ಇಬ್ಬರು ಹಿಂದೂಗಳು ಸೇರಿ ನಾಲ್ವರು ಅಲ್ಪಸಂಖ್ಯಾತರು ಬಾಂಗ್ಲಾ ಸಂಸತ್ತಿಗೆ ಆಯ್ಕೆ
ಢಾಕಾ: ಬಾಂಗ್ಲಾದೇಶ ಸಂಸತ್ತಿನ 299 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಇಬ್ಬರು ಹಿಂದೂಗಳು ಸೇರಿದಂತೆ ಅಲ್ಪಸಂಖ್ಯಾತ ಸಮುದಾಯಗಳಿಗೆ ಸೇರಿದ ನಾಲ್ವರು ಆಯ್ಕೆಯಾಗಿದ್ದಾರೆ. ಇವರೆಲ್ಲರೂ ಮಂಗಳವಾರ ಸರ್ಕಾರ ರಚನೆ ಮಾಡಲಿರುವ ಬಾಂಗ್ಲಾದೇಶ ನ್ಯಾಷನಲಿಸ್ಟ್ ಪಾರ್ಟಿ (ಬಿಎನ್ಪಿ)ಗೆ ಸೇರಿದವರು. ಗೋಯೇಶ್ವರ ಚಂದ್ರ ರಾಯ್ ಮತ್ತು ನಿತ್ಯ ರಾಯ್ ಚೌಧರಿ ಹಿಂದೂ ಅಭ್ಯರ್ಥಿಗಳಾಗಿ ಬಿಎನ್ಪಿ ಟಿಕೆಟ್ನಲ್ಲಿ ಗೆಲುವು ಸಾಧಿಸಿದ್ದಾರೆ. ಢಾಕಾ ಮತ್ತು ಪಶ್ಚಿಮ ಮಗೂರಾ ಕ್ಷೇತ್ರಗಳಿಂದ ಇವರು ಜಮಾತ್ ಇ ಇಸ್ಲಾಮಿ ಅಭ್ಯರ್ಥಿಗಳನ್ನು ಸೋಲಿಸಿ ಸಂಸತ್ತಿಗೆ ಆಯ್ಕೆಯಾಗಿದ್ದಾರೆ. ರಾಯ್ ಅವರು ಬಿಎನ್ಪಿಯ ಅತ್ಯುನ್ನತ ನೀತಿ ನಿರ್ಧಾರ ವಿಭಾಗವಾಗಿರುವ ಸ್ಥಾಯಿ ಸಮಿತಿ ಸದಸ್ಯರಾಗಿದ್ದರೆ, ಚೌಧರಿಯವರು ಪಕ್ಷದ ಉಪಾಧ್ಯಕ್ಷ ಹಾಗೂ ಹಿರಿಯ ಸಲಹೆಗಾರ ಮತ್ತು ತಂತ್ರಗಾರ. ಮೂರನೇ ಅಲ್ಪಸಂಖ್ಯಾತ ಅಭ್ಯರ್ಥಿಯಾಗಿ ಸಂಸತ್ತಿಗೆ ಆಯ್ಕೆಯಾಗಿರುವ ಹಿರಿಯ ಬಿಎನ್ಪಿ ಮುಖಂಡ ಸಚಿಂಗ್ ಪ್ರೂ ಬೌದ್ಧ ಸಮುದಾಯಕ್ಕೆ ಸೇರಿದ್ದಾರೆ. ಮರ್ಮಾ ಬುಡಕಟ್ಟು ಸಮುದಾಯಕ್ಕೆ ಸೇರಿರುವ ದಕ್ಷಿಣದ ಬಂದ್ರಬನ್ ಕ್ಷೇತ್ರದಿಂದ ಆಯ್ಕೆಯಾಗಿದ್ದಾರೆ. ನಾಲ್ಕನೇ ಅಲ್ಪಸಂಖ್ಯಾತ ಅಭ್ಯರ್ಥಿ ದೀಪೇನ್ ದೇವನ್, ಬೌದ್ಧ ಪ್ರಾಬಲ್ಯದ ಚಕ್ಮಾ ಬುಡಕಟ್ಟು ಸಮುದಾಯಕ್ಕೆ ಸೇರಿದವರು. ದಕ್ಷಿಣ ರಂಗಾಮತಿ ಬೆಟ್ಟ ಜಿಲ್ಲೆಯಿಂದ ಇವರು ಆಯ್ಕೆಯಾಗಿದ್ದಾರೆ. ಆದರೆ ಅವರ ಜಾತಿಯ ಬಗ್ಗೆ ಅಸ್ಪಷ್ಟತೆ ಇದ್ದು, ಅವರನ್ನು ಹಿಂದೂ ಎಂದು ಹಲವರು ಬಣ್ಣಿಸಿದ್ದಾರೆ. ಬಾಂಗ್ಲಾದೇಶದ 17 ಕೋಟಿ ಮತದಾರರ ಪೈಕಿ ಶೇಕಡ 8ರಷ್ಟು ಹಿಂದೂಗಳಿದ್ದಾರೆ.
T20 ವಿಶ್ವಕಪ್ | ಹೀನಾಯ ಸೋಲು: ಬೌಲರ್ಗಳ ವಿರುದ್ಧ ಪಾಕಿಸ್ತಾನದ ನಾಯಕ ಅಸಮಾಧಾನ
ಕೊಲಂಬೊ: ಭಾರತ ವಿರುದ್ಧ ಮತ್ತೊಂದು ಹೀನಾಯ ಸೋಲು ಅನುಭವಿಸಿದ ಪಾಕಿಸ್ತಾನ ಟಿ20 ಕ್ರಿಕೆಟ್ ತಂಡದ ನಾಯಕ ಸಲ್ಮನ್ ಅಲಿ ಅಘಾ ಪಂದ್ಯದ ಬಳಿಕ ನಡೆದ ಸುದ್ದಿಗೋಷ್ಠಿಯಲ್ಲಿ ಬೌಲರ್ ಗಳ ಮೇಲೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಪ್ರಸಂಗ ನಡೆಯಿತು. ನಮ್ಮ ಬೌಲರ್ ಗಳು ನಮ್ಮ ಯೋಜನೆಯನ್ನು ಜಾರಿಗೆ ತರಲು ವಿಫಲರಾದರು ಎಂದು ಅಘಾ ಹೇಳಿದರು. ಬ್ಯಾಟ್ಸ್ ಮನ್ ಗಳ ನಿರ್ಲಕ್ಷ್ಯವನ್ನೂ ಕಟುವಾಗಿ ಟೀಕಿಸಿದ ಅವರು, ಬ್ಯಾಟರ್ ಗಳ ಈ ಮನೋಭಾವ ಭಾರತಕ್ಕೆ ನಿಯತವಾಗಿ ವಿಕೆಟ್ ಕಬಳಿಸಲು ಅನುವಾಯಿತು ಎಂದು ವಿಶ್ಲೇಷಿಸಿದರು. ನಮ್ಮ ಸ್ಪಿನ್ನರ್ ಗಳು ವಿಫಲರಾದರು. ನಮ್ಮ ಯೋಚನೆಗಳನ್ನು ಕಾರ್ಯರೂಪಕ್ಕೆ ತರುವಲ್ಲಿ ಕೊರತೆ ಎದ್ದುಕಂಡಿತು. ನಮ್ಮ ಸ್ಪಿನ್ನರ್ ಗಳ ಮೇಲೆ ವಿಶ್ವಾಸ ಇರಿಸಿದ್ದೆವು. ಕಳೆದ ಆರು ತಿಂಗಳಿಂದ ಅವರು ಉತ್ತಮ ಪ್ರದರ್ಶನ ನೀಡುತ್ತಾ ಬಂದಿದ್ದಾರೆ. ಬ್ಯಾಟಿಂಗ್ನಲ್ಲಿ ಕೂಡಾ ಪವರ್ ಪ್ಲೇಯಲ್ಲಿ ನಾವು ಹಲವು ವಿಕೆಟ್ಗಳನ್ನು ಕಳೆದುಕೊಂಡೆವು. ಮೊದಲ ಇನಿಂಗ್ಸ್ ನಲ್ಲಿ ಪಿಚ್ ಜಿಗುಟಾಗಿತ್ತು ಹಾಗೂ ಚೆಂಡಿನ ಮೇಲೆ ಹಿಡಿತ ಉತ್ತಮವಾಗಿತ್ತು. ಆದರೆ ಬೌಲಿಂಗ್ ಕಾರ್ಯಗತಗೊಳಿಸುವಲ್ಲಿ ಎಡವಿದೆವು. ಮೊದಲ ಇನ್ನಿಂಗ್ಸ್ ಗೆ ಹೋಲಿಸಿದರೆ ಎರಡನೇ ಇನ್ನಿಂಗ್ ನಲ್ಲಿ ಪಿಚ್ ಬ್ಯಾಟ್ಸ್ ಮನ್ ಗಳಿಗೆ ಸಹಕಾರಿಯಾಗಿತ್ತು. ಈ ಬಗೆಯ ಪಂದ್ಯಗಳಲ್ಲಿ ಸದಾ ದೊಡ್ಡ ನಿರೀಕ್ಷೆ ಇರುತ್ತದೆ. ಇದನ್ನು ನಾವು ಸರಿಪಡಿಸಬೇಕಿದೆ. ಆ ಬಗೆಯ ಹಲವು ಪಂದ್ಯಗಳನ್ನು ನಾವು ಆಡಿದ್ದೇವೆ. ಎರಡು ದಿನದಲ್ಲಿ ಮತ್ತೊಂದು ಪಂದ್ಯ ಇದ್ದು, ಆ ಬಗ್ಗೆ ಯೋಚಿಸಬೇಕಿದೆ. ಅದನ್ನು ಗೆದ್ದು ಸೂಪರ್-8 ಅರ್ಹತೆ ಪಡೆಯಬೇಕು. ಅದು ಮತ್ತೆ ಹೊಸ ಟೂರ್ನಿಯಾಗಲಿದೆ ಎಂದು ಸಲ್ಮನ್ ವಿಶ್ಲೇಷಿಸಿದರು. ಈ ಗೆಲುವಿನೊಂದಿಗೆ ಭಾರತ ಸೂಪರ್-8 ಹಂತಕ್ಕೆ ರಹದಾರಿ ಪಡೆಯಿತು.
ಇಟ್ಟಿಗೆಯ ಲಾಭದ ಹಿಂದೆ ಅಡಗಿದೆ ನೂರಾರು ಜನರ ಅನಾರೋಗ್ಯದ ಕಥೆ!
ಕರ್ನಾಟಕದ ಉತ್ತರ ತುದಿಯಲ್ಲಿರುವ ರಾಯಚೂರು ಜಿಲ್ಲೆಯ ಶಕ್ತಿನಗರದ ಹೆಸರು ಕೇಳದ ಕನ್ನಡಿಗರಿಲ್ಲ. ರಾಜ್ಯದ ಮನೆಮನೆಗೆ ಬೆಳಕು ನೀಡುವ ಈ ಕೇಂದ್ರವು ಕೇವಲ ಒಂದು ಕಾರ್ಖಾನೆಯಲ್ಲ, ಅದು ಲಕ್ಷಾಂತರ ಜನರ ಬದುಕಿಗೆ ಆಸರೆಯಾಗಿರುವ ಒಂದು ಬೃಹತ್ ಇಂಧನ ಲೋಕ. ಕೃಷ್ಣಾ ನದಿಯ ತಟದಲ್ಲಿ ತಲೆಯೆತ್ತಿ ನಿಂತಿರುವ ಈ ವಿದ್ಯುತ್ ಸ್ಥಾವರವು ಕಳೆದ ನಾಲ್ಕು ದಶಕಗಳಿಂದ ಕರ್ನಾಟಕದ ಕತ್ತಲೆಯನ್ನು ಓಡಿಸುತ್ತಿದೆ. ಶಕ್ತಿನಗರದ ಈ ಘಟಕವು ಕರ್ನಾಟಕದ ಮೊದಲ ಶಾಖೋತ್ಪನ್ನ ವಿದ್ಯುತ್ ಕೇಂದ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದು, ಇದರ ವಿಶೇಷತೆಗಳು ಹಲವಾರು. ಬೃಹತ್ ಉತ್ಪಾದನಾ ಸಾಮರ್ಥ್ಯ : ಇಲ್ಲಿ ಒಟ್ಟು 8 ಘಟಕಗಳಿದ್ದು, ಸುಮಾರು 1720 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಒಂದು ಕಾಲದಲ್ಲಿ ಕರ್ನಾಟಕದ ಒಟ್ಟು ವಿದ್ಯುತ್ ಬೇಡಿಕೆಯ ಅರ್ಧಕ್ಕಿಂತ ಹೆಚ್ಚು ಪಾಲನ್ನು ಇದೊಂದೇ ಕೇಂದ್ರ ಪೂರೈಸುತ್ತಿತ್ತು. ಕೃಷ್ಣಾ ನದಿಯ ಆಸರೆ: ವಿದ್ಯುತ್ ಉತ್ಪಾದನೆಗೆ ಅಗತ್ಯವಿರುವ ನೀರನ್ನು ಕೃಷ್ಣಾ ನದಿಯಿಂದ ಪಡೆಯಲಾಗುತ್ತದೆ. ನದಿಯ ಪಕ್ಕದಲ್ಲೇ ಇರುವುದರಿಂದ ನೀರು ಸರಬರಾಜು ಸುಲಭವಾಗಿದೆ. ಕಲ್ಲಿದ್ದಲು ಆಧಾರಿತ ತಂತ್ರಜ್ಞಾನ: ಇಲ್ಲಿ ಕಲ್ಲಿದ್ದಲನ್ನು ಸುಟ್ಟು ಅದರಿಂದ ಬರುವ ಹಬೆಯ ಮೂಲಕ ಟರ್ಬೈನ್ ತಿರುಗಿಸಿ ವಿದ್ಯುತ್ ತಯಾರಿಸುತ್ತದೆ. ಇಲ್ಲಿಗೆ ದಿನನಿತ್ಯ ಸಾವಿರಾರು ಟನ್ ಕಲ್ಲಿದ್ದಲು ರೈಲುಗಳ ಮೂಲಕ ಬರುತ್ತದೆ. ಉದ್ಯೋಗಾವಕಾಶ: ಈ ಕೇಂದ್ರವು ಸಾವಿರಾರು ಕುಟುಂಬಗಳಿಗೆ ನೇರ ಮತ್ತು ಪರೋಕ್ಷ ಉದ್ಯೋಗ ನೀಡಿದೆ. ರಾಯಚೂರು ಜಿಲ್ಲೆಯ ಆರ್ಥಿಕತೆಗೆ ಇದು ದೊಡ್ಡ ಬೆನ್ನೆಲುಬಾಗಿದೆ. ಶಕ್ತಿನಗರದ ಒಳಗಿನ ಲೋಕ ಹೇಗಿದೆ? ನೀವು ಎಂದಾದರೂ ಶಕ್ತಿನಗರದ ಹತ್ತಿರ ಹೋದರೆ, ದೂರದಿಂದಲೇ ಆಕಾಶಕ್ಕೆ ಮುಖ ಮಾಡಿ ನಿಂತಿರುವ ಬೃಹತ್ ಚಿಮಣಿಗಳು ಕಾಣಿಸುತ್ತವೆ. ಅಲ್ಲಿನ ವಾತಾವರಣವೇ ವಿಭಿನ್ನ. ಅಲ್ಲಿ ಸದಾ ಕಾಲ ಕೇಳಿಸುವ ಯಂತ್ರಗಳ ಗುಂಯ್ ಎಂಬ ಶಬ್ದ, ಬೃಹತ್ ಕನ್ವೇಯರ್ ಬೆಲ್ಟ್ಗಳ ಮೇಲೆ ಚಲಿಸುವ ಕಲ್ಲಿದ್ದಲು ಮತ್ತು ಅಲ್ಲಿನ ಕಾರ್ಮಿಕರ ಅವಿರತ ಶ್ರಮ ನೋಡಿದರೆ ನಮಗೆ ನಾವು ಬಳಸುವ ಪ್ರತಿ ಯೂನಿಟ್ ವಿದ್ಯುತ್ತಿನ ಬೆಲೆ ತಿಳಿಯುತ್ತದೆ. ಆದರೆ, ಈ ಬೆಳಕಿನ ಹಿಂದೆ ಒಂದು ಕರಾಳ ಮುಖವೂ ಇದೆ. ಅಲ್ಲಿನ ಜನರ ಅನುಭವದ ಮಾತುಗಳನ್ನು ಕೇಳಿದರೆ ಅಭಿವೃದ್ಧಿಯ ಜೊತೆಗಿನ ಅನಿವಾರ್ಯ ನೋವುಗಳು ಅರ್ಥವಾಗುತ್ತವೆ. ಶಕ್ತಿನಗರ ಎಂದರೆ ಒಂದು ಕಾಲದಲ್ಲಿ ಸಮೃದ್ಧಿಯ ಸಂಕೇತವಾಗಿತ್ತು. ಆದರೆ ಇಂದು ಅದು ಬೂದಿಯ ಕವಚ ಹೊದ್ದಿರುವ ರೋಗಗ್ರಸ್ತ ನಗರವಾಗಿ ಮಾರ್ಪಟ್ಟಿದೆ. ಶಕ್ತಿನಗರ ಎದುರಿಸುತ್ತಿರುವ ಗಂಭೀರ ಸಮಸ್ಯೆಗಳು: ಯಾವುದೇ ಒಂದು ಬೃಹತ್ ಯೋಜನೆಯಿಂದ ಲಾಭವಿರುವಂತೆ, ಪರಿಸರದ ಮೇಲೆ ಅದರ ಪರಿಣಾಮಗಳು ಅಷ್ಟೇ ಗಾಢವಾಗಿರುತ್ತವೆ. ಶಕ್ತಿನಗರದ ಸುತ್ತಮುತ್ತಲ ಜನ ಇಂದು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ: ಬೂದಿಯ ಮಳೆ: ಆಕಾಶದಿಂದ ಸುರಿಯುವ ಮೃತ್ಯು ಇಲ್ಲಿನ ಜನರ ಅತಿದೊಡ್ಡ ಶತ್ರು ಎಂದರೆ ಕಲ್ಲಿದ್ದಲಿನ ಬೂದಿ (Fly Ash). ಕಲ್ಲಿದ್ದಲನ್ನು ಸುಟ್ಟು ವಿದ್ಯುತ್ ತೆಗೆದ ಮೇಲೆ ಉಳಿಯುವ ಈ ಬೂದಿಯನ್ನು ಸಂಗ್ರಹಿಸಲು ಬೃಹತ್ ಬೂದಿ ಕೊಳಗಳನ್ನು (Ash Ponds) ನಿರ್ಮಿಸಲಾಗಿದೆ. ಆದರೆ, ಗಾಳಿ ಬೀಸಿದಾಗ ಈ ಕೊಳಗಳಿಂದ ಏಳುವ ಬೂದಿಯ ಧೂಳು ಇಡೀ ಆಕಾಶವನ್ನೇ ಮುಚ್ಚಿ ಬಿಡುತ್ತದೆ. ಜನರ ಮನೆಗಳು, ಗಿಡಮರಗಳು, ಬಟ್ಟೆಬರೆಗಳ ಮೇಲೆಲ್ಲಾ ಬಿಳಿ ಬೂದಿಯ ಪದರ ಕಾಣಸಿಗುತ್ತದೆ. ಊಟ ಮಾಡಲು ಕುಳಿತರೆ ತಟ್ಟೆಯಲ್ಲಿ ಬೂದಿ, ಕುಡಿಯುವ ಲೋಟದ ನೀರಿನ ಮೇಲೆ ಬೂದಿಯ ತೇಲು ಪದರ. ನಾವು ತಿನ್ನುವ ಅನ್ನದ ಜೊತೆಗೂ ಇಲ್ಲಿನ ಜನ ಬೂದಿಯ ಕಣಗಳನ್ನು ನುಂಗುತ್ತಿದ್ದಾರೆ. ಇದರಿಂದ ಜನರಿಗೆ ಉಸಿರಾಟದ ತೊಂದರೆ, ಅಸ್ತಮಾ ಮತ್ತು ಚರ್ಮದ ಕಾಯಿಲೆಗಳು ಸಾಮಾನ್ಯ ಎಂಬಂತಾಗಿವೆ. ಇಲ್ಲಿನ ಕಾರ್ಮಿಕರು ಮತ್ತು ಸ್ಥಳೀಯರಲ್ಲಿ ಶ್ವಾಸಕೋಶದ ಕಾಯಿಲೆಗಳು ಹೆಚ್ಚಾಗಿ ಕಂಡುಬರುತ್ತಿವೆ. ಬೂದಿಯ ಸಣ್ಣ ಕಣಗಳು ಶ್ವಾಸಕೋಶಕ್ಕೆ ಸೇರಿ ದೀರ್ಘಕಾಲದ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡುತ್ತಿವೆ. ಶಾಖದ ತೀವ್ರತೆ: ರಾಯಚೂರು ಮೊದಲೇ ಬಿಸಿಲ ಊರು. ಅದರಲ್ಲೂ ಶಕ್ತಿನಗರದ ವಿದ್ಯುತ್ ಕೇಂದ್ರದಿಂದ ಹೊರಬರುವ ಬೃಹತ್ ಪ್ರಮಾಣದ ಶಾಖವು ಸುತ್ತಮುತ್ತಲಿನ ತಾಪಮಾನವನ್ನು ಇನ್ನೂ 2-3 ಡಿಗ್ರಿ ಹೆಚ್ಚಿಸಿದೆ. ಬೇಸಿಗೆಯಲ್ಲಂತೂ ಇಲ್ಲಿನ ಜನರ ಬದುಕು ಅಕ್ಷರಶಃ ಕೆಂಡದ ಮೇಲಿಟ್ಟಂತಾಗುತ್ತದೆ. ಇಟ್ಟಿಗೆ ತಯಾರಿಕೆ: ಲಾಭವೋ ಅಥವಾ ಕಣ್ಣೊರೆಸುವ ತಂತ್ರವೋ? ಈ ಬೂದಿಯನ್ನು ಬಳಸಿಕೊಂಡು ಇಟ್ಟಿಗೆಗಳನ್ನು ತಯಾರಿಸುವ ಘಟಕಗಳಿವೆ. ಕಲ್ಲಿದ್ದಲು ಬೂದಿಯಿಂದ ಇಟ್ಟಿಗೆ ಮಾಡುವುದು ಪರಿಸರ ಸ್ನೇಹಿ ಎಂದು ಹೇಳಲಾಗುತ್ತದೆಯಾದರೂ, ಈ ಪ್ರಕ್ರಿಯೆಯಲ್ಲಿ ಹಾರುವ ಧೂಳನ್ನು ನಿಯಂತ್ರಿಸುವಲ್ಲಿ ವ್ಯವಸ್ಥೆ ಸಂಪೂರ್ಣ ವಿಫಲವಾಗಿದೆ. ಬೂದಿ ಸಾಗಿಸುವ ಲಾರಿಗಳು ಸರಿಯಾಗಿ ಮುಚ್ಚಲ್ಪಟ್ಟಿರುವುದಿಲ್ಲ, ಇದರಿಂದ ರಸ್ತೆಯುದ್ದಕ್ಕೂ ಬೂದಿ ಚೆಲ್ಲುತ್ತಾ ಸಾಗುತ್ತದೆ. ಈ ಇಟ್ಟಿಗೆ ಭಟ್ಟಿಗಳ ಸುತ್ತಮುತ್ತ ವಾಸಿಸುವ ಜನರ ಸ್ಥಿತಿಯಂತೂ ಹೇಳತೀರದು. ಅನಾರೋಗ್ಯದ ಸುಳಿಯಲ್ಲಿ ಬದುಕು: ಶಕ್ತಿನಗರದ ಆಸ್ಪತ್ರೆಗಳಿಗೆ ಒಮ್ಮೆ ಭೇಟಿ ನೀಡಿದರೆ ಅಲ್ಲಿನ ವಾಸ್ತವ ಅರ್ಥವಾಗುತ್ತದೆ. ಅಲ್ಲಿ ಬರುವ ಶೇ. 80 ರೋಗಿಗಳು ಎದುರಿಸುತ್ತಿರುವ ಸಮಸ್ಯೆಗಳು ಹೀಗಿವೆ: ಶ್ವಾಸಕೋಶದ ಕಾಯಿಲೆ: ಅಸ್ತಮಾ, ಬ್ರಾಂಕೈಟಿಸ್ ಮತ್ತು ಟಿಬಿ ಮಾದರಿಯ ಲಕ್ಷಣಗಳು ಇಲ್ಲಿನ ಪ್ರತಿಯೊಬ್ಬರನ್ನೂ ಕಾಡುತ್ತಿದೆ. ಬೂದಿಯ ಸಣ್ಣ ಕಣಗಳು ನೇರವಾಗಿ ಶ್ವಾಸಕೋಶದ ಆಳಕ್ಕೆ ಇಳಿದು ಉಸಿರಾಟವನ್ನೇ ಕಷ್ಟಕರವಾಗಿಸಿದೆ. ಚರ್ಮದ ಸಮಸ್ಯೆ: ಗಾಳಿಯಲ್ಲಿರುವ ರಾಸಾಯನಿಕ ಮಿಶ್ರಿತ ಬೂದಿಯಿಂದಾಗಿ ಜನರಿಗೆ ನಿರಂತರವಾಗಿ ತುರಿಕೆ, ಕಪ್ಪು ಕಲೆಗಳು ಮತ್ತು ಚರ್ಮದ ಅಲರ್ಜಿ ಕಾಡುತ್ತಿದೆ. ದೃಷ್ಟಿ ದೋಷ: ಕಣ್ಣುಗಳಲ್ಲಿ ಸದಾ ಉರಿ ಮತ್ತು ಕೆಂಪಾಗುವಿಕೆ ಇಲ್ಲಿನ ಜನರಿಗೆ ಸಾಮಾನ್ಯವಾಗಿದೆ. ‘ನಾವು ಉಸಿರಾಡುತ್ತಿಲ್ಲ, ಬೂದಿಯನ್ನು ನುಂಗುತ್ತಿದ್ದೇವೆ’ ಇಲ್ಲಿನ ಸ್ಥಳೀಯ ಹಿರಿಯರೊಬ್ಬರು ಹೇಳುವ ಮಾತು ಕರುಳು ಹಿಂಡುವಂತಿದೆ: ‘ಸರಕಾರಕ್ಕೆ ಬೆಂಗಳೂರಿನ ಲೈಟುಗಳು ಮುಖ್ಯ, ಆದರೆ ಆ ಲೈಟು ಉರಿಯಲು ನಮ್ಮ ಶ್ವಾಸಕೋಶಗಳು ಕಲ್ಲಿದ್ದಲಿನ ಒಲೆಯಾಗುತ್ತಿವೆ. ನಮ್ಮ ಮಕ್ಕಳಿಗೆ ಆಟವಾಡಲು ಮಣ್ಣಿಲ್ಲ, ಬರೀ ಬೂದಿಯಿದೆ. ನಾವು ಕುಡಿಯುವ ನೀರು ನಮಗೆ ಅಮೃತವಾಗಬೇಕಿತ್ತು, ಆದರೆ ಅದು ಸಾವಿನ ದಾರಿಯಾಗುತ್ತಿದೆ’. ಕಾರ್ಖಾನೆಯ ಚಿಮಣಿಗಳಿಂದ ಬರುವ ಹೊಗೆ ಕೇವಲ ಆಕಾಶಕ್ಕೆ ಹೋಗುವುದಿಲ್ಲ, ಅದು ಜನರ ಆಯಸ್ಸನ್ನು ಪ್ರತಿದಿನ ಕುಗ್ಗಿಸುತ್ತಿದೆ. ಇಲ್ಲಿನ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಕಣ್ಣು ಮುಚ್ಚಿ ಕುಳಿತಿದೆ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶಕ್ತಿನಗರದ ವಿದ್ಯುತ್ ಕೇಂದ್ರವು ಕರ್ನಾಟಕದ ಆಸ್ತಿ ಎಂಬುದು ನಿಜ. ಆದರೆ ಆ ಬೆಳಕಿಗಾಗಿ ಅಲ್ಲಿನ ಜನರು ತಮ್ಮ ಆರೋಗ್ಯ ಮತ್ತು ಪರಿಸರವನ್ನು ಬಲಿ ಕೊಡುತ್ತಿದ್ದಾರೆ. ಈಗಿನ ಕಾಲದಲ್ಲಿ ಕಲ್ಲಿದ್ದಲು ಆಧಾರಿತ ವಿದ್ಯುತ್ಗಿಂತ ಸೌರಶಕ್ತಿ ಮತ್ತು ಪವನಶಕ್ತಿಯಂತಹ ನವೀಕರಿಸಬಹುದಾದ ಇಂಧನಗಳತ್ತ ನಾವು ಹೆಚ್ಚು ಗಮನ ಹರಿಸಬೇಕಿದೆ. ಅಲ್ಲದೆ, ಸರಕಾರವು ಇಲ್ಲಿನ ‘ಬೂದಿ ಕೊಳ’ಗಳನ್ನು ಸರಿಯಾಗಿ ನಿರ್ವಹಿಸಿ, ಬೂದಿ ಹಳ್ಳಿಗಳಿಗೆ ಹರಡದಂತೆ ತಡೆಯಲು ಆಧುನಿಕ ತಂತ್ರಜ್ಞಾನ ಬಳಸಬೇಕಿದೆ. ಸ್ಥಳೀಯ ಜನರಿಗೆ ಉತ್ತಮ ವೈದ್ಯಕೀಯ ಸೌಲಭ್ಯ ನೀಡುವುದು ಸರಕಾರದ ಆದ್ಯತೆಯಾಗಬೇಕು. ನಮಗೆ ವಿದ್ಯುತ್ ಬೇಕು, ಆದರೆ ಅದು ಜನರ ಪ್ರಾಣದ ಬೆಲೆಯ ಮೇಲಲ್ಲ. ಶಕ್ತಿನಗರದ ಜನರು ಕರ್ನಾಟಕಕ್ಕೆ ಬೆಳಕು ನೀಡುತ್ತಿದ್ದಾರೆ. ಅದಕ್ಕೆ ಬದಲಾಗಿ ಅವರಿಗೆ ಉತ್ತಮ ಪರಿಸರ ನೀಡುವುದು ನಮ್ಮೆಲ್ಲರ ಜವಾಬ್ದಾರಿ. ಕುಡಿಯುವ ನೀರು ಮತ್ತು ಕಲುಷಿತ ಒಡಲು ಕಲ್ಲಿದ್ದಲು ಬೂದಿಯಲ್ಲಿ ಸೀಸ, ಆರ್ಸೆನಿಕ್ ಮತ್ತು ಕ್ಯಾಡ್ಮಿಯಂನಂತಹ ಭಾರೀ ಲೋಹಗಳಿರುತ್ತವೆ. ಸಂಗ್ರಹಣೆ ಮಾಡಲಾದ ಈ ಬೂದಿ ಗಾಳಿಗೆ ಹಾರಿ ಹೋಗಿ ನೇರವಾಗಿ ಕೃಷ್ಣಾ ನದಿಗೆ ಮತ್ತು ಸ್ಥಳೀಯ ಕುಡಿಯುವ ನೀರಿನ ಹೊಂಡಗಳಿಗೆ ಸೇರುತ್ತಿದೆ. ಜನರು ಅನಿವಾರ್ಯವಾಗಿ ಇದೇ ನೀರನ್ನು ಕುಡಿಯುತ್ತಿದ್ದಾರೆ. ಈ ವಿಷಕಾರಿ ಕಣಗಳು ದೇಹದೊಳಗೆ ಸೇರಿದಾಗ ಅವು ಮೂಳೆಗಳಲ್ಲಿ, ಶ್ವಾಸಕೋಶದಲ್ಲಿ ಮತ್ತು ರಕ್ತದಲ್ಲಿ ಶೇಖರಣೆಯಾಗುತ್ತವೆ. ಇದರಿಂದಾಗಿ ಚಿಕ್ಕ ವಯಸ್ಸಿನಲ್ಲೇ ಜನರು ಕಿಡ್ನಿ ವೈಫಲ್ಯ, ಮೂಳೆಗಳ ಸವೆತ ಮತ್ತು ನಿರಂತರವಾದ ಮೈಕೈ ನೋವಿನಿಂದ ಬಳಲುತ್ತಿದ್ದಾರೆ. ಶಕ್ತಿನಗರದ ಹಳ್ಳಿಯೊಂದರ ಮಗುವಿನ ಮುಖ ಸದಾ ಬಿಳಿಯಾಗಿರುವುದು ಆರೋಗ್ಯದಿಂದಲ್ಲ, ಅದು ಅಂಟಿಕೊಂಡಿರುವ ಬೂದಿಯಿಂದ!
ಚಾಮರಾಜನಗರ | ವರದಕ್ಷಿಣೆ ಕಿರುಕುಳ ಆರೋಪ: ಗೃಹಿಣಿ ಅನುಮಾನಾಸ್ಪದ ಸಾವು
ಚಾಮರಾಜನಗರ: ಚಾಮರಾಜನಗರ ಹನೂರು ತಾಲೂಕಿನ ಮಾರ್ಟಳ್ಳಿ ಸಮೀಪದ ಕೋಟೆಪೊದೆ ಗ್ರಾಮದಲ್ಲಿ ಗೃಹಿಣಿಯೋರ್ವರು ಅನುಮಾನಾಸ್ಪದವಾಗಿ ಮೃತಪಟ್ಟಿರುವ ಘಟನೆ ಬೆಳಕಿಗೆ ಬಂದಿದ್ದು, ಮೃತಳ ತಂದೆ ವರದಕ್ಷಿಣೆ ಕಿರುಕುಳದಿಂದಲೇ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ರಾಮಾಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಮೃತ ಮಹಿಳೆಯನ್ನು ಪ್ರಿಯಾ (ಶಿವಕುಮಾರ್ ಪತ್ನಿ) ಎಂದು ಗುರುತಿಸಲಾಗಿದೆ. ಮೃತಳ ತಂದೆ ನೀಡಿದ ದೂರಿನ ಪ್ರಕಾರ, ಪತಿ ಶಿವಕುಮಾರ್ ಫೈನಾನ್ಸ್ ಸಂಸ್ಥೆಯಿಂದ ಸಾಲ ಪಡೆದಿದ್ದು, ಅದರ ಕಂತುಗಳನ್ನು ತಂದೆಯಿಂದ ತರಿಸಿಕೊಳ್ಳುವಂತೆ ಪ್ರಿಯಾಳಿಗೆ ಹಿಂಸೆ ನೀಡುತ್ತಿದ್ದನು ಎನ್ನಲಾಗಿದೆ. ಈ ಕುರಿತು ಒಂದು ತಿಂಗಳ ಹಿಂದೆ ಬಂಧುಗಳು ಸೇರಿ ಬುದ್ಧಿವಾದ ಹೇಳಿದ್ದರೂ, ವರದಕ್ಷಿಣೆಗಾಗಿ ಒತ್ತಡ ಮುಂದುವರಿದಿತ್ತು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. 2025ರ ಡಿಸೆಂಬರ್ನಲ್ಲಿ 50,000 ರೂ. ನಗದು ನೀಡಿದ್ದಾಗಿ ಮೃತಳ ತಂದೆ ತಿಳಿಸಿದ್ದಾರೆ. ಫೆ.14ರ, 2026ರಂದು ಮಧ್ಯಾಹ್ನ ತಮ್ಮ ಮಕ್ಕಳು ಪ್ರಿಯಾಳನ್ನು ಭೇಟಿಯಾದಾಗ ಹೆಚ್ಚುವರಿ ವರದಕ್ಷಿಣೆಗಾಗಿ ಕಿರುಕುಳ ನೀಡುತ್ತಿರುವ ವಿಷಯ ತಿಳಿಸಿದ್ದಾಳೆ ಎನ್ನಲಾಗಿದೆ. ಸಂಜೆ ತಂದೆಯೊಂದಿಗೆ ದೂರವಾಣಿ ಮೂಲಕವೂ ಇದೇ ವಿಷಯವನ್ನು ಹಂಚಿಕೊಂಡಿದ್ದಾಳೆ ಎಂದು ದೂರಿನಲ್ಲಿ ಹೇಳಲಾಗಿದೆ. ರಾತ್ರಿ ವೇಳೆ ಶಿವಕುಮಾರ್ ಮನೆ ಹೊರಗೆ ಹೋಗಿದ್ದಾಗ, ಸುಮಾರು 10 ಗಂಟೆ ಸುಮಾರಿಗೆ ಪ್ರಿಯಾ ಮನೆಯ ಕೋಣೆಯ ಫ್ಯಾನಿಗೆ ವೇಲಿನಿಂದ ನೇಣು ಬಿಗಿದ ಸ್ಥಿತಿಯಲ್ಲಿ ಕಂಡುಬಂದಿದ್ದಾಳೆ ಎಂದು ಪಕ್ಕದ ಮನೆಯವರು ತಿಳಿಸಿದ್ದಾರೆ. ಬಳಿಕ ಕುಟುಂಬದವರು ಮೃತದೇಹವನ್ನು ಕೆಳಗಿಳಿಸಿದ್ದಾರೆ. “ವರದಕ್ಷಿಣೆ ಕಿರುಕುಳದಿಂದ ಬೇಸತ್ತು ನನ್ನ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಶಿವಕುಮಾರ್ ಮತ್ತು ಅವನ ತಾಯಿ ಶಾಂತಿ ಸಾವಿಗೆ ಕಾರಣರು” ಎಂದು ಮೃತಳ ತಂದೆ ಆರೋಪಿಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶಶಿಧರ್ ಘಟನೆ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಕಲೆಹಾಕಿದ್ದಾರೆ. ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
ಕೇರಳ | ಸರಕಾರಿ ಗೌರವದೊಂದಿಗೆ ಅತ್ಯಂತ ಕಿರಿಯ ಅಂಗಾಂಗ ದಾನಿಯ ಅಂತ್ಯಸಂಸ್ಕಾರ
ಪಟ್ಟಣಂತಿಟ್ಟ: ರಾಜ್ಯದ ಅತ್ಯಂತ ಕಿರಿಯ ಅಂಗಾಂಗ ದಾನಿ ಎನಿಸಿಕೊಂಡಿದ್ದ 10 ತಿಂಗಳ ಮಗು ಆಲಿನ್ ಶೆರೀನ್ ಅಬ್ರಹಾಂ ಅಂತ್ಯಸಂಸ್ಕಾರವನ್ನು ಜನಸಾಗರದ ನಡುವೆ ಭಾನುವಾರ ಸಂಜೆ ನೆಡುಂಗಡಪಲ್ಲಿ ಸೆಂಟ್ ಥಾಮಸ್ ಸಿಎಸ್ಐ ಚರ್ಚ್ನಲ್ಲಿ ಸಕಲ ಸರಕಾರಿ ಗೌರವಗಳೊಂದಿಗೆ ನೆರವೇರಿಸಲಾಯಿತು. ಶುಕ್ರವಾರ ಮೆದುಳು ನಿಷ್ಕ್ರಿಯಗೊಂಡಿದ್ದಾಗಿ ಘೋಷಿಸಲಾಗಿದ್ದ ಆಲಿಯನ್ ಅಂಗಾಂಗ ದಾನದ ಮೂಲಕ ನಾಲ್ಕು ಮಕ್ಕಳಿಗೆ ಜೀವ ನೀಡಿದ್ದಳು. ಆಕೆಯ ಲಿವರ್, ಕಿಡ್ನಿ, ಕಣ್ಣು ಮತ್ತು ಹೃದಯ ಕವಾಟಗಳನ್ನು ದಾನ ಮಾಡಲಾಗಿತ್ತು. ಕುಟುಂಬಕ್ಕೆ ಆದ ತುಂಬಲಾರದ ನಷ್ಟವನ್ನು ಇತರ ಮಕ್ಕಳಿಗೆ ಜೀವದಾನ ಮಾಡುವ ಮೂಲಕ ತುಂಬಿಕೊಳ್ಳಲು ಪೋಷಕರು ನಿರ್ಧರಿಸಿದ್ದರು. ಕೊಟ್ಟಾಯಂನಲ್ಲಿ ಫೆ.5ರಂದು ಪೋಷಕರು ಹಾಗೂ ಸಂಬಂಧಿಕರ ಜತೆಗೆ ಈ ಮಗು ಪ್ರಯಾಣಿಸುತ್ತಿದ್ದ ಕಾರು ಅಪಘಾತಕ್ಕೀಡಾಗಿ ಮಗುವಿಗೆ ತೀವ್ರ ಗಾಯಗಳಾಗಿದ್ದವು. ಪುಟ್ಟ ಮಗುವಿನ ಅಂಗಾಂಗ ದಾನಕ್ಕೆ ಕಾರಣರಾದ ತಂದೆ ಅರುಣ್ ಅಬ್ರಹಾಂ ಮತ್ತು ಶೆರೀನ್ ಆ್ಯನ್ ಜಾನ್ ಅವರ ಮಾನವೀಯತೆಯನ್ನು ಗೌರವಿಸುವ ಸಲುವಾಗಿ ಮಲ್ಲಪಳ್ಳಿ ಬಳಿಯ ನೆಡುಂಗದಪಳ್ಳಿಯ ವೆಲುಮನ್ನಿಲಿಗೆ ಜನಸಾಗರವೇ ಭಾನುವಾರ ಬೆಳಿಗ್ಗೆಯಿಂದ ಹರಿದಿತ್ತು. ಬೆಳಿಗ್ಗೆ 7.45ರ ವೇಳೆಗೆ ಆಲಿನ್ ಮೃತದೇಹವನ್ನು ತರಲಾಗಿತ್ತು. ಮಲ್ಲಿಗೆಯಿಂದ ಸುತ್ತಲಾಗಿದ್ದ ಪುಟ್ಟ ಮೃತದೇಹಪೆಟ್ಟಿಗೆಯಲ್ಲಿ ಪುಟ್ಟ ದಾನಿಯ ಮೃತದೇಹವನ್ನು ಇರಿಸಲಾಗಿತ್ತು. ಶೋಕಸಾಗರದ ನಡುವೆ ಪೋಷಕರು ಹಾಗೂ ಬಂಧುಗಳು ಮೃತದೇಹಪೆಟ್ಟಿಗೆಯ ಪಕ್ಕ ಇದ್ದರು. ಸಚಿವರಾದ ವೀಣಾ ಜಾರ್ಜ್, ವಿ.ಎನ್.ವಾಸವನ್, ಸಂಸದ ಸುರೇಶ್ ಗೋಪಿ ಹಾಗೂ ಹಲವು ಮಂದಿ ಜನಪ್ರತಿನಿಧಿಗಳು ಮನೆಗೆ ಭೇಟಿ ನೀಡಿ ಪುಟ್ಟ ಆತ್ಮಕ್ಕೆ ಶಾಂತಿ ಕೋರಿದರು. ಪೋಷಕರ ನಿರ್ಧಾರದ ಬಗ್ಗೆ ಮಾಧ್ಯಮಗಳ ಮೂಲಕ ತಿಳಿದು ರಾಜ್ಯದ ಮೂಲೆಮೂಲೆಗಳಿಂದ ಜನ ಆಗಮಿಸಿ ಪುಟ್ಟ ಮಗುವಿಗೆ ಅಂತಿಮ ನಮನ ಸಲ್ಲಿಸಿದರು. ಮಧ್ಯಾಹ್ನ 3 ಗಂಟೆ ವೇಳೆಗೆ ಅಪಾರ ಅಭಿಮಾನಿಗಳೊಂದಿಗೆ ಚರ್ಚ್ ಆವರಣಕ್ಕೆ ಶವಯಾತ್ರೆ ತಲುಪಿತು. ಉಕ್ಕಿ ಬರುತ್ತಿದ್ದ ಕಣ್ಣೀರಿನ ನಡುವೆಯೂ, ನಾಲ್ವರು ಮಕ್ಕಳಿಗೆ ಜೀವದಾನ ಮಾಡಿದ ಹೆಮ್ಮೆ ಇದೆ ಎಂದು ಅಜ್ಜ ರಾಜಿ ಸ್ಯಾಮ್ಯುಯೆಲ್ ಹೇಳಿದರು.
ಮಂಗಳೂರು: ಮೂಲತಃ ನಗರದ ಜೆಪ್ಪುವಿನ ಪ್ರಸಕ್ತ ಕುತ್ತಾರ್ ಶಾಂತಿಭಾಗ್ನಲ್ಲಿ ವಾಸವಾಗಿದ್ದ ಮುಹಮ್ಮದ್ ಅಲಿ ರವಿವಾರ ಸಂಜೆ ನಿಧನರಾದರು. ಮೃತರು ವಾರ್ತಾಭಾರತಿಯ ಉದ್ಯೋಗಿಯಾಗಿರುವ ಪುತ್ರ ತ್ವಾಹಿರ್ ಮತ್ತು ಅಪಾರ ಬಂಧುಬಳಗವನ್ನು ಅಗಲಿದ್ದಾರೆ. ವಿದೇಶದಲ್ಲಿ ಉದ್ಯೋಗಿಯಾಗಿದ್ದ ಅವರು ಕೆಲವು ವರ್ಷಗಳ ಹಿಂದೆ ಊರಿಗೆ ಬಂದು ನೆಲೆಸಿದ್ದರು. ಸೋಮವಾರ ಬೆಳಗ್ಗೆ ಕುತ್ತಾರ್ ಮದನಿನಗರ ಜುಮಾ ಮಸೀದಿಯ ಆವರಣದಲ್ಲಿ ದಫನ ಮಾಡಲಾಯಿತು ಎಂದು ಕುಟುಂಬದ ಮೂಲಗಳು ತಿಳಿಸಿವೆ.
‘ಅನ್ಯ’ರಾಗುತ್ತಿರುವ ವಲಸೆ ಕಾರ್ಮಿಕರು!
ದೇಶದಲ್ಲಿ ದಲಿತರ ಮೇಲೆ ದೌರ್ಜನ್ಯಗಳಿಗೆ ಸಮಾಜ ಅನಧಿಕೃತವಾಗಿ ಮಾನ್ಯತೆಯನ್ನು ನೀಡುತ್ತಾ ಬಂದಿದೆ. ಇಂದು ಇಂತಹ ದೌರ್ಜನ್ಯಗಳ ವಿರುದ್ಧ ಕಾನೂನುಗಳನ್ನು ರಚಿಸಲು ಮುಂದಾದಾಗ, ಮೇಲ್ಜಾತಿಯ ಕೆಲವು ಗುಂಪುಗಳು ಯಾವ ಕೀಳರಿಮೆಯೂ ಇಲ್ಲದೆ ಬೀದಿಗಿಳಿದು ಪ್ರತಿಭಟನೆ ನಡೆಸುವಷ್ಟರ ಮಟ್ಟಿಗೆ ಲಜ್ಜೆಯನ್ನು ಕಳೆದುಕೊಂಡಿವೆ. ಮಹಿಳೆಯರ ಮೇಲಿನ ದೌರ್ಜನ್ಯಗಳು, ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯಗಳು ಭಾರತದ ಸಾಂಸ್ಕೃತಿಕ ಹಿರಿಮೆಗಳ ಭಾಗ ಎಂಬಂತೆ ಬಿಂಬಿತವಾಗುತ್ತಿದೆ. ಇಷ್ಟಕ್ಕೂ ಗುಜರಾತ್ನಲ್ಲಿ ನಡೆದ ಸಾಮೂಹಿಕ ಹತ್ಯಾಕಾಂಡ, ಅತ್ಯಾಚಾರಗಳನ್ನು ‘ಸಾಂಸ್ಕೃತಿಕ ಪುನರುತ್ಥಾನ’ದ ಹೆಸರಿನಲ್ಲಿ ಸಮರ್ಥಿಸಿಕೊಂಡ ದೇಶ ನಮ್ಮದು. ದೋಷಿಗಳು ಎಂದು ನ್ಯಾಯಾಲಯದಿಂದ ಘೋಷಿತರಾಗಿ ಶಿಕ್ಷೆ ಅನುಭವಿಸುತ್ತಿದ್ದ ಸಾಮೂಹಿಕ ಅತ್ಯಾಚಾರ, ಕೊಲೆ ಆರೋಪಿಗಳಾಗಿರುವ 11 ಮಂದಿ ದುಷ್ಕರ್ಮಿಗಳನ್ನು ಗುಜರಾತ್ ಸರಕಾರವೇ ಬಿಡುಗಡೆಗೊಳಿಸಿದಾಗ ಆ ಆರೋಪಿಗಳಿಗೆ ಹೂಹಾರ ಹಾಕಿ, ಆರತಿ ಎತ್ತಿ ಸ್ವಾಗತಿಸಿದ ಸುದ್ದಿಗಳು ದೇಶದ ಮಾನವನ್ನು ಹರಾಜಿಗಿಟ್ಟಿತ್ತು. ಮಹಿಳೆಯರ ಮೇಲಿನ ದೌರ್ಜನ್ಯಗಳಿಗೆ ಕಠಿಣ ಕಾನೂನುಗಳನ್ನು ಮಾಡಿದಾಗಲೂ, ಅದನ್ನು ವಿರೋಧಿಸುವ ಗುಂಪುಗಳು ನಮ್ಮ ನಡುವೆ ಇವೆ. ಮತಾಂತರ ಕಾಯ್ದೆ, ಗೋಹತ್ಯೆ ನಿಷೇಧ ಕಾಯ್ದೆಗಳು ಈ ದೇಶದಲ್ಲಿ ಅಲ್ಪಸಂಖ್ಯಾತರ ಅದರಲ್ಲೂ ಮುಸ್ಲಿಮರ ಮೇಲೆ ದಾಳಿ ನಡೆಸಲು ದುಷ್ಕರ್ಮಿಗಳಿಗೆ ನೀಡಿದ ಪರೋಕ್ಷ ಪರವಾನಿಗೆಯೇ ಆಗಿವೆ. ಇದೀಗ ದೇಶ ವಲಸೆ ಕಾರ್ಮಿಕರ ಮೇಲಿನ ಹಲ್ಲೆಗಳಿಗಾಗಿ ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗುತ್ತಿದೆ. ಈ ವರ್ಷದ ಎರಡು ತಿಂಗಳಲ್ಲಿ ವಲಸೆ ಕಾರ್ಮಿಕರ ಮೇಲೆ ಬೇರೆ ಬೇರೆ ಕಾರಣಗಳಿಗಾಗಿ 20ಕ್ಕೂ ಅಧಿಕ ಹಲ್ಲೆ ಪ್ರಕರಣಗಳು ವಿವಿಧ ಠಾಣೆಗಳಲ್ಲಿ ದಾಖಲಾಗಿವೆ. ಹಲವೆಡೆ ಗುಂಪುಗಳಿಂದ ಕಾರ್ಮಿಕರ ಹತ್ಯೆಗಳು ನಡೆದಿವೆ. ಕಳೆದ ವರ್ಷ ನಾಲ್ಕು ಹೊಸ ಕಾರ್ಮಿಕ ಕಾಯ್ದೆಗಳನ್ನು ಘೋಷಿಸಿದಾಗ, ವಲಸೆ ಕಾರ್ಮಿಕರ ಬದುಕನ್ನು ಮೇಲೆತ್ತುವ ಬಗ್ಗೆ ಸರಕಾರ ಭರವಸೆಗಳನ್ನು ನೀಡಿತ್ತು. ಕಾರ್ಮಿಕರಿಗೆ ನೇಮಕಾತಿ ಪತ್ರ, ಸಾಮಾಜಿಕ ಭದ್ರತೆ, ಕನಿಷ್ಠ ವೇತನ ಇತ್ಯಾದಿ ಭರವಸೆಗಳೂ ವಲಸೆ ಕಾರ್ಮಿಕರಿಗೆ ದೊರೆತಿದ್ದವು. ಎಲ್ಲಕ್ಕಿಂತ ಮುಖ್ಯವಾಗಿ ಜುಲೈ 2026ರಿಂದ ಜೂನ್ 2027ರವರೆಗೆ ವಲಸೆ ಕಾರ್ಮಿಕರ ಸ್ಥಿತಿಗತಿಯನ್ನು ಅವಲೋಕಿಸಲು ಬೃಹತ್ ಸಮೀಕ್ಷೆಯನ್ನು ಹಮ್ಮಿಕೊಂಡಿದೆ. ವಿಪರ್ಯಾಸವೆಂದರೆ, ದೇಶಾದ್ಯಂತ ಈಗಾಗಲೇ ಈ ಸಮೀಕ್ಷೆಯನ್ನು ಕೇಸರಿಧಾರಿ ಸಂಘಪರಿವಾರ ಕಾರ್ಯಕರ್ತರು ನಡೆಸುತ್ತಿದ್ದಾರೆ. ಕಂಡ ಕಂಡ ಗುಡಿಸಲುಗಳಿಗೆ ನುಗ್ಗಿ ಅವರ ದಾಖಲೆಗಳನ್ನು ಕೇಳುವುದು ಒಂದೆಡೆಯಾದರೆ, ವಲಸೆ ಕಾರ್ಮಿಕರನ್ನು ಯಾರೂ ತಡೆದು ನಿಲ್ಲಿಸಿ ಅವರ ಪೌರತ್ವವನ್ನು ಪ್ರಶ್ನಿಸಬಹುದು ಎನ್ನುವ ಸ್ಥಿತಿ ದೇಶದಲ್ಲಿ ನಿರ್ಮಾಣವಾಗಿದೆ. ಚುನಾವಣಾ ಆಯೋಗವು ಹಮ್ಮಿಕೊಂಡಿರುವ ಮತದಾರರ ಪಟ್ಟಿಯ ತೀವ್ರ ಪರಿಷ್ಕರಣೆ ನೇರವಾಗಿ ವಲಸೆ ಕಾರ್ಮಿಕರನ್ನೇ ಗುರಿಯಾಗಿಸಿಕೊಂಡಿದೆ. ಮತದಾರರ ಪಟ್ಟಿಯಿಂದ ಹೊರಬೀಳುತ್ತಿರುವ ಕೋಟ್ಯಂತರ ಜನರಲ್ಲಿ ವಲಸೆ ಕಾರ್ಮಿಕರೇ ಅಗ್ರ ಸ್ಥಾನದಲ್ಲಿದ್ದಾರೆ. ಸರಕಾರವು ವಲಸೆ ಕಾರ್ಮಿಕರಿಗೆ ಯೋಜನೆಗಳನ್ನು ರೂಪಿಸುವುದು ಬದಿಗಿರಲಿ, ಅವರ ಮತದಾನದ ಹಕ್ಕುಗಳನ್ನೇ ಕಿತ್ತುಕೊಳ್ಳುವುದಕ್ಕೆ ಯೋಜನೆ ರೂಪಿಸುತ್ತಿದೆ. ಮತದಾರರ ಪಟ್ಟಿಯಿಂದ ಹೊರ ಬೀಳುವ ಈ ವಲಸೆ ಕಾರ್ಮಿಕರು ಭವಿಷ್ಯದಲ್ಲಿ ದೇಶದ ಪಾಲಿಗೆ ಶಾಶ್ವತವಾಗಿ ಅನ್ಯರಾಗಲಿದ್ದಾರೆ. ಕಳೆದ ವಾರ ಪಂಜಾಬ್ನ ಮೊಗಾ ಜಿಲ್ಲೆಯಲ್ಲಿ ವಲಸೆ ಕಾರ್ಮಿಕರ ತಂಡದ ಮೇಲೆ ಬೈಕ್ನಲ್ಲಿ ಬಂದ ದುಷ್ಕರ್ಮಿಗಳು ಯದ್ವಾತದ್ವಾ ಗುಂಡು ಹಾರಿಸಿದರು. ಈ ವಲಸೆ ಕಾರ್ಮಿಕರು ಪಾಕಿಸ್ತಾನಕ್ಕೋ, ಬಾಂಗ್ಲಾಕ್ಕೋ ಸೇರಿದವರಾಗಿರಲಿಲ್ಲ. ಎಲ್ಲರೂ ಬಿಹಾರ ಮೂಲದವರಾಗಿದ್ದರು. ಇದೀಗ ಪೊಲೀಸರು ದಾಳಿ ನಡೆಸಿದ ಜೋಬಲ್ ಪ್ರೀತ್ ಮತ್ತು ಆತನ ಸಹಚರ ಆಕಾಶ್ ದೀಪ್ ಎಂಬವರನ್ನು ಬಂಧಿಸಿದ್ದಾರೆ. ಮಹಾರಾಷ್ಟ್ರದ ಪುಣೆಯಲ್ಲಿ ಕಳೆದವಾರ ಪಶ್ಚಿಮ ಬಂಗಾಳದ ಪುರುಲಿಯಾ ಮೂಲದ ಸುಖೇನ್ ಮಮತೋ ಎಂಬ 24 ವರ್ಷದ ಕಾರ್ಮಿಕನನ್ನು ದುಷ್ಕರ್ಮಿಗಳು ಹತ್ಯೆ ಮಾಡಿದ್ದಾರೆ. ಈ ವಲಸೆ ಕಾರ್ಮಿಕ ಮಾಡಿದ ಮಹಾಪರಾಧ ಎಂದರೆ ಬಂಗಾಳಿ ಭಾಷೆ ಮಾತನಾಡಿರುವುದು. ಪೊಲೀಸರು ಈ ಸಂಬಂಧ ಇಬ್ಬರನ್ನು ಬಂಧಿಸಿದ್ದು, ವೈಯಕ್ತಿಕ ಗಲಾಟೆಯೇ ಕೊಲೆಗೆ ಕಾರಣ ಎಂದು ಎಫ್ಐಆರ್ನಲ್ಲಿ ಹೇಳಿದ್ದಾರೆ. ಜನಾಂಗೀಯ ದ್ವೇಷ ಈ ಹತ್ಯೆಗೆ ಕಾರಣವಾಗಿರುವುದನ್ನು ಪೊಲೀಸರು ಮರೆ ಮಾಚಿದ್ದಾರೆ. ಇದು ಬರೆ ಉತ್ತರ ಭಾರತಕ್ಕೆ ಸೀಮಿತ ಕೃತ್ಯಗಳಲ್ಲ. ತಮಿಳುನಾಡಿನ ಕೊಯಮತ್ತೂರು, ತಿರುವಳ್ಳೂರು ಮತ್ತು ಚೆನ್ನೈ ಭಾಗಗಳಲ್ಲಿ ಉತ್ತರ ಭಾರತದ ಕಾರ್ಮಿಕರ ಮೇಲೆ ತೀವ್ರ ದಾಳಿಗಳು ನಡೆದಿರುವುದು ವರದಿಯಾಗಿವೆ. ಇತ್ತೀಚೆಗೆ ತಮಿಳುನಾಡಿನಲ್ಲಿ ಪಶ್ಚಿಮ ಬಂಗಾಳದ ಸೂರಜ್ ಎಂಬ ಕಾರ್ಮಿಕನ ಮೇಲೆ ಅಪ್ರಾಪ್ತ ವಯಸ್ಕರು ಕೊಡಲಿಯಿಂದ ದಾಳಿ ಮಾಡಿದ ವೀಡಿಯೊ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ರೈಲು ಪ್ರಯಾಣದ ಸಂದರ್ಭದಲ್ಲೂ ಇಂತಹ ಹಲ್ಲೆಗಳು ನಡೆದಿರುವುದು ಮಾಧ್ಯಮಗಳಲ್ಲಿ ವರದಿಯಾಗಿವೆ. ಇತ್ತೀಚೆಗೆ ‘ಬುದ್ಧಿವಂತರ ಜಿಲ್ಲೆ’ಯಲ್ಲೂ ವಲಸೆ ಕಾರ್ಮಿಕನ ಮೇಲೆ ನಡೆದ ಹಲ್ಲೆ ಸುದ್ದಿಯಾಯಿತು. ಜಾರ್ಖಂಡ್ ಮೂಲದ ಕಾರ್ಮಿಕನ ಮೇಲೆ ನಾಲ್ವರು ಯುವಕರು ಹಲ್ಲೆ ನಡೆಸಿದ್ದೇ ಅಲ್ಲದೆ ಆತನನ್ನು ಬಾಂಗ್ಲಾ ನುಸುಳುಕೋರ ಎಂದು ನಿಂದಿಸಿದ್ದರು. ವಲಸೆ ಕಾರ್ಮಿಕರು ಬಂಗಾಳಿ ಮಾತನಾಡುವುದೇ ಅಪರಾಧ ಎನ್ನುವಂತಹ ಸ್ಥಿತಿ ನಿರ್ಮಾಣವಾಗಿದೆ. ಮಂಗಳೂರು, ಬೆಂಗಳೂರಿನಂತಹ ನಗರಗಳು ತಲೆಯೆತ್ತಿ ನಿಂತಿರುವುದು ಈ ವಲಸೆ ಕಾರ್ಮಿಕರ ಬೆವರು, ರಕ್ತದಿಂದ. ನಮ್ಮ ರಸ್ತೆಗಳು, ಸೇತುವೆಗಳು ಈ ವಲಸೆ ಕಾರ್ಮಿಕರಿಂದಲೇ ನಿರ್ಮಾಣಗೊಂಡಿವೆ. ಚಿಕ್ಕಮಗಳೂರು, ಕೊಡಗಿನಲ್ಲಿ ಕಾಫಿ ಎಸ್ಟೇಟ್ನಲ್ಲಿ ಅಸ್ಸಾಂ, ಪಶ್ಚಿಮಬಂಗಾಳದಿಂದ ಬಂದ ಕಾರ್ಮಿಕರ ಬೆವರುಗಳಿವೆ. ಇವರೇನೂ ತಾವಾಗಿಯೇ ಬಂದವರಲ್ಲ. ಕಡಿಮೆ ವೇತನಕ್ಕೆ ದುಡಿಸಬಹುದು ಎನ್ನುವ ಒಂದೇ ಕಾರಣಕ್ಕಾಗಿ ಇವರನ್ನು ಎಸ್ಟೇಟ್ ಮಾಲಕರು, ಗುತ್ತಿಗೆದಾರರು ತಾವಾಗಿಯೇ ಕರೆಸಿಕೊಂಡು ಆಶ್ರಯ ನೀಡುತ್ತಾರೆ. ಯಾವುದೇ ವೈದ್ಯಕೀಯ ಸವಲತ್ತು, ಪಿಎಫ್ ಮೊದಲಾದ ಸವತ್ತುಗಳಿಲ್ಲದೆ ದುಡಿಯುತ್ತಾರೆ. ಕೆಲಸದ ಸಂದರ್ಭದಲ್ಲಿ ದುರಂತಕ್ಕೀಡಾದರೆ ಅದಕ್ಕೆ ಸೂಕ್ತ ಪರಿಹಾರವೂ ಇವರಿಗೆ ದೊರಕುವುದಿಲ್ಲ. ಮಾಲಕರು, ಗುತ್ತಿಗೆದಾರರು ತಮ್ಮ ಕಾರ್ಯ ಮುಗಿದ ಬಳಿಕ ಅವರನ್ನು ಅತ್ಯಂತ ಅಮಾನವೀಯವಾಗಿ ತಿರಸ್ಕರಿಸುತ್ತಾರೆ. ಆಗ ಅವರಿಗೆ ‘ನುಸುಳು ಕೋರರು’ ‘ಬಾಂಗ್ಲಾ ವಲಸಿಗರು’ ಎನುವ ಹಣೆಪಟ್ಟಿ ಲಗತ್ತಿಸಲಾಗುತ್ತದೆ. ಈ ವಲಸೆ ಕಾರ್ಮಿಕರು ವೇತನ ಹೆಚ್ಚಳದ ಬಗ್ಗೆ ಮಾತನಾಡಿದರೆ ಅಥವಾ ತಮ್ಮ ಹಕ್ಕುಗಳನ್ನು ಕೇಳಿದರೆ ತಕ್ಷಣ ಅವರ ತಲೆಗೆ ದೇಶದ್ರೋಹದ ಕಿರೀಟವನ್ನು ತೊಡಿಸಲಾಗುತ್ತದೆ. ಎಷ್ಟೋ ಎಸ್ಟೇಟ್ಗಳಲ್ಲಿ ಜೀತದ ಬದುಕು ನಡೆಸುತ್ತಿರುವ ವಲಸೆ ಕಾರ್ಮಿಕರಿದ್ದಾರೆ. ಪ್ರಾದೇಶಿಕ ವಾದ, ಭಾಷಾವಾದಕ್ಕೂ ಮೊದಲು ಬಲಿಯಾಗುವುದು ಇದೇ ವಲಸೆ ಕಾರ್ಮಿಕರು. ಈ ಜನಾಂಗೀಯ ದ್ವೇಷ ಇತ್ತೀಚಿನ ದಿನಗಳಲ್ಲಿ ಸರಕಾರಿ ಪ್ರಾಯೋಜತ್ವವನ್ನು ಪಡೆದುಕೊಂಡಿರುವುದು ಆತಂಕಕಾರಿಯಾಗಿದೆ. ವಲಸೆ ಕಾರ್ಮಿಕರ ಮೇಲೆ ನಡೆಯುತ್ತಿರುವ ಈ ಜನಾಂಗೀಯ ದೌರ್ಜನ್ಯಗಳ ವಿರುದ್ಧ ಸರಕಾರ ಮಾತನಾಡದೆ ಇದ್ದರೆ ಭವಿಷ್ಯದಲ್ಲಿ ಭಾರತ ಮೂಲದ ಅನಿವಾಸಿಗಳ ವಿರುದ್ಧ ಇತರ ದೇಶಗಳೂ ಇದೇ ಮಾದರಿಯನ್ನು ಅನುಸರಿಸುವ ದಿನ ದೂರವಿಲ್ಲ.
ವಾಣಿಜ್ಯ ನಿವೇಶನ ಹರಾಜು: ಬಿಡಿಎಗೆ ಭರ್ಜರಿ 2,097ಕೋಟಿ ರೂ. ಆದಾಯ, ಕೋನದಾಸಪುರದಲ್ಲಿ ಭರ್ಜರಿ ಬೆಲೆ
ಬೆಂಗಳೂರಲ್ಲಿ ಜಮೀನಿಗೆ ಚಿನ್ನದ ಬೆಲೆ ಇದ್ದು, ಬರೋಬ್ಬರಿ 52 ಎಕರೆ ವಾಣಿಜ್ಯ ಭೂಮಿ ಮಾರಾಟ ಮಾಡುವ ಮೂಲಕ ಎಕರೆಗೆ 40.13 ಕೋಟಿ ರೂ ನಂತೆ, 2097 ಕೋಟಿ ರೂಪಾಯಿಗೆ ಮಾರಾಟವಾಗಿದೆ.
ಲಕ್ಷಾಂತರ ಭಕ್ತಸಾಗರದ ನಡುವೆ ಆರ್ಟ್ ಆಫ್ ಲಿವಿಂಗ್ ಅಂತಾರಾಷ್ಟ್ರೀಯ ಕೇಂದ್ರದಲ್ಲಿ ಮಹಾಶಿವರಾತ್ರಿ ಮಹೋತ್ಸವ
ಆರ್ಟ್ ಆಫ್ ಲಿವಿಂಗ್ ಅಂತಾರಾಷ್ಟ್ರೀಯ ಕೇಂದ್ರದಲ್ಲಿ ನಿನ್ನೆ (ಫೆ.15-ಭಾನುವಾರ) ಮಹಾಶಿವರಾತ್ರಿ ಉತ್ಸವವನ್ನು ಅದ್ದೂರಿಯಾಗಿ ಆಚರಿಸಲಾಯಿತು. ಗುರುದೇವ್ ಶ್ರೀ ರವಿ ಶಂಕರ್ ಅವರ ಸಾನಿಧ್ಯದಲ್ಲಿ ನಡೆದ ಈ ಉತ್ಸವದಲ್ಲಿ ಲಕ್ಷಾಂತರ ಭಕ್ತರು ಭಾಗವಹಿಸಿದ್ದರು. ಈ ವೇಳೆ ಮಾತನಾಡಿದ ರವಿ ಶಂಕರ್ ಅವರು, ಮಹಾಶಿವರಾತ್ರಿಯನ್ನು “ಆತ್ಮವು ಭೌತಿಕತೆಯನ್ನು ಮೀರಿ ದೈವಿಕತೆಯತ್ತ ಏರಿಹೋಗುವ ಕ್ಷಣ” ಎಂದು ಬಣ್ಣಿಸಿದರು. ಇದೇ ವೇಳೆ ಭಕ್ತರಿಗೆ ಮೂಲ ಸೋಮನಾಥ ಜ್ಯೋತಿರ್ಲಿಂಗದ ಇತ್ತೀಚೆಗೆ ಪತ್ತೆಯಾದ ಅವಶೇಷಗಳ ದರ್ಶನದ ಭಾಗ್ಯ ದೊರೆತಿದ್ದು ವಿಶೇಷವಾಗಿತ್ತು.
ಭಾರತ vs ಪಾಕಿಸ್ತಾನ ಫಲಿತಾಂಶ ಯಾವಾಗಲೂ ಒಂದೇ; ʻಬಾಪ್, ಬಾಪ್ ಹೋತಾ ಹೈʼ ಎಂದ ಅಮಿತ್ ಶಾ!
ಶ್ರೀಲಂಕಾದ ಕೊಲೊಂಬೊದಲ್ಲಿರುವ ಪ್ರೇಮದಾಸ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಭಾರತ vs ಪಾಕಿಸ್ತಾನ ಟಿ-20 ಪಂದ್ಯ, ಕ್ರಿಕೆಟ್ ಮೈದಾನದಲ್ಲಿ ಭಾರತದ ಸಾರ್ವಭೌಮತ್ವವನ್ನು ಮತ್ತೊಮ್ಮೆ ಸಾಬೀತುಪಡಿಸಿದೆ. ಐಸಿಸಿ ಪಂದ್ಯಾವಳಿಗಳಲ್ಲಿ ಪಾಕಿಸ್ತಾನ ವಿರುದ್ಧ ಗೆಲುವಿನ ನಾಗಾಲೋಟ ಮುಂದುವರೆಸಿರುವ ಭಾರತ, 8-1 ಅಂತರದ ಗೆಲುವಿನ ಮೂಲಕ ಬಾಪ್, ಬಾಪ್ ಹೋತಾ ಹೈ ಎಂಬುದನ್ನು ಸಾರಿ ಹೇಳಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಕೂಡ ಟೀಂ ಇಂಡಿಯಾಗೆ ಅಭಿನಂದನೆ ಸಲ್ಲಿಸಿದ್ದು, ತಮ್ಮ ಎಕ್ಸ್ ಪೋಸ್ಟ್ನಲ್ಲಿ ಪಾಕಿಸ್ತಾನದ ಕಾಲೆಳೆದಿದ್ದಾರೆ.
ಪಾಕ್ ಹೀನಾಯ ಸೋಲಿಗೆ ಜಾಲತಾಣಗಳಲ್ಲಿ ಮೂದಲಿಕೆ; ಡ್ಯಾನಿಶ್ ಕನೇರಿಯಾ ಒನ್ ಲೈನ್ ಟ್ವೀಟ್ ಈಗ ವೈರಲ್!
ಪಾಕಿಸ್ತಾನ ತಂಡ ಭಾರತದ ವಿರುದ್ಧ ಹೀನಾಯ ಸೋಲು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಚರ್ಚೆಯ ಸಂಗತಿಯಾಗಿಬಿಟ್ಟಿದೆ. ಅನೇಕ ಮಾಜಿ ಕ್ರಿಕೆಟಿಗರು, ಕ್ರಿಕೆಟ್ ತಜ್ಞರು, ಕ್ರಿಕೆಟ್ ಪ್ರೇಮಿಗಳು ಈ ಬಗ್ಗೆ ತರಹೇವಾರಿ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಇನ್ನು ಟ್ರೋಲಿಗರಿಗಂತೂ ಪಾಕ್ ತಂಡದ ಸೋಲು ಬಹಳ ದೊಡ್ಡ ಆಹಾರ ಆಗಿ ಬಿಟ್ಟಿದೆ. ಏತನ್ಮಧ್ಯೆ ಪಾಕಿಸ್ತಾನ ತಂಡದ ಮಾಜಿ ಸ್ಪಿನ್ನರ್ ಡ್ಯಾನಿಶ್ ಕನೇರಿಯಾ ಅವರು ಮಾಡಿರುವ ಕೇವಲ ಒಂದೇ ವಾಕ್ಯದ ಎಕ್ಸ್ ಪೋಸ್ಟ್ ತೀವ್ರ ವೈರಲ್ ಆಗಿದೆ. ಅವರು ನೇರವಾಗಿ ಪಾಕಿಸ್ತಾನ ಹೀಗೆ ಸೋಲುವುದಕ್ಕಿಂತ ಬಹಿಷ್ಕಾರಕ್ಕೇ ಅಂಟಿಕೊಂಡಿದ್ದರೇ ಚೆನ್ನಾಗಿರುತ್ತಿತ್ತು ಎಂದು ಅಭಿಪ್ರಾಯಪಟ್ಟಿದ್ದಾರೆ. ಈ ವಿಚಾರವಾಗಿ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ `ಹೀಗೆ ಸೋಲನುಭವಿಸಿ ಮುಜುಗರಕ್ಕೊಳಗಾಗುವುದಕ್ಕಿಂತ ಪಾಕಿಸ್ತಾನ ತಂಡ ಪಂದ್ಯ ಬಹಿಷ್ಕಾರ ಮಾಡಿದ್ದರೇ ಚೆನ್ನಾಗಿರುತ್ತಿತ್ತು' ಎಂದು ಕಾಲೆಳೆಧಿದ್ದಾರೆ. ಅದಕ್ಕೆ ಬಾರೀ ಪ್ರತಿಕ್ರಿಯೆ ವ್ಯಕ್ತವಾಗಿದೆ. ಒಬ್ಬ ನೆಟ್ಟಿಗರು ಸದ್ಯದ ಪರಿಸ್ಥಿತಿಯಲ್ಲಿ ಪಾಕಿಸ್ತಾನ ತಂಡ ಭಾರತದ ವಿರುದ್ಧ ಸೋಲುವುದರ ಬದಲಾಗಿ ಪಂದ್ಯವನ್ನು ಬಾಯ್ಕಾಟ್ ಮಾಡಿದರೇ ಉತ್ತಮ ಎಂದು ಅಭಿಪ್ರಾಯಪಟ್ಟಿದ್ದಾರೆ. ಮತ್ತೊಬ್ಬರು ` ತೆಗೆದುಕೊಂಡದ್ದಕ್ಕಾಗಿ ಪಾಕಿಸ್ತಾನ ತಂಡ ಈಗ ದೂಷಿಸಬೇಕಷ್ಟೇ'' ಎಂದು ಕುಟುಕಿದ್ದಾರೆ. ಡ್ಯಾನಿಶ್ ಕನೇರಿಯಾ ಅವರು ಎಂದಿನಂತೆ ಪಾಕಿಸ್ತಾನವನ್ನು ಹುರಿಯುತ್ತಿದ್ದಾರೆ ಎಂಬುದು ಮತ್ತೊಂದು ಹಾಸ್ಯಮಿಶ್ರಿತ ಅಭಿಪ್ಪಾಯವಾಗಿದೆ. ಟ್ರಂಪ್ ಮಧ್ಯಸ್ಥಿಕೆ ಇವೆಲ್ಲದರ ಮಧ್ಯೆ ಪಾಕಿಸ್ತಾನದ ಈ ಸೋಲಿಗೆ ಅಫ್ಘಾನಿಸ್ತಾನದಲ್ಲಿ ಸಂಭ್ರಮಾಚರಣೆ ನಡೆಯುತ್ತಿದೆ ಎಂದು ಪ್ರತಿಕ್ರಿಯಿಸಿದ್ದಾರೆ. ಇದಕ್ಕಿಂತಲೂ ಗಮ್ಮತ್ತು ಎಂದರೆ ಟ್ರಂಪ್ ವಿಚಾರ ಬಂದಿರುವುದು. ತಂಡ 6 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದ್ದರೆ, ಅಮೆರಿಕ 4 ಅಂಕಗಳೊಂದಿಗೆ 2ನೇ ಸ್ಥಾನದಲ್ಲಿದೆ. ಅಷ್ಟೇ ಅಂಕ ಹೊಂದಿದ್ದರೂ ರನ್ ರೇಟ್ ಕಡಿಮೆ ಇರುವ ಪಾಕಿಸ್ತಾನ ತಂಡ 3ನೇ ಸ್ಥಾನಿಯಾಗಿದೆ. ಹೀಗಾಗಿ ಭಾರತ ಮತ್ತು ಪಾಕಿಸ್ತಾನದ ಮಧ್ಯೆ ಟ್ರಂಪ್ ಮಧ್ಯಸ್ಥಿಕೆ ವಹಿಸಿದ್ದಾರೆ ಎಂದು ಒಬ್ಬರು ಕಾಲೆಳೆದಿದ್ದಾರೆ. ಟಿ20 ವಿಶ್ವಕಪ್ ಪ್ರಾರಂಭಕ್ಕೂ ಮುನ್ನ ಫೆಬ್ರವರಿ 15ರಂದು ಭಾರತದ ವಿರುದ್ಧ ಎ ಗುಂಪಿನ ಪಂದ್ಯವನ್ನು ಬಹಿಷ್ಕರಿಸುವುದಾಗಿ ಪಾಕಿಸ್ತಾನ ಘೋಷಿಸಿತ್ತು. ಬಾಂಗ್ಲಾದೇಶವನ್ನು ಟೂರ್ನಿಯಿಂದ ಹೊರಗಿಟ್ಟದ್ದನ್ನು ವಿರೋಧಿಸಿ ಈ ಕ್ರಮಕ್ಕೆ ಮುಂದಾಗಿತು. ಆದರೆ ತನ್ನ ಈ ನಿರ್ಧಾರವನ್ನು ಐಸಿಸಿಗೆ ಲಿಖಿತ ರೂಪದಲ್ಲಿ ನೀಡಿರಲಿಲ್ಲ. ಇನ್ನೇನು ಪಂದ್ಯ ಶುರುವಾಗಲು ಒಂದು ವಾರ ಇರುವಾಗ ಲಾಹೋರ್ ನಲ್ಲಿ ಐಸಿಸಿ, ಬಿಸಿಬಿ ಮತ್ತು ಪಿಸಿಬಿ ಅಧಿಕಾರಿಗಳು ಕುಳಿದು ದೀರ್ಘಕಾಲ ಸಭೆ ನಡೆಸಿದರು. ಈ ಸಭೆಯ ಬಳಿಕ ಪಾಕಿಸ್ತಾನ ತಂಡ ಭಾರತದ ವಿರುದ್ಧ ಆಡುವುದಾಗಿ ಪಾಕಿಸ್ತಾನ ಸರ್ಕಾರವೇ ಘೋಷಿಸಿತು. ಕ್ರಿಕೆಟ್ ನ ಒಳಿತಿಗಾಗಿ ತಾನು ಈ ನಿರ್ಧಾರ ಕೈಗೊಂಡಿರುವುದಾಗಿಯೂ ತಿಳಿಸಿತು. ಭಾರತ ತಂಡ ಪುಲ್ವಾಮಾ ದಾಳಿಗೆ ಪ್ರತೀಕಾರವಾಗಿ ಶುರುಮಾಡಿದ್ದ ವನ್ನು ಕೊಲಂಬೊ ಪಂದ್ಯದಲ್ಲೂ ಮುಂದುವರಿಸುತ್ತಾ ಎಂಬ ಕುತೂಹಲ ಎಲ್ಲಿರಿಗೂ ಇತ್ತು. ಈ ಬಾರಿಯೂ ಸೂರ್ಯಕುಮಾರ್ ಯಾದವ್ ಅವರು ಪಾಕಿಸ್ತಾನ ತಂಡದ ನಾಯಕ ಸಲ್ಮಾನ್ ಅಲಿ ಆಘಾ ಅವರ ಹಸ್ತಲಾಘವ ಮಾಡಲೇ ಇಲ್ಲ.
‘ಕಬ್ಬಿಣದ ಕುದುರೆಗಳು’ ಅಧ್ಯಯನ ಆಸಕ್ತರಿಗೆ ಪಠ್ಯವಾಗುವ ಕೃತಿ : ಪ್ರೊ.ಬರಗೂರು ರಾಮಚಂದ್ರಪ್ಪ
ಬೆಂಗಳೂರು: ‘ಲೇಖಕ ಹನೂರು ಚನ್ನಪ್ಪರಚಿಸಿರುವ ‘ಕಬ್ಬಿಣದ ಕುದುರೆಗಳು’ ಕಾದಂಬರಿಯು ಭಾಷಾ ವಿಜ್ಞಾನ ಮತ್ತು ಸಾಮಾಜಿಕ ನೆಲೆಯ ದೃಷ್ಟಿಯಿಂದ ಅಧ್ಯಯನ ಆಸಕ್ತರಿಗೆ ಪಠ್ಯವಾಗುವ ಕೃತಿಯಾಗಿದೆ ಎಂದು ಹಿರಿಯ ಸಾಹಿತಿ ಪ್ರೊ.ಬರಗೂರು ರಾಮಚಂದ್ರಪ್ಪ ಅಭಿಪ್ರಾಯಪಟ್ಟಿದ್ದಾರೆ. ರವಿವಾರ ನಗರದ ಜ್ಞಾನಭಾರತಿ ಆವರಣದಲ್ಲಿರುವ ವೆಂಕಟಗಿರಿಗೌಡ ಸ್ಮಾರಕ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಹನೂರು ಚನ್ನಪ್ಪ ರಚಿಸಿರುವ ‘ಕಬ್ಬಿಣದ ಕುದುರೆಗಳು’ ಕಾದಂಬರಿ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕನ್ನಡ ಕಥನ ಕ್ಷೇತ್ರದಲ್ಲಿ ನಡೆಯುತ್ತಿರುವ ಪ್ರಯೋಗಗಳ ಒಂದು ಮಾದರಿಯಾಗಿ ಕೃತಿಯನ್ನು ನೋಡಬೇಕಾಗುತ್ತದೆ. ಕಾದಂಬರಿ ಕ್ಷೇತ್ರ ವೈವಿಧ್ಯಮಯವಾದದ್ದು ಎಂದರು. ಅಭಿವ್ಯಕ್ತಿಯ ವಿನ್ಯಾಸದಲ್ಲಿ ನಿರೂಪಣೆ ತಂತ್ರ ಮತ್ತು ಭಾಷಾ ವೈವಿಧ್ಯತೆ ಸೇರಿರುತ್ತದೆ. ಈ ಹಿನ್ನೆಲೆಯಲ್ಲಿ ಕನ್ನಡ ಕಾದಂಬರಿ ಪ್ರಪಂಚ ಎಲ್ಲ ರೀತಿಯ ಮಾದರಿಗಳನ್ನು ತನ್ನಲ್ಲಿ ಅಂತರ್ಗತ ಮಾಡಿಕೊಂಡು ವಿಕಾಸಹೊಂದಿದ, ಬೆಳೆದಂತ, ಕೆಲವೊಮ್ಮೆ ಸ್ಥಿತ್ಯಂತರಕ್ಕೆ ಕಾರಣವಾದಂತ ಕ್ಷೇತ್ರವಾಗಿದೆ. ಕೆಲವು ಪ್ರಯೋಗಗಳು ಮ್ಯೂಸಿಯಂ ಮಾದರಿಯಲ್ಲಿರುತ್ತದೆ. ಪ್ರಾದೇಶಿಕತೆ ತೋರಿಸುತ್ತೇವೆಂದು ಹೇಳಿ ಪ್ರಜ್ಞಾಪೂರ್ವಕವಾಗಿ ಕೆಲವರು ಹಳ್ಳಿ ಭಾಷೆೆಯನ್ನು ಬಳಸುವಂತಹ ಕವಿಗಳು, ಕಾದಂಬರಿಕಾರರು ನಮ್ಮಲ್ಲಿದ್ದಾರೆ ಎಂದು ಬರಗೂರು ರಾಮಚಂದ್ರಪ್ಪತಿಳಿಸಿದರು. ಎಲ್ಲಿ ಬದುಕು ಸ್ಥಗಿತವಾಗಿರುವುದನ್ನು ಹೇಳುತ್ತದೋ ಅಂತಹ ಕೃತಿಗಳು ಮ್ಯೂಸಿಯಂ ಮಾದರಿಯಲ್ಲಿರುತ್ತದೆ. ಎಲ್ಲಿ ಬದುಕಿನ ಚಲನಶೀಲತೆಯನ್ನು ಗ್ರಹಿಸಿ, ಆ ಬುದಕಿನ ಚಲನಶೀಲತೆಯನ್ನು ತನ್ನ ಆತ್ಮಶಕ್ತಿಯಾಗಿ ಪಡೆದುಕೊಂಡಿರುತ್ತದೊ, ಅಂತಹ ಕಾದಂಬರಿಗಳು ಪ್ರಯೋಗಗಳಾಗಿ ಮಾತ್ರ ಉಳಿಯುವುದಿಲ್ಲ. ಯಾವಾಗ ಶಕ್ತಿ ರಾಜಕಾರಣ ಸಾಹಿತ್ಯ ಕ್ಷೇತ್ರದ ವಿಮರ್ಶಾ ಮಾನದಂಡಗಳಾಗಿ ರೂಪುಗೊಳ್ಳುತ್ತದೊ, ಅಂತಹ ಸಂದರ್ಭದಲ್ಲಿ ನಿಜವಾದ ಸಾಹಿತ್ಯ ಕೃತಿಗಳ ಬಗ್ಗೆ ನಡೆಯಬೇಕಾದ ಚರ್ಚೆ ಅದೆಲ್ಲವೂ ನಿರ್ಲಕ್ಷಕ್ಕೆ ಒಳಗಾಗುತ್ತದೆ ಎಂದು ಅವರು ಹೇಳಿದರು. ಪ್ರಯೋಗಗಳೇ ಪರಂಪರೆಯಾದಾಗ ಅದಕ್ಕೆ ಸಾಹಿತ್ಯ ಕ್ಷೇತ್ರದಲ್ಲಿ ಒಂದು ಗಟ್ಟಿಯಾದ ನೆಲೆಯಿರುತ್ತದೆ. ಪ್ರಯೋಗ ಪ್ರಯೋಗಕ್ಕಷ್ಟೇ ಸೀಮಿತವಾದರೆ, ಅದು ತಾತ್ಕಾಲಿಕವಾಗಿರುತ್ತದೆ. ಆದರೆ ಅದಕ್ಕೆ ನಿರಂತರತೆ ಇರುವುದಿಲ್ಲ. ಆದರೆ ನಿಜವಾದ ಪ್ರಯೋಗಗಳು ಒಂದು ಪರಂಪರೆಯಾಗುವ ಶಕ್ತಿಯನ್ನು ಪಡೆದುಕೊಳ್ಳಬೇಕಾಗಿರುತ್ತದೆ. ಕನ್ನಡ ಕಾದಂಬರಿ ಕ್ಷೇತ್ರ ಎಷ್ಟು ಪ್ರಯೋಗ ಶೀಲವಾಗಿದೆ ಎಂದರೆ ಸರಳತೆಯಿಂದಲೇ ಸಂಕೀರ್ಣ ವಿಷಯಗಳನ್ನು ಹೇಳಿದ ಕಾದಂಬರಿಗಳು ನಮ್ಮಲ್ಲಿ ಇದ್ದಾವೆ ಎಂದು ಬರಗೂರು ರಾಮಚಂದ್ರಪ್ಪ ನುಡಿದರು. ಕಾರ್ಯಕ್ರಮದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಆಯುಕ್ತ ಕೆ.ಎ.ದಯಾನಂದ, ಅಂಕಣಕಾರ ರಘುನಾಥ್ ಚ.ಹ., ಸಾಹಿತ್ಯ ಅಕಾಡಮಿ ಅಧ್ಯಕ್ಷ ಎಲ್.ಎನ್.ಮುಕುಂದರಾಜ್, ಕೃತಿಕಾರ ಹನೂರು ಚನ್ನಪ್ಪ ಭಾಗವಹಿಸಿದ್ದರು.
ಶ್ರೀನಿವಾಸ ಜೋಕಟ್ಟೆಯವರ ‘ಅದೆಲ್ಲಾ ಬಿಟ್ಟು’ ಕೃತಿಗೆ ʼಕೆ.ವಾಸುದೇವಾಚಾರ್ ದತ್ತಿ ಪ್ರಶಸ್ತಿʼ
ಬೆಂಗಳೂರು : ಪತ್ರಕರ್ತ ಶ್ರೀನಿವಾಸ ಜೋಕಟ್ಟೆ ಅವರು ರಚಿಸಿರುವ ‘ಅದೆಲ್ಲಾ ಬಿಟ್ಟು’ ಕಥಾಸಂಕಲನಕ್ಕೆ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ ನೀಡುವ ಕೆ.ವಾಸುದೇವಾಚಾರ್ ದತ್ತಿ ಪ್ರಶಸ್ತಿಗೆ ಆಯ್ಕೆಯಾಗಿದೆ. ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ ಬೆಂಗಳೂರು ಇವರು ಜನವರಿಯಿಂದ ಡಿಸೆಂಬರ್ 2024ರ ಅಂತ್ಯದವರೆಗೆ ಪ್ರಕಟವಾದ ಒಟ್ಟು 54 ಪ್ರಕಾರದ ದತ್ತಿಗಳ 58 ಪ್ರಶಸ್ತಿಗಳಿಗೆ ಕೃತಿಗಳನ್ನು ಬರಹಗಾರರಿಂದ ಆಹ್ವಾನಿಸಿದ್ದರು. ರಾಜ್ಯ, ದೇಶ ಮತ್ತು ವಿದೇಶಗಳಿಂದ ಸುಮಾರು 900 ಕೃತಿಗಳು ಸ್ಪರ್ಧೆಗೆ ಬಂದಿದ್ದು, ಸಾಹಿತಿ ಡಾ.ಕೆ.ಮರುಳಸಿದ್ದಪ್ಪ ಅವರ ಅಧ್ಯಕ್ಷತೆಯಲ್ಲಿ 19 ಜನ ಪರಿಣಿತ ಸದಸ್ಯರನ್ನೊಳಗೊಂಡ ಸಮಿತಿಯಲ್ಲಿ ಆಯಾ ಪ್ರಕಾರಗಳಲ್ಲಿ ವಿದ್ವತ್ ಹೊಂದಿದ ಸದಸ್ಯರ 5 ತಂಡಗಳನ್ನು ರಚಿಸಿ ಪುಸ್ತಕಗಳನ್ನು ಆಯ್ಕೆ ಮಾಡಲಾಗಿದೆ. ಶ್ರೀನಿವಾಸ ಜೋಕಟ್ಟೆ ಈಗಾಗಲೇ 46 ಕೃತಿಗಳನ್ನು ಪ್ರಕಟಿಸಿದ್ದು, ಅವರ ಏಳು ಕೃತಿಗಳಿಗೆ ಈ ತನಕ ವಿವಿಧ ಪ್ರಶಸ್ತಿಗಳು ದೊರೆತಿವೆ. ಮಂಗಳೂರು ವಿವಿ ದ್ವಿತೀಯ ಬಿಕಾಂ ಪಠ್ಯದಲ್ಲೂ ಇವರ ಕತೆ ಆಯ್ಕೆಯಾಗಿತ್ತು. ಕರ್ನಾಟಕ ಸಾಹಿತ್ಯ ಅಕಾಡಮಿ ಪುಸ್ತಕ ಪ್ರಶಸ್ತಿ, ವರ್ಧಮಾನ ಸಾಹಿತ್ಯ ಪ್ರಶಸ್ತಿ, ಸಾಹಿತ್ಯಸೇತು ಪ್ರಶಸ್ತಿ, ವಿಶ್ವೇಶ್ವರಯ್ಯ ರಾಷ್ಟ್ರೀಯ ಸಾಹಿತ್ಯ ಪ್ರಶಸ್ತಿ, ವಿಕಾಸ ಪುಸ್ತಕ ಬಹುಮಾನ, ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನದ ಸಾಹಿತ್ಯ ಪ್ರಶಸ್ತಿ, ಇದೀಗ ಕಸಾಪದ ಕೆ.ವಾಸುದೇವಾಚಾರ್ ದತ್ತಿ ಪ್ರಶಸ್ತಿ ದೊರೆತಿದೆ ಎಂದು ಆಡಳಿತಾಧಿಕಾರಿ ಕೆ.ಎಂ.ಗಾಯಿತ್ರಿ ಮಾಹಿತಿ ನೀಡಿದ್ದಾರೆ.
ಪಡಿತರ ವ್ಯವಸ್ಥೆಗೆ ‘ಡಿಜಿಟಲ್ ಕರೆನ್ಸಿ’ಯ ಸ್ಪರ್ಶ
ಹೊಸದಿಲ್ಲಿ : ಪಾರದರ್ಶಕತೆ ಮತ್ತು ತ್ವರಿತ ಸೇವೆಗಾಗಿ ಡಿಜಿಟಲೀಕರಣಕ್ಕೆ ಒತ್ತು ನೀಡಿರುವ ಕೇಂದ್ರ ಸರಕಾರ, ಇದೀಗ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯಲ್ಲಿ ಡಿಜಿಟಲೀಕರಣದ ಮೂಲಕ ಹೊಸದೊಂದು ಮುನ್ನುಡಿ ಬರೆದಿದೆ. ಪ್ರಧಾನಿ ಮೋದಿ ಮಾರ್ಗದರ್ಶನ ಹಾಗೂ ಕೇಂದ್ರ ಆಹಾರ ಸಚಿವ ಪ್ರಹ್ಲಾದ್ ಜೋಶಿಯವರ ದೂರದೃಷ್ಟಿಯಂತೆ ಈಗಾಗಲೇ ‘ಒನ್ ನೇಷನ್ ಒನ್ ರೇಷನ್ ಕಾರ್ಡ್’, ಅನ್ನಚಕ್ರ ಹೀಗೆ ವಿವಿಧ ಮಹತ್ವದ ಕಾರ್ಯಕ್ರಮ ಅನುಷ್ಠಾನಕ್ಕಿಳಿದ ಕೇಂದ್ರ ಸರಕಾರ, ಇದೀಗ ಇದೇ ಮೊದಲ ಬಾರಿ ಸೆಂಟ್ರಲ್ ಬ್ಯಾಂಕ್ ಡಿಜಿಟಲ್ ಕರೆನ್ಸಿ ಆಧಾರಿತವಾಗಿ ‘ಡಿಜಿಟಲ್ ಆಹಾರ ಕೂಪನ್ ವ್ಯವಸ್ಥೆ ರೂಪದಲ್ಲಿ ಮಹತ್ವದ ಮೈಲಿಗಲ್ಲು ಸ್ಥಾಪಿಸಿದೆ. ಕೆಲ ವರ್ಷಗಳಲ್ಲಿ ಕೇಂದ್ರ ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆ, ದೇಶದಲ್ಲಿ ಪಡಿತರ ವ್ಯವಸ್ಥೆಯ ಸಮಗ್ರ ಡಿಜಿಟಲ್ ರೂಪಾಂತರ ಕೈಗೊಂಡಿದ್ದು, ಪಾರದರ್ಶಕತೆ, ಪೋರ್ಟಬಿಲಿಟಿ ವ್ಯವಸ್ಥೆ ಪಡಿತರ ವಿತರಣೆಯನ್ನು ಅತ್ಯಂತ ಪಾರದರ್ಶಕ ಮತ್ತು ತ್ವರಿತಗೊಳಿಸಿದೆ. ಇದರಿಂದ ನ್ಯಾಯ ಬೆಲೆ ಅಂಗಡಿಯವರಿಗೆ ತಕ್ಷಣವೇ ಕಮಿಷನ್ ಹಂಚಿಕೆ, ಫಲಾನುಭವಿಗಳಿಗೆ ಕ್ಷಣಾರ್ಧದಲ್ಲೇ ರೇಷನ್ ವಿತರಣೆ...ಹೀಗೆ ಪಡಿತರದ ಸಂಪೂರ್ಣ ವ್ಯವಸ್ಥೆ ಡಿಜಿಟಲ್ ಕರೆನ್ಸಿಗೆ ರೂಪಾಂತರವಾಗಿ ಪಾರದರ್ಶಕತೆಯತ್ತ ಇಟ್ಟ ದಿಟ್ಟ ಹೆಜ್ಜೆಯಾಗಿ ಗುರುತಿಸಿಕೊಳ್ಳುತ್ತಿದೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಪಾತ್ರವೂ ಇದರಲ್ಲಿ ಅಡಕವಾಗಿದೆ ಎಂಬುದು ವಿಶೇಷ. ಎಲ್ಲೆಲ್ಲಿ ಯೋಜನೆ? ಭಾರತೀಯ ರಿಸರ್ವ್ ಬ್ಯಾಂಕ್ ಮತ್ತು ಗುಜರಾತ್ ರಾಜ್ಯ ಸರಕಾರದ ಸಹಯೋಗದೊಂದಿಗೆ ಸದ್ಯಕ್ಕೆ ಮೊದಲನೇ ಹಂತದಲ್ಲಿ ಅಹಮದಾಬಾದ್, ಆನಂದ್, ದಾಹೋದ್ ಮತ್ತು ಸಬರಮತಿ ಜಿಲ್ಲೆಗಳಲ್ಲಿ ಈ ‘ಡಿಜಿಟಲ್ ಆಹಾರ ಕರೆನ್ಸಿ’ ಪ್ರಾರಂಭವಾಗಿದೆ. ಮುಂದಿನ ಹಂತದಲ್ಲಿ ಪುದುಚೇರಿ, ಚಂಡೀಗಢ, ದಾದ್ರಾ ಮತ್ತು ನಗರ ಹವೇಲಿ ಕೇಂದ್ರಾಡಳಿತ ಪ್ರದೇಶಗಳಲ್ಲಿ ಪ್ರಾರಂಭಿಸಲಾಗುವುದು ಎಂದು ಸಚಿವ ಜೋಶಿ ಘೋಷಿಸಿದರು.
ಮಹಿಳೆಯರ ಟಿ-20 ಪಂದ್ಯ : ಆಸ್ಟ್ರೇಲಿಯ ವಿರುದ್ಧ ಭಾರತಕ್ಕೆ ಜಯ
ಸಿಡ್ನಿ, ಫೆ.15: ಮಳೆಬಾಧಿತ ಮೊದಲ ಮಹಿಳೆಯರ ಟಿ-20 ಪಂದ್ಯದಲ್ಲಿ ಭಾರತ ಕ್ರಿಕೆಟ್ ತಂಡವು ಆತಿಥೇಯ ಆಸ್ಟ್ರೇಲಿಯ ತಂಡವನ್ನು ಡಿಎಲ್ಎಸ್ ನಿಯಮದಡಿ 21 ರನ್ಗಳ ಅಂತರದಿಂದ ಮಣಿಸಿತು. ರವಿವಾರ ನಡೆದ ಪಂದ್ಯದಲ್ಲಿ ಆಸ್ಟ್ರೇಲಿಯ ತಂಡವನ್ನು 133 ರನ್ಗಳಿಗೆ ನಿಯಂತ್ರಿಸಿದ ಭಾರತ ತಂಡವು ರನ್ ಚೇಸ್ ವೇಳೆ 5.1 ಓವರ್ಗಳಲ್ಲಿ 1 ವಿಕೆಟ್ ನಷ್ಟಕ್ಕೆ 50 ರನ್ ಗಳಿಸಿದಾಗ ಪಂದ್ಯಕ್ಕೆ ಮಳೆ ಅಡ್ಡಿಯಾಯಿತು. ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ಮೊದಲು ಫೀಲ್ಡಿಂಗ್ ಆಯ್ದುಕೊಂಡ ಭಾರತ ತಂಡವು ಪರಿಣಮಕಾರಿ ಬೌಲಿಂಗ್ ಮಾಡಿ ಆತಿಥೇಯರನ್ನು ಕಟ್ಟಿ ಹಾಕಿತು. ನಾಲ್ಕು ವಿಕೆಟ್ ಗೊಂಚಲು ಪಡೆದ ಅರುಂಧತಿ ರೆಡ್ಡಿ (4-22)ಬೌಲಿಂಗ್ ದಾಳಿಯ ಸಾರಥ್ಯ ವಹಿಸಿದರು. ಆಸ್ಟ್ರೇಲಿಯವು 18 ಓವರ್ಗಳಲ್ಲಿ ಗಂಟುಮೂಟೆ ಕಟ್ಟಿತು. ಬೆಥ್ ಮೂನಿ(5 ರನ್) ಅವರು ರೇಣುಕಾ ಸಿಂಗ್ ಬೌಲಿಂಗ್ನಲ್ಲಿ ವಿಕೆಟ್ ಒಪ್ಪಿಸಿದರು. ಜಾರ್ಜಿಯಾ ವೊಲ್(18 ರನ್, 10 ಎಸೆತ) ಉತ್ತಮ ಆರಂಭ ಸದುಪಯೋಗಪಡಿಸಿಕೊಳ್ಳುವಲ್ಲಿ ವಿಫಲರಾದರು. ಅಂತರ್ರಾಷ್ಟ್ರೀಯ ಕ್ರಿಕೆಟ್ನಲ್ಲಿ 20ನೇ ವರ್ಷಕ್ಕೆ ಕಾಲಿಟ್ಟಿರುವ ಎಲ್ಲಿಸ್ ಪೆರ್ರಿ (20 ರನ್) ಅವರು ಲಿಚ್ಫೀಲ್ಡ್ (26 ರನ್) ಅವರೊಂದಿಗೆ ಐದನೇ ವಿಕೆಟ್ಗೆ ನಿರ್ಣಾಯಕ 41 ರನ್ ಜೊತೆಯಾಟ ನಡೆಸಿದರು. ಗೆಲ್ಲಲು 134 ರನ್ ಬೆನ್ನಟ್ಟಿದ ಭಾರತ ಪರ ಶೆಫಾಲಿ ವರ್ಮಾ 11 ಎಸೆತಗಳಲ್ಲಿ 21 ರನ್ ಗಳಿಸಿದರು. ಜೋರಾಗಿ ಮಳೆ ಸುರಿದಾಗ ಸ್ಮತಿ ಮಂಧಾನ (ಔಟಾಗದೆ 16, 17 ಎಸೆತ) ಹಾಗೂ ಜೆಮಿಮಾ ರೋಡ್ರಿಗಸ್(ಔಟಾಗದೆ 9, 3 ಎಸೆ) ಒಂದು ವಿಕೆಟ್ ನಷ್ಟಕ್ಕೆ 50 ರನ್ ಕಲೆ ಹಾಕಿದರು. ಡಿಎಲ್ಎಸ್ ಲೆಕ್ಕಾಚಾರದ ಪ್ರಕಾರ ಮುನ್ನಡೆಯಲ್ಲಿತ್ತು.
ರೇಟ್ಕಾರ್ಡ್ ಆಧಾರದಲ್ಲಿ ಔಷಧಿ ಖರೀದಿ, ಸರಕಾರಕ್ಕೆ ಹೊರೆ : ಆರೋಪ
ಬೆಂಗಳೂರು : ಕಾರ್ಮಿಕ ಇಲಾಖೆ ಅಧೀನದ ನೌಕರರ ರಾಜ್ಯ ವಿಮಾ ನಿಗಮವು (ಇಎಸ್ಐಎಸ್), ಕೋಟ್ಯಂತರ ರೂ. ಮೌಲ್ಯದ ಜೀವ ರಕ್ಷಕ ಔಷಧ ಮತ್ತು ಶಸ್ತ್ರಚಿಕಿತ್ಸಾ ಪರಿಕರಗಳನ್ನು ಟೆಂಡರ್ ಬದಲು ರೇಟ್ಕಾರ್ಡ್ (ಆರ್ಸಿ) ಆಧಾರದಲ್ಲಿ ಖರೀದಿಸಲು ಮುಂದಾಗಿದ್ದು, ಇದರಿಂದ ಕೇಂದ್ರ ಮತ್ತು ರಾಜ್ಯ ಸರಕಾರಗಳಿಗೆ ಹೊರೆಯಾಗುವ ಸಾಧ್ಯತೆ ಇದೆ ಎನ್ನುವ ಆರೋಪ ಕೇಳಿಬಂದಿದೆ. ಪ್ರತಿ ವರ್ಷ ಕೇಂದ್ರ ಮತ್ತು ರಾಜ್ಯ ಸರಕಾರಗಳಿಂದ ಇಲಾಖೆಗೆ ಹತ್ತಾರು ಕೋಟಿ ರೂ.ಅನುದಾನ ಬರುತ್ತದೆ. ಈ ಅನುದಾನ ಬಳಸಿಕೊಂಡು ಇಲಾಖೆ ವ್ಯಾಪ್ತಿಯ ಇಎಸ್ಐಎಸ್ ಅಧಿಕಾರಿಗಳು, ನಿಯಮದಂತೆ ಟೆಂಡರ್ ಮೂಲಕ ಎಲ್-1 ಪಡೆದ ಕಂಪೆನಿಗಳಿಂದ ಔಷಧಗಳು ಮತ್ತು ಶಸ್ತ್ರಚಿಕಿತ್ಸಾ ಪರಿಕರಗಳನ್ನು ಖರೀದಿಸಬೇಕಿತ್ತು. ಈ ಸಂಬಂಧ 2 ವರ್ಷಗಳ ಹಿಂದೆಯೇ ಇಲಾಖೆಯು ಟೆಂಡರ್ ಅನ್ವಯ ಔಷಧ ಖರೀದಿಸಿ ಆಸ್ಪತ್ರೆ ಮತ್ತು ಡಿಸ್ಪೆನ್ಸರಿಗಳಿಗೆ ಸರಬರಾಜು ಮಾಡಿತ್ತು. ಆದರೆ, ಈ ಬಾರಿ ಹೊಸದಿಲ್ಲಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಇಎಸ್ಐಎಸ್, ಜನೌಷಧ ಕೇಂದ್ರಗಳಲ್ಲಿ ರೇಟ್ ಕಾರ್ಡ್ ಮೂಲಕ ಔಷಧ ಖರೀದಿಸಲು 2026ರ ಸೆ.16ರವರೆಗೆ ಒಪ್ಪಂದ ಮಾಡಿಕೊಂಡಿದೆ. ಆದ್ದರಿಂದ, ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಇಎಸ್ಐಎಸ್ ವ್ಯಾಪ್ತಿಯ ಆಸ್ಪತ್ರೆಗಳು ಮತ್ತು ವೈದ್ಯಕೀಯ ಕಾಲೇಜುಗಳು, ಟೆಂಡರ್ ಬದಲು ಸ್ಥಳೀಯ ಸರಬರಾಜುದಾರರು ಸಿದ್ಧಪಡಿಸಿರುವ ರೇಟ್ ಕಾರ್ಡ್ ಆಧಾರದಲ್ಲಿ ಸರ್ಜಿಕಲ್ ಐಟಮ್ಸ್ ಖರೀದಿಸುತ್ತಿವೆ. ಇದರ ಪರಿಣಾಮವಾಗಿ 2 ರೂಪಾಯಿ ಬೆಲೆಯ ಚುಚ್ಚುಮದ್ದು 10 ರೂಪಾಯಿಗಳಂತೆ ಖರೀದಿಸಲಾಗುತ್ತಿದೆ. ಜತೆಗೆ, ಇಂತಹ 25ಕ್ಕೂ ಅಧಿಕ ಶಸ್ತ್ರಚಿಕಿತ್ಸಾ ಪರಿಕರಗಳನ್ನು ನಿರ್ದಿಷ್ಟ ದರಗಿಂತ ದುಪ್ಪಟ್ಟು ದರದಲ್ಲಿ ಬೇಕಾಬಿಟ್ಟಿಯಾಗಿ ಖರೀದಿಸುತ್ತಿರುವುದರಿಂದ ಸರಕಾರದ ಬೊಕ್ಕಸಕ್ಕೆ ಹತ್ತಾರು ಕೋಟಿ ರೂ.ನಷ್ಟವಾಗಲಿದೆ ಎನ್ನುವ ಮಾತುಗಳು ಕೇಳಿಬಂದಿದೆ.ಆರೋಗ್ಯ ಇಲಾಖೆ ಅಧೀನದದಲ್ಲಿ ಕಾರ್ಯನಿರ್ವಹಿಸುತ್ತಿರುವ ರಾಜ್ಯ ವೈದ್ಯಕೀಯ ಸರಬರಾಜು ನಿಗಮ (ಕೆಎಸ್ಎಂಸಿಎಲ್), ಕರ್ನಾಟಕ ಸಾರ್ವಜನಿಕ ಸಂಗ್ರಹಣೆಯಲ್ಲಿನ ಪಾರದರ್ಶಕತೆ ಕಾಯ್ದೆ (ಕೆಟಿಪಿಪಿ) ಅನ್ವಯ ಟೆಂಡರ್ ನಡೆಸಿ ಅರ್ಹತೆ ಪಡೆದ ಕಂಪೆನಿಗಳಿಂದ ಪ್ರತಿ ವರ್ಷ ನೂರಾರು ಕೋಟಿ ರೂ. ಮೌಲ್ಯದ ಔಷಧ ಮತ್ತು ಶಸ್ತ್ರಚಿಕಿತ್ಸಾ ಪರಿಕರಗಳನ್ನು ಖರೀದಿಸುತ್ತಿದೆ. ಜಿಲ್ಲಾ, ತಾಲೂಕು ಆಸ್ಪತ್ರೆ, ಸಮುದಾಯ, ಆರೋಗ್ಯ ಕೇಂದ್ರ, ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ನಗರ ಆರೋಗ್ಯ ಕೇಂದ್ರಗಳಿಗೆ ಉಚಿತವಾಗಿ ಕೆಎಸ್ಎಂಸಿಎಲ್ ಔಷಧಗಳನ್ನು ಪೂರೈಸುತ್ತಿದೆ. ಕಾರ್ಮಿಕ ಇಲಾಖೆಯ ವ್ಯಾಪ್ತಿಗೆ ಬರುವ ಇಎಸ್ಐಎಸ್, ಕೆಎಸ್ಎಂಸಿಎಲ್ ಮಾದರಿಯಂತೆ ಟೆಂಡರ್ ನಡೆಸಿ ಐಎಸ್ಐ ಆಸ್ಪತ್ರೆಗಳು ಮತ್ತು ಡಿಸ್ಪೆನ್ಸರಿಗಳಿಗೆ ಔಷಧ, ಶಸ್ತ್ರಚಿಕಿತ್ಸಾ ಪರಿಕರಗಳನ್ನು ಖರೀದಿಸಿ ಸರಬರಾಜು ಮಾಡಬೇಕು. ಟೆಂಡರ್ ಮೂಲಕವೇ ಔಷಧ ಖರೀದಿಸಿದರೆ ಕಡಿಮೆ ದರ ಬೀಳುತ್ತದೆ. ಆದರೆ, ರೇಟ್ ಕಾರ್ಡ್ ಆಧಾರದಲ್ಲಿ ಖರೀದಿಸಿದರೆ 1 ಕೋಟಿ ರೂ. ಮೌಲ್ಯದ ಸರ್ಜಿಕಲ್ ಐಟಮ್ಸ್ಗೆ 2-3 ಕೋಟಿ ರೂ. ನೀಡಬೇಕಾಗುತ್ತದೆ. ಹಣ ಮಾಡುವುದಕ್ಕಾಗಿ ಸರಬರಾಜುದಾರರು ರೇಟ್ ಕಾರ್ಡ್ ಸಿದ್ಧಪಡಿಸಿ ಇಎಸ್ಐಎಸ್ಗೆ ಸಲ್ಲಿಸಿದ್ದಾರೆ ಎಂದು ಗೊತ್ತಾಗಿದೆ. ಹಣ ಪಾವತಿ ವಿಳಂಬ ಔಷಧ ಪೂರೈಸಿರುವ 100ಕ್ಕೂ ಅಧಿಕ ಔಷಧ ಕಂಪೆನಿಗಳಿಗೆ ಹಲವು ತಿಂಗಳಿಂದ ಹಣ ಪಾವತಿಯಾಗಿಲ್ಲ. ಇಎಸ್ಐಎಸ್ ಆಸ್ಪತ್ರೆ ಮತ್ತು ಡಿಸ್ಪೆನ್ಸರಿಗಳಿಗೆ ಕೋಟ್ಯಂತರ ರೂ.ಮೌಲ್ಯದ ವಿವಿಧ ಬಗೆಯ ಜೀವ ರಕ್ಷಕ ಮತ್ತು ಸಾಮಾನ್ಯ ಔಷಧಗಳನ್ನು ಕಂಪೆನಿಗಳು ಸರಬರಾಜು ಮಾಡಿವೆ. ಅಂದಾಜು 60 ಕೋಟಿ ರೂ. ಮೊತ್ತದ ಔಷಧ ಬಿಲ್ಗಳು ಬಾಕಿ ಉಳಿದಿವೆ. ಇಎಸ್ಐಎಸ್ ನಿಯಮದಂತೆ 4ರಿಂದ 6 ವಾರದೊಳಗೆ ಔಷಧ ಪೂರೈಸಿದ್ದ ಕಂಪೆನಿಗಳಿಗೆ ಹಣ ಪಾವತಿಸುವುದು ಅಧಿಕಾರಿಗಳ ಕರ್ತವ್ಯ. ಆದರೆ, 2025ರ ಜೂನ್ನಿಂದ ಈ ಔಷಧ ಬಿಲ್ಗಳಿಗೆ ಹಣ ಪಾವತಿಯಾಗಿಲ್ಲ. ಕಮಿಷನ್ ಆಸೆಗಾಗಿ ಅಧಿಕಾರಿಗಳೇ ಬಿಲ್ಗಳನ್ನು ಬಾಕಿ ಉಳಿಸಿಕೊಂಡಿರುವ ಬಗ್ಗೆ ಆರೋಪಗಳಿವೆ. ರಾಜ್ಯದಲ್ಲಿ 8 ಇಎಸ್ಐಎಸ್, 140ಕ್ಕೂ ಅಧಿಕ ಡಿಸ್ಪೆನ್ಸರಿಗಳಿವೆ. ನವಜಾತ ಶಿಶುಗಳಿಗೆ ಬರುವ ಸೂಕ್ಷ್ಮಕಾಯಿಲೆಗಳಿಂದ ಹಿಡಿದು ಎಲ್ಲ ತರಹದ ಚಿಕಿತ್ಸೆಗಳು ಕಾರ್ಮಿಕರಿಗೆ ಮತ್ತು ಅವರ ಅವಲಂಬಿತರ ಕುಟುಂಬಗಳಿಗೆ ಈ ಆಸ್ಪತ್ರೆಗಳಲ್ಲಿ ಉಚಿತವಾಗಿ ಚಿಕಿತ್ಸೆ ಸೌಲಭ್ಯ ನೀಡಲಾಗುತ್ತಿದೆ. ಆದರೆ, ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಔಷಧ ಖರೀದಿ ಪ್ರಕ್ರಿಯೆ ಕುಂಟುತ್ತಾ ಸಾಗುತ್ತಿದ್ದು, ಸಮರ್ಪಕವಾಗಿ ಅನುದಾನವೂ ಸದ್ಬಳಕೆಯಾಗುತ್ತಿಲ್ಲ. ರಾಜ್ಯದ ಬಹುತೇಕ ಐಎಸ್ಐಎಸ್, ಡಿಸ್ಪೆನ್ಸರಿಗಳಲ್ಲಿ ಸಾಮಾನ್ಯ ಕಾಯಿಲೆಗಳಿಂದ ಹಿಡಿದು ಗಂಭೀರ ಕಾಯಿಲೆಗಳ ನಿವಾರಿಸುವ ಔಷಧಗಳ ದಾಸ್ತಾನು ಇಲ್ಲ ಎನ್ನುವ ಆರೋಪ ಕೇಳಿಬಂದಿದೆ.
ಪಾಕಿಸ್ತಾನ ವಿರುದ್ಧ ಮೂರನೇ ವೇಗದ ಅರ್ಧಶತಕ| ಯುವರಾಜ್ ಸಿಂಗ್ ದಾಖಲೆ ಮುರಿದ ಇಶಾನ್ ಕಿಶನ್
ಕೊಲಂಬೊ, ಫೆ.15: ಭಾರತ ಕ್ರಿಕೆಟ್ ತಂಡವು ಅರಂಭಿಕ ಆಟಗಾರ ಅಭಿಷೇಕ್ ಶರ್ಮಾರನ್ನು ಶೂನ್ಯಕ್ಕೆ ಕಳೆದುಕೊಂಡಾಗ ತಂಡವನ್ನು ಆಧರಿಸಿದ ಇನ್ನೋರ್ವ ಆರಂಭಿಕ ಆಟಗಾರ ಇಶಾನ್ ಕಿಶನ್ ಪಾಕಿಸ್ತಾನದ ವಿರುದ್ಧ ಟಿ-20 ಅಂತಾರಾಷ್ಟ್ರೀಯ ಪಂದ್ಯದಲ್ಲಿ ಮೂರನೇ ವೇಗದ ಅರ್ಧಶತಕ ಗಳಿಸಿ ಗಮನ ಸೆಳೆದರು. ಅಬ್ರಾರ್ ಅಹ್ಮದ್ ಎಸೆದ ಏಳನೇ ಓವರ್ನ ಎರಡನೇ ಎಸೆತವನ್ನು ಬೌಂಡರಿ ಗೆರೆ ದಾಟಿಸಿದ ಕಿಶನ್ 27 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಭಾರತ ತಂಡವು ಪವರ್ಪ್ಲೇ ಅಂತ್ಯದಲ್ಲಿ 1 ವಿಕೆಟ್ ನಷ್ಟಕ್ಕೆ 52 ರನ್ ಗಳಿಸಿತು. ಕಿಶನ್ ಮೊದಲ ಓವರ್ನ ಕೊನೆಯ ಎಸೆತದಲ್ಲಿ ವಿಕೆಟ್ ಒಪ್ಪಿಸಿದಾಗ ತಂಡವನ್ನು ಆಧರಿಸಿದ ಕಿಶನ್ 40 ಎಸೆತಗಳಲ್ಲಿ 77 ರನ್ ಗಳಿಸಿದರು.
ಪಾಕ್ ಗೆ ಮತ್ತೆ ಔಟ್ ಆಫ್ ಸಿಲಬಸ್ ಸಮಸ್ಯೆ! ಅಭಿಷೇಕ್ ಶರ್ಮಾ ಬೇಗ ಔಟಾದ್ರೂ ಕಬ್ಬಿಣದ ಕಡಲೆಯಾದ ಇಶಾನ್ ಕಿಶನ್
ಪಾಕಿಸ್ತಾನ ತಂಡಕ್ಕೆ ಈ ಔಟ್ ಆಫ್ ಸಿಲಬಸ್ ಸಮಸ್ಯೆ ಮುಗಿಯುವ ಲಕ್ಷಣ ಕಾಣಿಸುತ್ತಿಲ್ಲ. ಏಷ್ಯಾ ಕಪ್ ಪೈನಲ್ ಪಂದ್ಯದಲ್ಲಿ ಅಭಿಷೇಕ್ ಶರ್ಮಾಗೆ ವ್ಯೂಹ ರಚಿಸಿ ಯಶಸ್ವಿಯಾಗಿದ್ದ ಸಲ್ಮಾನ್ ಆಘಾ ಬಳಗಕ್ಕೆ ತಿಲಕ್ ವರ್ಮಾ ಆಘಾತ ನೀಡದ್ದರು. ಇದೀಗ ಟಿ20 ವಿಶ್ವಕಪ್ 2026ರ ಎ ಬಣದ ಲೀಗ್ ಪಂದ್ಯದಲ್ಲೂ ಪಾಕಿಸ್ತಾನಕ್ಕೆ ಭಯ ಇದ್ದುದು ಅಭಿಷೇಕ್ ಶರ್ಮಾ ಅವರ ಬಗ್ಗೆಯೇ. ಆದರೆ ಅದರ ಎಣಿಕೆಗೂ ಮೀರಿ ಪಂದ್ಯದ ಗತಿಯನ್ನೇ ಬದಲಾಯಿಸಿದ್ದು ಭಾರತದ ವಿಕೆಟ್ ಕೀಪರ್ ಬ್ಯಾಟರ್ ಇಶಾನ್ ಕಿಶನ್! ಕೊಲಂಬೊದಲ್ಲಿ ಭಾನುವಾರ ಸಂಜೆ ನಡೆದ ಪಂದ್ಯದಲ್ಲಿ ಕೇವಲ 40 ಎಸೆತಗಳಲ್ಲಿ 71 ರನ್ ಗಳಿಸಿದರು.10 ಬೌಂಡರಿ ಬಾರಿಸಿದ ಅವರು 3 ಬಾರಿ ಚೆಂಡನ್ನು ಸಿಕ್ಸರ್ ಗೆತ್ತಿದರು. ಅಭಿಷೇಕ್ ಶರ್ಮಾ ಅವರ ವಿಕೆಟ್ ಮೊದಲ ಓವರ್ ನಲ್ಲೇ ಬಿದ್ದರೂ ನಿರ್ಭೀತ ಬ್ಯಾಟಿಂಗ್ ಪ್ರದರ್ಶಿಸಿದ ಅವರು ಅರ್ಹವಾಗಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು. ಪಾಕಿಸ್ತಾನ ಅಭಿಷೇಕ್ ಶರ್ಮಾ ಅವರನ್ನು ಔಟ್ ಮಾಡಿದರೂ ಇಶಾನ್ ಕಿಶನ್ ಕಬ್ಬಿಣದ ಕಡಲೆಯಾದರು. () ಏಷ್ಯಾಕಪ್ ನಲ್ಲಿ ತಿಲಕ್ ವರ್ಮಾ! ನಿಮಗೆ ನೆನಪಿರಬಹುದು, ಕಳೆದ ವರ್ಷ ಏಷ್ಯಾ ಕಪ್ ಫೈನಲ್ ಪಂದ್ಯದಲ್ಲಿ ಪಾಕಿಸ್ತಾನ ತಂಡದ ಅರೆಕಾಲಿಕ ಮಧ್ಯಮ ವೇಗಿ ಫಹೀಮ್ ಅಶ್ರಫ್ ಅವರು 2ನೇ ಓವರ್ ನ ಮೊದಲ ಎಸೆತದಲ್ಲೇ 5 ರನ್ ಗಳಿಸಿದ್ದ ಅಭಿಷೇಕ್ ಶರ್ಮಾ ಅವರನ್ನು ಬೇಗನೇ ಔಟ್ ಮಾಡುವಲ್ಲಿ ಯಶಸ್ವಿಯಾಗಿತ್ತು. ಆಗಲೇ ಅದು ಅರ್ಧ ಪಂದ್ಯ ಗೆದ್ದ ಸಂಭ್ರಮದಲ್ಲಿತ್ತು. ಆದರೆ ಟಿ10 ಸ್ಪೆಷಲಿಸ್ಟ್ ಬ್ಯಾಟರ್ ತಿಲಕ್ ವರ್ಮಾ ಸಲ್ಮಾನ್ ಆಘಾ ಬಳಗ ಅಂದುಕೊಳ್ಳದ ರೀತಿಯಲ್ಲಿ ಆಡಿದರು. 53 ಎಸೆತಗಳಿಂದ ಅಜೇಯ 69 ರನ್ ಗಳಿಸಿ ಭಾರತ ತಂಡವನ್ನು ಗೆಲುವಿನ ದಡ ಸೇರಿಸಿದ್ದರು. ಇಶಾನ್ ಕಿಶನ್ ನಿರ್ಭೀತ ಬ್ಯಾಟಿಂಗ್ ಇದೀಗ ಟಿ20 ವಿಶ್ವಕಪ್ ಎ ಬಣದ ಪಂದ್ಯದಲ್ಲೂ ಅದೇ ರೀತಿ ನಡೆಯಿತು. ೆಪಾಕಿಸ್ತಾನ ತಂಡದ ನಾಯಕ ಸಲ್ಮಾನ್ ಆಘಾ ಅಭಿಷೇಕ್ ಶರ್ಮಾ ಅವರನ್ನು ಮೊದಲನೇ ಓವರ್ ನಲ್ಲೇ ಖಾತೆ ತೆರೆಯುವ ಮುನ್ನವೇ ಔಟಾದರು. ಆದರೆ ಇಶಾನ್ ಕಿಶನ್ ಅವರು ಪಾಕಿಸ್ತಾನ ತಂಡಕ್ಕೆ ಅಕ್ಷರಶಃ ಕಬ್ಬಿಣದ ಕಡಲೆಯಾದರು. ಮೊದಲ ಓವರ್ ನಲ್ಲೇ ಅಬಿಷೇಕ್ ಶರ್ಮಾ ಅವರ ವಿಕೆಟ್ ಬಿದ್ದರೂ ಕ್ಯಾರೇ ಎನ್ನದೆ ಬ್ಯಾಟಿಂಗ್ ಮಾಡಿದ ಅವರು 2ನೇ ಓವರ್ ನಲ್ಲೇ ಪಾಕಿಸ್ತಾನದ ಪ್ರಧಾನ ವೇಗದ ಬೌಲರ್ ಶಾಹಿನ್ ಶಾ ಅಫ್ರಿದಿ ಬೌಲಿಂಗ್ ವಿರುದ್ಧ ಆಕ್ರಮಣಕಾರಿ ಬ್ಯಾಟಿಂಗ್ ನಡೆಸಿದರು. ಲಾಂಗ್ ಆನ್ ನಲ್ಲಿ ಭರ್ಜರಿ ಸಿಕ್ಸ್ ಅನ್ನು ಸಹ ಎತ್ತಿದರು. ಪವರ್ ಪ್ಲೇನ 6 ಓವರ್ ಗಳಲ್ಲಿ ತಂಡದ ಮೊತ್ತ 50 ದಾಟಿಸಿದರು. ತಿಲಕ್ ವರ್ಮಾ ಅವರ ಜೊತೆಗೆ 2ನೇ ವಿಕೆಟ್ ಗೆ 87 ರನ್ ಗಳ ಮಹತ್ವದ ಜೊತೆಯಾಟವಾಡಿದರು. ಇದು ಪಾಕಿಸ್ತಾನ ತಂಡದ ಆತ್ಮವಿಶ್ವಾಸಕ್ಕೆ ಭಾರೀ ಹೊಡೆತ ನೀಡಿತು. ಮಾತ್ರವಲ್ಲದೆ ಟಾಸ್ ಗೆದ್ದು ಭಾರತವನ್ನು ಬ್ಯಾಟಿಂಗ್ ಗೆ ಇಳಿಸಿ ಅಲ್ಪಮೊತ್ತಕ್ಕೆ ಕಟ್ಟಿ ಹಾಕಬಹುದು ಎಂದು ಅಂದುಕೊಂಡಿದ್ದ ಪಾಕಿಸ್ತಾನದ ಲೆಕ್ಕಾಚಾರವೆಲ್ಲಾ ಬುಡಮೇಲು ಆಯಿತು. ಅಂತಿಮವಾಗಿ . ಮಾತ್ರವಲ್ಲದೆ ಲೀಗ್ ಹಂತದಲ್ಲಿ ಇನ್ನೂ ಒಂದು ಪಂದ್ಯ ಬಾಕಿ ಉಳಿದಿರುವಂತೆ ಸೂಪರ್ 8 ಹಂತಕ್ಕೇರಿತು.
ಇರಾನ್ ಮೇಲೆ ಒತ್ತಡ ಹೆಚ್ಚಿಸುವ ಬಗ್ಗೆ ಟ್ರಂಪ್, ನೆತನ್ಯಾಹು ಚರ್ಚೆ: ವರದಿ
ವಾಷಿಂಗ್ಟನ್, ಫೆ.15: ಅಮೆರಿಕವು ಇರಾನ್ ಮೇಲಿನ ಆರ್ಥಿಕ ಒತ್ತಡವನ್ನು, ವಿಶೇಷವಾಗಿ ಚೀನಾಕ್ಕೆ ಇರಾನ್ನ ತೈಲ ರಫ್ತನ್ನು ಗುರಿಯಾಗಿಸಿಕೊಂಡು, ತೀವ್ರಗೊಳಿಸಬೇಕು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಒಪ್ಪಿಕೊಂಡಿದ್ದಾರೆ ಎಂದು `ಆಕ್ಸಿಯೋಸ್' ವರದಿ ಮಾಡಿದೆ. ಈ ವಾರ ಟ್ರಂಪ್ ಮತ್ತು ನೆತನ್ಯಾಹು ನಡುವೆ ಶ್ವೇತಭವನದಲ್ಲಿ ನಡೆದ ಮಾತುಕತೆಯು ಚೀನಾಕ್ಕೆ ಕಚ್ಛಾ ತೈಲವನ್ನು ಮಾರುವ ಇರಾನ್ನ ಸಾಮಥ್ರ್ಯವನ್ನು ನಿಗ್ರಹಿಸುವುದನ್ನು ಕೇಂದ್ರೀಕರಿಸಿತ್ತು. ಇರಾನ್ ವಿರುದ್ಧ ಗರಿಷ್ಠ ಒತ್ತಡದ ಜೊತೆ ಪೂರ್ಣ ಬಲದೊಂದಿಗೆ ಹೋಗಲು ನಾವು ಒಪ್ಪಿಕೊಂಡಿದ್ದೇವೆ ಎಂದು ಶ್ವೇತಭವನದ ಉನ್ನತ ಅಧಿಕಾರಿಯನ್ನು ಉಲ್ಲೇಖಿಸಿದ ವರದಿ ಹೇಳಿದೆ. ಇರಾನ್ನ ಪರಮಾಣು ಕಾರ್ಯಕ್ರಮವನ್ನು ವಿರೋಧಿಸಿ ಅಮೆರಿಕಾ ವಿಧಿಸಿರುವ ನಿರ್ಬಂಧವು ಜಾಗತಿಕ ತೈಲ ಮಾರುಕಟ್ಟೆಗೆ ಇರಾನ್ನ ತೈಲದ ಪ್ರವೇಶಾವಕಾಶವನ್ನು ಸೀಮಿತಗೊಳಿಸಿದೆ. ಆದರೆ ಇರಾನ್ ಜಲಮಾರ್ಗದ ಮೂಲಕ ನಡೆಸುವ ಕಚ್ಛಾತೈಲ ರಫ್ತಿನ 80%ಕ್ಕೂ ಹೆಚ್ಚನ್ನು ಚೀನಾ ಖರೀದಿಸುತ್ತಿದೆ. 2025ರಲ್ಲಿ ಪ್ರತೀ ದಿನ ಇರಾನ್ನಿಂದ 1.38 ದಶಲಕ್ಷ ಬ್ಯಾರೆಲ್ಗಳಷ್ಟು ಕಚ್ಛಾ ತೈಲವನ್ನು ಚೀನಾ ಖರೀದಿಸಿರುವುದಾಗಿ ವರದಿಯಾಗಿದೆ. ಏಕಪಕ್ಷೀಯ ನಿರ್ಬಂಧವನ್ನು ತಾನು ಮಾನ್ಯ ಮಾಡುವುದಿಲ್ಲ ಎಂದು ಚೀನಾ ಹೇಳುತ್ತಿದ್ದು ಇರಾನ್ ಜೊತೆಗಿನ ವ್ಯಾಪಾರವು ಕಾನೂನುಬದ್ಧವಾಗಿದೆ ಎಂದು ಪ್ರತಿಪಾದಿಸುತ್ತಿದೆ.
ತೈವಾನ್ ಕುರಿತ ಅಮೆರಿಕದ `ಸಂಚು' ಘರ್ಷಣೆಗೆ ಕಾರಣ ಆಗಬಹುದು: ಚೀನಾ ಎಚ್ಚರಿಕೆ
ಮ್ಯೂನಿಚ್, ಫೆ.15: ತೈವಾನ್ ವಿಷಯದಲ್ಲಿ `ಸಂಚು' ಹೂಡುವುದು ಘರ್ಷಣೆಗೆ ಕಾರಣವಾಗಬಹುದು. ತೈವಾನ್ನ ಮೂಲಕ ಚೀನಾವನ್ನು ವಿಭಜಿಸುವ ದುಸ್ಸಾಹಸಕ್ಕೆ ಕೈಹಾಕಬಾರದು ಎಂದು ಚೀನಾ ಅಮೆರಿಕಕ್ಕೆ ಎಚ್ಚರಿಕೆ ನೀಡಿದೆ. ಮ್ಯೂನಿಚ್ ಭದ್ರತಾ ಸಮ್ಮೇಳನದಲ್ಲಿ ಮಾತನಾಡಿದ ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ `ಭವಿಷ್ಯದಲ್ಲಿ ಅಮೆರಿಕವು ಚೀನಾದ ಕೆಂಪುಗೆರೆಯನ್ನು ದಾಟಿ, ತೈವಾನ್ ಮೂಲಕ ಚೀನಾವನ್ನು ವಿಭಜಿಸಲು ಪ್ರಚೋದನೆ ಮತ್ತು ಸಂಚು ಒಳಗೊಂಡಿರುವ ಚೀನಾ ನೀತಿಯನ್ನು ಅಳವಡಿಸಿಕೊಳ್ಳಬಹುದು. ಇದು ಚೀನಾ ಮತ್ತು ಅಮೆರಿಕ ನಡುವೆ ಘರ್ಷಣೆಗೆ ಕಾರಣವಾಗಬಹುದು' ಎಂದು ಹೇಳಿದ್ದಾರೆ. ಅಮೆರಿಕ ಧನಾತ್ಮಕ ಮತ್ತು ಪ್ರಾಯೋಗಿಕ ವಿಧಾನವನ್ನು ಅನುಸರಿಸುತ್ತದೆ ಎಂದು ಭಾವಿಸುತ್ತೇವೆ. ಆದರೆ ನಾವು ವಿವಿಧ ಅಪಾಯಗಳನ್ನು ಎದುರಿಸಲೂ ಸಿದ್ಧವಿದ್ದೇವೆ' ಎಂದವರು ಹೇಳಿರುವುದಾಗಿ ವರದಿಯಾಗಿದೆ. ಅಮೆರಿಕದಲ್ಲಿನ ಕೆಲವು ಧ್ವನಿಗಳು ಚೀನಾದ ಮೇಲೆ ದಾಳಿ ಮತ್ತು ಕಳಂಕ ಹೊರಿಸುವುದನ್ನು ಮುಂದುವರಿಸಿದ್ದರೂ ಎರಡು ರಾಷ್ಟ್ರಗಳ ನಡುವಿನ ಸಹಕಾರ ನಮ್ಮೆದುರು ಇರುವ ಉತ್ತಮ ಮಾರ್ಗವಾಗಿದೆ. ಜೊತೆಯಾಗಿ ಕೆಲಸ ಮಾಡುವುದು ಎರಡೂ ದೇಶಗಳ ಹಿತಾಸಕ್ತಿಗೆ ಪೂರಕವಾಗಿದೆ ಎಂದು ವಾಂಗ್ ಯಿ ಹೇಳಿದ್ದು ಆರ್ಥಿಕತೆಯನ್ನು ಅಸ್ತವ್ಯಸ್ತಗೊಳಿಸುವ ಅಥವಾ ಪೂರೈಕೆ ಸರಪಳಿಗಳನ್ನು ಅಡ್ಡಿಪಡಿಸುವ ಪ್ರಯತ್ನಗಳ ವಿರುದ್ಧ ಎಚ್ಚರಿಕೆ ನೀಡಿದ್ದಾರೆ. ಉಕ್ರೇನ್ ಶಾಂತಿ ಮಾತುಕತೆಯ ಬಗ್ಗೆ ಉಲ್ಲೇಖಿಸಿದ ವಾಂಗ್ ಯಿ `ಉಕ್ರೇನ್ನ ಭವಿಷ್ಯದ ಕುರಿತ ಮಾತುಕತೆಗಳಲ್ಲಿ ತೊಡಗಿಸಿಕೊಳ್ಳಲು ಯುರೋಪ್ಗೆ ಎಲ್ಲಾ ಹಕ್ಕುಗಳಿವೆ. ಯುರೋಪ್ ಈ ಪ್ರಕ್ರಿಯೆಯನ್ನು (ಉಕ್ರೇನ್ ಶಾಂತಿ ಮಾತುಕತೆ) ಪಕ್ಕದಲ್ಲಿ ನಿಂತು ನೋಡಬಾರದು. ಅವರಿಗೆ ಮಾತುಕತೆಯ ಮೇಜಿನ ಎದುರು ಕುಳಿತುಕೊಳ್ಳುವ ಅಧಿಕಾರವಿದೆ' ಎಂದು ಪ್ರತಿಪಾದಿಸಿದ್ದಾರೆ.
ಉಕ್ರೇನ್ನ 12 ಹಳ್ಳಿಗಳನ್ನು ವಶಪಡಿಸಿಕೊಂಡ ರಷ್ಯಾ, ತಿಕ್ಕಾಟ ಮತ್ತಷ್ಟು ತೀವ್ರ | Russia Military
ರಷ್ಯಾ ಸೇನೆ ಉಕ್ರೇನ್ ಮೇಲೆ ಯುದ್ಧ ಮಾತ್ರ ಮಾಡುತ್ತಿಲ್ಲ, ಇದರ ಜೊತೆಗೆ ಉಕ್ರೇನ್ಗೆ ಸೇರಿರುವ ದೊಡ್ಡ ದೊಡ್ಡ ಪ್ರದೇಶವನ್ನೇ ತನ್ನ ವಶಕ್ಕೆ ಪಡೆಯುತ್ತಿದೆ. ಚಳಿಗಾಲದ ಸಮಯದಲ್ಲಿ ರಷ್ಯಾ &ಉಕ್ರೇನ್ನ ನಡುವೆ ತೀವ್ರಗೊಂಡ ತಿಕ್ಕಾಟದಲ್ಲಿ ಜನರು ನಲುಗಿ ಹೋಗಿದ್ದಾರೆ. ಇದರ ಜೊತೆಗೆ ಉಕ್ರೇನ್ ಕೂಡ ಅಪಾರ ಪ್ರಮಾಣದಲ್ಲಿ ನಷ್ಟ ಅನುಭವಿಸಿದ್ದು, ಭವಿಷ್ಯದಲ್ಲಿ ಈ ಪೆಟ್ಟಿನಿಂದ ಸುಧಾರಿಸಿಕೊಳ್ಳಲು ಭಾರಿ
ಐಎಎಸ್ನಲ್ಲಿ ಓಬಿಸಿ ಕೇವಲ 4.3%, ಸಾಮಾನ್ಯ ವರ್ಗ 92% : ಕೇಂದ್ರದ ಅಂಕಿ-ಅಂಶ ಹಂಚಿಕೊಂಡ ಬಿ.ಕೆ.ಹರಿಪ್ರಸಾದ್
ಬೆಂಗಳೂರು : ದೇಶದ ಪ್ರಮುಖ ನಾಗರಿಕ ಸೇವೆಗಳಾದ ಐಎಎಸ್, ಐಪಿಎಸ್ ಮತ್ತು ಐಎಫ್ಎಸ್ನಲ್ಲಿ ವಿವಿಧ ವರ್ಗಗಳ ಪ್ರಾತಿನಿಧ್ಯದ ಕುರಿತು ಹಿರಿಯ ಕಾಂಗ್ರೆಸ್ ಮುಖಂಡ ಬಿ.ಕೆ.ಹರಿಪ್ರಸಾದ್ ಅವರು, ರಾಜ್ಯಸಭೆಯಲ್ಲಿ ಮಂಡಿಸಲಾದ ಅಂಕಿ-ಅಂಶಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ರಾಜ್ಯಸಭೆಯಲ್ಲಿ ಸರಕಾರ ಇಟ್ಟಿರುವ ಅಂಕಿ-ಅಂಶಗಳು ಒಂದು ಬೆಚ್ಚಿಬೀಳಿಸುವ ಸತ್ಯವನ್ನು ಬಹಿರಂಗಪಡಿಸುತ್ತವೆ. ಓಬಿಸಿಗಳು ಭಾರತದ ಜನಸಂಖ್ಯೆಯ ಸುಮಾರು 55%, ಎಸ್ಸಿ 24% ಮತ್ತು ಎಸ್ಟಿ 10% ಇದ್ದರೂ: ಐಎಎಸ್ ನಲ್ಲಿ – ಓಬಿಸಿ ಕೇವಲ 4.3%, ಐಪಿಎಸ್ ನಲ್ಲಿ – ಓಬಿಸಿ ಕೇವಲ 5.5%, ಐಎಫ್ಎಸ್ ನಲ್ಲಿ – ಓಬಿಸಿ ಕೇವಲ 10.6% ಎಂದು ಮಾಹಿತಿ ನೀಡಿದ್ದಾರೆ. ಐಎಎಸ್ ನಲ್ಲಿ 92%, ಐಪಿಎಸ್ ನಲ್ಲಿ 90% ಮತ್ತು ಐಎಫ್ಎಸ್ ನಲ್ಲಿ 82% ಜನರು ಸಾಮಾನ್ಯ ವರ್ಗದಿಂದಿದ್ದಾರೆ. ದೇಶದ ನಿಜವಾದ ಅಧಿಕಾರದ ರಚನೆ ಆಗಿರುವ ಬ್ಯೂರೋಕ್ರಸಿ ಇಷ್ಟು ಏಕಪಕ್ಷೀಯವಾಗಿದ್ದಾಗ, ಆಡಳಿತವನ್ನು ಎಲ್ಲರನ್ನು ಒಳಗೊಂಡದ್ದೆಂದು ಹೇಗೆ ಕರೆಯಬಹುದು? ಇದು ಪ್ರತಿನಿಧಿತ್ವವಲ್ಲ. ಇದು ಹೊರತಳ್ಳುವಿಕೆ ಮತ್ತು ಸಾಮಾಜಿಕ ನ್ಯಾಯದ ಸಂಪೂರ್ಣ ನಿರ್ಲಕ್ಷ್ಯ ಎಂದು ಅವರು ಎಕ್ಸ್ ಪೋಸ್ಟ್ನಲ್ಲಿ ಉಲ್ಲೇಖಿಸಿದ್ದಾರೆ. ರಾಜ್ಯಸಭೆಯಲ್ಲಿ ಸರ್ಕಾರ ಇಟ್ಟಿರುವ ಅಂಕಿ-ಅಂಶಗಳು ಒಂದು ಬೆಚ್ಚಿಬೀಳಿಸುವ ಸತ್ಯವನ್ನು ಬಹಿರಂಗಪಡಿಸುತ್ತವೆ. OBCಗಳು ಭಾರತದ ಜನಸಂಖ್ಯೆಯ ಸುಮಾರು 55%, SCಗಳು 24% ಮತ್ತು STಗಳು 10% ಇದ್ದರೂ: • IAS ನಲ್ಲಿ – OBC ಕೇವಲ 4.3% • IPS ನಲ್ಲಿ – OBC ಕೇವಲ 5.5% • IFS ನಲ್ಲಿ – OBC ಕೇವಲ 10.6% IAS ನಲ್ಲಿ 92%, IPS ನಲ್ಲಿ 90%… — Hariprasad.B.K. (@HariprasadBK2) February 15, 2026
'ಕನಿಷ್ಠ ಬ್ಯಾಲೆನ್ಸ್' ದಂಡಕ್ಕೆ ವಿರೋಧ: ಬೆಂಗಳೂರಿನ ಉದ್ಯಮಿಯ ಹೋರಾಟಕ್ಕೆ ಸಂಸದೀಯ ಸಮಿತಿಯ ಶಿಫಾರಸಿನ ಬೆಂಬಲ
ಬೆಂಗಳೂರು, ಫೆ.15: ಉಳಿತಾಯ ಖಾತೆಗಳಲ್ಲಿ ಕನಿಷ್ಠ ಬ್ಯಾಲೆನ್ಸ್ ಮಾನದಂಡವನ್ನು ಕಾಯ್ದುಕೊಳ್ಳದ ಗ್ರಾಹಕರಿಗೆ ಬ್ಯಾಂಕುಗಳು ವಿಧಿಸುತ್ತಿದ್ದ ದಂಡ ಪದ್ಧತಿಯನ್ನು ನಿಲ್ಲಿಸಬೇಕು ಎಂದು ಸಂಸದೀಯ ಸಮಿತಿ ಇತ್ತೀಚೆಗೆ ಶಿಫಾರಸು ಮಾಡಿರುವ ಹಿನ್ನೆಲೆಯಲ್ಲಿ, ಈ ಕ್ರಮದ ಹಿಂದೆ ಬೆಂಗಳೂರಿನ ಉದ್ಯಮಿಯೊಬ್ಬರ ಹೋರಾಟ ಕಾರಣವಾಗಿದೆ ಎಂಬ ಸಂಗತಿ ಇದೀಗ ಬೆಳಕಿಗೆ ಬಂದಿದೆ. ತಿರುವನಂತಪುರಂ ಮೂಲದ ಪರಮೇಶ್ವರನ್ ಕೃಷ್ಣ ಅಯ್ಯರ್ ಅವರು ಬಿದಿರು ಹಾಗೂ ಇತರ ಸುಸ್ಥಿರ ವಸ್ತುಗಳಿಂದ ಜೀವನಶೈಲಿ ಉತ್ಪನ್ನಗಳನ್ನು ತಯಾರಿಸುವ ‘ಬಂಬೂಪೆಕರ್’ ಸಂಸ್ಥೆಯ ಸ್ಥಾಪಕರು. ತಮ್ಮ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಬುಡಕಟ್ಟು ಸಮುದಾಯದ ಕಾರ್ಮಿಕರು ಬ್ಯಾಂಕ್ ಖಾತೆಗಳಲ್ಲಿ ಕನಿಷ್ಠ ಬ್ಯಾಲೆನ್ಸ್ ಇರದ ಕಾರಣ ಪದೇಪದೇ ದಂಡ ಕಳೆದುಕೊಳ್ಳುತ್ತಿರುವುದನ್ನು ಗಮನಿಸಿದ ಅವರು, ಈ ವಿಚಾರದ ವಿರುದ್ಧ ಹೋರಾಟ ಆರಂಭಿಸಿದರು. “ದಯವಿಟ್ಟು ನಮ್ಮ ಸಂಬಳವನ್ನು ಬ್ಯಾಂಕ್ ಖಾತೆಗಳ ಮೂಲಕವಲ್ಲ, ನಗದು ರೂಪದಲ್ಲಿ ನೀಡಿ” ಎಂದು ಕಾರ್ಮಿಕರು ಮನವಿ ಮಾಡಿದ ಸಂದರ್ಭ ಕಾರಣ ತಿಳಿದು ಅವರಿಗೆ ಆಘಾತವಾಯಿತು. 2008ರಲ್ಲಿ ಬುಡಕಟ್ಟು ಹಾಗೂ ಅಶಿಕ್ಷಿತ ಕಾರ್ಮಿಕರಿಗೆ ಉದ್ಯೋಗ ನೀಡುವ ಉದ್ದೇಶದಿಂದ ಸಂಸ್ಥೆ ಆರಂಭಿಸಿದ್ದ ಅವರು, ಕೋವಿಡ್ ಸಾಂಕ್ರಾಮಿಕಕ್ಕಿಂತ ಹಲವು ವರ್ಷಗಳ ಮೊದಲು ಬ್ಯಾಂಕ್ ಖಾತೆಗಳ ಮೂಲಕವೇ ಸಂಬಳ ಪಾವತಿಸುವ ವ್ಯವಸ್ಥೆ ಮಾಡಿದ್ದರು. ಸಂಬಳ ಜಮಾ ಆದ ತಕ್ಷಣ ಕಾರ್ಮಿಕರು ಬಹುತೇಕ ಹಣವನ್ನು ಕುಟುಂಬಗಳಿಗೆ ಕಳುಹಿಸುತ್ತಿದ್ದರು. ಇದರ ಪರಿಣಾಮವಾಗಿ ತಿಂಗಳ ಬಹುಪಾಲು ದಿನಗಳು ಖಾತೆಗಳಲ್ಲಿ ಕನಿಷ್ಠ ಬ್ಯಾಲೆನ್ಸ್ ಉಳಿಯದೇ ಹೋಗುತ್ತಿತ್ತು. ಮುಂದಿನ ತಿಂಗಳ ಸಂಬಳ ಬಂದಾಗ ಅದರಲ್ಲಿನ ಗಮನಾರ್ಹ ಭಾಗ ದಂಡವಾಗಿ ಕಡಿತಗೊಳ್ಳುತ್ತಿತ್ತು. ತಿಂಗಳಿಗೆ ₹15,000 ರಿಂದ ₹20,000 ಗಳಿಸುವ ಕಾರ್ಮಿಕರಿಗೆ ₹1,000ರಷ್ಟು ದಂಡ ಭಾರೀ ಹೊರೆ ಆಗುತ್ತಿತ್ತು ಎಂದು ಪರಮೇಶ್ವರನ್ ತಿಳಿಸಿದ್ದಾರೆ. ಈ ಪದ್ಧತಿಯನ್ನು ತೀವ್ರ ಅನ್ಯಾಯಕರವೆಂದು ಅವರು ಅಭಿಪ್ರಾಯಪಟ್ಟಿದ್ದಾರೆ. “ವೈಯಕ್ತಿಕ ಸಾಲಗಳಿಗೆ ಬ್ಯಾಂಕುಗಳು ಶೇಕಡಾ 4ರಿಂದ 7ರವರೆಗೆ ಬಡ್ಡಿ ವಿಧಿಸುತ್ತವೆ. ಆದರೆ ಕನಿಷ್ಠ ಬ್ಯಾಲೆನ್ಸ್ ಕೊರತೆಗೆ ₹800ರಿಂದ ₹1,000ವರೆಗೆ ದಂಡ ಕಡಿತಗೊಳಿಸುತ್ತವೆ. ಇದು ಒಂದು ತಿಂಗಳ ಅವಧಿಯಲ್ಲಿ ಶೇಕಡಾ 100ಕ್ಕಿಂತ ಹೆಚ್ಚು ಹೊರೆ ಆಗುತ್ತದೆ” ಎಂದು ಅವರು ಟೀಕಿಸಿದ್ದಾರೆ. ಷೇರು ಮಾರುಕಟ್ಟೆಯ ಮಾಜಿ ಉದ್ಯೋಗಿಯಾಗಿದ್ದ ಪರಮೇಶ್ವರನ್ ಕೇವಲ ದೂರು ನೀಡುವುದರಿಂದ ಪ್ರಯೋಜನವಿಲ್ಲ ಎಂದು ತಿಳಿದು, ಸಮಗ್ರ ಅಧ್ಯಯನದ ಬಳಿಕ ಕನಿಷ್ಠ ಬ್ಯಾಲೆನ್ಸ್ ದಂಡದ ಆರ್ಥಿಕ ಹೊರೆ ಕುರಿತು ವಿವರವಾದ ಪ್ರಾತಿನಿಧ್ಯ ಸಿದ್ಧಪಡಿಸಿ 2024ರ ಏಪ್ರಿಲ್ನಲ್ಲಿ ಲೋಕಸಭಾ ಸ್ಪೀಕರ್ಗೆ ಸಲ್ಲಿಸಿದರು. “ದೂರು ಸ್ವೀಕೃತಿಯ ದೃಢೀಕರಣವೂ ಸಿಗಲಿಲ್ಲ. ಆದರೆ ಧ್ವನಿ ಇಲ್ಲದ ಜನರ ಪರವಾಗಿ ಏನಾದರೂ ಮಾಡಿದ್ದೇನೆ ಎಂಬ ತೃಪ್ತಿ ಇತ್ತು” ಎಂದು ಅವರು ಹೇಳಿದ್ದಾರೆ. ಈ ದೂರವನ್ನು ಲೋಕಸಭಾ ಅರ್ಜಿ ಸಮಿತಿಯು ಪರಿಗಣಿಸಿತು. ಹಣಕಾಸು ಸಚಿವಾಲಯದ ಅಂಕಿಅಂಶಗಳ ಪ್ರಕಾರ, 2024–25ನೇ ಹಣಕಾಸು ವರ್ಷದಲ್ಲೇ ಬ್ಯಾಂಕುಗಳು ಕನಿಷ್ಠ ಬ್ಯಾಲೆನ್ಸ್ ದಂಡದ ಮೂಲಕ ₹4,817.9 ಕೋಟಿ ಸಂಗ್ರಹಿಸಿವೆ. 2020ರಿಂದ 2025ರವರೆಗೆ ಸಾರ್ವಜನಿಕ ವಲಯದ ಬ್ಯಾಂಕುಗಳು ₹11,535.99 ಕೋಟಿ ಸಂಗ್ರಹಿಸಿದ್ದು, ಖಾಸಗಿ ಬ್ಯಾಂಕುಗಳು 2024–25ರಲ್ಲಿ ಮಾತ್ರ ₹2,772.2 ಕೋಟಿ ದಂಡ ವಸೂಲಿ ಮಾಡಿವೆ. ಆರ್ಬಿಐ ಮಾರ್ಗಸೂಚಿಗಳು ಆಗಸ್ಟ್ 2015ರಿಂದ ಕನಿಷ್ಠ ಬ್ಯಾಲೆನ್ಸ್ ಕಾಯ್ದುಕೊಳ್ಳದ ಖಾತೆಗಳಿಗೆ ದಂಡ ವಿಧಿಸಲು ಭಾರತೀಯ ರಿಸರ್ವ್ ಬ್ಯಾಂಕ್ ಅನುಮತಿ ನೀಡಿದೆ. ಮಾರ್ಗಸೂಚಿಗಳ ಪ್ರಕಾರ ದಂಡವು ನಿಜವಾದ ಬ್ಯಾಲೆನ್ಸ್ ಮತ್ತು ಕನಿಷ್ಠ ಬ್ಯಾಲೆನ್ಸ್ ನಡುವಿನ ಕೊರತೆಯ ಸ್ಥಿರ ಶೇಕಡಾವಾರು ಆಗಿರಬೇಕು. ಭೌಗೋಳಿಕ ಪ್ರದೇಶ ಹಾಗೂ ಗ್ರಾಹಕ ವರ್ಗದ ಆಧಾರದ ಮೇಲೆ ಸ್ಲ್ಯಾಬ್ವಾರು ಶುಲ್ಕ ವಿಧಿಸಬಹುದು. ಖಾತೆ ತೆರೆಯುವಾಗಲೇ ಗ್ರಾಹಕರಿಗೆ ಕನಿಷ್ಠ ಬ್ಯಾಲೆನ್ಸ್ ಮಾಹಿತಿ ನೀಡಬೇಕು ಹಾಗೂ ಬದಲಾವಣೆಗಳನ್ನೂ ತಿಳಿಸಬೇಕು. ಮುಂಚಿತ ಸೂಚನೆ ನೀಡಿ ಒಂದು ತಿಂಗಳೊಳಗೆ ಬ್ಯಾಲೆನ್ಸ್ ತುಂಬದಿದ್ದರೆ ಮಾತ್ರ ದಂಡ ವಿಧಿಸಬೇಕು. ದಂಡದಿಂದ ಖಾತೆ ಮೈನಸ್ ಬ್ಯಾಲೆನ್ಸ್ಗೆ ಜಾರಬಾರದು ಎಂಬುದೂ ನಿಯಮವಾಗಿದೆ. ಈ ಎಲ್ಲಾ ಅಂಶಗಳನ್ನು ಪರಿಗಣಿಸಿದ ಸಂಸದೀಯ ಸಮಿತಿಯು, ವಿಶೇಷವಾಗಿ ಮೂಲ ಉಳಿತಾಯ ಖಾತೆಗಳಲ್ಲಿ ಕನಿಷ್ಠ ಬ್ಯಾಲೆನ್ಸ್ ಕಾಯ್ದುಕೊಳ್ಳದ ಗ್ರಾಹಕರಿಗೆ ದಂಡ ವಿಧಿಸುವುದನ್ನು ನಿಲ್ಲಿಸುವ ಏಕರೂಪ ನೀತಿ ಅಳವಡಿಸಬೇಕೆಂದು ಶಿಫಾರಸು ಮಾಡಿದೆ. ಹೆಚ್ಚಿನ ಬ್ಯಾಲೆನ್ಸ್ಗಳಿಗೆ ರಿವಾರ್ಡ್ ಪಾಯಿಂಟ್ಗಳು, ಶುಲ್ಕ ವಿನಾಯಿತಿ ಹಾಗೂ ಹೆಚ್ಚುವರಿ ಬಡ್ಡಿದರದಂತಹ ಪ್ರೋತ್ಸಾಹ ನೀಡಬಹುದು ಎಂದು ಸೂಚಿಸಿದೆ. ಸಹಕಾರಿ ಬ್ಯಾಂಕುಗಳು ಹಾಗೂ ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳಿಗೂ ಅಗತ್ಯ ಮಾರ್ಗಸೂಚಿ ನೀಡುವಂತೆ ಹಣಕಾಸು ಸೇವೆಗಳ ಇಲಾಖೆ ಹಾಗೂ ಆರ್ಬಿಐಗೆ ಮನವಿ ಮಾಡಲಾಗಿದೆ. ಶಿಫಾರಸು ಸಾರ್ವಜನಿಕವಾದ ಬಳಿಕ ಪರಮೇಶ್ವರನ್ ತಮ್ಮ ಪ್ರಯತ್ನದ ಪರಿಣಾಮ ಅರಿತು ಸಂತಸಪಟ್ಟಿದ್ದಾರೆ. “ನಮ್ಮಂತಹ ಸಾಮಾನ್ಯ ಜನರೂ ಬದಲಾವಣೆ ತರಬಹುದು ಎಂಬುದಕ್ಕೆ ಇದು ಸಾಕ್ಷಿ” ಎಂದು ಅವರು ಹೇಳಿದ್ದಾರೆ. ಉದ್ಯಮಿಯ ಪಯಣ ತಿರುವನಂತಪುರದ ವಲಿಯಸಲೈ ಮೂಲದ ಪರಮೇಶ್ವರನ್ 2008ರವರೆಗೆ ಷೇರು ಮಾರುಕಟ್ಟೆಯಲ್ಲಿ ಕೆಲಸ ಮಾಡಿದರು. ಬಳಿಕ ಬೆಂಗಳೂರಿಗೆ ಬಂದು ಇದೇ ಕ್ಷೇತ್ರದಲ್ಲಿ ಮುಂದುವರಿದ ಅವರು, ಭಾರತದ ಮಾಜಿ ರಾಷ್ಟ್ರಪತಿ ಎ.ಪಿ.ಜೆ. ಅಬ್ದುಲ್ ಕಲಾಂ ಅವರಿಗೆ ಪತ್ರ ಬರೆದು ಬಿದಿರು ಆಧಾರಿತ ಉದ್ಯಮ ಆರಂಭಿಸುವ ಆಶಯ ವ್ಯಕ್ತಪಡಿಸಿದ್ದರು. ಕಲಾಂ ಅವರ ಪ್ರೋತ್ಸಾಹವೇ ‘ಬಂಬೂಪೆಕರ್’ ಸ್ಥಾಪನೆಗೆ ಪ್ರೇರಣೆಯಾಯಿತು. 2009ರಲ್ಲಿ ಸ್ಥಾಪಿತವಾದ ಈ ಸಂಸ್ಥೆ ಇಂದು ಬಿದಿರು ಆಧಾರಿತ ಉತ್ಪನ್ನಗಳಲ್ಲಿ ಪ್ರಮುಖ ಸಂಸ್ಥೆಯಾಗಿ ಬೆಳೆದಿದೆ. ಬುಡಕಟ್ಟು ಸಮುದಾಯದ ಕಾರ್ಮಿಕರಿಗೆ ತರಬೇತಿ ನೀಡಿ ನ್ಯಾಯಸಮ್ಮತ ಹಾಗೂ ಸುಸ್ಥಿರ ವೇತನ ವ್ಯವಸ್ಥೆ ಒದಗಿಸುವುದು ಇದರ ಉದ್ದೇಶ. ಪೀಠೋಪಕರಣ, ಲೈಫ್ ಸ್ಟೈಲ್ ಉತ್ಪನ್ನಗಳು ಹಾಗೂ ಕರಕುಶಲ ವಸ್ತುಗಳ ತಯಾರಿಕೆಯಲ್ಲಿ ತೊಡಗಿಸಿಕೊಂಡಿರುವ ಸಂಸ್ಥೆ, ನೈಸರ್ಗಿಕ ವಸ್ತುಗಳ ಸಂಯೋಜನೆಯಿಂದ ವಿವಿಧ ರಚನೆಗಳ ನಿರ್ಮಾಣದಲ್ಲೂ ಪರಿಣತಿ ಹೊಂದಿದೆ. ಪ್ರಸ್ತುತ ಬೆಂಗಳೂರಿನಲ್ಲಿ ಎರಡು ಘಟಕಗಳನ್ನು ನಿರ್ವಹಿಸುತ್ತಿರುವ ಬಂಬೂಪೆಕರ್, ಈಶಾನ್ಯ ರಾಜ್ಯಗಳು, ಛತ್ತೀಸ್ಗಢ ಹಾಗೂ ತಿರುವನಂತಪುರಕ್ಕೆ ವಿಸ್ತರಣೆ ಮಾಡುವ ಯೋಜನೆ ಹೊಂದಿದೆ. “ಮುಂದಿನ ಮೂರು ವರ್ಷಗಳ ಆರ್ಡರ್ ಗಳಿವೆ. ಪೂರೈಕೆ ಸೀಮಿತವಾದರೂ ಬೇಡಿಕೆ ಹೆಚ್ಚಿದೆ” ಎಂದು ಪರಮೇಶ್ವರನ್ ತಿಳಿಸಿದ್ದಾರೆ. ಸೌಜನ್ಯ:onmanorama.com
ಅಮೆರಿಕ ಜೊತೆ ವ್ಯಾಪಾರ ಒಪ್ಪಂದ: ಕೇಂದ್ರದ ಮುಂದಿಟ್ಟ ಕಾಂಗ್ರೆಸ್ನ ಪ್ರಮುಖ ಪ್ರಶ್ನೆಗಳೇನು?
ಬೆಂಗಳೂರು: ಭಾರತ ಸರ್ಕಾರ ಅಮೆರಿಕೆದೊಂದಿಗೆ ವ್ಯಾಪಾರ ಒಪ್ಪಂದ ಮಾಡಿಕೊಳ್ಳುವ ಮೂಲಕ ಭಾರತ ರೈತರಿಗೆ ದ್ರೋಹ ಬಗೆದಿದೆ ಎಂದು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಆರೋಪಿಸಿದರು. ಇದರ ಬೆನ್ನಲ್ಲೆ ಕರ್ನಾಟಕ ಕಾಂಗ್ರೆಸ್ ಪಕ್ಷವು ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ನರೇಂದ್ರ ಮೋದಿಯವರ ಮುಂದೆ ಒಂದಷ್ಟು ಪ್ರಶ್ನೆಗಳನ್ನು ಇಟ್ಟಿದೆ. ಅಮೆರಿಕ ಜತೆಗಿನ ವ್ಯಾಪಾರ ಒಪ್ಪಂದ ಹೆಸರಿನಲ್ಲಿ ಭಾರತದ
ಹಂಪಿ ಉತ್ಸವವು ಜನೋತ್ಸವವಾಗಿ ಮಾರ್ಪಟ್ಟಿದೆ : ಶಾಸಕಿ ಲತಾ ಮಲ್ಲಿಕಾರ್ಜುನ್
ಹಂಪಿ ಉತ್ಸವದ ಸಮಾರೋಪ ಸಮಾರಂಭ
ಬಳ್ಳಾರಿ | ಕುರುಗೋಡು ಉತ್ಸವಕ್ಕೆ ಚಾಲನೆ
ಬಳ್ಳಾರಿ : ಐತಿಹಾಸಿಕ ನಾಡು ಕುರುಗೋಡು ಪಟ್ಟಣದಲ್ಲಿ ಚೊಚ್ಚಲ ಕುರುಗೋಡು ಉತ್ಸವ–2026ರ ಮೊದಲ ದಿನ ಭಾನುವಾರ ಹಬ್ಬದ ವಾತಾವರಣ ಮನೆಮಾಡಿತು. ಉತ್ಸವವನ್ನು ಜನಾಕರ್ಷಕಗೊಳಿಸಲು ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕುರುಗೋಡು ತಾಲ್ಲೂಕು ಆಡಳಿತದಿಂದ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಉತ್ಸವದ ಅಂಗವಾಗಿ ಸದೃಢ ಆರೋಗ್ಯದ ಸಂದೇಶ ಸಾರುವ ಮ್ಯಾರಥಾನ್ ಓಟವನ್ನು ಹಮ್ಮಿಕೊಳ್ಳಲಾಯಿತು. ಪಟ್ಟಣದ ಹೊರವಲಯದ ವದ್ದಟ್ಟಿ ಕ್ರಾಸ್ನಿಂದ ಶ್ರೀ ದೊಡ್ಡ ಬಸವೇಶ್ವರ ದೇವಸ್ಥಾನದವರೆಗೆ ನಡೆದ ಓಟಕ್ಕೆ ಕಂಪ್ಲಿ ಶಾಸಕ ಹಾಗೂ ಕರ್ನಾಟಕ ರಾಜ್ಯ ಸಹಕಾರ ಕೈಮಗ್ಗ ನೇಕಾರರ ಮಹಾಮಂಡಳಿ ನಿಯಮಿತ (ಕಾವೇರಿ ಹ್ಯಾಂಡ್ಲೂಮ್ಸ್) ಅಧ್ಯಕ್ಷ ಜೆ.ಎನ್. ಗಣೇಶ್ ಚಾಲನೆ ನೀಡಿದರು. ಯುವಕರು, ಯುವತಿಯರು ಹಾಗೂ 40 ವರ್ಷ ಮೇಲ್ಪಟ್ಟ ಪುರುಷರ ವಿಭಾಗಗಳಲ್ಲಿ ಸ್ಪರ್ಧೆ ನಡೆಯಿತು. ಶಾಸಕರು ಸಹ ಓಟದಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು. ಮುಖ್ಯ ವೃತ್ತದಲ್ಲಿ ಮೊದಲಾಗಿ ತಲುಪಿದವರಿಗೆ ಬಹುಮಾನ ವಿತರಿಸಲಾಯಿತು. ಗ್ರಾಮೀಣ ಸೊಗಡನ್ನು ಪ್ರತಿಬಿಂಬಿಸುವ ಎತ್ತಿನಬಂಡಿ ಪ್ರದರ್ಶನ ಉತ್ಸವದ ಪ್ರಮುಖ ಆಕರ್ಷಣೆಯಾಗಿತ್ತು. ತಾಲ್ಲೂಕಿನ ವಿವಿಧ ಗ್ರಾಮಗಳಿಂದ ರೈತರು ಜೋಡಿ ಎತ್ತುಗಳನ್ನು ಸಿಂಗರಿಸಿಕೊಂಡು ಭಾಗವಹಿಸಿದರು. ಮಿನಿ ವಿಧಾನಸೌಧದ ಬಳಿ ಶಾಸಕ ಜೆ.ಎನ್. ಗಣೇಶ್ ಚಾಲನೆ ನೀಡಿದರು. 60ಕ್ಕೂ ಹೆಚ್ಚು ಎತ್ತಿನಬಂಡಿಗಳು ಸಾಲಾಗಿ ಸಾಗಿದ್ದು ನೋಡುಗರ ಗಮನ ಸೆಳೆಯಿತು. ಮಹಿಳೆಯರಿಗಾಗಿ ಆಯೋಜಿಸಿದ್ದ ರಂಗೋಲಿ ಸ್ಪರ್ಧೆಯಲ್ಲಿ 130ಕ್ಕೂ ಹೆಚ್ಚು ಮಂದಿ ಭಾಗವಹಿಸಿದರು. ದೇವಸ್ಥಾನ ಎದುರುಗಡೆಯಿಂದ ಕಂಪ್ಲಿ ರಸ್ತೆಯವರೆಗೆ ಬಣ್ಣಬಣ್ಣದ ರಂಗೋಲಿ ಚಿತ್ತಾರಗಳು ಮೂಡಿಬಂದವು. ದೊಡ್ಡ ಬಸವೇಶ್ವರ–ನೀಲಮ್ಮಳ ಆಕೃತಿ, ದೇವಸ್ಥಾನದ ಗೋಪುರ, ಸಾಮಾಜಿಕ ಸಂದೇಶ ಸಾರುವ ಚಿತ್ರಗಳು ಸೇರಿದಂತೆ ವಿವಿಧ ವಿನ್ಯಾಸಗಳು ಗಮನಸೆಳೆದವು. ವಿಜೇತರಿಗೆ ಪ್ರಥಮ, ದ್ವಿತೀಯ ಮತ್ತು ತೃತೀಯ ಬಹುಮಾನ ವಿತರಿಸಲಾಯಿತು. ಕೃಷಿ ಸಂಸ್ಕೃತಿಯನ್ನು ಪ್ರತಿಬಿಂಬಿಸುವಂತೆ ಬಾದನಹಟ್ಟಿ ರಸ್ತೆಯ ಪೆಟ್ರೋಲ್ ಬಂಕ್ ಎದುರಿನ ಜಮೀನಿನಲ್ಲಿ ಪುರುಷರಿಗಾಗಿ ಕೆಸರು ಗದ್ದೆ ಓಟ ಆಯೋಜಿಸಲಾಯಿತು. ಶಾಸಕರು ಸ್ಪರ್ಧೆಗೆ ಚಾಲನೆ ನೀಡಿ ತಾವೂ ಭಾಗವಹಿಸಿದರು. ಮಹಿಳೆಯರಿಗಾಗಿ ಹಗ್ಗಜಗ್ಗಾಟ ಸ್ಪರ್ಧೆ ಮನರಂಜನೆ ನೀಡಿತು. ಇದೇ ವೇಳೆ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಚಿಣ್ಣರ ಚಿತ್ರಕಲಾ ಉತ್ಸವ ಹಾಗೂ ದೇವಸ್ಥಾನ ಮುಂಭಾಗ ಹವ್ಯಾಸಿ ಕಲಾವಿದರ ಚಿತ್ರಕಲಾ ಪ್ರದರ್ಶನ ಜರುಗಿದವು. ಉತ್ಸವದಲ್ಲಿ ಕುರುಗೋಡು ಪುರಸಭೆ ಅಧ್ಯಕ್ಷ ಟಿ. ಶೇಖಣ್ಣ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಬಸವನಗೌಡ, ತಹಶೀಲ್ದಾರ್ ನರಸಪ್ಪ ಸೇರಿದಂತೆ ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.
ಗಾಜಾ ಮರುನಿರ್ಮಾಣಕ್ಕೆ 5 ಬಿಲಿಯನ್ ಡಾಲರ್ ನೆರವು, ಶಾಂತಿ ಮಂಡಳಿ ಮಹತ್ವದ ತೀರ್ಮಾನ | Gaza Peace
ಗಾಜಾ ಈಗಷ್ಟೇ ಶಾಂತವಾಗುತ್ತಿದ್ದು, ಕಳೆದ ಕೆಲವು ವರ್ಷಗಳಿಂದ ಅಶಾಂತಿಗೆ ಸಿಲುಕಿ ಒದ್ದಾಡಿಬಿಟ್ಟಿದೆ. ಹಮಾಸ್ ಮತ್ತು ಇಸ್ರೇಲ್ ನಡುವೆ ಶುರುವಾಗಿದ್ದ ಯುದ್ಧವೇ ಇಡೀ ಗಾಜಾ ಪಟ್ಟಿಯನ್ನ ಧೂಳ್ ಧೂಳ್ ಮಾಡಿದೆ. ಹಮಾಸ್ ವಿರುದ್ಧದ ಯುದ್ಧದಲ್ಲಿ ಅಮಾಯಕರು ಕೂಡ ಸಂಕಷ್ಟಕ್ಕೆ ಸಿಲುಕಿದ್ದಾರೆ, ಹೀಗೆ ಅಮಾಯಕರಿಗೆ ತೊಂದರೆ ಮಾಡಲಾಗಿದೆ ಎಂದು ಇಸ್ರೇಲ್ ವಿರುದ್ಧ ಆಕ್ರೋಶ ಕೂಡ ಮೊಳಗುತ್ತಿದೆ. ಇದೇ ಸಮಯದಲ್ಲಿ ಅಮೆರಿಕ
ದೇಶದ ಕಾರ್ಮಿಕರ ಜೀವನ ಅಭದ್ರವಾಗಿದೆ: ಸಾಮಾಜಿಕ ಕಾರ್ಯಕರ್ತ ಹರ್ಷ ಮಂದರ್ ಕಳವಳ
ದಕ್ಷಿಣ ಕನ್ನಡ ಜಿಲ್ಲಾ ಸಮಿತಿಯ ಆಶ್ರಯದಲ್ಲಿ ವಲಸೆ ಕಾರ್ಮಿಕರ ಸಮ್ಮೇಳನ
ಹಂಪಿ ಉತ್ಸವ : ಮಹಿಳಾ ಕುಸ್ತಿ ಪಂದ್ಯಾವಳಿ
ಮಹಿಳಾ ಕಂಠೀರವ ಪ್ರಶಸ್ತಿ ಮುಡಿಗೇರಿಸಿಕೊಂಡ ರಾಧಿಕಾ
Bidar | ಬಸವ ಮಂಟಪದಲ್ಲಿ ಶಿವರಾತ್ರಿ ಪ್ರಯುಕ್ತ ಇಷ್ಟಲಿಂಗ ಪೂಜೆ
ಬೀದರ್ : ನಗರದ ಬಸವ ಮಂಟಪದಲ್ಲಿ ರಾಷ್ಟ್ರೀಯ ಬಸವ ದಳ, ಲಿಂಗಾಯತ ಧರ್ಮ ಮಹಾಸಭಾ, ಕ್ರಾಂತಿ ಗಂಗೋತ್ರಿ ಅಕ್ಕನಾಗಲಾಂಬಿಕಾ ಮಹಿಳಾ ಗಣ ವತಿಯಿಂದ ರವಿವಾರ ಆಯೋಜಿಸಿದ್ದ ಸಾಮೂಹಿಕ ಇಷ್ಟಲಿಂಗ ಪೂಜೆ ನಡೆಯಿತು. ಈ ವೇಳೆ ಬೆಂಗಳೂರಿನ ಚನ್ನಬಸವೇಶ್ವರ್ ಜ್ಞಾನಪೀಠದ ಪೀಠಾಧ್ಯಕ್ಷ ಜಗದ್ಗುರು ಡಾ. ಚನ್ನಬಸವಾನಂದ್ ಸ್ವಾಮೀಜಿ, ಬಸವ ಮಂಟಪದ ಸದ್ಗುರು ಮಾತೆ ಸತ್ಯಾದೇವಿ ಅವರು ಮಾತನಾಡಿದರು. ಯಾದಗಿರಿ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಮಹೇಶ್ ಬಿರಾದಾರ್ ಧ್ವಜಾರೋಹಣ ನೆರವೇರಿಸಿದರು. ಪ್ರೊ.ವೀರಶೆಟ್ಟಿ ಮೈಲೂರಕರ್ ಬಸವಪೂಜೆ ನೆರವೇರಿಸಿ ಪ್ರಸಾದ ದಾಸೋಹಗೈದರು. ಈ ವೇಳೆ ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಕೂಡಲ ಸಂಗಮ ಸುಕ್ಷೇತ್ರದಲ್ಲಿ ನೂತನವಾಗಿ ನಿರ್ಮಾಣ ಮಾಡುತ್ತಿರುವ ಲಿಂಗಾಯತ ಧರ್ಮ ಮಹಾಪೀಠದ ಕಾರ್ಯಯೋಜನೆಯ ಭಿತ್ತಿಪತ್ರ ಹಾಗೂ ಗಂಗಾವತಿಯಲ್ಲಿ ಮಾ.22 ರಂದು ನಡೆಯಲಿರುವ ಮಹಾದಂಡನಾಯಕರ ಸ್ಮರಣೋತ್ಸವ ಕಾರ್ಯಕ್ರಮದ ಕರಪತ್ರ ಬಿಡುಗಡೆ ಮಾಡಲಾಯಿತು. ಈ ಕಾರ್ಯಕ್ರಮದ ವೇದಿಕೆ ಮೇಲೆ ಅಖಿಲ ಭಾರತ ಲಿಂಗಾಯತ ಸಮನ್ವಯ ಸಮಿತಿಯ ರಾಜ್ಯ ಸಂಚಾಲಕ ಶ್ರೀಕಾಂತ್ ಸ್ವಾಮಿ, ಪಶುವೈದ್ಯಕೀಯ ವಿ.ವಿ.ಯ ನಿವೃತ್ತ ಡೀನ್ ಡಾ. ಸುರೇಶ್ ಪಾಟೀಲ್, ಉದ್ಯಮಿ ನಾಗಶೆಟ್ಟಿ ದಾಡಗಿ, ಡಾ. ವೀರಶೆಟ್ಟಿ ಮೈಲೂರಕರ್, ಶಿವಶರಣಪ್ಪ ಪಾಟೀಲ್ ಹಾರೂರಗೇರಿ, ನಿರ್ಮಲಾ ನಿಲಂಗೆ, ಶಿವಕುಮಾರ್ ಪಾರಾ, ನ್ಯಾಯವಾದಿ ಅಶೋಕ್ ಮಾನೂರೆ, ಬಸವರಾಜ್ ಲಾಧಾ, ಬಸವರಾಜ್ ಸಂಗಮದ, ಮನ್ಮಥಯ್ಯ ಸ್ವಾಮಿ, ಗಣಪತಿ ಬಿರಾದಾರ್ ಹಾಗೂ ಶ್ರೀನಾಥ್ ಕೋರೆ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಕಲ್ಯಾಣರಾವ್ ಬಂಬುಳಗಿ ವಚನ ಗಾಯನ ಮಾಡಿದರು. ಮಹಾರುದ್ರ ಡಾಕುಳಗೆ ಸ್ವಾಗತಿಸಿದರು. ಸತೀಶ್ ಪಾಟೀಲ್ ನಿರೂಪಿಸಿದರು. ಬಸವಕುಮಾರ್ ಚಟನಳ್ಳಿ ವಂದಿಸಿದರು.
ರಾಹುಲ್ ಗಾಂಧಿ ಫೋಟೋ ಅಳಿಸಲು ಕ್ರಿಕೆಟಿಗ ಸಚಿನ್ ತೆಂಡುಲ್ಕರ್ ಮೇಲೆ ಒತ್ತಡ: ಕೇರಳ ಕಾಂಗ್ರೆಸ್ ಆರೋಪ
ಸದ್ದಿಲ್ಲದೆ ಮಧ್ಯರಾತ್ರಿ ಫೋಟೋ ರಿಪೋಸ್ಟ್!
ಸೇಡಂ | ಮಹಾಶಿವರಾತ್ರಿ ಅಂಗವಾಗಿ ಯಾನಗುಂದಿ ಬೆಟ್ಟದಲ್ಲಿ ಧಾರ್ಮಿಕ ಕಾರ್ಯಕ್ರಮಗಳು
ಸೇಡಂ : ತಾಲೂಕಿನ ಸುಕ್ಷೇತ್ರ ಯಾನಗುಂದಿ ಬೆಟ್ಟದಲ್ಲಿ ಮಹಾಶಿವರಾತ್ರಿ ಪ್ರಯುಕ್ತ ಲಿಂಗೈಕ್ಯ ಅಹಿಂಸಾ ವೀರ ಧರ್ಮಜ ಮಹಾ ಯೋಗಿನಿ ಮಾತೆ ಮಾಣಿಕೇಶ್ವರಿ ಅಮ್ಮನವರ ಸನ್ನಿಧಿಯಲ್ಲಿ ಭಾನುವಾರ ಬೆಳಗ್ಗೆ 8ರಿಂದ ಮಧ್ಯಾಹ್ನ 2ರವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಭಕ್ತಿಭಾವದಿಂದ ಜರುಗಿದವು. ಅಮ್ಮನವರ ಪಾದುಕಾ ಪೂಜೆ, ಮಹಾರುದ್ರಾಭಿಷೇಕ ಹಾಗೂ ಮಂಗಳಾರತಿ ಕಾರ್ಯಕ್ರಮಗಳು ನೆರವೇರಿದ್ದು, ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದರು. ಈ ಸಂದರ್ಭದಲ್ಲಿ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ, ವಿಧಾನ ಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರ, ಶಾಸಕ ಅಲ್ಲಮಪ್ರಭು ಪಾಟೀಲ, ಟ್ರಸ್ಟ್ ಅಧ್ಯಕ್ಷ ಶಿವಯ್ಯಸ್ವಾಮಿ, ಸಕ್ಕರೆ ಆಯುಕ್ತ ಗೋವಿಂದರೆಡ್ಡಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. ಸಿದ್ರಾಮಪ್ಪ ಸಣ್ಣೂರ, ಭೀಮಣ್ಣ ಸಾಲಿ, ಶಿವಕುಮಾರ (ಜಿಕೆ) ಪಾಟೀಲ ತೆಲ್ಕೂರ, ಜಯಪ್ರಕಾಶ ಕಮಕನೂರ, ಚನ್ನಮಲ್ಲಪ್ಪ ಗಂಟಿ (ಗುರಮಿಠಕಲ್), ಭೀಮರಾವ್ ವಕೀಲ, ಮೌಲಾಲಿ ಅನಪೂರ, ಪರ್ವತರೆಡ್ಡಿ ಪಾಟೀಲ, ಲಲಿತಾ ಅನಪೂರ, ರವೀಂದ್ರ ನಂದಿಗಾಮ, ಕಿಷ್ಟಪ್ಪ ಮಾಸ್ತರ್, ಗುಂಡಪ್ಪ ಇಟಕಲ್, ತಿಮ್ಮಪ್ಪ ನಿಂಗಾವೋಳ್, ಪರುಷರಾಮರೆಡ್ಡಿ ಗಂಗಾ (ರಾವಲಪಲ್ಲಿ), ಶಿವಕುಮಾರ ಕಾನಾಗಡ್ಡಾ, ರಮೇಶ ಅಸ್ಟೂರ, ನರಸಿಂಹರೆಡ್ಡಿ (ಹೈದರಾಬಾದ್), ಸೂರ್ಯಕಾಂತ ಅವರಾದಿ, ಅಮೀನಾಬೇಗಂ, ರುದ್ರು ಪಿಲ್ಲಿ, ಮಹಾದೇವಪ್ಪ ಗೋಣಿ ಸೇರಿದಂತೆ ಲಕ್ಷಾಂತರ ಭಕ್ತರು ಆಗಮಿಸಿದ್ದರು.
ಫೆಬ್ರವರಿ 15ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ
Petrol, Diesel Price: ಪೆಟ್ರೋಲ್, ಡೀಸೆಲ್ ದರದಲ್ಲಿ ಜಾಸ್ತಿ ಅಲ್ಲದಿದ್ದರೂ, ಸ್ವಲ್ಪ ಪ್ರಮಾಣದಲ್ಲಾದರೂ, ಏರಿಳಿತ ಆಗುತ್ತಿರುತ್ತದೆ. ಹಾಗಾದರೆ, ಇಂದು (ಫೆಬ್ರವರಿ 15) ಬೆಂಗಳೂರು ಸೇರಿದಂತೆ ರಾಜ್ಯದ ಉಳಿದ ಜಿಲ್ಲೆಗಳಲ್ಲಿ ಲೀಟರ್ ಪೆಟ್ರೋಲ್, ಡೀಸೆಲ್ ಬೆಲೆ ಎಷ್ಟಿದೆ ಎನ್ನುವ ಅಂಕಿಅಂಶಗಳನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ. ಶಕ್ತಿಯ ಮೂಲಗಳು ಎನಿಸಿಕೊಂಡಿರುವ ಪೆಟ್ರೋಲ್ ಮತ್ತು ಡೀಸೆಲ್ ಇಂಧನ ಅತ್ಯವಶ್ಯಕವಾಗಿ ಬೇಕಾಗುವ ಸಂಪನ್ಮೂಲಗಳಾಗಿವೆ.
Kalaburagi | ಪಕ್ಷಭೇದ ಮರೆತು ಸಮಾಜಕ್ಕಾಗಿ ಒಂದಾಗಿ : ಶಾಸಕ ಡಾ.ಅವಿನಾಶ್ ಜಾಧವ
ಸಂತ ಶ್ರೀ ಸೇವಾಲಾಲ್ ಮಹಾರಾಜರ 287ನೆಯ ಜಯಂತಿ
Gold: ಚಿನ್ನದ ಬೆಲೆಯಲ್ಲಿ ದಾಖಲೆಯ ಕುಸಿತ: ಬರೋಬ್ಬರಿ ₹24,500 ಇಳಿಕೆ; ಆಭರಣ ಪ್ರಿಯರಿಗೆ ನೆಮ್ಮದಿ
ಬೆಂಗಳೂರು: ಭಾರತ ಸೇರಿದಂತೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲೂ ಚಿನ್ನದ ದರವುಇತ್ತೀಚಿನ ದಿನಗಳಲ್ಲಿ ಭಾರಿ ಏರಿಳಿತ ಕಾಣುತ್ತಿದೆ. 2025ರಲ್ಲಿ ಹೂಡಿಕೆದಾರರಿಗೆ ಭರ್ಜರಿ ಲಾಭ ತಂದುಕೊಟ್ಟಿದ್ದ ಬಂಗಾರದ ಬೆಲೆ 2026ರ ಜನವರಿಯಲ್ಲಿ 10 ಗ್ರಾಂಗೆ ರೂಪಾಯಿ 1,80,779 ತಲುಪಿ ದಾಖಲೆ ಸೃಷ್ಟಿಸಿತ್ತು. ಇದೀಗ ಅದರ ಬೆಲೆಯಲ್ಲಿ ಸುಮಾರು ರೂಪಾಯಿ 24,500 ಕುಸಿದಿದ್ದು, ಬರೋಬ್ಬರಿ 13.50ರಷ್ಟು ಕಡಿಮೆ ಆಗಿದೆ. ಸದ್ಯ ಮಾರುಕಟ್ಟೆಯಲ್ಲಿ 10
ಡಿ.ಕೆ.ಶಿವಕುಮಾರ್ ಅವರಿಗೆ ಮಾತ್ರವಲ್ಲ ಇಡೀ ರಾಜ್ಯಕ್ಕೆ ಒಳ್ಳೆಯದಾಗಲಿದೆ : ಯತೀಂದ್ರ ಸಿದ್ದರಾಮಯ್ಯ
ಕೊಪ್ಪಳ: ಮಹಾಶಿವರಾತ್ರಿ ಬಳಿಕ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಮಾತ್ರವಲ್ಲ ಇಡೀ ರಾಜ್ಯಕ್ಕೆ ಒಳ್ಳೆಯದಾಗಲಿದೆ ಎಂದು ವಿಧಾನ ಪರಿಷತ್ ಶಾಸಕ ಯತೀಂದ್ರ ಸಿದ್ದರಾಮಯ್ಯ ಅವರು ಹೇಳಿದರು. ನಗರದ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಶಿವರಾತ್ರಿಯ ಬಳಿಕ ಒಳ್ಳೆಯದಾಗಲಿದೆ ಎಂದು ಹೇಳಿದ್ದಾರಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಅವರಿಗೆ ಮಾತ್ರವಲ್ಲ, ಇಡೀ ರಾಜ್ಯಕ್ಕೆ ಒಳ್ಳೆಯದಾಗಲಿದೆ ಎಂದು ಪ್ರತಿಕ್ರಿಯಿಸಿದರು. ಮುಖ್ಯಮಂತ್ರಿ ಬದಲಾವಣೆ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸದ ಅವರು, ಈ ವಿಷಯದ ಬಗ್ಗೆ ಈಗಾಗಲೇ ಉತ್ತರ ನೀಡಿದ್ದೇನೆ. ಮತ್ತೆ ಮತ್ತೆ ಅದೇ ವಿಷಯವನ್ನು ಚರ್ಚಿಸುವುದಿಲ್ಲ ಎಂದು ಹೇಳಿದರು.
ಗಾಝಾ| ಇಸ್ರೇಲ್ ವೈಮಾನಿಕ ದಾಳಿಯಲ್ಲಿ ಕನಿಷ್ಠ 10 ಮಂದಿ ಮೃತ್ಯು
ಗಾಝಾ, ಫೆ.15: ರವಿವಾರ ಉತ್ತರ ಮತ್ತು ದಕ್ಷಿಣ ಗಾಝಾಪಟ್ಟಿಯಲ್ಲಿ ಇಸ್ರೇಲ್ನ ವೈಮಾನಿಕ ದಾಳಿಯಲ್ಲಿ ಕನಿಷ್ಠ 10 ಫೆಲೆಸ್ತೀನೀಯರು ಮೃತಪಟ್ಟಿರುವುದಾಗಿ ಗಾಝಾದ ಆರೋಗ್ಯ ಅಧಿಕಾರಿಗಳು ಹೇಳಿದ್ದಾರೆ. ಸ್ಥಳಾಂತರಗೊಂಡ ಕುಟುಂಬಗಳು ವಾಸಿಸುವ ಟೆಂಟ್ ಶಿಬಿರದ ಮೇಲೆ ಇಸ್ರೇಲ್ನ ವೈಮಾನಿಕ ದಾಳಿಯಲ್ಲಿ ಕನಿಷ್ಠ 4 ಜನರು ಮೃತಪಟ್ಟರೆ, ದಕ್ಷಿಣ ಗಾಝಾಪಟ್ಟಿಯ ಖಾನ್ ಯೂನಿಸ್ ನಗರದಲ್ಲಿ ನಡೆದ ಮತ್ತೊಂದು ದಾಳಿಯಲ್ಲಿ ಐವರು, ಗಾಝಾ ಪಟ್ಟಿಯ ಉತ್ತರದಲ್ಲಿ ನಡೆಸಿದ ಗುಂಡಿನ ದಾಳಿಯಲ್ಲಿ ಒಬ್ಬ ಮೃತಪಟ್ಟಿರುವುದಾಗಿ ವರದಿಯಾಗಿದೆ. ಶನಿವಾರ ಬೀಟ್ ಹನೌನ್ ನಗರದಲ್ಲಿ ಸುರಂಗವೊಂದರಿಂದ ಹೊರಬಂದ `ಹಮಾಸ್ ಸಶಸ್ತ್ರದಾರಿಗಳು' ಇಸ್ರೇಲ್ ಪಡೆಗಳ ಮೇಲೆ ದಾಳಿ ನಡೆಸಿರುವುದಕ್ಕೆ ಪ್ರತಿಯಾಗಿ ಈ ನಿಖರ ಮತ್ತು ಯಶಸ್ವಿ ಕಾರ್ಯಾಚರಣೆ ನಡೆಸಿರುವುದಾಗಿ ಇಸ್ರೇಲ್ ಮಿಲಿಟರಿ ಅಧಿಕಾರಿಗಳು ಹೇಳಿದ್ದಾರೆ.
ಮಲ್ಲಾಪೂರ ತಾಂಡದಲ್ಲಿ ಸಂತ ಸೇವಾಲಾಲ್ ಮಹಾರಾಜ್ ಜಯಂತಿ ಆಚರಣೆ
ಅರಕೇರಾ : ತಾಲೂಕಿನ ಕ್ಯಾದಿಗೇರಾ ಗ್ರಾಮ ಪಂಚಾಯತ್ ವ್ಯಾಪ್ತಿಯ ಮಲ್ಲಾಪೂರ ತಾಂಡದಲ್ಲಿ ಮಹಾತಪಸ್ವಿ ಸಂತ ಸೇವಾಲಾಲ್ ಮಹಾರಾಜ್ ಅವರ 287ನೇ ಜಯಂತಿಯನ್ನು ಭಕ್ತಿ ಭಾವದಿಂದ ಹಾಗೂ ವಿಜೃಂಭಣೆಯಿಂದ ಆಚರಿಸಲಾಯಿತು. ಗ್ರಾಮದ ಶ್ರೀ ಹನುಮಾನ ದೇವಸ್ಥಾನದಿಂದ ಸಂತ ಸೇವಾಲಾಲ್ ಮಹಾರಾಜರ ಭಾವಚಿತ್ರದ ಮೆರವಣಿಗೆ ಪ್ರಾರಂಭವಾಗಿ, ಮಹಿಳೆಯರು ಕಳಸ ಹಿಡಿದು ಸ್ವಾಗತಿಸಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದರು. ಮೆರವಣಿಗೆಯುದ್ದಕ್ಕೂ ಮಹಿಳೆಯರು ಸಂಪ್ರದಾಯಬದ್ಧ ಲಂಬಾಣಿ ವೇಷಭೂಷಣ ಧರಿಸಿ ಮದುವಣಗಿತ್ತಿಯರಂತೆ ಶೃಂಗಾರಗೊಂಡು ನೃತ್ಯ-ಹಾಡುಗಳೊಂದಿಗೆ ಹೆಜ್ಜೆ ಹಾಕಿ ಸಂಭ್ರಮಿಸಿದರು. ಹಿರಿಯರು ನಗಾರಿ ಮೇಳದೊಂದಿಗೆ ಭಜನೆಗಳನ್ನು ಹಾಡಿ ಸಂತ ಸೇವಾಲಾಲ್ ಅವರನ್ನು ಸ್ಮರಿಸಿದರು. ಎಲ್ಲೆಡೆ ಕೆಂಪು ಬಣ್ಣದ ಲಂಬಾಣಿ ಉಡುಪು ತೊಟ್ಟ ಮಹಿಳೆಯರು “ದಿಮಿ ದಿಮಿ ನಾಚ್ ತು, ಡಿಲೊ ಡಿಲೊ ನಾಚ್” ಎಂಬ ಜಾನಪದ ಗೀತೆಗೆ ತಾಳಮೇಳದೊಂದಿಗೆ ಕುಣಿದು ಸಂಭ್ರಮ ಹೆಚ್ಚಿಸಿದರು. ಗ್ರಾಮದಲ್ಲಿ ಕೆಂಪು-ಬಿಳಿ ಬಾವುಟಗಳು ರಾರಾಜಿಸುತ್ತಿದ್ದು ಹಬ್ಬದ ಸಂಭ್ರಮಕ್ಕೆ ಮತ್ತಷ್ಟು ಕಳೆ ನೀಡಿದವು. ಈ ಸಂದರ್ಭದಲ್ಲಿ ಗ್ರಾಮದ ಮುಖ್ಯ ಬೀದಿಯಲ್ಲಿ ನೂತನವಾಗಿ ನಿರ್ಮಾಣಗೊಂಡ ಸಂತ ಸೇವಾಲಾಲ್ ಮಹಾರಾಜರ ವೃತ್ತಕ್ಕೂ ಪೂಜೆ ಸಲ್ಲಿಸಲಾಯಿತು. ಇಂದಿನ ಆಧುನಿಕ ಕಂಪ್ಯೂಟರ್ ಯುಗದಲ್ಲೂ ಲಂಬಾಣಿ ಸಂಪ್ರದಾಯ, ಉಡುಗೆ-ತೊಡಿಗೆ, ಕಲೆ-ಸಂಸ್ಕೃತಿಯನ್ನು ಉಳಿಸಿ ಮುಂದಿನ ಪೀಳಿಗೆಗೆ ಪರಿಚಯಿಸುವುದು ಹೆಮ್ಮೆಯ ವಿಷಯವಾಗಿದೆ ಎಂದು ಗ್ರಾಮಸ್ಥರು ಅಭಿಪ್ರಾಯಪಟ್ಟರು. ಕಾರ್ಯಕ್ರಮದಲ್ಲಿ ಶೇಖರಪ್ಪ ಪೂಜಾರಿ, ಶಿವಪ್ಪ ಪೂಜಾರಿ, ಧರ್ಮಣ್ಣ ಪೂಜಾರಿ, ವಿಜಯ ರಾಠೋಡ ಪೂಜಾರಿ, ಬಾಷಪ್ಪ, ಬುಡ್ಡಪ್ಪ, ರಾಮಚಂದ್ರ, ಸೂಗಪ್ಪ, ಶಂಕ್ರಪ್ಪ ಪೂಜಾರಿ, ಪೋಮಣ್ಣ, ದೇನಪ್ಪ, ಮೇಗಪ್ಪ ಪೂಜಾರಿ, ಭೀಮಣ್ಣ, ಅಮರೇಶ ರಾಠೋಡ, ಬಸವರಾಜ, ಅಂಬ್ರೇಶ (ಎಸ್ಡಿಎಂಸಿ ಅಧ್ಯಕ್ಷರು), ಜಗನ್ನಾಥ ಸರ್ವೆಯರ್, ನಾಗರಾಜ, ಸುರೇಶ, ಮುಕೇಶ, ಹನುಮಂತ ಸೇರಿದಂತೆ ಗ್ರಾಮದ ಹಿರಿಯರು, ಮಹಿಳೆಯರು ಹಾಗೂ ಯುವಕರು ಭಾಗವಹಿಸಿದ್ದರು.
ಉಕ್ರೇನ್ನ 12 ಗ್ರಾಮಗಳನ್ನು ವಶಕ್ಕೆ ಪಡೆದುಕೊಂಡ ರಶ್ಯ: ವರದಿ
ಮಾಸ್ಕೋ, ಫೆ.15: ಫೆಬ್ರವರಿಯಲ್ಲಿ ರಶ್ಯದ ಪಡೆಗಳು ಪೂರ್ವ ಉಕ್ರೇನ್ನ 12ಕ್ಕೂ ಹೆಚ್ಚು ಗ್ರಾಮಗಳನ್ನು ವಶಕ್ಕೆ ಪಡೆದಿರುವುದಾಗಿ ರಶ್ಯ ಸೇನಾಪಡೆಯ ಮುಖ್ಯಸ್ಥ ವ್ಯಾಲೆರಿ ಗೆರಸಿಮೋವ್ ರವಿವಾರ ಹೇಳಿದ್ದಾರೆ. ತೀವ್ರ ಚಳಿಯ ಹೊರತಾಗಿಯೂ ಫೆಬ್ರವರಿ ತಿಂಗಳ ಎರಡು ವಾರದಲ್ಲೇ ನಮ್ಮ ಸಶಸ್ತ್ರ ಪಡೆಗಳು 12 ಗ್ರಾಮಗಳನ್ನು ಸ್ವತಂತ್ರಗೊಳಿಸಿವೆ ಎಂದು ಉಕ್ರೇನ್ನಿಂದ ವಶಕ್ಕೆ ಪಡೆದಿರುವ ಪ್ರದೇಶಕ್ಕೆ ಭೇಟಿ ನೀಡಿದ ಗೆರೆಸಿಮೋವ್ ಹೇಳಿದ್ದಾರೆ. ರಶ್ಯದ ಪಡೆಗಳು ಕೈಗಾರಿಕಾ ಕೇಂದ್ರ ಸ್ಲೊವಿಯಾಂಸ್ಕ್ನತ್ತ ಮುನ್ನಡೆದಿದ್ದು ನಗರದಿಂದ ಸುಮಾರು 15 ಕಿ.ಮೀ ದೂರದಲ್ಲಿವೆ. ಈಶಾನ್ಯ ಸುಮಿ ಮತ್ತು ಖಾರ್ಕಿವ್ ಪ್ರದೇಶದ ಗಡಿ ಭಾಗಗಳಲ್ಲಿ ರಶ್ಯವು ಭದ್ರತಾ ವಲಯವನ್ನು ವಿಸ್ತರಿಸುತ್ತಿದ್ದು ಇಲ್ಲಿ ಕೆಲವು ಭಾಗಗಳ ಮೇಲೆ ಈಗಾಗಲೇ ನಿಯಂತ್ರಣ ಸಾಧಿಸಿವೆ. ನಿಪ್ರೊಪೆಟ್ರೋವ್ಸ್ಕ್ ಪ್ರಾಂತದ ದಿಕ್ಕಿನಲ್ಲಿ ಮುಂದಿನ ಕಾರ್ಯಾಚರಣೆಯ ಬಗ್ಗೆ ಅಧಿಕಾರಿಗಳ ಜೊತೆ ಚರ್ಚಿಸುವುದಾಗಿ ಗೆರಸಿಮೋವ್ ಹೇಳಿದ್ದಾರೆ.
ರಾಯಚೂರು | ಸಂತ ಸೇವಾಲಾಲ್ ಅವರ ವಿಚಾರಧಾರೆಗಳನ್ನು ಅಳವಡಿಸಿಕೊಳ್ಳಬೇಕು: ಡಾ.ಹಂಪಣ್ಣ ಸಜ್ಜನ್
ಸಂತ ಸೇವಾಲಾಲ್ ಜಯಂತಿ ಕಾರ್ಯಕ್ರಮ
ಸಿಂಧನೂರಿನಲ್ಲಿ ಶ್ರೀ ಸಂತ ಸೇವಾಲಾಲ್ ಜಯಂತಿ ಅದ್ದೂರಿ ಆಚರಣೆ
ಸಿಂಧನೂರು: ನಗರದಲ್ಲಿ ಬಂಜಾರ ಸಮಾಜದ ವತಿಯಿಂದ ಭಾನುವಾರ ಆಯೋಜಿಸಲಾದ ಸಂತ ಸೇವಾಲಾಲ್ ಮಹಾರಾಜ್ ಜಯಂತಿ ಕಾರ್ಯಕ್ರಮ ಭಕ್ತಿಭಾವ ಮತ್ತು ಸಂಭ್ರಮದಿಂದ ನೆರವೇರಿತು. ಶ್ರೀ ಸಂತ ಸೇವಾಲಾಲ್ ಅವರ ಭಾವಚಿತ್ರದ ಭವ್ಯ ಮೆರವಣಿಗೆ ನಗರದ ಎಪಿಎಂಸಿಯಲ್ಲಿರುವ ಗಣೇಶ ಗುಡಿಯಿಂದ ಆರಂಭವಾಗಿ ಜನತಾ ಕಾಲೋನಿಯಲ್ಲಿರುವ ಬಂಜಾರ ಸಮಾಜದ ದೇವಸ್ಥಾನದವರೆಗೆ ಸಾಗಿತು. ಮೆರವಣಿಗೆಯಲ್ಲಿ ಬಂಜಾರ ಸಮಾಜದ ಮಹಿಳೆಯರು ಮತ್ತು ಮಕ್ಕಳು ತಮ್ಮ ಸಾಂಪ್ರದಾಯಿಕ ವಸ್ತ್ರ ಧರಿಸಿ ನೃತ್ಯ ಮಾಡಿ ಸಂಭ್ರಮಿಸಿದರು. ಮಹಿಳೆಯರು ಹೊತ್ತು ಸಾಗಿದ ಕುಂಭಕಳಶ ಮೆರವಣಿಗೆಗೆ ವಿಶೇಷ ಮೆರುಗು ನೀಡಿತು. ಜನತಾ ಕಾಲೋನಿಯಲ್ಲಿರುವ ಶ್ರೀ ಸಂತ ಸೇವಾಲಾಲ್ ವೃತ್ತಕ್ಕೆ ಭೇಟಿ ನೀಡಿದ ರಾಜಕೀಯ ಮುಖಂಡರು ಹಾಗೂ ವಿವಿಧ ಸಂಘ-ಸಂಸ್ಥೆಗಳ ಪ್ರತಿನಿಧಿಗಳು ಸೇವಾಲಾಲ್ ಅವರ ಭಾವಚಿತ್ರಕ್ಕೆ ಹೂಮಾಲೆ ಹಾಕಿ ಗೌರವ ಸಲ್ಲಿಸಿದರು. ಈ ಸಂದರ್ಭದಲ್ಲಿ ಬಂಜಾರ ಸಮಾಜದ ಮುಖಂಡರು, ಯುವಕರು ಹಾಗೂ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಭಾಗವಹಿಸಿದ್ದರು.
ಮ್ಯೂನಿಚ್, ಫೆ.15: ರಶ್ಯದ ಕಚ್ಛಾತೈಲ ಖರೀದಿಯನ್ನು ಸ್ಥಗಿತಗೊಳಿಸುವುದಾಗಿ ಭಾರತ ಭರವಸೆ ನೀಡಿದೆ ಎಂಬ ಅಮೆರಿಕದ ಹೇಳಿಕೆಗೆ ಪ್ರತಿಕ್ರಿಯಿಸಿರುವ ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ `ಭಾರತವು ತನ್ನ ಇಂಧನ ನಿಯಮಗಳನ್ನು ತನ್ನದೇ ಆದ ನಿಯಮಗಳ ಮೇಲೆ ನಿರ್ಧರಿಸುತ್ತದೆ' ಎಂದಿದ್ದಾರೆ. ಮ್ಯೂನಿಚ್ ಭದ್ರತಾ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಜೈಶಂಕರ್ `ಭಾರತದ ಇಂಧನ ಆಯ್ಕೆಗಳು ವೆಚ್ಚ, ಅಪಾಯ(ರಿಸ್ಕ್) ಮತ್ತು ಲಭ್ಯತೆಯನ್ನು ಆಧರಿಸಿದೆ. ಭಾರತವು ಕಾರ್ಯತಂತ್ರದ ಸ್ವಾಯತ್ತತೆಗೆ ದೃಢವಾಗಿ ಬದ್ಧವಾಗಿದೆ, ಯಾಕೆಂದರೆ ಅದು ನಮ್ಮ ಇತಿಹಾಸ ಮತ್ತು ವಿಕಾಸದ ಭಾಗವಾಗಿದೆ ' ಎಂದರು. ಜಾಗತಿಕ ತೈಲ ಮಾರುಕಟ್ಟೆ ಸಂಕೀರ್ಣವಾಗಿದೆ. ತೈಲ ಕಂಪನಿಗಳು ತಮ್ಮ ಹಿತದೃಷ್ಟಿಯಿಂದ ನಿರ್ಧಾರಗಳನ್ನು ಕೈಗೊಳ್ಳುವ ಮೊದಲು ಲಭ್ಯತೆ, ವೆಚ್ಚ ಮತ್ತು ಅಪಾಯಗಳನ್ನು ಗಮನಿಸುತ್ತವೆ ಎಂದ ಜೈಶಂಕರ್, ಭಾರತವು ಸ್ವತಂತ್ರ ನಿರ್ಧಾರಗಳನ್ನು ಕೈಗೊಳ್ಳುತ್ತದೆ ಮತ್ತು ಈ ವಿಷಯದಲ್ಲಿ ಇತರರನ್ನು ಅವಲಂಬಿಸುವುದಿಲ್ಲ ಎಂದು ಅಮೆರಿಕಾದೊಂದಿಗಿನ ಇತ್ತೀಚಿನ ವ್ಯಾಪಾರ ಒಪ್ಪಂದವನ್ನು ಉಲ್ಲೇಖಿಸಿ ಹೇಳಿದ್ದಾರೆ.
ಹುಣಸಗಿ | ಕರ್ತವ್ಯ, ತರಬೇತಿ, ಕವಾಯತು ವೇಳೆ ಮೃತಪಟ್ಟರೆ 10 ಲಕ್ಷ ರೂ. ಪರಿಹರ : ಬಡಿಗೇರ
ಗಣೇಶ-ಈದ್ ಮಿಲಾದ್ ಹಬ್ಬದ ಕರ್ತವ್ಯ ನಿರ್ವಹಿಸಿದ ಗೃಹರಕ್ಷಕರಿಗೆ ಪ್ರಶಂಸನಾ ಪತ್ರ ವಿತರಣೆ
ನಿರ್ಬಂಧ ತೆರವು ಕುರಿತು ಚರ್ಚಿಸಲು ಅಮೆರಿಕ ಸಿದ್ಧವಿದ್ದರೆ ಪರಮಾಣು ಒಪ್ಪಂದಕ್ಕೆ ರಾಜಿ ಪರಿಗಣಿಸಲು ಸಿದ್ಧ: ಇರಾನ್
ಟೆಹ್ರಾನ್, ಫೆ.15: ದೇಶದ ಮೇಲಿನ ಎಲ್ಲಾ ನಿರ್ಬಂಧಗಳನ್ನೂ ತೆರವುಗೊಳಿಸುವ ಬಗ್ಗೆ ಚರ್ಚಿಸಲು ಅಮೆರಿಕ ಸಿದ್ಧವಿದ್ದರೆ ಅಮೆರಿಕ ಜೊತೆ ಪರಮಾಣು ಒಪ್ಪಂದವನ್ನು ತಲುಪಲು ರಾಜಿಗಳನ್ನು ಪರಿಗಣಿಸಲು ಇರಾನ್ ಸಿದ್ದವಾಗಿದೆ ಎಂದು ಇರಾನ್ನ ಸಹಾಯಕ ವಿದೇಶಾಂಗ ಸಚಿವ ಮಜೀದ್ ತಖ್ತ್-ರವಾಂಚಿಯನ್ನು ಉಲ್ಲೇಖಿಸಿ ಬಿಬಿಸಿ ರವಿವಾರ ವರದಿ ಮಾಡಿದೆ. ಚೆಂಡು ಈಗ ಅಮೆರಿಕದ ಅಂಗಣದಲ್ಲಿದೆ. ತಾವು ಒಪ್ಪಂದ ಬಯಸುತ್ತೇವೆ ಎಂದವರು ಸಾಬೀತು ಪಡಿಸಬೇಕು. ಅವರು ಪ್ರಾಮಾಣಿಕರಾಗಿದ್ದರೆ ನಾವು ಒಪ್ಪಂದದ ಮಾರ್ಗದಲ್ಲಿದ್ದೇವೆ ಎಂದು ನನಗೆ ಖಾತ್ರಿಯಿದೆ' ಎಂದು ರವಾಂಚಿ ಹೇಳಿರುವುದಾಗಿ ವರದಿಯಾಗಿದೆ. ಈ ಮಧ್ಯೆ, ಪರಮಾಣು ಶಸ್ತ್ರಾಸ್ತ್ರಗಳನ್ನು ಹೊಂದಲು ಇರಾನ್ಗೆ ಎಂದಿಗೂ ಅನುಮತಿ ನೀಡುವುದಿಲ್ಲ. ಅದಂತೂ ಸ್ಪಷ್ಟವಾಗಿದೆ. ಪರಮಾಣು ಶಕ್ತ ಇರಾನ್ ಪ್ರಾದೇಶಿಕ ಮತ್ತು ಜಾಗತಿಕ ಭದ್ರತೆಗೆ ಗಂಭೀರ ಅಪಾಯವನ್ನು ಉಂಟು ಮಾಡುತ್ತದೆ ಎಂಬುದು ನಮ್ಮ ದೀರ್ಘಕಾಲದ ನಿಲುವಾಗಿದೆ ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಹೇಳಿದ್ದು ಇರಾನ್ ಜೊತೆಗಿನ ಉದ್ವಿಗ್ನತೆಯನ್ನು ಬಗೆಹರಿಸಲು ರಾಜತಾಂತ್ರಿಕ ಕ್ರಮಕ್ಕೆ ಈಗಲೂ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆದ್ಯತೆ ನೀಡುತ್ತಾರೆ. ಇರಾನ್ ಈ ಹಿಂದೆ ಅಮೆರಿಕದ ಹಿತಾಸಕ್ತಿಗಳ ಮೇಲೆ ದಾಳಿ ಮಾಡುವ ಇಚ್ಛೆಯನ್ನು ಪ್ರದರ್ಶಿಸಿದ್ದರಿಂದ ಅಮೆರಿಕ ಈ ಪ್ರದೇಶದಲ್ಲಿ ಮಿಲಿಟರಿ ಪಡೆಗಳನ್ನು ನಿಯೋಜಿಸಿದೆ ಎಂದಿದ್ದಾರೆ.
ಆಯತುಲ್ಲಾ ಆಲಿ ಖಾಮಿನೈರನ್ನು ಭೇಟಿ ಮಾಡಲು ಡೊನಾಲ್ಡ್ ಟ್ರಂಪ್ ಸಿದ್ಧ: ಅಮೆರಿಕ
ವಾಷಿಂಗ್ಟನ್, ಫೆ.15: ಇರಾನ್ನೊಂದಿಗಿನ ಉದ್ವಿಗ್ನತೆ ಹೆಚ್ಚಿರುವ ನಡುವೆಯೇ ಅಮೆರಿಕ ಈಗಲೂ ರಾಜತಾಂತ್ರಿಕ ಪರಿಹಾರ ಮಾರ್ಗಕ್ಕೆ ಆದ್ಯತೆ ನೀಡುತ್ತದೆ ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಹೇಳಿದ್ದು, ಅವಕಾಶ ಸಿಕ್ಕರೆ ಇರಾನ್ನ ಸರ್ವೋಚ್ಛ ನಾಯಕ ಆಯತುಲ್ಲಾ ಆಲಿ ಖಾಮಿನೈ ಅವರನ್ನು ಭೇಟಿ ಮಾಡಲು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಿದ್ದರಿದ್ದಾರೆ ಎಂದು ಹೇಳಿದ್ದಾರೆ. ಜಾಗತಿಕ ಬಿಕ್ಕಟ್ಟುಗಳನ್ನು ಪರಿಹರಿಸಲು ನೇರ ಮಾತುಕತೆಯನ್ನು ಪ್ರಾಯೋಗಿಕ ಮಾರ್ಗವಾಗಿ ಟ್ರಂಪ್ ಪರಿಗಣಿಸುತ್ತಾರೆ. ಎದುರಾಳಿಗಳನ್ನು ಭೇಟಿಯಾಗುವುದನ್ನು ರಿಯಾಯಿತಿ(ಒಪ್ಪಿಕೊಳ್ಳುವುದು) ಎಂದು ವ್ಯಾಖ್ಯಾನಿಸಬಾರದು. ಯಾರನ್ನೂ ಭೇಟಿಯಾಗಲು ಇಚ್ಛಿಸುವ ಅಧ್ಯಕ್ಷರ ಅಧೀನದಲ್ಲಿ ನಾನು ಕಾರ್ಯ ನಿರ್ವಹಿಸುತ್ತಿದ್ದೇನೆ. ಒಂದು ವೇಳೆ ನಾಳೆ ಖಾಮಿನೈ ನಾನು ಅಧ್ಯಕ್ಷ ಟ್ರಂಪ್ರನ್ನು ಭೇಟಿಯಾಗಲು ಬಯಸುತ್ತೇನೆ ಎಂದು ಹೇಳಿದರೆ, ಟ್ರಂಪ್ ಖಂಡಿತಾ ಒಪ್ಪುತ್ತಾರೆ ಎಂಬ ಬಗ್ಗೆ ವಿಶ್ವಾಸವಿದೆ. ಇದರರ್ಥ ಟ್ರಂಪ್ ಅವರು ಖಾಮಿನೈಯ ನಿಲುವನ್ನು ಒಪ್ಪುತ್ತಾರೆ ಎಂದಲ್ಲ. ಜಾಗತಿಕ ಸಮಸ್ಯೆಗಳನ್ನು ಪರಿಹರಿಸಲು ಇದು ಉತ್ತಮ ಮಾರ್ಗವಾಗಿದೆ' ಎಂದು ರೂಬಿಯೊ ಹೇಳಿರುವುದಾಗಿ `ಬ್ಲೂಮ್ಬರ್ಗ್' ವರದಿ ಮಾಡಿದೆ. ಇರಾನ್ನೊಂದಿಗೆ ಮಾತುಕತೆಯ ಒಪ್ಪಂದವನ್ನು ಮುಂದುವರಿಸಲು ಟ್ರಂಪ್ ಬದ್ಧವಾಗಿದ್ದಾರೆ. ಶೀಘ್ರದಲ್ಲೇ ಮಾತುಕತೆ ನಡೆಯಬಹುದು. ಮುಂದಿನ ದಿನಗಳಲ್ಲಿ ನಡೆಯಲಿರುವ ಸಭೆಗಳಲ್ಲಿ ಅಮೆರಿಕದ ಪ್ರತಿನಿಧಿಗಳಾದ ಸ್ಟೀವ್ ವಿಟ್ಕಾಫ್ ಮತ್ತು ಜರೆಡ್ ಕುಷ್ನರ್ ಪಾಲ್ಗೊಳ್ಳುತ್ತಾರೆ. ಅಧ್ಯಕ್ಷರು ಯಾವಾಗಲೂ ಒಪ್ಪಂದದ ಮೂಲಕ ಸಮಸ್ಯೆಗಳನ್ನು ಕೊನೆಗೊಳಿಸಲು ಬಯಸುತ್ತಾರೆ' ಎಂದು ರೂಬಿಯೊ ಹೇಳಿದ್ದಾರೆ.
ಯಾದಗಿರಿ | ನಿರಂತರ ಅಭ್ಯಾಸದಿಂದ ಗುರಿ, ಸಾಧನೆ ಸಾಧ್ಯ: ಎಸ್ಪಿ ಪೃಥ್ವಿಕ್ ಶಂಕರ್
ಯಾದಗಿರಿ: ನಿಗದಿತ ಗುರಿಯೊಂದಿಗೆ ಸಮಯಪಾಲನೆ ಮಾಡಿ ನಿರಂತರ ಅಭ್ಯಾಸ ನಡೆಸಿದರೆ ಜೀವನದಲ್ಲಿ ಅಂದುಕೊಂಡ ಗುರಿ ಸಾಧಿಸಲು ಸಾಧ್ಯವಾಗುತ್ತದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪೃಥ್ವಿಕ್ ಶಂಕರ್ ಹೇಳಿದರು. ಭಾನುವಾರ ನಗರದಲ್ಲಿನ ರಾಯಲ್ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ಮುಸ್ಲಿಂ ನೌಕರರ ಕಲ್ಯಾಣ ಸಂಘ ಜಿಲ್ಲಾ ಘಟಕದ ವತಿಯಿಂದ ಹಮ್ಮಿಕೊಂಡಿದ್ದ ವೃತ್ತಿಪರ ಸಲಹೆ ಕಾರ್ಯಕ್ರಮ ಹಾಗೂ 2026ನೇ ಸಾಲಿನ ಕ್ಯಾಲೆಂಡರ್ ಬಿಡುಗಡೆ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಇಂದು ಜ್ಞಾನ ಪಡೆದುಕೊಳ್ಳಲು ಅನೇಕ ಮಾರ್ಗಗಳು ಲಭ್ಯವಿವೆ. ಸಾಮಾಜಿಕ ಜಾಲತಾಣಗಳನ್ನು ಸದುಪಯೋಗಪಡಿಸಿಕೊಂಡು ಉತ್ತಮ ಶಿಕ್ಷಣ ಪಡೆಯಬೇಕು. ಆದರೆ ಜಾಲತಾಣಗಳ ದುರುಪಯೋಗಕ್ಕೆ ಬಲಿಯಾಗದಂತೆ ವಿದ್ಯಾರ್ಥಿಗಳು ಎಚ್ಚರಿಕೆಯಿಂದಿರಬೇಕು ಎಂದು ಸಲಹೆ ನೀಡಿದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಜಿಲ್ಲಾ ಪಂಚಾಯತ್ ಸಿಇಒ ಲವೀಶ್ ಒರ್ಡಿಯಾ ಮಾತನಾಡಿ, ಮಕ್ಕಳ ಆಸಕ್ತಿ ಮತ್ತು ಅಭಿಲಾಷೆಗೆ ಅನುಗುಣವಾಗಿ ಶಿಕ್ಷಣ ನೀಡಿದರೆ ಅವರು ನಿಶ್ಚಿತವಾಗಿ ಗುರಿ ಮುಟ್ಟುತ್ತಾರೆ ಎಂದು ಹೇಳಿದರು. ಜಿಲ್ಲಾ ಸರ್ಜನ್ ಡಾ. ಆಫ್ರಿನ್ ರಿಜ್ವಾನ್ ಮಾತನಾಡಿ, ಹತ್ತನೇ ತರಗತಿಯಿಂದಲೇ ವಿದ್ಯಾರ್ಥಿಗಳು ಮುಂದಿನ ಗುರಿ ನಿಗದಿಪಡಿಸಿಕೊಂಡು ಅಧ್ಯಯನ ನಡೆಸಿದರೆ ಪಿಯು ಹಂತದಲ್ಲಿ ಶಿಕ್ಷಣ ಸುಲಭವಾಗುತ್ತದೆ. ಶಾಲಾ ದಿನಗಳಲ್ಲಿ ಕಲಿಕೆಯೇ ಪ್ರಮುಖ ಗುರಿಯಾಗಬೇಕು. ಅದರಿಂದ ಸಾಧಕರಾಗಿ ದೇಶದ ಅಭಿವೃದ್ಧಿಗೆ ಕೈಜೋಡಿಸಬಹುದು ಎಂದು ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಮೊಹಮ್ಮದ್ ಅಸಾದ್ ವಹಿಸಿದ್ದರು. ಮಾಜಿ ಪದಾಧಿಕಾರಿಗಳಾದ ವಾಯಿದ್ ಮಿಯ್ಯಾ, ಎಜಾವುಲ್ಲಾ ಹಕ್ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳಾದ ಚನ್ನಬಸಪ್ಪ, ಈರಣ್ಣ ಕನ್ನಳ್ಳಿ ಉಪಸ್ಥಿತರಿದ್ದರು. ಉಪನ್ಯಾಸಕಿ ಖಜಿಜ್ ಫಾತಿಮಾ ಪ್ರಾಸ್ತಾವಿಕವಾಗಿ ಮಾತನಾಡಿದರು. ಪಿಡಿಒ ಮೌಲಾಲಿ ಐಕೂರ ಕಾರ್ಯಕ್ರಮ ನಿರೂಪಿಸಿದರು. ಸಂಘದ ಜಿಲ್ಲಾ ಪದಾಧಿಕಾರಿಗಳಾದ ಅಹ್ಮದ್ ಖಾನ್, ಸೈಯದ್ ಅಲಿ ಹಫೀಜ್ ಪಟೇಲ್ ಸೇರಿದಂತೆ ಎಸ್ಎಸ್ಎಲ್ಸಿ ಮತ್ತು ಪಿಯು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು. ಸಾಧಕಿ ವಿದ್ಯಾರ್ಥಿನಿಗೆ ಸನ್ಮಾನ ಯುಎಸ್ಎಯಲ್ಲಿ ನಡೆದ ವಿಜ್ಞಾನ ಮೇಳದಲ್ಲಿ ಭಾಗವಹಿಸಿ ಐಆರ್ಎ ಇಂಜಿನಿಯರ್ ಮತ್ತು ಡಿಸೈನರ್ ವಿಭಾಗದಲ್ಲಿ ಸಾಧನೆ ಮಾಡಿದ ಕಲಬುರಗಿಯ ಎಸ್.ಆರ್.ಎನ್. ಮೆಹ್ತಾ ಸಿಬಿಎಸ್ಇ ಶಾಲೆಯ 9ನೇ ತರಗತಿ ವಿದ್ಯಾರ್ಥಿನಿ ಜೈಶಾ ಫಲಕ್ ಮೊಹಿನ್ ಖಾಜಿ ಅವರಿಗೆ ವಿಶೇಷ ಸನ್ಮಾನ ನೀಡಲಾಯಿತು. ಆತ್ಮವಿಶ್ವಾಸದಿಂದ ಯಶಸ್ಸು ಸಾಧ್ಯ : ಅಮೀನ್ ಇ. ಮುದಸಾರ್ ಆತ್ಮವಿಶ್ವಾಸ, ದೃಢತೆ ಮತ್ತು ಸಮಯಪಾಲನೆಯೊಂದಿಗೆ ಅಭ್ಯಾಸ ಮಾಡಿದರೆ ಜೀವನದ ಗುರಿಯನ್ನು ಸುಲಭವಾಗಿ ಮುಟ್ಟಬಹುದು ಎಂದು ಸೀಗ್ಮಾ ಸಂಸ್ಥೆಯ ಸಂಸ್ಥಾಪಕ ಸಿಇಒ ಹಾಗೂ ಮಾರ್ಗದರ್ಶಕ ಭಾಷಣಕಾರ ಅಮೀನ್ ಇ. ಮುದಸಾರ್ ಹೇಳಿದರು. ಎಸೆಸೆಲ್ಸಿ ಮತ್ತು ಪಿಯು ವಿದ್ಯಾರ್ಥಿಗಳಿಗೆ ‘ಯಶಸ್ವಿ ಕಲಿಕಾ ವಿದ್ಯಾರ್ಥಿಯಾಗುವುದು ಹೇಗೆ’ ಎಂಬ ವಿಷಯದ ಕುರಿತು ವೃತ್ತಿಪರ ಸಲಹೆ ನೀಡಿದ ಅವರು, ಓದನ್ನು ಜೀವನದ ಮೊದಲ ಗುರಿಯನ್ನಾಗಿ ಮಾಡಿಕೊಂಡು ಪ್ರತಿದಿನ ಅಧ್ಯಯನಕ್ಕೆ ಸಾಕಷ್ಟು ಸಮಯ ಮೀಸಲಿಡಬೇಕು. ಪರೀಕ್ಷೆಯನ್ನು ಭಯವಿಲ್ಲದೆ, ಶಾಂತಚಿತ್ತದಿಂದ ಎದುರಿಸಲು ಪೂರ್ಣ ಸಿದ್ಧತೆ ಅಗತ್ಯ ಎಂದು ಹೇಳಿದರು. ಪದವಿ ನಂತರ ಸ್ವಂತ ಉದ್ಯೋಗ ಮತ್ತು ನೌಕರಿ ಪಡೆಯುವ ಮಾರ್ಗಗಳ ಕುರಿತು ಉದಾಹರಣೆಗಳೊಂದಿಗೆ ವಿವರಿಸಿ, ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಉತ್ತರಿಸಿದರು.
ಬಾಂಗ್ಲಾದೇಶ ಪ್ರಮಾಣ ವಚನ ಸಮಾರಂಭದಲ್ಲಿ ಪ್ರಧಾನಿ ಮೋದಿ ಅವರ ಬದಲು ಸ್ಪೀಕರ್ ಭಾಗಿ | Bangladesh Election
ಭಾರತ ಮತ್ತು ಬಾಂಗ್ಲಾದೇಶ ನಡುವೆ ಎಲ್ಲಾ ಸರಿಯಾಗುವ ಮುನ್ಸೂಚನೆ ಸಿಗುತ್ತಿದೆ, ಎರಡೂ ದೇಶ ಕಿತ್ತಾಡಿಕೊಂಡು ಇನ್ನೇನು ಸಂಬಂಧ ಹಾಳು ಮಾಡಿಕೊಳ್ಳುತ್ತಿವೆ ಎನ್ನುವಾಗಲೇ ವಾತಾವರಣ ದಿಢೀರ್ ಬದಲಾಗಿದೆ. ಬಾಂಗ್ಲಾದೇಶದ ಮತದಾರರು ಪಾಕಿಸ್ತಾನ ಹಾಗೂ ಇತರ ದೇಶಗಳ ಕುತಂತ್ರಕ್ಕೆ ತಕ್ಕನಾಗಿ ಉತ್ತರ ಕೊಟ್ಟಿದ್ದು, ಭಾರತದ ಜೊತೆ ಉತ್ತಮ ಸ್ನೇಹ ಸಂಬಂಧ ಹೊಂದಿರುವ ವ್ಯಕ್ತಿಯನ್ನೇ ಬಾಂಗ್ಲಾ ನೂತನ ಪ್ರಧಾನಿ ಪಟ್ಟಕ್ಕೆ ಆಯ್ಕೆ
ರಾಜಕೀಯದಲ್ಲಿ ಯಶಸ್ಸು ಸಾಧಿಸಲು ವಿಜಯ್ ಮೊದಲು ನಟಿ ತೃಷಾ ಮನೆಯಿಂದ ಹೊರಬರಲಿ: ವಿವಾದ ಸೃಷ್ಟಿಸಿದ ಬಿಜೆಪಿ ನಾಯಕನ ಹೇಳಿಕೆ
ಚೆನ್ನೈ,ಫೆ.15: ನಟ-ರಾಜಕಾರಣಿ ವಿಜಯ್ ಅವರು ರಾಜಕೀಯದಲ್ಲಿ ಅನುಭವ ಪಡೆಯಲು ಮತ್ತು ಯಶಸ್ಸು ಸಾಧಿಸಲು ಮೊದಲು ನಟಿ ತೃಷಾ ಮನೆಯಿಂದ ಹೊರಬರಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ನೈನಾರ್ ನಾಗೇಂದ್ರ ಹೇಳಿದ್ದು, ಇದು ಚುನಾವಣೆ ಸನ್ನಿಹಿತವಾಗಿರುವ ತಮಿಳುನಾಡಿನಲ್ಲಿ ಹೊಸ ರಾಜಕೀಯ ಬಿರುಗಾಳಿಯನ್ನು ಸೃಷ್ಟಿಸಿದೆ. ನೈನಾರ್ ಕೀಳುಮಟ್ಟದ ಮತ್ತು ವೈಯಕ್ತಿಕ ಹೇಳಿಕೆಯನ್ನು ರಾಜಕೀಯ ನಾಯಕರು ಕಟುವಾಗಿ ಟೀಕಿಸಿದ್ದಾರೆ. ಮುಂಬರುವ ಚುನಾವಣೆಯಲ್ಲಿ ತನ್ನ ಟಿವಿಕೆ ಪಕ್ಷವು ಡಿಎಂಕೆಗೆ ಏಕೈಕ ಪ್ರತಿಸ್ಪರ್ಧಿಯಾಗಲಿದೆ ಎಂಬ ವಿಜಯ್ ಹೇಳಿಕೆಯನ್ನು ತಿರಸ್ಕರಿಸಿದ ನೈನಾರ್ ,ಅವರು ಅನನುಭವಿಯಾಗಿದ್ದಾರೆ. ಮನೆಯ ಛಾವಣಿಯನ್ನೂ ಹತ್ತಲು ಸಾಧ್ಯವಾಗದ ಅವರು ಆಕಾಶಕ್ಕೇರುವ ಕನಸನ್ನು ಕಾಣುತ್ತಿದ್ದಾರೆ ಎಂದು ಅಣಕಿಸಿದರು. ವಿಜಯ್ ತನ್ನ ಕುಟುಂಬದೊಂದಿಗೆ ಉತ್ತಮ ಸಂಬಂಧಗಳನ್ನು ಕಾಯ್ದುಕೊಳ್ಳಬೇಕು ಮತ್ತು ಮಹಾನ್ ನಾಯಕರ ನೇತೃತ್ವದ ಆಂದೋಲನದ ಸರಿಯಾದ ಮಾಹಿತಿಯನ್ನು ಜನರಿಗೆ ತಿಳಿಸಬೇಕು. ಮೊದಲು ಅವರು ಇವೆಲ್ಲದರಿಂದ ಹೊರಬರಬೇಕು ಎಂದರು. ತನ್ನ ಹೇಳಿಕೆಯ ಕುರಿತು ಸುದ್ದಿಗಾರರು ಪ್ರಶ್ನಿಸಿದಾಗ ಪ್ರತಿಕ್ರಿಯಿಸಿದ ನೈನಾರ್, ‘ಹಾಗೆ ನಾನು ಒಂದು ಸಲ ಮಾತ್ರ ಹೇಳಿದ್ದೆ’ಎಂದರಾದರೂ ಅದನ್ನು ಹಿಂದೆಗೆದುಕೊಳ್ಳಲು ನಿರಾಕರಿಸಿದರು. ತಮಿಳುನಾಡಿನಲ್ಲಿ ವಿಜಯ್ ಅವರ ರಾಜಕೀಯ ರ್ಯಾಲಿ ಸಂದರ್ಭದಲ್ಲಿ ನೈನಾರ್ ಈ ಹೇಳಿಕೆಯನ್ನು ನೀಡಿದ್ದಾರೆ. ವಿಜಯ್ ಬಿಜೆಪಿ ಮತ್ತು ಆಡಳಿತಾರೂಢ ಡಿಎಂಕೆ ವಿರುದ್ಧ ತೀವ್ರ ವಾಗ್ದಾಳಿಯನ್ನು ನಡೆಸುತ್ತಿದ್ದಾರೆ. ಈಗಾಗಲೇ ಕಾವೇರಿರುವ ರಾಜಕೀಯ ವಾತಾವರಣವಿರುವ ತಮಿಳುನಾಡಿನಲ್ಲಿ ನೈನಾರ್ ಹೇಳಿಕೆಗಳು ಹೊಸ ಚರ್ಚೆಯನ್ನು ಹುಟ್ಟುಹಾಕಿದ್ದು, ಡಿಎಂಕೆ ತಕ್ಷಣವೇ ಬಿಜೆಪಿ ವಿರುದ್ಧ ದಾಳಿ ನಡೆಸಿದೆ. ಬಿಜೆಪಿಯು ಮಹಿಳೆಯರಿಗೆ ಎಂದೂ ಗೌರವ ನೀಡದ ಮನು ಧರ್ಮವನ್ನು ಅನುಸರಿಸುತ್ತಿದೆ. ನೈನಾರ್ ಆ ರೀತಿಯಲ್ಲಿ ಮಾತನಾಡುವುದು ಸಹಜವೇ ಆಗಿದೆ. ಇದೇ ಕಾರಣದಿಂದಾಗಿ ತಮಿಳುನಾಡಿನ ಜನರು ಬಿಜೆಪಿಗೆ ವಿರುದ್ಧವಾಗಿದ್ದಾರೆ. ಬಿಜೆಪಿ ಮಹಿಳೆಯರನ್ನು ಕೆಟ್ಟದಾಗಿ ನಡೆಸಿಕೊಳ್ಳುತ್ತದೆ. ಅದಕ್ಕಾಗಿ ಕುಖ್ಯಾತಿಯನ್ನು ಪಡೆದಿದೆ ಎಂದು ಹೇಳಿದ ಡಿಎಂಕೆ ವಕ್ತಾರ ಇಕೆಎಸ್ ಇಳಂಗೋವನ್ ಅವರು, ನೈನಾರ್ ಆರೆಸ್ಸೆಸ್ನ ಗುಲಾಮರಾಗಿದ್ದಾರೆ. ಹೀಗಾಗಿಯೇ ಅವರು ಹಾಗೆ ಮಾತನಾಡುತ್ತಿದ್ದಾರೆ ಎಂದು ಆರೋಪಿಸಿದರು. ತಮಿಳುನಾಡು ಕಾಂಗ್ರೆಸ್ ಅಧ್ಯಕ್ಷ ಸೆಲ್ವಪೆರುಂತಗೈ ಅವರೂ ನೈನಾರ್ ಹೇಳಿಕೆಯನ್ನು ಆಘಾತಕಾರಿ ಎಂದು ಖಂಡಿಸಿದ್ದು, ತೃಷಾರ ಹೆಸರನ್ನು ರಾಜಕೀಯದಲ್ಲೇಕೆ ಎಳೆದು ತರಲಾಗಿದೆ ಎಂದು ಪ್ರಶ್ನಿಸಿದ್ದಾರೆ. ಈ ನಡುವೆ ನೈನಾರ್ ಅವರನ್ನು ಬೆಂಬಲಿಸಿರುವ ಬಿಜೆಪಿ ನಾಯಕರು, ಡಿಎಂಕೆ ರಾಜಕೀಯ ಲಾಭಕ್ಕಾಗಿ ಅವರ ಹೇಳಿಕೆಯನ್ನು ತಿರುಚುತ್ತಿದೆ ಎಂದು ಆರೋಪಿಸಿದ್ದಾರೆ. ನೈನಾರ್ ಒಳ್ಳೆಯ ಅರ್ಥದಲ್ಲಿಯೇ ಹೇಳಿಕೆಯನ್ನು ನೀಡಿದ್ದಾರೆ. ಡಿಎಂಕೆ ಅದನ್ನು ಉದ್ದೇಶಪೂರ್ವಕವಾಗಿ ತಿರುಚುತ್ತಿದೆ ಎಂದು ಬಿಜೆಪಿ ನಾಯಕಿ ಎಸ್.ವಿಜಯಧರಿಣಿ ಪ್ರತಿಪಾದಿಸಿದರು.
4 ವರ್ಷಗಳಿಂದ ಕೋರ್ಟಿಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿ ಸೆರೆ
ಉಡುಪಿ: ಕಳೆದ ನಾಲ್ಕು ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿಯೊಬ್ಬ ನನ್ನು ಕುಂದಾಪುರ ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಗುಲ್ವಾಡಿ ಸೌಕೂರು ಆಳ್ವರ ಮನೆಯ ಶಶಾಂಕ್ ಶೆಟ್ಟಿ ಯಾನೆ ಶಶಿಕಿರಣ್ ಯಾನೆ ಕಿರಣ್ ಶೆಟ್ಟಿ ಯಾನೆ ರಾಕೇಶ್ ಯಾನೆ ಶಶಿ (32) ಎಂದು ಗುರುತಿಸಲಾಗಿದೆ. ಈತನ ವಿರುದ್ಧ ಕುಂದಾಪುರ ಗ್ರಾಮಾಂತರ ಠಾಣೆಯಲ್ಲಿ 7 ಪ್ರಕರಣ, ಹೆಬ್ರಿ- 1, ಕಲಘಟಕಿ- 1, ಕೋಟ- 1 ಹಾಗೂ ಬೆಂಗಳೂರು ಚಂದ್ರ ಲೇ ಔಟ್-1 ರಂತೆ ಕಳ್ಳತನ, ಸುಲಿಗೆ, ಹನಿಟ್ರಾಪ್ ಗಳಂತಹ ಒಟ್ಟು 11 ಪ್ರಕರಣಗಳು ದಾಖಲಾಗಿವೆ. ಈತನ ವಿರುದ್ದ ನ್ಯಾಯಾಲಯವು ಈವರೆಗೆ 12 ಬಾರಿ ವಾರೆಂಟ್ ಹೊರಡಿಸಿದ್ದು ಈತ ನ್ಯಾಯಾಲಯಕ್ಕೆ ಹಾಜರಾಗದೇ ಸುಮಾರು 4 ವರ್ಷಗಳಿಂದ ತಲೆಮರೆಸಿಕೊಂಡಿದ್ದನು. ಈತನ ಪತ್ತೆಯ ಬಗ್ಗೆ 4 ವರ್ಷಗಳಿಂದ ಪ್ರಯತ್ನಿಸುತ್ತಿದ್ದು ಖಚಿತ ಮಾಹಿತಿಯಂತೆ ಶಶಾಂಕ್ ಶೆಟ್ಟಿಯನ್ನು ಫೆ.15 ರಂದು ಕುಂದಾಪುರ ತಾಲೂಕು ಬಿದ್ಕಲ್ ಕಟ್ಟೆ ಎಂಬಲ್ಲಿ ಬಂದಿಸಲಾಗಿದೆ. ಕುಂದಾಪುರ ಡಿವೈಎಸ್ಪಿ ಹೆಚ್.ಡಿ ಕುಲಕರ್ಣಿ ಮತ್ತು ಪೊಲೀಸ್ ವೃತ್ತ ನಿರೀಕ್ಷಕ ಸಂತೋಷ ಎ ಕಾಯ್ಕಿಣಿ ಮಾರ್ಗದರ್ಶನದಲ್ಲಿ ಕುಂದಾಪುರ ಗ್ರಾಮಾಂತರ ಪೊಲೀಸ್ ಉಪನಿರೀಕ್ಷಕರಾದ ನಾಸೀರ್ ಹುಸೇನ್ ಹಾಗೂ ಚಂದ್ರಕಲಾ ಮ ಪತ್ತಾರ ಅವರ ನೇತ್ರತ್ವದಲ್ಲಿ ಠಾಣಾ ಸಿಬ್ಬಂದಿ ರಾಜು ಬಿ, ಗುರು ಪ್ರಸಾದ್, ಕಿರಣ್ ಬಿ ಪಾಟೀಲ್ ಹಾಗೂ ಕುಂದಾಪುರ ಠಾಣಾ ಸಿಬಂದಿ ಚಂದ್ರ ಶೆಟ್ಟಿ ಈ ಕಾರ್ಯಾಚರಣೆ ನಡೆಸಿದ್ದಾರೆ.
ವಡಗೇರಾ | ಭಾರತಮಾಲಾ ರಾಷ್ಟ್ರೀಯ ಹೆದ್ದಾರಿ ಅಂಡರ್ಪಾಸ್ ಅಗಲ-ಎತ್ತರ ಹೆಚ್ಚಿಸಲು ಮನವಿ
ವಡಗೇರಾ: ಭಾರತಮಾಲಾ ಪರಿಯೋಜನೆ ಯೋಜನೆಯಡಿ ನಿರ್ಮಾಣವಾಗುತ್ತಿರುವ ರಾಷ್ಟ್ರೀಯ ಹೆದ್ದಾರಿ 150ಸಿ ಮಾರ್ಗದಲ್ಲಿ ವಡಗೇರಾದಿಂದ ಸೈದಾಪುರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯ ಕೋನಹಳ್ಳಿ ಗ್ರಾಮದ ಸಮೀಪ ಅಂಡರ್ಪಾಸ್ ಬ್ರಿಡ್ಜ್ ಕಾಮಗಾರಿ ನಡೆಯುತ್ತಿದೆ. ಈ ಅಂಡರ್ಪಾಸ್ ತೀರ ಚಿಕ್ಕದಾಗಿ ನಿರ್ಮಾಣವಾಗುತ್ತಿದೆ ಎಂದು ಆರೋಪಿಸಿ ರೈತರು ಹಾಗೂ ಸಾರ್ವಜನಿಕರು ವಡಗೇರಾ ತಹಸೀಲ್ದಾರ್ ಅವರಿಗೆ ಮನವಿ ಸಲ್ಲಿಸಿದರು. ವಡಗೇರಾ ತಾಲೂಕಿನ ಸುತ್ತಮುತ್ತಲಿನ ರೈತರು ಬೆಳೆದ ಭತ್ತ, ಹತ್ತಿ, ಕಬ್ಬು, ಜೋಳ ಸೇರಿದಂತೆ ವಿವಿಧ ಬೆಳೆಗಳನ್ನು ತುಂಬಿದ ವಾಹನಗಳ ಮೂಲಕ ಸೈದಾಪುರ ಮತ್ತು ರಾಯಚೂರು ಕಡೆ ಮಾರಾಟಕ್ಕೆ ಇದೇ ಮಾರ್ಗವನ್ನು ಬಳಸುತ್ತಾರೆ. ಜೊತೆಗೆ ಈ ರಸ್ತೆ ರಾಜ್ಯ ಹೆದ್ದಾರಿಯಾಗಿ ಆಂಧ್ರಪ್ರದೇಶಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ಮಾರ್ಗವಾಗಿದೆ. ಪ್ರಸ್ತುತ ನಿರ್ಮಾಣವಾಗುತ್ತಿರುವ ಅಂಡರ್ಪಾಸ್ ಬ್ರಿಡ್ಜ್ ಅಗಲ ಮತ್ತು ಎತ್ತರ ಕಡಿಮೆಯಾಗಿದ್ದರೆ, ದೊಡ್ಡ ವಾಹನಗಳ ಸಂಚಾರಕ್ಕೆ ತೀವ್ರ ತೊಂದರೆಯಾಗಲಿದೆ ಎಂದು ರೈತರು ಆತಂಕ ವ್ಯಕ್ತಪಡಿಸಿದರು. ಬ್ರಿಡ್ಜ್ ಚಿಕ್ಕದಾಗಿ ನಿರ್ಮಾಣವಾದರೆ ಕೃಷಿ ಉತ್ಪನ್ನಗಳನ್ನು ಸಾಗಿಸುವ ವಾಹನಗಳು ಸಂಚರಿಸಲು ಅಸಾಧ್ಯವಾಗುತ್ತದೆ ಎಂದು ಹೇಳಿದರು. ಹೀಗಾಗಿ ರಾಷ್ಟ್ರೀಯ ಹೆದ್ದಾರಿ 150ಸಿ ಅಡಿಯಲ್ಲಿ ನಿರ್ಮಿಸುತ್ತಿರುವ ಅಂಡರ್ಪಾಸ್ ಕಾಮಗಾರಿಯನ್ನು ತಾತ್ಕಾಲಿಕವಾಗಿ ನಿಲ್ಲಿಸಿ, ಅಗಲ ಮತ್ತು ಎತ್ತರ ಹೆಚ್ಚಿಸುವಂತೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತರಲಾಯಿತು. ಅನೇಕ ರೈತರು ಹಾಗೂ ವಿವಿಧ ಗ್ರಾಮಗಳಿಗೆ ಸಂಚರಿಸುವ ವಾಹನಗಳಿಗೆ ಸುಗಮ ಸಂಚಾರ ಕಲ್ಪಿಸುವಂತೆ ಮನವಿ ಮಾಡಿದರು. ಮನವಿ ಸಲ್ಲಿಸುವ ಸಂದರ್ಭದಲ್ಲಿ ದೇವಿಂದ್ರಪ್ಪಗೌಡ ಮಾಲಿ ಪಾಟೀಲ್, ಮಲ್ಲಣ್ಣ ನೀಲಹಳ್ಳಿ, ಫಕೀರ್ ಅಹ್ಮದ್ ಮರಡಿ, ಮಂಜುನಾಥ ಉಪ್ಪಾರ (ಕೋನಹಳ್ಳಿ), ಜಲಾಲ್ ಸಾಬ್, ಖಾಸಿಂಸಾಬ್ ಮುಲ್ಲಾ, ದುರ್ಗಪ್ಪ ಕರಿಗುಡ್ಡ, ಹುಲಗಪ್ಪ ಟನಕೇದಾರ, ಸಕ್ರೆಪ್ಪ ಕೋನಹಳ್ಳಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಮುಲ್ಕಿ: ಉರೂಸ್ ಕಾರ್ಯಕ್ರಮದ ಸಮಾರೋಪ ಸಮಾರಂಭ, ರಾಜ್ಯ ಮಟ್ಟದ ದಫ್ ಸ್ಪರ್ಧಾ ಕೂಟ
ಮುಲ್ಕಿ: ಹಝ್ರತ್ ಸೈಯ್ಯದ್ ಮೌಲಾನ ವಲಿಯುಲ್ಲಾಹಿ ಖ.ಸ ಅವರ ಹೆಸರಿನಲ್ಲಿ ನಡೆಸಿಕೊಂಡು ಬರುತ್ತಿರುವ ಉರೂಸ್ ಕಾರ್ಯಕ್ರಮದ ಸಮಾರೋಪ ಸಮಾರಂಭ ಹಾಗೂ ರಾಜ್ಯ ಮಟ್ಟದ ದಫ್ ಸ್ಪರ್ಧಾ ಕೂಟವು ಶನಿವಾರ ದರ್ಗಾ ವಠಾರದಲ್ಲಿ ನಡೆಯಿತು. ಮುಖ್ಯ ಪ್ತಭಾಷಣಗೈದು ಮಾತನಾಡಿದ ಕರ್ನಾಟಕ ರಾಜ್ಯ ಎಸ್ಕೆಎಸ್ಸೆಸ್ಸೆಫ್ ಪ್ರಧಾನ ಕಾರ್ಯದರ್ಶಿ ಹಾಗೂ ಕೆಐಸಿ ಕುಂಬ್ರದ ಪ್ರಾಂಶುಪಾಲರಾದ ಅನೀಸ್ ಕೌಸರಿ ಅವರು, ಧರ್ಮದ ಹೆಸರಿನಲ್ಲಿ ನಡೆಯುವ ಕೋಮುಗಲಭೆಗಳು ಕೇವಲ ರಾಜಕೀಯಕ್ಕಾಗಿ ನಡೆದಿರುವುದು ಅಂಕಿ ಅಂಶಗಳು ತಿಳಿಸುತ್ತಿದೆ. ಧರ್ಮವನ್ನು ಮುಂದಿಟ್ಟುಕೊಂಡು ರಾಜಕೀಯ ಮಾಡುವವರಿಂದ ಧರ್ಮಗಳ ತಿರುಳು ತಿಳಿಯುವ ಬಸಲು ಧಾರ್ಮಿಕ ಪ್ರಮುಖರಿಂದ ಧರ್ಮಗಳ ವಿಚಾರ ತಿಳಿಯ ಬೇಕು ಎಂದರು. ದೇಶದ ಎಲ್ಲಾ ಭಾಷೆ, ಸಂಸ್ಕೃತಿಗಳು ಜಗತ್ತೇ ಒಂದು ಕುಟುಂಬ ಎಂಬ ಸಂದೇಶ ನೀಡುತ್ತದೆ ಎಂದ ಅವರು, ಕುರ್ ಆನ್ ಭಯೋತ್ಪಾದನೆ ಎನ್ನುವ ದುರುಳರಿಗೆ, “ ಕುರ್ ಆನ್ ಹೃದಯದ ತಳದಲ್ಲಿ ಕರುಣೆ ಹುಟ್ಟಿಸುವ ಸಲುವಾಗಿದೆ” ಎಂದು ಕುರ್ ಆನ್ ಪಠಿಸಿದರು. ಬಳಿಕ ಮಾತನಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ ಅವರು, ದ.ಕ. ಜಿಲ್ಲೆಯಲ್ಲಿ ಡ್ರಗ್ಸ್ ಪೆಡ್ಲರ್ ಗಳು, ಕೋಮು ಸೌಹಾರ್ದ ಕದಡುವವರಿಗೆ ಧಕ್ಷ ಅಧಿಕಾರಿಗಳು ಹೆಡೆ ಮುರಿಕಟ್ಟುವ ಕೆಲಸ ಮಾಡುತ್ತಿದ್ದಾರೆ. ಜಿಲ್ಲೆಯ ಯುವ ಜನರಿಗೆ ಉದ್ಯೋಗ ಇಲ್ಲದಿರುವ ಕಾರಣದಿಂದ ಇಂತಹಾ ಕೃತ್ಯಗಳಿಗೆ ಯುವಕರು ಮುಂದಾಗುತ್ತಿ ದ್ದಾರೆ ಎಂದು ಕಂಡುಕೊಂಡ ರಾಜ್ಯ ಸಿದ್ದರಾಮಯ್ಯ ಮತ್ತು ಡಿಕೆಶಿ ನೇತೃತ್ವದ ಸರಕಾರ ಜಿಲ್ಲೆಯಲ್ಲಿ ಉದ್ಯೋಗ ಸೃಷ್ಟಿಗೆ ಮುಂದಾಗಿದ್ದು, ಈ ಸಂಬಂಧ ನಿರಂತರ ಸಭೆಗಳು ನಡೆದಿವೆ. ದೇಶದಲ್ಲಿ ಶೇ.5ರಷ್ಟು ಜನರಷ್ಠೇ ಕೋಮು ದ್ವೇಷಿಗಳಿದ್ದಾರೆ ಹೊರತು ಶೇ.95ಮಂದಿ ಸೌಹಾರ್ದ ಬಯಸುವವರಾಗಿದ್ದಾರೆ. ಹಾಗಾಗಿ ಕೋಮು ಸೌಹಾರ್ದ ಕೆಡಿಸಬಹುದಾದ ಭಾಷಣ, ಮಾತು ಕೃತಿಗಳನ್ನು ತಮ್ಮ ವೇಚನೆಗೆ ಒಳಪಡಿಸಿ ಬಳಿಕ ಪ್ರತಿಕ್ರಿಯಿಸುವ ಕೆಲಸ ವಾಗಬೇಕು ಎಂದ ಅವರು, ನಾವು ಸೌಹಾರ್ದ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕು ಎಂದು ಕರೆ ನೀಡಿದರು. ಇದೇ ವೇಳೆ ಕರಾವಳಿ ಪ್ರಾಧಿಕಾರದ ಅಧ್ಯಕ್ಷ ಎಂ.ಎ.ಗಫೂರ್, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪತ್ರಕರ್ತ ಬಿ.ಎಂ. ಹನೀಫ್, ಜಿಲ್ಲಾ ರಾಜ್ಯೋತ್ಸವ ಪುರಸ್ಕೃತ ಜಯಕೃಷ್ಣ ಕೋಟ್ಯಾನ್ ಹಾಗೂ ಸಾಮಾಜಿಕ ಕಾರ್ಯಕರ್ತ ಬಶೀರ್ ಅಹ್ಮದ್ ಖಂಡಿಗೆ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಸೂಫೀವರ್ಯರಾದ ಸೈಯ್ಯದ್ ಅಲಿಯಾರ್ ತಂಙಳ್ ಮಣ್ಣಾರ್ ಕಾಡ್ ಕೇರಳ ಅವರು ದುಆ ಆಶೀರ್ವಚನ ನೀಡಿದರು. ಸಮಾರೋಪ ಸಮಾರಂಭದ ಸಭಾ ಕಾರ್ಯಕ್ರಮವನ್ನು ಕದಿಕೆ ಹಳೆಯಂಗಡಿ ಕೇಂದ್ರ ಜುಮಾ ಮಸೀದಿಯ ಖತೀಬ್ ಅಬ್ದುಲ್ಲಾ ಝೈನಿ ಬಡಗನ್ನೂರು ಉದ್ಘಾಟಿಸಿದರು. ಕೇಂದ್ರ ಜುಮಾ ಮಸೀದಿ ಹಾಗೂ ಉರೂಸ್ ಸಮಿತಿಯ ಅಧ್ಯಕ್ಷ ಹಾಜಿ ಅಬ್ದುಲ್ ರಹಿಮಾನ್ ಕುಡುಂಬೂರು ಅಧ್ಯಕ್ಷತೆ ವಹಿಸಿದ್ದರು. ಸಮಾರಂಭದಲ್ಲಿ ಸಾಗ್ ಬದ್ರಿಯಾ ಜುಮಾ ಮಸೀದಿಯ ಖತೀಬ್ ಎಂ. ಅಬ್ದುಲ್ಲ ಮದನಿ, ಸಂತೆಕಟ್ಟೆ ಹಿಮಾಯ ತುಲ್ ಇಸ್ಲಾಂ ಜುಮಾ ಮಸೀದಿಯ ಖತೀಬ್ ಕೆ.ಎಂ. ಅಬೂಬಕ್ಕರ್ ಮದನಿ, ಇಂದಿರಾನಗರ ಅಲ್ ಮದರಸತುಲ್ ಖಿಲ್ ರಿಯಾದ ಸದರ್ ಮುಅಲ್ಲಿಂ ಇಮ್ರಾನ್ ಮನ್ಸೂಮಿ ಕೃಷ್ಣಾಪುರ, ಕದಿಕೆ ನೂರುಲ್ ಹುದಾ ಮದರಸದ ಸದರ್ ಮುಅಲ್ಲಿಂ ಮುಹಮ್ಮದ್ ಶರೀಫ್ ಮದನಿ, ಅಬ್ದುಲ್ ರಶೀದ್ ಮುಸ್ಲಿಯಾರ್ ಸಂತೆಕಟ್ಟೆ, ಇಬ್ರಾಹೀಂ ಫಾಲಿಲಿ, ಅಬ್ದುಲ್ ಹಮೀದ್ ಮುಸ್ಲಿಯಾರ್ ಸಾಗ್, ಹಾಫಿಲ್ ಹಾರಿಸ್ ಮದನಿ, ಮುಲ್ಕಿ ಮೂಡಬಿದಿರೆ ಶಾಸಕ ಉಮಾನಾಥ ಕೋಟ್ಯಾನ್, ಮಾಜಿ ಸಚಿವರಾದ ಅಭಯ ಚಂದ್ರಜೈನ್, ಕರ್ನಾಟಕ ರಾಜ್ಯ ಎಸ್ ಡಿಪಿಐ ಕಾರ್ಯದರ್ಶಿ ರಿಯಾಝ್ ಕಡಂಬು, ಉದ್ಯಮಿಗಳಾದ ಗುಲಾಂ ಮುಹಮ್ಮದ್ ಹೆಜಮಾಡಿ, ಕಲಂದರ್ ಶಮೀಮ್ ಕದಿಕೆ, ಜುನೈದ್ ಅಹ್ಮದ್ ಸಾಗ್, ಕಲಂದರ್ ಮೂಡಿಗೆರೆ, ಪಡುಪಣಂಬೂರು ಸಹಕಾರಿ ವ್ಯವಸಾಯ ಬ್ಯಾಂಕ್ ಅಧ್ಯಕ್ಷ ಎಸ್.ಎಸ್. ಸತೀಶ್ ಭಟ್, ಹಳೆಯಂಗಡಿ ಪ್ರಿಯದರ್ಶಿನಿ ಸಹಕಾರಿ ಸಂಘದ ಅಧ್ಯಕ್ಷ ವಸಂತ್ ಬರ್ನಾರ್ಡ್, ಸಾಮಾಜಿಕ ಚಿಂತಕ ಮುನೀರ್ ಕಾಟಿಪಳ್ಳ, ಜಮಾಅತ್ ನ ಹಿರಿಯ ವ್ಯಕ್ತಿ ಖಾಸೀಂ ಸಾಹೇಬ್ ಇಂದಿರಾನಗರ, ಹಳೆಯಂಗಡಿವಲಯ ಮುಸ್ಲಿಂ ಜಮಾಅತ್ ಒಕ್ಕೂಟದ ಮುಮ್ಮದ್ ಇರ್ಷಾದ್, ಅಬ್ದುಲ್ ಖಾದರ್ ಕೋಡಿಹತ್ಲು, ಮುಸ್ಲಿಂ ಜಮಾತ್ ಒಕ್ಕೂಟ ಹಳೆಯಂಗಡಿ ವಲಯದ ಮಾಜಿ ಅಧ್ಯಕ್ಷ ಸಾಹುಲ್ ಹಮೀದ್ ಕದಿಕೆ, ಮುಹಮ್ಮದ್ ಹನೀಫ್ ಝಿಯಾಯಿ, ಉಮರುಲ್ ಫಾರೂಕ್ ಮುಸ್ಲಿಯಾರ್, ಕದಿಕೆ ಹಳೆಯಂಗಡಿ ಕೇಂದ್ರ ಜುಮಾ ಮಸೀದಿಯ ಉಪಾಧ್ಯಕ್ಷ ಹಾಜಿ ಬಶೀರ್ ಅಹ್ಮದ್ ಕಲ್ಲಾಪು, ಕೇಂದ್ರ ಜುಮಾ ಮಸೀದಿ ಮತ್ತು ಉರೂಸ್ ಸಮಿತಿ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಎಚ್.ಕೆ., ಉರೂಸ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಝಾಕ್ ಮೂಡುತೋಟ ಸಾಗ್ ಮೊದಲಾದವರು ಉಪಸ್ಥಿತರಿದ್ದರು. ಸಮಾರೋಪ ಸಮಾರಂಭಕ್ಕೂ ಮುನ್ನ ಬೃಹತ್ ಸಂದಲ್ ಮೆರವಣಿಗೆ ನಡೆಯಿತು. ಸಭಾ ಕಾರ್ಯಕ್ರಮದ ಬಳಿಕ ರಾಜ್ಯಮಟ್ಟದ ದಫ್ ಸ್ಪರ್ಧಾಕೂಟ ನಡೆಯಿತು. ದಫ್ ಸ್ಪರ್ಧಾ ಕೂಟದಲ್ಲಿ ಕಲಂದರ್ ಶಾ ದಫ್ ಕಮೀಟಿ ಮಣಿಪುರ ಕಾಪು ಪ್ರಥಮ ಬಹುಮಾನ ಪಡೆದರೆ, ದ್ವಿತೀಯ ಬಹುಮಾನವನ್ನು ತಾಜುಲ್ ಹುದಾ ದಫ್ ಕಮೀಟಿ ರೆಂಜಾಡಿ ಪಡೆದುಕೊಂಡಿತು.ತೃತೀಯ ಬಹುಮಾನವನ್ನು ಅಲ್ ಜಝೀರಾ ದಫ್ ಕಮೀಟಿ ಅಕ್ಕರೆಕೆರೆ ತನ್ನದಾಗಿಸಿಕೊಂಡರೆ, ಚತುರ್ಥ ಬಹುಮಾನವನ್ನು ಮುಹಿಯುದ್ದೀನ್ ದಫ್ ಕಮೀಟಿ ಕೂಳೂರು ಮುಡಿಗೇರಿಸಿಕೊಂಡಿತು.
ಅಫಜಲಪುರ | ಟ್ರಾಕ್ಟರ್ಗೆ ಬೈಕ್ ಢಿಕ್ಕಿ : ಮೂವರು ಪ್ರಾಣಾಪಾಯದಿಂದ ಪಾರು
ಅಫಜಲಪುರ: ಪಟ್ಟಣದ ಅಮೋಗಿಸಿದ ದೇವಸ್ಥಾನ ಎದುರಿನ ಘತ್ತರಗಾ ಮುಖ್ಯ ತಿರುವಿನ ರಸ್ತೆಯಲ್ಲಿ ಅಪಘಾತ ಸಂಭವಿಸಿ ಮೂವರು ಯುವಕರು ಕೂದಳೆಯ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾದ ಘಟನೆ ರವಿವಾರ ಸಂಜೆ 9 ಗಂಟೆಗೆ ನಡೆದಿದೆ. ಅಫಜಲಪುರದಿಂದ ತಾಲೂಕಿನ ಹವಳಗಾ ಗ್ರಾಮದ ವ್ಯಾಪ್ತಿಯಲ್ಲಿರುವ ರೇಣುಕಾ ಸಕ್ಕರೆ ಕಾರ್ಖಾನೆ ಕಡೆಗೆ ಕಬ್ಬು ತುಂಬಿಕೊಂಡು ತೆರಳುತ್ತಿದ್ದ ಡಬಲ್ ಟ್ರಾಕ್ಟರ್-ಟ್ರೈಲರ್ಗೆ ಈ ಅವಘಡ ಸಂಭವಿಸಿದೆ. ತಿರುವಿನಲ್ಲಿ ವೇಗವಾಗಿ ಬಂದ ಬೈಕ್ ನಿಯಂತ್ರಣ ತಪ್ಪಿ ಟ್ರಾಕ್ಟರ್ ಟ್ರೈಲರ್ ಒಳಗೆ ನುಗ್ಗಿದೆ. ಬೈಕ್ ಮೇಲೆ ಮೂವರು ಯುವಕರು ಪ್ರಯಾಣಿಸುತ್ತಿದ್ದು, ಅಪಾಯ ಅರಿತ ತಕ್ಷಣವೇ ಹೊರಗೆ ಜಿಗಿದುಕೊಂಡ ಕಾರಣ ದೊಡ್ಡ ಅನಾಹುತ ತಪ್ಪಿದೆ. ಘಟನೆಯಲ್ಲಿ ಒಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಸ್ಥಳದಲ್ಲಿದ್ದ ಸಾರ್ವಜನಿಕರು ತಕ್ಷಣ ಸಹಾಯಕ್ಕೆ ಧಾವಿಸಿದ್ದಾರೆ ಎಂದು ತಿಳಿದು ಬಂದಿದೆ. ಅಪಘಾತದ ಬಳಿಕ ಕೆಲಕಾಲ ಸಂಚಾರದಲ್ಲಿ ಗೊಂದಲ ಉಂಟಾಯಿತು. ಬೈಕ್ ಸವಾರರು ಯಾರು ಹಾಗೂ ಯಾವ ಕಡೆಗೆ ತೆರಳುತ್ತಿದ್ದರು ಎಂಬುದು ಸ್ಪಷ್ಟವಾಗಿಲ್ಲ. ಈ ಕುರಿತು ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಅಮೋಗಿಸಿದ ದೇವಸ್ಥಾನ ಎದುರಿನ ಈ ತಿರುವು ಅಪಾಯಕಾರಿ ಪ್ರದೇಶವಾಗಿದ್ದು, ರಸ್ತೆ ಇಕ್ಕಟ್ಟಾಗಿರುವುದರಿಂದ ಆಗಾಗ್ಗೆ ಅಪಘಾತಗಳು ಸಂಭವಿಸುತ್ತಿವೆ. ರಸ್ತೆ ಅಗಲಿಕರಣ ಸೇರಿದಂತೆ ಸೂಕ್ತ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
India Vs Pakistan- ಪಾಕ್ ಕೊಲಂಬೊದಲ್ಲಿ ಆಡಿದರೂ ಅಷ್ಟೇ! ಸರಿಸಾಟಿಯಲ್ಲಿದ ಟೀಂ ಇಂಡಿಯಾ ವಿರುದ್ಧ 9ರಲ್ಲಿ 8ನೇ ಸೋಲು
ಅಂತೂ ಭಾರತ ತಂಡಕ್ಕೆ ಪಾಕಿಸ್ತಾನ ಸರಿಸಾಟಿಯಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಕೊಲಂಬೊದಲ್ಲೂ ಭಾರತದ ವಿರುದ್ಧ ಸೋಲುವುದರೊಂದಿಗೆ ಕಳೆದ 9 ಪಂದ್ಯಗಳಲ್ಲಿ 8ನೇ ಪಂದ್ಯವನ್ನು ಟೀಂ ಇಂಡಿಯಾ ಗೆದ್ದಂತಾಗಿದೆ. ಅಭಿಷೇಕ್ ಶರ್ಮಾ ಅವರ ವಿಕೆಟ್ ಅನ್ನು ಮೊದಲ ಓವರ್ ನಲ್ಲೇ ಪಡೆದು ಸಂಭ್ರಮಿಸುತ್ತಿದ್ದ ಪಾಕಿಸ್ತಾನ ತಂಡ ಅಂತಿಮವಾಗಿ 61 ರನ್ ಗಳಿಂದ ಹೀನಾಯ ಸೋಲು ಕಂಡಿತು. ಕೊಲಂಬೊದ ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆದ ಎ ಗುಂಪಿನ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ ನಿಗದಿತ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 175 ರನ್ ಗಳಿಸಿತು. ಇದಕ್ಕುತ್ತರವಾಗಿ ಪಾಕಿಸ್ತಾನ ತಂಡ 18 ಓವರ್ ಗಳಲ್ಲಿ 114 ರನ್ ಗಳಿಸುವಷ್ಟರಲ್ಲಿಯೇ ಆಲೌಟ್ ಆಯಿತು. ()ನಿಧಾನಗತಿಯ ಪಿಚ್ ನಲ್ಲಿ ಸ್ಪರ್ಧಾತ್ಮಕ ಗುರಿ ಪಡೆದಿದ್ದ ಪಾಕಿಸ್ತಾನ ತಂಡ ಮೊದಲ ಓವರ್ ನಲ್ಲೇ ಅಪಾಯಕಾರಿ ಸಾಹಿಬ್ ಝಾದಾ ಫರ್ಹಾನ್ ಅವರ ವಿಕೆಟ್ ಅನ್ನು ಕಳೆದುಕೊಂಡಿತು. ಹಾರ್ದಿಕ್ ಪಾಂಡ್ಯ ಅವರು ಈ ವಿಕೆಟ್ ಎಗರಿಸಿದ್ದಲ್ಲದೆ ಮೊದಲನೇ ಓವರ್ ಮೇಡನ್ ಮಾಡುವ ಮೂಲಕ ಎದುರಾಳಿ ತಂಡದ ಮೇಲೆ ಒತ್ತಡ ಹೇರಿದರು. ಈ ಒತ್ತಡದಿಂದ ಹೊರಬರಲು ಪಾಕಿಸ್ತಾುನ ತಂಡ ಒದ್ದಾಡಿತು. ಐದನೇ ಓವರ್ ನಲ್ಲಿ 34 ರನ್ ಗಳಾಗುವಷ್ಟರಲ್ಲಿ 4 ವಿಕೆಟ್ ಕಳೆದುಕೊಂಡಿತು. ವಿಕೆಟ್ ಕೀಪರ್ ಉಸ್ಮಾನ್ ಖಾನ್(34 ಎಸೆತದಲ್ಲಿ 44) ಮತ್ತು ಶಹೀನ್ ಶಾ ಅಫ್ರಿದಿ(19 ಎಸೆತದಲ್ಲಿ 23) ಹೊರತುಪಡಿಸಿದರೆ ಬೇರಾರೂ ಪ್ರತಿರೋಧ ತೋರದ್ದರಿಂದ ಕೇವಲ18 ಓವರ್ ಗಳಲ್ಲಿ ಪಾಕಿಸ್ತಾನದ ಇನ್ನಿಂಗ್ಸ್ ಕೊನೆಗೊಂಡಿತು. ಇಶಾನ್ ಕಿಶನ್ ಬಿರುಗಾಳಿ ಬ್ಯಾಟಿಂಗ್ ಇದಕ್ಕೂ ಮೊದಲು ಟಾಸ್ ಸೋತು ಬ್ಯಾಟಿಂಗ್ ಗೆ ಇಳಿಸಲ್ಪಟ್ಟ ಭಾರತ ತಂಡ ಅವರನ್ನು ಮೊದಲ ಓವರ್ ನಲ್ಲೇ ಕಳೆದುಕೊಂಡಿತು. ಸ್ಪಿನ್ನರ್ ಸಲ್ಮಾನ್ ಅಲಿ ಆಘಾ ಅವರೆಸೆದ ಮೊದಲ ಓವರ್ ನ ಕೊನೇ ಎಸೆತದಲ್ಲಿ ಎಡವಿದ ಅವರು ಶಾಹಿನ್ ಶಾ ಅಫ್ರಿದಿ ಕೈಗ ಕ್ಯಾಚಿತ್ತು ಪೆವಿಲಿಯನ್ ಸೇರಿಕೊಂಡರು. ಆದರೆ ಪಾಕಿಸ್ತಾನಕ್ಕೆ ಆಘಾತ ನೀಡಿದ್ದು ಇಶಾನ್ ಕಿಶನ್. ಯಾವುದೇ ಒತ್ತಡವಿಲ್ಲದೆ ಪಾಕ್ ಬೌಲಿಂಗ್ ಬೆಂಡೆತ್ತಿದ ಅವರು, ಕೇವಲ 27 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಭಾರತ ಪವರ್ ಪ್ಲೇನ 6 ಓವರ್ ಗಳಲ್ಲಿ 52 ರನ್ ಪೇರಿಸಿತ್ತು. 11.1 ಓವರ್ ಗಳಲ್ಲಿ 100 ರನ್ ಗಡಿ ತಲುಪಿತು. ತಂಡದ ಮೊತ್ತ 88 ಆಗಿದ್ದಾಗ ಉತ್ತಮವಾಗಿ ಆಡುತ್ತಿದ್ದ ಇಶಾನ್ ಕಿಶನ್ ಅವರ ವಿಕೆಟ್ ಪತನವಾಯಿತು. ಔಟಾಗುವ ಮುನ್ನ ಅವರು, 40 ಎಸೆತಗಳಿಂದ 10 ಬೌಂಡರಿ ಮತ್ತು 3 ಸಿಕ್ಸರ್ ಗಳಿದ್ದ 77 ರನ್ ಗಳಿಸಿದ್ದರು. ಅವರ ವಿಕೆಟ್ ಪತನದ ಬಳಿಕ ತಿಲಕ್ ವರ್ಮಾ(24 ಎಸೆತದಲ್ಲಿ 25 ರನ್), (29 ಎಸೆತದಲ್ಲಿ 32 ರನ್) ಮತ್ತು ಶಿವಂ ದುಬೆ (17 ಎಸೆತದಲ್ಲಿ 27 ರನ್ ) ಬಾರಿಸಿದ್ದರಿಂದ ಗೌರವಯುತ ಮೊತ್ತ ಗಳಿಸುವಂತಾಯಿತು. ಪಾಕ್ ತಂಡದ ಪರ ಸಯೀಮ್ ಅಯೂಬ್ 3 ವಿಕೆಟ್ ಕಬಳಿಸಿದರು. ಆರಂಭಿಕ ಬೌಲಿಂಗ್ ಮಾಡಿದ ಸಲ್ಮಾನ್ ಆಘಾ ಅವರು 10 ರನ್ ಗೆ 1 ವಿಕೆಟ್ ಗಳಿಸಿದರು. ಸಂಕ್ಷಿಪ್ತ ಸ್ಕೋರ್ ಭಾರತ 20 ಓವರ್ ಗಳಲ್ಲಿ 175/7, ಇಶಾನ್ ಕಿಶನ್ 77(40), ಸೂರ್ಯಕುಮಾರ್ ಯಾದವ್ 32(29), ಶಿವಂ ದುಬೆ 27(17), ತಿಲಕ್ ವರ್ಮಾ 25(24), ಸೈಯಮ್ ಅಯೂಬ್ 25ಕ್ಕೆ 3, ಸಲ್ಮಾನ್ ಆಘಾ 10ಕ್ಕೆ 1, ಉಸ್ಮಾನ್ ತಾರಿಕ್ 24ಕ್ಕೆ1.
T20 ವಿಶ್ವಕಪ್ | ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಸೋಲಿಸಿದ ಭಾರತ
ಕೊಲಂಬೊ, ಫೆ.15: ಇಲ್ಲಿನ ಆರ್ ಪ್ರೇಮದಾಸ ಸ್ಟೇಡಿಯಮ್ ನಲ್ಲಿ ನಡೆದ T20 ವಿಶ್ವಕಪ್ ನ ಪಾಕಿಸ್ತಾನದ ವಿರುದ್ಧದ ಪಂದ್ಯದಲ್ಲಿ ಭಾರತ ತಂಡವು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು 61 ರನ್ಗಳಿಂದ ಹೀನಾಯವಾಗಿ ಸೋಲಿಸಿ ಭರ್ಜರಿ ಜಯ ಗಳಿಸಿದೆ. ಆರಂಭಿಕ ಬ್ಯಾಟರ್ ಇಶಾನ್ ಕಿಶನ್ ಅವರ ಅಬ್ಬರದ ಬ್ಯಾಟಿಂಗ್ ನೆರವಿನಿಂದ ಭಾರತ ತಂಡವು 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 175 ರನ್ ಗಳಿಸಿತ್ತು. 176 ರನ್ ಗಳ ಗುರಿ ಪಡೆದ ಪಾಕಿಸ್ತಾನ ತಂಡವು 114 ರನ್ಗಳಿಗೆ ಆಲೌಟ್ ಆಯಿತು.
ಯಾದಗಿರಿ | ಸಂತ ಸೇವಾಲಾಲ್ ಅವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ; ರಮೇಶ ಕೋಲಾರ್
ಸಂತ ಸೇವಾಲಾಲ್ ಜಯಂತಿ ಆಚರಣೆ
ಕೆ.ಸಿ.ವರ್ಗೀಸ್ ಕೊಲೆ ಪ್ರಕರಣವೆಂದು ಸಾಬೀತು: ಮೂವರ ಬಂಧನ
ಉಪ್ಪಿನಂಗಡಿ: ಆರು ದಿನದ ಹಿಂದೆ ನೆಲ್ಯಾಡಿ ಗ್ರಾಮದ ಕೊಪ್ಪಮಾದೇರಿ ನಿವಾಸಿ ಕೆ.ಸಿ.ವರ್ಗೀಸ್ (73 )ರವರ ಸಾವು ತಲೆ ಹಾಗೂ ದೇಹದ ಭಾಗಗಳಿಗೆ ಬಲವಾದ ಪೆಟ್ಟು ಬಿದ್ದಿರುವುದರಿಂದಲೇ ಆಗಿದೆ ಎಂಬ ಶವ ಪರೀಕ್ಷೆಯ ವರದಿ ಆಧಾರಿಸಿ ಇದೊಂದು ಕೊಲೆ ಎಂದು ಉಪ್ಪಿನಂಗಡಿ ಪೊಲೀಸರು ಕೇಸು ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ. ಘಟನೆ ಕುರಿತಂತೆ ಮೃತರ ಪುತ್ರ ಆಟೋರಿಕ್ಷಾ ಚಾಲಕ ಕೆ.ವಿ.ತೋಮಸ್ ಎಂಬವರು ಉಪ್ಪಿನಂಗಡಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಂದೆ ಕೆ.ಸಿ.ವರ್ಗೀಸ್ ಮತ್ತು ತಾಯಿ ಎಸ್ತೆರಾ ವರ್ಗೀಸ್ ಅವರು ಕೊಪ್ಪ ಮಾದೇರಿ ಎಂಬಲ್ಲಿ ಪ್ರತ್ಯೇಕವಾಗಿ ವಾಸವಾಗಿದ್ದರು. ಫೆ.8ರಂದು ತಾಯಿಯನ್ನು ಚಿಕಿತ್ಸೆಗೆ ನೆಲ್ಯಾಡಿಯ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿ ರಾತ್ರಿ 8 ಗಂಟೆಗೆ ಮಾವನ ಮನೆಯಲ್ಲಿ ಬಿಟ್ಟಿದ್ದೇನೆ. ಆ ಸಮಯ ಕೊಪ್ಪ ಮಾದೇರಿಯ ಮನೆಯಲ್ಲಿ ತಂದೆ ಕೆ.ಸಿ.ವರ್ಗೀಸ್ ಮಾತ್ರ ಇದ್ದರು. ಬಳಿಕ ನೆಲ್ಯಾಡಿ ಪೇಟೆಯಲ್ಲಿ ಆಟೋ ಬಾಡಿಗೆ ಮಾಡಿ ರಾತ್ರಿ 11 ಗಂಟೆಗೆ ನನ್ನ ಮನೆಗೆ ಹೋಗುವಾಗ ತಂದೆ-ತಾಯಿ ವಾಸ ಮಾಡಿಕೊಂಡಿದ್ದ ಮನೆಯ ಬಾಗಿಲು ತೆರೆದುಕೊಂಡಿರು ವುದನ್ನು ನೋಡಿ ಮನೆಯೊಳಗಡೆ ಹೋದಾಗ ತಂದೆ ಕೆ.ಸಿ.ವರ್ಗೀಸ್ರವರು ಮಂಚದ ಕೆಳಗೆ ಬಿದ್ದುಕೊಂಡು ತಲೆಗೆ ರಕ್ತ ಗಾಯವಾಗಿರುವುದನ್ನು ಕಂಡು ಆ್ಯಂಬುಲೆನ್ಸ್ ನಲ್ಲಿ ಮಾವನೊಂದಿಗೆ ಪುತ್ತೂರು ಸರಕಾರಿ ಆಸ್ಪತ್ರೆಗೆ ಕರೆದು ಕೊಂಡು ಹೋಗಿದ್ದು ವೈದ್ಯರು ಪರೀಕ್ಷಿಸಿ ಕೆ.ಸಿ.ವರ್ಗೀಸ್ ಮೃತಪಟ್ಟಿ ರುವುದಾಗಿ ದೃಢಪಡಿಸಿರುತ್ತಾರೆ. ತಂದೆ ಒಬ್ಬರೇ ಮನೆಯಲ್ಲಿದ್ದ ಸಮಯ ಅವರ ಮರಣ ಸಂಭವಿಸಿದ್ದು ಇದರಲ್ಲಿ ಸಂಶಯವಿದ್ದು, ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ತಿಳಿಸಿದ್ದರು. ಈ ದೂರಿನಂತೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದರು. ಕೊಲೆ ಕೇಸು ದಾಖಲು: ಕೆ.ಸಿ.ವರ್ಗೀಸ್ ಸಾವಿಗೆ ಸಂಬಂಧಿಸಿ ಪೊಲೀಸರು ಸ್ಥಳದ ಮಹಜರು ನಡೆಸಿದ್ದರು. ಘಟನಾ ಸ್ಥಳಕ್ಕೆ ವಿಧಿ ವಿಜ್ಞಾನ ತಂಡದವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ದೇರಳಕಟ್ಟೆಯ ಆಸ್ಪತ್ರೆಯಲ್ಲಿ ಮೃತದೇಹದ ಮರಣೊತ್ತರ ಪರೀಕ್ಷೆಯೂ ನಡೆಸಲಾಗಿತ್ತು. ಶವ ಪರೀಕ್ಷೆ ನಡೆಸಿದ ವೈದ್ಯರು ಮರಣೋತ್ತರ ಶವ ಪರೀಕ್ಷೆ ನಡೆಸಿದ್ದು, ಮೃತ ವ್ಯಕ್ತಿಯು ತಲೆಗೆ ಉಂಟಾದ ಗಂಭೀರ ಹಲ್ಲೆಯಿಂದಾಗಿ ಮತ್ತು ದೇಹದ ಇತರ ಭಾಗಗಳಿಗೆ ಆಗಿರುವ ಗಾಯದಿಂದಾಗಿ ಮೃತಪಟ್ಟಿರುವುದಾಗಿದೆ ಎಂದು ವೈದ್ಯರು ವರದಿ ನೀಡಿದ್ದರು. ಈ ಬಗ್ಗೆ ತನಿಖೆ ನಡೆಸಿದ ಪೊಲೀಸರಿಗೆ ಆ ದಿನ ಮೃತ ಕೆ.ಸಿ. ವರ್ಗೀಸ್ ತನ್ನ ಹೆಂಡತಿ ಎಸ್ತೆರಾ ವರ್ಗೀಸ್ಗೆ ಹೊಡೆದಿದ್ದು, ಆಕೆಯು ಮನೆಯಿಂದ ಹೊರಗೆ ಸ್ವಲ್ಪ ದೂರದಲ್ಲಿ ಹೋಗಿ ಕುಳಿತಿದ್ದು, ಇದನ್ನು ನೋಡಿದ ಒಬ್ಬ ವ್ಯಕ್ತಿ ತನಗೆ ಪರಿಚಯದ ಒಬ್ಬ ಅಟೋ ರಿಕ್ಷಾದವರನ್ನು ಬರಮಾಡಿ ಆಸ್ಪತ್ರೆಗೆ ಕಳುಹಿಸಿದ್ದಾನೆ. ಆಗ ಆಕೆಯ ತಮ್ಮ ರಾಜು ಆಸ್ಪತ್ರೆಗೆ ಬಂದು ತನ್ನ ಅಕ್ಕನನ್ನು ನೋಡಿ ತನ್ನ ತಮ್ಮ ಚಾಕೋಚ್ಚನಿಗೆ ಕರೆ ಮಾಡಿ ಅಕ್ಕನಿಗೆ ಅವರ ಗಂಡ ಹೊಡೆದಿದ್ದಾರೆ. ನೀನು ಬೇಗ ಬಾ ಎಂದು ಕರೆಸಿಕೊಂಡಿದ್ದು, ಬಳಿಕ ತೋಮಸ್ನನ್ನು ಸ್ವಲ್ಪ ದೂರ ಬಿಟ್ಟು ಚಾಕೊಚ್ಚ ಮತ್ತು ರಾಜುರವರು ಮನೆಯ ಒಳಗೆ ಹೋಗಿ ಕೆ.ಸಿ. ವರ್ಗೀಸ್ ಅವರಿಗೆ ಕಟ್ಟಿಗೆಯಿಂದ ಹೊಡೆದಿದ್ದಾರೆ. ಬಳಿಕ ತೋಮಸ್ ಅವರಲ್ಲಿ ಬಂದು ಅವರಿಗೆ ಸರಿಯಾಗಿ ಹೊಡೆದಿದ್ದೇವೆ. ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗು ಎಂದು ಹೇಳಿರುವುದಾಗಿ ತಿಳಿದು ಬಂದಿದೆ. ಮೂವರ ಬಂಧನ: ಈ ಪ್ರಕರಣಕ್ಕೆ ಸಂಬಂಧಿಸಿ ಕೆ.ವಿ. ತೋಮಸ್, ಅರಸಿನಮಕ್ಕಿಯ ಸಿ.ಟಿ. ರಾಜು, ಹಾಗೂ ನೆಲ್ಯಾಡಿಯ ಚಾಕೊಚ್ಚ ಎಂಬವರನ್ನು ಪೊಲೀಸರು ಬಂಧಿಸಿ, ತನಿಖೆ ಮುಂದುವರಿಸಿದ್ದಾರೆ.
ಬಾಂಗ್ಲಾ ಪ್ರಧಾನಿ ತಾರೀಕುರ್ರಹ್ಮಾನ್ ಪ್ರಮಾಣವಚನ ಸಮಾರಂಭದಲ್ಲಿ ಭಾರತವನ್ನು ಪ್ರತಿನಿಧಿಸಲಿರುವ ಸ್ಪೀಕರ್ ಓಂ ಬಿರ್ಲಾ
ಹೊಸದಿಲ್ಲಿ,ಫೆ.15: ಬಾಂಗ್ಲಾದೇಶದ ನೂತನ ಪ್ರಧಾನಿ ತಾರೀಕುರ್ರಹ್ಮಾನ್ ಅವರ ಪ್ರಮಾಣವಚನ ಕಾರ್ಯಕ್ರಮದಲ್ಲಿ ಲೋಕಸಭಾ ಸ್ಪೀಕರ್ ಓಂಬಿರ್ಲಾ ಅವರು ಮಂಗಳವಾರ ಭಾರತವನ್ನು ಪ್ರತಿನಿಧಿಸಲಿದ್ದಾರೆ. ಮಹತ್ವದ ರಾಜತಾಂತ್ರಿಕ ಬಾಂಧವ್ಯದ ನಡೆಯೊಂದರಲ್ಲಿ ಬಾಂಗ್ಲಾ ಮಧ್ಯಂತರ ಸರಕಾರದ ಮುಖ್ಯ ಸಲಹೆಗಾರ ಮುಹಮ್ಮದ್ ಯೂನಸ್ ಅವರು, ಬಾಂಗ್ಲಾದ ನೂತನ ಪ್ರಧಾನಿಯ ಪ್ರಮಾಣವಚನ ಸಮಾರಂಭಕ್ಕೆ ಭಾರತ, ಚೀನಾ, ಸೌದಿ ಆರೇಬಿಯ, ಪಾಕಿಸ್ತಾನ, ತುರ್ಕಿಯೆ, ಯುಎಇ, ಖತರ್, ಮಲೇಶ್ಯಾ, ಬ್ರೂನಿ, ಶ್ರೀಲಂಕಾ, ನೇಪಾಳ, ಮಾಲ್ದೀವ್ಸ್ ಹಾಗೂ ಭೂತಾನ್ ದೇಶಗಳ ಆಡಳಿತ ಮುಖ್ಯಸ್ಥರನ್ನು ಆಹ್ವಾನಿಸಿದ್ದರು. ಪ್ರಧಾನಿ ನರೇಂದ್ರ ಮೋದಿಯವರನ್ನು ಈ ಸಮಾರಂಭಕ್ಕೆ ಆಹ್ವಾನಿಸಲಾಗಿತ್ತಾದರೂ, ಮುಂಬೈಯಲ್ಲಿ ಅವರಿಗೆ ಪೂರ್ವನಿಗದಿತ ಕಾರ್ಯಕ್ರಮಗಳಿದ್ದುದರಿಂದ ಅವರಿಗೆ ಭಾಗವಹಿಸಲು ಸಾಧ್ಯವಾಗುವುದಿಲ್ಲವೆಂದು ಅಧಿಕೃತ ಮೂಲಗಳು ತಿಳಿಸಿವೆ. ಈ ಮಹತ್ವದ ಕಾರ್ಯಕ್ರಮದಲ್ಲಿ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರು ಭಾಗವಹಿಸುವಿಕೆಯು ಭಾರತ ಹಾಗೂ ಬಾಂಗ್ಲಾದೇಶದ ಜನತೆಯ ನಡುವಿನ ಗಾಢವಾದ ಹಾಗೂ ಬಾಳಿಕೆಯ ಸ್ನೇಹವು, ಉಭಯದೇಶಗಳನ್ನು ಬೆಸೆದಿರುವ ಪ್ರಜಾತಾಂತ್ರಿಕ ಮೌಲ್ಯಗಳಿಗೆ ಭಾರತದ ಸ್ಥಿರವಾದ ಬದ್ಧತೆಯನ್ನು ಮರು ದೃಢಪಡಿಸಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.
ಕೇರಳ: ಸಾಲದ ಹೊರೆ ತಾಳಲಾರದೆ ಪ್ರಗತಿಪರ ರೈತ ಆತ್ಮಹತ್ಯೆ
ಕಣ್ಣೂರು,ಫೆ.15: ಪ್ರಶಸ್ತಿ ವಿಜೇತ ಪ್ರಗತಿಪರ ಕೃಷಿಕರೊಬ್ಬರು ಸಾಲದ ಹೊರೆಯನ್ನು ತಾಳಲಾಗದೆ ಆತ್ಮಹತ್ಯೆಗೆ ಶರಣಾದ ಘಟನೆ ಕೇರಳದ ಚಿರುಪುಳದಲ್ಲಿ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡ ರೈತನನ್ನು ಚೆರುಪುಳದ ಇದಾವರಂ ನಿವಾಸಿ 62 ವರ್ಷ ವಯಸ್ಸಿನ ಅಂಬಟ್ಟು ಎಲಿಯಾಸ್ ಎಂದು ಗುರುತಿಸಲಾಗಿದೆ. ಎಲಿಯಾಸ್ ಮೂರು ದಿನಗಳ ಹಿಂದೆ ತನ್ನ ಕೀಟನಾಶಕ ಸೇವಿಸಿದ್ದು, ಅವರ ಹೊಲದಲ್ಲಿ ಚಿಂತಾಜನಕ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಜಿಲ್ಲೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಎಲಿಯಾಸ್ ರವಿವಾರ ಕೊನೆಯುಸಿರೆಳೆದರೆಂದು ವರದಿ ತಿಳಿಸಿದೆ. ಅಂಬಟ್ಟು ಎಲಿಯಾಸ್ ಕೃಷಿಗಾಗಿ ಲಕ್ಷಾಂತರ ರೂಪಾಯಿ ಸಾಲ ಮಾಡಿದ್ದರಿಂದ ಅದರ ಹೊರೆಯನ್ನು ತಾಳಲಾರದೆ ಅವರು ಆತ್ಮಹತ್ಯೆ ಮಾಡಿಕೊಂಡಿರಬೇಕೆಂದು ಶಂಕಿಸಲಾಗಿದೆ. ಎಲಿಯಾಸ್ ಅವರು ಸುಮಾರು ನಾಲ್ಕು ದಶಕಗಳಿಂದ ಕಣ್ಣೂರಿನ ಬೆಟ್ಟಪ್ರದೇಶಗಳು ಹಾಗೂ ನೆರೆಯ ಕಾಸರಗೋಡು ಜಿಲ್ಲೆಗಳಲ್ಲಿ ಜಮೀನುಗಳನ್ನು ಗುತ್ತಿಗೆ ಪಡೆದು ತರಕಾರಿ ಬೆಳೆಸುತ್ತಿದ್ದರು. ಹಾಲಿ ಋತುವಿನಲ್ಲಿ ಅವರು 2500 ಬಾಳೆಗಿಡಗಳನ್ನು ಬೆಳೆದಿದ್ದರು.ಆದರೆ ಸಮರ್ಪಕವಾದ ಫಸಲು ದೊರೆಯದೆ ಇದ್ದುದರಿಂದ ತೀವ್ರ ಖಿನ್ನರಾಗಿದ್ದ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಮೂಲಗಳು ತಿಳಿಸಿವೆ.
ಕನಕಗಿರಿ | ಎತ್ತು, ಭೂಮಿ ತಾಯಿ ರೈತನ ಬಾಳನ್ನು ಬೆಳಗುವ ಜೀವನಾಡಿ : ಚನ್ನಮಲ್ಲಸ್ವಾಮಿ
ಕನಕಗಿರಿ: ಎತ್ತು ಹಾಗೂ ಭೂಮಿತಾಯಿ ರೈತನ ಬಾಳನ್ನು ಬೆಳಗುವ ಜೀವನಾಡಿ. ಈ ಎರಡನ್ನು ಸ್ವಚ್ಚ ಮನಸ್ಸಿನಿಂದ ಪೂಜಿಸುವವರ ಜೀವನ ಬಂಗಾರವಾಗುತ್ತದೆ ಎಂದು ಸುವರ್ಣಗಿರಿ ಸಂಸ್ಥಾನ ವಿರಕ್ತಮಠದ ಚನ್ನಮಲ್ಲಸ್ವಾಮಿ ತಿಳಿಸಿದರು. ಪಟ್ಟಣದ ಬಸರಿಹಾಳ ರಸ್ತೆಯಲ್ಲಿ ಶ್ರೀ ಕನಕದುರ್ಗ ಎತ್ತುಗಳ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಮಹಾಶಿವರಾತ್ರಿ ಅಂಗವಾಗಿ ಭಾನುವಾರ ಆಯೋಜಿದ್ದ 'ಕುಂಟಿ ದಿಂಡಿನ ಮೇಲೆ ಉಸುಕಿನ ಚೀಲದ ದಿಂಡು ಎಳೆಯುವ ಸ್ಪರ್ಧೆ'ಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಮನೋಲ್ಲಾಸ ನೀಡುವ ಕ್ರೀಡೆಗಳನ್ನು ಬಿಟ್ಟು ಜನ ಮೊಬೈಲ್ ಗೆ ಜೋತು ಬಿದ್ದಿದ್ದಾರೆ ದೇಶಿಯ ಕ್ರೀಡೆಗಳಾದ ಕುಸ್ತಿ, ಕಬ್ಬಡ್ಡಿ, ಮುಂಗೈ ಇತರೆ ಆಟೋಟದಲ್ಲಿ ಭಾಗಿಯಾದರೆ ಉತ್ತಮ ಆರೋಗ್ಯವನ್ನು ಪಡೆದುಕೊಳ್ಳಲು ಸಾಧ್ಯವಿದೆ ಎಂದು ತಿಳಿಸಿದರು. ಯುವಕರು ಗ್ರಾಮೀಣ ಭಾಗದ ಕ್ರೀಡೆಗಳಿಗೆ ಹೆಚ್ಚಿನ ಒಲವು ನೀಡಬೇಕು. ಒಣ ರಾಜಕೀಯ ಮಾಡುವವರೆ ಹೆಚ್ಚಾಗಿರುವ ಈ ಸಮಯದಲ್ಲಿ ರೈತರು ಸಿಗುತ್ತಿಲ್ಲ. ಇದ್ದ ರೈತರಿಗೆ ಹೆಣ್ಣು ಸಿಗುತ್ತಿಲ್ಲ ಎಂದು ವಿಷಾದಿಸಿದರು. ಹತ್ತಕ್ಕೂ ಹೆಚ್ಚು ಜೋಡಿ ಎತ್ತುಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದು, ಅವು ಓಡುತ್ತಿದ್ದಂತೆ ಅಲ್ಲಿ ಸೇರಿದ ಜನರು ಚಪ್ಪಾಳೆ, ಸಿಳ್ಳೆ,ಕೇಕೇ ಹಾಕಿ ಸಂತಸ ವ್ಯಕ್ತಪಡಿಸಿದರು. ಸ್ಪರ್ಧೆಯ ನಿಮಿತ್ತರೈತರು ತಮ್ಮ ಎತ್ತುಗಳನ್ನು ಬಲೂನ್, ಗೆಜ್ಜೆ ಕಟ್ಟಿ ಶೃಂಗಾರಿಸಿದ್ದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ. ಗಂಗಾಧರಸ್ವಾಮಿ, ವಕ್ತಾರ ಶರಣಬಸಪ್ಪ ಭತ್ತದ, ಬಿಜೆಪಿ ಮಂಡಲ ಅಧ್ಯಕ್ಷ ಸಣ್ಣ ಕನಕಪ್ಪ, ಮಾಜಿ ಅಧ್ಯಕ್ಷ ಮಹಾಂತೇಶ ಸಜ್ಜನ, ಪಟ್ಟಣ ಪಂಚಾಯಿತಿ ಉಪಾಧ್ಯಕ್ಷ ಕಂಠಿರಂಗಪ್ಪ ನಾಯಕ, ಸದಸ್ಯ ಹನುಮಂತ ಬಸರಿಗಿಡದ, ನಾಮನಿರ್ದೇಶನ ಸದಸ್ಯರಾದ ಶಾಂತಪ್ಪ ಬಸರಿಗಿಡದ, ಗಂಗಾಧರ ಚೌಡ್ಕಿ ಪ್ರಮುಖರಾದ ವಾಗೇಶ ಹಿರೇಮಠ, ಕೆ.ಎಚ್ ಕುಲಕರ್ಣಿ, ಹುಸೇನಸಾಬ ಗೊರಳ್ಳಿ, ಟಿಜೆ ರಾಮಚಂದ್ರ, ಗಣೇಶರೆಡ್ಡಿ, ಮದರಸಾಬ ಸಂತ್ರಾಸ, ಇತರರು ಇದ್ದರು.
ಕಾರಟಗಿ | ಕನ್ನಡ ಸಾಹಿತ್ಯ ಸಮ್ಮೇಳನದ ಲಾಂಛನ ಬಿಡುಗಡೆ
ತಾಲೂಕಿನ ಮರಲಾನಹಳ್ಳಿ ಗ್ರಾಮದಲ್ಲಿ ನಡೆಯಲಿರುವ ತಾಲೂಕು 3ನೇ ಸಾಹಿತ್ಯ ಸಮ್ಮೇಳನದ ಲಾಂಛನವನ್ನು ಭಾನುವಾರ ಗಣ್ಯರ ಸಮ್ಮುಖದಲ್ಲಿ ಬಿಡುಗಡೆಗೊಳಿಸಲಾಯಿತು. ಇಲ್ಲಿನ ಶ್ರೀ ಲಕ್ಷ್ಮೀ ವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಶರಣೇಗೌಡ ಪೊಲೀಸ್ ಪಾಟೀಲ್ ಸೇರಿದಂತೆ ಹಲವು ಸಂಘ-ಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸಿದರು. ಜಿಲ್ಲಾಧ್ಯಕ್ಷ ಶರಣೇಗೌಡ ಪೊ.ಪಾ ಮಾತನಾಡಿ, ಫೆ.21ರಂದು ಶನಿವಾರ ಮರಲಾನಹಳ್ಳಿ ಗ್ರಾಮದಲ್ಲಿ ನಡೆಯುವ ತಾಲೂಕಾ ಸಾಹಿತ್ಯ ಸಮ್ಮೇಳನವನ್ನು ಅತ್ಯಂತ ಅದ್ಧೂರಿಯಾಗಿ ಮತ್ತು ಅರ್ಥಪೂರ್ಣವಾಗಿ ನಡೆಸಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು. ಮೊದಲ ಹಂತವಾಗಿ ಲಾಂಛನ ಬಿಡುಗಡೆ ಮಾಡಲಾಗಿದ್ದು, ಸಮ್ಮೇಳನದ ಯಶಸ್ಸಿಗೆ ಎಲ್ಲರೂ ಸಹಕರಿಸಬೇಕು ಎಂದು ಮನವಿ ಮಾಡಿದರು. ತಾಲೂಕಾಧ್ಯಕ್ಷ ಶರಣಪ್ಪ ಕೋಟ್ಯಾಳ ಮಾತನಾಡಿ, ನಾಡಿನ ಭಾಷೆ, ಜನಪದ ಪರಂಪರೆ ಹಾಗೂ ಸಾಹಿತ್ಯದ ಬೆಳವಣಿಗೆಗೆ ಇಂತಹ ಸಮ್ಮೇಳನಗಳು ಜೀವಾಳವಾಗಿವೆ. ಸಮ್ಮೇಳನವು ಹೊಸ ಚಿಂತನೆ, ವಿನೂತನ ಕಾರ್ಯಕ್ರಮಗಳು ಹಾಗೂ ಸಾಹಿತ್ಯಾಸಕ್ತರ ವಿಶಾಲ ಭಾಗವಹಿಸುವಿಕೆಗೆ ವೇದಿಕೆಯಾಗಲಿದೆ ಎಂದು ಹೇಳಿದರು. ಈಗಾಗಲೇ ಸಿದ್ಧತೆ ಕುರಿತು ಹಲವು ಸಭೆಗಳು ನಡೆದಿದ್ದು, ಆಹ್ವಾನ ಪತ್ರಿಕೆ ಸಿದ್ಧಪಡಿಸುವ ಕಾರ್ಯ ನಡೆಯುತ್ತಿದೆ. ವಿವಿಧ ಸಮಿತಿಗಳನ್ನು ರಚಿಸಿ ಜವಾಬ್ದಾರಿಗಳನ್ನು ಹಂಚಲಾಗುತ್ತಿದೆ ಎಂದು ವಿವರಿಸಿದರು. ಸಮ್ಮೇಳನಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಸ್ವಾಗತ ಸಮಿತಿಯ ಅಧ್ಯಕ್ಷರಾಗಿದ್ದು, ವಿವಿಧ ಪಕ್ಷ ಹಾಗೂ ಸಮುದಾಯಗಳ ಮುಖಂಡರ ಸಹಕಾರದೊಂದಿಗೆ ಸಮ್ಮೇಳನದ ಯಶಸ್ಸಿಗೆ ರೂಪುರೇಷೆಗಳು ಸಿದ್ಧಗೊಳ್ಳುತ್ತಿವೆ ಎಂದು ತಿಳಿಸಿದರು. ಪರಿಷತ್ ನ ಜಿಲ್ಲಾ ಕೋಶಾಧ್ಯಕ್ಷ ರಮೇಶ ಕುಲಕರ್ಣಿ, ನಿಕಟಪೂರ್ವ ತಾಲೂಕಾಧ್ಯಕ್ಷ ಚನ್ನಬಸಪ್ಪ ವಕ್ಕಳದ, ಸರಕಾರಿ ನೌಕರರ ಸಂಘದ ತಾಲೂಕಾಧ್ಯಕ್ಷ ಹನುಮಂತಪ್ಪ ನಾಯಕ ತೊಂಡಿಹಾಳ, ಪ್ರಾ.ಶಾ.ಶಿ ಸಂಘದ ತಾಲೂಕಾಧ್ಯಕ್ಷ ವಿಠ್ಠಲ್ ಜೀರಗಾಳಿ, ಜಿ.ಪಂ ಮಾಜಿ ಸದಸ್ಯ ಡಿ. ಕೃಷ್ಣಪ್ಪ, ತಾ.ಪಂ ಮಾಜಿ ಅಧ್ಯಕ್ಷ ಮಹಮ್ಮದ್ ರಫೀ, ತಾ.ಪಂ ಮಾಜಿ ಸದಸ್ಯ ಜೆ. ತಿಪ್ಪಣ್ಣ, ಗ್ರಾ.ಪಂ ಮಾಜಿ ಅಧ್ಯಕ್ಷ ರವಿನಂದಾ, ಹಿರಿಯ ಮುಖಂಡರಾದ ವಿರುಪಣ್ಣ ದೊಡ್ಡಮನಿ, ಗ್ಯಾರಂಟಿ ಸಮಿತಿ ಜಿಲ್ಲಾ ಸದಸ್ಯ ಸೋಮನಾಥ್ ದೊಡ್ಡಮನಿ, ಯುವ ಮುಖಂಡರಾದ ರಮೇಶ ನಾಡಿಗೇರ್ ವಕೀಲರು, ಜೂರಟಗಿ, ಯಮನೂರಪ್ಪ ಜೋಗಲದಿನ್ನಿ, ಉದ್ಯಮಿ ಎಂ. ಸುಬ್ಬಾರಾವ್, ಡಿ. ಪಂಪಾಪತಿ, ಯಮನೂರಪ್ಪ ಬೆನ್ನೂರು, ಎಂ.ಪಟ್ಟಾಭಿ, ಶರಣಪ್ಪ ನಾಯಕ ಹುಳ್ಕಿಹಾಳ, ಪರಿಷತ್ ಸದಸ್ಯರಾದ ಅಲಿ ಹುಸೇನ್, ಜಾಗೃತ ಯುವಕ ಸಂಘದ ಅಧ್ಯಕ್ಷ ಬಸವರಾಜ ಶೆಟ್ಟರ್, ಪ್ರಹ್ಲಾದ ಜೋಷಿ, ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ ಉಮೇಶ ಮರ್ಲಾನಹಳ್ಳಿ, ರಾಜ್ಯ ಜಾನಪದ ಅಕಾಡೆಮಿ ಸದಸ್ಯ ಮಹಿಬೂಬ್ ಕಿಲ್ಲೇದಾರ್, ಸಿ.ಆರ್.ಪಿ ಭೀಮಣ್ಣ ಕರಡಿ, ಶಿಕ್ಷಕರುಗಳಾದ ಹೋಮಣ್ಣ, ಸಾವಿತ್ರಿ ಮಲ್ಲನಗೌಡರ್, ವೀರನಗೌಡ ಹಣವಾಳ, ರಾಘವೇಂದ್ರ ಕೌತಾಳ, ಮಂಜುನಾಥ್ ಹೊನಗುಡಿ, ಬಾಬು ಅಲಿಖಾನ್, ವೆಂಕಟೇಶ ಭಜಂತ್ರಿ ಇನ್ನಿತರರು ಇದ್ದರು.
Bidar | ಸಂತ ಸೇವಾಲಾಲ್ ಅವರು ಶಾಂತಿಯ ಸಂದೇಶ ಸಾರಿದ ಮಹಾನ್ ದಾರ್ಶನಿಕರು : ಸಚಿವ ರಹೀಂ ಖಾನ್
ಸಂತ ಸೇವಾಲಾಲ್ ಮಹಾರಾಜರ 287ನೇ ಜಯಂತಿ ಆಚರಣೆ
ರಷ್ಯಾ ಅಧ್ಯಕ್ಷರ ಶತ್ರು ಅಲೆಕ್ಸಿ ನವಲ್ನಿ ವಿಚಾರದಲ್ಲಿ ಯುರೋಪ್ ದೇಶಗಳ ಸ್ಫೋಟಕ ಆರೋಪ | Alexei Navalny
ಅಲೆಕ್ಸಿ ನವಲ್ನಿ ವಿಚಾರ ವರ್ಷಗಳ ನಂತರ ದೊಡ್ಡ ಸದ್ದು ಮಾಡುತ್ತಿದೆ. ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ವಿರುದ್ಧ ಹೋರಾಟ ಮಾಡಿದ್ದ ನವಲ್ನಿ, ಕೆಲ ವರ್ಷದ ಹಿಂದೆ ಮೃತಪಟ್ಟಿದ್ದು ಸುದ್ದಿಯಾಗಿತ್ತು. ಆದರೆ ಇದೀಗ ದಿಢೀರ್ ಅಲೆಕ್ಸಿ ನವಲ್ನಿ ವಿಚಾರ ಮತ್ತೊಮ್ಮೆ ಮುನ್ನೆಲೆಗೆ ಬಂದಿದ್ದು, ಬ್ರಿಟನ್ ಸೇರಿ ಫ್ರಾನ್ಸ್ ಹಾಗೂ ಜರ್ಮನಿ ಜೊತೆಗೆ ಹಲವು ಯುರೋಪ್ ದೇಶಗಳು ನವಲ್ನಿಗೆ ವಿಷ
ಗ್ಯಾಸ್ ಅಪ್ಡೇಟ್ ಹೆಸರಿನಲ್ಲಿ ಆನ್ಲೈನ್ ವಂಚನೆ: ಪ್ರಕರಣ ದಾಖಲು
ಕೋಟ, ಫೆ.15: ಗ್ಯಾಸ್ ಅಪ್ಡೇಟ್ ಹೆಸರಿನಲ್ಲಿ ಲಕ್ಷಾಂತರ ರೂ. ಆನ್ಲೈನ್ ವಂಚನೆ ಎಸಗಿರುವ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೊಳಹಳ್ಳಿ ಗ್ರಾಮದ ಬಸವಪುರದ ಗಣಪತಿ ರಾಮಣ್ಣ ಶೆಟ್ಟಿ ಎಂಬವರ ಮೊಬೈಲ್ಗೆ ಫೆ.8ರಂದು ಕರೆ ಬಂದಿದ್ದು, ಮುಂಬೈ ಮಹಾನಗರ ಗ್ಯಾಸ್ನ ಅಪಡೇಟ್ ಮಾಡಲು ತಿಳಿಸಿ 12ರೂ. ಹಣ ಹಾಕಲು ತಿಳಿಸಿದ್ದರು. ಅದರಂತೆ ಗಣಪತಿ ಡೆಬಿಟ್ ಕಾರ್ಡನಿಂದ ಹಣವನ್ನು ಹಾಕಿದ್ದರು. ಆ ಬಳಿಕ ಫೆ.11ರಂದು ಹಾಗೂ 12ರಂದು ಇವರ ಖಾತೆಯಿಂದ 2,01,890ರೂ. ವರ್ಗಾವಣೆ ಮಾಡಿ ವಂಚಿಸಿರುವುದಾಗಿ ದೂರಲಾಗಿದೆ.
ಲಕ್ಷಾಂತರ ರೂ. ಆನ್ಲೈನ್ ವಂಚನೆ: ಪ್ರಕರಣ ದಾಖಲು
ಕೋಟ, ಫೆ.15: ವ್ಯಕ್ತಿಯೊಬ್ಬರ ಖಾತೆಯಿಂದ ಲಕ್ಷಾಂತರ ರೂ. ಹಣ ವರ್ಗಾವಣೆ ಮಾಡಿಕೊಂಡು ವಂಚಿಸಿರುವ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೋಟದ ರಮೇಶ್ ಮಯ್ಯ ಎಂಬವರು ಯುಟ್ಯೂಬ್ನಲ್ಲಿ ಬಂದ ಜಾಹಿರಾತಿನ ಪ್ರಕಾರ 2025ರ ಸೆ.20ರಂದು ಆನ್ಲೈನ್ ಮೂಲಕ 17617ರೂ ಪಾವತಿ ಮಾಡಿದ್ದು, ನಂತರ ನ.28ರಂದು ಮತ್ತೆ 90,000/ರೂ. ಪಾವತಿಸಿದ್ದರು. ಆದರೆ ಸೈಬರ್ ವಂಚಕರು ಇವರ ಖಾತೆಯಿಂದ ಒಟ್ಟು 1,07,617ರೂ. ಹಣವನ್ನು ಮೋಸದಿಂದ ತೆಗೆದು ವಂಚಿಸಿರುವುದಾಗಿ ದೂರಲಾಗಿದೆ.
ನೀವು ಸಾಕಷ್ಟು ನಿದ್ರೆ ಮಾಡುತ್ತೀರಾ? REM ನಿದ್ರೆ ಏಕೆ ಅಗತ್ಯ?
ನಿದ್ರೆಯ REM ಹಂತದಲ್ಲಿ ಹೆಚ್ಚಿನ ಕನಸುಗಳು ಬೀಳುತ್ತವೆ. ಮೆದುಳಿನ ಚಟುವಟಿಕೆ ಹೆಚ್ಚಾಗುತ್ತದೆ ಮತ್ತು ದೇಹವು ತಾತ್ಕಾಲಿಕವಾಗಿ ಗಾಢ ನಿದ್ರಾವಸ್ಥೆಗೆ ತಲುಪುತ್ತದೆ. ನಿದ್ರೆಯು ನಿಮ್ಮ ಒಟ್ಟಾರೆ ಆರೋಗ್ಯ ಮತ್ತು ಯೋಗಕ್ಷೇಮದ ಮೇಲೆ ಪರಿಣಾಮ ಬೀರುವ ಪ್ರಮುಖ ಅಂಶ. ಸ್ಲೀಪ್ ಫೌಂಡೇಶನ್ ಹೇಳುವ ಪ್ರಕಾರ, 18 ವರ್ಷದಿಂದ ಮೇಲ್ಪಟ್ಟ ಜನರಿಗೆ ಕನಿಷ್ಠ 7 ಗಂಟೆಗಳಿಗಿಂತ ಹೆಚ್ಚು ನಿದ್ರೆ ಮಾಡಬೇಕಾಗುತ್ತದೆ. ನೀವು ನಿದ್ರೆ ಮಾಡುವಾಗ ನಿಮ್ಮ ದೇಹದ ಬಳಲಿಕೆ ಕಡಿಮೆಯಾಗುತ್ತದೆ. ಜೀವಕೋಶಗಳನ್ನು ಸರಿಪಡಿಸುತ್ತದೆ. ಪ್ರತಿರಕ್ಷಣಾ ವ್ಯವಸ್ಥೆಯನ್ನು ಸುಧಾರಿಸುತ್ತದೆ ಮತ್ತು ಹಾರ್ಮೋನ್ಗಳನ್ನು ಸಮತೋಲನಗೊಳಿಸುತ್ತದೆ. ಮೆದುಳು ನೆನಪುಗಳನ್ನು ಪ್ರಕ್ರಿಯೆಗೊಳಿಸುತ್ತದೆ ಮತ್ತು ನಿದ್ರಿಸಿದಾಗ ವಿಷಕಾರಿ ತ್ಯಾಜ್ಯವನ್ನು ತೆರವುಗೊಳಿಸುತ್ತದೆ. ಅಲ್ಲದೆ, ಹೃದಯ ಬಡಿತ ಮತ್ತು ರಕ್ತದೊತ್ತಡ ಕಡಿಮೆಯಾಗುತ್ತದೆ. ಸ್ನಾಯುಗಳನ್ನು ಸಡಿಲಗೊಳಿಸುತ್ತದೆ ಮತ್ತು ದೇಹಕ್ಕೆ ನವಚೈತನ್ಯ ಬರಲು ಅನುವು ಮಾಡಿಕೊಡುತ್ತದೆ. ನಿದ್ರೆಯಲ್ಲಿ ವಿಭಿನ್ನ ಹಂತಗಳಿವೆ ಮತ್ತು ಪ್ರತಿಯೊಂದು ಹಂತಗಳು ಪ್ರಮುಖ ಕಾರ್ಯಗಳನ್ನು ಹೊಂದಿವೆ. ನಿದ್ರೆಯ ವಿಭಿನ್ನ ಹಂತಗಳನ್ನು ಅರ್ಥಮಾಡಿಕೊಳ್ಳುವುದು ನಿದ್ರೆಯಲ್ಲಿ ನಾಲ್ಕು ಹಂತಗಳಿರುತ್ತವೆ. ಅದರಲ್ಲಿ ಮೊದಲ ಮೂರು ಹಂತಗಳು ಇರುತ್ತವೆ, ಮತ್ತೊಂದು ತ್ವರಿತ ಕಣ್ಣಿನ ಚಲನೆಯ (REM) ಸ್ಥಿತಿ. ಹಂತ 1 (ಎನ್1): ಇದು ನಿದ್ರೆಯ ಬಹಳ ಹಗುರವಾದ ಹಂತ ಮತ್ತು ವ್ಯಕ್ತಿ ನಿದ್ರೆಗೆ ಜಾರುವ ಮೊದಲ ಹಂತ. ಹಂತ 2 (ಎನ್ 2): ಈ ಹಂತದಲ್ಲಿ ದೇಹವು ನಿಧಾನವಾಗಿ ಆರಾಮವಾಗಲು ಪ್ರಾರಂಭವಾಗುತ್ತದೆ. ದೇಹದ ಉಷ್ಣತೆ ಕುಸಿಯುತ್ತದೆ, ಸ್ನಾಯುಗಳು ಆರಾಮಗೊಳ್ಳುತ್ತವೆ ಮತ್ತು ಹೃದಯ ಮತ್ತು ಉಸಿರಾಟ ನಿಧಾನಗೊಳ್ಳುತ್ತದೆ. ಹಂತ 3 (ಎನ್3 ಅಥವಾ ಆಳವಾದ ನಿದ್ರೆ): ಇದು ಬಹಳ ಆಳವಾದ ನಿದ್ರೆಯ ಸಮಯ. ದೇಹ ಮತ್ತು ಮೆದುಳಿಗೆ ಹೆಚ್ಚು ಆರಾಮ ಕೊಡುವ ನಿದ್ರೆಯಾಗಿರುತ್ತದೆ. ಹಂತ 4 (REM ನಿದ್ರೆ): ಈ ಹಂತದಲ್ಲಿ ಹೆಚ್ಚಿನ ಕನಸುಗಳು ಬೀಳುತ್ತವೆ. ಮೆದುಳಿನ ಚಟುವಟಿಕೆ ಹೆಚ್ಚಾಗುತ್ತದೆ ಮತ್ತು ದೇಹವು ತಾತ್ಕಾಲಿಕವಾಗಿ ಗಾಢ ನಿದ್ರಾವಸ್ಥೆಗೆ ತಲುಪುತ್ತದೆ. REM ನಿದ್ರೆ ಎಂದರೇನು? REM ನಿದ್ರೆ ಎಂದರೆ ತ್ವರಿತ ಕಣ್ಣಿನ ಚಲನೆಯಾಗಿರುತ್ತದೆ ಮತ್ತು ಆಗ ಮೆದುಳಿನ ಚಟುವಟಿಕೆ ಹೆಚ್ಚಾಗುತ್ತದೆ. ಎಚ್ಚರವಾಗಿದ್ದಾಗ ಇದ್ದಂತಹ ಸ್ಥಿತಿಯಲ್ಲಿಯೇ ಇರುತ್ತದೆ. ಹೀಗೆ ಮೆದುಳಿನ ಚಟುವಟಿಕೆ ಅತ್ಯಧಿಕವಾಗಿದ್ದಾಗ ದೇಹವು ತಾತ್ಕಾಲಿಕವಾಗಿ ಸ್ನಾಯುಗಳು ಬಲ ಕಳೆದುಕೊಂಡ ಸ್ಥಿತಿಗೆ ತಲುಪುತ್ತದೆ. ಈ ಸ್ಥಿತಿಯಲ್ಲಿ ಕಣ್ಣುಗಳು ಮತ್ತು ಸ್ನಾಯುಗಳು ಉಸಿರಾಟವನ್ನು ನಿಯಂತ್ರಿಸುತ್ತವೆ. ಸ್ಲೀಪ್ ಫೌಂಡೇಶನ್ ಪ್ರಕಾರ, “ಕಣ್ಣುಗಳು ಮುಚ್ಚಿದ್ದರೂ ತ್ವರಿತವಾಗಿ ಚಲಿಸುತ್ತವೆ. ಅದೇ ಕಾರಣಕ್ಕೆ ತ್ವರಿತ ಕಣ್ಣಿನ ಚಲನೆ ಎನ್ನುವ ಹೆಸರು ಬಂದಿದೆ. ಸ್ಮರಣೆ, ಕಲಿಕೆ ಮತ್ತು ಸೃಜನಶೀಲತೆಗೆ REM ಬಹಳ ಮುಖ್ಯವಾಗುತ್ತದೆ. REM ನಿದ್ರೆ ಯಾವಾಗ ಬರುತ್ತದೆ? ಬಹಳಷ್ಟು ಸಂದರ್ಭದಲ್ಲಿ ನೀವು 90 ನಿಮಿಷಗಳ ನಿದ್ರಾವಸ್ಥೆಗೆ ಜಾರಿದ ನಂತರ REM ನಿದ್ರೆಗೆ ಹೋಗುತ್ತೀರಿ. ನಿದ್ರೆ ಪ್ರಗತಿ ಹೊಂದುತ್ತಿದ್ದಂತೆ, REM ಹಂತಗಳು ದೀರ್ಘಗೊಳ್ಳುತ್ತವೆ. ಮೊದಲ REM ಹಂತ ಕೆಲ ನಿಮಿಷಗಳಷ್ಟೇ ಇರಬಹುದು. ಆದರೆ ನಂತರದ ಹಂತದಲ್ಲಿ ಗಂಟೆಯವರೆಗೂ ಸಾಗಬಹುದು. ಒಟ್ಟಿನಲ್ಲಿ ವಯಸ್ಕರಲ್ಲಿ REM ಯು ಒಟ್ಟು ನಿದ್ರೆಯ ಶೇ. 25ರಷ್ಟು ಪ್ರಮಾಣದಲ್ಲಿರುತ್ತದೆ. REM ನಿದ್ರೆಯ ಲಾಭವೇನು? * ಚಿಂತನೆ ಮತ್ತು ಅರಿವಿನ ಕಾರ್ಯವನ್ನು ಸುಧಾರಿಸುತ್ತದೆ. * ಈ ಹಂತದಲ್ಲಿ ಕನಸು ಬೆಳೆಯುತ್ತದೆ. * ಭಾವನೆಗಳನ್ನು ಕಡಿಮೆ ಮಾಡಿ ಮನೋಸ್ಥಿತಿಯನ್ನು ಸ್ಥಿರಗೊಳಿಸುತ್ತದೆ. * ನೆನಪಿನ ಶಕ್ತಿಯನ್ನು ಬಲಪಡಿಸುತ್ತದೆ. ಅನಗತ್ಯ ನೆನಪುಗಳನ್ನು ಮರೆಸುತ್ತದೆ. * ಮರುದಿನಕ್ಕೆ ದೇಹ ಮತ್ತು ಮೆದುಳಿನ ಚಟುವಟಿಕೆಗೆ ಸಿದ್ಧಪಡಿಸುತ್ತದೆ. REM ನಿದ್ರೆ ಏರಿಸುವುದು ಹೇಗೆ? 1. ಪ್ರತಿದಿನ ಒಂದೇ ಸಮಯಕ್ಕೆ ನಿದ್ರೆ ಮಾಡಿ ಎಚ್ಚರವಾಗಿ. ಇದರಿಂದ ದೇಹದ ಗಡಿಯಾರ REM ಸೈಕಲ್ ಜೊತೆಗೆ ಹೊಂದಿಕೊಳ್ಳುತ್ತದೆ. 2. ನಿದ್ರೆಗೆ 30-60 ನಿಮಿಷ ಮೊದಲು ಓದುವುದು ಅಥವಾ ಯೋಗದಂತಹ ಚಟುವಟಿಕೆಯನ್ನು ಮಾಡಿ. 3. ಮೊಬೈಲ್ ಅಥವಾ ಟಿವಿಯ ನೀಲಿ ಬೆಳಕು ನಿದ್ರೆಗೆ ಜಾರುವ ಮೊದಲು ದೇಹಕ್ಕೆ ಅಡ್ಡಿಪಡಿಸಬಾರದು. 4. ನಿದ್ರೆಯ ಪರಿಸರ ತಂಪಾಗಿ ಮತ್ತು ಕತ್ತಲೆ ಮತ್ತು ಮೌನ ತುಂಬಿರಲಿ. 5. ನಿದ್ರೆಗೆ ಜಾರುವ ಮೊದಲು ಮೆಲಟೊನಿನ್ ಮತ್ತು ಮೆಗ್ನೇಶಿಯಂ ಸಮೃದ್ಧವಾಗಿರುವ ಚೆರ್ರಿಗಳು, ಬಾಳೆಹಣ್ಣು ಅಥವಾ ಬಾದಾಮಿ ಸೇವಿಸುವುದು ನೆರವಾಗುತ್ತದೆ.
ರಿಕ್ಷಾ, 7 ದ್ವಿಚಕ್ರ ವಾಹನಗಳಿಗೆ ಢಿಕ್ಕಿ ಹೊಡೆದ ಕಾರು!
ಮಣಿಪಾಲ, ಫೆ.15: ಕಾರೊಂದು ರಿಕ್ಷಾ ಹಾಗೂ ರಸ್ತೆ ಬದಿ ನಿಲ್ಲಿಸಿದ್ದ ಏಳು ದ್ವಿಚಕ್ರ ವಾಹನಗಳಿಗೆ ಢಿಕ್ಕಿ ಹೊಡೆದ ಘಟನೆ ಮಣಿಪಾಲ ಪ್ರೆಸ್ ಯುನಿಟ್-4 ರಸ್ತೆ ಬಳಿ ಫೆ.14ರಂದು ರಾತ್ರಿ ವೇಳೆ ನಡೆದಿದೆ. ಅಪಘಾತದಿಂದ ರಿಕ್ಷಾ ಚಾಲಕ ಬೈಲೂರಿನ ಶಿವಪ್ರಸಾದ್(40) ಎಂಬವರು ಗಾಯಗೊಂಡಿದ್ದಾರೆ. ಚಾಲಕ ಅಭಿಮನ್ಯು ನೇಗಿ ಎಂಬಾತ ತನ್ನ ಕಾರನ್ನು ರಸ್ತೆಯಲ್ಲಿ ಅಪಾಯಕಾರಿ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ಎದುರಿನಲ್ಲಿ ಹೋಗುತ್ತಿದ್ದ ರಿಕ್ಷಾಕ್ಕೆ ಹಾಗೂ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ 7 ದ್ವಿಚಕ್ರ ವಾಹನಗಳಿಗೆ ಅಪಘಾತಗೊಳಿರುವುದಾಗಿ ದೂರಲಾಗಿದೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
KSRTC ಬಸ್ಗಳ ಲಗೇಜ್ ದರ ಏರಿಕೆ! ಸೋಮವಾರದಿಂದಲೇ ಹೊಸ ದರ ಅನ್ವಯ; ಎಷ್ಟು KG ಉಚಿತ? ಹೊಸ ಶುಲ್ಕ ಎಷ್ಟು?
ಕೆಎಸ್ಆರ್ಟಿಸಿ ಬಸ್ಗಳ ಲಗೇಜ್ ಸಾಗಣೆ ದರ ಏರಿಕೆಯಾಗಿದೆ. ಪ್ರತಿ ಬಾರಿಯೂ ಲಗೇಜು ದರ ಏರಿಕೆ ಬಸ್ ಪ್ರಯಾಣ ದರ ಏರಿಕೆಯೊಂದಿಗೆ ಆಗುತ್ತದೆ. ಕಳೆದ ವರ್ಷ ಜನವರಿ 2025 ರಂದು ಬಸ್ ಪ್ರಯಾಣ ದರ ಏರಿಕೆಯಾಗಿತ್ತು, ಆದರೆ ಲಗೇಜು ದರ ಏರಿಕೆ ಮಾಡಿರಲಿಲ್ಲ. ಸೋಮವಾರದಿಂದ ಜಾರಿಗೆ ಬರುವಂತೆ ಲಗೇಜು ದರ ಏರಿಕೆಯಾಗಿದೆ. 30 kg ವರೆಗೂ ಉಚಿತ,ನಂತರ ದರ ಅನ್ವಯಿಸುತ್ತದೆ. ಈ ಹಿಂದೆ ಲಗೇಜು ದರ ಡಿಸೆಂಬರ್ 2021 ರಲ್ಲಿ ಏರಿಕೆಯಾಗಿತ್ತು.
ಅಕ್ರಮ ಅನ್ನಭಾಗ್ಯ ಅಕ್ಕಿ ಸಾಗಾಟ: ಓರ್ವನ ಬಂಧನ
ಕುಂದಾಪುರ, ಫೆ.15: ಸರಕಾರದ ಉಚಿತ ಅನ್ನಭಾಗ್ಯ ಯೋಜನೆಗೆ ಸಂಬಂಧಿಸಿದ ಅಕ್ಕಿಯನ್ನು ಅಕ್ರಮವಾಗಿ ರಿಕ್ಷಾದಲ್ಲಿ ಸಾಗಾಟ ಮಾಡುತ್ತಿದ್ದ ಓರ್ವನನ್ನು ಕುಂದಾಪುರ ಪೊಲೀಸರು ಫೆ.14ರಂದು ಸಂಜೆ ವೇಳೆ ಕುಂದಾಪುರ ರಿಂಗ್ ರಸ್ತೆ ಸಮೀಪ ಬಂಧಿಸಿದ್ದಾರೆ. ಖಚಿತ ಮಾಹಿತಿಯಂತೆ ಕುಂದಾಪುರ ಆಹಾರ ನಿರೀಕ್ಷಕ ಸುರೇಶ್ ಎಚ್.ಎಸ್., ಕುಂದಾಪುರ ಎಸ್ಸೈ ನಂಜಾನಾಯ್ಕ್ ಎನ್. ಹಾಗೂ ಸಿಬ್ಬಂದಿಯವರೊಂದಿಗೆ ಖಾರ್ವಿಕೇರಿ ರಿಂಗ್ ರಸ್ತೆ ಕಡೆಯಿಂದ ಬರುತ್ತಿದ್ದ ರಿಕ್ಷಾವನ್ನು ತಡೆದು ನಿಲ್ಲಿಸಿ ಪರಿಶೀಲಿಸಿದರು. ಆಗ ರಿಕ್ಷಾದಲ್ಲಿ 8 ಪಾಲೀಥಿನ್ ಚೀಲದಲ್ಲಿ ಉಚಿತ ಅನ್ನಭಾಗ್ಯ ಅಕ್ಕಿಯನ್ನು ತುಂಬಿಸಿ ಸಾಗಿಸುತ್ತಿರು ವುದು ಕಂಡು ಬಂದಿದೆ. ರಿಕ್ಷಾ ಚಾಲಕ ಕೃಷ್ಣ ಖಾರ್ವಿ ಹಾಗೂ ಒಟ್ಟು 300 ಕೆ.ಜಿ ತೂಕದ ಅಂದಾಜು 7200ರೂ. ಮೌಲ್ಯದ ಅಕ್ಕಿಯನ್ನು ವಶಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
IND Vs PAK: ಪಾಕಿಸ್ತಾನ ಬೌಲರ್ಗಳ ಚಳಿ ಬಿಡಿಸಿದ ಇಶಾನ್ ಕಿಶಾನ್: 176 ರನ್ಗಳ ಟಾರ್ಗೆಟ್ ನೀಡಿದ ಟೀಂ ಇಂಡಿಯಾ
India Vs Pakistan: ಕೊಲೊಂಬೊದಾ ಆರ್.ಪ್ರೇಮದಾಸ ಕ್ರೀಡಾಂಗಣದಲ್ಲಿ ಟಿ20 ವಿಶ್ವಕಪ್ 2026ರ ಎ ಗುಂಪಿನ ಹೈ ವೋಲ್ಟೇಜ್ ಪಂದ್ಯದಲ್ಲಿ ಪಾಕಿಸ್ತಾನ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಅದರಂತೆಯೇ ಮೊದಲು ಬ್ಯಾಟ್ ಬೀಸಿದ ಭಾರತ ತಂಡವು ಪಾಕಿಸ್ತಾನಕ್ಕೆ 176 ರನ್ಗಳ ಗುರಿ ನೀಡಿದೆ. ಟಾಸ್ ಸೋತು ಮೊದಲು ಬ್ಯಾಟ್ ಬೀಸಿದ ಟೀಂ ಇಂಡಿಯಾ ನಿಗದಿತ 20 ಓವರ್ಗಳಲ್ಲಿ
ಹೊಸದಿಲ್ಲಿ,ಫೆ.15: ರಿಲಯನ್ಸ್ ಗ್ರೂಪ್ ಅಧ್ಯಕ್ಷ ಅನಿಲ್ ಅಂಬಾನಿ ಮತ್ತು ಅಮೆರಿಕದ ಲೈಂಗಿಕ ಅಪರಾಧಿ ಜೆಫ್ರಿ ಎಪ್ಸ್ಟೀನ್ ನಡುವಿನ ಸಂಹನಗಳಲ್ಲಿ ವ್ಯವಹಾರಕ್ಕೆ ಹಣಕಾಸು ಒದಗಿಸುವುದು ಹೇಗೆ ಎನ್ನುವುದರಿಂದ ಹಿಡಿದು ರಕ್ಷಣಾ ವಲಯದಲ್ಲಿ ವ್ಯಾಪಾರದವರೆಗೆ ಹಲವಾರು ವಿಷಯಗಳ ಕುರಿತು ಇಬ್ಬರೂ ಚರ್ಚಿಸಿದ್ದರು ಎನ್ನುವುದನ್ನು ಅಮೆರಿಕದ ನ್ಯಾಯ ಇಲಾಖೆಯು (ಡಿಒಜೆ) ಬಿಡುಗಡೆಗೊಳಿಸಿರುವ ಎಪ್ಸ್ಟೀನ್ ಕಡತಗಳು ತೋರಿಸಿವೆ. ಡಿಒಜೆಯ ಎಪ್ಸ್ಟೀನ್ ಫೈಲ್ಸ್ ವೆಬ್ಸೈಟ್ನಲ್ಲಿ ಅನಿಲ್ ಅಂಬಾನಿ ಹೆಸರು 87 ಸಲ ಉಲ್ಲೇಖಿಸಲ್ಪಟ್ಟಿದೆ. 2019ರ ಎ.20ರಂದು ಎಪ್ಸ್ಟೀನ್ ಜೊತೆ ಮೆಸೇಜ್ ಚಾಟ್ನಲ್ಲಿ ಅಂಬಾನಿ, ಕಾರ್ಪೊರೇಟ್ ಮಟ್ಟದಲ್ಲಿ ಸಾಲದ ವ್ಯವಸ್ಥೆ ಮಾಡಲು ನೀವು ಹೇಗೆ ನೆರವಾಗಬಹುದು ಎಂದು ಪ್ರಶ್ನಿಸಿದ್ದರು. ಇದು ಮತ್ತು ಎಪ್ಸ್ಟೀನ್ ಹಾಗೂ ಅಂಬಾನಿ ನಡುವಿನ ಇತರ ಹಲವಾರು ಚಾಟ್ಗಳು ಅವರಿಬ್ಬರೂ ಎಪ್ಸ್ಟೀನ್ನ ಐಷಾರಾಮಿ ನಿವಾಸದಲ್ಲಿ ಭೇಟಿಯಾಗಿದ್ದರು. ಜೊತೆಯಾಗಿ ಭೋಜನ ಮಾಡಿದ್ದರು ಮತ್ತು ವ್ಯವಹಾರದ ಬಗ್ಗೆ ಚರ್ಚಿಸಿದ್ದರು ಎನ್ನುವುದನ್ನು ತೋರಿಸಿವೆ. ಒಂದು ಸಂದರ್ಭದಲ್ಲಿ ತನ್ನ ವರ್ಚಸ್ಸಿಗೆ ಕುಂದುಂಟಾಗಿರುವುದನ್ನು ಎಪ್ಸ್ಟೀನ್ ಅಂಬಾನಿಗೆ ತಿಳಿಸಿದ್ದ. ಆದರೂ ‘ಹಣಕಾಸು ನೆರವು ಒದಗಿಸಬಲ್ಲ ಹಲವರು ನನ್ನ ಸಂಪರ್ಕದಲ್ಲಿದ್ದಾರೆ. ಅದು ನಿಮಗೆ ಖುಷಿ ನೀಡಲಿದೆ. ಗೂಗಲ್ನಲ್ಲಿ ನನ್ನ ಕುರಿತು ಹುಡುಕಾಟದಿಂದ ನಿಮಗೆ ಚಿಂತೆಯಾಗಿದ್ದರೆ, ನನ್ನ ಸಂಪರ್ಕದಲ್ಲಿರುವ ಸಚಿವರ ದೊಡ್ಡ ದಂಡು ಅದನ್ನು ನಿವಾರಿಸುತ್ತದೆ’ ಎಂದೂ ಆತ ಹೇಳಿಕೊಂಡಿದ್ದ. ಫೆ.2017 ಮತ್ತು ಮೇ 2019ರ ನಡುವಿನ ಸರಣಿ ವಿನಿಮಯಗಳ ವಿಶ್ಲೇಷಣೆಯು ಈ ವಿವರಗಳನ್ನು ಬಹಿರಂಗಗೊಳಿಸಿದೆ ಎಂದು ಸುದ್ದಿಸಂಸ್ಥೆಯು ವರದಿ ಮಾಡಿದೆ. ಡಿಒಜೆ ಬಿಡುಗಡೆ ಮಾಡಿರುವ ದಾಖಲೆಗಳ ಪ್ರಕಾರ ಅಂಬಾನಿ ಜೊತೆ ಸಂಬಂಧವನ್ನು ಬೆಸೆಯಲು ಎಪ್ಸ್ಟೀನ್ ಬಹಳಷ್ಟು ಸಮಯವನ್ನು ಕಳೆದಿದ್ದ. ಎಪ್ಸ್ಟೀನ್ ವಿರುದ್ಧ ಅಮೆರಿಕವು ಲೈಂಗಿಕ ಅಪರಾಧದ ಆರೋಪವನ್ನು ಹೊರಿಸುವ ಕೆಲವೇ ತಿಂಗಳುಗಳ ಮುನ್ನ ಅವರಿಬ್ಬರೂ ನಿಕಟ ಸಂಪರ್ಕದಲ್ಲಿದ್ದರು. ಭೇಟಿಯ ಸಮಯದಲ್ಲಿ ನಿಮ್ಮ ಖುಷಿಗಾಗಿ ಎತ್ತರದ ಹೊಂಬಣ್ಣದ ಸ್ವೀಡಿಷ್ ಮಹಿಳೆಯನ್ನು ತಾನು ವ್ಯವಸ್ಥೆ ಮಾಡುವುದಾಗಿ ಚಾಟ್ವೊಂದರಲ್ಲಿ ಎಪ್ಸ್ಟೀನ್ ಸೂಚಿಸಿದಾಗ ಅಂಬಾನಿ ಅದಕ್ಕೆ ಒಪ್ಪಿಕೊಂಡಿದ್ದರು ಎನ್ನುವುದನ್ನು ಇಬ್ಬರ ನಡುವಿನ ಸಂವಹನಗಳು ತೋರಿಸಿವೆ. ಎಪ್ಸ್ಟೀನ್ ಕಡತಗಳಲ್ಲಿ ಅಂಬಾನಿ ಹೆಸರು ಪ್ರಮುಖವಾಗಿ ಕಾಣಿಸಿಕೊಂಡಿದ್ದರೂ ಅವರೇಕೆ ಇನ್ನೂ ಜೈಲು ಸೇರಿಲ್ಲ ಎಂದು ಪ್ರತಿಪಕ್ಷ ಕಾಂಗ್ರೆಸ್ ಪ್ರಶ್ನಿಸಿದೆ. ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿಯವರೂ ಎಪ್ಸ್ಟೀನ್ ಜೊತೆ ಸಂಪರ್ಕಕ್ಕಾಗಿ ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ವಿರುದ್ಧ ದಾಳಿಯನ್ನು ನಡೆಸಿದ್ದು, ಸಚಿವರು ತನ್ನ ವಿರುದ್ಧದ ಎಲ್ಲ ಆರೋಪಗಳನ್ನು ನಿರಾಕರಿಸಿದ್ದಾರೆ. ಎಪ್ಸ್ಟೀನ್ 2019ರಲ್ಲಿ ಜೈಲಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ. ಇತರ ದೇಶಗಳು ಎಪ್ಸ್ಟೀನ್ ಕಡತಗಳಲ್ಲಿ ಹೆಸರು ಕಾಣಿಸಿಕೊಂಡಿರುವ ನಾಯಕರ ಕುರಿತು ಈಗಾಗಲೇ ಪರಿಶೀಲನೆಯನ್ನು ಆರಂಭಿಸಿವೆ. ಉದಾಹರಣೆಗೆ ಫ್ರಾನ್ಸ್ ಕಡತಗಳ ವಿಶ್ಲೇಷಣೆಗಾಗಿ ಮ್ಯಾಜಿಸ್ಟ್ರೇಟ್ಗಳ ವಿಶೇಷ ತಂಡವನ್ನು ರಚಿಸಿದೆ. ಎಪ್ಸ್ಟೀನ್ ಜೊತೆ ಸಂಪರ್ಕದಲ್ಲಿದ್ದ ಫ್ರೆಂಚ್ ಮಾಡೆಲಿಂಗ್ ಏಜೆನ್ಸಿಯ ಅಧಿಕಾರಿ ಲುಕ್ ಬ್ರುನೆಲ್ ಅಪ್ರಾಪ್ತ ವಯಸ್ಕರ ಮೇಲೆ ಅತ್ಯಾಚಾರ ನಡೆಸಿದ್ದಕ್ಕಾಗಿ ಶಿಕ್ಷೆಗೆ ಗುರಿಯಾಗಿದ್ದು,2022ರಲ್ಲಿ ಪ್ಯಾರಿಸ್ ಜೈಲಿನಲ್ಲಿಯ ತನ್ನ ಕೋಣೆಯಲ್ಲಿ ಶವವಾಗಿ ಪತ್ತೆಯಾಗಿದ್ದ.
ಕೆಎಲ್ ರಾಹುಲ್ ಮತ್ತು ದೇವದತ್ ಪಡಿಕ್ಕಲ್ ಅವರ ಅಮೋಘ ಶತಕಗಳ ನೆರವಿನಿಂದ ಉತ್ತರಾಖಂಡ ಬೌಲಿಂಗ್ ಅನ್ನು ಧೂಳೀಪಟ ಮಾಡಿರುವ ಕರ್ನಾಟಕ ತಂಡ ಬೃಹತ್ ಮೊತ್ತದತ್ತ ಕಣ್ಣಿಟ್ಟಿದೆ. ಇವರಿಬ್ಬರು 2ನೇ ವಿಕೆಟ್ ಗೆ 278 ರನ್ ಗಳ ಜೊತೆಯಾಟವಾಡಿದ್ದರಿಂದ ಕರ್ನಾಟಕ ತಂಡ ರಣಜಿ ಸೆಮಿಫೈನಲ್ ಪಂದ್ಯದ ಮೊದಲ ದಿನಾಂತ್ಯಕ್ಕೆ 2 ವಿಕೆಟ್ ಕಳೆದುಕೊಂಡು 355 ರನ್ ಕಲೆ ಹಾಕಿದೆ. ಲಖನೌನ ಅಟಲ್ ಬಿಹಾರಿ ವಾಜಪೇಯಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದ ಉತ್ತರಾಖಂಡ ತಂಡದ ನಾಯಕ ಕುಮಾರ್ ಚಾಂಡೇಲಾ ಅವರು ಕರ್ನಾಟಕ ತಂಡವನ್ನು ಬ್ಯಾಟಿಂಗ್ ಗೆ ಆಹ್ನಾನಿಸಿದರು. ಉತ್ತರಾಖಂಡದ ಯೋಚನೆ ಪ್ರಾರಂಭದಲ್ಲಿ ಯಶಸ್ವಿಯಾಯಿತು. 9ನೇ ಓವರ್ ನ ಕೊನೇ ಎಸೆತದಲ್ಲಿ ಎಚ್ಚರಿಕೆಯಿಂದ ಆಡುತ್ತಿದ್ದ ಅವರ ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು. ಆದರೆ ಆ ಮೇಲೆ ನಡೆದದ್ದೇ ಬೇರೆ. ಕೆಎಲ್ ರಾಹುಲ್- ಪಡಿಕ್ಕಲ್ ಜೊತೆಯಾಟ ನಾಯಕ ದೇವದತ್ ಪಡಿಕ್ಕಲ್ ಅವರನ್ನು ಸೇರಿಕೊಂಡ ಕೆಎಲ್ ರಾಹುಲ್ ಅವರು ಉತ್ತರಾಖಂಡ ಬೌಲಿಂಗ್ ಅನ್ನು ಧ್ವಂಸ ಮಾಡಿದರು. 86 ಎಸೆತದಲ್ಲಿ ಅರ್ಧಶತಕ ಪೂರೈಸಿದ ಕೆಎಲ್ ರಾಹುಲ್ ಅವರು ಕೇವಲ 150 ಎಸೆತದಲ್ಲಿ ಶತಕ ಬಾರಿಸಿದರು. ಇನ್ನು ದೇವದತ್ ಪಡಿಕ್ಕಲ್ ಅವರಂತೂ ಇನ್ನೂ ವೇಗವಾಗಿ ಬ್ಯಾಟಿಂಗ್ ಮಾಡಿದರು. ಕೇವಲ 65 ಎಸೆತಗಳಲ್ಲಿ ಅರ್ಧಶತಕ ಗಳಿಸಿದ ಅವರು 144 ಎಸೆತಗಳಲ್ಲಿ ಶತಕ ಪೂರೈಸಿದರು. ಅವರು ಸೆಮಿಫೈನಲ್ಲೂ ಶತಕ ಬಾರಿಸಿ ಮಿಂಚಿದರು. ಉತ್ತಮವಾಗಿ ಆಡುತ್ತಿದ್ದ ಅವರು75ನೇ ಓವರ್ ನಲ್ಲಿ ತಂಡದ ಮೊತ್ತ 296 ಆಗಿದ್ದಾಗೆ ಆದಿತ್ಯ ರಾವತ್ ಬೌಲಿಂಗ್ ನಲ್ಲಿ ಕ್ವಾಟ್ ಆ್ಯಂಡ್ ಬೌಲ್ಡ್ ಆದರು. 211 ಎಸೆತಗಳನ್ನು ಎದುರಿಸಿದ ಅವರು 11 ಬೌಂಡರಿ ಮತ್ತು 5 ಸಿಕ್ಸರ್ ಗಳಿದ್ದ 141 ರನ್ ಗಳಿಸಿದರು. ಇದಾದ ಬಳಿಕ ದೇವದತ್ ಪಡಿಕ್ಕಲ್ ಅವರು ಕರುಣ್ ನಾಯರ್(65 ಎಸೆತದಲ್ಲಿ 37) ಅವರೊಂದಿಗೆ ಸೇರಿ ತಂಡದ ಇನ್ನಿಂಗ್ಸ್ ಕಟ್ಟಿದರು. ಇವರಿಬ್ಬರು ಮುರಿಯದ 3ನೇ ವಿಕೆಟ್ ಗೆ 59 ರನ್ ಗಳ ಜೊತೆಯಾಟವಾಡಿದ್ದು ಸೋಮವಾರಕ್ಕೆ ಕ್ರೀಸ್ ಕಾಯ್ದುಕೊಂಡಿದ್ದಾರೆ. 236 ಎಸೆತಗಳನ್ನು ಎದುರಿಸಿರುವ ಅವರು 16 ಬೌಂಡರಿ ಮತ್ತು 2 ಸಿಕ್ಸರ್ ಗಳನ್ನು ಸಿಡಿಸಿದರು. ಅವರು ಭರ್ಜರಿ ಫಾರ್ಮ್ ನಲ್ಲಿರುವುದು ಶುಭಸುದ್ದಿಯಾಗಿದೆ. ಭಾರತ ತಂಡದಲ್ಲಿ ಕಳೆದೆರಡು ವರ್ಷದಿಂದ ಬಹಳ ತಲೆನೋವಿನ ವಿಚಾರ ಆಗಿರುವ 3ನೇ ಕ್ರಮಾಂಕಕ್ಕೆ ಅವರು ಬಹಳ ಚೆನ್ನಾಗಿ ಹೊಂದಿಕೊಳ್ಳುತ್ತಾರೆ. ಹೀಗಾಗಿ ಅವರು ಬಿಸಿಸಿ ಆಯ್ಕೆ ಮಂಡಳಿ ಕದ ತಟ್ಟಿದ್ದಾರೆ. ಸಂಕ್ಷಿಪ್ತ ಸ್ಕೋರ್ ಕರ್ನಾಟಕ ಪ್ರಥಮ ಇನ್ನಿಂಗ್ಸ್ 355/2, ಕೆಎಲ್ ರಾಹುಲ್ 141, ದೇವದತ್ ಪಡಿಕ್ಕಲ್ ಅಜೇಯ 148, ಕರುಣ್ ನಾಯರ್ ನಾಟೌಟ್ 37, ಆದಿತ್ಯ ರಾವತ್ 73ಕ್ಕೆ 2.
6 ಕೋಟಿ ರೂ. ವೆಚ್ಚದಲ್ಲಿ 9 ಆಯುಷ್ಮಾನ್ ಭಾರತ್ ಕಟ್ಟಡ ಮಂಜೂರು: ಸಂಸದ ಕೋಟ
ಕಾರ್ಕಳ, ಫೆ.15: ಕೇಂದ್ರ ಸರಕಾರದ ಹಣಕಾಸು ನೆರವಿನ ಮೂಲಕ ಆಯುಷ್ಮಾನ್ ಭಾರತ್ ಯೋಜನೆಯಡಿ ತಲಾ 65 ಲಕ್ಷ ರೂ. ವೆಚ್ಚದಲ್ಲಿ 9 ಆಯುಷ್ಮಾನ್ ಆರೋಗ್ಯ ಘಟಕಗಳು ಮಂಜೂರಾಗಿವೆ. ಇದರಿಂದ ಕಾರ್ಕಳ ಕ್ಷೇತ್ರಕ್ಕೆ ಸುಮಾರು 6 ಕೋಟಿ ರೂ. ಅನುದಾನ ಬಿಡುಗಡೆಯಾಗಲಿದೆ ಎಂದು ಉಡುಪಿ ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ. ಕಾರ್ಕಳ ತಾಲೂಕಿನ ಕಡ್ತಲ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನೂತನ ಆಯುಷ್ಮಾನ್ ಕಟ್ಟಡಕ್ಕೆ ಶಿಲಾನ್ಯಾಸ ಮಾಡಿ ಜನಪ್ರತಿನಿಧಿಗಳ ಮತ್ತು ಸಾರ್ವಜನಿಕರನ್ನುದ್ದೇಶಿಸಿ ಅವರು ಮಾತನಾಡುತಿದ್ದರು. ಕೇಂದ್ರ ಸರಕಾರದ ಹಲವಾರು ಯೋಜನೆಗಳು ಜನಸಾಮಾನ್ಯರಿಗೆ ತಲುಪಿಸಬೇಕಾದ ಹೊಣೆ ಜನಪ್ರತಿನಿಧಿ ಗಳಾದ ನಮ್ಮೆಲ್ಲರ ಕರ್ತವ್ಯ ವಾಗಲಿದ್ದು, ದುರಾದೃಷ್ಟಕ್ಕೆ 70 ವರ್ಷ ಮೇಲ್ಪಟ್ಟ ಹಿರಿಯರಿಗೆ ಕೇಂದ್ರ ಸರಕಾರದ ನೆರವಿನ ಆಯುಷ್ಮಾನ್ ಭಾರತ್ ಯೋಜನೆಯನ್ನು ರಾಜ್ಯ ಸರಕಾರ ಇನ್ನೂ ಪ್ರಾರಂಭಿಸಿಲ್ಲ. ಕೇಂದ್ರ ಸರಕಾರದ ಮಹತ್ವದ ಯೋಜನೆ ಯಾದ 1 ಕುಟುಂಬಕ್ಕೆ 5 ಲಕ್ಷ ರೂ. ಆರ್ಥಿಕ ಅರೋಗ್ಯ ನೆರವಿನ ಯೋಜನೆ ಪ್ರತಿಷ್ಠಿತ ಆಸ್ಪತ್ರೆಗಳಲ್ಲಿ ಬೆಡ್ಡಿಲ್ಲ ಎಂಬ ಕಾರಣಕ್ಕೆ ರೋಗಿಯನ್ನು ವಾಪಾಸ್ ಕಳುಹಿಸುತ್ತಿವೆ. ಕೇಂದ್ರದ ಶಸ್ತ್ರಚಿಕಿತ್ಸಾ ದರ ರಾಜ್ಯ ಸರಕಾರ ನೀಡುತ್ತಿಲ್ಲ ಎಂದು ಖಾಸಗಿ ಆಸ್ಪತ್ರೆ ವಲಯ ದೂರುತ್ತಿವೆ. ಆ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳಿಗೆ ಪತ್ರ ಬರೆದು ಆಯುಷ್ಮಾನ್ ಭಾರತ್ ನಂತಹ ಬಡವರ ಪರ ಯೋಜನೆಗಳು ಅನುಷ್ಠಾನ ಮಾಡಲು ಅಗ್ರಹಿಸಿದ್ದೇನೆ ಎಂದರು. ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಕಾರ್ಕಳ ಶಾಸಕ ಸುನೀಲ್ ಕುಮಾರ್, ಆಯುಷ್ಮಾನ್ ಭಾರತ್ ಯೋಜನೆಯ ಮೂಲಕ ಕಾರ್ಕಳ ಕ್ಷೇತ್ರಕ್ಕೆ ಮಂಜೂರಾಗಿರುವ ಆರೋಗ್ಯ ಘಟಕಗಳನ್ನು ಕ್ಲಪ್ತ ಸಮಯದಲ್ಲಿ ಮುಗಿಸಬೇಕು ಎಂದು ಇಲಾಖಾಧಿಕಾರಿಗಳಿಗೆ ಸಲಹೆ ನೀಡಿದರು. ಸಭೆಯಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರ ಸಹಿತ ಅನೇಕ ಮುಖಂಡರು ಉಪಸ್ಥಿತರಿದ್ದರು.
ಹೊಸದಿಲ್ಲಿ,ಫೆ.15: ಕೃಷಿ ಉತ್ಪನ್ನಗಳ ಆಮದಿಗೆ ಅವಕಾಶ ಕಲ್ಪಿಸಿರುವ ಭಾರತ-ಅಮೆರಿಕ ವ್ಯಾಪಾರ ಒಪ್ಪಂದದ ಕುರಿತು ಸರಕಾರದ ನಿರೂಪಣೆ ಹಾಗೂ ಭಾರತವು ಪಾಕಿಸ್ತಾನ ಮತ್ತು ಬಾಂಗ್ಲಾದೇಶದಂತಹ ನೆರೆಹೊರೆಯ ದೇಶಗಳಿಗಿಂತ ಮೇಲುಗೈ ಸಾಧಿಸಿದೆ ಎಂಬ ಹೇಳಿಕೆಗಳನ್ನು ಪ್ರಮುಖ ರೈತ ಸಂಘಟನೆ ರಾಷ್ಟ್ರೀಯ ಕಿಸಾನ್ ಮಹಾಸಂಘವು ಪ್ರಶ್ನಿಸಿದೆ. ಭಾರತವು ಅಮೆರಿಕದಿಂದ ಕೃಷಿ ಸರಕುಗಳನ್ನು ಆಮದು ಮಾಡಿಕೊಳ್ಳಲು ಒಪ್ಪಿಕೊಂಡಿದೆ ಎಂಬ ಅಮೆರಿಕ ಕೃಷಿ ಸಚಿವ ಬ್ರೂಕ್ ರಾಲಿನ್ಸ್ ಅವರ ಹೇಳಿಕೆಯನ್ನು ಉಲ್ಲೇಖಿಸಿರುವ ಆರ್ಕೆಎಂ, ಇದು ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ಅವರ ಹೇಳಿಕೆಗೆ ವಿರುದ್ಧವಾಗಿದೆ ಎಂದು ಆರೋಪಿಸಿದೆ. ನೆರೆಕರೆಯ ದೇಶಗಳಿಗೆ ಹೋಲಿಸಿದರೆ ಒಪ್ಪಂದವು ಭಾರತಕ್ಕೆ, ವಿಶೇಷವಾಗಿ ರೈತರಿಗೆ ಲಾಭದಾಯಕವಾಗಿದೆ ಎಂದು ಸಮರ್ಥಿಸಿಕೊಂಡಿರುವ ಗೋಯಲ್ ಅವರ ಹೇಳಿಕೆಗಳನ್ನು ‘ವಂಚನೆ’ ಎಂದು ಬಣ್ಣಿಸಿದ ಆರ್ಕೆಎಮ್ನ ರಾಷ್ಟ್ರೀಯ ಸಂಯೋಜಕ ಕೆ.ವಿ.ಬಿಜು ಅವರು, ಇದು ಸರಕಾರದ ಉತ್ತರದಾಯಿತ್ವದ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ ಎಂದು ಹೇಳಿದರು. ಭಾರತೀಯ ಸಂಧಾನಕಾರರು ಸಂಪೂರ್ಣ ವಿವರಗಳನ್ನು ಬಹಿರಂಗಗೊಳಿಸಿಲ್ಲ, ಏಕೆಂದರೆ ಹಾಗೆ ಮಾಡುವುದು ರಾಜಕೀಯವಾಗಿ ಮತ್ತು ಆರ್ಥಿಕವಾಗಿ ಹಾನಿಕಾರಕವಾಗಬಹುದು ಎನ್ನುವುದು ಅವರಿಗೆ ತಿಳಿದಿದೆ. ಇದು ಆತಂಕಕಾರಿ ಎಂದು ಪ್ರತಿಪಾದಿಸಿದ ಬಿಜು, ಒಪ್ಪಂದದ ಮಾತುಕತೆಗಳನ್ನು ರಹಸ್ಯವಾಗಿ ನಡೆಸಲಾಗಿತ್ತು ಎಂದು ಆರೋಪಿಸಿದರು. ಪಾಕಿಸ್ತಾನ ಮತ್ತು ಬಾಂಗ್ಲಾದೇಶಕ್ಕೆ ಶೇ.19ರಷ್ಟು ಸುಂಕವನ್ನು ವಿಧಿಸಿರುವುದರಿಂದ ಈ ಒಪ್ಪಂದದಿಂದ ಭಾರತಕ್ಕೆ ಲಾಭವಾಗಲಿದೆ ಎಂಬ ಹೇಳಿಕೆ ಕುರಿತು ಅವರು, ಅಮೆರಿಕವು ಜವಳಿ ಸೇರಿದಂತೆ ಹಲವಾರು ಉತ್ಪನ್ನಗಳಿಗೆ ಆಮದು ಸುಂಕದಿಂದ ಸಂಪೂರ್ಣ ವಿನಾಯಿತಿ ಒದಗಿಸಲು ಬಾಂಗ್ಲಾದೇಶದೊಂದಿಗೆ ಈಗಾಗಲೇ ಒಪ್ಪಂದ ಮಾಡಿಕೊಂಡಿದೆ. ಹೀಗಿರುವಾಗ ಶೇ.18ರಷ್ಟು ಸುಂಕವನ್ನೇ ಒಂದು ಸಾಧನೆಯೆಂಬಂತೆ ಬಿಂಬಿಸುತ್ತಿರುವುದು ದಾರಿ ತಪ್ಪಿಸುವಂಥದ್ದಾಗಿದೆ. ಸುಮಾರು ಶೇ.30ರಷ್ಟು ಕಡಿಮೆ ಉತ್ಪಾದನಾ ವೆಚ್ಚವನ್ನು ಹೊಂದಿರುವ ಮತ್ತು ಅಮೆರಿಕಕ್ಕೆ ರಫ್ತುಗಳ ಮೇಲೆ ಶೂನ್ಯ ಸುಂಕದ ಸೌಲಭ್ಯವನ್ನು ಹೊಂದಿರುವ ದೇಶಗಳೊಂದಿಗೆ ಭಾರತೀಯ ಉತ್ಪಾದಕರು ಹೇಗೆ ಸ್ಪರ್ಧಿಸಲು ಸಾಧ್ಯ ಎನ್ನುವುದನ್ನು ವಾಣಿಜ್ಯ ಸಚಿವರು ವಿವರಿಸಬೇಕಿತ್ತು ಎಂದು ಹೇಳಿದರು. ಭಾರತಕ್ಕೆ ಪರಮಾಪ್ತ ದೇಶ ಸ್ಥಾನಮಾನವನ್ನು ನೀಡಲಾಗಿಲ್ಲ ಅಥವಾ ಆಮದು ಸುಂಕಗಳನ್ನು ಶೇ.10ಕ್ಕೆ ಇಳಿಸಲಾಗಿಲ್ಲ. ಅಲ್ಲದೆ ವ್ಯಾಪಾರ ಸಮರಕ್ಕಿಂತ ಮೊದಲಿನ ಶೇ.5-15ರ ಸುಂಕ ದರಗಳನ್ನು ಮರುಸ್ಥಾಪಿಸಲಾಗಿಲ್ಲ. ಈ ಮೂಲಭೂತ ಅನಾನುಕೂಲತೆಯನ್ನು ಪರಿಹರಿಸದೆ ಮೇಲುಗೈ ಸಾಧಿಸಿದ್ದೇವೆ ಎಂಬ ಹೇಳಿಕೆಗಳು ಪೊಳ್ಳಾಗಿವೆ ಎಂದರು. ಸ್ವದೇಶಿ ಜಾಗರಣ ಮಂಚ್ ಮತ್ತು ಭಾರತೀಯ ಕಿಸಾನ್ ಸಂಘ ಮುಕ್ತ ವ್ಯಾಪಾರ ಒಪ್ಪಂದಗಳನ್ನು ಮತ್ತು ಜಿಎಂ(ವಂಶವಾಹಿ ಪರಿವರ್ತಿತ) ಉತ್ಪನ್ನಗಳನ್ನು ವಿರೋಧಿಸಿದ್ದವು. ಆದರೆ ವ್ಯಾಪಾರ ಒಪ್ಪಂದವನ್ನು ಸಮರ್ಥಿಸಿಕೊಳ್ಳುವ ಅವುಗಳ ಪ್ರಸ್ತುತ ಪ್ರಯತ್ನವನ್ನು ರೈತರು ಅಥವಾ ರಾಷ್ಟ್ರೀಯ ಸಾರ್ವಭೌಮತೆಯ ಬಗ್ಗೆ ಕಾಳಜಿಗಿಂತ ಅಧಿಕಾರ ಕೇಂದ್ರಿತ ರಾಜಕೀಯ ಹಿತಾಸಕ್ತಿಗಳಿಂದ ಪ್ರೇರಿತ ಮತ್ತೊಂದು ದೇಶವಿರೋಧಿ ನಿಲುವು ಎಂದು ಪರಿಗಣಿಸಬೇಕು ಎಂದು ಆರ್ಕೆಎಂ ಹೇಳಿಕೆಯಲ್ಲಿ ತಿಳಿಸಿದೆ. ಭಾರತವು ವಿಶ್ವ ವ್ಯಾಪಾರ ಸಂಘಟನೆಯಲ್ಲಿ (ಡಬ್ಲ್ಯುಟಿಒ) ಅಮೆರಿಕದ ಕೃಷಿ ಸಬ್ಸಿಡಿಗಳನ್ನು ಬಹಳ ಹಿಂದಿನಿಂದಲೂ ವಿರೋಧಿಸುತ್ತಲೇ ಬಂದಿತ್ತು ಮತ್ತು ಈಗ ಸಬ್ಸಿಡಿ ಹೊಂದಿರುವ ಕೃಷಿ ಉತ್ಪನ್ನಗಳನ್ನು ಅಮೆರಿಕದಿಂದ ಆಮದು ಮಾಡಿಕೊಳ್ಳಲು ಅವಕಾಶ ನೀಡಿರುವುದು ಈ ಸಬ್ಸಿಡಿಯನ್ನು ವಿರೋಧಿಸುವಲ್ಲಿ ಭಾರತದ ಜೊತೆ ಕೈಜೋಡಿಸಿದ್ದ ಇತರ ದೇಶಗಳಿಗೆ ವಂಚನೆ ಮಾಡಿದಂತೆ ಎಂದು ಅದು ಹೇಳಿದೆ.
ಬಂಜಾರ ಸಮುದಾಯಕ್ಕೆ ಜ್ಞಾನದ ಬೆಳಕನ್ನು ನೀಡಿದವರು ಸಂತ ಸೇವಾಲಾಲರು: ಎಂ.ಎ.ಗಫೂರ್
ಉಡುಪಿ, ಫೆ.15: ಬಂಜಾರ ಸಮುದಾಯವನ್ನು ಒಗ್ಗೂಡಿಸಿ ಶಕ್ತಿ ತುಂಬಿ ಸಮುದಾಯಕ್ಕೆ ಜ್ಞಾನದ ಬೆಳಕನ್ನು ನೀಡಿದವರು ಶ್ರೀಸಂತ ಸೇವಾಲಾಲ ಎಂದು ಕರಾವಳಿ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಎಂ.ಎ.ಗಫೂರ್ ಹೇಳಿದ್ದಾರೆ. ಉಡುಪಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕೃಷ್ಣನಗರಿ ಶ್ರೀಸಂತ ಸೇವಾ ಲಾಲ್ ಬಂಜಾರ ಸಂಘ ಉಡುಪಿ ಜಿಲ್ಲೆ ಇವುಗಳ ಸಹಯೋಗದಲ್ಲಿ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ರವಿವಾರ ನಡೆದ ಶ್ರೀಸಂತ ಸೇವಾಲಾಲ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು. ಸಂತ ಸೇವಲಾರರು ಸತ್ಯ ನಿಷ್ಠೆ ಮತ್ತು ಪ್ರಾಮಾಣಿಕತೆಗೆ ಹೆಸರಾದವರು. ವಚನ, ಉಪದೇಶಗಳ ಮೂಲಕ ಸಮಾಜದಲ್ಲಿನ ಮೂಢ ನಂಬಿಕೆಗಳನ್ನು ಹೋಗಲಾಡಿಸಿ ಸಮಾಜ ಸುಧಾರಣೆಗಾಗಿ ಅನೇಕ ರೀತಿಯಲ್ಲಿ ಕೊಡುಗೆ ಗಳನ್ನು ನೀಡಿದರು. ವ್ಯಸನ ಮುಕ್ತ ಸಮಾಜವನ್ನು ನಿರ್ಮಾಣ ಮಾಡಲು ಮುಂದಾದ ಮಹಾನ್ ವ್ಯಕ್ತಿ ಅವರು ಎಂದರು. ಅಧ್ಯಕ್ಷತೆಯನ್ನು ವಹಿಸಿದ್ದ ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ ಮಾತನಾಡಿ, ಭಕ್ತಿಪಂಥ ಕಾಲದಲ್ಲಿ ಸಮಾಜದ ವ್ಯವಸ್ಥೆ ತಿದ್ದಲು, ಶ್ರಮಿಸಿದ ಸಂತ ಶ್ರೀಸೇವಾಲಾಲರು ಬುಡಕಟ್ಟಿನ ಜನರಲ್ಲಿ ಧೈರ್ಯ ಮತ್ತು ಆತ್ಮಸ್ಥೈರ್ಯ ಮೂಡಿ ಸಿದ ಮಹಾನ್ ದಾರ್ಶನಿಕ. ಅವರ ಮಾರ್ಗದರ್ಶನ ದಂತೆ ಇಂದಿನ ಪೀಳಿಗೆ ಉತ್ತಮ ಶಿಕ್ಷಣವನ್ನು ಪಡೆದು ಸಮಾಜದ ಏಳಿಗೆಗಾಗಿ ಶ್ರಮಿಸುವಂತಾಗಬೇಕು ಎಂದು ತಿಳಿಸಿದರು. ಕಳತ್ತೂರು ಪಿ.ಕೆ.ಎಸ್. ಪ್ರೌಢಶಾಲೆಯ ಸಹಶಿಕ್ಷಕ ಸಂತೋಷ್ ಅ ರಾಠೋಡ ಶ್ರೀಸಂತ ಸೇವಾಲಾಲರ ಕುರಿತು ವಿಶೇಷ ಉಪನ್ಯಾಸ ನೀಡಿ ದರು. ಈ ಸಂದರ್ಭದಲ್ಲಿ ಎಸೆಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದ ಸಮುದಾಯದ ಅಂಜಲಿ ಅವರನ್ನು ಗೌರವಿಸಲಾಯಿತು. ಉಡುಪಿ ಜಿಲ್ಲಾ ಕೃಷ್ಣನಗರಿ ಶ್ರೀಸಂತ ಸೇವಾಲಾಲ ಬಂಜಾರ ಸಂಘದ ಅಧ್ಯಕ್ಷ ಕುಮಾರ್ ಕೆ.ಎಂ., ಪದಾಧಿಕಾರಿ ಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಪ್ರಾಸ್ತವಿಕವಾಗಿ ಮಾತನಾಡಿ ಸ್ವಾಗತಿಸಿದರು. ವರ್ಷಾ ಬಿ. ಕೋಟ್ಯಾನ್ ಕಾರ್ಯಕ್ರಮ ನಿರೂಪಿಸಿದರು. ಕೃಷ್ಣನಗರಿ ಶ್ರೀಸಂತ ಸೇವಾ ಲಾಲ ಬಂಜಾರ ಸಂಘದ ಪ್ರಧಾನ ಕಾರ್ಯದರ್ಶಿ ಮನೋಹರ್ ಲಮಾಣಿ ವಂದಿಸಿದರು.
ಸಿಎಂ, ಡಿಸಿಎಂ ಭೇಟಿ ಮಾಡಿದ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ
ಬೆಂಗಳೂರು : ಮಾಜಿ ಮುಖ್ಯಮಂತ್ರಿ ಹಾಗೂ ಹಾವೇರಿ ಲೋಕಸಭಾ ಕ್ಷೇತ್ರದ ಸಂಸದ ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಿ, ಸಮಾಲೋಚನೆ ನಡೆಸಿದ್ದಾರೆ. ರವಿವಾರ ಉಭಯ ನಾಯಕರನ್ನು ಪ್ರತ್ಯೇಕವಾಗಿ ಭೇಟಿ ಮಾಡಿದ ಬಸವರಾಜ ಬೊಮ್ಮಾಯಿ, ತಮ್ಮ ಪುತ್ರಿಯ ವಿವಾಹ ನಿಶ್ಚಿತಾರ್ಥದ ಸಮಾರಂಭಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಆಹ್ವಾನಿಸಿದರು ಎಂದು ಗೊತ್ತಾಗಿದೆ.
ಮಲ್ನಾಡ್ ಮೆಹಬೂಬ್ ಅವರ ʼಮೂಲನಿವಾಸಿ ಮುಕ್ತ ಭಾರತ...?ʼ ಪುಸ್ತಕ ಬಿಡುಗಡೆ
ಹಾಸನ : ʼಮೂಲನಿವಾಸಿ ಮುಕ್ತ ಭಾರತ...?ʼ ಕೃತಿಯು ಇತಿಹಾಸ, ಸಂಸ್ಕೃತಿ ಮತ್ತು ಸಾಮಾಜಿಕ ಚರ್ಚೆಗಳ ನಡುವೆ ಉದ್ಭವಿಸಿರುವ ಗೊಂದಲಗಳನ್ನು ತಾರ್ಕಿಕವಾಗಿ ವಿಶ್ಲೇಷಿಸುವ ಪ್ರಯತ್ನ ಎಂದು ಸರಕಾರಿ ಕಲಾ ಮತ್ತು ವಾಣಿಜ್ಯ ಸ್ನಾತಕೋತ್ತರ ಕಾಲೇಜಿನ ಪ್ರಾಂಶುಪಾಲ ಬಿ.ಎಂ.ಇರ್ಷಾದ್ ಅಭಿಪ್ರಾಯಪಟ್ಟರು. ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಭವನದಲ್ಲಿ ಮಲ್ನಾಡ್ ಮೆಹಬೂಬ್ ಅವರು ರಚಿಸಿದ ʼಮೂಲನಿವಾಸಿ ಮುಕ್ತ ಭಾರತ...?ʼ ಪುಸ್ತಕ ಬಿಡುಗಡೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಭಾರತೀಯ ಇತಿಹಾಸವನ್ನು ಏಕಪಕ್ಷೀಯವಾಗಿ ಅರ್ಥೈಸುವ ಪ್ರವೃತ್ತಿಗೆ ಪ್ರಶ್ನೆ ಎತ್ತುವ ಈ ಕೃತಿ, ‘ಮೂಲ ನಿವಾಸಿ’ ಎಂಬ ಪರಿಕಲ್ಪನೆಯನ್ನು ಭಾವನಾತ್ಮಕ ಘೋಷಣೆಯ ಮಟ್ಟಕ್ಕೆ ಇಳಿಸದೆ, ಅದರ ಹಿಂದೆ ಇರುವ ಇತಿಹಾಸಾತ್ಮಕ ಹಾಗೂ ರಾಜಕೀಯ ವಾದಗಳನ್ನು ವಿಶ್ಲೇಷಣಾತ್ಮಕವಾಗಿ ಪರಿಶೀಲಿಸಿದೆ ಎಂದು ಅವರು ಹೇಳಿದರು. ವಿಭಜನಾ ಮನೋಭಾವದ ಬದಲಿಗೆ ಸಂವಾದ ಮತ್ತು ಅಧ್ಯಯನದ ದಾರಿಯನ್ನು ತೋರಿಸುವ ಗುಣ ಈ ಕೃತಿಗೆ ವಿಶೇಷತೆ ತಂದಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಈ ದೇಶದ ನಿರ್ಮಾಣ ಒಂದೇ ಸಂಸ್ಕೃತಿಯ ಫಲವಲ್ಲ, ಹಲವು ಸಂಸ್ಕೃತಿಗಳ ಸಂಯೋಜನೆಯ ಫಲವೆಂಬ ದೃಷ್ಟಿಕೋನವನ್ನು ಲೇಖಕರು ಪ್ರತಿಪಾದಿಸಿದ್ದಾರೆ. ಓದುಗರಲ್ಲಿ ವಿಮರ್ಶಾತ್ಮಕ ಮನೋಭಾವ ಬೆಳೆಸುವ ಸಾಮರ್ಥ್ಯ ಹೊಂದಿದೆ ಎಂದು ಅವರು ಅಭಿಪ್ರಾಯಪಟ್ಟರು. ಆಲೂರಿನ ಕನ್ನಡ ಉಪನ್ಯಾಸಕರಾದ ರೋಹಿತ್ ಅಗಸರಹಳ್ಳಿ ಪುಸ್ತಕದ ಕುರಿತು ಮಾತನಾಡಿ, ಚರಿತ್ರೆಯ ದ್ವಂದ್ವಗಳನ್ನು ನಿವಾರಿಸುವ ಒಂದು ಪ್ರಯತ್ನ ಈ ಕೃತಿಯಲ್ಲಿ ಅಡಗಿದೆ ಎಂದು ಹೇಳಿದರು. ಸಾಹಿತಿ ಹಾಗೂ ಉಪನ್ಯಾಸಕಿ ಡಾ.ಶಾಂತ ಅತ್ನಿ ಮಾತನಾಡಿ, ʼಮೂಲನಿವಾಸಿ ಮುಕ್ತ ಭಾರತ...?ʼ ಕೃತಿ ಬಹುತ್ವ, ಸೌಹಾರ್ದತೆ ಸಾರುತ್ತದೆ. ಈ ದೇಶದಲ್ಲಿ ಪರಸ್ಪರ ನಂಬಿಕೆಗಳಿಂದ ಬದುಕಬೇಕು. ಕೆಡುಕುಗಳಿಂದ ದೂರ ಇರಬೇಕು ಐಕ್ಯತೆಯೇ ನಮ್ಮ ಶಕ್ತಿ ಎಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಿಐಟಿಯು ಜಿಲ್ಲಾಧ್ಯಕ್ಷ ಧರ್ಮೇಶ್ ಮಾತನಾಡಿ, ದೇಶ ಆಳುವ ಜನರಿಗೆ ಸೌಹಾರ್ದತೆಯ ಭಾರತ ಬೇಕಾಗಿಲ್ಲ, ಅಧಿಕಾರ ಮತ್ತು ಸಂಪತ್ತು ಕ್ರೂಡೀಕರಿಸಲು ಇಲ್ಲ ಸಲ್ಲದ ವಿಷಯಗಳನ್ನು ಚಾಲನೆಗೆ ಬಿಡುತ್ತಿದ್ದಾರೆ ಎಂದರು. ಪುಸ್ತಕದ ಲೇಖಕ ಮಲ್ನಾಡ್ ಮೆಹಬೂಬ್ ಮಾತನಾಡಿ, ಕೆಲವು ವ್ಯಕ್ತಿಗಳು, ಸಂಘಟನೆಗಳು ಮುಸ್ಲಿಮರನ್ನು ಟಾರ್ಗೆಟ್ ಮಾಡಿ ದೇಶದ ಎಲ್ಲಾ ಕೆಡುಕುಗಳಿಗೆ ಮುಸ್ಲಿಮರೇ ಕಾರಣ ಎಂದು ವಾದಿಸುತ್ತಾರೆ. ಈ ಮೂಲಕ ಮುಸ್ಲಿಂ ಮುಕ್ತ ಭಾರತ ಎಂಬ ವಿಷಯವನ್ನು ಆಗಾಗ ಕೆಣಕುತ್ತಾರೆ. ಇಂತಹ ವಿಕೃತ ವಿಚಾರಧಾರೆ ಅಂತ್ಯವಾಗಬೇಕು ಎಂಬ ಉದ್ದೇಶದಿಂದ ಈ ಪುಸ್ತಕ ರಚಿಸಲಾಯಿತು ಎಂದು ಹೇಳಿದರು. ಭಾರತದಲ್ಲಿ ಮುಸ್ಲಿಮರು ಇಲ್ಲದಂತಹ ಸಂದರ್ಭ ಇತ್ತು, ಆ ಸಂದರ್ಭದಲ್ಲಿ ಎಲ್ಲವೂ ಶಾಂತಿಯಿಂದ ಇರಲಿಲ್ಲ ಎನ್ನುವುದಕ್ಕೆ ಇತಿಹಾಸ ಸಾಕ್ಷಿಯಾಗಿದೆ. ಅಂದಿನ ಪರಿಸ್ಥಿತಿಗೆ ಹೋಲಿಸಿದರೆ ಇಂದು ನಾವು ಅತ್ಯಂತ ಶಾಂತಿಯಿಂದ ಇದ್ದೇವೆ. ಇದಕ್ಕೆ ಸರ್ವ ಧರ್ಮದ ಸೌಹಾರ್ದತೆ ಕಾರಣ ಎಂದರು. ಭೀಮ ವಿಜಯ ಪತ್ರಿಕ ಸಂಪಾದಕ ನಾಗರಾಜು ಹೆತ್ತೂರ್ ಸ್ವಾಗತಿಸಿದರು. ʼನಮ್ಮ ಹಾಸನʼ ಟಿವಿ ಮುಖ್ಯಸ್ಥ ತೌಫಿಕ್ ಅಹಮದ್ ಆಶಯ ನುಡಿ ಮಾತನಾಡಿದರು. ಪ್ರಕಾಶಕ ಮಹಮ್ಮದ್ ಅಝರುದ್ದೀನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಚಾಂದಿನಿ ಕಾರ್ಯಕ್ರಮ ನಿರೂಪಿಸಿದರು.
ಬೀದರ್ | ಸೇವಾಲಾಲ್ರ ವಿಚಾರಧಾರೆಗಳು ಯುವ ಪೀಳಿಗೆಗೆ ದಿಕ್ಕು ತೋರಿಸುವ ದೀಪವಾಗಿವೆ : ಸಚಿವ ಈಶ್ವರ್ ಖಂಡ್ರೆ
ಬೀದರ್ : ಸಂತ ಸೇವಾಲಾಲ್ ಮಾಹಾರಾಜರ ವಿಚಾರಧಾರೆಗಳು ಯುವ ಪೀಳಿಗೆಗೆ ದಿಕ್ಕು ತೋರಿಸುವ ದೀಪವಾಗಿವೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ ಅವರು ಅಭಿಪ್ರಾಯ ವ್ಯಕ್ತಪಡಿಸಿದರು. ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ರವಿವಾರ ಸಂತ ಸೇವಾಲಾಲ್ ಅವರ 287ನೇ ಜಯಂತ್ಯೋತ್ಸವದ ಅಂಗವಾಗಿ ಸಂತ ಸೇವಾಲಾಲ್ ಮಹಾರಾಜ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಅವರು ಮಾತನಾಡಿದರು. ಸೇವಾಲಾಲ್ ಮಹಾರಾಜ್ ಅವರು ಅನ್ಯಾಯ ಅಂಧಶ್ರದ್ಧೆಗಳ ವಿರುದ್ಧ ಹೋರಾಡಿ ಸಮಾನತೆ, ಶಿಕ್ಷಣ ಹಾಗೂ ಆತ್ಮಗೌರವದ ಸಂದೇಶ ನೀಡಿದ್ದಾರೆ. ಅವರ ಆದರ್ಶಗಳು ಇಂದಿನ ಸಮಾಜಕ್ಕೆ ಅತ್ಯಂತ ಪ್ರಸ್ತುತವಾಗಿವೆ. ಸಂತ ಸೇವಾಲಾಲ್ ಮಹಾರಾಜರು ಮಹಾನ್ ಪವಾಡ ಪುರುಷರಾಗಿದ್ದರು. ಅವರು ಜನರ ಸಮಸ್ಯೆಗಳನ್ನು ಆಲಿಸಿಸುತ್ತಿದ್ದರು. ಮೂಡನಂಬಿಕೆ, ಕೆಟ್ಟ ಆಚರಣೆಗಳ ವಿರುದ್ಧ ಧ್ವನಿ ಎತ್ತಿ, ಜನರಿಗೆ ತಿಳಿವಳಿಕೆ ಮೂಡಿಸಿದರು ಎಂದರು. ಸಮಾಜದ ಐಕ್ಯತೆ ಮತ್ತು ಸಹಬಾಳ್ವೆಗೆ ಪ್ರೇರೆಪಿಸಿದ ಸೇವಾಲಾಲ್ ಅವರು, ಬ್ರೀಟಿಷರು ತೆರಿಗೆ ಹೆಚ್ಚಳ ಮಾಡಿದಾಗ ವೀರ ಸೇನಾನಿಯಾಗಿ ಹೋರಾಡಿದರು. ಯಾವುದೇ ಮಹಾನ್ ಪುರುಷರು ಒಂದೇ ಜಾತಿಗೆ ಸಿಮಿತವಿಲ್ಲ. ಅವರು ಮಾನವ ಕುಲಕ್ಕೆ, ಸುಧಾರಣೆಗೆ ಪ್ರಯತ್ನಿಸಿದವರಾಗಿದ್ದಾರೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ, ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ, ಎಸ್ಪಿ ಪ್ರದೀಪ್ ಗುಂಟಿ, ಸೇರಿದಂತೆ ಜಿಲ್ಲಾ ಬಂಜಾರಾ ಸಮಾಜದ ಪ್ರಮುಖರು ಉಪಸ್ಥಿತರಿದ್ದರು.
ಕೋಮುವಾದ ಪರಿಣಾಮ ‘ಕರಾವಳಿಯಲ್ಲಿ ಬಂಡವಾಳ ಹೂಡಿಕೆಗೆ ಹಿಂದೇಟು’ : ಪ್ರಿಯಾಂಕ್ ಖರ್ಗೆ
ಬೆಂಗಳೂರು : ‘ದಕ್ಷಿಣ ಕನ್ನಡ ಸೇರಿದಂತೆ ಕರಾವಳಿ ಪ್ರದೇಶದ ಜಿಲ್ಲೆಗಳಲ್ಲಿ ಕೋಮುವಾದ ಪರಿಣಾಮ ಬಂಡವಾಳ ಹೂಡಿಕೆಗೆ ಉದ್ಯಮಿಗಳು ಹಿಂದೇಟು ಹಾಕುತ್ತಿದ್ದಾರೆ’ ಎಂದು ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಇಂದಿಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ. ರವಿವಾರ ನಗರದ ಗಾಂಧಿ ಭವನ ಸಭಾಂಗಣದಲ್ಲಿ ಅಹರ್ನಿಶಿ ಪ್ರಕಾಶನ ಸಹಯೋಗದೊಂದಿಗೆ ಏರ್ಪಡಿಸಿದ್ದ ಪತ್ರಕರ್ತ ಇರ್ಷಾದ್ ಉಪ್ಪಿನಂಗಡಿ ಬರೆದಿರುವ ‘ಕರಾವಳಿಯ ರಕ್ತ-ಕಣ್ಣೀರು’(ಮತೀಯ ದ್ವೇಷದ ಬೆಂಕಿಯಲ್ಲಿ ನಲುಗಿದ ಬದುಕುಗಳು) ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ಅವರು, ರಾಜ್ಯದ ಜಿಡಿಪಿಗೆ ಬೆಂಗಳೂರು ಒಂದೇ ಶೇ.40ರಷ್ಟು ಕೊಡುಗೆ ನೀಡುತ್ತಿದ್ದರೆ, ಮಂಗಳೂರು ಶೇ.5.4ರಷ್ಟು ಕೊಡುಗೆ ನೀಡುತ್ತಿದೆ. ಆದರೆ, ಈ ಪ್ರಮಾಣ ಮತ್ತಷ್ಟು ಹೆಚ್ಚಿಸಲು ಅಲ್ಲಿನ ಕೋಮುವಾದ ಅಡ್ಡಿಯಾಗಿದೆ ಎಂದರು. ಪದೇ ಪದೇ ನಾನು ಐಟಿ-ಬಿಟಿ ಕಂಪೆನಿಗಳಿಗೆ ಕರಾವಳಿ ಭಾಗದಲ್ಲಿ ಹೂಡಿಕೆ ಮಾಡಿ ಎಂದು ಸಲಹೆ ನೀಡುತ್ತೇನೆ. ಆದರೆ, ಅವರು ಕರಾವಳಿಯಲ್ಲಿ ಹೂಡಿಕೆ ಮಾಡುವುದು ಸರಿ, ಮುಂದೆ ನಮ್ಮ ಉದ್ಯೋಗಿಗಳು ರೆಸ್ಟೋರೆಂಟ್ಗಳಿಗೆ ಹೋದಾಗ ಅವರ ಮೇಲೆ ಹಲ್ಲೆಗಳು ನಡೆದರೆ ರಕ್ಷಣೆಯನ್ನು ನೀವು ಖಚಿಪಡಿಸುತ್ತೀರಾ ಎಂಬ ಪ್ರಶ್ನೆ ಮಾಡುತ್ತಾರೆ. ಹೀಗಾಗಿ, ಕರಾವಳಿಯು ಕೋಮುಗಲಭೆ ಮುಕ್ತವಾಗಬೇಕು ಎಂದು ಅವರು ಹೇಳಿದರು. ನಿಜವಾದ ಭೂತ(ದೆವ್ವ) ಎಂದರೆ ಅದು ಆರೆಸ್ಸೆಸ್ ಮಾತ್ರವಾಗಿದೆ. ಆದರೆ, ನಾನು ಇದರ ನೆರಳು ಬಿಜೆಪಿಯೊಂದಿಗೆ ಹೋರಾಟ ಮಾಡುತ್ತಿದ್ದು, ಮುಂದೆ ಸಂವಿಧಾನದ ಅಡಿಯಲ್ಲಿಯೇ ಭೂತವಾದ ಆರೆಸ್ಸೆಸ್ ವಿರುದ್ಧ ಹೋರಾಟ ಮಾಡಬೇಕಾಗಿದೆ ಎಂದು ಪ್ರಿಯಾಂಕ್ ಖರ್ಗೆ ಅವರು ಕರೆ ನೀಡಿದರು. ಒಂದು ವೇಳೆ ಆರೆಸ್ಸೆಸ್ ಇಲ್ಲದಿದ್ದರೆ ಬಿಜೆಪಿ ಪಕ್ಷವೂ ಪ್ರಾದೇಶಿಕ ಪಕ್ಷವಾದ ಜೆಡಿಎಸ್ಗಿಂತಲೂ ಕೆಳಮಟ್ಟಕ್ಕೆ ತಲುಪಲಿದೆ. ಹೀಗಾಗಿ, ಮುಖ್ಯವಾಗಿರುವ ವಿರೋಧಿಗಳ ವಿರುದ್ಧವೇ ನಾನು ಹೋರಾಟ ಮಾಡಬೇಕಾಗಿದೆ ಎಂದ ಅವರು, ಜೆಡಿಎಸ್ ಪಕ್ಷವೂ ಜಾತ್ಯತೀತವಾಗಿ ಉಳಿದುಕೊಂಡಿಲ್ಲ. ಅವರು ತಮ್ಮ ಪಕ್ಷದಿಂದ ಜಾತ್ಯತೀತ ಪದವನ್ನು ಕೈಬಿಡಬೇಕು ಎಂದು ಪ್ರಿಯಾಂಕ್ ವಾಗ್ದಾಳಿ ನಡೆಸಿದರು. ‘ಉಡುಪಿಯ ಆದಿಮಾರು ಮಠದ ಶಾಲೆಯಲ್ಲಿ ಓದಿದವನು ನಾನು. ಆದರೆ, ಬಿಜೆಪಿಯವರು ಸುಮ್ಮನೆ ನನ್ನನ್ನು ಕಾನ್ವೆಂಟ್ ದಲಿತ ಎಂದು ಟೀಕಿಸುತ್ತಾರೆ. ನಿಜವಾಗಿಯೂ ಬಿಜೆಪಿ ಸಂಸದ ತೇಜಸ್ವಿ ಸೂರ್ಯನೆ ಕಾನ್ವೆಂಟ್ನಲ್ಲಿ ಓದಿದವರು. ಇನ್ನೊಂದೆಡೆ, ದೇಶದಲ್ಲೇ ಎಐ ಬಗ್ಗೆ ಕ್ರಾಂತಿಯನ್ನು ಮಾತನಾಡುವ ಬದಲು, ಔರಂಗಜೇಬ್ ಸಮಾಧಿ ಬಗ್ಗೆ ಚರ್ಚೆ ನಡೆಯುತ್ತಿರುವುದು ಬೇಸರದ ಸಂಗತಿ’ -ಪ್ರಿಯಾಂಕ್ ಖರ್ಗೆ, ಸಚಿವ
ದಿಲ್ಲಿ ಉದ್ಯಮಿ ಹತ್ಯೆ ಪ್ರಕರಣ| ಲಾರೆನ್ಸ್ ಬಿಷ್ಣೋಯಿ ತಂಡದ ಐವರ ಬಂಧನ
ಹೊಸದಿಲ್ಲಿ, ಫೆ. 15: ಇತ್ತೀಚೆಗೆ ಉತ್ತರ ದಿಲ್ಲಿಯ ಭಾವನಾ ಕೈಗಾರಿಕಾ ಪ್ರದೇಶದಲ್ಲಿ 35 ವರ್ಷದ ಉದ್ಯಮಿಯನ್ನು ಹತ್ಯೆಗೈದ ಪ್ರಕರಣಕ್ಕೆ ಸಂಬಂಧಿಸಿ ಲಾರೆನ್ಸ್ ಬಿಷ್ಣೋಯಿ ತಂಡದ ಐವರು ಸದಸ್ಯರನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ರವಿವಾರ ತಿಳಿಸಿದ್ದಾರೆ. ಖಚಿತ ಗುಪ್ತಚರ ಮಾಹಿತಿಯ ಹಿನ್ನೆಲೆಯಲ್ಲಿ ಕಾರ್ಯಪ್ರವೃತ್ತವಾದ ಪೊಲೀಸರು ರವಿವಾರ ಮುಂಜಾನೆ ಕೆಲವು ಶಂಕಿತರನ್ನು ಅಡ್ಡಗಟ್ಟಿದರು. ಈ ಸಂದರ್ಭ ಆರೋಪಿಗಳು ಪೊಲೀಸರ ತಂಡದ ಮೇಲೆ ಗುಂಡಿನ ದಾಳಿ ನಡೆಸಿ ಪರಾರಿಯಾಗಲು ಪ್ರಯತ್ನಿಸಿದರು. ಪೊಲೀಸರು ಪ್ರತಿ ದಾಳಿ ನಡೆಸಿದರು. ಇದರಿಂದ ಗುಂಡಿನ ಕಾಳಗ ನಡೆಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಗುಂಡಿನ ಕಾಳಗದ ಸಂದರ್ಭ ಓರ್ವ ಆರೋಪಿಯ ಕಾಲಿಗೆ ಗುಂಡಿನಿಂದ ಗಾಯವಾಯಿತು. ಆತನ್ನು ವಶಕ್ಕೆ ತೆಗೆದುಕೊಳ್ಳಲಾಯಿತು. ಗುಂಡಿನ ಕಾಳಗ ನಡೆಯುತ್ತಿರುವಂತೆ ಮೂವರನ್ನು ವಶಕ್ಕೆ ತೆಗೆದುಕೊಳ್ಳಲಾಯಿತು. ಅನಂತರ ಮತ್ತಿಬ್ಬರನ್ನು ಬಂಧಿಸಲಾಯಿತು. ಇದರೊಂದಿಗೆ ಈ ಪ್ರಕರಣಕ್ಕೆ ಸಂಬಂಧಿಸಿ ಬಂಧಿತರಾದವರ ಸಂಖ್ಯೆ 5ಕ್ಕೆ ತಲುಪಿದೆ. ಕಾರ್ಯಾಚರಣೆ ಸಂದರ್ಭ ಯಾವುದೇ ಪೊಲೀಸರಿಗೆ ಗಂಭೀರ ಗಾಯಗಳಾಗಿಲ್ಲ ಎಂದು ಹೇಳಿದ್ದಾರೆ. ಪ್ಲಾಸ್ಟಿಕ್ ಕಣಗಳ ಉತ್ಪಾದಕ ವೈಭವ್ ಗಾಂಧಿಯನ್ನು ಡಿಎಸ್ಐಡಿಸಿ ಕೈಗಾರಿಕಾ ಪ್ರದೇಶದ ಸೆಕ್ಟರ್ 4ನಲ್ಲಿರುವ ಅವರ ಕಾರ್ಖಾನೆಯ ಸಮೀಪ ಫೆಬ್ರವರಿ 9ರಂದು ಅಪರಾಹ್ನ ಸುಮಾರು 12.50ಕ್ಕೆ ಗುಂಡಿಕ್ಕಿ ಹತ್ಯೆಗೈಯಲಾಗಿತ್ತು.
ಉತ್ತರ ಪ್ರದೇಶ| ಪ್ರಧಾನಿ ವಿರುದ್ಧ ಆಕ್ಷೇಪಾರ್ಹ ಹೇಳಿಕೆಯ ವೀಡಿಯೊ ಪೋಸ್ಟ್: ಯುವಕನ ಬಂಧನ
ಲಕ್ನೋ, ಫೆ. 15: ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಆಕ್ಷೇಪಾರ್ಹ ಹೇಳಿಕೆಗಳನ್ನು ಒಳಗೊಂಡಿದೆ ಎನ್ನಲಾದ ವೀಡಿಯೊವನ್ನು ಪೋಸ್ಟ್ ಮಾಡಿರುವುದಕ್ಕಾಗಿ ಮುಝಪ್ಫರ್ ನಗರದಲ್ಲಿ 22 ವರ್ಷದ ಯುವನೋರ್ವನನ್ನು ಬಂಧಿಸಲಾಗಿದೆ ಎಂದು ಉತ್ತರಪ್ರದೇಶ ಪೊಲೀಸರು ರವಿವಾರ ತಿಳಿಸಿದ್ದಾರೆ. ಆರೋಪಿಯನ್ನು ಜಿತೇಂದ್ರ ಕುಮಾರ್ ಕಶ್ಯಪ್ ಎಂದು ಗುರುತಿಸಲಾಗಿದೆ ಎಂದು ಚಾರ್ತವಾಲ್ ಪೊಲೀಸ್ ಠಾಣೆಯ ಉಸ್ತುವಾರಿ ಅಧಿಕಾರಿ ಸತ್ಯನಾರಾಯಣ ದಹಿಯಾ ತಿಳಿಸಿದ್ದಾರೆ. ಪ್ರಧಾನಿ ಅವರ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಪ್ರಸರಣವಾದ ಬಳಿಕ ಕಶ್ಯಪ್ನನ್ನು ಶನಿವಾರ ಸಂಜೆ ಬಂಧಿಸಲಾಯಿತು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಕಶ್ಯಪ್ ಅವರ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ವಿವಿಧ ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಅವರು ಹೇಳಿದ್ದಾರೆ.
Bidar | ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ, ನಗದು ಕಳ್ಳತನ : ಪ್ರಕರಣ ದಾಖಲು
ಬೀದರ್ : ಜಿಲ್ಲೆಯ ಹುಲಸುರ್ ಪಟ್ಟಣದಲ್ಲಿ ಸುಮಾರು 2 ಲಕ್ಷ 45 ಸಾವಿರ ರೂ. ಮೌಲ್ಯದ ಚಿನ್ನಾಭರಣ ಹಾಗೂ ನಗದು ಹಣ ಕಳ್ಳತನವಾಗಿರುವ ಘಟನೆ ಬೆಳಕಿಗೆ ಬಂದಿದೆ. ಜಯಶ್ರೀ ಎಂಬವರು ನೀಡಿದ ದೂರಿನ ಪ್ರಕಾರ, ಅವರು ಮತ್ತು ಅವರ ಸೊಸೆ ಶುಕ್ರವಾರ ಮನೆಗೆ ಬೀಗ ಹಾಕಿ ಮನ್ನಾಖೇಳ್ಳಿ ಗ್ರಾಮಕ್ಕೆ ತೆರಳಿದ್ದರು. ಈ ವೇಳೆ ದುಷ್ಕರ್ಮಿಗಳು ಮನೆಯ ಬಾಗಿಲಿನ ಬೀಗ ಮುರಿದು ಒಳನುಗ್ಗಿ ಕಳ್ಳತನ ಎಸಗಿದ್ದಾರೆ. ಶನಿವಾರ ಮನೆಗೆ ಮರಳಿದಾಗ ಕಳ್ಳತನವಾಗಿರುವುದು ಗಮನಕ್ಕೆ ಬಂದಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಸುಮಾರು 1 ಲಕ್ಷ 95 ಸಾವಿರ ರೂ. ಮೌಲ್ಯದ 39 ಗ್ರಾಂ ಚಿನ್ನಾಭರಣ ಹಾಗೂ 50 ಸಾವಿರ ರೂ. ನಗದು ಹಣ ಕಳವಾಗಿರುವುದಾಗಿ ತಿಳಿಸಲಾಗಿದೆ. ಈ ಸಂಬಂಧ ಹುಲಸುರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
ಕೊಣಾಜೆ: ಜಮೀಯತುಲ್ ಫಲಾಹ್ ನಿಂದ 'ಉಲಮಾ-ಉಮರಾ ಸಂಗಮ
ಕೊಣಾಜೆ: ಮಾದಕ ವ್ಯಸನ ಎಲ್ಲಾ ರೀತಿಯ ಕೆಡುಕುಗಳ ಮೂಲ, ಜಮಾಅತ್ ಮಟ್ಟದಲ್ಲೇ ಮಾದಕ ವ್ಯಸನಿಗಳನ್ನು ಪತ್ತೆ ಹೆಚ್ಚುವ ನಿಟ್ಟಿನಲ್ಲಿ ಜಮಾಅತ್ ಸಮಿತಿಗಳು ತಳಮಟ್ಟದಲ್ಲಿ ಕೆಲಸ ಮಾಡಿದಾಗ ಸಮುದಾಯದ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು ಎಂದು ಲಿಮ್ರಾ ಎಜ್ಯು ಗ್ರೂಪ್ ಅಧ್ಯಕ್ಷ ಶೇಖ್ ಮುಹಮ್ಮದ್ ಇರ್ಫಾನಿ ಅಭಿಪ್ರಾಯಪಟ್ಟರು. ಜಮೀಯ್ಯತುಲ್ ಫಲಾಹ್ ಉಳ್ಳಾಲ ತಾಲೂಕು ಘಟಕ, ದ.ಕ. ಜಿಲ್ಲಾ ವಕ್ಸ್ ಸಲಹಾ ಸಮಿತಿ, ದ.ಕ.ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಹಾಗೂ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಸಂಯುಕ್ತ ಆಶ್ರಯದಲ್ಲಿ ಭಾನುವಾರ ಕಂಬಳಪದವು ಖಾಸಗಿ ಸಭಾಂಗಣದಲ್ಲಿ ನಡೆದ ಉಳ್ಳಾಲ ತಾಲೂಕು ಮಟ್ಟದ 'ಉಲಮಾ-ಉಮರಾ ಸಂಗಮ ಮತ್ತು ಜಮಾಅತ್ ಪ್ರತಿನಿಧಿಗಳ ಮಾಹಿತಿ' ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದರು. ವಿಧಾನ ಸಭಾಧ್ಯಕ್ಷ ಯು.ಟಿ.ಖಾದರ್ ಮಾತನಾಡಿ, ಸರ್ಕಾರದ ಯೋಜನೆಗಳು ಎಲ್ಲರಿಗೂ ಸಿಗದ ಕಾರಣ ಇದನ್ನೇ ನಂಬಿ ಕೂರುವುದು ಸರಿಯಲ್ಲ. ಸವಲತ್ತು ಪಡೆದವರು ಸದುಪಯೋಗಪಡಿಸಿಕೊಂಡು ಕುಟುಂಬದ ಆರ್ಥಿ ಸ್ಥಿತಿ ಹೆಚ್ಚಿಸಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ತಿಳಿಸಿದರು. ಜಿಲ್ಲಾ ಸ್ವಚ್ಛತಾ ರಾಯಭಾರಿ ಶೀನ ಶೆಟ್ಟಿ ಮಾತನಾಡಿ, ಪ್ಲಾಸ್ಟಿಕ್ ಬೆಂಕಿ ಪರಿಸರದಲ್ಲಿ ತ್ಯಾಜ್ಯದಿಂದಾಗಿ ವಿಶ್ವಕ್ಕೆ ಕರೊನಾಕ್ಕಿಂತ ಮಾರಕ ಕಾಯಿಲೆ ಬರಲಿದೆ. ಆಸ್ಪತ್ರೆಗಳನ್ನು ಕಡಿಮೆ ಮಾಡುವುದು ಜಾಗೃತ ಸಮಾಜದ ಲಕ್ಷಣ ಎಂದರು. ರಾಜ್ಯ ಹಜ್ ಸಮಿತಿ ಸದಸ್ಯ ಸಯ್ಯಿದ್ ಆಶ್ರಫ್ ತಂಬಳ್ ಆದೂರು ದುವಾ ನೆರವೇರಿಸಿದರು. ಜಮೀಯತುಲ್ ಫಲಾಹ್ ತಾಲೂಕು ಅಧ್ಯಕ್ಷ ಅಬ್ದುಲ್ ರಹಿಮಾನ್ ಕೋಡಿಜಾಲ್ ಅಧ್ಯಕ್ಷತೆ ವಹಿಸಿದ್ದರು. ಉದ್ಯಮಿ ಎಚ್.ಎನ್. ಹಮೀದ್, ಮೂಡದ ಮಾಜಿ ಅಧ್ಯಕ್ಷ ಇಬ್ರಾಹಿಂ ಕೋಡಿಜಾಲ್, ಉದ್ಯಮಿ ಮಹಮ್ಮದ್ ಶಾಫಿ, ಜಮೀಯತುಲ್ ಫಲಾಹ್ ಅಜೀವ ಸದಸ್ಯ ಮುಹಮ್ಮದ್ ಫಯಾಝ್ ಮಾದುಮೂಲೆ, ನಡುಪದವು ಅಲ್-ಉಮರ್ ಜುಮಾ ಮಸೀದಿಯ ಅಧ್ಯಕ್ಷ ಎನ್.ಎಸ್. ನಾಸಿರ್, ಜಮೀಯತುಲ್ ಫಲಾಹ್ ದ.ಕ. ಮತ್ತು ಉಡುಪಿ ಜಿಲ್ಲಾಧ್ಯಕ್ಷ ಅಶ್ಫಕ್ ಅಹ್ಮದ್, ವಕೀಲ ಸರ್ಫರಾಝ್ ಮುಖ್ಯ ಅತಿಥಿಗಳಾಗಿದ್ದರು. ಜನಶಿಕ್ಷಣ ಟ್ರಸ್ಟ್ ನಿರ್ದೇಶಕ ಕೃಷ್ಣ ಮೂಲ್ಯ, ದ.ಕ.ಜಿಲ್ಲಾ ವಕ್ಫ್ ಅಧಿಕಾರಿ ಅನ್ವರ್ ಮುಸ್ತಫಾ, ಅಲ್ಪಸಂಖ್ಯಾತ ಜಿಲ್ಲಾ ಕಲ್ಯಾಣಾಧಿಕಾರಿ ಜಿನೇಂದ್ರ ಕೋಟ್ಯಾನ್, ವ್ಯವಸ್ಥಾಪಕ ಯಶೋಧರ್ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದರು. ಜಮೀಯತುಲ್ ಫಲಾಹ್ ತಾಲೂಕು ಪ್ರಧಾನ ಕಾರ್ಯದರ್ಶಿ ಅಬ್ದುಲ್ ನಾಸೀರ್ ಕೆ.ಕೆ. ಸ್ವಾಗತಿಸಿದರು. ಮಾಧ್ಯಮ ಕಾರ್ಯದರ್ಶಿ ಸಿ.ಎಂ.ಶರೀಫ್ ಪಟ್ಟೋರಿ ಕಾರ್ಯಕ್ರಮ ನಿರೂಪಿಸಿದರು.
UGCET 2026: ಎಂಜಿನಿಯರಿಂಗ್ ಕೋರ್ಸ್ ಪ್ರವೇಶ ಬಯಸಿದ್ದ ಅಭ್ಯರ್ಥಿಗಳಿಗೆ ಗುಡ್ನ್ಯೂಸ್
ಬೆಂಗಳೂರು: ಎಂಜಿನಿಯರಿಂಗ್ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸ್ ಗಳ ಪ್ರವೇಶ ಬಯಸುವ ಅಭ್ಯರ್ಥಿಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (KEA) ಶುಭ ಸುದ್ದಿ ನೀಡಿದೆ. ಈ ಕೋರ್ಸ್ಗಳ ಪ್ರವೇಶಕ್ಕಾಗಿ ನಡೆಸುವ ಸಾಮಾನ್ಯ ಪ್ರವೇಶ ಪರೀಕ್ಷೆ (CET 2026) ಅರ್ಜಿ ಸಲ್ಲಿಕೆ ದಿನಾಂಕವನ್ನು ವಿಸ್ತರಣೆ ಮಾಡಲಾಗಿದೆ ಎಂದು ಪ್ರಾಧಿಕಾರ ಆಡಳಿತಾಧಿಕಾರಿ ಇಸ್ಲಾವುದ್ದೀನ್ ಗದ್ಯಾಳ ಅವರು ತಿಳಿಸಿದ್ದಾರೆ. ಎಂಜಿನಿಯರಿಂಗ್ ಹಾಗೂ ಇನ್ನಿತರ
ಕಲಬುರಗಿ | ನಾಳೆಯಿಂದ ಎರಡು ದಿನಗಳ ಕಾಲ ನುಡಿ ಜಾತ್ರೆ
ಅಕ್ಷರ ಜಾತ್ರೆಗೆ ಸಜ್ಜುಗೊಂಡ ಕನ್ನಡ ಭವನ
ಅಖಿಲ ಭಾರತ ಚರ್ಚೆ, ಭಾಷಣ ಸ್ಪರ್ಧೆಯಲ್ಲಿ ವೃಂದಾ ಕೊನ್ನಾರ್ಗೆ ಪ್ರಶಸ್ತಿ
ಮಂಗಳೂರು, ಫೆ.15: ಐಸಿಎಐಯ ಪ್ರೊಫೆಷನಲ್ ಸ್ಕಿಲ್ಸ್ ಎನ್ರಿಚ್ಮೆಂಟ್ ಕಮಿಟಿ ಸದಸ್ಯರಿಗಾಗಿ ಹೊಸದಿಲ್ಲಿಯಲ್ಲಿ ಆಯೋಜಿಸಿದ್ದ ರಾಷ್ಟ್ರೀಯ/ಅಖಿಲ ಭಾರತ ಚರ್ಚೆ ಹಾಗೂ ತತ್ವ ಭಾಷಣ ಸ್ಪರ್ಧೆಯಲ್ಲಿ ಮಂಗಳೂರಿನ ಸಿಎ ವೃಂದಾ ಕೊನ್ನಾರ್ ರಾಷ್ಟ್ರೀಯ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದ್ದಾರೆ. ಬೈಕಂಪಾಡಿಯ ಸುಬ್ಬ ರಾವ್ - ವಿದ್ಯಾ ದಂಪತಿಯ ಪುತ್ರಿ ಹಾಗೂಉದ್ಯಮಿ ಮುರಳಿ ನಾವಡ ಮಧೂರ್ ಪತ್ನಿಯಾಗಿ ರುವ ವೃಂದಾ ಕೊನ್ನಾರ್ ಅವರು ಮಂಗಳೂರು ಶಾಖಾ ಮಟ್ಟದ ಸ್ಪರ್ಧೆ ಹಾಗೂ ದಕ್ಷಿಣ ಭಾರತೀಯ ಪ್ರಾದೇಶಿಕ ಮಟ್ಟದ ಸ್ಪರ್ಧೆಗಳಲ್ಲಿ ಜಯ ಸಾಧಿಸುವ ಮೂಲಕ ರಾಷ್ಟ್ರೀಯ ಹಂತಕ್ಕೆ ತಲುಪಿದ್ದರು. ರಾಷ್ಟ್ರಮಟ್ಟದ ಈ ಸ್ಪರ್ಧೆಯಲ್ಲಿ ಐಸಿಎಐಯ ಪೂರ್ವ, ಪಶ್ಚಿಮ, ಉತ್ತರ, ದಕ್ಷಿಣ ಹಾಗೂ ಮಧ್ಯ ವಲಯಗಳನ್ನು ಪ್ರತಿನಿಧಿಸಿದ ಟಾಪ್ 10 ಚಾರ್ಟರ್ಡ್ ಅಕೌಂಟೆಂಟ್ ಸ್ಪರ್ಧಾರ್ಥಿಗಳು ಭಾಗವಹಿಸಿದ್ದರು.
ಅಫಜಲಪುರ | ಶಾಲೆ-ಮನೆ ಎರಡೂ ಮಕ್ಕಳ ವ್ಯಕ್ತಿತ್ವ ನಿರ್ಮಾಣದ ಪೀಠಗಳು : ಅಭಿನವ ಶ್ರೀ
ಅಫಜಲಪುರ: ಪಟ್ಟಣದ ಶ್ರೀ ಬಸವ ಜ್ಯೋತಿ ಶಿಕ್ಷಣ ಸಂಸ್ಥೆಯಲ್ಲಿ 2025–26ನೇ ಸಾಲಿನ ವಾರ್ಷಿಕೋತ್ಸವ ಸಮಾರಂಭವು ಸಡಗರ–ಸಂಭ್ರಮದಿಂದ ಜರುಗಿತು. ವಿದ್ಯಾರ್ಥಿಗಳ ಪ್ರತಿಭಾ ಪ್ರದರ್ಶನ, ಪಾಲಕರ ಹರ್ಷೋದ್ಗಾರ ಕಾರ್ಯಕ್ರಮ ಕಂಗೊಳಿಸಿತು. ಆಳಂದ ತಾಲೂಕಿನ ಮಾದನ ಹಿಪ್ಪರಗದ ಶ್ರೀ ಅಭಿನವ ಶಿವಲಿಂಗ ಮಹಾಸ್ವಾಮಿಗಳು ಮಾತನಾಡಿ, “ಮಕ್ಕಳಿಗೆ ಕೇವಲ ಅಕ್ಷರ ಜ್ಞಾನ ನೀಡುವುದು ಸಾಕಾಗುವುದಿಲ್ಲ. ಶಿಕ್ಷಣದ ಜೊತೆಗೆ ಮೌಲ್ಯಯುತ ಸಂಸ್ಕಾರಗಳನ್ನು ಬೋಧಿಸಿದಾಗ ಮಾತ್ರ ಅವರು ಉತ್ತಮ ನಾಗರಿಕರಾಗಿ ಸಮಾಜದಲ್ಲಿ ಹೊಳೆಯುತ್ತಾರೆ. ಶಾಲೆ ಮತ್ತು ಮನೆ ಎರಡೂ ಮಕ್ಕಳ ವ್ಯಕ್ತಿತ್ವ ನಿರ್ಮಾಣದ ಪೀಠಗಳಾಗಿವೆ” ಎಂದು ಹೇಳಿದರು. ಇಂದಿನ ಯುಗದಲ್ಲಿ ತಂತ್ರಜ್ಞಾನ ಪ್ರಭಾವ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಮಕ್ಕಳ ನಡವಳಿಕೆ ಮತ್ತು ಚಟುವಟಿಕೆಗಳ ಮೇಲೆ ಪಾಲಕರು ಕಣ್ಣಿಟ್ಟಿರಬೇಕು ಎಂದು ಸಲಹೆ ನೀಡಿದರು. ಕೋಲಿ ಸಮಾಜದ ತಾಲೂಕು ಮಾಜಿ ಅಧ್ಯಕ್ಷ ಹಾಗೂ ಉದ್ಯಮಿ ಶಂಕರ್ ಮ್ಯಾಕೇರಿ ಕಾರ್ಯಕ್ರಮವನ್ನು ಉದ್ಘಾಟಿಸಿದರು, ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಶಿವಕುಮಾರ್ ನಾಟಿಕರ್ ಜ್ಯೋತಿ ಬೆಳಗಿಸಿ ಕಾರ್ಯಕ್ರಮಕ್ಕೆ ಶುಭ ಕೋರಿದರು. ಉದ್ಯಮಿ ರಾಜೇಂದ್ರ ಕಂಬಾರ ಫೋಟೋ ಪೂಜೆ ನೆರವೇರಿಸಿದರು. ಸಂಸ್ಥೆಯ ಕಾರ್ಯದರ್ಶಿ ಎಚ್.ದಂಡೋತಿ ಕಾರ್ಯಕ್ರಮದ ವ್ಯವಸ್ಥೆಯನ್ನು ಸಮರ್ಥವಾಗಿ ನಿಭಾಯಿಸಿದರು. ಸಂಸ್ಥೆಯ ಅಧ್ಯಕ್ಷೆ ಶಿಲ್ಪಾ ಬಿ.ಎನ್. ಅಧ್ಯಕ್ಷತೆ ವಹಿಸಿದರು. ಕರವೇ ಅಧ್ಯಕ್ಷ ಶ್ರೀಕಾಂತ ದಿವಾಣಜಿ ಸ್ವಾಗತಿಸಿದರು. ಪ್ರಾಸ್ತಾವಿಕವಾಗಿ ಬಸವರಾಜ ನಿಂಬರ್ಗಿ ಮಾತನಾಡಿ ಶಿಕ್ಷಣ ಮಹತ್ವವನ್ನು ತಿಳಿಸಿಕೊಟ್ಟರು. ಕಾರ್ಯಕ್ರಮದಲ್ಲಿ ಮೈಬೂಬ್ ಪಟೇಲ್, ರಾಜಕುಮಾರ್ ಗುಣಾರಿ, ಚಿದಾನಂದ ಸೋನಾರ, ರಾಜಕುಮಾರ್ ಉಕ್ಕಲಿ, ಸಂತೋಷ್ ಚಲವಾದಿ, ಆನಂದ್ ಬಿರಾದಾರ್, ಯಲ್ಲಪ್ಪ ಉಡುಗಿ, ಶ್ರೀಮತಿ ಸುವರ್ಣ ಮೈಂದರ್ಗಿ, ಅಮೃತ್ ನಂದೂರ್, ಡಾ. ಪ್ರಭಾಕರ್ , ಮಲ್ಲಿಕಾರ್ಜುನ್ ಭಜಂತ್ರಿ, ಸುಭಾಷ್ ದೇಗನಾಳ, ಶ್ರೀಶೈಲ್ ಪ್ಯಾಟಿ, ಗುರು ಹಿರೇಮಠ, ಬಸವರಾಜ್ ಓನಮಶೆಟ್ಟಿ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ವೈದ್ಯಕೀಯ ಕ್ಷೇತ್ರದಲ್ಲಿ ಸಾಧನೆಗೈದ ಗೌರಮ್ಮ ಘತ್ತರಗಿ, ಮಾಧ್ಯಮ ಕ್ಷೇತ್ರದಲ್ಲಿ ಸಾಧನೆಗೈದ ಸಿದ್ದು ಶಿವಣಗಿ ಹಾಗೂ ಮಾಜಿ ಸೈನಿಕರಾದ ಈರಣ್ಣ ಬಿರಾದಾರ್, ಶಂಕರ್ಲಿಂಗ್ ಕರನಾಳ್ಕರ, ಅಂಬಣ್ಣ ಜಮಾದಾರ್ ಅವರಿಗೆ ಸನ್ಮಾನಿಸಿ ಗೌರವಿಸಲಾಯಿತು. ವೇದಿಕೆ ಕಾರ್ಯಕ್ರಮದ ನಂತರ ವಿದ್ಯಾರ್ಥಿಗಳಿಂದ ನೃತ್ಯ, ನಾಟಕ, ದೇಶಭಕ್ತಿ ಗೀತೆಗಳು ಸೇರಿದಂತೆ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ವಿದ್ಯಾರ್ಥಿಗಳ ಕಲಾತ್ಮಕ ಪ್ರತಿಭೆ ಎಲ್ಲರ ಮನಸೆಳೆಯಿತು.
ವೃಂದಾ ದಿನೇಶ್ ವೀರಾವೇಶದ ಅರ್ಧಶತಕ! ಬ್ಯಾಂಕಾಕ್ ನಲ್ಲಿ ಪಾಕ್ ವಿರುದ್ಧ ಭಾರತ ವನಿತೆಯರ ಜಯಭೇರಿ!
ಟಿ20 ವಿಶ್ವಕಪ್ ನಲ್ಲಿ ಭಾರತ ತಂಡ ಪಾಕಿಸ್ತಾನದ ವಿರುದ್ಧ ಆಡಲು ಅಣಿಯಾಗುತ್ತಿದ್ದಂತೆಯೇ ಬ್ಯಾಂಕಾಕ್ ನಲ್ಲಿ ಪಾಕಿಸ್ತಾನ ಎ ಮಹಿಳಾ ತಂಡವನ್ನು 8 ವಿಕೆಟ್ ಗಳಿಂದ ಭರ್ಜರಿಯಾಗಿ ಸೋಲಿಸಿ ವಿಕ್ರಮ ಮೆರಿದಿದೆ.ಭಾನುವಾರ ನಡೆದ ರೈಸಿಂಗ್ ಏಷ್ಯಾ ಕಪ್ ರೈಸಿಂಗ್ ಸ್ಟಾರ್ಸ್ ವುಮೆನ್ ಟೂರ್ನಿಯ ಗ್ರೂಪ್ ಎ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ತಂಡ 18.5 ಓವರ್ ಗಳಲ್ಲೇ 93 ರನ್ ಗಳಿಸುವಷ್ಟರಲ್ಲಿ ಆಲೌಟ್ ಆಯಿತು. ಇದಕ್ಕುತ್ತರವಾಗಿ ಭಾರತ ತಂಡ ಕೇವಲ 10.1 ಓವರ್ ಗಳಲ್ಲಿ 2 ವಿಕೆಟ್ ಕಳೆದುಕೊಂಡು ಗುರಿ ತಲುಪಿತು. ಸಾಧಾರಣ ಮೊತ್ತ ಬೆಂಬತ್ತಿ ಹೊರಟ ಭಾರತ ತಂಡ ಹುಮೈರಾ ಖಾಝಿ ಅವರ ವಿಕೆಟ್ ಇನ್ನಿಂಗ್ಸ್ ನ ಮೊದಲ ಎಸೆತದಲ್ಲೇ ಪತನಗೊಂಡಿತು. ಆದರ ವೃಂದಾ ದಿನೇಶ್ ಮತ್ತು ಅನುಷ್ಕಾ ಶರ್ಮ ಅವರು ಎರಡನೇ ವಿಕೆಟ್ ಗೆ ಮಹತ್ವದ 79 ರನ್ ಸೇರಿಸಿದ್ದರಿಂದ ಪಂದ್ಯ ಸಂಪೂರ್ಣವಾಗಿ ಪಾಕಿಸ್ತಾನದ ಕೈತಪ್ಪಿತು. ಒಂದು ಕಡೆಯಲ್ಲಿ ವೃಂದಾ ಅವರು ಅಬ್ಬರಿಸುತ್ತಿದ್ದರೆ ಮತ್ತೊಂದು ತುದಿಯಲ್ಲಿ ತಾಳ್ಮೆಯ ಬ್ಯಾಟಿಂಗ್ ಪ್ರದರ್ಶನ ನೀಡಿದ ಅನುಷ್ಕಾ ಅವರು 26 ಎಸೆತದಲ್ಲಿ 4 ಬೌಂಡರಿಗಳಿದ್ದ 24 ರನ್ ಗಳಿಸಿದರು. ಅವರ ವಿಕೆಟ್ ಪತನದ ಬಳಿಕ ವೃಂದಾ ಅವರ ಜೊತೆಗೂಡಿದ ತೇಜಲ್ ಹಸಬ್ನಿಸ್(5 ಎಸೆತದಲ್ಲಿ 12) ತಂಡವನ್ನು ಜಯಶಾಲಿಯನ್ನಾಗಿಸಿದರು. ಕೇವಲ 29 ಎಸೆತಗಳಲ್ಲಿ 12 ಬೌಂಡರಿಗಳಿದ್ದ 55 ರನ್ ಗಳಿಸಿದ ಆರಂಭಿಕ ಬ್ಯಾಟರ್ ವೃಂದಾ ದಿನೇಶ್ ಅವರು ಪಂದ್ಯಶ್ರೇಷ್ಠ ಪ್ರಶಸ್ತಿ ಗಳಿಸಿದರು.ಇದಕ್ಕೂ ಮುನ್ನ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಪಾಕಿಸ್ತಾನ ತಂಡದ ಲೆಕ್ಕಾಚಾರವನ್ನು ಭಾರತದ ಮಧ್ಯಮ ವೇಗಿ ಸೈಮಾ ಠಾಕೂರ್, ಸ್ಪಿನ್ನರ್ ರಾಧಾ ಯಾದವ್ ಮತ್ತು ಪ್ರೇಮಾ ರಾವತ್ ಬುಡಮೇಲುಗೊಳಿಸಿದರು. ಮೂವರೂ ತಲಾ 2 ವಿಕೆಟ್ ಗಳನ್ನು ಗಳಿಸದರು. ಭಾರತದ ಬಿಗು ಬೌಲಿಂಗ್ ವಿರುದ್ಧ ಶಾವಲ್ ಝುಲ್ಫಿಕರ್ (29 ಎಸತೆದಲ್ಲಿ 23) ಮತ್ತು ಗುಲ್ ರುಖ್(28 ಎಸೆತದಲ್ಲಿ 21) ಹೊರತುಪಡಿಸಿದರೆ ಬೇರಾವ ಬ್ಯಾಟರ್ ಗಳೂ ಆಡಲು ಸಾಧ್ಯವಾಗಲಿಲ್ಲ. ಹೀಗಾಗಿ ತಂಡ ಕೇವಲ 93 ರನ್ ಗಳಿಗೆ ಆಲೌಟ್ ಆಯಿತು. ಸಂಕ್ಷಿಪ್ತ ಸ್ಕೋರ್ ಪಾಕಿಸ್ತಾನ ಎ ತಂಡ 18.5 ಓವರ್ ಗಳಲ್ಲಿ 93 ಕ್ಕೆ ಆಲೌಟ್, ಶಾವಲ್ ಝುಲ್ಫಿಕರ್ 23(29), ಗುಲ್ ರುಖ್ 21(28), ಅನೋಶಾ ನಾಸಿರ್ 17(17), ಸೈಮಾ ಠಾಕೂರ್ 14ಕ್ಕೆ 2, ರಾಧಾ ಯಾದವ್ 11ಕ್ಕೆ 2, ಪ್ರೇಮಾ ರಾವತ್ 16ಕ್ಕೆ 2. ಭಾರತ ಎ ತಂಡ 10.1 ಓವರ್ ಗಳಲ್ಲಿ 97/2, ವೃಂದಾ ದಿನೇಶ್ ಅಜೇಯ 55(29), ಅನುಷ್ಕಾ ಶರ್ಮಾ 24(26), ತೇಜಲ್ ಹಸಬ್ನಿಸ್ 12(5), ವಹೀದಾ ಅಖ್ತರ್ 18ಕ್ಕೆ 1, ಮೊಮಿನಾ ರೈಸತ್ 13ಕ್ಕೆ 1.
ಕಲಬುರಗಿ | ರಾಷ್ಟ್ರಗೀತೆಗಿಂತ ರಾಷ್ಟ್ರಗಾನಕ್ಕೆ ಆದ್ಯತೆ ನೀಡುತ್ತಿರುವುದು ಖಂಡನಾರ್ಹ : ಕೆ.ನೀಲಾ
ಕಲಬುರಗಿ: ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್ವಾದಿ) ಕಲಬುರಗಿ ಜಿಲ್ಲಾ ಸಮಿತಿಯು ರಾಷ್ಟ್ರಗೀತೆ/ರಾಷ್ಟ್ರಗಾನ ಕುರಿತಂತೆ ಕೇಂದ್ರ ಸರ್ಕಾರ ಹೊರಡಿಸಿರುವ ಆದೇಶವನ್ನು ತೀವ್ರವಾಗಿ ಖಂಡಿಸಿದೆ. ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಪಕ್ಷದ ಜಿಲ್ಲಾ ಕಾರ್ಯದರ್ಶಿ ಕೆ.ನೀಲಾ ಅವರು, ಭಾರತ ಸರ್ಕಾರವು ರಾಷ್ಟ್ರಗೀತೆಗಿಂತ ರಾಷ್ಟ್ರಗಾನಕ್ಕೆ ಆದ್ಯತೆ ನೀಡುವಂತೆ ಆದೇಶ ಹೊರಡಿಸಿರುವುದು ಸಂವಿಧಾನದ ಭಾವನೆಗೆ ವಿರುದ್ಧವಾಗಿದೆ ಎಂದು ಆರೋಪಿಸಿದ್ದಾರೆ. ಭಾರತ ಸಂವಿಧಾನದ ವಿಧಿ 51A(ಅ) ಪ್ರಕಾರ ರಾಷ್ಟ್ರಧ್ವಜ ಮತ್ತು ರಾಷ್ಟ್ರಗೀತೆಯನ್ನು ಗೌರವಿಸುವುದು ಪ್ರತಿಯೊಬ್ಬ ನಾಗರಿಕನ ಮೂಲ ಕರ್ತವ್ಯವಾಗಿದೆ. ಸಂವಿಧಾನ ಸಭೆಯಲ್ಲಿ ನಡೆದ ಸಮಗ್ರ ಚರ್ಚೆಯ ಬಳಿಕ ರಾಷ್ಟ್ರಗಾನದ ವಿಷಯವಾಗಿ ಆಗಿನ ರಾಷ್ಟ್ರಪತಿ ರಾಜೇಂದ್ರ ಪ್ರಸಾದ್ ನೀಡಿದ ಹೇಳಿಕೆಯನ್ನು ಅಂಗೀಕರಿಸಿ, ಕೇವಲ ಎರಡು ಚರಣಗಳನ್ನು ಮಾತ್ರ ಹಾಡಲು ನಿರ್ಧರಿಸಲಾಗಿತ್ತು ಎಂದು ಹೇಳಿದ್ದಾರೆ. ಆದರೆ ಇತ್ತೀಚಿನ ಆದೇಶದ ಮೂಲಕ ಉಳಿದ ನಾಲ್ಕು ಚರಣಗಳನ್ನು ಸೇರಿಸಲು ಸರ್ಕಾರ ಯತ್ನಿಸುತ್ತಿದ್ದು, ಅವು ಭಾರತೀಯ ಗಣರಾಜ್ಯದ ಧರ್ಮನಿರಪೇಕ್ಷ ಸ್ವಭಾವಕ್ಕೆ ಹೊಂದಿಕೆಯಾಗುವುದಿಲ್ಲವೆಂದು ಸಂವಿಧಾನ ಸಭೆ ಅಭಿಪ್ರಾಯಪಟ್ಟಿತ್ತು ಎಂದು ತಿಳಿಸಿದ್ದಾರೆ. ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ದುರುದ್ದೇಶದಿಂದ ರಾಷ್ಟ್ರಗಾನ ಮತ್ತು ರಾಷ್ಟ್ರಗೀತೆಯ ವಿಷಯದಲ್ಲಿ ಅನಗತ್ಯ ವಿವಾದವನ್ನು ಸೃಷ್ಟಿಸುತ್ತಿದೆ ಎಂದು ಆರೋಪಿಸಿರುವ ಅವರು, ಇಂತಹ ಐತಿಹಾಸಿಕ ಮತ್ತು ಸಾಂಸ್ಕೃತಿಕ ಚಿಹ್ನೆಗಳೊಂದಿಗೆ ಆಟವಾಡಲು ಅವಕಾಶ ನೀಡಬಾರದು. ಕೇಂದ್ರ ಸರ್ಕಾರವು ಈ ಆದೇಶವನ್ನು ತಕ್ಷಣವೇ ಹಿಂತೆಗೆದುಕೊಳ್ಳಬೇಕು ಎಂದು ಕೆ.ನೀಲಾ ಅವರು ಒತ್ತಾಯಿಸಿದ್ದಾರೆ.
ಫೆ.19 - 21ರವರೆಗೆ ಮುನಿಯಾಲು ಏಕಪವಿತ್ರ ಶ್ರೀಮನ್ನಾಗಮಂಡಲ
ಹೆಬ್ರಿ, ಫೆ.15: ಮುನಿಯಾಲು ಸಂಜೀವಿನಿ ಗೋಧಾಮದ ನಾಗಬನದಲ್ಲಿ ಫೆ.19ರಿಂದ 21ರವರೆಗೆ ಏಕ ಪವಿತ್ರ ಶ್ರೀಮನ್ನಾಗಮಂಡಲ ನಡೆಯಲಿದೆ ಎಂದು ಮುನಿಯಾಲು ಸಂಜೀವಿನಿ ಫಾರ್ಮ್ ಗೋಧಾಮದ ಪ್ರವರ್ತಕ ಜಿ.ರಾಮಕೃಷ್ಣ ಆಚಾರ್ಯ ತಿಳಿಸಿದ್ದಾರೆ. ಕೊರಂಗ್ರಪಾಡಿ ವಿದ್ವಾನ್ ಕೆಪಿ ಕುಮಾರಗುರು ತಂತ್ರಿ ನೇತೃತ್ವದಲ್ಲಿ, ವಾಸುದೇವ ಭಟ್ ಅವರ ಸಹಯೋಗ ದೊಂದಿಗೆ ಪಾತ್ರಿಗಳಾದ ರಾಮಚಂದ್ರ ಕುಂಜಿತ್ತಾಯ ಹಾಗೂ ಗೋಳಿಯಂಗಡಿ ಸುಬ್ರಹ್ಮಣ್ಯ ವೈದ್ಯ ಅವರ ಮೇಳದೊಂದಿಗೆ ನಾಗಮಂಡಲ ನಡೆಯಲಿದೆ. ಫೆ.19ರಂದು ಋತಿಜ್ವರ ಸ್ವಾಗತ, ಋತಿಗ್ವರಣ, ಫಲನ್ಯಾಸ-ಪ್ರಾರ್ಥನೆ, ಆದ್ಯಶುದ್ಧಿ- ಪುಣ್ಯಾಹ, ಮಾತೃಕಾ ಪೂಜನಮ್, ನಾಂದೀಸಮಾರಾಧನ್, ಸಪ್ತರ್ಷಿ ಪೂಜನಮ್, ಅರಣಿಮಥನ, ಬ್ರಹ್ಮ ಕೂರ್ಚ ಹೋಮ, 6 ಕಾಯಿ ಗಣಯಾಗ, ನವಗ್ರಹ ಯಾಗ, ಪ್ರತಿಸರಬಂಧಪೂರ್ವಕ ಕಂಕಣಬಂಧನ, ಶ್ರೀಮದ್ ಭಾಗವತ ಪಾರಾಯಣರಂಭ, ಉಗ್ರಾಣ ಮುಹೂರ್ತ, ಅನ್ನರಾಧನ ಉಗ್ರಾಣ ಮುಹೂರ್ತ, ಅಂಕೂರ ಪೂಜೆ, ಸಪ್ತಶುದ್ಧಿ, ಭೂ ಶುದ್ದಿ, ವಾಸ್ತು ವಿದ್ಯಾ ಕಲಪ, ರಾಕ್ಷೋಘ್ನಸೂಕ್ತಯಾಗ, ಪ್ರಕಾರ ಬಲಿ ನಡೆಯಲಿದೆ. 20ರಂದು ಮೃತ್ಯುಂಜಯ ಹೋಮ, ಕೂಷ್ಮಂಡಯಾಗ, ಭೂತನಾಥ ಪ್ರಿತೀಕರ ಪ್ರತ್ಯಕ್ಷ ಅಶ್ವಪೂಜಾ, ಪ್ರಸನ್ನ ಪೂಜೆ, ಸಾನ್ನಿಧ್ಯಾರ್ಥ ನೂರುಂಪಾಲುಮ್, ಚಕ್ರಬ್ಜಮಂಡಲ ಪೂಜಾ, ಭದ್ರಕಮಂಡಲ ಪೂಜೆ ನಡೆಯಲಿದೆ. 21ರಂದು ಆಶ್ಲೇಷ ಬಲಿದಾನ, ಪಂಚ ವಿಂಶತಿ ದ್ರವ್ಯ ಮಿಳಿತ ಕಲಶ, ಪ್ರಧಾನಯಾಗ, ಸರ್ಪತ್ರಯ ಮಂತ್ರ ಯಾಗ, ಪವಮಾನ ಸೂಕ್ತಯಾಗ, ತಿಲಯಾಗ, ಬ್ರಹ್ಮಚಾರಿ ಆರಾಧನೆ, ಪ್ರಸನ್ನ ಪೂಜೆ, ಪಲ್ಲಪೂಜೆ, ಅನ್ನರಾದನೆ, ದುರ್ಗ ನಮಸ್ಕಾರ, ಹಾಲಿಟ್ಟು ಸೇವೆ, ಏಕ ಪವಿತ್ರ ಶ್ರೀಮನ್ನಾ ನಾಗಮಂಡಲ ಸೇವೆ, ಅನುಗ್ರಹ ವಾಕ್ಯ ಪ್ರಧಾನ, ಪ್ರಸಾದ ವಿತರಣೆ, ಪ್ರಸನ್ನ -ಉತ್ತರ ಪೂಜೆ, ಮಹಾ ಅನ್ನಸಂತರ್ಪಣೆ ಜರುಗಲಿದೆ ಎಂದು ಅವರು ತಿಳಿಸಿದ್ದಾರೆ. ರೈತಪೀಠ ಪ್ರಶಸ್ತಿ ಸ್ಥಾಪನೆ ರೈತರ ತ್ಯಾಗವನ್ನು ಗುರುತಿಸುವ ಉದ್ದೇಶದಿಂದ ರೈತಪೀಠ ಪ್ರಶಸ್ತಿಯನ್ನು ಸ್ಥಾಪಿಸಲಾಗಿದ್ದು, ಫೆ.20ರಂದು ಸಂಜೆ ಶ್ರೀನಿವಾಸ ಸಭಾಮಂಟಪದಲ್ಲಿ ರೈತಪೀಠ ಪ್ರಶಸ್ತಿ ಪ್ರದಾನ ನಡೆಯಲಿದೆ. 240ಕ್ಕೂ ಹೆಚ್ಚು ಭಾರತೀಯ ಭತ್ತದ ತಳಿಗಳನ್ನು ಸಂರಕ್ಷಣೆ ಮಾಡಿದ ಅಪರೂಪದ ಕೃಷಿಕ ಋಷಿ ಬಿ.ಕೆ.ದೇವರಾಯ ಮಿತ್ತಬಾಗಿಲು ಅವರು ಮೂಡಬಿದರೆ ಎಸ್ಕೆಎಫ್ ಸಂಸ್ಥೆ ನೀಡುವ ನೂತನ ಪ್ರಥಮ ರೈತಪೀಠ ಪ್ರಶಸ್ತಿಯನ್ನು ಸ್ವೀಕರಿಸಲಿದ್ದಾರೆ. ಬೆಳಗ್ಗೆ 10.30ಕ್ಕೆ ‘ಕೃಷಿ ಮಂಡಲ’ ವಿಚಾರಗೋಷ್ಠಿ ನಡೆಯಲಿದ್ದು, ಇದನ್ನು ಪದ್ಮಶ್ರೀ ಸತ್ಯ ನಾರಾಯಣ ಬೆಳೇರಿ ಉದ್ಘಾಟಿಸಲಿರುವರು ಎಂದು ಡಾ.ಜಿ.ರಾಮಕೃಷ್ಣ ಆಚಾರ್ಯ ಮಾಹಿತಿ ನೀಡಿದರು.

17 C