ದೈನಂದಿನ ಸೇವೆಗಳ ನಿರಾಕರಣೆ ಮತ್ತು ಸಂವಿಧಾನಾತ್ಮಕ ಸಮಾನತೆ
ಕರ್ನಾಟಕದ ಗದಗ ಜಿಲ್ಲೆಯಲ್ಲಿ ದಲಿತರಿಗೆ ಕ್ಷೌರ ಸೇವೆ ನಿರಾಕರಿಸಿದ ಘಟನೆ ದೈನಂದಿನ ಸಾಮಾಜಿಕ ಅಸಮಾನತೆಯ ಸಾಂದರ್ಭಿಕ ಉದಾಹರಣೆಯಾಗಿದೆ. ಇಂತಹ ಘಟನೆಗಳು ಕೇವಲ ಪ್ರತ್ಯೇಕ ಗ್ರಾಮಗಳ ಸಮಸ್ಯೆಯಾಗದೆ, ಭಾರತದ ಹಲವು ರಾಜ್ಯಗಳಲ್ಲಿ ಮರುಕಳಿಸುತ್ತಿರುವ ಸಾಮಾಜಿಕ ಬಹಿಷ್ಕಾರದ ರೂಪವಾಗಿವೆ. ಸಂವಿಧಾನಾತ್ಮಕ ವಿಧಿಗಳು, ಕಾನೂನು ರಕ್ಷಣಾ ವ್ಯವಸ್ಥೆ ಮತ್ತು ರಾಷ್ಟ್ರೀಯ ಅಪರಾಧ ದಾಖಲೆಗಳ ಬೆಳಕಿನಲ್ಲಿ ಈ ಘಟನೆಯನ್ನು ವಿಶ್ಲೇಷಿಸಬೇಕಿದೆ. ಸಾಮಾನ್ಯವಾಗಿ ಕ್ಷೌರ ಸೇವೆ ನಿರಾಕರಣೆ ಅಲ್ಪಪ್ರಮಾಣದ ಘಟನೆ ಎಂದು ಕಾಣಬಹುದು. ಆದರೆ ಸಮಾಜಶಾಸ್ತ್ರೀಯವಾಗಿ ಇದು ದೈನಂದಿನ ಜಾತಿ ಪ್ರಾತ್ಯಕ್ಷಿಕೆಯ ರೂಪವಾಗಿದೆ. ಭಾರತೀಯ ಸಂವಿಧಾನದ ವಿಧಿ 17 ಅಸ್ಪಶ್ಯತೆಯನ್ನು ನಿಷೇಧಿಸಿದೆ. ಆದರೂ ಗ್ರಾಮೀಣ ಭಾರತದಲ್ಲಿ ಸಾರ್ವಜನಿಕ ಸೇವೆಗಳ ಪ್ರವೇಶದಲ್ಲಿನ ಭೇದಭಾವ ಮುಂದುವರಿಯುತ್ತಿರುವುದು ಸಂವಿಧಾನಾತ್ಮಕ ಮೌಲ್ಯಗಳ ಅನುಷ್ಠಾನದಲ್ಲಿ ಗಂಭೀರ ವ್ಯತ್ಯಾಸವಿದೆ ಎಂಬುದನ್ನು ಸೂಚಿಸುತ್ತದೆ. ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳ (ಅತ್ಯಾಚಾರ ತಡೆ) ಕಾಯ್ದೆ(1989) ದಲಿತರ ವಿರುದ್ಧದ ಅವಮಾನ, ಸಾಮಾಜಿಕ ಬಹಿಷ್ಕಾರ ಮತ್ತು ಹಿಂಸಾಚಾರವನ್ನು ದಂಡನೀಯ ಅಪರಾಧವಾಗಿ ಪರಿಗಣಿಸುತ್ತದೆ. 2015 ಮತ್ತು 2018ರ ತಿದ್ದುಪಡಿ ಮೂಲಕ ಸಾಮಾಜಿಕ ಬಹಿಷ್ಕಾರವನ್ನು ಸ್ಪಷ್ಟವಾಗಿ ಅಪರಾಧವೆಂದು ಗುರುತಿಸಲಾಗಿದೆ. ಆದರೆ ಕಾನೂನು ಅಸ್ತಿತ್ವದಲ್ಲಿದ್ದರೂ, ದೈನಂದಿನ ಸೇವೆಗಳ ನಿರಾಕರಣೆ ಪ್ರಕರಣಗಳು ಗ್ರಾಮೀಣ ಸಮಾಜದಲ್ಲಿ ಅಡಗಿದ ರೂಪದಲ್ಲಿ ಮುಂದುವರಿಯುತ್ತಿವೆ. ಹಲವು ಬಾರಿ ದಲಿತರು ದೂರು ನೀಡಲು ಹೆದರುತ್ತಾರೆ ಅಥವಾ ಸ್ಥಳೀಯ ಒತ್ತಡದಿಂದ ಪ್ರಕರಣಗಳು ಹಿಂಪಡೆಯಲ್ಪಡುತ್ತವೆ. ನ್ಯಾಷನಲ್ ಕ್ರೈಂ ರೆಕಾರ್ಡ್ಸ್ ಬ್ಯೂರೋ ಬಿಡುಗಡೆ ಮಾಡಿದ ಕ್ರೈಂ ಇನ್ ಇಂಡಿಯಾ 2022 ವರದಿ ಪ್ರಕಾರ, ಅನುಸೂಚಿತ ಜಾತಿಗಳ ವಿರುದ್ಧ ದಾಖಲಾದ ಅಪರಾಧ ಪ್ರಕರಣಗಳ ಸಂಖ್ಯೆ 50,000ಕ್ಕೂ ಅಧಿಕವಾಗಿದೆ (ಸುಮಾರು 57,000 ಪ್ರಕರಣಗಳು). 2021ರಲ್ಲಿ ಇದು ಸುಮಾರು 50,900 ಪ್ರಕರಣಗಳಷ್ಟಿತ್ತು. ಅಂದರೆ ದಿನಕ್ಕೆ ಸರಾಸರಿ 150ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗುತ್ತಿವೆ. ಈ ಅಂಕಿಅಂಶಗಳು ದೈಹಿಕ ಹಿಂಸಾಚಾರ, ಹಲ್ಲೆ, ಭೂ ವಿವಾದ, ಲೈಂಗಿಕ ದೌರ್ಜನ್ಯ ಮುಂತಾದ ಗಂಭೀರ ಪ್ರಕರಣಗಳನ್ನು ಒಳಗೊಂಡಿವೆ. ಆದರೆ ಕ್ಷೌರ ಸೇವೆ, ದೇವಾಲಯ ಪ್ರವೇಶ, ಕುಡಿಯುವ ನೀರಿನ ಬಳಕೆ ಮುಂತಾದ ದೈನಂದಿನ ಸೇವೆಗಳ ನಿರಾಕರಣೆ ಬಹುಪಾಲು ದಾಖಲಾಗದೆ ಉಳಿಯುವ ಸಾಧ್ಯತೆ ಇದೆ. ಇದರಿಂದ ಅಧಿಕೃತ ಅಂಕಿಅಂಶಗಳು ವಾಸ್ತವ ಪರಿಸ್ಥಿತಿಯ ಸಂಪೂರ್ಣ ಚಿತ್ರಣ ನೀಡುವುದಿಲ್ಲ. ಇಂತಹ ಘಟನೆಗಳು ಕೇವಲ ಕರ್ನಾಟಕಕ್ಕೆ ಸೀಮಿತವಲ್ಲ. ತೆಲಂಗಾಣ, ಉತ್ತರ ಪ್ರದೇಶ, ರಾಜಸ್ಥಾನ ಮತ್ತು ಗುಜರಾತ್ಗಳಲ್ಲಿ ದಲಿತರಿಗೆ ಸಲೂನ್ ಸೇವೆ ನಿರಾಕರಣೆ ಅಥವಾ ಪ್ರತ್ಯೇಕವಾಗಿ ಸೇವೆ ನೀಡುವ ಘಟನೆಗಳು ವರದಿಯಾಗಿವೆ. ಇವುಗಳು ಜಾತಿ ಆಧಾರಿತ ಶುದ್ಧತೆ-ಅಶುದ್ಧತೆ ಕಲ್ಪನೆಯ ಜೀವಂತತೆಯನ್ನು ಸೂಚಿಸುತ್ತವೆ. ಭಾರತೀಯ ಸಮಾಜವು ಭೀಕರ ಜಾತಿ ಹಿಂಸಾಚಾರದ ಘಟನೆಗಳನ್ನು ಕಂಡಿದೆ. ಉದಾಹರಣೆಗೆ ಆಂಧ್ರಪ್ರದೇಶದ ಕರಂಚೇಡು ಹತ್ಯಾಕಾಂಡ ಮತ್ತು ಸುಂಡೂರು ಹತ್ಯಾಕಾಂಡ. ಇವುಗಳು ದೈಹಿಕ ಹಿಂಸಾಚಾರದ ತೀವ್ರ ರೂಪಗಳು. ಇಂದಿನ ಕ್ಷೌರ ಸೇವೆ ನಿರಾಕರಣೆಯಂತಹ ಘಟನೆಗಳು ಆ ಮಟ್ಟದ ಹಿಂಸಾಚಾರವಲ್ಲದಿದ್ದರೂ, ಅಸಮಾನತೆಯ ಮೂಲ ಮನೋವೃತ್ತಿ ಅದೇ ಆಗಿದೆ. ಡಾ. ಬಿ.ಆರ್. ಅಂಬೇಡ್ಕರ್ ಒತ್ತಿಹೇಳಿದ ಕಾನ್ಸ್ಟಿಟ್ಯೂಷನಲ್ ಮೊರ್ಯಾಲಿಟಿ ಇನ್ನೂ ಸಂಪೂರ್ಣವಾಗಿ ಸಾಮಾಜಿಕ ಜೀವನದಲ್ಲಿ ಆವರಿಸಿಲ್ಲ. ಕಾನೂನು ಸಮಾನತೆ ನೀಡಿದರೂ, ಸಾಮಾಜಿಕ ಸ್ವೀಕೃತಿ ಇಲ್ಲದೆ ಅದು ಕಾಗದದ ಮೇಲಿನ ಹಕ್ಕಾಗಿಯೇ ಉಳಿಯುತ್ತದೆ. ಕ್ಷೌರ ಸೇವೆ ನಿರಾಕರಣೆ ಪ್ರಕರಣಗಳು ಪ್ರಜಾಪ್ರಭುತ್ವದ ದೈನಂದಿನ ಅನುಭವದಲ್ಲಿ ಅಸಮಾನತೆ ಉಳಿದಿರುವುದನ್ನು ತೋರಿಸುತ್ತವೆ. ಇದು ಗ್ರಾಮ ಮಟ್ಟದಲ್ಲಿ ಸಂವಿಧಾನ ಜಾಗೃತಿ ಅಭಿಯಾನಗಳು, ಸಾಮಾಜಿಕ ಬಹಿಷ್ಕಾರ ಪ್ರಕರಣಗಳ ತ್ವರಿತ ವಿಚಾರಣೆ, ಪಂಚಾಯತ್ ಮಟ್ಟದಲ್ಲಿ ಸಮಾನ ಸೇವೆ ಖಚಿತಪಡಿಸುವ ನಿಯಮಗಳು, ಶಾಲಾ ಶಿಕ್ಷಣದಲ್ಲಿ ಜಾತಿ ವಿರೋಧಿ ಮೌಲ್ಯಗಳ ಒಳಗೊಳ್ಳುವಿಕೆಯ ಮೂಲಕ ಪರಿವರ್ತನೆ ಸಾಧ್ಯವಾಗಬಹುದು. ಗದಗದಂತಹ ಘಟನೆಗಳು ಕೇವಲ ಸ್ಥಳೀಯ ಸಮಸ್ಯೆಯಾಗಿಲ್ಲ; ಅವು ಸಂವಿಧಾನಾತ್ಮಕ ಸಮಾನತೆ ಮತ್ತು ಸಾಮಾಜಿಕ ವಾಸ್ತವಗಳ ನಡುವಿನ ಅಂತರವನ್ನು ಬಹಿರಂಗಪಡಿಸುತ್ತವೆ. ದಲಿತರಿಗಾಗಿ ಕ್ಷೌರ ಸೇವೆಗೆ ಪ್ರವೇಶವು ಕೇವಲ ಸೇವಾ ಪ್ರಶ್ನೆಯಲ್ಲ, ಅದು ಮಾನವ ಗೌರವ ಮತ್ತು ನಾಗರಿಕ ಸಮಾನತೆಯ ಪ್ರಶ್ನೆ. ಕಾನೂನು ಮತ್ತು ಅಂಕಿಅಂಶಗಳು ಸಮಸ್ಯೆಯ ತೀವ್ರತೆಯನ್ನು ತೋರಿಸುತ್ತವೆ; ಆದರೆ ನಿಜವಾದ ಬದಲಾವಣೆ ಸಾಮಾಜಿಕ ಮನೋವೃತ್ತಿಯ ಪರಿವರ್ತನೆಯಿಂದ ಮಾತ್ರ ಸಾಧ್ಯ.
ಕುವೈತ್ ಮೇಲೆ ಭೀಕರ ದಾಳಿ ನಡೆಸಿದ ಇರಾನ್ ಮಿಲಿಟರಿ, ಅಮೆರಿಕ ಸೇನಾ ನೆಲೆಗೆ ಹಾನಿ ಆರೋಪ | Israel Military
ಇಸ್ರೇಲ್ ದಿಢೀರ್ ಇರಾನ್ ಮೇಲೆ ದಾಳಿ ಮಾಡಿದ ನಂತರ ಮಧ್ಯಪ್ರಾಚ್ಯ ಭಾಗದಲ್ಲಿ ಪರಿಸ್ಥಿತಿ ಅತ್ಯಂತ ಸೂಕ್ಷ್ಮ ಸ್ಥಿತಿಗೆ ತಲುಪಿದೆ. ಇರಾನ್ ಸೇನೆ ಕೂಡ ರೊಚ್ಚಿಗೆದ್ದು ಇದೀಗ ಮರುದಾಳಿ ಆರಂಭಿಸಿದ್ದು, ಈ ಮೂಲಕ ಎರಡೂ ಕಡೆ ಕ್ಷಿಪಣಿಗಳು ತೂರಾಡುತ್ತಿವೆ. ಇದರ ಜೊತೆಗೆ ಅಮೆರಿಕ ಸೇನೆಯ ಬೃಹತ್ &ಶಕ್ತಿಶಾಲಿ ಯುದ್ಧ ವಿಮಾನಗಳು ಕೂಡ ಅಬ್ಬರಿಸುತ್ತಾ ಇರಾನ್ ನೆಲವನ್ನು ಧೂಳ್
ಮಾಚನೂರಲ್ಲಿ ಚರಂಡಿ ನೀರಿನ ಸಮಸ್ಯೆ; ಸಾಂಕ್ರಾಮಿಕ ರೋಗದ ಭೀತಿಯಲ್ಲಿ ಜನತೆ
ಯಾದಗಿರಿ: ಜಿಲ್ಲೆಯ ವಡಗೇರಾ ತಾಲೂಕು ವ್ಯಾಪ್ತಿಯ ಮಾಚನೂರ ಗ್ರಾಮದಲ್ಲಿ ಚರಂಡಿ ನೀರು ರಸ್ತೆ ಮೇಲೆ ಹರಿದು ಪಾಚುಗಟ್ಟಿರುವ ಪರಿಣಾಮ ಗ್ರಾಮಸ್ಥರು ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ. ಬಿಳ್ಹಾರ ಗ್ರಾಪಂಗೆ ವ್ಯಾಪ್ತಿಗೆ ಸೇರಿದ ಈ ಗ್ರಾಮದಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ ಗಂಭೀರವಾಗಿ ಕಾಣಿಸಿಕೊಂಡಿದ್ದು, ಸಾಂಕ್ರಾಮಿಕ ರೋಗದ ಭೀತಿ ಹೆಚ್ಚಾಗಿದೆ. ಗ್ರಾಮದ ಪ್ರಮುಖ ರಸ್ತೆಗಳ ಮೇಲೆಯೇ ಚರಂಡಿ ನೀರು ಹರಿದು ಸಂಚಾರ ದುಸ್ತರವಾಗಿದೆ. ವರ್ಷಗಳಿಂದ ಸಮರ್ಪಕ ಸ್ವಚ್ಛತೆ ಕೈಗೊಳ್ಳದ ಕಾರಣ ನಿಂತ ನೀರು ಹಸಿರು ಬಣ್ಣಕ್ಕೆ ತಿರುಗಿದ್ದು, ಸೊಳ್ಳೆಗಳ ಉತ್ಪತ್ತಿಗೆ ಕಾರಣವಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಇದರಿಂದ ಡೆಂಗ್ಯೂ, ಮಲೇರಿಯಾ ಸೇರಿದಂತೆ ವಿವಿಧ ಸಾಂಕ್ರಾಮಿಕ ರೋಗಗಳು ಹರಡುವ ಆತಂಕ ಮನೆ ಮಾಡಿದೆ. ಗ್ರಾಮದ ಸರಕಾರಿ ಶಾಲಾ ಕಟ್ಟಡ ಶಿಥಿಲಾವಸ್ಥೆಯಲ್ಲಿದ್ದು, ತಡೆಗೋಡೆ ಕುಸಿದಿದೆ. ಶಾಲೆ ಮತ್ತು ಮಹಿಳೆಯರ ಶೌಚಾಲಯಗಳು ಬಳಕೆಗೆ ಅಯೋಗ್ಯವಾಗಿವೆ. ಶುದ್ಧ ಕುಡಿಯುವ ನೀರಿನ ಘಟಕ ದುರಸ್ತಿಗೊಳಿಸದಿರುವುದರಿಂದ ಜನರು ಪರದಾಡುತ್ತಿದ್ದಾರೆ. ಸಿಸಿ ರಸ್ತೆ ಹಾಗೂ ಸಮರ್ಪಕ ಚರಂಡಿ ವ್ಯವಸ್ಥೆ ಸೇರಿದಂತೆ ಅನೇಕ ಮೂಲ ಸೌಕರ್ಯಗಳ ಕೊರತೆ ಸ್ಪಷ್ಟವಾಗಿದೆ. ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ಹಲವು ಬಾರಿ ಸಮಸ್ಯೆ ತಂದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದುಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ತಕ್ಷಣ ಚರಂಡಿ ಸ್ವಚ್ಛಗೊಳಿಸಿ, ತಗ್ಗು ಪ್ರದೇಶಗಳನ್ನು ಮಣ್ಣಿನಿಂದ ಮುಚ್ಚಿ, ಬ್ಲೀಚಿಂಗ್ ಪೌಡರ್ ಸಿಂಪಡಣೆ ಹಾಗೂ ಫಾಗಿಂಗ್ ಮೂಲಕ ಸೊಳ್ಳೆ ನಿಯಂತ್ರಣ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ. ಮಾಚನೂರಗ್ರಾಮದಲ್ಲಿ ಮೂಲಸೌಕರ್ಯಗಳ ಕೊರತೆಯಿಂದ ಜನ ಸಂಕಷ್ಟ ಅನುಭವಿಸುತ್ತಿದ್ದಾರೆ. ಸಾರ್ವಜನಿಕರ ಆರೋಗ್ಯದೊಂದಿಗೆ ಚಲ್ಲಾಟ ಆಡುತ್ತಿರುವ ಅಧಿಕಾರಿಗಳನ್ನು ಎಚ್ಚರಿಸಲು ಸಿಇಒ ಹಾಗೂ ಡಿಸಿ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ಉಮೇಶ್ ಕೆ. ಮುದ್ನಾಳ, ಸಾಮಾಜಿಕ ಹೋರಾಟಗಾರ ಮಾಹಿತಿ ನೀಡದ ಅಧಿಕಾರಿಗಳು ಗ್ರಾಮದ ಕುಡಿಯುವ ನೀರು, ರಸ್ತೆ, ಚರಂಡಿ ಸೇರಿದಂತೆ ಹಲವು ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಮಾಹಿತಿ ಪಡೆಯಲು ಪತ್ರಿಕಾ ಪ್ರತಿನಿಧಿ ತಾಪಂ ಇಒ ಹಾಗೂ ಜಿಪಂ ಸಿಇಒ ಅವರನ್ನು ಸಂಪರ್ಕಿಸಲು ಯತ್ನಿಸಿದರೂ ದೂರವಾಣಿ ಸ್ವೀಕರಿಸಲಿಲ್ಲ ಎಂಬ ಆರೋಪ ಕೇಳಿಬಂದಿದೆ. ಜನ ಸಮಸ್ಯೆಗೆ ಸ್ಪಂದಿಸುವಲ್ಲಿ ಅಧಿಕಾರಿಗಳ ನಿರ್ಲಕ್ಷ್ಯ ಅಸಮಾಧಾನಕ್ಕೆ ಕಾರಣವಾಗಿದೆ. ಚರಂಡಿ ನೀರು ರಸ್ತೆ ಮೇಲೆ ಹರಿದು ಪಾಚುಗಟ್ಟಿರುವುದರಿಂದ ಸಂಚಾರ ಕಷ್ಟವಾಗಿದೆ. ಸೊಳ್ಳೆಗಳ ಕಾಟದಿಂದ ಸಾಂಕ್ರಾಮಿಕ ರೋಗದ ಭೀತಿ ಹೆಚ್ಚಾಗಿದೆ. ಅಧಿಕಾರಿಗಳು ತಕ್ಷಣ ಭೇಟಿ ನೀಡಿ ಸಮಸ್ಯೆ ಬಗೆಹರಿಸಬೇಕು. -ರವಿ, ಗ್ರಾಮಸ್ಥ
Bank Holidays: ಕರ್ನಾಟಕದಲ್ಲಿ ಮಾರ್ಚ್ ತಿಂಗಳ ಬ್ಯಾಂಕ್ ರಜೆಗಳ ಪಟ್ಟಿ
Karnataka bank holidays March 2026: ಕರ್ನಾಟಕದಲ್ಲಿ ಹಬ್ಬಗಳು ಮತ್ತು ವಾರಾಂತ್ಯದ ರಜೆಗಳು ಸೇರಿ ಮಾರ್ಚ್ ತಿಂಗಳಿನಲ್ಲಿ 10 ದಿನ ಕಾಲ ಬ್ಯಾಂಕ್ಗಳು ಮುಚ್ಚಲ್ಪಡುತ್ತವೆ. ಇದರಿಂದ ಬ್ಯಾಂಕ್ ಉದ್ಯೋಗಿಗಳಿಗೆ ಗುಡ್ ನ್ಯೂಸ್ ಸಿಕ್ಕಂತಾಗಿದೆ. ಮತ್ತೊಂದೆಡೆ, ಸಾಮಾನ್ಯ ಗ್ರಾಹಕರಿಗೆ ತೊಂದರೆ ಆಗುವ ಸಾಧ್ಯತೆಯಿದೆ. ಯಾವೆಲ್ಲ ದಿನ ಬ್ಯಾಂಕ್ ಬಂದ್ ಆಗಲಿವೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ. ಮಾರ್ಚ್ನಲ್ಲಿ ಯುಗಾದಿ,
‘ಲಚ್ಮನ ಸೈಕಲ್ ಪುರಾಣ’-ಪ್ರವಚನ ಸಣ್ಣ ಕಥಾ ಪ್ರಕಾರವು ಕನ್ನಡ ಸಾಹಿತ್ಯಕ್ಕೆ ಪ್ರವೇಶವಾದುದು ಪಾಶ್ಚತ್ಯ ಸಾಹಿತ್ಯ ಪ್ರೇರಣೆಯಿಂದ. ಪಂಜೆ ಮಂಗೇಶರಾಯರ ‘ನನ್ನ ಚಿಕ್ಕ ತಾಯಿ’ ಮೊದಲ ಸಣ್ಣ ಕಥೆ. 1900ನೇ ಇಸವಿಯ ಜುಲೈ ತಿಂಗಳ ‘ಸುವಾಸಿನಿ’ ಪತ್ರಿಕೆಯಲ್ಲಿ ಈ ಕಥೆ ಪ್ರಕಟವಾದ ಮೇಲೆ ಸಣ್ಣ ಕಥೆಗಳ ಯುಗವೇ ಪ್ರಾರಂಭವಾಯಿತು. ಒಂದೂ ಕಾಲು ಶತಮಾನದಿಂದಲೂ ಈ ಪ್ರಕಾರವು ಸಮೃದ್ಧವೂ, ಶ್ರೀಮಂತವೂ ಆಗಿ ಬೆಳೆಯುತ್ತಲೇ ಇದೆ. ಈ 21ನೇ ಶತಮಾನದಲ್ಲಿ ಬರೆಯುತ್ತಿರುವ ಯುವ ಸಾಹಿತಿಗಳು ಕನ್ನಡ ಕಥಾ ಲೋಕಕ್ಕೆ ವಿಶಿಷ್ಟ ಆಕರ್ಷಣೆ, ಗತ್ತು, ಗೈರತ್ತುಗಳನ್ನು ನೀಡಿದ್ದಾರೆ. ಯಾವುದೇ ಸಾಹಿತ್ಯ ಪ್ರಕಾರವು ಸಹೃದಯರಲ್ಲಿ ಭಾವದೀಪ್ತಿಗೊಳ್ಳುವುದರ ಜೊತೆಗೆ, ಹೊಸ ಚಿಂತನೆಗಳಿಂದ ಬೌದ್ಧಿಕ ಅರಿವು ವಿಸ್ತರಿಸಬೇಕು. ಇದು ನಮ್ಮದೇ ಕಥೆ ಎಂಬ ಸಣ್ಣ ಅನುಭೂತಿ ಓದುಗನಲ್ಲಿ ಉಂಟಾದರೆ ಲೇಖಕ ಧನ್ಯನೆಂದು ಭಾವಿಸುತ್ತಾನೆ. ಇಂತಹ ಒಂದು ಅನುಭೂತಿಯನ್ನು ಉಂಟು ಮಾಡಿದ ಕಥೆಗಾರ ಮೋಹನ ಬಣಕಾರ ಇವರ ಚೊಚ್ಚಲ ಕಥಾ ಸಂಕಲನ ‘ಲಚ್ಮನ ಸೈಕಲ್ ಪುರಾಣ ಮತ್ತು ಇತರ ಕಥೆಗಳು’ ಎಂಬ ಕೃತಿಯಲ್ಲಿ 10 ಕಥೆಗಳಿವೆ. ನಾಟಕ ಕಂಪೆನಿ, ಪೊಲೀಸ್ ಅಜ್ಜಿ, ಹೀಗೊಂದು ಮದುವೆ ಮುಂತಾದವುಗಳು ಸ್ತ್ರೀ ಕೇಂದ್ರಿತವಾದವುಗಳಾಗಿದ್ದು ರಾಜೂ ಕಾಕಾ, ಒಂದು ಬಾಟಲಿನ ಕಥೆ, ಆಚಾರವಿಲ್ಲದ ನಾಲಿಗೆ, ಲಚ್ಮನ ಸೈಕಲ್ ಪುರಾಣ ಮುಂತಾದವುಗಳು ಪುರುಷ ಕೇಂದ್ರಿತವಾದವುಗಳಾಗಿವೆ. ಮುಗ್ಧ ಮಗುವನ್ನು ಕೇಂದ್ರವಾಗಿಸಿದ. ‘ಎ.ಬಿ.ಸಿ.ಡಿ.’ ಕಥೆ ಮತ್ತು ‘ಲೈಟ್ ಆಫ್ ಪ್ಲೀಸ್’ ಸಲಿಂಗ ಕಾಮದ ಬಗ್ಗೆ ಮಾತನಾಡುತ್ತದೆ. ಕಥೆಗಳಿಗೆ ವಸ್ತುವನ್ನು ಆಯ್ಕೆ ಮಾಡುವುದರಲ್ಲಿಯೂ, ಅದನ್ನು ಪ್ರಸ್ತುತ ಮಾಡಿಸಿದ ರೀತಿಯಲ್ಲಿಯೂ ಲೇಖಕರ ಕೌಶಲ ಮತ್ತು ಪ್ರತಿಭೆಯನ್ನು ಮೆಚ್ಚಲೇಬೇಕು. ‘ಹೇಳುವುದು ಶಾಸ್ತ್ರ, ಇಕ್ಕುವುದು ಗಾಳ’ ಎಂಬ ಗಾದೆ ಮಾತಿನಂತೆ ಊರಿಗೆಲ್ಲ ಉಪದೇಶ ಮಾಡುವ ಶಿಕ್ಷಕರ ಮಗನೇ ಕುಡುಕನಾಗಿ ಮಾಡುತ್ತಿದ್ದ ಅವಾಂತರಗಳ ಅನಾವರಣವನ್ನು ‘ಆಚಾರ ಹೇಳುವ ನಾಲಿಗೆ’ ಕಥೆಯಲ್ಲಿ ಮಾಡಲಾಗಿದೆ. ಗಾಜಿನ ಮನೆಯೊಳಗೆ ಕೂತವರು ಇತರರ ಮನೆಗೆ ಕಲ್ಲು ಹೊಡೆಯಬಾರದು ಎಂಬ ವಿವೇಕವನ್ನು ಮೂಡಿಸುತ್ತದೆ. ಪರರ ಸೊತ್ತುಗಳನ್ನು ಆಶಿಸಬಾರದು ಎಂಬುದನ್ನು ಯುಕ್ತಿಪೂರ್ವಕವಾದ ಘಟನೆಗಳಿಂದ ಹೆಣೆಯಲಾದ ಕಥೆ ‘ಅವಲಕ್ಕಿ ಸರ’. ಕಳೆದುಕೊಂಡ ಅಮೂಲ್ಯ ವಸ್ತುವನ್ನು ದೇವರ ಹುಂಡಿಯಿಂದಲೂ ಹೊರತೆಗೆದು ನೀಡಿ ಸಂತೈಸಿದ ರೀತಿ ಅನನ್ಯ. ಇದು ಸಾಧ್ಯವೇ ಎಂಬ ಪ್ರಶ್ನೆ ಓದುಗನಲ್ಲಿ ಮೂಡಿಸಿದರೂ, ನೊಂದವರನ್ನು ರಕ್ಷಿಸುವ ಹೊಣೆ ದೇವರಿಗಿರಬೇಕು ಎಂಬುದನ್ನು ಸಾರುತ್ತದೆ. ಹುಂಡಿಯನ್ನು ಒಡೆದು ಅವಲಕ್ಕಿ ಸರವನ್ನು ಕಳೆದುಕೊಂಡ ನೊಂದವರಿಗೆ ನೀಡಿದ ಅರ್ಚಕರೇ ನಮಗೆ ದೇವರಾಗಿ ಕಾಣುತ್ತಾರೆ. ‘ಹೀಗೊಂದು ಮದುವೆ’ಯ ವಸ್ತುವೂ ವಿಶಿಷ್ಟವಾಗಿದೆ. ಹೆತ್ತವರ ಒತ್ತಾಯಕ್ಕೆ ಮಣಿದ ಆಧುನಿಕ ಯುವಕ- ಯುವತಿಯರು ಮದುವೆಗೆ ಸಮ್ಮತಿಸದೆ ಒಂದು ವರ್ಷದವರೆಗೂ ಸಂಪರ್ಕಿಸದೆ ದೂರ ಉಳಿದವರು ಬಳಿಕ ಮದುವೆಗೆ ಒಪ್ಪಿದ್ದು ಹೆತ್ತವರಿಗೆ ಸಂತಸದ ವಿಷಯವಾಯಿತು. ಆದರೆ ಯುವತಿಯು ಚಾಣಾಕ್ಷತನದಿಂದ ತನ್ನ ಪ್ರೇಮಿಯೊಂದಿಗೆ ವಿದೇಶಕ್ಕೆ ಹಾರಲು ತಂತ್ರ ಹೂಡಿದ್ದು, ಯುವಕನನ್ನು ಕಂಗೆಡಿಸುತ್ತದೆ. ಯುವಕನ ಮುಗ್ಧತೆಯನ್ನು ದುರುಪಯೋಗ ಪಡಿಸಿಕೊಂಡ ಯುವತಿಯ ಕೃತ್ಯಕ್ಕೆ ಬೆರಗಾಗುವ ಸರದಿ ನಮ್ಮದು. ಸಲಿಂಗ ಕಾಮಿಗಳು ಯಾವ ಸ್ಥಳದಲ್ಲಿ, ಯಾವ ಸಮಯದಲ್ಲಿ, ಯಾವ ರೀತಿಯಲ್ಲಿ ತಮ್ಮ ತೀಟೆಯನ್ನು ತೀರಿಸಿಕೊಳ್ಳುತ್ತಾರೆ ಎಂಬುದನ್ನು ತಿಳಿಸುವ ಕಥೆಯೇ ‘ಲೈಟ್ ಆಫ್ ಪ್ಲೀಸ್’. ಈ ಕಥೆಯಲ್ಲಿ ಸಮಾಜವನ್ನು ಎಚ್ಚರಿಸುವ ಹಿತ ನುಡಿಗಳಿವೆ. ‘ಲಚ್ಮನ ಸೈಕಲ್ ಪುರಾಣ’ ಹಳ್ಳಿಯ ಮುಗ್ಧ ಯುವಕನ ಪ್ರೀತಿ ಮತ್ತು ಸ್ವಾಮಿ ನಿಷ್ಠೆಯನ್ನು ಸೊಗಸಾಗಿ ವರ್ಣಿಸಲಾಗಿದೆ. ಕೃಷಿಕ ಕುಟುಂಬದ ಪ್ರಾಣಿ ಪ್ರೀತಿ, ಅದು ಕಾಯಿಲೆ ಬಿದ್ದಾಗ ಪಶು ವೈದ್ಯರನ್ನು ಸಂಪರ್ಕಿಸಲು ಪಡುವ ಸಂಕಷ್ಟಗಳು, ತನಗೆ ಸೈಕಲ್ ಬಿಡಲು ಬಾರದಿದ್ದರೂ, ಸೈಕಲ್ ಕೊಂಡು ಹೋಗು ಎಂಬ ಮಾತನ್ನೇ ನಂಬಿ ಸೈಕಲ್ ದೂಡಿಕೊಂಡು ಹೋದ ಆಳು ಲಚ್ಮನ ನಿಷ್ಠೆಯನ್ನು ನಾವು ಗೌರವಿಸುವಂತೆ ಮಾಡುತ್ತದೆ. ವಿದ್ಯಾರ್ಥಿಗಳು ವಾಸವಿದ್ದ ಪಕ್ಕದ ಮನೆಗೆ ಬಾಡಿಗೆಗೆ ಬಂದ ಅಜ್ಜಿ ಈ ಹುಡುಗರೊಂದಿಗೆ ಪ್ರೀತಿಯನ್ನು ಬೆಳೆಸಿಕೊಂಡು ಅವರಲ್ಲಿ ಶಿಸ್ತನ್ನು ರೂಪಿಸಿದ ರೀತಿ ಖುಷಿ ಕೊಡುತ್ತದೆ. ಅದೇ ಅಜ್ಜಿ ಒಂದು ದಿನ ಮಲಗಿದಲ್ಲೇ ನಿಧನರಾದಾಗ ಈ ಹುಡುಗರು ನಿಜವಾಗಿ ತಾವು ಅನಾಥರಾದಂತೆ ಕಂಬನಿ ತುಂಬಿ ವಿದಾಯ ಹೇಳಿದ್ದು ಹೃದಯಸ್ಪರ್ಶಿಯಾಗಿದೆ. ‘ಪೊಲೀಸ್ ಅಜ್ಜಿ’ಯ ಈ ಕತೆ ನಮ್ಮ ಮನಸ್ಸನ್ನು ತಟ್ಟುವಂತೆ ಮಾಡುತ್ತದೆ. ಸಹ ಪ್ರಯಾಣಿಕರೊಂದಿಗೆ ಸಹನೆ ಇಲ್ಲದೆ ವರ್ತಿಸುವ ನಡವಳಿಕೆಯು ಮನುಷ್ಯ ಪ್ರೀತಿಯ ಕೊರತೆಯನ್ನು ಹೇಳುತ್ತಾ ಸಾಮಾಜಿಕ ಸಭ್ಯತೆಯು ಸಮಾಜದಲ್ಲಿ ನಮ್ಮ ಅಸ್ತಿತ್ವಕ್ಕೆ ಮತ್ತು ನೆಮ್ಮದಿಗೆ ಅತ್ಯವಶ್ಯಕವಾಗಿವೆ ಎಂಬುದನ್ನು ವ್ಯಕ್ತಪಡಿಸುವ ಕಥೆಯೇ ‘ಒಂದು ಬಾಟಲಿನ ಕಥೆ’. ನೀರಿನ ಬಾಟಲ್ ಕೆಳಗೆ ಬಿದ್ದ ಕಾರಣಕ್ಕೆ ಕೆರಳಿದ ನಾಯಕಿಯೇ ಮುಂದೆ ಅಪಘಾತದ ದುರಂತದಲ್ಲಿ ತತ್ತರಿಸುತ್ತಾ ಅದೇ ಬಾಟಲಿಯ ನೀರನ್ನು ಬಯಸುವ ಘಟನೆಯ ಚಿತ್ರಣವು ಮನೋಜ್ಞವಾಗಿದೆ. ಸಾಮಾಜಿಕ ಎಚ್ಚರದ ಜೊತೆಗೆ ಮನುಷ್ಯರ ಮಧ್ಯೆ ಹೊಗೆಯಾಡುತ್ತಿರುವ ಅಪನಂಬಿಕೆಗಳ ದುಷ್ಪರಿಣಾಮಗಳನ್ನು ಈ ಕಥೆ ಸುಂದರವಾಗಿ ಕಟ್ಟಿಕೊಟ್ಟಿದೆ. ಕುಟುಂಬಕ್ಕಾಗಿ ತನ್ನ ಸರ್ವಸ್ವವನ್ನು ತ್ಯಾಗ ಮಾಡಿದ ರಾಜೂ ಕಾಕನ ಅಂತ್ಯವು ಓದುಗರ ಕಣ್ಣು ತೇವಗೊಳ್ಳುವಂತೆ ಮಾಡುತ್ತದೆ. ಮನೆಯ ಹೆಂಗಸರು ಕಾಕನ ಮೇಲೆ ಹೊರಿಸಿದ ಆರೋಪಗಳಿಂದ ಘಾಸಿಗೊಂಡ ಕಾಕಾ ಆತ್ಮಹತ್ಯೆ ಮಾಡಿಕೊಂಡು ಸಾಯುವುದಕ್ಕೆ ಅವನು ಸಾಕಿದ ಕುಟುಂಬವೇ ಹೊಣೆಯೆಂಬುದನ್ನು ಲೇಖಕ ಸ್ಪಷ್ಟಪಡಿಸಿದ ರೀತಿಗೆ ಸಹೃದಯರು ಅಭಿನಂದಿಸಲೇ ಬೇಕು. ‘ರಾಜೂ ಕಾಕಾ ಹೋಗಿಬಿಟ್ಟ’ ಎಂಬ ಕಥೆಯು ರಾಜೂನ ವ್ಯಕ್ತಿತ್ವವನ್ನು ಅಪೂರ್ವ ರೀತಿಯಲ್ಲಿ ಕಟ್ಟಿಕೊಟ್ಟಿದೆ. ‘ಎ.ಬಿ.ಸಿ.ಡಿ.’ ಕಥೆಯು ಮಕ್ಕಳ ಮುಗ್ಧ ಪ್ರಪಂಚವನ್ನು ಅದರಲ್ಲೂ ಪ್ರಾಣಿಗಳ ಮೇಲಿನ ಪ್ರೀತಿಯನ್ನು, ಸೂಕ್ಷ್ಮ ರೀತಿಯ ಸ್ಪಂದನವನ್ನು ಸೊಗಸಾಗಿ ಚಿತ್ರಿಸಿದೆ. ‘ನಾಟಕ ಕಂಪೆನಿ’ ಕಥೆಯಲ್ಲಿ ಆಧುನಿಕ ಉದ್ಯೋಗಸ್ಥ ಮಹಿಳೆಯರು ಮಾಡುವ ಕೆಲಸಗಳ್ಳತನದ ಪ್ರಸಂಗಗಳನ್ನು ಲಲಿತ ಪ್ರಬಂಧ ರೀತಿಯಲ್ಲಿ ಸುಂದರವಾಗಿ ಹಣೆಯಲ್ಪಟ್ಟಿದೆ. ಒಟ್ಟಾರೆಯಾಗಿ ಈ ಹತ್ತು ಕಥೆಗಳಲ್ಲಿ ಹೆಚ್ಚಿನವುಗಳು ಪ್ರಸ್ತುತಿಗೊಂಡದ್ದು ಸಂಭಾಷಣೆಗಳ ಮೂಲಕ. ಇದು ಈ ಸಂಕಲನದ ವಿಶಿಷ್ಟ ಶೈಲಿಯಾಗಿದೆ. ಲೇಖಕರು ಮಾನವ ಮನಸ್ಸಿನ ತುಡಿತ-ಮಿಡಿತಗಳಿಗೆ ಸ್ಪಂದಿಸಿದ ರೀತಿಯೂ ಗಮನಾರ್ಹವಾಗಿದೆ. ಈ ಸಂಕಲನದ ಹಲವು ಕಥೆಗಳು ತುಷಾರ, ಮಯೂರ ಮುಂತಾದ ಪತ್ರಿಕೆಗಳಲ್ಲಿ ಪ್ರಕಟಗೊಂಡಿದ್ದು ಜನ ಮೆಚ್ಚುಗೆಗಳಿಸಿವೆ. ಲೇಖಕ ಮೋಹನ ಬಣಕಾರ ಅವರಿಂದ ಕನ್ನಡ ಕಥಾಲೋಕಕ್ಕೆ ಇನ್ನೂ ಉತ್ಕೃಷ್ಟವಾದ ಕಥೆಗಳನ್ನು ನಿರೀಕ್ಷಿಸಬಹುದು. ಪ್ರಕಾಶಕರಾದ ಬೆನಕ ಬುಕ್ಸ್ ಬ್ಯಾಂಕ್ ಅವರಿಗೂ ನಮ್ಮ ಅಭಿನಂದನೆಗಳು. ಈ ಕೃತಿಯ ಮುಖಬೆಲೆ: 230 ರೂ. ಪ್ರಕಾಶಕರು: ಬೆನಕ ಬುಕ್ಸ್ ಬ್ಯಾಂಕ್, ಯಳಗಲ್ಲು, ಕೋಡೂರು ಅಂಚೆ, 577418 ಹೊಸನಗರ (ತಾ.), ಶಿವಮೊಗ್ಗ ಜಿಲ್ಲೆ, ಮೊ:7338437666
ಆಲಮೇಲದಲ್ಲಿ ಬಸವೇಶ್ವರ ವೃತ್ತ ನಿರ್ಲಕ್ಷ್ಯ
ಕಾಯಕಲ್ಪಕ್ಕೆ ಭಕ್ತರ ಒತ್ತಾಯ; ತಕ್ಷಣ ಕ್ರಮಕ್ಕೆ ಆಗ್ರಹ
ಇಂದಿನಿಂದ ಕಲಬುರಗಿಯಲ್ಲಿ ಮಹಿಳಾ ಐಟಿಎಫ್ ಟೆನಿಸ್ ಟೂರ್ನಿ
11ಕ್ಕೂ ಹೆಚ್ಚು ವಿದೇಶಿ ಆಟಗಾರ್ತಿಯರು ಭಾಗಿ: ವಿನ್ನರ್ಗೆ 30 ಸಾವಿರ ಡಾಲರ್!
34 -36 ಡಿಗ್ರಿ ಸೆಲ್ಸಿಯಸ್ ಉರಿ ಬಿಸಿಲು, ಸೆಖೆ ಭುಗಿಲು ; ಫೆಬ್ರವರಿಯಲ್ಲೇ ಉರಿಯುತ್ತಿದೆ ಹಾವೇರಿ
ಹಾವೇರಿ ಜಿಲ್ಲೆಯಾದ್ಯಂತ ಬೇಸಿಗೆ ಆರಂಭದಲ್ಲೇ ನೀರಿನ ಕೊರತೆ ಎದುರಾಗಿದೆ. ಬಹುತೇಕ ಕಡೆ ಬೋರ್ವೆಲ್ ಮತ್ತು ತೆರೆದ ಬಾವಿಗಳ ನೀರಿನ ಮಟ್ಟ ಕುಸಿತ ಕಂಡುಬಂದಿದೆ. ಒಂದೆಡೆ ನೀರಿನ ಅಭಾವ ಮತ್ತೊಂದೆಡೆ ಸುಡು ಬಿಸಿಲಿಗೆ ಬೆಳೆಗಳು ಕಮರುತ್ತಿವೆ. ರೈತರು ನೀರಾವರಿ ನಿರ್ವಹಣೆಯಲ್ಲಿ ಹೆಚ್ಚು ಜಾಗ್ರತೆ ವಹಿಸುವ ಅಗತ್ಯವಿದೆ ಎಂದು ಕೃಷಿ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಅಕ್ಷತಾ ಎಂಬ ಕವಯಿತ್ರಿಯೂ ರಾಧಕ್ಕ ಎಂಬ ಟೀಚರೂ..!
ಅಣಶಿಯ ಶಾಲೆ ಕೇವಲ ಒಂದು ವಿದ್ಯಾಲಯವಲ್ಲ; ಅದು ಬದುಕಿನ ಪಾಠಶಾಲೆ. ಅಲ್ಲಿ ಮಕ್ಕಳ ಹೆಜ್ಜೆಗೊಂದು ಕಥೆ, ಕಣ್ಣೀರಿಗೊಂದು ಅರ್ಥ, ನಗುವಿಗೊಂದು ಭವಿಷ್ಯ ಮತ್ತು ಈ ಎಲ್ಲದ ಮಧ್ಯೆ ನಿಂತಿರುವ ರಾಧಕ್ಕ - ಕಾಡಿನ ನಡುವೆ ಹೊತ್ತಿ ಉರಿಯುವ ಒಂದು ಬೆಳಕಿನ ಮೌನದ ದೀಪವೇ ಸರಿ. ಮೊನ್ನೆ ಜೋಯಿಡಾ ಕಾಡಿನೊಳಗಡೆ ಕನ್ನಡ ಶಾಲೆಗಳಿಗೆ ಸ್ನೇಹಿತರು ಅಕ್ಷರ ಸಾಮಗ್ರಿಗಳನ್ನು ಹಂಚುತ್ತಿದ್ದ ಸಂದರ್ಭ. ಒಂದು ಶಾಲೆ ಮುಗಿದರೆ ಮತ್ತೊಂದು ಶಾಲೆ. ಹಸಿರು ಕಾಡಿನ ಮಧ್ಯೆ ಅಡಗಿಕೊಂಡ ಪುಟ್ಟ ಪುಟ್ಟ ಸರಕಾರಿ ಶಾಲೆಗಳವು. ಅಲ್ಲಿ ಮಕ್ಕಳ ಕಣ್ಣುಗಳಲ್ಲಿ ಕನಸು, ಕೈಯಲ್ಲಿ ಕಾಗದ-ಪೆನ್ನು, ಮನಸ್ಸಿನಲ್ಲಿ ಕಲಿಕೆಯ ಭರವಸೆ ಎದ್ದು ಕಾಣುತ್ತಿತ್ತು. ಆ ಓಡಾಟದ ಮಧ್ಯೆ ನನ್ನ ಹುಡುಕಾಟ ಒಂದೇ. ‘‘ಈ ಕಾಡಿನೊಳಗಡೆ ಎಲ್ಲಾದರೂ ರಾಧಕ್ಕೋರು ಸಿಗುತ್ತಾರಾ?’’ ಎಂದು. ಕಾರಣ, ಕನ್ನಡ ಮಾಸಿಕ ಒಂದರಲ್ಲಿ ಕೆಲವು ವರ್ಷಗಳ ಹಿಂದೆ ಕಂತು ಕಂತುಗಳಲ್ಲಿ ಪ್ರಕಟವಾದ ಕಾಡೊಳಗಡೆಯ ಶಿಕ್ಷಕಿಯೊಬ್ಬರು ಬರೆದ ಅಪರೂಪದ ಅನುಭವ ಕಥನವನ್ನು ಓದಿದ್ದೆ. ಹಾಗಂತ ಅದು ಕೇವಲ ಶಿಕ್ಷಕಿಯೊಬ್ಬರ ದಿನಚರಿ ಅಲ್ಲ; ಅದು ಕಾಡುಮಕ್ಕಳ ಬದುಕಿನ ಪಾಠ. ಬುಡಕಟ್ಟು ಜನಾಂಗದ ಮಕ್ಕಳ ಕೈ ಹಿಡಿದು ಕಲಿಕೆಯ ಹಾದಿಯಲ್ಲಿ ನಡೆಸುವ ತಪಸ್ಸಿನ ಕಥೆ. ಆ ಅಂಕಣ ಓದಿದ ಮೇಲೆ, ಆ ರಾಧಕ್ಕ ನನ್ನೊಳಗೆ ಹೀರೋ ಆಗಿಬಿಟ್ಟಿದ್ದರು. ಸಿದ್ಧಿ, ಹಾಲಕ್ಕಿ, ಕುಡುಬಿ-ಈ ಜನಾಂಗಗಳ ಸಾಂದ್ರತೆಯೊಳಗೆ ಇರುವ ಜೋಯಿಡಾ ಕಾಡು, ಅಲ್ಲಿ ವಿದ್ಯಾಭ್ಯಾಸ ಎಂದರೆ ಪಠ್ಯಪುಸ್ತಕದ ಪಾಠವಲ್ಲ; ಅದು ಬದುಕಿನೊಂದಿಗೆ ಹೋರಾಡುವ ಕಲೆ. ಸರಿಯಾದ ವಿದ್ಯುತ್ ಇಲ್ಲ, ನಿರಂತರ ಸುರಿಯುವ ಮಳೆ, ಕೆಲವೊಮ್ಮೆ ಮೊಬೈಲ್ ರೇಂಜ್ ಕೂಡ ಇಲ್ಲದ ಪ್ರದೇಶ. ಒಂದೇ ಒಂದು ಪೆಟ್ರೋಲ್ ಬಂಕ್ ಇರುವ ಇಡೀ ತಾಲೂಕು. ರಸ್ತೆಗಳೇ ವಿರಳ. ಕಾಡುಪ್ರಾಣಿಗಳ ಹಾವಳಿ, ನಿರಾಸಕ್ತಿಯ ಪೋಷಕರು. ಇಂತಹ ಪರಿಸ್ಥಿತಿಯಲ್ಲಿ ಪ್ರತಿದಿನ ಮಕ್ಕಳನ್ನು ತರಗತಿಯಲ್ಲಿ ಕೂರಿಸಿ ಪಾಠ ಹೇಳುವುದು ಕಡಿಮೆ ಪರಿಶ್ರಮವಲ್ಲ; ಅದು ತಪಸ್ಸೇ. ಅಂಥ ಜಾಗದಲ್ಲಿ ಹುಟ್ಟೂರು ಬಿಟ್ಟು, ಮೂಲಭೂತ ಸೌಲಭ್ಯಗಳಿಲ್ಲದ ಶಾಲೆಗಳಲ್ಲಿ ಸೇವೆ ಮಾಡುತ್ತಿರುವ ಶಿಕ್ಷಕರು ನಿಜಕ್ಕೂ ಮೌನ ಯೋಧರು. ಶಿವಮೊಗ್ಗ, ಕುಮಟಾ, ಕಾರವಾರ, ಹಳಿಯಾಳದಂತಹ ನಗರಗಳಿಂದ ಬಂದು, ಕಾಡಿನೊಳಗಡೆ ಮಕ್ಕಳ ಭವಿಷ್ಯ ಕಟ್ಟಲು ತಮ್ಮ ಬದುಕಿನ ಸುಖವನ್ನು ಪಣಕ್ಕಿಟ್ಟಿರುವ ಈ ಶಿಕ್ಷಕರ ಆದರ್ಶಗಳ ಬಗ್ಗೆ ಒಂದು ಪುಸ್ತಕವೇ ಬರಬೇಕು. ಅಂಥ ಕಾಡೊಳಗಡೆ ರಾಧಕ್ಕರ ಹುಡುಕಾಟಕ್ಕೆ ವಿಶೇಷ ಕಾರಣವಿತ್ತು. ಅವರು ಬರೆದ ಅಂಕಣದಲ್ಲಿ, ಊರೊಟ್ಟಿಗೆ ಸೇರಿ ಶಾಲೆ ಕಟ್ಟಿದ ಕಥೆಯನ್ನು ವಿವರಿಸಿದ್ದರು. ಅದರಲ್ಲಿ ಓದುಗ ಅಭಿಮಾನಿಗಳು ಕೊಟ್ಟ ಪುಸ್ತಕಗಳು ಗ್ರಂಥಾಲಯ ತುಂಬಿದ ಕಥೆ ಇತ್ತು. ದಾನಿಗಳು ಕೊಟ್ಟ ಸಹಾಯದ ಸಾಕ್ಷಿಗಳು ಶಾಲೆ ತುಂಬಿತ್ತು. ಊರಿನ ಜೊತೆ ಬೆಸೆದುಕೊಂಡ ಸಂಬಂಧ, ಮಕ್ಕಳನ್ನು ಊರಿನ ನಾಳೆಯ ಮಕ್ಕಳಾಗಿ ರೂಪಿಸಬೇಕೆನ್ನುವ ದೂರದೃಷ್ಟಿ, ಶಿಕ್ಷಣವನ್ನು ಬದುಕಿನ ಭಾಗವಾಗಿಸುವ ಅವರ ಕನಸು-ಇವೆಲ್ಲ ನನ್ನ ಮನಸ್ಸನ್ನು ತೀವ್ರವಾಗಿ ಕಾಡಿತ್ತು. ಅಂತೂ ಮೊನ್ನೆ ದಿನ, ನಮ್ಮ ಬಸ್ಸು ಅಣಶಿ ಶಾಲೆಯ ಅಂಗಳದಲ್ಲಿ ನಿಂತಾಗ, ರಾಧಕ್ಕ ಸಿಕ್ಕೇ ಬಿಟ್ಟರು. ಅವರ ನಡಿಗೆ, ವೇಗ, ದೃಢತೆ, ಹೊಣೆಗಾರಿಕೆಯ ಹೆಜ್ಜೆಗಳು. ಹೇಳದೇ ಹೇಳುವಂತೆ, ಈ ಶಾಲೆಯ ಮುಖ್ಯೋಪಾಧ್ಯಾಯಿನಿ ಅವರೇ ಅನ್ನುವ ಭಾವವಿತ್ತು. ನಮ್ಮವರು ತಂದ ಲೇಖನ ಸಾಮಗ್ರಿ, ಕುಣಬಿ ಮಕ್ಕಳ ತಾಯಂದಿರಿಗೆ ಸೀರೆ, ಮಕ್ಕಳಿಗೆ ತಿಂಡಿಗಳನ್ನು ಹಂಚುವ ಮುಂಚೆ, ರಾಧಕ್ಕ ನಮ್ಮನ್ನೆಲ್ಲ ಉದ್ದೇಶಿಸಿ ಮಾತನಾಡಲು ನಿಂತರು. ಅದಕ್ಕೂ ಮುಂಚೆ, ಕುಣಬಿ ಹುಡುಗನೊಬ್ಬ ದಾಸರ ಪದವನ್ನು ಹಾಡಿದ. ಕಾಡಿನ ಮೌನದೊಳಗೆ ಕೀರ್ತನೆಯ ಸ್ವರ ಹರಿದಾಗ, ಖಂಡಿತವಾಗಿಯೂ ಆ ಶಾಲೆ ಯಾವುದೋ ವಿಶಿಷ್ಟ ಸ್ಥಳವೆನಿಸಿತು. ರಾಧಕ್ಕನ ಮುನ್ನುಡಿ, ಆ ಶಾಲೆಯನ್ನು ನನ್ನ ಕಣ್ಣಲ್ಲಿ ಮತ್ತಷ್ಟು ಎತ್ತರಕ್ಕೆ ಏರಿಸಿತು. ಕಾಡೊಳಗಡೆಯ ಅಂಗಳದಲ್ಲಿ ಹಳೆಯ ಕಟ್ಟಡ ಕಳಚಿಕೊಂಡು, ಹೊಸ ಶಾಲಾ ಕಟ್ಟಡ ಎದ್ದಿತ್ತು. ಅದರೊಳಗೆ ಕಾಲಿಟ್ಟಾಗ, ನಾನು ಬೆರಗಾದೆ. ಇಡೀ ಆವರಣ ಒಂದು ಕಲಾ ಶಾಲೆಯಾಗಿ ಪರಿವರ್ತಿತವಾಗಿತ್ತು. ಗೋಡೆಯ ಮೇಲೆ ಅಂಗೈಯಗಳ ಖಾಲಿ ಜಾಗವೇ ಇಲ್ಲ. ಮಕ್ಕಳ ಚಿತ್ರಗಳು, ಕೈಚಾಣದ ಕಲಾಕೃತಿಗಳು, ವಿಜ್ಞಾನ ಮಾದರಿಗಳು, ಕೃಷಿ ಉಪಕರಣಗಳ ಪುಟ್ಟ ಪುಟ್ಟ ಅಣಕು ರೂಪಗಳು. ಮಣ್ಣು ಮರ ತೆಂಗಿನ ನಾರು ಚಿಪ್ಪಿಯಿಂದ ಮಾಡಿದ ಕತ್ತಿ, ಕುಡುಗೋಲು, ನೇಗಿಲು, ಮುಟ್ಟಾಳೆ ಇನ್ನೂ ಏನೇನೋ. ಇಲ್ಲಿ ಓದುವವರು ಓದಿಸುವವರೆಲ್ಲ ಮಣ್ಣಿನ ಮಕ್ಕಳು ಅನ್ನೋದಕ್ಕೆ ನೂರಾರು ಸಾಕ್ಷಿಗಳು ಅಲ್ಲಿ ನಿಂತಿದ್ದವು. ರಾಧಕ್ಕನವರು ನನ್ನ ಕೈಗೆ ಪೆನ್ನು ಕೊಟ್ಟು, ‘‘ಇಲ್ಲೊಂದು ಸೈನ್ ಮಾಡಿ’’ ಎಂದರು. ಗೋಡೆಯ ಮೇಲೆ ನಾನು ಕಪ್ಪುಮಸಿಯಲ್ಲಿ ‘ದೇರ್ಲ’ ಎಂದು ಕನ್ನಡದಲ್ಲಿ ಸಹಿ ಹಾಕುತ್ತಿದ್ದಾಗ, ಅದರ ಆಚೆ-ಈಚೆ ಇದ್ದ ಕನ್ನಡದ ಸಹಿಗಳು ಕಣ್ಣಿಗೆ ಬಿದ್ದವು-ಐಎಎಸ್ ಅಧಿಕಾರಿಗಳು, ಸಾಹಿತಿಗಳು, ವಿಜ್ಞಾನಿಗಳು, ಸೈನಿಕರು, ಶಿಕ್ಷಕರು, ಚಿಂತಕರು... ನಾಗರಿಕ ಜಗತ್ತಿನ ದೂರದ ಅಣಶಿ ಶಾಲೆಗೆ ಬಂದು ಹೋದವರೇ. ನಾವು ಹಿಂದಿನ ದಿನ ನೋಡಿದ ಮೂರು-ನಾಲ್ಕು ಶಾಲೆಗಳ ಒಟ್ಟು ಮಕ್ಕಳ ಸಂಖ್ಯೆಗಳಿಗಿಂತ, ಇಲ್ಲಿ ಒಂದೇ ಶಾಲೆಯಲ್ಲಿ 80ಕ್ಕಿಂತಲೂ ಹೆಚ್ಚು ಮಕ್ಕಳಿದ್ದರು. ಎಲ್ಲರೂ ಕುಣುಬಿ ಮಕ್ಕಳೇ. ಅವರ ಆಸಕ್ತಿ, ಅಭಿರುಚಿ, ಕಲೆಯ ಪ್ರೀತಿ ಅಳೆಯಲು ಹೆಚ್ಚು ಸಮಯ ಬೇಕಾಗಿರಲಿಲ್ಲ. ಒಬ್ಬ ಶಿಕ್ಷಕ-ಶಿಕ್ಷಕಿ ಮನಸ್ಸು ಮಾಡಿದರೆ ಏನೂ ಮಾಡಬಹುದು ಅನ್ನೋದಕ್ಕೆ, ಈ ಅಣಶಿ ಶಾಲೆಯೇ ಸಾಕ್ಷಿ. ಅಂದಹಾಗೆ, ಈ ರಾಧಕ್ಕ ಯಾರು? ಅವರ ನಿಜವಾದ ಹೆಸರೇನು? ನಿಮಗೂ ಕುತೂಹಲ ಇರಬೇಕಲ್ಲ? ಕನ್ನಡದ ಶ್ರೇಷ್ಠ ಲೇಖಕಿ, ಕವಯಿತ್ರಿ, ಕತೆಗಾರ್ತಿ ಅಕ್ಷತಾ ಕೃಷ್ಣಮೂರ್ತಿ. ಬುಡಕಟ್ಟು ಜನಾಂಗದ ಮಕ್ಕಳ ಪ್ರೀತಿಯ ಈ ಅಕ್ಕ ಕಾಡಿನ ಶಾಲೆಯ ಕಥೆಯನ್ನು ದೂರದ ಪತ್ರಿಕೆಗೆ ಕಂತು ಕಂತಾಗಿ ಬರೆಯುವಾಗ, ಎಲ್ಲೂ ತಮ್ಮ ಹೆಸರನ್ನು ಪ್ರಕಟಿಸಿರಲಿಲ್ಲ. ಶಾಲೆಯ ಯಶಸ್ಸು ಊರಿಗೆ ಗೊತ್ತಿರಲಿ, ನಾನು ಮಾತ್ರ ನಾಡಿಗೆ ಗೊತ್ತಾಗಬಾರದು ಅನ್ನುವ ಒಂದು ಮೌನ ಸಂಕಲ್ಪ ಆಕೆಯದಾಗಿತ್ತು. ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆ ಅಣಶಿ ಜೋಯಿಡಾ - ಇಲ್ಲಿಯ ಕಂತು ಕಂತಿನ ಕಥೆ ಪುಸ್ತಕವಾಗುವ ಹೊತ್ತಿಗೆ ಮುನ್ನುಡಿ ಬರೆಯಲು ಕೂತ ನಾಡಿನ ಹಿರಿಯ ಲೇಖಕ, ಸಂಸ್ಕೃತಿ ಚಿಂತಕ ಬರಗೂರು ರಾಮಚಂದ್ರಪ್ಪ ಬೆರಗು ಮತ್ತು ಹಠಕ್ಕೆ ಬೀಳುತ್ತಾರೆ. ‘ಅದು ಬೇರೆ ಯಾರೂ ಅಲ್ಲ, ನಾನು ಅಕ್ಷತಾ ಕೃಷ್ಣಮೂರ್ತಿ’ ಎಂದು ಈ ಟೀಚರಮ್ಮ ಸತ್ಯ ಹೇಳಬೇಕಾಯಿತು! ಕಾಡಿನ ನಡುಹಾದಿಯಲ್ಲಿ ನಿಂತ ಆ ಶಾಲೆಯ ದಿನಚರಿಯೇ ಒಂದು ಜೀವಂತ ಕಥೆ. ಬೆಳಗಿನ ಮೌನ, ಮಧ್ಯಾಹ್ನದ ಗದ್ದಲ, ಸಂಜೆಗತ್ತಲಿನ ಆತಂಕ, ತರಗತಿಯ ಒಳಗಡೆಯೇ ನುಗ್ಗುವ ಮಂಗ ಹಾವು ನಾಯಿ ಚೇಳು ಇಲಿ ಹೆಗ್ಗಣ.... ಎಲ್ಲವೂ ಒಟ್ಟಾಗಿ ಸೇರಿ ಅಣಶಿಯ ಈ ಶಾಲೆಯನ್ನು ಕೇವಲ ಕಟ್ಟಡವಲ್ಲ, ಒಂದು ಉಸಿರಾಡುವ ಜೀವಿಯಂತೆ ಮಾಡಿವೆ. ಅಲ್ಲಿ ಪ್ರತಿ ದಿನವೂ ಪುಸ್ತಕದೊಂದಿಗೆ ಬದುಕೂ ಪಾಠ ಹೇಳುತ್ತದೆ. ಪಠ್ಯಪುಸ್ತಕಗಳಿಗಿಂತ ಗಾಢವಾದ, ಪರೀಕ್ಷೆಗಳಿಗಿಂತ ಕಠಿಣವಾದ ಪಾಠಗಳು ಅಲ್ಲಿ ಪ್ರತಿಕ್ಷಣ ನಡೆಯುತ್ತಲೇ ಇರುತ್ತವೆ. ಕೋವಿಡ್ ಸಂದರ್ಭದಲ್ಲಿ ಆ ಶಾಲೆ ಹೇಗಿತ್ತು ಅನ್ನುವುದನ್ನು ರಾಧಕ್ಕನ ಮಾತಿನಲ್ಲೇ ಕೇಳಿ, ‘‘....ಶಾಲೆಯ ಹೊಸ ಕಟ್ಟಡ ಸೊರಗುತ್ತಿದೆ. ಮಕ್ಕಳನ್ನು ನೋಡದೇ ಒಂದು ರೀತಿಯ ಮಾನಸಿಕ ಕ್ಷೋಭೆಗಳಾಗಿದೆ. ಹೀಗಾಗಿಯೇ ಧೂಳು ಹಿಡಿಸಿಕೊಂಡು ಮೀಯದೆ ಕುಂತು ಬಿಟ್ಟಿದೆ. ಮಕ್ಕಳ ಹೆಜ್ಜೆ ಗುರುತಿನ ಸಪ್ಪಳವಿಲ್ಲ, ಪ್ರಾರ್ಥನೆಯ ಸಾಲು ಇಲ್ಲ, ಕಸಕಡ್ಡಿ ಆರಿಸುವ ಕೈಗಳಿಲ್ಲ, ಬಾಗಿಲು ಕಿಟಕಿಗಳು ತೆರೆಯುತ್ತಾ ಹಾಕುವಾಗ ಆಗುವ ಕಿರ್ ಎಂಬ ಹಿತವಾದ ಸದ್ದಿಲ್ಲ. ಗೋಡೆಯ ಮೇಲಿದ್ದ ಮಿಂಚುಫಲಕಗಳಿಗೆ ಮಕ್ಕಳ ಸ್ಪರ್ಶ ಸುಖ ಸಿಗುತ್ತಿಲ್ಲ, ಕಾರ್ಡುಗಳ ರಾಶಿ ಸರಿಪಡಿಸುವವರಿಲ್ಲ, ಹವಾಮಾನ ನಕ್ಷೆ ಹೇಳ ಹೆಸರಿಲ್ಲದೆ ಸ್ತಬ್ಧವಾಗಿದೆ. ಬಿಸಿಯೂಟದ ಕೋಣೆಯಲ್ಲಿ ಒಗ್ಗರಣೆಯ ಪರಿಮಳವಿಲ್ಲ, ರಸಂ, ಪಲಾವ್, ಸಾಗು ಮುಂತಾದ ಪದಾರ್ಥಗಳೆಲ್ಲ ಮಕ್ಕಳ ಹೊಟ್ಟೆ ಸೇರುವ ಸರದಿಯಲ್ಲಿ ಇಲ್ಲ, ಕರಿಹಲಗೆಯ ದಿನಾಂಕ ಬದಲಾಗಿಲ್ಲ, ಇಡೀ ದಿನ ಮಾತನಾಡುವ ಮಕ್ಕಳ ಹೆಸರನ್ನು ಪಟ್ಟಿ ಮಾಡುವವರಿಲ್ಲ, ಮೂಲೆಯಲ್ಲಿ ಬಿದ್ದ ಡಸ್ಪರು ತನ್ನ ಹೊಟ್ಟೆ ತೆರೆದು ತೋರಿಸುವ ಸ್ಥಿತಿಗೆ ಬಂದರೂ ಅದಕ್ಕೆ ಸೂಕ್ತ ಆಪರೇಷನ್ ಮಾಡುವ ಮಕ್ಕಳ ವೈದ್ಯರಿಲ್ಲ, ಮಳೆಗಾಲಕ್ಕೆಂದು ವರ್ಗಕೋಣೆಯ ಮೂಲೆಯಲ್ಲಿ ಆಗಲೇ ಬಂದುಳಿಯುತ್ತಿದ್ದ ಎರಡು ಮೂರು ಹಿಡಿಗಳು (ಕಸಬರಿಗೆ) ಇನ್ನೂ ಹಾಜರಾಗಿಲ್ಲ. ರಗಸದಅ ಬರೆದುಕೊಂಡ ಅಕ್ಷರ ಫಲಕಗಳು ತಮ್ಮ ಹೆಸರಿನ ಅಸ್ತಿತ್ವ ಮರೆತೇ ಹೋದಂತಾಗಿವೆ, ಸಮಯ ಪರಿಪಾಲಕ ಶಾಲೆಯ ಗಂಟೆ ಹಸಿವಾಗಿ ತನ್ನ ಶಬ್ದವನ್ನು ತಾನೇ ನುಂಗಿಬಿಟ್ಟಿದೆ ಎಂಬಂತಿದೆ. ಏಳನೆಯ ವರ್ಗದ ಮಕ್ಕಳು ದೇಣಿಗೆ ಕೊಟ್ಟ ಲೈಟಿನ ಸರ ಹೊತ್ತಿಕೊಳ್ಳದೆ ವಿದಾಯದ ಗೀತೆ ಹಾಡುತ್ತಿರುವಾಗ, ಶಾಲೆಯ ಫಿಲ್ಟರು ನೀರಿಲ್ಲದ ಬಾವಿಯಂತಾಗಿರುವಾಗ ಇಡೀ ಶಾಲೆ ಇದ್ದಲ್ಲಿಯೇ ಕುಬ್ಜವಾಗುತ್ತಿರುವುದು ಊರವರ ಗಮನಕ್ಕೂ ಬಂದಿದೆ. ಶಾಲೆಯ ಸುತ್ತಮುತ್ತಲಿನ ಗಿಡಮರಗಳು ಕೂಡ ಮಕ್ಕಳ ಕೈ ತಾಗದೇ ಮೈದುಂಬಿಕೊಂಡಿಲ್ಲ...’’ ಹದ್ದೊಂದು ಕುಕ್ಕಿ ಒಯ್ಯುವಾಗ ಆಕಾಶದಿಂದಲೇ ಬಿದ್ದ ಪುಟ್ಟ ಹಕ್ಕಿಮರಿಯ ಆರೈಕೆಯ ಚಿತ್ರ ಕಾಡೊಳಗಡೆಯ ನಿಜ ಮೌಲ್ಯವಾಗಿ ಕಾಣಿಸಿಕೊಳ್ಳುತ್ತದೆ. ಕ್ಷಣದಲ್ಲೇ ಮಕ್ಕಳ ಕಣ್ಣುಗಳಲ್ಲಿ ಮೂಡಿದ ಆತಂಕ, ಕೈಗಳಲ್ಲಿ ಮೂಡಿದ ಚುರುಕು, ಹೃದಯದಲ್ಲಿ ಉಕ್ಕಿದ ಕರುಣೆ - ಇವೆಲ್ಲವೂ ಒಟ್ಟಾಗಿ ರಾಧಕ್ಕನ ಶಾಲೆಯ ಅಸಲಿ ಪಠ್ಯಕ್ರಮ. ಯಾರೂ ಹೇಳಿಕೊಡದ ಮಾನವೀಯತೆಯ ಪಾಠ. ಹಕ್ಕಿಗೆ ನೀರು ಕುಡಿಸಲು ಪ್ರಯತ್ನಿಸಿದ ಪ್ರವೀಣನ ಕೈಕಂಪು, ಗಾಯಕ್ಕೆ ಔಷಧಿ ಹಚ್ಚಿದ ಅಖಿಲನ ಎಚ್ಚರಿಕೆ, ಉಬ್ಬಸ ಹೊಡೆದು ಅಳುತ್ತ ಬಂದ ಆಯೇರಾಳ ಕಣ್ಣೀರು - ಈ ಎಲ್ಲವೂ ಮಕ್ಕಳೊಳಗಿನ ಜೀವಸ್ಪಂದನವನ್ನು ಬಿಚ್ಚಿಟ್ಟವು. ಪಾಠದ ವೇಳಾಪಟ್ಟಿಯಲ್ಲಿ ಇಲ್ಲದಿದ್ದರೂ, ಈ ಕ್ಷಣವೇ ಅವರ ಬದುಕಿನ ಅತಿ ದೊಡ್ಡ ಪಾಠವಾಗಿತ್ತು. ರಾಧಕ್ಕ ಆ ಮಕ್ಕಳ ನಡುವೆ ನಿಂತು ನೋಡುತ್ತಿದ್ದಾಗ, ಆಕೆಗೆ ಅರ್ಥವಾಯಿತು - ತಾನು ಖಂಡಿತ ಬರೀ ಶಿಕ್ಷಕಿಯಲ್ಲ, ಈ ಕಾಡಿನೊಳಗಿನ ಬದುಕಿನ ಸಾಕ್ಷಿ. ಮಕ್ಕಳ ಕಣ್ಣುಗಳಲ್ಲಿ ಮಿಂಚುವ ಕರುಣೆ, ಪರಸ್ಪರ ಕೈಹಿಡಿದು ನಿಲ್ಲುವ ಧೈರ್ಯ, ಅಪಾಯದ ಮುಂದೆ ಹೆದರದೆ ಬುದ್ಧಿಯಿಂದ ಎದುರಿಸುವ ಚಾಣಾಕ್ಷತೆ - ಇವೆಲ್ಲವೂ ಸೇರಿ ಅಣಶಿಯ ಶಾಲೆಯನ್ನು ವಿಶಿಷ್ಟವನ್ನಾಗಿಸುತ್ತವೆ. ಇಲ್ಲಿ ವಿದ್ಯೆ ಅಂದರೆ ಕೇವಲ ಅಕ್ಷರಜ್ಞಾನವಲ್ಲ; ಬದುಕನ್ನು ಅರ್ಥಮಾಡಿಕೊಳ್ಳುವ ಜ್ಞಾನವೂ ಹೌದು. ಅದೇ ಹಕ್ಕಿ ಸ್ವಲ್ಪ ಚೇತರಿಸಿಕೊಂಡು ಕಣ್ಣು ಬಿಟ್ಟಾಗ ಮಕ್ಕಳ ಮುಖದಲ್ಲಿ ಮೂಡಿದ ನಗು, ಇಡೀ ಜೋಯಿಡಾ ಕಾಡಿನ ಮೇಲೆಯೇ ಹಬ್ಬಿದ ಮಿಂಚಿನಂತೆ ಕಾಣಿಸುತ್ತದೆ. ಆ ಕ್ಷಣದಲ್ಲಿ ಮತ್ತೊಮ್ಮೆ ಶಾಲೆಯ ಗಂಟೆ ಮತ್ತೆ ಧ್ವನಿಸಿದಂತೆ ಆಯಿತು. ಆದರೆ ಅದು ಕಬ್ಬಿಣದ ಗಂಟೆಯ ಸದ್ದು ಅಲ್ಲ; ಮಕ್ಕಳ ಹೃದಯದೊಳಗಿನ ಸಂವೇದನೆಯ ಧ್ವನಿ. ಆ ಧ್ವನಿ ಕಾಡಿನೊಳಗೆ ಹರಡಿದಂತೆ, ಮರಗಳ ನಡುವೆ, ಹಕ್ಕಿಗಳ ಗಾನದಲ್ಲಿ, ಗಾಳಿಯ ಉಸಿರಿನಲ್ಲಿ ಬೆರೆತು ಹೋಯಿತು. ರಾಧಕ್ಕನ ಜೊತೆಗೆ ನನಗೂ ಆಗ ಅರ್ಥವಾಯಿತು - ಈ ಶಾಲೆಯ ಪ್ರತಿದಿನವೂ ಒಂದು ಕಥೆ. ಪ್ರತಿಕ್ಷಣವೂ ಒಂದು ಪಾಠ. ಅಣಶಿಯ ಈ ಶಾಲೆ ಕರ್ನಾಟಕದ ಸಾವಿರಾರು ಶಾಲೆಗಳ ನಡುವೆ ನಿಂತು, ಮೌನವಾಗಿ ಆದರೆ ದೃಢವಾಗಿ ಹೇಳುತ್ತಿದೆ: ‘‘ನಾವು ಕಾಡಿನೊಳಗೆ ಇದ್ದೇವೆ, ಆದರೆ ಅಜ್ಞಾನದಲ್ಲಲ್ಲ. ನಾವು ಅಪಾಯದ ಮಧ್ಯೆ ಬದುಕುತ್ತೇವೆ, ಆದರೆ ಭಯದಲ್ಲಿ ಅಲ್ಲ. ನಾವು ಬಡವರು, ಆದರೆ ಮನಸ್ಸಿನಲ್ಲಿ ಸಿರಿವಂತರು’’ಎಂದು. ಹೀಗಾಗಿಯೇ ಅಣಶಿಯ ಶಾಲೆ ಕೇವಲ ಒಂದು ವಿದ್ಯಾಲಯವಲ್ಲ; ಅದು ಬದುಕಿನ ಪಾಠಶಾಲೆ. ಅಲ್ಲಿ ಮಕ್ಕಳ ಹೆಜ್ಜೆಗೊಂದು ಕಥೆ, ಕಣ್ಣೀರಿಗೊಂದು ಅರ್ಥ, ನಗುವಿಗೊಂದು ಭವಿಷ್ಯ ಮತ್ತು ಈ ಎಲ್ಲದರ ಮಧ್ಯೆ ನಿಂತಿರುವ ರಾಧಕ್ಕ - ಕಾಡಿನ ನಡುವೆ ಹೊತ್ತಿ ಉರಿಯುವ ಒಂದು ಬೆಳಕಿನ ಮೌನದ ದೀಪವೇ ಸರಿ. ರಾಧಕ್ಕ ಯಾನೆ ಅಕ್ಷತಾ ಕೃಷ್ಣಮೂರ್ತಿ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾದ ಬೇಲೆಕೇರಿ ಗ್ರಾಮದವರು. ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಪಡೆದವರು. ಕಾವ್ಯದ ಓದು, ಬರಹ, ಕಥೆ, ಗಝಲ್, ವಿಮರ್ಶೆ ಇವರ ಆಸಕ್ತಿಗಳು. ಸಾಮಾಜಿಕ ಸೇವೆಯಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿರುವ ಇವರು ಹನ್ನೆರಡು ವರ್ಷಗಳಿಂದ ಗಾಂವಕರ ಮೆಮೋರಿಯಲ್ ಫೌಂಡೇಷನ್ ಪರಿಕಲ್ಪನೆ ಹಾಗೂ ಸಂಘಟನೆಗಳಲ್ಲಿ ಕ್ರಿಯಾಶೀಲರಾಗಿದ್ದಾರೆ. ‘ಹನ್ನೆರಡು ದಡೆ ಬೆಲ್ಲ’, ‘ಕೋಳ್ತಂಬ’, ‘ನಾನು ದೀಪ ಹಚ್ಚಬೇಕೆಂದಿದ್ದೆ’ ಕವನ ಸಂಕಲನಗಳು. ‘ಹಾಲಕ್ಕಿ ಒಕ್ಕಲಿಗರು... ಜನಾಂಗ ಅಧ್ಯಯನ ಕೃತಿ’, ‘ಸುಕ್ರಿ ಬೊಮ್ಮಗೌಡ’ ಜೀವನ ಚರಿತ್ರೆ, ‘ಮಧುರ ಚೆನ್ನ’ ವ್ಯಕ್ತಿ ಪರಿಚಯದ ಕೃತಿ, ‘ಕೇದಿಗೆಯ ಕಂಪು’ ವಿಮರ್ಶಾ ಕೃತಿ, ‘ಅಬ್ಬೋಲಿ’ ಕಥಾ ಸಂಕಲನ, ‘ಹಾಲಕ್ಕಿ ಕೋಗಿಲೆ’ ಸಂಪಾದಿತ ಕೃತಿ, ‘ಇಸ್ಕೂಲು’ ಪ್ರಕಟಿತ ಕೃತಿಗಳು. ಮಯೂರವರ್ಮ ಪ್ರಶಸ್ತಿ, ಹಲಸಂಗಿ ಗೆಳೆಯರ ಪ್ರತಿಷ್ಠಾನದ ಯುವ ಪ್ರಶಸ್ತಿ, ಕರ್ನಾಟಕ ಜಾನಪದ ಪರಿಷತ್ತಿನ ಲೋಕಸರಸ್ವತಿ ಗ್ರಂಥ ಪ್ರಶಸ್ತಿ, ಕಡೆಂಗೋಡ್ಲು ಶಂಕರಭಟ್ಟ ಕಾವ್ಯ ಪ್ರಶಸ್ತಿ, ಸಂಕ್ರಮಣ ಕಾವ್ಯ ಬಹುಮಾನ, ಡಿ.ಎಸ್. ಕರ್ಕಿ ಕಾವ್ಯ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತಿನ ನೀಲಗಂಗಾ ದತ್ತಿ ಕಾವ್ಯ ಪ್ರಶಸ್ತಿ, ಡಾ. ಅನುಪಮಾ ನಿರಂಜನ ಕಥಾ ಸ್ಪರ್ಧೆಯ ಬಹುಮಾನ, ಫೀನಿಕ್ಸ್ ಕಥಾರತ್ನ ಪ್ರಶಸ್ತಿ, ಉತ್ತರ ಕನ್ನಡ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ, ಸಂಗಾತಿ ರಂಗಭೂಮಿ ಅಂಕೋಲಾ ಉತ್ಸವ-2007 ಪ್ರಶಸ್ತಿ ಮುಂತಾಗಿ ಪುರಸ್ಕಾರ ಗೌರವಗಳಿಗೆ ಪಾತ್ರರಾಗಿದ್ದಾರೆ. ಇವರೂ ಸೇರಿ ಈ ದೇಶದ ಇಂತಹ ಕಾಡೊಳಗಡೆಯ ಕತ್ತಲೆಯಲ್ಲಿ ಮಕ್ಕಳ ದಾರಿ ಬೆಳಗುವ ವಿನಾಯಕ ಪಟಗಾರ, ಶಾಂತ ಕುಮಾರ್, ಮೋಹನ್ ಸರ್ ಹೀಗೆ ಕಾಡೊಳಗಡೆ ಇರುವ ಸಾವಿರಾರು ಶಿಕ್ಷಕರಿಗೆ ಈ ದಾರಿಯಲ್ಲಿ ಹೃದಯ ತುಂಬಿ ಅಭಿನಂದನೆ ಸಲ್ಲಿಸುವೆ.
ಕೋಲಾರ ಜಿಲ್ಲೆಯ 186 ಗ್ರಾಮಗಳಲ್ಲಿ ನೀರಿನ ಕೊರತೆ ಸಾಧ್ಯತೆ
ಕೋಲಾರ : ಬೇಸಿಗೆ ಎನ್ನುವುದು ಕೋಲಾರ ಜಿಲ್ಲೆಯ ಮಟ್ಟಿಗೆ ಅಗ್ನಿಪರೀಕ್ಷೆ. ಶಾಶ್ವತ ನದಿ ನಾಲೆಗಳಿಲ್ಲದ ಕೋಲಾರ ಜಿಲ್ಲೆಯಲ್ಲಿ ಬೇಸಿಗೆಯಲ್ಲಿ ಜನರು ಹಾಗೂ ಜಾನುವಾರುಗಳಿಗೆ ಕುಡಿಯುವ ನೀರು ಒದಗಿಸುವುದು ಸವಾಲಿನ ಕೆಲಸವೇ ಆಗಿದೆ. ಇಡೀ ಕೋಲಾರ ಜಿಲ್ಲೆಯು ಕುಡಿಯುವ ನೀರಿಗಾಗಿ ಕೆರೆ ಕುಂಟೆಗಳನ್ನು ಅವಲಂಬಿಸಿದೆ. ವಾರ್ಷಿಕ ಸರಾಸರಿ ಮಳೆ ಸುರಿದಾಗ ಮಾತ್ರವೇ ಕೆರೆ ಕುಂಟೆಗಳಲ್ಲಿ ಒಂದಷ್ಟು ನೀರು ಸಂಗ್ರಹವಾಗುತ್ತದೆ. ಇಲ್ಲವಾದರೆ ಡಿಸೆಂಬರ್ ಅಂತ್ಯದವೇಳೆಗೆ ಇಡೀ ಜಿಲ್ಲೆಯ ಕೆರೆ ಕುಂಟೆಗಳು ಬಟಾ ಬಯಲಾಗಿ ಬದಲಾಗುತ್ತವೆ. ಇಂತಹ ಪರಿಸ್ಥಿತಿಯಲ್ಲಿ ಕೋಲಾರ ಜಿಲ್ಲೆಯ ದಾಹವನ್ನು ನಿವಾರಣೆ ಮಾಡುವುದು ಕೇವಲ ಕೊಳವೆ ಬಾವಿಗಳು ಮಾತ್ರ. ಮಳೆ ಹೆಚ್ಚಳ: ಕಳೆದ ವರ್ಷ 2025 ಡಿಸೆಂಬರ್ನಿಂದ ನವೆಂಬರ್ ಅವಧಿಯವರೆಗೂ ಕೋಲಾರ ಜಿಲ್ಲಾದ್ಯಂತ 735.1 ಮಿಮೀ ವಾಡಿಕೆ ಮಳೆ ಸುರಿಯಬೇಕಾಗಿತ್ತು. ಆದರೆ, ಈ ಅವಧಿಯಲ್ಲಿ 927 ಮಿ.ಮೀ ಮಳೆ ಸುರಿಯುವ ಮೂಲಕ ಶೇ.26ರಷ್ಟು ಮಳೆ ಪ್ರಮಾಣ ಹೆಚ್ಚುವರಿಯಾಗಿರುವುದು ದಾಖಲಾಗಿದೆ. ಅಂದರೆ ಕೋಲಾರ ಜಿಲ್ಲೆ 2025ರಲ್ಲಿ ಸಮಾಧಾನಕರ ಮಳೆಯನ್ನು ದಾಖಲಿಸಿಕೊಂಡಿದೆ. ಕೆಸಿವ್ಯಾಲಿ ಯರಗೋಳ್ ನೀರು: ಕೋಲಾರ ಜಿಲ್ಲೆಯಲ್ಲಿ ಬೇಸಿಗೆ ಆರಂಭಕ್ಕೂ ಮೊದಲೇ ಪ್ರತಿ ಗ್ರಾಮ, ಪಟ್ಟಣ, ನಗರಗಳ ಹಲವಾರು ಕಡೆಗಳಲ್ಲಿ ಮಹಿಳೆಯರು ಖಾಲಿ ಬಿಂದಿಗೆಗಳನ್ನು ರಸ್ತೆಯಲ್ಲಿಟ್ಟು ನೀರಿಗಾಗಿ ಪ್ರತಿಭಟನೆ ನಡೆಸುವ ದೃಶ್ಯಗಳು ಸಾಮಾನ್ಯ ಎನ್ನುವಂತೆ ನಡೆಯುತ್ತಿದ್ದವು. ಆದರೆ, ಕೋಲಾರ ಜಿಲ್ಲೆಗೆ ಕೆಸಿ ವ್ಯಾಲಿ ನೀರು ಹಾಗೂ ಯರಗೋಳ್ ನೀರು ಹರಿದ ನಂತರ ಈ ದೃಶ್ಯಗಳು ಕಾಣ ಸಿಗುತ್ತಿಲ್ಲ. ಕೆಸಿ ವ್ಯಾಲಿ ನೀರಿನಿಂದಾಗಿ ಕೋಲಾರ ಜಿಲ್ಲೆಯ ನೂರಕ್ಕೂ ಹೆಚ್ಚು ಕೆರೆಗಳಿಗೆ ಎರಡು ಬಾರಿ ಸಂಸ್ಕರಿಸಿದ ತ್ಯಾಜ್ಯ ನೀರು ತುಂಬುತ್ತಿದ್ದು, ಇದರಿಂದ ಅಂತರ್ಜಲ ಮಟ್ಟ ಹೆಚ್ಚಾಗಿದೆ. ಕೋಲಾರ ಜಿಲ್ಲೆಯಲ್ಲಿ ಸಣ್ಣ ನೀರಾವರಿ ಇಲಾಖೆಯ 138 ಕೆರೆಗಳ ಪೈಕಿ 18 ಕೆರೆಗಳು ಪೂರ್ಣ ತುಂಬಿದ್ದು, 15 ಕೆರೆಗಳು ಶೇ.51 ರಿಂದ 99 ರಷ್ಟು ತುಂಬಿವೆ. ಕೆಸಿ ವ್ಯಾಲಿ ಯೋಜನೆಯಡಿ ಜಿಲ್ಲೆಯ 132 ಕೆರೆಗಳ ಪೈಕಿ 51 ಕೆರೆಗಳು ಶೇ.100 ರಷ್ಟು ಭರ್ತಿಯಾಗಿವೆ. ಉಳಿದಂತೆ ಇರುವ ಜಿಪಂ ವ್ಯಾಪ್ತಿಯ ಕೆರೆಗಳಲ್ಲಿಯೂ ಅಲ್ಪಸ್ವಲ್ಪ ನೀರು ಲಭ್ಯವಾಗಿದೆ. ಇದರಿಂದ ಜಾನುವಾರುಗಳ ಕುಡಿಯುವ ನೀರಿಗೆ ಇನ್ನೂ ಒಂದೆರಡು ತಿಂಗಳು ಕೊರತೆ ಇಲ್ಲದಂತಾಗಿದೆ. ನೀರಿನ ಕೊರತೆ: ಕೆಸಿ ವ್ಯಾಲಿ ನೀರು ಹರಿಯುವಿಕೆ ಹಾಗೂ ಯರಗೋಳ್ ನೀರಿನ ಪೂರೈಕೆಯ ಹೊರತಾಗಿಯೂ ಕೋಲಾರ ಜಿಲ್ಲೆಯ ಗ್ರಾಮೀಣ ಭಾಗದ 186 ಗ್ರಾಮಗಳಲ್ಲಿ ಹಾಗೂ ನಗರ ಪ್ರದೇಶದ 31 ವಾರ್ಡ್ಗಳಲ್ಲಿ ಮುಂದಿನ ದಿನಗಳಲ್ಲಿ ನೀರಿನ ಕೊರತೆ ಉಂಟಾಗಬಹುದು ಎಂಬ ನಿರೀಕ್ಷೆ ಹೊಂದಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಇಂತ ಗ್ರಾಮ ಮತ್ತು ವಾರ್ಡ್ಗಳಲ್ಲಿ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಲು ಡಿಸಿ ಸೂಚನೆ ಮೇರೆಗೆ ಅಧಿಕಾರಿಗಳು ಕ್ರಮವಹಿಸಿದ್ದಾರೆ. ಹಿಂದಿನ ವರ್ಷಗಳಲ್ಲಿ ಆದಂತೆ ಟ್ಯಾಂಕರ್ ಪೂರೈಕೆಯಲ್ಲಿ ಲೋಪಗಳು ಹಾಗೂ ಅಕ್ರಮಗಳು ಆಗದಂತೆ ಎಚ್ಚರವಹಿಸಲು ಕಟ್ಟೆಚ್ಚರವಹಿಸುವಂತೆಯೂ ಸೂಚನೆ ನೀಡಲಾಗಿದೆ. ಕ್ರಿಯಾ ಯೋಜನೆ: ಬೇಸಿಗೆಯಲ್ಲಿನ ಹೀಟ್ ವೇವ್ ತಡೆಯಲು ಕ್ರಿಯಾ ಯೋಜನೆ ಸಿದ್ಧಪಡಿಸಲಾಗಿದ್ದು, ನರೇಗಾ ಸಮಯದಲ್ಲಿ ಬದಲಾವಣೆ, ಆಸ್ಪತ್ರೆಗಳಲ್ಲಿ ಬೇಸಿಗೆಯಲ್ಲಿ ಹರಡುವ ಸಾಂಕ್ರಾಮಿಕ ರೋಗಗಳ ನಿಯಂತ್ರಣಕ್ಕೆ ಅಗತ್ಯ ಔಷಧಿಗಳ ಮತ್ತು ಒಆರ್ಎಸ್ ಪೌಡರ್ ದಾಸ್ತಾನು ಇಡಲು ಸೂಚಿಸಲಾಗಿದೆ. ತೆರೆದ ಗಾಡಿಗಳಲ್ಲಿ ಕತ್ತರಿಸಿದ ಹಣ್ಣುಗಳ ಮಾರಾಟಕ್ಕೆ ಕಡಿವಾಣ ಹಾಕಲು ಹಾಗೂ ನಿಗಾವಹಿಸಲು ಸಲಹೆ ನೀಡಲಾಗಿದೆ. ಅಗ್ನಿ ಅವಘಡಗಳನ್ನು ತಡೆಯಲು ಅಗ್ನಿ ಶಾಮಕ ದಳದಲ್ಲಿ ನೀರಿನ ಸಂಗ್ರಹಣೆ, ಉಪಕರಣಗಳ ಸನ್ನದ್ಧತೆ ನಿಯಮಿತವಾಗಿ ಪರಿಶೀಲಿಸಿ ಸಜ್ಜಾಗಿರಲು ಸೂಚಿಸಲಾಗಿದೆ. ಜಿಲ್ಲಾಧಿಕಾರಿಯ ಹಾಗೂ ತಹಶೀಲ್ದಾರ್ಗಳ ಪಿಡಿ ಖಾತೆಯಲ್ಲಿ ಪ್ರಸ್ತುತ ಒಟ್ಟು 917.91 ಲಕ್ಷ ರೂ. ಎಸ್ಡಿಆರ್ಎಫ್ ಹಾಗೂ ಎಸ್ಡಿಎಂಎಫ್ ಅನುದಾನ ಲಭ್ಯವಿದೆ. ಬೇಸಿಗೆ ನಿರ್ವಹಣೆ ಕುರಿತ ಮುನ್ನಚ್ಚರಿಕೆ ಕ್ರಮಗಳನ್ನು ಪ್ರಚರ ಪಡಿಸಲು ಸಂಬಂಧಪಟ್ಟ ಇಲಾಖೆಗಳಿಗೆ ಮಾಹಿತಿ ಶಿಕ್ಷಣ ಸಂವಹನದ ಚಟುವಟಿಕೆಗಳನ್ನು ಕೈಗೊಂಡು ಕಾರ್ಯಪ್ರವೃತ್ತರಾಗಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. <ಡಾ.ಎಂ.ಆರ್.ರವಿ, ಜಿಲ್ಲಾಧಿಕಾರಿ
ಸಾಮಾಜಿಕ ನ್ಯಾಯಯದ ಆಶಯವು ರಾಜಕೀಯ ಲೆಕ್ಕಾಚಾರಕ್ಕೆ ಬಲಿಯಾಗಬಾರದು
2019 ರಲ್ಲಿ ನ್ಯಾಯಮೂರ್ತಿ ನಾಗಮೋಹನ್ ದಾಸ್ ಅವರ ಅಧ್ಯಕ್ಷತೆಯಲ್ಲಿ ಕರ್ನಾಟಕ ರಾಜ್ಯ ಪರಿಶಿಷ್ಟ ಜಾತಿ ಮತ್ತು ಪ.ವರ್ಗಗಳ ಮೀಸಲಾತಿ ಪ್ರಮಾಣ ಹೆಚ್ಚಳಕ್ಕಾಗಿ ರಚನೆಯಾದ ಆಯೋಗದ ಮುಂದೆ ಅನೇಕ ಸಂಘಟನೆಗಳು ಸಲ್ಲಿಸಲಾದ ಮನವಿಯಲ್ಲಿ ಈ ಅಂಶಗಳನ್ನು ಸ್ಪಷ್ಟವಾಗಿ ತಿಳಿಸಲಾಗಿತ್ತು. ಭಾರತದ ಹಲವಾರು ರಾಜ್ಯಗಳು ಈಗಾಗಲೇ ಶೇ. 50ರ ಮಿತಿಯನ್ನು ಮೀರಿ ಮೀಸಲಾತಿ ಜಾರಿಗೊಳಿಸಿರುವುದು. ತಮಿಳುನಾಡಿನಲ್ಲಿ 69ಶೇ., ಮಹಾರಾಷ್ಟ್ರದಲ್ಲಿ 68ಶೇ., ಛತ್ತೀಸ್ಗಡದಲ್ಲಿ 82ಶೇ., ಮಧ್ಯಪ್ರದೇಶದಲ್ಲಿ 73ಶೇ., ರಾಜಸ್ಥಾನದಲ್ಲಿ 68ಶೇ. ಮೀಸಲಾತಿ ಜಾರಿಯಲ್ಲಿದೆ ಎಂದು ಉಲ್ಲೇಖಿಸಲಾಗಿದೆ. ಇವುಗಳನ್ನು ಈಗಾಗಲೇ ಸಂವಿಧಾನದ 9th Schedule ನಲ್ಲಿ ಸೇರಿಸಲ್ಪಟ್ಟಿದೆ. ನ್ಯಾಯಾಲಯದ ಹಸ್ತಕ್ಷೇಪದಿಂದ ರಕ್ಷಣೆ ಪಡೆಯುವ ಉದ್ದೇಶದಿಂದ ಆ ಕ್ರಮ ಕೈಗೊಳ್ಳಲಾಗಿದೆ. ಹಾಗಾಗಿ ಕರ್ನಾಟಕ ರಾಜ್ಯದ ವಿಷಯದಲ್ಲಿ 50ಶೇ. ಮಿತಿಯನ್ನು ಮೀರಬಾರದು ಎಂದು ಹೇಳುವುದರಲ್ಲಿ ನ್ಯಾಯವಿದೆಯೇ?. ಖಂಡಿತ ಇಲ್ಲ. ಶೇ. 50ರ ಮಿತಿಯನ್ನು ಮೀರಬಾರದು ಎನ್ನುವ ವಿಚಾರ ಮೊದಲಿಗೆ M. R. Balaji v/s State of Mysore (28.9.1962) ತೀರ್ಪಿನಲ್ಲಿ ಹೊರಬಂದಿತ್ತು. ನಂತರ Indra Sawhney v/s Union of India(16.11.1992) ತೀರ್ಪಿನಲ್ಲಿ ಅದನ್ನು ಪುನರುಚ್ಚರಿಸಿದರೂ, ಅದೇ ತೀರ್ಪಿನಲ್ಲಿ “compelling extraordinary circumstances” ಇದ್ದಲ್ಲಿ ಈ ಮಿತಿಯನ್ನು ಮೀರಿ ಹೋಗಬಹುದು ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ. ಅಂದರೆ, ಸಾಮಾಜಿಕ ಹಿಂದುಳಿದಿರುವಿಕೆಯ ಗಂಭೀರತೆ, ಜನಸಂಖ್ಯೆಯ ಪ್ರಮಾಣ, ಶಿಕ್ಷಣ ಮತ್ತು ಉದ್ಯೋಗ ಕ್ಷೇತ್ರಗಳಲ್ಲಿ ಪ್ರತಿನಿಧಿತ್ವದ ಕೊರತೆಯಂತಹ ಅಸಮತೋಲನ ಪರಿಸ್ಥಿತಿಗಳು ಎದುರಾದಂತಹ ಸಮಯದಲ್ಲಿ ಮೀರಬಹುದು ಎಂದರ್ಥ. ಕರ್ನಾಟಕದಲ್ಲಿ ಪರಿಶಿಷ್ಟ ಜಾತಿಗಳ ಜನಸಂಖ್ಯೆ ಸುಮಾರು 17ಶೇ. ಕ್ಕಿಂತ ಹೆಚ್ಚು, ಪರಿಶಿಷ್ಟ ಪಂಗಡಗಳು ಸುಮಾರು 7ಶೇ. ಕ್ಕಿಂತ ಹೆಚ್ಚು ಇದೆ. ಐತಿಹಾಸಿಕವಾಗಿ ಹಿಂದುಳಿದ ಈ ಸಮುದಾಯಗಳಿಗೆ ಸಮರ್ಪಕ ಪ್ರಾತಿನಿಧಿತ್ವ ಸಿಗದಿರುವುದನ್ನು ಸುಪ್ರೀಂಕೋರ್ಟ್ ಹೇಳಿದಂತೆ “compelling extraordinary circumstances” ಎಂದೇ ಪರಿಗಣಿಸಬಹುದಾಗಿದೆ ಎನ್ನುವುದು ವಾಸ್ತವಿಕತೆ. ಇದಕ್ಕೆ ವಿರುದ್ಧವಾಗಿ, 103ನೇ ಸಂವಿಧಾನ ತಿದ್ದುಪಡಿ ಮೂಲಕ ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ (EWS) ೧೦ಶೇ. ಮೀಸಲಾತಿ ಜಾರಿಗೆ ತರಲಾಯಿತು. ಈ ತಿದ್ದುಪಡಿ Janhit Abhiyan v/s Union of India ತೀರ್ಪಿನಲ್ಲಿ ಬಹುಮತದಿಂದ ಮಾನ್ಯತೆ ಪಡೆದರೂ, ಅದು ಮೀಸಲಾತಿಯ ಮೂಲ ತತ್ವಕ್ಕೇ ವಿರುದ್ಧವಾಗಿದೆ.Articles ೧೫(೪), ೧೬(೪) ಮತ್ತು ೪೬ ರ ಆಶಯವು ಶತಮಾನಗಳ ಕಾಲ ಸಾಮಾಜಿಕ ದಮನಕ್ಕೆ ಒಳಗಾದವರಿಗೆ ಪರಿಹಾರ ಒದಗಿಸುವುದು. ಆದರೆ EWS ಮೀಸಲಾತಿ ಸ್ಪಷ್ಟವಾಗಿ ಆರ್ಥಿಕ ಹಿಂದುಳಿದಿರುವಿಕೆಯ ಮಾನದಂಡದ ಮೇಲೆ ರೂಪುಗೊಂಡಿದೆ. ಆರ್ಥಿಕ ಹಿಂದುಳಿದಿರುವಿಕೆಯ ನಿವಾರಣೆಗೆ ಕಲ್ಯಾಣ ಯೋಜನೆಗಳನ್ನು ತರಬಹುದಾಗಿತ್ತು. ಆ ರೀತಿಯ ಅನೇಕ ಕಲ್ಯಾಣ ಯೋಜನೆಗಳನ್ನು ಈಗಾಗಲೇ ತರಲಾಗಿದೆ. ಆದರೆ ಅದನ್ನು ಮೀಸಲಾತಿಯ ಪರಿಕಲ್ಪನೆಗೆ ಜೋಡಿಸುವುದು ಸಂವಿಧಾನ ಬೋಧಿಸುವ ಸಾಮಾಜಿಕ ನ್ಯಾಯ, ಸಮಾನ ಪ್ರಾತಿನಿಧಿತ್ವ ಎನ್ನುವ ಮೂಲ ಆಶಯಕ್ಕೆ ವಿರುದ್ಧವಾಗಿದೆ. ಇಲ್ಲಿ ಮುಖ್ಯವಾದ ಪ್ರಶ್ನೆ ಉದ್ಭವಿಸುವುದೇನೆಂದರೆ, EWS 10ಶೇ. ಮೀಸಲಾತಿಗೆ ಕೇಂದ್ರ ಸರಕಾರ ತ್ವರಿತವಾಗಿ ಸಂವಿಧಾನ ತಿದ್ದುಪಡಿ ಮಾಡಿ, ರಾಷ್ಟ್ರಪತಿ ಅಂಕಿತ ಪಡೆದು ಜಾರಿಗೊಳಿಸಿರುವಾಗ, ಕರ್ನಾಟಕದ ಪರಿಶಿಷ್ಟ ಜಾತಿ-ಪಂಗಡಗಳ ಮೀಸಲಾತಿ ಹೆಚ್ಚಳದ ವಿಷಯದಲ್ಲಿ ಯಾಕೆ ಉತ್ಸಾಹ ತೋರುತ್ತಿಲ್ಲ? 50ಶೇ. ಮಿತಿ ಮೀರಬಾರದು ಎನ್ನುವ ವಿಚಾರದಲ್ಲಿ ಈಗ ಕಠಿಣ ನಿಲುವು ತಾಳುವವರು, EWS ವಿಷಯದಲ್ಲಿ ಅದನ್ನು ಯಾಕೆ ಮೀರಿದರು?. ಇದು ಕೇಂದ್ರ ಸರಕಾರದ ಮಲತಾಯಿ ಧೋರಣೆ ಎನ್ನಿಸುವುದಿಲ್ಲವೇ?. ಇದಕ್ಕಿಂತ ಹೆಚ್ಚು ಆತಂಕಕಾರಿ ಎನ್ನಿಸುವುದು, ಕರ್ನಾಟಕದಿಂದ ಆಯ್ಕೆಯಾದ ಬಿಜೆಪಿಯ ಸಂಸದರು ಮತ್ತು ಪ್ರಮುಖ ನಾಯಕರು ಈ ವಿಷಯದಲ್ಲಿ ಮೌನ ವಹಿಸಿರುವುದು. ರಾಜ್ಯದ ಹಿತಾಸಕ್ತಿಯನ್ನು ರಕ್ಷಿಸುವುದು ಅವರ ಸಂವಿಧಾನಾತ್ಮಕ ಮತ್ತು ನೈತಿಕ ಹೊಣೆಗಾರಿಕೆಯಾಗಬೇಕು. ಪರಿಶಿಷ್ಟ ಜಾತಿ-ಪಂಗಡಗಳ ಮೀಸಲಾತಿ ಹೆಚ್ಚಳಕ್ಕೆ ರಾಜ್ಯ ಸರಕಾರ ಶಿಫಾರಸು ಮಾಡಿದಾಗ, ರಾಜ್ಯದ ಎಲ್ಲಾ ಪಕ್ಷಗಳ ಸಂಸದರು ಒಗ್ಗೂಡಿ ಕೇಂದ್ರ ಸರಕಾರದ ಮೇಲೆ ಒತ್ತಡ ತರಬೇಕಾಗಿತ್ತು. 9th Scheduleಗೆ ಸೇರಿಸಲು ಅಗತ್ಯವಾದ ಸಂವಿಧಾನ ತಿದ್ದುಪಡಿ ಬಗ್ಗೆ ಸ್ಪಷ್ಟ ನಿಲುವು ತೆಗೆದುಕೊಳ್ಳಬೇಕಾಗಿತ್ತು. ಆದರೆ ಈ ವಿಷಯದಲ್ಲಿ ಮೌನವೇ ಹೆಚ್ಚಾಗಿ ಗೋಚರಿಸುತ್ತಿದೆ. ಈ ಮೌನವು ಅನುಕೂಲಸಿಂಧು ರಾಜಕಾರಣ ಅಂತ ಅನ್ನಿಸುವುದಿಲ್ಲವೇ? ಸಂವಿಧಾನ ತಮಗೆ ನೀಡಿರುವ ಹಕ್ಕನ್ನು ಕೇಳುವುದಕ್ಕೆ ಇವರು ಮೋದಿ-ಶಾ ಗಳಿಗೆ ಹೆದರುವ ಅವಶ್ಯಕತೆ ಇದೆಯೇ. ರಾಜ್ಯದ ಹಿತಕ್ಕಿಂತ ಪಕ್ಷವೇ ಮುಖ್ಯವೆಂದು ಭಾವಿಸುವ ಮನೋಭಾವವಿದು ಎನ್ನುವಂತಹ ಪ್ರಶ್ನೆಗಳು ಸಹಜವಾಗಿ ಮೂಡುತ್ತವೆ. ಜನಪ್ರತಿನಿಧಿಗಳ ಕರ್ತವ್ಯವು ಕೇವಲ ಪಕ್ಷಕ್ಕೆ ನಿಷ್ಠರಾಗಿರುವುದಷ್ಟೇ ಅಲ್ಲ, ತಮ್ಮ ಸಮುದಾಯಗಳ ನ್ಯಾಯಸಮ್ಮತ ಬೇಡಿಕೆಗಾಗಿ ಧ್ವನಿ ಎತ್ತುವುದಾಗಿದೆ.
ಅಮೆರಿಕಾ-ಇಸ್ರೇಲ್ ಜಂಟಿಯಾಗಿ ಇರಾನ್ ಮೇಲೆ ವೈಮಾನಿಕ ದಾಳಿ ನಡೆಸಿದ್ದು, ಇದರಿಂದಾಗಿ ಇರಾನ್ ಸುಪ್ರೀಂ ಲೀಡರ್ ಆಯತೊಲ್ಲಾ ಅಲಿ ಖಮೇನಿ ಹತ್ಯೆಗೀಡಾಗಿದ್ದಾರೆ. ಈ ನಿಧನದ ವಾರ್ತೆಯನ್ನು ಕೇಳುತ್ತಿದ್ದಂತೆ ಕರ್ನಾಟಕದಲ್ಲಿನ ಮಿನಿ ಇರಾನ್ ಆಲಿಪುರದಲ್ಲಿ ಶೋಕಮಡುಗಟ್ಟಿದ್ದು, ಅಲ್ಲಿನ ಗ್ರಾಮಸ್ಥರು ಸ್ವಯಂ ಪ್ರೇರಿತವಾಗಿ ಅಂಗಡಿಗಳನ್ನು ಬಂದ್ ಮಾಡಿದ್ದು, 3 ದಿನಗಳ ಕಾಲ ಕರಾಳ ದಿನ ಎಂದು ಶೋಕಾರಚಣೆ ಮಾಡಲು ಮುಂದಾಗಿದ್ದಾರೆ. ಅಲ್ಲದೆ, ಖಮೇನಿ ಹತ್ಯೆಗೆ ಕಾರಣವಾದ ಅಮೆರಿಕಾ ವಿರುದ್ದ ಆಕ್ರೋಶ ಹೊರಹಾಕಿದ್ದು, ಧಿಕ್ಕಾರಗಳನ್ನು ಕೂಗುತ್ತಿದ್ದಾರೆ. ಇರಾನ್ ನಾಯಕನ ಹತ್ಯೆ ಕರ್ನಾಟಕದ ಆಲಿಪುರ ಗ್ರಾಮಸ್ಥರ ದುಃಖಕ್ಕೆ ಕಾರಣವಾಗಿದ್ದೇಕೆ? ಖಮೇನಿಗೂ ಮತ್ತು ಆಲಿಪುರಕ್ಕೆ ಇರುವ ನಂಟೇನು? ಈ ಕುರಿತ ವರದಿ ಇಲ್ಲಿದೆ..
ರಾಷ್ಟ್ರೀಯ ವಿಜ್ಞಾನ ದಿನ 2026ರ ಭವಿಷ್ಯದ ಒಳನೋಟ; ಜ್ಞಾನ ಸಂಪಾದನೆಗೆ ಭಾರತವೇ ಮುಕುಟ
ಪ್ರತಿವರ್ಷ ಫೆ.28ರಂದು ಭಾರತದಲ್ಲಿ ರಾಷ್ಟ್ರೀಯ ವಿಜ್ಞಾನ ದಿನ ಆಚರಿಸಲಾಗುತ್ತದೆ. ಜಗತ್ತು ಕಂಡ ಅದ್ಭುತ ಭಾರತೀಯ ವಿಜ್ಞಾನ ಪ್ರತಿಭೆ ಸಿವಿ ರಾಮನ್ ಅವರ ರಾಮನ್ ಪರಿಣಾಮ ಕಂಡುಹಿಡಿದ ಈ ದಿನ ಭಾರತೀಯ ವಿಜ್ಞಾನ ಕ್ಷೇತ್ರಕ್ಕೆ ಅತ್ಯಂತ ಮಹತ್ವದ್ದಾಗಿದ್ದು, ಅದನ್ನು ಗೌರವಿಸಲು ರಾಷ್ಟ್ರೀಯ ಗೌರವ ದಿನ ಆಚರಿಸಲಾಗುತ್ತದೆ. ಈ ಕುರಿತು ಯುವ ವಿಜ್ಞಾನಿ ದೀಪಕ್ ಎಎಸ್ ಅವರು ಸುದೀರ್ಘ ಲೇಖನ ಬರೆದಿದ್ದು, ವಿಜ್ಞಾನ ಕ್ಷೇತ್ರದಲ್ಲಿ ಭಾರತದ ಬೆಳವಣಿಗೆ ಕುರಿತು ಬೆಳಕು ಚೆಲ್ಲಿದ್ದಾರೆ, ಇಲ್ಲಿದೆ ಮಾಹಿತಿ.
Maharashtra | ಕಾರ್ಖಾನೆಯಲ್ಲಿ ಭಾರಿ ಸ್ಫೋಟ: ಕನಿಷ್ಠ 10 ಮಂದಿ ಮೃತ್ಯು, ಹಲವರಿಗೆ ಗಾಯ
ಮುಂಬೈ: ನಾಗ್ಪುರ ಜಿಲ್ಲೆಯ ಕಟೋಲ್ ನಲ್ಲಿರುವ ಕಾರ್ಖಾನೆಯೊಂದರಲ್ಲಿ ರವಿವಾರ ಸಂಭವಿಸಿದ ಭಾರಿ ಸ್ಫೋಟದಲ್ಲಿ ಕನಿಷ್ಠ 10 ಮಂದಿ ಮೃತಪಟ್ಟು, ಹಲವರು ಗಾಯಗೊಂಡಿದ್ದಾರೆ. ಮೃತಪಟ್ಟವರ ಪೈಕಿ ಓರ್ವ ಮಹಿಳೆಯೂ ಸೇರಿದ್ದಾರೆ. ಸ್ಫೋಟಕಗಳ ತಯಾರಿಕಾ ಕಾರ್ಖಾನೆಯಲ್ಲಿ ಈ ಘಟನೆ ಸಂಭವಿಸಿದೆ. ಈ ಘಟನೆಯಲ್ಲಿ ಹಲವು ಕಿಲೋಮೀಟರ್ ದೂರದವರೆಗೆ ಭಾರಿ ಸ್ಫೋಟದ ಸದ್ದುಗಳು ಕೇಳಿ ಬಂದಿದೆ. ಸುದ್ದಿ ತಿಳಿಯುತ್ತಿದ್ದಂತೆ ಕಟೋಲ್ ಶಾಸಕ ಚರಣ್ ಸಿಂಗ್ ಠಾಕೂರ್ ಘಟನಾ ಸ್ಥಳಕ್ಕೆ ತೆರಳಿ ಪರಿಶೀಲನೆಯನ್ನು ನಡೆಸಿದ್ದಾರೆ.
ಖಮೇನಿ ಜಾಗಕ್ಕೆ ಹೊಸ ನಾಯಕನ ಆಯ್ಕೆ ಮಾಡಲು ಮಂಡಳಿ ರಚಿಸಿದ ಇರಾನ್ | Israel Military
ಇರಾನ್ ಸರ್ವಾಧಿಕಾರಿ ಖಮೇನಿ ಹತ್ಯೆಯ ನಂತರ ಈಗ ಮಧ್ಯಪ್ರಾಚ್ಯ ಧಗಧಗ ಅಂತಿದ್ದು, ಯಾವುದೇ ಕ್ಷಣದಲ್ಲಿ ಇಡೀ ಮಧ್ಯಪ್ರಾಚ್ಯ ಹೊತ್ತಿ ಉರಿಯುವ ವಾತಾವರಣ ಸೃಷ್ಟಿಯಾಗಿದೆ. ಹೀಗಿದ್ದಾಗ ದಿಢೀರ್ ಅಂತಾ ಖಮೇನಿ ಜಾಗಕ್ಕೆ ಹೊಸ ನಾಯಕನನ್ನು ಆಯ್ಕೆ ಮಾಡಿದ ಇರಾನ್ ಇನ್ನಷ್ಟು ದಾಳಿ ಮಾಡಲು ಸಜ್ಜಾಗಿದೆ. ಇರಾನ್ ಸುಪ್ರೀಂ ಲೀಡರ್ ಅಯಾತೊಲ್ಲಾ ಅಲಿ ಖಮೇನಿ ಹತ್ಯೆ ನಂತರ, ಇರಾನ್ ಆಡಳಿತ
ಇರಾನ್-ಇಸ್ರೇಲ್ ಯುದ್ಧದಿಂದಾಗಿ ದುಬೈನಲ್ಲಿ ಡ್ರೋನ್ ಪ್ರತಾಪ್, ಕಾಂಗ್ರೆಸ್ ಶಾಸಕ ಸೇರಿ 150 ಕನ್ನಡಿಗರು ಲಾಕ್!
ಇಸ್ರೇಲ್-ಅಮೆರಿಕಾ ಜಂಟಿಯಾಗಿ ಇರಾನ್ ಮೇಲೆ ನಡೆಸುತ್ತಿರುವ ದಾಳಿಗಳಿಂದಾಗಿ ಯುದ್ದ ಆರಂಭವಾಗಿದ್ದು, ಇದರಿಂದಾಗಿ ಮಧ್ಯಪ್ರಾಚ್ಯದಲ್ಲಿ 150 ಕನ್ನಡಿಗರು ಸಿಲುಕಿರುವುದಾಗಿ ಮಾಹಿತಿ ದೊರೆತಿದೆ. ಇನ್ನು, ಈ ಕನ್ನಡಿಗರಲ್ಲಿ ಬಳ್ಳಾರಿ ಶಾಸಕ ಭರತ್ ರೆಡ್ಡಿ, ಬಿಗ್ ಬಾಸ್ ಮಾಜಿ ಸ್ಪರ್ಧಿ ಡ್ರೋನ್ ಪ್ರತಾಪ್ ಸೇರಿದಂತೆ ಹಲವರು ದುಬೈನ ವಿಮಾನ ನಿಲ್ದಾಣದಲ್ಲಿ ಸಿಲುಕಿಕೊಂಡಿದ್ದಾರೆ ಎಂದು ಗೃಹಸಚಿವರು ಮಾಹಿತಿ ನೀಡಿದ್ದಾರೆ. ಅಲ್ಲದೆ, ಇವರೆಲ್ಲರನ್ನು ಸುರಕ್ಷಿತವಾಗಿ ಕರೆತರುವ ಕಾರ್ಯ ನಡೆಸಲಾಗುವುದು ಎಂದು ತಿಳಿಸಿದ್ದಾರೆ. ಇನ್ನು, ಯುದ್ದಪೀಡಿತ ಮಧ್ಯಪ್ರಾಚ್ಯದ ಹಲವು ದೇಶಗಳಲ್ಲಿ ಸಿಲುಕಿಕೊಂಡಿರುವ ಭಾರತೀಯರು ಕೇಂದ್ರವನ್ನು ಸಂಪರ್ಕಿಸಲು ಭಾರತದ ವಿದೇಶಾಂಗ ಸಚಿವಾಲಯ ಸಹಾಯವಾಣಿ ಸಂಖ್ಯೆಯನ್ನು ಬಿಡುಗಡೆ ಮಾಡಿದೆ. ಅವುಗಳ ವಿವರ ಇಲ್ಲಿದೆ..
ಬೆಂಗಳೂರು | ಇಂಗು ಗುಂಡಿ ಸ್ವಚ್ಛಗೊಳಿಸುವಾಗ ಉಸಿರು ಗಟ್ಟಿ ಮೂವರು ಮೃತ್ಯು
ಬೆಂಗಳೂರು : ಮಳೆ ನೀರಿನ ಇಂಗು ಗುಂಡಿ ಶುಚಿಗೊಳಿಸುವ ವೇಳೆ ಮೂವರು ಮೃತಪಟ್ಟಿರುವ ಘಟನೆ ಶನಿವಾರ ವೈಟ್ಫೀಲ್ಡ್ ಠಾಣಾ ವ್ಯಾಪ್ತಿಯ ಇಮ್ಮಡಿಹಳ್ಳಿ ದೇಗುಲ ವೃತ್ತದ ಬಳಿ ನಡೆದಿದೆ. ಮೃತರನ್ನು ಮುನಿಶಾಮಪ್ಪ (67), ರುದ್ರಕುಮಾರ್ (40) ಹಾಗೂ ವಿಶ್ವನಾಥ್ ಆಚಾರಿ (24) ಎಂದು ಗುರುತಿಸಲಾಗಿದೆ. ಮನೆ ಮಾಲಕ ಮುನಿಶಾಮಪ್ಪ ಅವರು 12 ವರ್ಷಗಳ ಹಿಂದೆ ನಿರ್ಮಿಸಿದ್ದ ಇಂಗು ಗುಂಡಿಯನ್ನು ಬಳಸುತ್ತಿರಲಿಲ್ಲ. ಕಾಲಕ್ರಮೇಣ ಗುಂಡಿಯಲ್ಲಿ ನೀರು ಹಾಗೂ ಕಸದ ವಸ್ತುಗಳು ಕೊಳೆತು ದುರ್ವಾಸನೆ ಉಂಟಾಗಿತ್ತು. ರಾಸಾಯನಿಕ ಸಿಂಪಡಿಸಿ ಶುಚಿಗೊಳಿಸಲು ಮುಂದಾದ ವೇಳೆ ಉಸಿರಾಟದ ತೊಂದರೆಯಾಗಿ ಅವರು ಮೂರ್ಛೆಗೊಂಡಿದ್ದಾರೆ. ಮಾಲೀಕನನ್ನು ರಕ್ಷಿಸಲು ಹೋದ ಪ್ಲಂಬರ್ ರುದ್ರಕುಮಾರ್ ಕೂಡ ಮೂರ್ಛೆಗೊಂಡಿದ್ದಾರೆ. ಇವರಿಬ್ಬರನ್ನು ನೋಡಲು ಹೋದ ವಿಶ್ವನಾಥ್ ಆಚಾರಿ ಎಂಬ ಯುವಕನೂ ಮೂರ್ಛೆ ಹೋಗಿದ್ದಾರೆ. ವಿಶ್ವನಾಥ್ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದನು. ಅಕ್ಕಪಕ್ಕದ ಮನೆಯವರು ಮೂವರನ್ನೂ ಖಾಸಗಿ ಆಸ್ಪತ್ರೆಗೆ ಸಾಗಿಸಲು ಯತ್ನಿಸಿದರೂ ಮಾರ್ಗ ಮಧ್ಯೆ ಅವರು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣದ ಕುರಿತು ತನಿಖೆ ಮುಂದುವರಿದಿದೆ. ವೈಟ್ಫೀಲ್ಡ್ ಪೊಲೀಸ್ ಠಾಣೆಯಲ್ಲಿ ಘಟನೆಯ ಕುರಿತು ಪ್ರಕರಣ ದಾಖಲಾಗಿದೆ.
ಚಿಕ್ಕಬಳ್ಳಾಪುರ : ಆಯತುಲ್ಲಾ ಅಲಿ ಖಾಮಿನೈ ಹತ್ಯೆ ಹಿನ್ನೆಲೆ: ಅಲಿಪುರದಲ್ಲಿ ಮೂರು ದಿನಗಳ ಶೋಕಾಚರಣೆ
ಅಂಗಡಿ ಮುಂಗಟ್ಟುಗಳು ಬಂದ್
ಇಸ್ರೇಲ್ ಮೇಲೆ ಇರಾನ್ ನಡೆಸಿದ ದಾಳಿಯಲ್ಲಿ ಓರ್ವ ಮೃತ್ಯು, 121 ಮಂದಿಗೆ ಗಾಯ : ವರದಿ
ಟೆಲ್ ಅವೀವ್: ಇಸ್ರೇಲ್ ಮತ್ತು ಅಮೆರಿಕದ ಜಂಟಿ ದಾಳಿಗೆ ಪ್ರತೀಕಾರವಾಗಿ ಇರಾನ್ ನಡೆಸಿದ ದಾಳಿಯಲ್ಲಿ ಈವರೆಗೆ ಓರ್ವ ವ್ಯಕ್ತಿ ಮೃತಪಟ್ಟಿದ್ದು, 121 ಮಂದಿಗೆ ಗಾಯವಾಗಿದೆ. ಗಾಯಗೊಂಡವರಲ್ಲಿ ಹೆಚ್ಚಿನವರು ಅಪ್ರಾಪ್ತರು ಎಂದು ಇಸ್ರೇಲ್ ಮೂಲಗಳು ತಿಳಿಸಿರುವ ಬಗ್ಗೆ aljazeera ವರದಿ ಮಾಡಿದೆ. ಇರಾನ್ನ ಕ್ಷಿಪಣಿಗಳ ಪೈಕಿ ಬಹುತೇಕ ಕ್ಷಿಪಣಿಗಳನ್ನು ಮಾರ್ಗಮಧ್ಯದಲ್ಲೇ ತಡೆಹಿಡಿಯಲಾಗಿದೆ ಇಲ್ಲವೆ ಹೊಡೆದುರುಳಿಸಲಾಗಿದೆ. ಆದರೆ, ಕೆಲವು ಕ್ಷಿಪಣಿಗಳು ರಾಡಾರ್ ತಪ್ಪಿಸಿ ಟೆಲ್ ಅವೀವ್ ಹಾಗೂ ಪಶ್ಚಿಮ ಜೆರುಸಲೇಂನ ಬೈತ್ ಶೆಮೇಶ್ ಅನ್ನು ಅಪ್ಪಳಿಸುವಲ್ಲಿ ಯಶಸ್ವಿಯಾಗಿವೆ ಎಂದು ಇಸ್ರೇಲ್ ಸೇನೆ ತಿಳಿಸಿದೆ. ಇಸ್ರೇಲ್ ರಕ್ಷಣಾ ವ್ಯವಸ್ಥೆಗಳು ಕೆಲ ಕ್ಷಿಪಣಿಗಳನ್ನು ಇಸ್ರೇಲ್ ವಸಾಹತುಶಾಹಿಗಳಿಂದ ದೂರ ತಳ್ಳಿ, ಫೆಲೆಸ್ತೀನ್ ಪ್ರಾಂತ್ಯಕ್ಕೆ ಹಿಮ್ಮೆಟ್ಟಿಸಿವೆ ಎನ್ನಲಾಗಿದೆ. ಇದರಿಂದಾಗಿ, ಶನಿವಾರ ಬೆಳಗ್ಗೆ ಆಕ್ರಮಿತ ದಕ್ಷಿಣ ವೆಸ್ಟ್ ಬ್ಯಾಂಕ್ ನ ಬೈತ್ ಸಾಹೌರ್ ಪಟ್ಟಣದೊಳಗೆ ಓರ್ವ ಫೆಲೆಸ್ತೀನ್ ಪ್ರಜೆ ಗಾಯಗೊಂಡಿದ್ದರು.
ಆಯತೊಲ್ಲಾ ಖಮೇನಿ ಹತ್ಯೆಗೆ ಇರಾನ್ನಿಂದ ಪ್ರತೀಕಾರದ ವಾಗ್ದಾನ; ಅಮೆರಿಕ, ಇಸ್ರೇಲ್ ನೆಲೆಗಳ ಮೇಲೆ ಆಕ್ರೋಶದ ಜ್ವಾಲೆ!
ಅಮೆರಿಕ-ಇಸ್ರೇಲ್ ನಡೆಸಿದ ಜಂಟಿ ವೈಮಾನಿಕ ದಾಳಿಯಲ್ಲಿ ಇರಾನ್ ಸರ್ವೋಚ್ಚ ನಾಯಕ ಆಯತೊಲ್ಲಾ ಅಲಿ ಖಮೇನಿ ಹತ್ಯೆಗೀಡಾಗಿದ್ದಾರೆ. ಖಮೇನಿ ಹತ್ಯೆಯಿಂದ ಆಕ್ರೋಶದ ಜ್ವಾಲೆಯಲ್ಲಿ ಬೇಯುತ್ತಿರುವ ಇರಾನ್, ಪ್ರತೀಕಾರದ ವಾಗ್ದಾನ ಮಾಡಿದೆ. ಅದರಂತೆ ಖಮೇನಿ ಮೃತಪಟ್ಟಿರುವುದು ದೃಢಪಟ್ಟ ಕೆಲವೇ ಗಂಟೆಗಳ ನಂತರ, ಮಧ್ಯಪ್ರಾಚ್ಯದಲ್ಲಿರುವ ಅಮೆರಿಕ ಮತ್ತು ಇಸ್ರೇಲ್ ಸೇನಾ ನೆಲೆಗಳ ಮೇಲೆ ಇರಾನ್ ದಾಳಿ ಮಾಡಿದೆ. ಈ ಬಾರಿಯ ದಾಳಿಗಳು ಭಯಾನಕವಾಗಿರಲಿವೆ ಎಂದು ಇರಾನ್ ಎಚ್ಚರಿಕೆ ನೀಡಿದ್ದು, ಅಮೆರಿಕ ಮತ್ತು ಇಸ್ರೇಲ್ ಕೂಡ ಪ್ರತಿದಾಳಿಗೆ ಸಜ್ಜಾಗುತ್ತಿವೆ.
ಆನೇಕಲ್ | ಪತ್ನಿಯನ್ನು ಕೊಲೆ ಮಾಡಿ ಪತಿ ಆತ್ಮಹತ್ಯೆ
ಆನೇಕಲ್ : ತಾಲೂಕಿನ ಸೂರ್ಯನಗರ ಠಾಣೆ ವ್ಯಾಪ್ತಿಯ ಹೀಲಲಿಗೆ ಗ್ರಾಮದಲ್ಲಿ ಪತಿ–ಪತ್ನಿಯ ಜಗಳ ತಾರಕಕ್ಕೇರಿ ಪತ್ನಿಯನ್ನು ಕೊಲೆ ಮಾಡಿ ಬಳಿಕ ಪತಿಯೂ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಮೃತರನ್ನು ಒಡಿಶಾ ಮೂಲದ ದೀಪಾಂತ್ ಸಬರ (31) ಮತ್ತು ಅವರ ಪತ್ನಿ ಮಂಜುಳಾ ಸಬರ (27) ಎಂದು ಗುರುತಿಸಲಾಗಿದೆ. 20 ದಿನದಿಂದಷ್ಟೇ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ದಂಪತಿ ಬೊಮ್ಮಸಂದ್ರದ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ದಂಪತಿಗಳ ನಡುವೆ ಜಗಳ ಉಂಟಾಗಿ, ಕೋಪದಲ್ಲಿ ಪತ್ನಿಯನ್ನು ಕೊಲೆ ಮಾಡಿರಬಹುದೆಂಬ ಶಂಕೆ ವ್ಯಕ್ತವಾಗಿದೆ. ಬಳಿಕ ಪತಿ ಮನೆಯಲ್ಲೇ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಮನೆ ಮಾಲೀಕ ಶಿವಕುಮಾರ್ 20 ದಿನಗಳ ಹಿಂದೆ ಮನೆ ಬಾಡಿಗೆ ನೀಡಿದ್ದರು. ಗುರುವಾರ ರಾತ್ರಿ ಶಿವಕುಮಾರ್ ಅವರ ತಾಯಿ ಚೌಡಮ್ಮ ಮನೆ ಬಳಿ ನೋಡಿದಾಗ ಮಂಚದ ಮೇಲೆ ಮಹಿಳೆಯ ಮೃತದೇಹ ಕಾಣಿಸಿಕೊಂಡಿದೆ. ತಕ್ಷಣವೇ ಸೂರ್ಯನಗರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪತ್ನಿಯ ಮೃತದೇಹದ ಮುಂದೆ ಪತಿ ಅಳುತ್ತಾ ವೀಡಿಯೊ ದಾಖಲಿಸಿಕೊಂಡಿದ್ದು, ಬಳಿಕ ನೇಣಿಗೆ ಶರಣಾಗಿರುವುದು ಮೊಬೈಲ್ ಪರಿಶೀಲನೆಯಲ್ಲಿ ಬೆಳಕಿಗೆ ಬಂದಿದೆ. ಅಲ್ಲದೆ ಒಡಿಶಾ ಭಾಷೆಯಲ್ಲಿ ಡೆತ್ನೋಟ್ ಬರೆದಿಟ್ಟಿರುವುದು ಪತ್ತೆಯಾಗಿದೆ. ಸ್ಥಳಕ್ಕೆ ಬಂದ ಸೂರ್ಯ ನಗರ ಪೊಲೀಸ್ ಠಾಣೆ ಪೊಲೀಸರು ಮನೆಯ ಬಾಗಿಲು ಮುರಿದು ಒಳಗೆ ಪ್ರವೇಶಿಸಿದಾಗ ಪತಿಯೂ ಆತ್ಮಹತ್ಯೆ ಮಾಡಿಕೊಂಡಿರುವುದು ದೃಢಪಟ್ಟಿದೆ. ಘಟನೆ ಎರಡು ದಿನಗಳ ಹಿಂದೆ ನಡೆದಿರಬಹುದೆಂದು ಶಂಕಿಸಲಾಗಿದೆ. ಮೃತದೇಹಗಳು ಕೊಳೆಯುವ ಸ್ಥಿತಿಗೆ ಬಂದಿದ್ದವು. ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಮೃತದೇಹಗಳನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ. ಡಿವೈಎಸ್ಪಿ ಮಲ್ಲೇಶ್ ಗೌಡ ಹಾಗೂ ಇನ್ಸ್ಪೆಕ್ಟರ್ ಸಂಜೀವ್ ಮಹಾಜನ್ ಸ್ಥಳ ಪರಿಶೀಲನೆ ನಡೆಸಿದರು. ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಳ್ಳಲಾಗಿದೆ.
ಭಟ್ಕಳ: ಶಮ್ಸುದ್ದೀನ್ ಸರ್ಕಲ್ನ ಕ್ಲಾಕ್ ಟವರ್ ನೆಲಸಮ
ಭಟ್ಕಳ: ರಾಷ್ಟ್ರೀಯ ಹೆದ್ದಾರಿ 66 ರಲ್ಲಿನ ವಿಸ್ತರಣಾ ಕಾಮಗಾರಿಯ ಭಾಗವಾಗಿ ಭಟ್ಕಳದ ಶಮ್ಸುದ್ದೀನ್ ಸರ್ಕಲ್ನಲ್ಲಿ ಇದ್ದ ಕ್ಲಾಕ್ ಟವರ್ ಅನ್ನು ಶನಿವಾರ ನೆಲಸಮ ಮಾಡಲಾಯಿತು. ಪೊಲೀಸ್ ಇನ್ಸ್ಪೆಕ್ಟರ್ ದಿವಾಕರ್ ಅವರ ನೇತೃತ್ವದಲ್ಲಿ ಮಧ್ಯಾಹ್ನ ಸುಮಾರು 3 ಗಂಟೆಗೆ ಜೆಸಿಬಿ ಯಂತ್ರಗಳ ಸಹಾಯದಿಂದ ಧ್ವಂಸ ಕಾರ್ಯ ಆರಂಭಿಸಲಾಯಿತು. ಟವರ್ನ ಮೇಲ್ಭಾಗದಲ್ಲಿ ಅಳವಡಿಸಿದ್ದ ಸುಮಾರು ಎರಡು ಟನ್ ತೂಕದ ಗ್ರಾನೈಟ್ ಕಲ್ಲನ್ನು ತೆರವುಗೊಳಿಸಲು ಎರಡು ಗಂಟೆಗೂ ಅಧಿಕ ಸಮಯ ಹಿಡಿಯಿತು. ಈ ವೇಳೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರಕ್ಕೆ ತಾತ್ಕಾಲಿಕ ವ್ಯತ್ಯಯ ಉಂಟಾಗಿದ್ದು, ಸಂಜೆ 6 ಗಂಟೆಯ ವೇಳೆಗೆ ಟವರ್ ಸಂಪೂರ್ಣವಾಗಿ ನೆಲಸಮಗೊಂಡಿತು. ಈ ಕ್ಲಾಕ್ ಟವರ್ ಅಂದಿನ ಮೈಸೂರು ಸಂಸ್ಥಾನದ 1950ರ ದಶಕದ ಉಪ ಹಣಕಾಸು ಸಚಿವರಾಗಿದ್ದ ಜುಕಾಕೊ ಶಮ್ಸುದ್ದೀನ್ ಅವರ ಹೆಸರಿನಲ್ಲಿ ಶಮ್ಸುದ್ದೀನ್ ಸರ್ಕಲ್ನಲ್ಲಿ 2002ರಲ್ಲಿ ನಿರ್ಮಿಸಲಾಗಿತ್ತು. ಭಟ್ಕಳದ ಉದ್ಯಮಿ ಹಾಗೂ ಪ್ಯೂರ್ ಗೋಲ್ಡ್ ಸಂಸ್ಥೆಯ ಮಾಲೀಕ ಶಬೀಬ್ ಕೋಲಾ ಅವರು ಸುಮಾರು ರೂ.10 ಲಕ್ಷ ವೆಚ್ಚದಲ್ಲಿ ಇದನ್ನು ನಿರ್ಮಿಸಿದ್ದರು ಎನ್ನಲಾಗಿದೆ. ನಾಲ್ಕು ಕಂಬಗಳ ಮೇಲೆ ನಿರ್ಮಿಸಲಾದ ಈ ಟವರ್ನ ಮೇಲ್ಭಾಗದಲ್ಲಿ ಭಾರೀ ಗ್ರಾನೈಟ್ ಕಲ್ಲು ಅಳವಡಿಸಲಾಗಿತ್ತು. ನಾಲ್ಕೂ ದಿಕ್ಕುಗಳಲ್ಲಿ ಗಡಿಯಾರಗಳನ್ನು ಅಳವಡಿಸಲಾಗಿದ್ದು, ಇದು ನಗರದ ಪ್ರಮುಖ ಗುರುತುಗಳಲ್ಲಿ ಒಂದಾಗಿ ಪರಿಣಮಿಸಿತ್ತು. ಶಬೀಬ್ ಕೋಲಾ ಅವರ ಪ್ರಕಾರ, ಟವರ್ ನಿರ್ಮಾಣದ ಉದ್ದೇಶ ಭಟ್ಕಳದಲ್ಲಿ ವಿವಿಧ ಧರ್ಮೀಯರ ನಡುವಿನ ಏಕತೆ ಮತ್ತು ಸಾಮರಸ್ಯವನ್ನು ಉತ್ತೇಜಿಸುವುದಾಗಿತ್ತು. ಹೆದ್ದಾರಿ ವಿಸ್ತರಣೆಯ ಬಳಿಕ ಶಮ್ಸುದ್ದೀನ್ ಸರ್ಕಲ್ನ ರೂಪರೇಖೆ ಬದಲಾಗುತ್ತಿರುವ ಹಿನ್ನೆಲೆಯಲ್ಲಿ, ಈ ಸ್ಥಳಕ್ಕೆ ಮುಂದಿನ ದಿನಗಳಲ್ಲಿ ಯಾವ ರೀತಿಯ ಹೊಸ ವಿನ್ಯಾಸ ನೀಡಲಾಗುತ್ತದೆ ಎಂಬುದು ಗಮನಾರ್ಹವಾಗಿದೆ.
ಇರಾಕ್ ನ ಎರ್ಬಿಲ್ ವಿಮಾನ ನಿಲ್ದಾಣದ ಬಳಿ ಡ್ರೋನ್ ಪತನ: ದೋಹಾ, ದುಬೈನಲ್ಲೂ ಸ್ಫೋಟ ; ವರದಿ
ಎರ್ಬಿಲ್: ಉತ್ತರ ಇರಾಕ್ ನ ಎರ್ಬಿಲ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪ ಡ್ರೋನ್ ಪತನಗೊಂಡಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಡ್ರೋನ್ ಪತನವಾದ ಪ್ರದೇಶದಿಂದ ದಟ್ಟ ಹೊಗೆ ಏರುತ್ತಿರುವುದು ಕಂಡುಬಂದಿದೆ ಎಂದು ವರದಿಗಳು ತಿಳಿಸಿವೆ. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ದೃಶ್ಯಗಳಲ್ಲಿ ವಿಮಾನ ನಿಲ್ದಾಣದ ಸುತ್ತಮುತ್ತಲ ಪ್ರದೇಶದಿಂದ ಹೊಗೆ ಆಕಾಶಕ್ಕೇರುತ್ತಿರುವುದು ಗೋಚರಿಸಿದೆ ಎಂದು ಹೇಳಲಾಗಿದೆ. ಘಟನೆಯಿಂದ ಸಂಭವಿಸಿದ ಹಾನಿ ಅಥವಾ ಗಾಯಾಳುಗಳ ಕುರಿತು ಈವರೆಗೆ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಇಸ್ರೇಲ್ ಹಾಗೂ ಅಮೆರಿಕದ ದಾಳಿಗಳಿಗೆ ಪ್ರತಿಕ್ರಿಯೆಯಾಗಿ ಇರಾನ್ ಪ್ರತಿಕ್ರಿಯೆ ಕೈಗೊಳ್ಳುತ್ತಿರುವ ಹಿನ್ನೆಲೆಯಲ್ಲಿ, ಉತ್ತರ ಇರಾಕ್ ನ ಸ್ವಾಯತ್ತ ಕುರ್ದಿಶ್ ಪ್ರದೇಶದಲ್ಲಿರುವ ಎರ್ಬಿಲ್ ವಿಮಾನ ನಿಲ್ದಾಣವನ್ನು ಎರಡು ಬಾರಿ ಗುರಿಯಾಗಿಸಲಾಗಿದೆ ಎಂದು Al Jazeera ವರದಿ ಮಾಡಿದೆ. ಶನಿವಾರ ವಾಯು ರಕ್ಷಣಾ ಪಡೆಗಳು ಡ್ರೋನ್ ದಾಳಿಯನ್ನು ತಡೆದಿವೆ ಎಂಬ ವರದಿಗಳೂ ಲಭ್ಯವಾಗಿವೆ. ಐಎಸ್ಐಎಲ್ (ಐಸಿಸ್) ವಿರುದ್ಧದ ಅಂತಾರಾಷ್ಟ್ರೀಯ ಒಕ್ಕೂಟದ ಭಾಗವಾಗಿ ಇರಾಕ್ನ ಸ್ವಾಯತ್ತ ಕುರ್ದಿಶ್ ಪ್ರದೇಶದಲ್ಲಿ ಅಮೆರಿಕದ ಪಡೆಗಳು ಇನ್ನೂ ನಿಯೋಜಿತವಾಗಿವೆ ಎಂದು ತಿಳಿದುಬಂದಿದೆ. ಇದೇ ವೇಳೆ, ಖತರ್ ರಾಜಧಾನಿ ದೋಹಾದಾದ್ಯಂತ ಕನಿಷ್ಠ 11 ಸ್ಫೋಟಗಳ ಶಬ್ದ ಕೇಳಿಬಂದಿದೆ ಎಂದು ನಗರದ ನಿವಾಸಿಗಳು ತಿಳಿಸಿದ್ದಾರೆ. ದೋಹಾ ನಗರದ ಮೇಲಿನ ಆಕಾಶದಲ್ಲಿ ಸ್ಫೋಟಗಳು ಸಂಭವಿಸಿದಂತೆ ಕಂಡುಬಂದಿದೆ ಎಂದು ತಿಳಿದು ಬಂದಿದೆ. ಇನ್ನೊಂದೆಡೆ, ದುಬೈ ನಗರದಲ್ಲೂ “ಹಲವಾರು ದೊಡ್ಡ ಸ್ಫೋಟಗಳು” ಕೇಳಿಬಂದಿವೆ ಎಂದು ರಾಯಿಟರ್ಸ್ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಮಧ್ಯಪ್ರಾಚ್ಯದ 27 ಅಮೆರಿಕದ ಸೇನಾ ನೆಲೆಗಳ ಮೇಲೆ ದಾಳಿ ಘೋಷಿಸಿದ ಇರಾನ್ನ IRGC
ಟೆಹ್ರಾನ್: ಅಮೆರಿಕ ಮತ್ತು ಇಸ್ರೇಲ್ನ ಬಾಂಬ್ ದಾಳಿಗೆ ಪ್ರತೀಕಾರವಾಗಿ ಆರನೇ ಹಂತದ ದಾಳಿಯನ್ನು ನಡೆಸಲಾಗುತ್ತಿದೆ ಎಂದು ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ ಹೇಳಿದೆ ಎಂದು ಇರಾನ್ನ ಸರಕಾರಿ ಸುದ್ದಿ ಸಂಸ್ಥೆ ವರದಿ ಮಾಡಿದೆ. ಮಧ್ಯಪ್ರಾಚ್ಯದಲ್ಲಿರುವ ಇಸ್ರೇಲ್ ಮತ್ತು ಅಮೆರಿಕ ಸೇನಾ ನೆಲೆಗಳ ಮೇಲೆ ಭಾರಿ ಪ್ರಮಾಣದ ಕ್ಷಿಪಣಿ ಮತ್ತು ಡ್ರೋನ್ ದಾಳಿ ನಡೆಸಲಾಗುತ್ತಿದೆ ಎಂದು ಅದು ಹೇಳಿದೆ. ಅಮೆರಿಕದ 27 ಸೇನಾ ನೆಲೆಗಳು ಹಾಗೂ ಇಸ್ರೇಲ್ ನ ಟೆಲ್ ನಾಫ್ ವಾಯು ನೆಲೆ, ಟೆಲ್ ಅವೀವ್ ನಲ್ಲಿರುವ ಹಕೀರ್ಯದಲ್ಲಿನ ಇಸ್ರೇಲ್ ನ ಸೇನಾ ಕಮಾಂಡ್ ಮುಖ್ಯ ಕಚೇರಿಗಳು ಹಾಗೂ ಟೆಲ್ ಅವೀವ್ ನಲ್ಲಿರುವ ಬೃಹತ್ ರಕ್ಷಣಾ ಕೈಗಾರಿಕಾ ಸಂಕೀರ್ಣದ ಮೇಲೆ ದಾಳಿ ನಡೆಸಲಾಗಿದೆ ಎಂದು ಹೇಳಿದೆ. “ಇರಾನ್ ಪಡೆಗಳು ಯಶಸ್ವಿ ಮತ್ತು ವಿಷಾದಿಸಬೇಕಾದ ವಿಭಿನ್ನ ಮತ್ತು ಕಠಿಣ ಪ್ರತೀಕಾರದ ಕ್ರಮಗಳನ್ನು ಜಾರಿಗೊಳಿಸಲಿವೆ” ಎಂದು ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ ಹೇಳಿದೆ.
ಆಯತೊಲ್ಲಾ ಅಲಿ ಖಮೇನಿ ಯಾರು? ಅಮೆರಿಕ ವೈರತ್ವದಲ್ಲೇ ಜೀವತೆತ್ತ ಧಾರ್ಮಿಕ ಗುರು; ಇರಾನಿಯನ್ನರ ಹೀರೋ ಅಥವಾ ವಿಲನ್?
ಆಯತೊಲ್ಲಾ ಅಲಿ ಖಮೇನಿ ಈ ಹೆಸರು ಕೇಳಿದರೆ ಅರ್ಧ ಇರಾನ್ಗೆ ಹೆಮ್ಮೆ, ಇನ್ನರ್ಧ ಇರಾನ್ಗೆ ಕುದಿ. ಅರ್ಧ ಇರಾನಿಯನ್ನರ ಪಾಲಿಗೆ ಆರಾಧ್ಯದೈವ, ಇನ್ನರ್ಧ ಇರಾನಿಯನ್ನರ ಪಾಲಿಗೆ ರಾಕ್ಷಸ. ಹಾಗಿದ್ದರೆ ಅಸಲಿಗೆ ಆಯತೊಲ್ಲಾ ಅಲಿ ಖಮೇಮನಿ ಯಾರು? ಅಮೆರಿಕ-ಇಸ್ರೇಲ್ ಜಂಟಿ ಕಾರ್ಯಾಚರಣೆಯಲ್ಲಿ ಖಮೇನಿ ಮೃತಪಟ್ಟಿರುವುದಕ್ಕೆ ಇರಾನಿಯನ್ನರು ಸಂಭ್ರಮಿಸುತ್ತಿದ್ದಾರಾ? ಸರ್ವೋಚ್ಚ ನಾಯಕನ ಅಗಲಿಕೆಗೆ ರೋದಿಸುತ್ತಿರುವವರು ಯಾರು? ಸರಿಸುಮಾರು ಮೂರು ದಶಕಗಳ ಖಮೇನಿ ಆಡಳಿತದಲ್ಲಿ ಇರಾನ್ ಪರಿಸ್ಥಿತಿ ಹೇಗಿತ್ತು? ಇಲ್ಲಿದೆ ಸುದೀರ್ಘ ವಿಶ್ಲೇಷಣಾತ್ಮಕ ವರದಿ.
ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ನೆಲೆಸಿರುವ ಕನ್ನಡಿಗರ ರಕ್ಷಣೆ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಹತ್ವದ ಅಪ್ಡೇಟ್ಸ್ ಕೊಟ್ಟಿದ್ದಾರೆ. ಇದರೊಂದಿಗೆ ಅವರು Oneindia Kannada ಬರಹವನ್ನು ಸಹ ಹಂಚಿಕೊಂಡಿದ್ದಾರೆ. ಇಸ್ರೇಲ್ ಹಾಗೂ ಇರಾನ್ ನಡುವಿನ ಯುದ್ಧದಿಂದಾಗಿ ಇಸ್ರೇಲ್, ಯುಎಇ, ಇರಾನ್, ಖತಾರ್ ಸೇರಿದಂತೆ ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ನೆಲೆಸಿರುವ ಕನ್ನಡಿಗರ ಸುರಕ್ಷತೆಯನ್ನು ನಾವು ಅತ್ಯಂತ ಗಂಭೀರವಾಗಿ ಪರಿಗಣಿಸಿದ್ದು, ಈ ಸಂಬಂಧ ದೆಹಲಿಯ
ಕರ್ನಾಟಕ ರಾಜ್ಯ ಯುವ ಆಯೋಗ: ಈಗ ನಿರ್ಣಾಯಕ ಹೆಜ್ಜೆಯ ಸಮಯ
ಕರ್ನಾಟಕದ ಯುವಜನತೆ ಇಂದು ಒಂದು ಮಹತ್ವದ ತಿರುವಿನಲ್ಲಿದೆ. ರಾಜ್ಯದ ಒಟ್ಟು ಜನಸಂಖ್ಯೆಯಲ್ಲಿ ದೊಡ್ಡ ಪಾಲನ್ನು ಹೊಂದಿರುವ ಯುವಕರು ಶಿಕ್ಷಣ, ಉದ್ಯೋಗ, ಕೌಶಲ್ಯಾಭಿವೃದ್ಧಿ, ಮಾನಸಿಕ ಆರೋಗ್ಯ ಹಾಗೂ ಸಾಮಾಜಿಕ ಪ್ರತಿನಿಧಿತ್ವದಂತಹ ಅನೇಕ ಸವಾಲುಗಳನ್ನು ಎದುರಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಯುವಕರ ಸಮಸ್ಯೆಗಳಿಗೆ ಸಮಗ್ರ ಹಾಗೂ ವ್ಯವಸ್ಥಾತ್ಮಕ ಪರಿಹಾರ ಒದಗಿಸಲು ಕರ್ನಾಟಕ ರಾಜ್ಯ ಯುವ ಆಯೋಗ ಸ್ಥಾಪನೆ ಅತ್ಯವಶ್ಯಕವಾಗಿದೆ. ಸೋಲಿಡಾರಿಟಿ ಯೂತ್ ಮೂವ್ಮೆಂಟ್ ಈ ಹಿನ್ನೆಲೆಯಲ್ಲಿ ರಾಜ್ಯ ಸರಕಾರವನ್ನು ತೀವ್ರವಾಗಿ ಆಗ್ರಹಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಈ ವಿಷಯಕ್ಕೆ ತಕ್ಷಣ ವೈಯಕ್ತಿಕ ಗಮನ ನೀಡಿ, ಯುವ ಆಯೋಗ ಸ್ಥಾಪನೆಗೆ ಸಂಬಂಧಿಸಿದ ಅಧಿಸೂಚನೆಯನ್ನು ಕೂಡಲೇ ಹೊರಡಿಸಬೇಕು ಎಂದಿದೆ. ಯುವ ಆಯೋಗ-ಭಿಕ್ಷೆಯಲ್ಲ, ಹಕ್ಕು ಯುವ ಆಯೋಗದ ಬೇಡಿಕೆ ಯಾವುದೋ ರಾಜಕೀಯ ಲಾಭಕ್ಕಾಗಿ ಮುಂದಿಟ್ಟಿರುವ ವಿಷಯವಲ್ಲ. ಇದು ಯುವಕರ ಸಂವಿಧಾನಾತ್ಮಕ ಹಕ್ಕು ಮತ್ತು ರಾಜ್ಯದ ಭವಿಷ್ಯವನ್ನು ಭದ್ರಗೊಳಿಸುವ ಹೆಜ್ಜೆಯಾಗಿದೆ. 2023ರ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಯುವ ಆಯೋಗ ಸ್ಥಾಪಿಸುವ ಭರವಸೆ ನೀಡಲಾಗಿತ್ತು. ಆದರೆ ಇನ್ನೂ ಆ ಭರವಸೆ ಈಡೇರದಿರುವುದು ಯುವ ಸಮುದಾಯದಲ್ಲಿ ನಿರಾಶೆಯನ್ನು ಉಂಟುಮಾಡಿದೆ. ಕರ್ನಾಟಕದಲ್ಲಿ 2 ಕೋಟಿಗೂ ಅಧಿಕ ಯುವಜನಸಂಖ್ಯೆ ಇದ್ದರೂ, ಯುವಕರ ಹಕ್ಕುಗಳ ರಕ್ಷಣೆ ಮತ್ತು ಸಮಸ್ಯೆಗಳ ಸಮಗ್ರ ಪರಿಹಾರಕ್ಕಾಗಿ ಸ್ವಾಯತ್ತ ಹಾಗೂ ಜವಾಬ್ದಾರಿಯುತ ವೇದಿಕೆ ಇನ್ನೂ ರೂಪುಗೊಂಡಿಲ್ಲ. ಇದು ಆಡಳಿತಾತ್ಮಕ ಖಾಲಿತನವನ್ನು ಸೂಚಿಸುತ್ತದೆ. ಇಂದಿನ ಯುವಕರ ಸವಾಲುಗಳು ರಾಜ್ಯದ ಯುವಕರು ಇಂದು ಎದುರಿಸುತ್ತಿರುವ ಪ್ರಮುಖ ಸಮಸ್ಯೆಗಳು ಹಲವು. ಶಿಕ್ಷಣ ಪೂರ್ಣಗೊಳಿಸಿದ ಬಳಿಕ ಉದ್ಯೋಗದ ಅನಿಶ್ಚಿತತೆ, ಕೌಶಲ್ಯಾಭಿವೃದ್ಧಿ, ಅವಕಾಶಗಳ ಕೊರತೆ, ಮಾನಸಿಕ ಒತ್ತಡ ಮತ್ತು ಆತ್ಮಹತ್ಯೆಗಳ ಹೆಚ್ಚುತ್ತಿರುವ ಪ್ರಮಾಣ, ಮಾದಕವಸ್ತುಗಳ ಪ್ರಭಾವ, ಸಾಮಾಜಿಕ ಅಸಮಾನತೆ ಮತ್ತು ರಾಜಕೀಯ ಪ್ರತಿನಿಧಿತ್ವದ ಕೊರತೆ-ಇವುಗಳೆಲ್ಲವೂ ಗಂಭೀರ ಚಿಂತನೆಯ ವಿಷಯಗಳಾಗಿವೆ. ಈ ಸಮಸ್ಯೆಗಳು ಪ್ರತ್ಯೇಕ ಇಲಾಖೆಗಳ ಮೂಲಕ ಭಾಗಶಃ ಪರಿಹಾರವಾಗಬಹುದಾದರೂ, ಯುವಕರ ವಿಚಾರಗಳಿಗೆ ಸಮರ್ಪಿತವಾದ ಸ್ವಾಯತ್ತ ಸಂಸ್ಥೆ ಇದ್ದಲ್ಲಿ ಮಾತ್ರ ದೀರ್ಘಕಾಲಿಕ ಹಾಗೂ ಸಮಗ್ರ ಪರಿಹಾರ ಸಾಧ್ಯ. ಯುವ ಆಯೋಗದ ಅಗತ್ಯ ಪಾತ್ರ ಯುವ ಆಯೋಗವು ಯುವ ಹಕ್ಕುಗಳ ರಕ್ಷಣೆ, ಉಲ್ಲಂಘನೆಗಳ ಪರಿಶೀಲನೆ, ಶಿಕ್ಷಣ ಮತ್ತು ಉದ್ಯೋಗ ನೀತಿಗಳ ಕುರಿತು ಶಿಫಾರಸುಗಳು, ಮಾನಸಿಕ ಆರೋಗ್ಯ ಮತ್ತು ಮಾದಕವಸ್ತು ವಿರೋಧಿ ತಂತ್ರ ರೂಪಣೆ, ಯುವಕರ ದೂರುಗಳ ಪಾರದರ್ಶಕ ಪರಿಹಾರ ವ್ಯವಸ್ಥೆ ಹಾಗೂ ನಾಯಕತ್ವ ಅಭಿವೃದ್ಧಿ ಕಾರ್ಯಕ್ರಮಗಳನ್ನು ಜಾರಿಗೆ ತರುವಲ್ಲಿ ಮಹತ್ವದ ಪಾತ್ರ ವಹಿಸಬಹುದು. ಇದು ಕೇವಲ ಸಲಹಾ ಮಂಡಳಿ ಆಗಿರದೆ, ಕಾರ್ಯನಿರ್ವಹಣಾ ಸಾಮರ್ಥ್ಯ ಹೊಂದಿದ, ಜವಾಬ್ದಾರಿಯುತ ಮತ್ತು ಸ್ವಾಯತ್ತ ಸಂಸ್ಥೆಯಾಗಿರಬೇಕು ಎಂಬುದು ಯುವ ಸಂಘಟನೆಗಳ ಅಭಿಪ್ರಾಯವಾಗಿದೆ. ರಾಜ್ಯವ್ಯಾಪಿ ಬೆಂಬಲ ಯುವ ಆಯೋಗ ಸ್ಥಾಪನೆಗಾಗಿ ರಾಜ್ಯದ ವಿವಿಧ ಜಿಲ್ಲೆಗಳು ಮತ್ತು ಘಟಕಗಳಿಂದ ಪ್ರತಿನಿಧಿತ್ವಗಳು ಸಲ್ಲಿಕೆಯಾಗಿವೆ. ವಿಷಯವನ್ನು ಕ್ಯಾಬಿನೆಟ್ ಮಟ್ಟದಲ್ಲಿಯೂ ಪ್ರಸ್ತಾಪಿಸಲಾಗಿದೆ. ಹಲವು ಗಣ್ಯರು ಮುಖ್ಯಮಂತ್ರಿ ಅವರಿಗೆ ಬೆಂಬಲ ಸೂಚಿಸಿ ಪತ್ರ ರವಾನಿಸಿದ್ದಾರೆ. ಅವರಲ್ಲಿ ಸಭಾಧ್ಯಕ್ಷರಾದ ಯು.ಟಿ. ಖಾದರ್, ಸಚಿವರುಗಳಾದ ಶಿವರಾಜ್ ಎಸ್. ತಂಗಡಗಿ, ರಹೀಂ ಖಾನ್, ಎಚ್.ಕೆ. ಪಾಟಿಲ್, ರಾಮಲಿಂಗಾ ರೆಡ್ಡಿ ಹಾಗೂ ಸಂತೋಷ್ ಎಸ್. ಲಾಡ್ ಸೇರಿದಂತೆ ಅನೇಕರು ಇದ್ದಾರೆ. ಈ ಬೆಂಬಲವು ವಿಷಯದ ಗಂಭೀರತೆಯನ್ನು ಸ್ಪಷ್ಟಪಡಿಸುತ್ತದೆ. ಆರ್ಥಿಕವಾಗಿ ಸಾಧ್ಯ, ಆಡಳಿತಾತ್ಮಕವಾಗಿ ಅಗತ್ಯ ಯುವ ಆಯೋಗದ ಅಂದಾಜು ವಾರ್ಷಿಕ ವೆಚ್ಚ ರೂ. 4-5 ಕೋಟಿ ಮಾತ್ರ. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಒಟ್ಟು ಬಜೆಟ್ಗೆ ಹೋಲಿಸಿದರೆ ಇದು ಅತಿ ಕಡಿಮೆ ಮೊತ್ತ. ಆದ್ದರಿಂದ ಇದು ಆರ್ಥಿಕವಾಗಿ ಸಾಧ್ಯವಲ್ಲ ಎನ್ನುವ ವಾದ ಅಸಂಬದ್ಧ. ಬದಲಾಗಿ, ಇದು ರಾಜ್ಯದ ಭವಿಷ್ಯದಲ್ಲಿ ಹೂಡಿಕೆ ಮಾಡುವ ದೂರದೃಷ್ಟಿಯ ಕ್ರಮವಾಗಲಿದೆ. ಈಗ ನಿರ್ಧಾರ ಬೇಕು ಇದೀಗ ರಾಜ್ಯ ಸರಕಾರದಿಂದ ಸ್ಪಷ್ಟ ಕಾಲಮಿತಿಯೊಂದಿಗೆ ನಿರ್ಣಾಯಕ ಕ್ರಮ ನಿರೀಕ್ಷಿಸಲಾಗಿದೆ. ಯುವಕರ ಭವಿಷ್ಯವನ್ನು ರೂಪಿಸುವ ಈ ಮಹತ್ವದ ಹೆಜ್ಜೆ ಇನ್ನಷ್ಟು ವಿಳಂಬವಾಗಬಾರದು. ಯುವ ಆಯೋಗ ಸ್ಥಾಪನೆ ಕೇವಲ ಆಡಳಿತಾತ್ಮಕ ಕ್ರಮವಲ್ಲ ಇದು ಕರ್ನಾಟಕದ ಭವಿಷ್ಯದ ಮೇಲೆ ಸರಕಾರದ ಬದ್ಧತೆಯನ್ನು ತೋರಿಸುವ ಐತಿಹಾಸಿಕ ನಿರ್ಧಾರವಾಗಲಿದೆ.
ಅಫಜಲಪುರ : ಸಾಲಬಾಧೆ ತಾಳಲಾರದೆ ರೈತ ಆತ್ಮಹತ್ಯೆ
ಕಲಬುರಗಿ : ರೈತರೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಅಫಜಲಪುರ ತಾಲೂಕಿನ ಬಂದರವಾಡ ಗ್ರಾಮದಲ್ಲಿ ನಡೆದಿದೆ. ಮಲ್ಲಪ್ಪ ತಾರಾಪುರ(58) ಆತ್ಮಹತ್ಯೆ ಮಾಡಿಕೊಂಡ ರೈತ. ಶನಿವಾರ ಬೆಳಿಗ್ಗೆ 8 ಗಂಟೆಗೆ ತಮ್ಮ ಜಮೀನಿಗೆ ತೆರಳಿ ಜಮೀನು ತುಂಬಾ ಸುತ್ತಾಡಿ ಈ ಬಾರಿ ಯಾವುದೇ ಬೆಳೆ ಸರಿಯಾಗಿ ಬೆಳೆದಿಲ್ಲ ಎಂದು ಮನನೊಂದಿದ್ದರು. ಮೃತ ರೈತ ಬ್ಯಾಂಕ್ ನಲ್ಲಿ 2 ಲಕ್ಷ, ಖಾಸಗಿ 5 ಲಕ್ಷ ರೂ.ಸಾಲ ಮಾಡಿಕೊಂಡಿದ್ದರು. ಸಾಲಬಾಧೆ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಮೃತರು ಇಬ್ಬರು ಪುತ್ರರು, ಮೂವರು ಪುತ್ರಿಯರು ಸೇರಿದಂತೆ ಅಪಾರ ಬಂಧುಗಳನ್ನು ಅಗಲಿದ್ದಾರೆ . ಈ ಕುರಿತು ದೇವಲ ಗಾಣಗಾಪುರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗೌರಿಬಿದನೂರಿನ ಅಲೀಪುರಕ್ಕೂ ಇರಾನ್ ನಾಯಕ ಖಮೇನಿಗೂ ಇದೆ ನಂಟು, ಹತ್ಯೆ ಖಂಡಿಸಿ ಅಘೋಷಿತ ಬಂದ್
ಗೌರಿಬಿದನೂರು: ಇರಾನ್ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರ ಹತ್ಯೆ ಸುದ್ದಿ ತಿಳಿಯುತ್ತಿದ್ದಂತೆ, ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲ್ಲೂಕಿನ ಅಲೀಪುರ ಸ್ತಬ್ಧಗೊಂಡಿದೆ. ನೆಚ್ಚಿನ ಧಾರ್ಮಿಕ ನಾಯಕನ ಸಾವಿನಿಂದ ಕಂಗಾಲಾಗಿರುವ ಸ್ಥಳೀಯ ಶಿಯಾ ಮುಸ್ಲಿಮರು ಸ್ವಯಂಪ್ರೇರಿತರಾಗಿ ಅಂಗಡಿ-ಮುಗ್ಗಟ್ಟುಗಳನ್ನು ಮುಚ್ಚಿ ಅಘೋಷಿತ ಬಂದ್ ಆಚರಿಸುತ್ತಿದ್ದಾರೆ. ಬೆಳಿಗ್ಗೆಯಿಂದಲೇ ರಸ್ತೆಗಿಳಿದ ನೂರಾರು ಗ್ರಾಮಸ್ಥರು ಖಮೇನಿ ಅವರ ಭಾವಚಿತ್ರ ಹಿಡಿದು ಕಣ್ಣೀರು ಹಾಕುತ್ತಾ
ಖಾಮಿನೈ ಹತ್ಯೆ “ಒಂದು ಮಹಾ ಅಪರಾಧ” : ಇರಾನ್ ಅಧ್ಯಕ್ಷ ಮಸೂದ್ ಪೆಝೆಶ್ಕಿಯಾನ್
ಪ್ರತಿಕ್ರಿಯೆ ನೀಡುವುದಾಗಿ ಪ್ರತಿಜ್ಞೆ
ಮಹಾರಾಷ್ಟ್ರದ ಫ್ಯಾಕ್ಟರಿಯಲ್ಲಿ ತೀವ್ರ ಸ್ಫೋಟ 15 ಜನರು ಸಾವು, 18 ಜನರು ಗಂಭೀರ ಗಾಯ
ಮಹಾರಾಷ್ಟ್ರದ ಫ್ಯಾಕ್ಟರಿಯೊಂದರಲ್ಲಿ ಸ್ಫೋಟವೊಂದು ಸಂಭವಿಸಿದ್ದು 15 ಜನ ಮೃತಪಟ್ಟಿದ್ದಾರೆ. ಮಹಾರಾಷ್ಟ್ರದ ನಾಗ್ಪುರದಲ್ಲಿ ಈ ಸ್ಫೋಟ ಸಂಭವಿಸಿದೆ. ಇಲ್ಲಿನ ನಾಗ್ಪುರದ ಎಸ್ಬಿಎಲ್ ಎನರ್ಜಿ ಲಿಮಿಟೆಡ್ನಲ್ಲಿ ಸಂಭವಿಸಿದ ಸ್ಫೋಟದಲ್ಲಿ 15 ಜನರು ಸಾವನ್ನಪ್ಪಿದ್ದಾರೆ, 18 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ನಾಗ್ಪುರ ಗ್ರಾಮೀಣ ಎಸ್ಪಿ ಹರ್ಶ್ ಪೊದ್ದಾರ್ ಅವರು ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.
ಪರಮಾಣು ಬಾಂಬ್ ದಾಳಿಯ ಭಯ ಮತ್ತಷ್ಟು ಹೆಚ್ಚಾಯ್ತು, ಇರಾನ್ ಮೇಲೆ ಜಗತ್ತಿನ ಕಣ್ಣು | Israel Military
ಇರಾನ್ ಮೇಲೆ ಭೀಕರ ದಾಳಿ ಮಾಡಿರುವ ಇಸ್ರೇಲ್ ಹಾಗೂ ಅಮೆರಿಕ, ಜಂಟಿಯಾಗಿ ಕಾರ್ಯಾಚರಣೆ ನಡೆಸಿ ಈಗ ಇರಾನ್ ಸರ್ವಾಧಿಕಾರಿ ಖಮೇನಿ ಕಥೆಯನ್ನೇ ಮುಗಿಸಿವೆ. ಈ ಬಗ್ಗೆ ಇರಾನ್ ಮಾಧ್ಯಮಗಳು ಕೂಡ ಅಧಿಕೃತವಾಗಿ ಮಾಹಿತಿ ನೀಡಿದ್ದು, ಅಮೆರಿಕ ಹಾಗೂ ಇರಾನ್ ನಡುವೆ ನೇರವಾದ ಸಂಘರ್ಷ ಶುರುವಾಗಿದೆ. ನೋಡ ನೋಡುತ್ತಲೇ ಭಾರಿ ದೊಡ್ಡ ಹಂತಕ್ಕೆ ತಲುಪಿರುವ ಈ ಯುದ್ಧ ಪರಮಾಣು
ಮಡಿಕೇರಿ : ಕಾಡಾನೆ ದಾಳಿಗೆ ಪಿಯುಸಿ ವಿದ್ಯಾರ್ಥಿನಿ ಬಲಿ
ಮಡಿಕೇರಿ ಮಾ.1: ಕಾಡಾನೆ ದಾಳಿಗೆ ಸಿಲುಕಿ ಪಿಯುಸಿ ವಿದ್ಯಾರ್ಥಿನಿ ಮೃತಪಟ್ಟಿರುವ ಘಟನೆ ಮಡಿಕೇರಿ ತಾಲ್ಲೂಕಿನ ಬೆಟ್ಟತ್ತೂರು ಗ್ರಾಮದಲ್ಲಿ ನಡೆದಿದೆ. ಕುಡಿಯರ ಗಿರೀಶ್ ಎಂಬುವವರ ಪುತ್ರಿ ಪೂಜಾ (17) ಮೃತ ವಿದ್ಯಾರ್ಥಿನಿ. ಮಡಿಕೇರಿಯ ಸಂತ ಮೈಕಲರ ಪದವಿಪೂರ್ವ ಕಾಲೇಜಿನ ಪಿಯುಸಿ ವಿದ್ಯಾರ್ಥಿನಿಯಾಗಿದ್ದ ಈಕೆ, ಶನಿವಾರ ಸಂಜೆ ಮನೆಗೆ ತೆರಳುತ್ತಿದ್ದ ಸಂದರ್ಭ ಏಕಾಏಕಿ ಕಾಡಾನೆ ದಾಳಿ ಮಾಡಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದಾಳೆ ಎಂದು ತಿಳಿದು ಬಂದಿದೆ. ಕಾಡಾನೆ ದಾಳಿ ಕುರಿತು ಗ್ರಾಮಸ್ಥರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇರಾನ್ ಮೇಲೆ ಅಮೆರಿಕಾ ಹಾಗೂ ಇಸ್ರೇಲ್ ನಡೆಸಿದ ಜಂಟಿ ಕಾರ್ಯಚರಣೆಯಿಂದಾಗಿ ಈಗಾಗಲೇ ಮಧ್ಯಪ್ರಾಚ್ಯದಲ್ಲಿ ಮತ್ತೊಂದು ಯುದ್ದ ಆರಂಭವಾಗಿದ್ದು, ಇದರಿಂದಗಿ ಜಾಗತಿಕ ಮಾರುಕಟ್ಟೆಯಲ್ಲಿ ಹಲವು ಅನಿಶ್ಚಿತತೆಗಳು ಎದುರಾಗುವ ಸಂಭವನೀಯತೆ ಇದೆ. ಅದರಲ್ಲೂ ಪ್ರಮುಖವಾಗಿ ಭಾರತಕ್ಕೆ ಸಾಕಷ್ಟು ಸಂಕಷ್ಟ ಎದುರಾಗಲಿದ್ದು, ತೈಲ ಬೆಲಯಲ್ಲಿ ಏರಿಕೆ, ಚಿನ್ನ ಹಾಗೂ ಬೆಳ್ಳಿ ದರ ಏರಿಕೆ ಹೀಗೆ ಹಲವು ವಿಚಾರಗಳಲ್ಲಿ ಆರ್ಥಿಕ ಸಂಕಷ್ಟವುಂಟಾಗಲಿದ್ದು, ಭಾರತದಿಂದ ಇರಾನ್ ಗೆ ರಫ್ತು ಮಾಡಲಾಗುತ್ತಿದ್ದ ಬಾಸ್ಮತಿ ಅಕ್ಕಿಗೂ ಈ ಯುದ್ದದ ಬಿಸಿ ತಟ್ಟಲಿದೆ. ಈ ಕುರಿತ ವರದಿ ಇಲ್ಲಿದೆ.
Gold Rate Today: ಆಭರಣ ಪ್ರಿಯರ ಗಮನಕ್ಕೆ: ಬೆಂಗಳೂರಿನಲ್ಲಿ ಇಂದು ಚಿನ್ನ-ಬೆಳ್ಳಿ ದರ ಹೇಗಿದೆ? ಇಲ್ಲಿದೆ ಮಾಹಿತಿ
ಬೆಂಗಳೂರು: ಮಧ್ಯಪ್ರಾಚ್ಯದಲ್ಲಿ ಸೃಷ್ಟಿಯಾಗಿರುವ ಭೀಕರ ಯುದ್ಧದ ವಾತಾವರಣ ಮತ್ತು ಜಾಗತಿಕ ಮಾರುಕಟ್ಟೆಯ ಅಸ್ಥಿರತೆಯ ನಡುವೆಯೂ, ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಇಂದು ಚಿನ್ನದ ಬೆಲೆ ಸ್ಥಿರವಾಗಿದೆ. ಫೆಬ್ರವರಿ 28 ರಂದು ದಾಖಲೆಯ ಮಟ್ಟದಲ್ಲಿ ಏರಿಕೆ ಕಂಡಿದ್ದ ಚಿನ್ನದ ದರವು ಇಂದು ಯಾವುದೇ ಬದಲಾವಣೆ ಕಾಣದೆ ಗ್ರಾಹಕರಲ್ಲಿ ಕುತೂಹಲ ಮೂಡಿಸಿದೆ. ಯುದ್ಧದ ಉದ್ವಿಗ್ನತೆಯಿಂದಾಗಿ ಹೂಡಿಕೆದಾರರು ಸುರಕ್ಷಿತ ಹೂಡಿಕೆಯಾಗಿ ಚಿನ್ನದತ್ತ ಮುಖ
‘ಇತಿಹಾಸದಲ್ಲೇ ಅತ್ಯಂತ ವಿನಾಶಕಾರಿ ದಾಳಿ’ ಶೀಘ್ರದಲ್ಲೇ ಆರಂಭ: ಖಾಮಿನೈ ಹತ್ಯೆ ಬೆನ್ನಲ್ಲೇ ಐಆರ್ಜಿಸಿ ಎಚ್ಚರಿಕೆ
ಟೆಹ್ರಾನ್: “ಇಸ್ಲಾಮಿಕ್ ಗಣರಾಜ್ಯ ಇರಾನ್ನ ಇತಿಹಾಸದಲ್ಲೇ ಅತ್ಯಂತ ವಿನಾಶಕಾರಿ ಆಕ್ರಮಣಕಾರಿ ಕಾರ್ಯಾಚರಣೆ” ಶೀಘ್ರದಲ್ಲೇ ಆರಂಭವಾಗಲಿದೆ ಎಂದು ಇರಾನಿನ ಕ್ರಾಂತಿಕಾರಿ ಗಾರ್ಡ್ ಕಾರ್ಪ್ಸ್ (ಐಆರ್ಜಿಸಿ) ಘೋಷಿಸಿದೆ ಎಂದು ಫಾರ್ಸ್ ಸುದ್ದಿ ಸಂಸ್ಥೆ ವರದಿ ಮಾಡಿದೆ. ಇರಾನ್ನ ಸರ್ವೋಚ್ಚ ನಾಯಕ ಆಯತುಲ್ಲಾ ಅಲಿ ಖಾಮಿನೈ ಅವರ ಉನ್ನತ ರಾಜಕೀಯ ಸಲಹೆಗಾರ ಹಾಗೂ ರಕ್ಷಣಾ ಮಂಡಳಿಯ ಕಾರ್ಯದರ್ಶಿ ಅಲಿ ಶಮ್ಖಾನಿ ಅವರು ಟೆಹ್ರಾನ್ ಮೇಲೆ ನಡೆದ ಅಮೆರಿಕ–ಇಸ್ರೇಲಿ ದಾಳಿಯಲ್ಲಿ ಸಾವನ್ನಪ್ಪಿದ್ದಾರೆ. ಐಆರ್ಜಿಸಿಯ ಕಮಾಂಡರ್-ಇನ್-ಚೀಫ್ ಮುಹಮ್ಮದ್ ಪಾಕ್ಪೌರ್ ಕೂಡ ಹತ್ಯೆಯಾಗಿದ್ದಾರೆ ಎಂದು ಇರಾನ್ ಖಚಿತಪಡಿಸಿದ ಬೆನ್ನಲ್ಲೇ ಈ ಹೇಳಿಕೆ ಹೊರಬಂದಿದೆ. ಐಆರ್ಜಿಸಿ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ, ದಾಳಿ “ಕೇವಲ ಕ್ಷಣಗಳಲ್ಲೇ” ಆರಂಭವಾಗಲಿದ್ದು, ಈ ಪ್ರದೇಶದಲ್ಲಿನ “ಆಕ್ರಮಿತ ಪ್ರದೇಶಗಳು ಹಾಗೂ ಅಮೆರಿಕನ್ ಭಯೋತ್ಪಾದಕ ನೆಲೆಗಳು” ಗುರಿಯಾಗಲಿವೆ ಎಂದು ತಿಳಿಸಲಾಗಿದೆ. ಈ ಹೇಳಿಕೆ ಮಧ್ಯಪ್ರಾಚ್ಯದಲ್ಲಿ ಈಗಾಗಲೇ ಉಂಟಾಗಿರುವ ಉದ್ವಿಗ್ನತೆಯನ್ನು ಮತ್ತಷ್ಟು ಉಲ್ಬಣಗೊಳಿಸಿದೆ. ಈ ಬೆಳವಣಿಗೆಗಳು ಇರಾನ್ ಹಾಗೂ ಅಮೆರಿಕ–ಇಸ್ರೇಲ್ ನಡುವಿನ ಸಂಘರ್ಷವನ್ನು ಮತ್ತಷ್ಟು ತೀವ್ರಗೊಳಿಸುವ ಸೂಚನೆ ನೀಡಿದ್ದು, ಪ್ರದೇಶದ ಭದ್ರತಾ ಪರಿಸ್ಥಿತಿಯ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆ ಇದೆ.
Iran Supreme Leader Khamenei: ಇರಾನ್ ಸುಪ್ರೀಂ ಲೀಡರ್ ಅಯಾತೊಲ್ಲ ಖಮೇನಿ ಕೊಲೆಯಾಗಿದೆ; ಅಮೆರಿಕಾ - ಇಸ್ರೇಲ್ ಗುರಿ ಸಾಧಿಸಿದೆ: ಗೋಪಾಲಕೃಷ್ಣ ಕುಂಟಿನಿ ಅವರ ಬರಹ ಇಲ್ಲಿದೆ. ಯುದ್ಧ ದಿನ 1ರಂದೇ ಅಮೆರಿಕಾ ಮತ್ತು ಇಸ್ರೇಲ್ ಗುರಿ ಸಾಧಿಸಿದೆ. ಅಯಾತೊಲ್ಲ ಅಲಿ ಹೊಸೈನಿ ಖಮೇನಿಯನ್ನು ಕೊಂದಿದ್ದು ಅಮೆರಿಕಾ ಅಲ್ಲ, ಇಸ್ರೇಲ್. ಎಲ್ಲ ಅನಿಷ್ಟಕ್ಕೂ ಈತನೇ ಕಾರಣ, ಈ
ಉಡುಪಿ : ಪೊಲೀಸ್ ಇಲಾಖೆಯ ಮ್ಯಾರಥಾನ್ ನಲ್ಲಿ ಪಾಲ್ಗೊಂಡಿದ್ದ ಎಸ್ಐ ನಾಸೀರ್ ಹುಸೇನ್ ಕುಸಿದು ಬಿದ್ದು ಮೃತ್ಯು
ಉಡುಪಿ: ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಉಡುಪಿಯಲ್ಲಿ ರವಿವಾರ ಬೆಳಗ್ಗೆ ಹಮ್ಮಿಕೊಳ್ಳಲಾದ ಮ್ಯಾರಥಾನ್ ನಲ್ಲಿ ಪಾಲ್ಗೊಂಡಿದ್ದ ಕುಂದಾಪುರ ಗ್ರಾಮಾಂತರ ಎಸ್ಐ ನಾಸೀರ್ ಹುಸೇನ್ ಕುಸಿದು ಬಿದ್ದು ಮೃತಪಟ್ಟ ಬಗ್ಗೆ ವರದಿಯಾಗಿದೆ. ನಮ್ಮ ಪೊಲೀಸ್ ನಮ್ಮ ಹೆಮ್ಮೆ ಎಲ್ಲರಿಗೂ ಫಿಟ್ನೆಸ್ ಡಬ್ ಫ್ರೀ ಕರ್ನಾಟಕ ಸೈಬರ್ ಜಾಗೃತಿಗಾಗಿ 5 ಕಿ.ಮೀ ಮ್ಯಾರಥಾನ್ ಓಟವನ್ನು ಉಡುಪಿ ಅಜ್ಜರಕಾಡು ಮೈದಾನದಲ್ಲಿ ಹಮ್ಮಿಕೊಳ್ಳಲಾಗಿತ್ತು. ಇದರಲ್ಲಿ ಎಸ್ಐ ನಾಸೀರ್ ಹುಸೇನ್ ಸೇರಿದಂತೆ ನೂರಾರು ಪೊಲೀಸರು ಪಾಲ್ಗೊಂಡಿದ್ದರು. ಮ್ಯಾರಥಾನ್ ಓಡುತ್ತಿದ್ದ ನಾಸೀರ್ ಹುಸೇನ್ ಒಮ್ಮೆಲೆ ಕುಸಿದು ಬಿದ್ದು ತೀವ್ರವಾಗಿ ಅಸ್ವಸ್ಥಗೊಂಡರು ಎನ್ನಲಾಗಿದೆ. ಕೂಡಲೇ ಅವರನ್ನು ಉಡುಪಿ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಅಲ್ಲಿ ಪರೀಕ್ಷಿಸಿದ ವೈದ್ಯರು ಅವರು ಮೃತ ಪಟ್ಟಿರುವುದಾಗಿ ತಿಳಿಸಿದ್ದಾರೆ ಎಂದು ತಿಳಿದು ಬಂದಿದೆ.
ಇರಾನ್ ಹಣೆಬರಹ ಮೊದಲೇ ಊಹಿಸಿದ್ದ ಭಾರತೀಯ ಮೂಲದ ಅಮೆರಿಕನ್ ಜ್ಯೋತಿಷಿ; ಖಮೇನಿ ಗ್ರಹಚಾರದ ಲೆಕ್ಕಾಚಾರ!
ಅಮೆರಿಕ ಮತ್ತು ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ, ಇರಾನ್ ಸರ್ವೋಚ್ಚ ನಾಯಕ ಆಯತೊಲ್ಲಾ ಅಲಿ ಖಮೇನಿ ಮೃತಪಟ್ಟಿದ್ದಾರೆ. ಖಮೇನಿ ಅವರ ಕುಟುಂಬದ ಪ್ರಮುಖ ಸದಸ್ಯರೂ ಕೂಡ ಈ ದಾಳಿಯಲ್ಲಿ ಸಾವನ್ನಪ್ಪಿದ್ದಾರೆ. ಇರಾನ್ಗೆ ಈ ಆಘಾತದಿಂದ ಹೊರಬರಲು ಕೆಲವು ದಿನಗಳು ಬೇಕಾಗಬಹುದು. ಈ ಮಧ್ಯೆ ಇರಾನ್ ಮೇಲೆ ಅಮೆರಿಕ ಮತ್ತು ಇಸ್ರೇಲ್ ಜಂಟಿ ದಾಳಿ ಬಗ್ಗೆ ಮತ್ತು ಖಮೇನಿ ಅವರ ಸಂಕಷ್ಟಗಳ ಬಗ್ಗೆ, ಅಮೆರಿಕದಲ್ಲಿ ನೆಲೆಸಿರುವ ಭಾರತೀಯ ಮೂಲದ ಜ್ಯೋತಿಷಿ ನರಸಿಂಹ ರಾವ್ ನುಡಿದಿದ್ದ ಭವಿಷ್ಯವಾಣಿಯೊಂದು ನಿಜವಾಗಿದೆ.
ಅಮೆರಿಕ-ಇಸ್ರೇಲ್ ದಾಳಿಯಲ್ಲಿ ಖಮೇನಿ ಮತ್ತು ಕುಟುಂಬಸ್ಥರೂ ಸಾವು, 40 ದಿನ ರಾಷ್ಟ್ರೀಯ ಶೋಕಾಚರಣೆ ಘೋಷಣೆ
ಟೆಹ್ರಾನ್: ಇರಾನ್ ಮತ್ತು ಇಸ್ರೇಲ್-ಅಮೆರಿಕ ನಡುವಿನ ಸಮರವು ತೀವ್ರ ಸ್ವರೂಪ ಪಡೆದುಕೊಂಡಿದ್ದು, ಟೆಹ್ರಾನ್ನಲ್ಲಿ ನಡೆದ ವಾಯುದಾಳಿಯಲ್ಲಿ ಇರಾನ್ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರ ಕುಟುಂಬದ ಸದಸ್ಯರು ಬಲಿಯಾಗಿದ್ದಾರೆ ಎಂದು ಇರಾನ್ ಸರ್ಕಾರಿ ಮಾಧ್ಯಮಗಳು ದೃಢಪಡಿಸಿವೆ. ಇರಾನ್ನ ಅಧಿಕೃತ ಸುದ್ದಿ ಸಂಸ್ಥೆಗಳಾದ 'ಫಾರ್ಸ್' (Fars) ಮತ್ತು ಐಆರ್ಐಬಿ (IRIB) ವರದಿಗಳ ಪ್ರಕಾರ ಶನಿವಾರ ನಡೆದ ದಾಳಿಯಲ್ಲಿ
ಹರ್ಮೂಜ್ ಜಲಸಂಧಿ ಬಂದ್: ಭಾರತಕ್ಕೆ ತಟ್ಟಲಿದೆ ತೈಲ ದರದ ಬಿಸಿ, ಆರ್ಥಿಕತೆಗೂ ಭಾರಿ ಹೊಡೆತ
ಪಶ್ಚಿಮ ಏಷ್ಯಾದಲ್ಲಿ ಉಲ್ಬಣಿಸಿರುವ ಯುದ್ಧದ ಭೀತಿಯ ಬೆನ್ನಲ್ಲೇ, ಇರಾನ್ ಜಗತ್ತಿನ ಅತ್ಯಂತ ಪ್ರಮುಖ ತೈಲ ಮಾರ್ಗವಾದ 'ಹರ್ಮೂಜ್ ಜಲಸಂಧಿ'ಯನ್ನು (Strait of Hormuz) ಅಧಿಕೃತವಾಗಿ ಬಂದ್ ಮಾಡಿದೆ. ಈ ಬೆಳವಣಿಗೆಯು ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಸಂಚಲನ ಮೂಡಿಸಿದ್ದು, ಭಾರತದಂತಹ ರಾಷ್ಟ್ರಗಳ ಮೇಲೆ ತೀವ್ರ ಪರಿಣಾಮ ಬೀರುವ ಸಾಧ್ಯತೆ ಇದೆ. ಇಸ್ರೇಲ್-ಅಮೆರಿಕದ ದಾಳಿಯ ನಂತರ ಇರಾನ್ ಈ ಜಲಸಂಧಿಯನ್ನು
US-Israel Strike: ಹೌದು ಆಯತೊಲ್ಲಾ ಖಮೇನಿ ಇನ್ನಿಲ್ಲ; ಇರಾನ್ ಸರ್ಕಾರಿ ಮಾಧ್ಯಮ ಅಧಿಕೃತ ಘೋಷಣೆ!
ಅಮೆರಿಕ ಮತ್ತು ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ, ಇರಾನ್ ಸರ್ವೋಚ್ಚ ನಾಯಕ ಆಯತೊಲ್ಲಾ ಅಲಿ ಖಮೇನಿ ಮೃತಪಟ್ಟಿರುವುದನ್ನು, ಇರಾನ್ ಸರ್ಕಾರಿ ಮಾಧ್ಯಮ ದೃಢಪಡಿಸಿದೆ. ಅಮಾನವೀಯ ದಾಳಿಯಲ್ಲಿ ನಮ್ಮ ಕ್ರಾಂತಿಕಾರಿ ನಾಯಕ ಆಯತೊಲ್ಲಾ ಅಲಿ ಖಮೇನಿ ಹುತಾತ್ಮರಾಗಿದ್ದಾರೆ ಎಂದು IRIB ವರದಿ ಮಾಡಿದೆ. ಸುಮಾರು ಮೂರು ದಶಕಗಳಿಂದ ಇರಾನ್ ಆಡಳಿತದ ಚುಕ್ಕಾಣಿ ಹಿಡಿದಿದ್ದ ಆಯತೊಲ್ಲಾ ಅಲಿ ಖಮೇನಿ, ಅಮೆರಿಕ ಮತ್ತು ಇಸ್ರೇಲ್ ವೈರತ್ವದಲ್ಲೇ ಜೀವ ತೆತ್ತಿದ್ದಾರೆ. ಈ ಕುರಿತು ಇಲ್ಲಿದೆ ಮಾಹಿತಿ.
ಅಮೆರಿಕ- ಇಸ್ರೇಲ್ ಜಂಟಿ ದಾಳಿಯಲ್ಲಿ ಇರಾನ್ ನ ಪರಮೋಚ್ಚ ನಾಯಕ ಆಯತುಲ್ಲಾ ಅಲಿ ಖಾಮಿನೈ ಮೃತ್ಯು : ದೃಢಪಡಿಸಿದ ಇರಾನ್
ದಾಳಿಯಲ್ಲಿ ಖಾಮಿನೈ ಪುತ್ರಿ, ಅಳಿಯ ಮತ್ತು ಮೊಮ್ಮಗ ಕೂಡ ಮೃತ್ಯು : ವರದಿ
ಇರಾನ್ ಸುಪ್ರೀಂ ಲೀಡರ್ ಖಮೇನಿ ಜೀವಂತವಾಗಿಲ್ಲ: ಇಸ್ರೇಲ್-ಅಮೆರಿಕದ ಜಂಟಿ ದಾಳಿ ಬಳಿಕ ನೆತನ್ಯಾಹು, ಟ್ರಂಪ್ ಘೋಷಣೆ
ಇರಾನ್ನ ಸುಪ್ರೀಂ ಲೀಡರ್ ಅಯತೊಲ್ಲಾ ಅಲಿ ಖಮೇನಿ ಅವರು ಇಸ್ರೇಲ್ ಮತ್ತು ಅಮೆರಿಕ ನಡೆಸಿದ ಜಂಟಿ ವಾಯುದಾಳಿಯಲ್ಲಿ ಹತರಾಗಿರುವ ಅನೇಕ ಲಕ್ಷಣಗಳು ಕಂಡುಬಂದಿವೆ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಘೋಷಿಸಿದ್ದಾರೆ. ಟೆಹ್ರಾನ್ನ ಹೃದಯಭಾಗದಲ್ಲಿರುವ ಖಮೇನಿ ಅವರ ಅಧಿಕೃತ ನಿವಾಸ ಮತ್ತು ಕಾಂಪೌಂಡ್ ಮೇಲೆ ನಡೆದ ಭೀಕರ ದಾಳಿಯಲ್ಲಿ ಅದು ಸಂಪೂರ್ಣ ನಾಶವಾಗಿದ್ದು, ಈ ಸರ್ವಾಧಿಕಾರಿ ಈಗ
ಶ್ರೀಲಂಕಾ ವಿರುದ್ಧ ಗೆದ್ದರೂ ಟಿ20 ವಿಶ್ವಕಪ್ ನಿಂದ ಪಾಕಿಸ್ತಾನ ಔಟ್!
ಹೊಸದಿಲ್ಲಿ: ಸಹ ಅತಿಥೇಯ ಶ್ರೀಲಂಕಾ ತಂಡದ ವಿರುದ್ಧ ಐದು ರನ್ ಗಳ ಜಯ ಗಳಿಸಿದರೂ ಪಾಕಿಸ್ತಾನ ತಂಡ ಟಿ20 ವಿಶ್ವಕಪ್ ನಿಂದ ಅಧಿಕೃತವಾಗಿ ಹೊರಬಿದ್ದಿದೆ. ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ ಎಂಟು ವಿಕೆಟ್ ನಷ್ಟಕ್ಕೆ 212 ರನ್ ಗಳಿಸಿತು. ಸೆಮಿಫೈನಲ್ ಗೆ ಅರ್ಹತೆ ಪಡೆಯಲು ಶ್ರೀಲಂಕಾ ತಂಡವನ್ನು 147 ರನ್ ಗಳಿಗೆ ನಿಯಂತ್ರಿಸಬೇಕಿತ್ತು. ಆದರೆ 60 ರನ್ ಗಳನ್ನು ಹೆಚ್ಚುವರಿಯಾಗಿ ನೀಡಿದ ಪಾಕಿಸ್ತಾನ ಟೂರ್ನಿಯಿಂದ ಹೊರಬಿದ್ದಿದೆ. ಇದರಿಂದಾಗಿ ಎರಡನೇ ಗುಂಪಿನಿಂದ ಇಂಗ್ಲೆಂಡ್ ಜತೆಗೆ ನ್ಯೂಝಿಲೆಂಡ್ ಸೆಮಿಫೈನಲ್ ಟಿಕೆಟ್ ಪಡೆದಿದೆ. ಶ್ರೀಲಂಕಾ ತಂಡ 12ನೇ ಓವರ್ ನಲ್ಲಿ 5 ವಿಕೆಟ್ ನಷ್ಟಕ್ಕೆ 101 ರನ್ ಗಳಿಸಿದ್ದಾಗ ಪಾಕಿಸ್ತಾನದ ಆಸೆ ಇನ್ನೂ ಜೀವಂತವಾಗಿತ್ತು. ಆದರೆ ಪವನ್ ರತ್ನಾಯಕೆ ಮತ್ತು ನಾಯಕ ದಾಸುನ್ ಶನಕ 16ನೇಓವರ್ ನಲ್ಲಿ ಮೊತ್ತವನ್ನು 148ಕ್ಕೆ ಕೊಂಡೊಯ್ದರು. ಆ ಬಳಿಕ ಟಿ20 ವಿಶ್ವಕಪ್ ನಲ್ಲಿ ತನ್ನ ಗರಿಷ್ಠ ಮೊತ್ತವಾದ 212 ರನ್ ಗಳಿಸಿದ್ದ ಪಾಕಿಸ್ತಾನ ಆತಂಕದ ಕ್ಷಣಗಳನ್ನು ಎದುರಿಸಿತು. ಶಹೀನ್ ಶಾ ಅಫ್ರೀದಿಯವರ ಕೊನೆಯ ಓವರ್ ನ ಮೊದಲ ನಾಲ್ಕು ಎಸೆತಗಳಲ್ಲಿ 4-6-6-6 ರನ್ ಗಳನ್ನು ಶನಕ ಕೊಳ್ಳೆಹೊಡೆದರು. ಕೊನೆಯ ಎರಡು ಎಸೆತಗಳಲ್ಲಿ ಶ್ರೀಲಂಕಾ ಗೆಲುವಿಗೆ ಆರು ರನ್ ಗಳಿಸಬೇಕಿತ್ತು. ಆದರೆ ಯಾರ್ಕರ್ ಆಗಿದ್ದ ಐದನೇ ಎಸೆತವನ್ನು ಶನಕ ವೈಡ್ ಎಂದು ತಪ್ಪಾಗಿ ಲೆಕ್ಕ ಹಾಕಿದರು. ಪಾಕಿಸ್ತಾನ ಐದು ರನ್ ಗಳಿಂದ ಗೆಲುವು ಸಾಧಿಸಿ ನ್ಯೂಝಿಲೆಂಡ್ ಬಳಿಕದ ಸ್ಥಾನ ಪಡೆಯಿತು. ಅಂತಿಮ ನಾಲ್ಕರ ಘಟ್ಟದಿಂದ ಹೊರಬಿದ್ದರೂ, ಗೆಲುವಿನೊಂದಿಗೆ ಟೂರ್ನಿಯನ್ನು ಮುಗಿಸಿ ತವರು ಪ್ರೇಕ್ಷಕರಿಗೆ ಖುಷಿ ನೀಡುವ ಶ್ರೀಲಂಕಾ ತಂಡದ ಆಸೆ ಈಡೇರಲಿಲಲ್ಲ.
ಬೆಂಗಳೂರು | ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಪ್ರಕರಣ: ಶಾಲಾ ಮಾಲಕ ಸೇರಿ ಮೂವರ ಬಂಧನ
ಬೆಂಗಳೂರು: ಆಗ್ನೇಯ ಬೆಂಗಳೂರಿನ ದೇವನಹಳ್ಳಿಯ ಖಾಸಗಿ ವಸತಿ ಶಾಲೆಯಲ್ಲಿ ಎಂಟನೇ ತರಗತಿ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಎಸಗಿದ ಆರೋಪದಲ್ಲಿ ಶಾಲೆಯ ಮಾಲೀಕ, ಆತನ ಪತ್ನಿ ಹಾಗೂ ಶಾಲೆಯ ಪ್ರಾಂಶುಪಾಲರನ್ನು ಬಂಧಿಸಲಾಗಿದೆ. ಶಾಲೆಯಲ್ಲಿ ಒಂದರಿಂದ ಹತ್ತನೇ ತರಗತಿವರೆಗಿನ 600 ಮಕ್ಕಳಿದ್ದು, ಈ ಪೈಕಿ 150 ಮಂದಿ ಬಾಲಕಿಯರು. ಹದಿನಾಲ್ಕು ವರ್ಷ ವಯಸ್ಸಿನ ಬಾಲಕಿ ಮತ್ತು ಆಕೆಯ ಪೋಷಕರು ಶುಕ್ರವಾರ ಪೊಲೀಸರಿಗೆ ಈ ಸಂಬಂಧ ದೂರು ನೀಡಿದ್ದು, ಶಾಲೆಯ ಮಾಲಕ ಲೈಂಗಿಕ ದೌರ್ಜನ್ಯ ಎಸಗಿದ್ದಾಗಿ ಆಪಾದಿಸಿದ್ದರು. ಪತ್ನಿ ಹಾಗೂ ಪ್ರಾಂಶುಪಾಲರು ಮಧ್ಯಪ್ರವೇಶಿಸಿಲ್ಲ ಎಂದು ದೂರಿದ್ದರು. ಮಾಲಕನ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಾಗಿದ್ದರೆ, ಪತ್ನಿ ಹಾಗೂ ಪ್ರಾಂಶುಪಾಲನ ವಿರುದ್ಧ ಅತ್ಯಾಚಾರಕ್ಕೆ ನೆರವು ನೀಡಿದ ಆರೋಪ ಹೊರಿಸಲಾಗಿದೆ. ಇಂಥ ಇತರ ಘಟನೆಗಳು ನಡೆದಿವೆಯೇ ಎಂಬ ಬಗ್ಗೆ ಪರಿಶೀಲಿಸಲು ಇತರ ವಿದ್ಯಾರ್ಥಿಗಳ ಜತೆ ಚರ್ಚಿಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ. ಕಳೆದ ಎಂಟು ದಿನಗಳ ಕಾಲ ನಿರಂತರ ಲೈಂಗಿಕ ದೌರ್ಜನ್ಯ ಎಸಗಿ ಅತ್ಯಾಚಾರ ಮಾಡಲಾಗಿದೆ. ಆತನ ಪತ್ನಿ ಹಾಗೂ ಪ್ರಾಂಶುಪಾಲರಿಂದ ನೆರವು ಕೇಳಿದಾಗ, ಈ ದಿನಗಳಲ್ಲಿ ಇಂಥ ಕೃತ್ಯಗಳು ಸಾಮಾನ್ಯ. ಆ ಬಗ್ಗೆ ಏನೂ ಮಾತನಾಡಬಾರದು ಎಂದು ಇಬ್ಬರೂ ಹೇಳಿದರು ಎಂದು ಬಾಲಕಿ ದೂರಿನಲ್ಲಿ ಹೇಳಿದ್ದಾಳೆ. ರಾತ್ರಿಯ ವೇಳೆ ವಾರ್ಡನ್ ಕಚೇರಿಗೆ ಕರೆಸಿಕೊಂಡ ಶಾಲೆಯ ಮಾಲಕ ಪಾನಮತ್ತ ಸ್ಥಿತಿಯಲ್ಲಿ ಕೊಠಡಿಗೆ ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿದ್ದಾನೆ. ಚಿತ್ರಹಿಂಸೆ ತಾಳಲಾರದೇ ಎಲ್ಲ ವಿಷಯವನ್ನು ಪೋಷಕರಿಗೆ ಹೇಳಿದ್ದಾಗಿ ಬಾಲಕಿ ವಿವರಿಸಿದ್ದಾಳೆ.
Karnataka Weather: ಕರ್ನಾಟಕದ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಮಳೆ ಸಾಧ್ಯತೆ, ಬಿಸಿಲೂ ಹೆಚ್ಚು
ಬೆಂಗಳೂರು: ಕಳೆದ 24 ಗಂಟೆಗಳಲ್ಲಿ ಕರ್ನಾಟಕದ ಹವಾಮಾನದಲ್ಲಿ ಏರುಪೇರು ಕಂಡುಬಂದಿದೆ. ದಕ್ಷಿಣ ಒಳನಾಡಿನ ಒಂದೆರಡು ಕಡೆಗಳಲ್ಲಿ ಮಳೆಯಾಗಿದ್ದರೆ, ಕರಾವಳಿ ಮತ್ತು ಉತ್ತರ ಒಳನಾಡಿನಲ್ಲಿ ಒಣ ಹವಾಮಾನ ಮುಂದುವರಿದಿದೆ. ರಾಜ್ಯದ ಬಯಲು ಸೀಮೆಯಲ್ಲಿ ವಿಜಯಪುರವು 15.2 ಡಿಗ್ರಿ ಸೆಲ್ಸಿಯಸ್ ಕನಿಷ್ಠ ತಾಪಮಾನ ದಾಖಲಿಸುವ ಮೂಲಕ ಅತಿ ತಂಪಾದ ಪ್ರದೇಶವಾಗಿ ಹೊರಹೊಮ್ಮಿದೆ. ಹಾಸನದಲ್ಲಿ ಕನಿಷ್ಠ ತಾಪಮಾನ 13.4 ಡಿಗ್ರಿ ಸೆಲ್ಸಿಯಸ್
ಕೆಲವರಿಗೆ ಮುಂದಾಗುವ ಅನಾಹುತಗಳ ಬಗ್ಗೆ ಮೊದಲೇ ಭಾಸವಾಗುತ್ತದೆಯಂತೆ. ಅದೇ ರೀತಿ ಅಮೆರಿಕ ಮತ್ತು ಇಸ್ರೇಲ್ ಜೊತೆಗೂಡಿ ಇರಾನ್ ಮೇಲೆ ದಾಳಿ ನಡೆಸುವ ಬಗ್ಗೆ, ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಅವರಿಗೂ ಮೊದಲೇ ಭಾಸವಾಗಿತ್ತು. ಈ ಕುರಿತು ಹೇಳಿಕೆ ನೀಡಿದ್ದ ಹೈದರಾಬಾದ್ ಸಂಸದ, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಇಸ್ರೇಲ್ ಪ್ರವಾಸದ ಸಮಯವನ್ನೂ ಪ್ರಶ್ನಿಸಿದ್ದರು. ಇರಾನ್ ಮೇಲಿನ ದಾಳಿಯ ಬಗ್ಗೆ ಓವೈಸಿ ಅವರ ಭವಿಷ್ಯವಾಗಿ ಈಗ ನಿಜವಾಗಿದೆ. ಇಲ್ಲದೆ ಹೆಚ್ಚಿನ ಮಾಹಿತಿ.
ಡೊನಾಲ್ಡ್ ಟ್ರಂಪ್ ಮತ್ತು ಬೆಂಜಮಿನ್ ನೆತನ್ಯಾಹು ಅವರಿಗೆ ಖಮೇನಿ ಮೃತದೇಹದ ಫೋಟೋ ರವಾನೆ! ದುಷ್ಮನಿ ಅಂತ್ಯ
ಅಮೆರಿಕ ಮತ್ತು ಇಸ್ರೇಲ್ ಜಂಟಿ ವೈಮಾನಿಕ ದಾಳಿಯಲ್ಲಿ, ಇರಾನ್ ಸರ್ವೋಚ್ಚ ನಾಯಕ ಆಯತೊಲ್ಲಾ ಅಲಿ ಖಮೇನಿ ಮೃತಪಟ್ಟಿದ್ದಾರೆ ಎಂದು ಇಸ್ರೇಲ್ ಮಾಧ್ಯಮ ವರದಿ ಮಾಡಿದೆ. ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಕೂಡ ಖಮೇನಿ ಸಾವನ್ನು ದೃಢಪಡಿಸಿದ್ದಾರೆ. ಈ ಮಧ್ಯೆ ಇಸ್ರೇಲ್ ಮಾಧ್ಯಮಗಳು, ಖಮೇನಿ ಮೃತದೇಹದ ಫೋಟೋಗಳನ್ನು ಡೊನಾಲ್ಡ್ ಟ್ರಂಪ್ ಮತ್ತು ಬೆಂಜಮಿನ್ ನೆತನ್ಯಾಹು ಅವರಿಗೆ ರವಾನಿಸಲಾಗಿದೆ ಎಂದು ತಿಳಿಸಿವೆ. ಇಲ್ಲಿದೆ ಹೆಚ್ಚಿನ ಮಾಹಿತಿ.
ಅಮೆರಿಕ ಮತ್ತು ಇಸ್ರೇಲ್ ನಡೆಸಿದ ದಾಳಿಯಲ್ಲಿ ಇರಾನ್ ಸರ್ವೋಚ್ಚ ನಾಯಕ ಆಯತೊಲ್ಲಾ ಅಲಿ ಖಮೇನಿ ಹತ್ಯೆಯನ್ನು, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ದೃಢಪಡಿಸಿದ್ದಾರೆ. ಯುಎಸ್ ಅಧ್ಯಕ್ಷ ತಮ್ಮ ಟ್ರೂತ್ ಸೋಶಿಯಲ್ ಮಿಡಿಯಾದಲ್ಲಿ ಜಗತ್ತಿನ ಅತಿ ದುಷ್ಟ ವ್ಯಕ್ತಿ ಇನ್ನಿಲ್ಲ ಎಂದು ಪೋಸ್ಟ್ ಮಾಡಿದ್ದಾರೆ. ಖಮೇನಿ ಹತ್ಯೆ ಇರಾನ್ಗೆ ಬಹುದೊಡ್ಡ ಆಘಾತ ನೀಡಿದ್ದರೆ, ಅಮೆರಿಕ ಮತ್ತು ಇಸ್ರೇಲ್ ಸಂಭ್ರಮಿಸುತ್ತಿವೆ. ಇರಾನ್ ಈ ಕುರಿತು ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ. ಇಲ್ಲಿದೆ ಮಾಹಿತಿ.
ಇಸ್ರೇಲ್ ನಿಂದ ಇರಾನ್ ನ ಮಿನಾಬ್ ಬಾಲಕಿಯರ ಶಾಲೆಯ ಮೇಲೆ ದಾಳಿ; ಮೃತರ ಸಂಖ್ಯೆ 108ಕ್ಕೆ ಏರಿಕೆ
ಮಿನಾಬ್ (ಇರಾನ್): ಇರಾನಿನ ಮಿನಾಬ್ ನಗರದ ಶಾಜರೆಹ್ ತಯ್ಯೆಬೆಹ್ ಬಾಲಕಿಯರ ಪ್ರಾಥಮಿಕ ಶಾಲೆಯ ಮೇಲೆ ಇಸ್ರೇಲ್ ನಡೆಸಿದ ದಾಳಿಯಲ್ಲಿ ಸಾವನ್ನಪ್ಪಿದವರ ಸಂಖ್ಯೆ 108ಕ್ಕೆ ಏರಿಕೆಯಾಗಿದೆ ಎಂದು ವರದಿಯಾಗಿದೆ. ಮಿನಾಬ್ ಪ್ರಾಸಿಕ್ಯೂಟರ್ ಕಚೇರಿಯನ್ನು ಉಲ್ಲೇಖಿಸಿ ಮಿಝಾನ್ ಸುದ್ದಿ ಸಂಸ್ಥೆ ಈ ಮಾಹಿತಿ ಪ್ರಕಟಿಸಿದೆ. ದಾಳಿಯಿಂದ ಶಾಲಾ ಕಟ್ಟಡವು ಭಾರೀ ಹಾನಿಗೊಳಗಾಗಿದ್ದು, ಅವಶೇಷಗಳಡಿ ಇನ್ನೂ ಕೆಲವರು ಸಿಲುಕಿರುವ ಸಾಧ್ಯತೆ ಇರುವುದಾಗಿ ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ. ಗಾಯಗೊಂಡ ವಿದ್ಯಾರ್ಥಿನಿಯರು ಹಾಗೂ ಸಿಬ್ಬಂದಿಯನ್ನು ಸಮೀಪದ ಆಸ್ಪತ್ರೆಗಳಿಗೆ ದಾಖಲಿಸಲಾಗಿದ್ದು, ಕೆಲವರ ಸ್ಥಿತಿ ಚಿಂತಾಜನಕವಾಗಿದೆ. ಸಾವಿನ ಸಂಖ್ಯೆ ಇನ್ನಷ್ಟು ಏರಿಕೆಯಾಗುವ ಸಾಧ್ಯತೆಯಿದೆ ಎಂಬ ಆತಂಕವೂ ವ್ಯಕ್ತವಾಗಿದೆ. ಘಟನೆ ಹಿನ್ನೆಲೆಯಲ್ಲಿ ಪ್ರದೇಶದಲ್ಲಿ ಉದ್ವಿಗ್ನತೆ ಮುಂದುವರೆದಿದೆ. ಭದ್ರತಾ ಪಡೆಗಳು ಸ್ಥಳವನ್ನು ಸುತ್ತುವರಿದು ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ಕೈಗೊಂಡಿವೆ ಎಂದು ತಿಳಿದು ಬಂದಿದೆ.
ದುಬೈ ವಿಮಾನ ನಿಲ್ದಾಣದ ಮೇಲೆ ಕ್ಷಿಪಣಿ ದಾಳಿ?
ದುಬೈ: ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ತೀವ್ರಗೊಂಡಿರುವ ಸಂದರ್ಭದಲ್ಲಿ ದುಬೈ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಗುರಿಯಾಗಿಸಿಕೊಂಡು ಕ್ಷಿಪಣಿ ದಾಳಿ ನಡೆದಿದೆ ಎಂಬ ವರದಿಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವಿಮಾನ ನಿಲ್ದಾಣದ ಸಮೀಪದಿಂದ ಚಿತ್ರೀಕರಿಸಲಾಗಿದೆ ಎಂದು ಹೇಳಲಾಗುತ್ತಿರುವ ಕೆಲವು ವೀಡಿಯೊಗಳು ಆನ್ಲೈನ್ನಲ್ಲಿ ಪ್ರಸಾರವಾಗುತ್ತಿದ್ದು, ಸ್ಫೋಟದ ಶಬ್ದಗಳು ಕೇಳಿಬಂದಿವೆ ಎನ್ನಲಾಗಿದೆ. ಯುನೈಟೆಡ್ ಅರಬ್ ಎಮಿರೇಟ್ಸ್ನ ವಿವಿಧ ಭಾಗಗಳಲ್ಲಿ ತುರ್ತು ಎಚ್ಚರಿಕೆ ಸಂದೇಶಗಳನ್ನು ರವಾನಿಸಿ, ನಿವಾಸಿಗಳು ಹಾಗೂ ಪ್ರವಾಸಿಗರು ಸಂಭಾವ್ಯ ಕ್ಷಿಪಣಿ ಬೆದರಿಕೆಯನ್ನು ಗಮನಿಸಿ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸೂಚಿಸಲಾಗಿತ್ತು. ಈ ಬಗ್ಗೆ ಯುಎಇ ಅಧಿಕಾರಿಗಳಿಂದ ಅಧಿಕೃತ ದೃಢೀಕರಣ ಲಭ್ಯವಾಗಿಲ್ಲ. ಘಟನೆಗೆ ಸಂಬಂಧಿಸಿದಂತೆ ಸರ್ಕಾರ ಅಥವಾ ಸಂಬಂಧಿತ ಇಲಾಖೆಗಳಿಂದ ಇನ್ನೂ ಸ್ಪಷ್ಟನೆ ನೀಡಿಲ್ಲ.
ದುಬೈ/ಅಬುಧಾಬಿ: ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ)ಯಾದ್ಯಂತ ನಿವಾಸಿಗಳು ಹಾಗೂ ಪ್ರವಾಸಿಗರ ಮೊಬೈಲ್ಗಳಿಗೆ ತುರ್ತು ಎಚ್ಚರಿಕೆ ಸಂದೇಶಗಳು ರವಾನೆಯಾದವು. ಪ್ರದೇಶದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆ ಮತ್ತು ಸಂಭಾವ್ಯ ಕ್ಷಿಪಣಿ ಬೆದರಿಕೆ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಆಂತರಿಕ ಸಚಿವಾಲಯ (ಎಂಒಐ) ಬಿಡುಗಡೆ ಮಾಡಿದ ಸಂದೇಶದಲ್ಲಿ, “ಪ್ರಸ್ತುತ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಸಂಭಾವ್ಯ ಕ್ಷಿಪಣಿ ಬೆದರಿಕೆಗಳಿವೆ. ತಕ್ಷಣವೇ ಹತ್ತಿರದ ಸುರಕ್ಷಿತ ಕಟ್ಟಡದಲ್ಲಿ ಆಶ್ರಯ ಪಡೆಯಿರಿ. ಕಿಟಕಿಗಳು, ಬಾಗಿಲುಗಳು ಹಾಗೂ ತೆರೆದ ಪ್ರದೇಶಗಳಿಂದ ದೂರವಿರಿ. ಮುಂದಿನ ಸೂಚನೆಗಳಿಗಾಗಿ ಕಾಯಿರಿ” ಎಂದು ತಿಳಿಸಲಾಗಿದೆ. ಎಚ್ಚರಿಕೆ ಅರೇಬಿಕ್ ಹಾಗೂ ಇಂಗ್ಲಿಷ್ ಭಾಷೆಗಳಲ್ಲಿ ದೇಶದ ತುರ್ತು ಅಧಿಸೂಚನಾ ವ್ಯವಸ್ಥೆಯ ಮೂಲಕ ಪ್ರಸಾರಗೊಂಡಿದೆ. ಎಮಿರೇಟ್ ನಾದ್ಯಂತ ಒಂದೇ ಸಮಯದಲ್ಲಿ ತುರ್ತು ಸಂದೇಶ ತಲುಪಿದೆ ಎಂದು ತಿಳಿದು ಬಂದಿದೆ. ಜನರು ಆತಂಕಕ್ಕೆ ಒಳಗಾಗದೆ ಶಾಂತವಾಗಿದ್ದು, ಅಧಿಕೃತ ಮೂಲಗಳಿಂದ ಹೊರಬರುವ ಸೂಚನೆಗಳನ್ನು ಮಾತ್ರ ಪಾಲಿಸಬೇಕು ಎಂದು ಅಧಿಕಾರಿಗಳು ಮನವಿ ಮಾಡಿದ್ದಾರೆ.
ದುಬೈನಲ್ಲಿ ತುರ್ತು ಎಚ್ಚರಿಕೆಗಳ ನಡುವೆ ಜಬಲ್ ಅಲಿ ಪೋರ್ಟ್ ಮೇಲೆ ಕ್ಷಿಪಣಿ ದಾಳಿ: ವರದಿ
ದುಬೈ: ದೇಶಾದ್ಯಂತ ನಿವಾಸಿಗಳು ಮತ್ತು ಪ್ರವಾಸಿಗರಿಗೆ ತುರ್ತು ಎಚ್ಚರಿಕೆ ಸಂದೇಶಗಳನ್ನು ಕಳುಹಿಸಿದ ಕೆಲವೇ ಕ್ಷಣಗಳಲ್ಲಿ, ದುಬೈ ನ ಜಬಲ್ ಅಲಿ ಪೋರ್ಟ್ ಮೇಲೆ ಕ್ಷಿಪಣಿ ದಾಳಿ ನಡೆದಿದೆ ಎಂದು ವರದಿಯಾಗಿದೆ. ಸಂಭಾವ್ಯ ಕ್ಷಿಪಣಿ ಬೆದರಿಕೆ ಹಿನ್ನೆಲೆಯಲ್ಲಿ ತಕ್ಷಣ ಆಶ್ರಯ ಪಡೆಯುವಂತೆ ಸೂಚಿಸುವ ಎಚ್ಚರಿಕೆಗಳನ್ನು ಅಧಿಕಾರಿಗಳು ಮೊಬೈಲ್ ಫೋನ್ಗಳಿಗೆ ರವಾನಿಸಿದ್ದರು. ಇದರ ಬೆನ್ನಲ್ಲೇ ಜಬಲ್ ಅಲಿ ಪೋರ್ಟ್ ಪ್ರದೇಶದಲ್ಲಿ ಸ್ಫೋಟದ ಶಬ್ದಗಳು ಕೇಳಿಬಂದಿವೆ ಎಂಬ ಮಾಹಿತಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಆದರೆ, ಪೋರ್ಟ್ ಮೇಲೆ ದಾಳಿ ನಡೆದಿರುವ ಕುರಿತು ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಅಧಿಕಾರಿಗಳಿಂದ ಇನ್ನೂ ಯಾವುದೇ ಅಧಿಕೃತ ದೃಢೀಕರಣ ಲಭ್ಯವಾಗಿಲ್ಲ. ಘಟನೆಯ ಸ್ವರೂಪ, ಸಂಭವನೀಯ ಹಾನಿ ಹಾಗೂ ಸಾವುನೋವುಗಳ ಬಗ್ಗೆ ತಕ್ಷಣ ಸ್ಪಷ್ಟ ಮಾಹಿತಿ ದೊರಕಿಲ್ಲ. ಘಟನೆಯ ಕುರಿತಂತೆ ಸಂಬಂಧಿತ ಇಲಾಖೆಗಳು ಪರಿಶೀಲನೆ ನಡೆಸುತ್ತಿವೆ ಎಂದು ಮೂಲಗಳು ತಿಳಿಸಿವೆ. ಸಾರ್ವಜನಿಕರು ವದಂತಿಗಳಿಗೆ ಕಿವಿಗೊಡದೆ, ಅಧಿಕೃತ ಮಾಹಿತಿಯನ್ನು ಮಾತ್ರ ಅನುಸರಿಸುವಂತೆ ಮನವಿ ಮಾಡಲಾಗಿದೆ.
ವಿಬಿ ಜಿ ರಾಮ್ ಜಿ ಕಾಯ್ದೆ ಬಗ್ಗೆ ಕಾಂಗ್ರೆಸ್ ತಪ್ಪು ಸಂದೇಶ ಕೊಡುತ್ತಿದೆ : ಪ್ರಹ್ಲಾದ್ ಜೋಶಿ
ಹುಬ್ಬಳ್ಳಿ, ಫೆ.28: ಕೇಂದ್ರ ಸರಕಾರವು ಜಾರಿಗೆ ತಂದಿರುವ ‘ವಿಬಿ ಜಿ ರಾಮ್ ಜಿ ಕಾಯ್ದೆ’ ಬಗ್ಗೆ ದೇಶದ ಜನಕ್ಕೆ ಕಾಂಗ್ರೆಸ್ ತಪ್ಪು ಸಂದೇಶ ಕೊಡುತ್ತಿದೆ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಹ್ಲಾದ್ ಜೋಶಿ ಆರೋಪಿಸಿದರು. ಶನಿವಾರ ಇಲ್ಲಿನ ಅರವಿಂದ ನಗರದಲ್ಲಿರವ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ‘ವಿಬಿ ಜಿ ರಾಮ್ ಜಿ' ಕುರಿತು ಮಾತನಾಡಿದ ಅವರು, ಈ ಹಿಂದೆ ಮನರೇಗಾದಲ್ಲಿ ಅನುದಾನ ಸೋರಿಕೆ ದೊಡ್ಡ ಪ್ರಮಾಣದಲ್ಲಿತ್ತು. ಭ್ರಷ್ಟಾಚಾರ ವ್ಯಾಪಕವಾಗಿತ್ತು. ಅಲ್ಲದೆ, ನಕಲಿ ಜಾಬ್ ಕಾರ್ಡ್ಗಳನ್ನು ಸೃಷ್ಟಿಸಲಾಗುತ್ತಿತ್ತು. ಇದೀಗ ಇದೆಲ್ಲದಕ್ಕೂ ಕಡಿವಾಣ ಬೀಳಲಿದೆ. ಆ ಕಾರಣಕ್ಕೆ ಕಾಂಗ್ರೆಸ್ ತಗಾದೆ ತೆಗೆಯುತ್ತಿದೆ ಎಂದು ದೂರಿದರು. ಎನ್ಡಿಎ ಸರಕಾರ ಜಾರಿಗೆ ತಂದ ವಿಬಿ-ಜಿ ರಾಮ್ ಜಿ ಯೋಜನೆ ಮೂಲಕ ಗ್ರಾಮೀಣ ಭಾಗದ ಜನರಿಗೆ 125 ದಿನಗಳ ಉದ್ಯೋಗ ಖಾತರಿ ದೊರೆಯಲಿದೆ. ಕೃತಕಬುದ್ಧಿಮತ್ತೆ ಚಾಲಿತ ಮೇಲ್ವಿಚಾರಣೆ, ಬಯೋಮೆಟ್ರಿಕ್ ಹಾಜರಾತಿ ಮತ್ತು ಡಿಜಿಟಲ್ ಲೆಕ್ಕಪರಿಶೋಧನೆಗಳೊಂದಿಗೆ ಈಗ ಸಂಪೂರ್ಣ ಪ್ರಕ್ರಿಯೆ ಪಾರದರ್ಶಕವಾಗಲಿದೆ ಎಂದು ಪ್ರಹ್ಲಾದ್ ಜೋಶಿ ಹೇಳಿದರು. ವಿಬಿ ಜಿ ರಾಮ್ ಜಿ ಭ್ರಷ್ಟಾಚಾರಕ್ಕೆ ಸಂಪೂರ್ಣ ಕಡಿವಾಣ ಹಾಕಲಿದೆ. ಅಲ್ಲದೆ, ಗ್ರಾಮೀಣ ಭಾರತದ ಆರ್ಥಿಕತೆಗೆ ಹೊಸ ಶಕ್ತಿ ನೀಡಲಿದೆ ಮತ್ತು ವಿಕಸಿತ ಭಾರತ ನಿರ್ಮಾಣಕ್ಕೆ ಮಹತ್ವದ ಹೆಜ್ಜೆಯಾಗಲಿದೆ ಎಂದು ಅವರು ಪ್ರತಿಪಾದಿಸಿದರು.
ಹೋಳಿ ಹಬ್ಬದ ಪ್ರಯುಕ್ತ ಯಶವಂತಪುರ-ಸಂತ್ರಾಗಚಿ ನಡುವೆ ವಿಶೇಷ ಎಕ್ಸ್ಪ್ರೆಸ್ ರೈಲು
ಬೆಂಗಳೂರು, ಫೆ.28: ಮುಂಬರುವ ಹೋಳಿ ಹಬ್ಬದ ಸಮಯದಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿವಾರಿಸಲು, ನೈಋತ್ಯ ರೈಲ್ವೆಯು ಯಶವಂತಪುರ ಮತ್ತು ಸಂತ್ರಾಗಚಿ ನಿಲ್ದಾಣಗಳ ನಡುವೆ ವಿಶೇಷ ಎಕ್ಸ್ಪ್ರೆಸ್ ರೈಲುಗಳನ್ನು ಓಡಿಸಲಿದೆ. ಸೇವೆಯ ವಿವರಗಳು: ರೈಲು ಸಂಖ್ಯೆ 06233 ಯಶವಂತಪುರ-ಸಂತ್ರಾಗಚಿ ವಿಶೇಷ ಎಕ್ಸ್ಪ್ರೆಸ್ ಮಾ.1ರಂದು(ರವಿವಾರ) ಬೆಳಗ್ಗೆ 7.30ಕ್ಕೆ ಯಶವಂತಪುರ ನಿಲ್ದಾಣದಿಂದ ಹೊರಟು ಸೋಮವಾರ ರಾತ್ರಿ 8.45ಕ್ಕೆ ಸಂತ್ರಾಗಚಿ ನಿಲ್ದಾಣಕ್ಕೆ ಆಗಮಿಸಲಿದೆ. ರೈಲು ಸಂಖ್ಯೆ 06234 ಸಂತ್ರಾಗಚಿ-ಯಶವಂತಪುರ ವಿಶೇಷ ಎಕ್ಸ್ಪ್ರೆಸ್ ಮಾ.3ರಂದು (ಮಂಗಳವಾರ) ಮಧ್ಯಾಹ್ನ 2.45ಕ್ಕೆ ಸಂತ್ರಾಗಚಿ ನಿಲ್ದಾಣದಿಂದ ಹೊರಟು ಗುರುವಾರ ಬೆಳಗ್ಗೆ 4 ಗಂಟೆಗೆ ಯಶವಂತಪುರಕ್ಕೆ ಆಗಮಿಸಲಿದೆ. ಮಾರ್ಗದಲ್ಲಿ ಈ ವಿಶೇಷ ರೈಲುಗಳು ಎರಡೂ ದಿಕ್ಕುಗಳಲ್ಲಿ ಯಲಹಂಕ, ಹಿಂದೂಪುರ, ಧರ್ಮಾವರಂ, ಅನಂತಪುರ, ಗುತ್ತಿ, ಧೋಣ್, ನಂದ್ಯಾಲ್, ಗಿದ್ದಲೂರು, ಮಾರ್ಕಾಪುರ ರೋಡ್, ನರಸರಾವ್ಪೇಟೆ, ಗುಂಟೂರು, ವಿಜಯವಾಡ, ರಾಜಮಂಡ್ರಿ, ವಿಜಯನಗರಂ, ಬ್ರಹ್ಮಪುರ, ಖುರ್ದಾ ರೋಡ್, ಭುವನೇಶ್ವರ್, ಕಟಕ್, ಭದ್ರಕ್, ಬಾಲೇಶ್ವರ್ ಹಾಗೂ ಖರಗ್ ಪುರ್ ನಿಲ್ದಾಣಗಳಲ್ಲಿ ನಿಲುಗಡೆಯನ್ನು ಹೊಂದಿರುತ್ತವೆ. ಈ ವಿಶೇಷ ರೈಲು 20 ಕೋಚ್ ಗಳಿಂದ ಕೂಡಿದ್ದು ಇದರಲ್ಲಿ 1 ಎಸಿ ಟು-ಟಯರ್ ಕೋಚ್, 3 ಎಸಿ ಥ್ರೀ-ಟಯರ್ ಕೋಚ್ ಗಳು, 9 ಸ್ಲೀಪರ್ ದರ್ಜೆಯ ಕೋಚ್ ಗಳು, 5 ಸಾಮಾನ್ಯ ದ್ವಿತೀಯ ದರ್ಜೆಯ ಕೋಚ್ ಗಳು ಮತ್ತು 2 ದ್ವಿತೀಯ ದರ್ಜೆ ಲಗೇಜ್-ಕಮ್-ಬ್ರೇಕ್ ವ್ಯಾನ್ಗಳು (ದಿವ್ಯಾಂಗಸ್ನೇಹಿ ಕಂಪಾರ್ಟ್ಮೆಂಟ್ ನೊಂದಿಗೆ) ಇರುತ್ತವೆ ಎಂದು ಪ್ರಕಟಣೆ ತಿಳಿಸಿದೆ.
ರಾಜ್ಯದಲ್ಲಿ ಗರ್ಭಕಂಠ ಕ್ಯಾನ್ಸರ್ ತಡೆಯಲು ಲಸಿಕೆ ಅಭಿಯಾನಕ್ಕೆ ಚಾಲನೆ
ಬೆಂಗಳೂರು : ದೇಶದಲ್ಲಿ ಬಾಲಕಿಯರ ಆರೋಗ್ಯ ಸುರಕ್ಷತೆಗೆ ಹೆಚ್ಚು ಒತ್ತು ನೀಡಲು ಮುಂದಾಗಿರುವ ಸರಕಾರ ಈಗ ಗರ್ಭಕಂಠ ಕ್ಯಾನ್ಸರ್ ತಡೆಗೆ ಹ್ಯೂಮನ್ ಪ್ಯಾಪಿಲೋಮವೈರಸ್ (ಎಚ್ಪಿವಿ) ಲಸಿಕೆ ನೀಡುವ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ. ಕೇಂದ್ರ ಸರಕಾರದ ಆಶಯದಂತೆ ರಾಜ್ಯದಲ್ಲಿಯೂ ಈ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ. ರಾಜಸ್ಥಾನದ ಅಜ್ಮೀರ್ನಲ್ಲಿ ನಡೆದ ಕಾರ್ಯಕ್ರಮಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಚಾಲನೆ ನೀಡಿದರು. ಬೆಂಗಳೂರಿನ ಕೆ.ಸಿ.ಜನರಲ್ ಆಸ್ಪತ್ರೆಯಲ್ಲಿ ವೆಬ್ಕ್ಯಾಸ್ಟ್ ಮೂಲಕ ಕಾರ್ಯಕ್ರಮ ವೀಕ್ಷಿಸಲಾಯಿತು. ಕೆ.ಸಿ.ಜನರಲ್ ಆಸ್ಪತ್ರೆಯಲ್ಲಿ ವೈದ್ಯಕೀಯ ಶಿಕ್ಷಣ ಇಲಾಖೆ ನಿರ್ದೇಶಕಿ ಡಾ.ಸುಜಾತಾ ರಾಥೋಡ್, ರಾಷ್ಟ್ರೀಯ ಆರೋಗ್ಯ ಮಿಷನ್ ವ್ಯವಸ್ಥಾಪಕ ನಿರ್ದೇಶಕ ಅವಿನಾಶ್ ಮೆನನ್, ಬೆಂಗಳೂರು ಮೆಡಿಕಲ್ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ಡೀನ್, ಕಿದ್ವಾಯಿ ಆಸ್ಪತ್ರೆಯ ನಿರ್ದೇಶಕರು ಹಾಗೂ ಇತರ ಹಿರಿಯ ಅಧಿಕಾರಿಗಳು ಇದೇ ಸಂದರ್ಭದಲ್ಲಿ ಹಾಜರಿದ್ದರು. 14 ವರ್ಷ ಮೇಲ್ಪಟ್ಟ ವಯಸ್ಸಿನ ಸುಮಾರು 1.15 ಕೋಟಿ ಹುಡುಗಿಯರಿಗೆ ಸರಕಾರಿ ಆರೋಗ್ಯ ಸೌಲಭ್ಯಗಳಲ್ಲಿ, ಆಯುಷ್ಮಾನ್ ಆರೋಗ್ಯ ಮಂದಿರಗಳು (ಪ್ರಾಥಮಿಕ ಆರೋಗ್ಯ ಕೇಂದ್ರಗಳು), ಸಮುದಾಯ ಆರೋಗ್ಯ ಕೇಂದ್ರಗಳು, ಉಪ-ಜಿಲ್ಲಾ ಮತ್ತು ಜಿಲ್ಲಾ ಆಸ್ಪತ್ರೆಗಳು ಹಾಗೂ ಸರಕಾರಿ ವೈದ್ಯಕೀಯ ಕಾಲೇಜುಗಳು ಮತ್ತು ಆಸ್ಪತ್ರೆಗಳಲ್ಲಿ ಲಸಿಕೆಯನ್ನು ಹಾಕಲಾಗುತ್ತದೆ. ಈ ಅಭಿಯಾನವು ಮೂರು ತಿಂಗಳ ಅವಧಿ ನಡೆಯಲಿದ್ದು, ಸಮರೋಪಾದಿಯಲ್ಲಿ ಕೈಗೊಂಡು ನಿಗದಿಪಡಿಸಿದ ಬಾಲಕಿಯರಿಗೆ ಲಸಿಕೆ ನೀಡಲಾಗುತ್ತದೆ. ಮಹಿಳೆಯರಲ್ಲಿ ಕ್ಯಾನ್ಸರ್ ಸಂಬಂಧಿತ ಕಾಯಿಲೆಗೆ ಪ್ರಮುಖ ಕಾರಣಗಳಲ್ಲಿ ಒಂದಾದ ಗರ್ಭಕಂಠದ ಕ್ಯಾನ್ಸರ್ ಅನ್ನು ತಡೆಗಟ್ಟಲು ಹ್ಯೂಮನ್ ಪ್ಯಾಪಿಲೋಮವೈರಸ್ (ಎಚ್ಪಿವಿ) ಲಸಿಕೆ ನೀಡಲಾಗುತ್ತದೆ. ನಾಡಿನಾದ್ಯಂತ ಹುಡುಗಿಯರು ಮತ್ತು ಮಹಿಳೆಯರ ದೀರ್ಘಕಾಲೀನ ಆರೋಗ್ಯವನ್ನು ಕಾಪಾಡುವಲ್ಲಿ ಇದೊಂದು ಮಹತ್ವದ ಮೈಲಿಗಲ್ಲಾಗಲಿದೆ. ಮುಂದಿನ ದಿನಗಳಲ್ಲಿ ಈ ಅಭಿಯಾನವನ್ನು ಎಲ್ಲೆಡೆ ವಿಸ್ತರಿಸಲಾಗುವುದು ಎಂದು ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಪರಿಶಿಷ್ಟ ಜಾತಿಗಳಲ್ಲಿಯೇ ತಾರತಮ್ಯ ತೊಲಗಬೇಕಿದೆ : ನ್ಯಾ.ನಾಗಮೋಹನ್ ದಾಸ್
ಬೆಂಗಳೂರು, ಫೆ. 28: ಪರಿಶಿಷ್ಟ ಜಾತಿಗಳಲ್ಲಿಯೇ ಸ್ಪೃಶ್ಯ ಮತ್ತು ಅಸ್ಪೃಶ್ಯ ಜಾತಿಗಳಿದ್ದು, ಜಾತಿಗಳಲ್ಲಿ ಮೇಲು-ಕೀಳು ಎಂಬ ತಾರತಮ್ಯ ಹೆಚ್ಚಾಗಿದೆ. ಈ ತಾರತಮ್ಯವನ್ನು ತೊಲಗಿಸಬೇಕು. ಇಲ್ಲವಾದಲ್ಲಿ, ನಮ್ಮ ಸಂವಿಧಾನದ ಆಶಯಗಳು ಅನುಷ್ಟಾನಕ್ಕೆ ಬರುವುದಿಲ್ಲ ಎಂದು ನಿವೃತ್ತ ನ್ಯಾಯಮೂರ್ತಿ ಎಚ್.ಎನ್. ನಾಗಮೊಹನ್ ದಾಸ್ ಹೇಳಿದ್ದಾರೆ. ಶನಿವಾರ ಇಲ್ಲಿನ ವಸಂತನಗರದಲ್ಲಿರುವ ದೇವರಾಜ ಅರಸು ಭವನದಲ್ಲಿ ಕರ್ನಾಟಕ ರಾಜ್ಯ ದ್ರಾವಿಡರ್ ಕಳಗಂ ವತಿಯಿಂದ ಆಯೋಜಿಸಿದ್ದ ‘ಸ್ವಾಭಿಮಾನ ಚಳುವಳಿಯ ಶತಮಾನೋತ್ಸವ’ದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಪರಿಶಿಷ್ಟ ಜಾತಿ ಪಟ್ಟಿಯ 101 ಜಾತಿಗಳಲ್ಲಿ ಸ್ಪೃಶ್ಯರು-ಅಸ್ಪೃಶ್ಯರು ಇದ್ದು, ಈ ಸ್ಪೃಶ್ಯರು ಅಸ್ಪೃಶ್ಯರಿಗಿಂತ ಶ್ರೇಷ್ಟರು ಎನ್ನುತ್ತಾರೆ. ಇವರಿಬ್ಬರ ನಡುವೆ ಅಲೆಮಾರಿಗಳು ಇದ್ದಾರೆ. ಸ್ಪೃಶ್ಯರು ಅಲೆಮಾರಿಗಳಿಗಿಂತ ಶ್ರೇಷ್ಟ ಎಂದು ಭಾವಿಸಿದ್ದಾರೆ. ಹೀಗಾಗಿ ಪರಿಶಿಷ್ಟ ಜಾತಿಗಳಲ್ಲಿಯೇ ಜಾತಿ ತಾರತಮ್ಯ ಇಂದಿಗೂ ಇದೆ. ಈ ಜಾತಿಗಳಲ್ಲಿ ಕೃಷಿಕರಿದ್ದಾರೆ, ಕೂಲಿ ಕಾರ್ಮಿಕರಿದ್ದಾರೆ, ಕಸಗುಡಿಸುವವರಿದ್ದಾರೆ. ವೃತ್ತಿ ಆಧಾರದಲ್ಲಿಯೂ ತಾರತಮ್ಯ ಮಾಡುತ್ತಿದ್ದಾರೆ ಎಂದು ಅವರು ಹೇಳಿದರು. ಅಸ್ಪೃಶ್ಯತೆಯನ್ನು ನಿವಾರಣೆ ಮಾಡಬೇಕು ಎಂದು ಸಂವಿಧಾನದಲ್ಲಿದೆ. ಅಸ್ಪೃಶ್ಯತೆ ಆಚರಣೆಯ ವಿರುದ್ಧ ಕಾನೂನುಗಳನ್ನೂ ಜಾರಿ ಮಾಡಿದ್ದೇವೆ. ಇದರ ಪರಿಣಾಮವಾಗಿ ಪರಿಶಿಷ್ಟ ಸಮುದಾಯಗಳಲ್ಲಿ ಸಾಕಷ್ಟು ಅಭಿವೃದ್ಧಿಯಾಗಿದೆ. ಆದರೆ ಪರಿಶಿಷ್ಟ ಜಾತಿಗಳಲ್ಲಿಯೇ ಅಸ್ಪೃಶ್ಯತೆ ಇದ್ದು, ಅಸ್ಪೃಶ್ಯತೆಯಲ್ಲಿರುವ ಅಸ್ಪೃಶ್ಯತೆಯನ್ನು ನಿವಾರಣೆ ಮಾಡುವ ನಿಟ್ಟಿನಲ್ಲಿ ಯಾರೂ ಬರೆದಿಲ್ಲ, ಯಾರು ಧ್ವನಿಯನ್ನೂ ಎತ್ತಲಿಲ್ಲ. ಈ ಬಗ್ಗೆ ಸರಕಾರದಲ್ಲಿಯೂ ಯೋಜನೆಗಳಿಲ್ಲ. ಇಂತಹ ಕಾಲಘಟ್ಟದಲ್ಲಿ ನಾವು ಬದುಕುತ್ತಿದ್ದೇವೆ ಎಂದು ಅವರು ಬೇಸರ ವ್ಯಕ್ತಪಡಿಸಿದರು. ಭಾರತದ ಸಂವಿಧಾನದಲ್ಲಿ ಧರ್ಮ, ಜಾತಿ, ಭಾಷೆ, ಲಿಂಗ, ಪ್ರಾಂತ್ಯ ಬೇಧವಿಲ್ಲದೆ, ಕಾನೂನಿನ ಮುಂದೆ ಎಲ್ಲರೂ ಸಮಾನರು ಎಂದು ಉಲ್ಲೇಖಿಸಲಾಗಿದೆ. ಸಮಾನ ರಕ್ಷಣೆ, ಸಮಾನ ಅವಕಾಶಗಳು ದೇಶದ ಜನರಿಗೆ ಸಿಕ್ಕಿದೆ. ಸಂವಿಧಾನ ಜಾರಿಯಾಗಿ ಏಳು ದಶಕಗಳು ಕಳೆದಿವೆ. ಈ ಕಾಲಮಾನದಲ್ಲಿ ನಾವು ಒಂದಿಷ್ಟು ಸಾಧನೆಯನ್ನು ಮಾಡಿದ್ದೇವೆ. ಈ ಸಾಧನೆಯ ಮಧ್ಯೆಯೂ ಸಂವಿಧಾನಕ್ಕೆ ಒಂದು ಗಂಡಾಂತರ ಬಂದಿದೆ ಎಂದು ಆತಂಕ ವ್ಯಕ್ತಪಡಿಸಿದರು. ಸಂವಿಧಾನವನ್ನು ಅಪವ್ಯಾಖ್ಯಾನ ಮಾಡಲಾಗುತ್ತಿದೆ, ಸಂವಿಧಾನವನ್ನೇ ಅಪ್ರಸ್ತುತ ಮಾಡಲಾಗುತ್ತಿದೆ. ಇದನ್ನು ಗಂಭೀರವಾಗಿ ಪರಿಗಣಿಸಿ, ಪರಿಹಾರ ಕಂಡುಕೊಳ್ಳಬೇಕು. ಇಲ್ಲವಾದರೆ, ಸಂವಿಧಾನ ಕಳೆದುಕೊಳ್ಳುತ್ತೇವೆ. ಸಂವಿಧಾನವನ್ನು ಕಳೆದುಕೊಂಡರೆ, ಪೆರಿಯಾರ್, ಅಂಬೇಡ್ಕರ್ ಚಿಂತನೆಗಳನ್ನು ಕಳೆದುಕೊಳ್ಳುವಂತಾಗುತ್ತದೆ ಎಂದು ಎಚ್.ಎನ್. ನಾಗಮೋಹನ್ ದಾಸ್ ಹೇಳಿದರು. ನಮಗೆ ವಿಜ್ಞಾನ ತಿಳಿದಿದೆ, ವಿಜ್ಞಾನವನ್ನು ಬಳಕೆ ಮಾಡುತ್ತೇವೆ. ಆದರೆ ನಾವು ವೈಜ್ಞಾನಿಕ ಮನೋಭಾವನೆಯನ್ನು ಬೆಳೆಸಿಕೊಳ್ಳುತ್ತಿಲ್ಲ. ಈ ದೇಶದ ಹೆಚ್ಚಿನ ಜನರು ವೈಜ್ಞಾನಿಕ ಮನೋಭಾವನೆಯನ್ನು ರೂಪಿಸಿಕೊಳ್ಳುತ್ತಿಲ್ಲ. ಕೆಲವರಿಗೆ ವೈಜ್ಞಾನಿಕ ಮನೋಭಾವನೆ ಇದ್ದರೂ, ಅವರು ವಿಚಾರವಾದಿಗಳಾಗುತ್ತಿಲ್ಲ. ವೈಜ್ಞಾನಿಕ ಮನೋಭಾವನೆಯನ್ನು ಹೊಂದಿರುವವರು ಇನ್ನೂ ಪಾಳೆಗಾರಿಕೆಯನ್ನು ಪ್ರೋತ್ಸಾಹಿಸುತ್ತಿದ್ದಾರೆ, ಅಪ್ರಜಾಪ್ರಭುತ್ವ ರೀತಿಯಲ್ಲಿ ನಡೆದುಕೊಳ್ಳುತ್ತಿದ್ದಾರೆ. ಸಾಮಾಜಿಕ ನ್ಯಾಯದ ವಿರುದ್ಧ ನಡೆದುಕೊಳ್ಳುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ಮಾಜಿ ಅಡ್ವೊಕೇಟ್ ಜನರಲ್ ರವಿವರ್ಮ ಕುಮಾರ್, ಚಿಂತಕ ಕೆ.ಎಸ್.ಭಗವಾನ್, ಮಾಜಿ ಸಚಿವೆ ಬಿ.ಟಿ.ಲಲಿತಾ ನಾಯಕ್, ದ್ರಾವಿಡರ್ ಕಳಗಂನ ಅಧ್ಯಕ್ಷ ಡಾ.ಕೆ.ವೀರಮಣಿ, ವಿಚಾರವಾದಿ ನರೇಂದ್ರ ನಾಯಕ್, ದಸಂಸ ಸಂಚಾಲಕ ಮಾವಳ್ಳಿ ಶಂಕರ್, ಕರ್ನಾಟಕ ರಾಜ್ಯ ದ್ರಾವಿಡರ್ ಕಳಗಂನ ಎಸ್.ಗುಣವೇಂದನ್, ಮುತ್ತುಮಣಿ ನನ್ನನ್ ಸೇರಿದಂತೆ ಮತ್ತಿತರರು ಹಾಜರಿದ್ದರು. ‘ಮೌಢ್ಯ ಮತ್ತು ಕಂದಾಚಾರ ನಿಷೇಧ ಕಾನೂನಿನ ಮಾದರಿಯಲ್ಲೇ ಕರ್ನಾಟಕ ರಾಜ್ಯದಲ್ಲಿ ‘ಸ್ವಾಭಿಮಾನ’ವನ್ನು ಎತ್ತಿಹಿಡಿಯಲು ಕಾನೂನು ರೂಪಿಸುವ ಅಗತ್ಯವಿದೆ. ಇದರಿಂದ ಅಂತರ್ಜಾತಿ, ಅಂತರ್ ಧರ್ಮೀಯ ವಿವಾಹಿತರಿಗೆ ರಕ್ಷಣೆ ಕಲ್ಪಿಸಲು ಸಾಧ್ಯವಾಗಲಿದೆ. ಆ ನಿಟ್ಟಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರಕಾರ ಮುಂದಾಗಬೇಕು’ -ಕೆ.ವೀರಮಣಿ ದ್ರಾವಿಡ ಕಳಗಂ ಅಧ್ಯಕ್ಷ
ಇರಾನ್ ಸರ್ವೋಚ್ಚ ನಾಯಕ ಆಯತೊಲ್ಲಾ ಖಾಮಿನೈ ಅವರ ಅಧಿಕೃತ ನಿವಾಸ ನಾಶವಾಗಿದೆ: ನೆತನ್ಯಾಹು ಹೇಳಿಕೆ
► ಇರಾನ್ ಸರಕಾರ ಉರುಳಿಸಲು ಅವಕಾಶ ಎಂದು ಭಾವಿಸಬೇಕು► ಟಿವಿ ಮೂಲಕ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಿದ ಇಸ್ರೇಲ್ ಪ್ರಧಾನಿ
ರಾಜ್ಯ ಶಿಕ್ಷಣ ನೀತಿ ವರದಿ ಬಹಿರಂಗಪಡಿಸಲು ಸಾಹಿತಿ, ಚಿಂತಕರ ಆಗ್ರಹ
ಬೆಂಗಳೂರು, ಫೆ.28: ಕರ್ನಾಟಕ ಸರಕಾರವು ರಾಜ್ಯ ಶಿಕ್ಷಣ ನೀತಿಯ ವರದಿಯನ್ನು ಸಾರ್ವಜನಿಕ ವಲಯದಲ್ಲಿ ಮಂಡಿಸಿ ನಾಗರೀಕ ಸಮುದಾಯದಲ್ಲಿ ಚರ್ಚೆಗೆ ಅವಕಾಶ ನೀಡಬೇಕು ಎಂದು ಸಾಹಿತಿ, ಚಿಂತಕರು ಆಗ್ರಹಿಸಿದ್ದಾರೆ. ಶನಿವಾರ ಇಲ್ಲಿನ ಗಾಂಧಿ ಭವನದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಹಾಗೂ ನೀತಿ ನಿರೂಪಣೆಗಾಗಿ ಸಂಶೋಧನಾ ಸಂಸ್ಥೆಯ ವತಿಯಿಂದ ಆಯೋಜಿಸಿದ್ದ ‘ಕರ್ನಾಟಕ ಶಾಲಾ ಶಿಕ್ಷಣದ ಸ್ಥಿತಿಗತಿ’ ಕುರಿತ ವಿಚಾರ ಸಂಕಿರಣದಲ್ಲಿ ಒಮ್ಮತದ ನಿರ್ಣಯ ಕೈಗೊಳ್ಳಲಾಯಿತು. ಕರ್ನಾಟಕ ರಾಜ್ಯ ಸರಕಾರವು ನೇಮಕ ಮಾಡಿದ ರಾಜ್ಯ ಶಿಕ್ಷಣ ನೀತಿ ಅಯೋಗವು ಕರ್ನಾಟಕ ರಾಜ್ಯ ಶಿಕ್ಷಣ ನೀತಿಯ ವರದಿಯನ್ನು ಸಿದ್ಧಪಡಿಸಿ 2025ರ ಆ.8ರಂದು ರಾಜ್ಯ ಸರಕಾರಕ್ಕೆ ಸಲ್ಲಿಸಿತು. ಪ್ರಜಾಪ್ರಭುತ್ವ ಹಾಗೂ ಸಂವಿಧಾನದ ಆಶಯಗಳಿಗೆ ಅನುಗುಣವಾಗಿದ್ದ ಈ ಮಹತ್ವದ ನೀತಿಯನ್ನು ಸಾರ್ವಜನಿಕ ವಲಯದಲ್ಲಿ ಬಿಡುಗಡೆ ಮಾಡಲಾಗುವುದೆಂದು ನಿರೀಕ್ಷಿಸಲಾಗಿತ್ತು. ಕಾರಣ, ಶಿಕ್ಷಣ ನೀತಿಯ ಅನುಷ್ಠಾನದ ಭಾಗೀದಾರರಾದ ವಿದ್ಯಾರ್ಥಿಗಳು, ಶಿಕ್ಷಕರು, ಪೋಷಕರು, ಶಿಕ್ಷಣ ತಜ್ಞರು, ಹಾಗೂ ರಾಜ್ಯದ ಎಲ್ಲಾ ನಾಗರಿಕರು ನೀತಿಯ ಆಶಯ, ಪ್ರಸ್ತಾವ ಮತ್ತು ಶಿಫಾರಸ್ಸುಗಳನ್ನು ತಿಳಿದುಕೊಳ್ಳುವ ಹಕ್ಕನ್ನು ಹೊಂದಿರುತ್ತಾರೆ ಎಂದು ಸಾಹಿತಿ, ಚಿಂತಕರು ತಿಳಿಸಿದರು. ಒಂದು ಶಿಕ್ಷಣ ನೀತಿ ಕೇವಲ ಕೆಲವೇ ತಜ್ಞರ ವರದಿಯಾಗದೇ ನಾಡಿನ ಚಿಂತನೆಯ ಭಾಗವಾಗುವುದು ಮತ್ತು ಎಲ್ಲರ ಅಭಿಪ್ರಾಯಗಳು ನೀತಿಯ ಅನುಷ್ಠಾನಕ್ಕೆ ಮಾರ್ಗದರ್ಶಿಯಾಗುವುದು ರಾಜಕೀಯ ನೈತಿಕತೆಗೆ ಅನಿವಾರ್ಯ ಕರ್ತವ್ಯವಾಗಿದೆ. ಶಿಕ್ಷಣ ನೀತಿಯ ಸ್ವೀಕಾರ, ಒಪ್ಪಿಗೆ ಅನುಷ್ಠಾನ, ಪರಾಮರ್ಶೆ ಇತ್ಯಾದಿಗಳು ಕೇವಲ ರಾಜಕೀಯ ಅಧಿಕಾರದ ಅಥವಾ ಪಕ್ಷಗಳ ಮತ್ತು ಅಧಿಕಾರಶಾಹಿಗೆ ವ್ಯಾಪ್ತಿಗೆ ಬರಕೂಡದು. ಸಾರ್ವಜನಿಕ ಚರ್ಚೆ, ಸಂವಾದ, ಮುಕ್ತ ವಿಮರ್ಶೆ ಇವುಗಳ ಮೂಲಕ ಎಲ್ಲರ ಒಮ್ಮತದ ಅಭಿಪ್ರಾಯವನ್ನು ರೂಪಿಸಿಕೊಂಡು, ಅನುಷ್ಠಾನದ ಕ್ರಮಗಳನ್ನು ರೂಪಿಸಿಕೊಳ್ಳುವುದು ಅತ್ಯಂತ ಅವಶ್ಯಕವಾಗಿದೆ ಎಂದು ಹೇಳಿದರು. ರಾಷ್ಟ್ರೀಯ ಶಿಕ್ಷಣ ನೀತಿಯ ಅನುಷ್ಠಾನದ ಸಂದರ್ಭದಲ್ಲಿ ಆದಂತೆ ಅವಸರ, ಏಕಪಕ್ಷೀಯ ನಿರ್ಧಾರ, ಸಂವಿಧಾನ ವಿರೋಧಿ ಹಾಗೂ ನಿರ್ದೇಶನಗಳು ಮತ್ತೆ ಪುನರಾವರ್ತನೆ ಆಗದಂತೆ ಎಚ್ಚರವಹಿಸಬೇಕಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾ.6ರ ಅಧಿವೇಶನದಲ್ಲಿ ಮಂಡಿಸುವ ಬಜೆಟ್ ಭಾಷಣದಲ್ಲಿ ಈ ವಿಷಯವನ್ನು ಘೋಷಿಸಿಬೇಕು ಎಂದು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ, ಹಿರಿಯ ಸಾಹಿತಿ ಪ್ರೊ.ರಾಜೇಂದ್ರ ಚೆನ್ನಿ, ಲೇಖಕಿ ಪ್ರೊ.ಸಬೀಹಾ ಭೂಮಿಗೌಡ, ಹಿರಿಯ ಸಾಹಿತಿ ನಾಡೋಜ ಡಾ.ಜಿ.ರಾಮಕೃಷ್ಣ, ಶಿಕ್ಷಣ ತಜ್ಞ ಡಾ.ನಿರಂಜನಾರಾಧ್ಯ ವಿ.ಪಿ, ಕುಮಾರ್ ಶೃಂಗೇರಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಜಿಲ್ಲಾ ರಕ್ತ ವರ್ಗಾವಣಾ ಅಧಿಕಾರಿಗಳ ನೇಮಕಕ್ಕೆ ಅನುಮತಿ ನೀಡಿದ ಸರಕಾರ
ಬೆಂಗಳೂರು, ಫೆ.28: ರಾಜ್ಯ ಸರಕಾರವು ರಕ್ತ ವರ್ಗಾವಣೆಯಿಂದ ಹರಡಬಹುದಾದ ಸೋಂಕುಗಳನ್ನು ತಡೆಗಟ್ಟಲು ಹಾಗೂ ರಕ್ತಕೇಂದ್ರಗಳ ಸಮರ್ಪಕ ನಿರ್ವಹಣೆಯನ್ನು ಬಲಪಡಿಸಲು ಜಿಲ್ಲಾ ರಕ್ತ ವರ್ಗಾವಣಾ ಅಧಿಕಾರಿಗಳನ್ನು ನೇಮಕ ಮಾಡಲು ಅನುಮತಿ ನೀಡಿದೆ. ಈ ಸಂಬಂಧ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧೀನ ಕಾರ್ಯದರ್ಶಿ ಪ್ರಭಾಕರ್ ಟಿ. ಆದೇಶ ಹೊರಡಿಸಿದ್ದು, ರಕ್ತ ವರ್ಗಾವಣೆಯಿಂದ ಹರಡಬಹುದಾದ ಸೋಂಕುಗಳನ್ನು ತಡೆಗಟ್ಟಲು, ರಕ್ತಕೇಂದ್ರಗಳ ಸಮರ್ಪಕ ನಿರ್ವಹಣೆಯನ್ನು ಬಲಪಡಿಸಲು, ರಕ್ತದ ಅವಶ್ಯವಿರುವ ರೋಗಿಗಳಿಗೆ ಉತ್ತಮ ಗುಣಮಟ್ಟದ ಹಾಗೂ ಸಮರ್ಪಕ ರಕ್ತವನ್ನು ಪೂರೈಸಲು ಜಿಲ್ಲಾ ರಕ್ತ ವರ್ಗಾವಣಾ ಅಧಿಕಾರಿಗಳನ್ನು ನೇಮಕ ಮಾಡಬೇಕು ಎಂದಿದ್ದಾರೆ. ಜಿಲ್ಲೆಯ ಸರಕಾರಿ ವೈದ್ಯಕೀಯ ಕಾಲೇಜಿನ ರಕ್ತ ವರ್ಗಾವಣಾ ವಿಭಾಗದ ಮುಖ್ಯಸ್ಥರು ಅಥವಾ ರಕ್ತ ವರ್ಗಾವಣಾ ವಿಭಾಗದ ಹಿರಿಯ ಪ್ರಾಧ್ಯಾಪಕರನ್ನು ಜಿಲ್ಲಾ ರಕ್ತ ವರ್ಗಾವಣಾ ಅಧಿಕಾರಿಗಳನ್ನಾಗಿ ನೇಮಿಸಬೇಕು. ಈ ಅಧಿಕಾರಿಗಳು ಲಭ್ಯವಿಲ್ಲದಿದ್ದಲ್ಲಿ, ಜಿಲ್ಲೆಯ ಸರಕಾರಿ ವೈದ್ಯಕೀಯ ಕಾಲೇಜಿನ ರೋಗಶಾಸ್ತ್ರ ವಿಭಾಗದ ಮುಖ್ಯಸ್ಥರು ಅಥವಾ ರೋಗಶಾಸ್ತ್ರ ವಿಭಾಗದ ಹಿರಿಯ ಪ್ರಾಧ್ಯಾಪಕರು ಅಥವಾ ರಕ್ತ ನಿಧಿ ಅಧಿಕಾರಿಗಳನ್ನು ನೇಮಕ ಮಾಡಬೇಕು ಎಂದು ಅವರು ಹೇಳಿದ್ದಾರೆ.
ಇರಾನ್ ಮೇಲಿನ ದಾಳಿ | ಅಧ್ಯಕ್ಷ ಟ್ರಂಪ್ ಅಧಿಕಾರಕ್ಕೆ ಮಿತಿ ಹಾಕಲು ಅಮೆರಿಕ ಕಾಂಗ್ರೆಸ್ ನಲ್ಲಿ ಆಗ್ರಹ
ವಾಷಿಂಗ್ಟನ್: ಇರಾನ್ ವಿರುದ್ಧ ಅಮೆರಿಕ ಕೈಗೊಂಡಿರುವ ಮಿಲಿಟರಿ ದಾಳಿಗಳ ಹಿನ್ನೆಲೆ ಅಧ್ಯಕ್ಷ ಟ್ರಂಪ್ ಅವರ ಯುದ್ಧಾಧಿಕಾರವನ್ನು ಮಿತಿಗೊಳಿಸುವ ಕುರಿತಂತೆ ಅಮೆರಿಕ ಕಾಂಗ್ರೆಸ್ ನಲ್ಲಿ ಚರ್ಚೆ ತೀವ್ರಗೊಂಡಿದೆ ಎಂದು Al Jazeera ವರದಿ ಮಾಡಿದೆ. ತಮ್ಮ ಕ್ಷೇತ್ರಗಳಲ್ಲಿ ಇರುವ ಎಲ್ಲಾ ಸೆನೆಟರ್ ಗಳನ್ನು ತುರ್ತಾಗಿ ವಾಷಿಂಗ್ಟನ್ ಗೆ ಕರೆಸಿ, ಇರಾನ್ ದಾಳಿಗಳಿಗೆ ಸಂಬಂಧಿಸಿದಂತೆ ಅಧ್ಯಕ್ಷರ ಅಧಿಕಾರಕ್ಕೆ ಮಿತಿ ವಿಧಿಸುವ ನಿರ್ಣಯದ ಮೇಲೆ ಮತದಾನ ನಡೆಸಬೇಕು ಎಂಬ ಬೇಡಿಕೆ ಡೆಮೋಕ್ರಾಟ್ ಪಕ್ಷದ ಸದಸ್ಯರಿಂದ ಕೇಳಿಬಂದಿದೆ. ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇರಾನ್ ನಿಂದ ಅಮೆರಿಕ ಇರುವ ಅಪಾಯವನ್ನು ಉತ್ಪ್ರೇಕ್ಷಿಸಿದ್ದಾರೆ. ಈ ದಾಳಿಗಳು ಕಾನೂನುಬಾಹಿರ ಮತ್ತು ಸಂವಿಧಾನಬಾಹಿರ ಎಂದು ಅನೇಕ ಡೆಮೋಕ್ರಾಟ್ಗಳು ಆರೋಪಿಸಿದ್ದಾರೆ. ಸಾಮಾನ್ಯ ಅಮೆರಿಕನ್ನರು ಮತ್ತೊಂದು “ಅಂತ್ಯವಿಲ್ಲದ ಯುದ್ಧ”ವನ್ನು ಬಯಸುವುದಿಲ್ಲ ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ. “ಇದನ್ನು ನಿಲ್ಲಿಸಲು ಕಾಂಗ್ರೆಸ್ ತಕ್ಷಣವೇ ಸಭೆ ಸೇರಬೇಕು. ಶಾಸನಾಂಗದ ಅನುಮೋದನೆ ಇಲ್ಲದೆ ಅಧ್ಯಕ್ಷರು ಮಿಲಿಟರಿ ಕ್ರಮ ಕೈಗೊಳ್ಳುವುದು ಸಂವಿಧಾನದ ಆತ್ಮಕ್ಕೆ ವಿರುದ್ಧ” ಎಂದು ಮತ್ತೊಬ್ಬ ಡೆಮೋಕ್ರಾಟ್ ನಾಯಕ ಹೇಳಿದ್ದಾರೆ. ಅಮೆರಿಕ ಸಂವಿಧಾನದ ಪ್ರಕಾರ ಯುದ್ಧ ಘೋಷಿಸುವ ಅಧಿಕಾರ ಅಧ್ಯಕ್ಷರಿಗೆ ಇಲ್ಲ; ಅದು ಕಾಂಗ್ರೆಸ್ಗೆ ಸೇರಿದೆ. ಆದರೆ 1973ರಲ್ಲಿ ಅಂಗೀಕರಿಸಲಾದ ಯುದ್ಧಾಧಿಕಾರಗಳ ನಿರ್ಣಯ ಪ್ರಕಾರ, ತುರ್ತು ಪರಿಸ್ಥಿತಿಯಲ್ಲಿ ಅಧ್ಯಕ್ಷರು ಮಿಲಿಟರಿ ಕ್ರಮ ಕೈಗೊಳ್ಳಬಹುದು. ಆದರೆ ಅವರು ಕಾಂಗ್ರೆಸ್ ಗೆ ಮಾಹಿತಿ ನೀಡಿ ಅನುಮೋದನೆ ಪಡೆಯಬೇಕು. ಕಾಂಗ್ರೆಸ್ ಅನುಮೋದನೆ ನೀಡದಿದ್ದರೆ 60 ದಿನಗಳೊಳಗೆ ಪಡೆಗಳನ್ನು ಹಿಂತೆಗೆದುಕೊಳ್ಳಬೇಕು ಎಂಬ ನಿಯಮವೂ ಈ ನಿರ್ಣಯದಲ್ಲಿದೆ. ಅಮೆರಿಕ ನೇರ ದಾಳಿಗೆ ಒಳಗಾದ ಸಂದರ್ಭದಲ್ಲಿ ಮಾತ್ರ ಅಧ್ಯಕ್ಷರಿಗೆ ಕಾರ್ಯನಿರ್ವಾಹಕ ಅಧಿಕಾರ ಅನ್ವಯಿಸುತ್ತದೆ. ಆದರೆ ಪ್ರಸ್ತುತ ಪರಿಸ್ಥಿತಿಯಲ್ಲಿ ಅಮೆರಿಕ ನೇರ ಬೆದರಿಕೆಗೆ ಒಳಗಾಗಿದೆ ಎಂಬುದಕ್ಕೆ ಸ್ಪಷ್ಟ ಕಾರಣವಿಲ್ಲ ಎಂದು ರಾಜಕೀಯ ಪ್ರಶ್ನಿಸುತ್ತಿದ್ದಾರೆ. ಹೀಗಾಗಿ ಇರಾನ್ ದಾಳಿಗಳ ವಿಷಯದಲ್ಲಿ ಅಧ್ಯಕ್ಷರ ಕ್ರಮ ಸಂವಿಧಾನಾತ್ಮಕ ಮಿತಿಗಳನ್ನು ಮೀರುತ್ತಿದೆಯೇ ಎಂಬ ವಿಚಾರ ಇದೀಗ ಅಮೆರಿಕ ರಾಜಕೀಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.
Iran | ಇಸ್ಫಹಾನ್ ಕೈಗಾರಿಕಾ ವಲಯ ಖಾಲಿ ಮಾಡುವಂತೆ ಇಸ್ರೇಲಿ ಸೇನೆಯ ಎಚ್ಚರಿಕೆ
ಟೆಹ್ರಾನ್/ಇಸ್ಫಹಾನ್: ಇರಾನ್ ನ ಇಸ್ಫಹಾನ್ ನಗರದ ಕೈಗಾರಿಕಾ ವಲಯದಲ್ಲಿರುವ ಜನರಿಗೆ ಇಸ್ರೇಲಿ ಸೇನೆ ಬಲವಂತದ ಸ್ಥಳಾಂತರದ ಬೆದರಿಕೆ ನೀಡಿದೆ. ದಾಳಿ ನಡೆಸುವ ಮುನ್ನ ಸಂಬಂಧಿತ ಪ್ರದೇಶವನ್ನು ತಕ್ಷಣವೇ ಖಾಲಿ ಮಾಡುವಂತೆ ಎಚ್ಚರಿಕೆ ನೀಡಲಾಗಿದೆ. #BREAKING ⚡️ ❌ - The IDF has issued an urgent warning to Iranians of an incoming IDF strike in the industrial zone of Isfahan in the coming minutes. Coordinates: 32.668922, 51.845391 pic.twitter.com/eAUvxF2d0k — Syria Retold Daily (@SyriaRetold) February 28, 2026 ಸಾಮಾಜಿಕ ಜಾಲತಾಣ X ನಲ್ಲಿ ಪ್ರಕಟಿಸಿದ ಪೋಸ್ಟ್ ನಲ್ಲಿ ಕೆಂಪು ಬಣ್ಣದಲ್ಲಿ ಗುರುತಿಸಲಾದ ಪ್ರದೇಶವನ್ನು ಹೊಂದಿರುವ ನಕ್ಷೆಯನ್ನು ಹಂಚಿಕೊಳ್ಳಲಾಗಿದೆ. ಅದರಲ್ಲಿ ಸೂಚಿಸಿರುವ ವಲಯದಲ್ಲಿ ಸೈನಿಕ ನೆಲೆಗಳಿವೆ ಎಂದು ಹೇಳಲಾಗಿದೆ. “ಕೆಲವೇ ನಿಮಿಷಗಳಲ್ಲಿ, ಇಸ್ರೇಲಿ ಸೇನೆ ಈ ಪ್ರದೇಶದ ಮಿಲಿಟರಿ ನೆಲೆಗಳ ಮೇಲೆ ದಾಳಿ ಮಾಡುತ್ತದೆ” ಎಂದು ಪೋಸ್ಟ್ ನಲ್ಲಿ ಉಲ್ಲೇಖಿಸಲಾಗಿದೆ. ನಾಗರಿಕರು ತಮ್ಮ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ತಕ್ಷಣ ಸ್ಥಳಾಂತರಗೊಳ್ಳಬೇಕು ಎಂಬ ಸಂದೇಶವೂ ನೀಡಲಾಗಿದೆ. ಇಸ್ಫಹಾನ್ ಇರಾನ್ನ ಪ್ರಮುಖ ಕೈಗಾರಿಕಾ ಕೇಂದ್ರಗಳಲ್ಲಿ ಒಂದಾಗಿದ್ದು, ಅಲ್ಲಿ ಸೈನಿಕ ಸಂಬಂಧಿತ ಸೌಕರ್ಯಗಳೂ ಇರುವುದಾಗಿ ವರದಿಗಳು ಸೂಚಿಸುತ್ತಿವೆ. ಇಸ್ರೇಲ್–ಇರಾನ್ ನಡುವಿನ ಉದ್ವಿಗ್ನತೆ ಹೆಚ್ಚುತ್ತಿರುವ ಹಿನ್ನೆಲೆ ಈ ಎಚ್ಚರಿಕೆ ಹೊರಬಿದ್ದಿದೆ.
Bengaluru | ಜ್ಯೋತಿಷಿಯ ಭವಿಷ್ಯಕ್ಕೆ ಹೆದರಿ ಮದುವೆ ನಿಶ್ಚಯವಾಗಿದ್ದ ಯುವತಿ ಆತ್ಮಹತ್ಯೆ!
ಬೆಂಗಳೂರು : ಜ್ಯೋತಿಷಿಯೊಬ್ಬ ‘ನೀನು ಅಲ್ಪಾಯುಷಿ’ ಎಂದು ಭವಿಷ್ಯ ಹೇಳಿದ್ದಕ್ಕೆ ಹೆದರಿ ಮದುವೆ ನಿಶ್ಚಯವಾಗಿದ್ದ ಯುವತಿಯೊಬ್ಬಳು ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಆತಂಕಕಾರಿ ಘಟನೆ ಬಾಗಲಗುಂಟೆ ಪೊಲೀಸ್ ಠಾಣಾ ವ್ಯಾಪ್ತಿಯ ಎಂಇಐ ಲೇಔಟ್ನಲ್ಲಿ ಶನಿವಾರ ವರದಿಯಾಗಿದೆ. ಖಾಸಗಿ ಕಂಪೆನಿಯಲ್ಲಿ ಉದ್ಯೋಗಿಯಾಗಿ ಮನೆಯಿಂದಲೇ ಕೆಲಸ ಮಾಡುತ್ತಿದ್ದ ವಿದ್ಯಾಜ್ಯೋತಿ(29) ಎಂಬಾಕೆ ಮೃತಪಟ್ಟ ಯುವತಿ ಎಂದು ಗುರುತಿಸಲಾಗಿದೆ. ಮೃತ ವಿದ್ಯಾಜ್ಯೋತಿ ಕೊಡಗು ಮೂಲದ ಯುವಕನನ್ನು ಪ್ರೀತಿಸುತ್ತಿದ್ದಳು. ಆಕೆಯ ಇಷ್ಟದಂತೆ ಎರಡೂ ಕಡೆಯ ಕುಟುಂಬದವರು ಒಪ್ಪಿ ಮದುವೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದರು. ಆದರೆ, ಇತ್ತೀಚೆಗೆ ಜ್ಯೋತಿಷಿಯೊಬ್ಬರು ವಿದ್ಯಾಜ್ಯೋತಿಗೆ ‘ನೀನು ಅಲ್ಪಾಯುಷಿ’ ಎಂದು ಭವಿಷ್ಯ ನುಡಿದಿದ್ದರು ಎನ್ನಲಾಗಿದೆ. ಇದೇ ವಿಚಾರಕ್ಕೆ ನೊಂದು, ಹೆದರಿದ ಆಕೆ ಈ ಕಠಿಣ ನಿರ್ಧಾರ ತೆಗೆದುಕೊಂಡಿರಬಹುದು ಎಂದು ಶಂಕಿಸಲಾಗಿದೆ. ವಿದ್ಯಾಜ್ಯೋತಿ ಅಲ್ಪಾಯುಷಿ ಎಂದು ಹೇಳಿದ್ದ ಜ್ಯೋತಿಷಿ, ದೋಷ ಪರಿಹಾರಕ್ಕಾಗಿ 9 ದಿನಗಳ ಕಾಲ ಪೂಜೆ ಮಾಡುವಂತೆ ಸೂಚಿಸಿದ್ದರು. ಜತೆಗೆ 9ನೇ ದಿನ ಮಾರಮ್ಮ ದೇವರಿಗೆ ತಾಳಿ ಒಪ್ಪಿಸುವಂತೆ ತಿಳಿಸಿದ್ದರು. ಇದರಂತೆ ಕುಟುಂಬಸ್ಥರು ದೇವರಿಗೆ ತಾಳಿ ಕೊಡಲು ಸಿದ್ಧತೆ ನಡೆಸಿದ್ದರು. ಆದರೆ, ಫೆ.27ರಂದು ಮಧ್ಯಾಹ್ನದ ಊಟದ ನಂತರ ವಿದ್ಯಾಜ್ಯೋತಿ ತನ್ನ ಕೊಠಡಿಗೆ ಹೋಗಿದ್ದಳು. ಆಕೆ ಮನೆಯಿಂದಲೇ ಕೆಲಸ ಮಾಡುತ್ತಿದ್ದ ಕಾರಣ, ಕೆಲಸ ಮಾಡುತ್ತಿರಬಹುದೆಂದು ಮನೆಯವರು ಭಾವಿಸಿದ್ದರು. ಆದರೆ, ಸಂಜೆ ತಾಯಿ ಕರೆದರೂ ಆಕೆ ಹೊರಬಂದಿರಲಿಲ್ಲ. ರಾತ್ರಿ 8ಗಂಟೆ ಸುಮಾರಿಗೆ ದೇವಸ್ಥಾನಕ್ಕೆ ಹೋಗಬೇಕಿದ್ದ ಕಾರಣ ತಾಯಿ ಮತ್ತೆ ಮಗಳನ್ನು ಕರೆದಿದ್ದಾರೆ. ಎಷ್ಟು ಬಾಗಿಲು ತಟ್ಟಿದರೂ ತೆಗೆಯದಿದ್ದಾಗ, ಅನುಮಾನಗೊಂಡು ಕಿಟಕಿಯ ಮೂಲಕ ನೋಡಿದ್ದಾರೆ. ಈ ವೇಳೆ ಆಕೆ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಈ ಘಟನೆ ಕುರಿತು ಮಾಹಿತಿ ತಿಳಿದ ಬಾಗಲಗುಂಟೆ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿರುವುದಾಗಿ ತಿಳಿಸಿದ್ದಾರೆ.
ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ | ಕುವೈತ್ ನಲ್ಲಿ ಮುಂದಿನ ಸೂಚನೆವರೆಗೆ ತರಾವೀಹ್ ನಮಾಝ್ ರದ್ದು
ಕುವೈತ್: ರಮಝಾನ್ ಮಾಸದ ಅಂಗವಾಗಿ ದೇಶದಾದ್ಯಂತ ಮಸೀದಿಗಳಲ್ಲಿ ರಾತ್ರಿ ವೇಳೆ ನಡೆಯುವ ತರಾವೀಹ್ ನಮಾಝ್ ಮುಂದಿನ ಸೂಚನೆವರೆಗೆ ರದ್ದುಗೊಳಿಸುವುದಾಗಿ ಕುವೈತ್ನ ಇಸ್ಲಾಮಿಕ್ ವ್ಯವಹಾರಗಳ ಸಚಿವಾಲಯ ಘೋಷಿಸಿದೆ. ಸಚಿವಾಲಯ ಹೊರಡಿಸಿದ ಪ್ರಕಟಣೆಯಲ್ಲಿ, ದೇಶದ ಎಲ್ಲಾ ಮಸೀದಿಗಳಲ್ಲಿ ಸಾಮೂಹಿಕವಾಗಿ ನಡೆಯುವ ತರಾವೀಹ್ ನಮಾಝ್ ಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುವಂತೆ ನಿರ್ದೇಶಿಸಲಾಗಿದೆ. ಪರಿಸ್ಥಿತಿಯನ್ನು ಪರಿಗಣಿಸಿ ಮುನ್ನೆಚ್ಚರಿಕಾ ಕ್ರಮವಾಗಿ ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದು ತಿಳಿಸಲಾಗಿದೆ. ಮುಂದಿನ ಸೂಚನೆ ಪ್ರಕಟವಾಗುವವರೆಗೆ ಈ ಆದೇಶ ಜಾರಿಯಲ್ಲಿರಲಿದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಪರಿಸ್ಥಿತಿಯ ಪರಿಶೀಲನೆಯ ನಂತರ ಅಗತ್ಯ ಮಾರ್ಗಸೂಚಿಗಳನ್ನು ಪ್ರಕಟಿಸಲಾಗುವುದು ಎಂದು ಸಚಿವಾಲಯ ತಿಳಿಸಿದೆ.
Belagavi | ಮಕ್ಕಳ ಕಳ್ಳಿ ಎಂದು ಆರೋಪಿಸಿ ಮಹಿಳೆಗೆ ಹಲ್ಲೆ
ಬೆಳಗಾವಿ, ಫೆ.28: ನಗರದಲ್ಲಿ ಹರಿದಾಡುತ್ತಿರುವ ‘ಮಕ್ಕಳ ಕಳ್ಳರ’ ವದಂತಿಯ ಹಿನ್ನೆಲೆಯಲ್ಲಿ ಭಿಕ್ಷೆ ಬೇಡಲು ಬಂದ ಮಹಿಳೆಯೊಬ್ಬರನ್ನು ಮಕ್ಕಳ ಕಳ್ಳಿ ಎಂದು ಶಂಕಿಸಿ ಸ್ಥಳೀಯರು ಧರ್ಮದೇಟು ನೀಡಿದ ಘಟನೆ ನಗರದ ನ್ಯೂ ಗಾಂಧಿ ನಗರದಲ್ಲಿ ಶನಿವಾರ ನಡೆದಿರುವುದು ವರದಿಯಾಗಿದೆ. ಈ ಘಟನೆಯಿಂದಾಗಿ ಸ್ವಲ್ಪಹೊತ್ತು ಆ ಪ್ರದೇಶದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಪ್ರತಿವರ್ಷದಂತೆ ಈ ಬಾರಿಯೂ ರಮಝಾನ್ ಸಂದರ್ಭದಲ್ಲಿ ಭಿಕ್ಷೆ ಸಂಗ್ರಹಿಸಲು ಬಂದಿದ್ದ ಮಹಿಳೆಯನ್ನು ಸ್ಥಳೀಯ ಮಹಿಳೆಯರು ಆಕೆಯನ್ನು ಮಕ್ಕಳ ಅಪಹರಣಕಾರ್ತಿ ಎಂದು ಆರೋಪಿಸಿ ಥಳಿಸಲಾರಂಭಿಸಿದರು. ಘಟನೆಯ ಮಾಹಿತಿ ತಿಳಿದ ತಕ್ಷಣ ಮಾಳಮಾರುತಿ ಪೊಲೀಸರು ಸ್ಥಳಕ್ಕೆ ಧಾವಿಸಿ, ಆಕ್ರೋಶಗೊಂಡಿದ್ದ ಜನರ ಮಧ್ಯೆ ನುಗ್ಗಿ ಪರಿಸ್ಥಿತಿಯನ್ನು ಹತೋಟಿಗೆ ತರಬೇಕಾಯಿತು. ಪೊಲೀಸರು ಆ ಭಿಕ್ಷುಕ ಮಹಿಳೆಯನ್ನು ಜನರ ಕೈಯಿಂದ ಬಿಡಿಸಿ ವಶಕ್ಕೆ ತೆಗೆದುಕೊಂಡು, ಸ್ಥಳದಲ್ಲಿ ಜಮಾಯಿಸಿದ್ದ ಜನರನ್ನು ಗದರಿಸಿ ಚದುರಿಸಿದರು. ನಂತರ ನಡೆಸಿದ ವಿಚಾರಣೆಯಲ್ಲಿ ಆ ಮಹಿಳೆ ಸಂಪೂರ್ಣ ನಿರಪರಾಧಿ ಎಂದು ತಿಳಿದುಬಂದಿದೆ. ಈ ಬೆಳವಣಿಗೆಗಳ ಹಿನ್ನೆಲೆಯಲ್ಲಿ, ಬೆಳಗಾವಿ ಪೊಲೀಸ್ ಆಯುಕ್ತ ಭೂಷಣ್ ಬೊರಸೆ ಅವರು ಸ್ವತಃ ಮಾಧ್ಯಮದ ಮುಂದೆ ಬಂದು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ. ವೀಡಿಯೊ ಹೇಳಿಕೆಯನ್ನು ಬಿಡುಗಡೆ ಮಾಡಿರುವ ಅವರು, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ಯಾವುದೇ ಅನಾಮಧೇಯ ಮತ್ತು ದೃಢೀಕರಿಸದ ಆಡಿಯೊ ಅಥವಾ ಸಂದೇಶಗಳನ್ನು ಸಾರ್ವಜನಿಕರು ನಂಬಬಾರದು. ನಿಮಗೆ ಯಾವುದೇ ಅನುಮಾನಾಸ್ಪದ ವ್ಯಕ್ತಿ ಅಥವಾ ಚಟುವಟಿಕೆ ಕಂಡುಬಂದರೆ, ದಯವಿಟ್ಟು ತಕ್ಷಣವೇ ನಮ್ಮ ಸಹಾಯವಾಣಿ 100 ಗೆ ಕರೆ ಮಾಡಿ ಮಾಹಿತಿ ನೀಡಿ. ಕಾನೂನನ್ನು ಕೈಗೆತ್ತಿಕೊಳ್ಳಬೇಡಿ ಎಂದು ಮನವಿ ಮಾಡಿದ್ದಾರೆ.
ಟೆಹ್ರಾನ್, ಫೆ. 28: ಅಮೆರಿಕ ಮತ್ತು ಇಸ್ರೇಲ್ ನಡೆಸಿದ ದಾಳಿಗಳ ಪರಿಣಾಮವಾಗಿ ಇರಾನ್ ನ 24 ಪ್ರಾಂತ್ಯಗಳು ತೀವ್ರವಾಗಿ ಬಾಧಿತವಾಗಿದ್ದು, ಇದುವರೆಗೆ 201 ಜನರು ಸಾವನ್ನಪ್ಪಿದ್ದಾರೆ ಮತ್ತು 747 ಮಂದಿ ಗಾಯಗೊಂಡಿದ್ದಾರೆ ಎಂದು ಇರಾನ್ನ ರೆಡ್ ಕ್ರೆಸೆಂಟ್ ಸೊಸೈಟಿ ತಿಳಿಸಿದೆ ಎಂದು al jazeera ವರದಿ ಮಾಡಿದೆ. ರೆಡ್ ಕ್ರೆಸೆಂಟ್ ಸೊಸೈಟಿಯ ವಕ್ತಾರರು ಮೆಹರ್ ನ್ಯೂಸ್ ಏಜೆನ್ಸಿಗೆ ನೀಡಿದ ಮಾಹಿತಿಯ ಪ್ರಕಾರ, ದಾಳಿಗಳು ವಿವಿಧ ಪ್ರದೇಶಗಳಲ್ಲಿ ವ್ಯಾಪಕ ಪರಿಣಾಮ ಬೀರಿವೆ. ಹಾನಿಗೊಳಗಾದ ಸ್ಥಳಗಳಲ್ಲಿ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗಳನ್ನು ಮುಂದುವರಿಸಲಾಗುತ್ತಿದೆ. ದಾಳಿಗೊಳಗಾದ ಪ್ರದೇಶಗಳಲ್ಲಿ 220 ಕ್ಕೂ ಹೆಚ್ಚು ರೆಡ್ ಕ್ರೆಸೆಂಟ್ ತಂಡಗಳನ್ನು ನಿಯೋಜಿಸಲಾಗಿದ್ದು, ಅವು ಅವಶೇಷ ತೆರವು, ಸಿಲುಕಿರುವವರ ಶೋಧ ಹಾಗೂ ಗಾಯಾಳುಗಳಿಗೆ ತುರ್ತು ನೆರವು ಒದಗಿಸುವ ಕಾರ್ಯದಲ್ಲಿ ತೊಡಗಿವೆ ಎಂದು ವಕ್ತಾರರು ತಿಳಿಸಿದ್ದಾರೆ. ಪರಿಸ್ಥಿತಿ ಇನ್ನೂ ಉದ್ವಿಗ್ನವಾಗಿದ್ದು, ಮೃತರು ಮತ್ತು ಗಾಯಾಳುಗಳ ಸಂಖ್ಯೆ ಹೆಚ್ಚುವ ಸಾಧ್ಯತೆ ಇರುವುದಾಗಿ ಅಧಿಕಾರಿಗಳು ಸೂಚಿಸಿದ್ದಾರೆ.
ದುಬೈನ ಬುರ್ಜ್ ಖಲೀಫಾ ಮೇಲೆ ಇರಾನ್ ಕ್ಷಿಪಣಿ ದಾಳಿ? ವಿಶ್ವದ ಅತಿ ಎತ್ತರದ ಕಟ್ಟಡ ಬಳಿ ಸ್ಪೋಟದ ವಿಡಿಯೋ ವೈರಲ್!
ವಿಶ್ವದ ಅತಿ ಎತ್ತರದ ಕಟ್ಟದ ಬುರ್ಜ್ ಖಲೀಫಾ ಮೇಲೆ ಇರಾನ್ ಕ್ಷಿಪಣಿ ದಾಳಿ ನಡೆಸಿರುವ ಸಾಧ್ಯತೆ ಇದೆ. ಈ ಕುರಿತ ವಿಡಿಯೋ ಒಂದು ವೈರಲ್ ಆಗಿದ್ದು, ಬುರ್ಜ್ ಖಲೀಫಾ ಬಳಿ ಭೀಕರ ಸ್ಪೋಟವಾಗಿ ಹೊಗೆ ಬರುತ್ತಿದೆ. ಇನ್ನು ಇರಾನ್ ಪ್ರತೀಕಾರಕ್ಕೆ ನೆರೆಯ ದೇಶಗಳು ಬೆಚ್ಚಿಬಿದ್ದಿವೆ. ಇಸ್ರೇಲ್, ಕತಾರ್, ಬಹರೇನ್, ಯುಎಇ ಸೌದಿ ಅರೇಬಿಯಾ, ಸೇರಿ ಹಲವು ದೇಶದ ಅಮೆರಿಕದ ಸೇನಾ ನೆಲೆಯ ಮೇಲೆ ಇರಾನ್ ಕ್ಷಿಪಣಿ ದಾಳಿ ನಡೆಸುತ್ತಿದೆ.
ಉಕ್ರೇನ್ ವಿರುದ್ಧ ರೊಚ್ಚಿಗೆದ್ದ ರಷ್ಯಾ, ಶಾಂತಿ ಮಾತುಕತೆಗೆ ಬ್ರೇಕ್ ಬೀಳುವ ಸಾಧ್ಯತೆ | Ukraine And Russia
ಪ್ರಪಂಚ ಹಾಳಾಗಿ ಹೋಗುತ್ತಿದ್ದು, ಎಲ್ಲೆಲ್ಲೂ ಬರೀ ಯುದ್ಧದ ಮಾತೇ ಕೇಳಿಬರುತ್ತಿದೆ. ಒಂದು ಕಡೆ ದಿಢೀರ್ ಅಂತಾ ಶುರುವಾಗಿರುವ ಇರಾನ್ ಮತ್ತು ಇಸ್ರೇಲ್ ಯುದ್ಧ ಭೀತಿ ಹುಟ್ಟುಹಾಕಿದೆ. ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ ಇರಾನ್ ವಿರುದ್ಧ ಕಾರ್ಯಾಚರಣೆ ಶುರು ಮಾಡಿವೆ. ಈ ನಡುವೆ ಅತ್ತ ರಷ್ಯಾ ಮತ್ತು ಉಕ್ರೇನ್ ಕಳೆದ 4 ವರ್ಷಗಳಿಂದ ಬಡಿದಾಡುತ್ತಿವೆ. ಇನ್ನೊಂದು ಕಡೆ ಇಸ್ರೇಲ್
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ತಾವು ಅಂದುಕೊಂಡ ರೀತಿಯಲ್ಲೇ ಈಗ ಮಾಡಿದ್ದು, ಅಮೆರಿಕದ ದೊಡ್ಡ ಶತ್ರು ಇರಾನ್ ವಿರುದ್ಧ ಘೋರ ಯುದ್ಧ ಆರಂಭಿಸಿದ್ದಾರೆ. ಇಸ್ರೇಲ್ ಮೊದಲಿಗೆ ಈ ವಿಚಾರದಲ್ಲಿ ಮುಂದೆ ನುಗ್ಗಿ ದಾಳಿ ಆರಂಭ ಮಾಡಿದ್ದು, ಇರಾನ್ ಮತ್ತು ಇಸ್ರೇಲ್ ನಡುವೆ ಭಾರಿ ದೊಡ್ಡ ತಿಕ್ಕಾಟ ಆರಂಭ ಆಗಿದೆ. ಅದರಲ್ಲೂ ಇರಾನ್ ರಾಜಧಾನಿ ತೆಹ್ರಾನ್ ಈಗಾಗಲೇ
ಕರ್ನಾಟಕ ಬಜೆಟ್ 2026 ಬಳಿಕ ನಾಯಕತ್ವ ಬದಲಾವಣೆ ಅಂತಿಮ ಕಾದಾಟ ಆಗುತ್ತೆ: ಮಾಜಿ ಸಿಎಂ ಭವಿಷ್ಯ
ಹಾವೇರಿ: ಕರ್ನಾಟಕ ಕಾಂಗ್ರೆಸ್ ಸರ್ಕಾರದ ಕುರ್ಚಿಯ ಗುದ್ದಾಟ ತೀವ್ರವಾಗಿದೆ. ಮಾರ್ಚ್ ತಿಂಗಳಲ್ಲಿ ನಡೆಯಲಿರುವ ರಾಜ್ಯ ಬಜೆಟ್ 2026 (Karnataka Budget 2026) ನಂತರ ನಾಯಕತ್ವ ಬದಲಾವಣೆ ಅಂತಿಮ ಘಟಕ್ಕೆ ತಲುಪಲಿದೆ. ಅದು ಕಾದಾಟವೇ ಆಗಲಿದೆ. ಸಂಧಾನ ಆಗಲು ಸಾಧ್ಯವಿಲ್ಲ. ಅದು ಯಾವ ರೀತಿ ಆಗುತ್ತದೆ ಎನ್ನುವುದನ್ನು ಕಾದು ನೋಡಬೇಕು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ
ಕಲಬುರಗಿ | ಇಫ್ತಾರ್ ಕೂಟ, ಬೈಬಲ್ ವಿನಿಮಯ ಕಾರ್ಯಕ್ರಮ
ಕಲಬುರಗಿ: ರಮಝಾನ್ ಉಪವಾಸ ನಿಮಿತ್ತ ನಗರದ ಸಂತ್ರಾಸ್ ವಾಡಿ ಸಮೀಪದ ಹಿದಾಯತ್ ಸೆಂಟರ್ ನಲ್ಲಿ ಮಸ್ಸಿಹ್ ಸೇನಾ ಮತ್ತು ಜಮಾಅತೆ ಎ ಇಸ್ಲಾಮಿ ಹಿಂದ್ ಸಂಯುಕ್ತ ಆಶ್ರಯದಲ್ಲಿ ಲೆಂಟ್ ಮತ್ತು ರಮಝಾನ್ ವಿಚಾರ ಸಂಕಿರಣ ಜರುಗಿತು. ಮುಹಮ್ಮದ್ ಜೀಯವುಲ್ಲಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಇಸಾಯಿ ಮಹಾಸಭಾದ ಸಂಧ್ಯಾರಾಜ್ ಸ್ಯಾಮುಯೆಲ್ ಕಾರ್ಯಕ್ರಮ ಉದ್ಘಾಟಿಸಿದ್ದರು. ಫಾದರ್ ಸ್ಟಾನಿ ಲೋಬೋ ಕಾರ್ಯಕ್ರಮದ ಸಾನಿಧ್ಯವಹಿಸಿದ್ದರು. ಮೆರಾಜೊದ್ದೀನ್ ಪಟೇಲ್ ತಾವರಗೇರಾ, ಫಾಸ್ಟರ್ ಶಿರೋಮಣಿ ಉಪನ್ಯಾಸ ನೀಡಿದ್ದರು. ಲಕ್ಮಿಕಾಂತ್ ಹುಬಳಿ, ಎಂಡಿ ಅಬ್ದುಲ್ ಖಾದರ್, ಡಾ. ಕಿರಣ ಜಾರ್ಜ, ಫಾಸ್ಟರ್ ಪರಶುರಾಮ, ಸ್ಯಾಮುಯಲ್ ಬಾಲೆಕರ್, ಫಾಸ್ಟರ್ ಪಂಡಿತ್ ಎಸ್, ರಾಬಿನ್ ಪ್ರತಾಪ್, ಶೇಕ್ ಶಫಿ ಅಹ್ಮದ್ ಸೇರಿದಂತೆ ಮುಂತಾದವರು ಇದ್ದರು. ಕಾರ್ಯಕ್ರಮದಲ್ಲಿ ಕ್ರಿಶ್ಚಿಯನ್ ಸಮುದಾಯದಿಂದ ಬೈಬಲ್ ವಿನಿಮಯ ಮತ್ತು ಜಮಾಅತೆ ಎ ಇಸ್ಲಾಮಿ ಹಿಂದ್ ವತಿಯಿಂದ ಇಫ್ತಾರ್ ಕೂಟ ನಡೆಸಲಾಯಿತು.
ನಶೆ, ಭಿಕ್ಷಾಟನೆ ಮುಕ್ತ ಬೀದರ್ ಜಿಲ್ಲೆಗೆ ಸಂಕಲ್ಪ : ಡಾ.ಅಬ್ದುಲ್ ಖದೀರ್
ಬೀದರ್ : ಜಿಲ್ಲೆಯನ್ನು ನಶೆ, ಭಿಕ್ಷಾಟನೆ ಹಾಗೂ ದ್ವೇಷದಿಂದ ಮುಕ್ತಗೊಳಿಸಲು ಬೀದರ್ ನಾಗರಿಕ ಸನ್ಮಾರ್ಗ ಸಮಿತಿ ಸಂಕಲ್ಪ ತೊಟ್ಟಿದೆ ಎಂದು ಸಮಿತಿಯ ಅಧ್ಯಕ್ಷ ಡಾ. ಅಬ್ದುಲ್ ಖದೀರ್ ಹೇಳಿದರು. ನಗರದ ಜಿಲ್ಲಾ ಕನ್ನಡ ಭವನದಲ್ಲಿ ನಡೆದ ದುಶ್ಚಟಗಳ ನಿಯಂತ್ರಣ ಕುರಿತ ಸಮಾಲೋಚನಾ ಸಭೆಯಲ್ಲಿ ಅವರು ಮಾತನಾಡಿ, ಹಿರಿಯರ ಮಾರ್ಗದರ್ಶನದಲ್ಲಿ ಜಿಲ್ಲೆಯ ಪ್ರತೀ ಗ್ರಾಮದಲ್ಲೂ ಯುವಕರ ಸಮಿತಿ ರಚಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು. ಗುಟ್ಕಾ, ಸಿಗರೇಟ್, ಮದ್ಯಪಾನ, ಅತಿಯಾದ ಮೊಬೈಲ್ ಬಳಕೆ ಹಾಗೂ ಭಿಕ್ಷಾಟನೆ ಸಾಮಾಜಿಕ ಪಿಡುಗಾಗಿವೆ. 25ರಿಂದ 30 ವರ್ಷದೊಳಗಿನ ಯುವಕರು ಮಾದಕ ವಸ್ತುಗಳು ಮತ್ತು ಇತರ ವ್ಯಸನಗಳಿಗೆ ಬಲಿಯಾಗುತ್ತಿದ್ದಾರೆ. ತಮ್ಮ ಹಣವನ್ನು ಖರ್ಚು ಮಾಡಿ ಭವಿಷ್ಯ ಹಾಳು ಮಾಡಿಕೊಳ್ಳುತ್ತಿದ್ದಾರೆ. ಇದರಿಂದ ಕುಟುಂಬಕ್ಕೂ ಭಾರವಾಗುತ್ತಿದ್ದಾರೆ ಎಂದು ಅವರು ಕಳವಳ ವ್ಯಕ್ತಪಡಿಸಿದರು. ಯುವಕರು ರೋಗಪೀಡಿತರಾದರೆ ದೇಶ ದುರ್ಬಲವಾಗುತ್ತದೆ. ಹೀಗಾಗಿ ಯುವಕರನ್ನು ದುಶ್ಚಟಗಳಿಂದ ದೂರವಿಟ್ಟು ಪ್ರೀತಿ, ವಿಶ್ವಾಸ ಹಾಗೂ ಸಹೋದರತ್ವದ ವಾತಾವರಣ ನಿರ್ಮಿಸುವುದು ಸಮಿತಿಯ ಉದ್ದೇಶವಾಗಿದೆ ಎಂದು ಹೇಳಿದರು. ಹಿಂದುಳಿದ ವರ್ಗಗಳ ಒಕ್ಕೂಟದ ಗೌರವಾಧ್ಯಕ್ಷ ಬಸವರಾಜ್ ಮಾಳಗೆ ಮಾತನಾಡಿ, ದುಶ್ಚಟಗಳ ವಿರುದ್ಧ ಜಿಲ್ಲೆಯಲ್ಲಿ ಜನಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಎಲ್ಲರೂ ಕೈಜೋಡಿಸಿದರೆ ಬೀದರ್ ಜಿಲ್ಲೆ ನಶೆ ಮತ್ತು ಭಿಕ್ಷಾಟನೆ ಮುಕ್ತವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಸಮಿತಿಯ ಕಾರ್ಯದರ್ಶಿ ಅಶೋಕ್ ವಡಗಾವೆ ಹಾಗೂ ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ್ ಚನಶೆಟ್ಟಿ ಕೂಡ ಮಾತನಾಡಿದರು. ಈ ಸಂದರ್ಭದಲ್ಲಿ ಹಿಂದುಳಿದ ವರ್ಗಗಳ ಒಕ್ಕೂಟದ ಅಧ್ಯಕ್ಷ ಡಾ. ರಾಜಶೇಖರ್ ಸೇಡಂಕರ್, ಪ್ರಮುಖರಾದ ಅಬ್ದುಲ್ ಮನ್ನಾನ್ ಸೇಠ್, ಹಾವಶೆಟ್ಟಿ ಪಾಟೀಲ್ ಹಾಗೂ ಶರಣಪ್ಪ ಮಿಠಾರೆ ಸೇರಿದಂತೆ ಅನೇಕರು ಇದ್ದರು.
ಮಂಗಳೂರು: ಬೃಹತ್ ಬೈಬಲ್ ಅಧಿವೇಶನ 3ನೇ ದಿನ ಸಂಪನ್ನ
ಗಲ್ಫ್ ರಾಷ್ಟ್ರಗಳಲ್ಲಿ ಶಾಂತಿಗಾಗಿ ವಿಶೇಷ ಪ್ರಾರ್ಥನೆ
ಬಸವಕಲ್ಯಾಣ | ಗ್ಯಾರಂಟಿ ಯೋಜನೆಯ ಪ್ರಗತಿ ಪರಿಶೀಲನಾ ಸಭೆ
ಆಹಾರ ಇಲಾಖೆ ಅಧಿಕಾರಿಗಳ ವಿರುದ್ಧ ಭ್ರಷ್ಟಾಚಾರ ಆರೋಪ
ಹರಪನಹಳ್ಳಿ | ಕೂಲಹಳ್ಳಿ ಗೋಣಿಬಸವೇಶ್ವರ ರಥೋತ್ಸವ
ಹರಪನಹಳ್ಳಿ: ಪಂಚಗಣಾಧೀಶರರ ಐತಿಹಾಸಿಕ ಹಿನ್ನೆಲೆಯುಳ್ಳ ತಾಲೂಕಿನ ಕೂಲಹಳ್ಳಿ ಗೋಣಿಬಸವೇಶ್ವರ ರಥೋತ್ಸವವು ಶುಕ್ರವಾರ ಸಂಜೆ ಅಪಾರ ಭಕ್ತರ ಮಧ್ಯೆ ನಡೆಯಿತು. ಕೂಲಹಳ್ಳಿ ಹೊರವಲಯದಲ್ಲಿ ನಿರ್ಮಿಸಿದ್ದ ಆಕರ್ಷಕ ರಥಕ್ಕೆ ಕೆಂಪು, ಬಿಳಿ ಸೇರಿದಂತೆ ವಿವಿಧ ಬಣ್ಣಗಳ ಬಾವುಟ ಹಾಗೂ ಹಲವು ದೇವತೆಗಳ ಭಾವಚಿತ್ರ ಅಳವಡಿಕೆಯ ಜೊತೆಗೆ, ಬಾಳೆದಿಂಡು, ಮಾವಿನ ತೋರಣ ಹಾಗೂ ಪುಷ್ಪ ಮಾಲೆಯೊಂದಿಗೆ ಅಲಂಕರಿಸಲಾಗಿತ್ತು. ಈ ಸಂದರ್ಭದಲ್ಲಿ ಶಾಸಕಿ ಲತಾ ಮಲ್ಲಿಕಾರ್ಜುನ, ದೇವಸ್ಥಾನದ ಅರ್ಚಕ ಹಾಲೇಶಪ್ಪ, ಕವಿತಾ,ಡಿವೈಎಸ್ಪಿ ಸಂತೋಷ್ ಚೌಹಾಣ್, ಸಿಪಿಐ ಮಹಾಂತೇಶ್ ಸಜ್ಜನ್, ಪಿಎಸ್ಐ ಶಂಭುಲಿಂಗಹಿರೇಮಠ, ದೇವಸ್ಥಾನ ಆಡಳಿತ ಅಧಿಕಾರಿ ಪುಷ್ಪವತಿ,ಸೇರಿದಂತೆ ದೇವಸ್ಥಾನದ ಸಿಬ್ಬಂದಿಗಳು ಮತ್ತು ಗ್ರಾಪಂ ಸದಸ್ಯರು ಸೇರಿ ಅಪಾರ ಭಕ್ತರು ಇದ್ದರು.
War: ವಿಶ್ವಸಂಸ್ಥೆ ತುರ್ತು ಸಭೆ: ಇರಾನ್ ಮೇಲಿನ ಜಂಟಿ ವೈಮಾನಿಕ ದಾಳಿಗೆ ಬೀಳುತ್ತಾ ಬ್ರೇಕ್
Middle East War UN reaction:ಇರಾನ್ ಮೇಲೆ ಮೊದಲು ಇಸ್ರೇಲ್ ನಂತರ ಯುಎಸ್ ನಡೆಸಿದ ವೈಮಾನಿಕ ದಾಳಿಯು ಜಾಗತಿಕವಾಗಿ ಗಮನ ಸೆಳೆದಿದೆ. ಈ ಯುದ್ಧವು ಕೇವಲ ಮೂರು ರಾಷ್ಟ್ರಗಳಿಗೆ ಮಾತ್ರವಲ್ಲದೇ ವಿಶ್ವದ ಬೇರೆ ಬೇರೆ ರಾಷ್ಟ್ರಗಳ ಮೇಲೂ ಪರಿಣಾಮ ಬೀರುತ್ತಿದೆ. ಈ ಕಾರಣದಿಂದ ವಿಶ್ವಸಂಸ್ಥೆ (United Nation) ಇಂದಿನ ಬೆಳವಣಿಗೆಯನ್ನು ಖಂಡಿಸಿ ತುರ್ತು ಸಭೆ ಕರೆದಿದೆ. ತಡವಾದರೂ
ಹಾಸನ, ಕೊಡಗು, ಚಿಕ್ಕಮಗಳೂರು ಆನೆ ಸಮಸ್ಯೆಗೆ ಶಾಶ್ವತ ಪರಿಹಾರಕ್ಕೆ ಕ್ರಮ : ಈಶ್ವರ್ ಖಂಡ್ರೆ
ಬಾಳೆಹೊನ್ನೂರು : ಅರಣ್ಯ ಸಂರಕ್ಷಣೆಯಲ್ಲಿ ಅರಣ್ಯವಾಸಿಗಳ ಪಾತ್ರ ಮಹತ್ವದ್ದಾಗಿದ್ದು, ಅರಣ್ಯ ಇಲಾಖೆ ಯಾವುದೇ ಜನರ ವಿರುದ್ಧವಿಲ್ಲ. ಆದರೆ, ಸುಪ್ರೀಂಕೋರ್ಟ್ ತೀರ್ಪು ಮತ್ತು ಕೇಂದ್ರ ಹಾಗೂ ರಾಜ್ಯ ಸರಕಾರದ ಅರಣ್ಯ ಕಾಯಿದೆ ಕಾನೂನುಗಳ ಪಾಲನೆ ಮಾಡುವ ನಿಟ್ಟಿನಲ್ಲಿ ಕೆಲವು ಅಸಮಾಧಾನಗಳಿವೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ್ ಬಿ ಖಂಡ್ರೆ ಹೇಳಿದ್ದಾರೆ. ಬಾಳೆಹೊನ್ನೂರಿನ ನಾರಾಯಣಗುರು ಸಮುದಾಯ ಭವನದಲ್ಲಿಂದು ಆಯೋಜಿಸಲಾಗಿದ್ದ ಮಲೆನಾಡು ರೈತರ ಸಮಸ್ಯೆಗಳ ಕುರಿತ ಸಂವಾದದಲ್ಲಿ ಮಾತನಾಡಿದ ಅವರು, ಅರಣ್ಯ ಜಮೀನನ್ನು ಯಾರಿಗೂ ಪರಿಭಾರೆ ಮಾಡಲು ಅವಕಾಶವಿಲ್ಲ. ಆ ರೀತಿ ಅನ್ಯ ಉದ್ದೇಶಕ್ಕೆ ಕಾಡನ್ನು ಬಳಸಲು ನ್ಯಾಯಾಲಯದ ಅನುಮತಿ ಮತ್ತು ಕೇಂದ್ರ ಸರಕಾರದ ಸಮ್ಮತಿ ಅಗತ್ಯ ಎಂದು ಹೇಳಿದರು. ಸೆಕ್ಷನ್ 4 ಸಮಸ್ಯೆ ಸ್ವಾತಂತ್ರ್ಯಪೂರ್ವದಿಂದಲೂ ಇದೆ. ರಾಜ ಮಹಾರಾಜರ ಕಾಲದಲ್ಲೇ ಅಧಿಸೂಚನೆ ಆದ ಹಲವು ಪ್ರಕರಣ ಸೆಕ್ಷನ್ 17 ಆಗದೆ ಬಾಕಿ ಇದೆ. ಈಗ ಈ ಸಮಸ್ಯೆ ಪರಿಹರಿಸಲು ಸರಕಾರ ಕಾನೂನು ವ್ಯಾಪ್ತಿಯಲ್ಲೇ ಪ್ರಯತ್ನಿಸುತ್ತಿದೆ ಎಂದ ಅವರು, ಅರಣ್ಯ ಭೂಮಿಯನ್ನು ಮೂಲಸೌಕರ್ಯ ಅಭಿವೃದ್ಧಿಗೆ ಬಳಸಬೇಕಾದರೆ ತೀರುವಳಿ (ಎಫ್.ಸಿ.) ನಿಯಮಗಳ ಪಾಲನೆ ಮಾಡಬೇಕಾಗುತ್ತದೆ ಪರ್ಯಾಯ ಭೂಮಿ ಪಡೆದು, ಅರಣ್ಯ ಬೆಳೆಸಬೇಕಾಗುತ್ತದೆ ಎಂದೂ ತಿಳಿಸಿದರು. ಇತ್ತೀಚಿಗೆ ಆನೆ ದಾಳಿಯಿಂದ ಎರಡು ಅಮೂಲ್ಯ ಜೀವಹಾನಿ ಆಗಿರುವುದು ಅತ್ಯಂತ ನೋವಿನ ಸಂಗತಿ. ಸರಕಾರ ಆನೆ ಸೆರೆಗೆ ತಕ್ಷಣವೇ ಆದೇಶ ನೀಡಿತ್ತು. ಆನೆ ಸೆರೆ ಕಾರ್ಯಾಚರಣೆ ಅತ್ಯಂತ ಕ್ಲಿಷ್ಟಕರವಾಗಿದ್ದು, ಇಲಾಖೆಯ ಶಾರ್ಪ್ ಶೂಟರ್ ಆನೆ ವೆಂಕಟೇಶ್ ಅವರೇ ಮೃತಪಟ್ಟಿದ್ದರು. ದಸರಾ ಅಂಬಾರಿ ಹೊರುತ್ತಿದ್ದ ಅರ್ಜುನ ಆನೆಯೂ ಹುತಾತ್ಮನಾಯಿತು ಎಂದು ಹೇಳಿದರು. ಮಾನವ ವನ್ಯಜೀವಿ ಸಮಸ್ಯೆ ಇಂದು ನಿನ್ನೆಯದಲ್ಲ. ರಾಜ ಮಹಾರಾಜರು ವನ್ಯಜೀವಿ ಉಪಟಳ ಹೆಚ್ಚಾದಾಗ ಬೇಟೆಗೆ ಹೋಗುತ್ತಿದ್ದರು. ಕಳ್ಳಬೇಟೆಯೂ ನಡೆಯುತ್ತಿತ್ತು. ಪ್ರಕೃತಿ ಪರಿಸರದ ಸಮತೋಲನ ಕಾಪಾಡಲು ವನ್ಯಜೀವಿಗಳ ಮಹತ್ವ ಮನಗಂಡು ದಿವಂಗತ ಪ್ರಧಾನಿ ಇಂದಿರಾಗಾಂಧೀ ಅವರು 1972ರಲ್ಲಿ ವನ್ಯಜೀವಿ ಸಂರಕ್ಷಣಾ ಕಾಯಿದೆ ತಂದ ಬಳಿಕ ರಾಜ್ಯದಲ್ಲಿ ವನ್ಯಜೀವಿಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. 6395 ಆನೆಗಳೊಂದಿಗೆ ರಾಜ್ಯ ಗಜಪಡೆಯಲ್ಲಿ ನಂ.1 ಆಗಿದೆ. ಹುಲಿ ಸಂಖ್ಯೆಯಲ್ಲಿ ನಂ.2 ಸ್ಥಾನದಲ್ಲಿದೆ. ಆನೆ, ಹುಲಿಗಳ ಸಂಖ್ಯೆಯಲ್ಲಿನ ಹೆಚ್ಚಳ ಮತ್ತು ಕ್ಷೀಣಿಸುತ್ತಿರುವ ಅರಣ್ಯದಿಂದಾಗಿ ಮಾನವ-ವನ್ಯಜೀವಿ ಸಂಘರ್ಷ ಹೆಚ್ಚಾಗುತ್ತಿದೆ ಎಂದರು. ಆನೆಗಳೂ ಕೂಡ ನಮ್ಮಂತೆಯೇ ತಮ್ಮ ಆಹಾರ ಪದ್ಧತಿಯಲ್ಲಿ ಬದಲಾವಣೆ ಮಾಡಿಕೊಂಡಿವೆ. ತೋಟಗಳಿಗೆ ಬಂದು ತಿನ್ನಲು ಆರಂಭಿಸಿವೆ. ವನ್ಯಜೀವಿ ಸಂಘರ್ಷ ನಿಯಂತ್ರಿಸಲು ಮತ್ತು ಶಾಶ್ವತ ಪರಿಹಾರ ಕಂಡುಕೊಳ್ಳಲು ರಾಜ್ಯ ಸರ್ಕಾರ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದೆ ಎಂದರು. ಆನೆಗಳು, ಕಾಡೆಮ್ಮೆ, ಕಾಡುಕೋಣ ನಾಡಿಗೆ ಬಾರದಂತೆ ತಡೆಯಲು ಅಗತ್ಯಕ್ಕೆ ಅನುಗುಣವಾಗಿ ರೈಲ್ವೆ ಬ್ಯಾರಿಕೇಡ್ ಮಂಜೂರು ಮಾಡಲಾಗಿದೆ. ಈಗ ಪ್ರಕ್ರಿಯೆ ಪ್ರಾರಂಭವಾಗಿದ್ದು, 140 ಕಿ.ಮೀ. ರೈಲ್ವೆ ಬ್ಯಾರಿಕೇಡ್ ನಿರ್ಮಾಣಕ್ಕೆ ಪ್ರಸ್ತಾವನೆ ಬಂದಿದೆ. 12 ಕೋಟಿ ರೂ. ವೆಚ್ಚದಲ್ಲಿ ಸೂಕ್ಷ್ಮ ಪ್ರದೇಶದಲ್ಲಿ 7 ಕಿ.ಮೀ. ರೈಲ್ವೆ ಬ್ಯಾರಿಕೇಡ್ ಹಾಕಲು ಕ್ರಮ ಕೈಗೊಳ್ಳಲಾಗಿದ್ದು, ಶೀಘ್ರ ಕಾಮಗಾರಿ ಆರಂಭವಾಗುತ್ತದೆ. ಎಂದರು. ಕೊಪ್ಪದಲ್ಲಿ ಆನೆಗಳ ಹಾವಳಿ ಹೆಚ್ಚಾಗಿದ್ದು, ಬೆಳೆ ಹಾನಿ ಮತ್ತು ಜೀವ ಆನೆ ಆಗುತ್ತಿದ್ದು, ಕೊಪ್ಪದಲ್ಲಿ ಪ್ರತ್ಯೇಕ ಆನೆ ಕಾರ್ಯಪಡೆ ಸ್ಥಾಪನೆಗೆ ಶೀಘ್ರವೇ ಆದೇಶ ಹೊರಡಿಸಲಾಗುವುದು ಎಂದು ತಿಳಿಸಿದರು. ವನ್ಯಜೀವಿ ಸಂಚಾರ ಹೆಚ್ಚಾಗಿರುವ ಕಡೆ ಥರ್ಮಲ್ ಡ್ರೋನ್ ಕ್ಯಾಮರಾ ನೆರವಿನಿಂದ ಅವುಗಳ ಚಲನ ವಲನದ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡಲು ಸೂಚಿಸಲಾಗಿದೆ. ದೇಶೀಯವಾಗಿ ಅಭಿವೃದ್ಧಿ ಪಡಿಸಿರುವ ರೇಡಿಯೋ ಕಾಲರ್ ಗಳನ್ನು ಹಿಂಡು ಆನೆಗೆ ಅಳವಡಿಸಿ, ಜನವಸತಿ ಪ್ರದೇಶಕ್ಕೆ ಬಂದರೆ ತತ್ ಕ್ಷಣವೇ ಮಾಹಿತಿ ನೀಡುವ ವ್ಯವಸ್ಥೆ ಮಾಡಲು ಸೂಚಿಸಲಾಗಿದೆ ಎಂದು ತಿಳಿಸಿದರು. ಮಧ್ಯಪ್ರದೇಶದಲ್ಲಿ ಕಾಡೆಮ್ಮೆ, ಕಾಡುಕೋಣದ ಸಮಸ್ಯೆಗೆ ಪರಿಹಾರ ಕಂಡುಕೊಂಡಿದ್ದು, ಅದರ ಅಧ್ಯಯನಕ್ಕೆ ತಂಡ ಕಳಿಸಲಾಗುತ್ತಿದೆ ಎಂದು ತಿಳಿಸಿದರು.
ಜೇವರ್ಗಿ | ಮಲ್ಲಾಬಾದ್ ಏತ ನೀರಾವರಿ ಹೋರಾಟ ತೀವ್ರಗೊಳಿಸಲು ರೈತ ಮುಖಂಡರ ನಿರ್ಧಾರ
ಜೇವರ್ಗಿ : ಯಡ್ರಾಮಿ ಸೇರಿದಂತೆ ಜೇವರ್ಗಿ ತಾಲೂಕಿನ ರೈತರ ಬಹುಕಾಲದ ಬೇಡಿಕೆಯಾದ ಮಲ್ಲಾಬಾದ್ ಏತ ನೀರಾವರಿ ಯೋಜನೆಗೆ ತಕ್ಷಣ ಚಾಲನೆ ನೀಡಬೇಕು ಹಾಗೂ ಗ್ರಾಮೀಣ ಭಾಗಗಳಲ್ಲಿನ ಸರ್ಕಾರಿ ಶಾಲೆಗಳ ಮುಚ್ಚುವಿಕೆ ಕ್ರಮವನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿ ರೈತ ಮುಖಂಡರು ಮುಂದಿನ ಹೋರಾಟವನ್ನು ತೀವ್ರಗೊಳಿಸಲು ನಿರ್ಧರಿಸಿದರು. ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಸಭೆಯಲ್ಲಿ ಸರ್ಕಾರದ ನೀತಿ ಕುರಿತು ಚರ್ಚಿಸಿದ ಬಳಿಕ ಈ ತೀರ್ಮಾನ ಕೈಗೊಳ್ಳಲಾಯಿತು. ಸಭೆಯಲ್ಲಿ ಮಾತನಾಡಿದ ಮಹೇಶ್ ಕುಮಾರ್ ರಾಠೋಡ್, ಮಲ್ಲಾಬಾದ್ ಏತ ನೀರಾವರಿ ಯೋಜನೆ ರೈತರ ಜೀವನಾಡಿಯಾಗಿದೆ. ವರ್ಷಗಳಿಂದ ನಿರೀಕ್ಷೆಯಲ್ಲಿರುವ ಯೋಜನೆಯನ್ನು ಇನ್ನಷ್ಟು ವಿಳಂಬ ಮಾಡುವುದು ಅನ್ಯಾಯ. ತಕ್ಷಣ ಕಾರ್ಯಾರಂಭವಾಗಬೇಕು ಎಂದು ಒತ್ತಾಯಿಸಿದರು. ಬಾಬು ಪಾಟೀಲ್ ಮುತ್ತಕೋಡ ಮಾತನಾಡಿ, ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಎಂಬ ನೆಪದಲ್ಲಿ ಸರ್ಕಾರಿ ಶಾಲೆಗಳನ್ನು ಮುಚ್ಚುವುದು ಗ್ರಾಮೀಣ ಬಡ ಮಕ್ಕಳ ಭವಿಷ್ಯಕ್ಕೆ ದೊಡ್ಡ ಹೊಡೆತ. ಬದಲಾಗಿ ಮೂಲಸೌಕರ್ಯ ಅಭಿವೃದ್ಧಿ ಹಾಗೂ ಶಿಕ್ಷಕರ ನಿಯೋಜನೆಗೆ ಒತ್ತು ನೀಡಬೇಕು ಎಂದರು. ಇಬ್ರಾಹಿಂ ಪಟೇಲ್ ಯಾಳವಾರ್ ಶಾಂತಿಪೂರ್ಣ ಹೋರಾಟದ ಮೂಲಕ ಸರ್ಕಾರದ ಗಮನ ಸೆಳೆಯಲು ಕರೆ ನೀಡಿದರು. ಮೈನುದ್ದಿನ್ ಇನಾಮ್ದಾರ್ (ವಕೀಲರು) ಕೂಡ ಅಭಿಪ್ರಾಯ ವ್ಯಕ್ತಪಡಿಸಿದರು. ಸಭೆಯಲ್ಲಿ ಬಿ.ಹೆಚ್. ಮಾಲಿ ಪಾಟೀಲ್, ಭೀಮಶಂಕರ್ ಬಿಲ್ಲಾಡ, ಸಿದ್ದಲಿಂಗ ಪೂಜಾರಿ, ನಿಂಗಪ್ಪ ಪೂಜಾರಿ ಯಾಳವಾರ್, ಪರಮೇಶ್ ಬಿರಾಳ್, ಗುರುನಾಥ್ ಸಾಹು ರಾಜವಾಳ್, ಮಲ್ಲಿಕಾರ್ಜುನ್ ದೊಡ್ಮನಿ (ಕೆಲ್ಲೂರು), ದೇವು ಚಿಗರಳ್ಳಿ, ಸಲೀಂ ಪಟೇಲ್ ಸಿಗರತಳ್ಳಿ, ಅಜೀಜ್ ಪಟೇಲ್, ಶಾಂತಯ್ಯ ಗುತ್ತೇದಾರ್, ರಫೀಕ್ ಸರ್ ಹಾಗೂ ಗಿರೀಶ ತುಂಬಗಿ ಸೇರಿದಂತೆ ಅನೇಕರು ಭಾಗವಹಿಸಿದ್ದರು. ಕೃಷಿ ಮತ್ತು ಶಿಕ್ಷಣ ಗ್ರಾಮೀಣ ಪ್ರದೇಶಗಳ ಪ್ರಮುಖ ಆಧಾರಸ್ತಂಭಗಳಾಗಿದ್ದು, ಇವುಗಳ ಮೇಲಿನ ನಿರ್ಲಕ್ಷ್ಯವನ್ನು ಸಹಿಸಲಾಗುವುದಿಲ್ಲ ಎಂದು ಮುಖಂಡರು ಎಚ್ಚರಿಸಿದರು.
ಇರಾನ್ ಮೇಲೆ ಅಮೆರಿಕ-ಇಸ್ರೇಲ್ ಮಿಲಿಟರಿ ದಾಳಿ: ಕೆಂಪೇಗೌಡ ಏರ್ಪೋರ್ಟ್ನಿಂದ ಗಲ್ಫ್ಗೆ ತೆರಳುವ ವಿಮಾನ ಹಾರಾಟ ರದ್ದು
ಬೆಂಗಳೂರು, ಫೆ.28 : ಅಮೆರಿಕ ಮತ್ತು ಇಸ್ರೇಲ್, ಇರಾನ್ ಮೇಲೆ ಮಿಲಿಟರಿ ದಾಳಿ ಶುರು ಮಾಡಿದ್ದು, ಸದ್ಯ ಈ ಯುದ್ಧ ಆತಂಕಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಎಲ್ಲೆಡೆ ವಿಮಾನಗಳ ಹಾರಾಟ ರದ್ದು ಮಾಡಲಾಗಿದೆ. ಇತ್ತ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ತೆರಳಬೇಕಿದ್ದ ಕೆಲ ವಿಮಾನಗಳೂ ರದ್ದಾಗಿವೆ. ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ ಇರಾನ್ ವಿರುದ್ಧ ಮಿಲಿಟರಿ ದಾಳಿ ನಡೆಸುತ್ತಿವೆ. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ವಿಮಾನಗಳ ಹಾರಾಟವನ್ನು ರದ್ದು ಮಾಡಲಾಗಿದೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ತೆರಳಬೇಕಿದ್ದ ವಿಮಾನಗಳು ಸೇರಿದಂತೆ ವಿದೇಶದಿಂದ ಬೆಂಗಳೂರಿಗೆ ಬರಬೇಕಿದ್ದ ಕೆಲ ವಿಮಾನಗಳನ್ನು ಸಹ ರದ್ದು ಮಾಡಲಾಗಿದೆ ಎಂದು ಮೂಲಗಳಿಂದ ತಿಳಿದುಬಂದಿದೆ. ದುಬೈ, ಅಬುಧಾಬಿ, ಜಿದ್ದಾಗೆ ತೆರಳಬೇಕಿದ್ದ ವಿಮಾನಗಳು ರದ್ದು ಮಾಡಲಾಗಿದೆ. ಏರ್ಲೈನ್ಸ್ ಸಿಬ್ಬಂದಿ ಈಗಾಗಲೇ ಪ್ರಯಾಣಿಕರಿಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.
ಚಿಂಚೋಳಿ | ಒಳಮೀಸಲಾತಿಯ ದೋಷ ಸರಿಪಡಿಸಲು ಒತ್ತಾಯಿಸಿ ಪ್ರತಿಭಟನೆ
ಚಿಂಚೋಳಿ : ಕರ್ನಾಟಕ ಸರ್ಕಾರ ಜಾರಿಗೆ ತಂದಿರುವ ಪರಿಶಿಷ್ಟ ಜಾತಿ (SC) ಒಳಮೀಸಲಾತಿ ರೋಸ್ಟರ್ ಪಟ್ಟಿಯಲ್ಲಿನ ತಾಂತ್ರಿಕ ದೋಷಗಳನ್ನು ಸರಿಪಡಿಸಿ, ಪ್ರವರ್ಗ ‘ಬಿ’ ಮತ್ತು ‘ಸಿ’ ಗುಂಪುಗಳಿಗೆ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿ ಪರಿಶಿಷ್ಟ ಜಾತಿ ಸಮಾಜ ತಾಲೂಕು ಸಮಿತಿ ವತಿಯಿಂದ ತಹಸೀಲ್ದಾರರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು. ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಮುಖಂಡರು, ಪ್ರಸ್ತುತ ಜಾರಿಯಲ್ಲಿರುವ ಒಳಮೀಸಲಾತಿ ರೋಸ್ಟರ್ ಪಟ್ಟಿಯು ಪ್ರವರ್ಗ ‘ಬಿ’ ಮತ್ತು ‘ಸಿ’ ಅಡಿಯಲ್ಲಿ ಬರುವ ಸಮುದಾಯಗಳನ್ನು ಪರಿಶಿಷ್ಟ ಜಾತಿ ಪಟ್ಟಿಯಿಂದ ಹೊರಗಿಟ್ಟಂತೆಯೇ ಭಾಸವಾಗುತ್ತಿದೆ ಎಂದು ಆರೋಪಿಸಿದರು. ಒಳಮೀಸಲಾತಿಯ ಮೂಲ ಉದ್ದೇಶ ಅಸಮಾನರಿಗೆ ಸಮಾನ ಅವಕಾಶ ಕಲ್ಪಿಸುವುದಾಗಿದ್ದರೂ, ಅನುಷ್ಠಾನ ಹಂತದಲ್ಲಿ ಉಂಟಾದ ತಾಂತ್ರಿಕ ತೊಂದರೆಗಳಿಂದ ಅನೇಕ ಸಮುದಾಯಗಳಿಗೆ ಅನ್ಯಾಯವಾಗುತ್ತಿದೆ ಎಂದು ಹೇಳಿದರು. ಒಳಮೀಸಲಾತಿ ಸಂಬಂಧಿಸಿದ ಗೊಂದಲಗಳು ಬಗೆಹರಿಯುವವರೆಗೆ ಪ್ರಸ್ತುತ ನಡೆಯುತ್ತಿರುವ ಶಿಕ್ಷಣ ಹಾಗೂ ಉದ್ಯೋಗ ನೇಮಕಾತಿ ಪ್ರಕ್ರಿಯೆಗಳನ್ನು ತಕ್ಷಣ ತಡೆಹಿಡಿಯಬೇಕು ಎಂದು ಒತ್ತಾಯಿಸಿದರು. ಪ್ರವರ್ಗ ‘ಬಿ’ ಮತ್ತು ‘ಸಿ’ಗೆ ಮಾರಕವಾಗಿರುವ ರೋಸ್ಟರ್ ಬಿಂದುಗಳನ್ನು ಕೂಡಲೇ ಹಿಂಪಡೆಯಬೇಕು ಎಂದು ಆಗ್ರಹಿಸಿದರು. ಎಲ್ಲಾ ಪ್ರವರ್ಗಗಳಿಗೆ (ಎ, ಬಿ, ಸಿ) ಸಮಾನ ಅವಕಾಶ ಕಲ್ಪಿಸುವಂತೆ ಹೊಸ ಕಾಯ್ದೆ ರೂಪಿಸಬೇಕು. ಹೊಸ ಜಾತಿ ಪ್ರಮಾಣಪತ್ರ ವಿತರಣೆಯನ್ನು ತಾತ್ಕಾಲಿಕವಾಗಿ ನಿಲ್ಲಿಸಿ, ಗೊಂದಲಗಳು ನಿವಾರಣೆಯಾಗುವವರೆಗೆ ಹಳೆಯ ಮೀಸಲಾತಿ ಪದ್ಧತಿಯ ಅಡಿಯಲ್ಲೇ ಖಾಲಿ ಹುದ್ದೆಗಳನ್ನು ಭರ್ತಿ ಮಾಡಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ. ಈ ಸಂದರ್ಭದಲ್ಲಿ ಗೌತಮ್ ಬೊಮ್ನಳ್ಳಿ, ಮಾರುತಿ ಗಂಜಗೇರಿ, ಆನಂದ್ ಟೈಗರ್, ರೇವಣಸಿದ್ದಪ್ಪ ಸುಬೆದಾರ್, ರಾಜೇಂದ್ರ ಪ್ರಸಾದ, ಅಮರ ಲೋಡ್ಡನೂರ್,ಚೇತನ್ ನಿರಾಳಕರ, ಪಾಂಡುರಂಗ ಲೋಡ್ದನೊರ್,ಓಮನರಾವ್ ಕೊರವಿ,ರಾಜು ಎಲಕಪಳ್ಳಿ,ವಿವೇಕ್ ಗಂಗನ್, ಗೈಬಣ್ಣ ವಾಲಿಕಾರ, ರಾಜಶೇಖರ್ ಮೌರ್ಯ, ರಾಜಶೇಖರ್ ಹೊಸಮನಿ, ವಿಶ್ವನಾಥ್ ವಾಲಿಕಾರ ದಸ್ತಾಪುರ, ಮಾರುತಿ ಕೊಳ್ಳುರ್, ಕಾಶೀನಾಥ್ ಶಿಂದೆ, ಆರ್, ಗಣಪತ್ ರಾವ್, ಜಗನಾಥ್ ಡಾಕ್ಟರ್, ಸತೀಶ್ ದೇಗಲ್ಮಡಿ, ಪ್ರೇಮಕುಮಾರ್ ಗಾರಂಪಳ್ಳಿ, ದೇವೇಂದ್ರಪ್ಪ ಜಾಬೀನ್, ಜಗನ್ನಾಥ್ ಗಂಜಗೇರಿ, ರಮೇಶ್ ಕುಸರಂಪಳ್ಳಿ,ಜೈಭೀಮ್ ಹೊಲ್ಕರ್, ಸಂಜು ಸಾಸರಗಾವ್,ಬಸವರಾಜ್ ಶಿರಸಿ,ರಘು ದಳಪತಿ, ಗೌತಮ್ ಇತಪುರ,ಅಭಿಜಿತ್ ಕೊರವಿ, ಆನಂದ್ ಗುರಂಪಳ್ಳಿ ಇದ್ದರು.
ಅಫಜಲಪುರ | ಶಿಕ್ಷಣವು ಮಕ್ಕಳ ಭವಿಷ್ಯವನ್ನು ರೂಪಿಸುವ ದೊಡ್ಡ ಶಕ್ತಿ : ಮಳೇಂದ್ರ ಶಿವಾಚಾರ್ಯ
ಅಫಜಲಪುರ : ವಿದ್ಯಾ ಭಾರತಿ ಶಿಕ್ಷಣ ಸಂಸ್ಥೆ ವತಿಯಿಂದ 17ನೇ ಶಾಲಾ ವಾರ್ಷಿಕೋತ್ಸವ ಹಾಗೂ ಸ್ನೇಹ ಸಮ್ಮೇಳನ ಕಾರ್ಯಕ್ರಮ ಪಟ್ಟಣದ ಸರಸಂಬಾ ಕಲ್ಯಾಣ ಮಂಟಪದಲ್ಲಿ ಅದ್ದೂರಿಯಾಗಿ ನಡೆಯಿತು. ಶ್ರೀ ಮಳೇಂದ್ರ ಸಂಸ್ಥಾನ ಹಿರೇಮಠದ ಶ್ರೀ ವಿಶ್ವರಾಧ್ಯ ಮಳೇಂದ್ರ ಶಿವಾಚಾರ್ಯರು ಸಾನಿಧ್ಯ ವಹಿಸಿ ಆಶೀರ್ವಚನ ನೀಡಿ, ಶಿಕ್ಷಣವು ಮಕ್ಕಳ ಭವಿಷ್ಯವನ್ನು ರೂಪಿಸುವ ಶಕ್ತಿಯಾಗಿದೆ. ಶಿಕ್ಷಣ ಸಂಸ್ಥೆ ಕಟ್ಟುವುದು ಸುಲಭವಾದರೂ ಅದನ್ನು ನಿಷ್ಠೆಯಿಂದ, ಗುಣಮಟ್ಟದಿಂದ ನಡೆಸುವುದು ಬಹಳ ಕಠಿಣ ಪರಿಶ್ರಮದ ಕೆಲಸ ಎಂದು ಹೇಳಿದರು. ಶಿಕ್ಷಕರು ಮಕ್ಕಳಿಗೆ ಮೌಲ್ಯಯುತ ಶಿಕ್ಷಣ ನೀಡಬೇಕು ಹಾಗೂ ಪಾಲಕರು ಮಕ್ಕಳನ್ನು ಮೊಬೈಲ್ ಬಳಕೆಯಿಂದ ದೂರ ಇಡಬೇಕು ಎಂದು ಸಲಹೆ ನೀಡಿದರು. ಖ್ಯಾತ ಉದ್ಯಮಿ ಶಂಕರ ಮ್ಯಾಕೇರಿ, ಸಂಸ್ಥೆಯ ಅಧ್ಯಕ್ಷ ಸಿದ್ದು ಪೂಜಾರಿ, ನೆರವು ಸಮಾಜ ಸೇವಾ ಟ್ರಸ್ಟ್ ಅಧ್ಯಕ್ಷ ಸಿದ್ದರಾಮ ಶಿವಣಗಿ ಪ್ರಸ್ತಾವಿಕವಾಗಿ ಮಾತನಾಡಿದರು. ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಶಾಂತಾ ಘಂಟೆ ಹಾಗೂ ಧನರಾಜ ಖೈರಾಟ ಬಡದಾಳ ಅವರನ್ನು ಸನ್ಮಾನಿಸಲಾಯಿತು. ಗೋಳಸಾರದ ಪರಂ ಶ್ರೀ ಅಭಿನವ ಪುಂಡಲಿಂಗ ಮಹಾ ಶಿವಯೋಗಿಗಳು ಸಾನಿಧ್ಯ ವಹಿಸಿದ್ದರು. ಕೆಪಿಸಿಸಿ ಸದಸ್ಯ ಪಪ್ಪು ಪಟೇಲ್ ಕಾರ್ಯಕ್ರಮ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಸಾಹಿತಿ ಬಿ.ಎಂ.ರಾವ್, ತಾಲೂಕು ಪತ್ರಕರ್ತರ ಸಂಘದ ತಾಲೂಕ ಅಧ್ಯಕ್ಷ ಮಕಾರ್ಜುನ ಹಿರೇಮಠ, ಜಿಲ್ಲಾ ಪತ್ರಕರ್ತರ ಸಂಘದ ಕಾರ್ಯಕಾರಣಿ ಸದಸ್ಯ ಶಕೀಲ್ ಚೌಧರಿ, ಕಸಾಪ ಅಧ್ಯಕ್ಷೆ ಪ್ರಭಾವತಿ ಮೇತ್ರಿ, ಭೀಮರಾಯ ಜಮಾದಾರ, ಆನಂದ ಛತ್ರಬಂದ, ಶರಣಮ್ಮಾ ಮಠ, ರೂಪಾ ಮೂಝಾವದೇಶ್ವರ ಮಠ, ವಿಜಯಲಕ್ಷ್ಮಿ ಸರಾಒ, ಸರೋಜಿನಿ ಗುಗ್ಗರಿ, ಶಾಂಭವಿ ಯಲ್ಲದೆ, ಸವಿತಾ ತಳವಾರ,ನಿಂಗಮ್ಮಾ ಹೆಗ್ಗಣದೊಡ್ಡಿ, ಮಾಳಪ್ಪ ಗುಡ್ಡಳ್ಳಿ ಉಪಸ್ಥಿತರಿದ್ದರು. ಸ್ವಾಗತವನ್ನು ಶಿಕ್ಷಕಿ ಪಂಕಜಾ ಆನೂರಕರ್ ನೆರವೇರಿಸಿದರು. ವಿದ್ಯಾರ್ಥಿನಿ ಕೀರ್ತಿ ಯಳಸಂಗಿ ಹಾಗೂ ಲಕ್ಷ್ಮಿ ಪಾಟೀಲಾ ನಿರೂಪಿಸಿದರು. ಶಿಕ್ಷಕಿ ವಿಶಾಲಾಕ್ಷಿ ನಾಯ್ಕೋಡಿ ವಂದಿಸಿದರು.
T20 World Cup : ನಿರ್ಣಾಯಕ ಪಂದ್ಯದಲ್ಲಿ ಶ್ರೀಲಂಕಾ ವಿರುದ್ದ ಗೆದ್ದರೂ, ಟೂರ್ನಿಯಿಂದ ಪಾಕಿಸ್ತಾನ ಔಟ್
Pakistan Out of T20 World Cup : ಪಾಕಿಸ್ತಾನಕ್ಕೆ ಶ್ರೀಲಂಕಾದ ವಿರುದ್ದದ ಪಂದ್ಯದಲ್ಲಿ ಗೆಲುವು ಮಾತ್ರ ಮುಖ್ಯವಾಗಿರಲಿಲ್ಲ, ಗೆಲುವಿನ ಅಂತರವೂ ಮುಖ್ಯವಾಗಿತ್ತು. ಪೆಲ್ಲೆಕಲೆ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಪಾಕಿಸ್ತಾನ, ಶ್ರೀಲಂಕಾದ ವಿರುದ್ದ ಗೆಲುವು ಸಾಧಿಸಿತು. ಆದರೆ, ರನ್’ರೇಟ್ ಲೆಕ್ಕಾಚಾರದಲ್ಲಿ ಹಿಂದೆ ಬಿದ್ದ ಹಿನ್ನಲೆಯಲ್ಲಿ, ಟೂರ್ನಿಯಿಂದ ಔಟ್ ಆಗಬೇಕಾಯಿತು.
ಕಲಬುರಗಿ | 22 ಫಲಾನುಭವಿಗಳಿಗೆ ಹೊಲಿಗೆ ಯಂತ್ರೋಪಕರಣಗಳ ವಿತರಣೆ
ಕಲಬುರಗಿ: 2024–25ನೇ ಸಾಲಿನ ಡಿ.ದೇವರಾಜ್ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ ಯೋಜನೆಯಡಿ ಹೊಲಿಗೆ ಯಂತ್ರಗಳ ವಿತರಣೆ ಕಾರ್ಯಕ್ರಮ ಶನಿವಾರ ಕಲಬುರಗಿಯ ನಗರದ ಅಫಜಲಪುರ ಶಾಸಕರ ಗೃಹ ಕಚೇರಿಯಲ್ಲಿ ಜರುಗಿತು. ಅಫಜಲಪುರ ವಿಧಾನಸಭಾ ಕ್ಷೇತ್ರದ ಶಾಸಕರಾದ ಎಂ.ವೈ.ಪಾಟೀಲ ಅವರ ಅಧ್ಯಕ್ಷತೆಯಲ್ಲಿ ಆಯ್ಕೆಯಾದ 22 ಫಲಾನುಭವಿಗಳಿಗೆ ಹೊಲಿಗೆ ಯಂತ್ರೋಪಕರಣಗಳನ್ನು ವಿತರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು, ಸರ್ಕಾರದ ವಿವಿಧ ಕಲ್ಯಾಣ ಯೋಜನೆಗಳನ್ನು ಸಮಾಜದ ಅಂಚಿನವರಿಗೂ ತಲುಪಿಸುವುದು ತಮ್ಮ ಪ್ರಾಮುಖ್ಯ ಗುರಿಯಾಗಿದೆ ಎಂದು ತಿಳಿಸಿದರು. ಸ್ವಂತ ಉದ್ಯೋಗವೇ ನಿಜವಾದ ಸಬಲೀಕರಣ. ಹೊಲಿಗೆ ಯಂತ್ರವು ಕೇವಲ ಉಪಕರಣವಲ್ಲ, ಅದು ಒಂದು ಕುಟುಂಬದ ಭವಿಷ್ಯವನ್ನು ಕಟ್ಟುವ ಸಾಧನ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ನಿಗಮದ ವ್ಯವಸ್ಥಾಪಕರಾದ ಜಗದೇವಪ್ಪ, ರವಿಕುಮಾರ ಸಿಳ್ಳಿ, ಪಕ್ಷದ ಮುಖಂಡರಾದ ಉಗ್ರಮೂರ್ತಿ ಗರೂರು ಗುಡೂರ, ಶರಣು ಅಪಚ್ಚಂದ, ಲಿಂಗಣ್ಣ ಗೌಡ ಪಾಟೀಲ್ ಮಿಣಜಿಗಿ, ನಬೀಸಾಬ್ ಜೋಗುರ್ ಸೇರಿದಂತೆ ಅನೇಕ ಗಣ್ಯರು ಹಾಗೂ ಫಲಾನುಭವಿಗಳು ಉಪಸ್ಥಿತರಿದ್ದರು.
ಯಾದಗಿರಿ | ದ್ವಿತೀಯ ಪಿಯು ಪರೀಕ್ಷೆ : 8,076 ವಿದ್ಯಾರ್ಥಿಗಳು ಹಾಜರು, 551 ಮಂದಿ ಗೈರು
ಯಾದಗಿರಿ : ಜಿಲ್ಲೆಯಾದ್ಯಂತ ಶನಿವಾರದಿಂದ ಆರಂಭಗೊಂಡ ದ್ವಿತೀಯ ಪಿಯು ಪರೀಕ್ಷೆಗಳು ಒಂದೆರಡು ಸಣ್ಣ ಗೊಂದಲಗಳನ್ನು ಹೊರತುಪಡಿಸಿ ಬಹುತೇಕ ಸುಸೂತ್ರವಾಗಿ ನಡೆದಿವೆ. ಮೊದಲ ದಿನ ಕನ್ನಡ ಮತ್ತು ಅರೇಬಿಕ್ ವಿಷಯಗಳ ಪರೀಕ್ಷೆಗೆ ಜಿಲ್ಲೆಯ 20 ಕೇಂದ್ರಗಳಲ್ಲಿ ಒಟ್ಟು 8,627 ವಿದ್ಯಾರ್ಥಿಗಳು ಹೆಸರು ನೋಂದಾಯಿಸಿದ್ದರು. ಅದರಲ್ಲಿ 551 ವಿದ್ಯಾರ್ಥಿಗಳು ಗೈರುಹಾಜರಾಗಿದ್ದು, 8,076 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದಾರೆ. ಯಾದಗಿರಿ ನಗರದ ಒಂದು ಪರೀಕ್ಷಾ ಕೇಂದ್ರ ಸ್ಥಳ ಬದಲಾವಣೆಯಿಂದಾಗಿ ಸಬಾ ಕಾಲೇಜಿನ ವಿದ್ಯಾರ್ಥಿಗಳು ಕೆಲ ನಿಮಿಷ ಗೊಂದಲಕ್ಕೀಡಾದರು. ಕೆಂಭಾವಿ ಕೇಂದ್ರದಲ್ಲಿ ಹಾಲ್ಟಿಕೆಟ್ ವಿಚಾರವಾಗಿ ಪ್ರಾಚಾರ್ಯ ಮತ್ತು ವಿದ್ಯಾರ್ಥಿಗಳ ನಡುವೆ ವಾಗ್ವಾದ ನಡೆದಿರುವ ಮಾಹಿತಿ ದೊರೆತಿದೆ. ಇವುಗಳನ್ನು ಹೊರತುಪಡಿಸಿ ಪರೀಕ್ಷೆಗಳು ಶಾಂತಿಯುತವಾಗಿ ನಡೆದಿವೆ. ಜಿಲ್ಲಾಡಳಿತ ಮತ್ತು ಜಿಲ್ಲಾ ಪೊಲೀಸ್ ಇಲಾಖೆ ನಕಲು ಹಾಗೂ ಅಹಿತಕರ ಘಟನೆಗಳಿಗೆ ಅವಕಾಶ ನೀಡದಂತೆ ಕಟ್ಟುನಿಟ್ಟಿನ ಬಂದೋಬಸ್ತ್ ಕೈಗೊಂಡಿತ್ತು. ಸುರಪುರದ ಸರ್ಕಾರಿ ಪಿಯು ಕಾಲೇಜಿನಲ್ಲಿ ಅತಿ ಹೆಚ್ಚು 66 ವಿದ್ಯಾರ್ಥಿಗಳು ಗೈರಾಗಿದ್ದಾರೆ. ರಂಗಪೇಟೆಯ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಪಿಯು ಕಾಲೇಜಿನಲ್ಲಿ ಕೇವಲ 7 ವಿದ್ಯಾರ್ಥಿಗಳು ಗೈರಾಗಿದ್ದಾರೆ. ಶಹಾಪುರ ಸರ್ಕಾರಿ ಬಾಲಕರ ಪಿಯು ಕಾಲೇಜಿನಲ್ಲಿ ಅತ್ಯಧಿಕ 691 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಗುರುಮಠಕಲ್ ಸರ್ಕಾರಿ ಬಾಲಕಿಯರ ಪಿಯು ಕಾಲೇಜಿನಲ್ಲಿ 174 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದಾರೆ. ಪರೀಕ್ಷಾ ಕೇಂದ್ರದ ಎಡವಟ್ಟು : ಯಾದಗಿರಿ ನಗರದಲ್ಲಿ ಹಾಲ್ಟಿಕೆಟ್ನಲ್ಲಿ ಪರೀಕ್ಷಾ ಕೇಂದ್ರದ ವಿಳಾಸ ತಪ್ಪಾಗಿ ಮುದ್ರಿತಗೊಂಡ ಪರಿಣಾಮ ವಿದ್ಯಾರ್ಥಿಗಳು ಕೆಲಕಾಲ ಪರದಾಡಿದರು. ಲುಂಬಿನಿ ವನದ ಬಳಿ ಇರುವ ಕೇಂದ್ರದ ಬದಲು ಗಂಜ್ ರಸ್ತೆಯ ವಿಳಾಸ ಮುದ್ರಿತವಾಗಿದ್ದರಿಂದ ಗೊಂದಲ ಉಂಟಾಯಿತು. ಬಳಿಕ ಅಧಿಕಾರಿಗಳು ತಕ್ಷಣ ಸ್ಪಂದಿಸಿ ವಿದ್ಯಾರ್ಥಿಗಳನ್ನು ಸರಿಯಾದ ಕೇಂದ್ರಕ್ಕೆ ಕಳುಹಿಸಿ ಸಮಸ್ಯೆ ನಿವಾರಿಸಿದರು. ಸೂಕ್ತ ವ್ಯವಸ್ಥೆ : ಜಿಲ್ಲಾಧಿಕಾರಿ ಹರ್ಷಲ್ ಭೋಯೆರ್, ಎಸ್ಪಿ ಪೃಥ್ವಿಕ್ ಶಂಕರ್ ಹಾಗೂ ಪಿಯು ಉಪನಿರ್ದೇಶಕ ಪಂಡಿತರಾವ ಪವಾರ್ ನೇತೃತ್ವದಲ್ಲಿ ಸಮರ್ಪಕ ವ್ಯವಸ್ಥೆ ಮಾಡಲಾಗಿತ್ತು. ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲಿ ಸಿಸಿ ಕ್ಯಾಮೆರಾ, ಬೆಳಕು ಮತ್ತು ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿತ್ತು. ಕೇಂದ್ರಗಳ 200 ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿತ್ತು.
Israel Attacks Iran: ಪರಮೋಚ್ಚ ನಾಯಕ ಖಮೇನಿ ಫಿನೀಶ್? ಇಸ್ರೇಲ್ ಮಾಧ್ಯಮ ವರದಿ; ಈವರೆಗೂ ಇಲ್ಲ ಎಂದ ಇರಾನ್
ಇಸ್ರೇಲ್ ನಡೆಸಿದ ದಾಳಿಯಲ್ಲಿ ಇರಾನ್ ಪರಮೋಚ್ಚ ನಾಯಕ ಯತೊಲ್ಲಾಅಲಿ ಖಮೇನಿ ಮೃತಪಟ್ಟಿದ್ದಾರೆ ಎಂದು ಇಸ್ರೇಲ್ ಮಾಧ್ಯಗಳು ವರದಿ ಮಾಡಿದೆ. ಖಮೇನಿ ಕಚೇರಿ ಮೇಲೆಯೇ ದಾಳಿ ನಡೆದಿದ್ದು, ಸಾವಿನ ಸಾಧ್ಯತೆ ಹೆಚ್ಚಿದೆ. ಆದರೆ, ಇರಾನ್ ಈ ಬಗ್ಗೆ ಯಾವುದೇ ಅಧಿಕೃತ ಘೋಷಣೆ ಮಾಡಿಲ್ಲ. ಈವರೆಗೂ ಜೀವಂತ ಇದ್ದಾರೆ ಎಂದು ಅಲ್ಲಿನ ವಿದೇಶಾಂಗ ಸಚಿವ ಹೇಳಿದ್ದಾರೆ.
ದ.ಕ. ಜಿಲ್ಲೆ| ದ್ವಿತೀಯ ಪಿಯುಸಿ ಪರೀಕ್ಷೆ ಆರಂಭ: 163 ಮಂದಿ ಗೈರು
ಮಂಗಳೂರು, ಫೆ.28: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ ಶನಿವಾರ ಆರಂಭಗೊಂಡಿದೆ. ಕನ್ನಡ ಭಾಷಾ ಪರೀಕ್ಷೆಗೆ ನೋಂದಾಯಿಸಿದ 21,661 ಮಂದಿ ಅಭ್ಯರ್ಥಿಗಳ ಪೈಕಿ 21, 498 ಮಂದಿ ಪರೀಕ್ಷೆಗೆ ಹಾಜರಾಗಿದ್ದಾರೆ. 163 ಮಂದಿ ಗೈರು ಹಾಜರಾಗಿದ್ದಾರೆ. ಶೇ 99.24 ಮಂದಿ ಪರೀಕ್ಷೆ ಬರೆದಿದ್ದಾರೆ. ಅರೇಬಿಕ್ ಪರೀಕ್ಷೆಗೆ 315 ಮಂದಿ ಪೈಕಿ 313 ಮಂದಿ ಪರೀಕ್ಷೆ ಬರೆದಿದ್ದಾರೆ. ಕೇವಲ 2 ಮಂದಿ ಗೈರು ಹಾಜರಾಗಿದ್ದಾರೆ. ಪರೀಕ್ಷೆಗೆ ಹಾಜರಾತಿ ಶೇ 99.36 ಎಂದು ಅಧಿಕೃತ ಮೂಲಗಳು ತಿಳಿಸಿದೆ. ದ.ಕ. ಜಿಲ್ಲಾಧಿಕಾರಿ ದರ್ಶನ್ ಎಚ್ವಿ ಅವರು ಪಿಯುಸಿ ವಿವಿಧ ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿದರು. ಈ ಬಾರಿ ಜಿಲ್ಲೆಯಲ್ಲಿ ಕಲೆ , ವಾಣಿಜ್ಯ ಮತ್ತು ವಿಜ್ಞಾನ ವಿಭಾಗದಲ್ಲಿ ಒಟ್ಟು 33,337 ಮಂದಿ ಅಭ್ಯರ್ಥಿಗಳು ಪರೀಕ್ಷೆ ತೆಗೆದುಕೊಂಡಿದ್ದಾರೆ. ಕಲಾ ವಿಭಾಗದಲ್ಲಿ ಒಟ್ಟು 3,724 ಮಂದಿ. ವಾಣಿಜ್ಯ ವಿಭಾಗದಲ್ಲಿ 15, 054 ಮತ್ತು ವಿಜ್ಞಾನ ವಿಭಾಗದಲ್ಲಿ 18, 559 ಮಂದಿ ಪರೀಕ್ಷೆ ಬರೆಯಲಿದ್ದಾರೆ. *59 ಪರೀಕ್ಷಾ ಕೇಂದ್ರ: ಹದಿನೈದು ದಿನಗಳ ಕಾಲ ನಡೆಯಲಿರುವ ಪರೀಕ್ಷೆಗೆ 59 ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸ ಲಾಗಿದೆ, ಕಳೆದ ವರ್ಷಕ್ಕಿಂತ ಈ ಬಾರಿ 5 ಕೇಂದ್ರಗಳ ಸಂಖ್ಯೆ ಜಾಸ್ತಿಯಾಗಿದೆ. ಸರಕಾರಿ ಕಾಲೇಜುಗಳಲ್ಲಿ 15, ಖಾಸಗಿ ಅನುದಾನಿತ 22 ಮತ್ತು ಖಾಸಗಿ ಅನುದಾನರಹಿತ 22 ಕಾಲೇಜುಗಳನ್ನು ಪರೀಕ್ಷಾ ಕೇಂದ್ರಗಳಾಗಿ ರೂಪಿಸಲಾಗಿದೆ.
ಅಫಜಲಪುರ | ಸರಕಾರಿ ಕಾಲೇಜುಗಳಲ್ಲಿ ಪ್ರವೇಶ ಪಡೆದು ಯೋಜನೆಗಳ ಸದುಪಯೋಗ ಪಡೆದುಕೊಳ್ಳಿ: ಡಾ.ಸಂತೋಷ ಹುಗ್ಗಿ
ಅಫಜಲಪುರ : ಉನ್ನತ ಶಿಕ್ಷಣ ಪಡೆಯಲಿರುವ ವಿದ್ಯಾರ್ಥಿಗಳ ಭವಿಷ್ಯ ಹಿತದೃಷ್ಟಿಯಿಂದ ಸರ್ಕಾರ ಹಾಗೂ ಕಾಲೇಜು ಶಿಕ್ಷಣ ಇಲಾಖೆ ಹಲವು ಮಹತ್ವದ ಯೋಜನೆಗಳನ್ನು ಜಾರಿಗೊಳಿಸುತ್ತಿದೆ. ವಿದ್ಯಾರ್ಥಿಗಳು ಸರಕಾರಿ ಕಾಲೇಜುಗಳಲ್ಲಿ ಪ್ರವೇಶ ಪಡೆದು ಈ ಯೋಜನೆಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದು ಪ್ರಾಚಾರ್ಯ ಡಾ. ಸಂತೋಷ ಹುಗ್ಗಿ ಹೇಳಿದರು. ಪಟ್ಟಣದ ಸರಕಾರಿ ಕಾಲೇಜಿನಲ್ಲಿ 2026-27ನೇ ಶೈಕ್ಷಣಿಕ ಸಾಲಿನ ಪ್ರವೇಶಾತಿ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಸರಕಾರಿ ಕಾಲೇಜುಗಳಲ್ಲಿ ಉತ್ತಮ ಸೌಲಭ್ಯಗಳಿವೆ. ಬಿಎ, ಬಿಎಸ್ಸಿ, ಬಿಕಾಂ ಹಾಗೂ ಪಿಜಿ ಕೋರ್ಸ್ಗಳು ಲಭ್ಯವಿದ್ದು, ಅನುಭವಿ ಉಪನ್ಯಾಸಕರು, ಸುಸಜ್ಜಿತ ಗ್ರಂಥಾಲಯ ಮತ್ತು ಪ್ರಯೋಗಾಲಯಗಳಿವೆ ಎಂದು ವಿವರಿಸಿದರು. ನಂತರ ಅಫಜಲಪುರ ಪಟ್ಟಣದ ವಿವಿಧ ಪದವಿ ಪೂರ್ವ ಕಾಲೇಜುಗಳಿಗೆ ಭೇಟಿ ನೀಡಿ ವಿದ್ಯಾರ್ಥಿಗಳು ಸರಕಾರಿ ಮಹಾವಿದ್ಯಾಲಯದಲ್ಲಿ ಪ್ರವೇಶ ಪಡೆಯುವಂತೆ ಮನವಿ ಮಾಡಿದರು. ಈ ಸಂದರ್ಭದಲ್ಲಿ ಡಾ. ಚಿನ್ನಾ ಆಶೆಪ್ಪ, ಡಾ. ವಿನಾಯಕ ಕೆ., ಡಾ. ರಾಘವೇಂದ್ರ, ಪ್ರವೀಣ, ಡಾ. ಸಂಗಣ್ಣ ಎಂ. ಸಿಂಗೆ, ಡಾ. ಮಲ್ಲಿಕಾರ್ಜುನ ಸಂದಿಮನಿ, ಡಾ. ಶರಣಬಸವೇಶ್ವರ, ಡಾ. ಗುಂಡಪ್ಪ ಸಿಂಗೆ, ಡಾ. ಮಮತಾ ಪಾಟೀಲ, ಡಾ. ಸಂತೋಷ ಬಡಿಗೇರ, ಡಾ. ಸುರೇಶ ಗುಡ್ಡಡಗಿ ಸೇರಿದಂತೆ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಕಾರ್ಮಿಕ ಮುರುಗನ್ ಕುಟುಂಬಕ್ಕೆ 25 ಲಕ್ಷ ರೂ. ಪರಿಹಾರಕ್ಕೆ ಆಗ್ರಹ: ಸಿಐಟಿಯು - ಡಿವೈಎಫ್ಐ ನೇತೃತ್ವದಲ್ಲಿ ಪ್ರತಿಭಟನೆ
ಮಂಗಳೂರು: ಮೀನುಗಾರಿಕಾ ಧಕ್ಕೆ ಪ್ರದೇಶದಲ್ಲಿ ದಾರಿದೀಪದ ಕಂಬವೊಂದು ಬಿದ್ದು ಪರಿಣಾಮವಾಗಿ ತಮಿಳುನಾಡು ಮೂಲದ ಕಾರ್ಮಿಕ ಮುರುಗನ್ ಸ್ಥಳದಲ್ಲೇ ಮೃತಪಟ್ಟಿದ್ದು,ಈ ಸಾವಿಗೆ ಕಾರಣರಾದವರ ವಿರುದ್ದ ಕಠಿಣ ಕ್ರಮಕ್ಕೆ ಆಗ್ರಹಿಸಿ ಹಾಗೂ ಈ ಸಾವಿಗೆ ನ್ಯಾಯ ದೊರಕಿಸಿಕೊಡಬೇಕು, ಮೃತರಾದ ಮುರುಗನ್ ಕುಟುಂಬಕ್ಕೆ ರೂ.25 ಲಕ್ಷದಷ್ಟು ಪರಿಹಾರ ನೀಡಬೇಕೆಂದು ಒತ್ತಾಯಿಸಿ ಕೇಂದ್ರ ಕಾರ್ಮಿಕ ಸಂಘಟನೆ ಸಿಐಟಿಯು ಹಾಗೂ ಯುವಜನ ಸಂಘಟನೆ ಡಿವೈಎಫ್ಐ ಜಂಟಿ ನೇತೃತ್ವದಲ್ಲಿ ಶನಿವಾರ ದಕ್ಕೆ ಪ್ರದೇಶದಲ್ಲಿ ನಡೆದ ಪ್ರತಿಭಟನಾ ಪ್ರದರ್ಶನ ದಲ್ಲಿ ಆಗ್ರಹಿಸಲಾಯಿತು. 300ಕ್ಕೂ ಮಿಕ್ಕಿದ ಮೀನುಗಾರಿಕಾ ಕಾರ್ಮಿಕರು ಮೀನುಗಾರಿಕಾ ಇಲಾಖೆ ಹಾಗೂ ಜಿಲ್ಲಾಡಳಿತದ ಬೇಜವಾಬ್ದಾರಿ ಯನ್ನು ಖಂಡಿಸಿ ಘೋಷಣೆಗಳನ್ನು ಕೂಗಿದರು. ಪ್ರತಿಭಟನೆಯನ್ನು ಉದ್ಘಾಟಿಸಿ ಮಾತನಾಡಿದ ಸಿಐಟಿಯು ದ.ಕ.ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ರವರು, ದಿನವೊಂದಕ್ಕೆ ಕೋಟ್ಯಾಂತರ ರೂಪಾಯಿ ವ್ಯಾಪಾರ ವಹಿವಾಟು ನಡೆಯುವ ಮೀನುಗಾರಿಕಾ ದಕ್ಕೆ ಪ್ರದೇಶದಲ್ಲಿ ಯಾವುದೇ ರೀತಿಯ ಮೂಲಭೂತ ಸೌಕರ್ಯಗಳಿಲ್ಲದಿರುವುದು ಮೀನುಗಾರಿಕಾ ಇಲಾಖೆ ಹಾಗೂ ಜಿಲ್ಲಾಡಳಿತದ ಬೇಜವಾಬ್ದಾರಿಯನ್ನು ಎತ್ತಿ ತೋರಿಸುತ್ತದೆ.ಸಾವಿರಾರು ಕಾರ್ಮಿಕರು ತಮ್ಮ ಹೊಟ್ಟೆಪಾಡಿ ಗಾಗಿ ಕಳೆದ ಹಲವಾರು ವರ್ಷಗಳಿಂದ ದುಡಿದು ಜಿಲ್ಲೆಯ ಅರ್ಥಿಕ ಚಟುವಟಿಕೆಗಳಿಗೆ ಶಕ್ತಿ ತುಂಬುತ್ತಿದ್ದರೂ ಅವರ ಬದುಕಿನ ರಕ್ಷಣೆಗಾಗಿ,ಸಾಮಾಜಿಕ ಭದ್ರತೆಗಾಗಿ ಯಾವುದೇ ಸವಲತ್ತುಗಳ ಇಲ್ಲದೆ ಅತಂತ್ರರಾಗಿದ್ದಾರೆ.ಮಹಿಳಾ ಕಾರ್ಮಿಕರಿಗೆ ಪ್ರತ್ಯೇಕ ವಿಶ್ರಾಂತಿ ಕೊಠಡಿ,ಶೌಚಾಲಯ ವ್ಯವಸ್ಥೆ, ಶುದ್ದ ಕುಡಿಯುವ ನೀರು ಸೇರಿದಂತೆ ಮೂಲ ಭೂತ ಸೌಕರ್ಯಗಳಿಲ್ಲ. ಘಟನೆ ನಡೆದು ವಾರ ಕಳೆದರೂ ಯಾವುದೇ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿಲ್ಲ, ಆ ಮೂಲಕ ಕಾರ್ಮಿಕರ ಜೀವಕ್ಕೆ ಬೆಲೆಯೇ ಇಲ್ಲ ಎಂಬಂತೆ ಮೀನುಗಾರಿಕಾ ಇಲಾಖೆ ಅಮಾನುಷವಾಗಿ ವರ್ತಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಡಿವೈಎಫ್ಐ ಜಿಲ್ಲಾಧ್ಯಕ್ಷ ಬಿ.ಕೆ.ಇಮ್ತಿಯಾಝ್ ಅವರು ಮಾತನಾಡಿ , ತಮಿಳುನಾಡು ಮೂಲದ ಕಾರ್ಮಿಕರು ಮಂಗಳೂರಿಗಾಗಿ ದುಡಿಯುತ್ತಿದ್ದಾರೆ.ಮೃತಪಟ್ಟಿರುವ ಕಾರ್ಮಿಕ ತಮಿಳನೆಂದು ಜಿಲ್ಲಾಡಳಿತ ತೀರಾ ನಿರ್ಲಕ್ಷ್ಯ ವಹಿಸಿರುವುದು ಖೇದಕರ. ಧಕ್ಕೆಯಲ್ಲಿ ಕಾರ್ಮಿಕರಿಗೆ ಯಾವುದೇ ರೀತಿಯ ಸುರಕ್ಷತಾ ಕ್ರಮಗಳಿಲ್ಲ.ಕಳೆದ ಹಲವು ವರ್ಷಗಳಿಂದ ಧಕ್ಕೆಯನ್ನು ಪ್ರವೇಶಿಸುವ ಎಲ್ಲಾ ವಾಹನಗಳಿಂದ ಲಕ್ಷಾಂತರ ರೂಪಾಯಿ ಸುಂಕ ಸಂಗ್ರಹಿಸಲಾ ಗುತ್ತಿದೆ. ಆದರೆ ಸಮರ್ಪಕ ಪಾರ್ಕಿಂಗ್ ವ್ಯವಸ್ಥೆ ಇಲ್ಲ. ಪ್ರತಿನಿತ್ಯ ಟ್ರಾಫಿಕ್ ಸಮಸ್ಯೆ ಉಂಟಾಗಿ ಜನರ ಸಮಯ ಟ್ರಾಫಿಕ್ ಜಾಮ್ನಲ್ಲಿ ವ್ಯರ್ಥವಾಗುತ್ತಿದೆ . ಡ್ರೈನೇಜ್ ಅವ್ಯವಸ್ಥೆಯಿಂದಾಗಿ ಪ್ರದೇಶವಿಡೀ ದುರ್ನಾತ ಬೀರುತ್ತಿದೆ. ಮುರುಗನ್ ಸಾವಿಗೆ ಕಾರಣರಾದ ಅಧಿಕಾರಿಗಳು ಹಾಗೂ ಧಕ್ಕೆ ನಿರ್ವಹಣೆಯನ್ನು ವಹಿಸುತ್ತಿರುವ ಗುತ್ತಿಗೆದಾರರ ವಿರುದ್ದ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕೆಂದು ಆಗ್ರಹಿಸಿದ ಅವರು ಜಿಲ್ಲಾಡಳಿತವು ಮುರುಗನ್ ಕುಟುಂಬಕ್ಕೆ ಒಂದು ವಾರದ ಒಳಗಾಗಿ 25ಲಕ್ಷ ಘೋಷಣೆ ಮಾಡಬೇಕು .ಅದು ಅಸಾಧ್ಯವಾದರೆ ಮೀನುಗಾರಿಕಾ ಇಲಾಖೆಯ ಜಂಟಿ ನಿರ್ದೇಶಕರ ಕಚೇರಿಗೆ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಸಿದರು. ಸಿಐಟಿಯು ಜಿಲ್ಲಾ ನಾಯಕರಾದ ಯೋಗೀಶ್ ಜಪ್ಪಿನಮೊಗರು ಹಾಗೂ ಡಿವೈಎಫ್ಐ ಜಿಲ್ಲಾ ಮುಖಂಡರಾದ ಸಂತೋಷ್ ಬಜಾಲ್ ರವರು ಮಾತನಾಡಿ,ಘಟನೆಯ ಗಂಭೀರತೆಯನ್ನು ಎಳೆಎಳೆಯಾಗಿ ವಿವರಿಸುತ್ತಾ,ಸ್ಥಳೀಯ ಸಂಸದರು, ಶಾಸಕರು ಸೇರಿದಂತೆ ಎಲ್ಲಾ ಜನಪ್ರತಿನಿಧಿಗಳ ನಿರ್ಲಕ್ಷ್ಯತೆಯನ್ನು ಖಂಡಿಸಿದರು. ಪ್ರತಿಭಟನೆಯಲ್ಲಿ ಸಿಐಟಿಯು ಜಿಲ್ಲಾ ನಾಯಕರಾದ ರವಿಚಂದ್ರ ಕೊಂಚಾಡಿ,ನಾಗೇಶ್ ಕೊಟ್ಯಾನ್, ಡಿವೈಎಫ್ಐ ಜಿಲ್ಲಾ ನಾಯಕರಾದ ಮನೋಜ್ ವಾಮಂಜೂರು, ನವೀನ್ ಕೊಂಚಾಡಿ,ತಯ್ಯುಬ್ ಬೆಂಗರೆ, ರಿಝ್ವಾನ್ ಹರೇಕಳ, ಜಗದೀಶ್ ಕುಲಾಲ್,ಸಾಧಿಕ್ ಮುಲ್ಕಿ, ಹನೀಫ್ ಬೆಂಗ್ರೆ, ಪಿ.ಜಿ ರಫೀಕ್, ಅಬ್ದುಲ್ ರಫೀಕ್ ಬೆಂಗ್ರೆ, ಬಿಲಾಲ್ ಬೆಂಗ್ರೆ, ಮುವಾಜ್ ಬೆಂಗ್ರೆ, ಅಶ್ರಫ್ ಹರೇಕಳ, ಜನವಾದಿ ಮಹಿಳಾ ಸಂಘಟನೆಯ ಪ್ರಮುಖರಾದ ಅಸುಂತ ಡಿಸೋಜಾ, ಯೋಗೀತಾ ಸುವರ್ಣ, ಹಸಿ ಮೀನು ಕಾರ್ಮಿಕರ ಸಂಘದ ಮುಖಂಡರಾದ ಆಸಿಫ್, ಇಕ್ಬಾಲ್, ಆಶ್ರಫ್, ರಫೀಕ್, ಅಝೀಝ್, ಶಫಿಕ್ ರೆಹಮಾನ್, ಸ್ಥಳೀಯ ಕಾರ್ಮಿಕ ಮುಖಂಡರಾದ ಮುಝಮ್ಮಿಲ್ ಕುಪ್ಪೆಟ್ಟು, ಮೂರ್ತಿ, ವೇಕಟೇಶ್ ಮುಂತಾದವರು ಉಪಸ್ಥಿತರಿದ್ದರು.
ಮಂಗಳೂರು| ಪಾರ್ಟ್ ಟೈಮ್ ಉದ್ಯೋಗದ ಹೆಸರಿನಲ್ಲಿ ವಿದ್ಯಾರ್ಥಿನಿಗೆ ವಂಚನೆ ಆರೋಪ: ಪ್ರಕರಣ ದಾಖಲು
ಮಂಗಳೂರು, ಫೆ.28: ಪಾರ್ಟ್ ಟೈಮ್ ಉದ್ಯೋಗದ ಹೆಸರಿನಲ್ಲಿ ವಿದ್ಯಾರ್ಥಿಗಳನ್ನು ವಂಚಿಸಿದ ಆರೋಪದಡಿ ಕುದ್ರೋಳಿಯಲ್ಲಿ ಕಾರ್ಯಾಚರಿಸುತ್ತಿರುವ ವೆಕ್ಸಾನ್ ಕಂಪೆನಿ ವಿರುದ್ಧ ಕದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವಿದ್ಯಾರ್ಥಿನಿಯೊಬ್ಬಳು ನೀಡಿದ ದೂರಿನಂತೆ ವೆಕ್ಸಾನ್ ಕಂಪೆನಿಯ ಸಂಸ್ಥಾಪಕ ದಿಗ್ವಿಜಯ್ ದೇಸಾಯಿ, ಸಹ ಸಂಸ್ಥಾಪಕರಾದ ರಾಮಚಂದ್ರ ಶೆವಾಲೆ, ಸುನಿಲ್ ಸಾವಂತ್, ಅನನ್ ಅಹೈರ್, ಮಂಗಳೂರಿನ ಶಾಖೆಯ ನೌಕರರಾದ ಪಲ್ಲವಿ, ಅಂಜಲಿ, ನವ್ಯ, ನಿವಿಶ್, ಜಯಶ್ರೀ, ಜುನೈದ್ ಎಂಬವರ ವಿರುದ್ಧ ಪ್ರಕರಣ ದಾಖಲಾಗಿದೆ. ವಿದ್ಯಾರ್ಥಿಗಳು ಹಾಗೂ ಇತರ ಉದ್ಯೋಗಾಂಕ್ಷಿಗಳಿಗೆ ಸುಳ್ಳು ಮಾಹಿತಿ ನೀಡಿ, ನಂಬಿಕೆ ದ್ರೋಹವನ್ನೆಸಗಿ ಮೋಸ ಮಾಡಿರುವುದಾಗಿ ಪ್ರಕರಣದಲ್ಲಿ ಉಲ್ಲೇಖಿಸಲಾಗಿದೆ. ದೂರುದಾರೆ ವಿದ್ಯಾರ್ಥಿನಿಯನ್ನು ಜನವರಿಯಲ್ಲಿ ನವ್ಯಾ ಎಂಬಾಕೆ ತಾನು ವೆಕ್ಸಾನ್ ಕಂಪೆನಿಯ ಉದ್ಯೋಗಿ ಎಂದು ಪರಿಚಯಿಸಿಕೊಂಡು ಮಧ್ಯಾಹ್ನ 2 ರಿಂದ 5 ಗಂಟೆಯವರೆಗೆ ಪಾರ್ಟ್ ಟೈಮ್ ಕೆಲಸ ಮಾಡಿ ತಿಂಗಳಿಗೆ 15,000 ರೂ. ನಿಂದ 30,000 ರೂ. ಗಳಿಸಬಹುದು. ಸಾಫ್ಟ್ ವೇರ್, ಡೇಟಾ ಎಂಟ್ರಿ ಕೆಲಸ, ತರಬೇತಿ ಸಮಯದಲ್ಲಿ ಉಳಿದುಕೊಳ್ಳಲು ಮತ್ತು ಆಹಾರಕ್ಕಾಗಿ ಶುಲ್ಕವಾಗಿ 2,500 ರೂ. ಭರಿಸಬೇಕು ಎಂದು ತಿಳಿಸಿದ್ದಳು ಎಂದು ಆರೋಪಿಸಲಾಗಿದೆ. ಅದಕ್ಕೆ ಒಪ್ಪಿಕೊಂಡು 2,500 ರೂ. ಪಾವತಿಸಿ, ಸಂಸ್ಥೆಯಲ್ಲಿ ಇತರ ಉದ್ಯೋಗಾಕಾಂಕ್ಷಿಗಳೊಂದಿಗೆ ತರಬೇತಿ ಪಡೆದಿದ್ದು, ಈ ವೇಳೆ ಬುಸಿನೆಸ್ ಮಾಡಬೇಕು, 51 ಸಾವಿರ ರೂ. ಮೌಲ್ಯದ ವಿವಿಧ ಕಂಪೆನಿಗಳ ಸೊತ್ತು ಖರೀದಿ ಮಾಡಬೇಕು ಮತ್ತು ಇತರರನ್ನು ಸಂಸ್ಥೆಗೆ ಸೇರಿಸಬೇಕು. ಅವರು ಕೂಡಾ ಸೊತ್ತು ಖರೀದಿಸಿದರೆ ಕಮಿಷನ್ ದೊರೆಯುತ್ತದೆ ಎಂದು ತಿಳಿಸಿದ್ದಾರೆ. ಅದರಂತೆ ನಿವೇಶ್ ಎನ್ನುವ ವ್ಯಕ್ತಿಯ ಗೂಗಲ್ ಪೇ ನಂಬರ್ ಗೆ 51 ಸಾವಿರ ರೂ. ಪಾವತಿಸಿದ್ದು, ಆದರೆ ಸಂಸ್ಥೆ ಕೊಟ್ಟಿರುವ ವಸ್ತುಗಳು ಗುಣಮಟ್ಟ ಇಲ್ಲದ್ದಾಗಿತ್ತು. ಮಾತ್ರವಲ್ಲದೆ ಸಾಫ್ಟ್ ವೇರ್, ಡೇಟಾ ಎಂಟ್ರಿ ಕೆಲಸವೆಂದು ನಂಬಿಸಿ, ಬಳಿಕ ಇತರರನ್ನು ಕಂಪೆನಿಗೆ ಸೇರಿಸುವಂತೆ ಮಾನಸಿಕವಾಗಿ ಒತ್ತಡ ಹಾಕಿ, ಅವರು ಹೇಳಿದಂತೆ ನಡೆದುಕೊಳ್ಳುವ ರೀತಿಯಲ್ಲಿ ಬ್ರೈನ್ ವಾಶ್ ಮಾಡಿದ್ದಾರೆ. ಒತ್ತಾಯ ಪೂರ್ವಕವಾಗಿ ಅವರು ಹೇಳಿದ ದಾಖಲಾತಿಗಳಿಗೆ ಸಹಿ ಮಾಡಿಸಿಕೊಂಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

29 C