KEA: ಪಿಜಿ ಮೆಡಿಕಲ್ ಸೀಟು ಹಂಚಿಕೆ ಅಂತಿಮ ಫಲಿತಾಂಶ ಡಿ.24ಕ್ಕೆ ಬಿಡುಗಡೆ
ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (ಕೆಇಎ) ಸ್ನಾತಕೋತ್ತರ ವೈದ್ಯಕೀಯ ಕೋರ್ಸ್ಗಳ (PGMedical 2025) ಪ್ರವೇಶ ಸಂಬಂಧ ಎರಡನೇ ಸುತ್ತಿನ ಸೀಟು ಹಂಚಿಕೆಯ ಅಪ್ಡೇಟ್ ನೀಡಿದೆ. ತಾತ್ಕಾಲಿಕ ಫಲಿತಾಂಶವನ್ನು ಇದೇ ಡಿಸೆಂಬರ್ 23ರ ಬದಲಿಗೆ ಡಿಸೆಂಬರ್ 22 ರಂದು ಮಂಗಳವಾರ ಬಿಡುಗಡೆ ಮಾಡಲಾಗುವುದು ಎಂದು ಪ್ರಾಧಿಕಾರದ ಕಾರ್ಯ ನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ತಿಳಿಸಿದ್ದಾರೆ. ಕೆಲವು ಅಭ್ಯರ್ಥಿಗಳಿಗೆ ಅಖಿಲ ಭಾರತ
15 ವರ್ಷ ಹಳೆಯ ವಾಹನಗಳಿಗೆ ಸಂಕಷ್ಟ? RTO ಹೊಸ ನಿಯಮ ಗೊತ್ತಿಲ್ಲದಿದ್ದರೆ ದಂಡ ಫಿಕ್ಸ್!
ನಿಮ್ಮ ಮನೆಯ ಪಾರ್ಕಿಂಗ್ನಲ್ಲಿ 15 ವರ್ಷಕ್ಕಿಂತ ಹಳೆಯದಾದ ಬೈಕ್ (Bike) ಅಥವಾ ಕಾರ್ (Car) ಇದೆಯೇ? ಅದು ನೋಡಲು ಚೆನ್ನಾಗಿದೆ, ಕಂಡೀಷನ್ ಕೂಡ ಸೂಪರ್ ಆಗಿದೆ ಎಂದು ನೀವು ಅಂದುಕೊಂಡಿರಬಹುದು. ಆದರೆ, ಕೇಂದ್ರ ಮತ್ತು ರಾಜ್ಯ ಸರ್ಕಾರದ ಹೊಸ ನಿಯಮಗಳು ನಿಮ್ಮ ಲೆಕ್ಕಾಚಾರವನ್ನು ಉಲ್ಟಾ ಮಾಡುವ ಸಾಧ್ಯತೆಯಿದೆ. ರಸ್ತೆಯಲ್ಲಿ ಹಳೆಯ ವಾಹನಗಳನ್ನು ಓಡಿಸುವುದು ಇನ್ನು ಮುಂದೆ ಮೊದಲಿನಷ್ಟು ಸುಲಭವಲ್ಲ. ಒಂದು ಸಣ್ಣ ನಿರ್ಲಕ್ಷ್ಯ ಮಾಡಿದರೂ ನಿಮ್ಮ ಜೇಬಿಗೆ ಸಾವಿರಾರು ರೂಪಾಯಿ ಕತ್ತರಿ ಬೀಳುವುದು ಖಚಿತ. ಅನೇಕ ವಾಹನ ... Read more The post 15 ವರ್ಷ ಹಳೆಯ ವಾಹನಗಳಿಗೆ ಸಂಕಷ್ಟ? RTO ಹೊಸ ನಿಯಮ ಗೊತ್ತಿಲ್ಲದಿದ್ದರೆ ದಂಡ ಫಿಕ್ಸ್! appeared first on Karnataka Times .
ʼನಾಯಕತ್ವ ಬದಲಾವಣೆʼ ವಿಚಾರ | ಕ್ಯಾಪ್ಟನ್ಶಿಪ್ಗಾಗಿ ಟಾಸ್ ಹಾಕಿದವರನ್ನೇ ಕೇಳಿ : ಸಚಿವ ಸತೀಶ್ ಜಾರಕಿಹೊಳಿ
ಬೆಳಗಾವಿ : ‘ಕ್ಯಾಪ್ಟನ್ಶಿಪ್ ಗಾಗಿ ಟಾಸ್ ಹಾಕಿದವರು ಅವರಿಬ್ಬರೇ. ಹೆಡ್ ಬಿದ್ದಿದೇಯೋ ಟೇಲ್ ಬಿದ್ದಿದೆಯೋ ಅವರನ್ನೇ ಕೇಳಿಬೇಕು’ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ‘ಮುಖ್ಯಮಂತ್ರಿ ಬದಲಾವಣೆ’ ವಿಚಾರವಾಗಿ ಸೂಚ್ಯವಾಗಿ ಪ್ರತಿಕ್ರಿಯಿಸಿದರು. ರವಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕ್ಯಾಪ್ಟನ್ (ಮುಖ್ಯಮಂತ್ರಿ) ಆಗಲು ಸಿದ್ದರಾಮಯ್ಯ ಹಾಗೂ ಡಿಕೆಶಿ ಟಾಸ್ ಮಾಡಿದ್ದಾರೆ. ಕ್ಯಾಪ್ಟನ್ ಬದಲಾವಣೆ ಆಗುತ್ತಾರೋ ಅಥವಾ ಹಳೆಯ ಕ್ಯಾಪ್ಟನ್ ಮುಂದುವರೆಯುತ್ತಾರೋ ಅವರನ್ನೇ ಕೇಳಬೇಕು. ಅವರಿಬ್ಬರೂ ಕ್ಯಾಪ್ಟನ್ ಆಗಲು ಟಾಸ್ ಮಾಡುವಾಗ ಥರ್ಡ್ ಅಂಪೈರ್ ಇರಲಿಲ್ಲ. ಇಬ್ಬರೇ ಟಾಸ್ ಹಾಕಿದ್ದಾರೆ. ಈ ಟಾಸ್ ವಿಚಾರ ಅವರಿಬ್ಬರಿಗೇ ಗೊತ್ತು. ವರಿಷ್ಠರು ಅವರಿಗೆ ಏನು ಹೇಳಿದೆ ಎಂದು ಅವರನ್ನೇ ಕೇಳಬೇಕು ಎಂದು ತಿಳಿಸಿದರು.
ʻಕೆಎನ್ ರಾಜಣ್ಣ ನನಗೆಷ್ಟು ಆಪ್ತ ಗೊತ್ತಿದ್ಯಾ? ನಾವಿಬ್ಬರು ಬ್ರದರ್ಸ್ ತರʼ: ಡಿಕೆ ಶಿವಕುಮಾರ್
ಸಚಿವ ಕೆ.ಎನ್. ರಾಜಣ್ಣ ಮತ್ತು ಡಿಕೆ ಶಿವಕುಮಾರ್ ಅವರ ದಿಢೀರ್ ಭೇಟಿ ನಂತರ ರಾಜ್ಯ ರಾಜಕೀಯದಲ್ಲಿ ಭಾರಿ ಚರ್ಚೆಯನ್ನು ಹುಟ್ಟುಹಾಕಿದೆ. ಈ ಬಗ್ಗೆ ಡಿ.ಕೆ. ಶಿವಕುಮಾರ್ ಅವರು ಮಾತನಾಡಿದ್ದು, ನಾವು ದಶಕಗಳ ಹಿಂದೆಯಿಂದಲೂ ಆತ್ಮೀಯರು, ಒಟ್ಟಾಗಿ ಕೆಲಸ ಮಾಡಿದ್ದೇವೆ. ಪಕ್ಷದ ಒಳಗೆ ಯಾವುದೇ ಭಿನ್ನಾಭಿಪ್ರಾಯವಿಲ್ಲ ನಾವೆಲ್ಲ ಅಣ್ಣ-ತಮ್ಮಂದಿರಂತೆ ಎಂದು ಊಹಾಪೋಹಾಗಳಿಗೆ ಬ್ರೇಕ್ ಹಾಕುವಂತೆ ಸಮರ್ಥಿಸಿಕೊಂಡರು.
ಶುಭಮನ್ ಗಿಲ್ ಮೇಲೆ ಯಾರದ್ದಾದರೂ ಕೆಟ್ಟ ದೃಷಿ ಬಿತ್ತಾ? ಸುನಿಲ್ ಗವಾಸ್ಕರ್ ಹೀಗೊಂದು ಸಲಹೆ ನೀಡಿದ್ದೇಕೆ?
Sunil Gavaskar On Shubman Gill- ಭಾರತ ಟಿ20 ತಂಡದಿಂದ ಗೇಟ್ ಪಾಸ್ ಪಡದಿರುವ ಶುಭಮನ್ ಗಿಲ್ ಅವರ ದೃಷ್ಟಿ ತೆಗೆಸಿಕೊಳ್ಳುವಂತೆ ಭಾರತ ತಂಡದ ಮಾಜಿ ನಾಯಕ ಸುನಿಲ್ ಗವಾಸ್ಕರ್ ಅವರು ಸಲಹೆ ನೀಡಿದ್ದಾರೆ. ಗಿಲ್ ಅವರನ್ನು ತಂಡದಿಂದ ಕೈಬಿಟ್ಟಿರುವುದಕ್ಕೆ ಅಚ್ಚರಿ ಮತ್ತು ಅಸಮಾಧಾನ ವ್ಯಕ್ತಪಡಿಸಿರುವ ಅವರು ಗಿಲ್ ಒಬ್ಬ ಕ್ಲಾಸ್ ಬ್ಯಾಟ್ಸ್ಮನ್ ಎಂದು ಹೊಗಳಿದ್ದಾರೆ. ಟೆಸ್ಟ್ ತಂಡದಿಂದ ಏಕಾಏಕಿ ಟಿ20 ಮಾದರಿಗೆ ಹೊಂದಿಕೊಳ್ಳುವುದು ಕಷ್ಟ. ಆದರೆ ಗಿಲ್ ಅವರು ಐಪಿಎಲ್ ನಲ್ಲಿ ತಮ್ಮ ಟಿ20 ಸಾಮರ್ಥ್ಯ ಸಾಬೀತುಪಡಿಸಿದ್ದಾರೆ ಎಂದು ಹೇಳಿದ್ದಾರೆ.
ಡಿಸೆಂಬರ್ 27ರವರೆಗೆ ಈ ರಾಜ್ಯಗಳಲ್ಲಿ ಮಳೆ, ಚಳಿ ಸಾಧ್ಯತೆ: ಹವಾಮಾನ ಇಲಾಖೆ
ಕರ್ನಾಟಕದ ಉತ್ತರ ಒಳನಾಡಿನ ಕೆಲವು ಭಾಗಗಳಲ್ಲಿ ಮತ್ತು ತೆಲಂಗಾಣ, ಉತ್ತರಾಖಂಡದ ಪ್ರತ್ಯೇಕ ಪ್ರದೇಶಗಳಲ್ಲಿ ತೀವ್ರ ಶೀತ ವಾತಾವರಣ ಮುಂದುವರಿದಿದೆ. ಪೂರ್ವ ಉತ್ತರ ಪ್ರದೇಶದ ಕೆಲವು ಭಾಗಗಳಲ್ಲಿ ಮತ್ತು ಪಶ್ಚಿಮ ಉತ್ತರ ಪ್ರದೇಶದ ಪ್ರತ್ಯೇಕ ಪ್ರದೇಶಗಳಲ್ಲಿ ದಿನದಿಂದ ದಿನಕ್ಕೆ ಶೀತ ವಾತಾವರಣ ತೀವ್ರಗೊಳ್ಳುತ್ತಿದೆ ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ. ಡಿಸೆಂಬರ್ 27ರವರೆಗೆ ಉತ್ತರಾಖಂಡ, ಉತ್ತರ ಪ್ರದೇಶ, ಹರಿಯಾಣ,
ಅಮೆರಿಕದ ಸರಕಾರಿ ವೆಬ್ಸೈಟ್ನಿಂದ ಟ್ರಂಪ್ ಫೋಟೋ ಸೇರಿ ಜೆಫ್ರಿ ಎಪ್ಸ್ಟೀನ್ಗೆ ಸಂಬಂಧಿಸಿದ 16 ದಾಖಲೆಗಳು ಕಣ್ಮರೆ
ವಾಷಿಂಗ್ಟನ್: ಅಮೆರಿಕದ ನ್ಯಾಯ ಇಲಾಖೆ (DOJ) ನಿರ್ವಹಿಸುವ ಸಾರ್ವಜನಿಕ ವೆಬ್ಸೈಟ್ ನಿಂದ ಫೈನಾನ್ಷಿಯರ್, ಶಿಕ್ಷೆಗೊಳಗಾದ ಲೈಂಗಿಕ ಅಪರಾಧಿ ಜೆಫ್ರಿ ಎಪ್ಸ್ಟೀನ್ ಗೆ ಸಂಬಂಧಿಸಿದ ಕನಿಷ್ಠ 16 ದಾಖಲೆಗಳು ಕಣ್ಮರೆಯಾಗಿರುವ ಬಗ್ಗೆ ವರದಿಯಾಗಿದೆ. ಶುಕ್ರವಾರವಷ್ಟೇ ಪ್ರಕಟಿಸಲಾಗಿದ್ದ ಈ ದಾಖಲೆಗಳು ಶನಿವಾರದ ವೇಳೆಗೆ ಲಭ್ಯವಿರಲಿಲ್ಲ. ಕಾಣೆಯಾದ ದಾಖಲೆಗಳಲ್ಲಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಒಳಗೊಂಡಿರುವ ಛಾಯಾಚಿತ್ರವೂ ಸೇರಿದೆ. ಈ ಫೋಟೋದಲ್ಲಿ ಎಪ್ಸ್ಟೀನ್, ಮೆಲಾನಿಯಾ ಟ್ರಂಪ್ ಹಾಗೂ ಗಿಸ್ಲೇನ್ ಮ್ಯಾಕ್ಸ್ ವೆಲ್ ಅವರೊಂದಿಗೆ ಟ್ರಂಪ್ ಕಾಣಿಸಿಕೊಂಡಿದ್ದು, ಪೀಠೋಪಕರಣಗಳು ಮತ್ತು ಒಳಗಿನ ಡ್ರಾಯರ್ಗಳಲ್ಲಿ ಇರಿಸಲಾಗಿದ್ದ ಚಿತ್ರಗಳ ಸರಣಿಯೊಂದರಲ್ಲಿ ಅದು ಸೇರಿತ್ತು ಎಂದು ವರದಿಯಾಗಿದೆ. ನಗ್ನ ಮಹಿಳೆಯರನ್ನು ಚಿತ್ರಿಸುವ ಕಲಾಕೃತಿಗಳ ಚಿತ್ರಗಳೂ ಕಣ್ಮರೆಯಾದ ಸಾಮಗ್ರಿಗಳಲ್ಲಿವೆ. ದಾಖಲೆಗಳನ್ನು ಉದ್ದೇಶಪೂರ್ವಕವಾಗಿ ತೆಗೆದುಹಾಕಲಾಗಿದೆಯೇ ಅಥವಾ ತಾಂತ್ರಿಕ ದೋಷದಿಂದ ಅಳಿಸಲಾಗಿದೆಯೇ ಎಂಬುದರ ಕುರಿತು ನ್ಯಾಯ ಇಲಾಖೆ ಯಾವುದೇ ಅಧಿಕೃತ ಸ್ಪಷ್ಟನೆ ನೀಡಿಲ್ಲ. ಈ ಸಂಬಂಧ ಕೇಳಲಾದ ಪ್ರಶ್ನೆಗಳಿಗೆ ಇಲಾಖೆ ವಕ್ತಾರರು ಪ್ರತಿಕ್ರಿಯಿಸಿಲ್ಲ. ದಾಖಲೆಗಳ ಅಸ್ಪಷ್ಟ ಕಣ್ಮರೆಯಿಂದ ಆನ್ಲೈನ್ ವಲಯದಲ್ಲಿ ಊಹಾಪೋಹಗಳು ಹೆಚ್ಚಾಗಿದ್ದು, ಎಪ್ಸ್ಟೀನ್ ಮತ್ತು ಅವರೊಂದಿಗೆ ಸಂಪರ್ಕ ಹೊಂದಿದ್ದ ಪ್ರಭಾವಿ ವ್ಯಕ್ತಿಗಳ ಕುರಿತು ಸಾರ್ವಜನಿಕ ಹಿತಾಸಕ್ತಿ ಮತ್ತೆ ಚುರುಕುಗೊಂಡಿದೆ. ಅಮೆರಿಕದ ಸದನದ ಮೇಲ್ವಿಚಾರಣಾ ಸಮಿತಿಯ ಡೆಮೋಕ್ರಾಟ್ ಸದಸ್ಯರು, ಟ್ರಂಪ್ ಅವರ ಚಿತ್ರ ಕಾಣೆಯಾಗಿರುವುದನ್ನು ಉಲ್ಲೇಖಿಸಿ ಪ್ರಶ್ನೆಗಳನ್ನು ಎತ್ತಿದ್ದಾರೆ. ಸಂತ್ರಸ್ತರೊಂದಿಗೆ FBI ನಡೆಸಿದ ಸಂದರ್ಶನಗಳು ಹಾಗೂ ಆರೋಪದ ನಿರ್ಧಾರಗಳಿಗೆ ಸಂಬಂಧಿಸಿದ ಆಂತರಿಕ ನ್ಯಾಯ ಇಲಾಖೆ ಜ್ಞಾಪಕ ಪತ್ರಗಳು ಬಿಡುಗಡೆಯಾದ ದಾಖಲೆಗಳಲ್ಲಿ ಸೇರಿರಲಿಲ್ಲ. ಇದರಿಂದ 2000ರ ದಶಕದ ಮಧ್ಯಭಾಗದಲ್ಲಿ ಎಪ್ಸ್ಟೀನ್ ಗೆ ಫೆಡರಲ್ ಲೈಂಗಿಕ ಕಳ್ಳಸಾಗಣೆ ಆರೋಪಗಳ ಬದಲು ರಾಜ್ಯ ಮಟ್ಟದ ಸಣ್ಣ ಅಪರಾಧಕ್ಕೆ ಒಪ್ಪಂದ ನೀಡಲಾಗಿದ್ದ ನಿರ್ಧಾರ ಮತ್ತೆ ಚರ್ಚೆಗೆ ಬಂದಿದೆ. ಎಪ್ಸ್ಟೀನ್ ನೊಂದಿಗೆ ಸಂಪರ್ಕ ಹೊಂದಿದ್ದ ಕೆಲ ಉನ್ನತ ವ್ಯಕ್ತಿಗಳಿಗೆ ದಾಖಲೆಗಳಲ್ಲಿ ಕಡಿಮೆ ಉಲ್ಲೇಖ ದೊರೆತಿರುವುದೂ ತನಿಖೆಯ ವ್ಯಾಪ್ತಿ ಕುರಿತು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಬಿಡುಗಡೆಗೊಂಡ ಕೆಲವು ದಾಖಲೆಗಳಲ್ಲಿ 1996ರಲ್ಲಿ ಮಕ್ಕಳ ಛಾಯಾಚಿತ್ರಗಳನ್ನು ಕದ್ದಿದ್ದಾರೆ ಎಂಬ ಆರೋಪದ ದೂರು ಹಾಗೂ ನಂತರ ನ್ಯಾಯ ಇಲಾಖೆ ಫೆಡರಲ್ ಮೊಕದ್ದಮೆಯಿಂದ ಹಿಂದೆ ಸರಿದಿರುವ ಸೂಚನೆಗಳೂ ಸೇರಿವೆ. ಬಿಡುಗಡೆಗೊಂಡು ಬಳಿಕ ಕಣ್ಮರೆಯಾದ ದಾಖಲೆಗಳಲ್ಲಿ ನ್ಯೂಯಾರ್ಕ್ ಮತ್ತು ಯುಎಸ್ ವರ್ಜಿನ್ ದ್ವೀಪಗಳಲ್ಲಿನ ಎಪ್ಸ್ಟೀನ್ ನಿವಾಸಗಳ ಛಾಯಾಚಿತ್ರಗಳು ಹಾಗೂ ರಾಜಕಾರಣಿಗಳು ಮತ್ತು ಸೆಲೆಬ್ರಿಟಿಗಳ ಚದುರಿದ ಚಿತ್ರಗಳೇ ಹೆಚ್ಚು ಗಮನ ಸೆಳೆದಿವೆ.
ರಾಜ್ಯದಲ್ಲಿ ಸೀಸನಲ್ ಫ್ಲೂ ಹೆಚ್ಚಳ: ಮಾರ್ಗಸೂಚಿ ಬಿಡುಗಡೆ
ಬೆಂಗಳೂರು: ಹವಾಮಾನ ಬದಲಾವಣೆಯಿಂದಾಗಿ ರಾಜ್ಯದಲ್ಲಿ ಸೀಸನಲ್ ಫ್ಲೂ(ಶೀತಜ್ವರ) ಹೆಚ್ಚಳ ಆಗುತ್ತಿದ್ದು, ಡಿಸೆಂಬರ್, ಜನವರಿಯಿಂದ ಮಾರ್ಚ್ ತನಕ ಸೀಸನಲ್ ಫ್ಲೂ ಹೆಚ್ಚಳದ ಭೀತಿ ಇದೆ. ಹೀಗಾಗಿ ಆರೋಗ್ಯ ಸೇವೆಗಳ ಆಯುಕ್ತಾಲಯವು ಮಾರ್ಗಸೂಚಿ ಬಿಡುಗಡೆ ಮಾಡಿದೆ. ಸೀಸನಲ್ ಫ್ಲೂ ಸಾಮಾನ್ಯವಾಗಿ ಒಂದು ವಾರಗಳ ಕಾಲ ಕಾಡಲಿದ್ದು, ಕೆಲವೊಮ್ಮೆ 3 ವಾರಗಳ ವರೆಗೂ ಮುಂದುವರಿಯುತ್ತದೆ. ಹೀಗಾಗಿ ಶೀತಜ್ವರ ಹರಡುವುದನ್ನು ತಡೆಗಟ್ಟಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಆಯುಕ್ತಾಲಯವು ಸೂಚನೆ ನೀಡಿದೆ. ಸೋಂಕಿತರ ಎಂಜಲಿನಿಂದ ಹರಡುವ ಸೋಂಕು ಇದಾಗಿದ್ದು, ಸೀನುವಿಕೆಯಿಂದ(sneezing) ಸೀಸನಲ್ ಫ್ಲೂ ವ್ಯಕ್ತಿಯಿಂದ ವ್ಯಕ್ತಿಗೆ ಹರಡುತ್ತದೆ. ಜ್ವರ, ಕೆಮ್ಮು, ಕೆಂಪು ಗುಳ್ಳೆ, ಹಸಿವು ಆಗದಿರುವುದು, ಮೈ-ಕೈ ನೋವು, ಶೀತ, ಒಣ ಕೆಮ್ಮು ಇದರ ಪ್ರಮುಖ ಗುಣಲಕ್ಷಣಗಳಾಗಿವೆ. ಮಕ್ಕಳು, ಹಿರಿಯರು, ಗರ್ಭಿಣಿಯರು, ಕೋಮಾರ್ಬಿಟೀಸ್ ರೋಗಿಗಳಿಗೆ ಹೆಚ್ಚಿನ ಅಪಾಯ ಉಂಟಾಗುವ ಸಾಧ್ಯತೆಯಿದ್ದು, ಮುನ್ನೆಚ್ಚರಿಕೆ ವಹಿಸುವಂತೆ ಮಾರ್ಗಸೂಚಿಯಲ್ಲಿ ಉಲ್ಲೇಖಿಸಲಾಗಿದೆ. ಸಿದ್ಧತೆಗಳೇನು? ♦ ಐಎಲ್ಐ, ಸಾರಿ(SARI) ಪ್ರಕರಣಗಳ ಬಗ್ಗೆ ಗಮನ ಹರಿಸಬೇಕು. ♦ ಪ್ರತಿ ದಿನ ಕನಿಷ್ಠ 5ರಷ್ಟು ಐಎಲ್ಐ ಕೇಸ್, 100ರಷ್ಟು ಸಾರಿ ಕೇಸ್ ಗಳ ಪರೀಕ್ಷೆ ಮಾಡಬೇಕು. ♦ ಎಲ್ಲ ಪ್ರಯೋಗಾಲಯಗಳಲ್ಲಿ ಸೂಕ್ತ ಟೆಸ್ಟಿಂಗ್ ಕಿಟ್ ಇರಿಸಿಕೊಳ್ಳಬೇಕು. ♦ ಅಗತ್ಯ ಔಷಧಗಳ ಶೇಖರಣೆ, ಪಿಪಿಇ ಕಿಟ್ ಗಳು, ಎನ್95 ಮಾಸ್ಕ್ ಸೇರಿ ಅಗತ್ಯ ಔಷಧಗಳ ದಾಸ್ತಾನಿರಿಸಬೇಕು. ♦ oseltamivir ಮಾತ್ರೆಗಳನ್ನು ದಾಸ್ತಾನು ಮಾಡಿ ಅಗತ್ಯಕ್ಕೆತಕ್ಕಂತೆ ಪ್ರಿಸ್ಕ್ರೈಬ್ ಮಾಡಬೇಕು ♦ ಇನ್ಫ್ಲುಯೆನ್ಝ ಲಸಿಕೆ ಶೇಖರಣೆ, ಹೆಲ್ತ್ ಕೇರ್ ವರ್ಕರ್ಸ್, ಗರ್ಭಿಣಿಯರು, ಹೈ ರಿಸ್ಕ್ ರೋಗಿಗಳು ಸೂಕ್ತ ಲಸಿಕೆ ಪಡೆಯುವಂತೆ ಸಲಹೆ ನೀಡಬೇಕು. ♦ ಕ್ಲಿನಿಕಲ್ ಮ್ಯಾನೇಜ್ಮೆಂಟ್ ಹಾಗೂ ಕ್ರಿಟಿಕಲ್ ಕೇರ್ ಸಿದ್ಧತೆ, ವೆಂಟಿಲೇಟರ್ ಗಳನ್ನು ಸಿದ್ಧ ಮಾಡಬೇಕು. ♦ ಸಮುದಾಯದಲ್ಲಿ ಅರಿವು ಮೂಡಿಸಲು ಕ್ರಮ ಕೈಗೊಳ್ಳಬೇಕು.
ರಾಷ್ಟ್ರೀಯ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮಕ್ಕೆ ಸಚಿವ ಮುನಿಯಪ್ಪ ಚಾಲನೆ
ಬೆಂ.ಗ್ರಾಂ.ಜಿಲ್ಲೆ: ಐದು ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ಪೋಲಿಯೋ ಹನಿ ಹಾಕಿಸುವ ಮೂಲಕ ಪೋಲಿಯೋ ಮುಕ್ತ ರಾಷ್ಟ್ರ ಎಂದು ಮತ್ತೊಮ್ಮೆ ಸಾಬೀತು ಮಾಡೋಣ ಎಂದು ಆಹಾರ ನಾಗರೀಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಹೆಚ್ ಮುನಿಯಪ್ಪ ಅವರು ತಿಳಿಸಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ದೇವನಹಳ್ಳಿಯ ತಾಲ್ಲೂಕಿನ ಆರೋಗ್ಯಾಧಿಕಾರಿಗಳ ಕಛೇರಿಯಲ್ಲಿ ಆಯೋಜಿಸಲಾಗಿದ್ದ ರಾಷ್ಟ್ರೀಯ ಪಲ್ಸ್ ಪೋಲಿಯೊ ಲಸಿಕಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಮಕ್ಕಳ ಭವಿಷ್ಯದ ಹಿತದೃಷ್ಟಿಯಿಂದ ಪೋಷಕರು ಯಾವುದೇ ಭಯವಿಲ್ಲದೆಯೇ ಮಕ್ಕಳಿಗೆ ಪೋಲಿಯೋ ಹನಿಯನ್ನು ತಪ್ಪದೇ ಹಾಕಿಸುವ ಮೂಲಕ ಮಕ್ಕಳನ್ನು ಅಂಗವೈಕಲ್ಯದಿಂದ ಪಾರುಮಾಡಿ. ಪೋಲಿಯೋ ಹನಿ ಪಡೆಯದಿಲ್ಲದ ಯಾವ ಮಗುವು ಸುರಕ್ಷಿತವಲ್ಲ ಎಂಬ ಅಂಶವನ್ನು ಪೋಷಕರು ಮನಗಾಣಬೇಕು ಎಂದರು. ಡಿಸೆಂಬರ್ 21 ರಿಂದ 24 ರವರೆಗೆ 2025ನೇ ಸಾಲಿನ ರಾಷ್ಟ್ರೀಯ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು. ಜಿಲ್ಲೆಯಲ್ಲಿ 0-5 ವರ್ಷದೊಳಗಿನ ಒಟ್ಟು 99828 ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕುವ ಗುರಿ ಹೊಂದಲಾಗಿದೆ ಮತ್ತು ಜಿಲ್ಲೆಯಲ್ಲಿ ಒಟ್ಟು 1374 ಕಠಿಣ ಪ್ರದೇಶಗಳನ್ನು (ಹೆಚ್.ಆರ್.ಎ) ಗುರುತಿಸಲಾಗಿದ್ದು, ಇವುಗಳ ಮೇಲೆ ಹೆಚ್ಚು ನಿಗಾವಹಿಸಿ ಜಿಲ್ಲೆಯಲ್ಲಿ ಯಾವುದೇ ಮಕ್ಕಳು ಯಾವುದೇ ಕಾರಣಕ್ಕೂ ಪೋಲಿಯೋ ಲಸಿಕೆಯಿಂದ ವಂಚಿತ ಆಗದಂತೆ ಕ್ರಮವಹಿಸಲಾಗಿದೆ ಎಂದರು. ಎಲ್ಲಾ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗಳಲ್ಲಿ, ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ, ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಮತ್ತು ಉಪಕೇಂದ್ರಗಳಲ್ಲಿ ಹಾಗೂ ಶಾಲೆಗಳಲ್ಲಿ/ಅಂಗನವಾಡಿ ಕೇಂದ್ರಗಳಲ್ಲಿ ಉಚಿತವಾಗಿ ಪಲ್ಸ್ ಪೋಲಿಯೋ ಲಸಿಕೆ ಹಾಕಲಾಗುವುದು. ಜಿಲ್ಲೆಯಾದ್ಯಂತ ಒಟ್ಟು 476 ಬೂತ್ಗಳ ಜೊತೆಗೆ 85 ಟ್ರಾನ್ಸಿಟ್ ತಂಡಗಳ ವ್ಯವಸ್ಥೆ ಮಾಡಲಾಗಿದ್ದು, ಮಕ್ಕಳಿಗೆ ಲಸಿಕೆಯನ್ನು ಹಾಕಲು ಒಟ್ಟು 2148 ಲಸಿಕಾದಾರರನ್ನು ನಿಯೋಜಿಸಲಾಗಿದೆ. ಇದರ ಮೇಲ್ವಿಚಾರಣೆಗಾಗಿ ಒಟ್ಟು 106 ಮೇಲ್ವಿಚಾರಕರನ್ನು ನೇಮಿಸಿದ್ದು. ಜಿಲ್ಲೆಯಲ್ಲಿ ಗ್ರಾಮೀಣ / ನಗರ ಪ್ರದೇಶದ ಒಟ್ಟು 2,80,986 ಮನೆಗಳಿಗೆ ಭೇಟಿ ನೀಡಿ ಲಸಿಕೆ ನೀಡಲು ಗುರಿ ಹೊಂದಲಾಗಿದೆ ಎಂದರು. ಕಾರ್ಯಕ್ರಮದಲ್ಲಿ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರಾದ ಬಿ.ರಾಜಣ್ಣ, ಬಯಪ್ಪ ಅಧ್ಯಕ್ಷರಾದ ವಿ. ಶಾಂತಕುಮಾರ್, ಬಯಪ್ಪ ನಿರ್ದೇಶಕರಾದ ಪ್ರಸನ್ನಕುಮಾರ್, ಪುರಸಭೆ ಅಧ್ಯಕ್ಷರಾದ ಡಿ.ಎಂ ಮುನಿಕೃಷ್ಣ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಾದ ಲಕ್ಕಾ ಕೃಷ್ಣಾರೆಡ್ಡಿ, ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿಗಳಾದ ಸೀಮಾ ರುದ್ರಪ್ಪ ಮಾಬಳೆ, ದೇವನಹಳ್ಳಿ ತಹಶೀಲ್ದಾರ್ ಅನಿಲ್, ಕೆಪಿಸಿಸಿ ಸದಸ್ಯರಾದ ಚಿನ್ನಪ್ಪ, ದೇವನಹಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಕೆ.ಸಿ ಮಂಜುನಾಥ್, ವಿಜಯಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದಿನ್ನೂರ ವೆಂಕಟೇಶ್ ಸೇರಿದಂತೆ ಆರೋಗ್ಯ ಇಲಾಖೆ ವೈದ್ಯರು ಹಾಗೂ ಸಿಬ್ಬಂದಿಗಳು, ಅಂಗನವಾಡಿ ಕಾರ್ಯಕರ್ತರು ಉಪಸ್ಥಿತರಿದ್ದರು.
South Africa| ಪಬ್ನಲ್ಲಿ ಗುಂಡಿನ ದಾಳಿ: ಕನಿಷ್ಠ 9 ಮಂದಿ ಮೃತ್ಯು
ಜೋಹಾನ್ಸ್ಬರ್ಗ್: ದಕ್ಷಿಣ ಆಫ್ರಿಕಾದ ಜೋಹಾನ್ಸ್ಬರ್ಗ್ ಸಮೀಪದ ಬೆಕರ್ಸ್ಡಾಲ್ ಪಟ್ಟಣದಲ್ಲಿ ರವಿವಾರ ಬೆಳಗಿನ ಜಾವ ನಡೆದ ಗುಂಡಿನ ದಾಳಿಯಲ್ಲಿ ಕನಿಷ್ಠ 9 ಮಂದಿ ಮೃತಪಟ್ಟಿದ್ದು, ಹತ್ತು ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಸ್ಥಳೀಯ ಸಮಯ ಮಧ್ಯರಾತ್ರಿ 1 ಗಂಟೆಗೆ ಸ್ವಲ್ಪ ಮೊದಲು ಪಬ್ ಬಳಿ ಈ ಘಟನೆ ನಡೆದಿದೆ. ಬಿಳಿ ಬಣ್ಣದ ಸೆಡಾನ್ ಕಾರಿನಲ್ಲಿ ಬಂದಿದ್ದ ಸುಮಾರು 12 ಮಂದಿ ಶಸ್ತ್ರಸಜ್ಜಿತ ಅಪರಿಚಿತರು ಮೊದಲು ಪಬ್ ಮಾಲೀಕರ ಮೇಲೆ ಗುಂಡು ಹಾರಿಸಿದ್ದಾರೆ. ಬಳಿಕ ಸ್ಥಳದಿಂದ ಪರಾರಿಯಾಗುವಾಗ ಸುತ್ತಮುತ್ತಲಿನ ಬೀದಿಗಳಲ್ಲಿ ಇದ್ದ ಜನರ ಮೇಲೂ ಗುಂಡಿನ ದಾಳಿ ನಡೆಸಿದ್ದಾರೆ ಎಂದು ಪೊಲೀಸ್ ಹೇಳಿಕೆಯಲ್ಲಿ ತಿಳಿಸಲಾಗಿದೆ. ದಾಳಿಗೊಳಗಾದ ಪಬ್ಗೆ ಕಾನೂನುಬದ್ಧ ಪರವಾನಗಿ ಇತ್ತು ಎಂದು ಪೊಲೀಸರು ತಿಳಿಸಿದ್ದಾರೆ. ದಕ್ಷಿಣ ಆಫ್ರಿಕಾದ ಸರಕಾರಿ ಸುದ್ದಿ ಸಂಸ್ಥೆಯ ವರದಿ ಪ್ರಕಾರ, ದಾಳಿಯಲ್ಲಿ ಪಬ್ನೊಳಗಿದ್ದವರು ಮಾತ್ರವಲ್ಲದೆ ಹೊರಗಿದ್ದ ನಾಗರಿಕರೂ ಗುರಿಯಾಗಿದ್ದಾರೆ. ಘಟನಾ ಸ್ಥಳಕ್ಕೆ ರಾಷ್ಟ್ರೀಯ ಹಾಗೂ ಪ್ರಾಂತೀಯ ಅಪರಾಧ ದೃಶ್ಯ ನಿರ್ವಹಣಾ ತಂಡಗಳು, ಗಂಭೀರ ಅಪರಾಧ ತನಿಖಾ ದಳ, ಅಪರಾಧ ಗುಪ್ತಚರ ಮತ್ತು ಅಪರಾಧ ಪತ್ತೆ ತಂಡಗಳು ಆಗಮಿಸಿ ಪರಿಶೀಲನೆ ನಡೆಸಿವೆ ಎಂದು ಗೌಟೆಂಗ್ ಪ್ರಾಂತ್ಯದ ಹಂಗಾಮಿ ಪೊಲೀಸ್ ಆಯುಕ್ತ ಫ್ರೆಡ್ ಕೆಕಾನಾ ತಿಳಿಸಿದ್ದಾರೆ. ದಾಳಿಯ ಉದ್ದೇಶ ಇನ್ನೂ ಸ್ಪಷ್ಟವಾಗಿಲ್ಲ. ಕೆಲವು ಮಾಧ್ಯಮ ವರದಿಗಳು ಸಾವಿನ ಸಂಖ್ಯೆ ಹತ್ತು ಎಂದು ತಿಳಿಸಿವೆ. ಈ ಕುರಿತು ಗೌಟೆಂಗ್ ಪ್ರಾಂತ್ಯದ ಪೊಲೀಸ್ ವಕ್ತಾರ ಬ್ರೆಂಡಾ ಮುರಿಡಿಲಿ, ಹತ್ತು ಮಂದಿ ಮೃತಪಟ್ಟಿರುವ ಸಾಧ್ಯತೆ ಇದೆ. ಮೃತರ ಗುರುತು ಪತ್ತೆ ಕಾರ್ಯ ಮುಂದುವರಿದಿದೆ ಎಂದು ತಿಳಿಸಿದ್ದಾರೆ.
RCB Mangesh Yadav: ಆರ್ಸಿಬಿ ಮಂಗೇಶ್ ಯಾದವ್ಗೆ ₹5,20,00,000 ನೀಡಿರುವುದರ ಹಿಂದಿದೆ ಬಿಗ್ ಪ್ಲ್ಯಾನ್
RCB Mangesh Yadav: ಐಪಿಎಲ್ 2025 ಫೈನಲ್ ಪಂದ್ಯದಲ್ಲಿ ಆರ್ಸಿಬಿ ಪಂಜಾಬ್ ಕಿಂಗ್ಸ್ ಮಣಿಸಿ ಚೊಚ್ಚಲ ಟ್ರೋಫಿ ಗೆದ್ದುಕೊಂಡಿತು. ಇನ್ನೂ ಮುಂದಿನ ಬಾರಿಯೂ ಟ್ರೋಫಿ ಗೆಲ್ಲಲು ಮಿನಿ ಹರಾಜಿನಲ್ಲಿ ಆಲ್ರೌಂಡರ್ ಆಟಗಾರರಿಗೆ ಗಾಳ ಹಾಕಿ ತಂಡವನ್ನು ಮತ್ತಷ್ಟು ಬಲಿಷ್ಠಪಡಿಸಿಕೊಂಡಿದೆ. ಈ ಪೈಕಿ ಯುವ ಆಟಗಾರ ಮಂಗೇಶ್ ಯಾದವ್ಗೆ ಕೋಟಿ.. ಕೋಟಿ ಹಣ ಸುರಿದಿದೆ. ಹಾಗಾದ್ರೆ, ಈತ ಯಾರು
Housing Price: 2026ರಲ್ಲಿ ವಸತಿ ಬೆಲೆಗಳು ಶೇ 5ಕ್ಕಿಂತ ಏರಿಕೆ: ಕ್ರೆಡೈ ಸಮೀಕ್ಷೆ
ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಈಗಾಗಲೇ ವಸತಿ ಬೆಲೆಗಳು ಗಗನಕ್ಕೇರಿವೆ. ಇದರ ನಡುವೆ ಕ್ರೆಡೈ ಮತ್ತು ಸಿಆರ್ಇ ಮ್ಯಾಟ್ರಿಕ್ಸ್ ನಡೆಸಿದ ಸಮೀಕ್ಷೆಯ ಪ್ರಕಾರ 2026ರಲ್ಲಿ ವಸತಿ ಬೆಲೆಗಳು ಶೇಕಡಾ 5ಕ್ಕಿಂತ ಹೆಚ್ಚು ಏರಿಕೆಯಾಗಲಿದೆ ಎಂದು ಹೇಳಿದೆ. ಸಮೀಕ್ಷೆಯಲ್ಲಿ ಪಾಲ್ಗೊಂಡ ಶೇಕಡಾ 70ರಷ್ಟು ರಿಯಲ್ ಎಸ್ಟೇಟ್ ಡೆವಲಪರ್ಗಳು ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ರಿಯಲ್ ಎಸ್ಟೇಟ್ ಸಂಸ್ಥೆಯಾದ
ಪರ್ವತ ಶ್ರೇಣಿಗಳ ನಾಶದಿಂದ ಭವಿಷ್ಯದಲ್ಲಿ ನೀರಿನ ಕೊರತೆ !
► 'ಸುಪ್ರೀಂ' ತೀರ್ಪು ದೆಹಲಿ ಮತ್ತು ನೆರೆಯ ನಗರಗಳಿಗೆ ಅಪಾಯಕಾರಿ ಹೇಗೆ ?
ಮುಂಬೈ: ಮಹಾರಾಷ್ಟ್ರ ಸ್ಥಳೀಯ ಸಂಸ್ಥೆಗಳಿಗೆ ನಡೆದ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆ ನಡೆಯುತ್ತಿದೆ. ಆಡಳಿತಾರೂಢ ಮಹಾಯುತಿಗೆ 150ಕ್ಕಿಂತ ಹೆಚ್ಚು ಸ್ಥಾನಗಳಲ್ಲಿ ಆರಂಭಿಕ ಮುನ್ನಡೆ ದೊರೆತಿದೆ. ಮತ್ತೊಂದೆಡೆ ವಿಪಕ್ಷಗಳ ಮೈತ್ರಿಕೂಟ ಮಹಾ ವಿಕಾಸ್ ಅಘಾಡಿಗೆ 50ಕ್ಕಿಂತ ಕಡಿಮೆ ಸ್ಥಾನಗಳಲ್ಲಿ ಆರಂಭಿಕ ಮುನ್ನಡೆ ದೊರೆತಿದೆ. ಸಿಲೋದ್ ಸ್ಥಾನದಲ್ಲಿ ಶಿವಸೇನೆಯ ಅಭ್ಯರ್ಥಿ ಸಮೀರ್ ಸತ್ತಾರ್ ಮುನ್ನಡೆಯಲಿದ್ದರೆ, ಕನ್ನಾಡ್ ನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶೇಖ್ ಫರೀನ್ ಮುನ್ನಡೆಯಲ್ಲಿದ್ದಾರೆ. ಶಿವಸೇನೆ (ಉದ್ಭವ್ ಬಣ) ಅಭ್ಯರ್ಥಿ ಅಪರ್ಣಾ ಗೋರ್ಡೆ ಅವರು ಪೈಥಾನ್ ಕ್ಷೇತ್ರದಲ್ಲಿ ಮುನ್ನಡೆ ಸಾಧಿಸಿದ್ದಾರೆ. ಇತ್ತೀಚಿನ ವರದಿಗಳ ಪ್ರಕಾರ, ಬಿಜೆಪಿ 85 ಸ್ಥಾನಗಳಲ್ಲಿ, ಶಿವಸೇನೆ (ಶಿಂದೆ ಬಣ) 41 ಸ್ಥಾನಗಳಲ್ಲಿ ಹಾಗೂ ಎನ್ಸಿಪಿ (ಅಜಿತ್ ಪವಾರ್ ಬಣ) 32 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಮತ್ತೊಂದೆಡೆ ಶಿವಸೇನೆ (ಉದ್ಭವ್ ಬಣ) 10 ಸ್ಥಾನಗಳಲ್ಲಿ, ಎನ್ಸಿಪಿ (ಶರದ್ ಪವಾರ್ ಬಣ) 12 ಸ್ಥಾನಗಳಲ್ಲಿ ಹಾಗೂ ಕಾಂಗ್ರೆಸ್ ಅಭ್ಯರ್ಥಿಗಳು 16 ನಗರ ಪಾಲಿಕೆ ಸ್ಥಾನಗಳಲ್ಲಿ ಮುನ್ನಡೆಯಲ್ಲಿದ್ದಾರೆ. ಸ್ವತಂತ್ರ ಅಭ್ಯರ್ಥಿಗಳೂ ಪ್ರಬಲ ಪೈಪೋಟಿ ನೀಡುತ್ತಿದ್ದು 20 ನಗರ ಪಾಲಿಕೆ ಸ್ಥಾನಗಳಲ್ಲಿ ಮುನ್ನಡೆಯಲ್ಲಿದ್ದಾರೆ.
`ಮಿಷನ್ ಶುಭಮನ್ ಗಿಲ್' ಫೈಲ್ಯೂರ್! ಮಹತ್ವದ ಟೂರ್ನಿಗೆ ಮುಂಚಿತವಾಗಿಯೇ ಯೂಟರ್ನ್ ಹೊಡೆದದ್ದೇಕೆ ಬಿಸಿಸಿಐ?
Shubman Gill Farm Issue- ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ, ಶುಭಮನ್ ಗಿಲ್ ಅವರ ಫಾರ್ಮ್ ಒಂದು ನೆಟ್ಟಗಿದ್ದಿದ್ದರೆ ಇನ್ನು ಮೂರು ತಿಂಗಳಲ್ಲಿ ಅವರು ಟಿ20 ತಂಡದ ನಾಯಕ ಸಹ ಆಗಬೇಕಿತ್ತು. ಆದರೆ ತಾನೊಂದು ಬಗೆದರೆ ಕಾಲ ಮತ್ತೊಂದು ಬಗೆಯುತ್ತದೆ ಎಂಬುದಕ್ಕೆ ಉದಾಹರಣೆ ಇದೇ ಇರಬೇಕು. ಶುಭಮನ್ ಗಿಲ್ ಅವರಿಗೆ 2026ರ ವಿಶ್ವಕಪ್ ತಂಡದಿಂದ ಕೊಕ್ ನೀಡಲಾಗಿದೆ. ಅಲ್ಲಿಗೆ ಅನ್ಯಾಯವಾಗಿ ಕಮರಿ ಹೋಗುತ್ತಿದ್ದ ಸಂಜು ಸ್ಯಾಮ್ಸನ್ ಎಂಬ ಅಪ್ಪಟ ಪ್ರತಿಭೆಗೆ ತನ್ನನ್ನು ತಾನು ಸಾಬೀತು ಪಡಿಸಲು ಮತ್ತೊಂದು ಅವಕಾಶ ಸಿಕ್ಕಂತಾಗಿದೆ. ಹಾಗಿದ್ದರೆ ಗಿಲ್ ಅವರನ್ನು ತಂಡದಿಂದ ಹೊರಗಿಡಲು ಮುಖ್ಯ ಕಾರಣವೇನು?
ಬಾಂಗ್ಲಾದೇಶದಲ್ಲಿ ಮುಂದುವರಿದ ಹಿಂಸಾಚಾರ| ಬಿಎನ್ಪಿ ನಾಯಕನ ನಿವಾಸಕ್ಕೆ ಬೆಂಕಿ: 7 ವರ್ಷದ ಪುತ್ರಿ ಸಜೀವ ದಹನ
ಢಾಕಾ: ಶನಿವಾರ ನಸುಕಿನಲ್ಲಿ ಲಕ್ಷ್ಮೀಪುರ್ ಸದರ್ ಉಪಜಿಲ್ಲಾದಲ್ಲಿನ ಬಿಎನ್ಪಿ ನಾಯಕ ಬೆಲಾಲ್ ಉಸೈನ್ ಮನೆಗೆ ಬೆಂಕಿ ಹಚ್ಚಿದ ಪರಿಣಾಮ, ಏಳು ವರ್ಷದ ಬಾಲಕಿಯೊಬ್ಬಳು ಮೃತಪಟ್ಟು, ಇನ್ನೂ ಮೂವರು ಗಂಭೀರವಾಗಿ ಗಾಯಗೊಂಡಿರುವ ಬಗ್ಗೆ ವರದಿಯಾಗಿದೆ. ಬಾಂಗ್ಲಾದೇಶದಲ್ಲಿ ನಡೆದ 2024ರ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಯುವ ನಾಯಕ ಷರೀಫ್ ಉಸ್ಮಾನ್ ಹಾದಿ ಹತ್ಯೆ ಬೆನ್ನಲ್ಲೆ ರಾತ್ರೋರಾತ್ರಿ ಬಾಂಗ್ಲಾದೇಶದ ಹಲವಾರು ನಗರಗಳಲ್ಲಿ ಹಿಂಸಾತ್ಮಕ ಪ್ರತಿಭಟನೆಗಳು ಭುಗಿಲೆದ್ದಿತ್ತು. ಇದರ ಬೆನ್ನಲ್ಲೆ ಘಟನೆ ನಡೆದಿದೆ. ಭಬನಿಗಂಜ್ ಯೂನಿಯನ್ನ ಬಿಎನ್ಪಿ ಪಕ್ಷದ ಸಹಾಯಕ ಸಂಘಟನಾ ಕಾರ್ಯದರ್ಶಿ ಹಾಗೂ ಉದ್ಯಮಿಯಾದ ಬೆಲಾಲ್ ಹೊಸೈನ್ ಅವರ ಚಾರ್ ಮಾನಸಾ ಗ್ರಾಮದಲ್ಲಿನ ನಿವಾಸಕ್ಕೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ ಪರಿಣಾಮ, ಬೆಲಾಲ್ ಅವರ 7 ವರ್ಷದ ಪುತ್ರಿ ಆಯೇಷಾ ಅಖ್ತರ್ ಸಜೀವವಾಗಿ ದಹನಗೊಂಡಿದ್ದಾರೆ ಎಂದು ಲಕ್ಷ್ಮೀಪುರ್ ಸದರ್ ಮಾಡೆಲ್ ಠಾಣೆಯ ಉಸ್ತುವಾರಿ ಅಧಿಕಾರಿ ಮುಹಮ್ಮದ್ ವಾಹಿದ್ ಪರ್ವೇಝ್ ತಿಳಿಸಿದ್ದಾರೆ ಎಂದು The Daily Star ಸುದ್ದಿ ಸಂಸ್ಥೆ ವರದಿ ಮಾಡಿದೆ. ಈ ಘಟನೆಯಲ್ಲಿ ಬೆಲಾಲ್ ಹೊಸೈನ್ ಹಾಗೂ ಅವರ ಇನ್ನಿಬ್ಬರು ಪುತ್ರಿಯರಾದ ಸಲ್ಮಾ ಅಖ್ತರ್ (16) ಹಾಗೂ ಸಾಮಿಯಾ ಅಖ್ತರ್ (14) ಅವರಿಗೆ ಗಂಭೀರ ಸುಟ್ಟಗಾಯಗಳಾಗಿವೆ. ಬೆಲಾಲ್ ಗೆ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಅವರ ಪುತ್ರಿಯರನ್ನು ಹೆಚ್ಚಿನ ಚಿಕಿತ್ಸೆಗಾಗಿ ಢಾಕಾಗೆ ರವಾನಿಸಲಾಗಿದೆ ಎಂದು ಉಸ್ತುವಾರಿ ಅಧಿಕಾರಿ ಮುಹಮ್ಮದ್ ವಾಹಿದ್ ಪರ್ವೇಝ್ ತಿಳಿಸಿದ್ದಾರೆ.
UPPINANGADY | ಜೇನು ಕೃಷಿ ಕಲಿಸುವ ನೆಪದಲ್ಲಿ ಬಾಲಕಿಯ ಅತ್ಯಾಚಾರ: ಆರೋಪಿಯ ಬಂಧನ
ಉಪ್ಪಿನಂಗಡಿ: ಜೇನುಕೃಷಿ ಕಲಿಸುವ ನೆಪದಲ್ಲಿ ವ್ಯಕ್ತಿಯೋರ್ವ ಅಪ್ರಾಪ್ತ ವಯಸ್ಸಿನ ಬಾಲಕಿಯ ಮೇಲೆ ನಿರಂತರ ಅತ್ಯಾಚಾರ ಎಸಗಿರುವ ಘಟನೆ ಉಪ್ಪಿನಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಅಬ್ದುಲ್ ಗಫೂರ್ ಅತ್ಯಾಚಾರ ಆರೋಪಿಯಾಗಿದ್ದು, ಆತನನ್ನು ಬಂಧಿಸಿರುವ ಉಪ್ಪಿನಂಗಡಿ ಪೊಲೀಸರು ಅ. ಕ್ರ 118/2025, ಕಲಂ: 115(2),351(2),65(1) BNS-2023 4, 6 ಪೊಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿ, ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ. ಘಟನೆ ವಿವರ: ಬೆಳಗಾವಿ ಮೂಲದ ಅಪ್ರಾಪ್ತ ವಯಸ್ಸಿನ ಬಾಲಕಿಗೆ ಜೇನುಕೃಷಿ ತರಬೇತಿ ನೀಡುವುದಾಗಿ ಹೇಳಿ ಆರೋಪಿ ಅಬ್ದುಲ್ ಗಫೂರ್ ಹೇಳಿದ್ದ. ಈ ಕಾರಣಕ್ಕೆ ಬಾಲಕಿಯನ್ನು ಪೋಷಕರು ಎರಡು ತಿಂಗಳಿನಿಂದ ಅಬ್ದುಲ್ ಗಫೂರ್ ಮನೆಯಲ್ಲಿ ಬಿಟ್ಟಿದ್ದರು. ಈ ಮಧ್ಯೆ ಬಾಲಕಿಯ ಪೋಷಕರು ಊರಿಗೆ ತೆರಳಿದ್ದರು. ಈ ಅವಧಿಯಲ್ಲಿ ಡಿ.2ರಿಂದ 19ರವರೆಗೆ ಆರೋಪಿ ಬಾಲಕಿಯ ಮೇಲೆ ನಿರಂತರವಾಗಿ ಅತ್ಯಾಚಾರ ಎಸಗಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಮಂಗಳೂರು: ಡಿ.23ರಂದು ಮುಹಿಮ್ಮಾತ್ ಸನದುದಾನ ಸಮ್ಮೇಳನದ ಪ್ರಚಾರ ಉದ್ಘಾಟನೆ
ಮಂಗಳೂರು: ಮುಹಿಮ್ಮಾತುಲ್ ಮುಸ್ಲಿಮೀನ್ ಎಜುಕೇಶನ್ ಸೆಂಟರ್, ಕಾಸರಗೋಡು ಇದರ ಸಂಸ್ಥಾಪಕ ಸೈಯದ್ ತ್ವಾಹಿರುಲ್ ಅಹ್ದಲ್ ತಂಙಳ್ ರ 20ನೇ ಉರೂಸ್ ಮುಬಾರಕ್ ಹಾಗೂ ಮುಹಿಮ್ಮಾತ್ ಸನದುದಾನ ಸಮ್ಮೇಳನ 2026ರ ಜನವರಿ 28ರಿಂದ 31ರ ವರೆಗೆ ನಡೆಯಲಿದೆ. ಇದರ ಪ್ರಚಾರ ಉದ್ಘಾಟನಾ ಸಮಾವೇಶ ಹಾಗೂ ಹಿಮಮೀಸ್ ಸಂಗಮ ಡಿ.23ರಂದು ಬೆಳಗ್ಗೆ 9:30ರಿಂದ ಮಧ್ಯಾಹ್ನ 1:30ರ ತನಕ ಮಂಗಳೂರು ಪಂಪ್ ವೆಲ್ ನ ಇಂಡಿಯಾನ ಆಸ್ಪತ್ರೆ ಹತ್ತಿರ ಯುನಿಕ್ಸ್ ಬಿಲ್ಡಿಂಗ್ ನ ಡಿಕೆಸಿ ಸಭಾಂಗಣದಲ್ಲಿ ಆಯೋಜಿಸಲಾಗಿದೆ. ಸಂಸ್ಥೆಯ ಉಪಾಧ್ಯಕ್ಷ ಸೈಯದ್ ಹಸನುಲ್ ಅಹ್ದಲ್ ತಂಙಳ್ ಹಾಗೂ ಕಾರ್ಯದರ್ಶಿ ಸೈಯದ್ ಮುನೀರುಲ್ ಅಹ್ದಲ್ ತಂಙಳ್ ನಾಯಕತ್ವ ವಹಿಸಲಿದ್ದಾರೆ. ಹಿಮಮೀಸ್ ಕರ್ನಾಟಕ ಅಧ್ಯಕ್ಷ ಸೈಯದ್ ಶರಫುದ್ದೀನ್ ತಂಙಳ್ ಪರೀಧ್ ನಗರ, ಡಾ.ಎಮ್ಮೆಸ್ಸೆಂ ಝೈನಿ ಕಾಮಿಲ್, ಮುಸ್ಲಿಮ್ ಜಮಾಅತ್ ಪ್ರಧಾನ ಕಾರ್ಯದರ್ಶಿ ತೋಕೆ ಕಾಮಿಲ್ ಸಖಾಫಿ, ಎಸ್ ವೈಎಸ್ ಪ್ರಧಾನ ಕಾರ್ಯದರ್ಶಿ ಕೆ.ಎಂ. ಸಿದ್ದೀಕ್ ಮೋಂಟುಗೋಳಿ, ಕೆಸಿಎಫ್ ಅಂತಾರಾಷ್ಟ್ರೀಯ ಸಮಿತಿಯ ಪ್ರ ಕಾರ್ಯದರ್ಶಿ ಇಕ್ಬಾಲ್ ಬರಕ ಒಮಾನ್, ಎಸ್.ಎಂ.ಎ. ಪ್ರಧಾನ ಕಾರ್ಯದರ್ಶಿ ಜೆಪ್ಪು ಮದನಿ, ಎಸ್.ಜೆ.ಎಂ. ಪ್ರ. ಕಾರ್ಯದರ್ಶಿ ಮುಹಮ್ಮದ್ ಮದನಿ, ಎಸ್ಸೆಸ್ಸೆಫ್ ಪ್ರಧಾನ ಕಾರ್ಯದರ್ಶಿ ಅಲಿ ತುರ್ಕಳಿಕೆ, ಕರ್ನಾಟಕ ಯೋಜನಾ ಸಮಿತಿಯ ಅಧ್ಯಕ್ಷ ಎಂಪಿಎಂ ಅಶ್ರಫ್ ಸಅದಿ, ಕೆಕೆಎಂ ಕಾಮಿಲ್ ಸಖಾಫಿ, ಕೋಶಾಧಿಕಾರಿ ಬದ್ರುದ್ದೀನ್ ಹಾಜಿ ಬಜ್ಪೆ, ಉಪಾಧ್ಯಕ್ಷ ಇಸ್ಹಾಕ್ ಹಾಜಿ ಬೊಳ್ಳಾಯಿ ಸಮೇತ ಹಲವಾರು ಗಣ್ಯರು ಭಾಗವಹಿಸಲಿದ್ದಾರೆ ಎಂದು ಮುಹಿಮ್ಮಾತ್ ಕರ್ನಾಟಕ ಯೋಜನಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಅಶ್ರಫ್ ಕಿನಾರ ಮಂಗಳೂರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
KUNDAPURA | ಕೋಟೇಶ್ವರದಲ್ಲಿ ತ್ಯಾಜ್ಯ ಸಂಸ್ಕರಣಾ ಘಟಕದಲ್ಲಿ ಅಗ್ನಿ ಅವಘಡ
ಕುಂದಾಪುರ: ಕೋಟೇಶ್ವರ ಪಂಚಾಯತ್ ಗೆ ಸೇರಿದ ಎಸ್.ಎಲ್.ಆರ್.ಎಂ. ಒಣ ತ್ಯಾಜ್ಯ ಸಂಸ್ಕರಣಾ ಘಟಕಕ್ಕೆ ಆಕಸ್ಮಿಕ ಬೆಂಕಿ ತಗಲಿ ಲಕ್ಷಾಂತರ ರೂ. ಮೌಲ್ಯದ ಸೊತ್ತುಗಳು ಹಾನಿಯಾದ ಘಟನೆ ರವಿವಾರ ನಸುಕಿನ ವೇಳೆ ಕೋಟೇಶ್ವರದಲ್ಲಿ ನಡೆದಿದೆ. ಗ್ರಾಮ ಪಂಚಾಯತ್ ಹಿಂಬದಿಯಲ್ಲಿ (ಹಳೆ ಗ್ರಾಪಂ ಕಟ್ಟಡ) ಕಳೆದ ನಾಲ್ಕೈದು ವರ್ಷಗಳಿಂದ ಎಸ್.ಎಲ್.ಆರ್.ಎಂ. ಘಟಕ ಕಾರ್ಯಾಚರಿಸುತ್ತಿದ್ದು ಇದರ ಕೆಳಭಾಗ, ಆಸುಪಾಸಿನಲ್ಲಿ ವಾಣಿಜ್ಯ ಕಟ್ಟಡಗಳಿವೆ. ಮೇಲ್ಭಾಗದಲ್ಲಿ ಒಣತ್ಯಾಜ್ಯ ಘಟಕವಿದ್ದು, ಅಲ್ಲಿ ಶೇಖರಿಸಿಟ್ಟಿದ್ದ ಒಣ ತ್ಯಾಜ್ಯಕ್ಕೆ ಆಕಸ್ಮಿಕ ಬೆಂಕಿ ತಗುಲಿ ಒಣ ತ್ಯಾಜ್ಯಗಳು, ಯಂತ್ರೋಪಕರಣ, ತಗಡಿನ ಶೀಟುಗಳು ಬೆಂಕಿಗಾಹುತಿಯಾಗಿವೆ. ವಾಣಿಜ್ಯ ಸಂಕಿರ್ಣದ ಕಟ್ಟಡದಲ್ಲಿದ್ದ ತರಕಾರಿ ಅಂಗಡಿ ಸಹಿತ ಒಂದಷ್ಟು ಅಂಗಡಿಗಳ ಸಾಮಗ್ರಿಗಳಿಗೆ ಹಾನಿಯಾಗಿವೆ. ಬೆಳಗ್ಗೆ ಅಯ್ಯಪ್ಪ ವ್ರತಧಾರಿಗಳು ಬೆಂಕಿ ಕಂಡು ಸಂಬಂಧಪಟ್ಟವರಿಗೆ ಮಾಹಿತಿ ನೀಡಿದ್ದು, ಅಗ್ನಿಶಾಮಕಕ್ಕೆ ಫೋನಾಯಿಸಿದ್ದಾರೆ. ತಕ್ಷಣ ಸ್ಥಳಕ್ಕಾಗಮಿಸಿ ಕುಂದಾಪುರ ಹಾಗೂ ಬೈಂದೂರು ಅಗ್ನಿಶಾಮಕ ದಳದವರು ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆಲಮಟ್ಟಿ-ಯಾದಗಿರಿ ರೈಲು ಮಾರ್ಗ ಸಮೀಕ್ಷೆಗೆ ಅಸ್ತು ; ಹೋರಾಟಗಾರರಲ್ಲಿ ಹರ್ಷ
ಆಲಮಟ್ಟಿ-ಯಾದಗಿರಿ ರೈಲು ಮಾರ್ಗದ ಕನಸು ನನಸಾಗುವ ಹಂತದಲ್ಲಿದೆ. ಬಹುದಶಕಗಳ ಬೇಡಿಕೆಯಾಗಿದ್ದ ಈ ಮಾರ್ಗದ ಅಂತಿಮ ಸ್ಥಳ ಸಮೀಕ್ಷೆಗೆ ರೈಲ್ವೆ ಇಲಾಖೆ ಟೆಂಡರ್ ಕರೆದಿದೆ. ಇದರಿಂದಾಗಿ 162 ಕಿಲೋಮೀಟರ್ ದೂರದ ರೈಲು ಮಾರ್ಗ ನಿರ್ಮಾಣಕ್ಕೆ ಅನುಕೂಲವಾಗಲಿದೆ. ಈ ಮಾರ್ಗ ನಿರ್ಮಾಣದಿಂದ ಪ್ರಯಾಣಿಕರ ಸಮಯ ಮತ್ತು ಹಣ ಉಳಿತಾಯವಾಗಲಿದೆ. ಕೃಷಿ ಮತ್ತು ವಾಣಿಜ್ಯಕ್ಕೂ ಇದು ಹೆಚ್ಚಿನ ಪ್ರಯೋಜನ ನೀಡಲಿದೆ.
ಈ 5 ರೀತಿಯ ಮಹಿಳೆಯರಿಗೆ ಗೃಹಲಕ್ಷ್ಮೀ ಹಣ ಸಿಗೋದಿಲ್ಲ – ನಿಮ್ಮ ಹೆಸರು ಲಿಸ್ಟ್ನಲ್ಲಿದೆಯಾ?
ರಾಜ್ಯದ ಮಹಿಳೆಯರ ಆರ್ಥಿಕ ಸಬಲೀಕರಣಕ್ಕಾಗಿ ಜಾರಿಗೆ ತಂದಿರುವ ಗೃಹಲಕ್ಷ್ಮಿ ಯೋಜನೆಯು (Gruha Lakshmi Scheme) ಯಶಸ್ವಿಯಾಗಿ ಮುಂದುವರಿಯುತ್ತಿದೆ. ಪ್ರತಿ ತಿಂಗಳು ಕೋಟ್ಯಂತರ ಮಹಿಳೆಯರ ಖಾತೆಗೆ ₹2,000 ಜಮಾ ಆಗುತ್ತಿದೆ. ಆದರೆ, ಇತ್ತೀಚಿನ ದಿನಗಳಲ್ಲಿ ಅನೇಕರಿಗೆ ಹಣ ಬರುವುದು ನಿಂತುಹೋಗಿದೆ ಅಥವಾ ಅರ್ಜಿ ಸಲ್ಲಿಸಿದರೂ ಹಣ ಮಂಜೂರಾಗಿಲ್ಲ ಎಂಬ ದೂರುಗಳು ಕೇಳಿಬರುತ್ತಿವೆ. ಸರ್ಕಾರವು ನಿಯಮಿತವಾಗಿ ಫಲಾನುಭವಿಗಳ ಪಟ್ಟಿಯನ್ನು ಪರಿಶೀಲನೆ ನಡೆಸುತ್ತಿದ್ದು, ಅನರ್ಹರ ಹೆಸರನ್ನು ಕೈಬಿಡುತ್ತಿದೆ. ಮುಖ್ಯವಾಗಿ ಇತ್ತೀಚೆಗೆ ನಡೆದ ದತ್ತಾಂಶ ಪರಿಶೀಲನೆ (Data Verification) ಮತ್ತು ಆಧಾರ್ ಜೋಡಣೆ ... Read more The post ಈ 5 ರೀತಿಯ ಮಹಿಳೆಯರಿಗೆ ಗೃಹಲಕ್ಷ್ಮೀ ಹಣ ಸಿಗೋದಿಲ್ಲ – ನಿಮ್ಮ ಹೆಸರು ಲಿಸ್ಟ್ನಲ್ಲಿದೆಯಾ? appeared first on Karnataka Times .
ಚೆನ್ನೈ: ಪ್ರವಾದಿ ಮುಹಮ್ಮದ್ ಅವರ ಪ್ರಸಿದ್ಧ ಬೋಧನೆ ‘ಕಾರ್ಮಿಕನ ಬೆವರು ಆರುವ ಮೊದಲು ವೇತನ ಕೊಟ್ಟುಬಿಡಿ’ ಮಾತನ್ನು ಉಲ್ಲೇಖಿಸಿ, ಮದ್ರಾಸ್ ಹೈಕೋರ್ಟ್ ಪಾವತಿಸದೇ ಉಳಿದಿರುವ ವಕೀಲರ ಕಾನೂನು ಶುಲ್ಕವನ್ನು ತಕ್ಷಣ ಇತ್ಯರ್ಥಪಡಿಸುವಂತೆ ಪುರಸಭೆಗೆ ನಿರ್ದೇಶನ ನೀಡಿದೆ. ಕಾರ್ಮಿಕ ಮತ್ತು ಸೇವಾ ನ್ಯಾಯಶಾಸ್ತ್ರಕ್ಕೆ ನ್ಯಾಯಯುತ ತತ್ವ ಸಮಾನವಾಗಿ ಅನ್ವಯಿಸಬೇಕು ಎಂದು ಉಲ್ಲೇಖಿಸಿದ ನ್ಯಾಯಮೂರ್ತಿ ಜಿ.ಆರ್. ಸ್ವಾಮಿನಾಥನ್, ಈ ತತ್ವವು ನ್ಯಾಯಯುತ ಆಡಳಿತದ ಮೂಲಭೂತ ಅಂಶವಾಗಿದೆ ಎಂದು ಹೇಳಿದರು. ಕಾರ್ಪೊರೇಷನ್ ನ ಪ್ರಕರಣಗಳಲ್ಲಿ ನ್ಯಾಯಾಲಯಗಳಲ್ಲಿ ಪ್ರತಿನಿಧಿಸಿದ್ದ ವಕೀಲ ಪಿ.ತಿರುಮಲೈ ಅವರು ತಮ್ಮ ಬಾಕಿ ಶುಲ್ಕವಾದ 13.05 ಲಕ್ಷ ರೂಪಾಯಿ ಪಾವತಿಸದಿರುವುದನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ವಿಚಾರಣೆ ನಡೆಸಿತು. ಈ ಹಿಂದೆ ವಕೀಲರ ಪ್ರಾತಿನಿಧ್ಯವನ್ನು ಪರಿಗಣಿಸುವಂತೆ ಹೈಕೋರ್ಟ್ ನಿಗಮಕ್ಕೆ ಸೂಚಿಸಿದ್ದರೂ, ಹಕ್ಕಿನ ಪ್ರಮುಖ ಭಾಗವನ್ನು ತಿರಸ್ಕರಿಸಿದ ಆದೇಶ ಹೊರಡಿಸಲಾಗಿತ್ತು. ಇದನ್ನೇ ಪ್ರಶ್ನಿಸಿ ಪ್ರಸ್ತುತ ಅರ್ಜಿ ಸಲ್ಲಿಸಲಾಗಿತ್ತು. ಈ ಹಿನ್ನೆಲೆಯಲ್ಲಿ, ಅರ್ಜಿದಾರರು ಹಾಜರಿದ್ದ ಪ್ರಕರಣಗಳ ವಿವರಗಳನ್ನು ಸಂಗ್ರಹಿಸುವ ಉದ್ದೇಶದಿಂದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರವನ್ನು ಸಂಪರ್ಕಿಸಲು ನ್ಯಾಯಾಲಯ ಅವಕಾಶ ನೀಡಿತು. ಶುಲ್ಕ ಪಾವತಿಯಲ್ಲಿ 18 ವರ್ಷಗಳ ಕಾಲ ಈಗಾಗಲೇ ವಿಳಂಬವಾಗಿದೆ ಎಂದು ಗಮನಿಸಿದ ನ್ಯಾಯಾಲಯ, ಬಡ್ಡಿ ಇಲ್ಲದೆ ಎರಡು ತಿಂಗಳೊಳಗೆ ಬಾಕಿ ಬಿಲ್ ಗಳನ್ನು ಇತ್ಯರ್ಥಪಡಿಸುವಂತೆ ನಿಗಮಕ್ಕೆ ನಿರ್ದೇಶನ ನೀಡಿತು. ಶುಲ್ಕ ಬಿಲ್ ಸಲ್ಲಿಕೆ ಕ್ರಮಬದ್ಧವಾಗಿರದ ಸಂದರ್ಭಗಳಲ್ಲಿ ಪಾವತಿ ವಿಳಂಬಕ್ಕೆ ನಿಗಮವನ್ನು ಸಂಪೂರ್ಣವಾಗಿ ದೂಷಿಸಲಾಗುವುದಿಲ್ಲ ಎಂಬ ಅಭಿಪ್ರಾಯವನ್ನೂ ವ್ಯಕ್ತಪಡಿಸಿತು. ರಾಜ್ಯದಲ್ಲಿ ಒಂದು ಡಝನ್ಗೂ ಹೆಚ್ಚು ಹೆಚ್ಚುವರಿ ಅಡ್ವೊಕೇಟ್ ಜನರಲ್ಗಳ ನೇಮಕವನ್ನು ನ್ಯಾಯಮೂರ್ತಿ ಸ್ವಾಮಿನಾಥನ್ “ಮುಜುಗರದ ವಿಷಯ” ಎಂದು ಬಣ್ಣಿಸಿದರು. ಅನೇಕ ಕಾನೂನು ಅಧಿಕಾರಿಗಳನ್ನು ನೇಮಿಸಿದರೆ, ಪ್ರತಿಯೊಬ್ಬರಿಗೂ ಸೂಕ್ತ ಕೆಲಸ ಒದಗಿಸುವ ಅಗತ್ಯವಿದ್ದು, ಇಲ್ಲದಿದ್ದರೆ ಅನಗತ್ಯವಾಗಿ ಪ್ರಕರಣಗಳನ್ನು ಹಂಚಬೇಕಾದ ಪರಿಸ್ಥಿತಿ ಉಂಟಾಗುತ್ತದೆ ಎಂದು ಹೇಳಿದರು. ಪ್ರಕರಣಗಳು ವಿಚಾರಣೆಗೆ ಬಂದಾಗ ಹೆಚ್ಚುವರಿ ಅಡ್ವೊಕೇಟ್ ಜನರಲ್ ಗಳು ಬೇರೆಡೆ ತೊಡಗಿಸಿಕೊಂಡಿರುವ ಕಾರಣ ಸರಕಾರಿ ವಕೀಲರು ವಿಚಾರಣೆಯನ್ನು ಮುಂದೂಡಲು ಅಥವಾ ಪಾಸ್ ಓವರ್ ಕೇಳುವ ಪದ್ಧತಿಯನ್ನು ಅವರು ಟೀಕಿಸಿದರು. “ಕನಿಷ್ಠ ಪಕ್ಷ ಮದ್ರಾಸ್ ಹೈಕೋರ್ಟ್ ನ ಮಧುರೈ ಪೀಠದಲ್ಲಿ 2026ರಿಂದ ಈ ಪ್ರವೃತ್ತಿ ನಿಲ್ಲಲಿದೆ ಎಂಬ ನಿರೀಕ್ಷೆಯಿದೆ” ಎಂದು ಹೇಳಿದರು. ಹಿರಿಯ ವಕೀಲರು ಹಾಗೂ ಕೆಲವು ಕಾನೂನು ಅಧಿಕಾರಿಗಳಿಗೆ ಪಾವತಿಸಲಾಗುತ್ತಿರುವ ಶುಲ್ಕದ ಪ್ರಮಾಣವನ್ನು ಪ್ರಶ್ನಿಸಿದ ನ್ಯಾಯಾಲಯ, ಉತ್ತಮ ಆಡಳಿತವು ಸಾರ್ವಜನಿಕ ಹಣವನ್ನು ಸಮಚಿತ್ತವಾಗಿ ಬಳಸಬೇಕು, ಕೆಲವರಿಗೆ ಮಾತ್ರ ಅಸಮಂಜಸವಾಗಿ ವಿತರಿಸಬಾರದು ಎಂದು ಸ್ಪಷ್ಟಪಡಿಸಿತು. ತಿರುಮಲೈ ಅವರ ಒಟ್ಟು ಕೇಳಿರುವ ಹಕ್ಕು ಅವರು ಹಾಜರಿದ್ದ ಪ್ರಕರಣಗಳ ಸಂಖ್ಯೆಗೆ ಹೋಲಿಸಿದರೆ ಅಲ್ಪ ಮೊತ್ತವಾಗಿದೆ ಎಂದು ಹೇಳಿದ ನ್ಯಾಯಾಲಯ, ಸರಕಾರ ಹಾಗೂ ಸ್ಥಳೀಯ ಸಂಸ್ಥೆಗಳು ಕೆಲವು ಹಿರಿಯ ವಕೀಲರಿಗೆ ಪಾವತಿಸಿರುವ “ಅಗಾಧವಾಗಿ ಹೆಚ್ಚಿನ ಮೊತ್ತ”ಗಳ ಬಗ್ಗೆ ಗಂಭೀರ ಕಳವಳ ವ್ಯಕ್ತಪಡಿಸಿತು. 1992ರಿಂದ 2006ರವರೆಗೆ 14 ವರ್ಷಗಳ ಕಾಲ ತಿರುಮಲೈ ಅವರು ಮಧುರೈ ನಗರ ಮುನ್ಸಿಪಲ್ ಕಾರ್ಪೊರೇಷನ್ ಪರವಾಗಿ ಸ್ಥಾಯಿ ವಕೀಲರಾಗಿದ್ದು, ಮಧುರೈ ಜಿಲ್ಲಾ ನ್ಯಾಯಾಲಯಗಳಲ್ಲಿ ಸುಮಾರು 818 ಪ್ರಕರಣಗಳಲ್ಲಿ ನಿಗಮವನ್ನು ಪ್ರತಿನಿಧಿಸಿದ್ದರು ಎಂದು ದಾಖಲೆಗಳು ಸೂಚಿಸುತ್ತವೆ. ಆ ಎಲ್ಲಾ ಪ್ರಕರಣಗಳ ಪ್ರಮಾಣೀಕೃತ ಪ್ರತಿಗಳನ್ನು ಪಡೆಯಲು ಅರ್ಜಿದಾರರಿಗೆ ಸಾಧ್ಯವಾಗದ ಹಿನ್ನೆಲೆಯಲ್ಲಿ, 818 ತೀರ್ಪುಗಳ ಪ್ರಮಾಣೀಕೃತ ಪ್ರತಿಗಳನ್ನು ಎರಡು ತಿಂಗಳೊಳಗೆ ಸಂಗ್ರಹಿಸುವಂತೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ನ್ಯಾಯಾಲಯ ನಿರ್ದೇಶನ ನೀಡಿತು. ಈ ಪ್ರಕ್ರಿಯೆಗೆ ಆಗುವ ವೆಚ್ಚವನ್ನು ಮೊದಲು ನಿಗಮವೇ ಭರಿಸಿ, ಅಂತಿಮ ಇತ್ಯರ್ಥದ ವೇಳೆ ಆ ಮೊತ್ತವನ್ನು ಕಡಿತಗೊಳಿಸಬೇಕೆಂದು ನ್ಯಾಯಾಲಯ ಸ್ಪಷ್ಟ ಸೂಚನೆ ನೀಡಿದೆ.
ಡಿಸೆಂಬರ್ 21ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ
Petrol, Diesel Price: ಪೆಟ್ರೋಲ್, ಡೀಸೆಲ್ ದರದಲ್ಲಿ ಜಾಸ್ತಿ ಅಲ್ಲದಿದ್ದರೂ, ಸ್ವಲ್ಪ ಪ್ರಮಾಣದಲ್ಲಾದ್ರೂ ಏರಿಳಿತ ಆಗುತ್ತಿರುತ್ತದೆ. ಹಾಗಾದರೆ, ಇಂದು (ಡಿಸೆಂಬರ್ 21) ಬೆಂಗಳೂರು ಸೇರಿದಂತೆ ರಾಜ್ಯದ ಉಳಿದ ಜಿಲ್ಲೆಗಳಲ್ಲಿ ಲೀಟರ್ ಪೆಟ್ರೋಲ್, ಡೀಸೆಲ್ ಬೆಲೆ ಎಷ್ಟಿದೆ ಎನ್ನುವ ಅಂಕಿಅಂಶಗಳನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ. ಶಕ್ತಿಯ ಮೂಲಗಳು ಎನಿಸಿಕೊಂಡಿರುವ ಪೆಟ್ರೋಲ್ ಮತ್ತು ಡೀಸೆಲ್ ಇಂಧನ ಅತ್ಯವಶ್ಯಕವಾಗಿ ಬೇಕಾಗುವ ಸಂಪನ್ಮೂಲಗಳಾಗಿವೆ.
Maharashtra Local Body Election Result: ಮೂರು ಸ್ಥಾನಗಳಲ್ಲಿ ಬಿಜೆಪಿ ಅವಿರೋಧ ಆಯ್ಕೆ
ಮುಂಬೈ: ಮಹಾರಾಷ್ಟ್ರ ಸ್ಥಳೀಯ ಸಂಸ್ಥೆಗಳ ಚುನಾವಣಾ ಮತ ಎಣಿಕೆ ಪ್ರಾರಂಭಗೊಂಡಿದೆ. ಮಧ್ಯಾಹ್ನದ ವೇಳೆ 286 ಪುರಸಭೆಗಳು ಮತ್ತು ನಗರ ಪಂಚಾಯತ್ಗಳಲ್ಲಿ ಆಡಳಿತ ಚುಕ್ಕಾಣಿ ಯಾರ ಪಾಲಾಗಲಿದೆ ಎಂಬ ಬಗ್ಗೆ ಚಿತ್ರಣ ಲಭ್ಯವಾಗಲಿದೆ. ಇತ್ತೀಚಿನ ವರದಿಗಳ ಪ್ರಕಾರ, ಆಡಳಿತಾರೂಢ ಬಿಜೆಪಿ ಮೂರು ಸ್ಥಾನಗಳಲ್ಲಿ ಅವಿರೋಧವಾಗಿ ಆಯ್ಕೆಯಾಗಿದೆ. ಆರಂಭಿಕ ಟ್ರೆಂಡ್ ಗಳಲ್ಲಿ ವಿವಿಧ ಪ್ರಮುಖ ಪಕ್ಷಗಳಿಗೆ ಮಿಶ್ರ ಫಲಿತಾಂಶ ಬಂದಿದ್ದು, ನಾಗಪುರ ಜಿಲ್ಲೆಯಲ್ಲಿ ವನಡೋಂಗರಿ ನಗರ ಸಭೆಯಲ್ಲಿ ಬಿಜೆಪಿ ಗೆಲುವು ಸಾಧಿಸಿದೆ. ಕಾಮಾಠಿ ಸ್ಥಾನದಲ್ಲಿ ಮುನ್ನಡೆ ಸಾಧಿಸಿದೆ. ಇನ್ನು ಏಟ್ ಹಾಗೂ ರಾಮ್ ಟೆಕ್ ನಗರ ಸಭೆಗಳಲ್ಲಿ ಶಿವಸೇನೆ ಮುನ್ನಡೆಯಲ್ಲಿದೆ. ಎಣಿಕೆ ಆರಂಭವಾಗುತ್ತಿದ್ದಂತೆ ಮಹಾಯುತಿ ಮತ್ತು ಮಹಾ ವಿಕಾಸ್ ಅಘಾಡಿ (ಎಂವಿಎ) ನಡುವೆ ಪೈಪೋಟಿ ಕಂಡು ಬಂದಿದೆ.
Bangladesh Lynching: ಬಾಂಗ್ಲಾದೇಶ ಹಿಂದೂ ವ್ಯಕ್ತಿ ಹತ್ಯೆ ಪ್ರಕರಣ: \ನಾವು ಎಚ್ಚರಿಕೆಯಿಂದ ವರ್ತಿಸಬೇಕು\
ಬಾಂಗ್ಲಾದೇಶದಲ್ಲಿ ಹಿಂಸಾತ್ಮಕ ಪ್ರತಿಭಟನೆ ಮತ್ತೆ ಶುರುವಾಗಿದೆ. ಕಳೆದ ಕೆಲವು ತಿಂಗಳುಗಳಿಂದ ಬಾಂಗ್ಲಾದೇಶದಲ್ಲಿ ತುಸು ಶಾಂತವಾಗಿತ್ತು. ಇದೀಗ ಬಾಂಗ್ಲಾದೇಶದಲ್ಲಿ ಮತ್ತೆ ತೀವ್ರ ಸ್ವರೂಪದ ಪ್ರತಿಭಟನೆಗಳು ಶುರುವಾಗಿದೆ. ಭಾರತೀಯ ಹಿಂದೂಗಳು ಎಚ್ಚರಗೊಳ್ಳದಿದ್ದರೆ, ಬಾಂಗ್ಲಾದೇಶದಲ್ಲಿ ಹಿಂದೂಗಳ ವಿರುದ್ಧದ ಕ್ರೌರ್ಯವನ್ನು ಕಡೆಗಣಿಸಿದರೆ, ಅಪಾಯ ನಾಳೆ ನಮ್ಮ ಮನೆ ಬಾಗಿಲಿಗೇ ಬರಲಿದೆ. ಬಾಂಗ್ಲಾದೇಶದಲ್ಲಿ ದೀಪು ಚಂದ್ರ ದಾಸ್ ಎಂಬ ವ್ಯಕ್ತಿಯನ್ನು ಹಿಂದು ಎಂಬ ಒಂದೇ
ʻಕಣ್ಮುಂದೆಯೇ ನನ್ನ ಸಾವು ಕಂಡಂತಾಯ್ತುʼ; ಮುಂಬೈನಲ್ಲಿ ನೋರಾ ಫತೇಹಿ ಕಾರಿಗೆ ಭೀಕರ ಅಪಘಾತ!
ಬಾಲಿವುಡ್ನ ಖ್ಯಾತ ನಟಿ ನೋರಾ ಫತೇಹಿ ಅವರ ಕಾರಿಗೆ ಶನಿವಾರ ಮಧ್ಯಾಹ್ನ ಮುಂಬೈನಲ್ಲಿ ಅಪಘಾತಕ್ಕೆ ಒಳಗಾಗಿದೆ. ಸನ್ಬರ್ನ್ ಫೆಸ್ಟಿವಲ್ನಲ್ಲಿ ಪ್ರದರ್ಶನ ನೀಡಲು ತೆರಳುತ್ತಿದ್ದಾಗ ಈ ಘಟನೆ ನಡೆದಿದೆ. ಕುಡುಕ ಚಾಲಕನೊಬ್ಬ ವೇಗವಾಗಿ ಕಾರು ಚಲಾಯಿಸಿ ಅವರ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ, ನೋರಾ ಅವರ ತಲೆಗೆ ಪೆಟ್ಟು ಬಿದ್ದಿದ್ದು, ಸದ್ಯ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎನ್ನಲಾಗಿದೆ.
ದಿಲ್ಲಿಯಲ್ಲಿ ವಾಯು ಗುಣಮಟ್ಟ ‘ಅತಿ ಕಳಪೆ’ ಮಟ್ಟಕ್ಕೆ ಇಳಿಕೆ
ಹೊಸ ದಿಲ್ಲಿ: ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ ರವಿವಾರ ಬೆಳಿಗ್ಗೆ ದಟ್ಟ ವಿಷಪೂರಿತ ಮಂಜು ಆವರಿಸಿದ್ದು, ವಾಯು ಗುಣಮಟ್ಟ ಸೂಚ್ಯಂಕ 438ಕ್ಕೆ ಕುಸಿದಿದೆ. ರವಿವಾರ ಬೆಳಗ್ಗೆ 7 ಗಂಟೆ ವೇಳೆ ಒಟ್ಟಾರೆ ವಾಯು ಗುಣಮಟ್ಟ ಸೂಚ್ಯಂಕ 390 ದಾಖಲಾಗಿದ್ದು, ಇದು ಅತ್ಯಂತ ಕಳಪೆ ಪ್ರವರ್ಗಕ್ಕೆ ಸೇರಿದೆ ಎಂದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಹೇಳಿದೆ. ಆದರೆ, ನಗರದ ಇನ್ನೂ ಕೆಲವು ಭಾಗಗಳಲ್ಲಿ ವಾಯು ಗುಣಮಟ್ಟ ಮತ್ತಷ್ಟು ಹದಗೆಟ್ಟಿದೆ. ದಿಲ್ಲಿಯ ವಿವಿಧ ಭಾಗಗಳಲ್ಲಿ ದಟ್ಟ ಮಂಜು ಆವರಿಸಿದೆ. ಮಾಲಿನ್ಯದ ಮಟ್ಟ ಅಪಾಯಕಾರಿಯಾಗಿ ಮುಂದುವರಿದಿದೆ. ಅಕ್ಷರಧಾಮ ಪ್ರದೇಶದಲ್ಲಿ ವಾಯು ಗುಣಮಟ್ಟ ಸೂಚ್ಯಂಕ 438ಕ್ಕೆ ಇಳಿಕೆಯಾಗಿದ್ದು, ಇದನ್ನು ಗಂಭೀರ ಪ್ರವರ್ಗವೆಂದು ಪರಿಗಣಿಸಲಾಗಿದೆ. ಇದೇ ರೀತಿಯ ಪರಿಸ್ಥಿತಿ ಘಾಝಿಪುರ್ ಪ್ರದೇಶದಲ್ಲೂ ಕಂಡು ಬಂದಿದೆ. ಅಲ್ಲಿ ವಾಯು ಗುಣಮಟ್ಟ ಸೂಚ್ಯಂಕ 438 ದಾಖಲಾಗಿದೆ ಎಂದು ಕೇಂದ್ರ ವಾಯು ಮಾಲಿನ್ಯ ನಿಯಂತ್ರಣ ಮಂಡಳಿ ತಿಳಿಸಿದೆ.
ಉರ್ದು ಪ್ರಭಾವದ ನಡುವೆ ಕನ್ನಡ ಕಟ್ಟಿದ ಗಝಲ್ ಕವಿ ಶಾಂತರಸ: ಅಮರೇಶ ನುಗಡೋಣಿ
ಕಲಬುರಗಿ | 'ಶಾಂತರಸರ ಸಾಹಿತ್ಯ ಲೋಕ' ಕಾರ್ಯಾಗಾರ
ಬೀದರ್ ಜಿಲ್ಲೆಯ ʼಬಿದ್ರಿ ಕಲೆʼ ಜಗತ್ತಿನಲ್ಲಿಯೇ ಪ್ರಸಿದ್ಧ
ʼಮನಸ್ಸಿನ ನೆಮ್ಮದಿಗಾಗಿ ಕರಕುಶಲ ಕಲೆ ಅಗತ್ಯʼ ಇಂದಿನ ದಿನಗಳಲ್ಲಿ ಹೆಚ್ಚಿನ ಜನರು ಹೆಚ್ಚು ಹಣ ಸಂಪಾದಿಸುವ ಉದ್ದೇಶದಿಂದ ಪಟ್ಟಣಗಳಿಗೆ ಹೋಗುತ್ತಿದ್ದು, ಪ್ರತಿಕೂಲ ಪರಿಸ್ಥಿತಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಆದರೆ ಅವರ ಮನಸಿಗೆ ನೆಮ್ಮದಿ ಎನ್ನುವುದೇ ಇರುವುದಿಲ್ಲ. ಬರೀ ಹಣ ಗಳಿಸುವ ಗುಂಗಿನಲ್ಲಿಯೇ ಕಾಲ ಕಳೆಯುತ್ತಿದ್ದಾರೆ. ಆದರೆ ಸಾಧ್ಯವಾದವರು ಬಿಡುವು ಸಿಕ್ಕಾಗ ಬಿದ್ರಿಯಂತಹ ಕರಕುಶಲ ಕಲೆಗಳ ಕಡೆಗೆ ಗಮನ ಹರಿಸಬೇಕು. ಇದರಿಂದ ಮನಸ್ಸಿಗೆ ಸಂತೋಷ ಸಿಗುತ್ತದೆ. ಬೀದರ್ ಜಿಲ್ಲೆಯ ಬಿದ್ರಿ ಕಲೆಯು ಜಗತ್ಪ್ರಸಿದ್ಧವಾಗಿದ್ದು, ಇದು ಸುಮಾರು 600 ವರ್ಷಗಳ ಇತಿಹಾಸ ಹೊಂದಿದೆ. ಅದು ಕರ್ನಾಟಕದ ತುತ್ತ ತುದಿಯಲ್ಲಿರುವ ಬೀದರ್ ಜಿಲ್ಲೆಯ ಇತಿಹಾಸವಾಗಿದೆ. ಬಿದ್ರಿ ಕಲೆಯು ಸಂಸ್ಕೃತಿ ಹಾಗೂ ಅನನ್ಯ ಕಲಾತ್ಮಕ ಪರಂಪರೆಯ ಸಂಕೇತವಾಗಿದ್ದು, ಅದರಲ್ಲೂ ದೇಶ-ವಿದೇಶಗಳಲ್ಲಿ ಪ್ರಸಿದ್ಧಿ ಪಡೆದಿದೆ. ಬಿದ್ರಿ ಕಲಾಕೃತಿ ಮೇಲಿನ ಬೆಳ್ಳಿ ಚಿತ್ರಗಳು ಈ ಕಲೆಗೆ ವಿಶಿಷ್ಟ ಸೊಬಗು ನೀಡುತ್ತದೆ. ಭಾರತೀಯ ಹಸ್ತಕಲೆಗಳಲ್ಲಿ ಬಿದ್ರಿ ಕಲೆ ತನ್ನದೇ ಆದ ಸ್ಥಾನ ಪಡೆದಿದೆ. ಬಿದ್ರಿ ಕಲೆಯ ಇತಿಹಾಸವನ್ನು ಕೆದಕಿದಾಗ ಇದು ಶಿಲಾಯುಗದಿಂದ ಬಂದಿರುವುದನ್ನು ಕಾಣಬಹುದು. ಅಲ್ಲಿ ಮಣ್ಣಿನ ಮಡಿಕೆಗಳ ಮೇಲೆ ಚಿತ್ತಾರಗಳನ್ನು ಬಿಡಿಸಿರುವದು ಕಂಡು ಬರುತ್ತದೆ. ಅನಂತರ 12ನೇ ಶತಮಾನದಲ್ಲಿ ಕಲ್ಯಾಣದ ಕಳಚೂರರ ಕಾಲದಲ್ಲಿ ಈ ಕಲೆಗೆ ರಾಜಾಶ್ರಯ ದೊರೆತು, ವಿವಿಧ ಪರಿಕರಗಳ ಮೇಲೆ ಲೋಹದ ವಸ್ತುಗಳ ಮೇಲೆ ಎಳೆ ಎಳೆಯಾಗಿ ಕುಸುರಿಗಳನ್ನು ಜೋಡಿಸುವ ಮೂಲಕ ಅಭಿವೃದ್ಧಿ ಹೊಂದಿರುವುದನ್ನು ನಾವು ಗಮನಿಸಬಹುದು. ಅನಂತರದಲ್ಲಿ ದಕ್ಷಿಣ ಬಹಮನಿ ವಂಶದೊಂದಿಗೆ ಬಿದ್ರಿ ಕಲೆ ಸಂಬಂಧವಿರುವುದು ಕಂಡು ಬರುತ್ತದೆ. ಬಹಮನಿ ಸಾಮ್ರಾಜ್ಯದ ಸ್ಥಾಪಕ ಹಸನ್ ಗಂಗೂ ಬಹಮನಿಯಾಗಿದ್ದು, ಬಹುಮನಿಯವರ ಮೊದಲ ರಾಜಧಾನಿ ದೌಲತಾಬಾದ್ ಆಗಿತ್ತು. ಅನಂತರ ಅವರು ತಮ್ಮ ರಾಜಧಾನಿಯನ್ನು ಗುಲ್ಬರ್ಗಕ್ಕೆ ವರ್ಗಾವಣೆ ಮಾಡಿದರು. ಅಲ್ಲಿ ಒಟ್ಟು ಏಳು ಸುಲ್ತಾನರು ಆಳ್ವಿಕೆ ಮಾಡಿದರು. ಅನಂತರ ಅಹಮದ್ ಷಾ ವಲಿ ಎನ್ನುವ ಸುಲ್ತಾನ ರಾಜಧಾನಿಯನ್ನು ಗುಲ್ಬರ್ಗದಿಂದ ಬೀದರ್ಗೆ ವರ್ಗಾವಣೆ ಮಾಡಿದನು. ಬಳಿಕ ಕೋಟೆ ನಿರ್ಮಾಣಕ್ಕಾಗಿ ಕಲಾವಿದರ ಒಂದು ಗುಂಪನ್ನು ಬೀದರ್ಗೆ ಕರೆಸಲಾಯಿತು. ಅವರಲ್ಲಿ ಕೆಲವರು ಬಿದ್ರಿ ಕಲೆ ಬಲ್ಲವರಾಗಿದ್ದರು. ಇದೇ ಸಂದರ್ಭದಲ್ಲಿ ಬಿದ್ರಿ ಕಲೆ ಹುಟ್ಟಿಕೊಂಡಿತು ಎಂದು ಹೇಳಲಾಗುತ್ತದೆ. ಒಂದು ಸಂಪ್ರದಾಯದ ಪ್ರಕಾರ ಬಿದ್ರಿ ಕಲೆಯು ಇರಾನ್, ಇರಾಕ್ ಮತ್ತು ಪರ್ಷಿಯನ್ ದೇಶಗಳಿಂದ ಭಾರತಕ್ಕೆ ಬಂತು ಎಂದು ತಿಳಿದು ಬರುತ್ತದೆ. ಸೂಫಿ ಸಂತರಾದ ಖಾಜಾ ಮೊಯಿನುದ್ದೀನ್ ಹಸನ್ ಚಿಸ್ತಿ ಮತ್ತು ಅವರ ಅನುಯಾಯಿಗಳು ರಾಜಸ್ಥಾನದ ಅಜ್ಮೀರ್ಗೆ ಬಂದು ನೆಲೆಸಿದರು. ಅವರ ಮುಖಾಂತರ ಈ ಕುಸುರಿ ಕೆಲಸ ಭಾರತಕ್ಕೆ ಪ್ರವೇಶಿಸಿತ್ತು. ಮತ್ತೊಂದು ಮೂಲದ ಪ್ರಕಾರ ಇರಾಕಿನ ಕಲಾವಿದರು ಬೆಳ್ಳಿ ಬಂಗಾರದ ಕುಸುರಿ ಕೆಲಸಗಳಲ್ಲಿ ನಿಪುಣರಾಗಿದ್ದರು. ಅದರಲ್ಲಿ ಅಬ್ದುಲ್ಲಾ ಬಿನ್ ಕೈಸರ್ ಎಂಬವರು ಈ ಕಲೆಯನ್ನು ಬಿದರ್ ನಲ್ಲಿ ಅಭಿವೃದ್ಧಿಪಡಿಸಿದರು ಎಂದು ಹೇಳಲಾಗುತ್ತದೆ. ಈ ಕಲಾವಿದರು ಬಹಮನಿ ಸಾಮ್ರಾಜ್ಯದಲ್ಲಿ ರಾಜಾಶ್ರಯ ಪಡೆದು ಅಲ್ಲಿಯೇ ಕಲಾಕೃತಿಗಳನ್ನು ತಯಾರಿಸುತ್ತಿದ್ದರು. ಮೊದಲು ಕಲಾವಿದರು ಲೋಹದ ಪಾತ್ರೆಗಳ ಮೇಲೆ ಚಿತ್ತಾರಗಳನ್ನು ಬಿಡಿಸಿ ಅದಕ್ಕೆ ಕೆತ್ತನೆ ಮಾಡಿ ಅದರಲ್ಲಿ ಚಿನ್ನ ಮತ್ತು ಬೆಳ್ಳಿ ಜೋಡಿಸುವ ವಿಚಾರ ಹೊಳೆದು ಇವುಗಳ ತಯಾರಿಕೆಯಲ್ಲಿ ತೊಡಗಿದ್ದರು. ಅನಂತರ ವಿವಿಧ ವಸ್ತುಗಳನ್ನು ತಯಾರಿಸಿ ಅವುಗಳ ಮೇಲೆ ಸಾವಿರಾರು ಸೂಕ್ಷ್ಮವಾದ ಚಿತ್ತಾರಗಳನ್ನು ಬಿಡಿಸಿ, ಕೆತ್ತನೆ ಮಾಡಿ ಅವುಗಳಲ್ಲಿ ಚಿನ್ನ ಬೆಳ್ಳಿಯ ಎಳೆಗಳನ್ನು ಜೋಡಿಸಿ ಅದಕ್ಕೆ ಫೈಲುಗಳಿಂದ ತಿಕ್ಕಿ ಕಲಾಕೃತಿಗೆ ಹೊಳಪು ಬರುವಂತೆ ಮಾಡುತ್ತಿದ್ದರು. ಆದರೆ ಹೊಳಪಾಗಿರುವ ಕಲಾಕೃತಿ ಬೆಳ್ಳಗೆ ಇರುವುದರಿಂದ ಅವರು ಮಾಡಿದ ಬೆಳ್ಳಿ ಬಂಗಾರದ ಚಿತ್ತಾರಗಳನ್ನು ಕಾಣಲು ಸಾಧ್ಯವಾಗದೆ ಕಲಾವಿದರು ಗೊಂದಲದಲ್ಲಿದ್ದಾಗ ಬೀದರ್ ಕೋಟೆಯ ಮಣ್ಣಿನಿಂದ ಕಲಾಕೃತಿಗೆ ಕಪ್ಪು ಬಣ್ಣ ಮಾಡುವ ಒಂದು ಹೊಸ ಆವಿಷ್ಕಾರ ಪಡೆದುಕೊಂಡರು. ಆದ್ದರಿಂದ ಈ ಕಲೆಗೆ ಬಿದ್ರಿ ಕಲೆ ಎಂಬ ಹೆಸರು ಬಂತು ಎಂದು ತಿಳಿದುಬರುತ್ತದೆ. ಅಂದಿನಿಂದ ಇಂದಿನವರೆಗೆ ಬಿದ್ರಿ ಕಲೆಯನ್ನು ಉಳಿಸಿಕೊಂಡು ಬರಲಾಗಿದೆ. ಸ್ವಾತಂತ್ರ್ಯ ಪೂರ್ವದಲ್ಲಿ ಬಿದ್ರಿ ಕಲೆಗೆ ತುಂಬಾ ಬೇಡಿಕೆ ಇತ್ತು. ಯಾವುದೇ ಒಂದು ಸಭೆ ಸಮಾರಂಭಗಳಲ್ಲಿ ಬಿದ್ರಿ ಕಲೆಯನ್ನು ಕಾಣಿಕೆಯಾಗಿ ಕೊಡುವುದು ಒಂದು ವಾಡಿಕೆಯಾಗಿತ್ತು. ಉಡುಗೊರೆಯಾಗಿ ಪಾನದನ, ಉಗುಲ್ದಾನ್, ಆಭರಣ ಪೆಟ್ಟಿಗೆ, ಕಿವಿ ಓಲೆ, ಅಲಂಕಾರಿಕ ಸಾಮಗ್ರಿಗಳು, ಹೂದಾನಿಗಳನ್ನು ಉಡುಗೊರೆಯಾಗಿ ನೀಡುತ್ತಿದ್ದರು. ಅದರಲ್ಲೂ ಪ್ರಮುಖವಾಗಿ ಮದುವೆ ಸಮಾರಂಭಗಳಲ್ಲಿ ಕೊಡುವುದಂತೂ ಒಂದು ಮರ್ಯಾದೆಯ ಪ್ರಶ್ನೆಯಾಗಿತ್ತು. ಯಾರಾದರೂ ಕಲಾಕೃತಿಗಳನ್ನು ಮದುವೆಯಲ್ಲಿ ಉಡುಗೊರೆಯಾಗಿ ಕೊಡದಿದ್ದಲ್ಲಿ, ‘ಇವರು ಎಂತಾ ಮಂಡುಬೀಗರು, ಎಷ್ಟು ಜಿಪುಣ ಬೀಗರು, ತನ್ನ ಮಗಳ ಮದುವೆಯಲ್ಲಿ ಒಂದಾದರೂ ಬಿದ್ರಿ ಕಲೆ ವಸ್ತುವನ್ನು ಉಡುಗರೆಯಾಗಿ ಕೊಡಲೇ ಇಲ್ಲ’ ಎಂದು ಜನ ಮಾತಾಡಿಕೊಳ್ಳುತ್ತಿದ್ದರು. ಆ ಸಂದರ್ಭದಲ್ಲಿ ಬಿದ್ರಿ ಕಲೆ ಅಷ್ಟು ಪ್ರಖ್ಯಾತಿ ಪಡೆದಿತ್ತು. ಅಷ್ಟೇ ಅಲ್ಲದೆ ಬಿದ್ರಿ ಕಲಾಕೃತಿಗಳನ್ನು ಅರಸರು, ಮಂತ್ರಿಗಳು, ಜನರು ತಮ್ಮ ಮನೆಯಲ್ಲಿ ಬಳಸುವುದು ಮತ್ತು ಅಲಂಕಾರಿಕ ವಸ್ತುಗಳನ್ನು ಸಂಗ್ರಹಿಸುವುದು ಒಂದು ಸಂಪ್ರದಾಯವೇ ಆಗಿತ್ತು. ಆ ಸಂದರ್ಭದಲ್ಲಿ ಅನೇಕ ಬಿದ್ರಿ ಕಲಾಕೃತಿಗಳು ವಿದೇಶಗಳಿಗೆ ಕೊಂಡೊಯ್ಯಲಾಯಿತು. ಯೂರೋಪಿನ ಅನೇಕ ದೇಶಗಳ ವಸ್ತು ಸಂಗ್ರಹಾಲಯಗಳಲ್ಲಿ ಅಪರೂಪದ ಬಿದ್ರಿ ಕಲಾಕೃತಿಗಳು ಇಂದಿಗೂ ಕಾಣಬಹುದಾಗಿದೆ. ಹೈದರಾಬಾದಿನ ಸಾಲಾರಜಂಗ ಮ್ಯೂಸಿಯಂನಲ್ಲಿ ರಾಜ ಮಹಾರಾಜರು ಬಳಸುತ್ತಿದ್ದ ಅಪರೂಪದ ಬಿದ್ರಿ ಕಲಾಕೃತಿಗಳನ್ನು ಇಂದಿಗೂ ಕಾಣಬಹುದು. ಬಿದ್ರಿ ಕಲೆ ಎಂದ ತಕ್ಷಣ ಮೊದಲು ನೆನಪಿಗೆ ಬರುವುದೇ ಕರ್ನಾಟಕದ ಬೀದರ್ ಜಿಲ್ಲೆ. ಇದೊಂದು ಅದ್ಭುತವಾದ ಕಲೆಯಾಗಿದೆ. ಬಿದ್ರಿ ಕಲಾವಿದರು ಕಲಾಕೃತಿಗಳ ಮೇಲೆ ಚಿತ್ತಾರಗಳನ್ನು ಬಿಡಿಸಿ ಕೆತ್ತನೆ ಮಾಡಿ ಅವುಗಳಲ್ಲಿ ಬೆಳ್ಳಿ ತಂತಿ ಕೂಡಿಸುವುದನ್ನು ನೋಡುವುದು ತುಂಬಾ ರೋಚಕವಾಗಿದೆ. ಬೀದರ್ ಕೋಟೆಯಲ್ಲಿನ ಮಣ್ಣನ್ನು ನೀರಿಗೆ ಹಾಕಿ ಕುದಿಸಿ ಬೆಳ್ಳಿ ತುಂಬಿರುವ ಬಿಳಿಯಾಗಿರುವ ಝಿಂಕ್ ಮತ್ತು ತಾಮ್ರ ಮಿಶ್ರಿತ ಧಾತುವಿನ ಕಲಾಕೃತಿಯನ್ನು ಕುದಿಯುವ ಮಣ್ಣಿನಲ್ಲಿ ಹಾಕಿದಾಗಲಂತೂ ಇಂದ್ರಜಾಲದಂತೆ ಭಾಸವಾಗುತ್ತದೆ. ಕೇವಲ ಕುದಿಯುವ ಮಣ್ಣಿನಲ್ಲಿ ಕಲಾಕೃತಿ ಹಾಕಿದಾಗ ಅದು ಹೇಗೆ ಕಪ್ಪಾಗುತ್ತದೆ, ಬೆಳ್ಳಿ ಯಾಕೆ ಕಪ್ಪಾಗುವುದಿಲ್ಲ ಎಂಬ ದಟ್ಟ ಅನುಮಾನ ನೋಡುಗರಲ್ಲಿ ಮೂಡುತ್ತದೆ. ಬಿದ್ರಿ ಕಲಾಕೃತಿಗಳಿಗೆ ಬಣ್ಣ ಹಾಕುವುದನ್ನು ನೋಡುವುದೇ ಪ್ರವಾಸಿಗರಿಗೆ ಅಪರೂಪದ ಘಳಿಗೆಯಾಗಿದೆ. ಈ ಕಲೆಯನ್ನು ವೀಕ್ಷಿಸಲು ದೇಶ ವಿದೇಶಗಳಿಂದ ಜನ ಬೀದರ್ ಜಿಲ್ಲೆಗೆ ಬರುತ್ತಾರೆ. ಬಂದ ಪ್ರವಾಸಿಗರು ಕಲಾಕೃತಿಗಳನ್ನು ನೋಡಿ ಕಣ್ತುಂಬಿಸಿಕೊಳ್ಳುತ್ತಾರೆ. ಕಪ್ಪು ಬಣ್ಣದ ಹಿನ್ನೆಲೆಯ ಮೇಲಿನ ಬಿಳಿಯಾದ, ಅತಿ ಸೂಕ್ಷ್ಮವಾದ ಬೆಳ್ಳಿಯ ಚಿತ್ರಗಳನ್ನು ನೋಡಿ ಆಶ್ಚರ್ಯ ಪಡುತ್ತಾರೆ. ಈ ಕಲೆ ಪೂರ್ತಿ ಕೈಯಿಂದಲೇ ಮಾಡಲಾಗಿದೆ ಎಂದು ಹೇಳಿದರೆ ನಂಬಲಾಗದೆ ದಿಟ್ಟಿಸಿ ನೋಡುತ್ತಾರೆ. ತಂತ್ರಜ್ಞಾನ ಎಷ್ಟೇ ಮುಂದುವರಿದರೂ, ಯಾವುದೇ ಯಂತ್ರಗಳಿಂದ ಈ ಚಿತ್ರಗಳನ್ನು ಬಿಡಿಸಿ ಕೆತ್ತನೆ ಮಾಡಿ ಬೆಳ್ಳಿ ತುಂಬಲು ಸಾಧ್ಯವೇ ಇಲ್ಲ. ಇಷ್ಟು ಸೂಕ್ಷ್ಮವಾಗಿ ಕೆಲಸ ಮಾಡಲು ಕೇವಲ ಬಿದ್ರಿ ಕಲಾವಿದರಿಂದಲೇ ಸಾಧ್ಯ ಎಂದು ಅರಿತ ಭಾರತ ಸರಕಾರವು 2006ರ ಜನವರಿ 3ರಂದು ಬಿದ್ರಿ ಕಲೆಗೆ ‘ಜಿಐ ಟ್ಯಾಗ್’ಅನ್ನು ‘ಬಿದ್ರಿವೇರ್’ ಎಂಬ ಹೆಸರಿನಲ್ಲಿ ನೀಡಿದೆ. ಇದು ಕರ್ನಾಟಕದ ಬೀದರ್ ಜಿಲ್ಲೆಯ ಪರಂಪರೆಯ ಲೋಹಕಲೆಯಾಗಿದೆ ಎಂದು ಅಧಿಕೃತವಾಗಿ ಗುರುತಿಸಲಾಗಿದೆ. ಬಿದ್ರಿ ಕಲಾವಿದರ ಕಲ್ಪನೆಗೆ ತಕ್ಕಂತೆ ಸಂಪೂರ್ಣವಾಗಿ ಕೈಯಿಂದ ಮೂಡಿಬರುವ ಸೌಂದರ್ಯದ ಕಲೆಯಾಗಿದೆ. ಈ ಸೌಂದರ್ಯದ ಕಲೆಯಲ್ಲಿ ತಮ್ಮ ಕೈಚಳಕವನ್ನು ತೋರಿಸಿ ಕಲಾವಿದರು ರಾಜ್ಯ ಮತ್ತು ರಾಷ್ಟ್ರ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಕೇವಲ ರಾಜ್ಯ ಮತ್ತು ರಾಷ್ಟ್ರ ಪ್ರಶಸ್ತಿಗಳಲ್ಲದೆ, 2023ರಲ್ಲಿ ಶಾ ರಶೀದ್ ಅಹ್ಮದ್ ಖಾದ್ರಿ ಅವರು ಭಾರತದ ಅತ್ಯುನ್ನತ ಪ್ರಶಸ್ತಿಗಳಲ್ಲಿ ಒಂದಾದ ‘ಪದ್ಮಶ್ರೀ’ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಅಷ್ಟೇ ಅಲ್ಲದೆ ಕೆಲವು ಕಲಾವಿದರು ಹೊರ ದೇಶಗಳಲ್ಲಿ ಹೋಗಿ ಬಿದ್ರಿ ಕಲೆ ಪ್ರದರ್ಶನ ಮಾಡಿದ್ದು ಹೆಮ್ಮೆಯ ವಿಷಯಾವಾಗಿದೆ. ಇಷ್ಟೆಲ್ಲಾ ಹೆಸರುವಾಸಿಯಾದ, ಐತಿಹಾಸಿಕ ಹಿನ್ನೆಲೆಯನ್ನು ಹೊಂದಿದ ಬಿದ್ರಿ ಕಲೆ ಈಗ ಅಳಿವಿನಂಚಿನಲ್ಲಿದೆ. ಬೀದರ್ನಲ್ಲಿ ನೂರಾರು ಕುಟುಂಬಗಳಿಗೆ ಈ ಕಲೆಯೇ ಒಂದು ಉದ್ಯೋಗ ಮತ್ತು ಜೀವನೋಪಾಯದ ಮೂಲವಾಗಿದೆ. ಆದರೆ ಬಿದ್ರಿ ಕಲಾವಿದರು ಇತ್ತೀಚಿನ ದಿನಗಳಲ್ಲಿ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಕೆಲವು ವರ್ಷಗಳಿಂದ ಕಚ್ಚಾ ವಸ್ತುಗಳ ಬೆಲೆ ದುಬಾರಿಯಾಗುತ್ತಲೇ ಇದೆ. ಅದರಲ್ಲಂತೂ ಬೆಳ್ಳಿಯ ಬೆಲೆ ಮೂರು ವರ್ಷಗಳಲ್ಲಿ ಮೂರು ಪಟ್ಟು ಹೆಚ್ಚಾಗಿದೆ. ಸಬ್ಸಿಡಿ ದರದಲ್ಲಿ ಕಚ್ಚಾವಸ್ತುಗಳನ್ನು ನೀಡುತ್ತಿದ್ದ ‘ಕರ್ನಾಟಕ ರಾಜ್ಯ ಹಸ್ತ ಶಿಲ್ಪ ಅಭಿವೃದ್ಧಿ ನಿಗಮ’ ಕೂಡ ಬಿದ್ರಿ ಕಲಾವಿದರಿಂದ ದೂರ ಸರಿಯುತ್ತಿದೆ. ಇದರಿಂದಾಗಿ ಅನೇಕ ಕಲಾವಿದರು ಈ ಕಲೆಯನ್ನು ತೊರೆದು ಗಾರೆ ಕೆಲಸ, ಆಟೋ ಚಾಲನೆ, ಹೊಟೇಲ್, ಕೂಲಿ ಕೆಲಸದಲ್ಲಿ ತೊಡಗಿಸಿ ಕೊಂಡಿದ್ದಾರೆ. ಅನೇಕ ಹಂತಗಳಲ್ಲಿ ಬಿದ್ರಿ ಕಲಾವಿದರಿಗೆ ಸಿಗುವ ಲಾಭ ಮಧ್ಯವರ್ತಿಗಳ ಕೈ ಸೇರುತ್ತಿದೆ. ಅಳಿವಿನಂಚಿನಲ್ಲಿರುವ ಬಿದ್ರಿ ಕಲೆಯೊಂದಿಗೆ ಭಾವನಾತ್ಮಕ ಸಂಬಂಧ ಹೊಂದಿರುವ ಕಲಾವಿದರು ಮತ್ತು ಅವರ ಕುಟುಂಬಗಳು ಮಾತ್ರ ಈ ಕಲೆಯನ್ನು ಬೆಳೆಸಿಕೊಂಡು ಹೋಗುತ್ತಿವೆ. ಸದ್ಯದಲ್ಲಿ ಬಿದ್ರಿ ಕಲೆಗೆ ಸರಕಾರ ಹಾಗೂ ಖಾಸಗಿ ಸಂಸ್ಥೆಗಳ ಸಹಕಾರ ಅತ್ಯಗತ್ಯವಾಗಿದೆ. ಬಿದ್ರಿ ಕಲೆ ಮತ್ತು ಕಲಾವಿದರನ್ನು ಬೆಳೆಸುವ ಕೆಲಸ ತುರ್ತಾಗಿ ನಡೆಯಬೇಕಾಗಿದೆ. ನವ ಕಲಾವಿದರಿಗೆ ತರಬೇತಿ ನೀಡುವುದು, ಸ್ವ ಸಹಾಯ ಸಂಘದ ಮಹಿಳೆಯರಿಗೆ ತರಬೇತಿ ನೀಡುವುದು, ಸರಕಾರದಿಂದ ಸವಲತ್ತುಗಳನ್ನು ನೀಡುವುದು, ವಸ್ತು ಪ್ರದರ್ಶನ ಮೇಳಗಳಲ್ಲಿ ಬಿದ್ರಿ ಕಲೆಯ ಪ್ರದರ್ಶನಕ್ಕೆ ಹೆಚ್ಚು ಆದ್ಯತೆ ನೀಡುವುದು, ಶಾಲಾ ಕಾಲೇಜುಗಳಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಮಾಡುವುದು, ಅಳಿವಿನಂಚಿನಲ್ಲಿರುವ ಬಿದ್ರಿ ಕಲೆಯ ಅಭಿವೃದ್ಧಿಗಾಗಿ ವಿಶೇಷ ಯೋಜನೆ ರೂಪಿಸುವುದು ತುಂಬಾ ಮುಖ್ಯವಾಗಿದೆ. ಇಲ್ಲದಿದ್ದಲ್ಲಿ ಈ ಕಲೆ ಕೇವಲ ವಸ್ತು ಸಂಗ್ರಹಾಲಯಕ್ಕೆ ಸೀಮಿತವಾಗಿ ಉಳಿಯಲಿದೆ.
ಕಲ್ಯಾಣ ಕರ್ನಾಟಕವು ಸಾಹಿತ್ಯ-ಸಾಂಸ್ಕೃತಿಕವಾಗಿ ಬಹುಫಲವತ್ತಾದ ನೆಲ. ಇಲ್ಲಿ ಅನೇಕ ಸೂಫಿ ಸಂತರು, ಶರಣರು, ದಾಸರು, ತತ್ವ ಪದಕಾರರು ಆಗಿ ಹೋಗಿದ್ದಾರೆ. ಹಲವು ಸೂಫಿಗಳು ಬದುಕಿ ಬಾಳಿದರು ಎಂಬುದಕ್ಕೆ ಅವರ ದರ್ಗಾಗಳೇ ಮೂರ್ತ ಸಾಕ್ಷಿಗಳಾಗಿವೆ. ಎಂದೋ ಸತ್ತು ಮರೆಯಾಗಿದ್ದರೂ ಈ ಸೂಫಿಗಳು ಜನಪದರ ಗಾಢವಾದ ನಂಬಿಕೆ, ಆಳವಾದ ವಿಶ್ವಾಸ ಹಾಗೂ ನಿಷ್ಠಾಪೂರ್ಣವಾದ ಆಚರಣೆಗಳಲ್ಲಿ ಇವತ್ತಿಗೂ ಜೀವಂತವಾಗಿರುವುದು ಗಮನಾರ್ಹ ಸಂಗತಿ. ಮಾನವ ಪ್ರೀತಿಯನ್ನೇ ಮೂಲ ನೆಲೆಯನ್ನಾಗಿಟ್ಟುಕೊಂಡ ಸೂಫಿಗಳು ಯಾರಲ್ಲೂ ಭೇದಭಾವ ಎಣಿಸದೇ ಎಲ್ಲರನ್ನೂ ಸಮಾನವಾಗಿ ಪ್ರೀತಿಸುವ, ಸೌಹಾರ್ದದ ಬೋಧನೆಗಳನ್ನು ಬಿತ್ತಿದ್ದಾರೆ. ಜಗತ್ತಿನ ಜಂಜಡದಲ್ಲಿ ಸಿಲುಕಿ ನರಳುತ್ತಿದ್ದ ಜನತೆಯ ಹೃದಯಕ್ಕೆ ಧಾರ್ಮಿಕ ಬೋಧನೆಯ ಬೆಳಕು, ಸಾಂತ್ವನ ನೀಡುತ್ತಿದ್ದುದರಿಂದ ಎಲ್ಲ ವರ್ಗದ ಜನತೆಯ ಗೌರವಾದರಗಳಿಗೆ ಪಾತ್ರರಾಗಿದ್ದಾರೆ. ಸೂಫಿಗಳು ಸ್ವಭಾವತಃ ನಾಡಾಡಿಗಳು. ನಿಜಾರ್ಥದಲ್ಲಿ ಜಂಗಮ ಸ್ವರೂಪಿಗಳು. ಕ್ರಿ.ಶ. 1347ರಿಂದ 1538ರವರೆಗಿನ ಬಹಮನಿ ಸಾಮ್ರಾಜ್ಯದ ಸಂದರ್ಭದಲ್ಲಿ ನಮ್ಮ ಕಲ್ಯಾಣ ಕರ್ನಾಟಕದ ಭಾಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸೂಫಿ ಸಂತರು ಕಂಡುಬರುತ್ತಾರೆ. ದೀರ್ಘವಾದ ಸೂಫಿ ಚಳವಳಿಯ ಪರಂಪರೆಯಲ್ಲಿ ಹಲವು ಸಿಲ್ಸಿಲಾದ ಸೂಫಿ ಪಂಥಗಳು ‘ಚೌದಾಹ್ ಖಾನ್ದಾನ್’ ಎಂಬ ಹೆಸರಿನಲ್ಲಿ ಪ್ರಸಿದ್ಧವಾಗಿವೆ. ಅವುಗಳಲ್ಲಿ ನಾಲ್ಕು ಪಂಥಗಳು ಮಾತ್ರ ಅತ್ಯಂತ ಪ್ರಸಿದ್ಧವಾಗಿವೆ. 1) ಖಾದ್ರಿಯಾ ಪಂಥ, 2) ಚಿಶ್ತಿಯಾ ಪಂಥ, 3) ಸುಹ್ರವರ್ದಿಯಾ ಪಂಥ, 4) ನಕ್ಶ್ಬಂದಿ ಪಂಥ. ಬಹಮನಿ ಸುಲ್ತಾನರು ಮತ್ತು ವಿಜಯಪುರದ ಆದಿಲ್ ಶಾಹಿಗಳ ಕಾಲದಲ್ಲಿ ದಖ್ಖನ್ನ ಮೂರು ಪ್ರಮುಖ ನಗರಗಳಾಗಿದ್ದ ಕಲಬುರಗಿ, ಬೀದರ್ ಹಾಗೂ ವಿಜಯಪು ಸೂಫಿಗಳ ಪ್ರಮುಖ ಕೇಂದ್ರಗಳಾಗಿದ್ದವು. ಕಲಬುರಗಿ ವಿಭಾಗದ ಸೂಫಿ ಪರಂಪರೆಗೆ ದೀರ್ಘವಾದ ಚರಿತ್ರೆಯಿದೆ. ದಖನಿ ಉರ್ದುವಿನ ಪ್ರಸ್ಥ ಭೂಮಿ ಎನಿಸಿಕೊಂಡಿರುವ ಕಲಬುರಗಿ ಜಿಲ್ಲೆಯು ಸಹಜವಾಗಿಯೇ ಸೂಫಿ ತತ್ವದ ತೊಟ್ಟಿಲಾಗಿದೆ. ಕಲಬುರಗಿಯ ಸುಪ್ರಸಿದ್ಧ ಸೂಫಿ ಸಂತ ಹಝರತ್ ಖ್ವಾಜಾ ಬಂದೇ ನವಾಝರು ದಿಲ್ಲಿಯಿಂದ ಕಲಬುರಗಿಗೆ ಬರುವುದಕ್ಕಿಂತಲೂ ಪೂರ್ವದಲ್ಲಿಯೇ ಹಝರತ್ ಸೈಯದ್ ಶಾಹ್ ಹಿಸಾಮುದ್ದೀನ್ ಹುಸೇನಿ ಅಲ್ಮಾರೂಫ್ ತೇಗ್ ಬರಹಾನಾ, ಹಝರತ್ ಶೇಖ್ ಸಿರಾಜುದ್ದೀನ್ ಜುನೈದಿ, ಹಝರತ್ ಶೇಖ್ ಸಾದ್ ಮಖ್ದೂಮ್ ಪೀರ್ ಜಂಜಾನಿ, ಹಝರತ್ ಶೇಖ್ ಶಾಹ್ ರುಕ್ನುದ್ದೀನ್ ತೋಲಾ ಮುಂತಾದವರು ಬಂದು ಇಲ್ಲಿ ನೆಲೆಸಿದ್ದರು ಎಂಬ ಪ್ರತೀತಿ ಇದೆ. ಹಝರತ್ ಖ್ವಾಜಾ ಬಂದೇ ನವಾಝ್ ಗೇಸುದರಾಜ್ ಅವರ ಆಗಮನದ ನಂತರ ಇಲ್ಲಿಯ ಸೂಫಿ ಪರಂಪರೆಯು ಹರವಾಗಿ ಬೆಳೆದು ಪಸರಿಸಿತೆಂದು ಹೇಳಬಹುದು. ಕಲಬುರಗಿ ಜಿಲ್ಲೆಯದಾದ್ಯಂತ ಹಝರತ್ ಚಿತಾಶಾಹ್ ವಲಿ, ಹಝರತ್ ಸೂಫಿ ಸರಮಸ್ತ್, ಹಝರತ್ ಖಲೀಫತುರ್ರಹ್ಮಾನ್, ಹಝರತ್ ಬಾಬಾ ಫಕ್ರುದ್ದೀನ್ ಹುಸೇನಿ, ಹಝರತ್ ಲಾಡ್ಲೆ ಮಶಾಯಿಕ್ ಆನ್ಸಾರಿ, ಹಝರತ್ ಮಸ್ತಾನ ಶಾಹ್ ಖಾದ್ರಿ ಚೇಂಗಟಾ, ಹಝರತ್ ಚಂದಾ ಹುಸೇನಿ, ಖ್ವಾಜಾ ಅಮೀನುದ್ದೀನ್, ಸಾದೆಸಾಬ್, ಹೈದ್ರಾದ ಸೈಫನ್ ಮಲ್ಲಿಕ, ಹಝರತ್ ಖ್ವಾಜಾ ಸಯ್ಯದ್ ಮಹಮ್ಮದ್ ಬಾದಶಾಹ್ ಖಾದ್ರಿ ಮುಂತಾದ ಸೂಫಿ ಸಂತರು ನೆಲೆ ನಿಂತಿದ್ದರು.ಅಲ್ಲದೆ ಕಲ್ಯಾಣ ಕರ್ನಾಟಕದಲ್ಲಿ ಸುಮಾರು 60 ಮಹಿಳಾ ಸೂಫಿಗಳು ಕಾಣಸಿಗುತ್ತಾರೆ. ಅವರಲ್ಲಿ ಖುಂಜಾ ಮಾಂ ಸಾಹೇಬಾ, ಝಟಪಟ್ ಬೀಬಿ, ಸತಿ ಮಾಂ ಸಾಹೇಬಾ, ಆಳಂದದ ಬೀಬಿ ತಾರಾ, ಶಹಾಪೂರ ಬೀ, ಶಹಾಪೂರ ಹಿಪ್ಪರಗಾದ ಪಾಂಚ ಬೀಬಿ, ಯಕ್ಕಂಚಿಯ ಲಷ್ಕರ್ಬೀ, ಕೆಂಭಾವಿಯ ಮಾಸಾಬೀ, ಮಾಲಗತ್ತಿಯ ಸೈದಾನಿ ಮಾಂ, ಸೇಡಂನ ಮುಕ್ಕಿ ಬೀ, ಸಗರದ ಬೀಬಿ ಗೋಹರ್ ಮುಂತಾದ ಮಹಿಳಾ ಸೂಫಿಗಳು ಕಂಡುಬರುವುದು ಉಲ್ಲೇಖಾರ್ಹವಾಗಿದೆ. ಹಝರತ್ ಬೀಬಿ ಕಮಾಲಾ ಸುಲ್ತಾನಾ ಖುಂಜಾ ಮಾಂ ಸಾಹೇಬಾ: ಹಝರತ್ ಬೀಬಿ ಕಮಲಾ ಸುಲ್ತಾನಾ ಖುಂಜಾ ಮಾಂ ಸಾಹೇಬಾ ಅವರು ದಖ್ಖನ್ನಿನ ಪ್ರಸಿದ್ಧ ಸೂಫಿ ಮಹಿಳೆಯರಲ್ಲಿ ಒಬ್ಬರು. ಬೀಬಿ ಖುಂಜಾ ಮಾಂ ಸಾಹೇಬಾ ಅವರು ಸುಲ್ತಾನ್ ಮೆಹಮೂದ್ ಶಾಹ್ ಬಹಮನಿಯವರ ಏಕೈಕ ಅಕ್ಕರೆಯ ಪುತ್ರಿಯಾಗಿದ್ದರು. ಇವರ ಅಜ್ಜ ಸುಲ್ತಾನ್ ಅಲಾವುದ್ದೀನ್ ಹಸನ್ ಗಂಗೂ ಬಹಮನಿ. ಬೀಬಿ ಕಮಾಲಾ ಸುಲ್ತಾನಾ ಬಾಲ್ಯದಿಂದಲೇ ಅಧ್ಯಾತ್ಮಿಕ ಪ್ರವೃತ್ತಿಯುಳ್ಳವರಾಗಿದ್ದರು. ಇವರು ತಮ್ಮ ಐದನೆಯ ವಯಸ್ಸಿನಿಂದಲೇ ಖುರಾನ್-ಎ-ಮಜೀದನ್ನು ಪಠಿಸುತ್ತಿದ್ದರು. ಅವರ ಅಧ್ಯಾತ್ಮಿಕ ಜ್ಞಾನ ಮನಗಂಡ ತಂದೆ ಸುಲ್ತಾನ್ ಮೆಹಮೂದ್ ಬಹಮನಿ, ಮಗಳ ಪ್ರಾರ್ಥನೆ, ಪಠಣ, ಧ್ಯಾನದ ತಲ್ಲೀನತೆಯನ್ನು ಕಂಡು ನಿಬ್ಬೆರಗಾಗಿ ಅಸಾಮಾನ್ಯ ಅಥವಾ ಅಸಾಧಾರಣ ಎಂಬ ಅರ್ಥದಲ್ಲಿ ‘ಕಮಾಲಾ’ (ಕಮಾಲಾವಾಲಿ) ಎಂದು ಕರೆದರು. ಸುಲ್ತಾನಾ ಅಂದರೆ ರಾಜಕುಮಾರಿ. ಇವರು ಸುಲ್ತಾನ್ ಮೆಹಮೂದ್ ಬಹಮನಿ ಅವರ ಮಗಳಾಗಿದ್ದರಿಂದ ಇವರಿಗೆ ಬೀಬಿ ಸುಲ್ತಾನಾ ರಾಜಕುಮಾರಿ, ಎಂಬ ಅರ್ಥದಲ್ಲಿ ಕರೆಯಲಾಗಿದೆ. ‘ಖುಂಜಾ’ ಎಂಬ ಪದವು ಪರ್ಷಿಯನ್ ಭಾಷೆಯ ‘ಖುಂಜ್’ ಎಂಬ ಪದದಿಂದ ಬಂದಿದೆ. ಇದು ಜಾಣ, ದಿವ್ಯ, ಸೂಕ್ಷ್ಮಗ್ರಾಹಿ ಎಂಬ ನಾನಾ ಅರ್ಥಗಳನ್ನು ಸೂಚಿಸುತ್ತದೆ. ಜನಸಾಮಾನ್ಯರು ಬೀಬಿ ಕಮಾಲಾ ಅವರ ದಯೆ, ಕರುಣೆಯನ್ನು ಕಂಡು ಆಧ್ಯಾತ್ಮಿಕ ತಾಯಿಯ ದರ್ಜೆಯನ್ನು ಕೊಟ್ಟಿದ್ದಾರೆ. ಮಾಂ ಸಾಹೇಬಾ ಎಂದು ಕರೆಯಲು ಇನ್ನೊಂದು ಕಾರಣ ಇವರಿಗೆ ಇಬ್ಬರು ಮಕ್ಕಳು. ಇವರು ಪ್ರವಾದಿಯವರ ಮನೆತನದ ಮೊಮ್ಮಕ್ಕಳು. ಇವರನ್ನು ಎಲ್ಲಾ ಸೂಫಿಗಳ ತಾಯಿ ಎಂಬ ಅರ್ಥದಲ್ಲಿ ಇವರನ್ನು ಮಾಂ ಸಾಹೇಬಾ ಎಂದು ಕರೆಯಲಾಯಿತು. ಹಝರತ್ ಬೀಬಿ ಕಮಾಲಾ ಸುಲ್ತಾನಾ ಬೀಬಿ ಸಾಹೇಬಾ ಅವರ ವಿವಾಹವು ಹಝರತ್ ಖ್ವಾಜಾ ಸೈಯ್ಯದ್ ಮಹಮ್ಮದ್ ಮೀರಾಂ ಹುಸೇನಿ ಅವರೊಂದಿಗೆ ನಡೆಯಿತು. ವಿವಾಹವಾದ ನಂತರ ಹಝರತ್ ಖುಂಜಾ ಮಾಂ ಸಾಹೇಬಾ ತಮ್ಮ ತಂದೆ ಸುಲ್ತಾನ್ ಮೆಹಮೂದ್ ಬಹಮನಿಯವರ ರಾಜವೈಭವವನ್ನು ತ್ಯಜಿಸಿದರು. ಬಳಿಕ ತನ್ನ ಪತಿ ಹಝರತ್ ಖ್ವಾಜಾ ಮುಹಮ್ಮದ್ ಮೀರಾಂ ಅವರೊಂದಿಗೆ ಅಧ್ಯಾತ್ಮಿಕ ಪ್ರಚಾರದಲ್ಲಿ ತೊಡಗಿದರು. ಅನಂತರ ಯಾತ್ರೆ ನಡೆಸಿದ ಅವರು ಕರ್ನಾಟಕ ರಾಜ್ಯದ ಗಡಿಭಾಗದ ಕೃಷ್ಣಾ ನದಿ ತೀರದ ಅಥನಿಯ ಸಮೀಪ ಇರುವ ಜುಗುಲ್ಗೆ ಬಂದರು. ಅಲ್ಲಿ ಇವತ್ತಿಗೂ ಅವರು ವಾಸಿಸಿದ ಮನೆಯನ್ನು ಕಾಣಬಹುದು. ಅವರು ಮಾನವೀಯ ಸಂದೇಶಗಳನ್ನು ಪ್ರಚುರಪಡಿಸಿದ ಖಾನ್ಖಾಹ್ ಇದೆ. ಅವರು ಬಳಸಿದ ಕೆಲ ಸಾಮಗ್ರಿಗಳು ಇಂದಿಗೂ ಕಾಣಸಿಗುತ್ತವೆ. ಆ ಖಾನ್ಖಾಹ್ದ ವಿಶೇಷತೆಯೆಂದರೆ ಹಝರತ್ ಖುಂಜಾ ಮಾಂ ಸಾಹೇಬಾ ಅವರು ಮಹಿಳೆಯರಿಗೆ ದೈವ ಮಾರ್ಗ ತೋರುವ ಶೈಕ್ಷಣಿಕ ಕಾರ್ಯ ಕೈಗೊಳ್ಳುತ್ತಿದ್ದರು. ಜೋಗುಲ್ ಎಂಬ ಪದವು ‘ದೋಗುಲ್’ ಎಂಬ ಪದದಿಂದ ಬಂದಿದೆ. ಏಕೆಂದರೆ, ಕಮಾಲಾ ಸುಲ್ತಾನಾ ಅವರಿಗೆ ಇಬ್ಬರು ಅಸಾಧಾರಣ ಮಕ್ಕಳಿದ್ದರು. ಇವರ ಹಿರಿಯ ಮಗ ಹಝರತ್ ಖ್ವಾಜಾ ಶಮಶೋದ್ದೀನ್ ಮೀರಾಂ ಹುಸೇನಿ ಜೈದಿ ಚಿಶ್ತಿ ಅಲ್ಮಾರೂಫ್ ಖ್ವಾಜಾ ಶಮನಾ ಮೀರಾಂ ದಖ್ಖನ್ನಿನ ಪ್ರಸಿದ್ಧ ಸೂಫಿಗಳಲ್ಲಿ ಒಬ್ಬರಾಗಿದ್ದು, ಇವರ ಅನೇಕ ಪವಾಡಗಳು ಜನಜನಿತವಾಗಿವೆ. ಕಿರಿಯ ಪುತ್ರ ಹಝರತ್ ಸೈಯ್ಯದ್ ಖ್ವಾಜಾ ಖಮರುದ್ದೀನ್ ಮೀರಾಂ ಹುಸೈನಿ ಜೈದಿ ಚಿಶ್ತಿ (ರ) ಇವರು ಖುಂಜಾ ಮಾಂ ಸಾಹೆಬಾ ಅವರ ಪ್ರಿಯ ಪುತ್ರರಾಗಿದ್ದರು. ಇವರು ತಮ್ಮ ತಂದೆ ಮುಹಮ್ಮದ್ ಮೀರಾಂ ಹಾಗೂ ಸಹೋದರ ಖ್ವಾಜಾ ಶಮನಾ ಮೀರಾಂ ಅವರ ನಿಧನಾನಂತರ ತನ್ನ ತಾಯಿಯೊಂದಿಗೆ ಗುಲ್ಬರ್ಗಕ್ಕೆ ಬಂದರು. ಇವರು ಚಿಕ್ಕ ವಯಸ್ಸಿನಲ್ಲೇ ನಿಧನರಾದರು. ಇವರ ಮಝಾರ ಖುಂಜಾ ಮಾಂ ಸಾಹೇಬಾ ಅವರ ಎಡಗಡೆ ಇದೆ. ಹಝರತ್ ಕಮಾಲಾ ಸುಲ್ತಾನಾ ಖುಂಜಾ ಮಾಂ ಸಾಹೇಬಾ ಅವರು ಕ್ರಿ.ಶ. 1372 ಫೆಬ್ರುವರಿ 2 (ಹಿಜರಿ ಶಕೆ 26 ರಜಬ್ 773 ಸೋಮವಾರ) ರಂದು ಗುಲಬರ್ಗಾದಲ್ಲೇ ಇಹಲೋಕ ತ್ಯಜಿಸಿದರು. ಇವರ ಮಝಾರ್ ಶರೀಫ್ ಗುಲಬರ್ಗಾ ಜಿಲ್ಲೆಯ ಚಿಕ್ಕ ಗ್ರಾಮವಾದ ಕಪನೂರ ಸಮೀಪ ಬೀದರ ರಸ್ತೆಯಲ್ಲಿದೆ. ಇವರ ಮಝಾರಿನ ಮೇಲೆ ಬೃಹದಾಕಾರದ ಮತ್ತು ಸುಂದರವಾದ ಗುಂಬಜನ್ನು ಕಟ್ಟಲಾಗಿದೆ. ಅದು ಇಸ್ಲಾಮಿಕ್ ನಿರ್ಮಾಣ ಶೈಲಿಯ ಪ್ರತೀಕವಾಗಿದೆ. ಹಝರತ್ ಖ್ವಾಜಾ ಬಂದೇ ನವಾಜರು ಇವರ ಮಝಾರಿಗೆ ಸತತವಾಗಿ 11 ವರ್ಷಗಳವರೆಗೆ ಸಂದರ್ಶನ ಮಾಡಿದ್ದಾರೆಂದು ಹೇಳಲಾಗುತ್ತದೆ. ಹಝರತ್ ಖ್ವಾಜಾ ಬಂದೇ ನವಾಜರು ಮತ್ತು ಹಝರತ್ ಕಮಾಲಾ ಸುಲ್ತಾನಾ ಖುಂಜಾ ಮಾಂ ಸಾಹೇಬಾ ಇವರಿಬ್ಬರೂ ಒಂದೇ ಗುರುವಿನ (ಹಝರತ್ ಖ್ವಾಜಾ ನಾಸಿರುದ್ದೀನ್ ಚಿರಾಗ್ ದೆಹಲ್ವಿ) ಅನುಯಾಯಿಗಳಾಗಿದ್ದರು. ಹೀಗಾಗಿ ಇವರಿಬ್ಬರ ನಡುವೆ ತುಂಬಾ ಅನೋನ್ಯತೆ ಇತ್ತು. ಹಝರತ್ ಝಟ್-ಪಟ್ ಬೀಬಿ : ಇವರು ಕಲಬುರಗಿಯ ಮಹಿಳಾ ಸೂಫಿಗಳಲ್ಲಿಯೇ ತುಂಬಾ ಜನಪ್ರಿಯರಾಗಿದ್ದಾರೆ. ಇವರ ದರ್ಗಾ ಕಲಬುರಗಿಯ ಸಂಗತರಾಷವಾಡಿಯಲ್ಲಿದೆ. ಒಂದು ಪ್ರತೀತಿಯ ಪ್ರಕಾರ ಬಿಜಾಪೂರದ ಆದಿಲ್ ಶಾಹಿ ಬಾದಶಾಹನ ಅರಮನೆಯಲ್ಲಿ ಏಳು ಜನ ಸಹೋದರಿಯರಿದ್ದರು. ಅವರಲ್ಲಿ ಝಟ್-ಪಟ್ ಬೀಬಿ ಒಬ್ಬರು. ಅವರಿಗೆ ಏನೇ ಕೆಲಸ ಕೊಟ್ಟರೂ ತಕ್ಷಣ ಮಾಡಿ ಮುಗಿಸುತ್ತಿದ್ದರು. ಇದರಿಂದಾಗಿ ಅವರಿಗೆ ಝಟ್-ಪಟ್ ಎಂಬ ಬಿರುದು ಬಂದಿದೆ ಎಂದು ಹೇಳಲಾಗುತ್ತದೆ. ಮಾಸಾ ಬೀ- ಕೆಂಭಾವಿ: ಮಾಸಾ ಬೀ ದರ್ಗಾವು ಯಾದರಿಯ ಶೋರಾಪುರ ತಾಲೂಕಿನಲ್ಲಿದೆ. ಇದು ಈ ಭಾಗದ ತುಂಬಾ ಪ್ರಸಿದ್ಧ ಮಹಿಳಾ ಸೂಫಿಯ ದರ್ಗಾವಾಗಿದ್ದು, ದೂರ ಪ್ರದೇಶದ ಜನರು ಇಲ್ಲಿ ಬಂದು ಸಂದರ್ಶನ ಮಾಡುತ್ತಾರೆ. ಈ ದರ್ಗಾ ಸುಮಾರು ಏಳು ನೂರು ವರ್ಷಗಳಷ್ಟು ಹಳೆಯದ್ದಾಗಿದೆ ಎಂದು ಹೇಳಲಾಗುತ್ತದೆ. ಒಂದು ಎತ್ತರವಾದ ಪ್ರದೇಶದಲ್ಲಿ ಮಾಸಾಬೀಯವರ ದರ್ಗಾವಿದೆ. ಇನ್ನೊಂದು ಕಡೆ ಎತ್ತರ ಭಾಗದಲ್ಲಿ ಆಯಿ ಮುನ್ನವರ್ ಬಾಬಾ ಅವರ ಮಝಾರ ಇದೆ. ಅಲ್ಲದೆ ದರ್ಗಾದ ಹೊರ ಆವರಣದಲ್ಲಿ ಬಯಲಿನಲ್ಲಿ ನಾಲ್ಕು ಮಝಾರಗಳಿವೆ. ಹಝರತ್ ಸೈಯ್ಯದಾ ಬೀಬಿ ಗೋಹರ್ ಸಗರ: ಇವರು ಹಝರತ್ ಸೈಯ್ಯದ್ ಮೆಹಮೂದ್ ಸೂಫಿ ಸರಮಸ್ತ ಅವರ ಪತ್ನಿಯಾಗಿದ್ದರು. ಇವರು ಬಲಗ್ (ಇಂದಿನ ಅಫಘಾನಿಸ್ಥಾನ) ಸುಲ್ತಾನನ ಮಗಳು, ಬಲಗ್ನ ರಾಜಕುಮಾರಿಯಾಗಿದ್ದರು. ಇವರ ವಿವಾಹವು ಹಝರತ್ ಸೂಫಿ ಸರಮಸ್ತ ಅವರೊಂದಿಗೆ ಇರಾಕಿನ ಸಾಮರಾ ಪಟ್ಟಣದಲ್ಲಿ ನಡೆಯಿತು. ಇವರು ಸರಳ ವ್ಯಕ್ತಿತ್ವದ ಅಧ್ಯಾತ್ಮಿಕ ಪ್ರವೃತ್ತಿಯುಳ್ಳವರಾಗಿದ್ದರು. ಸೈಯ್ಯದಾ ಬೀಬಿ ಗೋಹರ್ ಮತ್ತು ಅವರ ಪತಿ ಹಝರತ್ ಸೂಫಿ ಸರಮಸ್ತ್ ಅವರಿಗೆ ನಾಲ್ಕು ಜನ ಗಂಡು ಮಕ್ಕಳು ಹಾಗೂ ಮೂರು ಜನ ಹೆಣ್ಣು ಮಕ್ಕಳಿದ್ದರು. ಬೀಬಿ ಗೋಹರ್ ಅವರಿಗೆ ಜನಿಸಿದ ಈ ನಾಲ್ಕು ಜನ ಗಂಡು ಮಕ್ಕಳು ಹಾಗೂ ಮೂರು ಜನ ಹೆಣ್ಣು ಮಕ್ಕಳು ಸುಪ್ರಸಿದ್ಧ ಸೂಫಿಗಳಾಗಿ ಹೊರಹೊಮ್ಮಿದ್ದಾರೆ. ಹಝರತ್ ಗೋಹರ್ ಬೀಬಿ ರಹ ಅವರ ವಂಶವು ಪೀಳಿಗೆಯಿಂದ ಪೀಳಿಗೆಗೆ ಸೂಫಿಗಳನ್ನು. ಕೊಡುಗೆಯಾಗಿ ಕೊಟ್ಟಿದೆ. ಆದ್ದರಿಂದಲೇ ಗೋಹರ್ ಬೀಬಿಯವರಿಗೆ ‘ಉಮ್ಮುಲ್ ಔಲಿಯಾ’ (ಸಿದ್ಧರ ತಾಯಿ) ಎಂದು ಕರೆಯಲಾಗುತ್ತದೆ. ಇವರ ಸಮಾಧಿಯು ಹಝರತ್ ಸೂಫಿ ಸರಮಸ್ತ್ ಅವರ ಕಟ್ಟೆಯ ಮೇಲೆಯೇ ಇದೆ. ಶರಣರ ವಿಶಾಲ ದೃಷ್ಟಿಗೂ, ಸರ್ವಧರ್ಮ ಸಮಭಾವವನ್ನು ತಮ್ಮ ಪ್ರಧಾನ ಗುರಿಯಾಗಿಸಿಕೊಂಡಿದ್ದ ಸೂಫಿ ಸಂತರ ನಿಲುವಿಗೂ ತೀರಾ ಹತ್ತಿರದ ಸಂಬಂಧ ಇರುವುದನ್ನು ಗಮನಿಸಬಹುದು. ಪ್ರಸ್ತುತ ಕಾಲಘಟ್ಟದಲ್ಲಿ ಧರ್ಮ ಧರ್ಮಗಳ ಮಧ್ಯೆ ಹಿಂದೆಂದೂ ಕಂಡರಿಯದಂಥ ಬಿರುಕು ಕಾಣಿಸಿಕೊಂಡಿದೆ. ಇಂತಹ ದುರ್ಭರ ಸನ್ನಿವೇಶದಲ್ಲಿ ಎಲ್ಲ ಧರ್ಮಾನುಯಾಯಿಗಳ ಹೃದಯಗಳಲ್ಲಿ ಪರಸ್ಪರ ಮೈತ್ರಿ ಬೆಳೆಸಲು ಕಲ್ಯಾಣ ಕರ್ನಾಟಕದ ಶರಣರು ಬಿಟ್ಟು ಹೋಗಿರುವ ವಚನ ಪರಂಪರೆಯ ಜೊತೆಗೆ ಸೂಫಿ ಸಂತರ ಸೌಹಾರ್ದದ ಪರಂಪರೆಯ ಅರಿವು ಅವಶ್ಯಕವಾಗಿದೆ.
ಡಿಮ್ಯಾಂಡ್ ರಿಜಿಸ್ಟರ್ ಆಸ್ತಿ ಕಂದಾಯ ಸಂಗ್ರಹ ಸ್ಥಗಿತ
ಆಧುನಿಕ ತಂತ್ರಜ್ಞಾನ ಅಳವಡಿಕೆಯಿಂದ ಗ್ರಾ.ಪಂ. ಆಡಳಿತದಲ್ಲಿ ಕಂದಾಯ ಸಂಗ್ರಹಕ್ಕೆ ತೊಂದರೆಯಾಗಿದ್ದು, ಲಕ್ಷಾಂತರ ರೂ. ನಷ್ಟ ಉಂಟಾಗಿದೆ. ಕ್ರಮಬದ್ಧವಲ್ಲದ ಆಸ್ತಿಗಳ ಕಂದಾಯ ಸಂಗ್ರಹ ಸ್ಥಗಿತಗೊಂಡಿದ್ದು, ದಾಖಲೆಗಳ ವಿತರಣೆಯಲ್ಲೂ ತಾಂತ್ರಿಕ ತಾಪತ್ರಯ ಹೆಚ್ಚಾಗಿದೆ. ಇದರಿಂದಾಗಿ ಗ್ರಾಮೀಣ ಜನರ ಸಮಸ್ಯೆ ಜಟಿಲಗೊಂಡಿದೆ.
Government School Teachers: ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಹಾಜರಿ ಕುರಿತು ಸರ್ಕಾರ ಮಹತ್ವದ ಆದೇಶ
ಬೆಂಗಳೂರು, ಡಿಸೆಂಬರ್ 21: ರಾಜ್ಯದಲ್ಲಿ ಶಿಕ್ಷಣ ಇಲಾಖೆಯು ವಿದ್ಯಾರ್ಥಿಗಳಿಗೆ ಅನುಕೂಲ ಆಗುವಂತೆ ಮಹತ್ವದ ಆದೇಶಗಳನ್ನು ಹೊರಹಾಕುತ್ತಲಿರುತ್ತದೆ. ಇದೀಗ ಸರ್ಕಾರಿ ಶಾಲೆಗಳಲ್ಲಿ ಹಾಜರಾತಿ ಕುರಿತು ಆದೇಶವೊಂದನ್ನು ಹೊರಡಿಸಿದೆ. ಹಾಗಾದ್ರೆ, ಅದೇನು ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ. ರಾಜ್ಯದ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಮೊಬೈಲ್ ಆಧಾರಿತ ಹಾಜರಾತಿ ವ್ಯವಸ್ಥೆಯನ್ನು ಜಾರಿಗೊಳಿಸಲಾಗುತ್ತಿದೆ. ಪ್ರತಿ ದಿನ ಶಾಲಾ ಶಿಕ್ಷಕರು, ಸಿಬ್ಬಂದಿಗಳು
ಚಳಿ, ಕ್ರಿಸ್ಮಸ್ ಎಫೆಕ್ಟ್; ಮಟನ್ ದರದಲ್ಲಿ ಏರಿಕೆ, ನಾನ್ವೆಜ್ ಪ್ರಿಯರಿಗೆ ಭಾರಿ ನಿರಾಸೆ
ಕರ್ನಾಟಕದಲ್ಲಿ ಚಳಿಗಾಳಿ ಆರಂಭವಾಗಿದ್ದು, ಜನರು ಮಾಂಸಾಹಾರದತ್ತ ಹೆಚ್ಚು ಒಲವು ತೋರುತ್ತಿದ್ದಾರೆ. ಕ್ರಿಸ್ಮಸ್ ಮತ್ತು ಹೊಸ ವರ್ಷದ ಬೇಡಿಕೆಯ ನಡುವೆ ಮಾಂಸದ ಬೆಲೆ ಭಾರೀ ಏರಿಕೆ ಕಂಡಿದೆ. ಮೊಟ್ಟೆಯ ದರವೂ ಏರಿಕೆಯಾಗಿದೆ. ಮೊಟ್ಟೆ ತಿನ್ನುವದರ ಹರಿದಾಡಿದ ಸುಳ್ಳು ವದಂತಿ ಬಗ್ಗೆ ಎಫ್ಎಸ್ಎಸ್ಎಐ ಸ್ಪಷ್ಟಪಡಿಸಿದ್ದು, ಮೊಟ್ಟೆ ಹಾನಿಕಾರಕವಲ್ಲ ಸುರಕ್ಷಿತ ಎಂದು ಹೇಳಿದೆ. ಕೋಳಿ ಮಾಂಸ ಮೂನ್ನೂರರ ಗಡಿ ದಾಟಿದರೆ. ಮಾಂಸದ ದರ ಕ್ರಿಸ್ಮಸ್ ವೇಳೆಗೆ ಸಾವಿರ ದಾಟುವ ಸಾಧ್ಯತೆ ಇದೆ.
ಚಳಿ ಹೆಚ್ಚಳ: ಆರೋಗ್ಯ ಕಳವಳ; ಯೆಲ್ಲೋ ಅಲರ್ಟ್
ಹಾವೇರಿ ಜಿಲ್ಲೆಯಲ್ಲಿ ಚಳಿ ತೀವ್ರವಾಗಿದೆ. ಕನಿಷ್ಠ ಉಷ್ಣಾಂಶ 8 ಡಿಗ್ರಿಗಿಂತ ಕಡಿಮೆಯಾಗಿದೆ. ಯೆಲ್ಲೊ ಅಲರ್ಟ್ ನೀಡಲಾಗಿದೆ. ಮುಂದಿನ 5 ದಿನಗಳ ಕಾಲ ಶೀತ ಗಾಳಿ ಬೀಸುವ ಸಾಧ್ಯತೆ ಇದೆ. ಆರೋಗ್ಯ ತಜ್ಞರು ಬೆಚ್ಚನೆಯ ಉಡುಪು ಧರಿಸಲು ಮತ್ತು ತಣ್ಣೀರು ಸೇವಿಸದಿರಲು ಸಲಹೆ ನೀಡಿದ್ದಾರೆ. ಕಾರ್ಮಿಕರು ಸಂಕಷ್ಟದಲ್ಲಿದ್ದಾರೆ. ಸ್ಥಳೀಯ ಸಂಸ್ಥೆಗಳು ಅವರಿಗೆ ಬೆಚ್ಚನೆಯ ಉಡುಪು ನೀಡಲು ಮುಂದಾಗಬೇಕು.
ಮೊಟ್ಟಮೊದಲ ಬಾರಿಗೆ 700 ಶತಕೋಟಿ ಡಾಲರ್ ಮೈಲುಗಲ್ಲು ದಾಟಿದ ಎಲಾನ್ ಮಸ್ಕ್!
ಜಗತ್ತಿನ ಅತ್ಯಂತ ಶ್ರೀಮಂತ ವ್ಯಕ್ತಿ ಎಂಬ ಹೆಗ್ಗಳಿಕೆ
Gold Price Dec 21: ಯತಾಸ್ಥಿತಿ ಕಾಯ್ದುಕೊಂಡ ಚಿನ್ನದ ಬೆಲೆ, ಇಂದಿನ ದರಪಟ್ಟಿ ಇಲ್ಲಿದೆ
ಚಿನ್ನ ಹಾಗೂ ಬೆಳ್ಳಿಯ ದರಗಳು ಈ ವಾರದ ಆರಂಭದಲ್ಲಿ ನಿರಂತರವಾಗಿ ಏರಿಕೆ ಕಂಡಿತ್ತು. ಶುಕ್ರವಾರದಿಂದ ಕ್ರಮೇಣವಾಗಿ ದರಗಳು ಕಡಿಮೆಯಾಗುತ್ತಾ ಬಂದಿದ್ದು, 24 ಕ್ಯಾರೆಟ್ ಚಿನ್ನದ ಮೇಲೆ ಗ್ರಾಂ.ಗೆ 66 ರೂಪಾಯಿವರೆಗೆ ದರ ಕಡಿಮೆಯಾಗಿತ್ತು. ಶನಿವಾರವೂ ದರಗಳು ಯತಾಸ್ಥಿತಿ ಕಾಯ್ದುಕೊಂಡಿದೆ. ಇಂದು ಬೆಂಗಳೂರಿನಲ್ಲಿ ಈಗ 24 ಕ್ಯಾರೆಟ್, 22 ಕ್ಯಾರೆಟ್, 18 ಕ್ಯಾರೆಟ್ ಚಿನ್ನದ ದರ ಹಾಗೂ ಬೆಳ್ಳಿಯ
30 ಕೋಟಿ ರೂ.ಗಿಲ್ಲ ವಾರಸುದಾರರು ; ಆರ್ಬಿಐ ಖಾತೆ ಸೇರಿದ ಹಣ
ಭಾರತೀಯ ರಿಸರ್ವ್ ಬ್ಯಾಂಕ್ನ ಸೂಚನೆ ಮೇರೆಗೆ, ದಶಕಗಳಿಂದ ನಿರ್ವಹಣೆಗೊಳ್ಳದ ಬ್ಯಾಂಕ್ ಖಾತೆಗಳಲ್ಲಿರುವ ಸುಮಾರು 30.51 ಕೋಟಿ ರೂ. ಹಣವನ್ನು ವಾರಸುದಾರರಿಗೆ ತಲುಪಿಸಲು 'ನಿಮ್ಮ ಹಣ ನಿಮ್ಮ ಹಕ್ಕು' ಅಭಿಯಾನ ಆರಂಭವಾಗಿದೆ. ಈ ಅಭಿಯಾನವು ಮುಂದಿನ ವರ್ಷದ ಸೆಪ್ಟೆಂಬರ್ ವರೆಗೆ ನಡೆಯಲಿದ್ದು, ಜಿಲ್ಲಾಡಳಿತವೂ ಸಹಕಾರ ನೀಡುತ್ತಿದೆ.
Indian Railway | ಬಾಕಿ ವಸೂಲಿ, ಟಿಕೆಟೇತರ ಆದಾಯದಲ್ಲಿ ಹಿಂದೆ ಬಿದ್ದ ರೈಲ್ವೆ: CAG
ಹೊಸದಿಲ್ಲಿ: ದೊಡ್ಡ ಪ್ರಮಾಣದಲ್ಲಿ ಭೂ ಹಿಡುವಳಿಗಳನ್ನು ಹೊಂದಿದ್ದರೂ ಮತ್ತು 269 ಪ್ರಕರಣಗಳಲ್ಲಿ ಖಾಸಗಿಯವರಿಂದ 2023ರ ಮಾರ್ಚ್ ವರೆಗೆ ಬಾಕಿ ಇರುವ 4087 ಕೋಟಿ ರೂಪಾಯಿ ವಸೂಲಿ ಮಾಡಲು ವಿಫಲವಾಗಿರುವ ಹಿನ್ನೆಲೆಯಲ್ಲಿ ರೈಲ್ವೆ ಇಲಾಖೆ ತನ್ನ ಟಿಕೆಟೇತರ ಆದಾಯವನ್ನು ಹೆಚ್ಚಿಸಿಕೊಳ್ಳುವುದು ಸಾಧ್ಯವಾಗಿಲ್ಲ ಎಂದು ಕಂಟ್ರೋಲರ್ ಅಂಡ್ ಆಡಿಟರ್ ಜನರಲ್ (ಸಿಎಜಿ) ವರದಿ ಆಕ್ಷೇಪ ವ್ಯಕ್ತಪಡಿಸಿದೆ. ದುರ್ಬಲ ಕಣ್ಗಾವಲು ಮತ್ತು ಕಾನೂನು ಜಾರಿ ವ್ಯವಸ್ಥೆ ಇದಕ್ಕೆ ಕಾರಣ ಎಂದು ವರದಿ ವಿಶ್ಲೇಷಿಸಿದೆ. ಪರಿಶೋಧನಾ ವರದಿಯಲ್ಲಿ ರೈಲ್ವೆಯ ಹೆಚ್ಚುವರಿ ಭೂಮಿಯನ್ನು ವಾಣಿಜ್ಯ ಉದ್ದೇಶಗಳಿಗೆ ಅಭಿವೃದ್ಧಿಪಡಿಸುವ ಮತ್ತು ಆದಾಯ ಹೆಚ್ಚಿಸುವ, ರೈಲ್ವೆಯ ಖಾಲಿ ಭೂಮಿ ಮತ್ತು ಬಹು ಚಟುವಟಿಕೆಯ ನಿರ್ಮಾಣಗಳಿಂದ ಆದಾಯ ಸಂಗ್ರಹಿಸುವ ಹೊಣೆ ಹೊತ್ತಿರುವ ಆರ್ಎಲ್ಡಿಎಯ ಎರಡು ಚಟುವಟಿಕೆಗಳತ್ತ ಗಮನ ಹರಿಸಲಾಗಿದೆ. 2018-19 ರಿಂದ 2022-23 ನೇ ವರ್ಷದ ವರೆಗಿನ ಅಂಕಿ ಅಂಶಗಳನ್ನು ಪರಿಶೀಲನೆಗೆ ಒಳಪಡಿಸಲಾಗಿದೆ. 2023ರ ವೇಳೆಗೆ ರೈಲ್ವೆ 4.88 ಲಕ್ಷ ಹೆಕ್ಟೇರ್ ಭೂಮಿಯನ್ನು ಹೊಂದಿದ್ದು, ಈ ಪೈಕಿ 62,740 ಹೆಕ್ಟೇರ್ ಖಾಲಿ ಬಿದ್ದಿದೆ. ಈ ಪೈಕಿ ಕೇವಲ ಶೇಕಡ 1.6 ಅಂದರೆ 997.8 ಹೆಕ್ಟೇರ್ ಪ್ರದೇಶವನ್ನು ಮಾತ್ರ ಆರ್ಎಲ್ಡಿಎಗೆ ವಹಿಸಲಾಗಿದೆ. ಈ ಅವಧಿಯಲ್ಲಿ ರೈಲ್ವೆ ಮಂಡಳಿ 657 ಹೆಕ್ಟೇರ್ ಗಳಿಗಾಗಿ 188 ಪ್ರಸ್ತಾವನೆಗಳನ್ನು ಸ್ವೀಕರಿಸಿದೆ. ಈ ಪೈಕಿ 59 ಪ್ರಸ್ತಾವನೆಗಳನ್ನು ಆರ್ಎಲ್ಡಿಎಗೆ ವಹಿಸಲಾಗಿದ್ದು, 35 ಜಾಗಗಳನ್ನು ಆರ್ಎಲ್ಡಿಎ ಡೆವಲಪರ್ ಗಳಿಗೆ ವಹಿಸಿದೆ. ಇಷ್ಟು ದೊಡ್ಡ ಪ್ರಮಾಣದಲ್ಲಿ ಭೂಮಿಯನ್ನು ಹೊಂದಿದ್ದರೂ, 2023ರ ಮಾರ್ಚ್ ವರೆಗೆ ಕೇವಲ ಶೇ. 8.8 ರಷ್ಟು ಭೂಮಿಯನ್ನು ಮಾತ್ರ ಅಭಿವೃದ್ಧಿಗಾಗಿ ನೀಡಲಾಗಿದೆ. ಹಲವು ಪ್ರಕರಣಗಳಲ್ಲಿ ಭೂಮಿಯ ಶೀರ್ಷಿಕೆಯ ಸಮಸ್ಯೆ ಇತ್ಯರ್ಥವಾಗದೇ ಇರುವ, ಒತ್ತುವರಿ ಇರುವ ಮತ್ತು ಋಣಭಾರಗಳು ಇರುವ ಭೂಮಿಯನ್ನು ಆರ್ಎಲ್ಡಿಎಗೆ ವಹಿಸಲಾಗಿದೆ. ಇದರಿಂದಾಗಿ ಈ ಭೂಮಿಯಲ್ಲಿ ಆದಾಯ ಗಳಿಸುವುದು ಸಾಧ್ಯವಾಗಿಲ್ಲ ಎಂದು ಅಭಿಪ್ರಾಯಪಟ್ಟಿದೆ. ವ್ಯವಸ್ಥೆಯಲ್ಲಿನ ಮತ್ತು ಕಾರ್ಯಾಚರಣೆ ಸಮಸ್ಯೆಗಳಿಂದಾಗಿ ರೈಲ್ವೆ ಭೂಮಿ ನಗದೀಕರಣ ಮತ್ತು ಆದಾಯ ಗಳಿಕೆಯ ಸಾಧ್ಯತೆಗಳ ಮೇಲೆ ಪರಿಣಾಮ ಉಂಟಾಗಿದೆ ಎಂದು ವಿಶ್ಲೇಷಿಸಲಾಗಿದೆ.
Human Wildlife conflict | ರಾಜಧಾನಿ ರೈಲು ಡಿಕ್ಕಿ; ನಾಲ್ಕು ಮರಿ ಸೇರಿದಂತೆ ಏಳು ಆನೆಗಳು ಮೃತ್ಯು
ಸಂಗ್ ಜುರೈ: ಮಿಜೋರಾಂನ ಸಾಯಿರಂಗ್ ನಿಂದ ಹೊಸದಿಲ್ಲಿಗೆ ಬರುತ್ತಿದ್ದ ರಾಜಧಾನಿ ರೈಲು, ಆನೆಗಳ ಹಿಂಡಿಗೆ ಡಿಕ್ಕಿ ಹೊಡೆದು ಸಂಭವಿಸಿದ ದುರಂತದಲ್ಲಿ ನಾಲ್ಕು ಮರಿಯಾನೆಗಳು ಸೇರಿದಂತೆ ಏಳು ಆನೆಗಳು ಸಾವನ್ನಪ್ಪಿವೆ. ಘಟನೆಯಲ್ಲಿ ಮತ್ತೊಂದು ಮರಿಯಾನೆ ಗಾಯಗೊಂಡಿದೆ. ಈಶಾನ್ಯ ಫ್ರಾಂಟಿಯರ್ ರೈಲ್ವೆ ವ್ಯಾಪ್ತಿಯ ಜಮುನಾಮುಖ್-ಕಾಂಪುರ ಸೆಕ್ಷನ್ ವ್ಯಾಪ್ತಿಯಲ್ಲಿ ಬರುವ ಕೇಂದ್ರ ಅಸ್ಸಾಂನ ಹೊಜೈ ಜಿಲ್ಲೆಯ ಸಂಗ್ಜುರೈ ಎಂಬಲ್ಲಿ ಈ ಘಟನೆ ನಡೆದಿದೆ. ಲೋಕೊಮೋಟಿವ್ ಹಾಗೂ ಇತರ ಐದು ಕೋಚ್ಗಳು ಡಿಕ್ಕಿಯ ಬಳಿಕ ಹಳಿತಪ್ಪಿವೆ. ಈ ಅಪಘಾತದ ತೀವ್ರತೆಗೆ ಪ್ರಯಾಣಿಕರಿಗೆ ಯಾವುದೇ ಗಾಯಗಳಾಗಿಲ್ಲ ಎಂದು ರೈಲ್ವೆ ಹೇಳಿಕೆ ನೀಡಿದೆ. ಶನಿವಾರ ನಸುಕಿನಲ್ಲಿ 2.17ರ ವೇಳೆಗೆ ಈ ಘಟನೆ ನಡೆದಿದೆ. ಮೃತಪಟ್ಟಿರುವ ಆನೆಗಳ ಪೈಕಿ ಮೂರು ಹೆಣ್ಣಾನೆಗಳು ಹಾಗೂ ನಾಲ್ಕು ಗಂಡಾನೆಗಳು. ಒಂದು ಆನೆ ಗರ್ಭಿಣಿಯಾಗಿತ್ತು ಎಂದು ತಿಳಿದು ಬಂದಿದೆ. ಮರಣೋತ್ತರ ಪರೀಕ್ಷೆ ಬಳಿಕ ಆನೆಗಳನ್ನು ಹೂಳಲಾಗಿದೆ. ಒಟ್ಟು 50 ಕಾಡಾನೆಗಳು ಹಿಂಡಿನಲ್ಲಿದ್ದವು ಎಂದು ಗ್ರಾಮಸ್ಥರು ಹೇಳಿದ್ದಾರೆ. ಗುವಾಹತಿಯಿಂದ ಸುಮಾರು 126 ಕಿಲೋಮೀಟರ್ ದೂರಲ್ಲಿ ಈ ಘಟನೆ ಸಂಭವಿಸಿದೆ. ಕುತೂಹಲದ ಅಂಶವೆಂದರೆ ಆನೆಗಳಿಗೆ ರೈಲು ಡಿಕ್ಕಿ ಹೊಡೆಯುವುದನ್ನು ತಪ್ಪಿಸುವ ಸಲುವಾಗಿ ಘಟನೆ ನಡೆದ ಸ್ಥಳದಿಂದ 32 ಕಿಲೋಮೀಟರ್ ಆಚೆಗೆ ಹವಾಯಿಪುರ ಮತ್ತು ಲುಮ್ಡಿಂಗ್ ಸೆಕ್ಷನ್ ರೈಲು ಹಳಿಗಳಲ್ಲಿ AI-ಆಧರಿತ ಚಲನವಲನ ಪತ್ತೆ ವ್ಯವಸ್ಥೆ ಇದ್ದು, ಆನೆಗಳು ಈ ಕಾರಿಡಾರ್ ಮೂಲಕ ಸಂಚರಿಸುವ ವೇಳೆ ಇದು ಮಾಹಿತಿಯನ್ನು ನೀಡುತ್ತದೆ. ಆಹಾರ ಹುಡುಕಿಕೊಂಡು ಆನೆಗಳು ಈ ಭಾಗದ ಗ್ರಾಮಗಳಿಗೆ ಬರುತ್ತಿದ್ದು, ಇಂಥ ವ್ಯವಸ್ಥೆ ಇದ್ದಲ್ಲಿ ಅಪಘಾತ ತಪ್ಪಿಸಬಹುದಿತ್ತು ಎಂದು ಗ್ರಾಮಸ್ಥರು ಹೇಳಿದ್ದಾರೆ.
ʻಮೊಟ್ಟೆ ತಿನ್ನುವುದರಿಂದ ಕ್ಯಾನ್ಸರ್ ಬರಲ್ಲ, ಅದು ಸುರಕ್ಷಿತʼ; ಎಫ್ಎಸ್ಎಸ್ಎಐ ಸ್ಪಷ್ಟನೆ
ಮೊಟ್ಟೆಗಳಲ್ಲಿ ಕ್ಯಾನ್ಸರ್ ಕಾರಕ ಅಂಶಗಳಿವೆ ಎಂಬ ಸಾಮಾಜಿಕ ಜಾಲತಾಣಗಳ ಪೋಸ್ಟ್ಗಳಿಗೆ ಪ್ರತಿಕ್ರಿಯಿಸಿರುವ ಎಫ್ಎಸ್ಎಸ್ಎಐ, ಆಹಾರ ಸುರಕ್ಷತೆ ಮತ್ತು ಗುಣಮಟ್ಟ ನಿಯಮಗಳು 2011ರ ಅಡಿಯಲ್ಲಿ ಮೊಟ್ಟೆ ಉತ್ಪಾದನೆಯ ಯಾವುದೇ ಹಂತದಲ್ಲಿ ನೈಟ್ರೋಫ್ಯೂರನ್ಗಳ ಬಳಕೆಯನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ ಎಂದು ತಿಳಿಸಿದೆ. ಈ ವದಂತಿಗಳು ಸಾರ್ವಜನಿಕರಲ್ಲಿ ಗೊಂದಲ ಮೂಡಿಸುತ್ತಿದ್ದು, ಗ್ರಾಹಕರು ಅಧಿಕೃತ ಮಾಹಿತಿಯನ್ನಷ್ಟೇ ನಂಬಬೇಕು ಎಂದು ಪ್ರಾಧಿಕಾರ ಮನವಿ ಮಾಡಿದೆ.
ಮನಸ್ಸು ಯಾವುದೇ ವಿಷಯವನ್ನು ಪ್ರತ್ಯೇಕವಾಗಿ ಯೋಚಿಸುವುದಿಲ್ಲ; ಅದು ಹೊಸ ಅನುಭವವನ್ನು ಯಾವಾಗಲೂ ಹಳೆಯ ಅನುಭವದೊಂದಿಗೆ ಹೋಲಿಕೆ ಮಾಡುತ್ತದೆ. ಈಗ ಸಿಕ್ಕಿರುವುದನ್ನು ಹಿಂದಿನ ಅನುಭವ, ಅರಿವಿನ ಮತ್ತು ಅಧ್ಯಯನದ ಜೊತೆಗೆ ಕೂಡಿಸುತ್ತದೆ. ಈ ಕೂಡಿಸುವ ಗುಣವನ್ನು ಸಂಬಂಧಾತ್ಮಕ ಸಂಸ್ಕರಣೆ ಅಥವಾ (Associative Processing) ಎಂದು ಕರೆಯಲಾಗುತ್ತದೆ. ಇದು ಸ್ಮರಣೆ, ಕಲಿಕೆ ಮತ್ತು ಭಾವನೆಗಳ ಮೂಲ ತಂತ್ರಜ್ಞಾನ. ಹೊಸದನ್ನು ನೋಡಿದೊಡನೆ ಅದರಂತೆಯೇ ಇರುವ ಹಳೆಯ ಅನುಭವವನ್ನು ಮನಸ್ಸು ಹುಡುಕುತ್ತದೆ, ಏಕೆಂದರೆ ಬೇಗ ಅರ್ಥ ಮಾಡಿಕೊಂಡುಬಿಡೋಣ ಅಂತ. ಆದರೆ ಕೆಲವೊಮ್ಮೆ ಈ ಕೂಡಿಸುವ ಮನೋಗುಣ ಭಾವನೆಗಳನ್ನು ತರ್ಕ ಅಥವಾ ವಿಮರ್ಶೆ ಮಾಡುವುದಿಲ್ಲ ಮತ್ತು ಪೂರ್ವಾಗ್ರಹಗಳನ್ನು ಕೂಡಾ ಉಂಟುಮಾಡಬಹುದು. ಯಾವುದೋ ಒಂದು ಸುಗಂಧವು ತಕ್ಷಣವೇ ಯಾರಾದರೂ ವ್ಯಕ್ತಿಯ ನೆನಪು ತರಬಹುದು. ಕೆಲವೊಮ್ಮೆ ಕೆಲವು ಸ್ಥಳಗಳಲ್ಲಿ ಹಾದು ಹೋಗುತ್ತಿದ್ದರೆ ಅಲ್ಲಿ ಬರುವ ಪರಿಮಳ ಯಾವುದೋ ಗತಕಾಲವನ್ನು ನೆನಪಿಸಬಹುದು ಅಥವಾ ಅದೇ ವಾಸನೆಗೆ ಕೂಡಿಸಬಹುದಾದ ಇನ್ನೊಂದು ಸ್ಥಳ ನೆನಪಿಗೆ ಬರಬಹುದು. ಯಾವುದಾದರೂ ಒಂದು ಹಾಡು ಕೇಳುತ್ತಿದ್ದಂತೆ ಜೀವನದ ನಿರ್ದಿಷ್ಟ ಕಾಲವನ್ನು ನೆನಪಿಗೆ ತರಬಹುದು. ಕೆಂಪು ಸಿಗ್ನಲ್ ನೋಡಿದೊಡನೆ ಯೋಚನೆಗೂ ಮುನ್ನವೇ ‘ನಿಲ್ಲು’ ಎಂಬ ಪ್ರತಿಕ್ರಿಯೆ ನೀಡುತ್ತೇವೆ. ಹೊಸಬರಾದರೂ ಅವರು ಯಾರಾದರೂ ಹಳೆಯ ಸ್ನೇಹಿತನಂತೆ ಕಾಣುತ್ತಿದ್ದರೆ ತಕ್ಷಣ ಆತ್ಮೀಯತೆ ಮೂಡುವುದು; ಇವೆಲ್ಲವೂ ಒಂದು ವಿಷಯವನ್ನು ಮತ್ತೊಂದು ವಿಷಯಕ್ಕೆ ಕೂಡಿಸುವ ಮನಸ್ಸಿನ ಗುಣ. ಮಾನಸಿಕ ದೃಷ್ಟಿಕೋನದಿಂದ ನೋಡಲು ಹೋದರೆ ಇದೊಂದು ಮನದೆಳೆ (Psychological Thread) ಎನ್ನಬಹುದು. ಮನೋವಿಜ್ಞಾನದಲ್ಲಿ ಇದನ್ನು ಬೆಸುಗೆಯ ಕಲ್ಪನೆಗಳು ಅಥವಾ (Association of Ideas)ಎಂದು ವಿವರಿಸಲಾಗಿದೆ. ಉದಾಹರಣೆಗೆ, ಬಾಲ್ಯದಲ್ಲಿ ನಿರಂತರವಾಗಿ ತಿರಸ್ಕಾರ ಅಥವಾ ಅವಮಾನ ಅನುಭವಿಸಿದ ವ್ಯಕ್ತಿಗೆ, ಮುಂದಿನ ಜೀವನದಲ್ಲಿ ಟೀಕೆಗಳನ್ನು ಕಂಡಾಗಲೇ ಆತ್ಮವಿಶ್ವಾಸ ಕುಗ್ಗುವುದು. ಇಲ್ಲಿ ಟೀಕೆಯೊಂದಿಗೆ ‘ನಾನು ಸಾಕಷ್ಟಿಲ್ಲ, ನನ್ನಲ್ಲಿ ಕೊರತೆಯಿದೆ’ ಎಂಬ ಭಾವದ ಜೊತೆಗೆ ಅಜ್ಞಾತ ಸಂಬಂಧ ನಿರ್ಮಾಣವಾಗಿರುತ್ತದೆ. ಇದಕ್ಕೆ ಸಂಬಂಧಿಸಿದ ಮತ್ತೊಂದು ತತ್ವವೇ ಪಾವ್ಲಾವ್ ವಿಜ್ಞಾನಿಯ ಕ್ಲಾಸಿಕಲ್ ಕಂಡೀಶನಿಂಗ್. ಕೆಲವರ ಸಂಬಂಧಗಳಲ್ಲಿ ತಮಗೆ ನೋವು ಕೊಡುವವರೇ ಕೆಲವೊಮ್ಮೆ ಪ್ರೀತಿ, ಭದ್ರತೆ ಅಥವಾ ಸ್ವೀಕಾರವನ್ನೂ ಹೊಂದಿದ್ದರೆ ಮನಸ್ಸು ನೋವಿನೆಳೆಯ ಜೊತೆಗೇ ಪ್ರೀತಿಯನ್ನೂ ಬೆಸೆದುಕೊಂಡುಬಿಟ್ಟಿರುತ್ತದೆ. ಶಿಕ್ಷಿಸುವ ಅಪ್ಪ ಮತ್ತು ಅಮ್ಮ, ಕಾಡುವ ಪ್ರೇಮಿ; ಇವರನ್ನೆಲ್ಲಾ ವ್ಯಕ್ತಿ ನೋವು ಮತ್ತು ಸಂಬಂಧ ಒಂದಾಗಿ ಬೆಸೆದುಕೊಂಡಿರುವರು. ಪ್ರೀತಿಸುವಾಗ ನೋವು ಸಹಜ ಎಂದು ಭಾವಿಸುವ ಮನಸ್ಸಿನ ಸಂಬಂಧಾತ್ಮಕ ಸಂಸ್ಕರಣೆಯ ಅತ್ಯಂತ ಗಾಢ ಹಾಗೂ ಅಪಾಯಕಾರಿ ರೂಪವು ಸಂಬಂಧಗಳನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದರೂ, ದೌರ್ಜನ್ಯ ಮಾಡುತ್ತಿದ್ದರೂ ಪ್ರೇಮದೆಳೆ ಮತ್ತು ನೋವಿನೆಳೆಗಳನ್ನು ಬೆಸೆದುಕೊಂಡು ಬರೀ ಸಹಿಸಿಕೊಳ್ಳುವುದು ಮಾತ್ರವಲ್ಲ, ಸಹಜವೆಂದು ಒಪ್ಪಿಕೊಂಡೂ ಬಿಟ್ಟಿರುತ್ತಾರೆ. ಅದಕ್ಕೇ ಬಾಧೆಬಂಧ (Trauma Bonding) ಎನ್ನುವುದು. ಇನ್ನು ಪೋಷಕರು ಮತ್ತು ಮಕ್ಕಳ ವಿಷಯದಲ್ಲಾದರೆ, ಮಕ್ಕಳು ಈ ಬಾಧೆಬಂಧಕ್ಕೆ ಒಗ್ಗಿಕೊಂಡು ನೋವಿನೆಳೆ ಮತ್ತು ಪ್ರೇಮದೆಳೆಯನ್ನು ಬೆಸೆದುಕೊಂಡು ತಮ್ಮ ಮುಂದಿನ ಪೀಳಿಗೆಗೂ ಅದನ್ನು ಮುಂದುವರಿಸುವ ಸಾಧ್ಯತೆ ಉಂಟು. ಆಗ ಹೊಸ ತಲೆಮಾರಿನ ಮಕ್ಕಳು ತಮ್ಮ ಪೋಷಕರ ದೃಷ್ಟಿಕೋನವನ್ನು ಮತ್ತು ವರ್ತನೆಯನ್ನು ಒಪ್ಪದೇ ಹೋಗುವ ಕಾರಣ ಸಂಘರ್ಷಗಳಿಗೆ ಕಾರಣವಾಗುತ್ತದೆ. ಮನದೆಳೆಯು ಜೈವಿಕ ಮತ್ತು ನರವಿಜ್ಞಾನ ದೃಷ್ಟಿಕೋನದ (Biological & Neurological Threads) ಆಯಾಮದಲ್ಲಿ ನೋಡುವುದಾದರೆ ಮನಸ್ಸು ತನಗೆ ದೊರಕುವ ಅಥವಾ ತನ್ನಲ್ಲಿರುವ ಅನುಭವದ, ಅರಿವಿನ ಮತ್ತು ಅಧ್ಯಯನದ ಎಳೆಗಳನ್ನು ಮೆದುಳಿನ ಸ್ಮರಣೆಯ ಕೇಂದ್ರದಲ್ಲಿ (ಹಿಪೊಕ್ಯಾಂಪಸ್) ನೆನಪುಗಳನ್ನು ಜೋಡಿಸುತ್ತದೆ. ಅದರೊಟ್ಟಿಗೆ ಕೆಲಸ ಮಾಡುವುದು ಭಾವನೆಗಳ ಭದ್ರತಾ ಕೇಂದ್ರವಾದ ಅಮಿಗ್ಡಲಾ. ಅದು ಭಾವನಾತ್ಮಕವಾದ ತೀವ್ರತೆಯನ್ನು ಕೂಡಿಸುತ್ತದೆ. ಭಾವನೆ ಗಾಢವಾಗಿರುವ ಅನುಭವಗಳಲ್ಲಿ ಮೆದುಳಿನ ಸಂವಹನದ ಸೇತುವೆಗಳು (Synaptic Connections) ಬಲವಾಗುತ್ತವೆ. ಇದನ್ನು (Hebbian Learning) ಎಂದು ಕರೆಯುತ್ತಾರೆ. ನ್ಯೂರಾನುಗಳು ಒಟ್ಟಿಗೆ ಪ್ರೇರಣೆಗೊಂಡಾಗ ಒಟ್ಟಿಗೆ ಬೆಸೆದುಕೊಳ್ಳುತ್ತವೆ (Neurons that fire together, wire together ). ನೀವು ಮೊದಲ ಬಾರಿ ಸೈಕಲ್ ಓಡಿಸುವಾಗ, ಮೆದುಳಿನಲ್ಲಿನ ನರಕೋಶಗಳು ಹೊಸ ಹೊಸ ಮಾರ್ಗಗಳನ್ನು ಹುಡುಕುತ್ತವೆ. ಅದಕ್ಕೆ ಕಷ್ಟವಾಗುತ್ತದೆ. ಆದರೆ ಪ್ರತಿದಿನ ಅಭ್ಯಾಸ ಮಾಡಿದಂತೆ, ಅದೇ ನರಕೋಶಗಳ ನಡುವೆ ಸಂಪರ್ಕಗಳು ಬಲವಾಗುತ್ತವೆ. ಆ ಕೆಲಸ ಸುಲಭವಾಗುತ್ತದೆ. ಇದಕ್ಕೇ ಹೇಳುವುದು; ಯಾವ ಕೆಲಸವನ್ನು ಮತ್ತೆ ಮತ್ತೆ ಮಾಡುತ್ತೇವೋ, ಅದರ ಸಂವಹನದ ಸೇತುವೆಗಳು (Synaptic Connections) ಬಲವಾಗುತ್ತವೆ. ಹಾಗೆಯೇ ಬಾಲ್ಯದಲ್ಲಿ ಯಾವಾಗಲೂ ಗದರಿಕೆಯೊಂದಿಗೆ ಹೊಡೆತ ತಿನ್ನುತ್ತಿದ್ದ ವ್ಯಕ್ತಿಗೆ, ವಯಸ್ಕನಾದ ನಂತರವೂ ಯಾರಾದರೂ ಧ್ವನಿಯನ್ನು ಎತ್ತಿದರೆ ಸಾಕು- ಹೃದಯ ಬಡಿತ ಜೋರಾಗುತ್ತದೆ. ಏಕೆಂದರೆ ಜೋರಾಗಿ ಮಾತನಾಡುವುದರ ನಂತರ ಏಟು ತಿನ್ನುವ ಅಪಾಯ ಎಂದು ಮೆದುಳಿನಲ್ಲಿ ಸಂವಹನದ ಸೇತುವೆ ಈಗಾಗಲೇ ಬಲವಾಗಿ ರೂಪಗೊಂಡಿರುತ್ತದೆ. ಸಂವಹನದ ಸೇತುವೆ ಬಲವಾಗಿದ್ದರೆ, ಆ ಯೋಚನೆ ಅಥವಾ ಭಾವನೆ ತಕ್ಷಣ ಬರುತ್ತದೆ. ದುರ್ಬಲವಾಗಿದ್ದರೆ, ಅದು ನಿಧಾನವಾಗಿ ಅಥವಾ ಅಪರೂಪವಾಗಿ ಬರುತ್ತದೆ. ಹಾಗೆಯೇ ಇದು ಶಾಶ್ವತ ಎಂದೇನೂ ಅಲ್ಲ. ಹೊಸ ಅಭ್ಯಾಸ, ಹೊಸ ಆಲೋಚನೆಗಳನ್ನು ಮಾಡಿದರೆ ಹೊಸ ಸಂಪರ್ಕಗಳು ನಿರ್ಮಾಣವಾಗುತ್ತವೆ.
ಶೋಷಿತರಲ್ಲಿ ಸ್ವಾಭಿಮಾನದ ಕಿಡಿ ಹೊತ್ತಿಸಿದ ಬಿ. ಶ್ಯಾಮಸುಂದರ್
ಇಂದು ಬಿ. ಶ್ಯಾಮಸುಂದರ್ ಜನ್ಮದಿನ
ಡಿಎಸ್ಸಿ ಎ20: ಸನ್ನದ್ಧವಾದ ದೇಶೀಯ ಮುಳುಗು ಬೆಂಬಲ ನೌಕೆ
ಡಿಎಸ್ಸಿ ಎ20ಯನ್ನು ಇಂಡಿಯನ್ ರಿಜಿಸ್ಟರ್ ಆಫ್ ಶಿಪ್ಪಿಂಗ್ (ಐಆರ್ಎಸ್) ನಿಗದಿಪಡಿಸಿರುವ ಸುರಕ್ಷತೆ ಮತ್ತು ಗುಣಮಟ್ಟದ ಮಾನದಂಡಗಳಿಗೆ ಅನುಗುಣವಾಗಿಯೇ ನಿರ್ಮಿಸಲಾಗಿದ್ದು, ನೌಕೆ ಗಟ್ಟಿಮುಟ್ಟಾಗಿ, ಸುರಕ್ಷಿತವಾಗಿ ಮತ್ತು ಸಮುದ್ರದಲ್ಲಿ ನಂಬಿಕಾರ್ಹವಾಗಿರುವಂತೆ ಖಾತ್ರಿಪಡಿಸಲಾಗಿದೆ. ಭಾರತೀಯ ನೌಕಾಪಡೆ ತನ್ನ ಮೊದಲ ಡೈವಿಂಗ್ ನೆರವು ನೌಕೆಯಾದ ಡಿಎಸ್ಸಿ ಎ20ಯನ್ನು ಅಧಿಕೃತವಾಗಿ ಸೇರ್ಪಡೆಗೊಳಿಸಿದೆ. ಈ ನೌಕೆಯನ್ನು ಕೋಲ್ಕತಾದ ತಿತಾಘರ್ ರೈಲ್ ಸಿಸ್ಟಮ್ಸ್ ಸಂಪೂರ್ಣ ದೇಶೀಯವಾಗಿ ನಿರ್ಮಿಸಿದೆ. ಈ ನೌಕೆ ನೌಕಾಪಡೆಯ ಮುಳುಗುಗಾರರಿಗೆ (ಡೈವರ್ಗಳು) ನೀರಿನಾಳದಲ್ಲಿ ರಕ್ಷಣಾ ಕಾರ್ಯಾಚರಣೆ, ದುರಸ್ತಿ ಮತ್ತು ನಿರ್ವಹಣಾ ಕಾರ್ಯಗಳನ್ನು ನಡೆಸಲು ನೆರವಾಗುತ್ತದೆ. ಪ್ರಸ್ತುತ ನೌಕೆಯ ನಿರ್ಮಾಣದ ಮೂಲಕ ಭಾರತ ಈಗ ತಾನು ಅತ್ಯಾಧುನಿಕವಾದ ನೌಕಾ ಉಪಕರಣಗಳನ್ನು ವಿದೇಶಗಳ ಮೇಲಿನ ಅವಲಂಬನೆ ಇಲ್ಲದೆ, ದೇಶದೊಳಗೆ ತಾನೇ ತಯಾರಿಸಬಲ್ಲೆ ಎನ್ನುವುದನ್ನು ಸಾಬೀತುಪಡಿಸಿದೆ. ನೌಕೆಯ ಅಧಿಕೃತ ಸೇರ್ಪಡೆಯ ಸಮಾರಂಭ ಡಿಸೆಂಬರ್ 16, 2025ರಂದು ಕೊಚ್ಚಿಯ ನೌಕಾನೆಲೆಯಲ್ಲಿ ನೆರವೇರಿತು. ಈ ನೌಕೆಯನ್ನು 2025ರ ಸೆಪ್ಟಂಬರ್ ತಿಂಗಳಲ್ಲೇ ನೌಕಾಪಡೆಗೆ ಪೂರೈಸಲಾಗಿತ್ತು. ಭಾರತೀಯ ರಕ್ಷಣಾ ಸಚಿವಾಲಯ ಫೆಬ್ರವರಿ 12, 2021ರಂದು ಕೋಲ್ಕತಾದ ತಿತಾಘರ್ ರೈಲ್ ಸಿಸ್ಟಮ್ಸ್ ಸಂಸ್ಥೆಯೊಡನೆ ಭಾರತೀಯ ನೌಕಾಪಡೆಯ ಬಳಕೆಗಾಗಿ ಐದು ಡೈವಿಂಗ್ ಬೆಂಬಲ ನೌಕೆಗಳನ್ನು ನಿರ್ಮಿಸುವ ಒಪ್ಪಂದಕ್ಕೆ ಸಹಿ ಹಾಕಿತ್ತು. ಅಂದರೆ, ಡಿಎಸ್ಸಿ ಎ20 ಇಂತಹ ಐದು ನೌಕೆಗಳ ಪೈಕಿ ಮೊದಲನೆಯ ನೌಕೆಯಾಗಿದ್ದು, ಮುಂದಿನ ವರ್ಷಗಳಲ್ಲಿ ನಮ್ಮ ನೌಕಾಪಡೆಯ ಸಾಮರ್ಥ್ಯಗಳನ್ನು ವೃದ್ಧಿಸಲಿದೆ. ವಿನ್ಯಾಸ ಹಂತದಲ್ಲಿ ನೌಕೆ ಎನ್ಎಸ್ಟಿಎಲ್ ವಿಶಾಖಪಟ್ಟಣಂನಲ್ಲಿ ಹಲವಾರು ಹೈಡ್ರೋಡೈನಾಮಿಕ್ ಅನಾಲಿಸಿಸ್ ಎನ್ನಲಾಗುವ ನೀರಿನ ಹರಿವಿನ ಪರೀಕ್ಷೆಗಳಿಗೆ ಒಳಗಾಗಿತ್ತು. ಅಂದರೆ, ಹಡಗು ನೀರಿನ ಮೂಲಕ ಹೇಗೆ ಸೀಳಿಕೊಂಡು ಮುಂದೆ ಸಾಗುತ್ತದೆ ಎನ್ನುವುದನ್ನು ಪರಿಶೀಲಿಸಲು, ಸಮತೋಲನ ಹೊಂದಿರುತ್ತದೆಯೇ ಮತ್ತು ಸಮುದ್ರದಲ್ಲಿ ಹೇಗೆ ಸುರಕ್ಷಿತವಾಗಿರುತ್ತದೆ ಎಂದು ಪರಿಶೀಲಿಸಲು ಕೃತಕ ಅಲೆಗಳು ಮತ್ತು ಹರಿವುಗಳನ್ನು ಸೃಷ್ಟಿಸಿ ಅದರಲ್ಲಿ ಪರೀಕ್ಷಿಸಲಾಗುತ್ತದೆ. ಮುಳುಗು ಬೆಂಬಲ ನೌಕೆಗಳು ಅತ್ಯಂತ ಪ್ರಕ್ಷುಬ್ಧವಾದ ಸಮುದ್ರದಲ್ಲೂ ಸಂಪೂರ್ಣ ಸ್ಥಿರವಾಗಿ ನಿಲ್ಲಬೇಕಿರುವುದರಿಂದ, ಈ ಪರೀಕ್ಷೆಗಳು ಅತ್ಯಂತ ಮುಖ್ಯವಾಗಿವೆ. ಏಕೆಂದರೆ, ಮುಳುಗುಗಾರರು ನೀರಿನಾಳದಲ್ಲಿ ತಮ್ಮ ಸುರಕ್ಷತೆಗೆ ಇದೇ ನೌಕೆಯ ಮೇಲೆ ಅವಲಂಬಿತರಾಗಿರುತ್ತಾರೆ. ಡಿಎಸ್ಸಿ ಎ20ಯನ್ನು ಇಂಡಿಯನ್ ರಿಜಿಸ್ಟರ್ ಆಫ್ ಶಿಪ್ಪಿಂಗ್ (ಐಆರ್ಎಸ್) ನಿಗದಿಪಡಿಸಿರುವ ಸುರಕ್ಷತೆ ಮತ್ತು ಗುಣಮಟ್ಟದ ಮಾನದಂಡಗಳಿಗೆ ಅನುಗುಣವಾಗಿಯೇ ನಿರ್ಮಿಸಲಾಗಿದ್ದು, ನೌಕೆ ಗಟ್ಟಿಮುಟ್ಟಾಗಿ, ಸುರಕ್ಷಿತವಾಗಿ ಮತ್ತು ಸಮುದ್ರದಲ್ಲಿ ನಂಬಿಕಾರ್ಹವಾಗಿರುವಂತೆ ಖಾತ್ರಿಪಡಿಸಲಾಗಿದೆ. ಡಿಎಸ್ಸಿ ಎ20 ಕೆಟಮರಾನ್ ವಿನ್ಯಾಸವನ್ನು ಬಳಸುತ್ತದೆ. ಅಂದರೆ, ಇದು ಎರಡು ಪ್ರತ್ಯೇಕ ಹಲ್ಗಳನ್ನು (ಹಲ್ ಎಂದರೆ ಹಡಗಿನ ಮುಖ್ಯ ತೇಲುವ ಭಾಗ) ಒಂದರ ಪಕ್ಕ ಒಂದರಂತೆ ಹೊಂದಿರುತ್ತದೆ. ಈ ವಿನ್ಯಾಸ ನೌಕೆಗೆ ಉತ್ತಮ ಸಮತೋಲನ ಮತ್ತು ಸಮುದ್ರದಲ್ಲಿ ಹೆಚ್ಚಿನ ಸ್ಥಿರತೆ ಒದಗಿಸುತ್ತದೆ. ಇಂತಹ ಅವಳಿ ಹಲ್ ವಿನ್ಯಾಸ ವಿಶೇಷವಾಗಿ ಡೈವಿಂಗ್ ಕಾರ್ಯಾಚರಣೆಗಳಿಗೆ ಹೆಚ್ಚು ಮುಖ್ಯವಾಗಿದ್ದು, ಇದರಿಂದ ಮುಳುಗುಗಾರರು ನೀರಿನೊಳಗೆ ಜಿಗಿಯುವಾಗ ಅಥವಾ ಮೇಲಕ್ಕೆ ಬರುವಾಗ ನೌಕೆ ಹೆಚ್ಚು ತುಯ್ದೆಡುವುದನ್ನು ತಪ್ಪಿಸಲು ಸಾಧ್ಯವಾಗುತ್ತದೆ. ಭಾರತದ ಬಳಿ ಸಾಕಷ್ಟು ಸಾಮಾನ್ಯ ಬೋಟುಗಳು ಮತ್ತು ಹಡಗುಗಳು ಇರುವಾಗ, ಈ ವಿಶೇಷ ಡೈವಿಂಗ್ಗೆ ನೆರವು ನೀಡುವ ನೌಕೆಯ ಅಗತ್ಯವೇನು ಎಂದು ನಿಮಗೆ ಅನಿಸಬಹುದು. ಇದಕ್ಕೆ ಉತ್ತರ, ನೀರಿನಾಳದಲ್ಲಿ ನಡೆಸುವ ಕಾರ್ಯಾಚರಣೆಗಳಿಗೆ ಬೇಕಾಗುವ ವಿಶಿಷ್ಟ ಅವಶ್ಯಕತೆಗಳಲ್ಲಿದೆ. ಮಾಮೂಲಿ ಹಡಗುಗಳನ್ನು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಸಾಗುವ ನಿಟ್ಟಿನಲ್ಲಿ ವಿನ್ಯಾಸಗೊಳಿಸಲಾಗಿರುತ್ತದೆ. ಆದರೆ, ಡೈವಿಂಗ್ ಬೆಂಬಲ ನೌಕೆಗಳು ಒಂದು ರೀತಿ ತೇಲಾಡುವ ಕಾರ್ಯಾಗಾರಗಳಿದ್ದಂತೆ. ಮುಳುಗುಗಾರರು ನೀರಿನಾಳದಲ್ಲಿ ಕೆಲಸ ಮಾಡುತ್ತಿರುವಾಗ, ಈ ನೌಕೆಗಳು ಸಂಪೂರ್ಣ ನಿಶ್ಚಲವಾಗಿ ಒಂದೇ ಜಾಗದಲ್ಲಿ ಹಲವಾರು ಗಂಟೆಗಳ ಕಾಲ ನಿಂತಿರಬೇಕಾಗುತ್ತದೆ. ಇವುಗಳು ಏರ್ ಕಂಪ್ರೆಸರ್, ಸಂವಹನ ವ್ಯವಸ್ಥೆಗಳು ಮತ್ತು ಸುರಕ್ಷತಾ ಚೇಂಬರ್ಗಳನ್ನು ಹೊಂದಿದ್ದು, ದೈನಂದಿನ ಹಡಗುಗಳು ಅಥವಾ ನೌಕೆಗಳು ಈ ವ್ಯವಸ್ಥೆಗಳನ್ನು ಹೊಂದಿರುವುದಿಲ್ಲ. ಇವುಗಳ ನಡುವಿನ ವ್ಯತ್ಯಾಸವನ್ನು ಒಂದು ಕಾರ್ ಮತ್ತು ಆಂಬುಲೆನ್ಸ್ ನಡುವಿನ ವ್ಯತ್ಯಾಸಕ್ಕೆ ಹೋಲಿಸಬಹುದು. ಎರಡೂ ವಾಹನಗಳು ಚಕ್ರಗಳು ಮತ್ತು ಇಂಜಿನ್ಗಳನ್ನು ಹೊಂದಿದ್ದರೂ, ಆಂಬುಲೆನ್ಸ್ ಜೀವರಕ್ಷಕ ಉಪಕರಣಗಳನ್ನು ಹೊಂದಿ, ಕಾರಿಗಿಂತ ಸಂಪೂರ್ಣ ಭಿನ್ನವಾದ ಉದ್ದೇಶವನ್ನು ಪೂರೈಸುತ್ತದೆ. ನೀರಿನಾಳದಲ್ಲಿ ನಡೆಸುವ ದುರಸ್ತಿ ಕಾರ್ಯಗಳಿಗೆ, ಸುರಕ್ಷತಾ ಪರಿಶೀಲನೆಗೆ, ಬಂದರು ಸ್ವಚ್ಛತಾ ಕಾರ್ಯಗಳಿಗೆ ಮತ್ತು ಕರಾವಳಿ ತೀರದಲ್ಲಿ ಪ್ರಮುಖ ಡೈವಿಂಗ್ ಕಾರ್ಯಾಚರಣೆಗಳಿಗೆ ನೆರವಾಗಲು ಈ ನೌಕೆಗೆ ಅತ್ಯಾಧುನಿಕ ಡೈವಿಂಗ್ ಉಪಕರಣಗಳನ್ನು ಅಳವಡಿಸಲಾಗಿರುತ್ತದೆ. ಡೈವಿಂಗ್ ಸಪೋರ್ಟ್ ಕ್ರಾಫ್ಟ್ (ಡಿಎಸ್ಸಿ) ಎ20 ಸೇರ್ಪಡೆ ಒಂದು ಮಹತ್ವದ ಹೆಜ್ಜೆಯಾಗಿದ್ದು, ಭಾರತೀಯ ನೌಕಾ ಸೇನೆಯ ಭಾರತೀಯ ನಿರ್ಮಾಣದ ಹಡಗುಗಳು ಮತ್ತು ನೌಕೆಗಳನ್ನು ಹೊಂದುವ ಯೋಜನೆ ಮತ್ತು ಕೇಂದ್ರ ಸರಕಾರದ ಆತ್ಮನಿರ್ಭರ ಭಾರತ (ಸ್ವಾವಲಂಬಿ ಭಾರತ) ಯೋಜನೆಗಳಿಗೆ ಬೆಂಬಲ ಒದಗಿಸುತ್ತದೆ. ಈ ವಿಶೇಷ ನೌಕೆಯನ್ನು ಭಾರತದಲ್ಲೇ ನಿರ್ಮಿಸಿರುವುದು ಭಾರತದ ರಕ್ಷಣಾ ಉದ್ಯಮದ ಸಾಮರ್ಥ್ಯ ಹೆಚ್ಚುತ್ತಿರುವುದನ್ನು ಪ್ರದರ್ಶಿಸಿದ್ದು, ವಿದೇಶೀ ಉಪಕರಣಗಳ ಮೇಲಿನ ಅವಲಂಬನೆಯನ್ನು ಕಡಿಮೆಗೊಳಿಸುವ ಸ್ಪಷ್ಟ ಸಂದೇಶ ನೀಡಿದೆ. ಈ ನೌಕೆ ಎರಡು ಜನರ ರಿಕಂಪ್ರೆಶನ್ ಚೇಂಬರ್ಗಳನ್ನು (ಆರ್ಸಿಸಿ ಡೈವಿಂಗ್ ನಡೆಸಿ ಬಂದ ಬಳಿಕ, ಅಂದರೆ ನೀರಿನಾಳದಲ್ಲಿ ಅಲ್ಲ, ದೇಹದ ಒತ್ತಡವನ್ನು ಸುರಕ್ಷಿತವಾಗಿ ಸಹಜ ಸ್ಥಿತಿಗೆ ತರಲು ಬಳಕೆಯಾಗುತ್ತದೆ) ಹೊಂದಿದೆ. ಇದು ಆಳದ ಮುಳುಗುವಿಕೆ ನಡೆಸಿದ ಬಳಿಕವೂ ಸುರಕ್ಷಿತ ಚೇತರಿಕೆಯನ್ನು ಖಾತ್ರಿಪಡಿಸುತ್ತದೆ. ನೌಕಾಪಡೆಯ ಮುಳುಗುಗಾರರು 30ರಿಂದ 60 ಮೀಟರ್ಗಳಷ್ಟು ಆಳದಲ್ಲಿ ಕಾರ್ಯಾಚರಿಸಬಲ್ಲವರಾಗಿದ್ದು, ಇದರಿಂದ ದೀರ್ಘಾವಧಿಯ ಸುರಕ್ಷಿತ ನೀರಿನಾಳದ ಕಾರ್ಯಾಚರಣೆ ನಡೆಸಲು ಮತ್ತು ಸುಭದ್ರ ಸಾಗರ ಭದ್ರತೆ ಹೊಂದಲು ಸಾಧ್ಯವಾಗುತ್ತದೆ. ಡೈವರ್ಗಳು ಬಲುಬೇಗನೆ ಆಳ ಸಮುದ್ರದಿಂದ ಮೇಲೆ ಬಂದರೆ, ಆಗ ಅವರ ರಕ್ತದಲ್ಲಿ ಸಾರಜನಕದ ಗುಳ್ಳೆಗಳು ಉಂಟಾಗಿ, ಅವರಲ್ಲಿ ಗಂಭೀರ ಅಸ್ವಸ್ಥತೆ ಕಾಣಿಸಿಕೊಳ್ಳುವಂತೆ ಮಾಡಬಹುದು. ಆದರೆ, ಆರ್ಸಿಸಿ ವ್ಯವಸ್ಥೆ ಅವರ ದೇಹವನ್ನು ನಿಧಾನವಾಗಿ ಸಹಜ ಒತ್ತಡಕ್ಕೆ ಕರೆ ತರುವುದರಿಂದ ಇಂತಹ ಅಪಾಯಕಾರಿ ಸನ್ನಿವೇಶಗಳು ನಿರ್ಮಾಣವಾಗುವುದನ್ನು ತಡೆಯಲು ಸಾಧ್ಯವಾಗುತ್ತದೆ. ಈ ನೌಕೆ ನೀರಿನಾಳದಲ್ಲಿ ಹಡಗುಗಳ ಪರಿಶೀಲನೆ ಮತ್ತು ದುರಸ್ತಿ ನಡೆಸಬಲ್ಲದು, ಹುಡುಕಾಟ ಮತ್ತು ರಕ್ಷಣಾ ಡೈವಿಂಗ್ ನಿರ್ವಹಿಸಿ, ಬಂದರುಗಳು ಮತ್ತು ಕರಾವಳಿ ಪ್ರದೇಶಗಳಲ್ಲಿ ಹಾನಿಗೊಳಗಾದ ವಸ್ತುಗಳನ್ನು ಶೋಧಿಸಲು ನೆರವಾಗಬಲ್ಲದು ಮತ್ತು ನೌಕಾಪಡೆಯ ಮುಳುಗುಗಾರರಿಗೆ ತರಬೇತಿ ನೀಡಲು ಸಹಾಯ ಮಾಡಬಲ್ಲದು. ಈ ನೌಕೆ ದೈನಂದಿನ ನಿರ್ವಹಣೆ ಮತ್ತು ತುರ್ತು ನೀರಿನಾಳದ ಕಾರ್ಯಗಳಿಗೆ ಬಹಳ ಮುಖ್ಯವಾಗಿದ್ದು, ಭಾರತೀಯ ನೌಕಾಪಡೆಗೆ ಎಲ್ಲ ಪರಿಸ್ಥಿತಿಗೂ ಉತ್ತಮ ಸಿದ್ಧತೆ ಹೊಂದಿರಲು ನೆರವಾಗುತ್ತದೆ. ಯಾವುದಾದರೂ ಹಡಗನ್ನು ಮರಳಿ ಡಾಕ್ಗೆ ತರದೆ ಅದರ ಪ್ರೊಪೆಲ್ಲರ್ ಅನ್ನು ಜೋಡಿಸುವುದಾಗಲಿ, ಮುಳುಗಿರುವ ಉಪಕರಣಗಳನ್ನು ಹುಡುಕುವುದಾಗಲಿ, ಇಂತಹ ಕಾರ್ಯಗಳನ್ನು ಡಿಎಸ್ಸಿ ಎ20 ವೇಗವಾಗಿ ಮತ್ತು ದಕ್ಷವಾಗಿ ನಿರ್ವಹಿಸುತ್ತದೆ. ಈ ಸಾಧನೆ ಭಾರತದ ಬೆಳೆಯುತ್ತಿರುವ ತಾಂತ್ರಿಕ ಆತ್ಮವಿಶ್ವಾಸ ಮತ್ತು ಸ್ವಾವಲಂಬಿಯಾಗಿ ರಕ್ಷಣಾ ಮೂಲಭೂತ ವ್ಯವಸ್ಥೆಗಳನ್ನು ನಿರ್ಮಿಸಿ, ನಮ್ಮ ಕರಾವಳಿಯನ್ನು ನಾವೇ ರಕ್ಷಿಸುವ ಬದ್ಧತೆಯನ್ನು ಪ್ರತಿನಿಧಿಸುತ್ತದೆ.
ಕನಕನ ಕಿಂಡಿ ಮತ್ತು ನಾರಾಯಣ ಗುರುಗಳ ಕನ್ನಡಿ!
ನಾವೀಗ ಕನ್ನಡಿಯನ್ನು ಹೆಚ್ಚು ಪ್ರೀತಿಸುತ್ತೇವೆ, ಆದರೆ ಅದು ತೋರಿಸುವ ಸತ್ಯವನ್ನು ಸಹಿಸುವುದಿಲ್ಲ. ಕಿಂಡಿಯನ್ನು ಮುಚ್ಚಲು ಯತ್ನಿಸುತ್ತೇವೆ, ಏಕೆಂದರೆ ಅದು ಒಳಗಡೆಯ ಅಸಮಾನತೆಯನ್ನು ಮತ್ತೆ ಮತ್ತೆ ಹೊರಗೆ ತೋರಿಸುತ್ತಲೇ ಇದೆ. ಕನಕನ ಕಿಂಡಿ ಮತ್ತು ಗುರುಗಳ ಕನ್ನಡಿ ನಮ್ಮನ್ನು ಇನ್ನೂ ಪ್ರಶ್ನಿಸುತ್ತಿವೆ- ನೀನು ದೇವರನ್ನು ಹುಡುಕುತ್ತಿದ್ದೀಯಾ ಅಥವಾ ನಿನ್ನ ಭ್ರಮೆಯನ್ನೋ? ನೀನು ಒಳಗೊಳ್ಳುವ ಸಮಾಜ ಕಟ್ಟುತ್ತಿದ್ದೀಯಾ ಅಥವಾ ಗೋಡೆ ಎತ್ತುತ್ತಿದ್ದೀಯಾ? ಜಗತ್ತಿನಲ್ಲೇ ಕನ್ನಡಿಯನ್ನು ಅತ್ಯಂತ ಹೆಚ್ಚು ಪ್ರೀತಿಸುವ ಜನರಿರುವ ದೇಶ ನಮ್ಮದೇ ಇರಬೇಕು. ಕನ್ನಡಿ ನಮ್ಮನ್ನು ನಾವು ನೋಡಿಕೊಳ್ಳುವುದಕ್ಕಿಂತ ಹೆಚ್ಚಾಗಿ ನಮ್ಮನ್ನು ಬೇರೆಯವರು ನೋಡಬೇಕೆನ್ನುವ ಉದ್ದೇಶದಿಂದ ಬಳಕೆಯಾಗುವುದೇ ಹೆಚ್ಚು. ಮಹಾ ಮಾನವತಾವಾದಿ ನಾರಾಯಣ ಗುರುಗಳು ಕೇರಳದ ದೇವಾಲಯಗಳ ಗರ್ಭಗುಡಿಯ ಮುಂದೆ ಅಳವಡಿಸಿದ್ದ ದರ್ಪಣದ ಉದ್ದೇಶ - ನಿಜಾರ್ಥವನ್ನು ನಾವು ಸಾಮಾನ್ಯವಾಗಿ ಅಪಾರ್ಥ ಮಾಡಿಕೊಳ್ಳುತ್ತೇವೆ. ದೇವಾಲಯದಲ್ಲಿ ಕನ್ನಡಿ ಏಕೆ? ದೇವರನ್ನು ನೋಡಲು ಬಂದವನಿಗೆ ತನ್ನ ಮುಖವನ್ನೇ ತೋರಿಸಲೇ? ಹೌದು, ಅದೇ ಗುರುಗಳ ಕ್ರಾಂತಿ. ‘‘ನೀನು ಯಾರು?’’ ಎಂಬ ಪ್ರಶ್ನೆಗೆ ಉತ್ತರ ಹುಡುಕದೇ ದೇವರನ್ನು ಹುಡುಕುವ ಪ್ರಯತ್ನವೇ ದೊಡ್ಡ ಭ್ರಮೆ. ಕನ್ನಡಿ ಭಕ್ತನಿಗೆ ದೇವರನ್ನು ತೋರಿಸುವುದಿಲ್ಲ, ಮೊದಲು ಭಕ್ತನನ್ನೇ ತೋರಿಸುತ್ತದೆ. ನಿನಗೇ ನಿನ್ನ ಮುಖ, ನಿನ್ನ ಕಣ್ಣು, ನಿನ್ನ ನೋಟ -ಇವೆಲ್ಲವೂ ದೇವರ ಹುಡುಕಾಟಕ್ಕೆ ಮೊದಲ ಪಾಠ. ‘‘ಮೂಗಿಲ್ಲದವನಿಗೆ ಕನ್ನಡಿಯ ತೋರಲೇಕೆ..’’ಎಂಬ ವಚನವೊಂದು ನೆನಪಾಗುತ್ತದೆ. ಮೂಗು ಅನ್ನುವುದು ಕೇವಲ ದೇಹದ ಅಂಗವಲ್ಲ; ಅದು ಸತ್ಯವನ್ನು ಅರಿಯುವ ಜ್ಞಾನೇಂದ್ರಿಯದ ರೂಪಕ. ಎರಡು ಕಣ್ಣುಗಳನ್ನು ತದೇಕಚಿತ್ತದಿಂದ ಮೂಗಿನ ತುದಿಗೆ ಕೇಂದ್ರೀಕರಿಸಲು ಸಾಧ್ಯವೇ ಇಲ್ಲ. ಇಟ್ಟರೂ ಅದು ಕ್ಷಣಿಕ. ಹಠಯೋಗದಿಂದ ಅದನ್ನು ಸಾಧಿಸಿಕೊಂಡರೆ ಎದುರುಗಡೆ ಮಸುಕು, ಕತ್ತಲೆ ಮಾಯಮಯವಾಗುತ್ತದೆ. ಆದರೆ ಅದೇ ಹಠವನ್ನು ಹೊಸ ರೀತಿಗೆ ತಿರುಗಿದರೆ, ಅದೇ ಕತ್ತಲೆಯಲ್ಲಿ ಹೊಸ ಬೆಳಕು ಗೋಚರಿಸುತ್ತದೆ. ಬುದ್ಧನಿಗೆ ಆದ ಜ್ಞಾನೋದಯ ಕೂಡ ಇಂತಹದ್ದೇ. ಹಳೆಯ ದೃಷ್ಟಿಯ ಕುಸಿತ, ಹೊಸ ಅರಿವಿನ ಗೋಚರ. ಗುರುಗಳ ಕನ್ನಡಿ ಕೂಡ ಹಾಗೆ ಮೊದಲು ನಮ್ಮಲ್ಲಿಯ ‘‘ನಾನು ಪರಮ ಶ್ರೇಷ್ಠ’’ ಎನ್ನುವ ಭ್ರಮೆಯನ್ನು ಒಡೆದು, ‘‘ನಿಜವಾಗಿ ನಾನು ಯಾರು?’’ ಎನ್ನುವ ಪ್ರಶ್ನೆಯನ್ನು ನಮ್ಮ ಮುಂದೆ ನಿಲ್ಲಿಸುತ್ತದೆ. ಅದೇ ಕಾರಣಕ್ಕೆ ನಾರಾಯಣ ಗುರುಗಳು ದೇವಾಲಯದೊಳಗೆ ಕನ್ನಡಿಯೊಂದಿಗೆ ಗ್ರಂಥಾಲಯಗಳನ್ನು ಸ್ಥಾಪಿಸಿದರು. ಪುಸ್ತಕಗಳು ಆತ್ಮಚಿಂತನೆಗೆ, ಸ್ವವಿಮರ್ಶೆಗೆ, ಲೋಕ ವಿಸ್ತರಣೆಗೆ ಕೊಡುವಷ್ಟು ಶಕ್ತಿ ಬೇರೆ ಯಾವುದೂ ಕೊಡಲಾರವು. ಒಂದು ದೇವಾಲಯದಲ್ಲಿ ಧ್ಯಾನಕ್ಕೆ ಕನ್ನಡಿ, ಜ್ಞಾನಕ್ಕೆ ಪುಸ್ತಕ, ಮನಸ್ಸಿಗೆ ಉದ್ಯಾವನ - ಈ ಮೂರೂ ಸೇರಿದಾಗ ಮಾತ್ರ ಮನುಷ್ಯ ಸಂಪೂರ್ಣನಾಗುತ್ತಾನೆ ಎಂಬುದು ಗುರುಗಳ ಚಿಂತನೆ. ದೇವರು ಕಲ್ಲಿನಲ್ಲಿ ಮಾತ್ರವಲ್ಲ, ತಿಳುವಳಿಕೆಯಲ್ಲಿ, ಅಧ್ಯಯನದಲ್ಲಿ, ಅನುಸಂಧಾನದಲ್ಲಿ, ಪ್ರಶ್ನೆಯಲ್ಲಿ, ವೌನದಲ್ಲೂ ಇರುತ್ತಾನೆ ಎಂಬ ಸಂದೇಶ ಅವರದು. ಹಾಗೆಯೇ ಶ್ರೀಕೃಷ್ಣನ ದರ್ಶನಕ್ಕಾಗಿ ಬಂದ ಕನಕನಿಗೆ, ನೆಲದವನಿಗೆ, ದೇವಾಲಯದ ಒಳಗಡೆ ಪ್ರವೇಶ ನಿರಾಕರಿಸಲ್ಪಟ್ಟಾಗ ಕಿಂಡಿ ಸೃಷ್ಟಿಯಾಗಿ ಕೃಷ್ಣನು ದರ್ಶನ ನೀಡಿದ ಕಥೆ ಕೇವಲ ಭಕ್ತಿಕಥೆ, ದಂತಕತೆ ಅಥವಾ ಕೇವಲ ಕಟ್ಟುಕತೆಯಾಗಿ ಉಳಿಯಬಾರದು. ಅದು ಸಾಮಾಜಿಕ ನ್ಯಾಯದ ಅತ್ಯಂತ ತೀಕ್ಷ್ಣ ರೂಪಕ. ಕಿಂಡಿ ಎಂದರೆ ಚಿಕ್ಕ ರಂಧ್ರ. ಆದರೆ ಆ ರಂಧ್ರವೇ ದೃಷ್ಟಿಗೆ ಚೌಕಟ್ಟು. ಕನ್ನಡಿ - ಕನ್ನಡಕಕ್ಕೆ ಫ್ರೇಮ್ ಇದ್ದಂತೆ - ಅದು ಎಲ್ಲವನ್ನೂ ತೋರಿಸುವುದಿಲ್ಲ, ಆದರೆ ತೋರಿಸುವುದನ್ನೇ ಅತ್ಯಂತ ಸ್ಪಷ್ಟವಾಗಿ ತೋರಿಸುತ್ತದೆ. ದೊಡ್ಡದಾಗಿ ತೋರಿಸುತ್ತದೆ. ಬೇರೆ ಎಲ್ಲವನ್ನು ಬದಿಗಿಟ್ಟು ಅದೊಂದನ್ನೇ ತೋರಿಸುತ್ತದೆ. ಬೇರೆ ಯಾವುದೂ ಕಾಣಿಸದ ಹಾಗೆ ಕಣ್ಣಿಗೆ ಅದೊಂದನ್ನೇ ಗೋಚರಿಸುತ್ತದೆ. ಕನಕನ ಕಿಂಡಿ ಕೇವಲ ದೇವಾಲಯದ ಗೋಡೆಯಲ್ಲಿರುವ ರಂಧ್ರವಲ್ಲ; ಸಮಾಜದ ಗೋಡೆಯಲ್ಲಿ ಬಿದ್ದ ಬಿರುಕು, ಒಳಗೊಳ್ಳುವಿಕೆ, ಪರಸ್ಪರ ದರ್ಶನ, ಸಮರ್ಪಣೆ - ಇವೆಲ್ಲವನ್ನು ಆ ಚಿಕ್ಕ ಕಿಂಡಿ ಒಳಗೊಂಡಿದೆ. ‘‘ನೀನು ಒಳಗೆ ಬರಬಾರದು’’ ಎನ್ನುವ ಸಮಾಜಕ್ಕೆ, ಸ್ವತ: ಭಗವಂತನೇ ಆದ ಕೃಷ್ಣ ‘‘ಬೇಡ, ನಾನೇ ನಿನ್ನ ಕಡೆಗೆ ಬರುತ್ತೇನೆ’’ ಎಂದು ಹೇಳಿದ ಕ್ಷಣ ಅದು. ದೇವರು ಬರೀ ಗೋಡೆಯೊಳಗೆ, ಸ್ಥಾವರದೊಳಗಡೆ ಗರ್ಭಗುಡಿಯೊಳಗೆ ಸೀಮಿತನಲ್ಲ, ತನ್ನನ್ನು ಶುದ್ಧ ಅಂತಃಕರಣದಿಂದ ನಂಬುವ ಈ ನೆಲದ ಯಾವುದೇ ಭಕ್ತನ ಹೃದಯದ ಕಡೆಗೆ ತಿರುಗುವವನು ಎಂಬ ಘೋಷಣೆ. ಇಲ್ಲೇ ನನಗೆ ಇನ್ನೊಂದು ಕಥೆ ನೆನಪಾಗುತ್ತದೆ. ಕಲಿಯುವ ಆಸೆಯಿಂದ ಆಶ್ರಮಕ್ಕೆ ಬಂದ ಶಿಷ್ಯನೊಬ್ಬನಿಗೆ ಪಾಠ ಕಲಿಸುವ ಮುಂಚೆ ಗುರು ‘‘ಮೊದಲು ನೀನು ಅಲ್ಲೇ ಇರುವ ಬಾವಿಯನ್ನು ಇಣುಕಿ ಬಾ’’ ಎಂದು ಹೇಳುತ್ತಾರೆ. ಮೊದಲ ಬಾರಿ ಶಿಷ್ಯನಿಗೆ ನೀರಿನಲ್ಲಿ ತನ್ನ ಮುಖವೇ ಕಾಣಿಸುತ್ತದೆ. ಮತ್ತೆ ಮತ್ತೆ ಅದೇ ಪ್ರಯತ್ನ. ಶಿಷ್ಯನಿಂದ, ‘‘ತಿಳಿ ನೀರಲ್ಲಿ ನನ್ನನ್ನು ನಾನು ನೋಡಿಕೊಂಡೆ’’ ಎಂಬ ಉತ್ತರ. ಗುರುಗಳ ವೌನ. ಕೊನೆಗೆ ಶಿಷ್ಯ ಬಾವಿಕಟ್ಟೆಯ ಮೇಲೆ ಕೂತು ತದೇಕಚಿತ್ತದಿಂದ ನೋಡುತ್ತಿದ್ದಾಗ, ಈ ಬಾರಿ ತನ್ನ ಮುಖ ಕಾಣಿಸದೆ ಆತನಿಗೆ ನೀರಿನ ಆಳದಲ್ಲಿರುವ ಮೀನುಗಳು, ಕಲ್ಲುಗಳು, ಗಿಡಗಂಟಿಗಳು ಕಾಣಿಸುತ್ತವೆ. ಆಗ ಗುರುಗಳು ಹೇಳುತ್ತಾರೆ -‘‘ಈಗ ನಿನಗೆ ಕಲಿಸಬಹುದಾದ ಕಾಲ. ನೀನು ನಿನ್ನನ್ನೇ ನೋಡುವ ಹಂತ ದಾಟಿ, ಲೋಕವನ್ನು ನೋಡುವ ಹಂತಕ್ಕೆ ಬಂದಿದ್ದೀಯ.’’! ಗುರುಗಳ ಕನ್ನಡಿ, ಕನಕನ ಕಿಂಡಿ, ಬಾವಿಯ ತಿಳಿ ನೀರು - ಮೂರೂ ಒಂದೇ ಪಾಠ ಹೇಳುತ್ತವೆ. ಮೊದಲ ಹಂತದಲ್ಲಿ ಮನುಷ್ಯ ತನ್ನನ್ನೇ ನೋಡುತ್ತಾನೆ. ಎರಡನೇ ಹಂತದಲ್ಲಿ ತನ್ನನ್ನೇ ಮರೆತು ಲೋಕವನ್ನು ನೋಡಲು ಕಲಿಯುತ್ತಾನೆ. ಸಾಮಾಜಿಕ ನ್ಯಾಯವೂ ಹಾಗೆಯೇ. ‘ನನ್ನ ಹಕ್ಕು’ ಎಂಬ ಹಂತದಿಂದ ‘ಎಲ್ಲರ ಹಕ್ಕು’ ಎಂಬ ಹಂತಕ್ಕೆ ಸಾಗುವ ಪ್ರಯಾಣ. ಈ ಭೂಮಿ ಈ ನೀರು ಈ ಮಣ್ಣು ಈ ಅನ್ನ ಎಲ್ಲವೂ ಎಲ್ಲರಿಗೂ ಸೇರಿದ್ದು ಎನ್ನುವ ಸಮಾನ ಭಾವ. ಕನಕದಾಸರು ಮತ್ತು ನಾರಾಯಣ ಗುರುಗಳು ಮಾಡಿದ ದೊಡ್ಡ ಪ್ರಯೋಗ, ಭಾಷೆಗಳಲ್ಲಿ ಅವರೆಂದೂ ದೇವರನ್ನು ಕೆಳಗಿಳಿಸಲಿಲ್ಲ, ಅವನನ್ನು ಮೇಲಿಟ್ಟೇ ಮನುಷ್ಯನನ್ನು ಮೇಲೇರಿಸಿದರು. ಸಮಾಜದ ಹಂಚಿಕೆಯ ನ್ಯಾಯವನ್ನು ಸರಿಪಡಿಸಲು, ಬಡವರಿಗೆ, ನೆಲದವರಿಗೆ ಸಮಾನ ಬದುಕು ಒದಗಿಸಲು ಅವರು ಕತ್ತಿ ಹಿಡಿಯಲಿಲ್ಲ, ಸೇನೆ ಕಟ್ಟಲಿಲ್ಲ, ಸಿಂಹಾಸನಕ್ಕೆ ಏರಲಿಲ್ಲ, ಕಿರೀಟ ಧಾರಣೆ ಮಾಡಲಿಲ್ಲ; ಕೇವಲ ಕನ್ನಡಿ ಮತ್ತು ಕಿಂಡಿಯನ್ನು ಹಿಡಿದರು. ಒಂದು ‘‘ನಿನ್ನನ್ನು ನೀನೇ ನೋಡು’’ ಎಂದಿತು. ಇನ್ನೊಂದು ‘‘ನಿನಗೆ ನಿರಾಕರಿಸಲಾದ ದರ್ಶನವೂ ಸಾಧ್ಯ’’ ಎಂದಿತು. ನಾವೀಗ ಕನ್ನಡಿಯನ್ನು ಹೆಚ್ಚು ಪ್ರೀತಿಸುತ್ತೇವೆ, ಆದರೆ ಅದು ತೋರಿಸುವ ಸತ್ಯವನ್ನು ಸಹಿಸುವುದಿಲ್ಲ. ಕಿಂಡಿಯನ್ನು ಮುಚ್ಚಲು ಯತ್ನಿಸುತ್ತೇವೆ, ಏಕೆಂದರೆ ಅದು ಒಳಗಡೆಯ ಅಸಮಾನತೆಯನ್ನು ಮತ್ತೆ ಮತ್ತೆ ಹೊರಗೆ ತೋರಿಸುತ್ತಲೇ ಇದೆ. ಕನಕನ ಕಿಂಡಿ ಮತ್ತು ಗುರುಗಳ ಕನ್ನಡಿ ನಮ್ಮನ್ನು ಇನ್ನೂ ಪ್ರಶ್ನಿಸುತ್ತಿವೆ- ನೀನು ದೇವರನ್ನು ಹುಡುಕುತ್ತಿದ್ದೀಯಾ ಅಥವಾ ನಿನ್ನ ಭ್ರಮೆಯನ್ನೋ? ನೀನು ಒಳಗೊಳ್ಳುವ ಸಮಾಜ ಕಟ್ಟುತ್ತಿದ್ದೀಯಾ ಅಥವಾ ಗೋಡೆ ಎತ್ತುತ್ತಿದ್ದೀಯಾ? ಈ ಪ್ರಶ್ನೆಗಳ ಮಧ್ಯೆ ನಿಂತು ಉತ್ತರ ಹುಡುಕುವಾಗಲೇ ಕನಕ ಮತ್ತು ಗುರುಗಳು ನಮ್ಮ ಸಮಕಾಲೀನರಾಗುತ್ತಾರೆ. ಅವರ ಸಾಧನೆ ಭೂತಕಾಲದಲ್ಲಿಲ್ಲ. ಅದು ನಮ್ಮ ಕಣ್ಣಿನ ಮುಂದೆ, ಕನ್ನಡಿಯೊಳಗೆ, ಕಿಂಡಿಯಾಚೆ ಇನ್ನೂ ಜೀವಂತವಾಗಿದೆ. ಕರುನಾಡಿನ ಮಣ್ಣಿನಲ್ಲಿ ಕನಕದಾಸರು, ಕೇರಳದ ತೀರಗಳಲ್ಲಿ ನಾರಾಯಣ ಗುರುಗಳು - ಇಬ್ಬರದ್ದೂ ಬೇರೆ ಭಾಷೆ, ಬೇರೆ ಭೌಗೋಳಿಕತೆ, ಬೇರೆ ಕಾಲಘಟ್ಟ. ಆದರೆ ಅವರ ಬದುಕಿನ ಮೂಲ ಪ್ರಶ್ನೆ ಒಂದೇ: ನ್ಯಾಯ ಯಾರಿಗೆ? ದೇವರು ಯಾರಿಗೆ? ಸಮಾಜ ಯಾರಿಗಾಗಿ? ಈ ಪ್ರಶ್ನೆಗಳಿಗೆ ಅವರು ಕೇವಲ ಗ್ರಂಥಗಳಲ್ಲಿ ಅಲ್ಲ, ಬದುಕಿನಲ್ಲೇ ಉತ್ತರಿಸಿದರು. ಅದೇ ಅವರ ದೊಡ್ಡ ಸಾಧನೆ. ಕನಕದಾಸರು ಕೆಳಗಡೆಯಿಂದ ಬದುಕನ್ನು ನೋಡಿದವರು. ನೆಲದವನಾಗಿದ್ದ ಕನಕನಿಗೆ ದೇವಾಲಯದ ಬಾಗಿಲುಗಳು ಮುಚ್ಚಿದ್ದವು. ಆದರೆ ದೇವರ ದರ್ಶನ ಮುಚ್ಚಲಿಲ್ಲ. ಉಡುಪಿಯ ಕೃಷ್ಣನ ಕಿಂಡಿ ಒಂದು ಧಾರ್ಮಿಕ ಕಥೆಯಷ್ಟೇ ಅಲ್ಲ; ಅದು ಸಾಮಾಜಿಕ ನ್ಯಾಯದ ಕಿಡಿ- ಕಿಂಡಿ. ‘‘ನೀನು ಒಳಗೆ ಬರಲಾರೆ’’ ಎನ್ನುವ ಸಮಾಜಕ್ಕೆ, ‘‘ನಾನು ಹೊರಗಡೆಯವನತ್ತ ತಿರುಗುತ್ತೇನೆ’’ ಎನ್ನುವ ದೇವರ ಘೋಷಣೆ ಅದು. ಧಾರ್ಮಿಕ ನ್ಯಾಯ ಎಂದರೆ ಪೂಜೆ ಮಾಡುವ ಹಕ್ಕು ಮಾತ್ರವಲ್ಲ, ಗೌರವದಿಂದ ನಿಲ್ಲುವ ಹಕ್ಕು ಕೂಡ ಅನ್ನುವುದನ್ನು ಕನಕದಾಸರು ಆ ಒಂದು ಕಿಂಡಿಯ ಮೂಲಕ ಹೇಳಿಬಿಟ್ಟರು. ಕನಕನ ಕೀರ್ತನೆಗಳಲ್ಲಿ ದೇವರು ಎಲ್ಲೂ ಮೂರ್ತಿಯೊಳಗೆ ಸಿಕ್ಕಿಹಾಕಿಕೊಂಡವನಲ್ಲ. ಅವನು ಹಸಿದವನ ಜೊತೆಗೆ ನಿಂತವನು, ನೋವಿನೊಳಗೆ ಕೂತವನು. ‘‘ಕುಲ ಕುಲ ಕುಲವೆಂದು ಹೊಡೆದಾಡದಿರಿ’’ ಎಂದು ಹೇಳುವಾಗ ಕನಕ ಕೇವಲ ಜಾತಿ ವಿರೋಧ ಮಾಡುತ್ತಿಲ್ಲ; ನ್ಯಾಯ ಹಂಚಿಕೆಯ ವಂಚನೆಯನ್ನು ಬಯಲಿಗೆಳೆಯುತ್ತಿದ್ದಾನೆ. ದೇವರು ಎಲ್ಲರಿಗೂ ಸೇರಿದವನು ಅಂದರೆ, ಸಮಾಜವೂ ಎಲ್ಲರಿಗೂ ಸಮನಾಗಿರಬೇಕು ಎನ್ನುವುದು ಅವರ ಧಾರ್ಮಿಕ ರಾಜಕೀಯ. ಇದಕ್ಕೆ ಸಮಾಂತರವಾಗಿ ಕೇರಳದಲ್ಲಿ ನಾರಾಯಣ ಗುರುಗಳು ದೇವಾಲಯದ ಗೋಡೆಗಳನ್ನೇ ಮರುಪರಿಭಾಷಿಸಿದರು. ‘‘ಒಂದು ಜಾತಿ, ಒಂದು ಧರ್ಮ, ಒಂದೇ ಮತ, ಒಂದು ದೇವರು - ಮಾನವನಿಗೆ’’ ಎನ್ನುವ ವಾಕ್ಯ ಘೋಷಣೆಯಷ್ಟೇ ಅಲ್ಲ; ಅದು ಸಾಮಾಜಿಕ ನ್ಯಾಯದ ನೀತಿಸೂತ್ರ. ಜ್ಞಾನವಿಲ್ಲದೆ ಭಕ್ತಿ ಕುರುಡು, ಪ್ರಶ್ನೆಯಿಲ್ಲದೆ ಧರ್ಮ ಅಪಾಯಕಾರಿಯೆಂದು ಅವರಿಗೆ ಗೊತ್ತಿತ್ತು. ಕೆಳ ಜಾತಿಯವರಿಗೆ ಶಿಕ್ಷಣ, ಸ್ವಾಭಿಮಾನ, ಆತ್ಮಗೌರವ ದೊರಕಿದಾಗಲೇ ಸಾಮಾಜಿಕ ನ್ಯಾಯ ಸಾಧ್ಯ ಎಂಬುದು ಅವರ ಸ್ಪಷ್ಟ ನಿಲುವು. ದೇವಾಲಯವನ್ನು ವೌನದ ಜಾಗವನ್ನಾಗಿಸದೆ, ಚಿಂತನೆಯ ಕೇಂದ್ರವನ್ನಾಗಿಸುವ ಪ್ರಯತ್ನ ಅದು. ಕನಕದಾಸರು ಮತ್ತು ನಾರಾಯಣ ಗುರುಗಳು ಇಬ್ಬರೂ ಧರ್ಮವನ್ನು ಕೆಳಗಡೆಯಿಂದ ಮೇಲಕ್ಕೆ ತಿರುಗಿಸಿದರು. ಅವರು ದೇವರನ್ನು ಮೇಲ್ಜಾತಿ ಮೇಲುವರ್ಗ ಉಳ್ಳವರಿಂದ ಕೆಳಗಿಳಿಸಿ, ನೆಲದವನ ಪಕ್ಕದಲ್ಲಿ ಕುಳ್ಳಿರಿಸಿದರು. ನ್ಯಾಯ ಹಂಚಿಕೆಯ ಪ್ರಶ್ನೆಯನ್ನು ಅವರು ಕಾನೂನಿನಲ್ಲಿ ಅಲ್ಲ, ದೈನಂದಿನ ಬದುಕಿನಲ್ಲಿ ಎತ್ತಿದರು. ಯಾರಿಗೆ ದರ್ಶನ, ಯಾರಿಗೆ ಶಿಕ್ಷಣ, ಯಾರಿಗೆ ಗೌರವ - ಈ ಮೂರು ಪ್ರಶ್ನೆಗಳ ಸುತ್ತಲೇ ಅವರ ಹೋರಾಟ ಸಾಗಿತು. ಇಂದು ನಾವು ಸಾಮಾಜಿಕ ನ್ಯಾಯದ ಬಗ್ಗೆ ಜೋರಾಗಿ ಮಾತನಾಡುತ್ತೇವೆ, ಪ್ರತಿಭಟನೆ ಮಾಡುತ್ತೇವೆ. ಆದರೆ ಧಾರ್ಮಿಕ ನ್ಯಾಯದ ಮಾತು ಬಂದಾಗ ವೌನವಾಗುತ್ತೇವೆ. ಕನಕ ಮತ್ತು ಗುರುಗಳು ನಮಗೆ ಹೇಳಿದ್ದು ಒಂದೇ: ಧರ್ಮ ನ್ಯಾಯವಿಲ್ಲದೆ ಇದ್ದರೆ ಅದು ಶೋಷಣೆಯ ಸಾಧನವಾಗುತ್ತದೆ; ನ್ಯಾಯ ಧರ್ಮವಿಲ್ಲದೆ ಇದ್ದರೆ ಅದು ಕಠೋರವಾಗುತ್ತದೆ. ಕೇರಳ ಮತ್ತು ಕರ್ನಾಟಕದಲ್ಲಿ ಅವರು ಮಾಡಿದ ದೊಡ್ಡ ಸಾಧನೆ ಎಂದರೆ, ಈ ಎರಡನ್ನೂ ಮನುಷ್ಯನ ಬದುಕಿನ ಮಧ್ಯಕ್ಕೆ ತಂದು ನಿಲ್ಲಿಸಿದ್ದು. ಅದಕ್ಕಾಗಿಯೇ ಅವರು ಇನ್ನೂ ಕೂಡ ನಮ್ಮ ಕಾಲದ ಪ್ರಶ್ನೆಗಳಿಗೆ ಉತ್ತರ ಕೊಡುತ್ತಲೇ ಇದ್ದಾರೆ - ಕನ್ನಡಿಯಲ್ಲೂ, ಕಿಂಡಿಯಲ್ಲೂ.! ಇತಿಹಾಸ ಯಾವಾಗಲೂ ಮೇಲಿನಿಂದ ಕೆಳಕ್ಕೆ ಹರಿಯುವ ನದಿಯಲ್ಲ. ಕೆಲವೊಮ್ಮೆ ಅದು ಕೆಳಗಡೆಯಿಂದ ಮೇಲಕ್ಕೆ ಒತ್ತಿಕೊಂಡು ಬರುವ ಬುಗ್ಗೆಯಂತೆ. ಆ ಬುಗ್ಗೆಯ ನೀರು ಮಣ್ಣಿನ ಬಣ್ಣ ಹೊತ್ತುಕೊಂಡೇ ಬರುತ್ತದೆ, ಆದರೆ ಅದೇ ನೀರು ನೆಲವನ್ನು ಹಸಿರುಗೊಳಿಸುತ್ತದೆ. ಕನಕದಾಸರೂ ಹಾಗೆಯೇ, ನಾರಾಯಣ ಗುರುಗಳೂ ಹಾಗೆಯೇ. ಇಬ್ಬರೂ ‘ಕೆಳ ಸಮಾಜ’ ಎನ್ನುವ ಚೌಕಟ್ಟಿನಲ್ಲಿ ಹುಟ್ಟಿ, ಬದುಕನ್ನು ಕೆಳಗಡೆಯಿಂದಲೇ ಪ್ರವೇಶಿಸಿದವರು. ಆದರೆ ಅವರ ಚಿಂತನೆ, ಸಾಧನೆ, ಸಾಮಾಜಿಕ ಪ್ರಯೋಗಗಳು ಮಾತ್ರ ಮೇಲ್ಭಾಗದ ಮಂಟಪಕ್ಕೆ ಸೀಮಿತವಾಗದೆ, ಮನುಷ್ಯನ ಒಳಗಡೆಯನ್ನೇ ನಡುಗಿಸಿದವು.
ವಿಕಸಿತ ಭಾರತ ಶಿಕ್ಷಣ ಅಧಿಷ್ಠಾನ ಮಸೂದೆ 2025: ಒಂದು ಮಹಾ ದುರಂತ
ಈ ಹೊಸದಾದ 2025ರ ಉನ್ನತ ಶಿಕ್ಷಣ ಅಧಿಷ್ಠಾನ ಆಯೋಗದಲ್ಲಿ ರಾಜ್ಯಗಳ ಶಿಕ್ಷಣ ಇಲಾಖೆ, ವಿವಿಗಳಿಗೆ ನೀತಿ ನಿರೂಪಣೆಯಲ್ಲಿ ಸ್ವಾತಂತ್ರವಿರುವುದಿಲ್ಲ. ಕೇಂದ್ರ ಮತ್ತು ರಾಜ್ಯ ವಿಶ್ವವಿದ್ಯಾನಿಲಯಗಳು ಮತ್ತು ಕಾಲೇಜುಗಳಿಗೆ ಆಡಳಿತ ಮತ್ತು ಶೈಕ್ಷಣಿಕ ನೀತಿ ರೂಪಿಸುವ ಪ್ರಕ್ರಿಯೆಯಲ್ಲಿ ಯಾವುದೇ ಜವಾಬ್ದಾರಿಯಿರುವುದಿಲ್ಲ. ಇಲ್ಲಿ ಶಿಕ್ಷಣಕ್ಕಾಗಿ ಕೇಂದ್ರ ಸಲಹಾ ಸಮಿತಿ ಇರುತ್ತದೆ. ಈ ಸಮಿತಿಯು ತನ್ನ ಅಧ್ಯಕ್ಷ ಮತ್ತು ಸದಸ್ಯರಿಂದ ಸಲಹೆ, ಅಭಿಪ್ರಾಯಗಳನ್ನು ಪಡೆದುಕೊಳ್ಳುತ್ತದೆ. ಆದರೆ ಅದಕ್ಕೆ ನಿರ್ಣಯ ತೆಗೆದುಕೊಳ್ಳುವ ಅಧಿಕಾರವಿರುವುದಿಲ್ಲ, ಕಡೆಗೂ ಶಿಕ್ಷಣ ಇಲಾಖೆಗೆ ಅಂತಿಮವಾದ ನಿರ್ಣಾಯಕ ತೀರ್ಮಾನ ಕೈಗೊಳ್ಳುವ ಅಧಿಕಾರವಿರುತ್ತದೆ. ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು 15 ಡಿಸೆಂಬರ್ 2025ರಂದು ಲೋಕಸಭೆಯಲ್ಲಿ ವಿಬಿಎಸ್ಎ(ವಿಕಸಿತ ಭಾರತ ಶಿಕ್ಷಣ ಅಧಿಷ್ಠಾನ ಮಸೂದೆ-2025) ಮಸೂದೆಯನ್ನು ಮಂಡಿಸಿದರು. ಮೋದಿ ನೇತೃತ್ವದ ಕೇಂದ್ರ ಸರಕಾರವು ಎನ್ಇಪಿ 2020ರ ಶಿಫಾರಸುಗಳನ್ನು ಜಾರಿಗೊಳಿಸುವ ಮುಂದುವರಿದ ಭಾಗವಾಗಿ ದೇಶದ ಉನ್ನತ ಶಿಕ್ಷಣದ ವ್ಯವಸ್ಥೆಯನ್ನು ಸಂಪೂರ್ಣ ಕೇಂದ್ರೀಕರಣಗೊಳಿಸಲು ಮುಂದಾಗಿದೆ. ಸಮಗ್ರ ಬದಲಾವಣೆಯ ಹೆಸರಿನಲ್ಲಿ ಇಡೀ ವ್ಯವಸ್ಥೆಯನ್ನು ಒಂದೇ ಸಂಸ್ಥೆಯ ವ್ಯಾಪ್ತಿಯಲ್ಲಿ ತರುತ್ತಿದ್ದಾರೆ. ಶಿಕ್ಷಣ ಇಲಾಖೆಯು ದೇಶದ ಉನ್ನತ ಶಿಕ್ಷಣದ ಮೇಲುಸ್ತುವಾರಿ ಮತ್ತು ನಿಯಂತ್ರಣಕ್ಕಾಗಿ ‘ವಿಕಸಿತ ಭಾರತ ಶಿಕ್ಷಣ ಅಧಿಷ್ಠಾನ’ ಎಂಬ ಹೆಸರಿನ ಒಂದೇ ಆಯೋಗವನ್ನು ಸ್ಥಾಪಿಸುವ ಪ್ರಸ್ತಾವವನ್ನು ಮಾಡಿದೆ. ಇದು ಕಾಯ್ದೆಯಾಗಿ ಜಾರಿಗೆ ಬಂದರೆ ಈಗಿರುವ ಯುಜಿಸಿ (ವಿಶ್ವವಿದ್ಯಾನಿಲಯ ಧನಸಹಾಯ ಆಯೋಗ), ಎಐಸಿಟಿಇ (ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ), ಎನ್ಸಿಟಿಇ (ರಾಷ್ಟ್ರೀಯ ಶಿಕ್ಷಕರ ಶಿಕ್ಷಣ ಮಂಡಳಿ) ಹೊಸ ಆಯೋಗದೊಂದಿಗೆ ವಿಲೀನಗೊಳ್ಳಲಿವೆ. ಭಾರತೀಯ ಉನ್ನತ ಶಿಕ್ಷಣದ ಸಮಗ್ರ ನಿಯಂತ್ರಣಕ್ಕಾಗಿ ‘ವಿಕಸಿತ ಭಾರತ ಶಿಕ್ಷಣ ಅಧಿಷ್ಠಾನ ಆಯೋಗ’ ಸ್ಥಾಪನೆಯಾಗಲಿದೆ. ಇದು ದೇಶದ ಉನ್ನತ ಶಿಕ್ಷಣದ ಅತ್ಯುನ್ನತ ಸಂಸ್ಥೆಯಾಗಲಿದೆ. ಈ ಆಯೋಗವು ಒಬ್ಬ ಅಧ್ಯಕ್ಷ ಹಾಗೂ ಗರಿಷ್ಠ 12 ಸದಸ್ಯರನ್ನು ಹೊಂದಲಿದೆ. ಕೇಂದ್ರ ಸರಕಾರದ ಶಿಫಾರಸಿನ ಮೇರೆಗೆ ರಾಷ್ಟ್ರಪತಿಯವರು ಅಧ್ಯಕ್ಷರನ್ನು ನೇಮಿಸಲಿದ್ದಾರೆ. ಅಧ್ಯಕ್ಷರ ಆರಂಭಿಕ ಅಧಿಕಾರಾವಧಿ ಮೂರುವರ್ಷ ಅದನ್ನು ಐದು ವರ್ಷಗಳವರೆಗೆ ವಿಸ್ತರಿಸಬಹುದು. ಒಮ್ಮೆ ನೇಮಕಗೊಂಡ ಅಧ್ಯಕ್ಷರನ್ನು ಮತ್ತೊಂದು ಅವಧಿಗೆ ನೇಮಕ ಮಾಡುವುದಕ್ಕೂ ಮಸೂದೆ ಅವಕಾಶ ಕಲ್ಪಿಸುತ್ತದೆ. ಮಸೂದೆಯ ಪರಿಶೀಲನೆಗಾಗಿ ಅದನ್ನು ಜೆಪಿಸಿಗೆ(ಜಂಟಿ ಸಂಸದೀಯ ಸಮಿತಿ) ಒಪ್ಪಿಸಲಾಗಿದೆ. ಈ ಮಸೂದೆಯಲ್ಲಿ ‘ಈಗಿನ ಉನ್ನತ ಶಿಕ್ಷಣ ವ್ಯವಸ್ಥೆ ಬಹಳ ವಿಸ್ತಾರವಾಗಿ ಬೆಳೆದಿದ್ದು, ಹಲವು ಸಾಂವಿಧಾನಿಕ ನಿಯಂತ್ರಣ ಪ್ರಾಧಿಕಾರಗಳಿವೆ. ಹೀಗಾಗಿ ಶಿಕ್ಷಣ ಸಂಸ್ಥೆಗಳು ವಿವಿಧ ಸಂಸ್ಥೆಗಳಿಂದ ಹಲವು ಅನುಮತಿ ಪಡೆಯಬೇಕಾಗುತ್ತ್ತದೆ. ಈ ಪ್ರಾಧಿಕಾರಗಳು ನಡೆಸುವ ಪರಿಶೀಲನೆಗಳಿಗೂ ಒಡ್ಡಿಕೊಳ್ಳಬೇಕಿದೆ. ದೇಶದ ಎಲ್ಲ ಶಿಕ್ಷಣ ವ್ಯವಸ್ಥೆಗಳ ಆಡಳಿತ ಮತ್ತು ನಿಯಂತ್ರಣ ಸೇರಿದಂತೆ ಇಡೀ ವ್ಯವಸ್ಥೆಯಲ್ಲಿ ಸಮಗ್ರ ಬದಲಾವಣೆ ತರುವುದಕ್ಕಾಗಿ, ಸುಸ್ಥಿರ ಅಭಿವೃದ್ಧಿಯ ನಾಲ್ಕನೇ ಗುರಿಯೂ ಸೇರಿದಂತೆ 21ನೇ ಶತಮಾನದ ಶಿಕ್ಷಣದ ಮಹತ್ವಾಕಾಂಕ್ಷೆಯ ಗುರಿಗಳಿಗೆ ಅನುಗುಣವಾಗಿ ನಮ್ಮ ದೇಶದ ಸಂಪ್ರದಾಯ ಮತ್ತು ವೌಲ್ಯ ವ್ಯವಸ್ಥೆಗಳಿಗೆ ಪೂರಕವಾಗಿ ಹೊಸ ವ್ಯವಸ್ಥೆ ರೂಪಿಸುವುದಕ್ಕಾಗಿ 2020ರ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಈಗಾಗಲೇ ಜಾರಿಗೊಳಿಸಲಾಗಿದೆ. ಈ ನೀತಿಗಳಿಗೆ ಪೂರಕವಾಗಿ ಈ ಮಸೂದೆಯನ್ನು ಸಿದ್ಧಪಡಿಸಲಾಗಿದೆ. ದೇಶದಲ್ಲಿ ಜಾಗತಿಕ ಗುಣಮಟ್ಟದ ಉನ್ನತ ಶಿಕ್ಷಣ ಸಂಸ್ಥೆಗಳ ಸ್ಥಾಪನೆಗೆ ಮತ್ತು ಉನ್ನತ ಶಿಕ್ಷಣದಲ್ಲಿ ಒಟ್ಟು ದಾಖಲಾತಿ ಅನುಪಾತ (ಜಿಇಆರ್) ಹೆಚ್ಚಾಗಲು ಈ ಮಸೂದೆ ಕೊಡುಗೆ ನೀಡಲಿದೆ’ ಎಂದು ವಿವರಿಸಿದೆ. ಈ ಮಸೂದೆಯಲ್ಲಿ ಮೂರು ಪರಿಷತ್ಗಳಿವೆ: ವಿಕಸಿತ ಭಾರತ ಶಿಕ್ಷಣ ವಿನಿಯಮನ್ ಪರಿಷತ್ (ಭಾರತೀಯ ಉನ್ನತ ಶಿಕ್ಷಣ ನಿಯಂತ್ರಣ ಪರಿಷತ್) ಅಧ್ಯಕ್ಷರು ಮತ್ತು 14 ಸದಸ್ಯರನ್ನು ಹೊಂದಲಿದೆ. ಜವಾಬ್ದಾರಿ: ಆಯೋಗದ ಅಡಿಯಲ್ಲಿ ಶಿಕ್ಷಣ ಸಂಸ್ಥೆಗಳ ನಿಯಂತ್ರಣ, ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಶಿಕ್ಷಣದ ಗುಣಮಟ್ಟ ಕಾಯ್ದುಕೊಳ್ಳಲು ಮತ್ತು ಉತ್ತಮ ಸಂಬಂಧ ಸಾಧಿಸಲು ಕ್ರಮಗಳನ್ನು ಕೈಗೊಳ್ಳುವುದು, ಉನ್ನತ ಶಿಕ್ಷಣದ ಅಂತರ್ರಾಷ್ಟ್ರೀಕರಣಕ್ಕೆ ಪ್ರೋತ್ಸಾಹ ನೀಡುವುದು ಹಾಗೂ ಶಿಕ್ಷಣ ಸಂಸ್ಥೆಗಳು ನಿಯಂತ್ರಣ ನಿಯಮಗಳ ಪಾಲನೆ ಮಾಡುವಂತೆ ನೋಡಿಕೊಳ್ಳುವುದು. ವಿಕಸಿತ ಭಾರತ ಶಿಕ್ಷಣ ಗುಣವತಾ ಪರಿಷತ್ (ಭಾರತೀಯ ಉನ್ನತಶಿಕ್ಷಣ ಮಾನ್ಯತಾ ಪರಿಷತ್) ಅಧ್ಯಕ್ಷರು ಮತ್ತು 14 ಸದಸ್ಯರು ಈ ಜವಾಬ್ದಾರಿ ಶಿಕ್ಷಣ ಸಂಸ್ಥೆಗಳಿಗೆ ಮಾನ್ಯತೆ ನೀಡುವುದು ಮತ್ತು ಮಾನ್ಯತೆ ನೀಡುವ ಸ್ವತಂತ್ರ ವ್ಯವಸ್ಥೆಯ ಮೇಲುಸ್ತುವಾರಿ. ವಿಕಸಿತ ಭಾರತ ಶಿಕ್ಷಣ ಮಾನಕ ಪರಿಷತ್ (ಭಾರತೀಯ ಉನ್ನತ ಶಿಕ್ಷಣ ಮಾನದಂಡ ನಿಗದಿ ಪರಿಷತ್) ಅಧ್ಯಕ್ಷರು ಮತ್ತು 14 ಸದಸ್ಯರು ಇದರಲ್ಲಿ ಇರುತ್ತಾರೆ. ಜವಾಬ್ದಾರಿ: ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿರಬೇಕಾದ ಶೈಕ್ಷಣಿಕ ಗುಣಮಟ್ಟವನ್ನು ನಿಗದಿ ಮಾಡುವುದು ಮತ್ತು ಸಮನ್ವಯ ಸಾಧಿಸುವುದು. ಶಿಕ್ಷಣ ತಜ್ಞರು, ಶಿಕ್ಷಣ ಕ್ಷೇತ್ರದಲ್ಲಿ ತೊಡಗಿರುವವರು, ರಾಜ್ಯ, ಕೇಂದ್ರಾಡಳಿತ ಪ್ರದೇಶಗಳ ಪ್ರತಿನಿಧಿಗಳು, ರಾಜ್ಯ ಉನ್ನತ ಸಂಸ್ಥೆಗಳು ಮತ್ತು ರಾಷ್ಟ್ರೀಯ ಪ್ರಾಮುಖ್ಯದ ಸಂಸ್ಥೆಗಳ ಪ್ರತಿನಿಧಿಗಳು ಅಧಿಷ್ಠಾನದ ಪರಿಷತ್ತುಗಳ ಸದಸ್ಯರಾಗಲಿದ್ದಾರೆ. ದೇಶದಲ್ಲಿರುವ ಎಲ್ಲ ವಿಶ್ವವಿದ್ಯಾನಿಲಯಗಳು (ಕೇಂದ್ರೀಯ, ರಾಜ್ಯ, ಖಾಸಗಿ, ಡೀಮ್), ಅವುಗಳ ವ್ಯಾಪ್ತಿಗೆ ಬರುವ ಕಾಲೇಜುಗಳು, ಸ್ವತಂತ್ರವಾಗಿ ಕಾರ್ಯನಿರ್ವಹಿಸುವ ಶಿಕ್ಷಣ ಸಂಸ್ಥೆಗಳು, ಐಐಟಿ, ಎನ್ಐಟಿ, ಐಐಎಸ್ಇಆರ್, ಐಐಎಂ, ಐಐಐಟಿಗಳು ಸೇರಿದಂತೆ ಕೇಂದ್ರ ಸರಕಾರವು ರಾಷ್ಟ್ರೀಯ ಪ್ರಾಮುಖ್ಯದ ಶಿಕ್ಷಣ ಸಂಸ್ಥೆಗಳು ಎಂದು ಘೋಷಿಸಿರುವ ಸಂಸ್ಥೆಗಳು ಈ ಮಸೂದೆಯ ವ್ಯಾಪ್ತಿಗೆ ಬರುತ್ತವೆ (ಸದ್ಯ ಐಐಟಿ ಮತ್ತು ಐಐಎಂಗಳು ಯುಜಿಸಿ ನಿಯಂತ್ರಣಕ್ಕೆ ಬರುವುದಿಲ್ಲ) ಸಾಧಕ ಬಾಧಕಗಳು ಈ ಆಯೋಗದ ಹೆಸರು, ಪರಿಷತ್ನ ಹೆಸರುಗಳು ಸಂಪೂರ್ಣ ಹಿಂದಿಮಯವಾಗಿವೆ. ಇದು ಹಿಂದಿ ಹೇರಿಕೆ ಎನ್ನುವುದರಲ್ಲಿ ಅನುಮಾನವಿಲ್ಲ. ಪ್ರಸ್ತಾಪ: ಪುಟ 3,334:, ಶರತ್ತು 45 ಮತ್ತು 46ರ ಅನುಸಾರ: ನೀತಿ ನಿರೂಪಣೆಯ ವಿಚಾರಕ್ಕೆ ಸಂಬಂಧಿಸಿದಂತೆ ಆಯೋಗಕ್ಕೆ ನಿರ್ದೇಶನ ನೀಡಲು ಕೇಂದ್ರ ಸರಕಾರಕ್ಕೆ ಸಂಪೂರ್ಣ ಅಧಿಕಾರ ಕೊಡಲಾಗಿದೆ. ಒಂದು ವೇಳೆ ಆಯೋಗ ಮತ್ತು ಪರಿಷತ್ಗಳು ಸೂಕ್ತ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿಲ್ಲ ಎಂದು ಅನಿಸಿದರೆ, ಅವುಗಳ ನಡುವೆ ಭಿನ್ನಾಭಿಪ್ರಾಯ ತಲೆದೋರಿದರೆ ಅಂತಿಮ ನಿರ್ಧಾರ ತೆಗೆದುಕೊಳ್ಳುವ ಅಗತ್ಯ ಉಂಟಾದರೆ ಅವುಗಳನ್ನು ರದ್ದುಗೊಳಿಸಲು ಕೇಂದ್ರ ಸರಕಾರಕ್ಕೆ ಸಂಪೂರ್ಣ ಅಧಿಕಾರ ಕೊಡಲಾಗಿದೆ. ಬಾಧಕ: ಎಲ್ಲಾ ಸಂದರ್ಭಗಳಲ್ಲಿಯೂ ಕೇಂದ್ರ ಸರಕಾರದ ನಿಯಮವೇ ಅಂತಿಮವಾಗಿರುತ್ತದೆ. ಇದು ಆಯೋಗದ ಸ್ವಾಯತ್ತೆಗೆ ಧಕ್ಕೆ ಉಂಟು ಮಾಡುತ್ತದೆ. ಉನ್ನತ ಶಿಕ್ಷಣದ ಆಡಳಿತ, ನಿಯಂತ್ರಣವನ್ನು ಸಂಪೂರ್ಣವಾಗಿ ಕೇಂದ್ರೀಕರಣಗೊಳಿಸಲಾಗಿದೆ. ಆನಂದ ತೇಲ್ತುಂಬ್ಡೆ ಅವರು ‘ಈ ಬದಲಾವಣೆಗಳು ಶಿಕ್ಷಣದ ಸುದಾರಣೆಗಳಲ್ಲ, ನಿರಂಕುಶ ಪ್ರಭುತ್ವದ ಹೇರಿಕೆ’ ಎಂದು ಹೇಳಿದ್ದಾರೆ. ಯುಜಿಸಿ ಮುಂತಾದ ಸ್ವಾಯತ್ತ ಸಂಸ್ಥೆಗಳನ್ನು ವಿಸರ್ಜಿಸಿ ಒಂದು ಆಯೋಗದಲ್ಲಿ ವಿಲೀನಗೊಳಿಸುವುದು ಬಲವರ್ಧನೆ ಎಂದು ಕರೆಯಲಾಗಿದೆ. ಆದರೆ ಕಳೆದ ಹನ್ನೊಂದು ವರ್ಷಗಳ ಮೋದಿ ನೇತೃತ್ವ ಸರಕಾರದ ಆಡಳಿತದ ಅನುಭವದಲ್ಲಿ ಹೇಳುವುದಾದರೆ ಇದು ಸಂಪೂರ್ಣವಾಗಿ ಅಧಿಕಾರ ಕೇಂದ್ರೀಕರಣವಾಗಿದೆ. ಆರೆಸ್ಸೆಸ್ನ ಬ್ರಾಹ್ಮಣವಾದಿ-ಹಿಂದುತ್ವ ಸಿದ್ಧಾಂತದ ಅನುಷ್ಠಾನಕ್ಕೆ ಮುಕ್ತ ಅವಕಾಶ ಕಲ್ಪಿಸಲಾಗಿದೆ. ಈ ಎಲ್ಲಾ ಗೊಂದಲ ಮತ್ತು ಮೋದಿ ನೇತೃತ್ವದ ಸರಕಾರದ ಏಕಪಕ್ಷೀಯ ನಿರ್ಧಾರಗಳಿಗೆ ಮೂಲವು 2005ರಲ್ಲಿ ಆಗಿನ ಯುಪಿಎ ಸರಕಾರ ಸ್ಯಾಮ್ ಪಿತ್ರೋಡಾ ಅಧ್ಯಕ್ಷತೆಯಲ್ಲಿ ರಚಿಸಿದ ರಾಷ್ಟ್ರೀಯ ಜ್ಞಾನ ಆಯೋಗದ ಶಿಫಾರಸುಗಳಲ್ಲಿದೆ. ಈ ಜ್ಞಾನ ಆಯೋಗವು ಉನ್ನತ ಶಿಕ್ಷಣದಲ್ಲಿ ಸ್ವತಂತ್ರವಾದ ನಿಯಂತ್ರಣ ಪ್ರಾಧಿಕಾರದ ರಚನೆಗೆ ಒಲವು ವ್ಯಕ್ತಪಡಿಸುತ್ತದೆ. ನಂತರ 2009ರ ಯಶಪಾಲ್ ಸಮಿತಿಯು ಏಕ ಗವಾಕ್ಷಿ ನಿಯಂತ್ರಣ ಪ್ರಾಧಿಕಾರ ಪರವಾಗಿ ಮಾತನಾಡುತ್ತದೆ. ಅಂದರೆ ಈಗಿರುವ ಸ್ವರೂಪದಲ್ಲಿ ಕೇಂದ್ರದಲ್ಲಿ ಯುಜಿಸಿ ಮತ್ತು ಅದರ ಅಡಿಯಲ್ಲಿ ಬರುವ ಕೇಂದ್ರ, ರಾಜ್ಯ ವಿಶ್ವ ವಿದ್ಯಾನಿಲಯಗಳು, ವೈದ್ಯಕೀಯ, ನರ್ಸಿಂಗ್, ತಂತ್ರಜ್ಞಾನ, ಕೃಷಿ, ಲೆಕ್ಕ ಪರಿಶೋಧಕ, ವಾಸ್ತುಶಿಲ್ಪ ಇತರ ವಲಯಗಳಿಗೆ ಮೇಲ್ವಿಚಾರಣೆ ಮತ್ತು ನಿಯಂತ್ರಣ ಘಟಕಗಳಿರುತ್ತವೆ. ಇವೆಲ್ಲವನ್ನೂ ವಿಸರ್ಜಿಸಿ ಎಲ್ಲವನ್ನು ಒಂದೇ ಆಯೋಗದಡಿ ತರಬೇಕೆಂದು ಯಶಪಾಲ್ ಸಮಿತಿ ಶಿಫಾರಸು ಮಾಡಿತ್ತು. ಬಿಡಿ ಬಿಡಿಯಾದ ಆಡಳಿತ ವ್ಯವಸ್ಥೆಯು ಎಂದಿಗೂ ಅನುಕೂಲಕರವಲ್ಲ, ಉನ್ನತ ಶಿಕ್ಷಣದಲ್ಲಿ ಏಕ ಗವಾಕ್ಷಿಯ ಕೇಂದ್ರೀಕೃತ ಆಡಳಿತ ವ್ಯವಸ್ಥೆ ಇರಬೇಕಾಗುತ್ತದೆ, ಆಗಲೇ ನಿಯಂತ್ರಣ ಸುಲಭವಾಗುತ್ತದೆ ಎಂದು ಎರಡೂ ಆಯೋಗಗಳು ವರದಿ ನೀಡಿದ್ದವು. ಆಗಿನ ಯುಪಿಎ ಸರಕಾರದ ಶಿಕ್ಷಣ ಸಚಿವರಾಗಿದ್ದ ಕಪಿಲ್ ಸಿಬಲ್ ಅವರು ಉನ್ನತ ಶಿಕ್ಷಣವನ್ನು ಕೇಂದ್ರೀಕರಣಗೊಳಿಸಿ ಏಕಗವಾಕ್ಷಿ ಅಡಿಯಲ್ಲಿ ನಿಯಂತ್ರಣ ಸಾಧಿಸಲು ಉನ್ನತ ಶಿಕ್ಷಣ ಮತ್ತು ಸಂಶೋಧನೆಗಾಗಿ ರಾಷ್ಟ್ರೀಯ ಮಂಡಳಿ ತರಲು ಉದ್ದೇಶಿಸಿದ್ದರು. ಈ ಹೊಸದಾದ 2025ರ ಉನ್ನತ ಶಿಕ್ಷಣ ಅಧಿಷ್ಠಾನ ಆಯೋಗದಲ್ಲಿ ರಾಜ್ಯಗಳ ಶಿಕ್ಷಣ ಇಲಾಖೆ, ವಿವಿಗಳಿಗೆ ನೀತಿ ನಿರೂಪಣೆಯಲ್ಲಿ ಸ್ವಾತಂತ್ರವಿರುವುದಿಲ್ಲ. ಕೇಂದ್ರ ಮತ್ತು ರಾಜ್ಯ ವಿಶ್ವವಿದ್ಯಾನಿಲಯಗಳು ಮತ್ತು ಕಾಲೇಜುಗಳಿಗೆ ಆಡಳಿತ ಮತ್ತು ಶೈಕ್ಷಣಿಕ ನೀತಿ ರೂಪಿಸುವ ಪ್ರಕ್ರಿಯೆಯಲ್ಲಿ ಯಾವುದೇ ಜವಾಬ್ದಾರಿಯಿರುವುದಿಲ್ಲ. ಇಲ್ಲಿ ಶಿಕ್ಷಣಕ್ಕಾಗಿ ಕೇಂದ್ರ ಸಲಹಾ ಸಮಿತಿ ಇರುತ್ತದೆ. ಈ ಸಮಿತಿಯು ತನ್ನ ಅಧ್ಯಕ್ಷ ಮತ್ತು ಸದಸ್ಯರಿಂದ ಸಲಹೆ, ಅಭಿಪ್ರಾಯಗಳನ್ನು ಪಡೆದುಕೊಳ್ಳುತ್ತದೆ. ಆದರೆ ಅದಕ್ಕೆ ನಿರ್ಣಯ ತೆಗೆದುಕೊಳ್ಳುವ ಅಧಿಕಾರವಿರುವುದಿಲ್ಲ, ಕಡೆಗೂ ಶಿಕ್ಷಣ ಇಲಾಖೆಗೆ ಅಂತಿಮವಾದ ನಿರ್ಣಾಯಕ ತೀರ್ಮಾನ ಕೈಗೊಳ್ಳುವ ಅಧಿಕಾರವಿರುತ್ತದೆ. ಉನ್ನತ ಶಿಕ್ಷಣದಲ್ಲಿ ರಾಜ್ಯಗಳನ್ನು ಒಳಗೊಳ್ಳಬೇಕಾಗುತ್ತದೆ, ಅವರಿಗೂ ನೀತಿ ನಿರೂಪಣೆಯಲ್ಲಿ ಉತ್ತರದಾಯಿತ್ವವಿರುತ್ತದೆ ಮತ್ತು ಬಾಧ್ಯತೆಯಿರುತ್ತದೆ. ಆದರೆ ಈ ಹೊಸ ಕರಡಿನಲ್ಲಿ ರಾಜ್ಯಗಳಿಗೆ ಬಾಧ್ಯತೆಯ, ಉತ್ತರದಾಯಿತ್ವದ ಅವಕಾಶವನ್ನು ನೀಡಿಲ್ಲ. ಈ ಹಿಂದೆ ಯುಜಿಸಿಯು ಎರಡು ಶ್ರೇಣಿಯ ವ್ಯವಸ್ಥೆಯನ್ನು ಶಿಫಾರಸು ಮಾಡಿತ್ತು. ಅದರಲ್ಲಿ ಆಯೋಗ ಮತ್ತು ಆಡಳಿತ ಮಂಡಳಿ ಇರುತ್ತದೆ. ಈ ಆಡಳಿತ ಮಂಡಳಿಯು ರಾಜ್ಯಗಳ ಪ್ರತಿನಿಧಿಗಳನ್ನು ಒಳಗೊಂಡಿರುತ್ತದೆ ಮತ್ತು ವೈದ್ಯಕೀಯ, ತಂತ್ರಜ್ಞಾನ, ಇಂಜಿನಿಯರಿಂಗ್, ಕೃಷಿ, ಪಶು ವೈದ್ಯಕೀಯ, ನರ್ಸಿಂಗ್ ವಲಯಗಳಿಂದಲೂ ಪ್ರತಿನಿಧಿಗಳನ್ನು ಒಳಗೊಂಡಿರುತ್ತದೆ. ಈ ಪ್ರತಿನಿಧಿಗಳಿಗೆ ನೀತಿ-ನಿರೂಪಣೆಯಲ್ಲಿ, ನಿರ್ಣಯ ರೂಪಿಸುವಲ್ಲಿ ಗುರುತರವಾದ ಜವಾಬ್ದಾರಿಯಿರುತ್ತದೆ ಮತ್ತು ಉತ್ತರದಾಯಿತ್ವವಿರುತ್ತದೆ. ಪ್ರತೀ ಹಂತದಲ್ಲಿಯೂ ಅವರ ಸಲಹೆ ಪಡೆದುಕೊಂಡು ತೀರ್ಮಾನ ಕೈಗೊಳ್ಳಬೇಕಾಗುತ್ತದೆ. ಇದು ಅತ್ಯಂತ ಸೌಹಾರ್ದಯುತವಾದ ವ್ಯವಸ್ಥೆಯಾಗುತ್ತದೆ. ಆದರೆ ಈ ಹೊಸದಾದ ಉನ್ನತ ಶಿಕ್ಷಣ ಆಯೋಗವು ಈ ಎಲ್ಲಾ ಆಶಯಗಳನ್ನು ಕೈಬಿಟ್ಟಿದೆ. ಪ್ರಸ್ತಾಪ : ವಿಕಸಿತ ಅಧಿಷ್ಠಾನ ಆಯೋಗದ ಸಮಿತಿಯ 12 ಸದಸ್ಯರಲ್ಲಿ ಮತ್ತು ಇತರ ಮೂರು ಪರಿಷತ್ಗಳ ತಲಾ 14 ಸದಸ್ಯರ ಪೈಕಿ ರಾಜ್ಯ ಉನ್ನತ ಶಿಕ್ಷಣ ಸಂಸ್ಥೆಗಳಿಂದ ಪ್ರಾಧ್ಯಾಪಕ ಶ್ರೇಣಿಯ ಇಬ್ಬರು ಸದಸ್ಯರು ನೇಮಕಗೊಳ್ಳುತ್ತಾರೆ. ಮೂರು ಪರಿಷತ್ಗಳ ಈ ಮಂಡಳಿಗಳಿಗೆ ತನ್ನ ಅಭಿಪ್ರಾಯಗಳನ್ನು, ಸಲಹೆಗಳನ್ನು ಕೇವಲ ಶಿಫಾರಸು ಮಾಡುವ ಅಧಿಕಾರವಿರುತ್ತದೆ. ನಿರ್ಣಯ ತೆಗೆದುಕೊಳ್ಳುವ ಅಧಿಕಾರವಿರುವುದಿಲ್ಲ. ಆದರೆ ಸಲಹಾ ಸಮಿತಿಯ ಈ ಶಿಫಾರಸುಗಳನ್ನು ಒಪ್ಪುವ ಅಥವಾ ತಿರಸ್ಕರಿಸುವ ಅಧಿಕಾರ ಮೇಲಿನ ಆಯೋಗ ಮತ್ತು ಇಲಾಖೆಗೆ ನೀಡಲಾಗಿದೆ. ಬಾಧಕ : ಈ ನಿಯಮಗಳು ಶೈಕ್ಷಣಿಕ, ಆಡಳಿತಾತ್ಮಕ ಚರ್ಚೆ ಮತ್ತು ನಿರ್ಣಯಗಳ ಸಂದರ್ಭದಲ್ಲಿ ಪ್ರತೀ ಪರಿಷತ್ನಲ್ಲಿ ರಾಜ್ಯದಿಂದ ಕೇವಲ ಇಬ್ಬರು ಸದಸ್ಯರು ಇರುವುದರಿಂದ ಇದು ರಾಜ್ಯಗಳ ಪಾಲ್ಗೊಳ್ಳುವಿಕೆಯನ್ನೇ ಮಿತಿಗೊಳಿಸುತ್ತದೆ. ರಾಜ್ಯಗಳು ತಮ್ಮ ಸಲಹೆಗಳನ್ನು ಮಂಡಿಸಬಹುದೇ ಹೊರತು ನಿರ್ಣಯಗಳನ್ನು ತೆಗೆದುಕೊಳ್ಳುವ ಅಧಿಕಾರವಿರುವುದಿಲ್ಲ. ಆ ಮೂಲಕ ಪ್ರಜಾಪ್ರಭುತ್ವದ ಒಕ್ಕೂಟದ ಆಶಯಗಳನ್ನೇ ದುರ್ಬಲಗೊಳಿಸುತ್ತದೆ ಮತ್ತು ಉನ್ನತ ಶಿಕ್ಷಣ ವ್ಯವಸ್ಥೆಯನ್ನೇ ಕೇಂದ್ರೀಕರಣಗೊಳಿಸುತ್ತದೆ. ಈ ಆಯೋಗ ಮತ್ತು ಪರಿಷತ್ಗಳ ಸದಸ್ಯರ ಪೈಕಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಅಧಿಕಾರಶಾಹಿಯ ಪ್ರತಿನಿಧಿಗಳಿದ್ದಾರೆ. ಶೈಕ್ಷಣಿಕ ವಲಯದಿಂದ ಪ್ರತೀ ಮಂಡಳಿಗೆ ಕೇವಲ ಇಬ್ಬರು ಪ್ರತಿನಿಧಿಗಳಿರುತ್ತಾರೆ. ಇದು ಇಡೀ ಆಯೋಗದ ಕಾರ್ಯನಿರ್ವಹಣೆಯನ್ನು ‘ಅಧಿಕಾರಶಾಹೀಕರಣ’ಗೊಳಿಸುತ್ತದೆ. ಶೈಕ್ಷಣಿಕ ವಿಚಾರಗಳಿಗೆ, ವ್ಯಾಸಂಗಕ್ರಮ(ಪೆಡಗಾಜಿ) ಸಂಬಂಧಿಸಿದಂತೆ ಈ ಅಧಿಕಾರಶಾಹಿ ನೀತಿ ರೂಪಿಸುತ್ತದೆ. ಇದು ಸ್ವಾಗತಾರ್ಹವಲ್ಲ. ಇದು ಶಿಕ್ಷಣ ಆಯೋಗವಲ್ಲ, ಬದಲಿಗೆ ಕಾರ್ಯಾಂಗ ಹಿಡಿತದ ಆಯೋಗ ಎನ್ನಬಹುದು ಸರಕಾರವು ಈ ಹೊಸ ಆಯೋಗದ ಮೂಲಕ ಶೈಕ್ಷಣಿಕ ಸುಧಾರಣೆಯ ಬದಲಾಗಿ ಆಡಳಿತ ಸುಧಾರಣೆಯನ್ನು ಆದ್ಯತೆಯಾಗಿ ಪರಿಗಣಿಸಿದಂತಿದೆ. ಮಂಡಳಿಗಳಿಗೆ ನೇಮಕಾತಿಯಲ್ಲಿ ಸಾಮಾಜಿಕ ನ್ಯಾಯದ ಸ್ವರೂಪವನ್ನು, ನೀತಿ ನಿಯಮಾವಳಿಗಳನ್ನು ಎಲ್ಲಿಯೂ ಸ್ಪಷ್ಟವಾಗಿ ಉಲ್ಲೇಖಿಸಿಲ್ಲ. ಅಧ್ಯಕ್ಷರ, ಸದಸ್ಯರ ಆಯ್ಕೆ ನೇಮಕಾತಿ ದಲಿತ, ತಳ ಸಮುದಾಯ, ಅಲ್ಪಸಂಖ್ಯಾತರನ್ನು ಒಳಗೊಂಡಂತೆ ನೇಮಕವಾಗುತ್ತದೆಯೇ ಎನ್ನುವುದರ ಕುರಿತು ಈ ಕರಡು ಮಸೂದೆ ವೌನವಾಗಿದೆ. ಐಎಎಸ್ ಹುದ್ದೆಗಳಿಗೆ ಈಗಾಗಲೇ ಹಿಂಬಾಗಿಲ ಪ್ರವೇಶದ ಮೂಲಕ ಸಾಮಾಜಿಕ ನ್ಯಾಯವನ್ನು ಉಲ್ಲಂಸಿದ ಉದಾಹರಣೆ ನಮ್ಮ ಕಣ್ಣ ಮುಂದಿದೆ. ಇಲ್ಲಿಯೂ ಇದೇ ನೀತಿ ಅನುಸರಿಸುವರೇ? ಈ ಕುರಿತು ಎಲ್ಲಿಯೂ ಪಾರದರ್ಶಕತೆ ಕಂಡುಬರುತ್ತಿಲ್ಲ. ಈ ಉನ್ನತ ಶಿಕ್ಷಣ ಆಯೋಗದ ರಚನೆಯ ಮೂಲಕ ವಿಶ್ವವಿದ್ಯಾನಿಲಯಗಳಿಗೆ ದರ್ಜೆಗಳನ್ನು ನಿಗದಿಪಡಿಸಲು ಶಿಕ್ಷಣದಲ್ಲಿ ಶ್ರೇಣೀಕೃತ ವ್ಯವಸ್ಥೆಯನ್ನು ಜಾರಿಗೊಳಿಸಲಾಗುತ್ತದೆ. ಈ ಶ್ರೇಣಿಕೃತ ವ್ಯವಸ್ಥೆಯಲ್ಲಿ ಸಂಪೂರ್ಣ ಸ್ವಾಯತ್ತೆ, ದುಬಾರಿ ಶುಲ್ಕವನ್ನು ವಿಧಿಸುವ ವಿ.ವಿ.ಗಳನ್ನು ವಿಶ್ವ ದರ್ಜೆಯ ಸಂಸ್ಥೆಗಳೆಂದು ಕರೆಯಲಾಗುತ್ತದೆ ಸಾಮಾನ್ಯ ವಿದ್ಯಾರ್ಥಿಗಳಿರುವ ವಿ.ವಿ.ಗಳನ್ನು ಕೆಳದರ್ಜೆ ಎಂದು ಕಪ್ಪುಪಟ್ಟಿಗೆ ಸೇರಿಸುವ ಸಾಧ್ಯತೆಗಳಿವೆ ಪ್ರಸ್ತಾಪ: ಈ ವಿಕಸಿತ ಭಾರತ ಶಿಕ್ಷಣ ಅಧಿಷ್ಠಾನ ಆಯೋಗಕ್ಕೆ(ವಿಬಿಎಸ್ಎ) ಹಣಕಾಸಿನ ಜವಾಬ್ದಾರಿ ನೀಡಿಲ್ಲ. ಇದರ ಆಡಳಿತ ಮತ್ತು ಶೈಕ್ಷಣಿಕ ಗುಣಮಟ್ಟದ ಮೇಲೆ ಮಾತ್ರ ಹೆಚ್ಚಿನ ಸುಧಾರಣೆಗಳನ್ನು ತರಬೇಕು, ಅದಕ್ಕೆ ಹಣಕಾಸಿನ ನಿರ್ವಹಣೆ ಹೆಚ್ಚುವರಿ ಹೊರೆಯಾಗುತ್ತದೆ ಎಂದು ಪ್ರತಿಪಾದಿಸಿರುವ ಕೇಂದ್ರ ಶಿಕ್ಷಣ ಇಲಾಖೆ ಆಡಳಿತ/ಶೈಕ್ಷಣಿಕ ಹಾಗೂ ಹಣಕಾಸಿನ ನಿರ್ವಹಣೆ ಎರಡನ್ನು ಪ್ರತ್ಯೇಕಿಸಿದೆ. ವಿಬಿಎಸ್ಎ ಕೇವಲ ಶೈಕ್ಷಣಿಕ ಮತ್ತು ಆಡಳಿತದ ಜವಾಬ್ದಾರಿ ಹೊಂದಿರುತ್ತದೆ. ಹಣಕಾಸಿನ ನಿರ್ವಹಣೆಯ ಎಲ್ಲಾ ಜವಾಬ್ದಾರಿಯನ್ನು ಶಿಕ್ಷಣ ಇಲಾಖೆಗೆ ವಹಿಸಲಾಗಿದೆ.(ಪುಟ 37, ಕ್ರ.ಸಂ.3) ಬಾಧಕ : ಈ ಹೊಸ ನೀತಿಯಿಂದಾಗಿ ಅಧಿಷ್ಠಾನ ಆಯೋಗವು ತನ್ನ ಆಡಳಿತಾತ್ಮಕ ನಿರ್ಣಯಗಳಿಗೆ ಅವಶ್ಯಕವಾದ ಹಣಕಾಸಿನ ನೆರವನ್ನು ಶಿಕ್ಷಣ ಇಲಾಖೆಯ ಮೇಲೆ ಅವಲಂಬಿತವಾಗಬೇಕಾಗುತ್ತದೆ. ಉನ್ನತ ಶಿಕ್ಷಣದ ಹಣಕಾಸಿನ ಜವಾಬ್ದಾರಿಯು ನೇರವಾಗಿ ಒಂದು ರಾಜಕೀಯ ಪಕ್ಷ ಆಡಳಿತವಿರುವ ಇಲಾಖೆಯ ಸುಪರ್ದಿಗೆ ಸೇರಿದಾಗ ಇಡೀ ಧನ ಸಹಾಯದ, ವಿನಿಯೋಗದ ಪ್ರಕ್ರಿಯೆಯು ರಾಜಕೀಯಗೊಳ್ಳುತ್ತದೆ. ಆಗ ಎಲ್ಲಾ ಕೇಂದ್ರ, ರಾಜ್ಯ ವಿವಿಗಳು ಈ ಇಲಾಖೆಯ ಮರ್ಜಿಯಲ್ಲಿರಬೇಕಾಗುತ್ತದೆ. ರಾಜ್ಯಗಳು ತನ್ನ ಭಿನ್ನಾಭಿಪ್ರಾಯಗಳನ್ನು ವ್ಯಕ್ತಪಡಿಸಿದರೆ ಇಲಾಖೆಯಿಂದ ಸೂಕ್ತ ಹಣಕಾಸಿನ ನೆರವು ಕಡಿತಗೊಳ್ಳುವ ಭಯದ ಕತ್ತಿ ಸದಾ ತೂಗಾಡುತ್ತಿರುತ್ತದೆ. ಈ ಪರಾವಲಂಬಿತನವು ಶಿಕ್ಷಣ ಆಯೋಗದ ಹಲ್ಲು, ಉಗುರುಗಳನ್ನು ಕಿತ್ತಂತಾಗುತ್ತದೆ. ಜೊತೆಗೆ ಶಿಕ್ಷಣ ಇಲಾಖೆಯು ವಿಶ್ವವಿದ್ಯಾನಿಲಯಗಳ ಆಡಳಿತದಲ್ಲಿ ನೇರವಾಗಿ ಹಸ್ತಕ್ಷೇಪ ಮಾಡುವ ಅವಕಾಶ ಕಲ್ಪಿಸಿಕೊಡುತ್ತದೆ. ಅಲ್ಲಿಗೆ ಅದರ ಸ್ವಾಯತ್ತೆಗೆ ಧಕ್ಕೆ ಉಂಟಾಗುತ್ತದೆ. ಶಿಕ್ಷಣದಲ್ಲಿ ಸಾರ್ವಜನಿಕ ಹೂಡಿಕೆಯನ್ನು ಉತ್ತೇಜಿಸಬೇಕಾದ ಸಂದರ್ಭದಲ್ಲಿ ಈ ಉನ್ನತ ಶಿಕ್ಷಣ ಆಯೋಗದ ಸ್ವರೂಪವು ಸರಕಾರವೇ ಆರ್ಥಿಕ ಅನುದಾನವನ್ನು ಕಡಿತಗೊಳಿಸಲು ಸಹಕಾರಿಯಾಗುವಂತೆ ರಚನೆಯಾಗಲಿದೆ. ಯುಜಿಸಿ ಅಧ್ಯಕ್ಷರಾಗಿದ್ದ ಥೋರಟ್ ಅವರು ‘‘ಇಂಗ್ಲೆಂಡ್ ಒಳಗೊಂಡಂತೆ ಅನೇಕ ರಾಷ್ಟ್ರಗಳಲ್ಲಿ ಉನ್ನತ ಶಿಕ್ಷಣದಲ್ಲಿನ ಹಣಕಾಸಿನ ಹಂಚಿಕೆ ಮತ್ತು ಅನುದಾನದ ಜವಾಬ್ದಾರಿಯು ಆಯೋಗಕ್ಕೆ ವಹಿಸಲಾಗುತ್ತದೆ, ಇಲಾಖೆಗಳ ವ್ಯಾಪ್ತಿಗೆ ಬರುವುದಿಲ್ಲ. ಧನ ಸಹಾಯದ ಎಲ್ಲಾ ಚಟುವಟಿಕೆಗಳು ರಾಜಕಾರಣದಿಂದ ಮುಕ್ತವಾಗಿರಬೇಕು’’ ಎಂದು ಹೇಳುತ್ತಾರೆ. ಯೋಜನಾ ಆಯೋಗದಲ್ಲಿ ಶಿಕ್ಷಣಕ್ಕೆ ಕುರಿತಂತೆ ಪ್ರಧಾನ ಸಲಹೆಗಾರರಾಗಿದ್ದ ಅಮಿತಾಭ್ ಭಟ್ಟಾಚಾರ್ಯ ಅವರು ‘‘ಶೇ.50 ಪ್ರಮಾಣಕ್ಕಿಂತಲೂ ಹೆಚ್ಚಿನ ಪ್ರಮಾಣದ ವಿದ್ಯಾರ್ಥಿ/ವಿದ್ಯಾರ್ಥಿನಿಯರು ರಾಜ್ಯ ವಿಶ್ವವಿದ್ಯಾನಿಲಯಗಳಲ್ಲಿ ವ್ಯಾಸಂಗ ಮಾಡುತ್ತಾರೆ. ಈ ರಾಜ್ಯ ವಿ.ವಿ.ಗಳಿಗೆ ಧನ ಸಹಾಯ ಮಾಡುವಾಗ ಎಲ್ಲಿಯೂ ಆರ್ಥಿಕ ಕೊರತೆ ಉಂಟಾಗದಂತೆ ಎಚ್ಚರ ವಹಿಸಬೇಕಾಗುತ್ತದೆ. ಪಾರದರ್ಶಕ ವ್ಯವಸ್ಥೆಯಿರಬೇಕಾಗುತ್ತದೆ. ಆದರೆ ಉನ್ನತ ಶಿಕ್ಷಣ ಆಯೋಗವು ಹಣಕಾಸಿನ ನಿರ್ವಹಣೆ ಮೇಲೆ ಅಧಿಕಾರವಿಲ್ಲದೆ ಎಷ್ಟರ ಮಟ್ಟಿಗೆ ಆಡಳಿತದಲ್ಲಿ ಸುಧಾರಣೆ ತರಬಲ್ಲದು ಎನ್ನುವ ಪ್ರಶ್ನೆಗೆ ಇನ್ನೂ ಉತ್ತರ ದೊರಕಿಲ್ಲ’’ ಎಂದು ಹೇಳುತ್ತಾರೆ ನವ ಉದಾರೀಕರಣದ ಡಬ್ಲುಟಿಒ-ಗ್ಯಾಟ್ ಆದೇಶದಲ್ಲಿ ಬಂಡವಾಳಶಾಹಿ ಹಣಕಾಸಿನ ಕುರಿತು ಹೇಳುವಾಗ ಶಿಕ್ಷಣವು ಒಂದು ಹಕ್ಕಲ್ಲ ಬದಲಾಗಿ ಲಾಭದಾಯಕವಾದ ಉದ್ಯಮ ಎಂದು ಪರಿಗಣಿಸಬೇಕು. ಹೀಗಾಗಿ ಅದನ್ನು ವ್ಯಾಪಾರೀಕರಣಗೊಳಿಸಬೇಕು ಎಂದು ಉಲ್ಲೇಖಿಸಿದೆ. ಪಿ.ವಿ.ನರಸಿಂಹರಾವ್ರಿಂದ ಮೊದಲುಗೊಂಡು ವಾಜಪೇಯಿ, ಮನಮೋಹನ್ ಸಿಂಗ್ ಸರಕಾರಗಳೂ ಸಹ ಡಬ್ಲುಟಿಒ-ಗ್ಯಾಟ್ನ ಈ ಆದೇಶವನ್ನು ಚಾಚೂ ತಪ್ಪದೆ ಬದ್ಧತೆಯಿಂದ ಪಾಲಿಸುತ್ತಲೇ ಬಂದಿವೆ. ಈಗಿನ ಮೋದಿ ನೇತೃತ್ವದ ಸರಕಾರ ಇದನ್ನು ಮತ್ತಷ್ಟು ತೀವ್ರವಾಗಿ ಮುಂದುವರಿಸುತ್ತಿದೆ. ಯುಜಿಸಿಯ ಕಾರ್ಯವೈಖರಿಯಲ್ಲಿನ ತಪ್ಪುಗಳನ್ನು, ಅದರ ರಚನೆಯಲ್ಲಿನ ದೋಷಗಳನ್ನು ಸರಿಪಡಿಸಲು ಕಾರ್ಯಯೋಜನೆಗಳನ್ನು ಹಮ್ಮಿಕೊಳ್ಳಬೇಕಾಗಿದ್ದ ಕೇಂದ್ರ ಶಿಕ್ಷಣ ಇಲಾಖೆ ಸ್ವತಃ ಮೂಗನ್ನೇ ಕುಯ್ದಂತೆ ಯುಜಿಸಿಯನ್ನೇ ವಿಸರ್ಜಿಸಿದೆ. ಬದಲಿಗೆ ಉನ್ನತ ಶಿಕ್ಷಣದ ವ್ಯಾಪಾರೀಕರಣಕ್ಕೆ ಅವಶ್ಯಕವಾದ ನೀತಿನಿಯಮಗಳನ್ನು ರೂಪಿಸಲು ‘ವಿಕಸಿತ ಭಾರತ ಅಧಿಷ್ಠಾನ ಆಯೋಗ’ವನ್ನು ಸ್ಥಾಪಿಸಿದೆ. ಇಂದು ಉನ್ನತ ಶಿಕ್ಷಣ ವ್ಯವಸ್ಥೆಯು ತನ್ನ ಈಗಿನ ಸ್ವರೂಪದಲ್ಲಿ ಅನುತ್ಪಾದಕವಾದ ಉದ್ಯಮ ಎಂದೇ ಮೋದಿ ಸರಕಾರ ಬಲವಾಗಿ ನಂಬಿದೆ. ಇದನ್ನು ಲಾಭದಾಯಕ ಉದ್ಯಮವನ್ನಾಗಿಸಲು ಈ ಮಾದರಿಯ ವ್ಯಾಪಾರೀಕರಣದ ಅವಶ್ಯಕತೆ ಇದೆ ಎಂದು ಜನರನ್ನು ನಂಬಿಸುತ್ತಿದೆ. ಉನ್ನತ ಶಿಕ್ಷಣ ಕೈಗಾರಿಕೀಕರಣವಾಗದೆ ಉಳಿಗಾವಿಲ್ಲ ಎಂದು ಪ್ರತಿಪಾದಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಈ ಶಿಕ್ಷಣ ಆಯೋಗಕ್ಕೆ ಮಾನ್ಯತೆ ದೊರೆತು ತನ್ನ ಕಾರ್ಯನೀತಿಗಳನ್ನು ಜಾರಿಗೊಳಿಸಲು ಮುಂದಾದರೆ ಅಗ ಅವಶ್ಯಕವಾದ ಶೈಕ್ಷಣಿಕ ಸುಧಾರಣೆಗಳು ಹಿನ್ನೆಲೆಗೆ ಸರಿಯಲಿವೆ. ಮಾನವಿಕ ವಿಷಯಗಳ (ಭಾಷೆ, ಸಮಾಜ ವಿಜ್ಞಾನ, ಇತಿಹಾಸ, ಮಾನವಶಾಸ್ತ್ರ, ರಾಜಕೀಯ ವಿಜ್ಞಾನ, ಮಾಧ್ಯಮ, ಇತ್ಯಾದಿ) ಅಧ್ಯಯನಕ್ಕೆ ಬೆಂಬಲ ದೊರಕುವುದಿಲ್ಲ ಮತ್ತು ಉದ್ಯೋಗ ಆಧಾರಿತ ಶಿಕ್ಷಣಕ್ಕೆ, ಮಾರುಕಟ್ಟೆ ಸ್ನೇಹಿ ವಿಷಯಗಳಿಗೆ ವ್ಯಾಪಕ ಪ್ರಚಾರ ಕೊಡಲಾಗುತ್ತದೆ. ವಿಶ್ವವಿದ್ಯಾನಿಲಯಗಳು ವೈಜ್ಞಾನಿಕ ಅನ್ವೇಷಣೆಗೆ, ಸಂಶೋಧನೆಗಳಿಗೆ ತಾಣವಾಗಬೇಕು ಎನ್ನುವ ಆಶಯವೇ ಮೂಲೆಗುಂಪಾಗಲಿದೆ ಈಗಾಗಲೇ ಮೋದಿ ಸರಕಾರ ಶಿಕ್ಷಣದಲ್ಲಿ ಆರ್ಥಿಕ ಅನುದಾನವನ್ನು ಕಡಿತಗೊಳಿಸುತ್ತ ಬಂದಿರುವುದರಿಂದ ಆ ಜಾಗದಲ್ಲಿ ಬಂಡವಾಳ ಆಧರಿಸಿದ ಹಣಕಾಸು ವ್ಯವಸ್ಥೆ ಪ್ರವೇಶ ಪಡೆಯಲಿದೆ. ಸಾರ್ವಜನಿಕ-ಖಾಸಗಿ-ಸಹಭಾಗಿತ್ವ (ಪಿಪಿಪಿ) ವಿಶ್ವ ವಿದ್ಯಾನಿಲಯಗಳ ನೀತಿ ನಿಯಮಾವಳಿಯಾಗಲಿದೆ. ಮತ್ತೊಂದೆಡೆ ಕೇಂದ್ರ, ರಾಜ್ಯ ವಿಶ್ವವಿದ್ಯಾನಿಲಯಗಳು ಆರ್ಥಿಕ ಅನುದಾನಕ್ಕಾಗಿ ಸದಾ ಸರಕಾರವನ್ನು ಸಂಪ್ರೀತಿಗೊಳಿಸುತ್ತಲೇ ಇರಬೇಕಾಗುತ್ತದೆ. ಗುಣಮಟ್ಟದ ಹೆಸರಿನಲ್ಲಿ, ಕಲಿಕೆಯ ಹೆಸರಿನಲ್ಲಿ, ಮೂಲಭೂತ ಸೌಕರ್ಯದ ನೆಪದಲ್ಲಿ ಉನ್ನತ ಶಿಕ್ಷಣವು ಅತ್ಯಂತ ದುಬಾರಿಯಾದ ಶಿಕ್ಷಣವಾಗಲಿದೆ. ದುಬಾರಿಯಾದ ಶುಲ್ಕವನ್ನು ಭರಿಸಲು ಈ ಬಂಡವಾಳ ಹಣಕಾಸು ವ್ಯವಸ್ಥೆಯು ಸಾಲದ ರೂಪದಲ್ಲಿ ಆರ್ಥಿಕ ನೆರವನ್ನು ಒದಗಿಸುತ್ತದೆ. ಒಮ್ಮೆ ಅನುದಾನ ಹಂಚಿಕೆ ರದ್ದುಗೊಂಡರೆ ವಿದ್ಯಾರ್ಥಿಗಳು ಸಾಲದ ಮಾಫಿಯಾದಲ್ಲಿ ಸಿಲುಕುತ್ತಾರೆ. ಸಬ್ಸಿಡಿ ರೂಪದಲ್ಲಿ ವಿದ್ಯಾರ್ಥಿ ಸಾಲವನ್ನು ಪಡೆಯಲೇಬೇಕಾದ ಅನಿವಾರ್ಯತೆಗೆ ಸಿಲುಕುತ್ತಾರೆ ಮತ್ತು ಸಾಲದ ಸುಳಿಯಲ್ಲಿ ಸಿಲುಕಿಕೊಳ್ಳುತ್ತಾರೆ. ಈ ಕಾರಣಕ್ಕೆ ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳು ಸಾಲ ಮರುಪಾವತಿಸಲಾಗದೆ, ತಲೆಗಂದಾಯದ ಚಕ್ರವ್ಯೆಹಕ್ಕೆ ಸಿಲುಕಿ ತಮ್ಮ ಕಲಿಕೆಯನ್ನೇ ಮೊಟಕುಗೊಳಿಸುವ ಅಪಾಯಕ್ಕೆ ಗುರಿಯಾಗಲಿದ್ದಾರೆ. ಮೋದಿ ಸರಕಾರವು ಈ ಮೇಲಿನಂತೆ ತೀವ್ರವಾದ ಬದಲಾವಣೆಗಳ ಮೂಲಕ ಅಂತಿಮವಾಗಿ ಉನ್ನತ ಶಿಕ್ಷಣವನ್ನು ಹಂತ ಹಂತವಾಗಿ ಕೇಂದ್ರೀಕರಣ, ಖಾಸಗೀಕರಣಗೊಳಿಸುವ ತಮ್ಮ ಅಜೆಂಡಾಗಳನ್ನು ಜಾರಿಗೊಳಿಸಲು ಪ್ರಯತ್ನಿಸುತ್ತಿದೆ.
ಹೊಸ ವರ್ಷಾಚರಣೆಗೆ ದಿನಗಣನೆ; ಸಕಲೇಶಪುರದತ್ತ ಜನರ ಚಿತ್ತ; ಹೊಂಸ್ಟೇ, ರೆಸಾರ್ಟ್ಗೆ ಡಿಮ್ಯಾಂಡ್
ಹೊಸ ವರ್ಷಾಚರಣೆಗೆ ಕೆಲವೇ ದಿನಗಳು ಬಾಕಿ ಇರುವಾಗಲೇ ಹಾಸನ ಜಿಲ್ಲೆಯ ಮಲೆನಾಡಿನಲ್ಲಿ ಪ್ರವಾಸೋದ್ಯಮಕ್ಕೆ ಭಾರಿ ಬೇಡಿಕೆ ಸೃಷ್ಟಿಯಾಗಿದೆ. ಸಕಲೇಶಪುರದ ಬಹುತೇಕ ಹೋಂಸ್ಟೆಗಳು ಮತ್ತು ರೆಸಾರ್ಟ್ಗಳು ಈಗಾಗಲೇ ಸಂಪೂರ್ಣವಾಗಿ ಬುಕ್ ಆಗಿವೆ. ಬೆಂಗಳೂರು, ಮೈಸೂರು ಸೇರಿದಂತೆ ಹೊರ ರಾಜ್ಯಗಳ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಜಿಲ್ಲೆಗೆ ಆಗಮಿಸುತ್ತಿದ್ದಾರೆ. ಲಾಡ್ಜ್ಗಳು, ಹೋಟೆಲ್ಗಳು ಗ್ರಾಹಕರನ್ನು ಸೆಳೆಯಲು ಸಿದ್ಧತೆ ನಡೆಸಿವೆ. ಪ್ರವಾಸಿ ಟ್ಯಾಕ್ಸಿಗಳಿಗೂ ಬೇಡಿಕೆ ಹೆಚ್ಚಿದೆ. ಪೊಲೀಸ್ ಇಲಾಖೆ ಸೂಕ್ತ ಮುನ್ನೆಚ್ಚರಿಕೆ ವಹಿಸಿದೆ.
Karnataka Weather: ಶೀತಗಾಳಿಯ ಪರಿಣಾಮ ಡಿಸೆಂಬರ್ 26ರವರೆಗೆ ಈ ಜಿಲ್ಲೆಗಳಲ್ಲಿ ಚಳಿ ಹೆಚ್ಚು
ಕರ್ನಾಟಕದ ಒಳನಾಡಿನಲ್ಲಿ ಉತ್ತರ ಪೂರ್ವ ದಿಕ್ಕಿನ ಗಾಳಿ ಮತ್ತು ಕರಾವಳಿ ಕರ್ನಾಟಕದ ಮೇಲೆ ಪೂರ್ವ ದಿಕ್ಕಿನ ಗಾಳಿಯು ಕೆಳ ಉಷ್ಣವಲಯದ ಮಟ್ಟದಲ್ಲಿ ಮೇಲುಗೈ ಸಾಧಿಸುವ ಸಾಧ್ಯತೆಯಿದೆ. ರಾಜ್ಯದ ಬಯಲು ಪ್ರದೇಶಗಳ ಪೈಕಿ ವಿಜಯಪುರದಲ್ಲಿ ಕನಿಷ್ಠ ತಾಪಮಾನ 6.9 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಕರ್ನಾಟಕದ ಒಳನಾಡಿನ ಹಲವೆಡೆ ಕನಿಷ್ಠ ತಾಪಮಾನ ಸಾಮಾನ್ಯಕ್ಕಿಂತ ಕಡಿಮೆಯಾಗಿದೆ. ಮುಂದಿನ ಒಂದು ವಾರದವರೆಗೆ ಕರ್ನಾಟಕದ
ಹೈಕೋರ್ಟ್ ತಡೆಯಾಜ್ಞೆ ನಡುವೆಯೇ 569 ಮದ್ಯದ ಲೈಸೆನ್ಸ್ ಇ-ಹರಾಜು; ಒಂದು ಸಾವಿರ ಕೋಟಿ ಆದಾಯ ನಿರೀಕ್ಷೆ!
ಅಬಕಾರಿ ಇಲಾಖೆ477 ಚಿಲ್ಲರೆ ಮದ್ಯ ಮಾರಾಟ ಮಳಿಗೆ ಮತ್ತು 92 ರಿಫ್ರೆಶ್ ರೂಮ್ ಸನ್ನದುಗಳನ್ನು ಇ-ಹರಾಜು ಹಾಕಲು ದಿನಾಂಕ ನಿಗದಿ ಮಾಡಿದ್ದು, ಆ ಮೂಲಕ ಒಂದು ಸಾವಿರ ಕೋಟಿ ರೂ. ಆದಾಯ ಸಂಗ್ರಹಿಸಲು ಮುಂದಾಗಿದೆ. ಹೈಕೋರ್ಟ್ ತಡೆಯಾಜ್ಞೆ ನಡುವೆಯೂ ಇಲಾಖೆ ಅಧಿಸೂಚನೆ ಹೊರಡಿಸಿದೆ. ಬೆಂಗಳೂರಿನಲ್ಲಿ 182 ಲೈಸೆನ್ಸ್ ಹರಾಜಿಗೆ ಬರಲಿದೆ. ಇದರಿಂದ ಬೆಂಗಳೂರಿನಲ್ಲಿ ಮದ್ಯ ಮಾರಾಟ ಮಳಿಗೆಗಳ ಸಂಖ್ಯೆ ಹೆಚ್ಚಳವಾಗಲಿದೆ.
ಬೆಂಗಳೂರಿನಲ್ಲಿ ಅಪಾರ್ಟ್ಮೆಂಟ್ಗಳ ನಿರ್ಮಾಣ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ. ಈ ಮಧ್ಯೆ ಒಸಿ ಮತ್ತು ಸಿಸಿ ಪ್ರಮಾಣಪತ್ರಗಳಲ್ಲಿ ಗೊಂದಲ ಉಂಟಾಗಿದೆ. ಇದರಿಂದ ಗೃಹ ಖರೀದಿದಾರರು ಸಂಕಷ್ಟ ಎದುರಿಸುತ್ತಿದ್ದಾರೆ. ರೇರಾ ಕಾಯಿದೆ, ಕೆಎಂಸಿ, ಬಿಬಿಎಂಪಿ, ಜಿಬಿಎ ಕಾಯಿದೆಗಳ ವ್ಯಾಖ್ಯಾನದಲ್ಲಿ ವ್ಯತ್ಯಾಸವಿದೆ. ಇಂತಹ ಗೊಂದಲಗಳಿಗೆ ತೆರೆ ಎಳೆಯುವಂತೆ ಕೋರಿ ಕೆ-ರೇರಾ ಅಧ್ಯಕ್ಷರು ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಇದು ಖರೀದಿದಾರರ ಹಿತಾಸಕ್ತಿ ರಕ್ಷಿಸಲು ಅಗತ್ಯವಾಗಿದೆ ಎನ್ನಲಾಗಿದೆ.
ಬಾಗಲಕೋಟೆ | ಬುದ್ಧಿಮಾಂದ್ಯ ಬಾಲಕನ ಮೇಲೆ ಶಿಕ್ಷಕನಿಂದ ಹಲ್ಲೆ ಆರೋಪ: ಪ್ರಕರಣ ದಾಖಲು
ಬಾಗಲಕೋಟೆ : ಬುದ್ಧಿಮಾಂದ್ಯ ಬಾಲಕನ ಮೇಲೆ ಬೆಲ್ಟ್, ಪ್ಲಾಸ್ಟಿಕ್ ಪೈಪ್ನಿಂದ ಶಿಕ್ಷಕರೊಬ್ಬರು ಹಲ್ಲೆ ಮಾಡಿರುವ ಘಟನೆ ನವನಗರದಲ್ಲಿ ನಡೆದಿರುವುದು ವರದಿಯಾಗಿದೆ. ನವನಗರದ ಸೆಕ್ಟರ್ ನಂ.54 ರಲ್ಲಿರುವ ದಿವ್ಯಜ್ಯೋತಿ ಬುದ್ಧಿಮಾಂದ್ಯ ಮಕ್ಕಳ ಶಾಲೆಯಲ್ಲಿ ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ನೆಲಕ್ಕೆ ಬಿದ್ದು ಹೊರಳಾಡಿದರೂ, ದೀಪಕ್ ರಾಠೋಡ್(16) ಎಂಬ ಬಾಲಕನಿಗೆ ಶಿಕ್ಷಕ ಬಿಡದೇ ಥಳಿಸಿದ್ದಾನೆೆ ಎಂಬ ಆರೋಪ ಕೇಳಿಬಂದಿದೆ. ಶಿಕ್ಷಕ ಅಕ್ಷಯ್ ಇಂದುಳ್ಕೂರ್ ಹಲ್ಲೆ ಮಾಡಿರುವ ಆರೋಪಿ ಎಂದು ಹೇಳಲಾಗುತ್ತಿದೆ. ಹಲ್ಲೆ ವೇಳೆ ಬಾಲಕ ಕಣ್ಣಿಗೆ ಖಾರದಪುಡಿ ಎರಚಿ ಹೇಯ ಕೃತ್ಯ ಸಹ ಮಾಡಿರುವ ಆರೋಪವೂ ಕೇಳಿ ಬಂದಿದೆ. ಈ ಘಟನೆಯಿಂದಾಗಿ ಬುದ್ಧಿಮಾಂದ್ಯ ಕೇಂದ್ರದ ಮುಂದೆ ಪಾಲಕರು ಜಮಾಯಿಸಿದ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಘಟನೆಯು ಪೊಲೀಸ್ ಠಾಣೆ ಮೆಟ್ಟಲು ಏರಿದ್ದರಿಂದ ಸ್ಥಳಕ್ಕೆ ಪೊಲೀಸರು, ಆಗಮಿಸಿ ವಿಚಾರಣೆ ನಡೆಸಿದರು. ಇಂತಹ ಘಟನೆಯಿಂದಾಗಿ ಶಾಲೆಯು ಅನಧಿಕೃತವಾಗಿ ನಡೆಸುತ್ತಿರುವ ಬಗ್ಗೆ ಮಾಹಿತಿ ತಿಳಿದು ಬಂದಿದೆ. ಈ ಮಧ್ಯೆ ನಾವು ಏನು ತಪ್ಪು ಮಾಡಿಲ್ಲ, ಖಾರದ ಪುಡಿ ಎರಚಿಲ್ಲ, ಅಲ್ಲಿನ ಮಕ್ಕಳೇ ಖಾರ ಪುಡಿ ಎರಚಿದ್ದಾರೆ ಎಂದು ಶಿಕ್ಷಕ ಅಕ್ಷಯ್ ಹಾಗೂ ಪತ್ನಿ ಆನಂದಿ ಸಮಜಾಯಿಷಿ ನೀಡಿದ್ದಾರೆ. ಈಗಾಗಲೇ ಅಕ್ಷಯ್ ಹಾಗೂ ಅವರ ಪತ್ನಿ ಆನಂದಿ ಊರ್ಫ್ ಮಾಲಿನಿ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದೇವೆ ಎಂದು ನವನಗರ ಪೊಲೀಸರು ತಿಳಿಸಿದ್ದಾರೆ.
ಅನ್ಯಾಯದ ವಿರುದ್ಧ ಪ್ರತಿಭಟಿಸದ ಪರಿಸ್ಥಿತಿ ನಿರ್ಮಾಣ : ಕೆ.ನೀಲಾ ವಿಷಾದ
'ವಾರ್ತಾಭಾರತಿ'ಯ ಕಲ್ಯಾಣ ಕರ್ನಾಟಕ ಆವೃತ್ತಿ ಲೋಕಾರ್ಪಣೆ
ಕೇಪು: ಪೊಲೀಸ್ ಕಾರ್ಯಾಚರಣೆ ತಡೆದು ಕೋಳಿ ಅಂಕ ನಡೆಸಿದ ಪುತ್ತೂರು ಶಾಸಕ
► ಶಾಸಕ ಅಶೋಕ್ ರೈ ಸಹಿತ 16 ಮಂದಿಯ ವಿರುದ್ಧ ಪ್ರಕರಣ ದಾಖಲು
2026ರ ಗಣರಾಜ್ಯೋತ್ಸವದಲ್ಲಿ 'ವಂದೇ ಮಾತರಂ' ಥೀಮ್ - ಏನೇನು ಕಾರ್ಯಕ್ರಮ?
77ನೇ ಗಣರಾಜ್ಯೋತ್ಸವವನ್ನು 'ವಂದೇ ಮಾತರಂ' ಗೀತೆಯ 150 ವರ್ಷಗಳ ಇತಿಹಾಸದೊಂದಿಗೆ ಆಚರಿಸಲು ಕೇಂದ್ರ ಸರ್ಕಾರ ಸಿದ್ಧತೆ ನಡೆಸಿದೆ. ಯುರೋಪಿಯನ್ ಯೂನಿಯನ್ ನಾಯಕರಾದ ಉರ್ಸುಲಾ ವಾನ್ ಡೆರ್ ಲೇಯೆನ್ ಮತ್ತು ಆಂಟೋನಿಯೊ ಕೋಸ್ಟಾ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಈ ಸಂದರ್ಭದಲ್ಲಿ EU-ಭಾರತ ಮುಕ್ತ ವ್ಯಾಪಾರ ಒಪ್ಪಂದ ಅಂತಿಮಗೊಳಿಸುವ ನಿರೀಕ್ಷೆಯಿದೆ. ದೇಶಾದ್ಯಂತ ವಿಶೇಷ ಕಾರ್ಯಕ್ರಮಗಳು ನಡೆಯಲಿವೆ.
ವಾರ್ತಾಭಾರತಿ ಕಲ್ಯಾಣ ಕರ್ನಾಟಕದ ಮನೆಮನೆಗೂ ತಲುಪಲಿ | Vartha Bharati launches Kalyana Karnataka edition
ಕಲಬುರಗಿ : ವಾರ್ತಾಭಾರತಿ ಕಲ್ಯಾಣ ಕರ್ನಾಟಕ ಆವೃತ್ತಿ ಲೋಕಾರ್ಪಣೆ ಕಾರ್ಯಕ್ರಮಕ್ಕೆ ಬಂದವರ ಮಾತು
ಬೆಂಗಳೂರು : ಸ್ಲಂ ನಿವಾಸಿಗಳ ಮೇಲೆ ಅಧಿಕಾರಿಗಳ ದರ್ಪ : ಬೀದಿಪಾಲಾದ ನೂರಾರು ಕುಟುಂಬಗಳು | Bengaluru
ನಾಲ್ಕು ಜೆಸಿಬಿಗಳೊಂದಿಗೆ ಕಾಲೋನಿಗೆ ನುಗ್ಗಿದ ಅಧಿಕಾರಿಗಳು : 300ಕ್ಕೂ ಹೆಚ್ಚು ಮನೆಗಳು ಧ್ವಂಸ ► ಯಲಹಂಕ ವಲಯದಲ್ಲಿರುವ ಕೋಗಿಲು ಬಡಾವಣೆಯ ಫಕೀರ್ ಕಾಲೋನಿಯಲ್ಲಿ ಘಟನೆ
ವಾರ್ತಾಭಾರತಿ ಜನರು ಮತ್ತು ವಾಸ್ತವ ಜಗತ್ತಿನ ಮಧ್ಯೆ ಸೇತುವೆಯಾಗಿ ನಿಂತಿದೆ : ಅಬ್ದುಸ್ಸಲಾಮ್ ಪುತ್ತಿಗೆ | Kalaburagi
ಕಲಬುರಗಿ : ವಾರ್ತಾಭಾರತಿ ಕಲ್ಯಾಣ ಕರ್ನಾಟಕ ಆವೃತ್ತಿ ಲೋಕಾರ್ಪಣೆ ಕಾರ್ಯಕ್ರಮ ► ವಾರ್ತಾಭಾರತಿ ಪ್ರಧಾನ ಸಂಪಾದಕ ಅಬ್ದುಸ್ಸಲಾಮ್ ಪುತ್ತಿಗೆ ಮಾತು
ಈ ಪತ್ರಿಕೆಯನ್ನು ನಾವೆಲ್ಲರೂ ಸೇರಿ ಸ್ವಾಗತಿಸೋಣ : ರಾಬರ್ಟ್ ಮಿರಾಂದ | Kalaburagi
ಕಲಬುರಗಿ : ವಾರ್ತಾಭಾರತಿ ಕಲ್ಯಾಣ ಕರ್ನಾಟಕ ಆವೃತ್ತಿ ಲೋಕಾರ್ಪಣೆ ಕಾರ್ಯಕ್ರಮ ► ಕಲಬುರಗಿ ಧರ್ಮ ಕ್ಷೇತ್ರದ ಧರ್ಮಾಧ್ಯಕ್ಷ ರಾಬರ್ಟ್ ಮಿರಾಂದ ಮಾತು
ಶೋಷಣೆ ಮುಕ್ತ ಸಮಾಜದ ನಿರ್ಮಾಣ ಈ ಪತ್ರಿಕೆಯ ಗುರಿ : ಡಿ.ಜಿ ಸಾಗರ್ | D G Sagar | Kalaburagi
ಕಲಬುರಗಿ : ವಾರ್ತಾಭಾರತಿ ಕಲ್ಯಾಣ ಕರ್ನಾಟಕ ಆವೃತ್ತಿ ಲೋಕಾರ್ಪಣೆ ಕಾರ್ಯಕ್ರಮ ► ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಡಿ.ಜಿ ಸಾಗರ್ ಮಾತು
ಹಿಜಾಬ್ ಎಳೆದ್ರೂ ಯಾರಿಗೂ ನೋವಾಗ್ತಿಲ್ಲ ಅನ್ನೋ ಸಂದರ್ಭದಲ್ಲಿ ನಾವಿದ್ದೇವೆ : ಕೆ. ನೀಲಾ | Kalaburagi
ಕಲಬುರಗಿ : ವಾರ್ತಾಭಾರತಿ ಕಲ್ಯಾಣ ಕರ್ನಾಟಕ ಆವೃತ್ತಿ ಲೋಕಾರ್ಪಣೆ ಕಾರ್ಯಕ್ರಮ ► ಲೇಖಕಿ, ಹೋರಾಟಗಾರ್ತಿ ಕೆ. ನೀಲಾ ಮಾತು
ರಾಜಕೀಯ ನಾಯಕರಿಗೆ ಅಂಧಭಕ್ತರು ಹೆಚ್ಚಾಗಿ ದೇಶಕ್ಕೆ ಹಾನಿಯಾಗ್ತಿದೆ : ಶ್ರೀ ಕೋರಣೇಶ್ವರ ಮಹಾ ಸ್ವಾಮೀಜಿ
ಕಲಬುರಗಿ : ವಾರ್ತಾಭಾರತಿ ಕಲ್ಯಾಣ ಕರ್ನಾಟಕ ಆವೃತ್ತಿ ಲೋಕಾರ್ಪಣೆ ಕಾರ್ಯಕ್ರಮ ► ಆಳಂದ ತೋಂಟದಾರ್ಯ ಅನುಭವ ಮಂಟಪದ ಶ್ರೀ ಕೋರಣೇಶ್ವರ ಮಹಾ ಸ್ವಾಮೀಜಿ ಮಾತು
ಮಂಗಳೂರಿನಲ್ಲಿ ಕರಾವಳಿ ಉತ್ಸವಕ್ಕೆ ಅದ್ದೂರಿ ಚಾಲನೆ
ಮಂಗಳೂರು: ಮಂಗಳೂರಿನಲ್ಲಿ ಒಂದು ತಿಂಗಳು ನಡೆಯಲಿರುವ ಕರಾವಳಿ ಉತ್ಸವಕ್ಕೆ ರಾಜ್ಯ ಸರಕಾರ 2 ಕೋಟಿ ರೂ. ಅನುದಾನ ಮಂಜೂರು ಮಾಡಿದೆ ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂ ರಾವ್ ಹೇಳಿದ್ದಾರೆ. ನಗರದ ಕರಾವಳಿ ಉತ್ಸವ ಮೈದಾನದಲ್ಲಿ ಶನಿವಾರ ಸಂಜೆ ದಕ್ಷಿಣ ಕನ್ನಡ ಜಿಲ್ಲಾಡಳಿತ , ಸ್ಥಳೀಯ ಸಂಘ ಸಂಸ್ಥೆ ಗಳ ಸಹಯೋಗದೊಂದಿಗೆ, ಸಾಂಸ್ಕೃತಿಕ, ಕ್ರೀಡಾ ಮತ್ತು ಮನರಂಜನಾ ಚಟುವಟಿಕೆಗಳ ಸಮಾಗವಾದ ‘ಕರಾವಳಿ ಉತ್ಸವಕ್ಕೆ 2025-26ಕ್ಕೆ ಚಾಲನೆ ನೀಡಿ ಮಾತನಾಡಿದರು. ಪ್ರಥಮ ಬಾರಿಗೆ ರಾಜ್ಯ ಸರಕಾರ ಕರಾವಳಿ ಉತ್ಸಾವಕ್ಕೆ ದೊಡ್ಡ ಪ್ರಮಾಣದ ಅನುದಾನ ಕೊಟ್ಟಿದೆ. ಮುಖ್ಯ ಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯ ಮಂತ್ರಿ ಡಿ.ಕೆ. ಶಿವಕುಮಾರ್ ಕರಾವಳಿ ಉತ್ಸವದ ಸಮಾರೋಪಕ್ಕೆ ಆಹ್ವಾನಿಸಲಾಗುವುದು ಎಂದು ಗುಂಡೂ ರಾವ್ ಹೇಳಿದರು. ಕರಾವಳಿ ಉತ್ಸಾವದಂತಹ ವೈವಿಧ್ಯಮಯವಾದ ಕಾರ್ಯಕ್ರಮ ನಡೆದಾಗ ಜನರಲ್ಲಿ ಸಹೋದರತೆ , ಪ್ರೀತಿ, ವಿಶ್ವಾಸ ಬೆಳೆಯುತ್ತದೆ ಎಂದು ನುಡಿದರು. ಕರಾವಳಿ ಭಾಗದ ಸಂಸ್ಕೃತಿ, ಕ್ರೀಡೆ ಇದಕ್ಕೆಲ್ಲ ಭವ್ಯವಾದ ಇತಿಹಾಸ ಹಿನ್ನೆಲೆ ಇದೆ. ಜನರು ಇದರಲ್ಲಿ ಆಸಕ್ತಿಯಿಂದ ಉತ್ಸಾಹದಿಂದ ಭಾಗವಹಿಸುವ ಹಿನ್ನೆಲೆಯಲ್ಲಿ ಇಲ್ಲಿ ಯಾವುದೇ ಉತ್ಸವಗಳು ಯಶಸ್ವಿಯಾಗಿ ನಡೆಯುತ್ತಿದೆ ಎಂದರು. ಕರಾವಳಿ ಉತ್ಸವದಿಂದಾಗಿ ಒಂದು ತಿಂಗಳುಗಳ ಕಾಲ ಮಂಗಳೂರು ಮತ್ತು ಸುತ್ತಮತ್ತಲಿನ ವಾತಾವರಣದಲ್ಲಿ ಹಬ್ಬದ ವಾತಾವರಣ ಇರುತ್ತದೆ. ಕರಾವಳಿ ಜಿಲ್ಲೆಗಳು ಕರ್ನಾಟಕದ ಕಲೆ , ಭಾಷೆ , ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಶ್ರಮಿಸುತ್ತಿದೆ. ಇಲ್ಲಿಯ ಜನರು ಪ್ರತಿಭಾವಂತರು ಕ್ರೀಡೆ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲೂ ಮಿಂಚುತ್ತಾರೆ. ರಾಜ್ಯಕ್ಕೆ ದೇಶಕ್ಕೆ ಮೆರಗು ನೀಡುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ವೇದವ್ಯಾಸ ಕಾಮತ್ ಅಧ್ಯಕ್ಷತೆ ವಹಿಸಿದ್ದರು. ವಿಧಾನ ಪರಿಷತ್ ಸದಸ್ಯರಾದ ಡಾ.ಮಂಜುನಾಥ ಭಂಡಾರಿ ಮತ್ತು ಐವನ್ ಡಿ ಸೋಜ,ಮೆಸ್ಕಾಂ ಅಧ್ಯಕ್ಷ ಹರೀಶ್ ಕುಮಾರ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಂಎ ಗಫೂರ್, ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಗಟ್ಟಿ, ಕರ್ನಾಟಕ ಪರಿಸರ ಪವ್ರವಾಸೋದ್ಯಮ ಮಂಡಳಿ ಅಧ್ಯಕ್ಷೆ ಶಾಲೆಟ್ ಲವಿನಾ ಪಿಂಟೊ,ಕರ್ನಾಟಕ ರಾಜ್ಯ ಬೀಜ ಮತ್ತು ಸಾವಯವ ಪ್ರಮಾಣ ಸಂಸ್ಥೆಯ ಅಧ್ಯಕ್ಷೆ ಲಾವಣ್ಯ ಬಲ್ಲಾಳ್, ಅರೆ ಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ, ಗಾಣಿಗ ಅಭಿವೃದ್ಧಿ ನಿಗಮದ ಅಧ್ಯಕ್ಷ ವಿಶ್ವಾಸ್ ಕುಮಾರ್ ದಾಸ್, ರಾಜ್ಯ ಕಾರ್ಮಿಕ ಕನಿಷ್ಠ ವೇತನಾ ಸಲಹಾ ಮಂಡಳಿ ಅಧ್ಯಕ್ಷ ಟಿಎಂ ಶಹೀದ್, ಮಂಗಳೂರು ಪೊಲೀಸ್ ಆಯಕ್ತ ಸುಧೀರ್ ಕುಮಾರ್ ರೆಡ್ಡಿ , ದ.ಕ. ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನಾರ್ವಡೆ ವಿನಾಯಕ ಕಾರ್ಬಾರಿ , ಉಪ ಅರಣ್ಯ ಸಂರಕ್ಷಣಾಧಿಕಾರಿ ಆ್ಯಂಟನಿ ಮರಿಯಪ್ಪ , ಜಿಲ್ಲಾಧಿಕಾರಿ ದರ್ಶನ್ ಎಚ್.ವಿ.ಪ್ರಾಸ್ತಾವಿಕ ವಾಗಿ ಮಾತನಾಡಿದರು. ಅಪರ ಜಿಲ್ಲಾಧಿಕಾರಿ ರಾಜು ಕೆ ಸ್ವಾಗತಿಸಿ, ಮನಪಾ ಅಯುಕ್ತ ರವಿಚಂದ್ರ ನಾಯಕ್ ವಂದಿಸಿದರು. ಕರಾವಳಿ ಉತ್ಸವದಲ್ಲಿ .. ನಯಾಗರ ಜಲಪಾತ , ಅರಣ್ಯ ಇಲಾಖೆಯ ಕೃತಕ ಕಾಡು , ವಿವಿಧ ಇಲಾಖೆಗಳ ಮಳಿಗೆಗಳು, ಪ್ರದರ್ಶನಗಳು ಕರಾವಳಿ ಉತ್ಸವದಲ್ಲಿ ಗಮನ ಸೆಳೆಯುತ್ತಿದೆ.
ಪತ್ರಿಕೆಗಳು ಸಂವಿಧಾನದ ಮೌಲ್ಯಗಳನ್ನು ಎತ್ತಿ ಹಿಡಿಯುವ ಕೆಲಸ ಮಾಡ್ಬೇಕು : Rahim Khan
ಕಲಬುರಗಿ : ವಾರ್ತಾಭಾರತಿ ಕಲ್ಯಾಣ ಕರ್ನಾಟಕ ಆವೃತ್ತಿ ಲೋಕಾರ್ಪಣೆ ಕಾರ್ಯಕ್ರಮ ಪೌರಾಡಳಿತ ಮತ್ತು ಹಜ್ ಸಚಿವ ರಹೀಮ್ ಖಾನ್ ಮಾತು The official launch of the Vartha Bharathi – Kalyana Karnataka Print Edition marks an important milestone in people-centric journalism. With a strong commitment to truth, social justice, and democratic values, Vartha Bharathi begins a new chapter in amplifying the voices of Kalyana Karnataka. This video captures the key moments of the launch event, insightful speeches by distinguished guests, and the enthusiasm of the people who witnessed this historic occasion. Watch the full video Like, share, and support independent journalism
ಮಾಧ್ಯಮ, ಕಲಾವಿದ, ಜನರು ನಿರಂತರವಾದ ವಿರೋಧಪಕ್ಷ ಆಗಿರಬೇಕು : ಪ್ರಕಾಶ್ ರಾಜ್ | Prakash Raj | Kalaburagi
The official launch of the Vartha Bharathi – Kalyana Karnataka Print Edition marks an important milestone in people-centric journalism. With a strong commitment to truth, social justice, and democratic values, Vartha Bharathi begins a new chapter in amplifying the voices of Kalyana Karnataka. This video captures the key moments of the launch event, insightful speeches by distinguished guests, and the enthusiasm of the people who witnessed this historic occasion. Watch the full video Like, share, and support independent journalism
ಸ್ವತಂತ್ರ ಮಾಧ್ಯಮಗಳ ನಡುವೆ ಯಾವುದೇ ಸ್ಪರ್ಧೆ ಇಲ್ಲ, ನಾವು ಒಟ್ಟಾಗಿ ಕೆಲಸ ಮಾಡ್ತೇವೆ : ಸಿದ್ಧಾರ್ಥ್ ವರದರಾಜನ್
The official launch of the Vartha Bharathi – Kalyana Karnataka Print Edition marks an important milestone in people-centric journalism. With a strong commitment to truth, social justice, and democratic values, Vartha Bharathi begins a new chapter in amplifying the voices of Kalyana Karnataka. This video captures the key moments of the launch event, insightful speeches by distinguished guests, and the enthusiasm of the people who witnessed this historic occasion. Watch the full video Like, share, and support independent journalism
ಮಲಯಾಳಂ ಚಿತ್ರರಂಗದ ಮನಸ್ಸು ಗೆದ್ದ ಖ್ಯಾತ ಚಿತ್ರನಟ, ನಿರ್ದೇಶಕ ಶ್ರೀನಿವಾಸನ್ ನಿಧನ | Sreenivasan
► 48 ವರ್ಷಗಳ ಚಲನಚಿತ್ರ ವೃತ್ತಿ ಬದುಕಿನ ಪಯಣ ಅಂತ್ಯ Renowned Malayalam cinema actor, director, screenwriter, and lyricist Sreenivasan, who won millions of hearts with his simplicity, humor, and socially relevant storytelling, has passed away. Through realistic characters and meaningful narratives, he brought Malayalam cinema closer to the lives of ordinary people. His remarkable contributions as an actor, filmmaker, and writer have left an everlasting impact on Indian cinema. Sreenivasan’s memorable performances, powerful scripts, and thought-provoking films will continue to inspire generations. His demise is an irreparable loss to the Malayalam film industry.
'thewire.in' ಪ್ರಧಾನ ಸಂಪಾದಕ ಸಿದ್ಧಾರ್ಥ್ ವರದರಾಜನ್ ಅವರಿಂದ ಲೋಕಾರ್ಪಣೆ
The official launch of the Vartha Bharathi – Kalyana Karnataka Print Edition marks an important milestone in people-centric journalism. With a strong commitment to truth, social justice, and democratic values, Vartha Bharathi begins a new chapter in amplifying the voices of Kalyana Karnataka. This video captures the key moments of the launch event, insightful speeches by distinguished guests, and the enthusiasm of the people who witnessed this historic occasion. Watch the full video Like, share, and support independent journalism
ಇದು ಕಲ್ಯಾಣ ಕರ್ನಾಟಕದ ಪ್ರತಿಯೊಂದು ಮನೆಯವರ ಪತ್ರಿಕೆ : ಯು.ಟಿ ಖಾದರ್ | U. T. Khader | Kalaburagi
ಕಲಬುರಗಿ : ವಾರ್ತಾಭಾರತಿ ಕಲ್ಯಾಣ ಕರ್ನಾಟಕ ಆವೃತ್ತಿ ಲೋಕಾರ್ಪಣೆ ಕಾರ್ಯಕ್ರಮ ► ವಿಧಾನಸಭಾಧ್ಯಕ್ಷ ಯು.ಟಿ ಖಾದರ್ ಮಾತು #varthabharati #utkhader #kalaburagi The official launch of the Vartha Bharathi – Kalyana Karnataka Print Edition marks an important milestone in people-centric journalism. With a strong commitment to truth, social justice, and democratic values, Vartha Bharathi begins a new chapter in amplifying the voices of Kalyana Karnataka. This video captures the key moments of the launch event, insightful speeches by distinguished guests, and the enthusiasm of the people who witnessed this historic occasion. Watch the full video Like, share, and support independent journalism
ಗಾಂಧಿ ಭಾರತವನ್ನು ಗೋಡ್ಸೆ ಭಾರತವಾಗಿ ಮಾಡಲು ಬಿಡುವುದಿಲ್ಲ : ಡಿ.ಕೆ.ಶಿವಕುಮಾರ್
ಬೆಂಗಳೂರು : ದೇಶದ ಐಕ್ಯತೆ ಹಾಗೂ ಸ್ವಾತಂತ್ರ್ಯಕ್ಕೆ ಪ್ರಾಣ ತ್ಯಾಗ ಮಾಡಿದ ಮಹಾತ್ಮ ಗಾಂಧೀಜಿ ಅವರ ಹೆಸರನ್ನು ನಾಥೂರಾಮ್ ಗೋಡ್ಸೆ ಪಕ್ಷದವರು ತೆಗೆಯಲು ಮುಂದಾಗಿದ್ದಾರೆ. ಗಾಂಧಿ ಭಾರತವನ್ನು ಗೋಡ್ಸೆ ಭಾರತವನ್ನಾಗಿ ಮಾಡಲು ಕಾಂಗ್ರೆಸಿಗರು ಬಿಡುವುದಿಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. ಶನಿವಾರ ಇಲ್ಲಿನ ಸ್ವಾತಂತ್ರ್ಯ ಉದ್ಯಾನದಲ್ಲಿ ‘ನ್ಯಾಷನಲ್ ಹೆರಾಲ್ಡ್ ಕುರಿತು ಸೋನಿಯಾ ಗಾಂಧಿ, ರಾಹುಲ್ ಗಾಂಧಿ ವಿರುದ್ಧ ಸುಳ್ಳು ಇಡಿ ಕೇಸ್ ಹಾಗೂ ನರೇಗಾ ಯೋಜನೆ ಹೆಸರು ಬದಲಾವಣೆಯಲ್ಲಿ ಮಹಾತ್ಮ ಗಾಂಧೀಜಿ ಅವರ ಹೆಸರು ಕೈಬಿಟ್ಟು ಅವಮಾನ’ ಮಾಡಿರುವುದನ್ನು ಖಂಡಿಸಿ ನಡೆದ ‘ಸತ್ಯಮೇವ ಜಯತೆ-ಪ್ರತಿಭಟನಾ ಕಾರ್ಯಕ್ರಮ’ದಲ್ಲಿ ಅವರು ಮಾತನಾಡಿದರು. ಈ ದೇಶದ ಸ್ವಾತಂತ್ರ್ಯದ ನಾಯಕತ್ವ ವಹಿಸಿದ ಮಹಾತ್ಮಾ ಗಾಂಧೀಜಿ ಅವರು ನೂರು ವರ್ಷಗಳ ಹಿಂದೆ ಕನ್ನಡ ನೆಲ ಬೆಳಗಾವಿಯಲ್ಲಿ ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ಜವಾಬ್ದಾರಿ ವಹಿಸಿದರು. ಈ ದೇಶಕ್ಕೆ ಸ್ವಾತಂತ್ರ್ಯದ ಬುನಾದಿ ಹಾಕಿದರು. ಇದಕ್ಕಾಗಿ ನಾವು ಗಾಂಧಿ ಭಾರತ ಕಾರ್ಯಕ್ರಮ ಮಾಡಿದೆವು ಎಂದು ಅವರು ಹೇಳಿದರು. ಮಹತ್ಮಾ ಗಾಂಧೀಜಿ ಅವರ ಹೆಸರಿನಲ್ಲಿ ನಮ್ಮ ಸರಕಾರ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಜಾರಿಗೆ ತಂದಿತು. ಈ ಯೋಜನೆಯಿಂದ ಗ್ರಾಮೀಣ ಭಾಗದಲ್ಲಿ ಭೂಮಿ ಮಟ್ಟ ಮಾಡಲು, ಕೊಟ್ಟಿಗೆ ನಿರ್ಮಾಣ, ಆಶ್ರಯಮನೆ ನಿರ್ಮಾಣ ಮಾಡಲು ಸರಕಾರ ಕೂಲಿ ನೀಡುತ್ತದೆ. ಸೋನಿಯಾ ಗಾಂಧಿ ಅವರ ನೇತೃತ್ವದಲ್ಲಿ ಮನಮೋಹನ್ ಸಿಂಗ್ ಅವರು ಈ ಐತಿಹಾಸಿಕ ತೀರ್ಮಾನ ಕೈಗೊಂಡಿದ್ದಾರೆ. ಮಹಾತ್ಮಾ ಗಾಂಧೀಜಿ ಅವರ ಹೆಸರಿನಲ್ಲಿ ತಂದ ಈ ಯೋಜನೆಯಲ್ಲಿ ಈ ಸರಕಾರ ಗಾಂಧೀಜಿ ಅವರ ಹೆಸರು ತೆಗೆಯುತ್ತಿದೆ ಎಂದು ಅವರು ತಿಳಿಸಿದರು. ಬಿಜೆಪಿಗರು ಗಾಂಧಿ ಪ್ರತಿಮೆ ಮುಂದೆ ನಿಂತು ಹೋರಾಟ ಮಾಡುವ ಹಕ್ಕನ್ನು ಕಳೆದುಕೊಂಡಿದ್ದಾರೆ. ಹೀಗಾಗಿ ಬಿಜೆಪಿ ನಾಯಕರು ಹಾಗೂ ಶಾಸಕರು ಇನ್ನು ಮುಂದೆ ಗಾಂಧಿ ಪ್ರತಿಮೆ ಬಳಿ ಪ್ರತಿಭಟನೆ ಮಾಡಬಾರದು ಎಂದು ಸವಾಲು ಹಾಕುತ್ತೇನೆ. ಬಡವರಿಗೆ ಉದ್ಯೋಗ ನೀಡುವ ಯೋಜನೆಯ ಹೆಸರಿನಿಂದ ನೀವು ಗಾಂಧೀಜಿ ಅವರ ಹೆಸರು ತೆಗೆಯುತ್ತಿದ್ದೀರಿ ಎಂದರೆ ನೀವು ದೇಶದ್ರೋಹಿಗಳು. ಬೇರೆ ದೇಶದ ನಾಯಕರು ನಮ್ಮ ದೇಶಕ್ಕೆ ಬಂದರೆ ಮೊದಲು ಅವರು ಗಾಂಧಿ ಸಮಾಧಿಗೆ ಹೋಗಿ ಪೂಜೆ ಮಾಡುತ್ತಾರೆ. ಗಾಂಧಿ ಭಾವಚಿತ್ರಕ್ಕೆ ನಮಿಸುತ್ತಾರೆ. ಆದರೆ ಗಾಂಧಿ ಅವರ ಹೆಸರು ತೆಗೆಯುವ ಮೂಲಕ ಮತ್ತೊಮ್ಮೆ ಗಾಂಧಿ ಅವರನ್ನು ಕೊಲ್ಲುತ್ತಿದ್ದೀರಿ ಎಂದು ಅವರು ಹೇಳಿದರು. ನ್ಯಾಷನಲ್ ಹೆರಾಲ್ಡ್ ದೇಶದ ಆಸ್ತಿ. ದ್ವೇಷ ಬಿಜೆಪಿ ಆಸ್ತಿ. ಸತ್ಯಕ್ಕೆ ಸಾವಿಲ್ಲ, ಸುಳ್ಳು ಕೇಸ್ ಗಳಿಗೆ ಆಯುಷ್ಯವಿಲ್ಲ. ಇಂದು ಸತ್ಯಮೇವ ಜಯತೆ ಎಂದು ಹೋರಾಟ ಮಾಡುತ್ತಿದ್ದೇವೆ. ಬಿಜೆಪಿಗೆ ಘನತೆ ಇಲ್ಲದೆ ಬದುಕುತ್ತಿದ್ದಾರೆ. ಪಿತೂರಿಯಿಂದ ಸೋಲಿಸಲು, ದ್ವೇಷದಿಂದ ಕುಗ್ಗಿಸಲು ಸಾಧ್ಯವಿಲ್ಲ. ಕಾಂಗ್ರೆಸ್ ಶಕ್ತಿ ದೇಶದ ಶಕ್ತಿ, ಕಾಂಗ್ರೆಸ್ ಇತಿಹಾಸ ದೇಶದ ಇತಿಹಾಸ. ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗೆಲ್ಲಾ ದೇಶದ ಭವಿಷ್ಯ ರೂಪಿಸಲು ಸಂವಿಧಾನದ ರೂಪದಲ್ಲಿ ಕಾರ್ಯಕ್ರಮಗಳನ್ನು ಕೊಟ್ಟುಕೊಂಡು ಬಂದಿದೆ ಎಂದು ಅವರು ತಿಳಿಸಿದರು. ನನ್ನ ಮೇಲೆ ಸುಳ್ಳು ಪ್ರಕರಣ ದಾಖಲಿಸಿ, ಪೋಲೀಸ್ ಠಾಣೆ, ಕೋರ್ಟ್ ಜೈಲು ಸುತ್ತುವಂತೆ ಮಾಡಿದರು. ನಂತರ ನನ್ನ ಮೇಲಿನ ಪ್ರಕರಣ ವಜಾಗೊಂಡಿತು. ಅದೇ ರೀತಿ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರ ಮೇಲೆ ದಾಖಲಿಸಿದ್ದ ಆರೋಪ ಪಟ್ಟಿಯನ್ನು ಕೋರ್ಟ್ ವಜಾಗೊಳಿಸಿದೆ. ಆದರೆ ಅವರು ಇಲ್ಲಿಗೆ ನಿಲ್ಲಿಸುವುದಿಲ್ಲ. ಮೊನ್ನೆ ಹೊಸದಾಗಿ ಎಫ್ಐಆರ್ ದಾಖಲಿಸಿ ನೋಟೀಸ್ ನೀಡಿದ್ದಾರೆ. ಅವರ ವಿಚಾರಣೆಗೆ ಹಾಜರಾಗಲು ನಾನು ದಿಲ್ಲಿಗೆ ತೆರಳುತ್ತಿದ್ದೇನೆ. ಅವರಿಗೆ ಎಫ್ಐಆರ್ ಪ್ರತಿ ನೀಡುವಂತೆ ಕೇಳಿದ್ದೇನೆ ಎಂದು ಅವರು ತಿಳಿಸಿದರು. ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ನಾನು ಹಾಗೂ ನನ್ನ ಸಹೋದರ ಡಿ.ಕೆ. ಸುರೇಶ್ ದೇಣಿಗೆ ನೀಡಿದ್ದೇವೆ. ಶಾಮನೂರು ಶಿವಶಂಕರಪ್ಪ ಅವರು ಕೊಡಿಸಿದ್ದಾರೆ. ನಮ್ಮೆಲ್ಲರಿಗೂ ನೋಟೀಸ್ ನೀಡಿದ್ದಾರೆ. ನಾವು ಇದನ್ನು ಎದುರಿಸುತ್ತೇವೆ. ನಾವೆಲ್ಲರೂ ಕಾಂಗ್ರೆಸಿಗರು. ಅದೇ ರೀತಿ ನ್ಯಾಷನಲ್ ಹೆರಾಲ್ಡ್ ಆಸ್ತಿ ಉಳಿಸಿಕೊಳ್ಳಲು ಸುಮಾರು 100 ಕೋಟಿ ರೂ.ಯಷ್ಟು ಹಣವನ್ನು ಕಾಂಗ್ರೆಸಿಗರು ನೀಡಿದರು. ಈ ಹಣ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರ ಖಾತೆಗೆ ಹಣ ಹೋಗಿಲ್ಲ. ಆದರೂ ಮನಿ ಲಾಂಡರಿಂಗ್ ಕೇಸ್ ದಾಖಲಿಸಿದ್ದಾರೆ ಎಂದು ಅವರು ಕಿಡಿಕಾರಿದರು. ಇದೇ ವೇಳೆ ಎಐಸಿಸಿ ಕಾರ್ಯದರ್ಶಿಗಳಾದ ಅಭಿಷೇಕ್ ದತ್, ಮಯೂರ್ ಜೈಕುಮಾರ್, ಬಿ.ವಿ. ಶ್ರೀನಿವಾಸ್, ಶಾಸಕರಾದ ಪ್ರದೀಪ್ ಈಶ್ವರ್, ಹರಿಪ್ರಸಾದ್, ಮಹಿಳಾ ಕಾಂಗ್ರೆಸ್ ರಾಜ್ಯಾಧ್ಯಕ್ಷೆ ಸೌಮ್ಯ ರೆಡ್ಡಿ, ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷ ಮಂಜುನಾಥ್ ಗೌಡ, ಮುಖಂಡರಾದ ಎಚ್.ಎಂ. ರೇವಣ್ಣ, ಮೋಟಮ್ಮ, ರಾಣಿ ಸತೀಶ್, ಬಿ.ಎಲ್. ಶಂಕರ್, ಚಂದ್ರಪ್ಪ ಮತ್ತಿತರರು ಭಾಗವಹಿಸಿದ್ದರು.
ʼಭೂತಾರಾಧನೆʼ: ಮಾಯದ ನಡೆ ಜೋಗದ ನುಡಿ ಕೃತಿ ಬಿಡುಗಡೆ
ಮಂಗಳೂರು: ಡಿಜಿಟಲ್ ಯುಗದಲ್ಲಿ ದೈವಾರಾಧನೆ ಮತ್ತು ಭೂತಾರಾಧನೆಯ ಸಂಶೋಧನೆಯಲ್ಲಿ ದಾಖಲೀಕರಣವು ಹೆಚ್ಚು ಮಹತ್ವ ಪಡೆದುಕೊಂಡಿದೆ ಎಂದು ವಿಶ್ರಾಂತ ಕುಲಪತಿ ಪ್ರೊ.ಬಿ.ಎ ವಿವೇಕ ರೈ ಅಭಿಪ್ರಾಯಪಟ್ಟರು. ಕರಾವಳಿ ಲೇಖಕಿಯರ ವಾಚಕಿಯರ ಸಂಘ, ಮಂಗಳೂರು ವಿವಿ ಕನ್ನಡ ಅಧ್ಯಯನ ಸಂಸ್ಥೆಯ ಗಿಳಿವಿಂಡು, ರಂಗಸಂಗಾತಿ ಸಾಂಸ್ಕೃತಿಕ ಪ್ರತಿಷ್ಠಾನ ಮತ್ತು ಸಂತ ಅಲೋಶಿಯಸ್ ಕಾಲೇಜಿನ ಕನ್ನಡ ವಿಭಾಗವು ಶನಿವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಜಾನಪದ ವಿದ್ವಾಂಸ ಪ್ರೊ.ಕೆ.ಚಿನ್ನಪ್ಪ ಗೌಡ ಅವರ ಱಭೂತಾರಾಧನೆ: ಮಾಯದ ನಡೆ ಜೋಗದ ನುಡಿೞ ಕೃತಿಯನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು. ಡಿಜಿಟಲ್ ಮಾಧ್ಯಮಗಳು ಮುನ್ನೆಲೆಗೆ ಬಂದ ಬಳಿಕ ದೈವಗಳ ಬಗ್ಗೆಯೂ ಅಪೂರ್ಣ ಮಾಹಿತಿಗಳನ್ನು ಹಂಚಿಕೊಳ್ಳು ವವರು ಇದ್ದಾರೆ. ಅವರಲ್ಲಿ ಪ್ರತಿಯೊಬ್ಬರೂ ಇದೇ ಅಂತಿಮ ಎಂದು ಹೇಳುತ್ತಾರೆ. ದೈವ ಹುಟ್ಟಿದ್ದು ಹೀಗೆ, ಅದರ ಸಂಚಾರ ಹಾಗೆ ಎಂದೆಲ್ಲಾ ವಾದಿಸುತ್ತಾರೆ. ಯುವ ಸಂಶೋಧಕರು ಇಂತಹ ಅಪೂರ್ಣ ಮಾಹಿತಿಗಳನ್ನು ನಂಬ ಬಾರದು ವಿವೇಕ ರೈ ಸಲಹೆ ನೀಡಿದರು. ಸಂಶೋಧನೆ ಹೇಳಿದಷ್ಟು ಸುಲಭದ ಕೆಲಸವಲ್ಲ. ಅದಕ್ಕೆ ಪೂರ್ವಸಿದ್ಧತೆ ಅಗತ್ಯವಿದೆ. ಪ್ರತೀ ಹಂತದಲ್ಲೂ ಎಚ್ಚರ ದಿಂದ ಇರಬೇಕು. ದೈವಾರಾಧನೆಯ ವಿಷಯದಲ್ಲಿ ಈ ಪ್ರಜ್ಞೆ ಅತ್ಯಂತ ಸೂಕ್ಷ್ಮವಾಗಿರಬೇಕು ಎಂದ ವಿವೇಕ ರೈ ಭೂತಾರಾಧನೆ ಮತ್ತು ದೈವಾರಾಧನೆ ಪದಗಳ ಬಗ್ಗೆ ಚರ್ಚೆಗಳು ನಡೆಯುತ್ತವೆ. ಸಂಶೋಧನೆಯ ಮೂಲಕ ಅವುಗಳನ್ನು ದಾಖಲಿಸಿಕೊಳ್ಳುವಾಗ ಅನುಕೂಲಕ್ಕೆ ತಕ್ಕಂತೆ ಈ ಪದಗಳನ್ನು ಬಳಸಿಕೊಳ್ಳಬಹುದಾಗಿದೆ ಎಂದರು. ವಿಮರ್ಶಕ ರಾಜಶೇಖರ್ ಹಳೆಮನೆ ಕೃತಿಯನ್ನು ಅವಲೋಕಿಸಿದರು. ಕಾಪುಮಜಲಿನ ದೈವನರ್ತಕ ಶೇಖರ ಪರವ ಅವರನ್ನು ಗೌರವಿಸಲಾಯಿತು. ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ ಸಹ ಸಂಸ್ಥಾಪಕ ಅಶ್ವತ್ಥ್ ಎಸ್.ಎಲ್ ಅಧ್ಯಕ್ಷತೆ ವಹಿಸಿದ್ದರು. ಮಂಗಳೂರು ವಿವಿ ಎಸ್ವಿಪಿ ಕನ್ನಡ ಅಧ್ಯಯನ ಸಂಸ್ಥೆಯ ಅಧ್ಯಕ್ಷ ನಾಗಪ್ಪಗೌಡ ಆರ್. ಪಾಲ್ಗೊಂಡಿದ್ದರು. ಪ್ರಿಯಾಂಕ ಸ್ವಾಗತಿಸಿದರು. ಮಹಾಲಿಂಗ ಭಟ್ ವಂದಿಸಿದರು. ದಿನೇಶ್ ನಾಯಕ್ ಕಾರ್ಯಕ್ರಮ ನಿರೂಪಿಸಿದರು.
ಮಾರುಕಟ್ಟೆಗೆ ಬರುವ ಮೊದಲೇ ಮಾರಾಟವಾಗುವ ಪತ್ರಿಕೆಗಳು ವಸ್ತುನಿಷ್ಠ ಆಗಿರಲ್ಲ : ಯಾಸೀನ್ ಮಲ್ಪೆ
ಕಲಬುರಗಿ : ವಾರ್ತಾಭಾರತಿ ಕಲ್ಯಾಣ ಕರ್ನಾಟಕ ಆವೃತ್ತಿ ಲೋಕಾರ್ಪಣೆ ► ವಾರ್ತಾಭಾರತಿ ಸ್ಥಾಪಕ ನಿರ್ದೇಶಕ ಯಾಸೀನ್ ಮಲ್ಪೆ ಪ್ರಾಸ್ತಾವಿಕ ಭಾಷಣ ► ಕಲಬುರಗಿ : ಡಾ.ಎಸ್.ಎಂ. ಪಂಡಿತ್ ರಂಗಮಂದಿರದಲ್ಲಿ ನಡೆದ ಕಾರ್ಯಕ್ರಮ #varthabharati The official launch of the Vartha Bharathi – Kalyana Karnataka Print Edition marks an important milestone in people-centric journalism. With a strong commitment to truth, social justice, and democratic values, Vartha Bharathi begins a new chapter in amplifying the voices of Kalyana Karnataka. This video captures the key moments of the launch event, insightful speeches by distinguished guests, and the enthusiasm of the people who witnessed this historic occasion. Watch the full video Like, share, and support independent journalism
ಬಂಧನ ಭೀತಿಯಿಂದ ತಲೆಮರೆಸಿಕೊಂಡ ಬೈರತಿ ಬಸವರಾಜ್; ವಿದೇಶಕ್ಕೆ ಪರಾರಿಯಾಗುವ ಶಂಕೆ, ಲುಕ್ಔಟ್ ನೋಟಿಸ್ ಜಾರಿ
ರೌಡಿಶೀಟರ್ ಬಿಕ್ಲು ಶಿವನ ಕೊಲೆ ಪ್ರಕರಣದಲ್ಲಿ ಬಿಜೆಪಿ ಶಾಸಕ ಬೈರತಿ ಬಸವರಾಜು ಬಂಧನ ಭೀತಿ ಎದುರಿಸುತ್ತಿದ್ದಾರೆ. ಹೈಕೋರ್ಟ್ ಮತ್ತು ಸೆಷನ್ಸ್ ನ್ಯಾಯಾಲಯ ನಿರೀಕ್ಷಣಾ ಜಾಮೀನು ನಿರಾಕರಿಸಿದ್ದು, ಸಿಐಡಿ ಅಧಿಕಾರಿಗಳು ರಾಜ್ಯ ಹಾಗೂ ಹೊರರಾಜ್ಯಗಳಲ್ಲಿ ಕಾರ್ಯಾಚರಣೆ ತೀವ್ರಗೊಳಿಸಿದ್ದಾರೆ. ವಿದೇಶಕ್ಕೆ ಪರಾರಿಯಾಗುವ ಶಂಕೆ ಹಿನ್ನೆಲೆಯಲ್ಲಿ ಲುಕ್ಔಟ್ ನೋಟಿಸ್ ಜಾರಿ ಮಾಡಲಾಗಿದೆ.
ಪ್ರಿಯಾಂಕಾ - ಪ್ರಶಾಂತ್ ಮೀಟಿಂಗ್: ಉತ್ತರ ಪ್ರದೇಶ ಚುನಾವಣೆಗೆ ರಣತಂತ್ರವೇ ? | Prashant Kishor - Priyanka Gandhi
ಬಿಹಾರದಲ್ಲಿ ಶೂನ್ಯ ಸಾಧನೆ ಮಾಡಿದ ಪ್ರಶಾಂತ್ ಕಾಂಗ್ರೆಸ್ ಗೆ ಬೇಕೇ ? ► ಮೋದಿ 'ಬ್ರ್ಯಾಂಡ್' ಮಾಡಿದ ವ್ಯಕ್ತಿ, ಮೋದಿಯನ್ನು ಸೋಲಿಸಲು ಸಾಧ್ಯವೇ? ►► ವಾರ್ತಾಭಾರತಿ NEWS ANALYSIS
ಏಳು ನಿಯೋಗಗಳಿಗೆ 13 ಕೋಟಿಗೂ ಹೆಚ್ಚು ಖರ್ಚು: ರಾಜತಾಂತ್ರಿಕ ಗೆಲುವು ಎಲ್ಲಿದೆ ?
ಪಾಕ್ ವಿರುದ್ಧ ಜಾಗತಿಕ ಅಭಿಪ್ರಾಯ ಮೂಡಿಸುವ ಕೆಲಸ ಯಶಸ್ವಿಯಾಯಿತೇ ? ► ಸಂಸದರ ಪ್ರವಾಸ ಫೋಟೋ ತೆಗೆಸಿಕೊಳ್ಳುವುದಕ್ಕಷ್ಟೇ ಸೀಮಿತವಾಯಿತೆ ? ► ಜನರ ದುಡ್ಡನ್ನು ಹೇಗೆ ಖರ್ಚು ಮಾಡಲಾಯಿತು? ಉತ್ತರವಿಲ್ಲ ಯಾಕೆ ? ►► ವಾರ್ತಾಭಾರತಿ NEWS ANALYSIS
ವೈದ್ಯೆಯ ಹಿಜಾಬ್ ಎಳೆದ ನಿತೀಶ್ ಕುಮಾರ್ | Nitish Kumar - Hijab Row - Politics
ಹಿಜಾಬ್ ಎಳೆಯುವುದು ಪ್ರೀತಿ ಎನ್ನುವ ರಾಜಕೀಯ ಎಷ್ಟು ಅಪಾಯಕಾರಿ? ► ಬೇಟಿ ಬಚಾವೋ ಘೋಷಣೆಯ ಹಿಂದೆ ಮಹಿಳೆಯ ಅವಮಾನ ಮರೆಮಾಚಲಾಗುತ್ತಿದೆಯೇ ?
ಸೈಬರ್ ವಂಚಕರ ಬಲೆಗೆ ಸಿಲುಕಿದ್ದ ಬ್ಯಾಂಕ್ ಗ್ರಾಹಕ-ವೈದ್ಯರಿಗೆ ರಕ್ಷಣೆ
►ಮತ್ತಷ್ಟು ಹಣ ಕಳೆದುಕೊಳ್ಳುವುದನ್ನು ತಪ್ಪಿಸಿದ ಸೆನ್ ಪೊಲೀಸರು► ಬ್ಯಾಂಕ್ ಅಧಿಕಾರಿಗಳ ವಿಶೇಷ ನಿಗಾ
ಶಿಕ್ಷಣ ವಂಚಿತ ಬಡ, ಹಿಂದುಳಿದ ವರ್ಗಗಳಿಗೆ ಇದರಿಂದ ಅನ್ಯಾಯ ಆಗುತ್ತೆ : ಶ್ರೀಪಾದ್ ಭಟ್ | Shripad Bhat
ಉನ್ನತ ಶಿಕ್ಷಣ ವ್ಯವಸ್ಥೆಯನ್ನು ಕೇಂದ್ರ ಸರಕಾರ ದುರ್ಬಲಗೊಳಿಸುತ್ತಿದೆಯೇ? ► ಶಿಕ್ಷಣ ಇಲಾಖೆಯಲ್ಲಿನ ಬದಲಾವಣೆಯ ಪರಿಣಾಮ ತಕ್ಷಣಕ್ಕೆ ಗೊತ್ತಾಗಲ್ಲ ►► ವಾರ್ತಾಭಾರತಿ - Politics ಡಾಟ್ ಕಾಮ್ ಶ್ರೀಪಾದ್ ಭಟ್ ಶಿಕ್ಷಣ ತಜ್ಞರು
ನರೇಗಾ ಯೋಜನೆಯಿಂದ ಗಾಂಧಿಯ ಹೆಸರನ್ನು ಮಾತ್ರವಲ್ಲದೆ ಬಡ ಭಾರತದ ಹಕ್ಕುಗಳನ್ನೇ ಕಿತ್ತುಹಾಕಲಾಗಿದೆಯೇ? MGNREGA
G RAM G ಯೋಜನೆಯು ವರ್ಷದಲ್ಲಿ 60 ದಿನಗಳ ಉದ್ಯೋಗ ಖಾತರಿ ಯೋಜನೆ ಜಾರಿ ಮಾಡಬಾರದೆಂದು ತಾಕೀತು ಮಾಡುತ್ತದೆಯೇ? ► G RAM G ಪ್ರಕಾರ ಉದ್ಯೋಗ ಖಾತರಿ ಎಲ್ಲಿ, ಎಷ್ಟು ಜಾರಿ ಮಾಡಬೇಕೆಂಬುದನ್ನೆಲ್ಲಾ ಕೇಂದ್ರ ಸರ್ಕಾರವು ತೀರ್ಮಾನಿಸುತ್ತದೆಯೇ? ► ಇದು ಎಲ್ಲಾ ರೈತ ಮತ್ತು ಜನಪರ ಯೋಜನೆಗಳನ್ನು ರದ್ದು ಮಾಡುವ ರಾಮರಾಜ್ಯದ ಮುನ್ಸೂಚನೆಯೇ? ► ವಾರ್ತಾಭಾರತಿ ಶಿವಸುಂದರ್ ಅವರ ಸಮಕಾಲೀನ
MGNREGA ದಿಂದ ಗಾಂಧಿ ಹೆಸರು ತೆಗೆಯುವ ಹುನ್ನಾರ ಯಾಕೆ ? | Modi Government - Politics - Shreepad bhat
ಗಾಂಧೀಜಿಯ ಗ್ರಾಮ ಸ್ವರಾಜ್ಯಕ್ಕೆ ಇದು ದೊಡ್ಡ ಪೆಟ್ಟು ► ಗಾಂಧಿ ಬಗ್ಗೆ ಬಿಜೆಪಿಗೆ ಇಷ್ಟೊಂದು ಅಸಹನೆ ಯಾಕಿದೆ ? ► ಕಾರ್ಮಿಕರು, ಮಧ್ಯಮವರ್ಗದ ಮೇಲೆ ಇದರ ದುಷ್ಪರಿಣಾಮ ಏನು ? ►► ವಾರ್ತಾಭಾರತಿ - Politics ಡಾಟ್ ಕಾಮ್ ಶ್ರೀಪಾದ್ ಭಟ್ ಶಿಕ್ಷಣ ತಜ್ಞರು
ಬಿಜೆಪಿಯಲ್ಲಿ ‘ಪೀಳಿಗೆಯ ಬದಲಾವಣೆ’ ಎಂಬ ನರೇಟಿವ್ ನಿಜವೇ? | Nitin Nabin - BJP
ಮೋದಿ, ಶಾ ಅವರು ಧರ್ಮೇಂದ್ರ ಪ್ರಧಾನ್, ವಸುಂಧರಾ ರಾಜೇರನ್ನು ಮರೆತು ಬಿಟ್ಟರೇ ? ► ಮೋದಿ–ಶಾ ಯುಗದಲ್ಲಿ ಬಿಜೆಪಿ ಅಧ್ಯಕ್ಷರ ಹುದ್ದೆಗೆ ಎಷ್ಟು ಮಹತ್ವ ಇದೆ? ► ಬಿಜೆಪಿಯಲ್ಲಿ ಆಂತರಿಕ ಪ್ರಜಾಪ್ರಭುತ್ವ ಇನ್ನೂ ಉಳಿದಿದೆಯೇ?
Sonia Gandhi, Rahul Gandhi ಗೆ ಕೋರ್ಟ್ ರಿಲೀಫ್: ಏನಿದು ಪ್ರಕರಣ ? | National Herald case
ಮೋದಿ ಹೇಳಿದ್ದನ್ನು ಈಗ ಯಾರೂ ನಂಬಲ್ಲ... ► ಸೋನಿಯಾ, ರಾಹುಲ್ ಹೆಸರಿಗೆ ಕಳಂಕ ತರಲು ನೋಡ್ತಿದ್ದಾರೆ ►► ವಾರ್ತಾಭಾರತಿ - Politics ಡಾಟ್ ಕಾಮ್ ಬ್ರಿಜೇಶ್ ಕಾಳಪ್ಪ ಎಐಸಿಸಿ ವಕ್ತಾರ
ನಾಲ್ಕು ಕೋಟಿ ಮತದಾರರ ಹೆಸರು ಇಲ್ಲವಾಗಿದೆ: ಆದಿತ್ಯನಾಥ್ | Adityanath | SIR
Is there an internal crisis within the BJP? A major political storm is brewing as Uttar Pradesh Chief Minister Yogi Adityanath raises serious questions over the SIR issue. Yogi’s claim that nearly 40 million voters’ names have gone missing has shaken the BJP’s own narrative and sparked intense debate within the party. Has SIR turned into a political weapon against the BJP itself? Did Yogi Adityanath openly challenge the party’s official stand? And can Home Minister Amit Shah publicly counter Yogi’s claims? This video explores the deepening tensions, power dynamics, and political implications behind the SIR controversy. Watch this detailed political analysis to understand how the SIR issue may become a turning point in BJP’s internal politics and future electoral strategies.
ಗಾಂಧಿ ಹೆಸರು ತೆಗೆದು, ಉದ್ಯೋಗ ಖಾತರಿಯನ್ನೇ ತೆಗೆದ ಕೇಂದ್ರ ಸರಕಾರ ! - Mahatma Gandhi NREGA
ಗಾಂಧಿಗೆ ನಮಸ್ಕರಿಸುವ ನಾಟಕವಾಡುತ್ತಾ ಏನಿದು ಮೋದಿ ಸರಕಾರದ ಹೊಸ ಆಟ? ► ವಿಕಸಿತ್ ಭಾರತ್ ಹೆಸರಿನಲ್ಲಿ ಹಕ್ಕು ಆಧರಿತ ಯೋಜನೆಗೆ ಇದು ಅಂತ್ಯ ಕಾಲವೇ?
ಕೇರಳದ ಮತದಾರರು ಕೋಮು ರಾಜಕೀಯವನ್ನು ತಿರಸ್ಕರಿಸಿದ್ದು ಹೇಗೆ ? | Kerala | CPIM | BJP
Has the CPI(M) indirectly helped the BJP gain a foothold in Kerala? This question has sparked intense political debate following recent election results. While Kerala voters have traditionally rejected communal politics, the latest outcomes suggest a complex political shift. How did Kerala’s electorate firmly oppose communal polarization? How did the UDF, led by the Congress, consolidate its base and achieve a remarkable victory? And is there truth to the allegation that the CPI(M) silently enabled the BJP’s growth in the state by weakening the Congress vote base? In this video, we analyze Kerala’s political dynamics, voting patterns, the role of the CPI(M), BJP’s expanding presence, and the reasons behind UDF’s impressive performance. A deep dive into Kerala politics, electoral strategy, and the future of secular politics in the state.
ನ್ಯಾಯಸಮ್ಮತ ಚುನಾವಣೆಗಾಗಿ ಹೋರಾಟ ನಡೆಸಬೇಕಾದ ಅನಿವಾರ್ಯತೆ ಏಕಿದೆ ?
“Vote theft is the truth” — Congress has launched a nationwide political offensive, raising serious questions about the fairness and transparency of India’s electoral process. From allegations against the Election Commission to protests demanding free and fair elections, the opposition claims democracy itself is under threat. Why has Congress announced the need for a mass movement to protect fair elections? What is behind the “chor chor” slogans against Election Commissioners? Is the credibility of the Election Commission declining, and why are questions being raised about the lack of transparency? Despite Congress presenting what it calls factual evidence, why is a section of mainstream or “lapdog” media remaining silent? In this video, we examine the allegations, political reactions, democratic concerns, and the larger impact on India’s electoral credibility. Watch this detailed political analysis to understand the real issues behind the election controversy and the future of Indian democracy.
ಹೊಟ್ಟೆಯ ಕ್ಯಾನ್ಸರ್ ಗೆ ಕಾರಣಗಳೇನು? ಲಕ್ಷಣಗಳು ಏನಿರುತ್ತೆ ? | spicy foods really cause cancer?
ಪ್ರತಿದಿನ ಮಸಾಲೆಯುಕ್ತ ಆಹಾರ ಸೇವಿಸೋದು ಎಷ್ಟು ಅಪಾಯ ? Do spicy foods really cause cancer? This is a common question among people who consume spicy and masala-rich food daily. In this video, we explain the scientific facts behind spicy foods and their connection to stomach (gastric) cancer.
ಮಂಗಳೂರು, ಡಿ.20: ಶನಿವಾರ ಅಸ್ತಮಿಸಿದ ರವಿವಾರ ರಾತ್ರಿ (ಡಿ.20) ರಜಬ್ ತಿಂಗಳ ಪ್ರಥಮ ಚಂದ್ರದರ್ಶನವಾಗಿರುವ ಬಗ್ಗೆ ಯಾವುದೇ ಮಾಹಿತಿ ಇಲ್ಲದ ಕಾರಣ ಜುಮಾದಿಲ್ ಆಖಿರ್ 30 ಪೂರ್ತಿಗೊಳಿಸಿ ರವಿವಾರ (ಡಿ.21) ಅಸ್ತಮಿಸಿದ ಸೋಮವಾರ ರಾತ್ರಿ ರಜಬ್ ಚಾಂದ್ 1 ಆಗಿರುತ್ತದೆ ಎಂದು ದ.ಕ. ಜಿಲ್ಲಾ ಖಾಝಿ ಶೈಖುನಾ ಅಲ್ಹಾಜ್ ತ್ವಾಖಾ ಅಹ್ಮದ್ ಅಲ್ ಅಝ್ಹರಿ ತೀರ್ಮಾನಿಸಿರುತ್ತಾರೆ. 2026ರ ಜನವರಿ 16ರ ಶುಕ್ರವಾರ ಅಸ್ತಮಿಸಿದ ಶನಿವಾರ ರಾತ್ರಿ ರಜಬ್ ಚಾಂದ್ 27 ಇಸ್ರಾಹ್-ಮಿಹ್ರಾಜ್ ರಾತ್ರಿಯಾಗಿರುತ್ತದೆ ಎಂದು ಮಸ್ಜಿದ್ ಝೀನತ್ ಬಕ್ಷ್ ಕೇಂದ್ರ ಜುಮಾ ಮಸೀದಿಯ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಹನೀಫ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ವಿಜೇತ ತಂಡಗಳಿಗೆ ಟ್ರೋಫಿ ವಿತರಿಸಿದ ಫುಟ್ಬಾಲ್ ದಂತಕತೆ Lionel Messi | Rahul Gandhi meets Lionel Messi
Congress leader Rahul Gandhi met football legend Lionel Messi during a special event held at Uppal Stadium in Hyderabad. The global football icon distributed trophies to the winning teams, making the occasion memorable for players and fans alike. The event brought together sports, leadership, and celebration, creating a buzz among football lovers across the country. Watch the video to see key moments from Lionel Messi’s Hyderabad visit, Rahul Gandhi’s interaction with the football legend, and the highlights of the trophy distribution ceremony.
ಮಿತ್ರರಾಷ್ಟ್ರಗಳ ಆರ್ಥಿಕ ದಾಳಿಗಳ ವಿರುದ್ಧ ಭಾರತಕ್ಕೆ ರಕ್ಷಣೆ ಇಲ್ಲವಾಗಿದೆಯೆ? | PM Modi | Indian Economy
Are India’s traditional allies slowly turning into adversaries? Is the country losing its protection against economic attacks from so-called friendly nations? This video explores the growing use of tariffs and economic pressure as geopolitical weapons, questioning the real intent behind Donald Trump’s “friendly handshake with a tariff strike.” We also analyze the dangerous consequences of increasing dependence on Russia and China, and whether India is getting trapped in the global “Dollar Trap.” From trade wars to currency dominance, this video presents the real picture of the ongoing global financial war and where India stands in this rapidly shifting world order. Watch till the end for an in-depth analysis of geopolitics, economics, and India’s strategic challenges.
ಮೋದಿ ಸರಕಾರದಲ್ಲಿ ನಡೆಯುತ್ತಿರುವ ಅಘೋಷಿತ ಒಪ್ಪಂದಗಳು ಏನೇನು ? | Modi Government
Are government contracts being awarded in return for donations? Is the current administration running a system of governance or an organized recovery mechanism? This video takes a deep dive into the alleged undeclared deals happening under the Modi government. While the ruling establishment remains trapped in historical narratives, the present-day realities raise serious questions about the country’s direction. We also examine the role of “lapdog media,” massive government advertising budgets worth crores, and the truths that remain deliberately hidden from the public. From protection for the rich to moral lectures for the poor, this video exposes the harsh realities of “New India” and questions who truly benefits from the system. Watch the full video for a critical analysis of governance, power, money, and media in today’s India.
ಕಾಂಗ್ರೆಸ್ ಆಡಳಿತದ ರಾಜ್ಯದಲ್ಲೇ ಯುಪಿ ಮಾದರಿ? : ಪರಮೇಶ್ವರ್ ಹೇಳಿಕೆ ಪಕ್ಷಕ್ಕೆ ಆಘಾತ | G Parameshwar - Congress
ರಾಹುಲ್ ಹೋರಾಟಕ್ಕೂ, ಪರಮೇಶ್ವರ್ ಹೇಳಿಕೆಗೂ ಏನು ಸಂಬಂಧ? ► ಚಿದಂಬರಂ ಗಾಬರಿ, ಸಿದ್ದರಾಮಯ್ಯ ಮೌನ : ಸರ್ಕಾರದಲ್ಲಿ ಏನಾಗುತ್ತಿದೆ? ► ಬಿಜೆಪಿಯನ್ನು ಟೀಕಿಸಿ, ಬಿಜೆಪಿಯಂತೆ ನಡೆದುಕೊಳ್ಳುವ ಕಾಂಗ್ರೆಸ್ ನಾಯಕರು

24 C