ಅಮೆರಿಕಾ ಇರಾನ್ ನಡುವಿನ ಬಿಕ್ಕಟ್ಟಿನ ನಡುವೆ ಇರಾನ್ ಹೊರ್ಮುಜ್ ಜಲಸಂಧಿಯನ್ನು ತಾತ್ಕಲಿಕವಾಗಿ ಸ್ಥಗಿತಗೊಳಿಸಿದೆ. ಈ ನಿರ್ಧಾರವೇನೂ ತಾತ್ಕಾಲಿಕವಾಗಿಯೇ ಆಗಿದ್ದರೂ ಈ ನಡೆ ಮಾತ್ರ ಅಪರೂಪವಾಗಿದ್ದು, ಸುಮಾರು 4 ದಶಕಗಳಿಂದ ಇರಾನ್ ಈ ಜಲಸಂಧಿಯನ್ನು ಸ್ಥಗಿತಗೊಳಿಸಿದ ಪ್ರಸಂಗವೇ ಇಲ್ಲ. ಆದರೆ ಅಮೆರಿಕಾದೊಂದಿಗೆ ಬಿಕ್ಕಟ್ಟಿನ ಮಧ್ಯೆ ಸುರಕ್ಷತೆಯ ದೃಷ್ಠಿಯಿಂದ ಎಂಬ ಕಾರಣ ನೀಡಿ ಕೆಲ ಸಮಯದವರೆಗೆ ಮಾಡಿದ ಈ ಸ್ಥಗಿತ ಜಾಗತಿಕ ಮಾರುಕಟ್ಟೆಯಲ್ಲಿ ಆತಂಕವನ್ನುಂಟು ಮಾಡಿದೆ. ಇದಕ್ಕೆ ಕಾರಣ ಜಾಗತಿಕ ಮಾರುಕಟ್ಟೆಯ ಸರಾಸರಿ ಶೇ.20% ತೈಲ ಇಲ್ಲಿಂದಲೇ ಸಾಗಿ ಪೂರೈಕೆಯಾಗುತ್ತದೆ. ಹೀಗಿರುವಾಗ ಈ ತಾತ್ಕಲಿಕ ಸ್ಥಗಿತ ಯುದ್ದ ಆರಂಭವಾದಲ್ಲಿ ಅನಿರ್ದಿಷ್ಟಾವಧಿಗೆ ಮಾರ್ಪಾಡಾದರೆ ಅಪಾಯ ತಪ್ಪಿದಲ್ಲ ಎಂದು ಕಳವಳ ಮೂಡಿಸಿದೆ. ಹಾಗಾದ್ರೆ, ಏನಿದು ಇರಾನ್ ನ ಅಪರೂಪದ ಹೊರ್ಮುಜ್ ಜಲಸಂಧಿ ಸ್ಥಗಿತಗೊಳಿಸಿದ ನಡೆ, ಇದು ಜಾಗತಿಕ ಮಾರುಕಟ್ಟೆಯಲ್ಲಿ ಆತಂಕಕ್ಕೆ ಏಕೆ ಕಾರಣವಾಗುತ್ತೆ ಎಂಬ ಮಾಹಿತಿ ಇಲ್ಲಿದೆ..
ಮೊದಲ ಬಾರಿ ರಣಜಿ ಫೈನಲ್ ತಲುಪಿ ಇತಿಹಾಸ ನಿರ್ಮಿಸಿದೆ ಜಮ್ಮು ಕಾಶ್ಮೀರ!; ಘಟಾನುಘಟಿಗಳಿದ್ದರೂ ಎಡವಿತು ಬಲಿಷ್ಠ ಬಂಗಾಳ
Jammu And Kashmir Cricket Team- ಕಳೆದ ಕೆಲವು ವರ್ಷಗಳಿಂದ ಸದ್ದು ಮಾಡುತ್ತಿರುವ ಜಮ್ಮು ಮತ್ತು ಕಾಶ್ಮೀರ ಕ್ರಿಕೆಟ್ ತಂಡ ಇದೀಗ ಮೊದಲ ಬಾರಿಗೆ ಪ್ರತಿಷ್ಠಿತ ರಣಜಿ ಟ್ರೋಫಿ ಫೈನಲ್ ತಲುಪಿ ಇತಿಹಾಸ ನಿರ್ಮಿಸಿದೆ. ಬಲಿಷ್ಠ ಬಂಗಾಳ ತಂಡದ ವಿರುದ್ಧ ನಡೆದ ಸೆಮಿಫಾನಲ್ ನಲ್ಲಿ 6 ವಿಕೆಟ್ ಗಳ ಜಯ ದಾಖಲಿಸಿದ ಪರಾಸ್ ದೋಗ್ರಾ ನೇತೃತ್ವದ ಕಣಿವೆ ರಾಜ್ಯದ ತಂಡ ಎಲ್ಲರನ್ನೂ ನಿಬ್ಬೆರಗಾಗಿಸಿತು. ಮತ್ತೊಂದು ಸೆಮಿಫೈನಲ್ ಪಂದ್ಯದಲ್ಲಿ ಕರ್ನಾಟಕ ತಂಡ ಉತ್ತರಾಖಂಡ ವಿರುದ್ಧ ಪ್ರಥಮ ಇನ್ನಿಂಗ್ಸ್ ಮುನ್ನಡೆ ಗಳಿಸಿದೆ. ಹೀಗಾಗಿ ಕರ್ನಾಟಕ ಮತ್ತು ಜಮ್ಮು ಕಾಶ್ಮೀರ ತಂಡಗಳ ನಡುವೆ ಫೈನಲ್ ಪಂದ್ಯ ನಡೆಯುವ ಎಲ್ಲಾ ಸಾಧ್ಯತೆಗಳಿವೆ.
AI Impact Summit 2026: ಕ್ಲಿನಿಕ್ ನಿಭಾಯಿಸುವ ರೊಬೊ ಸೇರಿ ಭಾರತವೇ ಹೊರತಂದಿದೆ ಐದು ಸೂಪರ್ ಎಐ ತಂತ್ರಜ್ಞಾನ
AI Impact Summit 2026: ನವದೆಹಲಿಯಲ್ಲಿ ನಡೆಯುತ್ತಿರುವ ಎಐ ಇಂಪ್ಯಾಕ್ಟ್ ಶೃಂಗಸಭೆಯು ಜಾಗತಿಕ ಮಟ್ಟದಲ್ಲಿ ಕೃತಕ ಬುದ್ಧಿಮತ್ತೆ (ಎಐ) ಕುರಿತಾದ ಚರ್ಚೆಗಳಿಗೆ ಪ್ರಮುಖ ವೇದಿಕೆಯಾಗುತ್ತಿದೆ. ಈ ಶೃಂಗಸಭೆಯು ರಾಜಕೀಯ ನಾಯಕರು, ತಂತ್ರಜ್ಞಾನ ದಿಗ್ಗಜ ಕಂಪನಿಗಳು, ಸ್ಟಾರ್ಟ್ಅಪ್ಗಳು ಮತ್ತು ಸಂಶೋಧಕರನ್ನು ಈ ವೇದಿಕೆಯಲ್ಲಿ ಒಗ್ಗೂಡಿಸಿದೆ. ಈ ಶೃಂಗಸಭೆಯಲ್ಲಿ ಮೇಡ್ ಇನ್ ಇಂಡಿಯಾ ಹೆಮ್ಮೆ ಮೂಡಿಸುವ ಪ್ರಮುಖ ಎಐ ಉತ್ಪನ್ನಗಳು
ಹೊಸದಿಲ್ಲಿಯಲ್ಲಿ ನಡೆಯುತ್ತಿರುವ ಇಂಡಿಯಾ ಎಐ ಇಂಪ್ಯಾಕ್ಟ್ ಶೃಂಗಸಭೆಯ ಎಕ್ಸ್ಪೋದಿಂದ ಗಲ್ಗೋಟಿಯಾಸ್ ವಿಶ್ವವಿದ್ಯಾಲಯವನ್ನು ಹೊರಹಾಕಲಾಗಿದೆ. ಗ್ರೇಟರ್ ನೋಯ್ಡಾ ಮೂಲದ ಗಲ್ಗೋಟಿಯಾಸ್ ವಿವಿ ಎಕ್ಸ್ಪೋದಲ್ಲಿ ರೋಬೋಡಾಗ್ ನ್ನು ಪ್ರದರ್ಶಿಸಿದ್ದು, ವಿಶ್ವವಿದ್ಯಾನಿಲಯದ ಸೆಂಟರ್ ಆಫ್ ಎಕ್ಸಲೆನ್ಸ್ ಅಭಿವೃದ್ಧಿಪಡಿಸಿದ ರೋಬೋಡಾಗ್ ಇದು ಎಂದು ಹೇಳಿತ್ತು. ಓರಿಯನ್ ಎಂದು ಈ ರೋಬೋಡಾಗ್ ಗೆ ಹೆಸರಿಡಲಾಗಿದೆ. ನಮ್ಮ ವಿವಿಯ ಸೆಂಟರ್ ಆಫ್ ಎಕ್ಸಲೆನ್ಸ್ ಅಭಿವೃದ್ಧಿಪಡಿಸಿದ ರೋಬೋಡಾಗ್ ಇದು ಎಂದು ವಿವಿಯ ಪ್ರೊಫೆಸರ್ ಒಬ್ಬರು ಮಾಧ್ಯಮ ಸಂದರ್ಶನದಲ್ಲಿ ಹೇಳಿದ್ದರು. ಈ ಸಂದರ್ಶನದ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದ್ದಂತೆ, ಸೋಷಿಯಲ್ ಮೀಡಿಯಾ ಬಳಕೆದಾರರು ಇದು ಚೀನಾದ ರೋಬೋಡಾಗ್ Unitree Go2 ಎಂದು ಗುರುತಿಸಿದ್ದು, ಗಲ್ಗೋಟಿಯಾ ವಿವಿ ವಿದೇಶದ ತಂತ್ರಜ್ಞಾನವನ್ನು ತಮ್ಮದೆಂದು ಹೇಳಿಕೊಳ್ಳುತ್ತಿದೆ ಎಂದು ಆರೋಪಿಸಿದ್ದಾರೆ. ಈ ಆರೋಪದ ಬೆನ್ನಲ್ಲೇ ಗಲ್ಗೋಟಿಯಾಸ್ ವಿವಿಯನ್ನು ಶೃಂಗಸಭೆಯ ಎಕ್ಸ್ಪೋದಿಂದ ಹೊರಹೋಗುವಂತೆ ಹೇಳಲಾಯಿತು. ಗಲ್ಗೋಟಿಯಾಸ್ ವಿವಿ ಪ್ರದರ್ಶಿಸಿರುವ ರೋಬೋಟ್ ಯುನಿಟ್ರೀ ಗೋ2 ಚೀನಾದ ರೋಬೋಟಿಕ್ಸ್ ಕಂಪನಿ ಯುನಿಟ್ರೀಯಿಂದ ವಾಣಿಜ್ಯಿಕವಾಗಿ ಲಭ್ಯವಿರುವ ಮಾದರಿಯಾಗಿದ್ದು, ಇದನ್ನು ಭಾರತದಲ್ಲಿ ಆನ್ಲೈನ್ನಲ್ಲಿ ರೂ. 2 ಲಕ್ಷದಿಂದ ರೂ. 3 ಲಕ್ಷದವರೆಗೆ ಮಾರಾಟ ಮಾಡಲಾಗುತ್ತದೆ. ಗಲ್ಗೋಟಿಯಾಸ್ ವಿವಿ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಟೀಕೆಗಳು ವ್ಯಕ್ತವಾದ ಬೆನ್ನಲ್ಲೇ ವಿಶ್ವವಿದ್ಯಾಲಯವು X ನಲ್ಲಿ ಹೇಳಿಕೆಯೊಂದನ್ನು ಪೋಸ್ಟ್ ಮಾಡಿದೆ. ರೋಬೋಟಿಕ್ ನಾಯಿಯನ್ನು ಯುನಿಟ್ರೀಯಿಂದ ಖರೀದಿಸಲಾಗಿದೆ. ಅದನ್ನು ವಿದ್ಯಾರ್ಥಿಗಳಿಗೆ ಕಲಿಕಾ ಸಾಧನವಾಗಿ ಮಾತ್ರ ಬಳಸಲಾಗುತ್ತಿದೆ. ಈ ರೋಬೋಡಾಗ್ ನ್ನು ನಾವೇ ಅಭಿವೃದ್ಧಿಪಡಿಸಿದ್ದು ಎಂದು ನಾವು ಹೇಳಿಲ್ಲ. ಯುನಿಟ್ರೀಯಿಂದ ಇತ್ತೀಚೆಗೆ ಖರೀದಿಸಿದ ರೋಬೋಡಾಗ್ ಆ ಪ್ರಯಾಣದಲ್ಲಿ ಅಂತಹ ಒಂದು ಹೆಜ್ಜೆಯಾಗಿದೆ. ಇದು ಕೇವಲ ಪ್ರದರ್ಶನದಲ್ಲಿರುವ ಯಂತ್ರವಲ್ಲ. ಇದು ಚಲನೆಯಲ್ಲಿರುವ ತರಗತಿ ಕೊಠಡಿ. ನಮ್ಮ ವಿದ್ಯಾರ್ಥಿಗಳು ಅದರೊಂದಿಗೆ ಪ್ರಯೋಗ ಮಾಡುತ್ತಿದ್ದಾರೆ. ಅದರ ಮಿತಿಗಳನ್ನು ಪರೀಕ್ಷಿಸುತ್ತಿದ್ದಾರೆ ಈ ಮೂಲಕ ಅವರು ತಮ್ಮ ಜ್ಞಾನವನ್ನು ವಿಸ್ತರಿಸುತ್ತಿದ್ದಾರೆ. ನಾವು ಸ್ಪಷ್ಟಪಡಿಸುವುದೇನೆಂದರೆ ಗಲ್ಗೋಟಿಯಾಸ್ ರೋಬೋಡಾಗ್ ಅನ್ನು ನಿರ್ಮಿಸಿಲ್ಲ ಅಥವಾ ನಾವು ಅದನ್ನು ನಿರ್ಮಿಸಿರುವುದಾಗಿ ಯಾವತ್ತೂ ಹೇಳಿಕೊಂಡಿಲ್ಲ. ಆದರೆ ನಾವು ಶೀಘ್ರದಲ್ಲೇ ಭಾರತದಲ್ಲಿಯೇ ಅಂತಹ ತಂತ್ರಜ್ಞಾನಗಳನ್ನು ವಿನ್ಯಾಸಗೊಳಿಸುವ, ಇಂಜಿನಿಯರ್ ಮಾಡುವ ವಿದ್ಯಾರ್ಥಿಗಳನ್ನು ತಯಾರು ಮಾಡುತ್ತಿದ್ದೇವೆ ಎಂದಿದೆ. ಇನ್ನೊಂದು ಪೋಸ್ಟ್ ನಲ್ಲಿ ತಮ್ಮ ವಿವಿ ವಿರುದ್ಧ ಟೀಕೆಯು ಪ್ರಚಾರ ಅಭಿಯಾನದ ಭಾಗವೆಂದು ವಿವರಿಸಿದೆ. ವಿಶ್ವವಿದ್ಯಾನಿಲಯವು ತಮ್ಮ ತಪ್ಪಿನಿಂದ ನುಣುಚಿಕೊಳ್ಳಲು ಪ್ರಯತ್ನಿಸುತ್ತಿದ್ದಂತೆ ಸೋಷಿಯಲ್ ಮೀಡಿಯಾ ಬಳಕೆದಾರರು ಗಲ್ಗೋಟಿಯಾಸ್ ವಿವಿ ರೋಬೋಟ್ ಅನ್ನು ಪ್ರದರ್ಶಿಸಿದ್ದಲ್ಲದೆ ಅದಕ್ಕೆ ಓರಿಯನ್ ಎಂದು ಮರುನಾಮಕರಣ ಮಾಡಿದೆ. ಅದನ್ನು ತಾವೇ ನಿರ್ಮಿಸಿದ್ದೇವೆ ಎಂದು ಹೇಳುತ್ತಿರುವ ವಿಡಿಯೊವನ್ನು ಪುರಾವೆಯಾಗಿ ತೋರಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯೆಯಾಗಿ, ವಿಶ್ವವಿದ್ಯಾನಿಲಯವು ನಿಜವಾದ ನಾವೀನ್ಯತೆ ರಾಷ್ಟ್ರೀಯ ಗಡಿಗಳಿಂದ ಸೀಮಿತವಾಗಿರಬಾರದು. ಪ್ರಪಂಚದಾದ್ಯಂತದ ಉನ್ನತ ಶ್ರೇಣಿಯ ತಂತ್ರಜ್ಞಾನವನ್ನು ಆಮದು ಮಾಡಿಕೊಳ್ಳುವುದು ವಾಸ್ತವವಾಗಿ ತಮ್ಮ ವಿದ್ಯಾರ್ಥಿಗಳಿಗೆ ಸಾಧ್ಯವಾದಷ್ಟು ಉತ್ತಮವಾದ ಪ್ರಾಯೋಗಿಕ ಅನುಭವವನ್ನು ನೀಡುವ ತಂತ್ರವಾಗಿದೆ ಎಂದು ಹೇಳಿದೆ. ► ರೋಬೋಡಾಗ್ ವಿವಾದ ಗಲ್ಗೋಟಿಯಾಸ್ ನ ಪ್ರಾಧ್ಯಾಪಕಿ ನೇಹಾ ಸಿಂಗ್ ಅವರು ವಿಶ್ವವಿದ್ಯಾನಿಲಯದ ಸೆಂಟರ್ ಆಫ್ ಎಕ್ಸಲೆನ್ಸ್ ಸಂಸ್ಥೆಯ 350 ಕೋಟಿ ರೂ.ಗಳ AI ಉಪಕ್ರಮದ ಅಡಿಯಲ್ಲಿ ಓರಿಯನ್ ಅನ್ನು ಅಭಿವೃದ್ಧಿಪಡಿಸಿದೆ ಎಂದು ಹೇಳಿಕೊಂಡ ವಿಡಿಯೊ ವೈರಲ್ ಆಗಿದೆ. ನೀವು ಓರಿಯನ್ ನ್ನು ಭೇಟಿ ಮಾಡಬೇಕು. ಇದನ್ನು ಗಲ್ಗೋಟಿಯಾಸ್ ವಿಶ್ವವಿದ್ಯಾಲಯದ ಸೆಂಟರ್ ಆಫ್ ಎಕ್ಸಲೆನ್ಸ್ ಅಭಿವೃದ್ಧಿಪಡಿಸಿದೆ. ಈ ಯಂತ್ರವು ಕಣ್ಗಾವಲು ಮತ್ತು ಮೇಲ್ವಿಚಾರಣೆ ಕಾರ್ಯಗಳನ್ನು ಮಾಡುವ ಸಾಮರ್ಥ್ಯವನ್ನು ಹೊಂದಿದೆ. ಇದು ಕ್ಯಾಂಪಸ್ನಾದ್ಯಂತ ಮುಕ್ತವಾಗಿ ಚಲಿಸುತ್ತದೆ ಎಂದು AI ಶೃಂಗಸಭೆಯಲ್ಲಿ ರೋಬೋಡಾಗ್ ನ ವೈಶಿಷ್ಟ್ಯಗಳನ್ನು ನೇಹಾ ಮಾಧ್ಯಮ ಪ್ರತಿನಿಧಿಗೆ ವಿವರಿಸಿದ್ದರು. ► ಯುನಿಟ್ರೀ ರೋಬೋಡಾಗ್ ಎಂದರೇನು? ಯುನಿಟ್ರೀ ರೊಬೊಟಿಕ್ಸ್ನ ರೋಬೋಡಾಗ್ಗಳು ಅಡೆತಡೆಗಳನ್ನು ದಾಟುವುದರಿಂದ ಹಿಡಿದು ಕೈಗಾರಿಕಾ ತಾಣಗಳನ್ನು ಪರಿಶೀಲಿಸುವ, ಮನರಂಜನಾ ಬಳಕೆಯವರೆಗೆ ವಿಭಿನ್ನ ಕಾರ್ಯಗಳನ್ನು ನಿರ್ವಹಿಸುವಾಗ ನೈಜ ಪ್ರಾಣಿಗಳಂತೆಯೇ ನಡೆಯಲು ಮತ್ತು ಚಲಿಸಲು ನಿರ್ಮಿಸಲಾದ ನಾಲ್ಕು ಕಾಲಿನ ರೋಬೋಟ್ಗಳ ಶ್ರೇಣಿಯಾಗಿದೆ. ಯುನಿಟ್ರೀ ಚೀನಾದ ರೊಬೊಟಿಕ್ಸ್ ಸಂಸ್ಥೆಯಾಗಿದ್ದು, ಇದು ಕಡಿಮೆ ಬೆಲೆಯಲ್ಲಿ ಯಂತ್ರಗಳನ್ನು ಮಾರಾಟ ಮಾಡುತ್ತದೆ. ► ಕಾಂಗ್ರೆಸ್ ವಿರುದ್ಧ ಪ್ರತಿಭಟನೆ ನಡೆಸಿ ಟ್ರೋಲ್ ಆಗಿದ್ದ ಗಲ್ಗೋಟಿಯಾಸ್ ವಿವಿ ವಿದ್ಯಾರ್ಥಿಗಳು 2024ರಲ್ಲಿ ಗಲ್ಗೋಟಿಯಾಸ್ ವಿವಿಯ ವಿದ್ಯಾರ್ಥಿಗಳು ಕಾಂಗ್ರೆಸ್ ಪಕ್ಷದ ಚುನಾವಣಾ ಪ್ರಣಾಳಿಕೆ ವಿರುದ್ಧ ದಿಲ್ಲಿಯ ಕಾಂಗ್ರೆಸ್ ಕಚೇರಿಗೆ ಪ್ರತಿಭಟನಾ ಮೆರವಣಿಗೆ ನಡೆಸಿದ್ದರು. ಆ ವೇಳೆ ಪತ್ರಕರ್ತರೊಬ್ಬರು, ಪ್ರತಿಭಟನೆಯಲ್ಲಿ ಭಾಗಿಯಾಗಿರುವ ವಿದ್ಯಾರ್ಥಿಗಳಲ್ಲಿ ನೀವು ಯಾಕೆ ಈ ಪ್ರತಿಭಟನೆ ಮಾಡುತ್ತಿದ್ದೀರಿ? ಎಂದು ಕೇಳಿದಾಗ ಹಲವರು ಉತ್ತರ ನೀಡಲು ತಡಕಾಡಿದ್ದರು. ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದೀರಿ, ಪ್ರಣಾಳಿಕೆಯಲ್ಲಿ ಏನಿದೆ ಎಂದು ಕೇಳಿದಾಗ ಅದೂ ಅವರಿಗೆ ಗೊತ್ತಿರಲಿಲ್ಲ. ಕೈಯಲ್ಲಿರುವ ಪೋಸ್ಟರ್ ಗಳನ್ನು ಕೂಡಾ ಓದಲು ಅವರು ಹೆಣಗಾಡಿದ್ದರು. ಯಾಕೆ ಪ್ರತಿಭಟಿಸುತ್ತಿದ್ದಾರೆ ಎಂಬುದನ್ನು ವಿವರಿಸಲು ವಿದ್ಯಾರ್ಥಿಗಳಿಗೆ ಸಾಧ್ಯವಾಗಲಿಲ್ಲ. ವರದಿಗಾರ ಒಬ್ಬ ವಿದ್ಯಾರ್ಥಿಯಲ್ಲಿ ಯಾಕೆ ಪ್ರತಿಭಟನೆ ನಡೆಸುತ್ತಿದ್ದೀರಿ ಎಂದು ಕೇಳಿದಾಗ , ನಾವು ಯುವಕರು ಮತ್ತು ಅಭಿವೃದ್ಧಿ ಹೊಂದಿದ ಭಾರತವನ್ನು ಬಯಸುತ್ತೇವೆ, ಅದಕ್ಕಾಗಿಯೇ ನಾವು ಪ್ರತಿಭಟಿಸುತ್ತಿದ್ದೇವೆ ಎಂದು ಆತ ಹೇಳಿದ್ದಾನೆ. ನೀವು ಇಲ್ಲಿ ಸಂಪತ್ತಿನ ಮರು ಹಂಚಿಕೆ, ಪಿತ್ರಾರ್ಜಿತ ಆಸ್ತಿ ತೆರಿಗೆ ವಿರುದ್ಧ ಘೋಷಣೆ ಕೂಗುತ್ತಿದ್ದೀರಿ ಅದೇನು? ಎಂದು ಕೇಳಿದಾಗ ವಿದ್ಯಾರ್ಥಿ ನನಗೆ ಗೊತ್ತಿಲ್ಲ ಎಂದಿದ್ದಾನೆ. Say no to wealth vulture ಎಂಬ ಫಲಕ ಹಿಡಿದಿದ್ದ ವಿದ್ಯಾರ್ಥಿನಿಯಲ್ಲಿ ಇದರ ಅರ್ಥವೇನು ಎಂದು ಕೇಳಿದಾಗ ಆಕೆಗೂ ಉತ್ತರ ಗೊತ್ತಿರಲಿಲ್ಲ. ಅದೇ ರೀತಿ No place for urban Naxals in Viksit Bharat ಎಂಬ ಫಲಕ ಹಿಡಿದಿದ್ದ ವಿದ್ಯಾರ್ಥಿಯಲ್ಲಿ ಅದರ ಅರ್ಥ ಕೇಳಿದಾಗ ಅವನಿಗೂ ಅದೇನೆಂದು ಗೊತ್ತಿರಲಿಲ್ಲ. ವಿದ್ಯಾರ್ಥಿಗಳು ಇಂಗ್ಲಿಷ್ ಮಾತ್ರವಲ್ಲ ಹಿಂದಿಯಲ್ಲಿ ಬರೆದ ಪೋಸ್ಟರ್ ಗಳನ್ನು ಕೂಡಾ ಓದಲು ತಡಕಾಡಿದರು. ಕೆಲವರು ಪೋಸ್ಟರ್ ಗಳಿಂದಲೇ ಮುಖ ಮರೆ ಮಾಡಿಕೊಂಡರು. ಈ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಟ್ರೋಲ್ ಆಗಿತ್ತು #Congress के खिलाफ वेल्थ डिस्ट्रीब्यूशन-कथित इन्हेरिटेंसी टैक्स के मुद्दे पर छात्रों का प्रदर्शन लेकिन ज्यादातर को न मुद्दे पता थे ना वजह। कुछ बैनर भी ठीक से नहीं पढ़ पाए। देखिए कांग्रेस मुख्यालय की ओर प्रदर्शन करने चले छात्रों के गजब जवाब। #ReporterDiary | ( @JournoAshutosh ) pic.twitter.com/ystudZDqYm — AajTak (@aajtak) May 1, 2024 2020ರಲ್ಲಿ ಗಲ್ಗೋಟಿಯಾ ವಿವಿಯ ಸಂಶೋಧನಾ ವಿದ್ಯಾರ್ಥಿ ಧರ್ಮೇಂದ್ರ ಕುಮಾರ್ 'Corona virus killed by sound vibrations produced by Thali or Ghanti: A potential hypothesis' ಎಂಬ ಸಂಶೋಧನಾ ಪ್ರಬಂಧ ಟೀಕೆಗೊಳಗಾಗಿತ್ತು. 2020 : Dharmendra Kumar, research scholar at Galgotias university. Corona virus killed by sound vibrations produced by Thali or Ghanti: A potential hypothesis https://t.co/dGyOPA2zDy pic.twitter.com/D9ftfk56ew — Mohammed Zubair (@zoo_bear) February 17, 2026 ವೈದ್ಯರು ಮತ್ತು ವಿಜ್ಞಾನಿಗಳು ಈ ಪ್ರಬಂಧವು ಅವೈಜ್ಞಾನಿಕವಾಗಿದೆ ಎಂದು ಟೀಕಿಸಿದ್ದು ಜಾಗತಿಕ ಆರೋಗ್ಯ ಬಿಕ್ಕಟ್ಟಿನ ಸಂದರ್ಭದಲ್ಲಿ ಸುಳ್ಳು ನಿರೂಪಣೆಯ ಹರಡುವಿಕೆಯನ್ನು ಪ್ರೋತ್ಸಾಹಿಸಿದ್ದಕ್ಕಾಗಿ ವಿಶ್ವವಿದ್ಯಾನಿಲಯವನ್ನು ತರಾಟೆಗೆ ತೆಗೆದುಕೊಂಡಿದ್ದರು. ಗಲ್ಗೋಟಿಯಾಸ್ ವಿಶ್ವವಿದ್ಯಾಲಯದ ವೆಬ್ಸೈಟ್ ಪ್ರಕಾರ, ಈ ಶಿಕ್ಷಣ ಸಂಸ್ಥೆಯನ್ನು 2011 ರಲ್ಲಿ ಶಕುಂತಲಾ ಶೈಕ್ಷಣಿಕ ಮತ್ತು ಕಲ್ಯಾಣ ಸೊಸೈಟಿ ಸ್ಥಾಪಿಸಿದೆ. ವಿಶ್ವವಿದ್ಯಾಲಯದ ಜೊತೆಗೆ, ಗಾಲ್ಗೋಟಿಯಾಸ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ & ಟೆಕ್ನಾಲಜಿ (GIMT), ಗಾಲ್ಗೋಟಿಯಾಸ್ ಕಾಲೇಜ್ ಆಫ್ ಎಂಜಿನಿಯರಿಂಗ್ & ಟೆಕ್ನಾಲಜಿ (GCET), ಮತ್ತು ಗಲ್ಗೋಟಿಯಾಸ್ ಕಾಲೇಜ್ ಆಫ್ ಫಾರ್ಮಸಿ (GCOP) ಎಂಬ ಮೂರು ಕಾಲೇಜುಗಳನ್ನು ಸೊಸೈಟಿ ನಡೆಸುತ್ತಿದೆ. 30,000 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಇಲ್ಲಿ ಕಲಿಯುತ್ತಿದ್ದಾರೆ. 2014ರಲ್ಲಿ ನರೇಂದ್ರ ಮೋದಿ ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಗಲ್ಗೋಟಿಯಾಸ್ ವಿಶ್ವವಿದ್ಯಾಲಯಕ್ಕೆ ಶೈಕ್ಷಣಿಕ ಕ್ಷೇತ್ರದಲ್ಲಿ ಅತ್ಯುತ್ತಮ ಖಾಸಗಿ ವಿಶ್ವವಿದ್ಯಾಲಯ ಪ್ರಶಸ್ತಿ ಪ್ರದಾನ ಮಾಡಿದ್ದರು.
ಭೋಪಾಲ್: ಇಂದೋರ್ ನಗರದ ಭಾಗೀರಥಪುರ ಪ್ರದೇಶದಲ್ಲಿ ಕಲುಷಿತ ಕುಡಿಯುವ ನೀರು ಸೇವಿಸಿ ಜನರು ಮೃತಪಟ್ಟಿರುವ ವಿಚಾರವು ಮಂಗಳವಾರ ಮಧ್ಯಪ್ರದೇಶ ವಿಧಾನಸಭೆಯಲ್ಲಿ ತೀವ್ರ ಗದ್ದಲಕ್ಕೆ ಕಾರಣವಾಯಿತು. ವಿರೋಧ ಪಕ್ಷವು ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿ ಹೊಣೆಗಾರಿಕೆ ಹೊತ್ತುಕೊಳ್ಳುವಂತೆ ಒತ್ತಾಯಿಸಿದರೆ, ರಾಜ್ಯ ನಗರಾಭಿವೃದ್ಧಿ ಸಚಿವ ಕೈಲಾಶ್ ವಿಜಯವರ್ಗಿಯ ಅವರು 1984ರ ಭೋಪಾಲ್ ಅನಿಲ ದುರಂತವನ್ನು ಉಲ್ಲೇಖಿಸಿ ಕಾಂಗ್ರೆಸ್ ಗೆ ತಿರುಗೇಟು ನೀಡಿದರು. ಈ ವೇಳೆ ಸದನದಲ್ಲಿ ಪದೇಪದೇ ಅಡ್ಡಿಪಡಿಸುವಿಕೆ, ತೀವ್ರ ವಾಗ್ವಾದಗಳು ನಡೆದವು. ಡಿಸೆಂಬರ್ 24, 2025 ರಿಂದ ಈ ವರ್ಷದ ಜನವರಿ 6ರವರೆಗೆ ಇಂದೋರ್ ನ ಭಾಗೀರಥಪುರದಲ್ಲಿ ಕಲುಷಿತ ನೀರು ಸೇವಿಸಿ 23 ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದರು. ಈ ವಿಚಾರವನ್ನು ಪ್ರಶ್ನಿಸಿದ ವಿರೋಧ ಪಕ್ಷದ ನಾಯಕ ಉಮಾಂಗ್ ಸಿಂಘರ್, ಸರ್ಕಾರ ಉದ್ದೇಶಪೂರ್ವಕವಾಗಿ ಚರ್ಚೆಯನ್ನು ತಪ್ಪಿಸುತ್ತಿದೆ ಎಂದು ಆರೋಪಿಸಿದರು. “ನಮ್ಮ ಮುಂದೂಡಿಕೆ ನಿರ್ಣಯ ಜಾರಿಯಲ್ಲಿದೆ. ಭಾಗೀರಥಪುರದಲ್ಲಿ ಜನರು ಕಲುಷಿತ ನೀರು ಕುಡಿದು ಸಾವನ್ನಪ್ಪಿದ್ದಾರೆ. ಸರ್ಕಾರ ಈ ಬಗ್ಗೆ ಕೇಳಲು ಅಥವಾ ಚರ್ಚಿಸಲು ಬಯಸುವುದಿಲ್ಲ. ” ಎಂದು ಅವರು ಸ್ಪೀಕರ್ ಗೆ ಮನವಿ ಮಾಡಿದರು. ಇದೇ ವೇಳೆ ರಾಜ್ಯಪಾಲರ ಭಾಷಣದ ವಂದನಾ ನಿರ್ಣಯದ ಚರ್ಚೆ ನಡೆಯುತ್ತಿತ್ತು. ಬಿಜೆಪಿ ಶಾಸಕ ಪ್ರಭುರಾಮ್ ಚೌಧರಿ ತಮ್ಮ ಭಾಷಣವನ್ನು ಮುಂದುವರಿಸಲು ಯತ್ನಿಸಿದರು. ಸರ್ಕಾರದ ಆರೋಗ್ಯ ಯೋಜನೆಗಳನ್ನು ಉಲ್ಲೇಖಿಸಿ ಮುಖ್ಯಮಂತ್ರಿ ಮೋಹನ್ ಯಾದವ್ ನೇತೃತ್ವದಲ್ಲಿ ರಾಜ್ಯ “ಸರ್ವತೋಮುಖ ಅಭಿವೃದ್ಧಿ” ಯತ್ತ ಸಾಗುತ್ತಿದೆ ಎಂದು ಹೇಳಿದರು. ಆದರೆ ವಿರೋಧ ಪಕ್ಷದ ಸದಸ್ಯರು ಭಾಗೀರಥಪುರದಲ್ಲಿ ಜನರು ಮೃತಪಟ್ಟ ಘಟನೆಗಳನ್ನು ಉಲ್ಲೇಖಿಸುತ್ತಾ ಪದೇಪದೇ ಅಡ್ಡಿಪಡಿಸಿದರು. ಕಾಂಗ್ರೆಸ್ ಶಾಸಕ ಪರಶಿಯಾ ಸೋಹನ್ ಲಾಲ್ ಬಾಲ್ಮಿಕಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿ,“ಭಾಗೀರಥಪುರದಲ್ಲಿ 35 ಜನರನ್ನು ಮಲಮೂತ್ರ ಮಿಶ್ರಿತ ನೀರು ಕುಡಿಸಿ ಕೊಂದಿದ್ದಾರೆ,” ಎಂದು ನೇರವಾಗಿ ಆರೋಪಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಪ್ರಭುರಾಮ್ ಚೌಧರಿ, ಅದು ಆಕಸ್ಮಿಕ ಘಟನೆ. ಅದರ ಬಗ್ಗೆ ಮಾತನಾಡಬೇಡಿ” ಎಂದು ಮನವಿ ಮಾಡಿದಾಗ, ಬಾಲ್ಮಿಕಿ,“ಎಂತಹ ದುರಂತ. 35 ಅಮಾಯಕ ಬಡಜನರು ಅಕಾಲಿಕವಾಗಿ ತಮ್ಮ ಜೀವಗಳನ್ನು ಕಳೆದುಕೊಂಡಿದ್ದಾರೆ,” ಎಂದು ಪ್ರತ್ಯುತ್ತರ ನೀಡಿದರು. ಚರ್ಚೆ ತಾರಕಕ್ಕೇರಿದ ವೇಳೆ ಸಚಿವ ಕೈಲಾಶ್ ವಿಜಯವರ್ಗಿಯ ಮಧ್ಯಪ್ರವೇಶಿಸಿ 1984ರ ಭೋಪಾಲ್ ಅನಿಲ ದುರಂತವನ್ನು ಉಲ್ಲೇಖಿಸಿದರು.“ಭೋಪಾಲ್ ಅನಿಲ ದುರಂತದಲ್ಲಿ 35,000 ಜನರು ಸಾವನ್ನಪ್ಪಿದರು,” ಎಂದು ಅವರು ಹೇಳುತ್ತಿದ್ದಂತೆ ಕಾಂಗ್ರೆಸ್ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಆಗ ವಿಜಯವರ್ಗಿಯ, “ಅವರದೇ ಸರ್ಕಾರವಿತ್ತು, ನಾಯಕತ್ವವಿತ್ತು. ಆಂಡರ್ಸನ್ ತಪ್ಪಿಸಿಕೊಳ್ಳಲು ಸಹಾಯ ಮಾಡಿದವರು ಅವರೇ. ಇಂದಿಗೂ ಆ ಜನರಿಗೆ ನ್ಯಾಯ ಸಿಕ್ಕಿಲ್ಲ,” ಎಂದು ಆರೋಪಿಸಿದರು. ಇದಕ್ಕೆ ತಿರುಗೇಟು ನೀಡಿದ ಉಮಾಂಗ್ ಸಿಂಘರ್, ಸರ್ಕಾರ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದೆ ಎಂದು ಆರೋಪಿಸಿ,“ನೀವು ಘಟನೆಗೆ ಹೊಣೆ ಹೊತ್ತು ರಾಜೀನಾಮೆ ನೀಡಬೇಕು,” ಎಂದು ಸವಾಲು ಹಾಕಿದರು. ಆದರೆ ವಿಜಯವರ್ಗಿಯ ಹಿಂದೆ ಸರಿಯದೆ ಮತ್ತೆ ಭೋಪಾಲ್ ದುರಂತವನ್ನೇ ಉಲ್ಲೇಖಿಸಿ, “35,000 ಜನರು ತಮ್ಮ ಜೀವಗಳನ್ನು ಕಳೆದುಕೊಂಡರು, ಲಕ್ಷಾಂತರ ಪ್ರಾಣಿಗಳು ಸತ್ತವು. ನಮ್ಮ ಅಧಿಕಾರಿಗಳು ಅವರನ್ನು ಬಂಧಿಸಿದರು, ಆದರೆ ಅವರ ನಾಯಕರೇ ಬಿಡುಗಡೆಗೆ ಕಾರಣರಾದರು. ಅವರ ನಾಯಕರು ಗಂಭೀರ ಪಾಪ ಮಾಡಿದ್ದಾರೆ,” ಎಂದು ಪ್ರತ್ಯುತ್ತರ ನೀಡಿದರು. ಆಗ ಕಾಂಗ್ರೆಸ್ ಸದಸ್ಯರು ಪ್ರಸ್ತುತ ಬಿಕ್ಕಟ್ಟಿನ ಕುರಿತು ಮಾತ್ರ ಮಾತನಾಡುವಂತೆ ಒತ್ತಾಯಿಸಿದರು. ಬಾಲ್ಮಿಕಿ, “ದಯವಿಟ್ಟು ಇಂದಿನ ಚರ್ಚೆಯ ಕುರಿತು ಮಾತನಾಡಿ,” ಎಂದು ಮನವಿ ಮಾಡಿದರು. ಸಿಂಘರ್ ಸದನದ ಗಮನವನ್ನು ಮತ್ತೆ ಭಾಗೀರಥಪುರ ಘಟನೆಯತ್ತ ಸೆಳೆದು,“ ಭಾಗೀರಥಪುರದಲ್ಲಿ ಮನುಷ್ಯರು ಸಾಯುತ್ತಿದ್ದಾರೆ; ಅವರು ಅದರ ಬಗ್ಗೆ ಮಾತನಾಡುತ್ತಿಲ್ಲ. ಮಧ್ಯಪ್ರದೇಶದ ಜನರ ಜೀವಕ್ಕೆ ಬೆಲೆ ಇಲ್ಲವೇ? ಮುಗ್ಧ ಜನರು ಸಾಯುತ್ತಿದ್ದಾರೆ, ನೀವು ಕಾಳಜಿ ವಹಿಸುವುದಿಲ್ಲ,” ಎಂದು ಆಕ್ರೋಶ ವ್ಯಕ್ತಪಡಿಸಿದರು. ಜಬಲ್ಪುರ ಪೂರ್ವ ಕ್ಷೇತ್ರದ ಶಾಸಕ ಲಖನ್ ಘಂಘೋರಿಯಾ ಭಾಗೀರಥಪುರದಲ್ಲಿ ಪೈಪ್ಲೈನ್ಗಳನ್ನು ಚರಂಡಿಗಳ ಕೆಳಗೆ ಹಾಕಿರುವುದರಿಂದ ನೀರು ಕಲುಷಿತವಾಗುತ್ತಿದೆ ಎಂದು ಆರೋಪಿಸಿ,“ನಿಮ್ಮ ಪ್ರದೇಶದಲ್ಲಿರುವ ಪೈಪ್ಲೈನ್ಗಳು ಸಂಪೂರ್ಣವಾಗಿ ಕಲುಷಿತಗೊಂಡಿವೆ. ನೀರಿನ ಕೊರತೆಯಾದಾಗ ಜನರು ಪೈಪ್ಗಳಲ್ಲಿ ರಂಧ್ರಗಳನ್ನು ಮಾಡುತ್ತಾರೆ. ಅದರಲ್ಲಿ ಕಲುಷಿತ ನೀರು ಒಳನುಗ್ಗುತ್ತದೆ,” ಎಂದು ವಿವರಿಸಿದರು.
Good News: ಹೋಳಿ ಪ್ರಯುಕ್ತ ಬೆಂಗಳೂರು-ಬೀದರ್-ಕಲಬುರಗಿ ರೈಲುಗಳ ಸೇವೆ ವಿಸ್ತರಣೆ, ವೇಳಾಪಟ್ಟಿ
ಬೆಂಗಳೂರು: ಹೋಳಿ ಹಬ್ಬದ ಸಡಗರಕ್ಕೆ ಸಾಥ್ ನೀಡಲು ನೈರುತ್ಯ ರೈಲ್ವೆಯು ಸಜ್ಜಾಗಿದೆ!. ಹೋಳಿ ಸಂಭ್ರಮಕ್ಕೆ ದಿನಗಣನೆ ಆರಂಭವಾಗಿದೆ. ಸಾಲು ಸಾಲು ರಜೆಗಳು ಎದುರಾಗುವ ಹಿನ್ನೆಲೆ ಬೆಂಗಳೂರಿನಿಂದ ಬೇರೆ ಬೇರೆ ಕಡೆಗಳಲ್ಲಿ ತೆರಳುವವರ ಸಂಖ್ಯೆ ಹೆಚ್ಚಿರುತ್ತದೆ. ಪ್ರಯಾಣಿಕರಿಗೆ ಅನುಕೂಲ ಒದಗಿಸುವ ಉದ್ದೇಶದಿಂದ ವಿಶೇಷ ಎಕ್ಸ್ಪ್ರೆಸ್ ರೈಲುಗಳ ಸಂಚಾರ ಸೇವೆಯನ್ನು ವಿಸ್ತರಣೆ ಮಾಡಲಾಗಿದೆ ಎಂದು ನೈಋತ್ಯ ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
ಮಾ.16ರಂದು 10 ರಾಜ್ಯಗಳ 37 ರಾಜ್ಯಸಭಾ ಸ್ಥಾನಗಳಿಗೆ ಚುನಾವಣೆ ಘೋಷಣೆ
ಹೊಸದಿಲ್ಲಿ: ದೇಶದ 10 ರಾಜ್ಯಗಳ 37 ರಾಜ್ಯಸಭಾ ಸ್ಥಾನಗಳಿಗೆ ದ್ವೈವಾರ್ಷಿಕ ಚುನಾವಣೆಯನ್ನು ಭಾರತೀಯ ಚುನಾವಣಾ ಆಯೋಗ ಬುಧವಾರ ಘೋಷಿಸಿದೆ. ಮಾರ್ಚ್ 16ರಂದು ಮತದಾನ ನಡೆಯಲಿದ್ದು, ಅದೇ ದಿನ ಸಂಜೆ ಮತ ಎಣಿಕೆ ನಡೆಯಲಿದೆ. ಮಹಾರಾಷ್ಟ್ರ–7, ತಮಿಳುನಾಡು–6, ಪಶ್ಚಿಮ ಬಂಗಾಳ–5, ಬಿಹಾರ–5, ಒಡಿಶಾ–4, ಅಸ್ಸಾಂ–3, ಛತ್ತೀಸ್ಗಢ–2, ಹರ್ಯಾಣ–2, ತೆಲಂಗಾಣ–2 ಹಾಗೂ ಹಿಮಾಚಲ ಪ್ರದೇಶ–1 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಈ ಸದಸ್ಯರ ಅವಧಿ ಎಪ್ರಿಲ್ 2026ರಲ್ಲಿ ಮುಕ್ತಾಯಗೊಳ್ಳಲಿದೆ. ನಿವೃತ್ತಿಯಾಗಲಿರುವ ಪ್ರಮುಖ ಸದಸ್ಯರಲ್ಲಿ ಶರದ್ ಪವಾರ್, ಕೇಂದ್ರ ಸಚಿವ ರಾಮದಾಸ್ ಅಠವಳೆ, ಕಾಂಗ್ರೆಸ್ ನ ಅಭಿಷೇಕ್ ಮನು ಸಿಂಘ್ವಿ, ತೃಣಮೂಲ ಕಾಂಗ್ರೆಸ್ ನ ಸಾಕೇತ್ ಗೋಖಲೆ ಮತ್ತು ರಾಜ್ಯಸಭಾ ಉಪಾಧ್ಯಕ್ಷ ಹರಿವಂಶ್ ನಾರಾಯಣ್ ಸಿಂಗ್ ಸೇರಿದ್ದಾರೆ. ಚುನಾವಣಾ ಆಯೋಗ ಪ್ರಕಟಿಸಿದ ವೇಳಾಪಟ್ಟಿಯಂತೆ ಫೆಬ್ರವರಿ 26ರಂದು ಅಧಿಸೂಚನೆ ಹೊರಡಿಸಲಾಗುವುದು. ನಾಮಪತ್ರ ಸಲ್ಲಿಕೆಗೆ ಮಾರ್ಚ್ 5 ಕೊನೆಯ ದಿನವಾಗಿದ್ದು, ಮಾರ್ಚ್ 6ರಂದು ಪರಿಶೀಲನೆ ನಡೆಯಲಿದೆ. ಮಾರ್ಚ್ 9ರವರೆಗೆ ನಾಮಪತ್ರ ಹಿಂಪಡೆಯಲು ಅವಕಾಶವಿದೆ. ಮಾರ್ಚ್ 16ರಂದು ಬೆಳಿಗ್ಗೆ 9ರಿಂದ ಸಂಜೆ 4ರವರೆಗೆ ಮತದಾನ ನಡೆಯಲಿದ್ದು, ಸಂಜೆ 5ರಿಂದ ಮತ ಎಣಿಕೆ ಆರಂಭವಾಗಲಿದೆ. ಮಾರ್ಚ್ 20ರೊಳಗೆ ಚುನಾವಣಾ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎಂದು ಆಯೋಗ ತಿಳಿಸಿದೆ. ಮತಪತ್ರದಲ್ಲಿ ಆದ್ಯತೆ ಗುರುತಿಸಲು ಚುನಾವಣಾಧಿಕಾರಿ ಒದಗಿಸುವ ನೇರಳೆ ಬಣ್ಣದ ಸ್ಕೆಚ್ ಪೆನ್ನುಗಳನ್ನು ಮಾತ್ರ ಬಳಸಬೇಕು ಎಂದು ಆಯೋಗ ಸೂಚನೆ ನೀಡಿದೆ. ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆಗಾಗಿ ವೀಕ್ಷಕರನ್ನು ನಿಯೋಜಿಸಲಾಗುವುದು ಎಂದೂ ಹೇಳಿದೆ. ಈ ಚುನಾವಣೆಯ ಫಲಿತಾಂಶಗಳು ಸಂಬಂಧಿತ ರಾಜ್ಯ ವಿಧಾನಸಭೆಗಳಲ್ಲಿನ ಪಕ್ಷಗಳ ಸಂಖ್ಯಾಬಲದ ಮೇಲೆ ಅವಲಂಬಿತವಾಗಿದ್ದು, ರಾಜ್ಯಸಭೆಯ ಸಂಖ್ಯಾ ಬಲದಲ್ಲಿ ಅಲ್ಪ ಮಟ್ಟಿನ ಬದಲಾವಣೆಯಾಗುವ ಸಾಧ್ಯತೆ ಇದೆ.
ಗೌರವದಿಂದ ಇದ್ದರೆ ಸರಿ, ಇಲ್ಲಾಂದ್ರೆ ಬಿಜೆಪಿ ಕಚೇರಿ ಮುಂದೆ ಕಸ ಸುರಿಸ್ತೇನೆ: ಡಿಕೆಶಿ ಖಡಕ್ ಎಚ್ಚರಿಕೆ
ನಗರದ ಘನತ್ಯಾಜ್ಯವನ್ನು ಬೆಂಗಳೂರು ಹೊರ ವಲಯದಲ್ಲಿ ವಿಲೇವಾರಿ ಮಾಡಲು ಬಿಜೆಪಿ ಶಾಸಕರು ಅಡ್ಡಿ ಉಂಟು ಮಾಡುತ್ತಿರುವ ಆರೋಪದ ಹಿನ್ನೆಲೆಯಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದರು. ಗೌರವದಿಂದ ಇದ್ದರೆ ಸರಿ, ಇಲ್ಲದಿದ್ದರೆ ಬಿಜೆಪಿ ಕಚೇರಿಯ ಮುಂದೆ ಕಸ ಹಾಕಿಸುತ್ತೇನೆ ಎಂದ ಖಡಕ್ ಎಚ್ಚರಿಕೆ ನೀಡಿದರು. ಕಸದ ಲಾರಿ ಅಪಘಾತ ಘಟನೆ ನಡೆದರೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳುತ್ತೇವೆ. ಆದರೆ, ಅದರ ಹೆಸರಿನಲ್ಲಿ ಕಸ ವಿಲೇವಾರಿಗೆ ಅಡ್ಡಿ ಉಂಟು ಮಾಡುವುದು ಸರಿಯಲ್ಲ ಎಂದರು.
ಬೆಂಗಳೂರಲ್ಲಿ ವೃದ್ಧರಿಗೆ ಸ್ವತಃ ಮಕ್ಕಳಿಂದಲೇ ಹೆಚ್ಚಿದ ಕಿರುಕುಳ: ಸಹಾಯವಾಣಿಗೆ ಕರೆಗಳ ಸರಮಾಲೆ
ಬೆಂಗಳೂರಿನ ಅಪರಾಧ ಪ್ರಕರಣಗಳಲ್ಲಿ ಇತ್ತೀಚೆಗೆ ಬೆಚ್ಚಿ ಬೀಳಿಸುತ್ತಿರುವ ಘಟನೆಗಳು, ಮಕ್ಕಳಿಂದಲೇ ತಂದೆತಾಯಿಯರ ಕೊಲೆಗಳಾಗುತ್ತಿವೆ, ಆಸ್ತಿ-ಹಣಕಾಸಿನ ವಿಚಾರಕ್ಕಾಗಿ ಈ ಹಾದಿ ಹಿಡಿಯುತ್ತಿದ್ದು, ಹಿರಿಯರು ರಕ್ಷಣೆಗಾಗಿ ಸಹಾಯವಾಣಿಗೆ ಮಾಡುತ್ತಿರುವ ಕರೆಗಳು ಹೆಚ್ಚಾಗುತ್ತಿವೆ.
ಆರ್ಬಿಐಯಲ್ಲಿ ಪದವೀಧರರಿಗೆ ಉದ್ಯೋಗವಕಾಶ; ಅರ್ಜಿ ಸಲ್ಲಿಸುವುದು ಹೇಗೆ?
ಆಯ್ಕೆ ಪ್ರಕ್ರಿಯೆಯು ಪ್ರಾಥಮಿಕ ಪರೀಕ್ಷೆ, ಮುಖ್ಯ ಪರೀಕ್ಷೆ ಮತ್ತು ಭಾಷಾ ಪ್ರಾವೀಣ್ಯತೆಯ ಪರೀಕ್ಷೆಯನ್ನು ಒಳಗೊಂಡಿರುತ್ತದೆ. ತಪ್ಪು ಉತ್ತರಗಳಿಗೆ ನಕಾರಾತ್ಮಕ ಅಂಕಗಳು ಸಿಗಲಿವೆ. ಬ್ಯಾಂಕ್ ಗಳ ಬ್ಯಾಂಕ್ ಆಗಿರುವ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ (RBI) ಕೆಲಸ ಮಾಡುವ ಆಸಕ್ತಿ ಹೊಂದಿರುವವರಿಗೆ ಇದೀಗ ಉತ್ತಮ ಅವಕಾಶ ಲಭಿಸಿದೆ. RBI ದೇಶಾದ್ಯಂತ ಖಾಲಿ ಇರುವ 650 ಸಹಾಯಕ ಹುದ್ದೆಗಳನ್ನು ಭರ್ತಿ ಮಾಡಲು ಅಧಿಕೃತ ಅಧಿಸೂಚನೆ ಹೊರಡಿಸಿದೆ. ಯಾವುದೇ ಪದವಿ ಮುಗಿಸಿದ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದು. ಆಯ್ಕೆಯಾದವರಿಗೆ ಸಂಬಳದ ಜೊತೆಗೆ ಕೇಂದ್ರ ಸರ್ಕಾರದ ಭತ್ಯೆಗಳೂ ಸಿಗಲಿವೆ. ಬೆಂಗಳೂರಿನಲ್ಲಿ 24 ಹುದ್ದೆಗಳು ಖಾಲಿ ಇರುವ ಕಾರಣ ಕನ್ನಡಿಗರು ಲಾಭ ಪಡೆದುಕೊಳ್ಳಬಹುದು. ಆಸಕ್ತರು ಈ ಮುಂದಿನ ಲಿಂಕ್ ನಲ್ಲಿ ಅರ್ಜಿ ಸಲ್ಲಿಸಬಹುದು: https://ibpsreg.ibps.in/rbiafeb26/ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕನಿಷ್ಠ ಶೇ 50 ಅಂಕಗಳೊಂದಿಗೆ (SC/ST/PwBD ಗಾಗಿ ಪಾಸ್ ಅಂಕಗಳಿದ್ದರೆ ಸಾಕು) ಪದವೀಧರರಾಗಿರಬೇಕು ಮತ್ತು 20–28 ವರ್ಷ ವಯಸ್ಸಿನವರಾಗಿರಬೇಕು. ಆಯ್ಕೆ ಪ್ರಕ್ರಿಯೆಯು ಪ್ರಾಥಮಿಕ ಪರೀಕ್ಷೆ, ಮುಖ್ಯ ಪರೀಕ್ಷೆ ಮತ್ತು ಭಾಷಾ ಪ್ರಾವೀಣ್ಯತೆಯ ಪರೀಕ್ಷೆಯನ್ನು ಒಳಗೊಂಡಿರುತ್ತದೆ. ತಪ್ಪು ಉತ್ತರಗಳಿಗೆ ನಕಾರಾತ್ಮಕ ಅಂಕಗಳು ಸಿಗಲಿವೆ. ಅರ್ಜಿಗಳನ್ನು 2026 ಫೆಬ್ರವರಿ 16ರಿಂದ 08 ಮಾರ್ಚ್ 2026 ರವರೆಗೆ ಆನ್ಲೈನ್ನಲ್ಲಿ ಸ್ವೀಕರಿಸಲಾಗುತ್ತದೆ. ವೇತನ ಶ್ರೇಣಿಯು ತಿಂಗಳಿಗೆ 29,000 ರೂ. ಮೂಲದಿಂದ ಪ್ರಾರಂಭವಾಗುತ್ತದೆ, ಎಚ್ಆರ್ಎ ಹೊರತುಪಡಿಸಿ ಒಟ್ಟು ವೇತನ 58,514 ರೂ. ಅಂತಿಮ ಆಯ್ಕೆಯು ಪರೀಕ್ಷೆಯ ಕಾರ್ಯಕ್ಷಮತೆ, ಎಲ್ಪಿಟಿ, ವೈದ್ಯಕೀಯ ಫಿಟ್ನೆಸ್ ಮತ್ತು ದಾಖಲೆ ಪರಿಶೀಲನೆಯನ್ನು ಅವಲಂಬಿಸಿರುತ್ತದೆ. ಪ್ರಮುಖ ದಿನಾಂಕಗಳು * ಅಧಿಸೂಚನೆ ದಿನಾಂಕ: 16 ಫೆಬ್ರವರಿ 2026 * ಆನ್ಲೈನ್ ಅರ್ಜಿ ಆರಂಭ: 16 ಫೆಬ್ರವರಿ 2026 * ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 08 ಮಾರ್ಚ್ 2026 * ಶುಲ್ಕ ಪಾವತಿಗೆ ಕೊನೆಯ ದಿನಾಂಕ: 08 ಮಾರ್ಚ್ 2026 * ಪ್ರಾಥಮಿಕ ಪರೀಕ್ಷೆ (ತಾತ್ಕಾಲಿಕ ದಿನಾಂಕ)- 11 ಏಪ್ರಿಲ್ 2026 * ಮುಖ್ಯ ಪರೀಕ್ಷೆ (ತಾತ್ಕಾಲಿಕ ದಿನಾಂಕ)- 07 ಜೂನ್ 2026 * ಪೂರ್ವಭಾವಿ ಪರೀಕ್ಷೆಗೆ ತರಬೇತಿ ಬೇಡಿಕೆಗೆ (ಎಸ್ಸಿ/ಎಸ್ಟಿ/ಒಬಿಸಿ/ಪಿಡಬ್ಲ್ಯುಬಿಡಿ) ಕೊನೆಯ ದಿನಾಂಕ: 10 ಮಾರ್ಚ್ 2026 * ವಿವರಗಳಿಗೆ ಅಭ್ಯರ್ಥಿಗಳು ಆರ್ಬಿಐ ಅಧಿಕೃತ ವೆಬ್ತಾಣವನ್ನು ಪರೀಕ್ಷಿಸಿ ದೃಢಪಡಿಸಬಹುದು. ಅರ್ಜಿ ಶುಲ್ಕ ಜನರಲ್/ಒಬಿಸಿ/ ಇಡಬ್ಲ್ಯುಎಸ್: 450 ರೂ. + 18% ಜಿಎಸ್ಟಿ ಎಸ್ಸಿ/ಎಸ್ಟಿ/ ಪಿಡಬ್ಲ್ಯುಡಿ/ಮಾಜಿ ಸೈನಿಕರು: 50 ರೂ. + 18% ಜಿಎಸ್ಟಿ (ಕೇವಲ ಇಂಟಿಮೇಶನ್ ಶುಲ್ಕ) ಆರ್ಬಿಐ ಸಿಬ್ಬಂದಿ: ಶುಲ್ಕವಿಲ್ಲ ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್, ಇಂಟರ್ನೆಟ್ ಬ್ಯಾಂಕಿಂಗ್, ಐಎಂಪಿಎಸ್, ಕ್ಯಾಶ್ ಕಾರ್ಡ್/ ಮೊಬೈಲ್ ವಾಲೆಟ್ ಮೂಲಕ ಪಾವತಿಸುವ ಅವಕಾಶವಿದೆ. ಹುದ್ದೆಗಳ ವಿವರ ದೇಶದ ವಿವಿಧ ನಗರಗಳಲ್ಲಿ ಆರ್ಬಿಐ ಕಚೇರಿಗಳಲ್ಲಿ ಖಾಲಿ ಇರುವ ಹುದ್ದೆಗಳ ವಿವರ ಹೀಗಿದೆ: ಬೆಂಗಳೂರು -24 ಅಹಮದಾಬಾದ್ -20 ಭೋಪಾಲ್ -30 (ರಾಯಪುರಕ್ಕೆ 5 ಸೇರಿವೆ) ಭುವನೇಶ್ವರ -18 ಚಂಡೀಗಢ -20 (ಶಿಮ್ಲಾ ಒಳಗೊಂಡಿದೆ) ಚೆನ್ನೈ -53 ಗುವಾಹಟಿ -36 (ಅಗರ್ತಲಾಕ್ಕೆ 2, ಐಜ್ವಾಲ್ಗೆ 1, ಇಂಫಾಲ್ಗೆ 2, ಶಿಲ್ಲಾಂಗ್ಗೆ 3 ಸೇರಿವೆ.) ಹೈದರಾಬಾದ್ -11 ಜೈಪುರ -11 ಜಮ್ಮು -10 (ಶ್ರೀನಗರವನ್ನು ಒಳಗೊಂಡಿದೆ) ಕಾನ್ಪುರ ಮತ್ತು ಲಕ್ನೋ -50 (ಕಾನ್ಪುರ 29, ಲಕ್ನೋಗೆ 21) ಕೋಲ್ಕತಾ -29 (ಗ್ಯಾಂಗ್ಟಾಕ್ಗೆ 1 ಒಳಗೊಂಡಿದೆ) ಮುಂಬೈ -249 (ಬೇಲಾಪುರಕ್ಕೆ 23, ಪಣಜಿಗೆ 2) ನಾಗ್ಪುರ -17 ನವದೆಹಲಿ -49 ಪಾಟ್ನಾ -17 (ರಾಂಚಿಗೆ 1 ಒಳಗೊಂಡಿದೆ) ತಿರುವನಂತಪುರಂ -6 (ಕೊಚ್ಚಿಯನ್ನು ಒಳಗೊಂಡಿದೆ) ವಿದ್ಯಾರ್ಹತೆ ಮತ್ತು ಇತರ ಅರ್ಹತೆ ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ವಿಷಯದಲ್ಲಿ ಪದವಿ ಪೂರ್ಣಗೊಳಿಸಿರಬೇಕು. ಕನಿಷ್ಠ ಶೇ 50 ಅಂಕಗಳನ್ನು ಪಡೆದಿರಬೇಕು. ಎಸ್ಸಿ/ಎಸ್ಟಿ/ ಪಿಡಬ್ಲ್ಯುಡಿ ಅಭ್ಯರ್ಥಿಗಳು ಪಾಸ್ ಆಗಿದ್ದರೆ ಸಾಕು. ಜೊತೆಗೆ ಕಂಪ್ಯೂಟರ್ ಜ್ಞಾನ ಕಡ್ಡಾಯವಾಗಿರುತ್ತದೆ. ವೇತನ ಆಯ್ಕೆಯಾದ ಅಭ್ಯರ್ಥಿಗಳಿಗೆ ಮೂಲ ವೇತನ 29,000 ರೂ.ನಿಂದ ಪ್ರಾರಂಭವಾಗಲಿದೆ. ಪ್ರಸ್ತುತ ಇರುವ ಭತ್ಯೆಗಳ ಪ್ರಕಾರ ಆರಂಭಿಕ ಅಂದಾಜು 58,514 ರೂ (ಮನೆ ಬಾಡಿಗೆ ಭತ್ಯೆ ಹೊರತುಪಡಿಸಿ) ವೇತನ ಸಿಗಲಿದೆ. ಅಭ್ಯರ್ಥಿಗಳು ಬ್ಯಾಂಕ್ ವಸತಿ ಪಡೆಯದಿದ್ದರೆ ಹೆಚ್ಚುವರಿಯಾಗಿ ಶೇ 15ರಷ್ಟು ಮನೆ ಬಾಡಿಗೆ ಭತ್ಯೆ (ಎಚ್ಆರ್ಎ) ಕೂಡ ಲಭ್ಯವಿರುತ್ತದೆ. ವಯೋಮಿತಿ ದಿನಾಂಕ 2026 ಫೆಬ್ರವರಿ 01ಕ್ಕೆ ಅನ್ವಯವಾಗುವಂತೆ ಅಭ್ಯರ್ಥಿಯ ವಯಸ್ಸು 20ರಿಂದ 28 ವರ್ಷದ ಒಳಗಿರಬೇಕು. ವಯೋಮಿತಿ ಸಡಲಿಕೆ: ಒಬಿಸಿ ಅಭ್ಯರ್ಥಿಗಳಿಗೆ 03 ವರ್ಷ (31 ವರ್ಷದವರೆಗೆ) ಎಸ್ಸಿ/ಎಸ್ಟಿ ಅಭ್ಯರ್ಥಿಗಳು: 05 ವರ್ಷ (33 ವರ್ಷದವರೆಗೆ) ಪಿಡಬ್ಲ್ಯುಡಿ ಅಭ್ಯರ್ಥಿಗಳು: 10 ವರ್ಷ ಸಡಿಲಿಕೆ ಇರುತ್ತದೆ. ಪರೀಕ್ಷೆ ವಿವರ/ಆಯ್ಕೆ ಹೇಗೆ: ಪ್ರಾಥಮಿಕ ಪರೀಕ್ಷೆ (ಒಬ್ಜೆಕ್ಟಿವ್) ಮುಖ್ಯ ಪರೀಕ್ಷೆ (ಒಬ್ಜೆಕ್ಟಿವ್) ಭಾಷಾ ಪ್ರಾವೀಣ್ಯತೆ ಪರೀಕ್ಷೆ (ಎಲ್ಪಿಟಿ) ನೆಗೆಟಿವ್ ಅಂಕ : ಪೂರ್ವಭಾವಿ ಮತ್ತು ಮುಖ್ಯ ಪರೀಕ್ಷೆಗಳಲ್ಲಿ ತಪ್ಪು ಉತ್ತರಗಳಿಗೆ 1/4 ರಷ್ಟು ಅಂಕವನ್ನು ಕಡಿತಗೊಳಿಸಲಾಗುತ್ತದೆ. ಅಂತಿಮ ಆಯ್ಕೆ : ಆನ್ಲೈನ್ ಪರೀಕ್ಷೆಗಳಲ್ಲಿನ ಸಾಧನೆ +ಎಲ್ಪಿಟಿ + ವೈದ್ಯಕೀಯ ಫಿಟ್ನೆಸ್ + ದಾಖಲೆ ಪರಿಶೀಲನೆಯ ಆಧಾರದ ಮೇಲೆ. ಹುದ್ದೆ : ಆರಂಭದಲ್ಲಿ ಅರ್ಜಿ ಸಲ್ಲಿಸಿದ ನೇಮಕಾತಿ ವಲಯದಲ್ಲಿ; ನಂತರ ವಲಯಗಳಿಗೆ ವರ್ಗಾಯಿಸಬಹುದು. ಪರೀಕ್ಷಾ ಪೂರ್ವ ತರಬೇತಿ : SC/ST/OBC/PwBD ಅಭ್ಯರ್ಥಿಗಳಿಗೆ ಲಭ್ಯವಿದೆ (ಸ್ವ-ನಿಧಿ)
ಗುರ್ಗಾಂವ್: ವ್ಯಾಲಂಟೈನ್ಸ್ ಡೇ ಆಚರಿಸಿಕೊಂಡು ಪತ್ನಿ ಕಥೆಯನ್ನೇ ಮುಗಿಸಿದ ಪತಿ; ಸಂಶಯವೇ ಮುಳುವಾಯ್ತಾ?
ಪತ್ನಿಯ ಜೊತೆ ವ್ಯಾಲಂಟೈನ್ಸ್ ಡೇ ಆಚರಿಸಿಕೊಂಡು, ನಂತರ ಆಕೆಯ ಕಥೆಯನ್ನೇ ಮುಗಿಸಿದ್ದಾನೆ ಪತಿ. ಪತ್ನಿಯ ಮೇಲಿನ ಸಂಶಯವೇ ಇದಕ್ಕೆ ಕಾರಣ ಎನ್ನಲಾಗಿದೆ. ಇಂತಹದ್ದೊಂದು ಘಟನೆ ಹರಿಯಾಣದ ಝಜ್ಜರ್ ಜಿಲ್ಲೆಯಲ್ಲಿ ನಡೆದಿದೆ. 31 ವರ್ಷದ ಚಾರ್ಟರ್ಡ್ ಅಕೌಂಟೆಂಟ್ ಅನ್ಶುಲ್ ಧವನ್ ಗರ್ಭಿಣಿ ಪತ್ನಿ ಮೆಹಕ್ಳನ್ನು ಕೊಂದು ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.
T20 World Cup : ಆಸೀಸ್ ಪತನಕ್ಕೆ ಮುಳುವಾದ ಜಿಂಬಾವ್ವೆ ವಿರುದ್ದ ಸೋಲು - ಪಾಂಟಿಂಗ್ ಬಿಚ್ಚಿಟ್ಟ 3 ಕಾರಣಗಳು
ವಿಶ್ವಕಪ್’ನಿಂದ ಕಾಂಗರೋ ಹೊರಕ್ಕೆ : ಈ ಬಾರಿಯ ಸರ್ಪ್ರೈಸ್ ಫಲಿತಾಂಶದಲ್ಲಿ ಆಸ್ಟ್ರೇಲಿಯಾ ಸೂಪರ್ ಎಂಟರ ಹಂತಕ್ಕೆ ಪ್ರವೇಶಿಸಲಾಗದೇ, ಟೂರ್ನಿಯಿಂದ ಹೊರಬಿದ್ದಿದೆ. 2021ರಲ್ಲಿ ಚಾಂಪಿಯನ್ ಆಗಿದ್ದ ಆಸೀಸ್, ಈ ಬಾರಿ ನಿರಾಶಾದಾಯಕ ಪ್ರದರ್ಶನವನ್ನು ನೀಡಿದೆ. ತಂಡದ ಕಳಪೆ ಪ್ರದರ್ಶನದ ಬಗ್ಗೆ ಮಾಜಿ ರಿಕಿ ಪಾಂಟಿಂಗ್ ಬೇಸರ ವ್ಯಕ್ತ ಪಡಿಸಿದ್ದಾರೆ. ಜೊತೆಗೆ, ಸೋಲಿಗೆ ಕಾರಣವನ್ನು ನೀಡಿದ್ದಾರೆ.
ಪ್ರಗ್ಯಾನ್ 22ನೇ ಆವೃತ್ತಿ| ಫೆ.19 ರಿಂದ ’ಅನಾಕ್ರೋನಿಯಾ’ ಥೀಮ್ ನಡಿ ಸಂಭ್ರಮಾಚರಣೆ
ಮಂಗಳೂರು: ತಮಿಳುನಾಡಿನ ತಿರುಚಿನಾಪಳ್ಳಿಯ ಎನ್ಐಟಿಕೆ ವತಿಯಿಂದ ’ಅನಾಕ್ರೋನಿಯಾ’ ಥೀಮ್ ನಡಿ ಫೆ.19ರಿಂದ 22ರವರೆಗೆ ಪ್ರಗ್ಯಾನ್ 22ನೇ ಆವೃತ್ತಿ ನಡೆಯಲಿದೆ. NIT Trichy- ವಿದ್ಯಾರ್ಥಿಗಳಿಗೆ ಸ್ಫೂರ್ತಿ ನೀಡುವ, ಮಿತಿಗಳನ್ನು ಸವಾಲು ಮಾಡುವ ಮತ್ತು NIT Trichyಯನ್ನು ಆಚರಿಸುವ ಹಬ್ಬವಾಗಿದೆ. ಪ್ರಗ್ಯಾನ್ ಯ ವಾರ್ಷಿಕ ಅಂತರಾಷ್ಟ್ರೀಯ ತಾಂತ್ರಿಕ-ನಿರ್ವಹಣಾ ಮಹೋತ್ಸವವಾಗಿ ISO (Anachronia), ಇದು 9001 ಮತ್ತು 20121 ಪ್ರಮಾಣೀಕೃತವಾಗಿದೆ. ಇದೀಗ ಅನಾಕ್ರೋನಿಯಾ ಎಂಬ ಶೀರ್ಷಿಕೆಯೊಂದಿಗೆ 22ನೇ ಆವೃತ್ತಿಯ ವೇದಿಕೆ ಸಿದ್ಧವಾಗಿದೆ. ಪ್ರದರ್ಶನಗಳು: ಸಂಗಮ್ ಮತ್ತು ಇಂಜಿನಿಯಮ್ ವಿದ್ಯಾರ್ಥಿಗಳ ನಾವೀನ್ಯತೆಯನ್ನು ಗುರುತಿಸಲು ಪ್ರಗ್ಯಾನ್ ಪ್ರತಿ ವರ್ಷ ’ಓಪನ್ ಹೌಸ್’ ಎಂಬ ಎರಡು ದಿನಗಳ ಕಾರ್ಯಕ್ರಮವನ್ನು ಆಯೋಜಿಸುತ್ತದೆ. ವಿವಿಧ ವಿಭಾಗಗಳು ಮತ್ತು ತಾಂತ್ರಿಕ ಕ್ಲಬ್ಗಳ ಯೋಜನೆಗಳನ್ನು ಒಟ್ಟುಗೂಡಿಸಿ, ವಿದ್ಯಾರ್ಥಿಗಳು ತಮ್ಮ ಕೆಲಸವನ್ನು ಪ್ರದರ್ಶಿಸಲು ಮತ್ತು ಹೂಡಿಕೆದಾರರಿಗೆ ತಮ್ಮ ಪರಿಹಾರಗಳನ್ನು ವಿವರಿಸಲು ವೇದಿಕೆ ನೀಡುತ್ತದೆ. (Ingenium): ಇಂಜಿನಿಯಮ್ ಇದು ರಾಷ್ಟ್ರಮಟ್ಟದ ತಾಂತ್ರಿಕ ಸ್ಪರ್ಧೆಯಾಗಿದ್ದು, ದೇಶದಾದ್ಯಂತ ಇರುವ ಪ್ರತಿಭಾವಂತ ಯುವ ಮನಸ್ಸುಗಳನ್ನು ಆಕರ್ಷಿಸುತ್ತದೆ. (Sangam) NIT Trichy ಸಂಗಮ್ : ಇದು ಪ್ರಗ್ಯಾನ್ನ ಪ್ರಮುಖ ಹಾರ್ಡ್ವೇರ್ ಹ್ಯಾಕಥಾನ್ ಆಗಿದ್ದು, ವಿದ್ಯಾರ್ಥಿಗಳಿಗೆ ನೈಜ ಪ್ರಪಂಚದ ಸವಾಲುಗಳಿಗೆ ಪ್ರಾಯೋಗಿಕ ಪರಿಹಾರಗಳನ್ನು ರೂಪಿಸಲು ಅವಕಾಶ ನೀಡುತ್ತದೆ. ಪ್ರಗ್ಯಾನ್ ಏಳು ವಿಭಾಗಗಳಡಿ ಮ್ಯಾನೇಜ್ಮೆಂಟ್, ಕೋಡಿಂಗ್, ಹಾರ್ಡ್ವೇರ್, ರೋಬೋಟಿಕ್ಸ್ ಸಹಿತ ವಿವಿಧ ಕ್ಷೇತ್ರಗಳಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸುತ್ತದೆ. (Linux)(Samsung), (Mercedes) ಲಿನಕ್ಸ್ , ಸ್ಯಾಮ್ಸಂಗ್ ಮರ್ಸಿಡಿಸ್ ನಂತಹ ಪ್ರಸಿದ್ಧ ಕಂಪನಿಗಳ ಸಹಯೋಗದೊಂದಿಗೆ ಕಾರ್ಯಾಗಾರಗಳನ್ನು ನಡೆಸಲಾಗುತ್ತದೆ. ಇದು ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಕೌಶಲ ಗಳನ್ನು ಕಲಿಯಲು ಸಹಾಯ ಮಾಡುತ್ತದೆ. (Crossfire)ಕ್ರಾಸ್ಫೈರ್ : ಇದು ಪ್ರಗ್ಯಾನ್ನ ಪ್ರಮುಖ ಚರ್ಚಾಕೂಟವಾಗಿದ್ದು, ಭಾರತದಾದ್ಯಂತದ ರಾಜಕೀಯ ಗಣ್ಯರು ಸಾಮಾಜಿಕ ಮತ್ತು ಆರ್ಥಿಕ ವಿಷಯಗಳ ಬಗ್ಗೆ ಚರ್ಚಿಸಲು ಇಲ್ಲಿ ಒಂದಾಗುತ್ತಾರೆ. (PSR) (Techids) ಪ್ರಗ್ಯಾನ್ ಬ್ಲಾಗ್ ಮತ್ತು ಪಾಡ್ಕಾಸ್ಟ್ ಮೂಲಕ ವಿದ್ಯಾರ್ಥಿ ಸಮುದಾಯದೊಂದಿಗೆ ಸಂವಹನ ನಡೆಸುತ್ತದೆ. ಪ್ರಗ್ಯಾನ್ ಸಾಮಾಜಿಕ ಜವಾಬ್ದಾರಿ ತಂಡವು ವರ್ಷವಿಡೀ ಪ್ರಭಾವಶಾಲಿ ಉಪಕ್ರಮಗಳನ್ನು ನಡೆಸು ತ್ತದೆ. ಇದರಲ್ಲಿ ’ಟೆಕಿಡ್ಸ್’ ಪ್ರಮುಖವಾಗಿದ್ದು, ಇದು ಶಾಲಾ ಮಕ್ಕಳಿಗೆ ತಾಂತ್ರಿಕ ಜಗತ್ತಿನ ಪ್ರಾಥಮಿಕ ಅರಿವು ಮೂಡಿಸುತ್ತದೆ. ಇನ್ಫೋಟೈನ್ಮೆಂಟ್ (Infotainment): ಇದು ವಿದ್ಯಾರ್ಥಿಗಳ ಮನರಂಜನೆಗಾಗಿ ಮೀಸಲಾದ ವಿಭಾಗವಾಗಿದೆ. ಬೆಂಕಿಯ ಪ್ರದರ್ಶನಗಳು, ಬೆಳಕಿನ ಆಟಗಳು ಮತ್ತು ವೈಮಾನಿಕ ಸಾಹಸಗಳಿಂದ ಹಿಡಿದು ಅದ್ಧೂರಿ ’(Pro shows) ಪ್ರೊ ಶೋ’ ವರೆಗೆ, ಇನ್ಫೋಟೈನ್ಮೆಂಟ್ ಹಬ್ಬದ ಉತ್ಸಾಹವನ್ನು ಹೆಚ್ಚಿಸುತ್ತದೆ. ಪ್ರಗ್ಯಾನ್ ಕೇವಲ ಒಂದು ಹಬ್ಬವಲ್ಲ. NIT Trichy ಇದು ವಿದ್ಯಾರ್ಥಿ ಸಮುದಾಯದ ಶಕ್ತಿ ಮತ್ತು ಸಂಸ್ಥೆಯ ಬದ್ಧತೆಯ ಪ್ರತಿಬಿಂಬವಾಗಿದೆ ಎಂದು ಪ್ರಕಟನೆ ತಿಳಿಸಿದೆ.
ಮೊಂಟೆಪದವು ಭೂ ಕುಸಿತ ಪ್ರಕರಣ: ಮಾನವ ಹಕ್ಕುಗಳ ಆಯೋಗದೆದುರು ಭಾವುಕರಾದ ಸಂತ್ರಸ್ತೆ
ಆಂಬುಲೆನ್ಸ್ ನಲ್ಲಿ ಜಿ.ಪಂ. ಕಚೇರಿಗೆ ಆಗಮನ
ಪಂಜಾಬ್ ವಿಶ್ವವಿದ್ಯಾಲಯದಲ್ಲಿ ಜಾತಿ ತಾರತಮ್ಯ ಆರೋಪಿಸಿ ದಲಿತ ಸಹಾಯಕ ಪ್ರಾಧ್ಯಾಪಕನಿಂದ ಪ್ರತಿಭಟನೆ
ಚಂಡೀಗಢ: ಪಂಜಾಬ್ ವಿಶ್ವವಿದ್ಯಾಲಯದಲ್ಲಿ ಕಳೆದ ಎರಡು ವರ್ಷಗಳಿಂದ ಜಾತಿ ಆಧಾರಿತ ತಾರತಮ್ಯ ಮತ್ತು ಕಿರುಕುಳ ಎದುರಿಸುತ್ತಿರುವುದಾಗಿ ದಲಿತ ಸಹಾಯಕ ಪ್ರಾಧ್ಯಾಪಕರೊಬ್ಬರು ಆರೋಪಿಸಿದ್ದಾರೆ ಎಂದು maktoobmedia.com ವರದಿ ಮಾಡಿದೆ. ಪಂಜಾಬ್ ವಿವಿ ಅರ್ಥಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಹರ್ಪ್ರೀತ್ ಸಿಂಗ್ ಅವರು ಉಪಕುಲಪತಿ ಕಚೇರಿಯ ಹೊರಗೆ ಪ್ರತಿಭಟನೆ ನಡೆಸಿದ್ದಾರೆ. ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ.ಸ್ಮಿತಾ ಶರ್ಮಾ ಅವರು ಜಾತಿ ತಾರತಮ್ಯ ಮತ್ತು ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ. ನನ್ನನ್ನು ಪ್ರೊಫೆಸರ್ ಹುದ್ದೆಗೆ ಭಡ್ತಿ ನೀಡದಂತೆ ಉದ್ದೇಶಪೂರ್ವಕವಾಗಿ ತಡೆಯಲಾಗಿದೆ. ಪ್ರೀ-ಸ್ಕ್ರೀನಿಂಗ್ ಸಮಿತಿಯೊಂದಿಗೆ ಸಂಚು ರೂಪಿಸಿ ಭಡ್ತಿ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಲಾಗಿದೆ. 2024ರ ಮೇ ತಿಂಗಳಿನಿಂದ ವಿಶ್ವವಿದ್ಯಾಲಯದ ಅಧಿಕಾರಿಗಳಿಗೆ ಈ ಬಗ್ಗೆ ಹಲವು ಬಾರಿ ಮನವಿ ಸಲ್ಲಿಸಿದ್ದರೂ ಯಾವುದೇ ಕ್ರಮವನ್ನು ಕೈಗೊಂಡಿಲ್ಲವೆಂದು ಆರೋಪಿಸಿದ್ದಾರೆ. “ಇದು ಪಂಜಾಬ್ ವಿಶ್ವವಿದ್ಯಾಲಯದ ಸಾಂಸ್ಥಿಕ ಜಾತಿವಾದವಲ್ಲದೆ ಬೇರೇನೂ ಅಲ್ಲ, ಒಬ್ಬ ಪ್ರಾಧ್ಯಾಪಕನನ್ನು ಕೂಡ ಜಾತಿಯ ಕಾರಣದಿಂದ ಗುರಿಯಾಗಿಸಲಾಗುತ್ತಿದೆ. ವಿಶ್ವವಿದ್ಯಾಲಯಗಳೊಳಗಿನ ಜಾತಿ ಆಧಾರಿತ ತಾರತಮ್ಯವು ಅಧ್ಯಾಪಕರಿಗೆ ಮಾತ್ರವಲ್ಲದೆ ಹಿಂದುಳಿದ ಸಮುದಾಯಗಳ ವಿದ್ಯಾರ್ಥಿಗಳಿಗೆ ಕೂಡ ಅನುಭವಾಗುತ್ತಿದೆ” ಎಂದು ಡಾ.ಹರ್ಪ್ರೀತ್ ಸಿಂಗ್ ಆರೋಪಿಸಿದ್ದಾರೆ. ಡಾ. ಶರ್ಮಾ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಮತ್ತು ಬಾಕಿ ಇರುವ ಭಡ್ತಿ ಪ್ರಕ್ರಿಯೆಯನ್ನು ತಕ್ಷಣ ಪೂರ್ಣಗೊಳಿಸಬೇಕು ಎಂದು ಒತ್ತಾಯಿಸಿ ಅವರು ಜ್ಞಾಪಕ ಪತ್ರವನ್ನು ಸಹ ಸಲ್ಲಿಸಿದರು. ಸೋಮವಾರದೊಳಗೆ ಯಾವುದೇ ಕ್ರಮ ಕೈಗೊಳ್ಳದಿದ್ದರೆ, ಉಪಕುಲಪತಿ ಕಚೇರಿಯ ಹೊರಗೆ ಧರಣಿ ನಡೆಸುವುದಾಗಿ ಎಚ್ಚರಿಸಿದ್ದಾರೆ. ಡಾ. ಸಿಂಗ್ ಅವರಿಗೆ ಬೆಂಬಲ ವ್ಯಕ್ತಪಡಿಸಿದ ಅಂಬೇಡ್ಕರ್ ವಿದ್ಯಾರ್ಥಿ ವೇದಿಕೆ (ASF), ನ್ಯಾಯವನ್ನು ಒದಗಿಸಲು ವಿಶ್ವವಿದ್ಯಾಲಯ ಆಡಳಿತ ಮತ್ತು ಉಪಕುಲಪತಿಗಳು ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದೆ. ಈ ಬಗ್ಗೆ ನಿರ್ಲಕ್ಷ್ಯವಹಿಸಿದರೆ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದೆ. #Casteism A Dalit Assistant Professor at Panjab University has alleged caste-based discrimination. He claims he has been deliberately harassed by Smita Sharma for the past two years. This incident exposes the deep-rooted casteism in universities. pic.twitter.com/71ZLrdBHnS — The Dalit Voice (@ambedkariteIND) February 14, 2026
ಹಾಸನ ನಗರದಲ್ಲಿ ನಶೆಮುಕ್ತ ಜಾಥಾ: ಆರೋಗ್ಯಕರ ಯುವಜನತೆ ನಿರ್ಮಾಣಕ್ಕೆ ಸಮಗ್ರ ಸಂಕಲ್ಪ
ಹಾಸನ: ನಗರದ ಜಿಲ್ಲಾ ಕ್ರೀಡಾಂಗಣದ ಆವರಣದಲ್ಲಿ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾನಿಲಯ ಅನುಮೋದಿತ ಆರೋಗ್ಯ ವಿಜ್ಞಾನಗಳ ಸಮೂಹ ಸಂಸ್ಥೆಗಳ ಸಂಘ ಇವರ ಸಹ ಯೋಗದಲ್ಲಿ ಬುಧವಾರ ಹಮ್ಮಿಕೊಳ್ಳಲಾಗಿದ್ದ ನಶೆಮುಕ್ತ ಸಮಾಜ ನಿರ್ಮಾಣದ ಮಹತ್ವ ಸಾರುವ ಉದ್ದೇಶದಿಂದ ನಗರದಲ್ಲಿ ಆಯೋಜಿಸಲಾದ ಜಾಗೃತಿ ಜಾಥಾ ಮತ್ತು ವಾಕಥಾನ್ ಕಾರ್ಯಕ್ರಮವು ಯುವಜನತೆಗೆ ಸ್ಫೂರ್ತಿದಾಯಕ ಸಂದೇಶ ನೀಡಿತು. ವಿವಿಧ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳು, ಸರ್ಕಾರಿ ಅಧಿಕಾರಿಗಳು, ಜನಪ್ರತಿನಿಧಿಗಳು ಹಾಗೂ ಧಾರ್ಮಿಕ ಮುಖಂಡರು ಭಾಗವಹಿಸಿ “ನಶೆ ಬಿಡಿ, ಆರೋಗ್ಯ ಹಿಡಿ”ಎಂಬ ಘೋಷಣೆ ಮೊಳಗಿಸಿದರು. ಸಭಾ ಕಾರ್ಯಕ್ರಮದಲ್ಲಿ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾನಿಲಯದ ಉಪಕುಲಪತಿ ಬಿ.ಸಿ.ಭಗವಾನ್ ಪ್ರಾಸ್ತಾವಿಕವಾಗಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಕೇವಲ ಪದವಿ ಪಡೆಯಲು ಓದುತ್ತಿಲ್ಲ, ಆರೋಗ್ಯವಂತ, ಜವಾಬ್ದಾರಿಯುತ ನಾಗರಿಕರಾಗಿ ದೇಶ ನಿರ್ಮಾಣಕ್ಕೆ ತಯಾರಾಗುತ್ತಿದ್ದಾರೆ ಎಂದು ಹೇಳಿದರು. ದೇಶದಲ್ಲಿ ಡ್ರಗ್ಸ್ ಸೇವನೆ ಭಯಾನಕವಾಗಿ ಹೆಚ್ಚುತ್ತಿರುವುದು ಕಳವಳಕಾರಿ ಸಂಗತಿ. ಕೆಲವು ಅಧ್ಯಯನಗಳ ಪ್ರಕಾರ ಶೇಕಡ 30ರಿಂದ 40ರಷ್ಟು ಯುವಕರು ನಶೆ ಪದಾರ್ಥಗಳ ಬಳಕೆಯಲ್ಲಿ ತೊಡಗಿರುವುದು ಆತಂಕಕಾರಿ ಬೆಳವಣಿಗೆ ಎಂದರು. “ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳದಿದ್ದರೆ, ಭವಿಷ್ಯದ ಭಾರತವನ್ನು ಹೇಗೆ ಕಟ್ಟುವಿರಿ?” ಎಂದು ಪ್ರಶ್ನಿಸಿ, ನಶೆ ವಿರುದ್ಧ ಯುವಜನತೆ ತೀವ್ರ ಜಾಗೃತಿ ಹೊಂದಬೇಕು ಎಂದು ಕರೆ ನೀಡಿದರು. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಈಗಾಗಲೇ 40 ಸಾವಿರಕ್ಕೂ ಹೆಚ್ಚು ಜನರನ್ನು ವಾಕಥಾನ್ ಮೂಲಕ ಜಾಗೃತಿಗೊಳಿಸಲಾಗಿದ್ದು, ಹಾಸನ 10ನೇ ಜಿಲ್ಲೆಯಾಗಿ ಈ ಜಾಥಾಕ್ಕೆ ಸಾಕ್ಷಿಯಾಗಿದೆ ಎಂದರು. ಪುಷ್ಪಗಿರಿ ಮಠದ ಮಠಾಧೀಶ ಶ್ರೀ ಸೋಮಶೇಖರ ಮಹಾಸ್ವಾಮೀಜಿ ಆಶೀರ್ವಚನ ನೀಡಿ, ವ್ಯಕ್ತಿಯ ಆರೋಗ್ಯದಷ್ಟೇ ದೇಶದ ಆರೋಗ್ಯವೂ ಅತಿ ಮುಖ್ಯ. “ನನ್ನ ಆರೋಗ್ಯದ ಜೊತೆಗೆ ಇತರರ ಆರೋಗ್ಯವನ್ನೂ ಕಾಪಾಡುತ್ತೇನೆ” ಎಂಬ ಸಂಕಲ್ಪವನ್ನು ಪ್ರತಿಯೊಬ್ಬರೂ ಮಾಡಬೇಕು ಎಂದು ಹೇಳಿದರು. ಇಂದಿನ ಕಾಲಘಟ್ಟದಲ್ಲಿ 800 ವರ್ಷದ ಮಕ್ಕಳೇ ಡ್ರಗ್ಸ್ಗೆ ಬಲಿಯಾಗುತ್ತಿರುವುದು ಸಮಾಜದ ಮುಂದೆ ನಿಂತಿರುವ ದೊಡ್ಡ ಯಕ್ಷಪ್ರಶ್ನೆಯಾಗಿದೆ. ಭಗವಂತ ಕೊಟ್ಟ ಶಕ್ತಿಯನ್ನು ಸಮಾಜದ ಒಳಿತಿಗೆ ಬಳಸಿದಾಗ ಮಾತ್ರ ಜೀವನ ಸಾರ್ಥಕವಾಗುತ್ತದೆ. ನಶೆಮುಕ್ತ ಕರ್ನಾಟಕ, ಶ್ರೇಷ್ಠ ಭಾರತ ನಿರ್ಮಾಣಕ್ಕೆ ಎಲ್ಲರೂ ಕೈಜೋಡಿಸಬೇಕು ಎಂದು ಕರೆ ನೀಡಿದರು. ಸಂಸದ ಶ್ರೇಯಸ್ ಎಂ. ಪಟೇಲ್ ಮಾತನಾಡಿ, ಗಾಂಜಾ ಸೇರಿದಂತೆ ವಿವಿಧ ಮಾದಕ ವಸ್ತುಗಳು ಶಾಲಾ-ಕಾಲೇಜು ವಿದ್ಯಾರ್ಥಿಗಳ ಬದುಕನ್ನೇ ಹಾಳು ಮಾಡುತ್ತಿರುವುದು ನೋವಿನ ಸಂಗತಿ. ಈ ಕುರಿತು ಹಲವು ವೇದಿಕೆಗಳಲ್ಲಿ ಗಮನಸೆಳೆದಿದ್ದೇನೆ. ಮುಂದಿನ ಪೀಳಿಗೆಗೆ ಆರೋಗ್ಯಕರ, ಸುರಕ್ಷಿತ ವಾತಾವರಣ ನಿರ್ಮಾಣ ಮಾಡುವುದು ನಮ್ಮೆಲ್ಲರ ಹೊಣೆಗಾರಿಕೆ ಎಂದು ಅಭಿಪ್ರಾಯಪಟ್ಟರು. ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ ಮಾತನಾಡಿ, 'ಸ್ವಾಸ್ಥ್ಯ ಭಾರತವೇ ಶ್ರೇಷ್ಠ ಭಾರತ' ಎಂದು ಹೇಳಿ, ಪ್ರತಿಯೊಂದು ಕುಟುಂಬವೂ ನಶಾಮುಕ್ತವಾಗಿರಬೇಕು ಎಂಬ ಸಂಕಲ್ಪ ಕೈಗೊಳ್ಳಬೇಕು. ದೇಶವನ್ನು ದುರ್ಬಲಗೊಳಿಸಲು ಶತ್ರುಗಳು ಯುದ್ಧ ಮಾಡಬೇಕಾಗಿಲ್ಲ; ನಶೆ ಹಬ್ಬಿಸಿದರೆ ಸಾಕು ಎಂಬ ಎಚ್ಚರಿಕೆ ನೀಡಿದರು. ಮುಂದಿನ ದಿನಗಳಲ್ಲಿ ರಾಷ್ಟ್ರೀಯ ಹಬ್ಬಗಳ ಸಂದರ್ಭ ಅಂಗಾಂಗ ದಾನ ಮಾಡಿದ ಕುಟುಂಬಗಳನ್ನು ಸನ್ಮಾನಿಸಲಾಗುವುದು ಎಂದರು. ಶಾಸಕ ಎಚ್.ಪಿ. ಸ್ವರೂಪ್ ಮಾತನಾಡಿ, ನಶೆಮುಕ್ತ ಹಾಸನ ನಿರ್ಮಾಣಕ್ಕೆ ಯುವಕರು ಮುಂಚೂಣಿಯಲ್ಲಿ ನಿಲ್ಲಬೇಕು. 'ಮತ್ತೊಬ್ಬರ ಜೀವಕ್ಕೆ ನಾವು ಉಸಿರಾಗಬಹುದು' ಎಂಬ ಸಂದೇಶದೊಂದಿಗೆ ಅಂಗಾಂಗ ದಾನ ಅತ್ಯುತ್ತಮ ದಾನ ಎಂದು ಹೇಳಿದರು. ಮಾದಕ ವಸ್ತುಗಳ ಮಾರಾಟ ಮತ್ತು ಬಳಕೆಯನ್ನು ಕಟ್ಟುನಿಟ್ಟಾಗಿ ತಡೆಯಲು ಎಲ್ಲರೂ ಸಹಕರಿಸಬೇಕು ಎಂದು ತಿಳಿಸಿದರು. ಅಂಗಾಂಗ ದಾನ ಎಂದರೇ ಒಂದು ವಿಶೇಷವಾದ ದಾನ. ಮತ್ತೊಬ್ಬರ ಜೀವಕ್ಕೆ ನೀವು ಉಸಿರಾಗಬಹುದು ಎಂದು ಹೇಳಿದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ನಶೆಮುಕ್ತ ಸಮಾಜ ನಿರ್ಮಾಣಕ್ಕೆ ಪ್ರತಿಜ್ಞೆ ಕೈಗೊಂಡರು. ಇದೆ ವೇಳೆ ಎನ್ಸಿಬಿ ಬೆಂಗಳೂರು ವಲಯದ ಇನ್ಸ ಸ್ಪೆಕ್ಟರ್ ವಿಕಾಸ್ ಸಿಂಗ್ ಹಾಗೂ ದಿಶಾ ಭೋದ್ ಫೌಂಡೇಶನ್ ನಿರ್ದೇಶಕ ಧ್ರುವಕುಮಾರ್, ಎಎಸ್ಪಿ ಶ್ರೀನಿಧಿ, ಸುರೇಶ್, ವಸಂತ ಶೆಟ್ಟಿ, ಡಾ.ರಾಮನಾಥ್, ಡಾ.ನಿತಿನ್, ಡಾ.ಶಶಿಕುಮಾರ್, ಡಾ.ಕಿರಣ್ ಕೆಂಪೇಗೌಡ ಮತ್ತಿತರರು ಉಪಸ್ಥಿತರಿದ್ದರು.
ಮಂಗಳೂರು: ಫೆ.19, 20ರಂದು 'ಅಸ್ತಿತ್ವ'ದಿಂದ ಸಂತ ಅಲೋಶಿಯಸ್ ನಲ್ಲಿ ಸಂಗೀತ ಕಾರ್ಯಕ್ರಮ
ಮಂಗಳೂರು: ಅಸ್ತಿತ್ವ, ಮಂಗಳೂರು ಇದರ ದಶಮಾನೋತ್ಸವ ಪ್ರಯುಕ್ತ ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾನಿಲಯದ ರಂಗ ಅಧ್ಯಯನ ಕೇಂದ್ರದ ಸಹಯೋಗದಲ್ಲಿ ಫೆ.19 ಮತ್ತು 20ರಂದು ಸಂಗೀತ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಫೆ.19ರಂದು ಕೀರ್ತನ ನಾಯ್ಗ ಮುಂದಾಳತ್ವದಲ್ಲಿ 'ಸುರೋಂ ಕೀ ಮೆಹಫಿಲ್' ಎಂಬ ಹಿಂದೂಸ್ಥಾನಿ ಸಂಗೀತ ಕಾರ್ಯಕ್ರಮ ನಡೆಯಲಿದೆ. ಫೆ.20ರಂದು ಜೇಸನ್ ಲೋಬೋ ಮುಂದಾಳತ್ವದಲ್ಲಿ ಮಿಸ್ತೇರಿಯುಮ್ ಎಂಬ ಅಧ್ಯಾತ್ಮಿಕ ಹಾಡುಗಳ ಕಾರ್ಯಕ್ರಮ ಜರುಗಲಿದೆ. ಎರಡೂ ಸಂಗೀತ ಕಾರ್ಯಕ್ರಮಗಳು ಸಂಜೆ 6:30ಕ್ಕೆ ಸಂತ ಅಲೋಶಿಯಸ್ ವಿವಿಯ ಮದರ್ ಥೆರೇಸಾ ಮದರ್ ಥೆರೇಸಾ ಉದ್ಯಾನವನದಲ್ಲಿ ಪ್ರಕೃತಿಯ ಮಡಿಲಿನಲ್ಲಿ ವಿಶಿಷ್ಟವಾದ ಸಂಯೋಜನೆಯೊಂದಿಗೆ ನಡೆಯಲಿದೆ.ಸಾರ್ವಜನಿಕರಿಗೆ ಮುಕ್ತವಾದ ಪ್ರವೇಶವಿದೆ ಎಂದು ಸಂಘಟಕರು ತಿಳಿಸಿದ್ದಾರೆ. ಅರೆಹೊಳೆ ಪ್ರತಿಷ್ಠಾನ, ಗೆಳೆಯರ ಬಳಗ ಮಂಗಳೂರು ಹಾಗೂ ಕನ್ನಡ ವಿಭಾಗದ ಸಹಭಾಗಿತ್ವದಲ್ಲಿ ಈ ಕಾರ್ಯಕ್ರಮ ಜರುಗಲಿದೆ.
ರಾಜ್ಯದ ಶಕ್ತಿ ಸೌಧ ಎಂದೇ ಕರೆಯಲ್ಪಡುವ ವಿಧಾನಸೌಧಕ್ಕೆ ಮಾಧ್ಯಮಗಳಿಗೆ ನಿರ್ಬಂಧ ಹೇರಲಾಗಿದೆ. ಇತ್ತೀಚೆಗೆ ವಿಧಾನಸೌಧದಲ್ಲಿ ಸಚಿವ ಬೈರತಿ ಸುರೇಶ್ ಕಚೇರಿಯಲ್ಲಿ ಕಳ್ಳತನ ಪ್ರಕರಣ ನಡೆದಿತ್ತು. ಮಾಧ್ಯಮಗಳ ವರದಿಯಿಂದ ಇದು ಬಹಿರಂಗಗೊಂಡಿತ್ತು. ಇದರ ಬೆನ್ನಲ್ಲೇ ವಿಧಾನಸೌಧಕ್ಕೆ ಮಾಧ್ಯಮಗಳಿಗೆ ನಿರ್ಬಂಧ ಹೇರಲಾಗಿದೆ. ರಾಜ್ಯ ಸರ್ಕಾರದ ನಡೆಗೆ ಆಕ್ರೋಶ ವ್ಯಕ್ತವಾಗಿದೆ. ವಿಪಕ್ಷ ನಾಯಕ ಆರ್ ಅಶೋಕ್ ಕೂಡಾ ಇದಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. ಕೂಡಲೇ ಸರ್ಕಾರ ತನ್ನ ಸುತ್ತೋಲೆಯನ್ನು ವಾಪಸ್ ಪಡೆದುಕೊಳ್ಳಬೇಕು ಎಂದಿದ್ದಾರೆ. ಮತ್ತಷ್ಟು ವಿವರ ಇಲ್ಲಿದೆ.
ಅಮೆರಿಕನ್ ವೀಸಾ ಹಾಗೂ ಅಲ್ಲಿನ ಜೀವನವನ್ನು ಅನುಭವಿಸಬೇಕು ಎಂಬುದು ಸಾವಿರಾರು ಭಾರತೀಯರ ಕನಸು. ಆದ್ರೆ ಇತ್ತೀಚೆಗೆ ಅಮೆರಿಕಾದಲ್ಲಿರುವ ಭಾರತೀಯ NRIಗಳು US ತೊರೆದು ಭಾರತಕ್ಕೆ ಬರುತ್ತಿರುವ ಘಟನೆಗಳು ಹೆಚ್ಚುತ್ತಿವೆ. ಹೀಗೆ US ನಲ್ಲಿ ಸುಮಾರು 12 ವರ್ಷಗಳ ಕಾಲ ಇದ್ದ ಭಾರತೀಯ NRI ಸಹ ತನ್ನ 2.9ಕೋಟಿ ವಾರ್ಷಿಕ ಸಂಬಳವನ್ನು ತೊರೆದು ಭಾರತಕ್ಕೆ ಬರುವ ಕುರಿತು ಆಲೋಚನೆ ಮಾಡುತ್ತಿದ್ದಾರೆ. ಇದಕ್ಕೆ ಪ್ರಮುಖ ಕಾರಣ ತನ್ನ 3 ಮಂದಿ ಮಕ್ಕಳಿಗೆ ಅಜ್ಜಿ-ತಾತ ಹೀಗೆ ಕುಟುಂಬದೊಂದಿಗೆ ಬೆಳೆಯಲು ಅವಕಾಶ ಸಿಗಬೇಕೆಂಬ ಆಲೋಚನೆ. ಆದಾಗ್ಯೂ, ಈ ನಿರ್ಧಾರ ಸರಿಯೋ ತಪ್ಪೋ ಎಂಬ ಗೊಂದಲದಲ್ಲಿರುವ ಇವರು ನೆಟ್ಟಿಗರಿಂದ ಸಲಹೆ ಪಡೆದಿದ್ದಾರೆ. ಈ ಕುರಿತ ಮಾಹಿತಿ ಇಲ್ಲಿದೆ...
ರಾಜ್ಯಸಭಾ ಚುನಾವಣೆ ಘೋಷಣೆ: 10 ರಾಜ್ಯಗಳ 37 ಸ್ಥಾನಗಳಿಗೆ ಮಾರ್ಚ್ 16 ಕ್ಕೆ ಮತದಾನ; ಎಲ್ಲೆಲ್ಲಿ?
ರಾಜ್ಯಸಭಾ ಚುನಾವಣೆಯ ದಿನಾಂಕವನ್ನು ಚುನಾವಣಾ ಆಯೋಗ ಘೋಷಣೆ ಮಾಡಿದೆ. ಫೆಬ್ರವರಿ ಕೊನೆಯ ವಾರ ಅಧಿಸೂಚನೆ ಹೊರಡಿಸಲಿದ್ದು, ಮಾರ್ಚ್ 16 ರಂದು ಮತದಾನ ಇರಲಿದೆ. ಶರದ್ ಪವಾರ್, ಅಭಿಷೇಕ್ ಮನುಸಂಘ್ವಿ ಸೇರಿ 10 ರಾಜ್ಯಗಳ 37 ಸದಸ್ಯರ ಅವಧಿ ಮುಕ್ತಾಯವಾಗುತ್ತಿದೆ. ಯಾವೆಲ್ಲಾ ರಾಜ್ಯಗಳಲ್ಲಿ ಎಷ್ಟು ಸ್ಥಾನಕ್ಕೆ ಚುನಾವಣೆ ಎಂಬ ಮಾಹಿತಿ ಇಲ್ಲಿದೆ.
ಪ್ರಿಡ್ಜ್ ಸ್ಟೋರೇಜ್ನಲ್ಲಿ ಹುಳ-ಕೊಳೆತ ವಾಸನೆ! ಬೆಂಗಳೂರು ಸ್ಟಾರ್ ಅಂಬೂರ್ ಬಿರಿಯಾನಿ ಹೋಟೆಲ್ ಗೆ ದಂಡ ವಿಧಿಸಿದ ಜಿಬಿಎ
ಆಹಾರ ಮಳಿಗೆ, ಹೋಟೆಲ್ಗಳ ಅಶುಚಿತ್ವದ ಹಿನ್ನೆಲೆ ದಾಳಿ ಮಾಡಿದ ಜಿಬಿಎ ಘನತ್ಯಾಜ್ಯ ವಿಭಾಗದ ಅಧಿಕಾರಿಗಳು ಸ್ಟಾರ್ ಅಂಬೂರ್ ಬಿರಿಯಾನಿ ಹೋಟೆಲ್ಗೆ 1 ಲಕ್ಷ ರೂಪಾಯಿ ದಂಡ ಹಾಕಿದ್ದಾರೆ.
ಸಮಸ್ಯೆಗಳಿಗೆ ಶೀಘ್ರ ಪರಿಹಾರ, ನಾಯಿಗಳಿಗೆ ಶೆಡ್ ನಿರ್ಮಾಣ: ಜಿಲ್ಲಾಧಿಕಾರಿ ದರ್ಶನ್ ಎಚ್.ವಿ.
ಉಳ್ಳಾಲ: ಪೂರ್ವಭಾವಿ ಸಭೆಯಲ್ಲಿ ಅಭಿವೃದ್ಧಿ ಕುರಿತು ಚರ್ಚೆ ನಡೆಯಬೇಕು. ಸಮಸ್ಯೆಗಳಿಗೆ ಪರಿಹಾರ ಒದಗಿಸುವ ಯೋಜನೆ ರೂಪಿಸಬೇಕು. ಸಭೆಯಲ್ಲಿ ಮಹಿಳಾ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ನಿಮ್ಮ ವಾರ್ಡ್ನ ಪ್ರಮುಖ ಸಮಸ್ಯೆಗಳ ಬಗ್ಗೆ ಮಾಹಿತಿ ನೀಡಿದರೆ ಅವುಗಳಿಗೆ ಶೀಘ್ರ ಪರಿಹಾರ ಒದಗಿಸಲಾಗುವುದು ಎಂದು ಉಳ್ಳಾಲ ನಗರಸಭೆ 2026-27 ಸಾಲಿನ ಬಜೆಟ್ ಮಂಡನೆಯ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿದ್ದ, ಉಳ್ಳಾಲ ನಗರಸಭೆಯ ಆಡಳಿತಾಧಿಕಾರಿಯಾಗಿರುವ ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ಸಲಹೆ ನೀಡಿದರು. ಸಭೆಯಲ್ಲಿ ಉಳ್ಳಾಲ ಬೈಲ್, ಸುಭಾಷ್ ನಗರ, ಚೆಂಬುಗುಡ್ಡೆ, ಕೃಷ್ಣ ನಗರ ಮುಂತಾದ ಪ್ರದೇಶಗಳಲ್ಲಿ ಚರಂಡಿ ಸಮಸ್ಯೆಯಿಂದ ಉಂಟಾಗುತ್ತಿರುವ ತೊಂದರೆ ಬಗ್ಗೆ ಸ್ಥಳೀಯರು ಜಿಲ್ಲಾಧಿಕಾರಿಯ ಗಮನ ಸೆಳೆದರು. ಇತ್ತೀಚೆಗೆ ನಿರ್ಮಾಣಗೊಂಡ ಸ್ಮಶಾನದಲ್ಲಿ ಮೂರು ಲಕ್ಷ ರೂ. ಮೌಲ್ಯದ ಕಬ್ಬಿಣ ಕಳುವಾಗಿದೆ. ಇದಕ್ಕೆ ಹೊಣೆ ಯಾರು? ಜನನ-ಮರಣ ಪ್ರಮಾಣಪತ್ರಗಳನ್ನು ಇಂಟರ್ನೆಟ್ನಲ್ಲಿ ಪಡೆಯುವ ವ್ಯವಸ್ಥೆ ರಾಜ್ಯದಲ್ಲೂ ಜಾರಿಯಾಗಬೇಕು ಎಂಬ ಆಗ್ರಹ ವ್ಯಕ್ತವಾಯಿತು. ನಾಡದೋಣಿ ಮೀನುಗಾರರ ಸಂಘದ ಅಧ್ಯಕ್ಷ ಹನೀಫ್ ಮಾತನಾಡಿ, ಮೀನುಗಾರಿಕೆ ನಡೆಯುವ ಸ್ಥಳಗಳಲ್ಲಿ ಬೀದಿ ನಾಯಿಗಳ ಕಾಟ ಹೆಚ್ಚಾಗಿದೆ. ಇದಕ್ಕೆ ಪರಿಹಾರ ಏಕೆ ಇಲ್ಲ ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಜಿಲ್ಲಾಧಿಕಾರಿ ದರ್ಶನ್ ಎಚ್.ವಿ., ನಾಯಿಗಳಿಗೆ ಶೆಡ್ ನಿರ್ಮಾಣ ಮಾಡಲು ಸರ್ಕಾರದ ಆದೇಶವಿದೆ. ನಾಯಿಗಳಿಂದ ಹೆಚ್ಚಿನ ತೊಂದರೆ ಆಗುತ್ತಿರುವುದರಿಂದ ಶೆಡ್ ನಿರ್ಮಾಣ ಮಾಡಲಾಗುವುದು. ದಾರಿಯಲ್ಲಿ ಯಾರೂ ನಾಯಿಗಳಿಗೆ ಆಹಾರ ಹಾಕಬಾರದು ಎಂದು ಸೂಚಿಸಿದರು. ಅಕ್ಕರೆ ಕೆರೆಯಲ್ಲಿ ಮಳೆ ನೀರು ಮನೆಗಳಿಗೆ ನುಗ್ಗುತ್ತದೆ. ಇದಕ್ಕೆ ಪರಿಹಾರ ಸಿಗುತ್ತಿಲ್ಲ. ಚರಂಡಿ ವ್ಯವಸ್ಥೆ ಕಲ್ಪಿಸಿ ಪರಿಹಾರ ಒದಗಿಸಬೇಕು ಎಂದು ಮಹಿಳೆಯೊಬ್ಬರು ಮನವಿ ಮಾಡಿದರು. ಸುಭಾಷ್ ನಗರ ವಾರ್ಡ್ನಲ್ಲಿ ಚರಂಡಿ ವ್ಯವಸ್ಥೆ ಇಲ್ಲದೆ ಹಲವು ಮನೆಗಳಿಗೆ ಹಾನಿಯಾಗುತ್ತಿದೆ. ಕೈಕೋ ಪ್ರದೇಶದಲ್ಲಿ ಅಂಗನವಾಡಿ ನಿರ್ಮಾಣಕ್ಕಾಗಿ ಅರ್ಜಿ ಸಲ್ಲಿಸಿ ಮೂರು ವರ್ಷವಾದರೂ ಕಾಮಗಾರಿ ಆರಂಭವಾಗಿಲ್ಲ. ಈ ಬಗ್ಗೆ ಶೀಘ್ರ ಕ್ರಮ ಕೈಗೊಳ್ಳಬೇಕು ಎಂದು ಮಾಜಿ ಕೌನ್ಸಿಲರ್ ಬಶೀರ್ ಮನವಿ ಮಾಡಿದರು. ಉಳಿಯದಲ್ಲಿ ಜಲಸಿರಿ ಯೋಜನೆಯಡಿ ಪೈಪ್ಲೈನ್ ಕಾಮಗಾರಿ ಕೆಲವು ಮನೆಗಳಿಗೆ ಆಗಿಲ್ಲ. ಇದರಿಂದ ಅನೇಕ ಕುಟುಂಬಗಳಿಗೆ ತೊಂದರೆ ಉಂಟಾಗಿದೆ. ಈ ಸಮಸ್ಯೆ ಇತ್ಯರ್ಥಪಡಿಸಬೇಕು ಎಂದು ಮಾಜಿ ಕೌನ್ಸಿಲರ್ ವೀಣಾ ಜಿಲ್ಲಾಧಿಕಾರಿಯ ಗಮನ ಸೆಳೆದರು. ಜಲಸಿರಿ ಯೋಜನೆಯಡಿ ಕುಡಿಯುವ ನೀರಿನ ಕಾಮಗಾರಿಯಿಂದ ರಸ್ತೆಗಳನ್ನು ಅಗೆದು ಬಿಟ್ಟು ಕೇಬಲ್ ಕತ್ತರಿಸಲಾಗಿದೆ. ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯ ನಿಝಾಮ್ ವಿನಂತಿಸಿದರು. ಬಡವರು ತೆರಿಗೆಗಳನ್ನು ಸಮಯಕ್ಕೆ ಪಾವತಿಸುತ್ತಾರೆ, ಆದರೆ ಬಲಾಢ್ಯರು ಪಾವತಿಸುವುದಿಲ್ಲ. ಈ ಬಗ್ಗೆ ಕ್ರಮ ಕೈಗೊಳ್ಳಬೇಕು. ಜೋರಾಗಿ ಮಳೆ ಬಂದಾಗ ಹಲವು ಮನೆಗಳಿಗೆ ಹಾನಿಯಾಗುತ್ತದೆ. ರಾಜಕಾಲುವೆ ಸಮಸ್ಯೆ ಶೀಘ್ರ ಇತ್ಯರ್ಥಗೊಳ್ಳಬೇಕು ಎಂದು ಮಾಜಿ ಉಪಾಧ್ಯಕ್ಷ ಅಯ್ಯೂಬ್ ಜಿಲ್ಲಾಧಿಕಾರಿಯ ಗಮನ ಸೆಳೆದರು. ಮಹಿಳೆಯರೇ ಹೆಚ್ಚಾಗಿ ಭಾಗವಹಿಸಿದರು ನಗರಸಭೆಯ 31 ವಾರ್ಡ್ಗಳಲ್ಲಿ ಕೆಲವೇ ಮಾಜಿ ಕೌನ್ಸಿಲರ್ಗಳು ಸಭೆಯಲ್ಲಿ ಭಾಗವಹಿಸಿದ್ದರು. ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಭಾಗವಹಿಸಿ ತಮ್ಮ ತಮ್ಮ ವಾರ್ಡ್ಗಳ ಸಮಸ್ಯೆಗಳನ್ನು ಜಿಲ್ಲಾಧಿಕಾರಿಯ ಮುಂದಿಟ್ಟರು. ಪೌರಾಯುಕ್ತ ಸಂತೋಷ್ ಹಾಗೂ ಲೆಕ್ಕಾಧಿಕಾರಿ ವಾಸುದೇವ ಸಭೆಯಲ್ಲಿ ಉಪಸ್ಥಿತರಿದ್ದರು.
ನಿತಾಯ್ ರಾಯ್ ಚೌಧರಿ; ತಾರಿಕ್ ರೆಹಮಾನ್ ನೇತೃತ್ವದ ಬಾಂಗ್ಲಾದೇಶ ಸಂಪುಟದ ಏಕೈಕ ಹಿಂದೂ ಸಚಿವ; ಯಾರಿವರು?
ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತ ಹಿಂದೂಗಳ ಮೇಲೆ ನಡೆಯುತ್ತಿರುವ ದೌರ್ಜನ್ಯ, ಜಾಗತಿಕ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಇದೀಗ ತಾನೆ ನೆರೆ ರಾಷ್ಟ್ರದಲ್ಲಿ ಸರ್ಕಾರ ಬದಲಾಗಿದ್ದು, ತಾರಿಕ್ ರೆಹಮಾನ್ ನೂತನ ಪ್ರಧಾನಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ತಾರಿಕ್ ರೆಹಮಾನ್ ಅವರ ಸಂಪುಟದಲ್ಲಿ ಒಟ್ಟು 50 ಸಚಿವರಿದ್ದು ಈ ಪೈಕಿ ನಿತಾಯ್ ರಾಯ್ ಚೌಧರಿ ಏಕೈಕ ಹಿಂದೂ ಸಚಿವರಾಗಿ ಪ್ರತಿಜ್ಞಾವಿಧಿ ಸ್ವೀಕರಿಸಿದ್ದಾರೆ. ಯಾರಿವರು ನಿತಾಯ್ ರಾಯ್ ಚೌಧರಿ? ಬಾಂಗ್ಲಾ ರಾಜಕಾರಣದಲ್ಲಿ ಅವರ ಪಾತ್ರವೇನು? ಇಲ್ಲಿದೆ ಸಂಪೂರ್ಣ ಮಾಹಿತಿ.
ಡಿಜಿಟಲ್ ಭದ್ರತೆಯಲ್ಲಿ ಹೊಸ ಯುಗ: TraceX Guard AI ಮೊಬೈಲ್ ಸುರಕ್ಷತಾ ಪರಿಹಾರ
AI ಆಧಾರಿತ TraceX Guard ಮೊಬೈಲ್ ಅಪ್ಲಿಕೇಶನ್ QR ಕೋಡ್ ಮೋಸ, ಫಿಷಿಂಗ್ ದಾಳಿಗಳು ಮತ್ತು ಡಿಜಿಟಲ್ ವಂಚನೆಗಳಿಂದ ಬಳಕೆದಾರರನ್ನು ರಕ್ಷಿಸುವ ಸಮಗ್ರ ಸುರಕ್ಷತಾ ಪರಿಹಾರ.
ಶಂಕರಲಿಂಗ ದೇವಾಲಯದ ಅಭಿವೃದ್ಧಿ ನಿರ್ಲಕ್ಷ್ಯ
ಕಲ್ಲಡ್ಕ : ಅನುಗ್ರಹ ಮಹಿಳಾ ಕಾಲೇಜಿನಲ್ಲಿ ಕನ್ನಡ ಸಂಘದ ವತಿಯಿಂದ ಉಪನ್ಯಾಸ ಕಾರ್ಯಕ್ರಮ
ಕಲ್ಲಡ್ಕ : ಅನುಗ್ರಹ ಮಹಿಳಾ ಕಾಲೇಜಿನಲ್ಲಿ ಕನ್ನಡ ಸಂಘದ ವತಿಯಿಂದ ‘ಸಮಕಾಲೀನ ವಿದ್ಯಮಾನಗಳು ಮತ್ತು ಯುವಜನತೆ’ ಎಂಬ ವಿಷಯದ ಮೇಲೆ ಉಪನ್ಯಾಸ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಇತಿಹಾಸ ತಜ್ಞ, ಸಾಹಿತಿ, ತುಮಕೂರು ವಿಶ್ವವಿದ್ಯಾನಿಲಯದ ಕನ್ನಡ ಅಧ್ಯಯನ ವಿಭಾಗದ ಹಿರಿಯ ಪ್ರಾಧ್ಯಾಪಕರಾದ ಪ್ರೊ. ನಿತ್ಯಾನಂದ ಬಿ. ಶೆಟ್ಟಿ ಅವರು ಭಾಗವಹಿಸಿದ್ದರು. ಪದವಿ ವಿದ್ಯಾರ್ಥಿನಿಯರನ್ನು ಉದ್ದೇಶಿಸಿ ಸಮಕಾಲೀನ ವಿದ್ಯಮಾನಗಳ ಕುರಿತು ಸವಿಸ್ತಾರವಾಗಿ ಮಾತನಾಡಿದರು. ವಿದ್ಯಾಭ್ಯಾಸ ಎಂದರೆ ಕೇವಲ ಪುಸ್ತಕದ ಓದಷ್ಟೇ ಅಲ್ಲ; ನಮ್ಮ ಸುತ್ತಮುತ್ತ ನಡೆಯುತ್ತಿರುವ ಪ್ರತಿಯೊಂದು ಘಟನೆಯಲ್ಲೂ ಅಡಗಿರುವ ರಾಜಕೀಯವನ್ನು ಅರಿಯುವ ಪ್ರಜ್ಞೆ ಬೆಳೆಸಿಕೊಳ್ಳುವಾಗ ಮಾತ್ರ ಓದು ಅರ್ಥಪೂರ್ಣವಾಗುತ್ತದೆ. ಭಗವದ್ಗೀತೆ, ಬೈಬಲ್, ಕುರ್ಆನ್ ಮೊದಲಾದ ಧರ್ಮಗ್ರಂಥಗಳನ್ನು ಎಷ್ಟು ನಿಷ್ಠೆಯಿಂದ ಓದುತ್ತೇವೆಯೋ, ಅದೇ ನಿಷ್ಠೆಯಿಂದ ದೇಶದ ಸಂವಿಧಾನವನ್ನು ಅರ್ಥಮಾಡಿಕೊಳ್ಳಬೇಕು ಇದರಿಂದ ಸಮಾಜದಲ್ಲಿ ಸಾಮರಸ್ಯದ ಬದುಕು ಸಾಧ್ಯವಾಗುತ್ತದೆ ಎಂದರು. ವಿದ್ಯಾರ್ಥಿಗಳು ಸಾಹಿತ್ಯದ ಒಲವನ್ನು ಬೆಳೆಸಿಕೊಳ್ಳುವ ಜೊತೆಗೆ ಲೋಕಜ್ಞಾನದ ಪುಸ್ತಕಗಳನ್ನು ಓದುವ ಅಭ್ಯಾಸ ಬೆಳೆಸಿಕೊಳ್ಳಬೇಕು ಎಂದು ಪ್ರೇರೇಪಿಸಿದರು. ಉಪನ್ಯಾಸದ ನಂತರ ವಿದ್ಯಾರ್ಥಿನಿಯರೊಂದಿಗೆ ಸಂವಾದ ನಡೆಯಿತು. ಇತ್ತೀಚೆಗೆ ಬಿಡುಗಡೆಯಾದ ತಮ್ಮ ‘ಅಳವು ಅರಿಯದ ಭಾಷೆ – ಕಲೆ, ಸಮಾಜ, ಇತಿಹಾಸ’ ಕೃತಿಯನ್ನು ಕಾಲೇಜು ಗ್ರಂಥಾಲಯಕ್ಕೆ ಉಡುಗೊರೆಯಾಗಿ ನೀಡಿದರು. ವೇದಿಕೆಯಲ್ಲಿ ಅನುಗ್ರಹ ಮಹಿಳಾ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ಯಾಸಿನ್ ಬೇಗ್, ಖಜಾಂಜಿ ಹೈದರ್ ಅಲಿ, ಪ್ರಾಂಶುಪಾಲೆ ಡಾ. ಹೇಮಲತ ಬಿ.ಡಿ., ಕನ್ನಡ ಸಂಘದ ಪದಾಧಿಕಾರಿ ರೇಷ್ಮಾ, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು. ತುಮಕೂರು ವಿಶ್ವವಿದ್ಯಾನಿಲಯದ ಸಂಶೋಧನಾ ವಿದ್ಯಾರ್ಥಿಗಳಾದ ಅಮರ್ ಮತ್ತು ಧನುಷ್ ಭಾಗವಹಿಸಿದ್ದರು. ಪ್ರಥಮ ಬಿ.ಸಿ.ಎ. ವಿಭಾಗದ ಕುಮಾರಿ ಫಾತಿಮಾ ನಾಫಿಯಾ ಕಿರಾಅತ್ ಪಠಿಸಿದರು. ದ್ವಿತೀಯ ಬಿ.ಎ. ವಿಭಾಗದ ಕುಮಾರಿ ಫಾತಿಮತ್ ಶಮಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಕನ್ನಡ ವಿಭಾಗದ ಉಪನ್ಯಾಸಕಿ ಶ್ರೀಮತಿ ರೇಷ್ಮಾ ಧನ್ಯವಾದ ಸಮರ್ಪಿಸಿದರು.
AI ಶೃಂಗಸಭೆಯು ‘ಅಬ್ಬರದ ಪ್ರಚಾರ ಪ್ರದರ್ಶನ’: ರಾಹುಲ್ ಗಾಂಧಿ ವಾಗ್ದಾಳಿ
ದೇಶೀಯ ದತ್ತಾಂಶ ಮಾರಾಟಕ್ಕಿಟ್ಟಿದ್ದರೆ, ಚೀನೀ ಉತ್ಪನ್ನಗಳು ಗಮನ ಸೆಳೆಯುತ್ತಿವೆ ಎಂದ ವಿಪಕ್ಷ ನಾಯಕ
Karnataka Weather: ವಾಯುಭಾರ ಕುಸಿತ: ದಕ್ಷಿಣ ಕನ್ನಡ, ಮಲೆನಾಡಲ್ಲಿ ಮಳೆಯಾಗುವ ಮುನ್ಸೂಚನೆ
ಭಾರಿ ಬಿಸಿಲಿಂದ ಕಂಗೆಟ್ಟಿರುವ ಕರಾವಳಿ ಜನರಿಗೆ, ಹಾಗೂ ಮಳೆಗಾಗಿ ಎದುರು ನೋಡುತ್ತಿರುವ ಕಾಫಿ ಬೆಳೆಗಾರರಿಗೆ ಮಳೆಯ ಸಿಹಿಸುದ್ದಿ ಸಿಕ್ಕಿದೆ. ಇನ್ನು 2-3 ದಿನಗಳಲ್ಲಿ ಹಗುರ ಮಳೆಯಾಗುವ ಮುನ್ಸೂಚನೆ ಸಿಕ್ಕಿದೆ. ಎಲ್ಲೆಲ್ಲಿ ಎಂಬ ವಿವರ ಇಲ್ಲಿದೆ.
SEBCಯಡಿ ಮುಸ್ಲಿಮರಿಗೆ ನೀಡುತ್ತಿದ್ದ 5% ಮೀಸಲಾತಿ ರದ್ದುಗೊಳಿಸಿದ ಮಹಾರಾಷ್ಟ್ರ ಸರಕಾರ
ಮುಂಬೈ: ಮಹಾರಾಷ್ಟ್ರ ಸರಕಾರ ಶಿಕ್ಷಣ ಮತ್ತು ಸರಕಾರಿ ಉದ್ಯೋಗಗಳಲ್ಲಿ SEBCಯಡಿ ಮುಸ್ಲಿಂ ಸಮುದಾಯಕ್ಕೆ ನೀಡಿದ್ದ ಶೇಕಡಾ 5 ರಷ್ಟು ಮೀಸಲಾತಿಯನ್ನು ರದ್ದುಗೊಳಿಸಿರುವ ಬಗ್ಗೆ ವರದಿಯಾಗಿದೆ. ದೇವೇಂದ್ರ ಫಡ್ನವೀಸ್ ನೇತೃತ್ವದ ಮಹಾರಾಷ್ಟ್ರ ಸರಕಾರ ಈ ಹೊಸ ಆದೇಶವನ್ನು ನೀಡಿದೆ. ಈ ಆದೇಶದಿಂದ ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ವರ್ಗಗಳ(SEBC) ವರ್ಗದ ಅಡಿಯಲ್ಲಿ ಮುಸ್ಲಿಂ ಸಮುದಾಯದ ಕೆಲವು ವರ್ಗಗಳಿಗೆ ಈ ಹಿಂದೆ ದೊರೆಯುತ್ತಿದ್ದ ಮೀಸಲಾತಿ ರದ್ದುಗೊಂಡಿದೆ. 2014ರಲ್ಲಿ ಕಾಂಗ್ರೆಸ್-ಎನ್ ಸಿಪಿ ಮೈತ್ರಿ ಸರಕಾರ ಈ ಮೀಸಲಾತಿಯನ್ನು ಘೋಷಿಸಿತ್ತು. ಈ ನಿರ್ಧಾರವನ್ನು ಬಾಂಬೆ ಹೈಕೋರ್ಟ್ನಲ್ಲಿ ಪ್ರಶ್ನಿಸಲಾಯಿತು. ನಂತರ ಬಾಂಬೆ ಹೈಕೋರ್ಟ್ ಸರಕಾರಿ ಉದ್ಯೋಗಗಳಲ್ಲಿ ಈ ಮೀಸಲಾತಿಗೆ ಮಧ್ಯಂತರ ತಡೆಯಾಜ್ಞೆ ವಿಧಿಸಿತ್ತು. ಶಿಕ್ಷಣ ಸಂಸ್ಥೆ ಹಾಗೂ ಸರಕಾರಿ ಉದ್ಯೋಗ ಪಡೆಯಲು ಮುಸ್ಲಿಂ ಸಮುದಾಯಕ್ಕೆ ಇದು ಅನುಕೂಲವಾಗಲಿದೆ ಎಂದು ಹೇಳಲಾಗಿತ್ತು. ಇದೀಗ ಹಿಂದಿನ ಸರಕಾರದ ಆದೇಶವನ್ನು ಬಿಜೆಪಿ ಸರಕಾರ ರದ್ದುಪಡಿಸಿದೆ.
ರೈಲು ಪ್ರಯಾಣಿಕರಿಗೆ ಭರ್ಜರಿ ಸುದ್ದಿ ಕೊಟ್ಟ ರೈಲ್ವೆ ಇಲಾಖೆ, ಈ ಮಾರ್ಗದಲ್ಲಿ ವಿಶೇಷ ರೈಲು... South Western Railway
ಭಾರತೀಯ ರೈಲ್ವೆ ಪ್ರಯಾಣಿಕರ ಅನುಕೂಲಕ್ಕೆ ಹಲವು ಬದಲಾವಣೆ ಮಾಡಿಕೊಂಡು, ಹೊಸ ಹೊಸ ರೈಲುಗಳ ಸೌಲಭ್ಯ ನೀಡುತ್ತಾ ಬಂದಿದೆ. ಅದರಲ್ಲೂ ವಿಶೇಷ ರೈಲುಗಳ ಮೂಲಕ ಪ್ರಯಾಣಿಕರ ದಟ್ಟಣೆ ನಿಯಂತ್ರಿಸಲಾಗುತ್ತಿದ್ದು, ಲಕ್ಷ ಲಕ್ಷ ಪ್ರಯಾಣಿಕರಿಗೆ ಇದರಿಂದ ಅನುಕೂಲ ಆಗುತ್ತಿದೆ. ಅದೇ ರೀತಿ ಈಗ ಹೆಚ್ಚುವರಿ ಪ್ರಯಾಣಿಕರ ದಟ್ಟಣೆಯನ್ನ ನಿವಾರಿಸಲು ಸೌತ್ ವೆಸ್ಟರ್ನ್ ರೈಲ್ವೆ, ಕಾಚಿಗುಡಾ ಮಾರ್ಗವಾಗಿ ಒಂದು ವಿಶೇಷ ರೈಲನ್ನು
ರಾಜೇಶ್ವರ್ ಗ್ರಾಮದಲ್ಲಿ ಸ್ವಚ್ಛತೆ ಮರೀಚಿಕೆ
ಪಟ್ಟಣ ಪಂಚಾಯತ್ ಘೋಷಣೆಯಾದರೂ ಅಭಿವೃದ್ಧಿ ಕುಂಠಿತ
ಸ್ಥಿರವಾದ ಚಿನ್ನ, ಸತತ ಕುಸಿಯುತ್ತಿದೆ ಬೆಳ್ಳಿ; ಇಂದಿನ ದರವೆಷ್ಟು?
ಜನವರಿಯಲ್ಲಿ ಗರಿಷ್ಠ 3,00,000ಕ್ಕೇರಿದ್ದ ಬೆಳ್ಳಿಯ ಬೆಲೆ ಫೆಬ್ರವರಿ 10 ರಿಂದ ಸತತ ಕುಸಿತ ಕಂಡು 2,55,000 ರೂ. ಗೆ ಬಂದು ನಿಂತಿದೆ. ಕಳೆದ ವರ್ಷ ಎಪ್ರಿಲ್ ನಿಂದ ಡಿಸೆಂಬರ್ ಅವಧಿಯಲ್ಲಿ ಚಿನ್ನದ ಸರಾಸರಿ ಬೆಲೆ ಶೇ 25ರಷ್ಟು ಏರಿಕೆ ಕಂಡಿತ್ತು ಮತ್ತು ಪ್ರತಿ ಕೆಜಿಗೆ 94,554 ಡಾಲರ್ ಗೆ ತಲುಪಿದೆ. ಜನವರಿಯಲ್ಲಿ ಗರಿಷ್ಠ ಮಟ್ಟಕ್ಕೆ ಏರಿದ್ದ ಚಿನ್ನ, ನಿಧಾನವಾಗಿ ಸ್ಥಿರತೆ ಕಂಡುಕೊಳ್ಳುತ್ತಿದೆ. ಗರಿಷ್ಠ ಬೆಲೆಯಿಂದಾಗಿ ಖರೀದಿದಾರರು ಕಡಿಮೆಯಾಗಿ ಬೆಲೆ ದುರ್ಬಲವಾಗಿದೆ. ಜಿನೀವಾದಲ್ಲಿ ನಡೆದ ಇರಾನ್- ಅಮೆರಿಕ ಮಾತುಕತೆ ನಂತರ ಭೌಗೋಳಿಕ ರಾಜಕೀಯ ಉದ್ವಿಗ್ನತೆಗಳು ಕಡಿಮೆಯಾಗಬಹುದು ಎನ್ನುವ ನಿರೀಕ್ಷೆಗಳೂ ಸುರಕ್ಷಿತ ಆಸ್ತಿಯಾಗಿ ಚಿನ್ನದ ಬೇಡಿಕೆಯನ್ನು ಕಡಿಮೆ ಮಾಡಿದೆ. ಒಂಭತ್ತು ತಿಂಗಳ ಅವಧಿಯಲ್ಲಿ ಚಿನ್ನದ ಆಮದು ಪ್ರಮಾಣ ಶೇ 18.3ರಷ್ಟು ಕುಸಿದು 522 ಟನ್ ಗಳಿಗೆ ತಲುಪಿದೆ ಎಂದು ವಾಣಿಜ್ಯ ಇಲಾಖೆಯ ದತ್ತಾಂಶಗಳು ತೋರಿಸಿವೆ. ಆದರೆ ಪ್ರತಿ ಯುನಿಟ್ ಮೌಲ್ಯ ಹೆಚ್ಚಾಗಿರುವ ಕಾರಣ ಆಮದು ಶುಲ್ಕ ಶೇ 1.8ರಷ್ಟು ಹೆಚ್ಚಾಗಿದೆ. ಇನ್ನೊಂದೆಡೆ ಬೆಳ್ಳಿ ಸರಾಸರಿ ಬೆಲೆ ಪ್ರತಿ ಕೆಜಿಗೆ ಶೇ 46.7ರಷ್ಟು ಏರಿಕೆಯಾಗಿ 1357 ಡಾಲರ್ ಗೆ ತಲುಪಿದ್ದರೂ, ಆಮದು ಪ್ರಮಾಣ ಶೇ 56ರಷ್ಟು ಹೆಚ್ಚಾಗಿ 5,727 ಟನ್ ಗಳಿಗೆ ತಲುಪಿದೆ. ಪರಿಣಾಮವಾಗಿ ಎಪ್ರಿಲ್ ನಿಂದ ಡಿಸೆಂಬರ್ ಅವಧಿಯಲ್ಲಿ ಬೆಳ್ಳಿಯ ಆಮದು ಮೌಲ್ಯವು ದ್ವಿಗುಣಗೊಂಡಿದೆ. ಫೆಬ್ರವರಿ ಮೊದಲೆರಡು ವಾರದಲ್ಲಿ ಚಿನ್ನ ವಿಪರೀತ ಏರಿಳಿತ ಕಾಣದೆ ಪ್ರತಿ ಗ್ರಾಂಗೆ 15 ಸಾವಿರದಿಂದ 16 ಸಾವಿರದ ನಡುವೆ ಸ್ಥಿರವಾಗಿ ನಿಂತಿದೆ. ಕಳೆದ ಶನಿವಾರ ಅಲ್ಪ ಏರಿಕೆ ಕಂಡಿದ್ದ ಚಿನ್ನದ ಬೆಲೆ ಸೋಮವಾರ ಫೆಬ್ರವರಿ 16ರಂದು ಅಲ್ಪ ಕುಸಿತ ಕಂಡಿದೆ. ಮಂಗಳವಾರ ಇನ್ನಷ್ಟು ಕುಸಿತ ಕಂಡಿದೆ. ಇದೀಗ ಬುಧವಾರ ಮಾರುಕಟ್ಟೆ ಆರಂಭವಾದಾಗ ಹೆಚ್ಚು ಏರಿಳಿತ ಕಾಣದೆ ಸ್ಥಿರವಾಗಿ ನಿಂತಿದೆ. ಬೆಂಗಳೂರಿನಲ್ಲಿ ಫೆಬ್ರವರಿ 18ರಂದು ಬುಧವಾರ ಮಾರುಕಟ್ಟೆಗಳಲ್ಲಿ ಚಿನ್ನದ ಬೆಲೆ ಹೆಚ್ಚು ಏರಿಳಿತ ಕಂಡಿಲ್ಲ. ಒಂದು ಗ್ರಾಂ 24 ಕ್ಯಾರೆಟ್ ಶುದ್ಧ ಚಿನ್ನದ ದರ 15,420 ರೂ. ನಷ್ಟಿದೆ. ಒಂದು ಗ್ರಾಂ 22 ಕ್ಯಾರೆಟ್ ಆಭರಣ ಚಿನ್ನದ ದರ 14,135 ರೂ. ಮತ್ತು ಒಂದು ಗ್ರಾಂ 18 ಕ್ಯಾರೆಟ್ ಚಿನ್ನದ ದರ 11,565 ರೂ. ಬೆಲೆಗೆ ತಲುಪಿದೆ. ಮಂಗಳೂರಿನಲ್ಲಿ ಸ್ಥಿರವಾದ ಚಿನ್ನದ ದರ ಫೆಬ್ರವರಿ 18ರಂದು ಬುಧವಾರ ಬೆಳಗಿನ 11 ಗಂಟೆಯ ವಹಿವಾಟಿನಲ್ಲಿ ಮಂಗಳೂರಿನಲ್ಲಿ ಚಿನ್ನದ ಬೆಲೆ ಸ್ಥಿರವಾಗಿದೆ. ಬೆಳಗಿನ ವಹಿವಾಟಿನಲ್ಲಿ ಚಿನ್ನದ ಬೆಲೆ ಹಿಂದಿನ ರಾತ್ರಿಯ ಅಂತಿಮ ಬೆಲೆಯಿಂದ ಏರಿಳಿತ ಕಂಡಿಲ್ಲ. ಒಂದು ಗ್ರಾಂ 24 ಕ್ಯಾರೆಟ್ ಚಿನ್ನದ ದರ 15,420 ರೂ. ನಷ್ಟಿದೆ. ಒಂದು ಗ್ರಾಂ 22 ಕ್ಯಾರೆಟ್ ಚಿನ್ನದ ದರ 14,135 ರೂ. ಮತ್ತು ಒಂದು ಗ್ರಾಂ 18 ಕ್ಯಾರೆಟ್ ಚಿನ್ನದ ದರ 11,565 ರೂ. ಬೆಲೆಗೆ ತಲುಪಿದೆ. ಸತತ ಕುಸಿಯುತ್ತಿರುವ ಬೆಳ್ಳಿ ಫೆಬ್ರವರಿ ಆರಂಭದಿಂದಪೇ ಸತತ ಕುಸಿತ ಕಂಡಿದ್ದ ಬೆಳ್ಳಿ ಕಳೆದ ವಾರದ ಆರಂಭದಲ್ಲಿ ಅಲ್ಪ ಏರಿಕೆ ಕಂಡಿತ್ತು. ಆದರೆ ಫೆಬ್ರವರಿ 10ರಿಂದ ಸತತ ಕುಸಿತ ಕಾಣುತ್ತಾ ಬಂದಿದೆ. ಕಳೆದ ಶುಕ್ರವಾರ ಮತ್ತು ಶನಿವಾರ ಸತತ ಕುಸಿತ ಕಂಡಿದ್ದ ಚಿನ್ನ ಪ್ರತಿ ಕೆಜಿಗೆ 2,75,000 ರೂ.ಗೆ ಬಂದು ನಿಂತಿತ್ತು. ಫೆಬ್ರವರಿ 16ರಂದು ಸೋಮವಾರವೂ ಪ್ರತಿ ಗ್ರಾಂಗೆ 7 ರೂ. ಇಳಿಕೆ ಕಂಡು ಕೆಜಿಗೆ 2,68,000 ರೂ. ಗೆ ಕುಸಿದಿತ್ತು. ಮಂಗಳವಾರ ಪ್ರತಿ ಗ್ರಾಂಗೆ 8 ರೂ. ಕುಸಿತ ಕಂಡಿರುವ ಬೆಳ್ಳಿ ಕೆಜಿಗೆ 2,60,000 ರೂ. ಗೆ ಬಂದು ನಿಂತಿತ್ತು. ಇದೀಗ ಬುಧವಾರ ಮಾರುಕಟ್ಟೆ ತೆರೆದ ತಕ್ಷಣ ಪ್ರತಿ ಗ್ರಾಂಗೆ 5 ರೂ. ಕುಸಿದು ಕೆಜಿಗೆ 2,55,000 ರೂ. ಗೆ ಬಂದು ನಿಂತಿದೆ. ವಿವಿಧ ನಗರಗಳಲ್ಲಿ 1 ಗ್ರಾಮ್ ಚಿನ್ನದ ದರ (ಬೆಳಗಿನ ವಹಿವಾಟು) ಹೇಗಿದೆ? ದಿಲ್ಲಿ: 4 ಕ್ಯಾರೆಟ್ ಚಿನ್ನದ ದರ 15,435 ರೂ., 22 ಕ್ಯಾರೆಟ್ ಚಿನ್ನದ ದರ 14,150 ರೂ. ಮುಂಬೈ: 24 ಕ್ಯಾರೆಟ್ ಚಿನ್ನದ ದರ 15,420ರೂ., 22 ಕ್ಯಾರೆಟ್ ಚಿನ್ನದ ದರ 14,135 ರೂ. ಅಹಮದಾಬಾದ್: 24 ಕ್ಯಾರೆಟ್ ಚಿನ್ನದ ದರ 15,425 ರೂ., 22 ಕ್ಯಾರೆಟ್ ಚಿನ್ನದ ದರ 14,140 ರೂ. ಚೆನ್ನೈ: 24 ಕ್ಯಾರೆಟ್ ಚಿನ್ನದ ದರ 15,524 (-98) ರೂ., 22 ಕ್ಯಾರೆಟ್ ಚಿನ್ನದ ದರ 14,230 (-90) ರೂ. ಕೋಲ್ಕತ್ತಾ: 24 ಕ್ಯಾರೆಟ್ ಚಿನ್ನದ ದರ 15,420ರೂ., 22 ಕ್ಯಾರೆಟ್ ಚಿನ್ನದ ದರ 14,135 ರೂ. ಹೈದರಾಬಾದ್: 24 ಕ್ಯಾರೆಟ್ ಚಿನ್ನದ ದರ 15,420ರೂ., 22 ಕ್ಯಾರೆಟ್ ಚಿನ್ನದ ದರ 14,135 ರೂ. ಜೈಪುರ: 4 ಕ್ಯಾರೆಟ್ ಚಿನ್ನದ ದರ 15,435 ರೂ., 22 ಕ್ಯಾರೆಟ್ ಚಿನ್ನದ ದರ 14,150 ರೂ. ಚಂಡೀಗಢ: 4 ಕ್ಯಾರೆಟ್ ಚಿನ್ನದ ದರ 15,435 ರೂ., 22 ಕ್ಯಾರೆಟ್ ಚಿನ್ನದ ದರ 14,150 ರೂ. ಲಕ್ನೋ: 24 ಕ್ಯಾರೆಟ್ ಚಿನ್ನದ ದರ 15,435 ರೂ., 22 ಕ್ಯಾರೆಟ್ ಚಿನ್ನದ ದರ 14,150 ರೂ.
ಬೆಂಳೂರಿನಲ್ಲಿ ಇತ್ತೀಚೆಗೆ ಸೈಬರ್ ಕ್ರೈಂ ಹಾಗೂ ಹಣಕ್ಕಾಗಿ ಬ್ಲ್ಯಾಕ್ ಮೇಲ್ ಮಾಡಲು ಅತ್ಯಂತ ಕೀಳು ಮಟ್ಟಕ್ಕೆ ಇಳಿಯುತ್ತಿರುವವರ ಘಟನೆಗಳು ಬೆಳಕಿಗೆ ಬರುತ್ತಿದ್ದು, ಸದ್ಯ ಈ ಬ್ಲ್ಯಾಕ್ ಮೇಲ್ಗೆ ಕನ್ನಡದ ಕಿರುತೆರೆ ನಟಿಯೊಬ್ಬರು ಒಳಗಾಗಿದ್ದಾರೆ. ಕನ್ನಡದ ಕಿರುತೆರೆ ನಟಿಯೊಬ್ಬರು ಕೋರಮಂಗಲದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದು, ಈ ವೇಳೆ ಅಲ್ಲಿಯ ವಾಶ್ ರೂಂ ಅನ್ನು ನಟಿ ಬಳಿಸಿದ್ದಾರೆ. ಈ ಸಮಯದಲ್ಲಿ ಅಪರಿಚಿತನೊಬ್ಬ ಆಕೆಯ ಖಾಸಗಿ ವಿಡಯೋಗಳನ್ನು ರೆಕಾರ್ಡ್ ಮಾಡಿಕೊಂಡಿದ್ದು, ವಿಡಿಯೋ ಬಳಸಿಕೊಂಡು ಹಣಕ್ಕಾಗಿ ಬ್ಲ್ಯಾಕ್ ಮೇಲ್ ಮಾಡಿದ್ದು, ಹಣ ನೀಡದಿದ್ದರೆ ವಿಡಿಯೋ ವೈರಲ್ ಮಾಡುವುದಾಗಿ ಬೆದರಿಕ ಹಾಕಿದ್ದಾನೆ. ಸದ್ಯ ಈ ಕುರಿತು ನಟಿ ಬೆಂಗಳೂರಿನ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದು, ತನಿಖೆ ನಡೆಯುತ್ತಿದೆ.
ಇಂದೋರ್ ವಿವಿಯಲ್ಲಿ ಚಿನ್ನದ ಪದಕ ಗೆದ್ದ 78ರ ವಯಸ್ಸಿನ ಸುಷ್ಮಾ ಮೋಘೆ
ಇಂದೋರ್: ಕಲಿಯುವ ಛಲವಿದ್ದರೆ ವಯಸ್ಸು ಕೇವಲ ಒಂದು ಸಂಖ್ಯೆಯಷ್ಟೇ ಎಂಬ ಮಾತು ಆಗಾಗ ಕೇಳಿಬರುತ್ತದೆ. ಆದರೆ, ಇಲ್ಲೊಬ್ಬರು 78 ವರ್ಷದ ಹಿರಿಯ ಜೀವ ಅದನ್ನು ಅಕ್ಷರಶಃ ಸಾಬೀತುಪಡಿಸಿದ್ದಾರೆ. ಇಂದೋರ್ನ ಪ್ರತಿಷ್ಠಿತ ದೇವಿ ಅಹಲ್ಯಾ ವಿಶ್ವವಿದ್ಯಾಲಯದಲ್ಲಿ (ಡಿಎವಿವಿ) ನಡೆದ ಘಟಿಕೋತ್ಸವ ಸಮಾರಂಭವು ಅಕ್ಷರಶಃ ಇಂತಹದೊಂದು ಅಪರೂಪದ ಮತ್ತು ಸ್ಫೂರ್ತಿದಾಯಕ ಕ್ಷಣಕ್ಕೆ ಸಾಕ್ಷಿಯಾಯಿತು. ನಿವೃತ್ತಿಯ ನಂತರದ ಜೀವನವನ್ನು ಸುಮ್ಮನೇ ಕಳೆಯದೆ,
Explainer: ಉತ್ತರ ಭಾರತದ ಮಹಿಳೆ ಅಡುಗೆಮನೆಗೆ ಸೀಮಿತ, ದಕ್ಷಿಣ ಭಾರತದ ಮಹಿಳೆ ಮಾಡರ್ನ್: ಈ ವಿಭಜನೆ ಸರಿಯೇ?
ಇತ್ತೀಚೆಗೆ ತಮಿಳುನಾಡಿನ ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಪಕ್ಷದ ಸಂಸದರಾದ ದಯಾನಿಧಿ ಮಾರನ್ ಅವರು ಉತ್ತರ ಭಾರತದ ಮಹಿಳೆಯರನ್ನು ತಮಿಳುನಾಡಿನ ಮಹಿಳೆಯರೊಂದಿಗೆ ಹೋಲಿಕೆ ಮಾಡಿ ನೀಡಿದ ಹೇಳಿಕೆಯು ದೇಶವ್ಯಾಪಿ ಆಕ್ರೋಶಕ್ಕೆ ಕಾರಣವಾಯಿತು. ಉತ್ತರ ಭಾರತದ ಮಹಿಳೆಯರನ್ನು ಮನೆಯಲ್ಲೇ ಇರಿ, ಅಡುಗೆಮನೆಯಲ್ಲೇ ಇರಿ, ಮಕ್ಕಳನ್ನು ಹೆತ್ತು ಬೆಳೆಸುವುದು ನಿಮ್ಮ ಕೆಲಸ ಎಂದು ಹೇಳಲಾಗುತ್ತದೆ ಎಂದು ಅವರು ಆರೋಪಿಸಿದರೆ, ತಮಿಳುನಾಡಿನಲ್ಲಿ
ಹಿಂದೂ-ಮುಸ್ಲಿಮ್ ಎಂದಲ್ಲ, ಮನುಷ್ಯತ್ವ ಇರುವವರೆಲ್ಲ ಓದಲೇ ಬೇಕಾದ ‘ಕರಾವಳಿಯ ರಕ್ತ ಕಣ್ಣೀರು’
ಕರಾವಳಿಯನ್ನು ಕೋಮುವಾದದ ಪ್ರಯೋಗ ಶಾಲೆ ಎಂದು ಯಾಕೆ ಕರೆಯುತ್ತಾರೆ ಎಂಬುದನ್ನು ದಾಖಲಿಸುವ, ಕೇವಲ ಧರ್ಮದ ಕಾರಣಕ್ಕಾಗಿ ಹಲವು ಅಮಾಯಕರನ್ನು ಅಮಾನುಷವಾಗಿ ಹತ್ಯೆಮಾಡಿದ ಘಟನೆಗಳ ಕುರಿತು ಪತ್ರಕರ್ತ ಇರ್ಷಾದ್ ಉಪ್ಪಿನಂಗಡಿ ನೋವು, ಯಾತನೆ, ವಿಷಾದದಲ್ಲಿ ಅದ್ದಿದ ಅಕ್ಷರಗಳಲ್ಲಿ ಬರೆದ ಕರಾವಳಿಯ ರಕ್ತ ಕಣ್ಣೀರು ಓದಿದ್ದೇ ಜೀವ ತಲ್ಲಣಿಸಿ ಹೋಯಿತು! ಕೋಮುವಾದದ ಕರಾಳ ಹಸ್ತಗಳು, ನಿಷ್ಪಾಪ ಜೀವಗಳನ್ನು, ನೂರಾರು ವರ್ಷಗಳ ಸೌಹಾರ್ದ ಸಂಬಂಧಗಳ ಪರಂಪರೆಯನ್ನು, ಮನುಷ್ಯ ಮನುಷ್ಯರ ನಡುವಿನ ಮಾನವೀಯ ತಂತುಗಳನ್ನು ಇಷ್ಟೂ ನಿರ್ದಯವಾಗಿ ಹೊಸಕಿ ಹಾಕಲು ಸಾಧ್ಯವೇ ಎಂಬುದನ್ನು ಯೋಚಿಸಿದರೇ ದಿಗಿಲಾಗುತ್ತದೆ. ಆದರೆ ಈಗಾಗಲೇ ನಡೆದು ಹೋದ ಅಂತಹ ಪಾಶವೀ ಕೃತ್ಯಗಳನ್ನು, ಹತ್ಯೆಯಾದವರ ಕುಟುಂಬದಲ್ಲಿ ಅದು ಸೃಷ್ಟಿಸಿದ ನಿರ್ವಾತವನ್ನು, ಆಜೀವ ಪರ್ಯಂತದ ತಲ್ಲಣಗಳನ್ನು, ನಾಶಗೊಳಿಸಿದ ನೆಮ್ಮದಿಯ ಬದುಕಿನ ನಾನಾ ಮುಖಗಳನ್ನು ಎಳೆ ಎಳೆಯಾಗಿ ದಾಖಲಿಸಿರುವ ಇರ್ಷಾದ್, ಆ ಮೂಲಕ ಇಡೀ ನಾಗರಿಕ ಸಮಾಜ ಅಪರಾಧಿ ಪ್ರಜ್ಞೆಯಿಂದ ತಲೆ ತಗ್ಗಿಸುವಂತೆ ನಮ್ಮೆಲ್ಲರ ಆತ್ಮಸಾಕ್ಷಿಯನ್ನು ಚುಚ್ಚಿದ್ದಾರೆ. ಕೋಮು ವಿಷ ಜ್ವಾಲೆಯ ಕಿಡಿಗಳನ್ನು ಹಚ್ಚುವುದು ಯಾವುದೋ ಧರ್ಮರಕ್ಷಣೆಯ ಅಮಲಿನ ಅಜ್ಞಾತ ಕೈಗಳಾದರೂ, ಆ ಕಿಡಿಗಳು ಕಾಳ್ಗಿಚ್ಚಿನಂತೆ ವ್ಯಾಪಿಸಿ ಹೇಗೆ ಇಡೀ ಸಮಾಜದ ಸೌಹಾರ್ದ ಬದುಕನ್ನೇ ಸುಟ್ಟು ಬೂದಿಯಾಗಿಸುತ್ತದೆ ಅನ್ನುವುದಕ್ಕೆ, ಇರ್ಷಾದ್ ಪುಟ ಪುಟಗಳಲ್ಲೂ ಸಾಕ್ಷ್ಯ ನೀಡುತ್ತಾ ಹೋಗುತ್ತಾರೆ. 1968ರಿಂದಲೂ ಕರಾವಳಿ ನೂರಾರು ಕೋಮು ಸಂಘರ್ಷ, ದರೋಡೆ, ಹತ್ಯೆಗಳನ್ನು ಕಂಡಿದೆ. ಆದರೆ ಇರ್ಷಾದ್ ಇಲ್ಲಿ ಹದಿಮೂರು ಅಮಾಯಕ ವ್ಯಕ್ತಿಗಳ ಹತ್ಯೆಯ ವಿವರಗಳನ್ನು ಮಾತ್ರ ದಾಖಲಿಸುತ್ತಾರೆ. ಆ ಹದಿಮೂರು ಮಂದಿ ಯಾರೆಂದರೆ.. ಇಬ್ಬರು ಹಿಂದೂ ಯುವಕರ ಮೇಲಿನ ಹಲ್ಲೆಗೆ ಪ್ರತೀಕಾರವಾಗಿ, ಅದಕ್ಕೆ ಸಂಬಂಧವೇ ಇಲ್ಲದ ಮುಹಮ್ಮದ್ ನಾಸಿರ್, ಮುಸ್ಲಿಮನೆಂಬ ತಪ್ಪು ಗ್ರಹಿಕೆಯಿಂದ ಹಿಂದೂಗಳಿಂದಲೇ ಕೊಲೆಯಾದ ಹರೀಶ್ ಪೂಜಾರಿ, ಹಿಂದೂ-ಮುಸ್ಲಿಮ್ ಕೋಮು ವೈಷಮ್ಯಕ್ಕೆ ಬಲಿಪಶುವಾದ ರಾಜೇಶ್ ಕೋಟ್ಯಾನ್, ರಾಜೇಶ್ ಹತ್ಯೆಗೆ ಪ್ರತೀಕಾರವಾಗಿ ತಲೆಗೊಂದು ತಲೆ ಎಂಬ ಕುರುಡು ನ್ಯಾಯಕ್ಕೆ ಹತ್ಯೆಯಾದ ಸೈಫಾನ್, ಹಿಂದೂ ಕುಟುಂಬದ ಅಂಗವಿಕಲ ವ್ಯಕ್ತಿಯೊಬ್ಬರಿಗೆ ಊರುಗೋಲಾಗಿದ್ದರೂ, ಮತೀಯ ದ್ವೇಷಕ್ಕೆ ಬಲಿಯಾದ ಅಮಾಯಕ ಅಶ್ರಫ್ ಕಲಾಯಿ, ಅಶ್ರಫ್ ಹತ್ಯೆಯ ಸೇಡಿಗೆ ಬಲಿಯಾದ ಶರತ್ ಮಡಿವಾಳ, ಬಂಟಿಂಕ್ ಕಟ್ಟುವ ಸಣ್ಣ ವಿಚಾರಕ್ಕೆ ಹತ್ಯೆಯಾದ ದೀಪಕ್ ರಾವ್, ದೀಪಕ್ ಹತ್ಯೆಗೆ ಪ್ರತೀಕಾರವಾಗಿ ಹತ್ಯೆಯಾದ ಅಬ್ದುಲ್ ಬಶೀರ್, ಕರುವನ್ನು ಸಾಕಿದ ತಪ್ಪಿಗೆ ಜೀವ ತೆತ್ತ ಮುಹಮ್ಮದ್ ಮಸೂದ್, ಮಸೂದ್ ಹತ್ಯೆಗೆ ಪ್ರತೀಕಾರವಾಗಿ ಹತ್ಯೆಯಾದ ಪ್ರವೀಣ್ ಪೂಜಾರಿ ನೆಟ್ಟಾರು, ಪ್ರವೀಣ್ ಹತ್ಯೆಯ ಸೇಡು ತೀರಿಸಲು ಕೊಲೆಯಾದ ಫಾಝಿಲ್, ಪಾಕಿಸ್ತಾನ ಪರ ಘೋಷಣೆ ಕೂಗಿದನೆಂಬ ಸುಳ್ಳು ಆರೋಪದಲ್ಲಿ ಹಾಡಹಗಲೇ ಹತ್ಯೆಯಾದ ಅಶ್ರಫ್, ತಾನು ರಕ್ತ ನೀಡಿದ ವ್ಯಕ್ತಿಯ ಮಗನಿಂದಲೇ ಹತ್ಯೆಯಾದ ಅಬ್ದುಲ್ ರಹಮಾನ್, ತನ್ನ ಬಾಡಿಗೆ ವಾಹನದಲ್ಲಿ ದನ ಸಾಗಿಸಿದ ನೆಪದಲ್ಲಿ ಹತ್ಯೆಯಾದ ಅಬ್ದುಲ್ ಸಮೀರ್. ಅಂದರೆ, ಹತ್ಯೆಯಾದವರಲ್ಲಿ ಹಿಂದೂಗಳಿದ್ದಾರೆ ಅದಕ್ಕಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಮುಸ್ಲಿಮರಿದ್ದಾರೆ. ಆದರೆ ಈ ಎಲ್ಲ ಬರ್ಬರ ಹತ್ಯೆಗಳ ಹಿಂದೆ ಇರುವ ತಲೆಗೊಂದು ತಲೆ ಅನ್ನುವ ಅಮಾನುಷ ಲೆಕ್ಕಾಚಾರ ಮಾತ್ರ ನಾಗರಿಕ ಸಮಾಜದ ನಿರ್ಲಜ್ಜ ಕ್ರೌರ್ಯದ ಸಂಕೇತ. ಅದಕ್ಕಿಂತಲೂ ಕಳವಳಕಾರಿ ಅಂಶವೆಂದರೆ, ಈ ಎಲ್ಲ ಕೃತ್ಯಗಳ ಬಹುತೇಕ ಆರೋಪಿಗಳೆಲ್ಲ ಶಿಕ್ಷೆಯನ್ನೂ ಅನುಭವಿಸದೆ, ಜಾಮೀನಿನಲ್ಲಿ ಹೊರಬಂದು ರಾಜಾರೋಷವಾಗಿ, ಹತ್ಯೆಯಾದ ಅಮಾಯಕ ವ್ಯಕ್ತಿಗಳ ಸಂತ್ರಸ್ತ ಕುಟುಂಬವನ್ನೇ ಅಣಕಿಸುವುದು!! ಮತೀಯ ದ್ವೇಷಕ್ಕೆ ಬಲಿಯಾದವರ ಕುಟುಂಬಗಳನ್ನು ಸ್ವತಃ ಭೇಟಿ ಮಾಡಿರುವ ಇರ್ಷಾದ್ ವಿವರಿಸುವಂತೆ, ಎಲ್ಲ ಕುಟುಂಬಗಳ ಒಂದು ಸಾಮಾನ್ಯ ವಿಚಾರವೆಂದರೆ, ಹತ್ಯೆಯಾದವರೆಲ್ಲ ತೀರಾ ಬಡತನದ ಕುಟುಂಬದ ಹಿನ್ನೆಲೆಯವರು, ಬಹುತೇಕ ಮಂದಿ ಆಟೋ ಚಾಲಕರು, ಕೂಲಿ ಕೆಲಸಗಾರರು ಹಾಗೂ ಹೊಟ್ಟೆ ಪಾಡಿಗೆ ದಿನವೂ ಕಷ್ಟಪಟ್ಟು ದುಡಿದು ಬದುಕುವವರು. ವಿಪರ್ಯಾಸವೆಂದರೆ, ಮತೀಯ ರಕ್ತದಾಹಿಗಳ ಪಾಲಿಗೆ ಇಂತಹವರೇ ಸುಲಭ ತುತ್ತು! ಮುಖ್ಯವಾಗಿ ಗಮನಿಸಬೇಕಾದ ಅಂಶವೆಂದರೆ, ಇಲ್ಲಿ ಹತ್ಯೆಯಾದವರಲ್ಲಿ ಯಾರೊಬ್ಬರೂ ಕ್ರಿಮಿನಲ್ ಅಪರಾಧದ ಹಿನ್ನೆಲೆಯುಳ್ಳವರಲ್ಲ, ಮತೀಯ ದ್ವೇಷದ ಸಂಘಟನೆಗಳ ನಂಟು ಇರುವವರಲ್ಲ. ಕೋಮುದ್ವೇಷದ ಚಟುವಟಿಕೆಗಳಲ್ಲಿ ಭಾಗಿಗಳಾದವರೂ ಅಲ್ಲ. ತಾವಾಯಿತು ತಮ್ಮ ದೈನಂದಿನ ದುಡಿಮೆಯಾಯಿತು ಎಂದು ನಿರ್ಲಿಪ್ತರಾಗಿದ್ದ, ಧರ್ಮ-ಜಾತಿ ಎಂದು ನೋಡದೆ ಇನ್ನೊಬ್ಬರ ಕಷ್ಟಕ್ಕೆ ಸ್ಪಂದಿಸುತ್ತಿದ್ದ ಸಾಮಾನ್ಯರಲ್ಲಿ ಸಾಮಾನ್ಯರಂತೆ ಇದ್ದವರು. ಯಾರದೋ ಹತ್ಯೆಯ ಸೇಡಿಗಾಗಿ, ಸಂಬಂಧವೇ ಇಲ್ಲದಿದ್ದರೂ ಕೇವಲ ಧರ್ಮದ ಕಾರಣಕ್ಕಾಗಿ ಉರುಳಿದ ಒಂದು ತಲೆಗೆ ಮತ್ತೊಂದು ತಲೆ ಬಲಿಕೊಡಲೇಬೇಕೆಂಬ ಮತಾಂಧ ರಕ್ಕಸರ ಅಟ್ಟಹಾಸ ಕ್ರೌರ್ಯಕ್ಕೆ ತಮ್ಮದಲ್ಲದ ತಪ್ಪಿಗೆ ಬಲಿಯಾದವರು ಇವರು. ಆದರೆ, ಇರ್ಷಾದ್, ಈ ಎಲ್ಲ ಕರಾಳ ಹತ್ಯೆಗಳ ಮತ್ತು ಅದು ಹೇಗೆ ಸಂಬಂಧ ಪಟ್ಟ ಕುಟುಂಬಗಳ ಬದುಕನ್ನೇ ಸರ್ವನಾಶಗೊಳಿಸಿದೆ ಎಂಬುದನ್ನು ವಿವರಿಸುತ್ತಲೇ, ಈ ಯಾವ ಸಂತ್ರಸ್ತರು ಕೂಡ, ಹತ್ಯೆಗೆ ಕಾರಣರಾದವರನ್ನಾಗಲಿ, ಅವರ ಕುಟುಂಬದವರನ್ನಾಗಲಿ ದ್ವೇಷಿಸದೆ, ಅವರೂ ತಮ್ಮ ನೋವಿನ ಪಾಲುದಾರರೆಂಬಂತೆ ಕ್ಷಮಿಸುವ ಔದಾರ್ಯತೆಯ, ಪ್ರೀತಿ ಸಹಬಾಳ್ವೆಯ ಅವರ ಆಶಯಗಳ ಕುರಿತೂ ಕಣ್ಣೀರಾಗಿ ಬರೆಯುತ್ತಾರೆ. ಪುಸ್ತಕದಲ್ಲಿ ಒಂದು ಅಧ್ಯಾಯವನ್ನು ದಕ್ಷಿಣ ಕನ್ನಡದಲ್ಲಿ ಈ ರೀತಿ ಮತೀಯ ದ್ವೇಷಕ್ಕೆ ಬಲಿಯಾದ 40 ಮಂದಿ ಅಮಾಯಕರ ಪಟ್ಟಿಯನ್ನೂ ಸಂಕ್ಷಿಪ್ತ ವಿವರಗಳೊಂದಿಗೆ ನೀಡಿದ್ದಾರೆ. ಹಾಗೆಯೇ 1968ರ ದಕ್ಷಿಣ ಕನ್ನಡದ ಮೊದಲ ಕೋಮು ಗಲಭೆಯ ವಿಸ್ತೃತ ವಿವರಣೆಗೆ ಇನ್ನೊಂದು ಅಧ್ಯಾಯ ಮೀಸಲಿರಿಸಿದ್ದಾರೆ. ಹಾಗೆಂದು, ಈ ಎಲ್ಲ ಭಯಾನಕ ಹತ್ಯೆಗಳ ಕುರಿತು, ಮತೀಯ ದ್ವೇಷದ ಬೆಂಕಿಯಲ್ಲಿ ನಲುಗಿದ ಬದುಕುಗಳ ಕುರಿತು ಇರ್ಷಾದ್ ಬರೆದದ್ದು, ಮತ್ತೆ ಈ ಎಲ್ಲ ಆರದ ಗಾಯಗಳನ್ನು ಕೆದಕುವ ಉದ್ದೇಶದಿಂದ ಅಲ್ಲ. ಅವರೇ ತಮ್ಮ ಲೇಖಕನ ಮಾತಿನಲ್ಲಿ ಬರೆದಂತೆ ಮತೀಯ ದ್ವೇಷದ ಗೋಡೆಗಳನ್ನು ಕೆಡವಿ, ಮತ್ತೆ ಸಾಮರಸ್ಯದ ಸೇತುವೆಗಳನ್ನು ಕಟ್ಟುವ ಅವಶ್ಯಕತೆ ಇಂದು ದಕ್ಷಿಣ ಕನ್ನಡ ಜಿಲ್ಲೆಗಿದೆ. ಅದನ್ನು ಸಾಧಿಸಬಹುದು ಎಂಬುದಕ್ಕೆ ಪ್ರತ್ಯಕ್ಷ ಉದಾಹರಣೆಯಾಗಿ ಇರುವವರು ಮತೀಯ ದ್ವೇಷಕ್ಕೆ ಪ್ರಾಣ ಕಳೆದುಕೊಂಡ ಅಮಾಯಕರ ತಾಯಂದಿರು. ಮಕ್ಕಳನ್ನು ಕಳೆದುಕೊಂಡು ಮಡಿಲು ಬರಿದಾಗಿಸಿಕೊಂಡ ದುಲೈಖಾ, ವಾರಿಜಾ ಕೋಟ್ಯಾನ್ ಮತ್ತು ಸಾರಮ್ಮ ಕರಾವಳಿ ಪಾಲಿಗೆ ಮಾದರಿ ತಾಯಂದಿರು.ಅಗಾಧ ನೋವಿನ ನಡುವೆಯೂ ಅವರು ಆಡುತ್ತಿರುವ ಪ್ರೀತಿ ಮತ್ತು ಸೌಹಾರ್ದದ ಮಾತುಗಳು ಧರ್ಮಾಂಧತೆಯ ಅಮಲಿನಲ್ಲಿರುವವರ ಹೃದಯಗಳನ್ನು ಕಟ್ಟಬೇಕಾಗಿದೆ. ‘ಕೊಲೆಯಾದ ವ್ಯಕ್ತಿ ಹಿಂದೂ ಆಗಲಿ, ಮುಸ್ಲಿಮ್ ಆಗಲಿ ಅವರ ರಕ್ತದ ಬಣ್ಣ ಒಂದೇ ಅಲ್ಲವೇ? ಆ ಮಕ್ಕಳ ತಾಯಂದಿರ ಕಣ್ಣೀರಿನ ಬಣ್ಣದಲ್ಲಿ ವ್ಯತ್ಯಾಸವಿದೆಯೇ?’ ಎಂಬ ಅವರ ಮಾತುಗಳಲ್ಲಿ ಧರ್ಮ, ಜಾತಿ ಮತ್ತು ರಾಜಕೀಯ ಸಿದ್ಧಾಂತಗಳ ಎಲ್ಲೆ ಮೀರಿ ಮಾನವೀಯತೆಯನ್ನು ಎತ್ತಿ ಹಿಡಿಯುವ ಪ್ರಬಲ ಸಂದೇಶವಿದೆ. ಅವರ ಕಣ್ಣೀರಿನ ಪ್ರತೀ ಹನಿಯಲ್ಲೂ ಶಾಂತಿ ಮತ್ತು ಸಹಬಾಳ್ವೆಯ ಆಳವಾದ ಆಶಯ ಅಡಗಿದೆ. ದ್ವೇಷದ ವಿಷ ಬೀಜ ಬಿತ್ತುವವರಿಗೆ, ಅಮಾಯಕ ಜೀವಗಳನ್ನು ಬಲಿ ತೆಗೆದುಕೊಳ್ಳುವವರಿಗೆ ಮತ್ತು ಸಮಾಜವನ್ನು ವಿಭಜಿಸುವವರಿಗೆ ಈ ತಾಯಂದಿರ ನೋವು ಅರ್ಥವಾದರೆ ಬಹುಶಃ ಕರಾವಳಿಯ ಮತೀಯ ಪ್ರತೀಕಾರದ ದಾಹಕ್ಕೆ ಪೂರ್ಣ ವಿರಾಮ ಬೀಳಬಹುದು. ದಿನೇಶ್ ಅಮಿನ್ ಮಟ್ಟು ಅವರು ಮುನ್ನುಡಿಯಲ್ಲಿ ಬರೆದಂತೆ, ಕಣ್ಣುಗಳಿದ್ದೂ ದೃಷ್ಟಿ ಕಳೆದುಕೊಂಡು ತಮ್ಮ ತಮ್ಮ ಧರ್ಮ ರಕ್ಷಣೆಗೆ ಹೊರಟವರು ಈ ಪುಸ್ತಕದಲ್ಲಿ ದಾಖಲಿಸಿರುವ ಕೋಮುವಾದದ ಸಂತ್ರಸ್ತರ ಎದೆಯಾಳದ ಮಾತುಗಳನ್ನು ತಮ್ಮೆದೆಗಳಿಗೆ ಇಳಿಸಿಕೊಂಡರೆ ಇರ್ಷಾದ್ ಉಪ್ಪಿನಂಗಡಿಯವರ ಪ್ರಯತ್ನ ಅಷ್ಟರ ಮಟ್ಟಿಗೆ ಸಾರ್ಥಕವಾಗಬಹುದು.
KUWJ : 20 ವರ್ಷಗಳ ಸುದೀರ್ಘ ವನವಾಸಕ್ಕೆ ಬ್ರೇಕ್ - ಚುನಾವಣೆಗೆ ದಿನ ನಿಗದಿ
Working Journalists Association : ಹತ್ತು ಹಲವು ಕಾರಣಗಳಿಂದ ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ಚುನಾವಣೆಯೇ ನಡೆಯುತ್ತಿರಲಿಲ್ಲ. ಈಗ, ಎದುರಾಗಿರುವ ಎಲ್ಲಾ ಅಡೆತಡೆಗಳು ನಿವಾರಣೆಯಾಗಿದೆ. ಇದೇ ಬರುವ ಭಾನುವಾರದಂದು (ಫೆ. 22) ಚುನಾವಣೆ ನಡೆಯಲಿದೆ. ಎಲ್ಲರೂ ಬಂದು ಮತಚಲಾಯಿಸಿ, ಸುವರ್ಣಾವಕಾಶವನ್ನು ಬಳಸಿಕೊಳ್ಳಬೇಕೆಂದು ಮನವಿ ಮಾಡಲಾಗಿದೆ.
‘ಆನೆಧಾಮ’ ಮಾನವ-ಆನೆ ಸಂಘರ್ಷಕ್ಕೆ ಪರಿಹಾರ
ಹಾಸನ, ಫೆ.17: ಕರ್ನಾಟಕ ರಾಜ್ಯದಲ್ಲಿ ಅರಣ್ಯ ಇಲಾಖೆಯಡಿ ಹಲವು ಆನೆ ಶಿಬಿರಗಳು ಕಾರ್ಯನಿರ್ವಹಿಸುತ್ತಿವೆ. ಕೊಡಗಿನ ದುಬಾರೆ ಆನೆ ಶಿಬಿರ, ಶಿವಮೊಗ್ಗ ಜಿಲ್ಲೆಯ ಸಕ್ರೆಬೈಲು ಆನೆ ಶಿಬಿರ, ಚಾಮರಾಜನಗರ ಜಿಲ್ಲೆಯ ಮುತ್ತಂಗಿ (ಬಂಡೀಪುರ) ಆನೆ ಶಿಬಿರ ಹಾಗೂ ನಾಗರಹೊಳೆ ಅರಣ್ಯದ ಅಂಚಿನ ವೀರನಹೊಸಹಳ್ಳಿ/ಮೈಸೂರು ಆನೆ ಶಿಬಿರಗಳು ಪ್ರಮುಖವಾಗಿವೆ. ಈ ಶಿಬಿರಗಳಲ್ಲಿ ಗಾಯಗೊಂಡ, ವಯಸ್ಸಾದ ಅಥವಾ ಮಾನವ ವಸತಿಗೆ ಮರು ಪ್ರವೇಶಿಸುವ ಆನೆಗಳಿಗೆ ಚಿಕಿತ್ಸೆ, ಆಹಾರ, ಆರೈಕೆ ಒದಗಿಸಲಾಗುತ್ತಿದ್ದು, ತರಬೇತಿ ಮತ್ತು ಆರೋಗ್ಯ ತಪಾಸಣೆ ಕ್ರಮಬದ್ಧವಾಗಿ ನಡೆಯುತ್ತಿದೆ. ಕರ್ನಾಟಕದ ಹೊರತಾಗಿ ದಕ್ಷಿಣ ಭಾರತದ ಇತರ ರಾಜ್ಯಗಳಲ್ಲಿಯೂ ಆನೆ ಶಿಬಿರ-ಪ್ರಮುಖ ಪಾತ್ರ ವಹಿಸುತ್ತಿವೆ. ತಮಿಳುನಾಡಿನ ನೀಲಗಿರಿ ಜಿಲ್ಲೆಯ ತೆಪ್ಪಕಾಡು (ಮದುಮಲೈ) ಆನೆ ಶಿಬಿರ ಮತ್ತು ಕೊಯಮತ್ತೂರಿನ ಅನಮಲೈ-ಟಾಪ್ಸ್ಲಿಪ್ ಆನೆ ಶಿಬಿರ, ಕೇರಳದ ಕೊಟ್ಟೂರು ಆನೆ ಪುನರ್ವಸತಿ ಕೇಂದ್ರ, ಗುರುವಾಯೂರು ದೇವಸ್ವಂ ಆನೆ ಶಿಬಿರ ಹಾಗೂ ಕೋದನಡ್ ಆನೆ ತರಬೇತಿ ಕೇಂದ್ರಗಳು ಆನೆ ಸಂರಕ್ಷಣೆಯಲ್ಲಿ ಪ್ರಮುಖ ಕೇಂದ್ರಗಳಾಗಿ ಗುರುತಿಸಿಕೊಂಡಿವೆ. ಇದೇ ರೀತಿ ಈಶಾನ್ಯ ಭಾರತದ ಅಸ್ಸಾಂ ರಾಜ್ಯದ ಸೋನಾಪುರ್ ಆನೆ ಶಿಬಿರ ಹಾಗೂ ಕಾಜಿರಂಗಾ ರಾಷ್ಟ್ರೀಯ ಉದ್ಯಾನದಲ್ಲಿನ ಆನೆ ಶಿಬಿರಗಳು ಕೂಡ ರಾಷ್ಟ್ರಮಟ್ಟದಲ್ಲಿ ಪ್ರಸಿದ್ಧಿಯಾಗಿವೆ. ಉತ್ತರಾಖಂಡದ ಕೋರ್ಬೆಟ್ ರಾಷ್ಟ್ರೀಯ ಉದ್ಯಾನದಲ್ಲಿಯೂ ಆನೆ ಶಿಬಿರಗಳು ಕಾರ್ಯನಿರ್ವಹಿಸುತ್ತಿವೆ. ಕೇಂದ್ರ ಸರಕಾರವು 1992ರಲ್ಲಿ ಪ್ರಾರಂಭಿಸಿದ ವಿಶೇಷ ಯೋಜನೆಯಡಿ ದೇಶಾದ್ಯಂತ ಆನೆ ಸಂರಕ್ಷಣೆಗೆ ವಿಶೇಷ ಒತ್ತು ನೀಡಲಾಗಿದ್ದು, ಈ ಯೋಜನೆಯಡಿಯಲ್ಲಿ ಸುಮಾರು 33 ಆನೆ ಸಂರಕ್ಷಿತ ಪ್ರದೇಶಗಳು ಗುರುತಿಸಲ್ಪಟ್ಟಿವೆ. ಕರ್ನಾಟಕ-ತಮಿಳುನಾಡು-ಕೇರಳ ವ್ಯಾಪ್ತಿಯ ಮೈಸೂರು-ನೀಲಗಿರಿ ಆನೆ ಸಂರಕ್ಷಿತ ಪ್ರದೇಶ, ಝಾರ್ಖಂಡ್ನ ಸಿಂಗ್ಭೂಮ್, ಒಡಿಶಾದ ಮಯೂರ್ಭಂಜ, ಮಧ್ಯಪ್ರದೇಶ ಮತ್ತು ಛತ್ತೀಸ್ಗಢ ವ್ಯಾಪ್ತಿಯ ಸೋನ್-ರೂಪನಾಥ್, ಅಸ್ಸಾಂನ ದಿಹಿಂಗ್-ಪಾಟ್ಕೈ ಆನೆ ಸಂರಕ್ಷಿತ ಪ್ರದೇಶಗಳು ದೇಶದ ಪ್ರಮುಖ ಆನೆ ವಾಸಸ್ಥಳಗಳಾಗಿವೆ. ಈ ಸಂರಕ್ಷಿತ ಪ್ರದೇಶಗಳು ಆನೆಗಳ ವಾಸಸ್ಥಳ ಕಾಪಾಡುವ ಜೊತೆಗೆ ಅವುಗಳ ಸಹಜ ಚಲನವಲನವನ್ನು ರಕ್ಷಿಸುವ ಉದ್ದೇಶ ಹೊಂದಿವೆ. ಇದಕ್ಕೆ ಜೊತೆಗೆ ದೇಶಾದ್ಯಂತ 150ಕ್ಕಿಂತ ಹೆಚ್ಚು ಆನೆ ದಾರಿಗಳು ಗುರುತಿಸಲ್ಪಟ್ಟಿವೆ. ಆನೆಗಳು ಒಂದು ಅರಣ್ಯ ಪ್ರದೇಶದಿಂದ ಮತ್ತೊಂದು ಅರಣ್ಯ ಪ್ರದೇಶಕ್ಕೆ ಸಂಚರಿಸಲು ಬಳಸುವ ಈ ದಾರಿಗಳು ನಾಶವಾದಾಗ ಅಥವಾ ಅತಿಕ್ರಮಣಗೊಂಡಾಗ ಆನೆಗಳು ಗ್ರಾಮ ಮತ್ತು ಕೃಷಿ ಪ್ರದೇಶಗಳತ್ತ ಪ್ರವೇಶಿಸುವ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಕರ್ನಾಟಕದಲ್ಲಿ ಹಾಸನ-ಚಿಕ್ಕಮಗಳೂರು-ಕೊಡಗು-ಮೈಸೂರು,ಬಂಡೀಪುರ-ನಾಗರಹೊಳೆ-ವಯನಾಡು ಹಾಗೂ ಬಿಸಿಲೆ ಘಾಟ್-ಯಡೂರು-ಕುಕ್ಕೆ ಸುಬ್ರಹ್ಮಣ್ಯ ಅರಣ್ಯ ಸಂಪರ್ಕ ದಾರಿಗಳು ಪ್ರಮುಖವಾಗಿದ್ದು, ಈ ದಾರಿಗಳ ಸಂರಕ್ಷಣೆ ಮತ್ತು ಪುನರ್ ಸ್ಥಾಪನೆ ಮೂಲಕವೇ ಆನೆ-ಮಾನವ ಸಂಘರ್ಷವನ್ನು ತಗ್ಗಿಸಬಹುದು ಎಂದು ಪರಿಸರ ತಜ್ಞರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಪಶ್ಚಿಮ ಘಟ್ಟದ ಹಾಸನ, ಸಕಲೇಶಪುರ, ಆಲೂರು, ಬೇಲೂರು ಭಾಗಗಳಲ್ಲಿ ಆನೆ ದಾಳಿಗಳು ಹೆಚ್ಚುತ್ತಿರುವ ಹಿನ್ನಲೆಯಲ್ಲಿ, ಹಾಸನ ಜಿಲ್ಲೆಯಲ್ಲಿ ಆನೆ ದಾಮ ಅಥವಾ ಆನೆ ಪುನರ್ವಸತಿ ಕೇಂದ್ರ ಸ್ಥಾಪನೆ ಕುರಿತು ಸಾರ್ವಜನಿಕ ವಲಯದಲ್ಲಿ ಚರ್ಚೆ ಜೋರಾಗಿದೆ. ಸರಕಾರ ಈ ನಿಟ್ಟಿನಲ್ಲಿ ಆನೆಧಾಮಕ್ಕೆ ಮುಂದಾಗಬೇಕಾಗಿದೆ. ಕಾಡಾನೆ ಮತ್ತು ಮಾನವ ಸಂಘರ್ಷ ಶಾಶ್ವತ ಪರಿಹಾರಕ್ಕೆ ಆನೆ ಧಾಮ ಸೂಕ್ತ. ನಾನು ಶ್ರೀಲಂಕಾ ಪ್ರವಾಸ ಮಾಡಿ ಈ ಬಗ್ಗೆ ಅಧ್ಯಯನ ಮಾಡಿದ್ದೇನೆ. ಸಕಲೇಶಪುರದಲ್ಲಿ ಈ ಯೋಜನೆಗೆ ಸದ್ಯಕ್ಕೆ 100 ಎಕರೆ ಭೂಮಿ ಇದ್ದರೆ ಸಾಕು. ಈ ಯೋಜನೆಯನ್ನು ಪ್ರಾರಂಭಿಸಬಹುದು. ಮನುಷ್ಯನ ಜೀವಕ್ಕಿಂತ ಮಿಗಿಲಾದದ್ದು ಯಾವುದೂ ಇಲ್ಲ, ಪ್ರಾಣ ಉಳಿಸಲು ಸರಕಾರ ರಾಜಕೀಯ ಇಚ್ಛಾಶಕ್ತಿಯನ್ನು ಪ್ರದರ್ಶಿಸಬೇಕಾಗಿದೆ. ಆನೆಧಾಮ ಸ್ಥಾಪನೆಗೆ ನೀಡಿರುವ ನಮ್ಮ ಮನವಿಯನ್ನು ಗಂಭೀರವಾಗಿ ಪರಿಗಣಿಸಿ ಆನೆ ಧಾಮ ಯೋಜನೆ ಅನುಷ್ಠಾನಗೊಳಿಸುತ್ತಾರೆ ಎಂಬ ವಿಶ್ವಾಸ ಸಿಎಂ ಸಿದ್ದರಾಮಯ್ಯರ ಮೇಲಿದೆ. <ಎಚ್.ಎಂ.ವಿಶ್ವನಾಥ್, ಮಾಜಿ ಶಾಸಕ
ಕಲಬುರಗಿ | ನಿಗದಿತ ಸಮಯಕ್ಕೆ ಆರಂಭವಾಗದ ಮನಪಾ ಸಾಮಾನ್ಯ ಸಭೆ: ವಿಪಕ್ಷ ಸದಸ್ಯರಿಂದ ಪ್ರತಿಭಟನೆ
ಕಲಬುರಗಿ: ಕಲಬುರಗಿ ಮಹಾನಗರ ಪಾಲಿಕೆಯ ಸಾಮಾನ್ಯ ಸಭೆಯು ನಿಗದಿತ ಸಮಯಕ್ಕೆ ಆರಂಭವಾಗದ ಹಿನ್ನೆಲೆಯಲ್ಲಿ ಪಾಲಿಕೆಯ ವಿರೋಧ ಪಕ್ಷದ ಸದಸ್ಯರು ಸಭೆಯನ್ನು ಬಹಿಷ್ಕರಿಸಿ, ಪ್ರತಿಭಟನೆ ನಡೆಸಿರುವ ಘಟನೆ ಬುಧವಾರ ನಡೆದಿದೆ. ನಗರದ ಟೌನ್ ಹಾಲ್ ನಲ್ಲಿ ಬುಧವಾರ ಪೂರ್ವಾಹ್ನ 11 ಗಂಟೆಗೆ ನಿಗದಿಯಾಗಿದ್ದ ಸಾಮಾನ್ಯ ಸಭೆಗೆ ವಿರೋಧ ಪಕ್ಷವಾಗಿರುವ ಬಿಜೆಪಿ ಸದಸ್ಯರು ಹಾಜರಾಗಿದ್ದರು. ಸಮಯ 12 ಗಂಟೆ ಮೀರಿದರೂ ಪಾಲಿಕೆಯ ಮೇಯರ್ ವರ್ಷಾ ರಾಜೀವ್ ಜಾನೆ ಸೇರಿದಂತೆ ಆಡಳಿತ ಪಕ್ಷದ ಸದಸ್ಯರು ಸಭೆಗೆ ಗೈರಾಗಿದ್ದರು. ಇದರಿಂದ ಅಸಮಾಧಾನಗೊಂಡ ವಿಪಕ್ಷದ ಬಿಜೆಪಿ ಸದಸ್ಯರು, ನಿಗದಿತ ಸಮಯಕ್ಕೆ ಒಂದು ಗಂಟೆ ವಿಳಂಬವಾದರೂ ಸಭೆ ಆರಂಭಿಸಿಲ್ಲ, ಕೋರಂ ಸಹ ತುಂಬಿಲ್ಲ. ಚರ್ಚೆ ನಡೆಸುವುದರ ಬಗ್ಗೆ ಆಡಳಿತ ಪಕ್ಷದ ಸದಸ್ಯರಿಗೆ ಆಸಕ್ತಿಯೇ ಇಲ್ಲ ಎಂದು ಸಭೆಯಿಂದ ಹೊರ ನಡೆದು ಸಭಾಂಗಣದ ಬಾಗಿಲು ಎದುರು ಧರಣಿ ನಡೆಸಿದರು. ಈ ವೇಳೆ ಮಹಾನಗರ ಪಾಲಿಕೆಯ ವಿರೋಧ ಪಕ್ಷದ ನಾಯಕಿ ಶೋಭಾ ದೇಸಾಯಿ, ವಿಶಾಲ ದರ್ಗಿ, ಮಲ್ಲು ಉದನೂರು, ಸಚಿನ್ ಕಡಗಂಚಿ, ದಿಗಂಬರ ಮಾಗಣಗೆರೆ, ಪ್ರಭು ಹಾದಿಮನಿ, ಬಸಮ್ಮ ಮುನ್ನೊಳ್ಳಿ, ಶಂಭುಲಿಂಗ ಬಳಬಟ್ಟಿ, ರೇಣುಕಾ ರಾಮು ಗುಮ್ಮಟ, ಸೇರಿದಂತೆ ಇನ್ನಿತರ ಪಾಲಿಕೆ ಸದಸ್ಯರು ಇದ್ದರು.
ಹೊಸದಿಲ್ಲಿ: ಇಂಡಿಯಾ ಎಐ ಇಂಪ್ಯಾಕ್ಟ್ ಶೃಂಗಸಭೆಯಲ್ಲಿ ಚೀನಾ ನಿರ್ಮಿತ Robot Dog ಅನ್ನು ತಾವೇ ಅಭಿವೃದ್ಧಿಪಡಿಸಿದ್ದಾಗಿ ಗ್ಯಾಲ್ಗೋಟಿಯಾ ವಿಶ್ವವಿದ್ಯಾಲಯ ಪ್ರದರ್ಶಿಸಿದ ವೀಡಿಯೊ ವೈರಲ್ ಆಗಿದೆ. ಇದರ ಬೆನ್ನಲ್ಲೆ ಇಂಡಿಯಾ ಎಐ ಇಂಪ್ಯಾಕ್ಟ್ ಶೃಂಗಸಭೆಯ ಎಕ್ಸ್ಪೋದಿಂದ ನಿರ್ಗಮಿಸುವಂತೆ ಗ್ಯಾಲ್ಗೋಟಿಯಾ ವಿಶ್ವವಿದ್ಯಾಲಯಕ್ಕೆ ಸೂಚಿಸಲಾಗಿದೆ ಎಂದು ವರದಿಯಾಗಿದೆ. ವಿವಾದಿತ ರೋಬೋಟ್ ಯುನಿಟ್ರೀ ಗೋ2 (Unitree Go2) ಆಗಿದ್ದು, ಇದನ್ನು ಚೀನಾದ ರೋಬೋಟಿಕ್ಸ್ ಕಂಪೆನಿ ತಯಾರಿಸಿದೆ. ಇದನ್ನು ಭಾರತದಲ್ಲಿ ಆನ್ಲೈನ್ ಮೂಲಕ ಸುಮಾರು 2 ಲಕ್ಷದಿಂದ 3 ಲಕ್ಷ ರೂ.ಗಳಿಗೆ ಮಾರಾಟ ಮಾಡಲಾಗುತ್ತಿದೆ. ಶೃಂಗಸಭೆಯಲ್ಲಿ ಇದನ್ನು “Orion” ಎಂದು ಹೆಸರಿಸಲಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ವೀಡಿಯೊದಲ್ಲಿ ವಿಶ್ವವಿದ್ಯಾಲಯದ ಪ್ರತಿನಿಧಿ ಎಂದು ಹೇಳಿಕೊಂಡ ಮಹಿಳೆ ಮಾಧ್ಯಮಗಳೊಂದಿಗೆ ಮಾತನಾಡುತ್ತಾ ರೋಬೋಟ್ನ ವೈಶಿಷ್ಟ್ಯಗಳನ್ನು ವಿವರಿಸುತ್ತಿರುವುದು ಮತ್ತು ಗ್ಯಾಲ್ಗೋಟಿಯಾ ವಿಶ್ವವಿದ್ಯಾಲಯ ಇದನ್ನು ಅಭಿವೃದ್ಧಿ ಪಡಿಸಿದೆ ಎಂದು ಹೇಳುತ್ತಿರುವುದು ಕಂಡು ಬಂದಿದೆ. ಸಂದರ್ಶನವೊಂದರಲ್ಲಿ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕರೊಬ್ಬರು ಈ ರೋಬೋಟ್ ತಾವೇ ನಿರ್ಮಿಸಿದ್ದೇವೆ ಎಂದು ಹೇಳಿಕೆಯನ್ನು ನೀಡಿದ್ದರು. ಸಾಮಾಜಿಕ ಜಾಲತಾಣಗಳ ಬಳಕೆದಾರರು ಇದು ಚೀನಾ ನಿರ್ಮಿತ ಯುನಿಟ್ರೀ ಗೋ2 ಎಂದು ಗುರುತಿಸಿ ಗ್ಯಾಲ್ಗೋಟಿಯಾ ವಿಶ್ವವಿದ್ಯಾಲಯವನ್ನು ಟೀಕಿಸಿದರು. ಇದರ ಬೆನ್ನಲ್ಲೆ ಪ್ರತಿಕ್ರಿಸಿದ ಗ್ಯಾಲ್ಗೋಟಿಯಾ ವಿಶ್ವವಿದ್ಯಾಲಯ, ಈ ಸಾಧನವನ್ನು ನಾವೇ ನಿರ್ಮಿಸಿದ್ದೇವೆ ಎಂದು ಎಂದಿಗೂ ಹೇಳಿಕೊಂಡಿಲ್ಲ. Robot Dog ಅನ್ನು ಚೀನಾದ ರೋಬೋಟಿಕ್ಸ್ ಸಂಸ್ಥೆಯಾದ ಯುನಿಟ್ರೀಯಿಂದ ಖರೀದಿಸಲಾಗಿದೆ ಮತ್ತು ವಿದ್ಯಾರ್ಥಿಗಳಿಗೆ ಕಲಿಕಾ ಸಾಧನವಾಗಿ ಬಳಸಲಾಗುತ್ತಿದೆ ಎಂದು ಸ್ಪಷ್ಟನೆಯನ್ನು ನೀಡಿದೆ. Galgotias University under fire for displaying Chinese Robo Dog [ #RoboDog ] as their own, under the name #Orion , at the India AI Impact Summit [ #IndiaAISummit2026 ] in #Delhi , now clarifying it never claimed to have developed the technology ( #Robot ). The #GalgotiasUniversity … pic.twitter.com/vhhHqdyR8d — Surya Reddy (@jsuryareddy) February 18, 2026 #WATCH | Delhi | Following row over display of a Chinese-made robodog at AI Impact Summit, Galgotias University Professor Dr Aishwarya Shrivastava says, We never claimed that we manufactured it (robodog), it was only a part of our AI investment. It got misinterpreted in a big… pic.twitter.com/xnVUPlQIi0 — ANI (@ANI) February 18, 2026
ಮಹಿಳೆಯ ಲಾಡಿ ಬಿಚ್ಚುವುದು ಅತ್ಯಾಚಾರ ಯತ್ನ ಅಲ್ಲ ಎಂಬ ಅಲಹಾಬಾದ್ ಹೈಕೋರ್ಟ್ ತೀರ್ಪು ರದ್ದುಗೊಳಿಸಿದ ಸುಪ್ರೀಂಕೋರ್ಟ್
ಅತ್ಯಾಚಾರ ಯತ್ನದ ಕಾನೂನಾತ್ಮಕ ವಿಶ್ಲೇಷಣೆ ಕುರಿತು ಕಳೆದ ವರ್ಷ ಅಲಹಾಬಾದ್ ಹೈಕೋರ್ಟ್ ನೀಡಿದ್ದ ವಿವಾದಾತ್ಮಕ ತೀರ್ಪನ್ನು ರದ್ದುಗೊಳಿಸಿರುವ ಸುಪ್ರೀಂಕೋರ್ಟ್, ಮಹಿಳೆಯ ಲಾಡಿ ಬಿಚ್ಚುವುದನ್ನು ಅತ್ಯಾಚಾರ ಪ್ರಯತ್ನ ಎಂದು ತೀರ್ಪು ನೀಡಿದೆ. ಲೈಂಗಿಕ ಕಿರುಕುಳದಂತಹ ಸೂಕ್ಷ್ಮ ಪ್ರಕರಣಗಳ ವಿಚಾರಣೆ ವೇಳೆ, ನ್ಯಾಯಾಧೀಶರು ಹೆಚ್ಚಿನ ಸಂವೇದನೆ ಪ್ರದರ್ಶಿಸಬೇಕು ಎಂದೂ ಸುಪ್ರೀಂಕೋರ್ಟ್ ಸಲಹೆ ನೀಡಿದೆ. ಇದೇ ವೇಳೆ
ಸ್ಮಶಾನವಿಲ್ಲದೆ ತಮಿಳುನಾಡಿನ ಅರಣ್ಯದಲ್ಲಿ ಶವಸಂಸ್ಕಾರ
ಚಾಮರಾಜನಗರ : ಜಿಲ್ಲೆಯಲ್ಲಿರುವ ಕರ್ನಾಟಕ-ತಮಿಳುನಾಡಿನ ಗಡಿಯಲ್ಲಿರುವ ಗ್ರಾಮಗಳಲ್ಲಿ ಸ್ಮಶಾನವಿಲ್ಲದೆ ತಮಿಳುನಾಡಿನ ಅರಣ್ಯದ ಬಳಿಗೆ ಶವ ತೆಗೆದುಕೊಂಡು ಹೋಗಿ ಅಂತ್ಯಕ್ರಿಯೆ ಮಾಡಲಾಗುತ್ತಿದೆ. ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಜಲ್ಲಿಪಾಳ್ಯ, ಪೆದ್ದನಪಾಳ್ಯ, ಕೂಡ್ಲೂರು ಗ್ರಾಮಗಳಲ್ಲಿ ಶವ ಸಂಸ್ಕಾರ ಮಾಡಲು ಜನರಿಗೆ ಸ್ಮಶಾನವಿಲ್ಲ. ಮನೆಯಲ್ಲಿ ಯಾರಾದರೂ ಮೃತಪಟ್ಟರೆ ಶವವನ್ನು ಕರ್ನಾಟಕ-ತಮಿಳುನಾಡು ಗಡಿಯಲ್ಲಿರುವ ಪಾಲಾರ್ ನದಿ ದಡಕ್ಕೆ ಕೊಂಡೊಯ್ಯಬೇಕಾಗುತ್ತಿದೆ. ಜಲ್ಲಿಪಾಳ್ಯ ಗ್ರಾಮದಲ್ಲಿ ಹಲವು ಸಮುದಾಯಗಳು ವಾಸ ಮಾಡುತ್ತಿವೆ. ಇಲ್ಲಿ ಯಾರಿಗೂ ರುದ್ರಭೂಮಿ ಇಲ್ಲ. ಚರ್ಚ್ನಿಂದ ಸಿಕ್ಕಿರುವ ಭೂಮಿಯಲ್ಲಿ ಕ್ರೈಸ್ತರು ಶವ ಸಂಸ್ಕಾರ ಮಾಡುತ್ತಿರುವುದರಿಂದ ಈ ಸಮುದಾಯ ಪರದಾಡಬೇಕಿಲ್ಲ. ಉಳಿದವರಿಗೆ ಶವ ಸಂಸ್ಕಾರ ಮಾಡಲು ನಿಗದಿಯಾಗಿರುವ ಭೂಮಿ ಇಲ್ಲದೆ ತೊಂದರೆಯಾಗುತ್ತಿದೆ. ಇದೇ ರೀತಿ ಪಕ್ಕದ ಊರುಗಳಾದ ಕೂಡ್ಲೂರು, ಪೆದ್ದನಪಾಳ್ಯದಲ್ಲೂ ಸ್ಮಶಾನವಿಲ್ಲದ ಕಾರಣ ಅಂತ್ಯಕ್ರಿಯೆ ಮಾಡಲು ತಮಿಳುನಾಡಿನ ಅರಣ್ಯವನ್ನೇ ಆಶ್ರಯಿಸಬೇಕಾಗುತ್ತಿದೆ. ನೀರು ಕಡಿಮೆಯಾಗುವವರೆಗೂ ಕಾಯಬೇಕು: ರುದ್ರಭೂಮಿ ಇಲ್ಲದ ಕಾರಣ ನದಿ ದಡದಲ್ಲಿ ಶವ ಸಂಸ್ಕಾರ ಮಾಡುವುದರಿಂದ ನೀರು ಜಾಸ್ತಿ ಇದ್ದಾಗ ಶವವನ್ನು ಹೆಗಲ ಮೇಲಿಂದ ಕೆಳಗೆ ಇಟ್ಟು ಕಾದು ಬಳಿಕ ನದಿ ದಾಟಿ ತಮಿಳುನಾಡಿನ ಕಡೆ ಅಂತ್ಯಕ್ರಿಯೆ ಮಾಡಲಾಗುತ್ತಿದೆ. ಹೂಗ್ಯಂ ಗ್ರಾಮದಲ್ಲಿರುವ ಸಾರ್ವಜನಿಕ ಸ್ಮಶಾನಕ್ಕೆ ಸಾಗುವ ಮಾರ್ಗದ ಮಧ್ಯೆ ದೊಡ್ಡ ಹಳ್ಳವಿದೆ. ಈ ಹಳ್ಳವನ್ನು ಹಾಲೇರು ಹಳ್ಳ ಎಂದೇ ಕರೆಯುತ್ತಾರೆ. ತಮಿಳುನಾಡಿನಿಂದ ಹರಿದುಬರುವ ನೀರು ಹೂಗ್ಯಂ ಮಾರ್ಗವಾಗಿ ಮೆಟ್ಟೂರು ಡ್ಯಾಂಗೆ ಸೇರುತ್ತದೆ. ಮಳೆಗಾಲದಲ್ಲಿ ಹಳ್ಳ ತುಂಬಿ ಭೋರ್ಗರೆಯುತ್ತದೆ. ಇಂತಹ ಸಂದರ್ಭದಲ್ಲಿ ಗ್ರಾಮದಲ್ಲಿ ಮೃತಪಟ್ಟವರ ಶವಸಂಸ್ಕಾರ ಮಾಡಬೇಕಾದರೆ ಜೀವಾಪಾಯದಲ್ಲಿ ಶವವನ್ನು ಹೊತ್ತುಕೊಂಡು ಹೋಗಬೇಕಾಗಿದೆ. ಸೇತುವೆ ನಿರ್ಮಾಣ ಮಾಡಿಕೊಡಲು ಒತ್ತಾಯ:ಹೂಗ್ಯಂ ಗ್ರಾಮದ ಸ್ಮಶಾನದ ದಾರಿಯಲ್ಲಿ ಸಿಗುವ ಹಳ್ಳದಲ್ಲಿ ಸೇತುವೆ ನಿರ್ಮಾಣ ಮಾಡಿಕೊಡಬೇಕೆಂದು ಗ್ರಾಮಸ್ಥ ಸಂಪತ್ ಒತ್ತಾಯಿಸಿದ್ದಾರೆ. ಹಳ್ಳದಲ್ಲಿ ನೀರು ಹರಿಯುವಾಗ ಶವವನ್ನು ಹೊತ್ತುಕೊಂಡು ಹೋಗಲು ಆಗುವುದಿಲ್ಲ. ಒಂದು ವೇಳೆ ಬೇರೆ ಯಾರಾದರೂ ನೀರಿನಲ್ಲಿ ಕೊಚ್ಚಿ ಹೋದರೆ ಮತ್ತೊಬ್ಬರ ಸಾವು ಸಂಭವಿಸುತ್ತದೆ. ಈ ಹಿನ್ನೆಲೆಯಲ್ಲಿ ಸೇತುವೆ ನಿರ್ಮಾಣ ಮಾಡಿಕೊಡಬೇಕು. ಸ್ಮಶಾನದ ರಸ್ತೆಯಲ್ಲಿ ಬೀದಿದೀಪ ಅವಳಡಿಸಿಕೊಡಬೇಕೆಂದು ಆಗ್ರಹಿಸಿದ್ದಾರೆ. ಜಲ್ಲಿಪಾಳ್ಯ ಗ್ರಾಮದಲ್ಲಿ ಸ್ಮಶಾನವಿಲ್ಲದ ಕಾರಣ ತಮಿಳುನಾಡು ನದಿ ದಡದಲ್ಲಿ ಶವ ಸಂಸ್ಕಾರ ಮಾಡುತ್ತಿದ್ದೇವೆ. ಊರಿನಲ್ಲಿ ವಿವಿಧ ಸಮುದಾಯಗಳು ವಾಸ ಮಾಡುತ್ತಿದ್ದರೂ ರುದ್ರಭೂಮಿ ಇಲ್ಲದಿರುವ ಕಾರಣ ಶವ ಸಂಸ್ಕಾರಕ್ಕೆ ತುಂಬಾ ತೊಂದರೆಯಾಗುತ್ತಿದೆ. ಅಲ್ಲಿನ ಅರಣ್ಯದ ಅಂಚಿನಲ್ಲಿ ಅಂತ್ಯಕ್ರಿಯೆ ಮಾಡಬೇಡಿ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಹೇಳುತ್ತಿದ್ದಾರೆ. ನಮ್ಮ ಗ್ರಾಮಕ್ಕೆ ಬೇಗ ಸ್ಮಶಾನ ಗುರುತಿಸಿಕೊಡಬೇಕೆಂದು ಒತ್ತಾಯಿಸುತ್ತೇನೆ. -ಕಾರ್ತಿಕ್, ಜಲ್ಲಿಪಾಳ್ಯ ಗ್ರಾಮಸ್ಥರು ತಮಿಳುನಾಡಿನ ಕಡೆ ಹೋಗಿ ಶವ ಸಂಸ್ಕಾರ ಮಾಡುವುದು ನಿಲ್ಲಿಸಲು ಈಗಾಗಲೇ ಜಲ್ಲಿಪಾಳ್ಯ, ನಲ್ಲೂರು ಇನ್ನಿತರ ಗ್ರಾಮಗಳಿಗೆ ಸ್ಮಶಾನಕ್ಕೆ ಜಾಗ ಕೊಟ್ಟಿದ್ದೇವೆ. ರುದ್ರಭೂಮಿ ಮಂಜೂರು ಆಗಿದೆ. ಇದನ್ನು ಹದ್ದುಬಸ್ತು ಮಾಡಿ ಗ್ರಾಮ ಪಂಚಾಯತ್ಗೆ ಹಸ್ತಾಂತರ ಮಾಡುತ್ತೇವೆ. -ಚೈತ್ರಾ, ಹನೂರು ತಹಶೀಲ್ದಾರ್
ದಾವಣಗೆರೆ ಬೈಎಲೆಕ್ಷನ್ : ಶಾಮನೂರು ಫ್ಯಾಮಿಲಿ ಪಾರುಪತ್ಯಕ್ಕೆ ಬ್ರೇಕ್? ಕಾಂಗ್ರೆಸ್ ಟಿಕೆಟ್ ಫೈಟ್ ಕೊತಕೊತ
Davanagere South By Election : ಶಾಮನೂರು ಶಿವಶಂಕರಪ್ಪನವರ ನಿಧನದ ನಂತರ, ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಟಿಕೆಟ್ ಫೈಟ್ ಕಾಂಗ್ರೆಸ್ಸಿನಲ್ಲಿ ಜೋರಾಗಿ ನಡೆಯುತ್ತಿದೆ. ಮತ್ತೆ ಅವರ ಕುಟುಂಬಕ್ಕೆ ಟಿಕೆಟ್ ನೀಡಬಾರದು ಎನ್ನುವ ಕೂಗು ಕಾಂಗ್ರೆಸ್ಸಿನಲ್ಲೇ ಜೋರಾಗುತ್ತಿದೆ. ಮುಸ್ಲಿಮರಿಗೆ ಈ ಬಾರಿ ಟಿಕೆಟ್ ನೀಡಬೇಕೆಂದು ಜಮೀರ್ ಅಹ್ಮದ್ ಒತ್ತಾಯಿಸುತ್ತಿದ್ದಾರೆ.
ರಣಜಿ ಟ್ರೋಫಿ | ಬಂಗಾಳವನ್ನು ಮಣಿಸಿ ಮೊದಲ ಬಾರಿ ಫೈನಲ್ ಗೇರಿದ ಜಮ್ಮು–ಕಾಶ್ಮೀರ
ಕೊಲ್ಕತ್ತಾ: ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಜಮ್ಮು–ಕಾಶ್ಮೀರ ತಂಡ ಇತಿಹಾಸ ನಿರ್ಮಿಸಿದೆ. ಬಲಿಷ್ಠ ಬಂಗಾಳ ತಂಡವನ್ನು ಸೆಮಿಫೈನಲ್ ನಲ್ಲಿ ಸೋಲಿಸಿ ಮೊದಲ ಬಾರಿಗೆ ಫೈನಲ್ ಗೆ ಅರ್ಹತೆ ಪಡೆಯುವ ಮೂಲಕ ಜಮ್ಮು ಕಾಶ್ಮೀರ ತಂಡ ಗಮನ ಸೆಳೆದಿದೆ. ಬಂಗಾಳ ಕ್ರಿಕೆಟ್ ಅಕಾಡೆಮಿ ಸ್ಟೇಡಿಯಂನಲ್ಲೇ ಈ ಸಾಧನೆ ಮಾಡಿರುವುದು ವಿಶೇಷ. ಮೊದಲ ಇನ್ನಿಂಗ್ಸ್ ನಲ್ಲಿ ಬಂಗಾಳವು 328 ರನ್ ಕಲೆಹಾಕಿತು. ಸುದೀಪ್ ಕುಮಾರ್ ಘರಾಮಿ 146 ರನ್ಗಳೊಂದಿಗೆ ತಂಡಕ್ಕೆ ಉತ್ತಮ ಇನ್ನಿಂಗ್ಸ್ ಕಟ್ಟಿದರು. ಇದಕ್ಕೆ ಉತ್ತರವಾಗಿ ಜಮ್ಮು–ಕಾಶ್ಮೀರ 302 ರನ್ ಗಳಿಗೆ ಆಲೌಟ್ ಆಯಿತು. ಬಂಗಾಳದ ವೇಗಿ ಮುಹಮ್ಮದ್ ಶಮಿ 8ಕ್ಕೆ 90 ರನ್ ನೀಡಿ ಗಮನಾರ್ಹ ಬೌಲಿಂಗ್ ಪ್ರದರ್ಶನ ನೀಡಿದರು. ಎರಡನೇ ಇನ್ನಿಂಗ್ಸ್ ನಲ್ಲಿ ಪಂದ್ಯ ತಿರುವು ಪಡೆದಿತು. ಜಮ್ಮು–ಕಾಶ್ಮೀರದ ವೇಗಿಗಳ ದಾಳಿಗೆ ಬಂಗಾಳ ಕೇವಲ 99 ರನ್ ಗಳಿಗೆ ಕುಸಿಯಿತು. ಔಕಿಬ್ ನಬಿ 4ಕ್ಕೆ 36 ಹಾಗೂ ಸುನಿಲ್ ಕುಮಾರ್ 4ಕ್ಕೆ 27 ಬೌಲಿಂಗ್ ಪ್ರದರ್ಶನ ನೀಡಿದರು. ಇದರಿಂದ ಜಮ್ಮು ಕಾಶ್ಮೀರಕ್ಕೆ ಗೆಲುವಿಗೆ 126 ರನ್ ಗುರಿ ಲಭಿಸಿತು. ಗುರಿ ಬೆನ್ನಟ್ಟಿದ ಜಮ್ಮು–ಕಾಶ್ಮೀರ ಆರಂಭದಲ್ಲೇ ಎರಡು ವಿಕೆಟ್ ಕಳೆದುಕೊಂಡರೂ ಮಧ್ಯಮ ಕ್ರಮಾಂಕವು ರಕ್ಷಣಾತ್ಮಕ ಆಟವಾಡಿತು. ವಂಶಜ್ ಶರ್ಮಾ ಅಜೇಯ 43 ರನ್ ಗಳಿಸಿದರು. ಶುಭಮ್ ಪುಂಡಿರ್ 27 ರನ್ ನೆರವಿನಿಂದ ಜಮ್ಮುಕಾಶ್ಮೀರ ಇನ್ನೂ ಆರು ವಿಕೆಟ್ಗಳು ಬಾಕಿ ಇರುವಾಗ ಗುರಿ ತಲುಪಿ ಮೊದಲ ಬಾರಿಗೆ ಫೈನಲ್ ತಲುಪಿತು. J&K create history as they defeat Bengal by 7️⃣ wickets to book their ticket to the #RanjiTrophy Final for the very first time Scorecard ▶️ https://t.co/QXyCuRHJ6e @IDFCFIRSTBank pic.twitter.com/VBKPD9I9mX — BCCI Domestic (@BCCIdomestic) February 18, 2026
ಕಮಲ ದಳದಲ್ಲಿ 2028 ಕ್ಕೆ ಸಿಎಂ ಯಾರೆಂಬ ಚರ್ಚೆಯಿಂದ ಮೈತ್ರಿಗೆ ಎದುರಾಗಿದೆ ಆಪತ್ತು
ಚುನಾವಣೆಗೆ ಎರಡು ವರ್ಷಕ್ಕೂ ಅಧಿಕ ಸಮಯ ಬಾಕಿ ಇದೆ. ಹೀಗಿರುವಾಗ ಬಿಜೆಪಿ ಮತ್ತು ಜೆಡಿಎಸ್ ನಲ್ಲಿ ಸಿಎಂ ಯಾರು ಎಂಬ ಚರ್ಚೆ ನಡೆಯುತ್ತಿದೆ. ಸದ್ಯ ಕೇಂದ್ರ ಸಚಿವರಾಗಿರುವ ಎಚ್ ಡಿ ಕುಮಾರಸ್ವಾಮಿ ಅವರನ್ನು ಮುಂದಿನ ಸಿಎಂ ಎಂದು ಬಿಂಬಿಸಲಾಗುತ್ತಿದೆ. ಇದು ಬಿಜೆಪಿ ನಾಯಕರ ಕಣ್ಣು ಕೆಂಪಾಗಿಸಿದೆ.
ಇರಾನ್ ಹಾಗೂ ಅಮೆರಿಕಾ ನಡುವಿನ ಬಿಕ್ಕಟ್ಟನ್ನು ಶಮನಗೊಳಿಸಲು ಜಿನಿವಾದಲ್ಲಿ 2ನೇ ಸುತ್ತಿನ ಮಾತುಕತೆಗಳು ನಡೆದಿದ್ದು, ಯಾವುದೇ ತಾರ್ಕಿತ ಅಂತ್ಯವನ್ನು ಕಾಣದೇ ಅಂತ್ಯವಾಗಿದೆ. ಈ ಕುರಿತು ಅಮೆರಿಕಾದ ಉಪಾಧ್ಯಕ್ಷ ಜೆ.ಡಿ ವ್ಯಾನ್ಸ್ ಇರಾನ್ ಕೆಲ ಷರತ್ತುಗಳನ್ನು ಒಪ್ಪಿಕೊಂಡಿಲ್ಲ ಎಂದರೆ, ಇರಾನ್ ಸಂಬಂಧ ಸರಿಹೋಗಲು ಸಮಯ ಬೇಕಾಗುತ್ತದೆ ಎಂದಿದ್ದಾರೆ. ಹೀಗೆ ಒಂದೆಡೆ ಶಾಂತಿ ಮಾತುಕತೆಗಳು ನಡೆಯುತ್ತಿರುವ ನಡುವೆಯೇ ಇರಾನ್ ನತ್ತ ಯುಎಸ್ 50ಕ್ಕೂ ಅಧಿಕ ಫೈಟರ್ ಜೆಟ್ ಗಳನ್ನು ನಿಯೋಜಿಸಿದೆ. ಈ ಬೆನ್ನಲ್ಲೆ, ಇರಾನ್ ಸುಪ್ರೀಂ ಲೀಡರ್ ಖಮೇನಿ ಮಿಲಿಟರಿ ದಾಳಿಯ ಎಚ್ಚರಿಕೆ ನೀಡಿದ್ದು ಮಧ್ಯಪ್ರಾಚ್ಯದಲ್ಲಿ ಯುದ್ದ ವಾತವರಣ ಹೆಚ್ಚುವಂತೆ ಮಾಡುತ್ತಿದೆ.
Gold Rate : ಚಿನ್ನದ ಬೆಲೆ ಇಂದು ತಟಸ್ಥ: ಬೆಳ್ಳಿ ಬೆಲೆ ಎರಡುವರೇ ಲಕ್ಷಕ್ಕೆ ಇಳಿಕೆ!
ಚಿನ್ನ ಬೆಳ್ಳಿ ದರದಲ್ಲಿ ಭಾರಿ ಇಳಿಕೆಯಾಗುತ್ತಿದೆ. ಬಂಗಾರದ ಚಿನ್ನದ ಬೆಲೆ 14 ಸಾವಿರಕ್ಕೆ ಇಳಿಕೆಯಾಗಿರುವುದು ಚಿನ್ನಾಭರಣ ಪ್ರಿಯರಿಗೆ ಶುಭ ದಿನಗಳಾಗಿವೆ.
ಗುವಾಹಟಿ: ಅಸ್ಸಾಂ ಕಾಂಗ್ರೆಸ್ ಮಾಜಿ ಅಧ್ಯಕ್ಷ ಭೂಪೇನ್ ಕುಮಾರ್ ಬೋರಾ ಫೆಬ್ರವರಿ 22ರಂದು ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾರೆ ಎಂದು ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ತಿಳಿಸಿದ್ದಾರೆ. ಮಂಗಳವಾರ ಗುವಾಹಟಿಯಲ್ಲಿರುವ ಅವರ ನಿವಾಸಕ್ಕೆ ಭೇಟಿ ನೀಡಿದ ನಂತರ ಪ್ರತಿಕ್ರಿಯಿಸಿದ ಸಿಎಂ ಹಿಮಂತ ಬಿಸ್ವಾ ಶರ್ಮಾ, ಭೂಪೇನ್ ಬೋರಾ ಫೆಬ್ರವರಿ 22ರಂದು ಔಪಚಾರಿಕವಾಗಿ ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ ಎಂದು ನಿಮಗೆ ತಿಳಿಸಲು ನನಗೆ ಸಂತೋಷವಾಗಿದೆ. ಅವರೊಂದಿಗೆ, ಗುವಾಹಟಿ ಮತ್ತು ಲಖಿಂಪುರದಲ್ಲಿ ಹಲವು ಕಾಂಗ್ರೆಸ್ ನಾಯಕರು ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ ಎಂದು ಹೇಳಿದ್ದಾರೆ. ಈ ಬೆಳವಣಿಗೆಯಿಂದ ಭೂಪೇನ್ ಕುಮಾರ್ ಬೋರಾ ತಮ್ಮ ರಾಜೀನಾಮೆಯನ್ನು ಹಿಂತೆಗೆದುಕೊಳ್ಳುವ ಮೂಲಕ ಕಾಂಗ್ರೆಸ್ ಪಕ್ಷದಲ್ಲೇ ಉಳಿಯುತ್ತಾರಾ ಅಥವಾ ವಿಧಾನಸಭೆ ಚುನಾವಣೆಗೆ ಮುಂಚಿತವಾಗಿ ಬೇರೆ ರಾಜಕೀಯ ಪಕ್ಷಕ್ಕೆ ಸೇರ್ಪಡೆಯಾಗುತ್ತಾರ ಎಂಬ ಊಹಾಪೋಹಗಳಿಗೆ ತೆರೆ ಎಳೆದಂತಾಗಿದೆ.
‘ವಂದೇ ಮಾತರಂ’ ಪೂರ್ಣ ಗಾಯನ ಮೋದಿ ಸರಕಾರದ ಫ್ಯಾಶಿಸ್ಟ್ ರಾಜಕಾರಣ
ದೇಶದ ಲಾಂಛನಗಳು ಯಾವುದೇ ಮತಧರ್ಮಗಳ ಸಂಕೇತವಾಗದಿದ್ದಾಗ ದೇಶದ ಎಲ್ಲಾ ಜನರೂ ಮತಧರ್ಮಗಳ ಹಂಗಿಲ್ಲದೆ ಸ್ವಪ್ರೇರಣೆಯಿಂದ ಗೌರವಿಸುತ್ತಾರೆ. ಆದರೆ ವಂದೇ ಮಾತರಂನಲ್ಲಿ ಭಾರತ ಮಾತೆಯನ್ನು ಹಿಂದೂ ಬ್ರಾಹ್ಮಣ ದೇವತೆಯನ್ನಾಗಿ ಚಿತ್ರಿಸಿ ಅದಕ್ಕೆ ದೇಶದ ಎಲ್ಲಾ ಮತಧರ್ಮೀಯರು ಎದ್ದು ನಿಂತು ಗೌರವಿಸಬೇಕೆಂದು ಆದೇಶಿಸುವುದು, ಹಿಂದೂಗಳಲ್ಲದ ಸ್ವದೇಶೀಯರ ದೇಶಪ್ರೇಮವನ್ನು ಅವಮಾನಿಸುವ ಆದೇಶ. ಅದರಲ್ಲೂ ವಿಗ್ರಹಾರಾಧನೆ ಸಮ್ಮತವಲ್ಲದ ಮತ್ತು ಮುಸ್ಲಿಮ್ ನರಮೇಧಕ್ಕೆ ಕರೆಕೊಡುವ ಗೀತೆಯನ್ನು ಗೌರವಿಸಿ ಎಂದು ಆದೇಶಿಸುವುದು ಮುಸ್ಲಿಮರನ್ನು ದಿನನಿತ್ಯ ಪರಕೀಯಗೊಳಿಸಿ ದಾಳಿ ಮಾಡುವ ಫ್ಯಾಶಿಸ್ಟ್ ರಣತಂತ್ರವೇ ಹೊರತು ದೇಶಪ್ರೇಮವಲ್ಲ. ಕಳೆದ ವಾರ ಭಾರತವು ಮೋದಿ ಸರಕಾರದ ಸಾಲುಸಾಲು ದ್ರೋಹಗಳ ಬಗ್ಗೆ ಗಂಭೀರ ಚರ್ಚೆ ನಡೆಸುತ್ತಿತ್ತು. ಮೋದಿ ಮತ್ತವರ ಮಂತ್ರಿಗಳು ಅಪ್ರಾಪ್ತ ವಯಸ್ಕ ಮಕ್ಕಳ ಕಾಮೋದ್ಯಮಿ ಎಪ್ಸ್ಟೀನ್ ಜೊತೆ ಸಂಪರ್ಕವಿಟ್ಟುಕೊಂಡಿದ್ದರ ಬಗ್ಗೆ, ಜನರಲ್ ನರವಣೆ ಪುಸ್ತಕವು ಬಯಲು ಮಾಡಿರುವಂತೆ ಚೀನಾ ದಾಳಿಯ ಸಂದರ್ಭದಲ್ಲಿ ಮೋದಿ ಸರಕಾರ ಭಾರತದ ಭದ್ರತೆಯ ವಿಷಯದಲ್ಲಿ ಬೇಜವಾಬ್ದಾರಿಯಿಂದ ನಡೆದುಕೊಂಡಿರುವ ಬಗ್ಗೆ ಮತ್ತು ಅಮೆರಿಕದ ಜೊತೆಗಿನ ವಾಣಿಜ್ಯ ಒಪ್ಪಂದದಲ್ಲಿ ಭಾರತವನ್ನು ಮೋದಿ ಸರಕಾರ ಅಮೆರಿಕಕ್ಕೆ ಮಾರಿಕೊಂಡಿರುವ ಬಗ್ಗೆ ದೇಶವು ಮೋದಿ ಸರಕಾರವನ್ನು ತರಾಟೆಗೆ ತೆಗೆದುಕೊಂಡಿತ್ತು. ಆ ಸಂದರ್ಭದಲ್ಲಿ ದಿಢೀರನೆ ಮೋದಿ ಸರಕಾರ ಇನ್ನುಮುಂದೆ ಎಲ್ಲಾ ಅಧಿಕೃತ ಕಾರ್ಯಕ್ರಮಗಳಲ್ಲಿ ಮತ್ತು ಶಾಲೆಗಳಲ್ಲಿ ರಾಷ್ಟ್ರಗೀತೆಯಾದ ಜನಗಣಮನ ಹಾಡುವುದಕ್ಕೆ ಮುನ್ನ ‘ವಂದೇ ಮಾತರಂ’ ಗೀತೆಯ ಆರೂ ಚರಣಗಳನ್ನು ಕಡ್ಡಾಯವಾಗಿ ಹಾಡಬೇಕೆಂದೂ ಮತ್ತು ಅದನ್ನು ಹಾಡುವಾಗ ಎಲ್ಲರೂ ಕಡ್ಡಾಯವಾಗಿ ಎದ್ದು ನಿಂತು ಗೌರವ ಸೂಚಿಸಬೇಕೆಂದೂ ಆದೇಶ ಹೊರಡಿಸಿತು. ಈ ಕುತಂತ್ರದ ತಕ್ಷಣದ ಉದ್ದೇಶ ಮೋದಿ ಸರಕಾರದ ದ್ರೋಹಗಳ ಬಗೆಗಿನ ಚರ್ಚೆಯನ್ನು ಹಿಂದಕ್ಕೆ ತಳ್ಳುವುದೇ ಆಗಿದೆ, ಆದರೆ ಅದರಷ್ಟೇ ಮುಖ್ಯವಾಗಿ ವಂದೇ ಮಾತರಂ ಗೀತೆಯನ್ನು ತನ್ನ ಕ್ಷುದ್ರ ಹಿಂದುತ್ವವಾದಿ ರಾಜಕಾರಣಕ್ಕೆ ಬಳಸಿಕೊಂಡು ದೇಶವನ್ನು ಮತ್ತಷ್ಟು ಧ್ರುವೀಕರಿಸುವುದೂ ಕೂಡ ಮೋದಿ ಸರಕಾರದ ದೂರಗಾಮಿ ಉದ್ದೇಶವಾಗಿದೆ. ಏಕೆಂದರೆ ‘ವಂದೇ ಮಾತರಂ’ನ ಮೊದಲೆರಡು ಚರಣಗಳನ್ನು ಮಾತ್ರ ಹಾಡಬಹುದೆಂದೂ, ಉಳಿದ ನಾಲ್ಕು ಚರಣಗಳಲ್ಲಿ ದೇಶದ ಮತಧರ್ಮಾತೀತ ಸೆಕ್ಯುಲರ್ ಅಸ್ಮಿತೆಗೆ ಮತ್ತು ಸೌಹಾರ್ದ ಬದುಕಿಗೆ ಧಕ್ಕೆ ತರುವ ಆಶಯಗಳಿರುವುದರಿಂದ ಹಾಡುವ ಅಗತ್ಯವಿಲ್ಲವೆಂದೂ ದೇಶವು ಪಕ್ಷಾತೀತವಾಗಿ ಒಕ್ಕೊರಲಿಂದ ತೀರ್ಮಾನ ಮಾಡಿ ಒಂಭತ್ತು ದಶಕಗಳೇ ಕಳೆದು ಹೋಗಿವೆ. ಈಗ ಮತ್ತೆ ಅದನ್ನು ಕೆದಕುವ ಅಗತ್ಯವೇನಿತ್ತು? 1937ರಲ್ಲಿ ಬ್ರಿಟಿಷ್ ಆಳ್ವಿಕೆಯಡಿಯಲ್ಲೇ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಆಡಳಿತದ ಪ್ರಾಂತೀಯ ಸರಕಾರಗಳಡಿಯಲ್ಲಿ ಶಾಲೆಗಳಲ್ಲಿ ವಂದೇ ಮಾತರಂ ಹಾಡಬೇಕೇ ಎಂಬ ಪ್ರಶ್ನೆ ಆಗಲೇ ಚರ್ಚೆಗೆ ಬಂದಿತ್ತು. ಆಗ ನೆಹರೂ ಮತ್ತು ಬಿಜೆಪಿಯವರು ಬಹುವಾಗಿ ಆರಾಧಿಸುವ ಸರ್ದಾರ್ ಪಟೇಲ್, ಸುಭಾಷ್ ಚಂದ್ರ ಬೋಸರಿದ್ದ ಕಾಂಗ್ರೆಸ್ನ ಉನ್ನತ ಸಮಿತಿಯು ರವೀಂದ್ರನಾಥ ಟಾಗೋರರ ಜೊತೆಗಿನ ಸಮಾಲೋಚನೆಯೊಂದಿಗೆ ವಂದೇ ಮಾತರಂನ ಮೊದಲೆರಡು ಚರಣಗಳನ್ನು ಮಾತ್ರ ಹಾಡಿದರೆ ಸಾಕೆಂದು ತೀರ್ಮಾನಿಸಿತು. ಉಳಿದ ನಾಲ್ಕು ಚರಣಗಳಲ್ಲಿ ಕೋಮುದ್ವೇಷ ಬಿತ್ತುವ ಅಂಶಗಳಿತ್ತು ಎಂಬ ಬಗ್ಗೆ ಬಿಜೆಪಿ ಮಾನ್ಯ ಮಾಡುವ ಪಟೇಲರಿಗೂ ಅನುಮಾನವಿರಲಿಲ್ಲ. ನೇತಾಜಿ ಬೋಸರಂತೂ ಆಗಲೂ, ಆ ನಂತರ ಭಾರತೀಯ ದೇಶಪ್ರೇಮಿ ಹಿಂದೂ, ಮುಸ್ಲಿಮ್, ಸಿಖ್ ಸೈನಿಕರನ್ನು ಸೇರಿಸಿ ಕಟ್ಟಿದ ಆಝಾದ್ ಹಿಂದ್ ಫೌಜ್ನಲ್ಲಿ ಕೂಡ ವಂದೇ ಮಾತರಂ ಚರಣಗಳನ್ನು ಹಾಡುತ್ತಿರಲಿಲ್ಲ. ಸಂವಿಧಾನ ಸಭೆಯಲ್ಲಿ ಈ ಬಗ್ಗೆ ವಿಶೇಷ ಚರ್ಚೆ ನಡೆಯಲಿಲ್ಲವಾದರೂ, ಅಂತಿಮ ದಿನದಂದೂ ಸಂವಿಧಾನ ಸಭೆಯ ಅಧ್ಯಕ್ಷರಾಗಿದ್ದ ಬಾಬು ರಾಜೆಂದ್ರ ಪ್ರಸಾದರು ಜನಗಣಮನವು ರಾಷ್ಟ್ರಗೀತೆಯಾಗಿಯೂ, ‘ವಂದೇ ಮಾತರಂ’ನ ಮೊದಲ ಎರಡು ಚರಣಗಳನ್ನು ಮಾತ್ರ ರಾಷ್ಟ್ರಗಾನವಾಗಿ ಒಪ್ಪಿಕೊಳ್ಳಬೇಕೆಂದು ತೀರ್ಮಾನವನ್ನು ಪ್ರಸ್ತುತಪಡಿಸಿದರು. ಅದಕ್ಕೆ ಇಡೀ ಸಂವಿಧಾನ ಸಭೆ ಒಕ್ಕೊರಲಿಂದ ಸಮ್ಮತಿ ವ್ಯಕ್ತಪಡಿಸಿತು. ಆ ಅನುಮೋದನೆಯಲ್ಲಿ ಬಿಜೆಪಿ ಮತ್ತು ಮೋದಿಯವರು ಆರಾಧಿಸುವ ಸರ್ದಾರ್ ಪಟೇಲರು ಮಾತ್ರವಲ್ಲದೆ ಬಿಜೆಪಿಯ ಮೊದಲ ಅವತಾರವಾಗಿದ್ದ ಭಾರತೀಯ ಜನಸಂಘದ ಮೊದಲ ಅಧ್ಯಕ್ಷರಾದ ಮತ್ತು ಆಗ ಹಿಂದೂ ಮಹಾ ಸಭಾದ ರಾಷ್ಟ್ರೀಯ ನಾಯಕರೂ ಆಗಿದ್ದ ಶಾಮ ಪ್ರಸಾದ್ ಮುಖರ್ಜಿಯವರ ಅನುಮೋದನೆಯೂ ಸೇರಿಕೊಂಡಿತ್ತು. ಹೀಗಾಗಿ ಇದು ಮುಗಿದು ಹೋದ ಕಥೆ. ಆದರೂ ಪ. ಬಂಗಾಳದ ಚುನಾವಣೆ ಹತ್ತಿರ ಬರುತ್ತಿದ್ದಂತೆ ಈ ವರ್ಷ ಮತ್ತೆ ಮೋದಿ ಸರಕಾರ ವಂದೇ ಮಾತರಂ ಅನ್ನು ಜನಗಣಮನದ ವಿರುದ್ಧ ಎತ್ತಿ ಕಟ್ಟಲು ಪ್ರಾರಂಭಿಸಿದರು. ಹಾಗೂ ಈ ವರ್ಷ ವಂದೇ ಮಾತರಂ ಬರೆದು 150 ವರ್ಷವಾಗಿರುವುದರಿಂದ ದೇಶಾದ್ಯಂತ ಕಾರ್ಯಕ್ರಮಗಳನ್ನು ಯೋಜಿಸಲು ಪ್ರಾರಂಭಿಸಿತು. ಅದರ ಮುಂದುವರಿಕೆಯಾಗಿ ಈಗ ವಂದೇ ಮಾತರಂನ ಮೊದಲೆರಡು ಚರಣಗಳನ್ನು ಮಾತ್ರವಲ್ಲದೆ ಉಳಿದ ನಾಲ್ಕು ಚರಣಗಳನ್ನು ಕಡ್ಡಾಯವಾಗಿ ಹಾಡಲೇ ಬೇಕೆಂದು ಕೋಮುವಾದಿ ಕುತಂತ್ರ ನಡೆಸಿದೆ. ಮೋದಿ ಸರಕಾರದ ಈ ಹಿಂದುತ್ವವಾದಿ ಫ್ಯಾಶಿಸ್ಟ್ ಕುತಂತ್ರವನ್ನು ಅರ್ಥಮಾಡಿಕೊಳ್ಳಬೇಕೆಂದರೆ ವಂದೇ ಮಾತರಂ ಹಾಡಿನ ಚರಿತ್ರೆಯನ್ನು ಸಂಕ್ಷಿಪ್ತವಾಗಿ ಅರ್ಥಮಾಡಿಕೊಳ್ಳಬೇಕಾಗುತ್ತದೆ. ವಂದೇ ಮಾತರಂ-ಸುಂದರ ದೇಶಸ್ತುತಿಯಿಂದ ಕರಾಳ ದ್ವೇಷ ಭಿತ್ತಿಯೆಡೆಗೆ.. ವಂದೇ ಮಾತರಂ ಗೀತೆಯನ್ನು ಬರೆದದ್ದು ಬಂಗಾಳದ ಖ್ಯಾತ ಸಾಹಿತಿ ಮತ್ತು ಕವಿ ಬಂಕಿಮ ಚಂದ್ರ ಚಟರ್ಜಿಯವರು (1838-1894). 18ನೇ ಶತಮಾನದಲ್ಲಿ ಕೊನೆಯ ಭಾಗದಲ್ಲಿ ಅವರು ಬ್ರಿಟಿಷ್ ಆಡಳಿತದಲ್ಲಿ ಅಧಿಕಾರಿಯೂ ಆಗಿದ್ದರು. ಇವರ ಕಾಲಘಟ್ಟದಲ್ಲೇ ಬ್ರಿಟಿಷರು ಭಾರತದ ಮೊತ್ತ ಮೊದಲ ಜನಗಣತಿಯನ್ನು 1871ರಲ್ಲಿ ಮಾಡಿದರು. ಆ ಜನಗಣತಿಯಂತೆ ಬ್ರಿಟಿಷರ ಆಳ್ವಿಕೆಯಲ್ಲಿದ್ದ ಅವಿಭಜಿತ ಬಂಗಾಳ, ಬಿಹಾರ, ಜಾರ್ಖಂಡ್ ಇತ್ಯಾದಿಗಳಿದ್ದ ಬಂಗಾಳ ಪ್ರೆಸಿಡೆನ್ಸಿಯ ಜನಸಂಖ್ಯೆ ಏಳು ಕೋಟಿ. ವಂದೇ ಮಾತರಂ ಹಾಡಿನ ಮೂರನೇ ಚರಣದಲ್ಲಿ ಬರುವ ಏಳು ಕೋಟಿ ಕಂಠಗಳು ನಿನ್ನ ಸ್ತುತಿಯನ್ನು ಮಾಡುತ್ತವೆ ಎಂಬ ವಾಕ್ಯದಿಂದಾಗಿ ಈ ಹಾಡನ್ನು 1872ರ ಸೆನ್ಸಸ್ ಅಂಕಿಅಂಶಗಳು ಬಂದ ನಂತರದಲ್ಲಿ ಬರೆದದ್ದು ಎಂದು ಇತಿಹಾಸಕಾರರು ಊಹಿಸುತ್ತಾರೆ. ಅರಬಿಂದೋ ಘೋಷ್ ಅವರು ಈ ಗೀತೆಯನ್ನು 1875ರಲ್ಲಿ ಬರೆದದ್ದು ಎಂದು ಬರೆದಿದ್ದಾರೆ. ಅದನ್ನು ಆಧರಿಸಿಯೇ 2025ರಲ್ಲಿ ಅದರ 150ನೇ ವರ್ಷವನ್ನು ಮೋದಿ ಸರಕಾರ ಆಚರಿಸುತ್ತಿದೆ. ಬಂಕಿಮ ಚಂದ್ರರ ಹತ್ತಿರದ ಸಂಬಂಧಿಗಳು ಮತ್ತು ಇತಿಹಾಸಕಾರರು ಬರೆದಿರುವ ಚರಿತ್ರೆಗಳ ಪ್ರಕಾರ ಈಗ ಹಾಲಿ ಇರುವ 27 ಸಾಲುಗಳ ವಂದೇ ಮಾತರಂ ಗೀತೆಯ ಮೊದಲ 12 ಸಾಲುಗಳನ್ನು ಬರೆದದ್ದು 1875ರಲ್ಲಿ ಎಂದು ಊಹಿಸಲಾಗಿದೆ. ಈ 12 ಸಾಲುಗಳು: ವಂದೇ ಮಾತರಂ ಸುಜಲಾಂ ಸುಫಲಾಂ ಮಲಯಜ ಶೀತಲಾಂ ಸಸ್ಯ ಶ್ಯಾಮಲಾಂ ಶುಭ್ರ ಜ್ಯೋತ್ಸ್ನಾಂ ಪುಲಕಿತ ಯಾಮಿನೀಂ ಫುಲ್ಲ ಕುಸುಮಿತ ಧ್ರುಮದಳ ಶೋಭಿನೀಂ.. ಸಪ್ತಕೋಟಿ ಕಂಠ ಕಲಕಲ ನಿನಾದ ಕರಾಲೆ ದ್ವಿಸಪ್ತಕೋಟಿ ಭುಜೌ ಘೃತ ಖರಕರವಾಲೆ ಕೆ ಬಲೆ ಮಾ ತುಮಿ ಅಬಲೇ ಎಂದು ಶುದ್ಧ ಸಂಸ್ಕೃತದಲ್ಲಿ ಭಾರತದ ಪ್ರಕೃತಿಯನ್ನು ಕಾವ್ಯಾತ್ಮಕವಾಗಿ ಮತ್ತು ಲಯಬದ್ಧವಾಗಿ ವರ್ಣಿಸುತ್ತವೆ. ಇದರಲ್ಲಿ ಯಾವುದೇ ಧಾರ್ಮಿಕ ಪೂರ್ವಾಗ್ರಹಗಳು ಕಾಣುವುದಿಲ್ಲ. ಆ ನಂತರದಲ್ಲಿ ಬಂಕಿಮರು 1882ರಲ್ಲಿ ‘ಆನಂದ ಮಠ’ ಎಂಬ ಕಾದಂಬರಿಯನ್ನು ಬರೆಯುತ್ತಾರೆ. ಆ ಕಾದಂಬರಿಯ ಘಟನಾವಳಿ ಮತ್ತು ಪಾತ್ರ ಪೋಷಣೆಯ ಭಾಗವಾಗಿ ಮೇಲಿನ 12 ಸಾಲುಗಳ ಜೊತೆಗೆ ಹೊಸದಾಗಿ ಇನ್ನು 15 ಸಾಲುಗಳನ್ನು ಬರೆದು ಅದರಲ್ಲಿ ಸೇರಿಸುತ್ತಾರೆ. ಆನಂದ ಮಠ-ಮುಸ್ಲಿಮ್ ದ್ವೇಷದ ಬ್ರಿಟಿಷ್ ಪರ ಕಾದಂಬರಿ ಆನಂದಮಠ ಕಾದಂಬರಿಯನ್ನು ಬಂಕಿಮರು ಬರೆದದ್ದು 1882ರಲ್ಲಿಯಾದರೂ ಅದರ ವಸ್ತು ಮತ್ತು ಕಾಲಘಟ್ಟ 1770-75ರದ್ದು. ಆಗತಾನೇ ಬಂಗಾಳದ ಸ್ವತಂತ್ರ ನವಾಬ ಸಿರಾಜುದ್ಧೌಲರನ್ನು ಬ್ರಿಟಿಷರ ಈಸ್ಟ್ ಇಂಡಿಯಾ ಕಂಪೆನಿ ಸೋಲಿಸಿ ಇಡೀ ಬಂಗಾಳ ಪ್ರಾಂತದಲ್ಲಿ ತನ್ನ ಗುಲಾಮಿ ನವಾಬರ ಮೂಲಕ ರೈತಾಪಿಯ ರಕ್ತ ಹೀರಲು ಪ್ರಾರಂಭಿಸಿರುತ್ತದೆ. ಇದರ ವಿರುದ್ಧ ಬಂಗಾಳ ಪ್ರಾಂತದಲ್ಲಿ ಹಿಂದೂ ಸನ್ಯಾಸಿಗಳು ಮತ್ತು ಮುಸ್ಲಿಮ್ ಫಕೀರರು ಒಟ್ಟಾಗಿ ನವಾಬ ಮತ್ತು ಬ್ರಿಟಿಷರ ವಿರುದ್ಧ ಸಶಸ್ತ್ರ ದಂಗೆಯನ್ನು ಮಾಡಿದ್ದು ಇತಿಹಾಸ. ಆದರೆ ಈಸ್ಟ್ ಇಂಡಿಯಾ ಕಂಪೆನಿ ನವಾಬನ ಸಹಾಯದೊಂದಿಗೆ ಸನ್ಯಾಸಿ ಮತ್ತು ಫಕೀರರು ಇಬ್ಬರನ್ನು ಕೊಂದು ಹಾಕುತ್ತದೆ ಮತ್ತು ದಂಗೆಯನ್ನು ಹತ್ತಿಕ್ಕುತ್ತದೆ. ಬಂಕಿಮರ ಕಾದಂಬರಿಯ ವಸ್ತು ಇದೇ ಆಗಿದ್ದರೂ ಕಾದಂಬರಿಯಲ್ಲಿ ಇದು ಸನ್ಯಾಸಿ ಮತ್ತು ಫಕೀರರ ಜಂಟಿ ಬಂಡಾಯವಾಗದೆ ಕೇವಲ ಹಿಂದೂ ಸನ್ಯಾಸಿಗಳ- ಸಂತಾನರ ಬಂಡಾಯ ಮಾತ್ರವಾಗುತ್ತದೆ ಹಾಗೂ ಶತ್ರು ನವಾಬ ಮತ್ತು ಬ್ರಿಟಿಷರಿಬ್ಬರೂ ಆಗದೆ ಕೇವಲ ನವಾಬ ಮಾತ್ರ ಆಗುತ್ತಾನೆ. ನವಾಬ ಮಾತ್ರವಲ್ಲ ಹಳ್ಳಿಗಳ ಸಾಮಾನ್ಯ ಮುಸ್ಲಿಮರೂ ಶತ್ರುಗಳಾಗುತ್ತಾರೆ. ಹೀಗೆ ಕಾದಂಬರಿ ಚರಿತ್ರೆಯನ್ನು ವಿಕೃತಗೊಳಿಸಿ ಬ್ರಿಟಿಷ್ ಪರವಾಗಿರುವ ಮುಸ್ಲಿಮ್ ವಿರೋಧಿ ಕೋಮು ಕಥನವಾಗಿ ಬಿಡುತ್ತದೆ. ಬರಗಾಲದಿಂದ ತನ್ನ ಹಿಂದಿನ ಎಲ್ಲಾ ವೈಭವವನ್ನು ಕಳೆದುಕೊಂಡು ಹೆಂಡತಿ ಮತ್ತು ಮಗಳೊಂದಿಗೆ ಬದುಕನ್ನು ಅರಸುತ್ತಾ ಗುಳೆ ಹೊರಡುವ ಬ್ರಾಹ್ಮಣ ಭೂಮಾಲಕ ಮಹೇಂದ್ರ ಇದರ ಕಥಾನಾಯಕ. ಆದರೆ ಮಹೇಂದ್ರ ಇಲ್ಲಿ ಕಳೆದು ಹೋದ ಹಿಂದೂ ಬ್ರಾಹ್ಮಣ ವೈಭವಕ್ಕೆ ಪ್ರತಿನಿಧಿಯಷ್ಟೆ. ಹೀಗಾಗಿ ಮತ್ತೆ ಆ ವೈಭವವನ್ನು ಗಳಿಸಿಕೊಳ್ಳುವುದು ಹೇಗೆ ಎಂಬುದೇ ಆನಂದ ಮಠದ ನಿಜವಾದ ಕಥೆ. ಆದರೆ ಇಲ್ಲಿ ವೈಭವ ಕಿತ್ತುಕೊಂಡವರು ಮುಸ್ಲಿಮ್ ದೊರೆಗಳು. ಹೀಗಾಗಿ ಈ ದೇಶದ ಪ್ರಧಾನ ಶತ್ರುಗಳು ಮುಸ್ಲಿಮರೆಂಬುದೇ ಕಾದಂಬರಿಯ ಸಂದೇಶ. ಆದ್ದರಿಂದಲೇ ಕಾದಂಬರಿಯು ಬರಗಾಲದ ಬವಣೆ, ರೈತಾಪಿಗಳು ಇರುವೆಗಳಂತೆ ಸಾಯುತ್ತಿರುವ ದೃಶ್ಯಗಳಿಂದ ಪ್ರಾರಂಭವಾದರೂ ಅವೆಲ್ಲವೂ ನಂತರ ಸಂಪೂರ್ಣ ಮರೆಯಾಗಿ ಬಿಡುತ್ತದೆ. ಅದೇ ರೀತಿ ಈ ಬರಗಾಲಕ್ಕೆ ಕಾರಣವಾದ ಬ್ರಿಟಿಷ್ ಆಡಳಿತದ ಪ್ರಸ್ತಾಪವೂ ಕಾದಂಬರಿಯಲ್ಲಿ ಬರುವುದಿಲ್ಲ. ಕಾದಂಬರಿಯಲ್ಲಿ ಮುಸ್ಲಿಮ್ ದರೋಡೆಕೋರರು ಮತ್ತು ಮುಸ್ಲಿಮ್ ನವಾಬರ ದಾಳಿ ಇವೆರಡರ ವಿರುದ್ಧ ಸಮರ ಸಾರಲು ಹಿಂದೂಗಳು ಸಂಸಾರವನ್ನು ತೊರೆದು ಸನ್ಯಾಸಿಗಳಾಗಿ ಸಶಸ್ತ್ರ ಬಂಡಾಯ ಹೂಡಿರುತ್ತಾರೆ. ಮಹೇಂದ್ರನನ್ನು ಈ ಬಂಡಾಯದಲ್ಲಿ ಸೇರುವಂತೆ ಮಾಡಲು ಆತನನ್ನು ಗುಪ್ತ ಗುಹೆಗೆ ಕರೆದುಕೊಂಡು ದೇವಿ-ಭಾರತ ಮಾತೆಯ ದರ್ಶನ ಮಾಡಿಸಲಾಗುತ್ತದೆ. ಭಾರತ ಮಾತೆಯಲ್ಲ ಮುಸ್ಲಿಮರ ಬಲಿ ಕೇಳುವ ಕಾಳಿ! ಆ ದೇವಿಯ ಮುಂದೆ ಮುಸ್ಲಿಮರ ನರಮೇಧ ನಡೆಸಿ ಈ ದೇಶವನ್ನು ವಿಮೋಚನೆಮಾಡುವ ವೀರ ಪ್ರತಿಜ್ಞೆಯ ಭಾಗವಾಗಿಯೇ ವಂದೇ ಮಾತರಂ ಹಾಡನ್ನು ಹಾಡಲಾಗುತ್ತದೆ. ವಂದೇ ಮಾತರಂ ಹಾಡುತ್ತಲೇ ಮಹೇಂದ್ರನಂತಹವರು ಮುಸ್ಲಿಮರ ಮಾರಣ ಹೋಮಕ್ಕೆ ಸಜ್ಜಾಗುತ್ತಾರೆ. ಬರಗಾಲದ ಬವಣೆಯಿಂದ ಹಿಂದೂಗಳಷ್ಟೇ ಮುಸ್ಲಿಮ್ ರೈತರು ಸಹ ತುತ್ತಾಗಿ ಇರುವೆಗಳಂತೆ ಸಾಯುತ್ತಿದ್ದರೂ ಇಡೀ ಮುಸ್ಲಿಮ್ ಸಮುದಾಯವನ್ನೇ ಹಿಂದೂಗಳ ಬವಣೆಗೆ ಕಾರಣವೆಂಬಂತೆ ಚಿತ್ರಿಸಲಾಗಿದೆ. ಹೀಗೆ ಕಾದಂಬರಿ ಮೊದಲಿನಿಂದಲೂ ಇಡೀ ಮುಸ್ಲೀಮ್ ಸಮುದಾಯವನ್ನೇ ದೇಶದಿಂದ ಬಿಟ್ಟೋಡಿಸುವಂತೆ ಮಾಡುವುದನ್ನು ತನ್ನ ಗುರಿಯನ್ನಾಗಿರಿಗಿಸಿಕೊಳ್ಳುತ್ತದೆ. ಕಾದಂಬರಿಯ ನಾಯಕನಾದ ಸತ್ಯಾನಂದ ಘೋಷಿಸುವಂತೆ ‘‘ನಮಗೆ ಅಧಿಕಾರ ಬೇಕಿಲ್ಲ. ನಮ್ಮ ಉದ್ದೇಶ ಎಲ್ಲಾ ಮುಸ್ಲಿಮರನ್ನು ಕೊಂದುಹಾಕುವುದು. ಏಕೆಂದರೆ ಅವರು ನಮ್ಮ ದೇವರ ಶತ್ರುಗಳು!’’. ಇದೇ ಆ ಕಾದಂಬರಿಯ ಪ್ರಧಾನ ಧಾತು. ಸನಾತನ ಧರ್ಮದ ಪುನರುತ್ಥಾನವೇ ನಮ್ಮ ಗುರಿಯೆಂದು ಘೋಷಿಸುವ ಆನಂದಮಠದ ಬಂಡಾಯಗಾರರು ತಮ್ಮನ್ನು ತಾವು ಸನಾತನಿಗಳೆಂದೇ ಗುರುತಿಸಿಕೊಳ್ಳುತ್ತಾರೆ. ಆನಂದ ಮಠ ಕಾದಂಬರಿಯು ಎಷ್ಟೇ ದೇಶಪ್ರೇಮಿ ಎಂಬ ಪ್ರಚಾರ ಪಡೆದುಕೊಂಡಿದ್ದರೂ ಕಾದಂಬರಿಯಲ್ಲಿ ಮಾತ್ರ ಅದರ ಬ್ರಿಟಿಷ್ ವಸಾಹತುಶಾಹಿ ಪಕ್ಷಪಾತ ಮತ್ತು ಮುಸ್ಲಿಮ್ ದ್ವೇಷವನ್ನು ಕಿಂಚಿತ್ತೂ ಮುಚ್ಚುಮರೆ ಮಾಡಿಲ್ಲ. ಅದರ ಕೆಲವು ಆಯ್ದ ಭಾಗಗಳನ್ನು ಓದಿದರೂ ಅದು ಸ್ಪಷ್ಟವಾಗುತ್ತದೆ. ಬಂಕಿಮಚಂದ್ರರ ಆನಂದ ಮಠ ಕಾದಂಬರಿಯನ್ನು ವೆಂಕಟಾಚಾರ್ಯ ಅವರು 1960ರ ಮೊದಲ ಭಾಗದಲ್ಲೇ ಕನ್ನಡಕ್ಕೆ ಅನುವಾದಿಸಿದ್ದರು. ಅದಲ್ಲದೆ ಈ ಕಾದಂಬರಿಯ ಇನ್ನೂ ಮೂರು ಕನ್ನಡ ಅನುವಾದಗಳಾಗಿವೆ. ಇದನ್ನು ಕರ್ನಾಟಕ ಅನುವಾದ ಸಾಹಿತ್ಯ ಅಕಾಡಮಿ 2007ರಲ್ಲಿ ಮರುಮುದ್ರಣ ಮಾಡಿ ಪ್ರಕಟಿಸಿತ್ತು. ಇಂಥ ಮುಸ್ಲಿಮ್ ದ್ವೇಷದ ಕಾದಂಬರಿಯಲ್ಲಿ ನಾಯಕ ಮಹೇಂದ್ರನಿಗೆ ಮುಸ್ಲಿಮ್ ನರಮೇಧ ನಡೆಸಲು ದೀಕ್ಷೆ ಕೊಡುವ ಭಾಗವಾಗಿ ಈಗಾಗಲೇ ಬರೆದಿದ್ದ ವಂದೇ ಮಾತರಂ ಹಾಡನ್ನು ಬಂಕಿಮಚಂದ್ರರು ಮತ್ತಷ್ಟು ವಿಸ್ತರಿಸಿ ಬರೆಯುತ್ತಾರೆ. ಆನಂದಮಠ ಕಾದಂಬರಿ ಬರೆಯುವುದಕ್ಕೆ ಮುಂಚೆ ಬರೆದಿದ್ದ ಮೊದಲ 12 ಸಾಲುಗಳಲ್ಲಿ ಭಾರತವು ಹಸನ್ಮುಖಿ ಕರುಣಾಮಯಿ ಧರ್ಮಾತೀತ ಜಗದ್ಧಾತ್ರಿಯಾಗಿ ಚಿತ್ರಿತವಾದರೆ ನಂತರ 15 ಸಾಲುಗಳಲ್ಲಿ ಆ ಮಾತೆಯು ಶತ್ರುವನ್ನು ಚೆಂಡಾಡಲು ಸಮರೋತ್ಸಾಹಿಯಾಗಿ ಕಾದಿರುವ ಕಾಳಿಯಾಗಿ ಮತ್ತು ದುರ್ಗೆಯಾಗಿ ಬದಲಾಗುತ್ತಾಳೆ. ಮೊದಲ 12 ಸಾಲುಗಳಲ್ಲಿ ಸಂಸ್ಕೃತ ಭಾಷೆಯನ್ನು ಬಿಟ್ಟರೆ ಬೇರೆ ಯಾವುದೇ ಧಾರ್ಮಿಕ ಚಿಹ್ನೆಗಳಿರುವುದಿಲ್ಲ. ಆದರೆ ನಂತರದ 15 ಸಾಲುಗಳಲ್ಲಿ ದುರ್ಗೆ, ಕಾಳಿ ಇನ್ನಿತ್ಯಾದಿ ಬ್ರಾಹ್ಮಣೀಯ ಹಿಂದೂ ದೇವತೆಗಳು ಅವತರಿಸುತ್ತಾರೆ. (ಆಸಕ್ತರು ಬಂಗಾಳದ ವಿಶ್ವಭಾರತಿ-ಶಾಂತಿನಿಕೇತನದ ಮಾಜಿ ಉಪಕುಲಪತಿ ಹಾಗೂ ಭಾರತ ಸರಕಾರದ ಸಂಸ್ಕೃತಿ ಇಲಾಖೆಯ ಟಾಗೋರ್ ಫೆಲೋ ಕೂಡ ಆಗಿದ್ದ ಸಬ್ಯಸಾಚಿ ಭಟ್ಟಾಚಾರ್ಯ ಅವರ ‘ಗಿಚಿಟಿಜe ಒಚಿಣಚಿಡಿಚಿm- ಖಿhe ಃiogಡಿಚಿಠಿhಥಿ oಜಿ ಚಿ soಟಿg’ ಎಂಬ ಪೆಂಗ್ವಿನ್ ಪ್ರಕಾಶನ 2003ರಲ್ಲಿ ಪ್ರಕಟಿಸಿದ ಕೃತಿಯನ್ನು ಗಮನಿಸಬಹುದು) ಸ್ಪಷ್ಟವಾಗಿ ಕಾಣುವಂತೆ ಮೊದಲ ಎರಡು ಚರಣಗಳಿಗಿಂತ ಸಂಪೂರ್ಣ ಭಿನ್ನವಾಗಿ ಈ ಚರಣಗಳಲ್ಲಿ ಭಾರತ ಮಾತೆಯು ಹಿಂದೂ ಬ್ರಾಹ್ಮಣ ದೇವಿಯಾಗಿ ಮಾರ್ಪಾಡಾಗುತ್ತಾಳೆ. ತುಮ್ ಹಿ ಧರ್ಮಾ ಆಗುವುದಲ್ಲದೆ ‘‘...ನಿನ್ನಿಂದಲೇ ನಮ್ಮ ಶಕ್ತಿ ಮತ್ತು ಪ್ರತಿ ಮಂದಿರದಲ್ಲೂ ನಿನ್ನನ್ನೇ ನಾವು ನೋಡುತ್ತೇವೆ’’ ಎಂದು ಸ್ತುತಿಸಲಾಗುತ್ತದೆ. ಧರ್ಮಾತೀತವಾದ ಮಾತೆ ಈ ರೀತಿ ನಿರ್ದಿಷ್ಟ ಧರ್ಮದ ಹಾಗೂ ದೇವಸ್ಥಾನಗಳ ಬಂದಿಯಾಗುತ್ತಾಳೆ. ಎಲ್ಲಕ್ಕಿಂತ ಮುಖ್ಯವಾಗಿ ಈ ಮಾತೆ ಈಗ ಕರುಣಾಮಯಿಯಾಗಿ ಮಾತ್ರ ಉಳಿಯುವುದಿಲ್ಲ. ಈಗ ಮಾತೆ: ತ್ವಂ ಹಿ ದುರ್ಗಾ ದಶಪ್ರಹರಣ ಧಾರಿಣಿಯಾಗುತ್ತಾಳೆ. ಅಂದರೆ ಹತ್ತು ಯುದ್ಧಾಸ್ತ್ರಗಳನ್ನು ಹೊಂದಿರುವ ರಣಕಾಳಿಯಾಗುತ್ತಾಳೆ. ಶತ್ರು ಸಂಹಾರಕ್ಕೆ ಕಾತುರಳಾದ ಮಾತೆಯಾಗುತ್ತಾಳೆ. ಹೀಗೆ ಹೊಸದಾಗಿ ಸೇರ್ಪಡೆಯಾದ 15 ಸಾಲುಗಳು ಧರ್ಮ ಸೂಚಕ ಮಾತ್ರವಲ್ಲ, ಕದನ ಸೂಚಕವೂ ಆಗಿ ಮಾರ್ಪಾಡಾಗುತ್ತದೆ. ಆದರೆ ಜಗದ್ಧಾತ್ರಿ ಮಾತೆ, ಕಾದಂಬರಿಕಾರನ ಬದಲಾದ ರಾಜಕಾರಣಕ್ಕೆ ತಕ್ಕಂತೆ ಶತ್ರು ಸಂಹಾರಕ ದುರ್ಗಾ ದಶಪ್ರಹರಣ ಧಾರಿಣಿಯಾಗಿ ಮಾರ್ಪಾಡಾಗುತ್ತಾಳೆ. ಆದರೆ ಇಲ್ಲಿ ಭಾರತಕ್ಕೆ ಶತ್ರು ಮುಸ್ಲಿಮರೇ ಹೊರತು ಭಾರತವನ್ನು ಲೂಟಿ ಮಾಡುತ್ತಿದ್ದ, ಹಿಂದೂ-ಮುಸ್ಲಿಮ್ ಜನಸಾಮಾನ್ಯರ ಶೋಷಣೆ ಮಾಡುತ್ತಿದ್ದ ಬ್ರಿಟಿಷರಲ್ಲ! ಏಕೆಂದರೆ ಬಂಕಿಮಚಂದ್ರರು ಬ್ರಿಟಿಷ್ ಸರಕಾರದಲ್ಲಿ ಅಧಿಕಾರಿಯೂ ಆಗಿದ್ದರು! ಆನಂದಮಠದ ಮೊದಲ ಆವೃತ್ತಿಗೆ ಬರೆದ ಮುನ್ನುಡಿಯಲ್ಲೇ ಬಂಕಿಮಚಂದ್ರರು ತನ್ನ ಕಾದಂಬರಿಯ ಬಂಡಾಯ ಸಾಮಾಜಿಕ ಬಂಡಾಯವೇ ಹೊರತು ರಾಜಕೀಯ ಬಂಡಾಯವಲ್ಲವೆಂದು-ಅರ್ಥಾತ್ ಬ್ರಿಟಿಷ್ ವಿರೋಧಿ ಕೃತಿಯಲ್ಲವೆಂದು ಸ್ಪಷ್ಟಪಡಿಸಿಬಿಟ್ಟಿದ್ದರು. 1883ರ ಮಾರ್ಚ್ 31ರಂದು ಬ್ರಿಟಿಷ್ ಆಡಳಿತದ ಅಧಿಕೃತ ಗೆಝೆಟ್ನಲ್ಲಿ ಈ ಕಾದಂಬರಿಯು ಧಾರ್ಮಿಕ ಭಾವನೆಗಳಿಂದ ಪ್ರೇರಿತಗೊಂಡ, ಮುಸ್ಲಿಮ್ ಆಳ್ವಿಕೆಯ ಕೊನೆಯನ್ನು ಬಯಸುವ ಮತ್ತು ಬ್ರಿಟಿಷರು ಭಾರತದ ಮೇಲೆ ಸಂಪೂರ್ಣ ಸ್ವಾಮ್ಯ ಪಡೆಯಬೇಕೆಂಬ ಆಶಯವುಳ್ಳ ಕಾದಂಬರಿಯೆಂದು ಹೊಗಳಲಾಗಿತ್ತು. 1937ರಲ್ಲಿ ವೈಸ್ರಾಯ್ ಕೌನ್ಸಿಲ್ನ ಸದಸ್ಯನಾಗಿದ್ದ ಸರ್ ಹೆನ್ರಿ ಕ್ರೈಕ್ ಈ ಕಾದಂಬರಿಯು ಮುಸ್ಲಿಮರ ವಿರುದ್ಧ ಘೊಷಗೀತೆಯೆಂದೇ ಬಣ್ಣಿಸಿದ್ದನು. ಹೀಗಾಗಿಯೇ ಈ ಹಾಡನ್ನಾಗಲೀ, ಕಾದಂಬರಿಯನ್ನಾಗಲೀ ಬ್ರಿಟಿಷ್ ಆಡಳಿತ ಯಾವತ್ತೂ ನಿಷೇಧಿಸಲಿಲ್ಲ! ಹೀಗಾಗಿಯೇ ಬಲಪಂಥೀಯರು ಆರಾಧಿಸುವ ಪ್ರಖ್ಯಾತ ಇತಿಹಾಸಕಾರ ಆರ್.ಸಿ. ಮಜುಂದಾರ್ ಸಹ ಆನಂದಮಠವನ್ನು ವಿಶ್ಲೇಷಿಸುತ್ತಾ ಬಂಕಿಮಚಂದ್ರರು ದೇಶಭಕ್ತಿಯನ್ನು ಮತಧರ್ಮವಾಗಿಯೂ, ಮತಧರ್ಮವನ್ನು ದೇಶಭಕ್ತಿಯಾಗಿಯೂ ಮಾಡಿಬಿಟ್ಟರು ಮತ್ತು ರಾಷ್ಟ್ರವನ್ನು ಕಾಳಿ ಮಾತೆಯೆಂದೇ ಸಂಕೇತಿಸಲಾಗಿದೆ ಎಂದು ಹೇಳುತ್ತಾರೆ. ದೇಶಪ್ರೇಮವಲ್ಲ- ಫ್ಯಾಶಿಸ್ಟ್ ರಣತಂತ್ರ ದೇಶದ ಲಾಂಛನಗಳು ಯಾವುದೇ ಮತಧರ್ಮಗಳ ಸಂಕೇತವಾಗದಿದ್ದಾಗ ದೇಶದ ಎಲ್ಲಾ ಜನರೂ ಮತಧರ್ಮಗಳ ಹಂಗಿಲ್ಲದೆ ಸ್ವಪ್ರೇರಣೆಯಿಂದ ಗೌರವಿಸುತ್ತಾರೆ. ಆದರೆ ವಂದೇ ಮಾತರಂನಲ್ಲಿ ಭಾರತ ಮಾತೆಯನ್ನು ಹಿಂದೂ ಬ್ರಾಹ್ಮಣ ದೇವತೆಯನ್ನಾಗಿ ಚಿತ್ರಿಸಿ ಅದಕ್ಕೆ ದೇಶದ ಎಲ್ಲಾ ಮತಧರ್ಮೀಯರು ಎದ್ದು ನಿಂತು ಗೌರವಿಸಬೇಕೆಂದು ಆದೇಶಿಸುವುದು, ಹಿಂದೂಗಳಲ್ಲದ ಸ್ವದೇಶೀಯರ ದೇಶಪ್ರೇಮವನ್ನು ಅವಮಾನಿಸುವ ಆದೇಶ. ಅದರಲ್ಲೂ ವಿಗ್ರಹಾರಾಧನೆ ಸಮ್ಮತವಲ್ಲದ ಮತ್ತು ಮುಸ್ಲಿಮ್ ನರಮೇಧಕ್ಕೆ ಕರೆಕೊಡುವ ಗೀತೆಯನ್ನು ಗೌರವಿಸಿ ಎಂದು ಆದೇಶಿಸುವುದು ಮುಸ್ಲಿಮರನ್ನು ದಿನನಿತ್ಯ ಪರಕೀಯಗೊಳಿಸಿ ದಾಳಿ ಮಾಡುವ ಫ್ಯಾಶಿಸ್ಟ್ ರಣತಂತ್ರವೇ ಹೊರತು ದೇಶಪ್ರೇಮವಲ್ಲ. ಈ ಹಿಂದೆ ಸುಪ್ರೀಂ ಕೋರ್ಟ್ ಕೇರಳದ ಇಮ್ಯುನಿಯಲ್ ಪ್ರಕರಣದಲ್ಲಿ ಧಾರ್ಮಿಕ ವಿಶ್ವಾಸಗಳನ್ನು ಉಲ್ಲಂಘಿಸುವ ರೀತಿಯ ದೇಶಗೌರವದ ಆದೇಶಗಳು ಸಿಂಧುವಲ್ಲ ಎಂದು ಸ್ಪಷ್ಟವಾಗಿ ತೀರ್ಪು ನೀಡಿದೆ. ಹೀಗಾಗಿ ಮೋದಿ ಸರಕಾರದ ಆದೇಶ ಸಿಂಧುವಾಗಲಾರದು ಅಥವಾ ಬದಲಾದ ಸಂದರ್ಭದಲ್ಲಿ ಬೇರೊಂದು ನಿಲುವಿಗೂ ಬರಬಹುದು. ಇದು ‘ವಂದೇ ಮಾತರಂ’ ಮತ್ತು ‘ಆನಂದಮಠ’ಗಳ ನಿಜ ಕೋಮುಸ್ವರೂಪ ಹಾಗೂ ಮೋದಿ ಸರಕಾರದ ನೈಜ ಉದ್ದೇಶ. ಈ ಹಿಂದುತ್ವವಾದಿ ಫ್ಯಾಶಿಸ್ಟ್ ಕ್ರಮವನ್ನು ಮತಾತೀತ ಭಾರತೀಯತೆಯಿಂದಲೇ ಸೋಲಿಸಬೇಕು.
ಬಾರಾಮತಿಯಲ್ಲಿ ಪತನವಾದ ವಿಮಾನದ ಬ್ಲಾಕ್ ಬಾಕ್ಸ್ ಗೆ ಹಾನಿಯಾಗಿದೆ : ಎಎಐಬಿ
ಹೊಸದಿಲ್ಲಿ: ಬಾರಾಮತಿ ಬಳಿ ಜನವರಿ 28ರಂದು ಸಂಭವಿಸಿದ ಲಿಯರ್ಜೆಟ್ 45(VT-SSK) ವಿಮಾನ ದುರಂತದ ಕುರಿತು ಎಎಐಬಿ ಸಮಗ್ರ ತನಿಖೆ ನಡೆಸುತ್ತಿದೆ ಎಂದು ನಾಗರಿಕ ವಿಮಾನಯಾನ ಸಚಿವಾಲಯ ತಿಳಿಸಿದೆ. ಬಾರಾಮತಿ ವಿಮಾನ ನಿಲ್ದಾಣದಲ್ಲಿ ಅಪಘಾತಕ್ಕೀಡಾದ ಲಿಯರ್ಜೆಟ್ ವಿಮಾನದಲ್ಲಿ ಎರಡು ಸ್ವತಂತ್ರ ಬ್ಲಾಕ್ ಬಾಕ್ಸ್ಗಳು ಇದ್ದವು. ಅಪಘಾತದ ಸಂದರ್ಭ ಎರಡೂ ಬೆಂಕಿಯಿಂದಾಗಿ ತೀವ್ರ ಹಾನಿಗೀಡಾಗಿವೆ ಎಂದು ತಿಳಿಸಿದೆ. ನಾಗರಿಕ ವಿಮಾನಯಾನ ಸಚಿವಾಲಯದ ಪ್ರಕಾರ, L3-ಕಮ್ಯುನಿಕೇಷನ್ಸ್ ತಯಾರಿಸಿದ ಡಿಜಿಟಲ್ ಫ್ಲೈಟ್ ಡೇಟಾ ರೆಕಾರ್ಡರ್ (DFDR) ಅನ್ನು AAIB ಫ್ಲೈಟ್ ರೆಕಾರ್ಡರ್ ಪ್ರಯೋಗಾಲಯದಲ್ಲಿ ಯಶಸ್ವಿಯಾಗಿ ಡೌನ್ಲೋಡ್ ಮಾಡಲಾಗಿದೆ. ಸಮಗ್ರ, ವಸ್ತುನಿಷ್ಠ ತನಿಖೆಯನ್ನು ಖಚಿತಪಡಿಸಿಕೊಳ್ಳಲು ಎಲ್ಲಾ ನಿಗದಿತ ತಾಂತ್ರಿಕ ಮತ್ತು ಕಾರ್ಯವಿಧಾನದ ಪ್ರೋಟೋಕಾಲ್ಗಳನ್ನು ಶ್ರದ್ಧೆಯಿಂದ ಅನುಸರಿಸಲಾಗುತ್ತಿದೆ. ತನಿಖೆಯ ಮುಂದಿನ ಹಂತದಲ್ಲಿ ಹೆಚ್ಚಿನ ಮಾಹಿತಿಯನ್ನು ಹಂಚಿಕೊಳ್ಳುತ್ತೇವೆ ಎಂದು ಎಎಐಬಿ ಹೇಳಿದೆ. ಜನವರಿ 28ರಂದು ಮಹಾರಾಷ್ಟ್ರದ ಬಾರಾಮತಿಯಲ್ಲಿ ನಡೆದ ವಿಮಾನ ದುರಂತದಲ್ಲಿ ಮಹಾರಾಷ್ಟ್ರದ ಮಾಜಿ ಡಿಸಿಎಂ ಅಜಿತ್ ಪವಾರ್ ಸೇರಿದಂತೆ ಇತರರು ಮೃತಪಟ್ಟಿದ್ದರು.
ಚುಮುಟಿ, ಗುಗ್ಗೆಕಡ್ಡಿ, ಬಳೆ, ಉಂಗುರ ತಯಾರಿಸುವ ಬೈಲ್ ಪತರ್
ಬೈಲ್ ಪತರ್ ಸಮುದಾಯದವರು ಬೀದಿಬದಿಯಲ್ಲಿ ಟೆಂಟ್ ಹಾಕಿಕೊಂಡು ತಾಮ್ರ ಅಥವಾ ಹಿತ್ತಾಳೆ ಲೋಹದಲ್ಲಿ ಚುಮುಟ, ಗುಗ್ಗೆಕಡ್ಡಿ, ಕೈಬಳೆ, ಉಂಗುರ, ಚೈನು ತಯಾರಿಸುತ್ತ, ತಾವು ತಯಾರಿಸಿದ್ದನ್ನು ಅಲ್ಲೇ ಟೆಂಟ್ ಮುಂದೆ ಹರಡಿಕೊಂಡು ಮಾರುತ್ತಿರುತ್ತಾರೆ. ಬಹುತೇಕ ಗ್ರಾಮಾಂತರ ಪ್ರದೇಶದ ಸಂತೆ, ಬಸ್ ಸ್ಟ್ಯಾಂಡ್, ಜಾತ್ರೆಗಳಲ್ಲಿ ಇವರು ಕಾಣಸಿಗುತ್ತಾರೆ. ಚಿನ್ನಬೆಳ್ಳಿ ಕೊಳ್ಳಲಾರದ ಬಳೆ, ಉಂಗುರ, ಒಡವೆ ಧರಿಸಲು ಆಸೆ ಪಡುವ ಕಡುಬಡವರೇ ಇವರ ಗ್ರಾಹಕರು. ಆಯೋಗದ ಕೆಲಸಕ್ಕೆಂದು ಹೊರಟು ಕೊಪ್ಪಳದ ‘ಬೈಲ್ ಪತರ್’ಗಳ ಕಾಲನಿಯಲ್ಲಿ ಅವರ ಬದುಕು, ಬವಣೆಗಳ ಕುರಿತು ಮಾತನಾಡುತ್ತಾ ಮಾಹಿತಿ ಸಂಗ್ರಹಿಸುತ್ತಿದ್ದಾಗ ಅಜ್ಜಿಯೊಂದು ನನ್ನ ಕೈಹಿಡಿದು ನನ್ನ ಉಂಗುರದ ಬೆರಳಿಗೆ ತಾಮ್ರದ ಉಂಗುರ ಹಾಕಿ ಹರಸಿದ್ದು ಇನ್ನೂ ನೆನಪಿದೆ. ನನ್ನ ಜೀವನದಲ್ಲೇ ಬಂಗಾರದ ಅಥವಾ ಬೆಳ್ಳಿ ಉಂಗುರ ಇಟ್ಟುಕೊಳ್ಳದ ನಾನು ಆ ಅಜ್ಜಿಯ ಪ್ರೀತಿಯ ಸಂಕೇತವಾಗಿ, ಆ ಅಜ್ಜಿಯೇ ತಯಾರಿಸಿದ ಆ ತಾಮ್ರದ ಉಂಗುರವನ್ನು ಬಹಳ ದಿನ ಇಟ್ಟುಕೊಂಡಿದ್ದೆ. ಆ ತಾಮ್ರದ ಉಂಗುರ ಕಿಲುಬು ಹಿಡಿದು ಕಪ್ಪಗಾದ ಮೇಲಷ್ಟೆ ಅದನ್ನು ತೆಗೆದಿದ್ದು. ಕರ್ನಾಟಕದ ಗೋಕಾಕ್, ಬಿಜಾಪುರ, ಬೆಳಗಾವಿ, ದಾವಣಗೆರೆ, ಹುಬ್ಬಳ್ಳಿ, ಧಾರವಾಡ, ಕೊಪ್ಪಳ, ರಾಯಚೂರು, ಗುಲ್ಬರ್ಗ, ಸುರಪುರ, ಶಾಪೂರ್, ಗಂಗಾವತಿ, ಹೊಸಪೇಟೆ ಮುಂತಾದೆಡೆ ಊರ ಹೊರಗೆ ಬೈಲ್ ಪತರ್ ಸಮುದಾಯದವರು ವಾಸಿಸುತ್ತಾರೆ. ಮಹಾರಾಷ್ಟ್ರ ಮತ್ತು ಆಂಧ್ರಪ್ರದೇಶದಲ್ಲೂ ಇವರ ಜನಸಂಖ್ಯೆ ಇದೆ. ಬೀದಿಬದಿಯಲ್ಲಿ ಟೆಂಟ್ ಹಾಕಿಕೊಂಡು ತಾಮ್ರ ಅಥವಾ ಹಿತ್ತಾಳೆ ಲೋಹದಲ್ಲಿ ಚುಮುಟ, ಗುಗ್ಗೆಕಡ್ಡಿ, ಕೈಬಳೆ, ಉಂಗುರ, ಚೈನು ತಯಾರಿಸುತ್ತ, ತಾವು ತಯಾರಿಸಿದ್ದನ್ನು ಅಲ್ಲೇ ಟೆಂಟ್ ಮುಂದೆ ಹರಡಿಕೊಂಡು ಮಾರುತ್ತಿರುತ್ತಾರೆ. ಬಹುತೇಕ ಗ್ರಾಮಾಂತರ ಪ್ರದೇಶದ ಸಂತೆ, ಬಸ್ ಸ್ಟ್ಯಾಂಡ್, ಜಾತ್ರೆಗಳಲ್ಲಿ ಇವರು ಕಾಣಸಿಗುತ್ತಾರೆ. ಚಿನ್ನಬೆಳ್ಳಿ ಕೊಳ್ಳಲಾರದ ಬಳೆ, ಉಂಗುರ, ಒಡವೆ ಧರಿಸಲು ಆಸೆ ಪಡುವ ಕಡುಬಡವರೇ ಇವರ ಗ್ರಾಹಕರು. ಬೈಲ್ ಪತರ್ ಸಮುದಾಯದವರು ಬಹುತೇಕ ಒಡಿಶಾದಿಂದ ಕರ್ನಾಟಕಕ್ಕೆ ವಲಸೆ ಬಂದವರೆಂದು ಮಾನವಶಾಸ್ತ್ರಜ್ಜರು ಅಭಿಪ್ರಾಯ ಪಡುತ್ತಾರೆ. ಇವರ ಮುಖಚರ್ಯೆ ಮತ್ತು ದೈಹಿಕ ಸ್ವರೂಪ ಒಡಿಶಾನ್ನರನ್ನು ಹೋಲುವಂತಿದೆ. ಇವರು ಮೂಲತಃ ಅಲೆಮಾರಿ ಸಮುದಾಯವಾಗಿದ್ದು, ಇವರು ಅಲೆಮಾರಿ ಜೀವನ ಮಾಡುವಾಗ ಇವರ ಬಳಿ ಬೆಕ್ಕು, ನಾಯಿ, ಕತ್ತೆಗಳು ಇದ್ದದ್ದರಿಂದ ಇವರನ್ನು ‘ಬೈಲ್ ಪತರ್’ ಎಂದು ಕರೆದರಂತೆ. ಮೇಲುನೋಟಕ್ಕೆ ಇವರ ವೃತ್ತಿಯಿಂದಾಗಿ ವಿಶ್ವಕರ್ಮ, ಕಮ್ಮಾರರಂತೆ ಕಾಣುವ ಈ ಸಮುದಾಯದಲ್ಲಿ ಇವರದೇ ಆದ ಏಳು ಪಂಗಡಗಳಿದ್ದು, ಅವನ್ನು ಗೌಡ್ರು(ಕಟ್ಟಿಮನಿ), ಸಮಂತ, ಪಚ್ಮೆ, ಪಡತ್ನೋಡ್, ಭಂಟೋಡು, ಮೂಕಲಜ್ಜಿ, ಕಬಸ್ತೋಡ್ ಎಂದು ಕರೆಯುತ್ತಾರೆ, ಇವರಾಡುವ ಭಾಷೆಯನ್ನು ‘ಸೂರ್ ಜಗನ್ನಾತಿ’ ಎನ್ನುತ್ತಾರೆ, ಒಡಿಶಾದಲ್ಲಿ ಹುಟ್ಟಿದ ಈ ಭಾಷೆಗೆ ಲಿಪಿ ಇಲ್ಲ. ಈ ಭಾಷೆಯಲ್ಲಿ ಕನ್ನಡ, ಮರಾಠಿ, ಒರಿಯ, ಹಿಂದಿ, ಉರ್ದು ಎಲ್ಲವೂ ಮಿಶ್ರಣವಾಗಿ ಒಳಗೊಂಡಿದೆ. ಹಿಂದೆ ಇವರು ವಿಶ್ವಕರ್ಮ ಅಥವಾ ಆಚಾರಿ ಸಮುದಾಯದಂತೆ ಚಿನ್ನ-ಬೆಳ್ಳಿ ಒಡವೆ ತಯಾರಿಸುತ್ತಾ ಅದೇ ವ್ಯಾಪಾರ ಮಾಡುತ್ತಿದ್ದರಂತೆ. ಚಿನ್ನ, ಬೆಳ್ಳಿಗಳು ಗಗನಕ್ಕೇರಿದ ಮೇಲೆ ಅವು ಇವರ ಕೈಗಟುಕದ ಕಾರಣ ಅದನ್ನು ಬಿಟ್ಟು ತಾಮ್ರ, ಹಿತ್ತಾಳೆ, ಅಲ್ಯುಮಿನಿಯಂ ಗಳಲ್ಲಿ ಒಡವೆ ತಯಾರಿಸಿ ಮಾರುತ್ತಾ ಊರೂರು ಅಲೆದಾಡತೊಡಗಿದರು. ಈ ಬಗ್ಗೆ ಕೇಳಿದಾಗ ‘‘ನಮ್ಮ ಜನಾಂಗದವರು ಒಂದು ಕಡೆ ಇರಲ್ಲ ಸರ್ ನಾವಿದ್ದ ಕಡೆ ಏನಾದರೂ ಕೊಲೆ, ಸುಲಿಗೆ, ಗಲಾಟೆಗಳು ಆದರೆ ಭಯದಿಂದ ಆ ಊರು ಬಿಟ್ಟು ಮುಂದೆ ಹೋಗ್ತೀವಿ..’’ ಎಂದು ಹೇಳುತ್ತಾರೆ. ಇದರಿಂದ ಈ ಅಸಹಾಯಕ ಸಮುದಾಯ ಅದೆಷ್ಟು ದುರ್ಬಲವಾಗಿದೆ, ಅದೆಷ್ಟು ಅಸಹಾಯಕವಾಗಿ ಭಯಭಕ್ತಿಯಿಂದ ಬದುಕುತ್ತಿದೆ ಎನ್ನುವುದು ಅರ್ಥವಾಗುತ್ತದೆ. ಗೋಕಾಕ್ ಡ್ಯಾಮ್ ಕಟ್ಟುವ ಮುಂಚೆ ಅದೇ ಜಾಗದಲ್ಲಿ ಇವರದು ಸುಮಾರು 130 ಕುಟುಂಬಗಳು ವಾಸವಾಗಿ ಇದ್ದವಂತೆ. ಡ್ಯಾಮ್ ಕಟ್ಟುವಾಗ ಇವರನ್ನು ಒಕ್ಕಲೆಬ್ಬಿಸಲಾಯಿತು ಆದರೆ ಅವರಿಗೆ ಸರಕಾರ ಪುನರ್ ವಸತಿ ಕಲ್ಪಿಸಲಿಲ್ಲ, ಅಲ್ಲಿಂದ ಆಚೆ ಅವರಿಗೆ ಸೂರು, ನೆಲೆಯಿಲ್ಲದೆ ಊರೂರು ಸುತ್ತುತ್ತಾ ತಮ್ಮ ಕುಶಲಕರ್ಮದಿಂದ ತಾಮ್ರ, ಹಿತ್ತಾಳೆಯ ಒಡವೆ ಮಾಡಿ ಮಾರುತ್ತಾ ಪಕ್ಕಾ ಅಲೆಮಾರಿಗಳಾದರು. ಇವರು ಎಲ್ಲೇ ಟೆಂಟ್ ಅಥವಾ ಗುಡಾರ ಹಾಕಿದರೆ ಪೊಲೀಸರು ಇವರನ್ನು ಎತ್ತಂಗಡಿ ಮಾಡಿಸುತ್ತಾ ತೊಂದರೆ ನೀಡುತ್ತಾರೆ. ಇವರು ಒಡವೆಗಳನ್ನು ಅಲ್ಲೇ ತಯಾರಿಸಿ ಅಲ್ಲೇ ಮಾರುವುದರಿಂದ ಜನ ಓಡಾಡುವ ಸ್ಥಳಗಳಲ್ಲೇ ಅವರು ನೆಲೆ ನಿಲ್ಲಬೇಕು. ಇಲ್ಲದಿದ್ದಲ್ಲಿ ಇವರ ಹೊಟ್ಟೆಪಾಡು ನಡೆಯಲ್ಲ, ಇವರ ಸಂಕಷ್ಟ ಪೊಲೀಸರಿಗೆ ಅರ್ಥವಾಗಲ್ಲ. ಇವರಲ್ಲಿ ಶಿಕ್ಷಣವಂತೂ ಇಲ್ಲವೇ ಇಲ್ಲ, ಇನ್ನು ಸರಕಾರಿ ಉದ್ಯೋಗ ಎಲ್ಲಿಂದ ಬರಬೇಕು? ಇವರಿಗೆ ಇರಲಿಕ್ಕೆ ನೆಲೆ ಇದ್ದರಲ್ಲವೆ ಮಕ್ಕಳು ಶಾಲೆ ಕಡೆ ಮುಖಮಾಡುವುದು? ಬೈಲ್ ಪತರ್ ಸಮುದಾಯವೇನೋ ಹಿಂದುಳಿದ ವರ್ಗದ ಪ್ರವರ್ಗ ಒಂದರಲ್ಲಿ ಕ್ರಮಸಂಖ್ಯೆ 59(ಎ)ರಲ್ಲಿದೆ. ಆದರೆ ಈ ಸಮುದಾಯದ ಬಗ್ಗೆ ಮಾಹಿತಿ ತಿಳಿಯದ ಅಧಿಕಾರಿಗಳು ಇವರಿಗೆ ಜಾತಿ ಪ್ರಮಾಣ ಪತ್ರ ನೀಡಲ್ಲ. ಈಗ ಇವರು ತಯಾರಿಸುವ ತಾಮ್ರ, ಹಿತ್ತಾಳೆ, ಅಲ್ಯೂಮಿನಿಯಂ ಒಡವೆಗಳನ್ನು ಕೊಳ್ಳುವವರು ಗ್ರಾಮಾಂತರ ಪ್ರದೇಶಗಳಲ್ಲೂ ಕಡಿಮೆಯಾಗಿದ್ದಾರೆ. ಆದ್ದರಿಂದ ಇವರಿಗೆ ಮಾಡಲು ಕೆಲಸವಿಲ್ಲ. ಹೊಟ್ಟೆಪಾಡಿಗಾಗಿ ಗಾರೆ ಕೆಲಸ, ಕೂಲಿ ಕೆಲಸಕ್ಕೆ ಹೋಗುತ್ತಾರೆ. ಕೇವಲ ಸಾವಿರಗಳಲ್ಲಿರುವ ಇಂತಹ ಸೂಕ್ಷ್ಮ ಸಮುದಾಯಗಳನ್ನು ಮೇಲೆತ್ತಲು ಲಕ್ಷಾಂತರ ಕೋಟಿ ಹಣ ಬಜೆಟ್ ನೀಡುವ ಸರಕಾರಗಳಿಗೆ ಕೇವಲ ಒಂದು ಗಂಟೆಯ ಕೆಲಸ ಅಷ್ಟೇ! ಆದರೆ ಸರಕಾರ ನಡೆಸುವವರಿಗೆ ಪಂಚೇಂದ್ರಿಯಗಳು ಇರಬೇಕು. ಬೈಲ್ ಪತ್ತರ್ ಸಮುದಾಯದ ಬಗ್ಗೆ ಸಾಮಾಜಿಕ, ಔದ್ಯೋಗಿಕ, ಆರ್ಥಿಕ ಹಿನ್ನೆಲೆಯಲ್ಲಿ ಅಧ್ಯಯನ ಮಾಡಿದ ನಮ್ಮ ಆಯೋಗ 2010ರಲ್ಲಿ ವಿಶೇಷ ಪ್ಯಾಕೇಜ್(ವಿಶೇಷ ವರದಿ 23/2010) ನೀಡಿ, ಈ ಸಮುದಾಯದ ಅಭಿವೃದ್ಧಿಗೆ ಒಂಭತ್ತು ಅಂಶಗಳನ್ನು ಪರಿಹಾರೋಪಾಯಗಳಾಗಿ ಸರಕಾರಕ್ಕೆ ಸಲಹೆ ನೀಡಿತ್ತು. ದುರಂತವೆಂದರೆ ಅಲ್ಲಿಂದ ಆಚೆ ಅಧಿಕಾರಕ್ಕೆ ಬಂದ ಯಾವುದೇ ಸರಕಾರಗಳು ತಮ್ಮ ಸರಕಾರದ ಹಿಂದುಳಿದ ವರ್ಗಗಳ ಆಯೋಗವೇ ನೀಡಿದ್ದ ವರದಿಯನ್ನು ತೆರೆದು ಕೂಡ ನೋಡಿಲ್ಲ! ಸೋ ಕಾಲ್ಡ್ ‘ಸಾಮಾಜಿಕ ನ್ಯಾಯ’ದ ಹರಿಕಾರ ಸಿದ್ದರಾಮಯ್ಯನವರು ಕೂಡ ಸದಾ ತಮ್ಮ ಜಾತಿಗೆ ಸೀಮಿತರಾಗಿ ಹೋದರೇ ಹೊರತು ತಮ್ಮ ಅಧಿಕಾರದ ಅವಧಿಯಲ್ಲಿ ಇಂತಹ ಸಣ್ಣ ಸಮುದಾಯಗಳಿಗೆ ಎಂದೂ ಸ್ಪಂದಿಸಲೇ ಇಲ್ಲ! ಅವರ ಅಕ್ಕಪಕ್ಕ ಇರುವ, ಸದಾ ‘ಸಾಮಾಜಿಕ ನ್ಯಾಯ’ದ ಭಾಷಣ ಒದರುವ ಬುದ್ಧಿಜೀವಿಗಳಿಗೂ ಇಂತಹ ಅಸಹಾಯಕ ಸಮುದಾಯಗಳು ಕಾಣಲೇ ಇಲ್ಲ. ಬದಲಿಗೆ ಈ ಬುದ್ಧಿಜೀವಿಗಳು ಸದಾ ಸಿದ್ದರಾಮಯ್ಯನವರನ್ನು ಹೊಗಳುತ್ತಾ ಹೊನ್ನ ಶೂಲಕ್ಕೆ ಏರಿಸುತ್ತಾ, ಸಿದ್ದರಾಮಯ್ಯನವರಿಗೆ ಗುರಾಣಿಗಳಾಗಿ ಇವರು ತಮ್ಮ ಬದುಕುಗಳನ್ನು ಮಾತ್ರ ಸಲೀಸಾಗಿ ಶ್ರೀಮಂತಗೊಳಿಸಿಕೊಳ್ಳುತ್ತಿದ್ದಾರೆ. ಇಂತಹ ಅಸಹಾಯಕ, ನೋವುಂಡ ಸಮುದಾಯಗಳ ನಿಟ್ಟುಸಿರು ಇವರಿಗೆ ತಾಕದೆ ಇರಲಾರದು.
HASSAN | ರಾಜನಹಳ್ಳಿಯಲ್ಲಿ ಪೆಟ್ರೋಲ್ ಸುರಿದು ಬೆಂಕಿಹಚ್ಚಿ ಸಾರಿಗೆ ಇಲಾಖೆ ನೌಕರನ ಹತ್ಯೆ
10 ಮಂದಿಯ ವಿರುದ್ಧ ಪ್ರಕರಣ ದಾಖಲು
ವಿದೇಶಕ್ಕೆ ಹಾರಿದ ಕೈ ಶಾಸಕರ ಮೇಲೆ ಹೈಕಮಾಂಡ್ ಹಾಗೂ ಡಿಕೆಶಿ ಬಣದ ಕಣ್ಣು! ಸುತ್ತಾಟಕ್ಕೆ ಹೋದರೂ ಇಲ್ಲ ನೆಮ್ಮದಿ
ರಾಜ್ಯ ಈಗಾಗಲೇ ನಾಯಕತ್ವ ಬದಲಾವಣೆ ಚರ್ಚೆ ನಡುವೆ ಕಾಂಗ್ರೆಸ್ ಶಾಸಕರು ವಿದೇಶ ಪ್ರಯಾಣ ಬೆಳೆಸಿದ್ದಾರೆ. ಇದು ಸದ್ಯ, ರಾಜಕೀಯ ವಲಯದಲ್ಲಿ ಭಾರಿ ಚರ್ಚೆಯನ್ನುಂಟು ಮಾಡಿದ್ದು, ಕೆಲ ಶಾಸಕರು ಇದು ಅವರ ವೈಯಕ್ತಿಕ ಪ್ರವಾಸ ಎಂದು ಹೇಳುತ್ತಿದ್ದಾರೆ. ಆದರೆ, ಈ ಪ್ರವಾಸದ ಕುರಿತು ಕೆಪಿಸಿಸಿಗೂ ತಿಳಿಸದೆ ಇರುವುದು ಸದ್ಯ ಭಾರಿ ಅನುಮಾನಗಳಿಗೆ ಎಡೆಮಾಡಿಕೊಟ್ಟಿದ್ದು, ಈ ವಿಚಾರ ನನಗೆ ತಿಳಿಸಿಲ್ಲ ಎಂದು ಡಿಸಿಎಂ ಡಿಕೆ ಶೀವಕುಮಾರ್ ಹೇಳಿಕೆ ನೀಡಿದ್ದು, ಸದ್ಯ ಈ ಶಾಸಕರ ವಿದೇಶ ಪ್ರವಾಸದ ಮೇಲೆ ಹದ್ದಿನ ಕಣ್ಣಿಟ್ಟು ಗಮನಿಸುತ್ತಿದ್ದಾರೆ. ಇವೆಲ್ಲಾದರ ನಡುವೆ ಈ ಪ್ರವಾಸಕ್ಕೆ ಪ್ರಾಯೋಜಕತ್ವ ನೀಡಿದ್ದು ಯಾರು ಎಂಬ ಕುರಿತು ಚರ್ಚೆಗಳು ಶುರುವಾಗಿದ್ದು, ಈ ಕುರಿತ ವರದಿ ಇಲ್ಲಿದೆ..
ಇದಕ್ಕಿಂತ ಸ್ಪಷ್ಟವಾಗಿ ಹೇಳಲು ಬರಲ್ಲ; ಭಾರತದಿಂದ ಪಾಕಿಸ್ತಾನ ಪರಮಾಣು ಸೌಲಭ್ಯಕ್ಕೆ ಧಕ್ಕೆ ನಿಜ ಎಂದ ಟಾಮ್ ಕೂಪರ್!
ಶಂಖದಿಂದ ಬಂದರೆನೇ ತೀರ್ಥ ಎನ್ನುವ ಹಾಗೆ, ಪಾಕಿಸ್ತಾನಕ್ಕೆ ಪಶ್ಚಿಮದಿಂದ ಬರುವ ಆದೇಶಗಳು, ವರದಿಗಳೇ ವೇದವಾಕ್ಯ. ಆಪರೇಷನ್ ಸಿಂಧೂರ ಸೇನಾ ಕಾರ್ಯಾಚರಣೆ ಸಮಯದಲ್ಲಿ ಭಾರತವು ಕಿರಾನಾ ಹಿಲ್ಸ್ ಪರಮಾಣು ಸೌಲಭ್ಯಕ್ಕೆ ಧಕ್ಕೆ ತಂದಿರುವ ಬಗ್ಗೆ ಯಾರೂ ಏನೇ ಹೇಳಿದರೂ ಕೇಳದ ಪಾಕಿಸ್ತಾನ, ಈಗ ವಾಯುಯಾನ ವಿಶ್ಲೇಷಕ ಟಾಮ್ ಕೂಪರ್ ನೀಡಿರುವ ವರದಿಯಿಂದ ಮುಖ ಮುಚ್ಚಿಕೊಂಡಿದೆ. ಭಾರತೀಯ ವಾಯುಸೇನೆ, ಪಾಕಿಸ್ತಾನದ ಕಿರಾನಾ ಹಿಲ್ಸ್ ಮೇಲೆ ದಾಳಿ ಮಾಡಿರುವುದು ನಿಜ ಎಂದು ಟಾಮ್ ಕೂಪರ್ ಸ್ಪಷ್ಟಪಡಿಸಿದ್ದಾರೆ.
ಸೂರ್ಯಗ್ರಹಣ ಕಣ್ತುಂಬಿಕೊಂಡ ಜನರು, ಕಂಕಣ ಸೂರ್ಯಗ್ರಹಣದ ಬಗ್ಗೆ ಇಲ್ಲಿದೆ ಮಾಹಿತಿ... Solar Eclipse
ವರ್ಷದ ಮೊದಲ ಸೂರ್ಯಗ್ರಹಣ ಸಂಭವಿಸಿದ್ದು, ಕಂಕಣ ಸೂರ್ಯಗ್ರಹಣ ಕಣ್ತುಂಬಿಕೊಂಡ ಜನರು ಪುಳಕಿತರಾದರು. ಖಗೋಳ ಲೋಕದಲ್ಲಿ ಮತ್ತೊಂದು ಅದ್ಭುತ ಘಟನೆ ನಡೆದಿದ್ದು, ಫೆಬ್ರವರಿ ತಿಂಗಳಲ್ಲಿ ವರ್ಷದ ಮೊದಲ ಸೂರ್ಯಗ್ರಹಣ ಬಂದಿದೆ. ಬಾಹ್ಯಾಕಾಶ ಲೋಕದ ವಿಸ್ಮಯವನ್ನ ಇಡೀ ಪ್ರಪಂಚವೇ ಕಣ್ತುಂಬಿಕೊಂಡಿದೆ. 2026 ಫೆಬ್ರವರಿ 17 ಮಂಗಳವಾರ ಸಂಭವಿಸಿದ ಕಂಕಣ ಸೂರ್ಯಗ್ರಹಣ, ದಕ್ಷಿಣ ಆಫ್ರಿಕಾ ಸೇರಿ ಜಿಂಬಾಬ್ವೆ, ಬೋತ್ಸ್ವಾನಾ, ನಮೀಬಿಯಾ, ಮಾರಿಷಸ್,
Congress vs Bjp: ಬಿಜೆಪಿಯ 3 ಸುಳ್ಳುಗಳಿವು: ಸುಳ್ಳು ಸುದ್ದಿಗಳ ಫ್ಯಾಕ್ಟರಿಯಾಗಿರುವ ಬಿಜೆಪಿಯವರೇ: ಕಾಂಗ್ರೆಸ್ ಟೀಕೆ
Congress vs Bjp: ಕರ್ನಾಟಕ ಕಾಂಗ್ರೆಸ್ ಮತ್ತು ಬಿಜೆಪಿಯ ನಡುವೆ ಟ್ವೀಟ್ ವಾರ್ ಶುರುವಾಗಿದೆ. ಸುಳ್ಳು ಸುದ್ದಿಗಳ ಫ್ಯಾಕ್ಟರಿಯಾಗಿರುವ ಬಿಜೆಪಿಯವರೇ, ಮೊಸಳೆ ಕಣ್ಣೀರು ಸುರಿಸುವ ಮುನ್ನ ಈ ಸತ್ಯಾಂಶಗಳನ್ನು ಕಣ್ಣು ತೆರೆದು ನೋಡಿ. ರಾಜ್ಯದ ಜನರಿಗೆ ವಿಷ ಕುಡಿಸುತ್ತಿರುವುದು ನಾವಲ್ಲ, ದಿನಬೆಳಗಾದರೆ ಅಗತ್ಯ ವಸ್ತುಗಳ ಬೆಲೆ ಏರಿಸಿ ಜನರ ರಕ್ತ ಹೀರುತ್ತಿರುವ ನಿಮ್ಮ ಕೇಂದ್ರ ಸರ್ಕಾರ ಎಂದು
ಫೈರ್ ಮೆನ್ ಹುದ್ದೆಯನ್ನು ಫೈರ್ ಫೈಟರ್ ಎಂದು ಬದಲಿಸಿದ ಅಗ್ನಿಶಾಮಕ ಇಲಾಖೆ: ಮಹಿಳೆಯರಿಗೆ ಸಿಗಲಿದ್ಯಾ ಅವಕಾಶ?
ರಾಜ್ಯದಲ್ಲಿ ಅಗ್ನಿಶಾಮಕ ಇಲಾಖೆ ಆರಂಭವಾಗಿ ಸುಮಾರು 8 ದಶಕಗಳು ಕಳೆದಿದ್ದರೂ ರಾಜ್ಯದಲ್ಲಿ ಒಬ್ಬ ಮಹಿಳಾ ಫೈರ್ ಫೈಟರ್ ಸಹ ನೇಮಕವಾಗಿರಲಿಲ್ಲ. ಇದೀಗ ಈ ಪರಿಸ್ಥಿತಿ ಬದಲಾಗುವ ಸಮಯ ಬಂದಿದ್ದು, ಕೇಂದ್ರ ಸರ್ಕಾರದ ಸೂಚನೆಯಂತೆ ಅಗ್ನಿಶಾಮಕ ಇಲಾಖೆಯಲ್ಲಿನ ಫೈರ್ ಮೆನ್ ಹಾಗೂ ಲೀಡ್ ಫೈರ್ ಮೆನ್ ಹುದ್ದೆಯ ಹೆಸರುಗಳನ್ನು ಫೈರ್ ಫೈಟರ್ ಹಾಗೂ ಲೀಡ್ ಫೈರ್ ಫೈಟರ್ ಎಂದು ಬದಲಾಯಿಸಲಾಗುತ್ತಿದೆ. ಇದರಿಂದಾಗಿ ಮುಂಬರುವ ದಿನಗಳಲ್ಲಿ ಮಹಿಳೆಯರನ್ನು ಈ ಹುದ್ದೆಗೆ ನೇಮಿಸಿಕೊಳ್ಳಲು ಸುಲಭವಾಗಲಿದ್ದು, ರಾಜ್ಯದ ಅಗ್ನಿಶಾಮಕ ಇಲಾಖೆಯಲ್ಲಿ ಮಹಿಳಾ ಫೈರ್ ಫೈಟರ್ ಗಳನ್ನು ಕಾಣುವ ಭರವಸೆ ಮೂಡಿದೆ. ಇನ್ನು, ವಿಶೇಷವೆಂದರೆ, ಈ ಕುರಿತಂತೆ ವಿಕ 83 ವರ್ಷಗಳು ಕಳೆದರೂ ರಾಜ್ಯದಲ್ಲಿ ಒಬ್ಬ ಮಹಿಳಾ ಫೈರ್ ಫೈಟರ್ ಸಹ ನೇಮಕವಾಗಿಲ್ಲ ಎಂಬ ಕುರಿತ ವಿಸೃತ್ತ ವರದಿಯನ್ನು ಹಂಚಿಕೊಂಡ ಕೆಲ ದಿನಗಳಲ್ಲೇ ಅಗ್ನಿಶಾಮಕ ಇಲಾಖೆ ಈ ನಿರ್ಧಾರ ಕೈಗೊಂಡಿದೆ.
ಇರಾನ್ ವಿರುದ್ಧ ಅಮೆರಿಕ ಸೇನೆಯ ಅಂತಿಮ ಹಂತದ ಸಿದ್ಧತೆ, ಆತಂಕದ ವಾತಾವರಣ ನಿರ್ಮಾಣ | US Military
ಇರಾನ್ ಹೇಗಾದರೂ ಸರಿ ಅಮೆರಿಕ ಎದುರು ಮಂಡಿಯೂರಬೇಕು ಎಂಬುದು ಟ್ರಂಪ್ ಅವರ ನಿರ್ಧಾರ. ಹೀಗಾಗಿಯೇ ಡೊನಾಲ್ಡ್ ಟ್ರಂಪ್ ಅವರು ಎಲ್ಲಾ ರೀತಿಯ ಅಸ್ತ್ರ ಪ್ರಯೋಗ ಮಾಡುತ್ತಾ, ಎದುರಾಳಿ ಇರಾನ್ ಎದೆಯಲ್ಲಿ ಭಯ ಹುಟ್ಟಿಸುವ ಕೆಲಸ ಮಾಡುತ್ತಿದ್ದಾರೆ. ಅಮೆರಿಕ ಮತ್ತು ಇರಾನ್ ನಡುವಿನ ರಾಜತಾಂತ್ರಿಕ ಸಂಧಾನ ಯಶಸ್ವಿಯಾದರೆ ಯುದ್ಧವನ್ನ ತಪ್ಪಿಸುವ ಸಾಧ್ಯತೆ ಇದ್ರೂ, ಪರ್ಷಿಯನ್ ಗಲ್ಫ್ ಪ್ರದೇಶದಲ್ಲಿ ದೊಡ್ಡಣ್ಣ
ಪಹಲ್ಗಾಮ್ ಭಯೋತ್ಪಾದಕ ದಾಳಿ ಯೋಜನೆ ರೂಪಿಸಿ ಸಂಕಷ್ಟಕ್ಕೆ ಸಿಲುಕಿರುವ ಪಾಕಿಸ್ತಾನ, ಭಾರತ ನೀಡುತ್ತಿರುವ ವಾಟರ್ ಶಾಕ್ಗೆ ಅಕ್ಷರಶಃ ಬೆಚ್ಚಿಬಿದ್ದಿದೆ. ಈಗಾಗಲೇ ಪಾಕಿಸ್ತಾನದೊಂದಿಗಿನ ಸಿಂಧೂ ಜಲ ಒಪ್ಪಂದ ರದ್ದುಗೊಳಿಸಿರುವ ಭಾರತ, ಈಗ ಪಾಕಿಸ್ತಾನಕ್ಕೆ ಹರಿಯುವ ರಾವಿ ನದಿಯ ಹೆಚ್ಚುವರಿ ನೀರನ್ನು ತಡೆಯಲು ಮುಂದಾಗಿದೆ. ಒಂದು ವೇಳೆ ಭಾರತ ರಾವಿ ನದಿಯ ಹೆಚ್ಚುವರಿ ನೀರನ್ನು ತಡೆದಿದ್ದೇ ಆದಲ್ಲಿ, ಪಾಕಿಸ್ತಾನದ ಜಲಕಂಟಕ ತೀವ್ರ ಸ್ವರೂಪ ಪಡೆಯುವುದು ಖಚಿತ. ಈ ಕುರಿತು ಇಲ್ಲಿದೆ ಹೆಚ್ಚಿನ ಮಾಹಿತಿ.
ಸಿಎಂ ಬದಲಾವಣೆ : ಗುರುಗಳು ಜಪಕ್ಕೆ ಕೂತಿದ್ದಾರೆ, 3ನೇ ಡೇಟ್ ರಹಸ್ಯ ಬಿಚ್ಚಿಟ್ಟ- ಇಕ್ಬಾಲ್ ಹುಸೇನ್
Karnataka CM Race : ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಕೂಗು ಮತ್ತೆ ಜೋರಾಗಿ ಸಾಗುತ್ತಿದೆ. ಡಿಸಿಎಂ ಡಿಕೆ ಶಿವಕುಮಾರ್ ಅವರ ಆಪ್ತ ವಲಯದಲ್ಲಿ ಕಾಣಿಸಿಕೊಳ್ಳುವ ಇಕ್ಬಾಲ್ ಹುಸೇನ್, ಎರಡು ಡೇಟ್ ಮಿಸ್ ಆಗಿರಬಹುದು, ಮೂರನೇ ಡೇಟ್ ನಲ್ಲಿ ನಮ್ಮ ಸಾಹೇಬ್ರು ಮುಖ್ಯಮಂತ್ರಿ ಆಗುವುದು ಖಚಿತ ಎಂದು ಹೇಳಿದ್ದಾರೆ. ಇನ್ನೊಂದು ಕಡೆ, ಸುಮಾರು ಇಪ್ಪತ್ತು ಶಾಸಕರು ವಿದೇಶ ಪ್ರವಾಸಕ್ಕೆ ಹೊರಟಿದ್ದಾರೆ.
ನವದೆಹಲಿ: ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರು ಭಾರತಕ್ಕೆ ಭೇಟಿ ನೀಡಿದ್ದು, ರಕ್ಷಣಾ ಕ್ಷೇತ್ರದಲ್ಲಿ ಹಲವು ಮಹತ್ವದ ಚರ್ಚೆ ನಡೆದಿದೆ. ಭಾರತ ಹಾಗೂ ಫ್ರಾನ್ಸ್ ನಡುವೆ ಮಂಗಳವಾರ ಫೆಬ್ರವರಿ 17ರಂದು ನಡೆದ ದ್ವಿಪಕ್ಷೀಯ ಮಾತುಕತೆಯಲ್ಲಿ ರಕ್ಷಣಾ ಸಂಬಂಧಕ್ಕೆ ಉತ್ತೇಜನ ನೀಡಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಮುಂಬೈನಲ್ಲಿ ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರೊಂದಿಗೆ ದ್ವಿಪಕ್ಷೀಯ
ವೃತ್ತಿಜೀವನದ ಮಹತ್ವದ ತಿರುವನ್ನು ನೆನಪಿಸಿಕೊಂಡ ಹಾರ್ದಿಕ್ ಪಾಂಡ್ಯ
ಹೊಸದಿಲ್ಲಿ: ಭಾರತ ಟಿ20 ಕ್ರಿಕೆಟ್ ತಂಡದ ಪ್ರಮುಖ ಆಲ್ರೌಂಡರ್ಗಳಲ್ಲೊಬ್ಬರಾದ ಹಾರ್ದಿಕ್ ಪಾಂಡ್ಯ ತಮ್ಮ ವೃತ್ತಿಜೀವನಕ್ಕೆ ಮಹತ್ವದ ತಿರುವು ನೀಡಿದ ಘಟನೆಯನ್ನು ನೆನಪಿಸಿಕೊಂಡಿದ್ದಾರೆ. 2016ರ ಐಸಿಸಿ ಪುರುಷರ ಟಿ20 ವಿಶ್ವಕಪ್ ಪಂದ್ಯಾವಳಿಯಲ್ಲಿ ಬಾಂಗ್ಲಾದೇಶ ವಿರುದ್ಧದ ನಾಟಕೀಯ ಕೊನೆಯ ಓವರ್ ಅವರನ್ನು ದೇಶದ ಕ್ರಿಕೆಟ್ ಕ್ಷೇತ್ರದಲ್ಲಿ ಐಕಾನ್ ಆಗಿ ರೂಪಿಸಿತು. ಕೊನೆಯ ಓವರ್ನಲ್ಲಿ 11ಕ್ಕಿಂತ ಹೆಚ್ಚು ರನ್ ನೀಡದಂತೆ ಮಿತವ್ಯಯ ಸಾಧಿಸುವ ಹೊಣೆ ಹೊತ್ತಿದ್ದ ಪಾಂಡ್ಯ, ಟೂರ್ನಿಯನ್ನು ಭಾರತದ ಪಾಲಿಗೆ ಅವಿಸ್ಮರಣೀಯ ಕ್ಷಣವನ್ನಾಗಿಸಿದರು. ಅದಾದ ಒಂದು ದಶಕದ ಬಳಿಕ ಭಾರತೀಯ ತಂಡ ಚಾಂಪಿಯನ್ಶಿಪ್ ಉಳಿಸಿಕೊಳ್ಳುವ ಅಭಿಯಾನವನ್ನು ಮುಂದುವರಿಸುತ್ತಿದೆ. ಆ ರಾತ್ರಿ ತಮ್ಮ ವೃತ್ತಿಜೀವನಕ್ಕೆ ಭದ್ರವಾದ ಅಡಿಪಾಯ ದೊರಕಿತು ಹಾಗೂ ಮುಂದಿನ ದಿನಗಳಲ್ಲಿ ಅನುಕೂಲಕರ ಘಟನೆಗಳು ವೃತ್ತಿಬದುಕನ್ನು ಕಟ್ಟಿಕೊಟ್ಟವು ಎಂದು ಅವರು ಹೇಳಿದ್ದಾರೆ. ನಾನು ಇಂದು ಈ ಮಟ್ಟದ ಆಟಗಾರನಾಗಿದ್ದರೆ ಇಂತಹ ಕ್ಷಣಗಳೇ ಕಾರಣ ಎಂದು ನಾನು ಭಾವಿಸುತ್ತೇನೆ. ಅಂತರರಾಷ್ಟ್ರೀಯ ವೃತ್ತಿಜೀವನದ ಆರಂಭಿಕ ಹಂತಗಳಲ್ಲಿ ಸವಾಲುಗಳು ಇದ್ದವು. ನಾನು ನನ್ನ ಸಾಮರ್ಥ್ಯವನ್ನು ಪ್ರದರ್ಶಿಸಬೇಕಿತ್ತು. ಮುಖ್ಯವಾಗಿ ವಿಶ್ವಾಸವನ್ನು ಬೆಳೆಸಿಕೊಳ್ಳಬೇಕಿತ್ತು. ಕ್ರಿಕೆಟ್ನಲ್ಲಿ ಶೇಕಡಾ 1ರಷ್ಟು ಅವಕಾಶವೂ ಮಹತ್ವದ್ದೇ. ಪಂದ್ಯದ ಕೊನೆಯ ಎಸೆತದವರೆಗೂ ಪಂದ್ಯ ಮುಗಿದಿರುವುದಿಲ್ಲ ಎಂದು ಜಿಯೊಸ್ಟಾರ್ ಜೊತೆಗಿನ ಸಂವಾದದಲ್ಲಿ ವಿವರಿಸಿದರು. ಬಾಂಗ್ಲಾದೇಶ ವಿರುದ್ಧದ ಪಂದ್ಯ ಇದಕ್ಕೆ ಉತ್ತಮ ಉದಾಹರಣೆ. ವಿಕೆಟ್ ಪಡೆಯುವ ಒಂದು ಎಸೆತದ ಮೊದಲು ಬ್ಯಾಟರ್ ನನ್ನ ಎದುರೇ ಪಂದ್ಯ ಮುಗಿದಂತೆ ಸಂಭ್ರಮಿಸಲು ಆರಂಭಿಸಿದ್ದರು. ಎಲ್ಲವೂ ನನ್ನ ಕಣ್ಣೆದುರೇ ನಡೆಯುತ್ತಿತ್ತು. ಇಂತಹ ಘಟನೆಗಳು ಮಧುರ ನೆನಪಿನ ಕ್ಷಣಗಳು. ಆರಂಭಿಕ ದಿನಗಳು ಹೇಗಿದ್ದವು ಎಂದು ನೆನಸಿಕೊಂಡಾಗ, ನನ್ನ ವೃತ್ತಿಜೀವನ ರೂಪಿಸುವಲ್ಲಿ ಅದು ಮಹತ್ವದ ಕ್ಷಣವಾಯಿತು ಎಂದು ಅವರು ಹೇಳಿದರು. ಭಾರತ ರೋಚಕವಾಗಿ ಈ ಪಂದ್ಯವನ್ನು ಒಂದು ರನ್ ಅಂತರದಿಂದ ಗೆದ್ದಿತ್ತು. ತಮ್ಮ ಬ್ಯಾಟಿಂಗ್ ಸಾಮರ್ಥ್ಯ ಇನ್ನೂ ಸಂಪೂರ್ಣವಾಗಿ ಅನಾವರಣಗೊಂಡಿಲ್ಲ ಎಂಬ ವಿಶ್ವಾಸವನ್ನು ಪಾಂಡ್ಯ ವ್ಯಕ್ತಪಡಿಸಿದರು. ಇತ್ತೀಚಿನ ಐಪಿಎಲ್ ಸೀಸನ್ ಬಳಿಕ ಬ್ಯಾಟ್ಸ್ಮನ್ ಆಗಿಯೂ ರೂಪುಗೊಳ್ಳಬೇಕು ಎಂಬ ನಿರ್ಧಾರಕ್ಕೆ ಬಂದಿರುವುದಾಗಿ ತಿಳಿಸಿದ ಅವರು, ಪ್ರೇಯಸಿ ಮೋಹಿಕಾ ಅವರ ಪಾತ್ರವನ್ನೂ ಸ್ಮರಿಸಿದರು.
IT - BT: ಕರಾವಳಿ ಅಭಿವೃದ್ಧಿ: ಸಚಿವ ಪ್ರಿಯಾಂಕ್ ಖರ್ಗೆ vs ಉದ್ಯಮಿ ಮೋಹನ್ದಾಸ್ ಪೈ ನಡುವೆ ಟ್ವೀಟ್ ಸಮರ
ಸಚಿವ ಪ್ರಿಯಾಂಕ್ ಖರ್ಗೆ vs ಉದ್ಯಮಿ ಮೋಹನ್ದಾಸ್ ಪೈ ನಡುವೆ ಟ್ವೀಟ್ ವಾರ್ ಶುರುವಾಗಿದೆ. ಕರ್ನಾಟಕದ ಕರಾವಳಿ ಅಭಿವೃದ್ಧಿ, ಕರಾವಳಿಗೆ ಐಟಿ - ಬಿಟಿ ಕಂಪನಿಗಳು ಬರುವ ವಿಚಾರ ಹಾಗೂ ಕರ್ನಾಟಕದ ಆದಾಯದಲ್ಲಿ ಕರಾವಳಿಯ ಪಾಲು ಸೇರಿದಂತೆ ಹಲವು ವಿಚಾರಗಳಿಗೆ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆ ನಡೆದಿದೆ. ಮುಖ್ಯವಾಗಿ ಕೋಮುಗಲಭೆಯ ಕಾರಣಕ್ಕೆ ಕರ್ನಾಟಕದ ಕರಾವಳಿಗೆ ಐಟಿ -
ಬಾಂಗ್ಲಾದೇಶ ರಾಷ್ಟ್ರೀಯ ಚುನಾವಣೆಯಲ್ಲಿ ಐತಿಹಾಸಿಕ ಗೆಲುವು ದಾಖಲಿಸಿರುವ ಬಾಂಗ್ಲಾದೇಶ ನ್ಯಾಷನಲಿಸ್ಟ್ ಪಾರ್ಟಿ (ಬಿಎನ್ಪಿ), ಪಕ್ಷದ ಮುಖ್ಯಸ್ಥ ತಾರಿಕ್ ರೆಹಮಾನ್ ಅವರನ್ನು ದೇಶದ ಪ್ರಧಾನಮಂತ್ರಿ ಹುದ್ದೆ ಮೇಲೆ ಕೂರಿಸಿದೆ. ತಾರಿಕ್ ರೆಹಮಾನ್ ನಿನ್ನೆ (ಫೆ.17-ಮಂಗಳವಾರ) ಬಾಂಗ್ಲಾದೇಶದ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಈ ಸಮಾರಂಭದಲ್ಲಿ ಭಾರತದ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಭಾಗವಹಿಸಿದ್ದು, ಬಾಂಗ್ಲಾದ ನೂತನ ಪ್ರಧಾನಿ ಅವರಿಗೆ ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಬರೆದ ಅಭಿನಂದನಾ ಪತ್ರವನ್ನು ತಲುಪಿಸಿದ್ದಾರೆ. ಇಲ್ಲಿದೆ ಮಾಹಿತಿ.
ರೈತರ ಕೊರಳಿಗೆ ಉರುಳಾಗಿರುವ ಜಾನುವಾರು ಹತ್ಯೆ ಪ್ರತಿಬಂಧಕ ಕಾಯ್ದೆ
ಮಾರ್ಚ್ 6ಕ್ಕೆ ರಾಜ್ಯ ಬಜೆಟ್ ಮಂಡನೆಯಾಗಲಿದೆ. ಇದಕ್ಕೆ ಸಂಬಂಧಿಸಿ ಬಜೆಟ್ ಪೂರ್ವಭಾವಿ ಸಭೆಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ನಡೆಯುತ್ತಿವೆ. ವಿವಿಧ ವಲಯಗಳ ಮುಖಂಡರು ಅಭಿವೃದ್ಧಿಗೆ ಸಂಬಂಧಿಸಿ ತಮ್ಮ ಅಭಿಪ್ರಾಯಗಳನ್ನು, ಬೇಡಿಕೆಗಳನ್ನು ಸಭೆಯ ಮುಂದಿಡುತ್ತಿದ್ದಾರೆ. ಈ ಸಂದರ್ಭದಲ್ಲಿ ರಾಜ್ಯದ ರೈತ ಮುಖಂಡರು ಹಲವು ಬೇಡಿಕೆಗಳನ್ನು ಮಂಡಿಸಿದ್ದು, ಅವುಗಳನ್ನು ಈ ಬಾರಿಯ ಬಜೆಟ್ನಲ್ಲಿ ಈಡೇರಿಸಬೇಕು ಎಂದು ಒತ್ತಾಯಿಸಿದ್ದಾರೆ. ಬೇಡಿಕೆಗಳಲ್ಲಿ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಕಾಯ್ದೆಯನ್ನು ಹಿಂದೆಗೆಯಬೇಕು ಎನ್ನುವುದು ಒಂದು. ಅದರ ಜೊತೆಗೇ ಕೃಷಿ ಚಟುವಟಿಕೆಗಳಲ್ಲಿ ತೊಡಗಿರುವ ರೈತ ಯುವಕರನ್ನು ವಿವಾಹವಾಗುವ ಹೆಣ್ಣು ಮಕ್ಕಳಿಗೆ ಕನಿಷ್ಠ 10 ಲಕ್ಷ ರೂ. ಠೇವಣಿ ಇಡಬೇಕು, ಕೃಷಿ ಪೂರಕ ಸಣ್ಣ ಉದ್ದಿಮೆಗಳನ್ನು ಸ್ಥಾಪಿಸುವ ಜತೆಗೆ ಭದ್ರತೆ ನೀಡಿ ಬಡ್ಡಿ ರಹಿತ ಸಾಲಕ್ಕೆ ಉತ್ತೇಜನ ನೀಡಬೇಕು, ರೈತರಿಗೆ ನೇರ ತಲುಪುವಂತೆ ಪಿಡಿಎ ವ್ಯವಸ್ಥೆಯನ್ನು ಮಾಡಬೇಕು. ಕೇಂದ್ರ ಸರಕಾರ ಜಾರಿಗೆ ತರಲು ಹೊರಟಿರುವ ವಿದ್ಯುತ್ ಕಾಯ್ದೆ 2025, ಬೀಜ ಮಸೂದೆ 2025, ಕೃಷಿ ಉತ್ಪನ್ನಗಳ ಮಾರುಕಟ್ಟೆ ರಾಷ್ಟ್ರೀಯ ಚೌಕಟ್ಟು ನೀತಿಯನ್ನು ರಾಜ್ಯದಲ್ಲಿ ಜಾರಿಗೆ ತರುವುದಿಲ್ಲ ಎಂದು ಈ ಅಧಿವೇಶನದಲ್ಲಿ ಘೋಷಿಸಬೇಕು, ರೈತರಿಗೆ ಬೆಂಬಲ ಬೆಲೆ ಒದಗಿಸುವ ಸಲುವಾಗಿ ಕನಿಷ್ಠ 20 ಸಾವಿರ ಕೋಟಿ ಆವರ್ತ ನಿಧಿಯನ್ನು ಮೀಸಲಿಡಬೇಕು, ಸಮಗ್ರ ಪಡಿತರ ವ್ಯವಸ್ಥೆಯನ್ನು ರೂಪಿಸಿ ಭತ್ತ, ರಾಗಿ, ಜೋಳ, ತೊಗರಿಬೇಳೆ, ಎಣ್ಣೆಕಾಳು, ಸಿರಿಧಾನ್ಯ ಮುಂತಾದ ಅವಶ್ಯಕ ಉತ್ಪನ್ನಗಳನ್ನು ಎಂ.ಎಸ್.ಪಿ ದರದಲ್ಲಿ ರೈತರಿಂದಲೇ ನೇರವಾಗಿ ಕೊಳ್ಳುವ ವ್ಯವಸ್ಥೆಯನ್ನು ರೂಪಿಸಬೇಕು, ಬಗರ್ ಹುಕುಂ ಸಾಗುವಳಿದಾರರಿಗೆ ದರಖಾಸ್ತು ಮಂಜೂರು ಮಾಡಲು ತೊಡಕಾಗಿರುವ ತಾಂತ್ರಿಕ ತೊಂದರೆಗಳನ್ನು ನಿವಾರಿಸಲು ಕಂದಾಯ ಕಾಯ್ದೆಗೆ ತಿದ್ದುಪಡಿ ತಂದು ಹಕ್ಕುಪತ್ರ ನೀಡಲು ಘೋಷಿಸಬೇಕು, 2013ರ ಭೂ-ಸ್ವಾಧೀನ ಕಾಯ್ದೆಯನ್ನು ಕೈಗಾರಿಕೆ, ರಾಷ್ಟ್ರೀಯ ಹೆದ್ದಾರಿ, ನೀರಾವರಿ ಯೋಜನೆಗಳಿಗೆ ಭೂ ಸ್ವಾಧೀನ ಪಡಿಸಿಕೊಳ್ಳಲು ಅನ್ವಯ ಮಾಡಲಾಗಿದೆ. ಆದರೆ, ಗ್ರಾಮಾಂತರ ಪ್ರದೇಶದಲ್ಲಿ ವಸತಿ ಉದ್ದೇಶಕ್ಕೆ ಸ್ವಾಧೀನ ಪಡಿಸಿಕೊಳ್ಳುವ ಭೂಮಿಗೂ ಈ ಕಾಯ್ದೆಯನ್ನು ಅನ್ವಯಿಸಬೇಕು. ಕರ್ನಾಟಕದ ಕೃಷಿಯ ಹೆಚ್ಚು ಭೂಮಿ ಮರಳು ಭೂಮಿಯಾಗಿ ಪರಿವರ್ತನೆ ಆಗುತ್ತಿರುವುದು ತುಂಬಾ ಆತಂಕಕಾರಿಯಾಗಿದೆ. ಇದನ್ನು ತಡೆಗಟ್ಟಲು ವಿಶೇಷ ಕಾಳಜಿಯ ಕಾರ್ಯಕ್ರಮವನ್ನು ರೂಪಿಸಬೇಕು ಎಂದು ಸಭೆಯಲ್ಲಿ ಆಗ್ರಹಿಸಿದ್ದಾರೆ. ಸುಮಾರು 25 ಅಂಶಗಳ ಬೇಡಿಕೆಗಳನ್ನು ಮಂದಿಟ್ಟು, ಈ ಬಾರಿಯ ಬಜೆಟ್ನಲ್ಲಿ ಕೃಷಿಗೆ ಆದ್ಯತೆಯನ್ನು ನೀಡಬೇಕು ಎಂದು ಮುಖ್ಯಮಂತ್ರಿಯನ್ನು ಒತ್ತಾಯಿಸಿದ್ದಾರೆ. ಬೇಡಿಕೆಗಳಲ್ಲಿ ಜಾನುವಾರು ಹತ್ಯೆ ಪ್ರತಿಬಂಧಕ ಕಾಯ್ದೆ ಗೆ ಸಂಬಂಧಿಸಿ ರೈತರ ಬೇಡಿಕೆಗೆ ರಾಜಕೀಯ ಆಯಾಮವೂ ಇದೆ. ಈ ಕಾಯ್ದೆ ರೈತರ ಪಾಲಿಗೆ ಉರುಳಾಗಿ ಪರಿಣಮಿಸಿದೆ. ಜಾನುವಾರು ಸಾಕಣೆಯ ಮೂಲಕ ಬದುಕು ಕಟ್ಟಿಕೊಂಡಿರುವ ಗ್ರಾಮೀಣ ಪ್ರದೇಶದ ಸಾವಿರಾರು ರೈತರು ಈ ಕಾಯ್ದೆಯ ಕಾರಣದಿಂದಲೇ ಜಾನುವಾರು ಸಾಕಣೆಗೆ ಬೆನ್ನು ಹಾಕುವ ಪರಿಸ್ಥಿತಿನಿರ್ಮಾಣವಾಗಿದೆ. ಈ ಕಾಯ್ದೆಯನ್ನು ಜಾನುವಾರುಗಳನ್ನು ಸಾಕುವ ರೈತರ ಹಿತಾಸಕ್ತಿಗಾಗಿ ಜಾರಿಗೊಳಿಸಲಾಗಿದೆ ಎಂದು ನಂಬಿಸಿ ರೈತರ ಕೊರಳು ಕುಯ್ಯುವ ಕೆಲಸವನ್ನು ಹಿಂದಿನ ಬಿಜೆಪಿ ಸರಕಾರ ಮಾಡಿದೆ. ಇಂತಹದೊಂದು ಕಾಯ್ದೆಯ ಬೇಡಿಕೆ ರೈತರಿಂದ ಯಾವತ್ತೂ ಬಂದಿರಲಿಲ್ಲ. ಇದು ಕೃಷಿಯೊಂದಿಗೆ ಯಾವ ಸಂಬಂಧವನ್ನು ಹೊಂದಿರದ ಆರೆಸ್ಸೆಸ್ ಸಂಘಟನೆಯಿಂದ ಹೊರಹೊಮ್ಮಿದ ಆಗ್ರಹವಾಗಿತ್ತು. ರಾಜ್ಯದಲ್ಲಿ ದನಗಳ್ಳರ ಹಾವಳಿ ಹೆಚ್ಚಿದೆ, ಅಕ್ರಮವಾಗಿ ದನಸಾಗಾಟ ನಡೆಯುತ್ತಿದೆ, ಅಕ್ರಮವಾಗಿ ಜಾನುವಾರು ಹತ್ಯೆ ನಡೆಯುತ್ತಿದೆ ಎನ್ನುವ ರಾಜಕೀಯ ಗದ್ದಲಗಳನ್ನು ಕೃತಕವಾಗಿ ಸೃಷ್ಟಿಸಿ ಬಳಿಕ ಇಂತಹದೊಂದು ಕಾಯ್ದೆಯನ್ನು ರೈತರ ಹಿತಾಸಕ್ತಿಯನ್ನು ನೆಪ ಮಾಡಿ ಜಾರಿಮಾಡಲಾಯಿತು. ಆದರೆ ಇಲ್ಲಿಯವರೆಗೆ ಈ ಕಾಯ್ದೆಯಿಂದ ನಮಗೆ ಲಾಭವಾಗಿದೆ ಎಂದು ಎದೆಮುಟ್ಟಿ ಒಬ್ಬನೇ ಒಬ್ಬ ರೈತನಿಗೆ ಹೇಳಲು ಸಾಧ್ಯವಾಗಿಲ್ಲ. ಬದಲಿಗೆ ತಾನು ಸಾಕಿದ ಗೋವನ್ನು ಯಾರಿಗೆ, ಯಾವಾಗ ಮಾರಾಟ ಮಾಡಬೇಕು, ಮಾಡಬಾರದು ಎನ್ನುವ ಹಕ್ಕನ್ನು ರೈತ ಕಳೆದುಕೊಳ್ಳುವಂತಾಯಿತು. ರಾಜ್ಯದಲ್ಲಿ ಅಕ್ರಮ ದನಸಾಗಾಟ, ಅಕ್ರಮಕಸಾಯಿಖಾನೆ, ಅಕ್ರಮ ಗೋಹತ್ಯೆಗಳು ನಡೆಯುತ್ತಿತ್ತು ಎನ್ನುವುದರಲ್ಲಿ ಎರಡು ಮಾತಿಲ್ಲ. ಅಮಾನವೀಯವಾಗಿ ಗೋವುಗಳನ್ನು ಸಾಗಿಸುತ್ತಿದ್ದ ಪ್ರಕರಣಗಳು ವ್ಯಾಪಕವಾಗಿ ಬೆಳಕಿಗೆ ಬಂದಿವೆ. ಅಕ್ರಮ ಗೋಗಳ್ಳರು ಮತ್ತು ಅಕ್ರಮವಾಗಿ ಅಮಾನವೀಯರೀತಿಯಲ್ಲಿ ಗೋವುಗಳ ಸಾಗಾಟದಲ್ಲಿ ರೈತರ ತಪ್ಪಿರಲಿಲ್ಲ. ಆದರೆ ಇಂದು ಬಿಜೆಪಿ ತಂದ ಕಾನೂನು ಗೋಸಾಗಾಟಗಾರರನ್ನು ಶಿಕ್ಷಿಸುವುದಕ್ಕಿಂತಲೂ ಹೆಚ್ಚಾಗಿ ರೈತರನ್ನು ಶಿಕ್ಷಿಸುತ್ತಿದೆ. ತಮ್ಮ ಹಟ್ಟಿಯಲ್ಲಿರುವ ಅನುಪಯುಕ್ತ ಗೋವುಗಳನ್ನು ಹಿಂದೆಲ್ಲ ಉತ್ತಮ ದರಕ್ಕೆ ಮಾರಾಟ ಮಾಡಿ ಅದರಿಂದ ಆದಾಯಗಳನ್ನು ಪಡೆಯುತ್ತಿದ್ದರು. ಈ ಆದಾಯ ಹಟ್ಟಿಯಲ್ಲಿರುವ ಇತರ ಗೋವುಗಳ ಖರ್ಚುವೆಚ್ಚಗಳನ್ನು ಭರಿಸಲು ಸಹಾಯ ಮಾಡುತ್ತಿತ್ತು. ರೈತರ ಪಾಲಿಗೆ ತಮ್ಮ ಹಟ್ಟಿಯಲ್ಲಿದ್ದ ಗೋವುಗಳು ಒಂದು ರೀತಿಯ ಕರೆನ್ಸಿ ಆಗಿರುತ್ತಿದ್ದವು. ಅವರ ಕಷ್ಟ ಕಾಲಕ್ಕೆ ಅದು ನೆರವಾಗುತ್ತಿತ್ತು. ಆದರೆ ಇಂದು ಅನುಪಯುಕ್ತ ಜಾನುವಾರುಗಳನ್ನು ಮಾರುವ ಹಿಂದಿನ ಸ್ವಾತಂತ್ರ್ಯ ರೈತರಿಗೆ ಉಳಿದಿಲ್ಲ. ಈ ಕಾನೂನನ್ನು ದುರುಪಯೋಗ ಪಡಿಸಿಕೊಂಡು ಪೊಲೀಸರು ಮತ್ತು ನಕಲಿ ಗೋರಕ್ಷಕರು ರೈತರನ್ನು ಶೋಷಣೆ ಮಾಡುತ್ತಿದ್ದಾರೆ. ಇಂದು ರೈತರು ಸಾಕುವುದಕ್ಕೆ ದನ ಸಾಗಾಟ ಮಾಡುವುದು ಕೂಡ ಕಷ್ಟವಾಗುತ್ತಿದೆ. ಅನುಪಯುಕ್ತ ದನವನ್ನು ಗೋಶಾಲೆಗಳಿಗೆ ಸೇರಿಸಬೇಕು ಅಥವಾ ನಕಲಿ ಗೋರಕ್ಷಕರಿಗೆ ಕಮಿಶನ್ ನೀಡಿ ಅವರ ಮೂಲಕವೇ ಅದನ್ನು ಮಾರಾಟ ಮಾಡಬೇಕು ಎನ್ನುವ ಸ್ಥಿತಿ ನಿರ್ಮಾಣವಾಗಿದೆ. ಗೋವಿನ ಜೊತೆಗೆ ಯಾವುದೇ ಸಂಬಂಧವಿಲ್ಲದ ರೌಡಿ ಶೀಟರ್ಗಳು ಇಂದು ನಕಲಿ ಗೋರಕ್ಷರಾಗಿ ಓಡಾಡುತ್ತಿದ್ದಾರೆ. ಪ್ರಚೋದನಾತ್ಮಕವಾದ ದ್ವೇಷ ರಾಜಕೀಯಕ್ಕಷ್ಟೇ ಈ ಕಾಯ್ದೆ ದುರ್ಬಳಕೆಯಾಗುತ್ತಿದೆ. ಈ ಕಾಯ್ದೆಯಿಂದಾಗಿ ಗ್ರಾಮೀಣ ಪ್ರದೇಶಗಳಲ್ಲಿ ನಡೆಯುತ್ತಿರುವ ಜಾನುವಾರು ಸಂತೆಗಳು ಗಮನಾರ್ಹವಾಗಿ ಇಳಿಕೆಯಾಗಿದೆ. ಸಂತೆಗೆ ಜಾನುವಾರುಗಳನ್ನು ತಂದ ರೈತರು, ಗಿರಾಕಿಗಳಿಲ್ಲದೆ ಅದನ್ನು ಹಾಗೆಯೇ ವಾಪಸ್ ಕೊಂಡು ಹೋಗುತ್ತಿದ್ದಾರೆ. ಈ ಜಾನುವಾರುಗಳನ್ನು ಮಾರಾಟ ಮಾಡಲೂ ಆಗದೆ, ಇತ್ತ ಇಟ್ಟುಕೊಳ್ಳಲು ಆಗದೆ ರೈತರು ರಸ್ತೆಗೆ ಬಿಡುತ್ತಿದ್ದಾರೆ. ಇದೇ ಸಂದರ್ಭದಲ್ಲಿ ರೈತರ ಹೆಸರಿನಲ್ಲಿ ನಕಲಿ ಗೋರಕ್ಷಕರು ಮಾತ್ರವಲ್ಲ, ಅಕ್ರಮ ಗೋಶಾಲೆಗಳೂ ಹುಟ್ಟಿಕೊಂಡಿವೆ. ಈ ಗೋಶಾಲೆಗಳು ಅಕ್ರಮಗಳ ಬೀಡಾಗಿವೆ. ಸರಕಾರದಿಂದ ಬಿಡುಗಡೆಯಾಗುತ್ತಿರುವ ಕೋಟ್ಯಂತರ ಹಣ ಈ ಗೋಶಾಲೆಗಳ ಪಾಲಾಗುತ್ತಿದೆ. ಈ ಎಲ್ಲ ಶೋಷಣೆಗಳಿಂದ ರೈತರು ಮುಕ್ತಿ ಪಡೆಯಬೇಕಾದರೆ ಸರಕಾರ ಗೋಹತ್ಯೆ ನಿಷೇಧ ಕಾಯ್ದೆಯನ್ನು ಹಿಂದೆಗೆದು ಜಾನುವಾರು ಮಾರಾಟದ ಹಕ್ಕನ್ನು ರೈತರಿಗೆ ಮರಳಿಸಬೇಕು. ಇದೇ ಸಂದರ್ಭದಲ್ಲಿ ಗೋಕಳ್ಳರ, ಅಕ್ರಮ ಗೋಸಾಗಾಟಗಾರರ ವಿರುದ್ಧ ಕಠಿಣ ಕಾಯ್ದೆಯನ್ನು ಮಾಡಬೇಕು. ಅಕ್ರಮವಾಗಿ ಗೋಸಾಗಾಟ ಮಾಡಿದರೆ ಅಥವಾ ಅಮಾನವೀಯವಾಗಿ ಗೋವುಗಳನ್ನು ಸಾಗಿಸಿದ ಪ್ರಕರಣ ಕಂಡು ಬಂದರೆ ಕಠಿಣ ಶಿಕ್ಷೆ ವಿಧಿಸುವಂತಹ ಕಾಯ್ದೆಗಳನ್ನು ಜಾರಿಗೊಳಿಸಬೇಕು. ಹಾಗೆಯೇ ನಕಲಿ ಗೋರಕ್ಷಕರ ವಿರುದ್ಧವೂ ಕಠಿಣ ಕಾಯ್ದೆ ಜಾರಿಯಾಗಬೇಕು. ಅನುಪಯುಕ್ತ ಗೋವುಗಳನ್ನು ಸಾಕಲೆಂದೇ ಮಾಡಿರುವ ಎಲ್ಲ ಗೋಶಾಲೆಗಳನ್ನು ಮುಚ್ಚಿ ಸರಕಾರ ಅಧಿಕೃತವಾಗಿ ಗೋಶಾಲೆಗಳಿಗೆ ಬಿಡುಗಡೆ ಮಾಡುತ್ತಿರುವ ಹಣವನ್ನು ನಿಜವಾದ ಅರ್ಥದಲ್ಲಿ ಗೋವುಗಳನ್ನು ಸಾಕುವ ರೈತರಿಗೆ ತಲುಪಿಸುವ ಕೆಲಸ ಮಾಡಬೇಕು. ಈ ಮೂಲಕ ಗ್ರಾಮೀಣ ಪ್ರದೇಶದಲ್ಲಿ ಗೋವುಗಳನ್ನು ಸಾಕುವ ರೈತರು ಆರ್ಥಿಕವಾಗಿ ಚೇತರಿಕೆಯನ್ನು ಪಡೆಯಬಹುದು. ಗೋ ಹತ್ಯೆ ಕಾಯ್ದೆಯ ಹಿಂದಿರುವ ರಾಜಕೀಯದ ಬಗ್ಗೆ ಕಾಂಗ್ರೆಸ್ ಪಕ್ಷ ಹಲವು ಬಾರಿ ಮಾತನಾಡಿದೆ. ಇದೀಗ ಈ ಕಾಯ್ದೆಯನ್ನು ಹಿಂದೆಗೆಯಬೇಕು ಎಂದು ರೈತರೇ ಒತ್ತಾಯಿಸುತ್ತಿದ್ದಾರೆ. ಸರಕಾರ ಈ ಬಜೆಟ್ ಸಂದರ್ಭದಲ್ಲಿ ರೈತರ ಕೊರಳಿಗೆ ಉರುಳಾಗಿರುವ ಕಾಯ್ದೆಯನ್ನು ಹಿಂದೆಗೆದು ನಕಲಿ ಗೋರಕ್ಷಕರಿಂದ, ಗೋಕಳ್ಳರಿಂದ, ಅಕ್ರಮ ಗೋಸಾಗಾಟಗಾರರಿಂದ ರೈತರನ್ನು ರಕ್ಷಿಸಲು ಪರ್ಯಾಯ ಕಾನೂನೊಂದನ್ನು ಜಾರಿಗೊಳಿಸಬೇಕು.
ನ್ಯೂಯಾರ್ಕ್ ಚರ್ಚ್ ನಲ್ಲಿ ಸ್ಫೋಟ: ಐವರಿಗೆ ಗಾಯ
ನ್ಯೂಯಾರ್ಕ್: ಇಲ್ಲಿನ ಬೂಮ್ವಿಲ್ಲೆ ಪಟ್ಟಣದ ಸ್ಟೇಟ್ ರೂಟ್ ನಂ. 12ರ ಅಬಂಡಂಟ್ ಲೈಫ್ ಫೆಲೋಶಿಪ್ ಚರ್ಚ್ ನಲ್ಲಿ ಸಂಭವಿಸಿದ ಭೀಕರ ಸ್ಫೋಟದಲ್ಲಿ ಕನಿಷ್ಠ ಐದು ಮಂದಿ ಗಾಯಗೊಂಡಿದ್ದಾರೆ. ನ್ಯೂಯಾರ್ಕ್ ಸ್ಟೇಟ್ ಪೊಲೀಸರು ಘಟನೆ ಬಗ್ಗೆ ತನಿಖೆ ಆರಂಭಿಸಿದ್ದಾರೆ. ಅಮೆರಿಕ ಕಾಲಮಾನದ ಪ್ರಕಾರ ಬೆಳಿಗ್ಗೆ 10.23ರ ವೇಳೆಗೆ ಘಟನೆ ಸಂಭವಿಸಿದ್ದು, ಚರ್ಚ್ ನ ಒಳಭಾಗದಲ್ಲಿ ಅನಿಲದ ವಾಸನೆ ಬರುತ್ತಿದೆ ಎಂದು ವರದಿಯಾದ ಸ್ವಲ್ಪ ಹೊತ್ತಿನಲ್ಲೇ ಸ್ಫೋಟ ಸಂಭವಿಸಿದೆ. ಸ್ಫೋಟಕ್ಕೆ ಮುನ್ನ ಅನಿಲದ ವಾಸನೆ ಬಂದಿದ್ದಾಗಿ ಪ್ರತ್ಯಕ್ಷದರ್ಶಿಗಳು ತನಿಖಾಧಿಕಾರಿಗಳಿಗೆ ಹೇಳಿದ್ದಾರೆ. ಘಟನೆ ಬಗ್ಗೆನ್ಯೂಸ್ ವೀಕ್ ಗೆ ಹೇಳಿಕೆ ನೀಡಿದ ಪೊಲೀಸರು, ಬೂನ್ವಿಲ್ಲೆ ಅಗ್ನಿಶಾಮಕ ದಳದ ಸಿಬ್ಬಂದಿ ಕಟ್ಟಡದ ಒಳಗೆ ಇದ್ದು, ನಾಲ್ವರು ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಒಬ್ಬ ನಾಗರಿಕ ಸೇರಿದಂತೆ ಐದು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಇಬ್ಬರ ಸ್ಥಿತಿ ಚಿಂತಾಜನಕವಾಗಿದ್ದು, ಉಳಿದ ಮೂವರಿಗೆ ಅಪಾಯ ಇಲ್ಲ ಎಂದು ಹೇಳಿದ್ದಾರೆ. ಚರ್ಚ್ ಕಟ್ಟಡ ಸಂಪೂರ್ಣ ನಾಶವಾಗಿದ್ದು, ಯಾವುದೇ ಅಪರಾಧ ಚಟುವಟಿಕೆಯ ಸೂಚನೆಗಳು ಕಾಣುತ್ತಿಲ್ಲ. ಪ್ರೊಪೇನ್ ಸಿಲಿಂಡರ್ ಗಳಿಂದ ಸ್ಫೋಟ ಸಂಭವಿಸಿರಬೇಕು ಎಂದು ಅಂದಾಜಿಸಿದ್ದಾಗಿ ಪೊಲೀಸರು ವಿವರಿಸಿದ್ದಾರೆ. ಚರ್ಚ್ ನ ಪಾಸ್ಟರ್ ಮತ್ತು ಇತರರು ಪ್ರೊಪೇನ್ ಕಂಪನಿಗೆ ಮನವಿ ಮಾಡಿಕೊಂಡಿದ್ದು, ಸ್ಫೋಟಕ್ಕೆ ಮುನ್ನ ಅನಿಲ ಸೋರಿಕೆ ಬಗ್ಗೆ ಮಾಹಿತಿ ನೀಡಿದ್ದರು ಎಂದು ಚರ್ಚ್ ಧರ್ಮಾಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ.
ಕರಾವಳಿ ಕರ್ನಾಟಕದ ಶಿಕ್ಷಣ ಮತ್ತು ಉದ್ಯೋಗಾವಕಾಶಗಳನ್ನು ಕೊಟ್ಟ ಸಿಎ ರಾಘವೇಂದ್ರ ರಾವ್ ನಿಧನ
ಕರಾವಳಿ ಕರ್ನಾಟಕದಲ್ಲಿ ಶ್ರೀನಿವಾಸ್ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ಸ್ಗಳನ್ನು ತೆರೆದು 18 ಕ್ಕೂ ಹೆಚ್ಚು ವೃತ್ತಿಪರ ಕಾಲೇಜುಗಳನ್ನು ತೆರದು ಶಿಕ್ಷಣ ಕ್ಷೇತ್ರಕ್ಕೆ ಹಾಗೂ ವಿದ್ಯಾರ್ಥಿಗಳ ಭವಿಷ್ಯಕ್ಕೆ ನೆರವಾದ ಮಹಾನ್ ವ್ಯಕ್ತಿ ಸಿಎ, ಎ ರಾಘವೇಂದ್ರ ರಾವ್ ಅವರು ಮಂಗಳವಾರ ರಾತ್ರಿ ನಿಧನಹೊಂದಿದ್ದಾರೆ.
Karnataka Weather Updates: ರಾಜಧಾನಿ ಬೆಂಗಳೂರು ಸೇರಿದಂತೆ ಕರ್ನಾಟಕದಾದ್ಯಂತ ಬಹುತೇಕ ಒಣಹವೆ ಮುಂದುವರಿದಿದೆ. ಉಳಿದಂತೆ ರಾಜ್ಯದ ವಿವಿಧ ಭಾಗದಲ್ಲಿ ಚಳಿ ಇದೆ. ಮುಂದಿನ ಐದು ದಿನಗಳ ವರೆಗೆ ಕರ್ನಾಟಕದಲ್ಲಿ ಹವಾಮಾನ ಹೇಗಿರಲಿದೆ ಎನ್ನುವ ಸಂಪೂರ್ಣ ವಿವರ ಇಲ್ಲಿದೆ. ಕರ್ನಾಟಕದಲ್ಲಿ ಮುಂದಿನ ಮೂರು ದಿನಗಳಿಂದ ಐದು ದಿನಗಳ ವರೆಗೆ ಕರ್ನಾಟಕದಲ್ಲಿ ಬಹುತೇಕ ಒಣಹವೆ ಮುಂದುವರಿಯಲಿದೆ. ಮುಂದಿನ ಐದು ದಿನಗಳಲ್ಲಿ
ಕರ್ನಾಟಕದಲ್ಲಿ ಬೇಕು ಉದ್ಯೋಗ ಸಂಕಲ್ಪದ ಬಜೆಟ್! ಶಿಕ್ಷಣ ಹಾಗೂ ಪೊಲೀಸ್ ಇಲಾಖೆಯ ಖಾಲಿ ಹುದ್ದೆ ಭರ್ತಿ ಯಾವಾಗ?
ಕರ್ನಾಟಕದ ಸರಕಾರಿ ಸೇವೆಗಳಲ್ಲಿ ಬರೋಬ್ಬರಿ 2.76 ಲಕ್ಷ ಹುದ್ದೆಗಳು ಖಾಲಿ ಇವೆ. ಇದರ ಭರ್ತಿಗೆ ಕ್ರಮಗಳು ಮಾತ್ರ ಆಗುತ್ತಿಲ್ಲ . ಲಕ್ಷಾಂತರ ಯುವಜನ ಪರೀಕ್ಷೆಗಳನ್ನು ಬರೆದು ನೇಮಕಾತಿಗಳಿಗೆ ಕಾಯುತ್ತಿದ್ದರೆ ಇತ್ತ ಸರಕಾರ ಈ ಬಾರಿಯ ಬಜೆಟ್ನಲ್ಲಾದರೂ ನಿರುದ್ಯೋಗಿಗಳ ಸಂಕಷ್ಟಕ್ಕೆ ಸ್ಪಂದಿಸುತ್ತಾ ಎಂದು ಎದುರುನೋಡುತ್ತಿದ್ದಾರೆ. ಈ ಬಾರಿಯ ಬಜೆಟ್ ಲೆಕ್ಕಾಚಾರಗಳು ಹೇಗಿವೆ ನೋಡಿ.
Gold Price: ಬಂಗಾರದ ಬೆಲೆ 80,000 ರೂ.ಗಿಂತಲೂ ಕಡಿಮೆ ಆಗಲಿದೆ: ತಜ್ಞರ ಮುನ್ಸೂಚನೆ, ಕಾರಣವೇನು?
Gold Price Forecast 2026: ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿ ವಹಿವಾಟಿನಲ್ಲಿ ನಿರಂತರ ಏರಿಳಿತ ಮುಂದುವರಿದಿದೆ. ಈ ಲೋಹಗಳ ದರವು ಇಳಿಮುಖವಾಗಿದೆ. ಹೊಸ ಮುನ್ಸೂಚನೆಗಳ ಪ್ರಕಾರ, ಚಿನ್ನದ ಬೆಲೆ 08 ಗ್ರಾಂಗೆ (ಒಂದು ಸವರನ್) 80,000 ರೂ.ಗಿಂತ ಕಡಿಮೆ ಆಗುವ ಸಾಧ್ಯತೆ ಇದೆ. ತಿಂಗಳುಗಳಲ್ಲಿ ಗರಿಷ್ಠ ಹಂತ ತಲುಪಿದ್ದ ಬೆಲೆಗಳು ದಾಖಲೆಯ ಹಂತಕ್ಕೆ ಇಳಿಯಬಹುದು ಎಂದು ವಿಶ್ಲೇಷಣೆ
ನವದೆಹಲಿ: ಕೇಂದ್ರೀಯ ಪ್ರೌಢಶಿಕ್ಷಣ ಮಂಡಳಿ (CBSE) ಮಂಗಳವಾರ, ಫೆಬ್ರವರಿ 17, 2026 ರಂದು ನಡೆಸಿದ 10ನೇ ತರಗತಿಯ ಗಣಿತ (Mathematics Standard ಮತ್ತು Basic) ಬೋರ್ಡ್ ಪರೀಕ್ಷೆಯು ದೇಶಾದ್ಯಂತ ವಿದ್ಯಾರ್ಥಿಗಳಿಂದ ಮಿಶ್ರ ಪ್ರತಿಕ್ರಿಯೆಗೆ ಕಾರಣವಾಗಿದೆ. ಶಿಕ್ಷಕರು ಹಾಗೂ ಶೈಕ್ಷಣಿಕ ತಜ್ಞರ ಪ್ರಾಥಮಿಕ ವಿಶ್ಲೇಷಣೆಯ ಪ್ರಕಾರ, ಪ್ರಶ್ನೆಪತ್ರಿಕೆಯು ಬಹುಪಾಲು ಎನ್ಸಿಇಆರ್ಟಿ (NCERT) ಪಠ್ಯಕ್ರಮವನ್ನು ಆಧರಿಸಿದ್ದರೂ, ಪರೀಕ್ಷಾ ಕೊಠಡಿಯಲ್ಲಿ ಸಮಯ
ಹೆಚ್ಚುತ್ತಿದೆ ರೈಲು ಅಪಘಾತಗಳು; ಪಾಲಕ್ಕಾಡ್ ಡಿವಿಜನ್ನಲ್ಲಿ 2 ವರ್ಷಗಳಲ್ಲಿ 913 ಅಪಘಾತ ಪ್ರಕರಣ
ಪಾಲಕ್ಕಾಡ್ ಡಿವಿಜನ್ನಲ್ಲಿ ರೈಲು ಡಿಕ್ಕಿ ಹೊಡೆದು ಸಂಭವಿಸುತ್ತಿರುವ ಅಪಘಾತಗಳ ಸಂಖ್ಯೆ ಹೆಚ್ಚುತ್ತಿದ್ದು, ಕೇವಲ ಎರಡು ವರ್ಷದ ಅವಧಿಯಲ್ಲಿ ಬರೋಬ್ಬರಿ 913 ಅಪಘಾತ ಪ್ರಕರಣಗಳು ದಾಖಲಾಗಿವೆ. ಕೇವಲ 2025ರ ವರ್ಷದಲ್ಲೇ ಪಾಲಕ್ಕಾಡ್ ಡಿವಿಜನ್ನಲ್ಲಿ 433 ಅಪಘಾತ ಪ್ರಕರಣಗಳು ದಾಖಲಾಗಿದ್ದು, ಒಟ್ಟು 322 ಜನ ತಮ್ಮ ಪ್ರಾಣ ಕಳೆದುಕೊಂಡಿರುವುದು ಆಘಾತಕಾರಿಯಾಗಿದೆ. ವಿವಿಧ ಕಾರಣಗಳಿಗಗಿ ಸಂಭವಿಸುತ್ತಿರುವ ಈ ರೈಲು ಅಪಘಾತಗಳನ್ನು ತಡೆಯಬೇಕಿದ್ದು, ಪ್ರಯಾಣಿಕರ ಜೀವ ಉಳಿಸುವ ಜವಾಬ್ದಾರಿ ರೈಲ್ವೆ ಇಲಾಖೆಯದ್ದಾಗಿದೆ. ಇಲ್ಲಿದೆ ಹೆಚ್ಚಿನ ಮಾಹಿತಿ.
ಕ್ಯಾಬ್ನಲ್ಲಿ ಮಗು ಮರೆತು ಬಂದ ಪೋಷಕರು, ಬೆಂಗಳೂರಿನಲ್ಲಿ ಹೀಗೊಂದು ವಿಚಿತ್ರ ಘಟನೆ; ಸುಖಾಂತ್ಯ ಕಂಡಿದ್ದೇಗೆ?
ಇದು ಕೊಂಚ ವಚಿತ್ರವಾದರೂ ಸತ್ಯ ಘಟನೆ. ಕ್ಯಾಬ್ನಲ್ಲಿ ಮಲಗಿದ್ದ ಮಗುವನ್ನು ಮರೆತು ಮನೆಗೆ ಮರಳಿದ್ದ ಪೋಷಕರು, ಪೊಲೀಸರ ನೆರವಿನಿಂದ ತಮ್ಮ ಮಗುವನ್ನು ಮರಳಿ ಪಡೆದ ಘಟನೆ ರಾಜಧಾನಿ ಬೆಂಗಳೂರಿನಲ್ಲಿ ನಡೆದಿದೆ. ನಿದ್ದೆ ಮಾಡುತ್ತಿದ್ದ ಮಗುವನ್ನು ಕ್ಯಾಬ್ನಲ್ಲೇ ಮರೆತು ಬಂದಿದ್ದ ದಂಪತಿ, ಆ ಬಳಿಕ ಪೊಲೀಸ್ ಸಹಾಯವಾಣಿಗೆ ಕರೆ ಮಾಡಿ ವಿಷಯ ತಿಳಿಸಿದ್ದರು. ಕೂಡಲೇ ಸ್ಪಂದಿಸಿದ ಹೊಯ್ಸಳ ಪೊಲೀಸರು, ಕ್ಯಾಬ್ನ್ನು ಪತ್ತೆಹಚ್ಚಿ ಮಗುವನ್ನು ಪೋಷಕರಿಗೆ ಒಪ್ಪಿಸಿದ್ದಾರೆ. ಹಿಂಬದಿ ಸೀಟ್ನಲ್ಲಿ ಮಗು ಮಲಗಿದ್ದು ಚಾಲಕನಿಗೂ ತಿಳಿದಿರಲಿಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.
ಬರಲಿದೆ AI ಆಧಾರಿತ ಸ್ಮಾರ್ಟ್ ವಾಟರ್ ಮೀಟರ್; ನಿಖರ ನೀರಿನ ಬಿಲ್ ಗ್ಯಾರಂಟಿ ಘೋಷಿಸಿದ ಜಲಮಂಡಳಿ
ಕರ್ನಾಟಕ ರಾಜಧಾನಿ ಬೆಂಗಳೂರಿಗೆ ನೀರು ಸರಬರಾಜು ಹೊಣೆ ಹೊತ್ತಿರುವ ಜಲಮಂಡಳಿ, ಹಲವು ಜನಪರ ಕಾರ್ಯಕ್ರಮಗಳನ್ನು ಜಾರಿಗೆ ತರುತ್ತಿದೆ. ಅದೇ ರೀತಿ ರಾಷ್ಟ್ರ ರಾಜಧಾನಿ ಹೊಸದಿಲ್ಲಿಯಲ್ಲಿ ನಡೆದ ಎಐ ಇಂಪ್ಯಾಕ್ಟ್ ಶೃಂಗಸಭೆಯಲ್ಲಿ ಭಾಗವಹಿಸಿದ್ದ ಜಲಮಂಡಳಿ ಅಧ್ಯಕ್ಷ ಡಾ.ವಿ.ರಾಮ್ ಪ್ರಸಾತ್ ಮನೋಹರ್ ಬೆಂಗಳೂರಿನ ಬೃಹತ್ ನೀರು ಬಳಕೆದಾರರಿಗೆ ನಿಖರ ಬಿಲ್ ನೀಡಲು, ಶೀಘ್ರದಲ್ಲೇ ಕೃತಕ ಬುದ್ಧಿಮತ್ತೆ (AI) ಆಧಾರಿತ ಸ್ಮಾರ್ಟ್ ವಾಟರ್ ಮೀಟರ್ಗಳ ಅಳವಡಿಕೆ ಯೋಜನೆಯನ್ನು ಘೋಷಿಸಿದ್ದಾರೆ. ಈ ಕುರಿತು ಮಾಹಿತಿ ಇಲ್ಲಿದೆ.
ಲಖನೌ: ಕೆಎಲ್ ರಾಹುಲ್, ರವಿಚಂದ್ರನ್ ಸ್ಮರಣ್ ಶತಕ ಮತ್ತು ನಾಯಕ ದೇವದತ್ ಪಡಿಕ್ಕಲ್ ಅವರ ದ್ವಿಶತಕಗಳ ನೆರವಿನಿಂದ ಅದ್ಭುತ ಪ್ರದರ್ಶನದ ನೆರವಿನಿಂದ ಉತ್ತರಾಖಂಡದ ವಿರುದ್ಧ ರನ್ ಪರ್ವತವನ್ನೇ ನಿರ್ಮಿಸಿರುವ ಕರ್ನಾಟಕ ತಂಡ ರಣಜಿ ಟ್ರೋಫಿ ಫೈನಲ್ ಪ್ರವೇಶಿಸುವ ಹುಮ್ಮಸ್ಸಿನಲ್ಲಿದೆ. ಇಲ್ಲಿನ ವಾಜಪೇಯಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಸೆಮಿಫೈನಲ್ ಪಂದ್ಯದ 3ನೇ ದಿನವಾದ ಮಂಗಳವಾರ 6 ವಿಕೆಟ್ಗೆ 689 ರನ್ಗಳಿಂದ ಮೊದಲ ಇನಿಂಗ್ಸ್ ಮುಂದುವರಿಸಿದ ಕರ್ನಾಟಕ, 194.4 ಓವರ್ಗಳಲ್ಲಿ 736 ರನ್ಗಳಿಗೆ ಆಲೌಟ್ ಆಯಿತು. ಕರ್ನಾಟಕಕ್ಕೆ ಇನ್ನಿಂಗ್ಸ್ ಡಿಕ್ಲೇರ್ ಮಾಡಿ ಎದುರಾಳಿ ತಂಡವನ್ನು ಬ್ಯಾಟಿಂಗ್ ಗೆ ಇಳಿಸುವ ಅವಕಾಶ ಇಧ್ದರೂ ದೊಡ್ಡ ಮೊತ್ತ ಗಳಿಸಿ ಎದುರಾಳಿಯನ್ನು ಒತ್ತಡಕ್ಕೆ ಸಿಲುಕಿಸುವ ತಂತ್ರಕ್ಕೆ ಮೊರೆ ಹೊಕ್ಕಿತು. ಮೊದಲ ದಿನವೇವಾಡಿದಾಗ ಉತ್ತರಾಖಂಡ ದಿಕ್ಕು ತಪ್ಪಿತ್ತು. ಈಗಂತೂ ಎದುರಾಳಿ ತಂಡ ಸಂಪೂರ್ಣವಾಗಿ ಕರ್ನಾಟಕ ಬೀಸಿದ ಬಲೆಯಲ್ಲಿ ಸಿಲಕಿಕೊಂಡಿದೆ. ಇದೀಗ ಮೊದಲ ಇನ್ನಿಂಗ್ಸ್ ಪ್ರಾರಂಭಿಸಿರವ ಉತ್ತರಾಖಂಡ ಮೂರನೇ ದಿನಾಂತ್ಯಕ್ಕೆ 5 ವಿಕೆಟ್ ನಷ್ಟಕ್ಕೆ 149 ರನ್ ಗಳಿಸಿದ್ದು ಫಾಲೋ ಆನ್ ಭೀತಿಯಲ್ಲಿದೆ. ಲಕ್ಷ್ಯ ರಾಜೇಶ್(52*) ಮತ್ತು ಸೌರಭ್ ರಾವತ್(10*) ನಾಲ್ಕನೇ ದಿನದಾಟಕ್ಕೆ ಕ್ರೀಸ್ ಕಾಯ್ದುಕೊಂಡಿದ್ದಾರೆ. ಸದ್ಯಕ್ಕೆ ಇನ್ನು ಎರಡು ದಿನಗಳ ಆಟ ಬಾಕಿ ಉಳಿದಿದ್ದು ಇವರಿಬ್ಬರ ಆಟದ ಮೇಲೆ ಉತ್ತರಾಖಂಡದ ಪಂದ್ಯದ ಭವಿಷ್ಯ ನಿರ್ಧಾರವಾಗಲಿದೆ. ಮೊದಲ ಇನಿಂಗ್ಸ್ ಹಿನ್ನಡೆ ತಪ್ಪಿಸಲು ಉಳಿದ 5 ವಿಕೆಟ್ಗಳಲ್ಲಿ 587 ರನ್ ಗಳಿಸಬೇಕಿದೆ. ಬುಧವಾರ ಮೊದಲಿನ ಅವಧಿಯಲ್ಲೇ ಕರ್ನಾಟಕದ ಬೌಲರ್ಗಳು ಉತ್ತರಾಖಂಡವನ್ನು ಆಲೌಟ್ ಮಾಡಿದರೆ, ಫಾಲೋ ಆನ್ ವಿಧಿಸಿ ಪಂದ್ಯ ಗೆಲ್ಲುವ ಅವಕಾಶ ದೇವದತ್ ಪಡಿಕ್ಕಲ್ ಬಳಗದ ಮುಂದಿದೆ. ಒಂದು ವೇಳೆ ಉತ್ತರಾಖಂಡದ ಪ್ರಥಮ ಇನ್ನಿಂಗ್ಸ್ ಕೊಂಚ ದೀರ್ಘವಾಗಿ ಪಂದ್ಯ ಡ್ರಾ ಆದರೂ ಕರ್ನಾಟಕಕ್ಕೆ ಲಾಭವೇ. ಯಾಕೆಂದರೆ ಈ ಮೊತ್ತವನ್ನು ಉತ್ತರಾಖಂಡ ದಾಟುವುದು ಕಷ್ಟಸಾಧ್ಯ. ಪ್ರಥಮ ಇನ್ನಿಂಗ್ಸ್ ಆಧಾರದ ಮೇಲೆ ಕರ್ನಾಟಕಕ್ಕೆ ಫೈನಲ್ ಪ್ರವೇಶದ ಅವಕಾಶ ಸಿಗಲಿದೆ. ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಕರ್ನಾಟಕ ತಂಡ ಮಾಡಿ ಗೆದ್ದಿತ್ತು. ಸಂಕ್ಷಿಪ್ತ ಸ್ಕೋರ್ ಕರ್ನಾಟಕ ಪ್ರಥಮ ಇನ್ನಿಂಗ್ಸ್ 194.4 ಓವರ್ ಗಳಲ್ಲಿ 736ಕ್ಕೆ ಆಲೌಟ್, ಕೆಎಲ್ ರಾಹುಲ್ 141(211), ದೇವದತ್ ಪಡಿಕ್ಕಲ್ 232(330), ರವಿಚಂದ್ರನ್ ಸ್ಮರಣ್ 135(218), ಕೃತಿಕ್ ಕೃಷ್ಣ 60(103), ವಿದ್ಯಾಧರ್ ಪಾಟೀಲ್ 54(144), ಆದಿತ್ಯ ರಾವತ್ 154ಕ್ಕೆ 4, ಮಾಯಾಂಕ್ ಮಿಶ್ರಾ 173ಕ್ಕೆ 3. ಉತ್ತರಾಖಂಡ ಪ್ರಥಮ ಇನ್ನಿಂಗ್ಸ್ 69 ಓವರ್ ಗಳಲ್ಲಿ 149/5, ಲಕ್ಷ್ಯ ರಾಯ್ ಚಂದಾನಿ ಅಜೇಯ 52(148), ಸೌರಭ್ ರಾವತ್ ನಾಟೌಟ್ 10(37), ವಿದ್ಯಾಧರ್ ಪಾಟೀಲ್ 26ಕ್ಕೆ 2, ಶ್ರೇಯಸ್ ಗೋಪಾಲ್ 23ಕ್ಕೆ 1.
ಜೂನಿಯರ್ ಹಾಕಿ ಪ್ರಧಾನ ಕೋಚ್ ಹುದ್ದೆಗೆ ಮತ್ತೆ ಅರ್ಜಿ ಸಲ್ಲಿಸಿದ ಶ್ರೀಜೇಶ್
ಹೊಸದಿಲ್ಲಿ, ಫೆ. 17: ಭಾರತೀಯ ಹಾಕಿ ತಂಡದ ಮಾಜಿ ಗೋಲ್ಕೀಪರ್ ಪಿ.ಆರ್. ಶ್ರೀಜೇಶ್ ಭಾರತೀಯ ಜೂನಿಯರ್ ಪುರುಷರ ಹಾಕಿ ತಂಡದ ಪ್ರಧಾನ ಕೋಚ್ ಹುದ್ದೆಗೆ ಮತ್ತೊಮ್ಮೆ ಅರ್ಜಿ ಸಲ್ಲಿಸಿದ್ದಾರೆ. ಅವರ ಮೊದಲ ಗುತ್ತಿಗೆ ಅವಧಿ ಕಳೆದ ವರ್ಷದ ಡಿಸೆಂಬರ್ನಲ್ಲಿ ಮುಕ್ತಾಯಗೊಂಡಿತ್ತು. ಅವರ ಅರ್ಜಿಯು ಇನ್ನು 15 ದಿನಗಳಲ್ಲಿ ಇತ್ಯರ್ಥಗೊಳ್ಳುವ ನಿರೀಕ್ಷೆಯಿದೆ. ಎರಡು ಬಾರಿಯ ಒಲಿಂಪಿಕ್ ಕಂಚಿನ ಪದಕ ವಿಜೇತ ಶ್ರೀಜೇಶ್ ಅವರನ್ನು 2024ರ ಆಗಸ್ಟ್ನಲ್ಲಿ ಜೂನಿಯರ್ ಪುರುಷರ ಹಾಕಿ ತಂಡದ ಪ್ರಧಾನ ಕೋಚ್ ಆಗಿ ನೇಮಿಸಲಾಗಿತ್ತು. ಅವರ ಉಸ್ತುವಾರಿಯ ತಂಡವು ಕಳೆದ ವರ್ಷದ ಡಿಸೆಂಬರ್ನಲ್ಲಿ ಚೆನ್ನೈನಲ್ಲಿ ನಡೆದ ಎಫ್ಐಎಚ್ ಪುರುಷರ ಜೂನಿಯರ್ ವಿಶ್ವಕಪ್ನಲ್ಲಿ ಕಂಚಿನ ಪದಕ ಗೆದ್ದಿತ್ತು. ಇದರೊಂದಿಗೆ ಈ ಪಂದ್ಯಾವಳಿಯಲ್ಲಿ ಭಾರತದ ಒಂಭತ್ತು ವರ್ಷಗಳ ಪದಕ ಬರ ನೀಗಿತ್ತು. ಕಂಚಿನ ಪದಕದ ಪಂದ್ಯದಲ್ಲಿ ಭಾರತ ಆರಂಭಿಕ ಹಿನ್ನಡೆಯನ್ನು ನಿವಾರಿಸಿಕೊಂಡು ಅರ್ಜೆಂಟೀನಾ ತಂಡವನ್ನು 4–2 ಗೋಲುಗಳಿಂದ ಸೋಲಿಸಿತ್ತು.
T20 ವಿಶ್ವಕಪ್ | ಫೆ.18ರಂದು ಭಾರತಕ್ಕೆ ಎದುರಾಳಿ ನೆದರ್ಲ್ಯಾಂಡ್ಸ್
ದಕ್ಷಿಣ ಆಫ್ರಿಕದ ಮುನ್ನ ಆತಿಥೇಯರಿಗೆ ಅಭ್ಯಾಸ ಪಂದ್ಯ ಅಹ್ಮದಾಬಾದ್, ಫೆ. 17: ಪಾಕಿಸ್ತಾನ ವಿರುದ್ಧದ 61 ರನ್ ಗಳ ಭರ್ಜರಿ ಗೆಲುವಿನೊಂದಿಗೆ ಭಾರತ ಈಗಾಗಲೇ T20 ವಿಶ್ವಕಪ್ ನ ಸೂಪರ್ ಎಂಟು ಹಂತ ಪ್ರವೇಶಿಸಿದ್ದು, ಬುಧವಾರ ‘ಎ’ ಗುಂಪಿನ ತನ್ನ ಕೊನೆಯ ಲೀಗ್ ಪಂದ್ಯದಲ್ಲಿ ಅಹ್ಮದಾಬಾದ್ ನಲ್ಲಿ ನೆದರ್ಲ್ಯಾಂಡ್ಸ್ ತಂಡವನ್ನು ಎದುರಿಸಲಿದೆ. ಲೀಗ್ ಅಭಿಯಾನವನ್ನು ಅಜೇಯವಾಗಿ ಮುಕ್ತಾಯಗೊಳಿಸುವತ್ತ ತಂಡ ಸಾಗಿದೆ. ಈ ಪಂದ್ಯ ಯಾವ ತಂಡಕ್ಕೂ ಮಹತ್ವದ್ದಲ್ಲ. ಆದರೆ ಭಾರತ ಇದನ್ನು ದಕ್ಷಿಣ ಆಫ್ರಿಕ ವಿರುದ್ಧದ ಮುಂದಿನ ಪಂದ್ಯಕ್ಕೆ ಅಭ್ಯಾಸವಾಗಿ ಬಳಸಲಿದೆ. ನೆದರ್ಲ್ಯಾಂಡ್ಸ್ನ ಲೋಗನ್ ಫನ್ ಬೀಕ್ ಮತ್ತು ಬಸ್ ಡಿ ಲೀಡ್ ವೇಗ ಬದಲಾವಣೆಗಳಲ್ಲಿ ನಿಪುಣರು. ಫ್ರೆಡ್ ಕ್ಲಾಸನ್ ಎಡಗೈ ಸ್ಪಿನ್ ಅನುಭವ ನೀಡಲಿದ್ದಾರೆ. ಪವರ್ಪ್ಲೇಯಲ್ಲಿ ಆರ್ಯನ್ ದತ್ ಅವರ ಆಫ್ಸ್ಪಿನ್ ಮತ್ತು ರೋಲೊಫ್ ಫನ್ ಡರ್ ಮರ್ವ್ ಅವರ ಎಡಗೈ ಸ್ಪಿನ್ ದಾಳಿಯನ್ನು ಎದುರಿಸುವ ಅವಕಾಶ ಭಾರತೀಯರಿಗೆ ಸಿಗಲಿದೆ. ಈ ಅನುಭವ ದಕ್ಷಿಣ ಆಫ್ರಿಕ ವಿರುದ್ಧ ಉಪಯುಕ್ತವಾಗಬಹುದು. 2023ರ ಏಕದಿನ ವಿಶ್ವಕಪ್ ನಲ್ಲಿ ಇದೇ ನೆದರ್ಲ್ಯಾಂಡ್ಸ್ ತಂಡ ದಕ್ಷಿಣ ಆಫ್ರಿಕ ಮತ್ತು ಬಾಂಗ್ಲಾದೇಶಕ್ಕೆ ಆಘಾತಕಾರಿ ಸೋಲು ನೀಡಿತ್ತು. ಹೀಗಾಗಿ ತಂಡ ಸಾಮರ್ಥ್ಯ ಮೀರಿದ ಪ್ರದರ್ಶನ ನೀಡುವ ಶಕ್ತಿ ಹೊಂದಿದೆ. ಆರಂಭಿಕ ಬ್ಯಾಟರ್ ಅಭಿಷೇಕ್ ಶರ್ಮಾ ತಮ್ಮ ಚೊಚ್ಚಲ T20 ವಿಶ್ವಕಪ್ ನಲ್ಲಿ ಈಗಾಗಲೇ ಎರಡು ಬಾರಿ ಶೂನ್ಯಕ್ಕೆ ಔಟಾಗಿದ್ದಾರೆ. ಇಶಾನ್ ಕಿಶನ್ ಉತ್ತಮ ಫಾರ್ಮ್ನಲ್ಲಿದ್ದಾರೆ. ಇಲ್ಲಿನ ಪಿಚ್ ಸ್ಪಿನ್ನರ್ ಗಳಿಗೆ ಅನುಕೂಲಕರವಾಗಿದ್ದು, ಭಾರತೀಯ ಮಧ್ಯಮ ಕ್ರಮಾಂಕಕ್ಕೆ ನೆರವಾಗಲಿದೆ. ಭಾರತೀಯ ಬೌಲಿಂಗ್ ಘಟಕ ಬಲಿಷ್ಠವಾಗಿದ್ದು, ಈ ವಿಭಾಗದಲ್ಲಿ ಪ್ರಯೋಗಕ್ಕೆ ಅವಕಾಶವಿದೆ. ತಂಡಗಳು ಭಾರತ: ಸೂರ್ಯಕುಮಾರ್ ಯಾದವ್ (ನಾಯಕ), ಅಭಿಷೇಕ್ ಶರ್ಮಾ, ತಿಲಕ್ ವರ್ಮಾ, ಸಂಜು ಸ್ಯಾಮ್ಸನ್, ಶಿವಮ್ ದುಬೆ, ಇಶಾನ್ ಕಿಶನ್, ಹಾರ್ದಿಕ್ ಪಾಂಡ್ಯ, ಅರ್ಶದೀಪ್ ಸಿಂಗ್, ಜಸ್ಪ್ರೀತ್ ಬುಮ್ರಾ, ಮುಹಮ್ಮದ್ ಸಿರಾಜ್, ವರುಣ್ ಚಕ್ರವರ್ತಿ, ಕುಲದೀಪ್ ಯಾದವ್, ಅಕ್ಷರ್ ಪಟೇಲ್, ವಾಶಿಂಗ್ಟನ್ ಸುಂದರ್, ರಿಂಕು ಸಿಂಗ್. ನೆದರ್ಲ್ಯಾಂಡ್ಸ್: ಸ್ಕಾಟ್ ಎಡ್ವರ್ಡ್ಸ್ (ನಾಯಕ), ಕಾಲಿನ್ ಆ್ಯಕರ್ಮನ್, ನೋ ಕ್ರೋಸ್, ಬಸ್ ಡಿ ಲೀಡ್, ಆರ್ಯನ್ ದತ್, ಫ್ರೆಡ್ ಕ್ಲಾಸನ್, ಕೈಲ್ ಕ್ಲೇನ್, ಮೈಕಲ್ ಲೆವಿಟ್, ಝ್ಯಾಕ್ ಲಯನ್–ಕ್ಯಾಶೆ, ಮ್ಯಾಕ್ಸ್ ಒ’ಡೌಡ್, ಲೋಗನ್ ಫನ್ ಬೀಕ್, ಟಿಮ್ ಫನ್ ಡರ್ ಗುಗ್ಟನ್, ರೋಲೊಫ್ ಫನ್ ಡರ್ ಮರ್ವ್, ಪೌಲ್ ಫನ್ ಮೀಕರನ್, ಸಾಕಿಬ್ ಝುಲ್ಫೀಕರ್.
ಪತ್ರಕರ್ತರ ಜೊತೆ ಮಂತ್ರಿಗಳ ಸಂಬಂಧ ಇತಿಮಿತಿಯಲ್ಲಿದೆ: ಸಚಿವ ಚಲುವರಾಯಸ್ವಾಮಿ
ಬೆಂಗಳೂರು : ಇತ್ತೀಚಿನ ದಿನಗಳಲ್ಲಿ ಪತ್ರಕರ್ತರು ಮತ್ತು ಮಂತ್ರಿಗಳ ನಡುವೆ ಅಷ್ಟೊಂದು ಸಂಬಂಧ ಇಲ್ಲ ಎನ್ನುವುದಾಗಿ ಪತ್ರಕರ್ತ ವಿಠ್ಠಲಮೂರ್ತಿ ಹೇಳಿದ್ದು, ಹಾಗೇನೂ ಇಲ್ಲ. ಎಲ್ಲವೂ ಇತಿಮಿತಿಯಲ್ಲಿದೆ. ನಾವು ಎಲ್ಲೇ ಹೋದರೂ, ಎಚ್ಚರಿಕೆಯಿಂದ ಇದ್ದರೆ ನಾವು ಸುರಕ್ಷಿತವಾಗಿರಬಹುದು ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದ್ದಾರೆ. ಮಂಗಳವಾರ ಗಾಂಧಿ ಸ್ಮಾರಕ ನಿಧಿ, ಕರ್ನಾಟಕ ಮಾಧ್ಯಮ ಅಕಾಡಮಿ, ಕಾರ್ಯನಿರತ ಪತ್ರಕರ್ತರ ಸಂಘ, ಪ್ರೆಸ್ಕ್ಲಬ್ ಹಾಗೂ ಬೆಂಗಳೂರು ವರದಿಗಾರರ ಕೂಟದ ವತಿಯಿಂದ ನಗರದ ಗಾಂಧಿ ಭವನದಲ್ಲಿ ಆಯೋಜಿಸಲಾಗಿದ್ದ ಹಿರಿಯ ಪತ್ರಕರ್ತ, ಪರಿಷತ್ ಮಾಜಿ ಸದಸ್ಯ ಪಿ.ರಾಮಯ್ಯ ಅವರ ಶ್ರದ್ಧಾಂಜಲಿ, ‘ನಾನು ಹಿಂದೂ ರಾಮಯ್ಯ’ ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ರಾಷ್ಟ್ರಕವಿ ಕುವೆಂಪು ಅವರು ಶೂದ್ರ ಸಾಹಿತಿಗಳಾಗಿ ಏನೆಲ್ಲ ಕಷ್ಟಗಳನ್ನು ಎದುರಿಸಿದ್ದರು. ಅಂತಹ ಮೇರು ಸಾಹಿತಿಗಳೇ ಅಷ್ಟೊಂದು ಕಷ್ಟು ಅನುಭವಿಸಿದ್ದಾರೆಂದರೆ, ಪಿ.ರಾಮಯ್ಯ ಅವರು ಒಂದು ಇಂಗ್ಲಿಷ್ ಪತ್ರಿಕೆಯಲ್ಲಿ ಉನ್ನತ ಸ್ಥಾನವನ್ನು ಮುಟ್ಟಬೇಕಾದರೆ ಅವರು ಯಾವ ರೀತಿಯ ಶ್ರಮ, ಶ್ರದ್ಧೆ ವಹಿಸಿದ್ದರು ಎನ್ನುವುದನ್ನು ನಾವು ಅರ್ಥ ಮಾಡಿಕೊಳ್ಳಬೇಕು ಎಂದು ತಿಳಿಸಿದರು. ಹಿರಿಯ ಪತ್ರಕರ್ತ ಪಿ.ರಾಮಯ್ಯ ಅವರು ನನಗೆ ಅನೇಕ ಸಲಹೆಗಳನ್ನು ನೀಡಿದ್ದಾರೆ. ಅವರ ಬರವಣೆಗೆ ಬದಲಾವಣೆಗೆ ಪೂರಕವಾಗಿರುತ್ತಿದ್ದವು. ಅವರ ಮಾರ್ಗದರ್ಶನದಿಂದ ನಾನು ಅನೇಕ ವಿಷಯವನ್ನು ಕಲಿತಿದ್ದೇನೆ. ರಾಜಕೀಯ ಮತ್ತು ಮಾಧ್ಯಮ ಕ್ಷೇತ್ರದಲ್ಲಿ ಪಿ.ರಾಮಯ್ಯ ಅವರನ್ನು ಮಾದರಿಯನ್ನಾಗಿ ಇಟ್ಟುಕೊಳ್ಳಬಹುದು ಎಂದು ಅಭಿಪ್ರಾಯಪಟ್ಟರು. ಸಿಎಂ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ಮಾತನಾಡಿ, ಪತ್ರಕರ್ತರಾಗುವುದೆಂದರೆ ಒಂದು ರೀತಿಯಲ್ಲಿ ದೀಕ್ಷೆ ಪಡೆದಂತೆ. ಒಮ್ಮೆ ಪತ್ರಕರ್ತರಾದರೆ, ಮುಂದೆ ರಾಜಕಾರಣಿಯಾದರೂ, ಉದ್ಯಮಿಯಾದರೂ ಸರಿಯೇ. ಪತ್ರಕರ್ತರು ಕಾಲವನ್ನು ಒಪ್ಪಿಕೊಳ್ಳುತ್ತಲೇ ಸಮಾಜದಲ್ಲಿರುವ ಹುಳಕನ್ನು ನಯವಾಗಿ ತೋರಿಸಿ ತಿದ್ದಬಲ್ಲವರು ಮಾತ್ರ ಜನಮಾನಸದಲ್ಲಿ ಉಳಿಯಲು ಸಾಧ್ಯ ಎಂದು ಹೇಳಿದರು. ಸಾರ್ವಜನಿಕ ಜೀವನ ಕಲುಷಿತ ಹಾಗೂ ಪತ್ರಿಕೋದ್ಯಮ ಕಳಪೆಯಾಗುತ್ತಿರುವ ಹೊತ್ತಿನಲ್ಲಿ ಪಿ.ರಾಮಯ್ಯ ಎಂಬ ಅಪ್ಪಟ ಮಾದರಿ ನಮ್ಮನ್ನು ಅಗಲಿದೆ. ರಾಮಯ್ಯ ಅವರು ಪತ್ರಿಕಾ ವೃತ್ತಿಯ ಘನತೆ, ಮೌಲ್ಯ ಹಾಗೂ ನೈತಿಕ ಶಕ್ತಿ ಹೆಚ್ಚಳವಾಗಲು ಶ್ರಮವಹಿಸಿದ್ದರು ಎಂದು ಅವರು ನೆನಪು ಮಾಡಿಕೊಂಡರು. ವಿದ್ಯುನ್ಮಾನ ಮಾಧ್ಯಮಗಳು ಬಂದ ಮೇಲೆ ಪತ್ರಿಕೋದ್ಯಮದ ಉದ್ದೇಶ ಮತ್ತು ಸ್ವರೂಪ ಬದಲಾಗಿದೆ. ಇವತ್ತು ರಾಜಕಾರಣ ಎಲ್ಲ ಕಡೆ ರಾರಾಜಿಸುತ್ತಿದೆ. ದಿನನಿತ್ಯ ಪತ್ರಿಕೆ, ಟಿವಿ ನೋಡಿದರೆ ರಾಜಕಾರಣವೇ ಬಿಟ್ಟರೆ, ಜನರ ಬದುಕು ಮತ್ತು ಭಾವನೆಗೆ ಸಂಬಂಧಪಟ್ಟ ಯಾವುದೇ ವಿಷಯಗಳಿಗೆ ಆಸ್ಪದವೇ ಇಲ್ಲದಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು. ಇತ್ತೀಚಿಗೆ ಹಾವೇರಿಯಲ್ಲಿ ಒಂದು ಲಕ್ಷ ಜನರಿಗೆ ಹಕ್ಕು ಪತ್ರ ನೀಡುವ ಕಾರ್ಯಕ್ರಮ ಆಂಯೋಜಿಸಲಾಗಿತ್ತು. ಆದರೆ ಆ ಕಾರ್ಯಕ್ರಮದಲ್ಲಿ ಯಾವುದು ಮುಖ್ಯವಾದ ಸುದ್ದಿಯೋ ಅದನ್ನು ಬಿಟ್ಟು, ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳು ಕೈ ಕುಲಕಲಿಲ್ಲ ಎಂದು ಪತ್ರಕರ್ತರು ಕೇಳಿದ್ದರು. ಹೀಗಾಗಿ ಲಕ್ಷ ಜನರಿಗೆ ಹಕ್ಕು ಪತ್ರ ನೀಡಿರುವ ವಿಚಾರ ಮುನ್ನೆಲೆಗೆ ಬರದೇ, ಬೇರೆ ಬೇರೆ ವಿಚಾರಗಳು ಮುನ್ನೆಲಗೆ ಬಂದಿವೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ, ಮಾಧ್ಯಮ ಅಕಾಡಮಿಯ ಅಧ್ಯಕ್ಷೆ ಆಯೇಶಾ ಖಾನಂ, ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು, ಗಾಂಧಿ ಸ್ಮಾರಕ ನಿಧಿಯ ಅಧ್ಯಕ್ಷ ಡಾ.ವೂಡೇ ಪಿ.ಕೃಷ್ಣ, ಪ್ರೆಸ್ಕ್ಲಬ್ ಅಧ್ಯಕ್ಷ ಆರ್.ಶ್ರೀಧರ್, ವರದಿಗಾರರ ಕೂಟದ ಅಧ್ಯಕ್ಷ ಆರ್.ಟಿ.ವಿಠ್ಠಲಮೂರ್ತಿ, ಡಾ.ಬಾಲಾಜಿ ಮತ್ತಿತರರು ಉಪಸ್ಥಿತರಿದ್ದರು.
T20 ವಿಶ್ವಕಪ್ | ಸೂಪರ್ 8ಕ್ಕೇರಿದ ನ್ಯೂಝಿಲ್ಯಾಂಡ್
ಕೆನಡಕ್ಕೆ ಸೋಲುಣಿಸಿದ ಗ್ಲೆನ್ ಫಿಲಿಪ್ಸ್–ರಚಿನ್ ರವೀಂದ್ರ ಜೊತೆಯಾಟ ಚೆನ್ನೈ, ಫೆ. 17: ಐಸಿಸಿ T20 ವಿಶ್ವಕಪ್ ನಲ್ಲಿ ಮಂಗಳವಾರ ಗ್ಲೆನ್ ಫಿಲಿಪ್ಸ್ ಮತ್ತು ರಚಿನ್ ರವೀಂದ್ರ ಅವರ ಅರ್ಧಶತಕಗಳ ನೆರವಿನಿಂದ ನ್ಯೂಝಿಲ್ಯಾಂಡ್ ತಂಡವು ಕೆನಡವನ್ನು ಎಂಟು ವಿಕೆಟ್ಗಳ ಭರ್ಜರಿ ಅಂತರದಿಂದ ಸೋಲಿಸಿದೆ. ಇದರೊಂದಿಗೆ ನ್ಯೂಝಿಲ್ಯಾಂಡ್ ‘ಡಿ’ ಗುಂಪಿನಿಂದ ಸೂಪರ್ 8 ಹಂತವನ್ನು ಪ್ರವೇಶಿಸಿದೆ. ಕೆನಡದ ಯುವರಾಜ್ ಸಾಮ್ರಾ 65 ಎಸೆತಗಳಲ್ಲಿ 110 ರನ್ ಗಳನ್ನು ಬಾರಿಸಿದರೂ, ಆ ತಂಡದ ಬೌಲರ್ ಗಳಿಗೆ ಎದುರಾಳಿ ಬ್ಯಾಟರ್ ಗಳನ್ನು ನಿಯಂತ್ರಿಸಲು ಸಾಧ್ಯವಾಗಲಿಲ್ಲ. ಸಾಮ್ರಾ T20 ವಿಶ್ವಕಪ್ ಇತಿಹಾಸದಲ್ಲಿ ಶತಕ ಬಾರಿಸಿದ ಅತ್ಯಂತ ಕಿರಿಯ ಆಟಗಾರನಾದರು. ಗೆಲುವಿಗೆ 20 ಓವರ್ ಗಳಲ್ಲಿ 174 ರನ್ ಗಳ ಗುರಿಯನ್ನು ಪಡೆದ ನ್ಯೂಝಿಲ್ಯಾಂಡ್ ಇನ್ನೂ 29 ಎಸೆತಗಳು ಬಾಕಿಯಿರುವಂತೆಯೇ ಗೆಲುವು ದಾಖಲಿಸಿತು. ಅದು 15.1 ಓವರ್ ಗಳಲ್ಲಿ ಎರಡು ವಿಕೆಟ್ಗಳ ನಷ್ಟಕ್ಕೆ 176 ರನ್ ಗಳಿಸಿತು. ಫಿಲಿಪ್ಸ್ ಮತ್ತು ರಚಿನ್ ಮುರಿಯದ ಮೂರನೇ ವಿಕೆಟ್ಗೆ 146 ರನ್ ಗಳ ಭಾಗೀದಾರಿಕೆಯನ್ನು ನಿಭಾಯಿಸಿ ತಂಡವನ್ನು ಸುಲಭ ವಿಜಯದತ್ತ ಮುನ್ನಡೆಸಿದರು. ಫಿಲಿಪ್ಸ್ 36 ಎಸೆತಗಳಲ್ಲಿ 76 ರನ್ ಗಳನ್ನು ಸಿಡಿಸಿ ಅಜೇಯರಾಗಿದ್ದರು. ಅವರ ಇನಿಂಗ್ಸ್ನಲ್ಲಿ ಆರು ಸಿಕ್ಸರ್ ಗಳು ಮತ್ತು ನಾಲ್ಕು ಬೌಂಡರಿಗಳಿದ್ದವು. ರಚಿನ್ ರವೀಂದ್ರ 39 ಎಸೆತಗಳಲ್ಲಿ 59 ರನ್ ಗಳಿಸಿ ಔಟಾಗದೆ ಉಳಿದರು. ಅವರು ನಾಲ್ಕು ಬೌಂಡರಿಗಳು ಮತ್ತು ಮೂರು ಸಿಕ್ಸರ್ ಗಳನ್ನು ಬಾರಿಸಿದರು. ಉಳಿದಂತೆ, ಆರಂಭಿಕ ಬ್ಯಾಟರ್ ಫಿನ್ ಅಲನ್ 8 ಎಸೆತಗಳಲ್ಲಿ 21 ರನ್ ಗಳ ಕೊಡುಗೆ ನೀಡಿದರು. ಕಿವೀಸ್ ತಂಡವು ತನ್ನ ಲೀಗ್ ಹಂತದಲ್ಲಿ 1.227 ನೆಟ್ ರನ್ ರೇಟ್ ನೊಂದಿಗೆ ಆರು ಅಂಕಗಳನ್ನು ಗಳಿಸಿದೆ. ಇದೇ ಗುಂಪಿನಲ್ಲಿ ದಕ್ಷಿಣ ಆಫ್ರಿಕ ಈಗಾಗಲೇ ಸೂಪರ್ 8 ಹಂತ ತಲುಪಿದೆ. ಅದು ನೆಟ್ ರನ್ ರೇಟ್ ಆಧಾರದಲ್ಲಿ ಅಗ್ರ ಸ್ಥಾನದಲ್ಲಿದೆ. ಕೆನಡಕ್ಕೆ ಈವರೆಗೆ ಆಡಿದ ಮೂರು ಪಂದ್ಯಗಳಲ್ಲಿ ಜಯ ಸಾಧಿಸಲು ಸಾಧ್ಯವಾಗಿಲ್ಲ. ಅದು ತನ್ನ ಕೊನೆಯ ಲೀಗ್ ಪಂದ್ಯದಲ್ಲಿ ಅಫ್ಘಾನಿಸ್ತಾನವನ್ನು ಎದುರಿಸಲಿದೆ. ಇದಕ್ಕೂ ಮೊದಲು, ಎರಡೂ ತಂಡಗಳಿಗೆ ಗೆಲುವು ಅತ್ಯಗತ್ಯವಾಗಿದ್ದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಕೆನಡ, ಯುವರಾಜ್ ಸಾಮ್ರಾ ಅವರ ಶತಕದ ನೆರವಿನಿಂದ ನಾಲ್ಕು ವಿಕೆಟ್ಗಳ ನಷ್ಟಕ್ಕೆ 173 ರನ್ ಗಳಿಸಿತು. ಎಡಗೈ ಬ್ಯಾಟರ್ ಸಾಮ್ರಾ 58 ಎಸೆತಗಳಲ್ಲಿ ಶತಕ ಬಾರಿಸಿ ದಾಖಲೆ ನಿರ್ಮಿಸಿದರು. ಹತ್ತೊಂಬತ್ತು ವರ್ಷ 141 ದಿನ ವಯಸ್ಸಿನ ಸಾಮ್ರಾ ಐಸಿಸಿ T20 ವಿಶ್ವಕಪ್ ನಲ್ಲಿ ಶತಕ ಬಾರಿಸಿದ ಅತ್ಯಂತ ಕಿರಿಯ ಆಟಗಾರನಾದರು. ಅವರ ಇನಿಂಗ್ಸ್ನಲ್ಲಿ ಆರು ಸಿಕ್ಸರ್ ಗಳು ಮತ್ತು 11 ಬೌಂಡರಿಗಳಿದ್ದವು. ಅವರು ಲಾಕಿ ಫರ್ಗ್ಯೂಸನ್ ಮತ್ತು ಮಿಚೆಲ್ ಸ್ಯಾಂಟ್ನರ್ ಇಲ್ಲದ ನ್ಯೂಝಿಲ್ಯಾಂಡ್ ಬೌಲಿಂಗ್ ದಾಳಿಯ ಪೂರ್ಣ ಪ್ರಯೋಜನ ಪಡೆದರು. ನಾಯಕ ದಿಲ್ಪ್ರೀತ್ ಬಾಜ್ವಾ 39 ಎಸೆತಗಳಲ್ಲಿ 36 ರನ್ ಗಳಿಸಿದರು.
ಆರೋಗ್ಯ ಹಕ್ಕು ಕಾಯ್ದೆ ತರಲು ಪ್ರಯತ್ನ : ದಿನೇಶ್ ಗುಂಡೂರಾವ್
ಬೆಂಗಳೂರು : ಇಲಾಖೆ ವತಿಯಿಂದ ಆರೋಗ್ಯ ಹಕ್ಕು ಕಾಯ್ದೆ(ಆರ್ಟಿಎಚ್) ತರಲು ಈಗಾಗಲೇ ಕೆಲಸ ಪ್ರಾರಂಭ ಮಾಡಿದ್ದೇವೆ. ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯರ ಜೊತೆಗೂ ಚರ್ಚೆ ಮಾಡಿ ಸಚಿವ ಸಂಪುಟದಲ್ಲಿ ಮಂಡಿಸುವ ಪ್ರಯತ್ನ ಮಾಡಲಾಗವುದು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಭರವಸೆ ನೀಡಿದ್ದಾರೆ. ಮಂಗಳವಾರ ಗಾಂಧಿ ಭವನದಲ್ಲಿ ಡ್ರಗ್ ಎಕ್ಷನ್ ಫೋರಮ್, ಸಾರ್ವತ್ರಿಕ ಆರೋಗ್ಯ ಆಂದೋಲನ, ಬೇರು ಬೆವರು ಸಾಂಸ್ಕೃತಿಕ ಬಳಗದ ವತಿಯಿಂದ ಹಮ್ಮಿಕೊಂಡಿದ್ದ ಆರೋಗ್ಯ ಹಕ್ಕಿನ ಜಾಥಾ ಸಮಾವೇಶ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಈ ಮೊದಲು ಸಂಘ-ಸಂಸ್ಥೆಗಳು, ಕ್ರಿಶ್ಚಿಯನ್ ಆಸ್ಪತ್ರೆಗಳು ಸೇರಿದಂತೆ ಹಲವರು ಚಿಕಿತ್ಸೆಯನ್ನು ಸೇವಾ ಮನೋಭಾವದಿಂದ ಜನರಿಗೆ ಉಚಿತವಾಗಿ ನೀಡುತ್ತಿದ್ದರು. ಆದರೆ ಪ್ರಸ್ತುತದ ವೈದ್ಯಕೀಯ ಕ್ಷೇತ್ರ ಬಹುದೊಡ್ಡ ವ್ಯಾಪಾರ ಕ್ಷೇತ್ರವಾಗಿ ಮಾರ್ಪಟ್ಟಿದೆ ಎಂದರು. ಖಾಸಗಿ ಕ್ಷೇತ್ರದಲ್ಲಿ ಕಾರ್ಪೊರೇಟ್ರ ಪ್ರಭಾವ ಹೆಚ್ಚಾಗುತ್ತಿದೆ. ದೊಡ್ಡದೊಡ್ಡ ಕಂಪೆನಿಗಳು ಲಾಭ ಮಾಡುವುದಕ್ಕಾಗಿಯೇ ಆರೋಗ್ಯ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಸರಕಾರ ಇದನ್ನು ಹೇಗೆ ನಿಯಂತ್ರಣ ಮಾಡಬಹುದು ಎನ್ನುವುದರ ಬಗ್ಗೆ ಪ್ರಯತ್ನ ಮಾಡಲಾಗುವುದು. ಸಾರ್ವಜನಿಕ-ಖಾಸಗಿ ಸಹಭಾಗಿತ್ವ (ಪಿಪಿಪಿ)ಮಾಡಲ್ ನಮ್ಮ ವ್ಯಾಪ್ತಿಯಲ್ಲಿ ಇಲ್ಲ. ಆದರೂ ಈ ಪಿಪಿಪಿ ಮಾದರಿಯನ್ನು ಸಂಪೂರ್ಣವಾಗಿ ನಿರಾಕರಿಸುವಂತದ್ದಲ್ಲ ಎಂದು ಅವರು ತಿಳಿಸಿದರು. ಪಿಪಿಪಿ ಮಾದರಿಯ ಆಸ್ಪತ್ರೆಗಳು ದಾವಣಗೆರೆ, ಮಂಗಳೂರಿನಲ್ಲಿ ಬಹಳ ಚೆನ್ನಾಗಿ ನಡೆಯುತ್ತಿವೆ. ಅಲ್ಲಿ ಎಲ್ಲರೂ ಬಂದು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಕೆಲವು ಕಡೆ ಪಿಪಿಪಿ ಮಾದರಿಗಳು ಯಶಸ್ವಿಯೂ ಆಗಿದೆ ಮತ್ತು ವೈಫಲ್ಯವೂ ಆಗಿದೆ. ಈ ಮಾದರಿಯಲ್ಲಿ ಒಬ್ಬರ ಆಶಯ ಒಂದೇ ಇದ್ದಾಗ ಯಶಸ್ವಿಯಾಗುತ್ತದೆ ಮತ್ತು ಇನ್ನೊಬ್ಬರ ಆಶಯ ಕೇವಲ ಹಣ ಮತ್ತು ಲಾಭವೇ ಆದಾಗ ವಿಫಲವಾಗುತ್ತದೆ ಎಂದು ದಿನೇಶ್ ಗುಂಡೂರಾವ್ ಹೇಳಿದರು. ಕಾರ್ಯಕ್ರಮದಲ್ಲಿ ಡ್ರಗ್ಸ್ ಆಕ್ಷನ್ ಫೋರಂನ ಗೋಪಾಲ ದಾಬಡೆ, ಸಾರ್ವತ್ರಿಕ ಆರೋಗ್ಯ ಆಂದೋಲನ ಕರ್ನಾಟಕದ ಪ್ರಸನ್ನ ಸಾಲಿಗ್ರಾಮ, ಎಂಜಿಎಸ್ಪಿಯ ವೈಶಾಲಿ, ಆಕ್ಷನ್ ಏಯ್ಡ್ನ ರೇಷ್ಮ, ಗಮನ ಶಾಂತಮ್ಮ ಸಾಮಾಜಿಕ ಕಾರ್ಯಕರ್ತ ಶಶಿರಾಜ್ ಹರತಲೆ, ಜನವಾದಿ ಗೌರಮ್ಮ, ಕಲಾವಿದ ಬೇರು ಬೆವರು ಚಂದ್ರು, ನೆರಳು ಸಂಸ್ಥೆಯ ಕರಿಬಸಪ್ಪ, ಜಬೀನಾ ಖಾನಂ, ಸ್ವಾತಿ, ಅಕ್ಷಯ್, ಪುಷ್ಪ, ಅಶೋಕ್ ಸೇರಿದಂತೆ ಹಲವರು ಭಾಗವಹಿಸಿದ್ದರು.
ಅಮೆರಿಕ| ಅಪ್ರಾಪ್ತ ವಯಸ್ಕಳ ಮೇಲೆ ಲೈಂಗಿಕ ದೌರ್ಜನ್ಯ ಆರೋಪ: ಭಾರತೀಯನ ಬಂಧನ
ವಾಶಿಂಗ್ಟನ್,ಫೆ.17: ಅಪ್ರಾಪ್ತ ವಯಸ್ಕಳ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಆರೋಪದಲ್ಲಿ ಅಕ್ರಮ ವಲಸಿಗ ಭಾರತೀಯನೊಬ್ಬನನ್ನು ಬಂಧಿಸಲಾಗಿದೆಯೆಂದು ಅಮೆರಿಕದ ವಲಸೆ ಹಾಗೂ ಕಸ್ಟಮ್ಸ್ ಜಾರಿ (ಐಸಿಇ) ಅಮೆರಿಕದ ಹಿರಿಯ ಮಾನವಹಕ್ಕುಗಳ ಅಧಿಕಾರಿಗಳು ತಿಳಿಸಿದ್ದಾರೆ. ಬಂಧಿತ ಆರೋಪಿಯನ್ನು ವೊಡೆಲಾ ಯಶಸ್ವಿ ಕೊಟ್ಟಪಲ್ಲಿ ಎಂದು ಗುರುತಿಸಲಾಗಿದೆ. ಈತ ಅಮೆರಿಕದಲ್ಲಿ ದಾಖಲೆರಹಿತ ವಲಸಿಗನಾಗಿದ್ದು, ವಲಸೆ ಕಾನೂನಿನಡಿ ಆತನನ್ನು ಗಡಿಪಾರುಗೊಳಿಸುವ ಕಾನೂನುಪ್ರಕ್ರಿಯೆ ಜಾರಿಯಲ್ಲಿದೆ ಎಂದು ಅವರು ಹೇಳಿದ್ದಾರೆ. ನ್ಯೂಜೆರ್ಸಿಯಲ್ಲಿ ಅಪ್ರಾಪ್ತ ವಯಸ್ಸಿನ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಆರೋಪವನ್ನು ಆತನ ಮೇಲೆ ಹೊರಿಸಲಾಗಿದೆ. ಅಂಗಡಿಯಿಂದ ಕಳವು ಹಾಗೂ ಸಾರ್ವಜನಿಕ ಶಾಂತಿಭಂಗದ ಆರೋಪವನ್ನು ಕೂಡಾ ಆತ ಎದುರಿಸುತ್ತಿದ್ದಾನೆ.
ರಶ್ಯದ ಲೆನಿನ್ಗಾರ್ಡ್ ಸೇನಾನೆಲೆಯಲ್ಲಿ ಸ್ಫೋಟ: ಕನಿಷ್ಠ ಇಬ್ಬರು ಮೃತ್ಯು
ಮಾಸ್ಕೋ,ಫೆ.17: ರಶ್ಯದ ಲೆನಿನ್ಗ್ರಾಡ್ ಪ್ರಾಂತದ ಸೆರ್ಟೊಲೊವೊ ಪಟ್ಟಣದಲ್ಲಿರುವ ಸೇನಾ ನೆಲೆಯಲ್ಲಿ ಸಂಭವಿಸಿದ ಸ್ಫೋಟದಲ್ಲಿ ಕನಿಷ್ಠ ಇಬ್ಬರು ಮೃತಪಟ್ಟಿದ್ದಾರೆ. ಮಿಲಿಟರಿ ಪೊಲೀಸ್ ಕಟ್ಟಡದಲ್ಲಿ ಈ ಸ್ಫೋಟ ಸಂಭವಿಸಿರುವುದಾಗಿ ಲೆನಿನ್ಗ್ರಾಡ್ನ ಗವರ್ನರ್ ಅಲೆಕ್ಸಾಂಡರ್ ಡೊಝ್ಡೆಂಕೊ ಹೇಳಿದ್ದಾರೆ. ಆದರೆ ಈ ಬಗ್ಗೆ ಅವರು ಹೆಚ್ಚಿನ ವಿವರಗಳನ್ನು ನೀಡಲು ನಿರಾಕರಿಸಿದ್ದಾರೆ. ಕುಸಿದುಬಿದ್ದಿರುವ ಮಿಲಿಟರಿ ಪೊಲೀಸ್ ಕಾರ್ಯಾಲಯದ ಕಟ್ಟಡದ ಅವಶೇಷಗಳನ್ನು ತೆರವುಗೊಳಿಸಲು ಹಾಗೂ ಗಾಯಾಳುಗಳನ್ನು ರಕ್ಷಿಸಲು ಭದ್ರತಾಪಡೆಗಳು ಕಾರ್ಯಾಚರಿಸುತ್ತಿವೆಯೆಂದು ಡ್ರೊಝೆಡೆಂಕೊ ತಿಳಿಸಿದ್ದಾರೆ.
ಬಿಇಎಲ್ಗೆ ಭೇಟಿ ನೀಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್; ಕ್ಷಿಪಣಿ ಸಂಯೋಜನಾ ಘಟಕದ ಉದ್ಘಾಟನೆ
ಬೆಂಗಳೂರು : ರಕ್ಷಣಾ ಸಚಿವ ರಾಜನಾಥ್ ಸಿಂಗ್ ಬೆಂಗಳೂರಿನ ನವರತ್ನ ಡಿಫೆನ್ಸ್ ಪಿಎಸ್ಯು ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ಗೆ (ಬಿಇಎಲ್) ಭೇಟಿ ನೀಡಿ ಪುಣೆಯಲ್ಲಿರುವ ಕೃತಕ ಬುದ್ಧಿಮತ್ತೆ ಶ್ರೇಷ್ಠತಾ ಕೇಂದ್ರವನ್ನು ವರ್ಚುವಲ್ ಮೂಲಕ ಉದ್ಘಾಟಿಸಿದರು ಮತ್ತು ಕಂಪನಿಯ ಕೃತಕ ಬುದ್ಧಿಮತ್ತೆ ನೀತಿಯನ್ನು ಅಧಿಕೃತವಾಗಿ ಬಿಡುಗಡೆ ಮಾಡಿದರು. ಅಲ್ಲದೇ, ಬಿಇಎಲ್ ಅಭಿವೃದ್ಧಿಪಡಿಸಿದ ಮೌಂಟೇನ್ ಫೈರ್ ಕಂಟ್ರೋಲ್ ರಾಡಾರ್ ಅನ್ನು ಲೋಕಾರ್ಪಣೆ, ಕ್ಷಿಪಣಿ ಸಂಯೋಜನಾ ಘಟಕದ ಉದ್ಘಾಟನೆ, ಆಕಾಶ್ 3ನೇ ಮತ್ತು 4ನೇ ರೆಜಿಮೆಂಟ್ ಕಾಂಬ್ಯಾಟ್ ಸಿಸ್ಟಮ್ಗಳಿಗೆ ಇದೇ ಸಂದರ್ಭದಲ್ಲಿ ಅವರು ಚಾಲನೆ ನೀಡಿದರು. ಭಾರತೀಯ ಸ್ಟಾರ್ಟ್ಅಪ್ಗಳು ಅಭಿವೃದ್ಧಿಪಡಿಸಿದ ಕೃತಕ ಬುದ್ಧಿಮತ್ತೆ ಆಧಾರಿತ ಪರಿಹಾರಗಳು ಸೇರಿದಂತೆ ವಿವಿಧ ಸುಧಾರಿತ ದೇಶೀಯ ರಕ್ಷಣಾ ತಂತ್ರಜ್ಞಾನಗಳ ಬಗ್ಗೆ ಸಚಿವರಿಗೆ ಮಾಹಿತಿ ನೀಡಲಾಯಿತು. ಇದು ರಕ್ಷಣಾ ಪರಿಸರ ವ್ಯವಸ್ಥೆಯಲ್ಲಿ ನಾವೀನ್ಯತೆ ಮತ್ತು ಸ್ವದೇಶೀಕರಣಕ್ಕೆ ನೀಡಲಾಗುತ್ತಿರುವ ಪ್ರಾಮುಖ್ಯತೆಯನ್ನು ಎತ್ತಿ ತೋರಿಸಿತು. ಬಿಇಎಲ್ ಸಹಯೋಗದೊಂದಿಗೆ ಕ್ಷಿಪಣಿ ವ್ಯವಸ್ಥೆಗಳ ತಯಾರಿಕೆಯಲ್ಲಿ ತೊಡಗಿರುವ ಉದ್ಯಮ ಪಾಲುದಾರರಾದ ಬಿಇಎಂಎಲ್, ಬಿಡಿಎಲ್, ಎಲ್ ಅಂಡ್ ಟಿ, ಎಂ.ಎಸ್.ಎಂ.ಇಗಳು ಮತ್ತು ಸ್ಟಾರ್ಟ್ ಅಪ್ಗಳೊಂದಿಗೆ ರಾಜನಾಥ್ ಸಿಂಗ್ ಸಂವಾದ ನಡೆಸಿದರು. ಸುಧಾರಿತ ದೇಶೀಯ ತಂತ್ರಜ್ಞಾನಗಳ ಅಭಿವೃದ್ಧಿಗಾಗಿ ಶೈಕ್ಷಣಿಕ ಪಾಲುದಾರರಾದ ಐಐಟಿ-ಎಂ ಮತ್ತು ಐಐಎಸ್ಸಿ ಪ್ರತಿನಿಧಿಗಳೊಂದಿಗೂ ಚರ್ಚೆಗಳು ನಡೆದವು. ಮಾಹಿತಿ ವಿನಿಮಯದ ಸಂದರ್ಭದಲ್ಲಿ, ಬಿಇಎಲ್ನ ಕೇಂದ್ರ ಸಂಶೋಧನಾ ಪ್ರಯೋಗಾಲಯಗಳು, ಎಲೆಕ್ಟ್ರಾನಿಕ್ಸ್ ವಾರ್ಫೇರ್ ಮತ್ತು ಫೋಟೋನಿಕ್ಸ್ ಶ್ರೇಷ್ಠತಾ ಕೇಂದ್ರ, ಕಮ್ಯುನಿಕೇಶನ್ ಶ್ರೇಷ್ಠತಾ ಕೇಂದ್ರ, ರಾಡಾರ್ ಮತ್ತು ವೆಪನ್ ಸಿಸ್ಟಮ್ಸ್ ಹಾಗೂ ಉತ್ಪನ್ನ ಅಭಿವೃದ್ಧಿ ಮತ್ತು ನಾವೀನ್ಯತೆ ಕೇಂದ್ರ ಕೈಗೊಂಡಿರುವ ಸ್ವದೇಶೀಕರಣ ಉಪಕ್ರಮಗಳನ್ನು ಪ್ರದರ್ಶಿಸಲಾಯಿತು. ಸ್ಟಾರ್ಟ್ಅಪ್ಗಳು ಮತ್ತು ಉದ್ಯಮ ಪಾಲುದಾರರು ತಮ್ಮ ಉತ್ಪನ್ನಗಳನ್ನು ಪ್ರದರ್ಶಿಸಿದರು. ದೇಶೀಯ ರಕ್ಷಣಾ ಉತ್ಪಾದನೆ ಮತ್ತು ಸಂಶೋಧನಾ ಸಾಮಥ್ರ್ಯಗಳನ್ನು ಬಲಪಡಿಸುವಲ್ಲಿ ಬಿಇಎಲ್ ನೀಡುತ್ತಿರುವ ಮಹತ್ವದ ಕೊಡುಗೆಯನ್ನು ಸಚಿವರ ಗಮನಕ್ಕೆ ತರಲಾಯಿತು. ತ್ವರಿತ ಪ್ರತಿಕ್ರಿಯೆ ಮೇಲ್ಮೈಯಿಂದ ಗಾಳಿಗೆ ಚಿಮ್ಮುವ ಕ್ಷಿಪಣಿ ವ್ಯವಸ್ಥೆಗಳು, ಲಘು ಯುದ್ಧ ವಿಮಾನ ಮಾರ್ಕ್ II , ಸುಧಾರಿತ ಮಧ್ಯಮ ಯುದ್ಧ ವಿಮಾನ, ಪ್ರಾಜೆಕ್ಟ್ ಕುಶಾ, ಡ್ರೋನ್ ನಿರೋಧಕ ವ್ಯವಸ್ಥೆಗಳು ಮತ್ತು ನೌಕಾ ಶಸ್ತ್ರಾಸ್ತ್ರ ನಿಯಂತ್ರಣ ವ್ಯವಸ್ಥೆಗಳಂತಹ ಪ್ರಮುಖ ರಾಷ್ಟ್ರೀಯ ರಕ್ಷಣಾ ಕಾರ್ಯಕ್ರಮಗಳಿಗೆ ಪೂರಕವಾಗಿ ಬಿಇಎಲ್ನಲ್ಲಿ ನಡೆಯುತ್ತಿರುವ ಸಂಶೋಧನೆ ಮತ್ತು ಅಭಿವೃದ್ಧಿ ಚಟುವಟಿಕೆಗಳ ಬಗ್ಗೆಯೂ ಸಚಿವರಿಗೆ ವಿವರಿಸಲಾಯಿತು. ಕಾರ್ಯತಂತ್ರದ ಸೆಮಿಕಂಡಕ್ಟರ್ ಸಾಧನಗಳಾದ ಸೆಕ್ಯೂರ್ ಸಿಸ್ಟಮ್ ಆನ್ ಚಿಪ್ಸ್, ಮೊನೊಲಿಥಿಕ್ ಮೈಕ್ರೋವೇವ್ ಇಂಟಿಗ್ರೇಟೆಡ್ ಸಕ್ರ್ಯೂಟ್ಸ್ ಮತ್ತು ಅಪ್ಲಿಕೇಶನ್ ಸ್ಪೆಸಿಫಿಕ್ ಇಂಟಿಗ್ರೇಟೆಡ್ ಸಕ್ರ್ಯೂಟ್ಸ್ ಗಳ ಸ್ವದೇಶೀಕರಣದಲ್ಲಿ ಬಿಇಎಲ್ ಪಾತ್ರದ ಮೇಲೆ ವಿಶೇಷ ಗಮನ ಹರಿಸಲಾಯಿತು. ಇದು ‘ಇಂಡಿಯಾ ಸೆಮಿಕಂಡಕ್ಟರ್ ಮಿಷನ್' ಮತ್ತು ನಿರ್ಣಾಯಕ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಆತ್ಮನಿರ್ಭರ ಭಾರತದ ದೂರದೃಷ್ಟಿಗೆ ಅನುಗುಣವಾಗಿದೆ. ಸ್ವದೇಶಿ ಸಂಶೋಧನೆ ಮತ್ತು ಅಭಿವೃದ್ಧಿ ಉಪಕ್ರಮಗಳು ಭೂಮಿ, ವಾಯು, ನೌಕಾ ಮತ್ತು ಕಾರ್ಯತಂತ್ರದ ವಲಯಗಳಲ್ಲಿ ಕಾರ್ಯಾಚರಣೆಯ ಸನ್ನದ್ಧತೆಯನ್ನು ಹೆಚ್ಚಿಸುತ್ತಿವೆ ಹಾಗೂ ವಿದೇಶಿ ತಂತ್ರಜ್ಞಾನಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುತ್ತಿವೆ ಎಂದು ತಿಳಿಸಲಾಯಿತು. ರಕ್ಷಣಾ ಸಚಿವರು ಬಿಇಎಲ್ನ ಸಂಶೋಧನಾ ಸಮುದಾಯವನ್ನು ಉದ್ದೇಶಿಸಿ ಮಾತನಾಡುತ್ತಾ, ಎಐ ಮತ್ತು ಸ್ವಾಯತ್ತ ವ್ಯವಸ್ಥೆಗಳಲ್ಲಿನ ಇತ್ತೀಚಿನ ತಂತ್ರಜ್ಞಾನಗಳನ್ನು ಬಳಸಿಕೊಂಡು ಉತ್ಪನ್ನಗಳ ತ್ವರಿತ ಅಭಿವೃದ್ಧಿಗಾಗಿ ಸ್ಟಾರ್ಟ್ಅಪ್ಗಳು, ಉದ್ಯಮ ಮತ್ತು ಶಿಕ್ಷಣ ಸಂಸ್ಥೆಗಳೊಂದಿಗೆ ಸಹಕರಿಸಲು ಪ್ರೋತ್ಸಾಹಿಸಿದರು. ವಿಕಸಿತ ಭಾರತದ ಕನಸನ್ನು ನನಸಾಗಿಸಲು ಬಿಇಎಲ್ ವಿವಿಧ ವಿಭಾಗಗಳ ನಡುವಿನ ಸಹಯೋಗ, ನಾವೀನ್ಯತೆ ಮತ್ತು ಕ್ಷಿಪ್ರ ಮೂಲಮಾದರಿ ತಯಾರಿಕೆಗೆ ಆದ್ಯತೆ ನೀಡಬೇಕೆಂದು ಒತ್ತಿ ಹೇಳಿದರು.
ಪ್ರಧಾನಿ ಮೋದಿ- ಫ್ರೆಂಚ್ ಅಧ್ಯಕ್ಷ ಮ್ಯಾಕ್ರನ್ ದ್ವಿಪಕ್ಷೀಯ ಮಾತುಕತೆ| ಉಭಯ ದೇಶಗಳ ಸಂಬಂಧ ವಿಶೇಷ ಜಾಗತಿಕ
ಕಾರ್ಯತಂತ್ರ ಪಾಲುದಾರಿಕೆಗೆ ಹೆಚ್ಚಿಸಲು ನಿರ್ಧಾರ
ಇರಾನ್ ಸನಿಹಕ್ಕೆ ಧಾವಿಸುತ್ತಿರುವ ಅಮೆರಿಕದ ಯುದ್ಧ ನೌಕೆ ಯುಎಸ್ಎಸ್ ‘ಅಬ್ರಹಾಂ ಲಿಂಕನ್’
ಟೆಹರಾನ್,ಫೆ.17: ಇರಾನ್-ಅಮೆರಿಕ ನಡುವೆ ಸ್ವಿಝರ್ಲ್ಯಾಂಡ್ನ ಜಿನೇವಾದಲ್ಲಿ ಎರಡನೇ ಹಂತದ ಮಾತುಕತೆಗಳು ಮಂಗಳವಾರ ನಡೆಯುತ್ತಿವಂತೆಯೇ ಇರಾನ್ ಕರಾವಳಿಯ ಸನಿಹಕ್ಕೆ ಅಮೆರಿಕದ ಯುದ್ಧ ನೌಕೆ ಯುಎಸ್ಎಸ್ ಅಬ್ರಹಾಂಲಿಂಕನ್ ಧಾವಿಸುತ್ತಿದ್ದು, ಪ್ರದೇಶದಲ್ಲಿ ಮತ್ತೆ ಸಂಘರ್ಷದ ಭೀತಿಯನ್ನು ಹುಟ್ಟುಹಾಕಿದೆ. ಇರಾನ್ ಕರಾವಳಿಯಿಂದ 700 ಕಿ.ಮೀ. ದೂರದ ಒಮಾನ್ ಕರಾವಳಿಯಲ್ಲಿ ಅಮೆರಿಕದ ವಿಮಾನಸಾಗಣೆ ನೌಕೆ ಅಬ್ರಹಾಂ ಲಿಂಕನ್ ಲಂಗರು ಹಾಕಿರುವ ದೃಶ್ಯದ ಉಪಗ್ರಹ ಚಿತ್ರಗಳನ್ನು ಬಿಬಿಸಿ ಸುದ್ದಿಸಂಸ್ಥೆ ಹಂಚಿಕೊಂಡಿದೆ. ಈ ಯುದ್ಧ ನೌಕೆಯು ಎಫ್-35 ಯುದ್ಧವಿಮಾನಗಳು ಸೇರಿದಂತೆ 90 ಫೈಟರ್ ಜೆಟ್ಗಳು, 5683 ಯೋಧರನ್ನು ಒಳಗೊಂಡಿದೆ. ಐದು ದಿನಗಳ ಹಿಂದೆ ಅಮೆರಿಕದ ಇನ್ನೊಂದು ವಿಮಾನವಾಹಕ ನೌಕೆ ಯುಎಸ್ಎಸ್ ಜೆರಾಲ್ಡ್ ಆರ್.ಫೋರ್ಡ್ ಕೂಡಾ ಇರಾನ್ನೆಡೆಗೆ ಧಾವಿಸಲು ಆರಂಭಿಸಿದೆ. ಈ ನಡುವೆ ಇರಾನ್ನ ರೆವೆಲ್ಯೂಶನರಿ ಗಾರ್ಡ್ ಯೋಧರು ಹೊರ್ಮುಝ್ ಜಲಸಂಧಿಯಲ್ಲಿ ಸಮರಾಭ್ಯಾಸ ಕವಾಯತನ್ನು ಆರಂಭಿಸಿರುವುದು ಯುದ್ಧ ಭೀತಿಯನ್ನು ಇನ್ನಷ್ಟು ಹೆಚ್ಚಿಸಿದೆ.
ಮಹಾರಾಷ್ಟ್ರ| ವಿದ್ಯಾರ್ಥಿಗಳ ನಡುವೆ ಘರ್ಷಣೆ: ಓರ್ವ ಮೃತ್ಯು, ಮೂವರು ಗಂಭೀರ
ಲಾತೂರ್, ಫೆ. 17: ಮಹಾರಾಷ್ಟ್ರದ ಲಾತೂರ್ನ ಕಾಲೇಜೊಂದರಲ್ಲಿ ವಿದ್ಯಾರ್ಥಿಗಳ ಎರಡು ಗುಂಪುಗಳ ನಡುವೆ ನಡೆದ ಘರ್ಷಣೆಯ ಸಂದರ್ಭ ಓರ್ವ ವಿದ್ಯಾರ್ಥಿ ಮೃತಪಟ್ಟಿದ್ದಾನೆ. ಮೂವರು ಗಂಭೀರ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಔಸಾ ರಸ್ತೆಯಲ್ಲಿರುವ ಕಾಲೇಜಿನ ಆವರಣದಲ್ಲಿ ಸೋಮವಾರ ಸಂಜೆ ಈ ಘಟನೆ ನಡೆದಿದೆ. ಘರ್ಷಣೆಗೆ ಸಂಬಂಧಿಸಿ ನಾಲ್ವರು ವಿದ್ಯಾರ್ಥಿಗಳನ್ನು ಬಂಧಿಸಲಾಗಿದೆ. ‘‘ವೈಯುಕ್ತಿಕ ವಿವಾದದ ಹಿನ್ನೆಲೆಯಲ್ಲಿ ಮೂರನೇ ವರ್ಷದ ಡಿಪ್ಲೊಮಾ ಕೋರ್ಸ್ನ ವಿದ್ಯಾರ್ಥಿಗಳ ಎರಡು ಗುಂಪುಗಳ ನಡುವೆ ಘರ್ಷಣೆ ನಡೆಯಿತು. ಈ ಸಂದರ್ಭ ಆ ದಾರಿಯಾಗಿ ಸಾಗುತ್ತಿದ್ದ ನಾರಾಯಣ ಪಂಚಾಲ್ (20)ನನ್ನು ಇರಿದು ಹತ್ಯೆಗೈಯಲಾಗಿದೆ. ಇತರ ಮೂವರಿಗೆ ಗಂಭೀರ ಗಾಯಗಳಾಗಿವೆ. ಅವರನ್ನು ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ’’ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಸಚಿವರ ಸಂಖ್ಯೆ ಶೇ.15 ಮೀರುವಂತಿಲ್ಲ : ಹೈಕೋರ್ಟ್
ಬೆಂಗಳೂರು : ಸಂವಿಧಾನದ ವಿಧಿಯ ಪ್ರಕಾರ ಸಚಿವರ ಸಂಖ್ಯೆಯು ಒಟ್ಟು ಶಾಸಕರ ಸಂಖ್ಯೆ ಶೇ.15 ಅನ್ನು ಮೀರುವಂತಿಲ್ಲ. ಇಷ್ಟೇ ಮಂದಿ ಸಚಿವರಾಗಬೇಕು ಎಂಬುದಕ್ಕೆ ಮಿತಿ ಇದೆ. ಅನುಮತಿಗಿಂತ ಹೆಚ್ಚು ಮಂದಿಗೆ ಸರಕಾರ ವೇತನ ನೀಡಲಾಗದು ಎಂದು ಹೈಕೋರ್ಟ್ ಮೌಖಿಕವಾಗಿ ಹೇಳಿದೆ. ಸಂಪುಟ ದರ್ಜೆ ಸ್ಥಾನಮಾನ ಹಾಗೂ ಸೌಲಭ್ಯಗಳೊಂದಿಗೆ 34 ಮಂದಿ ಶಾಸಕರನ್ನು ವಿವಿಧ ನಿಗಮ-ಮಂಡಳಿಗಳಿಗೆ ಅಧ್ಯಕ್ಷರನ್ನಾಗಿ ಹಾಗೂ ದಿಲ್ಲಿ ವಿಶೇಷ ಪ್ರತಿನಿಧಿ, ಸಿಎಂ ರಾಜಕೀಯ ಕಾರ್ಯದರ್ಶಿ ಸಹಿತ ಹಲವು ಶಾಸಕರಿಗೆ ವಿವಿಧ ಹುದ್ದೆಗಳಿಗೆ ನೇಮಕ ಮಾಡಿರುವುದು ಸಂವಿಧಾನಬಾಹಿರ ಎಂದು ಆಕ್ಷೇಪಿಸಿ ಬೆಂಗಳೂರು ನಿವಾಸಿ ಸೂರಿ ಪಾಯಲ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಹಾಗೂ ನ್ಯಾಯಮೂರ್ತಿ ಸಿ.ಎಂ. ಪೂಣಚ್ಚ ಅವರಿದ್ದ ವಿಭಾಗೀಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು. ಅರ್ಜಿದಾರರ ಪರ ವಕೀಲರು ವಾದ ಮಂಡಿಸಿ, ಹಾಲಿ ಅರ್ಜಿ ಸಲ್ಲಿಸಿದಾಗ 46 ಮಂದಿ ಲಾಭದಾಯಕ ಹುದ್ದೆಯಲ್ಲಿದ್ದರು. ಈಗ 129 ಮಂದಿ ಲಾಭದಾಯಕ ಹುದ್ದೆಯಲ್ಲಿದ್ದಾರೆ. ನಾವು ಸರಕಾರದ ಆದೇಶವನ್ನು ಮಾತ್ರ ಪ್ರಶ್ನಿಸುತ್ತೇವೆ. ಎಲ್ಲ ಪ್ರತಿವಾದಿಗಳನ್ನು ಡಿಲೀಟ್ ಮಾಡಬಹುದು. ಶಾಸಕರು ಫಲಾನುಭವಿಗಳಾಗಿದ್ದಾರೆ. ಸರಕಾರದ ಆದೇಶ ಕಾರ್ಯಕಾರಿ ಆದೇಶ ರೂಪದಲ್ಲಿದ್ದು, ಅದು ಮತ್ತೆ ಅಂಥ ಹುದ್ದೆಗಳನ್ನು ಸೃಷ್ಟಿಸುತ್ತಿದೆ. ರಾಜ್ಯ ಸರಕಾರವು ಹೊಸದಾಗಿ ಆಯೋಗ, ಸಮಿತಿ, ಪ್ರಾಧಿಕಾರ, ಮಿಷನ್, ಕಾರ್ಯಪಡೆಗಳನ್ನು ರೂಪಿಸಿ ಅದಕ್ಕೆ ಶಾಸಕರನ್ನು ನೇಮಿಸಿ ಅಧ್ಯಕ್ಷರನ್ನಾಗಿಸಿದೆ. ನಾವು ವೈಯಕ್ತಿಕವಾಗಿ ಶಾಸಕರು/ಸಚಿವರ ವಿರುದ್ಧವಿಲ್ಲ. ಸರಕಾರದ ಆದೇಶದ ವಿರುದ್ಧ ಮಾತ್ರ ಇದ್ದೇವೆ. ಅಧ್ಯಕ್ಷರು/ಮುಖ್ಯಸ್ಥರಿಗೆ ಕರ್ನಾಟಕ ಸಚಿವರು ವೇತನ, ಭತ್ತೆ ಕಾಯ್ದೆ 1956ರ ವೇತನ ಸಿಗಲಿದೆ. ಈಗ ಶಾಸಕರಿಗೆ ಸಚಿವರಿಗೆ ಸಂಪುಟ ದರ್ಜೆ ಸ್ಥಾನಮಾನ ನೀಡಲಾಗಿದೆ ಎಂದರು. ಆಗ ನ್ಯಾಯಪೀಠ, ಸಂವಿಧಾನದ 164(1ಎ) ವಿಧಿ ಪ್ರಕಾರ ಸಚಿವರ ಸಂಖ್ಯೆಯು ಶೇ. 15 ಅನ್ನು ಮೀರುವಂತಿಲ್ಲ. ಇಷ್ಟೇ ಮಂದಿ ಸಚಿವರಾಗಬೇಕು ಎಂಬುದಕ್ಕೆ ಮಿತಿ ಇದೆ. ಅನುಮತಿಸಿರುವ ಮಂದಿಗಿಂತ ಹೆಚ್ಚು ಮಂದಿಗೆ ನಿಮಗೆ ವೇತನ ನೀಡಲಾಗುವುದಿಲ್ಲ ಎಂದು ಹೇಳಿತು. ಅಂತಿಮವಾಗಿ, ಪ್ರತಿವಾದಿಗಳನ್ನಾಗಿಸಿರುವ ಶಾಸಕರ ವಿರುದ್ಧ ಯಾವುದೇ ಕೋರಿಕೆ ಇಲ್ಲವಾದ್ದರಿಂದ ಅವರನ್ನು ಪ್ರತಿವಾದಿಗಳ ಸ್ಥಾನದಿಂದ ತೆಗೆಯಬಹುದು. 2020ರ ಅಕ್ಟೋಬರ್ 7ರಂದು ರಾಜ್ಯ ಸರಕಾರ ಹೊರಡಿಸಿರುವ ಸರಕಾರದ ಆದೇಶವನ್ನು ಮಾತ್ರ ಅರ್ಜಿದಾರರು ಪ್ರಶ್ನಿಸಿದ್ದಾರೆ ಎಂದು ಆದೇಶಿಸಿದ ನ್ಯಾಯಪೀಠ, ವಿಚಾರಣೆಯನ್ನು ಮಾರ್ಚ್ 4ಕ್ಕೆ ಮುಂದೂಡಿತು.
ಗುಜರಾತ್ನ 6 ನ್ಯಾಯಾಲಯಗಳಿಗೆ ಬಾಂಬ್ ಬೆದರಿಕೆ: ಪೊಲೀಸರಿಂದ ಶೋಧ
ಅಹ್ಮದಾಬಾದ್, ಫೆ. 17: ಗುಜರಾತ್ನ 6 ನ್ಯಾಯಾಲಯಗಳು ಮಂಗಳವಾರ ಬಾಂಬ್ ಬೆದರಿಕೆಯ ಇಮೇಲ್ಗಳನ್ನು ಸ್ವೀಕರಿಸಿವೆ. ಈ ಹಿನ್ನೆಲೆಯಲ್ಲಿ ಈ ನ್ಯಾಯಾಲಯಗಳಲ್ಲಿ ಕೂಲಂಕಷ ಶೋಧ ಕಾರ್ಯಾಚರಣೆ ನಡೆಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಹ್ಮದಾಬಾದ್, ವಡೋದರಾ, ವಲಸಾಡ್, ರಾಜ್ಕೋಟ್, ಗಾಂಧಿನಗರ ಹಾಗೂ ಮಹೇಶಾನ ನ್ಯಾಯಾಲಯಗಳು ಬಾಂಬ್ ಬೆದರಿಕೆಯ ಇಮೇಲ್ಗಳನ್ನು ಸ್ವೀಕರಿಸಿವೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ವಡೋದರಾ ಜಿಲ್ಲಾ ನ್ಯಾಯಾಲಯಕ್ಕೆ ಕಳುಹಿಸಿದ ಇಮೇಲ್ನಲ್ಲಿ ನ್ಯಾಯಾಲಯದ ಆವರಣದಲ್ಲಿ 19 ಬಾಂಬ್ಗಳನ್ನು ಇರಿಸಲಾಗಿದೆ ಎಂದು ಪ್ರತಿಪಾದಿಸಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ‘‘ಮಧ್ಯಾಹ್ನದ ಊಟದ ಸಮಯದಲ್ಲಿ ನ್ಯಾಯಾಲಯದ ಮೇಲೆ ಬಾಂಬ್ ಹಾಕಲಾಗುವುದು ಎಂದು ಬೆದರಿಕೆ ಒಡ್ಡಲಾಗಿತ್ತು. ಇಮೇಲ್ ಕಳುಹಿಸಿದವರು ತಮಿಳುನಾಡು ನ್ಯಾಯಾಲಯದ ತೀರ್ಪನ್ನು ಟೀಕಿಸಿದ್ದಾರೆ. ವಡೋದರಾ ಎಸ್ಒಜಿ, ಬಾಂಬ್ ಪತ್ತೆ ಹಾಗೂ ನಿಷ್ಕ್ರಿಯ ದಳ (ಬಿಡಿಡಿಎಸ್), ಶ್ವಾನ ದಳ, ಸ್ಥಳೀಯ ಪೊಲೀಸರು ಹಾಗೂ ಸೈಬರ್ ತಜ್ಞರ ತಂಡ ಪೂರ್ವಾಹ್ನ ಸುಮಾರು 11 ಗಂಟೆಗೆ ಸ್ಥಳಕ್ಕೆ ತಲುಪಿತು. ನ್ಯಾಯಾಲಯದ ಆವರಣವನ್ನು ಸುತ್ತುವರಿಯಿತು. ಆದರೆ, ಯಾವುದೇ ಅನುಮಾನಾಸ್ಪದ ವಸ್ತು ಪತ್ತೆಯಾಗಿಲ್ಲ’’ ಎಂದು ವಲಯ 2 ಡಿಸಿಪಿ ಮಂಜಿತ್ ವಂಝಾರಾ ತಿಳಿಸಿದ್ದಾರೆ. ನ್ಯಾಯಾಲಯದ ಆವರಣದಲ್ಲಿ ಸುಧಾರಿತ ಸ್ಫೋಟಕಗಳನ್ನು ಇರಿಸಲಾಗಿದೆ. ಅದು ಅಪರಾಹ್ನದ ನಮಾಝ್ಗೆ ಮುನ್ನ ಸ್ಫೋಟಗೊಳ್ಳಲಿದೆ ಎಂದು ಇಮೇಲ್ ಬೆದರಿಕೆ ಒಡ್ಡಿತ್ತು. ಈ ಹಿನ್ನೆಲೆಯಲ್ಲಿ ವಲಸಾಡ್ನ ಜಿಲ್ಲಾ ನ್ಯಾಯಾಲಯದ 19 ನ್ಯಾಯಾಲಯಗಳನ್ನು ತೆರವುಗೊಳಿಸಲಾಯಿತು ಎಂದು ವಲಸಾಡ್ನ ಪೊಲೀಸ್ ವರಿಷ್ಠ ಯುವರಾಜ್ ಸಿಂಗ್ ಜಡೇಜಾ ತಿಳಿಸಿದ್ದಾರೆ. ಶೋಧ ಕಾರ್ಯಾಚರಣೆ ಸಂದರ್ಭ ಅನುಮಾನಾಸ್ಪದವಾದ ಯಾವುದೇ ವಸ್ತುಗಳು ಪತ್ತೆಯಾಗಿಲ್ಲ ಎಂದು ಅವರು ಹೇಳಿದ್ದಾರೆ. ಬಾಂಬ್ ಬೆದರಿಕೆ ಹಿನ್ನೆಲೆಯಲ್ಲಿ ರಾಜ್ಕೋಟ್, ಗಾಂಧಿನಗರ ಹಾಗೂ ಅಹ್ಮದಾನಗರ್ನ ಜಿಲ್ಲಾ ನ್ಯಾಯಾಲಯಗಳನ್ನು ಮಂಗಳವಾರ ಬೆಳಗ್ಗೆ ತೆರೆವುಗೊಳಿಸಲಾಯಿತು. ಆದರೆ ಯಾವುದೇ ರೀತಿಯ ಸಂದೇಹಾಸ್ಪದ ವಸ್ತುಗಳು ಪತ್ತೆಯಾಗಿಲ್ಲ ಎಂದು ಅಧಿಕಾರಿಗಳು ದೃಢಪಡಿಸಿದ್ದಾರೆ.
ಮಾಹಿತಿ ನಿರಾಕರಿಸಿದ ಆರೋಪ | ಮಹೇಶ್ ಜೋಶಿಗೆ ವಿಧಿಸಲಾಗಿದ್ದ 25 ಸಾವಿರ ರೂ. ದಂಡ ಖಾಯಂ
ಬೆಂಗಳೂರು : ಮಾಹಿತಿ ಹಕ್ಕು (ಆರ್ಟಿಐ) ಕಾಯ್ದೆ ಅಡಿ ಮಾಹಿತಿ ನೀಡಲು ನಿರಾಕರಿಸಿದ ಕಾರಣಕ್ಕೆ ಮಾಹಿತಿ ಆಯೋಗ ವಿಧಿಸಿದ್ದ 25 ಸಾವಿರ ರೂ. ದಂಡದ ಆದೇಶ ಪ್ರಶ್ನಿಸಿ ಸಲ್ಲಿಸಿದ್ದ ಮೇಲ್ಮನವಿಯನ್ನು ಕಸಾಪ ಅಧ್ಯಕ್ಷ ಮಹೇಶ್ ಜೋಶಿ ಹಿಂಪಡೆದಿದ್ದಾರೆ. ಇದರಿಂದ, ಹೈಕೋರ್ಟ್ ಮೇಲ್ಮನವಿ ವಜಾಗೊಳಿಸಿದ್ದು, ಜೋಶಿ ಅವರು 25 ಸಾವಿರ ರೂ. ದಂಡ ಪಾವತಿಸುವ ಅನಿವಾರ್ಯತೆ ಎದುರಾಗಿದೆ. ಬೆಂಗಳೂರು ದೂರದರ್ಶನಕ್ಕೆ ಸಂಬಂಧಿಸಿ ಕೆಲವು ಮಾಹಿತಿ ಕೋರಿ ಬಿ. ಅಶೋಕ್ ಮತ್ತು ಎನ್.ಕೆ. ಮೋಹನ್ ರಾಂ 2008-09ರ ಅವಧಿಯಲ್ಲಿ ದೂರದರ್ಶನ ಕೇಂದ್ರಕ್ಕೆ ಅರ್ಜಿ ಸಲ್ಲಿಸಿದ್ದರು. ಅಂದಿನ ದೂರದರ್ಶನ ಮಾಹಿತಿ ಅಧಿಕಾರಿ ಹಾಗೂ ಕೇಂದ್ರದ ನಿರ್ದೇಶಕರಾಗಿದ್ದ ಮಹೇಶ್ ಜೋಶಿ ಮಾಹಿತಿ ನೀಡಲು ನಿರಾಕರಿಸಿದ್ದರಲ್ಲದೆ, ಮಾಹಿತಿ ಒದಗಿಸಲು 50,160 ರೂ. ಪಾವತಿಸುವಂತೆ ಅರ್ಜಿದಾರರಿಗೆ ಸೂಚಿಸಿದ್ದರು. ಇದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಮನವಿಯನ್ನು ಪುರಸ್ಕರಿಸಿದ್ದ ಕೇಂದ್ರ ಮಾಹಿತಿ ಹಕ್ಕು ಆಯೋಗ, ಮಾಹಿತಿ ನೀಡದ ಮಹೇಶ ಜೋಶಿ ಕ್ರಮ ಸರಿಯಲ್ಲ ಹಾಗೂ ಮಾಹಿತಿ ನಿರಾಕರಿಸುವ ಮೂಲಕ ಅವರು ದಂಡಕ್ಕೆ ಅರ್ಹರು ಎಂದು ತೀರ್ಮಾನಿಸಿ 25 ಸಾವಿರ ರೂ. ದಂಡ ವಿಧಿಸಿ, ಅದನ್ನು ಅವರ ಸಂಬಳದಲ್ಲಿ ಕಡಿತಗೊಳಿಸಲು ಆದೇಶಿಸಿತ್ತು. ಈ ಆದೇಶ ಪ್ರಶ್ನಿಸಿ ಜೋಶಿ ಕರ್ನಾಟಕ ಹೈಕೋರ್ಟ್ ಮೆಟ್ಟಿಲೇರಿದ್ದರು. ಅರ್ಜಿ ವಿಚಾರಣೆ ನಡೆಸಿದ್ದ ಏಕಸದಸ್ಯ ನ್ಯಾಯಪೀಠ, ಜೋಶಿ ಮನವಿಯನ್ನು ವಜಾಗೊಳಿಸಿತ್ತು. ಜೋಶಿಯವರ ಧೋರಣೆ ಒಬ್ಬ ಸರಕಾರಿ ಅಧಿಕಾರಿಯ ಗುಣವಲ್ಲ. ಈ ಹಿನ್ನೆಲೆಯಲ್ಲಿ ಆಯೋಗ ನೀಡಿರುವ ಆದೇಶ ಸಮಂಜಸವಾಗಿಯೇ ಇದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿ, 25 ಸಾವಿರ ರೂ. ದಂಡ ವಿಧಿಸಿದ್ದ ಆಯೋಗದ ಆದೇಶ ಎತ್ತಿ ಹಿಡಿದಿತ್ತು. ಏಕಸದಸ್ಯ ನ್ಯಾಯಪೀಠದ ಈ ಆದೇಶವನ್ನು ಪ್ರಶ್ನಿಸಿ ಜೋಶಿ ವಿಭಾಗೀಯ ನ್ಯಾಯಪೀಠದಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ಈ ಮೇಲ್ಮನವಿಯನ್ನು ನ್ಯಾಯಮೂರ್ತಿ ಅನು ಶಿವರಾಮನ್ ಮತ್ತು ವಿಜಯಕುಮಾರ್ ಎ. ಪಾಟೀಲ ಅವರಿದ್ದ ವಿಭಾಗೀಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು.ಅರ್ಜಿಯ ಕಳೆದ ವಿಚಾರಣೆ ವೇಳೆ ನ್ಯಾಯಪೀಠ, ನಿಮ್ಮ ಮೇಲ್ಮನವಿ ವಿಚಾರಣೆಗೆ ಯೋಗ್ಯವಾಗಿಲ್ಲ. ಆದ್ದರಿಂದ, ಮೇಲ್ಮನವಿ ಹಿಂಪಡೆಯಲು ಅವಕಾಶ ನೀಡುತ್ತಿದ್ದೇವೆ. ವಾದ ಮುಂದುವರಿಸಲು ಬಯಸಿದರೆ ಅವಕಾಶ ನೀಡುತ್ತೇವಾದರೂ, ಒಂದು ವೇಳೆ ತೀರ್ಪು ನಿಮ್ಮ ಪರವಾಗಿ ಬರದೇ ಹೋದಲ್ಲಿ 1 ಲಕ್ಷ ರೂ. ದಂಡ ವಿಧಿಸಲಾಗುವುದು ಎಂಬ ಮೌಖಿಕ ಎಚ್ಚರಿಕೆ ನೀಡಿತ್ತು. ಈ ಎಚ್ಚರಿಕೆ ಹಿನ್ನೆಲೆಯಲ್ಲಿ ಮಹೇಶ್ ಜೋಶಿ ಪರ ವಕೀಲರು ಮಂಗಳವಾರ ಮೇಲ್ಮನವಿ ಹಿಂಪಡೆದರು.

29 C