Shivamogga | ಅಡಿಕೆ ತೋಟದಲ್ಲಿ ಸುಟ್ಟ ಸ್ಥಿತಿಯಲ್ಲಿ ಉಪನ್ಯಾಸಕನ ಮೃತದೇಹ ಪತ್ತೆ
ಶಿವಮೊಗ್ಗ: ಅಡಿಕೆ ತೋಟದಲ್ಲಿ ಖಾಸಗಿ ಕಾಲೇಜಿನ ಉಪನ್ಯಾಸಕರೊಬ್ಬರ ಮೃತದೇಹ ಸಂಪೂರ್ಣ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಹೊಳೆಹೊನ್ನೂರು ಸಮೀಪದ ಹನುಮಂತಾಪುರದಲ್ಲಿ ನಡೆದಿದೆ. ಮೃತರನ್ನು ಉಪನ್ಯಾಸಕ ಸುರೇಶ್ (58) ಎಂದು ಗುರುತಿಸಲಾಗಿದೆ. ತೋಟದಲ್ಲಿ ಸುರೇಶ್ ಅವರ ಮೃತದೇಹವು ಸಂಪೂರ್ಣ ಸುಟ್ಟು ಕರಕಲಾದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಸ್ಥಳೀಯರು ಗಮನಿಸಿದಾಗ ಮೃತದೇಹವು ಬಳಿ ಇನ್ನು ಬೆಂಕಿ ಇತ್ತು. ಕೂಡಲೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಘಟನಾ ಸ್ಥಳಕ್ಕೆ ಹೊಳೆಹೊನ್ನೂರು ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
ಪಾರದರ್ಶಕ ನೇಮಕಾತಿಗಾಗಿ ಪ್ರತಿಷ್ಠಿತ 'ಸ್ಕಾಚ್ ರಾಷ್ಟ್ರೀಯ ಪ್ರಶಸ್ತಿ' ಮುಡಿಗೇರಿಸಿಕೊಂಡ KSRTC
Karnataka KSRTC:ಕರ್ನಾಟಕದಾದ್ಯಂತ ಉತ್ತಮ ಸೇವೆ ನೀಡುತ್ತಿರುವ ಹಾಗೂ ತನ್ನ ಉಪಕ್ರಮ, ಪ್ರಯಾಣಿಕ ಸ್ನೇಹಿ ಕಾರ್ಯಕ್ರಮಗಳಿಂದ ಹಲವು ಪ್ರಶಸ್ತಿಗಳಿಗೆ ಭಾಜನವಾಗಿರುವ ರಾಜ್ಯದ ಹೆಮ್ಮೆಯ 'ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು' (KSRTC) ಇದೀಗ ಪ್ರತಿಷ್ಠಿತ 'ಸ್ಕೋಚ್ ರಾಷ್ಟ್ರೀಯ ಪ್ರಶಸ್ತಿ'ಯನ್ನು ಮುಡಿಗೇರಿಸಿಕೊಂಡಿದೆ. 'ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ಮಾನವ ರಹಿತ 'ಪಾರದರ್ಶಕ ನೇಮಕಾತಿ ಮತ್ತು ಪರಿಣಾಮಕಾರಿ ತರಬೇತಿ ಕಾರ್ಯಕ್ರಮ'ಕ್ಕೆ
Belthangady | ಬೈಕ್ ಡಿವೈಡರ್ ಗೆ ಢಿಕ್ಕಿ: ವಿದ್ಯಾರ್ಥಿ ಮೃತ್ಯು; ಇನ್ನೋರ್ವ ವಿದ್ಯಾರ್ಥಿ ಗಂಭೀರ
ಬೆಳ್ತಂಗಡಿ : ಬೈಕೊಂದು ಸ್ಕಿಡ್ ಆಗಿ ಡಿವೈಡರ್ ಗೆ ಢಿಕ್ಕಿ ಹೊಡೆದ ಪರಿಣಾಮ ಓರ್ವ ವಿದ್ಯಾರ್ಥಿ ಮೃತಪಟ್ಟು, ಇನ್ನೋರ್ವ ವಿದ್ಯಾರ್ಥಿ ಗಂಭೀರವಾಗಿ ಗಾಯಗೊಂಡ ಘಟನೆ ಉಜಿರೆ -ಧರ್ಮಸ್ಥಳ ರಾಜ್ಯ ಹೆದ್ದಾರಿಯ ಕಾಲೇಜು ರಸ್ತೆಯಲ್ಲಿ ಶನಿವಾರ ತಡರಾತ್ರಿ ನಡೆದಿದೆ. ಲಾಯಿಲ ಗ್ರಾಮದ ಅಮ್ಮನಂಗಡಿ ನಿವಾಸಿ ಚಂದ್ರಶೇಖರ್ ಎಂಬವರ ಪುತ್ರ ನಿತೇಶ್(19) ಮೃತಪಟ್ಟವರು. ಬೈಕ್ ಚಲಾಯಿಸುತ್ತಿದ್ದ ಪುತ್ತೂರು ನಿವಾಸಿ ಲಿಖಿತ್(20) ಎಂಬವರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಉಜಿರೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇವರಿಬ್ಬರು ಉಜಿರೆಯ ಖಾಸಗಿ ಕಾಲೇಜಿನ ವಿದ್ಯಾರ್ಥಿಗಳಾಗಿದ್ದಾರೆ. ಇವರಿಬ್ಬರು ಮಾ.28ರಂದು ರಾತ್ರಿ ಸುಮಾರು 12:30ಕ್ಕೆ ಕಾರ್ಯಕ್ರಮ ಮುಗಿಸಿ ಬೈಕಿನಲ್ಲಿ ವಾಪಸ್ ಬರುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ. ಬೈಕ್ ಸ್ಕಿಡ್ ಆಗಿ ಉಜಿರೆ -ಧರ್ಮಸ್ಥಳ ರಾಜ್ಯ ಹೆದ್ದಾರಿಯ ಕಾಲೇಜು ರಸ್ತೆಯಲ್ಲಿರುವ ಪಂಚಮಿ ಲಾಡ್ಜ್ ಮುಂಭಾಗದ ಡಿವೈಡರ್ ಗೆ ಢಿಕ್ಕಿ ಹೊಡೆದಿದೆ. ಅಪಘಾತ ನಡೆದ ಸ್ಥಳಕ್ಕೆ ಬೆಳ್ತಂಗಡಿ ಸಂಚಾರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಾಗಿದೆ.
ನಿರಂತರ ಯುದ್ಧದ ಬಳಲಿಕೆಯಿಂದಾಗಿ ಇಸ್ರೇಲ್ ಸೈನ್ಯದ ಮನೋಬಲ ಕುಸಿಯುತ್ತಿದೆಯೇ?
ಇಸ್ರೇಲ್ 2023ರಿಂದಲೂ ಯುದ್ಧದಲ್ಲಿಯೇ ತೊಡಗಿದೆ. ಮೊದಲು ಗಾಝಾ, ನಂತರ ಲೆಬನಾನ್, ನಂತರ ಯಮನ್. ಇರಾಕ್, ಆನಂತರ ಸಿರಿಯಾ ಮೇಲೆ ದಾಳಿ ಮಾಡಿತು. ಆಮೇಲೆ ಗಾಝಾ ಮೇಲೆ ದಾಳಿ ಮಾಡಿತು. ಈಗ ಮತ್ತೆ ಇರಾನ್ ಮೇಲೆ ದಾಳಿ ನಡೆಸುತ್ತಿದೆ. ಲೆಬನಾನ್ ಮೇಲೆಯೂ ಮುಗಿಬಿದ್ದಿದೆ. ಇಸ್ರೇಲ್ 900 ದಿನಗಳಿಗಿಂತಲೂ ಹೆಚ್ಚು ಸಮಯದಿಂದ ಯುದ್ಧ ಮಾಡುತ್ತಲೇ ಇದೆ. ಇದು ಮುಂದುವರಿದರೆ, ಸೈನ್ಯ ಕುಸಿಯಲಿದೆ ಎಂದು ಇಸ್ರೇಲ್ ಸೇನೆಯ ಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ ಇಯಾಲ್ ಝಮೀರ್ ಹೇಳಿದ್ದಾರೆ. ಸೈನಿಕರು ನಿರಂತರವಾಗಿ ಹೋರಾಡುತ್ತಿದ್ದಾರೆ. ಅಲ್ಲದೆ, ಮಾನವಶಕ್ತಿಯ ಜೊತೆಗೆ, ಶಸ್ತ್ರಾಸ್ತ್ರಗಳ ದಾಸ್ತಾನು ಕೂಡ ಕಡಿಮೆಯಾಗುತ್ತಿದೆ. ಯುದ್ಧಸಾಮಗ್ರಿಗಳ ಆರ್ಥಿಕತೆ ಬಗ್ಗೆ ಮತ್ತು ಎಚ್ಚರಿಕೆಯಿಂದ ಗುಂಡು ಹಾರಿಸುವ ಅಗತ್ಯದ ಬಗ್ಗೆ ಚರ್ಚೆ ನಡೆಯುತ್ತಿದೆ. ಒತ್ತಡದಲ್ಲಿರುವವರು ಇಸ್ರೇಲಿ ಸೈನ್ಯ ಮಾತ್ರವಲ್ಲ; ನಾಗರಿಕರ ಜೀವಗಳೂ ಅಪಾಯದಲ್ಲಿವೆ. ಯಾವಾಗ ಸೈರನ್ ಮೊಳಗುತ್ತದೆ, ಯಾವಾಗ ಬಂಕರ್ ಒಳಗೆ ಓಡಬೇಕಾಗುತ್ತದೆ ಎಂದು ಹೇಳಲು ಬರುವುದಿಲ್ಲ. ಯುದ್ಧದ ಹಾನಿಯ ಬಗ್ಗೆ ವರದಿ ಮಾಡುವುದನ್ನು ಇಸ್ರೇಲಿ ಸರಕಾರ ನಿಷೇಧಿಸಿದೆ. ಇರಾನ್ ಮೇಲೆ ದಾಳಿ ಶುರುಮಾಡಿದಾಗ ಯುಎಸ್ ಇಷ್ಟು ದೀರ್ಘ ಮತ್ತು ತೀವ್ರ ಮಿಲಿಟರಿ ಕಾರ್ಯಾಚರಣೆಯಾದೀತು ಎಂದುಕೊಂಡೇ ಇರಲಿಲ್ಲ.ಅದು ಇರಾನ್ ಅನ್ನು ಹಗುರವಾಗಿ ಪರಿಗಣಿಸಿತು. ಆದರೆ ಇಸ್ರೇಲ್ ಇರಾನ್ ಅನ್ನು ಅಮೆರಿಕಕ್ಕಿಂತ ಚೆನ್ನಾಗಿ ಅರ್ಥಮಾಡಿಕೊಂಡಿದೆ. ಅದಕ್ಕಾಗಿಯೇ ಇಸ್ರೇಲ್ ದೀರ್ಘಕಾಲದ ಸಂಘರ್ಷವನ್ನು ನಿರೀಕ್ಷಿಸಿ ಯುದ್ಧಕ್ಕಿಳಿಯಿತು. ಟ್ರಂಪ್ ಕದನ ವಿರಾಮದ ಪ್ರಸ್ತಾಪ ಮಾಡಿದ್ದರೆ, ಇಸ್ರೇಲ್ ಅದಕ್ಕಾಗಿ ಒತ್ತಾಯಿಸಿಲ್ಲ. ಬದಲಾಗಿ ಇಸ್ರೇಲ್ ತನ್ನ ದಾಳಿ ನಿಲ್ಲಿಸುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ಇಸ್ರೇಲಿ ಸೈನ್ಯ ತೀಕ್ಷ್ಣವಾದ ತರಬೇತಿ, ಹೈಟೆಕ್ ಶಸ್ತ್ರಾಸ್ತ್ರಗಳು ಮತ್ತು ಅದ್ಭುತ ಸಾಮರ್ಥ್ಯ ಹೊಂದಿದೆ. ಆದರೆ ಈ 900ಕ್ಕೂ ಹೆಚ್ಚು ದಿನಗಳಿಂದ ನಡೆಸಿರುವ ಯುದ್ಧದಲ್ಲಿ ಅದಕ್ಕೆ ವಿಶ್ರಾಂತಿ ಪಡೆಯಲು ಒಂದು ಕ್ಷಣವೂ ಸಿಗುತ್ತಿಲ್ಲ. ಟೈಮ್ಸ್ ಆಫ್ ಇಸ್ರೇಲ್ ವರದಿಯ ಪ್ರಕಾರ, ಈ ವಾರ ಇಸ್ರೇಲ್ನಲ್ಲಿ ಯುದ್ಧಕ್ಕೆ ಸಂಬಂಧಿಸಿದಂತೆ ಕ್ಯಾಬಿನೆಟ್ ಸಭೆ ನಡೆಯಿತು. ಇಸ್ರೇಲ್ನ ಮಿಲಿಟರಿ ಮುಖ್ಯಸ್ಥ ಇಯಾಲ್ ಝಮೀರ್, ಯುದ್ಧ ಹೀಗೇ ಮುಂದುವರಿದರೆ, ಸೈನ್ಯ ಒಳಗಿನಿಂದ ಕುಸಿಯಬಹುದು ಎಂದು ಸಭೆಯಲ್ಲಿ ಹೇಳಿದ್ದಾರೆ. ಒಂದೆಡೆ ಕಾರ್ಯಾಚರಣೆಗಳು ಹೆಚ್ಚುತ್ತಿದ್ದರೆ, ಮತ್ತೊಂದೆಡೆ ಸೈನಿಕರ ಕೊರತೆ ಇದೆ. ಆದ್ದರಿಂದ, ಹೊಸ ಕಾನೂನುಗಳು ತುರ್ತಾಗಿ ಅಗತ್ಯವಿದೆ. ಹೆಚ್ಚಿನ ಜನರನ್ನು ಸೈನ್ಯಕ್ಕೆ ನೇಮಿಸಿಕೊಳ್ಳಬೇಕಿದೆ. ಮೀಸಲು ಕರ್ತವ್ಯವನ್ನು ಮತ್ತಷ್ಟು ಬಲಪಡಿಸಬೇಕಾಗಿದೆ ಮತ್ತು ಮಿಲಿಟರಿ ಸೇವಾ ಸಮಯ ವಿಸ್ತರಿಸಬೇಕಿದೆ. ಈ ಕ್ರಮಗಳನ್ನು ಶೀಘ್ರದಲ್ಲೇ ತೆಗೆದುಕೊಳ್ಳದಿದ್ದರೆ, ಸೈನ್ಯ ತನ್ನ ಕಾರ್ಯಾಚರಣೆಯನ್ನು ನಡೆಸಲು ಸಾಧ್ಯವಾಗುವುದಿಲ್ಲ. ಸೇನಾ ಮುಖ್ಯಸ್ಥರ ಇಂಥ ಹೇಳಿಕೆ ಇಸ್ರೇಲ್ ಪಾಲಿಗೆ ಕಳವಳಕಾರಿ. ಈ ಹೇಳಿಕೆಯ ನಂತರ, ಇಸ್ರೇಲಿ ವಿರೋಧ ಪಕ್ಷದ ನಾಯಕರು ಸಹ ಇಸ್ರೇಲ್ ಸರಕಾರವನ್ನು ಪ್ರಶ್ನಿಸಿದ್ದಾರೆ. ಮೀಸಲು ಪಡೆಯನ್ನು ಕರೆಯುವುದು ಹೆಚ್ಚು ಕಷ್ಟಕರವಾಗುತ್ತಿದೆ ಎಂದು ಮುಖ್ಯಸ್ಥರು ವಿವರಿಸಿದರು. ಅನೇಕ ಸೈನಿಕರು ಆರು ಅಥವಾ ಏಳು ಯುದ್ಧಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಅವರು ದಣಿದಿದ್ದಾರೆ ಮತ್ತು ಮೊದಲಿನಂತೆ ಪ್ರತಿಕ್ರಿಯಿಸಲು ಸಾಧ್ಯವಾಗುತ್ತಿಲ್ಲ. ಸೈನ್ಯ ತನ್ನದೇ ಆದ ಕಾರ್ಯಗಳಿಗೆ ಸಾಕಷ್ಟು ಸೈನಿಕರನ್ನು ಸಹ ಹೊಂದಿಲ್ಲ. ಇದಲ್ಲದೆ, ಹರೇದಿ ಸಮುದಾಯದಂತಹ ಕೆಲವರಿಗೆ ನೇಮಕಾತಿಯಿಂದ ಸರಕಾರ ವಿನಾಯಿತಿ ನೀಡುವುದು ಸೈನ್ಯದ ಸಿದ್ಧತೆಗೆ ಮತ್ತಷ್ಟು ಹಾನಿ ಮಾಡುತ್ತಿದೆ. ಹರೇದಿಗಳಿಗೆ ಧಾರ್ಮಿಕ ಅಧ್ಯಯನದ ಹೆಸರಿನಲ್ಲಿ ಬಹಳ ಹಿಂದಿನಿಂದಲೂ ವಿನಾಯಿತಿ ನೀಡಲಾಗಿದೆ. ಅವರು ಕಡ್ಡಾಯ ಮಿಲಿಟರಿ ಸೇವೆ ಮಾಡಬೇಕಾಗಿಲ್ಲ. ಅವರು ತಮ್ಮ ಅಧ್ಯಯನ ಮುಂದುವರಿಸುತ್ತಾರೆ ಮತ್ತು ಸೈನ್ಯಕ್ಕೆ ಸೇರುವುದನ್ನು ತಪ್ಪಿಸುತ್ತಾರೆ. ಅವರಲ್ಲಿ ಕೆಲವರು ಸೈನ್ಯಕ್ಕೆ ಸೇರುವುದನ್ನು ತಪ್ಪಿಸಲು ಇದನ್ನು ನೆಪವಾಗಿ ಬಳಸುತ್ತಿದ್ದಾರೆ ಎಂದು ಆರೋಪಿಸಲಾಗಿದೆ. ಈ ಯುದ್ಧಕ್ಕಾಗಿ ಮುಖ್ಯಸ್ಥರು ಮತ್ತು ವಿರೋಧ ಪಕ್ಷಗಳು ನೆತನ್ಯಾಹು ಮೇಲೆ ನಿರಂತರವಾಗಿ ದಾಳಿ ನಡೆಸುತ್ತಿವೆ. ಇರಾನ್ ಮತ್ತು ಇಸ್ರೇಲ್ ನಡುವಿನ ಯುದ್ಧ ಮೂರನೇ ವಾರ ಪ್ರವೇಶಿಸಿದಾಗ, ಇರಾನ್ನ ಕ್ಲಸ್ಟರ್ ಬಾಂಬ್ಗಳ ಪರಿಣಾಮವಾಗಿ ಇಸ್ರೇಲ್ನ ವಾಯು ರಕ್ಷಣಾ ವ್ಯವಸ್ಥೆ ಒತ್ತಡಕ್ಕೆ ಒಳಗಾಯಿತು. ಇದಲ್ಲದೆ, ಇಸ್ರೇಲ್ನ ವಾಯು ರಕ್ಷಣಾ ವ್ಯವಸ್ಥೆಗಳು ಈಗ ಪ್ರತಿಬಂಧಕ ಕ್ಷಿಪಣಿಗಳ ಕೊರತೆ ಎದುರಿಸುತ್ತಿವೆ. ಕಳೆದ ವರ್ಷದ 12-ದಿನಗಳ ಯುದ್ಧದಲ್ಲಿ ಇಸ್ರೇಲ್ ಮತ್ತು ಯುಎಸ್ ಎರಡೂ ಹೆಚ್ಚಿನ ಸಂಖ್ಯೆಯ ಪ್ರತಿಬಂಧಕ ಕ್ಷಿಪಣಿಗಳನ್ನು ಬಳಸಿದವು. ಆ ಸಮಯದಲ್ಲಿ ಯುಎಸ್ ಕೂಡ ಕ್ಷಿಪಣಿಗಳ ಕೊರತೆ ಅನುಭವಿಸಿತ್ತು. ಆ ಯುದ್ಧದ ನಂತರ ಇಸ್ರೇಲ್ ತನ್ನ ದಾಸ್ತಾನನ್ನು ಸಂಪೂರ್ಣವಾಗಿ ಉತ್ತಮಪಡಿಸಿರದಿರುವ ಸಾಧ್ಯತೆಯಿದೆ. ಇದಲ್ಲದೆ, ಇರಾನ್ ಹೆಚ್ಚಾಗಿ ಕ್ಷಿಪಣಿಗಳು ಮತ್ತು ಡ್ರೋನ್ಗಳನ್ನು ಬಳಸುತ್ತಿದೆ. ಐರನ್ ಡೋಮ್ ಕೂಡ ಬಹಳ ಸಲ ದಾಳಿ ತಡೆಯಲು ಸಾಧ್ಯವಾಗಿಲ್ಲ. ಯಾವುದೇ ವ್ಯವಸ್ಥೆ ನೂರಕ್ಕೆ ನೂರು ಸುರಕ್ಷಿತವಲ್ಲ ಎಂದು ಇಸ್ರೇಲಿ ಮಿಲಿಟರಿಯೇ ಒಪ್ಪಿಕೊಳ್ಳುತ್ತದೆ. ಕನಿಷ್ಠ, ಅವರು ಶೇ. 90 ದಾಳಿಗಳನ್ನು ಪ್ರತಿಬಂಧಿಸುತ್ತಿದ್ದಾರೆ. ಕೆಲವು ಇರಾನಿ ಕ್ಷಿಪಣಿಗಳು ತಮ್ಮ ಗುರಿಗಳನ್ನು ಹೊಡೆಯುತ್ತಿವೆ. ಮತ್ತೊಂದು ಸಮಸ್ಯೆ ಎಂದರೆ ಇರಾನ್ ಕ್ಲಸ್ಟರ್ ಬಾಂಬ್ಗಳನ್ನು ಬಳಸುತ್ತಿದೆ. ಯುದ್ಧ ಪ್ರಾರಂಭವಾದಾಗಿನಿಂದ, ಇರಾನ್ ಕ್ಲಸ್ಟರ್ ಸಿಡಿತಲೆಗಳನ್ನು ಹೊಂದಿದ ಕನಿಷ್ಠ 19 ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಹಾರಿಸಿದೆ. ಈ ಸಣ್ಣ ಬಾಂಬ್ಗಳು ಯಾವಾಗಲೂ ತಕ್ಷಣವೇ ಸ್ಫೋಟಗೊಳ್ಳುವುದಿಲ್ಲ. ಈ ಶಸ್ತ್ರಾಸ್ತ್ರಗಳನ್ನು ಪ್ರತಿಬಂಧಿಸುವುದು ತುಂಬಾ ಕಷ್ಟ. ಈ ಕಾರಣಗಳಿಗಾಗಿ, ಇಸ್ರೇಲ್ನ ಪ್ರತಿಬಂಧಕಗಳ ಸಂಗ್ರಹ ಈಗ ಖಾಲಿಯಾಗುತ್ತಿದೆ. ಮತ್ತೊಂದು ಸಮಸ್ಯೆ ಎಂದರೆ, ಪ್ರತಿಯೊಂದು ಪ್ರತಿಬಂಧಕ ಕ್ಷಿಪಣಿಗೆ ಲಕ್ಷಾಂತರ ಡಾಲರ್ ವೆಚ್ಚವಾಗುತ್ತದೆ. ರಕ್ಷಣಾ ವ್ಯವಸ್ಥೆಯ ನಿರ್ಮಾಣಕ್ಕೆ ತಿಂಗಳುಗಟ್ಟಲೆ ಸಮಯ ಬೇಕು ಮತ್ತು ತಿಂಗಳುಗಟ್ಟಲೆ ತಯಾರಿಸಿದ್ದೆಲ್ಲವೂ ಒಂದೇ ದಿನದಲ್ಲಿ ಖರ್ಚಾಗಲೂಬಹುದು. ಇದೆಲ್ಲದರ ಹೊರತಾಗಿ ಈಗ ಸೈನಿಕರೇ ದಣಿದು ಕೂತಿದ್ದಾರೆ. ಈಗ ಸೈನಿಕರ ಜೀವಕ್ಕಿಂತ ಬಾಂಬ್ಗಳು ಮತ್ತು ಕ್ಷಿಪಣಿಗಳನ್ನು ಉಳಿಸುವುದಕ್ಕೆ ಆದ್ಯತೆ ನೀಡಲಾಗುತ್ತಿದೆ. ಪರಿಸ್ಥಿತಿ ಈಗ ಎಷ್ಟರ ಮಟ್ಟಿಗೆ ತಲುಪಿದೆಯೆಂದರೆ, ಸೈನಿಕರು ಯುದ್ಧದಲ್ಲಿ ಹೋರಾಡಲು ನಿರಾಕರಿಸುತ್ತಿದ್ದಾರೆ.ಮಾತ್ರವಲ್ಲದೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಈ ನಡುವೆ, ಇಸ್ರೇಲಿ ಸೈನ್ಯ ಸಾಮಾಜಿಕ ಮಾಧ್ಯಮದಲ್ಲಿ ದಕ್ಷಿಣ ಲೆಬನಾನ್ಗೆ ದೊಡ್ಡ ಘಟಕ ನಿಯೋಜಿಸಲಾಗುತ್ತಿದೆ ಎಂದು ಘೋಷಿಸಿದೆ. ಹಿಜ್ಬುಲ್ಲಾ ಕ್ಷಿಪಣಿಗಳ ಬೆದರಿಕೆ ತಗ್ಗಿಸಲು ಲೆಬನಾನ್ನಲ್ಲಿ ಬಫರ್ ವಲಯವನ್ನು ರಚಿಸಲಾಗುತ್ತಿದೆ. ವಿಶ್ವಸಂಸ್ಥೆ ವರದಿ ಪ್ರಕಾರ, ಮಾರ್ಚ್ ಆರಂಭದಿಂದ ಇಸ್ರೇಲಿ ದಾಳಿಗಳಿಂದಾಗಿ ಅಲ್ಲಿ 12 ಲಕ್ಷಕ್ಕೂ ಹೆಚ್ಚು ಜನರನ್ನು ಸ್ಥಳಾಂತರಿಸಲಾಗಿದೆ. 1,100ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. 3,000ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಲೆಬನಾನ್ನ ಲಿಟಾನಿ ನದಿಯ ದಕ್ಷಿಣಕ್ಕೆ ಇರುವ ಸಂಪೂರ್ಣ ಪ್ರದೇಶವನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳಲು ಇಸ್ರೇಲ್ ಬಯಸುತ್ತಿದೆ. ಇಸ್ರೇಲ್ ತನ್ನ ಉತ್ತರದ ಗಡಿ ಸಂಪೂರ್ಣ ಸುರಕ್ಷಿತವಾಗಿದೆ ಎಂಬ ವಿಶ್ವಾಸ ಬರುವವರೆಗೆ ಈ ಪ್ರದೇಶದಿಂದ ಸ್ಥಳಾಂತರಗೊಂಡ ಲೆಬನಾನಿಗಳು ಹಿಂದಿರುಗಲು ಅವಕಾಶವಿಲ್ಲ ಎಂದು ಇಸ್ರೇಲ್ ಸ್ಪಷ್ಟವಾಗಿ ಹೇಳಿದೆ. ಇಸ್ರೇಲ್ ಲೆಬನಾನ್ನಲ್ಲಿ ಮತ್ತೊಂದು ವಿಭಾಗವನ್ನು ನಿಯೋಜಿಸಿದ್ದು, ಸಾವಿರಾರು ಪಡೆಗಳು ಲೆಬನಾನ್ ಕಡೆಗೆ ಮುನ್ನಡೆಯುತ್ತಿವೆ. ಇಸ್ರೇಲ್ ತನ್ನ ಭೂಮಿಯನ್ನು ಆಕ್ರಮಿಸಿಕೊಳ್ಳಲು ಬಯಸುತ್ತದೆ ಎಂದು ಲೆಬನಾನ್ ಆರೋಪಿಸುತ್ತಿದೆ. ಇನ್ನೊಂದೆಡೆ ಟ್ರಂಪ್ ಇರಾನ್ ಜೊತೆಗಿನ ಮಾತುಕತೆಗೆ 10 ದಿನಗಳ ಕಾಲಾವಕಾಶ ನೀಡಿದ್ದಾರೆ. ಅಂದರೆ ಎಪ್ರಿಲ್ 6 ರ ಗಡುವು ಈಗ ಹೊಸ ಗಡುವಾಗಿದೆ. ಇರಾನ್ ಸರಕಾರದ ಕೋರಿಕೆಯ ಮೇರೆಗೆ, ದಾಳಿಗೆ ಎಪ್ರಿಲ್ 6ರವರೆಗೆ ಗಡುವು ವಿಸ್ತರಿಸಿದ್ದೇನೆ ಎಂದು ಟ್ರಂಪ್ ಹೇಳಿದ್ದಾರೆ. ಇರಾನ್ ಏಳು ದಿನಗಳನ್ನು ಕೇಳಿತ್ತು, ಆದರೆ ತಾನು 10 ದಿನಗಳನ್ನು ನೀಡಿದ್ದಾಗಿ ಟ್ರಂಪ್ ಹೇಳಿಕೊಂಡಿದ್ದಾರೆ.
ಇಸ್ರೇಲ್ ನಲ್ಲಿ ಉದ್ವಿಗ್ನತೆ ಹೆಚ್ಚಳ | ನಿಷೇಧದ ನಡುವೆಯೇ ಯುದ್ಧ ವಿರೋಧಿ ಪ್ರತಿಭಟನೆ
ಟೆಲ್ ಅವೀವ್: ಸಾರ್ವಜನಿಕ ಸಭೆಗಳ ಮೇಲೆ ರಾಷ್ಟ್ರವ್ಯಾಪಿ ನಿಷೇಧ ಹೇರಿದ್ದರೂ, ಇಸ್ರೇಲ್ ನಲ್ಲಿ ಯುದ್ಧ ವಿರೋಧಿ ಪ್ರತಿಭಟನೆಗಳು ಭುಗಿಲೆದ್ದಿದ್ದು, ದೇಶದೊಳಗಿನ ಉದ್ವಿಗ್ನತೆ ಹೆಚ್ಚುತ್ತಿದೆ. ಪ್ರಧಾನಿ ಬೆಂಜಮಿನ್ ನೆತನ್ಯಾಹು ನೇತೃತ್ವದ ಸರ್ಕಾರದ ಯುದ್ಧ ನೀತಿಗಳನ್ನು ವಿರೋಧಿಸಿ ಪ್ರತಿಭಟನಾಕಾರರು ಬೀದಿಗಿಳಿದರು. ಟೆಲ್ ಅವೀವ್ನಲ್ಲಿ ನಡೆದ ಪ್ರತಿಭಟನೆ ವೇಳೆ ಪೊಲೀಸರು ಕಠಿಣ ಕ್ರಮ ಕೈಗೊಂಡು, ಪ್ರತಿಭಟನಾಕಾರರನ್ನು ಬಲವಂತವಾಗಿ ಎಳೆದೊಯ್ದು ಬಂಧಿಸಿರುವ ಘಟನೆಗಳು ನಡೆದಿದೆ ಎಂದು aljazeera.com ವರದಿ ಮಾಡಿದೆ. ಪೊಲೀಸರ ಕ್ರಮವನ್ನು ಖಂಡಿಸಿದ ಪ್ರತಿಭಟನಾಕಾರರು, ದೇಶದಲ್ಲಿ ಪ್ರಜಾಪ್ರಭುತ್ವದ ಮೌಲ್ಯಗಳು ಅಪಾಯದಲ್ಲಿವೆ ಎಂದು ಆರೋಪಿಸಿದ್ದಾರೆ. ಸಾರ್ವಜನಿಕ ಅಭಿಪ್ರಾಯವನ್ನು ಮೌನಗೊಳಿಸಲಾಗುತ್ತಿದೆ ಎಂಬ ಆಕ್ಷೇಪವೂ ವ್ಯಕ್ತವಾಗಿದೆ. ಈ ನಡುವೆ, ಇತ್ತೀಚಿನ ಸಮೀಕ್ಷೆಗಳು ಇರಾನ್ ವಿರುದ್ಧದ ಯುದ್ಧಕ್ಕೆ ಇನ್ನೂ ಗಣನೀಯ ಜನಬೆಂಬಲವಿದೆ ಎಂದು ಸೂಚಿಸುತ್ತಿವೆ. ಇದರಿಂದ ಇಸ್ರೇಲ್ ನಲ್ಲಿನ ಆಳವಾದ ಭಿನ್ನಾಭಿಪ್ರಾಯಗಳು ಬಹಿರಂಗವಾಗಿವೆ. ಹೈಫಾದಲ್ಲಿಯೂ ಇದೇ ರೀತಿಯ ಪ್ರತಿಭಟನೆಗಳು ನಡೆದಿರುವ ವರದಿಗಳು ಲಭ್ಯವಾಗಿವೆ. ಆದರೆ ಅಧಿಕೃತವಾಗಿ ಪೊಲೀಸ್ ಕ್ರಮದ ತೀವ್ರತೆಯನ್ನು ಕಡಿಮೆ ಮಾಡಿ ತೋರಿಸುವ ಪ್ರಯತ್ನ ನಡೆದಿದೆ ಎನ್ನಲಾಗಿದೆ.
ಹಾಸನ: ಬೆಟ್ಟದ ಭೈರವೇಶ್ವರ ತಾಣದಲ್ಲಿ ಘರ್ಷಣೆ ; ಫೋಟೋ ಶೂಟ್ಗೆ ಕಡಿವಾಣ ಚಿಂತನೆ
ಸಕಲೇಶಪುರ ತಾಲೂಕಿನ ಬೆಟ್ಟದ ಬೈರವೇಶ್ವರ ದೇವಾಲಯದ ಆವರಣದಲ್ಲಿ ಪ್ರೀ ವೆಡ್ಡಿಂಗ್ ಫೋಟೊ ಶೂಟ್ಗೆ ತೆರಳಿದ್ದ ಫೋಟೊ ಗ್ರಾಫರ್ಸ್ ಮೇಲೆ ಹಲ್ಲೆ ನಡೆಸಿದ ಪ್ರಕರಣ ರಾಜ್ಯಾದ್ಯಂತ ಸುದ್ದಿ ಮಾಡುತ್ತಿದೆ. ಹೀಗಾಗಿ ಷರತ್ತು ಜತೆಗೆ ಶುಲ್ಕು ವಿಧಿಸಿ ಫೋಟೋಶೋಟ್ಗೆ ಅನುಮತಿ ಕಲ್ಪಿಸಲು ಜಿಲ್ಲಾಡಳಿತ ಚಿಂತಿನೆ ನಡೆಸಿದೆ.
ಇರಾನ್ ಮೇಲೆ ಮುಂದಿನ ವಾರ ಭೂದಾಳಿ? ಬಲಿಷ್ಠ ಸೇನೆ ಹೊಂದಿರುವ ಇರಾನ್ ಮಣಿಸಲು ಯೋಜನೆ ರೂಪಿಸುತ್ತಿರುವ ಪೆಂಟಗಾನ್
ಅಮೆರಿಕ-ಿರಾನ್ ಯುದ್ಧ ಸಂಧಾನದಿಂದ ಸರಿಹೋಗಬಹುದು ಎಂದು ಜಗತ್ತು ಆಲೋಚಿಸುತ್ತಿದ್ದರೆ, ಇನ್ನೊಂದೆಡೆ ಪರಿಸ್ಥಿತಿ ಮತ್ತಷ್ಟು ಜಟಿಲವಾಗುತ್ತಾ ಹೋಗುತ್ತಿದೆ. ಅಮೆರಿಕದ ಸೇನೆಯ ತುಕಡಿಗಳು ದಾಳಿಗೆ ಸಜ್ಜಾಗುತ್ತಿವೆ.
ಶ್ರೀಲಂಕಾದಲ್ಲಿ ತೈಲ ಸಂಕಷ್ಟ: ರಕ್ಷಣೆಗೆ ಧಾವಿಸಿದ ಭಾರತದಿಂದ 38,000 ಮೆಟ್ರಿಕ್ ಟನ್ ಇಂಧನ ಪೂರೈಕೆ
ಮಧ್ಯಪ್ರಾಚ್ಯದಲ್ಲಿನ ಅನಿಶ್ಚಿತತೆಯಿಂದಾಗಿ ಜಗತ್ತಿನಾದ್ಯಂತ ಇಂಧನ ಬಿಕ್ಕಟ್ಟು ಎದುರಾಗಿದ್ದು, ಭಾರತ ತನ್ನ ನೆರೆರಾಷ್ಟ್ರಗಳ ನೆರವಿಗೆ ಧಾವಿಸಿದ್ದು, ಶ್ರೀಲಂಕಾಗೆ 38ಸಾವಿರ ಮೆಟ್ರಿಕ್ ಟನ್ ಪೆಟ್ರೋಲಿಯಂ ಪೂರೈಕೆ ಮಾಡಿದೆ. ಬಿಕ್ಕಟ್ಟಿನ ನಡುವೆ ಭಾರತ ಹಾಗೂ ಶ್ರೀಲಂಕಾದ ನಾಯಕರ ನಡುವೆ ನಡೆದ ಸರಣಿ ಮಾತುಕತೆಗಳ ಬಳಿಕ ಈ ಬೆಳವಣಿಗೆಯಾಗಿದ್ದು, ಭಾರತದ ಸಹಾಯಕ್ಕೆ ಶ್ರೀಲಂಕಾದ ವಿರೋಧ ಪಕ್ಷದ ನಾಯಕ ಧನ್ಯವಾದ ತಿಳಿಸಿದ್ದಾರೆ.
ನ್ಯಾಯ ವಿತರಣೆಯಲ್ಲಿ ಪೊಲೀಸರು ಯಾವುದೇ ಕಾರಣಕ್ಕೂ ರಾಜಿಯಾಗಬಾರದು: ಸಿಎಂ ಸಿದ್ದರಾಮಯ್ಯ
ಮೈಸೂರು: 46ನೇ ತಂಡದ ಸಿವಿಲ್ ಪೊಲೀಸ್ ಉಪ ನಿರೀಕ್ಷಕ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥ ಸಂಚಲನ
New Railway Line: ಗದಗ-ಹೊಟಗಿ ರೈಲು ಡಬ್ಲಿಂಗ್ ಪೂರ್ಣ, ಮಹಾರಾಷ್ಟ್ರವರೆಗೂ ಸಂಚಾರ ಸುಧಾರಣೆ
Gadag-Hotgi Rail Doubling Project: ಬಹುನಿರೀಕ್ಷೆಯ ಉತ್ತರ ಕರ್ನಾಟಕದ ಗದಗ-ಹೊಟಗಿ ರೈಲು ಮಾರ್ಗ ಕಾರ್ಯ ಪೂರ್ಣಗೊಂಡಿದೆ. ಬಾಕಿ ಇದ್ದ ಎಲ್ಲ ಕೆಲಸಗಳು ಪೂರ್ಣಗೊಂಡಿದ್ದು, ಪ್ರಮುಖ ಪ್ರದೇಶದಲ್ಲಿ ನದಿ ಮೇಲೆ ಗರ್ಡರ್ ಸಹ ನಿರ್ಮಿಸಲಾಗಿದೆ. ಪ್ರಾಯೋಗಿಕ ರೈಲು ಸಂಚಾರ, ಪರಿಶೀಲನೆ ಮುಗಿದಿದ್ದು, ಮಾರ್ಗದಲ್ಲಿ ಇದೇ ಮಾರ್ಚ್ 25ರಿಂದ ಪ್ರಯಾಣಿಕರ ರೈಲು ಸೇವೆ ಆರಂಭಿಸಿದೆ. ಇದರಿಂದ ಗದಗ, ಬಾಗಲಕೋಟೆ, ವಿಜಯಪುರ
ಬಹುಭಾಷಾ ನಟಿ, ಬಿಜೆಪಿ ನಾಯಕಿ ಖುಷ್ಬೂ ಸುಂದರ್ (Khushbu Sundar) ಅವರ ಪತಿ, ಹಿರಿಯ ನಿರ್ದೇಶಕ ಸುಂದರ್ ಸಿ ಅವರು ಸಕ್ರಿಯ ರಾಜಕೀಯಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ. 2026ರ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಅವರು ಮಧುರೈ ಸೆಂಟ್ರಲ್ ಕ್ಷೇತ್ರದಿಂದ ಸ್ಪರ್ಧಿಸುವುದಾಗಿ ಘೋಷಿಸಿದ್ದಾರೆ. ಕಳೆದ ಮೂರು ದಶಕಗಳಿಂದ ತಮಿಳು ಚಿತ್ರರಂಗದಲ್ಲಿ ಯಶಸ್ವಿ ನಿರ್ದೇಶಕ ಮತ್ತು ನಟನಾಗಿ ಗುರುತಿಸಿಕೊಂಡಿರುವ ಸುಂದರ್ ಅವರಿಗೆ
Bhatkal | ನವಾಯತ್ ಕಾಲನಿಯಲ್ಲಿ ಕರಿ ಚಿರತೆ ಪ್ರತ್ಯಕ್ಷ: ವೃದ್ಧರೊಬ್ಬರ ಮೇಲೆ ದಾಳಿಗೆ ಯತ್ನ
ಭಟ್ಕಳ: ನಗರದ ನವಾಯತ್ ಕಾಲನಿಯಲ್ಲಿ ಶನಿವಾರ ರಾತ್ರಿ ಕರಿ ಚಿರತೆ ಕಾಣಿಸಿಕೊಂಡಿರುವ ಘಟನೆ ಸ್ಥಳೀಯರಲ್ಲಿ ಆತಂಕ ಸೃಷ್ಟಿಸಿದೆ. ಮರಿಯಂ ಅಲಿ ಮಸೀದಿ ಸಮೀಪ ರಾತ್ರಿ ಸುಮಾರು 8:30ರ ವೇಳೆಗೆ ವೃದ್ಧರೊಬ್ಬರ ಮೇಲೆ ಚಿರತೆ ದಾಳಿ ಮಾಡಲು ಯತ್ನಿಸಿದ್ದು, ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ವರದಿಯಾಗಿದೆ. ಸ್ಥಳೀಯರ ಮಾಹಿತಿಯಂತೆ, 60 ವರ್ಷದ ಹಸನ್ ನಮಾಝ್ ಸಲ್ಲಿಸಿ ಮರಿಯಂ ಅಲಿ ಮಸೀದಿ ಹಿಂಭಾಗದ ಮೂಲಕ ಮನೆಗೆ ಹಿಂದಿರುಗುತ್ತಿದ್ದ ವೇಳೆ ಕಪ್ಪು ಚಿರತೆ ಏಕಾಏಕಿ ಅವರ ಮೇಲೆ ಎರಗಲು ಯತ್ನಿಸಿದೆ. ಈ ವೇಳೆ ಅವರು ನೆಲಕ್ಕುರುಳಿದ್ದು, ಅಪಾಯದಿಂದ ಪಾರಾಗಿದ್ದಾರೆ. ವಿಷಯ ತಿಳಿದು ಸ್ಥಳದಲ್ಲಿ ಸ್ಥಳೀಯರು ಜಮಾಯಿಸಿದ್ದರು. ಘಟನೆಯನ್ನು ವಿವರಿಸಿದ ಹಸನ್ ರ ಪುತ್ರ ಶಾಫಿ, “ಕಳೆದ ರಾತ್ರಿ ನಾನು ಮನೆಯ ಹೊರಗಿದ್ದಾಗ ಚಿರತೆ ನನ್ನ ತಂದೆಯ ಮೇಲೆ ದಾಳಿ ಮಾಡಲು ಯತ್ನಿಸಿದ್ದನ್ನು ಕಂಡೆ. ತಕ್ಷಣ ಓಡಿ ಹೋದಾಗ ಅದು ಪೊದೆಗಳೊಳಗೆ ಓಡಿ ಹೋಯಿತು” ಎಂದು ತಿಳಿಸಿದ್ದಾರೆ. ಈ ಘಟನೆಯ ಸುಮಾರು ಒಂದು ಗಂಟೆ ಬಳಿಕ ಮತ್ತೊಂದು ಕಡೆ ಚಿರತೆ ಕಾಣಿಸಿಕೊಂಡಿರುವುದಾಗಿ ಹೇಳಲಾಗಿದೆ. ಮಸೀದಿಯಿಂದ ಸುಮಾರು 200 ಮೀಟರ್ ದೂರದ ಬಶೀರ್ ಅಹ್ಮದ್ ಎಂಬವರು ತಮ್ಮ ಮನೆಯ ಮುಂದೆ ಚಿರತೆಯನ್ನು ಕಂಡಿರುವುದಾಗಿ ತಿಳಿಸಿದ್ದಾರೆ. ಮಾಹಿತಿ ತಿಳಿಯುತ್ತಿದ್ದಂತೆ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ವ್ಯಾಪಕ ಶೋಧ ಕಾರ್ಯ ಆರಂಭಿಸಿದರು. ಸ್ಥಳೀಯರು ಅವರ ಜೊತೆ ಸೇರಿದರು. ಚಿರತೆಯನ್ನು ಕಾಡಿನತ್ತ ಓಡಿಸಲು ಪಟಾಕಿ ಸಿಡಿಸಲಾಗಿದ್ದು, ಮರಿಯಂ ಅಲಿ ಮಸೀದಿ ಹಿಂಭಾಗದಿಂದ ‘ಮ್ಯಾಂಗೋ ಫಾರ್ಮ್’ ಪ್ರದೇಶ ಹಾಗೂ ಸಮೀಪದ ಅರಣ್ಯ ಭಾಗಗಳಲ್ಲಿ ಶೋಧ ನಡೆಸಿದರು. ಆದರೆ ಚಿರತೆ ಎಲ್ಲೂ ಕಾಣಿಸಿಲ್ಲ. ಸಾಗರ ರಸ್ತೆ ಅರಣ್ಯ ಪ್ರದೇಶದಿಂದ ಕಡವಿನಕಟ್ಟೆ ಮಾರ್ಗವಾಗಿ ಚಿರತೆ ವಸತಿ ಪ್ರದೇಶಕ್ಕೆ ಬಂದಿರುವ ಸಾಧ್ಯತೆ ಇದೆ ಎಂದು ಅರಣ್ಯ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಎರಡು ದಿನಗಳ ಹಿಂದೆಯೇ ಹೆಗ್ಗಲ್ ನದಿ ಸಮೀಪ ಚಿರತೆಯನ್ನು ಕಂಡಿದ್ದಾಗಿ ಸ್ಥಳೀಯ ಯುವಕ ಅಬ್ದುಲ್ ರಹ್ಮಾನ್ ಎಂಬವರು ತಿಳಿಸಿದ್ದಾರೆ. ಗುರುವಾರ ಸಂಜೆ ಮೀನುಗಾರಿಕೆಗೆ ತೆರಳಿದ್ದ ವೇಳೆ ಚಿರತೆಯನ್ನು, ಅದರತ್ತ ಟಾರ್ಚ್ ಬೆಳಕು ಹಾಯಿಸಿದಾಗ ಗರ್ಜಿಸಿ ಓಡಿ ಹೋಯಿತೆಂದು ಅವರು ಹೇಳಿದ್ದಾರೆ. ಸ್ಥಳೀಯ ಸಮಾಜಸೇವಕ ನೌಫಿಲ್ ಖರುರಿ ಅವರ ಪ್ರಕಾರ, ಕಳೆದ ನಾಲ್ಕು–ಐದು ದಿನಗಳಿಂದ ಚಿರತೆ ಈ ಪ್ರದೇಶದಲ್ಲಿ ಸಂಚರಿಸುತ್ತಿದೆ. ಸಮೀಪದ ಅರಣ್ಯ ಪ್ರದೇಶದಿಂದ ದಾರಿ ತಪ್ಪಿ ಬಂದಿರುವ ಸಾಧ್ಯತೆ ಇದೆ. ಮರಿಯಂ ಅಲಿ ಮಸೀದಿ, ಮುಜಮ್ಮಿಲ್ ಮಸೀದಿ ಹಾಗೂ ಕಾರ್ಗದ್ದೆ ಭಾಗಗಳಲ್ಲಿ ಸಾಮಾನ್ಯವಾಗಿ ಕಾಣುತ್ತಿದ್ದ ಬೀದಿ ನಾಯಿಗಳು ಇತ್ತೀಚೆಗೆ ಕಾಣಿಸದಿರುವುದು ಕೂಡ ಕಾಡುಮೃಗದ ಉಪಸ್ಥಿತಿಯ ಸೂಚನೆ ಎಂದು ಅವರು ಹೇಳಿದ್ದಾರೆ. ಚಿರತೆ ಇನ್ನೂ ಪತ್ತೆಯಾಗದ ಹಿನ್ನೆಲೆಯಲ್ಲಿ ನಿವಾಸಿಗಳಲ್ಲಿ ಆತಂಕ ಮುಂದುವರಿದಿದೆ. ಮಕ್ಕಳನ್ನು ಶಾಲೆಗೆ ಕಳುಹಿಸುವ ಬಗ್ಗೆ ಪೋಷಕರು ಚಿಂತೆ ವ್ಯಕ್ತಪಡಿಸಿದ್ದಾರೆ.
ಇಸ್ರೇಲ್ ನಲ್ಲಿ ಬಂಧನದಲ್ಲಿದ್ದ ಮತ್ತೊಬ್ಬ ಫೆಲೆಸ್ತೀನಿನ ಕೈದಿ ಮೃತ್ಯು
ರಮಲ್ಲಾ, ಮಾ. 29: ಇಸ್ರೇಲ್ ಬಂಧನದಲ್ಲಿದ್ದ ಫೆಲೆಸ್ತೀನಿನ ಕೈದಿ ಮರ್ವಾನ್ ಫಾತಿ ಹರ್ಝುಲ್ಲಾ ಅವರು ಮೃತಪಟ್ಟಿದ್ದಾರೆ. ಜನವರಿ 8ರಂದು ಬಂಧನಕ್ಕೊಳಗಾದ ಅವರನ್ನು ಮೆಗಿದ್ದೋ ಜೈಲಿನಲ್ಲಿ ಇಡಲಾಗಿತ್ತು ಎಂದು ಫೆಲೆಸ್ತೀನಿನ ಕೈದಿಗಳು ಮತ್ತು ಮುಕ್ತ ಕೈದಿಗಳ ಕಾರ್ಯಗಳ ಪ್ರಾಧಿಕಾರ ಹಾಗೂ ಫೆಲಸ್ತೀನಿನ ಕೈದಿಗಳ ಸಮಾಜ ತಿಳಿಸಿವೆ ಎಂದು Aljazeera ವರದಿ ಮಾಡಿದೆ. ಅಕ್ಟೋಬರ್ 2024ರಲ್ಲಿ ಗಾಝಾ ಮೇಲೆ ಇಸ್ರೇಲ್ ಯುದ್ಧ ಆರಂಭಿಸಿದ ಬಳಿಕ, ಇಸ್ರೇಲಿನ ಜೈಲುಗಳು ಮತ್ತು ಬಂಧನ ಕೇಂದ್ರಗಳಲ್ಲಿ ಸಾವನ್ನಪ್ಪಿದ ಫೆಲೆಸ್ತೀನಿನ ಕೈದಿಗಳ ಸಂಖ್ಯೆ 100 ಕ್ಕೂ ಅಧಿಕವಾಗಿದೆ. ಹರ್ಝುಲ್ಲಾ ಅವರೂ ಆ ಪಟ್ಟಿಯಲ್ಲಿ ಸೇರಿದ್ದಾರೆ. ವಾಫಾ ಸುದ್ದಿ ಸಂಸ್ಥೆಯ ಪ್ರಕಾರ, ಹರ್ಝುಲ್ಲಾ ಅವರ ಪುತ್ರ ತಹ್ರೀರ್ ಹರ್ಝುಲ್ಲಾ ಅವರನ್ನೂ ‘ಆಡಳಿತಾತ್ಮಕ ಬಂಧನ’ ನೀತಿಯಡಿಯಲ್ಲಿ ಯಾವುದೇ ಆರೋಪವಿಲ್ಲದೆ ಬಂಧಿಸಲಾಗಿದೆ.
Gold: ಅಮೆರಿಕಕ್ಕೆ ವೆನೆಜುವೆಲಾದಿಂದ 1,000 ಕೆ.ಜಿ ಚಿನ್ನ ರಫ್ತು: ಬಹುಕೋಟಿ ಡಾಲರ್ ಒಪ್ಪಂದಕ್ಕೆ ಸಹಿ
ಅಂತರಾಷ್ಟ್ರೀಯ ರಾಜಕೀಯದಲ್ಲಿ ಸಂಚಲನ ಮೂಡಿಸಿರುವ ಬೆಳವಣಿಗೆಯೊಂದರಲ್ಲಿ, ವೆನೆಜುವೆಲಾದ ಸರ್ಕಾರಿ ಸ್ವಾಮ್ಯದ ಗಣಿಗಾರಿಕೆ ಸಂಸ್ಥೆಯು ಅಮೆರಿಕದ ಮಾರುಕಟ್ಟೆಗೆ 1,000 ಕೆಜಿ ಚಿನ್ನವನ್ನು ಮಾರಾಟ ಮಾಡಲು ಬಹುಕೋಟಿ ಡಾಲರ್ ಒಪ್ಪಂದಕ್ಕೆ ಸಹಿ ಹಾಕಿದೆ. ವೆನೆಜುವೆಲಾದ ಸರ್ಕಾರಿ ಸಂಸ್ಥೆ 'ಮಿನರ್ವೆನ್' (Minerven) ಪ್ರಖ್ಯಾತ ಕಮೊಡಿಟಿ ಟ್ರೇಡರ್ ಆಗಿರುವ 'ಟ್ರಾಫಿಗುರಾ' (Trafigura) ಸಂಸ್ಥೆಯೊಂದಿಗೆ ಈ ಒಪ್ಪಂದ ಮಾಡಿಕೊಂಡಿದೆ. ವರದಿಗಳ ಪ್ರಕಾರ, ಮಿನರ್ವೆನ್ ಸಂಸ್ಥೆಯು
Bengaluru | ತಾಯಿ, ಸಹೋದರಿಯನ್ನು ಕೊಲೆಗೈದು ವ್ಯಕ್ತಿ ಆತ್ಮಹತ್ಯೆಗೆ ಯತ್ನ: ಇಬ್ಬರ ಸ್ಥಿತಿ ಗಂಭೀರ
ಚೀಟಿ ವ್ಯವಹಾರದಲ್ಲಿ ನಷ್ಟ, ಸಾಲಗಾರರ ಕಾಟದಿಂದ ಬೇಸತ್ತು ಕೃತ್ಯ: ಎಸ್ಪಿ
ರೇಮಂಡ್ ನ ಮಾಜಿ ಅಧ್ಯಕ್ಷ ವಿಜಯಪತ್ ಸಿಂಘಾನಿಯಾ ನಿಧನ
ಮುಂಬೈ, ಮಾ. 29: ರೇಮಂಡ್ ಗ್ರೂಪ್ ನ ಮಾಜಿ ಅಧ್ಯಕ್ಷ ವಿಜಯಪತ್ ಸಿಂಘಾನಿಯಾ ಅವರು ಶನಿವಾರ ಸಂಜೆ ನಿಧನರಾದರು ಎಂದು ಕುಟುಂಬ ಮೂಲಗಳು ತಿಳಿಸಿವೆ. ಅವರಿಗೆ 87 ವರ್ಷ ವಯಸ್ಸಾಗಿತ್ತು. ಸಿಂಘಾನಿಯಾ ಅವರು ಮುಂಬೈನಲ್ಲಿ ಕೊನೆಯುಸಿರೆಳೆದಿದ್ದಾರೆ. ರವಿವಾರ ಅವರ ಅಂತ್ಯಕ್ರಿಯೆಗಳು ನೆರವೇರಲಿವೆ ಎಂದು ರೇಮಂಡ್ ಗ್ರೂಪ್ ವಕ್ತಾರರು ತಿಳಿಸಿದ್ದಾರೆ. ಅವರ ನಿಧನದ ವಿಚಾರವನ್ನು ಮಗ ಹಾಗೂ ರೇಮಂಡ್ ಗ್ರೂಪ್ ನ ಪ್ರಸ್ತುತ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಗೌತಮ್ ಸಿಂಘಾನಿಯಾ ಅವರು ಸಾಮಾಜಿಕ ಜಾಲತಾಣ ‘X’ನಲ್ಲಿ ಪ್ರಕಟಿಸಿದರು. ಪದ್ಮಭೂಷಣ ಪ್ರಶಸ್ತಿ ಪುರಸ್ಕೃತರಾಗಿದ್ದ ವಿಜಯಪತ್ ಸಿಂಘಾನಿಯಾ ಅವರು ಉದ್ಯಮ ಕ್ಷೇತ್ರದ ಪ್ರಮುಖ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದು, ವಿಮಾನಯಾನದಲ್ಲೂ ಅಪಾರ ಆಸಕ್ತಿ ಹೊಂದಿದ್ದರು. ಬಿಸಿ ಗಾಳಿಯ ಬಲೂನ್ ನಲ್ಲಿ ಅತಿ ಎತ್ತರಕ್ಕೆ ಏರಿದ ವಿಶ್ವ ದಾಖಲೆಯನ್ನು ಅವರು ಹೊಂದಿದ್ದರು. ವಿಜಯಪತ್ ಸಿಂಘಾನಿಯಾ ಅವರು ಸುಮಾರು ಎರಡು ದಶಕಗಳ ಕಾಲ ರೇಮಂಡ್ ಸಂಸ್ಥೆಯನ್ನು ಅಧ್ಯಕ್ಷರಾಗಿ ಮುನ್ನಡೆಸಿದ್ದು, 2000ರವರೆಗೆ ಸಂಸ್ಥೆಯ ಬೆಳವಣಿಗೆಯಲ್ಲಿ ಮಹತ್ವದ ಪಾತ್ರವಹಿಸಿದ್ದರು. ಬಳಿಕ ಕಂಪೆನಿಯ ನಿಯಂತ್ರಣವನ್ನು ತಮ್ಮ ಮಗ ಗೌತಮ್ ಸಿಂಘಾನಿಯಾ ಅವರಿಗೆ ಹಸ್ತಾಂತರಿಸಿ, ಸಂಸ್ಥೆಯಲ್ಲಿದ್ದ ತಮ್ಮ ಸಂಪೂರ್ಣ 37 ಶೇಕಡಾ ಪಾಲನ್ನು ಅವರಿಗೆ ವರ್ಗಾಯಿಸಿದ್ದರು. ವಿಜಯಪತ್ ಸಿಂಘಾನಿಯಾ ಹಾಗೂ ಅವರ ಮಗ ಗೌತಮ್ ಸಿಂಘಾನಿಯಾ ಕೆಲ ವರ್ಷಗಳ ಹಿಂದೆ ಕಾನೂನು ವಿವಾದಗಳಲ್ಲಿ ಸಿಲುಕಿದ್ದರೂ, ನಂತರ ಪರಸ್ಪರ ಮಾತುಕತೆ ಮೂಲಕ ಸಮಸ್ಯೆಗಳನ್ನು ಇತ್ಯರ್ಥಪಡಿಸಿಕೊಂಡಿದ್ದರು.
ಟ್ರಂಪ್ ವಿರುದ್ಧ ಜನಾಕ್ರೋಶ: ಇರಾನ್ ಯುದ್ಧ ವಿರೋಧಿಸಿ US-ಯುರೋಪ್ ನಲ್ಲಿ 'ನೋ ಕಿಂಗ್ಸ್' ಬೃಹತ್ ಪ್ರತಿಭಟನೆ!
ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಇರಾನ್ ಯುದ್ದ, ವಲಸೆ ವಿರೋಧಿ ನೀತಿ ಸೇರಿದಂತೆ ಹಲವು ಕಠಿಣ ನಿಯಮಗಳ ವಿರುದ್ದ ಶನಿವಾರ ಅಮೆರಿಕಾ ಸೇರಿದಂತೆ ಯುರೋಪ್ ನ ಹಲವು ಪ್ರಮುಖ ನಗರಗಳಲ್ಲಿ ನೋಕಿಂಗ್ಸ್ ಪ್ರತಿಭಟನೆ ನಡೆದಿದೆ. ಈ ಪ್ರತಿಭಟನೆಗಳಲ್ಲಿ ಲಕ್ಷಾಂತರ ಸಂಖ್ಯೆಯಲ್ಲಿ ಪ್ರತಿಭಟನಾಕಾರರು ಭಾಗಿಯಾಗಿದ್ದು, ವಲಸೆ ವಿರೋಧಿ ನೀತಿಯಿಂದಾಗಿ ಮಾರಕ ದಾಳಿಗೊಳಗಾಗಿದ್ದ ಮಿನ್ನೆಸೋಟ ಇವುಗಳ ಕೇಂದ್ರ ಬಿಂದುವಾಗಿ ಮಾರ್ಪಟ್ಟಿತ್ತು. ಈ ಕುರಿತ ವರದಿ ಇಲ್ಲಿದೆ..
ದುಬೈನ ಬುರ್ಜ್ ಖಲೀಫಾ ಎದುರು ತಾಯಿಯ ಸಂಭ್ರಮ: ಅಮ್ಮನ ಆಸೆ ಈಡೇರಿಸಿದ ಮಗಳ Video Viral
ದುಬೈ: ಪ್ರತಿಯೊಬ್ಬ ಮಕ್ಕಳಿಗೂ ತಮ್ಮ ಪೋಷಕರ ಆಸೆಗಳನ್ನು ಈಡೇರಿಸುವುದು ಒಂದು ದೊಡ್ಡ ಕನಸಾಗಿರುತ್ತದೆ. ಅದರಲ್ಲೂ ಜೀವನಪೂರ್ತಿ ಮಕ್ಕಳಿಗಾಗಿ ಕಷ್ಟಪಟ್ಟ ತಂದೆ-ತಾಯಿಯನ್ನು ವಿದೇಶ ಪ್ರವಾಸಕ್ಕೆ ಕರೆದೊಯ್ದು ಅವರ ಮುಖದಲ್ಲಿ ನಗು ನೋಡುವುದು ನಿಜಕ್ಕೂ ಅದೊಂದು ಅದ್ಭುತ ಅನುಭವ. ಇದೀಗ ಮಗಳೊಬ್ಬಳು ತನ್ನ ತಾಯಿಯನ್ನು ಮೊದಲ ಬಾರಿಗೆ ವಿಶ್ವದ ಅತಿ ಎತ್ತರದ ಕಟ್ಟಡ ದುಬೈನ 'ಬುರ್ಜ್ ಖಲೀಫಾ' ನೋಡಲು ಕರೆದೊಯ್ದಿರುವ
ಪಾಕಿಸ್ತಾನದ ಮುಖವಾಡ ಪದೇ ಪದೇ ಕಳಚಿ ಬೀಳುತ್ತಿದೆ. ಉಗ್ರರ ಸ್ವರ್ಗವಾಗಿರುವ ಪಾಕಿಸ್ತಾನ, ಅಲ್ಲಿಂದ ಜಮ್ಮುಕಾಶ್ಮೀರವನ್ನು ಟಾರ್ಗೆಟ್ ಮಾಡಿ, ದಾಳಿಗಳನ್ನು ನಡೆಸುತ್ತಿದೆ ಮೊದಲಾದ ಪ್ರಮುಖ ಅಂಶಗಳ ಅಮೆರಿಕದ ವರದಿಯಲ್ಲಿ ಬಹಿರಂಗ ವಾಗಿದೆ.
ಅಮೆರಿಕ ಯೂನಿವರ್ಸಿಟಿಗಳ ಮೇಲೆ ಪ್ರತಿದಾಳಿ ಮಾಡುವ ಎಚ್ಚರಿಕೆ ಕೊಟ್ಟ ಇರಾನ್! ಸೇನಾ ನಿಯೋಜನೆ ಹೆಚ್ಚಿಸುತ್ತಿರುವ ಯುಎಸ್!
ಅಮೆರಿಕ ಕದನ ವಿರಾಮ ಎಂದು ಹೇಳುತ್ತಿದ್ದರೂ, ಇರಾನ್ ಮೇಲೆ ನಿರಂತರ ದಾಳಿಯಾಗುತ್ತಿದ್ದು, ಇದಕ್ಕೆ ಪ್ರತಿದಾಳಿ ಮಾಡುವ ಎಚ್ಚರಿಕೆಯನ್ನು ಇರಾನ್ ಕೊಟ್ಟಿದೆ. ಇನ್ನೊಂದೆಡೆ ಮಧ್ಯಪ್ರಾಷ್ಯದಲ್ಲಿ ಅಮೆರಿಕದ ನೌಕಾಸೇನೆಯ ಪಡೆಯನ್ನು ಹೆಚ್ಚಿಸಲಾಗುತ್ತಿದೆ.
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ
ಉದ್ಯೋಗಿಗಳಿಗೆ ಕೇಂದ್ರ ಸರ್ಕಾರ ಭರ್ಜರಿ ಸಿಹಿಸುದ್ದಿ ನೀಡಿದ್ದು, ನೌಕರರ ಭವಿಷ್ಯ ನಿಧಿ ಸಂಘಟನೆ (EPFO) ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆಗೆ ಮುಂದಾಗಿದೆ. ಏಪ್ರಿಲ್ 1, 2026 ರಿಂದ ಬಹುನಿರೀಕ್ಷಿತ 'ಇಪಿಎಫ್ಒ 3.0' (EPFO 3.0) ವ್ಯವಸ್ಥೆ ಜಾರಿಗೆ ಬರಲಿದ್ದು, ಇನ್ಮುಂದೆ ಪಿಎಫ್ ಖಾತೆಯು ಬಹುತೇಕ ಬ್ಯಾಂಕ್ ಖಾತೆಯಂತೆಯೇ ಕಾರ್ಯನಿರ್ವಹಿಸಲಿದೆ. ಈ ಹೊಸ ಅಪ್ಡೇಟ್ನೊಂದಿಗೆ ಯುಪಿಐ ಮತ್ತು ಎಟಿಎಂ ಮೂಲಕ
ಐಸ್ಕ್ರೀಂ ವ್ಯಾಪಾರಿಯ ಶಿರಚ್ಛೇದ ಮಾಡಿ ತಲೆ ಮನೆಗೊಯ್ದು ಭೂಪ!
ಬಾರಾಬಂಕಿ: ಉತ್ತರ ಪ್ರದೇಶದ ಬಾರಾಬಂಕಿಯಲ್ಲಿ ಶನಿವಾರ 25 ವರ್ಷದ ಐಸ್ಕ್ರೀಂ ವ್ಯಾಪಾರಿಯ ಶಿರಚ್ಛೇದ ಮಾಡಿದ ವ್ಯಕ್ತಿಯೊಬ್ಬ, ಕತ್ತು ಸೀಳಿ ರುಂಡವನ್ನು ಬೇರ್ಪಡಿಸಿ ತಲೆಯನ್ನು ಮನೆಗೆ ಒಯ್ದು, ಏನೂ ಆಗಿಲ್ಲ ಎಂಬಂತೆ ಅಡುಗೆ ಮಾಡಲಾರಂಭಿಸಿದ ಘಟನೆ ವರದಿಯಾಗಿದೆ. ಬಾರಾಬಂಕಿ ಜಿಲ್ಲೆಯ ಪರ್ಸಾವಲ್ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಕೊಲೆಯಾದ ವ್ಯಕ್ತಿಯನ್ನು ಬಬ್ಲೂ ಎಂದು ಗುರುತಿಸಲಾಗಿದ್ದು, ಎಂದಿನಂತೆ ಐಸ್ಕ್ರೀಂ ಮಾರುತ್ತಾ ಪರ್ಸಾವಲ್ ಗ್ರಾಮಕ್ಕೆ ತೆರಳಿದ್ದ. ಐಸ್ಕ್ರೀಮ್ ಮಾರುತ್ತಿದ್ದ ವೇಳೆ ಸ್ಥಳೀಯ ಶಂಕರ್ ಯಾದವ್ ಎಂಬಾತನ ಜತೆಗೆ ವಾಗ್ವಾದ ಆರಂಭವಾಗಿತ್ತು. ವಾಗ್ವಾದ ತಾರಕಕ್ಕೇರಿ ಶಂಕರ್ ಯಾದವ್, ಸಾರ್ವಜನಿಕರ ಸಮ್ಮುಖದಲ್ಲೇ ಬಬ್ಲೂ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿ, ಕತ್ತು ಸೀಳಿ ತಲೆಯನ್ನು ಕತ್ತರಿಸಿದ. ಸ್ಥಳದಿಂದ ತೆರಳುವ ಮುನ್ನ ಶಂಕರ್ ಯಾದವ್, ಬೇರ್ಪಟ್ಟ ತಲೆಯನ್ನು ಅದೇ ಗ್ರಾಮದಲ್ಲಿದ್ದ ತನ್ನ ಮನೆಗೆ ಕೊಂಡೊಯ್ದ. ಮನೆಗೆ ಹೋದ ಬಳಿಕ ಏನೂ ಆಗಿಲ್ಲವೆಂಬಂತೆ ಅಡುಗೆ ಮಾಡಲು ಆರಂಭಿಸಿದ್ದು, ಮನೆಗೆ ತೆರಳಿದ ಪೊಲೀಸರಿಗೆ ಕಂಡುಬಂತು. ಈ ಘಟನೆ ಬಗ್ಗೆ ಪೊಲೀಸರಿಗೆ ಮಾಹಿತಿ ಲಭ್ಯವಾದ ತಕ್ಷಣವೇ ಗ್ರಾಮದಲ್ಲಿ ಎಸ್ಪಿ ಅರ್ಪಿತ್ ವಿಜಯವರ್ಗೀಯ ಮಾರ್ಗದರ್ಶನದಂತೆ ಬಿಗಿ ಬಂದೋಬಸ್ತ್ ವ್ಯವಸ್ಥೆಗೊಳಿಸಲಾಗಿದೆ. ಇಡೀ ಪ್ರದೇಶವನ್ನು ಪೊಲೀಸರು ಸುತ್ತುವರಿದಿದ್ದು, ಪೊಲೀಸರು ಶಂಕರ್ ಯಾದವ್ ಮನೆಗೆ ತೆರಳಿದರು. ಪೊಲೀಸರು ಮನೆಗೆ ಬಂದಾಗ ಯಾದವ್ ಅಡುಗೆ ಮಾಡುತ್ತಿದ್ದ ಹಾಗೂ ಕತ್ತರಿಸಲ್ಪಟ್ಟ ತಲೆ ಅಲ್ಲೇ ಪಕ್ಕದಲ್ಲಿ ಬಿದ್ದಿತ್ತು. ಪೊಲೀಸರು ಆರೋಪಿಯನ್ನು ಬಂಧಿಸಿ, ತಲೆ ಹಾಗೂ ಕೃತ್ಯಕ್ಕೆ ಬಳಸಿದ ಆಯುಧವನ್ನು ವಶಪಡಿಸಿಕೊಂಡಿದ್ದಾರೆ. ಬಬ್ಲೂ ಮೂವರು ಸಹೋದರರ ಪೈಕಿ ಹಿರಿಯರಾಗಿದ್ದು, ಐಸ್ಕ್ರೀಂ ಮಾರಾಟದ ಮೂಲಕ ಕುಟುಂಬದ ಆಧಾರಸ್ತಂಭವಾಗಿದ್ದ. ಈತನಿಗೆ ಪತ್ನಿ ಹಾಗೂ ಇಬ್ಬರು ಪುಟ್ಟ ಮಕ್ಕಳಿದ್ದಾರೆ. ಜಗಳದ ಕಾರಣ ಬಗ್ಗೆ ತನಿಖೆ ನಡೆಸಲಾಗುತ್ತಿದೆ.
ಪಶ್ಚಿಮ ಏಷ್ಯಾ ಸಂಘರ್ಷ | ಮಧ್ಯಪ್ರಾಚ್ಯದಲ್ಲಿರುವ ಅಮೆರಿಕನ್ ವಿವಿಗಳ ಮೇಲೆ ಪ್ರತಿದಾಳಿ: ಇರಾನ್ ಎಚ್ಚರಿಕೆ
ಟೆಹರಾನ್, ಮಾ. 29: ಇರಾನ್ ನ ಎರಡು ವಿಶ್ವವಿದ್ಯಾನಿಲಯಗಳು ಇಸ್ರೇಲ್–ಅಮೆರಿಕ ಜಂಟಿ ದಾಳಿಯಲ್ಲಿ ಧ್ವಂಸಗೊಂಡಿರುವ ಹಿನ್ನೆಲೆಯಲ್ಲಿ, ಮಧ್ಯಪ್ರಾಚ್ಯದಲ್ಲಿರುವ ಅಮೆರಿಕನ್ ವಿಶ್ವವಿದ್ಯಾನಿಲಯಗಳನ್ನು ಗುರಿಯಾಗಿಸಿ ದಾಳಿ ನಡೆಸುವುದಾಗಿ ಇರಾನ್ ನ ರೆವಲ್ಯೂಶನರಿ ಗಾರ್ಡ್ IRGC ಎಚ್ಚರಿಕೆ ನೀಡಿದೆ. “ಮಧ್ಯಪ್ರಾಚ್ಯದಲ್ಲಿರುವ ಅಮೆರಿಕನ್ ವಿಶ್ವವಿದ್ಯಾನಿಲಯಗಳು ಪ್ರತಿದಾಳಿಯಿಂದ ತಪ್ಪಿಸಿಕೊಳ್ಳಬೇಕಾದರೆ, ಟೆಹರಾನ್ ಕಾಲಮಾನದ ಪ್ರಕಾರ ಸೋಮವಾರ ಮಧ್ಯಾಹ್ನ 12 ಗಂಟೆಯೊಳಗೆ ಇರಾನಿಯನ್ ವಿಶ್ವವಿದ್ಯಾನಿಲಯಗಳ ಮೇಲೆ ನಡೆದ ದಾಳಿಯನ್ನು ಅಧಿಕೃತವಾಗಿ ಖಂಡಿಸಬೇಕು” ಎಂದು ರೆವಲ್ಯೂಶನರಿ ಗಾರ್ಡ್ ಹೇಳಿದೆ ಎಂದು ಇರಾನ್ ಮಾಧ್ಯಮಗಳು ವರದಿ ಮಾಡಿವೆ. ಇರಾನ್ ಮೇಲೆ ಇಸ್ರೇಲ್–ಅಮೆರಿಕ ದಾಳಿ ಆರಂಭಗೊಂಡು ಒಂದು ತಿಂಗಳು ಕಳೆದರೂ ಸಂಘರ್ಷ ಶಮನವಾಗುವ ಲಕ್ಷಣಗಳು ಕಾಣುತ್ತಿಲ್ಲ. ಟೆಹರಾನ್ ನಗರದ ವಿವಿಧ ಭಾಗಗಳಲ್ಲಿ ಇಸ್ರೇಲ್ ದಾಳಿ ಮುಂದುವರಿದಿದ್ದು, ಯೆಮನ್ ನಲ್ಲಿರುವ ಇರಾನ್ ಪರ ಹೌತಿಗಳು ಇಸ್ರೇಲ್ ವಿರುದ್ಧ 24 ಗಂಟೆಗಳಲ್ಲಿ ಎರಡನೇ ಬಾರಿಗೆ ಕ್ಷಿಪಣಿ ಹಾಗೂ ಡ್ರೋನ್ ದಾಳಿ ನಡೆಸಿದ್ದಾರೆ. ಮುಂದಿನ ದಿನಗಳಲ್ಲೂ ಸೈನಿಕ ಕಾರ್ಯಾಚರಣೆ ಮುಂದುವರಿಸಲಾಗುವುದು ಎಂದು ಹೌತಿ ಸಂಘಟನೆಯ ಮಿಲಿಟರಿ ವಕ್ತಾರ ಯಾಹ್ಯಾ ಸಾರೀ ವೀಡಿಯೊ ಸಂದೇಶದಲ್ಲಿ ತಿಳಿಸಿದ್ದಾರೆ. ಸಂಘರ್ಷದಲ್ಲಿ ಹೌತಿಗಳ ಸಕ್ರಿಯ ಭಾಗವಹಿಸುವಿಕೆ ಯುದ್ಧದ ತೀವ್ರತೆಯನ್ನು ಮತ್ತಷ್ಟು ಹೆಚ್ಚಿಸಿದೆ. ಯೆಮನ್ ನಾಚೆಗೆ ದಾಳಿ ನಡೆಸುವ ಸಾಮರ್ಥ್ಯ ಹೊಂದಿರುವ ಹೌತಿಗಳು ಅರೇಬಿಯನ್ ಪರ್ಯಾಯದ್ವೀಪ ಹಾಗೂ ಕೆಂಪು ಸಮುದ್ರ ಪ್ರದೇಶದ ಶಿಪ್ಪಿಂಗ್ ಲೇನ್ ಗಳಿಗೆ ಅಪಾಯ ಉಂಟುಮಾಡುತ್ತಿರುವ ಹಿನ್ನೆಲೆ, ಇಡೀ ಪ್ರದೇಶದಲ್ಲಿ ಆತಂಕ ವೃದ್ಧಿಯಾಗಿದೆ. 2023ರ ಅಕ್ಟೋಬರ್ 7ರ ದಾಳಿ ಬಳಿಕ ಗಾಝಾ ಯುದ್ಧದಲ್ಲಿ ಹೌತಿಗಳು ಹಮಾಸ್ ಸಂಘಟನೆಗೆ ಬೆಂಬಲ ನೀಡಿದ್ದರು. ಇದೇ ವೇಳೆ, ಇರಾಕ್ನ ಉತ್ತರ ಭಾಗದ ಮೊಸುಲ್ ನಗರದಲ್ಲಿ ನಡೆದ ದಾಳಿಯಲ್ಲಿ ಇಬ್ಬರು ಪೊಲೀಸ್ ಅಧಿಕಾರಿಗಳು ಮೃತಪಟ್ಟಿದ್ದಾರೆ. ಲೆಬನಾನ್ ನ ವಿವಿಧೆಡೆ ಶನಿವಾರ ನಡೆದ ಐದು ಪ್ರತ್ಯೇಕ ದಾಳಿಗಳಲ್ಲಿ ಒಂಭತ್ತು ಮಂದಿ ಅರೆವೈದ್ಯಕೀಯ ಸಿಬ್ಬಂದಿ ಸಾವನ್ನಪ್ಪಿದ್ದಾರೆ.
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ
ಚಿನ್ನ ಮತ್ತು ಬೆಳ್ಳಿ ಖರೀದಿಸಲು ಯೋಚಿಸುತ್ತಿರುವ ಗ್ರಾಹಕರಿಗೆ ಹಾಗೂ ಹೂಡಿಕೆದಾರರಿಗೆ ಇಂದಿನ ಮಾರುಕಟ್ಟೆಯ ವಿವರ ತಿಳಿದುಕೊಳ್ಳುವುದು ಅತಿ ಮುಖ್ಯವಾಗಿದೆ. ಇಂದಿನ (ಮಾರ್ಚ್ 29, 2026) ಅಧಿಕೃತ ದತ್ತಾಂಶದ ಪ್ರಕಾರ, ದೇಶೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಯಲ್ಲಿ ನಿನ್ನೆಗೆ ಹೋಲಿಸಿದರೆ ಬಹುತೇಕ ಸ್ಥಿರತೆ ಕಾಯ್ದುಕೊಳ್ಳಲಾಗಿದೆ. ಜಾಗತಿಕ ಮಾರುಕಟ್ಟೆಯಲ್ಲಿನ ಸಣ್ಣಪುಟ್ಟ ಬದಲಾವಣೆಗಳು ಮತ್ತು MCX (ಮಲ್ಟಿ ಕಮಾಡಿಟಿ ಎಕ್ಸ್ಚೇಂಜ್) ವಹಿವಾಟುಗಳ ಆಧಾರದ
ಭಾನುವಾರ ಹೊರಗೆ ಹೋಗುವ ಪ್ಲ್ಯಾನ್ನಲ್ಲಿರುವವರು ಈ ಮಾಹಿತಿಯನ್ನು ತಪ್ಪದೇ ಓದಿ, ನೇರಳೆ ಮಾರ್ಗದಲ್ಲಿ ಇಂದು ಸಂಚಾರ ವ್ಯತ್ಯಯ ಆಗಲಿದೆ.
ನಿಲ್ಲದ ಯುದ್ಧ: ನಲುಗುತ್ತಿರುವ ಜಾಗತಿಕ ಆರ್ಥಿಕತೆ
ಪ್ರತಿದಿನವೂ ಜಗತ್ತಿನ ಶೇ. 20ಕ್ಕೂ ಹೆಚ್ಚಿನ ತೈಲ ಸಾಗಾಟವಾಗುವ ಕಿರಿದಾದ ಸಮುದ್ರ ವ್ಯಾಪಾರ ಮಾರ್ಗವಾದ ಹಾರ್ಮುಝ್ ಜಲಸಂಧಿಯನ್ನೂ ಇರಾನ್ ಕೆಲವು ರಾಷ್ಟ್ರಗಳಿಗಷ್ಟೇ ತೆರೆದಿದೆ. ಹಾರ್ಮುಝ್ ಜಲಸಂಧಿ ಎನ್ನುವುದು ಅರ್ಧ ಜಗತ್ತಿಗೆ ಇಂಧನ ಪೂರೈಸುವ ಏಕೈಕ ಹೆದ್ದಾರಿ ಎಂದುಕೊಳ್ಳಿ. ಒಂದೊಮ್ಮೆ ಈ ಮಾರ್ಗ ಮುಚ್ಚಿದರೆ, ತೈಲ ಟ್ಯಾಂಕರ್ಗಳು ಈ ಮಾರ್ಗದ ಮೂಲಕ ತೆರಳಲು ಸಾಧ್ಯವಾಗುವುದಿಲ್ಲ. ಹಾಗಾದಾಗ ಕೆಲವೇ ದಿನಗಳಲ್ಲಿ, ಪೆಟ್ರೋಲ್, ಡೀಸೆಲ್ ಮತ್ತು ಅಡುಗೆ ಅನಿಲಗಳಿಗೆ ಜಗತ್ತಿನಾದ್ಯಂತ ಪರದಾಡಬೇಕಾಗುತ್ತವೆ. ಎಲ್ಲ ಕಾರ್ಯಗಳೂ ಸ್ಥಗಿತಗೊಳ್ಳುತ್ತವೆ. ಜಾಗತಿಕ ಆರ್ಥಿಕತೆಗಳು ನಲುಗುತ್ತವೆ. ಮಧ್ಯ ಪೂರ್ವದಲ್ಲಿ ಈಗೊಂದು ಬಲುದೊಡ್ಡ ಬೆಳವಣಿಗೆ ನಡೆಯುತ್ತಿದೆ. ಅದರ ಪರಿಣಾಮ ನಮ್ಮೆಲ್ಲರ ಮೇಲೂ ಬೀರುತ್ತಿದೆ. ಮಧ್ಯ ಪೂರ್ವ ಪ್ರದೇಶ ಜಗತ್ತಿನ ಒಟ್ಟು ತೈಲದ ಶೇ. 20ನ್ನು ಪ್ರತಿದಿನವೂ ಪೂರೈಸುವುದರಿಂದ, ಭಾರತದಲ್ಲಿ ಕುಳಿತಿರುವ ನಮಗೂ ಯುದ್ಧದ ಬಿಸಿ ತಟ್ಟಿದೆ. ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ ಫೆಬ್ರವರಿ 28ರಂದು ಇರಾನ್ನ ಮಿಲಿಟರಿ ಗುರಿಗಳ ಮೇಲೆ ಬೃಹತ್ ವಾಯು ದಾಳಿ ನಡೆಸುವ ಮೂಲಕ ಇದೆಲ್ಲವೂ ಆರಂಭಗೊಂಡಿತು. ಆರಂಭದಲ್ಲಿ ಕೇವಲ ವಾಯು ದಾಳಿಯ ರೂಪದಲ್ಲಿ ಆರಂಭಗೊಂಡ ಕಾರ್ಯಾಚರಣೆ, ಕ್ರಮೇಣ ಮೌನವಾಗಿಯೇ ಇರಾಕ್ ಯುದ್ಧದ ಬಳಿಕ ಈ ಪ್ರದೇಶದಲ್ಲಿ ಅಮೆರಿಕದ ಬಹುದೊಡ್ಡ ಮಿಲಿಟರಿ ಒಗ್ಗೂಡುವಿಕೆಯ ರೂಪ ಪಡೆದುಕೊಂಡಿದೆ. ಇಲ್ಲಿನ ಅಮೆರಿಕದ ಸೇನಾ ಸಂಗ್ರಹ ದಿನೇ ದಿನೇ ಹೆಚ್ಚಾಗುತ್ತಲೇ ಇದೆ. ಅಮೆರಿಕ ಈಗಾಗಲೇ ಇರಾನ್ನೊಳಗೆ ಮಿಲಿಟರಿ ಮುಖ್ಯ ನೆಲೆಗಳು, ಕ್ಷಿಪಣಿ ಉಡಾವಣಾ ತಾಣಗಳು, ಡ್ರೋನ್ ಕಾರ್ಖಾನೆಗಳು ಮತ್ತು ನೌಕಾಪಡೆಯ ಆಸ್ತಿಗಳು ಸೇರಿದಂತೆ 9,000ಕ್ಕೂ ಹೆಚ್ಚಿನ ಗುರಿಗಳ ಮೇಲೆ ದಾಳಿ ನಡೆಸಿವೆ. 140ಕ್ಕೂ ಹೆಚ್ಚು ಇರಾನಿಯನ್ ನೌಕೆಗಳು ಹಾನಿಗೊಂಡಿವೆ ಅಥವಾ ನಾಶವಾಗಿವೆ. ಇದಕ್ಕೆ ಪ್ರತಿಯಾಗಿ, ಇರಾನ್ ಸಹ ಬಹುತೇಕ ಪ್ರತಿದಿನವೂ ಇಸ್ರೇಲ್, ಸನಿಹದ ಗಲ್ಫ್ ರಾಷ್ಟ್ರಗಳು ಮತ್ತು ಅಮೆರಿಕನ್ ಸೇನಾ ನೆಲೆಗಳ ಮೇಲೆ ಕ್ಷಿಪಣಿ ಮತ್ತು ಡ್ರೋನ್ ದಾಳಿಗಳನ್ನು ನಡೆಸುತ್ತಿದೆ. ಎಲ್ಲಕ್ಕಿಂತ ಹೆಚ್ಚು ಅಪಾಯಕಾರಿಯಾಗಿ, ಪ್ರತಿದಿನವೂ ಜಗತ್ತಿನ ಶೇ. 20ಕ್ಕೂ ಹೆಚ್ಚಿನ ತೈಲ ಸಾಗಾಟವಾಗುವ ಕಿರಿದಾದ ಸಮುದ್ರ ವ್ಯಾಪಾರ ಮಾರ್ಗವಾದ ಹಾರ್ಮುಝ್ ಜಲಸಂಧಿಯನ್ನೂ ಇರಾನ್ ಕೆಲವು ರಾಷ್ಟ್ರಗಳಿಗಷ್ಟೇ ತೆರೆದಿದೆ. ಹಾರ್ಮುಝ್ ಜಲಸಂಧಿ ಎನ್ನುವುದು ಅರ್ಧ ಜಗತ್ತಿಗೆ ಇಂಧನ ಪೂರೈಸುವ ಏಕೈಕ ಹೆದ್ದಾರಿ ಎಂದುಕೊಳ್ಳಿ. ಒಂದೊಮ್ಮೆ ಈ ಮಾರ್ಗ ಮುಚ್ಚಿದರೆ, ತೈಲ ಟ್ಯಾಂಕರ್ಗಳು ಈ ಮಾರ್ಗದ ಮೂಲಕ ತೆರಳಲು ಸಾಧ್ಯವಾಗುವುದಿಲ್ಲ. ಹಾಗಾದಾಗ ಕೆಲವೇ ದಿನಗಳಲ್ಲಿ, ಪೆಟ್ರೋಲ್, ಡೀಸೆಲ್ ಮತ್ತು ಅಡುಗೆ ಅನಿಲಗಳಿಗೆ ಜಗತ್ತಿನಾದ್ಯಂತ ಪರದಾಡಬೇಕಾಗುತ್ತವೆ. ಎಲ್ಲ ಕಾರ್ಯಗಳೂ ಸ್ಥಗಿತಗೊಳ್ಳುತ್ತವೆ. ಜಾಗತಿಕ ಆರ್ಥಿಕತೆಗಳು ನಲುಗುತ್ತವೆ. ಪರಿಸ್ಥಿತಿ ಇನ್ನಷ್ಟು ಗಂಭೀರವಾಗುವುದು ಇಲ್ಲಿಂದ. ಅಮೆರಿಕ ಕೇವಲ ಬಹಳಷ್ಟು ದೂರದಿಂದ ಬಾಂಬ್ ದಾಳಿ ನಡೆಸುತ್ತಾ ಕೂತಿಲ್ಲ. ಅದು ಈಗಾಗಲೇ ತನ್ನ ಸಾವಿರಾರು ಯೋಧರನ್ನು ಯುದ್ಧ ಪೀಡಿತ ಪ್ರದೇಶದತ್ತ ರವಾನಿಸುತ್ತಿದೆ. ಮಾರ್ಚ್ 24ರಂದು, ಅಮೆರಿಕದ ನಾರ್ತ್ ಕೆರೊಲಿನಾದಲ್ಲಿರುವ ಉನ್ನತ ಮಿಲಿಟರಿ ಪಡೆಯಾದ 82ನೇ ಏರ್ಬಾರ್ನ್ ಡಿವಿಷನ್ನ 2,000 ಯೋಧರನ್ನು ಮಧ್ಯ ಪೂರ್ವಕ್ಕೆ ತೆರಳುವಂತೆ ಆದೇಶಿಸಲಾಗಿದೆ. ಈ ಪಡೆ ಅತ್ಯಂತ ಕ್ಷಿಪ್ರವಾಗಿದ್ದು, ಇದನ್ನು ಕೇವಲ 18 ಗಂಟೆಗಳ ಒಳಗಾಗಿ ಜಗತ್ತಿನ ಯಾವ ಮೂಲೆಗೆ ಬೇಕಾದರೂ ರವಾನಿಸಲು ಸಾಧ್ಯವಿದೆ. ಹಾಗೆಂದು ಇವರು ಯಾರೋ ಸಾಮಾನ್ಯ ಯೋಧರಲ್ಲ. ಇವರು ಅತ್ಯಂತ ಹೆಚ್ಚಿನ ತರಬೇತಿ ಹೊಂದಿರುವ ಪ್ಯಾರಾಟ್ರೂಪರ್ಗಳಾಗಿದ್ದು, ಆಕಾಶದಿಂದ ಅತ್ಯಂತ ಹೆಚ್ಚಿನ ವೇಗದಲ್ಲಿ ಯಾವುದೇ ಯುದ್ಧ ಭೂಮಿಗೆ ಬೇಕಾದರೂ ನಿಖರವಾಗಿ ಧುಮುಕಬಲ್ಲರು. ಅವರ ಜೊತೆಗೆ, ಎರಡು ಬೃಹತ್ ಮರೀನ್ ಗುಂಪುಗಳೂ ಸಹ ಮಧ್ಯ ಪೂರ್ವದತ್ತ ಸಾಗುತ್ತಿವೆ. ಒಂದು ಗುಂಪು ಜಪಾನ್ನಿಂದ ತೆರಳುತ್ತಿದ್ದರೆ, ಇನ್ನೊಂದು ಕ್ಯಾಲಿಫೋರ್ನಿಯದಿಂದ ಬರುತ್ತಿದೆ. ಇವು ಮೂರೂ ಪಡೆಗಳು ಜೊತೆಯಾದಾಗ, ಅವು ಯುದ್ಧ ಆರಂಭಗೊಂಡ ಬಳಿಕ, ಈ ಪ್ರದೇಶಕ್ಕೆ ಬಹುತೇಕ 7,000 ಹೆಚ್ಚುವರಿ ಯೋಧರನ್ನು ತಂದಂತಾಗುತ್ತದೆ. ಇದು ಇಷ್ಟು ಸಣ್ಣ ಅವಧಿಯಲ್ಲಿ ಕಳುಹಿಸಬಹುದಾದ ಬಹುದೊಡ್ಡ ಸಂಖ್ಯೆಯ ಸೇನೆಯಾಗಿದೆ. ಈ ಮೂರು ಪಡೆಗಳನ್ನು ಸರಳವಾಗಿ ಅರ್ಥೈಸಿಕೊಳ್ಳೋಣ. ಜಪಾನ್ನಿಂದ ಪ್ರಯಾಣಿಸುತ್ತಿರುವ ಮೊದಲ ಗುಂಪನ್ನು ಯುಎಸ್ಎಸ್ ಟ್ರಿಪೋಲಿ ಎನ್ನುವ ಬೃಹತ್ತಾದ, 261 ಮೀಟರ್ ಉದ್ದವಿರುವ ಮತ್ತು 45,000 ಟನ್ ತೂಕವಿರುವ, ಒಂದು ಸಣ್ಣ ವಿಮಾನ ವಾಹಕ ನೌಕೆಯಂತೆ ಕಾರ್ಯಾಚರಿಸುವ ಯುದ್ಧ ನೌಕೆಯ ಆಧಾರದಲ್ಲಿ ರಚಿಸಲಾಗಿದೆ. ಈ ನೌಕೆ ಯುದ್ಧ ವಿಮಾನಗಳು, ಹೆಲಿಕಾಪ್ಟರ್ಗಳು ಮತ್ತು 2,200 ಮರೀನ್ಗಳನ್ನು ಹೊಂದಿದೆ. ಇದು ಎರಡು ಹೆಚ್ಚುವರಿ ಬೆಂಬಲ ನೌಕೆಗಳೊಡನೆ ಪ್ರಯಾಣಿಸುತ್ತಿದ್ದು, ಅವುಗಳಲ್ಲಿ ಒಂದು ಯೋಧರು ಮತ್ತು ಆಯುಧಗಳನ್ನು ಹೊತ್ತು ಸಾಗಿದರೆ, ಇನ್ನೊಂದು ನೌಕೆಯಲ್ಲಿ ಒಂದು ವಿಶೇಷ ವಿಭಾಗವಿದೆ. ಇದು ನೀರಿನಿಂದ ತುಂಬಿದಾಗ, ಬೋಟುಗಳು ಮತ್ತು ಉಭಯಚರಿ ವಾಹನಗಳು ಹೊರಗಡೆ ತೇಲಿ, ನೇರವಾಗಿ ದಡದತ್ತ ಸಾಗಬಲ್ಲವು. ಒಟ್ಟಾರೆಯಾಗಿ ಇದೊಂದು ಚಲಿಸುವ ಬಂದರ್ನಂತಹ ವ್ಯವಸ್ಥೆಯಾಗಿದೆ. ಕ್ಯಾಲಿಫೋರ್ನಿಯಾದಿಂದ ಸಾಗಿರುವ ಎರಡನೇ ಗುಂಪು ಯುಎಸ್ಎಸ್ ಬಾಕ್ಸರ್ ಎನ್ನುವ ಇಂತಹದ್ದೇ ದಾಳಿ ನೌಕೆಯ ಆಧಾರಿತವಾಗಿದೆ. ಈ ನೌಕೆ ಎಫ್-35ಬಿ ಯುದ್ಧ ನೌಕೆಗಳನ್ನು ಹೊಂದಿದ್ದು, 2,200 ಮರೀನ್ಗಳು ಮತ್ತು ಬೆಂಬಲ ನೌಕೆಗಳನ್ನು ಹೊಂದಿದೆ. ಇದು 22,200 ಕಿಲೋಮೀಟರ್ ದೂರ ಸಾಗಬೇಕಿದ್ದು, ಕೇವಲ ಎಪ್ರಿಲ್ ಮಧ್ಯಭಾಗದಲ್ಲಷ್ಟೇ ಮಧ್ಯ ಪೂರ್ವಕ್ಕೆ ತಲುಪಬಹುದು. ಇನ್ನು ಮೂರನೇ ಗುಂಪು 2,000 ಪ್ಯಾರಾಟ್ರೂಪರ್ಗಳನ್ನು ಹೊಂದಿರುವ 82ನೇ ಏರ್ಬಾರ್ನ್ ಪಡೆಯಾಗಿದ್ದು, ಈ ಯೋಧರು ಬೃಹತ್ ಮಿಲಿಟರಿ ಸಾಗಣೆ ವಿಮಾನಗಳಲ್ಲಿ ಹಾರಾಡುತ್ತಾ ಬರುತ್ತಾರೆ. ಇವರು ಎಲ್ಲಿ ಬೇಕಾದರೂ ಬಲುಬೇಗನೆ ಲ್ಯಾಂಡಿಂಗ್ ನಡೆಸಲು ಸಜ್ಜಾಗಿರುತ್ತಾರೆ. ಈ ಪಡೆಗಳು ನಿಜಕ್ಕೂ ಮಾಡುವುದೇನು? ತಜ್ಞರು ಒಂದು ವಿಚಾರವನ್ನು ಸ್ಪಷ್ಟವಾಗಿ ಹೇಳುತ್ತಿದ್ದಾರೆ. ಇದು 2003ರಲ್ಲಿ 1,60,000 ಯೋಧರನ್ನು ಬಳಸಿಕೊಂಡ ಇರಾಕ್ ಯುದ್ಧದಂತಹ ಪೂರ್ಣ ಪ್ರಮಾಣದ ಯುದ್ಧವಲ್ಲ. ಈಗ ಬರುತ್ತಿರುವ ಪಡೆಗಳು ಬಹಳ ಸಣ್ಣ ಸಂಖ್ಯೆಯಲ್ಲಿದ್ದು, ಇವು ಕೇವಲ ಕ್ಷಿಪ್ರವಾದ, ನಿಖರ ಕಾರ್ಯಾಚರಣೆಗಳಾದ ದಾಳಿ, ಪ್ರಮುಖ ಪ್ರದೇಶಗಳ ಕೈವಶ, ವೇಗದ ಕಾರ್ಯಾಚರಣೆಗಳನ್ನು ನಡೆಸಲು ಮಾತ್ರವೇ ವಿನ್ಯಾಸಗೊಂಡಿವೆ. ಬೃಹತ್ ಟ್ಯಾಂಕ್ಗಳು, ಭಾರೀ ಪೂರೈಕೆ ವ್ಯವಸ್ಥೆಗಳು ಮತ್ತು ದೀರ್ಘಾವಧಿಯ ಕಮಾಂಡ್ ವ್ಯವಸ್ಥೆಗಳು ಇಲ್ಲಿ ಲಭ್ಯವಿಲ್ಲ. ಈ ಸೇನೆ ವೇಗವಾಗಿ ಹೊಡೆತ ನೀಡಬಹುದಾದರೂ, ಇರಾನ್ನೊಳಗೆ ದೀರ್ಘಕಾಲ ಉಳಿಯಲು ಸಾಧ್ಯವಿಲ್ಲ. ಸರಳವಾಗಿ ವಿವರಿಸುವುದಾದರೆ, ಈ ಪಡೆಗಳು ವೇಗದ ಕಾರ್ಯಾಚರಣೆಗೆ ನಿರ್ಮಾಣಗೊಂಡಿವೆಯೇ ಹೊರತು, ದೀರ್ಘಾವಧಿಯ ಭೂ ಯುದ್ಧಕ್ಕಲ್ಲ. ಮೂರು ಸಂಭಾವ್ಯ ಫಲಿತಾಂಶಗಳ ಕುರಿತು ಚರ್ಚಿಸಲಾಗುತ್ತಿದೆ. ಒಂದು, ಅಮೆರಿಕ ಹಾರ್ಮುಝ್ ಜಲಸಂಧಿಯ ಬಳಿಯ ಪ್ರಮುಖ ಪ್ರದೇಶಗಳ ಮೇಲೆ ನಿಯಂತ್ರಣ ಸಾಧಿಸಿ, ತೈಲ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗದಂತೆ ನೋಡಿಕೊಂಡು, ಹಡಗುಗಳನ್ನು ರಕ್ಷಿಸಬಹುದು. ಎರಡನೆಯ ಸಾಧ್ಯತೆ ಎಂದರೆ, ಅಮೆರಿಕ ಇರಾನ್ನ ಅತ್ಯಂತ ಮುಖ್ಯ ತೈಲ ರಫ್ತು ಬಿಂದುವಾದ ಖಾರ್ಗ್ ದ್ವೀಪವನ್ನು ವಶಪಡಿಸಿಕೊಳ್ಳಲು ಪ್ರಯತ್ನ ನಡೆಸಬಹುದು. ಇದು ಇರಾನ್ನ ಆರ್ಥಿಕತೆಗೆ ಬಹುದೊಡ್ಡ ಹೊಡೆತ ನೀಡಬಹುದಾದರೂ, ಯುದ್ಧವನ್ನು ಅತ್ಯಂತ ತೀವ್ರಗೊಳಿಸುವ ಅಪಾಯವೂ ಎದುರಾದೀತು. ಇನ್ನು ಮೂರನೆಯ ಮತ್ತು ಅತ್ಯಂತ ತೀವ್ರವಾದ ಕ್ರಮವೆಂದರೆ, ಅಮೆರಿಕ ಇರಾನ್ನ ಪರಮಾಣು ಸಂಗ್ರಹವನ್ನು ನತಂಝ್, ಪುರ್ದೊ ಮತ್ತು ಇಶ್ಫಹಾನ್ನಂತಹ ನೆಲೆಗಳಿಂದ ಸಂಗ್ರಹಿಸಲು ಪ್ರಯತ್ನಿಸಬಹುದು. ಈ ನೆಲೆಗಳು ಈಗಾಗಲೇ ತೀವ್ರ ವಾಯು ದಾಳಿಗೆ ತುತ್ತಾಗಿವೆ. ಅಮೆರಿಕದ ಸೆಕ್ರೆಟರಿ ಆಫ್ ಸ್ಟೇಟ್ ಮಾರ್ಕೊ ರುಬಿಯೋ ಅವರು ಸಾರ್ವಜನಿಕವಾಗಿಯೇ ಯಾರಾದರೂ ಇರಾನ್ ಒಳಗೆ ನುಗ್ಗಿ, ಅಲ್ಲಿನ ಪರಮಾಣು ಪದಾರ್ಥಗಳನ್ನು ಸಂಗ್ರಹಿಸಿ ತರಬಹುದು ಎಂದು ಹೇಳಿಕೆ ನೀಡಿದ್ದರು. ನಿವೃತ್ತ ಅಡ್ಮಿರಲ್, ನೇಟೊದ ಮಾಜಿ ಕಮಾಂಡರ್ ಆಗಿರುವ ಜೇಮ್ಸ್ ಸ್ಟಾವ್ರಿಡಿಸ್ ಅವರೂ ಸಹ ಖಾರ್ಗ್ ದ್ವೀಪಕ್ಕೆ ನುಗ್ಗುವುದು ಅಥವಾ ಪರಮಾಣು ನೆಲೆಗಳಿಗೆ ನುಗ್ಗುವುದು ಮಾಡಿದರೆ ಅದಕ್ಕೆ ಇರಾನ್ನ ಅತ್ಯಂತ ತೀವ್ರ ಪ್ರತಿರೋಧ ಎದುರಿಸಬೇಕಾಗಿ ಬರಬಹುದು ಎಂದು ಎಚ್ಚರಿಸಿದ್ದಾರೆ. ಇರಾನ್ ಡ್ರೋನ್ಗಳು, ಸ್ಫೋಟಕ ಬೋಟುಗಳು ಮತ್ತು ಕ್ಷಿಪಣಿಗಳನ್ನು ಜಲಸಂಧಿಯ ಕಿರಿದಾದ ಹಾದಿಯಲ್ಲಿ ತೀಕ್ಷ್ಣವಾಗಿ ಬಳಸಿಕೊಂಡೀತು. ತಜ್ಞರು ಈಗ ಇನ್ನೊಂದು ದೊಡ್ಡ ಎಚ್ಚರಿಕೆಯನ್ನೂ ನೀಡುತ್ತಿದ್ದಾರೆ. ಈಗ ಅಮೆರಿಕ ತನ್ನ ಮಿಲಿಟರಿ ಗಮನವನ್ನು ಸಂಪೂರ್ಣವಾಗಿ ಇರಾನ್ ಮೇಲೆ ಹರಿಸಿದಾಗ, ಜಗತ್ತಿನ ಇತರ ತೊಂದರೆದಾಯಕ ಸ್ಥಳಗಳು ಅಮೆರಿಕದ ಉಪಸ್ಥಿತಿ ಕಡಿಮೆಯಾಗುವುದರ ಲಾಭ ಪಡೆದುಕೊಳ್ಳುವ ಸಾಧ್ಯತೆಗಳಿವೆ. ಮಧ್ಯ ಪೂರ್ವದಲ್ಲಿ ಹಚ್ಚಿರುವ ಬೆಂಕಿ, ನಿರೀಕ್ಷೆಗೂ ಮೀರಿ ಬೇರೆ ಬೇರೆ ಕಡೆಗಳಿಗೆ ಹಬ್ಬುವ ಅಪಾಯಗಳಿವೆ. ಸದ್ಯದ ಮಟ್ಟಿಗೆ, ಅಮೆರಿಕ ತಾನು ಇರಾನ್ ಜೊತೆ ಮಾತನಾಡುತ್ತಿರುವುದಾಗಿ ಹೇಳಿಕೊಂಡಿದೆ. ಆದರೆ, ಇರಾನ್ ಈಗ ಅಂತಹ ಯಾವುದೇ ಮಾತುಕತೆಗಳು ನಡೆಯುತ್ತಿಲ್ಲ ಎಂದಿದೆ. ಇದೇ ವೇಳೆ, ಹಡಗುಗಳು ತೇಲುತ್ತಲೇ ಇವೆ, ಯೋಧರು ಮುಂದೆ ಬರುತ್ತಲೇ ಇದ್ದಾರೆ. ಜಗತ್ತು ಈಗ ಕಣ್ ತೆರೆದು ನೋಡುತ್ತಿದ್ದು, ಜಾಗತಿಕ ಆತಂಕ ಮಾತ್ರ ನಿಜವೇ ಆಗುತ್ತಿದೆ.
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ
ಭಾರತೀಯ ಹವಾಮಾನ ಇಲಾಖೆ (IMD) ಬಿಡುಗಡೆ ಮಾಡಿರುವ ವರದಿ ಪ್ರಕಾರ, ಮಾರ್ಚ್ 29 ರಂದು ಕರ್ನಾಟಕದ ಹವಾಮಾನದಲ್ಲಿ ಭಾರಿ ಬದಲಾವಣೆಗಳು ಕಂಡುಬರುತ್ತಿವೆ. ರಾಜ್ಯದ ಹಲವೆಡೆ ಬಿಸಿಲಿನ ತಾಪಮಾನ ತೀವ್ರವಾಗಿ ಏರಿಕೆಯಾಗುತ್ತಿದ್ದರೆ, ಮಲೆನಾಡು ಮತ್ತು ದಕ್ಷಿಣ ಒಳನಾಡಿನ ಕೆಲವು ನಿರ್ದಿಷ್ಟ ಜಿಲ್ಲೆಗಳಲ್ಲಿ ಮಳೆಯಾಗುವ ಸ್ಪಷ್ಟ ಮುನ್ಸೂಚನೆ ಸಿಕ್ಕಿದೆ. ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಹವಾಮಾನ ಇಲಾಖೆಯ ವರದಿಯ
ಸನ್ಮಿತ್ರ ಯೋಜನೆಯಡಿ, ವಿಶೇಷ ಕಾರ್ಯಾಚರಣೆ ನಡೆಸಿರುವ ಮೈಸೂರು ಜಿಲ್ಲಾ ಪೊಲೀಸರು, ಮುಂಬೈ ಡ್ರಗ್ ಪೆಡ್ಲರ್ಗಳ ಜೊತೆಗೆ ಈ ಜಾಲದಲ್ಲಿ ಸಿಲುಕಿದ್ದ ಮೈಸೂರಿನ ಡ್ರಗ್ ಪೆಡ್ಲರ್ಗಳನ್ನು ಪತ್ತೆ ಹಚ್ಚಿದ್ದಾರೆ. ಬರೋಬ್ಬರಿ 12 ಕೋಟಿ ರೂ ಮೌಲ್ಯದ ಡ್ರಗ್ಸ್ ವಶಕ್ಕೆ ಪಡೆದಿದ್ದಾರೆ.
ಕಾಂಗ್ರೆಸ್ ಮುಖಂಡ ಸಾದಿಕ್ ಪೈಲ್ವಾನ್ ಮನೆಗೆ ಸಚಿವರು, ಶಾಸಕರ ಭೇಟಿ
ನಾವು ಸಹೋದರರಂತೆ ಇದ್ದೇವೆ: ಸಚಿವ ಎಸ್.ಎಸ್.ಮಲ್ಲಿಕಾರ್ಜುನ್
RCB Vs SRH- ವಿರಾಟ್ ಕೊಹ್ಲಿ ಕ್ಯಾಚ್ ಬಿಟ್ಟದ್ದಕ್ಕೆ ನಕ್ಕ ಪತ್ನಿ ಅನುಷ್ಕಾ ಶರ್ಮಾ! ವೈರಲ್ ಆಗಿದೆ ವಿಡಿಯೋ
ಅವರು ಸನ್ ರೈಸರ್ಸ್ ಹೈದರಾಬಾದ್ ತಂಡದ ವಿರುದ್ಧ ಗೆಲುವಿನ ದಡ ತಲುಪಿ ಹೀರೋ ಆದರೇನೋ ನಿಜ. ಆದರೆ ಅವರು ಫೀಲ್ಡಿಂಗ್ ವೇಳೆ ಸುಲಭದ ಕ್ಯಾಚ್ ಒಂದನ್ನು ಕೈಚೆಲ್ಲಿದ್ದಕ್ಕೆ ಅವರ ಪತ್ನಿ ಅನುಷ್ಕಾ ಶರ್ಮಾ ಅವರು ನಕ್ಕ ವಿಡಿಯೋ ಇದೀಗ ವೈರಲ್ ಆಗಿದೆ. ಇದು ನಡೆದದ್ದು ಸನ್ ರೈಸರ್ಸ್ ತಂಡದ ಇನ್ನಿಂಗ್ಸ್ ನ 18ನೇ ಓವರ್ ನಲ್ಲಿ. ಸೆಟ್ ಆಗಿದ್ದ ಅನಿಕೇತ್ ವರ್ಮಾ ವರ್ಮಾ ಅವರು ನೀಡಿದ ಕ್ಯಾಚ್ ಅನ್ನು ಕೈಚೆಲ್ಲಿದ ವಿರಾಟ್ ಕೊಹ್ಲಿ ಅಕ್ಷರಶಃ ಮುಜುಗರಕ್ಕೆ ಒಳಗಾಗಿದ್ದರು. ಆದರೆ ತನ್ನ ಪತಿಯ ಎಡವಟ್ಟಿಗೆ ಪ್ರೇಕ್ಷಕರ ಗ್ಯಾಲರಿಯಿಂದ ಪಂದ್ಯ ವೀಕ್ಷಿಸುತ್ತಿದ್ದ ಅನುಷ್ಕಾ ಶರ್ಮಾ ನಕ್ಕರು. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮಾರ್ಚ್ 28ರಂದು ನಡೆದ ಉದ್ಘಾಟನಾ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಸನ್ ರೈಸರ್ಸ್ ಹೈದರಾಬಾದ್ 20 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 201 ರನ್ ಗಳಿಸಿತು. ಈ ಮೊತ್ತವನ್ನು ಆರ್ ಸಿಬಿಯು ವಿರಾಟ್ ಕೊಹ್ಲಿ ಅವರ ಅಜೇಯ 69 ರನ್ ಗಳ ಕೊಡುಗೆಯಿಂದಾಗಿ 25 ಎಸೆತಗಳು ಬಾಕಿ ಉಳಿದಿರುವಂತೆ 4 ವಿಕೆಟ್ ಕಳೆದುಕೊಂಡು ಗುರಿ ತಲುಪಿತು. ()ಆದರೆ ಅದಕ್ಕೂ ಮೊದಲು ಸನ್ ರೈಸರ್ಸ್ ಬ್ಯಾಟಿಂಗ್ ಮಾಡುತ್ತಿದ್ದ ವೇಳೆ 18ನೇ ಓವರ್ ನಲ್ಲಿ ವಿರಾಟ್ ಕೊಗ್
ಹಾಸನ | ಛಾಯಾಗ್ರಾಹಕರ ಮೇಲೆ ಹಲ್ಲೆಗೆ ಖಂಡನೆ: ಮಾ. 31ರಂದು ರಾಜ್ಯಾದ್ಯಂತ ಪ್ರತಿಭಟನೆ
ಹಾಸನ: ಜಿಲ್ಲೆಯಲ್ಲಿ ಛಾಯಾಚಿತ್ರಗ್ರಾಹಕರ ಮೇಲೆ ನಡೆದ ಹಲ್ಲೆ ಪ್ರಕರಣಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಕರ್ನಾಟಕ ಛಾಯಾಚಿತ್ರಗ್ರಾಹಕರ ಸಂಘವು ರಾಜ್ಯಾದ್ಯಂತ ಪ್ರತಿಭಟನೆ ನಡೆಸಲು ತೀರ್ಮಾನಿಸಿದೆ. ಸಂಘದ ರಾಜ್ಯ, ಜಿಲ್ಲಾ ಹಾಗೂ ತಾಲ್ಲೂಕು ಘಟಕಗಳ ಸಂಯುಕ್ತ ನಿರ್ಧಾರದಂತೆ ಮಾರ್ಚ್ 31, 2026 ರಂದು ಹಾಸನ ಸೇರಿದಂತೆ ರಾಜ್ಯದ ಎಲ್ಲಾ ತಾಲ್ಲೂಕು ಕಚೇರಿಗಳ ಮುಂದೆ ಛಾಯಾಗ್ರಾಹಕರು ಶಾಂತಿಯುತ ಧರಣಿ ಹಾಗೂ ಪ್ರತಿಭಟನೆ ನಡೆಸಲಿದ್ದಾರೆ ಎಂದು ಸಂಘದ ರಾಜ್ಯಾಧ್ಯಕ್ಷ ಹೆಚ್.ಎಸ್. ನಾಗೇಶ್ ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಶನಿವಾರ ಮಾತನಾಡಿ, ಸಕಲೇಶಪುರ ತಾಲೂಕಿನ ಬೆಟ್ಟದ ಭೈರವೇಶ್ವರ ದೇವಸ್ಥಾನದ ಆವಣದಲ್ಲಿ ಪ್ರಿ-ವೆಡ್ಡಿಂಗ್ ಶೂಟ್ ನಡೆಸುವ ವೇಳೆ ಸ್ಥಳೀಯರಿಂದ ಛಾಯಾಗ್ರಾಹಕರ ಮೇಲೆ ಹಲ್ಲೆ ನಡೆದಿರುವುದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ಈ ಘಟನೆಯಲ್ಲಿ ಸುಮಾರು 5 ಲಕ್ಷ ರೂ. ಮೌಲ್ಯದ ಛಾಯಾಚಿತ್ರೋಪಕರಣಗಳು ಹಾನಿಗೊಳಗಾಗಿರುವುದಾಗಿ ತಿಳಿದುಬಂದಿದೆ. ಘಟನೆಯಿಂದ ಛಾಯಾಗ್ರಾಹಕರಿಗೆ ಆರ್ಥಿಕವಾಗಿ ಭಾರೀ ನಷ್ಟವಾಗಿದ್ದು, ವೃತ್ತಿಪರ ಬದುಕಿನ ಮೇಲೆ ದುಷ್ಪರಿಣಾಮ ಬೀರಿದೆ ಎಂದರು. ವೃತ್ತಿಪರ ಛಾಯಾಗ್ರಾಹಕರು ತಮ್ಮ ಜೀವನೋಪಾಯಕ್ಕಾಗಿ ಶ್ರಮಿಸುತ್ತಿರುವ ಸಂದರ್ಭದಲ್ಲಿ ಇಂತಹ ಹಲ್ಲೆಗಳು ಹೆಚ್ಚುತ್ತಿರುವುದು ಆತಂಕಕಾರಿ ಬೆಳವಣಿಗೆ ಎಂದು ಸಂಘದ ಪದಾಧಿಕಾರಿಗಳು ತಿಳಿಸಿದ್ದಾರೆ. ಇಂತಹ ಘಟನೆಗಳು ಮುಂದುವರಿದರೆ ಛಾಯಾಗ್ರಹಣ ವೃತ್ತಿಯ ಭದ್ರತೆ ಪ್ರಶ್ನಾರ್ಹವಾಗಲಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು. ಈ ಹಿನ್ನೆಲೆಯಲ್ಲಿ ಸಂಘವು ಹಲವು ಪ್ರಮುಖ ಬೇಡಿಕೆಗಳನ್ನು ಮುಂದಿಟ್ಟಿದೆ. ಹಲ್ಲೆ ನಡೆಸಿದ ಆರೋಪಿಗಳಿಗೆ ತಕ್ಷಣ ಕಠಿಣ ಶಿಕ್ಷೆ ವಿಧಿಸಬೇಕು, ಹಾನಿಗೊಳಗಾದ ಛಾಯಾಗ್ರಾಹಕರಿಗೆ ಸಮರ್ಪಕ ಪರಿಹಾರವನ್ನು ಸರ್ಕಾರ ಘೋಷಿಸಬೇಕು. ವೃತ್ತಿಪರ ಛಾಯಾಗ್ರಾಹಕರಿಗೆ ಸೂಕ್ತ ರಕ್ಷಣೆ ನೀಡುವಂತೆ ಕ್ರಮ ಕೈಗೊಳ್ಳಬೇಕು. ಪ್ರಕರಣದ ಸಂಬಂಧ ಸಂಬಂಧಿತ ಅಧಿಕಾರಿಗಳು ನ್ಯಾಯಸಮ್ಮತ ಹಾಗೂ ತ್ವರಿತ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು. ಇನ್ನು ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೂ ಮನವರಿಕೆ ಮಾಡಲಾಗುವುದು ಎಂದರು. ಮಾರ್ಚ್ 31ರಂದು ನಡೆಯಲಿರುವ ಈ ಪ್ರತಿಭಟನೆಯಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಛಾಯಾಚಿತ್ರಗ್ರಾಹಕರು, ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ನಿರೀಕ್ಷೆ ಇದೆ ಎಂದು ಎಚ್ಚರಿಸಿದರು. ಪತ್ರಿಕಾಗೋಷ್ಠಿಯಲ್ಲಿ ಛಾಯಗ್ರಾಹಕರ ಸಂಘದ ರಾಜ್ಯ ಕಾರ್ಯದರ್ಶಿ ಟಿ.ಸಿ. ನಾಗರಾಜು ಜಿಲ್ಲಾಧ್ಯಕ್ಷ ಎಸ್. ನಿಂಗರಾಜು, (ಸ್ವಾಮಿ), ಪ್ರಧಾನ ಕಾರ್ಯದರ್ಶಿ ಬಿ.ಕೆ. ಧರ್ಮಶೆಟ್ಟಿ, ತಾಲೂಕು ಅಧ್ಯಕ್ಷ ಎಸ್.ಜಿ. ನಾಗರಾಜು, ನಾಗರಾಜು, ತುಮಕೂರು ಜಿಲ್ಲೆಯ ತಾಲೂಕು ಅಧ್ಯಕ್ಷ ಕೆ.ಹೆಚ್. ಅನೀಲ್ ಕುಮಾರ್, ಇತರರು ಉಪಸ್ಥಿತರಿದ್ದರು.
ಕೊಡಗಿನ ವಿವಿಧೆಡೆ ಗುಡುಗು, ಸಿಡಿಲು ಸಹಿತ ಮಳೆ; ಹೊತ್ತಿ ಉರಿದ ತೆಂಗಿನ ಮರ
ಮಡಿಕೇರಿ: ಕೊಡಗು ಜಿಲ್ಲೆಯ ವಿವಿಧೆಡೆ ಗುಡುಗು, ಸಿಡಿಲು ಸಹಿತ ಸಾಧಾರಣ ಮಳೆಯಾಗಿದೆ. ಸಿಡಿಲಬ್ಬರ ಜನರಲ್ಲಿ ಆತಂಕವನ್ನು ಮೂಡಿಸಿತು. ಸುಂಟಿಕೊಪ್ಪದಲ್ಲಿ ಸಿಡಿಲು ಬಡಿದು ತೆಂಗಿನ ಮರ ಹೊತ್ತಿ ಉರಿದ ಘಟನೆ ನಡೆದಿದೆ. ಮುಂದಿನ ನಾಲ್ಕು ದಿನಗಳ ಕಾಲ ಮಳೆಯಾಗುವ ಸಾಧ್ಯತೆಗಳಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಚಿನ್ನಸ್ವಾಮಿಯಲ್ಲಿ ಕನ್ನಡಿಗ ದೇವ್, ವಿರಾಟ್ ಅಬ್ಬರದ ಬ್ಯಾಟಿಂಗ್: ಆರ್ಸಿಬಿ ವಿರುದ್ಧ ಎಸ್ಆರ್ಎಚ್ ಹೀನಾಯು ಸೋಲು
IPL 2026 RCB Vs SRH: ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2026 ಉದ್ಘಾಟನಾ ಪಂದ್ಯದಲ್ಲಿ ಆರ್ಸಿಬಿಯು ಎಸ್ಆರ್ಎಚ್ ವಿರುದ್ಧ ಆರು ವಿಕೆಟ್ಗಳ ಭರ್ಜರಿ ಜಯ ಸಾಧಿಸಿತು. ಈ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಈ ಬಾರಿಯ ಐಪಿಎಲ್ ಅಭಿಯಾನಕ್ಕೆ ಅದ್ಭುತ ಚಾಲನೆ ನೀಡಿದೆ. ಅಂತಿಮ ಹಂತದವರೆಗೆ ಕ್ರೀಸ್ನಲ್ಲಿ ಭದ್ರವಾಗಿ ನೆಲೆ ನಿಂತ ವಿರಾಟ್
ಮುಂಬೈ ನಂಟಿನ ಮಾದಕ ವಸ್ತು ಜಾಲ ಭೇದಿಸಿದ ಮೈಸೂರು ಜಿಲ್ಲಾ ಪೊಲೀಸರು
12 ಕೋಟಿ ರೂ. ಮೌಲ್ಯದ 48 ಕೆಜಿ ತೂಕದ ಮಾದಕ ವಸ್ತು ವಶ: ಇಬ್ಬರ ಬಂಧನ
ಚೊಚ್ಚಲ ಐಪಿಎಲ್ ಪಂದ್ಯವನ್ನಾಡಿದ ಜಾಕೋಬ್ ಡಫಿ 3 ವಿಕೆಟ್! ಇಂಪ್ಯಾಕ್ಟ್ ಪ್ಲೇಯರ್ ಆಗಿ ಕಣಕ್ಕಿಳಿದ ದೇವದತ್ ಪಡಿಕ್ಕಲ್ 3 ಕ್ಯಾಚ್ ಜೊತೆಗೆ ಸ್ಫೋಟಕ ಅರ್ಧಶತಕ! ರಜತ್ ಪಾಟೀದಾರ್ ಕಡೆಯಿಂದ ನಾಯಕನಾಟ, ಚೇಸ್ ಮಾಸ್ಟರ್ ವಿರಾಟ್ ಕೊಹ್ಲಿ ಅವರ ಜವಾಬ್ದಾರಿಯುತ ಅರ್ಧಶತಕ. - ಹೀಗೆ ಸಾಂಘಿಕ ಆಟದ ನೆರವಿನಿದಿಂದ ಹಾಲಿ ಚಾಂಪಿಯನ್ ಪದಕ್ಕೆ ತಕ್ಕದಾಗಿ ಆಡಿದ ರಾಯಲ್ ಚಾಲೆಂಜರ್ಸ್ ತಂಡ ಐಪಿಎಲ್ 2026ರ ಉದ್ಘಾಟನಾ ಪಂದ್ಯದಲ್ಲಿ ಸನ್ ರೈಸರ್ಸ್ ತಂಡವನ್ನು 6 ವಿಕೆಟ್ ಗಳಿಂದ ಸೋಲಿಸುವ ಶುಭಾರಂಭಗೈದಿದೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮಾರ್ಚ್ 28 ಭಾನುವಾರದಂದು ನಡೆದ ಉದ್ಘಾಟನಾ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಸನ್ ರೈಸರ್ಸ್ ಹೈದರಾಬಾದ್ ತಂಡ ನಿಗದಿತ 20 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 201 ರನ್ ಬಾರಿಸಿದರು. ಇದಕ್ಕುತ್ತರವಾಗಿ ಆರ್ ಸಿಬಿ ತಂಡ ಇನ್ನೂ 25 ಎಸೆತಗಳು ಬಾಕಿ ಉಳಿದಿರುವಂತೆಯೇ 4 ವಿಕೆಟ್ ಕಳೆದುಕೊಂಡು ಗೆಲುವಿನ ದಡ ತಲುಪಿತು. ()ಸ್ಪರ್ಧಾತ್ಮಕ ಮೊತ್ತ ಬೆಂಬತ್ತಿ ಹೊರಟ ಆರ್ ಸಿಬಿ ಪರ ಫಿಲ್ ಸಾಲ್ಟ್ ಮೊದಲನೇ ಓವರ್ ನಲ್ಲೇ ಎರಡು ಬೌಂಡರಿ ಬಾರಿಸಿ ಭರವಸೆ ಮೂಡಿಸಿದ್ದರು. ಆದರೆ ಅನುಭವಿ ಎಡಗೈ ವೇಗಿ ಜಯದೇವ್ ಉನಾದ್ಕತ್ ಅವರು ಎಸೆದ ಇನ್ನಿಂಗ್ಸ್ ನ 2ನೇ ಓವರ್ ನ ಮೊದಲನೇ ಎಸೆತದಲ್ಲೇ ಫಿಲ್ ಸಾಲ್ಟ್ ಅವರನ್ನು ಕ್ಲಾಸನ್ ಗೆ ಕ್ಯಾಚ್ ಕೊಡಿಸಿ ಆರ್ ಸಿಬಿಗೆ ಆಘಾತ ನೀಡಿದರು. ಪಡಿಕ್ಕಲ್ ರಿಯಲ್ ಇಂಪ್ಯಾಕ್ಟ್ ಈ ಸಂದರ್ಭದಲ್ಲಿ ಕ್ರೀಸಿಗಿಳಿದ ಕನ್ನಡಿಗ ದೇವದತ್ ಪಡಿಕ್ಕಲ್ ತಂಡ ತನ್ನನ್ನೇಕೆ ಇಂಪ್ಯಾಕ್ಟ್ ಪ್ಲೇಯರ್ ಆಗಿ ಕಣಕ್ಕಿಳಿಸುತ್ತಿದೆ ಎಂಬುದನ್ನು ಸಮರ್ಥಿಸಿಕೊಳ್ಳುವಂತೆ ಆಡಿದರು. ವಿರಾಟ್ ಕೊಹ್ಲಿ ಅವರನ್ನು ಸೇರಿಕೊಂಡ ಅವರು ಪವರ್ ಪ್ಲೇನ ಮೊದಲ ಆರು ಓವರ್ ಗಳಲ್ಲಿ ತಂಡದ ಮೊತ್ತವನ್ನು 76 ರನ್ ತಲುಪಿಸಿದರು. ಎದುರಾಳಿ ಬೌಲರ್ ಗಳ ಎಸೆತಗಳನ್ನು ಮನಸೋ ಇಚ್ಛೆ ದಂಡಿಸಿದ ಅವರು ಕೇವಲ 21 ಓವರ್ ಗಳಲ್ಲಿ ಅರ್ಧಶತಕ ಪೂರೈಸಿದರು. ಕೊಹ್ಲಿ ಮತ್ತು ಅವರು ಕೇವಲ 7.2 ಓವರ್ ಗಳಲ್ಲಿ 100 ರನ್ ಗಡಿ ತಲುಪಿಸಿದ್ದು ಎದುರಾಳಿಗಳ ಕೈಯಿಂದ ಪಂದ್ಯವನ್ನು ಕಿತ್ತುಕೊಂಡರು. ಇವರಿಬ್ಬರು 2ನೇ ವಿಕೆಟ್ ಗೆ 101 ರನ್ ಗಳ ಜೊತೆಯಾಟವಾಡಿದರು. ಹರ್ಷ್ ದುಬೆ ಅವರು ಎಸೆದ 9ನೇ ಓವರ್ ನಲ್ಲಿ ದೊಡ್ಡ ಹೊಡೆತಕ್ಕೆ ಪ್ರಯತ್ನಿಸಿದ ಪಡಿಕ್ಕಲ್ ಎಡವಿ ಕ್ಲಾಸನ್ ಗೆ ಕ್ಯಾಚಿತ್ತರು. ಆದರೆ ಅವರು ಅದಾಗಲೇ ತಮ್ಮ ಕಾರ್ಯವನ್ನು ಮುಗಿಸಿದ್ದರಿಂದ ಆರ್ ಸಿಬಿಗೆ ಗೆಲುವಿನ ಹಾದಿ ಸುಗಮವಾಯಿತು. ಔಟಾಗುವ ಮುಂಚೆ ಅವರು 26 ಎಸೆತಗಳಿಂದ 7 ಬೌಂಡರಿ ಮತ್ತು 4 ಸಿಕ್ಸರ್ ಗಳಿದ್ದ 61 ರನ್ ಗಳಿಸಿದ್ದರು. ಮತ್ತೊಮ್ಮೆ ಚೇಸ್ ಕಿಂಗ್ ಇದಾದ ಬಳಿಕ ಚೇಸ್ ಕಿಂಗ್ ವಿರಾಟ್ ಕೊಹ್ಲಿ ಮತ್ತು ರಜತ್ ಪಾಟೀದಾರ್ ಅವರು 4ನೇ ವಿಕೆಟ್ ಗೆ 53 ರನ್ ಗಳ ಜೊತೆಯಾಟವಾಡಿದರು. ನಾಯಕನ ಆಟವಾಡಿದ ಪಾಟೀದಾರ್ ಕೇವಲ 12 ಎಸೆತಗಳಲ್ಲಿ 2 ಬೌಂಡರಿ ಮತ್ತು 3 ಸಿಕ್ಸರ್ ಗಳನ್ನು ಒಳಗೊಂಡ 31 ರನ್ ಗಳಿಸಿ ಔಟಾದರು. ಮುಂದಿನ ಎಸೆತದಲ್ಲೇ ದೊಡ್ಡ ಹೊಡೆತಕ್ಕೆ ಪ್ರಯತ್ನಿಸಿದ ಜಿತೇಶ್ ಶರ್ಮಾ ಡಕೌಟ್ ಆಗಿ ಮರಳಿದರು. ಈ ಹಂತದಲ್ಲಿ ಟಿಮ್ ಡೇವಿಡ್ ಜೊತೆ ಸೇರಿಕೊಂಡು ಇನ್ನಿಂಗ್ಸ್ ಮುಂದುವರಿಸಿದ ಕೊಹ್ಲಿ ಕೇವಲ 33 ಎಸೆತಗಳಲ್ಲಿ ತಮ್ಮ 72ನೇ ಐಪಿಎಲ್ ಅರ್ಧಶತಕ ಪೂರೈಸಿಕೊಂಡರು. ಜೊತೆಗೆ ಗೆಲುವಿನ ದಡವನ್ನೂ ತಲುಪಿಸಿದರು. ಇದಕ್ಕೂ ಮೊದಲು ಟಾಸ್ ಸೋತು ಬ್ಯಾಟಿಂಗ್ ಗೆ ಇಳಿಸಲ್ಪಟ್ಟ ಸನ್ ರೈಸರ್ಸ್ ಹೈದರಾಬಾದ್ ತಂಡಕ್ಕೆ ಚೊಚ್ಚಲ ಐಪಿಎಲ್ ಪಂದ್ಯವನ್ನು ಆಡಿದ ಅವರು ಹೊಡೆತ ನೀಡಿದರು. ಸ್ಫೋಟಕ ಬ್ಯಾಟರ್ ಅಭಿಷೇಕ್ ಶರ್ಮಾ(8 ಎಸೆತದಲ್ಲಿ 7 ರನ್), ಟ್ರಾವಿಸ್ ಹೆಡ್(9 ಎಸೆತದಲ್ಲಿ 11 ರನ್) ಅವರ ವಿಕೆಟ್ ಗಳನ್ನು ಒಂದೇ ಓವರ್ ನಲ್ಲಿ ಕಿತ್ತ ಅವರು ನಿತೇಶ್ ಕುಮಾರ್ ರೆಡ್ಡಿ(6 ಎಸೆತದಲ್ಲಿ 1 ರನ್) ಅವರ ವಿಕೆಟ್ ಅನ್ನು ಸಹ ಪಡೆದರು. ಹೀಗಾಗಿ 5ನೇ ಓವರ್ ನಲ್ಲಿ 29 ರನ್ ಗಳಿಗೆ 3 ವಿಕೆಟ್ ಗಳು ಉರುಳಿದರು. ಈ ಹಂತದಲ್ಲಿ ಹೆನ್ರಿಚ್ ಕ್ಲಾಸನ್ ಅವರನ್ನು ಸೇರಿಕೊಂಡ ನಾಯಕ ಇಶಾನ್ ಕಿಶನ್ ಅವರು ರನ್ ಧಾರಣೆ ಬೀಳದಂತೆ ನೋಡಿಕೊಂಡರು. ಇವರಿಬ್ಬರು 4ನೇ ವಿಕೆಟ್ ಗೆ 99 ರನ್ ಗಳ ಜೊತೆಯಾಟವಾಡಿದರು. ಇಶಾನ್ ಕಿಶನ್ ಅವರು 38 ಎಸೆತಗಳಿಂದ 8 ಬೌಂಡರಿ ಮತ್ತು 5 ಸಿಕ್ಸರ್ ಗಳಿದ್ದ 80 ರನ್ ಬಾರಿಸಿದರೆ, ಕ್ಲಾಸನ್ ಅವರು 22 ಎಸೆತಗಳಿಂದ 2 ಬೌಂಡರಿ ಮತ್ತು 1 ಸಿಕ್ಸರ್ ಗಳಿದ್ದ 31 ರನ್ ಬಾರಿಸಿದರು. ಇಶಾನ್ ಅವರ ವಿಕೆಟ್ ಅನ್ನು ಅವರು ಪಡೆದರು. ಅಂತಿಮ ಓವರ್ ಗಳಲ್ಲಿ ಅನಿಕೇತ್ ವರ್ಮಾ ಅವರು 18 ಎಸೆತಗಳಲ್ಲಿ 3 ಸಿಕ್ಸರ್ ಮತ್ತು 4 ಬೌಂಡರಿಗಳನ್ನೊಳಗೊಂಡ 43 ರನ್ ಗಳಿಸಿದ್ದರಿಂದ ಸನ್ ರೈಸರ್ಸ್ ತಂಡ 200ರ ಗಡಿ ದಾಟಿತು. ಆರ್ ಸಿಬಿ ಪರ ಜಾಕೋಬ್ ಡಫಿ ಮತ್ತು ರೊಮಾರಿಯೋ ಶೆಫರ್ಡ್ ತಲಾ 3 ವಿಕೆಟ್ ಪಡೆದರು. ಸಂಕ್ಷಿಪ್ತ ಸ್ಕೋರ್ ಸನ್ ರೈಸರ್ಸ್ ಹೈದರಾಬಾದ್ 20 ಓವರ್ ಗಳಲ್ಲಿ 201/9, ಇಶಾನ್ ಕಿಶನ್ 80(38), ಹೈನ್ರಿಚ್ ಕ್ಲಾಸನ್ 31(22), ಅನಿಕೇತ್ ವರ್ಮಾ 43(18), ಜಾಕೋಬ್ ಡಫಿ 22/3, ರೊಮಾರಿಯೊ ಶೆಫರ್ಡ್ 54ಕ್ಕೆ 3. ರಾಯಲ್ ಚಾಲೆಂಜರ್ಸ್ ಬೆಂಗಳೂರು 15.4 ಓವರ್ ಗಳಲ್ಲಿ 203/4, ವಿರಾಟ್ ಕೊಹ್ಲಿ ಅಜೇಯ 69(38), ರಜತ್ ಪಾಟೀದಾರ್ 61(26), ರಜತ್ ಪಾಟೀದಾರ್ 31(12), ಡೇವಿಡ್ ಪೇಯ್ನ್ 35ಕ್ಕೆ 2, ಜಯದೇವ್ ಉನಾದ್ಕತ್ 35ಕ್ಕೆ 2.
ರಾಯಚೂರು| ನಿಂತಿದ್ದ ಲಾರಿಗೆ ಬೈಕ್ ಢಿಕ್ಕಿ: ಇಬ್ಬರು ಸವಾರರು ಮೃತ್ಯು
ಸಿಂಧನೂರು: ನಿಂತಿದ್ದ ಲಾರಿಗೆ ಬೈಕ್ ಢಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರರಿಬ್ಬರು ಮೃತಪಟ್ಟ ಘಟನೆ ಶನಿವಾರ ರಾತ್ರಿ ತಾಲೂಕಿನ ಕುನ್ನಟಗಿ ಕ್ಯಾಂಪಿನ ಪೆಟ್ರೋಲ್ ಬಂಕ್ ಬಳಿ ಸಂಭವಿಸಿದೆ. ಮಲ್ಲನಗೌಡ ಕಣ್ಣೂರು (37), ವಿರೂಪಾಕ್ಷಿ (38) ಮೃತ ಬೈಕ್ ಸವಾರರು. ಇವರು ಸಿಂಧನೂರಿನಿಂದ ತಮ್ಮ ಸ್ವಗ್ರಾಮ ಕಣ್ಣೂರು ಕಡೆಗೆ ಬೈಕ್ನಲ್ಲಿ ತೆರಳುತ್ತಿದ್ದಾಗ ಕುನ್ನಟಗಿ ಕ್ಯಾಂಪ್ ನ ಪೆಟ್ರೋಲ್ ಬಂಕ್ ಬಳಿ ನಿಂತಿದ್ದ ಲಾರಿಗೆ ಢಿಕ್ಕಿ ಹೊಡೆದಿದೆ. ಘಟನೆಯಲ್ಲಿ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಘಟನಾ ಸ್ಥಳಕ್ಕೆ ಗ್ರಾಮೀಣ ಠಾಣೆ ಪಿಎಸ್ಐ ಸೇರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ದ.ಕ. ಜಿಲ್ಲಾ ಎಸ್ಪಿ ಡಾ.ಅರುಣ್ ಕೆ., ಎಸಿಪಿ ನಜ್ಮಾ ಫಾರೂಕಿಗೆ ಸಿಎಂ ಪದಕ
ಮಂಗಳೂರು, ಮಾ.28: ದಕ್ಷಿಣ ಕನ್ನಡ ಎಸ್ಪಿ ಡಾ.ಅರುಣ್ ಕೆ., ಮಂಗಳೂರು ನಗರ ಸಂಚಾರ ಉಪ ವಿಭಾಗದ ಎಸಿಪಿ ನಜ್ಮಾ ಫಾರೂಕಿ ಸಹಿತ ಹಲವು ಪೊಲೀಸ್ ಅಧಿಕಾರಿಗಳಿಗೆ 2025ನೇ ಸಾಲಿನ ಸಿಎಂ ಪದಕ ಪ್ರಕಟಗೊಂಡಿದ್ದು, ಎ.2ರಂದು ಬೆಂಗಳೂರಿನಲ್ಲಿ ಸಿಎಂ ಪದಕ ಪ್ರದಾನ ಮಾಡಲಾಗುವುದು. ಕೆಎಸ್ಆರ್ಪಿ 7ನೇ ಪಡೆ ಎಆರ್ಎಸ್ಐ ಕೆ.ಎಂ.ಶಿವಶೇಖರ, ಡಿಎಆರ್ ಎಎಸ್ಐ ತಿಲಕ್ರಾಜ್, ಬಂಟ್ವಾಳ ಪೊಲೀಸ್ ಠಾಣೆ ಹೆಡ್ಕಾನ್ಸ್ಟೇಬಲ್ ಇರ್ಷಾದ್ ಪಿ., ಕಂಕನಾಡಿ ನಗರ ಠಾಣೆಯ ಹೆಡ್ಕಾನ್ಸ್ಟೇಬಲ್ ಜಯಾನಂದ ಎನ್., ಮಂಗಳೂರು ನಗರ ಸೈಬರ್ ಕ್ರೈಂ ಠಾಣೆಯ ಹೆಡ್ಕಾನ್ಸ್ಟೇಬಲ್ಗಳಾದ ಮಣಿ ಎಂ.ಎನ್. ಮತ್ತು ಸತೀಶ್ (ಪ್ರಸ್ತುತ ಪದೋನ್ನತಿಗೊಂಡು ಬಜಪೆ ಠಾಣೆಯಲ್ಲಿದ್ದಾರೆ). ಬೆಳ್ತಂಗಡಿ ಗ್ರಾಮಾಂತರ ಪೊಲೀಸ್ ಠಾಣೆಯ ಹೆಡ್ಕಾನ್ಸ್ಟೇಬಲ್ ವಿಜಯ ಕುಮಾರ್ ರೈ, ಉರ್ವ ಪೊಲೀಸ್ ಠಾಣೆಯ ಮಹಿಳಾ ಹೆಡ್ಕಾನ್ಸ್ಟೇಬಲ್ ಲಲಿತಾ ಲಕ್ಷ್ಮೀ ಅವರು ಆಯ್ಕೆಯಾಗಿದ್ದಾರೆ.
IPL 2026 | ಇಂಪ್ಯಾಕ್ಟ್ 'ಕಿಂಗ್' ಪಡಿಕ್ಕಲ್; RCBಯಿಂದ ಶುಭಾರಂಭ
SRH ವಿರುದ್ಧ 6 ವಿಕೆಟ್ ಗಳ ಭರ್ಜರಿ ಜಯ
ಪಶ್ಚಿಮ ಏಶ್ಯ ಬಿಕ್ಕಟ್ಟು | ಟ್ರಂಪ್-ಮೋದಿ ಮಹತ್ವದ ಮಾತುಕತೆಯಲ್ಲಿ ಎಲಾನ್ ಮಸ್ಕ್ ಭಾಗಿ; ವರದಿಯನ್ನು ಅಲ್ಲಗಳೆದ ಭಾರತ
ಹೊಸದಿಲ್ಲಿ, ಮಾ. 28: ಮಾರ್ಚ್ 24ರಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ನಡುವೆ ಮಾತ್ರ ದೂರವಾಣಿ ಮಾತುಕತೆ ನಡೆದಿತ್ತು ಎಂದು ಶನಿವಾರ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಸ್ಪಷ್ಟಪಡಿಸಿದ್ದು, ಈ ಮಾತುಕತೆಯಲ್ಲಿ ಎಲಾನ್ ಮಸ್ಕ್ ಭಾಗಿಯಾಗಿದ್ದರು ಎಂಬ ವರದಿಗಳನ್ನು ಅಲ್ಲಗಳೆದಿದೆ. ಮಂಗಳವಾರ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ನಡೆದ ದೂರವಾಣಿ ಕರೆಯಲ್ಲಿ ಟೆಸ್ಲಾ ಸಿಇಒ ಎಲಾನ್ ಮಸ್ಕ್ ಕೂಡ ಭಾಗಿಯಾಗಿದ್ದರು ಎಂದು ಶುಕ್ರವಾರ ದಿ ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿತ್ತು. ನ್ಯೂಯಾರ್ಕ್ ಟೈಮ್ಸ್ ವರದಿಯ ಪ್ರಕಾರ, ಪಶ್ಚಿಮ ಏಶ್ಯ ಬಿಕ್ಕಟ್ಟಿನ ಕುರಿತು ಎರಡು ರಾಷ್ಟ್ರಗಳ ಮುಖ್ಯಸ್ಥರ ನಡುವೆ ನಡೆದ ಮಾತುಕತೆಯಲ್ಲಿ ಖಾಸಗಿ ವ್ಯಕ್ತಿಯೊಬ್ಬರು ಭಾಗಿಯಾಗಿರುವುದು ಅಸಹಜ ನಿದರ್ಶನವಾಗಿದೆ ಎಂದು ಹೇಳಲಾಗಿದೆ. ಈ ವರದಿಯ ಕುರಿತು ಸ್ಪಷ್ಟೀಕರಣ ನೀಡಿರುವ ವಿದೇಶಾಂಗ ವ್ಯವಹಾರಗಳ ಸಚಿವಾಲಯ, “ನಾವು ವರದಿಯನ್ನು ನೋಡಿದ್ದೇವೆ. ಮಾರ್ಚ್ 24ರಂದು ನಡೆದ ದೂರವಾಣಿ ಕರೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಡುವೆ ಮಾತ್ರ ನಡೆದಿತ್ತು” ಎಂದು ಹೇಳಿದೆ ಎಂದು ಎಎನ್ಐ ಸುದ್ದಿ ಸಂಸ್ಥೆ ವರದಿ ಮಾಡಿದೆ. “ಈ ಹಿಂದೆ ಹೇಳಿದಂತೆ, ಈ ಮಾತುಕತೆಯು ಪಶ್ಚಿಮ ಏಶ್ಯ ಬಿಕ್ಕಟ್ಟಿನ ಕುರಿತು ದೃಷ್ಟಿಕೋನಗಳನ್ನು ವಿನಿಮಯ ಮಾಡಿಕೊಳ್ಳಲು ಅವಕಾಶ ಒದಗಿಸಿತು” ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರರು ತಿಳಿಸಿದ್ದಾರೆ ಎಂದು ಎಎನ್ಐ ವರದಿ ಮಾಡಿದೆ. ಮಹತ್ವದ ಇಂಧನ ಮಾರ್ಗಗಳನ್ನು ರಕ್ಷಿಸಲು ಜಾಗತಿಕ ಪ್ರಯತ್ನಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಮಾರ್ಚ್ 24ರಂದು ದೂರವಾಣಿಯಲ್ಲಿ ಮಾತುಕತೆ ನಡೆಸಿದ್ದ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಪಶ್ಚಿಮ ಏಶ್ಯದಲ್ಲಿ ಮುಂದುವರಿದಿರುವ ಬಿಕ್ಕಟ್ಟಿನ ಕುರಿತು ಚರ್ಚಿಸಿದ್ದರು. ಈ ಮಾತುಕತೆಯ ಬಳಿಕ ಪ್ರಮುಖ ಜಲಮಾರ್ಗವಾದ ಹಾರ್ಮುಝ್ ಜಲಸಂಧಿಯನ್ನು ಮುಕ್ತವಾಗಿಡುವ ಪ್ರಾಮುಖ್ಯತೆಯ ಕುರಿತು ನಾನು ಚರ್ಚಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.
‘IPL ಟಿಕೆಟ್’ | ಪ್ರತಿಪಕ್ಷ ಬಿಜೆಪಿಯಲ್ಲೇ ‘ಬೇಕು-ಬೇಡ ಭಿನ್ನಮತ’ !
ಬೆಂಗಳೂರು: ಐಪಿಎಲ್ ಟಿ-20 ಕ್ರಿಕೆಟ್ ಟೂರ್ನಿ ಆರಂಭವಾಗಿದ್ದು, ಪಂದ್ಯ ವೀಕ್ಷಣೆ ಟಿಕೆಟ್ಗಾಗಿ ಜನಪ್ರತಿನಿಧಿಗಳ(ಶಾಸಕರು) ನಡುವೆ ಜಟಾಪಟಿ ಶುರುವಾಗಿದೆ. ಪ್ರತಿಪಕ್ಷ ಬಿಜೆಪಿಯಲ್ಲೇ ಐಪಿಎಲ್ ಟಿಕೆಟ್ ‘ಬೇಕು-ಬೇಡ’ ಎಂದು ಭಿನ್ನಮತ ಸ್ಟೋಟಗೊಂಡಿದೆ. ಇತ್ತೀಚೆಗೆ ಐಪಿಎಲ್ ಸಂಭ್ರಮಾಚರಣೆಯ ವೇಳೆ 11 ಮಂದಿ ಅಮಾಯಕ ಯುವಕರು ಬಲಿಯಾದ ಕಹಿ ಘಟನೆ ಜನರ ನೆನಪಿನಿಂದ ಮಾಸುವ ಮುನ್ನವೇ ಮತ್ತೊಂದು ಆವೃತ್ತಿ ಆರಂಭಗೊಂಡಿದೆ. ಜನ ಸಾಮಾನ್ಯರ ಕಷ್ಟ-ಕಾರ್ಪಣ್ಯಗಳಿಗೆ ಸ್ಪಂದಿಸಬೇಕಾದ ಶಾಸಕರೇ ಜನಹಿತವನ್ನು ಮರೆತು ಐಪಿಎಲ್ ಕ್ರಿಕೆಟ್ ನೆಪದಲ್ಲಿ ಮೋಜಿ-ಮಸ್ತಿಗೆ ಮುಂದಾಗಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ. ಐಪಿಎಲ್ ಪಂದ್ಯ ವೀಕ್ಷಿಸಲು ನಾಮುಂದು-ತಾಮುಂದೆ ಎಂದು ಜನ ದುಬಾಲು ಬೀಳುವುದು ಸಹಜ. ಆದರೆ, ಐಪಿಎಲ್ ಟಿಕೆಟ್ಗಾಗಿ ಜನಪ್ರತಿನಿಧಿಗಳು ಪೈಪೋಟಿಗೆ ಇಳಿದಿರುವುದು ನಿಜಕ್ಕೂ ಶೋಚನೀಯ. ವಿಧಾನಸಭೆ ಕಲಾಪದಲ್ಲೇ ‘ಐಪಿಎಲ್ ಟಿಕೆಟ್ ಬೇಕು’ ಎಂದು ಶಾಸಕರು ಒತ್ತಾಯ ಮಾಡಿದ್ದು ವಿವಿಧ ರೀತಿಯ ವ್ಯಾಖ್ಯಾನಗಳಿಗೆ ಕಾರಣವಾಗಿದೆ. ಇದೀಗ ಈ ವಿಚಾರ ಬರೀ ಚರ್ಚೆಗೆ ಸೀಮಿತವಾಗಿಲ್ಲ. ಬದಲಿಗೆ ಪ್ರತಿಪಕ್ಷ ಬಿಜೆಪಿಯಲ್ಲಿನ ಭಿನ್ನಮತ ಸ್ಟೋಟಕ್ಕೂ ಕಾರಣವಾಗಿದೆ. ಐಪಿಎಲ್ ಟಿಕೆಟ್ ರಾಜಕೀಯ ಆಯಾಮ ಪಡೆದುಕೊಂಡಿದೆ. ಬಿಜೆಪಿ ಒಳಗೊಳಗಿನ ಭಿನ್ನಮತವನ್ನು ಬಹಿರಂಗಪಡಿಸುವ ರಾಜಕೀಯ ಪ್ರಸಂಗಕ್ಕೂ ಸಾಕ್ಷಿಯಾಗಿದೆ ಎಂಬುದು ಕುತೂಹಲಕರ ಸಂಗತಿಯಾಗಿದೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಹಿರಿಯ ಶಾಸಕ ಎಸ್.ಸುರೇಶ್ ಕುಮಾರ್, ಸಂಸದ ತೇಜಸ್ವಿ ಸೂರ್ಯ ಸೇರಿದಂತೆ ಇನ್ನಿತರ ಮುಖಂಡರು ‘ನಮಗೆ ಐಪಿಎಲ್ ಟಿಕೆಟ್ ಬೇಡ. ವಿಐಪಿ ಟಿಕೆಟ್ ಬಹಿಷ್ಕರಿಸಬೇಕು’ ಎಂದು ಕರೆ ನೀಡಿದ್ದಾರೆ. ಆದರೆ, ವಿಧಾನಸಭೆ ವಿಪಕ್ಷ ನಾಯಕ ಆರ್.ಅಶೋಕ್, ಶಾಸಕ ಡಾ.ಸಿ.ಎನ್.ಅಶ್ವತ್ಥ ನಾರಾಯಣ್ ಸೇರಿದಂತೆ ಕೆಲ ಶಾಸಕರು ಐಪಿಎಲ್ ಟಿಕೆಟ್ ಕೊಡಿಸಬೇಕು ಎಂದು ಆಗ್ರಹಿಸಿದ್ದರು. ‘ತಿಂಗಳಿಗೆ 1,600 ರೂ.ಮಾತ್ರ ಬಾಡಿಗೆಗೆ ಕೆಎಸ್ಸಿಎಗೆ ಸರಕಾರ 16 ಎಕರೆ ಭೂಮಿ ನೀಡಿದೆ. ಆದರೆ, ಶಾಸಕರಿಗೆ ಐಪಿಎಲ್ ಟಿಕೆಟ್ ಕೊಡಿ ಎಂದು ನಾವು ಬೇಡುವ ಸ್ಥಿತಿ ನಿರ್ಮಾಣವಾಗಿದೆ’ ಎಂದು ಅಶೋಕ್ ಅಸಮಾಧಾನ ವ್ಯಕ್ತಪಡಿಸಿದ್ದರು. ಇದೀಗ ಈ ವಿಚಾರವು ಬಿಜೆಪಿ ಪಕ್ಷದೊಳಗಿನ ಗುಂಪುಗಾರಿಕೆ, ನಾಯಕತ್ವದ ಮೇಲಿನ ಅಸಮಾಧಾನ ಮತ್ತು ನಿರ್ಧಾರಗಳ ಮೇಲೆ ಪ್ರಭಾವ ಬೀರುವವರ ಬಗ್ಗೆ ಇರುವ ಅಸಹನೆಯ ಪ್ರತೀಕವೂ ಆಗಿದೆ. ನನಗೆ ಐಪಿಎಲ್ ಪಾಸ್ ಬೇಡ ಎಂದ ಶಾಸಕ ಸುರೇಶ್ ಕುಮಾರ್ ‘ನಾವೆಲ್ಲರೂ ವೇದಿಕೆಯ ಮೇಲೆ ನಮ್ಮನ್ನು ‘ಜನಸೇವಕರು’ ಎಂದು ಕರೆದುಕೊಳ್ಳುತ್ತೇವೆ. ಇಂತಹ ಹಿನ್ನೆಲೆಯಲ್ಲಿ ಈ ವಿಐಪಿ ಸಂಸ್ಕೃತಿಗೆ ಪುರಸ್ಕಾರ ಸಿಗುತ್ತಿರುವುದು ಆಶ್ಚರ್ಯವನ್ನುಂಟು ಮಾಡುತ್ತಿದೆ. ನಾನು ಮಾಧ್ಯಮಗಳ ಮೂಲಕ, ಸದ್ಯದಲ್ಲೇ ನಡೆಯಲಿರುವ ಐಪಿಎಲ್ ಪಂದ್ಯಕ್ಕೆ ಪ್ರತಿಯೊಬ್ಬ ಶಾಸಕರಿಗೆ ತಲಾ ಎರಡು ಟಿಕೆಟ್ ಹಾಗೂ ಮುಂದಿನ ದಿನಗಳಲ್ಲಿ ಐದು ಟಿಕೆಟ್ ಕೊಡುವ ಸುದ್ಧಿ ಓದಿ ತಿಳಿದೆ. ಇದು ಖಂಡಿತಾ ಸರಿಯಾದ ನಿರ್ಧಾರವಲ್ಲ. ವಿಧಾನಸಭೆಯಲ್ಲಿ ಈ ಚರ್ಚೆ ನಡೆದ ಕೇವಲ 24 ಗಂಟೆಯಲ್ಲೇ ಸರಕಾರ ಈ ರೀತಿ ಘೋಷಣೆ ಮಾಡಲು ಉತ್ಸುಕತೆ ತೋರಿರುವುದು ನನಗೂ ಆಶ್ಚರ್ಯ ತಂದಿದೆ. ನಮ್ಮ ಅದೆಷ್ಟೋ ಪ್ರಶ್ನೆಗಳಿಗೆ ವರ್ಷಾನುಗಟ್ಟಲೆ ಫಲಿತಾಂಶ ಸಿಕ್ಕಿರುವುದಿಲ್ಲ. ಆದರೆ, ಶಾಸಕರ ವಿಷಯ ಬಂದ ತಕ್ಷಣ ಇಷ್ಟು ಬೇಗ ಕೆಲಸ ಮಾಡಿಬಿಟ್ಟರು ಎಂದು ಜನ ಮಾತನಾಡಿಕೊಳ್ಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ, ಮಾಧ್ಯಮಗಳ ಮೂಲಕ ಶಾಸಕರಿಗೆ ಟಿಕೆಟ್ ಕೊಡುತ್ತಾರೆಂದು ನಾನು ಏನು ತಿಳಿದುಕೊಂಡಿದ್ದೇನೋ, ಆ ಪಾಸ್ಗಳನ್ನು ಅಥವಾ ಆ ಟಿಕೆಟ್(ಗಳನ್ನು)ನಾನು ಸವಿನಯವಾಗಿ ನಿರಾಕರಿಸುತ್ತೇನೆ. ಸ್ಪಷ್ಟ ಮಾತುಗಳಲ್ಲಿ ಹೇಳುವುದಾದರೆ, ದಯವಿಟ್ಟು ನನಗೆ ಆ ಟಿಕೆಟ್(ಗಳು) ಖಂಡಿತ ಬೇಡ’. -ಎಸ್.ಸುರೇಶ್ ಕುಮಾರ್, ಬಿಜೆಪಿ ಶಾಸಕ
ಕುಂದಾಪುರ| ಕಾರು - ಕ್ಯಾಂಟರ್ ಢಿಕ್ಕಿ: ಇಬ್ಬರು ಮೃತ್ಯು, ನಾಲ್ವರಿಗೆ ಗಂಭೀರ ಗಾಯ
ಕುಂದಾಪುರ: ಕಾರು ಹಾಗೂ ಕ್ಯಾಂಟರ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಕಾರಿನಲ್ಲಿದ್ದ ಇಬ್ಬರು ಮೃತಪಟ್ಟು ನಾಲ್ವರು ಗಾಯಗೊಂಡ ಘಟನೆ ನಾವುಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಶನಿವಾರ ಸಂಜೆ ನಡೆದಿದೆ. ಮಮತಾ (36), ಅವರ ಪುತ್ರಿ ದೃತಿಕಾ (14) ಮೃತರು. ಮಮತಾ ಅವರ ಪತಿ ನೆಲಮಂಗಲ ನಿವಾಸಿ ರಾಘು, ಪುತ್ರಿ ಜಾಹ್ನವಿ, ಕಾರಿನಲ್ಲಿದ್ದ ಚಾರ್ವಿ, ಕಿರಣ್ ಅವರಿಗೆ ಗಾಯಗಳಾಗಿದೆ. ಗಾಯಾಳುಗಳನ್ನು ವಿವಿಧ ಆಸ್ಪತ್ರೆಗಳಿಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಇವರೆಲ್ಲರೂ ಕಾರಿನಲ್ಲಿ ಬೆಂಗಳೂರಿನಿಂದ ಉಡುಪಿಗೆ ಆಗಮಿಸಿ ಗೋಕರ್ಣದತ್ತ ಸಾಗುತ್ತಿದ್ದಾಗ ಈ ದುರ್ಘಟನೆ ನಡೆದಿದೆ ಎಂದು ತಿಳಿದುಬಂದಿದೆ. ಘಟನಾ ಸ್ಥಳಕ್ಕೆ ಬೈಂದೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
Assam | ಬಿಜೆಪಿ ಅಧಿಕಾರಕ್ಕೆ ಮರಳಿದರೆ ಮಿಯಾಗಳ ಬೆನ್ನು ಮೂಳೆ ಮುರಿಯುವೆ: ಸಿಎಂ ಹಿಮಂತ ಬಿಸ್ವ ಶರ್ಮ ಬೆದರಿಕೆ
ಗುವಾಹಟಿ, ಮಾ. 28: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಒಂದು ವೇಳೆ ಬಿಜೆಪಿ ಮತ್ತೆ ಅಧಿಕಾರಕ್ಕೆ ಮರಳಿದರೆ, ಮಿಯಾಗಳ ಬೆನ್ನು ಮೂಳೆ ಮುರಿಯುವೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮ ಬೆದರಿಕೆ ಒಡ್ಡಿದ್ದಾರೆ. ಲಖೀಂಪುರ್ ಜಿಲ್ಲೆಯ ಧಕೌಖಾನಾದಲ್ಲಿ ಆಯೋಜಿಸಲಾಗಿದ್ದ ಚುನಾವಣಾ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಹಿಮಂತ ಬಿಸ್ವ ಶರ್ಮ, “ರಾಜ್ಯದ ಮೂಲನಿವಾಸಿಗಳಿಗಾಗಿ ನನ್ನ ಸರ್ಕಾರ ಕೆಲಸ ಮಾಡಿದೆ” ಎಂದು ಹೇಳಿದ್ದಾರೆ. “ಯಾರು ಬಾಂಗ್ಲಾದೇಶದಿಂದ ವಲಸೆ ಬಂದು ಅಸ್ಸಾಂ ಭೂಮಿ ಮತ್ತು ಮನೆಗಳನ್ನು ಅತಿಕ್ರಮಿಸಿದ್ದಾರೊ, ಅಂಥವರ ಕೈ ಮತ್ತು ಕಾಲುಗಳನ್ನು ರಾಜಕೀಯವಾಗಿ ನಾವು ಮುರಿಯುತ್ತೇವೆ” ಎಂದು ಅವರು ಘೋಷಿಸಿದ್ದಾರೆ. “ನಾವು ಈ ಬಾರಿ ಬಾಂಗ್ಲಾದೇಶಿ ಮಿಯಾಗಳ ಬೆನ್ನು ಮೂಳೆಯನ್ನು ಮುರಿಯಲಿದ್ದು, ಅವರು ಅಸ್ಸಾಂ ಜನರನ್ನು ಎದುರಿಸಲೂ ಸಾಧ್ಯವಾಗುವುದಿಲ್ಲ” ಎಂದು ಅವರು ಎಚ್ಚರಿಸಿದ್ದಾರೆ. ಕಳೆದ ಕೆಲವು ತಿಂಗಳಲ್ಲಿ ಹಿಮಂತ ಬಿಸ್ವ ಶರ್ಮ ಮಿಯಾಗಳನ್ನು ಗುರಿಯಾಗಿಸಿಕೊಂಡು ಸರಣಿ ಹೇಳಿಕೆಗಳನ್ನು ನೀಡಿದ್ದಾರೆ. ಅದರಲ್ಲಿ “ನನ್ನ ಕೆಲಸ ಅವರು ನರಳುವಂತೆ ಮಾಡುವುದು” ಎಂಬ ಹೇಳಿಕೆಯೂ ಸೇರಿದೆ. ಚುನಾವಣಾ ಮತಪಟ್ಟಿಯಿಂದ ಮಿಯಾ ಮುಸ್ಲಿಮರ ಹೆಸರನ್ನು ತೆಗೆದು ಹಾಕಲು ಅರ್ಜಿಗಳನ್ನು ಸಲ್ಲಿಸುವಂತೆ ಅವರು ಬಿಜೆಪಿ ಕಾರ್ಯಕರ್ತರಿಗೆ ಸೂಚನೆಯನ್ನೂ ನೀಡಿದ್ದಾರೆ.
Ayodhya | ಉತ್ತರ ಪ್ರದೇಶ ಸಚಿವರ ಯಜ್ಞ ಸ್ಥಳದಲ್ಲಿ ಬೆಂಕಿ ಅವಘಡ; ಒಂದು ಎಕರೆ ಪೆಂಡಾಲ್ ಸುಟ್ಟು ಭಸ್ಮ
ಅಯೋಧ್ಯೆ, ಮಾ. 28: ಶನಿವಾರ ಉತ್ತರ ಪ್ರದೇಶದ ಸಾರಿಗೆ ಸಚಿವ ದಯಾಶಂಕರ ಸಿಂಗ್ ಅವರು ಇಲ್ಲಿಯ ರಾಮ ಮಂದಿರದಿಂದ 800 ಮೀ. ಅಂತರದಲ್ಲಿ ಹಮ್ಮಿಕೊಂಡಿದ್ದ ಯಜ್ಞ ಸ್ಥಳದಲ್ಲಿ ಬೃಹತ್ ಬೆಂಕಿ ಅವಘಡ ಸಂಭವಿಸಿದೆ. ಒಂದು ಎಕರೆ ವಿಸ್ತೀರ್ಣದ ಪೆಂಡಾಲ್ ಕೆಲವೇ ನಿಮಿಷಗಳಲ್ಲಿ ಸುಟ್ಟು ಭಸ್ಮಗೊಂಡಿದೆ. ಘಟನೆ ನಡೆದಾಗ ಸ್ಥಳವು ಬಹುತೇಕ ಖಾಲಿಯಿದ್ದರಿಂದ ಯಾವುದೇ ಸಾವುನೋವುಗಳು ಸಂಭವಿಸಿಲ್ಲ ಎಂದು ಸುದ್ದಿಸಂಸ್ಥೆಯು ವರದಿ ಮಾಡಿದೆ. ಒಂಭತ್ತು ದಿನಗಳ ಲಕ್ಷ್ಮೀ ನಾರಾಯಣ ಮಹಾಯಜ್ಞ ಸಾಂಗಗೊಂಡ ಸುಮಾರು ಒಂದೂವರೆ ಗಂಟೆಯ ಬಳಿಕ, ಮಧ್ಯಾಹ್ನ 12 ಗಂಟೆಗೆ ಬೆಂಕಿ ಕಾಣಿಸಿಕೊಂಡಿತ್ತು. ಸ್ಥಳದಲ್ಲಿ 1,251 ಹವನ ಕುಂಡಗಳನ್ನು ನಿರ್ಮಿಸಲಾಗಿದ್ದು, ಯಜ್ಞ ಸಮಾರೋಪ ಸಮಯದಲ್ಲಿ 50,000ಕ್ಕೂ ಅಧಿಕ ಜನರು ಸೇರಿದ್ದರು. ಅದೃಷ್ಟವಶಾತ್ ಬೆಂಕಿ ಅವಘಡ ಸಂಭವಿಸುವ ಮುನ್ನವೇ ಹೆಚ್ಚಿನವರು ಅಲ್ಲಿಂದ ನಿರ್ಗಮಿಸಿದ್ದರು. ವೈದಿಕ ವಿಧಿಗಳ ಬಳಿಕ ತೆಂಗಿನಕಾಯಿ ಒಡೆಯುವಾಗ ಸಿಡಿದ ಕಿಡಿಯಿಂದಾಗಿ ಬಟ್ಟೆಯ ಪೆಂಡಾಲ್ ಗೆ ಬೆಂಕಿ ಹತ್ತಿಕೊಂಡಿರಬಹುದು ಎಂದು ಪ್ರಾಥಮಿಕ ವರದಿಗಳು ಸೂಚಿಸಿವೆ. ಯಜ್ಞ ನಡೆಯುತ್ತಿದ್ದಾಗ ಸ್ಥಳದಲ್ಲಿದ್ದ ಅಗ್ನಿಶಾಮಕ ತಂಡಗಳು ತಕ್ಷಣವೇ ಕಾರ್ಯಾಚರಣೆ ನಡೆಸಿದವು. ಸುಮಾರು 10 ಅಗ್ನಿಶಾಮಕ ಯಂತ್ರಗಳು ಎರಡು ಗಂಟೆಗಳ ಪ್ರಯತ್ನದ ಬಳಿಕ ಬೆಂಕಿಯನ್ನು ನಂದಿಸಿದವು ಎಂದು ವರದಿಯು ತಿಳಿಸಿದೆ. ಬೆಂಕಿಗೆ ನಿಖರವಾದ ಕಾರಣವನ್ನು ತಿಳಿದುಕೊಳ್ಳಲು ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.
ಭಾರತವನ್ನು ಗುರಿಯಾಗಿಸಿಕೊಂಡ ಭಯೋತ್ಪಾದಕ ಸಂಘಟನೆಗಳು ಪಾಕಿಸ್ತಾನದಲ್ಲಿ ಸಕ್ರಿಯ: ಅಮೆರಿಕ ಸಂಸತ್ತಿನ ವರದಿ
ವಾಶಿಂಗ್ಟನ್, ಮಾ.28: ಅಮೆರಿಕ ಸಂಸತ್ತಿನ ಇತ್ತೀಚಿನ ವರದಿಯು ಪಾಕಿಸ್ತಾನದಿಂದ ಕಾರ್ಯನಿರ್ವಹಿಸುವ ಹಲವಾರು ಭಯೋತ್ಪಾದಕ ಗುಂಪುಗಳ ನಿರಂತರ ಉಪಸ್ಥಿತಿಯನ್ನು ಬಹಿರಂಗಪಡಿಸಿದೆ. ವಿಶ್ಲೇಷಣೆಯ ಪ್ರಕಾರ, ಪಾಕಿಸ್ತಾನವು ವ್ಯಾಪಕ ಶ್ರೇಣಿಯ ಸಶಸ್ತ್ರ ಭಯೋತ್ಪಾದಕ ಗುಂಪುಗಳ ಕೇಂದ್ರವಾಗಿ ಉಳಿದಿದೆ. ಇದರಲ್ಲಿ ಹಲವು ಗುಂಪುಗಳು ದಶಕಗಳಿಂದಲೂ ಸಕ್ರಿಯವಾಗಿವೆ. ಸತತ ಸೇನಾ ಕಾರ್ಯಾಚರಣೆಗಳು ಮತ್ತು ನೀತಿ ಕ್ರಮಗಳು ಅಮೆರಿಕ ಮತ್ತು ವಿಶ್ವಸಂಸ್ಥೆಯಿಂದ ಭಯೋತ್ಪಾದಕ ಸಂಘಟನೆಗಳೆಂದು ಗೊತ್ತುಪಡಿಸಿದ ಜಾಲವನ್ನು ಸಂಪೂರ್ಣವಾಗಿ ಕಿತ್ತುಹಾಕಿಲ್ಲ ಎಂದು ವರದಿ ಗಮನ ಸೆಳೆದಿದೆ. ಈ ಗುಂಪುಗಳನ್ನು - ಜಾಗತಿಕ, ಅಫ್ಘಾನಿಸ್ತಾನ ಕೇಂದ್ರಿತ, ಭಾರತ-ಕಾಶ್ಮೀರ ಆಧಾರಿತ, ದೇಶೀಯ ಮತ್ತು ಪಂಥೀಯ ಎಂಬ ಐದು ಭಾಗಗಳಾಗಿ ವರದಿಯಲ್ಲಿ ವರ್ಗೀಕರಿಸಲಾಗಿದೆ. ಭಾರತ ಕೇಂದ್ರಿತ ಗುಂಪುಗಳು ಸಕ್ರಿಯವಾಗಿವೆ. 2008ರ ಮುಂಬೈ ದಾಳಿಗೆ ಹೊಣೆಗಾರನಾದ ಲಷ್ಕರೆ ತೈಯಬ್ಬ ಮತ್ತು 2001ರ ಸಂಸತ್ ದಾಳಿಗೆ ಸಂಬಂಧಿಸಿರುವ ಜೈಷೆ ಮೊಹಮ್ಮದ್ ಕಾಶ್ಮೀರಕ್ಕೆ ಸಂಬಂಧಿಸಿದ ಉದ್ದೇಶಗಳೊಂದಿಗೆ ಪಾಕಿಸ್ತಾನದ ಭೂಪ್ರದೇಶದಿಂದ ಕಾರ್ಯಾಚರಣೆಯನ್ನು ಮುಂದುವರಿಸುತ್ತಿವೆ ಎಂದು ವರದಿ ಎಚ್ಚರಿಸಿದೆ.
Adani: ಅದಾನಿ ರಕ್ಷಣಾ ಮತ್ತು ಬಾಹ್ಯಾಕಾಶ ಸಂಸ್ಥೆಯು ಸ್ವದೇಶೀಯವಾಗಿ ತಯಾರಿಸಲಾದ 7.62 ಮಿಮೀ 'ಪ್ರಹಾರ್' ಲೈಟ್ ಮಷಿನ್ ಗನ್ಗಳ ಮೊದಲ ಹಂತದ 2,000 ಗನ್ಗಳನ್ನು ಭಾರತೀಯ ಸೇನೆಗೆ ನೀಡಲಾಯಿತು. ಇದು ಭಾರತದ ರಕ್ಷಣಾ ಉತ್ಪಾದನಾ ಕ್ಷೇತ್ರದಲ್ಲಿ ಮಹತ್ವದ ಮೈಲಿಗಲ್ಲಾಗಿದೆ. ಈ ವಿತರಣೆ ಮೂಲಕ, ಅದಾನಿ ರಕ್ಷಣಾ ಮತ್ತು ಬಾಹ್ಯಾಕಾಶ ಸಂಸ್ಥೆಯು ಭಾರತದಲ್ಲಿ ಸ್ವದೇಶೀಯವಾಗಿ ಲೈಟ್ ಮಷಿನ್ ಗನ್ಗಳನ್ನು
ದ.ಕ. ಜಿಲ್ಲಾ 28ನೇ ಕನ್ನಡ ಸಾಹಿತ್ಯ ಸಮ್ಮೇಳನ ಸಮಾರೋಪ
ಬಂಟ್ವಾಳ : ರಾಜ್ಯದ ಎಲ್ಲಾ ಸರಕಾರಿ ಅನುದಾನಿತ ಕನ್ನಡ ಶಾಲೆಗಳಿಗೆ ಅಧ್ಯಾಪಕರ ನೇಮಕಾತಿ ಆಗಬೇಕು ಎಂದು ನಾವೆಲ್ಲರೂ ಸರ್ಕಾರವನ್ನು ಒತ್ತಾಯಿಸಬೇಕಾಗಿದೆ ಎಂದು ಶ್ರೀ ಕಟೀಲು ಕ್ಷೇತ್ರದ ಅನುವಂಶಿಕ ಅರ್ಚಕ ಹರಿ ನಾರಾಯಣದಾಸ ಹೇಳಿದರು. ಬಿ.ಸಿ.ರೋಡಿನ ಸ್ಪರ್ಶಾ ಕಲಾ ಮಂದಿರದ ಪಂಜೆ ಮಂಗೇಶರಾಯ ಸಭಾಂಗಣ, ರಾಣಿ ಅಬ್ಬಕ್ಕ ವೇದಿಕೆಯಲ್ಲಿ ದ.ಕ. ಜಿಲ್ಲಾ ಸಾಹಿತ್ಯ ಪರಿಷತ್ ವತಿಯಿಂದ 3 ದಿನಗಳ ಕಾಲ ನಡೆದ 28 ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಶನಿವಾರ ಸಮಾರೋಪ ಭಾಷಣ ಮಾಡಿದ ಅವರು, ಕಳೆದ 30 ವರ್ಷಗಳಿಂದ ಒಂದೇ ಒಂದು ಕನ್ನಡ ಅನುದಾನಿತ ಶಾಲೆ ಗಳಿಗೆ ಶಿಕ್ಷಕರ ನೇಮಕಾತಿ ಆಗಿಲ್ಲ. ಕನ್ನಡ ಶಾಲೆಗಳನ್ನು ಉಳಿಸುವ ನಿಟ್ಟಿನಲ್ಲಿ ಪ್ರಯತ್ನಗಳು ಮುಂದುವರಿಯಬೇಕು ಎಂದರು. ಮಾಜಿ ಸಚಿವ ಬಿ.ರಮಾನಾಥ ರೈ ಅವರು ಮಾತನಾಡಿ, ಕನ್ನಡ ಶಾಲೆಗಳನ್ನು ಬೆಳೆಸುವ ನಿಟ್ಟಿನಲ್ಲಿ ಹತ್ತು ಹಲವು ಯೋಜನೆಗಳನ್ನು ಸರ್ಕಾರ ತಂದಿದೆ. ಆದರೆ ನಾವುಗಳು ದುಬಾರಿ ದೇಣಿಗೆ ಕೊಟ್ಟು ನಮ್ಮ ಮಕ್ಕಳನ್ನು ದೊಡ್ಡ ಶಾಲೆಯಲ್ಲಿ ಶಿಕ್ಷಣ ಕೊಡಿಸಿ ಸರ್ಕಾರಿ ಶಾಲೆ ಉಳಿಸುವ ಬಗ್ಗೆ ವೇದಿಕೆಯಲ್ಲಿ ಭಾಷಣ ಮಾಡಿ ಯಾವುದೇ ಪ್ರಯೋಜನ ಇಲ್ಲ. ಮಕ್ಕಳ ಕೊರತೆ ಇದ್ದಂತಹ ನಗರ ಪ್ರದೇಶದ ಶಿಕ್ಷಕರು ಗ್ರಾಮೀಣ ಪ್ರದೇಶದ ಶಾಲೆಗಳಿಗೆ ಹೋಗಲು ಹಿಂದೇಟು ಹಾಕುವುದು ಕೂಡ ಒಂದು ಕಾರಣವಾಗಿದೆ ಎಂದ ಅವರು ಸಂಸ್ಕೃತ ಭಾಷೆಗೆ ಎಲ್ಲೂ ವಿರೋದ ಇಲ್ಲ, ಆದರೆ ಕಲಿಕೆಗೆ ಅವಕಾಶದ ಕೊರತೆ ಇದೆ ಎಂಬುದನ್ನು ತಿಳಿದುಕೊಳ್ಳ ಬೇಕಾಗಿದೆ, ಭಾಷೆಯ ಬಳಕೆಯ ಕೊರತೆ ಯಿಂದಾಗಿ ಭಾಷೆಯು ನಾಶವಾಗದಂತೆ ನೋಡಿಕೊಳ್ಳಬೇಕು ಎಂದರು. ಸಮ್ಮೇಳನಾಧ್ಯಕ್ಷತೆ ವಹಿಸಿದ್ದ ಹಿರಿಯ ಸಾಹಿತಿ ಚಿದಂಬರ ಬೈಕಂಪಾಡಿ ಸಮ್ಮೇಳನದ ಯಶಸ್ಸಿಗೆ ಸಹಕರಿಸಿದ ಸರ್ವರಿಗೆ ಹಾಗೂ ತನಗೆ ಅವಕಾಶ ಕಲ್ಪಿಸಿದ ಸಂಘಟಕರಿಗೆ ಕೃತಜ್ಞತೆ ಸಲ್ಲಿಸಿದರು. ಕಸಾಪ ಜಿಲ್ಲಾಧ್ಯಕ್ಷ ಡಾ.ಎಂ.ಪಿ.ಶ್ರೀನಾಥ್ ಸ್ವಾಗತಿಸಿ, ಆಶಯ ನುಡಿಗಳನ್ನಾಡಿದರು. ಇದೇ ವೇಳೆ ಸಮಾಜ ಸೇವಕರಾದ ವಿನೋದ ಶೆಣೈ, ರವಿಶಂಕರ್ ಶೆಟ್ಟಿ ಬಡಾಜೆಗುತ್ತು ಅವರನ್ನು ಸನ್ಮಾನಿಸಲಾಯಿತು. ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಜಗನ್ನಾಥ ಚೌಟ ಬದಿಗುಡ್ಡೆ, ಸಮಾಜ ಸೇವಕ ಜಗನ್ನಾಥ ಬಂಗೇರ ನಿರ್ಮಾಲ್ ಅವರಿಗೆ ಸಾಧಕ ಸಿರಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಸಾಹಿತಿಗಳಾದ ಪದ್ಮನಾಭ ಭಟ್ ಎಕ್ಕಾರು, ಸದಾನಂದ ನಾರಾವಿ, ವಾಸ್ತು ತಜ್ಞ ಕೆ.ರಾಜಾರಾಮ ಶರ್ಮ ಬೆಳಾಲು, ಸಮಾಜ ಸೇವಕ ಕೇಶವ ಎ. ಕ್ಯೊಲ, ವೈದ್ಯಕೀಯ ಕ್ಷೇತ್ರದ ಸಾಧಕ ಡಾ.ಮುರುಳೀಧರ ವೈ.ಕೆ., ಮಾದ್ಯಮ ಕ್ಷೇತ್ರ ದಲ್ಲಿನ ಸಾಧನೆಗಾಗಿ ಎ. ಗೋಪಾಲ ಅಂಚನ್ ಆಲದಪದವು, ದೇವಿಪ್ರಸಾದ್ ಬೆಳ್ತಂಗಡಿ, ಶಿಕ್ಷಣ ಕ್ಷೇತ್ರದಲ್ಲಿ ಲೂವಿಝಾ ಕುಟಿನ್ಹೋ, ಸಹಕಾರಿ ರಂಗದ ಕೆ.ಟಿ.ವಿಶ್ವನಾಥ್, ವೈದ್ಯಕೀಯ/ಸಾಮಾಜಿಕ ಕ್ಷೇತ್ರದ ಡಾ.ಕೆ.ಎ.ಸಿದ್ದೀಕ್ ಅಡ್ಡೂರ್, ದೈವನರ್ತಕ ಡಾ.ರವೀಶ್ ಪಡುಮಲೆ, ಸಾಮಾಜಿಕ ಕ್ಷೇತ್ರದ ಇಸ್ಮಾಯಿಲ್ ಶಾಫಿ ಬಬ್ಬು ಕಟ್ಟಿ, ಪಾಕಶಾಸ್ತ್ರ ತಜ್ಣ ಶಂಕರ ಐತಾಳ್, ಕಲಾವಿದ ಎಚ್.ಕೆ.ನೈನಾಡು ಅವರಿಗೆ ಕನ್ನಡ ಸಿರಿ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಗಡಿನಾಡು ಸೇವೆಗಾಗಿ ಡಾ.ಎಸ್.ಆರ್.ನರಹರಿ ಕಾಸರಗೋಡು, ಸಂಸ್ಥೆಯ ಕಲಾ ಸೇವೆಗಾಗಿ ಕಟೀಲು ಶ್ರೀ ದುರ್ಗಾಪರಮೇಶ್ವರಿ ಯಕ್ಷಗಾನ ಮಂಡಳಿಗೆ ಸನ್ಮಾನ ಮಾಡಲಾಯಿತು. ಸಮ್ಮೇಳನದ ಸರ್ವಾಧ್ಯಕ್ಷ ಚಿದಂಬರ ಬೈಕಂಪಾಡಿ ದಂಪತಿಗಳು, ಕಸಾಪ ಅಧ್ಯಕ್ಷ ಡಾ.ಎಂ.ಪಿ.ಶ್ರೀನಾಥ್, ಬಂಟ್ವಾಳ ತಾಲೂಕು ಕಸಾಪ ಅಧ್ಯಕ್ಷ ವಿಶ್ವನಾಥ ಬಂಟ್ವಾಳ, ಸ್ವಾಗತ ಸಮಿತಿ ಅಧ್ಯಕ್ಷ ಬಿ.ರಘುನಾಥ ಸೋಮಯಾಜಿ ಎರೆಕಳ, ಸಮ್ಮೇಳನ ಸ್ವಾಗತ ಸಮಿತಿ ಕಾರ್ಯಾಧ್ಯಕ್ಷ ಪಿಯೂಷ್ ಎಲ್ ರೋಡ್ರಿಗಸ್, ಪ್ರಧಾನ ಕಾರ್ಯದರ್ಶಿ ಅಬೂಬಕರ್ ಅಮ್ಮುಂಜೆ, ಕಾರ್ಯದರ್ಶಿ ದೇವಪ್ಪ ಕುಲಾಲ್, ಕೋಶಾಧಿಕಾರಿ ಸುಭಾಶ್ಚಂದ್ರ ಜೈನ್, ಆಮಂತ್ರಣ ಸಂಚಾಲಕ ಪಿ. ಮಹಮ್ಮದ್ ಪಾಣೆಮಂಗಳೂರು ಅವರನ್ನು ಸನ್ಮಾನಿಸಲಾಯಿತು. ರೋಟರಿ ಮಾಜಿ ಗವರ್ನರ್ ಎನ್.ಪ್ರಕಾಶ್ ಕಾರಂತ ಉಜಿರೆ ಎಸ್.ಡಿ.ಎಂ ಕಾಲೇಜು ಪ್ರಾಂಶುಪಾಲ ಪ್ರೊ.ವಿಶ್ವನಾಥ್ ಪಿ., ಹಿರಿಯ ನ್ಯಾಯವಾದಿ ಜಯರಾಮ ರೈ, ಕರ್ನಾಟಕ ಪರಿಸರ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿ ಅಧ್ಯಕ್ಷೆ ಶಾಲೆಟ್ ಲವೀನಾ ಪಿಂಟೋ, ಸ್ವಾಗತ ಸಮಿತಿ ಉಪಾಧ್ಯಕ್ಷ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಗೌರವ ಕಾರ್ಯದರ್ಶಿ ರಾಜೇಶ್ವರಿ ಎಂ, ವಿವಿಧ ತಾಲೂಕು ಕಸಾಪ ಅಧ್ಯಕ್ಷರುಗಳಾದ ಚಂದ್ರಶೇಖರ್ ಪೇರಾಲು ಸುಳ್ಯ, ಡಿ.ಯದುಪತಿ ಗೌಡ ಬೆಳ್ತಂಗಡಿ , ಮಂಜುನಾಥ ಎಸ್. ರೇವಣ್ಕರ್ ಮಂಗಳೂರು, ಕೆ.ಸೇಸಪ್ಪ ರೈ ಕಡಬ, ಉಮೇಶ್ ನಾಯಕ್ ಪುತ್ತೂರು, ಮಿಥುನ್ ಉಡುಪಿ ಮೂಲ್ಕಿ ಮೊದಲಾದವರು ಉಪಸ್ಥಿತರಿದ್ದರು. ಸಮ್ಮೇಳನದಲ್ಲಿ ಇಂದು ನಡೆದ ಕಾರ್ಯಕ್ರಮಗಳು ಶಾಸ್ತ್ರೀಯ ಸಂಗೀತ, ಸಾಹಿತ್ಯ : ಹೊಸ ತಲೆಮಾರು ವಿಶಯದಲ್ಲಿ ಗೋಷ್ಠಿ, ತಂತ್ರಜ್ಞಾನ -ಸಾಹಿತ್ಯ-ಸಹಬಾಳ್ವೆ, ದ.ಕ.ಜಿಲ್ಲೆಯ ರಂಗಭೂಮಿ - ಬದುಕು - ಅವಲೋಕನ ಮತ್ತು ಕನ್ನಡ ಭಾಷೆಯಲ್ಲಿ ವೈದ್ಯ ವಿಜ್ಞಾನ ಹಾಗೂ ವೈದ್ಯಕೀಯ ಕಲಿಕೆ, ಕನ್ನಡ ಮಾಧ್ಯಮ ಶಾಲೆಗಳ ವಾಸ್ತವ ಮತ್ತು ಭವಿಷ್ಯ, ಹಳೆಗನ್ನಡ ಸಾಹಿತ್ಯದ ರಸಧಾರೆ, ವಿಚಾರದಲ್ಲಿ ವಿಶೇಷ ಉಪನ್ಯಾಸ, ಸಿದ್ಧಕಟ್ಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ಗಮಕ ಶ್ರೀಕೃಷ್ಣ ಭಕ್ತಿ, ಸಮ್ಮೇಳನಾಧ್ಯಕ್ಷ ರೊಂದಿಗೆ ಸಂವಾದ, ಬಹಿರಂಗ ಅಧಿವೇಶನ, ನೃತ್ಯ ರಂಜಿನಿ, ಕನ್ನಡ ಗಾನ ಗುಚ್ಛ, ನೃತ್ಯ ವೈಭವ ಹಾಗೂ ಯಕ್ಷಗಾನ ತಾಳಮದ್ದಳೆ ಕಾರ್ಯಕ್ರಮಗಳು ನಡೆದವು. ತುಂಬೆ ಪದವಿಪೂರ್ವ ಕಾಲೇಜು ಪ್ರಾಂಶುಪಾಲ ವಿ.ಸು.ಭಟ್ ಹಾಗೂ ಆಶಾ ಮಯ್ಯ ಪುತ್ತೂರು ಕಾರ್ಯಕ್ರಮ ನಿರೂಪಿಸಿ, ಕಾರ್ಯದರ್ಶಿ ರಾಮದಾಸ್ ಬಂಟ್ವಾಳ್ ವಂದಿಸಿದರು. ಓದುವ ಹವ್ಯಾಸ ಕುಂಠಿತವಾಗ ಬಾರದು: ಚಿದಂಬರ ಬೈಕಂಪಾಡಿ ಓದುವ ಹವ್ಯಾಸ ಕುಂಠಿತವಾಗಬಾರದು ಪತ್ರಕರ್ತರಿಗೂ ಇದು ಅತೀ ಅಗತ್ಯ ಎಂದು ದಕ್ಷಿಣ ಕನ್ನಡ ಜಿಲ್ಲಾ 28ನೆ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಚಿದಂಬರ ಬೈಕಂಪಾಡಿ ತಿಳಿಸಿದ್ದಾರೆ. ಅವರು ಬಿ.ಸಿ.ರೋಡ್ ಸ್ಪರ್ಶಾ ಕಲಾ ಮಂದಿರದಲ್ಲಿ ನಡೆಯುತ್ತಿರುವ ದ.ಕ ಜಿಲ್ಲಾ 28ನೆ ಸಾಹಿತ್ಯ ಸಮ್ಮೇಳನದಲ್ಲಿ ಶನಿವಾರ ಸಮ್ಮೇಳನಾಧ್ಯಕ್ಷರೊಂದಿಗೆ ಸಂವಾದ ಗೋಷ್ಠಿಯಲ್ಲಿ ಮಾತನಾಡುತ್ತಾ, ಓದುಗರ ಸಂಖ್ಯೆ ಇತ್ತೀಚಿನ ದಿನಗಳಲ್ಲಿ ಕಡಿಮೆಯಾ ಗುತ್ತಿದೆ , ಪತ್ರಕರ್ತರೇ ಪತ್ರಿಕೆಯನ್ನು ಓದುವುದು ಕಡಿಮೆ ಮಾಡಿದ್ದಾರೆ. ಕೇವಲ ತಾನು ಕಳಿಸಿದ ವರದಿಯನ್ನು ಮಾತ್ರ ಓದುತ್ತಾರೆ ಇದು ಸರಿಯಲ್ಲ. ಪತ್ರಕರ್ತರಿಗೂ ಓದು ಮುಖ್ಯ, ಇದರ ಬಗ್ಗೆ ಪತ್ರಕರ್ತರು ಗಮನ ಹರಿಸಬೇಕು ಎಂದು ಮನವಿ ಮಾಡಿದರು. ಸಾಹಿತ್ಯ ಹಾಗೂ ಪತ್ರಿಕೋದ್ಯಮ ಎರಡನ್ನೂ ಹೇಗೆ ಹೊಂದಾಣಿಕೆ ಮಾಡಿ ಕೈಗೊಂಡಿದ್ದೀರಿ ಎಂಬ ಪ್ರಶ್ನೆಗೆ ಚಿದಂಬರವರು ಉತ್ತರಿಸುತ್ತಾ, ಸಾಹಿತ್ಯ ಮತ್ತು ಪತ್ರಿಕೋದ್ಯಮ ಬೇರೆ ಬೇರೆಯೇ ಆಗಿದೆ, ಹೊಂದಾಣಿಕೆ ಮಾಡಿಕೊಂಡು ಹೋಗುವುದು ತುಂಬಾ ಕಷ್ಟ. ಎರಡೂ ಭಿನ್ನ ರೀತಿಯ ಸರಳವಾಗಿದೆ. ಪತ್ರಿಕೋದ್ಯಮಕ್ಕೆ ಹೆಚ್ಚು ಆದ್ಯತೆ ನೀಡಿದ್ದೇನೆ ಎಂದರು. ಕನ್ನಡದ ಜೊತೆಗೆ ಆಂಗ್ಲ ಪದ ಬಳಕೆ ಸರಿಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಚಿದಂಬರ ಬೈಕಂಪಾಡಿಯವರು ಭಾಷೆ ಎಂಬುದು ಸಂವಹನ ಮಾಧ್ಯಮ, ಓದುಗನಿಗೆ ಅರ್ಥವಾಗುವುದು ಮುಖ್ಯ. ಈ ನಿಟ್ಟಿನಲ್ಲಿ ಕೆಲವು ಪ್ರಚಲಿತದಲ್ಲಿರುವ ಆಂಗ್ಲ ಪದ ಬಳಕೆ ತಪ್ಪಲ್ಲ ಎಂದರು. ಮುಂಗಾರು ಮತ್ತು ಕನ್ನಡ ಪ್ರಭ ಎರಡು ಪತ್ರಿಕೆಗಳಲ್ಲಿ ದುಡಿದಿರುವ ಬಗ್ಗೆ ಮಾತನಾಡಿದ ಅವರು ವಡ್ಡರ್ಸೆ ರಘುರಾಮ ಶೆಟ್ಟಿ ಪತ್ರಕರ್ತನನ್ನು ತನ್ನ ಕುಟುಂಬದ ಸದಸ್ಯರಂತೆ ನೋಡಿಕೊಂಡಿದ್ದಾರೆ ಹೊರತು ಯಾವತ್ತೂ ಕೆಲಸಗಾರಂತೆ ನೋಡಿಕೊಂಡಿಲ್ಲ. ಕನ್ನಡ ಪ್ರಭ ಪತ್ರಿಕೆಯ ವೈಎನ್ ಕೆ ದುಡುಕು ಸ್ವಭಾವದ ಜೊತೆಗೆ ಅತ್ಯಂತ ಪ್ರೀತಿ, ಆತ್ಮೀಯತೆಯಿಂದ ನೋಡಿಕೊ ಳ್ಳುತ್ತಿದ್ದರು. ಸಾಗರಕ್ಕೆ ಸಾಗರವೇ ಸಾಟಿ ಎನ್ನುವಂತೆ ಅವರಿಗೆ ಅವರೇ ಸಾಟಿಯಾಗಬಲ್ಲವರು. ಪಗೋ ಅವರ ಬಗ್ಗೆ ಪುಸ್ತಕ ಬರೆಯಲು ಕಾರಣವಾದ ಅಂಶದ ಬಗ್ಗೆ ಪ್ರಸ್ತಾಪಿಸುತ್ತಾ, ನಾವು ಐವರ ಪೈಕಿ ನಾಲ್ವರು ಬ್ರಾಹ್ಮಣರು ನಾನೊಬ್ಬ ಶೂದ್ರ ಆದರೆ ನಮ್ಮ ಒಡನಾಟದಲ್ಲಿ ಜಾತಿ ಸಮಸ್ಯೆಯಾಗಲಿಲ್ಲ. ಅವರು ನನ್ನ ಮೇಲೆ ಇಟ್ಟಿರುವ ಪ್ರೀತಿಯೇ ಅವರ ಬಗ್ಗೆ ಕೃತಿ ಬರೆಯಲು ಪ್ರೇರಣೆಯಾಯಿತು ಎಂದರು. ನನ್ನ ಜೀವಮಾನದಲ್ಲಿ ಎಲ್ಲಾ ರಾಜಕೀಯ ಪಕ್ಷದವರ ಬಗ್ಗೆ ಬರೆದಿದ್ದೇನೆ ಆದರೆ ಇದುವರೆಗೆ ನನ್ನ ವರದಿಗೆ ಸಂಬಂಧಿ ಸಿದಂತೆ ಯಾವುದೇ ಕೇಸು ದಾಖಲಾಗಿಲ್ಲ. ಸವಾಲುಗಳನ್ನು ನಿಭಾಯಿಸಿದ್ದೇನೆ ಎಂದರು. ಸಂವಾದ ಗೋಷ್ಠಿಯನ್ನು ದಕ್ಷಿಣ ಕನ್ನಡ ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಪುಷ್ಪರಾಜ್ ಬಿ.ಎನ್ ನಡೆಸಿಕೊಟ್ಟರು. ಪತ್ರಕರ್ತರಾದ ಉದಯ ಶಂಕರ್ ನೀರ್ಪಾಜೆ, ಗಣೇಶ್ ಪ್ರಸಾದ್ ಪಾಂಡೇಲು, ಹರೀಶ್ ಮಾಂಬಾಡಿ, ಮಾಲತಿ ಶೆಟ್ಟಿ ಮಾಣೂರು ಭಾಗವಹಿಸಿದ್ದರು. ರೇಖಾ ವಿಶ್ವನಾಥ್ ಬಂಟ್ವಾಳ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.
ಹೊಸಪೇಟೆ| ರೈಲು ಹರಿದು ಅಪರಿಚಿತ ವ್ಯಕ್ತಿ ಮೃತ್ಯು
ಹೊಸಪೇಟೆ: ವಿಜಯನಗರ ಜಿಲ್ಲೆಯ ಹೊಸಪೇಟೆ ರೈಲು ನಿಲ್ದಾಣದಲ್ಲಿ ರೈಲು ಹರಿದು ಅಪರಿಚಿತ ವ್ಯಕ್ತಿಯೋರ್ವ ಮೃತಪಟ್ಟಿರುವ ಘಟನೆ ನಡೆದಿದೆ. ಅಪರಿಚಿತ ವ್ಯಕ್ತಿ ರೈಲ್ವೆ ಟ್ರಾಕ್ ಮೇಲೆ ಬಿದ್ದಿದ್ದ ವೇಳೆ ರೈಲು ಹರಿದು ಮೃತಪಟ್ಟಿದ್ದಾನೆ. ಈ ಬಗ್ಗೆ ಸ್ಥಳೀಯರು ರೈಲ್ವೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಹೊಸಪೇಟೆ ರೈಲ್ವೆ ಪೊಲೀಸರು ಸ್ಥಳಕ್ಕೆ ತೆರಳಿ ಮೃತದೇಹವನ್ನು ವಶಪಡಿಸಿಕೊಂಡಿದ್ದಾರೆ. ಮೃತ ವ್ಯಕ್ತಿಯ ಗುರುತು ಇನ್ನೂ ಪತ್ತೆಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಕಲಬುರಗಿ| ಎಲ್ಪಿಜಿ ದರ ಏರಿಕೆ ವಿರೋಧಿಸಿ ಆಟೋ ಚಾಲಕರಿಂದ ಪ್ರತಿಭಟನೆ
ಕಲಬುರಗಿ: ನಗರದಲ್ಲಿ ಆಟೋಗಳಿಗೆ ಬಳಸುವ ಎಲ್ಪಿಜಿ ಗ್ಯಾಸ್ ದರವನ್ನು ದಿಢೀರನೆ ಹೆಚ್ಚಿಸಿರುವುದನ್ನು ಖಂಡಿಸಿ, ನೂರಾರು ಆಟೋ ಚಾಲಕರು ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಎಲ್ಪಿಜಿ ಗ್ಯಾಸ್ ಬಂಕ್ ಮಾಲೀಕರು ಯಾವುದೇ ಸ್ಪಷ್ಟ ಕಾರಣವಿಲ್ಲದೆ ದಿಢೀರನೆ ದರವನ್ನು ಹೆಚ್ಚಿಸಿದ್ದು, ಇದು ಬಡ ಆಟೋ ಚಾಲಕರ ಮೇಲೆ ಭಾರೀ ಹೊರೆ ಆಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಈಗಾಗಲೇ ನಗರದಲ್ಲಿ ಆಟೋಗಳ ಸಂಖ್ಯೆ ಹೆಚ್ಚಾಗಿರುವುದರಿಂದ ಚಾಲಕರಿಗೆ ಸಮರ್ಪಕ ಆದಾಯ ಸಿಗುತ್ತಿಲ್ಲ. ಇಂತಹ ಸಂದರ್ಭದಲ್ಲಿ ದಿಢೀರನೆ ಗ್ಯಾಸ್ ದರ ಹೆಚ್ಚಿಸಿರುವುದು ಅವರ ಬದುಕಿಗೆ ದೊಡ್ಡ ಹೊಡೆತವಾಗಿದೆ. ದಿನಪೂರ್ತಿ ಆಟೋ ಚಲಾಯಿಸಿದರೂ ಹೊಟ್ಟೆಪಾಡಿಗೂ ಹಣ ಸಾಕಾಗುತ್ತಿಲ್ಲ. ಅದರಲ್ಲಿ ದರ ಹೆಚ್ಚಳ ಮಾಡುತ್ತಿರುವುದು ಖಂಡನೀಯ ಎಂದರು. ಪೆಟ್ರೋಲ್, ಡೀಸೆಲ್ ಹಾಗೂ ಗೃಹ ಬಳಕೆಯ ಸಿಲಿಂಡರ್ ದರಗಳಲ್ಲಿ ಏರಿಕೆ ಇಲ್ಲದಿದ್ದರೂ, ಆಟೋ ಎಲ್ಪಿಜಿ ದರವನ್ನು ಮಾತ್ರ ಹೆಚ್ಚಿಸಿರುವುದು ಉದ್ದೇಶಪೂರ್ವಕ ಕ್ರಮವಾಗಿದೆ. ಈ ಮೂಲಕ ಗ್ಯಾಸ್ ಏಜೆನ್ಸಿಗಳು ಆಟೋ ಚಾಲಕರಿಂದ ಅನ್ಯಾಯವಾಗಿ ಹಣ ವಸೂಲಿ ಮಾಡುತ್ತಿದ್ದಾರೆ. ಕೂಡಲೇ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಮುಂದಿನ ದಿನಗಳಲ್ಲಿ ಯಾವುದೇ ಕಾರಣಕ್ಕೂ ಎಲ್ಪಿಜಿ ದರ ಹೆಚ್ಚಿಸಬಾರದು ಎಂದು ಆಗ್ರಹಿಸಿದ್ದಾರೆ. ಇಲ್ಲದಿದ್ದಲ್ಲಿ, ಕಲಬುರಗಿಯ ಎಲ್ಲಾ ಆಟೋ ಚಾಲಕರ ನೇತೃತ್ವದಲ್ಲಿ ನಗರ ಬಂದ್ ನಡೆಸುವ ಎಚ್ಚರಿಕೆಯನ್ನು ನೀಡಿದ್ದಾರೆ. ಈ ಸಂದರ್ಭದಲ್ಲಿ ಶ್ರೀರಾಮ ಸೇನೆ ಜಿಲ್ಲಾ ಅಧ್ಯಕ್ಷ ಲಕ್ಷ್ಮಿಕಾಂತ್ ಸ್ವಾದಿ, ಶಾಂತಪ್ಪ ಕಟ್ಟಾ, ಅಭಿಷೇಕ್ ಭುವಿ, ಅಲೋಕ್ ಮಾಡೇದ, ಜಗನ್ನಾಥ ಹರಸೂರ್, ಅಭಿಷೇಕ್ ಠಾಕುರ, ಅಂಬರೀಷ್ ಜಮಾದಾರ್, ಭೀಮಾಶಂಕರ ಸೇರಿದಂತೆ ಹಲವರು ಭಾಗವಹಿಸಿದ್ದರು.
ಸ್ವಾತಿ ಅವರಿಗೆ ಡಾಕ್ಟರೇಟ್ ಪದವಿ ಪ್ರದಾನ
ಕಾರ್ಕಳ : ಕಾರ್ಕಳದ ಶ್ರೀ ಭುವನೇಂದ್ರ ಕಾಲೇಜಿನ ಕಂಪ್ಯೂಟರ್ ಸೈನ್ಸ್ ವಿಭಾಗದ ಮುಖ್ಯಸ್ಥರಾದ ಸ್ವಾತಿ ಕೆ ಅವರಿಗೆ ಮಾರ್ಚ್ 2026 ರಲ್ಲಿ “ATM: Algorithms for Authentication of Digital Transactions based on Multi-biometrics” ಎಂಬ ಪ್ರಬಂಧಕ್ಕಾಗಿ ಮಂಗಳೂರು ವಿಶ್ವವಿದ್ಯಾಲಯದಿಂದ ಪಿಎಚ್ಡಿ ಪದವಿ ಪ್ರದಾನವಾಗಿದೆ. ಇವರು ಮಂಗಳೂರು ವಿಶ್ವವಿದ್ಯಾಲಯದ ಕಂಪ್ಯೂಟರ್ ಸೈನ್ಸ್ ವಿಭಾಗದ ಹಿರಿಯ ಪ್ರಾಧ್ಯಾಪಕರಾದ ಡಾ. ಬಿ. ಎಚ್. ಶೇಖರ್ ಅವರ ಮಾರ್ಗದರ್ಶನದಲ್ಲಿ ಸಂಶೋಧನೆ ನಡೆಸಿದ್ದಾರೆ. ಇವರು ಕೆ. ಚಂದ್ರಶೇಖರ ರಾವ್ ಮತ್ತು ಜಯಂತಿ ಕೆ ಅವರ ಪುತ್ರಿ, ಹಾಗೂ ನಂದ ಕಿಶೋರ್ ಕೆ ಅವರ ಪತ್ನಿ.
ಕಲಬುರಗಿ| ಆಶಾ ಕಾರ್ಯಕರ್ತೆಯರನ್ನು ವಜಾಗೊಳಿಸದಂತೆ ಸಚಿವ ಪ್ರಿಯಾಂಕ್ ಖರ್ಗೆಗೆ ಮನವಿ
ಕಲಬುರಗಿ: ಜಿಲ್ಲೆಯಲ್ಲಿ 200ಕ್ಕೂ ಅಧಿಕ ಆಶಾ ಕಾರ್ಯಕರ್ತೆಯರನ್ನು ಕೆಲಸದಿಂದ ತೆಗೆಯಲು ಆರೋಗ್ಯ ಇಲಾಖೆ ರೂಪಿಸಿರುವ ನೀಲಿ ನಕ್ಷೆಯನ್ನು ವಿರೋಧಿಸಿ, ಯಾವುದೇ ಆಶಾ ಕಾರ್ಯಕರ್ತೆಯನ್ನು ವಜಾಗೊಳಿಸಬಾರದು ಎಂದು ಒತ್ತಾಯಿಸಿ AIUTUC ಸಂಘಟನೆ ವತಿಯಿಂದ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ಬೆಂಗಳೂರಿನ ಗೃಹ ಕಚೇರಿಯಲ್ಲಿ ಭೇಟಿಯಾಗಿ ಮನವಿ ಸಲ್ಲಿಸಲಾಯಿತು. ಆರೋಗ್ಯ ಇಲಾಖೆಯ ಈ ಕ್ರಮದಿಂದ ನೂರಾರು ಆಶಾ ಕಾರ್ಯಕರ್ತೆಯರ ಬದುಕು ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆ ಇದ್ದು, ತಕ್ಷಣವೇ ಈ ನಿರ್ಧಾರವನ್ನು ಹಿಂಪಡೆಯಬೇಕು ಎಂದು ಮನವಿಯಲ್ಲಿ ಸಂಘಟನೆಯ ಮುಖಂಡರು ಒತ್ತಾಯಿಸಿದ್ದಾರೆ. ನಿಯೋಗದಲ್ಲಿ AIUTUC ಕಾರ್ಮಿಕ ಸಂಘಟನೆಯ ಕಲಬುರಗಿ ಜಿಲ್ಲಾ ಕಾರ್ಯದರ್ಶಿ ಎಸ್.ಎಂ. ಶರ್ಮಾ, ಆಶಾ ಕಾರ್ಯಕರ್ತೆಯರ ಸಂಘದ ಜಿಲ್ಲಾ ಅಧ್ಯಕ್ಷೆ ಶಿವಲಿಂಗಮ್ಮ ಹರಳಯ್ಯ, ಜಿಲ್ಲಾ ಕಾರ್ಯದರ್ಶಿ ಗೀತಾ ಬಡಿಗೇರ್ ಹಾಗೂ ಆಶಾ ಕಾರ್ಯಕರ್ತೆಯರಾದ ಸಂಗೀತಾ ಮತ್ತು ಯಲ್ಲಮ್ಮ ಭಾಗವಹಿಸಿದ್ದರು. ಆಶಾ ಕಾರ್ಯಕರ್ತೆಯರು ಆರೋಗ್ಯ ಸೇವೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದು, ಅವರನ್ನು ವಜಾಗೊಳಿಸುವುದು ಸಾರ್ವಜನಿಕ ಆರೋಗ್ಯ ವ್ಯವಸ್ಥೆಯ ಮೇಲೆಯೂ ದುಷ್ಪರಿಣಾಮ ಬೀರುತ್ತದೆ ಎಂದು ಪ್ರತಿನಿಧಿಗಳು ಆತಂಕ ವ್ಯಕ್ತಪಡಿಸಿದರು.
Tamil Nadu | ಡಿಎಂಕೆ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ
ಕೊಯಂಬತ್ತೂರು ದಕ್ಷಿಣದಿಂದ ಸೆಂಥಿಲ್ ಬಾಲಾಜಿ, ಬೋಡಿನಾಯಕನೂರಿನಿಂದ OPS ಕಣಕ್ಕೆ
ಬೆಂಗಳೂರಿನ ಪ್ರತಿಷ್ಠಿತ ಕಾಲೇಜಿನ ಪ್ರೊಫೆಸರ್ ಪಾಠ ಮಾಡುವ ಸಂದರ್ಭದಲ್ಲಿ ವಿದ್ಯಾರ್ಥಿಯನ್ನು 14 ಬಾರಿ ಟೆರರಿಸ್ಟ್ ಎಂದು ಕರೆದಿದ್ದಾರೆ. ಮುಸ್ಲಿಂ ಸಮುದಾಯ ವಿದ್ಯಾರ್ಥಿಗೆ ಈ ರೀತಿ ನಿಂದಿಸಿದ್ದಕ್ಕೆ ಪ್ರೊಫೆಸರ್ ವಿರುದ್ಧ ಪೊಲೀಸ್ ಕೇಸ್ ದಾಖಲಾಗಿದೆ. ಕಾಲೇಜಿನಿಂದ ಅವರನ್ನು ಅಮಾನತು ಮಾಡಲಾಗಿದೆ. ಈ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
Sri Lanka | 4 ಲೀಟರ್ ಪೆಟ್ರೋಲ್ ದಾಸ್ತಾನಿರಿಸಿಕೊಂಡ ವ್ಯಕ್ತಿಗೆ ಜೈಲುಶಿಕ್ಷೆ!
ಕೊಲಂಬೊ, ಮಾ.28: ಮಧ್ಯಪ್ರಾಚ್ಯ ಯುದ್ಧದಿಂದಾಗಿ ದೇಶದಾದ್ಯಂತ ಇಂಧನ ಕೊರತೆಯ ಸಂದರ್ಭದಲ್ಲಿ 4 ಲೀಟರ್ ಪೆಟ್ರೋಲ್ ದಾಸ್ತಾನಿರಿಸಿಕೊಂಡಿರುವುದನ್ನು ಒಪ್ಪಿಕೊಂಡ ವ್ಯಕ್ತಿಗೆ ಶ್ರೀಲಂಕಾದ ನ್ಯಾಯಾಲಯ ಮೂರು ವಾರಗಳ ಜೈಲುಶಿಕ್ಷೆ ವಿಧಿಸಿರುವುದಾಗಿ ಸ್ಥಳೀಯ ಮಾಧ್ಯಮ ವರದಿ ಮಾಡಿದೆ. ಆರೋಪಿಯು ಮೊದಲು ಹುಲ್ಲು ಕತ್ತರಿಸುವ ಯಂತ್ರಕ್ಕೆ ಪೆಟ್ರೋಲ್ ಸಂಗ್ರಹಿಸಿಟ್ಟಿರುವುದಾಗಿ ವಾದಿಸಿದ್ದ. ಆದರೆ ಈತ ಪೆಟ್ರೋಲನ್ನು ‘ಬ್ಲ್ಯಾಕ್ ಮಾರ್ಕೆಟ್’ನಲ್ಲಿ ಮಾರಲು ಉದ್ದೇಶಿಸಿದ್ದ ಎಂದು ಅಧಿಕಾರಿಗಳು ಹೇಳಿದ್ದಾರೆ. ಆರೋಪಿಗೆ 3 ವಾರಗಳ ಜೈಲುಶಿಕ್ಷೆಯ ಜೊತೆಗೆ 1,500 ರೂ. (ಶ್ರೀಲಂಕಾದ ಕರೆನ್ಸಿ) ದಂಡ ವಿಧಿಸಲಾಗಿದೆ. ಮಧ್ಯಪ್ರಾಚ್ಯ ಯುದ್ಧ ಆರಂಭಗೊಂಡ ಬಳಿಕ ಶ್ರೀಲಂಕಾದಲ್ಲಿ ಇಂಧನ ಪಡಿತರ ವ್ಯವಸ್ಥೆ ಜಾರಿಯಲ್ಲಿದೆ.
ಐಪಿಎಸ್ ಅಧಿಕಾರಿ ಸುಮನ್ ಡಿ. ಪನ್ನೇಕರ್ ಸಹಿತ 153 ಪೊಲೀಸರಿಗೆ ಮುಖ್ಯಮಂತ್ರಿ ಪದಕ
ಎ.2ರಂದು ಬೆಂಗಳೂರಿನಲ್ಲಿ ಪ್ರದಾನ
ಪಶ್ಚಿಮ ಏಶ್ಯಾ ಸಂಘರ್ಷ | ಸೌದಿ ಯುವರಾಜರ ಜೊತೆ ಮೋದಿ ಮಾತುಕತೆ
ಹೊಸದಿಲ್ಲಿ, ಮಾ. 28: ಪಶ್ಚಿಮ ಏಶ್ಯಾ ಸಂಘರ್ಷದ ನಡುವೆ ಶನಿವಾರ ಪ್ರಧಾನಿ ನರೇಂದ್ರ ಮೋದಿ ಅವರು ಸೌದಿ ಅರೇಬಿಯಾದ ಯುವರಾಜ ಹಾಗೂ ಪ್ರಧಾನಿ ಮುಹಮ್ಮದ್ ಬಿನ್ ಸಲ್ಮಾನ್ ಅವರೊಂದಿಗೆ ಮಾತುಕತೆ ನಡೆಸಿದ್ದು, ಸಂಚಾರ ಸ್ವಾತಂತ್ರ್ಯ ಮತ್ತು ಸುರಕ್ಷಿತ ಹಡಗು ಮಾರ್ಗಗಳನ್ನು ಖಚಿತಪಡಿಸುವ ಅಗತ್ಯವನ್ನು ಒತ್ತಿ ಹೇಳಿದ್ದಾರೆ. ಪಶ್ಚಿಮ ಏಶ್ಯಾದಲ್ಲಿನ ಪ್ರಾದೇಶಿಕ ಪರಿಸ್ಥಿತಿಯ ಕುರಿತು ಸೌದಿ ನಾಯಕತ್ವದೊಂದಿಗೆ ಚರ್ಚಿಸಿದ್ದಾಗಿ ಮೋದಿ ‘ಎಕ್ಸ್’ ಪೋಸ್ಟ್ನಲ್ಲಿ ತಿಳಿಸಿದ್ದಾರೆ. ಮಾತುಕತೆ ಸಂದರ್ಭದಲ್ಲಿ ಪ್ರಾದೇಶಿಕ ಇಂಧನ ಮೂಲಸೌಕರ್ಯಗಳ ಮೇಲಿನ ದಾಳಿಗಳಿಗೆ ಭಾರತದ ಖಂಡನೆಯನ್ನು ಮೋದಿ ಪುನರುಚ್ಚರಿಸಿದರು. ವಿಶೇಷವಾಗಿ ಪ್ರಾದೇಶಿಕ ಉದ್ವಿಗ್ನತೆಯ ಈ ಸಮಯದಲ್ಲಿ ಸಂಚಾರ ಸ್ವಾತಂತ್ರ್ಯವನ್ನು ಕಾಯ್ದುಕೊಳ್ಳುವುದು ಹಾಗೂ ಹಡಗು ಮಾರ್ಗಗಳು ಮುಕ್ತ ಮತ್ತು ಸುರಕ್ಷಿತವಾಗಿರುವಂತೆ ನೋಡಿಕೊಳ್ಳುವುದು ಅಗತ್ಯವೆಂದು ಉಭಯ ನಾಯಕರು ಒಪ್ಪಿಕೊಂಡರು. ‘ಈ ಕಷ್ಟದ ಸಮಯದಲ್ಲಿ ಸೌದಿಯಲ್ಲಿ ಇರುವ ಭಾರತೀಯರ ಯೋಗಕ್ಷೇಮವನ್ನು ನೋಡಿಕೊಳ್ಳುತ್ತಿರುವುದಕ್ಕಾಗಿ ಸೌದಿ ಯುವರಾಜರಿಗೆ ನಾನು ಧನ್ಯವಾದಗಳನ್ನು ಸಲ್ಲಿಸಿದ್ದೇನೆ,’ ಎಂದು ಮೋದಿ ‘ಎಕ್ಸ್’ ಪೋಸ್ಟ್ನಲ್ಲಿ ಬರೆದಿದ್ದಾರೆ.
ಭಾರತೀಯ ಮಾಧ್ಯಮಗಳು ಆಗಾಗ್ಗೆ ಮೋದಿ ವಿಶ್ವದ ಅತ್ಯಂತ ಜನಪ್ರಿಯ ನಾಯಕ ಎಂಬ ಶೀರ್ಷಿಕೆಯೊಂದಿಗೆ ಮಾರ್ನಿಂಗ್ ಕನ್ಸಲ್ಟ್ ಎಂಬ ಅಮೆರಿಕನ್ ಸಂಸ್ಥೆಯ ಅನುಮೋದನೆ ರೇಟಿಂಗ್ ಅನ್ನು ಉಲ್ಲೇಖಿಸುತ್ತವೆ. ಈ ಶೀರ್ಷಿಕೆಗಳು ಒಂದೇ ಆನ್ಲೈನ್ ಟ್ರ್ಯಾಕರ್ ಅನ್ನು ಆಧರಿಸಿವೆ, ಆದರೆ ಅದರ ವಿಧಾನಗಳು ಮತ್ತು ಮಿತಿಗಳನ್ನು ಪರಿಶೀಲಿಸಲು ಯಾರೂ ಮುಂದಾಗುವುದಿಲ್ಲ. ಇಂತಿರುವಾಗ ಈ ಸಮೀಕ್ಷೆಯನ್ನು ಯಾರು ನಡೆಸುತ್ತಾರೆ, ಅದು ಹೇಗೆ ಕಾರ್ಯನಿರ್ವಹಿಸುತ್ತದೆ ಮತ್ತು ಅದರ ಅನುಮೋದನೆ ಏನು ಎಂಬುದನ್ನು ತಿಳಿದುಕೊಳ್ಳುವುದು ಮುಖ್ಯ. ಮಾರ್ನಿಂಗ್ ಕನ್ಸಲ್ಟ್ ನಡೆಸುವ ಸಮೀಕ್ಷೆ ಬಗ್ಗೆ ದಿ ವೈರ್ ನಲ್ಲಿ ಪ್ರಕಟವಾದ ವಿಶ್ಲೇಷಣೆ ಇಲ್ಲಿದೆ. ಸಮೀಕ್ಷೆಯನ್ನು ಯಾರು ನಡೆಸುತ್ತಾರೆ? ಈ ಅಂಕಿ ಅಂಶಗಳು 2014 ರಲ್ಲಿ ಸ್ಥಾಪನೆಯಾದ ಯುಎಸ್ ಮೂಲದ ಸಮೀಕ್ಷೆ ಕಂಪನಿಯಾದ ಮಾರ್ನಿಂಗ್ ಕನ್ಸಲ್ಟ್ನ ವಾಣಿಜ್ಯ ಉತ್ಪನ್ನವಾದ ಮಾರ್ನಿಂಗ್ ಕನ್ಸಲ್ಟ್ ಪೊಲಿಟಿಕಲ್ ಇಂಟೆಲಿಜೆನ್ಸ್ ತಯಾರಿಸಿದ ಗ್ಲೋಬಲ್ ಲೀಡರ್ ಅಪ್ರೂವಲ್ ರೇಟಿಂಗ್ ಟ್ರ್ಯಾಕರ್ನಿಂದ ಬಂದಿವೆ. ಮಾರ್ನಿಂಗ್ ಕನ್ಸಲ್ಟ್ ಖಾಸಗಿಯಾಗಿ ನಡೆಸಲ್ಪಡುವ, ಲಾಭದ ಉದ್ದೇಶಿತ ಸಂಸ್ಥೆಯಾಗಿದೆ. ಇದರ ಸಿಇಒ ಮತ್ತು ಸಹ-ಸಂಸ್ಥಾಪಕ ಮೈಕೆಲ್ ರಾಮ್ಲೆಟ್. ಈ ಟ್ರ್ಯಾಕರ್ ಭಾರತ ಸೇರಿದಂತೆ 20 ಕ್ಕೂ ಹೆಚ್ಚು ದೇಶಗಳಲ್ಲಿನ ನಾಯಕರನ್ನು ಒಳಗೊಳ್ಳುತ್ತದೆ . ಇದು ಪ್ರತಿ ದೇಶದ ಜನರ ದೈನಂದಿನ ಆನ್ಲೈನ್ ಸಮೀಕ್ಷೆಗಳ ಆಧಾರದ ಮೇಲೆ ಅನುಮೋದನೆ/ಅಸಮ್ಮತಿ ಸಂಖ್ಯೆಗಳನ್ನು ಪ್ರಕಟಿಸುತ್ತದೆ. ಅವರ ಮೋದಿ ರೇಟಿಂಗ್ ಹೇಗೆ ಕೆಲಸ ಮಾಡುತ್ತದೆ? ಮೋದಿ ವಿಶ್ವದ ಅತ್ಯಂತ ಜನಪ್ರಿಯ ನಾಯಕ ಎಂಬ ಪರಿಚಿತ ಹೇಳಿಕೆಯು ಈ ಗ್ಲೋಬಲ್ ಲೀಡರ್ ಅಪ್ರೂವಲ್ ರೇಟಿಂಗ್ ಟ್ರ್ಯಾಕರ್ನಲ್ಲಿ ಹುಟ್ಟಿಕೊಂಡಿದೆ. ಪ್ರತಿ ನಾಯಕನಿಗೆ ರೇಟಿಂಗ್ ನೀಡಲು, ಮಾರ್ನಿಂಗ್ ಕನ್ಸಲ್ಟ್ ಆ ನಾಯಕನ ಕೆಲಸದ ಕಾರ್ಯಕ್ಷಮತೆಯನ್ನು ಪ್ರತಿಕ್ರಿಯಿಸುವವರು ಅನುಮೋದಿಸುತ್ತಾರೆಯೇ ಅಥವಾ ನಿರಾಕರಿಸುತ್ತಾರೆಯೇ ಎಂಬ ಪ್ರಮಾಣಿತ ಪ್ರಶ್ನೆಗೆ 7 ದಿನಗಳಲ್ಲಿ ಲಭಿಸಿದ ಸರಾಸರಿ ಪ್ರತಿಕ್ರಿಯೆಗಳನ್ನು ವರದಿ ಮಾಡುತ್ತದೆ. ಈ ದತ್ತಾಂಶವನ್ನು ಕನ್ಸಲ್ಟ್ ಕಾರ್ಪೊರೇಟ್ ಮತ್ತು ರಾಜಕೀಯ ಕ್ಲೈಂಟ್ಗಳಿಗೆ ಮಾರಾಟ ಮಾಡುತ್ತದೆ. ಆದಾಗ್ಯೂ, ಹೆಚ್ಚಿನ ಡೇಟಾ ಮತ್ತು ನಿರ್ದಿಷ್ಟ ವಿಧಾನಗಳನ್ನು ಖಾಸಗಿಯಾಗಿ ಇರಿಸಲಾಗುತ್ತದೆ. ಸೀಮಿತ ಆವೃತ್ತಿ ಮಾತ್ರ ಅವರ ವೆಬ್ ಸೈಟ್ ನಲ್ಲಿ ಉಚಿತವಾಗಿ ಲಭ್ಯವಿರುತ್ತದೆ. ಮಾರ್ನಿಂಗ್ ಕನ್ಸಲ್ಟ್ ಬಹು ಪ್ಯಾನೆಲ್ ಪೂರೈಕೆದಾರರಿಂದ ಪಡೆದ ದೊಡ್ಡ ಆನ್ಲೈನ್ ಸಮೀಕ್ಷೆಗಳನ್ನು ಅವಲಂಬಿಸಿದೆ. ಈ ದತ್ತಾಂಶವು ಸಂಭವನೀಯತೆಯಿಲ್ಲದ ಮಾದರಿಗಳಿಂದ ಬಂದಿದೆ, ಅಂದರೆ ಇದು ಸಾಮಾನ್ಯ ಜನರ ಯಾದೃಚ್ಛಿಕ ಆಯ್ಕೆಗಿಂತ ಆನ್ಲೈನ್ ಸಮೀಕ್ಷೆ ಪ್ಯಾನೆಲ್ಗಳಿಗೆ ಸೇರಲು ಆಯ್ಕೆ ಮಾಡುವ ಜನರನ್ನು ಅವಲಂಬಿಸಿದೆ. ತಮ್ಮ ಡೇಟಾದಲ್ಲಿನ ಯಾವುದೇ ಅಂತರವನ್ನು ಸರಿಪಡಿಸಲು, ಸಂಸ್ಥೆಯು ವಯಸ್ಸು, ಲಿಂಗ ಮತ್ತು ಪ್ರದೇಶದ ಆಧಾರದ ಮೇಲೆ ಫಲಿತಾಂಶಗಳನ್ನು ಹೊಂದಿಸಿಕೊಳ್ಳುತ್ತದೆ . ಇದನ್ನು ಸರಿಹೊಂದಿಸಲು ಅವರು ಅಧಿಕೃತ ಜನಗಣತಿ ಅಂಕಿಅಂಶಗಳನ್ನು ಬಳಸುತ್ತಾರೆ. ಮೋದಿ ವಿಶ್ವದ ಅತ್ಯಂತ ಜನಪ್ರಿಯ ನಾಯಕ ಎಂಬ ಶೀರ್ಷಿಕೆಯಲ್ಲಿ ತಪ್ಪೇನಿದೆ? ಭಾರತೀಯ ಮಾಧ್ಯಮಗಳು ಈ ಹೇಳಿಕೆಯನ್ನು ವರದಿ ಮಾಡುವ ವಿಧಾನದಲ್ಲಿ ಎರಡು ಮೂಲಭೂತ ದೋಷಗಳಿವೆ. ಒಂದು ವಾಣಿಜ್ಯ ಸಂಸ್ಥೆಯ ಆನ್ಲೈನ್ ಟ್ರ್ಯಾಕರ್ನಿಂದ ಭಾರತದಲ್ಲಿರುವ 1.4 ಶತಕೋಟಿ ಜನರ ಧ್ವನಿಯನ್ನು ನಿಖರವಾಗಿ ಸೆರೆಹಿಡಿಯಬಹುದು ಮತ್ತು ಈ ಸಂಖ್ಯೆಗಳನ್ನು ವಿಶ್ವ ನಾಯಕರನ್ನು ಪರಸ್ಪರ ವಿರುದ್ಧವಾಗಿ ಶ್ರೇಣೀಕರಿಸಲು ಬಳಸಬಹುದು ಎಂದು ಅದು ಊಹಿಸುತ್ತದೆ. ವಾಸ್ತವದಲ್ಲಿ, ಎರಡೂ ಹೋಲಿಕೆಗಳು ಇದೇ ಡೇಟಾವನ್ನು ಆಧರಿಸಿವೆ. ಮೊದಲನೆಯದಾಗಿ, ಮಾರ್ನಿಂಗ್ ಕನ್ಸಲ್ಟ್ನ ದತ್ತಾಂಶವು ಭಾರತದ ಒಂದು ನಿರ್ದಿಷ್ಟ ಭಾಗವನ್ನು ಪ್ರತಿಬಿಂಬಿಸುತ್ತದೆ. ಅಂದರೆ ಆನ್ಲೈನ್ನಲ್ಲಿರುವವರು ಮತ್ತು ಸಮೀಕ್ಷೆಯಲ್ಲಿ ಭಾಗವಹಿಸುವವರು. ಬೃಹತ್ ಡಿಜಿಟಲ್ ಅಂತರದಿಂದ ವ್ಯಾಖ್ಯಾನಿಸಲ್ಪಟ್ಟ ಭಾರತ ದೇಶದಲ್ಲಿ, ಇದು ಸಣ್ಣ ವಿವರವಲ್ಲ. ಈ ಅಂಕಿಅಂಶಗಳು ಭಾರತೀಯರ ಒಂದು ವಿಭಾಗದ ಅಪೂರ್ಣ ಮತ್ತು ಕಳಪೆ ಪ್ರಾತಿನಿಧ್ಯವಾಗಿದೆ. ಇಲ್ಲಿ ಹೇಳುತ್ತಿರುವ ಅಂಕಿ ಅಂಶಗಳು ವಿಶಾಲ ಭಾರತದ ಎಲ್ಲ ಜನರನ್ನು ಪ್ರತಿನಿಧೀಕರಿಸುವುದಿಲ್ಲ ಎರಡನೆಯದಾಗಿ, ಮೋದಿ vs ಟ್ರಂಪ್ vs ಕಾರ್ನಿ ನಂತಹ ದೇಶಾದ್ಯಂತದ ಹೋಲಿಕೆಗಳು ಪ್ರತಿ ದೇಶದಲ್ಲಿನ ಸಮೀಕ್ಷೆಯು ಹೋಲಿಸಬಹುದಾದ ವ್ಯಾಪ್ತಿ, ಗುಣಮಟ್ಟ ಮತ್ತು ರಾಜಕೀಯ ಸಂದರ್ಭವನ್ನು ಹೊಂದಿದೆ ಎಂದು ಊಹಿಸುತ್ತವೆ. ವಾಸ್ತವದಲ್ಲಿ, ದೇಶಗಳು ಇಂಟರ್ನೆಟ್ ಬಳಕೆ, ಮೂಲಸೌಕರ್ಯ, ಮಾಧ್ಯಮ ಪರಿಸರಗಳು ಮತ್ತು ಪ್ರತಿಕ್ರಿಯೆ ಮಾದರಿಗಳಲ್ಲಿ ಭಾರಿ ವ್ಯತ್ಯಾಸವನ್ನು ಹೊಂದಿವೆ.ಈ ಅಂಕಿಅಂಶಗಳನ್ನು ಒಂದೇ ಶ್ರೇಯಾಂಕದಲ್ಲಿ ತೂಗುವುದು ಸರಿಯಲ್ಲ , ಏಕೆಂದರೆ ಇದು ವಿಭಿನ್ನ ಸಂಸ್ಕೃತಿಗಳು ಮತ್ತು ರಾಜಕೀಯ ವ್ಯವಸ್ಥೆಗಳು ಸಮೀಕ್ಷೆಗೆ ಹೇಗೆ ಪ್ರತಿಕ್ರಿಯಿಸುತ್ತವೆ ಎಂಬುದರಲ್ಲಿನ ವ್ಯತ್ಯಾಸಗಳನ್ನು ನಿರ್ಲಕ್ಷಿಸುತ್ತದೆ. ಕೊನೆಯದ್ದಾಗಿ ನಿಖರವಾದ ಮಟ್ಟಗಳು - 68% vs 75% ಅನುಮೋದನೆ : ಮಾಧ್ಯಮಗಳು ಈ ರೀತಿಯ ಶೇಕಡಾವಾರು ಪಾಯಿಂಟ್ ಗಳನ್ನು ಸಂಪೂರ್ಣ ಸತ್ಯಗಳೆಂದು ಪರಿಗಣಿಸುತ್ತವೆ. ಸಂಭವನೀಯವಲ್ಲದ ಆನ್ಲೈನ್ ಸಮೀಕ್ಷೆಗಳಲ್ಲಿ ಇವುಗಳನ್ನು ನಿಖರವಾಗಿ ಅಳೆಯಲು ಅಸಾಧ್ಯ. ಈ ದತ್ತಾಂಶವು ನಾಯಕನ ಬೆಂಬಲ ಹೆಚ್ಚುತ್ತಿದೆಯೇ ಅಥವಾ ಕುಸಿಯುತ್ತಿದೆಯೇ ಎಂಬುದನ್ನು ಗುರುತಿಸಲು ಬಳಸಬಹುದು. ಆದರೆ ನಿಖರವಾದ ಅನುಮೋದನೆ ಶೇಕಡಾವಾರು ಪಡೆಯಲು ಅಥವಾ ಒಂದು ದೇಶವನ್ನು ಇನ್ನೊಂದು ದೇಶಕ್ಕೆ ಹೋಲಿಸಲು ಇದನ್ನು ಬಳಸಬಾರದು. ಹಾಗಾದರೆ ಮೋದಿಗೆ ಸಿಕ್ಕ ರೇಟಿಂಗ್ ನ್ನು ಹೇಗೆ ಪರಿಗಣಿಸಬೇಕು? ಮಾರ್ನಿಂಗ್ ಕನ್ಸಲ್ಟ್ನ ಮೋದಿ ಅನುಮೋದನೆ ಸರಣಿಯನ್ನು 1.4 ಬಿಲಿಯನ್ ಭಾರತೀಯರ ನಿರ್ಣಾಯಕ ಧ್ವನಿಯಾಗಿ ಪರಿಗಣಿಸದೆ, ಭಾರತದ ಆನ್ಲೈನ್, ಸಮೀಕ್ಷೆ ತಲುಪಬಹುದಾದ ಜನಸಂಖ್ಯೆಯಲ್ಲಿನ ವರ್ತನೆಗಳ ಒಂದು ಗದ್ದಲದ ಸೂಚಕವಾಗಿ ಪರಿಗಣಿಸುವುದು ಉತ್ತಮ. ಜಾಗತಿಕ ಶ್ರೇಯಾಂಕಗಳ ಬಗ್ಗೆಯೂ ನೀವು ಎಚ್ಚರದಿಂದಿರಬೇಕು, ಏಕೆಂದರೆ ಪ್ರತಿಯೊಂದು ದೇಶವು ತನ್ನ ದತ್ತಾಂಶ, ರಾಜಕೀಯ ಮತ್ತು ಸುದ್ದಿ ಮಾಧ್ಯಮವನ್ನು ಹೇಗೆ ನಿರ್ವಹಿಸುತ್ತದೆ ಎಂಬುದರಲ್ಲಿ ಭಾರಿ ವ್ಯತ್ಯಾಸಗಳಿವೆ. ಮಾರ್ನಿಂಗ್ ಕನ್ಸಲ್ಟ್ ಸಾಮಾನ್ಯವಾಗಿ ಎಷ್ಟು ವಿಶ್ವಾಸಾರ್ಹವಾಗಿದೆ? ಮಾರ್ನಿಂಗ್ ಕನ್ಸಲ್ಟ್ ಗಂಭೀರ, ದತ್ತಾಂಶ ಆಧಾರಿತ ಕಾರ್ಯಾಚರಣೆಯಾಗಿದೆ. ಆದರೆ ಅದರ ದಾಖಲೆಯು ದೋಷಪೂರಿತವಾಗಿದೆ. ಅದರ ವಿಧಾನಗಳು ಯುಎಸ್ ನಲ್ಲಿಯೂ ಟೀಕೆಗೆ ಗುರಿಯಾಗುತ್ತವೆ. 2016 ರ ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ, ಮಾರ್ನಿಂಗ್ ಕನ್ಸಲ್ಟ್ನ ರಾಷ್ಟ್ರೀಯ ಸಮೀಕ್ಷೆಯು ಹಿಲರಿ ಕ್ಲಿಂಟನ್ ಅವರು, ಅವರ ಜನಪ್ರಿಯ ಮತಗಳ ಅಂತರಕ್ಕಿಂತ ಹೆಚ್ಚು ಮುಂದೆ ಇದ್ದಾರೆ ಎಂದು ತೋರಿಸಿದೆ. ಇದು ಅವರ ಅನುಕೂಲವನ್ನು ಉತ್ಪ್ರೇಕ್ಷಿಸುವ ವಿಶಾಲ ಉದ್ಯಮ ಪ್ರವೃತ್ತಿಗೆ ಅನುಗುಣವಾಗಿದೆ. ನಂತರದ ಯುಎಸ್ ಮಧ್ಯಾವಧಿಯಲ್ಲಿ, ಸಾರ್ವಜನಿಕ ಅಭಿಪ್ರಾಯ ಸಂಗ್ರಹಣೆ ಮಾಡುವ ಕಾರ್ಯಕ್ಷಮತೆಯ ವಿವಿಧ ಮೌಲ್ಯಮಾಪನಗಳು ಸಂಭವನೀಯತೆ ಆಧಾರಿತ ವಿಧಾನಗಳನ್ನು ಬಳಸುವ ಸಾಂಪ್ರದಾಯಿಕ ಸಮೀಕ್ಷೆಗಳಿಗೆ ಹೋಲಿಸಿದರೆ ಮಾರ್ನಿಂಗ್ ಕನ್ಸಲ್ಟ್ ಅನ್ನು ನಿಖರತೆಯಲ್ಲಿ ಸರಾಸರಿಗಿಂತ ಕಡಿಮೆ ಇರಿಸಿದೆ. ಸಮೀಕ್ಷೆ ಮಾಧ್ಯಮ (ಡಿಜಿಟಲ್ vs. ಸಾಂಪ್ರದಾಯಿಕ ಫೋನ್) ಫಲಿತಾಂಶಗಳ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಮತ್ತು shy Trump voters ಎಂಬ ಪ್ರವೃತ್ತಿ ( ಡೊನಾಲ್ಡ್ ಟ್ರಂಪ್ ಅವರನ್ನು ಬೆಂಬಲಿಸುವ ಆದರೆ ಸಾಮಾಜಿಕ ಕಳಂಕ ಅಥವಾ ತೀರ್ಪಿನ ಭಯದಿಂದಾಗಿ ಅದನ್ನು ಸಮೀಕ್ಷೆದಾರರಿಗೆ ಒಪ್ಪಿಕೊಳ್ಳಲು ಹಿಂಜರಿಯುವ ಪ್ರವೃತ್ತಿ)ಮುಂತಾದ ಸಂಕೀರ್ಣ ಮತದಾನ ಸವಾಲುಗಳನ್ನು ವಿಶ್ಲೇಷಿಸುವ ಮೂಲಕ ಸಂಸ್ಥೆಯು ತನ್ನ ಖ್ಯಾತಿಯನ್ನು ಗಳಿಸಿದೆ. ಆದರೆ ನಂತರದ ಚುನಾವಣಾ ಫಲಿತಾಂಶಗಳು ಮತ್ತು ಹೊರಗಿನ ವಿಶ್ಲೇಷಣೆಗಳು ಅವರು ವಿವರಿಸಿದ ಪರಿಣಾಮಗಳ ಪ್ರಮಾಣ ಮತ್ತು ರಾಜಕೀಯ ಮಹತ್ವದ ಬಗ್ಗೆ ಅನುಮಾನವನ್ನು ವ್ಯಕ್ತಪಡಿಸಿವೆ. ಇದು ಕೇವಲ ಮಾರ್ನಿಂಗ್ ಕನ್ಸಲ್ಟ್ನ ಸಮಸ್ಯೆಯಲ್ಲ, ಸಂಭವನೀಯತೆಯಿಲ್ಲದ ಆನ್ಲೈನ್ ಸಮೀಕ್ಷೆಯ ಸಿಂಧುತ್ವವು ಸಮೀಕ್ಷಾ ತಜ್ಞರಲ್ಲಿ ತೀವ್ರ ಚರ್ಚೆಯ ವಿಷಯವಾಗಿ ಉಳಿದಿದೆ. ಇದು ಸಾಮಾನ್ಯವಾಗಿ ಸಂಭವನೀಯತೆಯಿಲ್ಲದ ಆನ್ಲೈನ್ ಸಮೀಕ್ಷೆಯ ಸಮಸ್ಯೆಯೇ? ಮಾರ್ನಿಂಗ್ ಕನ್ಸಲ್ಟ್ ಸೇರಿದಂತೆ ಸಂಭವನೀಯತೆಯಿಲ್ಲದ ಆನ್ಲೈನ್ ಸಮೀಕ್ಷೆದಾರರೊಂದಿಗೆ ಹಲವಾರು ಪುನರಾವರ್ತಿತ ಸಮಸ್ಯೆಗಳನ್ನು ತಜ್ಞರು ಸೂಚಿಸಿದ್ದಾರೆ. ಭಾರತದಂತಹ ರಚನಾತ್ಮಕವಾಗಿ ಅಸಮಾನ ಭೂದೃಶ್ಯದಲ್ಲಿ, ಇಂಟರ್ನೆಟ್ ಪ್ರವೇಶವು ಸಾರ್ವತ್ರಿಕವಾಗಿಲ್ಲ, ಹಾಗಾಗಿ ಅಂತರಗಳು ಇನ್ನಷ್ಟು ಎದ್ದು ಕಾಣುತ್ತವೆ. ನಿಜವಾದ ಮಾದರಿ ದೋಷವಿಲ್ಲ Margins of error ಅಥವಾ ಅಂದಾಜು ನಿಜವಾಗಿಯೂ ಯಾದೃಚ್ಛಿಕವಾಗಿ ಜನರನ್ನು ಆರಿಸಿದರೆ ಮಾತ್ರ ಕೆಲಸ ಮಾಡುತ್ತದೆ. ಆನ್ಲೈನ್ ಸಮೀಕ್ಷೆಗಳು ಆ ರೀತಿಯಲ್ಲಿ ಕೆಲಸ ಮಾಡುವುದಿಲ್ಲ ಮಾದರಿಯು ಯಾದೃಚ್ಛಿಕವಾಗಿಲ್ಲದ ಕಾರಣ, ಪ್ರಮಾಣಿತ Margins of error ಅನ್ನು ಬಳಸುವುದು ದಾರಿತಪ್ಪಿಸುತ್ತದೆ; ಇದು ಡೇಟಾವನ್ನು ನಿಜವಾಗಿರುವುದಕ್ಕಿಂತ ಹೆಚ್ಚು ನಿಖರವಾಗಿ ಕಾಣುವಂತೆ ಮಾಡುತ್ತದೆ. ದೊಡ್ಡ ಪ್ರಮಾಣದ ಮರುಸಮತೋಲನ ಕಚ್ಚಾ ಮಾದರಿಯಲ್ಲಿನ ಅಸಮತೋಲನವನ್ನು ಸರಿದೂಗಿಸಲು ಈ ರೀತಿ ಮಾಡಲಾಗುತ್ತದೆ. ಒಂದು ಸಮೀಕ್ಷೆಯು ವಯಸ್ಸು ಮತ್ತು ಲಿಂಗದಂತಹ ಮೂಲಭೂತ ವಿಷಯಗಳಿಗೆ ಸಂಖ್ಯೆಗಳನ್ನು ಸಮತೋಲನಗೊಳಿಸಿ ಜಾತಿ, ಜನರು ಯಾವ ಸುದ್ದಿಗಳನ್ನು ನೋಡುತ್ತಾರೆ ಅಥವಾ ಭಿನ್ನಾಭಿಪ್ರಾಯವನ್ನು ವ್ಯಕ್ತಪಡಿಸುವ ಭಯ ಮುಂತಾದ ಆಳವಾದ ಅಂಶಗಳನ್ನು ನಿರ್ಲಕ್ಷಿಸಿದರೆ ಅಲ್ಲಿ ಲೆಕ್ಕಾಚಾರ ಸರಿ ಹೊಂದುವುದಿಲ್ಲ. ಜನರು ಯೋಚಿಸುವ ರೀತಿಯಲ್ಲಿ ನಿಜವಾದ ಕಾರಣಗಳನ್ನು ಅದು ತಪ್ಪಿಸಿಕೊಂಡ ಕಾರಣ ಮಾದರಿ ಆಧಾರಿತ ಪಕ್ಷಪಾತವು ಮುಂದುವರಿಯಬಹುದು ಅಥವಾ ಇನ್ನಷ್ಟು ಹದಗೆಡಬಹುದು. ಸೀಮಿತ ಪಾರದರ್ಶಕತೆ ಈ ಸಮೀಕ್ಷೆಗಳು ಖಾಸಗಿ ಉತ್ಪನ್ನಗಳಾಗಿರುವುದರಿಂದ, ಮೈಕ್ರೋಡೇಟಾ, ಪೂರ್ಣ ಕೋಡ್ಬುಕ್ಗಳು ಮತ್ತು ಬಳಸಿದ ಮಾಪನಗಳನ್ನು ವಿರಳವಾಗಿ ಬಿಡುಗಡೆ ಮಾಡಲಾಗುತ್ತದೆ. ಇದು ತಜ್ಞರು ಅಥವಾ ಪತ್ರಕರ್ತರು ದೃಢತೆಯನ್ನು ಪರೀಕ್ಷಿಸುವುದರಿಂದ ಅಥವಾ ಡೇಟಾವನ್ನು ಮರು ವಿಶ್ಲೇಷಿಸುವುದನ್ನು ತಡೆಯುತ್ತದೆ. ಸಾಮಾನ್ಯ ಟೀಕೆಗಳನ್ನು ಮೀರಿ, ಈ ನಿರ್ದಿಷ್ಟ ಅಧ್ಯಯನಕ್ಕೆ ವಿಶಿಷ್ಟವಾದ ತಾಂತ್ರಿಕ ಮಿತಿಗಳು ಅಥವಾ ಕಾರ್ಯವಿಧಾನದ ಎಚ್ಚರಿಕೆಗಳು ಯಾವುವು? ಸಮೀಕ್ಷೆಯಲ್ಲಿ ಮೋದಿ ಅವರಿಗೆ ಸಿಕ್ಕ ಅನುಮೋದನೆಗಳನ್ನು ಅರ್ಥೈಸಿಕೊಳ್ಳುವಾಗ ಕೆಲವು ಎಚ್ಚರಿಕೆಗಳನ್ನು ನೀಡಬೇಕಾಗಿದೆ. ಮೊದಲಿಗೆ, ಮಾರ್ನಿಂಗ್ ಕನ್ಸಲ್ಟ್ ತನ್ನ ವಿಧಾನದ ಬಗ್ಗೆ ಪಾರದರ್ಶಕವಾಗಿದೆ. ಇದು ಸಾಂಪ್ರದಾಯಿಕ ಯಾದೃಚ್ಛಿಕ-ಅಂಕಿಯ ಡಯಲಿಂಗ್ ಅಥವಾ ಅಧಿಕೃತ ಜನಸಂಖ್ಯಾ ನೋಂದಣಿಗಳಿಂದ ಮಾದರಿ ಪಡೆಯುವ ಬದಲು ಸಂಭವನೀಯತೆಯಿಲ್ಲದ ಆನ್ಲೈನ್ ಪ್ಯಾನೆಲ್ಗಳನ್ನು ಬಳಸುತ್ತದೆ. ಭಾರತದಲ್ಲಿ, ಇದು ನಗರ ಮತ್ತು ನಗರ ಮತ್ತು ಗ್ರಾಮಗಳ ನಡುವೆ ವಾಸಿಸುವ ನಿವಾಸಿಗಳು, ಸ್ಮಾರ್ಟ್ಫೋನ್ ಮತ್ತು ಹೈ-ಸ್ಪೀಡ್ ಇಂಟರ್ನೆಟ್ ಬಳಕೆದಾರರು ಮತ್ತು ಹೆಚ್ಚು ವಿದ್ಯಾವಂತ, ಹೆಚ್ಚಿನ ಆದಾಯದ ಮತ್ತು ಹೆಚ್ಚು ರಾಜಕೀಯವಾಗಿ ತೊಡಗಿಸಿಕೊಂಡಿರುವ ಜನರು ಈ ಸಮೀಕ್ಷೆಯಲ್ಲಿ ಭಾಗಿಯಾಗುತ್ತಾರೆ. ಈ ಗುಂಪುಗಳು ರಾಜಕೀಯವಾಗಿ ತಟಸ್ಥವಾಗಿಲ್ಲ. ಹೆಚ್ಚಿನ ವಿಶ್ಲೇಷಣೆಗಳು ಅವರು ಬಡ, ಕಡಿಮೆ ಸಂಪರ್ಕ ಹೊಂದಿದ ನಾಗರಿಕರಿಗೆ ಹೋಲಿಸಿದರೆ ಆಡಳಿತ ಪಕ್ಷ ಮತ್ತು ಅದರ ಆದ್ಯತೆಯ ನಿರೂಪಣೆಗಳ ಕಡೆಗೆ ವಾಲುತ್ತಾರೆ ಎಂದು ತೋರಿಸುತ್ತವೆ. ಎರಡನೆಯದಾಗಿ, ಸಾರ್ವತ್ರಿಕ ಇಂಟರ್ನೆಟ್ ವ್ಯಾಪ್ತಿಯನ್ನು ಹೊಂದಿರುವ ದೇಶಗಳಲ್ಲಿ ಆನ್ಲೈನ್ ಪ್ಯಾನೆಲ್ಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತವೆ. ಭಾರತದ ಡಿಜಿಟಲ್ ಪ್ರವೇಶವು ಬೆಳೆದಿದ್ದರೂ ಸಹ, ಆದಾಯ, ಲಿಂಗ, ಪ್ರದೇಶ, ಧರ್ಮ ಮತ್ತು ಜಾತಿಯ ಆಧಾರದ ಮೇಲೆ ದೊಡ್ಡ ಅಂತರಗಳು ಉಳಿದಿವೆ. ಆಫ್ಲೈನ್, ಕಡಿಮೆ ಆದಾಯದ ಮತ್ತು ಹಿರಿ ವಯಸ್ಸಿನ ಭಾರತೀಯರ ಕಡಿಮೆ ವ್ಯಾಪ್ತಿಯು ಮೋದಿಯ ಬಗ್ಗೆ ಕಡಿಮೆ ಉತ್ಸಾಹ ಹೊಂದಿರುವ ನಾಗರಿಕರಿಗೆ ಒಡ್ಡಿಕೊಳ್ಳುವುದನ್ನು ವ್ಯವಸ್ಥಿತವಾಗಿ ಕಡಿಮೆ ಮಾಡುತ್ತದೆ. ಮೂರನೆಯದಾಗಿ, ಮಾರ್ನಿಂಗ್ ಕನ್ಸಲ್ಟ್ ಉನ್ನತ ಮಟ್ಟದ ವಿಧಾನಗಳನ್ನು ಪ್ರಕಟಿಸುತ್ತದೆ. ದೈನಂದಿನ ಆನ್ಲೈನ್ ಸಂದರ್ಶನಗಳು, ರೋಲಿಂಗ್ ಸರಾಸರಿಗಳನ್ನು ಅವು ಹೊಂದಿದ್ದರೂ ಸಾರ್ವಜನಿಕ ಟ್ರ್ಯಾಕರ್ನಲ್ಲಿ ಪೂರ್ಣವಾಗಿ ವಿಧಾನದ ಟಿಪ್ಪಣಿಯನ್ನು ಒದಗಿಸುವುದಿಲ್ಲ. ಕಾಣೆಯಾದ ಅಥವಾ ಅಪಾರದರ್ಶಕ ವಿವರಗಳಲ್ಲಿ ಭಾರತದಲ್ಲಿ ಪ್ಯಾನೆಲ್ ಸಂಯೋಜನೆ ಗ್ರಾಮೀಣ/ನಗರ ಶ್ರೇಣೀಕರಣ ಮತ್ತು ಕೋಟಾಗಳು, ಭಾಷಾ ವ್ಯಾಪ್ತಿ (ಯಾವ ಭಾರತೀಯ ಭಾಷೆಗಳನ್ನು ಬಳಸಲಾಗುತ್ತದೆ, ಅನುವಾದಗಳನ್ನು ಹೇಗೆ ಪರೀಕ್ಷಿಸಲಾಗುತ್ತದೆ), ಮತ್ತು ಪ್ರತಿಕ್ರಿಯೆ ದರಗಳ ಮಾದರಿಗಳು ಸೇರಿವೆ. ಇವುಗಳಿಲ್ಲದೆ, ಭಾರತೀಯ ಮಾದರಿಯು ಬಡ ರಾಜ್ಯಗಳು, ಹಿಂದಿಯೇತರ ಪ್ರದೇಶಗಳು ಅಥವಾ ದಲಿತರು, ಆದಿವಾಸಿಗಳು ಮತ್ತು ಮುಸ್ಲಿಮರಂತಹ ರಾಜಕೀಯವಾಗಿ ಅಂಚಿನಲ್ಲಿರುವ ಗುಂಪುಗಳನ್ನು ಅರ್ಥಪೂರ್ಣವಾಗಿ ಪ್ರತಿನಿಧಿಸುತ್ತದೆಯೇ ಎಂದು ನಿರ್ಣಯಿಸುವುದು ಹೊರಗಿನವರಿಗೆ ಅಸಾಧ್ಯ. ನಾಲ್ಕನೆಯದಾಗಿ, ಸಾರ್ವಜನಿಕರಿಗೆ ಮುಖಾಮುಖಿಯಾಗುವ ಟ್ರ್ಯಾಕರ್ ಕೆಲವೇ ಕೆಲವು ವಿಷಯಗಳನ್ನ ಮಾತ್ರ ತೋರಿಸುತ್ತದೆ. ನಿರ್ದಿಷ್ಟ ಸ್ಥಳೀಯ ಅನುವಾದಗಳು ಅಥವಾ ಪ್ರಶ್ನೆಗಳ ಅನುಕ್ರಮವನ್ನು ಬಹಿರಂಗಪಡಿಸಲು ಇದು ವಿಫಲವಾಗಿದೆ, ಇವೆರಡೂ ಪ್ರತಿಕ್ರಿಯೆಗಳನ್ನು ಗಮನಾರ್ಹವಾಗಿ ಪಕ್ಷಪಾತ ಮಾಡಬಹುದು. ಇದಲ್ಲದೆ, ಸ್ಪ್ಲಿಟ್-ಮಾದರಿ ಪ್ರಯೋಗಗಳ ಅನುಪಸ್ಥಿತಿಯು ಡೇಟಾದ ದೃಢತೆಯನ್ನು ನಾವು ಪರಿಶೀಲಿಸಲು ಸಾಧ್ಯವಿಲ್ಲ ಎಂದರ್ಥ. ಸಮೀಕ್ಷೆಯಲ್ಲಿನ ಸಣ್ಣ ಭಾಷಾ ಬದಲಾವಣೆಗಳು ಸಹ ಭೌತಿಕವಾಗಿ ವಿಭಿನ್ನ ಅನುಮೋದನೆ ರೇಟಿಂಗ್ಗಳಿಗೆ ಕಾರಣವಾಗಬಹುದು. ಅಂತಿಮವಾಗಿ, ಈ ಸಮೀಕ್ಷೆ ಕಂಪನಿಗಳು ತಮ್ಮ ಡೇಟಾವನ್ನು ದೊಡ್ಡ ವ್ಯವಹಾರಗಳು ಮತ್ತು ರಾಜಕಾರಣಿಗಳಿಗೆ ಮಾರಾಟ ಮಾಡುವುದರಿಂದ, ಅವರು ತಮ್ಮ ಚಾರ್ಟ್ಗಳನ್ನು ಸ್ವಚ್ಛ ಮತ್ತು ಓದಲು ಸುಲಭವಾಗುವಂತೆ ಮಾಡಲು ಒಂದು ಕಾರಣವಿದೆ. ಅವರು ತಮ್ಮ ಗ್ರಾಹಕರನ್ನು ಸಂತೋಷವಾಗಿಡಲು ವಿಶ್ವದ ಅತ್ಯಂತ ಜನಪ್ರಿಯ ನಾಯಕ ನಂತಹ ಸುಗಮ ಪ್ರವೃತ್ತಿಗಳು ಮತ್ತು ಆಕರ್ಷಕ ಹೆಡ್ಡಿಂಗ್ ತೋರಿಸಲು ಬಯಸುತ್ತಾರೆ. ಸಮಸ್ಯೆಯೆಂದರೆ ನೈಜ-ಪ್ರಪಂಚದ ಡೇಟಾ ಹೆಚ್ಚಾಗಿ ಗೊಂದಲಮಯ ಮತ್ತು ಅನಿಶ್ಚಿತವಾಗಿರುತ್ತದೆ. ಪರಿಪೂರ್ಣ ಚಾರ್ಟ್ ಮೇಲೆ ಕೇಂದ್ರೀಕರಿಸುವ ಮೂಲಕ, ಈ ಕಂಪನಿಗಳು ಸಾಮಾನ್ಯವಾಗಿ ಸೂಕ್ಷ್ಮ ವಿಷಯಗಳನ್ನು ಮರೆಮಾಡುತ್ತವೆ. ಸಂಕ್ಷಿಪ್ತವಾಗಿ ಹೇಳುವುದಾದರೆ, ಮೋದಿ ವಿಶ್ವದ ಅತ್ಯಂತ ಜನಪ್ರಿಯ ನಾಯಕ ಎಂಬ ಶೀರ್ಷಿಕೆಯನ್ನು ಹೀಗೆ ಬರೆಯಬೇಕು: ಅಮೆರಿಕ ಮೂಲದ ಸಂಸ್ಥೆಯೊಂದರ ಆನ್ಲೈನ್ ಟ್ರ್ಯಾಕರ್ ಪ್ರಕಾರ ಅವರು ಮೇಲ್ವಿಚಾರಣೆ ಮಾಡುವ ನಿರ್ದಿಷ್ಟ ನಾಯಕರ ಗುಂಪಿನಲ್ಲಿ ಮೋದಿ ಅತ್ಯುನ್ನತ ಅನುಮೋದನೆಯನ್ನು ಹೊಂದಿದ್ದಾರೆ. ಗಣನೀಯ ಕಾರ್ಯವಿಧಾನದ ಮಿತಿಗಳೊಂದಿಗೆ ಇದು ಯಾದೃಚ್ಛಿಕವಲ್ಲದ ಮಾದರಿಗಳನ್ನುಅವಲಂಬಿಸಿದೆ. ಇದು ಭಾರತೀಯ ಮಾಧ್ಯಮಗಳಲ್ಲಿನ ಅಬ್ಬರದ ಮುಖ್ಯಾಂಶಗಳು ಸೂಚಿಸುವುದಕ್ಕಿಂತ ಹೆಚ್ಚು ಸಾಧಾರಣವಾದ ಹೇಳಿಕೆಯಾಗಿದೆ.
ಶಿಥಿಲಾವಸ್ಥೆಯಲ್ಲಿರುವ ಸೇತುವೆಗಳ ಅಭಿವೃದ್ಧಿ ಕಾರ್ಯ: ಸಚಿವ ಸತೀಶ್ ಜಾರಕಿಹೊಳಿ
ವಿಟ್ಲ: 20 ವರ್ಷಗಳಿಂದ ಸೇತುವೆಗಳ ಕಾಮಗಾರಿಗೆ ಅದ್ಯತೆಯನ್ನು ನೀಡಲಾಗಿಲ್ಲ. ಕೇರಳ ಸಂಪರ್ಕ ಕಲ್ಪಿಸುವ ಎರಡು ಮೂರು ಸೇತುವೆ ಮಾಡುವ ಪ್ರಸ್ತಾವನೆಯಿದೆ. ಸುಳ್ಯ ಭಾಗ ಸೇರಿ ಬೇರೆ ಭಾಗದಲ್ಲಿ ಬೇಡಿಕೆಯಿದೆ. ಸಂಪರ್ಕ ಸನಿಹ ಆಗುವ ಸ್ಥಳಗಳಲ್ಲಿ ಅಭಿವೃದ್ಧಿ ನಡೆಸಲಾಗುವುದು. ಶಿಥಿಲಾವಸ್ಥೆಯಲ್ಲಿರುವ ಸೇತುವೆಗಳ ಅಭಿವೃದ್ಧಿ ಕಾರ್ಯ ಮುಂದಿನ ದಿನ ನಡೆಯಲಿದೆ ಎಂದು ಲೊಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು. ಅವರು ಶನಿವಾರ ಮಾಣಿಲ ಗ್ರಾಮದ ಕಾಮಜಾಲು ಪೂನಡ್ಕ ಮೂಲಕ ಕೇರಳ ಸಂಪರ್ಕ ಕಲ್ಪಿಸುವ ಸೇತುವೆ ನಿರ್ಮಾಣ ಸ್ಥಳ ವೀಕ್ಷಣೆ ಮಾಡಿ ಮಾತನಾಡಿದರು. ಜನರಿಗೆ ಅನುಕೂಲ ಆಗುವ ಸೇತುವೆಯಾದರೆ ಮಾಡುವ ಪ್ರಯತ್ನ ಮಾಡಲಾಗುವುದು. ಪೂನಡ್ಕ ಸೇತುವೆ ಸುಮಾರು ಐವತ್ತು ವರ್ಷದ ಹಿಂದಿನ ಬೇಡಿಕೆಯೆಂದು ತಿಳಿದು, ಖುದ್ದು ಸ್ಥಳ ಪರಿಶೀಲನೆಗೆ ಆಗಮಿಸಿದ್ದೇನೆ. ಕಾಲು ಸಂಕ ಹಾಗೂ ಸೇತುವೆಗಳ ಅಭಿವೃದ್ಧಿಗೆ ಹೆಚ್ಚಿನ ಆಧ್ಯತೆಯನ್ನು ನೀಡಲಾಗಿದೆ. ಪೂನಡ್ಕ ಸೇತುವೆ ಬಗ್ಗೆ ಸಾದಕ ಭಾದಕ ನೋಡಿ ಮತ್ತಿನ ನಿರ್ಧಾರವನ್ನು ತೆಗೆದುಕೊಳ್ಳಲಾಗುವುದು. ಸೇತುವೆಯ ಸಂಪೂರ್ಣ ಖರ್ಚು ಕರ್ನಾಟಕವೇ ಭರಿಸಲಿದೆ ಎಂದು ಹೇಳಿದರು. ಜಿಲ್ಲೆಯಾದ್ಯಂತ ಕೆಲವು ಸೇತುವೆ ಹೊಸದಾಗಿ ಮಾಡಿದರೆ, ಅಗಲೀಕರಣ ಸೇರಿ ಕೆಲವನ್ನು ದುರಸ್ಥಿ ಮಾಡಲಾಗು ತ್ತಿದೆ. ಎಸ್. ಎಚ್. ಡಿ. ಪಿ. ಕಾಮಗಾರಿಗಳಿ ಸದ್ಯ ಉತ್ತಮವಾಗಿ ನಡೆಯುತ್ತಿದ್ದು, ಹಿಂದಿನ ಅವಧಿಯ ವಿಚಾರ ತಿಳಿದಿಲ್ಲ. ಪುತ್ತೂರು ಶಾಸಕರು ನೀಡಿದ ಬಹಳಷ್ಟು ಯೋಜನೆಯನ್ನು ನೀಡಲಾಗಿದೆ. ಮಳೆಗೆ ಕಾಮಗಾರಿ ಹಾನಿ ಯಾಗಬಾರದೆಂಬ ನಿಟ್ಟಿನಲ್ಲಿ ಇಲಾಖೆಯ ಕಾಮಗಾರಿಗಳನ್ನು ಅಕ್ಟೋಬರ್ ಬಳಿಕವೇ ನಡೆಸಲಾಗುತ್ತಿದ್ದು, ಗುತ್ತಿಗೆಯನ್ನು ಎಪ್ರಿಲ್ ನಲ್ಲಿ ಮಾಡಲಾಗುತ್ತಿದೆ ಎಂದರು. ಶಾಸಕ ಅಶೋಕ್ ಕುಮಾರ್ ರೈ, ವಿಟ್ಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪದ್ಮನಾಭ ಪೂಜಾರಿ ಸಣ್ಣಗುತ್ತು, ಕುಕ್ಕಾಜೆ ಶ್ರೀಕೃಷ್ಣ ಗುರೂಜಿ, ಪ್ರಮುಖರಾದ ಎಂ. ಎಸ್. ಮಹಮ್ಮದ್, ಗೋಪಾಲಕೃಷ್ಣ ನಾಯಕ್ ಮುಕ್ವೆ, ಶ್ರೀಧರ್ ಬಾಳೆಕಲ್ಲು, ವಿಷ್ಣು ಕುಮಾರ್ ಕೊಮ್ಮುಂಜೆ, ಜಯರಾಮ್ ಬಲ್ಲಾಳ್, ಕೃಷ್ಣ ಪೂಜಾರಿ, ಗಣೇಶ್ ಭಟ್ ದೇಲಂತಮಜಲು, ವಿಷ್ಣು ಕನ್ನಡಗುಳಿ, ರಾಮಕೃಷ್ಣ ಅಡ್ಯಂತಾಯ, ಕರೀಂ ಕುದ್ದುಪದವು ಮತ್ತಿತರರು.
ಮಂಗಳೂರಿನಲ್ಲಿ ಗುಡುಗು, ಮಿಂಚು ಸಹಿತ ತುಂತುರು ಮಳೆ
ಮಂಗಳೂರು: ಕಳೆದ ಸುಮಾರು ಒಂದು ತಿಂಗಳಿನಿಂದ ಸುಡು ಬಿಸಿಲಿನಿಂದ ತತ್ತರಿಸಿದ್ದ ಮಂಗಳೂರು ನಗರದಲ್ಲಿ ಶನಿವಾರ ಸಂಜೆ ಗುಡುಗು ಮಿಂಚಿನ ಸಹಿತ ತುಂತುರು ಮಳೆಯಾಗಿದೆ. 40 ಡಿಗ್ರಿ ಸೆಲ್ಸಿಯಸ್ ಗೂ ಮೀರಿದ ಬಿಸಿಲ ಝಳದಿಂದ ಸಾರ್ವಜನಿಕ ಬದುಕು ಹೈರಾಣಾಗಿದ್ದ ನಗರದಲ್ಲಿ ತುಂತುರು ಮಳೆ ಬಿಸಿಲ ಧಗೆಯನ್ನು ರಾತ್ರಿ ವೇಳೆ ಸ್ವಲ್ಪ ಕಡಿಮೆಗೊಳಿಸಿದೆ. ಕಳೆದ ಕೆಲ ದಿನಗಳಿಂದ ದ.ಕ. ಜಿಲ್ಲೆಯ ಗ್ರಾಮೀಣ ಪ್ರದೇಶಗಳಾದ ಬೆಳ್ತಗಂಡಿ, ಬಂಟ್ವಾಳ ಸೇರಿದಂತೆ ಕೆಲವಡೆ ಮಳೆಯಾಗಿದ್ದರೂ ಮಂಗಳೂರು ನಗರದಲ್ಲಿ ಬಿಸಿಲ ಬೇಗೆ ಹೆಚ್ಚಾಗಿತ್ತು. ಶನಿವಾರ ಸಂಜೆಯ ವೇಳೆ ಮೋಡ ಕವಿದ ವಾತಾವರಣದೊಂದಿಗೆ ಸಿಡಿಲು, ಮಿಂಚು ಸೇರಿ ಮಳೆ ಸುರಿದಿದೆ.
RCB ಜಾಣ ನಡೆ: 3 ವಿಕೆಟ್ ಕಿತ್ತ ಜಾಕೋಬ್ ಡಫಿ ಕೋಟಾ ಮುಗಿಸಿ ಪೆವಿಲಿಯನ್ ಗೆ, ದೇವದತ್ ಪಡಿಕ್ಕಲ್ ಕಣಕ್ಕೆ!
ಜೋಶ್ ಹೇಜಲ್ವುಡ್ ಅವರು ಅಲಭ್ಯರಾಗಿದ್ದ ಹಿನ್ನೆಲೆಯಲ್ಲಿ ನಿರಾಸೆಯಲ್ಲಿದ್ದ ಆರ್ ಸಿಬಿ ಅಭಿಮಾನಿಗಳ ಮೊಗದಲ್ಲಿ ಇದೀಗ ನಗು ಮೂಡಿದೆ. ಕಾರಣ ಅವರ ಬದಲಿಗೆ ಕಣಕ್ಕಿಳಿದ ಕಿವೀಸ್ ವೇಗಿ ಜಾಕೋಬ್ ಡಫಿ ಅವರು 5 ಓವರ್ ಮುಗಿಯುವುದರೊಳಗಾಗಿ ಸನ್ ರೈಸರ್ಸ್ ತಂಡದ ಅಗ್ರ ಕ್ರಮಾಂಕದ ಮೂವರ ಬ್ಯಾಟರ್ ಗಳನ್ನು ಔಟ್ ಮಾಡಿ ತಮ್ಮ ಕೆಲಸವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. 7 ಓವರ್ ಮುಗಿಯುವುದರೊಳಗಾಗಿ ತಮ್ಮ 4 ಓವರ್ ಗಳ ಕೋಟಾ ಮುಗಿಸಿದಿ ಅವರು ಪೆವಿಲಿಯನ್ ಸೇರಿಕೊಂಡಿದ್ದು ಅವರ ಬದಲು ಇಂಪ್ಯಾಕ್ಟ್ ಪ್ಲೇಯರ್ ಆಗಿ ಕರ್ನಾಟಕದ ಸ್ಫೋಟಕ ದಾಂಡಿಗ ದೇವದತ್ ಪಡಿಕ್ಕಲ್ ಅವರು ಇಂಪ್ಯಾಕ್ಟ್ ಪ್ಲೇಯರ್ ಆಗಿ ಕಣಕ್ಕಿಳಿಸಿದ್ದಾರೆ. ಈ ಮೂಲಕ ನಿಯಮವನ್ನು ಸದುಪಯೋಗಿಸಿಕೊಂಡ ಆರ್ ಸಿಬಿಯ ಜಾಣ ನಡೆ ಗಮನ ಸೆಳೆದಿದೆ. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಉದ್ಘಾಟನಾ ಪಂದ್ಯದಲ್ಲಿ ಟಾಸ್ ಗೆದ್ದ ಆರ್ ಸಿಬಿ ನಾಯಕ ರಜತ್ ಪಾಟೀದಾರ್ ಅವರು ಫೀಲ್ಡಿಂಗ್ ಆಯ್ದುಕೊಂಡರು. ಆರ್ ಸಿಬಿ ತಂಡ ಅಲಭ್ಯರಾಗಿರುವ ಮುಂಚೂಣಿಯ ಮಧ್ಯಮವೇಗಿಗಳಾದ ಜೋಶ್ ಹೇಜಲ್ ವುಡ್ ಮತ್ತು ಯಶ್ ದಯಾಳ್ ಬದಲು ಜಾಕೋಬ್ ಡಫಿ ಮತ್ತು ಅವರನ್ನು ಪ್ಲೇಯಿಂಗ್ ಇಲೆವೆನ್ ನಲ್ಲಿ ಸೇರಿಸಿಕೊಂಡಿತ್ತು. ()ತಂಡ ತನ್ನ ಮೇಲಿಟ್ಟ ನಂಬಿಕೆಯನ್ನು ಎಳ್ಳಷ್ಟೂ ಸುಳ್ಳು ಮಾಡದ ನ್ಯೂಜಿಲೆಂಡ್ ನ ಆಟಗಾರ ಜಾಕೋಬ್ ಡಫಿ ಅವರು ಎದುರಾಳಿ ಸನ್ ರೈಸರ್ಸ್ ವಿರುದ್ಧ ಮಾರಕ ದಾಳಿ ಸಂಘಟಿಸಿದರು. ಆರಂಭಿಕನಾಗಿ ದಾಳಿಗಿಳಿದ ಅವರು ಮೊದಲ ಓವರ್ ಚೆನ್ನಾಗಿ ಎಸೆದರೂ ಅಭಿಷೇಕ್ ಶರ್ಮಾ ಅವರು ಡೀಪ್ ಫಾರ್ಮರ್ಡ್ ಪಾಯಿಂಟ್ ಮೇಲೆ ಸಿಕ್ಸರ್ ಬಾರಿಸಿ ಸ್ಫೋಟಕ ಇನ್ನಿಂಗ್ಸ್ ಆರಂಭಿಸುವ ಸೂಚನೆ ನೀಡಿದ್ದರು. ಆದರೆ ಮತ್ತೊಂದು ತುದಿಯಿಂದ ಸ್ವಿಂಗ್ ಕಿಂಗ್ ಭುವನೇಶ್ವರ್ ಕುಮಾರ್ ಅವರು ಸಹ ಬಿಗು ದಾಳಿ ಸಂಘಟಿಸಿದ್ದರಿಂದ ಅಭಿಷೇಕ್ ಮತ್ತು ಟ್ರಾವಿಸ್ ಹೆಡ್ ಗೆ ರನ್ ಕದಿಯಲು ಸುಲಭವಾಗಲಿಲ್ಲ. ಹೀಗಾಗಿ 2 ಓವರ್ ಮುಗಿಯುವುದರೊಳಗೆ ಸನ್ ರೈಸರ್ಸ್ ಪಾಲಿಗೆ ದಕ್ಕಿದ್ದು ಕೇವಲ 17 ರನ್ ಗಳಷ್ಟೇ.3ನೇ ಓವರ್ ನ ಮೊದಲ ಎಸೆತದಲ್ಲೇ ಡಫಿ ಸನ್ ರೈಸರ್ಸ್ ಗೆ ಮೊದಲ ಆಘಾತ ನೀಡಿದರು. ಅಭಿಷೇಕ್ ಶರ್ಮಾ ಅವರ ಲೆಕ್ಕಾಚಾರ ತಪ್ಪಿಸಿದ ಡಫಿ ಅವರ ಎಸೆತ ಆಗಸದೆತ್ತರಕ್ಕೆ ಚಿಮ್ಮಿದಾಗ ಕೀಪರ್ ಜಿತೇಶ್ ಶರ್ಮಾ ಅವರು ಕ್ಯಾಚ್ ಹಿಡಿವಲ್ಲಿ ಯಾವ ತಪ್ಪನ್ನೂ ಮಾಡಲಿಲ್ಲ.
ಮೈಸೂರು: ದೇಶಾದ್ಯಂತ ಸರ್ಕಾರಿ ಕಚೇರಿಗಳು, ಶಾಲೆಗಳು ಮತ್ತು ನ್ಯಾಯಾಲಯಗಳಿಗೆ ಹುಸಿಬಾಂಬ್ ಸಂದೇಶಗಳನ್ನ ಕಳುಹಿಸಿ ಆತಂಕ ಸೃಷ್ಟಿಸುತ್ತಿದ್ದ ಆರೋಪದಲ್ಲಿ ಮೈಸೂರಿನಲ್ಲಿ ವ್ಯಕ್ತಿಯೋರ್ವನ್ನು ದಿಲ್ಲಿ ಪೊಲೀಸರು ಬಂಧಿಸಿದ್ದಾರೆ. ಶ್ರೀನಿವಾಸ್ ಬಂಧಿತ ಆರೋಪಿ. ಈತ ಮೈಸೂರಿನ ಬೃಂದಾವನ ಬಡಾವಣೆಯ ನಿವಾಸಿ ಎನ್ನಲಾಗಿದೆ. ಇತ್ತೀಚೆಗೆ ಸರ್ಕಾರಿ ಕಚೇರಿಗಳು, ಶಾಲಾ ಕಟ್ಟಡಗಳು ಹಾಗೂ ನ್ಯಾಯಾಲಯಗಳಿಗೆ ಬಾಂಬ್ ಸ್ಪೋಟವಾಗುವ ಬೆದರಿಕೆ ಸಂದೇಶ ಬಂದು ಆತಂಕ ಸೃಷ್ಟಿಯಾಗಿತ್ತು. ಒಂದೇ ತಿಂಗಳಿನಲ್ಲಿ ಹಲವು ಬಾರಿ ಮೇಲ್ ಮೂಲಕ ಸಂದೇಶ ರವಾನೆ ಆಗಿದೆ. ಈ ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿದ ಸರ್ಕಾರ ಹುಸಿ ಬಾಂಬ್ ರೂವಾರಿಯನ್ನು ಬಂಧಿಸಲು ಮುಂದಾಗಿದ್ದು, ಮೈಸೂರಿನಲ್ಲಿ ಕಾರ್ಯಾಚರಣೆ ನಡೆಸಿದ ದಿಲ್ಲಿ ಪೊಲೀಸರ ತಂಡ ಆರೋಪಿ ಶ್ರೀನಿವಾಸ್ ನನ್ನು ಬಂಧಿಸಿದ್ದಾರೆ. ಬಂಧನದ ವೇಳೆ ಆರೋಪಿಯ ಮನೆಯಲ್ಲಿ ಹಲವು ಸಿಮ್ ಕಾರ್ಡ್ಗಳು ಹಾಗೂ ಲ್ಯಾಪ್ಟಾಪ್ ವಶಕ್ಕೆ ಪಡೆಯಲಾಗಿದೆ. ಇವುಗಳನ್ನು ಪರಿಶೀಲನೆಗಾಗಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ದಿಲ್ಲಿ ಪೊಲೀಸರು ವಿಶೇಷ ತಂಡವನ್ನು ರಚಿಸಿ ತನಿಖೆ ನಡೆಸಿದ್ದರು. ಆರೋಪಿಯನ್ನು ಹೆಚ್ಚಿನ ವಿಚಾರಣೆಗೆ ದಿಲ್ಲಿಗೆ ಕರೆದೊಯ್ಯಲಾಗುತ್ತಿದೆ ಎಂದು ತಿಳಿದು ಬಂದಿದೆ.
ಮುಂಗಾರು ಪೂರ್ವ ಮಳೆ ಪ್ರಾರಂಭ: ಗುಡುಗು, ಸಿಡಿಲು ಬಗ್ಗೆ ಎಚ್ಚರಿಕೆ
ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾದಿಕಾರದಿಂದ ಸಲಹೆ, ಸೂಚನೆ
ದೇವದುರ್ಗ| ದಿ.ಮುರಿಗೆಪ್ಪ ಸಾಹುಕಾರ ಪ್ರತಿಷ್ಠಾನ ವತಿಯಿಂದ ಬೃಹತ್ ನೇತ್ರ ಚಿಕಿತ್ಸಾ ಶಿಬಿರ
ದೇವದುರ್ಗ: ತಾಲೂಕಿನ ಕೊಡಗೈದಾನಿ ಎಂದು ಹೆಸರುವಾಸಿಯಾದ ದಿ.ಮುರಿಗೆಪ್ಪ ಸಾಹುಕಾರ ಪ್ರತಿಷ್ಠಾನದ ವತಿಯಿಂದ ಶನಿವಾರ ಪಟ್ಟಣದ ಸಾರ್ವಜನಿಕರ ಆಸ್ಪತ್ರೆಯಲ್ಲಿ ಹಮ್ಮಿಕೊಂಡಿದ್ದ ಬೃಹತ್ ನೇತ್ರ ಚಿಕಿತ್ಸಾ ಶಿಬಿರದಲ್ಲಿ ಸುಮಾರು 363 ಜನ ಚಿಕಿತ್ಸೆ ಪಡೆದುಕೊಂಡಿದ್ದಾರೆ. ದಿ.ಖೇಣೆದ್ ಮುರಿಗೆಪ್ಪ ಪ್ರತಿಷ್ಠಾನ ಹಾಗೂ ಲಯನ್ಸ್ ಕ್ಲಬ್ ರಾಯಚೂರು ವತಿಯಿಂದ ಮತ್ತು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ವಿವೇಕಾನಂದ ಸೇವಾಶ್ರಮ ಬೆಂಗಳೂರು, ನೇತ್ರ ನಿಯಂತ್ರಣ ವಿಭಾಗ ಮತ್ತು ಸಾರ್ವಜನಿಕ ಆಸ್ಪತ್ರೆ ದೇವದುರ್ಗ ಸಂಯುಕ್ತಾಶ್ರಮದಲ್ಲಿ 8 ರ್ಷದಿಂದ ಸತತ ನೇತ್ರ ಚಿಕಿತ್ಸಾ ಶಿಬಿರ ಖೇಣೆದ್ ಮುರಿಗೆಪ್ಪ ಪ್ರತಿಷ್ಠಾನ ವತಿಯಿಂದ ಯಶಸ್ವಿಯಾಗಿ ಮಾಡಿಕೊಂಡು ಬಂದಿದ್ದೇವೆ. ಪ್ರಾಕಶ್ ಖೇಣೆದ್ ಸಾಹುಕಾರ ಕಣ್ಣು ಕಳೆದುಕೊಂಡು ಸಂಕಷ್ಟದಲ್ಲಿದ್ದ ಹಲವಾರು ಬಡ ಕುಟುಂಬಗಳಿಗೆ ಬೆಳಕು ನೀಡಿದ, ರಕ್ತದಾನ ಶಿಬಿರಗಳು, ಸಮಾಜಮುಖಿ ಕೆಲಸದಲ್ಲಿ ತೊಡಗಿಕೊಂಡ ಮಹಾನ ನಾಯಕ ಎಂದರೆ ತಪ್ಪಾಗಲ್ಲ ಎಂದು ಬಸವರಾಜ್ ಯತಗಲ್ ಅವರು ತಿಳಿಸಿದರು. ಈ ಸಂದರ್ಭದಲ್ಲಿ ಪ್ರಕಾಶ್ ಖೇಣೆದ್, ನಿಖಿಲ್ ಖೇಣೆದ್, ಪಿಡಿ.ಕೃಷ್ಣಮೂರ್ತಿ, ಅಮರೇಶ್ ರಾಯಕೋಟಿ, ಸಚಿನ್ ಪ್ರಭು, ಗೋವಿಂದರಾಜು, ಬಸವರಾಜ್ ಯತಗಲ್ ಮತ್ತಿತರರು ಉಪಸ್ಥಿತರಿದ್ದರು.
ಟ್ಯಾಕ್ಟರ್ ಯಂತ್ರಕ್ಕೆ ಸಿಲುಕಿ ವ್ಯಕ್ತಿ ಮೃತ್ಯು
ಕಾರ್ಕಳ, ಮಾ.28: ಗದ್ದೆಯಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬರು ಟ್ಯಾಕ್ಟರ್ ಯಂತ್ರ ತಾಗಿ ಮೃತಪಟ್ಟ ಘಟನೆ ಯರ್ಲಪಾಡಿ ಗ್ರಾಮದ ಹೊಸೊಕ್ಲು ನೆಲೆಬೈಲು ಎಂಬಲ್ಲಿ ಶುಕ್ರವಾರ ಬೆಳಗ್ಗೆ ನಡೆದಿದೆ. ಮೃತರನ್ನು ಶ್ರೀಧರ್ ಎಂದು ಗುರುತಿಸಲಾಗಿದೆ. ಇವರು ಸುಂದರ ಪೂಜಾರಿ ಎಂಬವರ ಗದ್ದೆಯಲ್ಲಿ ಟ್ಯಾಕ್ಟರ್ನಲ್ಲಿ ಭತ್ತದ ಪಿಂಡಿಯನ್ನು ಮಾಡುತ್ತಿದ್ದು, ಈ ವೇಳೆ ಅವರು ಟ್ಯಾಕ್ಟರ್ನಿಂದ ಕೆಳಗೆ ಬಿದ್ದರು. ಇದರ ಪರಿಣಾಮ ಅವರ ತಲೆಗೆ ಟ್ರಾಕ್ಟರ್ನ ಹಿಂಬದಿಯ ಯಂತ್ರ ತಾಗಿತ್ತೆನ್ನಲಾಗಿದೆ. ಇದರಿಂದ ಗಂಭೀರವಾಗಿ ಗಾಯಗೊಂಡ ಶ್ರೀಧರ್ ಮೃತಪಟ್ಟರೆಂದು ತಿಳಿದುಬಂದಿದೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಉಡುಪಿ ಜಿಲ್ಲೆಯಾದ್ಯಂತ ಗುಡುಗು ಸಹಿತ ಭಾರೀ ಮಳೆ
ಉಡುಪಿ, ಮಾ.28: ಉಡುಪಿ ಜಿಲ್ಲೆಯಾದ್ಯಂತ ಶನಿವಾರ ಸಂಜೆಯಿಂದ ಗುಡುಗು ಸಿಡಿಲು ಸಹಿತ ಭಾರೀ ಮಳೆಯಾಗಿರುವ ಬಗ್ಗೆ ವರದಿಯಾಗಿದೆ. ಉಡುಪಿ ನಗರದಲ್ಲಿ ರಾತ್ರಿ ವೇಳೆ ಗುಡುಗು ಸಹಿತ ಭಾರೀ ಮಳೆಯಾಗಿದೆ. ಇದರಿಂದ ವಾಹನ ಸವಾರರು ತೀರಾ ತೊಂದರೆ ಅನುಭವಿಸುವಂತಾಯಿತು. ಮಳೆಯಿಂದಾಗಿ ನಗರದ ಹಲವು ಮಾರ್ಗಗಳಲ್ಲಿ ಟ್ರಾಫಿಕ್ ಜಾಮ್ ಕೂಡ ಕಂಡುಬಂತು. ಕಳೆದ ಐದು ದಿನಗಳಿಂದ ಭಾರೀ ಸೆಕೆಯಿಂದ ಬಳಲುತ್ತಿದ್ದ ಜನತೆಗೆ ಮಳೆಯಿಂದಾಗಿ ತಂಪಿನ ವಾತಾವರಣ ಸೃಷ್ಠಿಯಾಗಿದೆ. ಕಾರ್ಕಳ ತಾಲೂಕಿನಲ್ಲಿ ಸಂಜೆ ವೇಳೆ ಭಾರೀ ಗಾಳಿ ಮಳೆಯಾಗಿದ್ದು, ಇದರಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ. ತಾಲೂಕಿನ ನೂರಲ್ಬೆಟ್ಟು, ಈದು, ಹೊಸ್ಮಾರು, ರೆಂಜಾಳ, ನೆಲ್ಲಿಕಾರು, ಇರ್ವತ್ತೂರು, ಮುಡಾರು, ಕೆರುವಾಶೆ, ಶಿರ್ಲಾಲು ಸೇರಿದಂತೆ ಹಲವು ಭಾಗಗಳಲ್ಲಿ ಮಳೆ ತೀವ್ರವಾಗಿದ್ದು, ಕೆಲವೆಡೆ ಆಲಿಕಲ್ಲು ಮಳೆಯೂ ಆಗಿರುವುದಾಗಿ ತಿಳಿದುಬಂದಿದೆ. ಬೆಳಗ್ಗಿನಿಂದ ಮೋಡ ಕವಿದು ಉಷ್ಣತೆ ಹೆಚ್ಚಾಗಿದ್ದ ಬಳಿಕ ಸಂಜೆ ಸುರಿದ ಈ ಭಾರೀ ಮಳೆಯಿಂದಾಗಿ ಗ್ರಾಮೀಣ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಿದೆ. ಭಾರೀ ಗಾಳಿಯ ಪರಿಣಾಮ ಕೆಲವು ಕಡೆಗಳಲ್ಲಿ ಮರಗಳು ಧರೆಗೆ ಉರುಳಿ ಬಿದ್ದು, ರಸ್ತೆ ಸಂಚಾರಕ್ಕೆ ಅಡಚಣೆ ಉಂಟಾಗಿದೆ. ಸ್ಥಳೀಯರು ಮತ್ತು ಅಧಿಕಾರಿಗಳು ಸೇರಿ ಮರಗಳನ್ನು ತೆರವುಗೊಳಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಅದೇ ರೀತಿ ಹೆಬ್ರಿ ತಾಲೂಕಿನ ಮುನಿಯಾಲು, ವರಂಗ, ಅಂಡಾರು ಹಾಗೂ ಕಬ್ಬಿನಾಲೆ ಪ್ರದೇಶಗಳಲ್ಲಿಯೂ ಮಳೆಯಾದ ಬಗ್ಗೆ ವರದಿಯಾಗಿದೆ. ಕಾಪು ತಾಲೂಕಿನ ಕಾಪು, ಪಡುಬಿದ್ರಿ, ಹೆಜಮಾಡಿ ಭಾಗಗಳಲ್ಲಿಯೂ ರಾತ್ರಿ ವೇಳೆ ಶನಿವಾರ ಗುಡುಗು ಸಹಿತ ಮಳೆಯಾಗಿದೆ. ಮಧ್ಯಾಹ್ನದಿಂದಲೇ ಮೋಡ ಕವಿದ ವಾತಾವರಣ ಕಂಡುಬಂದಿದ್ದು, ಸಂಜೆ ವೇಳೆಗೆ ಮಳೆ ಆರಂಭವಾಗಿ ಸಿಡಿಲು, ಮಿಂಚು ಸಹಿತ ಮಳೆಯ ತೀವ್ರತೆ ಹೆಚ್ಚಾಯಿತು.ಈ ಹಿನ್ನೆಲೆಯಲ್ಲಿ ಕೆಲವಡೆ ವಿದ್ಯುತ್ ವ್ಯತ್ಯಯ ಉಂಟಾಗಿ ಸ್ಥಳೀಯರಿಗೆ ತೊಂದರೆ ಉಂಟಾಯಿತು. ಅದೇ ರೀತಿ ಕುಂದಾಪುರ, ಬ್ರಹ್ಮಾವರ, ಬೈಂದೂರು ತಾಲೂಕಿನಲ್ಲೂ ಉತ್ತಮ ಮಳೆಯಾಗಿದೆ. ಗುಡುಗು ಸಹಿತ ಭಾರೀ ಮಳೆಯಿಂದಾಗಿ ಜನ ಆತಂಕಕ್ಕೆ ಒಳಗಾಗಿದ್ದಾರೆ. ಮಳೆಯ ಪರಿಣಾಮವಾಗಿ ಕೆಲವು ಕಡೆ ಕೃಷಿ ಭೂಮಿಗಳಿಗೆ ತಾತ್ಕಾಲಿಕ ಹಾನಿ ಉಂಟಾಗಿರುವ ಸಾಧ್ಯತೆ ಇದ್ದು, ರೈತರು ಆತಂಕ ವ್ಯಕ್ತಪಡಿಸಿದ್ದಾರೆ.
ಮದ್ರಸ ಶಿಕ್ಷಣವು ಸಂಸ್ಕೃತಿಯ ಪ್ರತೀಕ: ಮುಹಮ್ಮದ್ ಸಅದಿ
‘ಫತ್ಹೇ ಮುಬಾರಕ್’ ರಾಜ್ಯಮಟ್ಟದ ಮದ್ರಸ ಪ್ರಾರಂಭೋತ್ಸವ ಉದ್ಘಾಟನೆ
ಪಿಬಿ ಜಿ ರಾಮ್ ಜಿ ಕಾಯ್ದೆ ಕುರಿತ ಪ್ರಿಯಾಂಕ್ ಖರ್ಗೆ ಪತ್ರಕ್ಕೆ ಪ್ರತಿ ಪತ್ರ: ಕೋಟ
ಉಡುಪಿ, ಮಾ.28: ಪಿಬಿ ಜಿ ರಾಮ್ ಜಿ ಕಾಯಿದೆ ಕುರಿತು ಟೀಕಿಸಿ ರಾಜ್ಯ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ ಖರ್ಗೆ ರಾಜ್ಯದ ಎಲ್ಲ ಪಂಚಾಯತ್ ಸದಸ್ಯರಿಗೆ ಪತ್ರ ಬರೆದಿದ್ದು, ಅದಕ್ಕೆ ಪ್ರತಿಯಾಗಿ ಅದರಲ್ಲಿನ ಎಲ್ಲ ಆರೋಪ ಗಳಿಗೆ ಉತ್ತರವಾಗಿ ನಾನು ಕೂಡ ಗ್ರಾಪಂ ಸದಸ್ಯರು ಹಾಗೂ ರಾಜ್ಯದ ಸಂಸದರುಗಳಿಗೆ ಪತ್ರ ಬರೆದಿದ್ದೇನೆ ಎಂದು ಉಡುಪಿ ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ. ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಚಿವರ ಪತ್ರ ಸತ್ಯಕ್ಕೆ ದೂರವಾದ ಮಾಹಿತಿಯನ್ನು ಒದಗಿಸುತ್ತಿದ್ದು, ಈ ಯೋಜನೆ ಬಗ್ಗೆ ಸುಳ್ಳು ಮತ್ತು ಅಪಪ್ರಚಾರದ ಹೇಳಿಕೆ ನೀಡಿ ಜನರನ್ನು ಮತ್ತು ಸ್ಥಳೀಯ ಆಡಳಿತದ ಜನಪ್ರತಿನಿಧಿಗಳನ್ನು ತಪ್ಪಿ ದಾರಿಗೆ ಎಳೆಯುತ್ತಿದ್ದಾರೆ. ಆ ಹಿನ್ನೆಲೆಯಲ್ಲಿ ಈ ಯೋಜನೆಯ ಉದ್ಯೋಗಿಗಳಿಗೆ ಮತ್ತು ಜನಪ್ರತಿನಿಧಿ ಗಳಿಗೆ ವಿಬಿ ಜಿ ರಾಮ್ ಜಿ ಕಾಯಿದೆ ಬಗ್ಗೆ ವಾಸ್ತವಿಕತೆಯನ್ನು ತಿಳಿಸುವುದು ನಾನು ಪತ್ರ ಬರೆದಿದ್ದೇನೆ ಎಂದರು. ಈ ಕಾಯಿದೆಯನ್ನು ಯಾವುದೇ ಚರ್ಚೆ ಮಾಡದೆ ಸರ್ವಾಧಿಕಾರದಿಂದ ಅನುಮೋದನೆ ಮಾಡಲಾಗಿದೆ ಎಂಬ ಆರೋಪ ಸುಳ್ಳು. ಈ ಕಾಯಿದೆಯನ್ನು ಚರ್ಚಿಸಿಯೇ ಬಹುಮತದಿಂದ ಅನುಷ್ಠಾನಗೊಂಡಿದೆ. ನೂತನ ಕಾಯಿದೆ ಯಲ್ಲಿ ಈಗ ಗ್ರಾಪಂಗಳು ಮತ್ತು ಗ್ರಾಮಸಭೆಗಳಿಗೆ ಇರುವ ಅಧಿಕಾರವನ್ನು ಕಿತ್ತುಕೊಳ್ಳದೆ ಮೊದಲಿನಂತೆ ಉಳಿಸಲಾಗಿದೆ. ಇದರಲ್ಲಿ ಯಾವ ಬದಲಾವಣೆ ಕೂಡ ಮಾಡಿಲ್ಲ. ರಾಜ್ಯ ಸರಕಾರ ಮಾಡುತ್ತಿರುವ ಆರೋಪ ಸತ್ಯಕ್ಕೆ ದೂರ ವಾದುದು ಎಂದು ಅವರು ಹೇಳಿದರು. ರಾಜ್ಯ ಸಚಿವರು ಪತ್ರದಲ್ಲಿ ಮಾಡಿರುವ 10 ಆರೋಪಗಳನ್ನು ಉಲ್ಲೇಖಿಸಿ ನಾನು ಪತ್ರದಲ್ಲಿ ಸ್ಪಷ್ಟನೆ ನೀಡಿದ್ದೇನೆ. ಸರ್ವರ ಸಹಭಾಗಿತ್ವಕ್ಕೆ ಸಾಕ್ಷಿಯಾಗಿ ಉದ್ಯೋಗ ಖಾತ್ರಿ ಯೋಜನೆ ಹೆಚ್ಚು ದಿನ ಕೆಲಸ ಮತ್ತು ಹೆಚ್ಚು ಆರ್ಥಿಕ ಶಕ್ತಿಯೊಡನೆ ಬಡ ಕಾರ್ಮಿಕರಿಗೆ ವರದಾನವಾಗಿ ಬಂದಿದೆ. ಆದರೆ ರಾಜ್ಯ ಸರಕಾರ ಕೇಂದ್ರ ಸರಕಾರದ ಬಡವರ ಪರ ಯೋಜನೆಗಳನ್ನು ರಾಜ್ಯದಲ್ಲಿ ಜಾರಿಯಾಗದಂತೆ ಅಡ್ಡಗಾಲು ಹಾಕುತ್ತಿದೆ ಎಂದು ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.
ಎಲ್ಪಿಜಿ ಹೊತ್ತ ಹಡಗುಗಳು ಭಾರತದತ್ತ ಆಗಮನ
ಕೊಚ್ಚಿ, ಮಾ. 28: ಭಾರತಕ್ಕೆ ಬರುತ್ತಿರುವ ಮತ್ತೆರಡು ಎಲ್ಪಿಜಿ ಹೊತ್ತ ಹಡಗುಗಳು ಶನಿವಾರ ಹಾರ್ಮುಝ್ ಜಲಸಂಧಿಯನ್ನು ದಾಟಿವೆ. ಪಶ್ಚಿಮ ಏಶ್ಯಾ ಸಂಘರ್ಷದ ನಡುವೆ ಭಾರತ ಹಾಗೂ ಇತರ ನಾಲ್ಕು ಮಿತ್ರ ದೇಶಗಳ ಹಡಗುಗಳಿಗೆ ಹೋರ್ಮುಝ್ ಜಲಸಂಧಿಯ ಮೂಲಕ ಹಾದು ಹೋಗಲು ಅವಕಾಶ ನೀಡುವುದಾಗಿ ಇರಾನ್ ಹೇಳಿದ ಬಳಿಕ ಈ ಬೆಳವಣಿಗೆ ನಡೆದಿದೆ. ಅಮೆರಿಕ, ಇಸ್ರೇಲ್ ಹಾಗೂ ಇರಾನ್ ನಡುವಿನ ಯುದ್ಧ ಆರಂಭವಾದ ಬಳಿಕ ಮುಚ್ಚಿದ್ದ ಹಾರ್ಮುಝ್ ಜಲಸಂಧಿಯ ಮೂಲಕ ಬಿಡಬ್ಲ್ಯು ಇಎಲ್ಎಂ ಹಾಗೂ ಬಿಡಬ್ಲ್ಯು ಟಿವೈಆರ್ ಹಡಗುಗಳು ಹಾದು ಬಂದಿವೆ. ಅವು ಒಮಾನ್ ಕೊಲ್ಲಿ ಕಡೆಗೆ ಚಲಿಸುತ್ತಿವೆ ಎಂದು ಇತ್ತೀಚಿನ ಶಿಪ್ಪಿಂಗ್ ದತ್ತಾಂಶ ತಿಳಿಸಿದೆ. ಭಾರತದ ಎರಡು ಹಡಗುಗಳು ಕೊಲ್ಲಿಯಿಂದ ಹೊರಡುವಾಗ ಗಂಟೆಗೆ 27 ಕಿ.ಮೀ. ವೇಗದಲ್ಲಿ ಪರಸ್ಪರ ಸಮೀಪವಾಗಿ ಸಾಗಿದವು. ಮುಖ್ಯವಾಗಿ ಕಚ್ಚಾ ತೈಲ ಹೊತ್ತ ಸುಮಾರು ಐದು ಭಾರತೀಯ ಹಡಗುಗಳು ಯುಎಇ ಬಳಿಯ ಸಮುದ್ರದಲ್ಲಿ ಲಂಗರು ಹಾಕಿವೆ. ಜಾಗತಿಕ ತೈಲದ ಐದನೇ ಒಂದು ಭಾಗ ಹಡಗುಗಳ ಮೂಲಕ ಹಾದು ಹೋಗುವ ಹಾರ್ಮುಝ್ ಜಲಸಂಧಿಯ ಮೂಲಕ ಹಾದು ಹೋಗಲು ಅನುಮತಿಗಾಗಿ ಅವು ಕಾಯುತ್ತಿವೆ.
ಕೊಚ್ಚಿ, ಮಾ. 28: 2001 ಹಾಗೂ 2006ರ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಬೆಂಬಲ ಕೋರಲು ಯುಡಿಎಫ್ ಅಧ್ಯಕ್ಷ ವಿ.ಡಿ. ಸತೀಶನ್ RSS ನಾಯಕರನ್ನು ಭೇಟಿಯಾಗಿದ್ದರು ಎಂದು ಸಂಘ ಪರಿವಾರದ ನಾಯಕ ಆರ್.ವಿ. ಬಾಬು ಶನಿವಾರ ಪ್ರತಿಪಾದಿಸಿದ್ದಾರೆ. ಆದರೆ, ಈ ಆರೋಪವನ್ನು ವಿ.ಡಿ. ಸತೀಶನ್ ನಿರಾಕರಿಸಿದ್ದಾರೆ. ತಾನು ಎಂದೂ RSS ಅಥವಾ ಬಿಜೆಪಿಯಿಂದ ಮತಗಳನ್ನು ಕೇಳಿಲ್ಲ ಎಂದು ಅವರು ಹೇಳಿದ್ದಾರೆ. ತಾನು ಸ್ಪರ್ಧಿಸುತ್ತಿರುವ ಪರವೂರು ಕ್ಷೇತ್ರದಲ್ಲಿ ವಾಸಿಸುತ್ತಿರುವ ಬಾಬು ಕಾಂಗ್ರೆಸ್ ವಿರೋಧಿಯಾಗಿದ್ದಾರೆ ಎಂದು ಅವರು ಪ್ರತಿಪಾದಿಸಿದ್ದಾರೆ. ಟಿವಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನವೊಂದರಲ್ಲಿ RSS ಪರ ಸಂಘಟನೆಯಾದ ಹಿಂದೂ ಐಕ್ಯ ವೇದಿ ರಾಜ್ಯಾಧ್ಯಕ್ಷ ಬಾಬು ಅವರು, ಸತೀಶನ್ 2006ರಲ್ಲಿ RSS ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದನ್ನು ಈ ಹಿಂದೆ ನಿರಾಕರಿಸಿದ್ದರು. ಆದರೆ, ಈಗ ಒಪ್ಪಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ. ‘‘ಹಾಗಾದರೆ, ಯಾರು ಸುಳ್ಳು ಹೇಳುತ್ತಿದ್ದಾರೆ? ಇದೇ ರೀತಿ ಭವಿಷ್ಯದಲ್ಲಿ ಅವರು 2001 ಹಾಗೂ 2006ರಲ್ಲಿ ವಿಧಾನಸಭೆ ಚುನಾವಣೆಗಳನ್ನು ಗೆಲ್ಲಲು RSS ಸಹಾಯವನ್ನು ಕೇಳಿರುವುದನ್ನು ಒಪ್ಪಿಕೊಳ್ಳಬೇಕಾಗುತ್ತದೆ’’ ಎಂದು ಕೂಡ ಬಾಬು ಹೇಳಿದ್ದಾರೆ. RSSಗೆ ಸಂಬಂಧಿಸಿದಂತೆ ಕಾಂಗ್ರೆಸ್ ಈಗ ತೆಗೆದುಕೊಂಡ ನಿಲುವು 2001 ಹಾಗೂ 2006ರಲ್ಲಿ ಇದ್ದಂತಿಲ್ಲ. 1996ರಲ್ಲಿ ಸತೀಶನ್ ಅವರು ಸಿಪಿಐಯ ಪಿ. ರಾಜು ವಿರುದ್ಧ ದಯನೀಯವಾಗಿ ಸೋತರು. ಅನಂತರ ಜಯ ಗಳಿಸಲು RSS ನೆರವು ಕೋರಿದರು ಎಂದು ಬಾಬು ತಿಳಿಸಿದ್ದಾರೆ. ಸತೀಶನ್ ಅವರನ್ನು ಸೋಲಿಸಬೇಕೆಂದು ತಾನು ಕೂಡ ಬಯಸಿದ್ದೆ. ತಾನು ಯುಡಿಎಫ್ ಹಾಗೂ ಎಲ್ಡಿಎಫ್ ಎರಡನ್ನೂ ಒಂದೇ ನಾಣ್ಯದ ಎರಡು ಮುಖಗಳಾಗಿ ನೋಡುವುದಾಗಿ ಅವರು ಹೇಳಿದ್ದಾರೆ. ಸುದ್ದಿಗಾರರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಸತೀಶನ್, ತಾನು ಚುನಾವಣೆಯಲ್ಲಿ ಸೋಲಬೇಕೆಂದು ಬಾಬು ಬಯಸಿದ್ದರು. ಇದು ತಾನು ಬಿಜೆಪಿ ಅಥವಾ ಆರ್ಎಸ್ಎಸ್ ಜೊತೆ ಯಾವುದೇ ಒಪ್ಪಂದ ಮಾಡಿಕೊಂಡಿಲ್ಲ ಎಂಬುದನ್ನು ತೋರಿಸುತ್ತದೆ ಎಂದಿದ್ದಾರೆ.
RCB: ಆರ್ಸಿಬಿ ಪಂದ್ಯದ ನಡುವೆಯೆ ಮತ್ತೊಮ್ಮ ಅಭಿಮಾನಿಗಳ ಮನಗೆದ್ದ 'ಕ್ರಶ್' ಅನನ್ಯಾ ಬಿರ್ಲಾ
Ananya Birla RCB Post Viral: ಬೆಂಗಳೂರಿನ ಎಂ.ಚಿನ್ನಸ್ವಾಮಿಯಲ್ಲಿ ನಡೆಯುತ್ತಿರುವ ಐಪಿಎಲ್ 2026ರ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಆರ್ಸಿಬಿ ಹಾಗೂ ಸನ್ರೈಸರ್ಸ್ ಹೈದರಾಬಾದ್ ಮುಖಾಮುಖಿಯಾಗಿವೆ. ಈ ನಡುವೆಯೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯನ್ನು ಖರೀದಿಸಿದ ಆರ್ಯಮನ್ ವಿಕ್ರಮ್ ಬಿರ್ಲಾ ಅವರ ಸಹೋದರಿ ಅನನ್ಯಾ ಬಿರ್ಲಾ ಅವರು ವಿಶೇಷ ಪೋಸ್ಟ್ ಹಂಚಿಕೊಂಡು ಕನ್ನಡ ಅಭಿಮಾನಿಗಳ ಮನಸು ಗೆದ್ದಿದ್ದಾರೆ.
ಕಲಬುರಗಿ| ತೃತೀಯ ಭಾಷೆ ಕುರಿತ ಸರಕಾರದ ನಿರ್ಧಾರ ಮರುಪರಿಶೀಲನೆಗೆ ಶಶೀಲ್ ನಮೋಶಿ ಆಗ್ರಹ
ಕಲಬುರಗಿ: ರಾಜ್ಯದ ಶಾಲಾ ಶಿಕ್ಷಣ ವ್ಯವಸ್ಥೆಯಲ್ಲಿ ತೃತೀಯ ಭಾಷೆಯ ಸ್ಥಾನಮಾನಕ್ಕೆ ಸಂಬಂಧಿಸಿದಂತೆ ಕೈಗೊಂಡಿರುವ ನಿರ್ಧಾರವನ್ನು ಮತ್ತೊಮ್ಮೆ ಮರುಪರಿಶೀಲಿಸಿ ಕೈಬಿಡಬೇಕೆಂದು ವಿಧಾನ ಪರಿಷತ್ ಸದಸ್ಯ ಶಶೀಲ್ ನಮೋಶಿ ಅವರು ರಾಜ್ಯ ಸರಕಾರಕ್ಕೆ ಆಗ್ರಹಿಸಿದ್ದಾರೆ. ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶಶೀಲ್ ನಮೋಶಿ, ತೃತೀಯ ಭಾಷೆಯನ್ನು ಕೇವಲ ಬೋಧನೆ ಮಟ್ಟಕ್ಕೆ ಸೀಮಿತಗೊಳಿಸಿ ಅಂಕಗಳ ಬದಲು ಗ್ರೇಡಿಂಗ್ ವ್ಯವಸ್ಥೆ ಜಾರಿಗೊಳಿಸಿರುವುದು ಭಾಷೆಗಳ ಮಹತ್ವವನ್ನು ಕುಗ್ಗಿಸುವ ಕ್ರಮವಾಗಿದೆ. ಅಲ್ಲದೆ, ಇದು ವಿದ್ಯಾರ್ಥಿಗಳ ತೃತೀಯ ಭಾಷಾ ಕಲಿಕೆಯ ಹಕ್ಕನ್ನು ಕಸಿದುಕೊಂಡಂತಾಗಿದೆ ಎಂದು ಆರೋಪಿಸಿದರು. ದೇಶದ ಸಂವಿಧಾನದ ವಿಧಿ 21ಎ ಅನ್ವಯ 6 ರಿಂದ 14 ವರ್ಷದ ಮಕ್ಕಳಿಗೆ ಉಚಿತ ಹಾಗೂ ಕಡ್ಡಾಯ ಶಿಕ್ಷಣದ ಜೊತೆಗೆ ತಮ್ಮ ಇಚ್ಛೆಯ ಭಾಷೆಯನ್ನು ಕಲಿಯುವ ಹಕ್ಕು ಇದೆ. ಆದರೆ ಸರ್ಕಾರದ ಈ ಹೊಸ ನಿರ್ಧಾರವು ಆ ಹಕ್ಕಿನ ಆತ್ಮಕ್ಕೆ ಧಕ್ಕೆಯಾಗುತ್ತದೆ ಎಂದ ಅವರು, ಸರ್ಕಾರದ ಈ ತೀರ್ಮಾನ ತೃತೀಯ ಭಾಷೆಯ ಶಿಕ್ಷಕರ ಹುದ್ದೆಗಳನ್ನು ಕೈಬಿಡುವ ಹುನ್ನಾರ ನಡೆಸಿದೆ ಎಂದು ಗಂಭೀರ ಆರೋಪ ಮಾಡಿದರು. ಇದುವರೆಗೆ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳಿಗೆ 625 ಅಂಕಗಳ ಮೌಲ್ಯಮಾಪನದಲ್ಲಿ ತೃತೀಯ ಭಾಷೆಗಳಿಗೂ ಸ್ಥಾನವಿತ್ತು. ಆದರೆ ಇದೀಗ ಅದನ್ನು 525 ಅಂಕಗಳಿಗೆ ಇಳಿಸಿರುವುದು ಶಿಕ್ಷಣದ ಗುಣಮಟ್ಟದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಆತಂಕ ವ್ಯಕ್ತಪಡಿಸಿದರು. ತೃತೀಯ ಭಾಷೆಗೆ ಪಾಸ್/ಫೇಲ್ ವ್ಯವಸ್ಥೆಯನ್ನು ರದ್ದುಪಡಿಸಿ ಕೇವಲ ಗ್ರೇಡಿಂಗ್ ಜಾರಿಗೊಳಿಸುವುದರಿಂದ ವಿದ್ಯಾರ್ಥಿಗಳಲ್ಲಿ ಓದುವ ಗಂಭೀರತೆ ಕಡಿಮೆಯಾಗಬಹುದು. “ಮಾರ್ಕ್ಸ್ ಇಲ್ಲ” ಎಂಬ ಮನೋಭಾವದಿಂದ ಅವರು ನಿರ್ಲಕ್ಷ್ಯ ತೋರಿಸುವ ಸಾಧ್ಯತೆ ಹೆಚ್ಚಿದೆ ಎಂದು ಅವರು ತಿಳಿಸಿದರು. ರಾಜ್ಯದಲ್ಲಿ ಸಾವಿರಾರು ಶಿಕ್ಷಕರು ತೃತೀಯ ಭಾಷೆಯನ್ನು ಬೋಧಿಸುತ್ತಿದ್ದು, ಈ ವಿಷಯಗಳಲ್ಲಿ ಪದವಿ ಹಾಗೂ ಸ್ನಾತಕೋತ್ತರ ಪದವಿ ಪಡೆದ ಹಲವರು ಉದ್ಯೋಗದ ನಿರೀಕ್ಷೆಯಲ್ಲಿದ್ದಾರೆ. ಈ ನಿರ್ಧಾರವು ಶಿಕ್ಷಕರ ಹುದ್ದೆಗಳು ಆಕಾಂಕ್ಷಿಗಳಿಗೆ ಪೆಟ್ಟು ಬೀಳಲಿದೆ ಎಂದು ನಮೋಶಿ ಹೇಳಿದರು. ತ್ರಿಭಾಷಾ ನೀತಿ ವಿದ್ಯಾರ್ಥಿಗಳ ಭಾಷಾ ಕೌಶಲ್ಯ, ರಾಷ್ಟ್ರೀಯ ಏಕತೆ ಮತ್ತು ಬೌದ್ಧಿಕ ಬೆಳವಣಿಗೆಗೆ ಸಹಾಯಕವಾಗಿದ್ದು, ಸರ್ಕಾರ ಈ ನಿರ್ಧಾರವನ್ನು ಮರುಪರಿಶೀಲನೆ ನಡೆಸಿ, ಹಿಂಪಡೆಯಬೇಕು ಎಂದು ಆಗ್ರಹಿಸಿದರು.
ಕೃತಕ ಬುದ್ದಿಮತ್ತೆ ಬಂಡವಾಳಶಾಹಿಯ ಸರಕು: ಪ್ರೊ.ಕೆ.ಫಣಿರಾಜ್
ಉಡುಪಿ, ಮಾ.28: ಕೃತಕ ಬುದ್ದಿಮತ್ತೆ ಎಂಬುದು ಕೇವಲ ಸ್ವಾಯತ್ತ ವೈಜ್ಞಾನಿಕ ಬೆಳವಣಿಗೆ ಮಾತ್ರ ಅಲ್ಲ. ಅದು ಕೂಡ ಬಂಡವಾಳಶಾಹಿಯ ಸರಕು ಆಗಿದೆ. ಈಗ ಬಂಡವಾಳಶಾಹಿಯ ಬಹಳ ದೊಡ್ಡ ಜ್ಞಾನ ಸಾಧನ ಆಗಿರುವ ಕೃತಕ ಬುದ್ದಿಮತ್ತೆ ಕೇವಲ ಸಾಹಿತ್ಯ, ಸಿನೆಮಾದ ಪ್ರಶ್ನೆ ಅಲ್ಲ, ಇಡೀ ಮನುಷ್ಯ ಸಮಾಜಕ್ಕೆ ಸವಾಲು ಆಗಿದೆ. ಇದು ರಂಗಭೂಮಿಯನ್ನು ಕೂಡ ಆವರಿಸದೆ ಬಿಡುವುದಿಲ್ಲ ಎಂದು ಹಿರಿಯ ಚಿಂತಕ ಪ್ರೊ.ಕೆ.ಫಣಿರಾಜ್ ಹೇಳಿದ್ದಾರೆ. ರಥಬೀದಿ ಗೆಳೆಯರು ಉಡುಪಿ ವತಿಯಿಂದ ವಿಶ್ವ ರಂಗಭೂಮಿ ದಿನಾಚರಣೆಯ ಪ್ರಯುಕ್ತ ಉಡುಪಿ ಎಂ.ಜಿ.ಎಂ. ಕಾಲೇಜಿನ ಧ್ವನ್ಯ ಲೋಕದಲ್ಲಿ ಶನಿವಾರ ಆಯೋಜಿಸಲಾದ ವಿಚಾರಗೋಷ್ಠಿಯಲ್ಲಿ ಅವರು ರಂಗಭೂಮಿಯಲ್ಲಿ ಕೃತಕ ಬುದ್ಧಿಮತ್ತೆ ಸಾಧ್ಯತೆಗಳು ಮತ್ತು ಸವಾಲುಗಳು ಎಂಬ ವಿಷಯ ಮಂಡಿಸಿದರು. ಕೃತಕ ಬುದ್ದಿಮತ್ತೆ ಮನುಷ್ಯರ ಬೌದ್ಧಿಕ ಸಾಮರ್ಥ್ಯ ಹಾಗೂ ಅನುಭವಕ್ಕೆ ದೊಡ್ಡ ಸವಾಲು ಆಗಿದೆ. ಇದು ಮನುಷ್ಯನ ನಕಲು ಹೊರತು ಪ್ರತಿ ಮನುಷ್ಯ ಅಲ್ಲ. ಕೃತಕ ಬುದ್ದಿಮತ್ತೆ ಸಿನೆಮಾ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲೂ ಭಯ ಸೃಷ್ಠಿಸಿದೆ. ಇದರ ಬಗ್ಗೆ ಸಿನೆಮಾದವರು ತಲೆಕೆಡಿಕೊಂಡಷ್ಟು ರಂಗಭೂಮಿ ಯವರು ಮಾಡುತ್ತಿಲ್ಲ ಎಂದರು. ಕೃತಕ ಬುದ್ದಿಮತ್ತೆ ಯಾಕೆ ನಮಗೆ ಸವಾಲು ಆಗುತ್ತಿದೆ ಅಂದರೆ ಈವರೆಗೆ ನಾವು ನಿಸರ್ಗಕ್ಕೆ ಸವಾಲು ಆಗಿ ಕಲೆಗಳನ್ನು ಸೃಷ್ಠಿಸುತ್ತಿದ್ದೇವು. ಈಗ ಮನುಷ್ಯನಿಗೆ ಪ್ರತಿಯಾಗಿ ಯಂತ್ರಗಳೇ ಸೃಷ್ಠಿ ಮಾಡುವ ಹಂತಕ್ಕೆ ಬೆಳೆದು ನಿಂತಿದೆ. ಮೊದಲು ಕೃತಕ ಎಂಬುದು ಪ್ರಕೃತಿ ಮತ್ತು ಮನುಷ್ಯರ ನಡುವಿನ ಸಂಘರ್ಷವಾಗಿದ್ದರೆ ಈಗ ಕೃತಕ ಬುದ್ದಿಮತ್ತೆ ಮನುಷ್ಯ ಮತ್ತು ಯಂತ್ರಗಳ ನಡುವಿನ ಸಂಘರ್ಷವಾಗಿ ಬಿಟ್ಟಿದೆ ಎಂದು ಅವರು ತಿಳಿಸಿದರು. ಬಂಡವಾಳಶಾಹಿ ಉತ್ಪಾದನೆ ಮಾಡುವ ಪ್ರತಿಯೊಂದು ವಸ್ತು ಕೂಡ ಸರಕು ಆಗಿದೆ. ಆ ಸರಕು ಮನುಷ್ಯನ ಜೀವನ್ಮರಣದ ಪ್ರಶ್ನೆ ಎಂಬ ರೀತಿಯಲ್ಲಿ ಮಾರುಕಟ್ಟೆಯ ಮನೋರೋಗವನ್ನು ಸೃಷ್ಟಿಸುತ್ತದೆ. ಆ ವ್ಯವಸ್ಥೆಯಲ್ಲಿ ಕೃತಕ ಬುದ್ಧಿಮತ್ತೆ ಕೂಡ ಸರಕು ಆಗಿ ಜ್ಞಾನಕ್ಕೆ ಸವಾಲು ಒಡ್ಡುತ್ತಿದೆ. ಅದು ಇಲ್ಲದೆ ನಾವು ಬದುಕಲು ಸಾಧ್ಯವಾಗದ ಸ್ಥಿತಿ ಬಂದು ಬಿಡುತ್ತದೆ ಎಂದು ಅವರು ಅಭಿಪ್ರಾಯ ಪಟ್ಟರು. ರಥಬೀದಿ ಗೆಳೆಯರು ಅಧ್ಯಕ್ಷ ಉದ್ಯಾವರ ನಾಗೇಶ್ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಕಾರ್ಯದರ್ಶಿ ಪ್ರೊ.ಸುಬ್ರಹ್ಮಣ್ಯ ಜೋಶಿ ವಂದಿಸಿದರು. ಸಂತೋಷ್ ನಾಯಕ್ ಪಟ್ಲ ಕಾರ್ಯಕ್ರಮ ನಿರೂಪಿಸಿದರು. ಬಳಿಕ ನಾದ ಮಣಿನಾಲ್ಕೂರು ಅವರಿಂದ ರಂಗಗೀತೆಗಳ ಪ್ರಸ್ತುತಿ ಜರಗಿತು.
ಮಧ್ಯ ಏಶ್ಯಾ ಸಂಘರ್ಷ | ಮಾತುಕತೆಗೆ ವಿಶ್ವಾಸ ಅಗತ್ಯ: ಇರಾನ್
ಇಸ್ಲಾಮಾಬಾದ್, ಮಾ.28: ಮಧ್ಯ ಏಶ್ಯಾ ಸಂಘರ್ಷದ ಬಗ್ಗೆ ಮಾತುಕತೆಗೆ ಹಾಗೂ ಮಧ್ಯಸ್ಥಿಕೆ ವಹಿಸಲು ವಿಶ್ವಾಸದ ಅಗತ್ಯವಿದೆ ಎಂದು ಇರಾನ್ ಅಧ್ಯಕ್ಷ ಮಸೂದ್ ಪೆಝೆಶ್ಕಿಯಾನ್ ಪಾಕಿಸ್ತಾನದ ಪ್ರಧಾನಿ ಶೆಹಬಾಝ್ ಷರೀಫ್ ಗೆ ತಿಳಿಸಿದ್ದಾರೆ ಎಂದು ಅಧ್ಯಕ್ಷರ ಕಚೇರಿ ಶನಿವಾರ ತಿಳಿಸಿದೆ. ಪೆಝೆಶ್ಕಿಯಾನ್ ಅವರು ಪಾಕಿಸ್ತಾನದ ರಾಜತಾಂತ್ರಿಕ ಪ್ರಯತ್ನಗಳನ್ನು ಶ್ಲಾಘಿಸಿದರು ಮತ್ತು ಉಭಯ ನಾಯಕರು ಪ್ರದೇಶದಲ್ಲಿ ಹಗೆತನ ಮತ್ತು ಘರ್ಷಣೆಯನ್ನು ಕೊನೆಗೊಳಿಸುವ ಪ್ರಯತ್ನಗಳ ಕುರಿತು ಚರ್ಚಿಸಿದರು. ಅಮೆರಿಕ ಮತ್ತು ಗಲ್ಫ್ ರಾಷ್ಟ್ರಗಳೊಂದಿಗೆ ಪಾಕಿಸ್ತಾನದ ರಾಜತಾಂತ್ರಿಕ ಸಂಪರ್ಕಗಳ ಬಗ್ಗೆ ಷರೀಫ್ ವಿವರಿಸಿದರು ಎಂದು ಹೇಳಿಕೆ ತಿಳಿಸಿದೆ.
Karnataka Rains: ರಾಜ್ಯದಲ್ಲಿ ಮಾರ್ಚ್ 29 ರಿಂದ 4 ದಿನ ಭಾರೀ ಮಳೆ; 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಣೆ!
Karnataka Weather: ರಾಜ್ಯದಲ್ಲಿ ಶನಿವಾರದಿಂದ ಮುಂಗಾರು ಪೂರ್ವ ಮಳೆಯ ಅಬ್ಬರ ಆರಂಭವಾಗಿದೆ. ದಕ್ಷಿಣ ಕನ್ನಡ, ಉಡುಪಿ, ಹಾಸನ, ಚಿಕ್ಕಮಗಳೂರಿನಲ್ಲಿ ಅಬ್ಬರಿಸಿದೆ. ಮುಂದಿನ ನಾಲ್ಕು ದಿನ 14 ಜಿಲ್ಲೆಗಳಲ್ಲಿ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಶಿವಮೊಗ್ಗ, ಚಿಕ್ಕಮಗಳೂರು, ಹಾಸನ ಸೇರಿದಂತೆ ವಿವಿಧ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ನೀಡಲಾಗಿದೆ.
ಭದ್ರತೆ ಬೇಕಿದ್ದರೆ ನಿಮ್ಮ ನೆಲದಿಂದ ಶತ್ರುಗಳನ್ನು ಓಡಿಸಿ: ಗಲ್ಫ್ ರಾಷ್ಟ್ರಗಳಿಗೆ ಇರಾನ್ ಎಚ್ಚರಿಕೆ
ಟೆಹ್ರಾನ್, ಮಾ.28: ಇರಾನ್ ಯಾವತ್ತೂ ದಾಳಿಯನ್ನು ಪ್ರಾರಂಭಿಸುವುದಿಲ್ಲ. ಆದರೆ ತನ್ನ ಮೂಲಸೌಕರ್ಯ ಅಥವಾ ಆರ್ಥಿಕ ಕೇಂದ್ರಗಳನ್ನು ಗುರಿಯಾಗಿಸಿದರೆ ಬಲಿಷ್ಠವಾಗಿ ಪ್ರತಿಕ್ರಿಯಿಸುತ್ತದೆ ಎಂದು ಇರಾನ್ ಅಧ್ಯಕ್ಷ ಮಸೂದ್ ಪೆಝೆಶ್ಕಿಯಾನ್ ಶನಿವಾರ ಹೇಳಿದ್ದಾರೆ. ನೆರೆಹೊರೆಯ ದೇಶಗಳು ತಮ್ಮ ಭೂಪ್ರದೇಶವನ್ನು ಇರಾನ್ ವಿರುದ್ಧದ ಕಾರ್ಯಾಚರಣೆಗೆ ಬಳಸಲು ಬಿಡಬಾರದು ಎಂದು ಆಗ್ರಹಿಸಿದ ಅವರು, ‘ನೀವು ಅಭಿವೃದ್ಧಿ, ಶಾಂತಿ ಮತ್ತು ಭದ್ರತೆಯನ್ನು ಬಯಸುವಿರಾದರೆ, ಶತ್ರು ನಿಮ್ಮ ನೆಲದಿಂದ ಯುದ್ಧವನ್ನು ನಡೆಸಲು ಬಿಡಬೇಡಿ’ ಎಂದು ಎಚ್ಚರಿಕೆ ನೀಡಿದ್ದಾರೆ. ಪ್ರಾದೇಶಿಕ ನೆರೆಹೊರೆಯೊಂದಿಗೆ ಸ್ಥಿರ ಸಂಬಂಧವನ್ನು ನಾವು ಬಯಸುತ್ತೇವೆ. ಆದರೆ ಪ್ರಾದೇಶಿಕ ನೆಲೆಗಳಿಂದ ನಡೆಸಲಾಗುವ ದಾಳಿಗಳಿಗೆ ಸೂಕ್ತ ರೀತಿಯಲ್ಲಿ ಪ್ರತ್ಯುತ್ತರ ನೀಡುವುದಾಗಿ ಇರಾನ್ ಪುನರುಚ್ಚರಿಸಿದೆ. ಇರಾನ್ ಮೇಲೆ ದಾಳಿ ನಡೆಸಲು ಅಮೆರಿಕವು ಗಲ್ಫ್ ರಾಷ್ಟ್ರಗಳಲ್ಲಿನ ತನ್ನ ಮಿಲಿಟರಿ ನೆಲೆಗಳನ್ನು ಬಳಸುತ್ತಿದೆ. ಇದಕ್ಕೆ ಪ್ರತಿಯಾಗಿ ಸೌದಿ ಅರೆಬಿಯಾ, ಯುಎಇ, ಒಮಾನ್, ಕುವೈತ್, ಖತರ್ ಸೇರಿದಂತೆ ಪ್ರದೇಶದ ಹಲವು ದೇಶಗಳ ಮೇಲೆ ಇರಾನ್ ಪ್ರತಿದಾಳಿ ತೀವ್ರಗೊಳಿಸಿದೆ.
ರಂಗಸೇವೆಗೆ ರಾಜ್ಯ ಮಟ್ಟದ ಗೌರವ: ಸದ್ಯೋಜಾತ ಶಾಸ್ತ್ರಿ ಹಿರೇಮಠ ಅವರಿಗೆ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ
ವಿಜಯನಗರ/ ಹೊಸಪೇಟೆ: ಜಿಲ್ಲೆಯ ಹೊಸಪೇಟೆ ತಾಲೂಕಿನ ಮರಿಯಮ್ಮನಹಳ್ಳಿ ಸಮೀಪದ ಜಿ. ನಾಗಲಾಪುರ ಗ್ರಾಮದ ರಂಗಭೂಮಿ ನಟ ಹಾಗೂ ನಿರ್ದೇಶಕ ಶ್ರೀ ಸದ್ಯೋಜಾತ ಶಾಸ್ತ್ರಿ ಹಿರೇಮಠ ಅವರಿಗೆ 2025-26ನೇ ಸಾಲಿನ ಕರ್ನಾಟಕ ನಾಟಕ ಅಕಾಡೆಮಿ ವಾರ್ಷಿಕ ಪ್ರಶಸ್ತಿ ಲಭಿಸಿದೆ. ಹೂವಿನಹಡಗಲಿಯ ರಂಗಭಾರತಿ ರಂಗ ಮಂದಿರದಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಗ್ರಾಮೀಣ ಹಿನ್ನೆಲೆಯಿಂದ ಬಂದ ಸದ್ಯೋಜಾತ ಶಾಸ್ತ್ರಿ ಹಿರೇಮಠ ಅವರು ಬಾಲ್ಯದಲ್ಲೇ ರಂಗಭೂಮಿಯತ್ತ ಆಕರ್ಷಿತರಾಗಿ ಸಾಮಾಜಿಕ, ಐತಿಹಾಸಿಕ ಹಾಗೂ ಪೌರಾಣಿಕ ನಾಟಕಗಳ ಜೊತೆಗೆ ಬಯಲಾಟಗಳಲ್ಲಿ ಬಾಲ ಕಲಾವಿದರಾಗಿ ತಮ್ಮ ಕಲಾ ಜೀವನ ಆರಂಭಿಸಿದರು. ನಂತರ ಕಾಲೇಜು ದಿನಗಳಲ್ಲಿ ನಾಟಕ ರಚನೆ ಮತ್ತು ನಿರ್ದೇಶನದ ಮೂಲಕ ತಮ್ಮದೇ ಕಲಾ ಬಳಗದೊಂದಿಗೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಹತ್ತಾರು ನಾಟಕಗಳನ್ನು ಯಶಸ್ವಿಯಾಗಿ ಪ್ರದರ್ಶಿಸಿದರು. ಬೆಂಗಳೂರಿನಲ್ಲಿ ಕೈಗಾರಿಕಾ ರಂಗದಲ್ಲಿ ಕಾರ್ಯನಿರ್ವಹಿಸುತ್ತಾ ತಮ್ಮ ಕಲಾ ನೈಪುಣ್ಯತೆಯಿಂದ ಹಲವಾರು ಹೊಸ ಕಲಾವಿದರನ್ನು ರೂಪಿಸಿದ ಅವರು, ಐ.ಟಿ.ಐ ಲಲಿತಕಲಾ ಸಂಘದ ನಾಟಕಗಳಲ್ಲಿ ಅಭಿನಯಿಸಿ ಗಮನ ಸೆಳೆದಿದ್ದಾರೆ. ಕ್ರಾಂಪ್ಟನ್ ಗ್ರೀನ್ಸ್ ರಂಗತಂಡದೊಂದಿಗೆ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದಾರೆ. ಪ್ರಯೋಗರಂಗ ಹಾಗೂ ರಂಗ ನಿರಂತರ ತಂಡಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು, ವಾಲ್ಟರ್ ಡಿಸೋಜಾ, ಸಿಜಿಕೆ, ನಾಗರಾಜ ಮೂರ್ತಿ, ಸುರೇಶ್ ಆನಗಳ್ಳಿ, ಕೃಷ್ಣಮೂರ್ತಿ ಕವತ್ತಾರ ಮೊದಲಾದ ಖ್ಯಾತ ನಿರ್ದೇಶಕರೊಂದಿಗೆ ಕೆಲಸ ಮಾಡಿದ್ದಾರೆ. ವೃತ್ತಿ ನಿಮಿತ್ತ ವಿದೇಶದಲ್ಲಿದ್ದಾಗಲೂ ಅಲ್ಲಿನ ಕನ್ನಡ ಸಂಘಗಳಲ್ಲಿ ನಾಟಕ ಚಟುವಟಿಕೆಗಳಿಗೆ ಉತ್ತೇಜನ ನೀಡಿ, ‘ಬೆಳ್ಳಕ್ಕಿ ಹಿಂಡು ಬೆದರ್ಯಾವೋ’, ‘ಗಾಂಪರ ಗುಂಪು’, ‘ರಾವಿ ನದಿ ದಂಡೆಯಲ್ಲಿ’, ‘ಆಗ್ನಿಶಿಖೆ’ ಮುಂತಾದ ನಾಟಕಗಳನ್ನು ನಿರ್ದೇಶಿಸಿ ರಂಗಭೂಮಿಗೆ ವಿಶಿಷ್ಟ ಕೊಡುಗೆ ನೀಡಿದ್ದಾರೆ. ಇವರ ಸಾಧನೆಯನ್ನು ಗುರುತಿಸಿದ ಕರ್ನಾಟಕ ನಾಟಕ ಅಕಾಡೆಮಿ, 2025-26ನೇ ಸಾಲಿನ ವಾರ್ಷಿಕ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಈ ಪ್ರಶಸ್ತಿಯನ್ನು ಅವರು ತಮ್ಮ ತವರು ಜಿಲ್ಲೆಗಳಾದ ಬಳ್ಳಾರಿ ಮತ್ತು ವಿಜಯನಗರದ ಕಲಾವಿದರಿಗೆ ಹಾಗೂ ಸಹೋದರ ದಿವಂಗತ ಷಡಕ್ಷರ ಶಾಸ್ತ್ರಿ ಅವರಿಗೆ ಅರ್ಪಿಸಿದರು. ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ರಂಗಭಾರತಿ ಅಧ್ಯಕ್ಷರಾದ ಶ್ರೀಮತಿ ಎಂ.ಪಿ. ಸುಮಾ ವಿಜಯ, ಎಂ.ಪಿ. ವೀಣಾ ಮಹಾಂತೇಶ್, ನಿರ್ದೇಶಕರಾದ ಪ್ರಭು ಸೊಪ್ಪಿನ್, ನಿವೃತ್ತ ಪ್ರಾಚಾರ್ಯ ಡಾ. ಶಾಂತಮೂರ್ತಿ ಕುಲಕರ್ಣಿ, ಹಿರಿಯ ರಂಗ ನಿರ್ದೇಶಕ ಮಾ.ಬ. ಸೋಮಣ್ಣ, ವಿಜಯನಗರ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಮಧುರಚನ್ನ ಶಾಸ್ತ್ರಿ, ಡಾ. ಯತ್ನಳ್ಳಿ ಮಲ್ಲಯ್ಯ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.
ಹಾರ್ಮುಝ್ ಮೂಲಕ ರಸಗೊಬ್ಬರ ಸಾಗಣೆಗೆ ನೆರವಾಗಲು ಕಾರ್ಯಪಡೆ ನೇಮಿಸಿದ ವಿಶ್ವಸಂಸ್ಥೆ
ನ್ಯೂಯಾರ್ಕ್, ಮಾ.28: ಹಾರ್ಮುಝ್ ಜಲಸಂಧಿಯ ಮೂಲಕ ರಸಗೊಬ್ಬರಗಳ ಸುರಕ್ಷಿತ ಸಾಗಣೆಗಾಗಿ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಅಂಟೋನಿಯೊ ಗುಟೆರಸ್ ಕಾರ್ಯಪಡೆಯನ್ನು ಪ್ರಾರಂಭಿಸಿದ್ದಾರೆ ಎಂದು ಅವರ ವಕ್ತಾರರು ಘೋಷಿಸಿದ್ದಾರೆ. ‘ಮಧ್ಯಪ್ರಾಚ್ಯದಲ್ಲಿನ ಸಂಘರ್ಷವು ತೀವ್ರಗೊಳ್ಳುವ ಭೀತಿ ಹೆಚ್ಚುತ್ತಿರುವಂತೆಯೇ, ಹಾರ್ಮುಝ್ ಜಲಸಂಧಿಯ ಮೂಲಕ ಕಡಲ ವ್ಯಾಪಾರದಲ್ಲಿನ ಅಡಚಣೆಗಳು ಮುಂಬರುವ ತಿಂಗಳುಗಳಲ್ಲಿ ಮಾನವೀಯ ಅಗತ್ಯಗಳು ಮತ್ತು ಕೃಷಿ ಉತ್ಪಾದನೆಯ ಮೇಲೆ ವ್ಯಾಪಕ ಪರಿಣಾಮ ಬೀರುವ ಅಪಾಯವಿದೆ. ಈ ಪರಿಣಾಮಗಳನ್ನು ತಗ್ಗಿಸಲು ತಕ್ಷಣದ ಕ್ರಮ ಅತ್ಯಗತ್ಯವಾಗಿದೆ’ ಎಂದು ಗುಟೆರಸ್ ಅವರ ವಕ್ತಾರ ಸ್ಟೀಫನ್ ಡ್ಯುಜಾರಿಕ್ ಹೇಳಿದ್ದಾರೆ. ವಿಶೇಷ ಕಾರ್ಯಪಡೆಯು ತಾಂತ್ರಿಕ ಕಾರ್ಯವಿಧಾನಗಳನ್ನು ಅಭಿವೃದ್ಧಿಪಡಿಸಲು ಮತ್ತು ಪ್ರಸ್ತಾಪಿಸಲು ಕೆಲಸ ಮಾಡುತ್ತದೆ. ಅದು ಜಲಸಂಧಿಯ ಮೂಲಕ ಸಂಬಂಧಿತ ಕಚ್ಚಾ ವಸ್ತುಗಳ ಸಾಗಣೆ ಒಳಗೊಂಡಂತೆ ರಸಗೊಬ್ಬರ ವ್ಯಾಪಾರವನ್ನು ಸುಗಮಗೊಳಿಸುತ್ತದೆ. ಹಲವಾರು ಅಂತರರಾಷ್ಟ್ರೀಯ ಏಜೆನ್ಸಿಗಳ ಪ್ರತಿನಿಧಿಗಳನ್ನು ಕಾರ್ಯಪಡೆ ಒಳಗೊಂಡಿರುತ್ತದೆ ಮತ್ತು ಸಂಬಂಧಿತ ವಿಶ್ವಸಂಸ್ಥೆಯ ಸದಸ್ಯ ರಾಷ್ಟ್ರಗಳೊಂದಿಗೆ ನಿಕಟ ಸಮಾಲೋಚನೆಯೊಂದಿಗೆ ಕೆಲಸ ಮಾಡುತ್ತದೆ. ಇತ್ತೀಚಿನ ದಿನಗಳಲ್ಲಿ ಪ್ರಧಾನ ಕಾರ್ಯದರ್ಶಿಯವರು ಇರಾನ್, ಅಮೆರಿಕ, ಪಾಕಿಸ್ತಾನ, ಈಜಿಪ್ಟ್ ಮತ್ತು ಬಹ್ರೇನ್ ನ ಪ್ರತಿನಿಧಿಗಳೊಂದಿಗೆ ದೂರವಾಣಿಯಲ್ಲಿ ಮಾತನಾಡಿದ್ದಾರೆ. ಸಂಘರ್ಷ ವಲಯಗಳಲ್ಲಿ ಈ ರೀತಿಯ ವ್ಯವಸ್ಥೆಗಳಲ್ಲಿ ನಮಗೆ ಬಹಳಷ್ಟು ಅನುಭವವಿದೆ ಎಂದು ಹೇಳಿದ ಡ್ಯುಜಾರಿಕ್, ರಷ್ಯಾ ಉಕ್ರೇನ್ ಮೇಲೆ ಆಕ್ರಮಣ ನಡೆಸಿದ ಕೆಲ ದಿನಗಳ ಬಳಿಕ ಕಪ್ಪು ಸಮುದ್ರದ ಮೂಲಕ ಉಕ್ರೇನ್ ನ ಧಾನ್ಯಗಳ ಸಾಗಣೆಗೆ ವಿಶ್ವಸಂಸ್ಥೆಯ ನೇತೃತ್ವದಲ್ಲಿ ನಡೆದ ಒಪ್ಪಂದವನ್ನು ಉಲ್ಲೇಖಿಸಿದರು. ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಘಟನೆ (ಎಫ್ಎಒ) ಪ್ರಕಾರ ಅಂತರರಾಷ್ಟ್ರೀಯ ರಸಗೊಬ್ಬರ ವ್ಯಾಪಾರದ 30%ದಷ್ಟು ಹಾರ್ಮುಝ್ ಜಲಸಂಧಿಯ ಮೂಲಕ ಸಾಗುತ್ತದೆ. ಒಂದು ವೇಳೆ ಯುದ್ಧವು ಮುಂದಿನ ಒಂದು ಅಥವಾ ಎರಡು ವಾರ ಮುಂದುವರಿದರೆ ಮಾರುಕಟ್ಟೆಗಳಿಗೆ ಆಘಾತ ಕಾದಿದೆ. ಒಂದು ವೇಳೆ ಹಾರ್ಮುಝ್ ಜಲಸಂಧಿಯಲ್ಲಿನ ಅಡಚಣೆ ಮೂರು ತಿಂಗಳು ಮುಂದುವರಿದರೆ ವಿಶ್ವದಾದ್ಯಂತದ ಕೃಷಿಕರಿಗೆ ಸಮಸ್ಯೆಯಾಗಲಿದೆ ಮತ್ತು ಗೋಧಿ, ಅಕ್ಕಿ ಹಾಗೂ ಜೋಳಗಳ ಉತ್ಪಾದನೆ ಗಣನೀಯವಾಗಿ ಕಡಿಮೆಯಾಗಲಿದೆ ಎಂದು ಎಫ್ಎಒ ಮುಖ್ಯ ಆರ್ಥಿಕ ತಜ್ಞ ಮ್ಯಾಕ್ಸಿಮೊ ಟೊರೆರೊ ಗುರುವಾರ ಕಳವಳ ವ್ಯಕ್ತಪಡಿಸಿದ್ದರು.
IPL 2026- ಕಳೆದ ಸೀಸನ್ ನಲ್ಲಿ ಬೆಂಚು ಕಾಯಿಸಿದ್ದ RCB ಮಧ್ಯಮ ವೇಗಿ ಅಭಿನಂದನ್ ಸಿಂಗ್ ಗೆ ಪದಾರ್ಪಣೆ ಭಾಗ್ಯ!
RCB Vs SRH Inaugural Match- ವಿಶ್ವದ ಅತ್ಯಂತ ಜನಪ್ರಿಯ ಮತ್ತು ಶ್ರೀಮಂತ ಕ್ರಿಕೆಟ್ ಲೀಗ್ ಆಗಿರುವ ಐಪಿಎಲ್ ನ 16ನೇ ಆವೃತ್ತಿಗೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಚಾಲನೆ ಸಿಕ್ಕಿದೆ. ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಸನ್ ರೈಸರ್ಸ್ ತಂಡದ ವಿರುದ್ಧ ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡಿದೆ. ಅಚ್ಚರಿಯ ಬೆಳವಣಿಗೆಯಲ್ಲಿ ಕಳೆದ ಆವೃತ್ತಿಯಲ್ಲಿ ಒಂದೇ ಒಂದು ಪಂದ್ಯವನ್ನಾಡದ ಮಧ್ಯಮ ವೇಗದ ಬೌಲರ್ ಅಭಿನಂದನ್ ಸಿಂಗ್ ಅವರು ಪ್ಲೇಯಿಂಗ್ ಇಲೆವೆನ್ ನಲ್ಲಿ ಸ್ಥಾನ ಪಡೆದಿದ್ದಾರೆ.
ಮುರ್ಷಿದಾಬಾದ್ ಹಿಂಸಾಚಾರ | ರಘುನಾಥಗಂಜ್, ಜಂಗೀಪುರಗಳಲ್ಲಿ ನಿಷೇಧಾಜ್ಞೆ
ಕೋಲ್ಕತಾ, ಮಾ.28: ಶುಕ್ರವಾರ ರಾಮನವಮಿ ಮೆರವಣಿಗೆ ಸಂದರ್ಭದಲ್ಲಿ ಕಲ್ಲುತೂರಾಟ, ವಿಧ್ವಂಸಕ ಕೃತ್ಯ ಮತ್ತು ಬೆಂಕಿ ಹಚ್ಚುವಿಕೆ ಸೇರಿದಂತೆ ಎರಡು ಗುಂಪುಗಳ ನಡುವೆ ಹಿಂಸಾತ್ಮಕ ಘರ್ಷಣೆಗಳ ಬಳಿಕ ಶನಿವಾರ ಪಶ್ಚಿಮ ಬಂಗಾಳದ ಮುರ್ಷಿದಾಬಾದ್ನ ರಘುನಾಥಗಂಜ್ ಮತ್ತು ಜಂಗೀಪುರ ಪ್ರದೇಶಗಳಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಈವರೆಗೆ 30 ಜನರನ್ನು ಬಂಧಿಸಲಾಗಿದ್ದು, ಪರಿಸ್ಥಿತಿ ಈಗ ನಿಯಂತ್ರಣದಲ್ಲಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೋರ್ವರು ತಿಳಿಸಿದ್ದಾರೆ. ಪೋಲೀಸರು ಮತ್ತು ಕೇಂದ್ರೀಯ ಸಶಸ್ತ್ರ ಪಡೆಗಳ ಸಿಬ್ಬಂದಿಗಳು ಗಸ್ತು ನಿರ್ವಹಿಸುತ್ತಿದ್ದು, ಜನರಲ್ಲಿ ಆತಂಕವನ್ನು ನಿವಾರಿಸಲು ಆರ್ಎಎಫ್ ಪಥಸಂಚಲನ ನಡೆಸಿದೆ ಎಂದು ಹೇಳಿದರು. ಅಗತ್ಯ ಸೇವೆಗಳನ್ನು ಹೊರತುಪಡಿಸಿ ಮಾರುಕಟ್ಟೆ ಪ್ರದೇಶಗಳಲ್ಲಿನ ಹೆಚ್ಚಿನ ಅಂಗಡಿಗಳು ಮುಚ್ಚಿದ್ದು, ಬೀದಿಗಳಲ್ಲಿ ಕೆಲವೇ ಜನರು ಕಂಡುಬಂದಿದ್ದರು. ಆದರೆ, ವಾಹನ ಸಂಚಾರ ಸಾಮಾನ್ಯವಾಗಿತ್ತು. ರಾಮನವಮಿ ಮೆರವಣಿಗೆ ಸಂದರ್ಭದಲ್ಲಿ ರಘುನಾಥಗಂಜ್ನ ಮೆಕೆಂಝಿ ಪಾರ್ಕ್ ಸಮೀಪ ಅಬ್ಬರದ ಸಂಗೀತ ಕುರಿತು ನಡೆದ ವಾಗ್ವಾದವು ಹಿಂಸಾಚಾರಕ್ಕೆ ತಿರುಗಿತ್ತು. ಆರಾಧನಾ ಸ್ಥಳದ ಸಮೀಪ ಸಂಗೀತದ ಶಬ್ದವನ್ನು ಕೆಲವರು ಆಕ್ಷೇಪಿಸಿದ್ದರೆಂದು ಹೇಳಲಾಗಿದ್ದು, ಅವಳಿ ನಗರಗಳ ವಿವಿಧ ಪ್ರದೇಶಗಳಲ್ಲಿ ಎರಡು ಗುಂಪುಗಳ ನಡುವೆ ಘರ್ಷಣೆಗಳು ನಡೆದಿದ್ದವು. ಜಿಲ್ಲೆಯಾದ್ಯಂತ ಭದ್ರತೆಯನ್ನು ಹೆಚ್ಚಿಸಲಾಗಿದ್ದು, ಶಾಂತಿಯನ್ನು ಕಾಯ್ದುಕೊಳ್ಳುವಂತೆ ಜಿಲ್ಲಾಡಳಿತವು ನಿವಾಸಿಗಳಿಗೆ ಮನವಿ ಮಾಡಿಕೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಭಾರತವು ಪಶ್ಚಿಮ ಏಶ್ಯಾ ಬಿಕ್ಕಟ್ಟನ್ನು ಪೂರ್ಣ ಶಕ್ತಿಯಿಂದ ಎದುರಿಸುತ್ತಿದೆ: ಪ್ರಧಾನಿ ಮೋದಿ
ನೋಯ್ಡಾ, ಮಾ.28: ಪಶ್ಚಿಮ ಏಶ್ಯಾದಲ್ಲಿನ ಬಿಕ್ಕಟ್ಟಿನಿಂದಾಗಿ ಎದುರಾಗಿರುವ ಸವಾಲುಗಳನ್ನು ಭಾರತವು ಪೂರ್ಣ ಶಕ್ತಿಯೊಂದಿಗೆ ಎದುರಿಸುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಹೇಳಿದರು. ಉತ್ತರ ಪ್ರದೇಶದ ಜೇವರ್ನಲ್ಲಿ ನೋಯ್ಡಾ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಉದ್ಘಾಟಿಸಿ ಮಾತನಾಡಿದ ಅವರು, ತನ್ನ ನಾಗರಿಕರ ಸುರಕ್ಷತೆಗಾಗಿ ದೇಶವು ಎಲ್ಲ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎಂದು ಒತ್ತಿ ಹೇಳಿದರು. ‘ಪಶ್ಚಿಮ ಏಶ್ಯಾದಲ್ಲಿ ಒಂದು ತಿಂಗಳಿಗೂ ಹೆಚ್ಚು ಸಮಯದಿಂದ ಸಂಘರ್ಷ ನಡೆಯುತ್ತಿದೆ. ಯುದ್ಧದಿಂದಾಗಿ ಆಹಾರ, ಪೆಟ್ರೋಲ್, ಡೀಸೆಲ್, ಅನಿಲ, ಕಲ್ಲಿದ್ದಲು ಮತ್ತು ಇತರ ಅಗತ್ಯ ಸಾಮಗ್ರಿಗಳ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗಿದೆ. ಸುತ್ತಲೂ ಬಿಕ್ಕಟ್ಟಿದ್ದು, ಪ್ರತಿಯೊಂದು ದೇಶವೂ ಅದನ್ನು ಎದುರಿಸಲು ಪ್ರಯತ್ನಿಸುತ್ತಿದೆ. ನಮ್ಮ ಭಾರತವೂ ತನ್ನ ಪ್ರಜೆಗಳ ಬೆಂಬಲದೊಂದಿಗೆ ಈ ಬಿಕ್ಕಟ್ಟಿನ ವಿರುದ್ಧ ಪೂರ್ಣ ಶಕ್ತಿಯೊಂದಿಗೆ ಹೋರಾಡುತ್ತಿದೆ’ ಎಂದರು. ಭಾರತವು ಸಂಘರ್ಷಪೀಡಿತ ಪ್ರದೇಶಗಳಿಂದ ಕಚ್ಚಾ ತೈಲ ಮತ್ತು ಅನಿಲ ಆಮದುಗಳನ್ನು ಅವಲಂಬಿಸಿದೆ ಎಂದು ಉಲ್ಲೇಖಿಸಿದ ಮೋದಿ, ಕುಟುಂಬಗಳು ಮತ್ತು ರೈತರ ಮೇಲೆ ಹೊರೆ ಬೀಳದಂತೆ ಸರ್ಕಾರವು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎಂದು ಹೇಳಿದರು. ತೈಲ ಅವಲಂಬನೆಯನ್ನು ತಗ್ಗಿಸುವಲ್ಲಿ ಎಥೆನಾಲ್ ಮಿಶ್ರಣದ ಪಾತ್ರವನ್ನು ಒತ್ತಿ ಹೇಳಿದ ಅವರು, ಎಥೆನಾಲ್ ಉತ್ಪಾದನೆ ಮತ್ತು ಪೆಟ್ರೋಲ್ ನಲ್ಲಿ ಅದರ ಮಿಶ್ರಣವನ್ನು ಹೆಚ್ಚಿಸದಿದ್ದರೆ ದೇಶವು ಪ್ರತಿ ವರ್ಷ ವಿದೇಶಗಳಿಂದ 4.5 ಕೋಟಿ ಬ್ಯಾರಲ್ ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳಬೇಕಾಗುತ್ತಿತ್ತು ಎಂದು ತಿಳಿಸಿದರು. ‘ಈ ಬಿಕ್ಕಟ್ಟಿನ ಸಮಯದಲ್ಲಿ ನಮ್ಮ ರೈತರ ಕಠಿಣ ಪರಿಶ್ರಮ ದೇಶಕ್ಕೆ ಗಮನಾರ್ಹ ನೆಮ್ಮದಿಯನ್ನು ನೀಡಿದೆ. ಎಥೆನಾಲ್ನಿಂದ ದೇಶಕ್ಕೆ ಪ್ರಯೋಜನವಾಗಿದೆ ಮತ್ತು ರೈತರೂ ಹೆಚ್ಚಿನ ಲಾಭ ಪಡೆದಿದ್ದಾರೆ. ಸುಮಾರು 1.5 ಲಕ್ಷ ಕೋಟಿ ರೂಪಾಯಿಗಳ ವಿದೇಶಿ ವಿನಿಮಯ ಉಳಿತಾಯವಾಗಿದೆ. ಎಥೆನಾಲ್ ಇಲ್ಲದಿದ್ದರೆ ಈ ಹಣ ವಿದೇಶಗಳಿಗೆ ಹೋಗುತ್ತಿತ್ತು’ ಎಂದೂ ಅವರು ಹೇಳಿದರು. ನೂತನ ನೋಯ್ಡಾ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಕುರಿತು ಮಾತನಾಡಿದ ಅವರು, ವಿಕಸಿತ ಉತ್ತರ ಪ್ರದೇಶ ಮತ್ತು ವಿಕಸಿತ ಭಾರತದತ್ತ ಪಯಣದಲ್ಲಿ ಇಂದು ಹೊಸ ಅಧ್ಯಾಯ ಆರಂಭಗೊಂಡಿದೆ. ಈ ವಿಮಾನ ನಿಲ್ದಾಣವು ಪ್ರದೇಶದಲ್ಲಿ ಆರ್ಥಿಕ ಚಟುವಟಿಕೆಗಳನ್ನು ಹೆಚ್ಚಿಸಲಿದೆ, ಪಶ್ಚಿಮ ಉತ್ತರ ಪ್ರದೇಶದ ರೈತರು, ಸಣ್ಣ ವ್ಯಾಪಾರಿಗಳು ಮತ್ತು ಯುವಜನರಿಗೆ ಹೊಸ ಅವಕಾಶಗಳನ್ನು ಸೃಷ್ಟಿಸಲಿದೆ ಎಂದರು. ‘ಭಾರತದ ವಾಯುಯಾನ ಕ್ಷೇತ್ರವು ವೇಗವಾಗಿ ಬೆಳೆಯುತ್ತಿದೆ. ದೇಶಾದ್ಯಂತ ಹೊಸ ವಿಮಾನ ನಿಲ್ದಾಣಗಳು ನಿರ್ಮಾಣವಾಗುತ್ತಿದ್ದಂತೆ ಹೊಸ ವಿಮಾನಗಳಿಗೆ ಬೇಡಿಕೆಯೂ ಹೆಚ್ಚುತ್ತಿದೆ. ಪರಿಣಾಮವಾಗಿ ವಿವಿಧ ವಾಯುಯಾನ ಸಂಸ್ಥೆಗಳು ನೂರಾರು ಹೊಸ ವಿಮಾನಗಳಿಗೆ ಆದೇಶಗಳನ್ನು ನೀಡಿವೆ. ಈ ನೂತನ ಸೌಲಭ್ಯಗಳು ಮತ್ತು ವಿಮಾನಗಳನ್ನು ನಿರ್ವಹಿಸಲು ದೊಡ್ಡ ಕಾರ್ಯಪಡೆಯ ಅಗತ್ಯವಿದ್ದು, ಇದು ನಮ್ಮ ಯುವಜನರಿಗೆ ಬೃಹತ್ ಅವಕಾಶವನ್ನು ಒದಗಿಸುತ್ತಿದೆ. ನಮ್ಮ ಸರ್ಕಾರವೂ ವಾಯುಯಾನ ವಲಯದಾದ್ಯಂತ ತರಬೇತಿ ಸೌಲಭ್ಯಗಳನ್ನು ವಿಸ್ತರಿಸುತ್ತಿದೆ’ ಎಂದು ಪ್ರಧಾನಿ ನುಡಿದರು.
ಅತಿಥಿ ಉಪನ್ಯಾಸಕರ ಹುದ್ದೆಗೆ ಅರ್ಜಿ ಆಹ್ವಾನ
ಉಡುಪಿ, ಮಾ.28: ಸರಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ ಉಪ್ಪೂರು ಇಲ್ಲಿ ಡಿಪ್ಲೋಮಾ ಇನ್ ಟೂಲ್ ಆಂಡ್ ಡೈ ಮೇಕಿಂಗ್ ಹಾಗೂ ಡಿಪ್ಲೋಮಾ ಇನ್ ಮೆಕೆಟ್ರಾನಿಕ್ಸ್ ತರಗತಿಗಳನ್ನು ನಡೆಸಲು ಎಂ.ಟೆಕ್/ಬಿ.ಇ (ಮೆಕ್ಯಾನಿಕಲ್ ಇಂಜಿನಿಯರಿಂಗ್, ಇಆ್ಯಂಡ್ಇ, ಎ ಆ್ಯಂಡ್ ಸಿ) ಎಂ.ಎಸ್ಸಿ(ಎಲೆಕ್ಟ್ರಾನಿಕ್ಸ್, ಫಿಸಿಕ್ಸ್) ವಿದ್ಯಾರ್ಹತೆ ಹೊಂದಿರುವ ಅತಿಥಿ ಉಪನ್ಯಾಸಕರ ಅವಶ್ಯಕತೆ ಇದ್ದು, ಆಸಕ್ತ ಅಭ್ಯರ್ಥಿಗಳು ಸರಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ, ಸರಕಾರಿ ಪ್ರೌಢಶಾಲೆ ಹತ್ತಿರ, ಕೊಳಲಗಿರಿ ಉಪ್ಪೂರು ದೂ.ಸಂ: 9880510585, 8618760169 ಇ-ಮೇಲ್: - gttcudupi@gmail.com-ಅನ್ನು ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.
ವಿಜಯನಗರ| ಆಟೋ LPG ದರ ಏರಿಕೆ ವಿರುದ್ಧ ಪ್ರತಿಭಟನೆ: ಅಧಿಕಾರಿಗಳ ಮಧ್ಯಸ್ಥಿಕೆ ಬಳಿಕ ಹಳೆಯ ದರ ಮುಂದುವರಿಕೆ
ಹೊಸಪೇಟೆ (ವಿಜಯನಗರ ಜಿಲ್ಲೆ): ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಡ್ಯಾಮ್ ರಸ್ತೆಯಲ್ಲಿರುವ ಗೋ ಗ್ಯಾಸ್ ಕಂಪನಿಯ ಆಟೋ LPG ಬಂಕ್ನಲ್ಲಿ ಏಕಾಏಕಿ ಲೀಟರ್ಗೆ 15 ರೂಪಾಯಿ ದರ ಏರಿಕೆ ಮಾಡಿದ ಹಿನ್ನೆಲೆಯಲ್ಲಿ ಆಟೋ ಚಾಲಕರಲ್ಲಿ ಆಕ್ರೋಶ ವ್ಯಕ್ತವಾಗಿದೆ. ಮಾರ್ಚ್ 27ರಂದು ಲೀಟರ್ಗೆ 84.95 ರೂಪಾಯಿ ಇದ್ದ ಆಟೋ LPG ದರವನ್ನು ಹಠಾತ್ 99.95 ರೂಪಾಯಿಗೆ ಹೆಚ್ಚಿಸಲಾಗಿತ್ತು. ಈ ದಿಡೀರ್ ದರ ಏರಿಕೆಯನ್ನು ಖಂಡಿಸಿ, CITU ಅಂಗಸಂಸ್ಥೆಯಾದ ಫೆಡರೇಶನ್ ಆಫ್ ಕರ್ನಾಟಕ ಆಟೋರಿಕ್ಷಾ ಡ್ರೈವರ್ಸ್ ಯೂನಿಯನ್ (FKARDU) ಹೊಸಪೇಟೆ ತಾಲೂಕು ಸಮಿತಿ ನೇತೃತ್ವದಲ್ಲಿ ಹೋರಾಟಕ್ಕೆ ಕರೆ ನೀಡಲಾಗಿತ್ತು. ಹೋರಾಟ ಆರಂಭಿಸುವ ಮುನ್ನವೇ ಪೊಲೀಸ್ ಇಲಾಖೆ ತಕ್ಷಣ ಕಾರ್ಯಪ್ರವೃತ್ತವಾಗಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತೆಗೆದುಕೊಂಡಿತು. DYSP ಮಂಜುನಾಥ್ ಅವರ ನೇತೃತ್ವದಲ್ಲಿ, ದಂಡಾಧಿಕಾರಿಗಳು, ಫುಡ್ ಸೆಕ್ಷನ್ ಅಧಿಕಾರಿಗಳು ಹಾಗೂ ಸ್ಥಳೀಯ ಪೊಲೀಸ್ ಇನ್ಸ್ಪೆಕ್ಟರ್ ಮತ್ತು ಸಿಬ್ಬಂದಿಗಳು ಗ್ಯಾಸ್ ಬಂಕ್ ವ್ಯವಸ್ಥಾಪಕರೊಂದಿಗೆ ಮಾತುಕತೆ ನಡೆಸಿದರು. ಈ ವೇಳೆ ಕಾನೂನುಬಾಹಿರವಾಗಿ ಯಾವುದೇ ದರ ಏರಿಕೆ ಮಾಡಬಾರದೆಂದು ಅಧಿಕಾರಿಗಳು ಎಚ್ಚರಿಕೆ ನೀಡಿದರು. ಪರಿಣಾಮವಾಗಿ, ಬಂಕ್ ಸಿಬ್ಬಂದಿಗಳು ಹಳೆಯ ದರವಾದ 84.95 ರೂಪಾಯಿಯನ್ನು ಮುಂದುವರಿಸಲು ಒಪ್ಪಿಕೊಂಡರು. FKARDU ಸಂಘದ ತಾಲೂಕು ಅಧ್ಯಕ್ಷ ಹಾಗೂ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಎಂ. ಸಂತೋಷ್ ಕುಮಾರ್ ಅವರು, ಆಟೋ ಚಾಲಕರ ಪರವಾಗಿ ಸ್ಪಂದಿಸಿದ ಎಲ್ಲಾ ಅಧಿಕಾರಿಗಳಿಗೆ ಹಾಗೂ ಬಂಕ್ ಸಿಬ್ಬಂದಿಗಳಿಗೆ ಧನ್ಯವಾದಗಳನ್ನು ತಿಳಿಸಿದರು. ಭವಿಷ್ಯದಲ್ಲಿ ಇಂತಹ ದರ ಏರಿಕೆ ಮರುಕಳಿಸಿದರೆ ತೀವ್ರ ಹೋರಾಟ ನಡೆಸುವುದಾಗಿ ಎಚ್ಚರಿಸಿದರು. ಒಟ್ಟಾರೆ, ತಕ್ಷಣದ ಆಡಳಿತಾತ್ಮಕ ಕ್ರಮದಿಂದ ಆಟೋ ಚಾಲಕರಿಗೆ ತಾತ್ಕಾಲಿಕ ನೆರವು ದೊರಕಿದಂತಾಗಿದೆ.
ಮಣಿಪಾಲ: ಗ್ರಾಮೀಣ ಮಹಿಳೆಯರಿಗೆ ಬ್ರ್ಯಾಂಡಿಂಗ್ ತರಬೇತಿ
ಮಣಿಪಾಲ, ಮಾ.28: ಮಣಿಪಾಲದ ಭಾರತೀಯ ವಿಕಾಸ ಟ್ರಸ್ಟ್, ಟಿಎಮ್ಜಿ ಸುನಿಧಿ ಫೌಂಡೇಶನ್ ಟ್ರಸ್ಟ್ ಮಣಿಪಾಲ ಮತ್ತು ಮಣಿಪಾಲ ಪೇಮೆಂಟ್ ಆಂಡ್ ಐಡೆಂಟಿಟಿ ಸೆಲ್ಯೂಶನ್ ಪ್ರೈವೇಟ್ ಲಿಮಿಟೆಡ್ ಇವರ ಸಂಯುಕ್ತ ಆಶ್ರಯದಲ್ಲಿ ಗ್ರಾಮೀಣ ಮಹಿಳಾ ಉದ್ಯಮಿಗಳಿಗೆ 3 ದಿನಗಳ ಬ್ರ್ಯಾಂಡಿಂಗ್, ಪ್ಯಾಕೇಜಿಂಗ್, ಲೇಬಲಿಂಗ್ ಮತ್ತು ಮಾರುಕಟ್ಟೆ ಕುರಿತು ತರಬೇತಿ ಕಾರ್ಯಕ್ರಮದ ಸಮಾರೋಪ ಸಮಾರಂಭ ಮಣಿಪಾಲದ ಭಾರತೀಯ ವಿಕಾಸ ಟ್ರಸ್ಟ್ ಸಭಾಂಗಣದಲ್ಲಿ ಜರಗಿತು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿದ ಮಣಿಪಾಲ ಮೀಡಿಯಾ ನೆಟ್ವರ್ಕ್ನ ಸಿಎಸ್ಆರ್ ಟೀಮ್ ಲೀಡ್ ರೂಪಶ್ರೀ ಕೆ. ಮಾತನಾಡಿ, ಉದ್ಯಮದಲ್ಲಿ ಸಂಪರ್ಕ, ನಿರಂತರತೆ ಮತ್ತು ಸಹಭಾಗಿತ್ವ ಎಂಬ ಮೂರು ಅಂಶಗಳು ಯಶಸ್ಸಿನ ಪ್ರಮುಖ ಆಧಾರಸ್ತಂಭಗಳಾಗಿವೆ. ಈ ಅಂಶಗಳನ್ನು ಸಮರ್ಪಕವಾಗಿ ಅಳವಡಿಸಿಕೊಂಡು ಕಾರ್ಯ ನಿರ್ವಹಿಸಿದಲ್ಲಿ ಯಾವುದೇ ಉದ್ಯಮಿ ತನ್ನ ಉದ್ಯಮದಲ್ಲಿ ದೀರ್ಘಕಾಲಿಕ ಬೆಳವಣಿಗೆ ಹಾಗೂ ಯಶಸ್ಸನ್ನು ಸಾಧಿಸಬಹುದು ಎಂದರು. ಅಧ್ಯಕ್ಷತೆ ವಹಿಸಿದ್ದ ಬಿವಿಟಿ ಸಂಸ್ಥೆಯ ಹಿರಿಯ ಸಲಹೆಗಾರ ಜಗದೀಶ್ ಪೈ, ಸ್ಥಳೀಯ ಮಾರುಕಟ್ಟೆ ವ್ಯವಸ್ಥೆಯನ್ನು ಪರಿಣಾಮಕಾರಿಯಾಗಿ ಬಳಸಿ ಕೊಂಡು, ಗುಣಮಟ್ಟ ಹಾಗೂ ಬ್ರ್ಯಾಂಡಿಂಗ್ಗೆ ಹೆಚ್ಚಿನ ಆದ್ಯತೆ ನೀಡಿದಲ್ಲಿ ಉದ್ಯಮ ವನ್ನು ವಿಸ್ತರಿಸುವ ಅವಕಾಶಗಳು ಹೆಚ್ಚಾಗುತ್ತವೆ ಎಂದು ಕಿವಿಮಾತು ಹೇಳಿದರು. ಈ ಸಂದರ್ಭದಲ್ಲಿ ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು. ಬಿವಿಟಿಯ ಮುಖ್ಯ ವ್ಯವಸ್ಥಾಪಕ ಮನೋಹರ ಕಟ್ಗೇರಿ ಸ್ವಾಗತಿಸಿ, ಪ್ರಸ್ತಾವಿಕ ಮಾತುಗಳನ್ನಾಡಿದರು. ಕಾರ್ಯಕ್ರಮ ಅಧಿಕಾರಿ ಪ್ರತಿಮಾ ಕಾರ್ಯ ಕ್ರಮ ನಿರೂಪಿಸಿ, ವಂದಿಸಿದರು. 35 ಮಂದಿ ಮಹಿಳಾ ಉದ್ಯಮಿಗಳು ತರಬೇತಿಯ ಪ್ರಯೋಜನ ಪಡೆದರು.
ಹೊಸಪೇಟೆ| ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳ ಬಂಧನ: 1200 ಗ್ರಾಂ ಗಾಂಜಾ ವಶಕ್ಕೆ
ಹೊಸಪೇಟೆ: ನಗರದ ಚಿತ್ತವಾಡಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿ, ಸುಮಾರು 1200 ಗ್ರಾಂ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ. ಸಿದ್ದಿಪ್ರಿಯ ಕಲ್ಯಾಣ ಮಂಟಪದ ಹಿಂಭಾಗದಲ್ಲಿ ಗಾಂಜಾ ಮಾರಾಟ ನಡೆಯುತ್ತಿರುವ ಕುರಿತು ದೊರೆತ ಖಚಿತ ಮಾಹಿತಿಯ ಮೇರೆಗೆ, ಚಿತ್ತವಾಡಗಿ ಪೊಲೀಸ್ ಠಾಣೆಯ ಪಿ.ಐ ಮತ್ತು ಸಿಬ್ಬಂದಿ ದಾಳಿ ನಡೆಸಿದ್ದಾರೆ. ಈ ವೇಳೆ ಸ್ಥಳದಲ್ಲಿದ್ದ ಇಬ್ಬರನ್ನು ವಶಕ್ಕೆ ಪಡೆದು, ಅವರ ಬಳಿಯಿದ್ದ ಸುಮಾರು 1,200 ಗ್ರಾಂ ಗಾಂಜಾ ವಶಪಡಿಸಿಕೊಂಡಿದ್ದಾರೆ. ಬಂಧಿತ ಆರೋಪಿಗಳನ್ನು ಸತೀಶ್ ಕುಮಾರ್, ಚಿನ್ನಬಾಲು ಎಂದು ಗುರುತಿಸಲಾಗಿದೆ. ಇಬ್ಬರು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಈ ಸಂಬಂಧ ಚಿತ್ತವಾಡಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶೆರಿಲ್ ಐಯೊನ ಐಮನ್ ರಿಗೆ ಪಿಎಚ್ಡಿ ಪದವಿ
ಹಳೆಯಂಗಡಿ : ಶ್ರೀದೇವಿ ಇಂಜಿನಿಯರಿಂಗ್ ಕಾಲೇಜ್ ಇಲ್ಲಿ ಪ್ರೊಫೆಸರ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಶೆರಿಲ್ ಆಯೋನ ಐಮನ್ ಅವರು ಇಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಶನ್ ವಿಭಾಗದಲ್ಲಿ ಸಲ್ಲಿಸಿದ ಡಿಸೈನ್ ಆ್ಯಂಡ್ ಇಂಪ್ಲಿಮೆಂಟೇಶನ್ ಆಫ್ ಎಫಿಷಿಯೆಂಟ್ ನ್ಯಾನೋ ಮೆಟೀರಿಯಲ್ ಫಾರ್ ಎನರ್ಜಿ ಸ್ಟೋರೇಜ್ ಸೆನ್ಸಸ್ ಆ್ಯಂಡ್ ಫೋಟೊ ಕೆಟಲೊಸಿಎಸ್ ಅಪ್ಲಿಕೇಶನ್ಸ್ ವಿಷಯಗಳಿಗೆ ಮಂಗಳೂರಿನ ಪ್ರತಿಷ್ಠಿತ ಶ್ರೀನಿವಾಸ ವಿಶ್ವವಿದ್ಯಾಲಯವು ಡಾಕ್ಟರ್ ಆಫ್ ಫಿಲೊಸಫಿ(Ph.D) ಪದವಿಯನ್ನು ನೀಡಿ ಗೌರವಿಸಿದರು. ಇಂದು ಮುಕ್ಕ ಶ್ರೀನಿವಾಸ್ ಕಾಲೇಜಿನಲ್ಲಿ ನಡೆದ ಘಟಿಕೋತ್ಸವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಶೆರಿಲ್ ಐಯೊನ ಐಮನ್ ಅವರು, ವಾಮಂಜೂರ ಸೈಂಟ್ ಜೋಸೆಫ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ತನ್ನ ಶಿಕ್ಷಣ ಮುಗಿಸಿ ಪ್ರಸ್ತುತ ಮಂಗಳೂರಿನ ಶ್ರೀದೇವಿ ಇಂಜಿನಿಯರಿಂಗ್ ಕಾಲೇಜ್ ಮಂಗಳೂರು ಇಲ್ಲಿ ಪ್ರೊಫೆಸರ್ ಆಗಿ ಸೇವೆ ಮಾಡುತ್ತಿದ್ದಾರೆ. ಮೂಲತಃ ಹಳೆಯಂಗಡಿಯವರಾದ ಇವರು ಪ್ರಸ್ತುತ ಮಂಗಳೂರಿನ ನಿವಾಸಿಯಾಗಿದ್ದು, ಸಿಎಸ್ಐ ಚರ್ಚ್ ಮಡಿಕೇರಿಗುಡ್ಡೆ ಮಂಗಳೂರು ಇದರ ಸಭಾ ಪರಿಪಾಲನ ಸಮಿತಿಯ ಕೌನ್ಸಿಲ್ ಸದಸ್ಯರಾಗಿ, ಪ್ರಿಯದರ್ಶಿನಿ ಕೋ ಆಪರೇಟಿವ್ ಸೊಸೈಟಿಯ ನಿರ್ದೇಶಕರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.
ರಾಜ್ಯಮಟ್ಟದ ಲಾನ್ ಟೆನಿಸ್ ಕೂಟ: ಜೆಸ್ಕಾಂ ಚಾಂಪಿಯನ್
ಕಲಬುರಗಿ: 2025-26ನೆಯ ಸಾಲಿನ ಅಂತರ್ ಕಂಪೆನಿಗಳ ರಾಜ್ಯಮಟ್ಟದ ಪುರುಷರ ಲಾನ್ ಟೆನಿಸ್ ಕ್ರೀಡಾಕೂಟದಲ್ಲಿ ದೌಲತರಾಯ ಹಡಪದ ನೇತೃತ್ವದ ಗುಲ್ಬರ್ಗಾ ವಿದ್ಯುಚ್ಛಕ್ತಿ ಸರಬರಾಜು ಕಂಪೆನಿ ನಿಯಮಿತ(ಜೆಸ್ಕಾಂ) ತಂಡ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಮಂಡ್ಯ ನಗರದಲ್ಲಿ ಗುರುವಾರ ನಡೆದ ಕ್ರೀಡಾಕೂಟದಲ್ಲಿ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ ಮುಖ್ಯ ಎಂಜಿನಿಯರ್ ಹಾಗೂ ಕ್ರೀಡಾ ಸಮಿತಿಯ ಅಧ್ಯಕ್ಷರಾಗಿರುವ ಸುನೀಲ್ ಕುಮಾರ್ ಅವರು ಜೆಸ್ಕಾಂ ತಂಡದ ಆಟಗಾರರಿಗೆ ಟ್ರೋಫಿ ಪ್ರದಾನ ಮಾಡಿದರು. ಈ ವೇಳೆ ಜೆಸ್ಕಾಂ ಟೆನಿಸ್ ತಂಡದ ನೇತೃತ್ವ ವಹಿಸಿದ ದೌಲತರಾಯ ಹಡಪದ, ಸಯ್ಯದ್ ಅಮ್ಜದ್ ಅಲಿ, ನಾಗರಾಜ್ ಹಾಗೂ ವಿನೋದಕುಮಾರ್ ಅವರು ಟ್ರೋಫಿ ಸ್ವೀಕರಿಸಿ ಸಂಭ್ರಮಿಸಿದರು. ರಾಜ್ಯಮಟ್ಟದ ಪುರುಷರ ಲಾನ್ ಟೆನಿಸ್ ಕ್ರೀಡಾಕೂಟದಲ್ಲಿ ಜೆಸ್ಕಾಂ, ಮೆಸ್ಕಾಂ, ಬೆಸ್ಕಾಂ, ಸೆಸ್ಕ್ ಮತ್ತಿತ್ತರ ಕಂಪೆನಿಗಳು ಭಾಗವಹಿಸಿದ್ದವು. ಲಾನ್ ಟೆನಿಸ್ ವಿಭಾಗದಲ್ಲಿ ಗೆದ್ದಿರುವ ಜೆಸ್ಕಾಂ ತಂಡದ ಸಾಧನೆಗೆ ಜೆಸ್ಕಾಂನ ಎಸ್ಸಿ, ಎಸ್ಟಿ ಯುನಿಯನ್ ನ ಉಪಾಧ್ಯಕ್ಷ ಪರಂಗಪ್ಪ ಸೇರಿದಂತೆ ಅಧಿಕಾರಿ, ಸಿಬ್ಬಂದಿ ವರ್ಗದವರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
Sakleshpura | ಸಿಡಿಲು ಬಡಿದು ಐವರು ಮಹಿಳಾ ಕಾರ್ಮಿಕರಿಗೆ ಗಾಯ
ಸಕಲೇಶಪುರ: ತಾಲೂಕಿನ ಹರಗರಹಳ್ಳಿ ಗ್ರಾಮದ ದಿಣಹಳ್ಳಿ ಕಾಫಿ ಎಸ್ಟೇಟ್ನಲ್ಲಿ ಕೆಲಸ ಮಾಡುತ್ತಿದ್ದ ಐವರು ಮಹಿಳಾ ಕಾರ್ಮಿಕರು ಸಿಡಿಲು ಬಡಿದು ಗಾಯಗೊಂಡ ಘಟನೆ ಶನಿವಾರ ಮಧ್ಯಾಹ್ನ ನಡೆದಿದೆ. ಕಾಫಿ ತೋಟದಲ್ಲಿ ಔಷಧಿ ಸಿಂಪಡಿಸುತ್ತಿದ್ದ ವೇಳೆ ಸಿಡಿಲು ಬಡಿದಿದ್ದು, ಕುದರಂಗಿ ಗ್ರಾಮದ ರೂಪ, ಸತ್ತಿಗಾಲ್ ಗ್ರಾಮದ ಜಯಮ್ಮ, ಸುಳ್ಳಕ್ಕಿ ಗ್ರಾಮದ ಸುಮಿತ್ರಾ ಹಾಗೂ ಕುದರಂಗಿ ಗ್ರಾಮದ ಲಕ್ಷ್ಮಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ತಕ್ಷಣ ಪಟ್ಟಣದ ಕ್ರಾಫರ್ಡ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಪೈಕಿ ರೂಪ ಅವರಿಗೆ ಗಂಭೀರ ಗಾಯಗಳಾಗಿರುವುದಾಗಿ ತಿಳಿದುಬಂದಿದೆ.
ಕೆಲಸದ ಸ್ಥಳದಲ್ಲಿ ಮಹಿಳೆ ಸುರಕ್ಷಿತಳೇ? ರಾಜ್ಯದಲ್ಲಿ 3 ವರ್ಷಗಳಲ್ಲಿ ಮಹಿಳಾ ಆಯೋಗದಲ್ಲಿ ದಾಖಲಾಗಿದೆ 349 ಪ್ರಕರಣ
ಕೆಲಸದ ಸ್ಥಳಗಳಲ್ಲಿ ಮಹಿಳೆಯರ ಮೇಲೆ ದೌರ್ಜನ್ಯ, ಕಿರುಕುಳ ನಡೆಯುತ್ತಿವೆ. ಈ ಕುರಿತಾಗಿ ಕರ್ನಾಟಕ ರಾಜ್ಯ ಮಹಿಳಾ ಆಯೋಗದಲ್ಲೂ ಅನೇಕ ದೂರುಗಳು ದಾಖಲಾಗಿವೆ. 1997ರಲ್ಲಿ ಸುಪ್ರೀಂ ಕೋರ್ಟ್ ಹೊರಡಿಸಿದ ವಿಶಾಕಾ ಮಾರ್ಗಸೂಚಿಯಲ್ಲಿ ಕೆಲಸದ ಸ್ಥಳಗಳಲ್ಲಿ ಮಹಿಳಾ ಸುರಕ್ಷತೆಯ ಬಗ್ಗೆ ಉಲ್ಲೇಖ ಮಾಡಲಾಗಿದೆ. ಕೆಲಸದ ಸ್ಥಳದಲ್ಲಿ ಮಹಿಳೆಯರ ಮೇಲಿನ ಲೈಂಗಿಕ ಕಿರುಕುಳ ತಡೆಗಟ್ಟಲು ನಿಯಮಾವಳಿಗಳನ್ನು ರೂಪಿಸಲಾಗಿದೆ. ಪ್ರತಿಯೊಂದು ಸಂಸ್ಥೆಯಲ್ಲಿ ಈ ಸಂಬಂಧಿಸಿದಂತೆ ದೂರು ಸಮಿತಿ ರಚನೆ ಮಾಡಲು ನಿರ್ದೇಶನವಿದೆ. ಅಲ್ಲದೆ, ದೂರುದಾರರಿಗೆ ರಕ್ಷಣೆ ಹಾಗೂ ಸುರಕ್ಷಿತ ವಾತಾವರಣ ಕಲ್ಪಿಸುವುದನ್ನು ಕಡ್ಡಾಯಗೊಳಿಸಲಾಗಿದೆ.
ರಾಜ್ಯದಲ್ಲಿ 2 ವರ್ಷದಲ್ಲಿ 30,000 ಹಾವು ಕಡಿತ ಪ್ರಕರಣ: ವಿಷ ಏರಿ 254 ಮಂದಿ ಸಾವು
ಖಾಸಗಿ ಆಸ್ಪತ್ರೆಗಳಲ್ಲಿ ಮುಂಗಡ ಹಣಕ್ಕಾಗಿ ಒತ್ತಾಯಿಸದೆ ಹಾವು ಕಡಿತಗೊಂಡ ಸಂತ್ರಸ್ತರಿಗೆ ತಕ್ಷಣ ಜೀವ ಉಳಿಸುವ ಚಿಕಿತ್ಸೆಯನ್ನು ಒದಗಿಸುವಂತೆ ಆದೇಶಿಸಲಾಗಿದೆ. ಹಾವು ಕಡಿತ ಮತ್ತು ಮರಣಗಳನ್ನು ತಡೆಗಟ್ಟಲು ದೇಶದಲ್ಲೇ ಪ್ರಪ್ರಥಮ ಭಾರಿಗೆ ರಾಜ್ಯವು ವಿವಿಧ ಇಲಾಖೆಗಳು ತೆಗೆದುಕೊಳ್ಳಬೇಕಾಗಿರುವ ಕ್ರಮಗಳ ಕುರಿತು ರಾಜ್ಯ ಕ್ರಿಯಾ ಯೋಜನೆಗೆ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿಯನ್ನು ನೀಡಿದೆ. ಕರ್ನಾಟಕ ರಾಜ್ಯದಲ್ಲಿ ಕಳೆದ ಎರಡು ವರ್ಷಗಳಲ್ಲಿ ಹಾವು ಕಡಿತದಿಂದ 254 ಮಂದಿ ಸಾವನ್ನಪ್ಪಿದ್ದಾರೆ. ಈ ಕುರಿತಾದ ಒಂದಿಷ್ಟು ವಿವರಗಳು ಇಲ್ಲಿವೆ.
ಭಟ್ಕಳದಲ್ಲಿ ಧಾರ್ಮಿಕ ಧ್ವಜ ತೆರವು: ಕೆಲಕಾಲ ಉದ್ವಿಗ್ನತೆ
ಭಟ್ಕಳ: ಈದುಲ್ ಫಿತ್ರ್ ಅಂಗವಾಗಿ ಬಂದರ್ ರಸ್ತೆಯ ಈದ್ಗಾ ಮೈದಾನದ ಎದುರು ಅಳವಡಿಸಲಾಗಿದ್ದ ಧ್ವಜವನ್ನು ಪುರಸಭೆ ಅಧಿಕಾರಿಗಳು ತೆರವುಗೊಳಿಸಿದ ಹಿನ್ನೆಲೆಯಲ್ಲಿ ಪ್ರದೇಶದಲ್ಲಿ ಕೆಲಕಾಲ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಯಿತು. ಈ ಕ್ರಮಕ್ಕೆ ವಿರೋಧ ವ್ಯಕ್ತಪಡಿಸಿ ನೂರಾರು ಮಂದಿ ಸ್ಥಳದಲ್ಲಿ ಜಮಾಯಿಸಿ ಆಕ್ರೋಶ ವ್ಯಕ್ತಪಡಿಸಿದರು. ಧ್ವಜ ತೆರವುಗೊಳಿಸುವ ಮೂಲಕ ಧಾರ್ಮಿಕ ಭಾವನೆಗೆ ಧಕ್ಕೆ ತಂದಿರುವುದಾಗಿ ಅವರು ದೂರಿದರು. ಇದರಿಂದ ಬಂದರ್ ರಸ್ತೆ ಭಾಗದಲ್ಲಿ ಸಂಚಾರ ವ್ಯತ್ಯಯ ಉಂಟಾಗಿ ಬಿಗುವಿನ ವಾತಾವರಣ ನಿರ್ಮಾಣವಾಯಿತು. ವಿಷಯ ತಿಳಿದ ತಕ್ಷಣ ಡಿವೈಎಸ್ಪಿ ಗಿರೀಶ್ ಬಿ., ಸಿಪಿಐ ದಿವಾಕರ್ ಪಿ.ಎಂ., ಪಿಎಸ್ಐ ನವೀನ್ ನಾಯಕ್ ಹಾಗೂ ಗ್ರಾಮೀಣ ಠಾಣೆಯ ಇನ್ಸ್ಪೆಕ್ಟರ್ ವೆಂಕಟೇಶ್ ಮುರ್ನಾಳ್ ಸೇರಿದಂತೆ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಮುಂದಾದರು. ಪ್ರತಿಭಟನಾಕಾರರೊಂದಿಗೆ ಮಾತುಕತೆ ನಡೆಸಿ ಪರಿಸ್ಥಿತಿಯನ್ನು ಶಮನಗೊಳಿಸಿದರು. ಪೊಲೀಸರ ಸಕಾಲಿಕ ಮಧ್ಯಪ್ರವೇಶದಿಂದ ಪರಿಸ್ಥಿತಿ ಹತೋಟಿಗೆ ಬಂದಿದ್ದು, ಪ್ರದೇಶದಲ್ಲಿ ಬಿಗಿ ಪೊಲೀಸ್ ಬಂದೋ ಬಸ್ತ್ ಮುಂದುವರಿಸಲಾಗಿದೆ. ಯಾವುದೇ ವದಂತಿಗಳಿಗೆ ಕಿವಿಗೊಡಬಾರದು ಮತ್ತು ಶಾಂತಿ–ಸೌಹಾರ್ದತೆ ಕಾಪಾಡಿಕೊಳ್ಳಬೇಕು ಎಂದು ಪೊಲೀಸ್ ಇಲಾಖೆ ಹಾಗೂ ಆಡಳಿತವು ಸಾರ್ವಜನಿಕರಿಗೆ ಮನವಿ ಮಾಡಿದೆ. ಧ್ವಜ ತೆರವು ವಿವಾದ ಕುರಿತು ತಂಝೀಮ್ ಮುಖಂಡ ಮೌಲಾನ ಅಝೀಝುರ್ರಹ್ಮಾನ್ ರುಕ್ನುದ್ದಿನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಭಾರತದಲ್ಲಿ ಎಲ್ಲರಿಗೂ ಒಂದೇ ಕಾನೂನು ಅನ್ವಯಿಸಬೇಕು. ಹಿಂದೂಗಳಿಗೆ ಬೇರೆ, ಮುಸ್ಲಿಮರಿಗೆ ಬೇರೆ ಕಾನೂನು ಎಂಬುದಿಲ್ಲ. ನಗರದಲ್ಲಿ ಅನಧಿಕೃತವಾಗಿ ಅಳವಡಿಸಲಾಗಿರುವ ಕೇಸರಿ ಧ್ವಜಗಳು ಹಲವೆಡೆ ಸರ್ಕಾರಿ ಜಾಗಗಳಲ್ಲಿ ಹಾರಾಡುತ್ತಿವೆ. ಮೊದಲು ಅವುಗಳನ್ನು ತೆರವುಗೊಳಿಸಬೇಕು” ಎಂದು ಅವರು ತಿಳಿಸಿದ್ದಾರೆ. “ಈದ್ ಸಂದರ್ಭ ಅಳವಡಿಸಲಾದ ಧಾರ್ಮಿಕ ಧ್ವಜವನ್ನು ಮಾತ್ರ ಗುರಿಯಾಗಿಸಿಕೊಂಡು ತೆರವುಗೊಳಿಸಿರುವುದು ಸಮುದಾಯದ ಯುವಕರಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ. ಎಲ್ಲರಿಗೂ ಒಂದೇ ರೀತಿಯ ನಿಯಮ ಅನ್ವಯವಾ ಗಬೇಕು” ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ರಾಯಚೂರು| ವಾಲ್ಮೀಕಿ ಅಭಿವೃದ್ಧಿ ನಿಗಮದ ಫಲಾನುಭವಿಗಳಿಗೆ ಶಾಸಕ ಹಂಪನಗೌಡ ಬಾದರ್ಲಿಯಿಂದ ಕಾರುಗಳ ವಿತರಣೆ
ಸಿಂಧನೂರು: ಕರ್ನಾಟಕ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದಿಂದ ಸ್ವಾವಲಂಬಿ ಸಾರಥಿ ಯೋಜನೆಯಡಿ ಆಯ್ಕೆಯಾದ ಫಲಾನುಭವಿಗಳಿಗೆ ಶನಿವಾರ ಶಾಸಕ ಹಂಪನಗೌಡ ಬಾದರ್ಲಿ 12 ಕಾರುಗಳನ್ನು ವಿತರಿಸಿದರು. ನಂತರ ಮಾತನಾಡಿದ ಶಾಸಕ ಹಂಪನಗೌಡ ಬಾದರ್ಲಿ, ಸರಕಾರ ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಅನೇಕ ಯೋಜನೆಗಳನ್ನು ರೂಪಿಸಿದ್ದು, ಯೋಜನೆಯ ಲಾಭ ಪಡೆದು ಸ್ವಾವಲಂಬನೆ ಬದುಕು ಕಟ್ಟಿಕೊಳ್ಳಬೇಕು. ಸರಕಾರದ ಯೋಜನೆಯನ್ನು ಸದುಪಯೋಗಪಡಿಸಿಕೊಳ್ಳುವ ಮೂಲಕ ಉಜ್ವಲವಾದ ಜೀವನ ರೂಪಿಸಿಕೊಳ್ಳಬೇಕೆಂದರು. ಇದೇ ಸಂದರ್ಭದಲ್ಲಿ ನಿಗಮದ ಜಿಲ್ಲಾ ವ್ಯವಸ್ಥಾಪಕ ಆದೇಶ ಅವರು ಮಾತನಾಡಿ, 2023-24 ಮತ್ತು 2024-25ನೇ ಸಾಲಿನಲ್ಲಿ ನಿಗಮದಿಂದ ಸಿಂಧನೂರು ವಿಧಾನಸಭಾ ವ್ಯಾಪ್ತಿಯ ಪರಿಶಿಷ್ಟ ಪಂಗಡದ ಫಲಾನುಭವಿಗಳಿಗೆ 8 ಕಾರು, ಎರಡು ಟ್ರಾಕ್ಟರ್ ಮತ್ತು ಎರಡು ಗೂಡ್ಸ್ ವಾಹನವನ್ನು ವಿತರಣೆ ಮಾಡಲಾಗಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಪಿಎಲ್ ಡಿ ಬ್ಯಾಂಕ್ ಅಧ್ಯಕ್ಷ ಎಂ.ದೊಡ್ಡಬಸವರಾಜ, ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಖಾಜಿಮಲಿಕ್ ವಕೀಲ, ಗ್ರಾಮೀಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಲಿಂಗಪ್ಪ ದಢೇಸೂಗುರು, ಮುಖಂಡರಾದ ಅರುಣ್ ಕುಮಾರ್, ಹನುಮೇಶ ನಾಯಕ ಮುಳ್ಳೂರು, ಮೌಲಪ್ಪ ಮಾಡಶಿರವಾರ, ಅಯ್ಯಪ್ಪ ನಾಯಕ, ರಾಮನಗೌಡ ಮಲ್ಕಾಪುರ, ಗ್ಯಾರೆಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ವೈ.ಅನಿಲ್ ಕುಮಾರ್ ಸೇರಿದಂತೆ ಕಾಂಗ್ರೆಸ್ ಮುಖಂಡರು, ಫಲಾನುಭವಿಗಳು ಉಪಸ್ಥಿತರಿದ್ದರು.

30 C