ಮಧ್ಯಪ್ರಾಚ್ಯ ಯುದ್ಧಕ್ಕೆ 2ವಾರಗಳ ಕದನವಿರಾಮ ಘೋಷಣೆಯಾಗಿದ್ದು, ಈ ಬೆನ್ನಲ್ಲೇ ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್ ನಲ್ಲಿ ಏ.10ರಂದು ಅಮೆರಿಕಾ-ಇರಾನ್ ನಡುವೆ ಶಾಂತಿ ಒಪ್ಪಂದದ ರಾಜತಾಂತ್ರಿಕ ಮಾತುಕತೆಗಳು ನಡೆಯಲಿವೆ. ಈ ನಿಟ್ಟನಲ್ಲಿ ಸಿದ್ದತೆ ನಡೆಸುತ್ತಿರುವ ಇಸ್ಲಾಮಾಬಾದ್ ಏ.9 ಹಾಗೂ ಏ.10 ರಂದು ಈ ಪ್ರಾಂತ್ಯದಲ್ಲಿ 2ದಿನಗಳ ಸಾರ್ವಜನಿಕ ರಜೆಯನ್ನು ಘೋಷಿಸಿದ್ದು, ಅಗತ್ಯ ಸೇವೆಗಳು ಮಾತ್ರ ಸಿಗಲಿವೆ ಎಂದು ಆದೇಶ ಹೊರಡಿಸಿದೆ. ಈ ಕುರಿತ ಮಾಹಿತಿ ಇಲ್ಲಿದೆ..
ಕಾಲೇಜು ದಿನದಿಂದ ಖರ್ಗೆ ಅವರನ್ನು ನಾಬಲ್ಲೆ, ರಾಹುಲ್ ಸಹವಾಸವೇ ಅವರಿಗೆ ಮುಳು: ಪ್ರಲ್ಹಾದ ಜೋಶಿ
Pralhad Joshi On Mallikarjun Kharge : ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆಯವರನ್ನು ನಾನು ಹಿಂದಿನಿಂದಲೂ ಬಲ್ಲೆ. ಹಿಂದೆಲ್ಲಾ ಅವರು ಈ ರೀತಿ ಇರಲಿಲ್ಲ, ಅವರು ರಾಹುಲ್ ಗಾಂಧಿ ಸಹವಾಸ ಮಾಡಿದಾಗನಿಂದ, ಅಪ್ರಬುದ್ದ ಹೇಳಿಕೆಯನ್ನು ನೀಡಲು ಆರಂಭಿಸಿದ್ದಾರೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಲೇವಡಿ ಮಾಡಿದ್ದಾರೆ.
ರೌಡಿಗಳ ವಿರುದ್ಧ ಖಾಕಿ ಕೆಂಗಣ್ಣು: ಮೂರೇ ತಿಂಗಳಿಗೆ 37 ರೌಡಿಗಳ ಗಡೀಪಾರು, ಆರು ಮಂದಿ ವಿರುದ್ಧ ಗೂಂಡಾಸ್ತ್ರ
ಬೆಂಗಳೂರು ನಗರದಲ್ಲಿ ಶಾಂತಿ ಕಾಪಾಡುವ ನಿಟ್ಟಿನಲ್ಲಿ ಸಕ್ರಿಯವಾಗಿರುವ ಸಿಸಿಬಿ ಮತ್ತು ಸ್ಥಳೀಯ ಪೊಲೀಸರು ರೌಡಿಗಳ ದಮನಕ್ಕೆ ಮುಂದಾಗಿದ್ದಾರೆ. ಪ್ರಸಕ್ತ ವರ್ಷದ ಮೊದಲ ಮೂರು ತಿಂಗಳಲ್ಲೇ 37 ರೌಡಿಗಳನ್ನು ನಗರದಿಂದ ಗಡೀಪಾರು ಮಾಡುವ ಮೂಲಕ ಅವರ ಅಪರಾಧ ಚಟುವಟಿಕೆಗಳಿಗೆ ಬ್ರೇಕ್ ಹಾಕಲಾಗಿದೆ. ಕೇವಲ ಗಡೀಪಾರು ಮಾತ್ರವಲ್ಲದೆ, ಸಮಾಜಕ್ಕೆ ಹೆಚ್ಚು ಅಪಾಯಕಾರಿಯಾಗಿರುವ ಆರು ಕುಖ್ಯಾತ ರೌಡಿಗಳ ಮೇಲೆ ಕಠಿಣವಾದ 'ಗೂಂಡಾ ಕಾಯಿದೆ'ಯನ್ನು ಹೇರುವ ಪ್ರಕ್ರಿಯೆಯೂ ಪ್ರಗತಿಯಲ್ಲಿದೆ. ಈ ಕ್ರಮವು ರೌಡಿ ಪಡೆಗಳಲ್ಲಿ ನಡುಕ ಹುಟ್ಟಿಸಿದೆ.
ಮಧ್ಯಪ್ರದೇಶ| 'ವಂದೇ ಮಾತರಂ' ಹಾಡುವಂತೆ ಕಾಂಗ್ರೆಸ್ ಕೌನ್ಸಿಲರ್ಗೆ ಬಿಜೆಪಿ ನಾಯಕರಿಂದ ಒತ್ತಾಯ
ಇಂದೋರ್: ಇಂದೋರ್ ಮಹಾನಗರ ಪಾಲಿಕೆಯ ಬಜೆಟ್ ಮೇಲಿನ ಚರ್ಚೆಯ ಸಂದರ್ಭದಲ್ಲಿ ಕಾಂಗ್ರೆಸ್ನ ಮಹಿಳಾ ಕೌನ್ಸಿಲರ್ ಒಬ್ಬರು ವಂದೇ ಮಾತರಂ ಹಾಡಲು ನಿರಾಕರಿಸಿದ್ದಾರೆ. ಬುಧವಾರ ಕೌನ್ಸಿಲರ್ ಫೌಝಿಯಾ ಶೇಖ್ ಅಲಿಮ್ ಅವರು ವಂದೇ ಮಾತರಂ ಹಾಡಲು ನಿರಾಕರಿಸಿದ್ದರಿಂದ ಆಡಳಿತಾರೂಢ ಬಿಜೆಪಿಯ ಕೌನ್ಸಿಲರ್ಗಳು ಅಧ್ಯಕ್ಷರ ಪೀಠದ ಬಳಿ ಧಾವಿಸಿ ಘೋಷಣೆಗಳನ್ನು ಕೂಗಿದರು. ಗದ್ದಲದ ಹಿನ್ನೆಲೆ ಅಧ್ಯಕ್ಷ ಮುನ್ನಾಲಾಲ್ ಯಾದವ್ ಅವರು ಅಲಿಮ್ ಅವರನ್ನು ಸದನದಿಂದ ಹೊರಹೋಗುವಂತೆ ಸೂಚಿಸಿದ್ದಾರೆ. ಇಸ್ಲಾಮಿಕ್ ನಂಬಿಕೆಗಳನ್ನು ಉಲ್ಲೇಖಿಸಿ ಫೌಝಿಯಾ ಶೇಖ್ ಅಲಿಮ್ ಅವರು ವಂದೇ ಮಾತರಂ ಹಾಡಲು ನಿರಾಕರಿಸಿದ್ದಾರೆ. ಸಂವಿಧಾನ ನಮಗೆ ಧಾರ್ಮಿಕ ಸ್ವಾತಂತ್ರ್ಯವನ್ನು ನೀಡಿದೆ. ನನ್ನನ್ನು ವಂದೇ ಮಾತರಂ ಹಾಡುವಂತೆ ಯಾರೂ ಒತ್ತಾಯಿಸುವಂತಿಲ್ಲ. ನಾನು ರಾಷ್ಟ್ರಗೀತೆಯನ್ನು ಗೌರವಿಸುತ್ತೇನೆ ಎಂದು ಅಲಿಮ್ ಹೇಳಿದ್ದಾರೆ. ಸಭೆಯಲ್ಲಿ ಕಲುಷಿತ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ನಾನು ಮಾತನಾಡಲು ಉದ್ದೇಶಿಸಿದ್ದೆ. ಆದರೆ ಹೆಚ್ಚು ಮೂಲಭೂತ ಸಮಸ್ಯೆಗಳಿಂದ ಸದನವನ್ನು ಬೇರೆಡೆಗೆ ಸೆಳೆಯಲು ಬಿಜೆಪಿ ಕೌನ್ಸಿಲರ್ಗಳು ಮೊದಲು ವಂದೇ ಮಾತರಂ ಹಾಡುವಂತೆ ಒತ್ತಾಯಿಸಿದ್ದಾರೆ ಎಂದು ಫೌಝಿಯಾ ಶೇಖ್ ಅಲಿಮ್ ಹೇಳಿದ್ದಾರೆ. Indore Municipal Corporation erupted in chaos during a budget session when a BJP councillor declared: If you want to live in India, you must say 'Vande Mataram'! Congress councillor Fauzia Sheikh Aleem objected, saying it cannot be forced, and walked out of the house. pic.twitter.com/a1ZNsY025e — Megh Updates ™ (@MeghUpdates) April 8, 2026
Middle East War: ಮಧ್ಯಪ್ರಾಚ್ಯ ಯುದ್ಧ: ಎಂಥಾ ನಾಚಿಕೆಗೇಡು, ಒಳ್ಳೆಯವರಿಗಿದು ಕಾಲವಲ್ಲ: ಎಂದು ನಟ ಕಿಶೋರ್ ಕುಮಾರ್
Middle East War: ಮಧ್ಯಪ್ರಾಚ್ಯ ಯುದ್ಧ ಹಾಗೂ ಕದನ ವಿರಾಮಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ನಟ ಕಿಶೋರ್ ಕುಮಾರ್ ಅವರು ಎಂಥಾ ನಾಚಿಕೆಗೇಡು, ಒಳ್ಳೆಯವರಿಗಿದು ಕಾಲವಲ್ಲ ಎಂದು ಹೇಳಿದ್ದಾರೆ. ವಿಶ್ವಗುರುವಾಗಲು ಪರಮಾಣು ಸಂಘರ್ಷದ ಹೊಸ್ತಿಲಲ್ಲಿ ನಿಂತ ಮಧ್ಯಪ್ರಾಚ್ಯದ ಯುದ್ಧಕ್ಕಿಂತ ಸರಿಯಾದ ಸಮಯ ಸಿಗದೆಂದು ಯುಕ್ರೇನ್ ಯುದ್ಧನಿಲ್ಲಿಸಿದ ದಲ್ಲಾಳಿ ಪಾಪಾನನ್ನು ಯುದ್ಧ ಅಪರಾಧಿಗಳ ಜೊತೆ ಹಲ್ಲು ಕಿಸಿಯಲು, ರೀಲ್ಸ್
ಸಂಪಾದಕೀಯ | ಅಮೆರಿಕದ ವಿರುದ್ಧ ಇರಾನ್ ನಾಗರಿಕರು ಗೆದ್ದ ಯುದ್ಧ!
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಯೋಗೇಶ್ ಗೌಡ ಹತ್ಯೆ : ವಿನಯ್ ಕುಲಕರ್ಣಿ ವಿರುದ್ಧದ ಪ್ರಕರಣದ ತೀರ್ಪು ಏಪ್ರಿಲ್ 15 ಕ್ಕೆ ಮುಂದೂಡಿಕೆ
ಬಿಜೆಪಿ ಮುಖಂಡನಾಗಿದ್ದ ಯೋಗೇಶ್ ಗೌಡ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ವಿನಯ್ ಕುಲಕರ್ಣಿ ವಿರುದ್ಧದ ಪ್ರಕರಣದ ತೀರ್ಪು ಏಪ್ರಿಲ್ 15 ಕ್ಕೆ ಮುಂದೂಡಿಕೆ ಮಾಡಲಾಗಿದೆ. ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಗುರುವಾರ ತೀರ್ಪು ಪ್ರಕಟ ಮಾಡಬಹುದು ಎಂಬ ನಿರೀಕ್ಷೆ ಇತ್ತು. ಅದರೆ ಗುರುವಾರ ತೀರ್ಪು ಪ್ರಕಟ ಮಾಡಿಲ್ಲ. ಬದಲಾಗಿ ಏಪ್ರಿಲ್ 15 ಕ್ಕೆ ಮುಂದೂಡಿಕೆ ಮಾಡಲಾಗಿದೆ. ಯೋಗೇಶ್ ಗೌಡ ಕೊಲೆ ಪ್ರಕರಣ ರಾಜ್ಯಾದ್ಯಂತ ಭಾರೀ ಸದ್ದು ಮಾಡಿತ್ತು. ರಾಜಕೀಯವಾಗಿಯೂ ವಿನಯ್ ಕುಲಕರ್ಣಿ ಅವರಿಗೆ ಇದು ಹಿನ್ನಡೆ ಉಂಟು ಮಾಡಿತ್ತು.
ವಂದೇ ಮಾತರಂ ಎಲ್ಲ ಚರಣಗಳ ಗಾಯನ: ಪಿಐಎಲ್ ವಿಚಾರಣೆಗೆ ಪರಿಗಣಿಸಲು ಹೈಕೋರ್ಟ್ ನಕಾರ
Singing of All Stanzas of Vande Mataram: Karnataka High Court Refuses to Entertain PIL
ರಾಜ್ಯದ ಕಳೆದ 3 ವರ್ಷಗಳ ದ್ವಿತೀಯ PUC ಫಲಿತಾಂಶದ ಹೈಲೈಟ್ಸ್; ಮೇಲುಗೈ ಸಾಧಿಸಿದ ಜಿಲ್ಲೆಗಳು ಯಾವುವು? ಇಲ್ಲಿದೆ ಮಾಹಿತಿ
ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ (KSEAB) ನಡೆಸುವ ದ್ವಿತೀಯ ಪಿಯುಸಿ ಪರೀಕ್ಷೆಯು ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯದಲ್ಲಿ ಅತ್ಯಂತ ಪ್ರಮುಖ ಘಟ್ಟವಾಗಿದೆ. ಪ್ರತಿ ವರ್ಷ ಲಕ್ಷಾಂತರ ವಿದ್ಯಾರ್ಥಿಗಳು ಈ ಪರೀಕ್ಷೆಯನ್ನು ಬರೆಯುತ್ತಾರೆ. ಕುತೂಹಲದ ಸಂಗತಿಯೆಂದರೆ, ಫಲಿತಾಂಶದ ವಿಚಾರದಲ್ಲಿ ಕರಾವಳಿಯ ಜಿಲ್ಲೆಗಳು ಯಾವಾಗಲೂ ಮುಂಚೂಣಿಯಲ್ಲಿರುತ್ತವೆ. ಕಳೆದ ಮೂರು ವರ್ಷಗಳ ಅಂದರೆ 2023, 2024 ಮತ್ತು 2025ರ ದ್ವಿತೀಯ
ಹೊಸಕೋಟೆ ಟು ಹೊಸೂರು ಸಂಪರ್ಕ ಕಲ್ಪಿಸುವ STRR ಜೂನ್ ವೇಳೆಗೆ ಪೂರ್ಣ ಸಾಧ್ಯತೆ: 16 ತಿಂಗಳಿನಿಂದ ವಿಳಂಬಕ್ಕೆ ಕಾರಣವೇನು?
ಬೆಂಗಳೂರಿನ ಹೊಸಕೋಟೆಯಿಂದ ಹೊಸೂರು ಮಾರ್ಗದಲ್ಲಿ ನಿರ್ಮಿಸಲಾಗುತ್ತಿರುವ ಸ್ಯಾಟಲೈಟ್ ಟೌನ್ ರಿಂಗ್ ರಸ್ತೆ ಕಾಮಗಾರಿ ವೇಗವಾಗಿ ಸಾಗುತ್ತಿದ್ದು, ಮುಂದಿನ ಜೂನ್ ವೇಳೆಗೆ ಅಂತ್ಯಗೊಳ್ಳುವ ನೀರಿಕ್ಷಯಿದೆ. ಇನ್ನು, ಆರಂಭಿಕವಾಗಿ ಕಳೆದ ವರ್ಷವೇ ಪೂರ್ಣಗೊಳ್ಳಬೇಕಿದ್ದ ಕಾರ್ಯದಲ್ಲಿ ಅನುಮೋದನೆಗಳಲ್ಲಿನ ವಿಳಂಬದಿಂದಾಗಿ ಸಮಯಕ್ಕೆ ಸರಿಯಾಗಿ ಸಂಪರ್ಕ ಕಲ್ಪಿಸಲು ಸಾಧ್ಯವಾಗದೆ ಇದ್ದು, ಜೂನ್ ವೇಳೆಗೆ ಕಾಮಗಾರಿ ಪೂರ್ಣಗೊಳ್ಳುವ ಸಾಧ್ಯತೆಯಿದೆ ಎಂದು NHAI ಮೂಲಗಳು ತಿಳಿಸಿವೆ.ಈ ಕುರಿತ ಮಾಹಿತಿ ಇಲ್ಲಿದೆ..
ಯೋಗೇಶ್ ಗೌಡ ಪ್ರಕರಣ: ಏ.15ಕ್ಕೆ ಅಂತಿಮ ತೀರ್ಪು, ವಿನಯ್ ಕುಲಕರ್ಣಿ ಭವಿಷ್ಯ ಅಂದು ನಿರ್ಧಾರ
ಬೆಂಗಳೂರು: ಹಾಲಿ ಶಾಸಕ ಮತ್ತು ಮಾಜಿ ಸಚಿವ ವಿನಯ್ ಕುಲಕರ್ಣಿ ಅವರಿಗೆ ಸಂಬಂಧಿಸಿದ ಧಾರವಾಡದ ಜಿ.ಪಂ ಸದಸ್ಯ ಯೋಗೇಶ್ ಗೌಡ ಕೊಲೆ ಪ್ರಕರಣದ ನ್ಯಾಯಾಲಯ ವಿಚಾರಣೆ ಪೂರ್ಣಗೊಂಡಿದೆ. ಇಂದು ಗುರುವಾರ (ಏ.9) ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಅಂತಿಮ ತೀರ್ಪು ಆದೇಶವನ್ನು ಏಪ್ರಿಲ್ 15ಕ್ಕೆ ಮುಂದೂಡಿದೆ. ಅಂದು ತೀರ್ಪು ಹೊರ ಬೀಳಲಿದೆ. ಧಾರವಾಡದ ಜಿಲ್ಲಾ ಪಂಚಯಾತಿ ಸದಸ್ಯ ಯೋಗೇಡೌ
Chikkamagaluru | ಇನ್ನೂ ಪತ್ತೆಯಾಗದ ಬಾಲಕಿ ಶ್ರೀ ನಂದಾ: ಚಂದ್ರದ್ರೋಣ ಬೆಟ್ಟದಲ್ಲಿ ಮುಂದುವರಿದ ಶೋಧ ಕಾರ್ಯ
ಶೋಧ ಕಾರ್ಯಾಚರಣೆಗೆ ಜಿಲ್ಲಾಡಳಿತದಿಂದ ಡ್ರೋನ್, 100ಕ್ಕೂ ಅಧಿಕ ಸಿಬ್ಬಂದಿಯ ಬಳಕೆ
ವಿರಾಟ್ ಕೊಹ್ಲಿ ಜೊತೆ ಹೋಲಿಕೆಗೆ ಫುಲ್ ಗರಂ : Let's End It Here ಎಂದು ಎದ್ದುಹೋದ ಬಾಬರ್ ಆಝಂ
Virat Kohli Vs Babar Azam : ವಿಶ್ವ ಕ್ರಿಕೆಟ್’ನಲ್ಲಿ ಚೇಸ್ ಮಾಸ್ಟರ್ ಎಂದೇ ಹೆಸರು ಪಡೆದಿರುವ ವಿರಾಟ್ ಕೊಹ್ಲಿಯ ಜೊತೆ ಹೋಲಿಕೆ ಮಾಡಿದ್ದಕ್ಕೆ ಪಾಕಿಸ್ತಾನದ ಸ್ಟಾರ್ ಬ್ಯಾಟ್ಸಮ್ಯಾನ್ ಬಾಬರ್ ಆಝಂ ಸಿಟ್ಟಾಗಿದ್ದಾರೆ. ನಾನು ಕೂಡಾ ಬಹಳಷ್ಟು ಪಂದ್ಯವನ್ನು ತಂಡಕ್ಕೆ ಗೆಲ್ಲಿಸಿಕೊಟ್ಟಿದೇನೆ. ಲೆಟ್ಸ್ ಎಂಡ್ ಇಟ್ ಹಿಯರ್ ಎಂದು ಪಾಕಿಸ್ತಾನದ ಮಾಧ್ಯಮದವರಿಗೆ ಎಚ್ಚರಿಸಿದ್ದಾರೆ.
AI ಆಧಾರಿತ ತಂತ್ರಜ್ಞಾನಕ್ಕೆ ಒತ್ತು: ವರ್ಸೆ ಇನ್ನೋವೇಶನ್ನ ನೂತನ CPTO ಆಗಿ ಪ್ರಸನ್ನ ಪ್ರಸಾದ್ ನೇಮಕ
ಬೆಂಗಳೂರು, ಏಪ್ರಿಲ್ 9, 2026: ಭಾರತದ ಪ್ರಮುಖ ಕೃತಕ ಬುದ್ಧಿಮತ್ತೆ (AI) ಆಧಾರಿತ ಸ್ಥಳೀಯ ಭಾಷಾ ತಂತ್ರಜ್ಞಾನ ಪ್ಲಾಟ್ಫಾರ್ಮ್ ಹಾಗೂ ಡೈಲಿಹಂಟ್, ಜೋಶ್, ನೆಕ್ಸ್ವರ್ಸ್.ಎಐ (NexVerse.ai), ಮ್ಯಾಗ್ಜ್ಟರ್ ಮತ್ತು ಒನ್ಇಂಡಿಯಾದ ಮಾತೃ ಸಂಸ್ಥೆಯಾದ ವರ್ಸೆ ಇನ್ನೋವೇಶನ್, ಇಂದು ತನ್ನ ಮುಖ್ಯ ಉತ್ಪನ್ನ ಮತ್ತು ತಂತ್ರಜ್ಞಾನ ಅಧಿಕಾರಿಯಾಗಿ (CPTO) ಪ್ರಸನ್ನ ಪ್ರಸಾದ್ ಅವರ ನೇಮಕವನ್ನು ಪ್ರಕಟಿಸಿದೆ. ಈ ಪಾತ್ರದಲ್ಲಿ,
ಬಳ್ಳಾರಿಯಿಂದ ಬೆಂಗಳೂರು ಕಡೆಗೆ ಸಂಚರಿಸುತ್ತಿದ್ದ ಹಂಪಿ ಎಕ್ಸ್ಪ್ರೆಸ್ ರೈಲಿನಲ್ಲಿ ಬೆಂಕಿ : ತಪ್ಪಿದ ಭಾರಿ ದುರಂತ
ಪ್ರಯಾಣಿಕರಿದ್ದ ರೈಲಿನಲ್ಲಿ ರಾತ್ರಿ ವೇಳೆಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ತಕ್ಷಣ ಎಚ್ಚೆತ್ತುಕೊಂಡ ಪರಿಣಾಮ ಆಗಬಹುದಾಗಿದ್ದ ಭಾರಿ ದುರಂತವೊಂದು ತಪ್ಪಿದೆ.
2029 ರ ಚುನಾವಣೆಗೂ ಮುನ್ನ ಮಹಿಳಾ ಮೀಸಲಾತಿ, ಕರಡು ಮಸೂದೆಗೆ ಕೇಂದ್ರ ಸಚಿವ ಸಂಪುಟ ಅಸ್ತು
ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇಕಡಾ 33 ರಷ್ಟು ಸ್ಥಾನಗಳನ್ನು ಮೀಸಲಿಡುವ ಐತಿಹಾಸಿಕ ನಾರಿ ಶಕ್ತಿ ವಂದನ್ ಅಧಿನಿಯಮಕ್ಕೆ ಕೇಂದ್ರ ಸಚಿವ ಸಂಪುಟವು ಅನುಮೋದನೆ ನೀಡಿದೆ. ಈ ನಿರ್ಧಾರವು ಭಾರತೀಯ ರಾಜಕಾರಣದಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆಯನ್ನು ಹೆಚ್ಚಿಸುವ ಮತ್ತು ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆಯಲ್ಲಿ ಅವರಿಗೆ ಸಮಾನ ಅವಕಾಶ ನೀಡುವ ಪ್ರಮುಖ ಹೆಜ್ಜೆಯಾಗಿದೆ.
ಅಂತಿಮ ಒಪ್ಪಂದಕ್ಕೆ ಬರುವವರೆಗೂ ಅಮೆರಿಕದ ಮಿಲಿಟರಿ ಇರಾನ್ ಸುತ್ತಮುತ್ತ ಇರಲಿವೆ: ಡೊನಾಲ್ಡ್ ಟ್ರಂಪ್
ವಾಶಿಂಗ್ಟನ್: ಅಮೆರಿಕ-ಇರಾನ್ ಎರಡು ವಾರಗಳ ಕದನ ವಿರಾಮ ಘೋಷಿಸಿದೆ. ಈ ಮಧ್ಯೆ ಎರಡು ದೇಶಗಳು ಅಂತಿಮ ಒಪ್ಪಂದಕ್ಕೆ ಬರುವವರೆಗೂ ಅಮೆರಿಕಾ ಪಡೆಗಳು ಇರಾನ್ ಸುತ್ತಮುತ್ತ ಇರಲಿವೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಈ ಕುರಿತು ಟ್ರೂತ್ ಸೋಶಿಯಲ್ ನಲ್ಲಿ ಪೋಸ್ಟ್ ಮಾಡಿರುವ ಡೊನಾಲ್ಡ್ ಟ್ರಂಪ್, ಅಂತಿಮ ಒಪ್ಪಂದಕ್ಕೆ ಎರಡು ದೇಶಗಳು ತಲುಪುವವರೆಗೆ ಅಮೆರಿಕಾ ಪಡೆಗಳು ಇರಾನ್ ಸುತ್ತಮುತ್ತ ಇರಲವೆ ಎಂದು ಹೇಳಿದ್ದಾರೆ. ಎಲ್ಲಾ ಅಮೆರಿಕಾ ನೌಕೆಗಳು, ವಿಮಾನಗಳು ಮತ್ತು ಸೈನಿಕರು, ಆಯುಧಗಳು ಈಗಾಗಲೇ ದುರ್ಬಲಗೊಂಡಿರುವ ಶತ್ರುವನ್ನು ಸಂಪೂರ್ಣವಾಗಿ ನಾಶಪಡಿಸುವ ಗುರಿಯೊಂದಿಗೆ ನಿಜವಾದ ಒಪ್ಪಂದ ಸಂಪೂರ್ಣವಾಗಿ ಪಾಲನೆಯಾಗುವವರೆಗೆ ಇರಾನ್ ಮತ್ತು ಅದರ ಸುತ್ತಮುತ್ತಲಲ್ಲಿ ಉಳಿಯಲಿವೆ ಎಂದು ಟ್ರಂಪ್ ಹೇಳಿದ್ದಾರೆ. ತಮ್ಮ ಪೋಸ್ಟ್ನಲ್ಲಿ ಟ್ರಂಪ್, ಹಾರ್ಮುಝ್ ಜಲಸಂಧಿ ಸಂಪೂರ್ಣವಾಗಿ ಕಾರ್ಯನಿರ್ವಹಿಸಲಿದೆ ಮತ್ತು ಕದನ ವಿರಾಮದ ಷರತ್ತುಗಳ ಭಾಗವಾಗಿ ದೇಶವು ಯಾವುದೇ ಪರಮಾಣು ಶಸ್ತ್ರಾಸ್ತ್ರಗಳನ್ನು ಅಭಿವೃದ್ಧಿಪಡಿಸುವುದಿಲ್ಲ ಎಂದು ಭರವಸೆ ನೀಡಲಾಗಿತ್ತು ಎಂದು ಇರಾನ್ಗೆ ನೆನಪಿಸಿದ್ದಾರೆ. ಈ ಷರತ್ತುಗಳ ಉಲ್ಲಂಘನೆಯು ದೊಡ್ಡಮಟ್ಟದ ದಾಳಿಗೆ ಕಾರಣವಾಗಬಹುದು ಎಂದು ಹೇಳಿದ್ದಾರೆ. ಯಾವುದೇ ಕಾರಣಕ್ಕೆ ಅಂತಿಮ ಒಪ್ಪಂದ ನಡೆಯದಿದ್ದರೆ, ಹೆಚ್ಚು ಅಸಂಭವವಾಗಿದ್ದರೆ ಗುಂಡಿನ ದಾಳಿ ಪ್ರಾರಂಭವಾಗುತ್ತದೆ. ಅದು ಯಾರೂ ಹಿಂದೆಂದೂ ನೋಡಿರದಷ್ಟು ದೊಡ್ಡಮಟ್ಟದಲ್ಲಿ ನಡೆಯಲಿದೆ ಎಂದು ಟ್ರಂಪ್ ಪೋಸ್ಟ್ ಮಾಡಿದ್ದಾರೆ.
IPL 2026 | GTಗೆ ರೋಚಕ ಜಯ: ಹೊಸ ಇತಿಹಾಸ ಬರೆದ ಜೋಸ್ ಬಟ್ಲರ್
ಮುಂಬೈ: ಗುಜರಾತ್ ಟೈಟನ್ಸ್ ತಂಡದ ಬ್ಯಾಟರ್ ಜೋಸ್ ಬಟ್ಲರ್ ಅವರು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಟಿ20 ಕ್ರಿಕೆಟ್ ನ 600ನೇ ಸಿಕ್ಸರ್ ಬಾರಿಸುವ ಮೂಲಕ ಐಪಿಎಲ್ ನಲ್ಲಿ ಇತಿಹಾಸ ಸೃಷ್ಟಿಸಿದ್ದಾರೆ. ಈ ಮೈಲುಗಲ್ಲು ದಾಟಿದ ಐದನೇ ಆಗಿ ಇಂಗ್ಲೆಂಡ್ ನ ಸ್ಟಾರ್ ಬ್ಯಾಟರ್ ಸೇರ್ಪಡೆಯಾಗಿದ್ದಾರೆ. ಕ್ರಿಸ್ ಗೇಲ್ (1056), ಕಿರನ್ ಪೋಲಾರ್ಡ್ (981), ಆಂಡ್ರೆ ರಸೆಲ್ (784) ಮತ್ತು ನಿಕೊಲಸ್ ಪೂರನ್ (712) ಈ ಮೈಲುಗಲ್ಲು ದಾಟಿದ ಇತರ ನಾಲ್ವರು ಆಟಗಾರರು. ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಬಟ್ಲರ್ ಐದು ಸಿಕ್ಸರ್ ಮತ್ತು ಮೂರು ಬೌಂಡರಿ ಸಹಿತ 192.59 ಸ್ಟ್ರೈಕ್ ರೇಟ್ನಲ್ಲಿ ಕೇವಲ 27 ಎಸೆತಗಳಲ್ಲಿ 52 ರನ್ ಸಿಡಿಸಿದರು. ಇವರ ಐದು ಸಿಕ್ಸರ್ಗಳು ಮೊದಲ ಆರು ಓವರ್ ಗಳಲ್ಲಿ ಬಂದಿದ್ದು, ಆರಂಭಿಕ ಬ್ಯಾಟರ್ ಹೊರತುಪಡಿಸಿ ಇತರ ಆಟಗಾರರು ಆರು ಓವರ್ ಗಳೊಳಗೆ ಗಳಿಸಿದ ಎರಡನೇ ಗರಿಷ್ಠ ರನ್ ಇದಾಗಿದೆ. ಇದಕ್ಕೂ ಮುನ್ನ 2014ರ ಐಪಿಎಲ್ ನಲ್ಲಿ ಸುರೇಶ್ ರೈನಾ 25 ಎಸೆತಗಳಲ್ಲಿ 87 ರನ್ ಗಳಿಸಿದ್ದರು. ಈ ಅರ್ಧಶತಕದೊಂದಿಗೆ 16 ಪಂದ್ಯಗಳ ಬಳಿಕ ಮೊದಲ ಬಾರಿಗೆ ಟಿ20 ಅರ್ಧಶತಕ ಗಳಿಸಿದಂತಾಗಿದೆ. SA20 ಟೂರ್ನಿಯಲ್ಲಿ ಪ್ರಿಟೋರಿಯಾ ಕ್ಯಾಪಿಟಲ್ಸ್ ವಿರುದ್ಧ ಡರ್ಬನ್ ಸೂಪರ್ ಜೈಂಟ್ಸ್ ಪರ ಈ ವರ್ಷಾರಂಭದಲ್ಲಿ ಬಟ್ಲರ್ ಅರ್ಧಶತಕ ಗಳಿಸಿದ್ದರು. ಇತ್ತೀಚೆಗೆ ಮುಕ್ತಾಯವಾದ ಟಿ20 ವಿಶ್ವಕಪ್ ನಲ್ಲಿ ಎಂಟು ಇನ್ನಿಂಗ್ಸ್ ಗಳಲ್ಲಿ 10.87 ಸರಾಸರಿಯಲ್ಲಿ ಕೇವಲ 87 ರನ್ ಗಳಿಸಿದ್ದರು. ಐಪಿಎಲ್ ನ ಮೊದಲ ಮೂರು ಪಂದ್ಯಗಳಲ್ಲಿ ಬಟ್ಲರ್ 38.66 ಸರಾಸರಿಯಲ್ಲಿ 116 ರನ್ ಗಳಿಸಿದ್ದು, 156 ಸ್ಟ್ರೈಕ್ರೇಟ್ ಹೊಂದಿದ್ದಾರೆ. ಟಿ20 ಕ್ರಿಕೆಟ್ ನಲ್ಲಿ ಈ ವರ್ಷ ಅವರು 422 ರನ್ ಗಳನ್ನು 19 ಇನ್ನಿಂಗ್ಸ್ಗಳಲ್ಲಿ 23.44 ಸರಾಸರಿಯೊಂದಿಗೆ ಗಳಿಸಿದ್ದಾರೆ. ಇದರಲ್ಲಿ ಎರಡು ಅರ್ಧಶತಕ ಸೇರಿವೆ. ಸಾಯಿ ಸುದರ್ಶನ್ ಅಗ್ಗದ ಮೊತ್ತಕ್ಕೆ (12) ವಿಕೆಟ್ ಒಪ್ಪಿಸಿದರೂ, ಬಟ್ಲರ್ ಹಾಗೂ ಶುಭಮನ್ ಗಿಲ್ ಗುಜರಾತ್ ಟೈಟನ್ಸ್ಗೆ ಆಸರೆಯಾದರು. ವಾಷಿಂಗ್ಟನ್ ಸುಂದರ್ (32 ಎಸೆತಗಳಲ್ಲಿ 55) ಅವರ ಉಪಯುಕ್ತ ಕೊಡುಗೆಯೊಂದಿಗೆ ಜಿಟಿ 20 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 210 ರನ್ ಗಳಿಸಿತು. ಡೆಲ್ಲಿ ಕ್ಯಾಪಿಟಲ್ಸ್ ಪರ ಕೆ.ಎಲ್. ರಾಹುಲ್ 52 ಎಸೆತಗಳಲ್ಲಿ 92 ರನ್ ಸಿಡಿಸಿದರೂ, ಒಂದು ರನ್ ಅಂತರದ ಸೋಲು ಅನುಭವಿಸಬೇಕಾಯಿತು. 20 ಎಸೆತಗಳಲ್ಲಿ 41 ರನ್ ಸಿಡಿಸಿದ ಡೇವಿಡ್ ಮಿಲ್ಲರ್ ಕೊನೆಯ ಎಸೆತದವರೆಗೂ ಹೋರಾಟ ಮುಂದುವರಿಸಿದರು.
Chikkamagaluru | ಪತಿಯ ಕೊಳೆತ ಮೃತದೇಹದೊಂದಿಗೆ 10 ದಿನಗಳನ್ನು ಕಳೆದ ಮಾನಸಿಕ ಅಸ್ವಸ್ಥ ಪತ್ನಿ
ಕೊಟ್ಟಿಗೆಹಾರದಲ್ಲೊಂದು ಕರುಣಾಜನಕ ಘಟನೆ
ಚುನಾವಣೆಗೆ ಮುನ್ನ ತಮಿಳುನಾಡು ಮುಖ್ಯಕಾರ್ಯದರ್ಶಿ, ಡಿಜಿಪಿ ದಿಢೀರ್ ವರ್ಗಾವಣೆ
ಚೆನ್ನೈ: ತಮಿಳುನಾಡು ವಿಧಾನಸಭೆಯ 234 ಸ್ಥಾನಗಳಿಗೆ ಈ ತಿಂಗಳ 23ರಂದು ಚುನಾವಣೆ ನಡೆಯಲಿದ್ದು, ಚುನಾವಣಾ ಆಯೋಗವು ಬುಧವಾರ ರಾಜ್ಯದ ಮುಖ್ಯ ಕಾರ್ಯದರ್ಶಿ ಎನ್. ಮುರುಗಾನಂದಂ, ಹಿರಿಯ ಅಧಿಕಾರಿ ಎಂ. ಸಾಯಿಕುಮಾರ್ ಹಾಗೂ ಡಿಜಿಪಿ ಎಸ್. ಡೇವಿಡ್ಸನ್ ದೇವಸಿರ್ವತಮ್ ಮತ್ತು 1995ರ ಐಪಿಎಸ್ ಬ್ಯಾಚ್ ಅಧಿಕಾರಿ ಸಂದೀಪ್ ಮಿತ್ತಲ್ ಅವರನ್ನು ದಿಢೀರನೇ ವರ್ಗಾಯಿಸಿದೆ. ಆಯೋಗದ ಕ್ರಮವನ್ನು ಆಡಳಿತಾರೂಢ ಡಿಎಂಕೆ ತೀವ್ರವಾಗಿ ಖಂಡಿಸಿದೆ. ರಾಜ್ಯದ ಆಡಳಿತ ಯಂತ್ರ ಡಿಎಂಕೆ ಸರ್ಕಾರದ ಪರವಾಗಿ ಕಾರ್ಯನಿರ್ವಹಿಸುತ್ತಿದೆ ಎಂಬ ಆರೋಪವನ್ನು ವಿರೋಧ ಪಕ್ಷಗಳು ಮಾಡುತ್ತಿದ್ದ ಹಿನ್ನೆಲೆ ಆಯೋಗ ಈ ಕ್ರಮ ಕೈಗೊಂಡಿದೆ. ಚುನಾವಣಾ ಆಯೋಗದ ಕಾರ್ಯದರ್ಶಿ ಲತಾ ತ್ರಿಪಾಠಿ ಈ ಕುರಿತು ಮಾಹಿತಿ ನೀಡಿದ್ದು, 1990ರ ಬ್ಯಾಚ್ ಐಎಎಸ್ ಅಧಿಕಾರಿ ಎಂ. ಸಾಯಿಕುಮಾರ್ ಅವರನ್ನು ಮುಖ್ಯ ಕಾರ್ಯದರ್ಶಿ ಹುದ್ದೆಗೆ ನಿಯೋಜಿಸಲಾಗಿದೆ. ನಿರ್ಗಮಿಸುತ್ತಿರುವ ಅಧಿಕಾರಿಗಳಿಗೆ ಚುನಾವಣಾ ಪ್ರಕ್ರಿಯೆ ಮುಕ್ತಾಯದವರೆಗೆ ಯಾವುದೇ ಚುನಾವಣಾ ಸಂಬಂಧಿತ ಕೆಲಸಗಳನ್ನು ನೀಡಬಾರದು ಎಂದು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಈ ಬದಲಾವಣೆಗಳು ತಕ್ಷಣದಿಂದ ಜಾರಿಗೆ ಬರಲಿದ್ದು, ಬುಧವಾರ ಸಂಜೆ 6 ಗಂಟೆಯೊಳಗೆ ಅನುಸರಣೆ ವರದಿ ಸಲ್ಲಿಸುವಂತೆ ಆದೇಶಿಸಲಾಗಿದೆ. ಚುನಾವಣಾ ಸಿದ್ಧತೆಯ ಅಂಗವಾಗಿ ಈ ಬದಲಾವಣೆಗಳನ್ನು ಮಾಡಲಾಗಿದೆ ಎಂದು ಆಯೋಗ ಸ್ಪಷ್ಟಪಡಿಸಿದೆ. ಈ ಮಧ್ಯೆ, ಚುನಾವಣಾ ಆಯೋಗದ ಕ್ರಮವನ್ನು ಕಟುವಾಗಿ ಟೀಕಿಸಿರುವ ಮುಖ್ಯಮಂತ್ರಿ ಎಂ. ಕೆ. ಸ್ಟಾಲಿನ್, ಚುನಾವಣಾ ಆಯೋಗವನ್ನು ಬಿಜೆಪಿಯ ಶಾಖೆ ಎಂದು ಲೇವಡಿ ಮಾಡಿದ್ದಾರೆ. ಇಂಥ ನಡೆಗಳಿಂದ ಡಿಎಂಕೆ ಗೆಲುವನ್ನು ತಡೆಯಲಾಗದು. ಈ ಅಧಿಕಾರಿಗಳನ್ನು ವರ್ಗಾಯಿಸುವ ಮೂಲಕ ನೀವು ಯಾರಿಗೆ ನೆರವಾಗಲು ಬಯಸಿದ್ದೀರಿ? ಎಂದು ಸ್ಟಾಲಿನ್ ಪ್ರಶ್ನಿಸಿದ್ದಾರೆ.
Gold Rate April 9: ಚಿನ್ನ - ಬೆಳ್ಳಿ ಬೆಲೆಯಲ್ಲಿ ಭರ್ಜರಿ ಇಳಿಕೆ: ಬಂಗಾರ ಖರೀದಿದಾರರಿಗೆ ಸಂತೋಷದ ಸುದ್ದಿ
Gold Rate April 9: ಚಿನ್ನ ಮತ್ತು ಬೆಳ್ಳಿ ಪ್ರಿಯರಿಗೆ ಗುರುವಾರ ಸಂತೋಷದ ದಿನವಾಗಿದೆ. ಕಳೆದ ಎರಡು ದಿನಗಳಿಂದಲೂ ಚಿನ್ನ ಮತ್ತು ಬೆಳ್ಳಿಯ ಬೆಲೆಯು ಹೆಚ್ಚಾಗುತ್ತಿತ್ತು. ಇದೀಗ ಗುರುವಾರ ಬಂಗಾರ ಮತ್ತು ಬೆಳ್ಳಿ ಬೆಲೆಯು ಭರ್ಜರಿ ಇಳಿಕೆಯಾಗಿದೆ. ಇದು ಬಂಗಾರ ಪ್ರಿಯರಲ್ಲಿ ಸಂತೋಷವನ್ನುಂಟು ಮಾಡಿದೆ. ಏಪ್ರಿಲ್ 9ರ ಗುರುವಾರ ಚಿನ್ನ ಮತ್ತು ಬೆಳ್ಳಿಯ ಬೆಲೆ ಎಷ್ಟಾಗಿದೆ ಎನ್ನುವ
ಸರಣಿ ಅವಾಂತರಗಳಿಂದ ಎಚ್ಚೆತ್ತುಕೊಂಡ ಅರಣ್ಯ ಇಲಾಖೆ : ಚಾರಣಿಗರ ಸುರಕ್ಷತೆಗಾಗಿ ಟ್ರ್ಯಾಕಿಂಗ್ ಆ್ಯಪ್!
ಚಾರಣಿಗರ ಸುರಕ್ಷತೆಗಾಗಿ ಪ್ರಮಾಣಿತ ಮಾನದಂಡ ರೂಪಿಸಲು ಮತ್ತು ಟ್ರ್ಯಾಕಿಂಗ್ ಆಪ್ ಅಭಿವೃದ್ಧಿಪಡಿಸಲು ಅರಣ್ಯ ಸಚಿವ ಈಶ್ವರ ಖಂಡ್ರೆ ಸೂಚನೆ ನೀಡಿದ್ದಾರೆ. ರಾಜ್ಯದಲ್ಲಿ ಚಾರಣಕ್ಕೆ ಸಂಬಂಧಿಸಿದಂತೆ ಸರಣಿ ಅವಾಂತರಗಳು ನಡೆದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಈ ಎಚ್ಚರಿಕೆಯ ಕ್ರಮವನ್ನು ಕೈಗೊಂಡಿದೆ. ಇತ್ತೀಚಿನ ದಿನಗಳಲ್ಲಿ ರಾಜ್ಯದಲ್ಲಿ ಚಾರಣದ ಸಂದರ್ಭದಲ್ಲಿ ಎರಡು ಪ್ರಕರಣಗಳು ನಡೆದಿವೆ. ಚಾರಣದ ವೇಳೆ ನಾಪತ್ತೆಯಾಗಿದ್ದ ಶರಣ್ಯ ಪತ್ತೆಯಾಗಿದ್ದಾರೆ. ಆದರೆ ಮತ್ತೋರ್ವ ಬಾಲಕಿ ಚಿಕ್ಕಮಗಳೂರಿನಲ್ಲಿ ನಾಪತ್ತೆಯಾಗಿದ್ದು, ಪತ್ತೆ ಕಾರ್ಯ ಮುಂದುವರಿದಿದೆ. ಮತ್ತಷ್ಟು ವಿವರ ಇಲ್ಲಿದೆ.
ಗಾಝಾದಲ್ಲಿ ಇಸ್ರೇಲ್ ನಿಂದ ಡ್ರೋನ್ ದಾಳಿ: Aljazeera ವರದಿಗಾರ ಮುಹಮ್ಮದ್ ವಿಶಾಹ್ ಮೃತ್ಯು
ಗಾಝಾ, ಎ. 9: ಗಾಝಾದಲ್ಲಿ ಇಸ್ರೇಲ್ ಪಡೆಗಳು ನಡೆಸಿದ ಡ್ರೋನ್ ದಾಳಿಯಲ್ಲಿ Aljazeeraದ ವರದಿಗಾರ ಮುಹಮ್ಮದ್ ವಿಶಾಹ್ ಮೃತಪಟ್ಟಿದ್ದಾರೆ. ಈ ಘಟನೆಯನ್ನು Aljazeera ತೀವ್ರವಾಗಿ ಖಂಡಿಸಿದ್ದು, ಯುದ್ಧ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸುವ ಪತ್ರಕರ್ತರ ಸುರಕ್ಷತೆಯ ಕುರಿತು ಕಳವಳ ವ್ಯಕ್ತಪಡಿಸಿದೆ. ಮಾಧ್ಯಮ ಸಂಘಟನೆಗಳು ಪತ್ರಕರ್ತರ ರಕ್ಷಣೆಗೆ ತುರ್ತು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿವೆ.
Gold Rate Fall: ಏರಿದಷ್ಟೇ ವೇಗವಾಗಿ ಕುಸಿದ ಚಿನ್ನದ ಬೆಲೆ: ಲೆಬನಾನ್ ಮೇಲೆ ಇಸ್ರೇಲ್ ದಾಳಿ ಪರಿಣಾಮ!
ಚಿನ್ನ ಬೆಳ್ಳಿ ದರದಲ್ಲಿ ಇಂದು ಕುಸಿತ ಕಂಡುಬಂದಿದೆ. ನಿನ್ನೆ ಕದನ ವಿರಾಮ ಘೋಷಣೆಯಾದ ಪರಿಣಾಮ ಭಾರೀ ಡಿಮ್ಯಾಂಡ್ ಸೃಷ್ಟಿಯಾಗಿದ್ದ ಲೋಹಗಳು, ಇಂದು ದಿಢೀರ್ ಇಳಿಕೆಯಾಗಿದೆ.
ಭಾರತದ ಜನಗಣತಿಗೆ ಒಂದು ವಿಶಿಷ್ಟವಾದ ಇತಿಹಾಸವಿದೆ. ಜಗತ್ತಿನ ಬೃಹತ್ ಜನಸಂಖ್ಯೆಯುಳ್ಳ ದೇಶವಾದ ಭಾರತದ ಜನಗಣತಿ ದೇಶದ ಜನಸಂಖ್ಯೆಯ ದೃಷ್ಟಿಯಿಂದ ಮಾತ್ರವಲ್ಲದೆ ಜನರ ಆರ್ಥಿಕ, ಶೈಕ್ಷಣಿಕ, ಸಾಮಾಜಿಕ, ಔದ್ಯೋಗಿಕ ಸ್ಥಿತಿಗತಿಯನ್ನು ಅರಿಯುವ ದೃಷ್ಟಿಯಿಂದಲೂ ಭಾರೀ ಮಹತ್ವವನ್ನು ಪಡೆದಿದೆ. ಭಾರತದ ಸುದೀರ್ಘ ಅಭಿವೃದ್ಧಿ ದರ,ಜನಸಂಖ್ಯಾ ಬೆಳವಣಿಗೆ ದರದ ಅರಿವು ಭಾರತಕ್ಕೆ ಅತೀ ಮುಖ್ಯವಾಗಿದ್ದರೆ ಈ ಅಂಕಿ ಅಂಶಗಳ ಕುತೂಹಲ ಇತರ ದೇಶಗಳಿಗೂ ಇವೆ. ಆರ್ಥಿಕ ಸಂಪನ್ಮೂಲಗಳ ಬಳಕೆ, ಅವುಗಳ ಫಲಿತಾಂಶ, ದೇಶದ ಪ್ರಜೆಗಳ ಆರ್ಥಿಕ, ಶೈಕ್ಷಣಿಕ, ಸಾಮಾಜಿಕ ಬೆಳವಣಿಗೆ ದರ, ಸರಕಾರ ಅನುಷ್ಠಾನ ಮಾಡಿದ ವಿವಿಧ ಯೋಜನೆಗಳ ಪರಿಣಾಮ, ಸಂಪನ್ಮೂಲಗಳ ಬಳಕೆ ಮತ್ತು ಅವು ಜನರ ಬದುಕಿನ ಮೇಲೆ ಬೀರಿದ ಪರಿಣಾಮ, ದೀರ್ಘಕಾಲಿಕ ಯೋಜನೆಗಳ ಅನುಷ್ಠಾನ ಮತ್ತು ಬೆಳವಣಿಗೆ ದರ, ಜನರು ಮತ್ತು ತಾಂತ್ರಿಕ ಮತ್ತು ವೈಜ್ಞಾನಿಕ ಆವಿಷ್ಕಾರಗಳ ಅನುಷ್ಠಾನ, ಪಂಚವಾರ್ಷಿಕ ಯೋಜನೆಗಳ ಪರಿಣಾಮ, ಮುಂಗಡ ಪತ್ರ ಮತ್ತು ಅವುಗಳ ಫಲ, ರೂಪಿಸಬೇಕಾದ ಭವಿಷ್ಯದ ಯೋಜನೆಗಳು, ದೇಶದ ಆದ್ಯತೆಗಳು, ಸಾಮಾಜಿಕ ಪಲ್ಲಟ, ಸಾರಿಗೆ-ಸಂಪರ್ಕ ಬೆಳವಣಿಗೆ ದರ, ಕುಟುಂಬ ಮತ್ತು ವೈಯಕ್ತಿಕ ಅಂಕಿಅಂಶಗಳ ಸಂಗ್ರಹ ಒಟ್ಟಾರೆಯಾಗಿ ವೈಯಕ್ತಿಕ ಮತ್ತು ಸಾಮೂಹಿಕ ಅಭಿವೃದ್ಧಿ ದತ್ತಾಂಶಗಳನ್ನು ಪಡೆಯಲು ಈ ಜನಗಣತಿ ಎನ್ನುವುದು ಅತೀ ಅಗತ್ಯವಾದ ಮಾನದಂಡವಾಗಿದೆ. ಭಾಷೆ, ಲಿಂಗ, ವಯೋಮಾನದ ಆಧಾರದಲ್ಲಿ ಜನಸಂಖ್ಯೆ ಹರಿವು ಅರಿಯಲು ಕೂಡಾ ಈ ಜನಗಣತಿ ಅತೀ ಮುಖ್ಯ. ನಗರೀಕರಣ, ಮೂಲಸೌಕರ್ಯ ಅಳವಡಿಕೆ, ಚುನಾವಣಾ ಕ್ಷೇತ್ರ ಪುನರ್ರಚನೆ ಕಾರ್ಯಕ್ಕೂ ಜನಗಣತಿ ಮೂಲಾಧಾರವಾಗಲಿದೆ. ಭಾರತದಂತಹ ಬೃಹತ್ ದೇಶದಲ್ಲಿ ಜನಗಣತಿ ಕಾರ್ಯ ಆಗಾಗ ಅನುಷ್ಠಾನ ಮಾಡುವುದು ಕಷ್ಟ ಎಂದು ಅರಿತಿದ್ದ ಬ್ರಿಟಿಷರು ಅಂದೇ 10 ವರ್ಷಗಳಿಗೊಮ್ಮೆ ಜನಗಣತಿ ಪ್ರಕ್ರಿಯೆ ಜಾರಿಗೊಳಿಸಿದ್ದರು. ಇದು ಸ್ವಾತಂತ್ರ್ಯಾ ನಂತರವೂ ಅದೇ ರೀತಿ ಮುಂದುವರಿಯಿತು. ಜನಗಣತಿ ಇತಿಹಾಸ ಬ್ರಿಟಿಷ್ ಸರಕಾರ ಮೊದಲ ಬಾರಿಗೆ 1824ರಲ್ಲಿ ಭಾರತದ ಅಲಹಾಬಾದ್ನಲ್ಲಿ ಜನಗಣತಿ ಕಾರ್ಯವನ್ನು ಕೈಗೆತ್ತಿಕೊಂಡಿತು. ಅಂದಿನ ವೈಸ್ರಾಯ್ ಆಗಿದ್ದ ಹೆನ್ರಿ ವಾಲ್ಟರ್ 1830ರಲ್ಲಿ ಢಾಕಾದಲ್ಲಿ ಜನಗಣತಿ ಕಾರ್ಯ ನಡೆಸಿದರು. ಆದರೆ ಇದು ಸೀಮಿತ ಪ್ರದೇಶಗಳ ಅಂಕಿ ಅಂಶಗಳ ಸಂಗ್ರಹದ ಗುರಿಯನ್ನು ಹೊಂದಿತ್ತು. ಇದನ್ನು ಮತ್ತಷ್ಟು ವ್ಯವಸ್ಥಿತವಾಗಿ 1872ರಲ್ಲಿ ವೈಸ್ರಾಯ್ ಹೆನ್ರಿ ಮೇಯೋ ಜಾರಿಗೆ ತಂದರು. ಆದರೆ ಇದು ಏಕಕಾಲದಲ್ಲಿ ನಡೆದ ಜನಗಣತಿ ಆಗಿರಲಿಲ್ಲ. ಭಾರತದಲ್ಲಿ ಬ್ರಿಟಿಷ್ ಅಧಿಕಾರಿ ಡಬ್ಲ್ಯುಡಬ್ಲ್ಯು ಪ್ಲೋಡರ್ 1881ರಲ್ಲಿ ಅವಿಭಜಿತ ಭಾರತದಲ್ಲಿನ ಬ್ರಿಟಿಷ್ ಇಂಡಿಯಾದ ವ್ಯಾಪ್ತಿಯಲ್ಲಿ ಮೊದಲ ಬಾರಿಗೆ ಏಕಕಾಲದಲ್ಲಿ ಜನಗಣತಿ ಕಾರ್ಯವನ್ನು ನಡೆಸಿದರು. ಇದು ಇಂದಿನ ದಶವಾರ್ಷಿಕ ಜನಗಣತಿ ಕಾರ್ಯಕ್ಕೆ ಅಡಿಗಲ್ಲಾಯಿತು. ಅಲ್ಲದೆ ದೇಶಾದ್ಯಂತ ಏಕಕಾಲದಲ್ಲಿ ನಡೆಯುವ ಜನಗಣತಿಗೆ ಇದು ನಾಂದಿಯನ್ನಾಡಿತು. ಆದುದರಿಂದ ಭಾರತದ ಪೂರ್ಣಪ್ರಮಾಣದ ಏಕಕಾಲದ ಜನಗಣತಿ ಕಾರ್ಯ 1881 ರಿಂದ ಮೊದಲ್ಗೊಂಡಿತು. ಆದರೂ 1872ರ ಜನಗಣತಿಯನ್ನು ಮೊದಲ ಜನಗಣತಿ ಎಂದು ಪರಿಗಣಿಸಲಾಗಿದೆ. ಈ ಹಿನ್ನೆಲೆಯಲ್ಲಿ ಇದೀಗ ಭಾರತದ ಮುಂದಿರುವ ಜನಗಣತಿ 16ನೇ ಜನಗಣತಿಯಾಗಿದೆ. 2026-27ರ ಜನಗಣತಿಯ ವಿಶೇಷತೆ ಇದು ದೇಶದ 16ನೇ ಮತ್ತು ಸ್ವಾತಂತ್ಯಾ ನಂತರದ 8ನೇ ಜನಗಣತಿ. 1881ರಿಂದ ನಿರಂತರ 10 ವರ್ಷಗಳಿಗೊಮ್ನೆ ನಡೆಯುತ್ತಿದ್ದ ಭಾರತದ ಜನಗಣತಿ 2021ರಲ್ಲಿ ಕೋವಿಡ್ ಕಾರಣದಿಂದ ಸಕಲ ಸಿದ್ಧತೆಯ ಹೊರತಾಗಿಯೂ ನಡೆಯಲಿಲ್ಲ. ಅಧಿಸೂಚನೆ, ಸಿಬ್ಬಂದಿ ನೇಮಕ, ಮನೆಪಟ್ಟಿಗಾಗಿ 2020ರಲ್ಲಿ ವಿವಿಧ ಹಂತಗಳಲ್ಲಿ ತರಬೇತಿ ನಡೆದರೂ ಅದೇ ವರ್ಷದ ಮಾರ್ಚ್ ತಿಂಗಳಲ್ಲಿ ಘೋಷಣೆಯಾದ ಲಾಕ್ಡೌನ್ ಕಾರಣದಿಂದ ಜನಗಣತಿ ಕಾರ್ಯ ಮುಂದೂಡಲ್ಪಟ್ಟಿತು. ಇದೀಗ ಮುಂದೂಡಲ್ಪಟ್ಟ ಜನಗಣತಿ 2027 ರಲ್ಲಿ ನಡೆಸಲು ಅಧಿಸೂಚನೆ ಪ್ರಕಟವಾಗಿದ್ದು ಪೂರ್ವಭಾವಿಯಾಗಿ ನಡೆಯುವ ಮನೆಪಟ್ಟಿ ಕಾರ್ಯಕ್ಕೆ ಕ್ಷಣಗಣನೆ ಆರಂಭವಾಗಿದೆ. ಸಾಮಾನ್ಯವಾಗಿ ಜನಗಣತಿ ಕಾರ್ಯ ಎರಡು ಹಂತಗಳಲ್ಲಿ ನಡೆಯುತ್ತದೆ. ಜನಗಣತಿಗೆ ಮೊದಲು ಮನೆಪಟ್ಟಿ ಕಾರ್ಯ ಒಂದು ವರ್ಷ ಮೊದಲೇ ನಡೆಯುವುದು ರೂಢಿ. ಇದೀಗ 2027ರ ಜನಗಣತಿಯ ಮನೆಪಟ್ಟಿ ಕಾರ್ಯ ಇದೇ ವರ್ಷದ ಎಪ್ರಿಲ್ 16ರಿಂದ ಮೇ 15ರ ವರೆಗೆ ಕರ್ನಾಟಕ ರಾಜ್ಯದಲ್ಲಿ ನಡೆಯಲಿದೆ. ಇದಕ್ಕಾಗಿ ಮೊಬೈಲ್ ಆ್ಯಪ್ ಮೂಲಕ ಗಣತಿದಾರರು ಮಾಹಿತಿ ಸಂಗ್ರಹಿಸಲಿದ್ದಾರೆ. ಈ ಸಮಯದಲ್ಲಿ ಮನೆಮನೆಗೆ ಬರುವ ಗಣತಿದಾರರು ಮನೆ, ಕಟ್ಟಡಗಳಿಗೆ ಸಂಖ್ಯೆ ನೀಡಿದ ಬಳಿಕ 34 ಪ್ರಧಾನ ಪ್ರಶ್ನೆಗಳ ಆಧಾರದಲ್ಲಿ ಮಾಹಿತಿಗಳನ್ನು ಗಣತಿ ಆ್ಯಪ್ ಮೂಲಕ ದಾಖಲಿಸಲಿದ್ದಾರೆ. ಮನೆ, ಕಟ್ಟಡ, ಕುಟುಂಬ, ಮೂಲಭೂತ ಸೌಲಭ್ಯಗಳ ಕುರಿತಾದ ಈ ಪ್ರಶ್ನೆಗಳಿಗೆ ಆಫ್ಲೈನ್ ಸ್ಥಿತಿಯಲ್ಲೂ ಮಾಹಿತಿ ದಾಖಲಿಸಲು ಅವಕಾಶ ನೀಡಲಾಗಿದೆ. ಗಣತಿದಾರರು ಮನೆ, ಕಟ್ಟಡ, ಆಶ್ರಮ, ವಸತಿನಿಲಯ, ಬಂದಿಖಾನೆ, ಶಿಕ್ಷಣ ಸಂಸ್ಥೆಗಳು, ಕೈಗಾರಿಕೆ ಇತ್ಯಾದಿಗಳಿಗೆ ಭೇಟಿ ನೀಡಿದಾಗ ಸಂಬಂಧಿಸಿದವರು ಪೂರಕ ಮಾಹಿತಿ ನೀಡುವುದು ಕಡ್ಡಾಯವಾಗಿದೆ. ಗಣತಿದಾರರು ದಾಖಲಿಸಿದ ಮಾಹಿತಿಗಳನ್ನು ಪರಿಶೀಲಿಸಿ ಮೇಲ್ವಿಚಾರಕರು ಅನುಮೋದಿಸಲಿದ್ದಾರೆ. ಈ ಹಂತದಲ್ಲಿ ಗಣತಿದಾರರಿಗೆ ಸೌಜನ್ಯದೊಂದಿಗೆ ಖಚಿತ ಮಾಹಿತಿ ನೀಡಿ ಜಗತ್ತಿನ ಅತೀ ದೊಡ್ಡ ಗಣತಿ ಕಾರ್ಯಕ್ಕೆ ಸಹಕರಿಸಬೇಕಾದುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಸ್ವಯಂ ಗಣತಿಗೆ ಅವಕಾಶ ಸ್ವಯಂ ಗಣತಿ ಈ ಬಾರಿಯ ಜನಗಣತಿಯ ವೈಶಿಷ್ಟ್ಯಗಳಲ್ಲಿ ಒಂದಾಗಿದೆ. se.census. gov.in ಮೂಲಕ ದೇಶದ ಪ್ರತಿಯೊಂದು ಕುಟುಂಬದ ಮುಖ್ಯಸ್ಥನೂ ತನ್ನ ಮಾಹಿತಿಗಳನ್ನು ಸ್ವಯಂ ಆಗಿ ದಾಖಲಿಸಬಹುದು. ದಾಖಲಾತಿಯ ಬಳಿಕ ದೊರೆಯುವ SE ID - ಗಣತಿ ಗುರುತಿನ ಸಂಖ್ಯೆಯನ್ನು ಮನೆಗೆ ಬರುವ ಗಣತಿದಾರರೊಂದಿಗೆ ಹಂಚಿಕೊಳ್ಳುವುದು ಕಡ್ಡಾಯವಾಗಿದೆ. ಸ್ವಯಂ ಗಣತಿ ಕಾರ್ಯ ಈಗಾಗಲೇ ಆರಂಭವಾಗಿದ್ದು ಎಪ್ರಿಲ್ 1ರಿಂದ ಎಪ್ರಿಲ್ 15ರ ವರೆಗೆ ಅವಕಾಶ ನೀಡಲಾಗಿದೆ. ಸ್ಯಯಂಗಣತಿಯಲ್ಲಿ ತಮ್ಮ ತಮ್ಮ ಮನೆ ಯಾ ಕಟ್ಟಡವನ್ನು ಜಿಯೋ ಮ್ಯಾಪ್ ಮೂಲಕ ಗುರುತಿಸಬೇಕಾಗಿದ್ದು ಇದು ಸಾಮಾನ್ಯ ಜನರಿಗೆ ಸ್ವಲ್ಪ ಕ್ಲಿಷ್ಟಕರವಾಗಿದ್ದು ಇದನ್ನು ಸರಳೀಕರಿಸುವುದು ಅಗತ್ಯ. ಕುತೂಹಲ : ಈ ವರೆಗೂ ಪ್ರತೀ ಹತ್ತು ವರ್ಷಗಳಿಗೊಮ್ಮೆ ನಡೆಯುತ್ತಿದ್ದ ಜನಗಣತಿ ಈ ಬಾರಿ ಹಿಂದಿನ 2001, 2011, 2021ರ ಸರಣಿ ವರ್ಷಗಳನ್ನು ಮೀರಿ 2027ರಲ್ಲಿ ನಡೆಯಲಿದೆ. ಈ ಪ್ರಕಾರ ಮುಂದಿನ ಜನಗಣತಿ ನಿಜವಾಗಿಯೂ 2031ರಲ್ಲಿ ನಡೆಯಬೇಕಾಗಿತ್ತು. ಆದರೆ ಮತ್ತೆ ನಾಲ್ಕೇ ವರ್ಷಗಳಲ್ಲಿ ಇಂತಹ ಬೃಹತ್ ಕಾರ್ಯಕ್ಕೆ ಸರಕಾರ ಮುಂದಾಗುವುದೇ ಅಥವಾ ಶತಮಾನಗಳಿಂದ ನಡೆದು ಬಂದ ಸರಣಿ ವರ್ಷಗಳ ಮುಂದುವರಿಕೆ ಗತಿ ಬದಲಾಗಿ ಹೊಸ 27, 37, 47ರ ಸರಣಿ ಆರಂಭವಾಗುವುದೇ ಕಾಲವೇ ನಿರ್ಧರಿಸಬೇಕು.
ಹೊರ್ಮುಜ್ನಲ್ಲಿ ಜಲ ಮೈನ್ ನಿಂದ ಸುರಕ್ಷತೆಗಾಗಿ ಹಡುಗಗಳಿಗೆ ಹೊಸ ರೂಟ್ ಮ್ಯಾಪ್ ನೀಡಿದ IRGC: ಯಾವ್ಯಾವ ಮಾರ್ಗ ಸೇಫ್?
ಮಧ್ಯಪ್ರಾಚ್ಯದಲ್ಲಿ ಕದನವಿರಾಮದ ಬೆನ್ನಲ್ಲೇ, ಒಪ್ಪಂದದ ಪ್ರಕಾರ ಹೊರ್ಮುಜ್ ಜಲಸಂಧಿಯನ್ನು ಹಡಗುಗಳ ಸಂಚಾರಕ್ಕೆ ಇರಾನ್ ಮುಕ್ತಗೊಳಿಸಿದೆ. ಈ ಬೆನ್ನಲ್ಲೇ, ಯುದ್ಧದ ಸಮಯದಲ್ಲಿ ಇಲ್ಲಿ ಅಳವಡಿಸಲಾಗಿದ್ದ ಸಮುದ್ರ ಮೈನ್ ಗಳನ್ನು ತಪ್ಪಿಸಿ ಸುರಕ್ಷಿತ ಪ್ರಯಾಣಕ್ಕಾಗಿ ಹಡಗುಗಳಿಗೆ ಹೊಸ ಮಾರ್ಗವನ್ನು ಸೂಚಿಸಿದ್ದು, ಈ ಮಾರ್ಗಗಳ ಮೂಲಕವೇ ಸಂಚರಿಸುವಂತೆ ತಿಳಿಸಿದೆ. ಆ ಮಾರ್ಗಗಳೇನು ಎಂಬ ಮಾಹಿತಿ ಇಲ್ಲಿದೆ..
ಬಾಗಲಕೋಟೆ ಉಪ ಚುನಾವಣೆ: ಬಿರುಸಿನ ಮತದಾನ
ಬಾಗಲಕೋಟೆ: ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದ ಎಚ್.ವೈ.ಮೇಟಿ ಅವರ ನಿಧನದಿಂದ ತೆರವಾದ ಸ್ಥಾನಕ್ಕೆ ಇಂದು ಉಪ ಚುನಾವಣೆ ಶಾಂತಿಯುತವಾಗಿ ಆರಂಭಗೊಂಡಿದೆ. 9 ಗಂಟೆ ವೇಳೆ 11.87 ಶೇ. ಮತದಾನವಾಗಿದೆ. ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಉಮೇಶ ಮೇಟಿ ಅವರು ತಿಮ್ಮಾಪೂರ ಗ್ರಾಮದ ಮತಗಟ್ಟೆ ಸಂಖ್ಯೆ 39ರಲ್ಲಿ ಮತದಾನ ಮಾಡಿದರು. ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ ಸರಕಾರಿ ಶಾಲೆ ನಂಬರ್ 4 ರಲ್ಲಿ ಹಕ್ಕು ಚಲಾಯಿಸಿದರು. ಬಾಗಲಕೋಟೆ ಮತ ಕ್ಷೇತ್ರದಲ್ಲಿ ಒಟ್ಟು 322 ಮತಗಟ್ಟೆಗಳಲ್ಲಿ ಪಿಂಕ್ ಹಾಗೂ ಯುವ ಮತದಾನ ಕೇಂದ್ರ ಗಮನ ಸೆಳೆಯುತ್ತಿದೆ. ಬೆಳಗಿನ ಜಾವದಿಂದಲೇ ಎಲ್ಲ ಮತಗಟ್ಟೆಗಳಲ್ಲಿ ಬಿರುಸಿನ ಮತದಾನ ಸಾಗಿದ್ದು, ಯುವ ಮತದಾರರು, ಮಹಿಳೆಯರು, ಹಿರಿಯ ನಾಗಕರಿಕರು ಹುಮ್ಮಸ್ಸಿನಿಂದ ಮತ ಕೇಂದ್ರಕ್ಕೆ ಆಗಮಿಸಿ ತಮ್ಮ ಹಕ್ಕು ಚಲಾಯಿಸುತ್ತಿದ್ದಾರೆ. ಚುನಾವಣೆಗೆ ಒಟ್ಟು 9 ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದಾರೆ. ಆಗಮಿಸಿ ತಮ್ಮ ಹಕ್ಕು ಚಲಾಯಿಸುತ್ತಿದ್ದಾರೆ.
Gruhalakshmi Guarantee Scheme: ಚುನಾವಣೆ ಸಮಯದಲ್ಲೇ ಗೃಹಲಕ್ಷ್ಮೀ ಸೇರಿ ಗ್ಯಾರಂಟಿ ಯೋಜನೆಗಳಿಗೆ ಸಂಕಷ್ಟ ಎದುರಾಗಿದ್ದು, ಈ ಯೋಜನೆಗಳ ಬಗ್ಗೆ ಭಾರತೀಯ ಚುನಾವಣಾ ಆಯೋಗವು ಪ್ರಶ್ನೆ ಮಾಡಿದೆ. ಈ ಸಂಬಂಧ ಪ್ರತಿಕ್ರಿಯೆ ನೀಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ವಿಷಯಕ್ಕೆ ಸಂಬಂಧಿಸಿದಂತೆ ಸ್ಪಷ್ಟನೆ ಕೊಟ್ಟಿದ್ದಾರೆ. ದಾವಣಗೆರೆ ಮತ್ತು ಬಾಗಲಕೋಟೆ ಜಿಲ್ಲೆಗಳಲ್ಲಿ ನಡೆಯುತ್ತಿರುವ ಉಪಚುನಾವಣೆಗಳ ಸಂದರ್ಭದಲ್ಲಿ ಭಾರತದ ಚುನಾವಣಾ ಆಯೋಗವು
ಮತಗಳನ್ನು ಕಸಿಯುವ ಈ ಆಟ ಎಲ್ಲಿಗೆ ತಲುಪಲಿದೆ?
ಎಸ್ಐಆರ್ನಲ್ಲಿ ಮತ ಅಳಿಸುವಿಕೆಗೆ ಗುರಿಯಾಗಿರುವವರು ಮುಸ್ಲಿಮರು. ಒಂದು ನಿರ್ದಿಷ್ಟ ಧರ್ಮದ ಆಧಾರದ ಮೇಲೆ ಮತದಾನದ ಹಕ್ಕಿನ ಮೇಲೆಯೇ ದಾಳಿ ಮಾಡಲಾಗುತ್ತಿದೆ. ಮತ್ತದು ಮೂರು ರೀತಿಯಲ್ಲಿ ನಡೆದಿದೆ. ಉತ್ತರ ಪ್ರದೇಶ, ರಾಜಸ್ಥಾನ, ಅಸ್ಸಾಂ, ಗುಜರಾತ್ ಮತ್ತು ಪಶ್ಚಿಮ ಬಂಗಾಳ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಫಾರ್ಮ್ 7 ಅನ್ನು ಮೋಸದಿಂದ ಬಳಸಿ ಮುಸ್ಲಿಮ್ ಮತದಾರರನ್ನು ತೆಗೆದುಹಾಕಲಾಗುತ್ತಿದೆ. ಈ ಬಗ್ಗೆ ‘ದಿ ಕ್ವಿಂಟ್’ ವರದಿ ಮಾಡಿದ್ದು, ಮುಸ್ಲಿಮರ ಮತದಾನದ ಹಕ್ಕಿನ ಮೇಲೆ ದಾಳಿ ಮಾಡಲಾಗುತ್ತಿರುವ ವಿಧಾನವನ್ನು ವಿವರಿಸಿದೆ. ಮುಸ್ಲಿಮ್ ಮತದಾರರ ಅಳಿಸುವಿಕೆಗೆ ಬಳಸಲಾಗಿರುವ ಮೂರು ವಿಧಾನಗಳ ಬಗ್ಗೆ ಕ್ವಿಂಟ್ ವಿವರಿಸಿದೆ ಮತ್ತು ಇವೇ ವಿಧಾನಗಳು ದೇಶಾದ್ಯಂತ ವಿಸ್ತರಿಸಬಹುದು ಎಂಬ ಆತಂಕವನ್ನು ಕೂಡ ಅದು ವರದಿಯಲ್ಲಿ ವ್ಯಕ್ತಪಡಿಸಿದೆ. ಇದನ್ನೆಲ್ಲ ನೋಡುತ್ತಿದ್ದರೆ, ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತದಲ್ಲಿ ಪ್ರಜಾಪ್ರಭುತ್ವದ ಕಥೆ ಏನಾಗುತ್ತಿದೆ ಎಂಬ ಪ್ರಶ್ನೆ ಮತ್ತೆ ಕಾಡುತ್ತದೆ. ಕ್ವಿಂಟ್ ವಿವರಿಸುವ ಪ್ರಕಾರ, ಮೊದಲ ವಿಧಾನವೆಂದರೆ ಫಾರ್ಮ್ 7. ರಾಜಸ್ಥಾನದ ಅಲ್ವರ್ನಲ್ಲಿ ಫಾರ್ಮ್ 7 ಅನ್ನು ಬಳಸಿಕೊಂಡು ನೂರಾರು ಮುಸ್ಲಿಮ್ ಮತದಾರರನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕಲು ಪ್ರಯತ್ನಿಸಲಾಗಿದೆ. ಫಾರ್ಮ್ 7 ಒಂದು ನಮೂನೆಯಾಗಿದ್ದು, ಅದರ ಮೂಲಕ ನೀವು ಯಾವುದೇ ಮತದಾರರ ಬಗ್ಗೆ ಪ್ರಶ್ನೆಗಳನ್ನು ಎತ್ತಬಹುದು. ಅಲ್ವರ್ನಲ್ಲಿ, ಈ ಫಾರ್ಮ್ ಅನ್ನು ಮುಸ್ಲಿಮ್ ಮತದಾರರನ್ನು ಗುರಿಯಾಗಿಸಲು ಬಳಸಲಾಗುತ್ತಿತ್ತು ಎಂಬುದು ಬಯಲಾಗಿದೆ. ಹೆಚ್ಚಿನ ದೂರುಗಳನ್ನು ಬಿಜೆಪಿಗೆ ಸಂಬಂಧಿಸಿದ ಜನರೇ ಸಲ್ಲಿಸಿದ್ದಾರೆ ಎಂದು ಹೇಳಲಾಗುತ್ತದೆ. ಅದೇ ರೀತಿ, ಉತ್ತರ ಪ್ರದೇಶದ ಚಂದೌಲಿಯಲ್ಲಿ ಬಿಎಲ್ಒ ಒಬ್ಬರಿಗೆ ಒಂದು ಅನಾಮಧೇಯ ಲಕೋಟೆ ಬರುತ್ತದೆ. 7 ಮುಸ್ಲಿಮ್ ಮತದಾರರನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕುವಂತೆ ಅದರಲ್ಲಿ ಸೂಚಿಸಲಾಗಿರುತ್ತದೆ. ಚಂದೌಲಿಯಲ್ಲಿಯೇ, ಆರು ಬಿಎಲ್ಒಗಳಿಗೆ ವಿಭಿನ್ನ ವಿಧಾನಗಳನ್ನು ಬಳಸಿಕೊಂಡು ಮುಸ್ಲಿಮ್ ಮತದಾರರನ್ನು ತೆಗೆದುಹಾಕಲು ಫಾರ್ಮ್ಗಳನ್ನು ನೀಡಲಾಯಿತು. ಈ ಫಾರ್ಮ್ಗಳಲ್ಲಿ ಕೆಲವು ಸಂಪೂರ್ಣವಾಗಿ ನಕಲಿಯಾಗಿವೆ ಎಂಬುದು ಕೂಡ ಬಯಲಾಗಿದೆ. ಫಾರ್ಮ್ಗಳನ್ನು ಯಾರ ಹೆಸರು ಬಳಸಿ ಭರ್ತಿ ಮಾಡಲಾಗಿತ್ತೋ ಆ ಜನರು ತಾವು ಅಂತಹ ಯಾವುದೇ ದೂರು ದಾಖಲಿಸಿಲ್ಲ ಎಂದು ಹೇಳಿದ್ದಾರೆ. ಪಶ್ಚಿಮ ಬಂಗಾಳ, ಗುಜರಾತ್ ಮತ್ತು ಅಸ್ಸಾಮಿನಿಂದಲೂ ಇದೇ ರೀತಿಯ ವರದಿಗಳು ಬಂದಿವೆ. ಎಲ್ಲ ಕಡೆಯಲ್ಲೂ ಎರಡು ವಿಷಯಗಳು ಸಾಮಾನ್ಯವಾಗಿ ಕಂಡಿವೆ. ಮುಸ್ಲಿಮ್ ಮತದಾರರನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕಲು ಪ್ರಯತ್ನಗಳು ನಡೆಯುತ್ತಿವೆ ಎಂಬುದು ಒಂದಾದರೆ, ಫಾರ್ಮ್ಗಳನ್ನು ಭರ್ತಿ ಮಾಡುವಲ್ಲೇ ವಂಚನೆಯಿದೆ ಎಂಬುದು ಎರಡನೆಯ ವಿಷಯ. ಕೆಲವು ಬಿಎಲ್ಒಗಳ ಪ್ರಾಮಾಣಿಕತೆ ಮತ್ತು ಸ್ವತಂತ್ರ ಮಾಧ್ಯಮಗಳ ವರದಿಗಳಿಂದಾಗಿ ಈ ಪ್ರದೇಶಗಳಲ್ಲಿ ಮತಗಳು ಹೀಗೆ ಡಿಲೀಟ್ ಆಗುವುದು ತಪ್ಪಿದೆ.ಆದರೆ ಅನೇಕ ಸ್ಥಳಗಳಲ್ಲಿ ಮತಗಳ ರಿಗ್ಗಿಂಗ್ ಇನ್ನೂ ನಡೆಯುತ್ತಿರುವ ಸಾಧ್ಯತೆ ಇದೆ. ಇಲ್ಲಿ ದೊಡ್ಡ ಪ್ರಶ್ನೆಯೆಂದರೆ, ಮತಪಟ್ಟಿಯ ರಿಗ್ಗಿಂಗ್ಗೆ ಸ್ಪಷ್ಟ ಪ್ರಯತ್ನಗಳು ನಡೆಯುತ್ತಿದ್ದರೂ, ಚುನಾವಣಾ ಆಯೋಗ ಅದನ್ನು ತನಿಖೆ ಮಾಡಲು ಯಾವುದೇ ಆಸಕ್ತಿ ತೋರಿಸಿಲ್ಲ ಎಂಬುದು. ಇನ್ನು, ಮುಸ್ಲಿಮ್ ಮತದಾರರನ್ನು ಅಳಿಸಲು ಬಳಸಲಾಗುತ್ತಿರುವ ಎರಡನೇ ವಿಧಾನವೆಂದರೆ, ಡಿಲಿಮಿಟೇಶನ್. ಇಲ್ಲಿಯವರೆಗೆ ಎರಡು ರಾಜ್ಯಗಳಲ್ಲಿ ಡಿಲಿಮಿಟೇಶನ್ ಪೂರ್ಣಗೊಂಡಿದೆ. ಆ ಎರಡು ರಾಜ್ಯಗಳೆಂದರೆ, ಅಸ್ಸಾಂ ಮತ್ತು ಜಮ್ಮು-ಕಾಶ್ಮೀರ. ಈ ಎರಡೂ ರಾಜ್ಯಗಳಲ್ಲಿ ಕ್ಷೇತ್ರಗಳ ಗಡಿಗಳನ್ನು ಬದಲಾಯಿಸಲು ವಿಭಿನ್ನ ಮಾನದಂಡಗಳನ್ನು ಬಳಸಲಾಗಿದೆ. ಜಮ್ಮು-ಕಾಶ್ಮೀರದಲ್ಲಿ, ಜನಸಂಖ್ಯೆಯನ್ನು ಉಲ್ಲೇಖಿಸಿ, ಮುಸ್ಲಿಮ್ ಬಹುಸಂಖ್ಯಾತ ಕಾಶ್ಮೀರದಲ್ಲಿ ಕ್ಷೇತ್ರಗಳ ಅನುಪಾತ ಕಡಿಮೆ ಮಾಡಲಾಗಿದೆ. ಆದರೆ ಹಿಂದೂ ಬಹುಸಂಖ್ಯಾತ ಜಮ್ಮುವಿನಲ್ಲಿ ಕ್ಷೇತ್ರಗಳ ಅನುಪಾತ ಹೆಚ್ಚಿಸಲಾಯಿತು.ಕಡಿಮೆ ಜನಸಂಖ್ಯೆಯನ್ನು ಉಲ್ಲೇಖಿಸಿ, ಜಮ್ಮುವಿನ ಮುಸ್ಲಿಮ್ ಬಹುಸಂಖ್ಯಾತ ಪ್ರದೇಶಗಳನ್ನು ಅನಂತ್ನಾಗ್ ಲೋಕಸಭಾ ಕ್ಷೇತ್ರದಲ್ಲಿ ಸೇರಿಸಲಾಗಿದೆ. ಪಿರ್ ಪಂಜಾಲ್ ಪರ್ವತ ಶ್ರೇಣಿಯ ಸಂಪೂರ್ಣ ಪ್ರದೇಶ ಈ ಎರಡು ಪ್ರದೇಶಗಳ ನಡುವೆ ಇದೆ. ಆದರೆ ಅಸ್ಸಾಮಿನಲ್ಲಿ ಹೆಚ್ಚಿನ ಜನಸಂಖ್ಯೆಯ ಹೊರತಾಗಿಯೂ, ಮುಸ್ಲಿಮ್ ಬಹುಸಂಖ್ಯಾತ ಪ್ರದೇಶಗಳಲ್ಲಿನ ಕ್ಷೇತ್ರಗಳನ್ನು ಕಡಿಮೆ ಮಾಡಲಾಯಿತು ಮತ್ತು ಕ್ಷೇತ್ರಗಳನ್ನು ವಿಭಜಿಸುವಾಗ ಎಲ್ಲಾ ಡಿಲಿಮಿಟೇಶನ್ ತತ್ವಗಳನ್ನು ಗಾಳಿಗೆ ತೂರಲಾಯಿತು. ಚುನಾವಣೆಗಳ ಮೂಲಭೂತ ತತ್ವವೆಂದರೆ ಪ್ರತಿಯೊಬ್ಬ ಮತದಾರರಿಗೂ ಸಮಾನ ಮತವಿರಬೇಕು. ಪ್ರತೀ ಸ್ಥಾನದಲ್ಲಿ ಸಮಾನ ಸಂಖ್ಯೆಯ ಮತದಾರರನ್ನು ಖಚಿತಪಡಿಸಿಕೊಳ್ಳುವುದು ಡಿಲಿಮಿಟೇಶನ್ನ ಉದ್ದೇಶವಾಗಿದೆ. ಜನಸಂಖ್ಯೆಯ ಆಧಾರದ ಮೇಲೆ, ಅಸ್ಸಾಮಿನ ಪ್ರತೀ ಲೋಕಸಭಾ ಸ್ಥಾನ 17.5 ಲಕ್ಷ ಮತದಾರರನ್ನು ಹೊಂದಿರಬೇಕು. ಆದರೂ, ಮುಸ್ಲಿಮ್ ಬಹುಸಂಖ್ಯಾತ ದುಬ್ರಿ ಸ್ಥಾನಕ್ಕೆ ಸುಮಾರು 10 ಲಕ್ಷ ಹೆಚ್ಚುವರಿ ಮತದಾರರನ್ನು ಸೇರಿಸಲಾಗಿದೆ. ಅಂದರೆ, ದುಬ್ರಿಯಲ್ಲಿ ಮತದ ಮೌಲ್ಯ ಅಸ್ಸಾಂನ ಇತರ ಸ್ಥಾನಗಳಿಗಿಂತ ಕಡಿಮೆಯಾಗಿದೆ. ಆದರೆ ಕಥೆ ಅಲ್ಲಿಗೇ ಮುಗಿಯುವುದಿಲ್ಲ. ಈ 10 ಲಕ್ಷ ಸೇರಿಸಲಾದ ಮತದಾರರು ಹಿಂದೆ ಹತ್ತಿರದ ಬರ್ಪೇಟಾ ಕ್ಷೇತ್ರದಲ್ಲಿದ್ದರು. ಅಂದರೆ, ಇಲ್ಲಿನ ತಂತ್ರ ಏನೆಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಬರ್ಪೇಟಾ ಕ್ಷೇತ್ರದ ಮುಸ್ಲಿಮ್ ಬಹುಸಂಖ್ಯಾತ ಪ್ರದೇಶಗಳನ್ನು ದುಬ್ರಿಯಲ್ಲಿ ವಿಲೀನಗೊಳಿಸಲಾಯಿತು ಮತ್ತು ಇದ್ದಕ್ಕಿದ್ದಂತೆ ಬರ್ಪೇಟಾ ಕ್ಷೇತ್ರ ಮುಸ್ಲಿಮ್ ಬಹುಸಂಖ್ಯಾತ ಕ್ಷೇತ್ರವಾಗಿರುವ ಬದಲು ಹಿಂದೂ ಬಹುಸಂಖ್ಯಾತ ಕ್ಷೇತ್ರವಾಗಿ ಬದಲಾಯಿತು. ಫಲಿತಾಂಶಗಳು ಬಂದಾಗ, ಎನ್ಡಿಎ ಮೊದಲ ಬಾರಿಗೆ ಈ ಸ್ಥಾನವನ್ನು ಗೆದ್ದಿರುವುದರಲ್ಲಿ ಆಶ್ಚರ್ಯವೇನಿಲ್ಲ. ಸ್ಪಷ್ಟವಾಗುವುದು ಏನೆಂದರೆ, ಒಂದೇ ಮಾನದಂಡವನ್ನು ತಮಗೆ ಹೇಗೆ ಬೇಕೋ ಹಾಗೆ ಬಳಸಿಕೊಂಡಿದ್ಧಾರೆ ಎಂಬುದು. ಜನಸಂಖ್ಯೆಯನ್ನು ನೆಪವಾಗಿ ಬಳಸಿಕೊಂಡು ಕಾಶ್ಮೀರದಲ್ಲಿ ಕ್ಷೇತ್ರಗಳ ಪ್ರಮಾಣ ಕಡಿಮೆ ಮಾಡಲಾಯಿತು. ಅದೇ ರೀತಿ, ಮುಂದೆ ಕ್ಷೇತ್ರ ಮರುವಿಂಗಡಣೆ ಆಗುವಾಗ, ಕುಟುಂಬ ಯೋಜನೆಯನ್ನು ಉತ್ತಮವಾಗಿ ಜಾರಿಗೆ ತಂದಿರುವ ದಕ್ಷಿಣ ಭಾರತ ಮತ್ತು ಪಂಜಾಬ್ನಂತಹ ಅಭಿವೃದ್ಧಿ ಹೊಂದಿದ ರಾಜ್ಯಗಳ ಸೀಟುಗಳ ಪ್ರಮಾಣವೂ ಕಡಿಮೆಯಾಗುತ್ತದೆ. ಆದರೆ ಅಸ್ಸಾಮಿನಲ್ಲಿ ಅದೇ ಜನಸಂಖ್ಯಾ ವಾದವೇ ನಾಪತ್ತೆಯಾಗುತ್ತದೆ ಮತ್ತು ಮುಸ್ಲಿಮ್ ಬಹುಸಂಖ್ಯಾತ ಪ್ರದೇಶಗಳಲ್ಲಿ ಸೀಟುಗಳು ಕಡಿಮೆಯಾಗುತ್ತವೆ. ಮುಸ್ಲಿಮ್ ಮತದಾರರನ್ನು ತೆಗೆದುಹಾಕಲು ಬಳಸಲಾಗುವ ಮೂರನೇ ವಿಧಾನ ಮತದಾರರ ನಿಗ್ರಹ. 2024ರ ಲೋಕಸಭಾ ಚುನಾವಣೆ ಸಮಯದಲ್ಲಿ, ಉತ್ತರ ಪ್ರದೇಶದ ಸಂಭಲ್ ಕ್ಷೇತ್ರದ ಕೆಲವು ಮುಸ್ಲಿಮ್ ಮತದಾರರು ಮತ ಚಲಾಯಿಸಲು ಹೋದಾಗ ಪೊಲೀಸ್ ಲಾಠಿಚಾರ್ಜ್ ಮಾಡಿದರು ಎಂದು ಸುದ್ದಿಯಾದದ್ದು ನೆನಪಿರಬಹುದು. ಅಲ್ಲಿ ಪೊಲೀಸರು ಬಂದು ಲಾಠಿಚಾರ್ಜ್ ನಡೆಸಿದರು. ಕೆಲವು ಮುಸ್ಲಿಮ್ ಬಹುಸಂಖ್ಯಾತ ಪ್ರದೇಶಗಳಲ್ಲಿ ಗಂಟೆಗಳ ಕಾಲ ಮತಗಟ್ಟೆಗಳನ್ನು ಮುಚ್ಚಲಾಗಿದ್ದರ ಬಗ್ಗೆಯೂ ದೂರುಗಳು ಬಂದಿದ್ದವು. ಕೆಲವು ತಿಂಗಳುಗಳ ನಂತರ, ಉತ್ತರ ಪ್ರದೇಶದ ಕುಂದ್ರಾ ವಿಧಾನಸಭಾ ಕ್ಷೇತ್ರದಲ್ಲಿ ಉಪಚುನಾವಣೆ ನಡೆಯಿತು. ಅಲ್ಲಿ ಹಲವಾರು ಮುಸ್ಲಿಮ್ ಬಹುಸಂಖ್ಯಾತ ಪ್ರದೇಶಗಳಲ್ಲಿ ಮತದಾರರನ್ನು ಬೆದರಿಸಲಾಗಿದೆ ಅಥವಾ ಮತದಾನ ಮಾಡದಂತೆ ತಡೆಯಲಾಗಿದೆ ಎಂಬ ಆರೋಪಗಳು ಕೇಳಿಬಂದವು. ವರದಿಯ ಪ್ರಕಾರ, ಮುಸ್ಲಿಮ್ ಜನಸಂಖ್ಯೆಯ ಬೂತ್ಗಳಲ್ಲಿಯೂ ಮತದಾನದ ಪ್ರಮಾಣ ಕಡಿಮೆಯಾಗಿತ್ತು. ಹೀಗೆ, ಈ ಮೂರು ವಿಧಾನಗಳ ಮೂಲಕ ಅನೇಕ ಮುಸ್ಲಿಮ್ ನಾಗರಿಕರಿಗೆ ಮತದಾನದ ಹಕ್ಕನ್ನು ನಿರಾಕರಿಸಲಾಗುತ್ತಿದೆ ಅಥವಾ ಅವರ ಮತಗಳು ಕಡಿಮೆಯಾಗುತ್ತಿವೆ. ದೊಡ್ಡ ಪ್ರಶ್ನೆಯೆಂದರೆ ಚುನಾವಣಾ ಆಯೋಗ ಇದರ ಬಗ್ಗೆ ಏನು ಮಾಡುತ್ತಿದೆ ಎಂಬುದು. ಚುನಾವಣಾ ಆಯೋಗ ಇದನ್ನು ತಡೆಯುವ ಅಭಿಯಾನದಲ್ಲಿ ವಿಫಲವಾಗುತ್ತಿದೆ ಅಥವಾ ಅದರಲ್ಲಿ ಸ್ವತಃ ಭಾಗಿಯಾಗುತ್ತಿದೆ ಎಂದು ಭಾವಿಸುವುದು ಅನಿವಾರ್ಯವಾಗುತ್ತದೆ. ಇಂದು ಮುಸ್ಲಿಮ್ ಮತದಾರರನ್ನು ಗುರಿ ಮಾಡುತ್ತಿರುವ ಈ ನಡವಳಿಕೆ ನಾಳೆ ಇತರರ ಮೇಲೆಯೂ ಆಗಬಹುದು. ಯಾರಿಗೋ ಆದರೆ ನಮಗೇನಂತೆ ಎಂಬ ಮನಃಸ್ಥಿತಿ ಇರುವಲ್ಲಿ, ಈಗೇನೋ ಈ ಬಿಸಿ ಎಲ್ಲರನ್ನೂ ತಟ್ಟದೆ ಇರಬಹುದು. ಆದರೆ ಹಾಗೆ ನಿರಾಳವಾಗಿರುವವರು ತಮ್ಮ ಮೇಲೆ ಇಂಥದ್ದೇನೂ ಆಗಲಾರದು ಎಂದು ಭಾವಿಸಿ ನಿರಾಳವಾಗಿಯೇ ಇರಲು ಸಾಧ್ಯವಿಲ್ಲ. ಇಂದು ಒಬ್ಬ ವ್ಯಕ್ತಿಯ ಸಾಂವಿಧಾನಿಕ ಹಕ್ಕುಗಳನ್ನು ಕಸಿದುಕೊಳ್ಳಲಾಗುತ್ತಿದ್ದರೆ, ನಾಳೆ ಅದು ಬೇರೆ ಯಾರದೇ ವಿಷಯದಲ್ಲೂ ನಡೆಯಬಹುದು. ಮತಗಳನ್ನು ಕಸಿಯುವ ಈ ಆಟ ಒಂದು ದಿನ ನಿಮ್ಮ ಮನೆಯಂಗಳಕ್ಕೇ ಬಂದು ನಿಲ್ಲಲೂಬಹುದು.
ಅಮೆರಿಕದ ವಿರುದ್ಧ ಇರಾನ್ ನಾಗರಿಕರು ಗೆದ್ದ ಯುದ್ಧ!
ಯುದ್ಧ ಆರಂಭಿಸುವ ಮುನ್ನ ಅಮೆರಿಕ ಸುಳ್ಳುಗಳ ಕ್ಷಿಪಣಿಗಳಿಂದ ಮೊದಲು ದಾಳಿ ಮಾಡುತ್ತದೆ. ಆ ಬಳಿಕ ಬಾಂಬ್ಗಳನ್ನು ಸುರಿಸುತ್ತದೆ. ಇರಾಕ್ನ ವಿರುದ್ಧ ಯುದ್ಧ ಘೋಷಿಸುವ ಸಂದರ್ಭದಲ್ಲಿ ಅಮೆರಿಕ ಮೊದಲು ‘ಇರಾಕ್ನ ಬಳಿ ರಾಸಾಯನಿಕ ಶಸ್ತ್ರಾಸ್ತ್ರಗಳಿವೆ’ ಎಂಬ ಸುಳ್ಳಿನ ಕ್ಷಿಪಣಿಗಳನ್ನು ತೂರಿ ಬಿಟ್ಟಿತು. ಆ ಬಳಿಕ ಇರಾಕ್ನ್ನು ಸುಲಭವಾಗಿ ನಾಶ ಮಾಡಿತು. ಇರಾನ್ನ ವಿರುದ್ಧವೂ ಅದೇ ತಂತ್ರವನ್ನು ಬಳಸುವ ಪ್ರಯತ್ನವನ್ನು ಅಮೆರಿಕ ನಡೆಸಿತಾದರೂ, ಅಮೆರಿಕದ ಸುಳ್ಳುಗಳ ಕ್ಷಿಪಣಿಗಳೆಲ್ಲ ಇರಾನ್ ನಾಗರಿಕರ ಧೀರೋದ್ಧಾತತೆಯ ಮುಂದೆ ಟುಸ್ಸಾಯಿತು. ಅಮೆರಿಕವು ಯುದ್ಧಾರಂಭಕ್ಕೆ ಮುನ್ನ, ಇದು ಇರಾನ್ ಜನರ ಪರವಾಗಿ ನಡೆಸಲಿರುವ ಹೋರಾಟ ಎಂದು ಬಿಂಬಿಸುವ ಪ್ರಯತ್ನ ನಡೆಸಿತು. ಅಲ್ಲಿ ನ ಸಂತ್ರಸ್ತ ಮಹಿಳಾ ಪ್ರತಿಭಟನಕಾರರ ಜೊತೆಗೆ ತಾನಿದ್ದೇನೆ ಎಂದು ಹೇಳಿಕೊಂಡಿತು. ಆದರೆ ಯುದ್ಧ ಆರಂಭವಾದ ಮೊದಲ ದಿನವೇ ಹೆಣ್ಣು ಮಕ್ಕಳ ಶಾಲೆಯ ಮೇಲೆ ದಾಳಿ ನಡೆಸಿ ೧೫೦ಕ್ಕೂ ಅಧಿಕ ವಿದ್ಯಾರ್ಥಿನಿಯರನ್ನು ಕೊಂದು ಹಾಕಿತು. ಅಷ್ಟೇ ಅಲ್ಲ, ಅಲ್ಲಿನ ಆಸ್ಪತ್ರೆ ಸಹಿತ ಸಾರ್ವಜನಿಕ ಸೇವೆಗಳ ಮೇಲೆ ಎಗ್ಗಿಲ್ಲದೆ ದಾಳಿ ನಡೆಸಿತು. ಯಾರನ್ನು ಅಮೆರಿಕ ಸರ್ವಾಧಿಕಾರಿಗಳು ಎಂದು ಕರೆದಿತ್ತೋ, ಅವರೆಲ್ಲರನ್ನು ಕೊಂದು ಹಾಕಿದ ಬಳಿಕವೂ ಅಮೆರಿಕ ಯುದ್ಧ ನಿಲ್ಲಿಸಲಿಲ್ಲ. ಯಾಕೆಂದರೆ, ಇರಾನ್ನಲ್ಲಿರುವ ಸರ್ವಾಧಿಕಾರ ಅಮೆರಿಕದ ಸಮಸ್ಯೆಯೇ ಆಗಿರಲಿಲ್ಲ. ಅಮೆರಿಕಕ್ಕೆ ಇರಾನ್ನ ತೈಲ ಸಂಪತ್ತಿನ ಮೇಲೆ ನಿಯಂತ್ರಣದ ಅಗತ್ಯವಿತ್ತು. ಅದಕ್ಕಾಗಿ ಅಲ್ಲಿನ ನಿಯಂತ್ರಣದಲ್ಲಿರುವ ಸರಕಾರ ರಚಿಸುವುದು ಅದರ ಗುರಿಯಾಗಿತ್ತು. ಮೇಲ್ಸ್ತರದ ನಾಯಕರನ್ನು ಕೊಂದುಹಾಕುವುದರೊಂದಿಗೆ ಇರಾನ್ ತನಗೆ ಶರಣಾಗುತ್ತದೆ ಎನ್ನುವ ಅಮೆರಿಕದ ತಂತ್ರ ಅಲ್ಲಿ ನಾಗರಿಕರಿಂದಲೇ ಬುಡಮೇಲಾಯಿತು. ನಿಜವಾದ ಯುದ್ಧ ಆರಂಭವಾದದ್ದೇ ಈ ಎಲ್ಲ ನಾಯಕರು ತಮ್ಮ ಪ್ರಾಣಗಳನ್ನು ಅರ್ಪಿಸಿದ ಬಳಿಕ. ಆವರೆಗೆ ಇರಾನ್ ಸರಕಾರದ ಜೊತೆಗೆ ಭಿನ್ನಮತವನ್ನು ಹೊಂದಿದ್ದ ನಾಗರಿಕರೂ ದೇಶದ ಪರವಾಗಿ ಸಂಘಟಿತವಾಗಿ ನಿಲ್ಲಬೇಕಾದ ಸ್ಥಿತಿಯನ್ನು ಸ್ವತಃ ಟ್ರಂಪ್ ನಿರ್ಮಾಣ ಮಾಡಿದರು. ನಿಜಕ್ಕೂ ಇರಾನ್ನ ನಾಗರಿಕರ ಬಗ್ಗೆ, ಅಲ್ಲಿನ ಪ್ರಜಾಸತ್ತೆಯ ಬಗ್ಗೆ ಮತ್ತು ಮಹಿಳೆಯರ ಬಗ್ಗೆ ಅಮೆರಿಕಕ್ಕೆ ಕಾಳಜಿಯಿದ್ದಿದ್ದರೆ ಎರಡು ದಿನಗಳ ನಾಶ, ನಷ್ಟದ ಬಳಿಕವಾದರೂ ದಾಳಿಯನ್ನು ನಿಲ್ಲಿಸುತ್ತಿತ್ತು. ವಿಪರ್ಯಾಸವೆಂದರೆ, ಕಡೆಯದಾಗಿ ಇರಾನ್ನ ವಿದ್ಯುತ್ ಸ್ಥಾವರಗಳು, ಸೇತುವೆಗಳ ಮೇಲೆ ದಾಳಿ ನಡೆಸಲಿದ್ದೇನೆ ಎನ್ನುವ ಬೆದರಿಕೆಯನ್ನು ಅವರು ಒಡ್ಡಿದರು. ಇಡೀ ಇರಾನ್ ನಾಗರಿಕತೆಯನ್ನೇ ಸರ್ವನಾಶ ಮಾಡುತ್ತೇನೆ ಎಂದು ಘೋಷಿಸಿದರು. ಟ್ರಂಪ್ ಈ ಮೂಲಕ ಇರಾನ್ನ ಜನರಿಗೇ ನೇರ ಬೆದರಿಕೆಯನ್ನು ಒಡ್ಡಿದ್ದರು. ನೀವು ಸರಕಾರದ ವಿರುದ್ಧ ಧ್ವನಿಯೆತ್ತದೇ ಇದ್ದರೆ ನಿಮ್ಮನ್ನು ಸಾಮೂಹಿಕವಾಗಿ ಸರ್ವನಾಶ ಮಾಡುತ್ತೇನೆ ಎನ್ನುವ ಬೆದರಿಕೆಯದು. ಹಿಟ್ಲರ್ ಯಹೂದಿಗಳ ವಿರುದ್ಧವೂ ಇಂತಹ ಭೀಕರ ಬೆದರಿಕೆ ಒಡ್ಡಿರಲಿಲ್ಲ. ಈ ಘೋಷಣೆಯೊಂದಿಗೆ ಅಮೆರಿಕ ತಾನೇನೆನ್ನುವುದನ್ನು ಜಗತ್ತಿನ ಮುಂದೆ ಜಾಹೀರು ಪಡಿಸಿತು. ತಾತ್ಕಾಲಿಕ ಕದನ ವಿರಾಮ ಘೋಷಿಸುವ ಅನಿವಾರ್ಯತೆಯನ್ನು ಟ್ರಂಪ್ಗೆ ನಿರ್ಮಿಸುವ ಮೂಲಕ ಇರಾನ್ ಅಪಾರ ಸಾವುನೋವು, ನಾಶ ನಷ್ಟದ ನಡುವೆಯೂ ಯುದ್ಧವನ್ನು ಗೆದ್ದುಕೊಂಡಿದೆ. ಈ ಗೆಲುವು ಇರಾನ್ನ ನಾಗರಿಕರಿಗೆ ನೇರವಾಗಿ ಸಲ್ಲಬೇಕಾಗಿದೆ. ಇರಾನ್ನ ನಾಗರಿಕರ ಧೈರ್ಯ, ಆತ್ಮಾಭಿಮಾನದ ಮುಂದೆ ಅಮೆರಿಕದ ಕ್ಷಿಪಣಿಗಳು ಶಕ್ತಿಹೀನವಾಯಿತು. ೪೮ ಗಂಟೆಗಳಲ್ಲಿ ಶರಣಾಗದಿದ್ದರೆ ಇಡೀ ಇರಾನ್ನ ನಾಗರಿಕತೆಯೇ ನಿರ್ನಾಮವಾಗಲಿದೆ ಎನ್ನುವ ಟ್ರಂಪ್ನ ಬೆದರಿಕೆಯಲ್ಲಿ ಹತಾಶೆಯ ಪರಮಾವಧಿಯಿತ್ತು. ಸರ್ವಾಧಿಕಾರಿಯೊಬ್ಬನ ಆಕ್ರಂದನವಿತ್ತು. ಇಡೀ ವಿಶ್ವವೇ ಟ್ರಂಪ್ನ ಮಾತಿನಲ್ಲಿರುವ ಲಜ್ಜೆಗೇಡಿತನಕ್ಕೆ, ಕ್ರೌರ್ಯಕ್ಕೆ ತಲೆತಗ್ಗಿಸಿತ್ತು. ‘ನಾಳೆ ಏನಾಗಬಹುದು’ ಎನ್ನುವ ಆತಂಕದಲ್ಲಿ ಜಗತ್ತು ನಿದ್ದೆಗೆಟ್ಟು ಕುಳಿತಿತ್ತು. ಅದಾಗಲೇ ಭಾರೀ ನಾಶ ನಷ್ಟಗಳನ್ನು ಎದುರಿಸಿದ್ದ ಇರಾನ್ ನಾಗರಿಕರು ಈ ಬೆದರಿಕೆಗೆ ತಲೆಬಾಗಿ ಇರಾನ್ನ ಸರಕಾರದ ಮೇಲೆ, ಸೇನೆಯ ಮೇಲೆ ಒತ್ತಡಗಳನ್ನು ಹಾಕುತ್ತಾರೆ ಎಂದು ಟ್ರಂಪ್ ಭಾವಿಸಿದ್ದರೆ ಅದು ತಿರುವು ಮುರುವಾಯಿತು. ತಮ್ಮ ಸೇತುವೆಗಳನ್ನು, ತಮ್ಮ ವಿದ್ಯುತ್ ಸ್ಥಾವರಗಳನ್ನು ರಕ್ಷಿಸುವುದಕ್ಕೆ ಇರಾನ್ ನಾಗರಿಕರು ಬೀದಿಗಿಳಿದರು. ಅವುಗಳ ಸುತ್ತ ಮಾನವ ಸರಪಳಿಗಳನ್ನು ಕಟ್ಟಿ ನಿಂತರು. ಕಲಾವಿದರು, ಹಿರಿಯರು, ಯುವಕರು, ಮಕ್ಕಳು, ಮಹಿಳೆಯರು ಎನ್ನದೇ ಎಲ್ಲ ವರ್ಗದ ಜನರು ಈ ಮಾನವ ಸರಪಳಿಯಲ್ಲಿ ಭಾಗಿಯಾದರು. ಇರಾನ್ನ ಯಾವುದೇ ಕ್ಷಿಪಣಿಗಳು ಮಾಡಿದ ಹಾನಿಗಿಂತ ಈ ಮಾನವ ಸರಪಳಿಗಳು ಅಮೆರಿಕದ ದುರಹಂಕಾರಕ್ಕೆ ಹೆಚ್ಚು ಹಾನಿಯನ್ನು ಮಾಡಿದವು. ಕೈಯಲ್ಲಿ ಯಾವುದೇ ಆಯುಧಗಳನ್ನು ಹೊಂದಿರದ ಈ ನಾಗರಿಕರು ‘‘ಬನ್ನಿ, ನಮ್ಮನ್ನು ಕೊಲ್ಲಿ’’ ಎಂದು ಕ್ಷಿಪಣಿಗಳಿಗೆ ಎದೆಯೊಡ್ಡಿ ನಿಂತಿದ್ದು ಒಂದು ಐತಿಹಾಸಿಕ ಘಟನೆಯೇ ಸರಿ. ಮಹಾತ್ಮ್ಮಾ ಗಾಂಧೀಜಿ ಬ್ರಿಟಿಷರ ವಿರುದ್ಧ ಪ್ರದರ್ಶಿಸಿದ ಅಹಿಂಸೆಯ ಆಯುಧವನ್ನು ಹಿಡಿದು ಇರಾನ್ ನಾಗರಿಕರು ಟ್ರಂಪ್ ಸವಾಲನ್ನು ಎದುರಿಸಿದರು. ಹಾರ್ಮುಝ್ ಜಲಸಂಧಿಗಿಂತ ದೊಡ್ಡ ಸವಾಲಾಗಿ ನಿಂತದ್ದು ಈ ಮಾನವ ಸರಪಳಿಯ ಗೋಡೆಯಾಗಿತ್ತು. ಯಾವ ನಾಗರಿಕರನ್ನು ನೆಪವಾಗಿಟ್ಟುಕೊಂಡು ಟ್ರಂಪ್ ಇರಾನ್ನ ಮೇಲೆ ದಾಳಿ ನಡೆಸಿದರೋ ಅದೇ ನಾಗರಿಕರು ಟ್ರಂಪ್ನ ಅಟ್ಟಹಾಸಕ್ಕೆ ಎದೆಯೊಡ್ಡಿ ನಿಂತಿದ್ದರು. ಇದು ತಾತ್ಕಾಲಿಕ ಕದನವಿರಾಮ ಎನ್ನುವುದು ಸ್ಪಷ್ಟ. ಹಾರ್ಮುಝ್ ಜಲಸಂಧಿಯನ್ನು ಬಳಸಿಕೊಂಡು ಇರಾನ್ ನಡೆಸಿದ ಮಾಡು-ಮಡಿ ಹೋರಾಟ ಅಮೆರಿಕ-ಇಸ್ರೇಲ್ ಎನ್ನುವ ಬಲಿಷ್ಠ ದೇಶಗಳ ‘ಹೇಡಿತನ’ವನ್ನು ಜಗಜ್ಜಾಹೀರು ಮಾಡಿತು. ಅವುಗಳ ಮುಖವಾಡವನ್ನು ಹರಿದು ಹಾಕಿತು. ಅಮೆರಿಕ, ಇದೀಗ ಆದ ನಷ್ಟವನ್ನು ತುಂಬಿಸಿಕೊಳ್ಳುವ ಬಗೆ ಹೇಗೆ ಎಂದು ಯೋಚಿಸುತ್ತಿದೆ. ಮಧ್ಯಸ್ಥಿಕೆ ವಹಿಸುವ ನೆಪದಲ್ಲಿ ಪಾಕಿಸ್ತಾನ ಎನ್ನುವ ಲಂಗೋಟಿಯ ಮೂಲಕ ಅದು ತನ್ನ ನಗ್ನದೇಹವನ್ನು ಮುಚ್ಚಿಕೊಳ್ಳಲು ಮುಂದಾಗಿದೆ. ಪಾಕಿಸ್ತಾನದ ಮಧ್ಯಸ್ಥಿಕೆಯ ಮೂಲಕ ಕೊನೆಗೂ ಅದು ಕದನ ವಿರಾಮ ಕೊಡುಗೆಯನ್ನು ಮುಂದಿಟ್ಟಿದೆ. ಇದೇ ಸಂದರ್ಭದಲ್ಲಿ ಈ ಕದನವಿರಾಮಕ್ಕೆ ಇಸ್ರೇಲ್ ಎಷ್ಟರಮಟ್ಟಿಗೆ ಸಹಕರಿಸುತ್ತದೆ ಎನ್ನುವುದರ ಆಧಾರದ ಮೇಲೆ ಮಧ್ಯಪ್ರಾಚ್ಯ ಸಂಘರ್ಷ ನಿಂತಿದೆ. ಇರಾನ್-ಅಮೆರಿಕ ಯುದ್ಧ ಆ ದೇಶಗಳಿಗಷ್ಟೇ ಸೀಮಿತವಾಗಿ ಉಳಿದಿಲ್ಲ. ಅದರ ಪರಿಣಾಮಗಳನ್ನು ಇಡೀ ಜಗತ್ತು ಬೇರೆ ಬೇರೆ ರೂಪದಲ್ಲಿ ಅನುಭವಿಸುತ್ತಿದೆ. ಒಂದು ಸಣ್ಣ ದೇಶದ ವಿರುದ್ಧ ಬಲಿಷ್ಠ ರಾಷ್ಟ್ರಗಳು ನಡೆಸಿದ ಏಕಮುಖ ದಾಳಿಯನ್ನು ಮೌನವಾಗಿ ನಿಂತು ನೋಡಿದ ಪರಿಣಾಮವನ್ನು ಭಾರತವೂ ಸೇರಿದಂತೆ ಎಲ್ಲ ದೇಶಗಳು ಉಣ್ಣುತ್ತಿವೆ. ಈ ಕದನ ವಿರಾಮವನ್ನು ಶಾಶ್ವತ ಯುದ್ಧ ವಿರಾಮವಾಗಿ ಪರಿವರ್ತಿಸುವಲ್ಲಿ ಎಲ್ಲ ದೇಶಗಳು ಮುಂದಡಿಯಿಡಲು ಶ್ರಮಿಸದೇ ಇದ್ದರೆ ಭವಿಷ್ಯದಲ್ಲಿ ಅಭಿವೃದ್ಧಿ ಹೊಂದುತ್ತಿರುವ ಭಾರತದಂತಹ ದೇಶಗಳು ಸಾಕಷ್ಟು ಆರ್ಥಿಕ ಹಿಂಜರಿಕೆಯನ್ನು ಎದುರಿಸಬೇಕಾಗಬಹುದು. ಅಮೆರಿಕವು ಇರಾನ್ ವಿರುದ್ಧ ನೇರ ಯುದ್ಧ ಘೋಷಿಸಿದ್ದರೆ, ಅಭಿವೃದ್ಧಿ ಹೊಂದುತ್ತಿರುವ ದೇಶಗಳ ವಿರುದ್ಧ ಪರೋಕ್ಷ ಯುದ್ಧ ಘೋಷಿಸಿದೆ ಎನ್ನುವ ಎಚ್ಚರಿಕೆ ನಮ್ಮಲ್ಲಿ ಇರಬೇಕಾಗಿದೆ. ಇರಾನ್ ನಾಗರಿಕರು ಪ್ರದರ್ಶಿಸಿದ ಪ್ರಬುದ್ಧತೆಯನ್ನು ವಿಶ್ವದ ಎಲ್ಲ ಶಾಂತಿಪ್ರಿಯ ನಾಗರಿಕರು ಸಂಘಟಿತವಾಗಿ ಪ್ರದರ್ಶಿಸಿ ಈ ಯುದ್ಧವನ್ನು ಗೆಲ್ಲಬೇಕಾದ ಅನಿವಾರ್ಯ ಜಗತ್ತಿಗಿದೆ.
ಯಾವುದೇ ದೇಶ-ಕಾಲದ ಜನರಲ್ಲಿ ಸಮಾಜದ ಧುರೀಣನಾಗಬೇಕು, ಸಾಧ್ಯವಾದಲ್ಲಿ ಇತರರನ್ನು ಆಳಬೇಕು ಎಂಬ ಸುಪ್ತಬಯಕೆ ಇದ್ದೇ ಇರುತ್ತದೆ. ಆದರೆ ಪ್ರಕಟವಾಗಿ ಹೇಳುವವರು ಕಡಿಮೆ. ಕೆಲವರು ಇತರರನ್ನು ಆಳಬೇಕೆಂಬ ಮಹತ್ವಾಕಾಂಕ್ಷೆಯನ್ನು ಇಟ್ಟುಕೊಳ್ಳುತ್ತಾರೆ. ಇದಕ್ಕಾಗಿ ಯಾರನ್ನಾದರೂ ಆಶ್ರಯಿಸುವುದು ಅನಿವಾರ್ಯ. ಹಾಗೆ ಆಶ್ರಯಿಸಲ್ಪಡುವವನು ಆಶ್ರಯಿಸುವವನಿಗಿಂತ ಮೇಲಿನ ಹಂತದ ನಾಯಕನಾಗುತ್ತಾನೆ. ಈ ಸಾಮಾಜಿಕ ಪಿರಮಿಡ್ ಮೇಲ್ತುದಿಯಲ್ಲಿ ಒಬ್ಬನಿಗೇ ಜಾಗ ಕೊಟ್ಟಾಗ ಅದು ಸರ್ವಾಧಿಕಾರವಾಗುತ್ತದೆ; ಒಂದಷ್ಟು ಜನರಿಗೆ ಜಾಗ ಸಿಕ್ಕಿದಾಗ ಅದಕ್ಕೆ ಆಂಗ್ಲ ಭಾಷೆಯಲ್ಲಿ ‘ಆಲಿಗಾರ್ಖಿ’ (Oligarchy) ಎಂದು ಹೇಳುವ ‘ಕೆಲವೇ ಜನರ ಪ್ರಭುತ್ವ’ ಲಭ್ಯವಾಗುತ್ತದೆ ಮತ್ತು ಅದು ಏಕವ್ಯಕ್ತಿ ಪ್ರದರ್ಶನವಾಗದೆ ಕಿಂಚಿತ್ತಾದರೂ ಸಾಮುದಾಯಿಕ ಲಕ್ಷಣವನ್ನು ಹೊಂದಿರುತ್ತದೆ. ಕೆಳತಪ್ಪಲಲ್ಲಿರುವವರಿಗೆ ಅಲ್ಲಿ ಅಷ್ಟೆತ್ತರದ ಶಿಖರದಲ್ಲಿ ಒಂದಷ್ಟು ಜನರಿದ್ದಾರಲ್ಲ, ಅವರು ತಮ್ಮ ಯೋಗಕ್ಷೇಮಕ್ಕೆ ಹೊಣೆಗಾರರೆಂಬ ಭಾವನೆ, ನಂಬಿಕೆ ಬರುತ್ತದೆ. ಹಾಗೆ ಮೇಲೇರಿದವರು ಏಣಿಯನ್ನೇರಿದವರಂತೆ ಕೆಳಗಿನ ಮೆಟ್ಟಲುಗಳಲ್ಲಿರುವವರನ್ನು ಗಮನಿಸುತ್ತಾರೋ ಇಲ್ಲವೋ ಅಂತೂ ಕೆಳಗಿರುವ ಭಾರೀ ಬಹುಮತಕ್ಕೆ ನಾವೇ ನಮ್ಮನ್ನು ಆಳುತ್ತೇವೆ ಅಥವಾ ಹೀಗೆ ಮೇಲೇರಿದವರು ನಮ್ಮ ಪ್ರತಿನಿಧಿಗಳು ಎಂಬ ಭ್ರಮೆ ಅಥವಾ ಮಾಯಾವಾಸ್ತವವು ನಿರ್ಮಾಣವಾಗುತ್ತದೆ. ಒಟ್ಟಾರೆ ಸಮಾಜದಲ್ಲಿ ನಮ್ಮನ್ನು ಯಾರೋ ತುಳಿಯುತ್ತಿದ್ದಾರೆಂಬ ಅನುಭವವಾಗಬೇಕಾದರೆ ಬಹಳ ಸೂಕ್ಷ್ಮತೆ ಮತ್ತು ಪ್ರಜ್ಞೆ ಬೇಕು. ಅಲ್ಲಿಯವರೆಗೆ ನಾವು ಇಲ್ಲಿರಲು ಇಲ್ಲವೇ ಇಲ್ಲೇ ಇರಲು ಯೋಗ್ಯರು ಅಥವಾ ನಮ್ಮ ಅರ್ಹತೆಗೆ ತಕ್ಕಂತೆ ನಾವಿದ್ದೇವೆ, ಮೇಲೇರಿದವರು ನಮಗಿಂತ ಹೆಚ್ಚು ಅರ್ಹತೆಯನ್ನು ಪಡೆದವರು, ಹೆಚ್ಚು ಯೋಗ್ಯರು ಅಥವಾ ಅವರಿಗೆ ಮೇಲೇರುವ ಯೋಗ ಸಂದಿದೆ ಮತ್ತು ನಮಗೆ ಇಲ್ಲಿರುವ ಯೋಗವಿದೆ ಇದು ನಮ್ಮ ವಿಧಿ ಎಂದುಕೊಂಡು ಸಹನೆಯಿಂದ ಸುಮ್ಮನಿರಲು ಬದುಕು, ಜಗತ್ತು ಹೇಳಿಕೊಡುತ್ತದೆ. ಇಂತಹ ಸ್ಥಿತಿಗೆ ಒಂದು ವ್ಯವಸ್ಥೆಯ ರೂಪವನ್ನು ನೀಡಬಯಸುತ್ತದೆ ಸಮಾಜ. ಅದಕ್ಕೆ ಚುನಾವಣೆ, ನಾಮಕರಣ ಮುಂತಾದ ವ್ಯವಸ್ಥೆಯನ್ನು ಮಾಡಿಕೊಳ್ಳುತ್ತೇವೆ. ಅದು ತೃಪ್ತಿ ನೀಡದಿದ್ದಾಗಲೂ ನಮ್ಮ ಮನಸ್ಸಿನ ಸಮಾಧಾನಕ್ಕೆ ಪರಿಪೂರ್ಣ ಅಥವಾ ದೋಷರಹಿತವೆಂದು ಕೊಳ್ಳುತ್ತೇವೆ. ಕಿಂಚಿದೂನವಿಲ್ಲದ್ದು ಭೂಮಿಯ ಮೇಲೆ ಉಳಿಯುವುದಿಲ್ಲವಂತೆ! ಪ್ರಜಾಪ್ರಭುತ್ವ, ಪ್ರಜಾತಂತ್ರವೆಂದು ನಾವು ರೂಢಿಯಲ್ಲಿ ಹೇಳುವ ಇಂತಹ ವ್ಯವಸ್ಥೆ ಒಂದರಿಂದ ಇನ್ನೊಂದಾಗಿ ಬದಲಾಗುವುದು ಸಾಧ್ಯ. ಕೆಲವೇ ಜನರ ಪ್ರಭುತ್ವ ಒಳಿತನ್ನೇ ಮಾಡುತ್ತದೆಂಬ ಖಾತ್ರಿಯಿಲ್ಲ. ಸ್ವಲ್ಪ ಹೆಚ್ಚುಕಡಿಮೆಯಾದಾಗಲೂ ಅದು ಸರ್ವಾಧಿಕಾರಕ್ಕೆ ಅಥವಾ ಅರಾಜಕತೆಗೆ ಹೊರಳಬಲ್ಲುದು. ಸರ್ವಾಧಿಕಾರವೆಂದಾಕ್ಷಣ ಅದು ಕೆಟ್ಟದ್ದು ಎಂಬ ನಮ್ಮ ರೂಢಿಗತ ಕಲ್ಪನೆ ಸತ್ಯವೇ ಆಗಿರಬೇಕಾಗಿಲ್ಲ. ಸರ್ವಾಧಿಕಾರವೂ ಕೆಲವು ಒಳ್ಳೆಯ ಸಂಗತಿಗಳನ್ನು ರೂಪಿಸಬಲ್ಲುದು. ಕೇಡನ್ನೂ ಮಾಡಬಲ್ಲುದು. ರಾಜಮಹಾರಾಜರ ಕಾಲದಲ್ಲಿ ಜನರು ಸುಖವಾಗಿದ್ದ ನಿದರ್ಶನಗಳಿವೆ. ಅಂದರೆ ಆಯಾಯ ಕಾಲ-ದೇಶದಲ್ಲಿ ಆಡಳಿತ ಮಾಡುವವನ(ರ) ಗುಣ ಮತ್ತು ಸಾಮರ್ಥ್ಯದ ಮೇಲೆ ಈ ಒಳಿತು ಕೆಡುಕುಗಳು ನಿರ್ಧಾರವಾಗಬಲ್ಲುದು. ಯಾವುದು ಒಳ್ಳೆಯದು, ಯಾವುದು ಕೆಟ್ಟದ್ದು ಎಂಬುದು ವ್ಯಕ್ತಿಗತ ಹೇಗೋ ಹಾಗೆಯೇ ಕೆಲವು ಬಾರಿ ಸಾಮಾಜಿಕವೂ ಸಾಮುದಾಯಿಕವೂ ಆಗಿರುವುದು ಎಲ್ಲ ಕಾಲದ ಸೋಜಿಗ. ವಿಚಾರ ಮತ್ತು ಭಾವನೆ- ಇವುಗಳಲ್ಲಿ ಮನುಷ್ಯನನ್ನು ಬೇಗ ಆವರಿಸುವುದು ಭಾವನೆ. ವಿಚಾರ ಘನಪದಾರ್ಥವಾದರೆ ಭಾವನೆಯು ದ್ರವಪದಾರ್ಥ. ಭಾವನೆಯು ಸುಲಭವಾಗಿ ಅರ್ಥವೇದ್ಯ. ಅಳು, ನಗುವಿನಂತೆ ಗಾಂಭೀರ್ಯ ಅರ್ಥವಾಗದು. ಹಾಸ್ಯ, ಸುಖ, ದುಃಖ, ಕ್ರೌರ್ಯ ಇವು ತಟ್ಟಿದಷ್ಟು ಗಾಢವಾಗಿ ವೈಚಾರಿಕ ಚರ್ಚೆ, ವಿಮರ್ಶೆ ಅಥವಾ ಸಂಕೀರ್ಣವಾದ ಯಾವುದೂ ತಟ್ಟದು. ಸಾಹಿತ್ಯ ಅಥವಾ ಇತರ ಯಾವುದೇ ಕಲೆಯನ್ನು ಗಮನಿಸಿ: ಒಂದು ಹಾಸ್ಯಕವಿಗೋಷ್ಠಿ ಜನರನ್ನು ರಂಜಿಸಿದಷ್ಟು, ಗಂಭೀರ, ಸಂಕೀರ್ಣ ಕವಿಗೋಷ್ಠಿ ಅದೆಷ್ಟೇ ಮೌಲಿಕವಾದರೂ ರಂಜಿಸದು. ನಗೆನಾಟಕ ಒಲಿದಷ್ಟು ಅಮೂರ್ತನಾಟಕ ಒಲಿಯದು. ವೈಟಿಂಗ್ ಫಾರ್ ಗೋಡೋ (Waiting For Godot) ಎಷ್ಟು ಓದುಗರಿಗೆ ಪ್ರಿಯವಾಗುತ್ತದೆ? ಅದೇ ಗುಂಡಣ್ಣನವರ, ಮಾಸ್ಟರ್ ಹಿರಣ್ಣಯ್ಯನವರ ನಾಟಕಗಳು ಬಹುಬೇಗ ಜನರಿಗೆ ಪ್ರಿಯವಾಗುತ್ತವೆ. ತತ್ವಶಾಸ್ತ್ರವನ್ನು ಅಧ್ಯಯನ ಮಾಡುವವರು ತೀರಾ ವಿರಳ. ಜೆ. ಕೃಷ್ಣಮೂರ್ತಿಯನ್ನು ಇಷ್ಟಪಡುವವರು ಕಡಿಮೆ; ಮನೋರಂಜಕ ಕೃತಿಗಳ ಸಾಹಿತಿಗಳಿಗೆ ಜನರು ಮುತ್ತುತ್ತಾರೆ. ಸುಲಭದ್ದು ಆಕರ್ಷಕ; ಕಷ್ಟದ್ದು ತನ್ನನ್ನು ದೂರವಿಡು ಎಂದು ಸಾಮಾನ್ಯ ಮನಸ್ಸಿಗೆ ಹೇಳುತ್ತದೆ. ಇಂತಹ ಸಂದರ್ಭವನ್ನು ರಾಜಕಾರಣ ಬಳಸಿಕೊಂಡಷ್ಟು ಇತರ ಯಾವ ಕ್ಷೇತ್ರವೂ ಬಳಸಿಕೊಂಡ ಉದಾಹರಣೆಗಳಿಲ್ಲ. ಕಾರಣವಿಷ್ಟೇ: ರಾಜಕಾರಣ ಎಲ್ಲ ವಿಷಯಗಳಂತೆ ಒಂದು ‘ವಿಷಯ’ ಮಾತ್ರವಲ್ಲ; ಅದು ಜನರಿಗೆ ಒಂದು ನಿಯಂತ್ರಣರೇಖೆ. ಅಲ್ಲಿರುವ ಎಲ್ಲ ಸೌಲಭ್ಯಗಳು, ಅನುಕೂಲಗಳು, ಅನಿಶ್ಚಿತತೆಗಳು ಕೆನೆಪದರದ ನಾಯಕರ ನಡುವಣ ವಿಚಾರವೇ ಹೊರತು ಕೆಳಪದರದವರದ್ದಲ್ಲ. ಅಧಿಕಾರದ ಏಣಿಯಲ್ಲಿ ಮೇಲೇರಿ ಒಮ್ಮೆ ಸಮಾಜವನ್ನು ನಿಯಂತ್ರಿಸಲು ಶಕ್ತನಾದವನು ತನ್ನಂತೆಯೇ ಮೇಲೆ ಬಂದವನೊಂದಿಗೆ ಸ್ಪರ್ಧಿಸುತ್ತಾನೆಯೇ ಹೊರತು ಜನಸಾಮಾನ್ಯರೊಂದಿಗಲ್ಲ. ಅಲ್ಲಿ ನಡೆಯುವ ಸ್ಪರ್ಧೆ ಜನಸಾಮಾನ್ಯರ ಲೋಕಕ್ಕೆ ಒಂದು ಬೆರಗಷ್ಟೇ ಹೊರತು ಅವರು ನೇರವಾಗಿ ಅದರಲ್ಲಿ ಸ್ಪರ್ಧಿಸುವುದಿಲ್ಲ. ಪ್ರಜಾಪ್ರಭುತ್ವದಲ್ಲಿ ಜನರು ಭಾಗವಹಿಸುವುದು ಯಾವಾಗ? ನಿಗದಿತ ಅವಧಿಯಲ್ಲಿ ನಡೆಯುವ ಚುನಾವಣೆಯಲ್ಲಿ ಮಾತ್ರ. ಆಗೊಮ್ಮೆ ನಾವು ಈ ರಾಜಕೀಯದ ನಿಗೂಢತೆಯಲ್ಲಿ, ಪಲ್ಲಟದಲ್ಲಿ, ಕೊನೆಗೆ ಆಟದಲ್ಲಿ ಪಾಲ್ಗೊಳ್ಳುವವರು ಎಂಬ ಭಾವನೆಯನ್ನು ಗುರುತರ ಕರ್ತವ್ಯವೆಂಬ ರೀತಿಯಲ್ಲಿ ಕೈಗೊಳ್ಳುತ್ತೇವೆ. ಮತದಾನಕ್ಕಾಗಿ ಸಾವಿರಾರು ರೂಪಾಯಿಗಳನ್ನು ವೆಚ್ಚಮಾಡಿ ಬಹಳಷ್ಟು ಅಂತರವನ್ನು ಕ್ರಮಿಸಿ ಭಾಗವಹಿಸುವವರಿದ್ದಾರೆ. ಅಸ್ಸಾಮಿನಿಂದ ವಲಸೆ ಬಂದು ಚಿಕ್ಕಮಗಳೂರು-ಕೊಡಗಿನ ಕಾಫಿತೋಟಗಳಲ್ಲಿ ದುಡಿಯುವ ಮಂದಿ ಅಲ್ಲಿ ನಡೆಯುವ ಚುನಾವಣೆಗೆ ಗುಳೆಹೋಗುತ್ತಾರೆ. ಇದರ ಪರಿಣಾಮವಾಗಿ ಕಾಫಿತೋಟದಲ್ಲಿ ದುಡಿಮೆಗೆ ಜನರೇ ಇರದೆ ಭಣಗುಡುವ ವಾತಾವರಣ ಸೃಷ್ಟಿಯಾಗಿರುವುದು ವಾಸ್ತವ. ಹೀಗೆ ಹೋದವರಿಗೆ ಚುನಾವಣೆಯ ಬಳಿಕ ಅಲ್ಲಿ ಬದುಕಲು ಬೇಕಾದ ಸೌಕರ್ಯಗಳಿರುವುದಿಲ್ಲ. ಬದುಕಬೇಕಾದರೆ ಜನರು ಮತ್ತೆ ಹೀಗೆ ವಲಸೆ ಹೋಗಬೇಕು. ಹಾಗಾದರೆ ಅವರನ್ನು ಚುನಾವಣೆಯೆಂಬ ಪ್ರಕ್ರಿಯೆಯಲ್ಲಿ ಭಾಗವಹಿಸಲು ಪ್ರೇರೇಪಿಸುವ ಭಾವನೆಯಾದರೂ ಯಾವುದು? ತಾವು ಈ ಪಿರಮಿಡ್ನ ಶಿಖರದಲ್ಲಿರಬೇಕಾದ ವ್ಯಕ್ತಿ ಅಥವಾ ಗುಂಪನ್ನು ಆಯ್ಕೆ ಮಾಡುವವರು ಎಂಬ ಭಾವನೆಯಷ್ಟೇ. ಇದಾದರೂ ಎಂತಹ ಭಾವನೆ? ಅದೊಂದು ಉಲ್ಲಾಸಕರ ಉನ್ಮಾದ. ಯಾವುದೇ ವೈಚಾರಿಕ ಚರ್ಚೆಯಲ್ಲಿ ಭಾಗವಹಿಸದೆ, ಆಡಳಿತದ ಅನುಕೂಲಗಳನ್ನು ಪಡೆಯದ ಮತದಾನದ ಭಾವಾವೇಶ. ಇರಬಹುದು: ಒಂದಿಷ್ಟು ಚಿಲ್ಲರೆ ಹಣ, ಸಾರಾಯಿ, ಉಡುಗೊರೆಗಳು, ಇವುಗಳಿಗಾಗಿ ತಮ್ಮ ಅಮೂಲ್ಯವಾದ ಅಥವಾ ಸಾಪೇಕ್ಷವಾಗಿ ಹೊಂದದ ಸಮಯ, ಹಣ ಇವುಗಳನ್ನು ವ್ಯರ್ಥ ವೆಚ್ಚವಾಗಿಸಿ ಭಾಗವಹಿಸುವ ಈ ನಡೆ-ನುಡಿಗೆ ಏನನ್ನಬೇಕು? ಮಾಯಾ ವಾಸ್ತವವೆನ್ನಬಹುದು. ಈ ಮಾಯಾ ಬಝಾರಿನಲ್ಲಿ ಆ ಕ್ಷಣಕ್ಕೆ ಎಷ್ಟೇ ಕ್ಷೀಣ ವ್ಯಕ್ತಿಯೂ ಘಟೋತ್ಗಜನೇ. ತಳಸ್ತರದಲ್ಲಿ ಈ ಚಟುವಟಿಕೆ ಬಹುತೇಕ ಎಲ್ಲರಲ್ಲೂ ಸಮಾನವಾಗಿರುತ್ತದೆ. ಒಮ್ಮೆ ಮತದಾನ ಮಾಡಿದರೆಂದರೆ ಮಂದಿ ಮತ್ತೆ ತಮ್ಮ ನಿತ್ಯಕಾಯಕಕ್ಕೆ ಮರಳುತ್ತಾರೆ. ತಮ್ಮ ಮತದಾನದಿಂದ ಯಾರಿಗೆ, ಕೊನೆಗೆ ತನಗಾದರೂ ಏನಾಗಿದೆ, ಏನಾಗಬೇಕಾಗಿದೆ, ಎಂಬುದನ್ನು ತಳಸ್ತರದ ಜನಸಾಮಾನ್ಯರು ಯೋಚಿಸರು. ಸಾಮಾಜಿಕ ಪಿರಮಿಡ್ನ ಏಣಿಯಲ್ಲಿ ಮೇಲೇರಿದಂತೆಲ್ಲ ಆಡಳಿತದ ಅರಿವು ಮತ್ತು ಬಯಕೆ ಹೆಚ್ಚಾಗುತ್ತದೆ. ಅವರು ಸಮುದ್ರದಲ್ಲಿ ಮತ್ತೆ ಮತ್ತೆ ಬಡಿಯುವ ತೆರೆಗಳಂತೆ ಕಣ್ಣಿಗೆ ಕಾಣಿಸುತ್ತಾರೆ. ತಳಸ್ತರದ ಜನರು ತೆರೆಗಳಡಿಯ ನೀರಿನಂತೆ ಸದ್ದಿಲ್ಲದೆ ಪ್ರಶಾಂತವಾಗಿ ಉಳಿಯುತ್ತಾರೆ. ಒಟ್ಟು ಜಲಮಟ್ಟಕ್ಕೆ ಬಹುತೇಕ ಕಾರಣರು ಈ ಆಳದ ನೀರಿನಂತಿರುವ ಜನರೇ. ಆದರೆ ಬಹುತೇಕ ಚುನಾವಣೆಗಳಲ್ಲಿ ಜನರು ಪರಸ್ಪರ ಮಾತನಾಡಿಕೊಂಡು ನಿರ್ಧರಿಸಿದಂತೆ ಮತದಾನ ಮಾಡುತ್ತಾರಲ್ಲ, ಹೇಗೆ ಮತ್ತು ಯಾಕೆ? ಸ್ವತಃ ಯಾವುದೇ ಆಡಳಿತದಿಂದ ಬಾಧಿತವಾಗದಿದ್ದರೂ ಜನರು ಆಡಳಿತವನ್ನು ಬದಲಾಯಿಸಬಲ್ಲರು, ಅಥವಾ ಬದಲಾಯಿಸುತ್ತಾರೆ. ಬೆಲೆಯೇರಿಕೆಯಂತಹ ಸಮಸ್ಯೆ ಎಲ್ಲರನ್ನೂ ಕಾಡುತ್ತದೆಯಾದರೂ ಅದರ ವಿರುದ್ಧ ಯಾವುದೇ ಗುಲ್ಲೆಬ್ಬಿಸುವ ಮನೋವೃತ್ತಿ ಜನರಲ್ಲಿರುವುದಿಲ್ಲ. ಅವರು ಏನಿದ್ದರೂ ತಮ್ಮತಮ್ಮೊಳಗೆ ಮಾತನಾಡಿಕೊಳ್ಳುತ್ತಾರೆ- ಅದೂ ಕೈಯಲ್ಲಿ ಕಾಸಿಲ್ಲದಾಗ. ಒಂದು ಹೊತ್ತಿನ ಊಟಕ್ಕೆ ಆಸ್ಪದವಿದ್ದರೆ ಅವರು ಮತ್ತೊಂದು ಹೊತ್ತಿನ ಊಟವನ್ನೂ ಯೋಚಿಸರು. ಆದರೆ ಮತಗಟ್ಟೆಯಲ್ಲಿ ಇವೆಲ್ಲ ಒಂದೇ ಮನೋಧರ್ಮವಾಗಿ ಪರಿವರ್ತನೆಯಾಗುತ್ತವೆ. ಇದರ (ಕು)ತಂತ್ರವನ್ನು ರಾಜಕಾರಣ ಮಾತ್ರ ಅರ್ಥಮಾಡಿಕೊಳ್ಳುತ್ತದೆ ಯೆಂದು ಕಾಣುತ್ತದೆ: ಜನರ ಭಾವನೆಗಳನ್ನು ಉದ್ದೀಪನಗೊಳಿಸಿದರೆ ಸಾಲದು, ಕೆರಳಿಸಬೇಕು ಎಂಬುದು ರಾಜಕೀಯದ ತಂತ್ರ. ನಾಯಕರು ಮಾಡುವ ಪರಸ್ಪರ ದೂಷಣೆ ಜನಕಾರ್ಷಕವಾಗುವುದು ಯಾಕೆ? ನಾವು ಹೇಳದಿರುವುದನ್ನು, ನಮಗೆ ಸಾಧ್ಯವಿಲ್ಲದ್ದನ್ನು ಈ ಮಂದಿ ಬಹಿರಂಗವಾಗಿ ಹೇಳುತ್ತಾರೆಂಬುದೇ ರಾಜಕೀಯ ನಾಯಕರನ್ನು, ಒಟ್ಟಿನಲ್ಲಿ ಸಕ್ರಿಯ ರಾಜಕಾರಣಿಗಳನ್ನು ನಾಯಕ ಪಾತ್ರಕ್ಕೆ ಆರಿಸುತ್ತದೆ. ಅವರೀಗ ನಮ್ಮೆಲ್ಲ(ರ) ಭಾವನೆಗಳ ನಾಯಕ. ನೆಲದಡಿಯ ಬೇರುಗಳ ಪಾಲಿಗೆ ಆಕಾಶಕ್ಕೆ ಮುಖಮಾಡಿದ ಚಿಗುರು, ಕೊಂಬೆ-ರೆಂಬೆ, ಒಟ್ಟಿನಲ್ಲಿ ಕಣ್ಣಿಗೆ ಕಾಣುವ ಮರ-ಗಿಡ. ಉತ್ತಮ ಆಡಳಿತ ಬೇಕೆಂದು ಎಲ್ಲರೂ ಬಯಸುವುದಿಲ್ಲವೇ ಎಂಬ ಪ್ರಶ್ನೆ ಬರಬಹುದು: ಆದರೆ ನಿಜಕ್ಕೂ ನೋಡಿದರೆ ಸಮಾಜದ ಮುಖ-ಅಮುಖ್ಯವಾಹಿನಿಗಳ ಬಹುಸಂಖ್ಯಾತರು ಈ ಕುರಿತು ತಲೆಗೆಡಿಸಿ ಕೊಳ್ಳುವುದಿಲ್ಲ. ಇದು ಸ್ಥಿತಪ್ರಜ್ಞೆಯೂ ಅಲ್ಲ, ಸಿನಿಕತನವೂ ಅಲ್ಲ. ಅದನ್ನು ನಡೆಸಲು ಗೊತ್ತುಪಡಿಸಿದ ನಾಯಕರಿದ್ದಾರಲ್ಲ, ಅವರು ನೋಡಿಕೊಳ್ಳುತ್ತಾರಲ್ಲ, ನಮ್ಮಿಂದೇನಾದೀತು ಎಂಬ ಅಲ್ಪತೃಪ್ತಿಯ ಚಿಂತನೆ ಅಥವಾ ನಾವು ಕಾಣುವ ಅಪರಿಪೂರ್ಣತೆಯೇ ವಾಸ್ತವದ ಲಕ್ಷಣ; ಅದು ಎಂದಿಗೂ ಪೂರ್ಣತೆಯನ್ನು ಪಡೆಯದು; ಕೇಡೆಂಬುದೇ ಆಡಳಿತದ ಲಕ್ಷಣವೆಂಬ ಮನಸ್ಥಿತಿ. ಆಡಳಿತದ ಮುಖ್ಯಶಾಖೆಯಾದ ರಾಜಕಾರಣಕ್ಕೆ ಮತ್ತು ಇಂಬುಕೊಡುವ ಅಧಿಕಾರಶಾಹಿಗೆ ಸಕಲ ಸೌಕರ್ಯಗಳನ್ನು ಮಾಡಿಕೊಡುವ ಪ್ರಜೆ ತನ್ನ ಸೌಕರ್ಯಗಳಿಗೆ, ಅನುಕೂಲಗಳಿಗೆ, ಸೌಲಭ್ಯಗಳಿಗೆ ಗಮನ ಕೊಡುವುದಿಲ್ಲವೆಂಬುದು ನಿಜವಾಸ್ತವ. ಇಲ್ಲವಾದರೆ ಪ್ರತೀ ಚುನಾವಣೆಯೂ ಅಧಿಕಾರದಲ್ಲಿರುವ ವ್ಯಕ್ತಿ/ಗುಂಪು/ಪಕ್ಷವನ್ನು ಉರುಳಿಸಬೇಕಿತ್ತು. ‘ಆಂಟಿಇನ್ಕಂಬೆನ್ಸಿ’ (Anti-incumbency) ಎಂದು ಇಂಗ್ಲಿಷ್ನಲ್ಲಿ ಹೇಳುವ ಆಡಳಿತವಿರೋಧಿ ಅಲೆ ಪ್ರತೀ ಚುನಾವಣೆಯಲ್ಲೂ ಕಾರ್ಯರೂಪಕ್ಕೆ ಬರಬೇಕಿತ್ತು. ಆದರೆ ಹಾಗಾಗುತ್ತಿಲ್ಲ. ಅಪವಾದಗಳಿರಬಹುದು. ೧೯೭೭ರಲ್ಲಿ ನಡೆದ ಚುನಾವಣೆಯಲ್ಲಿ ಆದ ಭಾರೀ ಪಲ್ಲಟದ ಹೊರತಾಗಿ ಇಂತಹ ಸ್ಥಿತ್ಯಂತರಗಳು ದೊಡ್ಡ ಪ್ರಮಾಣದಲ್ಲಿ ನಡೆದಿಲ್ಲ. ೨೦೧೪ರಂದೀಚೆಗೆ ಭಾಜಪ ಕೇಂದ್ರದಲ್ಲಿ ಅಧಿಕಾರವನ್ನು ಹಿಡಿದರೂ ಅದು ಕೆಲವಾದರೂ ಮಿತ್ರಪಕ್ಷಗಳನ್ನು ಆಶ್ರಯಿಸಿಯೇ ಬದುಕಬೇಕಾದ ದುಸ್ಥಿತಿಯಲ್ಲಿದೆ. ಅಂದರೆ ಜನರು ಯಾವುದೇ ಕುರ್ಚಿಯ ನಾಲ್ಕು ಕಾಲುಗಳೂ ಭದ್ರವಾಗಿರಲು ಬಿಡುವುದಿಲ್ಲ. ಇದು ಒಂದು ಸಾಮೂಹಿಕ ನಿರ್ಣಯವಲ್ಲ; ಬದಲಾಗಿ ಎದೆಗೂ ಎದೆಗೂ ನಡುವಿರುವ ಅಮೂರ್ತ ಸೇತುವೆಯ ಪರಿಣಾಮ. ಜನರೇ ಆರಿಸುವ, ರಾಜಕಾರಣ ಜನರ ಮನೋದರ್ಶಿನಿಯಾಗಿಯೇ ಇರಬೇಕಾಗುತ್ತದೆ. ಪರಿಣಾಮವಾಗಿ ರಾಜಕಾರಣವು ಜನರ ಮನೋಸ್ಥಿತಿಯ ದ್ಯೋತಕವಾಗಿ ಉಳಿಯುತ್ತದೆ. ಸಣ್ಣಪುಟ್ಟ ಅಪರೂಪದ ಒಳ್ಳೆಯತನವನ್ನು ಹೊರತುಪಡಿಸಿದರೆ ರಾಜಕಾರಣ ಮತ್ತು ಅಧಿಕಾರಶಾಹಿಯು ಎಂದೂ ಜನಹಿತವನ್ನು ಬಯಸಿದ್ದಿಲ್ಲ. ಮಹಾಭಾರತದಲ್ಲಿ ಬಕಾಸುರನೆಂಬ ರಾಕ್ಷಸನ ಪ್ರಸಂಗವಿದೆ. ಈತನಿಗೆ ದಿನವೂ ಒಂದುಗಾಡಿ ಆಹಾರ ಮತ್ತು ಅದರೊಂದಿಗೆ ಎರಡು ಎತ್ತುಗಳು ಮತ್ತು ಅದನ್ನು ನಡೆಸುವವನು ಬಲಿಯಾಗಬೇಕಿತ್ತಂತೆ. ಇದು ಅತಂತ್ರವನ್ನೇನೂ ಸೃಷ್ಟಿಸಿದ್ದು ಕಾಣುವುದಿಲ್ಲ. ಇಂದಿನ ಬೆಲೆಯೇರಿಕೆ ಮುಂತಾದ ಪಿಡುಗಿನಂತೆ ಅದೂ ಸಹ್ಯವಾಗಿತ್ತು ಮತ್ತು ಆಡಳಿತದ ಕುರಿತ ಜನರ ಪ್ರತಿಕ್ರಿಯಾ ಮನೋಧರ್ಮವೇ ಆಗಿತ್ತು. ಇದು ಕೊನೆಯಾದದ್ದು ಮಧ್ಯಪಾಂಡವ ಭೀಮನು ನಿಗದಿಯಾದ ಬಡಪಾಯಿಯ ಬದಲು ಹೋಗಿ ಆತನನ್ನು ಮರ್ದಿಸಿದಾಗ. ಇಂದು ಧರ್ಮ, ಮತ, ಭಾಷೆ ಮುಂತಾದ ಭಾವನಾತ್ಮಕ ವಿಚಾರಗಳೇ ಬಹುಜನರ ನಡುವಣ ಕೊಂಡಿ. ಮಾಧ್ಯಮವಾಗಿರಬೇಕಾದದ್ದು ಗುರಿಯಾಗಿದೆ. ಅದನ್ನು ರಾಜಕಾರಣಿಗಳು ಅಧಿಕಾರದ ಏಣಿಯ ಕೀಲಾಗಿ ಸಮರ್ಥವಾಗಿ ಬಳಸಿಕೊಳ್ಳುತ್ತಿದ್ದಾರೆ. ಜೊತೆಗೆ ಭ್ರಷ್ಟರಾಜಕೀಯದ ಭಾಷೆಯು ದ್ವೇಷದಿಂದ ಕೂಡಿದೆ ಮಾತ್ರವಲ್ಲ, ಬಹಳ ಕೀಳಾಗುತ್ತಿದೆ. ಆದರೂ ಜನ ಸುಮ್ಮನಿದ್ದಾರೆ ಮತ್ತು ಮನರಂಜನೆಯಂತೆ ಸ್ವೀಕರಿಸುತ್ತಾರೆ. ಪ್ರಜೆಗಳು ರಾಜಕಾರಣದ ಸ್ವತ್ತು ಮಾತ್ರವಲ್ಲ ತೊತ್ತು ಎಂದು ಜನರೇ ಒಪ್ಪಿಕೊಂಡಂತಿದೆ. ಪ್ರಾಯಃ ಜನರಿಗೆ ಪುರಂದರದಾಸರು ಹೇಳಿದ ಉತ್ತಮ ಪ್ರಭುತ್ವ ಲೊಳಲೊಟ್ಟೆ ಎಂಬುದು ಎಂದೋ ಅರ್ಥವಾಗಿತ್ತು. ಸಾವಿನ ನಂತರ ಮರಳಿಬಾರದ ಬದುಕಿನಂತೆ ಅದನ್ನು ಶೂನ್ಯದೃಷ್ಟಿಯಿಂದ, ತದೇಕಚಿತ್ತದಿಂದ ನೋಡುವುದನ್ನು ಬಿಟ್ಟರೆ ಬೇರೆ ಆಯ್ಕೆಗಳಿಲ್ಲವೆಂಬುದು ಮನದಟ್ಟಾಗಿದೆ. ಕನಸು ಕಾಣಲು ಆಯ್ಕೆಗಳಿದ್ದರೆ ಉತ್ತಮ ಆಡಳಿತದ ಕನಸು ಕಾಣಬಹುದು. ಆದರೆ ಆಯ್ಕೆಗಳಿಲ್ಲ. ಕನಸು ಕಾಣಬೇಕಾದರೂ ಅದಕ್ಕೊಂದು ಕಲ್ಪನೆಯ ನೆಲೆಗಟ್ಟು ಬೇಕು. ಅದೇ ಇಲ್ಲದಿದ್ದರೆ? ಕನಸು ಕನಸಾಗಿ ಕಾಡುವುದು, ಕಾಣುವುದು ಬೇರೆ; ಆದರೆ ಅಂತಹ ಕನಸೇ ಅಸಾಧ್ಯವಾದರೆ? ಅಲಭ್ಯವಾದರೆ? ಪ್ರಾಯಃ ಜನರಿಗೆ ಪುರಂದರದಾಸರು ಹೇಳಿದ ಉತ್ತಮ ಪ್ರಭುತ್ವ ಲೊಳಲೊಟ್ಟೆ ಎಂಬುದು ಎಂದೋ ಅರ್ಥವಾಗಿತ್ತು. ಸಾವಿನ ನಂತರ ಮರಳಿಬಾರದ ಬದುಕಿನಂತೆ ಅದನ್ನು ಶೂನ್ಯದೃಷ್ಟಿಯಿಂದ, ತದೇಕಚಿತ್ತದಿಂದ ನೋಡುವುದನ್ನು ಬಿಟ್ಟರೆ ಬೇರೆ ಆಯ್ಕೆಗಳಿಲ್ಲವೆಂಬುದು ಮನದಟ್ಟಾಗಿದೆ. ಕನಸು ಕಾಣಲು ಆಯ್ಕೆಗಳಿದ್ದರೆ ಉತ್ತಮ ಆಡಳಿತದ ಕನಸು ಕಾಣಬಹುದು. ಆದರೆ ಆಯ್ಕೆಗಳಿಲ್ಲ. ಕನಸು ಕಾಣಬೇಕಾದರೂ ಅದಕ್ಕೊಂದು ಕಲ್ಪನೆಯ ನೆಲೆಗಟ್ಟು ಬೇಕು. ಅದೇ ಇಲ್ಲದಿದ್ದರೆ? ಕನಸು ಕನಸಾಗಿ ಕಾಡುವುದು, ಕಾಣುವುದು ಬೇರೆ; ಆದರೆ ಅಂತಹ ಕನಸೇ ಅಸಾಧ್ಯವಾದರೆ? ಅಲಭ್ಯವಾದರೆ?
Mangaluru | ಎಎಸ್ಸೈ ಐತಪ್ಪ ಕೊಲೆ ಯತ್ನ ಪ್ರಕರಣ: ಆರೋಪಿ ಸಮೀರ್ ವಿರುದ್ಧ ರೆಡ್ ಕಾರ್ನರ್ ನೋಟಿಸ್ ಜಾರಿ
ಮಂಗಳೂರು: ಎಎಸ್ಸೈ ಐತಪ್ಪ ಕೊಲೆಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ವಿದೇಶದಲ್ಲಿ ತಲೆಮರೆಸಿಕೊಂಡಿರುವ ಆರೋಪಿ ಸಮೀರ್ ವಿರುದ್ಧ ರೆಡ್ ಕಾರ್ನರ್ ನೋಟಿಸ್ ಜಾರಿಗೊಳಿಸಲಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ. ಆರೋಪಿ ಸಮೀರ್ ವಿರುದ್ಧ ಸಾಮೂಹಿಕ ಅತ್ಯಾಚಾರ ಸಹಿತ 14 ಪ್ರಕರಣಗಳು ದಾಖಲಾಗಿವೆ. ಈತನ ಸುಳಿವು ಪತ್ತೆಯಾದಲ್ಲಿ ಮಾಹಿತಿ ನೀಡುವಂತೆ ಕಮಿಷನರ್ ಮನವಿ ಮಾಡಿದ್ದಾರೆ. ಈ ಹಿಂದೆ ಆರೋಪಿ ಸಫ್ವಾನ್ ಎಂಬಾತನ ಮೇಲೂ ರೆಡ್ ಕಾರ್ನರ್ ನೋಟಿಸ್ ಜಾರಿಗೊಳಿಸಿ ಕಾನೂನು ಕ್ರಮ ಜರುಗಿಸಲಾಗಿತ್ತು ಎಂದು ಅಯುಕ್ತ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ.
ವಿಧಾನಸಭಾ ಚುನಾವಣೆ| ಕೇರಳ, ಅಸ್ಸಾಂ ಮತ್ತು ಪುದುಚೇರಿಯಲ್ಲಿ ಬಿರುಸಿನ ಮತದಾನ
ಕೇರಳದಲ್ಲಿ 16.23%, ಅಸ್ಸಾಂನಲ್ಲಿ 17.87%, ಪುದುಚೇರಿಯಲ್ಲಿ 17.41% ಆರಂಭಿಕ ಮತದಾನ ದಾಖಲು
ಕೇರಳ ವಿಧಾನಸಭೆ ಚುನಾವಣೆ: 9 ಗಂಟೆ ವೇಳೆ ಕಾಸರಗೋಡಿನಲ್ಲಿ 10.55 ಶೇ. ಮತದಾನ
ಕಾಸರಗೋಡು: ಕೇರಳ ವಿಧಾನಸಭಾ ಚುನಾವಣೆಯ ಮೊದಲ ಎರಡು ಗಂಟೆಗಳಲ್ಲಿ ಕಾಸರಗೋಡು ಜಿಲ್ಲೆಯಲ್ಲಿ 10.55 ಶೇಕಡ ಮತದಾನವಾಗಿದೆ. ಮಂಜೇಶ್ವರ 8.99 ಶೇಕಡ, ಉದುಮ 11.62, ಕಾಞಂಗಾಡ್ 11.37, ಕಾಸರಗೋಡು 10.8 ಹಾಗೂ ತ್ರಿಕ್ಕರಿಪುರ ವಿಧಾನಸಭಾ ಕ್ಷೇತ್ರದಲ್ಲಿ 10.68 ಶೇಕಡ ಮತದಾನ ವಾಗಿದೆ ಮಂಜೇಶ್ವರ ವಿಧಾನಸಭಾ ಕ್ಷೇತ್ರದ ಎರಡು ಮತಗಟ್ಟೆಗಳಲ್ಲಿ ಮತ ಯಂತ್ರಗಳಲ್ಲಿ ದೋಷ ಕಂಡುಬಂದಿದೆ. ಇದರಿಂದ ಮತದಾನ ವಿಳಂಬಗೊಂಡಿತು. ಮಂಗಲ್ಪಾಡಿ ಪಂಚಾಯತ್ ನ ಶಿರಿಯ, ಕುಂಬಳೆ ಪಂಚಾಯತ್ ನ ಉಳುವಾರಿ ನಲ್ಲಿರುವ ಮತಗಟ್ಟೆಯಲ್ಲಿ ದೋಷ ಕಂಡುಬಂದಿದೆ. ದೋಷ ಸರಿಪಡಿಸಿದ ಬಳಿಕ ಮತದಾನ ಆರಂಭಗೊಂಡಿತು. ಕಾಸರಗೋಡು ಜಿಲ್ಲೆಯ ಐದು ಸೇರಿದಂತೆ ಕೇರಳದ 140 ವಿಧಾನಸಭಾ ಕ್ಷೇತ್ರಗಳಿಗೆ ಇಂದು ಚುನಾವಣೆ ನಡೆಯುತ್ತಿದೆ.
ದೇಶದ ಮೆಟ್ರೋ ನಕ್ಷೆಯಲ್ಲಿ 3 ನೇ ಸ್ಥಾನಕ್ಕೆ ಕುಸಿದ 'ನಮ್ಮ ಮೆಟ್ರೋ'
ಬೆಂಗಳೂರು ಮೆಟ್ರೋ ಈ ಹಿಂದೆ ದೆಹಲಿಯ ನಂತರ ದೇಶದ ಎರಡನೇ ಅತಿದೊಡ್ಡ ಮೆಟ್ರೋ ಜಾಲ ಎಂಬ ಹೆಗ್ಗಳಿಕೆಯನ್ನು ಹೊಂದಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಮುಂಬೈ ನಗರದಲ್ಲಿ ಮೆಟ್ರೋ ಕಾಮಗಾರಿಗಳು ಅತ್ಯಂತ ವೇಗವಾಗಿ ಪೂರ್ಣಗೊಂಡು, ಹೊಸ ಮಾರ್ಗಗಳು ಸಾರ್ವಜನಿಕ ಬಳಕೆಗೆ ಮುಕ್ತವಾದ ಹಿನ್ನೆಲೆಯಲ್ಲಿ ಬೆಂಗಳೂರು ಈಗ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿದೆ. ಮುಂಬೈನ ನಿರಂತರ ವಿಸ್ತರಣೆ ಮತ್ತು ಹೊಸ ಮಾರ್ಗಗಳ ಉದ್ಘಾಟನೆಯು ಆ ನಗರವನ್ನು ಎರಡನೇ ಸ್ಥಾನಕ್ಕೆ ಏರಿಸಿದೆ.
ನಂಬಿಕೆಗೆ ಯೋಗ್ಯವಲ್ಲದ ಪಾಕ್ ಮಧ್ಯಸ್ಥಿಕೆಯನ್ನು US ಒಪ್ಪಿಕೊಂಡಿದ್ದೇ ಆಶ್ಚರ್ಯ : ಇಸ್ರೇಲ್
Iran and US Ceasefire : ಅಮೆರಿಕ ಮತ್ತು ಇರಾನ್ ನಡುವೆ ನಡೆದ ಕದನ ವಿರಾಮಕ್ಕೆ ಮಧ್ಯಸ್ಥಿಕೆ ವಹಿಸುತ್ತಿರುವ ಪಾಕಿಸ್ತಾನದ ವಿರುದ್ದ ಇಸ್ರೇಲ್ ಕೆಂಡಕಾರಿದೆ. ಇಸ್ರೇಲ್, ಯಾವತ್ತೂ ಇಸ್ಲಾಮಾಬಾದ್’ಅನ್ನು ವಿಶ್ವಾಸಾರ್ಹ ದೇಶ ಎಂದು ನಂಬುವುದಿಲ್ಲ ಎಂದು ಭಾರತಕ್ಕೆ ಇಸ್ರೇಲ್ ರಾಯಭಾರಿಯಾಗಿರುವ ರೂವೆಲ್ ಅಜರ್ ಹೇಳಿದ್ದಾರೆ.
ದಾವಣಗೆರೆ ದಕ್ಷಿಣ ಉಪ ಚುನಾವಣೆ: ಶಾಂತಿಯುತ ಮತದಾನ ಆರಂಭ
ದಾವಣಗೆರೆ: ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ಬೆಳಗ್ಗೆ ನಿಗದಿತ ವೇಳೆ ಮತದಾನ ಆರಂಭಗೊಂಡಿದೆ. ಕನಗೊಂಡನಹಳ್ಳಿಯ ಮತಗಟ್ಟೆ ಸಂಖ್ಯೆ 66 ರ ಮತಯಂತ್ರದಲ್ಲಿ ಅಣಕು ಮತದಾನದ ವೇಳೆ ದೋಷ ಕಂಡುಬಂದ ಹಿನ್ನೆಲೆಯಲ್ಲಿ ಮತಯಂತ್ರವನ್ನು ಬದಲಿಸಿದ ಘಟನೆ ವರದಿಯಾಗಿದೆ. ಉಳಿದಂತೆ ಎಲ್ಲ 283 ಮತಗಟ್ಟೆಗಳಲ್ಲಿ ಶಾಂತಿಯುತ ಮತದಾನ ನಡೆಯುತ್ತಿದೆ. 76 ಸೂಕ್ಷ್ಮ ಮತಗಟ್ಟೆಗಳಲ್ಲಿ ಹೆಚ್ಚುವರಿ ಪೊಲೀಸ್ ಮತ್ತು ಅರೆ ಮಿಲಿಟರಿ ಪಡೆ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
IPL 2026: ಕೆಕೆಆರ್ಗೆ ಮೊದಲ ಜಯದ ನಿರೀಕ್ಷೆ: ಲಖನೌಗೆ ಗೆಲುವಿನ ಲಯ ಮುಂದುವರಿಸುವ ವಿಶ್ವಾಸ
ಇಂದು ಕೆಕೆಆರ್ ಹಾಗೂ ಲಖನೌ ಸೂಪರ್ ಜೈಂಟ್ಸ್ ತಂಡ ಮುಖಾಮುಖಿಯಾಗಲಿದೆ. ಈವರೆಗೂ ಆಡಿರುವ ಒಟ್ಟು 6 ಪಂದ್ಯಗಳಲ್ಲಿ ಕೆಕೆಅರ್ 2 ಬಾರಿ ಮಾತ್ರ ಜಯಗಳಿಸಿತ್ತು, 4 ಬಾರಿ ಲಖನೌ ಗೆದ್ದಿತ್ತು. ಇಂದು ರಾತ್ರಿ 7-30 ಕ್ಕೆ ಪಂದ್ಯ ಆರಂಭ ಆಗಲಿದ್ದು, ಆ ವೇಳೆಗೆ ಮಳೆ ಬಿಡುವು ಕೊಡುವ ನಿರೀಕ್ಷೆ ಇದೆ.
ಕೇರಳ ವಿಧಾನಸಭೆ ಚುನಾವಣೆ: ಕಾಸರಗೋಡಿನಲ್ಲಿ ಚುರ ಮತದಾನ
ಕೇರಳ ವಿಧಾನಸಭೆ ಚುನಾವಣೆ: ಕಾಸರಗೋಡಿನಲ್ಲಿ ಚುರ ಮತದಾನ
ಕದನವಿರಾಮದ ನಡುವೆಯೇ ಲೆಬನಾನ್ನಲ್ಲಿ ಇಸ್ರೇಲ್ ಭೀಕರ ದಾಳಿಗೆ 254 ಬಲಿ; ಶಾಂತಿ ಒಪ್ಪಂದ ಮುರಿಯಲು ಇರಾನ್ ಸಿದ್ಧತೆ?
ಮಧ್ಯಪ್ರಾಚ್ಯದ ಸಂಘರ್ಷಕ್ಕೆ 2ವಾರಗಳ ತಾತ್ಕಾಲಿಕ ಕದನವಿರಾಮ ಘೋಷಣೆಯಾಗಿದೆ, ಆದಾಗ್ಯೂ, ಇಸ್ರೇಲ್ ಇದು ಲೆಬನಾನ್ ಗೆ ಅನ್ವಯಿಸುವುದಿಲ್ಲ ಎಂದು ಪ್ರತಿಪಾದಿಸುತ್ತಿದ್ದು, ಭಾರಿ ಪ್ರಮಾಣದ ವೈಮಾನಿಕ ದಾಳಿ ನಡೆಸಿದೆ. ಇದರಿಂದಾಗಿ ಈವರೆಗೂ ಸುಮಾರು 200ಕ್ಕೂ ಅಧಿಕ ಜನ ಗಾಯಗೊಂಡಿದ್ದು, 1000ಕ್ಕೂ ಅಧಿಕ ಜನ ಗಾಯಗೊಂಡಿದ್ದಾರೆ. ಅಲ್ಲದೆ, ಕದನವಿರಾಮದ ಕುರಿತು ನಾಯಕರ ನಡುವೆ ವಿಭಿನ್ನ ನಿಲುವು ಕಾಣಿಸುತ್ತಿದ್ದು, ಇದು ಮಾತುಕತೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ. ಈ ಕುರಿತ ಮಾಹಿತಿ ಇಲ್ಲಿದೆ..
ಒಡಿಶಾದಲ್ಲಿ ಅದಾನಿ ಗ್ರೂಪ್ನಿಂದ ₹33,000 ಕೋಟಿ ಬೃಹತ್ ಹೂಡಿಕೆ: ಕರಣ್ ಅದಾನಿ ಮಹತ್ವದ ಘೋಷಣೆ
ಭಾರತದ ಕೈಗಾರಿಕಾ ಮತ್ತು ಡಿಜಿಟಲ್ ಬೆಳವಣಿಗೆಯಲ್ಲಿ ಒಡಿಶಾ ರಾಜ್ಯವು ಮುಂದಿನ ದಿನಗಳಲ್ಲಿ ಬಹಳ ಮುಖ್ಯವಾದ ಪಾತ್ರ ವಹಿಸಲಿದೆ ಎನ್ನುವುದನ್ನು ಎತ್ತಿಹಿಡಿದಿರುವ ಕರಣ್ ಅದಾನಿ, ಮಂಗಳವಾರ ಒಡಿಶಾದಲ್ಲಿ ಪ್ರಮುಖ ಬಹು-ವಲಯ ಹೂಡಿಕೆಗಳನ್ನು ಘೋಷಿಸಿದ್ದಾರೆ. ಭುವನೇಶ್ವರದಲ್ಲಿ ನಡೆದ ಶಂಕುಸ್ಥಾಪನೆ ಸಮಾರಂಭದಲ್ಲಿ ಮಾತನಾಡಿದ ಅವರು, ಡೇಟಾ ಮೂಲಸೌಕರ್ಯ, ಇಂಧನ ಮತ್ತು ಉತ್ಪಾದನಾ ವಲಯಗಳನ್ನು ಒಳಗೊಂಡ ಮೂರು ಪ್ರಮುಖ ಯೋಜನೆಗಳ ರೂಪರೇಷೆಗಳನ್ನು ವಿವರಿಸಿದರು.
ಯುಜಿಡಿ ಗ್ರಾಹಕರಿಗೂ ಶುಲ್ಕ ; ಮೈಸೂರು ಮಹಾನಗರ ಪಾಲಿಕೆ ನಿರ್ಧಾರ
ಮೈಸೂರು ಮಹಾನಗರ ಪಾಲಿಕೆಯು ತನ್ನ ಆದಾಯವನ್ನು ಹೆಚ್ಚಿಸಿಕೊಳ್ಳಲು ಹೊಸ ಮಾರ್ಗವೊಂದನ್ನು ಕಂಡುಕೊಂಡಿದ್ದು, ಪಾಲಿಕೆಯಿಂದ ಕುಡಿಯುವ ನೀರಿನ ಸಂಪರ್ಕ ಪಡೆಯದಿದ್ದರೂ ಒಳಚರಂಡಿ ವ್ಯವಸ್ಥೆಯನ್ನು ಬಳಸುತ್ತಿರುವ ಮನೆ ಮತ್ತು ಅಪಾರ್ಟ್ಮೆಂಟ್ಗಳಿಗೆ ಇನ್ಮುಂದೆ ಶುಲ್ಕ ವಿಧಿಸಲು ನಿರ್ಧರಿಸಿದೆ. ನಗರದ ಅನೇಕ ಬಡಾವಣೆಗಳಲ್ಲಿ ನಿವಾಸಿಗಳು ಸ್ವಂತ ಕೊಳವೆಬಾವಿಗಳ ಮೂಲಕ ನೀರು ಪಡೆದು, ತ್ಯಾಜ್ಯ ನೀರನ್ನು ಮಾತ್ರ ಪಾಲಿಕೆಯ ಒಳಚರಂಡಿ ಪೈಪ್ಲೈನ್ಗಳಿಗೆ ಬಿಡುತ್ತಿದ್ದಾರೆ.
ಬಳ್ಳಾರಿ ಜೈಲಿನಲ್ಲಿ ಕುಡಿವ ನೀರಿಗಾಗಿ ಕೈದಿಗಳ ಪರದಾಟ
ಬಿಸಿಲೂರು ಎಂದೇ ಕರೆಯಲ್ಪಡುವ ಬಳ್ಳಾರಿಯಲ್ಲಿ ಬೇಸಿಗೆಯ ಪ್ರಖರತೆ ಹೆಚ್ಚಾದಂತೆಲ್ಲಾ ನೀರಿನ ಅಭಾವ ತಲೆದೂರುವುದು ಮಾಮೂಲಿ. ಆದರೆ ಈ ಬಾರಿ ಈ ಜಲಕ್ಷಾಮದ ಬಿಸಿ ಸಾಮಾನ್ಯ ಜನರಿಗಷ್ಟೇ ಅಲ್ಲದೆ, ಕೇಂದ್ರ ಕಾರಾಗೃಹದ ಕೈದಿಗಳಿಗೂ ತೀವ್ರವಾಗಿ ತಟ್ಟಿದೆ. ಪ್ರಸ್ತುತ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿರುವ ಹಾಗೂ ವಿಚಾರಣೆ ಎದುರಿಸುತ್ತಿರುವ ಸುಮಾರು 485 ಮಹಿಳಾ ಮತ್ತು ಪುರುಷ ಕೈದಿಗಳಿದ್ದು, ಇವರೆಲ್ಲರೂ ದೈನಂದಿನ ಬಳಕೆಯ ನೀರಿಗಾಗಿ ಹೈರಾಣಾಗುತ್ತಿದ್ದಾರೆ.
Assembly Elections 2026: ಕೇರಳಂ, ಅಸ್ಸಾಂ, ಪುದುಚೇರಿ ವಿಧಾನಸಭೆ ಚುನಾವಣೆ ಮತದಾನ ಪ್ರಾರಂಭ
Assembly Elections 2026: ದೇಶದ ಗಮನ ಸೆಳೆದಿರುವ 5 ರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿ ಇಂದು ಮೂರು ವಿಧಾನಸಭೆಗಳ ಚುನಾವಣೆ ನಡೆಯುತ್ತಿದೆ. ಕೇರಳಂ, ಅಸ್ಸಾಂ ಹಾಗೂ ಕೇಂದ್ರಾಡಳಿ ಪ್ರದೇಶವಾದ ಪುದುಚೇರಿಯ ವಿಧಾನಸಭೆ ಚುನಾವಣೆಯ ಮತದಾನ ಪ್ರಾರಂಭವಾಗಿದ್ದು ಭರ್ಜರಿಯಾಗಿ ನಡೆಯುತ್ತಿದೆ.
ಚೆನ್ನೈ ಎಕ್ಸ್ಪ್ರೆಸ್ ಕಾರಿಡಾರ್ಗೆ ಎಂಟ್ರಿ, ಎಕ್ಸಿಟ್ ನಿರ್ಮಾಣ ಸಾಧ್ಯತೆ, ಶೀಘ್ರದಲ್ಲಿ ಹೆದ್ದಾರಿ ಪರಿಶೀಲನೆ
ಬೆಂಗಳೂರು-ಚೆನ್ನೈ ಎಕ್ಸ್ಪ್ರೆಸ್ವೇ ಯೋಜನೆಯು ದಕ್ಷಿಣ ಭಾರತದ ಪ್ರಮುಖ ಆರ್ಥಿಕ ಕಾರಿಡಾರ್ ಆಗಿದ್ದು, ಸುಮಾರು 18 ಸಾವಿರ ಕೋಟಿ ರೂಪಾಯಿ ವೆಚ್ಚದಲ್ಲಿ 263 ಕಿಲೋಮೀಟರ್ ಉದ್ದದ ಅತ್ಯಾಧುನಿಕ ರಸ್ತೆಯನ್ನು ನಿರ್ಮಿಸಲಾಗುತ್ತಿದೆ. 2022ರಲ್ಲಿ ಚಾಲನೆ ಪಡೆದ ಈ ಬೃಹತ್ ಕಾಮಗಾರಿಯು 2027ರ ವೇಳೆಗೆ ಸಂಪೂರ್ಣವಾಗಿ ಸಾರ್ವಜನಿಕ ಬಳಕೆಗೆ ಮುಕ್ತವಾಗುವ ನಿರೀಕ್ಷೆಯಿದೆ.
Rrain in Karnataka: ಕರ್ನಾಟಕದ ಕರಾವಳಿಯಲ್ಲಿ ಭಾರೀ ಬಿಸಿಲು; ಬೆಂಗಳೂರು ಸೇರಿ ಈ ಭಾಗಗಳಲ್ಲಿ ಮಳೆ: ಐಎಂಡಿ
Rrain in Karnataka: ಬೆಂಗಳೂರು ಸೇರಿದಂತೆ ಕರ್ನಾಟಕದ ವಿವಿಧ ಭಾಗಗಳಲ್ಲಿ ಬಿಸಿಲು ಹೆಚ್ಚಾಗಿದೆ. ಈ ನಡುವೆ ಚಂಡಮಾರುತ ಪ್ರಸರಣದ ಪ್ರಭಾವದಿಂದ ಕರ್ನಾಟಕದ ವಿವಿಧ ಪ್ರದೇಶಗಳಲ್ಲಿ ಮಳೆ ಆಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆಯು ಮುನ್ಸೂಚನೆ ನೀಡಿದೆ. ಬಿಸಿಲಿನ ನಡುವೆ ಬೆಂಗಳೂರಿನ ವಿವಿಧ ಭಾಗಗಳಲ್ಲಿ ಮಳೆ ಆಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ವರದಿ ತಿಳಿಸಿದೆ.
ಕೇಂದ್ರ ಸಾಕಷ್ಟು ಅನಿಲ ಸಿಲಿಂಡರ್ಗಳನ್ನು ರಾಜ್ಯಕ್ಕೆ ನೀಡಿದ್ದರೆ ಸಮಸ್ಯೆ ಉದ್ಭವಿಸುತ್ತಿರಲಿಲ್ಲ : ಎಂ.ಲಕ್ಷ್ಮಣ್
ಮೈಸೂರು : ಅನಿಲ ಸಮಸ್ಯೆಗೂ ರಾಜ್ಯ ಸರಕಾರಕ್ಕೂ ಸಂಬಂಧ ಇಲ್ಲ, ಆದರೂ ಆಟೊ ಎಲ್ಪಿಜಿ ಗ್ಯಾಸ್ ಮುಷ್ಕರದ ಪದಾಧಿಕಾರಿಗಳ ಮೂಲಕ ಕಾಂಗ್ರೆಸ್ ಸರಕಾರದ ವಿರುದ್ಧ ಮಾತನಾಡಿಸುವ ಕೆಲಸವನ್ನು ಬಿಜೆಪಿ ನಾಯಕರು ಮಾಡುತ್ತಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಕಿಡಿಕಾರಿದ್ದಾರೆ. ನಗರದ ಕಾಂಗ್ರೆಸ್ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪೆಟ್ರೋಲ್, ಡೀಸೆಲ್ ಮತ್ತು ಅನಿಲ ಪೂರೈಕೆ ಮಾಡಲು ಅವಕಾಶ ಇರುವುದು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯಕ್ಕೆ. ಇದರ ಸಚಿವ ಹರ್ದೀಪ್ ಸಿಂಗ್ ಪುರಿ ಮತ್ತು ನಮ್ಮ ರಾಜ್ಯದಿಂದ ಆಯ್ಕೆಯಾಗಿರುವ ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಹ್ಲಾದ್ ಜೋಶಿ. ಇವರು ಅನಿಲ ಸಮಸ್ಯೆ ಹೇಳುವುದನ್ನು ಬಿಟ್ಟು ಕೇಂದ್ರ ಸರಕಾರದ ತಪ್ಪನ್ನು ಮರೆಮಾಚಲು ಕೆಲವು ಆಟೊ ರಿಕ್ಷಾ ಪದಾಧಿಕಾರಿಗಳನ್ನು ಬಳಸಿಕೊಂಡು ರಾಜ್ಯಸರಕಾರಕ್ಕೆ ಮಸಿ ಬಳಿಯುವ ಕೆಲಸ ಮಾಡುತ್ತಿದ್ದಾರೆ. ಸತ್ಯ ಏನು ಎಂಬುದನ್ನು ರಾಜ್ಯದ ಜನರ ಮುಂದಿಡಬೇಕು ಎಂದು ಆಗ್ರಹಿಸಿದರು. ಮಾಧ್ಯಮಗಳು ರಾಜ್ಯದ ಜನರಿಗೆ ಸತ್ಯ ತೋರಿಸುವ ಕೆಲಸ ಮಾಡಬೇಕು, ಆದರೆ ಕೆಲವು ಮಾಧ್ಯಮಗಳು ಗ್ಯಾಸ್ ಸಮಸ್ಯೆ ಸರಕಾರದ ವೈಫಲ್ಯ ಎಂದು ಹೇಳುತ್ತಿವೆ. ಆದರೆ ಯಾವ ಸರಕಾರ ಎಂದು ಹೇಳುವುದಿಲ್ಲ, ನಂತರ ನಮ್ಮ ರಾಜ್ಯದ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್.ಮುನಿಯಪ್ಪ ಅವರ ಬಗ್ಗೆ ಮಾತನಾಡುತ್ತವೆ. ಇದರಿಂದ ಜನರಿಗೆ ಗೊಂದಲ ಉಂಟಾಗಲಿದೆ ಎಂದು ಹೇಳಿದರು. ಕೇಂದ್ರ ಸರ್ಕಾರ ಸಾಕಷ್ಟು ಅನಿಲ ಸಿಲಿಂಡರ್ಗಳನ್ನು ರಾಜ್ಯಕ್ಕೆ ನೀಡಿದ್ದರೆ ಈ ಸಮಸ್ಯೆ ಉದ್ಭವಿಸುತ್ತಿರಲಿಲ್ಲ. ಇದರ ಸತ್ಯ ಏನು ಎಂದು ಹೇಳುವುದನ್ನು ಬಿಟ್ಟು ನಮ್ಮ ರಾಜ್ಯದ ಕೇಂದ್ರ ಸಚಿವರುಗಳಾದ ಪ್ರಹ್ಲಾದ್ ಜೋಶಿ, ವಿ.ಸೋಮಣ್ಣ, ಶೋಭಾ ಕರಂದ್ಲಾಜೆ ಮತ್ತು ಮಣ್ಣಿನ ಮಗ ಎಚ್.ಡಿ.ಕುಮಾರಸ್ವಾಮಿ ಸುಳ್ಳುಗಳನ್ನೇ ಹೇಳುತ್ತಿದ್ದಾರೆ ಎಂದು ಕಿಡಿಕಾರಿದರು. ಹೋಟೆಲ್ ಮಾಲಕರಿಗೆ ಶೇ.50 ವಾಣಿಜ್ಯ ಸಿಲಿಂಡರ್ಗಳನ್ನು ನೀಡಲಾಗುತ್ತಿದೆ. ಕಾಳಸಂತೆಯಲ್ಲಿ ವಾಣಿಜ್ಯ ಸಿಲಿಂಡರ್ ಮಾರಾಟ ಮಾಡಲಾಗುತ್ತಿದೆ. ಒಂದು ಸಿಲಿಂಡರ್ಗೆ 8 ಸಾವಿರ ರೂ. ಪಡೆಯಲಾಗುತ್ತಿದೆ. ಇದನ್ನೇ ಬಂಡವಾಳ ಮಾಡಿಕೊಳ್ಳುವ ನರೇಂದ್ರ ಮೋದಿ ಮೇ.5 ರ ನಂತರ ಪೆಟ್ರೋಲ್, ಗ್ಯಾಸ್ ಬೆಲೆ ಹೆಚ್ಚಳ ಮಾಡಲಿದ್ದಾರೆ ಎಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ ನಗರ ಕಾಂಗ್ರೆಸ್ ಅಧ್ಯಕ್ಷ ಆರ್.ಮೂರ್ತಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಬಿ.ಜೆ.ವಿಜಯ್ ಕುಮಾರ್, ಕಾಂಗ್ರೆಸ್ ಮುಖಂಡ ಬಿ.ಎಂ.ರಾಮು, ಕಾರ್ಯದರ್ಶಿ ಗಿರೀಶ್, ಮಾಧ್ಯಮ ವಕ್ತಾರ ಮಹೇಶ್ ಉಪಸ್ಥಿತರಿದ್ದರು. ಮಾಜಿ ಸಂಸದ ಪ್ರತಾಪ್ ಸಿಂಹ, ಸಿಎಂ ಸಿದ್ಧರಾಮಯ್ಯ ಅವರ ವಿರುದ್ಧ ಅಶ್ಲೀಲವಾಗಿ ಮಾತನಾಡುತ್ತಾರೆ. ಅವರ ಬಗ್ಗೆ ಮಾತನಾಡದಂತೆ ನನ್ನನ್ನು ಸೇರಿದಂತೆ 8 ಜನರ ಮೇಲೆ ನ್ಯಾಯಾಲಯದಲ್ಲಿ ತಡೆಯಾಜ್ಞೆ ತಂದಿದ್ದಾರೆ. ಅವರು ಏನು ಬೇಕಾದರು ಮಾತನಾಡಬಹುದು. ನಾವುಗಳು ಏನು ಮಾತನಾಡುವ ಹಾಗಿಲ್ಲ, ನಮ್ಮ ವ್ಯವಸ್ಥೆ ಬೇಸರ ತರಿಸಿದೆ. - ಎಂ.ಲಕ್ಷ್ಮಣ್,ಕೆಪಿಸಿಸಿ ವಕ್ತಾರ
Karnataka Bypolls: ಇಂದು ದಾವಣಗೆರೆ ದಕ್ಷಿಣ-ಬಾಗಲಕೋಟೆ ಉಪಚುನಾವಣೆ ಮತದಾನ: ಪ್ರತಿಷ್ಠೆಯ ಕಣದಲ್ಲಿ ಗೆಲುವು ಯಾರಿಗೆ?
ರಾಜ್ಯ ರಾಜಕಾರಣದ ದೃಷ್ಟಿಯಿಂದ ಅತ್ಯಂತ ಕುತೂಹಲ ಕೆರಳಿಸಿರುವ ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ಇಂದು (ಏಪ್ರಿಲ್ 9) ಮತದಾನ ನಡೆಯುತ್ತಿದೆ. ರಾಜ್ಯದ ಆಡಳಿತಾರೂಢ ಮತ್ತು ವಿರೋಧ ಪಕ್ಷಗಳಿಗೆ ಈ ಚುನಾವಣೆ ಕೇವಲ ಒಂದು ಸ್ಥಾನದ ಗೆಲುವಲ್ಲ, ಬದಲಾಗಿ ತಮ್ಮ ಅಸ್ತಿತ್ವ ಮತ್ತು ವರ್ಚಸ್ಸನ್ನು ಸಾಬೀತುಪಡಿಸುವ 'ಪ್ರತಿಷ್ಠೆಯ ಕಣ'ವಾಗಿ ಮಾರ್ಪಟ್ಟಿದೆ. ಶಾಮನೂರು ಕುಡಿ vs
Hassan | ಚಿಕ್ಕಕಡಲೂರು ಗ್ರಾಮದಲ್ಲಿ ದರೋಡೆ; ಮನೆಗೆ ನುಗ್ಗಿ ಬೆಳ್ಳಿ, ನಗದು ದೋಚಿದ 5 ಮಂದಿಯ ಗ್ಯಾಂಗ್
ಹಾಸನ : ಜಿಲ್ಲೆಯ ಚಿಕ್ಕಕಡಲೂರು ಗ್ರಾಮದಲ್ಲಿ ಮಧ್ಯರಾತ್ರಿ ಸಮಯದಲ್ಲಿ ಸುಸಜ್ಜಿತವಾಗಿ ಬಂದಿದ್ದ ಕಳ್ಳರ ತಂಡ ಮನೆಗೆ ನುಗ್ಗಿ ಬೆಳ್ಳಿ ಹಾಗೂ ನಗದು ದೋಚಿ ಪರಾರಿಯಾಗಿರುವ ಘಟನೆ ವರದಿಯಾಗಿದೆ. ಗ್ರಾಮದ ಪ್ರಸಾದ್ ಅವರಿಗೆ ಸೇರಿದ ಮನೆಯನ್ನು ಗುರಿಯಾಗಿಸಿಕೊಂಡು ಕಪ್ಪು ಬಣ್ಣದ ಬಟ್ಟೆ ಧರಿಸಿ, ಮುಖಕ್ಕೆ ಮಾಸ್ಕ್ ಹಾಕಿಕೊಂಡ ಐವರು ಕಳ್ಳರು ಕಬ್ಬಿಣದ ರಾಡ್ ಸಹಾಯದಿಂದ ಮನೆಯ ಮುಖ್ಯ ಬಾಗಿಲನ್ನು ಒಡೆದು ಒಳನುಗ್ಗಿದ್ದಾರೆ. ಈ ವೇಳೆ ಮನೆಯ ಗೇಟ್ ಹೊರಭಾಗದಲ್ಲಿ ಇನ್ನಿಬ್ಬರು ಕಳ್ಳರು ಕಾವಲು ನಿಂತಿದ್ದು, ಸಕಲ ಕಾರ್ಯಾಚರಣೆಯನ್ನು ಸಮನ್ವಯಗೊಳಿಸುತ್ತಿದ್ದರು ಎಂದು ತಿಳಿದುಬಂದಿದೆ. ಒಳಗೆ ಪ್ರವೇಶಿಸಿದ ಕಳ್ಳರು ಮನೆಯ ಕೋಣೆಗಳನ್ನು ಪರಿಶೀಲಿಸಿ, ರೂಂನಲ್ಲಿದ್ದ ಲಾಕರ್ನ್ನು ಗುರಿಯಾಗಿಸಿಕೊಂಡಿದ್ದಾರೆ. ಬಳಿಕ ಲಾಕರ್ಅನ್ನು ಮುರಿದು ಅದರಲ್ಲಿದ್ದ ಸುಮಾರು ಒಂದು ಕೆಜಿ ಬೆಳ್ಳಿ ವಸ್ತುಗಳು ಹಾಗೂ 15 ಸಾವಿರ ನಗದು ಕದ್ದುಕೊಂಡು ಸ್ಥಳದಿಂದ ಪರಾರಿಯಾಗಿದ್ದಾರೆ. ಕಳ್ಳರು ಕಾರ್ಯಾಚರಣೆ ನಡೆಸಿದ ರೀತಿ ಅವರಲ್ಲಿ ಪೂರ್ವಯೋಜನೆ ಇದ್ದುದನ್ನು ಸೂಚಿಸುತ್ತಿದೆ ಎಂದು ಪೊಲೀಸರು ಶಂಕಿಸಿದ್ದಾರೆ. ಈ ದರೋಡೆ ಘಟನೆಯ ಸಂಪೂರ್ಣ ದೃಶ್ಯ ಮನೆಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಕಳ್ಳರ ಚಲನವಲನಗಳು ಸ್ಪಷ್ಟವಾಗಿ ದಾಖಲಾಗಿವೆ. ಸಿಸಿಟಿವಿ ದೃಶ್ಯಗಳ ಆಧಾರದಲ್ಲಿ ಆರೋಪಿಗಳನ್ನು ಪತ್ತೆ ಹಚ್ಚಲು ಪೊಲೀಸರು ಕಾರ್ಯಾಚರಣೆ ಆರಂಭಿಸಿದ್ದಾರೆ. ಘಟನೆ ತಿಳಿದ ತಕ್ಷಣ ದುಡ್ಡ ಪೊಲೀಸ್ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಜೊತೆಗೆ ಶ್ವಾನದಳ ಮತ್ತು ಬೆರಳಚ್ಚು ತಜ್ಞರನ್ನು ಕರೆಸಿ ಸಾಕ್ಷ್ಯ ಸಂಗ್ರಹ ಕಾರ್ಯ ಕೈಗೊಳ್ಳಲಾಗಿದೆ. ಸುತ್ತಮುತ್ತಲಿನ ಪ್ರದೇಶಗಳಲ್ಲಿ ತಪಾಸಣೆ ಹೆಚ್ಚಿಸಲಾಗಿದ್ದು, ಅನುಮಾನಾಸ್ಪದ ವ್ಯಕ್ತಿಗಳ ಮೇಲೆ ಕಣ್ಣಿಟ್ಟಿದ್ದಾರೆ. ಈ ರೀತಿಯ ಧೈರ್ಯಶಾಲಿ ಕಳ್ಳತನ ಗ್ರಾಮದಲ್ಲಿ ನಡೆದಿರುವುದು ಸ್ಥಳೀಯರಲ್ಲಿ ಭೀತಿ ಮೂಡಿಸಿದೆ. ರಾತ್ರಿ ವೇಳೆ ಭದ್ರತೆ ಕೊರತೆಯ ಬಗ್ಗೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದು, ಪೊಲೀಸ್ ಪೆಟ್ರೋಲಿಂಗ್ ಹೆಚ್ಚಿಸುವಂತೆ ಆಗ್ರಹಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ದುಡ್ಡ ಪೊಲೀಸ್ ಠಾಣೆ ಪೊಲೀಸರು ಶೀಘ್ರದಲ್ಲೇ ಆರೋಪಿಗಳನ್ನು ಬಂಧಿಸುವ ಭರವಸೆ ನೀಡಿದ್ದಾರೆ.
ಕೊಡಗಿನಲ್ಲಿ ಮುಂದುವರಿದ ಕಾಡಾನೆ ದಾಳಿ: ಕಾಫಿ ಬೆಳೆಗಾರ ಬಲಿ
ಕಳೆದ ಮೂರೂವರೆ ತಿಂಗಳಿನಲ್ಲಿ 6 ಮಂದಿ ಮೃತ್ಯು
ಮೇ 15ರಿಂದ ಎರಡು ದಿನಗಳ ಕಾಲ ‘ಕ್ಯಾಂಪಸ್ ನಿಂದ ವೃತ್ತಿ ಕಡೆಗೆ’ ಶೃಂಗಸಭೆ ಆಯೋಜನೆ
ಬೆಂಗಳೂರು : ಮೇ 15 ಮತ್ತು 16ರಂದು ಇಲ್ಲಿನ ಲಲಿತ್ ಅಶೋಕ್ ಹೋಟೆಲ್ನಲ್ಲಿ ‘ಕ್ಯಾಂಪಸ್ ನಿಂದ ವೃತ್ತಿ ಕಡೆಗೆ’ (ಕ್ಯಾಂಪಸ್ ಟು ಕರಿಯರ್-ಸಿ2ಸಿ) ಶೃಂಗಸಭೆಯನ್ನು ಆಯೋಜಿಸಲಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ತಿಳಿಸಿದ್ದಾರೆ. ಬುಧವಾರ ವಿಧಾನಸೌಧದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಶೃಂಗಸಭೆಯ ಲಾಂಛನ ಬಿಡುಗಡೆ ಮಾಡಿ ಮಾತನಾಡಿದ ಅವರು, ಉನ್ನತ ಶಿಕ್ಷಣವನ್ನು ಹೆಚ್ಚು ಕೌಶಲ್ಯಾಧಾರಿತ ಶಿಕ್ಷಣದೆಡೆಗೆ ಉತ್ತೇಜಿಸುವ ದೃಷ್ಟಿಯಿಂದ ಶೃಂಗಸಭೆಯನ್ನು ಆಯೋಜಿಸಲಾಗಿದ್ದು, ಸಭೆಯಲ್ಲಿ ರಾಜ್ಯದ ಪ್ರಮುಖ ಕೈಗಾರಿಕಾ ಸಂಸ್ಥೆಗಳು ಶಿಕ್ಷಣ ತಜ್ಞರು ಹಾಗೂ ಸರಕಾರ ಒಂದೆಡೆ ಸೇರಿ ಚರ್ಚಿಸಲಾಗುತ್ತದೆ. ಜೊತೆಗೆ ರಾಜ್ಯದ ವಿದ್ಯಾರ್ಥಿಗಳಿಗೆ ಉದ್ಯೋಗ ಅವಕಾಶಗಳನ್ನು ಕಲ್ಪಿಸಿ ಕೊಡುವಂತಹ ಶಿಕ್ಷಣ ನೀಡುವ ಮಹತ್ವದ ಕಾರ್ಯ ನಡೆಯಲಿದೆ ಎಂದರು. ರಾಜ್ಯದ ಪ್ರತಿಷ್ಠಿತ ಕೈಗಾರಿಕಾ ಕಂಪನಿಗಳು ಈ ಎರಡು ದಿನದ ಶೃಂಗಸಭೆಯಲ್ಲಿ ಪಾಲ್ಗೊಂಡು ವಿದಾ-್ಯರ್ಥಿಗಳಿಗೆ ಅವಶ್ಯಕವಾಗಿ ಬೇಕಾಗಿರುವ ಶಿಕ್ಷಣ ಉದ್ಯೋಗ ಮತ್ತು ಅವಕಾಶಗಳ ಸಂಬಂಧಪಟ್ಟಂತೆ ತಮ್ಮ ಅಭಿಪ್ರಾಯಗಳನ್ನು ಮಂಡಿಸಲಿದ್ದಾರೆ ಎಂದು ಸುಧಾಕರ್ ವಿವರಿಸಿದರು. ಜಾಗತಿಕ ಮಟ್ಟದಲ್ಲಿ ಉನ್ನತ ಶಿಕ್ಷಣ ಸಾಕಷ್ಟು ಬದಲಾಗಿದೆ. ಬದಲಾದ ಪರಿಕಲ್ಪನೆಗೆ ಸೂಕ್ತವಾಗಿ ನಾವು ವಿದ್ಯಾರ್ಥಿಗಳನ್ನು ಕೌಶಲಧಾರಿತ ಶಿಕ್ಷಣದೊಂದಿಗೆ ಸಜ್ಜುಗೊಳಿಸುವುದು ನಮ್ಮ ಪ್ರಮುಖ ಉದ್ದೇಶವಾಗಿದೆ. ಈ ಶೃಂಗಸಭೆಯು ಶೈಕ್ಷಣಿಕ ವಲಯವನ್ನು ಔದ್ಯೋಗಿಕ ವಲಯದ ಸಮೀಪಕ್ಕೆ ತರಲಿದೆ. ಉದ್ಯಮ ವಲಯ ತಮ್ಮ ಅಗತ್ಯಗಳು ಏನು ಎಂಬುದನ್ನು ಈವರೆಗೂ ಮುಕ್ತವಾಗಿ ಹಂಚಿಕೊಳ್ಳಲು ಮುಂದೆ ಬಂದಿಲ್ಲ. ನಾವು ನಮ್ಮ ಪದವೀಧರರನ್ನು ಉದ್ಯಮಗಳ ಬೇಡಿಕೆಗೆ ಅನುಗುಣವಾಗಿ ತಯಾರಿ ಮಾಡಬೇಕು ಎಂದು ಅವರು ಹೇಳಿದರು. ವಿದೇಶಿ ಭಾಷೆ ಕಲಿಕೆಗೆ ಹೆಚ್ಚು ಗಮನ: ಕಾಲೇಜುಗಳಲ್ಲಿ ಬಿಬಿಎ, ಬಿಸಿಎ ಕೋರ್ಸ್ಗಳಿಗೆ ಒತ್ತು ನೀಡಲಾಗುತ್ತಿದ್ದು, ಪ್ರಯೋಗಾಲಯ, ಅಗತ್ಯ ಸಾಫ್ಟ್ ವೇರ್, ಕೌಶಲಕ್ಕೆ ಆದ್ಯತೆ ನೀಡಲಾಗಿದೆ. ಜರ್ಮನ್, ಜಪಾನಿ ಭಾಷೆ ಕಲಿತವರಿಗೆ ಉದ್ಯೋಗ ಅವಕಾಶಗಳು ಹೆಚ್ಚಿರುವುದು ನಮ್ಮ ಗಮನಕ್ಕೆ ಬಂದಿದ್ದು, ನಮ್ಮ ಕಾಲೇಜುಗಳಲ್ಲಿ ವಿದೇಶಿ ಭಾಷೆ ಕಲಿಕೆಗೆ ಹೆಚ್ಚು ಗಮನ ಕೇಂದ್ರಿಕರಿಸಲಿದ್ದೇವೆ. ಫಲಿತಾಂಶ ಆಧಾರಿತ ಉನ್ನತ ಶಿಕ್ಷಣ ನಮ್ಮ ಉದ್ದೇಶವಾಗಿದೆ ಎಂದು ಡಾ.ಎಂ.ಸಿ.ಸುಧಾಕರ್ ಹೇಳಿದರು. ಕಾರ್ಯಕ್ರಮದಲ್ಲಿ ಕಾಲೇಜು ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಖುಷ್ಬೂ ಗೊಯೆಲ್ ಚೌಧರಿ, ಆಯುಕ್ತೆ ಮಂಜುಶ್ರೀ, ಕೌಶಲ ಅಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ಮನೋಜ್ ಕುಮಾರ್ ಮೀನಾ, ಮಣಿಪಾಲ್ ಅಕಾಡೆಮಿಯ ಏಕಲವ್ಯ ಬರೊಚ ಸೇರಿದಂತೆ ಇತರರು ಇದ್ದರು. ಸಂಪುಟದಲ್ಲಿ ರಾಜ್ಯ ಶಿಕ್ಷಣ ನೀತಿ ಬಗ್ಗೆ ತೀರ್ಮಾನ: ‘ರಾಜ್ಯ ಶಿಕ್ಷಣ ನೀತಿ ಸಂಬಂಧಪಟ್ಟಂತೆ ಮುಂಬರುವ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗುತ್ತದೆ. ಈಗಾಗಲೇ ಉನ್ನತ ಶಿಕ್ಷಣ ದಲ್ಲಿ ರಾಜ್ಯ ಶಿಕ್ಷಣ ನೀತಿಗೆ ಅನುಗುಣವಾಗಿ ಶಿಕ್ಷಣ ವ್ಯವಸ್ಥೆಯನ್ನು ಅನುಷ್ಠಾನಗೊಳಿಸಲಾಗಿದೆ. ಉಳಿದಂತೆ ಶಿಕ್ಷಣ ದಲ್ಲಿನ ಉತ್ಕೃಷ್ಟತೆ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಕೆಲ ಚರ್ಚೆಗಳು ನಡೆಯುತ್ತಿದೆ’ -ಡಾ.ಎಂ.ಸಿ.ಸುಧಾಕರ್, ಉನ್ನತ ಶಿಕ್ಷಣ ಸಚಿವ
IPL| ಸಿಕ್ಸರ್ನಲ್ಲಿ ನೂತನ ದಾಖಲೆ ಸೃಷ್ಟಿಸಿದ ವೈಭವ್ ಸೂರ್ಯವಂಶಿ
ಗುವಾಹಟಿ, ಎ. 8: ಮಂಗಳವಾರ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನವನ್ನು ನೀಡಿದ ರಾಜಸ್ಥಾನ ರಾಯಲ್ಸ್ನ ಆರಂಭಿಕ ಬ್ಯಾಟರ್ಗಳಾದ ಯಶಸ್ವಿ ಜೈಸ್ವಾಲ್ ಮತ್ತು ವೈಭವ್ ಸೂರ್ಯವಂಶಿ, ಮುಂಬೈ ಇಂಡಿಯನ್ಸ್ನ ಖ್ಯಾತಿವೆತ್ತ ಬೌಲಿಂಗ್ ದಾಳಿಯನ್ನು ಚಿಂದಿ ಉಡಾಯಿಸಿದ್ದಾರೆ. ಅವರು ಮಳೆ ಬಾಧಿತ ಪಂದ್ಯದಲ್ಲಿ, ರಾಜಸ್ಥಾನವನ್ನು 11 ಓವರ್ಗಳಲ್ಲಿ 3 ವಿಕೆಟ್ಗಳ ನಷ್ಟಕ್ಕೆ 150 ರನ್ನತ್ತ ಮುನ್ನಡೆಸಿದರು. ಜೈಸ್ವಾಲ್ 32 ಎಸೆತಗಳಲ್ಲಿ 77 ರನ್ಗಳನ್ನು ಸಿಡಿಸಿದರೆ, ವೈಭವ್ ಸೂರ್ಯವಂಶಿ 14 ಎಸೆತಗಳಲ್ಲಿ 39 ರನ್ಗಳನ್ನು ಬಾರಿಸಿದರು. ಅವರು ಒಟ್ಟು 9 ಸಿಕ್ಸರ್ಗಳನ್ನು ಸಿಡಿಸಿದರು. ಅವರು ಮೊದಲ ವಿಕೆಟ್ಗೆ ಕೇವಲ ಐದು ಓವರ್ಗಳಲ್ಲಿ 82 ರನ್ಗಳನ್ನು ಕೂಡಿಸಿದರು. ಇನಿಂಗ್ಸ್ ಉದ್ದಕ್ಕೂ ಆಸರೆಯಾಗಿ ನಿಂತ ಜೈಸ್ವಾಲ್ 10 ಬೌಂಡರಿಗಳು ಮತ್ತು ನಾಲ್ಕು ಸಿಕ್ಸರ್ಗಳನ್ನು ಸಿಡಿಸಿದರು. ಸೂರ್ಯವಂಶಿ ಐದು ಸಿಕ್ಸರ್ಗಳನ್ನು ಸಿಡಿಸಿದರು. ಈ ಪೈಕಿ ಎರಡು ಸಿಕ್ಸರ್ಗಳನ್ನು ಜಸ್ಪ್ರೀತ್ ಬುಮ್ರಾರ ಒಂದೇ ಓವರ್ನಲ್ಲಿ ಬಾರಿಸಿದರು. ಈ ಐದು ಸಿಕ್ಸರ್ಗಳ ಮೂಲಕ, ಸೂರ್ಯವಂಶಿ ಅವರು ಇಶಾನ್ ಕಿಶನ್ ಮತ್ತು ರಿಶಭ್ ಪಂತ್ರ ದಾಖಲೆಯನ್ನು ಮುರಿದರು. ಅವರಿಬ್ಬರು 20 ವರ್ಷ ತುಂಬುವ ಮೊದಲು ಐಪಿಎಲ್ನಲ್ಲಿ ಗರಿಷ್ಠ ಸಿಕ್ಸರ್ಗಳನ್ನು (ತಲಾ 30) ಗಳಿಸಿದ ದಾಖಲೆಯನ್ನು ತಮ್ಮ ಹೆಸರಿನಲ್ಲಿ ಹೊಂದಿದ್ದರು. ಸೂರ್ಯವಂಶಿ ಈಗ 35 ಐಪಿಎಲ್ ಸಿಕ್ಸರ್ಗಳನ್ನು ತನ್ನ ಹೆಸರಿನಲ್ಲಿ ಹೊಂದಿದ್ದಾರೆ. ಅವರು ಐಪಿಎಲ್ನಲ್ಲಿ 30ಕ್ಕಿಂತಲೂ ಅಧಿಕ ಸಿಕ್ಸರ್ಗಳನ್ನು ಸಿಡಿಸಿದ ಮೊದಲ ಹದಿಹರೆಯದ ಆಟಗಾರನಾಗಿದ್ದಾರೆ.
ಜಾಗತಿಕ ನಾವೀನ್ಯತಾ ಮೈತ್ರಿಕೂಟ ಬಲಕ್ಕೆ ಸಂಪರ್ಕ ಅಗತ್ಯ : ಪ್ರಿಯಾಂಕ್ ಖರ್ಗೆ
ಬೆಂಗಳೂರು : ರಾಜ್ಯದ ಜಾಗತಿಕ ನಾವೀನ್ಯತಾ ಮೈತ್ರಿಕೂಟದ (ಜಿಐಎ) ಕಾರ್ಯಕ್ರಮ ಬಲಪಡಿಸಲು ಅಂತಾರಾಷ್ಟ್ರೀಯ ಒಡನಾಟ ಹಾಗೂ ಸಂಪರ್ಕ ಹೆಚ್ಚಿಸುವ ಅಗತ್ಯ ಇದೆ ಎಂದು ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಅಭಿಪ್ರಾಯಪಟ್ಟಿದ್ದಾರೆ. ಬುಧವಾರ ಇಲ್ಲಿನ ಕರ್ನಾಟಕ ಇನ್ನೋವೇಷನ್ ಮತ್ತು ಟೆಕ್ನಾಲಜಿ ಸೊಸೈಟಿನಲ್ಲಿ (ಕೆಐಟಿಎಸ್) ನಡೆದ ಉನ್ನತ ಮಟ್ಟದ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಎ.17ರಂದು ಹೊಸದಿಲ್ಲಿಯಲ್ಲಿ ಜಾಗತಿಕ ನಾವೀನ್ಯತಾ ಮೈತ್ರಿಕೂಟಕ್ಕೆ ಸಂಬಂಧಿಸಿದಂತೆ ರಾಜತಾಂತ್ರಿಕರ ಜತೆ ಸಮಾಲೋಚನೆ ಸಭೆ ನಡೆಯಲಿದೆ. ಅಲ್ಲಿ ರಾಜ್ಯದ ನವೋದ್ಯಮಗಳಿಗೆ ಜಾಗತಿಕ ಮಾರುಕಟ್ಟೆ ವಿಸ್ತರಣೆಯ ಅನುಕೂಲತೆ ಕಲ್ಪಿಸುವುದು, ಜಾಗತಿಕ ನಾವೀನ್ಯತೆ ಕೇಂದ್ರವಾಗಿ ಕರ್ನಾಟಕದ ಸ್ಥಾನವನ್ನು ಇನ್ನಷ್ಟು ಬಲಪಡಿಸುವುದಕ್ಕೆ ಕೈಗೊಳ್ಳಬೇಕಾದ ರಚನಾತ್ಮಕ ಕಾರ್ಯಕ್ರಮಗಳ ಕುರಿತು ಉಲ್ಲೇಖಿಸಲಾಗುವುದು ಎಂದರು. ಈ ಸಂವಾದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ರಾಯಭಾರಿಗಳು, ಹೈಕಮಿಷನರ್ಗಳು ಮತ್ತು ಹಿರಿಯ ರಾಜತಾಂತ್ರಿಕ ಅಧಿಕಾರಿಗಳು ಸೇರಿದಂತೆ 50ಕ್ಕೂ ಹೆಚ್ಚು ದೇಶಗಳ ಪ್ರತಿನಿಧಿಗಳು ಭಾಗವಹಿಸುವ ನಿರೀಕ್ಷೆ ಇದೆ.ಸಮಾನಾಂತರವಾಗಿ ಉದ್ಯಮಿಗಳ ಜೊತೆಗೆ ಸಭೆ, ಭಾಗಿದಾರರ ಜೊತೆ ಸಮಾಲೋಚನೆ ನಡೆಸುವುದಕ್ಕೂ ರಾಜ್ಯ ಸರಕಾರ ಉದ್ದೇಶಿಸಿದೆ. ನವೋದ್ಯಮಗಳು, ವಾಣಿಜ್ಯ ಸಂಸ್ಥೆಗಳು ಮತ್ತು ಬಂಡವಾಳ ಹೂಡಿಕೆದಾರರನ್ನು ಒಟ್ಟುಗೂಡಿಸಿ ಜಾಗತಿಕ ಪಾಲುದಾರರ ಜೊತೆಗಿನ ಬಾಂಧವ್ಯ ಬಲಪಡಿಸಲು ತೀರ್ಮಾನಿಸಲಾಗಿದೆ ಎಂದು ಸಚಿವರು ಹೇಳಿದರು. ದ್ವಿಪಕ್ಷೀಯ ಮತ್ತು ಬಹುಪಕ್ಷೀಯ ಉಪಕ್ರಮಗಳ ಮೂಲಕ ಜಾಗತಿಕ ಮಾರುಕಟ್ಟೆಗಳಿಗೆ ಪ್ರವೇಶಿಸಲು ನವೋದ್ಯಮಗಳಿಗೆ ಅಗತ್ಯ ನೆರವು ನೀಡಲು ಪೂರಕವಾದ ಕಾರ್ಯಕ್ರಮಗಳನ್ನು ಜಾರಿಗೊಳಿಸುವ ನಿಟ್ಟಿನಲ್ಲಿ ರಾಜ್ಯದ ಮಾಹಿತಿ ತಂತ್ರಜ್ಞಾನ ಇಲಾಖೆಯು ಕೆಲಸ ಮಾಡುತ್ತಿದೆ ಎಂದೂ ಅವರು ಉಲ್ಲೇಖಿಸಿದರು. ಸಭೆಯಲ್ಲಿ ಐಟಿ, ಜೈವಿಕ ತಂತ್ರಜ್ಞಾನ ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಕಾರ್ಯದರ್ಶಿ ಡಾ. ಎನ್.ಮಂಜುಳಾ, ಕೆಐಟಿಎಸ್ ವ್ಯವಸ್ಥಾಪಕ ನಿರ್ದೇಶಕ ರಾಹುಲ್ ಶರಣಪ್ಪ ಸಂಕನೂರ ಸೇರಿದಂತೆ ಪ್ರಮುಖರಿದ್ದರು.
ಕೆಎಲ್ ರಾಹುಲ್ ಸಾಹಸದ ಬಳಿಕ ಡೇವಿಡ್ ಮಿಲ್ಲರ್ ವೀರಾವೇಷ; ಆದರೂ ಗುಜರಾತ್ ಟೈಟಾನ್ಸ್ ಗೆ 1 ರನ್ ರೋಚಕ ಜಯ!
GT Vs DC Match Highlights- ಕೊನೆ ಎಸೆತದವರೆಗೂ ಕ್ರಿಕೆಟ್ ಪ್ರೇಮಿಗಳಿಗೆ ರೋಚಕತೆಯನ್ನು ಉಣಬಡಿಸಿದ ಐಪಿಎಲ್ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ತಂಡವು ಡೆಲ್ಲಿ ಕ್ಯಾಪಿಟಲ್ಸ್ ಅನ್ನು 1 ರನ್ ಗಳಿಂದ ಸೋಲಿಸಿದೆ. ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್, ಗಿಲ್ (70), ಸುಂದರ್ (55) ಮತ್ತು ಬಟ್ಲರ್ (52) ಅವರ ಅರ್ಧಶತಕಗಳ ನೆರವಿನಿಂದ 210 ರನ್ ಗಳಿಸಿತು. ಗುರಿ ಬೆನ್ನಟ್ಟಿದ ಡೆಲ್ಲಿಗೆ ಕೆಎಲ್ ರಾಹುಲ್ (92) ಮತ್ತು ನಿಸ್ಸಾಂಕಾ ಭರ್ಜರಿ ಆರಂಭ ನೀಡಿದರು. ಅಂತಿಮ ಹಂತದಲ್ಲಿ ಡೇವಿಡ್ ಮಿಲ್ಲರ್ ಹೋರಾಡಿದರೂ, ಪ್ರಸಿದ್ಧ ಕೃಷ್ಣ ಎಸೆದ ಕೊನೆಯ ಓವರ್ನಲ್ಲಿ ಡೆಲ್ಲಿ ಎಡವಿತು.
ಹೊಸಪೇಟೆಯಲ್ಲಿ ಅನಧಿಕೃತ 20 ಮಳಿಗೆಗಳ ತೆರವು
ಹೊಸಪೇಟೆ/ವಿಜಯನಗರ : ನಗರಸಭೆ ಮುಂಭಾಗದಲ್ಲಿರುವ ಮಳಿಗೆಗಳಲ್ಲಿ ದೀರ್ಘಕಾಲದಿಂದ ಮುಂದುವರಿದಿದ್ದ ಅನಧಿಕೃತ ಅಧಿಭೋಗದ ವಿರುದ್ಧ ನಗರಸಭೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದು, ಇದುವರೆಗೆ ಸುಮಾರು 20ಕ್ಕೂ ಹೆಚ್ಚು ಮಳಿಗೆಗಳನ್ನು ತೆರವುಗೊಳಿಸಲಾಗಿದೆ. ಪೌರಾಯುಕ್ತ ಶಿವಕುಮಾರ್ ಅವರ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ, ಅನಧಿಕೃತವಾಗಿ ಮಳಿಗೆಗಳನ್ನು ವಶದಲ್ಲಿಟ್ಟುಕೊಂಡಿದ್ದವರನ್ನು ತೆರವುಗೊಳಿಸಿ ಸ್ಥಳವನ್ನು ಸರ್ಕಾರದ ವಶಕ್ಕೆ ಪಡೆಯಲಾಗಿದೆ. ನಗರಸಭೆ ಮೂಲಗಳ ಪ್ರಕಾರ, 2016ರ ಮೊದಲು ಮಳಿಗೆದಾರರು ತಿಂಗಳಿಗೆ 535 ರೂ. ನಂತೆ ಬಾಡಿಗೆ ಪಾವತಿಸುತ್ತಿದ್ದರು. ಆದರೆ 2016ರಲ್ಲಿ ಪ್ರಕರಣ ನ್ಯಾಯಾಲಯಕ್ಕೆ ಹೋದ ಬಳಿಕದಿಂದ ಇಂದಿನವರೆಗೆ ಯಾವುದೇ ಬಾಡಿಗೆ ಪಾವತಿಯಾಗಿಲ್ಲ ಎಂದು ತಿಳಿದುಬಂದಿದೆ. ಬಾಡಿಗೆ ದರ ಅತೀ ಕಡಿಮೆಯಾಗಿದ್ದ ಹಿನ್ನೆಲೆ ಅದನ್ನು ರದ್ದುಪಡಿಸಲು ನ್ಯಾಯಾಲಯದಲ್ಲಿ ಪ್ರಕರಣ ಹೂಡಲಾಗಿದ್ದು, ನಗರಸಭೆಗೆ ಅನುಕೂಲಕರ ತೀರ್ಪು ಬಂದ ನಂತರ ಕಾನೂನುಬದ್ಧವಾಗಿ ತೆರವು ಕಾರ್ಯಾಚರಣೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ನಗರಾಭಿವೃದ್ಧಿ ಮತ್ತು ಸಾರ್ವಜನಿಕ ಸುರಕ್ಷತೆ ದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದ್ದು, ಸಾರ್ವಜನಿಕ ವಲಯದಿಂದ ಮೆಚ್ಚುಗೆ ವ್ಯಕ್ತವಾಗಿದೆ. ಮುಂದಿನ ದಿನಗಳಲ್ಲಿ ಈ ಪ್ರದೇಶವನ್ನು ಅಭಿವೃದ್ಧಿಪಡಿಸಿ, ನಿಯಮಾನುಸಾರ ಹರಾಜು ಮೂಲಕ ಮಳಿಗೆಗಳನ್ನು ಹಂಚಿಕೆ ಮಾಡುವ ಯೋಜನೆಯೂ ರೂಪಿಸಲಾಗಿದೆ. “ನಗರಸಭೆಯ ಆಸ್ತಿಗಳ ಸಂರಕ್ಷಣೆ ಮತ್ತು ಸಾರ್ವಜನಿಕರ ಸುರಕ್ಷತೆ ನಮ್ಮ ಮೊದಲ ಆದ್ಯತೆ. ಹೈಕೋರ್ಟ್ ತೀರ್ಪಿನ ನಂತರ ಶೋಕಾಸ್ ನೋಟಿಸ್ ನೀಡಿ 45 ದಿನಗಳ ಗಡುವು ನೀಡಲಾಗಿತ್ತು. ಅದರಂತೆ ಕೆಲವರು ಸ್ವಯಂ ಪ್ರೇರಿತವಾಗಿ ತೆರವುಗೊಳಿಸಿರುವುದು ಶ್ಲಾಘನೀಯ.” -ಶಿವಕುಮಾರ್, ಪೌರಾಯುಕ್ತರು “ಶೋಕಾಸ್ ನೋಟಿಸ್ ನಂತರ ಮಳಿಗೆದಾರರು ನ್ಯಾಯಾಲಯದ ಮೊರೆ ಹೋಗಿದ್ದು, ವಿಚಾರಣೆ ಬಾಕಿ ಇರುವಾಗಲೇ ತೆರವುಗೊಳಿಸಿರುವುದು ನ್ಯಾಯಸಮ್ಮತವಲ್ಲ. ಈ ಕ್ರಮದ ವಿರುದ್ಧ ಕಾನೂನು ಹೋರಾಟ ಮುಂದುವರಿಸುತ್ತೇವೆ.” -ವಕೀಲ ಸದ್ದಾಂ, ಮಳಿಗೆದಾರರ ಪರ
Assam | ಕಾಂಗ್ರೆಸ್ ಅಭ್ಯರ್ಥಿ ಸುರೇನ್ ದೈಮಾರಿ ಪಕ್ಷಕ್ಕೆ ರಾಜೀನಾಮೆ
ಗುವಾಹಟಿ, ಎ. 8: ವಿಧಾನಸಭೆ ಚುನಾವಣೆಗೆ ಒಂದು ದಿನ ಮುನ್ನ, ಬುಧವಾರ ಉದಲ್ಗಿರಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸುರೇನ್ ದೈಮಾರಿ ಪಕ್ಷಕ್ಕೆ ರಾಜೀನಾಮೆ ಘೋಷಿಸಿದ್ದಾರೆ. ಪಕ್ಷದಿಂದ ಬೆಂಬಲದ ಕೊರತೆಯನ್ನು ಉಲ್ಲೇಖಿಸಿ ಅವರು ಉಮೇದುವಾರಿಕೆಯಿಂದ ಹಿಂದೆ ಸರಿದಿದ್ದಾರೆ. ಆದರೆ, ದೈಮಾರಿ ಅವರು ಇನ್ನೂ ಔಪಚಾರಿಕವಾಗಿ ರಾಜೀನಾಮೆ ಪತ್ರ ಸಲ್ಲಿಸಿಲ್ಲ ಎಂದು ಕಾಂಗ್ರೆಸ್ ಸ್ಪಷ್ಟಪಡಿಸಿದೆ. ಸುದ್ದಿಗಾರರೊಂದಿಗೆ ಮಾತನಾಡಿದ ದೈಮಾರಿ, ಕಾಂಗ್ರೆಸ್ ಬಗ್ಗೆ ಹತಾಶೆ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ ತನ್ನನ್ನು ವಂಚಿಸಿದೆ ಹಾಗೂ ಪರಿಶಿಷ್ಟ ಪಂಗಡವನ್ನು ನಿರ್ಲಕ್ಷಿಸಿದೆ ಎಂದು ಆರೋಪಿಸಿದ್ದಾರೆ. ಕಾಂಗ್ರೆಸ್ನಲ್ಲಿ ಇರುವುದರಿಂದ ಯಾವುದೇ ಲಾಭವಿಲ್ಲ ಎಂದು ದೈಮಾರಿ ತಿಳಿಸಿದ್ದಾರೆ.
ಅಮೆರಿಕ-ಇರಾನ್ ಕದನ ವಿರಾಮ | ಶೇರು ಮಾರುಕಟ್ಟೆಗಳಲ್ಲಿ ಸಂಭ್ರಮ: ಶೇ. 3.95ರಷ್ಟು ಜಿಗಿದ ಸೆನ್ಸೆಕ್ಸ್
ಹೊಸದಿಲ್ಲಿ, ಎ. 8: ಅಮೆರಿಕ ಮತ್ತು ಇರಾನ್ ಎರಡು ವಾರಗಳ ಕದನ ವಿರಾಮವನ್ನು ಘೋಷಿಸಿದ ಬಳಿಕ ಜಾಗತಿಕ ಶೇರು ಮಾರುಕಟ್ಟೆಗಳಲ್ಲಿ ತೀವ್ರ ಏರಿಕೆ ಹಾಗೂ ಕಚ್ಚಾತೈಲ ಬೆಲೆಗಳಲ್ಲಿ ಗಣನೀಯ ಕುಸಿತದ ಹಿನ್ನೆಲೆಯಲ್ಲಿ ಬುಧವಾರ ಭಾರತೀಯ ಶೇರು ಮಾರುಕಟ್ಟೆಗಳಲ್ಲಿ ಸಂಭ್ರಮ ಮನೆ ಮಾಡಿತ್ತು. ಬಾಂಬೆ ಶೇರು ವಿನಿಮಯ ಕೇಂದ್ರದ (BSE) ಸೂಚ್ಯಂಕ ಸೆನ್ಸೆಕ್ಸ್ ಬೆಳಿಗ್ಗೆ ಆರಂಭಗೊಂಡಾಗಲೇ 2,600ಕ್ಕೂ ಅಧಿಕ ಅಂಕಗಳಷ್ಟು ಜಿಗಿದಿದ್ದು, ದಿನವಿಡೀ ಏರಿಕೆಯನ್ನು ದಾಖಲಿಸುತ್ತಲೇ ಇತ್ತು. ಅಂತಿಮವಾಗಿ ಸೆನ್ಸೆಕ್ಸ್ 2,946.32 (ಶೇ. 3.95) ಅಂಕಗಳ ಏರಿಕೆಯೊಂದಿಗೆ 77,562.90ರಲ್ಲಿ ಮುಕ್ತಾಯಗೊಂಡರೆ, ಅತ್ತ ರಾಷ್ಟ್ರೀಯ ಶೇರು ವಿನಿಮಯ ಕೇಂದ್ರದ (NSE) ಸೂಚ್ಯಂಕ ನಿಫ್ಟಿ 873.70 (ಶೇ. 3.76) ಅಂಕಗಳ ಏರಿಕೆಯೊಂದಿಗೆ 23,997.35ರಲ್ಲಿ ಮುಕ್ತಾಯಗೊಂಡಿತು. ಸೆನ್ಸೆಕ್ಸ್ ನ 30 ಕಂಪನಿಗಳ ಪೈಕಿ ಇಂಟರ್ಗ್ಲೋಬ್ ಏವಿಯೇಷನ್, ಲಾರ್ಸೆನ್ ಆ್ಯಂಡ್ ಟುಬ್ರೊ, ಬಜಾಜ್ ಫೈನಾನ್ಸ್, ಅದಾನಿ ಪೋರ್ಟ್ಸ್, ಬಜಾಜ್ ಫಿನ್ಸರ್ವ್ ಹಾಗೂ ಮಹೀಂದ್ರ ಆ್ಯಂಡ್ ಮಹೀಂದ್ರ ಹೂಡಿಕೆದಾರರಿಗೆ ಹೆಚ್ಚಿನ ಲಾಭ ನೀಡಿವೆ. ಅತ್ತ ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಬ್ರೆಂಟ್ ಕಚ್ಚಾತೈಲದ ಬೆಲೆ ಪ್ರತಿ ಬ್ಯಾರಲ್ ಗೆ ಶೇ. 13.24ರಷ್ಟು ಕುಸಿದು 94.80 ಡಾಲರ್ಗೆ ತಲುಪಿತು. ಭೂರಾಜಕೀಯ ಒತ್ತಡ ತಗ್ಗಿದ ಪರಿಣಾಮ ಕಚ್ಚಾತೈಲ ಬೆಲೆಗಳಲ್ಲಿ ತೀವ್ರ ಕುಸಿತ ಕಂಡುಬಂದಿದ್ದು, ಇದು ವಿಶೇಷವಾಗಿ ಭಾರತಕ್ಕೆ ಹಣದುಬ್ಬರ ಮತ್ತು ಕರೆನ್ಸಿ ದೃಷ್ಟಿಯಿಂದ ಸಕಾರಾತ್ಮಕವಾಗಿದೆ ಎಂದು ಲಿವ್ ಲಾಂಗ್ ವೆಲ್ತ್ ಸಂಸ್ಥಾಪಕ ಹರಿಪ್ರಸಾದ್ ಕೆ. ತಿಳಿಸಿದ್ದಾರೆ.
ಬಸವ ಜಯಮೃತ್ಯುಂಜಯ ಸ್ವಾಮೀಜಿ ವಿರುದ್ಧ ಮಾನಹಾನಿ ಸುದ್ದಿ ಪ್ರಕಟಿಸದಂತೆ ಕೋರ್ಟ್ ನಿರ್ಬಂಧ
ಬೆಂಗಳೂರು : ಕೂಡಲಸಂಗಮ ಪಂಚಮಸಾಲಿ ಮಠದ ಪೀಠಾಧಿಪತಿ ಜಗದ್ಗುರು ಬಸವ ಜಯಮೃತ್ಯುಂಜಯ ಸ್ವಾಮೀಜಿ ವಿರುದ್ಧ ಯಾವುದೇ ರೀತಿಯ ಮಾನಹಾನಿ ಸುದ್ದಿ ಪ್ರಕಟಿಸದಂತೆ ಮಾಧ್ಯಮಗಳನ್ನು ನಿರ್ಬಂಧಿಸಿ ಬೆಂಗಳೂರು ಸೆಷನ್ಸ್ ನ್ಯಾಯಾಲಯ ಏಕಪಕ್ಷೀಯ ಪ್ರತಿಬಂಧಕಾದೇಶ ಮಾಡಿದೆ. ಬಸವ ಜಯಮೃತ್ಯುಂಜಯ ಸ್ವಾಮೀಜಿ ಅವರು ತಮ್ಮ ವಿರುದ್ಧ ಯಾವುದೇ ರೀತಿಯ ಮಾನಹಾನಿ ಸುದ್ದಿ ಪ್ರಸಾರ, ಪ್ರಕಟಣೆ ಮತ್ತು ಹಂಚಿಕೆ ಮಾಡದಂತೆ ಶಾಶ್ವತ ಪ್ರತಿಬಂಧಕಾದೇಶ ಮಾಡಬೇಕು ಎಂದು ಅಸಲು ದಾವೆ ಸಲ್ಲಿಸಿದ್ದು, ತಾತ್ಕಾಲಿಕ ಪ್ರತಿಬಂಧಕಾದೇಶ ಹೊರಡಿಸುವಂತೆ ಮಧ್ಯಂತರ ಮನವಿ ಮಾಡಿದ್ದರು. ಈ ಮನವಿಯನ್ನು 30ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಎನ್.ಆರ್. ಮಧು ಅವರು ಪುರಸ್ಕರಿಸಿದ್ದಾರೆ. ಸ್ವಾಮೀಜಿ ಅವರ ದಾವೆಯಲ್ಲಿ ಸಂಯುಕ್ತ ಕರ್ನಾಟಕ ದಿನಪತ್ರಿಕೆ, ಗ್ಯಾರಂಟಿ ಸುದ್ದಿ ವಾಹಿನಿ, ಸೌಖ್ಯಾ ಗಾಂವ್ಕರ್, ವಿಜಯವಾಹಿನಿ ನ್ಯೂಸ್, ಮೆಟಾ ಮತ್ತು ಯೂಟ್ಯೂಬ್ಗಳನ್ನು ಪ್ರತಿವಾದಿಗಳನ್ನಾಗಿಸಲಾಗಿದೆ.
ಇರಾನ್ನಿಂದ ಡ್ರೋನ್ ದಾಳಿ| ಪರ್ಷಿಯನ್ ಕೊಲ್ಲಿಯಲ್ಲಿ ಸೌದಿ ಆರೇಬಿಯದ ಪೈಪ್ಲೈನ್ಗೆ ಹಾನಿ
ರಿಯಾದ್: ಸೌದಿ ಆರೇಬಿಯದ ಪೂರ್ವ-ಪಶ್ಚಿಮ ತೈಲ ಪೈಪ್ಲೈನ್ ಮೇಲೆ ಬುಧವಾರ ಇರಾನ್ ಡ್ರೋನ್ ದಾಳಿ ನಡೆಸಿದೆ. ಇದರಿಂದಾಗಿ ಪರ್ಷಿಯನ್ ಕೊಲ್ಲಿಯಿಂದ ಕೆಂಪು ಸಮುದ್ರಕ್ಕೆ ಕಚ್ಚಾ ತೈಲವನ್ನು ಕೊಂಡೊಯ್ಯುತ್ತಿದ್ದ ಪ್ರಮುಖ ರಫ್ತು ಕೊಳವೆ ಮಾರ್ಗಕ್ಕೆ ಹಾನಿಯಾಗಿದೆ. ಪಾಕಿಸ್ತಾನದಲ್ಲಿ ಅಮೆರಿಕದ ಜೊತೆ ನಡೆಯಲಿರುವ ಮಾತುಕತೆಯ ಕಾರ್ಯಚೌಕಟ್ಟಿಗೆ ಸಮ್ಮತಿಯೇರ್ಪಟ್ಟಲ್ಲಿ ಗುರುವಾರ ಅಥವಾ ಶುಕ್ರವಾರವೇ ಹಾರ್ಮುಝ್ ಜಲಸಂಧಿಯನ್ನು ತೆರೆಯಲಾಗುವುದೆಂದು ಇರಾನ್ ತಿಳಿಸಿದೆ. ಮಾತುಕತೆಗೆ ಸಂಬಂಧಿಸಿದ ಇರಾನ್ನ ಪ್ರಸ್ತಾವಿತ 10 ಅಂಶಗಳ ಕಾರ್ಯಚೌಕಟ್ಟು, ಕೇವಲ ಪರಮಾಣು ಕಾರ್ಯಕ್ರಮವನ್ನು ಮಾತ್ರವಲ್ಲ ಪ್ರಾದೇಶಿಕ ಭದ್ರತೆಯನ್ನು ಒಳಗೊಂಡಿರುತ್ತದೆ. ಅಲ್ಲದೆ ಸುಮಾರು 45 ವರ್ಷಗಳಂದ ಇರಾನ್ ಮೇಲೆ 45 ವರ್ಷಗಳಂದ ಅಮೆರಿಕ ವಿಧಿಸಿರುವ ನಿರ್ಬಂಧಗಳು ಕೂಡಾ ಮಾತುಕತೆಯಲ್ಲಿ ಚರ್ಚಿಸಲಾಗುವುದು ಎಂದು ವರದಿಯೊಂದು ತಿಳಿಸಿದೆ.
ಅಮೆರಿಕಾ-ಇಸ್ರೇಲ್ ಸೇರಿ ಇರಾನ್ ಮೇಲೆ ಯುದ್ಧ; ಭಾರತ ಶಾಂತಿ ಸಂದಾನಕ್ಕೆ ಮುಂದಾಗಲಿ : ಪ್ರೊ.ರವಿವರ್ಮ ಕುಮಾರ್
ಬೆಂಗಳೂರು : ಅಮೆರಿಕಾ ಮತ್ತು ಇಸ್ರೇಲ್ ಸೇರಿ ಇರಾನ್ ಮೇಲೆ ನಡೆಸುತ್ತಿರುವ ಯುದ್ಧದ ಸಂದರ್ಭದಲ್ಲಿ ಭಾರತ ಸಂದಾನ ನಡೆಸುವ ಯಾವುದೇ ಒಂದು ಪ್ರಯತ್ನ ಮಾಡದಿರುವುದರಿಂದ, ಇಂದು ಪಾಕಿಸ್ತಾನಕ್ಕೆ ಆ ಮರ್ಯಾದೆ ಸಿಕ್ಕಿದೆ. ಇಂತಹ ಸನ್ನಿವೇಶದಲ್ಲಿ ಶಾಂತಿ ಸಂದಾನಕ್ಕೆ ಭಾರತ ಮುನ್ನುಗ್ಗಬೇಕು ಎಂದು ಮಾಜಿ ಅಡ್ವೊಕೇಟ್ ಜನರಲ್ ಹಾಗೂ ಸಂವಿಧಾನ ತಜ್ಞ ಪ್ರೊ.ರವಿವರ್ಮ ಕುಮಾರ್ ಸಲಹೆ ನೀಡಿದ್ದಾರೆ. ಬುಧವಾರ ನಗರದ ಟೌನ್ಹಾಲ್ ಮುಂಭಾಗ ಸಮಾನ ಮನಸ್ಕರ ಸಂಘಟನೆಗಳ ವತಿಯಿಂದ ಹಮ್ಮಿಕೊಂಡಿದ್ದ ‘ಯುದ್ಧ ನಿಲ್ಲಿಸಿ, ಶಾಂತಿ ಸ್ಥಾಪಿಸಿ’ ಜಾಗೃತಿ ಅಭಿಯಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಈ ಶತಮಾನದ ದೊಡ್ಡ ದೌರ್ಭಾಗ್ಯವೆಂದರೆ ಭಾರತ 70 ವರ್ಷಗಳಲ್ಲಿ ಸಾಧಿಸಿದ್ದಂತ ಶಾಂತಿ ಸಂದಾನದ ಸಾಧನೆಯನ್ನು ಇಂದಿನ ಕೇಂದ್ರ ಸರಕಾರ ನೀರಿನ ಹೋಮ ಮಾಡಿ, ಅಮೆರಿಕ ಜೊತೆಗೆ ಕೈಜೋಡಿಸಿ, ಭಾರತಕ್ಕೆ ಕೆಟ್ಟ ಹೆಸರು ತಂದಿದೆ ಎಂದು ದೂರಿದರು. ಭಾರತದ ನಾಯಕರು ಅಮೆರಿಕ ಜೊತೆಗೆ ಕೈ ಜೋಡಿಸುವಂತಹ ಕೆಟ್ಟ ಕೆಲಸ ಮಾಡಬೇಡಿ. ನಿರ್ಲಿಪ್ತ ದೇಶವಾಗಿ ಎರಡು ದೇಶಗಳ ಜೊತೆಗೂ ಒಳ್ಳೆಯ ಸಂಬಂಧ ಇಟ್ಟುಕೊಂಡು, ಅವರೊಂದಿಗೆ ಕಿತ್ತಾಡದೆ, ಯುದ್ಧ ಮಾಡುವ ಯಾವುದೇ ರಾಷ್ಟ್ರದ ಜೊತೆ ಕೈ ಜೋಡಿಸದೇ ಶಾಂತಿ ಕಾಪಾಡುವ ನಿಟ್ಟಿನಲ್ಲಿ ಮುಂದುವರೆಯಿರಿ ಎಂದು ರವಿವರ್ಮ ಕುಮಾರ್ ಮನವಿ ಮಾಡಿದರು. ಶಾಂತಿಗಾಗಿ ನಾಗರಿಕರ ವೇದಿಕೆಯ ಪ್ರೊ.ನಗರಗೆರೆ ರಮೇಶ್ ಮಾತನಾಡಿ, ‘ಯುದ್ಧ ಬೇಡ ಶಾಂತಿ ಬೇಕು ಎದು ಯಾರೂ ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಜಗತ್ತಿನ ಎಲ್ಲ ವಾಸಿಗಳಿಗೂ ಬೇಕಾದಂತದ್ದು. ಯುದ್ಧಗಳು ಬಂದಾಗ ಸಾವನೋವುಗಳಿಗೆ ಹೆಚ್ಚಾಗಿ ಗುರಿಯಾಗುವರು ಸಾಮಾನ್ಯ ಜನರು. ಸಾಮ್ರಾಜ್ಯಶಾಹಿಗಳು, ಆಳುವವರು ತಮ್ಮ ಸ್ವಾರ್ಥಕ್ಕಾಗಿ ಅಧಿಕಾರವನ್ನು ಸಂಪಾದನೆ ಮಾಡಿಕೊಳ್ಳುವುದಕ್ಕೆ, ಸಂಪಾದನೆ ಮಾಡಿರುವ ಅಧಿಕಾರವನ್ನು ಗಟ್ಟಿಗೊಳಿಸುವುದಕ್ಕೆ, ಸಂಪತ್ತನ್ನು ಹೆಚ್ಚು ಗಳಿಸಿಕೊಳ್ಳುವುದಕ್ಕೆ ಯುದ್ಧವನ್ನು ಬಯಸುತ್ತಾರೆ ಎಂದರು. ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎಲ್.ಎನ್.ಮುಕುಂದರಾಜು ಮಾತನಾಡಿ, ಜಗತ್ತಿನಲ್ಲಿ ಯುದ್ಧ ಸರ್ವನಾಶ ಮಾಡುವಂತದ್ದು. ಪ್ರಸ್ತುತ ಶಾಂತಿಯ ಕಾಲವಾಗಬೇಕು, ಯುದ್ಧದ ಕಾಲವಲ್ಲ. ಪಂಪ ಯುದ್ಧ ವಿರೋಧಿಯಾಗಿದ್ದ. ಮನುಷ್ಯರಿಗೆ ಸಂಕಟವನ್ನು ತಂದಿಡುವ ಯುದ್ಧ ಭೂಮಿಯನ್ನು ನಾಶ ಮಾಡಿದರೆ ಬದುಕುವುದಾದರೂ ಹೇಗೆ? ಯುದ್ಧದ ಪರವಾಗಿ ನಿಂತರೆ ನಮ್ಮ ಮಕ್ಕಳಿಗೆ ಮುಂದಿನ ಭವಿಷ್ಯ ಇರುವುದಿಲ್ಲ. ಮನುಷ್ಯ ವಿರೋಧಿ ಯುದ್ಧ ನಿಲ್ಲಬೇಕು. ಅಮೆರಿಕ ಮತ್ತು ಇರಾನ್ ನಡುವೆ ನಡೆಯುತ್ತಿರುವ ಯುದ್ಧ ಮಾತ್ರವಲ್ಲ, ಜಗತ್ತಿನಲ್ಲಿ ಎಲ್ಲೂ ಯುದ್ಧ ನಡೆಯಬಾರದು ಎಂದು ಹೇಳಿದರು. ಜಾಗೃತಿ ಅಭಿಯಾನದಲ್ಲಿ ನಾಟಕ ಅಕಾಡೆಮಿ ಅಧ್ಯಕ್ಷ ಡಾ.ಕೆ.ವಿ.ನಾಗರಾಜಮೂರ್ತಿ, ಚಿಂತಕ ಶಿವಸುಂದರ್, ಹಿರಿಯ ಲೇಖಕ ಡಾ.ಜಿ.ರಾಮಕೃಷ್ಣ, ಸಾಹಿತಿ ಪ್ರೊ.ಎಸ್.ಜಿ.ಸಿದ್ದರಾಮಯ್ಯ, ಸಿಪಿಎಂ ಕಾರ್ಯದರ್ಶಿ ಡಾ.ಕೆ.ಪ್ರಕಾಶ್, ನಾಗೇಶ್ ಅರಳಕುಪ್ಪೆ, ವಕೀಲ ನರಸಿಂಹಮೂರ್ತಿ, ಇ.ಬಸವರಾಜು ಸೇರಿದಂತೆ ಹಲವರು ಭಾಗವಹಿಸಿದ್ದರು.
ಲೆಬನಾನ್ ಮೇಲೆ ಇಸ್ರೇಲ್ ದಾಳಿ ನಿಲ್ಲಿಸದಿದ್ದಲ್ಲಿ ಕದನವಿರಾಮ ರದ್ದು: ಇರಾನ್ ಎಚ್ಚರಿಕೆ
ಟೆಹರಾನ್,ಎ.10: ಒಂದು ವೇಳೆ ಲೆಬನಾನ್ ಮೇಲೆ ಇಸ್ರೇಲ್ ದಾಳಿಗಳನ್ನು ಮುಂದುವರಿಸಿದಲ್ಲಿ ಇರಾನ್ ಎರಡು ವಾರಗಳ ಕದನವಿರಾಮದಿಂದ ಹಿಂದೆಸರಿಯಲಿದೆ ಎಂದು ಇರಾನ್ ತಾಸ್ನಿಮ್ ಸುದ್ದಿಸಂಸ್ಥೆ, ಅನಾಮಿಕ ಮೂಲಗಳನ್ನು ಉಲ್ಲೇಖಿಸಿ ವರದಿ ಮಾಡಿದೆ. ಲೆಬನಾನ್ ವಿರುದ್ಧ ಇಸ್ರೇಲ್ ನಡೆಸಿದ ದಾಳಿಗಳಿಗೆ ಪ್ರತಿಕ್ರಿಯೆಯಾಗಿ ಇರಾನ್ನ ಸಶಸ್ತ್ರ ಪಡೆಗಳು ಇಸ್ರೇಲ್ನಲ್ಲಿರುವ ಗುರಿಗಳನ್ನು ಗುರುತಿಸುತ್ತಿವೆ ಎಂದು ಎಂದು ಐಆರ್ಜಿಸಿ ಜೊತೆ ನಂಟು ಹೊಂದಿರುವ ಈ ಸುದ್ದಿಸಂಸ್ಥೆ ತಿಳಿಸಿದೆ. ಕದನವಿರಾಮ ಘೋಷಣೆಯ ಬಳಿಕವೂ ಲೆಬನಾನ್ನಲ್ಲಿ ಹಿಝ್ಬುಲ್ಲಾ ವಿರುದ್ಧ ದಾಳಿ ನಡೆಸಿದ್ದಕ್ಕಾಗಿ ಇಸ್ರೇಲನ್ನು ಇರಾನ್ ದಂಡಿಸಲಿದೆ ಎಂದು ಮೂಲವೊಂದು ತಿಳಿಸಿರುವುದಾಗಿ ಪ್ರೆಸ್ ಟಿವಿ ವರದಿ ಮಾಡಿದೆ.
ವಿಧಾನ ಮಂಡಲದ ಉಭಯ ಸಚಿವಾಲಯಗಳ ಸಂಪೂರ್ಣ ಡಿಜಿಟಲೀಕರಣ: ಒಪ್ಪಂದಕ್ಕೆ ಸಹಿ
ಬೆಂಗಳೂರು : ವಿಧಾನಮಂಡಲದ ಉಭಯ ಸಚಿವಾಲಯಗಳ ಸಂಪೂರ್ಣ ಡಿಜಿಟಲೀಕರಣ ಕಾರ್ಯದ ಕುರಿತು, ಸ್ಪೀಕರ್ ಯು.ಟಿ.ಖಾದರ್ ಫರೀದ್ ಅವರು ನ್ಯಾಷನಲ್ ಇ-ವಿಧಾನ್ ಅಪ್ಲಿಕೇಶನ್(NeVA) ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವಾಲಯದ ಅಧಿಕಾರಿ ಡಾ.ಸತ್ಯಪ್ರಕಾಶ್ ಖಠಾನ, ಹೆಚ್ಚುವರಿ ಕಾರ್ಯದರ್ಶಿ ಅವರೊಂದಿಗೆ ಬುಧವಾರ ವಿಧಾನಸೌಧದಲ್ಲಿರುವ ತಮ್ಮ ಕಚೇರಿಯಲ್ಲಿ ಚರ್ಚೆ ನಡೆಸಿ, ಶಾಸನ ಸಭೆಯನ್ನು ಸಂಪೂರ್ಣವಾಗಿ ಕಾಗದ ರಹಿತವಾಗಿ ನಡೆಸುವ ಕಾರ್ಯಕ್ಕೆ ಚಾಲನೆ ನೀಡಿ, ಒಪ್ಪಂದಕ್ಕೆ ಸಹಿ ಮಾಡಿದರು. ಈ ಸಭೆಯಲ್ಲಿ ವಿಧಾನಸಭೆ ಹಾಗೂ ವಿಧಾನಪರಿಷತ್ತಿನ ಕಾರ್ಯದರ್ಶಿಗಳು ಮತ್ತು ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದರು.
ಕದನ ವಿರಾಮ ಉಲ್ಲಂಘಿಸಿ ಹೊಸದಾಗಿ ದಾಳಿ ನಡೆದರೆ ಸೂಕ್ತ ಪ್ರತಿಕ್ರಿಯೆ: ಇರಾನ್
ಟೆಹರಾನ್: ಕದನವಿರಾಮದ ಬಳಿಕ ಇರಾನ್ ವಿರುದ್ಧ ನಡೆಯುವ ಯಾವುದೇ ಹೊಸ ದಾಳಿಗೆ ಪ್ರತಿಕ್ರಿಯಿಸಲು ತಾವು ಸಿದ್ಧರಾಗಿದ್ದೇವೆ ಎಂದು ಇರಾನ್ನ ರೆವೆಲ್ಯೂಶನರಿ ಗಾರ್ಡ್ಸ್ ಬುಧವಾರ ತಿಳಿಸಿದ್ದು, ಅಮೆರಿಕಕ್ಕೆ ಸಹಕಾರ ನೀಡುವುದರ ವಿರುದ್ಧ ಗಲ್ಫ್ ರಾಷ್ಟ್ರಗಳಿಗೆ ಎಚ್ಚರಿಕೆ ನೀಡಿದೆ. ‘‘ನಮ್ಮ ಪಡೆಗಳ ಕೈಗಳು ಬಂದೂಕಿನ ಟ್ರಿಗ್ಗರ್ ಮೇಲೆಯೇ ಇದ್ದು, ಶತ್ರುವು ತಪ್ಪು ಲೆಕ್ಕಾಚಾರಗಳನ್ನು ಪುನರಾವರ್ತಿಸಿದಲ್ಲಿ, ತಾವು ಕಾರ್ಯಾಚರಿಸಲು ಸನ್ನದ್ಧರಾಗಿದ್ದೇವೆ ಎಂದು ಐಆರ್ಜಿಸಿ ಹೇಳಿದೆ. ‘ಶತ್ರುವಿನ ಭರವಸೆಗಳಲ್ಲಿ ನಮಗೆ ಯಾವುದೇ ನಂಬಿಕೆಯಿಲ್ಲ. ಯಾವುದೇ ರೀತಿಯ ಅತಿಕ್ರಮಣಕ್ಕೆ ದೊಡ್ಡ ಮಟ್ಟದಲ್ಲಿ ಪ್ರತಿಕ್ರಿಯಿಸುವುದಾಗಿ ಅದು ಹೇಳಿದೆ. ಪಶ್ಚಿಮ ಏಶ್ಯದಲ್ಲಿರುವ ಪ್ರಾದೇಶಿಕ ಪಾಲುದಾರರಿಗೆ ಅಮೆರಿಕ ಹಾಗೂ ಇಸ್ರೇಲ್ನ ಅಸಾಮಾರ್ಥ್ಯದ ದರ್ಶನವಾಗಿದ್ದು, ಆ ಎರಡು ದೇಶಗಳ ಜೊತೆ ಸಹಕಾರವನ್ನು ಕಡಿದುಕೊಳ್ಳಬೇಕೆಂದು ಐಆರ್ಜಿಸಿ ಹೇಳಿಕೆ ತಿಳಿಸಿದೆ. ಇರಾನ್ ಒಗ್ಗಟ್ಟಾಗಿಯೇ ಉಳಿಯಲಿದೆ: ಮಸೂದ್ ಪೆಝೆಶ್ಕಿಯಾನ್ ಪಶ್ಚಿಮ ಏಶ್ಯಾ ಸಂಘರ್ಷವನ್ನು ಕೊನೆಗೊಳಿಸುವ ನಿಟ್ಟಿನಲ್ಲಿ ಅಮೆರಿಕ ಹಾಗೂ ಇಸ್ಲಾಮಾಬಾದ್ ನಡುವೆ ನಡೆಯುವ ಮಾತುಕತೆಗಳಲ್ಲಿ ಇರಾನ್ ಭಾಗವಹಿಸಲಿದೆಯೆಂದು ಇರಾನ್ ಅಧ್ಯಕ್ಷ ಮಸೂದ್ ಪೆಝೆಶ್ಕಿಯಾನ್ ಬುಧವಾರ ದೃಢಪಡಿಸಲಿದ್ದಾರೆ. ಈ ಕದನವಿರಾಮವು ಇರಾನ್ ಒಪ್ಪಿಕೊಂಡಿರುವಂತಹ ಸಿದ್ದಾಂತಗಳನ್ನು ಆಧರಿಸಿದ್ದಾಗಿದೆ ಹಾಗೂ ಮುಂದೆಯೂ ದೇಶವು ಒಗ್ಗಟ್ಟಾಗಿಯೇ ಉಳಿಯಲಿದೆ ಎಂದು ಹೇಳಿದೆ. ‘‘ಕದನವಿರಾಮವು ಇರಾನ್ ಸಾರ್ವತ್ರಿಕ ಸಿದ್ಧಾಂತಗಳ ಸ್ವೀಕಾರವಾಗಿದ್ದು, ನಮ್ಮ ಹುತಾತ್ಮ ನಾಯಕನ ಬಲಿದಾನ ಹಾಗೂ ಎಲ್ಲಾ ಜನತೆಯ ಭಾಗವಹಿಸುವಿಕೆಯ ಫಲವಾಗಿದೆ’’ ಎಂದವರು ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ. ಇಂದಿನಿಂದ ನಾವು ರಾಜತಾಂತ್ರಿಕತೆ, ರಕ್ಷಣೆ, ರಸ್ತೆಗಳಲ್ಲಿ ಹಾಗೂ ಸೇವೆಗಳಲ್ಲಿ ಒಗ್ಗಟ್ಟಿನಿಂದಿರುವೆವು ಎಂದು ಇರಾನ್ ಅಧ್ಯಕ್ಷರ ಹೇಳಿಕೆ ತಿಳಿಸಿದೆ. ಕದನವಿರಾಮಕ್ಕೆ ಬದ್ಧ: ಇಸ್ರೇಲ್ ಇರಾನ್ನ ಕ್ಷಿಪಣಿ ಉಡಾವಣಾ ಸ್ಥಳಗಳು ಹಾಗೂ ಮೂಲಸೌಕರ್ಯಗಳ ಮೇಲೆ ಮಂಗಳವಾರ ರಾತ್ರಿಯಿಡೀ ಕ್ಷಿಪಣಿ ದಾಳಿಗಳನ್ನು ನಡೆಸಿರುವ ಇಸ್ರೇಲ್ ಬುಧವಾರ ಇರಾನ್ ಜೊತೆ ಕದನವಿರಾಮ ಜಾರಿಯಲ್ಲಿರುವುದಾಗಿ ತಿಳಿಸಿದೆ. ಅಮೆರಿಕವು ಇರಾನ್ ಜೊತೆ ಏರ್ಪಡಿಸಿಕೊಂಡಿರುವ ಕದನವಿರಾಮಕ್ಕೆ ತಾನು ಬದ್ಧನಾಗಿರುವುದಾಗಿ ತಿಳಿಸಿದೆ. ತನ್ನ ಫೈಟರ್ ಜೆಟ್ಗಳು ಇರಾನ್ನ ಡಝನ್ಗಟ್ಟಲೆ ಲಾಂಚರ್ಗಳನ್ನು ನಾಶಪಡಿಸುವ ಮೂಲಕ ಇಸ್ರೇಲ್ ವಿರುದ್ಧದ ನಡೆಯಲಿದ್ದ ಕ್ಷಿಪಣಿಗಳ ಬೃಹತ್ ಸಮೂಹ ದಾಳಿಯನ್ನು ತಡೆಗಟ್ಟಲಾಗಿದೆೆಯೆಂದು ಇಸ್ರೇಲ್ ರಕ್ಷಣಾ ಪಡೆಗಳು ತಿಳಿಸಿವೆ.
2nd PUC Result: ದ್ವಿತೀಯ ಪಿಯು ಫಲಿತಾಂಶ ಇಂದು ಮಧ್ಯಾಹ್ನ 3 ಗಂಟೆಗೆ ಪ್ರಕಟ: ಸಚಿವ ಮಧು ಬಂಗಾರಪ್ಪ ಮಾಹಿತಿ
2026ರ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ ಬರೆದ ವಿದ್ಯಾರ್ಥಿಗಳ ಬಹುದಿನಗಳ ಕಾಯುವಿಕೆ ಕೊನೆಗೊಳ್ಳಲಿದೆ. ಪರೀಕ್ಷೆಯ ಫಲಿತಾಂಶವನ್ನು ಏಪ್ರಿಲ್ 9ರಂದು (ಗುರುವಾರ) ಮಧ್ಯಾಹ್ನ 3 ಗಂಟೆಗೆ ಅಧಿಕೃತವಾಗಿ ಪ್ರಕಟಿಸಲಾಗುವುದು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಅವರು ಮಹತ್ವದ ಮಾಹಿತಿ ನೀಡಿದ್ದಾರೆ. ದ್ವಿತೀಯ ಪಿಯುಸಿ ಪರೀಕ್ಷೆ-1 ಬರೆದ ರಾಜ್ಯದ ಲಕ್ಷಾಂತರ ವಿದ್ಯಾರ್ಥಿಗಳ ಕಾಯುವಿಕೆಗೆ ಗುರುವಾರ
ಇಸ್ಲಾಮಾಬಾದ್ನಲ್ಲಿ ಕದನ ವಿರಾಮ ಕುರಿತು ಮುಂದಿನ ಮಾತುಕತೆ| ಅಮೆರಿಕದ ನಿಯೋಗಕ್ಕೆ ಜೆಡಿ ವಾನ್ಸ್ ನೇತೃತ್ವ
ವಾಶಿಂಗ್ಟನ್: ಅಮೆರಿಕ ಹಾಗೂ ಇರಾನ್ನ ನಡುವೆ ಸಂಘರ್ಷ ಅಂತ್ಯಕ್ಕೆ ಸಂಬಂಧಿಸಿ ಇಸ್ಲಾಮಾಬಾದ್ನಲ್ಲಿ ಶುಕ್ರವಾರ ನಡೆಯಲಿರುವ ಮಾತುಕತೆಯಲ್ಲಿ ಅಮೆರಿಕ ನಿಯೋಗದ ನೇತೃತ್ವವನ್ನು ಉಪಾಧ್ಯಕ್ಷ ಜೆ.ಡಿ.ವಾನ್ಸ್ ವಹಿಸಲಿದ್ದಾರೆ ಎಂದು ವರದಿಯಾಗಿದೆ ಮಾತುಕತೆಗೆ ಸಂಬಂಧಿಸಿದ ಇರಾನ್ನ ಪ್ರಸ್ತಾವಿತ 10 ಅಂಶಗಳ ಕಾರ್ಯಚೌಕಟ್ಟು, ಕೇವಲ ಪರಮಾಣು ಕಾರ್ಯಕ್ರಮವನ್ನು ಮಾತ್ರವಲ್ಲ ಪ್ರಾದೇಶಿಕ ಭದ್ರತೆಯನ್ನು ಒಳಗೊಂಡಿರುತ್ತದೆ. ಅಲ್ಲದೆ ಸುಮಾರು 45 ವರ್ಷಗಳಿಂದ ಇರಾನ್ ಮೇಲೆ ಅಮೆರಿಕ ವಿಧಿಸಿರುವ ನಿರ್ಬಂಧಗಳು ಕೂಡ ಮಾತುಕತೆಯಲ್ಲಿ ಚರ್ಚಿಸಲಾಗುವುದು ಎಂದು ವರದಿಯೊಂದು ತಿಳಿಸಿದೆ.
ಪೊಲೀಸ್ ಕಸ್ಟಡಿಯಲ್ಲಿ ಯುವಕನ ಸಾವು; ಕೈಗೊಂಡ ಕ್ರಮಗಳ ವರದಿ ಸಲ್ಲಿಸಲು ಸರಕಾರಕ್ಕೆ ಹೈಕೋರ್ಟ್ ನಿರ್ದೇಶನ
ಬೆಂಗಳೂರು: ಕಳೆದ ನವೆಂಬರ್ನಲ್ಲಿ ಸಣ್ಣೇನಹಳ್ಳಿಯ ದರ್ಶನ್ ಎಂಬ ಯುಕನನ್ನು ಠಾಣೆಗೆ ಕರೆದೊಯ್ದು ಗಂಭೀರವಾಗಿ ಹಲ್ಲೆ ನಡೆಸಿ, ಆತನ ಸಾವಿಗೆ ಕಾರಣವಾದ ಆರೋಪದಲ್ಲಿ ವಿವೇಕನಗರ ಠಾಣೆ ಪೊಲೀಸರು ವಿರುದ್ಧ ದಾಖಲಾಗಿರುವ ಪ್ರಕರಣ ಸಂಬಂಧ ಕೈಗೊಂಡಿರುವ ಕ್ರಮಗಳ ಕುರಿತು ಮಾಹಿತಿ ನೀಡುವಂತೆ ರಾಜ್ಯ ಸರಕಾರಕ್ಕೆ ಹೈಕೋರ್ಟ್ ನಿರ್ದೇಶಿಸಿದೆ. ಪೊಲೀಸ್ ಕಸ್ಟಡಿ ಸಾವುಗಳಿಗೆ ಸಂಬಂಧಿಸಿದಂತೆ 'ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟೀಸ್-ಕರ್ನಾಟಕ' ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಬುಧವಾರ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಮತ್ತು ನ್ಯಾಯಮೂರ್ತಿ ಸಿ.ಎಂ. ಪೂಣಚ್ಚ ಅವರಿದ್ದ ವಿಭಾಗೀಯ ನ್ಯಾಯಪೀಠ ಈ ನಿರ್ದೇಶನ ನೀಡಿತು. ಜತೆಗೆ, ಅರ್ಜಿ ಸಂಬಂಧ ರಾಜ್ಯ ಸರಕಾರ, ರಾಜ್ಯ ಪೊಲೀಸ್ ಮಹಾ ನಿರ್ದೇಶಕರಿಗೆ ನೋಟಿಸ್ ಜಾರಿಗೊಳಿಸಿ, ವಿಚಾರಣೆಯನ್ನು ಜುಲೈ 15ಕ್ಕೆ ಮುಂದೂಡಿತು. ಇದೇ ವೇಳೆ, ಕಳೆದ ಐದು ವರ್ಷಗಳ ಅವಧಿಯಲ್ಲಿ ಪೊಲೀಸ್ ಕಸ್ಟಡಿಯಲ್ಲಿ ಸಂಭವಿಸಿರುವ ಸಾವುಗಳ ತನಿಖೆ, ಪ್ರಾಸಿಕ್ಯೂಷನ್, ಸಂತ್ರಸ್ತರಿಗೆ ಪರಿಹಾರ ಮತ್ತು ಸರಕಾರಕ್ಕೆ ಸೂಕ್ತ ಶಿಫಾರಸ್ಸು ಮಾಡುವ ಸಂಬಂಧ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ನೇತೃತ್ವದಲ್ಲಿ ಸಮಿತಿ ರಚಿಸುವಂತೆ ಅರ್ಜಿಯಲ್ಲಿ ಮಾಡಲಾಗಿದ್ದ ಮನವಿ ಪರಿಗಣಿಸಲು ನ್ಯಾಯಾಲಯ ನಿರಾಕರಿಸಿತು. ಅರ್ಜಿ ವಿಚಾರಣೆ ಆರಂಭವಾಗುತ್ತಿದ್ದಂತೆ ನ್ಯಾಯಪೀಠ, ಕಸ್ಟಡಿ ಸಾವುಗಳ ಕುರಿತು ಹಲವು ತೀರ್ಪುಗಳು ಬಂದಿವೆ. ನಿಮಗೆ ಯಾವ ಆದೇಶ ಬೇಕು ಎಂದು ಕೇಳಿತು. ಅರ್ಜಿದಾರರ ಪರ ವಕೀಲ ಕ್ಲಿಫ್ಟನ್ ರೋಜಾರಿಯೊ ಪ್ರತಿಕ್ರಿಯಿಸಿ, ಕಸ್ಟಡಿ ಸಾವಿನ ಬಗ್ಗೆ ಪರಿಹಾರ ಕೋರುತ್ತಿಲ್ಲ, ಕಸ್ಟಡಿಯಲ್ಲಿನ ಕಿರುಕುಳದ ಬಗ್ಗೆ ಕೇಳುತ್ತಿದ್ದೇವೆ ಎಂದರು. ಆಗ ನ್ಯಾಯಪೀಠ, ಕಸ್ಟಡಿಯಲ್ಲಿನ ಕಿರುಕುಳದ ಬಗ್ಗೆಯೂ ಹಲವು ತೀರ್ಪುಗಳು ಬಂದಿವೆ. ವ್ಯಕ್ತಿಯನ್ನು ಬಂಧಿಸಿದ ನಂತರ ಪಾಲಿಸಬೇಕಾದ ಪ್ರಕ್ರಿಯೆಗಳು ಈಗಾಗಲೇ ಚಾಲ್ತಿಯಲ್ಲಿವೆ. ಪ್ರಕ್ರಿಯೆ ಉಲ್ಲಂಘಿಸಿದ ಪ್ರಕರಣಗಳಲ್ಲಿ ನಿರ್ದೇಶನ ನೀಡಬಹುದು. ಕಿರುಕುಳ ನೀಡಿರುವುದು ಸಾಬೀತಾದ ಪ್ರಕರಣಗಳಲ್ಲಿ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವು ಹಲವು ಆದೇಶಗಳಲ್ಲಿ ಸಂತ್ರಸ್ತರಿಗೆ ಪರಿಹಾರಕ್ಕೆ ಆದೇಶಿಸಿದೆ ಎಂದು ಹೇಳಿತು. ಅಂತಿಮವಾಗಿ ಅರ್ಜಿಯಲ್ಲಿನ ಐದು ಮನವಿಗಳ ಪೈಕಿ ಐದನೇ ಮನವಿಯಂತೆ 2025ರ ನವೆಂಬರ್ನಲ್ಲಿ ಸಣ್ಣೇನಹಳ್ಳಿಯ ದರ್ಶನ್ ಎಂಬ ಯುವಕನನ್ನು ಕರೆದೊಯ್ದು ಗಂಭೀರವಾಗಿ ಹಲ್ಲೆ ನಡೆಸಿ, ಆತನ ಸಾವಿಗೆ ಕಾರಣವಾದ ಆರೋಪ ಸಂಬಂಧ ವಿವೇಕನಗರ ಠಾಣೆ ಪೊಲೀಸರ ವಿರುದ್ಧ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣ ಸಂಬಂಧ ಕೈಗೊಂಡಿರುವ ಕ್ರಮದ ಕುರಿತು ಮಾಹಿತಿ ನೀಡುವಂತೆ ರಾಜ್ಯ ಸರಕಾರಕ್ಕೆ ನ್ಯಾಯಾಲಯ ನಿರ್ದೇಶಿಸಿ, ವಿಚಾರಣೆ ಮುಂದೂಡಿತು. ಅರ್ಜಿದಾರರ ಇತರ ಮನವಿಗಳು: ಪೊಲೀಸ್ ಕಸ್ಟಡಿಯಲ್ಲಿನ ಕಿರುಕುಳ ಮತ್ತು ಸಾವನ್ನು ತಡೆಯಲು ಕಡ್ಡಾಯ ವೈದ್ಯಕೀಯ ಪರೀಕ್ಷೆ, ಎಫ್ಐಆರ್ ದಾಖಲು, ಮಾಜಿಸ್ಟೀರಿಯಲ್ ತನಿಖೆ, ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಒಳಗೊಂಡು ಸಮಗ್ರ ಶಿಷ್ಟಾಚಾರ ರೂಪಿಸಲು ನಿರ್ದೇಶಿಸಬೇಕು. ಕಸ್ಟಡಿಯಲ್ಲಿನ ದೌರ್ಜನ್ಯ ಮತ್ತು ಸಾವುಗಳ ಸಂಬಂಧ ಕಠಿಣ ಮತ್ತು ಪಾರದರ್ಶಕ ಕ್ರಮಕೈಗೊಳ್ಳಲು ಮುಖ್ಯ ಕಾರ್ಯದರ್ಶಿ ಮತ್ತು ಪೊಲೀಸ್ ಮಹಾನಿರ್ದೇಶಕರಿಗೆ ನಿರ್ದೇಶಿಸಬೇಕು. ಎಲ್ಲ ಪೊಲೀಸ್ ಠಾಣೆಗಳಲ್ಲಿ ಸಿಸಿಟಿವಿಗಳು ಚಾಲ್ತಿಯಲ್ಲಿರಬೇಕು. ಸಿಸಿಟಿವಿ ಸರಿಯಾಗಿ ಕೆಲಸ ಮಾಡದ ಠಾಣೆಯಲ್ಲಿನ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮಕೈಗೊಳ್ಳಲು ಪೊಲೀಸ್ ಮಹಾನಿರ್ದೇಶಕರು ಮತ್ತು ಬೆಂಗಳೂರು ಪೊಲೀಸ್ ಆಯುಕ್ತರಿಗೆ ನಿರ್ದೇಶಿಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿತ್ತು. ಈ ಮನವಿಗಳನ್ನು ಪರಿಗಣಿಸಲು ಹೈಕೋರ್ಟ್ ನಿರಾಕರಿಸಿದೆ. ಇನ್ನು ದರ್ಶನ್ ಸಾವಿನ ತನಿಖೆ ನಡೆಸಲು ವಿಶೇಷ ತನಿಖಾ ತಂಡ ರಚಿಸಬೇಕು. ಕಾಲಮಿತಿಯಲ್ಲಿ ಹೈಕೋರ್ಟ್ ನಿಗಾದಲ್ಲಿ ತನಿಖೆ ಕೈಗೊಳ್ಳಬೇಕು. ದರ್ಶನ್ ಕುಟುಂಬದವರಿಗೆ 50 ಲಕ್ಷ ರೂ. ಪರಿಹಾರ ನೀಡಲು ಆದೇಶಿಸಬೇಕು. ಮೃತನ ಕುಟುಂಬದವರಿಗೆ ರಕ್ಷಣೆ ಒದಗಿಸಬೇಕು ಎಂಬ ಮನವಿಯ ಸಂಬಂಧ ರಾಜ್ಯ ಸರಕಾರಕ್ಕೆ ನ್ಯಾಯಾಲಯ ನೋಟಿಸ್ ಜಾರಿಗೊಳಿಸಿದೆ.
ಋತುಚಕ್ರದ ರಜೆ ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ ಬೆಂಗಳೂರು ಎಂಪ್ಲಾಯರ್ಸ್ ಅಸೋಸಿಯೇಷನ್; ಸರಕಾರಕ್ಕೆ ನೋಟಿಸ್
ಬೆಂಗಳೂರು: ರಾಜ್ಯದಲ್ಲಿ ವಿವಿಧ ಕಾರ್ಮಿಕ ಕಾಯ್ದೆಗಳಡಿ ನೋಂದಣಿಯಾಗಿರುವ ಉದ್ದಿಮೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಮಹಿಳಾ ನೌಕರರಿಗೆ ಋತುಚಕ್ರದ ಸಮಯದಲ್ಲಿ ಮಾಸಿಕ ಒಂದು ದಿನದ ವೇತನಸಹಿತ ರಜೆ ನೀಡುವ ಸಂಬಂಧ ರಾಜ್ಯ ಸರಕಾರ ಹೊರಡಿಸಿರುವ ಅಧಿಸೂಚನೆ ಪ್ರಶ್ನಿಸಿ ಹೈಕೋರ್ಟ್ಗೆ ಮತ್ತೊಂದು ಅರ್ಜಿ ಸಲ್ಲಿಕೆಯಾಗಿದೆ. ಸರಕಾರದ ಅಧಿಸೂಚನೆ ಪ್ರಶ್ನಿಸಿ ಈಗಾಗಲೇ ಕರ್ನಾಟಕ ಎಂಪ್ಲಾಯರ್ಸ್ ಅಸೋಸಿಯೇಷನ್, ಬೆಂಗಳೂರು ಹೋಟೆಲ್ಸ್ ಅಸೋಸಿಯೇಷನ್ ಹಾಗೂ ವಿವಿಧ ಖಾಸಗಿ ವಲಯಗಳಲ್ಲಿ ಕೆಲಸ ಮಾಡುತ್ತಿರುವ ಮಹಿಳಾ ಉದ್ಯೋಗಿಗಳು ಅರ್ಜಿ ಸಲ್ಲಿಸಿದ್ದಾರೆ. ಇದೀಗ ಬೆಂಗಳೂರು ಎಂಪ್ಲಾಯರ್ಸ್ ಅಸೋಸಿಯೇಷನ್ ಸಹ ಹೈಕೋರ್ಟ್ ಮೆಟ್ಟಿಲೇರಿದೆ. ಮತ್ತೊಂದೆಡೆ, ಸರಕಾರದ ಕ್ರಮ ಸಮರ್ಥಿಸಿ ಹಾಗೂ ಉದ್ಯೋಗಸ್ಥ ಮಹಿಳೆಯರ ಪರವಾಗಿ ಆಲ್ ಇಂಡಿಯಾ ಸೆಂಟ್ರಲ್ ಕೌನ್ಸಿಲ್ ಆಫ್ ಟ್ರೇಡ್ ಯೂನಿಯನ್ಸ್ (ಎಐಸಿಸಿಟಿಯು), ಆಲ್ ಇಂಡಿಯಾ ಡೆಮಾಕ್ರಟಿಕ್ ಓಮೆನ್ಸ್ ಅಸೋಸಿಯೇಷನ್ (ಎಐಡಿಡಬ್ಲ್ಯುಎ) ಸಂಘಟನೆಗಳು ಹಾಗೂ 15 ಮಂದಿ ಮಹಿಳಾ ವಕೀಲರು ಮಧ್ಯಂತರ ಅರ್ಜಿಗಳನ್ನು ಸಲ್ಲಿಸಿದ್ದಾರೆ. ಈ ಎಲ್ಲ ಅರ್ಜಿಗಳು ನ್ಯಾಯಮೂರ್ತಿ ಅನಂತ ರಾಮನಾಥ ಹೆಗ್ಡೆ ಅವರಿದ್ದ ಏಕಸದಸ್ಯ ನ್ಯಾಯಪೀಠದ ಮುಂದೆ ಬುಧವಾರ ವಿಚಾರಣೆಗೆ ಬಂದಿದ್ದವು. ಅರ್ಜಿದಾರರು, ಸರಕಾರ ಹಾಗೂ ಮಧ್ಯಂತರ ಅರ್ಜಿದಾರರ ಪರ ವಕೀಲರ ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ, ಎಲ್ಲ ಮಧ್ಯಂತರ ಅರ್ಜಿಗಳನ್ನು ವಿಚಾರಣೆಗೆ ಅಂಗೀಕರಿಸಿತಲ್ಲದೆ, ಬೆಂಗಳೂರು ಎಂಪ್ಲಾಯರ್ಸ್ ಅಸೋಸಿಯೇಷನ್ ಸಲ್ಲಿಸಿರುವ ಅರ್ಜಿ ಸಂಬಂಧ ಸರಕಾರಕ್ಕೆ ನೋಟಿಸ್ ಜಾರಿಗೊಳಿಸಿ ವಿಚಾರಣೆಯನ್ನು ಏಪ್ರಿಲ್ 15ಕ್ಕೆ ಮುಂದೂಡಿತು.
Ballari | ಅತಿಥಿ ಶಿಕ್ಷಕರ ಗೌರವಧನ ತಾರತಮ್ಯ ನಿವಾರಣೆಗೆ ಮನವಿ
ಸಂಡೂರು/ಬಳ್ಳಾರಿ: ಕೆಕೆಆರ್ಡಿಬಿ (ಕೆಕೆಆರ್ಡಿಬಿ) ಆವಿಷ್ಕಾರ ಯೋಜನೆಯಡಿ ಕಾರ್ಯನಿರ್ವಹಿಸುತ್ತಿರುವ ಅತಿಥಿ ಶಿಕ್ಷಕರ ಗೌರವಧನದಲ್ಲಿ ಉಂಟಾದ ತಾರತಮ್ಯ ನಿವಾರಣೆಗಾಗಿ ಅತಿಥಿ ಶಿಕ್ಷಕರ ಸಂಘದ ಸಂಡೂರು ತಾಲೂಕು ಘಟಕ ಮನವಿ ಸಲ್ಲಿಸಿದೆ. ತಾಲೂಕಿನ ವಿವಿಧ ಸರ್ಕಾರಿ ಶಾಲೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಅತಿಥಿ ಶಿಕ್ಷಕರಲ್ಲಿ, ವಿಶೇಷವಾಗಿ ದ್ವಿಭಾಷಾ ಮಾಧ್ಯಮದಲ್ಲಿ ಬೋಧನೆ ನಡೆಸುವವರಿಗೆ ಮೊದಲು 10,000 ರೂ. ಮಾಸಿಕ ಗೌರವಧನ ನೀಡಲಾಗುತ್ತಿತ್ತು. ಆದರೆ ಸರ್ಕಾರ 12,000 ರೂ. ವೇತನ ನಿಗದಿಪಡಿಸಿದ್ದರೂ, ಕೆಲವು ತಾಲೂಕುಗಳಲ್ಲಿ ಮಾತ್ರ ಅದು ಜಾರಿಯಾಗಿದ್ದು, ವಿಜಯನಗರ ಜಿಲ್ಲೆಯ ಹಲವೆಡೆ ಶಿಕ್ಷಕರು ಈಗಾಗಲೇ 12,000 ರೂ. ಪಡೆಯುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯೊಳಗಿನವೇ ವೇತನ ತಾರತಮ್ಯ ಶಿಕ್ಷಕರಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ. ಈ ಸಮಸ್ಯೆಯನ್ನು ಗಮನಿಸಿದ ಸಂಘದ ಪದಾಧಿಕಾರಿಗಳು ಕ್ಷೇತ್ರ ಶಿಕ್ಷಣಾಧಿಕಾರಿಗಳೊಂದಿಗೆ ಚರ್ಚೆ ನಡೆಸಿ, ಬಳಿಕ ಸ್ಥಳೀಯ ಶಾಸಕಿ ಅನ್ನಪೂರ್ಣ ಈ ತುಕಾರಾಮ್ ಅವರಿಗೆ ಮನವಿ ಸಲ್ಲಿಸಿದರು. ಮನವಿಗೆ ಸ್ಪಂದಿಸಿದ ಶಾಸಕಿ, ಸಂಬಂಧಿತ ಶಿಕ್ಷಣಾಧಿಕಾರಿಗಳೊಂದಿಗೆ ಮಾತುಕತೆ ನಡೆಸಿ, ವೇತನ ತಾರತಮ್ಯವನ್ನು ಶೀಘ್ರದಲ್ಲೇ ಸರಿಪಡಿಸುವಂತೆ ಸೂಚನೆ ನೀಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಅಧಿಕಾರಿಗಳು ಸಮಸ್ಯೆಯನ್ನು ಸಕಾರಾತ್ಮಕವಾಗಿ ಪರಿಗಣಿಸಿ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಅತಿಥಿ ಶಿಕ್ಷಕರ ಸಂಘದ ಪದಾಧಿಕಾರಿಗಳು ಶಾಸಕರ ತ್ವರಿತ ಸ್ಪಂದನೆಗೆ ಕೃತಜ್ಞತೆ ವ್ಯಕ್ತಪಡಿಸಿ, ಶೀಘ್ರದಲ್ಲೇ ₹12,000 ವೇತನ ಜಾರಿಗೆ ಬರಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಅತಿಥಿ ಶಿಕ್ಷಕರಾದ ನಾಗವೇಣಿ, ಕೊಟ್ರಮ್ಮ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಟೆಲ್ಅವೀವ್: ಇರಾನ್ನೊಂದಿಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕದನವಿರಾಮ ಘೋಷಿಸಿದ ಬಳಿಕ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತಾನ್ಯಾಹು ಅವರು ಸ್ವದೇಶದಲ್ಲಿ ಪ್ರತಿಪಕ್ಷಗಳ ತೀವ್ರ ಟೀಕೆಗೆ ಗುರಿಯಾಗಿದ್ದಾರೆ. ಕದನವಿರಾಮ ಒಪ್ಪಂದವು ಇಸ್ರೇಲ್ ಪಾಲಿಗೆ ಒಂದು ಐತಿಹಾಸಿಕ ವೈಫಲ್ಯವಾಗಿದೆಎಂದು ಪ್ರತಿಪಕ್ಷ ನಾಯಕ ಯಾಯಿರ್ ಲ್ಯಾಪಿಡ್ ಖಂಡಿಸಿದ್ದಾರೆ. ಭದ್ರತೆಗೆ ಸಂಬಂಧಿಸಿದ ಈ ಮಹತ್ವದ ಮಾತುಕತೆಗಳಿಂದ ಇಸ್ರೇಲನ್ನು ಹೊರಗಿಟ್ಟಿರುವುದಕ್ಕೆ ಅವರು ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪ್ರಕಟಿಸಿದ ಪೋಸ್ಟ್ನಲ್ಲಿ ತಿಳಿಸಿದ್ದಾರೆ. ‘‘ನಮ್ಮ ರಾಷ್ಟ್ರೀಯ ಭದ್ರತೆಯ ಜೊತೆ ನಂಟು ಹೊಂದಿರುವ ವಿಶಯಗಳ ಬಗ್ಗೆ ನಿರ್ಧಾರಗಳನ್ನು ಕೈಗೊಳ್ಳುವಾಗ ಇಸ್ರೇಲ್ ಮಾತುಕತೆಯ ಮೇಜಿನಲ್ಲಿ ಇರಲೇ ಇಲ್ಲ ಎಂದು ಲ್ಯಾಪಿಡ್ ಹೇಳಿದ್ದಾರೆ. ಇರಾನ್ ಜೊತೆ ಅಮೆರಿಕವು ಏರ್ಪಡಿಸಿಕೊಂಡಿರುವ ಕದನವಿರಾಮವನ್ನು ರೂಪಿಸುವಲ್ಲಿ ಇಸ್ರೇಲ್ ಸರಕಾರ ಪಾತ್ರವೇನೆಂಬುದನ್ನು ಅವರು ಪ್ರಶ್ನಿಸಿದ್ದಾರೆ. ಇರಾನ್ ಜೊತೆಗಿನ ಸಂಘರ್ಷದಲ್ಲಿ ಇಸ್ರೇಲಿ ಸಶಸ್ತ್ರ ಪಡೆಗಳು ತಮಗೆ ವಹಿಸಿದ್ದ ಎಲ್ಲಾ ಕಾರ್ಯಗಳನ್ನು ಸಮರ್ಥವಾಗಿ ಈಡೇರಿಸಿವೆ. ನಾಗರಿಕರು ಕೂಡಾ ಸಹಕಾರವನ್ನು ನೀಡಿದ್ದಾರೆ. ಆದಾಗ್ಯೂ ಇಸ್ರೇಲ್ ಪ್ರಧಾನಿ ನೆತನ್ಯಾಹು ಅವರು ರಾಜತಾಂತ್ರಿಕವಾಗಿ ಹಾಗೂ ವ್ಯೆಹಾತ್ಮಕವಾಗಿ ವಿಲರಾಗಿದ್ದಾರೆ. ಪ್ರಧಾನಿಯವರು ಹೇಳಿಕೊಂಡಿದ್ದ ಯಾವುದೇ ಗುರಿಗಳು ಈಡೇರಿಲ್ಲವೆಂದು ಅವರು ಹೇಳಿದ್ದಾರೆ. ಇಸ್ರೇಲ್ ಪ್ರಧಾನಿಯ ‘ ಉದ್ದಟತನ, ನಿರ್ಲಕ್ಷ್ಯ ಹಾಗೂ ವ್ಯೆಹಾತ್ಮಕ ಯೋಜನೆಯ ಕೊರತೆ’ಯಿಂದಾಗಿ ಇಸ್ರೇಲ್ಗೆ ಭಾರೀ ಹಾನಿಯಾಗಿದ್ದು, ಅದನ್ನು ಸರಿಪಡಿಸಲು ವರ್ಷಗಳೇ ಬೇಕಾದೀತು ಎಂದು ಲ್ಯಾಪಿಡ್ ಹೇಳಿದ್ದಾರೆ.
ವಿಜಯನಗರ | ಮುಂಗಾರು ಹಂಗಾಮಿಗೆ ಸಕಾಲದಲ್ಲಿ ಬೀಜ, ರಸಗೊಬ್ಬರ ಪೂರೈಕೆ : ಡಿಸಿ ಕವಿತಾ ಎಸ್.ಮನ್ನಿಕೇರಿ
ವಿಜಯನಗರ (ಹೊಸಪೇಟೆ): ಮುಂಗಾರು ಹಂಗಾಮು ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ರೈತರಿಗೆ ಬಿತ್ತನೆ ಬೀಜ, ರಸಗೊಬ್ಬರ ಸೇರಿದಂತೆ ಅಗತ್ಯ ಕೃಷಿ ಪರಿಕರಗಳು ಸಕಾಲದಲ್ಲಿ ಲಭ್ಯವಾಗುವಂತೆ ಕ್ರಮವಹಿಸಬೇಕು ಎಂದು ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಸೂಚಿಸಿದರು. ಜಿಲ್ಲಾ ಪಂಚಾಯತ್ ಕಚೇರಿ ಸಭಾಂಗಣದಲ್ಲಿ ಕೃಷಿ ಇಲಾಖೆ ಮತ್ತು ಜಿಲ್ಲಾಡಳಿತ ವತಿಯಿಂದ ಆಯೋಜಿಸಲಾದ ಕೃಷಿ ಪರಿಕರಗಳ ವಿತರಣೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು. ಜಿಲ್ಲೆಯ ಎಲ್ಲಾ ರೈತ ಸಂಪರ್ಕ ಕೇಂದ್ರಗಳು ಮತ್ತು ಸಹಕಾರ ಸಂಘಗಳಲ್ಲಿ ರೈತರ ಬೇಡಿಕೆಗೆ ಅನುಗುಣವಾಗಿ ಬೀಜ ಹಾಗೂ ರಸಗೊಬ್ಬರವನ್ನು ಮುನ್ನೆಚ್ಚರಿಕೆಯಾಗಿ ದಾಸ್ತಾನು ಮಾಡಿಕೊಳ್ಳಬೇಕು. ರೈತರಿಗೆ ಉತ್ತಮ ಗುಣಮಟ್ಟದ ಬೀಜ ವಿತರಣೆ ಖಚಿತಪಡಿಸಬೇಕು ಎಂದು ತಿಳಿಸಿದರು. ಮಾರುಕಟ್ಟೆಯಲ್ಲಿ ನಕಲಿ ಬೀಜ ಹಾಗೂ ಕಳಪೆ ರಸಗೊಬ್ಬರ ಮಾರಾಟವನ್ನು ತಡೆಯಲು ವಿಶೇಷ ಜಾಗೃತ ದಳ ರಚಿಸಿ ನಿಯಮಿತ ದಾಳಿ ನಡೆಸಬೇಕು. ನಿಗದಿತ ದರಕ್ಕಿಂತ ಹೆಚ್ಚು ಬೆಲೆ ವಸೂಲಿ ಮಾಡಿದರೆ ಅಂತಹ ಮಳಿಗೆಗಳ ಪರವಾನಗಿ ರದ್ದುಗೊಳಿಸಲಾಗುವುದು ಎಂದು ಎಚ್ಚರಿಸಿದರು. ರೈತರು ಖರೀದಿಸುವ ಪರಿಕರಗಳಿಗೆ ಕಡ್ಡಾಯವಾಗಿ ರಸೀದಿ ನೀಡಬೇಕು ಹಾಗೂ ದಾಸ್ತಾನು ವಿವರಗಳನ್ನು ಸ್ಪಷ್ಟವಾಗಿ ಪ್ರದರ್ಶಿಸಬೇಕು. ಕೃಷಿ ಇಲಾಖೆ ಅಧಿಕಾರಿಗಳು ಕಚೇರಿಗೆ ಸೀಮಿತವಾಗದೆ ಕ್ಷೇತ್ರ ಮಟ್ಟದಲ್ಲಿ ಕಾರ್ಯನಿರ್ವಹಿಸಿ ರೈತರ ಸಮಸ್ಯೆಗಳಿಗೆ ಸ್ಪಂದಿಸಬೇಕು. ಬಿತ್ತನೆ ಸಮಯದಲ್ಲಿ ತಾಂತ್ರಿಕ ಸಲಹೆ ಮತ್ತು ಹವಾಮಾನ ಮಾಹಿತಿ ನೀಡಬೇಕು ಎಂದು ಸೂಚಿಸಿದರು. ಸಭೆಯಲ್ಲಿ ಕೃಷಿ ಇಲಾಖೆ ಜಂಟಿ ನಿರ್ದೇಶಕರು ಮಾಹಿತಿ ನೀಡುತ್ತಾ, ಜಿಲ್ಲೆಯಲ್ಲಿ 2.78 ಲಕ್ಷ ಹೆಕ್ಟೇರ್ ಕೃಷಿ ಭೂಮಿಯಿದ್ದು, ಪ್ರಸ್ತುತ 1.33 ಟನ್ ರಸಗೊಬ್ಬರ ಬೇಡಿಕೆಯಿದೆ. ಸದ್ಯಕ್ಕೆ ಯಾವುದೇ ಕೊರತೆಯಿಲ್ಲದಿದ್ದು, ಜೂನ್, ಜುಲೈ ಮತ್ತು ಆಗಸ್ಟ್ ತಿಂಗಳಲ್ಲಿ ಹೆಚ್ಚುವರಿ ಬೇಡಿಕೆಗೆ ಅಗತ್ಯ ಸಿದ್ಧತೆ ಕೈಗೊಳ್ಳಲಾಗಿದೆ ಎಂದು ಹೇಳಿದರು. ಜಿಲ್ಲಾ ರಸಗೊಬ್ಬರ ಮಾರಾಟಗಾರರ ಸಂಘದ ಅಧ್ಯಕ್ಷ ಶ್ರೀಧರ್ ಶೆಟ್ಟಿ, ಕೊಟ್ಟೂರಿನಲ್ಲಿ ರೈಲ್ವೆ ರೇಕ್ ಪಾಯಿಂಟ್ ಸ್ಥಾಪನೆಗೆ ಒತ್ತಾಯಿಸಿದರು. ಪ್ರಸ್ತುತ ದಾವಣಗೆರೆ, ಕೊಪ್ಪಳ ಮತ್ತು ಬಳ್ಳಾರಿಯಿಂದ ರಸಗೊಬ್ಬರ ತರಿಸಲಾಗುತ್ತಿದ್ದು, ಸಾರಿಗೆ ವೆಚ್ಚ ಹೆಚ್ಚುತ್ತಿದೆ ಎಂದು ಹೇಳಿದರು. ಈ ಕುರಿತು ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ, ರೈಲ್ವೆ ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಸಭೆಯಲ್ಲಿ ಕೃಷಿ ಇಲಾಖೆ ಜಂಟಿ ನಿರ್ದೇಶಕ ಮಂಜುನಾಥ್, ಗುಲ್ಬರ್ಗಾ ವಿಚಕ್ಷಣಾ ವಿಭಾಗದ ಜಂಟಿ ನಿರ್ದೇಶಕ ಶಿವಕುಮಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ರಾಷ್ಟ್ರೀಯ ಇಂಧನ ಭದ್ರತೆಗೆ ಒಂದು ಮೈಲಿಗಲ್ಲು ಎಂಬಂತೆ, ಭಾರತದ ಅತ್ಯಂತ ಮುಂದುವರಿದ ಪರಮಾಣು ರಿಯಾಕ್ಟರ್ ನಿರ್ಣಾಯಕ ಹಂತವನ್ನು ತಲುಪಿದೆ. ಇದು ಯುರೇನಿಯಂ ಮೇಲಿನ ಅವಲಂಬನೆಯನ್ನು ಕಡಿತಗೊಳಿಸುವತ್ತ ಒಂದು ಹೆಜ್ಜೆ ಹತ್ತಿರವಾಗಿದೆ. ತಮಿಳುನಾಡಿನ ಕಲ್ಪಾಕಂನಲ್ಲಿರುವ ಫಾಸ್ಟ್ ಬ್ರೀಡರ್ ರಿಯಾಕ್ಟರ್ (PFBR) ಸೋಮವಾರ ನಿರ್ಣಾಯಕ ಹಂತವನ್ನು ತಲುಪಿತು. ಈ ಪ್ರಗತಿಯು ಭಾರತವನ್ನು ರಷ್ಯಾದ ನಂತರ ವಾಣಿಜ್ಯ ಫಾಸ್ಟ್ ಬ್ರೀಡರ್ ರಿಯಾಕ್ಟರ್ ಹೊಂದಿರುವ ವಿಶ್ವದ ಎರಡನೇ ದೇಶವನ್ನಾಗಿ ಮಾಡಿದೆ. ಭಾರತದ ಪ್ರಧಾನಿ ನರೇಂದ್ರ ಮೋದಿ ಇದನ್ನು ಭಾರತಕ್ಕೆ ಹೆಮ್ಮೆಯ ಕ್ಷಣ ಮತ್ತು ದೇಶದ ಪರಮಾಣು ಕಾರ್ಯಕ್ರಮವನ್ನು ಮುನ್ನಡೆಸುವಲ್ಲಿ ನಿರ್ಣಾಯಕ ಹೆಜ್ಜೆ ಎಂದು ಕರೆದರು. ಈ ಫಾಸ್ಟ್ ಬ್ರೀಡರ್ ರಿಯಾಕ್ಟರ್, ಅದು ಬಳಸುವುದಕ್ಕಿಂತ ಹೆಚ್ಚಿನ ಇಂಧನವನ್ನು ಉತ್ಪಾದಿಸುವ ಸಾಮರ್ಥ್ಯ ಹೊಂದಿದ್ದು, ನಮ್ಮ ವೈಜ್ಞಾನಿಕ ಸಾಮರ್ಥ್ಯದ ಆಳ ಮತ್ತು ನಮ್ಮ ಎಂಜಿನಿಯರಿಂಗ್ ಉದ್ಯಮದ ಬಲವನ್ನು ಪ್ರತಿಬಿಂಬಿಸುತ್ತದೆ. ಕಾರ್ಯಕ್ರಮದ ಮೂರನೇ ಹಂತದಲ್ಲಿ ನಮ್ಮ ವಿಶಾಲವಾದ ಥೋರಿಯಂ ನಿಕ್ಷೇಪಗಳನ್ನು ಬಳಸಿಕೊಳ್ಳುವ ಕಡೆಗೆ ಇದು ನಿರ್ಣಾಯಕ ಹೆಜ್ಜೆಯಾಗಿದೆ ಎಂದು ಮೋದಿ ಸೋಮವಾರ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ. ಫಾಸ್ಟ್ ಬ್ರೀಡರ್ ರಿಯಾಕ್ಟರ್ ಎಂದರೇನು? ಇಂಧನ-ಸಮರ್ಥ ಶಕ್ತಿಕೇಂದ್ರವಾಗಿ ಕಾರ್ಯನಿರ್ವಹಿಸುವ ಫಾಸ್ಟ್ ಬ್ರೀಡರ್ ರಿಯಾಕ್ಟರ್, ಶಕ್ತಿ ಉತ್ಪಾದನಾ ಪ್ರಕ್ರಿಯೆಯಲ್ಲಿ ಬಳಸುವುದಕ್ಕಿಂತ ಹೆಚ್ಚಿನ ಫಿಸ್ಸೈಲ್ ವಸ್ತುಗಳನ್ನು (ವಿದಳನ ಪರಮಾಣು ಪ್ರತಿಕ್ರಿಯೆಗಳಿಗೆ ಬಳಸಬಹುದಾದ ಇಂಧನ) ಉತ್ಪಾದಿಸಲು ವಿನ್ಯಾಸಗೊಳಿಸಲಾದ ಮುಂದುವರಿದ ವ್ಯವಸ್ಥೆಯಾಗಿದೆ. ಭಾರತದ ಫಾಸ್ಟ್ ಬ್ರೀಡರ್ ರಿಯಾಕ್ಟರ್ ಅನ್ನು ದೇಶದ ಪರಮಾಣು ಇಂಧನ ಇಲಾಖೆಯ ಅಡಿಯಲ್ಲಿ ಪ್ರಮುಖ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯಾದ ಇಂದಿರಾ ಗಾಂಧಿ ಸೆಂಟರ್ ಫಾರ್ ಅಟಾಮಿಕ್ ರಿಸರ್ಚ್ (IGCAR) ವಿನ್ಯಾಸಗೊಳಿಸಿ ಅಭಿವೃದ್ಧಿಪಡಿಸಿದೆ. ಇದು 500 ಮೆಗಾವ್ಯಾಟ್ ವಿದ್ಯುತ್ (MWe) ಸಾಮರ್ಥ್ಯವನ್ನು ಹೊಂದಿದೆ. ಭಾರತ ಮತ್ತು ಇತರ ಹೆಚ್ಚಿನ ದೇಶಗಳು ಬಳಸುವ ಪರಮಾಣು ರಿಯಾಕ್ಟರ್ಗಳು ಯುರೇನಿಯಂ ಅನ್ನು ತಮ್ಮ ಇಂಧನವಾಗಿ ಬಳಸಿ ಪ್ಲುಟೋನಿಯಂ ಅನ್ನು ತ್ಯಾಜ್ಯವಾಗಿ ಹೊರಹಾಕುತ್ತವೆ. ಫಾಸ್ಟ್ ಬ್ರೀಡರ್ ರಿಯಾಕ್ಟರ್ ಹೊರಹಾಕಲ್ಪಟ್ಟ ಪ್ಲುಟೋನಿಯಂ ಅನ್ನು ಇಂಧನವಾಗಿ ಬಳಸಿಕೊಂಡು ಸ್ವಯಂ-ಸಮರ್ಥನೀಯ ಪರಮಾಣು ಕ್ರಿಯೆಯನ್ನು ಪ್ರಾರಂಭಿಸಬಹುದು. ಫಾಸ್ಟ್ ಬ್ರೀಡರ್ ರಿಯಾಕ್ಟರ್ ಗಳು ಯುರೇನಿಯಂ ಅನ್ನು ಇಂಧನವಾಗಿಯೂ ಬಳಸುತ್ತವೆ, ಆದರೆ ಅವು ಪ್ಲುಟೋನಿಯಂ ಅನ್ನು ಕೂಡ ಬಳಸುವ ಕಾರಣ ಅದರ ಬಳಕೆ ಕಡಿಮೆ ಅಗತ್ಯವಿರುತ್ತದೆ. ಆದ್ದರಿಂದ, ಕಲ್ಪಾಕ್ಕಂ ರಿಯಾಕ್ಟರ್ ಗೆ ಭಾರೀ ನೀರಿನ ರಿಯಾಕ್ಟರ್ ಗಳಿಗಿಂತ ವಿದ್ಯುತ್ ಉತ್ಪಾದಿಸಲು ಕಡಿಮೆ ಯುರೇನಿಯಂ ಅಗತ್ಯವಿರುತ್ತದೆ. ಅದಕ್ಕಾಗಿಯೇ ಇದನ್ನು ಪರಮಾಣು ಕಾರ್ಯಕ್ರಮದ ಎರಡನೇ ಹಂತ ಎಂದು ಕರೆಯಲಾಗುತ್ತದೆ. ಯುರೇನಿಯಂ-238 ಯುರೇನಿಯಂನ ಅತ್ಯಂತ ಹೇರಳವಾದ, ನೈಸರ್ಗಿಕವಾಗಿ ಕಂಡುಬರುವ ರೂಪವಾಗಿದ್ದು, ಅದು ಸ್ವತಃ ಕಡಿಮೆ ವಿಕಿರಣಶೀಲವಾಗಿದೆ. ಅದು ನ್ಯೂಟ್ರಾನ್ ಗಳನ್ನು ಪ್ಲುಟೋನಿಯಂ ಆಗಿ ಪರಿವರ್ತಿಸುತ್ತದೆ. ಮೊದಲ ಹಂತದಿಂದಲೇ ಬಳಸಲಾದ ಇಂಧನವನ್ನು ಬಳಸುವುದರಿಂದ, ಫಾಸ್ಟ್ ಬ್ರೀಡರ್ ರಿಯಾಕ್ಟರ್ ಪರಮಾಣು ತ್ಯಾಜ್ಯ ಉತ್ಪಾದನೆಯಲ್ಲಿ ಗಮನಾರ್ಹ ಕಡಿತದ ದೃಷ್ಟಿಯಿಂದ ಹೆಚ್ಚಿನ ಪ್ರಯೋಜನವನ್ನು ನೀಡುತ್ತದೆ. ಭಾರತದ ಪರಮಾಣು ಶಕ್ತಿ ಇಲಾಖೆಯು ತನ್ನ ಪರಮಾಣು ಇಂಧನ ಯೋಜನೆಗಳ ಪ್ರಮುಖ ಭಾಗವಾಗಿ ಫಾಸ್ಟ್ ಬ್ರೀಡರ್ ರಿಯಾಕ್ಟರ್ಗಳ ಕಲ್ಪನೆಯನ್ನು ಹೊಂದಿದ್ದರೂ, ಬ್ರಿಟಿಷ್ ಕೊಲಂಬಿಯಾ ವಿಶ್ವವಿದ್ಯಾಲಯದ ನಿಶ್ಯಸ್ತ್ರೀಕರಣ, ಜಾಗತಿಕ ಮತ್ತು ಮಾನವ ಭದ್ರತೆಯ ಪ್ರಾಧ್ಯಾಪಕ ಎಂ.ವಿ. ರಮಣ ಅವರು ಬ್ರೀಡರ್ ರಿಯಾಕ್ಟರ್ಗಳ ಜಾಗತಿಕ ಹಿನ್ನಡೆಗಳ ಇತಿಹಾಸವನ್ನು ಎತ್ತಿ ತೋರಿಸಿದ್ದಾರೆ. ಅಲ್ ಜಜೀರಾ ಜೊತೆ ಮಾತನಾಡಿದ ಅವರು, ಅಂತರ್ಗತ ತಾಂತ್ರಿಕ ಸಂಕೀರ್ಣತೆಗಳಿಂದಾಗಿ ಇದು ಸಾಂಪ್ರದಾಯಿಕ ಮಾದರಿಗಳಿಗಿಂತ ಕಡಿಮೆ ಕಾರ್ಯಾಚರಣೆಯ ದಕ್ಷತೆಗೆ ಕಾರಣವಾಗುತ್ತದೆ ಎಂದಿದ್ದಾರೆ. ಫಾಸ್ಟ್ ಬ್ರೀಡರ್ ರಿಯಾಕ್ಟರ್ ಹೇಗೆ ಕೆಲಸ ಮಾಡುತ್ತದೆ? ಭಾರತೀಯ ಪ್ರಧಾನ ಮಂತ್ರಿ ಕಚೇರಿ ತನ್ನ ವರದಿಯಲ್ಲಿ ಹೇಳಿದಂತೆ, ಫಾಸ್ಟ್ ಬ್ರೀಡರ್ ರಿಯಾಕ್ಟರ್ ಗಳು ಪ್ಲುಟೋನಿಯಂ ಮತ್ತು ಯುರೇನಿಯಂ ಎರಡನ್ನೂ ಬಳಸುತ್ತವೆ. ಇಲ್ಲಿ ಯುರೇನಿಯಂ ಅನ್ನು ಪ್ಲುಟೋನಿಯಂ ಆಗಿ ಪರಿವರ್ತಿಸಲಾಗುತ್ತದೆ. ಈ ವ್ಯವಸ್ಥೆಯ ಪ್ರಮುಖ ಪ್ರಯೋಜನವೆಂದರೆ ಪರಮಾಣು ಇಂಧನ ನಿಕ್ಷೇಪಗಳನ್ನು ವ್ಯಾಪಕವಾಗಿ ವಿಸ್ತರಿಸುವ ಸಾಮರ್ಥ್ಯ. ಸೈದ್ಧಾಂತಿಕವಾಗಿ, ಇದು ಪ್ಲುಟೋನಿಯಂ ಪರಿವರ್ತನೆಯ ಮೂಲಕ ಯುರೇನಿಯಂನ ಒಟ್ಟು ಬಳಕೆಯನ್ನು ಸಕ್ರಿಯಗೊಳಿಸುತ್ತದೆ. ಇದಲ್ಲದೆ, ಈ ತಂತ್ರಜ್ಞಾನವನ್ನು ಥೋರಿಯಂ ಆಧಾರಿತ ವ್ಯವಸ್ಥೆಗಳಿಗೆ ಅಳವಡಿಸಿಕೊಳ್ಳಬಹುದು. ಭೂಮಿಯ ಹೊರಪದರದಲ್ಲಿ ಯುರೇನಿಯಂಗಿಂತ ಥೋರಿಯಂ ಗಮನಾರ್ಹವಾಗಿ ಹೆಚ್ಚು ಹೇರಳವಾಗಿರುವುದರಿಂದ, ಈ ಬದಲಾವಣೆಯು ಲಭ್ಯವಿರುವ ಪರಮಾಣು ಇಂಧನದ ಪ್ರಮಾಣದಲ್ಲಿ ಮತ್ತಷ್ಟು ದೊಡ್ಡ ಹೆಚ್ಚಳವನ್ನು ಒದಗಿಸುತ್ತದೆ ಎಂದು ಬರ್ಮಿಂಗ್ಹ್ಯಾಮ್ ವಿಶ್ವವಿದ್ಯಾಲಯದ ಪರಮಾಣು ಭೌತಶಾಸ್ತ್ರ ಮತ್ತು ಪರಮಾಣು ಶಕ್ತಿಯ ಪ್ರಾಧ್ಯಾಪಕ ಪಾಲ್ ನಾರ್ಮನ್ ಹೇಳಿದ್ದಾರೆ. ಜಾಗತಿಕವಾಗಿ, ಥೋರಿಯಂ ನಿಕ್ಷೇಪಗಳು ಯುರೇನಿಯಂ ನಿಕ್ಷೇಪಗಳಿಗಿಂತ ನಾಲ್ಕು ಪಟ್ಟು ದೊಡ್ಡದಾಗಿದೆ. ಭಾರತವು ವಿಶ್ವದ ಯುರೇನಿಯಂನ ಸುಮಾರು 1-2 ಪ್ರತಿಶತದಷ್ಟು ಹೊಂದಿದ್ದು, ವಿಶ್ವದ ಥೋರಿಯಂನ 25 ಪ್ರತಿಶತಕ್ಕಿಂತ ಹೆಚ್ಚಿನದನ್ನು ಹೊಂದಿದೆ. ಬೃಹತ್ ಥೋರಿಯಂ ನಿಕ್ಷೇಪಗಳು ಭಾರತಕ್ಕೆ ಹೇಗೆ ಸಹಾಯ ಮಾಡುತ್ತವೆ? PFBR ನಿರ್ಮಾಣವು ಅಧಿಕೃತವಾಗಿ 2004ರಲ್ಲಿ ಅನೇಕ ವಿಳಂಬಗಳ ನಂತರ ಪ್ರಾರಂಭವಾಯಿತು. ಆದರೆ ಅದರ ಮಹತ್ವವನ್ನು ದೇಶದ ವಿಜ್ಞಾನಿಗಳು ಬಹಳ ಮೊದಲೇ ಎತ್ತಿ ತೋರಿಸಿದ್ದರು. ಅಂತರರಾಷ್ಟ್ರೀಯ ಪರಮಾಣು ಶಕ್ತಿ ಸಂಸ್ಥೆಗಾಗಿ ಭಾರತೀಯ ವಿಜ್ಞಾನಿಗಳಾದ ಶಿವರಾಮ್ ಬಾಬುರಾವ್ ಭೋಜೆ ಮತ್ತು ಪೆರುಮಾಳ್ ಚೆಲ್ಲಪಾಂಡಿ ಅವರು ಅಕ್ಟೋಬರ್ 1996ರಲ್ಲಿ ಬರೆದ ವರದಿಯ ಪ್ರಕಾರ, ದೇಶದಲ್ಲಿ ಹೆಚ್ಚುತ್ತಿರುವ ಮತ್ತು ನಿರಂತರ ವಿದ್ಯುತ್ ಬೇಡಿಕೆಯಿಂದಾಗಿ ಭಾರತದಲ್ಲಿ ಫಾಸ್ಟ್ ರಿಯಾಕ್ಟರ್ ಕಾರ್ಯಕ್ರಮವು ಮುಖ್ಯವಾಗಿದೆ. ಚೀನಾ ಮತ್ತು ಯುನೈಟೆಡ್ ಸ್ಟೇಟ್ಸ್ ನಂತರ ಭಾರತವು ವಿಶ್ವದ ಮೂರನೇ ಅತಿದೊಡ್ಡ ಇಂಧನ ಪೂರೈಕೆದಾರ. ವಿಶ್ವದ ಅತಿದೊಡ್ಡ ಜನಸಂಖ್ಯೆ ಮತ್ತು ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯೊಂದಿಗೆ, ಭಾರತದ ಇಂಧನ ಬಳಕೆ ಮತ್ತಷ್ಟು ಬೆಳೆಯುವ ನಿರೀಕ್ಷೆಯಿದೆ. ಅಮೆರಿಕ-ಇರಾನ್ ಸಂಘರ್ಷದಿಂದ ಉಂಟಾದ ಜಾಗತಿಕ ಇಂಧನ ಮಾರುಕಟ್ಟೆಗಳಲ್ಲಿನ ಇತ್ತೀಚಿನ ಅಡೆತಡೆಗಳು, ಪಳೆಯುಳಿಕೆ ಇಂಧನಗಳ ಮೇಲಿನ ನಿರಂತರ ಅತಿಯಾದ ಅವಲಂಬನೆಯಿಂದಾಗಿ ಭಾರತದಂತಹ ರಾಷ್ಟ್ರಗಳು ಎದುರಿಸುತ್ತಿರುವ ವ್ಯವಸ್ಥಿತ ಆರ್ಥಿಕ ದುರ್ಬಲತೆಗಳನ್ನು ಒತ್ತಿಹೇಳುತ್ತವೆ. ಈ ಸಮಯದಲ್ಲಿ, ಪರಮಾಣು ಶಕ್ತಿಯು ದೇಶದ ಇಂಧನ ಮಿಶ್ರಣದಲ್ಲಿ ಕೇವಲ 3 ಪ್ರತಿಶತವನ್ನು ಪ್ರತಿನಿಧಿಸುತ್ತದೆ. ಆದರೆ ಭಾರತವು ಅದನ್ನು 2024ರಲ್ಲಿ 8,180MW ನಿಂದ 2047ರ ವೇಳೆಗೆ 100GW ಗೆ ಹೆಚ್ಚಿಸಲು ಬಯಸುತ್ತದೆ. ಎರಡನೇ ಹಂತದಲ್ಲಿ, ಫಾಸ್ಟ್ ಬ್ರೀಡರ್ ರಿಯಾಕ್ಟರ್ ಗಳು ಯುರೇನಿಯಂ ಮತ್ತು ಭಾರೀ ನೀರಿನ ರಿಯಾಕ್ಟರ್ಗಳಿಂದ ಬರುವ ಪ್ಲುಟೋನಿಯಂ ತ್ಯಾಜ್ಯವನ್ನು ವಿದ್ಯುತ್ ಉತ್ಪಾದಿಸಲು ಬಳಸುತ್ತವೆ. ಅವು ಹೆಚ್ಚು ಪ್ಲುಟೋನಿಯಂ ಮತ್ತು ಯುರೇನಿಯಂ-233 ಎಂಬ ಯುರೇನಿಯಂನ ಹಗುರವಾದ ಐಸೊಟೋಪ್ ಅನ್ನು ಸಹ ಉತ್ಪಾದಿಸುತ್ತವೆ, ಇದು ಮೂರನೇ ಹಂತದ ರಿಯಾಕ್ಟರ್ಗಳಲ್ಲಿ ಇಂಧನವಾಗಿ ಬಳಸಬಹುದಾದ ಸಿದ್ಧ, ವಿದಳನ ವಸ್ತುವಾಗಿದೆ. ಆ ಮೂರನೇ ಹಂತದ ರಿಯಾಕ್ಟರ್ ಗಳನ್ನು ಒಮ್ಮೆ ವಿನ್ಯಾಸಗೊಳಿಸಿದ ನಂತರ, ಅವುಗಳಿಗೆ ಥೋರಿಯಂ ಮತ್ತು ಯುರೇನಿಯಂ-233 ಅನ್ನು ಪೂರೈಸಲಾಗುತ್ತದೆ. ಆ ರಿಯಾಕ್ಟರ್ಗಳು ಉತ್ಪಾದಿಸುವ ತ್ಯಾಜ್ಯವನ್ನು, ಯುರೇನಿಯಂ-233 ಅನ್ನು ಸಹ ರಿಯಾಕ್ಟರ್ ಗಳಿಗೆ ಇಂಧನವಾಗಿ ಹಿಂತಿರುಗಿಸಲಾಗುತ್ತದೆ. ಭಾರತವು ತನ್ನ ಮೂರು-ಹಂತದ ಪ್ರಕ್ರಿಯೆಯನ್ನು ಸಾಧಿಸಿದ ನಂತರ, ನೈಸರ್ಗಿಕವಾಗಿ ಕಂಡುಬರುವ ಯುರೇನಿಯಂನ ಅಗತ್ಯವನ್ನು ಗಮನಾರ್ಹವಾಗಿ ಕಡಿಮೆ ಮಾಡಲು ಸಾಧ್ಯವಾಗುತ್ತದೆ ಮತ್ತು ಹೆಚ್ಚಿನ ಅಗತ್ಯಗಳಿಗೆ ಥೋರಿಯಂ ಅನ್ನು ಬಳಸಲಾಗುತ್ತದೆ. ಇದು ಜಗತ್ತಿನ ಇತರ ಭಾಗಗಳಿಗೆ ಏಕೆ ಮುಖ್ಯ? ಅಮೆರಿಕ, ಫ್ರಾನ್ಸ್, ಯುನೈಟೆಡ್ ಕಿಂಗ್ ಡಮ್, ಜಪಾನ್, ಚೀನಾ ಮತ್ತು ರಷ್ಯಾ ಸೇರಿದಂತೆ ಇತರ ದೇಶಗಳು ಫಾಸ್ಟ್ ಬ್ರೀಡರ್ ರಿಯಾಕ್ಟರ್ ತಂತ್ರಜ್ಞಾನದಲ್ಲಿ ಕೆಲಸ ಮಾಡಿವೆ. ಆದರೆ ಇಲ್ಲಿಯವರೆಗೆ, ರಷ್ಯಾ ಮಾತ್ರ ವಾಣಿಜ್ಯ ಫಾಸ್ಟ್ ಬ್ರೀಡರ್ ರಿಯಾಕ್ಟರ್ ಅನ್ನು ಹೊಂದಿದೆ. ಪಾಲ್ ನಾರ್ಮನ್ ಅವರ ಪ್ರಕಾರ, ತಾಂತ್ರಿಕ ಮತ್ತು ಆರ್ಥಿಕ ಅಡೆತಡೆಗಳ ಸಂಯೋಜನೆಯಿಂದಾಗಿ ಜಗತ್ತು ಬ್ರೀಡರ್ ರಿಯಾಕ್ಟರ್ಗಳನ್ನು ಸಂಪೂರ್ಣವಾಗಿ ಸ್ವೀಕರಿಸಿಲ್ಲ. ರಿಯಾಕ್ಟರ್ ವಸ್ತುಗಳು, ಮರುಸಂಸ್ಕರಣೆ ಮತ್ತು ಸಂಪೂರ್ಣ ಪ್ರಕ್ರಿಯೆಯ ಆರ್ಥಿಕತೆಯ ಸವಾಲುಗಳು ಹೆಚ್ಚಿನ ದೇಶಗಳಲ್ಲಿ ಈ ತಂತ್ರಜ್ಞಾನವನ್ನು ಸ್ಥಾಪಿತ ಅಥವಾ ಮೂಲಮಾದರಿ ಹಂತಗಳನ್ನು ಮೀರಿ ಚಲಿಸದಂತೆ ತಡೆಯುತ್ತಿವೆ. ಭಾರತವು ತನ್ನ ರಿಯಾಕ್ಟರ್ ನ ಯಶಸ್ಸನ್ನು ವಾಣಿಜ್ಯ ಪರಮಾಣು-ಶಕ್ತಿ-ಉತ್ಪಾದಿಸುವ ಮಾದರಿಯಾಗಿ ಪರಿವರ್ತಿಸಲು ಸಾಧ್ಯವಾದರೆ, ಅದು ಇತರ ದೇಶಗಳನ್ನು ಇದನ್ನು ಅನುಸರಿಸಲು ಪ್ರೇರೇಪಿಸಬಹುದು. ಆದರೆ ಮ್ಯಾಸಚೂಸೆಟ್ಸ್ ಇನ್ ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (MIT) ಯ ಪರಮಾಣು ವಿಜ್ಞಾನ ಮತ್ತು ಎಂಜಿನಿಯರಿಂಗ್ ವಿಭಾಗದ ಪ್ರಾಧ್ಯಾಪಕರಾದ ಕೋರೌಶ್ ಶಿರ್ವಾನ್, ಭಾರತದ ಸಾಧನೆಯನ್ನು ಅತಿಯಾಗಿ ಒತ್ತಿ ಹೇಳುವುದರ ವಿರುದ್ಧ ಎಚ್ಚರಿಕೆ ನೀಡಿದ್ದಾರೆ. ಈ ಮೈಲಿಗಲ್ಲು ಸಾಧಿಸಲು ಭಾರತ ರಿಯಾಕ್ಟರ್ ನಿರ್ಮಾಣ ಪ್ರಾರಂಭವಾದಾಗಿನಿಂದ 20 ವರ್ಷಗಳಿಗಿಂತ ಹೆಚ್ಚು ಸಮಯ ತೆಗೆದುಕೊಂಡಿತು. ಚೀನಾ ಇತ್ತೀಚೆಗೆ ಕೇವಲ ಆರು ವರ್ಷಗಳಲ್ಲಿ ಸ್ವಲ್ಪ ದೊಡ್ಡದಾದ ಪ್ಲುಟೋನಿಯಂ ಫಾಸ್ಟ್ ಬ್ರೀಡರ್ ರಿಯಾಕ್ಟರ್ ಅನ್ನು ನಿರ್ಮಿಸಿದೆ. ತನ್ನ ಪರಮಾಣು 'ಹೆಚ್ಚಿನ' ಸಾಧನೆ ಕೇವಲ ಸಾಂಕೇತಿಕ ಮೈಲಿಗಲ್ಲು ಅಲ್ಲ ಎಂದು ಖಚಿತಪಡಿಸಿಕೊಳ್ಳಲು, ಭಾರತ ಈಗ ತನ್ನ ಹೆಚ್ಚುತ್ತಿರುವ ಇಂಧನ ಬೇಡಿಕೆಗಳನ್ನು ಪೂರೈಸಲು ತ್ವರಿತ, ದೊಡ್ಡ ಪ್ರಮಾಣದ ನಿಯೋಜನೆಯತ್ತ ಗಮನಹರಿಸಬೇಕು ಎಂದು ಅವರು ಹೇಳಿದ್ದಾರೆ.
ಎ.10ರಂದು ಹೊಸಪೇಟೆಯಲ್ಲಿ ಸಹಕಾರ ಭಾರತಿ ರಾಜ್ಯ ಕಾರ್ಯಕಾರಿಣಿ ಸಭೆ
ಹೊಸಪೇಟೆ/ವಿಜಯನಗರ: ಸಹಕಾರಿ ಕ್ಷೇತ್ರದ ಅಭಿವೃದ್ಧಿ ಮತ್ತು ಬಲಪಡಿಸುವ ಉದ್ದೇಶದಿಂದ ಸಹಕಾರ ಭಾರತಿ ರಾಜ್ಯ ಕಾರ್ಯಕಾರಿಣಿ ಸಭೆ ಹಾಗೂ ಪ್ರಮುಖ ಸಹಕಾರಿಗಳ ಸಮಾವೇಶವು ಎ.10ರಂದು ನಗರದ ಮಲ್ಲಿಗಿ ಹೋಟೆಲ್ನಲ್ಲಿ ನಡೆಯಲಿದೆ ಎಂದು ವಿಜಯನಗರ ಜಿಲ್ಲಾಧ್ಯಕ್ಷ ಕರಿಬಸವರಾಜ್ ಬಾದಾಮಿ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 1978ರ ಸೆ.15ರಂದು ಮಹಾರಾಷ್ಟ್ರದ ಪೂನೆಯಲ್ಲಿ ಸ್ಥಾಪನೆಯಾದ ಸಹಕಾರ ಭಾರತಿ ದೇಶದ ಸಹಕಾರಿ ಕ್ಷೇತ್ರದ ಪ್ರಮುಖ ಸ್ವಯಂಸೇವಾ ಸಂಘಟನೆಯಾಗಿದ್ದು, 650ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ತನ್ನ ಚಟುವಟಿಕೆಗಳನ್ನು ವಿಸ್ತರಿಸಿಕೊಂಡಿದೆ ಎಂದು ತಿಳಿಸಿದರು. ಕೃಷಿ, ಹೈನುಗಾರಿಕೆ, ಗೃಹ ನಿರ್ಮಾಣ, ಮೀನುಗಾರಿಕೆ ಹಾಗೂ ನೇಕಾರಿಕೆ ಸೇರಿದಂತೆ ವಿವಿಧ ಸಹಕಾರಿ ಕ್ಷೇತ್ರಗಳ ಅಭಿವೃದ್ಧಿಗಾಗಿ ಸಂಸ್ಥೆ ಕಾರ್ಯಯೋಜನೆಗಳನ್ನು ರೂಪಿಸಿ ಅನುಷ್ಠಾನಗೊಳಿಸುತ್ತಿದೆ. ಕೇಂದ್ರ ಸರ್ಕಾರ ಸಹಕಾರ ಕ್ಷೇತ್ರಕ್ಕೆ ಪ್ರತ್ಯೇಕ ಸಚಿವಾಲಯ ಸ್ಥಾಪಿಸಿರುವುದು ಹಾಗೂ ಹೊಸ ಸಹಕಾರಿ ನೀತಿಯ ಅನುಷ್ಠಾನದಿಂದ ಕಳೆದ ಮೂರು ವರ್ಷಗಳಲ್ಲಿ ಗಮನಾರ್ಹ ಬದಲಾವಣೆಗಳು ಸಂಭವಿಸಿರುವುದು ಸಂತಸದ ಸಂಗತಿಯಾಗಿದೆ ಎಂದು ಹೇಳಿದರು. ಕರ್ನಾಟಕದಲ್ಲಿ ಸಹಕಾರ ಭಾರತಿಯ ನೇತೃತ್ವದಲ್ಲಿ ಸೌಹಾರ್ದ ಸಹಕಾರಿ ವ್ಯವಸ್ಥೆ ಯಶಸ್ವಿಯಾಗಿ ನಡೆಯುತ್ತಿದ್ದು, ಈಗಾಗಲೇ 5,500ಕ್ಕೂ ಹೆಚ್ಚು ಸಂಸ್ಥೆಗಳು ಸಕ್ರಿಯವಾಗಿವೆ. ತಂತ್ರಜ್ಞಾನ ಮತ್ತು ವೃತ್ತಿಪರತೆಯನ್ನು ಅಳವಡಿಸಿಕೊಂಡು ಸಹಕಾರಿ ಸಂಸ್ಥೆಗಳನ್ನು ಇನ್ನಷ್ಟು ಬಲಪಡಿಸಲು ಮುಂದಿನ ದಿನಗಳಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು. ಎ.10ರಂದು ಬೆಳಿಗ್ಗೆ 10ರಿಂದ ಸಂಜೆ 5ರವರೆಗೆ ನಡೆಯಲಿರುವ ಸಭೆಯಲ್ಲಿ ರಾಜ್ಯದ 33 ಜಿಲ್ಲೆಗಳು ಹಾಗೂ ಮೂರು ಮಹಾನಗರಗಳಿಂದ 200ಕ್ಕೂ ಹೆಚ್ಚು ಪದಾಧಿಕಾರಿಗಳು ಭಾಗವಹಿಸಲಿದ್ದಾರೆ. ಸಭೆಯಲ್ಲಿ ಸಂಘಟನಾ ವಿಚಾರಗಳ ಕುರಿತು ಚರ್ಚಿಸಿ ಮಹತ್ವದ ನಿರ್ಧಾರಗಳನ್ನು ಕೈಗೊಳ್ಳಲಾಗುತ್ತದೆ. ಇದೇ ವೇಳೆ ಡಿಜಿಟಲ್ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿ, ಸಂಸ್ಥೆಯ ಪರಿಚಯ ಪುಸ್ತಕ ಹಾಗೂ ಪದಾಧಿಕಾರಿಗಳ ವಿಳಾಸ ಕೈಪಿಡಿ ಬಿಡುಗಡೆ ಮಾಡಲಾಗುತ್ತದೆ. ಸಂಜೆ 5 ಗಂಟೆಗೆ ಮಲ್ಲಿಗಿ ಹೋಟೆಲ್ನ ಸೆನೆಟ್ ಹಾಲ್ನಲ್ಲಿ ಬಳ್ಳಾರಿ, ವಿಜಯನಗರ, ಕೊಪ್ಪಳ ಮತ್ತು ರಾಯಚೂರು ಜಿಲ್ಲೆಗಳ ಪ್ರಮುಖ ಸಹಕಾರಿಗಳ ಸಮಾವೇಶ ನಡೆಯಲಿದೆ. ಈ ಸಮಾವೇಶವನ್ನು ರಾಷ್ಟ್ರೀಯ ಅಧ್ಯಕ್ಷ ಉದಯ್ ವಾಸುದೇವ ಜೋಶಿ ಉದ್ಘಾಟಿಸಲಿದ್ದು, ರಾಷ್ಟ್ರೀಯ ಸ್ವಯಂಸೇವಕ ಸಂಘ ಅಖಿಲ ಭಾರತೀಯ ವ್ಯವಸ್ಥಾ ಪ್ರಮುಖ ಮಂಗೇಶ್ ಭಂಡೆರ್ ದಿಕ್ಕೂಚಿ ಭಾಷಣ ಮಾಡಲಿದ್ದಾರೆ. ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ದೀಪಕ್ ಚೌರಾಸಿಯಾ, ರಾಜ್ಯ ಪ್ರಧಾನ ಕಾರ್ಯದರ್ಶಿ ಸಾಣೂರು ನರಸಿಂಹ ಕಾಮತ್, ರಾಜ್ಯ ಮಹಿಳಾ ಪ್ರಮುಖ ವಿದ್ಯಾಪೈ, ರಾಜ್ಯಕಾರಿಣಿ ಸಂಚಾಲಕ ಜಿ. ನಂಜನಗೌಡ ಹಾಗೂ ರಾಜ್ಯಾಧ್ಯಕ್ಷ ಪ್ರಭುದೇವ ಆರ್. ಮಾಗನೂರು ಸೇರಿದಂತೆ ಅನೇಕರು ಉಪಸ್ಥಿತರಿರಲಿದ್ದಾರೆ.
ಕದನ ವಿರಾಮಕ್ಕೆ ಪಾಕಿಸ್ತಾನದ ಮಧ್ಯಸ್ಥಿಕೆಯು ಮೋದಿಯ ರಾಜತಾಂತ್ರಿಕತೆಗೆ ತೀವ್ರ ಹಿನ್ನಡೆ: ಕಾಂಗ್ರೆಸ್ ಆರೋಪ
ಹೊಸದಿಲ್ಲಿ,ಎ.8: ಅಮೆರಿಕ ಮತ್ತು ಇರಾನ್ ನಡುವೆ ಕದನ ವಿರಾಮ ಮಾತುಕತೆಗಳಲ್ಲಿ ಪಾಕಿಸ್ತಾನವು ಮಧ್ಯಸ್ಥಿಕೆ ವಹಿಸಿದ್ದು ಪ್ರಧಾನಿ ನರೇಂದ್ರಮೋದಿಯವರ ರಾಜತಾಂತ್ರಿಕತೆಗೆ ತೀವ್ರ ಹಿನ್ನಡೆಯಾಗಿದೆ ಎಂದು ಕಾಂಗ್ರೆಸ್ ಬುಧವಾರ ಟೀಕಿಸಿದೆ. ಮೋದಿಯವರ ‘ಸ್ವಯಂ ಘೋಷಿತ’ ವಿಶ್ವಗುರು ಚಿತ್ರಣ ಈಗ ಬಯಲಾಗಿದೆ. ಅವರ ‘ಸ್ವಯಂ ಘೋಷಿತ 56 ಇಂಚಿನ ಎದೆ’ ಕುಗ್ಗಿಹೋಗಿದೆ ಎಂದು ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಅವರು ಸಾಮಾಜಿಕ ಮಾಧ್ಯಮದಲ್ಲಿ ಟೀಕಿಸಿದ್ದಾರೆ. ಇರಾನ್ ಹೊರ್ಮುಝ್ ಜಲಸಂಧಿಯನ್ನು ಮತ್ತೆ ತೆರೆಯುವುದಕ್ಕೆ ಪ್ರತಿಯಾಗಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಮಧ್ಯಪ್ರಾಚ್ಯದಲ್ಲಿ ಎರಡು ವಾರಗಳ ಕದನ ವಿರಾಮ ಘೋಷಿಸಿರುವ ಹಿನ್ನೆಲೆಯಲ್ಲಿ ರಮೇಶ್ ಹೇಳಿಕೆ ಹೊರಬಿದ್ದಿದೆ. ಆರ್ಥಿಕವಾಗಿ ದಿವಾಳಿಯಾಗಿರುವ ಪಾಕಿಸ್ತಾನದಂತಹ ದೇಶಕ್ಕೆ ಕದನ ವಿರಾಮ ಮಾತುಕತೆಗಳಲ್ಲಿ ಪ್ರಮುಖ ಪಾತ್ರ ವಹಿಸಲು ಸಾಧ್ಯವಾಗಿರುವುದು ಮೋದಿಯವರ ಮಾತುಕತೆ ಮತ್ತು ನಿರೂಪಣೆ ನಿರ್ವಹಣೆಯ ಕಾರ್ಯತಂತ್ರವನ್ನು ಪ್ರಶ್ನಿಸುವಂತೆ ಮಾಡಿದೆ ಎಂದು ರಮೇಶ್ ಸಾಮಾಜಿಕ ಮಾಧ್ಯಮದಲ್ಲಿ ಬರೆದಿದ್ದಾರೆ. ಕದನ ವಿರಾಮವನ್ನು ಸ್ವಾಗತಿಸಿರುವ ವಿದೇಶಾಂಗ ವ್ಯವಹಾರಗಳ ಸಚಿವಾಲಯವು, ಈ ಒಪ್ಪಂದವು ಪಶ್ಚಿಮ ಏಶ್ಯಾದಲ್ಲಿ ಶಾಶ್ವತ ಶಾಂತಿಯನ್ನು ತರುತ್ತದೆ ಎಂದು ತಾನು ಆಶಿಸಿರುವುದಾಗಿ ಹೇಳಿದೆ. ಈ ಸಂಘರ್ಷವು ಈಗಾಗಲೇ ಜನರಿಗೆ ತೀವ್ರ ಸಂಕಷ್ಟಗಳನ್ನುಂಟು ಮಾಡಿದೆ ಮತ್ತು ಜಾಗತಿಕ ಇಂಧನ ಪೂರೈಕೆ ಹಾಗೂ ವ್ಯಾಪಾರ ಜಾಲಗಳಿಗೆ ಅಡ್ಡಿಯನ್ನುಂಟು ಮಾಡಿದೆ ಎಂದು ಹೇಳಿರುವ ಸಚಿವಾಲಯವು, ‘ಹೊರ್ಮುಝ್ ಜಲಸಂಧಿಯ ಮೂಲಕ ಮುಕ್ತ ಸಂಚಾರ ಮತ್ತು ಜಾಗತಿಕ ವಾಣಿಜ್ಯ ಹರಿವು ಸುಗಮವಾಗಿ ನಡೆಯುತ್ತವೆ ಎಂದು ನಾವು ನಿರೀಕ್ಷಿಸಿದ್ದೇವೆ ’ ಎಂದು ತಿಳಿಸಿದೆ. ಕದನ ವಿರಾಮ ಒಪ್ಪಂದವನ್ನು ಒಪ್ಪಿಕೊಳ್ಳುವಂತೆ ಇರಾನಿಗೆ ಎಚ್ಚರಿಕೆ ನೀಡಲು ಟ್ರಂಪ್ ಬಳಸಿದ್ದ ಭಾಷೆಯು ‘ಅತ್ಯಂತ ಹೀನ’ವಾಗಿತ್ತು ಎಂದು ಬಣ್ಣಿಸಿರುವ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು, ಪಾಶ್ಚಾತ್ಯ ದೇಶಗಳ ನೈತಿಕತೆಯ ಮುಸುಕು ಹೇಗೆ ಕಳಚುತ್ತಿದೆ ಎನ್ನುವುದನ್ನು ಇಡೀ ಜಗತ್ತು ಗಮನಿಸುತ್ತಿದೆ ಮತ್ತು ಅರ್ಥ ಮಾಡಿಕೊಳ್ಳುತ್ತಿದೆ. ದ್ವೇಷ, ಕೋಪ, ಹಿಂಸೆ ಮತ್ತು ಅನ್ಯಾಯ ಎಂದಿಗೂ ಗೆಲ್ಲುವುದಿಲ್ಲ ಎಂದು ಹೇಳಿದ್ದಾರೆ. ಧೈರ್ಯ ಮತ್ತು ಬೆನ್ನುಮೂಳೆ ಎಂದರೇನು ಎನ್ನುವುದನ್ನು ಇರಾನ್ ಜಗತ್ತಿಗೆ ಕಲಿಸಿದೆ ಎಂದಿರುವ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಅವರು, ಭಾರತದ ನಾಯಕತ್ವವು ಬೆದರಿಸುವವರನ್ನು ದೃಢವಾಗಿ ಎದುರಿಸಬೇಕು ಎಂದು ಹೇಳಿದ್ದಾರೆ. ಪಾಪ ವಿಶ್ವಗುರು:ಡಿಎಂಕೆ ಕದನ ವಿರಾಮದಲ್ಲಿ ಪಾಕಿಸ್ತಾನದ ಪಾತ್ರ ಕುರಿತು ಕೇಂದ್ರವನ್ನು ವ್ಯಂಗ್ಯವಾಡಿರುವ ಡಿಎಂಕೆ ರಾಜ್ಯಸಭಾ ಸದಸ್ಯೆ ರತಿಜಿ‘ಸಲ್ಮಾ’ಅವರು,‘ಪಾಕಿಸ್ತಾನದ ಮಧ್ಯಸ್ಥಿಕೆಯಿಂದಾಗಿ ಯುದ್ಧವು ನಿಂತಿದೆ. ಪಾಪ ವಿಶ್ವಗುರು! ಸಂಘಿಗಳು ಇದನ್ನು ಹೇಗೆ ಅರಗಿಸಿಕೊಳ್ಳುತ್ತಾರೆ?’ ಎಂದು ಎಕ್ಸ್ ಪೋಸ್ಟ್ನಲ್ಲಿ ಪ್ರಶ್ನಿಸಿದ್ದಾರೆ.
Bidar | ಗ್ರಾಮೀಣ ಜನತೆಗೆ ಶುದ್ಧ ನೀರು ಒದಗಿಸುವುದು ಅತ್ಯಂತ ಅಗತ್ಯ : ಸಂಸದ ಸಾಗರ್ ಖಂಡ್ರೆ
ಬೀದರ್ : ಗ್ರಾಮೀಣ ಜನತೆಗೆ ಶುದ್ಧ ಹಾಗೂ ನಿರಂತರ ಕುಡಿಯುವ ನೀರು ಒದಗಿಸುವುದು ಅತ್ಯಂತ ಅಗತ್ಯವಾಗಿದೆ ಎಂದು ಸಂಸದ ಸಾಗರ್ ಖಂಡ್ರೆ ಅವರು ಹೇಳಿದರು. ಭಾಲ್ಕಿ ತಾಲೂಕಿನ ಮರುರ್ ಗ್ರಾಮದಲ್ಲಿ ಬುಧವಾರ ಜಲ್ ಜೀವನ್ ಮಿಷನ್ ಹಾಗೂ ಕರ್ನಾಟಕ ಸುಸ್ಥಿರ ಗ್ರಾಮೀಣ ಕುಡಿಯುವ ನೀರು ಸರಬರಾಜು ಯೋಜನೆಯಡಿ ಸುಮಾರು 73 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣಗೊಂಡ 24×7 ಕುಡಿಯುವ ನೀರು ಸರಬರಾಜು ಯೋಜನೆಗೆ ಅಧಿಕೃತ ಚಾಲನೆ ನೀಡಿ ಅವರು ಮಾತನಾಡಿದರು. ಜಲ್ ಜೀವನ್ ಮಿಷನ್ ಹಾಗೂ ಕರ್ನಾಟಕ ಸುಸ್ಥಿರ ಗ್ರಾಮೀಣ ಕುಡಿಯುವ ನೀರು ಸರಬರಾಜು ಯೋಜನೆಯಿಂದ ಮರುರ್ ಗ್ರಾಮದ ಜನರ ಜೀವನಮಟ್ಟದಲ್ಲಿ ಮಹತ್ವದ ಬದಲಾವಣೆಯಾಗಲಿದೆ. ವಿಶೇಷವಾಗಿ ಮಹಿಳೆಯರು ಮತ್ತು ಮಕ್ಕಳಿಗೆ ನೀರಿಗಾಗಿ ದೂರ ತೆರಳುವ ಸಂಕಷ್ಟ ನಿವಾರಣೆಯಾಗಲಿದೆ ಎಂದರು. ಪ್ರತಿಯೊಂದು ಮನೆಗೂ ಸುರಕ್ಷಿತ ಕುಡಿಯುವ ನೀರು ತಲುಪಿಸುವ ಕಾರ್ಯವನ್ನು ಮತ್ತಷ್ಟು ವೇಗಗೊಳಿಸಲು ನಾವು ಬದ್ಧರಾಗಿದ್ದೇವೆ. ಇಂತಹ ಯೋಜನೆಗಳು ಗ್ರಾಮೀಣ ಅಭಿವೃದ್ಧಿಗೆ ಮಹತ್ವದ ಬಲ ನೀಡುತ್ತವೆ ಎಂದು ಅವರು ಹೇಳಿದರು. ಕಾರ್ಯಕ್ರಮದಲ್ಲಿ ಸ್ಥಳೀಯ ಜನಪ್ರತಿನಿಧಿಗಳು, ಅಧಿಕಾರಿಗಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
ಇರಾನ್ ಮೇಲೆ ಅಮೆರಿಕ ಮತ್ತು ಇಸ್ರೇಲ್ ನಡೆಸುತ್ತಿರುವ ಯುದ್ಧ 40ನೇ ದಿನಕ್ಕೆ ಕಾಲಿಡುತ್ತಿದ್ದಂತೆ, ಅಮೆರಿಕ ಮತ್ತು ಇರಾನ್ ಪರಸ್ಪರ ಪ್ರಸ್ತಾವನೆಗಳ ಮೂಲಕ ಎರಡು ವಾರಗಳ ಕದನ ವಿರಾಮಕ್ಕೆ ಒಪ್ಪಿಕೊಂಡಿವೆ. ವಿರಾಮವು ಇರಾನ್ ಹಾರ್ಮುಝ್ ಜಲಸಂಧಿಯನ್ನು ಸಂಪೂರ್ಣ, ತಕ್ಷಣ ಮತ್ತು ಸುರಕ್ಷಿತವಾಗಿ ತೆರೆಯಲು ಒಪ್ಪಿಕೊಳ್ಳುವುದರ ಮೇಲೆ ಅವಲಂಬಿತವಾಗಿರುತ್ತದೆ ಎಂದು ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಇರಾನ್ ತನ್ನ 10 ಅಂಶಗಳ ಪ್ರಸ್ತಾವನೆಯ ಮೂಲಕ ಕಾರ್ಯಸಾಧ್ಯ ಶಾಂತಿ ಸ್ಥಾಪನೆಗಾಗಿರುವ ಅಂಶಗಳನ್ನು ಮುಂದಿಟ್ಟಿದೆ ಎಂದು ಟ್ರಂಪ್ ಹೇಳಿದ್ದಾರೆ. ಸೋಮವಾರ, ಹಾರ್ಮುಝ್ ಜಲಸಂಧಿಯನ್ನು ಮತ್ತೆ ತೆರೆಯಲು ಟ್ರಂಪ್ ಗಡುವು ನೀಡಿದ್ದರೂ, ಯುದ್ಧವನ್ನು ನಿಲ್ಲಿಸುವ ಪ್ರಸ್ತಾವನೆಯನ್ನು ಇರಾನ್ ತಿರಸ್ಕರಿಸಿತು. ಬದಲಾಗಿ ಹತ್ತು ಷರತ್ತುಗಳನ್ನು ಇರಾನ್ ಅಮೆರಿಕದ ಮುಂದೆ ಇಟ್ಟಿತು. ಅದರ ರಾಜ್ಯ ಸುದ್ದಿ ಸಂಸ್ಥೆಯ ಪ್ರಕಾರ, ಈ ಯೋಜನೆ ಪ್ರದೇಶದಲ್ಲಿನ ವ್ಯಾಪಕ ಸಂಘರ್ಷವನ್ನು ಕೊನೆಗೊಳಿಸುವುದು, ಜಲಸಂಧಿಯ ಮೂಲಕ ಸುರಕ್ಷಿತ ಮಾರ್ಗವನ್ನು ಖಚಿತಪಡಿಸುವುದು, ನಿರ್ಬಂಧಗಳನ್ನು ತೆಗೆದುಹಾಕುವುದು ಮತ್ತು ಹಾನಿಗೊಳಗಾದ ಮೂಲಸೌಕರ್ಯವನ್ನು ಪುನರ್ನಿರ್ಮಿಸುವ ಕಾರ್ಯಗಳ ಮೇಲೆ ಕೇಂದ್ರೀಕರಿಸಿದೆ. ಅದೇ ಸಮಯದಲ್ಲಿ, ಯಾವುದೇ ಪ್ರಸ್ತಾವನೆಯನ್ನು ಪರಿಶೀಲಿಸುವಾಗ ಅದು ಗಡುವಿನೊಳಗೆ ಕಾರ್ಯನಿರ್ವಹಿಸುವುದಿಲ್ಲ ಎಂದು ಟೆಹ್ರಾನ್ ತನ್ನ ನಿಲುವನ್ನು ಸ್ಪಷ್ಟಪಡಿಸಿದೆ. ಈ ಬಿಕ್ಕಟ್ಟಿನ ಸಮಯದಲ್ಲಿ ಮಧ್ಯವರ್ತಿಯಾಗಿ ಕಾರ್ಯನಿರ್ವಹಿಸುತ್ತಿರುವ ಪಾಕಿಸ್ತಾನದ ಮೂಲಕ ಸಂದೇಶವನ್ನು ರವಾನಿಸಲಾಯಿತು. ಇರಾನ್ ಬಯಸುತ್ತಿರುವುದೇನು? ಇರಾನ್ ಬಲವಾದ ಭರವಸೆಗಳನ್ನು ಬಯಸುತ್ತದೆ. ತನ್ನ ನೆಲದ ಮೇಲೆ ಇನ್ನು ಮುಂದೆ ದಾಳಿಗಳು ನಡೆಯಬಾರದು, ಲೆಬನಾನ್ ನಲ್ಲಿ ಹೆಜ್ಬೊಲ್ಲಾ ಮೇಲಿನ ಇಸ್ರೇಲಿ ದಾಳಿಗಳನ್ನು ಕೊನೆಗೊಳಿಸಬೇಕು. ನಿರ್ಬಂಧಗಳನ್ನು ಸಂಪೂರ್ಣವಾಗಿ ತೆಗೆದುಹಾಕಬೇಕು. ಪ್ರತಿಯಾಗಿ ಹಾರ್ಮುಜ್ ಜಲಸಂಧಿಯನ್ನು ತೆರೆಯಲು ಇರಾನ್ ಸಿದ್ಧವಾಗಿದೆ ಎಂದು ಸೂಚಿಸಿದೆ ಎಂದು ಹೆಸರು ಹೇಳಲು ಬಯಸದ ಇರಾನ್ನ ಇಬ್ಬರು ಹಿರಿಯ ಅಧಿಕಾರಿಗಳು ಹೇಳಿರುವುದಾಗಿ ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ. ಇರಾನ್ ಅಲ್ಲಿ ಸಂಚಾರವನ್ನು ಪರಿಣಾಮಕಾರಿಯಾಗಿ ನಿರ್ಬಂಧಿಸುತ್ತಿದೆ, ಆದರೆ ಈ ಪ್ರಸ್ತಾವನೆಯಡಿಯಲ್ಲಿ ಅದು ಹಡಗುಗಳು ಮತ್ತೆ ಹಾದುಹೋಗಲು ಅನುವು ಮಾಡಿಕೊಡುತ್ತದೆ. ಅದೇ ವೇಳೆ, ಟೆಹ್ರಾನ್ ಪ್ರತಿ ಹಡಗಿಗೆ ಸುಮಾರು 2 ಮಿಲಿಯನ್ ಡಾಲರ್ ಶುಲ್ಕ ವಿಧಿಸಲು ಯೋಜಿಸಿದೆ. ಆ ಹಣವನ್ನು ಜಲಸಂಧಿಯ ಆಚೆ ಇರುವ ಒಮಾನ್ ನೊಂದಿಗೆ ಹಂಚಿಕೊಳ್ಳಲಾಗುವುದು. ಯುದ್ಧ ಹಾನಿಗೆ ನೇರ ಪರಿಹಾರವನ್ನು ಕೇಳುವ ಬದಲು, ಅಮೆರಿಕ ಮತ್ತು ಇಸ್ರೇಲಿ ದಾಳಿಗಳಿಂದ ಹಾನಿಗೊಳಗಾದ ರಸ್ತೆಗಳು, ಸೌಲಭ್ಯಗಳು ಮತ್ತು ಇತರ ಮೂಲಸೌಕರ್ಯಗಳನ್ನು ಪುನರ್ನಿರ್ಮಿಸಲು ಈ ಹಣದ ತನ್ನ ಪಾಲನ್ನು ಬಳಸುವುದಾಗಿ ಇರಾನ್ ಹೇಳುತ್ತದೆ. ಇರಾನ್ ಮುಂದಿಟ್ಟ 10 ಅಂಶಗಳ ಪ್ರಸ್ತಾವನೆಗಳು ಇರಾನ್ ಮೇಲೆ ಇನ್ನು ಮುಂದೆ ದಾಳಿ ಮಾಡಬಾರದು ಅಮೆರಿಕ ಮತ್ತು ಅದರ ಮಿತ್ರ ರಾಷ್ಟ್ರಗಳು ಎಲ್ಲಾ ದಾಳಿಗಳನ್ನು ಶಾಶ್ವತವಾಗಿ ನಿಲ್ಲಿಸುತ್ತವೆ ಎಂಬ ದೃಢವಾದ ಖಾತರಿಯನ್ನು ಇರಾನ್ ಬಯಸುತ್ತದೆ. ಟೆಹ್ರಾನ್ ಕೇವಲ ತಾತ್ಕಾಲಿಕ ವಿರಾಮವನ್ನು ಕೇಳುತ್ತಿಲ್ಲ, ಬದಲಾಗಿ ಸಂಘರ್ಷಕ್ಕೆ ಶಾಶ್ವತ ಅಂತ್ಯವನ್ನು ಕೇಳುತ್ತಿದೆ. ಇರಾನಿನ ಸ್ವತ್ತುಗಳ ಬಿಡುಗಡೆ ವಿದೇಶಗಳಲ್ಲಿ ಸ್ಥಗಿತಗೊಳಿಸಲಾದ ಎಲ್ಲಾ ಇರಾನಿನ ಸ್ವತ್ತುಗಳನ್ನು ಒಪ್ಪಂದದ ಭಾಗವಾಗಿ ಹಿಂತಿರುಗಿಸಬೇಕು. ಲೆಬನಾನ್ ನಲ್ಲಿ ಇಸ್ರೇಲಿ ದಾಳಿಗಳನ್ನು ನಿಲ್ಲಿಸಿ ಇಸ್ರೇಲ್ ಹೆಜ್ಬೊಲ್ಲಾವನ್ನು ಗುರಿಯಾಗಿಸಿಕೊಂಡಿರುವ ಲೆಬನಾನ್ ನಲ್ಲಿ ದಾಳಿಗಳನ್ನು ಕೊನೆಗೊಳಿಸಬೇಕೆಂದು ಇರಾನ್ ಒತ್ತಾಯಿಸುತ್ತದೆ. ಎಲ್ಲಾ ಯುಎಸ್ ನಿರ್ಬಂಧಗಳನ್ನು ತೆಗೆದುಹಾಕಬೇಕು ಇರಾನ್ ನ ಆರ್ಥಿಕತೆಗೆ ದೀರ್ಘಕಾಲದಿಂದ ಹಾನಿ ಮಾಡಿರುವುದರಿಂದ ಎಲ್ಲಾ ಅಮೆರಿಕನ್ ನಿರ್ಬಂಧಗಳನ್ನು ತೆಗೆದುಹಾಕಬೇಕೆಂದು ಟೆಹ್ರಾನ್ ಬಯಸುತ್ತದೆ. ಇರಾನ್ನ ಮಿತ್ರ ರಾಷ್ಟ್ರಗಳ ಮೇಲೆ ಇನ್ನು ಮುಂದೆ ದಾಳಿ ಮಾಡಬಾರದು ವಿಶಾಲ ಶಾಂತಿ ಒಪ್ಪಂದದ ಅಡಿಯಲ್ಲಿ ಪ್ರದೇಶದಾದ್ಯಂತ ತನ್ನ ಮಿತ್ರ ಗುಂಪುಗಳ ಮೇಲೆ ದಾಳಿ ಮಾಡಬಾರದೆಂದು ಇರಾನ್ ಒತ್ತಾಯಿಸುತ್ತದೆ. ಹಾರ್ಮುಜ್ ಜಲಸಂಧಿಯನ್ನು ಸುರಕ್ಷಿತವಾಗಿ ಪುನಃ ತೆರೆಯುವುದು ಈ ಪ್ರಮುಖ ಜಾಗತಿಕ ತೈಲ ಮಾರ್ಗದ ಮೂಲಕ ಹಡಗುಗಳು ಸುರಕ್ಷಿತವಾಗಿ ಹಾದುಹೋಗಲು ಇರಾನ್ ಸಿದ್ಧವಾಗಿದೆ ಎಂದು ಹೇಳುತ್ತದೆ. ಪ್ರತಿ ಹಡಗಿಗೆ ಶುಲ್ಕ ಜಲಸಂಧಿಯ ಮೂಲಕ ಹಾದುಹೋಗುವ ಪ್ರತಿಯೊಂದು ಹಡಗು ಸುಮಾರು 2 ಮಿಲಿಯನ್ ಡಾಲರ್ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಒಮಾನ್ ಜೊತೆ ಆದಾಯ ಹಂಚಿಕೆ ಸಾರಿಗೆ ಶುಲ್ಕದಿಂದ ಸಂಗ್ರಹಿಸಲಾದ ಹಣವನ್ನು ಜಲಸಂಧಿಯಾದ್ಯಂತ ಇರುವ ಒಮಾನ್ನೊಂದಿಗೆ ಹಂಚಿಕೊಳ್ಳಲಾಗುವುದು. ಹಡಗುಗಳ ಸುರಕ್ಷಿತ ಸಾಗಣೆಯನ್ನು ಖಚಿತಪಡಿಸಿಕೊಳ್ಳಲು ಟೆಹ್ರಾನ್ ಸರಿಯಾದ ವ್ಯವಸ್ಥೆಯನ್ನು ಸಹ ಸ್ಥಾಪಿಸುತ್ತದೆ. UN ಭದ್ರತಾ ಮಂಡಳಿಯ ನಿರ್ಣಯವನ್ನು ಬದ್ಧಗೊಳಿಸುವುದು ವಿಶ್ವ ಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಬದ್ಧ ನಿರ್ಣಯದ ಮೂಲಕ ಎಲ್ಲಾ ಒಪ್ಪಂದಗಳನ್ನು ಔಪಚಾರಿಕಗೊಳಿಸಬೇಕೆಂದು ಇರಾನ್ ಬಯಸುತ್ತದೆ. ಪುನರ್ ನಿರ್ಮಾಣಕ್ಕಾಗಿ ಶುಲ್ಕಗಳ ಬಳಕೆ ನೇರ ಪರಿಹಾರವನ್ನು ಕೇಳುವ ಬದಲು, ಸಂಘರ್ಷದ ಸಮಯದಲ್ಲಿ ಹಾನಿಗೊಳಗಾದ ಮೂಲಸೌಕರ್ಯವನ್ನು ಪುನರ್ನಿರ್ಮಿಸಲು ಸಂಗ್ರಹಿಸಲಾದ ಶುಲ್ಕವನ್ನು ಬಳಸಲು ಇರಾನ್ ಯೋಜಿಸಿದೆ. ಶ್ವೇತಭವನದಲ್ಲಿ ಮಾತನಾಡಿದ ಡೊನಾಲ್ಡ್ ಟ್ರಂಪ್ ಈ ಪ್ರಸ್ತಾಪವನ್ನು ಒಪ್ಪಿಕೊಂಡಿದ್ದು, ಇದು ಮಹತ್ವದ ಪ್ರಸ್ತಾಪ. ಇದು ಮಹತ್ವದ ಹೆಜ್ಜೆ ಎಂದಿದ್ದಾರೆ. ಈ ಹಿಂದೆ ಅಮೆರಿಕದ ಪ್ರಸ್ತಾವನೆಯನ್ನು ಇರಾನ್ ತಿರಸ್ಕರಿಸಿತ್ತು ಇದು ಮಾತುಕತೆಗೆ ಮೊದಲ ಪ್ರಯತ್ನವಲ್ಲ. ಮಾರ್ಚ್ 24ರಂದು ಅಮೆರಿಕವು ಇರಾನ್ ಗೆ ಪಾಕಿಸ್ತಾನದ ಮೂಲಕ 15 ಅಂಶಗಳ ಯೋಜನೆಯನ್ನು ಕಳುಹಿಸಿತ್ತು. ಟೆಹ್ರಾನ್ ಆ ಪ್ರಸ್ತಾವನೆಯನ್ನು ತಿರಸ್ಕರಿಸಿ ಪ್ರತಿ-ಬೇಡಿಕೆಗಳನ್ನು ಇಟ್ಟಿತ್ತು. ಅವುಗಳಲ್ಲಿ ಕೆಲವು ಈಗ ಈ ಇತ್ತೀಚಿನ ಪ್ರಸ್ತಾವನೆಯಲ್ಲಿ ಮತ್ತೆ ಕಾಣಿಸಿಕೊಂಡಿವೆ. ಅಮೆರಿಕ ಏನು ಹೇಳಿದೆ? ಗಲ್ಫ್ ನಿಂದ ತೈಲ ಮತ್ತು ಇತರ ರಫ್ತುಗಳಿಗೆ ಪ್ರಮುಖ ಹಡಗು ಮಾರ್ಗವಾದ ಹಾರ್ಮುಜ್ ಜಲಸಂಧಿಯನ್ನು ಮತ್ತೆ ತೆರೆಯಲು ಟೆಹ್ರಾನ್ ಒಪ್ಪಿಕೊಂಡರೆ, ಇರಾನ್ ಮೇಲೆ ಬಾಂಬ್ ದಾಳಿ ಮತ್ತು ದಾಳಿಯನ್ನು ಎರಡು ವಾರಗಳ ಕಾಲ ಸ್ಥಗಿತಗೊಳಿಸಲು ಒಪ್ಪಿಕೊಂಡಿದ್ದೇನೆ ಎಂದು ಟ್ರಂಪ್ ಹೇಳಿದ್ದಾರೆ. ನಾವು ಈಗಾಗಲೇ ಎಲ್ಲಾ ಮಿಲಿಟರಿ ಉದ್ದೇಶಗಳನ್ನು ಪೂರೈಸಿದ್ದೇವೆ ಮತ್ತು ಮೀರಿದ್ದೇವೆ ಎಂದು ಟ್ರೂತ್ ಸೋಷಿಯಲ್ನಲ್ಲಿನ ಪೋಸ್ಟ್ನಲ್ಲಿ ಟ್ರಂಪ್ ತಾತ್ಕಾಲಿಕ ಕದನ ವಿರಾಮಕ್ಕೆ ಒಪ್ಪಿಕೊಂಡಿರುವುದಾಗಿ ತಿಳಿಸಿದ್ದಾರೆ. ಇದಕ್ಕಿಂತ ಮೊದಲು ಅಮೆರಿಕ ಮುಂದಿಟ್ಟಿರುವ ಬೇಡಿಕೆಗಳನ್ನು ನಿಗದಿತ ಗಡುವಿನೊಳಗೆ ಒಪ್ಪದಿದ್ದರೆ ಇರಾನ್ ನಾಗರಿಕತೆಯ ಸರ್ವನಾಶವಾಗಲಿದೆ ಎಂದು ಟ್ರಂಪ್ ಎಚ್ಚರಿಕೆ ನೀಡಿದ್ದರು. ಇದಕ್ಕೆ ಪ್ರತಿಯಾಗಿ ಇರಾನ್, ಅಮೆರಿಕದ ಬೆದರಿಕೆಗೆ ತಾನು ಜಗ್ಗುವುದಿಲ್ಲ ಎಂದಿತ್ತು. ಇರಾನ್ ಸೇನೆಯ ಸಮನ್ವಯದೊಂದಿಗೆ, ಹಾರ್ಮುಜ್ ಜಲಸಂಧಿಯ ಮೂಲಕ ಹಡಗುಗಳಿಗೆ ಎರಡು ವಾರಗಳ ಕಾಲ ಅವಕಾಶ ನೀಡಲು ಇರಾನ್ ಒಪ್ಪಿಕೊಂಡಿತು. ಇಸ್ರೇಲ್ ಏನು ಹೇಳಿದೆ? ಟ್ರಂಪ್ ಘೋಷಣೆ ಮಾಡಿದ ಸ್ವಲ್ಪ ಸಮಯದ ನಂತರ ಇಸ್ರೇಲ್ನಲ್ಲಿ ಸೈರನ್ಗಳು ಮೊಳಗಿದ್ದು, ಇಸ್ರೇಲ್ ರಕ್ಷಣಾ ಪಡೆಗಳು ಇರಾನ್ನಿಂದ ಹಾರಿಸಲಾದ ಕ್ಷಿಪಣಿಗಳನ್ನು ತಡೆಹಿಡಿಯುತ್ತಿವೆ ಎಂದು ತಿಳಿಸಿವೆ. ಮಂಗಳವಾರ ತಡರಾತ್ರಿ ಜೆರುಸಲೇಮ್ನಲ್ಲಿಯೂ ಜೋರಾದ ಶಬ್ದಗಳು ಕೇಳಿಬಂದವು. ಟ್ರಂಪ್ ಕದನ ವಿರಾಮ ಘೋಷಿಸಿದ ಕೆಲವು ಗಂಟೆಗಳ ನಂತರ, ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು, ಇರಾನ್ ವಿರುದ್ಧದ ದಾಳಿಗಳನ್ನು ಎರಡು ವಾರಗಳ ಕಾಲ ಸ್ಥಗಿತಗೊಳಿಸುವ ಅಧ್ಯಕ್ಷ ಟ್ರಂಪ್ ಅವರ ನಿರ್ಧಾರವನ್ನು ಇಸ್ರೇಲ್ ಬೆಂಬಲಿಸುತ್ತದೆ, ಇರಾನ್ ತಕ್ಷಣವೇ ಜಲಸಂಧಿಗಳನ್ನು ತೆರೆಯುತ್ತದೆ ಮತ್ತು ಅಮೆರಿಕ, ಇಸ್ರೇಲ್ ಹಾಗೂ ಈ ಪ್ರದೇಶದ ದೇಶಗಳ ಮೇಲಿನ ಎಲ್ಲಾ ದಾಳಿಗಳನ್ನು ನಿಲ್ಲಿಸುತ್ತದೆ ಎಂದಿದ್ದಾರೆ. ಟ್ರಂಪ್ ಅವರ ನಿರ್ಧಾರಗಳಲ್ಲಿ ನೆತನ್ಯಾಹು ಯಾವ ರೀತಿ ಭಾಗಿಯಾಗಿದ್ದಾರೆ ಎಂಬುದು ಸ್ಪಷ್ಟವಾಗಿಲ್ಲ. ಮುಂದೇನು? ಮಾತುಕತೆಗಳಿಗೆ ಮಧ್ಯಸ್ಥಿಕೆ ವಹಿಸುತ್ತಿರುವ ಪಾಕಿಸ್ತಾನವು ಎಲ್ಲಾ ವಿವಾದಗಳನ್ನು ಇತ್ಯರ್ಥಪಡಿಸಲು ನಿರ್ಣಾಯಕ ಒಪ್ಪಂದಕ್ಕಾಗಿ ಮತ್ತಷ್ಟು ಮಾತುಕತೆ ನಡೆಸಲು ಶುಕ್ರವಾರ ಇಸ್ಲಾಮಾಬಾದ್ ನಲ್ಲಿ ಸಭೆ ಸೇರಲು ನಿಯೋಗಗಳನ್ನು ಆಹ್ವಾನಿಸಿದೆ. ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಕ್ಯಾರೋಲಿನ್ ಲೀವಿಟ್ ವೈಯಕ್ತಿಕ ಮಾತುಕತೆಗಳ ಕುರಿತು ನಡೆಯುತ್ತಿರುವ ಚರ್ಚೆಗಳನ್ನು ಒಪ್ಪಿಕೊಂಡರು. ಆದರೆ ಅಧ್ಯಕ್ಷರು ಅಥವಾ ಶ್ವೇತಭವನ ಘೋಷಿಸುವವರೆಗೆ ಯಾವುದೂ ಅಂತಿಮವಾಗಿಲ್ಲ ಎಂದಿದ್ದಾರೆ.
Lingsugur | ರೈತ ಮುಖಂಡ ಅಮರಣ್ಣ ಗುಡಿಹಾಳ ನಿಧನ
ಲಿಂಗಸುಗೂರು : ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯ ಉಪಧ್ಯಾಕ್ಷರಾದ ಅಮರಣ್ಣ ಗುಡಿಹಾಳ ಇಂದು ನಿಧನರಾಗಿದ್ದಾರೆ. ರೈತ ಸಂಘದ ಸಕ್ರಿಯ ಕಾರ್ಯಕರ್ತರಾಗಿ ಸಂಘಟನೆಯಲ್ಲಿ ಗುರುತಿಸಿಕೊಂಡ ಇವರು ತಾಲೂಕು ಅಧ್ಯಕ್ಷರಾಗಿ ಹಲವಾರು ರೈತಪರ ಹೋರಾಟಗಳನ್ನು ಮಾಡಿ ರೈತರಿಗೆ ನ್ಯಾಯ ದೊರಕಿಸಿಕೊಡುವಲ್ಲಿ ಯಶಸ್ವಿಯಾಗಿದ್ದರು. ಇವರ ಕೆಲಸ ಕಾರ್ಯಗಳನ್ನು ಗಮಿಸಿ ರಾಜ್ಯ ಉಪಾಧ್ಯಕ್ಷ ಸ್ಥಾನ ಪಡೆದಿದ್ದರು. ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದ ಇವರು ಇಂದು ಸಂಜೆ ಇನಿಧನರಾಗಿದ್ದಾರೆ. 4 ಜನ ಹೆಣ್ಣು ಮಕ್ಕಳು ಹಾಗೂ 4 ಜನ ಗಂಡು ಮಕ್ಕಳು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆ ಇಂದು ಸಂಜೆ 4 ಗಂಟೆಗೆ ಅವರ ಸ್ವಗ್ರಾಮ ಗುಡಿಹಾಳದಲ್ಲಿ ನೆರವೆರಲ್ಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
Middle East Conflict- `ಎಕ್ಸ್'ನಲ್ಲಿ ಎಡವಟ್ಟು ಪೋಸ್ಟ್: ಅಪಹಾಸ್ಯಕ್ಕೀಡಾದ ಪಾಕ್ ಪ್ರಧಾನಿ ಶೆಹಬಾಜ್ ಷರೀಫ್
Pakistan PM Prime Minister X Post- ಅಮೆರಿಕ-ಇರಾನ್ ಕದನ ವಿರಾಮಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಅವರು ಸಿದ್ಧಪಡಿಸಿದ ಸಂದೇಶದ ಡ್ರಾಫ್ಟ್ ಅನ್ನು ಇದ್ದಂತೆಯೇ ಪೋಸ್ಟ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪಹಾಸ್ಯಕ್ಕೀಡಾಗಿದ್ದಾರೆ. ಮತ್ತೊಂದೆಡೆ, ಅಮೆರಿಕ ಅಧ್ಯಕ್ಷ ಟ್ರಂಪ್ ಇರಾನ್ಗೆ ಶಸ್ತ್ರಾಸ್ತ್ರ ಪೂರೈಸುವ ದೇಶಗಳ ಮೇಲೆ 50% ಸುಂಕ ವಿಧಿಸುವ ಎಚ್ಚರಿಕೆ ನೀಡಿದ್ದಾರೆ. ಇರಾನ್ ತನ್ನ ಯುರೇನಿಯಂ ಹೂತುಹಾಕಲು ಒಪ್ಪಿದ್ದು, ಕದನ ವಿರಾಮ ಜಾರಿಯಲ್ಲಿದ್ದರೂ ಶತ್ರುಗಳು ದಾಳಿ ಮಾಡಿದರೆ ತಕ್ಕ ಪ್ರತ್ಯುತ್ತರ ನೀಡುವುದಾಗಿ ಗುಡುಗಿದೆ.
Raichur | ಗೃಹರಕ್ಷಕದಳ ಸಮಾದೇಷ್ಟರ ನೇಮಕಾತಿಯಲ್ಲಿ ಅಕ್ರಮ : ಅರ್ಚನಾ ಹರಿಜನವಾಡ ಆರೋಪ
ರಾಯಚೂರು: ಜಿಲ್ಲಾ ಗೃಹರಕ್ಷಕದಳದ ನೂತನ ಜಿಲ್ಲಾ ಸಮಾದೇಷ್ಟರಾಗಿ ನೇಮಕಗೊಂಡಿರುವ ದೀಪಾ ಗೋಡೆಪಾಡ್ ಅವರ ನೇಮಕಾತಿ ನಿಯಮಬಾಹಿರವಾಗಿದ್ದು, ರಾಜಕೀಯ ಪ್ರಭಾವದಿಂದ ನಡೆದಿದೆ ಎಂದು ಗೃಹರಕ್ಷಕದಳದ ಸಿಬ್ಬಂದಿ ಅರ್ಚನಾ ಹರಿಜನವಾಡ ಆಕ್ಷೇಪಿಸಿದ್ದಾರೆ. ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎ.7ರಂದು ನಡೆದ ಈ ನೇಮಕಾತಿಯಲ್ಲಿ ಸೇವಾ ಹಿರಿತನವನ್ನು ಕಡೆಗಣಿಸಲಾಗಿದೆ. “ನಾನು ಹಿರಿಯರಾಗಿದ್ದರೂ ಕಿರಿಯರಾದ ದೀಪಾ ಗೋಡೆಪಾಡ್ ಅವರಿಗೆ ಹುದ್ದೆ ನೀಡಲಾಗಿದೆ. ಅವರಿಗೆ ಅಗತ್ಯ ಸೇವಾನುಭವವೂ ಇಲ್ಲ, ದೈಹಿಕ ಸಾಮರ್ಥ್ಯವೂ ಇಲ್ಲ” ಎಂದು ದೂರಿದರು. ಗೃಹರಕ್ಷಕದಳವು ಸಾರ್ವಜನಿಕರ ಸುರಕ್ಷತೆಯಲ್ಲಿ ಪ್ರಮುಖ ಪಾತ್ರ ವಹಿಸುವ ಸಂಸ್ಥೆಯಾಗಿದ್ದು, ಇಂತಹ ಜವಾಬ್ದಾರಿಯುತ ಹುದ್ದೆಗೆ ಅನುಭವ, ನಾಯಕತ್ವ ಹಾಗೂ ಶೈಕ್ಷಣಿಕ ಅರ್ಹತೆ ಇರುವವರನ್ನು ನೇಮಿಸಬೇಕಾಗಿತ್ತು. ಆದರೆ ಇಲಾಖೆಯ ನಿಯಮಗಳನ್ನು ಬದಿಗಿಟ್ಟು ನೇಮಕಾತಿ ನಡೆಸಿರುವುದು ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತಿರುವ ಸಿಬ್ಬಂದಿಗೆ ನಿರಾಶೆ ತಂದಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ದೈಹಿಕ ಸಾಮರ್ಥ್ಯ ಮತ್ತು ವಾಕ್ ಚಾತುರ್ಯದ ಕೊರತೆ ಇರುವವರ ನೇಮಕಾತಿಯಿಂದ ಇಲಾಖೆಯ ಕಾರ್ಯಕ್ಷಮತೆಗೆ ಧಕ್ಕೆ ಉಂಟಾಗುವ ಸಾಧ್ಯತೆ ಇದೆ ಎಂದು ಎಚ್ಚರಿಸಿದರು. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಮಧ್ಯಪ್ರವೇಶಿಸಿ, ಅರ್ಹತೆ ಆಧಾರಿತ ನೇಮಕಾತಿ ಮಾಡುವಂತೆ ಮನವಿ ಮಾಡಿದರು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಹೋರಾಟ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು. ಈ ಸಂದರ್ಭದಲ್ಲಿ ಬಿ. ಆಂಜನೇಯ, ಎಸ್. ರಾಜು, ಚಿನ್ನಬಾಬು, ರಾಮು ಉಪಸ್ಥಿತರಿದ್ದರು.
ಕಾರ್ಮಿಕರ ವೇತನ ಪಾವತಿಗೆ ಆಗ್ರಹಿಸಿ ಎ.10 ರಂದು ಸಿರವಾರದಲ್ಲಿ ಟಿಯುಸಿಐನಿಂದ ರಸ್ತೆ ತಡೆ
ಸಿರವಾರ : ತುಂಗಭದ್ರಾ ನೀರಾವರಿ ವಲಯದ ಹಂಗಾಮಿ ಕಾರ್ಮಿಕರ ಬಾಕಿ ವೇತನ ಪಾವತಿಗೆ ಆಗ್ರಹಿಸಿ ಹಾಗೂ ಭ್ರಷ್ಟ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಎ.10ರಂದು ಪಟ್ಟಣದ ದೇವದುರ್ಗ ಕ್ರಾಸ್ ಬಳಿ ಬೃಹತ್ ರಸ್ತೆ ತಡೆ ಚಳುವಳಿ ಹಮ್ಮಿಕೊಳ್ಳಲಾಗಿದೆ ಎಂದು ತುಂಗಭದ್ರಾ ನೀರಾವರಿ ವಲಯ ಹಂಗಾಮಿ ಕಾರ್ಮಿಕ ಸಂಘ (ಟಿಯುಸಿಐ) ತಿಳಿಸಿದೆ. ಪತ್ರಿಕಾ ಪ್ರಕಟಣೆ ನೀಡಿದ ಸಂಘಟನೆ, ಕಾರ್ಮಿಕರಿಗೆ ಬಾಕಿಯಾಗಿರುವ ಸುಮಾರು 1.10 ಕೋಟಿ ರೂ. ಕೂಲಿ ಹಣ ದುರುಪಯೋಗಗೊಂಡಿದೆ ಎಂದು ಆರೋಪಿಸಿದೆ. ಈ ಬಗ್ಗೆ ನ್ಯಾಯ ಕೇಳಲು ಹೋದ ಕಾರ್ಮಿಕರನ್ನು ಅವಮಾನಿಸಿದ ಪ್ರಭಾರಿ ಕಾರ್ಯಪಾಲಕ ಅಭಿಯಂತರ ವಿಜಯಲಕ್ಷ್ಮಿ ಪಾಟೀಲ್ ಹಾಗೂ ಇತರರ ವಿರುದ್ಧ ಎಫ್ಐಆರ್ ದಾಖಲಿಸಲು ಪೊಲೀಸ್ ಇಲಾಖೆ ಹಿಂದೇಟು ಹಾಕುತ್ತಿದೆ ಎಂದು ಟೀಕಿಸಿದೆ. ಜಿಲ್ಲಾಡಳಿತ ಹಾಗೂ ಸರ್ಕಾರ ಭ್ರಷ್ಟ ಅಧಿಕಾರಿಗಳ ಪರ ನಿಂತಿರುವುದನ್ನು ಸಂಘಟನೆ ಖಂಡಿಸಿದೆ. ಕಾರ್ಮಿಕರ ಬೇಡಿಕೆಗಳಲ್ಲಿ ಪ್ರಮುಖವಾಗಿ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ತಕ್ಷಣ ಎಫ್ಐಆರ್ ದಾಖಲಿಸುವುದು, 2025ರ ಸಾಲಿನ 80 ದಿನಗಳ ಬಾಕಿ ವೇತನ ಬಿಡುಗಡೆ, 2026ರ ಜನವರಿ, ಫೆಬ್ರವರಿ ಮತ್ತು ಮಾರ್ಚ್ ತಿಂಗಳ ವೇತನವನ್ನು ವಿಳಂಬವಿಲ್ಲದೆ ಪಾವತಿಸುವುದು ಸೇರಿವೆ. ಜೊತೆಗೆ ಕಾರ್ಮಿಕರ ಹಿತದೃಷ್ಟಿಯಿಂದ ಗುತ್ತಿಗೆ ಪದ್ಧತಿಯನ್ನು ಕೈಬಿಟ್ಟು ಸಹಕಾರಿ ಪದ್ಧತಿಯನ್ನು ಜಾರಿಗೆ ತರಬೇಕು ಎಂದು ಆಗ್ರಹಿಸಲಾಗಿದೆ. ಭ್ರಷ್ಟಾಚಾರಕ್ಕೆ ಬೆಂಬಲ ನೀಡುತ್ತಿರುವ ಜಿಲ್ಲಾಡಳಿತದ ಧೋರಣೆ ತಕ್ಷಣ ನಿಲ್ಲಬೇಕು ಎಂದು ಒತ್ತಾಯಿಸಿರುವ ಸಂಘಟನೆ, ನ್ಯಾಯಯುತ ಹೋರಾಟಕ್ಕೆ ತುಂಗಭದ್ರಾ ನೀರಾವರಿ ಇಲಾಖೆಯ ವಿವಿಧ ವಿಭಾಗಗಳ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದು ಕರೆ ನೀಡಿದೆ ಎಂದು ಆರ್.ಮಾನಸಯ್ಯ, ಜಿ.ಅಡವಿರಾವ್, ಅಮರೇಗೌಡ ಅವರು ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.
ಮುಟ್ಟಿನ ಸಂದರ್ಭದಲ್ಲಿ ಮಹಿಳೆಯರನ್ನು ಅಸ್ಪೃಶ್ಯರಂತೆ ಕಾಣುವುದು ಸರಿಯಲ್ಲ: ನ್ಯಾಯಮೂರ್ತಿ ಬಿ.ವಿ. ನಾಗರತ್ನ
ಹೊಸದಿಲ್ಲಿ, ಎ. 8: ಮಹಿಳೆಯರನ್ನು ಒಂದು ತಿಂಗಳಲ್ಲಿ ಮೂರು ದಿನ (ಮುಟ್ಟಿನ ಸಂದರ್ಭ)ಗಳ ವರೆಗೆ ಅಸ್ಪಶರು ಎಂದು ಪರಿಗಣಿಸುವುದು, ನಾಲ್ಕನೇ ದಿನದಿಂದ ಸ್ಪಶ್ಯರಂತೆ ಕಾಣುವುದು ಸಲ್ಲದು ಎಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಬಿ.ವಿ. ನಾಗರತ್ನ ಪ್ರತಿಪಾದಿಸಿದ್ದಾರೆ. ಧಾರ್ಮಿಕ ಸ್ಥಳಗಳಲ್ಲಿ ಮಹಿಳೆಯರ ವಿರುದ್ಧ ತಾರತಮ್ಯ ಮಾಡುವುದಕ್ಕೆ ಸಂಬಂಧಿದ ಅರ್ಜಿಗಳನ್ನು ಏಕೈಕ ಮಹಿಳಾ ನ್ಯಾಯಮೂರ್ತಿ ನಾಗರತ್ನ ಬಿ.ವಿ. ಸೇರಿದಂತೆ ಒಂಬತ್ತು ನ್ಯಾಯಮೂರ್ತಿಗಳನ್ನು ಒಳಗೊಂಡ ಸುಪ್ರೀಂ ಕೋರ್ಟ್ನ ಪೀಠ ಮಂಗಳವಾರ ವಿಚಾರಣೆ ನಡೆಸಿತು. ಈ ಅರ್ಜಿಗಳಲ್ಲಿ ಕೇರಳದ ಶಬರಿಮಲೆ ದೇವಸ್ಥಾನದ ಪ್ರಕರಣವೂ ಸೇರಿದೆ. ಈ ಅರ್ಜಿಗಳು ವಿವಿಧ ಧರ್ಮಗಳು ಅನುಸರಿಸುವ ಧಾರ್ಮಿಕ ಸ್ವಾತಂತ್ರ್ಯದ ವ್ಯಾಪ್ತಿಗೆ ಸಂಬಂಧಿಸಿದ ಪ್ರಶ್ನೆಗಳನ್ನು ಕೂಡ ಎತ್ತಿವೆ. ಈ ಪೀಠದಲ್ಲಿದ್ದ ಇತರ 8 ನ್ಯಾಯಮೂರ್ತಿಗಳೆಂದರೆ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್, ನ್ಯಾಯಮೂರ್ತಿಗಳಾದ ಎಂ.ಎಂ. ಸುಂದರೇಶ್, ಏಹ್ಸಾನುದ್ದೀನ್ ಅಮಾನುಲ್ಲಾ, ಅರವಿಂದ ಕುಮಾರ್, ಆಗಸ್ಟಿನ್ ಜಾರ್ಜ್ ಮಸೀಹ, ಪ್ರಸನ್ನ ಬಿ. ವರಾಲೆ, ಆರ್. ಮಹಾದೇವನ್ ಹಾಗೂ ಜೋಯ್ಮಲ್ಯ ಬಾಗ್ಚಿ. ಅರ್ಜಿಗಳ ವಿಚಾರಣೆ ನಡೆಸಿದ ಸಂದರ್ಭ ನ್ಯಾಯಮೂರ್ತಿ ನಾಗರತ್ನ ಅವರು, ಶಬರಿಮಲೆ ಸಂದರ್ಭದಲ್ಲಿ ವಿಧಿ 17 ಅನ್ನು ಹೇಗೆ ವಾದಿಸಬಹುದು ಎಂದು ನನಗೆ ತಿಳಿದಿಲ್ಲ. ನಾನು ಮಹಿಳೆಯಾಗಿ ಹೇಳುವುದಾದರೆ, ಪ್ರತಿ ತಿಂಗಳು ಮೂರು ದಿನ ಅಸ್ಪಶರಾಗಿ ಇರುವುದು ಹಾಗೂ ನಾಲ್ಕನೇ ದಿನ ಸ್ಪಶ್ಯರಾಗಿ ಇರುವುದು ಸಾಧ್ಯವಿಲ್ಲ ಎಂದಿದ್ದಾರೆ. ಈ ಪ್ರಕರಣದಲ್ಲಿ ವಿಧಿ 17 ಅನ್ನು ಅನ್ವಯಿಸುವ ಕುರಿತು ಅನುಮಾನ ವ್ಯಕ್ತಪಡಿಸಿದ ಅವರು, ಭಾರತದ ಜಾತಿ ಆಧಾರಿತ ಅಸ್ಪಶತೆಯ ದೀರ್ಘ ಇತಿಹಾಸದ ಹಿನ್ನೆಲೆಯಲ್ಲಿ ವಿಧಿ 17 ಅನ್ನು ಮೂಲಭೂತ ಹಕ್ಕಾಗಿ ಸೇರಿಸಲಾಗಿದೆ ಎಂದರು. 2018ರ ಶಬರಿಮಲೆ ತೀರ್ಪಿನ ಒಂದು ಅಭಿಪ್ರಾಯಕ್ಕೆ ತನ್ನ ತೀವ್ರ ಆಕ್ಷೇಪ ಇದೆ ಎಂದು ಕೇಂದ್ರ ಸರಕಾರದ ಪರವಾಗಿ ಹಾಜರಾಗಿದ್ದ ಭಾರತದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಪ್ರತಿಪಾದಿಸಿದ ಸಂದರ್ಭ ನ್ಯಾಯಮೂರ್ತಿ ನಾಗರತ್ನ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದರು.
ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ಕಾಮಗಾರಿಗಳ ತ್ವರಿತ ಅನುಷ್ಠಾನಕ್ಕೆ ಸಂಸದ ಕೋಟ ಸೂಚನೆ
ಉಡುಪಿ, ಎ.8: ಉಡುಪಿ ಜಿಲ್ಲೆಯಲ್ಲಿ ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯ ಸಮರ್ಪಕ ಬಳಿಕ ಹಾಗೂ ಕಾಮಗಾರಿಗಳನ್ನು ತ್ವರಿತವಾಗಿ ಅನುಷ್ಠಾನಗೊಳಿಸುವಂತೆ ಉಡುಪಿ ಚಿಕ್ಕಮಗಳೂರು ಕ್ಷೇತ್ರದ ಲೋಕಸಭಾ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಅಧಿಕಾರಿಗಳಿಗೆ ಸೂಚನೆಗಳನ್ನು ನೀಡಿದ್ದಾರೆ. ಮಣಿಪಾಲದಲ್ಲಿರುವ ಉಡುಪಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಇಂದು ಕರೆದ ಸಭೆಯಲ್ಲಿ ಸಂಸದ ಸ್ಥಳೀಯ ಪ್ರದೇಶಾಭಿವೃದ್ಧಿ ಕಾಮಗಾರಿಗಳ ಪ್ರಗತಿ ಪರಿಶೀಲನೆ ನಡೆಸಿದ ವೇಳೆ ಸಂಸದ ಕೋಟ ಶ್ರೀನಿವಾಸ ಪೂಜಾರಿ ಅಧಿಕಾರಿಗಳಿಗೆ ಈ ಸೂಚನೆ ನೀಡಿದರು. ಸಭೆಯಲ್ಲಿ 2024-25 ಹಾಗೂ 2025-26ನೇ ಸಾಲಿನ ಸಂಸದ ಪ್ರದೇಶಾಭಿವೃದ್ಧಿ ನಿಧಿ (ಎಂಪಿಎಲ್ಎಡಿಎಸ್) ಅಡಿಯಲ್ಲಿ ಅನುಷ್ಠಾನ ಗೊಳ್ಳುತ್ತಿರುವ ಕಾಮಗಾರಿಗಳ ಪ್ರಗತಿ ಕುರಿತು ಸಮಗ್ರವಾಗಿ ಪರಿಶೀಲನೆ ನಡೆಸಿದರು. ವಿವಿಧ ಇಲಾಖೆಗಳ ಮೂಲಕ ಕೈಗೊಳ್ಳಲಾಗಿರುವ ಕಾಮಗಾರಿ ಗಳ ಪ್ರಸ್ತುತ ಸ್ಥಿತಿ, ಬಾಕಿ ಇರುವ ಕಾಮಗಾರಿಗಳು ಹಾಗೂ ಎದುರಾಗುತ್ತಿರುವ ಅಡಚಣೆಗಳ ಬಗ್ಗೆ ಅಧಿಕಾರಿಗಳಿಂದ ವಿವರಗಳನ್ನು ಪಡೆದುಕೊಂಡರು. ಈ ಸಂದರ್ಭದಲ್ಲಿ ಸಂಸದರು ಕಾಮಗಾರಿಗಳನ್ನು ನಿಗದಿತ ಸಮಯದೊಳಗೆ ಪೂರ್ಣಗೊಳಿಸುವಂತೆ ಹಾಗೂ ಯಾವುದೇ ರೀತಿಯ ವಿಳಂಬವಾಗದಂತೆ ಸೂಕ್ತ ಕ್ರಮಕೈಗೊಳ್ಳಲು ಅಧಿಕಾರಿಗಳಿಗೆ ತಿಳಿಸಿದರು. ವಿಶೇಷವಾಗಿ ಪಂಚಾಯತ್ರಾಜ್ ಇಂಜಿನಿಯರಿಂಗ್ ವಿಭಾಗ ಹಾಗೂ ನಿರ್ಮಿತಿ ಕೇಂದ್ರದ ಅಧಿಕಾರಿಗಳಿಗೆ ಬಾಕಿ ಇರುವ ಕಾಮಗಾರಿಗಳಿಗೆ ತಕ್ಷಣವೇ ತಾಂತ್ರಿಕ ಮತ್ತು ಆಡಳಿತಾತ್ಮಕ ಪ್ರಕ್ರಿಯೆಗಳನ್ನು ಶೀಘ್ರವೇ ಪೂರ್ಣಗೊಳಿಸಿ ಅನುಷ್ಠಾನ ಮಾಡುವಂತೆ ನಿರ್ದೇಶಿಸಿದರು. ಸಭೆಯಲ್ಲಿ ಉಡುಪಿ ಜಿಲ್ಲೆಯ ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ್, ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಅರುಣ್ಕುಮಾರ್, ಪಂಚಾಯತ್ರಾಜ್ ಇಂಜಿನಿಯರಿಂಗ್ ವಿಭಾಗದ ಶ್ರೀನಾಥ್ ಹಾಗೂ ವಿವಿಧ ಅನುಷ್ಠಾನ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
Raichur | ಕನಿಷ್ಠ ವೇತನ 42,000 ರೂ. ನಿಗದಿ ಮಾಡಲಿ: ಎಐಸಿಸಿಟಿಯು ಆಗ್ರಹ
ರಾಯಚೂರು: ಕನಿಷ್ಠ ವೇತನವನ್ನು ತಕ್ಷಣ ಪರಿಷ್ಕರಿಸಿ ತಿಂಗಳಿಗೆ ಕನಿಷ್ಠ 42,000 ರೂ. ನಿಗದಿ ಮಾಡಬೇಕು ಹಾಗೂ ಕಾರ್ಮಿಕ ಸಂಹಿತೆಗಳನ್ನು ರದ್ದುಪಡಿಸಬೇಕು ಎಂದು ಒತ್ತಾಯಿಸಿ ಆಲ್ ಇಂಡಿಯಾ ಸೆಂಟ್ರಲ್ ಕೌನ್ಸಿಲ್ ಆಫ್ ಟ್ರೇಡ್ ಯೂನಿಯನ್ಸ್ (ಎಐಸಿಸಿಟಿಯು) ಜಿಲ್ಲಾ ಸಮಿತಿಯ ವತಿಯಿಂದ ನಗರದ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು. ಕಾರ್ಮಿಕರ ಹಕ್ಕುಗಳ ರಕ್ಷಣೆಗೆ ಹಲವು ವರ್ಷಗಳಿಂದ ಹೋರಾಟ ನಡೆಸುತ್ತಿರುವ ಸಂಘಟನೆಗಳು, ರಾಜ್ಯದಲ್ಲಿ ಕಾರ್ಮಿಕ ವರ್ಗದ ಹಕ್ಕುಗಳ ಸಮರ್ಪಕ ಅನುಷ್ಠಾನಕ್ಕೆ ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿವೆ. ಕೇಂದ್ರದ ಮೋದಿ ಸರ್ಕಾರವು 2025ರ ನ.21ರಿಂದ ಜಾರಿಗೆ ತಂದ ನಾಲ್ಕು ಕಾರ್ಮಿಕ ಸಂಹಿತೆಗಳು ಕಾರ್ಮಿಕರ ಮೇಲೆ ನೇರ ದಾಳಿ ಎಂದು ಪ್ರತಿಭಟನಾಕಾರರು ಆರೋಪಿಸಿದರು. ಈ ಸಂಹಿತೆಗಳು ಕಾರ್ಮಿಕರು ದಶಕಗಳ ಹೋರಾಟದಿಂದ ಪಡೆದ ಹಕ್ಕುಗಳನ್ನು ದುರ್ಬಲಗೊಳಿಸುತ್ತಿವೆ. “ವ್ಯವಹಾರ ಸುಲಭತೆ” ಹೆಸರಿನಲ್ಲಿ ಉದ್ಯೋಗದಾತರ ಅಧಿಕಾರ ಹೆಚ್ಚಿಸಿ, ಕಾರ್ಮಿಕರ ಶೋಷಣೆಗೆ ಅವಕಾಶ ಮಾಡಿಕೊಡಲಾಗುತ್ತಿದೆ ಎಂದು ಟೀಕಿಸಿದರು. ವೇತನ, ಉದ್ಯೋಗ ಭದ್ರತೆ ಮತ್ತು ಸಂಘಟನಾ ಹಕ್ಕುಗಳ ರಕ್ಷಣೆಯನ್ನು ಕುಗ್ಗಿಸುವ ಮೂಲಕ ಕಾರ್ಮಿಕರನ್ನು ಹಳೆಯ ಶೋಷಣೆಯ ವ್ಯವಸ್ಥೆಗೆ ತಳ್ಳುವ ಅಪಾಯವಿದೆ ಎಂದು ಎಚ್ಚರಿಸಿದರು. “ನೆಲವೇತನ (ಫ್ಲೋರ್ ವೇತನ)” ವ್ಯವಸ್ಥೆಯೂ ಕನಿಷ್ಠ ವೇತನದ ಹಕ್ಕಿಗೆ ಧಕ್ಕೆ ತರುವ ಸಾಧ್ಯತೆ ಇದೆ ಎಂದು ಹೇಳಿದರು. ರಾಜ್ಯ ಸರ್ಕಾರವೂ ಕನಿಷ್ಠ ವೇತನ ಪರಿಷ್ಕರಣೆಯಲ್ಲಿ ವಿಫಲವಾಗಿದೆ ಎಂದು ಆರೋಪಿಸಿದ ಪ್ರತಿಭಟನಾಕಾರರು, ಕಾನೂನು ಪ್ರಕಾರ ಐದು ವರ್ಷಕ್ಕೊಮ್ಮೆ ಪರಿಷ್ಕರಣೆ ಮಾಡಬೇಕಾದರೂ ಕೊನೆಯದಾಗಿ 2017ರಲ್ಲಿ ಮಾತ್ರ ನಡೆದಿದೆ. 2025ರಲ್ಲಿ 25,000 ರೂ. ಗೆ ಹೆಚ್ಚಿಸುವ ಪ್ರಾಥಮಿಕ ಅಧಿಸೂಚನೆ ಹೊರಬಂದಿದ್ದರೂ ಅಂತಿಮಗೊಳಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಈ ಹಿನ್ನೆಲೆ ಕಾರ್ಮಿಕರು ಕಡಿಮೆ ವೇತನದಲ್ಲೇ ಕೆಲಸ ಮಾಡಲು ಬಾಧ್ಯರಾಗಿದ್ದಾರೆ. ಗಾರ್ಮೆಂಟ್ ಮತ್ತು ಬೀಡಿ ಕ್ಷೇತ್ರದ ಮಹಿಳಾ ಕಾರ್ಮಿಕರ ಸ್ಥಿತಿ ಮತ್ತಷ್ಟು ದುರ್ಬಲವಾಗಿದೆ ಎಂದು ಹೇಳಿದರು. ಆಹಾರ, ಬಟ್ಟೆ, ವಸತಿ, ಶಿಕ್ಷಣ ಸೇರಿದಂತೆ ಮೂಲಭೂತ ಅಗತ್ಯಗಳನ್ನು ಗಮನಿಸಿದರೆ, ಗೌರವಯುತ ಜೀವನಕ್ಕಾಗಿ ತಿಂಗಳಿಗೆ ಕನಿಷ್ಠ ರೂ.42,000 ಅಗತ್ಯವಿದೆ. ಇದಕ್ಕಿಂತ ಕಡಿಮೆ ವೇತನವು ಕಾರ್ಮಿಕರನ್ನು ದಾರಿದ್ರ್ಯದತ್ತ ತಳ್ಳುತ್ತದೆ ಎಂದು ಅಭಿಪ್ರಾಯಪಟ್ಟರು. ಕನಿಷ್ಠ ವೇತನ ನೀಡದಿರುವುದು ಬಲವಂತದ ಕೆಲಸಕ್ಕೆ ಸಮಾನ ಎಂದು ಭಾರತದ ಸರ್ವೋಚ್ಚ ನ್ಯಾಯಾಲಯ ಕೂಡ ಹೇಳಿರುವುದನ್ನು ಅವರು ಉಲ್ಲೇಖಿಸಿದರು. ಸರ್ಕಾರಿ ಹಾಗೂ ಸಾರ್ವಜನಿಕ ಕ್ಷೇತ್ರಗಳಲ್ಲಿ ಗುತ್ತಿಗೆ ಕಾರ್ಮಿಕರಿಗೆ ಸಹ ಕಾನೂನುಬದ್ಧ ವೇತನ ನೀಡಲಾಗುತ್ತಿಲ್ಲ ಎಂದು ಆರೋಪಿಸಿ, ಕಾರ್ಮಿಕ ಇಲಾಖೆ ತನ್ನ ಕರ್ತವ್ಯ ನಿರ್ವಹಣೆಯಲ್ಲಿ ವಿಫಲವಾಗಿದೆ ಎಂದು ಟೀಕಿಸಿದರು. ಕಾರ್ಮಿಕ ವಿರೋಧಿ ಸಂಹಿತೆಗಳನ್ನು ತಕ್ಷಣ ರದ್ದುಪಡಿಸಿ, ಕನಿಷ್ಠ ವೇತನವನ್ನು ರೂ.42,000ಕ್ಕೆ ನಿಗದಿ ಮಾಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು. ಈ ಸಂದರ್ಭದಲ್ಲಿ ಎಐಸಿಸಿಟಿಯು ಜಿಲ್ಲಾಧ್ಯಕ್ಷರು ಅಜೀಜ್ ಜಾಗೀರ್ದಾರ್, ಮುಖಂಡರಾದ ಪ್ರಹ್ಲಾದ್ ರಾವ್, ಜಿಲಾನಿ ಯರಿಗೇರಾ, ಭೀಮಯ್ಯ, ಲಕ್ಷ್ಮಣ್, ನಿಸಾರ್ ಅಹ್ಮದ್, ಈರಣ್ಣ, ಜಗದೀಶ್, ಚಾಂದ್, ರಾಮಸ್ವಾಮಿ, ಇಮಾಮ್, ಪರಶುರಾಮ್, ಸಣ್ಣ ನರಸಪ್ಪ ಇದ್ದರು.
Kalaburagi | ವಿಶ್ವಗುರು ಬಸವಣ್ಣನವರ 893ನೇ ಜಯಂತಿ ಅದ್ದೂರಿ ಆಚರಣೆ : ಶಾಸಕ ಬಿ.ಆರ್. ಪಾಟೀಲ್
ಕಲಬುರಗಿ: ಕರ್ನಾಟಕದ ಸಾಂಸ್ಕೃತಿಕ ನಾಯಕ ಬಸವಣ್ಣನವರ 893ನೇ ಜಯಂತಿಯನ್ನು ಅದ್ದೂರಿಯಾಗಿ ಆಚರಿಸಲು ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಮೂರು ದಿನಗಳ ವಿಶೇಷ ಉಪನ್ಯಾಸ ಮಾಲಿಕೆ, ಸಾಮೂಹಿಕ ಇಷ್ಟಲಿಂಗ ಪೂಜೆ ಹಾಗೂ ಲಿಂಗದೀಕ್ಷೆ ಸೇರಿದಂತೆ ವೈವಿಧ್ಯಮಯ ಕಾರ್ಯಕ್ರಮಗಳು ನಡೆಯಲಿವೆ ಎಂದು ಉತ್ಸವ ಸಮಿತಿಯ ಅಧ್ಯಕ್ಷ ಹಾಗೂ ಆಳಂದ ಶಾಸಕ ಬಿ.ಆರ್.ಪಾಟೀಲ್ ತಿಳಿಸಿದ್ದಾರೆ. ಬುಧವಾರ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎ.16, 17 ಮತ್ತು 18ರಂದು ನಡೆಯಲಿರುವ ವಿಶೇಷ ಉಪನ್ಯಾಸ ಕಾರ್ಯಕ್ರಮಕ್ಕೆ ಶರಣಬಸವೇಶ್ವರರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ ಡಾ. ದಾಕ್ಷಾಯಿಣಿ ಎಸ್. ಅಪ್ಪ ಚಾಲನೆ ನೀಡಲಿದ್ದು, ಪ್ರಭುಶ್ರೀ ಮಾತಾಜಿ ಅಕ್ಕಮಹಾದೇವಿ, ಗದ್ದುಗೆಮಠದ ಚರಲಿಂಗ ಶ್ರೀಗಳು ಹಾಗೂ ಗುರುಮಿಠಕಲ್ ಶಾಂತವೀರ ಶಿವಾಚಾರ್ಯರು ಪ್ರತ್ಯೇಕ ದಿನಗಳಲ್ಲಿ ಉಪನ್ಯಾಸ ಕೊಡಲಿದ್ದಾರೆ, ಇದೇ ವೇಳೆಯಲ್ಲಿ ಹಲವು ಮಠಾಧೀಶರು, ಗಣ್ಯರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು. ಎ.19ರಂದು ಬೆಳಿಗ್ಗೆ 6.30ಕ್ಕೆ ಶರಣಬಸವೇಶ್ವರರ ಸಂಸ್ಥಾನದ ಅಖಿಲ ಭಾರತ ಶಿವಾನುಭವ ಮಂಟಪದಲ್ಲಿ ಸಾಮೂಹಿಕ ಇಷ್ಟಲಿಂಗ ಪೂಜೆ ಹಾಗೂ ಲಿಂಗದೀಕ್ಷೆ ನಡೆಯಲಿದೆ. ಇದೇ ದಿನ ಸಂಜೆ 5 ಗಂಟೆಗೆ ಜಾತ್ರಾ ಮೈದಾನದಲ್ಲಿ ಬಸವಾಭಿಮಾನಿಗಳ ಬೃಹತ್ ಬಹಿರಂಗ ಸಭೆ ಜರುಗಲಿದೆ. ಈ ಸಭೆಯಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ಹಾಗೂ ಸಚಿವ ಈಶ್ವರ ಖಂಡ್ರೆ ಸೇರಿದಂತೆ ಅನೇಕ ಗಣ್ಯರು ಭಾಗವಹಿಸುವರು ಎಂದರು. ಎ.20ರಂದು ಬಸವೇಶ್ವರರ ಜಯಂತಿ ಅಂಗವಾಗಿ ಬೆಳಿಗ್ಗೆ ಷಟಸ್ಥಲ ಧ್ವಜಾರೋಹಣ, ಉಪನ್ಯಾಸ, ವಚನ ಸಂಗೀತ, ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ರಕ್ತದಾನ ಶಿಬಿರ ಆಯೋಜಿಸಲಾಗಿದೆ. ಸಂಜೆ 4 ಗಂಟೆಗೆ ನಗರೇಶ್ವರ ಶಾಲೆಯಿಂದ ಜಗತ್ ವೃತ್ತದವರೆಗೆ ಬಸವಣ್ಣನವರ ಹಾಗೂ ಕಾಯಕ ಶರಣರ ಭಾವಚಿತ್ರಗಳೊಂದಿಗೆ ಭವ್ಯ ಸಾಂಸ್ಕೃತಿಕ ಮೆರವಣಿಗೆ ನಡೆಯಲಿದೆ. ಇದರ ಜೊತೆಗೆ ಬೈಕ್ ರ್ಯಾಲಿಯೂ ವಿಶೇಷ ಆಕರ್ಷಣೆಯಾಗಲಿದೆ ಎಂದರು. ಉತ್ಸವ ಸಮಿತಿಯ ಕಾರ್ಯಾಧ್ಯಕ್ಷ, ವಿಧಾನ ಪರಿಷತ್ ಸದಸ್ಯ ಬಿಜಿ ಪಾಟೀಲ್ ಮಾತನಾಡಿ, ಎ.10ರಿಂದ ಜಿಲ್ಲಾದ್ಯಂತ ಪ್ರತಿದಿನ ಎರಡು ತಾಲೂಕುಗಳಂತೆ ಭೇಟಿ ನೀಡಿ ಸಭೆಗಳನ್ನು ನಡೆಸಲಾಗುತ್ತದೆ. ಈಗಾಗಲೇ ಮೂರು ಹಂತದ ಸಭೆಗಳು ಯಶಸ್ವಿಯಾಗಿ ಪೂರ್ಣಗೊಂಡಿವೆ. ಈ ಬಾರಿ ಯಾರಿಂದಲೂ ಹಣ ಸಂಗ್ರಹ ಮಾಡದೇ, ಅರ್ಥಪೂರ್ಣವಾಗಿ ಜಯಂತಿ ಆಚರಿಸಲಾಗುತ್ತಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಸಮಿತಿಯ ಸದಸ್ಯರಾದ ಶಾಸಕ ಅಲ್ಲಂಪ್ರಭು ಪಾಟೀಲ್, ಅಮರನಾಥ ಪಾಟೀಲ್, ದೊಡ್ಡಪ್ಪಗೌಡ ಪಾಟೀಲ್ ನರಿಬೋಳ, ಡಾ. ಭೀಮಾಶಂಕರ ಬಿಲಗುಂದಿ, ಅಶೋಕ್ ಘೂಳಿ, ಸೋಮಶೇಖರ ಹಿರೇಮಠ, ಶಿವಾನಂದ ಧ್ಯಾಮಗೋಳ, ರುದ್ರಮುನಿ ಹಿರೇಮಠ, ಆರ್.ಕೆ.ಹುಡುಗಿ,ಆರ್. ಜಿ. ಶೆಟಗಾರ್, ಭೀಮಾಶಂಕರ ಮೀಟೆಕರ್, ಚನ್ನವೀರ ಡಿಗ್ಗಾವಿ, ರಾಜಶೇಖರ್ ಸಿರಿ, ಶರಣಬಸಪ್ಪಾ ಭೂಸನೂರ, ರಾಜಶೇಖರ ಮಂಕಂಚಿ, ರಮೇಶ್ ಮರಗೋಳ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.
Sedam | ದೈಹಿಕ, ಮಾನಸಿಕ ಸದೃಢತೆಗಾಗಿ ಕ್ರೀಡೆಗಳಲ್ಲಿ ತೊಡಗಿ : ಪಿಎಸ್ಐ ಉಪೇಂದ್ರ
ಸೇಡಂ: ಯುವಕರು ದೈಹಿಕ ಮತ್ತು ಮಾನಸಿಕ ಸದೃಢತೆಗಾಗಿ ಕ್ರೀಡೆಗಳಲ್ಲಿ ಹೆಚ್ಚು ತೊಡಗಿಸಿಕೊಳ್ಳಬೇಕು. ಸೋಲು-ಗೆಲುವನ್ನು ಸಮಾನವಾಗಿ ಸ್ವೀಕರಿಸಿ, ಶಿಸ್ತಿನಿಂದ ಆಟವಾಡುವುದೇ ನಿಜವಾದ ಕ್ರೀಡಾ ಸ್ಫೂರ್ತಿಯಾಗಿದೆ ಎಂದು ಸೇಡಂ ಠಾಣೆಯ ಪಿಎಸ್ಐ ಉಪೇಂದ್ರ ಕುಮಾರ್ ಅಭಿಪ್ರಾಯಪಟ್ಟರು. ತಾಲೂಕಿನ ಬಿಬ್ಬಳ್ಳಿ ಗ್ರಾಮದ ಆದರ್ಶ ವಿದ್ಯಾಲಯ ಶಾಲಾ ಮೈದಾನದಲ್ಲಿ ಆಯೋಜಿಸಲಾದ 'ಬಿಪಿಎಲ್ ಕ್ರಿಕೆಟ್ ಟೂರ್ನಮೆಂಟ್ ಸೀಸನ್-1' ರ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಗ್ರಾಮೀಣ ಭಾಗದಲ್ಲಿ ಪ್ರತಿಭೆಗಳಿಗೆ ಕೊರತೆಯಿಲ್ಲ, ಆದರೆ ಸರಿಯಾದ ವೇದಿಕೆಯ ಅವಶ್ಯಕತೆಯಿದೆ. ಬಿಪಿಎಲ್ನಂತಹ ಟೂರ್ನಮೆಂಟ್ಗಳು ಸ್ಥಳೀಯ ಯುವಕರಿಗೆ ತಮ್ಮ ಕೌಶಲ್ಯ ಪ್ರದರ್ಶಿಸಲು ಉತ್ತಮ ಅವಕಾಶ ನೀಡುತ್ತವೆ. ಇಲ್ಲಿಂದ ಉತ್ತಮ ಆಟಗಾರರು ಹೊರಹೊಮ್ಮಲಿ ಎಂದು ಆಶಿಸಿದರು. ಈ ಕ್ರೀಡಾಕೂಟವನ್ನು ವ್ಯವಸ್ಥಿತವಾಗಿ ಆಯೋಜಿಸುವಲ್ಲಿ ಸೋಮಶೇಖರ್ ಬಿಬ್ಬಳ್ಳಿ, ಬಸವರಾಜ ಬಿಬ್ಬಳ್ಳಿ ಹಾಗೂ ಜಗದೀಶ ಪಾಟೀಲ್ ಬಿಬ್ಬಳ್ಳಿ ಶ್ರಮವಹಿಸಿರುವುದು ಶ್ಲಾಘನೀಯ ಎಂದರು. ವಿಜಯಕುಮಾರ್ ಶರ್ಮಾ, ಸುಭಾಷ್ ನಾಟಿಕರ, ಜಗದೀಶ್ ಕುಕ್ಕುಂದ, ದೇವು ನಾಟಿಕರ, ತಿಪ್ಪಣ್ಣ ಯಡಗಾ, ನಾಗರಾಜ್ ವೇದಿಕೆಯಲ್ಲಿದ್ದರು.
ಇರಾನ್ ಜೊತೆಗಿನ ಎರಡು ವಾರಗಳ ಕದನ ವಿರಾಮ ಘೋಷಣೆಯಾದ ಬೆನ್ನಲ್ಲೇ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಅಂತರರಾಷ್ಟ್ರೀಯ ಮಟ್ಟದಲ್ಲಿ ಅತ್ಯಂತ ಕಠಿಣ ವ್ಯಾಪಾರ ನೀತಿಯನ್ನು ಪ್ರಕಟಿಸಿದ್ದಾರೆ. ಇರಾನ್ಗೆ ಮಿಲಿಟರಿ ಶಸ್ತ್ರಾಸ್ತ್ರಗಳನ್ನು ಪೂರೈಸುವ ಯಾವುದೇ ದೇಶದ ಮೇಲೆ ಅಮೆರಿಕಕ್ಕೆ ರಫ್ತು ಮಾಡುವ ಎಲ್ಲಾ ಸರಕುಗಳ ಮೇಲೆ ತಕ್ಷಣದಿಂದ ಜಾರಿಗೆ ಬರುವಂತೆ ಶೇ 50ರ ಸುಂಕ (Tariff) ವಿಧಿಸಲಾಗುವುದು
Kalaburagi | ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ : ಸಾಧಕಿಯರಿಗೆ ಸನ್ಮಾನ
ಕಲಬುರಗಿ: ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಜಿಲ್ಲಾ ಶಾಖೆ ಹಾಗೂ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು, ಜೇವರ್ಗಿ ಕಾಲೋನಿ ಇವರ ಸಂಯುಕ್ತ ಆಶ್ರಯದಲ್ಲಿ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮಹಿಳೆಯರನ್ನು ಸನ್ಮಾನ ಸಮಾರಂಭವನ್ನು ಹಮ್ಮಿಕೊಳ್ಳಲಾಯಿತು. ಸಾಧಕಿಯರಾದ ಸುಷ್ಮಾವತಿ ಎಸ್.ಪೂಜಾರಿ, ಡಾ.ಪ್ರೇಮಾ ಅಪಚಂದ, ಆಯಿಷಾ ಪಟೇಲ್, ಡಾ.ನಸೀನ್ ಖತಿಜಾ, ಡಾ.ಜ್ಯೋತಿ ಬಳಗಾರ, ಡಾ.ಭಾಗೀರತಿ ಗುಡ್ಡವಾಡಿ ಅವರನ್ನು ಸನ್ಮಾನಿಸಲಾಯಿತು. ಜಿಲ್ಲಾಧಿಕಾರಿಗಳು ಹಾಗೂ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಅಧ್ಯಕ್ಷರಾದ ಬಿ. ಫೌಝಿಯಾ ತರನ್ನುಮ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ. ಪ್ರಕಾಶ ಮೋರಗೆ ವಹಿಸಿದ್ದರು. ಅರುಣಕುಮಾರ ಲೋಯಾ, ಡಾ. ಶಾಂತಾ ಅಷ್ಟಗಿ, ಭಾಗ್ಯಲಕ್ಷ್ಮೀ ಎಂ., ಗುoಡಣ್ಣ ಪದ್ಮಾಜಿ, ರವೀಂದ್ರ ಶಾಬಾದಿ, ಡಾ.ಸಂತೋಷ ಹುಂಪಿ, ಡಾ. ಜ್ಯೋತಿ ರೆಡ್ಡಿ, ಡಾ. ಪದ್ಮರಾಜ ರಾಸಣಗಿ, ಡಾ. ಮಿನಾಕ್ಷಿ ವಿಜಯಕುಮಾರ, ನಯನಾ ಸೇಡಿಯಾ, ಡಾ. ಜ್ಯೋತಿ ಕೆ.ಎಸ್., ಡಾ. ರೂಪಾಲಿ ರಾಠೋಡ ಹಾಗೂ ಡಾ. ಪದ್ಮಾವತಿ ಧನ್ನಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
Afzalpur | ನೈತಿಕತೆ ಇದ್ದರೆ ತಕ್ಷಣ ರಾಜೀನಾಮೆ ನೀಡಿ: ಅರುಣಕುಮಾರ ಪಾಟೀಲ್ ವಿರುದ್ಧ ಜಮೀಲ್ ಗೌಂಡಿ ವಾಗ್ದಾಳಿ
ಅಫಜಲಪುರ: ಲೋಕಸಭೆ ಚುನಾವಣೆಯಲ್ಲಿ ನೀಡಿದ ಭರವಸೆ ಈಡೇರಿಸದಿದ್ದರೂ ಕೆಕೆಆರ್ ಟಿಸಿ ನಿಗಮದ ಅಧ್ಯಕ್ಷ ಸ್ಥಾನದಲ್ಲೇ ಮುಂದುವರಿಯುತ್ತಿರುವ ಅರುಣಕುಮಾರ ಪಾಟೀಲ್ ಅವರು ನೈತಿಕತೆ ಇದ್ದರೆ ತಕ್ಷಣ ರಾಜೀನಾಮೆ ನೀಡಬೇಕು ಎಂದು ಕಾಂಗ್ರೆಸ್ ಮುಖಂಡ ಜಮೀಲ್ ಗೌಂಡಿ ಆಗ್ರಹಿಸಿದರು. ಪಟ್ಟಣದ ಎಸ್.ಕೆ.ಜಿ ಲಾಡ್ಜ್ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಫಜಲಪುರ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ 50 ಸಾವಿರ ಮತಗಳ ಲೀಡ್ ಕೊಡುತ್ತೇವೆ, ಇಲ್ಲವಾದರೆ ರಾಜಕೀಯ ನಿವೃತ್ತಿ ಹೊಂದುತ್ತೇನೆ ಎಂದು ಅರುಣಕುಮಾರ ಪಾಟೀಲ್ ಹೇಳಿದ್ದರು. ಆದರೆ ಫಲಿತಾಂಶದಲ್ಲಿ ಬಿಜೆಪಿ ಪಕ್ಷಕ್ಕೆ ಸುಮಾರು 20 ಸಾವಿರ ಮತಗಳ ಮುನ್ನಡೆ ಲಭಿಸಿದರೂ ಅವರು ತಮ್ಮ ಸ್ಥಾನದಲ್ಲೇ ಮುಂದುವರಿಯುತ್ತಿದ್ದಾರೆ ಎಂದು ಟೀಕಿಸಿದರು. ಕಾಂಗ್ರೆಸ್ ಪಕ್ಷಕ್ಕಾಗಿ ದುಡಿದ ಕಾರ್ಯಕರ್ತರಿಗೆ ಅವಕಾಶ ನೀಡುವುದನ್ನು ಬಿಟ್ಟು, ವರಿಷ್ಠರ ಒಲವು ಪಡೆದು ನಿಗಮದ ಅಧ್ಯಕ್ಷ ಸ್ಥಾನ ಪಡೆದಿದ್ದಾರೆ ಎಂದು ಆರೋಪಿಸಿದರು. ಲೋಕಸಭೆ ಚುನಾವಣೆಯಲ್ಲಿ ಮಾಜಿ ಸಚಿವ ಮಾಲಿಕಯ್ಯ ಗುತ್ತೇದಾರ್ ಕಾಂಗ್ರೆಸ್ ಸೇರ್ಪಡೆಯಿಂದ ಬಿಜೆಪಿ ಲೀಡ್ ಕಡಿಮೆಯಾಗಿ, ಅಭ್ಯರ್ಥಿ ರಾಧಾಕೃಷ್ಣ ದೊಡ್ಮನಿ ಗೆಲುವಿಗೆ ಸಾಧ್ಯವಾಯಿತು ಎಂದರು. ಇನ್ನು ಶಾಸಕ ಎಂ.ವೈ. ಪಾಟೀಲ್ ಹಾಗೂ ಅವರ ಪುತ್ರ ಅರುಣಕುಮಾರ ಪಾಟೀಲ್ ಹಿಂದುಳಿದ ವರ್ಗಗಳಿಗೆ ಅನ್ಯಾಯ ಮಾಡುತ್ತಿದ್ದಾರೆ ಎಂದು ಆರೋಪಿಸಿದ ಅವರು, ವಿಧಾನಸಭೆ ಚುನಾವಣೆಯಲ್ಲಿ ಜೆ.ಎಂ. ಕೊರಬು ಅವರ ಬೆಂಬಲದಿಂದಲೇ ಎಂ.ವೈ. ಪಾಟೀಲ್ ಶಾಸಕರಾಗಿದ್ದಾರೆ. ಆದರೆ ಇದೀಗ ಅವರನ್ನು ರಾಜಕೀಯವಾಗಿ ಹಿಂಜರಿಯಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು. ಹಾಲುಮತ ಸಮುದಾಯದ ನಾಯಕರಿಗೆ ಅವಮಾನವಾಗುವ ರೀತಿಯಲ್ಲಿ ನಡೆದುಕೊಂಡಿದ್ದಾರೆ. ಇದಕ್ಕೆ ಮುಂದಿನ ದಿನಗಳಲ್ಲಿ ಸಮುದಾಯ ತಕ್ಕ ಉತ್ತರ ನೀಡಲಿದೆ ಎಂದು ಎಚ್ಚರಿಕೆ ನೀಡಿದರು. ಮುಸ್ಲಿಂ ಸಮುದಾಯದ ಹಿರಿಯ ಮುಖಂಡ ಮಕ್ಬೂಲ್ ಪಟೇಲ್ ಅವರು ಹಿಂದುಳಿದ, ದಲಿತ ಹಾಗೂ ಅಲ್ಪಸಂಖ್ಯಾತರಿಗೆ ಅವಕಾಶ ಕಲ್ಪಿಸುವಂತೆ ಮನವಿ ಮಾಡಿದರೆ, ಅದನ್ನು ವಿರೋಧಿಸುವುದು ಸರಿಯಲ್ಲ ಎಂದು ಹೇಳಿದರು. ಶಾಸಕರಿಂದ ಕಾಮಗಾರಿಗಳನ್ನು ಪಡೆದವರು ಅವರನ್ನು ಮೆಚ್ಚಿಸಲು ಇಂತಹ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಆರೋಪಿಸಿದರು. ಈ ಸಂದರ್ಭದಲ್ಲಿ ವಿಜಯಕುಮಾರ ಪಾಟೀಲ್, ಲತೀಫ್ ಪಟೇಲ್, ನಿಜಾಮೋದ್ದಿನ್ ಜಮಾದಾರ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಕೋಲ್ಕತ್ತಾ: ವಿಶೇಷ ತೀವ್ರ ಮತಪಟ್ಟಿ ಪರಿಷ್ಕರಣೆಯ ವೇಳೆ ಮತದಾರರನ್ನು ಮತಪಟ್ಟಿಯಿಂದ ಅಳಿಸಿಹಾಕಿರುವುದಕ್ಕೆ ಬಿಜೆಪಿ ಮತ್ತು ಚುನಾವಣಾ ಆಯೋಗದ ವಿರುದ್ಧ ವಾಗ್ದಾಳಿ ನಡೆಸಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಮತದಾರರನ್ನು ಮತಪಟ್ಟಿಯಿಂದ ಅಳಿಸಿಹಾಕುವುದನ್ನು ತಡೆಯಲು ನಾವು ಮತ್ತೆ ನ್ಯಾಯಾಲಯಕ್ಕೆ ಹೋಗಲಿದ್ದೇವೆ ಎಂದು ಘೋಷಿಸಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ವಿಶೇಷ ತೀವ್ರ ಮತಪಟ್ಟಿ ಪರಿಷ್ಕರಣೆಯ ಮುಕ್ತಾಯದ ಬಳಿಕ 91 ಲಕ್ಷ ಮತದಾರರನ್ನು ಕೈಬಿಟ್ಟಿರುವ ಹಿನ್ನೆಲೆಯಲ್ಲಿ ಅವರಿಂದ ಈ ಹೇಳಿಕೆ ಹೊರಬಿದ್ದಿದೆ. “ನೀವು ಹೆಸರುಗಳನ್ನು ಅಳಿಸಿಹಾಕುವ ಮೂಲಕ ಟಿಎಂಸಿಯನ್ನು ಮಣಿಸಲು ಸಾಧ್ಯವಿಲ್ಲ. ಮತಪಟ್ಟಿಯಿಂದ ಹೆಸರುಗಳನ್ನು ತೆಗೆದುಹಾಕುವುದನ್ನು ತಡೆಯಲು ನಾವು ಮತ್ತೆ ನ್ಯಾಯಾಲಯಕ್ಕೆ ಹೋಗಲಿದ್ದೇವೆ” ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ. ಈ ವೇಳೆ ಮತಪಟ್ಟಿ ಪರಿಷ್ಕರಣೆಗೆ ಸಂಬಂಧಿಸಿದಂತೆ ತಮ್ಮ ಪ್ರಮುಖ ಪ್ರತಿಸ್ಪರ್ಧಿಯಾದ ಬಿಜೆಪಿಯ ವಿರುದ್ಧ ಅವರು ವಾಗ್ದಾಳಿ ನಡೆಸಿದರು. ವಿಶೇಷ ತೀವ್ರ ಮತಪಟ್ಟಿ ಪರಿಷ್ಕರಣೆ ಪ್ರಕ್ರಿಯೆಯಲ್ಲಿ ನ್ಯಾಯಾಲಯ ಮಧ್ಯಪ್ರವೇಶಿಸಬೇಕು ಎಂದು ಕಳೆದ ಫೆಬ್ರವರಿಯಲ್ಲಿ ಮಮತಾ ಬ್ಯಾನರ್ಜಿ ಸುಪ್ರೀಂ ಕೋರ್ಟ್ಗೆ ಮನವಿ ಮಾಡಿದ್ದರು.
ಕದನ ವಿರಾಮದ ನಡುವೆಯೇ ಮುಂದುವರಿದ ದಾಳಿ | ಇರಾನ್ ತೈಲ ಘಟಕಕ್ಕೂ ಹಾನಿ; ಯುಎಇ, ಕುವೈತ್, ಬಹ್ರೇನ್ ಮೇಲೂ ದಾಳಿ
ಟೆಹ್ರಾನ್/ವಾಷಿಂಗ್ಟನ್: ಅಮೆರಿಕ–ಇರಾನ್ ನಡುವೆ ಘೋಷಿಸಲಾದ ಎರಡು ವಾರಗಳ ಕದನ ವಿರಾಮದ ನಡುವೆಯೇ ಮಧ್ಯಪ್ರಾಚ್ಯದಲ್ಲಿ ಬುಧವಾರವೂ ದಾಳಿಗಳು ಮುಂದುವರಿದಿವೆ. ಇದರಿಂದ ಕದನ ವಿರಾಮದ ಎಷ್ಟು ದಿನ ಇರಬಹುದು ಎಂಬ ಅನುಮಾನಗಳು ವ್ಯಕ್ತವಾಗಿವೆ. ಇರಾನ್, ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ), ಕುವೈತ್, ಬಹ್ರೇನ್ ಹಾಗೂ ಲೆಬನಾನ್ ಪ್ರದೇಶಗಳಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಇರಾನ್ ನ ತೈಲ ಸಂಸ್ಕರಣಾ ಮೂಲಸೌಕರ್ಯಕ್ಕೂ ಹಾನಿಯಾಗಿರುವ ಕುರಿತು ವರದಿಯಾಗಿದೆ. ಯುಎಇ, ಕುವೈತ್ ಮತ್ತು ಬಹ್ರೇನ್ ದೇಶಗಳು ಇರಾನ್ ಮೂಲದ ಕ್ಷಿಪಣಿಗಳು ಹಾಗೂ ಡ್ರೋನ್ ದಾಳಿಗೆ ಗುರಿಯಾಗಿವೆ. ಇದರಿಂದಾಗಿ ಈ ದೇಶಗಳು ತಮ್ಮ ವಾಯು ರಕ್ಷಣಾ ವ್ಯವಸ್ಥೆಗಳನ್ನು ತಕ್ಷಣ ಸಕ್ರಿಯಗೊಳಿಸಿವೆ. ಯುದ್ಧ ವಿರಾಮಕ್ಕೆ ಒಪ್ಪಂದವಾದ ಕೆಲವೇ ಗಂಟೆಗಳಲ್ಲೇ ಈ ದಾಳಿಗಳು ನಡೆದಿದೆ ಎಂದು ತಿಳಿದು ಬಂದಿದೆ. ಪಾಕಿಸ್ತಾನದ ಮಧ್ಯಸ್ಥಿಕೆಯಲ್ಲಿ ಈ ಕದನ ವಿರಾಮ ಮಾಡಲಾಗಿದ್ದು, ಆರು ವಾರಗಳ ಸಂಘರ್ಷಕ್ಕೆ ತೆರೆ ಎಳೆಯುವ ಪ್ರಯತ್ನ ಮಾಡಲಾಗಿದೆ ಎಂದು ವರದಿಗಳು ತಿಳಿಸಿವೆ. ಯುಎಇ ರಕ್ಷಣಾ ಇಲಾಖೆಯ ಪ್ರಕಾರ, ವಾಯು ರಕ್ಷಣಾ ಪಡೆಗಳು ಇರಾನ್ ನಿಂದ ಬರುವ ಕ್ಷಿಪಣಿಗಳು ಮತ್ತು ಡ್ರೋನ್ ಗಳನ್ನು ತಡೆಯಲು ಕಾರ್ಯನಿರ್ವಹಿಸುತ್ತಿವೆ. ಬ್ಯಾಲಿಸ್ಟಿಕ್ ಹಾಗೂ ಕ್ರೂಸ್ ಕ್ಷಿಪಣಿಗಳನ್ನು ಹೊಡೆದುರುಳಿಸುವ ವೇಳೆ ಅನೇಕ ಸ್ಥಳಗಳಲ್ಲಿ ಸ್ಫೋಟಗಳು ಕೇಳಿಬಂದಿವೆ. ಇದೇ ವೇಳೆ ಲೆಬನಾನ್ ನಲ್ಲಿ ಇಸ್ರೇಲ್ ದಾಳಿಗಳು ತೀವ್ರಗೊಂಡಿವೆ.
ಸರಕಾರಿ ಕೆಲಸ ಕೊಡಿಸುವುದಾಗಿ 20 ಲಕ್ಷ ರೂ ಪಂಗನಾಮ; ನಕಲಿ ಸಂದರ್ಶನ ನಡೆಸಿದ್ದಲ್ಲದೆ, ಆದೇಶ ಪತ್ರವನ್ನೂ ನೀಡಿದ್ದರು!
Fraud Case -ನಗರಾಭಿವೃದ್ಧಿ ಇಲಾಖೆಯಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಗುತ್ತಿಗೆದಾರ ಮನುಕುಮಾರ್ ಎಂಬುವವರಿಂದ 20 ಲಕ್ಷ ರೂಪಾಯಿ ಪಡೆದು ವಂಚಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಆರೋಪಿ ಎಂ.ಸಿ. ಗಿರೀಶ್ ಮತ್ತು ತಂಡವು ವಿಧಾನಸೌಧದ ಸಮೀಪ ಇರುವ ಕಬ್ಬನ್ ಪಾರ್ಕ್ ಒಳಗಿರುವ ಚನ್ನಬಸಪ್ಪ ಅಡಿಟೋರಿಯಂನಲ್ಲಿ ನಕಲಿ ಸಂದರ್ಶನ ನಡೆಸಿ, ನಕಲಿ ನೇಮಕಾತಿ ಪತ್ರ ಸಹ ನೀಡಿದ್ದರು. ಮನುಕುಮಾರ್ ಅವರಿಗೆ ತಡವಾಗಿ ಈ ವಂಚನೆ ಅರಿವಿಗೆ ಬಂದಿದೆ. ಈ ಸಂಬಂಧ ವಿಧಾನಸೌಧ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದ್ದು, ಪೊಲೀಸರು ಆರೋಪಿಗಳ ಪತ್ತೆಗೆ ಕ್ರಮ ಕೈಗೊಂಡಿದ್ದಾರೆ.

31 C