SENSEX
NIFTY
GOLD
USD/INR

Weather

25    C
... ...View News by News Source

ದ್ವೇಷ ಭಾಷಣ ತಡೆ ಕಾಯ್ದೆ ಮೂಲಕ ವಿರೋಧ ಪಕ್ಷಗಳ ಧ್ವನಿ ಅಡಗಿಸುವ ಷಡ್ಯಂತ್ರ ನಡೆಯುತ್ತಿದೆ: ಬಸವರಾಜ ಬೊಮ್ಮಾಯಿ ವಾಗ್ದಾಳಿ

ಕಲಬುರಗಿ: ರಾಜ್ಯ ಸರಕಾರ ಜಾರಿಗೆ ತರಲು ನಿರ್ಧರಿಸುವ 'ದ್ವೇಷ ಭಾಷಣ ತಡೆ ಕಾಯ್ದೆ'ಯು ಘೋಷಿತ ತುರ್ತು ಪರಿಸ್ಥಿತಿಯಾಗಿದೆ. ಈ ಕಾಯ್ದೆ ಜಾರಿ ಮಾಡಿ ವಿರೋಧ ಪಕ್ಷಗಳ ಧ್ವನಿಯನ್ನು ಅಡಗಿಸಲು ಷಡ್ಯಂತ್ರ ನಡೆಯುತ್ತಿದೆ ಎಂದು  ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ವಾಗ್ದಾಳಿ ನಡೆಸಿದ್ದಾರೆ. ನಗರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಬಸವರಾಜ ಬೊಮ್ಮಾಯಿ, ಈಗಾಗಲೇ, ಬಿಎನ್‌ಎಸ್ (BNS) ಕಾಯ್ದೆಯಲ್ಲಿ ಪ್ರಚೋದನಾಕಾರಿ ಭಾಷಣಗಳ ವಿರುದ್ಧ ಕ್ರಮಕ್ಕೆ ಅವಕಾಶವಿದೆ. ಹೀಗಿದ್ದರೂ ಹೊಸ ಕಾನೂನು ರೂಪಿಸುವ ಅಗತ್ಯವೇನಿತ್ತು? ಇದೊಂದು ಅಘೋಷಿತವಲ್ಲ, ಘೋಷಿತ ತುರ್ತು ಪರಿಸ್ಥಿತಿಯಂತೆ ಕಾಣಿಸುತ್ತಿದೆ ಎಂದು ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.   ರಾಜ್ಯ ಸರಕಾರದ ವೈಫಲ್ಯತೆಯನ್ನು ಪ್ರಶ್ನಿಸುವವರನ್ನು ಹಾಗೂ ಭ್ರಷ್ಟಾಚಾರದ ವಿರುದ್ಧ ಹೋರಾಡುವವರನ್ನು ಜೈಲಿಗಟ್ಟಲು ಈ ಸಂಚು ರೂಪಿಸಲಾಗಿದೆ. ಇದರ ವಿರುದ್ಧ ನಾವು ಕಾನೂನು ಹೋರಾಟಕ್ಕೆ ಇಳಿಯಲಿದ್ದೇವೆ. ಶೀಘ್ರದಲ್ಲೇ ರಾಜ್ಯಪಾಲರನ್ನು ಭೇಟಿ ಮಾಡಲಿದ್ದೇವೆ ಎಂದು ಹೇಳಿದರು. ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಸ್ತಿತ್ವಕ್ಕೆ ಬಂದ ಮೇಲೆ ಅಭಿವೃದ್ಧಿ ಸಂಪೂರ್ಣವಾಗಿ ಕುಂಠಿತವಾಗಿದೆ. ಇದನ್ನು ನಾವಷ್ಟೇ ಅಲ್ಲ, ಸ್ವತಃ ಆಡಳಿತ ಪಕ್ಷದ ಶಾಸಕರು ಮತ್ತು ಕೆಪಿಸಿಸಿ ಉಪಾಧ್ಯಕ್ಷರೇ ಪತ್ರದ ಮೂಲಕ ಒಪ್ಪಿಕೊಳ್ಳುತ್ತಿದ್ದಾರೆ. ಕಾಂಗ್ರೆಸ್‌ನಲ್ಲಿ 'ಹೈ' ಇದೆ, ಆದರೆ 'ಕಮಾಂಡ್' ಇಲ್ಲವೇ ಇಲ್ಲ ಎಂದು ವ್ಯಂಗ್ಯವಾಡಿದರು. ಕಾಂಗ್ರೆಸ್ ಹೈಕಮಾಂಡ್ ಈಗ ಎರಡು ಭಾಗವಾಗಿ ಹೋಗಿದೆ. ರಾಜ್ಯದಲ್ಲಿ ಉಂಟಾಗಿರುವ ನಾಯಕತ್ವದ ಗೊಂದಲಕ್ಕೆ ಹೈಕಮಾಂಡ್ ನೇರ ಹೊಣೆ. ಕರ್ನಾಟಕದ ಕಾಂಗ್ರೆಸ್ ನಾಯಕರು ಪರಿಣಿತರಾಗಿದ್ದಾರೆ, ಇಲ್ಲಿಂದಲೇ ಎಲ್ಲವೂ ದಿಲ್ಲಿಗೆ ಹೋಗುತ್ತಿರುವಾಗ ಅವರು ಹೈಕಮಾಂಡ್ ಮಾತನ್ನು ಯಾಕೆ ಕೇಳುತ್ತಾರೆ? ಎಂದು ಪ್ರಶ್ನಿಸಿದ್ದಾರೆ.   ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆ, ಭಿನ್ನಾಭಿಪ್ರಾಯದ ಕುರಿತು ಪ್ರತಿಕ್ರಿಯಿಸಿದ ಬಸವರಾಜ ಬೊಮ್ಮಾಯಿ, ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ, ಹಳೆಯ ಬೇರು ಹೊಸ ಚಿಗುರಿನಂತೆ ನಾವೆಲ್ಲರೂ ಒಟ್ಟಾಗಿ ಹೋಗುತ್ತಿದ್ದೇವೆ. ಭಿನ್ನರ ಬಣ ಎನ್ನುವುದು ಕೇವಲ ಎಲ್ಲರನ್ನೂ ಒಟ್ಟಾಗಿ ಕೊಂಡೊಯ್ಯುವ ಪ್ರಕ್ರಿಯೆಯ ಭಾಗವಷ್ಟೇ ಎಂದು ಹೇಳಿದರು.  

ವಾರ್ತಾ ಭಾರತಿ 23 Dec 2025 5:31 pm

ರಾಜ್ಯ ಕಾಂಗ್ರೆಸ್‌ ಗೊಂದಲದ ಗೂಡಾಗುತ್ತಿದೆ: ಶೋಭಾ ಕರಂದ್ಲಾಜೆ ಟೀಕೆ

ಕಲಬುರಗಿ: ರಾಜ್ಯ ಕಾಂಗ್ರೆಸ್‌ ಗೊಂದಲದ ಗೂಡಾಗುತ್ತಿದೆ. ಇಂತಹ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ನಿಜವಾದ ಹೈಕಮಾಂಡ್ ಯಾರು ಅಂತ ಗೊತ್ತೇ ಆಗುತ್ತಿಲ್ಲ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಲೇವಡಿ ಮಾಡಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವೆ ಶೋಭಾ ಕರಂದ್ಲಾಜೆ, ಸಿಎಂ ಸಿದ್ದರಾಮಯ್ಯ ಅವರು ತಾವೇ ಐದು ವರ್ಷ ಮುಖ್ಯಮಂತ್ರಿಯಾಗಿ ಮುಂದುವರಿಯುವುದಾಗಿ ಹೇಳುತ್ತಾರೆ. ಅಲ್ಲದೆ, ತಾನೇ ಹೈಕಮಾಂಡ್ ಎಂಬಂತೆ ವರ್ತಿಸುತ್ತಿದ್ದಾರೆ. ಇನ್ನೊಂದೆಡೆ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಎರಡೂವರೆ ವರ್ಷಗಳ ಅಧಿಕಾರ ಹಂಚಿಕೆ ಸೂತ್ರ ದಿಲ್ಲಿಯಲ್ಲಿದೆ ಎನ್ನುತ್ತಾರೆ. ಮತ್ತೊಂದೆಡೆ, ಹೈಕಮಾಂಡ್ ಸ್ಥಾನದಲ್ಲಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಈ ಗೊಂದಲಗಳನ್ನು ರಾಜ್ಯದಲ್ಲಿಯೇ ಬಗೆಹರಿಸಿಕೊಳ್ಳಿ ಎಂದು ಕೈಬಿಡುತ್ತಿದ್ದಾರೆ ಎಂದು ಹೇಳಿದರು.   ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ಇಂತಹ ಗೊಂದಲಗಳನ್ನು ಬಗೆಹರಿಸಲು ಆಗುತ್ತಿಲ್ಲ. ಇದರಿಂದಾಗಿ ರಾಜ್ಯ ಕಾಂಗ್ರೆಸ್‌ನಲ್ಲಿ ಹೈಕಮಾಂಡ್ ಯಾರು ಎಂಬ ಪ್ರಶ್ನೆ ಕಾಡುತ್ತಿದೆ. ಒಂದು ವೇಳೆ ಸಿದ್ದರಾಮಯ್ಯ ಅವರನ್ನೇ ಅಂತಿಮ ನಾಯಕ ಎಂದು ಘೋಷಿಸಿದರೆ ಅವರೇ ಎಲ್ಲಾ ನಿರ್ಣಯಗಳನ್ನು ಕೈಗೊಳ್ಳುತ್ತಾರೆ. ಅಲ್ಲಿಯವರೆಗೆ ಈ ಗೊಂದಲಗಳು ಮುಂದುವರಿಯಲಿವೆ ಎಂದು ಶೋಭಾ ಕರಂದ್ಲಾಜೆ ಹೇಳಿದ್ದಾರೆ.

ವಾರ್ತಾ ಭಾರತಿ 23 Dec 2025 5:19 pm

ಬೆಂಗಳೂರು &ಕರಾವಳಿ ಜಿಲ್ಲೆಗಳ ನಡುವೆ ವಂದೇ ಭಾರತ್‌ ರೈಲು: ಬಿಗ್‌ ಅಪ್‌ಡೇಟ್‌ ಕೊಟ್ಟ ಹೆಚ್‌.ಡಿ. ಕುಮಾರಸ್ವಾಮಿ

ನವದೆಹಲಿ: ರಾಜಧಾನಿ ಬೆಂಗಳೂರು ಹಾಗೂ ರಾಜ್ಯದ ಕರಾವಳಿ ಪ್ರದೇಶಗಳ ನಡುವೆ ಪ್ರಯಾಣವನ್ನು ಮತ್ತಷ್ಟು ಸುಲಭಗೊಳಿಸುವ ನಿಟ್ಟಿನಲ್ಲಿ ವಂದೇ ಭಾರತ್‌ ಎಕ್ಸ್ ಪ್ರೆಸ್‌‍ ರೈಲು ಸೇವೆ ಆರಂಭಿಸುವಂತೆ ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಹೆಚ್‌.ಡಿ. ಕುಮಾರಸ್ವಾಮಿ ಅವರು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ ಅವರಿಗೆ ಮನವಿ ಮಾಡಿದ್ದಾರೆ. ಈ ಸಂಬಂಧ ರೈಲ್ವೆ ಸಚಿವರಿಗೆ

ಒನ್ ಇ೦ಡಿಯ 23 Dec 2025 5:08 pm

ಗಿರಿನಾಡಲ್ಲಿ ಮಿತಿ ಮೀರಿದ ಕಾಡುಹಂದಿ, ಮಂಗಗಳ ಉಪಟಳ| ಬೆಳೆಗಳ ರಕ್ಷಣೆಗೆ ಸೀರೆ ಬಳಕೆಗೆ ಮುಂದಾದ ರೈತರು

ಯಾದಗಿರಿ: ಯಾದಗಿರಿ ಗುರುಮಠಕಲ್ ತಾಲೂಕಿನ ಯರಗೋಳದಿಂದ ಗುರುಮಠಕಲ್‌ವರೆಗೆ ಗುಡ್ಡಗಾಡು ಪ್ರದೇಶದ ಕೆಳಭಾಗದ ರೈತರ ತಮ್ಮ ಬೆಳೆಗಳು ಜಮೀನಿನಲ್ಲಿ ಬಿತ್ತನೆ ಮಾಡಿರುವ ಜೋಳ, ಸಜ್ಜಿ, ಶೇಂಗಾ ಸೇರಿದಂತೆ ಇನ್ನಿತರ ಬೆಳೆ ರಕ್ಷಣೆಗೆ ಸೀರೆ ಜಮೀನು ಸುತ್ತಲೂ ಕಟ್ಟಿದ್ದಾರೆ. ಜಿಲ್ಲೆಯಲ್ಲಿ ಕಾಡು ಹಂದಿ, ಮಂಗಗಳ ಹಾವಳಿ ಮೀತಿ ಮೀರಿದ್ದು, ಇದರಿಂದಾಗಿ ತೀವ್ರ ಕಂಗಲಾಗಿರುವ ರೈತರು ಅಳಿದುಳಿದ ಬೆಳೆ ರಕ್ಷಣೆಗೆ ಹಳೆ ಸೀರೆಗಳ ಮೊರೆ ಹೋಗಿದ್ದಾರೆ ಎಂದು ಸಾಮಾಜಿಕ ಹೋರಾಟಗಾರ ಉಮೇಶ್‌.ಕೆ. ಮುದ್ನಾಳ ತಿಳಿಸಿದ್ದಾರೆ ರೈತರ ಜಮೀನಿಗಳಿಗೆ ಭೇಟಿ ನೀಡಿ ರೈತರ ಜೊತೆ ಚರ್ಚಿಸಿ ಮಾತನಾಡಿದ ಉಮೇಶ್‌.ಕೆ.ಮುದ್ನಾಳ, ತಮ್ಮ ಜಮೀನಿನಲ್ಲಿ ಬಿತ್ತನೆ ಮಾಡಿರುವ ಬೆಳಗಳನ್ನು ರಕ್ಷಿಸಿಕೊಳ್ಳಲು ಹಳೆ ಸೀರೆಗಳನ್ನು ಹೊಲದ ಸುತ್ತಲೂ ನಾಲ್ಕು ಕಡೆ ಕಟ್ಟುತ್ತಿರುವ ದೃಶ್ಯ ಯಾದಗಿರಿ, ಗುರುಮಠಕಲ್ ತಾಲೂಕಿನ ಯರಗೋಳ, ಅಲ್ಲಿಪೂರ, ಹತ್ತಿಕುಣಿ, ಸೌದಾಗಾರ, ತಾತಳಗೇರಾ, ಯಂಪಾಡ್ ಅರಕೇರಾ, ಶಿವಪೂರ, ಕೋಟಗೇರಾ, ಕೆ. ಹೊಸಳ್ಳಿ, ಧರ್ಮಾಪೂರ, ಬೋಡಬಂಡಾ, ಸೇರಿದಂತೆ ಅನೇಕ ಗ್ರಾಮಗಳಲ್ಲಿ ಸಾಮಾನ್ಯವಾಗಿದೆ. ಈ ಪ್ರದೇಶದಲ್ಲಿ ಹಂದಿ, ಮಂಗಗಳ ಉಪಟಳ ಹೆಚ್ಚಳವಾಗಿದೆ. ರೈತರು ಹಳೇ ಸೀರೆಯನ್ನು ಬಳಕೆ ಮಾಡುವ ಮೂಲಕ ಕಾಡು ಹಂದಿ, ಮಂಗಗಳ ನಿಯಂತ್ರಣಕ್ಕೆ ಹರಸಾಹಸ ಪಡುತ್ತಿದ್ದಾರೆ. ಕಾಡುಹಂದಿ, ಮಂಗಗಳ ಹಾವಳಿ ಮಿತಿಮೀರಿದ ಪರಿಣಾಮ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಹೇಳಿದ್ದಾರೆ.   ಪ್ರತಿ ವರ್ಷ ಬರ ಅತಿವೃಷ್ಟಿ ನಡುವೆಯೇ ಶತಾಯ ಗತಾಯವಾಗಿ ಬೆಳೆಗಳನ್ನು ಬೆಳೆದುಕೊಂಡಿದ್ದಾರೆ. ಒಂದೆಡೆ ವಿದ್ಯುತ್ ಕಣ್ಣಾಮುಚ್ಚಾಲೆಯಿಂದ ಬೇಸತ್ತ ರೈತರಿಗೆ ಇನ್ನೊಂದು ಕಡೆ ಕಾಡು ಹಂದಿ, ಮಂಗಗಳ ಕಾಟ ಹೆಚ್ಚಳವಾಗಿವೆ. ಇವೆರಡರ ನಡುವೆ ಸಿಲುಕಿ ಒದ್ದಾಡುವಂತಹ ಪರಿಸ್ಥಿತಿ ರೈತರಿಗೆ ನಿರ್ಮಾಣವಾಗಿದೆ. ಈ ಭಾಗದ ಅಧಿಕಾರಿಗಳು, ಜನಪ್ರತಿನಿಧಿಗಳು ಮಾತ್ರ ಅನ್ನದಾತನ ಸಂಕಟ ಅರಿಯುವ ಪ್ರಯತ್ನ ಮಾಡದಿರುವುದು ನಿಜಕ್ಕೂ ಬೇಸರದ ಸಂಗತಿಯಾಗಿದೆ ಎಂದು ಹೇಳಿದರು.   ಸಂಬಂಧಿಸಿದ ಇಲಾಖೆಗಳು ರೈತರಿಗೆ ಇರುವ ಸಂಕಷ್ಟ ದೂರ ಮಾಡಲು ತಕ್ಷಣ ಕ್ರಮ ಕೈಗೊಳ್ಳಬೇಕು ಎಂಬುದು ರೈತರ ಆಗ್ರಹವಾಗಿದೆ. ರೈತರು ಇಷ್ಟೆಲ್ಲ ಸಂಕಷ್ಟದಲ್ಲಿ ಸಾಲ  ಮಾಡಿ ಬೆಳೆ ಬೆಳೆದರೂ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗುತ್ತಿದೆ. ಆದರೆ ರೈತಪರ ಸರಕಾರ ಎನ್ನುವ ರಾಜಕಾರಣಿಗಳು ಯಾವುದೇ ರೈತರ ಸಂಕಷ್ಟ ಪರಿಹರಿಸುವ ಕೆಲಸ ಮಾಡದೇ ಬರಿ ಬಾಯಿಮಾತಿನಲ್ಲಿ ರೈತರ ಪರ ಎಂದು ಬುರುಡೆ ಬಿಡುತ್ತಿರುವುದು ಸಮಸ್ಯೆ ಹೆಚ್ಚಲು ಕಾರಣವಾಗಿದೆ. ಇನ್ನಾದರೂ ಜಿಲ್ಲಾಡಳಿತ ತಕ್ಷಣ ಸಮಸ್ಯೆ ಗುರುತಿಸಿ ಇದಕ್ಕೆ ಪರಿಹಾರ ಕಂಡುಕೊಳ್ಳಬೇಕಿದೆ. ಇಲ್ಲವಾದಲ್ಲಿ ಅನ್ನದಾತರು ಮುಂದಿನ ದಿನಗಳಲ್ಲಿ ಸಿಡಿದೇಳುವ ಸಾಧ್ಯತೆ ತಳ್ಳಿ ಹಾಕುವಂತಿಲ್ಲ ಎಂದು ಹೇಳಿದರು.   ಈ ಸಂರ್ಭದಲ್ಲಿ ಸಂಶುದ್ದಿನ್, ಅಬ್ಬಾಸಲಿ, ಪವನ, ಮಲ್ಲೇಶಿ, ಸಣ್ಣ ಶರಣಪ್ಪ, ಸಿದ್ದಪ್ಪ, ದಸ್ತಗಿರಿ, ರಮೇಶ, ನಿಂಗಪ್ಪ, ಸಿದ್ರಾಮಪ್ಪ ತಳವಾರ, ಪರಮೇಶ ರಾಠೋಟ್‌, ಶಿವು ಹತ್ತಿಕುಣಿ, ಹಣಮಂತ ಯಂಕಪ್ಪ ಸೇರಿದಂತೆ  ಹಲವರು ಉಪಸ್ಥಿತರಿದ್ದರು.  

ವಾರ್ತಾ ಭಾರತಿ 23 Dec 2025 5:08 pm

New Railway Line: ಕೋಲಾರದ ಮಾರಿಕುಪ್ಪಂ-ಆಂಧ್ರದ ಕುಪ್ಪಂ ನೇರ ರೈಲು ಮಾರ್ಗದ ಉದ್ಘಾಟನೆ ದಿನಾಂಕ ಬಹಿರಂಗ

New Ralway Line: ವಿ.ಸೋಮಣ್ಣ ಅವರು ಸಚಿವರಾದಾಗಿನಿಂದಲೂ ರಾಜ್ಯದಲ್ಲಿ ರೈಲ್ವೆ ವಿಭಾಗದಲ್ಲಿ ಅಭಿವೃದ್ಧಿ ಕ್ರಾಂತಿಯೇ ಆಗುತ್ತಿದೆ. ಇದೀಗ ಅವರು ಕೋಲಾರದ ಮಾರಿಕುಪ್ಪಂ-ಆಂಧ್ರದ ಕುಪ್ಪಂ ನಡುವೆ ನಿರ್ಮಾಣ ಆಗುತ್ತಿರುವ ನೇರ ರೈಲು ಮಾರ್ಗದ ಲೋಕರ್ಪಣೆಯ ದಿನಾಂಕವನ್ನು ರಿವೀಲ್‌ ಮಾಡಿದ್ದಾರೆ. ಹಾಗಾದ್ರೆ, ಯಾವಾಗ ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ. ಕೋಲಾರ ಜಿಲ್ಲೆಯಲ್ಲಿ ಮರುಅಭಿವೃದ್ಧಿಗೊಂಡ ಊರ್ಗಾಮ್ ರೈಲು ನಿಲ್ದಾಣ

ಒನ್ ಇ೦ಡಿಯ 23 Dec 2025 5:04 pm

Natasha Poonawalla: ₹126 ಕೋಟಿ ಬೆಲೆಯ ದುಬಾರಿ ಉಂಗುರ ಧರಿಸಿದ ನತಾಶಾ ಪೂನಾವಾಲಾ

ಭಾರತೀಯ ಬಿಲಿಯನೇರ್ ನತಾಶಾ ಪೂನಾವಾಲಾ ಅವರು ಈಗಾಗಲೇ ತಮ್ಮ ಐಷಾರಾಮಿ ಜೀವನಶೈಲಿಯಿಂದ ಹೆಸರುವಾಸಿ. ಉನ್ನತ ದರ್ಜೆಯ ವಿನ್ಯಾಸಕ ಉಡುಗೆಗಳಿಂದ ಹಿಡಿದು ಸೊಗಸಾದ ಆಭರಣಗಳವರೆಗೆ ನತಾಶಾ ಫ್ಯಾಷನ್‌ ಪ್ರಿಯರ ಹುಬ್ಬೇರಿಸುತ್ತಾರೆ. ಇದೀಗ ನತಾಶಾ ತಾವು ಧರಿಸಿರುವ ದುಬಾರಿ ಉಂಗುರದಿಂದ ಸುದ್ದಿಯಾಗಿದ್ದಾರೆ. ಇತ್ತೀಚೆಗೆ ಆಭರಣ ತಜ್ಞ ಮತ್ತು ಫ್ಯಾಷನ್ ಕಂಟೆಂಟ್‌ ಕ್ರಿಯೇಟರ್‌ ಧ್ರುಮಿತ್ ಮೆರುಲಿಯಾ ಅವರು ನತಾಶಾ ಅವರ ಅಪರೂಪದ

ಒನ್ ಇ೦ಡಿಯ 23 Dec 2025 5:02 pm

ಬೆಂಗಳೂರು ಹಾಗೂ ಕರಾವಳಿ ಜಿಲ್ಲೆಗಳ ನಡುವೆ ವಂದೇ ಭಾರತ್‌ ರೈಲು ಆರಂಭಕ್ಕೆ ಎಚ್‌ಡಿಕೆ ಮನವಿ, ರೈಲ್ವೆ ಸಚಿವರಿಗೆ ಪತ್ರ

ಬೆಂಗಳೂರು ಹಾಗೂ ಕರಾವಳಿ ಜಿಲ್ಲೆಗಳ ನಡುವೆ ವಂದೇ ಭಾರತ್‌ ರೈಲು ಆರಂಭಕ್ಕೆ ಎಚ್‌ಡಿಕೆ ಮನವಿ ಮಾಡಿದ್ದಾರೆ. ಈ ಕುರಿತಾಗಿ ಅವರು ರೈಲ್ವೆ ಸಚಿವರಿಗೆ ಪತ್ರ ಬರೆದಿದ್ದಾರೆ. ಈ ರೈಲು ಸೇವೆ ಆರಂಭಿಸುವುದರಿಂದ ಹೆಚ್ಚುತ್ತಿರುವ ಪ್ರಯಾಣಿಕರ ಬೇಡಿಕೆ ಈಡೇರಿಸಿದಂತೆ ಆಗುತ್ತದೆ. ಪ್ರಾದೇಶಿಕ ಆರ್ಥಿಕ ಚಟುವಟಿಕೆಗಳನ್ನು ಉತ್ತೇಜಿಸುತ್ತದೆ. ಮಿಗಿಲಾಗಿ ಪ್ರವಾಸೋದ್ಯಮಕ್ಕೆ ಉತ್ತೇಜನ ದೊರೆಯಲಿದೆ. ಉದ್ಯೋಗಾವಕಾಶಗಳ ವೃದ್ಧಿಗೂ ಸಹಕಾರಿಯಾಗಲಿದೆ. ಸಮಗ್ರ, ದಕ್ಷ ಮತ್ತು ಅತ್ಯಾಧುನಿಕ ಧ್ಯೇಯ ಕಾರ್ಯಜಾಲದ ಸರ್ಕಾರದ ಮುನ್ನೋಟಕ್ಕೆ ಸಂಬಂಧಿಸಿದಂತೆ ಅಂತಾರಾಜ್ಯ ರೈಲು ಸಂಪರ್ಕವನ್ನು ಬೆಸೆಯುತ್ತದೆ ಎಂದು ಅವರು ಪ್ರತಿಪಾದಿಸಿದ್ದಾರೆ.

ವಿಜಯ ಕರ್ನಾಟಕ 23 Dec 2025 5:01 pm

ಇನಾಂ ವೀರಾಪುರ ಗ್ರಾಮದಲ್ಲಿ ಮರ್ಯಾದೆ ಹತ್ಯೆ ಪ್ರಕರಣ: ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಸಿಪಿಐ(ಎಂಎಲ್) ಆಗ್ರಹ

ರಾಯಚೂರು: ಧಾರವಾಡ ಜಿಲ್ಲೆಯ ಇನಾಂ ವೀರಾಪುರ ಗ್ರಾಮದಲ್ಲಿ ಪೀತಿಸಿ ವಿವಾಹವಾಗಿದ್ದ ದಂಪತಿಗಳ ಕೊಲೆಗೆ ಕಾರಣರಾದವರನ್ನು ಬಂಧಿಸಿ ಕಠಿಣ ಶಿಕ್ಷೆಗೆ ಗುರಿಪಡಿಸಬೇಕು ಎಂದು ಸಿಪಿಐ(ಎಂಎಲ್) ಲಿಬರೇಶನ್ ಆಗ್ರಹಿಸಿದೆ.   ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಸಿಪಿಐ(ಎಂಎಲ್) ಜಿಲ್ಲಾ ಕಾರ್ಯದರ್ಶಿ ನಾಗರಾಜ ಪೂಜಾರ್, “ಈ ದುಷ್ಕೃತ್ಯವು ಆಘಾತಕಾರಿಯಾಗಿದೆ. ಅನ್ಯ ಜಾತಿ ಯುವಕನನ್ನು ಮದುವೆಯಾಗಿದ್ದಾಳೆಂಬ ಕಾರಣಕ್ಕೆ ಗರ್ಭಿಣಿ ಮಗಳನ್ನು ಕೊಲೆಗೈದು, ಯುವಕನ ಮನೆಯವರ ಮೇಲೆ ದಾಳಿ ನಡೆಸಿದ ತಪ್ಪಿತಸ್ಥರನ್ನು ಕೂಡಲೇ ಬಂಧಿಸಿ ಕಠಿಣ ಶಿಕ್ಷೆ ವಿಧಿಸಬೇಕು” ಎಂದು ಒತ್ತಾಯಿಸಿದ್ದಾರೆ. “ಸಂವಿಧಾನ ದೇಶವನ್ನು ಜಾತ್ಯಾತೀತ ರಾಷ್ಟ್ರವೆಂದು ಘೋಷಿಸಿದೆ. ದೇಶ ಸ್ವಾತಂತ್ರ‍್ಯ ಗಳಿಸಿ 78 ವರ್ಷಗಳ ನಂತರವೂ ಹಲವರು ಜಾತಿ ಸಂಕುಚಿತತೆಯಿಂದ ವರ್ತಿಸುತ್ತಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ. ಪರಸ್ಪರ ಪ್ರೀತಿಸಿ ವಿವಾಹವಾಗಿ ತಮ್ಮ ಪಾಡಿಗೆ ತಾವು ಜೀವನ ನಡೆಸುತ್ತಿದ್ದ ಮುಗ್ಧ ದಂಪತಿಯ ಮೇಲೆ ಕುಟುಂಬದವರ ಈ ವರ್ತನೆ ಪ್ರಾಣಿಗಳಿಗಿಂತಲೂ ಕ್ರೂರವಾಗಿದೆ. ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿ ಶಾಂತಿ-ಸುವ್ಯವಸ್ಥೆ ಕಾಪಾಡಬೇಕೆಂದು” ನಾಗರಾಜ ಪೂಜಾರ್ ಆಗ್ರಹಿಸಿದ್ದಾರೆ.

ವಾರ್ತಾ ಭಾರತಿ 23 Dec 2025 4:55 pm

‘ಅರಬ್ಬೀ ಸಮುದ್ರ’ದ ಹೆಸರು ಬದಲಿಸಿ ಎಂದ ರಾಜ್ಯ ಬಿಜೆಪಿ ಶಾಸಕ - ‘ಹಿಂದೂ ಮಹಾಸಾಗರ’ದ ಹೆಸರು ಬದಲಿಸಿ ಎಂದ ಪಾಕಿಸ್ತಾನ!

ಕಾರವಾರ ಜಿಲ್ಲೆಯ ಬಿಜೆಪಿ ನಾಯಕ ಶಾಂತರಾಮ ಸಿದ್ದಿ ಅವರು ಅರಬ್ಬೀ ಸಮುದ್ರದ ಹೆಸರನ್ನು ರತ್ನಾಕರ ಸಾಗರ ಎಂದು ಮರುನಾಮಕರಣ ಮಾಡುವಂತೆ ಒತ್ತಾಯಿಸಿದ್ದಾರೆ. ಶತಮಾನಗಳ ಹಿಂದೆ ಈ ಹೆಸರಿನಿಂದಲೇ ಕರೆಯಲಾಗುತ್ತಿತ್ತು ಎಂದು ಅವರು ಹೇಳಿದ್ದಾರೆ. ಈ ಹಿಂದೆ ಇದ್ದ ಹೆಸರನ್ನೇ ಪುನಃ ಬಳಸಬೇಕು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಈ ನಿಟ್ಟಿನಲ್ಲಿ ಸರ್ಕಾರಗಳು ಮುಂದಾಗುವ ಸಾಧ್ಯತೆ ಇದೆ.

ವಿಜಯ ಕರ್ನಾಟಕ 23 Dec 2025 4:40 pm

Vande Bharat Express | ಕರಾವಳಿಯ ಮೂಲಕ ಬೆಂಗಳೂರು–ಗೋವಾ ವಂದೇ ಭಾರತ್ ರೈಲು ಆರಂಭಿಸಿ: ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಮನವಿ

ಬೆಂಗಳೂರು: ಬೆಂಗಳೂರು ಮತ್ತು ಕರಾವಳಿ ಕರ್ನಾಟಕ–ಗೋವಾ ನಡುವಿನ ವೇಗದ ರೈಲು ಸಂಪರ್ಕಕ್ಕಾಗಿ ವಂದೇ ಭಾರತ್ ಎಕ್ಸ್‌ಪ್ರೆಸ್ ಸೇವೆಯನ್ನು ಆರಂಭಿಸುವಂತೆ ಕೇಂದ್ರದ ಭಾರೀ ಕೈಗಾರಿಕೆಗಳು ಮತ್ತು ಉಕ್ಕು ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ಪತ್ರದ ಮೂಲಕ ಮನವಿ ಸಲ್ಲಿಸಿದ್ದಾರೆ. ಕರಾವಳಿಯನ್ನು ಸಂಪರ್ಕಿಸುವ ಘಾಟ್ ವಿಭಾಗದಾದ್ಯಂತ ವಿದ್ಯುದ್ದೀಕರಣ ಕಾರ್ಯ ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ, ಈ ಮಾರ್ಗದಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್ ಸಂಚಾರಕ್ಕೆ ಅಗತ್ಯ ಮೂಲಸೌಕರ್ಯ ಸಿದ್ಧವಾಗಿದೆ ಎಂದು ಅವರು ತಮ್ಮ ಮನವಿಯಲ್ಲಿ ಉಲ್ಲೇಖಿಸಿದ್ದಾರೆ. ಹಾಸನ, ಮಂಗಳೂರು ಜಂಕ್ಷನ್, ಉಡುಪಿ ಹಾಗೂ ಕಾರವಾರ ಮೂಲಕ ಬೆಂಗಳೂರು ಮತ್ತು ಮಡಗಾಂವ್(ಗೋವಾ) ಅನ್ನು ಸಂಪರ್ಕಿಸುವ ವಂದೇ ಭಾರತ್ ಎಕ್ಸ್‌ಪ್ರೆಸ್ ಸೇವೆಯನ್ನು ಆರಂಭಿಸುವಂತೆ ಅವರು ಪ್ರಸ್ತಾಪಿಸಿದ್ದಾರೆ. ಈ ರೈಲು ಕಾರಿಡಾರ್ ಪ್ರವಾಸೋದ್ಯಮ, ತೀರ್ಥಯಾತ್ರೆ, ಶಿಕ್ಷಣ ಹಾಗೂ ವೃತ್ತಿಪರ ಉದ್ದೇಶಗಳಿಗಾಗಿ ದೊಡ್ಡ ಪ್ರಮಾಣದಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಅನುಕೂಲವಾಗಲಿದೆ ಎಂದು ಅವರು ತಿಳಿಸಿದ್ದಾರೆ. ಭಾರತದ ಐಟಿ ರಾಜಧಾನಿ ಬೆಂಗಳೂರು ಹಾಗೂ ಕರಾವಳಿ ಕರ್ನಾಟಕ ಮತ್ತು ಗೋವಾದ ಪ್ರಮುಖ ವಾಣಿಜ್ಯ, ಬಂದರು ಮತ್ತು ಪ್ರವಾಸೋದ್ಯಮ ಕೇಂದ್ರಗಳ ನಡುವಿನ ಸಂಪರ್ಕವನ್ನು ಈ ಸೇವೆ ಮತ್ತಷ್ಟು ಬಲಪಡಿಸಲಿದೆ ಎಂಬ ಅಭಿಪ್ರಾಯವನ್ನೂ ಅವರು ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ, ನೈಋತ್ಯ ರೈಲ್ವೆಯ ಅಧಿಕಾರಿಗಳಿಗೆ ಪ್ರಸ್ತಾವಿತ ಸೇವೆಯ ಕಾರ್ಯಸಾಧ್ಯತೆಯನ್ನು ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ನಿರ್ದೇಶಿಸುವಂತೆ ಕುಮಾರಸ್ವಾಮಿ ಅವರು ರೈಲ್ವೆ ಸಚಿವರಿಗೆ ಮನವಿ ಮಾಡಿದ್ದಾರೆ. ವಂದೇ ಭಾರತ್ ಎಕ್ಸ್‌ಪ್ರೆಸ್ ಸೇವೆಯ ಆರಂಭವು ಅಂತರರಾಜ್ಯ ಸಂಚಾರವನ್ನು ಸುಗಮಗೊಳಿಸುವ ಜೊತೆಗೆ ಪ್ರಾದೇಶಿಕ - ಆರ್ಥಿಕ ಚಟುವಟಿಕೆಗಳಿಗೆ ಉತ್ತೇಜನ ನೀಡಲಿದೆ ಎಂದು ಅವರು ತಿಳಿಸಿದ್ದಾರೆ.

ವಾರ್ತಾ ಭಾರತಿ 23 Dec 2025 4:35 pm

ರಾಜ್ಯದಲ್ಲಿ 3 ವರ್ಷಗಳಲ್ಲಿ 18,931 ನವಜಾತ ಶಿಶುಗಳ ಸಾವು! ಬೆಂಗಳೂರಿನಲ್ಲೇ ಅಧಿಕ

ಕರ್ನಾಟಕದಲ್ಲಿ ಕಳೆದ ಮೂರು ವರ್ಷಗಳಲ್ಲಿ 18,931 ನವಜಾತ ಶಿಶುಗಳು ಮೃತಪಟ್ಟಿವೆ. ಈ ಪೈಕಿ ಬೆಂಗಳೂರು ನಗರದಲ್ಲಿ ಅತ್ಯಧಿಕ ಸಂಖ್ಯೆಯಲ್ಲಿ ನವಜಾತ ಶಿಶುಗಳ ಸಾವಾಗಿವೆ. ನವಜಾತ ಶಿಶುಗಳ ಸಾವಿನ ಪ್ರಮಾಣದಲ್ಲಿ ಕರ್ನಾಟಕ ರಾಜ್ಯ 6 ನೇ ಸ್ಥಾನದಲ್ಲಿದೆ. ಬೆಂಗಳೂರು ಮಾತ್ರವಲ್ಲದೆ, ಮೈಸೂರು, ರಾಯಚೂರು, ಕೊಪ್ಪಳದಲ್ಲೂ ಹೆಚ್ಚಿನ ಸಂಖ್ಯೆಯಲ್ಲಿ ನವಜಾತ ಶಿಶುಗಳ ಸಾವಾಗಿದೆ. ಅವಧಿ ಪೂರ್ವ ಜನನ, ಜನನ ಸಮಯದ ಉಸಿರುಗಟ್ಟುವಿಕೆ ಸೇರಿದಂತೆ ಇದಕ್ಕೆ ಹಲವು ಕಾರಣಗಳು ಇವೆ. ಮತ್ತಷ್ಟು ವಿವರ ಇಲ್ಲಿದೆ.

ವಿಜಯ ಕರ್ನಾಟಕ 23 Dec 2025 4:30 pm

ಒಂದೇ ಓವರ್ ನಲ್ಲಿ 5 ವಿಕೆಟ್! ಅಂತಾರಾಷ್ಟ್ರೀಯ ಟಿ20ಯಲ್ಲಿ ಯಾರಿಂದಲೂ ಸಾಧ್ಯವಾಗದ ಸಾಧನೆ ಮೆರೆದ ಇಂಡೋನೇಷ್ಯಾ ಬೌಲರ್!

ಅಂತಾರಾಷ್ಟ್ರೀಯ ಟಿ20 ಪಂದ್ಯಗಳಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದವರು ಬಹಳಷ್ಟು ಮಂದಿ ಇದ್ದಾರೆ. ಒಂದೇ ಓವರ್ ನಲ್ಲಿ 4 ವಿಕೆಟ್ ಪಡೆದವರು 4 ಮಂದಿ ಇದ್ದಾರೆ. ಆದರೆ ಒಂದು ಓವರ್ ನಲ್ಲಿ 5 ವಿಕೆಟ್ ಪಡದ ಸಾಧನಯನ್ನು ಈವರೆಗೂ ಯಾರೂ ಮಾಡಿಲ್ಲ. ಇಂಡೋನೇಷ್ಯಾ ತಂಡದ ಎಡಗೈ ವೇಗದ ಬೌಲರ್ ಗೆಡೆ ಪ್ರಿಯಂದನಾ ಅವರು ಕಾಂಬೋಡಿಯಾ ವಿರುದ್ಧದ ಪಂದ್ಯದಲ್ಲಿ ಒಂದೇ ಓವರ್ ನಲ್ಲಿ ಐದು ವಿಕೆಟ್ ಪಡೆದಿದ್ದಾರೆ. 2019ರಲ್ಲಿ ಕರ್ನಾಟಕದ ಅಭಿಮನ್ಯು ಮಿಥುನ್ ದೇಶೀಯ ಟಿ20ಯಲ್ಲಿ ಈ ಸಾಧನೆ ಮಾಡಿದ್ದರು.

ವಿಜಯ ಕರ್ನಾಟಕ 23 Dec 2025 4:29 pm

ಫ್ಲಿಪ್‌ಕಾರ್ಟ್‌, ಫೋನ್‌ಪೇ, ಜೆಪ್ಟೋ ಸೇರಿ 2026ರಲ್ಲಿ ಐಪಿಒ ತೆರೆಯಲು ಸಜ್ಜಾಗಿವೆ 20ಕ್ಕೂ ಹೆಚ್ಚು ಸ್ಟಾರ್ಟ್‌ಅಪ್‌ಗಳು

ಲೇಟ್-ಸ್ಟೇಜ್ ಖಾಸಗಿ ಹೂಡಿಕೆ ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ, ಭಾರತದ ಪ್ರಮುಖ 20ಕ್ಕೂ ಹೆಚ್ಚು ನವೋದ್ಯಮಗಳು 2026ರಲ್ಲಿ ಐಪಿಒ ಮೂಲಕ ಷೇರುಪೇಟೆ ಪ್ರವೇಶಿಸಲು ಸಜ್ಜಾಗಿವೆ. ಫೋನ್ ಪೇ, ಜೆಪ್ಟೋ, ಬೋಟ್ ಮತ್ತು ಫ್ಲಿಪ್‌ಕಾರ್ಟ್‌ನಂತಹ ದೈತ್ಯ ಕಂಪನಿಗಳು ಈ ಪಟ್ಟಿಯಲ್ಲಿವೆ. 2025ರಲ್ಲಿ ಐಪಿಒಗಳು ಉತ್ತಮ ಪ್ರದರ್ಶನ ನೀಡಿದ್ದು, ಸುಮಾರು 40,000 ಕೋಟಿ ರೂ. ಸಂಗ್ರಹಿಸಿವೆ. ಖಾಸಗಿ ಮಾರುಕಟ್ಟೆಯಲ್ಲಿ ನಿಧಿ ಸಿಗುವುದು ಕಷ್ಟವಾಗುತ್ತಿರುವುದರಿಂದ, ಕಂಪನಿಗಳು ಮೌಲ್ಯಮಾಪನ ಮತ್ತು ನಗದೀಕರಣಕ್ಕಾಗಿ ಸಾರ್ವಜನಿಕ ಮಾರುಕಟ್ಟೆಯನ್ನೇ ಪ್ರಮುಖ ಆಯ್ಕೆಯಾಗಿ ಪರಿಗಣಿಸುತ್ತಿವೆ ಎಂದು ತಜ್ಞರು ವಿಶ್ಲೇಷಿಸಿದ್ದಾರೆ.

ವಿಜಯ ಕರ್ನಾಟಕ 23 Dec 2025 4:28 pm

VB G-RAM-G ಮಸೂದೆ: ʼಉದ್ಯೋಗ ಖಾತರಿʼಯ ಭವಿಷ್ಯದ ಕುರಿತು ಹೆಚ್ಚಿದ ಆತಂಕ

ಒಕ್ಕೂಟ ವ್ಯವಸ್ಥೆಗೆ ಧಕ್ಕೆಯಾಗಲಿದೆಯೇ ನೂತನ ಮಸೂದೆ?

ವಾರ್ತಾ ಭಾರತಿ 23 Dec 2025 4:25 pm

ಡಿ.27ರಂದು ಸಿಡಬ್ಲ್ಯೂಸಿ ಮೀಟಿಂಗ್; ಸಿಎಂ ಡಿಸಿಎಂಗೆ ಯಾಕೆ ಆಹ್ವಾನವಿಲ್ಲ ಎಂದಿದ್ದಕ್ಕೆ ಸತೀಶ್ ಜಾರಕಿಹೊಳಿ ಹೇಳಿದ್ದಿಷ್ಟು

ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ದೆಹಲಿ ಭೇಟಿ, ಮುಖ್ಯಮಂತ್ರಿ ಕುರ್ಚಿ ಬದಲಾವಣೆಯ ಚರ್ಚೆ ಹಾಗೂ ಕೆ.ಎನ್. ರಾಜಣ್ಣ ಅವರ ಪತ್ರದ ವಿಚಾರವಾಗಿ ಬಾಗಲಕೋಟೆಯಲ್ಲಿ ಸಚಿವ ಸತೀಶ್ ಜಾರಕಿಹೊಳಿ ಮಾತನಾಡಿದರು. ರಾಜ್ಯದ ರಾಜಕೀಯ ಬೆಳವಣಿಗೆಗಳ ಬಗ್ಗೆ ತಾವು ತಟಸ್ಥ ನಿಲುವು ಹೊಂದಿರುವುದಾಗಿ ಅವರು ಸ್ಪಷ್ಟಪಡಿಸಿದ್ದಾರೆ. ಡಿ.27ರಂದು ಸಿಡಬ್ಲ್ಯೂಸಿ ಮೀಟಿಂಗ್ ನಡೆಯಲಿದ್ದು, ಇದಕ್ಕೆ ಸಿಎಂ ಮತ್ತು ಡಿಸಿಎಂ ಅವರಿಗೆ ಆಹ್ವಾನ ಕೊಟ್ಟಿಲ್ಲ ಎಂದು ಹೇಳಲಾಗುತ್ತಿದೆ.

ವಿಜಯ ಕರ್ನಾಟಕ 23 Dec 2025 4:18 pm

ಕೌಟುಂಬಿಕ ಕಲಹ: ಪತ್ನಿಯನ್ನು ಕೊಂದು ಅಪಘಾತ ಎಂದ ಕಥೆ ಕಟ್ಟಿದ ಗಂಡ ಸಿಕ್ಕಿ ಬಿದ್ದಿದ್ಹೇಗೆ?

ಕೌಟುಂಬಿಕ ಕಾರಣದಿಂದ ಬೇಸತ್ತು ತಾನೇ ಪತ್ನಿಯನ್ನು ಕೊಂದು, ಅದು ಅಪಘಾತ ಎಂದು ನಂಬಿಸಿದ್ದ ಪತಿ ಕೊನೆಗೂ ಪೊಲೀಸರ ಅತಿಥಿಯಾಗಿದ್ದಾನೆ. ಯಲಹಂಕ ನ್ಯೂಟೌನ್‌ ಬಳಿಯ ಚಿಕ್ಕಬೊಮ್ಮಸಂದ್ರ ನಿವಾಸಿ ಗಾಯತ್ರಿ (55) ಕೊಲೆಯಾದವರು. ಅವರ ಪತಿ ಆರೋಪಿ ಅನಂತ್‌ (62) ಅವರನ್ನು ಬಾಗಲೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.

ವಿಜಯ ಕರ್ನಾಟಕ 23 Dec 2025 4:14 pm

JK ಮನೆಗೆ ನುಗ್ಗಲು ಪ್ರಯತ್ನಿಸಿದ್ದ ಜಪಾನೀಸ್‌ ಮಹಿಳೆ ವಿರುದ್ದ ಪ್ರಕರಣ ದಾಖಲು: 1 ವರ್ಷದಲ್ಲಿ 3 ಹೌಸ್‌ ಬ್ರೇಕಿಂಗ್‌ ಘಟನೆ!

ಕೆ-ಪಾಪ್ ಸೆಲೆಬ್ರಿಟಿಗಳ ಮನೆಗಳಿಗೆ ಅಭಿಮಾನಿಗಳು ನುಗ್ಗುವ ಘಟನೆಗಳು ಹೆಚ್ಚಾಗುತ್ತಿದ್ದು, BTS ಜುಂಗ್‌ಕುಕ್ ಅತಿಹೆಚ್ಚಾಗಿ ಗುರಿಯಾಗುತ್ತಿದ್ದಾರೆ. ಕಳೆದ ವರ್ಷದಲ್ಲಿಯೇ ಮೂರು ಬಾರಿ ಅವರ ಮನೆಗೆ ನುಗ್ಗಲು ಯತ್ನ ನಡೆದಿದ್ದು, ಇತ್ತೀಚೆಗೆ 50 ವರ್ಷದ ಜಪಾನೀಸ್ ಮಹಿಳೆ ಬಂಧಿತರಾಗಿದ್ದಾರೆ. ಒಂದೇ ಒಂದು ವರ್ಷದಲ್ಲಿ ಸುಮಾರು 3 ಇಂತಹ ಘಟನೆಗಳು ನಡೆದಿದ್ದು, ಈ ಘಟನೆಗಳು ಸೆಲೆಬ್ರಿಟಿಗಳ ಸುರಕ್ಷತೆ ಮತ್ತು ಗೌಪ್ಯತೆಯ ಬಗ್ಗೆ ಪ್ರಶ್ನೆಗಳನ್ನು ಎತ್ತಿವೆ.

ವಿಜಯ ಕರ್ನಾಟಕ 23 Dec 2025 4:10 pm

ಒಂದಾಗಲಿರುವ ಠಾಕ್ರೆ ಸಹೋದರರು ? ’ನಾಳೆ 12 ಗಂಟೆಗೆ’ ಎಂದು ಸಂಜಯ್ ರಾವತ್ ಟ್ವೀಟ್

SS UBT and MNS alliance : ಬಹು ದಿನಗಳಿಂದ ನಡೆಯುತ್ತಿದ್ದ ಚರ್ಚೆಗೆ ತೆರೆಬೀಳುವ ಸಾಧ್ಯತೆಯಿದೆ. ಶಿವಸೇನೆ ಯುಬಿಟಿ ಬಣದ ಸಂಜಯ್ ರಾವತ್, ನಾಳೆ ಹನ್ನೆರಡು ಗಂಟೆಗೆ ಎಂದು ಟ್ವೀಟ್ ಮಾಡಿದ್ದಾರೆ. ಮುಂಬೈ ಪಾಲಿಕೆ ಚುನಾವಣೆ ಹತ್ತಿರವಾಗುತ್ತಿರುವ ಹಿನ್ನಲೆಯಲ್ಲಿ ಠಾಕ್ರೆ ಸಹೋದರರು ಒಂದಾಗಲಿದ್ದಾರೆ ಎನ್ನುವ ಖಚಿತವಾದ ಸುದ್ದಿ ಹರಿದಾಡುತ್ತಿದೆ.

ವಿಜಯ ಕರ್ನಾಟಕ 23 Dec 2025 4:05 pm

ಬೆಂಗಳೂರು ಮೆಟ್ರೋ ಸೇರಿ 4 ಪ್ರಮುಖ ಯೋಜನೆ: ಡಿಸಿಎಂ ಡಿ.ಕೆ ಶಿವಕುಮಾರ್ ದಿಢೀರ್ ದೆಹಲಿ ಪ್ರವಾಸ

ನವದೆಹಲಿ: ಉಪ ಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ ಶಿವಕುಮಾರ್ ಅವರು ಬೆಂಗಳೂರಿನ ನಮ್ಮ ಮೆಟ್ರೋ ಸೇರಿದಂತೆ ಪ್ರಮುಖ ಯೋಜನೆಗಳ ಜಾರಿಗೆ ಸಂಬಂಧಿಸಿದಂತೆ ಕೇಂದ್ರ ಸಚಿವರನ್ನು ಭೇಟಿ ಮಾಡಿದ್ದು ಪ್ರಮುಖ ವಿಚಾರಗಳ ಬಗ್ಗೆ ಚರ್ಚೆ ಮಾಡಿದ್ದಾರೆ. ಈ ಹಂತದಲ್ಲಿ ಬೆಂಗಳೂರಿನ ನಮ್ಮ ಮೆಟ್ರೋ ವಿಸ್ತರಣೆ ಹಾಗೂ ಕಸ ವಿಲೇವಾರಿಗೆ ಸಂಬಂಧಿಸಿದಂತೆ ಪ್ರಮುಖ ವಿಚಾರಗಳ ಬಗ್ಗೆ ಚರ್ಚೆ

ಒನ್ ಇ೦ಡಿಯ 23 Dec 2025 3:54 pm

“ಸಾರ್ವಜನಿಕ ಸುವ್ಯವಸ್ಥೆಗೆ ಧಕ್ಕೆ”ಗಾಗಿ ಶೇ.50ರಷ್ಟು ವಿಷಯಗಳನ್ನು ತೆಗೆದು ಹಾಕಿದ ಎಕ್ಸ್

ಎಕ್ಸ್ ಸಾಮಾಜಿಕ ಜಾಲತಾಣ ಕೇಂದ್ರ ಗೃಹ ಸಚಿವಾಲಯದ ‘ಸಹಯೋಗ್ ಪೋರ್ಟಲ್’ ಜೊತೆಗೆ ಸಮನ್ವಯಕ್ಕೆ ನಿರಾಕರಿಸಿದ ನಂತರ ಐಟಿ ಕಾಯ್ದೆಯಡಿ 1,100ಕ್ಕೂ ಹೆಚ್ಚು URLಗಳನ್ನು ತೆಗೆದು ಹಾಕುವಂತೆ ಆದೇಶವನ್ನು ನೀಡಲಾಗಿದೆ. 2024ರ ಮಾರ್ಚ್ ನಿಂದ 20 ತಿಂಗಳ ಅವಧಿಯಲ್ಲಿ ಕೇಂದ್ರ ಗೃಹ ಸಚಿವಾಲಯ ‘ಎಕ್ಸ್’ ಸಾಮಾಜಿಕ ಜಾಲತಾಣಕ್ಕೆ 91 ಆದೇಶಗಳನ್ನು ಕಳುಹಿಸಿದ್ದು, ಕಾನೂನು ಉಲ್ಲಂಘನೆಗಾಗಿ 1,100ಕ್ಕೂ ಹೆಚ್ಚು URL ಗಳನ್ನು ತೆಗೆದು ಹಾಕುವಂತೆ ಸೂಚಿಸಿದೆ. ಐಟಿ ಕಾಯ್ದೆಯ ಸೆಕ್ಷನ್ 79(3)(b) ಅಡಿಯಲ್ಲಿ ಕೇಂದ್ರ ಗೃಹ ಸಚಿವಾಲಯ ತನ್ನ ಅಂಗ ಸಂಸ್ಥೆಯಾದ ಭಾರತೀಯ ಸೈಬರ್ ಅಪರಾಧ ಸಮನ್ವಯ ಕೇಂದ್ರದ (I4C) ಮೂಲಕ ಈ ಆದೇಶಗಳನ್ನು ನೀಡಿದೆ. ಎಕ್ಸ್ ಸಾಮಾಜಿಕ ಜಾಲತಾಣ ಕೇಂದ್ರ ಗೃಹ ಸಚಿವಾಲಯದ ಸಹಯೋಗ್ ಪೋರ್ಟಲ್ ಜೊತೆಗೆ ಸಮನ್ವಯಕ್ಕೆ ನಿರಾಕರಿಸಿದ ನಂತರವೂ ಐಟಿ ಕಾಯ್ದೆಯಡಿ ಈ ಆದೇಶವನ್ನು ನೀಡಿದೆ. ಇವುಗಳಲ್ಲಿ ಅರ್ಧದಷ್ಟು (566) ಆದೇಶಗಳನ್ನು ‘ಸಾರ್ವಜನಿಕ ಸುವ್ಯವಸ್ಥೆಗೆ ಭಂಗ ತರುವ” ಅಪರಾಧಕ್ಕಾಗಿ ನೀಡಲಾಗಿದೆ. ಉಳಿದವುಗಳಲ್ಲಿ 124 ಆದೇಶಗಳನ್ನು ರಾಜಕೀಯ ಮತ್ತು ಸಾರ್ವಜನಿಕ ವ್ಯಕ್ತಿಗಳನ್ನು ಗುರಿಪಡಿಸಿರುವುದಕ್ಕಾಗಿ ನೀಡಲಾಗಿದೆ. 2024 ಮಾರ್ಚ್ 20ರಿಂದ 2025 ನವೆಂಬರ್ 7ರ ನಡುವೆ ನೀಡಲಾದ ಈ ನೋಟೀಸ್‌ ಗಳ ವಿವರಗಳನ್ನು ಕೇಂದ್ರ ಗೃಹ ಸಚಿವಾಲಯ ದೆಹಲಿ ಹೈಕೋರ್ಟ್ ಮುಂದೆ ಇಟ್ಟಿದೆ. ಅವುಗಳಲ್ಲಿ 58 ಆದೇಶಗಳನ್ನು ಎಕ್ಸ್‌ ಗೆ ಕಳೆದ ವರ್ಷ ನೀಡಲಾಗಿದೆ. 24 ಆದೇಶಗಳನ್ನು ಸಾರ್ವಜನಿಕ ಶಾಂತಿಗೆ ಭಂಗ ತರುವುದು ಮತ್ತು ಶತ್ರುತ್ವವನ್ನು ಪ್ರಚೋದಿಸಿರುವುದಕ್ಕಾಗಿ ನೀಡಲಾಗಿದೆ. ಮೂರು ಆದೇಶಗಳಲ್ಲಿ ಪೋಸ್ಟ್ ಮಾಡಲಾದ ವಿಷಯಗಳು ರಾಷ್ಟ್ರೀಯ ಐಕ್ಯತೆ ಮತ್ತು ಸಾರ್ವಭೌಮತೆಗೆ ಧಕ್ಕೆ ತರುತ್ತದೆ ಎಂದು ಕಾರಣ ನೀಡಲಾಗಿದೆ. ►91 ಆದೇಶಗಳಲ್ಲಿ 14 ಮಾತ್ರ ಅಪರಾಧ 20 ತಿಂಗಳ ಅವಧಿಯಲ್ಲಿ 91 ನೋಟೀಸ್‌ ಗಳಲ್ಲಿ 14 ಮಾತ್ರ ಅಪರಾಧ ಚಟುವಟಿಕೆಗಳಿಗೆ ಸಂಬಂಧಿಸಿದೆ. ಅಂದರೆ ಬೆಟ್ಟಿಂಗ್ ಆ್ಯಪ್ ಗಳ ಪ್ರಚಾರ, ಅಧಿಕೃತ ಹ್ಯಾಂಡಲ್ ಗಳಂತೆ ಅನುಕರಣೆ ಮಾಡಿ ಹಣಕಾಸು ವಂಚನೆ ಮಾಡುವ ಸಾಧ್ಯತೆ ಮತ್ತು ಮಕ್ಕಳ ಮೇಲೆ ಲೈಂಗಿಕ ಶೋಷಣೆಗೆ ಸಂಬಂಧಿಸಿದ ಮೆಟೀರಿಯಲ್ ಗಳ ಪ್ರಚಾರ ಇತ್ಯಾದಿ ಕಾರಣಗಳನ್ನು ನೀಡಲಾಗಿದೆ. 2024 ಮೇ 13ರಂದು ಒಂದು ಆದೇಶದಲ್ಲಿ 115 URLಗಳನ್ನು ತೆಗೆದು ಹಾಕುವಂತೆ ಹೇಳಲಾಗಿದೆ. “ಚುನಾವಣಾ ಪ್ರಕ್ರಿಯೆಯಲ್ಲಿ ಸುಳ್ಳು ಸುದ್ದಿಯನ್ನು ಹರಡಿ ಪ್ರಚಾರ ಮಾಡಲಾಗುತ್ತಿದೆ” ಎನ್ನುವ ಕಾರಣ ನೀಡಿ ಈ ಆದೇಶ ಕೊಡಲಾಗಿದೆ. 2024ರ ಏಪ್ರಿಲ್ ಮತ್ತು ಮೇ ನಡುವಿನ ಲೋಕಸಭಾ ಚುನಾವಣೆಯ ಅವಧಿಯಲ್ಲಿ 761 URLಗಳನ್ನು ತೆಗೆದು ಹಾಕುವಂತೆ ಎಕ್ಸ್‌ ಗೆ ನೋಟೀಸ್ ಕಳುಹಿಸಲಾಗಿತ್ತು. ಅವುಗಳಲ್ಲಿ 198 URLಗಳನ್ನು ರೆಪ್ರೆಸೆಂಟೇಶನ್ ಆಫ್ ಪೀಪಲ್ಸ್ ಆಕ್ಟ್ನ ಸೌಲಭ್ಯಗಳ ಉಲ್ಲಂಘನೆಗಾಗಿ ನಿರ್ದಿಷ್ಟವಾಗಿ ತೆಗೆದು ಹಾಕುವಂತೆ ಸೂಚಿಸಲಾಗಿತ್ತು. ವಿಚಾರಣೆಯಾಗದ ‘ಎಕ್ಸ್’ ಮೊಕದ್ದಮೆ ಸಹಯೋಗ್ ಪೋರ್ಟಲ್ ವಿರುದ್ಧ ಎಕ್ಸ್ ಸಂಸ್ಥೆಯ ನ್ಯಾಯಾಲಯದ ಮೊಕದ್ದಮೆ ಕರ್ನಾಟಕ ಹೈಕೋರ್ಟ್ ಮುಂದೆ ವಿಚಾರಣೆಗೆ ಬಾಕಿ ಉಳಿದಿದೆ. ಸಹಯೋಗ್ ಪೋರ್ಟಲ್ ಕೂಡ ಎಕ್ಸ್ ಸಂಸ್ಥೆಗೆ ಐಟಿ ಕಾಯ್ದೆಯ ಸೆಕ್ಷನ್ 79 (3)(b) ಅಡಿಯಲ್ಲಿ ಆದೇಶ ನೀಡಿದೆ. ಆದರೆ ಏನೇ ಯುಆರ್ಎಲ್ ತೆಗೆದು ಹಾಕುವ ಆದೇಶ ನೀಡುವುದಾದಲ್ಲಿ ಐಟಿ ಕಾಯ್ದೆಯ ಸೆಕ್ಷನ್ 69A ಅಡಿಯಲ್ಲಿ ನೀಡಬೇಕು ಎಂದು ಎಕ್ಸ್ ಸಂಸ್ಥೆ ತನ್ನ ನಿಲುವನ್ನು ಪ್ರಕಟಿಸಿದೆ. ಈ ಸೆಕ್ಷನ್ ಅಡಿಯಲ್ಲಿ ರಾಷ್ಟ್ರೀಯ ಭದ್ರತೆ ಮತ್ತು ಸಾಮಾಜಿಕ ಸುವ್ಯವಸ್ಥೆಯ ಉಲ್ಲಂಘನೆಗೆ ನೀಡಬಹುದಾದ ನಿರ್ದೇಶನಗಳಿಗೆ ಸೀಮಿತವಾಗಿದೆ. ಆದರೆ ಐಟಿ ಕಾಯ್ದೆಯ 79(3)(b) ಅಡಿಯಲ್ಲಿ ನೋಟೀಸ್‌ ಗಳನ್ನು ನೀಡುವುದು ನ್ಯಾಯಾಂಗ ಪ್ರಕ್ರಿಯೆಯಿಲ್ಲದೆ ವಿಷಯವನ್ನು ತೆಗೆದು ಹಾಕಲು ಅಥವಾ ನಿರ್ಬಂಧಿಸಲು ಅವಕಾಶ ನೀಡುತ್ತದೆ. ಈ ಕಾಯ್ದೆ ಸಾಮಾಜಿಕ ಮಾಧ್ಯಮಕ್ಕೆ ನಿರ್ದೇಶನ ನೀಡುವವರಿಗೆ ಸುಗಮ ಅವಕಾಶ ಕೊಡುತ್ತದೆ ಎಂದು ಎಕ್ಸ್ ಹೇಳಿದೆ. ನಾಯಕರು ಮತ್ತು ಸಾರ್ವಜನಿಕ ವ್ಯಕ್ತಿಗಳು ಗುರಿ ಒಂಭತ್ತು ನೋಟೀಸ್‌ ಗಳಲ್ಲಿ 21 URLಗಳನ್ನು ತೆಗೆದು ಹಾಕುವಂತೆ ಹೇಳುವಾಗ ಪ್ರಧಾನಿ ನರೇಂದ್ರ ಮೋದಿಯವರಿಗೆ ಸಂಬಂಧಿಸಿದ ತಿರುಚಿದ ವಿಷಯಗಳೆಂದು ಹೇಳಲಾಗಿದೆ. ಇನ್ನೆರಡರಲ್ಲಿ ನರೇಂದ್ರ ಮೋದಿ ಮತ್ತು ಕೈಗಾರಿಕೋದ್ಯಮಿ ಗೌತಮ್ ಅದಾನಿಯವರ ತಿರುಚಿದ ಚಿತ್ರಗಳಿವೆ ಎಂದು ಕಾರಣ ನೀಡಲಾಗಿದೆ. ಆರು ನೋಟೀಸ್‌ ಗಳಲ್ಲಿ 91 URLಗಳನ್ನು ತೆಗೆದು ಹಾಕುವಂತೆ ಕೇಂದ್ರ ಗೃಹ ಸಚಿವಾಲಯ ತಿಳಿಸಿದೆ. ಅದರಲ್ಲಿ ಕೇಂದ್ರ ಗೃಹಸಚಿವರಾದ ಅಮಿತ್ ಶಾ ವಿರುದ್ಧ ತಿರುಚಿದ ವಿಷಯಗಳನ್ನು ಪೋಸ್ಟ್ ಮಾಡಲಾಗಿತ್ತು ಎಂದು ಹೇಳಲಾಗಿದೆ. 2024 ಡಿಸೆಂಬರ್ 18ರಂದು ಕಳುಹಿಸಿದ ಆದೇಶದಲ್ಲಿ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಮತ್ತು ಪಕ್ಷದ ವಕ್ತಾರೆ ಸುಪ್ರಿಯಾ ಶ್ರೀನೇತ್ ಸೇರಿದಂತೆ 28 URLಗಳನ್ನು ತೆಗೆದು ಹಾಕುವಂತೆ ಸೂಚಿಸಲಾಗಿದೆ. ಗೃಹ ಸಚಿವಾಲಯ ಕಳುಹಿಸಿದ ಇತರ 2 ಆದೇಶಗಳಲ್ಲಿ ಐಸಿಸಿ ಅಧ್ಯಕ್ಷ ಜೇ ಶಾರನ್ನು ಗುರಿ ಮಾಡಲು ನಕಲಿ ಮತ್ತು ಎಐ ರಚಿತ ಸುದ್ದಿಗಳನ್ನು ಪೋಸ್ಟ್ ಮಾಡಿರುವುದಾಗಿ ಹೇಳಲಾಗಿತ್ತು. ಒಟ್ಟು 3 ಆದೇಶಗಳಲ್ಲಿ ಎರಡರಲ್ಲಿ ಪ್ರಧಾನಿ ಮತ್ತು ಕೇಂದ್ರ ಗೃಹ ರಾಜ್ಯ ಸಚಿವ ಬಂಡಿ ಸಂಜಯ್ ಕುಮಾರ್ ವಿರುದ್ಧ ಪೋಸ್ಟ್ ಮಾಡಿದ 14 URLಗಳನ್ನು ಅವಹೇಳನಕಾರಿ ಮತ್ತು ನೇರವಾಗಿ ತೆಗೆದು ಹಾಕಬೇಕು ಎಂದು ಸೂಚಿಸಿದೆ. 2024 ಜುಲೈರಂದು ಕಳುಹಿಸಿದ ಎರಡು ನೋಟೀಸ್‌ ಗಳಲ್ಲಿ 12 URL ತೆಗೆಯುವಂತೆ ಸೂಚಿಸಲಾಗಿತ್ತು. ಅವುಗಳಲ್ಲಿ ಹಣಕಾಸು ಮತ್ತು ವಾಣಿಜ್ಯ ಸಚಿವಾಲಯವನ್ನು ಅವಹೇಳನ ಮಾಡಿರುವ ಆರೋಪ ಹೊರಿಸಲಾಗಿತ್ತು. 2024 ಜುಲೈ 9ರಂದು ಹಣಕಾಸು ಸಚಿವಾಲಯ ಮತ್ತು ಭಾರತ ಸರ್ಕಾರವನ್ನು ಅವಹೇಳನ ಮಾಡುವಂತಹ ಜಿಎಸ್ಟಿ/ಆದಾಯ ತೆರಿಗೆ ವ್ಯವಸ್ಥೆ ಕುರಿತ ಅವಹೇಳನಕಾರಿ ವಿಷಯಗಳನ್ನು ತೆಗೆಯುವಂತೆ ಸೂಚಿಸಲಾಗಿತ್ತು. 2024 ನವೆಂಬರ್ನಲ್ಲಿ ಕೆನಡಾದ ನಿಜ್ಜರ್ ಕೊಲೆಯ ಮೇಲಿನ ಸಿಬಿಸಿ ಸಾಕ್ಷ್ಯಚಿತ್ರವನ್ನು ತೆಗೆದು ಹಾಕುವಂತೆ ನೋಟೀಸ್ ಕಳುಹಿಸಲಾಗಿತ್ತು. ಪ್ರಧಾನಿ, ಗೃಹ ಸಚಿವರು ಸೇರಿದಂತೆ ಭಾರತದ ಸಾರ್ವಜನಿಕ ವ್ಯಕ್ತಿಗಳ ವರ್ಚಸ್ಸನ್ನು ಹಾಳುಗೆಡವಲಾಗುತ್ತಿದೆ ಎಂದು ಕಾರಣ ನೀಡಲಾಗಿತ್ತು. ►ಚುನಾವಣೆ ಮೇಲೆ ಪ್ರಭಾವ 2024 ಮೇನಲ್ಲಿ ನೀಡಲಾದ ಒಂಭತ್ತು ನೋಟೀಸ್‌ ಗಳಲ್ಲಿ 198 ಚುನಾವಣಾ ಸಂಬಂಧಿತ ಯುಆರ್ಎಲ್ ವಿರುದ್ಧ ಆದೇಶ ನೀಡಲಾಗಿತ್ತು. ಅವುಗಳಲ್ಲಿ 115 URLಗಳು ವಿಪಕ್ಷಗಳಿಗೆ ಸೇರಿದ್ದವು. 2024 ಮೇ 27ರಂದು ಆಪ್ ಪಕ್ಷಕ್ಕೆ ಸಂಬಂಧಿ ಏಳು ಯುಆರ್ಎಲ್ ತೆಗೆಯುವಂತೆ ಹೇಳಿದಾಗ ಎಕ್ಸ್ ವಿರೋಧ ವ್ಯಕ್ತಪಡಿಸಿತ್ತು. ನಿರ್ಧಾರವನ್ನು ಮರುಮೌಲ್ಯಮಾಪನ ಮಾಡಲು I4C ನೀಡುವಂತೆ ಎಕ್ಸ್ ಕೇಳಿತ್ತು. ಆಪರೇಷನ್ ಸಿಂಧೂರ್ ಐದು ನೋಟೀಸ್‌ ಗಳಲ್ಲಿ 56 URLಗಳನ್ನು ತೆಗೆದು ಹಾಕುವಂತೆ ಹೇಳಲಾಗಿತ್ತು. ಅದರಲ್ಲಿ ಭಾರತದ ಸಮಗ್ರತೆ, ಸಾರ್ವಭೌಮತೆ ಮತ್ತು ಭದ್ರತೆಗೆ ಧಕ್ಕೆ ಬರುವ ಆರೋಪ ಹೊರಿಸಲಾಗಿತ್ತು. ಈ ವರ್ಷ ಏಪ್ರಿಲ್ 28ರಂದು ಪಹಲ್ಗಾಮ್ ದಾಳಿಯ ನಂತರ ಅಕ್ರಮ ಚಟುವಟಿಕೆಯ (ಯುಎಪಿಎ) ಸೆಕ್ಷನ್ 13ರ ಉಲ್ಲಂಘನೆಯ ಕಾರಣ ನೀಡಿ ಭಾರತ ರಾಷ್ಟ್ರದ ವಿರುದ್ಧ ಬೆದರಿಕೆ ಒಡ್ಡುವ ಸಂದೇಶಗಳನ್ನು ಹರಡುವ ಆರೋಪ ಹೊರಿಸಿ ಯುಆರ್ಎಲ್ ತೆಗೆದು ಹಾಕಲು ಸೂಚಿಸಲಾಗಿತ್ತು. ಆಪರೇಶನ್ ಸಿಂಧೂರ್ ಬಳಿಕ ಮೇಯಲ್ಲಿ ಗೃಹಸಚಿವಾಲಯ ಎಕ್ಸ್‌ ಗೆ ಎರಡು ನೋಟೀಸ್‌ ಗಳನ್ನು ಕಳುಹಿಸಿ “ಭಾರತೀಯ ಸೇನೆಗೆ ನಿರ್ಣಾಯಕವಾಗಿರುವ” ವಿಷಯಗಳಿರುವ URLಗಳನ್ನು ತೆಗೆಯುವಂತೆ ಸೂಚಿಸಿತ್ತು. ಭಾರತೀಯರನ್ನು ತಪ್ಪು ದಾರಿಗೆ ಎಳೆಯುವ ಭಾರತ-ಪಾಕಿಸ್ತಾನಕ್ಕೆ ಸಂಬಂಧಿಸಿದ ತಪ್ಪು ಮಾಹಿತಿ ಹಂಚಿಕೆಯಾಗುತ್ತಿರುವ ಆರೋಪ ಹೊರಿಸಲಾಗಿತ್ತು. 2025 ಏಪ್ರಿಲ್ ಮತ್ತು ಮೇ ನಡುವೆ I4C ಅಡಿಯಲ್ಲಿ ಒಟ್ಟು 14 ಸೂಚನೆಗಳನ್ನು ಕಳುಹಿಸಿ ಎಕ್ಸ್‌ ಗೆ ಸೇರಿದ 78 ಲಿಂಕ್ಗಳನ್ನು ತೆಗೆಯುವಂತೆ ಸೂಚಿಸಲಾಗಿತ್ತು. ಕೃಪೆ: Indianexpress.com

ವಾರ್ತಾ ಭಾರತಿ 23 Dec 2025 3:53 pm

ಜನವರಿ 1 ರಿಂದ ಬೈಕ್ ಸವಾರರಿಗೆ ₹5,000 ದಂಡ? ಜನವರಿ 1ರ ಈ ಸುದ್ದಿ ತಪ್ಪದೇ ಓದಿ

ಹೊಸ ವರ್ಷ ಆರಂಭವಾಗಲು ಇನ್ನು ಕೆಲವೇ ದಿನಗಳು ಬಾಕಿ ಉಳಿದಿವೆ. ಈ ಸಂದರ್ಭದಲ್ಲಿ ವಾಹನ ಸವಾರರ ಮೊಬೈಲ್‌ಗಳಿಗೆ ಒಂದು ಸುದ್ದಿ ಹರಿದಾಡುತ್ತಿದೆ. ಜನವರಿ 1ರಿಂದ ಸಂಚಾರ ನಿಯಮಗಳಲ್ಲಿ ಭಾರೀ ಬದಲಾವಣೆಯಾಗಲಿದ್ದು, ಬೈಕ್ ಸವಾರರಿಗೆ ನೇರವಾಗಿ 5,000 ರೂಪಾಯಿ ದಂಡ ವಿಧಿಸಲಾಗುತ್ತದೆ ಎಂಬ ಮಾತುಗಳು ಕೇಳಿಬರುತ್ತಿವೆ. ಈ ಸುದ್ದಿಯಿಂದಾಗಿ ದ್ವಿಚಕ್ರ ವಾಹನ ಸವಾರರು ಆತಂಕಕ್ಕೆ ಒಳಗಾಗಿದ್ದಾರೆ. ನಿಜಕ್ಕೂ ಸರ್ಕಾರ ಅಥವಾ ಸಂಚಾರ ಪೊಲೀಸ್ ಇಲಾಖೆ ಇಂತಹ ಹೊಸ ನಿಯಮ ಜಾರಿಗೆ ತಂದಿದೆಯಾ? ಜನವರಿ 1ರ ನಂತರ ರಸ್ತೆಗಿಳಿಯುವ ಮುನ್ನ ... Read more The post ಜನವರಿ 1 ರಿಂದ ಬೈಕ್ ಸವಾರರಿಗೆ ₹5,000 ದಂಡ? ಜನವರಿ 1ರ ಈ ಸುದ್ದಿ ತಪ್ಪದೇ ಓದಿ appeared first on Karnataka Times .

ಕರ್ನಾಟಕ ಟೈಮ್ಸ್ 23 Dec 2025 3:50 pm

ವಂದೇ ಭಾರತ್ ರೈಲುಗಳ ಲೋಕೋ ಪೈಲಟ್‌ ಗಳ ವೇತನ ಎಷ್ಟು ಗೊತ್ತೆ?

ಗಂಟೆಗೆ 160 ಕಿ.ಮೀ. ವೇಗದಲ್ಲಿ ಚಲಿಸುವ ವಂದೇ ಭಾರತ್ ರೈಲುಗಳ ಲೋಕೋ ಪೈಲಟ್‌ ಗಳ ವೇತನವೆಷ್ಟು ಗೊತ್ತೆ? ಅತಿವೇಗದ ರೈಲುಗಳನ್ನು ಓಡಿಸುವುದು ಸಾಮಾನ್ಯ ಕೆಲಸವಲ್ಲ. ರೈಲ್ವೆ ಈ ಕೆಲಸವನ್ನು ಅನುಭವಿ ಪೈಲಟ್‌ ಗಳಿಗೆ ಮಾತ್ರ ವಹಿಸುತ್ತದೆ. ಒಬ್ಬ ವ್ಯಕ್ತಿಯು ನೇರವಾಗಿ ವಂದೇ ಭಾರತ್ ರೈಲಿಗೆ ಪೈಲಟ್ ಆಗಲು ಸಾಧ್ಯವಿಲ್ಲ. ಇದಕ್ಕಾಗಿ ಒಂದು ವ್ಯವಸ್ಥಿತ ಪ್ರಕ್ರಿಯೆಯಿದೆ. ಹಿರಿಯ ಪೈಲಟ್‌ ಗಳಿಗೆ ಸಹಾಯಕರಾಗಿ ಕಾರ್ಯ ನಿರ್ವಹಿಸುವ ಮೂಲಕ ಪೈಲಟ್‌ ಗಳು ವೃತ್ತಿಜೀವನ ಆರಂಭವಾಗುತ್ತದೆ. ಅದಕ್ಕೂ ಮೊದಲು ಲೋಕೋ ಪೈಲಟ್‌ ಗಳು ಯಾರ್ಡ್‌ಗಳಲ್ಲಿ ರೈಲುಗಳನ್ನು ಸರಿಹೊಂದಿಸಿ ನಂತರ ಸರಕು ರೈಲುಗಳನ್ನು ಓಡಿಸುವ ಮೂಲಕ ಅನುಭವವನ್ನು ಪಡೆಯುತ್ತಾರೆ. ದೀರ್ಘಾವಧಿಯ ಅನುಭವದ ನಂತರ, ಪ್ರಯಾಣಿಕ ರೈಲುಗಳನ್ನು ಮತ್ತು ನಂತರ ವಂದೇ ಭಾರತ್‌ ನಂತಹ ಪ್ರೀಮಿಯಂ ಎಕ್ಸ್‌ಪ್ರೆಸ್ ರೈಲುಗಳನ್ನು ಓಡಿಸಲು ಅವಕಾಶ ಸಿಗುತ್ತದೆ. ಸಂಬಳ ಮತ್ತು ಭತ್ಯೆಗಳು 7ನೇ ವೇತನ ಆಯೋಗದ ಪ್ರಕಾರ, ಲೋಕೋ ಪೈಲಟ್‌ ಗಳಿಗೆ ಉತ್ತಮ ಸಂಬಳವಿದೆ. ಹೊಸ ಸಹಾಯಕ ಲೋಕೋ ಪೈಲಟ್ ನ ಆರಂಭಿಕ ಮೂಲ ವೇತನ 19,900 ರೂ.ಗಳಾಗಿದ್ದು, ಒಟ್ಟು ಭತ್ಯೆಗಳು 44,000 ರೂ.ಗಳಿಂದ 51,000 ರೂ.ಗಳವರೆಗೆ ಇರಬಹುದು. ಮುಖ್ಯ ಲೋಕೋ ಇನ್ಸ್‌ಪೆಕ್ಟರ್ ಎನ್ನುವುದು ಅತ್ಯುನ್ನತ ಮಟ್ಟ. ಅವರು ರೈಲು ಕಾರ್ಯಾಚರಣೆ ಮತ್ತು ತರಬೇತಿಯನ್ನು ಮೇಲ್ವಿಚಾರಣೆ ಮಾಡುತ್ತಾರೆ. ವಂದೇ ಭಾರತ್ ಪೈಲಟ್‌ ಗಳ ಜವಾಬ್ದಾರಿಗಳು ಕೇವಲ ರೈಲು ಪ್ರಾರಂಭಿಸುವುದಲ್ಲ, ಅವರು ಪ್ರಮುಖ ಜವಾಬ್ದಾರಿಗಳನ್ನು ಸಹ ನಿರ್ವಹಿಸುತ್ತಾರೆ. 7ನೇ ವೇತನ ಆಯೋಗದ ಪ್ರಕಾರ, ಲೋಕೋ ಪೈಲಟ್‌ ಗಳಿಗೆ ಉತ್ತಮ ಸಂಬಳವಿದೆ. ವಂದೇ ಭಾರತ್‌ ನಂತರ ಪ್ರೀಮಿಯಂ ರೈಲನ್ನು ನಿರ್ವಹಿಸುವ ಹಿರಿಯ ಪೈಲಟ್‌ ಗಳ ಮೂಲ ವೇತನವು ರೂ. 65,000 ರಿಂದ ರೂ. 85,000 ವರೆಗೆ ಇರುತ್ತದೆ. 30 ವರ್ಷಗಳ ಅನುಭವ ಹೊಂದಿರುವವರು ಅಥವಾ ಮುಖ್ಯ ಲೋಕೋ ಇನ್ಸ್‌ಪೆಕ್ಟರ್ (CLI) ಮಟ್ಟದ ಅಧಿಕಾರಿಗಳು ಎಲ್ಲಾ ಭತ್ಯೆಗಳನ್ನು ಒಳಗೊಂಡಂತೆ ತಿಂಗಳಿಗೆ ರೂ. 2,00,000 ದಿಂದ ರೂ. 2,50,000 ವರೆಗೆ ಗಳಿಸುತ್ತಾರೆ. ಅನುಭವಿ ಪೈಲಟ್‌ ಗಳಿಗೆ ಮಾತ್ರ ಅವಕಾಶ ವಂದೇ ಭಾರತ್‌ ನಂತಹ ಅತಿ ವೇಗದ ರೈಲುಗಳನ್ನು ಓಡಿಸುವುದು ಸಾಮಾನ್ಯ ಕೆಲಸವಲ್ಲ. ರೈಲ್ವೆ ಈ ಜವಾಬ್ದಾರಿಗಳನ್ನು ಹೆಚ್ಚು ಕೌಶಲ್ಯಪೂರ್ಣ ಮತ್ತು ಅನುಭವಿ ಪೈಲಟ್‌ ಗಳಿಗೆ ಮಾತ್ರ ವಹಿಸುತ್ತದೆ. ಈ ಪೈಲಟ್‌ ಗಳ ಜವಾಬ್ದಾರಿಗಳು ಕೇವಲ ರೈಲು ಪ್ರಾರಂಭಿಸುವುದಲ್ಲ, ಅವರು ಇತರ ಪ್ರಮುಖ ಜವಾಬ್ದಾರಿಗಳನ್ನು ಸಹ ನಿರ್ವಹಿಸುತ್ತಾರೆ. ಆಧುನಿಕ ಲೋಕೋಮೋಟಿವ್ ಮತ್ತು ಗಣಕೀಕೃತ ಎಂಜಿನ್ ವ್ಯವಸ್ಥೆಗಳ ಮೇಲ್ವಿಚಾರಣೆ, ರೈಲಿನ ವೇಗವನ್ನು ನಿಯಂತ್ರಿಸುವುದು ಮತ್ತು ಬ್ರೇಕಿಂಗ್ ವ್ಯವಸ್ಥೆಯ ಮೇಲೆ ಸಂಪೂರ್ಣ ನಿಯಂತ್ರಣ ಸಾಧಿಸುವುದು, ನಿಲ್ದಾಣದ ಸಿಬ್ಬಂದಿ ನಿಯಂತ್ರಣ ಕೊಠಡಿಯೊಂದಿಗೆ ನಿರಂತರ ಸಂಪರ್ಕ ಮೊದಲಾದ ಕರ್ತವ್ಯ ನಿರ್ವಹಿಸುತ್ತಾರೆ. ಹಿರಿಯ ಪೈಲಟ್‌ ಗಳು 30 ವರ್ಷಗಳ ಅನುಭವ ಹೊಂದಿರುವವರು ಅಥವಾ ಮುಖ್ಯ ಲೋಕೋ ಇನ್ಸ್‌ಪೆಕ್ಟರ್ (CLI) ಮಟ್ಟದ ಅಧಿಕಾರಿಗಳು ಎಲ್ಲಾ ಭತ್ಯೆಗಳನ್ನು ಒಳಗೊಂಡಂತೆ ತಿಂಗಳಿಗೆ ರೂ. 2,00,000 ದಿಂದ ರೂ. 2,50,000 ವರೆಗೆ ಗಳಿಸುತ್ತಾರೆ. ಹೆಚ್ಚುವರಿ ಪ್ರಯೋಜನಗಳು ರಾತ್ರಿ ಕೆಲಸ ಮಾಡುವವರಿಗೆ ಸಂಬಳದ ಜೊತೆಗೆ ಟಿಎ, ಡಿಎ, ಮನೆ ಬಾಡಿಗೆ ಮತ್ತು ರಾತ್ರಿ ಕರ್ತವ್ಯ ಭತ್ಯೆಗಳನ್ನು ಪಡೆಯುತ್ತಾರೆ. ಎಲ್ಲಕ್ಕಿಂತ ಹೆಚ್ಚಾಗಿ, ವಂದೇ ಭಾರತ್‌ ನಂತಹ ಪ್ರತಿಷ್ಠಿತ ರೈಲನ್ನು ಓಡಿಸುವುದು ಅವರಿಗೆ ದೊಡ್ಡ ಗೌರವದ ಕೆಲಸವೂ ಹೌದು.

ವಾರ್ತಾ ಭಾರತಿ 23 Dec 2025 3:49 pm

Madhya Pradesh | “ಮುಂದಿನ ಜನ್ಮದಲ್ಲೂ ಕುರುಡಾಗಿರುತ್ತಿ…” ಎಂದು ಅಂಧ ಮಹಿಳೆಗೆ ಅವಹೇಳನ ಮಾಡಿದ ಬಿಜೆಪಿ ನಾಯಕಿ!

ಚರ್ಚ್ ಗೆ ಅಂಧ ವಿದ್ಯಾರ್ಥಿಗಳನ್ನು ಕರೆತಂದಿದ್ದಕ್ಕೆ ಮತಾಂತರ ಆರೋಪಿಸಿದ ಸಂಘ ಪರಿವಾರ

ವಾರ್ತಾ ಭಾರತಿ 23 Dec 2025 3:44 pm

17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ; ರಾಯಭಾರಿಯಾಗಿ ಪ್ರಕಾಶ್ ರಾಜ್ ಆಯ್ಕೆ

ಬೆಂಗಳೂರು : 17ನೇ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ ರಾಯಭಾರಿಯಾಗಿ (Brand Ambassador) ಆಗಿ ಬಹುಬಾಷಾ ನಟ ಪ್ರಕಾಶ್ ರಾಜ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ಚಲನಚಿತ್ರೋತ್ಸವದ ಪೂರ್ವಭಾವಿ ಸಭೆಯ ಬಳಿಕ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, 17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಜ.29ರಿಂದ ಫೆ.6ರ ವರೆಗೆ ನಡೆಯಲಿದೆ. ಅಂತರಾಷ್ಟ್ರೀಯ ಚಲನಚಿತ್ರ ಉತ್ಸವದ ಉದ್ಘಾಟನೆ ವಿಧಾನಸೌಧದ ಮುಂಭಾಗದಲ್ಲಿ ಭವ್ಯ ಮೆಟ್ಟಿಲುಗಳ ಮೇಲೆ ನಡೆಯಲಿದೆ. ಈ ಬಾರಿಯ ಚಲನಚಿತ್ರೋತ್ಸವದಲ್ಲಿ ಮಹಿಳಾ ಸಬಲೀಕರಣ ಕುರಿತಾದ ಥೀಮ್ ಇರಲಿದೆ. ರಾಜಾಜಿನಗರದ ಲುಲು ಮಾಲ್‌ನಲ್ಲಿರುವ ಸಿನಿ ಪೊಲಿಸ್‌ನ 11 ಸ್ಕ್ರೀನ್‌ ಗಳಲ್ಲಿ ಚಿತ್ರೋತ್ಸವದ ಚಲನಚಿತ್ರಗಳ ಪ್ರದರ್ಶನ ನಡೆಯಲಿದೆ ಎಂದು ಮಾಹಿತಿ ನೀಡಿದರು. ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಏಷಿಯನ್, ಭಾರತೀಯ ಮತ್ತು ಕನ್ನಡ ಸಿನಿಮಾ ಸ್ಪರ್ಧಾತ್ಮಕ ವಿಭಾಗಗಳಿಗೆ ಚಲನಚಿತ್ರಗಳ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದ್ದು, ಇದಕ್ಕೆ ಉತ್ತಮ ಸ್ಪಂದನೆ ದೊರಕಿದೆ. ಈ ಮೂರು ಸ್ಪರ್ಧಾ ವಿಭಾಗಗಳಿಗೆ ಇದುವರೆಗೆ 110ಕ್ಕೂ ಹೆಚ್ಚು ಚಲನಚಿತ್ರಗಳು ಸಲ್ಲಿಕೆಯಾಗಿವೆ. ಚಲನಚಿತ್ರಗಳ ಸ್ಪರ್ಧಾತ್ಮಕ ವಿಭಾಗಗಳ ಅರ್ಜಿ ಸಲ್ಲಿಕೆಗೆ ಡಿಸೆಂಬರ್ 31, 2025 ಕಡೆಯ ದಿನಾಂಕವಾಗಿರುತ್ತದೆ. 17ನೇ ಅಂತರ ರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ರಾಜಾಜಿನಗರದ ಲುಲು ಮಾಲ್, ಜೊತೆಗೆ ಡಾ. ರಾಜ್ ಕುಮಾರ್ ಭವನ, ಕಲಾವಿದರ ಸಂಘ, ಚಾಮರಾಜಪೇಟೆ ಹಾಗೂ ಬನಶಂಕರಿಯಲ್ಲಿರವ ಸುಚಿತ್ರ ಫಿಲಂ ಸೊಸೈಟಿ ಚಿತ್ರಮಂದಿರಗಳಲ್ಲೂ ಪ್ರದರ್ಶನವಿರಲಿದೆ ಎಂದರು. ಕನ್ನಡ ಮತ್ತು ಭಾರತೀಯ ಚಿತ್ರಗಳು ಸೇರಿದಂತೆ ಒಟ್ಟಾರೆ 60ಕ್ಕೂ ಹೆಚ್ಚು ದೇಶಗಳ 200 ಚಲನಚಿತ್ರಗಳ, 400ಕ್ಕೂ ಹೆಚ್ಚು ಪ್ರದರ್ಶನಗಳಿರಲಿವೆ. ವಿಶ್ವದ ಪ್ರತಿಷ್ಠಿತ ಚಲನಚಿತ್ರೋತ್ಸವಗಳಲ್ಲಿ ಪಾಲ್ಗೊಂಡು ವಿವಿಧ ಪ್ರಶಸ್ತಿಗಳನ್ನು ಪಡೆದ ಮತ್ತು ಜನಮನ್ನಣೆಗಳಿಸಿದ ದೇಶ-ವಿದೇಶದ ಅತ್ಯುತ್ತಮ ಚಲನಚಿತ್ರಗಳು 17 ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಭಾಗವಹಿಸುತ್ತಿವೆ. ಕಾನ್ಸ್ (ಫ್ರಾನ್ಸ್), ಬರ್ಲಿನ್ (ಜರ್ಮನಿ), ವೆನಿಸ್ (ಇಟಲಿ), ಕಾರ್ಲೋವಿ ವೇರಿ (ಜೆಕ್‌ ರಿಪಬ್ಲಿಕ್), ಲೊಕಾರ್ನೂ (ಸಿಟ್ಟರ್ಲೆಂಡ್), ರಾಟರ್‌ಡ್ಯಾಮ್ (ನೆದರ್ ಲ್ಯಾಂಡ್), ಬೂಸಾನ್ (ದಕ್ಷಿಣ ಕೂರಿಯಾ), ಟೊರಂಟೋ (ಕೆನಡಾ) ದೇಶಗಳ ಚಿತ್ರೋತ್ಸವದಲ್ಲಿ ಭಾಗವಹಿಸಿ ಪ್ರಶಸ್ತಿ, ಮೆಚ್ಚುಗೆ ಪಡೆದ ಚಲನಚಿತ್ರಗಳು ಬೆಂಗಳೂರು ಚಿತ್ರೋತ್ಸವದಲ್ಲಿ ಒಂದೇ ಕಡೆ ಸಿನಿಮಾ ಪ್ರಿಯರಿಗೆ ವೀಕ್ಷಿಸಲು ದೊರೆಯಲಿವೆ. ಜೊತೆಗೆ ಈ ಬಾರಿಯ ಆಸ್ಕರ್ ಪ್ರಶಸ್ತಿಗೆ ಶಾರ್ಟ್ ಲಿಸ್ಟ್ ಆಗಿರುವ ವಿವಿಧ ದೇಶದ ಅತ್ಯುತ್ತಮ ಚಲನಚಿತ್ರಗಳು ಸಹ ನಮ್ಮ ಚಿತ್ರೋತ್ಸವದಲ್ಲಿ ಪ್ರದರ್ಶನಗೊಳ್ಳಲಿವೆ ಎಂದು ಹೇಳಿದರು. ಪೋಲಿಷ್ ಕಲ್ಪರಲ್ ಸೆಂಟರ್, ನವದೆಹಲಿ, ಗೋಥೆ ಇನ್ಸಿಟ್ಯೂಟ್ - ಮ್ಯಾಕ್ಸ್ ಮುಲ್ಲರ್ ಭವನ, ಬೆಂಗಳೂರು, ಅಲಿಯಾನ್ಸ್ ಫ್ರಾಂಸೇ - ಫ್ರೆಂಚ್ ಇನ್ಸಿಟ್ಯೂಟ್ ಹಾಗೂ ರಾಯಲ್ ಥೈಲ್ಯಾಂಡ್ ಕಾನ್ಸುಲೇಟ್‌ನವರು ಅವರ ದೇಶಗಳ ಅತ್ಯುತ್ತಮ ಚಲನಚಿತ್ರಗಳನ್ನು ಚಿತ್ರೋತ್ಸವದಲ್ಲಿ ಪ್ರದರ್ಶನಕ್ಕೆ ನೀಡುತ್ತಿದ್ದಾರೆ. ಹಾಗೆಯೇ ಪೋಲಿಷ್ ಕಲ್ಬರಲ್ ಸೆಂಟರ್ ಸಹಯೋಗದಲ್ಲಿ ಪೊಲೆಂಡ್‌ನ ಖ್ಯಾತ ನಿರ್ದೇಶಕರಾದ ಅಂದ್ರೆ ವಾಜ್ಞಾ ಅವರ ಶತಮಾನೋತ್ಸವ ಸ್ಮರಣಾರ್ಥವಾಗಿ ಅವರ ಆಯ್ದ ಚಲನಚಿತ್ರಗಳ ವಿಶೇಷ ಪುನರಾವಲೋಕನ (Retrospective), ಈ ಬಾರಿ ಚಿತ್ರೋತ್ಸವದಲ್ಲಿ ಆಯೋಜಿಸಲಾಗಿದೆ. ಇದರೊಂದಿಗೆ ಅಲಿಯಾನ್ಸ್ ಫ್ರಾಂಸೇ ಬೆಂಗಳೂರು ಹಾಗೂ ಫ್ರೆಂಚ್ ಇನ್ಸಿಟ್ಯೂಟ್ ಇನ್ ಇಂಡಿಯಾ ಸಹಯೋಗದಲ್ಲಿ ಆಫ್ರಿಕಾ ಸಿನಿಮಾಗಳ ಇತಿಹಾಸವನ್ನು ದಾಖಲಿಸುವ ವಿಶೇಷ ಚಲನಚಿತ್ರಗಳ ಸರಣಿಯನ್ನೂ ಈ ವರ್ಷದ ಚಿತ್ರೋತ್ಸವದಲ್ಲಿ ಪ್ರದರ್ಶಿಸಲಾಗುತ್ತಿದೆ ಎಂದು ತಿಳಿಸಿದರು. ಈ ಬಾರಿ ಚಿತ್ರೋತ್ಸವದ ಫಿಲಂ ಅಕಾಡೆಮಿಕ್ ಕಾರ್ಯಕ್ರಮಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ನೋಂದಾಯಿತ ಪ್ರತಿನಿಧಿಗಳು ಭಾಗವಹಿಸಲು ಅನುಕೂಲವಾಗುವಂತೆ ಚಿತ್ರೋತ್ಸವದ ಪ್ರಧಾನ ಕೇಂದ್ರದಲ್ಲಿ ವಿಶೇಷ ವೇದಿಕೆ ಇರಲಿದೆ. ಇದೇ ವೇದಿಕೆಯ ಆವರಣದಲ್ಲಿ 91 ವರ್ಷಗಳ ವರ್ಣ ರಂಜಿತ, ಸ್ಮರಣೀಯ ಸಿನಿಮಾ ಸಂಸ್ಕೃತಿಯ ಇತಿಹಾಸವಿರುವ ಕನ್ನಡ ಚಿತ್ರರಂಗದ ಮೈಲಿಗಲ್ಲುಗಳನ್ನು ಬಿಂಬಿಸುವ ವೈವಿಧ್ಯಮಯ ಛಾಯಾಚಿತ್ರ ಪ್ರದರ್ಶನವನ್ನು ಸಹ ಏರ್ಪಡಿಸಲಾಗುತ್ತದೆ ಎಂದರು. 2025-26 ನೇರ ಸಾಲಿನ 17ನೇ ಅಂತರರಾಷ್ಟ್ರೀಯ ಚಲನ ಚಿತ್ರೋತ್ಸವ ಏರ್ಪಡಿಸಲು ರೂ.‌ 7 ಕೋಟಿ ರೂಪಾಯಿಗಳ ಅಗತ್ಯವಿರುವ ಅನುದಾನ ಒದಗಿಸಲಾಗಿದೆ. ಸಮಾರೋಪ ಸಮಾರಂಭ ಅತ್ಯುತ್ತಮ ಚಲನಚಿತ್ರಗಳಿಗೆ ಪ್ರಶಸ್ತಿ, ಜೀವಮಾನ ಸಾಧನೆ ಪ್ರಶಸ್ತಿ ನೀಡಲಾಗುವುದು ಎಂದು ಮುಖ್ಯಮಂತ್ರಿಗಳು ತಿಳಿಸಿದರು. ಚಲನಚಿತ್ರ ಅಕಾಡೆಮಿ ಅಧ್ಯಕ್ಷರಾದ ಸಾಧು ಕೋಕಿಲ, ವಾರ್ತಾ ಇಲಾಖೆಯ ಕಾರ್ಯದರ್ಶಿ ಬಿ ಬಿ ಕಾವೇರಿ, ಆಯುಕ್ತರಾದ ಹೇಮಂತ್ ನಿಂಬಾಳ್ಕರ್, ಅಪರ ಮುಖ್ಯ ಕಾರ್ಯದರ್ಶಿ ಅಂಜುಂ ಪರ್ವೇಝ್, ಆರ್ಥಿಕ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಿತೇಶ್ ಕುಮಾರ್ ಸಿಂಗ್ ಹಾಗೂ ಅಕಾಡೆಮಿ ಸದಸ್ಯರು, ಸಂಘಟನಾ ಸಮಿತಿ ಸದಸ್ಯರು , ಚಲನಚಿತ್ರ ವಾಣಿಜ್ಯ ಮಂಡಳಿ ಪದಾಧಿಕಾರಿಗಳು ಪೂರ್ವಭಾವಿ ಸಭೆಯಲ್ಲಿ ಉಪಸ್ಥಿತರಿದ್ದರು.

ವಾರ್ತಾ ಭಾರತಿ 23 Dec 2025 3:26 pm

ಡಿ.25: ಆಶಾ ಪ್ರಕಾಶ್ ಶೆಟ್ಟಿ ಸಹಾಯ ಪ್ರದಾನ ಸಮಾರಂಭ; 7ನೇ ವರ್ಷದ ನೆರವು-2025

 ಮಂಗಳೂರು,ಡಿ.23;ಪ್ರತೀ ವರ್ಷ ಡಿಸೆಂಬರ್ 25 ರಂದು ನಾವು ಗೋಲ್ಡ್ ಫಿಂಚ್ ಮೈದಾನದಲ್ಲಿ ಅಶಾ ಪ್ರಕಾಶ್ ಶೆಟ್ಟಿ ಸಹಾಯ ಹಸ್ತ ಯೋಜನೆಯ ನೆರವು ಕಾರ್ಯಕ್ರಮವನ್ನು ಅಯೋಜಿಸುತ್ತಿದ್ದು, 7ನೇ ವರ್ಷದಲ್ಲಿ 100ಕ್ಕೂ ಅಧಿಕ ಸಂಘ ಸಂಸ್ಥೆಗಳಿಗೆ ನೆರವು ವಿತರಣೆಯಾಗಲಿದೆ. ಸರಿಸುಮಾರು 4 ಸಾವಿರ ಕುಟುಂಬಗಳು ಈ ಕಾರ್ಯಕ್ರಮದಲ್ಲಿ ನೆರವು ಬೆಂಬಲ ಪಡೆಯಲಿವೆ. 9.5 ಕೋ.ರೂ. ಗಳಿಗೂ ಅಧಿಕ ಮೊತ್ತ ವಿತರಿಸಲಾಗುತ್ತಿದೆ ಎಂದು ಎಂಆರ್ ಜಿ ಸಮೂಹ ಸಂಸ್ಥೆ ಗಳ ಅಧ್ಯಕ್ಷ ಪ್ರಕಾಶ್ ಶೆಟ್ಟಿ  ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಂದಿನ ಆಧುನಿಕ ತಂತ್ರಜ್ಞಾನ ಯುಗದಲ್ಲಿ ವೈದ್ಯಕೀಯ ಚಿಕಿತ್ಸೆ ಸುಲಭವಾಗಿದೆ ಎಂಬುದೇನೋ ನಿಜ. ಆದರೆ ಆ ಸವಲತ್ತುಗಳಿಗೆ ಎಲ್ಲರಿಗೂ ಪ್ರವೇಶ ಸಾಧ್ಯವಾಗುತ್ತಿಲ್ಲ ಎಂಬುದೂ ಅಷ್ಟೇ ಸತ್ಯ. ನಮ್ಮ ನೆರವಿನ ಮೊತ್ತದಲ್ಲಿ ದೊಡ್ಡ ಭಾಗ ಇದಕ್ಕೆ ಮೀಸಲಾಗಿದೆ. ಜಾತಿ, ಧರ್ಮ, ಪಂಗಡ ಎಂಬ ಯಾವ ಮನುಷ್ಯ ನಿರ್ಮಿತ ಗಡಿಗಳಿಲ್ಲದೆ ಅವಶ್ಯಕತೆ ಇರುವವರನ್ನು ನಮ್ಮ ತಂಡ ಹುಡುಕಿ, ಅರ್ಜಿಗಳನ್ನು ಪರಿಶೀಲಿಸಿ ಫಲಾನುಭವಿ ಗಳನ್ನು ಆಯ್ಕೆ ಮಾಡಿದೆ. ಇಲ್ಲಿ ಅವಶ್ಯಕತೆಯೇ ಮಾನದಂಡವಾಗಿದೆ. ನಮಗೆ ವಿಶ್ವಾಸವಿದೆ -ಅನಿವಾರ್ಯತೆ ಇಲ್ಲದಿದ್ದರೆ ಯಾರೂ ಅರ್ಜಿ ಹಾಕುವುದಿಲ್ಲ ಎಂದರು. ದೈಹಿಕ ಸಮಸ್ಯೆ ಇರುವ ದಿವ್ಯಾಂಗರು, ಡಯಾಲಿಸ್ ಸಹಿತ ನಿರಂತರ ಚಿಕಿತ್ಸೆಯನ್ನು ಪಡೆಯಬೇಕಾದ ಅನಿವಾರ್ಯತೆ ಇರುವವರು, ಶಿಕ್ಷಣ ಮುಂದುವರಿಕೆಗೆ ನೆರವು ಬೇಕಾದವರು, ಸಿಂಗಲ್ ಪೇರೆಂಟ್ ಮಕ್ಕಳು, ಸಾಂಸ್ಕೃತಿಕ ಕ್ಷೇತ್ರ, ಶಿಕ್ಷಣ ಕ್ಷೇತ್ರ, ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿದವರು ನೆರವಿನ ಬೆಂಬಲ ಪಡೆಯಲಿದ್ದಾರೆ. ಮನೆ ಕಟ್ಟಿ ಅದರ ಗೃಹ ಪ್ರವೇಶಕ್ಕಾಗಿ ಕಾಯುತ್ತಿರುವವರಿಗೂ ಅವರ ಭಾವನಾತ್ಮಕ ಮತ್ತು ಹಣಕಾಸಿನ ಪರಿಸ್ಥಿತಿಯನ್ನು ಮೌಲ್ಯಮಾಪನ ಮಾಡಿ ನೆರವು ಕೊಡಲಾಗುತ್ತಿದೆ. ಮನೆ ಕಟ್ಟಲು ಸಹಾಯ ಕೋರಿದ ಅರ್ಜಿಗಳನ್ನು ಪುರಸ್ಕರಿಸಲಾಗಿದೆ ಎಂದು ತಿಳಿಸಿದರು. ಈ ಯೋಜನೆಯನ್ನು ಆರಂಭಮಾಡಿದ ಮೊದಲ ವರ್ಷ ಒಟ್ಟು 1.25 ಕೋ.ರೂ. ನೆರವು ವಿತರಿಸಿದ್ದೇವೆ.ಆಗ 28 ಸಂಘ ಸಂಸ್ಥೆಗಳು ಪ್ರಯೋಜನ ಪಡೆದಿವೆ.ಫಲಾನುಭವಿಗಳ ಆಯ್ಕೆಯಲ್ಲಿ ಪ್ರಾದೇಶಿಕತೆಯನ್ನೂ ಗಮನಿಸಲಾಗಿದೆ. ಶಿವಮೊಗ್ಗ, ಸಾಗರ, ತೀರ್ಥಹಳ್ಳಿ, ಕೊಪ್ಪ, ಸಕಲೇಶಪುರ ಮತ್ತು ನಮ್ಮ ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು ಜಿಲ್ಲೆಗಳಿಂದ ಬಂದ ಅರ್ಜಿಗಳನ್ನು ಪರಿಶೀಲಿಸಿ ಆಯ್ಕೆ ಮಾಡಲಾಗಿದೆ. ನಾವು ಆಯ್ಕೆಗೆ ಸಂಬಂಧಿಸಿ ಸ್ವಾಯತ್ತ ಸಮಿತಿಯನ್ನು ಹೊಂದಿದ್ದೇವೆ, ಎಲ್ಲ ಜವಾಬ್ದಾರಿಯನ್ನೂ ಅದು ನಿಭಾಯಿಸುತ್ತದೆ. ವರ್ಷಂಪ್ರತಿಯಂತೆ ಈ ವರ್ಷವೂ ಸಾಧಕರನ್ನು ಗೌರವಿಸಲಾಗುವುದು. ಕಾರ್ಯಕ್ರಮದಲ್ಲಿ ವಿಧಾನ ಸಭಾಧ್ಯಕ್ಷರಾದ ಯು.ಟಿ. ಖಾದರ್ ಅವರು ಪಾಲ್ಗೊಳ್ಳುತ್ತಾರೆ. ಚಲನ ಚಿತ್ರ ನಿರ್ಮಾಪಕರಾದ ಅಶ್ವಿನಿ ಪುನೀತ್ ರಾಜ್ ಕುಮಾರ್ ಭಾಗವಹಿಸುತ್ತಾರೆ. ಮೂಡಬಿದ್ರೆಯ ಆಳ್ವಾಸ್ ಎಜುಕೇಷನ್ ಟ್ರಸ್ಟ್‌ನ ಡಾ. ಮೋಹನ್ ಆಳ್ವ, ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಎಂ.ಆರ್.ಜಿ. ಗ್ರೂಪಿನ ಗೌರವ್ ಪಿ. ಶೆಟ್ಟಿ ಅಂದಿನ ಕಾರ್ಯಕ್ರಮದಲ್ಲಿ ನಮ್ಮೊಂದಿಗೆ ಇರುತ್ತಾರೆ ಎಂದು ಪ್ರಕಾಶ್ ಶೆಟ್ಟಿ ತಿಳಿಸಿದ್ದಾರೆ. * ಯೋಜನೆ ಆರಂಭವಾದ ವರ್ಷ 2019. ಕಳೆದ ವರ್ಷ 3000 ಕುಟುಂಬಗಳಿಗೆ ಆರು ಕೋಟಿ ನೆರವು ವಿತರಿಸಲಾಗಿತ್ತು. * ಕಳೆದ ವರ್ಷದವರೆಗೆ ಪ್ರಧಾನವಾಗಿ ದಕ್ಷಿಣ ಕನ್ನಡ, ಉಡುಪಿ ಮತ್ತು ಕಾಸರಗೋಡು ಜಿಲ್ಲೆಗಳ ವ್ಯಾಪ್ತಿಯನ್ನು ಹೊಂದಿದ್ದ ಯೋಜನೆಯ ಭೌಗೋಳಿಕ ವ್ಯಾಪ್ತಿ ಶಿವಮೊಗ್ಗ, ಚಿಕ್ಕಮಗಳೂರು ಭಾಗಶಃ ಉತ್ತರ ಕನ್ನಡ ಜಿಲ್ಲೆಗಳಿಗೂ ವಿಸ್ತರಣೆಯಾಗಿದೆ. * ಮೊತ್ತವನ್ನು ನೇರವಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ನೇರ ನಗದು ವರ್ಗಾವಣೆ ಮೂಲಕ ಅಥವಾ ಕೆಲವು ಸಂದರ್ಭಗಳಲ್ಲಿ ಚೆಕ್ ಮೂಲಕ ಪಾವತಿಸಲಾಗುತ್ತದೆ. ಸಮುದಾಯದ ಅಸ್ತಿಗಳನ್ನು ಸೃಷ್ಟಿಸುವ ಧಾರ್ಮಿಕ ಕ್ಷೇತ್ರ, ಪರಂಪರೆಯ ಕ್ಷೇತ್ರಗಳಿಗೆ ನೆರವು ನೀಡಲಾಗಿದೆ. * ಫಲಾನುಭವಿಗಳನ್ನು ಕರೆತರಲು ವಾಹನ ವ್ಯವಸ್ಥೆಯನ್ನು ಎಂ.ಆರ್.ಜಿ.ಗ್ರೂಪ್ ಮಾಡುತ್ತದೆ. ಉಪಾಹಾರದ ವ್ಯವಸ್ಥೆ ಎಲ್ಲರಿಗೂ ಇರುತ್ತದೆ. ಯೋಜನೆಯ ಸಂಕ್ಷಿಪ್ತ ಫಲಶ್ರುತಿ: ಶಿಕ್ಷಣಕ್ಕೆ ಪ್ರೋತ್ಸಾಹ ಶೀರ್ಷಿಕೆಯಡಿ ನೆರವು ಪಡೆದವರು ಶಿಕ್ಷಣವನ್ನು ಯಶಸ್ವಿಯಾಗಿ ಪೂರೈಸಿ ಉದ್ಯೋಗಿಗಳಾಗಿದ್ದಾರೆ, ಅವರ ಕುಟುಂಬಗಳಿಗೆ ಅಧಾರ ಸ್ತಂಭವಾಗಿದ್ದಾರೆ. ಕ್ರೀಡಾ ಶೀರ್ಷಿಕೆಯಡಿ ಯೋಜನೆಯ ಬೆಂಬಲ ಪಡೆದವರು ಸಾಧನೆಯ ಪಥದಲ್ಲಿ ಸಾಗುತ್ತಿದ್ದಾರೆ. ಶಾಲೆಗಳಲ್ಲಿ ಶೌಚಾಲಯಗಳ ನಿರ್ಮಾಣಕ್ಕೆ ನೀಡಿರುವ ಬೆಂಬಲದಿಂದ ಬಾಲಕ ಮತ್ತು ಬಾಲಕಿಯರಿಗೆ ನೈರ್ಮಲ್ಯಯುಕ್ತ ಶೌಚಾಲಯಗಳ ಸೌಲಭ್ಯ ಒದಗಿದೆ. ಪರೋಕ್ಷ ಪರಿಣಾಮ ಎಂದರೆ ಶಾಲಾ ಮಕ್ಕಳಲ್ಲಿ ನೈರ್ಮಲ್ಯದ ಕಾಳಜಿ ಹೆಚ್ಚಿದೆ, ಜೊತೆಗೆ ಆರೋಗ್ಯರಕ್ಷಣೆಯ ಕವಚವೂ ಬಲಗೊಂಡಿದೆ. ಯೋಜನೆಯು ಶಿಕ್ಷಕರ ಕೊರತೆ ಇರುವ ಅನುದಾನಿತ/ಸರಕಾರಿ ಶಾಲೆಗಳಲ್ಲಿ ಶಿಕ್ಷಕರನ್ನು ನೇಮಿಸುವ ಆಡಳಿತ ಮಂಡಳಿಗಳನ್ನು ಬೆಂಬಲಿಸಿದೆ. ಇದರಿಂದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಕೆಲವು ಗ್ರಾಮೀಣ ಶಾಲೆಗಳಲ್ಲಿ ಶಿಕ್ಷಣದ ಗುಣಮಟ್ಟ ಹೆಚ್ಚಳವಾಗಿದೆ. ದಿವ್ಯಾಂಗರಿಗೆ ಅವರ ಅವಶ್ಯಕತೆಗಳಿಗೆ ಅನುಗುಣವಾಗಿ ಸಾಧನ ಸಲಕರಣೆಗಳನ್ನು ಖರೀದಿಸಲು ನೆರವು ಸಹಾಯ ಮಾಡಿದೆ. ಅನೇಕ ದಿವ್ಯಾಂಗರು ಚಲನೆಯ ಸ್ವಾತಂತ್ರ್ಯವನ್ನು ಪಡೆದಿದ್ದಾರೆ ಎಂದು ಪ್ರಕಾಶ್ ಶೆಟ್ಟಿ ತಿಳಿಸಿದ್ದಾರೆ.

ವಾರ್ತಾ ಭಾರತಿ 23 Dec 2025 3:20 pm

ಮಹಿಳಾ ತಂಡ ವಿಶ್ವಕಪ್ ಗೆದ್ದಿದ್ದರ ಲಾಭ; ಎಲ್ಲರಿಗೂ ಹೆಚ್ಚಾಗಲಿದೆ ಸಂಬಳ! ಮೊದಲೆಷ್ಟಿತ್ತು? ಈಗೆಷ್ಟು ಸಿಗಲಿದೆ?

Women Cricketers Pay Hike- ಭಾರತದಲ್ಲಿ ಮಹಿಳಾ ಕ್ರಿಕೆಟಿಗರಿಗೆ ಪುರುಷ ಕ್ರಿಕೆಟಿಗರಿಗೆ ಇರುವಷ್ಟು ವೇತನ ಯಾಕಿಲ್ಲ ಎಂಬುದೇ ಈವರೆಗೆ ದೊಡ್ಡ ಪ್ರಶ್ನೆಯಾಗಿತ್ತು. ಇದೀಗ ಮಹಿಳಾ ತಂಡ ವಿಶ್ವಕಪ್ ಗೆದ್ದ ಬಳಿಕ ಬಿಸಿಸಿಐಯು ಮಹಿಳಾ ಕ್ರಿಕೆಟಿಗರ ವೇತನದಲ್ಲಿ ಕ್ರಾಂತಿಕಾರಿ ಬದಲಾವಣೆ ತರಲು ನಿರ್ಧರಿಸಿದೆ. ರಾಷ್ಟ್ರೀಯ ತಂಡದ ಆಟಗಾರ್ತಿಯರು ಪುರುಷರಷ್ಟೇ ಪಂದ್ಯ ಶುಲ್ಕ ಪಡೆಯಲಿದ್ದಾರೆ. ಜೊತೆಗೆದೇಶೀಯ ಕ್ರಿಕೆಟ್ ಆಟಗಾರ್ತಿಯರ ವೇತನದಲ್ಲೂ ದೊಡ್ಡಮಟ್ಟದಲ್ಲಿ ಹೆಚ್ಚಳವಾಗಲಿದೆ. ಇದು ಮಹಿಳಾ ಕ್ರಿಕೆಟ್ ಬೆಳವಣಿಗೆಗೆ ದೊಡ್ಡ ಉತ್ತೇಜನ ನೀಡಲಿದೆ.

ವಿಜಯ ಕರ್ನಾಟಕ 23 Dec 2025 3:16 pm

ಅಮೆರಿಕಾ ತೊರೆಯಿರಿ 3 ಸಾವಿರ ಡಾಲರ್‌+ ಫ್ರೀ ಫ್ಲೈಟ್‌ ಟಿಕೆಟ್ ಪಡೆಯಿರಿ: ಇದು ಟ್ರಂಪ್‌ ಸರ್ಕಾರದ ಕ್ರಿಸ್ಮಸ್‌ ಹಾಲಿಡೇ ಆಫರ್‌! ಯಾರಿಗೆಲ್ಲಾ ಈ ಆಫರ್ ಆಪ್ಲೈ ಆಗುತ್ತೆ?

ಅಕ್ರಮ ವಲಸಿಗರಿಗೆ ಅಮೆರಿಕಾ ಸರ್ಕಾರ ಬಂಪರ್ ಆಫರ್ ನೀಡಿದೆ.ಈ ಆಫರ್‌ ಮೂಲಕ ಸ್ವಯಂಪ್ರೇರಿತರಾಗಿ ದೇಶ ತೊರೆದು ತಮ್ಮ ಸ್ವದೇಶಕ್ಕೆ ಮರಳುವವರಿಗೆ 3000 ಡಾಲರ್ (₹2.7 ಲಕ್ಷ) ಮತ್ತು ಉಚಿತ ವಿಮಾನ ಟಿಕೆಟ್ ನೀಡಲಾಗುವುದು. ಹಾಗೆ ಮುಂದೆ ಭವಿಷ್ಯದಲ್ಲಿ ಕಾನೂನು ಬದ್ದವಾಗಿ ಅಮೆರಿಕಾ ಪ್ರವೇಶಿಸಲು ಬಯಸಿದರೆ ಮಾರ್ಗಸುಲಭವಾಗಬಹುದು ಎಂದು ಅಮೆರಿಕಾದ ಗೃಹ ಭದ್ರತಾ ಇಲಾಖೆ ತಿಳಿಸಿದೆ. ಇನ್ನು, ಒಂದು ವೇಳೆ ಈ ಯೋಜನೆಯನ್ನು ಬಳಸಿಕೊಳ್ಳದಿದ್ದರೆ ಗಡಿಪಾರು ಮತ್ತು ಭವಿಷ್ಯದಲ್ಲಿ ಅಮೆರಿಕ ಪ್ರವೇಶಕ್ಕೆ ನಿರ್ಬಂಧ ಎದುರಾಗಲಿದೆ ಎಂದು ಎಚ್ಚರಿಸಿದೆ.

ವಿಜಯ ಕರ್ನಾಟಕ 23 Dec 2025 3:14 pm

ಬೀದಿ ನಾಯಿಗಳ ಪೋಷಣೆಗೆ ಆಸಕ್ತರು ಪ. ಪಂ ಸಂಪರ್ಕಿಸಿ: ಕಟ್ಟಿಮನಿ

ಕನಕಗಿರಿ: ಪಟ್ಟಣ ಪಂಚಾಯತಿ ವ್ಯಾಪ್ತಿಯಲ್ಲಿನ ಬಿಡಾಡಿ ಕರುಗಳನ್ನು ಮಾಲೀಕರು ಪೋಷಿಸಬೇಕು ಮನೆಯಲ್ಲಿಯೇ ಕಟ್ಟಿಕೊಂಡು ಪಟ್ಟಣ ಪಂಚಾಯತಿ ವ್ಯಾಪ್ತಿಯಲ್ಲಿನ ಬೀದಿ ಮತ್ತು ನಾಯಿಗಳನ್ನು ದತ್ತು ಪಡೆದು ಪೋಷಣೆ ಮಾಡಲು ಇಚ್ಛಿಸುವವರು ಹಾಗೂ ಆಶ್ರಯ ತಾಣದಲ್ಲಿರುವ ಬೀದಿ ನಾಯಿಗಳಿಗೆ ಆಹಾರ ಪೂರೈಸಲು ಇಚ್ಚಿಸುವ ಪ್ರಾಣಿಗಳ ಸಂರಕ್ಷಣೆ ಸಂಕಲ್ಪ ಹೊಂದಿರುವವರು ಪ್ರಾಣಿಗಳ ಮೇಲೆ ದಯೆ ಇರುವವರು ಕೂಡಲೇ ಪಟ್ಟಣ ಪಂಚಾಯತ ಕಾರ್ಯಾಲಯಕ್ಕೆ ಸಂಪರ್ಕಿಸಬಹುದು ಬೀದಿ ನಾಯಿಗಳಿಂದ ಸಾರ್ವಜನಿಕರಿಗೆ ಹಾಗೂ ವಾಹನ ಸವಾರರಿಗೆ ಆಗುವ ತೊಂದರೆ ತಪ್ಪಿಸಲು ಪುರಸಭೆಯಿಂದ ಅವುಗಳನ್ನು ಹಿಡಿದು ಆಶ್ರಯ ತಾಣಕ್ಕೆ ಸಾಗಿಸಲಾಗುತ್ತಿದೆ ಅಲ್ಲಿ ಬೀದಿ ನಾಯಿಗಳಿಗೆ ಆಹಾರ ಪೂರೈಸಲು ಇಚ್ಚಿಸುವವರು, ಎನ್‌ಜಿಒ ಸಂಘ ಸಂಸ್ಥೆಗಳು ಪ್ರಾಣಿ ದಯಾ ಸಂಘಗಳು ಹಾಗೂ ಇತರೆ ಪ್ರಾಣಿ ಪ್ರಿಯರು ಸ್ಥಳೀಯ ಪಟ್ಟಣ ಪಂಚಾಯತ ಕಾರ್ಯಲಯಕ್ಕೆ ಸಂಪರ್ಕಿಸ ಬಹುದು ಮುಖ್ಯಾಧಿಕಾರಿ ಲಕ್ಷ್ಮಣ್ ಕಟ್ಟಿಮನಿ ಅವರು ತಿಳಿಸಿದ್ದಾರೆ.

ವಾರ್ತಾ ಭಾರತಿ 23 Dec 2025 3:12 pm

ಕಲಬುರಗಿ| ಇ.ಎಸ್.ಐ.ಸಿ ಆಸ್ಪತ್ರೆ ಸೇವೆ ಇನ್ಮುಂದೆ ಅಸಂಘಟಿಕ ಕಾರ್ಮಿಕರಿಗೂ ಲಭ್ಯ: ಶೋಭಾ ಕರಂದ್ಲಾಜೆ

ಕಲಬುರಗಿ: ದೇಶದಲ್ಲಿ ಪ್ರಸ್ತುತ ಇರುವ ಇ.ಎಸ್.ಐ.ಸಿ ಆಸ್ಪತ್ರೆಯಲ್ಲಿ ಸಂಘಟಿತ ಕಾರ್ಮಿಕರಿಗೆ ಮತ್ತು ಅವರ ಅವಲಂಭಿಕತರಿಗೆ ಉಚಿತ ಸೇವೆ ನೀಡುತ್ತಿದ್ದು, ಇನ್ಮುಂದೆ ಕೃಷಿ, ಗಿಗ್, ಗಾರ್ಮೆಂಟ್ಸ ಸೇರಿದಂತೆ ಅಸಂಘಟಿತ ಕಾರ್ಮಿಕ ವರ್ಗದವರಿಗೂ ಇ.ಎಸ್.ಐ.ಸಿ ಆಸ್ಪತ್ರೆ ಸೇವೆ ಉಚಿತವಾಗಿ ಲಭ್ಯವಾಗಲಿದೆ ಎಂದು ಕೇಂದ್ರದ ಕಾರ್ಮಿಕ ಮತ್ತು ಉದ್ಯೋಗ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು. ಮಂಗಳವಾರ ಇ.ಎಸ್.ಐ.ಸಿ ಕಾಲೇಜ್ ಆಡಿಟೋರಿಯಂನಲ್ಲಿ ಆಯೋಜಿಸಿದಕ್ರೀಡಾ ಸಂಕೀರ್ಣ, ಮೇಲ್ಛಾವಣಿಯ ಸೌರ ವಿದ್ಯುತ್ ವ್ಯವಸ್ಥೆ ಮತ್ತು ಅಂತರ್ಜಲ ಮರುಪೂರಣ ಸೌಲಭ್ಯ ಉದ್ಘಾಟಿಸಿ ಮಾತನಾಡಿದ‌ ಅವರು, ಸಂಘಟಿತ ಮತ್ತು ಅಸಂಘಟಿತ ಶ್ರಮಿಕ ವರ್ಗಕ್ಕೆ ಸಾಮಾಜಿಕ ಭದ್ರತೆ ಒದಗಿಸಬೇಕೆಂಬ ಪ್ರಧಾನಮಂತ್ರಿಗಳ ಇಚ್ಛಾಶಕ್ತಿಯಂತೆ ಇಂತಹ ನಿರ್ಧಾರ ತೆಗೆದುಕೊಳ್ಳಲಾಗಿದೆ‌ ಎಂದರು. ಕಲಬುರಗಿಯ ಇ.ಎಸ್.ಐ.ಸಿ ಕಾಲೇಜು 560 ಹಾಸಿಗೆಯ ಆಸ್ಪತ್ರೆಯಾಗಿದ್ದು, ಕೇವಲ್ ಐ.ಪಿ., ಸಂಘಟಿತ ಕಾರ್ಮಿಕ ವರ್ಗಕ್ಕೆ‌ ಸೀಮಿತವಾಗಿದ್ದರಿಂದ ಪೂರ್ಣ ಪ್ರಮಾಣ ಹಾಸಿಗೆ ಭರದತಿಯಾಗುತ್ತಿಲ್ಲ. ಹೀಗಸಗಿ ಸಿ.ಜಿ.ಎಚ್.ಎಸ್ ಯೋಜನೆ ಈ ಆಸ್ಪತ್ರೆಗೆ ವಿಸ್ತರಣೆ ಹೀಗಿದ್ದಾಗಿಯೂ ಶೇ.50ಕ್ಕಿಂತ ಹೆಚ್ಚಿನ ಬೆಡ್ ತುಂಬುತ್ತಿಲ್ಲ ಎಂದರು. ಕಾರ್ಮಿಕ ಮಕ್ಕಳಿಗೆ ಅನುಕೂಲವಾಗಲೆಂದೇ ದೇಶದಾದ್ಯಂತ 10 ಮೆಡಿಕಲ್ ಜಾಲೇಜು ತೆರೆಯಲಾಗುತ್ತಿದೆ. ಅದರೆ ಕರ್ನಾಟಕದಲ್ಲಿ ಪ್ರಸ್ತುತ ಎರಡು ಇ.ಎಸ್.ಐ.ಸಿ ಮೆಡಿಕಲ್ ಕಾಲೇಜು ಇರುವುದರಿಂದ ಹೊಸ ಕಾಲೇಜಿಗೆ ಪ್ರಸ್ತಾವನೆ ಇಲ್ಲ ಎಂದ ಅವರು, ಬ್ರಿಟೀಷ್ ಕಾಲದಿಂದ ಬಂದಿದ್ದ 27 ವಿವಿಧ ಕಾಯ್ದೆಗಳನ್ನು ರದ್ದುಪಡಿಸಿ ಹೊಸದಾಗಿ 4 ಕಾರ್ಮಿಕ ಕಾಯ್ದೆ ರೂಪಿಸಿದ್ದು, ಅದು ಕಾರ್ಮಿಕರ ಹಿತ ಕಾಯಲಿದೆ ಎಂದರು. ಇಂದಿಲ್ಲಿ ಜಿಮ್, ವಾಲಿಬಾಲ್, ಕ್ರಿಕೆಟ್ ಮೈದಾನ ತುಂಬಾ ಸಂತೋಷದಿಂದ ಉದ್ಘಾಟಿಸಿದ್ದೇನೆ. ಶಿಕ್ಷಣದ ಜೊತೆದೆ ವ್ಯಕ್ತಿ ವಿಕಸನಕ್ಕೆ ಕ್ರೀಡೆಗಳು ಸಹಕಾರಿಯಾಗಿದೆ. ವಿದ್ಯಾರ್ಥಿಗಳು ಮಾನಸಿಕ ಮತ್ತು ದೈಹಿತ ಸದೃಢತೆಗೆ ಯೋಗ ಮಾಡಬೇಕು ಎಂದು ಸಲಹೆ ನೀಡಿದರು. ವಿದ್ಯಾರ್ಥಿಗಳೊಂದಿಗೆ ಸಂವಾದ,ಸಿ.ಟಿ-ಸ್ಕ್ಯಾನ್, ಎಂ.ಆರ್.ಐ. ಯಂತ್ರೋಪಕರಣಗಳ ಭರವಸೆ  ಶೋಭಾ ಕರಂದ್ಲಾಜೆ ಅವರು ವೈದ್ಯ, ಪ್ಯಾರಾ ಮೆಡಿಕಲ್, ನರ್ಸಿಂಗ್ ಸೇರಿದಂತೆ ಎಲ್ಲಾ ವರ್ಗದ ವಿದ್ಯಾರ್ಥಿಗಳ ಮತ್ತು ಸಿಬ್ಬಂದಿಗಳೊಮದುಗೆ ಸಮವಾದ ನಡೆಸಿ ಅವರ ಕುಂದುಕೊರತೆ ಅಹವಾಲು ಆಲಿಸಿದರು. ಸಿ.ಟಿ.ಸ್ಕ್ಯಾನ್, ಎಂ.ಆರ್.ಮಶೀನ್, ಕಾಲೇಜಿಗೆ ಸ್ವಂತ ಬಸ್, ನರ್ಸಿಂಗ್ ವಿದ್ಯಾರ್ಥಿಗಳಿಗೆ ಸ್ಟೆಫಂಡ್ ಸೇರಿದಂತೆ ಅನೇಕ‌ ಸಮಸ್ಯೆಗಳು ಸಚಿವರ ಮುಂದಿಟ್ಟರು. .ಟಿ-ಸ್ಕ್ಯಾನ್, ಎಂ.ಆರ್.ಐ. ಯಂತ್ರೋಪಕರಣಗಳ ಶೀಘ್ರವೇ ಒದಗಿಲಾಗುವುದು ಎಂದು‌ ಭರವಸೆ ನೀಡಿದರು. ಇ.ಎಸ್.ಐ.ಸಿ ಮೆಡಿಕಲ್ ಕಾಲೇಜಿನ ಡೀನ್ ಡಾ.ಕ್ಷೀರಸಾಗರ ಪ್ರಸ್ತಾವಿಕವಾಗಿ ಮಾತನಾಡಿ, ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಗೆ ಕಾಲೇಜು ಪೂರಕ ಕಾರ್ಯಕ್ರಮಗಳು ಹಾಕಿಕೊಂಡಿದೆ. ವಿಶೇಷವಾಗಿ ಕಲ್ಯಾಣ ಕರ್ನಾಟಕ ಭಾಗದಲ್ಲಿ ಶೈಕ್ಷಣಿಕ ಮತ್ತು ಅಸ್ಪತ್ತೆ ಗುಣಮಟ್ಟದ ಸೇವೆ ಒದಗಿಸಲು ಶ್ರಮಿಸಲಾಗುತ್ತಿದೆ ಎಂದರು. ಕಲಬುರಗಿ ಗ್ರಾಮೀಣ ಶಾಸಕ ಬಸವರಾಜ ಮತ್ತಿಮೂಡ, ವಿಧಾನ ಪರಿಷತ್ ಶಾಸಕ ಬಿ.ಜಿ.ಪಾಟೀಲ, ಮಾಜಿ ಶಾಸಕ ದತ್ತಾತ್ರೇಯ ಪಾಟೀಲ ರೇವೂರ, ಇ.ಎಸ್.ಐ.ಸಿ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಕಡ್ಲಿಮಟ್ಟಿ, ಉಪ ವೈದ್ಯಕೀಯ ಅಧೀಕ್ಷಕ ಡಾ.ಪದ್ಮಜಾ ಇ.ಎಸ್.ಐ.ಸಿ ಜಂಟಿ‌ ನಿರ್ದೇಶಕ ಎಸ್.ವಿ.ಯುವರಾಜ, ಪ್ರಾದೇಶಿಕ ನಿರ್ದೇಶಕ ಎಂ.ಸುಬ್ರಮಣ್ಯಮ್, ಮುಖಂಡರಾದ ಶಿವರಾಜ ಪಾಟೀಲ ರದ್ದೆವಾಡಗಿ, ಮಹಾದೇವ ಬೆಳಗುಂಪಿ ಸೇರಿದಂತೆ ಬೋಧಕ-ಬೋಧಕೇತರ ವೃಂದ, ವಿದ್ಯಾರ್ಥಿಗಳು ಇದ್ದರು.

ವಾರ್ತಾ ಭಾರತಿ 23 Dec 2025 3:10 pm

ʻಮೈತುಂಬಾ ಸೀರೆ ಉಟ್ರೇನೆ ನಿಮ್ಮ ಅಂದ ಚಂದ, ಅರ್ಧಂಬರ್ಧ ಬಟ್ಟೆ ಹಾಕೋದ್ರಲ್ಲಲ್ಲʼ: ತೆಲುಗು ನಟ ಶಿವಾಜಿ ವಿವಾದಾತ್ಮಕ ಹೇಳಿಕೆ

ಮಹಿಳೆಯರು ಪ್ರಕೃತಿಯಂತೆ. ಗೌರವಿಸುತ್ತೇವೆ. ಆದರೆ ದಯವಿಟ್ಟು ನಿಮ್ಮ ಅಂಗಾಗ ಕಾಣುವ ಬಟ್ಟೆ ಹಾಕಬೇಡಿ. ಹುಡುಗರು ಮೊದಲಿಗೆ ನಿಮ್ಮ ಹಕ್ಕು ನಿಮ್ಮ ಸ್ತ್ರೀ ಸ್ವಾತಂತ್ರ್ಯ ಎಂದು ಭಾವಿಸಿ ಸುಮ್ಮನಾಗುತ್ತಾರೆ. ಆದರೆ ಮನಸ್ಸಿನಲ್ಲಿ ಕೆಟ್ಟದಾಗಿ ಬೈದುಕೊಳ್ಳುತ್ತಾರೆ ಎಂದು ಸಿನಿಮಾ ರಿಲೀಸ್‌ಗೂ ಮುನ್ನ ಆಯೋಜಿಸಿದ್ದ ಕಾರ್ಯಕ್ರಮದಲ್ಲಿತೆಲುಗು ನಟ ಶಿವಾಜಿ ಅವರು ಮಾತನಾಡಿರುವುದು ಭಾರಿ ವಿವಾದಕ್ಕೆ ಕಾರಣವಾಗಿದೆ. ಗಾಯಕಿ ಚಿನ್ಮಯಿ ಅವರು ಸಹ ಎಕ್ಸ್‌ನಲ್ಲಿ ಪೋಸ್ಟ್‌ ಹಂಚಿಕೊಂಡು ಕಿಡಿಕಾರಿದ್ದಾರೆ.

ವಿಜಯ ಕರ್ನಾಟಕ 23 Dec 2025 3:09 pm

ಶಬರಿಮಲೆ: ಅರನ್ಮುಲದಿಂದ 'ತಂಗ ಅಂಗಿ' ಮೆರವಣಿಗೆ ಆರಂಭ, ಇದರ ಹಿನ್ನೆಲೆ ತಿಳಿಯಿರಿ

Thanka Anki: ಕೇರಳದ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಶಬರಿಮಲೆ ಸನ್ನಿಧಾನದಲ್ಲಿ ನಡೆಯುವ ಮಂಡಲ ಪೂಜೆಗೆ ಮುನ್ನದ ಮಹತ್ವದ ಆಚರಣೆಯಾಗಿ, ಅಯ್ಯಪ್ಪ ಸ್ವಾಮಿಗೆ ಅಲಂಕರಿಸುವ ಚಿನ್ನದ ವಸ್ತ್ರವಾದ ‘ತಂಗ ಅಂಗಿ'ಯ ಮೆರವಣಿಗೆ ಮಂಗಳವಾರ ಬೆಳಿಗ್ಗೆ ಅರನ್ಮುಲ ಪಾರ್ಥಸಾರಥಿ ದೇವಸ್ಥಾನದಿಂದ ಆರಂಭವಾಯಿತು. ಬೆಳಿಗ್ಗೆ ಸುಮಾರು 7 ಗಂಟೆಗೆ ದೇವಾಲಯದ ಅಧಿಕಾರಿಗಳು ಹಾಗೂ ಭಕ್ತರೊಂದಿಗೆ ತಂಗ ಅಂಗಿ ಪವಿತ್ರ ಯಾತ್ರೆ ಶುರುವಾಯಿತು.

ಒನ್ ಇ೦ಡಿಯ 23 Dec 2025 3:07 pm

ಪ್ರೀತಿ ದ್ವೇಷವನ್ನು ಗೆಲ್ಲುತ್ತದೆ ಎಂಬ ಸತ್ಯ ನಮ್ಮದಾಗಲಿ: ಮಂಗಳೂರು ಬಿಷಪ್‌ರಿಂದ ಕ್ರಿಸ್‌ಮಸ್ ಸಂದೇಶ

ಮಂಗಳೂರು, ಡಿ.23: ಪ್ರೀತಿ, ಸತ್ಯ ಮತ್ತು ಶಾಂತಿಯ ಬೆಳಕು ನಮ್ಮ ಮನ ಮನೆಗಳಲ್ಲಿ ಮಾತ್ರವಲ್ಲ, ಸಾರ್ವಜನಿಕ ವ್ಯವಸ್ಥೆ ಹಾಗೂ ಎಲ್ಲಾ ರೀತಿಯ ಸಂಸ್ಥೆ ಮತ್ತು ರಾಷ್ಟ್ರದ ನಿರ್ಧಾರಗಳಲ್ಲಿಯೂ ಹೊಳೆಯಲಿ. ಬೆಳಕು ಕತ್ತಲನ್ನು ನಿವಾರಿಸುತ್ತದೆ. ಪ್ರೀತಿ ದ್ವೇಷವನ್ನು ಗೆಲ್ಲುತ್ತದೆ ಮತ್ತು ಶಾಂತಿ ಭಯವನ್ನು ಹೋಗಲಾಡಿಸುತ್ತದೆ ಎಂಬ ಸತ್ಯ ನಮ್ಮದಾಗಲಿ ಎಂದು ಮಂಗಳೂರು ಬಿಷಪ್ ಅತೀ ವಂ. ಡಾ. ಪೀಟರ್ ಪಾವ್ಲ್ ಸಲ್ಡಾನಾ ಕ್ರಿಸ್‌ಮಸ್ ಸಂದೇಶ ನೀಡಿದ್ದಾರೆ. ಮಂಗಳೂರು ಬಿಷಪ್ ಹೌಸ್‌ನಲ್ಲಿ ಮಂಗಳವಾರ ಸುದ್ದಿಗಾರರ ಜತೆ ಕ್ರಿಸ್‌ಮಸ್ ಹಬ್ಬದ ಪ್ರಾರ್ಥನೆಯೊಂದಿಗೆ ಸಂದೇಶ ನೀಡಿದ ಅವರು, 2025ನೆ ಸಾಲಿನ ಕ್ರಿಸ್‌ಮಸ್ ಹಬ್ಬವು ದೇಶಕ್ಕೆ ಶಾಂತಿ, ಸಮಾಜಕ್ಕೆ ಸಮನ್ವಯ, ಸಾರ್ವಜನಿಕ ಬದುಕಿಗೆ ನೈತಿಕ ಪುನರುಜ್ಜೀವನ ಮತ್ತು ಪ್ರತಿಯೊಬ್ಬ ನಾಗರಿಕನ ಜೀವನಕ್ಕೆ ಭರವಸೆಯ ಹೊಸ ಕಿರಣ ತಂದುಕೊಡಲಿ ಎಂದು ಆಶಿಸಿದರು. ಸಮಾಜದಲ್ಲಿ ಹಿಂಸೆ, ವಂಚನೆ, ತಪ್ಪು ಆಹಿತಿ ಮತ್ತು ಪರಸ್ಪರ ಅವಿಶ್ವಾಸವ್ನ ಉತ್ತೇಜಿಸುವ ಸವಾಲುಗಳು ಹೆಚ್ಚುತ್ತಿವೆ. ಸಾರ್ವಜನಿಕ ವಲಯಗಳಲ್ಲಿ ಸತ್ಯ, ನ್ಯಾಯ ಮತ್ತು ಸೌಹಾರ್ದ ಕುಂದುತ್ತಿರುವುದು ದೇಶದ ಭವಿಷ್ಯದ ಹಿತದೃಷ್ಟಿಯಿಂದ ಚಿಂತಾಜನಕವಾಗಿ ಪರಿಣಮಿಸಿದೆ. ವ್ಯಕ್ತಿಯ ಖಾಸಗಿತನ, ಗೌರವಯುತ ಜೀವನ ಹಾಗೂ ಧಾರ್ಮಿಕ ಸ್ವಾತಂತ್ರ್ಯದಂತಹ ಮೂಲಭೂತ ಹಕ್ಕುಗಳು ದಿನದಿಂದ ದಿನಕ್ಕೆ ಅಪಾಯದ ಅಂಚಿಕೆ ಹೋಗುತ್ತಿದೆ. ಜಾತಿ, ಧರ್ಮ, ಕುಲ, ಅಂತಸ್ತು ಇವುಗಳ ಆಧಾರದ ಮೇಲೆ ಒಬ್ಬರಿಗೊಬ್ಬರು ಎತ್ತಿಕಟ್ಟುವುದು ಹೆಚ್ಚುತ್ತಿದೆ. ದಿನನಿತ್ಯ ಮುಗ್ದ ಜನರು ವಂಚಕರಿಂದ ಬಲಿಪಶುಗಳಾಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಯೇಸುವಿನ ಜನನ ದಿನವು ಸಮಾಜದ ಪ್ರತಿಯೊಬ್ಬ ನಾಗರಿಕನಿಗೂ ಹಾಗೂ ಪ್ರತಿಯೊಂದು ಸಂಸ್ಥೆಗೂ ಪರಸ್ಪರ ಗೌರವ ಬೆಳೆಸಲು, ಪ್ರತಿಯೊಬ್ಬರ ಘನತೆಯನ್ನು ಕಾಪಾಡಲು ನ್ಯಾಯ, ಅಸತ್ಯ ಮತ್ತು ಭ್ರಷ್ಟಾಚಾರನ್ನು ನಿವಾರಿಸಲು ಹಾಗೂ ಹಿಂಸೆಗೆ ಬದಲಾಗಿ ಶಾಂತಿ ಮತ್ತು ಸಂವಾದದ ಮಾರ್ಗವನ್ನು ಅನುಸರಿಲು ಕರೆ ನೀಡುತ್ತದೆ ಎಂದವರು ಹೇಳಿದರು. ಕ್ರಿಸ್‌ಮಸ್ ವಿಶೇಷ್ ಪ್ರಾರ್ಥನೆಯ ಜತೆಗೆ ಸಹ ಭೋಜನದ ಮೂಲಕ ಕ್ರಿಸ್‌ಮಸ್ ಸಂತಸವನ್ನು ಬಿಷಪ್‌ರವರು ಹಂಚಿಕೊಂಡರು. ಈ ಸಂದರ್ಭ ಸಾರ್ವಜನಿಕ ಸಂಪರ್ಕ ಅಧಿಕಾರಿಗಳಾದ ವಂ. ಡಾ. ಜಾನ್ ಬ್ಯಾಪ್ಟಿಸ್ ಸಲ್ಡಾನ, ರಾಯ್ ಕ್ಯಾಸ್ತಲಿನೊ, ಪಾಲನಾ ಪರಿಷತ್ ಕಾರ್ಯದರ್ಶಿ ಜಾನ್ ಡಿಸಿಲ್ವ, ವಿಕಾರ್ ಜೆರಲ್ ಮ್ಯಾಕ್ಸಿಂ ನೊರೊನ್ನಾ, ಮಾಧ್ಯಮ ಸಂಯೋಜಕ ಇಲಿಯಾಸ್ ಫೆರ್ನಾಂಡಿಸ್, ರ್ಯಾಕ್ಣೋ ಪತ್ರಿಕೆಯ ಸಂಪಾದಕ ವಂ. ರೂಪೇಶ್ ಮಾಡ್ತ ಉಪಸ್ಥಿತರಿದ್ದರು.

ವಾರ್ತಾ ಭಾರತಿ 23 Dec 2025 3:05 pm

ಮನರೇಗಾ ಹೆಸರು ಬದಲಾವಣೆ ಕೇಂದ್ರ ಸರಕಾರದ ದ್ವೇಷದ ರಾಜಕಾರಣ: ಐವನ್ ಆರೋಪ

ಮಂಗಳೂರು, ಡಿ.23: ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯನ್ನು ತಿದ್ದುಪಡಿ ಮಾಡಿ ಹೊಸ ಹೆಸರಿನ ಮೂಲಕ ಕೇಂದ್ರ ಸರಕಾರ ದ್ವೇಷದ ರಾಜಕಾರಣ ನಡೆಸುತ್ತಿದೆ ಎಂದು ವಿಧಾನ ಪರಿಷತ್‌ನ ಸದಸ್ಯ ಐವನ್ ಡಿಸೋಜಾ ಆರೋಪಿಸಿದ್ದಾರೆ. ಲಾಲ್‌ಬಾಗ್‌ನ ಮಂಗಳೂರು ಮಹಾನಗರ ಪಾಲಿಕೆಯ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರಕಾರ ರಾಜ್ಯ ಸರಕಾರಗಳನ್ನು ನಿರ್ಲಕ್ಷ್ಯ ಮಾಡಿ ಸಂಬಂಧ ಕೆಡುವ ರೀತಿಯಲ್ಲಿ ಕಾನೂನು ತರುತ್ತಿದೆ. ಇದು ದೇಶದಲ್ಲಿ ಹಿಂದಿನಿಂದಲೂ ನಡೆದುಕೊಂಡು ಬಂದ ಒಕ್ಕೂಟ ವ್ಯವಸ್ಥೆಯನ್ನು ಹಾಳುಮಾಡುವ ಕೆಲಸ ನಡೆಯುತ್ತಿದೆ. ಯುಪಿಎ ಸರಕಾರದ ಆಡಳಿತಾವಧಿಯಲ್ಲಿ ಮನರೇಗ ಯೋಜನೆಯ ಮೂಲಕ 100 ದಿನಗಳ ಉದ್ಯೋಗ ಖಾತ್ರಿಯನ್ನು ಒದಗಿಸುವ ಜತೆಗೆ ಶೇ. 90ರಷ್ಟು ಅನುದಾನವನ್ನು ಒದಗಿಸುತ್ತಿತ್ತು. ಇದು ಅತ್ಯಂತ ಜನಪ್ರಿಯ ಯೋಜನೆಯಾಗಿ ರೂಪುಗೊಂಡಿದ್ದು, ಬಡ ಕಾರ್ಮಿಕರು, ಕೂಲಿಕಾರ್ಮಿಕರು ತಮ್ಮ ಮನೆ ನಿರ್ಮಾ, ತೋಡು ನಿರ್ಮಾಣದಂತಹ ಕಾರ್ಯಗಳಿಗೆ ಸಹಕಾರಿಯಾಗಿತ್ತು. ದೇಶಕ್ಕೆ ಅಹಿಂಸೆಯ ಮಾರ್ಗದ ಮೂಲಕ ಸ್ವಾತಂತ್ರ್ಯದ ನೇತೃತ್ವ ವಹಿಸಿದ್ದ ಗಾಂಧಿ ಹೆಸರನ್ನು ಯೋಜನೆಗೆ ಇಡಲಾಗಿತ್ತು. ಇದೀಗ ಆ ಹೆಸರನ್ನು ತೆಗೆಯುವ ಕೆಲಸ ಖಂಡನೀಯ. ಮೋದಿಯವರು ಪ್ರಧಾನಿ ಆಗಬೇಕಿದ್ದರೂ ಮಹಾತ್ಮ ಗಾಂಧಿಯ ನೆನಪು ತೆಗದೇ ಆಗಬೇಕಿತ್ತು. ಆದರೆ ಬಿಜೆಪಿ ಇದೀಗ ಸ್ವಾರ್ಥ ರಾಜಕಾರಣ ನಡೆಸುತ್ತಿದೆ. ಯಾವುದೇ ಕಾರಣಕ್ಕೂ ಮನರೇಗಾದ ಹೆಸರು ಬದಲಾವಣೆ ಮಾಡಬಾರದು ಎಂದು ಐವನ್ ಡಿಸೋಜಾ ಆಗ್ರಹಿಸಿದರು. ಕರ್ನಾಟ ವಿಧಾನ ಪರಿಷತ್‌ನ 157ನೆ ಅಧಿವೇಶನದಲ್ಲಿ 50 ಪ್ರಶ್ನೆಗಳನ್ನು ಕೇಳಿದ್ದು, ಸಂಬಂಧಪಟ್ಟ ಸಚಿವರಿಂದ ಉತ್ತರ ದೊರಕಿದೆ. ನಗರ ಪೊಲೀಸ್ ಕಮಿಷನರೇಟ್ ವಿಭಾಗದ ಪೊಲೀಸ್ ಠಾಣೆಗಳಲ್ಲಿ ಅಧಿಕಾರಿ ಸಿಬ್ಬಂದಿ ಕೊರತೆ ಬಗ್ಗೆ ಪ್ರಸ್ತಾವಿಸಿದ್ದು, ಸಿಬ್ಬಂದಿ ಬಲ ಹೆಚ್ಚಿಸುವ ಪ್ರಸ್ತಾವನೆ ಪರಿಶೀಲನಾ ಹಂತದಲ್ಲಿರುವುದಾಗಿ ಡಾ. ಜಿ. ಪರಮೇಶ್ವರ ಅವರು ಉತ್ತರಿಸಿದ್ದಾರೆ ಎಂದರು. ಹೈಕೋರ್ಟ್ ಪೀಠ ಸ್ಥಾಪನೆಯ ಕುರಿತಂತೆಯೂ ಮತ್ತೆ ಸದನದಲ್ಲಿ ಪ್ರಸ್ತಾವಿಸಿದ್ದು, ಪರಿಶೀಲನೆ ಹಂತದಲ್ಲಿರುವುದಾಗಿ ಉತ್ತರ ಬಂದಿದೆ ಎಂದರು. ಗೋಷ್ಟಿಯಲ್ಲಿ ಮುಖಂಡರಾದ ಶಶಿಧರ ಹೆಗ್ಡೆ, ಸತೀಶ್ ಪೆಂಗಲ್, ಭಾಸ್ಕರ ರಾವ್, ಇಮ್ರಾನ್ ಎ.ಆರ್., ನೀತು ಡಿಸೋಜಾ, ಚಂದ್ರಹಾಸ ಪೂಜಾರಿ ಉಪಸ್ಥಿತರಿದ್ದರು.

ವಾರ್ತಾ ಭಾರತಿ 23 Dec 2025 3:02 pm

IMD Weather: ಹವಾಮಾನ ಬದಲಾವಣೆ, ಈ ಭಾಗಗಗಳಲ್ಲಿ ತೀವ್ರ ಚಳಿ ಮುನ್ಸೂಚನೆ, ಶೀತ ಅಲೆ

ನವದೆಹಲಿ: ಒಂದೆರಡು ಭಾಗಗಳಲ್ಲಿ ಮಳೆ ಆಗಿದ್ದು, ಬಿಟ್ಟರೆ ದೇಶದ ವಿವಿಧ ಭಾಗಗಳಲ್ಲಿ ಮುಂದಿನ ಐದು ದಿನಗಳಲ್ಲಿ ಶೀತ ಅಲೆ ಪ್ರಭಾವ ಹೆಚ್ಚಾಗಿರಲಿದೆ. ಹಲವೆಡೆ ದಟ್ಟ ಮಂಜು ಬೀಳಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬಿಹಾರದ ಪ್ರತ್ಯೇಕ ಸ್ಥಳಗಳಲ್ಲಿ ಶೀತ ವಾತಾವರಣ ತೀವ್ರಗೊಳ್ಳಲಿದೆ. ಜನರು ಆರೋಗ್ಯ ಕಾಳಜಿ ವಹಿಸಬೇಕಿದೆ. ಮುಂದಿನ ಎರಡು ದಿನಬಿಹಾರ, ಹಿಮಾಚಲ ಪ್ರದೇಶ,

ಒನ್ ಇ೦ಡಿಯ 23 Dec 2025 3:02 pm

Aravalli Mountain Explained: 4 ರಾಜ್ಯಗಳ ಹಸಿರು ತಡೆಗೋಡೆ \ಅರಾವಳಿ ಪರ್ವತ\ದಲ್ಲಿ ಗಣಿಗಾರಿಕೆ ಭೂತ, ಇಲ್ಲಿದೆ ಸಂಪೂರ್ಣ ವಿವರ

ನವ ದೆಹಲಿ: ದೇಶದಾದ್ಯಂತ ಇದೀಗ ಹೊಸ ಅಭಿಯಾನ ಶುರುವಾಗಿದೆ. ಅದರಲ್ಲೂ ರಾಜಸ್ಥಾನ ಹಾಗೂ ಉತ್ತರ ಭಾರತದ ಪ್ರಮುಖ ರಾಜ್ಯಗಳಲ್ಲಿನ ಜನರು ಕೇಂದ್ರ ಸರ್ಕಾರದ ನಿರ್ಧಾರದ ವಿರುದ್ಧ ತಿರುಗಿ ಬಿದ್ದಿದ್ದಾರೆ. ದೇಶದ ಮೂರಕ್ಕೂ ಹೆಚ್ಚು ರಾಜ್ಯಗಳ ಕೋಟ್ಯಾಂತರ ಜನರಿಗೆ ಮುಖ್ಯವಾಗಿ ಗ್ರಾಮೀಣ ಭಾಗದ ಜನರಿಗೆ ಗಾಳಿ ಹಾಗೂ ನೀರಿನ ವಿಚಾರದಲ್ಲಿ ಆಶಾಕಿರಣವಾಗಿರುವ ಅರಾವಳಿ ಪರ್ವತಗಳಲ್ಲಿ ಗಣಿಗಾರಿಕೆ ವಿಚಾರವು ತೀವ್ರ

ಒನ್ ಇ೦ಡಿಯ 23 Dec 2025 2:58 pm

ಗಂಜಿಮಠ: ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಾಜಿ ಝಕರಿಯ ಜೋಕಟ್ಟೆ ಅವರಿಗೆ ಗೌರವ ಸನ್ಮಾನ, ಅಭಿನಂದನಾ ಸಮಾರಂಭ

ಮಂಗಳೂರು: ಮರ್ಹೂಮ್ ಹಾಜಿ ಬಿ. ಶೇಕುಂಞಿ ಚಾರಿಟೇಬಲ್‌ ಟ್ರಸ್ಟ್‌ ಜೋಕಟ್ಟೆ ಹಾಗೂ ಝರಾ ಫ್ಯಾಮಿಲಿ ಟ್ರಸ್ಟ್‌ ಮಂಗಳೂರು ಇದರ ಸಹಯೋಗದಲ್ಲಿ 2025 ನೇ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಾಜಿ ಝಕರಿಯ ಜೋಕಟ್ಟೆ ಅವರಿಗೆ ಗೌರವ ಸನ್ಮಾನ, ಅಭಿನಂದನಾ ಸಮಾರಂಭ ಹಾಗೂ ಸೇವಾ ಚೆಕ್ ಹಸ್ತಾಂತರ ಕಾರ್ಯಕ್ರಮವು ಮಂಗಳವಾರ ಗಂಜಿಮಠದ ಝರಾ ಕನ್ವೆನ್ಶನ್ ಸೆಂಟರ್ ನಲ್ಲಿ ನಡೆಯಿತು. ಸಮಾರಂಭದಲ್ಲಿ ಮುಖ್ಯ‌ ಅತಿಥಿಯಾಗಿ ಭಾಗಿಯಾಗಿ‌ ಮಾತನಾಡಿದ ದ.ಕ. ಜಿಲ್ಲಾಧಿಕಾರಿ ದರ್ಶನ್ ಎಚ್. ವಿ., ವಿದೇಶದಲ್ಲಿ ಸ್ಥಳೀಯ ಯುವಕರಿಗೆ ಉದ್ಯೋಗ ನೀಡಿ ಅವರ ಜೀವನ ಕಲ್ಪಿಸುತ್ತಿರುವುದು ದೊಡ್ಡ ವಿಚಾರ. ಇದೇ ರೀತಿ ಸಮಾಜ ಸೇವೆ ಮುಂದುವರಿದು ಇನ್ನಷ್ಟು ಜನರಿಗೆ ತಲುಪಲಿ ಎಂದು ಶುಭಹಾರೈಸಿದರು. ಮಂಗಳೂರು ನಗರದಲ್ಲಿ ನಡೆಯುತ್ತಿರುವ ಸೌಹಾರ್ದಯುತ ಕರಾವಳಿ ಉತ್ಸವ ಕಾರ್ಯಕ್ರಮದಲ್ಲಿ ಎಲ್ಲರೂ ಭಾಗವಹಿಸಿ ಯಶಸ್ವಿಗೊಳಿಸುವಂತೆ ವಿನಂತಿಸಿದರು. ಇದೇ ಸಂದರ್ಭ 2025ನೇ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಾಜಿ ಝಕರಿಯ ಜೋಕಟ್ಟೆ ಅವರನ್ನು‌ ಗಣ್ಯರು ಸನ್ಮಾನಿಸಿ ಗೌರವಿಸುವ ಮೂಲಕ‌ ಅಭಿನಂದಿಸಿದರು. ಬಳಿಕ ಮಾತನಾಡಿದ ಅವರು, ನಾನು ನಡೆದು ಬಂದ ಕಷ್ಟದ ದಾರಿಯನ್ನು ಇಂದಿಗೂ ನೆನೆಯುತ್ತೇನೆ. ಹಾಗಾಗಿ‌ಯೇ ನನಗೆ ಬಡವರ‌ಮೇಲೆ ಅತಿಯಾದ ಅಕ್ಕರೆ ಎಂದರು. ನನ್ನ ಬೆಳವಣಿಗೆಯಲ್ಲಿ ಶ್ರಮಿಸಿರುವ ಕುಟುಂಬಿಕರು, ಊರಿನ ಹಿರಿಯರು, ಸ್ನೇಹಿತರು ಹಿತೈಷಿಗಳ ಸಹಕಾರ ಅವಿಸ್ಮರಣೀಯ. ಇದು ನನ್ನ ಕೊನೇಯ ವರೆಗೂ ನೆನಪಿನಲ್ಲಿಡುವ ದಿನ ಕರ್ನಾಟಕ ರಾಜ್ಯೋತ್ಸ ಪ್ರಶಸ್ತಿ ನೀಡಿ ಗೌರವಿಸಿದ ಕರ್ನಾಟಕ ಸರಕಾರಕ್ಕೆ ಧನ್ಯವಾದ ಸಮರ್ಪಿಸಿದರು.  ಸೇವಾ ಚೆಕ್ ಸ್ವೀಕರಿಸಿ ಮಾತನಾಡಿದ ತಲಪಾಡಿ ಸ್ನೇಹಾಲಯ ವ್ಯಸನ ವಿಮೋಚನಾ ಕೇಂದ್ರದ ಜೋಸೆಫ್ ಕ್ರಾಸ್ತ ಅವರು, ಝಕರಿಯ ಜೋಕಟ್ಟೆ ಅವರ ಸಾಮಾಜಿಕ ಕಳಕಳಿಯ ಸಮಾಜಿಕ ಸೇವೆ ಎಲ್ಲರಿಗೂ ಮಾದರಿ. ಅವರು ಸಮಾಜದ ಕಡುಬಡವರು, ಸಹಾಯಕ್ಕೆ ಅರ್ಹರನ್ನು ಗುರುತಿಸಿ ಸಹಾಯದ ಹಸ್ತ ಚಾಚುತ್ತಿದ್ದಾರೆ‌. ಇದು ಅವರು ಆರ್ಥಿಕವಾಗಿ ಮಾತ್ರವಲ್ಲದೆ ಮನಸ್ಸಿನಲ್ಲೂ ಶ್ರೀಮಂತರು ಎಂಬದನ್ನು ಸಾರಿ ಹೇಳುತ್ತದೆ. ಮುಂದಿನ‌ದಿನಗಳಲ್ಲಿ ರಾಷ್ಟ್ರ- ಅಂತರ್ ರಾಷ್ಟ್ರೀಯ ಮಟ್ಟದ ಪ್ರಶಸ್ತಿ, ಪುರಸ್ಕಾರಗಳು ಅವರನ್ನು ಹುಡುಕಿ ಬರಲಿ ಎಂದು ಶುಭಹಾರೈಸಿದರು. ಸಮಾರಂಭದಲ್ಲಿ ಕರ್ನಾಟಕ ವಿಧಾನಸಭೆಯ ಸಭಾಧ್ಯಕ್ಷರಾದ ಡಾ. ಯು.ಟಿ. ಖಾದರ್ ಫರೀದ್, ಮಂಗಳೂರು ನಗರ‌ ಪೊಲೀಸ್ ಆಯುಕ್ತರಾದ ಸುಧೀರ್ ಕುಮಾರ್ ರೆಡ್ಡಿ, ಮಂಗಳೂರು ಯೇನೆಪೋಯ ಡೀಮ್ಸ್ ಯುನಿವರ್ಸಿಟಿಯ ಕುಲಾಧಿಪತಿ ಡಾ. ವೈ. ಅಬ್ದುಲ್ಲ ಕುಂಞಿ, ತಲಪಾಡಿ ಸ್ನೇಹಾಲಯ ಪುನರ್ವಸತಿ ಕೇಂದ್ರದ ಸ್ಥಾಪಕರಾದ ಜೋಸೆಫ್ ಕ್ರಾಸ್ತಾ, ಝಕರಿಯಾ ಜೋಕಟ್ಟೆ ಅವರ ಪತ್ನಿ‌ ಹಾಝರ, ಮಕ್ಕಳಾದ ಝಹೀರ್ , ಝಾಹಿದ್ , ಝಾಹಿದ್ ಮೊದಲಾದವರು ಉಪಸ್ಥಿತರಿದ್ದರು‌. ಇದೇ ವೇಳೆ ಝಕರಿಯಾ ಜೋಕಟ್ಟೆ ಅವರು ಕರ್ನಾಟಕ ರಾಜ್ಯೋತ್ಸವ ಸಂದರ್ಭ ಪಡೆದಿದ್ದ 5ಲಕ್ಷ ರೂ. ನಗದು ಪುರಸ್ಕಾರವನ್ನು ಸಮಾಜಮುಖಿ ಸಂಸ್ಥೆಗಳಾದ ಸಾನಿಧ್ಯ ವಿಕಲಚೇತನರ ವಸತಿ ಶಾಲೆ ಶಕ್ತಿನಗರ, ಸ್ನೇಹಾಲಯ ವ್ಯಸನ ವಿಮೋಚನಾ ಕೇಂದ್ರ ತಲಪಾಡಿ, ಸ್ನೇಹದೀಪ ಎಚ್‌ಐವಿ ಮಕ್ಕಳ ಆಶ್ರಮ ಬೋಂದೆಲ್, ಎಂ.ಫ್ರೆಂಡ್ಸ್ ಲೇಡಿಗೋಶನ್ ಕಾರುಣ್ಯ ಯೋಜನೆ, ಹಿದಾಯ ಕಾಲನಿ ವಿಶೇಷ ಮಕ್ಕಳ ಕೇಂದ್ರ ಕಾವಳಕಟ್ಟೆ ಇವರಿಗೆ ಹಸ್ತಾಂತರಿಸಿದರು. ಸಭಾ ಕಾರ್ಯಕ್ರಮಕ್ಕೂ ಮುನ್ನ ಸಾನಿಧ್ಯ ವಿಕಲಚೇತನರ ವಸತಿ ಶಾಲೆ ಶಕ್ತಿನಗರ ಇದರ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು. ರಫೀಕ್ ಮಾಸ್ಟರ್ ಸ್ವಾಗತಿಸಿದರು. ಪತ್ರಕರ್ತ ಚೇತನ್ ಕಾರ್ಯಕ್ರಮ ನಿರೂಪಿಸಿದರು‌.

ವಾರ್ತಾ ಭಾರತಿ 23 Dec 2025 2:58 pm

ಅರೇಬಿಯಾ ಈಗ ಹಿಮಾಲಯ! ಸೌದಿಯಲ್ಲೀಗ ಚಳಿಯೋ ಚಳಿ, ತಾಪಮಾನ ಕೇವಲ ಮೈನಸ್ 4 ಡಿಗ್ರಿ ಸೆಲ್ಸಿಯಸ್!

ಸೌದಿ ಅರೇಬಿಯಾದಲ್ಲಿ ಮೂರು ದಶಕಗಳ ಬಳಿಕ ಮೊದಲ ಬಾರಿಗೆ ಹಿಮಪಾತವಾಗಿದೆ. ಉತ್ತರ ಸೌದಿ ಅರೇಬಿಯಾದಲ್ಲಿ ತಂಪಾದ ಗಾಳಿ, ಮಳೆ, ಬಿರುಗಾಳಿ ಮತ್ತು ದಾಖಲೆಯಷ್ಟು ಕಡಿಮೆ ತಾಪಮಾನ ಕಂಡುಬಂದಿದೆ. ಜಬಲ್ ಅಲ್ ಲೌಜ್ ಮತ್ತು ಟ್ರೋಜೇನಾ ಪರ್ವತ ಪ್ರದೇಶಗಳಲ್ಲಿ ತಾಪಮಾನ -4C ಗೆ ಕುಸಿದಿದೆ. ಜನರು ಹಿಮದಲ್ಲಿ ಆಟವಾಡಿ, ಸ್ಕೀಯಿಂಗ್ ಆನಂದಿಸಿದ್ದಾರೆ. ಮರುಭೂಮಿಯ ಭೂದೃಶ್ಯಗಳು ಹಿಮದಿಂದ ಆವರಿಸಲ್ಪಟ್ಟಿವೆ. ಇದು ಸೌದಿ ಅರೇಬಿಯಾದ ಹವಾಮಾನ ಇತಿಹಾಸದಲ್ಲಿ ಒಂದು ಅಪರೂಪದ ಕ್ಷಣವಾಗಿದೆ.

ವಿಜಯ ಕರ್ನಾಟಕ 23 Dec 2025 2:56 pm

Chamarajanagar | ಚಿರತೆಗಿಟ್ಟಿದ್ದ ಬೋನಿನಲ್ಲಿ ಸಿಲುಕಿದ ವ್ಯಕ್ತಿ, 3 ತಾಸು ಬೋನಿನಲ್ಲೇ ಚೀರಾಟ!

ಚಾಮರಾಜನಗರ : ಜಿಲ್ಲೆಯ ಯಳಂದೂರು ತಾಲೂಕಿನ ಗಂಗವಾಡಿ ಗ್ರಾಮದಲ್ಲಿ ಚಿರತೆಯನ್ನು ಹಿಡಿಯಲು ಇರಿಸಿದ್ದ ಬೋನಿನಲ್ಲಿ ವ್ಯಕ್ತಿಯೊಬ್ಬ ಸಿಲುಕಿ 3 ತಾಸಿಗೂ ಹೆಚ್ಚಿನ ಅವಧಿ ಇಲ್ಲೇ ಕೂಗಾಟ ನಡೆಸಿ ನಂತರ ಸ್ಥಳೀಯರ ನೆರವಿನೊಂದಿಗೆ ವಾಪಸ್ಸಾದ ಘಟನೆ ಸೋಮವಾರ ನಡೆದಿದೆ. ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲ್ಲೂಕಿನ ಗಂಗವಾಡಿ ಗ್ರಾಮದ ಕಿಟ್ಟಿ ಎಂಬಾತನೆ ಬೋನಿನಲ್ಲಿ ಸಿಲುಕಿದ ವ್ಯಕ್ತಿಯಾಗಿದ್ದಾನೆ. ಗಂಗವಾಡಿ ಗ್ರಾಮದಲ್ಲಿ ಕಳೆದ ಶನಿವಾರ ರಾತ್ರಿ ರಾಮಯ್ಯ ಎಂಬುವರಿಗೆ ಸೇರಿದ ಜಮೀನಿನಲ್ಲಿ ಚಿರತೆ ದಾಳಿ ನಡೆಸಿ ಮೂರು ಜಾನುವಾರುಗಳನ್ನು ಕೊಂದು ಹಾಕಿತ್ತು. ಈ ಸಂಬಂಧ ಶಾಸಕ ಎ.ಆರ್. ಕೃಷ್ಣಮೂರ್ತಿಯವರೂ ಕೂಡ ಸ್ಥಳಕ್ಕೆ ಭೇಟಿ ನೀಡಿ ಚಿರತೆ ಹಿಡಿಯಲು ಕ್ರಮ ವಹಿಸುವಂತೆ ಸೂಚನೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿ ಇದರ ಸೆರೆಗಾಗಿ ಗ್ರಾಮದಲ್ಲಿ ರವಿವಾರ ಎರಡು ಕಡೆ ಬೋನನ್ನು ಇರಿಸಿದ್ದರು. ಒಂದು ರಾಮಯ್ಯನವರ ಜಮೀನಿನಲ್ಲಿ ಇಟ್ಟಿದ್ದರೆ ಮತ್ತೊಂದು ಬೋನನ್ನು ರುದ್ರ ಎಂಬುವರ ಜಮೀನಿನಲ್ಲಿ ಇರಿಸಿದ್ದರು. ಇದು ಬಿಆರ್‌ಟಿ ಹುಲಿ ರಕ್ಷಿತ ಅರಣ್ಯ ಪ್ರದೇಶದ ಕಾಂಡಚಿನ ಗ್ರಾಮವಾಗಿದೆ. ರುದ್ರ ಎಂಬುವರ ಜಮೀನು ಗ್ರಾಮದಿಂದ ದೂರವಿದ್ದು ಇಲ್ಲಿ ಜನರ ಓಡಾಟ ಕಡಿಮೆ ಇದೆ. ಕುತೂಹಲಕ್ಕಾಗಿ ಇದೇ ಗ್ರಾಮದ ಕಿಟ್ಟಿ ಎಂಬ ವ್ಯಕ್ತಿ ಬೆಳಿಗ್ಗೆ 10.30 ಗಂಟೆಗೆ ಬೋನನ್ನು ನೋಡಲು ಒಬ್ಬರೇ ತೆರಳಿದ್ದಾರೆ. ಇದರ ಒಳ ಹೊಕ್ಕಿದ್ದಾರೆ. ಆಗ ಬೋನಿನ ಬಾಗಿಲು ಮುಚ್ಚಿಕೊಂಡಿದೆ. ಇವರು ಎಷ್ಟೇ ಪ್ರಯತ್ನ ಪಟ್ಟರೂ ಕೂಡ ಇದನ್ನು ತೆರೆಯಲು ಸಾಧ್ಯವಾಗಿಲ್ಲ. ಇವರ ಬಳಿ ಮೊಬೈಲ್ ಕೂಡ ಇರಲಿಲ್ಲ. ಹಾಗಾಗಿ ಇವರು ಇದರೊಳಗಿಂದಲೇ ಕಾಪಾಡಿ, ಕಾಪಾಡಿ ಎಂದು ಚೀರಾಟ ನಡೆಸಿದ್ದಾರೆ. ಆದರೆ ಚಿರತೆ ಭಯವಿದ್ದ ಕಾರಣ ಬೋನು ಇರಿಸಿದ್ದ ಜಾಗದಲ್ಲಿ ಇಲ್ಲಿನ ರೈತರು, ಕುರಿ, ದನಗಾಹಿಗಳು ತೆರಳಿಲ್ಲ. ಹಾಗಾಗಿ ಇವರು ಚೀರಾಟ ಯಾರಿಗೂ ಕೇಳಿಸಿಲ್ಲ. ನಂತರ ಇವರು ದಿಕ್ಕು ತೋಚದೆ ಇದರೊಳಗೆ ಬಂಧಿಯಾಗಿದ್ದಾರೆ. ಮಧ್ಯಾಹ್ನ 2.30 ರ ವೇಳೆಗೆ ಕೆಲ ಊಟಕ್ಕೆ ತೆರಳುತ್ತಿದ್ದ ದನಗಾಹಿಗಳು, ರೈತರು ದೂರದಿಂದ ಇವರ ಕಣ್ಣಿಗೆ ಬಿದ್ದಿದ್ದಾರೆ. ಆಗ ಇವರು ಜೋರಾಗಿ ಕಿರುಚಿದ್ದಾರೆ. ಅಳುಕಿನಿಂದಲೇ ಕೆಲವರು ಧೈರ್ಯ ಮಾಡಿ ಈ ಬೋನಿನ ಹತ್ತಿರ ತೆರಳಿದ್ದಾರೆ. ಆಗ ಕಿಟ್ಟಿ, ನಾನು ಒಳಗೆ ಸಿಲುಕಿಕೊಂಡಿದ್ದೇನೆ. ನನ್ನನ್ನು ಕಾಪಾಡಿ ಎಂದು ಅಂಗಲಾಚಿದ್ದಾರೆ. ಆಗ ಇವರು ಪಕ್ಕದ ಜಮೀನಿನ ರುದ್ರಯ್ಯ ಎಂಬುವರಿಗೆ ಮಾಹಿತಿ ನೀಡಿ ಇವರೊಂದಿಗೆ ಕೆಲ ಗ್ರಾಮಸ್ಥರು ಬಂದು ಬೋನಿನ ಬಾಗಿಲನ್ನು ತೆರೆದು ಇವರನ್ನು ಸುರಕ್ಷಿತವಾಗಿ ಹೊರಕ್ಕೆ ತಂದಿದ್ದಾರೆ.

ವಾರ್ತಾ ಭಾರತಿ 23 Dec 2025 2:55 pm

ಡೊನಾಲ್ಡ್ ಟ್ರಂಪ್‌ಗೂ ಸಿಗದ ಇಂತಹ ಹಣಕಾಸು ಸಚಿವರು : ಕುಮಾರಸ್ವಾಮಿ ವ್ಯಂಗ್ಯ ಯಾರತ್ತ?

Siddaramaiah Vs HD Kumaraswamy : ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲು ಕಾರಣವಾದ ಪಂಚ ಗ್ಯಾರಂಟಿ ಸ್ಕೀಂ ಸರಿಯಾಗಿ ಅನುಷ್ಠಾನಗೊಳ್ಳುತ್ತಿಲ್ಲ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ, ಸಿದ್ದರಾಮಯ್ಯ ಸರ್ಕಾರದ ವಿರುದ್ದ ಕಿಡಿಕಾರಿದ್ದಾರೆ. ಅಮೆರಿಕಾದ ಅಧ್ಯಕ್ಷರಿಗೂ ಸಿಗದ ಹಣಕಾಸು ಸಚಿವರು ನಮ್ಮ ಸಿದ್ದರಾಮಯ್ಯನವರು ಎಂದು ಕೇಂದ್ರ ಸಚಿವರು ಲೇವಡಿ ಮಾಡಿದ್ದಾರೆ.

ವಿಜಯ ಕರ್ನಾಟಕ 23 Dec 2025 2:53 pm

ಭಾರತದ ಜೊತೆಗಿನ ವ್ಯಾಪಾರ ಒಪ್ಪಂದ ವಿರೋಧಿಸಿದ ನ್ಯೂಜಿಲೆಂಡ್‌ ವಿದೇಶಾಂಗ ಸಚಿವ; ಏನಂತೆ ಪ್ಲಾಬ್ಲಂ?

ಭಾರತ-ನ್ಯೂಜಿಲೆಂಡ್‌ ಮುಕ್ತ ವ್ಯಾಪಾರ ಒಪ್ಪಂದ ಘೋಷಣೆಯಾಗಿ ಒಂದು ದಿನ ಕಳೆಯುವಷ್ಟರಲ್ಲೇ, ಇದಕ್ಕೆ ಅಪಸ್ವರ ಕೇಳಿಬಂದಿದೆ. ಈ ವ್ಯಾಪಾರ ಒಪ್ಪಂದವನ್ನು ವಿರೋಧಿಸಿರುವ ನ್ಯೂಜಿಲೆಂಡ್‌ ವಿದೇಶಾಂಗ ಸಚಿವ ವಿನ್‌ಸ್ಟನ್‌ ಪೀಟರ್ಸ್‌, ಈ ಒಪ್ಪಂದವು ನ್ಯೂಜಿಲೆಂಡ್‌ನಲ್ಲಿ ವಲಸೆ ಬಿಕ್ಕಟ್ಟನ್ನು ಸೃಷ್ಟಿಸುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಅಲ್ಲದೇ ಡೈರಿ ವಲಯದಲ್ಲಿ ನ್ಯೂಜಿಲೆಂಡ್‌ಗೆ ಭಾರೀ ಹೊಡೆತ ಬೀಳಲಿದೆ ಎಂದೂ ಪೀಟರ್ಸ್‌ ಎಚ್ಚರಿಸಿದ್ದಾರೆ. ತಮ್ಮ ನ್ಯೂಜಿಲೆಂಡ್‌ ಪಕ್ಷ ಭಾರತದೊಂದಿಗಿನ ಈ ವ್ಯಾಪಾರ ಒಪ್ಪಂದವನ್ನು ತಿರಸ್ಕರಿಸುತ್ತದೆ ಎಂದು ವಿನ್‌ಸ್ಟನ್‌ ಸ್ಪಷ್ಟಪಡಿಸಿದ್ದಾರೆ. ಇಲ್ಲಿದೆ ಮಾಹಿತಿ.

ವಿಜಯ ಕರ್ನಾಟಕ 23 Dec 2025 2:53 pm

ಪೌರಕಾರ್ಮಿಕರ ಸನ್ಮಾನ ಪವಿತ್ರ ಕಾರ್ಯ: ಡಾ. ಮಂಜುನಾಥ್ ಭಂಡಾರಿ

ಕಾರ್ಕಳದಲ್ಲಿ ಸಾರ್ವಜನಿಕರಿಗೆ ಕೃತಜ್ಞತಾ ಸಮರ್ಪಣೆ ಕಾರ್ಯಕ್ರಮ

ವಾರ್ತಾ ಭಾರತಿ 23 Dec 2025 2:51 pm

ಕೃಷ್ಣಾಪುರ : ವಾರ್ಷಿಕ ಸ್ವಲಾತ್‌ ಮಜ್ಜಿಸ್, ಮುಲ್ತಖಾ ಫೆಸ್ಟ್-2025

ಸುರತ್ಕಲ್ : ಬದ್ರಿಯಾ ಜುಮ್ಮಾ ಮಸ್ಟಿದ್ ಮುಸ್ಲಿಂ ಜಮಾಅತ್ (ರಿ) ಕೃಷ್ಣಾಪುರ ಇದರ ಆಡಳಿತಕ್ಕೊಳಪಟ್ಟಿರುವ ಅಲ್‌ಮದ್ರಸತುಲ್ ಬದ್ರಿಯಾದ ಮುಕ್ತಖಾ ಫೆಸ್ಟ್-2025 ಪ್ರಯುಕ್ತ‌ ಮದ್ರಸ ಮಕ್ಕಳ ಕಾರ್ಯಕ್ರಮ, ಬುರ್ದಾ ಮಜ್ಜಿಸ್, ವಾರ್ಷಿಕ ಸ್ವಲಾತ್‌ ಮಜ್ಜಿಸ್ ಹಾಗೂ ಮತ ಪ್ರಭಾಷಣದ ಸಮಾರೋಪ ಸಮಾರಂಭವು ಗುರುವಾರ ಮಸೀದಿಯ ವಠಾರದಲ್ಲಿ ಜರುಗಿತು. ವಾರ್ಷಿಕ ಸ್ವಲಾತ್ ಮಜ್ಲಿಸ್ ಮತ್ತು ಬುರ್ದಾ ಮಜ್ಲಿಸ್ ನ್ನು ಬದ್ರಿಯಾ ಜುಮ್ಮಾ ಮಸ್ಟಿದ್ ಮುಸ್ಲಿಂ ಜಮಾಅತ್ ಕೃಷ್ಣಾಪುರ ಇದರ‌ ಖಾಝಿ ಅಲ್‌ಹಾಜ್ ಇ.ಕೆ. ಇಬ್ರಾಹಿಂ ಮುಸ್ಲಿಯಾರ್ ಅವರು ಉದ್ಘಾಟಿಸಿ ದುಆ ಆಶೀರ್ವಚನ ನೀಡಿದರು. ವಾರ್ಷಿಕ ಸ್ವಲಾತ್‌ ಮಜ್ಲಸ್ ಗೆ ಮಂಜೇಶ್ವರ‌ ಸಂಯುಕ್ತ‌ ಜಮಾಅತ್ ಅಧ್ಯಕ್ಷರಾದ ಸಯ್ಯದ್ ಅತಾವುಲ್ಲಾ ತಂಬಳ್ ಮಂಜೇಶ್ವರ ನೇತೃತ್ವ ನೀಡಿದರು. ಹಾಫಿಳ್ ಸ್ವಾದಿಕ್ ಅಲಿ ಫಾಳಿಲಿ ಗೂಡಲ್ಲೂರು ಅವರ‌ ನೇತೃತ್ವದಲ್ಲಿ ಬುರ್ದಾ ಮಜ್ಲಿಸ್ ನಡೆಯಿತು. ಬದ್ರಿಯಾ ಜುಮ್ಮಾ ಮಸ್ಟಿದ್ ಮುಸ್ಲಿಂ ಜಮಾಅತ್ (ರಿ.) ಕೃಷ್ಣಾಪುರ ಇದರ ಖತೀಬರಾದ ಉಮರುಲ್ ಫಾರೂಖ್ ಸಖಾಫಿ ಅವರು ಪ್ರಾಸ್ತಾವಿಕ ಭಾಷಣ ಗೈದರು. ಕೃಷ್ಣಾಪುರ‌ ಕೇಂದ್ರ ಬದ್ರಿಯಾ ಜುಮ್ಮಾ ಮಸೀದಿಯ ಅಧ್ಯಕ್ಷರಾದ ಅಲ್‌ಹಾಜ್ ಝಾಕಿರ್ ಹುಸೈನ್ ಬಳ್ಕುಂಜೆ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಸಮಾರಂಭದಲ್ಲಿ ಕರ್ನಾಟಕ ರಾಜ್ಯ ಆಲೈಡ್ & ಹೆಲ್‌ಕೇರ್ ಕೌನ್ಸಿಲ್ ಅಧ್ಯಕ್ಷ ಯು.ಟಿ ಇಫಿಕಾರ್, ಕೆಪಿಸಿಸಿ ಪ್ರಧಾನ‌ ಕಾರ್ಯದರ್ಶಿ ಇನಾಯತ್ ಅಲಿ, ಮಾಜಿ ಶಾಸಕ ಅಲ್‌ಹಾಜ್ ಮೊದಿನ್ ಬಾವ, ವಿಧಾನ ಪರಿಷತ್ ಮಾಜಿ ಸದಸ್ಯರಾದ ಹಾಜಿ ಬಿ.ಎಂ. ಫಾರೂಕ್, ಕೃಷ್ಣಾಪುರ ಅಲ್ ಬದ್ರಿಯಾ ಎಜ್ಯುಕೇಶನಲ್ ಅಸೋಸಿಯೇಶನ್ ಅಧ್ಯಕ್ಷ ಅಬೂಬಕ್ಕರ್ ಕೃಷ್ಣಾಪುರ, ದ.ಕ ಜಿಲ್ಲಾ ವಕ್ಸ್ ಸಲಹಾ ಸಮಿತಿ ಮಾಜಿ ಅಧ್ಯಕ್ಷ ಬಿ.ಎ. ಅಬ್ದುಲ್ ನಾಸೀರ್ ಲಕ್ಕಿಸ್ಟಾರ್, ಸುಲ್ತಾನ್ ಡೈಮಂಡ್ & ಗೋಲ್ಡ್ ನ ಮ್ಯಾನೆಜಿಂಗ್ ಡೈರೆಕ್ಟರ್ ಅಬ್ದುಲ್ ರವೂಫ್, ಉದ್ಯಮಿಗಳಾದ ಬಿ.ಎ.ಫೌಝ್, ಇಮ್ಮಿಯಾಝ್, ಕೆ.ಎಂ ಮುಹಮ್ಮದ್ ಶರೀಫ್ ಸೌದಿ ಅರೆಬಿಯಾ, ಬದ್ರುಲ್ ಹುದಾ ಮಾಜಿ ಅಧ್ಯಕ್ಷ ಅಬೂಬಕ್ಕರ್ ಕನ್ನಡ ನಾಡು, ಮೊಹಿಯುದ್ದಿನ್, ಕೇಂದ್ರ ಬದ್ರಿಯಾ ಜುಮಾ ಮಸ್ಟಿದ್ ಕೃಷ್ಣಾಪುರ ಉಪಾಧ್ಯಕ್ಷ ಟಿ.ಎಂ. ಶರೀಫ್, ಪ್ರಧಾನ ಕಾರ್ಯದರ್ಶಿ ಎಂ.ಎಸ್. ಶರೀಫ್, ತೈಬಾ ಜುಮಾ ಮಸೀದಿ ಅಧ್ಯಕ್ಷ ಬಿ. ಅಬ್ದುಲ್ ಹಮೀದ್ ತಾಜ್ ಫಿಶ್, ಕೃಷ್ಣಾಪುರ ಈದ್ಗಾ ಜುಮಾ ಮಸೀದಿ ಅಧ್ಯಕ್ಷ ಅಬ್ದುಲ್ ಹಕ್, ಬದ್ರುಲ್ ಹುದಾ ಅಧ್ಯಕ್ಷ ಅಬೂಬಕರ್ ಟಿ.ಎಂ., ಮಸ್ಜಿದುಲ್ ಬದ್ರಿಯಾ ಅಧ್ಯಕ್ಷ ಇಬ್ರಾಹಿಂ ಎನ್.ಎಂ.ಪಿ.ಟಿ. ಮಸ್ಟಿದುಲ್ ಹುದಾ ಅಧ್ಯಕ್ಷ ಕೆ.ಎಚ್. ಅಬ್ದುರ್ರಹ್ಮಾನ್, ಕೃಷ್ಣಾಪುರ ಕೇಂದ್ರ ಬದ್ರಿಯಾ ಜುಮಾ ಮಸೀದಿಯ ಮಾಜಿ ಅಧ್ಯಕ್ಷರಾದ ಬಿ.ಎಂ. ಉಸ್ಮಾನ್ ಹಾಜಿ, ಅಬ್ದುಲ್ ಜಲೀಲ್ ಬದ್ರಿಯ, ಬಿ.ಎಚ್. ಮುಹಮ್ಮದ್ ಹಸನ್ ಮೊದಲಾದವರು ಉಪಸ್ಥಿತರಿದ್ದರು. ಕೃಷ್ಣಾಪುರ ಆಲ್‌ಮದ್ರಸತುಲ್ ಬದ್ರಿಯಾ ಕೇಂದ್ರ ಮದ್ರಸ ಸಮಿತಿ ಅಧ್ಯಕ್ಷ ಅಬ್ದುಲ್ ಹಕೀಂ ಫಾಲ್ಕನ್ ಸ್ವಾಗತಿಸಿದರು.

ವಾರ್ತಾ ಭಾರತಿ 23 Dec 2025 2:39 pm

Delhi | ಸಾಂತಾಕ್ಲಾಸ್ ಟೋಪಿ ಧರಿಸಿದ್ದಕ್ಕೆ ಮಹಿಳೆಯರ ವಿರುದ್ಧ ಮತಾಂತರ ಆರೋಪಿಸಿ ಅನುಚಿತವಾಗಿ ವರ್ತಿಸಿದ ಸಂಘಪರಿವಾರದ ಕಾರ್ಯಕರ್ತರು; ವೀಡಿಯೊ ವೈರಲ್‌

ಹೊಸದಿಲ್ಲಿ,ಡಿ.23: ದಿಲ್ಲಿಯ ಲಜಪತ್ ನಗರ ಪ್ರದೇಶದಲ್ಲಿ ಸಾಂತಾಕ್ಲಾಸ್ ಟೋಪಿಗಳನ್ನು ಧರಿಸಿದ್ದ ಕ್ರಿಶ್ಚಿಯನ್ ಮಹಿಳೆಯರು ಮತ್ತು ಮಕ್ಕಳ ಗುಂಪಿನ ವಿರುದ್ಧ ಮತಾಂತರ ಆರೋಪ ಹೊರಿಸಿ, ಅವರನ್ನು ಆ ಪ್ರದೇಶದಿಂದ ಹೊರಹೋಗುವಂತೆ ಬಜರಂಗದಳದ ಕಾರ್ಯಕರ್ತರು ಒತ್ತಾಯಿಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಈ ಸಂಬಂಧ ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೊವೊಂದು ವೈರಲ್‌ ಆಗಿದೆ. ವೀಡಿಯೊ ಹಾಗೂ ಪೋಸ್ಟ್‌ಗಳ ಪ್ರಕಾರ, ಸಾಂತಾಕ್ಲಾಸ್ ಕ್ಯಾಪ್ ಧರಿಸಿದ್ದ ಮಹಿಳೆಯರು ಮತ್ತು ಮಕ್ಕಳಿದ್ದ ಗುಂಪನ್ನು ಬಜರಂಗದಳದ ಕಾರ್ಯಕರ್ತರು ಎದುರುಗೊಂಡರು. ಸಾರ್ವಜನಿಕ ಸ್ಥಳಗಳಲ್ಲಿ ಇಂತಹ ಚಟುವಟಿಕೆಗಳನ್ನು ನಡೆಸಬಾರದು; ಮನೆಯೊಳಗೆ ಮಾತ್ರ ಆಚರಿಸಬೇಕು ಎಂದು ಅವರು ಸೂಚಿಸಿದ್ದಾರೆ ಎನ್ನಲಾಗಿದೆ. ಈ ವೇಳೆ ಕಾರ್ಯಕರ್ತರು ಮಹಿಳೆಯರೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ. ಸಾಮಾಜಿಕ ಮಾಧ್ಯಮದಲ್ಲಿ ವೈರಲ್‌ ವೀಡಿಯೊದಲ್ಲಿನ ಆರೋಪಗಳನ್ನು ಮಾಧ್ಯಮಗಳು ಸ್ವತಂತ್ರವಾಗಿ ಪರಿಶೀಲಿಸಲು ಸಾಧ್ಯವಾಗಿಲ್ಲ. ಈ ಘಟನೆ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ವಾರ್ತಾ ಭಾರತಿ 23 Dec 2025 2:35 pm

ಕುಂಬಳೆ | ಹೈಕೋರ್ಟ್ ವಿಚಾರಣೆಯ ನಡುವೆಯೇ ಟೋಲ್ ಆರಂಭಕ್ಕೆ ಯತ್ನ; ಜಿಲ್ಲಾಧಿಕಾರಿಗಳ ನಡೆ ಜನವಿರೋಧಿ : ಶಾಸಕ ಎ.ಕೆ.ಎಂ ಅಶ್ರಫ್ ಆರೋಪ

ಕಾಸರಗೋಡು: ರಾಷ್ಟ್ರೀಯ ಹೆದ್ದಾರಿಯ ಕುಂಬಳೆ ಆರಿಕ್ಕಾಡಿಯಲ್ಲಿ ಡಿ.27 ರಿಂದ ಶುಲ್ಕ ವಸೂಲಿಗೆ ರಹಸ್ಯ ಹುನ್ನಾರ ನಡೆಯುತ್ತಿದ್ದು, ಜನರ ಪರ ನಿಲ್ಲಬೇಕಾದ ಜಿಲ್ಲಾಧಿಕಾರಿಗಳೇ ಇದಕ್ಕೆ ಬೆಂಬಲ ನೀಡುತ್ತಿದ್ದಾರೆ ಎಂದು ಮಂಜೇಶ್ವರ ಶಾಸಕ ಎ.ಕೆ.ಎಂ ಅಶ್ರಫ್ ಆರೋಪಿಸಿದ್ದಾರೆ. ರಾಷ್ಟ್ರೀಯ ಹೆದ್ದಾರಿಯ ತಲಪಾಡಿಯಲ್ಲಿ ಟೋಲ್ ಗೇಟ್ ಕಾರ್ಯಾಚರಿಸುತ್ತಿದೆ. ಅಲ್ಲಿಂದ ಕೇವಲ 23 ಕಿ ಮೀ ದೂರದ ಕುಂಬಳೆಯಲ್ಲಿ ಅವೈಜ್ಞಾನಿಕವಾಗಿ ಇನ್ನೊಂದು ಟೋಲ್ ಗೇಟ್ ಪ್ರಾರಂಭಿಸುವುದನ್ನು ವಿರೋಧಿಸಿ ನಾಗರಿಕ ಕ್ರಿಯಾ ಸಮಿತಿ ನೀಡಿದ ದೂರಿನಂತೆ ಹೖಕೋರ್ಟಿನಲ್ಲಿ ಪ್ರಕರಣ ವಿಚಾರಣೆಯಲ್ಲಿದ್ದು,ನ್ಯಾಯಾಲಯ ಈ ವಿಷಯದಲ್ಲಿ ಅಂತಿಮ ತೀರ್ಪು ನೀಡಿಲ್ಲ. ಜನವರಿ 25ಕ್ಕೆ ಪ್ರಕರಣದ ವಿಚಾರಣೆ ಕಾಯ್ದಿರಿಸಲಾಗಿದೆ. ಈ ಮಧ್ಯೆ ನಾಗರಿಕ ಕ್ರಿಯಾ ಸಮಿತಿ ಕಾರ್ಯಕರ್ತರೊಂದಿಗೆ ಜಿಲ್ಲಾಧಿಕಾರಿಗಳ ಭೇಟಿಗೆ ಹೋದಾಗ ಜನರ ದೂರು, ಆಕ್ಷೇಪ ಆಲಿಸಬೇಕಾದ ಅವರು ರಾ. ಹೆದ್ದಾರಿ ಪರವಾಗಿ ಮಾತನಾಡಿ, ಶಾಸಕರನ್ನೂ, ಕ್ರಿಯಾ ಸಮಿತಿಯನ್ನೂ ಆಕ್ಷೇಪಿಸಿದರೆಂದು ಶಾಸಕ ಎಕೆಎಂ ಅಶ್ರಫ್ ದೂರಿದ್ದಾರೆ. ಜಿಲ್ಲಾಧಿಕಾರಿಗಳ ವರ್ತನೆ ಜನವಿರೋಧಿಯಾಗಿದ್ದು, ಈ ಕುರಿತು ರಾಜ್ಯ ಮುಖ್ಯಮಂತ್ರಿ ಹಾಗೂ ಕಾರ್ಯದರ್ಶಿಗೆ ದೂರು ಸಲ್ಲಿಸುವುದಾಗಿ ಶಾಸಕರು ತಿಳಿಸಿದ್ದಾರೆ. ಕುಂಬಳೆಯಲ್ಲಿ ಟೋಲ್ ಸಂಗ್ರಹ ಆರಂಭಿಸುವುದರ ವಿರುದ್ಧ ಬಿಜೆಪಿ ಹೊರತು ಉಳಿದೆಲ್ಲ ಪಕ್ಷದವರನ್ನು ಒಳಗೊಂಡ ಕ್ರಿಯಾ ಸಮಿತಿ ಹೋರಾಟದಲ್ಲಿದೆ. ಕಾನೂನು ವಿರುದ್ಧವಾಗಿ ಟೋಲ್ ಶುಲ್ಕ ವಸೂಲಾತಿಗೆ ಮುಂದಾದರೆ ಕ್ರಿಯಾ ಸಮಿತಿ ಅದನ್ನು ತಡೆಯುವುದಾಗಿ ಶಾಸಕರು‌ ಪ್ರಕಟನೆಯಲ್ಲಿ ಹೇಳಿದ್ದಾರೆ.

ವಾರ್ತಾ ಭಾರತಿ 23 Dec 2025 2:33 pm

ದೇವದುರ್ಗ| ಭಾರತೀಯ ಯೋಧರಿಗೆ ಸ್ವಾಗ್ರಾಮದಲ್ಲಿ‌ ಅದ್ಧೂರಿ‌ ಸ್ವಾಗತ

ರಾಯಚೂರು: ಭಾರತೀಯ ಸೈನ್ಯಕ್ಕೆ ಆಯ್ಕೆಯಾದ ಹನುಮಂತರಾಯ ಹಾಗೂ ರಾಮಲಿಂಗ ಪೂಜಾರಿಗೆ ದೇವದುರ್ಗ ಪಟ್ಟಣದಲ್ಲಿ ಭರ್ಜರಿ ಸ್ವಾಗತ ನೀಡಲಾಯಿತು. ದೇವದುರ್ಗ ಪಟ್ಟಣದಲ್ಲಿ ಸೋಮವಾರ ಸಂಜೆ ಭಾರತೀಯ ಸೈನ್ಯಕ್ಕೆ ಆಯ್ಕೆಯಾದ ಸೈನಿಕರಿಗೆ ಸಿರವಾರ ಕ್ರಾಸ್ ನಿಂದ ಡಾ.ಬಿ.ಆರ್.ಅಂಬೇಡ್ಕರ್‌ ವೃತ್ತದ ಮಾರ್ಗದಿಂದ ಹಜರ್ ಜಹೀರುದ್ದೀನ್ ಪಾಶಾ ವೃತ್ತದ ವರೆಗೆ ಮೆರವಣಿಗೆ  ಮೂಲಕ ಸೈನಿಕರ ಸಂಬಂಧಿಕರು ಮತ್ತು ಸೈನಿಕ ಅಕಾಡೆಮಿಯ ವತಿಯಿಂದ ವಿಜೃಂಭಣೆಯಿಂದ ಸ್ವಾಗತಿಸಲಾಯಿತು. ಈ ಸಂದರ್ಭದಲ್ಲಿ ಸೈನಿಕ ಆಕಾಡೆಮಿಯ ಅಧ್ಯಕ್ಷರಾದ ಭಾನುಪ್ರಕಾಶ್ ಖೇಣೆದ್, ಸೈನಿಕ ಪಂಪಣ್ಣ ಅಕ್ಕರಕ್ಕಿ, ಸುಭಾಷ್ ಚಂದ್ರಪಾಟೀಲ್,ಬಾಲಪ್ಪ ಭಾವಿಮನಿ,ಶರಣಗೌಡ ಗೌರಂಪೇಟೆ ಇದ್ದರು.

ವಾರ್ತಾ ಭಾರತಿ 23 Dec 2025 2:16 pm

ರಾಹುಲ್ ಗಾಂಧಿಗೆ ಪತ್ರ ಬರೆದ ಕೆ ಎನ್ ರಾಜಣ್ಣ: ವಿರೋಧಿ ಬಣದ ಬಗ್ಗೆ ಮಹತ್ವದ ಸಂಗತಿ ಉಲ್ಲೇಖ

ಮತಕಳ್ಳತನ ಕುರಿತಾಗಿ ಹೇಳಿಕೆ ನೀಡಿ ಸಚಿವ ಸ್ಥಾನದಿಂದ ವಜಾಗೊಂಡಿರುವ ಕೆ ಎನ್ ರಾಜಣ್ಣ ಅವರು ರಾಹುಲ್ ಗಾಂಧಿ ಅವರಿಗೆ ಸುದೀರ್ಘ ಪತ್ರಬರೆದಿದ್ದಾರೆ. ಪತ್ರದಲ್ಲಿ, ನಾನು ಈ ಪತ್ರ ಬರೆದ ಉದ್ದೇಶ ಇಷ್ಟೇ. ನನ್ನ ವಿರುದ್ದ ತಮಗೆ ತಪ್ಪು ಮಾಹಿತಿ ನೀಡಿದವರ ಮೇಲೆ ಕ್ರಮ ಆಗಬೇಕು. ನನ್ನ ಹೇಳಿಕೆಯ ಉದ್ದೇಶವನ್ನ ತಮಗೆ ತಪ್ಪಾಗಿ ಅರ್ಥೈಸುವಂತೆ ಮಾಡಿದವರ ಮೇಲೆ ಕ್ರಮ ಆಗಬೇಕು. ಜೊತೆಗೆ ಈ ಬಗ್ಗೆ ಕೂಲಂಕುಷವಾಗಿ ಚರ್ಚಿಸಲು ತಮ್ಮ ಭೇಟಿಗೆ ಅವಕಾಶ ನೀಡಿ ಎಂದು ಮಾಜಿ ಸಚಿವ ಕೆ ಎನ್ ರಾಜಣ್ಣ ರಾಹುಲ್ ಗಾಂಧಿ ಬಳಿ ಪತ್ರದ ಮೂಲಕ ಮನವಿ ಮಾಡಿದ್ದಾರೆ.

ವಿಜಯ ಕರ್ನಾಟಕ 23 Dec 2025 2:12 pm

ಉಡುಪಿ ಕಡಲತೀರಕ್ಕೆ ತೇಲಿ ಬಂದ ಶ್ರೀಕೃಷ್ಣನ ವಿಗ್ರಹ, ಜನರಿಗೆ ಉತ್ಸಾಹವೋ ಉತ್ಸಾಹ: ಅಸಲಿಯತ್ತೇನು?

Udupi Malpe Beach : ಶ್ರೀಕೃಷ್ಣನೂರು ಉಡುಪಿಯ ಮಲ್ಪೆ ಅರಬ್ಬೀ ಸಮುದ್ರ ಕಿನಾರೆಗೆ ಕೃಷ್ಣನ ವಿಗ್ರಹ ತೇಲಿ ಬಂದಿದೆ. ಸುಂದರವಾದ ವಿಗ್ರಹವನ್ನು ಕಂಡು, ಜನರ ಉತ್ಸಾಹಕ್ಕೆ ಪಾರವೇ ಇಲ್ಲದಂತಾಗಿದೆ. ಬೆಂಗಳೂರಿನಿಂದ ಬಂದಿದ್ದ ಇಸ್ಕಾನ್ ಭಕ್ತರು ಅದನ್ನು ಬೆಂಗಳೂರಿಗೆ ತೆಗೆದುಕೊಂಡು ಹೋಗಿದ್ದಾರೆ.

ವಿಜಯ ಕರ್ನಾಟಕ 23 Dec 2025 2:06 pm

ದುಬೈನಲ್ಲಿ ವೈಭವ್‌ ಸೂರ್ಯವಂಶಿಗೆ ಪಾಕ್‌ ಅಭಿಮಾನಿಗಳಿಂದ ಅವಮಾನ, ವಿಡಿಯೋ ವೈರಲ್‌: U-19 ಫೈನಲ್‌ನಲ್ಲಿ ಪಾಕ್‌ ಎದುರು ಭಾರತ ಹೀನಾಯ ಸೋಲು!

ದುಬೈನಲ್ಲಿ ನಡೆದ ಅಂಡರ್-19 ಏಷ್ಯಾ ಕಪ್ ಫೈನಲ್‌ನಲ್ಲಿ ಪಾಕಿಸ್ತಾನ ವಿರುದ್ಧ ಭಾರತ ಸೋತ ಬಳಿಕ, ಕ್ರೀಡಾಂಗಣದಿಂದ ಹೊರಬರುತ್ತಿದ್ದ ಯುವ ಆಟಗಾರ ವೈಭವ್ ಸೂರ್ಯವಂಶಿಗೆ ಪಾಕ್ ಅಭಿಮಾನಿಗಳು ಧಿಕ್ಕಾರ ಕೂಗಿ ಅವಮಾನಿಸಿದ ಘಟನೆ ನಡೆದಿದೆ. ಈ ವೈರಲ್ ವಿಡಿಯೋಗಳು ಕ್ರಿಕೆಟ್ ಸ್ಪರ್ಧೆಯ ನಡುವೆ ಯುವ ಆಟಗಾರರ ಮೇಲಾಗುತ್ತಿರುವ ಪರಿಣಾಮವನ್ನು ಎತ್ತಿ ತೋರಿಸಿವೆ. ಇನ್ನು, ಅಂಡರ್‌ 19 ಏಷ್ಯಾ ಕಪ್ ಫೈನಲ್‌ನಲ್ಲಿ ಪಾಕಿಸ್ತಾನ ಅದ್ಬುತ ಪ್ರದರ್ಶನ ನೀಡಿದ್ದು, ಭಾರತ 191 ರನ್ ಗಳಿಂದ ಹೀನಾಯವಾಗಿ ಸೋತಿದೆ. ಈ ಕುರಿತು BCCI ಮ್ಯಾನೆಜ್ಮೆಂಟನ್ನು ಪ್ರಶ್ನಿಸಲಿದೆ.

ವಿಜಯ ಕರ್ನಾಟಕ 23 Dec 2025 1:56 pm

ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಜನವರಿ 29 ರಿಂದ ಆರಂಭ: ರಾಯಭಾರಿಯಾಗಿ ಪ್ರಕಾಶ್ ರಾಜ್ ನೇಮಕ

ಜೊತೆಗೆ ಈ ಬಾರಿಯ ಆಸ್ಕರ್ ಪ್ರಶಸ್ತಿಗೆ ಶಾರ್ಟ್ ಲಿಸ್ಟ್ ಆಗಿರುವ ವಿವಿಧ ದೇಶದ ಅತ್ಯುತ್ತಮ ಚಲನಚಿತ್ರಗಳು ಸಹ ನಮ್ಮ ಚಿತ್ರೋತ್ಸವದಲ್ಲಿ ಪ್ರದರ್ಶನಗೊಳ್ಳಲಿವೆ. ಪೋಲಿಷ್ ಕಲ್ಪರಲ್ ಸೆಂಟರ್, ನವದೆಹಲಿ, ಗೋಥೆ ಇನ್ಸಿಟ್ಯೂಟ್ - ಮ್ಯಾಕ್ಸ್ ಮುಲ್ಲರ್ ಭವನ, ಬೆಂಗಳೂರು, ಅಲಿಯಾನ್ಸ್ ಫ್ರಾಂಸೇ - ಫ್ರೆಂಚ್ ಇನ್ಸಿಟ್ಯೂಟ್ ಹಾಗೂ ರಾಯಲ್ ಥೈಲ್ಯಾಂಡ್ ಕಾನ್ಸುಲೇಟ್‌ನವರು ಅವರ ದೇಶಗಳ ಅತ್ಯುತ್ತಮ ಚಲನಚಿತ್ರಗಳನ್ನು ಚಿತ್ರೋತ್ಸವದಲ್ಲಿ ಪ್ರದರ್ಶನಕ್ಕೆ ನೀಡುತ್ತಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಅವರು ಮಾಹಿತಿಯನ್ನು ನೀಡಿದರು. ಮತ್ತಷ್ಟು ವಿವರ ಇಲ್ಲಿದೆ.

ವಿಜಯ ಕರ್ನಾಟಕ 23 Dec 2025 1:55 pm

ಕಾಪು : ಕೆ. ಎಮ್. ಲತ್ಫುಲ್ಲಾ ನಿಧನ

ಕಾಪು : ಜಾಫರ್ ಟವರ್ ನ ಮಾಲಕ ಕೆ. ಎಮ್. ಲತ್ಫುಲ್ಲಾ ರವರು, (72 ) ಅಲ್ಪ ಕಾಲದ ಅಸೌಖ್ಯದಿಂದ ಸ್ವಗೃಹದಲ್ಲಿ ನಿಧನರಾದರು. ಸಿವಿಲ್ ಕಂಟ್ರಾಕ್ಟರ್ ಆಗಿದ್ದ ಇವರು ಸಮಾಜ ಸೇವೆಯಲ್ಲಿ ಸಕ್ರಿಯರಾಗಿದ್ದರು. ಉಡುಪಿ ಜಿಲ್ಲಾ ವಖ್ಫ್ ಸಲಹಾ ಸಮಿತಿಯ ಮಾಜಿ ಚೇರ್‌ಮ್ಯಾನ್, ಲಯನ್ಸ್ ಕ್ಲಬ್ ನ ಎಮ್‌ಜೆಎಫ್, ಕಾಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರೂ ಆಗಿದ್ದರು.  ಮೃತರು ಪತ್ನಿ, ಇಬ್ಬರು ಪುತ್ರರು, ಇಬ್ಬರು ಪುತ್ರಿಯರು ಹಾಗೂ ಅಪಾರ ಬಂಧುಗಳನ್ನು ಅಗಲಿದ್ದಾರೆ. ‌ 

ವಾರ್ತಾ ಭಾರತಿ 23 Dec 2025 1:55 pm

Shakti Scheme: ಈ ಮಹಿಳೆಯರಿಗೆ ಫ್ರೀ ಬಸ್ ಸೇವೆ ಬಂದ್, ರಾಜ್ಯದ ಶಕ್ತಿ ಯೋಜನೆಗೆ ಹೊಸ ನಿಯಮ?

ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದ ಐದು ಗ್ಯಾರಂಟಿಗಳಲ್ಲಿ ‘ಶಕ್ತಿ ಯೋಜನೆ’ (Shakti Yojane) ಅತ್ಯಂತ ಜನಪ್ರಿಯ ಯೋಜನೆಯಾಗಿದೆ. ಪ್ರತಿದಿನ ಲಕ್ಷಾಂತರ ಮಹಿಳೆಯರು ಉಚಿತವಾಗಿ ಸರ್ಕಾರಿ ಬಸ್‌ಗಳಲ್ಲಿ ಸಂಚರಿಸುತ್ತಿದ್ದಾರೆ. ಆದರೆ, ಕಳೆದ ಕೆಲವು ದಿನಗಳಿಂದ ಈ ಯೋಜನೆಯ ಮುಂದುವರಿಕೆ ಮತ್ತು ಅರ್ಹತೆಯ ಬಗ್ಗೆ ಸಾಕಷ್ಟು ಗೊಂದಲಗಳು ಉಂಟಾಗಿವೆ. ಸರ್ಕಾರದ ಬೊಕ್ಕಸದ ಮೇಲೆ ಬೀಳುತ್ತಿರುವ ಆರ್ಥಿಕ ಹೊರೆ ಮತ್ತು ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನದ ಕೊರತೆ ಎದುರಾಗುತ್ತಿದೆ ಎಂಬ ಚರ್ಚೆಗಳು ನಡೆಯುತ್ತಿರುವ ಬೆನ್ನಲ್ಲೇ, ಶಕ್ತಿ ಯೋಜನೆಯ ನಿಯಮಗಳಲ್ಲಿ ದೊಡ್ಡ ಬದಲಾವಣೆಯಾಗಲಿದೆಯೇ ... Read more The post Shakti Scheme: ಈ ಮಹಿಳೆಯರಿಗೆ ಫ್ರೀ ಬಸ್ ಸೇವೆ ಬಂದ್, ರಾಜ್ಯದ ಶಕ್ತಿ ಯೋಜನೆಗೆ ಹೊಸ ನಿಯಮ? appeared first on Karnataka Times .

ಕರ್ನಾಟಕ ಟೈಮ್ಸ್ 23 Dec 2025 1:51 pm

ಲಂಡನ್‌ನಿಂದ ಹೈದರಾಬಾದ್‌ಗೆ ಬರುತ್ತಿದ್ದ ಬ್ರಿಟಿಷ್ ಏರ್‌ವೇಸ್ ವಿಮಾನಕ್ಕೆ ಬಾಂಬ್ ಬೆದರಿಕೆ; ಸೇಫ್ ಲ್ಯಾಂಡ್

ಲಂಡನ್‌ನಿಂದ ಹೈದರಾಬಾದ್‌ಗೆ ಬರುತ್ತಿದ್ದ ಬ್ರಿಟಿಷ್ ಏರ್‌ವೇಸ್ ವಿಮಾನಕ್ಕೆ ಈ ಮೇಲ್ ಮೂಲಕ ಬಾಂಬ್ ಬೆದರಿಕೆ ಬಂದಿತ್ತು. ವಿಮಾನವು ಸುರಕ್ಷಿತವಾಗಿ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಯಿತು. ಪ್ರಯಾಣಿಕರಿಗೆ ಯಾವುದೇ ತೊಂದರೆಯಾಗಿಲ್ಲ. ಭದ್ರತಾ ತಪಾಸಣೆ ಬಳಿಕ ವಿಮಾನವು ಲಂಡನ್‌ಗೆ ತನ್ನ ಪ್ರಯಾಣವನ್ನು ಮುಂದುವರಿಸಿತು. ಅಧಿಕಾರಿಗಳ ಸಮಯೋಚಿತ ಕ್ರಮದಿಂದ ಯಾವುದೇ ಅಪಾಯ ಸಂಭವಿಸಲಿಲ್ಲ.

ವಿಜಯ ಕರ್ನಾಟಕ 23 Dec 2025 1:38 pm

ಸ್ವಾಮಿ ನಿಧಿ 2.0: ಅರ್ಧಕ್ಕೆ ನಿಂತ ನಿಮ್ಮ ಸ್ವಂತ ಮನೆಯ ಕನಸಿಗೆ ಕೇಂದ್ರ ಸರ್ಕಾರದ ನೆರವು; ಏನಿದು 15,000 ಕೋಟಿಯ ಸ್ವಾಮಿ ನಿಧಿ? ಅರ್ಜಿ ಸಲ್ಲಿಕೆ ಹೇಗೆ?

ಮನೆ ನಿರ್ಮಾಣ ಅರ್ಧಕ್ಕೆ ನಿಂತಿರುವವರಿಗೆ ಕೇಂದ್ರ ಸರ್ಕಾರದಿಂದ 'ಸ್ವಾಮಿ ನಿಧಿ 2.0' ಯೋಜನೆ. 15,000 ಕೋಟಿ ರೂ. ಮೊತ್ತದ ಈ ಯೋಜನೆಯು ಸುಮಾರು 1 ಲಕ್ಷ ಮನೆಗಳನ್ನು ಪೂರ್ಣಗೊಳಿಸುವ ಗುರಿ ಹೊಂದಿದೆ. ಇದರಿಂದ ಮನೆ ಖರೀದಿದಾರರಿಗೆ ಆರ್ಥಿಕ ನೆರವು ಸಿಗಲಿದೆ. ರಿಯಲ್ ಎಸ್ಟೇಟ್ ವಲಯಕ್ಕೆ ಹೊಸ ಚೈತನ್ಯ ಬರಲಿದೆ. ಡೆವಲಪರ್‌ಗಳಿಗೂ ಇದು ಸಹಕಾರಿಯಾಗಲಿದೆ. ಈ ಕುರಿತ ವಿವರಗಳು ಇಲ್ಲಿವೆ.

ವಿಜಯ ಕರ್ನಾಟಕ 23 Dec 2025 1:35 pm

ʼದ್ವೇಷ ಭಾಷಣ ತಡೆ ಕಾಯ್ದೆʼ ಕಾಂಗ್ರೆಸ್ ವಿರುದ್ಧ ಮಾತಾಡುವವರ ಬಾಯಿ ಮುಚ್ಚಿಸುವ ಷಡ್ಯಂತ್ರ : ಶೋಭಾ ಕರಂದ್ಲಾಜೆ

ಬೀದರ್ : ಕಾಂಗ್ರೆಸ್ ಸರಕಾರ ವಿಷಯಾಂತರ ಮಾಡಲು ಹಲವಾರು ಅಸ್ತ್ರಗಳನ್ನು ಬಳಸುತ್ತಿದೆ. ಅದರಲ್ಲಿ ದ್ವೇಷ ಭಾಷಣ ತಡೆ ಕಾಯ್ದೆ ಕೂಡಾ ಒಂದಾಗಿದೆ. ಕಾಂಗ್ರೆಸ್ ವಿರುದ್ಧ ಮಾತಾಡುವವರ ಬಾಯಿ ಮುಚ್ಚಿಸುವ ಷಡ್ಯಂತ್ರ ಇದಾಗಿದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು. ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಅಭಿವೃದ್ಧಿ ನಡೆಯುತ್ತಿಲ್ಲ. ಕುರ್ಚಿ ಕಿತ್ತಾಟ ನಡೆಯುತ್ತಿದೆ. ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಆಗಬೇಕಾ? ಸಿದ್ದರಾಮಯ್ಯ ಮುಂದುವರೆಯಬೇಕಾ? ಅನ್ನೋದೇ ಚರ್ಚೆ ನಡೆಯುತ್ತಿದೆ. ಅಭಿವೃದ್ಧಿಯ ಬಗ್ಗೆ ಚರ್ಚೆ ನಡೆಯುತ್ತಿಲ್ಲ ಎಂದು ಆಕ್ರೋಶ ಹೊರಹಾಕಿದರು. ದ್ವೇಷ ಭಾಷಣ ತಡೆ ಕಾಯ್ದೆ ಎನ್ನುವುದು ಕಾಂಗ್ರೆಸ್ ವಿರುದ್ಧ ಮಾತಾಡುವವರ ಬಾಯಿ ಮುಚ್ಚಿಸುವ ಷಡ್ಯಂತ್ರವಾಗಿದೆ. ನಮ್ಮೆಲ್ಲರ ಬಾಯಿ ಮುಚ್ಚಿಸಲು ಕಾಂಗ್ರೆಸ್ ವ್ಯವಸ್ಥಿತ ಷಡ್ಯಂತ್ರ ಮಾಡುತ್ತಿದೆ. ಕಾಂಗ್ರೆಸ್ ಸರಕಾರ ಸಂಪೂರ್ಣವಾಗಿ ವಿಫಲವಾಗಿದ್ದು, ಅದನ್ನು ಅವರು ಎತ್ತಿ ತೋರಿಸುತ್ತಿದ್ದಾರೆ ಎಂದರು. ಗೃಹ ಸಚಿವ ಪರಮೇಶ್ವರ್ ಅವರು ಖರ್ಗೆ ಭೇಟಿ ವಿಚಾರವಾಗಿ ಮಾತನಾಡಿದ ಅವರು, ಕಾಂಗ್ರೆಸ್ ನಾಯಕರು ಎಲ್ಲರೂ ಸಿಎಂ ಹಾಗೂ ಕೆಪಿಸಿಸಿ ಪಟ್ಟಕ್ಕಾಗಿ ಹಾತೊರೆಯುತ್ತಿದ್ದಾರೆ. ಯಾರನ್ನು ಇಳಿಸಬೇಕು, ಯಾರನ್ನು ಉರುಳಿಸಬೇಕು ಎನ್ನುವ ಚರ್ಚೆ ಮಾತ್ರ ಕಾಂಗ್ರೆಸ್ ನಾಯಕರು ಮಾಡುತ್ತಿದ್ದಾರೆ. ಒಂದು ಕಡೆ ಪರಮೇಶ್ವರ್ ಇನ್ನೊಂದು ಕಡೆ ಖರ್ಗೆ ಮತ್ತೊಂದು ಕಡೆ ಡಿಕೆಶಿ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ಪೈಪೋಟಿ ನಡೆಸುತ್ತಿದ್ದಾರೆ ಎಂದರು. ಬೆಳಗಾವಿಯಲ್ಲಿ ಅಧಿವೇಶನ ಯಾವ ಪುರುಷಾರ್ಥಕ್ಕೆ ಮಾಡಿದರು ಎಂದು ಪ್ರಶ್ನೆ ಮಾಡಿದ ಅವರು, ಉತ್ತರ ಕರ್ನಾಟಕದ ಬಗ್ಗೆ ಚರ್ಚೆ ಮಾಡ್ತೀವಿ ಅಂತ ಹೇಳಿ ದ್ವೇಷ ಭಾಷಣ ತಡೆಯ ಕಾಯ್ದೆ ಬಿಟ್ಟು ಅಧಿವೇಶನದಲ್ಲಿ ಅವರು ಏನು ಮಾಡಲಿಲ್ಲ. ಉತ್ತರ ಕರ್ನಾಟಕಕ್ಕೂ ನ್ಯಾಯಕೊಡಲ್ಲ, ಕರ್ನಾಟಕಕ್ಕೂ ನ್ಯಾಯಕೊಡಲ್ಲ. ಯಾರಿಗೂ ಇವರು ನ್ಯಾಯ ಕೊಡುವುದಿಲ್ಲ. ಬರೀ ಕುರ್ಚಿಗಾಗಿ ಕಿತ್ತಾಟ ನಡೆಸುತ್ತಿದ್ದಾರೆ ಎಂದು ಅವರು ಕಾಂಗ್ರೆಸ್ ವಿರುದ್ಧ ಹರಿಹಾಯ್ದರು.

ವಾರ್ತಾ ಭಾರತಿ 23 Dec 2025 1:34 pm

ಭಾರತ–ಪಾಕಿಸ್ತಾನ ನಡುವಿನ ಪರಮಾಣು ಯುದ್ಧ ತಡೆದಿದ್ದೇನೆ: ಮತ್ತೆ ಪುನರುಚ್ಛರಿಸಿದ ಡೊನಾಲ್ಡ್ ಟ್ರಂಪ್

ನ್ಯೂಯಾರ್ಕ್/ವಾಷಿಂಗ್ಟನ್: ಭಾರತ ಮತ್ತು ಪಾಕಿಸ್ತಾನ ನಡುವೆ ಸಂಭವಿಸಬಹುದಾಗಿದ್ದ ಪರಮಾಣು ಯುದ್ಧವನ್ನು ತಾನು ತಡೆದಿದ್ದೇನೆ ಎಂಬ ಹೇಳಿಕೆಯನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪುನರುಚ್ಛರಿಸಿದ್ದಾರೆ. ಈ ಮೂಲಕ ಲಕ್ಷಾಂತರ ಜೀವಗಳು ಉಳಿದಿವೆ ಎಂದು ಅವರು ಪ್ರತಿಪಾದಿಸಿದ್ದಾರೆ. ಫ್ಲೋರಿಡಾದ ಪಾಮ್ ಬೀಚ್‌ನ ಮಾರ್-ಎ-ಲಾಗೊ ಕ್ಲಬ್‌ ನಲ್ಲಿ ಸೋಮವಾರ ಮಾತನಾಡಿದ ಟ್ರಂಪ್, “ನಾವು ಪಾಕಿಸ್ತಾನ ಮತ್ತು ಭಾರತ ನಡುವಿನ ಸಂಭಾವ್ಯ ಪರಮಾಣು ಯುದ್ಧವನ್ನು ನಿಲ್ಲಿಸಿದ್ದೇವೆ. ಪಾಕಿಸ್ತಾನದ ನಾಯಕತ್ವ ಇದಕ್ಕಾಗಿ ನಮ್ಮನ್ನು ಮೆಚ್ಚಿದೆ. ಸುಮಾರು ಒಂದು ಕೋಟಿ ಜೀವಗಳು, ಬಹುಶಃ ಇನ್ನೂ ಹೆಚ್ಚು, ಇದರಿಂದಾಗಿ ಉಳಿದಿವೆ” ಎಂದು ಅವರು ಹೇಳಿದ್ದಾರೆ. ಈ ವೇಳೆ ರಕ್ಷಣಾ ಕಾರ್ಯದರ್ಶಿ ಪೀಟ್ ಹೆಗ್ಸೆತ್, ನೌಕಾಪಡೆ ಕಾರ್ಯದರ್ಶಿ ಜಾನ್ ಫೆಲನ್ ಹಾಗೂ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ ಉಪಸ್ಥಿತರಿದ್ದರು. ಸಂಘರ್ಷದ ತೀವ್ರತೆಯನ್ನು ಉಲ್ಲೇಖಿಸಿದ ಟ್ರಂಪ್, “ಎಂಟು ವಿಮಾನಗಳನ್ನು ಹೊಡೆದುರುಳಿಸಲಾಗಿತ್ತು. ಪರಿಸ್ಥಿತಿ ಮತ್ತೊಂದು ದಿನ ಮುಂದುವರಿದಿದ್ದರೆ ಭಾರೀ ಅನಾಹುತವಾಗುತ್ತಿತ್ತು” ಎಂದು ಹೇಳಿದರು. ರಷ್ಯಾ–ಉಕ್ರೇನ್ ಯುದ್ಧ ಮಾತ್ರ ಇನ್ನೂ ಇತ್ಯರ್ಥವಾಗಿಲ್ಲ ಎಂದೂ ಅವರು ಹೇಳಿದರು. ಮೇ 10ರಂದು ಅಮೆರಿಕದ ಮಧ್ಯಸ್ಥಿಕೆಯಲ್ಲಿ ನಡೆದ ದೀರ್ಘ ಮಾತುಕತೆಗಳ ಬಳಿಕ ಭಾರತ ಮತ್ತು ಪಾಕಿಸ್ತಾನ ‘ಪೂರ್ಣ ಹಾಗೂ ತಕ್ಷಣದ’ ಕದನ ವಿರಾಮಕ್ಕೆ ಒಪ್ಪಿಕೊಂಡಿವೆ ಎಂದು ಟ್ರಂಪ್ ಸಾಮಾಜಿಕ ಮಾಧ್ಯಮದಲ್ಲಿ ಘೋಷಿಸಿದ ನಂತರ, ಈ ವಿಷಯವನ್ನು ಅವರು ಹಲವಾರು ಬಾರಿ ಪುನರುಚ್ಛರಿಸಿದ್ದಾರೆ. ಆದರೆ ಈ ಸಂಬಂಧ ಭಾರತವು ಯಾವುದೇ ಮೂರನೇ ವ್ಯಕ್ತಿಯ ಹಸ್ತಕ್ಷೇಪವನ್ನೂ ನಿರಂತರವಾಗಿ ನಿರಾಕರಿಸಿದೆ. ಏಪ್ರಿಲ್ 22ರಂದು ಪಹಲ್ಗಾಮ್‌ ನಲ್ಲಿ ನಡೆದ ದಾಳಿಯಲ್ಲಿ 26 ನಾಗರಿಕರು ಮೃತಪಟ್ಟಿದ್ದಕ್ಕೆ ಪ್ರತೀಕಾರವಾಗಿ, ಮೇ 7ರಂದು ಭಾರತವು ಪಾಕಿಸ್ತಾನ ಹಾಗೂ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿನ ಭಯೋತ್ಪಾದಕ ನೆಲೆಗಳ ವಿರುದ್ಧ ಆಪರೇಷನ್ ಸಿಂಧೂರ್ ಆರಂಭಿಸಿತ್ತು. ನಾಲ್ಕು ದಿನಗಳ ಕಾಲ ನಡೆದ ತೀವ್ರ ಗಡಿಯಾಚೆಗಿನ ಡ್ರೋನ್ ಹಾಗೂ ಕ್ಷಿಪಣಿ ದಾಳಿಗಳ ಬಳಿಕ, ಮೇ 10ರಂದು ಎರಡೂ ರಾಷ್ಟ್ರಗಳು ಸಂಘರ್ಷ ಅಂತ್ಯಕ್ಕೆ ಒಪ್ಪಿಕೊಂಡವು.

ವಾರ್ತಾ ಭಾರತಿ 23 Dec 2025 1:14 pm

ಚಿನ್ನಸ್ವಾಮಿಯಲ್ಲಿ ನಡೆಯಬೇಕಿದ್ದ ವಿಜಯ್ ಹಜಾರೆ ಪಂದ್ಯಕ್ಕೆ ಅನುಮತಿ ನಿರಾಕರಣೆ - ವಿರಾಟ್ ಕೊಹ್ಲಿ ಆಡೋದೇ ತಪ್ಪಾ?

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಬೇಕಿದ್ದ ವಿಜಯ್ ಹಜಾರೆ ಟ್ರೋಫಿ ಪಂದ್ಯಕ್ಕೆ ರಾಜ್ಯ ಸರ್ಕಾರ ಅನುಮತಿ ನೀಡಿಲ್ಲ. ಆಂಧ್ರಪ್ರದೇಶ ಮತ್ತು ದೆಹಲಿ ನಡುವಿನ ಪಂದ್ಯ ರದ್ದಾಗಿದೆ. ವಿರಾಟ್ ಕೊಹ್ಲಿ ಆಡುತ್ತಾರೆ ಎಂಬ ವದಂತಿ ಹಾಗೂ ಜನಸಂದಣಿ ಸೇರುವ ಆತಂಕದಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಕಳೆದ ಘಟನೆಗಳ ಪುನರಾವರ್ತನೆ ತಪ್ಪಿಸಲು ಮುನ್ನೆಚ್ಚರಿಕೆ ವಹಿಸಲಾಗಿದೆ.

ವಿಜಯ ಕರ್ನಾಟಕ 23 Dec 2025 1:12 pm

ಹೊದಿಕೆ ಮಾರಾಟಗಾರರ ಸೋಗಿನಲ್ಲಿ ಪಾಕಿಸ್ತಾನಕ್ಕೆ ಬೇಹುಗಾರಿಕೆ: ಅರುಣಾಚಲ ಪ್ರದೇಶದಲ್ಲಿ ಕಾಶ್ಮೀರ ಮೂಲದ ಗೂಢಾಚಾರರ ಬಂಧನ!

ಪಾಕಿಸ್ತಾನದಲ್ಲಿರುವ ಹ್ಯಾಂಡ್ಲರ್‌ಗಳಿಗಾಗಿ ಗೂಢಚಾರಿಕೆ ನಡೆಸುತ್ತಿದ್ದ ಜಮ್ಮು ಮತ್ತು ಕಾಶ್ಮೀರದ ಐವರು ವ್ಯಕ್ತಿಗಳನ್ನು ಇಟಾನಗರ ಪೊಲೀಸರು ಬಂಧಿಸಿದ್ದಾರೆ. ಅರುಣಾಚಲ ಪ್ರದೇಶದ ಸೂಕ್ಷ್ಮ ಮಾಹಿತಿಯನ್ನು ಸಂಗ್ರಹಿಸಿ ಪಾಕಿಸ್ತಾನಕ್ಕೆ ರವಾನಿಸುತ್ತಿದ್ದ ಇವರನ್ನು ಹೊದಿಕೆ ಮಾರಾಟಗಾರರ ಸೋಗಿನಲ್ಲಿ ರಾಜ್ಯದ ಸೂಕ್ಷ್ಮ ಮಾಹಿತಿಗಳನ್ನು ಪಾಕಿಗಳ ವಶಕ್ಕೆ ನೀಡುತ್ತಿದ್ದರು ಎಂದು ಪತ್ತೆ ಹಚ್ಚಲಾಗಿದೆ. ಈ ಗೂಢಚಾರ ಜಾಲದ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದ್ದು, ಇಟಾನಗರ ನಿವಾಸಿಗಳಿಗೆ ಜಾಗರೂಕತೆಯಿಂದಿರುವಂತೆ ತಿಳಿಸಿದ್ದಾರೆ.

ವಿಜಯ ಕರ್ನಾಟಕ 23 Dec 2025 12:50 pm

Salary Hike: ಭಾರತೀಯ ಮಹಿಳಾ ಕ್ರಿಕೆಟಿಗರ ವೇತನ ಹೆಚ್ಚಳ: ಇಲ್ಲಿದೆ ಮಾಹಿತಿ

Women Cricketers Salary Hike: ವೇತನ ಹೆಚ್ಚಳದ ನಿರೀಕ್ಷೆಯಲ್ಲಿದ್ದ ಭಾರತೀಯ ಮಹಿಳಾ ಕ್ರಿಕೆಟಿಗರಿಗೆ ಕೊನೆಗೂ ಬಿಸಿಸಿಐ ಗುಡ್‌ ನ್ಯೂಸ್‌ ನೀಡಿದೆ. ದೇಶೀಯ ಪಂದ್ಯಗಳ ಮಹಿಳಾ ಕ್ರಿಕೆಟಿಗರು ಮತ್ತು ಅಧಿಕಾರಿಗಳ ಶುಲ್ಕವನ್ನು ದ್ವಿಗುಣಗೊಳಿಸಲಾಗಿದೆ. ಹಾಗಾದ್ರೆ, ಯಾರಿಗೆ ಎಷ್ಟು ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ. ಭಾರತ ಮಹಿಳಾ ಕ್ರಿಕೆಟ್‌ ತಂಡವು ಚೊಚ್ಚಲ ಏಕದಿನ ವಿಶ್ವಕಪ್‌ ಮುಡಿಗೇರಿಸಿಕೊಂಡಿದೆ. ಇದರ

ಒನ್ ಇ೦ಡಿಯ 23 Dec 2025 12:45 pm

ಧುರಂಧರ್ ವಿರುದ್ಧ ಸುಳ್ಳು ಪ್ರಚಾರಾಭಿಯಾನ ಎಂದು ಟೀಕಿಸಿದ ಧ್ರುವ್ ರಾಠಿ; ಸಿನಿಮಾವನ್ನು ಸಮರ್ಥಿಸಿಕೊಂಡ ನಟರು

ಹೊಸದಿಲ್ಲಿ: ಒಂದೆಡೆ ವೀಡಿಯೋ ಬ್ಲಾಗರ್ ಧ್ರುವ್ ರಾಠಿ ‘ಧುರಂಧರ್’ ಸಿನಿಮಾದ ರಾಜಕೀಯ ಸಂದೇಶವನ್ನು ‘ಸುಳ್ಳು ಪ್ರಚಾರಾಭಿಯಾನ” ಎಂದು ಟೀಕಿಸಿದ್ದಾರೆ. ಮತ್ತೊಂದೆಡೆ ಸಿನಿಮಾದಲ್ಲಿ ನಟಿಸಿದ ಅಂಕಿತ್ ಸಾಗರ್ ಮತ್ತು ಡ್ಯಾನಿಷ್ ಪಾಂಡರ್ ಸಿನಿಮಾದ ಸಂದೇಶವನ್ನು ಸಮರ್ಥಿಸಿಕೊಂಡಿದ್ದಾರೆ. ರಣ್ವೀರ್ ಸಿಂಗ್ ನಟಿಸಿರುವ ಸಿನಿಮಾ ತನ್ನ ಬಿಗಿಯಾದ ನಿರೂಪಣೆ ಮತ್ತು ಸಾಹಸಕ್ಕೆ ಪ್ರಶಂಸೆ ಗಳಿಸಿದೆ. ಜಾಗತಿಕವಾಗಿ ಬಾಕ್ಸ್ ಆಫೀಸ್ನಲ್ಲಿ ರೂ 800 ಕೋಟಿಗೂ ಹೆಚ್ಚು ಲಾಭಗಳಿಸಿದೆ. ಆದರೆ ಅದರ ರಾಜಕೀಯ ನಿರೂಪಣೆ ಮತ್ತು ನಿಜ ಜೀವನದ ಘಟನೆಗಳನ್ನು ನಿರೂಪಿಸಿರುವ ರೀತಿಗೆ ಸಾಕಷ್ಟು ಚರ್ಚೆಗೆ ಒಳಪಟ್ಟಿದೆ. ಮೂರು ಭಯೋತ್ಪಾದನಾ ಅಧ್ಯಾಯಗಳಾದ 1999ರ ಐಸಿ 814 ಹೈಜಾಕ್, 2001ರ ಸಂಸತ್ತಿನ ದಾಳಿ ಮತ್ತು 2008ರ ನವೆಂಬರ್ 11ರ ಮುಂಬೈ ದಾಳಿಯ ಪ್ರಕರಣಗಳನ್ನು ಬಿಂಬಿಸಿರುವ ಬಗ್ಗೆ ಬಹಳಷ್ಟು ಚರ್ಚೆಗಳಾಗಿವೆ. ಈ ಮೊದಲು ನಟ ಹೃತಿಕ್ ರೋಶನ್ ‘ಧುರಂಧರ್’ ಸಿನಿಮಾವನ್ನು ಪ್ರಶಂಸಿಸಿದರೂ, ಅದರಲ್ಲಿನ ರಾಜಕೀಯವನ್ನು ಒಪ್ಪಿಕೊಳ್ಳುವುದಿಲ್ಲ ಎಂದು ಹೇಳಿದ್ದರು. ‘ಧುರಂಧರ್’ ಬಗ್ಗೆ ಧ್ರುವ್ ರಾಠಿ ಏನು ಹೇಳಿದ್ದಾರೆ? ಇದೀಗ ವೀಡಿಯೊ ಬ್ಲಾಗರ್ ಧ್ರುವ್ ರಾಠಿ ಆಧಿತ್ಯ ಧರ್ ಸಿನಿಮಾ ಕುರಿತು ಹೊಸ ವೀಡಿಯೊ ಪ್ರಸಾರ ಮಾಡಿದ್ದಾರೆ. “ಧುರಂಧರ್ ನಿರ್ದೇಶಕ ಆದಿತ್ಯ ಧರ್ ಸಿನಿಮಾದಲ್ಲಿ ಸುಳ್ಳು ತುಂಬಿದ್ದಾರೆ ಮತ್ತು ಅಸಂಬದ್ಧ ಪ್ರಚಾರಾಭಿಯಾನವನ್ನು ಮಾಡುತ್ತಿದ್ದಾರೆ” ಎಂದು ಧ್ರುವ್ ರಾಠಿ ಹೇಳಿದ್ದಾರೆ. ಇದಕ್ಕೆ ಮೊದಲು ಟ್ರೈಲರ್ ಹೊರಬಂದಿದ್ದಾಗಲೂ ಧ್ರುವ್ ಅವರು ಸಿನಿಮಾದಲ್ಲಿನ ಹಿಂಸೆಯನ್ನು ಟೀಕಿಸಿದ್ದರು. ಧ್ರುವ್ ರಾಠಿ ಸಿನಿಮಾವನ್ನು ಅಪಾಯಕಾರಿ ಎಂದು ಹೇಳಿದ್ದಾರೆ. “ಚೆನ್ನಾಗಿ ನಿರೂಪಿಸಲಾದ ಪ್ರಚಾರಾಭಿಯಾನ ಅತಿ ಅಪಾಯಕಾರಿ. ‘ದ ತಾಜ್ ಸ್ಟೋರಿ’ ಮತ್ತು ‘ಬಂಗಾಳಿ’ ಸಿನಿಮಾಗಳು ಅಪಾಯಕಾರಿಯಲ್ಲ, ಏಕೆಂದರೆ ಅವುಗಳು ಕೆಟ್ಟ ಸಿನಿಮಾಗಳಾಗಿದ್ದವು. ಆದರೆ ‘ಧುರಂಧರ್’ ಜನರನ್ನು ತೊಡಗಿಸಿಕೊಳ್ಳುತ್ತಿರುವ ಸಿನಿಮಾ. ರಣ್ವೀರ್ ಸಿಂಗ್ ಸಿನಿಮಾ ‘ಕಾಲ್ಪನಿಕ’ ಎಂದು ಹೇಳಿಕೊಳ್ಳುತ್ತಿದ್ದರೂ, ಅದೊಂದು ಸಿನಿಮಾ ಮಾತ್ರವಲ್ಲ. ಸಮಸ್ಯೆ ಏನೆಂದರೆ, ಸಿನಿಮಾ ಪದೇಪದೆ ನಿಜ ಜೀವನದ ಘಟನೆಗಳಿಂದ ಸ್ಫೂರ್ತಿ ಪಡೆದಿರುವುದಾಗಿ ತೋರಿಸುತ್ತದೆ. ತನ್ನ ಟ್ರೈಲರ್ನಲ್ಲೂ ಅದನ್ನೇ ಹೇಳಿದೆ. 26/11 ದಾಳಿಯನ್ನು ತೋರಿಸುವಾಗ ಭಯೋತ್ಪಾದಕರ ನಡುವಿನ ನೈಜ ಆಡಿಯೋ ರೆಕಾರ್ಡಿಂಗ್ ಗಳನ್ನು ತೋರಿಸಲಾಗಿದೆ. ಪಾಕಿಸ್ತಾನದ ಲ್ಯಾರಿಯಲ್ಲಿರುವ ನೈಜ ಗ್ಯಾಂಗ್ ಸ್ಟರ್ ಗಳು ಮತ್ತು ಪೊಲೀಸರನ್ನು ತೋರಿಸಲಾಗಿದೆ” ಎಂದು ಅವರು ಹೇಳಿದ್ದಾರೆ. ‘ಧುರಂಧರ್’ ಸಿನಿಮಾ ಒಂದು ಗುಪ್ತಚರನ ಕತೆ ಇರುವ ಸಿನಿಮಾ. ಪಾಕಿಸ್ತಾನದ ಗ್ಯಾಂಗ್ ಗಳ ಜೊತೆಗೂಡಿದ ಗೂಢಾಚಾರ ಭಯೋತ್ಪಾದನಾ ಜಾಲವನ್ನು ಅದರೊಳಗಿದ್ದುಕೊಂಡೇ ತೊಡೆದುಹಾಕಲು ಪ್ರಯತ್ನಿಸುತ್ತಾನೆ. ಸಿನಿಮಾದಲ್ಲಿ ರಣ್ವೀರ್ ಸಿಂಗ್ ಜೊತೆಗೆ ಅಕ್ಷಯ್ ಖನ್ನಾ, ಆರ್ ಮಾಧವನ್, ಅರ್ಜುನ್ ರಾಂಪಾಲ್ ಮತ್ತು ಸಂಜಯ್ ದತ್ ನಟಿಸಿದ್ದಾರೆ. ಸಿನಿಮಾ 16 ದಿನಗಳಲ್ಲಿ 800 ಕೋಟಿ ರೂ. ಲಾಭ ಮಾಡಿದೆ. ►ಭಾರತದ ಸ್ಥಿತಿ ಎಂದ ಅಂಕಿತ್ ಸಾಗರ್ ನಟ ಅಂಕಿತ್ ಸಾಗರ್ ಸಿನಿಮಾದಲ್ಲಿ ಜಾವೆನ್ ಖಾನಾನಿ ಪಾತ್ರವನ್ನು ನಿರ್ವಹಿಸಿದ್ದಾರೆ. ಸಿನಿಮಾದಲ್ಲಿ ಮಾಧವನ್ ಪಾತ್ರವು ಭಾರತದ NSA (ರಾಷ್ಟ್ರೀಯ ಭದ್ರತಾ ಏಜೆನ್ಸಿ) ಮುಖ್ಯಸ್ಥ ಅಜಿತ್ ದೋವಲ್ ಮೇಲೆ ರೂಪಿಸಲಾಗಿದೆ. ಆ ಪಾತ್ರವು, “ಒಬ್ಬ ಹಿಂದೂಸ್ತಾನಿ ಮತ್ತೊಬ್ಬ ಹಿಂದೂಸ್ತಾನಿಯ ಶತ್ರು” ಎನ್ನುವ ಸಂಭಾಷಣೆಯಿದೆ. ಇದು ಧರ್ ಅಜೆಂಡಾವನ್ನು ತೋರಿಸುತ್ತದೆ. ನಟ ಅಂಕಿತ್ ತಾನು ರಾಜಕೀಯದಿಂದ ದೂರವಾಗಿರುವುದಾಗಿ ಹೇಳಿದರೂ, “ಭಾರತದಲ್ಲಿ ಈಗಿನ ಸ್ಥಿತಿ ಹಾಗಿದೆ. ಇದನ್ನು ಬಹಳ ಸಂಶೋಧನೆ ಮಾಡಿ ನಿರ್ದೇಶಕರು ತೋರಿಸಿರಬಹುದು. ನೋಟು ಅಮಾನ್ಯೀಕರಣ ಆಗಿದೆ. ಏನೋ ಕಾರಣ ಇರಬಹುದು. ದೇಶದಲ್ಲಿ ಬಹಳಷ್ಟು ಘಟನೆಗಳು ನಡೆದಿವೆ. ಏನೋ ಸಂಭವಿಸಿರಬಹುದು” ಎಂದು ಹೇಳಿದ್ದಾರೆ. ►26/11 ಅನ್ನು ನೀವು ಸುಳ್ಳೆಂದು ಹೇಳಲಾಗದು ಎಂದ ನಟ ರಾಜಕೀಯ ನಿರೂಪಣೆಯ ಬಗ್ಗೆ ಅನೇಕರು ಅಧಿತ್ಯ ಧರ್ ಸಿನಿಮಾವನ್ನು ಟೀಕಿಸಿದ್ದಾರೆ. ಹೃತಿಕ್ ಅವರೂ ರಾಜಕೀಯ ನಿರೂಪಣೆ ಒಪ್ಪಿಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ. ಆದರೆ ಸಿನಿಮಾದಲ್ಲಿ ರೆಹಮಾನ್ ಡಕಾಯಿತ್ ಸೋದರ ಸಂಬಂಧಿ ಉಜೈರ್ ಬಲೋಚ್ ಪಾತ್ರ ನಿರ್ವಹಿಸಿದ ನಟ ಡ್ಯಾನಿಷ್ ಪಾಂಡರ್ India TV ಜೊತೆಗೆ ಮಾತುಕತೆಯಲ್ಲಿ, “ಇದು ಬಹಳ ವಿಷಯಾತ್ಮಕವಾಗಿದೆ. ನಿಮಗೆ ಕೆಲವು ಇಷ್ಟವಾಗಬಹುದು ಮತ್ತು ನನಗೆ ಇಷ್ಟವಾಗದೆ ಇರಬಹುದು. ಇವುಗಳೆಲ್ಲ ಸಂಶೋಧನೆಯಿಂದ ತಿಳಿದು ಬಂದ ವಿಷಯ. 26/11 ಆಗಿರುವುದನ್ನು ನೀವು ತಡೆಯಲಾಗದು. ಪರದೆಯ ಮೇಲೆ ಭಯೋತ್ಪಾದಕರ ಧ್ವನಿಗಳಿವೆ. ಅದು ನಿಮಗೆ ಬಹಳ ಆತಂಕ ತರುತ್ತದೆ ಮತ್ತು ಹತಾಶೆಯನ್ನು ಉಂಟು ಮಾಡುತ್ತದೆ. ಅದೇ ಅವರು ಮಾಡಿರುವುದು” ಎಂದು ಅಭಿಪ್ರಾಯಪಟ್ಟಿದ್ದಾರೆ. “ಆ ಸಂದರ್ಭದಲ್ಲಿ ಭಯೋತ್ಪಾದಕರ ಕೈಗೆ ಸಿಲುಕಿದ ಸಂತ್ರಸ್ತರ ಬಗ್ಗೆ ಅನುಭೂತಿ ಮೂಡುತ್ತದೆ. ಬಹಳಷ್ಟು ಸಂತ್ರಸ್ತರು ಇದ್ದರು. ನಾವು ಮಾಧ್ಯಮದಲ್ಲಿ ನೋಡುತ್ತಿದ್ದಂತೆಯೇ ಎಲ್ಲವೂ ನಡೆಯುತ್ತದೆ. ಸಂತ್ರಸ್ತರ ಪಾಡು ಏನೆಂದು ನಮಗೆ ಅರ್ಥವಾಗುವುದಿಲ್ಲ. ಆದರೆ ಧ್ವನಿ ಸುರುಳಿಗಳನ್ನು ಕೇಳಿದಾಗ ತಕ್ಷಣ ಅನುಭೂತಿ ವ್ಯಕ್ತವಾಗುತ್ತದೆ. ನೀವು ಆ ಸ್ಥಾನದಲ್ಲಿದ್ದರೆ ಏನಾಗುತ್ತಿತ್ತು? ಅನುಭೂತಿ ಪ್ರಕಟಿಸುವುದು ಅತಿ ಮುಖ್ಯವಾಗುತ್ತದೆ” ಎನ್ನುತ್ತಾರೆ ಡ್ಯಾನಿಷ್.

ವಾರ್ತಾ ಭಾರತಿ 23 Dec 2025 12:42 pm

Government Employees: ಹಳೆ ಪಿಂಚಣಿ ಯೋಜನೆ ಜಾರಿ: ಸರ್ಕಾರಕ್ಕೆ ಎಚ್ಚರಿಕೆ ಕೊಟ್ಟ ಸರ್ಕಾರಿ ನೌಕರರು

ಬೆಂಗಳೂರು: ಕರ್ನಾಟಕದಲ್ಲಿ ಹಳೆ ಪಿಂಚಣಿ ಜಾರಿ ಆಗಬೇಕು ಎಂಬುದು ಸರ್ಕಾರಿ ನೌಕಕರರ ಬಹು ದಿನಗಳ ಬೇಡಿಕೆ. 2004ರಲ್ಲಿ ಕೇಂದ್ರ ಸರ್ಕಾರ ಹಳೆ ಪಿಂಚಣಿ ಯೋಜನೆಯನ್ನು ರದ್ದುಗೊಳಿಸಿ ರಾಷ್ಟ್ರೀಯ ಪಿಂಚಣಿ ಯೋಜನೆಯನ್ನು ದೇಶದಾದ್ಯಂತ ಅನ್ವಯಿಸಿತು. ಅಂದಿನಿಂದಲೂ ಸರ್ಕಾರಿ ನೌಕರರು ಹಳೆ ಪಿಂಚಣಿ ಯೋಜನೆಯ ಮರು ಜಾರಿಗೆ ರಾಜ್ಯ ಸರ್ಕಾರಿ ನೌಕರರು ಒತ್ತಾಯಿಸುತ್ತಲೇ ಬಂದಿದ್ದಾರೆ. ಇನ್ನೂ ಸರ್ಕಾರಿಬ ನೌಕರರ ಬೇಡಿಕೆ

ಒನ್ ಇ೦ಡಿಯ 23 Dec 2025 12:31 pm

'ಸೈಕ್ಲೋನ್ ಡಿಟ್ವಾ'ದಿಂದ ಹಾನಿ: ಶ್ರೀಲಂಕಾಗೆ 450 ಮಿಲಿಯನ್ ಡಾಲರ್ ನೆರವು ಘೋಷಿಸಿದ ಭಾರತ

'ಸೈಕ್ಲೋನ್ ಡಿಟ್ವಾ' ಚಂಡಮಾರುತದಿಂದ ಉಂಟಾದ ಹಾನಿ ಸರಿಪಡಿಸಲು ಭಾರತವು ಶ್ರೀಲಂಕಾಗೆ 450 ಮಿಲಿಯನ್ ಡಾಲರ್ ನೆರವು ಘೋಷಿಸಿದೆ. ಇದರಲ್ಲಿ 350 ಮಿಲಿಯನ್ ಡಾಲರ್ ರಿಯಾಯಿತಿ ಸಾಲ ಮತ್ತು 100 ಮಿಲಿಯನ್ ಡಾಲರ್ ಅನುದಾನ ಸೇರಿದೆ. ಶ್ರೀಲಂಕಾದ ವಿದೇಶಾಂಗ ಸಚಿವರು ಭಾರತದ ಸಹಾಯವನ್ನು ಶ್ಲಾಘಿಸಿದ್ದಾರೆ. ಈ ನೆರವು ಮೂಲಸೌಕರ್ಯ, ವಸತಿ ಮತ್ತು ಕೃಷಿ ಕ್ಷೇತ್ರಗಳ ಪುನರ್ನಿರ್ಮಾಣಕ್ಕೆ ಬಳಕೆಯಾಗಲಿದೆ.

ವಿಜಯ ಕರ್ನಾಟಕ 23 Dec 2025 12:30 pm

ದ್ವೇಷ ಭಾಷಣ ವಿರೋಧಿ ಕಾಯ್ದೆಯ ವಿರುದ್ಧ ಬಿಜೆಪಿ ಅಖಾಡಕ್ಕೆ: ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣ ಎಂದು ವಾಗ್ದಾಳಿ

ದ್ವೇಷ ಭಾಷಣ ವಿರೋಧಿ ಕಾಯ್ದೆಯ ಮೂಲಕ ಕಾಂಗ್ರೆಸ್ ಸರ್ಕಾರವು ಪ್ರತಿಪಕ್ಷಗಳು, ಮಾಧ್ಯಮದವರ ಮೇಲೆ ನಿಯಂತ್ರಣ ಹೇರುವುದು, ಹೆದರಿಸುವ ಕೆಲಸವನ್ನು ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ. ನಮ್ಮನ್ನು, (ಬಿಜೆಪಿ), ನಮ್ಮ ಸಂಘ ಸಂಸ್ಥೆ, ಕನ್ನಡ ಸಂಘಟನೆಗಳನ್ನು ದಮನ ಮಾಡಲು ಸರಕಾರ ಹೊರಟಿದೆ ಎಂದು ಗಮನ ಸೆಳೆಯುತ್ತಿದ್ದೇವೆ. ಇದರ ವಿರುದ್ಧ ಜಾಗೃತಿ ಮೂಡಿಸಲು ಈ ಪ್ರತಿಭಟನೆ ನಡೆಸಿದ್ದೇವೆ ಎಂದು ಬಿಜೆಪಿ ಹೇಳಿಕೊಂಡಿದೆ. ಈ ಕುರಿತಾಗಿ ರಾಜ್ಯಪಾಲರಿಗೆ ಬಿಜೆಪಿ ಮನವಿ ಸಲ್ಲಿಸಿದೆ. ಮತ್ತಷ್ಟು ವಿವರಗಳು ಇಲ್ಲಿವೆ.

ವಿಜಯ ಕರ್ನಾಟಕ 23 Dec 2025 12:25 pm

Vittal | ಬಾಂಗ್ಲಾ ಪ್ರಜೆಗೆ ಪಾಸ್ ಪೋರ್ಟ್ ಮಾಡಲು ಸಹಾಯ ಮಾಡಿದ ಆರೋಪ; ವಿಟ್ಲ ಪೊಲೀಸ್‌ ಕಾನ್ಸ್ಟೇಬಲ್ ಪ್ರದೀಪ್ ಬಂಧನ

ಬಂಟ್ವಾಳ: ಶಂಕಿತ ಬಾಂಗ್ಲಾ ಪ್ರಜೆಗೆ ಪಾಸ್ ಪೋರ್ಟ್ ಮಾಡಿಕೊಡಲು ಸಹಾಯ ಮಾಡಿದ ಆರೋಪದ ಮೇಲೆ ವಿಟ್ಲ ಪೊಲೀಸ್‌ ಠಾಣೆಯ ಸಿಬ್ಬಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ವಿಟ್ಲ ಪೊಲೀಸ್‌ ಠಾಣೆಯ ಕಾನ್ಸ್ಟೇಬಲ್ ಪ್ರದೀಪ್ ಎಂದು ಗುರುತಿಸಲಾಗಿದೆ. ಶಂಕಿತ ಬಾಂಗ್ಲಾ ಪ್ರಜೆ ಶಕ್ತಿದಾಸ್ ಎಂಬಾತನಿಗೆ ಪಾಸ್ ಪೋರ್ಟ್ ಪಡೆಯಲು ಸಹಾಯ ಆರೋಪ ಇವರ ಮೇಲಿದೆ. ಅದೇ  ಠಾಣೆಯ ಕಾನ್ಸ್ಟೇಬಲ್ ಸಾಬೀ ಮಿರ್ಜಿ ನೀಡಿದ ದೂರಿನ ಆಧಾರದ ಮೇಲೆ ಕಾನ್ಸ್ಟೇಬಲ್ ಪ್ರದೀಪ್ ನನ್ನು ಬಂಧಿಸಲಾಗಿದೆ ಎಂದು ತಿಳಿದು ಬಂದಿದೆ. ಈ ಹಿಂದೆ ಶಕ್ತಿದಾಸ್ ನೀಡಿದ್ದ ಪಾಸ್ ಪೋರ್ಟ್ ಅರ್ಜಿಯನ್ನು ಸಾಬೀ ಮಿರ್ಜಿ ತಿರಸ್ಕರಿಸಿದ್ದರು. ಆದರೆ ಇತ್ತೀಚೆಗೆ ಸಾಬೀ ಮಿರ್ಜಿ ಕರ್ತವ್ಯ ನಿಮಿತ್ತ ಬೇರೆ ಕಡೆಗೆ ಹೋದಾಗ ಕಾನ್ಸ್ಟೇಬಲ್ ಪ್ರದೀಪ್ ಸಹಾಯ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಆರೋಪಿ ಕಾನ್ಸ್ಟೇಬಲ್ ಪ್ರದೀಪ್ ನನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.

ವಾರ್ತಾ ಭಾರತಿ 23 Dec 2025 12:12 pm

ಬರ್ಲಿನ್‌ನಲ್ಲಿ ನಿಂತು ಭಾರತದ ಪ್ರಜಾಪ್ರಭುತ್ವ ಅಪಾಯದಲ್ಲಿದೆ ಎಂದ ರಾಹುಲ್‌ ಗಾಂಧಿ; ಕಾಂಗ್ರೆಸ್‌ Anti Democrat ಎಂದ ಬಿಜೆಪಿ!

ಜರ್ಮನಿ ಪ್ರವಾಸದಲ್ಲಿರುವ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ, ಭಾರತದ ಪ್ರಜಾಪ್ರಭುತ್ವದ ಕುರಿತು ನೀಡಿರುವ ಹೇಳಿಕೆ, ಆಡಳಿತಾರೂಢ ಬಿಜೆಪಿಯನ್ನು ತೀವ್ರವಾಗಿ ಕೆರಳಿಸಿದೆ. ಬರ್ಲಿನ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ, ರಾಹುಲ್‌ ಗಾಂಧಿ ಅವರು ಸಾಂವಿಧಾನಿಕ ಸಂಸ್ಥೆಗಳ ಮೇಲೆ ಸರ್ಕಾರದ ನಿಯಂತ್ರಣ, ಚುನಾವಣಾ ಅಕ್ರಮಗಳ ಬಗ್ಗೆ ಸುದೀರ್ಘವಾಗಿ ಮಾತನಾಡಿದ್ದಾರೆ. ರಾಹುಲ್‌ ಅವರ ಆರೋಪಗಳನ್ನು ಸ್ಪಷ್ಟವಾಗಿ ತಳ್ಳಿಹಾಕಿರುವ ಬಿಜೆಪಿ, ಕರ್ನಾಟಕದಲ್ಲಿ ಪ್ರಜಾಪ್ರಭುತ್ವ ಮಾರ್ಗದಲ್ಲಿ ಆಯ್ಕೆಯಾದ ಕಾಂಗ್ರೆಸ್‌ ಸರ್ಕಾರದ ಸ್ಥಿತಿಗತಿ ಗಮನಿಸುವಂತೆ ರಾಹುಲ್‌ ಗಾಂಧಿ ಅವರಿಗೆ ತಿರುಗೇಟು ನೀಡಿದೆ.

ವಿಜಯ ಕರ್ನಾಟಕ 23 Dec 2025 12:07 pm

ಹೈಜಂಪ್ ಮಾಡಿದ ಚಿನ್ನ; 10 ಗ್ರಾಂ ಚಿನ್ನದ ಬೆಲೆ 1.5 ಲಕ್ಷ ರೂ.ನತ್ತ!

ಮಂಗಳೂರಿನಲ್ಲಿ ಚಿನಿವಾರ ಪೇಟೆ ಹೇಗಿದೆ?

ವಾರ್ತಾ ಭಾರತಿ 23 Dec 2025 12:06 pm

ಭ್ರಷ್ಟರಿಗೆ ಲೋಕಾಯುಕ್ತ ಬಲೆ: ಕಾರವಾರ, ಬಾಗಲಕೋಟೆ, ವಿಜಯಪುರ, ಸಿಂಧನೂರಲ್ಲಿ ಏಕಕಾಲಕ್ಕೆ ದಾಳಿ

ಬಾಗಲಕೋಟೆ, ರಾಯಚೂರು ಸೇರಿದಂತೆ ರಾಜ್ಯದ ಹಲವೆಡೆ ಲೋಕಾಯುಕ್ತ ಅಧಿಕಾರಿಗಳು ಆದಾಯಕ್ಕಿಂತ ಅಧಿಕ ಆಸ್ತಿ ಗಳಿಕೆ ಆರೋಪದ ಮೇಲೆ ದಾಳಿ ನಡೆಸಿದ್ದಾರೆ. ಬಾಗಲಕೋಟೆ ಜಿಪಂ ಯೋಜನಾ ನಿರ್ದೇಶಕ ಶ್ಯಾಮಸುಂದರ್ ಕಾಂಬಳೆ, ರಾಯಚೂರು ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆಯ ಎಇಇ ಬಿ.ವಿಜಯಲಕ್ಷ್ಮಿ ಹಾಗೂ ಇಬ್ಬರು ಇತರ ಅಧಿಕಾರಿಗಳ ಮನೆ ಮತ್ತು ಕಚೇರಿಗಳಲ್ಲಿ ಪರಿಶೀಲನೆ ನಡೆಯುತ್ತಿದೆ.

ವಿಜಯ ಕರ್ನಾಟಕ 23 Dec 2025 11:57 am

ಎಸ್‌‌ ಐ ರ್ ನಾಗರಿಕ ಪ್ರಶ್ನೆ ಕೇಳುವ ನಾಗರಿಕ

ಆಗಸ್ಟ್ ನಿಂದ ನವೆಂಬರ್ ವರೆಗೆ ರಾಹುಲ್ ಗಾಂಧಿ ಮತದಾರರ ಪಟ್ಟಿಯ ಬಗ್ಗೆ ಹಲವು ಪ್ರಶ್ನೆಗಳನ್ನು ಕೇಳಿದರು. ಆ ಗಂಭೀರ ಪ್ರಶ್ನೆಗಳಿಗೆ ಉತ್ತರ ಕೊಡುವುದನ್ನು ಬಿಟ್ಟು ಅವುಗಳನ್ನು ತಮಾಷೆ ಮಾಡಲಾಗುತ್ತಿದೆ. ಚುನಾವಣಾ ಆಯುಕ್ತರ ವಿರುದ್ಧ ಯಾವುದೇ ಕೇಸು ದಾಖಲಾಗುವುದಿಲ್ಲ ಎಂದು ಮೋದಿ ಸರಕಾರ ಕಾನೂನು ತಂದ ಮೇಲೆ ಚುನಾವಣಾ ಆಯೋಗಕ್ಕೂ ಯಾವುದೇ ಭಯವಿಲ್ಲ. ಕನ್ನಡಕ್ಕೆ: ನೂರ್ ಜಹಾನ್ ಬಿಹಾರ ಮೂಲದ ರವೀಶ್ ಕುಮಾರ್ ಬೆಳೆದಿದ್ದು ದಿಲ್ಲಿಯಲ್ಲಿ. ಇಂದು ದೇಶದ ಮಾಧ್ಯಮ ರಂಗದ ಅತ್ಯಂತ ಚಿರಪರಿಚಿತ ಹೆಸರು. ಎನ್‌ಡಿಟಿವಿ ಇಂಡಿಯಾ ಹಿಂದಿ ವಾಹಿನಿಯ ಹಿರಿಯ ಕಾರ್ಯನಿರ್ವಾಹಕ ಸಂಪಾದಕರಾಗಿದ್ದವರು. ಪ್ರತಿರಾತ್ರಿ ಇವರು ನಡೆಸಿಕೊಡುವ ಪ್ರೈಮ್ ಟೈಮ್ ಶೋ ದೇಶದ ಪ್ರಮುಖ ರಾಜಕೀಯ, ಸಾಮಾಜಿಕ, ಆರ್ಥಿಕ ವಿದ್ಯಮಾನ ಗಳ ಕುರಿತ ಅತ್ಯಂತ ನಿಖರ ಮಾಹಿತಿ ಮತ್ತು ಪ್ರಖರ ವಿಶ್ಲೇಷಣೆಗೆ ಮನೆಮಾತಾಗಿತ್ತು. ಎನ್‌ಡಿಟಿವಿ ಅದಾನಿ ತೆಕ್ಕೆಗೆ ಸರಿದ ಬೆನ್ನಿಗೇ, ಅಷ್ಟೇ ದಿಟ್ಟತನದಿಂದ ಅಲ್ಲಿಂದ ಹೊರಬಂದು ಪತ್ರಿಕೋದ್ಯಮಕ್ಕೆ ತನ್ನ ಬದ್ಧತೆಯನ್ನು ಪ್ರದರ್ಶಿಸಿ ಸುದ್ದಿಯಾದರು. ಅನುಭವೀ ವರದಿಗಾರ, ಆಕರ್ಷಕ ಹಿಂದಿ ನಿರೂಪಕ, ಸತ್ಯ ಹೊರಗೆಳೆಯುವ ಸಂದರ್ಶಕ, ಕಟುಸತ್ಯವನ್ನು ಮುಂದಿಡುವ ವಿಶ್ಲೇಷಕ, ಖ್ಯಾತ ಲೇಖಕ, ನೇರ ಮಾತುಗಳ ರಾಜಕೀಯ ಚಿಂತಕರಾಗಿ ಸರಕಾರಗಳ ನಿದ್ದೆಗೆಡಿಸಿದವರು, ಜನರನ್ನು ಬಡಿದು ಎಚ್ಚರಿಸಿದವರು ಮತ್ತು ಸರಕಾರದ ಅಂಧ ಭಕ್ತರ ಕೆಂಗಣ್ಣಿಗೆ ಗುರಿಯಾದವರು ಮ್ಯಾಗ್ಸೆಸೆ ಪುರಸ್ಕೃತ ರವೀಶ್ ಕುಮಾರ್. ಸಂಸತ್ತು, ರಾಷ್ಟ್ರಪತಿ ಭವನ, ಪ್ರಧಾನಮಂತ್ರಿಗಳ ನಿವಾಸ ಹಾಗೂ ವಿವಿಧ ಸಚಿವಾಲಯಗಳಿಂದ ಮಾತ್ರ ದಿಲ್ಲಿ ರಾಜಧಾನಿಯಾಗಿಲ್ಲ. ಇಡೀ ದೇಶದಿಂದ ದಿಲ್ಲಿಗೆ ಬಂದಿರುವ ಜನರ ಪ್ರಜ್ಞಾವಂತಿಕೆ ಹಾಗೂ ಸಕ್ರಿಯ ಚಟುವಟಿಕೆಗಳಿಂದಲೂ ದಿಲ್ಲಿ ರಾಜಧಾನಿಯಾಗಿ ರೂಪುಗೊಂಡು ಇಡೀ ದೇಶದ ಗಮನ ಸೆಳೆಯುತ್ತಿದೆ. ಆದರೆ 2025ರ ವರ್ಷದಲ್ಲಿ ದಿಲ್ಲಿ ನಾಗರಿಕರ ರಾಜಧಾನಿ ಎಂಬ ಹೆಗ್ಗಳಿಕೆಯನ್ನು ಬಿಟ್ಟು ಬಿಟ್ಟ ಹಾಗೆ ಕಾಣುತ್ತಿದೆ. ಇಲ್ಲಿನ ಬೀದಿಗಳಲ್ಲಿ ನಡೆದು ನೋಡಿ, ಯಾವಾಗ ನೋಡಿದರೂ ಬರೀ ಹೊಗೆ ಆವರಿಸಿರುತ್ತದೆ, ಮಬ್ಬು ಕವಿದಿರುತ್ತದೆ. ಗಾಳಿಯಲ್ಲಿ ಮಾಲಿನ್ಯ ಮಿತಿ ಮೀರಿರುವುದರಿಂದ ಸೂರ್ಯನ ಬೆಳಕು ಬೀದಿಗಳ ಮೇಲೆ ಬೀಳುತ್ತಿಲ್ಲ. ಈಗಂತೂ ಜನ ಮಾಸ್ಕ್ ಹಾಕಿಕೊಳ್ಳುವುದನ್ನೂ ಬಿಟ್ಟು ಬಿಟ್ಟಿದ್ದಾರೆ. ಅಂದರೆ ಅವರೀಗ ಗಾಳಿಯಲ್ಲಿ ಸೇರಿರುವ ವಿಷದ ಬಗ್ಗೆ ಯೋಚಿಸುವುದನ್ನೇ ನಿಲ್ಲಿಸಿಬಿಟ್ಟಿದ್ದಾರೆ. ಇರುವ ಗಾಳಿಯನ್ನೇ ಅವರು ಉಸಿರಾಡುತ್ತಿದ್ದಾರೆ.   ಆದರೆ ದಿಲ್ಲಿಯ ಜನರ ಈ ಸಹನಶೀಲತೆ ಭಯ ಸೃಷ್ಟಿಸುತ್ತಿದೆ. ಕೊನೆಗೆ ಜನರ ಶ್ವಾಸಕೋಶವೂ ಇಂಗಾಲ ಹಾಗೂ ನೈಟ್ರೋಜನ್ ಗಳ ಸಣ್ಣ ಸಣ್ಣ ಕಣಗಳನ್ನು ಸಹಿಸುವ ಹಾಗೆ ಬದಲಾಗಿ ಬಿಡುತ್ತಾ, ಇಲ್ಲಿನ ಜನ ಕಾಲುವೆಯ ನೀರನ್ನೂ ಫಿಲ್ಟರ್ ಮಾಡದೆಯೇ ಕುಡಿಯಲು ಪ್ರಾರಂಭಿಸುತ್ತಾರಾ ಎಂಬ ಆತಂಕ ಕಾಡುತ್ತದೆ. ದಿಲ್ಲಿಯ ಎರಡು ಕೋಟಿ ಜನರಲ್ಲಿ ಎರಡು ನೂರು ಜನ ಧ್ವನಿ ಎತ್ತಿದಾಗ ಅದನ್ನು ಪೊಲೀಸರು ಅಲ್ಲಿಯೇ ದಮನಿಸಿಬಿಟ್ಟರು. ಅಲ್ಲಿಗೆ ಇಡೀ ರಾಜಧಾನಿ ಮೌನವಾಯಿತು. ಎಲ್ಲರಿಗೂ ಗಾಳಿ ಬೇಕು. ಆದರೆ ಗಾಳಿಗಾಗಿ ಎಲ್ಲರೂ ಮಾತಾಡಲ್ಲ. ಹಾಗಾಗಿ ಈಗ ದಿಲ್ಲಿ ಭಾರತದ ಜನರ ಪ್ರಜ್ಞಾವಂತಿಕೆಯ ಸಂಕೇತವಾಗಿದ್ದ ರಾಜಧಾನಿಯಾಗಿ ಉಳಿದಿಲ್ಲ. ಇಲ್ಲಿ ವಿಚಾರಗಳ ಸ್ವಾತಂತ್ರ್ಯ ಒಂದು ಪಕ್ಷದ ವಿಚಾರಧಾರೆಯ ಗುಲಾಮನಾಗಿ ಬಿಟ್ಟಿದೆ. ರಾಜಕೀಯ ಪಕ್ಷವೊಂದು ಸಿಟ್ಟು ಮಾಡಿಕೊಳ್ಳುತ್ತದೆ ಎಂದು ಜನ ಈಗ ಮಾತಾಡುವುದನ್ನೇ ನಿಲ್ಲಿಸಿಬಿಟ್ಟಿದ್ದಾರೆ. ಹೊಸ ಯೋಚನೆ, ಪ್ರಶ್ನಿಸುವುದು, ತಮ್ಮ ಬೇಡಿಕೆಗಳನ್ನು ಮಂಡಿಸುವುದು ಇತ್ಯಾದಿಗಳು ನಾಗರಿಕ ಜೀವನದಿಂದ ಕಾಣೆಯಾದರೆ ಆ ಜೀವನ ಜೈಲಿನ ಜೀವನ ಆಗಿಬಿಡುತ್ತದೆ. ಒಂದಿಡೀ ನಗರವನ್ನು ನೀವು ‘ಮ್ಯೂಟ್’ ನಲ್ಲಿ ನೋಡಿದಂತೆ ಭಾಸವಾಗುತ್ತದೆ. ಯಾರಾದರೂ ಬಂದ ಕೂಡಲೇ ನಾವು ವೀಕ್ಷಿಸುತ್ತಿದ್ದ ವೀಡಿಯೊದ ಧ್ವನಿಯನ್ನು ನಿಲ್ಲಿಸಿ ಆ ವೀಡಿಯೊ ಮಾತ್ರ ಹಾಗೇ ನಡೆಯುತ್ತಾ ಇರುವಂತೆ ದಿಲ್ಲಿ ಈಗ ‘ಮ್ಯೂಟ್’ ನಲ್ಲಿ ನಡೆಯುತ್ತಿರುವಂತೆ ಕಾಣುತ್ತಿದೆ. ದಿಲ್ಲಿಯ ಹೊರಗೆ ಬಿಹಾರದಲ್ಲಿ ಒಂದು ಕಾಲು ಕೋಟಿಗೂ ಹೆಚ್ಚು ಮಹಿಳೆಯರ ಖಾತೆಗಳಿಗೆ ತಲಾ ಹತ್ತು ಸಾವಿರ ರೂ. ಹಾಕಲಾಯಿತು. ಆ ದುಡ್ಡಿಗೆ ಮಹಿಳೆಯರು ತಮ್ಮ ಓಟು ಮಾರಿಬಿಟ್ಟರೆ ಅಥವಾ ವ್ಯಾಪಾರ ಮಾಡಲು ಎಂದು ಕೊಟ್ಟಿದ್ದನ್ನು ಅದಕ್ಕೇ ಬಳಸಿದರೇ? ಈ ಪ್ರಶ್ನೆಗಳ ಬಗ್ಗೆ ಈಗ ಯಾರೂ ತಲೆಕೆಡಿಸಿಕೊಂಡಿಲ್ಲ. ಆಗಸ್ಟ್‌ನಿಂದ ನವೆಂಬರ್‌ವರೆಗೆ ರಾಹುಲ್ ಗಾಂಧಿ ಮತದಾರರ ಪಟ್ಟಿಯ ಬಗ್ಗೆ ಹಲವು ಪ್ರಶ್ನೆಗಳನ್ನು ಕೇಳಿದರು. ಆ ಗಂಭೀರ ಪ್ರಶ್ನೆಗಳಿಗೆ ಉತ್ತರ ಕೊಡುವುದನ್ನು ಬಿಟ್ಟು ಅವುಗಳನ್ನು ತಮಾಷೆ ಮಾಡಲಾಗುತ್ತಿದೆ. ಚುನಾವಣಾ ಆಯುಕ್ತರ ವಿರುದ್ಧ ಯಾವುದೇ ಕೇಸು ದಾಖಲಾಗುವುದಿಲ್ಲ ಎಂದು ಮೋದಿ ಸರಕಾರ ಕಾನೂನು ತಂದ ಮೇಲೆ ಚುನಾವಣಾ ಆಯೋಗಕ್ಕೂ ಯಾವುದೇ ಭಯವಿಲ್ಲ. ಚುನಾವಣಾ ಆಯೋಗದ ಆ ಮೂವರು ಈಗ ಒಂದು ಪ್ರತ್ಯೇಕ ವರ್ಗವಾಗಿಬಿಟ್ಟಿದ್ದಾರೆ. ಅವರ ಕೆಲಸದಲ್ಲಿನ ಯಾವುದೇ ಲೋಪದೋಷಗಳ ಬಗ್ಗೆ ಈಗ ಯಾವುದೇ ಕಾನೂನು ಕ್ರಮ ಸಾಧ್ಯವಿಲ್ಲ.   ಚುನಾವಣಾ ಪ್ರಕ್ರಿಯೆ ಬಗ್ಗೆ ಅದೆಷ್ಟು ಪ್ರಶ್ನೆಗಳನ್ನು ಕೇಳಲಾಯಿತು? ಒಂದೇ ಒಂದು ಪ್ರಶ್ನೆಗೂ ಸರಿಯಾದ ಉತ್ತರ ಕೊಡಲಿಲ್ಲ. ಅಷ್ಟೇ ಅಲ್ಲ ಆ ಉತ್ತರ ಕೊಡುವ ಪ್ರಕ್ರಿಯೆಯಲ್ಲಿ ಎಲ್ಲೂ ನಾಗರಿಕರನ್ನು ಸೇರಿಸಿಕೊಳ್ಳಲಿಲ್ಲ. ಈಗ ನಮ್ಮ ಸಾಂವಿಧಾನಿಕ ಸಂಸ್ಥೆಗಳು ಉತ್ತರ ಕೊಡುವುದನ್ನೇ ನಿಲ್ಲಿಸಿಬಿಟ್ಟಿವೆ. ಜನರು ಪ್ರಶ್ನೆ ಕೇಳುವುದನ್ನೂ ಬಿಟ್ಟು ಬಿಟ್ಟಿದ್ದಾರೆ. ಜನರನ್ನು ಕೆವೈಸಿ ಅರ್ಜಿ ತುಂಬಿಸುವುದು ಹಾಗೂ ಎಸ್ ಐ ಆರ್‌ನಲ್ಲಿ ಹೆಸರು ಸೇರಿಸಲು ಆಧಾರ್ ನಂಬರ್ ತುಂಬಿಸುವುದರಲ್ಲಿ ಬಿಝಿ ಇಡಲಾಗಿದೆ. ನಾಗರಿಕರು ತಮ್ಮ ಗುರುತು ಸಾಬೀತು ಮಾಡುವಂತೆ ಹೇಳಲಾಗಿದೆ. ಅವರು ತಮ್ಮ ಗುರುತು ಸಾಬೀತಾಗಿದ್ದೇ ಸಾಧನೆ ಎಂದು ನಿಟ್ಟುಸಿರು ಬಿಡುತ್ತಿದ್ದಾರೆ. ನಾಗರಿಕ ಅಂದರೆ ಸರಕಾರದ ಮೇಲೆ ಕಣ್ಣಿಟ್ಟಿರುವ ಪ್ರಜ್ಞಾವಂತ ಎಂಬ ಅರ್ಥ ಈಗ ಉಳಿದಿಲ್ಲ. ಈಗಿನ ನಾಗರಿಕ ನೋಡುವುದನ್ನು, ಯೋಚಿಸುವುದನ್ನು, ಕೇಳುವುದನ್ನು, ಹೇಳುವುದನ್ನು ನಿಲ್ಲಿಸಿಬಿಟ್ಟಿದ್ದಾನೆ. ಭಾರತದ ನಾಗರಿಕರನ್ನು ನೀವು ಯಾವುದೇ ರೀತಿಯಲ್ಲಿ ಭಯ ಬೀಳಿಸಲು ಸಾಧ್ಯವಿಲ್ಲ. ಇಲ್ಲಿ ಪ್ರಜಾಪ್ರಭುತ್ವವೇ ಇಲ್ಲವಾಗಲಿದೆ ಎಂದು ನೀವು ನೂರು ಉದಾಹರಣೆ ಕೊಟ್ಟು ನೋಡಿ, ಆ ನಾಗರಿಕ ಮೌನವಾಗಿರುತ್ತಾನೆ. ಗಾಳಿಯಲ್ಲಿ ಪಿಎಂ 2.5 ಆದ ಬಗ್ಗೆ, ಶ್ವಾಸಕೋಶ, ಕಿಡ್ನಿ ಹಾಳಾಗುವ ಅಪಾಯದ ಬಗ್ಗೆ ನೀವು ನೂರು ಉದಾಹರಣೆ ಕೊಡಿ, ಆ ನಾಗರಿಕ ಮೌನವಾಗಿರುತ್ತಾನೆ. ಸಂಬಳ ಹೆಚ್ಚಾಗುತ್ತಿಲ್ಲ, ಉದ್ಯೋಗವೇ ಸಿಗುತ್ತಿಲ್ಲ ಆದರೂ ಆ ನಾಗರಿಕ ಮೌನವಾಗಿರುತ್ತಾನೆ. ಈಗ ಧಾರ್ಮಿಕ ಸಮಾವೇಶಗಳು ಹಾಗೂ ಹಬ್ಬಗಳ ಮೇಲೆ ಒಂದು ಪಕ್ಷದ ಕಬ್ಜಾ ಆಗಿಬಿಟ್ಟಿದೆ. ದೇಶದಲ್ಲಿ ಗೌರವ ಸ್ಥಾಪನೆಯ ಒಂದು ಭ್ರಮೆ ಸೃಷ್ಟಿಸಲಾಗಿದೆ. ನಾಗರಿಕ ಜೀವನದಲ್ಲಿ ಯಾವುದೇ ಗೌರವ ಉಳಿದಿಲ್ಲ. ಆದರೆ ಸಾಂಸ್ಕೃತಿಕ ಜೀವನದಲ್ಲಿ ಘನತೆ ಹಾಗೂ ಗೌರವ ಸ್ಥಾಪನೆಯ ನಾಟಕ ಮಾಡಲಾಗುತ್ತಿದೆ. ಧರ್ಮ ನೈತಿಕ ಶಕ್ತಿ ಕೊಡುತ್ತದೆ. ಆದರೆ ರಾಜಕೀಯದಲ್ಲಿ ಧರ್ಮದ ಬಳಕೆ ನೈತಿಕತೆ ಸ್ಥಾಪಿಸುವುದಕ್ಕಾಗಿ ಆಗುತ್ತಿಲ್ಲ. ರಾಜಕೀಯದಲ್ಲಿ ಆಗುತ್ತಿರುವ ಎಲ್ಲ ಅನೈತಿಕ ಆಟಗಳ ಮೇಲೆ ಪರದೆ ಹಾಕಲು ರಾಜಕಾರಣಿಗಳು ಹಣೆಗೆ ತಿಲಕ ಇಟ್ಟುಕೊಂಡು ಧಾರ್ಮಿಕರಂತೆ ಕಾಣಿಸಿಕೊಳ್ಳುತ್ತಿದ್ದಾರೆ. ಪ್ರಜಾಪ್ರಭುತ್ವದ ಮಹತ್ವದ ಸಂಸ್ಥೆಗಳಲ್ಲಿ ಆಗುತ್ತಿರುವ ಪಾಪ ಕಾರ್ಯಗಳಿಂದ ಬಚಾವಾಗಲು ಧರ್ಮವನ್ನು ಬಳಸಿಕೊಳ್ಳಲಾಗುತ್ತಿದೆ. ಧರ್ಮದ ಮೂಲಕ ಒಂದು ಸಮಾಜದಲ್ಲಿ ನೈತಿಕತೆ ಹಾಗೂ ಸತ್ಯದ ಬಲ ಕಾಣುತ್ತಿಲ್ಲ ಎಂದಾದರೆ ಆ ಸಮಾಜ ಧರ್ಮವನ್ನು ಪಾಲಿಸುತ್ತಿಲ್ಲ, ಬರೀ ಪಾಲಿಸುವ ನಾಟಕ ಮಾಡುತ್ತಿದೆ ಎಂದರ್ಥ. ಇವತ್ತಿನ ಭಾರತದಲ್ಲಿ ಸತ್ಯಕ್ಕೆ ಏನಾದರೂ ಸ್ಥಾನ ಇದೆಯೇ? ಸತ್ಯದ ಸಂಬಂಧ ಅನ್ವೇಷಣೆಯ ಜೊತೆಗಿದೆ. ಜಿಜ್ಞಾಸೆಯ ಜೊತೆಗಿದೆ. ಆದರೆ ರಾಜಧಾನಿ ದಿಲ್ಲಿಯ ಮೀಡಿಯಾ ಸತ್ಯದ ವಿರೋಧಿಯಾಗಿದೆ. ಅದು ಪ್ರಶ್ನೆ ಮಾಡುವುದೇ ಇಲ್ಲ. ಅನ್ವೇಷಣೆ ಅಲ್ಲಿ ಇಲ್ಲವೇ ಇಲ್ಲ. ಅಲ್ಲಿನ ಮೀಡಿಯಾ ಸತ್ಯಕ್ಕೆ ಪರದೆ ಹಾಕುವ ಕೆಲಸ ಮಾಡುತ್ತದೆ. ಅದಕ್ಕೆ ಧರ್ಮ ಅಥವಾ ಧರ್ಮದ ರಾಜಕೀಯ ಅಂದರೆ ಒಂದು ರಾಜಕೀಯ ಪಕ್ಷದ ಕಬ್ಜಾವನ್ನು ಕಾಪಾಡುವುದು ಹಾಗೂ ಸತ್ಯವನ್ನು ಸಮಾಧಿ ಮಾಡಿಬಿಡುವುದು. ಈಗ ಧರ್ಮವನ್ನು ರಾಜಕೀಯ ಸಂಪೂರ್ಣವಾಗಿ ಆವರಿಸಿಬಿಟ್ಟಿದೆ.   ಧಾರ್ಮಿಕ ಅಧಿಕಾರ ಸ್ವೀಕರಿಸುವ ಯಾವುದೇ ವ್ಯಕ್ತಿ ಯಾವುದೇ ರಾಜಕೀಯ ಪಕ್ಷದ ಎದುರು ಇಷ್ಟು ಗುಲಾಮನಾಗಲು ಹೇಗೆ ಸಾಧ್ಯ? ಆತ ಧರ್ಮದ ಅಧಿಕಾರದ ಬಗ್ಗೆ ನಂಬಿಕೆ ಇಟ್ಟವನಾದರೆ ರಾಜಕೀಯ ಪಕ್ಷಕ್ಕೂ ಪ್ರಶ್ನೆ ಕೇಳುವ ಧೈರ್ಯ ಆತನಿಗಿರಬೇಕು. ಧರ್ಮ ಇದನ್ನೇ ಮಾಡುತ್ತದೆ. ನಿಮ್ಮ ವರ್ತನೆಯನ್ನು ಶುದ್ಧಗೊಳಿಸುತ್ತದೆ, ಭಯದಿಂದ ಮುಕ್ತಗೊಳಿಸುತ್ತದೆ. ಆದರೆ ಈಗ ಉಲ್ಟಾ ಆಗುತ್ತಿದೆ. ಧರ್ಮದ ಮೇಲೆ ಕಬ್ಜಾ ಮಾಡಿಕೊಂಡ ರಾಜಕೀಯ ಪಕ್ಷದ ಭಯದಿಂದ ನಾಗರಿಕರು ಧರ್ಮಾನುಸಾರ ಕೇಳಲೇಬೇಕಾದ ಪ್ರಶ್ನೆಗಳನ್ನೂ ಕೇಳುತ್ತಿಲ್ಲ. ಅವರಿಗೀಗ ಧಾರ್ಮಿಕ ಪಾತ್ರಗಳು ಕೇವಲ ಕತೆ ಕೇಳುವುದಕ್ಕೆ ಹಾಗೂ ಸಮಾವೇಶಗಳಲ್ಲಿ ಸೇರುವುದಕ್ಕೆ, ಜನರನ್ನು ಆಕರ್ಷಿಸುವುದಕ್ಕೆ ಬೇಕಾದ ಪ್ರಸಂಗಗಳಾಗಿ ಬಿಟ್ಟಿವೆ. ಆ ಧಾರ್ಮಿಕ ಸಮಾವೇಶಗಳಲ್ಲಿ ಪ್ರೇರಣೆಯ ಮಾತು ಧಾರಾಳ ಇರುತ್ತದೆ , ಆದರೆ ಅದನ್ನು ಕೇಳಿ ಜನರಲ್ಲಿ ಯಾವುದೇ ಪ್ರೇರಣೆ ಕಾಣುವುದಿಲ್ಲ. ನಾಗರಿಕರ ವ್ಯಕ್ತಿತ್ವ ರೂಪಿಸಲು, ಬದಲಿಸಲು, ಸತ್ಯವೇ ಎಲ್ಲಕ್ಕಿಂತ ದೊಡ್ಡ ಧರ್ಮ ಎಂದು ತಿಳಿದುಕೊಳ್ಳಲಿ ಎಂದು ಈಗ ಧಾರ್ಮಿಕ ಮಾತುಗಳನ್ನು ಆಡಲಾಗುತ್ತಿಲ್ಲ, ಬದಲಿಗೆ ಧರ್ಮದ ಹೆಸರಲ್ಲಿ ಏನೋ ಕೆಲಸ ಆಗುತ್ತಿದೆ ಎಂದು ತೋರಿಸಲಿಕ್ಕಾಗಿ ಅದನ್ನು ಆಡಲಾಗುತ್ತಿದೆ. ನನ್ನ ಪಾಲಿಗೆ ಧರ್ಮ ಎಂದರೇನು ಎಂದು ಇವತ್ತು ಪ್ರತಿಯೊಬ್ಬ ನಾಗರಿಕನೂ ಪ್ರಶ್ನಿಸಬೇಕಾಗಿದೆ. ಇವತ್ತಿನ ರಾಜಕೀಯದ ಎದುರು ಧರ್ಮ ಆತನಿಗೆ ಸತ್ಯ ಹೇಳುವ ನೈತಿಕ ಶಕ್ತಿ ನೀಡುತ್ತಿದೆಯೇ ಅಥವಾ ಧರ್ಮದ ಹೆಸರಲ್ಲಿ ಆತ ಸುಮ್ಮನಿರುವಂತೆ ಒತ್ತಡ ಹಾಕಲಾಗುತ್ತಿದೆಯೇ ಎಂದು ಆತ ಪ್ರಶ್ನಿಸಬೇಕಾಗಿದೆ. ದೇವರ ಆರಾಧನೆ ನಮ್ಮ ಜೀವನ ಆದರೆ ಪ್ರಜಾಪ್ರಭುತ್ವದ ಜೀವನ ರಾಜಕೀಯದಿಂದ ನಡೆಯುತ್ತದೆ ಎಂದು ಜನರು ತಿಳಿದುಕೊಳ್ಳಬೇಕಾಗಿದೆ. ರಾಜಕೀಯವನ್ನು ಧರ್ಮದ ದೃಷ್ಟಿಯಿಂದ ನೋಡಿದರೆ ಪ್ರಜಾಪ್ರಭುತ್ವಕ್ಕೆ ನಷ್ಟವಾಗಲಿದೆ. ಅದರ ಪರಿಣಾಮ ಕೊನೆಗೆ ಜನರ ಮೇಲೆಯೇ ಆಗಲಿದೆ. ಅವರು ತಮ್ಮ ಜೀವನವನ್ನು ಉತ್ತಮಗೊಳಿಸುವ ಹೊಸ ಹೊಸ ಪ್ರಶ್ನೆಗಳನ್ನು ಅರಿತುಕೊಳ್ಳಲು ಸಾಧ್ಯವಾಗುವುದಿಲ್ಲ. ಸವಾಲುಗಳನ್ನು ಧರ್ಮದ ಹೆಸರಲ್ಲಿ ಬದಿಗೆ ಸರಿಸಿ ನೀವು ನಿಮ್ಮ ಜೀವನವನ್ನು ಉತ್ತಮವಾಗಿಸಲು ಸಾಧ್ಯವಿಲ್ಲ. ಭಾರತದ ಪ್ರಜಾಪ್ರಭುತ್ವ ಯಾವುದೇ ಕಟ್ಟಡದಲ್ಲಿ ವಾಸಿಸುವುದಿಲ್ಲ. ಅದು ಈ ದೇಶದ ನಾಗರಿಕ ಸಮೂಹದ ಪ್ರಜ್ಞಾವಂತಿಕೆಯಲ್ಲಿ ಅದು ಉಸಿರಾಡುತ್ತದೆ. ಈ ಪ್ರಜ್ಞಾವಂತಿಕೆಯ ಮೇಲೆ ಧರ್ಮದ ಭಯ ಹಾಗೂ ಧರ್ಮದ ಹೆಸರಿನಲ್ಲಿ ದ್ವೇಷ ಕೂತು ಬಿಟ್ಟರೆ ಮತ್ತೆ ಪ್ರಜಾಪ್ರಭುತ್ವ ನಾಶವಾಗುತ್ತದೆ. ನಾಗರಿಕ ವಿಷಗಾಳಿಯನ್ನೇ ಉಸಿರಾಡುತ್ತಾ ಇರುತ್ತಾನೆ. ಆದರೆ ಈ ಗಾಳಿಯನ್ನು ಸ್ವಚ್ಛಗೊಳಿಸುವ ಕರ್ತವ್ಯ ನಿಮ್ಮದಾಗಿತ್ತು ಆದರೆ ನೀವು ಅದನ್ನು ನಿರ್ವಹಿಸಿಲ್ಲ ಯಾಕೆ ಎಂದು ಆತ ಸರಕಾರವನ್ನು ಪ್ರಶ್ನಿಸಲಾರ. ಆತ ಒಂದಾದ ಬಳಿಕ ಇನ್ನೊಂದು ಆಸ್ಪತ್ರೆಗೆ ಅಲೆಯುತ್ತಾ ತನ್ನ ಅಸ್ವಸ್ಥ ಶ್ವಾಸಕೋಶವನ್ನು ತೋರಿಸುತ್ತಾ ಇರಬೇಕಾಗುತ್ತದೆ. ತನ್ನ ಚಿಕಿತ್ಸೆಗಾಗಿ ತನ್ನ ಮನೆಯನ್ನೇ ಮಾರಬೇಕಾಗುತ್ತದೆ. ದಿಲ್ಲಿಯ ಜನರು ತಾವು ಎಸ್‌ಐಆರ್‌ನಲ್ಲಿ ಹೆಸರಿರುವ ನಾಗರಿಕರಾಗಿ ಇರುವಂತೆ ನೋಡಿಕೊಳ್ಳುತ್ತೇವೆ, ಆದರೆ ಪ್ರಶ್ನೆ ಕೇಳುವ, ಬೀದಿಗಿಳಿಯುವ ನಾಗರಿಕರಾಗುವುದಿಲ್ಲ ಎಂದು ನಿರ್ಧರಿಸಿದ್ದಾರೆ. ಸುಮ್ಮನಾಗುವ ಯಾವುದೇ ನಾಗರಿಕ ತನ್ನನ್ನು ಪ್ರಜಾಪ್ರಭುತ್ವದಿಂದ ದೂರ ಮಾಡಿಕೊಳ್ಳುತ್ತಾ ಹೋಗುತ್ತಾನೆ. ದಿಲ್ಲಿಯ ಗಾಳಿ ಇನ್ನೆಂದೂ ಶುದ್ಧವಾಗುವುದಿಲ್ಲ. ದಿಲ್ಲಿಯ ಜನತೆ ಅದೇ ಗಾಳಿಯ ಜೊತೆ ಬದುಕಲು ಕಲಿತುಕೊಂಡು ಬಿಟ್ಟಿದ್ದಾರೆ.

ವಾರ್ತಾ ಭಾರತಿ 23 Dec 2025 11:55 am

ತಂಗಿ ಮದುವೆಗೆ ಭಿಕ್ಷುಕರಿಗೆ ವಿಶೇಷ ಆಹ್ವಾನ ಕೊಟ್ಟ ಅಣ್ಣ - ಕಾರುಗಳಲ್ಲಿ ಕರೆಯಿಸಿ ಊಟೋಪಚಾರ! ಘಾಸಿಪುರದಲ್ಲಿ ಮಾನವೀಯ ನಡೆ

ಉತ್ತರ ಪ್ರದೇಶದ ಘಾಸಿಪುರದಲ್ಲಿ ತಮ್ಮ ತಂಗಿಯ ಮದುವೆ ಮಾಡಿದ ಸಿದ್ದಾರ್ಥ್ ರೈ ಎಂಬುವರು ಆ ಮದುವೆಗೆ ಭಿಕ್ಷಕರು, ನಿರ್ಗತಿಕರನ್ನು ವಿಶೇಷವಾಗಿ ಆಹ್ವಾನಿಸಿ ಅವರಿಗೆ ಊಟ - ಉಪಚಾರ ನೆರವೇರಿಸಿದ್ದಾರೆ. ಇದು ಸಾಮಾಜಿಕ ವಲಯದಲ್ಲಿ ಭಾರೀ ಮೆಚ್ಚುಗೆಗೆ ಪಾತ್ರವಾಗಿದೆ. ಅಂಥ ನಿರ್ಗತಿಕರಿಗೆ ಎಲ್ಲರ ಸರಿಸಮಾನಾಗಿ ಕೂರಿಸಿ ಒಂದೊಪ್ಪೊತ್ತಿನ ವಿಶೇಷ ಭೋಜನ ನೀಡಿ ಸತ್ಕರಿಸಿರುವುದರಿಂದ ವಿಶೇಷ ಆಶೀರ್ವಾದ ಸಿಕ್ಕಿದೆ ಎಂದು ಅನೇಕ ನೆಟ್ಟಿಗರು ಅಭಿಪ್ರಾಯಪಟ್ಟಿದ್ದಾರೆ. ಆ ಅತಿಥಿ ಸತ್ಕಾರ ಪಡೆದ ಆ ಭಿಕ್ಷುಕರೂ ಸಹ ಸಿದ್ದಾರ್ಥ್ ರೈ ಅವರ ನಡೆಗೆ ಕೃತಜ್ಞತೆ ತೋರಿದ್ದಾರೆ. ಅವರು ಏನಂದ್ರು? ಈ ಸುದ್ದಿ ಓದಿ.

ವಿಜಯ ಕರ್ನಾಟಕ 23 Dec 2025 11:48 am

‘ಪಾರಿಜಾತ’ದಲ್ಲಿ ಅರಳಿದ ದಲಿತ ಕಲಾವಿದೆಯರು

ಪಾರಿಜಾತ ಕಲಾ ಪ್ರಕಾರದ ಕುರಿತಂತೆ ಶ್ರೀರಾಮ ಇಟ್ಟಣ್ಣನವರು ಹೆಚ್ಚು ಕೆಲಸ ಮಾಡಿದ್ದರ ನೆಪದಲ್ಲಿ ಈ ಕೃತಿಯನ್ನು ಪಾರಿಜಾತ ಕಲೆಯ ಸಾಂಸ್ಕೃತಿಕ ಚರಿತ್ರೆಯ ಪಠ್ಯವನ್ನಾಗಿಸಿದ್ದಾರೆ. ಪಾರಿಜಾತದ ಹಸ್ತಪ್ರತಿಗಳು, ಪ್ರದರ್ಶನ ಪಠ್ಯಗಳು, ಕಲಾವಿದರ ಸೃಜನಶೀಲತೆ, ಪಾರಿಜಾತದ ಸಂಗೀತ ಪರಂಪರೆ, ಹಲವು ಪಾರಿಜಾತಗಳ ಹೋಲಿಕೆ, ಪಾರಿಜಾತದ ಪರಿಷ್ಕರಣೆ ಕುರಿತಂತೆ ಹಿರಿಯರಾದ ಬಸವರಾಜ ಮಲಶೆಟ್ಟರನ್ನು ಒಳಗೊಂಡಂತೆ ವೀರಣ್ಣ ದಂಡೆ, ಬಾಳಾಸಾಹೇಬ ಲೋಕಾಪುರ, ವೀರೇಶ ಬಡಿಗೇರ, ಜಿ.ಎನ್. ಉಪಾಧ್ಯ, ಶಿವಾನಂದ ಶೆಲ್ಲಿಕೇರಿ, ಬಸವಲಿಂಗ ಹಿರೇಮಠ ಮೊದಲಾದವರು ವಿದ್ವತ್ ಪೂರ್ಣ ಸಂಶೋಧನಾ ಲೇಖನಗಳನ್ನು ಬರೆದಿದ್ದಾರೆ. ಈ ಅರ್ಥದಲ್ಲಿ ಈ ಕೃತಿ ಒಂದು ಉಪಯುಕ್ತ ಆಕರ ಗ್ರಂಥವಾಗಿದೆ. ಕನ್ನಡ ಸಾಹಿತ್ಯ ಪರಂಪರೆಯಲ್ಲಿ ಹಿರಿಯ ಲೇಖಕಿ ಲೇಖಕರನ್ನು ಗೌರವಿಸುವ, ನೆನಪಿಸುವ ಅಭಿನಂದನೆ ಸಲ್ಲಿಸುವ ಗ್ರಂಥ ಪ್ರಕಾರವೊಂದಿದೆ. ಇದು ಅಭಿನಂದಿಸಿದವರ ಒಡನಾಡಿಗಳ ಅನುಭವ, ಅವರ ಕೃತಿಗಳ ಪರಿಚಯ, ಅವರ ಆದ್ಯತೆಯ ಕ್ಷೇತ್ರವನ್ನು ಆಧರಿಸಿದ ಸಂಶೋಧನಾ ಲೇಖನಗಳನ್ನು ಸಂಪಾದಿಸುತ್ತಿರುತ್ತಾರೆ. ಹೀಗೆ ಕೆಲವು ಆಕರವಾಗಬಲ್ಲ ಮಹತ್ವದ ಅಭಿನಂದನ ಗ್ರಂಥಗಳು ಇವೆ. ಕುವೆಂಪು ಅವರ ಬಗೆಗಿನ ‘ಸಹ್ಯಾದ್ರಿ’ ಶಂಬಾ ಜೋಷಿ ಅವರ ‘ಅಧ್ಯಯನ’, ಎಂ.ಕೆ. ಇಂದಿರಾ ಅವರ ‘ಸುರಗಿ’ ದೇವನೂರರ ‘ಯಾರ ಜಪ್ತಿಗೂ ಸಿಗದ ನವಿಲು’ ಮುಂತಾದವುಗಳನ್ನು ಹೆಸರಿಸಬಹುದು. ಈ ಕುರಿತು ಪ್ರತ್ಯೇಕ ಅಧ್ಯಯನ ಸಂಶೋಧನೆ ಮಾಡುವಷ್ಟು ವಿಪುಲ ಅಭಿನಂದನ ಸಾಹಿತ್ಯ ಬಂದಿದೆ. ಹೀಗೆ ನನ್ನ ಗಮನ ಸೆಳೆದ ಒಂದು ಅಭಿನಂದನಾ ಗ್ರಂಥ ಡಾ. ಶ್ರೀರಾಮ ಇಟ್ಟಣ್ಣನವರ ಗ್ರಂಥ ‘ಪಾರಿಜಾತ’. ಶ್ರೀರಾಮ ಇಟ್ಟಣ್ಣನವರು ಬೆಳಗಾವಿ ಜಿಲ್ಲೆ ಗೋಕಾಕ್ ತಾಲೂಕಿನ ಯಾದವಾಡದವರು. 240 ಎಕರೆ ಜಮೀನು ಇದ್ದ ಹಾಲುಮತ ಸಮುದಾಯದ ಅವಿಭಕ್ತ ಕುಟುಂಬದಲ್ಲಿ ಬೆಳೆದರು. ಜನಪದ ಹಾಡುಪರಂಪರೆಯನ್ನು ಕೇಳುತ್ತಲೇ ಬೆಳೆದ ಇಟ್ಟಣ್ಣ ಎಂ.ಎಂ. ಕಲಬುರ್ಗಿ ಅವರ ಶಿಷ್ಯತ್ವದಲ್ಲಿ 1972ರಲ್ಲಿ ಕನ್ನಡ ಎಂ.ಎ. ಮುಗಿಸಿ ಅಧ್ಯಾಪನದ ಜತೆ ಜತೆಗೆ ಸಂಶೋಧನೆ ಆರಂಭಿಸುತ್ತಾರೆ. 1984 ರಲ್ಲಿ ಎಂ.ಎಂ. ಕಲಬುರಗಿ ಅವರ ಮಾರ್ಗದರ್ಶನದಲ್ಲಿ ‘ಶ್ರೀಕೃಷ್ಣ ಪಾರಿಜಾತ: ಒಂದು ಅಧ್ಯಯನ ಕುರಿತಂತೆ ಸಂಶೋಧನೆ ಪೂರೈಸಿ ಪಿಎಚ್.ಡಿ. ಪಡೆಯುತ್ತಾರೆ. ಕನ್ನಡದ ಅತ್ಯುತ್ತಮ ಸಂಶೋಧನೆಗಳನ್ನು ಪಟ್ಟಿ ಮಾಡಿದರೆ ಇಟ್ಟಣ್ಣನವರ ಈ ಸಂಶೋಧನೆಯೂ ಒಂದಾಗಿರುತ್ತದೆ. ಉತ್ತರ ಕರ್ನಾಟಕದಲ್ಲಿ ನೆಲೆಗೊಂಡ ಶ್ರೀಕೃಷ್ಣ ಪಾರಿಜಾತ ಜನಪದ ರಂಗ ಪ್ರಕಾರಕ್ಕೆ ಒಂದು ವಿಶ್ವವಿದ್ಯಾನಿಲಯ ಮಟ್ಟದ ಸಂಶೋಧನೆಯ ಗೌರವ ತಂದುಕೊಟ್ಟವರು. ಹೀಗೆ ಉತ್ತರ ಕರ್ನಾಟಕದ ಬಯಲಾಟ ಪರಂಪರೆಯ ಪಾರಿಜಾತ, ಸಣ್ಣಾಟ, ದೊಡ್ಡಾಟಗಳ ಬಗ್ಗೆ ನಿರಂತರವಾಗಿ ಅಧ್ಯಯನ ಮಾಡಿದವರು. 27ರಷ್ಟು ವಿವಿಧ ಕೃತಿಗಳನ್ನು ರಚಿಸಿದವರು. ಅಷ್ಟೂ ಕೃತಿಗಳಲ್ಲಿ ಹಾದುಹೋದ ಎಳೆಯೆಂದರೆ ಗಡಿಭಾಗದ ಅಂಚಿನ ಸಮುದಾಯಗಳ ಬದುಕು ಸಂಸ್ಕೃತಿ ಮತ್ತು ಪರಂಪರೆಯದಾಗಿದೆ. ಈ ಕಾರಣಕ್ಕೆ ಡಾ. ಶ್ರೀರಾಮ ಇಟ್ಟಣ್ಣನವರು ಗಮನಸೆಳೆದ ಹಿರಿಯ ವಿದ್ವಾಂಸರು. ಗದಗಿನ ಶ್ರೀ ಜಗದ್ಗುರು ತೋಂಟದಾರ್ಯ ಸಂಸ್ಥಾನ ಮಠ ಡಂಬಳದ ಡಾ. ಎಂ.ಎಂ. ಕಲಬುರ್ಗಿ ಲಿಂಗಾಯತ ಅಧ್ಯಯನ ಸಂಸ್ಥೆಯು 2021ರಲ್ಲಿ ಪ್ರಕಟಿಸಿದ ಇಟ್ಟಣ್ಣನವರ ಅಭಿನಂದನಾ ಗ್ರಂಥ ‘ಪಾರಿಜಾತ’ದಲ್ಲಿ ಏಳು ಭಾಗಗಳಿವೆ. ಮೊದಲ ಭಾಗದಲ್ಲಿ ಇಟ್ಟಣ್ಣನವರ ಆತ್ಮಕಥಾನಕವೂ, ಎರಡನೇ ಭಾಗದಲ್ಲಿ ಹಲವರ ಒಡನಾಟದ ನೆನಪುಗಳು, ಮೂರನೇ ಭಾಗದಲ್ಲಿ ಗ್ರಂಥಾವಲೋಕನ, ನಾಲ್ಕನೇ ಭಾಗದಲ್ಲಿ ಶ್ರೀಕೃಷ್ಣಪಾರಿಜಾತದ ಬಗೆಗಿನ ಸಂಶೋಧನಾ ಲೇಖನಗಳು, ಐದನೇ ಭಾಗದಲ್ಲಿ ಪಾರಿಜಾತ ಕಲಾವಿದೆಯರ ಪರಿಚಯ, ಆರನೇ ಭಾಗದಲ್ಲಿ ಇಟ್ಟಣ್ಣನವರ ಸಂದರ್ಶನವಿದೆ. ಒಟ್ಟು 840 ಪುಟದ ಈ ಗ್ರಂಥದಲ್ಲಿ 134 ಪುಟದಷ್ಟಿರುವ ಈ ಕೃತಿಯ ಐದನೇ ಎಸಳಲ್ಲಿನ ಪಾರಿಜಾತ ಕಲಾವಿದೆಯರ ಆತ್ಮಕಥನಗಳ ತುಣುಕಿನ ಪರಿಚಯಾತ್ಮಕ ಬರಹಗಳು ಈ ಕೃತಿಯ ತೂಕವನ್ನು ಹೆಚ್ಚಿಸಿವೆ. ಈ ಭಾಗವು ಅಭಿನಂದನಾ ಗ್ರಂಥದ ಜೀವಾಳದಂತೆ ಉಸಿರಾಡಿದೆ. ಈ ಕೃತಿಯು ಬಯಲಾಟ ಪರಂಪರೆಯ ಪಾರಿಜಾತ, ಸಣ್ಣಾಟ, ರಾಧಾನಾಟ, ದೊಡ್ಡಾಟ ಕಲೆಯ ಬೇರುಗಳನ್ನು ಅರ್ಥಮಾಡಿಕೊಳ್ಳಲು ಒಂದು ಆಕರ ಗ್ರಂಥವಾಗಿದೆ. ಪಾರಿಜಾತ ಕಲಾ ಪ್ರಕಾರದ ಕುರಿತಂತೆ ಶ್ರೀರಾಮ ಇಟ್ಟಣ್ಣನವರು ಹೆಚ್ಚು ಕೆಲಸ ಮಾಡಿದ್ದರ ನೆಪದಲ್ಲಿ ಈ ಕೃತಿಯನ್ನು ಪಾರಿಜಾತ ಕಲೆಯ ಸಾಂಸ್ಕೃತಿಕ ಚರಿತ್ರೆಯ ಪಠ್ಯವನ್ನಾಗಿಸಿದ್ದಾರೆ. ಪಾರಿಜಾತದ ಹಸ್ತಪ್ರತಿಗಳು, ಪ್ರದರ್ಶನ ಪಠ್ಯಗಳು, ಕಲಾವಿದರ ಸೃಜನಶೀಲತೆ, ಪಾರಿಜಾತದ ಸಂಗೀತ ಪರಂಪರೆ, ಹಲವು ಪಾರಿಜಾತಗಳ ಹೋಲಿಕೆ, ಪಾರಿಜಾತದ ಪರಿಷ್ಕರಣೆ ಕುರಿತಂತೆ ಹಿರಿಯರಾದ ಬಸವರಾಜ ಮಲಶೆಟ್ಟರನ್ನು ಒಳಗೊಂಡಂತೆ ವೀರಣ್ಣ ದಂಡೆ, ಬಾಳಾಸಾಹೇಬ ಲೋಕಾಪುರ, ವೀರೇಶ ಬಡಿಗೇರ, ಜಿ.ಎನ್. ಉಪಾಧ್ಯ, ಶಿವಾನಂದ ಶೆಲ್ಲಿಕೇರಿ, ಬಸವಲಿಂಗ ಹಿರೇಮಠ ಮೊದಲಾದವರು ವಿದ್ವತ್ ಪೂರ್ಣ ಸಂಶೋಧನಾ ಲೇಖನಗಳನ್ನು ಬರೆದಿದ್ದಾರೆ. ಈ ಅರ್ಥದಲ್ಲಿ ಈ ಕೃತಿ ಒಂದು ಉಪಯುಕ್ತ ಆಕರ ಗ್ರಂಥವಾಗಿದೆ. ಈ ಗ್ರಂಥದ ಜೀವಾಳವೆಂದರೆ ಪಾರಿಜಾತ ಕಲಾವಿದೆಯರ ಪರಿಚಯದ ಭಾಗ. ಡೊಂಬರ ಸಮುದಾಯದ ಕೌಜಲಗಿ ನಿಂಗವ್ವನನ್ನು ಮೊದಲುಗೊಂಡು ಫಾತಿಮಾ ಮುಗಳಖೋಡ, ಯಮನವ್ವ ಸೂಳಿಕೆರಿ, ಲೋಕಾಪುರ ಯಲ್ಲವ್ವ, ಮಲ್ಲಮ್ಮ ಮ್ಯಾಗೇರಿ, ಕಾಶೀಬಾಯಿ ದಾದನಟ್ಟಿ, ಚಂದ್ರವ್ವ ಕೌಜಲಗಿ, ಚಂಪಾಬಾಯಿ ನಣದಿ, ಮೆಟಗುಡ್ಡದ ಕಮಲವ್ವ, ಮಾಲಾಬಾಯಿ ಹಿಡಕಲ್ಲ, ಮಹಾದೇವಿ ಚೀಲಮಗೇರಿ ಮಠ, ವಿಶ್ವೇಶ್ವರಿ ಹಿರೇಮಠ, ಚಂದ್ರವ್ವ ನಾವಲಗಿ, ಕಾಕನೂರು ಕಾಕವ್ವ, ರೇಣುಕಾ ಮಾಲಾಪುರ, ಶಿರೋಳ ಮಲ್ಲವ್ವ, ಸುಂದ್ರವ್ವ ಚಿಮ್ಮಡಿ, ವಿಲಾಸಬಾಯಿ ತೇರದಾಳ, ಮುತ್ತವ್ವ ಕೆಸರಗೊಪ್ಪ, ಈಶ್ವರವ್ವ ಸಾರವಾಡ, ಪಾರವ್ವ ಹೊಸಕೋಟಿ, ಕುಳ್ಳೂರು ಯಲ್ಲವ್ವ, ಶಾಂತಾಬಾಯಿ ಸಾಲೊಟಗಿ, ಪ್ರೇಮಾ ತುಳಸಿಗೇರಿ, ಕಸ್ತೂರವ್ವ ಮನ್ನೀಕೇರಿ, ಅನಸೂಯ ಬಬಲೇಶ್ವರ, ಸತ್ಯವ್ವ ಹಿಪ್ಪರಗಿ, ಮಹಾದೇವಿ ಉತ್ತೂರು, ಸೊನ್ನದ ಮಾರೆವ್ವ, ಶಾಂತಬಾಯಿ ಕಂಕಣವಾಡಿ, ಪುತಳವ್ವ ಕೊಟ್ಯಾಳ, ಲಕ್ಷ್ಮಿಬಾಯಿ ಮನಗೊಳಿ, ಮರಗವ್ವ ಇಂಗಳಗಿ ಒಟ್ಟು 34 ಕಲಾವಿದೆಯರ ಪರಿಚಯವಿದೆ. ಇಲ್ಲಿ ಪರಿಚಯಿಸಿರುವ ಇಬ್ಬರು ಕಲಾವಿದೆಯರನ್ನು ಹೊರತುಪಡಿಸಿದರೆ ಉಳಿದವರೆಲ್ಲಾ ತಳವರ್ಗದ ಹಿಂದುಳಿದ ದಲಿತ ಕಲಾವಿದೆಯರಾಗಿದ್ದಾರೆ. 14 ಕಲಾವಿದೆಯರು ಚಮ್ಮಾರಿಕೆ ವೃತ್ತಿಯ ಮಾದಾರ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಇವರೆಲ್ಲಾ ಅನಿಷ್ಟ ದೇವದಾಸಿ ಪದ್ಧತಿಗೆ ಒಳಗಾದವರು. ಈ ದೇವದಾಸಿ ಪದ್ಧತಿಯ ಶೋಷಣೆಯಿಂದ ಹೊರಬರಲು ಇವರುಗಳೆಲ್ಲಾ ಪಾರಿಜಾತ ಕಲಾವಿದೆಯರಾಗಿ ಸಾಮಾಜಿಕ ಮಾನ್ಯತೆ ಪಡೆಯಲು ಜೀವನಪೂರ್ತಿ ಹೆಣಗಿದವರು. ಪಾರಿಜಾತ ಕಂಪನಿಗಳು ಆರಂಭಕ್ಕೆ ಮೇಲುಜಾತಿ ಗಂಡಸರ ಒಡೆತನದಲ್ಲಿದ್ದವು. ಈ ಮೇಲುಜಾತಿಗಳ ಒಡೆಯರು ದಲಿತ ಸಮುದಾಯದ ಕಲಾವಿದೆಯರನ್ನು ತಮ್ಮ ಕಂಪನಿಗಳನ್ನು ಬೆಳೆಸಲು ಅಡಿಗಲ್ಲಾಗಿ ಬಳಸಿಕೊಳ್ಳುತ್ತಿದ್ದರು. ದಲಿತ ಡೊಂಬರ ಸಮುದಾಯಕ್ಕೆ ಸೇರಿದ ಕೌಜಲಗಿ ನಿಂಗಮ್ಮ ಪಾರಿಜಾತವನ್ನು ಪರಿಷ್ಕರಿಸಿ ಮೊದಲಿಗೆ ಸ್ವಂತ ಪಾರಿಜಾತ ಕಂಪನಿಯನ್ನು ಕಟ್ಟಿದರು. ಈ ರೀತಿ ಕೌಜಲಗಿ ನಿಂಗಮ್ಮ ಹಾಕಿಕೊಟ್ಟ ದಾರಿಯಲ್ಲಿ ದೊಡ್ಡಮಟ್ಟದಲ್ಲಿ ದಲಿತ ಕೆಳಜಾತಿ ಮಹಿಳೆಯರು ಪಾರಿಜಾತ ಬಯಲಾಟ ಪರಂಪರೆಗೆ ಬರಲು ಸಾಧ್ಯವಾಯಿತು. ಅಂತೆಯೇ ಕೌಜಲಗಿ ನಿಂಗಮ್ಮನ ಪ್ರಭಾವದಿಂದ ಇಲ್ಲಿನ ಬಹುಪಾಲು ಕಲಾವಿದೆಯರು ಸ್ವಂತ ಪಾರಿಜಾತ ಸಂಘಗಳನ್ನು ಕಟ್ಟಿಕೊಂಡು ಮಾಲಕಿಯರಾಗಿ ಕಲಾವಿದರನ್ನು ಬೆಳೆಸಿದ್ದಾರೆ. ಪಾರಿಜಾತ ರಂಗಭೂಮಿ ದಲಿತ ಕಲಾವಿದೆಯರಿಗೆ ಕಲಿಕೆಯ ಶಾಲೆಯಾಗಿದೆ. ಅಂತೆಯೇ ಪಾರಿಜಾತದ ಅಭಿನಯದ ಮೂಲಕ ಸಮಾಜವನ್ನು ತಿದ್ದುವ ಕೆಲಸಕ್ಕೆ ಮುಂದಾಗುತ್ತಾರೆ. ಕನ್ನಡ ವಿಶ್ವವಿದ್ಯಾನಿಲಯದಿಂದ ನಾಡೋಜ ಗೌರವ ಪಡೆದ ಎಲ್ಲವ್ವ ರೊಡ್ಡಪ್ಪನವರ ಮೂಲತಃ ದೇವದಾಸಿಯಾಗಿದ್ದರೂ, ಯಲ್ಲವ್ವನಿಗೆ ಬಿಟ್ಟಿದ್ದ ದೇವದಾಸಿ ಪದ್ಧತಿಯಿಂದ ಹೊರಬಂದು ತಾನು ಹುಟ್ಟಿದ ಲೋಕಾಪುರದ ಠಾಣಿಕೇರಿಯಲ್ಲಿ ದೇವದಾಸಿ ಪದ್ಧತಿಯ ವಿರುದ್ಧ ಸಿಡಿದೇಳುತ್ತಾರೆ. ತನ್ನ ಕೇರಿಯ ಜನರಿಗೆ ತಿಳಿ ಹೇಳಿ ಮನವರಿಕೆ ಮಾಡಿ ಕೇರಿಯ ಯಾವುದೇ ಹೆಣ್ಣುಮಕ್ಕಳನ್ನು ದೇವದಾಸಿ ಪದ್ಧತಿಗೆ ಬಲಿಯಾಗದಂತೆ ತಡೆಯುತ್ತಾರೆ. ಯಾವ ದೇವದಾಸಿ ಪದ್ಧತಿ ತನಗೆ ಪಾರಿಜಾತಕ್ಕೆ ಪ್ರವೇಶ ಒದಗಿಸಿದ್ದಿತೋ, ಅದೇ ಪಾರಿಜಾತವನ್ನು ಬಳಸಿ ಕಲಾವಿದೆಯಾದ ಎಲ್ಲವ್ವ ದೇವದಾಸಿ ಪದ್ಧತಿಯ ವಿರುದ್ಧ ಹೋರಾಟ ಮಾಡಿದ್ದು ಅಪರೂಪದ ವಿದ್ಯಮಾನ. ಇದನ್ನು ಗುರುತಿಸಿಯೇ ಕನ್ನಡ ವಿಶ್ವವಿದ್ಯಾನಿಲಯ ಎಲ್ಲವ್ವನನ್ನು ನಾಡೋಜ ಎಂದು ಗುರುತಿಸಿತು. ಪಾರಿಜಾತ ವೈಷ್ಣವ ಮತವನ್ನು ಸಾರುವ ಕೃಷ್ಣ ಮತ್ತು ಆತನ ಇಬ್ಬರು ಹೆಂಡತಿಯರ ನಡುವೆ ನಡೆಯುವ ಸಂಭಾಷಣೆಯಾಗಿದೆ. ಕೃಷ್ಣ, ರುಕ್ಮಿಣಿ, ಸತ್ಯಭಾಮೆ, ಕೊರವಂಜಿ, ಗೊಲ್ಲತಿ ಹೀಗೆ ಎಲ್ಲಾ ಪಾತ್ರಗಳನ್ನು ದಲಿತ ಕೆಳವರ್ಗದ ಮಹಿಳೆಯರೇ ಅಭಿನಯಿಸಿದ್ದರಿಂದ ಇಡೀ ವೈಷ್ಣವ ಮತವನ್ನು ದಲಿತ ಕಣ್ಣೋಟದಿಂದಲೂ ಅಂತೆಯೇ ವೈಷ್ಣವ ಪಂಥ ದಲಿತರೊಳಗೆ ನೆಲೆಗೊಳ್ಳಲೂ ಕಾರಣವಾದಂತಿದೆ. ಅಂತೆಯೇ ಈ ಕಲಾವಿದೆಯರ ವೈವಾಹಿಕ ಜೀವನ ಜಾತ್ಯತೀತ, ಧರ್ಮಾತೀತವೂ ಆಗುವುದರೊಂದಿಗೆ ದುಃಖಕರವೂ ಆಗಿದೆ. ಕೌಜಲಗಿ ನಿಂಗವ್ವ ಹರೆಯದಲ್ಲಿ ತನ್ನ ಅಭಿನಯಕ್ಕೆ ಮಾರುಹೋದ ಶ್ರೀಮಂತ ವಕೀಲನನ್ನು ಮದುವೆಯಾಗುತ್ತಾಳೆ. ಬಹಳ ದಿನ ಬಾಳಲಾಗದೆ ಬೇರೆಯಾಗಿ ಬ್ರಹ್ಮಚಾರಿಣಿಯಾಗಿಯೇ ಬದುಕು ದೂಡುತ್ತಾಳೆ. ಕಲಾವಿದೆ ಚಂದ್ರವ್ವ ಕೌಜಲಗಿ ತಾನು ಮದುವೆ ಆಗದಿದ್ದರೂ ತವರು ಮತ್ತು ಗಂಡನ ಮನೆಯಿಂದ ತಿರಸ್ಕೃತಗೊಂಡ ಸರಗವ್ವ ಎಂಬ ಗರ್ಭಿಣಿಗೆ ಆಶ್ರಯ ಕೊಟ್ಟು ಹುಟ್ಟಿದ ಮಗಳನ್ನು ದತ್ತುಕ ಪಡೆದು ಸಾಕುತ್ತಾಳೆ. ಹೀಗೆ ಬಹುಪಾಲು ಕಲಾವಿದೆಯರು ಅವಿವಾಹಿತರಾಗಿಯೂ, ವಿವಾಹವಾದರೂ ಒಂಟಿಯಾಗಿ ಬದುಕಿದ್ದಾರೆ. ಇದರಲ್ಲೂ ಕೆಲವು ದೇವದಾಸಿಯರು ಪಾರಿಜಾತದ ಕಲಾವಿದೆಯರಾಗಿ ಒಂದಷ್ಟು ಆರ್ಥಿಕವಾಗಿ ಉತ್ತಮಗೊಂಡ ಕಾರಣ ತಮ್ಮ ಮಕ್ಕಳನ್ನು ಓದಿಸಿ ನೌಕರಿಗೆ ಹತ್ತಿಸಿದ್ದಾರೆ. ಮಾದಾರ ಮಾಲಾಬಾಯಿ ಹಿಡಕಲ್ಲ ಅವರು ತನ್ನ ಮಗನನ್ನು ಓದಿಸಿ ಶಿಕ್ಷಕನನ್ನಾಗಿ ಮಾಡಿದ್ದಾರೆ. ಕಾಶಿಬಾಯಿ ದಾದನಟ್ಟಿ ಅವರ ಮಗಳು ಸವಿತಾ ಶಿಕ್ಷಕಿಯಾದರೆ, ಮಗ ದೀಪಕ್ ಇಂಜಿನಿಯರ್ ಆಗಿದ್ದಾರೆ. ಹೀಗೆ ದಲಿತ ಹಿಂದುಳಿದ ವರ್ಗದ ಕಲಾವಿದೆಯರಿಗೆ ತಾವು ಅನಕ್ಷರಸ್ಥರಾಗಿದ್ದರೂ ತಮ್ಮ ಮುಂದಿನ ತಲೆಮಾರನ್ನು ಶಿಕ್ಷಿತರನ್ನಾಗಿ ಉದ್ಯೋಗಸ್ಥರನ್ನಾಗಿ ಮಾಡಿರುವುದು ಕೂಡ ಅಪರೂಪದ ಸಂಗತಿಯಾಗಿದೆ. ಕಲಾವಿದರಲ್ಲಿ ಧರ್ಮ-ಜಾತಿ ಕೂಡಾವಳಿ ಮಾಡುತ್ತವೆ. ಅಂತೆಯೇ ಕಲಾವಿದೆ ಚಂಪಾಬಾಯಿ ನಣದಿ ಸಹ ಕಲಾವಿದ ಅಪ್ಪಾಲಾಲ್ ನದಾಫ್ ಅವರನ್ನು ಮದುವೆಯಾಗಿ ಹಿಂದೂ-ಮುಸ್ಲಿಮ್ ಸಂಸ್ಕೃತಿಯನ್ನು ಕೂಡಿಸಿಕೊಂಡು ಬದುಕುತ್ತಾರೆ. ಮಕ್ಕಳಾದ ಗೈಬುಸಾಬ, ಲಸ್ಸಿಮಾ, ಮಾಬೂಬಿ, ರಝಿಯಾ ಅವರುಗಳನ್ನು ಸಾಧ್ಯವಾದಷ್ಟು ಶಿಕ್ಷಿತರನ್ನಾಗಿಸಿದ್ದಾರೆ. ಕೌಜಲಗಿ ನಿಂಗಮ್ಮ ಇಲ್ಲಿ ಪರಿಚಯವಾಗಿರುವ ಕಲಾವಿದೆಯರ ಜೀವನ ಚಿತ್ರಗಳನ್ನು ನೋಡುತ್ತಿದ್ದರೆ, ಇವರುಗಳೆಲ್ಲಾ ಅಡುಗೆ ಮನೆಯ ಚೌಕಟ್ಟನ್ನು ಮೀರಿ ಹೊರಬಂದವರು. ಸಮುದಾಯದ ಎದುರು ನಿಂತು ನಟಿಸಿದವರು. ಇದು ಗ್ರಾಮೀಣ ಭಾಗದ ಲಿಂಗತಾರತಮ್ಯದ ನೋಟವನ್ನು ಚೂರು ಪಲ್ಲಟಗೊಳಿಸಲು ಸಹಾಯಕವಾಗಿದೆ. ವಿಶೇಷವೆಂದರೆ ಇಲ್ಲಿನ ಬಹುಪಾಲು ಕಲಾವಿದೆಯರು ಮೊದ ಮೊದಲು ಬೇರೆ ಬೇರೆ ಕಂಪನಿಗಳಲ್ಲಿ ನಟಿಸುತ್ತಲೇ ತಾವು ನಟನೆಯಲ್ಲಿ ಪ್ರಬುದ್ಧರಾದಂತೆ, ಪಾರಿಜಾತ ಕಲೆಯ ಎಲ್ಲಾ ಆಯಾಮಗಳನ್ನು ಅನುಭವದಿಂದ ಅರಿತಂತೆ ತಾವೇ ಸ್ವತಃ ಪಾರಿಜಾತ ಕಂಪನಿಗಳನ್ನು ಕಟ್ಟಿ ಮುನ್ನಡೆಸಿದ್ದಾರೆ. ಇದು ಪ್ರಾಚೀನ ಮಾತೃಪ್ರಧಾನ ಸಮಾಜದ ಒಂದು ನೆನಪನ್ನು ತರುತ್ತದೆ. ಮಹಿಳೆಯರ ಈ ಬಗೆಯ ಆರ್ಥಿಕ ಸ್ವಾವಲಂಬನೆಯು ಪುರುಷ ಪಾರಮ್ಯದ ನಡುವೆಯೂ ಪಾರಿಜಾತವನ್ನು ಮಹಿಳಾಪ್ರಧಾನ ಕಲೆಯನ್ನಾಗಿಸಿದ್ದಾರೆ. ಇಲ್ಲಿನ ಕಲಾವಿದೆಯರ ಪರಿಚಯ ಮೇಲುನೋಟದ್ದು. ಈ ಕಲಾವಿದೆಯರ ಒಂದೊಂದು ಫೋಟೊವನ್ನಾದರೂ ಸಂಗ್ರಹಿಸಿ ಪ್ರಕಟಿಸಬಹುದಿತ್ತು. ಆದರೆ ಈ ಪರಿಚಯಗಳು ಹಲವು ಬಗೆಯ ಅಧ್ಯಯನಗಳಿಗೆ ಪ್ರೇರಣೆ ಆಗುವಂತಿವೆ. ಈ ಎಲ್ಲಾ ಕಲಾವಿದೆಯರ ಮೂಲಕ ಉತ್ತರ ಕರ್ನಾಟಕದ ಜನಪದ ರಂಗಭೂಮಿಯನ್ನು ಹೆಣ್ಣಿನ ಕಣ್ಣೋಟದಿಂದ ನೋಡುವ ಒಂದು ಆಯಾಮವನ್ನು ಒದಗಿಸುತ್ತದೆ. ಅಂತೆಯೇ ಈಗ ಬದುಕಿರುವ ಕಲಾವಿದೆಯರ ಆತ್ಮಕಥಾನಕಗಳನ್ನು ನಿರೂಪಣೆ ಮಾಡಿ ಒಬ್ಬೊಬ್ಬರ ಬಗ್ಗೆಯೂ ಅವರ ಅನುಭವಗಳನ್ನು ಆಧರಿಸಿ ಆತ್ಮಕಥನಗಳನ್ನು ಪ್ರಕಟಿಸಿದರೆ ಕರ್ನಾಟಕದ ಸಂದರ್ಭದಲ್ಲಿ ಅಪರೂಪದ ಅನುಭವಲೋಕಕ್ಕೆ ಜೀವ ಬರಿಸಿದಂತಾಗುತ್ತದೆ. ಇನ್ನು ಸಾಹಿತ್ಯದಲ್ಲಿ ಮಾತ್ರ ದಲಿತ ಮಹಿಳೆಯರ ಕೊಡುಗೆಗಳನ್ನು ಚರ್ಚಿಸುವ ನಾವುಗಳು ಜನಪದ ರಂಗಭೂಮಿಗೆ ದಲಿತ ಕೆಳವರ್ಗದ ಮಹಿಳೆಯರ ಕೊಡುಗೆಯನ್ನು ಚಾರಿತ್ರಿಕವಾಗಿ ಗುರುತಿಸಲು ಸಹಾಯವಾಗುತ್ತವೆ. ಹೀಗೆ ಪಾರಿಜಾತ ಕಲೆಯನ್ನು ಜೀವಂತಗೊಳಿಸಿದ ಈ ಎಲ್ಲಾ ಕಲಾವಿದೆಯರು ನಮ್ಮ ಚರಿತ್ರೆಯಲ್ಲಿ ದಾಖಲಾಗಬೇಕಿದೆ.

ವಾರ್ತಾ ಭಾರತಿ 23 Dec 2025 11:41 am

ಇಸ್ರೋದಿಂದ ಬ್ಲೂಬರ್ಡ್ ಬ್ಲಾಕ್ -2 ಸಂವಹನ ಉಪಗ್ರಹ ಉಡಾವಣೆಗೆ ಸಿದ್ಧತೆ; ನೀಲಿ ಹಕ್ಕಿ ಮಾಡಲಿದೆ ಕಮಾಲ್

ಇಸ್ರೋದ ಬಾಹ್ಯಾಕಾಶ ಕಾರ್ಯಾಚರಣೆಗಳು ಜಾಗತಿಕ ಮಟ್ಟದಲ್ಲಿ ಸದ್ದು ಮಾಡುತ್ತಿರುವ ಮಧ್ಯೆಯೇ, ನಾಳೆ (ಡಿ.24-ಬುಧವಾರ) ಅಮೆರಿಕದ AST ಸ್ಪೇಸ್‌ಮೊಬೈಲ್‌ ಕಂಪನಿಯ ಬ್ಲೂಬರ್ಡ್ ಬ್ಲಾಕ್ -2 ಸಂವಹನ​ ಉಪಗ್ರಹ ಉಡಾವಣೆ ಮಾಡಲಿದೆ. ಇಸ್ರೋ ತನ್ನ ಶಕ್ತಿಶಾಲಿ LVM3-M6 ​ಬಾಹ್ಯಾಕಾಶ ನೌಕೆಯ ಮೂಲಕ ಈ ಉಪಗ್ರಹವನ್ನು ಕಡಿಮೆ ಭೂಕಕ್ಷೆಗೆ ಸೇರಿಸಲಿದೆ. ಸ್ಮಾರ್ಟ್‌ಫೋನ್‌ಗಳಿಗೆ ನೇರವಾಗಿ ಬಾಹ್ಯಾಕಾಶ ಆಧಾರಿತ ಸೆಲ್ಯುಲಾರ್ ಬ್ರಾಡ್‌ಬ್ಯಾಂಡ್ ಸಂಪರ್ಕ ಕಲ್ಪಿಸುವ ಗುರಿಯನ್ನು ಈ ಬಾಹ್ಯಾಕಾಶ ಕಾರ್ಯಾಚರಣೆ ಹೊಂದಿದೆ. ಈ ಕುರಿತು ಹೆಚ್ಚಿನ ಮಾಹಿತಿ ಇಲ್ಲಿದೆ.

ವಿಜಯ ಕರ್ನಾಟಕ 23 Dec 2025 11:31 am

ಬಿಪಿಎಲ್ ಕಾರ್ಡ್ ರದ್ದು ಭೀತಿ: ಈ 5 ರೂಲ್ಸ್ ತಿಳಿಯದಿದ್ದರೆ ರದ್ದಾಗೋದು ಪಕ್ಕಾ

ರಾಜ್ಯದಾದ್ಯಂತ ಲಕ್ಷಾಂತರ ಕುಟುಂಬಗಳು ಸದ್ಯ ಒಂದು ಆತಂಕದಲ್ಲಿದ್ದಾರೆ. ದಿನನಿತ್ಯದ ಜೀವನಕ್ಕೆ ಆಧಾರವಾಗಿರುವ ಪಡಿತರ ಚೀಟಿ (Ration Card) ಎಲ್ಲಿ ರದ್ದಾಗಿಬಿಡುತ್ತದೆಯೋ ಎಂಬ ಭಯ ಜನಸಾಮಾನ್ಯರನ್ನು ಕಾಡುತ್ತಿದೆ. ಸರ್ಕಾರದ ಹೊಸ ಮಾನದಂಡಗಳ ಪ್ರಕಾರ ಪರಿಶೀಲನೆ ಬಿಗಿಗೊಂಡಿದ್ದು, ಸಾವಿರಾರು ಕಾರ್ಡ್‌ಗಳು ಈಗಾಗಲೇ ಅನರ್ಹ ಎಂದು ಪತ್ತೆಯಾಗಿವೆ. ಆದರೆ, ಈ ಪಟ್ಟಿಯಲ್ಲಿ ನಿಮ್ಮ ಹೆಸರಿದೆಯೇ? ಅನ್ನಭಾಗ್ಯ ಯೋಜನೆಯ ಪ್ರಯೋಜನ ಪಡೆಯುತ್ತಿರುವವರ ಸಂಖ್ಯೆ ಹೆಚ್ಚಾಗಿದೆ, ಆದರೆ ಅದೇ ಸಮಯದಲ್ಲಿ ಅನರ್ಹರು ಕೂಡ ಬಿಪಿಎಲ್ ಕಾರ್ಡ್ (BPL Card) ಸೌಲಭ್ಯ ಪಡೆಯುತ್ತಿದ್ದಾರೆ ಎಂಬ ಗಂಭೀರ ... Read more The post ಬಿಪಿಎಲ್ ಕಾರ್ಡ್ ರದ್ದು ಭೀತಿ: ಈ 5 ರೂಲ್ಸ್ ತಿಳಿಯದಿದ್ದರೆ ರದ್ದಾಗೋದು ಪಕ್ಕಾ appeared first on Karnataka Times .

ಕರ್ನಾಟಕ ಟೈಮ್ಸ್ 23 Dec 2025 11:17 am

₹8 ಕೋಟಿ ಸೈಬರ್‌ ವಂಚನೆ, ಮನನೊಂದು ಗುಂಡು ಹಾರಿಸಿಕೊಂಡ ಮಾಜಿ ಐಪಿಎಸ್ ಅಧಿಕಾರಿ

ಸೈಬರ್‌ ವಂಚಕರು ನಾನಾ ಮಾರ್ಗಗಳನ್ನು ಅನುಸರಿಸಿ, ಜನರನ್ನು ವಂಚಿಸುತ್ತಿರುವ ಪ್ರಕರಣಗಳು ಬೆಳಕಿಗೆ ಬರುತ್ತಲೇ ಇವೆ. ಈ ಜಾಲ ಎಲ್ಲೆಡೆ ಸಕ್ರಿಯವಾಗಿದ್ದು, ಮುಗ್ಧ ಜನರ ದಾರಿ ತಪ್ಪಿಸಿ ಹಣ ಲೂಟಿ ಮಾಡುತ್ತಿದ್ದಾರೆ. ಆದರೆ ಇದೇ ಈ ಸೈಬರ್‌ ವಂಚಕರ ಜಾಲಕ್ಕೆ ಸಿಲುಕಿದ್ದ ಪಂಜಾಬ್‌ನ ಮಾಜಿ ಐಪಿಎಸ್ ಅಧಿಕಾರಿ ಅಮರ್ ಸಿಂಗ್ ಚಾಹಲ್ ಪಟಿಯಾಲದಲ್ಲಿರುವ ತಮ್ಮ ಮನೆಯಲ್ಲಿ ಗುಂಡು ಹಾರಿಸಿಕೊಂಡು

ಒನ್ ಇ೦ಡಿಯ 23 Dec 2025 11:11 am

DK Shivakumar: ಕೇಂದ್ರ ಸರ್ಕಾರ ಕೊಲೆ ಮಾಡಲು ಹೊರಟಿದೆ: ಡಿ ಕೆ ಶಿವಕುಮಾರ್‌ ಹೇಳಿದ್ದೇನು?

ಬೆಂಗಳೂರು: ಈ ಮೊದಲು ಕೇಂದ್ರ ‌ಹಾಗೂ ರಾಜ್ಯ ಸರ್ಕಾರ ಕ್ರಮವಾಗಿ ಶೇ 90:10 ಅನುಪಾತದಲ್ಲಿ ಅನುದಾನ ನೀಡಬೇಕಿತ್ತು. ಈಗ ಶೇ 60:40 ಅನುಪಾತ ತಂದು ಈ ಯೋಜನೆಯನ್ನು ಸಾಯಿಸಲಾಗುತ್ತಿದೆ. ಮಹಾತ್ಮಾ ಗಾಂಧಿ ಅವರ ಹೆಸರಿ‌ನಲ್ಲಿರುವ ಯೋಜನೆಯನ್ನು ಕೊಲೆ ಮಾಡಲು ಬಿಜೆಪಿ ಸರ್ಕಾರ ಹೊರಟಿದೆ. ದೇಶದ ಎಲ್ಲಾ ಪ್ರಜಾ ಪ್ರತಿನಿಧಿಗಳಿಗೆ ಶಾಕಿಂಗ್ ವಿಚಾರ ಎಂದು ಉಪಮುಖ್ಯಮಂತ್ರಿ ಡಿ ಕೆ

ಒನ್ ಇ೦ಡಿಯ 23 Dec 2025 11:06 am

ಅಫಾಕ್ ಖಾನ್ ಮಾಡಿರುವ ತಪ್ಪಾದರೂ ಏನು?

ಯುಪಿ ಪೊಲೀಸ್ ಇಲಾಖೆಯಲ್ಲಿನ ಒಂದು ಘಟನೆ ಚರ್ಚೆಯಾಗುತ್ತಿದೆ. ಅದರ ವಿವರಗಳಿಗೆ ಹೋಗುವ ಮೊದಲು, ಯುಪಿ ಪೊಲೀಸರ ಮೂರು ಬಗೆಯ ಚಿತ್ರಣಗಳನ್ನು ಗಮನಿಸಬೇಕು. ಮೊದಲನೆಯದು, ಸಂಚಾರ ಪೊಲೀಸ್ ಅಧಿಕಾರಿ ಅಫಾಕ್ ಖಾನ್ ಅವರು ಸಂಚಾರ ಜಾಗೃತಿ ವೀಡಿಯೊದಲ್ಲಿ ಹೆಣ್ಣುಮಕ್ಕಳು ಮತ್ತು ರಸ್ತೆ ಸುರಕ್ಷತೆ ಬಗ್ಗೆ ಮಾತನಾಡುವಾಗ ಪ್ರವಾದಿ ಮುಹಮ್ಮದ್ ಅವರನ್ನು ಉಲ್ಲೇಖಿಸಿದರು. ಎರಡನೆಯದು, ಬಹರಾಯಿಚ್‌ನಲ್ಲಿ ಕಥಾವಾಚಕ ಪುಂಡರೀಕ್ ಗೋಸ್ವಾಮಿಗೆ ಗೌರವ ರಕ್ಷೆ ನೀಡಲಾಯಿತು. ಮೂರನೆಯದು, ಕಾವಾಡಿಗಳ ಮೇಲೆ ಹೂವುಗಳನ್ನು ಸುರಿಸುವ, ಸ್ತುತಿಗೀತೆ ಹಾಡುತ್ತಿರುವ, ಕಾವಾಡಿಗಳ ಪಾದಗಳಿಗೆ ಮುಲಾಮು ಹಚ್ಚುತ್ತಿರುವ ಮತ್ತು ಹೋಳಿ ಆಡುತ್ತಿರುವ ಪೊಲೀಸರ ಚಿತ್ರ. ಇವುಗಳಲ್ಲಿ ಅಫಾಕ್ ಖಾನ್ ಪ್ರಕರಣದಲ್ಲಿ ಅವರ ವಿರುದ್ಧ ಕ್ರಮ ಜರುಗಿಸಲಾಗಿದೆ. ಹಾಗಾದರೆ, ಇತರರ ಮೇಲೇಕೆ ಇಲ್ಲ ಎಂಬ ಪ್ರಶ್ನೆ ಸಹಜವಾಗಿಯೇ ಏಳುತ್ತದೆ. ಪ್ರವಾದಿ ಮುಹಮ್ಮದ್ ಅವರನ್ನು ಬದುಕನ್ನು ಪ್ರಸ್ತಾವಿಸಿ, ಹೆಣ್ಣುಮಕ್ಕಳನ್ನು ಆಶೀರ್ವಾದ ಎಂದು ಕರೆದದ್ದೇ ಕನೌಜ್ ಸಂಚಾರ ಪೊಲೀಸ್ ಅಧಿಕಾರಿಯ ತಪ್ಪಾಯಿತೆ? ಅಫಾಕ್ ಖಾನ್ ಯಾವುದೇ ನಿಯಮಗಳನ್ನು ಉಲ್ಲಂಘಿಸಿದ್ದಾರೆಯೇ? ಪೊಲೀಸ್ ಅಧಿಕಾರಿಗಳಿಗೆ ಸಾಮಾಜಿಕ ಮಾಧ್ಯಮ ನಿಯಮಗಳು ಯಾವುವು? ಎಂಬಿತ್ಯಾದಿ ಪ್ರಶ್ನೆಗಳೂ ಮೂಡುತ್ತವೆ. ಕನೌಜ್‌ನ ಟ್ರಾಫಿಕ್ ಸಬ್ ಇನ್‌ಸ್ಪೆಕ್ಟರ್ ಅಫಾಕ್ ಖಾನ್ ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಸಕ್ರಿಯರಾಗಿದ್ದಾರೆ. ಅವರಿಗೆ ಇನ್‌ಸ್ಟಾಗ್ರಾಮ್‌ನಲ್ಲಿ 9 ಲಕ್ಷಕ್ಕೂ ಹೆಚ್ಚು ಫಾಲೋವರ್‌ಗಳು ಮತ್ತು ಯೂಟ್ಯೂಬ್‌ನಲ್ಲಿ ಸುಮಾರು 85 ಸಾವಿರ ಚಂದಾದಾರರು ಇದ್ದಾರೆ. ಅವರು ಸಂಚಾರ ಜಾಗೃತಿ ಕುರಿತು ನೂರಾರು ವೀಡಿಯೊಗಳನ್ನು ಮಾಡಿದ್ದಾರೆ.ಆದರೆ ಒಂದು ವೀಡಿಯೊ ಅವರನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಅಫಾಕ್ ಖಾನ್ ಸಮವಸ್ತ್ರದಲ್ಲಿ ಧಾರ್ಮಿಕವಾಗಿ ಮಾತಾಡುತ್ತಿದ್ದರು ಎಂದು ಆರೋಪಿಸಲಾಗಿದೆ. ಅವರು ಹೇಳಿದ್ದಾದರೂ ಏನು? ‘‘ಹಿಂದೆ ಅರಬ್ ದೇಶಗಳಲ್ಲಿ ಒಂದು ಕುಟುಂಬದಲ್ಲಿ ಹೆಣ್ಣುಮಗು ಜನಿಸಿದರೆ ಜೀವಂತವಾಗಿ ಸಮಾಧಿ ಮಾಡಲಾಗುತ್ತಿತ್ತು. ಮದುವೆಯನ್ನು ಅವಮಾನವೆಂದು ಪರಿಗಣಿಸಲಾಗಿತ್ತು. ಆದರೆ ಪ್ರವಾದಿ ಮುಹಮ್ಮದ್ ಇದನ್ನು ವಿರೋಧಿಸಿದರು ಮತ್ತು ಹೆಣ್ಣುಮಕ್ಕಳಿಗೆ ರಕ್ಷಣೆ ನೀಡಿದರು. ಹೆಣ್ಣುಮಗಳು ಜನಿಸಿದ ಪ್ರತಿಯೊಂದು ಮನೆಯ ಮೇಲೆಯೂ ದೇವರ ಆಶೀರ್ವಾದ ಇರುತ್ತದೆ’’ ಎಂದು ಅವರು ಹೇಳಿದರು. ‘‘ಹೆಣ್ಣುಮಗಳಿಲ್ಲದ ಪೋಷಕರೆಂದರೆ, ಹೆಲ್ಮೆಟ್ ಇಲ್ಲದೆ ವಾಹನ ಚಲಾಯಿಸಿದಂತೆ’’ ಎಂದು ಅವರು ಹೋಲಿಸಿದರು. ಹೀಗೆ ಅವರು ಹೆಣ್ಣುಮಕ್ಕಳ ಮಹತ್ವವನ್ನು ವಿವರಿಸುತ್ತಲೇ, ಹೆಣ್ಣುಮಕ್ಕಳು ಹೆಲ್ಮೆಟ್ ಧರಿಸುವ ಬಗ್ಗೆ ತಮ್ಮ ತಂದೆಗೆ ಹೇಗೆ ಅರಿವು ಮೂಡಿಸಬಹುದು ಎಂಬುದರ ಕುರಿತು ಮಾತನಾಡಿದರು. ಇದು ಹಿಂದೂ ಸಂಘಟನೆಯ ಸದಸ್ಯರನ್ನು ಕೆರಳಿಸಿತು ಮತ್ತು ಅವರು ಎಸ್‌ಪಿಗೆ ದೂರು ನೀಡಿದ್ದಾರೆ. ಕನೌಜ್‌ನ ಹೆಚ್ಚುವರಿ ಎಸ್‌ಪಿ ಈ ವಿಷಯದ ತನಿಖೆ ಮಾಡುತ್ತಿದ್ದಾರೆ. ಸಂಚಾರ ನಿಯಮಗಳು ಮತ್ತು ರಸ್ತೆ ಸುರಕ್ಷತೆಯನ್ನು ವಿವರಿಸಲು ಇದೇ ಅಫಾಕ್ ಖಾನ್ ಅವರು ಯಮನ ಪಾತ್ರವನ್ನು ಕೂಡ ಹಿಂದಿನ ವೀಡಿಯೊಗಳಲ್ಲಿ ಬಳಸಿದ್ದಾರೆ. ಹಿಂದೂ ಧರ್ಮದಲ್ಲಿ ಯಮ ಸಾವಿನ ದೇವರು ಮತ್ತು ಆ ವೀಡಿಯೊ ವಿಚಾರವಾಗಿ ಅಫಾಕ್ ಖಾನ್ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ. ಧಾರ್ಮಿಕ ತೀರ್ಥಯಾತ್ರೆಗಳಿಗೆ ಹೋಗುವ ಭಕ್ತರೊಂದಿಗೆ ಅಫಾಕ್ ಖಾನ್ ರಸ್ತೆ ಸುರಕ್ಷತೆ ಬಗ್ಗೆ ಮಾತನಾಡುವ ಇತರ ರೀತಿಯ ವೀಡಿಯೊಗಳಿವೆ. ಅಫಾಕ್ ಖಾನ್ ಅವರು ಸಾಮಾಜಿಕ ಮಾಧ್ಯಮ ನೀತಿಗಳನ್ನು ಉಲ್ಲಂಘಿಸುತ್ತಿದ್ದರೆ, ಪೊಲೀಸರು ಮೊದಲೇ ಏಕೆ ಕ್ರಮ ಕೈಗೊಳ್ಳಲಿಲ್ಲ? ಕನೌಜ್ ಪೊಲೀಸರು ಸಾಮಾಜಿಕ ಮಾಧ್ಯಮ ನೀತಿಗಳನ್ನು ಉಲ್ಲಂಘಿಸಿದ್ದಕ್ಕಾಗಿ ಅವರನ್ನು ಶಿಕ್ಷಿಸಲಾಗಿದೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ. ಹಾಗಾದರೆ, ಈಗ ಯಾವ ನಿಯಮಗಳನ್ನು ಅಫಾಕ್ ಖಾನ್ ಉಲ್ಲಂಘಿಸಿದರು? ಸಮವಸ್ತ್ರ ಧರಿಸಿದ ಅಧಿಕಾರಿ ಸಾಮಾಜಿಕ ಮಾಧ್ಯಮ ನಿಯಮ ಉಲ್ಲಂಘನೆ ಮಾಡಿರುವ ಪ್ರಕರಣ ಇದು ಎಂದು ಅವರ ಹಿರಿಯ ಅಧಿಕಾರಿಗಳು ಹೇಳುತ್ತಿರುವ ಬಗ್ಗೆ ಕ್ವಿಂಟ್ ವರದಿ ಹೇಳುತ್ತಿದೆ. ತನಿಖೆ ನಡೆಯುತ್ತಿರುವುದರಿಂದ, ಸ್ವತಃ ಅಫಾಕ್ ಖಾನ್ ಈ ಬಗ್ಗೆ ಪ್ರತಿಕ್ರಿಯಿಸಲು ಸಾಧ್ಯವಿಲ್ಲ ಎಂದಿರುವುದಾಗಿಯೂ ವರದಿ ಹೇಳಿದೆ. ಆದರೆ ತಾನು ಯಾವಾಗಲೂ ಸೌಹಾರ್ದದ ಬಗ್ಗೆ ಮಾತನಾಡುತ್ತೇನೆ. ಸಂಚಾರ ಮತ್ತು ರಸ್ತೆ ಸುರಕ್ಷತೆ ಬಗ್ಗೆ ಜಾಗೃತಿ ಮೂಡಿಸುವುದು ತನ್ನ ಗುರಿ. ಪ್ರತೀ ವರ್ಷ ಲಕ್ಷಾಂತರ ಜನರು ರಸ್ತೆ ಅಪಘಾತಗಳಲ್ಲಿ ಸಾಯುತ್ತಾರೆ. ನಾವು ಅದನ್ನು ಬಗೆಹರಿಸಬೇಕಾಗಿದೆ ಎಂದಿರುವ ಅಫಾಕ್ ಖಾನ್, ಯಾವುದೇ ನಿಯಮ ಉಲ್ಲಂಘಿಸಿಲ್ಲ ಎಂದಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರಕಾರದ ಯೋಜನೆಗಳು ಮತ್ತು ಹೆಣ್ಣುಮಕ್ಕಳಿಗೆ ಸಂಬಂಧಿಸಿದ ಅಭಿಯಾನಗಳ ಬಗ್ಗೆಯೂ ಅವರು ಹೇಳಿದ್ದಾರೆ. ಹೆಣ್ಣುಮಕ್ಕಳಿರುವ ಮನೆ ಸ್ವರ್ಗ ಎಂದು ಅವರು ಹೇಳಿದ್ದಾರೆ. ಹಾಗಿರುವಾಗ, ಅಫಾಕ್ ಖಾನ್ ವಿರುದ್ಧ ಕ್ರಮ ಏಕೆ? ಉತ್ತರ ಪ್ರದೇಶದ ಮಾಜಿ ಡಿಜಿಪಿ ಡಾ. ವಿಕ್ರಮ್ ಸಿಂಗ್ ಅವರ ಹೇಳಿಕೆಯನ್ನು ಕ್ವಿಂಟ್ ವರದಿ ಉಲ್ಲೇಖಿಸಿದೆ. ಅವರು, ಅಫಾಕ್ ಖಾನ್ ಅವರನ್ನು ಏಕೆ ಸಸ್ಪೆಂಡ್ ಮಾಡಲಾಗಿದೆ ಎಂದು ತಿಳಿದುಕೊಳ್ಳಬೇಕಿದೆ ಎಂದಿದ್ದಾರೆ. ಸಮವಸ್ತ್ರದಲ್ಲಿರುವಾಗ ನಮ್ಮ ದೇವರು, ದೇವತೆಗಳ ಬಗ್ಗೆ ಮಾತನಾಡುವುದು ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಹಾಗೆ ಮಾಡುವುದನ್ನು ತಪ್ಪಿಸುವುದು ಒಳ್ಳೆಯದು. ಆದರೆ ಹಾಗೆ ಮಾಡಿದರೂ, ಅದೇನೂ ಅಪರಾಧವಲ್ಲ. ಅವರು ಯಾವುದೇ ಅಪರಾಧ ಮಾಡಿಲ್ಲ, ಅವರು ಯಾವುದೇ ಅಶಿಸ್ತಿನ ನಡವಳಿಕೆ ತೋರಿಸಿಲ್ಲ. ಕೌನ್ಸೆಲಿಂಗ್ ಸಾಕಾಗುತ್ತಿತ್ತು ಎಂದು ಅವರು ಹೇಳಿದ್ದಾರೆ. ಈಗ ಪ್ರಶ್ನೆಯೆಂದರೆ, ಅಫಾಕ್ ಖಾನ್ ಸಾಮಾಜಿಕ ಮಾಧ್ಯಮ ನೀತಿಗೆ ವಿರುದ್ಧವಾಗಿ ನಡೆದುಕೊಂಡಿದ್ದಾರೆಯೇ ಎನ್ನುವುದು. ಯುಪಿ ಪೊಲೀಸ್ ಸಾಮಾಜಿಕ ಮಾಧ್ಯಮ ನೀತಿ 2023 ಅನ್ನು ಗಮನಿಸಿದರೆ, ಪೊಲೀಸ್ ಸಿಬ್ಬಂದಿ ಸಾರ್ವಜನಿಕ ಸೇವೆಯಲ್ಲಿ ಅಥವಾ ಸಾರ್ವಜನಿಕರಿಗೆ ಸಹಾಯ ಮಾಡುವ ಯಾವುದೇ ಕೆಲಸವನ್ನು ತಮ್ಮ ವೈಯಕ್ತಿಕ ಸಾಮಾಜಿಕ ಮಾಧ್ಯಮ ಖಾತೆಗಳ ಮೂಲಕ ಮಾಡಬಹುದು ಮತ್ತು ಹಂಚಿಕೊಳ್ಳಬಹುದು ಎಂದು ಅದರಲ್ಲಿ ಹೇಳಲಾಗಿದೆ. ಪೊಲೀಸ್ ಸಿಬ್ಬಂದಿ ತಮ್ಮ ವೈಯಕ್ತಿಕ ಸಾಮಾಜಿಕ ಮಾಧ್ಯಮ ಖಾತೆಗಳಿಂದ ಸರಕಾರದ ಮೇಲೆ ಪ್ರಭಾವ ಬೀರದೆ ಶ್ಲಾಘನೀಯ ಪೊಲೀಸ್ ಕೆಲಸಕ್ಕೆ ಸಂಬಂಧಿಸಿದ ಪೋಸ್ಟ್‌ಗಳನ್ನು ಮರುಟ್ವೀಟ್ ಮಾಡಬಹುದು, ಮರುಹಂಚಿಕೊಳ್ಳಬಹುದು, ಲೈಕ್ ಮಾಡಬಹುದು ಮತ್ತು ಕಮೆಂಟ್ ಮಾಡಬಹುದು ಎಂದು ಸಾಮಾಜಿಕ ಮಾಧ್ಯಮ ನೀತಿ ಹೇಳುತ್ತದೆ ಎಂದು ವರದಿ ಉಲ್ಲೇಖಿಸಿದೆ. ಹಾಗಿರುವಾಗ, ಅಫಾಕ್ ಖಾನ್ ಯಾವ ನಿಯಮ ಉಲ್ಲಂಘಿಸಿದ್ದಾರೆ ಎಂಬುದು ಸ್ಪಷ್ಟವಾಗಿಲ್ಲ. ಒಂದುವೇಳೆ ಅವರು ಸಾಮಾಜಿಕ ಮಾಧ್ಯಮ ನೀತಿಯನ್ನು ಉಲ್ಲಂಘಿಸಿದ್ದಾರೆ ಎಂದೇ ಭಾವಿಸಿದರೂ, ಭಾರತದಲ್ಲಿ ಅನೇಕ ಪೊಲೀಸ್ ಅಧಿಕಾರಿಗಳು ಸಾಮಾಜಿಕ ಮಾಧ್ಯಮದಲ್ಲಿ ಸಕ್ರಿಯರಾಗಿದ್ದಾರೆ. ರೀಲ್‌ಗಳ ಮೂಲಕ ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳು ಗಮನ ಸೆಳೆಯುತ್ತಾರೆ. ಕ್ವಿಂಟ್ ವರದಿ ಪ್ರಕಾರ, ಉತ್ತರ ಪ್ರದೇಶದಲ್ಲಿಯೇ ಬಲ್ಲಿಯಾ ಟ್ರಾಫಿಕ್ ಪೊಲೀಸ್ ಅಧಿಕಾರಿ ರುದ್ರ ಪ್ರತಾಪ್ ಮಾಲ್ ಅವರ ಯೂಟ್ಯೂಬ್ ಚಾನೆಲ್‌ಗೆ 40 ಲಕ್ಷಕ್ಕೂ ಹೆಚ್ಚು ಚಂದಾದಾರರಿದ್ದಾರೆ. ನೂರಾರು ಜಾಗೃತಿ ವೀಡಿಯೊಗಳನ್ನು ಅವರು ಹಾಕಿದ್ದಾರೆ. ಡಿಎಸ್‌ಪಿ ಸಂತೋಷ್ ಪಟೇಲ್ ಸುಮಾರು 35 ಲಕ್ಷ ಚಂದಾದಾರರನ್ನು ಹೊಂದಿದ್ದಾರೆ. ಪಿ.ಕೆ. ಮಸ್ತ್ ಎಂಬವರು ಸುಮಾರು 24 ಲಕ್ಷ ಚಂದಾದಾರರನ್ನು ಹೊಂದಿದ್ದಾರೆ. ವಿವೇಕಾನಂದ ತಿವಾರಿ ಸುಮಾರು 85 ಲಕ್ಷ ಚಂದಾದಾರರನ್ನು ಹೊಂದಿದ್ದಾರೆ. ಈ ಎಲ್ಲಾ ಪೊಲೀಸ್ ಅಧಿಕಾರಿಗಳು ತಮ್ಮ ಕೆಲಸದ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಹೇಳಿಕೊಳ್ಳುತ್ತಾರೆ. ಅವರು ತುಂಬಾ ಸಕ್ರಿಯರಾಗಿದ್ದಾರೆ. ಹಾಗಾದರೆ, ಅವರ ವಿರುದ್ಧವೂ ಕ್ರಮ ಕೈಗೊಳ್ಳಲಾಗುತ್ತದೆಯೇ? ಧಾರ್ಮಿಕ ನಾಯಕ ಅಥವಾ ಧಾರ್ಮಿಕ ಬೋಧನೆಗಳ ಮೂಲಕ ಜಾಗೃತಿ ಮೂಡಿಸುವುದು ಅಪರಾಧವಾಗಿದ್ದರೆ, ಪೊಲೀಸರು ಬಹರಾಯಿಚ್‌ನಲ್ಲಿ ಕಥಾವಾಚಕ ಪುಂಡರೀಕ್ ಗೋಸ್ವಾಮಿಗೆ ಏಕೆ ಸೆಲ್ಯೂಟ್ ಮಾಡುತ್ತಿದ್ದಾರೆಂದು ಯುಪಿ ಪೊಲೀಸರು ವಿವರಿಸಬೇಕು. ಕಾವಾಡಿ ಯಾತ್ರಿಕರ ಮೇಲೆ ಹೂವುಗಳನ್ನು ಸುರಿಸುವುದು ಮತ್ತು ಹೋಳಿ ಬಣ್ಣಗಳನ್ನು ಲೇಪಿಸುವುದು ಮತ್ತು ಸಮವಸ್ತ್ರದಲ್ಲಿ ಭಜನೆಗಳನ್ನು ಹಾಡುವುದು ಸೇರಿದಂತೆ ವಿವಿಧ ಚಟುವಟಿಕೆಗಳಿಗಾಗಿ ಎಷ್ಟು ಪೊಲೀಸರ ಮೇಲೆ ಕ್ರಮ ಕೈಗೊಳ್ಳಲಾಗಿದೆ? ದೇಶಾದ್ಯಂತ ಅನೇಕ ಪೊಲೀಸ್ ಠಾಣೆಗಳಲ್ಲಿ ದೇವಾಲಯಗಳಿವೆ. ಹಾಗಾದರೆ, ಪೊಲೀಸ್ ಅಧಿಕಾರಿಗಳು ಅಲ್ಲಿಗೆ ಹೋಗುವುದಿಲ್ಲವೇ? 2019ರಲ್ಲಿ ಬರೇಲಿ ಜಿಲ್ಲೆಯ ಭಮೋರಾ ಪೊಲೀಸ್ ಠಾಣೆಯ ಎಸ್‌ಎಚ್‌ಒ ಜಾವೇದ್ ಖಾನ್ ಶಿವ ದೇವಾಲಯದಲ್ಲಿ ಪೂಜೆ ಸಲ್ಲಿಸಿದರು. ಆ ಸಮಯದಲ್ಲಿ, ಜಾವೇದ್ ಖಾನ್ ವಿರುದ್ಧ ಕ್ರಮ ಕೈಗೊಳ್ಳುವ ಬದಲು, ಅವರನ್ನು ಹೊಗಳಲಾಯಿತು. ಪೊಲೀಸರು ಪಕ್ಷಪಾತದಿಂದಲ್ಲ, ನ್ಯಾಯದಿಂದ ವರ್ತಿಸಬೇಕು. ಸಾಮಾನ್ಯ ಜನರು ಎಲ್ಲಾ ಧರ್ಮಗಳು, ಸಮಾಜಗಳು, ವರ್ಗಗಳು ಮತ್ತು ಜಾತಿಗಳನ್ನು ಒಂದೇ ಕಣ್ಣಿನಿಂದ ನೋಡಬೇಕು. ನಿಷ್ಠೆ, ಪ್ರಾಮಾಣಿಕತೆ ಮತ್ತು ನಿಷ್ಪಕ್ಷಪಾತದ ಪ್ರತಿಜ್ಞೆಯನ್ನು ಅವರು ನೆನಪಿಡಬೇಕು. ಹಾಗಾದರೆ, ಇದೆಲ್ಲವೂ ಸರಿ ಎನ್ನುವುದಾದರೆ, ಈಗ ಅಫಾಕ್ ಖಾನ್ ಮಾಡಿರುವ ತಪ್ಪೇನು? ಯುಪಿ ಪೊಲೀಸರು ಅಫಾಕ್ ಖಾನ್ ವಿರುದ್ಧದ ಕ್ರಮವನ್ನು ಯಾವ ರೀತಿಯಲ್ಲಿ ಸಮರ್ಥಿಸಿಕೊಳ್ಳುತ್ತಾರೆ?

ವಾರ್ತಾ ಭಾರತಿ 23 Dec 2025 11:04 am

Year Ender 2025 : ಕರ್ನಾಟಕದಲ್ಲಿ ನಡೆದ 15 ಪ್ರಮುಖ ವಿದ್ಯಮಾನಗಳ ಮಾಹಿತಿ - ಇಲ್ಲಿದೆ ಒಂದೇ ಕ್ಲಿಕ್ಕಿನಲ್ಲಿ

Year End Article 2025: ಡಿಸೆಂಬರ್ ತಿಂಗಳು ಮುಗಿಯುತ್ತಾ ಬರುತ್ತಿದೆ, 2026ರ ಸ್ವಾಗತಕ್ಕೆ ಜಗತ್ತು ಸಜ್ಜಾಗುತ್ತಿದೆ. ಹಾಲೀ ವರ್ಷದಲ್ಲಿ ರಾಜಕೀಯವಾಗಲಿ, ಪ್ರಾಕೃತಿಕ ವಿಕೋಪವಾಗಲಿ, ಹಲವು ಘಟನೆಗಳು ಸಂಭವಿಸಿದೆ. ಇನ್ನು, 2025ರಲ್ಲಿ ಹಲವಾರು ಗಣ್ಯರು ನಿಧನವನ್ನು ಹೊಂದಿದ್ದಾರೆ. ಈ ವರ್ಷದಲ್ಲಿ ರಾಜ್ಯದಲ್ಲಿ ನಡೆದ ಪ್ರಮುಖ ಘಟನೆಗಳ/ ವಿದ್ಯಮಾನಗಳು ಹೈಲೆಟ್ಸ್ ಈ ಲೇಖನದಲ್ಲಿ ಕೊಡಲಾಗಿದೆ.

ವಿಜಯ ಕರ್ನಾಟಕ 23 Dec 2025 10:58 am

Gold Silver Price Today: ಗಗನಕ್ಕೇರಿದ ಬೆಳ್ಳಿ-ಚಿನ್ನದ ದರ! ಎರಡೇ ದಿನಕ್ಕೆ ಬೆಳ್ಳಿ ದರ ₹9000 ಏರಿಕೆ, ಇಂದಿನ ದರ

ಬೆಂಗಳೂರು: ಚಿನ್ನ-ಬೆಳ್ಳಿ ಲೋಗಳನ್ನು ಕೊಳ್ಳುವವರಿಗೆ ನಿತ್ಯವು ಆಘಾತ ಎದುರಾಗುತ್ತಿದೆ. ಸದ್ಯಕ್ಕೆ ಚಿನ್ನ ಬೆಳ್ಳಿ ಖರೀದಿ ವಿಚಾರವೇ ಬೇಡವೇ ಬೇಡ ಎನ್ನುವಷ್ಟರ ಮಟ್ಟಿಗೆ ಅವುಗಳ ದರ ಗಗನಕ್ಕೇರುತ್ತಿದೆ. ಸದ್ಯಕ್ಕೆ ಇಳಿಕೆ ಆಗುವ ಯಾವ ಲಕ್ಷಣಗಳು ಕಾಣುತ್ತಿಲ್ಲ. ಬೆಳ್ಳಿ ದರ ಒಂದೇ ತಿಂಗಳಲ್ಲಿ 50,000 ರೂಪಾಯಿಗೆ ಜಿಗಿದಿದೆ. ಚಿನ್ನ ಬೆಲೆಯೂ ನಿತ್ಯ ಹೆಚ್ಚಾಗುತ್ತಿದೆ. ಇಂದು ಹಸ ಹೆಚ್ಚಾಗಿದ್ದು, ಬೆಂಗಳೂರಿನಲ್ಲಿ ಬಂಗಾರ,

ಒನ್ ಇ೦ಡಿಯ 23 Dec 2025 10:54 am

ಪಿಂಜಾರ ನಿಗಮಕ್ಕೆ ಅನುದಾನ ಕೊಡಿ, ಇಲ್ಲವೇ ಶೇ .30 ಅನುದಾನ ಮೀಸಲಿಡಿ : ಹೆಚ್.ಜಲೀಲ್‌ ಸಾಬ

ಲಿಂಗಸುಗೂರು : ಹಿಂದಿನ ಸರ್ಕಾರದಲ್ಲಿ ಸ್ಥಾಪನೆಯಾಗಿರುವ ಪಿಂಜಾರ ಅಭಿವೃದ್ಧಿ ನಿಗಮಕ್ಕೆ ಸರ್ಕಾರ ಅನುದಾನ ಬಿಡುಗಡೆ ಮಾಡಬೇಕು. ಇಲ್ಲವಾದಲ್ಲಿ ಇರುವ ಅಲ್ಪಸಂಖ್ಯಾತರ ನಿಗಮದ ಅನುದಾನದಲ್ಲಿ ಪಿಂಜಾರ ಸಮುದಾಯಕ್ಕೆ ಶೇ.30 ರಷ್ಟು ಅನುದಾನ ಮೀಸಲಾಗಿಡಬೇಕು ಎಂದು ಕರ್ನಾಟಕ ರಾಜ್ಯ ನದಾಫ್ / ಪಿಂಜಾರ ಸಂಘದ ರಾಜ್ಯಾಧ್ಯಕ್ಷ ಹೆಚ್.ಜಲೀಲ್‌ ಸಾಬ ಒತ್ತಾಯಿಸಿದರು. ತಾಲೂಕಿನ ಹಟ್ಟಿ ಚಿನ್ನದಗಣಿಯಲ್ಲಿ ಭಾನುವಾರ ಆಯೋಜಿಸಿದ್ದ ಕಲಬುರಗಿ ವಿಭಾಗ ಮಟ್ಟದ ಪ್ರತಿಭಾ ಪುರಸ್ಕಾರ ಹಾಗೂ ಗೌರವ ಸನ್ಮಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಅತ್ಯಂತ ಹಿಂದುಳಿದಿರುವ ಅಲ್ಪಸಂಖ್ಯಾತರಲ್ಲಿಯೇ ಅಲ್ಪಸಂಖ್ಯಾತವಾಗಿರುವ ಇಸ್ಲಾಂ ಧರ್ಮಾಚರಣೆ ಮಾಡುವ ನದಾಫ್/ ಪಿಂಜಾರರ ಅಭಿವೃದ್ಧಿಗೆ ಸರ್ಕಾರ ಮುಂದಾಗದೇ ಇರುವುದು ದುರಂತ, ಸಚಿವರು, ಶಾಸಕರುಗಳೊಂದಿ ಮೂರಾಲ್ಕು ಬಾರಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಸಮಸ್ಯೆ, ಬೇಡಿಕೆಗಳ ಈಡೇರಿಕೆಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಸರಕಾರ ಅಧಿಕಾರಕ್ಕೆ ಬಂದು ಎರಡೂವರೆ ವರ್ಷಗಳಾದವು. ಇದುವರೆಗೂ ಸ್ಥಾಪನೆಯಾಗಿರುವ ನಿಗಮಕ್ಕೆ ಅನುದಾನ ಬಿಡುಗಡೆ ಮಾಡಿಲ್ಲ. ಇನ್ನಾದರೂ ಸಂಸದರು, ಶಾಸಕರು, ಮಾಜಿ ಶಾಸಕರು ನಮ್ಮ ಮನವಿಯನ್ನು ಸರಕಾರದ ಕಿವಿಗೆ ಮುಟ್ಟಿಸಿ ಪಿಂಜಾರರಿಗೆ ನ್ಯಾಯ ದೊರಕಿಸಿ ಕೊಡಬೇಕು ಎಂದು ಮನವಿ ಮಾಡಿದರು. ಇದೇ ವೇಳೆ ಪಿಂಜಾರ ಸಮುದಾಯದ ಸಮಾಜ ಸೇವಕ ರಾಜ್ ಮೊಹಮ್ಮದ್ ಅವರ ಸಮಾಜ ಸೇವೆಯನ್ನು ಗುರುತಿಸಿ ಅವರಿಗೆ ಸನ್ಮಾನ ಮಾಡಿ ಗೌರವಿಸಲಾಯಿತು. ಸಂಸದ ಜಿ.ಕುಮಾರ ನಾಯಕ, ಮಾಜಿ ಶಾಸಕ ಡಿ.ಎಸ್. ಹೂಲಗೇರಿ, ನದಾಫ್ / ಪಿಂಚಾರ ಸಂಘದ ವಿಭಾಗೀಯ ಉಪಾಧ್ಯಕ್ಷ ಅಲ್‌ದಾಚ್ ಮಹಿಬೂಬಸಾಬ ಸಂತಕೆಲ್ಲೂರು, ಜಿಲ್ಲಾಧ್ಯಕ್ಷ ಮೌಲಾಸಾಬ ಗಣದಿನ್ನಿ ತಾಲೂಕು ಅಧ್ಯಕ್ಷ ಟಿ.ಅಮೀನುದ್ದೀನ್ ಚಾಂತಾಪೂರ, ಉಪಾದ್ಯಕ್ಷ ಅಮಿನುದ್ದಿನ್ ಬಂಡಿ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಗೋವಿಂದ ನಾಯಕ, ದಟ್ಟಿ ಘಟಕ ಅಧ್ಯಕ್ಷ ಅಡ್ಡ‌ಬಾಬಾ, ಮುಖಂಡರಾದ ಅಮ್ಮದ್‌ ಸೇರ್, ಖಾದರಸಾಬ ಆನೆಹೊಸೂರು, ಯಮನೂರ ನದಾಫ್‌, ನಬಿರಸೂಲ್, ರದಮಾನ್‌ಸಾಬ, ಖಾಜಾದುಸೇನ್ ಬಂಗಾರಿ, ರಾಜು ನದಾಫ್, ಬಂದೇನವಾಜ, ಮದಬೂಬ, ಖಾಜಾದುಸೇನ್ ಸೇರಿ ನೂರಾರು ಸಂಖ್ಯೆಯಲ್ಲಿ ಸಮಾಜದ ಮಹಿಳೆಯರು ಮತ್ತು ಪುರುಷರು ಸಮಾವೇಶದಲ್ಲಿ ಪಾಲ್ಗೊಂಡಿದ್ದರು.

ವಾರ್ತಾ ಭಾರತಿ 23 Dec 2025 10:53 am

ಬುಡಕಟ್ಟು ಮಕ್ಕಳ ಶಿಕ್ಷಣ ಮುಂದುವರಿಕೆಗೆ ಪೋಷಕರ ಉದ್ಯೋಗ ಮುಖ್ಯ

ಬುಡಕಟ್ಟು ಸಮುದಾಯದ ಮಕ್ಕಳಲ್ಲಿ ಶಾಲೆ ಬಿಡುವ ಪ್ರಮಾಣವನ್ನು ಕಡಿಮೆ ಮಾಡಲು ಪೋಷಕರಿಗೆ ಉದ್ಯೋಗಾವಕಾಶ ಸೃಷ್ಟಿಯೇ ಕೇಂದ್ರಬಿಂದುವಾಗಬೇಕು. ಶಿಕ್ಷಣ-ಉದ್ಯೋಗ-ಸಾಮಾಜಿಕ ಭದ್ರತೆ ಈ ಮೂರನ್ನು ಒಟ್ಟಾಗಿ ನೋಡಿದಾಗ ಹಾಗೂ ಮಕ್ಕಳ ಶಿಕ್ಷಣವನ್ನು ಕಾಪಾಡುವ ಪ್ರಯತ್ನವನ್ನು ಕುಟುಂಬದ ಆರ್ಥಿಕ ಸಬಲೀಕರಣದೊಂದಿಗೆ ಜೋಡಿಸಿದಾಗ ಮಾತ್ರ ಶಾಶ್ವತ ಪರಿಹಾರ ಸಾಧ್ಯ. ಭಾರತದ ಅಭಿವೃದ್ಧಿ ಚರ್ಚೆಗಳಲ್ಲಿ ಶಿಕ್ಷಣಕ್ಕೆ ಅತ್ಯಂತ ಮಹತ್ವದ ಸ್ಥಾನವಿದೆ. ಆದರೆ ಈ ಶಿಕ್ಷಣದ ಫಲಗಳು ಎಲ್ಲ ಸಮುದಾಯಗಳಿಗೆ ಸಮಾನವಾಗಿ ತಲುಪುತ್ತಿವೆಯೇ ಎಂಬ ಪ್ರಶ್ನೆ ಇನ್ನೂ ಜೀವಂತವಾಗಿದೆ. ವಿಶೇಷವಾಗಿ ಬುಡಕಟ್ಟು ಸಮುದಾಯದ ಮಕ್ಕಳಲ್ಲಿ ಶಾಲೆ ಬಿಡುವ ಪ್ರಮಾಣ ಆತಂಕಕಾರಿ ಮಟ್ಟದಲ್ಲಿರುವುದು ಗಂಭೀರ ಚಿಂತೆಯ ವಿಷಯವಾಗಿದೆ. ಈ ಸಮಸ್ಯೆಯನ್ನು ಕೇವಲ ಶಿಕ್ಷಣ ಕ್ಷೇತ್ರದ ಸಮಸ್ಯೆಯಾಗಿ ನೋಡಿದರೆ ಪರಿಹಾರ ಅಪೂರ್ಣವಾಗುತ್ತದೆ. ವಾಸ್ತವದಲ್ಲಿ ಇದು ಬಡತನ, ಉದ್ಯೋಗಾಭಾವ, ಸಾಮಾಜಿಕ ಅಸಮಾನತೆ ಮತ್ತು ಬಾಲ ಕಾರ್ಮಿಕ ಪದ್ಧತಿಗೆ ಸಂಬಂಧಿಸಿದ ಸಮಗ್ರ ಸಾಮಾಜಿಕ-ಆರ್ಥಿಕ ಸಮಸ್ಯೆಯಾಗಿದೆ. ಈ ಸಂಕೀರ್ಣ ಸಮಸ್ಯೆಯ ಕೇಂದ್ರಬಿಂದುವಿನಲ್ಲಿ ಇರುವುದೇ ಬುಡಕಟ್ಟು ಮಕ್ಕಳ ಪೋಷಕರಿಗೆ ಸ್ಥಿರ ಮತ್ತು ಗೌರವಯುತ ಉದ್ಯೋಗಾವಕಾಶಗಳ ಕೊರತೆ. ಬುಡಕಟ್ಟು ಪ್ರದೇಶಗಳಲ್ಲಿ ಪೋಷಕರ ಜೀವನೋಪಾಯ ಬಹುತೇಕ ಅರಣ್ಯ ಆಧಾರಿತ, ಋತುಮಾನಾಧಾರಿತ ಅಥವಾ ಅನೌಪಚಾರಿಕ ಕ್ಷೇತ್ರಗಳ ಮೇಲೆ ಹೆಚ್ಚು ಅವಲಂಬಿತವಾಗಿದೆ. ಇಂತಹ ಅಸ್ಥಿರ ಆದಾಯ ವ್ಯವಸ್ಥೆಗಳು ಕುಟುಂಬಗಳ ದಿನನಿತ್ಯದ ಅಗತ್ಯಗಳನ್ನು ಪೂರೈಸಲು ಸಾಕಾಗುವುದಿಲ್ಲ. ಇದರ ಪರಿಣಾಮವಾಗಿ, ಕುಟುಂಬದ ಆರ್ಥಿಕ ಒತ್ತಡವನ್ನು ತಗ್ಗಿಸಲು ಮಕ್ಕಳು ಶಾಲೆಗೆ ಹೋಗುವುದನ್ನು ನಿಲ್ಲಿಸಿ ಕೆಲಸಕ್ಕೆ ಹೋಗುವ ಪರಿಸ್ಥಿತಿ ಉಂಟಾಗುತ್ತಿದೆ. ಕೃಷಿ ಕೆಲಸ, ಕಟ್ಟಡ ನಿರ್ಮಾಣ, ಸಣ್ಣ ವ್ಯಾಪಾರ ಹಾಗೂ ಅರಣ್ಯ ಉತ್ಪನ್ನ ಸಂಗ್ರಹಣೆ ಮುಂತಾದ ಕ್ಷೇತ್ರಗಳಲ್ಲಿ ಮಕ್ಕಳನ್ನು ಬಳಸಿಕೊಳ್ಳಲಾಗುತ್ತಿದೆ. ಪೋಷಕರ ಉದ್ಯೋಗದ ಅಸ್ಥಿರತೆಯಿಂದ ಉಂಟಾಗುವ ವಲಸೆ ಮತ್ತೊಂದು ಪ್ರಮುಖ ಕಾರಣ. ಪೋಷಕರು ಕೆಲಸಕ್ಕಾಗಿ ಸ್ಥಳಾಂತರವಾದಾಗ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಾರೆ. ವಲಸೆ ಶಾಲೆಗಳ ನಿರಂತರತೆಯನ್ನು ಕಿತ್ತುಹಾಕುತ್ತದೆ; ಹೊಸ ಸ್ಥಳದಲ್ಲಿ ಭಾಷಾ ಅಡೆತಡೆ, ಶಾಲಾ ದಾಖಲಾತಿ ಸಮಸ್ಯೆ, ಸಾಮಾಜಿಕ ಒತ್ತಡಗಳು ಮಕ್ಕಳ ಕಲಿಕೆಗೆ ಅಡ್ಡಿಯಾಗುತ್ತವೆ. ಇದು ಮಕ್ಕಳ ಶಿಕ್ಷಣವನ್ನು ಮಾತ್ರವಲ್ಲ, ಅವರ ದೈಹಿಕ, ಮಾನಸಿಕ ಮತ್ತು ಸಾಮಾಜಿಕ ಅಭಿವೃದ್ಧಿಯ ಮೇಲೂ ದುಷ್ಪರಿಣಾಮ ಬೀರುತ್ತದೆ. ಬಾಲ ಕಾರ್ಮಿಕ ಪದ್ಧತಿ ಮತ್ತು ಶಾಲೆ ಬಿಡುವಿಕೆ ಪರಸ್ಪರ ಸಂಬಂಧ ಹೊಂದಿವೆ ಎಂಬುದು ಅನೇಕ ಅಧ್ಯಯನಗಳಿಂದ ದೃಢಪಟ್ಟಿದೆ. ಪೋಷಕರಿಗೆ ಸ್ಥಿರ ಆದಾಯ ಲಭ್ಯವಿದ್ದರೆ, ಮಕ್ಕಳನ್ನು ಕೆಲಸಕ್ಕೆ ಕಳುಹಿಸುವ ಅನಿವಾರ್ಯತೆ ಕಡಿಮೆಯಾಗುತ್ತದೆ ಮತ್ತು ಮಕ್ಕಳನ್ನು ಶಾಲೆಗೆ ಕಳುಹಿಸುವ ಮನೋಭಾವ ಬಲಗೊಳ್ಳುತ್ತದೆ. ಆದ್ದರಿಂದ, ಬುಡಕಟ್ಟು ಮಕ್ಕಳ ಶಿಕ್ಷಣವನ್ನು ನೀಡುವ ಪ್ರಯತ್ನಗಳು ಕೇವಲ ಶಾಲಾ ಮೂಲಸೌಕರ್ಯ, ಪಠ್ಯಕ್ರಮ ಸುಧಾರಣೆ ಅಥವಾ ವಿದ್ಯಾರ್ಥಿವೇತನಗಳಿಗೆ ಸೀಮಿತವಾಗದೆ, ಪೋಷಕರ ಉದ್ಯೋಗ ಸೃಷ್ಟಿಯನ್ನು ಕೇಂದ್ರಬಿಂದುವಾಗಿಸಿಕೊಂಡಿರಬೇಕು. ರಾಷ್ಟ್ರೀಯ ಬಾಲಕಾರ್ಮಿಕ ಯೋಜನೆಯು 9ರಿಂದ 12 ವರ್ಷ ವಯಸ್ಸಿನ ಮಕ್ಕಳ ಪುನರ್ವಸತಿಗೆ ಕೇಂದ್ರ ಸರಕಾರದ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯವು 1988ರಲ್ಲಿ ಪ್ರಾರಂಭಿಸಿತು. ಪ್ರಸ್ತುತ ಈ ಯೋಜನೆಯು ಕೇಂದ್ರ ಸರಕಾರದ ಶಿಕ್ಷಣ ಸಚಿವಾಲಯದಡಿಯಲ್ಲಿ 2021ರಿಂದ ಸಮಗ್ರ ಶಿಕ್ಷಾ ಅಭಿಯಾನ ಎಂಬುದಾಗಿ ಮರುನಾಮಕಾರಣವಾಗಿ ಜಾರಿಯಲ್ಲಿದೆ. ಈ ಯೋಜನೆಯ ಮುಖ್ಯ ಉದ್ದೇಶ ಬಾಲ ಕಾರ್ಮಿಕ ಪದ್ಧತಿಯಿಂದ ಮಕ್ಕಳನ್ನು ಮುಕ್ತಗೊಳಿಸಿ, ಅವರಿಗೆ ಪುನರ್ವಸತಿ ಮತ್ತು ಶಿಕ್ಷಣ ಒದಗಿಸುವುದಾಗಿದೆ. ಈ ಯೋಜನೆಯಡಿ ವಿಶೇಷ ತರಬೇತಿ ಶಾಲೆಗಳು, ಮಧ್ಯಾಹ್ನದ ಊಟ, ಆರೋಗ್ಯ ಸೇವೆಗಳು ಹಾಗೂ ಮಕ್ಕಳನ್ನು ಶಿಕ್ಷಣಕ್ಕೆ ಸೇರಿಸುವ ವ್ಯವಸ್ಥೆ ಕಲ್ಪಿಸಲಾಗಿದೆ. ಜೊತೆಗೆ ಪೋಷಕರಿಗೆ ಕೌಶಲ್ಯಾಭಿವೃದ್ಧಿ ತರಬೇತಿ ನೀಡುವ ಉದ್ದೇಶವೂ ಹೊಂದಿದೆ. ಆದರೆ ಅನೇಕ ಸಂದರ್ಭಗಳಲ್ಲಿ ಈ ಯೋಜನೆ ಮಕ್ಕಳ ಮೇಲಷ್ಟೇ ಹೆಚ್ಚು ಕೇಂದ್ರೀಕರಿಸಿಕೊಂಡಿದ್ದು, ಪೋಷಕರ ದೀರ್ಘಕಾಲೀನ ಉದ್ಯೋಗ ಭದ್ರತೆಯನ್ನು ಸಮರ್ಪಕವಾಗಿ ಸಾಧಿಸಿಲ್ಲ ಎಂಬುದು ಹಲವರ ಅಭಿಪ್ರಾಯ. ಈ ಹಿನ್ನೆಲೆಯಲ್ಲಿ ಬುಡಕಟ್ಟು ಸಮುದಾಯದ ಮಕ್ಕಳು ಶಾಲೆ ಬಿಡುವ ಪ್ರಮಾಣವನ್ನು ಕಡಿಮೆ ಮಾಡಲು ಪೋಷಕರ ದೀರ್ಘಕಾಲೀನ ಉದ್ಯೋಗ ಭದ್ರತೆಯನ್ನು ಕಾಪಾಡುವ ಯೋಜನೆಗಳ ಅವಶ್ಯಕತೆಯಿದೆ. ಅಂತರ್‌ರಾಷ್ಟ್ರೀಯ ಅನುಭವಗಳನ್ನು ಪರಿಶೀಲಿಸಿದರೆ, ಇಟಲಿ ದೇಶದ ಮಾದರಿ ವಿಶೇಷವಾಗಿ ಗಮನ ಸೆಳೆಯುತ್ತದೆ. ಇಟಲಿಯಲ್ಲಿ 15 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳನ್ನು ಕೆಲಸಕ್ಕೆ ಬಳಸುವುದನ್ನು ಕಠಿಣ ಕಾನೂನುಗಳ ಮೂಲಕ ನಿಷೇಧಿಸಲಾಗಿದೆ. ಆದರೆ ಇಟಲಿ ಕೇವಲ ಕಾನೂನು ನಿಷೇಧಕ್ಕಷ್ಟೇ ಸೀಮಿತವಾಗಿಲ್ಲ. ಅಲ್ಲಿ ಮಕ್ಕಳ ಸಮಸ್ಯೆಯನ್ನು ಕುಟುಂಬದ ಆರ್ಥಿಕ ಸಮಸ್ಯೆಯಾಗಿ ಪರಿಗಣಿಸಿ, ಪೋಷಕರಿಗೆ ಉದ್ಯೋಗಾವಕಾಶ, ಸಾಮಾಜಿಕ ಭದ್ರತೆ ಮತ್ತು ಕುಟುಂಬ ಸಹಾಯ ಒದಗಿಸುವ ಸಮಗ್ರ ನೀತಿಯನ್ನು ಅನುಸರಿಸಲಾಗಿದೆ. ಇಟಲಿಯ ಕಾರ್ಮಿಕ ಸಚಿವಾಲಯ, ಡಿಫೆನ್ಸ್ ಫಾರ್ ಚಿಲ್ಡ್ರನ್ ಇಂಟರ್‌ನ್ಯಾಷನಲ್ (ಡಿಸಿಐ-ಇಟಲಿ), ಅಂತರ್‌ರಾಷ್ಟ್ರೀಯ ಕಾರ್ಮಿಕ ಸಂಸ್ಥೆ ಹಾಗೂ ವಿವಿಧ ಸ್ವಯಂ ಸೇವಾ ಸಂಸ್ಥೆಗಳು ಪರಸ್ಪರ ಸಹಕಾರದೊಂದಿಗೆ ಕಾರ್ಯನಿರ್ವಹಿಸುತ್ತವೆ. Minori.it ಎಂಬ ಡಿಜಿಟಲ್ ವ್ಯವಸ್ಥೆಯ ಮೂಲಕ ಮಕ್ಕಳ ಮತ್ತು ಕುಟುಂಬಗಳ ಸ್ಥಿತಿಗತಿಯನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡಲಾಗುತ್ತದೆ. ಈ ಕುಟುಂಬ ಕೇಂದ್ರಿತ ಮತ್ತು ಸಮಗ್ರ ದೃಷ್ಟಿಕೋನವೇ ಇಟಲಿಯಲ್ಲಿ ಬಾಲ ಕಾರ್ಮಿಕ ಪದ್ಧತಿಯನ್ನು ಗಣನೀಯವಾಗಿ ಕಡಿಮೆ ಮಾಡಲು ಸಹಾಯವಾಗಿದೆ. ಇಂತಹ ಪ್ರಯತ್ನಗಳನ್ನು ಕೇಂದ್ರ ಮತ್ತು ರಾಜ್ಯ ಸರಕಾರಗಳು ಮಾದರಿಯನ್ನಾಗಿ ಪರಿಗಣಿಸಿ ಬುಡಕಟ್ಟು ಮಕ್ಕಳ ಶಿಕ್ಷಣವನ್ನು ಪರಿಣಾಮಕಾರಿಯಾಗಿ ಮುಂದುವರಿಕೆಗೆ ಪೋಷಕರಿಗೆ ಸ್ಥಿರ, ಗೌರವಯುತ ಮತ್ತು ಸ್ಥಳೀಯ ಉದ್ಯೋಗ ಒದಗಿಸುವುದು ಅತ್ಯಗತ್ಯ. ಉದ್ಯೋಗ ಭದ್ರತೆ ಬಂದಾಗ ಕುಟುಂಬದ ಆದಾಯ ಸ್ಥಿರವಾಗುತ್ತದೆ; ಮಕ್ಕಳ ಶಿಕ್ಷಣದಲ್ಲಿ ಹೂಡಿಕೆ ಸಾಧ್ಯವಾಗುತ್ತದೆ. ಪೋಷಕರಲ್ಲಿ ಶಿಕ್ಷಣದ ಮೌಲ್ಯ ಕುರಿತು ವಿಶ್ವಾಸ ಬೆಳೆದು, ಮಕ್ಕಳನ್ನು ಶಾಲೆಯಲ್ಲಿ ಉಳಿಸಿಕೊಳ್ಳುವ ಪ್ರೇರಣೆ ಹೆಚ್ಚುತ್ತದೆ. ವಿಶೇಷವಾಗಿ ಬುಡಕಟ್ಟು ಸಮುದಾಯಗಳಲ್ಲಿ ಪೋಷಕರಿಗೆ ಸ್ಥಳೀಯವಾಗಿ ಲಭ್ಯವಿರುವ, ಸ್ಥಿರ ಮತ್ತು ಗೌರವಯುತ ಉದ್ಯೋಗಾವಕಾಶಗಳನ್ನು ಸೃಷ್ಟಿಸಬೇಕು. ಮನರೇಗಾದಂತಹ ಗ್ರಾಮೀಣ ಉದ್ಯೋಗ ಯೋಜನೆಗಳನ್ನು ಬುಡಕಟ್ಟು ಪ್ರದೇಶಗಳಲ್ಲಿ ಪರಿಣಾಮಕಾರಿಯಾಗಿ ಜಾರಿಗೆ ತಂದರೆ ಪೋಷಕರಿಗೆ ಕನಿಷ್ಠ ಆದಾಯ ಭದ್ರತೆ ಸಿಗಬಹುದು. ಅದೇ ರೀತಿ, ಅರಣ್ಯ ಆಧಾರಿತ ಜೀವನೋಪಾಯಗಳಾದ ಜೇನು ಸಂಗ್ರಹ, ಲಘು ಅರಣ್ಯ ಉತ್ಪನ್ನಗಳ ಸಂಸ್ಕರಣೆ ಮತ್ತು ಔಷಧೀಯ ಸಸ್ಯಗಳ ಬೆಳವಣಿಗೆಯನ್ನು ಮೌಲ್ಯಸಂಯೋಜನೆಯೊಂದಿಗೆ ಅಭಿವೃದ್ಧಿಪಡಿಸಿದರೆ ಆದಾಯವನ್ನು ಹೆಚ್ಚಿಸಬಹುದು. ಇದಲ್ಲದೆ, ಸ್ವಸಹಾಯ ಗುಂಪುಗಳು, ಸಣ್ಣ ಉದ್ಯಮಗಳು ಮತ್ತು ಕೌಶಲ್ಯಾಭಿವೃದ್ಧಿ ಕಾರ್ಯಕ್ರಮಗಳು ಬುಡಕಟ್ಟು ಪೋಷಕರಿಗೆ ಆರ್ಥಿಕ ಸ್ವಾವಲಂಬನೆಯನ್ನು ನೀಡುವಲ್ಲಿ ಪ್ರಮುಖ ಪಾತ್ರ ವಹಿಸಬಹುದು. ಹೊಲಿಗೆ ತರಬೇತಿ, ಕೈತೋಟ, ಆಹಾರ ಸಂಸ್ಕರಣೆ ಹಾಗೂ ಅರಣ್ಯ ಉತ್ಪನ್ನ ಆಧಾರಿತ ಉದ್ಯಮಗಳನ್ನು ಸ್ಥಳೀಯ ಅಗತ್ಯಗಳಿಗೆ ಅನುಗುಣವಾಗಿ ಅಭಿವೃದ್ಧಿಪಡಿಸಬಹುದು. ಪೋಷಕರು ಆರ್ಥಿಕವಾಗಿ ಬಲಿಷ್ಠರಾಗುವಂತೆ ಮಾಡಿದಾಗ, ಮಕ್ಕಳನ್ನು ಶಾಲೆಗೆ ಕಳುಹಿಸುವುದು ಅವರಿಗೆ ಹೊರೆಯಾಗುವುದಿಲ್ಲ; ಬದಲಾಗಿ ಅದು ಭವಿಷ್ಯಕ್ಕಾಗಿ ಮಾಡುವ ಹೂಡಿಕೆಯಾಗಿ ಕಾಣಿಸುತ್ತದೆ. ಮಕ್ಕಳ ಶಿಕ್ಷಣ, ಬಾಲ ಕಾರ್ಮಿಕ ಪದ್ಧತಿ ನಿರ್ಮೂಲ ಮತ್ತು ಪೋಷಕರ ಉದ್ಯೋಗ ಸೃಷ್ಟಿ-ಈ ಮೂರು ಅಂಶಗಳನ್ನು ಪ್ರತ್ಯೇಕ ಯೋಜನೆಗಳಾಗಿ ನೋಡದೆ, ಸಂಯೋಜಿತ ನೀತಿಯಾಗಿ ಜಾರಿಗೆ ತರಬೇಕಾಗಿದೆ. ರಾಷ್ಟ್ರೀಯ ಬಾಲಕಾರ್ಮಿಕ ಯೋಜನೆಯಂತಹ ಯೋಜನೆಗಳನ್ನು ಕೇವಲ ಪುನರ್ವಸತಿ ಕಾರ್ಯಕ್ರಮಗಳಾಗಿ ಅಲ್ಲ, ಕುಟುಂಬ ಆಧಾರಿತ ಅಭಿವೃದ್ಧಿ ಯೋಜನೆಗಳಾಗಿ ಪರಿವರ್ತಿಸುವ ಅಗತ್ಯವಿದೆ. ಶಿಕ್ಷಣ ಇಲಾಖೆ, ಕಾರ್ಮಿಕ ಇಲಾಖೆ, ಅರಣ್ಯ ಇಲಾಖೆ ಮತ್ತು ಗ್ರಾಮೀಣ ಅಭಿವೃದ್ಧಿ ಇಲಾಖೆಗಳು ಪರಸ್ಪರ ಸಹಕಾರದಿಂದ ಕಾರ್ಯನಿರ್ವಹಿಸಿದರೆ ಮಾತ್ರ ದೀರ್ಘಕಾಲೀನ ಮತ್ತು ಶಾಶ್ವತ ಫಲಿತಾಂಶ ಸಾಧ್ಯವಾಗಬಹುದು. ಬಡತನದ ಕಾರಣದಿಂದ ಶಾಲೆ ಬಿಟ್ಟು ಕೆಲಸಕ್ಕೆ ಹೋಗಿದ್ದ ಮಗು, ಪೋಷಕರಿಗೆ ಉದ್ಯೋಗ ಸಿಕ್ಕ ನಂತರ ಮತ್ತೆ ಶಾಲೆಗೆ ಮರಳಿದರೆ, ಅದು ಕೇವಲ ಒಂದು ಕುಟುಂಬದ ಯಶಸ್ಸಲ್ಲ; ಅದು ಸಮಾಜದ ಪ್ರಗತಿಯ ಸಂಕೇತವಾಗಿದ್ದು ಸಾಮಾಜಿಕ ಚಲನೆ ಮತ್ತು ಮಾನವ ಸಂಪನ್ಮೂಲ ಅಭಿವೃದ್ಧಿಯ ಪ್ರಮುಖ ಆಯಾಮವಾಗಿ ಸಮಾನತೆ, ಸಾಮಾಜಿಕ ನ್ಯಾಯ ಮತ್ತು ಒಳಗೊಳ್ಳುವಿಕೆಯನ್ನು ಸಾಧಿಸುವ ಪರಿಣಾಮಕಾರಿ ಮಾರ್ಗವಾಗಿದೆ. ಪ್ರಸ್ತುತ, ಬುಡಕಟ್ಟು ಸಮುದಾಯದ ಮಕ್ಕಳಲ್ಲಿ ಶಾಲೆ ಬಿಡುವ ಪ್ರಮಾಣವನ್ನು ಕಡಿಮೆ ಮಾಡಲು ಪೋಷಕರಿಗೆ ಉದ್ಯೋಗಾವಕಾಶ ಸೃಷ್ಟಿಯೇ ಕೇಂದ್ರಬಿಂದುವಾಗಬೇಕು. ಶಿಕ್ಷಣ-ಉದ್ಯೋಗ-ಸಾಮಾಜಿಕ ಭದ್ರತೆ ಈ ಮೂರನ್ನು ಒಟ್ಟಾಗಿ ನೋಡಿದಾಗ ಹಾಗೂ ಮಕ್ಕಳ ಶಿಕ್ಷಣವನ್ನು ಕಾಪಾಡುವ ಪ್ರಯತ್ನವನ್ನು ಕುಟುಂಬದ ಆರ್ಥಿಕ ಸಬಲೀಕರಣದೊಂದಿಗೆ ಜೋಡಿಸಿದಾಗ ಮಾತ್ರ ಶಾಶ್ವತ ಪರಿಹಾರ ಸಾಧ್ಯ. ಭಾರತದಲ್ಲಿ ಸಮಗ್ರ ಶಿಕ್ಷಾ ಅಭಿಯಾನದಂತಹ ಯೋಜನೆಗಳನ್ನು ಬಲಪಡಿಸುವುದರ ಜೊತೆಗೆ, ಇಟಲಿಯಂತಹ ದೇಶಗಳ ಕುಟುಂಬ ಕೇಂದ್ರಿತ ಹಾಗೂ ಅಂತರ್‌ರಾಷ್ಟ್ರೀಯ ಕಾರ್ಮಿಕ ಸಂಸ್ಥೆಯ ಮಾನದಂಡಗಳಿಗೆ ಹೊಂದಿಕೆಯಾಗಿರುವ ಅನುಭವಗಳಿಂದ ಪಾಠ ಕಲಿಯಬೇಕಾಗಿದೆ. ಆಗ ಮಾತ್ರ ಬುಡಕಟ್ಟು ಮಕ್ಕಳಿಗೆ ಶಿಕ್ಷಣದ ಹಕ್ಕು ನಿಜಾರ್ಥದಲ್ಲಿ ಸಾಕಾರಗೊಳ್ಳುತ್ತದೆ ಮತ್ತು ಎಲ್ಲರನ್ನು ಒಳಗೊಂಡ ಅಭಿವೃದ್ಧಿಯ ಕನಸು ವಾಸ್ತವವಾಗುತ್ತದೆ.

ವಾರ್ತಾ ಭಾರತಿ 23 Dec 2025 10:44 am

ರಾಜ್ಯದಲ್ಲಿ ನಾಯಕತ್ವ ತಿಕ್ಕಾಟ ತಾರಕಕ್ಕೇರಿದರೂ ರಾಹುಲ್ ಗಾಂಧಿ ಮಧ್ಯ ಪ್ರವೇಶ ಯಾಕಿಲ್ಲ? ಇಲ್ಲಿವೆ 5 ಕಾರಣಗಳು

ರಾಜ್ಯ ಕಾಂಗ್ರೆಸ್‌ನಲ್ಲಿ ನಾಯಕತ್ವ ಬದಲಾವಣೆ ವಿಚಾರವಾಗಿ ಸಾಕಷ್ಟು ಗದ್ದಲ ಗಲಾಟೆಗಳು ನಡೆಯುತ್ತಿವೆ. ಈ ನಡುವೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ನಾಯಕತ್ವ ಬದಲಾವಣೆಯ ಗೊಂದಲಕ್ಕೆ ತೆರೆ ಎಳೆಯುವ ಸೂಚನೆ ನೀಡುವ ಬದಲಾಗಿ ಅಸಹಾಯಕತೆಯ ಮಾತನ್ನು ಆಡಿದ್ದಾರೆ. ಇಷ್ಟೆಲ್ಲಾ ಬೆಳವಣಿಗೆಗಳು ನಡೆಯುತ್ತಿದ್ದರೂ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮಾತ್ರ ಸೈಲೆಂಟಾಗಿದ್ದಾರೆ. ರಾಹುಲ್ ಗಾಂಧಿ ಮಧ್ಯಪ್ರವೇಶ ಮಾಡದೆ ಇರುವುದಕ್ಕೆ ಏನು ಕಾರಣ ಎಂಬುವುದು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ. ವಿವರ ಇಲ್ಲಿದೆ.

ವಿಜಯ ಕರ್ನಾಟಕ 23 Dec 2025 10:40 am

1971ರ ಭಾರತದ ಸಹಕಾರ ಸ್ಮರಿಸಿ; ರಾಯಭಾರಿ ಮೂಲಕ ಬಾಂಗ್ಲಾದೇಶಕ್ಕೆ ಖಡಕ್‌ ಸಂದೇಶ‌ ಕಳಿಸಿದ ವ್ಲಾಡಿಮಿರ್‌ ಪುಟಿನ್!

ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಭಾರತದ ಪರಮಾಪ್ತ ಸ್ನೇಹಿತ. ಭಾರತಕ್ಕೆ ಸಂಕಷ್ಟ ಎದುರಾದಾಗಲೆಲ್ಲಾ, ಭಾರತೀಯರ ಪರವಾಗಿ ಅತ್ಯಂತ ಗಟ್ಟಿಯಾಗಿ ಮಾತನಾಡುವ ಗೆಳೆಯ ಪುಟಿನ್.‌ ಇದಕ್ಕೆ ಪುಷ್ಠಿ ಎಂಬಂತೆ, ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಭಾರತ ವಿರೋಧಿ ಪ್ರತಿಭಟನೆಗಳಿಗೆ ರಷ್ಯಾ ತೀವ್ರ ಕಳವಳ ವ್ಯಕ್ತಪಡಿಸಿದೆ. ಈ ಕುರಿತು ಮಾತನಾಡಿರುವ ಬಾಂಗ್ಲಾದೇಶಕ್ಕೆ ರಷ್ಯಾ ರಾಯಭಾರಿ ಅಲೆಕ್ಸಾಂಡರ್ ಗ್ರಿಗೊರಿವಿಚ್ ಖೋಜಿನ್, 1971ರಲ್ಲಿ ಬಾಂಗ್ಲಾದೇಶ ರಚನೆಯಲ್ಲಿ ಭಾರತ ನಿರ್ವಹಿಸಿದ ಪಾತ್ರವನ್ನು ನೆನೆದು, ಸಂಘರ್ಷವನ್ನು ಕೊನೆಗೊಳಿಸುವಂತೆ ಯೂನಸ್‌ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.

ವಿಜಯ ಕರ್ನಾಟಕ 23 Dec 2025 10:40 am

ದೇಣಿಗೆ ಸಂಗ್ರಹದಲ್ಲಿ ದಾಖಲೆಯ ಏರಿಕೆ ಕಂಡ BJP; ಕಾಂಗ್ರೆಸ್‌ ಸೇರಿದಂತೆ ಹಲವು ಪಕ್ಷಗಳ ದೇಣಿಗೆ ಕುಸಿತ

► ಒಂದೇ ವರ್ಷದಲ್ಲಿ 2,121 ಕೋಟಿ ರೂಪಾಯಿ, ಅಂದರೆ ಶೇ.53.4ರಷ್ಟು 'ಗಳಿಸಿದ' ಭಾರತೀಯ ಜನತಾ ಪಕ್ಷ► JDU, SP, CPI(ML)L ಪಕ್ಷಗಳ ದೇಣಿಗೆಯಲ್ಲೂ ಏರಿಕೆ

ವಾರ್ತಾ ಭಾರತಿ 23 Dec 2025 10:33 am

ಐಫೋನ್‌ ತಯಾರಕ ಕಂಪನಿ ಫಾಕ್ಸ್‌ಕಾನ್‌ನಲ್ಲಿ 30 ಸಾವಿರ ಉದ್ಯೋಗಿಗಳ ನೇಮಕ

ದೇವನಹಳ್ಳಿ ಬಳಿ ಫಾಕ್ಸ್‌ಕಾನ್ ಐಫೋನ್ ಘಟಕದಲ್ಲಿ 9 ತಿಂಗಳಲ್ಲಿ 30 ಸಾವಿರ ಮಂದಿ ಕೆಲಸಕ್ಕೆ ಸೇರಿದ್ದಾರೆ. ಇವರಲ್ಲಿ ಶೇ.80ರಷ್ಟು ಮಹಿಳೆಯರಿದ್ದು, ಬಹುತೇಕರಿಗೆ ಇದೇ ಮೊದಲ ಉದ್ಯೋಗ. ಪಿಯುಸಿ, ಡಿಪ್ಲೊಮಾ ಓದಿದ ಯುವತಿಯರಿಗೆ ತರಬೇತಿ ನೀಡಿ ನೇಮಕ ಮಾಡಿಕೊಳ್ಳಲಾಗಿದೆ. ದೊಡ್ಡಬಳ್ಳಾಪುರ, ಚಿಕ್ಕಬಳ್ಳಾಪುರ, ಹೊಸಕೋಟಿ, ನೆಲಮಂಗಲ ಭಾಗದ ಯುವಕರಿಗೆ ಉದ್ಯೋಗ ಸಿಕ್ಕಿದೆ. ಹೊರ ರಾಜ್ಯದವರೂ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. 20,000 ಕೋಟಿ ರೂ. ಹೂಡಿಕೆ ಮಾಡಿ 11 ಜೋಡಣಾ ಘಟಕ ಸ್ಥಾಪನೆಗೆ ಯೋಜನೆ ಇದೆ.

ವಿಜಯ ಕರ್ನಾಟಕ 23 Dec 2025 10:23 am

ಟ್ರಂಪ್-ಕ್ಲಾಸ್‌ ಯುದ್ದನೌಕೆ ಚಿತ್ರ ಅನಾವರಣಗೊಳಿಸಿದ ಟ್ರಂಪ್:‌ ಚೀನಾ ಟಾರ್ಗೆಟ್‌ ಮಾಡುತ್ತಾ ಈ ʼಸುಂದರʼ ಬೃಹತ್‌ ಹಡಗು, ಟ್ರಂಪ್‌ ಹೇಳಿದ್ದೇನು?

ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ಹೆಸರಿನಲ್ಲಿ ಹೊಸ ಯುದ್ಧನೌಕೆಗಳನ್ನು ನಿರ್ಮಿಸುವ ಮಹತ್ವಾಕಾಂಕ್ಷೆಯ ಯೋಜನೆಯನ್ನು ಪ್ರಕಟಿಸಿದ್ದಾರೆ. ಈ ಯುದ್ಧನೌಕೆಗಳಿಗೆ 'ಟ್ರಂಪ್-ಕ್ಲಾಸ್' ಎಂದು ಹೆಸರಿಡಲಾಗಿದೆ. ಇವು ಅಮೆರಿಕಾದ ಇತಿಹಾಸದಲ್ಲಿಯೇ ಅತಿ ದೊಡ್ಡ ಯುದ್ಧನೌಕೆಗಳಾಗಿರಲಿದ್ದು, ಈ ಯೋಜನೆಯ ಮೂಲಕ ಅಮೆರಿಕಾವನ್ನು ಪ್ರಮುಖ ಹಡಗು ನಿರ್ಮಾಣ ಶಕ್ತಿಯಾಗಿ ಪುನಃಸ್ಥಾಪಿಸುವುದಾಗಿ ಟ್ರಂಪ್ ಹೇಳಿದ್ದಾರೆ. ಇನ್ನು, ಈ ಯುದ್ದ ನೌಕೆ ಜಗತ್ತಿನ ಯಾರನ್ನೂ ಬೇಕಾದರೂ ಎದುರಿಸಬಲ್ಲದು ಎಂದು ಹೇಳಿರುವ ಟ್ರಂಪ್ ಈ ಯುದ್ಧನೌಕೆಗಳು ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಹೊಂದಿರಲಿವೆ‌ ಎಂದು ವಿವರಿಸಿದ್ದಾರೆ.ಅಲ್ಲದೆ, ನೌಕಾಬಲದಲ್ಲಿ ಚೀನಾಗಿಂತ ಕಮ್ಮಿ ಇರುವ ಅಮೆರಿಕಾ ಈಗ ಅದನ್ನು ಬಲಪಡಿಸುವ ಮೂಲಕ ಚೀನಾಗೆ ಸೆಡ್ಡುಹೊಡೆಯಲು ನಿಂತಂತಿದೆ.

ವಿಜಯ ಕರ್ನಾಟಕ 23 Dec 2025 10:22 am

ಮನೆಬಾಗಿಲಿಗೆ ಮಿನಿ ಆಸ್ಪತ್ರೆ: 'ಆರೋಗ್ಯ ಸೇತು' ಸಂಚಾರಿ ಘಟಕ ಯೋಜನೆಗೆ ಚಾಲನೆ; ಏನಿದರ ವಿಶೇಷತೆ? ಸೇವೆ ಪಡೆಯುವುದು ಹೇಗೆ?

ರಾಜ್ಯದ ಮೂಲೆಮೂಲೆಗಳಿಗೂ ಆರೋಗ್ಯ ಭಾಗ್ಯ ತಲುಪಿಸಲು, ನಮ್ಮ ಸರ್ಕಾರ 'ಆರೋಗ್ಯ ಸೇತು ಸಂಚಾರಿ ಆರೋಗ್ಯ ಘಟಕ' ಎಂಬ ವಿನೂತನ ಯೋಜನೆಯನ್ನು ಜಾರಿಗೆ ತಂದಿದೆ. 81 ಸುಸಜ್ಜಿತ ವಾಹನಗಳ ಮೂಲಕ, ದೂರದ ಹಳ್ಳಿಗಳಿಗೂ ವೈದ್ಯಕೀಯ ಸೇವೆ ಲಭ್ಯವಾಗಲಿದೆ. ಪ್ರಾಥಮಿಕ ಆರೋಗ್ಯ ತಪಾಸಣೆ, ತಾಯಿ-ಮಗುವಿನ ಆರೈಕೆ, ಉಚಿತ ಔಷಧಿ ವಿತರಣೆ - ಎಲ್ಲವೂ ನಿಮ್ಮ ಮನೆ ಬಾಗಿಲಿಗೆ! ಇದರಿಂದ ನಿಮ್ಮ ಸಮಯ ಮತ್ತು ಹಣ ಉಳಿತಾಯವಾಗುವುದಲ್ಲದೆ, ಆರೋಗ್ಯ ಸುಧಾರಣೆಗೆ ಇದು ಒಂದು ದೊಡ್ಡ ಹೆಜ್ಜೆ.

ವಿಜಯ ಕರ್ನಾಟಕ 23 Dec 2025 10:17 am

Gold Rate Rise: ಚಿನ್ನದ ಬೆಲೆ 14 ಸಾವಿರ ಸನಿಹಕ್ಕೆ ದಾಖಲೆ ಜಿಗಿತ! ಇಂದು ಒಂದೇ ದಿನ 2400 ರೂ ಹೆಚ್ಚಳ! ಈ ವರ್ಷದ ಗರಿಷ್ಠ ದರ ದಾಖಲು

ಚಿನ್ನದ ಬೆಲೆ ಈ ಹಿಂದಿನ ಬೆಲೆಯನ್ನೆಲ್ಲಾ ಪುಡಿಗಟ್ಟಿ ಹೊಸ ಎತ್ತರಕ್ಕೆ ಜಿಗಿದಿದೆ. ಬರೋಬ್ಬರಿ 1 ಗ್ರಾಂ ಬೆಲೆ 13855ಕ್ಕೆ ಹೆಚ್ಚಳ ಆಗಿದೆ. ಚಿನ್ನ ಬೆಳ್ಳಿಯ ಪ್ರತಿನಿತ್ಯದ ಬೆಲೆ ವಿಜಯ ಕರ್ನಾಟಕ ವೆಬ್‌ನಲ್ಲಿ ತಿಳಿದುಕೊಳ್ಳಿ

ವಿಜಯ ಕರ್ನಾಟಕ 23 Dec 2025 10:07 am

ಖರ್ಗೆ ಹೇಳೊದೊಂದು, ಸಿದ್ದರಾಮಯ್ಯ ಹೇಳೋದು ಮತ್ತೊಂದು : ತಿಳಿಯುತ್ತಿಲ್ಲ ಗೊಂದಲದ ಸೃಷ್ಟಿಕರ್ತ ಯಾರೆಂದು?

Karnataka Congress Power sharing tussle : ಕರ್ನಾಟಕ ಕಾಂಗ್ರೆಸ್ಸಿನಲ್ಲಿ ನಾಯಕತ್ವದ ಬಿಕ್ಕಟ್ಟು ಮುಂದುವರಿದಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೀಡಿದ ಹೇಳಿಕೆಯ ನಂತರ, ಗೊಂದಲ ಇನ್ನಷ್ಟು ಹೆಚ್ಚಾದಂತೆ ಕಾಣುತ್ತಿದೆ. ಈ ನಡುವೆ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಸಚಿನ್ ಪೈಲಟ್ ಅವರನ್ನು ಡಿಕೆ ಶಿವಕುಮಾರ್ ಭೇಟಿಯಾಗಿದ್ದಾರೆ.

ವಿಜಯ ಕರ್ನಾಟಕ 23 Dec 2025 10:00 am

ಮಧುಮೇಹಿಗಳೇ ಇನ್ಸುಲಿನ್ ಇಂಜೆಕ್ಷನ್ ಗಳಿಗೆ ಗುಡ್ ಬೈ ಹೇಳಿ.... ಬಂತು ನೋಡಿ Inhaled Insulin!

ಸಿಪ್ಲಾ ಕಂಪನಿಯು ದೇಶದ ಮಧುಮೇಹ ರೋಗಿಗಳಿಗೆ ಇಂಜೆಕ್ಷನ್ ಇಲ್ಲದ ಉಸಿರಾಡುವ ಇನ್ಸುಲಿನ್ ಪೌಡರ್ 'Afrezza'ವನ್ನು ಬಿಡುಗಡೆ ಮಾಡಿದೆ. ಇದು ವಿಶೇಷ ಇನ್ಹೇಲರ್ ಮೂಲಕ ತೆಗೆದುಕೊಳ್ಳುವ ತ್ವರಿತ-ಕಾರ್ಯಕಾರಿ ಪೌಡರ್ ಆಗಿದ್ದು, ನೋವು ಮತ್ತು ಭಯವಿಲ್ಲದೆ ಮಧುಮೇಹ ನಿಯಂತ್ರಣಕ್ಕೆ ಸಹಾಯ ಮಾಡುತ್ತದೆ. ಭಾರತದಲ್ಲಿ ಸುಮಾರು 10 ಕೋಟಿ ಮಧುಮೇಹಿಗಳಿಗೆ ಇದು ಮಹತ್ವದ ಹೆಜ್ಜೆಯಾಗಿದೆ.

ವಿಜಯ ಕರ್ನಾಟಕ 23 Dec 2025 10:00 am

ಡಿಸೆಂಬರ್ 23ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್‌, ಡೀಸೆಲ್‌ ದರ ಎಷ್ಟಿದೆ ತಿಳಿಯಿರಿ

Petrol, Diesel Price: ಪೆಟ್ರೋಲ್, ಡೀಸೆಲ್‌ ದರದಲ್ಲಿ ಜಾಸ್ತಿ ಅಲ್ಲದಿದ್ದರೂ, ಸ್ವಲ್ಪ ಪ್ರಮಾಣದಲ್ಲಾದ್ರೂ ಏರಿಳಿತ ಆಗುತ್ತಿರುತ್ತದೆ. ಹಾಗಾದರೆ, ಇಂದು (ಡಿಸೆಂಬರ್ 23) ಬೆಂಗಳೂರು ಸೇರಿದಂತೆ ರಾಜ್ಯದ ಉಳಿದ ಜಿಲ್ಲೆಗಳಲ್ಲಿ ಲೀಟರ್‌ ಪೆಟ್ರೋಲ್‌, ಡೀಸೆಲ್‌ ಬೆಲೆ ಎಷ್ಟಿದೆ ಎನ್ನುವ ಅಂಕಿಅಂಶಗಳನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ. ಶಕ್ತಿಯ ಮೂಲಗಳು ಎನಿಸಿಕೊಂಡಿರುವ ಪೆಟ್ರೋಲ್ ಮತ್ತು ಡೀಸೆಲ್ ಇಂಧನ ಅತ್ಯವಶ್ಯಕವಾಗಿ ಬೇಕಾಗುವ ಸಂಪನ್ಮೂಲಗಳಾಗಿವೆ.

ಒನ್ ಇ೦ಡಿಯ 23 Dec 2025 9:57 am

ಗುಜರಾತ್| ಗರ್ಭಿಣಿ ಪತ್ನಿ ಮೇಲೆ ದಾಳಿ ಮಾಡಿದ ಬೆಕ್ಕನ್ನು ಕೊಂದ ವ್ಯಕ್ತಿಯ ಬಂಧನ!

ಅಹ್ಮದಾಬಾದ್: ಆರು ತಿಂಗಳ ಗರ್ಭಿಣಿ ಪತ್ನಿಯ ಮೇಲೆ ದಾಳಿ ಮಾಡಿದೆ ಎನ್ನಲಾದ ಬೆಕ್ಕನ್ನು ಅಮಾನುಷವಾಗಿ ಕೊಂದ ಆರೋಪದಲ್ಲಿ 21 ವರ್ಷದ ವ್ಯಕ್ತಿಯೊಬ್ಬನನ್ನು ವದಾಜ್ ಪೊಲೀಸರು ಸೋಮವಾರ ಬಂಧಿಸಿದ್ದಾರೆ. ಮಹಿಳೆ ಬೆಕ್ಕಿಗೆ ಹಾಲು ನೀಡುತ್ತಿದ್ದ ವೇಳೆ ಬೆಕ್ಕು ದಾಳಿ ಮಾಡಿತ್ತು ಎನ್ನಲಾಗಿದೆ. ಈ ಘಟನೆಯ ಭಯಾನಕ ವಿಡಿಯೊ ಜಾಲತಾಣಗಳಲ್ಲಿ ವೈರಲ್ ಆದ ಹಿನ್ನೆಲೆಯಲ್ಲಿ ಪ್ರಕರಣ ಬೆಳಕಿಗೆ ಬಂದಿತ್ತು. ಬೆಕ್ಕನ್ನು ತೀರಾ ಕ್ರೂರ ವಿಧಾನದಲ್ಲಿ ಕೊಂದ ಬಗ್ಗೆ ಪ್ರಾಣಿ ಕಲ್ಯಾಣ ಹೋರಾಟಗಾರರು ಹಾಗೂ ನಾಗರಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಭಾನುವಾರ ತನ್ನ 20 ವರ್ಷದ ಗರ್ಭಿಣಿ ಪತ್ನಿಯ ಮೇಲೆ ಬೆಕ್ಕು ದಾಳಿ ಮಾಡಿದ್ದರಿಂದ ತಾಳ್ಮೆ ಕಳೆದುಕೊಂಡ ರಾಹುಲ್ ದಂತಾನಿ ಎಂಬಾತ ಬೆಕ್ಕನ್ನು ಕೊಂದಿದ್ದ ಎನ್ನಲಾಗಿದೆ. ಬೆಕ್ಕಿನ ದಾಳಿಯಿಂದ ಮಹಿಳೆ ಅಸ್ವಸ್ಥಗೊಂಡಿದ್ದಾಳೆ ಎನ್ನಲಾಗಿದ್ದು, ವೈದ್ಯರ ಸಲಹೆ ಪಡೆದಿದ್ದಾರೆ. ಈ ಘಟನೆಯಿಂದ ಕೋಪಗೊಂಡ ದಂತಾನಿ, ಇತರ ಇಬ್ಬರ ಜತೆ ಸೇರಿ ಬೆಕ್ಕನ್ನು ಸಹಜ್ ಹೈಟ್ಸ್ ಅಪಾರ್ಟ್ಮೆಂಟ್ ಬಳಿಯ ಖಾಲಿ ನಿವೇಶನಕ್ಕೆ ಒಯ್ದು ಅಮಾನುಷವಾಗಿ ಹತ್ಯೆ ಮಾಡಿದ್ದ ಎಂದು ಪೊಲೀಸರು ಹೇಳಿದ್ದಾರೆ. ಬೆಕ್ಕನ್ನು ಗಂಟುಮೂಟೆ ಕಟ್ಟಿಕೊಂಡು ದ್ವಿಚಕ್ರವಾಹನದಲ್ಲಿ ಒಯ್ದ ವ್ಯಕ್ತಿ, ಮೂಟೆಯನ್ನು ನೆಲಕ್ಕೆ ಬಡಿದು ಬೆಕ್ಕನ್ನು ಕೊಲ್ಲುತ್ತಿರುವುದು ವಿಡಿಯೊದಲ್ಲಿ ಕಂಡುಬರುತ್ತಿದೆ. ಬಳಿಕ ಬೆಕ್ಕನ್ನು ಹೊರತೆಗೆದು ಎಸೆಯಲಾಗಿದೆ. ಒಬ್ಬ ಆರೋಪಿ ಬೆಕ್ಕಿನ ಕುತ್ತಿಗೆಗೆ ಕಾಲಿನಿಂದ ಒತ್ತುತ್ತಿದ್ದರೆ, ಮತ್ತೊಬ್ಬ ದೊಡ್ಡ ಕಲ್ಲಿನಿಂದ ಜಜ್ಜುತ್ತಿರುವುದು ದಾಖಲಾಗಿದೆ. ಆರೋಪಿಯು ಬೆಕ್ಕನ್ನು ಒದೆಯುತ್ತಿರುವ ಹಾಗೂ ಅದರ ಜತೆ ನಿಂತು ಫೋಟೊಗೆ ಫೋಸ್ ನೀಡುತ್ತಿರುವ ದೃಶ್ಯಾವಳಿಯೂ ಜಾಲತಾಣದಲ್ಲಿ ಹರಿದಾಡುತ್ತಿದೆ. ತೀವ್ರ ಗಾಯದಿಂದ ಬೆಕ್ಕು ಸ್ಥಳದಲ್ಲೇ ಪ್ರಾಣ ಬಿಟ್ಟಿದೆ. ಜಾಲತಾಣಗಳಲ್ಲಿ ಈ ವಿಡಿಯೊ ಹರಿದಾಡಿದ ಬೆನ್ನಲ್ಲೇ ಪ್ರಾಣಿ ಕಲ್ಯಾಣ ಸಂಸ್ಥೆಯ ಸ್ವಯಂಸೇವಕ ವಿರಾಲ್ ಪಟೇಲ್ ಎನ್ನುವವರು ವದಾಜ್ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದರು.

ವಾರ್ತಾ ಭಾರತಿ 23 Dec 2025 9:44 am

ಬಾಲ್ಯದಿಂದ ವಂಚಿತರಾಗಿರುವ ಬಡ ಮಕ್ಕಳು

ಭಾರತ ಸೇರಿದಂತೆ ಜಗತ್ತಿನಲ್ಲಿ ಬಹುದೊಡ್ಡ ಸಂಖ್ಯೆಯಲ್ಲಿ ಎಳೆ ಮಕ್ಕಳು ಬಡತನದ ಸುಳಿಗೆ ಸಿಲುಕಿದ್ದಾರೆ. ಜಾಗತಿಕ ಮಕ್ಕಳ ಸ್ಥಿತಿಗತಿಯ ಕುರಿತ 2025ರ ವರದಿ ಬಯಲು ಪಡಿಸಿದೆ. ಇಡೀ ಜಗತ್ತಿನಲ್ಲಿ ಬಡತನದ ಬೇಗೆಯಿಂದ ಬಳಲುತ್ತಿರುವ ಮಕ್ಕಳ ಸಂಖ್ಯೆ ಕ್ರಮೇಣ ಕಡಿಮೆಯಾಗುತ್ತಿದೆ. ಆದರೆ ಭಾರತದ ಮಕ್ಕಳು ಮಾತ್ರ ಬಡತನದ ಸುಳಿಯಿಂದ ಪಾರಾಗಿಲ್ಲ, ಮಾತ್ರವಲ್ಲ ಅಂಥವರ ಪ್ರಮಾಣ ಹೆಚ್ಚುತ್ತಲೇ ಇದೆ ಎಂಬುದು ಆತಂಕಕಾರಿ ಸಂಗತಿಯಾಗಿದೆ. ಸುಮಾರು 130 ಕೆಳ ಮತ್ತು ಮಧ್ಯಮ ಆದಾಯದ ದೇಶಗಳ ಬಹು ಆಯಾಮದ ದತ್ತಾಂಶಗಳ ವಿಶ್ಲೇಷಣೆ ಪ್ರಕಾರ ಶಿಕ್ಷಣ, ಆರೋಗ್ಯ, ವಸತಿ, ಪೌಷ್ಟಿಕತೆ, ನೈರ್ಮಲ್ಯ ಮತ್ತು ಶುದ್ಧ ನೀರು ಇವುಗಳಿಂದಲೂ ಮಕ್ಕಳು ವಂಚಿತರಾಗುತ್ತಿದ್ದಾರೆ. ಹೀಗಾಗಿ ಸಹಜ ಬಾಲ್ಯವನ್ನೂ ಅವರು ಕಳೆದುಕೊಳ್ಳುತ್ತಿದ್ದಾರೆ. ಭಾರತ ಜಗತ್ತಿನಲ್ಲಿ ಅತಿ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ದೇಶವಾಗಿದೆ. ಆದರೆ ಬಹುತೇಕ ಮಕ್ಕಳು ಕನಿಷ್ಠ ಪೌಷ್ಟಿಕಾಂಶದ ಕೊರತೆಯಿಂದ ಬಳಲುತ್ತಿದ್ದಾರೆ. ಇಂಥ ಪರಿಸ್ಥಿತಿಯಲ್ಲಿ ಪ್ರಸಕ್ತ ವರ್ಷದ ಮುಂಗಡ ಪತ್ರದಲ್ಲಿ ಬಡ ಮಕ್ಕಳ ಉನ್ನತಿಗಾಗಿ ಸರಕಾರದಿಂದ ಬರುತ್ತಿರುವ ಅನುದಾನವನ್ನೂ ಕಡಿತ ಮಾಡಿರುವುದು ಕಳವಳದ ಸಂಗತಿಯಾಗಿದೆ. ಆರೋಗ್ಯ ಮತ್ತು ಶಿಕ್ಷಣ ದೇಶದ ಪ್ರತಿಯೊಬ್ಬ ಮಗುವಿನ ಮೂಲಭೂತ ಹಕ್ಕು. ಮಕ್ಕಳಿಗೆ ಮೂಲಭೂತ ಸೌಕರ್ಯಗಳನ್ನು ಪೂರೈಸುವುದು ಸರಕಾರಗಳ ಆದ್ಯ ಕರ್ತವ್ಯವಾಗಿದೆ. ಆದರೆ ಕೇಂದ್ರ ಸರಕಾರದ ಮುಂಗಡ ಪತ್ರದಲ್ಲಿ ವರ್ಷದಿಂದ ವರ್ಷಕ್ಕೆ ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯಕ್ಕೆ ನಿಗದಿ ಪಡಿಸುವ ಅನುದಾನದ ಪ್ರಮಾಣ ಕಡಿಮೆಯಾಗುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ. ಈ ಹಿಂದೆ ಕೇಂದ್ರದ ಬಜೆಟ್‌ನಲ್ಲಿ ಮಕ್ಕಳು ಮಹಿಳೆಯರ ಅಭಿವೃದ್ಧಿ ಸಚಿವಾಲಯಕ್ಕೆ ನೀಡುವ ಅನುದಾನ ಶೇಕಡಾ 96ರಷ್ಟಿತ್ತು. ಅದು ಈಗ 2025-2026ರಲ್ಲಿ ಶೇಕಡಾ 0.5ರಷ್ಟು ಕುಸಿದಿದೆ. ಮುಕ್ತ ಮಾರುಕಟ್ಟೆಯ ವ್ಯವಸ್ಥೆಯಲ್ಲಿ ಶಿಕ್ಷಣ, ಆರೋಗ್ಯದಂಥ ಮೂಲಭೂತ ಸೌಕರ್ಯಗಳು ಮಾಯವಾಗಿ ಎಲ್ಲವೂ ವ್ಯಾಪಾರೀಕರಣಗೊಂಡಿವೆ. ಸೇವೆಯ ಜಾಗದಲ್ಲಿ ವ್ಯಾಪಾರ ಬಂದು ಕುಳಿತಿದೆ. ಕಾರ್ಪೊರೇಟ್ ಕಂಪೆನಿಗಳ ಐದು ಲಕ್ಷ ಕೋಟಿ ರೂಪಾಯಿ ಬ್ಯಾಂಕ್ ಸಾಲವನ್ನು ಮನ್ನಾ ಮಾಡುವ ದೇಶದಲ್ಲಿ ನಾಡಿನ ಭವಿಷ್ಯದ ಸಂಪತ್ತಾದ ಮಕ್ಕಳು ಹಸಿವೆಯಿಂದ ಬಳಲುತ್ತಿರುವುದು ನಾವು ನಾಚಿಕೆ ಪಡಬೇಕಾದ ವಿಷಯವಾಗಿದೆ. ವಾಸ್ತವವಾಗಿ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಲ್ಲಿ ವರ್ಷದಿಂದ ವರ್ಷಕ್ಕೆ ಆರ್ಥಿಕ ಪ್ರಗತಿ ಕುಂಠಿತವಾಗುತ್ತಿದೆ. ಇದರಿಂದಾಗಿ ಮಕ್ಕಳ ಅಭಿವೃದ್ಧಿ ಪ್ರಗತಿ ಕೂಡ ಏಳುತ್ತಾ ಬೀಳುತ್ತಾ ಸಾಗಿದೆ. ಇದೇ ಪ್ರವೃತ್ತಿ ಮುಂದುವರಿದರೆ 2030ರ ಹೊತ್ತಿಗೆ ಜಗತ್ತಿನ ಐದು ವರ್ಷದೊಳಗಿನ 45 ಲಕ್ಷ ಮಕ್ಕಳ ಬದುಕು ಮತ್ತು ಭವಿಷ್ಯಕ್ಕೆ ಕಾರ್ಗತ್ತಲು ಕವಿಯಲಿದೆ. ಬಹುತೇಕ ಬಡ ಹಾಗೂ ಅಭಿವೃದ್ಧಿ ಹೊಂದುತ್ತಿರುವ ದೇಶಗಳು ಸಾಲದ ಭಾರದಿಂದ ತತ್ತರಿಸಿ ಹೋಗಿವೆ. ಹಲವು ದೇಶಗಳು ಆರೋಗ್ಯ ಕ್ಷೇತ್ರಕ್ಕೆ ಖರ್ಚು ಮಾಡುತ್ತಿರುವ ಹಣಕ್ಕಿಂತಲೂ ಹೆಚ್ಚಿನ ಮೊತ್ತವನ್ನು ಸಾಲದ ಮೇಲಿನ ಬಡ್ಡಿಗಾಗಿ ವ್ಯಯಿಸುತ್ತಿವೆ. ಇದರ ದುಷ್ಪರಿಣಾಮ ಉಂಟಾಗುತ್ತಿರುವುದು ಮಕ್ಕಳ ಭವಿಷ್ಯದ ಮೇಲೆ ಅಂದರೆ ಅತಿಶಯೋಕ್ತಿಯಲ್ಲ. ಶಿಕ್ಷಣ, ಆರೋಗ್ಯ, ನೈರ್ಮಲ್ಯ, ಪೌಷ್ಟಿಕಾಂಶದ ಆಹಾರ, ಕ್ರೀಡೆ ಇವೇ ಮೊದಲಾದ ಕ್ಷೇತ್ರಗಳಲ್ಲಿ ಮಕ್ಕಳಿಗೆ ಗುಣಮಟ್ಟದ ಸಾರ್ವಜನಿಕ ಸೇವೆಯನ್ನು ಒದಗಿಸಬೇಕಾಗಿದೆ. ಎಲ್ಲಕ್ಕಿಂತ ಮೊದಲು ಮಕ್ಕಳ ಪೋಷಕರು ಆರ್ಥಿಕವಾಗಿ ಚೇತರಿಸಲು ಅನುಕೂಲವಾಗುವ ಉದ್ಯೋಗ ಅವರಿಗೆ ನೀಡಬೇಕು. ಅವರಿಗೆ ನಿಗದಿಪಡಿಸಿದ ಕನಿಷ್ಠ ವೇತನ, ಸಾಮಾಜಿಕ ಭದ್ರತಾ ಯೋಜನೆಗಳನ್ನು ನೀಡುವುದು ಸರಕಾರದ ಕರ್ತವ್ಯವಾಗಿದೆ. ಬಾಲಕರಿಗಿಂತ ಬಾಲಕಿಯರ ಪರಿಸ್ಥಿತಿ ಇನ್ನೂ ದಾರುಣವಾಗಿದೆ. ನಮ್ಮ ಕರ್ನಾಟಕದ ಪರಿಸ್ಥಿತಿ ಇನ್ನೂ ಗಂಭೀರವಾಗಿದೆ. ಹದಿನೆಂಟು ವರ್ಷಕ್ಕಿಂತ ಕಡಿಮೆ ವಯಸ್ಸಿನ ಬಾಲಕಿಯರು ಗರ್ಭ ಧರಿಸುವ ಪ್ರಕರಣಗಳು ರಾಜ್ಯದಲ್ಲಿ ನಿರಂತರವಾಗಿ ಹೆಚ್ಚಾಗುತ್ತಲೇ ಇವೆ. ಸುರಕ್ಷತೆ ಮತ್ತು ಸೂಕ್ತ ಶಿಕ್ಷಣ ಒದಗಿಸಬೇಕಾದ ಸರಕಾರಿ ಹಾಸ್ಟೆಲ್‌ಗಳಲ್ಲಿ ಗರ್ಭಧಾರಣೆ ಪ್ರಕರಣಗಳು ಹೆಚ್ಚುತ್ತಿವೆ. ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ಹಳ್ಳಿಯೊಂದರಲ್ಲಿ ದೇವರಾಜ ಅರಸು ಮೆಟ್ರಿಕ್ ಪೂರ್ವ ಬಾಲಕಿಯರ ವಸತಿ ನಿಲಯದ ಶೌಚಾಲಯದಲ್ಲಿ 9ನೇ ತರಗತಿಯ ವಿದ್ಯಾರ್ಥಿನಿಯೊಬ್ಬಳು ಮಗುವಿಗೆ ಜನ್ಮನೀಡಿದ ಘಟನೆ ವರದಿಯಾಗಿದೆ. ಇಂಥ ಪ್ರಕರಣಗಳು ಅಲ್ಲಲ್ಲಿ ನಡೆಯುತ್ತಲೇ ಇವೆ. ಇದರಿಂದಾಗಿ ಸರಕಾರಿ ವಸತಿ ನಿಲಯಗಳಲ್ಲಿ ಹೆಣ್ಣು ಮಕ್ಕಳು ಎಷ್ಟು ಸುರಕ್ಷಿತ ಎಂಬ ಪ್ರಶ್ನೆ ಉದ್ಭವವಾಗಿದೆ. ಸರಕಾರ ಸುರಕ್ಷತಾ ಕ್ರಮಗಳನ್ನು ಕೈಗೊಂಡಿಲ್ಲವೆಂದಲ್ಲ. ಹಾಸ್ಟೆಲ್‌ಗಳಲ್ಲಿ ಸಿ.ಸಿ. ಟಿವಿ ಅಳವಡಿಕೆ, ಕಡ್ಡಾಯವಾಗಿ ಮಹಿಳಾ ಸಿಬ್ಬಂದಿ ನೇಮಕ ಮೊದಲಾದ ಕ್ರಮಗಳನ್ನು ಕೈಗೊಂಡಿದೆ. ಆದರೂ ಈ ಎಲ್ಲ ಕ್ರಮಗಳ ನಡುವೆಯೂ ಬಾಲಕಿಯರು ಸುರಕ್ಷಿತವಾಗಿಲ್ಲ ಎಂಬುದು ಆತಂಕದ ಸಂಗತಿಯಾಗಿದೆ. ಕಳೆದ ಮೂರು ವರ್ಷಗಳಲ್ಲಿ ದೇಶದಲ್ಲಿ 14ರಿಂದ 18ನೇ ವಯಸ್ಸಿನ ಮೂರು ಲಕ್ಷಕ್ಕೂ ಹೆಚ್ಚು ಬಾಲಕಿಯರು ಗರ್ಭ ಧರಿಸಿರುವುದು ಅಧಿಕೃತವಾಗಿ ಬೆಳಕಿಗೆ ಬಂದಿದೆ. ಬಾಲಕಿಯರಿಗೆ ದೈಹಿಕ ಬದಲಾವಣೆಯ ಬಗ್ಗೆ ತಿಳುವಳಿಕೆ ಅಗತ್ಯವಾಗಿದೆ. ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯವನ್ನು ತಡೆಯಲು ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು, ಶಿಕ್ಷಕರು, ಸ್ಥಳೀಯ ಪೊಲೀಸ್ ಅಧಿಕಾರಿಗಳನ್ನು ಒಳಗೊಂಡ ಕಾವಲು ಸಮಿತಿಗಳನ್ನು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ರಚಿಸಲಾಗಿದೆ. ಆದರೂ ಬಾಲ ಗರ್ಭಿಣಿಯರು ಹೆಚ್ಚುತ್ತಿರುವುದು ಕಾವಲು ಸಮಿತಿಯ ವೈಫಲ್ಯಕ್ಕೆ ಸಾಕ್ಷಿಯಾಗಿದೆ. ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯಗಳು ನಡೆದಾಗ ಮುಚ್ಚಿ ಹಾಕಲು ಪ್ರಭಾವಿ ಶಕ್ತಿಗಳು ಮಸಲತ್ತು ಮಾಡುತ್ತವೆ. ಅದಕ್ಕೆ ಅವಕಾಶ ಕೊಡಬಾರದು. ಪೊಕ್ಸೊ ಕಾನೂನಿನ ಅಡಿಯಲ್ಲಿ ಸದರಿ ಪ್ರಕರಣವನ್ನು ದಾಖಲಿಸಿಕೊಳ್ಳಬೇಕು. ಯಾವುದೇ ನಾಗರಿಕ ಸಮಾಜದಲ್ಲಿ ಮಕ್ಕಳ ಬದುಕು, ಭವಿಷ್ಯ ಮೊದಲ ಆದ್ಯತೆಯಾಗಿರಬೇಕು. ತಮ್ಮ ಅವಶ್ಯಕತೆ ಮತ್ತು ಸುರಕ್ಷತೆಗಾಗಿ ಸಂಘಟಿತರಾಗಿ ಧ್ವನಿಯೆತ್ತುವ ಸಾಮರ್ಥ್ಯವಿಲ್ಲದ ಮಕ್ಕಳು ಮತ್ತು ಹಿರಿಯ ನಾಗರಿಕರ ಸಂರಕ್ಷಣೆಯ ಹೊಣೆಯನ್ನು ಸಮಾಜ ಮತ್ತು ಸರಕಾರಗಳೇ ಹೊತ್ತುಕೊಳ್ಳಬೇಕು. ಈ ದೇಶದಲ್ಲಿ ದೇವರು ಮತ್ತು ದೇವರ ಹೆಸರಿನಲ್ಲಿ ಸಂಘಟನೆಗಳನ್ನು ಕಟ್ಟಿಕೊಂಡು ಸಾಮಾಜಿಕ ನೆಮ್ಮದಿ ಮತ್ತು ಶಾಂತಿಯನ್ನು ಕದಡುವ ಸಾಕಷ್ಟು ಸಂಘಟನೆಗಳಿವೆ. ಅಂಥ ಸಂಘಟನೆಗಳು ಅಮಾಯಕ ಮಕ್ಕಳ ಬದುಕಿನ ಬಗ್ಗೆ ಸುರಕ್ಷತೆ ಬಗ್ಗೆ ಎಂದೂ ಸ್ಪಂದಿಸುವುದಿಲ್ಲ. ಇಲ್ಲಿ ಧರ್ಮಗುರುಗಳು, ಮಠಾಧೀಶರಿಗೇನೂ ಕೊರತೆ ಇಲ್ಲ. ಅವರೂ ಕೂಡ ಮಕ್ಕಳ ಬಗ್ಗೆ ಯಾವುದೇ ಕಾಳಜಿಯನ್ನು ತೋರಿಸುವುದಿಲ್ಲ. ಇಂಥ ಸನ್ನಿವೇಶದಲ್ಲಿ ಆರೋಗ್ಯಕರ ಮನಸ್ಸುಗಳು, ಜೀವ ಪರ ಕಾಳಜಿಯ ಸಂಘ, ಸಂಸ್ಥೆಗಳು ಮಕ್ಕಳ ನೋವು, ಯಾತನೆಗಳ ಬಗ್ಗೆ ಸ್ಪಂದಿಸಿ ಅವರ ನೆರವಿಗೆ ಬರಬೇಕು. ಸರಕಾರ ವಿಶೇಷ ಆಸಕ್ತಿ ವಹಿಸಿ ಬಡತನದ ಹಾಗೂ ಯಾತನೆಯ ಕೂಪದಿಂದ ಮಕ್ಕಳನ್ನು ಹೊರಗೆ ತಂದು ಅವರಿಗೆ ನೆಮ್ಮದಿಯ ಬದುಕನ್ನು ಕಟ್ಟಿಕೊಡುವುದು ತುರ್ತು ಅಗತ್ಯವಾಗಿದೆ.

ವಾರ್ತಾ ಭಾರತಿ 23 Dec 2025 9:16 am