ವಿಜಯನಗರ | ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಶಂಕರ್ ನಾಯಕ್ ಅವರ ಮನೆ ಮೇಲೆ ಲೋಕಾಯುಕ್ತ ದಾಳಿ
ಹೊಸಪೇಟೆ : ನಗರದ ಜಂಬೂನಾಥ ರಸ್ತೆಯಲ್ಲಿರುವ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಶಂಕರ್ ನಾಯಕ್ ಅವರ ಮನೆ ಮತ್ತು ಕಚೇರಿಯ ಮೇಲೆ ಬೆಳ್ಳಂಬೆಳಗ್ಗೆ ಲೋಕಾಯುಕ್ತ ಅಧಿಕಾರಿಗಳಿಂದ ದಾಳಿ ನಡೆದಿದೆ ಎಂದು ವರದಿಯಾಗಿದೆ. ವಿಜಯನಗರ ಲೋಕಾಯುಕ್ತ ಡಿವೈಎಸ್ಪಿ, ಸಚಿನ್, ಪಿಐ ಅಮರೇಶ್, ರಾಜೇಶ್ ಲಮಾಣಿ, ಬಳ್ಳಾರಿ ಲೋಕಾಯುಕ್ತ ಅಧಿಕಾರಿಗಳು ಬೆಳಿಗ್ಗೆಯಿಂದಲೂ ದಾಖಲೆ ಪರಿಶೀಲನೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಬೆಂಗಳೂರು ಗ್ರಾಮಾಂತರ : ಯುವಜನತೆಯಲ್ಲಿ ಅಸಾಂಕ್ರಾಮಿಕ ರೋಗ ಪತ್ತೆ
ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 30 ವರ್ಷ ಮೇಲ್ಪಟ್ಟವರಲ್ಲಿ ಬಿಪಿ, ಶುಗರ್, ಕ್ಯಾನ್ಸರ್ನಂತಹ ಅಸಾಂಕ್ರಾಮಿಕ ರೋಗಗಳ ತಪಾಸಣೆ ನಡೆಸಲಾಗುತ್ತಿದ್ದು, ಸಾವಿರಾರು ಮಂದಿಯಲ್ಲಿ ಈ ಸಮಸ್ಯೆಗಳು ಪತ್ತೆಯಾಗಿವೆ. ಆರೋಗ್ಯ ಇಲಾಖೆಯು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಉಚಿತ ಚಿಕಿತ್ಸೆ ನೀಡುತ್ತಿದೆ. ಆಧುನಿಕ ಜೀವನಶೈಲಿ, ಆಹಾರ ಪದ್ಧತಿ ಈ ರೋಗಗಳಿಗೆ ಪ್ರಮುಖ ಕಾರಣವಾಗಿದೆ.
RCB Playing 11 Prediction: ಐಪಿಎಲ್ 2026ಕ್ಕೆ ಆರ್ಸಿಬಿ ಪ್ಲೇಯಿಂಗ್ 11 ಭವಿಷ್ಯ..
IPL 2026 RCB Playing 11: ಐಪಿಎಲ್ 2025 ಚಾಂಪಿಯನ್ ಆಗಿರುವ ಆರ್ಸಿಬಿ ಮುಂದಿನ ಬಾರಿಯೂ ಟ್ರೋಫಿ ಗೆಲ್ಲುವ ಹಠದಲ್ಲಿದೆ. ಇಂದು (ಡಿಸೆಂಬರ್ 16) 2026ರ ಮಿನಿ ಹರಾಜು ಪ್ರಕ್ರಿಯೆ ನಡೆಯಲಿದೆ. ಈ ವೇಳೆ ಪ್ರಮುಖ ಆಟಗಾರರ ಮೇಲೆ ಕಣ್ಣಿಟ್ಟಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಮತ್ತಷ್ಟು ಬಲಿಷ್ಠಗೊಳಿಸಲು ಸಕಲ ಸಿದ್ಧತೆ ನಡೆಸಿಕೊಂಡಿದೆ. ಹಾಗಾದ್ರೆ, ಮುಂದಿನ ಬಾರಿಗೆ
Raichur | ಮಸ್ಕಿ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಅಬ್ದುಲ್ ಅಝೀಝ್, ಪ್ರಧಾನ ಕಾರ್ಯದರ್ಶಿಯಾಗಿ ವಿಠಲ್ ಕೇಳೂತ್ ಆಯ್ಕೆ
ರಾಯಚೂರು: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಮಸ್ಕಿ ತಾಲೂಕು ಘಟಕಕ್ಕೆ ಮತ್ತೊಮ್ಮೆ ಅವಿರೋಧ ಆಯ್ಕೆ ಪ್ರಕ್ರಿಯೆ ನಡೆಯಿತು. ಅಧ್ಯಕ್ಷರಾಗಿ ಅಬ್ದುಲ್ ಅಝೀಝ್ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ವಿಠಲ್ ಕೆಳೂತ್ ಅವಿರೋಧ ಆಯ್ಕೆಯಾಗಿದ್ದಾರೆ. ಮಸ್ಕಿಯ ಪತ್ರಿಕಾ ಭವನದಲ್ಲಿ ಸೋಮವಾರ ಮಧ್ಯಾಹ್ನ ತಾಲೂಕು ಘಟಕಕ್ಕೆ ಚುನಾವಣೆ ಪ್ರಕ್ರಿಯೆ ನಡೆಸಲಾಯಿತು. ಉಪಾಧ್ಯಕ್ಷರಾಗಿ ಬದರಿನಾಥ, ಖಜಾಂಚಿಯಾಗಿ ಅಮರೇಶ ಸಾಲಿಮಠ ಆಯ್ಕೆಯಾದರು. ಅವಿರೋಧ ಆಯ್ಕೆ ನಡೆದ ಬಳಿಕ ಜಿಲ್ಲಾಧ್ಯಕ್ಷರಾದ ಆರ್.ಗುರುನಾಥ ಫಲಿತಾಂಶ ಪ್ರಕಟಿಸಿ ವಿಜೇತರಿಗೆ ಪ್ರಮಾಣಪತ್ರ ವಿತರಿಸಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿದ್ಧಯ್ಯ ಸ್ವಾಮಿ ಕುಕನೂರು, ರಾಜ್ಯ ಸಮಿತಿ ಸದಸ್ಯ ಬಸವರಾಜ ನಾಗಡದಿನ್ನಿ, ಜಿಲ್ಲಾ ಉಪಾಧ್ಯಕ್ಷ ಮಹಾನಂದ ನಾಯಕ, ಜಿಲ್ಲಾ ಕಾರ್ಯದರ್ಶಿ ಬಸವರಾಜ ಬೋಗಾವತಿ, ಜಿಲ್ಲಾ ಖಜಾಂಚಿ ಮಲ್ಲಿಕಾರ್ಜುನಯ್ಯ, ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯರಾದ ಪ್ರಕಾಶ ಮಸ್ಕಿ, ಲಕ್ಷ್ಮಿ ಪ್ರಸನ್ನ ಜೈನ್ , ಲಕ್ಷ್ಮಣ ಕಪಗಲ್ ಚುನಾವಣೆ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದರು.
ರಾಯಚೂರು | ಹಣ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭಾಂಶ ನೀಡುವುದಾಗಿ ನಂಬಿಸಿ ವಂಚನೆ : ಗುಜರಾತ್ ಮೂಲದ ಆರೋಪಿಯ ಬಂಧನ
ರಾಯಚೂರು: ಹಣಹೂಡಿಕೆ ಮಾಡಿದರೆ ಹೆಚ್ಚಿನ ಲಾಭಾಂಶ ಕೊಡುವುದಾಗಿ ನಂಬಿಸಿ ಬ್ಯಾಂಕ್ ಖಾತೆಗಳಿಗೆ ಹಣ ಹಾಕಿಸಿಕೊಂಡು ವಂಚನೆ ಮಾಡಿದ ಗುಜರಾತ್ ಮೂಲದ ಆರೋಪಿ ಮೋಹಿತನನ್ನು ರಾಯಚೂರಿನ ಸೈಬರ್ ಅಪರಾಧ ಠಾಣೆ(ಸೆನ್ ) ಪೊಲೀಸರು ಬಂಧಿಸಿ, ಆರೋಪಿಯಿಂದ 3.50 ರೂ.ಲಕ್ಷ ಹಣವನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಯು 2024ರ ಡಿ.17ರಿಂದ 2025ರ ಜ.21ರ ವರೆಗೆ ಅವಧಿಯಲ್ಲಿ ಮೆಹಬೂಬ ರೆಹಮಾನ್ ಹಾಗೂ ಅವರ ಸ್ನೇಹಿತ ರಾಜಶೇಖರ ಅವರಿಗೆ ವಾಟ್ಸ್ಆ್ಯಪ್ನಲ್ಲಿ ಸಂಪರ್ಕ ಮಾಡಿ ವ್ಯಾಪಾರದಲ್ಲಿ ಹಣ ತೊಡಗಿಸುವಂತೆ ಹೇಳಿದ್ದರು. ಹೆಚ್ಚಿನ ಲಾಭಾಂಶ ಬರುವುದಾಗಿ ನಂಬಿಸಿ ಬ್ಯಾಂಕ್ ಖಾತೆಯಿಂದ 28,06,182 ರೂ. ಹಣವನ್ನು ವಿವಿಧ ಬ್ಯಾಂಕ್ ಖಾತೆಗಳಿಗೆ ವರ್ಗಾವಣೆ ಮಾಡಿಕೊಂಡಿದ್ದರು. ಹಣವು ಗುಜರಾತಿನ ಸೂರತ್ ಜಿಲ್ಲೆಯ ಮೋಹಿತ್ ರಾಜ್ವಾನಿ, ಮದತಲಿ ರಜ್ವಾನಿ, ಅವರ ಖಾತೆಗೆ ಜಮಾ ಆಗಿತ್ತು. ಹಣ ಕಳೆದುಕೊಂಡ ಸಿಂಧನೂರು ತಾ.ಪಂ ಎಂಜಿನಿಯರ್ ಮೆಹಬೂಬ ರೆಹಮಾನ್ ಅವರು ಸಿಂಧನೂರು ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ಕುರಿತು ಪ್ರಕರಣವನ್ನು ಬೇದಿಸಿರುವ ಸೈಬರ್ ಅಪರಾಧ (ಸೆನ್) ಠಾಣೆಯ ಪೊಲೀಸರು ಆರೋಪಿಯನ್ನು ಬಂಧಿಸಿ ಆರೋಪಿಯಿಂದ 3.50 ಲಕ್ಷ ರೂ. ವಶಪಡಿಸಿಕೊಂಡಿದ್ದಾರೆ. ಆರೋಪಿಯ ಹಿನ್ನೆಲೆ: ಗುಜರಾತ್ ನ ಸೂರತ್ ಜಿಲ್ಲೆಯ ಆರೋಪಿ ಮೋಹಿತ್ ವಿರುದ್ಧ ಸಿಂಧನೂರು ಮಾತ್ರವಲ್ಲದೇ ಅಂಧ್ರ ಪ್ರದೇಶದ ಕೋನಸೀಮಾ ಜಿಲ್ಲೆಯ ಮಂಡಪೇಟನಗರದ ಪೊಲೀಸ್ ಠಾಣೆಯಲ್ಲೂ ದೂರು ದಾಖಲಾಗಿದೆ. ಆರೋಪಿ 13 ಸೈಬರ್ ವಂಚನೆ ಪ್ರಕರಣಗಳಲ್ಲಿ ಭಾಗಿಯಾಗಿರುವುದು ವಿಚಾರಣೆಯಿಂದ ಬೆಳಕಿಗೆ ಬಂದಿದೆ. ಪ್ರಕರಣವನ್ನು ಸೈಬರ್ ಅಪರಾಧ ಠಾಣೆಯ ಡಿಎಸ್ ಪಿ ವೆಂಕಟೇಶ ಹೊಗಿಬಂಡಿ, ಸಿಬ್ಬಂದಿ ಪ್ರಾಣೇಶ, ಪ್ರವೀಣಕುಮಾರ ತನಿಖೆ ನಡೆಸಿ ಆರೋಪಿಯನ್ನು ಪತ್ತೆ ಮಾಡಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪುಟ್ಟಮಾದಯ್ಯ ತಿಳಿಸಿದ್ದಾರೆ.
ಗೋವಾ ನೈಟ್ಕ್ಲಬ್ ಮಾಲಕರ ಗಡೀಪಾರು ಸನ್ನಿಹಿತ : ಇಂದು ದೆಹಲಿಗೆ
ಹೊಸದಿಲ್ಲಿ: ಡಿ. 6ರಂದು ಗೋವಾದಲ್ಲಿ ಭೀಕರ ಅಗ್ನಿದುರಂತ ಸಂಭವಿಸಿದ ನೈಟ್ಕ್ಲಬ್ ನ ಮಾಲಕರಾದ ಸೌರಭ್ ಮತ್ತು ಗೌರವ್ ಲೂತ್ರಾ ಅವರನ್ನು ಥಾಯ್ಲೆಂಡ್ ನಿಂದ ಗಡೀಪಾರು ಮಾಡುವ ಪ್ರಕ್ರಿಯೆ ಅಂತಿಮ ಹಂತದಲ್ಲಿದ್ದು, ಮಂಗಳವಾರ ಹೊಸದಿಲ್ಲಿಗೆ ಕರೆತರುವ ನಿರೀಕ್ಷೆ ಇದೆ. 25 ಮಂದಿಯ ಸಜೀವ ದಹನಕ್ಕೆ ಕಾರಣವಾಗಿದ್ದ ದುರಂತ ಸಂಭವಿಸಿದ ಬೆನ್ನಲ್ಲೇ ಮಾಲಕರಾದ ಲೂತ್ರಾ ಸಹೋದರರು ಥಾಯ್ಲೆಂಡಿಗೆ ಪಲಾಯನ ಮಾಡಿದ್ದರು. ಇಬ್ಬರು ಆರೋಪಿಗಳನ್ನು ಮಧ್ಯಾಹ್ನ 1.45ರ ವೇಳೆಗೆ ಬ್ಯಾಂಕಾಕ್ ನಿಂದ ಇಂಡಿಗೋ ವಿಮಾನದಲ್ಲಿ ದೆಹಲಿಗೆ ಕರೆತರಲಾಗುವುದು ಎಂದು ಉನ್ನತ ಮೂಲಗಳು ತಿಳಿಸಿವೆ. ದೆಹಲಿ ಅಪರಾಧ ವಿಭಾಗ ಮತ್ತು ಗೋವಾ ಪೊಲೀಸರು ಆರೋಪಿಗಳನ್ನು ಪಾಟಿಯಾಲಾ ಹೌಸ್ ಕೋರ್ಟ್ನಲ್ಲಿ ಹಾಜರುಪಡಿಸುವ ನಿರೀಕ್ಷೆ ಇದೆ. ಮಂಗಳವಾರ ರಾತ್ರಿ ಗೋವಾಗೆ ಕರೆದೊಯ್ಯಲಾಗುವುದು ಎಂದು ಗೋವಾ ಡಿಜಿಪಿ ಅಲೋಕ್ ಕುಮಾರ್ ಹೇಳಿದ್ದಾರೆ. ಗಡೀಪಾರು ಪ್ರಕ್ರಿಯೆಯನ್ನು ಪೂರ್ಣಗೊಳಿಸುವ ನಿಟ್ಟಿನಲ್ಲಿ ಸಿಬಿಐ ಮತ್ತು ಗುಪ್ತಚರ ಅಧಿಕಾರಿಗಳನ್ನು ಒಳಗೊಂಡ ವಿಶೇಷ ತಂಡ ಶನಿವಾರ ಫುಕೆಟ್ಗೆ ತೆರಳಿತ್ತು. ಅಗ್ನಿದುರಂತ ಸಂಭವಿಸಿದ ಬ್ರಿಚ್ ಬೈ ರೋಮಿಯೊ ಲೇನ್ನಲ್ಲಿ ಬೆಂಕಿ ನಂದಿಸಲು ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿ ಹೆಣಗಾಡುತ್ತಿದ್ದರೆ, ಆರೋಪಿ ಸಹೋದರರು ದೆಹಲಿಯಿಂದ ಥಾಯ್ಲೆಂಡ್ಗೆ ಪಲಾಯನ ಮಾಡಿದ್ದರು. ಘಟನೆಯ ಬೆನ್ನಲ್ಲೇ ದೆಹಲಿ ಪ್ರಾದೇಶಿಕ ಪಾಸ್ಪೋರ್ಟ್ ಕಚೇರಿಯಿಂದ ಉಭಯ ಆರೋಪಿಗಳಿಗೆ ಶೋಕಾಸ್ ನೀಡಿ ಏಳು ದಿನಗಳ ಒಳಗಾಗಿ ಪಾಸ್ಪೋರ್ಟ್ಗಳನ್ನು ಏಕೆ ಮುಟ್ಟುಗೋಲು ಹಾಕಿಕೊಳ್ಳಬಾರದು ಎಂಬ ಬಗ್ಗೆ ವಿವರಣೆ ನೀಡುವಂತೆ ಸೂಚಿಸಲಾಗಿತ್ತು. ಈ ನೋಟಿಸ್ ನೀಡಿಕೆ ಬಳಿಕ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಪಾಸ್ಪೋರ್ಟ್ಗಳನ್ನು ವಶಪಡಿಸಿಕೊಳ್ಳುತ್ತದೆ. ಅಂದರೆ ಥಾಯ್ಲೆಂಡ್ನಲ್ಲಿ ಅಧಿಕೃತ ಪ್ರವಾಸ ದಾಖಲೆಗಳಿಲ್ಲದೇ ಅವರು ನೆಲೆಸುವಂತಾಗುತ್ತದೆ.
ಖರ್ಗೆ ದಯನೀಯ ಸ್ಥಿತಿ ನೋಡಿ ತಲೆತಗ್ಗಿಸುವಂತಾಗಿದೆ ಎಂದ ಬಿಜೆಪಿ : ಅಪಪ್ರಚಾರವೇ ನಿಮ್ಮ ಆತ್ಮ ಎಂದ ಕಾಂಗ್ರೆಸ್
Congress Vs BJP : ವೋಟ್ ಚೋರಿ ಅಭಿಯಾನದ ವೇಳೆ ಕಾಂಗ್ರೆಸ್ ಹೈಕಮಾಂಡ್, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರಿಗೆ ಅವಮಾನ ಮಾಡಿದೆ ಎಂದು ಬಿಜೆಪಿ ಆರೋಪಿಸಿದೆ. ಈ ಸಂಬಂಧ ಬಿಜೆಪಿ ಮಾಡಿರುವ ಟ್ವೀಟಿಗೆ, ಕಾಂಗ್ರೆಸ್ ಪ್ರತಿಕ್ರಿಯೆ ನೀಡಿದೆ. ಬೌದ್ಧಿಕ ದಾರಿದ್ರ್ಯದಿಂದ ನೀವು ಬಳಲುತ್ತಿದ್ದೀರಿ ಎಂದು ಕಾಂಗ್ರೆಸ್, ಬಿಜೆಪಿಗೆ ಟ್ವೀಟ್ ಮಾಡಿದೆ.
ಶಿವಮೊಗ್ಗ | ಹೊಸನಗರದಲ್ಲಿ 10 ಮಂದಿಗೆ ಮಂಗನ ಕಾಯಿಲೆ ಪಾಸಿಟಿವ್
ಶಿವಮೊಗ್ಗ: ಹೊಸನಗರ ತಾಲ್ಲೂಕಿನಲ್ಲಿ ಕೆಎಫ್ಡಿ ವೈರಸ್ ವೇಗವಾಗಿ ಹರಡುತ್ತಿದ್ದು, ಈವರೆಗೆ ಒಟ್ಟು 10 ಮಂದಿ ಪಾಸಿಟಿವ್ ಗೆ ಒಳಗಾಗಿದ್ದಾರೆ. ಸೊನಲೆ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯಲ್ಲಿ ಮೊದಲು ಪ್ರಕರಣ ದಾಖಲಾಗಿತ್ತು. ಇದಕ್ಕೆ ಮತ್ತೆರಡು ಪ್ರಕರಣ ಸೇರ್ಪಡೆಯಾಗಿದೆ. ಬಿಳ್ಳೊಡಿ ಸಮೀಪದ ಅರಳಸುರಳಿಯಲ್ಲಿ 2 ಪ್ರಕರಣ ಪತ್ತೆಯಾಗಿದೆ. ಒಟ್ಟು 10 ಪ್ರಕರಣಗಳು ವರದಿಯಾಗಿದ್ದು, ಎಲ್ಲರೂ 50ರಿಂದ 60 ವರ್ಷ ವಯೋಮಾನದವರಾಗಿದ್ದಾರೆ.
ಇಳಿದ ತಾಪಮಾನ, ಏರಿದ ಮೊಟ್ಟೆ ದರ; ತತ್ತಿ ಖಾದ್ಯಗಳಿಗೆ ಹೆಚ್ಚಿದ ಬೇಡಿಕೆ
ಉತ್ತರ ಕರ್ನಾಟಕದಲ್ಲಿ ವಿಪರೀತ ಚಳಿ ಹೆಚ್ಚಾಗಿದೆ. ಇದರಿಂದಾಗಿ ಮೊಟ್ಟೆ ದರವೂ ಏರಿಕೆಯಾಗಿದೆ. ಮೊಟ್ಟೆ ತಿಂದರೆ ದೇಹ ಬೆಚ್ಚಗಾಗುತ್ತದೆ ಎಂಬ ನಂಬಿಕೆಯಿಂದ ಮೊಟ್ಟೆ ಖಾದ್ಯಗಳಿಗೆ ಬೇಡಿಕೆ ಹೆಚ್ಚಿದೆ. ಉತ್ಪಾದನೆ ಕೊರತೆ ಮತ್ತು ಮಹಾರಾಷ್ಟ್ರದಿಂದ ಹೆಚ್ಚಿದ ಬೇಡಿಕೆ ಕೂಡ ದರ ಏರಿಕೆಗೆ ಕಾರಣವಾಗಿದೆ. ನಾಟಿ ಕೋಳಿ ಮೊಟ್ಟೆ ದರದಲ್ಲೂ ಏರಿಕೆಯಾಗಿದೆ. ಮೊಟ್ಟೆ ಮಾರಾಟದ ಪ್ರಮಾಣ ಶೇ. 70 ರಷ್ಟಿದೆ.
Explained: 60 ವರ್ಷಗಳ ಹಿಂದೆ ಹಿಮಾಲಯದಲ್ಲಿ ಪರಮಾಣು ಸಾಧನ ಇರಿಸಿದ್ದ ಸಿಐಎ; ಈಗ ಕಿದರ್ ಹೈ? ರೋಚಕ ಸ್ಟೋರಿ!
ಅಮೆರಿಕದ ಗುಪ್ತಚರ ಸಂಸ್ಥೆ ಸಿಐಎ ಭಾರತದ ಸಿಕ್ಕಿಂನಲ್ಲಿರುವ ನಂದಾ ದೇವಿ ಪರ್ವತದಲ್ಲಿ 1965ರಲ್ಲಿ ನಡೆಸಿದ್ದ ವಿಫಲ ಕಾರ್ಯಾಚರಣೆಯೊಂದರ ಬಗ್ಗೆ, ನ್ಯೂಯಾರ್ಕ್ ಟೈಮ್ಸ್ ವರದಿ ಸ್ಫೋಟಕ ಮಾಹಿತಿಗಳನ್ನು ಬಿಚ್ಚಿಟ್ಟಿದೆ. ಚೀನಾದ ಕ್ಷಿಪಣಿ ಪರೀಕ್ಷೆಗಳ ಮೇಲೆ ಕಣ್ಣಿಡಲು ಸಿಐಎ ನಂದಾ ದೇವಿ ಪರ್ವತದ ಮೇಲೆ ಪ್ಲುಟೋನಿಯಂ ತುಂಬಿದ್ದ ಪರಮಾಣು ಸಾಧನವೊಂದನ್ನು ಇರಸಲಿ ಬಯಸಿತ್ತು. ಆದರೆ ಹಿಮಪಾತದಿಂದಾಗಿ ಈ ಕಾರ್ಯಾಚರಣೆ ವಿಫಲವಾಗಿತ್ತು. ಇದರಲ್ಲಿ ಭಾರತದ ಪಾತ್ರದ ಬಗ್ಗೆಯೂ ನ್ಯೂಯಾರ್ಕ್ ಟೈಮ್ಸ್ ವರದಿ ಉಲ್ಲೇಖಿಸಿದೆ. ಸತ್ಯ ಏನು? ಇಲ್ಲಿದೆ ಮಾಹಿತಿ.
ಡಿಸೆಂಬರ್ 16ರಂದು ರಾಜ್ಯದಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ?: ಜಿಲ್ಲಾವಾರು ಅಂಕಿಅಂಶಗಳ ವಿವರ
Petrol, Diesel Price: ಪೆಟ್ರೋಲ್, ಡೀಸೆಲ್ ದರಲ್ಲಿ ಜಾಸ್ತಿ ಅಲ್ಲದಿದ್ದರೂ, ಸ್ವಲ್ಪ ಪ್ರಮಾಣದಲ್ಲಾದ್ರೂ ಏರಿಳಿತ ಆಗುತ್ತಿರುತ್ತದೆ. ಹಾಗಾದರೆ, ಇಂದು (ಡಿಸೆಂಬರ್ 16) ಬೆಂಗಳೂರು ಸೇರಿದಂತೆ ರಾಜ್ಯದ ಉಳಿದ ಜಿಲ್ಲೆಗಳಲ್ಲಿ ಲೀಟರ್ ಪೆಟ್ರೋಲ್, ಡೀಸೆಲ್ ಬೆಲೆ ಎಷ್ಟಿದೆ ಎನ್ನುವ ಅಂಕಿಅಂಶಗಳನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ. ಶಕ್ತಿಯ ಮೂಲಗಳು ಎನಿಸಿಕೊಂಡಿರುವ ಪೆಟ್ರೋಲ್ ಮತ್ತು ಡೀಸೆಲ್ ಇಂಧನ ಅತ್ಯವಶ್ಯಕವಾಗಿ ಬೇಕಾಗುವ ಸಂಪನ್ಮೂಲಗಳಾಗಿವೆ.
ರಾಜಕೀಯ ಗದ್ದಲಗಳಿಗೆ ವೇದಿಕೆಯಾದ ಅಧಿವೇಶನ ಕಲಾಪಗಳು...
ಬೆಳಗಾವಿ(ಸುವರ್ಣವಿಧಾನಸೌಧ), ಡಿ.15: ಜನರ ಆಶೋತ್ತರಗಳಿಗೆ ಅನುಗುಣವಾಗಿ ಆಡಳಿತ ಮತ್ತು ವಿಪಕ್ಷಗಳು ಪರಸ್ಪರ ಚರ್ಚೆ ನಡೆಸಿ, ಅದಕ್ಕೆ ಸರಕಾರ ಸೂಕ್ತ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಜರುಗುವ ಅಧಿವೇಶನಗಳು ಇತ್ತೀಚೆಗೆ ರಾಜಕೀಯ ಬಡಿದಾಟಗಳಿಗೆ ವೇದಿಕೆಗಳಾಗಿವೆ. ಅದರಂತೆ ಈ ಬಾರಿಯ ಬೆಳಗಾವಿ ಚಳಿಗಾಲದ ಅಧಿವೇಶನವೇನೂ ಹೊರತಾಗಿಲ್ಲ. ಈಗಾಗಲೇ ಅಧಿವೇಶನದ ಅರ್ಧ ಭಾಗ ಪೂರ್ಣಗೊಂಡಿದ್ದು, ಇಲ್ಲಿಯವರೆಗೆ ಉಭಯ ಸದನದಲ್ಲಿ ನಡೆದ ಕೆಲವೇ ಕೆಲವು ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳ ಕುರಿತ ಚರ್ಚೆಗಳು ಆರೋಪ-ಪ್ರತ್ಯಾರೋಪಗಳಿಗಷ್ಟೇ ಸೀಮಿತವಾಗಿದ್ದು, ಉಳಿದಂತೆ ಸಿಎಂ ಕುರ್ಚಿ ಕಿತ್ತಾಟ, ಬಣ ಬಡಿದಾಟಗಳಂತಹ ರಾಜಕೀಯ ಗದ್ದಲಗಳಿಗೆ ಸದನ ಸಾಕ್ಷಿಯಾದಂತಾಗಿದೆ. ‘ಪ್ರಾದೇಶಿಕ ಸಮತೋಲನ ಕಾಪಾಡುವ ನಿಟ್ಟಿನಲ್ಲಿ ಪ್ರಾರಂಭವಾದ ಬೆಳಗಾವಿ ಚಳಿಗಾಲದ ಅಧಿವೇಶನ 2006ರಿಂದ ಈವರೆಗೆ 13 ಅಧಿವೇಶನಗಳು ನಡೆದಿವೆ. ಈಗ 14ನೇ ಅಧಿವೇಶನ ನಡೆಯುತ್ತಿದೆ. ಆದರೆ, ಉತ್ತರ ಕರ್ನಾಟಕ ಭಾಗದ ಜ್ವಲಂತ ಸಮಸ್ಯೆಗಳಾದ ಕೃಷ್ಣಾ ಮೇಲ್ದಂಡೆ, ಮಹದಾಯಿ, ಕಳಸಾ ಬಂಡೂರಿಯಂಥಹ ನೀರಾವರಿ ಯೋಜನೆಗಳು, ಅರಣ್ಯ ಒತ್ತುವರಿ, ವಲಸೆ ಸಮಸ್ಯೆ, ಉದ್ಯೋಗ ಕೊರತೆ, ರೈತರು ಎದುರಿಸುತ್ತಿರುವ ಸಮಸ್ಯೆಗಳಿಗೆ ಇಂದಿಗೂ ಶಾಶ್ವತ ಪರಿಹಾರ ನೀಡಲಾಗಿಲ್ಲ. ಯಾವ ಉದ್ದೇಶ ಇಟ್ಟುಕೊಂಡು ಸರಕಾರ ಸುವರ್ಣವಿಧಾನಸೌಧವನ್ನು ಬೆಳಗಾವಿಯಲ್ಲಿ ಕಟ್ಟಲಾಗಿದೆ ಎಂಬುದೇ ನಮಗೆ ಅರ್ಥವಾಗುತ್ತಿಲ್ಲ. ಈ ಭಾಗದ ಸಮಸ್ಯೆಗಳಿಗೆ ಪರಿಹಾರ ನೀಡದ ಈ ಅಧಿವೇಶನ ಯಾಕೆ ಬೇಕು?’ ಎಂಬುದು ಇಲ್ಲಿನ ಜನಸಾಮಾನ್ಯರ ಒಕ್ಕೊರಲಿನ ಪ್ರಶ್ನೆ. ಜನರ ಬದುಕು ಬರಡು : 15 ಜಿಲ್ಲೆಗಳನ್ನು ಒಳಗೊಂಡಿರುವ ಉತ್ತರ ಕರ್ನಾಟಕ ಭಾಗದ ಬಹುತೇಕ ಕಡೆಗಳಲ್ಲಿ ಜನಸಾಮಾನ್ಯರು ಇಂದಿಗೂ ವಾಸಿಸಲು ಸೂರಿಲ್ಲದೆ, ಹಳ್ಳಿಗಳಿಗೆ ವಿದ್ಯುತ್ ಸೌಲಭ್ಯವಿಲ್ಲದೇ ಬದುಕುವಂತಹ ದುಸ್ಥಿತಿ ಇದೆ. ನೂರಾರು ಊರುಗಳಿಗೆ ಸರಕಾರಿ ಬಸ್ ವ್ಯವಸ್ಥೆಯೇ ಇಲ್ಲ, ರಸ್ತೆ ಸಂಪರ್ಕ ಹದಗೆಟ್ಟಿದೆ. ಸೂಕ್ತ ನೀರಾವರಿ ವ್ಯವಸ್ಥೆಯಿಲ್ಲದೆ ಕೃಷಿಯನ್ನೇ ನಂಬಿಕೊಂಡ ಜನರ ಬದುಕು ಬರಡಾಗಿದೆ. ಕೆಲಸಕ್ಕಾಗಿ ಇಲ್ಲಿನ ಬಹುತೇಕ ಜನರು ವರ್ಷಾನುಗಟ್ಟಲೇ ವಲಸೆ ಹೋಗುತ್ತಾರೆ. ಹೀಗಿದ್ದಾಗ, ಈವರೆಗೂ ಹಲವು ಸರಕಾರಗಳು ಬೆಳಗಾವಿಯಲ್ಲಿ ಅಧಿವೇಶನ ನಡೆಸಿ ಉತ್ತರ ಕರ್ನಾಟಕಕ್ಕೆ ಏನು ಅನುಕೂಲ ಒದಗಿಸಿವೆ ಎಂಬುದು ಬೆಳಗಾವಿ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾಸಮಿತಿ ಅಧ್ಯಕ್ಷ ಅಶೋಕ್ ಚಂದರಗಿ ಅವರ ಪ್ರಶ್ನೆಯಾಗಿದೆ. ಜಾತ್ರೆಗೆ ಬಂದಂತೆ ಸರಕಾರ ಬಂದು ಹೋಗುತ್ತದೆ : ಈ ಭಾಗದ ಹಲವು ದಶಕಗಳ ಸಮಸ್ಯೆಗಳಿಗೆ ಪರಿಹಾರ ಒದಗಿಸಬೇಕು ಎಂಬ ಉದ್ದೇಶದಿಂದಲೇ ಬೆಳಗಾವಿಯಲ್ಲಿ ಸುವರ್ಣ ವಿಧಾನಸೌಧವನ್ನು ಕಟ್ಟಿ, ಪ್ರತೀ ವರ್ಷವೂ ಇಲ್ಲಿ 10 ದಿನಗಳ ಕಾಲ ಚಳಿಗಾಲ ಅಧಿವೇಶನ ನಡೆಸಲಾಗುತ್ತದೆ. 2006ರಲ್ಲಿ ಮೊದಲ ಅಧಿವೇಶನ ನಡೆದಾಗ ಐದು ಕೋಟಿ ರೂ.ಖರ್ಚಾಗಿತ್ತು. ಈಗ 14ನೇ ಅಧಿವೇಶನಕ್ಕೆ ಸರಕಾರ ಬರೋಬ್ಬರಿ 21 ಕೋಟಿ ರೂ. ವ್ಯಯ ಮಾಡಿದೆ. ಆದರೆ, ಇದು ಕಾಟಾಚಾರದ ಅಧಿವೇಶನ, ಜಾತ್ರೆಗೆ ಬಂದ ರೀತಿಯಲ್ಲಿ ಸರಕಾರ ಬಂದು ಹೋಗುತ್ತದೆ. ಉತ್ತರ ಕರ್ನಾಟಕದ ಶಾಸಕರ ಹಾಜರಾತಿಯೇ ಕಡಿಮೆ ಇರುತ್ತದೆ. ಬೆಳಗ್ಗೆ ಸಹಿ ಮಾಡಿ ಹೋದವರು ವಾಪಸ್ ಸದನಕ್ಕೆ ಬರುವುದೇ ಇಲ್ಲ ಎಂಬ ದೂರುಗಳು ಪ್ರತಿವರ್ಷವೂ ಕೇಳಿ ಬರುತ್ತಿದೆ. ಈ ಸಲವೂ ಅದೇ ರೀತಿ ಆಗಿದೆ. ಅಧಿವೇಶನದ ಬಗ್ಗೆ ಯಾವ ನಿರೀಕ್ಷೆಗಳೂ ಉಳಿದಿಲ್ಲ ಎಂದು ಅಶೋಕ್ ಚಂದರಗಿಯವರ ಆರೋಪವಾಗಿದೆ. ಪ್ರತ್ಯೇಕ ರಾಜ್ಯ ಕೊಡಿ ಎನ್ನುವುದನ್ನು ಬಿಟ್ಟು ಪ್ರತ್ಯೇಕ ಬಜೆಟ್ ತನ್ನಿ : ಉತ್ತರ ಕರ್ನಾಟಕ ಭಾಗದ ಹಲವಾರು ಸಮಸ್ಯೆಗಳು ಇಂದಿಗೂ ಸಮಸ್ಯೆ ಆಗಿಯೇ ಉಳಿದಿರಲು ಮೂಲ ಕಾರಣ ಉತ್ತರ ಕರ್ನಾಟಕದ 96 ಶಾಸಕರು! ಎಲ್ಲ ಪಕ್ಷಗಳನ್ನು ಒಳಗೊಂಡ 96 ಶಾಸಕರಲ್ಲಿ ಕನಿಷ್ಠ 50 ಶಾಸಕರಾದರೂ ಒಗ್ಗಟ್ಟಿನಿಂದ ಉ.ಕ.ಭಾಗದ ಅಭಿವೃದ್ಧಿಗೆ ದಿಟ್ಟತನದಲ್ಲಿ ಧ್ವನಿ ಎತ್ತಿದ್ದರೆ ಬದಲಾವಣೆ ಕಾಣಬಹುದಾಗಿತ್ತು. ಅದನ್ನು ಬಿಟ್ಟು ಈ ಭಾಗದ ಜನರನ್ನು ಭಾವನಾತ್ಮಕವಾಗಿ ಮೂರ್ಖರನ್ನಾಗಿಸಲು ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಬೇಕು ಎನ್ನುವ ಕೂಗನ್ನು ಆಗಾಗ ಮುನ್ನೆಲೆಗೆ ತರುತ್ತಾರೆ. ಇದರಿಂದ ಏನೂ ಪ್ರಯೋಜನವಿಲ್ಲ. ಇದೆಲ್ಲವೂ ಇಲ್ಲಿನ ಜನಪ್ರತಿನಿಧಿಗಳ ರಾಜಕೀಯ ಅಜೆಂಡಾ ಅಷ್ಟೇ. ಯಾವುದೇ ಪಕ್ಷದ ಸರಕಾರವಿರಲಿ ಈ ಭಾಗದ ಶಾಸಕರಲ್ಲಿ ಒಗ್ಗಟ್ಟು, ಧೈರ್ಯವಿದ್ದರೆ ಉತ್ತರ ಕರ್ನಾಟಕಕ್ಕೆ ಪ್ರತ್ಯೇಕ ಬಜೆಟ್ ತನ್ನಿ ಎನ್ನುವುದು ಅಶೋಕ್ ಚಂದರಗಿಯವರ ಸವಾಲಾಗಿದೆ. ಕುರ್ಚಿ ಕದನಕ್ಕೆ ಸದನ ಸೀಮಿತ : ಚಳಿಗಾಲದ ಅಧಿವೇಶನ ಮಧ್ಯೆಯೂ ಬೆಳಗಾವಿ ಹೊರವಲಯದ ಖಾಸಗಿ ರೆಸಾರ್ಟ್ವೊಂದರಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಮತ್ತವರ ಬಣದವರು ಸಿಎಂ ಬದಲಾವಣೆ ವಿಚಾರದಲ್ಲಿ ಶಾಸಕರನ್ನು ಸೇರಿಸಿ ಅಭಿಪ್ರಾಯ ಸಂಗ್ರಹಿಸುವ ಯತ್ನದಲ್ಲಿ ತೊಡಗಿದ್ದು, ಈ ಗದ್ದಲ ಸದನಲ್ಲೂ ಮುಂದುವರಿದಿದೆ. ಆಡಳಿತರೂಢ ಕಾಂಗ್ರೆಸ್ನ ಕುರ್ಚಿ ಕಿತ್ತಾಟ, ವಿಪಕ್ಷಗಳ ಟೀಕೆಗೆ ಆಹಾರವಾಗಿ ಒಟ್ಟಾರೆ ಸದನ ಗದ್ದಲಗೂಡಾಗಿದೆ. ಇದರ ನಡುವೆ ಉತ್ತರ ಭಾಗದ ಸಮಸ್ಯೆಗಳು ಗೌಣವಾಗಿವೆ. ಇನ್ನರ್ಧದ ಅಧಿವೇಶನದಲ್ಲಿಯಾದರೂ ಈ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಸಿಗಲಿ. ಚರ್ಚೆಗಳು ತಾರ್ಕಿಕ ಅಂತ್ಯಕಾಣಲಿ. -ಅಶೋಕ್ ಚಂದರಗಿ, ಅಧ್ಯಕ್ಷ, ಬೆಳಗಾವಿ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾಸಮಿತಿ ಬೆಳಗಾವಿ ಅಧಿವೇಶನ ಎಂಬುದು ಟೂರಿಂಗ್ ಟಾಕೀಸ್ ಎಂಬ ಹಣೆಪಟ್ಟಿ ಪಡೆದುಕೊಂಡಿದೆ. ಬೆಂಗಳೂರಿನಿಂದ ಬೆಳಗಾವಿಗೆ ಬರುವ ಸಚಿವರು, ಶಾಸಕರು ಹಾಗೂ ಹಿರಿಯ ಅಧಿಕಾರಿಗಳು ಸುತ್ತಲಿನ ಜಿಲ್ಲೆಗಳಲ್ಲಿರುವ ಪರಿಸ್ಥಿತಿ ಅವಲೋಕಿಸಿ ಸರಕಾರಕ್ಕೆ ವರದಿ ಒಪ್ಪಿಸುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಿದ್ದಲ್ಲಿ ಇಲ್ಲಿನ ಜನರ ನಿಜವಾದ ಬದುಕು ಅನಾವರಣಗೊಳ್ಳುತ್ತದೆ. ಹಾಗಾದಾಗ ಸೂಕ್ತ ಬದಲಾವಣೆ ತರಲು ಸಾಧ್ಯ. -ರಮೇಶ್ ಕತ್ತಿ, ಮಾಜಿ ಸಂಸದ 100ಕ್ಕೂ ಅಧಿಕ ಪ್ರಶ್ನೆಗಳಿಗಿಲ್ಲ ಉತ್ತರ? : ಇಲ್ಲಿಯವರೆಗೆ ವಿಧಾನ ಪರಿಷತ್ನಲ್ಲಿ 100ಕ್ಕೂ ಹೆಚ್ಚು ಪ್ರಶ್ನೆಗಳಿಗೆ ಲಿಖಿತ ಉತ್ತರವೇ ಬಂದಿಲ್ಲ ಎಂದು ಜೆಡಿಎಸ್ನ ಭೋಜೇಗೌಡ ಶುಕ್ರವಾರ(ಡಿ.12)ದ ಕಲಾಪದಲ್ಲಿ ಆಕ್ರೋಶ ಹೊರಹಾಕಿದರು. ಇದು ಸರಕಾರ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯವನ್ನು ತೋರಿಸುತ್ತದೆ. ಜನರ ಸಮಸ್ಯೆಗಳ ಕುರಿತ ಪ್ರಶ್ನೆಗಳಿಗೆ ಉತ್ತರ ಕೊಡಲಾಗದಿದ್ದರೆ ಕೋಟ್ಯಂತರ ರೂ.ಗಳನ್ನು ದುಂದುವೆಚ್ಚ ಮಾಡಿ ಅಧಿವೇಶನಗಳೇಕೆ ನಡೆಸಬೇಕು? ಎಂಬುದು ಸಾಮಾಜಿಕ ಕಾರ್ಯಕರ್ತ ಸತೀಶ್ ಅವರ ಅಭಿಪ್ರಾಯ.
ಚೋರನೂರಿಗೆ ಭದ್ರಾ ಮೇಲ್ದಂಡೆ ಯೋಜನೆ ಯಾವಾಗ?
ಸಂಡೂರು ತಾಲೂಕಿನ ಚೋರನೂರು ಹೋಬಳಿಯ 10 ಸಾವಿರ ಎಕರೆ ರೈತರು ಭದ್ರಾ ಮೇಲ್ದಂಡೆ ಮೂಲ ಯೋಜನೆಗಾಗಿ ಪ್ರತಿ ವರ್ಷ ಮಳೆಗಾಗಿ ಕಾಯುತ್ತಿದ್ದಾರೆ. 1968ರಲ್ಲೇ ರೂಪಿತಗೊಂಡಿದ್ದ ಈ ಯೋಜನೆ ರಾಜಕೀಯ ಇಚ್ಛಾಶಕ್ತಿ ಕೊರತೆಯಿಂದ ನನೆಗುದಿಗೆ ಬಿದ್ದಿದೆ. ಕೂಡ್ಲಿಗಿ ಭಾಗದ ಕೆರೆಗಳು ತುಂಬಿದ್ದರೂ, ಚೋರನೂರು ವಂಚಿತವಾಗಿದೆ.
Gold Price Today: ದಿಢೀರ್ ದುಬಾರಿಯಾದ ಚಿನ್ನ, ಎಷ್ಟಿದೆ ಇಂದಿನ ದರ?
ಚಿನ್ನದ ದರಗಳಲ್ಲಿ ಸೋಮವಾರ ಭಾರೀ ಏರಿಕೆ ಕಂಡಿದ್ದು, ಚಿನ್ನ ಖರೀದಿದಾರರು ಶಾಕ್ನಲ್ಲಿದ್ದಾರೆ. ಒಂದು ಗ್ರಾಂ.ಚಿನ್ನದ ಮೇಲೆ 147 ರೂಪಾಯಿವರೆಗೆ ದರ ಏರಿದೆ. ಹೊಸ ವರ್ಷಕ್ಕೂ ಮುನ್ನವೇ ಚಿನ್ನ ದುಬಾರಿಯಾಗಿದ್ದು, ಖರೀದಿಯ ಆಸೆಯಲ್ಲಿದ್ದವರು ಕಂಗಾಲಾಗಿದ್ದಾರೆ. ಇಂದಿನ 24 ಕ್ಯಾರೆಟ್, 22 ಕ್ಯಾರೆಟ್, 18 ಕ್ಯಾರೆಟ್ ಚಿನ್ನದ ದರ ಹಾಗೂ ಬೆಳ್ಳಿಯ ದರಗಳ ಮಾಹಿತಿಯನ್ನು ಇಲ್ಲಿ ತಿಳಿಯಿರಿ.. ಚಿನ್ನದ ಬೆಲೆಗಳು
ಮೆಕ್ಸಿಕೋ | ತುರ್ತು ಲ್ಯಾಂಡಿಂಗ್ ವೇಳೆ ಮೇಲ್ಚಾವಣಿಗೆ ಅಪ್ಪಳಿಸಿದ ವಿಮಾನ : 7 ಮಂದಿ ಮೃತ್ಯು
ಮೆಕ್ಸಿಕೋ: ಇಲ್ಲಿನ ಸ್ಯಾನ್ ಮಾಂಟಿಯೊ ಅಟೆನ್ಕೊದಲ್ಲಿ ಸೋಮವಾರ ಪುಟ್ಟ ಖಾಸಗಿ ವಿಮಾನವೊಂದು ತುರ್ತು ಲ್ಯಾಂಡಿಂಗ್ ವೇಳೆ ವ್ಯವಹಾರ ಕೇಂದ್ರವೊಂದರ ಚಾವಣಿಗೆ ಬಡಿದು ಸಂಭವಿಸಿದ ದುರಂತದಲ್ಲಿ ಏಳು ಮಂದಿ ಮೃತಪಟ್ಟಿದ್ದಾರೆ. ಘಟನೆ ಹಿನ್ನೆಲೆಯಲ್ಲಿ ಭಾರಿ ಬೆಂಕಿ ಅನಾಹುತ ಸಂಭವಿಸಿದ್ದು, ಜನರನ್ನು ಸುರಕ್ಷಿತವಾಗಿ ಹೊರಕ್ಕೆ ಕರೆತರಲಾಗಿದೆ. ಅಕಪುಲ್ಕೊದಿಂದ ಹೊರಟಿದ್ದ ವಿಮಾನ ಮೆಕ್ಸಿಕೋ ಸಿಟಿಯಿಂದ 31 ಮೈಲು ಪಶ್ಚಿಮಕ್ಕೆ ಇರುವ ಟ್ಯುಲುಕಾ ವಿಮಾನ ನಿಲ್ದಾಣದತ್ತ ತೆರಳುತ್ತಿತ್ತು. ಅಪಘಾತ ಸಂಭವಿಸಿದ ಸ್ಥಳ ವಿಮಾನ ನಿಲ್ದಾಣದಿಂದ ಸುಮಾರು ಮೂರು ಕಿಲೋಮೀಟರ್ ದೂರದ ಕೈಗಾರಿಕಾ ಪ್ರದೇಶ ಎಂದು ಅಧಿಕಾರಿಗಳು ಹೇಳಿದ್ದಾರೆ. ವಿಮಾನದಲ್ಲಿ ಎಂಟು ಮಂದಿ ಪ್ರಯಾಣಿಕರು ಹಾಗೂ ಇಬ್ಬರು ಸಿಬ್ಬಂದಿ ಇದ್ದರು. ಆದರೆ ದುರಂತ ಸಂಭವಿಸಿದ ಹಲವು ಗಂಟೆಗಳ ಬಳಿಕವೂ ಏಳು ಮೃತದೇಹಗಳನ್ನು ಮಾತ್ರ ಪತ್ತೆ ಮಾಡಲಾಗಿದೆ ಎಂದು ಮೆಕ್ಸಿಕೊದ ಸರ್ಕಾರಿ ನಾಗರಿಕ ರಕ್ಷಣಾ ಸಂಯೋಜಕ ಆ್ಯಡ್ರಿನ್ ಹೆರ್ನಾಂಡಿಸ್ ಹೇಳಿದ್ದಾರೆ. ವಿಮಾನ ಫುಟ್ಬಾಲ್ ಮೈದಾನವೊಂದರಲ್ಲಿ ತುರ್ತಾಗಿ ಇಳಿಯುವ ಪ್ರಯತ್ನದಲ್ಲಿದ್ದಾಗ, ವ್ಯವಹಾರ ಕೇಂದ್ರವೊಂದರ ಚಾವಣಿಗೆ ಢಿಕ್ಕಿ ಹೊಡೆಯಿತು. ಈ ಸಂದರ್ಭ ಸಂಭವಿಸಿದ ಭೀಕರ ಬೆಂಕಿಯಿಂದಾಗಿ 130 ಮಂದಿಯನ್ನು ಬೇರೆ ಸ್ಥಳಕ್ಕೆ ಕರೆದೊಯ್ಯಲಾಯಿತು ಎಂದು ಸ್ಯಾನ್ ಮಾಟಿಯೊ ಅಟೆನ್ಕೊ ಮೇಯರ್ ಅನಾ ಮುನೀಝ್ ಅವರು ಮೆಲಾನಿಯೊ ಟೆಲಿವಿಷನ್ಗೆ ತಿಳಿಸಿದ್ದಾರೆ.
HDK Birthday; ನರೇಂದ್ರ ಮೋದಿ ಶುಭಾಶೀರ್ವಾದದಿಂದ ಭಾವುಕರಾದ ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿ
ಕರ್ನಾಟಕದ ಮಾಜಿ ಮುಖ್ಯಮಂತ್ರಿ, ಜೆಡಿಎಸ್ ರಾಜ್ಯಾಧ್ಯಕ್ಷ ಮತ್ತು ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವರಾದ ಹೆಚ್ಡಿ ಕುಮಾರಸ್ವಾಮಿ, ಇಂದು (ಡಿ.16-ಮಂಗಳವಾರ) ತಮ್ಮ 66ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಹೆಚ್ಡಿಕೆ ಅವರಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಜನ್ಮದಿನದ ಶುಭಾಶಯ ತಿಳಿಸಿದ್ದು, ಪ್ರತಿಯಾಗಿ ಹೆಚ್ಡಿಕೆ ಪ್ರಧಾನಿ ಮೋದಿ ಅವರಿಗೆ ಧನ್ಯವಾದ ಅರ್ಪಿಸಿದ್ದಾರೆ. ಇತ್ತ ಜೆಡಿಎಸ್ ರಾಜ್ಯ ಘಟಕ ಕೂಡ ಹೆಚ್ಡಿ ಕುಮಾರಸ್ವಾಮಿ ಅವರ ಜನ್ಮದಿನಕ್ಕೆ ಶುಭಾಶಯ ಸಂದೇಶ ಕಳುಹಿಸಿದೆ. ಇಲ್ಲಿದೆ ಮಾಹಿತಿ.
ಭಾರತದ ರಫ್ತುಗಳು ನವೆಂಬರ್ನಲ್ಲಿ ಭರ್ಜರಿಯಾಗಿವೆ. ಮೂರು ವರ್ಷಗಳಲ್ಲಿಯೇ ಅತಿ ವೇಗವಾಗಿ ಬೆಳೆದು 19.4% ಏರಿಕೆಯೊಂದಿಗೆ 38.1 ಶತಕೋಟಿ ಡಾಲರ್ ತಲುಪಿದೆ. ಚೀನಾ ಹಾಗೂ ಅಮೆರಿಕಾಗೆ ರಫ್ತು ಹೆಚ್ಚಾಗಿದೆ. ಆಮದುಗಳು ಕುಸಿದಿರುವುದರಿಂದ ವ್ಯಾಪಾರ ಕೊರತೆ ಕಡಿಮೆಯಾಗಿದೆ. ಹಲವು ವಲಯಗಳಲ್ಲಿ ರಫ್ತುದಾರರು ಮಾರುಕಟ್ಟೆಗಳನ್ನು ವೈವಿಧ್ಯಗೊಳಿಸಲು ಪ್ರಯತ್ನಿಸುತ್ತಿದ್ದಾರೆ. ಇನ್ನು, ಈಬಾರಿ ಚಿನ್ನದ ಆಮದಿನಲ್ಲಿ ಭಾರಿ ಇಳಿಕೆ ಕಂಡಿದೆ. ಈ ಮೂಲಕ ಭಾರತದ ಮಾರುಕಟ್ಟೆಯಲ್ಲಿ ಇನ್ನಷ್ಟು ಸ್ಥಿರತೆ ಹೆಚ್ಚಾಗುವಂತೆ ಮಾಡಿದೆ.
ಮಂಗಳೂರು | ಪರಸ್ಪರ ಸಂತಸ ಹಂಚಿಕೊಂಡಾಗ ಸೌಹಾರ್ದ: ಜಿಲ್ಲಾಧಿಕಾರಿ ದರ್ಶನ್
ಮಂಗಳೂರು, ಡಿ.15: ಸರ್ವ ಧರ್ಮದವರು ಪರಸ್ಪರ ಸಂತಸವನ್ನು ಹಂಚಿದರೆ ಜಾತಿ, ಭೇದ ಮರೆತು ಸೌಹಾರ್ದದಿಂದ ಜೀವನ ನಡೆಸಲು ಸಾಧ್ಯ ಎಂದು ದ.ಕ. ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ಅಭಿಪ್ರಾಯಿಸಿದ್ದಾರೆ. ಸಂತ ಮದರ್ ತೆರೆಸಾ ವಿಚಾರ ವೇದಿಕೆ, ಕೆಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್ (ರಿ)ಸಹಯೋಗದಲ್ಲಿ ಕದ್ರಿ ಪಾರ್ಕ್ನಲ್ಲಿ ಹಮ್ಮಿಕೊಂಡಿದ್ದ ಸೌಹಾರ್ದ ಕ್ರಿಸ್ಮಸ್ ಉತ್ಸವದ ಎರಡನೇ ದಿನ ಸಂಭ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು. ರವಿವಾರ ನಡೆದ ಕಾರ್ಯಕ್ರಮದಲ್ಲಿ ಮಂಗಳೂರು ಬಿಷಪ್ ರೆ.ಫಾ.ಡಾ.ಪೀಟರ್ ಪಾವ್ಲ್ ಸಲ್ಡಾನ, ಅರಣ್ಯಾಧಿಕಾರಿ ಆ್ಯಂಟನಿ ಮರಿಯಪ್ಪ, ಜಂಗಲ್ ಲಾಡ್ಜಸ್ ರೆಸಾರ್ಟ್ನ ನಿರ್ದೇಶಕ ಕ್ಲಿಫರ್ಡ್ ಲೋಬೊ, ಮಂಗಳೂರು ಧರ್ಮಪ್ರಾಂತದ ಪಿಆರ್ಒ ಫಾ. ಜೆ.ಬಿ.ಸಲ್ಡಾನ ಅತಿಥಿಗಳಾಗಿ ಆಗಮಿಸಿದ್ದರು. ಕ್ರಿಸ್ಮಸ್ ಸಂದೇಶ ನೀಡಿದ ಬಿಷಪ್, ಯೇಸು ಕ್ರಿಸ್ತರ ಜನನ ಜಗತ್ತಿಗೆ ಶಾಂತಿಯ ಸಂದೇಶ ನೀಡಿದೆ. ಎಲ್ಲರಿಗೂ ಶಾಂತಿ ಸಮಾಧಾನ ಬೇಕಿದೆ. ಕಷ್ಟದಲ್ಲಿರುವವರಿಗೆ ನೆರವು, ಸಾಂತ್ವನ ನೀಡುವುದು ಒಳ್ಳೆಯ ಕೈಂಕರ್ಯ ಎಂದರು. ವೇದಿಕೆಯ ಅಧ್ಯಕ್ಷ ರಾಯ್ ಕ್ಯಾಸ್ತೆಲಿನೊ ಮಾತನಾಡಿದರು. ಇದೇ ವೇಳೆ ಅಂತರ್ರಾಷ್ಟ್ರೀಯ ಕ್ರೀಡಾಪಟು ಆನಂದ್ ಸೋನ್ಸ್ ಮತ್ತು ಗೋಲ್ಡನ್ ಬುಕ್ ಆಫ್ ರೆಕಾರ್ಡ್ ದಾಖಲೆ ನಿರ್ಮಿಸಿದ ಭರತನಾಟ್ಯ ಕಲಾವಿದೆ ರೆಮೊನಾ ಇವೆಟ್ ಪಿರೇರರನ್ನು ಸನ್ಮಾನಿಸಲಾಯಿತು. ಸ್ಪರ್ಧಾ ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು. ಕ್ಯಾರಲ್ ಸಿಂಗಿಂಗ್ನಲ್ಲಿ ಸಂತ ಆ್ಯಗ್ನೆಸ್ ಪಿಯು ಕಾಲೇಜು ಪ್ರಥಮ, ಸಂತ ಅಲೋಶಿಯಸ್ ಕಾಲೇಜು ದ್ವಿತೀಯ, ಮದರ್ ತೆರೆಸಾ ಅಭಿಮಾನಿ ಬಳಗ ತೃತೀಯ ಸ್ಥಾನ ಪಡೆಯಿತು. ನಕ್ಷತ್ರ ರಚನೆ ಸ್ಪರ್ಧೆಯಲ್ಲಿ ಪಾದುವ ಫ್ರೆಂಡ್ಸ್ ಕ್ಲಬ್ ಪ್ರಥಮ, ಸೋನಲ್ ಕಿಶೋರ್ ಲೋಬೊ ಪೆರ್ಮನ್ನೂರು ದ್ವಿತೀಯ, ರೊಬಿ ಮಿರಾಂದ ದೇರೆಬೈಲು ತೃತೀಯ ಸ್ಥಾನ ಗಳಿಸಿದರು. ಕೇಕ್ ಸ್ಪರ್ಧೆಯಲ್ಲಿ ಶಿರ್ಲಿ ರೇಗೊ ಪ್ರಥಮ, ಪ್ರಮೀಳಾ ಮೆಂಡೋನ್ಸ ದ್ವಿತೀಯ, ಸ್ನೇಹಾ ಕುಡ್ವ ತೃತೀಯ ಬಹುಮಾನ ಗಳಿಸಿದರು. ರೆಮೋನ ಪಿರೇರಾ ತಂಡದಿಂದ ನೃತ್ಯ ಹಾಗೂ ರೂಪಕ ಪ್ರದರ್ಶನಗೊಂಡಿತು. ಜೋಯೆಲ್ ಅತ್ತೂರ್ ಬಳಗದಿಂದ ರಸಮಂಜರಿ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮ ಸಂಚಾಲಕರಾದ ಸ್ಟ್ಯಾನಿ ಲೋಬೊ,ಫಾ.ಸುದೀಪ್ ಪೌಲ್, ವಿಲ್ಮಾ ಮೊಂತೆರೋ, ಸಮರ್ಥ್ ಭಟ್, ಸ್ಟ್ಯಾನಿ ಬಂಟ್ವಾಳ್, ಡೋಲ್ಫಿ ಡಿಸೋಜ, ಅರುಣ್ ಡಿಸೋಜ, ರಹ್ಮಾನ್ ಕುಂಜತ್ತಬೈಲ್, ಜೇಮ್ಸ್ ಪ್ರವೀಣ್ ಸಹಕರಿಸಿದರು. ವೇದಿಕೆಯ ಕಾರ್ಯದರ್ಶಿ ಸುನೀಲ್ ಕುಮಾರ್ ಬಜಾಲ್ ಕಾರ್ಯಕ್ರಮ ನಿರ್ವಹಿಸಿದರು. ಕೆಥೊಲಿಕ್ ಸಭಾ ಅಧ್ಯಕ್ಷ ಸಂತೋಷ್ ಡಿಸೋಜ ವಂದಿಸಿದರು.
ಕರ್ನಾಟಕದ ಸಂಸದರು ಏನು ಮಾಡುತ್ತಿದ್ದಾರೆ?
ಕರ್ನಾಟಕದ ಬಗ್ಗೆ ಕೇಂದ್ರ ಸರಕಾರ ಮಲತಾಯಿ ಧೋರಣೆಯನ್ನು ಅನುಸರಿಸುತ್ತಲೇ ಇದೆ. ಮೊದಲಿನಿಂದಲೂ ಇದು ನಡೆಯುತ್ತಿದ್ದರೂ ಕಳೆದ ಹನ್ನೊಂದು ವರ್ಷಗಳಿಂದ ಈ ತಾರತಮ್ಯ ನೀತಿ ತೀವ್ರಗೊಂಡಿದೆ. ಕೃಷ್ಣಾ ಮೇಲ್ದಂಡೆ ಯೋಜನೆ, ಮಹಾದಾಯಿ ಯೋಜನೆಗಳಿರಲಿ, ರಾಜ್ಯಕ್ಕೆ ಬರಬೇಕಾದ ತೆರಿಗೆ ಬಾಕಿ ಇರಲಿ ಎಲ್ಲದರಲ್ಲೂ ಪಕ್ಷಪಾತದ ನೀತಿ ಮುಂದುವರಿದಿದೆ. ಲೋಕಸಭೆಯಲ್ಲಿ ಕರ್ನಾಟಕವನ್ನು ಪ್ರತಿನಿಧಿಸುವ 28 ಮಂದಿ ಸಂಸದರಿದ್ದರೂ ಇವರಲ್ಲಿ ಯಾರೊಬ್ಬರೂ ಕರ್ನಾಟಕಕ್ಕೆ ಆಗಿರುವ, ಆಗುತ್ತಿರುವ ಅನ್ಯಾಯದ ಬಗ್ಗೆ ಲೋಕಸಭಾ ಅಧಿವೇಶನದಲ್ಲಿ ಗಟ್ಟಿಯಾಗಿ ಮಾತಾಡಿದ ಉದಾಹರಣೆಗಳಿಲ್ಲ. ಹೀಗಾಗಿ ರಾಜ್ಯಕ್ಕೆ ನಿರಂತರವಾಗಿ ಅನ್ಯಾಯವಾಗುತ್ತಲೇ ಇದೆ. ತಮಿಳುನಾಡಿನಲ್ಲಿ ತಮ್ಮ ರಾಜ್ಯದ ಹಿತಾಸಕ್ತಿಯ ಪ್ರಶ್ನೆ ಬಂದರೆ, ಪಕ್ಷಭೇದ ಮರೆತು ಎಲ್ಲ ಸಂಸದರೂ ಒಟ್ಟಾಗಿ ಧ್ವನಿಯೆತ್ತುತ್ತಾರೆ. ದಿಲ್ಲಿಯಲ್ಲೂ ತಮಿಳುನಾಡಿನ ಲಾಬಿ ಪ್ರಭಾವಿಯಾಗಿದೆ. ಆದರೆ ಕರ್ನಾಟಕದ ಸಂಸದರಲ್ಲಿ ಅದರಲ್ಲೂ ಲೋಕಸಭಾ ಸದಸ್ಯರಲ್ಲಿ ಅಂಥ ಒಮ್ಮತದ ಹಿತಾಸಕ್ತಿ ಕಂಡು ಬರುತ್ತಿಲ್ಲ. ನದಿ ನೀರು ಹಂಚಿಕೆಗೆ ಸಂಬಂಧಿಸಿದಂತೆ ರಾಜ್ಯಕ್ಕೆ ಅನ್ಯಾಯವಾಗುತ್ತಲೇ ಬಂದರೂ ನಮ್ಮ ರಾಜ್ಯದ ಸಂಸದರ ಸ್ಪಂದನ ತುಂಬಾ ವಿರಳ. ರಾಜ್ಯದ 28 ಲೋಕಸಭಾ ಸದಸ್ಯರಲ್ಲಿ ಕೇಂದ್ರದ ಆಡಳಿತಾರೂಢ ಬಿಜೆಪಿ ಸಂಸದರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ರಾಜ್ಯ ಸರಕಾರ ಸರ್ವಪಕ್ಷ ನಿಯೋಗವನ್ನು ಪ್ರಧಾನಿ ನರೇಂದ್ರ ಮೋದಿಯವರ ಬಳಿ ಕರೆದುಕೊಂಡು ಹೋಗಲು ಅನೇಕ ಬಾರಿ ಮುಂದಾಗಿದ್ದರೂ ಸಂಸದರಿಂದ ಸಕಾರಾತ್ಮಕ ಪ್ರತಿಕ್ರಿಯೆ ಬಂದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅನೇಕ ಬಾರಿ ಹೇಳಿದ್ದಾರೆ. ಕರ್ನಾಟಕದ ಬಿಜೆಪಿ ಮತ್ತು ಜೆಡಿಎಸ್ ಸಂಸದರು ರಾಜ್ಯದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರವನ್ನು ಟೀಕಿಸುವಾಗ ನಾಲಿಗೆ ಸಡಿಲು ಬಿಟ್ಟು ಮಾತಾಡುತ್ತಾರೆ. ಆದರೆ ರಾಜ್ಯಕ್ಕೆ ಆಗಿರುವ ಅನ್ಯಾಯಗಳ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರ ಬಳಿ ಮಾತನಾಡಲು ಹೆದರುತ್ತಾರೆ. ಇದಕ್ಕೆ ಇತ್ತೀಚಿನ ಉದಾಹರಣೆ ಅಂದರೆ ಕಷ್ಣಾ ಮೇಲ್ದಂಡೆ ಯೋಜನೆ. ಕರ್ನಾಟಕದ ರೈತಾಪಿ ಜನರ ಬದುಕನ್ನು ಬದಲಿಸಬಲ್ಲ ಕೃಷ್ಣಾ ಮೇಲ್ದಂಡೆ ಯೋಜನೆ ಎರಡು ಮತ್ತು ಮೂರನೇ ಹಂತದ ಕಾರ್ಯ ವಿಳಂಬವಾಗುತ್ತಲೇ ಇದೆ. ಕೃಷ್ಣಾ ಜಲ ವಿವಾದ ಕುರಿತು ನ್ಯಾಯ ಮಂಡಳಿ ತೀರ್ಪು ನೀಡಿ 15 ವರ್ಷಗಳು ಗತಿಸಿದವು. ಆದರೆ ಕೇಂದ್ರ ಸರಕಾರದ ಜಾಣ ನಿರ್ಲಕ್ಷ್ಯದ ಕಾರಣದಿಂದಾಗಿ ಕರ್ನಾಟಕ ತನ್ನ ಪಾಲಿನ ನೀರನ್ನು ಬಳಸಿಕೊಳ್ಳಲಾಗದೆ ವ್ಯರ್ಥವಾಗಿ ಹರಿದು ಹೋಗುತ್ತಿದೆ. ಇದರ ಬಗ್ಗೆ ರಾಜ್ಯದ ಸಂಸದರು ಮಾತಾಡಿದ ಉದಾಹರಣೆಗಳು ತೀರಾ ಕಡಿಮೆ. ಅದರ ಬದಲಾಗಿ ಇದಕ್ಕೆ ರಾಜ್ಯ ಸರಕಾರ ಕಾರಣವೆಂದು ಬಿಜೆಪಿ ಮತ್ತು ಇತರ ಪ್ರತಿಪಕ್ಷಗಳು ಆರೋಪಿಸುತ್ತಿವೆ. ಆದರೆ ಕೇಂದ್ರ ಸರಕಾರವೇ ಈ ವಿಳಂಬಕ್ಕೆ ಕಾರಣವೆಂದು ರಾಜ್ಯ ಸರಕಾರ ಪ್ರತ್ಯಾರೋಪ ಮಾಡುತ್ತಿದೆ. ಆದರೆ ವಾಸ್ತವವಾಗಿ ಕಳೆದ ಹದಿನೈದು ವರ್ಷಗಳ ಕಾಲಾವಧಿಯಲ್ಲಿ ಕರ್ನಾಟಕದಲ್ಲಿ ಆಡಳಿತ ನಡೆಸಿದ ಎಲ್ಲ ಪಕ್ಷಗಳೂ ಈ ಲೋಪದ ಹೊಣೆಯನ್ನು ಹೊತ್ತು ಕೊಳ್ಳಬೇಕಾಗಿದೆ. ಆದರೆ ಕೃಷ್ಣಾ ನದಿ ನೀರನ್ನು ಮಹಾರಾಷ್ಟ್ರ, ಕರ್ನಾಟಕ ಮತ್ತು ಆಂಧ್ರಪ್ರದೇಶಗಳು ಹಂಚಿಕೊಳ್ಳಬೇಕಾಗಿರುವುದರಿಂದ ನದಿಯ ಪಾತ್ರದಲ್ಲಿ ಕೈಗೊಳ್ಳುವ ಯಾವುದೇ ಕಾಮಗಾರಿಗೆ ಕೇಂದ್ರ ಸರಕಾರ ಅಧಿಸೂಚನೆಯನ್ನು ಹೊರಡಿಸುವುದು ಕಡ್ಡಾಯವಾಗಿರುವುದರಿಂದ ಇದನ್ನು ರಾಷ್ಟ್ರೀಯ ಯೋಜನೆಯೆಂದು ಘೋಷಿಸಬೇಕಾಗುತ್ತದೆ. ಅಧಿಸೂಚನೆಯನ್ನು ಹೊರಡಿಸಲು ಕರ್ನಾಟಕ ಒತ್ತಡ ಹೇರಬೇಕಾಗುತ್ತದೆ. ನಮ್ಮ ಸಂಸದರು ಇದರ ಬಗ್ಗೆ ಮಾತಾಡಬೇಕು. ಆದರೆ ಮಾತಾಡುತ್ತಿಲ್ಲ. ಹೀಗಾಗಿ ಸದರಿ ಯೋಜನೆ ನನೆಗುದಿಗೆ ಬಿದ್ದಂತಾಗಿದೆ. ಕೃಷ್ಣಾ ಜಲ ವಿವಾದಕ್ಕೆ ಸಂಬಂಧಿಸಿದಂತೆ ನೀರು ಹಂಚಿಕೆ ಕುರಿತು 1956 ರಲ್ಲೇ ಆಂಧ್ರಪ್ರದೇಶ ಸರಕಾರ ಸುಪ್ರೀಂ ಕೋರ್ಟಿಗೆ ದೂರು ಸಲ್ಲಿಸಿತ್ತು. ಸುಪ್ರೀಂ ಕೋರ್ಟ್ ಮತ್ತು ನಂತರ ರಚನೆಯಾದ ಕೃಷ್ಣಾ ಜಲವಿವಾದ ನ್ಯಾಯ ಮಂಡಳಿ ಆಗಾಗ ಮಹಾರಾಷ್ಟ್ರ, ಕರ್ನಾಟಕ ಹಾಗೂ ಆಂಧ್ರಪ್ರದೇಶಗಳಿಗೆ ನೀರುಹಂಚಿಕೆ ಮಾಡಿ ತೀರ್ಪು ನೀಡಿದೆ. ಆ ತೀರ್ಪಿನ ಅನ್ವಯ ಕರ್ನಾಟಕ ಕೃಷ್ಣಾ ಮೇಲ್ದಂಡೆ ಯೋಜನೆಯ ಮೊದಲನೆಯ ಹಂತದ ಕಾಮಗಾರಿಯನ್ನು ಮುಗಿಸಿದೆ. ಎರಡನೇ ಹಂತದ ಕಾಮಗಾರಿ ಇನ್ನೂ ಪೂರ್ಣವಾಗಿಲ್ಲ. ಏತನ್ಮಧ್ಯೆ ನ್ಯಾಯ ಮಂಡಳಿ ಆಲಮಟ್ಟಿ ಅಣೆಕಟ್ಟೆಯ ಎತ್ತರವನ್ನು 519.6 ಮೀಟರ್ನಿಂದ 524.25 ಮೀಟರ್ಗಳಿಗೆ ಹೆಚ್ಚಿಸಲು ಹಾಗೂ ಕೃಷ್ಣಾ ಕೊಳ್ಳದ 173 ಟಿಎಂಸಿ ನೀರನ್ನು ಹಂಚಿಕೆ ಮಾಡಿ 2010ರಲ್ಲಿ ಅಂತಿಮ ತೀರ್ಪನ್ನು ನೀಡಿದೆ. ನ್ಯಾಯ ಮಂಡಳಿಯ ತೀರ್ಪು ಹೊರ ಬೀಳುತ್ತಿದ್ದಂತೆ ಬಿಜಾಪುರ, ಬಾಗಲಕೋಟೆ, ಯಾದಗಿರಿ, ಕಲಬುರಗಿ, ಕೊಪ್ಪಳ, ಗದಗ ಭಾಗದ ಬಹುತೇಕ ರೈತರು ಸಂಭ್ರಮಿಸಿದ್ದರು. ಆದರೆ ರಾಜ್ಯ ಸರಕಾರವು ಭೂಸ್ವಾಧೀನಕ್ಕೆ ತಯಾರಿ ಮಾಡಿಕೊಳ್ಳುತ್ತಿದ್ದಂತೆ ತಕರಾರುಗಳು ಶುರುವಾದವು. ಇದರಿಂದಾಗಿ ಭೂಸ್ವಾಧೀನ ಪ್ರಕ್ರಿಯೆ ವಿಳಂಬವಾಯಿತು. ಇದು ಒಂದೆಡೆಯಾದರೆ ಇನ್ನೊಂದೆಡೆ ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸರಕಾರದ ಜಾಣ ನಿರ್ಲಕ್ಷ್ಯವೂ ಇದಕ್ಕೆ ಕಾರಣವಾಗಿದೆ. ಕೇಂದ್ರದ ಅಧಿಸೂಚನೆ ಒತ್ತಟ್ಟಿಗಿರಲಿ ಕೃಷ್ಣಾ ಮೇಲ್ದಂಡೆ ಯೋಜನೆಯ ಎರಡನೇ ಹಂತದ ಕಾರ್ಯವೇ ಇನ್ನೂ ಪೂರ್ಣವಾಗಿಲ್ಲ. ಇದು ಮುಗಿದರೆ ಮಾತ್ರ ಮೂರನೆಯ ಹಂತದ ಕಾರ್ಯ ಆರಂಭ. ಈಗಲೇ ಅದರ ಬಗ್ಗೆ ಮಾತಾಡುವುದರಲ್ಲಿ ಅರ್ಥವಿಲ್ಲ. ಎರಡನೇ ಹಂತಕ್ಕೆ ಸಂಬಂಧಿಸಿದಂತೆ ಪರಿಹಾರ ಕಾರ್ಯ, ಅದರಲ್ಲೂ ವಿಶೇಷವಾಗಿ ಪುನರ್ವಸತಿ ಕಾರ್ಯ ಮುಗಿದಿಲ್ಲ. ಕಳೆದ ಇಪ್ಪತ್ತು ವರ್ಷಗಳಿಂದ ಭೂಮಿ ಮತ್ತು ಮನೆ ಮಾರು ಕಳೆದುಕೊಂಡ ಸಂತ್ರಸ್ತರಿಗೆ ಸೂಕ್ತವಾದ ಪರಿಹಾರವನ್ನು ನೀಡಲಾಗಿಲ್ಲ. ಆದರೆ ಭೂ ಸ್ವಾಧೀನಕ್ಕೆ ಸಂಬಂಧಪಟ್ಟ ಪ್ರಕರಣಗಳನ್ನು ನೆಪ ಮಾಡಿಕೊಂಡು ಕೇಂದ್ರದ ಮೋದಿ ನೇತೃತ್ವದ ಎನ್ಡಿಎ ಸರಕಾರ ಕಾಲಹರಣ ಮಾಡುತ್ತಿದೆ. ವಾಸ್ತವವಾಗಿ ಯೋಜನೆ ವಿಳಂಬವಾಗಲು ಕೇಂದ್ರ ಸರಕಾರದ ನಕಾರಾತ್ಮಕ ನೀತಿ ಕಾರಣವಾಗಿದೆ. ನ್ಯಾಯ ಮಂಡಳಿ 2010ರಲ್ಲೇ ತೀರ್ಪು ನೀಡಿದೆ. ಆಲಮಟ್ಟಿ ಅಣೆಕಟ್ಟೆಯ ಎತ್ತರವನ್ನು 1956ರ ಮೂಲ ಯೋಜನೆಯಲ್ಲಿ ಇದ್ದಂತೆ 524.25 ಮೀಟರ್ಗೆ ಹೆಚ್ಚಿಸಲು ಸುಪ್ರೀಂ ಕೋರ್ಟ್ ಅನುಮತಿ ನೀಡಿದೆ. ಆದರೂ ಕೇಂದ್ರ ಸರಕಾರ ವಿಳಂಬ ಮಾಡುತ್ತಿರುವುದೇಕೆ? ಈ ಪ್ರಶ್ನೆಗೆ ರಾಜ್ಯ ಬಿಜೆಪಿ ನಾಯಕರ ಹಾಗೂ ಸಂಸದರ ಬಳಿ ಉತ್ತರವಿಲ್ಲ. ಕೃಷ್ಣಾ ಮೇಲ್ದಂಡೆ ಯೋಜನೆ ವಿಳಂಬವಾಗಲು ಕೇಂದ್ರ ಸರಕಾರ ಮಾತ್ರವಲ್ಲ 2010ರಿಂದ 2023ರ ವರೆಗೆ ರಾಜ್ಯದಲ್ಲಿ ಆಡಳಿತ ನಡೆಸಿದ ಐದು ಸರಕಾರಗಳೂ ಕಾರಣವಾಗಿವೆ. ಕೇಂದ್ರದಿಂದ ಅಧಿಸೂಚನೆಯನ್ನು ಪಡೆಯಲು ಈ ಸರಕಾರಗಳು ಯಾವುದೇ ಪ್ರಯತ್ನವನ್ನು ಮಾಡಲಿಲ್ಲ. ಈಗಿನ ಕಾಂಗ್ರೆಸ್ ಸರಕಾರ ತಕ್ಷಣ ಅಧಿಸೂಚನೆಯನ್ನು ಹೊರಡಿಸಿ ಎಂದು ಕೇಂದ್ರಕ್ಕೆ ಹಲವಾರು ಸಲ ಪತ್ರಗಳನ್ನು ಬರೆದಿದೆ. ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕೂಡ ಪತ್ರಗಳನ್ನು ಬರೆದು ಒತ್ತಾಯಿಸಿದ್ದಾರೆ. ನೀರಾವರಿ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕೂಡ ಕೇಂದ್ರಕ್ಕೆ ಪತ್ರಗಳನ್ನು ಬರೆದಿದ್ದಾರೆ. ಆದರೆ ಕೇಂದ್ರದ ನರೇಂದ್ರ ಮೋದಿ ಸರಕಾರ ಜಾಣ ಮೌನವನ್ನು ತಾಳಿದೆ. ಈ ಕುರಿತು ಪ್ರಧಾನಮಂತ್ರಿಗಳನ್ನು ಭೇಟಿಯಾಗಲು ದಿಲ್ಲಿಗೆ ಸರ್ವಪಕ್ಷ ನಿಯೋಗವನ್ನು ಕೊಂಡೊಯ್ಯಲು ಹಲವಾರು ಸಲ ಯತ್ನಿಸಿದರೂ ಅದು ಸಾಧ್ಯವಾಗಿಲ್ಲ. ರಾಜ್ಯದಿಂದ ಚುನಾಯಿತರಾಗಿರುವ ಎನ್ಡಿಎ ಮೈತ್ರಿ ಕೂಟದ ಸಂಸದರು ಕೂಡ ಸಂಸತ್ನಲ್ಲಾಗಲಿ ಹೊರಗಡೆಯಾಗಲಿ ಈ ವಿಷಯವನ್ನು ಪ್ರಸ್ತಾಪಿಸಿಲ್ಲ. ಇನ್ನು ಮುಂದಾದರೂ ಎಲ್ಲ ಪಕ್ಷಗಳ ಸಂಸದರು ಪಕ್ಷಭೇದ ಮರೆತು ಕೃಷ್ಣಾ ಮೇಲ್ದಂಡೆ ಯೋಜನೆಗಾಗಿ ರಾಜಕೀಯ ಇಚ್ಛಾಶಕ್ತಿಯನ್ನು ತೋರಿಸಲಿ.
Karnataka Weather: ಕನಿಷ್ಠ ತಾಪಮಾನ ದಾಖಲು, ಈ ಜಿಲ್ಲೆಗಳಲ್ಲಿ ಡಿ.21ರವರೆಗೆ ಭಾರೀ ಚಳಿ
ರಾಜ್ಯದ ಹಲವು ಜಿಲ್ಲೆಗಳಲ್ಲಿ ಕನಿಷ್ಠ ತಾಪಮಾನ ದಾಖಲಾಗಿದೆ. ಡಿಸೆಂಬರ್ 21ರವರೆಗೆ ಬಹುತೇಕ ಜಿಲ್ಲೆಗಳಲ್ಲಿ ಚಳಿ ಹೆಚ್ಚಾಗಿರಲಿದೆ. ರಾಜ್ಯದ ಬಯಲು ಪ್ರದೇಶಗಳಾದ ದಾವಣಗೆರೆ, ಬೀದರ್ ಮತ್ತು ಹಾವೇರಿಯಲ್ಲಿ 10 ಡಿಗ್ರಿ ಸೆಲ್ಸಿಯಸ್ ಕನಿಷ್ಠ ತಾಪಮಾನ ದಾಖಲಾಗಿದೆ. ಬೆಂಗಳೂರು ಭಾಗದಲ್ಲಿ ಪ್ರಮುಖವಾಗಿ ಶುಭ್ರ ಆಕಾಶ ಕಂಡುಬರಲಿದೆ. ಕೆಲವು ಪ್ರದೇಶಗಳಲ್ಲಿ ಬೆಳಗಿನ ಜಾವದಲ್ಲಿ ಮಂಜು ಕವಿಯುವ ಸಾಧ್ಯತೆ ಹೆಚ್ಚಾಗಿದೆ. ಗರಿಷ್ಠ ಮತ್ತು
ಚಳಿಗಾಲದ ಮೊಟ್ಟೆ ಬಿಸಿಗೆ ಶಿಕ್ಷಕರ ಜೇಬಿಗೆ ಕತ್ತರಿ; ಮೊಟ್ಟೆ ದರ ಹೆಚ್ಚುತ್ತಿದ್ದರೂ, ಹೆಚ್ಚುತ್ತಿಲ್ಲ ಸರ್ಕಾರದ ಅನುದಾನ
ತುಮಕೂರಿನಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರು ಚಳಿಗಾಲದಲ್ಲಿ ಮೊಟ್ಟೆ ಖರೀದಿಗೆ ಹೆಚ್ಚುವರಿ ಹಣವನ್ನು ತಮ್ಮ ಜೇಬಿನಿಂದ ಭರಿಸುತ್ತಿದ್ದಾರೆ. ಸರ್ಕಾರ ನೀಡುವ 6 ರೂ. ಮೊಟ್ಟೆಯ ಬೆಲೆ 8 ರೂ. ಆಗಿದ್ದು, ಅಡುಗೆಯವರಿಗೆ ಮತ್ತು ಮೊಟ್ಟೆ ಸುಲಿಯುವವರಿಗೂ ಹಣ ನೀಡಬೇಕಾದ ಅನಿವಾರ್ಯತೆ ಶಿಕ್ಷಕರ ಮೇಲಿದೆ. ಇದರಿಂದಾಗಿ ತಿಂಗಳಿಗೆ 9-10 ಸಾವಿರ ರೂ. ಹೆಚ್ಚುವರಿ ಹೊರೆ ಬೀಳುತ್ತಿದೆ. ಇದರಿಂದಾಗಿ ತಮ್ಮ ಕುಟುಂಬ ನಿರ್ವಹಣೆ ಮೇಲೆ ಹೊರೆ ಹೆಚ್ಚಾಗುತ್ತಿದ್ದು, ಸೂಕ್ತ ಕ್ರಮ ಕೈಗೊಳ್ಳಬೇಕಾಗಿ ಸರಕಾರಕ್ಕೆ ಮನವಿ ಮಾಡುತ್ತಿದ್ದಾರೆ.
ದಕ್ಷಿಣ ರಾಜ್ಯಗಳ ಪೈಕಿ ನಮ್ಮ ಮೆಟ್ರೋ ಮುಂಚೂಣಿಯಲ್ಲಿ; ಸೇವೆಯ ಮೇಲೆ ಸಂಪೂರ್ಣ ನಂಬಿಕೆ ಇದೆ ಜನರಲ್ಲಿ
ಕರ್ನಾಟಕ ರಾಜಧಾನಿ ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸುತ್ತಿರುವ ನಮ್ಮ ಮೆಟ್ರೋ ರೈಲು ಸೇವೆ, ಹಲವು ಪ್ರಥಮಗಳನ್ನು ತನ್ನ ಮುಡಿಗೇರಿಸಿಕೊಂಡಿದೆ. ಇದೀಗ ದಕ್ಷಿಣ ಭಾರತದ ರಾಜ್ಯಗಳಲ್ಲೇ ಕಾರ್ಯಾಚರಣೆ ಮತ್ತು ನಿರ್ಮಾಣ ಹಂತದ ಯೋಜನೆಗಳಲ್ಲಿ ನಮ್ಮ ಮೆಟ್ರೋ ಉಳಿದ ರಾಜ್ಯಗಳಿಗಿಂತ ಮುಂಚೂಣಿಯಲ್ಲಿದೆ. ಸದ್ಯ ಬೆಂಗಳೂರಿನಲ್ಲಿ 96 ಕಿ.ಮೀ. ಮೆಟ್ರೋ ಮಾರ್ಗ ಕಾರ್ಯಾಚರಣೆಯಲ್ಲಿದ್ದು, 121 ಕಿ.ಮೀ ಮಾರ್ಗ ನಿರ್ಮಾಣ ಹಂತದಲ್ಲಿದೆ. ಈ ಕುರಿತು ಕೇಂದ್ರ ಸರ್ಕಾರ ಲೋಕಸಭೆಗೆ ನೀಡಿದ ಮಾಹಿತಿ ಏನು? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.
ಪ್ರಯಾಣಿಕರ ಪಾಲಿನ ಮೃತ್ಯುಕೂಪವಾದ ರಾಜಧಾನಿ: 3.5 ವರ್ಷದಲ್ಲಿ ಅಪಘಾತಕ್ಕೆ 3,296 ಬಲಿ, ಈ ಅಪಘಾತಗಳಿಗೆ ಕಾರಣವೇನು?
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಸಂಚಾರ ನಿಧಾನಗತಿಯಲ್ಲಿದ್ದರೂ ಸಹ ಕಾಮಗಾರಿಗಳು, ಗುಂಡಿ ಬಿದ್ದ ರಸ್ತೆಗಳು, ಅತಿ ವೇಗದ ಚಾಲನೆ ಅಪಘಾತಗಳಿಗೆ ಕಾರಣವಾಗುತ್ತಿವೆ. ಕಳೆದ ಮೂರೂವರೆ ವರ್ಷಗಳಲ್ಲಿ 3,296 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಕಳೆದ ಎರಡು ವರ್ಷಗಳಲ್ಲಿ 8,754 ಅಪಘಾತಗಳಾಗಿವೆ. ಸಂಚಾರ ಪೊಲೀಸರು ಸುರಕ್ಷತಾ ಕ್ರಮಗಳನ್ನು ಕೈಗೊಂಡಿದ್ದಾರೆ. ಬ್ಲಾಕ್ಸ್ಪಾಟ್ಗಳನ್ನು ಗುರುತಿಸಿ ಕ್ರಮ ಕೈಗೊಳ್ಳಲಾಗುತ್ತಿದೆ. ಪಾದಚಾರಿಗಳ ಸುರಕ್ಷತೆಗೆ ಆದ್ಯತೆ ನೀಡಲಾಗಿದ್ದು, ಅಪಘಾತಗಳನ್ನು ತಡೆಯಲು ಸೂಕ್ತ ಕ್ರಮಗಳ ಬಗ್ಗೆ ಪ್ರಸ್ತಾವನಾ ಪತ್ರ ಸಲ್ಲಿಸಲಾಗಿದೆ.
ಕುಲಪತಿ ವಜಾಕ್ಕೆ ಆಗ್ರಹಿಸಿ ತೇಝ್ ಪುರ ವಿ.ವಿ.ಯ ಸಿಬ್ಬಂದಿ, ವಿದ್ಯಾರ್ಥಿಗಳಿಂದ ಉಪವಾಸ ಮುಷ್ಕರ
ತೇಝ್ಪುರ, ಡಿ. 15: ಹಣಕಾಸು ಅವ್ಯವಹಾರದ ಆರೋಪದ ಕುರಿತಂತೆ ತೇಝ್ಪುರ ವಿಶ್ವವಿದ್ಯಾನಿಲಯದ ಕುಲಪತಿ ಶಂಭು ನಾಥ್ ಸಿಂಗ್ ಅವರನ್ನು ಕೂಡಲೇ ವಜಾಗೊಳಿಸುವುದು ಸೇರಿದಂತೆ ತಾವು ಎತ್ತಿದ ಸಮಸ್ಯೆಗಳ ಕುರಿತು ಶಿಕ್ಷಣ ಸಚಿವಾಲಯ (ಎಂಒಇ) ದಿಂದ ಪ್ರತಿಕ್ರಿಯೆ ಆಗ್ರಹಿಸಿ ವಿ.ವಿ.ಯ ವಿದ್ಯಾರ್ಥಿಗಳು, ಬೋಧಕರು ಹಾಗೂ ಬೋಧಕೇತರ ಸಿಬ್ಬಂದಿ ಸೋಮವಾರ 9 ಗಂಟೆಗಳ ಕಾಲ ಉಪವಾಸ ಮುಷ್ಕರ ನಡೆಸಿದರು. ಪ್ರತಿಭಟನಕಾರರು ನವೆಂಬರ್ ಅಂತ್ಯದಿಂದ ಪ್ರತಿಭಟನೆ ನಡೆಸುತ್ತಿರುವುದರಿಂದ ವಿಶ್ವವಿದ್ಯಾನಿಲಯ ಮುಚ್ಚಲಾಗಿದೆ. ಕಳೆದ ವಾರದಿಂದ ಅಂತಿಮ ಪರೀಕ್ಷೆಯನ್ನು ನಡೆಸಲು ಸೀಮಿತವಾಗಿ ತೆರೆಯಲಾಗಿದೆ. ವಿದ್ಯಾರ್ಥಿಗಳು, ಬೋಧಕರು ಹಾಗೂ ಬೋಧಕೇತರ ಸಿಬ್ಬಂದಿಯ ಜಂಟಿ ವೇದಿಕೆಯಾದ ತೇಝ್ಪುರ ವಿಶ್ವವಿದ್ಯಾನಿಲಯ ಯುನೈಟೆಡ್ ಫೋರಂ (ಟಿಯುಯುಎಫ್) ಆಶ್ರಯದಲ್ಲಿ ಪ್ರತಿಭಟನೆ ನಡೆಯುತ್ತಿದೆ. ಬೆಳಗ್ಗೆ 9 ಗಂಟೆಯಿಂದ ಉಪವಾಸ ಮುಷ್ಕರ ನಡೆಸಲಾಗಿದೆ ಎಂದು ವೇದಿಕೆ ಹೇಳಿದೆ. ಸಿಂಗ್ ವಿರುದ್ಧ ಶಿಕ್ಷಣ ಸಚಿವಾಲಯ ತ್ವರಿತ ಕ್ರಮ ತೆಗೆದುಕೊಳ್ಳಬೇಕೆಂಬುದು ಈ ಮುಷ್ಕರದ ಆಗ್ರಹವಾಗಿದೆ. ತೆಝ್ಪುರ ವಿ.ವಿ.ಯ ವಿದ್ಯಾರ್ಥಿಗಳು, ಬೋಧಕರು ಹಾಗೂ ಬೋಧಕೇತರ ಸಿಬ್ಬಂದಿಯ ಹೆಚ್ಚುತ್ತಿರುವ ಹತಾಶೆಯನ್ನು ಶಿಕ್ಷಣ ಸಚಿವಾಲಯ ನಿರ್ಲಕ್ಷಿಸುತ್ತಿದೆ. ನಿರಂತರ ಪ್ರತಿಭಟನೆ ಹಾಗೂ ಮನವಿ ಸಲ್ಲಿಸಿರುವ ಹೊರತಾಗಿಯೂ ಸಚಿವಾಲಯ ಮೌನವಾಗಿದೆ ಎಂದು ಟಿಯುಯುಎಫ್ ಹೇಳಿದೆ.
ಕಾಂಗ್ರೆಸ್ ನ ‘ಮತಗಳ್ಳತನ’ ಆರೋಪದಿಂದ ಅಂತರ ಕಾಯ್ದುಕೊಂಡು ಉಮರ್ ಅಬ್ದುಲ್ಲಾ
ಶ್ರೀನಗರ, ಡಿ. 15: ಕಾಂಗ್ರೆಸ್ ನ ‘ಮತಗಳ್ಳತನ’ದ ಆರೋಪದಿಂದ ಅಂತರ ಕಾಯ್ದುಕೊಂಡಿರುವ ಜಮ್ಮು ಹಾಗೂ ಕಾಶ್ಮೀರದ ಮುಖ್ಯಮಂತ್ರಿ ಉಮರ್ ಅಬ್ದುಲಾ, ಇದಕ್ಕೂ ಇಂಡಿಯಾ ಬಣಕ್ಕೂ ಯಾವುದೇ ಸಂಬಂಧ ಇಲ್ಲ ಎಂದು ಸೋಮವಾರ ಹೇಳಿದ್ದಾರೆ. ಹೊಸದಿಲ್ಲಿಯಲ್ಲಿ ನಡೆದ ‘‘ವೋಟ್ ಚೋರ್ ಗದ್ದಿ ಛೋಡ್’’ ರ್ಯಾಲಿಯಲ್ಲಿ ಕಾಂಗ್ರೆಸ್ನ ಉನ್ನತ ನಾಯಕರು ಬಿಜೆಪಿ ಹಾಗೂ ಚುನಾವಣಾ ಆಯುಕ್ತರ ವಿರುದ್ಧ ವಾಗ್ದಾಳಿ ಮಾಡಿದ ಒಂದು ದಿನದ ಬಳಿಕ ಅವರು ಈ ಹೇಳಿಕೆ ನೀಡಿದ್ದಾರೆ. ಮತಗಳ್ಳತನ ಆಡಳಿತ ಪಕ್ಷದ ಡಿಎನ್ಎಯಲ್ಲಿದೆ. ಬಿಜೆಪಿ ನಾಯಕರು ದೇಶದ್ರೋಹಿಗಳು. ಜನರ ಮತದಾನದ ಹಕ್ಕನ್ನು ಕಸಿದುಕೊಳ್ಳಲು ಅವರು ಪಿತೂರಿ ನಡೆಸುತ್ತಿದ್ದಾರೆ. ಅಂತಹ ನಾಯಕರನ್ನು ಅಧಿಕಾರದಿಂದ ತೆಗೆದು ಹಾಕಬೇಕು ಎಂದು ನಾಯಕರು ಆರೋಪಿಸಿದ್ದಾರೆ ಎಂದು ಉಮರ್ ಅಬ್ದುಲಾ ತಿಳಿಸಿದರು. ಉಮರ್ ಅಬ್ದುಲ್ಲಾ ಅವರ ನ್ಯಾಶನಲ್ ಕಾನ್ಫರೆನ್ಸ್ ಇಂಡಿಯಾ ಬಣದಲ್ಲಿರುವ ಪ್ರಮುಖ ಮಿತ್ರ ಪಕ್ಷವಾಗಿದೆ. ಲೋಕಸಭೆಯಲ್ಲಿ ವಿರೋಧ ಪಕ್ಷದ ಸಂಸದರು ಸಂಖ್ಯೆಗೆ ಅನುಗುಣವಾಗಿ ಕಾಂಗ್ರೆಸ್ ಅತಿ ದೊಡ್ಡ ಪಕ್ಷವಾಗಿದೆ. ಕಾಂಗ್ರೆಸ್ ಗಮನ ಸೆಳೆದ ‘‘ಮತಗಳ್ಳತನ’’ ಹಾಗೂ ಚುನಾವಣಾ ಅಕ್ರಮದ ಬಗ್ಗೆ ಪ್ರಶ್ನಿಸಿದಾಗ ಅಬ್ದುಲ್ಲಾ ಅವರು, ಇದಕ್ಕೂ ಇಡಿಯಾ ಬಣಕ್ಕೂ ಯಾವುದೇ ಸಂಬಂಧ ಇಲ್ಲ. ಪ್ರತಿಯೊಂದು ರಾಜಕೀಯ ಪಕ್ಷಕ್ಕೂ ತನ್ನದೇ ಆದ ಕಾರ್ಯಸೂಚಿಯನ್ನು ರೂಪಿಸುವ ಸ್ವಾತಂತ್ರ್ಯವಿದೆ. ಕಾಂಗ್ರೆಸ್ ಮತಗಳ್ಳತನ ಹಾಗೂ ಎಸ್ಐಆರ್ ಅನ್ನು ತನ್ನ ಮುಖ್ಯ ವಿಷಯವನ್ನಾಗಿ ಮಾಡಿಕೊಂಡಿದೆ. ಇದನ್ನು ಮಾಡಬೇಡಿ ಎಂದು ಹೇಳಲು ನಾವು ಯಾರು ಎಂದು ಅವರು ಹೇಳಿದರು. ಮತಗಳ್ಳತನದ ವಿರುದ್ಧ ಸುಮಾರು 6 ಕೋಟಿ ಸಹಿಗಳನ್ನು ಸಂಗ್ರಹಿಸಲಾಗಿದೆ ಹಾಗೂ ಅದನ್ನು ರಾಷ್ಟ್ರಪತಿಗಳಿಗೆ ನೀಡುವುದಾಗಿ ಕಾಂಗ್ರೆಸ್ ಹೇಳಿದೆ.
Punjab | ಹಲವು ಶಾಲೆಗಳಿಗೆ ಬಾಂಬ್ ಬೆದರಿಕೆ
ಜಲಂಧರ್(ಪಂಜಾಬ್), ಡಿ. 15: ಇಲ್ಲಿನ ಹಲವು ಶಾಲೆಗಳು ಸೋಮವಾರ ಬಾಂಬ್ ಬೆದರಿಕೆಯ ಇಮೇಲ್ ಸ್ವೀಕರಿಸಿವೆ. ಈ ಹಿನ್ನೆಲೆಯಲ್ಲಿ ಮಕ್ಕಳನ್ನು ಶಾಲೆಗಳಿಂದ ತೆರವುಗೊಳಿಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ‘‘ವಿದ್ಯುತ್ ಪೂರೈಕೆಯಲ್ಲಿ ಏನೋ ದೋಷವಿದೆ ಎಂದು ನಮಗೆ ತಿಳಿಸಲಾಯಿತು ಹಾಗೂ ನಮ್ಮ ಮಕ್ಕಳನ್ನು ಶಾಲೆಯಿಂದ ಕರೆದುಕೊಂಡು ಹೋಗುವಂತೆ ಸೂಚಿಸಲಾಯಿತು’’ ಎಂದು ವಿದ್ಯಾರ್ಥಿಗಳ ಹೆತ್ತವರು ಹೇಳಿದ್ದಾರೆ. ‘‘ಶಾಲಾ ಕಟ್ಟಡವನ್ನು ಧ್ವಂಸಗೊಳಿಸಲಾಗುವುದು ಎಂದು ಬೆದರಿಕೆ ಒಡ್ಡಿದ ಇಮೇಲ್ಗಳನ್ನು ಶಾಲೆಗಳ ಮುಖ್ಯೋಪಾಧ್ಯಾಯರು ಸ್ವೀಕರಿಸಿದ್ದಾರೆ’’ ಎಂದು ಎಸಿಪಿ (ಉತ್ತರ) ಸಂಜಯ್ ಕುಮಾರ್ ತಿಳಿಸಿದ್ದಾರೆ. ಸೈಬರ್ ಪೊಲೀಸ್ನ ತಂಡ ಇಮೇಲ್ನ ಮೂಲವನ್ನು ಪತ್ತೆ ಹಚ್ಚಲು ಪ್ರಯತ್ನಿಸುತ್ತಿದೆ ಎಂದು ಅವರು ತಿಳಿಸಿದ್ದಾರೆ.
Messi ಭೇಟಿ ವೇಳೆ ಸಾಲ್ಟ್ ಲೇಕ್ ಕ್ರೀಡಾಂಗಣಲ್ಲಿ ದಾಂಧಲೆ | CBI, EDಯಿಂದ ತನಿಖೆ ಕೋರಿ ಕಲ್ಕತಾ ಹೈಕೋರ್ಟ್ ಗೆ PIL
ಕೋಲ್ಕತಾ, ಡಿ. 15: ಸಾಲ್ಟ್ ಲೇಕ್ ಸ್ಟೇಡಿಯನಲ್ಲಿ ನಡೆದ ದಾಂಧಲೆಯ ತನಿಖೆಗೆ ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ಅಸೀಮ್ ಕುಮಾರ್ ರಾಯ್ ನೇತೃತ್ವದ ತನಿಖಾ ಸಮಿತಿ ರೂಪಿಸುವ ಪಶ್ಚಿಮ ಬಂಗಾಳ ಸರಕಾರದ ನಿರ್ಧಾರ ಪ್ರಶ್ನಿಸಿ ಕೋಲ್ಕತಾದ ಉಚ್ಚ ನ್ಯಾಯಾಲಯದಲ್ಲಿ ಸೋಮವಾರ 3 ಪ್ರತ್ಯೇಕ ಸಾರ್ವಜನಿಕ ಹಿತಾಸಕ್ತಿ (ಪಿಐಎಲ್) ಅರ್ಜಿಗಳನ್ನು ಸಲ್ಲಿಸಲಾಗಿದೆ. ತನಿಖೆಯನ್ನು ಕೇಂದ್ರ ತನಿಖಾ ಸಂಸ್ಥೆ (ಸಿಬಿಐ), ಜಾರಿ ನಿರ್ದೇಶನಾಲಯ (ED), ಗಂಭೀರ ವಂಚನೆ ತನಿಖೆ ಕಚೇರಿ (ಎಸ್ಎಫ್ಐಒ)ಯಂತಹ ಕೇಂದ್ರೀಯ ಸಂಸ್ಥೆಗಳಿಗೆ ಹಸ್ತಾಂತರಿಸುವಂತೆ ಅರ್ಜಿದಾರರು ನ್ಯಾಯಾಲಯವನ್ನು ಒತ್ತಾಯಿಸಿದ್ದಾರೆ. ಅವರು ತಮ್ಮ ಬೇಡಿಕೆಯನ್ನು ಬೆಂಬಲಿಸಲು ಘಟನೆಯ ತೀವ್ರತೆ, ಜನಸಂದಣಿಯ ನಿರ್ವಹಣೆ ಹಾಗೂ ಭದ್ರತೆಯಲ್ಲಿ ಲೋಪದ ಕುರಿತು ಗಮನ ಸೆಳೆದಿದ್ದಾರೆ. ಹಿಂಸಾಚಾರಕ್ಕೆ ಕಾರಣವಾದ ಅಂಶಗಳ ಬಗ್ಗೆ ಸ್ವತಂತ್ರ ತನಿಖೆ ನಡೆಸಲು ರಾಜ್ಯ ಮಟ್ಟದ ತನಿಖೆಯನ್ನು ಕೇಂದ್ರೀಯ ಸಂಸ್ಥೆಗಳಿಗೆ ವರ್ಗಾಯಿಸಬೇಕೆಂದು ಅರ್ಜಿಗಳು ಕೋರಿವೆ. ಪಶ್ಚಿಮಬಂಗಾಳ ವಿಧಾನ ಸಭೆಯ ಪ್ರತಿಪಕ್ಷದ ನಾಯಕ ಹಾಗೂ ಬಿಜೆಪಿ ಶಾಸಕ ಸುವೇಂದು ಅಧಿಕಾರಿ ಹಾಗೂ ನ್ಯಾಯವಾದಿಗಳಾದ ಸಬ್ಯಸಾಚಿ ಚಟರ್ಜಿ, ಮೈನಕ್ ಘೋಶಾಲ್ ಈ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಪ್ರತ್ಯೇಕವಾಗಿ ಸಲ್ಲಿಸಿದ್ದಾರೆ. ಈ ಅರ್ಜಿಗಳನ್ನು ನ್ಯಾಯಾಲಯ ಈ ವಾರಾಂತ್ಯದಲ್ಲಿ ವಿಚಾರಣೆಗೆ ಕೈಗೆತ್ತಿಕೊಳ್ಳುವ ಸಾಧ್ಯತೆ ಇದೆ.
ಸೋನಮ್ ವಾಂಗ್ಚುಕ್ ಬಂಧನ ಪ್ರಶ್ನಿಸಿ ಅರ್ಜಿ; ವಿಚಾರಣೆ ಜ. 7ಕ್ಕೆ ಮುಂದೂಡಿಕೆ
ಹೊಸದಿಲ್ಲಿ, ಡಿ. 15: ರಾಷ್ಟ್ರೀಯ ಭದ್ರತಾ ಕಾಯ್ದೆ ಅಡಿಯಲ್ಲಿ ಸೋನಮ್ ವಾಂಗ್ಚುಕ್ ಅವರ ಬಂಧನ ಪ್ರಶ್ನಿಸಿ ಅವರ ಪತ್ನಿ ಗೀತಾಂಜಲಿ ಜೆ. ಆಂಗ್ಮೋ ಸಲ್ಲಿಸಿದ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಸೋಮವಾರ ಜನವರಿ 7ಕ್ಕೆ ಮುಂದೂಡಿದೆ. ಸೋನಮ್ ವಾಂಗ್ಚುಕ್ ಅವರನ್ನು ರಾಷ್ಟ್ರೀಯ ಭದ್ರತಾ ಕಾಯ್ದೆ ಅಡಿ ಸೆಪ್ಟಂಬರ್ 26ರಂದು ಬಂಧಿಸಲಾಗಿತ್ತು. ಆಲಿಸಲು ಸಾಕಷ್ಟು ಸಮಯ ಇಲ್ಲದೇ ಇರುವುದರಿಂದ ನ್ಯಾಯಮೂರ್ತಿಗಳಾದ ಅರವಿಂದ್ ಕುಮಾರ್ ಹಾಗೂ ಎನ್.ವಿ. ಅಂಜಾರಿಯಾ ಅವರ ಪೀಠ ವಿಚಾರಣೆಯನ್ನು ಮುಂದೂಡಿತು. ಸೋನಮ್ ವಾಂಗ್ಚುಕ್ ಅವರ ಬಂಧನ ಕಾನೂನು ಬಾಹಿರ ಹಾಗೂ ಅದು ಅವರ ಮೂಲಭೂತ ಹಕ್ಕುಗಳ ಉಲ್ಲಂಘನೆ ಎಂದು ಅರ್ಜಿಯಲ್ಲಿ ಪ್ರತಿಪಾದಿಸಲಾಗಿದೆ.
ಕೊಚ್ಚಿ: ಕೇರಳದ ಮಲಪ್ಪುರಂ ಜಿಲ್ಲೆಯ ತೆನ್ನೆಲಾ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ 47 ಮತಗಳ ಅಂತರದಿಂದ ಜಯ ಸಾಧಿಸಿದ ಸಿಪಿಎಂ ನಾಯಕ ಸಯೀದ್ ಅಲಿ ಮಜೀದ್ ಅವರ ವಿಜಯೋತ್ಸವ ಭಾಷಣ ಸ್ತ್ರೀದ್ವೇಷದ ಹೇಳಿಕೆಗಳ ಹಿನ್ನೆಲೆಯಲ್ಲಿ ತೀವ್ರ ವಿವಾದಕ್ಕೆ ಕಾರಣವಾಗಿದೆ. ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿದ ಸಯೀದ್ ಅಲಿ ಮಜೀದ್, ಮದುವೆಯಾಗಿ ಪಂಚಾಯತ್ ವ್ಯಾಪ್ತಿಗೆ ಬಂದ ಮಹಿಳೆಯರು ಮತಗಳಿಗಾಗಿ ಅಥವಾ ಚುನಾವಣೆಗಾಗಿ ಬರಬಾರದು. ಅವರು ತಮ್ಮ ಗಂಡಂದಿರ ಜೊತೆ ಮಲಗಲು ಮಾತ್ರ ಎಂದು ಅವಹೇಳನಕಾರಿ ಮಾತುಗಳನ್ನು ಆಡಿದ್ದಾರೆ ಎಂಬ ಆರೋಪ ಕೇಳಿಬಂದಿದ್ದು, ಈ ಸಂಬಂಧದ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗಿದೆ. ಇಂಡಿಯನ್ ಮುಸ್ಲಿಂ ಲೀಗ್ ನ ಮಹಿಳಾ ಲೀಗ್ ವಿಭಾಗದ ಅಧ್ಯಕ್ಷರು ಒಂದು ದಿನ ತಡವಾಗಿ ವೀಡಿಯೊ ಬಿಡುಗಡೆ ಮಾಡಿರುವುದನ್ನು ಉಲ್ಲೇಖಿಸಿ, ಮಹಿಳಾ ಲೀಗ್ ಬಗ್ಗೆ ಮಾತನಾಡುವ ಅಗತ್ಯವಿಲ್ಲ ಎಂದು ಹೇಳಲಾಗಿದೆ ಎಂದು ಮಜೀದ್ ತಮ್ಮ ಭಾಷಣದಲ್ಲಿ ಹೇಳಿದ್ದಾರೆ. “ರಾಜಕೀಯದಲ್ಲಿದ್ದರೆ ಪಾಣಕ್ಕಾಡ್ನ ತಂಙಳ್ ಕುರಿತೂ ಮಾತು ಬರುತ್ತದೆ. ಅದನ್ನು ಕೇಳುವ ಧೈರ್ಯವಿರುವವರು ಮಾತ್ರ ರಾಜಕೀಯಕ್ಕೆ ಬರಬೇಕು. ಇಲ್ಲದಿದ್ದರೆ ಗೃಹಿಣಿಯರಾಗಿ ಮನೆಯಲ್ಲೇ ಇರಬಹುದು” ಎಂದು ಅವರು ಹೇಳಿರುವುದು ವೀಡಿಯೊದಲ್ಲಿ ಕೇಳಿಬರುತ್ತದೆ. ವರದಿಗಳ ಪ್ರಕಾರ, ಸಯೀದ್ ಅಲಿ ಮಜೀದ್ ಅವರು ಸಿಪಿಎಂನ ಸ್ಥಳೀಯ ಕಾರ್ಯದರ್ಶಿ ಹುದ್ದೆಗೆ ರಾಜೀನಾಮೆ ನೀಡಿ ಸ್ವತಂತ್ರ ಅಭ್ಯರ್ಥಿಯಾಗಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಅವರು ವಾರ್ಡ್ನಲ್ಲಿ 666 ಮತಗಳನ್ನು ಪಡೆದು, ಇಂಡಿಯನ್ ಮುಸ್ಲಿಂ ಲೀಗ್ ಅಭ್ಯರ್ಥಿಗಿಂತ 47 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಈ ಹೇಳಿಕೆಗಳನ್ನು ಮಹಿಳೆಯರ ಗೌರವಕ್ಕೆ ಧಕ್ಕೆ ತರುವುದಾಗಿ ಮಹಿಳಾ ಸಂಘಟನೆಗಳು ಹಾಗೂ ವಿರೋಧ ಪಕ್ಷಗಳು ಖಂಡಿಸಿದ್ದು, ಸಯೀದ್ ಅಲಿ ಮಜೀದ್ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿವೆ. CPM leader Sayed Ali Majeed has sparked controversy with sexist remarks in his victory speech. Video Courtesy: Athique Haneef @MSKiranPrakash @PaulCithara #CPM #Malappuram #Kerala pic.twitter.com/5i5NcbGW1d — TNIE Kerala (@xpresskerala) December 15, 2025
Australia | ‘ನನ್ನ ಮಗ ಒಬ್ಬ ಹೀರೋ, ಆತ ಜಾತಿ ಧರ್ಮ ನೋಡಲಿಲ್ಲ: ಅಹ್ಮದ್ ತಂದೆ Mohamed Fateh al-Ahmed
ಪ್ರಾಣವನ್ನು ಲೆಕ್ಕಿಸದೆ ದಾಳಿಕೋರನಿಂದ ಬಂದೂಕು ಕಸಿದುಕೊಂಡು, ಜನರನ್ನು ರಕ್ಷಿಸಿದ ಸಿರಿಯಾ ಮೂಲದ ಹಣ್ಣಿನ ವ್ಯಾಪಾರಿ
Schools Closed: ಮಹಾನಗರದಲ್ಲಿ ಹದಗೆಟ್ಟ ಗಾಳಿ ಗುಣಮಟ್ಟ: ಶಾಲೆಗಳ ಬಂದ್ಗೆ ಸರ್ಕಾರ ತಿರ್ಮಾನ
Poor Air Quality in City: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಆಗಾಗ ಗಾಳಿ ಗುಣಮಟ್ಟ ತೀರಾ ಕಳಪೆ ಮಟ್ಟ ತಲುಪುತ್ತದೆ. ಕಳೆದ ಮೂರು ನಾಲ್ಕು ದಿನಗಳಿಂದ ಬೆಂಗಳೂರಿಗಿಂತಲೂ ಬಳ್ಳಾರಿಯಲ್ಲಿ ಗಾಳಿ ಕಲುಷಿತಗೊಂಡಿದ್ದು ವರದಿ ಆಗಿತ್ತು. ಇದೀಗ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಉಸಿರಾಡಲು ಯೋಗ್ಯವಲ್ಲದ ಗಾಳಿ ದಾಖಲಾಗಿದೆ. ಹೀಗಾಗಿ ಮಕ್ಕಳ ಆರೋಗ್ಯ ದೃಷ್ಟಿಯಿಂದ ಶಾಲೆಗಳ ಬಂದ್ಗೆ ದೆಹಲಿ ಸರ್ಕಾರ
ಇರಾಕ್ ಚುನಾವಣಾ ಫಲಿತಾಂಶಕ್ಕೆ ಸುಪ್ರೀಂ ಫೆಡರಲ್ ಕೋರ್ಟ್ ಅನುಮೋದನೆ
ಬಗ್ದಾದ್, ಡಿ.15: ಇರಾಕಿನಲ್ಲಿ ಕಳೆದ ತಿಂಗಳು ನಡೆದ ಸಂಸದೀಯ ಚುನಾವಣೆಯ ಫಲಿತಾಂಶವನ್ನು ಸುಪ್ರೀಂ ಫೆಡರಲ್ ನ್ಯಾಯಾಲಯ ಅನುಮೋದಿಸಿದ್ದು ಉಸ್ತುವಾರಿ ಪ್ರಧಾನಿ ಮುಹಮ್ಮದ್ ಶಿಯಾ ಅಲ್-ಸುಡಾನಿ ಅವರ ಪಕ್ಷವು ಅತೀ ಹೆಚ್ಚಿನ ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಆದರೆ ಅವರಿಗೆ ಮತ್ತೊಂದು ಅವಧಿಯನ್ನು ಖಚಿತಪಡಿಸಲು ಇದು ಸಾಕಾಗದು ಎಂದು ದೃಢಪಡಿಸಿದೆ. ಮತದಾನ ಪ್ರಕ್ರಿಯೆಯು ಸಾಂವಿಧಾನಿಕ ಮತ್ತು ಕಾನೂನಿನ ಅವಶ್ಯಕತೆಗಳನ್ನು ಪೂರೈಸಿದೆ ಮತ್ತು ಮತದಾನದ ಸಿಂಧುತ್ವದ ಮೇಲೆ ಪರಿಣಾಮ ಬೀರುವಂತಹ ಯಾವುದೇ ಅಕ್ರಮಗಳನ್ನು ಹೊಂದಿಲ್ಲ ಎಂದು ನ್ಯಾಯಾಲಯ ದೃಢಪಡಿಸಿದೆ. 329 ಸ್ಥಾನಗಳಿರುವ ಸಂಸತ್ತಿನಲ್ಲಿ ಅಲ್-ಸುಡಾನಿ ಅವರ `ರಿಕನ್ಸ್ಟ್ರಕ್ಷನ್ ಆ್ಯಂಡ್ ಡೆವಲಪ್ಮೆಂಟ್' ಒಕ್ಕೂಟ 46 ಸ್ಥಾನಗಳನ್ನು ಪಡೆದು ಅತೀ ದೊಡ್ಡ ಪಕ್ಷವಾಗಿ ಗುರುತಿಸಿಕೊಂಡಿದೆ. ಆದರೆ ಯಾವುದೇ ಒಕ್ಕೂಟವು ಸ್ವತಃ ಸರಕಾರ ರಚಿಸುವಷ್ಟು ಸ್ಥಾನಗಳನ್ನು ಗಳಿಸಲು ವಿಫಲವಾಗಿದೆ.
ಹಾವೇರಿ | ಕರ್ತವ್ಯ ಲೋಪ ಆರೋಪ : ಸರ್ಕಲ್ ಇನ್ಸ್ಪೆಕ್ಟರ್ ಸಹಿತ ಇಬ್ಬರ ಅಮಾನತು
ಹಾವೇರಿ, ಡಿ.15: ಶಾಲಾ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಪೋಷಕರು ಹಾಗೂ ಸಾರ್ವಜನಿಕರಿಂದ ಶಿಕ್ಷಕನಿಗೆ ಚಪ್ಪಲಿ ಹಾರ ಹಾಕಿ ಹಲ್ಲೆ ನಡೆಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ತವ್ಯ ಲೋಪದಡಿ ಜಿಲ್ಲೆಯ ಸವಣೂರು ಸರ್ಕಲ್ ಇನ್ಸ್ ಪೆಕ್ಟರ್ ಹಾಗೂ ಓರ್ವ ಪೊಲೀಸ್ ಕಾನ್ಸ್ಟೇಬಲ್ಅನ್ನು ದಾವಣಗೆರೆ ಐಜಿಪಿ ಬಿ.ಆರ್.ರವಿಕಾಂತೇಗೌಡ ಅಮಾನತು ಮಾಡಿ ಇಲಾಖೆ ವಿಚಾರಣೆ ನಡೆಸಲು ನಿರ್ದೇಶನ ನೀಡಿದ್ದಾರೆ. ಅಮಾನತಾದ ಅಧಿಕಾರಿಯನ್ನು ಸವಣೂರು ಸರ್ಕಲ್ ಇನ್ಸ್ಪೆಕ್ಟರ್ ದೇವಾನಂದ ಎಂದು ತಿಳಿದುಬಂದಿದೆ. ವಿವರ : ಸವಣೂರು ಸರಕಾರಿ ಉರ್ದು ಶಾಲೆಯಲ್ಲಿ ಶಿಕ್ಷಕ ಜಗದೀಶ್ ಎಂಬಾತ ಶಾಲೆಯ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಆರೋಪದಡಿ ಆತನಿಗೆ ವಿದ್ಯಾರ್ಥಿನಿಯ ಪೋಷಕರು ಹಾಗೂ ಸಾರ್ವಜನಿಕರು ಹಲ್ಲೆ ನಡೆಸಿರುವ ಘಟನೆ ಡಿ.10ರಂದು ನಡೆದಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿಕ್ಷಕ ಹಾಗೂ ವಿದ್ಯಾರ್ಥಿನಿಯ ಪೋಷಕರು ವಿರುದ್ಧ ಪ್ರಕರಣ ದಾಖಲಾಗಿತ್ತು. ಈ ಪ್ರಕರಣ ಕುರಿತು ಪ್ರಾಥಮಿಕ ತನಿಖೆಗೆ ಹಾವೇರಿ ಎಸ್ಪಿ ಯಶೋಧಾ ಆದೇಶ ನೀಡಿದ್ದರು. ಕಠಿಣ ಶಿಕ್ಷೆ ಆಗಲಿ : ಈ ಪ್ರಕರಣದಲ್ಲಿ ತಪ್ಪುಮಾಡಿದವರಿಗೆ ಕಠಿಣ ಶಿಕ್ಷೆ ಆಗಬೇಕು ಎಂದು ಶಿಗ್ಗಾಂವ-ಸವಣೂರು ಕ್ಷೇತ್ರದ ಶಾಸಕ ಯಾಸಿರ್ ಅಹ್ಮದ್ ಖಾನ್ ಪಠಾಣ್ ತಿಳಿಸಿದ್ದಾರೆ.
ನೇಟೋ ಗುರಿಯನ್ನು ಕೈಬಿಡಲು ಉಕ್ರೇನ್ ಸಿದ್ಧ: ಝೆಲೆನ್ಸ್ಕಿ
ಬರ್ಲಿನ್, ಡಿ.15: ರಶ್ಯದೊಂದಿಗಿನ ಯುದ್ಧವನ್ನು ಕೊನೆಗೊಳಿಸುವ ನಿಟ್ಟಿನಲ್ಲಿ ಅಮೆರಿಕಾದ ಪ್ರತಿನಿಧಿಯೊಂದಿಗೆ ಬರ್ಲಿನ್ನಲ್ಲಿ ಐದು ಗಂಟೆ ಮಾತುಕತೆ ನಡೆಸಿದ ಉಕ್ರೇನ್ ಅಧ್ಯಕ್ಷ ವೊಲೊದಿಮಿರ್ ಝೆಲೆನ್ಸ್ಕಿ, ನೇಟೋ ಮಿಲಿಟರಿ ಒಕ್ಕೂಟಕ್ಕೆ ಸೇರ್ಪಡೆಗೊಳ್ಳುವ ಆಕಾಂಕ್ಷೆಗಳನ್ನು ಕೈಬಿಡಲು ಸಿದ್ಧ ಎಂದು ಹೇಳಿರುವುದಾಗಿ ವರದಿಯಾಗಿದೆ. `ಪಾಶ್ಚಿಮಾತ್ಯರು ಭದ್ರತೆಯ ಖಾತರಿ ನೀಡಿದರೆ ನೇಟೋಗೆ ಸೇರ್ಪಡೆಯಾಗುವ ಗುರಿಯನ್ನು ಉಕ್ರೇನ್ ಕೈಬಿಡಲು ಸಿದ್ಧ. ಆರಂಭದಿಂದಲೂ ನೇಟೋಗೆ ಸೇರ್ಪಡೆಗೊಳ್ಳುವುದು ಉಕ್ರೇನ್ ನ ಆಶಯವಾಗಿತ್ತು. ಇದು ನಿಜವಾದ ಭದ್ರತಾ ಖಾತರಿಯಾಗಿದೆ. ಅಮೆರಿಕ ಮತ್ತು ಯುರೋಪ್ನ ಕೆಲವು ಪಾಲುದಾರರು ಈ ನಿಟ್ಟಿನಲ್ಲಿ ಬೆಂಬಲ ನೀಡಲಿಲ್ಲ. ಆದ್ದರಿಂದ ನಮಗೆ ಅಮೆರಿಕಾದಿಂದ ಆರ್ಟಿಕಲ್-5ರ ರೀತಿಯ ಖಾತರಿ ಮತ್ತು ಯುರೋಪಿಯನ್ ಮಿತ್ರರಿಂದ, ಕೆನಡಾ, ಜಪಾನ್ ಮತ್ತಿತರ ದೇಶಗಳಿಂದ ಭದ್ರತೆಯ ಖಾತರಿ ದೊರಕುವುದು ರಶ್ಯದ ಮತ್ತೊಂದು ಆಕ್ರಮಣವನ್ನು ತಡೆಯಲು ಅವಕಾಶ ನೀಡುತ್ತದೆ. ಭದ್ರತಾ ಖಾತರಿಗೆ ಕಾನೂನಿನ ಬದ್ಧತೆಯಿರಬೇಕು. ಆಗ ನಾವು ಹೊಂದಾಣಿಕೆಗೆ ಸಿದ್ಧವಿದ್ದೇವೆ' ಎಂದು ಝೆಲೆನ್ಸ್ಕಿ ಹೇಳಿದ್ದಾರೆ. ಝೆಲೆನ್ಸ್ಕಿಯ ಈ ಹೇಳಿಕೆ ಉಕ್ರೇನ್ ನಿಲುವಿನಲ್ಲಿ ಪ್ರಮುಖ ಬದಲಾವಣೆಯನ್ನು ಸೂಚಿಸುತ್ತದೆ. ರಶ್ಯದ ದಾಳಿಗಳಿಂದ ರಕ್ಷಣೆ ಪಡೆಯಲು ನೇಟೋಗೆ ಸೇರ್ಪಡೆಗೊಳ್ಳುವುದಾಗಿ ಪ್ರತಿಪಾದಿಸುತ್ತಾ ಬಂದಿರುವ ಉಕ್ರೇನ್, ಈ ಆಕಾಂಕ್ಷೆಯನ್ನು ತನ್ನ ಸಂವಿಧಾನದಲ್ಲೂ ಸೇರ್ಪಡೆಗೊಳಿಸಿದೆ. ಯುದ್ಧ ಕೊನೆಗೊಳಿಸಲು ಟ್ರಂಪ್ ಪ್ರಸ್ತಾಪಿಸಿರುವ 20 ಅಂಶದ ಶಾಂತಿ ಯೋಜನೆಯ ಮತ್ತೊಂದು ಅಂಶವಾದ `ಭೂಪ್ರದೇಶವನ್ನು ರಶ್ಯಕ್ಕೆ ಬಿಟ್ಟುಕೊಡಲು' ಉಕ್ರೇನ್ ಇದುವರೆಗೆ ಸಮ್ಮತಿಸಿಲ್ಲ.
ಬೆನಿನ್ ನಲ್ಲಿ ಮಿಲಿಟರಿ ದಂಗೆ | ಅಧ್ಯಕ್ಷರ ಪದಚ್ಯುತಿ
ಸರಕಾರದ ವಿಸರ್ಜನೆ: ಯೋಧರ ಗುಂಪು ಘೋಷಣೆ
ಬೆನಿನ್ | ದಂಗೆ ವಿಫಲವಾಗಿದೆ: ಆಂತರಿಕ ಸಚಿವರ ಹೇಳಿಕೆ
ಪೋರ್ಟೋ ನೊವೊ, ಡಿ.15: ಬೆನಿನ್ ನಲ್ಲಿ ಘೋಷಿಸಲಾದ ದಂಗೆಯನ್ನು ವಿಫಲಗೊಳಿಸಲಾಗಿದೆ ಎಂದು ಆಂತರಿಕ ಸಚಿವ ಅಲಾಸೆನ್ ಸೆಯಿದೊವ್ `ಫೇಸ್ಬುಕ್'ನಲ್ಲಿ ಪೋಸ್ಟ್ ಮಾಡಿರುವ ವೀಡಿಯೊದಲ್ಲಿ ಹೇಳಿದ್ದಾರೆ. ಸೈನಿಕರ ಒಂದು ಸಣ್ಣ ಗುಂಪು ರಾಷ್ಟ್ರ ಮತ್ತು ಅದರ ಸಂಸ್ಥೆಗಳನ್ನು ಅಸ್ಥಿರಗೊಳಿಸುವ ಉದ್ದೇಶದಿಂದ ರವಿವಾರ ಬೆಳಿಗ್ಗೆ ದಂಗೆಯನ್ನು ಪ್ರಾರಂಭಿಸಿತು. ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸಿದ ಸಶಸ್ತ್ರ ಪಡೆಗಳು ಮತ್ತು ಅದರ ಮುಖ್ಯಸ್ಥರು ದೇಶಕ್ಕೆ ತಮ್ಮ ಬದ್ಧತೆಯನ್ನು ಎತ್ತಿಹಿಡಿದಿದ್ದಾರೆ' ಎಂದವರು ಪೋಸ್ಟ್ ಮಾಡಿದ್ದಾರೆ. ಎಲ್ಲವೂ ಚೆನ್ನಾಗಿದೆ. ಯಾವುದೇ ಸಮಸ್ಯೆಯಿಲ್ಲ ಎಂದು ಸರಕಾರದ ವಕ್ತಾರ ವಿಲ್ಫ್ರೆಡ್ ಹೌಂಗ್ಬೆಡ್ಜಿ ಹೇಳಿರುವುದಾಹಿ ಅಸೋಸಿಯೇಟೆಡ್ ಪ್ರೆಸ್ ವರದಿ ಮಾಡಿದೆ. ಫ್ರಾನ್ಸ್ ನಿಂದ 1960ರಲ್ಲಿ ಸ್ವಾತಂತ್ರ್ಯ ಪಡೆದ ಬಳಿಕ ಬೆನಿನ್ ಹಲವು ದಂಗೆಗಳಿಗೆ ಸಾಕ್ಷಿಯಾಗಿದೆ.
ಗ್ರೀಕ್ ದ್ವೀಪದ ಬಳಿ ವಲಸಿಗರ ದೋಣಿ ಮುಳುಗಿ 18 ಸಾವು
ಅಥೆನ್ಸ್, ಡಿ.15: ಗಾಳಿ ತುಂಬ ಬಹುದಾದ ದೋಣಿಯಲ್ಲಿ ಮೆಡಿಟರೇನಿಯನ್ ಸಮುದ್ರವನ್ನು ದಾಟಲು ಪ್ರಯತ್ನಿಸುತ್ತಿದ್ದ ಕನಿಷ್ಠ 18 ಮಂದಿ ವಲಸಿಗರು ದಕ್ಷಿಣ ಗ್ರೀಕ್ನ ಕ್ರೀಟ್ ದ್ವೀಪದ ಬಳಿ ದೋಣಿ ಮುಳುಗಿದಾಗ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ನೀರಿನಲ್ಲಿ ಅರ್ಧ ಮುಳುಗಿದ್ದ ದೋಣಿಯನ್ನು ಟರ್ಕಿಯ ಸರಕು ನೌಕೆ ಪತ್ತೆಹಚ್ಚಿ ಗ್ರೀಕ್ ಅಧಿಕಾರಿಗಳಿಗೆ ಮಾಹಿತಿ ನೀಡಿದೆ. ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಯಲ್ಲಿ ಯುರೋಪಿಯನ್ ಗಡಿ ಏಜೆನ್ಸಿಯ ಹಡಗು ಮತ್ತು ವಿಮಾನ, ಗ್ರೀಕ್ ಕರಾವಳಿ ಕಾವಲು ಪಡೆಯ ಹೆಲಿಕಾಪ್ಟರ್ ಮತ್ತು ಮೂರು ಹಡಗುಗಳು ಪಾಲ್ಗೊಂಡಿದ್ದು ಇಬ್ಬರನ್ನು ರಕ್ಷಿಸಲಾಗಿದೆ ಎಂದು ಕರಾವಳಿ ಕಾವಲು ಪಡೆಯ ಅಧಿಕಾರಿ ಹೇಳಿದ್ದಾರೆ.
ಗ್ರಾಮೀಣ ಉದ್ಯೋಗ ಖಾತ್ರಿ ಬದಲಿಗೆ ಕೇಂದ್ರದಿಂದ ಹೊಸ ಯೋಜನೆ, ರಾಜ್ಯಗಳ ಮೇಲೆ 40% ಹೊರೆ? ಆರಂಭದಲ್ಲೇ ವಿರೋಧ
ಕೇಂದ್ರ ಸರಕಾರ 'ಮಹಾತ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ'ಯನ್ನು ಬದಲಿಸಿ 'ಉದ್ಯೋಗ ಮತ್ತು ಜೀವನೋಪಾಯ ಖಾತರಿಗೆ ವಿಕಸಿತ ಭಾರತ ಯೋಜನೆ' ಜಾರಿಗೆ ತರಲು ಸಿದ್ಧತೆ ನಡೆಸಿದೆ. ಈ ಹೊಸ ಯೋಜನೆಯು 2047ರ ವೇಳೆಗೆ 'ವಿಕಸಿತ ಭಾರತ' ಗುರಿ ಸಾಧಿಸಲು ಮೂಲಸೌಕರ್ಯ ಒದಗಿಸುವ ಗುರಿ ಹೊಂದಿದೆ. ಯೋಜನೆಯ ವೆಚ್ಚದಲ್ಲಿ ರಾಜ್ಯಗಳೂ ಪಾಲು ಹಂಚಿಕೊಳ್ಳಬೇಕಾಗುತ್ತದೆ.
Australia | ಗುಂಡಿನ ದಾಳಿಯ ವೇಳೆ ಸಾಹಸ ಮೆರೆದ ಅಹ್ಮದ್ ಗೆ 1 ಲಕ್ಷ ಡಾಲರ್ ಬಹುಮಾನ
ವಾಷಿಂಗ್ಟನ್, ಡಿ.15: ಬೋಂಡಿ ಬೀಚ್ ನಲ್ಲಿ ಜನರ ಮೇಲೆ ಗುಂಡು ಹಾರಿಸುತ್ತಿದ್ದ ಶೂಟರ್ ನನ್ನು ಪ್ರಾಣದ ಹಂಗು ತೊರೆದು ಮಣಿಸಿದ ಹಣ್ಣಿನ ವ್ಯಾಪಾರಿ ಅಹ್ಮದ್ ಅಲ್ ಅಹ್ಮದ್ಗೆ ಅಮೆರಿಕಾದ ಕೋಟ್ಯಾಧಿಪತಿ, ಖಾಸಗಿ ಹೂಡಿಕೆ ಸಂಸ್ಥೆಯ ಮ್ಯಾನೇಜರ್ ಬಿಲ್ ಆಕ್ಮನ್ 1 ಲಕ್ಷ ಡಾಲರ್ ಬಹುಮಾನ ಘೋಷಿಸಿದ್ದಾರೆ. ಬೋಂಡಿ ಬೀಚ್ನಲ್ಲಿ ಹಣ್ಣಿನ ಅಂಗಡಿಯ ವ್ಯಾಪಾರಿ 43 ವರ್ಷ ವಯಸ್ಸಿನ ಅಹ್ಮದ್ ಅಲ್ ಅಹ್ಮದ್ ಅವರು ಪಾರ್ಕ್ ಮಾಡಲಾಗಿದ್ದ ಕಾರಿನ ಹಿಂಬದಿಯಿಂದ ನುಗ್ಗಿಬಂದು ಶೂಟರ್ ನ ಮೇಲೆ ಮುಗಿಬಿದ್ದು ಆತನ ಬಂದೂಕು ಕಸಿದುಕೊಳ್ಳುವ ಮೂಲಕ ಹಲವರ ಜೀವ ಉಳಿಸಿದ್ದಾರೆ. ಈ ಸಾಹಸಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಶ್ಲಾಘನೆ ವ್ಯಕ್ತವಾಗಿದ್ದು ಅಹ್ಮದ್ ಹೆಸರಿನಲ್ಲಿ ಆನ್ಲೈನ್ ನಿಧಿ ಸಂಗ್ರಹಿಸುವ ಅಭಿಯಾನವೂ ಆರಂಭವಾಗಿದೆ. `ಗೋ ಫಂಡ್ ಮಿ' ಆನ್ಲೈನ್ ಅಭಿಯಾನದಡಿ ಸೋಮವಾರ ಮಧ್ಯಾಹ್ನದ ವರೆಗೆ 3,06,000 ಡಾಲರ್ ನಿಧಿ ಸಂಗ್ರಹಿಸಲಾಗಿದೆ. ಈ ಮಧ್ಯೆ, ತೋಳು ಮತ್ತು ಕೈಗೆ ಗುಂಡೇಟಿನ ಗಾಯಗಳಾಗಿರುವ ಅಹ್ಮದ್ ಆಸ್ಪತ್ರೆಗೆ ದಾಖಲಾಗಿದ್ದಾರೆ ಮತ್ತು ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದಾರೆ ಎಂದು ಅವರ ಕುಟುಂಬದ ಮೂಲಗಳು ಹೇಳಿವೆ.
ಒಳ ಮೀಸಲಾತಿ ಜಾರಿಗಾಗಿ ಡಿ.17ರಂದು ಬೆಳಗಾವಿ ಚಲೋ ಹೋರಾಟ: ನರಸಪ್ಪ ದಂಡೋರ
ರಾಯಚೂರು: ಮಾದಿಗ ಸಮಾಜಕ್ಕೆ ಒಳ ಮೀಸಲಾತಿ ಪೂರ್ಣ ಪ್ರಮಾಣ ಜಾರಿಗೆ ಆಗ್ರಹಿಸಿ ಮಾದಿಗ ದಂಡೋರ ಮೀಸಲಾತಿ ಹೋರಾಟ ಸಮಿತಿಯಿಂದ ಡಿಸೆಂಬರ್ 17 ರಂದು ಬೆಳಗಾವಿ ಚಲೋ ಹಾಗೂ ಅಮರಣಾಂತ ಉಪವಾಸ ಸತ್ಯಾಗ್ರಹ ನಡೆಯಲಿದೆ ಎಂದು ಮಾದಿಗ ದಂಡೋರ ಮೀಸಲಾತಿ ಹೋರಾಟ ಸಮಿತಿ ಅಧ್ಯಕ್ಷ ನರಸಪ್ಪ ದಂಡೋರ ಹೇಳಿದರು. ಅವರಿಂದು ಮಾಧ್ಯಮಗೋಷ್ಟಿ ಉದ್ದೇಶಿಸಿ ಮಾತನಾಡಿ, ರಾಜ್ಯ ಕಾಂಗ್ರೆಸ್ ಸರ್ಕಾರ ಒಳಮೀಸಲು ಜಾರಿಗೆ ಆಸಕ್ತಿ ತೋರುತ್ತಿಲ್ಲ. ಜನರಿಗೆ ನೀಡಿದ ಮಾತು ಉಳಿಸಿಕೊಳ್ಳುವದಾಗಿ ಹೇಳುತ್ತಲೇ ಉದ್ದೇಶ ಪೂರಕವಾಗಿ ವಿಳಂಬ ಧೋರಣೆ ಅನುಸರಿಸುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಒಳ ಮೀಸಲಾತಿ ಜಾರಿ ಗೊಳಿಸುವುದಾಗಿ ಹೇಳಿ ನ್ಯಾಯಮೂರ್ತಿ ನಾಗಮೋಹನದಾಸ ಅವರಿಂದ ಪಡೆದ ವರದಿಯನ್ನು ಜಾರಿಗೊಳಿಸದೆ ಮೀಸಲು ಹಂಚಿಕೆ ಮಾಡಿ ಗೊಂದಲ ಸೃಷ್ಟಿಗೆ ಕಾರಣರಾದರು ಎಂದು ಹೇಳಿದರು. ಈ ಸಂದರ್ಭದಲ್ಲಿ ದುಳ್ಳಯ್ಯ ಗುಂಜಳ್ಳಿ, ರಂಜೀತ ದಂಡೋರ, ಜಕ್ರಪ್ಪ ಹಂಚಿನಾಳ, ಗೋವಿಂದ ಇಟೇಕರ್, ಹನುಮಂತ ಜುಲಮಗೇರ, ಭೀಮೇಶ ತುಂಟಾಪುರು, ದಾವೀದ, ರಾಜಪ್ಪ ಮರ್ಚಟ್ಹಾಳ, ಮಾರುತಿ ಉಪಸ್ಥಿತರಿದ್ದರು.
ಲೋಕಾಯುಕ್ತ ವಿಶೇಷ ಸಾರ್ವಜನಿಕ ಅಭಿಯೋಜಕರಾಗಿ ಮಲ್ಲಿನಾಥ ಎಸ್ ಹಿರೇಮಠ ನೇಮಕ
ರಾಯಚೂರು ಡಿ15: ರಾಯಚೂರು ಜಿಲ್ಲಾ ಲೋಕಾಯುಕ್ತ ವಿಶೇಷ ಸಾರ್ವಜನಿಕ ಅಭಿಯೋಜಕರಾಗಿ ಮಲ್ಲಿನಾಥ ಎಸ್ ಹಿರೇಮಠ ಅವರನ್ನು ನೇಮಿಸಿ ಕರ್ನಾಟಕ ಲೋಕಾಯುಕ್ತ ನಿಬಂಧಕರು ಆದೇಶ ಹೊರಡಿಸಿದ್ದಾರೆ. ಇಂಧೂದರ ಎಂ ಪಾಟೀಲ್ ಅವರನ್ನು ಕರ್ತವ್ಯದಿಂದ ಬಿಡುಗಡೆಗೊಳಿಸಿ ಅವರ ಸ್ಥಾನಕ್ಕೆ ರಾಯಚೂರು ಜಿಲ್ಲಾ ವಿಶೇಷ ಸಾರ್ವಜನಿಕ ಅಭಿಯೋಜಕರಾಗಿ ಮಲ್ಲಿನಾಥ ಎಸ್ ಹಿರೇಮಠ ಅವರನ್ನು ತತ್ಕ್ಷಣ ದಿಂದ ಬರುವಂತೆ ನೇಮಕ ಮಾಡಲಾಗಿದೆ.
ನ್ಯೂಝಿಲ್ಯಾಂಡ್: ಅತ್ಯಾಚಾರ ಆರೋಪಿ ಭಾರತೀಯ ಮೂಲದ ಚಾಲಕನಿಗೆ ಜೈಲು
ವೆಲ್ಲಿಂಗ್ಟನ್, ಡಿ.7: ನ್ಯೂಝಿಲ್ಯಾಂಡ್ ನಲ್ಲಿ ಪ್ರಯಾಣಿಸುತ್ತಿದ್ದ ಯುವತಿಯ ಮೇಲೆ ಅತ್ಯಾಚಾರ ನಡೆಸಿದ ಪ್ರಕರಣದಲ್ಲಿ ಭಾರತೀಯ ಮೂಲದ ಉಬೆರ್ ಚಾಲಕ ಸತ್ವಿಂದರ್ ಸಿಂಗ್ ಗೆ 7 ವರ್ಷ ಎರಡು ತಿಂಗಳು ಜೈಲುಶಿಕ್ಷೆ ವಿಧಿಸಲಾಗಿದೆ. 2023ರಲ್ಲಿ ಡ್ಯುನೆಡಿನ್ ನ ಸ್ಪೆಯ್ಟ್ಸ್ ಏಲ್ ಹೌಸ್ ನಿಂದ ಪೂರ್ವ ಹ್ಯಾಮಿಲ್ಟನ್ ಗೆ ತಡರಾತ್ರಿ ಉಬರ್ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಯುವತಿಯ ಮೇಲೆ ಚಾಲಕ ಸತ್ವಿಂದರ್ ಸಿಂಗ್ ಅತ್ಯಾಚಾರ ಎಸಗಿರುವುದು ಸಾಬೀತಾಗಿದೆ ಎಂದು ನ್ಯಾಯಾಧೀಶರು ತೀರ್ಪಿನಲ್ಲಿ ಉಲ್ಲೇಖಿಸಿದ್ದು ಸತ್ವಿಂದರ್ ಸಿಂಗ್ ಗೆ ವಿಧಿಸಿರುವ ಶಿಕ್ಷೆಯ ಪ್ರಮಾಣವನ್ನು ಇಳಿಸಬೇಕೆಂಬ ಕೋರಿಕೆಯನ್ನು ತಳ್ಳಿಹಾಕಿದ್ದಾರೆ.
ಪಡುಬಿದ್ರಿ | ವೇಶ್ಯಾವಾಟಿಕೆ ನಡೆಸುತ್ತಿದ್ದ ಆರೋಪ : ಇಬ್ಬರು ಆರೋಪಿಗಳ ಬಂಧನ
ಪಡುಬಿದ್ರಿ, ಡಿ.15: ಇಲ್ಲಿಗೆ ಸಮೀಪದ ಮಹಾದೇವಿ ಟೂರಿಸ್ಟ್ ಹೋಮ್ ಎಂಬ ಕಟ್ಟಡದಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಇಬ್ಬರು ಆರೋಪಿಗಳನ್ನು ಪಡುಬಿದ್ರೆ ಪೊಲೀಸರು ಡಿ.14ರಂದು ಬಂಧಿಸಿದ್ದಾರೆ. ಯತಿರಾಜ್ ಶೆಟ್ಟಿ ಪೊಲ್ಯ ಮತ್ತು ನವೀನ್ ಪೂಜಾರಿ ಬಂಧಿತ ಆರೋಪಿಗಳು. ಇವರು ಅಕ್ರಮವಾಗಿ ಹಣ ಗಳಿಸುವ ಉದ್ದೇಶದಿಂದ ಮಹಿಳೆಯರನ್ನು ಪುಸಲಾಯಿಸಿ ಕಳ್ಳಸಾಗಾಣಿಕೆ ಮಾಡಿ ವೇಶ್ಯಾವಾಟಿಕೆ ನಡೆಸುತ್ತಿದ್ದು, ಈ ಬಗ್ಗೆ ಖಚಿತ ಮಾಹಿತಿಯಂತೆ ಪಡುಬಿದ್ರಿ ಪೊಲೀಸರು ದಾಳಿ ನಡೆಸಿ ಇಬ್ಬರು ಸಂತ್ರಸ್ತ ಮಹಿಳೆಯರನ್ನು ರಕ್ಷಿಸಿದ್ದಾರೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಲಬುರಗಿ| ಸೆಪ್ಸಿಸ್ ಸೋಂಕು ಮೂಕ ಕೊಲೆಗಾರ: ಡಾ.ಶರಣಬಸಪ್ಪ ಹರವಾಳ
ಕಲಬುರಗಿ: ಸೆಪ್ಸಿಸ್ ಎಂದರೆ ನಿಮ್ಮ ದೇಹದ ಅತಿಯಾದ ಮತ್ತು ಜೀವಕ್ಕೆ ಅಪಾಯಕಾರಿಯಾದ ಪ್ರತಿಕ್ರಿಯೆಯಾಗಿದ್ದು, ಇದು ಸೋಂಕಿನಿಂದ ಉಂಟಾಗುತ್ತದೆ. ಇದನ್ನು ಮೂಕ ಕೊಲೆಗಾರ ಎಂದು ಕರೆಯಲಾಗುತ್ತದೆ ಎಂದು ಹೈದ್ರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯರು ಹಾಗೂ ಮಹಾದೇವಪ್ಪ ರಾಂಪೂರೆ ವೈದ್ಯಕೀಯ ಮಹಾವಿದ್ಯಾಲಯದ ಸಂಚಾಲಕರಾದ ಡಾ.ಶರಣಬಸಪ್ಪ ಹರವಾಳ ಹೇಳಿದರು. ಅವರು ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಬಸವೇಶ್ವರ ಬೋಧನಾ ಹಾಗೂ ಸಾರ್ವಜನಿಕ ಆಸ್ಪತ್ರೆಯ ಸಭಾಂಗಣದಲ್ಲಿ ಜರುಗಿದ ಮೈಕ್ರೋಬಾಯಲಾಜಿ ವಿಭಾಗದಿಂದ ಜರುಗಿದ ಸೆಪ್ಸಿಸ್ ಊಹಿಸಬೇಡಿ, ಪತ್ತೆಮಾಡಿ ವಿಷಯದ ಕುರಿತು ಜರುಗಿದ ಸಿ ಎಮ್ ಇ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಡಾ.ಶರಣಬಸಪ್ಪ ಹರವಾಳ, ಇದು ಹೆಚ್ಚಿನ ಜನರಿಗೆ ತುಂಬಾ ಪರಿಚಿತವಲ್ಲದಿರಬಹುದು, ಆದರೆ ವಾಸ್ತವವಾಗಿ ಇದು ನಮ್ಮಿಂದ ದೂರವಿಲ್ಲ. ಗಂಭೀರ ಕಾಯಿಲೆಯಾಗಿ, ಸೆಪ್ಸಿಸ್ನ ಅನಾರೋಗ್ಯ ಮತ್ತು ಮರಣ ಪ್ರಮಾಣವು ಹೆಚ್ಚಾಗಿರುತ್ತದೆ. ಪ್ರತಿ ವರ್ಷ ವಿಶ್ವಾದಾದ್ಯಂತ ಸುಮಾರು 20 ರಿಂದ 30 ಮಿಲಿಯನ್ ಸೆಪ್ಸಿಸ್ ಪ್ರಕರಣಗಳು ಕಂಡುಬರುತ್ತವೆ ಎಂದು ಅಂದಾಜಿಸಲಾಗಿದೆ ಎಂದು ಹೇಳಿದರು. ಗೌರವ ಅತಿಥಿಗಳಾಗಿದ್ದ ಬಸವೇಶ್ವರ ಆಸ್ಪತ್ರೆಯ ಸಂಚಾಲಕ ಡಾ.ಕಿರಣ್ ದೇಶಮುಖ್ ಮಾತನಾಡಿ, ಸೆಪ್ಸಿಸ್ ಚಿಕಿತ್ಸೆಯಲ್ಲಿ ಸಮಯವು ಅತ್ಯಗತ್ಯ ಮತ್ತು ಸೆಪ್ಸಿಸ್ನ ಆರಂಭಿಕ ಗುರುತಿಸುವಿಕೆ ಚಿಕಿತ್ಸೆಯ ಅತ್ಯಂತ ನಿರ್ಣಾಯಕ ಭಾಗವಾಗಿದೆ. ಇತ್ತೀಚೆಗೆ ಬ್ಯಾಕ್ಟೀರಿಯಾದ ಸೋಂಕಿನ ಆರಂಭಿಕ ರೋಗನಿರ್ಣಯಕ್ಕೆ ಹೆಪಾರಿನ್-ಬೈಂಡಿಂಗ್ ಪ್ರೋಟೀನ್ (HBP) ಉದಯೋನ್ಮುಖ ಗುರುತುಗಳಲ್ಲಿ ಒಂದಾಗಿದೆ ಎಂದು ಸಾಬೀತಾಗಿದೆ. ಇದು ವೈದ್ಯರು ಸೆಪ್ಸಿಸ್ ರೋಗಿಗಳನ್ನು ಸಾಧ್ಯವಾದಷ್ಟು ಬೇಗ ಪತ್ತೆಹಚ್ಚಲು ಮತ್ತು ಚಿಕಿತ್ಸೆಯ ಪರಿಣಾಮಗಳನ್ನು ಸುಧಾರಿಸಲು ಸಹಾಯ ಮಾಡುತ್ತದೆ ಎಂದು ಹೇಳಿದರು. ವೇದಿಕೆಯ ಮೇಲೆ ವೈದ್ಯಕೀಯ ಆಡಳಿತ ಮಂಡಳಿ ಸದಸ್ಯರಾದ ಡಾ ಗುರುಲಿಂಗಪ್ಪ ಪಾಟೀಲ್, ಮಹಾವಿದ್ಯಾಲಯದ ಡೀನ್ ಡಾ.ಶರಣಗೌಡ ಪಾಟೀಲ್, ನಿರ್ದೇಶಕರಾದ ಡಾ.ಮಲ್ಲಿಕಾರ್ಜುನ ಬಂಡಾರ, ವೈಸ್ ಡೀನ್ ಡಾ.ವಿಜಯಕುಮಾರ್ ಕಪ್ಪಿಕೇರಿ, ವೈದ್ಯಕೀಯ ಅಧೀಕ್ಷಕರಾದ ಡಾ.ಮಲ್ಲಿಕಾರ್ಜುನ ತೇಗನೂರ, ಡಾ.ಗಿರಿಧರ ಹಾವನೂರು, ಡಾ ಶಿಲ್ಪಾ ಪ್ರಧಾನ್, ಡಾ.ಬಸವರಾಜ ಪಾಟೀಲ್, ಶಿಬಾ ಪರ್ವೀನ್, ಶರಣಮ್ಮ ಬಿರಾದಾರ್ ಉಪಸ್ಥಿತರಿದ್ದರು. ಡಾ.ಪರಮೇಶ್ ಬಿರಾದಾರ್ ಸ್ವಾಗತಿಸಿದರು. ಡಾ.ಉಡಚಾಣ ಕಾರ್ಯಕ್ರಮ ನಿರೂಪಿಸಿದರು, ಡಾ.ಪ್ರೀತಿ ಹುಗ್ಗಿ ವಂದಿಸಿದರು.
ಚೀನಾ ಗಡಿಯಲ್ಲಿ ಯುದ್ಧಭೂಮಿ ಪ್ರವಾಸೋದ್ಯಮಕ್ಕಾಗಿ ಚೋ ಲಾ ಮತ್ತು ಡೋಕ್ಲಾಮ್ ಪಾಸ್ ಗಳನ್ನು ತೆರೆದ ಭಾರತ
ಗುವಾಹಟಿ,ಡಿ.15: ಭಾರತವು ಸೋಮವಾರ ಸಿಕ್ಕಿಮ್ನಲ್ಲಿ ಐತಿಹಾಸಿಕ ಚೋ ಲಾ ಮತ್ತು ಡೋಕ್ಲಾಮ್ ಪಾಸ್ಗಳನ್ನು (ಕಣಿವೆ ಮಾರ್ಗ) ತೆರೆಯುವ ಮೂಲಕ ‘ರಣಭೂಮಿ ದರ್ಶನ’ ಉಪಕ್ರಮದಡಿ ಚೀನಾ ಗಡಿಯಲ್ಲಿ ಯುದ್ಧಭೂಮಿ ಪ್ರವಾಸೋದ್ಯಮಕ್ಕೆ ಔಪಚಾರಿಕವಾಗಿ ಚಾಲನೆ ನೀಡಿದೆ. 2017ರಲ್ಲಿ ಭಾರತ ಮತ್ತು ಚೀನಾ ಸೈನಿಕರ ನಡುವೆ ಗಡಿ ಬಿಕ್ಕಟ್ಟಿನ ಬಳಿಕ ಡೋಕ್ಲಾಮ್ ಗಮನವನ್ನು ಸೆಳೆದಿದ್ದರೆ,1967ರಲ್ಲಿ ಭಾರತೀಯ ಮತ್ತು ಚೀನಿ ಪಡೆಗಳ ನಡುವೆ ಘರ್ಷಣೆ ನಡೆದ ಸ್ಥಳಗಳಲ್ಲಿ ಚೋ ಲಾ ಕೂಡ ಒಂದಾಗಿತ್ತು. ಈಶಾನ್ಯ ಭಾರತದಲ್ಲಿ,ವಿಶೇಷವಾಗಿ ಅರುಣಾಚಲ ಪ್ರದೇಶದಲ್ಲಿ ಇಂತಹ ಹಲವಾರು ಯುದ್ಧಭೂಮಿಗಳಿವೆ. ಸಿಕ್ಕಿಂ ಮುಖ್ಯಮಂತ್ರಿ ಪ್ರೇಮಸಿಂಗ್ ತಮಾಂಗ್ ಅವರು ಎರಡು ಪಾಸ್ಗಳ ತೆರೆಯುವಿಕೆಯ ದ್ಯೋತಕವಾಗಿ 25 ಬೈಕ್ಗಳು ಮತ್ತು ಇತರ ವಾಹನಗಳಿಗೆ ಹಸಿರು ನಿಶಾನೆಯನ್ನು ತೋರಿಸಿದರು. ಭಾರತೀಯ ಸೇನೆ ಮತ್ತು ಪ್ರವಾಸೋದ್ಯಮ ಸಚಿವಾಲಯದ ಜಂಟಿ ಉಪಕ್ರಮವಾಗಿರುವ ‘ಭಾರತ ರಣಭೂಮಿ ದರ್ಶನ’ ಐತಿಹಾಸಿಕ ಯುದ್ಧವಲಯಗಳು ಮತ್ತು ಮಿಲಿಟರಿ ಮಹತ್ವದ ಸ್ಥಳಗಳಿಗೆ ಭೇಟಿ ನೀಡಲು ನಾಗರಿಕರಿಗೆ ಅವಕಾಶವನ್ನು ಒದಗಿಸುತ್ತದೆ. ಜನರು ಭಾರತೀಯ ಸೇನೆಯ ಇತಿಹಾಸವನ್ನು ತಿಳಿದುಕೊಳ್ಳಲು ಮತ್ತು ಯೋಧರ ತ್ಯಾಗಗಳನ್ನು ಗೌರವಿಸಲು ಅನುವು ಮಾಡಿಕೊಡುವುದು ಇದರ ಉದ್ದೇಶವಾಗಿದೆ. ಚೋ ಲಾ ಮತ್ತು ಡೋಕ್ಲಾಮ್ ಪಾಸ್ಗಳನ್ನು ತೆರೆದಿರುವುದು ಕೇಂದ್ರದ ವೈಬ್ರಂಟ್ ವಿಲೇಜ್ ಕಾರ್ಯಕ್ರಮದ ಭಾಗವಾಗಿದ್ದು, ಗಡಿ ಪ್ರದೇಶದ ಪ್ರವಾಸೋದ್ಯಮವನ್ನು ಬಲಗೊಳಿಸುವುದು ಮತ್ತು ನಿಯಂತ್ರಿತ ಪ್ರವಾಸೋದ್ಯಮ ಚಟುವಟಿಕೆಗಳ ಮೂಲಕ ಸ್ಥಳೀಯ ಸಮುದಾಯಗಳಿಗೆ ಜೀವನೋಪಾಯ ಅವಕಾಶಗಳನ್ನು ಸೃಷ್ಟಿಸುವ ಗುರಿಯನ್ನು ಈ ಕಾರ್ಯಕ್ರಮವು ಹೊಂದಿದೆ ಎಂದು ತಮಾಂಗ್ ಹೇಳಿದರು. ಯುದ್ಧಭೂಮಿ ಪ್ರವಾಸೋದ್ಯಮದ ವಿಶಾಲ ಪರಿಕಲ್ಪನೆಯಡಿ ರೂಪಿಸಲಾಗಿರುವ ಈ ಕಾರ್ಯಕ್ರಮವು ಸಶಸ್ತ್ರ ಪಡೆಗಳ ಶೌರ್ಯ ಮತ್ತು ತ್ಯಾಗಗಳ ಕುರಿತು ಜನರಲ್ಲಿ ಅರಿವನ್ನು ಮೂಡಿಸುತ್ತದೆ ಮತ್ತು ದೇಶಭಕ್ತಿಯ ಪ್ರಜ್ಞೆಯನ್ನು ಬೆಳೆಸುತ್ತದೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು. ಪ್ರದೇಶದಲ್ಲಿ ಮೂಲಸೌಕರ್ಯ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿದ್ದು,ಪ್ರವಾಸೋದ್ಯಮ ಚಟುವಟಿಕೆಗಳನ್ನು ಬೆಂಬಲಿಸಲು ಅಗತ್ಯವಿರುವ ಸೌಲಭ್ಯಗಳನ್ನು ಒದಗಿಸಲಾಗುವುದು ಎಂದೂ ತಮಾಂಗ್ ತಿಳಿಸಿದರು.
40 ವರ್ಷದ ಹಿಂದೆ ಅಳವಡಿಸಿದ್ದ ಕೊಳವೆಗಳಲ್ಲಿ ಸೋರಿಕೆ, ಎಂ.ಜಿ. ರಸ್ತೆ ಅಗೆಯಲಿದೆ ಜಲಮಂಡಳಿ
ಬೆಂಗಳೂರು ಜಲಮಂಡಳಿ 40 ವರ್ಷಗಳ ಬಳಿಕ ಎಂಜಿ ರಸ್ತೆಯಲ್ಲಿ ನೀರು ಸರಬರಾಜು ಮತ್ತು ಒಳಚರಂಡಿ ಕೊಳವೆಗಳನ್ನು ಬದಲಾಯಿಸಲಿದೆ. ಈ ಕಾಮಗಾರಿ ಜನವರಿಯಲ್ಲಿ ಗಣರಾಜ್ಯೋತ್ಸವದ ನಂತರ ಆರಂಭವಾಗಲಿದೆ. ಸವೆದು ಹೋದ ಕೊಳವೆಗಳನ್ನು ಬದಲಾಯಿಸಿ, ಸೋರಿಕೆ ಮತ್ತು ಮಾಲಿನ್ಯವನ್ನು ತಡೆಯಲು ಮಂಡಳಿ ಉದ್ದೇಶಿಸಿದೆ. ಈ ಯೋಜನೆಯು 45 ಕೋಟಿ ರೂಪಾಯಿ ವೆಚ್ಚದ ರಸ್ತೆ ಕಾಂಕ್ರಿಟೀಕರಣದೊಂದಿಗೆ ನಡೆಯಲಿದೆ.
ಮಂಗಳೂರು | ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡಲು ಈಶ್ವರಾನಂದ ಪುರಿ ಸ್ವಾಮೀಜಿ ಸಲಹೆ
ಮಂಗಳೂರು, ಡಿ.15: ಜ್ಞಾನವಿಲ್ಲದ ಬದುಕು ಯಾತಕೋ ಮನುಜ ಎಂದು ಭಕ್ತ ಕನಕದಾಸರು ಜನರಲ್ಲಿ ಕೇಳುತ್ತಿದ್ದರು. ಹಾಗಾಗಿ ಜ್ಞಾನವೇ ಪ್ರಧಾನವಾದುದು. ಮಕ್ಕಳಿಗೆ ಅದರಲ್ಲೂ ಹೆಣ್ಣು ಮಕ್ಕಳಿಗೆ ಒಳ್ಳೆಯ ಶಿಕ್ಷಣ ನೀಡಿ, ಅವರನ್ನು ವಿದ್ಯಾವಂತರನ್ನಾಗಿಸಿದರೆ, ಮುಂದೆ ಉತ್ತಮ ಉದ್ಯೋಗ ಸಂಪಾದಿಸಿಕೊಳ್ಳುತ್ತಾರೆ ಎಂದು ಕನಕ ಗುರು ಪೀಠ ಹೊಸದುರ್ಗ ಶಾಖಾ ಮಠದ ಈಶ್ವರಾನಂದ ಪುರಿ ಸ್ವಾಮೀಜಿ ಸಲಹೆ ನೀಡಿದರು. ಮಂಗಳೂರಿನ ಉರ್ವಸ್ಟೋರ್ ತುಳು ಭವನದಲ್ಲಿ ರವಿವಾರ ಕರಾವಳಿ ಕುರುಬರ ಸಂಘದ ಆಶ್ರಯದಲ್ಲಿ ಹಮ್ಮಿಕೊಂಡ 538ನೇ ಕನಕ ಜಯಂತಿ ಆಚರಣೆಯ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು. ಹಿಂದಿನ ಕಾಲದಲ್ಲಿ ಧಾರ್ಮಿಕ ವಿಚಾರಗಳನ್ನು ಜನಸಾಮಾನ್ಯರಿಗೆ ತಿಳಿದುಕೊಳ್ಳಲು ಕಷ್ಟವಾಗುತ್ತಿತ್ತು. ಬಸವಣ್ಣ, ಕನಕದಾಸರು, ಪುರಂದರದಾಸರು ಮೊದಲಾದ ದಾಸವರೇಣ್ಯರು ಧಾರ್ಮಿಕ ವಿಚಾರಗಳನ್ನೊಳಗೊಂಡ ಪದ್ಯಗಳನ್ನು ಸರಳವಾದ ಭಾಷೆಯಲ್ಲಿ ಬರೆದು ಹಾಡಿ ಜನರ ಮಧ್ಯದಲ್ಲಿ ಪಸರಿಸುತ್ತಿದ್ದರು. ಹೀಗೆ ಸರಳವಾದ ಭಾಷೆಯಲ್ಲಿ ಜನರಿಂದ ಜನರಿಗೆ ಹರಡಿ ಭಕ್ತಿಯ ವಿಚಾರಗಳು, ಧಾರ್ಮಿಕ ವಿಚಾರಗಳು ಜ್ಞಾನದ ವಾಹಿನಿಗಳಾಗಿ ಹರಡಿದವು ಎಂದು ಹೇಳಿದರು. ಲೋಕೋಪಯೋಗಿ ಇಲಾಖೆಯ ಸಹಾಯಕ ಇಂಜಿನಿಯರ್ ಶ್ರೀಧರ್ ಟಿ.ಡಿ ಕಾರ್ಯಕ್ರಮ ಉದ್ಘಾಟಿಸಿದರು. ಯುವ ಸಾಹಿತಿ ಪ್ರವೀಣ ವೈ ಬೆನಕನವಾರಿ ಕನಕ ಸಂದೇಶ ನೀಡಿದರು. ಕರಾವಳಿ ವೀರಶೈವ ಲಿಂಗಾಯತ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಗುರುಮೂರ್ತಿ ಶುಭ ಹಾರೈಸಿದರು. ಕರಾವಳಿ ಕುರುಬರ ಸಂಘದ ಅಧ್ಯಕ್ಷ ನಿರಂಜನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಸ್ವಾಗತಿಸಿದರು. ಕರಾವಳಿ ಕುರುಬರ ಸಂಘದ ಗೌರವಾಧ್ಯಕ್ಷ ಡಾ.ಕೆ.ಇ ಪ್ರಕಾಶ್, ಸಂಘದ ಪ್ರಧಾನ ಕಾರ್ಯದರ್ಶಿ ನವೀನ್ ಗಾಂಧಿನಗರ, ಉಪಾಧ್ಯಕ್ಷರಾದ ಮಂಜುನಾಥ್ ನೋಟಗಾರ್ ಹಾಗೂ ಕೆ.ಬಿ ನಾಗರಾಜ್, ಸಂಘದ ಜೊತೆ ಕಾರ್ಯದರ್ಶಿ ಯಲ್ಲಪ್ಪಹದಗಲ್, ಸಂಘದ ಕೋಶಾಧಿಕಾರಿ ಮಲ್ಲಿಕಾರ್ಜುನ ಕಲ್ಲಹೊಲದ, ಜೊತೆ ಕೋಶಾಧಿಕಾರಿ ನಾರಾಯಣ ಪಾಟೀಲ್, ಸಂಘಟನಾ ಕಾರ್ಯದರ್ಶಿ ಶರಣಪ್ಪ ಹಳ್ಳಿಕೇರಿ, ಜೊತೆ ಸಂಘಟನಾ ಕಾರ್ಯದರ್ಶಿ ಕರಿಯಪ್ಪ ಗೌಡರ, ಸಂಘದ ನಿರ್ದೇಶಕರಾದ ಬಸವರಾಜ ದಾಸಬಾಳ, ಹನುಮಂತ ಸಂಗೊಂದಿ, ಯಲ್ಲಪ್ಪಸಿದ್ದಾಪುರ, ಪರಶುರಾಮ ಕಡೂರ ಮತ್ತು ಶಿವು ಲಾಯದಗೊಂಡಿ ಉಪಸ್ಥಿತರಿದ್ದರು. ಮೋಹನ್ದಾಸ್ ಮರಕಡ ಕಾರ್ಯಕ್ರಮ ನಿರೂಪಿಸಿದರು. ಸಂಘದ ಪ್ರಧಾನ ಕಾರ್ಯದರ್ಶಿ ನವೀನ್ ಗಾಂಧಿನಗರ ವಂದಿಸಿದರು. ಕನಕದಾಸರ ಭಾವಚಿತ್ರದ ಮೆರವಣಿಗೆ : ಕಾರ್ಯಕ್ರಮದ ಆರಂಭದಲ್ಲಿ ಉರ್ವಸ್ಟೋರ್ ನ ಶಾರದಾ ಮಾನಸ ಮಂಟಪದಿಂದ ತುಳು ಭವನದ ತನಕ ಕುಣಿತ ಭಜನೆ, ಡೊಳ್ಳು ಕುಣಿತ, ಕಲಶ, ಕುಂಭ ಸಹಿತ ಕನಕದಾಸರ ಭಾವಚಿತ್ರದ ಮೆರವಣಿಗೆ ನಡೆಯಿತು. ಲೋಕೋಪಯೋಗಿ ಇಲಾಖೆಯ ಎಇಇ ಶ್ರೀಧರ್ ಟಿ.ಡಿ ಮೆರವಣಿಗೆಗೆ ಚಾಲನೆ ನೀಡಿದರು. ಕಾರ್ಯಕ್ರಮ ಆರಂಭಕ್ಕೆ ಮೊದಲು ಶೃಂಗೇರಿಯ ಶಾರದಾ ಅಂಧ ಕಲಾವಿದರಿಂದ ಭಕ್ತಿ ಗೀತೆಗಳ ಗಾಯನ ನಡೆಯಿತು. ಸಾಧಕರಿಗೆ ಸನ್ಮಾನ, ಪ್ರತಿಭಾ ಪುರಸ್ಕಾರ ಕನಕ ಗುರು ಪೀಠ ಹೊಸದುರ್ಗ ಶಾಖಾ ಮಠದ ಈಶ್ವರಾನಂದ ಪುರಿ ಸ್ವಾಮೀಜಿ ಅವರನ್ನು ಗೌರವಿಸಲಾಯಿತು. ಕರಾವಳಿ ಕುರುಬರ ಸಂಘದ ಚಟುವಟಿಕೆಗಳಿಗೆ ಪ್ರೊತ್ಸಾಹಿಸುತ್ತಿರುವ ಲೋಕೋಪಯೋಗಿ ಇಲಾಖೆಯ ಎಇಇ ಶ್ರೀಧರ್ ಟಿ.ಡಿ, ಕರಾವಳಿ ವೀರಶೈವ ಲಿಂಗಾಯತ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಗುರುಮೂರ್ತಿ, ದ.ಕ. ಜಿಲ್ಲಾ ರಾಜ್ಯೋತ್ಸವ ಪುರಸ್ಕೃತ ಅಸಂಗಪ್ಪ ಎಸ್.ಪಾಲ್ತಿ, ಸರ್ವಕಾಲೇಜು ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ಆಯ್ಕೆಯಾದ ಗಣೇಶ್ ಶಿವಾನಂದ ಯರಝೇರಿ ಅವರನ್ನು ಸನ್ಮಾನಿಸಲಾಯಿತು. ಕರ್ನಾಟಕ ಪ್ರದೇಶ ಕುರುಬರ ಸಂಘದ ನಿರ್ದೇಶಕರಾದ ಶಿವಾನಂದ ಯರಝೇರಿ ಅವರು ಪ್ರಾಯೋಜಿಸಿದ ವಿದ್ಯಾರ್ಥಿವೇತನವನ್ನು ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿಯ ಸಾಧಕ 29 ವಿದ್ಯಾರ್ಥಿಗಳಿಗೆ ನೀಡಲಾಯಿತು. ಎಜುಕಾರುಣ್ಯ ಎಜುಕೇಶನಲ್ ಮತ್ತು ಚಾರಿಟೇಬಲ್ ಟ್ರಸ್ಟ್ ವತಿಯಿಂದ ಶ್ರೀಶಾ ಶೆಟ್ಟಿ ಅಬ್ಬೆಟ್ಟು ಇವರಿಗೆ 50,000 ರೂ. ಪ್ರೋತ್ಸಾಹಕ ನಗದು ನೀಡಲಾಯಿತು.
ಕಲಬುರಗಿ| ಬಹುಭಾಷಾ ನಾಟಕೋತ್ಸವ ಸಮಾರೋಪ ಸಮಾರಂಭ
ಕಲಬುರಗಿ: ರಂಗಾಯಣ ಕಲಬುರಗಿ ವತಿಯಿಂದ ಡಾ.ಎಸ್.ಎಂ.ಪಂಡಿತ್ ರಂಗಮಂದಿರದಲ್ಲಿ ಕಳೆದ ನಾಲ್ಕು ದಿನಗಳಿಂದ ನಡೆಯುತ್ತಿರುವ ಬಹುಭಾಷಾ ನಾಟಕೋತ್ಸವದ ಸಮಾರೋಪ ಸಮಾರಂಭ ನಡೆಯಿತು. ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಕೇಂದ್ರೀಯ ವಿಶ್ವವಿದ್ಯಾಲಯದ ಭಾಷಾನಿಕಾಯದ ಡೀನ್ ಆಗಿರುವ ನಾಟಕ ರಚನಾಕಾರ ಡಾ.ವಿಕ್ರಮ ವಿಸಾಜಿ, ರಂಗಭೂಮಿಯು ಬಹುಸಂಸ್ಕೃತಿಗಳ ತವರು. ಇಲ್ಲಿ ಸಮಾಜದ ಹಲವು ತಿಳಿವಳಿಕೆಗಳು, ಜೀವನದ ಅನೇಕ ತತ್ವಗಳು, ಭಾಷೆಯ ವಿವಿಧ ಕ್ರಮಗಳು ಬೆರೆತು ಹೋಗಿರುತ್ತವೆ. ಇದರಿಂದ ಜೀವನವನ್ನು ಅರಿಯುವ ಹೊಸ ದಾರಿಗಳು ತೆರೆದುಕೊಳ್ಳುತ್ತವೆ ಎಂದು ಹೇಳಿದರು. ಈ ಭಾಗದಲ್ಲಿ ಜನಪದ ರಂಗಭೂಮಿ, ವೃತ್ತಿ ರಂಗಭೂಮಿ, ಹವ್ಯಾಸಿ ರಂಗಭೂಮಿ, ಉರ್ದು ರಂಗಭೂಮಿ ಮತ್ತು ಮರಾಠಿ ರಂಗಭೂಮಿ ಒಟ್ಟಿಗೆ ಬೆಳೆದಿವೆ. ಪರಸ್ಪರ ಕಲಿತಿವೆ. ರಂಗಭೂಮಿಯ ಈ ಸೌಹಾರ್ದ ಸಂಸ್ಕೃತಿಯನ್ನು ಪೋಷಿಸಬೇಕಾಗಿದೆ ಎಂದು ಹೇಳಿದರು. ಮುಖ್ಯ ಅತಿಥಿಯಾಗಿ ಆಗಮಿಸಿ ಡಾ.ಮೀನಾಕ್ಷಿ ಬಾಳಿ ಮಾತನಾಡಿ, ಕಲ್ಯಾಣ ಕರ್ನಾಟಕ ಪ್ರದೇಶವು ಭಾಷಾ ಸಾಮರಸ್ಯಕ್ಕೆ ಹೆಸರುವಾಸಿಯಾಗಿದೆ. ಪ್ರಾಚೀನ ಕಾಲದಿಂದಲೂ ಕನ್ನಡವು ತೆಲಗು, ತುಳು, ತಮಿಳು ಇತ್ಯಾದಿ ಸಹೋದರಿ ಭಾಷೆಗಳಲ್ಲದೆ ಉರ್ದುವಿನಂಥ ಭಾಷೆಯೊಂದಿಗೂ ಸಾಮರಸ್ಯ ಸಾಧಿಸಿದೆ ಎಂದರು. ಪತ್ರಾಗಾರ ಕಚೇರಿಯ ಉಪನಿರ್ದೇಶಕರಾದ ಡಾ.ವೀರಶೆಟ್ಟಿ ಗಾರಂಪಳ್ಳಿ ಮಾತನಾಡಿ, ಕನ್ನಡ ರಂಗಭೂಮಿಗೆ ಒಂದು ಸಾವಿರ ವರ್ಷಗಳ ಇತಿಹಾಸವಿದೆ. ಅದು ಈ ಶತಮಾನಗಳ ಉದ್ದಕ್ಕೂ ಧರ್ಮಾತೀತವಾಗಿಯೇ ಉಳಿದು ಬಂದಿದೆ ಎಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ರಂಗಾಯಣದ ನಿರ್ದೇಶಕ ಸುಜಾತಾ ಜಂಗಮಶೆಟ್ಟಿ ಮಾತನಾಡಿ, ಭಾಷೆಯ ಮಿತಿಗಳನ್ನು ಮೀರಿ ಕನ್ನಡದ ನೆಲ ಎಲ್ಲವನ್ನು ಹೀರಿಕೊಂಡು ಬೆಳೆದಿದೆ. ಇನ್ನೊಂದನ್ನು ಸ್ವೀಕರಿಸುತ್ತಾ ನಮ್ಮದನ್ನು ಉಳಿಸಿಕೊಳ್ಳುತ್ತಾ ಬಹುತ್ವದ ದಾರಿಯಲ್ಲಿ ಸಾಗುವುದೇ ನಮಗೆ ಇರುವ ಅತ್ಯುತ್ತಮ ದಾರಿ. ಇಂತಹ ಬಹುತ್ವದ ಸಂಸ್ಕೃತಿಯನ್ನು ಬೆಳೆಸಲು ಹಲವು ಸೋದರ ಭಾಷೆಗಳ ಜೊತೆಗೆ ಸೇರಿ ಹಮ್ಮಿಕೊಂಡಿರುವ ಉತ್ಸವವೇ ಬಹುಭಾಷಾ ನಾಟಕೋತ್ಸವವಾಗಿದೆ ಎಂದು ಹೇಳಿದರು.
Bihar | ಕಾರ್ಯಕ್ರಮದಲ್ಲಿ ವೈದ್ಯೆಯ ಹಿಜಾಬ್ ಎಳೆದ CM ನಿತೀಶ್ ಕುಮಾರ್; ವಿಡಿಯೋ ವೈರಲ್
ವಿರೋಧ ಪಕ್ಷಗಳಿಂದ ತೀವ್ರ ಖಂಡನೆ; ನೀಚ ಕೃತ್ಯ ಎಂದ ಕಾಂಗ್ರೆಸ್
Dileep ಚಿತ್ರದ ಪೋಸ್ಟರ್ ಹಂಚಿಕೊಂಡ ಮೋಹನ್ ಲಾಲ್ ಗೆ ಡಬ್ಬಿಂಗ್ ಕಲಾವಿದೆ ಭಾಗ್ಯಲಕ್ಷ್ಮಿ ತರಾಟೆ
ತಿರುವನಂತಪುರ,ಡಿ.15: ನಟಿಯ ಅಪಹರಣ ಮತ್ತು ಅತ್ಯಾಚಾರ ಪ್ರಕರಣದಲ್ಲಿ ತೀರ್ಪು ಹೊರಬಿದ್ದ ಬಳಿಕ ‘ಭಾ ಭಾ ಬಾ’ ಚಿತ್ರದ ಪೋಸ್ಟರ್ ಹಂಚಿಕೊಂಡಿದ್ದಕ್ಕಾಗಿ ಮಲಯಾಳಂ ನಟ ಮೋಹನಲಾಲ್ ವಿರುದ್ಧ ಕಿಡಿ ಕಾರಿರುವ ಖ್ಯಾತ ಡಬ್ಬಿಂಗ್ ಕಲಾವಿದೆ ಭಾಗ್ಯಲಕ್ಷ್ಮಿ ಅವರು, ಅದನ್ನು ಭಾವನೆಗಳನ್ನು ಪರಿಗಣಿಸದ ಅವಿವೇಕಿ ಕೃತ್ಯವಾಗಿದೆ ಎಂದು ಬಣ್ಣಿಸಿದ್ದಾರೆ. ಸೋಮವಾರ ಕೇರಳ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಭಾಗ್ಯಲಕ್ಷ್ಮಿ,ಚಿತ್ರದ ಪೋಸ್ಟರ್ ನ್ನು ಹಂಚಿಕೊಳ್ಳುವ ಮುನ್ನ ಮೋಹನಲಾಲ್ ಒಂದು ಕ್ಷಣವಾದರೂ ಯೋಚಿಸಿದ್ದರೇ ಎಂದು ಪ್ರಶ್ನಿಸಿದರು. ಪ್ರಕರಣದಲ್ಲಿ ಎಂಟನೇ ಆರೋಪಿಯಾಗಿದ್ದ ದಿಲೀಪ್ ನಾಯಕ ನಟನಾಗಿದ್ದ ಚಿತ್ರದಲ್ಲಿ ಮೋಹನಲಾಲ್ ಅತಿಥಿ ನಟನಾಗಿ ಕಾಣಿಸಿಕೊಂಡಿದ್ದರು. ‘ತೀರ್ಪು ಬಂದ ದಿನವೇ ಆ ಪೋಸ್ಟರ್ ಬಿಡುಗಡೆ ಮಾಡಿದವರು ನಾವೆಲ್ಲರೂ ಪ್ರೀತಿಸುವ ಅದೇ ಮೋಹನ್ ಲಾಲ್ ಅಲ್ಲವೇ? ಆ ಕ್ಷಣದಲ್ಲಿ ತಾನೇನು ಮಾಡುತ್ತಿದ್ದೇನೆ ಎನ್ನುವುದನ್ನು ಅವರು ಯೋಚಿಸಬೇಕಿತ್ತಲ್ಲವೇ?’ ಎಂದು ಭಾಗ್ಯಲಕ್ಷ್ಮಿ ಪ್ರಶ್ನಿಸಿದರು. ದೂರು ದಾಖಲಿಸುವ ಸಂತ್ರಸ್ತೆಯ ನಿರ್ಧಾರದಿಂದ ಚಿತ್ರರಂಗದಲ್ಲಿಯ ಇತರ ಹಲವಾರು ಮಹಿಳೆಯರು ಬದುಕುಳಿದಿದ್ದಾರೆ. ಸಂತ್ರಸ್ತೆ ದೂರು ಸಲ್ಲಿಸಲು ಮುಂದೆ ಬಂದಿರದಿದ್ದರೆ ಮುಂದಿನ ಬಲಿಪಶು ಮಂಜು ವಾರಿಯರ್ ಆಗುತ್ತಿದ್ದರು ಎಂದ ಅವರು, ಸಂತ್ರಸ್ತೆಗೆ ಉದ್ಯಮದ ಬೆಂಬಲದ ಕೊರತೆಗೆ ದಿಲೀಪ್ ರ ಆರ್ಥಿಕ ಪ್ರಭಾವ ಪ್ರಮುಖ ಕಾರಣವಾಗಿತ್ತು ಎಂದರು.
ಬೀದರ್| ಬಸವಕಲ್ಯಾಣದಲ್ಲಿ ಕುರ್ಆನ್ ಪ್ರವಚನ ಕಾರ್ಯಕ್ರಮ
ಬೀದರ್ : ತಂದೆ ತಾಯಿ, ಸಹೋದರ, ಸಹೋದರಿ, ನೆರೆಹೊರೆಯವರು, ಸಂಬಂಧಿಕರೂಂದಿಗೆ ನಮ್ಮ ಸಂಬಂಧ ಚೆನ್ನಾಗಿದ್ದರೆ ಮೆಡಿಷನ್ ಕಡಿಮೆ ಮಾಡಬಹುದು. ಜಗತ್ತಿನಲ್ಲಿ ಅತ್ಯಂತ ಬೆಲೆಬಾಳುವ ವಸ್ತು ಅಂದರೆ ಅದು ಪ್ರೀತಿ. ಎಲ್ಲರನ್ನೂ ಪ್ರೀತಿಯಿಂದ ಕಾಣಬೇಕು ಎಂದು ಪ್ರಖ್ಯಾತ ಪ್ರವಚನಕಾರ ಮುಹಮ್ಮದ್ ಕುಂಞ ಹೇಳಿದರು. ಬಸವಕಲ್ಯಾಣದ ಅನುಭವ ಸಭಾ ಭವನದಲ್ಲಿ ನಡೆದ ಮೂರನೆ ದಿನದ ಕುರ್ಆನ್ ಪ್ರವಚನ ಕಾರ್ಯಕ್ರಮದಲ್ಲಿ ಪ್ರವಚನ ನೀಡಿದ ಮುಹಮ್ಮದ್ ಕುಂಞ, ಪರಸ್ಪರ ಅಪಹಾಸ್ಶ ಮಾಡಬೇಡಿ. ಪರಸ್ಪರ ನಿಂದಿಸಬೇಡಿ, ಅಡ್ಡ ಹೆಸರಿನಿಂದ ಕರೆಯಬೇಡಿ, ದ್ವೇಷಾನ್ವೇಷಣೆ ಮಾಡಬೇಡಿ ಎಂದು ಉಪದೇಶ ನೀಡಿದರು. ಪವಿತ್ರ ಕುರ್ಆನ್ ಮಾನವನ ಏಳಿಗೆಗಾಗಿ ಅಂಧಕಾರದಿಂದ ಬೆಳಕಿನೆಡೆಗೆ ಕೊಂಡೊಯ್ಯುವ ಮೂಲಕ ಬದುಕಿನ ವಾಸ್ತವ ಹಾಗೂ ಉದ್ದೇಶ ತಿಳಿಸುತ್ತದೆ. ಹಾಗೆಯೇ ವಾಯು, ಉಸಿರು, ನೀರು, ಭೂಮಿ ಜೀವನ ಎಲ್ಲವೂ ದೇವರದ್ದಾಗಿದೆ. ಜಾತಿ, ಧರ್ಮ, ಮತ, ಪಂಗಡ, ದೇಶ ನೋಡದೆ ಎಲ್ಲರನ್ನು ಪ್ರಿತಿಸಲು ಪವಿತ್ರ ಕುರ್ ಆನ್ ಹೇಳಿಕೊಡುತ್ತದೆ ಎಂದು ಹೇಳಿದರು. ಯಾರಲ್ಲಿ ಧರ್ಮ ಇರುತ್ತದೆಯೋ ಅವರು ಎಲ್ಲರನ್ನೂ ಪ್ರೀತಿಸುತ್ತಾರೆ. ಯಾರಲ್ಲಿ ಧರ್ಮದ ಚಿನ್ನೆ, ಬಣ್ಣ, ಪಕ್ಷಪಾತ, ಶ್ರೇಷ್ಠ ಎನ್ನುವ ಭಾವನೆ ಇರುತ್ತದೆಯೋ ಅವರು ಸಮಾಜ ಒಡೆಯುವ ಕೆಲಸ ಮಾಡುತ್ತಾರೆ. ಎಲ್ಲರನ್ನೂ ಕಂಡು ಮುಗುಳ್ನಗಬೇಕು. ಜನರೊಂದಿಗೆ ಒಳ್ಳೆಯ ಭಾವನೆ ಇಟ್ಟುಕೊಳ್ಳುವುದು ಶ್ರೇಷ್ಠವಾದ ಕೆಲಸವಾಗಿದೆ. ಸಂಬಂಧ ಹಾಳಾಗುವ ಯಾವ ಕೆಲಸ ಮಾಡಬೇಡಿ. ಜನರನ್ನು ನಿಂದಿಸಬೇಡಿ. ಬೆರೆಯವರ ಬಗ್ಗೆ ಚರ್ಚೆ ಮಾಡಿದರೆ ತಮ್ಮ ಮೃತ ಸಹೋದರನ ಮಾಂಸ ತಿಂದಹಾಗೆ ಎಂದು ಕುರ್ ಆನ್ ಹೇಳುತ್ತದೆ. ಅನಗತ್ಯವಾಗಿ ಬೇರೆಯವರ ಬಗ್ಗೆ ಮಾತನಾಡಬೇಡಿ. ಕುಟುಂಬ ಸಂಬಂಧ ಹಾಳು ಮಾಡುವರನ್ನು ದೇವರು ಮೆಚ್ಚುವುದಿಲ್ಲ. ನೆರೆಹೊರೆಯರ ಜೊತೆಗೆ ಉತ್ತಮವಾಗಿ ವರ್ತಿಸಿ ಸಂಬಂಧವನ್ನು ಬಲಪಡಿಸಿ ಎಂದು ಉಪದೇಶ ನೀಡಿದರು. ಈ ಸಂದರ್ಭದಲ್ಲಿ ನಿರ್ಗುಡಿಯ ಹವಾ ಮಲ್ಲಿನಾಥ್ ಮಹಾರಾಜ, ಬಸವಪ್ರಭು ಸ್ವಾಮೀಜಿ, ಮಾಜಿ ಸಚಿವ ರಾಜಶೇಖರ್ ಪಾಟೀಲ್, ದತ್ತಾತ್ರೇಯ ಗಾದಾ, ಮಲ್ಲಿಕಾರ್ಜುನ್ ಗುಂಗೆ, ಇಸ್ಥೇಖಾರ್ ಅಹ್ಮದ್ ಖಾದ್ರಿ, ಬಸವೇಶ್ವರ ಪಂಚ ಕಮಿಟಿ ಸದಸ್ಯರು, ಜಮಾತೆ ಇಸ್ಲಾಂಎ ಹಿಂದ್ ನ ಸದಸ್ಯರು ಸೇರಿದಂತೆ ಹಲವರು ಉಪಸ್ಥಿತರಿದ್ದರು.
ತ್ರಿರಾಷ್ಟ್ರ ಪ್ರವಾಸ ಕೈಗೊಂಡ ಪ್ರಧಾನಿ ನರೇಂದ್ರ ಮೋದಿ
ಹೊಸದಿಲ್ಲಿ,ಡಿ.15: ಪ್ರಧಾನಿ ನರೇಂದ್ರ ಮೋದಿಯವರು ಸೋಮವಾರ ಜೋರ್ಡಾನ್, ಇಥಿಯೋಪಿಯಾ ಮತ್ತು ಒಮಾನ್ಗೆ ತ್ರಿರಾಷ್ಟ್ರ ಪ್ರಯಾಣವನ್ನು ಕೈಗೊಂಡಿದ್ದಾರೆ. ಪಶ್ಚಿಮ ಏಷ್ಯಾ ಮತ್ತು ಆಫ್ರಿಕಾದ ಪ್ರಮುಖ ಪಾಲುದಾರರೊಂದಿಗೆ ದ್ವಿಪಕ್ಷೀಯ ಸಂಬಂಧಗಳನ್ನು ಬಲಗೊಳಿಸುವುದು ಈ ಭೇಟಿಯ ಉದ್ದೇಶವಾಗಿದೆ. ತನ್ನ ಭೇಟಿಯು ಪಶ್ಚಿಮ ಏಷ್ಯಾ ಮತ್ತು ಆಫ್ರಿಕಾದಾದ್ಯಂತ ರಾಜಕೀಯ, ಆರ್ಥಿಕ ಮತ್ತು ಜನರ ನಡುವಿನ ಸಂಬಂಧಗಳನ್ನು ಬಲಗೊಳಿಸುವುದರ ಮೇಲೆ ಕೇಂದ್ರೀಕರಿಸಲಿದೆ ಎಂದು ನಿರ್ಗಮನಕ್ಕೆ ಮುನ್ನ ನೀಡಿದ ಹೇಳಿಕೆಯಲ್ಲಿ ಮೋದಿ ತಿಳಿಸಿದರು. ಮೊದಲು ಜೋರ್ಡಾನ್ ಗೆ ಭೇಟಿ ನೀಡಲಿರುವ ಮೋದಿ ಬಳಿಕ ಇಥಿಯೋಪಿಯಾಕ್ಕೆ ತೆರಳಲಿದ್ದಾರೆ. ಇದು ಈ ಆಫ್ರಿಕನ್ ದೇಶಕ್ಕೆ ಮೋದಿಯವರ ಮೊದಲ ಭೇಟಿಯಾಗಲಿದೆ. ಈ ವೇಳೆ ಅವರು ಇಥಿಯೋಪಿಯಾ ಸಂಸತ್ತಿನ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ಪ್ರವಾಸದ ಅಂತಿಮ ಹಂತದಲ್ಲಿ ಮೋದಿ ಒಮಾನ್ ಗೆ ಭೇಟಿ ನೀಡಲಿದ್ದಾರೆ.
ಮೂಡಬಿದಿರೆ | ಡಿ.16ರಂದು ವಿಶೇಷ ಉಪನ್ಯಾಸ
ಮೂಡಬಿದಿರೆ: ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಂಗಳೂರು, ಚಕೋರ ಸಾಹಿತ್ಯ ವಿಚಾರ ವೇದಿಕೆ ದಕ್ಷಿಣ ಕನ್ನಡ ಜಿಲ್ಲೆ, ಮೂಡಬಿದ್ರೆ ಶ್ರೀಮಹಾವೀರ ಪದವಿ ಪೂರ್ವ ಕಾಲೇಜು ಇವುಗಳ ಸಹಯೋಗದೊಂದಿಗೆ ಕುವೆಂಪು ನಾಟಕಗಳ ವಸ್ತು ಮತ್ತು ಆಕೃತಿ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಡಿ.16ರಂದು ಬೆಳಗ್ಗೆ 11:30ಕ್ಕೆ ಕಾಲೇಜು ಸಭಾಂಗಣದಲ್ಲಿ ಆಯೋಜಿಸಲಾಗಿದೆ. ಕಾರ್ಕಳ ಯಕ್ಷರಂಗಾಯಣದ ನಿರ್ದೇಶಕ ಬಿ.ಆರ್.ವೆಂಕಟರಮಣ ಐತಾಳ್ ಉಪನ್ಯಾಸ ನೀಡಲಿದ್ದಾರೆ. ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲೆ ಲೆ.ವಿಜಯಲಕ್ಷ್ಮೀ ವಹಿಸಲಿರುವರು. ಪದವಿ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ.ಚಿನ್ನಸ್ವಾಮಿ ಎನ್. ಉಪಸ್ಥಿತರಿರುವರು. ಅಕಾಡೆಮಿ ಸದಸ್ಯ ಡಾ.ಜಯಪ್ರಕಾಶ್ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಲಿರುವರು ಎಂದು ಪ್ರಕಟಣೆ ತಿಳಿಸಿದೆ.
ಕಲಬುರಗಿ| ಕಸದ ರಾಶಿಗೆ ಬೆಂಕಿ: ತಪ್ಪಿದ ಭಾರೀ ಅನಾಹುತ
ಯಲಬುರ್ಗಾ: ಪಟ್ಟಣದ ಪೋಸ್ಟ್ ಆಫೀಸ್ ಹಿಂಭಾಗದಲ್ಲಿ ಕೆಇಬಿ–ಕೆಪಿಟಿಸಿಎಲ್ 110 ಕೆವಿ ಸ್ಟೇಷನ್ ಎಡಗಡೆ ಕಸದ ರಾಶಿಗೆ ಬೆಂಕಿ ತಗುಲಿ ಭಾರೀ ಅನಾಹುತವೊಂದು ತಪ್ಪಿದೆ. ಕಸದ ರಾಶಿಗೆ ಸಣ್ಣ ಕಿಡಿ ಬಿದ್ದು ಕ್ಷಣಾರ್ಧದಲ್ಲಿ ದೊಡ್ಡ ಪ್ರಮಾಣದ ಬೆಂಕಿ ಆವರಿಸಿಕೊಂಡಿತ್ತು. ಬೆಂಕಿಯ ತೀವ್ರತೆಯಿಂದ ಸುತ್ತಮುತ್ತ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಈ ಬಗ್ಗೆ ಮಾಹಿತಿ ಪಡೆದ ಅಗ್ನಿಶಾಮಕ ಇಲಾಖೆ ಸಿಬ್ಬಂದಿ ತಕ್ಷಣ ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ಯಶಸ್ವಿಯಾಗಿ ನಿಯಂತ್ರಿಸಿದ್ದಾರೆ. ಅವಘಡದ ವೇಳೆ ಕೆಇಬಿ ಸೆಕ್ಷನ್ ಆಫೀಸರ್ ರವಿ, ಲೈನ್ಮನ್ ಶಬ್ಬೀರ್ ಒಂಟಿ ಹಾಗೂ ಹನುಮಂತಪ್ಪ ಸೇರಿದಂತೆ ಸ್ಥಳೀಯರು ಸ್ಥಳದಲ್ಲಿದ್ದರು. ಘಟನೆ ಬಗ್ಗೆ ಸೂಕ್ತ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲು ಅಧಿಕಾರಿಗಳು ಸೂಚನೆ ನೀಡಿದ್ದಾರೆ.
ಸುರತ್ಕಲ್ | ಚೊಕ್ಕಬೆಟ್ಟು ಮಾಹಿತಿ, ನಾಗರಿಕ ಕೇಂದ್ರದ 15ನೇ ವಾರ್ಷಿಕೋತ್ಸವ
ಸುರತ್ಕಲ್: ಚೊಕ್ಕಬೆಟ್ಟು ಮಾಹಿತಿ ಮತ್ತು ನಾಗರಿಕ ಕೇಂದ್ರದ 15ನೇ ವಾರ್ಷಿಕೋತ್ಸವ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮ ರವಿವಾರ ಸಂಜೆ ಕಚೇರಿ ಮುಂಭಾಗದಲ್ಲಿ ಜರುಗಿತು. ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಚೊಕ್ಕಬೆಟ್ಟು ಜುಮಾ ಮಸೀದಿಯ ಖತೀಬ್ ಅಬ್ದುಲ್ ಅಝೀಝ್ ದಾರಿಮಿ ಅವರು ಮಾತನಾಡಿದರು. ಈ ಸಂದರ್ಭದಲ್ಲಿ ಅಕ್ಷರ ಸಂತ ಹರೇಕಳ ಹಾಜಬ್ಬ, ಪಬ್ಲಿಕ್ ಅಡ್ಡೆಸರ್ ಎಂ.ಜಿ.ತಲ್ಲತ್, ವಿಶ್ವಕಪ್ ವಿಜೇತೆ ಕಬಡ್ಡಿ ಕ್ರೀಡಾಪಟು ಧನಲಕ್ಷ್ಮಿ, ಸಿ.ಎ. ಫಾಯಿಝ್, ಬೆನಝೀರ್, ಕುಸ್ತಿ ಕ್ರೀಡಾಪಟು ಫಾಹಿಮ್, ಹಿಷಾಮ್ ಅವರನ್ನು ಸನ್ಮಾನಿಸಿ ಗೌರವಿಲಾಯಿತು. ಮಾಹಿತಿ ಹಾಗೂ ನಾಗರೀಕ ಸೇವಾ ಕೇಂದ್ರದ ಅಧ್ಯಕ್ಷ ನೌಶಾದ್ ಚೊಕ್ಕಬೆಟ್ಟು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಇದೇ ವೇಳೆ ಚೊಕ್ಕಬೆಟ್ಟು ಚರ್ಚ್ ಧರ್ಮಗುರು ಎಸ್.ಪಾಲನ್, ಪಬ್ಲಿಕ್ ಅಡ್ವೈಸರ್ ಎಂ.ಜಿ. ತಲ್ಹತ್, ಎಸ್ಡಿಪಿಐ ರಾಜ್ಯಸಮಿತಿ ಸದಸ್ಯ ಅಥಾವುಲ್ಲಾ ಜೋಕಟ್ಟೆ ಮೊದಲಾದವರು ಮಾತನಾಡಿದರು. ನಿಕಟಪೂರ್ವ ಮನಪಾ ಸದಸ್ಯೆ ಶಂಶಾದ್ ಅಬೂಬಕರ್, ತಣ್ಣೀರುಬಾವಿ ಜುಮಾ ಮಸೀದಿ ಅಧ್ಯಕ್ಷ ಅಬ್ದುಲ್ ಅಝೀಝ್, ಮುಹಮ್ಮದ್ ಅಲಿ ರೂಮಿ, ಮುಸ್ಲಿಂ ಜಮಾಅತ್ ಪಣಂಬೂರು ಇದರ ಅಧ್ಯಕ್ಷ ಎಸ್.ಎ.ರಹ್ಮತುಲ್ಲಾ, ಮುಹಮ್ಮದ್ ಕಾನ, ಜುಮಾ ಮಸೀದಿ ಸುರತ್ಕಲ್ ಇದರ ಅಧ್ಯಕ್ಷ ಎಸ್.ಕೆ. ಮುಸ್ತಫಾ, ಝಾಕಿರ್, ಇಬ್ರಾಹಿಂ, ತೌಸೀಫ್ ಕಕ್ಕಿಂಜೆ, ಜಾಫರ್ ಫೈಝಿ ಮತ್ತಿತರರು ಉಪಸ್ಥಿತರಿದ್ದರು.
ಮೂರು ದಿನಗಳ ಭಾರತ ಪ್ರವಾಸ ಅಂತ್ಯಗೊಳಿಸಿದ ಲಿಯೊನೆಲ್ Messi
ಪ್ರತಿಕೂಲ ಹವಾಮಾನದಿಂದಾಗಿ ತಡವಾಗಿ ದಿಲ್ಲಿ ತಲುಪಿದ ಅರ್ಜೆಂಟೀನದ ಆಟಗಾರ
ಆಫ್ರಿಕನ್ ಯೂತ್ ಚೆಸ್ ಚಾಂಪಿಯನ್ಶಿಪ್ : ಮಂಗಳೂರು ಮೂಲದ ಸನಾ ಕಯ್ಯಾರ್ ಚಾಂಪಿಯನ್
ಮಂಗಳೂರು, ಡಿ.15: ಉಗಾಂಡಾವನ್ನು ಪ್ರತಿನಿಧಿಸುತ್ತಿರುವ ಮಂಗಳೂರು ಮೂಲದ ಯುವ ಚೆಸ್ ಪ್ರತಿಭೆ ಸನಾ ಓಂಪ್ರಕಾಶ್ ಕಯ್ಯಾರ್, ಡಿ. 7 ರಿಂದ 13, 2025 ರವರೆಗೆ ಜಿಂಬಾಬೈಯ ಹರಾರೆಯಲ್ಲಿ ನಡೆದ ಆಫ್ರಿಕನ್ ಯೂತ್ ಚೆಸ್ ಚಾಂಪಿಯನ್ಶಿಫ್ನ ಅಂಡರ್-18 ಬಾಲಕಿಯರ ವಿಭಾಗದಲ್ಲಿ ಚಿನ್ನದ ಪದಕ ಗೆದ್ದು ಇತಿಹಾಸ ನಿರ್ಮಿಸಿದ್ದಾರೆ. ಈ ಸಾಧನೆಯೊಂದಿಗೆ ಸನಾ ಅವರಿಗೆ ಪ್ರತಿಷ್ಠಿತ ವಿಮೆನ್ ಕ್ಯಾಂಡಿಡೇಟ್ ಮಾಸ್ಟರ್’ (ಡಬ್ಲ್ಯುಸಿಎಂ ) ಪದವಿ ಲಭಿಸಿದ್ದು, ಪೂರ್ವ ಆಫ್ರಿಕಾ ಪ್ರದೇಶದಿಂದ ಈ ಪದವಿ ಗಳಿಸಿದ ಮೊದಲ ಮಹಿಳಾ ಆಟಗಾರ್ತಿ ಎಂಬ ಗೌರವಕ್ಕೂ ಪಾತ್ರರಾಗಿದ್ದಾರೆ. ಈ ಮಹತ್ವದ ಸಾಧನೆ ಸನಾ ಅವರ ಈಗಾಗಲೇ ಗಮನಾರ್ಹ ಚೆಸ್ ಪಯಣಕ್ಕೆ ಮತ್ತೊಂದು ಮಹತ್ವದ ಮೈಲಿಗಲ್ಲಾಗಿದೆ. 2022ರಲ್ಲಿ, ಜಾಂಬಿಯಾದಲ್ಲಿ ನಡೆದ ಆಫ್ರಿಕನ್ ಯೂತ್ ಚೆಸ್ ಚಾಂಪಿಯನ್ಶಿಪ್ನಲ್ಲಿ ಅಂಡರ್-14 ಬಾಲಕಿಯರ ವಿಭಾಗದಲ್ಲಿ ಬೆಳ್ಳಿ ಪದಕ ಗಳಿಸಿದ್ದರು. ಆ ಸಾಧನೆಯ ಫಲವಾಗಿ ಅವರಿಗೆ ಡಬ್ಲ್ಯುಸಿಎಂ ಪದವಿ ದೊರಕಿದ್ದು, ರೊಮೇನಿಯಾದಲ್ಲಿ ನಡೆದ ವಿಶ್ವ ಯೂತ್ ಚೆಸ್ ಚಾಂಪಿಯನ್ಶಿಪ್ನಲ್ಲಿ ಉಗಾಂಡಾವನ್ನು ಪ್ರತಿನಿಧಿಸುವ ಅರ್ಹತೆ ಲಭಿಸಿತ್ತು. ಸನಾ ಅವರು ಫೈಡೆ ರೇಟಿಂಗ್ 1,900 ದಾಟಿದ ಪೂರ್ವ ಆಫ್ರಿಕಾದ ಮೊದಲ ಮಹಿಳಾ ಆಟಗಾರ್ತಿ ಎನಿಸಿಕೊಂಡಿದ್ದರು. ಅದೇ ಚಾಂಪಿಯನ್ಶಿಪ್ನಲ್ಲಿ ಸ್ಪರ್ಧಿಸಿದ ಅವರ ಸಹೋದರ ಶೌಭಿತ್ ಓಂಪ್ರಕಾಶ್ ಕಯ್ಯಾರ್ ಅಂಡರ್-16 ಓಪನ್ ವಿಭಾಗದಲ್ಲಿ ಕಂಚಿನ ಪದಕ ಗೆದ್ದು ಶ್ಲಾಘನೀಯ ಪ್ರದರ್ಶನ ನೀಡಿದ್ದರು. ಸನಾ ಮತ್ತು ಶೌಭಿತ್ ಇಬ್ಬರೂ ಅಂತರರಾಷ್ಟ್ರೀಯ ಟೂರ್ನಮೆಂಟ್ ಅನುಭವ ಹಾಗೂ ಸಂರಚಿತ ತರಬೇತಿಯ ಸಂಯೋಜನೆಯ ಮೂಲಕ ತಮ್ಮ ಸಿದ್ಧತೆಯನ್ನು ನಡೆಸಿದ್ದಾರೆ. ಭಾರತಕ್ಕೆ ಭೇಟಿ ನೀಡಿದ ಸಂದರ್ಭಗಳಲ್ಲಿ, ಅವರು ಮಂಗಳೂರಿನ ಡೆರಿಕ್ಸ್ ಚೆಸ್ ಸ್ಕೂಲ್ (ಡಿಸಿಎಸ್)ನಲ್ಲಿ ಡೆರಿಕ್ ಪಿಂಟೊ ಅವರ ಮಾರ್ಗದರ್ಶನದಲ್ಲಿ ತರಬೇತಿ ಪಡೆದಿದ್ದು, ಬಳಿಕ ಆನ್ಲೈನ್ ತರಬೇತಿಯನ್ನೂ ಪಡೆದಿದ್ದಾರೆ. ಈ ಸಹೋದರ-ಸಹೋದರಿಯ ಸಾಧನೆಗಳ ಹಿಂದೆ ಅವರ ಪೋಷಕರಾದ ಓಂಪ್ರಕಾಶ್ ಕಯ್ಯಾರ್ ಮತ್ತು ಸರಿತಾ ಓಂಪ್ರಕಾಶ್ ಕಯ್ಯಾರ್ ಅವರ ನಿರಂತರ ಬೆಂಬಲ, ಪ್ರೋತ್ಸಾಹ ಮತ್ತು ಸಮರ್ಪಣೆ ಪ್ರಮುಖ ಪಾತ್ರ ವಹಿಸಿದೆ ಎಂದು ಡೆರಿಕ್ ಚೆಸ್ ಸ್ಕೂಲ್ನ ಪ್ರಕಟನೆ ತಿಳಿಸಿದೆ.
ಮಂಗಳವಾರ ಐಪಿಎಲ್ ಮಿನಿ ಹರಾಜು: ಗ್ರೀನ್, ವೆಂಕಟೇಶ್ ದುಬಾರಿ ಮೊತ್ತ ಪಡೆಯುವ ನಿರೀಕ್ಷೆ; ಯಾರ ಬಳಿ ಎಷ್ಟಿದೆ ಹಣ?
ಐಪಿಎಲ್ 19ನೇ ಆವೃತ್ತಿಯ ಆಟಗಾರರ ಮಿನಿ ಹರಾಜು ಅಬುಧಾಬಿಯಲ್ಲಿ ನಡೆಯಲಿದೆ. ಕೋಲ್ಕೊತಾ ನೈಟ್ ರೈಡರ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಯಾವ ಆಟಗಾರರ ಮೇಲೆ ಹೆಚ್ಚು ಗಮನ ಹರಿಸಲಿವೆ ಎಂಬುದು ಕುತೂಹಲ ಮೂಡಿಸಿದೆ. ಕ್ಯಾಮೆರಾನ್ ಗ್ರೀನ್, ವೆಂಕಟೇಶ್ ಅಯ್ಯರ್, ಮತ್ತು ಲಿಯಾಮ್ ಲಿವಿಂಗ್ಸ್ಟನ್ ಹೆಚ್ಚಿನ ಮೊತ್ತ ಪಡೆಯುವ ನಿರೀಕ್ಷೆಯಿದೆ. ಹತ್ತು ತಂಡಗಳು 77 ಸ್ಥಾನಗಳನ್ನು ತುಂಬಲು 237.55 ಕೋಟಿ ರೂ. ಖರ್ಚು ಮಾಡಲಿವೆ.
ವಿಟ್ಲ | ಪೊಲೀಸ್ ಇಲಾಖೆ, ʼಡಿ' ಗ್ರೂಪ್ ವತಿಯಿಂದ ಮಾದಕ ವ್ಯಸನ ಸಮಾಜಕ್ಕಾಗಿ ಜನ ಜಾಗೃತಿ ಜಾಥಾ
ವಿಟ್ಲ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಉಪ ವಿಭಾಗ ವಿಟ್ಲ ಪೊಲೀಸ್ ಠಾಣೆ ಹಾಗೂ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ವಿಟ್ಲ ʼಡಿʼ ಗ್ರೂಪ್ ವತಿಯಿಂದ ವಿಟ್ಲದಲ್ಲಿ ಮಾದಕ ವ್ಯಸನ ಮುಕ್ತ ಸಮಾಜಕ್ಕಾಗಿ ಜನ ಜಾಗೃತಿ ಜಾಥಾ ಹಾಗೂ ಸಮಾರಂಭ ನಡೆಯಿತು. ವಿವಿಧ ಸಂಘಟನೆ ಹಾಗೂ ಶಿಕ್ಷಣ ಸಂಸ್ಥೆಗಳ ಸಹಸ್ರಾರು ಮಂದಿ ಕಾಲ್ನಡಿಗೆ ಜಾಥದಲ್ಲಿ ಭಾಗಹಿಸಿದ್ದರು. ವಿಟ್ಲ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಪ್ರಕಾಶ್ ದೇವಾಡಿಗ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಬ್ ಇನ್ಸ್ಪೆಕ್ಟರ್ ರಾಮಕೃಷ್ಣ ಸೈಬರ್ ಅಪರಾಧಗಳ ಬಗ್ಗೆ ಮಾಹಿತಿ ನೀಡಿದರು. ಶೈಖ್ ಮಹಮ್ಮದ್ ಇರ್ಫಾನಿ ಫೈಝಿ ಮಾದಕ ವಸ್ತುಗಳ ದುಷ್ಪರಿಣಾಮಗಳ ಬಗ್ಗೆ ವಿವರಿಸಿದರು. ವಿಟ್ಲ ಸಮುದಾಯ ಆಸ್ಪತ್ರೆಯ ವೈದ್ಯಾಧಿಕಾರಿ ವಿಶ್ವೇಶ್ವರ ಭಟ್, ವಿಠಲ ಪದವಿ ಪೂರ್ವ ಕಾಲೇಜಿನ ಉಪ ಪ್ರಾಂಶುಪಾಲ ಕಿರಣ್ ಬ್ರಹ್ಮಾವರ, ವಿಟ್ಲ ಹೊರೈಝನ್ ಪಬ್ಲಿಕ್ ಸ್ಕೂಲ್ ಅಧ್ಯಕ್ಷ ಅಝೀಝ್ ಸನ, ವಿಟ್ಲ ವರ್ತಕರ ಸಂಘದ ಅಧ್ಯಕ್ಷ ಬಾಬು ಕೆ.ವಿ. ಮುಖ್ಯ ಅತಿಥಿಗಳಾಗಿದ್ದರು. ಡಿ ಗ್ರೂಪ್ ಅಧ್ಯಕ್ಷ ಶಾಕಿರ್ ಅಳಕೆಮಜಲು ಪ್ರಸ್ತಾವಿಕ ಭಾಷಣ ಮಾಡಿ ಸ್ವಾಗತಿಸಿದರು. ಅಬೂಬಕರ್ ಅನಿಲಕಟ್ಟೆ ಕಾರ್ಯಕ್ರಮ ನಿರೂಪಿಸಿದರು.
ಕೊಪ್ಪಳ| ಹಸುವಿನ ಕಾಲು ಕತ್ತರಿಸಿದ ಆರೋಪಿ ವಿರುದ್ಧ ಪ್ರಕರಣ ದಾಖಲು
ಕೊಪ್ಪಳ: ಹೊಲಕ್ಕೆ ಮೇಯಲು ಬಂದ ಹಸುವಿನ ಕಾಲು ಕತ್ತರಿಸಿದ ಆರೋಪಿ ವಿರುದ್ಧ ಕೊಪ್ಪಳ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ನಿಂಗಲಬಂಡಿ ಗ್ರಾಮದ ರಮೇಶಪ್ಪ ಹಡಪದ ವಿರುದ್ಧ ಪ್ರಕರಣ ದಾಖಲಾಗಿದೆ. ಮಾಟರಂಗಿ ಗ್ರಾಮದಲ್ಲಿ ಶ್ರೀ ಮಾರುತೇಶ್ವರ ದೇವಸ್ಥಾನಕ್ಕೆ ಸೇರಿದ ಹಸು ತನ್ನ ಹೊಲದಲ್ಲಿ ಬಂದು ಬೆಳೆ ತಿಂದು ಹಾಳು ಮಾಡುತ್ತಿದೆ ಎಂದು ಕೋಪಗೊಂಡು ರಮೇಶಪ್ಪ ಕೊಡಲಿಯಿಂದ ಹಸುವಿನ ಬಲಗಾಲನ್ನು ಕತ್ತರಿಸಿದ್ದಾನೆ. ಗಂಭೀರ ಸ್ಥಿತಿಯಲ್ಲಿದ್ದ ಹಸುವಿಗೆ ಹಿರೇಹರಳ್ಳಿ ಗ್ರಾಮದ ಪಶು ಆಸ್ಪತ್ರೆಯ ವೈದ್ಯರು ಚಿಕಿತ್ಸೆ ನೀಡಿದ್ದರು. ಆದರೆ ಕೆಲ ದಿನಗಳ ನಂತರ ಹಸು ಮೃತಪಟ್ಟಿದೆ. ಈ ಕುರಿತು ಶರಣಪ್ಪ ಮ್ಯಾಗೇರಿ ಎಂಬವರು ದೂರು ನೀಡಿದ್ದರು. ಈ ಕುರಿತು ಯಲಬುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆಕಳು ಮೃತಪಟ್ಟ ಕಾರಣ ಕೊಪ್ಪಳ ಪಶುಪಾಲನಾ ಮತ್ತು ಪಶು ವೈದ್ಯಸೇವಾ ಇಲಾಖೆಯ ಉಪನಿರ್ದೇಶಕರು ಕೊಪ್ಪಳ ಎಸ್ಪಿ ಅವರಿಗೆ ಪತ್ರ ಬರೆದು ಆರೋಪಿಯ ಮೇಲೆ ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಅಧಿನಿಯಮ 2020ರ ಅಡಿಯಲ್ಲಿ ಕ್ರಮ ಜರುಗಿಸುವಂತೆ ಆಗ್ರಹಿಸಿದ್ದಾರೆ.
ಉಡುಪಿ | ಡಿ.17ರಂದು ವಿಶೇಷ ಉಪನ್ಯಾಸ
ಉಡುಪಿ, ಡಿ.15: ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಂಗಳೂರು, ಚಕೋರ ಸಾಹಿತ್ಯ ವಿಚಾರ ವೇದಿಕೆ ಉಡುಪಿ ಜಿಲ್ಲೆ, ಉಡುಪಿ ಕ್ರಿಶ್ಚಿಯನ್ ಪದವಿ ಪೂರ್ವ ಕಾಲೇಜು ಇವುಗಳ ಸಹಯೋಗದೊಂದಿಗೆ ಕುವೆಂಪು ಅವರ ವಿಚಾರ ಸಾಹಿತ್ಯ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಡಿ.17ರಂದು ಅಪರಾಹ್ನ 1.30ಕ್ಕೆ ಕಾಲೇಜು ಸಭಾಂಗಣದಲ್ಲಿ ಆಯೋಜಿಸಲಾಗಿದೆ. ಉಡುಪಿ ಸರಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಡಾ.ಅನಂತ ರಾಮ ನಾಯಕ್ ಉಪನ್ಯಾಸ ನೀಡಲಿದ್ದಾರೆ. ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲೆ ಶ್ವೇತಾ ಶ್ರೀನಿವಾಸ್ ವಹಿಸಲಿರುವರು. ಅಕಾಡೆಮಿ ಸದಸ್ಯ ಡಾ.ಜಯಪ್ರಕಾಶ್ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಲಿರುವರು ಎಂದು ಪ್ರಕಟಣೆ ತಿಳಿಸಿದೆ.
ಉಡುಪಿ, ಡಿ.15: ಉಡುಪಿ ತಾಲೂಕು ಮೂಡನಿಡಂಬೂರು ಗ್ರಾಮದ ಅಂಬಲಪಾಡಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಗಿಡ-ಗಂಟಿಗಳು ಬೆಳೆದಿರುವ ಖಾಲಿ ಜಾಗದಲ್ಲಿ ಡಿ.12ರಂದು ಅಂದಾಜು 40-50 ವರ್ಷ ಪ್ರಾಯದ ಅಪರಿಚಿತ ಗಂಡಸಿನ ಮೃತದೇಹವು ಕೊಳೆತು ಅಸ್ಥಿ ಪಂಜರದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮೃತದೇಹವನ್ನು ಅಜ್ಜರಕಾಡು ಸರ್ಕಾರಿ ಜಿಲ್ಲಾ ಆಸ್ಪತ್ರೆಯ ಶವಾಗಾರದಲ್ಲಿ ಸಂರಕ್ಷಿಸಿ ಇಡಲಾಗಿದ್ದು, ಅಪರಿಚಿತ ಮೃತ ವ್ಯಕ್ತಿಯ ವಾರಸುದಾರರು /ಸಂಬಂಧಿಕರು ಯಾರಾದರೂ ಇದ್ದಲ್ಲಿ ಉಡುಪಿ ನಗರ ಪೊಲೀಸ್ ಠಾಣೆಯ ಪಿಎಸ್ಐ ಮೊ.ನಂ: 9480805445, ಪಿಐ ಮೊ.ನಂ: 9480805408, ಜಿಲ್ಲಾ ನಿಸ್ತಂತು ಕಚೇರಿ ದೂ.ಸಂಖ್ಯೆ: 0820-2526444 ಹಾಗೂ ಉಡುಪಿ ನಗರ ಪೊಲೀಸ್ ಠಾಣೆ ದೂ.ಸಂಖ್ಯೆ: 0820-2520444ನ್ನು ಸಂಪರ್ಕಿಸಬಹುದು ಎಂದು ಉಡುಪಿ ನಗರ ಪೊಲೀಸ್ ಠಾಣಾಧಿಕಾರಿಗಳ ಪ್ರಕಟಣೆ ತಿಳಿಸಿದೆ.
ಬ್ರಹ್ಮಾವರ | ರಿಕ್ಷಾ ಢಿಕ್ಕಿ: ಸ್ಕೂಟರ್ ಸವಾರ ಮೃತ್ಯು
ಬ್ರಹ್ಮಾವರ, ಡಿ.15: ರಿಕ್ಷಾವೊಂದು ಸ್ಕೂಟರಿಗೆ ಢಿಕ್ಕಿ ಹೊಡೆದ ಪರಿಣಾಮ ಸವಾರರೊಬ್ಬರು ಮೃತಪಟ್ಟ ಘಟನೆ ಹಾವಂಜೆ ಗ್ರಾಮದ ಮುಗ್ಗೇರಿ ಮಠ ಕ್ರಾಸ್ ಹತ್ತಿರ ಸೋಮವಾರ ಬೆಳಗ್ಗೆ ನಡೆದಿದೆ. ಮೃತರನ್ನು ಹಾವಂಜೆ ಗ್ರಾಮದ ಚಾರ್ಲಿ ಮಸ್ಕರೇನಸ್(63) ಎಂದು ಗುರುತಿಸಲಾಗಿದೆ. ಕೊಳಲಗಿರಿ ಕಡೆಯಿಂದ ಬರುತ್ತಿದ್ದ ರಿಕ್ಷಾ, ಎದುರಿನಿಂದ ಬರುತ್ತಿದ್ದ ಸ್ಕೂಟರ್ ಗೆ ಢಿಕ್ಕಿ ಹೊಡೆಯಿತ್ತೆನ್ನಲಾಗಿದೆ. ಇದರಿಂದ ಚಾರ್ಲಿ ರಸ್ತೆಗೆ ಬಿದ್ದರೆನ್ನ ಲಾಗಿದೆ. ಅಪಘಾತದಿಂದ ಎರಡೂ ವಾಹನಗಳು ಜಖಂಗೊಂಡಿವೆ. ಗಂಭೀರ ಸ್ಥಿತಿಯಲ್ಲಿದ್ದ ಚಾರ್ಲಿ ಅವರನ್ನು ಮಣಿಪಾಲ ಆಸ್ಪತ್ರೆಗೆ ಕರೆದುಕೊಂಡು ಹೋಗುವ ದಾರಿ ಮಧ್ಯೆ ಮೃತಪಟ್ಟರು ಎಂದು ತಿಳಿದುಬಂದಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಂಗಳೂರು ವಿ.ವಿ. ಸರಣಿ ಉಪನ್ಯಾಸ ಮಾಲಿಕೆ
ಮಂಗಳೂರು,ಡಿ.15: ಮಂಗಳೂರು ವಿಶ್ವವಿದ್ಯಾನಿಲಯ, ಎಸ್ವಿಪಿ. ಕನ್ನಡ ಅಧ್ಯಯನ ಸಂಸ್ಥೆಯ ವತಿಯಿಂದ ಪಂಪ ಪ್ರಶಸ್ತಿ ಪುರಸ್ಕೃತ ಪ್ರೊ. ಬಿ.ಎ. ವಿವೇಕ ರೈಅವರಿಂದ ಪಂಪನ ಆದಿಪುರಾಣ ಕಾವ್ಯದ ಬಗ್ಗೆ ಉಪನ್ಯಾಸ ಕಾರ್ಯಕ್ರಮ ಡಿಸೆಂಬರ್ 22, 23 ಮತ್ತು 24 ರಂದು ಸಂಜೆ 5:30 ರಿಂದ 6:30 ರವರೆಗೆ ನಗರದ ಹಂಪನಕಟ್ಟೆ ವಿಶ್ವವಿದ್ಯಾನಿಲಯ ಕಾಲೇಜಿನ ರವೀಂದ್ರ ಕಲಾಭವನದಲ್ಲಿ ಏರ್ಪಡಿಸಲಾಗಿದೆ. ಕಾರ್ಯಕ್ರಮವನ್ನು ಡಿಸೆಂಬರ್ 22 ರಂದು ಸಂಜೆ 5 ಗಂಟೆಗೆ ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಪಿ.ಎಲ್. ಧರ್ಮ ಉದ್ಘಾಟಿಸಲಿದ್ದಾರೆ. ವಿಶ್ವವಿದ್ಯಾನಿಲಯ ಕುಲಸಚಿವ (ಪ್ರಭಾರ) ಪ್ರೊ. ಗಣೇಶ್ ಸಂಜೀವ್ ಹಾಗೂ ಪ್ರಾಂಶುಪಾಲ ಪ್ರೊ. ಗಣಪತಿ ಗೌಡ ಭಾಗವಹಿಸಲಿರುವರು ಪ್ರಕಟನೆ ತಿಳಿಸಿದೆ.
ಮಂಗಳೂರು | ದಸಂಸದಿಂದ ಡಾ. ಅಂಬೇಡ್ಕರ್ ಪರಿನಿಬ್ಬಾಣ ದಿನಾಚರಣೆ
ಮಂಗಳೂರು, ಡಿ.15: ಕರ್ನಾಟಕ ದಲಿತ ಸಂಘರ್ಷ ಸಮಿತಿ (ರಿ) ಸ್ವಾಭಿಮಾನಿ ಪ್ರೊ.ಬಿ. ಕೃಷ್ಣಪ್ಪ ಬಣ ಮಂಗಳೂರು ತಾಲೂಕು ಶಾಖೆ ವತಿಯಿಂದ ಸಂವಿಧಾನ ಶಿಲ್ಪಿಭಾರತ ರತ್ನ, ಬಾಬಾ ಸಾಹೇಬ್ ಅಂಬೇಡ್ಕರ್ ಅವರ 69ನೇಯ ಪರಿನಿಬ್ಬಾಣ ದಿನವನ್ನು ರವಿವಾರ ಆಚರಿಸಲಾಯಿತು. ತಾಲೂಕು ಸಂಚಾಲಕರಾದ ರಾಘವೇಂದ್ರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾ ಸಮಿತಿಯ ಸಂಘಟನಾ ಸಂಚಾಲಕರಾದಂತ ದಲಿತ ನೌಕರರ ಒಕ್ಕೂಟದ ಉಸ್ತುವಾರಿ ಎಚ್.ಡಿ. ಲೋಹಿತ್ ಕಾರ್ಯಕ್ರಮ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಸಮಿತಿ ಮಹಿಳಾ ಸಂಚಾಲಕಿ ಸರೋಜಿನಿ ಬಂಟ್ವಾಳ, ಜಿಲ್ಲಾ ಸಂಘಟನಾ ಸಂಚಾಲಕರಾದ ರಘು ಕೆ. ಎಕ್ಕಾರು, ಮಂಗಳೂರು ವಿಮಾನ ನಿಲ್ದಾಣ ಪುನರ್ ನಿರ್ವಾಸಿತ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಸಂಕಪ್ಪ ಕಾಂಚನ್, ದಲಿತ ಕಲಾಮಂಡಳಿ ಜಿಲ್ಲಾ ಸಂಚಾಲಕ ಕಮಲಾಕ್ಷ ಬಜಲ್, ಸಿದ್ದಾರ್ಥ ನಗರ ಗ್ರಾಮ ಸಂಘಟನಾ ಸಂಚಾಲಕರಾದ ರವೀಂದ್ರ ಕೋಟ್ಯಾನ್, ಪೂರ್ಣಿಮಾ ಮುಳ್ಳೊಟ್ಟು, ರಾಧಾ ಪೇಜಾವರ, ಹಾಗೂ ವಿವಿಧ ಗ್ರಾಮ ಶಾಖೆಗಳ ಸಂಚಾಲಕರು, ಪದಾಧಿಕಾರಿಗಳು ಕಾರ್ಯಕರ್ತರು ಉಪಸ್ಥಿತರಿದ್ದರು. ತಾಲೂಕು ಕಲಾ ಮಂಡಳಿ ಸಂಚಾಲಕರಾದ ಗಂಗಾಧರ ಕೋಟ್ಯಾನ್, ತಾಲೂಕು ಸಮಿತಿ ಖಜಾಂಚಿ ರುಕ್ಕಯ ಅಮೀನ್ ಸ್ವಾಗತಿಸಿ, ಕೃಷ್ಣ ಕೆ ಎಕ್ಕಾರು, ತಾರಾಕ್ಷಿ ಎಂ.ಬಿ. ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ಯೆಯ್ಯಾಡಿ | ಕಾರು ಢಿಕ್ಕಿ : ವ್ಯಕ್ತಿ ಮೃತ್ಯು
ಮಂಗಳೂರು, ಡಿ.15: ನಗರದ ಯೆಯ್ಯಾಡಿ ಎಂಬಲ್ಲಿ ರಸ್ತೆ ದಾಟುತ್ತಿದ್ದ ವೇಳೆ ಕಾರು ಢಿಕ್ಕಿ ಹೊಡೆದ ಪರಿಣಾಮ ರಸ್ತೆ ದಾಟುತ್ತಿದ್ದ ವ್ಯಕ್ತಿಯೋರ್ವರು ಮೃತಪಟ್ಟ ಘಟನೆ ನಡೆದಿದೆ. ಯೆಯ್ಯಾಡಿಯ ನಿವಾಸಿ ಫೆಡ್ರಿಕ್ ಅಲ್ವಿನ್ ಫೆರ್ನಾಂಡಿಸ್ ಮೃತಪಟ್ಟ ವ್ಯಕ್ತಿ. ಇವರು ಶನಿವಾರ ಸಂಜೆ 6:30ಕ್ಕೆ ಯೆಯ್ಯಾಡಿಯ ತನ್ನ ಫ್ಲ್ಯಾಟ್ನಿಂದ ಮುಂಭಾಗದಲ್ಲಿರುವ ಅಂಗಡಿಗೆ ಹಾಲು ತರಲೆಂದು ರಸ್ತೆ ದಾಟಿ ಹೋಗುತ್ತಿದ್ದಾಗ ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಲಿಸಿಕೊಂಡು ಬಂದ ಕಾರು ಢಿಕ್ಕಿ ಹೊಡೆಯಿತು ಎನ್ನಲಾಗಿದೆ. ಗಂಭೀರವಾಗಿ ಗಾಯಗೊಂಡ ಫೆಡ್ರಿಕ್ ರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವುದಾಗಿ ಪ್ರಕರಣ ದಾಖಲಿಸಿರುವ ಸಂಚಾರ ಠಾಣೆಯ ಪೊಲೀಸರು ತಿಳಿಸಿದ್ದಾರೆ.
ಮಂಜೊಟ್ಟಿ : ಹೆಲ್ಪಿಂಗ್ ಹ್ಯಾಂಡ್ಸ್ ನಿಂದ ರಕ್ತದಾನ ಶಿಬಿರ
ಅಡ್ಡೂರು, ಡಿ.15: ಹೆಲ್ಪಿಂಗ್ ಹ್ಯಾಂಡ್ಸ್ ಮಂಜೊಟ್ಟಿ ಹಾಗೂ ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ ಇದರ ಜಂಟಿ ಆಶ್ರಯದಲ್ಲಿ ಅತ್ತಾವರ ಕೆಎಂಸಿ ಆಸ್ಪತ್ರೆಯ ರಕ್ತನಿಧಿಯ ಸಹಭಾಗಿತ್ವದಲ್ಲಿ ರಕ್ತದಾನ ಶಿಬಿರವು ರವಿವಾರ ಅಡ್ಡೂರು ಬದ್ರಿಯಾ ಮದ್ರಸ ಸಭಾಂಗಣದಲ್ಲಿ ನಡೆಯಿತು. ಹೆಲ್ಪಿಂಗ್ ಹ್ಯಾಂಡ್ಸ್ ನ ಅಧ್ಯಕ್ಷ ಮನ್ಸೂರು ಮಣ್ಣಗುಡ್ಡೆ ಅಧ್ಯಕ್ಷತೆ ವಹಿಸಿದ್ದರು. ಸ್ವದಖತುಲ್ಲಾ ಫೈಝಿ ದುಆಗೈದರು. ಅಡ್ಡೂರು ಬದ್ರಿಯಾ ಜುಮಾ ಮಸೀದಿಯ ಅಧ್ಯಕ್ಷ ಅಹ್ಮದ್ ಬಾವ ಅಂಗಡಿಮನೆ, ಹೆಲ್ಪಿಂಗ್ ಹ್ಯಾಂಡ್ಸ್ ನ ಸದಸ್ಯ ರಝಾಕ್ ಮಂಜೊಟ್ಟಿ, ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ ಸಂಸ್ಥೆಯ ಸಲಹೆಗಾರ ಮುಸ್ತಫಾ ದೆಮ್ಮಲೆ ಮತ್ತಿತರರು ಉಪಸ್ಥಿತರಿದ್ದರು. ಎಸ್.ಬಿ. ಮುಸ್ತಫಾ ಕಾರ್ಯಕ್ರಮ ನಿರೂಪಿಸಿದರು. ಶಾಹಿಕ್ ಪಾಂಡೆಲ್ ವಂದಿಸಿದರು.
ಮಂಗಳೂರು | ಎನ್ಐಟಿಕೆಯ ಅದ್ಯಾ ಅವರ ಸ್ಮಾರ್ಟ್ ಎಕ್ಸ್ ಪ್ರಾಜೆಕ್ಟ್ ಗೆ 1.19 ಕೋಟಿ ರೂ. ಅನುದಾನ
ಆಸ್ಟ್ರೇಲಿಯಾ-ಭಾರತ ಶಿಕ್ಷಣ, ಕೌಶಲ್ಯ ಮಂಡಳಿಯ 3ನೇ ಸಭೆ
ಸುವರ್ಣ ಆರೋಗ್ಯ ಟ್ರಸ್ಟ್ ಅಡಿ ನವೀಕರಿಸಲು ಕೆಪಿಎಂಇ ಮಾನ್ಯತೆ ಕಡ್ಡಾಯ
ಬೆಂಗಳೂರು : ಸುವರ್ಣ ಆರೋಗ್ಯ ಟ್ರಸ್ಟ್ ಅಡಿಯಲ್ಲಿ ಹೊಸ ಆಸ್ಪತ್ರೆಗಳನ್ನು ಎಂಪಾನೆಲ್ ಮಾಡುವಾಗ ಅಥವಾ ನವೀಕರಿಸುವಾಗ ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಯಿಂದ(ಕೆಪಿಎಂಇ) ಮಾನ್ಯತೆ ಹೊಂದಿರುವ ಪ್ರಮಾಣಪತ್ರ ಪರಿಗಣಿಸುವುದು ಕಡ್ಡಾಯವಾಗಿದೆ ಎಂದು ಸರಕಾರ ತಿಳಿಸಿದೆ. ಈ ಸಂಬಂಧ ರಾಜ್ಯ ಸರಕಾರವು ಆದೇಶ ಹೊರಡಿಸಿದ್ದು, ಈ ಮೂಲಕ ಕಾನೂನುಬದ್ಧವಾಗಿ ನಡೆಯುತ್ತಿರುವ ಆಸ್ಪತ್ರೆಗಳನ್ನು ಮಾತ್ರ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ನೆಟ್ವರ್ಕ್ ಆಸ್ಪತ್ರೆಗೆ ಸೇರಿಸಲು ಸಹಕಾರಿಯಾಗುತ್ತದೆ. ಈ ಪ್ರಕ್ರಿಯೆ ಆಡಳಿತಾತ್ಮಕ ದಕ್ಷತೆ ಹೆಚ್ಚಿಸುವುದಲ್ಲದೆ, ನಾಗರಿಕರಿಗೆ ಗುಣಮಟ್ಟದ ಆರೋಗ್ಯ ಸೇವೆಯನ್ನು ಒದಗಿಸುವ ಸಹಕಾರಿಯಾಗುತ್ತದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ನಾಲ್ಕು ಈಶಾನ್ಯ ರಾಜ್ಯಗಳಿಂದ ಬಿಜೆಪಿಗೆ ಅರ್ಧಕ್ಕೂ ಹೆಚ್ಚು ಹಣ ಸರಕಾರಿ ಗುತ್ತಿಗೆದಾರರಿಂದ ಬಂದಿತ್ತು!
reporters-collective.in ವರದಿ
ಕೇಂದ್ರ ಸರ್ಕಾರಿ ನೌಕರರಿಗೆ ಮಹತ್ವದ ಸುದ್ದಿ! ಗಡುವು ವಿಸ್ತರಣೆ ಸಾಧ್ಯತೆ?
ಕೇಂದ್ರ ಸರ್ಕಾರದ ನೌಕರರಿಗೆ (Central Government Employees) ಮತ್ತು ಪಿಂಚಣಿದಾರರಿಗೆ ಇದು ಬಹಳ ಮುಖ್ಯವಾದ ಮಾಹಿತಿ. ಏಪ್ರಿಲ್ 1, 2025 ರಿಂದ ಜಾರಿಗೆ ಬಂದಿರುವ ‘ಏಕೀಕೃತ ಪಿಂಚಣಿ ಯೋಜನೆ’ (Unified Pension Scheme – UPS) ಗೆ ಸೇರ್ಪಡೆಗೊಳ್ಳಲು ನೀಡಲಾಗಿದ್ದ ಗಡುವು ಮುಗಿದಿದೆ. ಆದರೆ, ನೌಕರರ ನಿರಾಸಕ್ತಿಯಿಂದಾಗಿ ಸರ್ಕಾರವು ಮತ್ತೊಮ್ಮೆ ದಿನಾಂಕವನ್ನು ವಿಸ್ತರಣೆ ಮಾಡುವ ಸಾಧ್ಯತೆಯಿದೆ ಎಂದು ವರದಿಗಳು ಹೇಳುತ್ತಿವೆ. ಏನಿದು ಯೋಜನೆ? ಪ್ರಸ್ತುತ ಸ್ಥಿತಿಗತಿ ಏನು? ಮತ್ತು ಇದರಿಂದ ನೌಕರರಿಗೆ ಆಗುವ ಲಾಭವೇನು? ಇಲ್ಲಿದೆ ಸಂಪೂರ್ಣ ... Read more The post ಕೇಂದ್ರ ಸರ್ಕಾರಿ ನೌಕರರಿಗೆ ಮಹತ್ವದ ಸುದ್ದಿ! ಗಡುವು ವಿಸ್ತರಣೆ ಸಾಧ್ಯತೆ? appeared first on Karnataka Times .
Bihar | ಮೂವರು ಪುತ್ರಿಯರಿಗೆ ನೇಣು ಬಿಗಿದು ತಾನೂ ಆತ್ಮಹತ್ಯೆ ಮಾಡಿಕೊಂಡ ತಂದೆ
ಮುಝಫ್ಫರ್ಪುರ,ಡಿ.16: ವ್ಯಕ್ತಿಯೋರ್ವ ತನ್ನ ಮೂವರು ಪುತ್ರಿಯರನ್ನು ನೇಣು ಬಿಗಿದು ಕೊಂದ ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮುಝಫ್ಫರ್ಪುರ ಜಿಲ್ಲೆಯ ಮಿಸ್ರೌಲಿಯಾ ಗ್ರಾಮದಲ್ಲಿ ನಡೆದಿದೆ. ಅಮರನಾಥ್ ರಾಮ್ ತನ್ನ ಎಲ್ಲ ಐವರು ಮಕ್ಕಳಿಗೆ ನೇಣು ಹಾಕಲು ಯತ್ನಿಸಿದ್ದನಾದರೂ ಇಬ್ಬರು ಪುತ್ರರು ಸಾವಿನ ಕುಣಿಕೆಯಿಂದ ಪಾರಾಗಿದ್ದಾರೆ ಎಂದು ಪೋಲಿಸರು ತಿಳಿಸಿದರು. ಅಮರನಾಥ್ ನ ಪತ್ನಿ ವರ್ಷದ ಹಿಂದೆ ಮೃತಪಟ್ಟಿದ್ದು,ಆತ ಪುತ್ರಿಯರಾದ ಅನುರಾಧಾ(12),ಶಿವಾನಿ(7) ಮತ್ತು ರಾಧಿಕಾ(6) ಹಾಗೂ ಪುತ್ರರಾದ ಶಿವಂ(6) ಮತ್ತು ಚಂದನ್ (5) ಅವರೊಂದಿಗೆ ವಾಸವಿದ್ದ. ಈ ದುರಂತ ಘಟನೆಗೆ ಹಲವಾರು ಕಾರಣಗಳು ಕೇಳಿ ಬರುತ್ತಿವೆ. ಆದರೆ ಪೋಲಿಸರು ಯಾವುದನ್ನೂ ದೃಢಪಡಿಸಿಲ್ಲ. ಪತ್ನಿಯ ನಿಧನದ ಬಳಿಕ ಐವರು ಮಕ್ಕಳನ್ನು ನೋಡಿಕೊಳ್ಳುವುದು ಅಮರನಾಥಗೆ ಕಷ್ಟವಾಗಿತ್ತು ಎಂದು ಕೆಲವು ಸ್ಥಳೀಯರು ಹೇಳಿದರೆ, ಆತ ಖಾಸಗಿ ಹಣಕಾಸು ಸಂಸ್ಥೆಯಿಂದ ಸಾಲವನ್ನು ಪಡೆದಿದ್ದ ಮತ್ತು ಅದನ್ನು ಮರುಪಾವತಿಸುವ ಒತ್ತಡದಲ್ಲಿದ್ದ ಎಂದು ಇತರರು ತಿಳಿಸಿದರು. ಅಡಿಗೆ ಮನೆಯಲ್ಲಿ ಮೊಟ್ಟೆಯ ಸಿಪ್ಪೆಗಳು ಬಿದ್ದುಕೊಂಡಿದ್ದು, ದುರಂತ ಅಂತ್ಯಕ್ಕೆ ಮುನ್ನ ಅಮರನಾಥ್ ಮೊಟ್ಟೆಗಳನ್ನು ಬೇಯಿಸಿ ಮಕ್ಕಳಿಗೆ ತಿನ್ನಿಸಿದ್ದ ಎನ್ನುವುದನ್ನು ಇದು ಸೂಚಿಸಿದೆ. ಅಮರನಾಥ್ ತನ್ನ ಮಕ್ಕಳನ್ನು ಟ್ರಂಕ್ ವೊಂದರ ಮೇಲೆ ನಿಲ್ಲಿಸಿದ್ದ ಮತ್ತು ಸೀರೆಗಳಿಂದ ಮಾಡಿಕೊಂಡಿದ್ದ ಕುಣಿಕೆಗಳನ್ನು ಕುತ್ತಿಗೆ ಸುತ್ತ ಹಾಕಿಕೊಳ್ಳುವಂತೆ ಸೂಚಿಸಿದ್ದ. ಈ ಸೀರೆಗಳು ಮಕ್ಕಳ ಮೃತ ತಾಯಿಯದ್ದಾಗಿದ್ದವು. ತಾನೂ ಕುತ್ತಿಗೆಗೆ ಕುಣಿಕೆಯನ್ನು ಬಿಗಿದುಕೊಂಡಿದ್ದ ಆತ ಬಳಿಕ ಮಕ್ಕಳಿಗೆ ಟ್ರಂಕ್ ನಿಂದ ಕೆಳಕ್ಕೆ ಜಿಗಿಯುವಂತೆ ಸೂಚಿಸಿದ್ದ ಮತ್ತು ತಾನೂ ಅದನ್ನೇ ಮಾಡಿದ್ದ. ಆದರೆ ಇಬ್ಬರು ಪುತ್ರರು ಮಾತ್ರ ಸಾವಿನ ಕುಣಿಕೆಯಿಂದ ಪಾರಾಗಿ ಬದುಕುಳಿದಿದ್ದಾರೆ ಎಂದು ಪೋಲಿಸರು ತಿಳಿಸಿದರು.
ಕುಂದಾಪುರ | ಕೊಂಕಣಿ ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ ನಾರಾಯಣ ಖಾರ್ವಿ ನಿಧನ
ಕುಂದಾಪುರ, ಡಿ.15: ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷ (2008-11), ಸಿಂಡಿಕೇಟ್ ಬ್ಯಾಂಕ್ನ ನಿವೃತ್ತ ಉದ್ಯೋಗಿ ಕೆ.ನಾರಾಯಣ ಖಾರ್ವಿ (79) ಅವರು ರವಿವಾರ ಮಣೂರಿನ ತಮ್ಮ ಸ್ವಗೃಹದಲ್ಲಿ ನಿಧನರಾಗಿದ್ದಾರೆ. ಅವರು ಪತ್ನಿ, ಇಬ್ಬರು ಪುತ್ರರು, ಓರ್ವ ಪುತ್ರಿಯನ್ನು ಅಗಲಿದ್ದಾರೆ. ಕೊಂಕಣಿ ಮಾತನಾಡುವ ಜಿಎಸ್ಬಿ ಅಥವಾ ಕ್ರಿಶ್ಚಿಯನ್ ಸಮುದಾಯಕ್ಕೆ ಹೊರತಾದ ಹಿಂದುಳಿದ ಖಾರ್ವಿ ಸಮುದಾಯದಿಂದ ಕೊಂಕಣಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿ ಆಯ್ಕೆಯಾದ ಮೊದಲಿಗರು ನಾರಾಯಣ ಖಾರ್ವಿ. ಇವರು ಕುಂದಾಪುರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದರು. ಕೊಂಕಣಿ ಜನಪದ ಹಾಗೂ ಸಂಸ್ಕೃತಿಗಾಗಿ ವಿಶೇಷವಾಗಿ ಮುತುವರ್ಜಿಯಿಂದ ದುಡಿದಿದ್ದ ಅವರು ಮಾಂಡ್ ಸೋಭಾಣ್ನ ಪ್ರಮುಖ ಆಧಾರ ಸ್ತಂಭವಾಗಿದ್ದರು. 2005ರಲ್ಲಿ ಇವರಿಗೆ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿಯು ದೊರಕಿತ್ತು. ಕೊಂಕಣಿ ಖಾರ್ವಿ ಕಲಾ ಗುಂಪಿನ ಮುಖ್ಯಸ್ಥರು ಇವರಾಗಿದ್ದರು. ಕಾರ್ಮಿಕ ನಾಯಕನಾಗಿ ಭಾರತೀಯ ಮಜ್ದೂರ್ ಸಂಘದಲ್ಲಿ ಸಕ್ರಿಯವಾಗಿ ದುಡಿದ ಇವರು ಸಾಹಿತ್ಯ, ಧಾರ್ಮಿಕ, ಸಾಂಸ್ಕೃತಿಕ ಹಾಗೂ ಸಂಘಟನೆಯ ಕ್ಷೇತ್ರದಲ್ಲೂ ತಮ್ಮನ್ನು ಗುರುತಿಸಿಕೊಂಡಿದ್ದರು. ಕುಂದಾಪುರ ಖಾರ್ವಿಕೇರಿ ಶ್ರೀ ಮಹಾಕಾಳಿ ದೇವಸ್ಥಾನದ ಅಧ್ಯಕ್ಷರಾಗಿ, ವಿದ್ಯಾರಂಗ ಮಿತ್ರ ಮಂಡಳಿಯ ಅಧ್ಯಕ್ಷರಾಗಿಯೂ ಕರ್ತವ್ಯ ನಿರ್ವಹಿಸಿದ್ದು, ಕಾರ್ಮಿಕರ ಸಮಸ್ಯೆಗೆ ಸಂಬಂಧಪಟ್ಟಂತೆ ಹಲವಾರು ಹೋರಾಟದ ಮೂಂಚೂಣಿಯಲ್ಲಿದ್ದರು. ಚಿಪ್ಪು ಕಾರ್ಮಿಕರ ಪರ ಹೋರಾಟದಲ್ಲೂ ಇವರು ಮುಂಚೂಣಿಯಲ್ಲಿದ್ದು, ಸಂಘಟನೆಗೆ ಒತ್ತು ನೀಡಿದ್ದರು. ನಾರಾಯಣ ಖಾರ್ವಿಯವರ ನಿಧನಕ್ಕೆ ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ತೀವ್ರ ಸಂತಾಪ ವ್ಯಕ್ತಪಡಿಸಿದೆ.
Pune | ಸಹಪಾಠಿಯಿಂದ ವಿದ್ಯಾರ್ಥಿಯ ಹತ್ಯೆ
ಪುಣೆ,ಡಿ.15: ಖಾಸಗಿ ಕೋಚಿಂಗ್ ಸೆಂಟರ್ ನ ತರಗತಿ ಕೋಣೆಯಲ್ಲಿ 16ರ ಹರೆಯದ ಬಾಲಕನನ್ನು ಆತನ ಸಹಪಾಠಿಯೇ ಚೂರಿಯಿಂದ ಇರಿದು ಹತ್ಯೆಗೈದಿರುವ ಘಟನೆ ಸೋಮವಾರ ಬೆಳಿಗ್ಗೆ ಪುಣೆ ಜಿಲ್ಲೆಯ ರಾಜಗುರುನಗರದಲ್ಲಿ ನಡೆದಿದೆ. ಇಬ್ಬರೂ 10ನೇ ತರಗತಿಯಲ್ಲಿ ಓದುತ್ತಿದ್ದು ಅವರ ನಡುವಿನ ಹಿಂದಿನ ವಿವಾದ ಕೊಲೆಗೆ ಕಾರಣವಾಗಿದೆ ಎಂದು ಪೋಲಿಸರು ತಿಳಿಸಿದರು. ಚೂರಿ ಇರಿತದಿಂದ ತೀವ್ರವಾಗಿ ಗಾಯಗೊಂಡಿದ್ದ ಬಾಲಕನನ್ನು ತಕ್ಷಣವೇ ಆಸ್ಪತ್ರೆಗೆ ಸಾಗಿಸಲಾಗಿತ್ತು,ಆದರೆ ಚಿಕಿತ್ಸೆ ಫಲಕಾರಿಯಾಗದೇ ಆತ ಕೊನೆಯುಸಿರೆಳೆದಿದ್ದಾನೆ. ಆರೋಪಿ ಬಾಲಕನನ್ನು ಬಂಧಿಸಲಾಗಿದೆ ಎಂದು ಪೋಲಿಸರು ತಿಳಿಸಿದರು.
ಡಿ.17ರಂದು ಬೆಳ್ತಂಗಡಿ ತಾಲೂಕು ಮಟ್ಟದ ದಫ್ ಸ್ಪರ್ಧೆಗೆ ಆಹ್ವಾನ
ಬೆಳ್ತಂಗಡಿ, ಡಿ.15: ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿಯ ವತಿಯಿಂದ ಡಿ.17ರಂದು ಸಂಜೆ 4ಕ್ಕೆ ಬೆಳ್ತಂಗಡಿ ಜಮೀಯತುಲ್ ಫಲಾಹ್ ಸಭಾಂಗಣದಲ್ಲಿ ಬೆಳ್ತಂಗಡಿ ತಾಲೂಕು ಮಟ್ಟದ ದಫ್ ಸ್ಪರ್ಧೆ ಏರ್ಪಡಿಸಲಾಗಿದೆ. ಈ ಸ್ಪರ್ಧೆಯಲ್ಲಿ ಭಾಗವಹಿಸಲು ಬಯಸುವ ತಂಡಗಳು ಡಿ.16ರ ಸಂಜೆ 6 ಗಂಟೆಯೊಳಗೆ ಹೆಸರು ನೋಂದಾಯಿಸಲು ಅವಕಾಶ ಕಲ್ಪಿಸಲಾಗಿದೆ. ಹೆಸರು ನೋಂದಾಯಿಸಲು ಮೊ.ಸಂ: 9845499527ನ್ನು ಸಂಪರ್ಕಿಸಬಹುದು ಎಂದು ಅಕಾಡಮಿಯ ಸದಸ್ಯ ಹಾಗೂ ದಫ್ ಸ್ಪರ್ಧೆಯ ಸದಸ್ಯ ಸಂಚಾಲಕ ಯು.ಎಚ್. ಖಾಲಿದ್ ಉಜಿರೆ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಶಿವಸೇನೆ (ಯುಬಿಟಿ)ಗೆ ಭಾರೀ ಹಿನ್ನಡೆ: ಬಿಜೆಪಿಗೆ ಸೇರಿದ ತೇಜಸ್ವಿ ಗೋಸಾಲ್ಕರ್
ಮುಂಬೈ,ಡಿ.15: ಶಿವಸೇನೆ (ಯುಬಿಟಿ)ಯ ಮಾಜಿ ಕಾರ್ಪೊರೇಟರ್ ಹಾಗೂ ಪಕ್ಷದ ಹಿರಿಯ ನಾಯಕ ವಿನೋದ ಘೋಸಾಲ್ಕರ್ ಅವರ ಸೊಸೆ ತೇಜಸ್ವಿ ಘೋಸಾಲ್ಕರ್ ಅವರು ಸೋಮವಾರ ಬಿಜೆಪಿಗೆ ವಿಧ್ಯುಕ್ತವಾಗಿ ಸೇರ್ಪಡೆಗೊಂಡಿದ್ದು,ಇದು ವಿಶೇಷವಾಗಿ ಬೃಹನ್ಮುಂಬೈ ಮಹಾನಗರ ಪಾಲಿಕೆ ಚುನಾವಣೆಗಳ ಮುನ್ನ ಉದ್ಧವ ಠಾಕ್ರೆ ನೇತೃತ್ವದ ಪಕ್ಷಕ್ಕೆ ಭಾರೀ ಹಿನ್ನಡೆಯಾಗಿದೆ. ತಿಂಗಳುಗಳ ಕಾಲ ಊಹಾಪೋಹಗಳ ಬಳಿಕ ಘೋಸಾಲ್ಕರ್ ಬಿಜೆಪಿಯನ್ನು ಅಪ್ಪಿಕೊಂಡಿದ್ದಾರೆ. ಘೋಸಾಲ್ಕರ್ ಈ ವರ್ಷದ ಆರಂಭದಲ್ಲಿಯೇ ಬಿಜೆಪಿ ಸೇರಲು ಆಸಕ್ತಿಯನ್ನು ವ್ಯಕ್ತಪಡಿಸಿದ್ದರು. ಆಗ ಅವರನ್ನು ಮಹಿಳಾ ಸಂಘಟಕ್ ಆಗಿ ನೇಮಕಗೊಳಿಸುವ ಮೂಲಕ ಪಕ್ಷದಲ್ಲಿಯೇ ಉಳಿಸಿಕೊಳ್ಳಲು ಯುಬಿಡಿ ನಾಯಕತ್ವ ಪ್ರಯತ್ನಿಸಿತ್ತು. ಆದರೂ ಅಂತಿಮವಾಗಿ ಅವರು ಪಕ್ಷವನ್ನು ತೊರೆದಿದ್ದಾರೆ. ಫೆ.2024ರಲ್ಲಿ ಕ್ಯಾಮೆರಾದಲ್ಲಿ ನೇರಪ್ರಸಾರದಲ್ಲಿ ಸೆರೆಯಾಗಿದ್ದ ಆಘಾತಕಾರಿ ಘಟನೆಯಲ್ಲಿ ತೇಜಸ್ವಿಯವರ ಪತಿ ಹಾಗೂ ಶಿವಸೇನೆ (ಯುಬಿಟಿ) ನಾಯಕ ಅಭಿಷೇಕ್ ಘೋಸಾಲ್ಕರ್ ಅವರನ್ನು ಫೇಸ್ಬುಕ್ ಲೈವ್ನಲ್ಲಿ ಇದ್ದಾಗಲೇ ಮೌರಿಸ್ ನೊರ್ಹೋನಾ ಎಂಬಾತ ಹಳೆಯ ದ್ವೇಷದಿಂದ ಗುಂಡಿಟ್ಟು ಹತ್ಯೆಗೈದಿದ್ದ.
ಅವಧಿ ಪೂರ್ಣಗೊಂಡ ಸ್ಥಳೀಯ ಸಂಸ್ಥೆಗಳಿಗೆ ಆಡಳಿತಾಧಿಕಾರಿ ನೇಮಕ; ಸರಕಾರದ ಆದೇಶ ರದ್ದತಿಗೆ ಹೈಕೋರ್ಟ್ ನಕಾರ
ಬೆಂಗಳೂರು : ಅವಧಿ ಪೂರ್ಣಗೊಳಿಸಿದ 70ಕ್ಕೂ ಅಧಿಕ ನಗರ ಸ್ಥಳೀಯ ಸಂಸ್ಥೆಗಳಿಗೆ ಅಡಳಿತಾಧಿಕಾರಿಗಳನ್ನು ನೇಮಕ ಮಾಡಿ ರಾಜ್ಯ ಸರಕಾರ ಹೊರಡಿಸಿರುವ ಆದೇಶ ರದ್ದುಪಡಿಸಲು ಹೈಕೋರ್ಟ್ ನಿರಾಕರಿಸಿದೆ. ಎರಡನೇ ಅವಧಿಗೆ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳಿಗೆ ಮೀಸಲು ನಿಗದಿಪಡಿಸಲು ವಿಳಂಬವಾದ ಹಿನ್ನೆಲೆಯಲ್ಲಿ ಆಡಳಿತಾಧಿಕಾರಿಗಳನ್ನು ನೇಮಕ ಮಾಡಿದ ಅವಧಿಯನ್ನು ತಮ್ಮ ಐದು ವರ್ಷದ ಅಧಿಕಾರಾವಧಿಗೆ ಪರಿಗಣಿಸದಂತೆ ಕೋರಿ ಹಾಗೂ ಈಗ ಅವಧಿ ಮುಗಿದ ಕಾರಣ ಆಡಳಿತಾಧಿಕಾರಿಗಳನ್ನು ನೇಮಕ ಮಾಡಿರುವುದನ್ನು ಪ್ರಶ್ನಿಸಿ ರಾಜ್ಯದ 70ಕ್ಕೂ ಅಧಿಕ ನಗರ ಸ್ಥಳೀಯ ಸಂಸ್ಥೆಗಳ ಚುನಾಯಿತ ಸದಸ್ಯರು ಸಲ್ಲಿಸಿದ ಅರ್ಜಿಗಳನ್ನು ನ್ಯಾಯಮೂರ್ತಿ ಸುನೀಲ್ ದತ್ ಯಾದವ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಸೋಮವಾರ ವಿಚಾರಣೆ ನಡೆಸಿತು. ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ, ಆಡಳಿತಾಧಿಕಾರಿ ನೇಮಕದಲ್ಲಿ ಮಧ್ಯಪ್ರವೇಶಿಸಲು ನಿರಾಕರಿಸಿತಲ್ಲದೇ, ಆಡಳಿತಾಧಿಕಾರಿ ನೇಮಕ ಪ್ರಶ್ನಿಸಿ ಸಲ್ಲಿಸಲಾಗಿದ್ದ 71 ಅರ್ಜಿಗಳನ್ನು ಇತ್ಯರ್ಥಪಡಿಸಿತು. ಸರಕಾರದ ಪರ ವಾದ ಮಂಡಿಸಿದ ಹೆಚ್ಚುವರಿ ಅಡ್ವೊಕೇಟ್ ಜನರಲ್ ಪ್ರತಿಮಾ ಹೊನ್ನಾಪುರ, ಕ್ಷೇತ್ರ ಮರುವಿಂಗಡಣೆಗೆ 150 ದಿನ ಬೇಕಿರುವುದರಿಂದ ಆಡಳಿತಾಧಿಕಾರಿ ನೇಮಕ ಮಾಡಲಾಗಿದೆ. ಸಂವಿಧಾನದ ಪರಿಚ್ಛೇದ 243(ಯು)ನಂತೆ ಸದಸ್ಯರ ಅವಧಿ 5 ವರ್ಷ ನಿಗದಿಯಾಗಿದೆ. ಅವಧಿ ಮುಗಿದ ಮೇಲೆ ಹಾಲಿ ಸದಸ್ಯ, ಅಧ್ಯಕ್ಷರನ್ನು ಮುಂದುವರಿಸಲಾಗದು. ಆದ್ದರಿಂದ, ಸ್ಥಳೀಯ ಸಂಸ್ಥೆಗಳಿಗೆ ಆಡಳಿತಾಧಿಕಾರಿ ನೇಮಿಸಲಾಗಿದೆ ಎಂದು ನ್ಯಾಯಪೀಠಕ್ಕೆ ತಿಳಿಸಿದರು. ಪ್ರಕರಣದ ಹಿನ್ನೆಲೆ: 2025ರ ಅಕ್ಟೋಬರ್ 18ರಿಂದ ನವೆಂಬರ್ 6ರವರೆಗೆ 5 ವರ್ಷದ ಅಧಿಕಾರಾವಧಿ ಮುಕ್ತಾಯಗೊಂಡಿರುವ 42 ನಗರಸಭೆ, 53 ಪುರಸಭೆ ಹಾಗೂ 23 ಪಟ್ಟಣ ಪಂಚಾಯಿತಿಗಳು ಸೇರಿ ರಾಜ್ಯದ ಒಟ್ಟು 118 ನಗರ ಸ್ಥಳೀಯ ಸಂಸ್ಥೆಗಳಿಗೆ ಆಡಳಿತಾಧಿಕಾರಿಗಳನ್ನು ನೇಮಕ ಮಾಡಿ ನವೆಂಬರ್ 5ರಂದು ರಾಜ್ಯ ಸರ್ಕಾರ ಆದೇಶ ಹೊರಡಿಸಿತ್ತು. ಇದನ್ನು ಪ್ರಶ್ನಿಸಿ ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದರು.
ಈ ಕಾರಣಕ್ಕೆ ಬೆಳಗಾವಿ ಅಧಿವೇಶನ ಒಂದು ವಾರ ವಿಸ್ತರಿಸಿ: ಸಭಾಧ್ಯಕ್ಷರಿಗೆ ಆರ್.ಅಶೋಕ್ ಪತ್ರ
Belagavi Winter Session 2025: ಕರ್ನಾಟಕ ರಾಜ್ಯ ವಿಧಾನಮಂಡಲ ಚಳಿಗಾಲದ ಅಧಿವೇಶನ 2025 ಡಿಸೆಂಬರ್ 08 ರಿಂದ 19ರವರೆಗೆ ನಡೆಯಲಿದೆ. ಇದರಲ್ಲಿ ಸದ್ಯ ಎಂಟು ಕಳೆದಿದೆ. ಕಾರಣಾಂತರಗಳಿಂದ 10 ದಿನಗಳ ಅಧಿವೇಶನದಲ್ಲಿ 2 ದಿನದ ಅಧಿವೇಶನದ ಸಮಯವು ಮೊಟುಕುಗೊಂಡಿರುತ್ತದೆ. ಈ ವೇಳೆ ವಿಪಕ್ಷ ನಾಯಕ ಆರ್.ಅಶೋಕ್ ಸಭಾಧ್ಯಕ್ಷ ಯು.ಟಿ.ಖಾದರ್ ಅವರಿಗೆ ಪತ್ರ ಬರೆದು ಅಧಿವೇಶನ ವಿಸ್ತರಣೆ ಬಗ್ಗೆ
ಜೈಲು ಅಧಿಕಾರಿಗಳೇ ಪರೋಲ್ ಅರ್ಜಿ ನಿರ್ಧರಿಸಿದರೆ ನ್ಯಾಯಾಲಯದ ಮೇಲಿನ ಹೊರೆ ಇಳಿಯಲಿದೆ : ಹೈಕೋರ್ಟ್ ಮೌಖಿಕ ಅಭಿಪ್ರಾಯ
ಬೆಂಗಳೂರು : ಸಜಾಬಂದಿಗಳು ಪರೋಲ್ ಕೋರಿ ಸಲ್ಲಿಸುವ ಮನವಿಗಳ ಸಂಬಂಧ ಜೈಲು ಅಧಿಕಾರಿಗಳೇ ಸೂಕ್ತ ಆದೇಶ ಹೊರಡಿಸಿದರೆ, ನ್ಯಾಯಾಲಯದ ಮೇಲಿನ ಹೊರೆ ಕಡಿಮೆಯಾಗಲಿದೆ ಎಂದು ಹೈಕೋರ್ಟ್ ಮೌಖಿಕವಾಗಿ ಅಭಿಪ್ರಾಯಪಟ್ಟಿದೆ. ಪರೋಲ್ ಮಂಜೂರಾತಿಗೆ ಕೋರಿದ ಸುಮಾರು 60 ಅರ್ಜಿಗಳು ಸೋಮವಾರ ಒಂದೇ ದಿನ ವಿಚಾರಣೆಗೆ ನಿಗದಿಯಾಗಿರುವುದನ್ನು ಗಮನಿಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದರು. ಸೋಮವಾರ ಮಧ್ಯಾಹ್ನದ ಕಲಾಪದ ವೇಳೆ ನ್ಯಾಯಮೂರ್ತಿಗಳು ಪರೋಲ್ ಮಂಜೂರಾತಿ ಕೋರಿದ ಅರ್ಜಿಗಳ ವಿಚಾರಣೆ ಕೈಗೆತ್ತಿಕೊಂಡರು. ಒಂದೂವರೆ ಗಂಟೆ ಸಮಯದಲ್ಲಿ 25ಕ್ಕೂ ಅಧಿಕ ಪರೋಲ್ ಅರ್ಜಿಗಳ ವಿಚಾರಣೆ ನಡೆಸಿ ವಿಲೇವಾರಿ ಮಾಡಿದರು. ಸಂಜೆ 4.50 ಸಮಯವಾದರೂ ಪೆರೋಲ್ ಅರ್ಜಿಗಳ ವಿಚಾರಣೆ ಅಂತ್ಯವಾಗಿರಲಿಲ್ಲ. ಈ ಹಂತದಲ್ಲಿ ಇನ್ನೆಷ್ಟು ಅರ್ಜಿಗಳಿವೆ, ಇನ್ನೂ ಮುಗಿದಿಲ್ಲವೇ ಎಂದು ಸರಕಾರಿ ವಕೀಲರನ್ನು ಕೇಳಿದ ನ್ಯಾಯಮೂರ್ತಿಗಳು, ವಿಚಾರಣಾ ಪಟ್ಟಿಯಲ್ಲಿನ ಪರೋಲ್ ಅರ್ಜಿಗಳ ಸಂಖ್ಯೆ ಗಮನಿಸಿದರು. ಆಗ 60 ಅರ್ಜಿಗಳು ವಿಚಾರಣೆ ನಿಗದಿಯಾಗಿರುವುದನ್ನು ಕಂಡ ನ್ಯಾಯಮೂರ್ತಿಗಳು ಸರಕಾರಿ ವಕೀಲರನ್ನು ಕುರಿತು, ಇಷ್ಟೆಲ್ಲ ಅರ್ಜಿಗಳನ್ನು ವಿಚಾರಣೆ ನಡೆಸಬೇಕಾದರೆ ಇಡೀ ದಿನದ ಸಮಯಬೇಕಾಗುತ್ತದೆ. ಜೈಲು ಅಧಿಕಾರಿಗಳೇ, ಪರೊಲ್ ಕೋರಿದ ಅರ್ಜಿಗಳನ್ನು ಪರಿಗಣಿಸಿ ಕಾನೂನು ಪ್ರಕಾರ ಆದೇಶಿಸಬೇಕು. ಇದರಿಂದ, ನ್ಯಾಯಾಲಯಕ್ಕೆ ಬರುವ ಅರ್ಜಿಗಳ ಸಂಖ್ಯೆ ಕಡಿಮೆಯಾಗುತ್ತದೆ. ಇಲ್ಲವಾದರೆ ನ್ಯಾಯಾಲಯದ ಮೇಲೆ ಹೆಚ್ಚು ಹೊರೆಯಾಗುತ್ತದೆ. ಈ ಬಗ್ಗೆ ಜೈಲು ಅಧಿಕಾರಿಗಳಿಗೆ ಸೂಚನೆ ನೀಡಿ ಎಂದು ಸರಕಾರಿ ವಕೀಲರಿಗೆ ನಿರ್ದೇಶಿಸಿದರು. 11 ವರ್ಷ ನಾಪತ್ತೆಯಾಗಿದ್ದ ಕೈದಿಗೆ ಪರೋಲ್ ನಿರಾಕರಣೆ: ಸಜಾಬಂದಿಯೊಬ್ಬನಿಗೆ ಪರೋಲ್ ಕೋರಿ ಆತನ ಪತ್ನಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ವಿಚಾರಣೆ ನಡೆಸಿತು. ಅರ್ಜಿದಾರರ ಪರ ವಕೀಲರು ಹಾಜರಾಗಿ, 90 ದಿನಗಳ ಪರೋಲ್ ಮಂಜೂರಾತಿಗೆ ಕೋರಿದರು. ಆಗ ನ್ಯಾಯಮೂರ್ತಿಗಳು, ಜೈಲು ಅಧಿಕಾರಿಗಳು ಏಕೆ ಪರೋಲ್ ನಿರಾಕರಿಸಿದ್ದಾರೆ ಎಂದು ಪ್ರಶ್ನಿಸಿದರು. ವಕೀಲರು ಉತ್ತರಿಸಿ, ಈ ಹಿಂದೆ 30 ದಿನಗಳ ಕಾಲ ಪರೋಲ್ ಮೇಲೆ ಬಿಡುಗಡೆಯಾಗಿದ್ದ ಕೈದಿ 11 ವರ್ಷ ತಲೆಮರೆಸಿಕೊಂಡಿದ್ದರು. ಕಳೆದ ವರ್ಷವಷ್ಟೇ ಪೊಲೀಸರು ಆತನನ್ನು ಪತ್ತೆ ಹಚ್ಚಿ ಜೈಲಿಗೆ ಕಳುಹಿಸಿದ್ದಾರೆ ಎಂದರು. ಅದಕ್ಕೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿಗಳು, 30 ದಿನ ಪರೋಲ್ ನೀಡಿದ್ದಕ್ಕೆ 11 ವರ್ಷ ತಲೆಮರೆಸಿಕೊಂಡಿದ್ದಾನೆ. ಇದೀಗ ಮತ್ತೆ ಪರೋಲ್ ನೀಡಿದರೆ ಮತ್ತೆ 11 ವರ್ಷ ನಾಪತ್ತೆಯಾಗುತ್ತಾನೆ. ಅದಕ್ಕೆ ಅವಕಾಶ ಕೊಡಲಾಗುವುದಿಲ್ಲ. ಈ ಕೈದಿ ಪರೋಲ್ಗೆ ಅರ್ಹನಲ್ಲ ಎಂದು ತಿಳಿಸಿ ಅರ್ಜಿ ವಜಾಗೊಳಿಸಿದರು.
ಕುಂದಾಪುರ | ಕೋಡಿಯಲ್ಲಿ ‘ಬ್ಯಾರೀಸ್ ಉದ್ಘಮ್’ ಕ್ಯಾಂಪಸ್ ಕನೆಕ್ಟ್-2025 ಕಾರ್ಯಕ್ರಮ
ಕುಂದಾಪುರ, ಡಿ.15: ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳ 120ನೇ ವರ್ಷದ ಸಂಭ್ರಮಾಚರಣೆ ಪ್ರಯುಕ್ತ ‘ಬ್ಯಾರೀಸ್ ಉದ್ಘಮ್’ ಕ್ಯಾಂಪಸ್ ಕನೆಕ್ಟ್- 2025 ಕಾರ್ಯಕ್ರಮ ಕೋಡಿ ಬ್ಯಾರೀಸ್ ನಾಲೆಡ್ಜ್ ಕ್ಯಾಂಪಸ್ ನಲ್ಲಿ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ಉಡುಪಿ ಡಾ.ಎ.ವಿ.ಬಾಳಿಗಾ ಸ್ಮಾರಕ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಮತ್ತು ಮನೋವೈದ್ಯ ಡಾ.ಪಿ.ವಿ. ಭಂಡಾರಿ ಮಾತನಾಡಿ, ಹೆತ್ತವರು ಮೊದಲು ಮಕ್ಕಳನ್ನು ಅರ್ಥ ಮಾಡಿ ಕೊಳ್ಳಬೇಕು, ಆನಂತರ ನಿರ್ಣಯವನ್ನು ತೆಗೆದುಕೊಳ್ಳಬೇಕು. ಮಕ್ಕಳನ್ನು ಬೇರೆಯವರೊಂದಿಗೆ ಹೋಲಿಸಬಾರದು ಎಂದು ತಿಳಿಸಿದರು. ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳ ಮ್ಯಾನೇಜಿಂಗ್ ಟ್ರಸ್ಟಿ ಮತ್ತು ಸಂಚಾಲಕ ಸೈಯದ್ ಮುಹಮ್ಮದ್ ಬ್ಯಾರಿ ಮಾತನಾಡಿ, ಸತ್ಯ, ನ್ಯಾಯ, ಸಮಾನತೆ ಎದುರು ಯಾವುದೂ ಇಲ್ಲ. ನಂಬಿಕೆ ಅತೀ ಮುಖ್ಯ. ಹಣದ ಬಗ್ಗೆ ಯೋಚಿಸದೆ ಗುಣದ ಬಗ್ಗೆ ಯೋಚಿಸಬೇಕು. ಹೃದಯವನ್ನು ಯಾವಾಗಲೂ ಶುದ್ಧವಾಗಿಟ್ಟುಕೊಳ್ಳಬೇಕು. ಜೀವನದ ಪರೀಕ್ಷೆಯಲ್ಲಿ ಯಾವಾಗಲೂ ಪಾಸಾಗುವಂತೆ ನೋಡಿಕೊಳ್ಳಬೇಕು ಎಂದರು. ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಕೆ.ಎಂ.ಅಬ್ದುಲ್ ರೆಹಮಾನ್ ಬ್ಯಾರಿ ಮಾತನಾಡಿ, ಸೋಲು ಗೆಲುವು ಮುಖ್ಯವಲ್ಲ, ಭಾಗವಹಿಸುವಿಕೆ ಅತೀ ಮುಖ್ಯವಾದದು. ಸ್ಪರ್ಧೆಗಳಲ್ಲಿ ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳ ಭವಿಷ್ಯ ಉಜ್ವಲವಾಗಲಿ ಎಂದು ಹಾರೈಸಿದರು ’ಬ್ಯಾರೀಸ್ ಉದ್ಘಮ್’ ಕ್ಯಾಂಪಸ್ ಕನೆಕ್ಟ್ -2025 ಕಾರ್ಯಕ್ರಮ ಅಡಿಯಲ್ಲಿ ಹೈಸ್ಕೂಲ್ ಮತ್ತು ಪಿಯುಸಿ ವಿಭಾಗದ ವಿದ್ಯಾರ್ಥಿಗಳಿಗಾಗಿ ಟ್ಯಾಲೆಂಟ್ ಹಂಟ್, ಕ್ವಿಜ್, ಮಾಡೆಲ್ ಮೇಕಿಂಗ್ ಸ್ಪರ್ಧೆಗಳನ್ನು ಮತ್ತು ಶಿಕ್ಷಕರಿಗಾಗಿ ಎಜುಕ್ರಿಯೇಟ್-ಇನೊವೇಟಿವ್ ಟೀಚಿಂಗ್ ಮಾಡೆಲ್ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ವಿಜೇತ ವಿದ್ಯಾರ್ಥಿಗಳಿಗೆ ನಗದು ಬಹುಮಾನ ನೀಡುವುದರೊಂದಿಗೆ ಗುರುತಿಸಲಾಯಿತು. ವಿದ್ಯಾರ್ಥಿ ಗಳಿಗಾಗಿ ವೃತ್ತಿ ಮಾರ್ಗದರ್ಶನ ಗ್ಯಾಲರಿ ಪ್ರದರ್ಶನ ಹಮ್ಮಿಕೊಳ್ಳಲಾಯಿತು. ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳ ವಿಶ್ವಸ್ಥ ಮಂಡಳಿಯ ಸದಸ್ಯರಾದ ಡಾ.ಆಸೀಫ್ ಬ್ಯಾರಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸಂಸ್ಥೆಯ ಹಿತೈಷಿ ಸಲೀಂ ಅತ್ತರ್ ಶುಭ ಹಾರೈಸಿದರು. ಕ್ವಿಝ್ ಮಾಸ್ಟರ್ ಆಗಿ ಕನ್ನಡ ಪಾಡ್ ಕಾಸ್ಟ್ ನಿರ್ಮಾಪಕಿ ಮತ್ತು ನಿರೂಪಕಿ ಸ್ಪೂರ್ತಿ ತೇಜ್ ಹಾಗೂ ವಿವಿಧ ಸ್ಪರ್ಧೆಗಳ ತೀರ್ಪುಗಾರರಾಗಿ ಸಂತೋಷ್ ಕುಮಾರ್ ಶೆಟ್ಟಿ, ಶಂಕರ್ ಉಪಾಧ್ಯಾಯ, ನಾಗರಾಜ್ ಯು. ಮತ್ತು ಉದಯ ಶೆಟ್ಟಿ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಕೆರಿಯರ್ ಎಕ್ಸ್ಪ್ರೆಸ್ನ ಸಂಸ್ಥಾಪಕ ಶೋಯಿಬ್ ವಲಾಯಿ, ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳ ನಿರ್ದೇಶಕಿ ಅಶ್ವಿನಿ ಶೆಟ್ಟಿ, ಶಾಲಾಭಿವೃದ್ಧಿ ಸಮಿತಿ ಮತ್ತು ಸಲಹಾ ಮಂಡಳಿಯ ಅಧ್ಯಕ್ಷರು ಮತ್ತು ಸದಸ್ಯರು, ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರು ಮತ್ತು ಸದಸ್ಯರು, ಪುರಸಭೆ ಸದಸ್ಯರು, ಪೋಷಕರು, ವಿವಿಧ ವಿಭಾಗಗಳ ಮುಖ್ಯಸ್ಥರು, ಬೋಧಕ ಬೋಧಕೇತರ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು ಉದ್ಘಾಟನಾ ಕಾರ್ಯಕ್ರಮವನ್ನು ಬ್ಯಾರೀಸ್ ಸೀಸೈಡ್ ಪಬ್ಲಿಕ್ ಸ್ಕೂಲ್ ನ ಶಿಕ್ಷಕಿ ಅಸ್ರಾ ಮತ್ತು ಬಿಎಡ್ ಪ್ರಶಿಕ್ಷಣಾರ್ಥಿ ಸ್ವಾತಿ ನಿರೂಪಿಸಿದರು. ಬ್ಯಾರಿಸ್ ಬಿ.ಎಡ್ ಕಾಲೇಜಿನ ಪ್ರಾಂಶುಪಾಲೆ ಡಾ.ಫಿರ್ದೋಸ್ ಸ್ವಾಗತಿಸಿದರು. ಅಕಾಡೆಮಿಕ್ ಡೀನ್ ಡಾ.ಪೂರ್ಣಿಮಾ ಟಿ. ಗಣ್ಯರನ್ನು ಪರಿಚಯಿಸಿದರು. ಬಿ.ಎಡ್ ಉಪನ್ಯಾಸಕಿ ಶಾಝಿಯಾ ವಂದಿಸಿದರು. ಸಮಾರೋಪ ಸಮಾರಂಭವನ್ನು ಬ್ಯಾರಿಸ್ ಪಿಯು ಕಾಲೇಜಿನ ಉಪನ್ಯಾಸಕಿ ಲಮಿಸ್ ನಿರೂಪಿಸಿದರು. ಬ್ಯಾರೀಸ್ ಬಿ.ಎಡ್ ಕಾಲೇಜಿನ ಪ್ರಶಿಕ್ಷಣಾರ್ಥಿ ಆನಂ ಸ್ವಾಗತಿಸಿದರು. ಶೀತಲ್ ಮೆಂಡೋನ್ಸಾ ವಂದಿಸಿದರು. ಈ ಕಾರ್ಯಕ್ರಮದಲ್ಲಿ ಜಿಲ್ಲೆಯ ಮತ್ತು ಹೊರಜಿಲ್ಲೆಯ 31 ಸರಕಾರಿ ಮತ್ತು ಖಾಸಗಿ ಶಾಲೆಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಪರಪ್ಪನ ಅಗ್ರಹಾರ ಕಾರಾಗೃಹಕ್ಕೆ ಡಿಜಿಪಿ ಅಲೋಕ್ ಕುಮಾರ್ ಭೇಟಿ
ಬೆಂಗಳೂರು : ಸೋಮವಾರ ನಗರದಲ್ಲಿರುವ ಪರಪ್ಪನ ಅಗ್ರಹಾರ ಕಾರಾಗೃಹಕ್ಕೆ ಡಿಜಿಪಿ ಅಲೋಕ್ ಕುಮಾರ್ ಭೇಟಿ ನೀಡಿದ್ದಾರೆ. ಭೇಟಿ ವೇಳೆ ಜೈಲಿನ ಚೆಕ್ ಪೋಸ್ಟ್ ಬಳಿ ಸಿಬ್ಬಂದಿಯಿಂದ ಮಾಹಿತಿ ಪಡೆದರು. ಅಧಿಕಾರಿಗಳ ಜೊತೆ ಜೈಲಿನ ಸುತ್ತಮುತ್ತ ಓಡಾಡಿ ಪರಿಶೀಲನೆ ನಡೆಸಿ ಹಾಗೂ ಪ್ರತಿ ಬ್ಯಾರಕ್ಗೂ ತೆರಳಿ ಮಾಹಿತಿ ಕಲೆಹಾಕಿ ಗಾಂಜಾ, ಬಿಡಿ ಸಿಗರೇಟ್ ಇನ್ನು ಮುಂದೆ ಸಿಗಲ್ಲ. ಎಲ್ಲ ಬಂದ್ ಆಗಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಜೈಲಿನ ಪ್ರತಿ ಬ್ಯಾರಕ್ಗೂ ಭೇಟಿ ನೀಡಿರುವ ಡಿಜಿಪಿ, ಕೈದಿಗಳ ಬಳಿಯು ಮಾಹಿತಿ ಕಲೆ ಹಾಕಿದ್ದಾರೆ. ಊಟ, ತಿಂಡಿ, ಶೌಚಾಲಯ ವ್ಯವಸ್ಥೆ ಬಗ್ಗೆ ಕೈದಿಗಳಿಗೆ ಪ್ರಶ್ನೆ ಕೇಳಿದ್ದಾರೆ. ಮೊಬೈಲ್ ಬಳಕೆ ಮಾಡುತ್ತಿದ್ದಾರೆ ಕೂಡಲೆ ಸಿಬ್ಬಂದಿ ವಶಕ್ಕೆ ನೀಡುವಂತೆ ತಾಕೀತು ಮಾಡಿದ್ದಾರೆ. ಕಳ್ಳಾಟವಾಡಿದರೆ, ಇನ್ನು ಮುಂದೆ ಕಠಿಣ ಕ್ರಮ ಎದುರಿಸಲು ಸಜ್ಜಾಗಿ ಎಂದು ಎಚ್ಚರಿಕೆ ನೀಡಿದ್ದಾರೆ. ಜೈಲಿನ ಅಡುಗೆ ಮನೆ, ಬೇಕರಿ, ಆಸ್ಪತ್ರೆಗೂ ಭೇಟಿ ನೀಡಿ, ವೈದ್ಯರು ಚಿಕಿತ್ಸೆ ಮಾತ್ರ ಕೋಡಬೇಕು. ಅದನ್ನು ಬಿಟ್ಟು ಮೊಬೈಲ್, ಗಾಂಜಾ ಸಾಗಾಣೆ ಮಾಡಿದ್ರೆ ಕ್ರಮ ಕೈಗೊಳ್ಳಲಾಗುತ್ತೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ. ಇದೇ ವೇಳೆ ಐಜಿಪಿ ದಿವ್ಯಾ, ಡಿಸಿಪಿ ನಾರಾಯಣ, ಮುಖ್ಯ ಅಧೀಕ್ಷ ಕ ಅಂಶುಕುಮಾರ್, ಕಮಾಂಡರ್ ವೀರೇಶ್ ಕುಮಾರ್ ಸೇರಿದಂತೆ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.
ಉಡುಪಿ, ಡಿ.15: ದಿವಂಗತ ಚೇಂಪಿ ಮಂಜುನಾಥ ಯಾನೆ ಅನಂತ ಲಕ್ಷ್ಮಣ ಭಟ್ ಇವರ ಧರ್ಮಪತ್ನಿ ಚೇಂಪಿ ಮಹಾಮಾಯಾ ಯಾನೆ ಕಸ್ತೂರಿ ಅನಂತ ಭಟ್(83) ಡಿ15ರಂದು ಉಡುಪಿ ಒಳಕಾಡಿನ ಸ್ವಗೃಹದಲ್ಲಿ ನಿಧನರಾದರು. ಮೃತರು ಉಡುಪಿಯ ಅನಂತ ವೈದಿಕ ಕೇಂದ್ರದ ಪ್ರಧಾನ ನಿರ್ದೇಶಕ ವೇ.ಮೂ ಚೇಂಪಿ ರಾಮಚಂದ್ರ ಅನಂತ ಭಟ್ ಸಹಿತ ಇಬ್ಬರು ಪುತ್ರರನ್ನು ಹಾಗೂ ನಾಲ್ಕು ಪುತ್ರಿಯರನ್ನು ಅಗಲಿದ್ದಾರೆ.
Bengaluru | ಒಂಟಿ ಮಹಿಳೆಯರನ್ನು ಅಡ್ಡಗಟ್ಟಿ ಅಸಭ್ಯವಾಗಿ ವರ್ತಿಸುತ್ತಿದ್ದ ವ್ಯಕ್ತಿಯ ಬಂಧನ
ಬೆಂಗಳೂರು : ನಗರದ ರಸ್ತೆಗಳಲ್ಲಿ ಒಂಟಿಯಾಗಿ ಓಡಾಡುವ ಮಹಿಳೆಯರನ್ನು ಹಿಂಬಾಲಿಸಿಕೊಂಡು ಹೋಗಿ ಅಡ್ಡಗಟ್ಟಿ ಅಸಭ್ಯವಾಗಿ ವರ್ತಿಸುತ್ತಿದ್ದ ವ್ಯಕ್ತಿಯೊಬ್ಬನನ್ನು ಇಲ್ಲಿನ ಕಾಮಾಕ್ಷಿಪಾಳ್ಯ ಠಾಣೆ poಲೀಸರು ಬಂಧಿಸಿದ್ದಾರೆ. ಹರೋಹಳ್ಳಿಯ ಮಾದೇಶ್ವರನಗರ ನಿವಾಸಿ ವಿನೋದ್(27) ಬಂಧಿತ ಆರೋಪಿ. ಸುಮ್ಮನಹಳ್ಳಿ ಜಂಕ್ಷನ್ ಮುಖಾಂತರ ಶ್ರೀನಿವಾಸನಗರ ಸರ್ಕಲ್ ಕಡೆಯಿಂದ ಮಹಿಳೆಯೊಬ್ಬರು ಪೀಣ್ಯ ಜಿಕೆಡಬ್ಲೂ ಲೇಔಟ್ಗೆ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದರು. ರಸ್ತೆ ಗುಂಡಿಯಿದ್ದ ಕಾರಣ ವಾಹನವನ್ನು ನಿಧಾನ ಮಾಡಿದಾಗ ಈತ ಹಿಂಬಾಲಿಸಿಕೊಂಡು ಬಂದು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಲ್ಲದೇ ಅವರನ್ನು ತಬ್ಬಿಕೊಂಡು ಅಸಭ್ಯವಾಗಿ ವರ್ತಿಸಿದ್ದಾನೆ ಎನ್ನಲಾಗಿದೆ. ಈ ವೇಳೆ ಹಿಂದೆ ಕಾರಿನಲ್ಲಿ ಬರುತ್ತಿದ್ದ ಮಹಿಳೆಯ ಪತಿ ಗಮನಿಸಿ ಆತನನ್ನು ಹಿಡಿದುಕೊಳ್ಳಲು ಯತ್ನಿಸಿದಾಗ ತಪ್ಪಿಸಿಕೊಂಡು ಪರಾರಿಯಾಗಿದ್ದ. ಬಳಿಕ ಪೊಲೀಸ್ ಸಹಾಯವಾಣಿ 112 ಗೆ ಕರೆ ಮಾಡಿದ್ದಾರೆ. ಹೊಯ್ಸಳ ಪೊಲೀಸರು ತಕ್ಷ ಣ ಸ್ಥಳಕ್ಕೆ ಆಗಮಿಸಿ ಕಾರ್ಯಾಚರಣೆ ಕೈಗೊಂಡು ವಿಕೃತ ಕಾಮಿಯನ್ನು ಬಂಧಿಸಿ ಕ್ರಮ ಜರುಗಿಸಿದ್ದಾರೆ. ಈ ವಿಕೃತ ಕಾಮಿ ಸಂಜೆಯಾಗುತ್ತಿದ್ದಂತೆ ಒಂಟಿ ಮಹಿಳೆಯರನ್ನು ಟಾರ್ಗೆಟ್ ಮಾಡಿ ಏಕಾಏಕಿ ತಬ್ಬಿಕೊಂಡು ಅಸಭ್ಯವಾಗಿ ವರ್ತಿಸುತ್ತಿದ್ದ ಎನ್ನಲಾಗಿದೆ. ಇದೀಗ ಪೊಲೀಸರು ಆತನನ್ನು ಬಂಧಿಸಿದ್ದಾರೆ.
ನಾಲ್ಕು ಬಾರಿ ಸಂಸದೆಯಾಗಿ ಆಯ್ಕೆಯಾಗಿದ್ದೇನೆ, ಇವಿಎಂ ವಿರೋಧಿಸಲ್ಲ; ಸುಳ್ಳು ಹೇಳಲು ಒಪ್ಪದ ಸುಪ್ರಿಯಾ ಸುಳೆ
ದೇಶಾದ್ಯಂತ ಬಿಜೆಪಿ ಚುನಾವಣಾ ದಿಗ್ವಿಜಯಗಳಿಗೆ ಎಲೆಕ್ಟ್ರಾನಿಕ್ಸ್ ಮತಯಂತ್ರ (ಇವಿಎಂ)ದಲ್ಲಿ ನಡೆಯುತ್ತಿರುವ ಗೋಲ್ಮಾಲ್ ಕಾರಣ ಎಂಬುದು ಪ್ರತಿಪಕ್ಷಗಳ ಆರೋಪ. ಆದರೆ ಮಹಾರಾಷ್ಟ್ರದಲ್ಲಿ ವಿಪಕ್ಷ ಮೈತ್ರಿಕೂಟದ ಭಾಗವಾಗಿರುವ ಎನ್ಸಿಪಿಯ ಸಂಸದೆ ಸುಪ್ರಿಯಾ ಸುಳೆ, ಇವಿಎಂ ವಿರುದ್ಧ ಸುಳ್ಳು ಆರೋಪ ಮಾಡುವುದಿಲ್ಲ ಎಂದು ಹೇಳುವ ಮೂಲಕ, ವಿಪಕ್ಷಗಳಿಗೆ ಆಘಾತ ನೀಡಿದ್ದಾರೆ. ನಾನು ನಾಲ್ಕು ಬಾರಿ ಸಂಸದೆಯಾಗಿ ಆಯ್ಕೆಯಾಗಿರುವುದು ಇದೇ ಇವಿಎಂ ವ್ಯವಸ್ಥೆ ಮೂಲಕ ಎಂದು ಸುಪ್ರಿಯಾ ಸುಳೆ ಹೇಳಿದ್ದಾರೆ. ಇಲ್ಲಿದೆ ನೋಡಿ ಹೆಚ್ಚಿನ ಮಾಹಿತಿ.
ಮಂಗಳೂರು, ಡಿ.15: ನಗರದ ಮರೋಳಿ ತಾತಾವು ನಿವಾಸಿ, ನಿವೃತ್ತ ಶಿಕ್ಷಕ ಭಾಸ್ಕರ ಬೇಕಲ್ (73) ಸೋಮವಾರ ಮುಂಜಾನೆ ಸ್ವಗೃಹದಲ್ಲಿ ನಿಧನರಾದರು. ಪತ್ನಿ, ಪುತ್ರ, ಪುತ್ರಿ ಹಾಗೂ ಅಪಾರ ಬಂಧುಬಳಗವನ್ನು ಮೃತರು ಅಗಲಿದ್ದಾರೆ ಮಂಗಳೂರು ಜೆಪ್ಪುವಿನ ಕಾಸ್ಸಿಯಾ ಪ್ರೌಢಶಾಲೆಯಲ್ಲಿ ಶಿಕ್ಷಕರಾಗಿದ್ದು, ನಿವೃತ್ತರಾಗಿದ್ದರು.
Bengaluru | ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿಸುವುದಾಗಿ ಉದ್ಯಮಿಗೆ 8.3 ಕೋಟಿ ರೂ. ವಂಚನೆ
ಬೆಂಗಳೂರು : ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿಸುವುದಾಗಿ ನಂಬಿಸಿ ನಗರದ ಉದ್ಯಮಿಯೊಬ್ಬರಿಗೆ ಸುಮಾರು 8.3 ಕೋಟಿ ರೂ.ಗಳನ್ನು ಸೈಬರ್ ಕಳ್ಳರು ವಂಚಿಸಿರುವ ಘಟನೆ ನಡೆದಿದ್ದು, ಈ ಬಗ್ಗೆ ದಕ್ಷಿಣ ವಿಭಗದ ಸಿಇಎನ್ ಪೊಲೀಸ್ ಠಾಣೆಗೆ ದೂರು ದಾಖಲಾಗಿದೆ. ಉದ್ಯಮಿ ರಾಜೇಂದ್ರ ನಾಯ್ಡು ಅವರಿಗೆ ಷೇರು ಮಾರುಕಟ್ಟೆ ಹೆಸರಿನಲ್ಲಿ ವಂಚಿಸಲಾಗಿದ್ದು, ದಕ್ಷಿಣ ವಿಭಗದ ಸಿಇಎನ್ ಠಾಣೆಗೆ ಅವರು ದೂರು ನೀಡಿದ್ದಾರೆ. ರಾಜೇಂದ್ರ ನಾಯ್ಡು ಅವರಿಗೆ ಕರೆ ಮಾಡಿದ್ದ ವಂಚಕರು, ಅವರು ಈ ಹಿಂದೆ ಪಡೆದಿದ್ದ ಸಾಲದ ಕುರಿತು ಮಾತನಾಡುತ್ತಾ ‘ನಿಮ್ಮ ಸಿವಿಲ್ ಸ್ರ್ಕೋರ್ ಉತ್ತಮವಾಗಿದೆ. ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭಂಶಗಳಿಸಬಹುದು’ ಎಂದು ನಂಬಿಸಿದ್ದರು ಎನ್ನಲಾಗಿದೆ. ಕೆಲವು ಚಾರಿಟಿ ಸೇವೆಗಳನ್ನು ನಡೆಸುತ್ತಿದ್ದ ರಾಜೇಂದ್ರ ನಾಯ್ಡು ಅವರು ಸ್ವಲ್ಪ ಹಣವನ್ನು ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದರೆ ಅದರಿಂದ ಬರುವ ಹಣವನ್ನು ಚಾರಿಟಿಗೆ ಉಪಯೋಗಿಸಬಹುದು ಎಂದು ಭಾವಿಸಿ ಹೂಡಿಕೆ ಮಾಡಲು ಮುಂದಾಗಿದ್ದರು. ಬಳಿಕ ರಾಜೇಂದ್ರ ನಾಯ್ಡು ಅವರ ಮೊಬೈಲ್ ಫೋನ್ನಲ್ಲಿ ವಂಚಕರು ಆ್ಯಪ್ವೊಂದನ್ನು ಇನ್ಸ್ಟಾಲ್ ಮಾಡಿಸಿದ್ದರು ಎನ್ನಲಾಗಿದೆ. ಆರಂಭದಲ್ಲಿ 25 ಲಕ್ಷ ರೂ. ಹೂಡಿಕೆ ಮಾಡಿದ್ದ ನಾಯ್ಡು ನಂತರ ಹಂತಹಂತವಾಗಿ ಒಟ್ಟು 8.3 ಕೋಟಿ ರೂ. ಹಣ ವರ್ಗಾಯಿಸಿದ್ದರು. ಇದಕ್ಕೆ ಪೂರಕವೆಂಬಂತೆ ಆ್ಯಪ್ನಲ್ಲಿ 59.4 ಕೋಟಿ ರೂ. ಲಾಭಾಂಶವನ್ನು ಆರೋಪಿಗಳು ತೋರಿಸಿದ್ದರು ಎಂದು ರಾಜೇಂದ್ರ ನಾಯ್ಡು ಪೊಲೀಸರಿಗೆ ತಿಳಿಸಿದ್ದಾರೆ. ತಮ್ಮ ಹೂಡಿಕೆಯು ದೊಡ್ಡ ಮೊತ್ತದ ಲಾಭಗಳಿಸಿದೆ ಎಂದುಕೊಂಡಿದ್ದ ರಾಜೇಂದ್ರ ನಾಯ್ಡು, 15 ಕೋಟಿ ರೂ.ಗಳನ್ನು ಹಿಂಪಡೆಯಲು ಪ್ರಯತ್ನಿಸಿದ್ದರು. ಆದರೆ ಹಣ ವಿತ್ ಡ್ರಾ ಆಗದಿದ್ದಾಗ ಅನುಮಾನಗೊಂಡ ಅವರು, ಮೊದಲು ತಮ್ಮನ್ನು ಸಂಪರ್ಕಿಸಿದ್ದ ಅಪರಿಚಿತ ವಂಚಕರಿಗೆ ಕರೆ ಮಾಡಿ ವಿಚಾರಿಸಿದಾಗ, ಶೇ.18 ಸೇವಾ ಶುಲ್ಕವಾಗಿ ಸುಮಾರು 2.70 ಕೋಟಿ ರೂ. ಪಾವತಿಸಬೇಕು ಎಂದು ಆಗ್ರಹಿಸಿದ್ದರು. ಆ ಸಮಯದಲ್ಲಿ ತಾವು ವಂಚನೆಗೊಳಗಾಗಿರುವುದನ್ನು ಅರಿತ ನಾಯ್ಡು ಸೈಬರ್ ಕ್ರೈಮ್ ಸಹಾಯವಾಣಿಗೆ ಕರೆ ಮಾಡಿ ದೂರು ನೀಡಿದ್ದರು. ನಂತರ ದಕ್ಷಿಣ ವಿಭಗದ ಸಿಇಎನ್ ಪೊಲೀಸ್ ಠಾಣೆಗೆ ತೆರಳಿ ಲಿಖಿಯ ದೂರು ನೀಡದ್ದಾರೆ. ಸದ್ಯ ದಕ್ಷಿಣ ವಿಭಗ ಸಿಇಎನ್ ಪೊಲೀಸರು ವಂಚಕರ ಖಾತೆಯಲ್ಲಿದ್ದ ಸುಮಾರು 60 ಲಕ್ಷ ಹಣವನ್ನು ಫ್ರೀಜ್ ಮಾಡಿದ್ದು, ಆರೋಪಿಗಳ ಪತ್ತೆಗಾಗಿ ತನಿಖೆ ಮುಂದುವರಿಸಿದ್ದಾರೆ ಎಂದು ವರದಿಯಾಗಿದೆ.
ಮಂಗಳೂರು | ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಕಚೇರಿ ಸ್ಥಳಾಂತರ
ಮಂಗಳೂರು,ಡಿ.15: ದಕ್ಷಿಣ ಕನ್ನಡ ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಕಚೇರಿ ಡಿಸೆಂಬರ್ 15ರಂದು ದಕ್ಷಿಣ ಕನ್ನಡ ಜಿಲ್ಲಾ ಆಡಳಿತ ಕೇಂದ್ರವಾದ ಪಡೀಲ್ ಪ್ರಜಾಸೌಧ ಕಟ್ಟಡಕ್ಕೆ ಸ್ಥಳಾಂತರಗೊಂಡಿದೆ ಎಂದು ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ. ವಿಳಾಸ: ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಪ್ರಜಾಸೌಧ, 2ನೇ ಮಹಡಿ, ಪಡೀಲ್ ಮಂಗಳೂರು-575007 (ದೂ.ಸಂ:-0824-2459494) ಇಮೇಲ್- dsodes.dakshinakannada@gmail.com ಎಂದು ಪ್ರಕಟನೆ ತಿಳಿಸಿದೆ.
ಪೊಲೀಸ್ ಅಧಿಕಾರಿ, ಸಿಬ್ಬಂದಿ ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚನೆ
ಬೆಂಗಳೂರು : ಬೆಂಗಳೂರು ನಗರ ಸಂಚಾರ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಎಲ್ಲ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳು ವಾಹನವನ್ನು ಚಲಾಯಿಸುವಾಗ ಕಡ್ಡಾಯವಾಗಿ ಹೆಲ್ಮೆಟ್/ಸೀಟ್ಬೆಲ್ಟ್ ಧರಿಸುವುದರ ಜೊತೆಗೆ ಎಲ್ಲ ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಬೆಂಗಳೂರು ಸಂಚಾರ ಜಂಟಿ ಪೊಲೀಸ್ ಆಯುಕ್ತ ಕಾರ್ತಿಕ್ ರೆಡ್ಡಿ ಹೇಳಿದ್ದಾರೆ. ಸೋಮವಾರ ಸುತ್ತೋಲೆ ಹೊರಡಿಸಿರುವ ಅವರು, ಮುಂದಿನ ದಿನಗಳಲ್ಲಿ ಸಂಚಾರ ಪೊಲೀಸರಿಂದ ನಿಯಮ ಉಲ್ಲಂಘನೆಗಳು ಕಂಡುಬಂದಲ್ಲಿ ಇಂತಹ ಅಧಿಕಾರಿ ಹಾಗೂ ಸಿಬ್ಬಂದಿ ವಿರುದ್ಧ ಕಾನೂನು ರೀತ್ಯಾ ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ. ಪೊಲೀಸರಿಂದಲೇ ಸಂಚಾರ ನಿಯಮಗಳ ಉಲ್ಲಂಘನೆ ಪ್ರಕರಣಗಳ ಹೆಚ್ಚಳವಾಗುತ್ತಿದ್ದು, ಸಂಚಾರ ನಿಯಮಗಳ ಪಾಲನೆಗೆ ಪೊಲೀಸರು ಪ್ರಾಮುಖ್ಯತೆ ನೀಡಬೇಕು. ಪೊಲೀಸರೇ ಸಂಚಾರ ನಿಯಮಗಳ ಉಲ್ಲಂಘಿಸಿದರೆ, ಪ್ರಶ್ನಿಸುವ ನೈತಿಕತೆ ಇರುವುದಿಲ್ಲ. ಜೊತೆಗೆ ಸಾರ್ವಜನಿಕರಿಂದ ಟೀಕೆಗಳಿಗೆ ಒಳಗಾಗಬೇಕಾಗುತ್ತದೆ. ಹೀಗಾಗಿ ಸಂಚಾರ ಪೊಲೀಸರಿಂದ ನಿಯಮ ಉಲ್ಲಂಘನೆ ಕಂಡು ಬಂದಲ್ಲಿ ಐಎಂವಿ ಕಾಯ್ದೆ ಅಡಿ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ, ಕಾನೂನನ್ನು ಜಾರಿಗೆ ತರುವ ಆರಕ್ಷಕರೇ ಸಂಚಾರ ನಿಯಮಗಳನ್ನು ಪಾಲಿಸದೇ ವಾಹನ ಚಾಲನೆ ಮಾಡುತ್ತಿರುವ ಪ್ರಕರಣಗಳು ಕಂಡುಬಂದಿರುತ್ತವೆ. ಇದರಲ್ಲಿ ಪ್ರಮುಖವಾಗಿ ಸೀಟ್ಬೆಲ್ಟ್ ಧರಿಸದೇ ಇರುವುದು ಹಾಗೂ ವಾಹನ ಚಾಲನೆ ವೇಳೆ ಮೊಬೈಲ್ ಬಳಕೆ ಮತ್ತಿತರ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳು ವರದಿಯಾಗಿವೆ. ಸಂಚಾರ ನಿಯಮಗಳನ್ನು ಪಾಲನೆ ಮಾಡುವುದು ಕೇವಲ ನಾಗರಿಕರಿಗೆ ಅನ್ವಯಿಸುವುದಿಲ್ಲ. ಕಾನೂನಿನ ಅಡಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವಪೊಲೀಸ್ ಅಧಿಕಾರಿಗಳು ಸಂಚಾರ ನಿಯಮಗಳಿಗೆ ಬಹಳ ಪ್ರಾಮುಖ್ಯತೆಯನ್ನು ನೀಡಬೇಕಾಗಿರುತ್ತದೆ ಎಂದು ಅವರು ಹೇಳಿದ್ದಾರೆ.
ಪರಪ್ಪನ ಅಗ್ರಹಾರ ಜೈಲಿನ ಇಂಚಿಂಚೂ ಪರಿಶೀಲಿಸಿದ ಅಲೋಕ್ ಕುಮಾರ್, ದರ್ಶನ್ ಸೆಲ್ಗೂ ಭೇಟಿ; ಏನಂದ್ರು ನಟ?
ನೂತನ ಡಿಜಿಪಿ ಅಲೋಕ್ ಕುಮಾರ್ ಅವರು ಪರಪ್ಪನ ಅಗ್ರಹಾರ ಜೈಲಿಗೆ ಭೇಟಿ ನೀಡಿ, ಅಕ್ರಮಗಳಿಗೆ ಕಡಿವಾಣ ಹಾಕುವಂತೆ ಹಾಗೂ ಸ್ವಚ್ಛತೆ ಕಾಪಾಡುವಂತೆ ಸಿಬ್ಬಂದಿಗೆ ಖಡಕ್ ಎಚ್ಚರಿಕೆ ನೀಡಿದರು. ಕೈದಿಗಳ ಊಟ, ವಸತಿ ಬಗ್ಗೆ ವಿಚಾರಿಸಿದ ಅವರು, ಮೊಬೈಲ್ ಬಳಕೆ, ಗಾಂಜಾ, ಬೀಡಿ, ಸಿಗರೇಟ್ ಮುಂತಾದ ಅಕ್ರಮ ಚಟುವಟಿಕೆಗಳನ್ನು ತಕ್ಷಣವೇ ನಿಲ್ಲಿಸುವಂತೆ ತಾಕೀತು ಮಾಡಿದರು. ನಟ ದರ್ಶನ್ ಅವರ ಬ್ಯಾರೆಕ್ಗೂ ಭೇಟಿ ನೀಡಿ ಮಾಹಿತಿ ಪಡೆದರು.
ಸಾರ್ವಜನಿಕ ಸಮಾರಂಭದಲ್ಲೇ ಮಹಿಳಾ ವೈದ್ಯೆಯ ಹಿಜಾಬ್ ಎಳೆದ ನಿತೀಶ್ ಕುಮಾರ್; ಬಿಹಾರ ಸಿಎಂ ನಡೆಗೆ ವಿಪಕ್ಷಗಳು ಕಿಡಿ
ಬಿಹಾರದ ಪಾಟ್ನಾದಲ್ಲಿ ಆಯುಷ್ ವೈದ್ಯರಿಗೆ ನೇಮಕಾತಿ ಪತ್ರ ವಿತರಿಸುವ ಸರ್ಕಾರಿ ಸಮಾರಂಭವೊಂದರಲ್ಲಿ, ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ವೇದಿಕೆಯ ಮೇಲೆಯೇ ಮಹಿಳಾ ವೈದ್ಯೆಯೊಬ್ಬರ ಹಿಜಾಬ್ ಅನ್ನು ತೆಗೆಸಿದ ಘಟನೆ ನಡೆದಿದೆ. ಈ ಕೃತ್ಯದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ತೀವ್ರ ವಿವಾದಕ್ಕೆ ಕಾರಣವಾಗಿದೆ. ಈ ಘಟನೆಯನ್ನು 'ಅತ್ಯಂತ ಕೀಳುಮಟ್ಟದ ಕೃತ್ಯ' ಎಂದು ಕರೆದಿರುವ ಕಾಂಗ್ರೆಸ್ ಮತ್ತು ಆರ್ಜೆಡಿ ಪಕ್ಷಗಳು, ಮುಖ್ಯಮಂತ್ರಿಗಳ ವರ್ತನೆಯನ್ನು ಕಟುವಾಗಿ ಟೀಕಿಸಿವೆ. ಮಹಿಳೆಯರ ಗೌರವಕ್ಕೆ ಧಕ್ಕೆ ತರುವಂತಹ ಈ ನಡೆಗಾಗಿ ನಿತೀಶ್ ಕುಮಾರ್ ರಾಜೀನಾಮೆ ನೀಡಬೇಕೆಂದು ವಿಪಕ್ಷಗಳು ಆಗ್ರಹಿಸಿವೆ.

19 C