಎಂಬಲ್ಲಿ ಫೆ.9ರಂದು ನಡೆದಿದೆ. ನಾಪತ್ತೆಯಾದವರನ್ನು ಕೇರಳದ ಸಾಬು ಕೆ.ಎಸ್.(44), ಕೇರಳ ಮತ್ತು ಮೊಹಮ್ಮದ್ ಅರಾಫತ್(41) ಎಂದು ಗುರುತಿಸಲಾಗಿದೆ. ಕಡ್ತಲದ ರಮೇಶ್ ಕುಮಾರ್ ಎಂಬವರು ಮಠದಬೆಟ್ಟುವಿನಿಂದ ರಬ್ಬರ್ ಟ್ಯಾಪಿಂಗ್ ಕೃಷಿ ಕೆಲಸಕ್ಕೆ ಇವರಿಬ್ಬರನ್ನು ಫೆ.9ರಂದು ಬೆಳಗ್ಗೆ ವರಂಗಕ್ಕೆ ಕೆಲಸಕ್ಕೆ ಕಾರಿನಲ್ಲಿ ಕಳುಹಿಸಿದ್ದರು. ಆದರೆ ಇವರು ಕೆಲಸಕ್ಕೆ ಹೋಗದೆ ವಾಹನ ಸಮೇತ ನಾಪತ್ತೆಯಾಗಿದ್ದಾರೆಂದು ದೂರಲಾಗಿದೆ. ಈ ಬಗ್ಗೆ ಅಜೆಕಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಾರ್ತಾ ಭಾರತಿ 11 Feb 2026 9:20 pm

ಬಸ್ ಏಜೆಂಟ್ ಆತ್ಮಹತ್ಯೆ

ಉಡುಪಿ, ಫೆ,11: ಬಸ್ ಏಜೆಂಟರೊಬ್ಬರು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಫೆ.11ರಂದು ಬೆಳಗ್ಗೆ ಬನ್ನಂಜೆ ಗರಡಿ ರಸ್ತೆ ಎಂಬಲ್ಲಿ ನಡೆದಿದೆ. ಮೃತರನ್ನು ಬನ್ನಂಜೆ ಗರಡಿ ರಸ್ತೆ ನಿವಾಸಿ ರಾಜೇಶ್ ಶೆಣೈ(56) ಎಂದು ಗುರುತಿಸಲಾಗಿದೆ. ಮಾನಸಿಕ ಖಿನ್ನತೆ ಯಿಂದ ಬಳಲುತ್ತಿದ್ದ ಇವರು, ಬಸ್ ಏಜೆಂಟ್ ಆಗಿ ಕೆಲಸ ನಿರ್ವಹಿಸುತ್ತಿದ್ದರು. ಜೀವನದಲ್ಲಿ ಜಿಗುಪ್ಸೆಗೊಂಡ ಇವರು ಮನೆ ಸಮೀಪದ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಾರ್ತಾ ಭಾರತಿ 11 Feb 2026 9:18 pm