SENSEX
NIFTY
GOLD
USD/INR

Weather

29    C
... ...View News by News Source

ಬೇರೆಯವರೊಂದಿಗೆ ಲವರ್ ವಿವಾಹ ನಿಶ್ಚಯ: ಬೆಂಗಳೂರಿನಲ್ಲಿ ಬಾಡಿ ಬಿಲ್ಡರ್‌ ಸಾವಿಗೆ ಶರಣು! ಡೆತ್‌ನೋಟ್‌ ಪತ್ತೆ

ಬೆಂಗಳೂರಿನ ಜಿಮ್‌ ಟ್ರೈನರ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಪ್ರೀತಿಸಿದ ಯುವತಿಯು ಬೇರೊಬ್ಬ ಯುವಕನೊಟ್ಟಿಗೆ ಎಂಗೇಜ್‌ಮೆಂಟ್‌ ಮಾಡಿಕೊಂಡಳು ಎಂಬ ಕಾರಣಕ್ಕೆ ಬೇಸತ್ತು ಸಾವಿಗೆ ಶರಣಾಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಮೃತ ವ್ಯಕ್ತಿ ಬರೆದ ಡೆಡ್‌ನೋಟ್‌ಗಳು ಪೊಲೀಸರಿಗೆ ಲಭ್ಯವಾಗಿದ್ದು, ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈ ಬಗ್ಗೆ ಹೆಚ್ಚಿನ ವಿವರ ಇಲ್ಲಿದೆ.

ವಿಜಯ ಕರ್ನಾಟಕ 8 Feb 2026 6:35 pm

Chamarajanagar | ಕಾಡಾನೆ ದಾಳಿಗೆ ರೈತ ಬಲಿ

ಚಾಮರಾಜನಗರ : ಚಾಮರಾಜನಗರ ಜಿಲ್ಲೆಗೆ ಹೊಂದಿಕೊಂಡಿರುವ ಸತ್ಯ ಮಂಗಲಂ ಹುಲಿ ಸಂರಕ್ಷಿತ ಪ್ರದೇಶಕ್ಕೆ ಬರುವ ತಾಳವಾಡಿ ಸಮೀಪದ ಜೀರಗಳ್ಳಿ ಅರಣ್ಯ ಪ್ರದೇಶದ ಕರಲವಾಡಿ ಗ್ರಾಮದಲ್ಲಿ ಆನೆಯ ದಾಳಿಯಿಂದ ಯುವಕನೊಬ್ಬ ಮೃತಪಟ್ಟಿರುವ ಘಟನೆ ನಡೆದಿದೆ. ಚಾಮರಾಜನಗರ ಜಿಲ್ಲೆಗೆ ಹೊಂದಿಕೊಂಡಿರುವ ತಮಿಳುನಾಡಿನ ತಾಳವಾಡಿ ಸಮೀಪದ ಕರಳವಾಡಿಯ ಮಹೇಶ್ (30) ಮೃತ ರೈತ. ಮಹೇಶ್ ತನ್ನ ಕೃಷಿ ಭೂಮಿಯಲ್ಲಿ ರಾತ್ರಿ ಕಾವಲು ಕಾಯುತ್ತಿದ್ದ, ಈ ವೇಳೆ ಮಹೇಶ್ ಮೇಲೆ ಆನೆಗಳ ಗುಂಪು ದಾಳಿ ಮಾಡಿದೆ ಎನ್ನಲಾಗಿದೆ. ಮಾಹಿತಿ ಪಡೆದು ಸ್ಥಳಕ್ಕೆ ತೆರಳಿದ ಅರಣ್ಯ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.

ವಾರ್ತಾ ಭಾರತಿ 8 Feb 2026 6:09 pm

Vaibhav Suryavanshi: ಮಗನೆ ಇದು ಆರಂಭವಷ್ಟೇ: ವೈಭವ್‌ ಸೂರ್ಯವಂಶಿಗೆ ತಂದೆ ನೀಡಿದ ಈ ಎಚ್ಚರಿಕೆ ಹಿಂದಿದೆ ಮಹತ್ವದ ಸಂದೇಶ

Vaibhav Suryavanshi: ಅಂಡರ್-19 ವಿಶ್ವಕಪ್‌ 2026 ಫೈನಲ್‌ನಲ್ಲಿ ಭಾರತವು ಇಂಗ್ಲೆಂಡ್ ತಂಡವನ್ನು ಭರ್ಜರಿಯಾಗಿ ಮಣಿಸಿ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಈ ಐತಿಹಾಸಿಕ ಗೆಲುವಿನ ರೂವಾರಿ 16 ವರ್ಷದ ವೈಭವ್ ಸೂರ್ಯವಂಶಿಗೆ ಪ್ರಶಂಸೆಗಳ ಸುರಿಮಳೆಯೇ ಹರಿದಬರುತ್ತಿದೆ. ಆದರೆ, ಅವರ ತಂದೆ ಮಾತ್ರ, ಅವನು ಇನ್ನೂ ಏನು ಸಾಧನೆ ಮಾಡಿಲ್ಲ. ಇದು ಆರಂಭ ಮಾತ್ರ ಎನ್ನುವ ಅಚ್ಚರಿ ಹೇಳಿಕೆ ನೀಡಿ

ಒನ್ ಇ೦ಡಿಯ 8 Feb 2026 6:09 pm

ಕೊಪ್ಪಳ| ಬಳಗೇರಿ ಗ್ರಾಮದಲ್ಲಿ ಕಡಲೆ ಬೆಳೆ ಆಕಸ್ಮಿಕವಾಗಿ ಬೆಂಕಿಗೆ ಆಹುತಿ

ಕುಕನೂರು: ಬಳಗೇರಿ ಗ್ರಾಮದ ರಾಮಪ್ಪ ಹೊಂಬಾಳೆ ಅವರಿಗೆ ಸೇರಿದ ಕಡಲೆ ಬೆಳೆ ಹಾಗೂ ಹೊಟ್ಟು ಆಕಸ್ಮಿಕ ಬೆಂಕಿಗೆ ಆಹುತಿಯಾಗಿ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ. ಸುಮಾರು 4 ಎಕರೆ ವಿಸ್ತೀರ್ಣದ ಕಡಲೆ ಬೆಳೆಯಲ್ಲಿ ಬೆಳೆದಿದ್ದ ಬೆಳೆಗೆ ಅಂದಾಜು 65 ಸಾವಿರ ಹಾಗೂ ಕಡಲೆ ಹೊಟ್ಟಿಗೆ 30 ಸಾವಿರ ಮೌಲ್ಯದ ನಷ್ಟ ಉಂಟಾಗಿದೆ. ಬೆಂಕಿ ವ್ಯಾಪಕವಾಗಿ ಹರಡುತ್ತಿದ್ದಂತೆ ಗ್ರಾಮಸ್ಥರು ಆತಂಕಗೊಂಡಿದ್ದಾರೆ. ಘಟನೆ ಬಗ್ಗೆ ಮಾಹಿತಿ ಪಡೆದ ತಕ್ಷಣವೇ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿ ಆರಿಸಿದ ಪರಿಣಾಮ ಹೆಚ್ಚಿನ ಅನಾಹುತ ತಪ್ಪಿದೆ. ಅಗ್ನಿ ಅವಘಡದಲ್ಲಿ ಗಂಗಮ್ಮ ಹೊಂಬಾಳೆ ಅವರ ಬಲಗೈ ಹಾಗೂ ಬಲಮುಖದಲ್ಲಿ ಗಾಯಗಳಾಗಿದ್ದು, ಅವರಿಗೆ ಚಿಕಿತ್ಸೆ ನೀಡಲಾಗಿದೆ ಎಂದು ತಿಳಿದುಬಂದಿದೆ.

ವಾರ್ತಾ ಭಾರತಿ 8 Feb 2026 6:07 pm

ಬೀದರ್‌| ಪತಿ ಮನೆಯವರಿಂದ ಕಿರುಕುಳ ಆರೋಪ : ಗೃಹಿಣಿ ನೇಣು ಬಿಗಿದುಕೊಂಡು ಆತ್ಮಹತ್ಯೆ

ಬಸವಕಲ್ಯಾಣ: ಪತಿ ಮನೆಯವರ ಕಿರಕುಳ ತಾಳಲಾರದೆ ಗೃಹಿಣಿಯೊಬ್ಬಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಗರದ ಬಸ್ ನಿಲ್ದಾಣದ ಹಿಂಭಾಗದ ಓಂ ನಗರದಲ್ಲಿ ಶುಕ್ರವಾರ ನಡೆದಿದೆ.  ಅಂಜನಾಬಾಯಿ(22) ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಗೃಹಿಣಿ. ಭಾಲ್ಕಿ ತಾಲೂಕಿನ ಜೋಳದಾಬಕಾ ಗ್ರಾಮದ ನಿವಾಸಿಯಾಗಿದ್ದ ಅಂಜನಾಬಾಯಿಗೆ 2022ರಲ್ಲಿ ಬಸವಕಲ್ಯಾಣದ ಓಂ ನಗರದಲ್ಲಿರುವ ಶೇಖರ್ ಪಾಟೀಲ್ ಎಂಬಾತನೊಂದಿಗೆ ವಿವಾಹವಾಗಿತ್ತು. ದಂಪತಿಗಳಿಗೆ 11 ತಿಂಗಳ ಒಂದು ಮಗು ಕೂಡ ಇದೆ. ವಿವಾಹದ ನಂತರ ಅಂಜನಾಬಾಯಿಗೆ ಆಕೆಯ ಪತಿ ಹಾಗೂ ಮನೆಯವರು ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡುತಿದ್ದರು ಎಂದು ಆರೋಪಿಸಲಾಗಿದೆ. ಇದರಿಂದ ಬೇಸತ್ತು ಮನೆಯಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಈ ಘಟನೆಗೆ ಸಂಬಂಧಿಸಿದಂತೆ ಮೃತ ಗೃಹಿಣಿಯ ತಂದೆ ದೂರು ನೀಡಿದ್ದಾರೆ. ನನ್ನ ಮಗಳಾದ ಅಂಜನಾಬಾಯಿಗೆ ಅವಳ ಅತ್ತೆ ಅರುಣಾಬಾಯಿ ವೇಶ್ಯವಾಟಿಕೆ ಮಾಡಲು ದಿನಾ ಒತ್ತಾಯಿಸುತ್ತಿದ್ದಳು. ಈ ವಿಷಯ ನನ್ನ ಮಗಳು ನಮಗೆ ಕರೆ ಮಾಡಿ ಕೂಡ ಹೇಳಿದ್ದಳು. ಆದರೆ ಇಂದಲ್ಲ ನಾಳೆ ಸರಿ ಹೋಗಬಹುದು ಎಂದು ನಾವು ಸುಮ್ಮನಿದ್ದೆವು. ನನ್ನ ಮಗಳು ಅವರ ಕಿರಕುಳ ತಾಳಲಾರದೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಬಸವಕಲ್ಯಾಣ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಈ ಕುರಿತು ತನಿಖೆ ನಡೆಯುತ್ತಿದೆ.  

ವಾರ್ತಾ ಭಾರತಿ 8 Feb 2026 5:53 pm

20 ರೂ. ಲಂಚದ ಆರೋಪದಿಂದ 30 ವರ್ಷಗಳ ಬಳಿಕ ಖುಲಾಸೆಗೊಂಡ ಮರುದಿನವೇ ಕಾನ್‌ಸ್ಟೇಬಲ್ ನಿಧನ

ಅಹ್ಮದಾಬಾದ್: 30 ವರ್ಷಗಳ ಕಾಲ 20 ರೂ.ಲಂಚ ಸ್ವೀಕರಿಸಿದ್ದ ಆರೋಪವನ್ನು ಹೊತ್ತುಕೊಂಡಿದ್ದ ಅಹ್ಮದಾಬಾದ್‌ನ ಪೋಲಿಸ್ ಕಾನ್‌ಸ್ಟೇಬಲ್ ಬಾಬುಭಾಯಿ ಪ್ರಜಾಪತಿ (64) ಕೊನೆಗೂ ನಿರಪರಾಧಿಯಾಗಿ ನ್ಯಾಯಾಲಯದಿಂದ ಖುಲಾಸೆಗೊಂಡಿದ್ದಾರೆ. ಆದರೆ ಈ ಗೆಲುವನ್ನು ಸಂಭ್ರಮಿಸಲು ಅವರಿಗೆ ಸಮಯವಿರಲಿಲ್ಲ, ತೀರ್ಪಿನ ಮರುದಿನವೇ ಹೃದಯಾಘಾತದಿಂದ ನಿಧನರಾಗಿದ್ದಾರೆ. ಪ್ರಜಾಪತಿ ಅಹ್ಮದಾಬಾದ್‌ನ ವೇಜಲ್‌ಪುರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಗ 1996ರಲ್ಲಿ ಕೇವಲ 20 ರೂ.ಲಂಚ ಪಡೆದಿದ್ದ ಆರೋಪದಲ್ಲಿ ಭ್ರಷ್ಟಾಚಾರ ತಡೆ ಕಾಯ್ದೆಯಡಿ ಅವರ ವಿರುದ್ಧ ಪ್ರಕರಣ ದಾಖಲಾಗಿತ್ತು. 2003ರಲ್ಲಿ ವಿಚಾರಣೆ ಆರಂಭಗೊಂಡಿದ್ದು, 2004ರಲ್ಲಿ ಸೆಷನ್ಸ್ ನ್ಯಾಯಾಲಯವು ಅವರಿಗೆ ನಾಲ್ಕು ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿತ್ತು. ಇದು ಪ್ರತಿಯೊಂದನ್ನೂ ಬದಲಿಸಿತ್ತು. ಅವರ ಶರೀರದ ಮೇಲೆ ಸಮವಸ್ತ್ರ ಉಳಿದುಕೊಂಡಿತ್ತಾದರೂ,ಅವರ ಗೌರವವನ್ನು ಕಿತ್ತುಕೊಳ್ಳಲಾಗಿತ್ತು. ಬಡ್ತಿಗಳು ಸ್ಥಗಿತಗೊಂಡಿದ್ದವು. ಸೌಲಭ್ಯಗಳನ್ನು ನಿಲ್ಲಿಸಲಾಗಿತ್ತು. ಅವರ ಬದುಕು ನ್ಯಾಯಾಲಯಗಳಲ್ಲಿ ಮತ್ತು ವಿಚಾರಣೆಯ ದಿನಾಂಕಗಳಲ್ಲಿಯೇ ಕಳೆದುಹೋಗಿತ್ತು. ಸೆಷನ್ಸ್ ನ್ಯಾಯಾಲಯದ ತೀರ್ಪಿನ ವಿರುದ್ಧ ಗುಜರಾತ್ ಉಚ್ಚ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿದ್ದರು. ಎರಡು ದಶಕಗಳಿಂದಲೂ ಅದು ಅಲ್ಲಿಯೇ ಬಾಕಿಯಿತ್ತು. ಕಳಂಕ ನಿವಾರಣೆಗಾಗಿ ಪ್ರಜಾಪತಿ ಅವರು ಕಾಯುತ್ತಲೇ ಇದ್ದರು ಎಂದು ವರದಿಯಾಗಿದೆ. ಕೊನೆಗೂ ಪ್ರಕರಣ ಆರಂಭಗೊಂಡ ಸರಿಯಾಗಿ 30 ವರ್ಷಗಳ ಬಳಿಕ ಫೆ.4, 2026ರಂದು ನ್ಯಾಯಾಲಯವು ಅವರ ವಿರುದ್ದದ ಆರೋಪವನ್ನು ಶಂಕಾತೀತವಾಗಿ ಸಾಬೀತುಗೊಳಿಸಲು ಪ್ರಾಸಿಕ್ಯೂಷನ್ ವಿಫಲಗೊಂಡಿದೆ ಎಂದು ಹೇಳಿ ಖುಲಾಸೆಗೊಳಿಸಿದೆ. ತೀರ್ಪಿನ ಬಳಿಕ ಮನೆಗೆ ಮರಳಿದ್ದ ಪ್ರಜಾಪತಿ ರಾತ್ರಿ ಮಲಗಿದವರು ಬೆಳಗಾದಾಗ ನಿಧನರಾಗಿದ್ದರು.

ವಾರ್ತಾ ಭಾರತಿ 8 Feb 2026 5:45 pm

ಶಿವರಾತ್ರಿ ಯಶವಂತಪುರ-ಉಡುಪಿ-ಕಾರವಾರ-ಮಡಗಾಂವ್‌ ವಿಶೇಷ ರೈಲಿನ ಮಾರ್ಗ ಬದಲು: ಪ್ರಯಾಣಿಕರ ಆಕ್ರೋಶ

ಶಿವರಾತ್ರಿ ಪ್ರಯುಕ್ತ ವಿಶೇಷ ರೈಲು ಬಿಡಲಾಗಿದ್ದು, ಈ ಮಾರ್ಗವನ್ನು ನೈಋುತ್ಯ ರೈಲ್ವೆ ಬದಲಾಯಿಸಿದೆ. ಯಶವಂತಪುರ-ಉಡುಪಿ-ಕಾರವಾರ-ಮಡಗಾಂವ್‌ ನಡುವೆ ವಿಶೇಷ ರೈಲು ಬಿಡಲಾಗಿತ್ತು. ಆದರೆ ಈ ಮಾರ್ಗವನ್ನು ಬದಲಾಯಿಸಲಾಗಿದ್ದು, ಅನಾನುಕೂಲಕ್ಕಾಗಿ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿಜಯ ಕರ್ನಾಟಕ 8 Feb 2026 5:34 pm

ಸಿಎಂ ಹಿಮಂತ ಶರ್ಮಾ ಮುಸ್ಲಿಮರ ವಿರುದ್ಧ ರೈಫಲ್ ಗುರಿಯಿಟ್ಟ AI ವೀಡಿಯೊ ಹಂಚಿಕೊಂಡ ಅಸ್ಸಾಂ ಬಿಜೆಪಿ; ವ್ಯಾಪಕ ಆಕ್ರೋಶದ ಬಳಿಕ ಪೋಸ್ಟ್‌ ಡಿಲೀಟ್!

ಇದು ನರಮೇಧಕ್ಕೆ ಕರೆ ಎಂದ ಕಾಂಗ್ರೆಸ್; ಯುಎಪಿಎ ಅಡಿ ಬಿಜೆಪಿ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ ಟಿಎಂಸಿ ಸಂಸದೆ

ವಾರ್ತಾ ಭಾರತಿ 8 Feb 2026 5:09 pm

ಕಾಂಗ್ರೆಸ್ ಸಂಸದ ಗೊಗೊಯ್ ಅವರ ಪತ್ನಿಯನ್ನು ಪಾಕಿಸ್ತಾನದ ಸಂಸ್ಥೆ ನೇಮಿಸಿಕೊಂಡಿದೆ: ಅಸ್ಸಾಂ ಸಿಎಂ ಹಿಮಂತ ಬಿಸ್ವ ಆರೋಪ

ನನ್ನ ಪತ್ನಿ ಪಾಕಿಸ್ತಾನದ ಐಎಸ್‌ಐ ಏಜೆಂಟ್ ಆಗಿದ್ದರೆ, ನಾನು ಭಾರತದ ರಾ ಏಜೆಂಟ್” ಎಂದು ವ್ಯಂಗ್ಯವಾಡಿದ ಸಂಸದ ಗೊಗೊಯ್

ವಾರ್ತಾ ಭಾರತಿ 8 Feb 2026 4:39 pm

ಭಯೋತ್ಪಾದನೆ ಬಗ್ಗೆ ಭಾರತದ ನಿಲುವು ದೃಢ, ನಿಗ್ರಹದ ಪ್ರಯತ್ನಗಳಿಗೆ ಸದಾ ಬೆಂಬಲ: ಮಲೇಷ್ಯಾದಲ್ಲಿ ಪ್ರಧಾನಿ ಮೋದಿ

ಭಯೋತ್ಪಾದನೆ ನಿಗ್ರಹಕ್ಕೆ ಭಾರತ ಪಣ ತೊಟ್ಟಿದೆ. ಈ ವಿಚಾರದಲ್ಲಿ ನಮ್ಮ ನಿಲುವು ಅಚಲವಾಗಿದೆ. ರಾಜಿ ಪ್ರಶ್ನೆಯೇ ಇಲ್ಲ ಎಂದು ಮಲೇಷ್ಯಾದಲ್ಲಿ ಪ್ರಧಾನಿ ಮೋದಿ ಹೇಳಿದ್ದಾರೆ. ಭಯೋತ್ಪಾದನೆ ನಿಗ್ರಹ, ಗುಪ್ತಚರ ಹಂಚಿಕೆ ಮತ್ತು ಕಡಲ ಭದ್ರತೆಯಲ್ಲಿ ಸಹಕಾರವನ್ನು ಬಲಪಡಿಸಲು ಉಭಯ ದೇಶಗಳು ಒಪ್ಪಿಕೊಂಡಿವೆ.

ವಿಜಯ ಕರ್ನಾಟಕ 8 Feb 2026 4:36 pm

ಸ್ಪೇನ್ ಗೆ ಹೊರಟಿದ್ದ ಸಿರಾಜ್‌ ನನ್ನು ತಡೆದಿತ್ತು ಸೂರ್ಯನ ಆ ಒಂದು ಪೋನ್‌ ಕಾಲ್‌: IND v/s USA ಪಂದ್ಯದಲ್ಲಿ ಅದ್ಬುತ ಪ್ರದರ್ಶನ ನೀಡಿದ ಸಿರಾಜ್‌ ತಂಡ ಸೇರಿದ್ದೇಗೆ ಗೊತ್ತಾ?

ಐಸಿಸಿ ಟಿ20 ವಿಶ್ವಕಪ್‌ನ ಉದ್ಘಾಟನಾ ಪಂದ್ಯದಲ್ಲಿ ಅಮೆರಿಕ ವಿರುದ್ಧ ಭಾರತ ಅಭೂತಪೂರ್ವ ಜಯಗಳಿಸಿದೆ. ಈ ಜಯದ ಪ್ರಮುಖ ರೂವಾರಿಗಳಲ್ಲಿ ಮೊಹಮ್ಮದ್ ಸಿರಾಜ್ ಕೂಡ ಒಬ್ಬರು. ಆದ್ರೆ ಸಿರಾಜ್‌ ತಂಡ ಸೇರಿದ್ದು,ಕೊನೆ ಕ್ಷಣದಲ್ಲಿ ಎಂಬುದು ಎಲ್ಲರಿಗೂ ಗೊತ್ತಿದೆ.ಈ ಟೂರ್ನಿಯಲ್ಲಿ ಆರಂಭಿಕವಾಗಿ ಟೀಂ ಇಂಡಿಯಾ ತಂಡದಲ್ಲಿ ಸಿರಾಜ್‌ ಇರಲಿಲ್ಲ ಹಾಗಾಗಿ ಸ್ಪೇನ್‌ ನಲ್ಲಿ ನಡೆಯುವ ಮ್ಯಾಚ್ ನೋಡಲು ಮ್ಯಾಡ್ರಿಡ್‌ ಗೆ ಹೊರಡಲು ಸಿದ್ದತೆ ನಡೆಸಿದ್ದ ಸಿರಾಜ್‌ ಗೆ ಸೂರ್ಯಕುಮಾರ್‌ ಮಾಡಿದ ಆ ಒಂದು ಕಾಲ್‌ ಮ್ಯಾಚ್‌ ನೋಡುವ ತನ್ನ ಪ್ಲ್ಯಾನ್‌ ನಿಂದ ಆಡುವ ಕಡೆಗೆ ದಿಕ್ಕು ಬದಲಾಯಿಸಿದ್ದೇಗೆ ಎಂಬುದನ್ನು ಸ್ವತಃ ಸಿರಾಜ್‌ ವಿವಿರಿಸಿದ್ದಾರೆ. ಹಾಗಾದ್ರೆ ಸಿರಾಜ್‌ ತಂಡ ಸೇರಲು ಸೂರ್ಯ ಮಾಡಿದ ಆ ಒಂದು ಕರೆ ಹೇಗೆ ಕಾರಣವಾಯಿತು ನೋಡಿ..

ವಿಜಯ ಕರ್ನಾಟಕ 8 Feb 2026 4:29 pm

20 ಲಕ್ಷ ರೂಪಾಯಿ ಬಹುಮಾನ ಹಣದಲ್ಲಿ ಚಿನ್ನದ ಸರಗಳನ್ನ ಖರೀದಿಸಿದ BBK 12 ರಕ್ಷಿತಾ ಶೆಟ್ಟಿ!

‘ಬಿಗ್ ಬಾಸ್ ಕನ್ನಡ 12’ ಕಾರ್ಯಕ್ರಮದಲ್ಲಿ ರನ್ನರ್ ಅಪ್ ಆಗಿದ್ದಕ್ಕೆ ರಕ್ಷಿತಾ ಶೆಟ್ಟಿಗೆ 20 ಲಕ್ಷ ರೂಪಾಯಿ ಬಹುಮಾನ ಹಣ ಲಭಿಸಿತ್ತು. ಅದೇ ಹಣದಲ್ಲಿ ರಕ್ಷಿತಾ ಶೆಟ್ಟಿ ಚಿನ್ನದ ಸರಗಳನ್ನ ಖರೀದಿ ಮಾಡಿದ್ದಾರೆ. ಬೇಕಾದ್ರೆ ನೀವೇ ಈ ವಿಡಿಯೋ ನೋಡಿ…

ವಿಜಯ ಕರ್ನಾಟಕ 8 Feb 2026 4:29 pm

RAICHURU | ಮುಖ್ಯಮಂತ್ರಿ ಸಿದ್ದರಾಮಯ್ಯರಿದ್ದ ಹೆಲಿಕಾಪ್ಟರ್ ಲ್ಯಾಂಡಿಂಗ್ ವೇಳೆ ಗೊಂದಲ!

ನಿಗದಿಯಾಗಿದ್ದ ಹೆಲಿಪ್ಯಾಡ್ ಬದಲು ಬೇರೊಂದು ಹೆಲಿಪ್ಯಾಡ್ ನಲ್ಲಿ ಲ್ಯಾಂಡಿಂಗ್: ಅಧಿಕಾರಿಗಳು ಕಕ್ಕಾಬಿಕ್ಕಿ

ವಾರ್ತಾ ಭಾರತಿ 8 Feb 2026 4:19 pm

ಬಾಂಗ್ಲಾದಲ್ಲಿ 1.25 ಕೋಟಿ ಹಿಂದುಗಳು ತಮ್ಮ ಹಕ್ಕುಗಳಿಗಾಗಿ ಹೋರಾಡಲು ನಿಂತರೆ ಕ್ರಾಂತಿಯಾಗುತ್ತದೆ : ಮೋಹನ್ ಭಾಗವತ್

ಬಾಂಗ್ಲಾದೇಶದಲ್ಲಿನ ಬಿಕ್ಕಟ್ಟಿನಿಂದ ಅಲ್ಲಿನ ಹಿಂದುಗಳು ಸಂಕಷ್ಟದಲ್ಲಿದ್ದಾರೆ. ಬಾಂಗ್ಲಾದೇಶದಲ್ಲಿ ಸುಮಾರು 1.25 ಕೋಟಿ ಹಿಂದೂಗಳಿದ್ದಾರೆ. ಅವರೆಲ್ಲರೂ ಒಗ್ಗಟ್ಟಾಗಿ ತಮ್ಮ ಹಕ್ಕುಗಳಿಗಾಗಿ ನಿಂತರೆ, ಜಗತ್ತಿನಾದ್ಯಂತ ಎಲ್ಲಾ ಹಿಂದುಗಳು ಬೆಂಬಲಿಸುತ್ತಾರೆ ಎಂದು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದರು.

ವಿಜಯ ಕರ್ನಾಟಕ 8 Feb 2026 3:59 pm

ಪೊಲೀಸರು ದೂರು ದಾಖಲಿಸದಿದ್ದರೆ ಏನು ಮಾಡಬೇಕು? ಮುಂದಿನ ಮಾರ್ಗ ಹೇಳಿಕೊಟ್ಟ ಕರ್ನಾಟಕ ಹೈಕೋರ್ಟ್‌

ಪೊಲೀಸರು ಠಾಣೆಗಳಲ್ಲಿ ದೂರು ಸ್ವೀಕರಿಸಲು ನಿರಾಕರಣೆ ಮಾಡಿದರೆ ನೇರವಾಗಿ ಹೈಕೋರ್ಟ್‌ಗೆ ಅರ್ಜಿ ಹಾಕಿ ಎಂದು ಹೈಕೋರ್ಟ್‌ನ ನ್ಯಾಯಮೂರ್ತಿಗಳು ಸೂಚನೆ ನೀಡಿದ್ದಾರೆ. ಪ್ರಕರಣವೊಂದರ ವಿಚಾರಣೆ ನಡೆಸಿದ ಅವರು, ಬಿಎನ್‌ಎಸ್‌ ಕಾಯಿದೆಯಡಿ ನ್ಯಾಯಾಲಯಕ್ಕೆ ಅರ್ಜಿ ಹಾಕುವಂತೆ ತಿಳಿಸಿದ್ದಾರೆ. ನ್ಯಾ. ಸೂರಜ್‌ ಗೋವಿಂದರಾಜು ಅವರ ಏಕಸದಸ್ಯ ಪೀಠವು ಈ ಆದೇಶ ನೀಡಿದೆ.

ವಿಜಯ ಕರ್ನಾಟಕ 8 Feb 2026 3:44 pm

BALAARI | ತೆಕ್ಕಲಕೋಟೆ ಉತ್ಖನನದಲ್ಲಿ 5 ಸಾವಿರ ವರ್ಷ ಹಳೆಯ ಅಸ್ಥಿಪಂಜರಗಳು ಪತ್ತೆ?

ಬಳ್ಳಾರಿ / ತೆಕ್ಕಲಕೋಟೆ: ಜಿಲ್ಲೆಯ ಸಿರಗುಪ್ಪ ತಾಲೂಕಿನ ತೆಕ್ಕಲಕೋಟೆ ಪಟ್ಟಣದ ಗೌಡ್ರಮೂಲೆ ಬೆಟ್ಟದಲ್ಲಿ ನಡೆಯುತ್ತಿರುವ ಉತ್ಖನನದ ವೇಳೆ ಪ್ರಾಗೈತಿಹಾಸಿಕ ಕಾಲಕ್ಕೆ ಸೇರಿದ ಎರಡು ಮಾನವ ಅಸ್ಥಿಪಂಜರಗಳು ಪತ್ತೆಯಾಗಿವೆ. ಅಮೆರಿಕದ ಹಾರ್ಟ್ ವಿಕ್ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕಿ ಹಾಗೂ ಉತ್ಖನನ ತಂಡದ ಸಹ ನಿರ್ದೇಶಕಿ ನಮಿತಾ ಎಸ್. ಸುಗಂಧಿ ನೇತೃತ್ವದ ಸಂಶೋಧಕರ ತಂಡ ಈ ಉತ್ಖನನ ನಡೆಸುತ್ತಿದೆ. ಕಳೆದ ವಾರ ಮಣ್ಣನ್ನು ಅಗೆದಾಗ ಮೊದಲು ಮಾನವ ಮೂಳೆಗಳು ಪತ್ತೆಯಾಗಿದ್ದು, ನಂತರ ಮತ್ತಷ್ಟು ಆಳವಾಗಿ ಅಗೆದಾಗ ಸುಮಾರು 5.5 ಅಡಿ ಉದ್ದದ ಎರಡು ಸಂಪೂರ್ಣ ಮಾನವ ಅಸ್ಥಿಪಂಜರಗಳು ಒಂದರ ಪಕ್ಕದಲ್ಲೊಂದು ಪತ್ತೆಯಾಗಿವೆ. ಪಳೆಯುಳಿಕೆ ಸುತ್ತಮುತ್ತ ಮಡಿಕೆ ಚೂರುಗಳು ಪತ್ತೆ ಅಸ್ಥಿಪಂಜರಗಳು ಯಾವುದೇ ರೀತಿಯಲ್ಲಿ ಹಾಳಾಗದೆ ಉತ್ತಮ ಸ್ಥಿತಿಯಲ್ಲಿ ದೊರೆತಿದ್ದು, ಮೃತದೇಹಗಳ ಮೇಲೆ ಕಲ್ಲುಗಳನ್ನು ಇಟ್ಟು ಶವಸಂಸ್ಕಾರ ಮಾಡಿದ ಪದ್ಧತಿಯ ಸ್ಪಷ್ಟ ಕುರುಹುಗಳು ಕಂಡುಬಂದಿವೆ. ಪಳೆಯುಳಿಕೆಗಳ ಸುತ್ತ ಮಡಿಕೆ ಚೂರುಗಳು, ಸೂಕ್ಷ್ಮ ಶಿಲಾಯುಗದ ಅವಶೇಷಗಳು ಹಾಗೂ ಮಾನವ ಆಯುಧ ಬಳಕೆಗೆ ಸಂಬಂಧಿಸಿದ ಸಾಕ್ಷ್ಯಗಳು ಪತ್ತೆಯಾಗಿವೆ. ಇದರಿಂದ ಇದು ನವಶಿಲಾಯುಗ ಅಥವಾ ಪ್ರಾಗೈತಿಹಾಸಿಕ ಕಾಲದ ಪ್ರಮುಖ ಮಾನವ ನೆಲೆ ಆಗಿರಬಹುದೆಂದು ತಜ್ಞರು ಅಂದಾಜಿಸಿದ್ದಾರೆ. ಪತ್ತೆಯಾದ ಅಸ್ಥಿಪಂಜರಗಳು ಸುಮಾರು 3,000 ರಿಂದ 5,000 ವರ್ಷಗಳ ಹಿಂದಿನವು ಆಗಿರಬಹುದೆಂದು ಹೇಳಲಾಗಿದ್ದು, ನಿಖರ ಕಾಲಮಾನದ ನಿರ್ಧಾರಕ್ಕಾಗಿ ಕಾರ್ಬನ್ ಡೇಟಿಂಗ್ ಪರೀಕ್ಷೆಗೆ ಒಳಪಡಿಸಲು ಅಧಿಕಾರಿಗಳು ನಿರ್ಧರಿಸಿದ್ದಾರೆ. ಉತ್ಖನನ ಕಾರ್ಯದ ನಿರ್ದೇಶಕ ಪರಂಪರೆ ಇಲಾಖೆ ಉಪ ನಿರ್ದೇಶಕ ಆರ್. ಶೇಜೇಶ್ವರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ತೆಕ್ಕಲಕೋಟೆ ಪ್ರದೇಶವನ್ನು ಸಂರಕ್ಷಿಸುವ ಅಗತ್ಯವಿದೆ ಎಂದು ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.      

ವಾರ್ತಾ ಭಾರತಿ 8 Feb 2026 3:40 pm

NEET UG 2026: ನೀಟ್‌ ಯುಜಿ ಪರೀಕ್ಷೆಯ ಅಧಿಸೂಚನೆ ಪ್ರಕಟ: ನೋಂದಣಿ ಪ್ರಕ್ರಿಯೆ, ಅರ್ಜಿ ಸಲ್ಲಿಕೆ ಸಂಪೂರ್ಣ ವಿವರ

ನವದೆಹಲಿ: ವೈದ್ಯಕೀಯ ಪ್ರವೇಶ ಪರೀಕ್ಷೆಯಾದ NEET UG-2026ಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯು (ಎನ್‌ಟಿಎ) ಅಧಿಸೂಚನೆ ಹೊರಡಿಸಿದೆ. ಈ ಅಧಿಸೂಚನೆಯೊಂದಿಗೆ ನೋಂದಣಿ ಪ್ರಕ್ರಿಯೆ ಅಧಿಕೃತವಾಗಿ ಆರಂಭವಾಗಿದ್ದು, ಅಭ್ಯರ್ಥಿಗಳು neet.nta.nic.in ವೆಬ್‌ಸೈಟ್ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು ಎಂದು ತಿಳಿಸಿದೆ. ನೀಟ್‌ ಯುಜಿ ಪರೀಕ್ಷೆಯು ಭಾರತದಲ್ಲಿ ಎಂಬಿಬಿಎಸ್‌, ಬಿಡಿಎಸ್‌, ಆಯುಷ್‌, ವೆಟರಿನರಿ ಹಾಗೂ ಇತರ ವೈದ್ಯಕೀಯ ಕೋರ್ಸ್‌ಗಳಿಗೆ ಪ್ರವೇಶ

ಒನ್ ಇ೦ಡಿಯ 8 Feb 2026 3:30 pm

ಭಾರತದ ಇಂಧನ ಆಮದಿನ ಮೇಲೆ ಅಮೆರಿಕದ ಕಣ್ಗಾವಲು!

ಭಾರತವು ರಷ್ಯಾದಿಂದ ನೇರವಾಗಿ ಅಥವಾ ಪರೋಕ್ಷವಾಗಿ ತೈಲ ಆಮದು ಮಾಡಿಕೊಳ್ಳುವುದನ್ನು ಪುನರಾರಂಭಿಸಿದೆ ಎಂಬ ವಿಷಯ ಪತ್ತೆಯಾದರೆ ಅಮೆರಿಕ ಶೇ 25ರಷ್ಟು ದಂಡದ ಸುಂಕವನ್ನು ಮತ್ತೆ ಜಾರಿಗೆ ತರಬಹುದು. ಭಾರತದ ಮೇಲೆ ವಿಧಿಸಿದ್ದ ಶೇ. 25ರ ದಂಡದ ಸುಂಕವನ್ನು ತೆಗೆದು ಹಾಕಿರುವ ಅಮೆರಿಕದ ಆದೇಶದ ಹಿಂದೆ ಭಾರತದ ಇಂಧನ ಆಮದಿನ ಮೇಲೆ ಕಣ್ಗಾವಲು ಇಡುವ ಬೆದರಿಕೆಯನ್ನೂ ಒಡ್ಡಲಾಗಿದೆ. ಡೊನಾಲ್ಡ್ ಟ್ರಂಪ್ ಆದೇಶದ ನಂತರ ಭಾರತದ ಉತ್ಪನ್ನಗಳ ಮೇಲಿನ ಶೇ 25ರಷ್ಟು ದಂಡ ವಿಧಿಸಿರುವುದನ್ನು ಹಿಂತೆಗೆದುಕೊಳ್ಳಲಾಗಿದೆ. ಆದರೆ ಭಾರತ ರಷ್ಯಾದಿಂದ ಇಂಧನ ಆಮದನ್ನು ಪುನರಾರಂಭಿಸುತ್ತದೆಯೇ ಎನ್ನುವುದನ್ನು ಅಮೆರಿಕದ ವಾಣಿಜ್ಯ ಕಾರ್ಯದರ್ಶಿ ಮೇಲ್ವಿಚಾರಣೆ ನಡೆಸಬೇಕಿದೆ ಎಂದು ವರದಿಯಾಗಿದೆ. ಹೊಸದಿಲ್ಲಿಯ ಸ್ವತಂತ್ರ ಚಿಂತಕರ ಚಾವಡಿಯಾಗಿರುವ ಸೆಂಟರ್ ಫಾರ್ ಪಾಲಿಸಿ ರಿಸರ್ಚ್ ಅಧ್ಯಕ್ಷ ಬ್ರಹ್ಮ ಚೆಲ್ಲಾನಿ ಹೇಳುವ ಪ್ರಕಾರ ಈ ಮೇಲ್ವಿಚಾರಣಾ ಆದೇಶವು ಟ್ರಂಪ್ ಅವರ ಕಾರ್ಯನಿರ್ವಾಹಕ ಆದೇಶದಲ್ಲಿನ ʼreal stingʼ (ಕುಟುಕು ) ಆಗಿರುತ್ತದೆ. “ಈ ಒಪ್ಪಂದವು ಭಾರತದ ತೈಲ ಆಮದುಗಳನ್ನು ಪತ್ತೆಹಚ್ಚುವ ಮೂಲಕ ವಾಣಿಜ್ಯ ಕಾರ್ಯದರ್ಶಿಗೆ ಅಧಿಕೃತ ಹೊಣೆಗಾರಿಕೆಯನ್ನು ನೀಡುತ್ತದೆ. ಭಾರತವು ರಷ್ಯಾದಿಂದ ನೇರವಾಗಿ ಅಥವಾ ಪರೋಕ್ಷವಾಗಿ ತೈಲ ಆಮದು ಮಾಡಿಕೊಳ್ಳುವುದನ್ನು ಪುನರಾರಂಭಿಸಿದೆ ಎಂಬ ವಿಷಯ ಪತ್ತೆಯಾದರೆ ಅಮೆರಿಕ ಶೇ 25ರಷ್ಟು ದಂಡದ ಸುಂಕವನ್ನು ಮತ್ತೆ ಜಾರಿಗೆ ತರಬಹುದು.” ಎಂದು ಅವರು ಹೇಳಿದ್ದಾರೆ. “ಪರೋಕ್ಷವಾಗಿ” ಎನ್ನುವ ಪದವು ಬಹಳ ಮುಖ್ಯವಾಗುತ್ತದೆ. ಕಚ್ಚಾ ತೈಲ ರಷ್ಯಾದಿಂದ ಬಂದಿದೆ ಎಂದು ಅರಿವಾದಲ್ಲಿ, ಯುರೋಪ್ ಮತ್ತು ಅಮೆರಿಕ ಸಂಯುಕ್ತ ಸಂಸ್ಥಾನಕ್ಕೆ ಭಾರತ ರಫ್ತು ಮಾಡುವ ಸಂಸ್ಕರಿತ ಇಂಧನಗಳಾದ ಡೀಸೆಲ್, ಜೆಟ್ ಫ್ಯೂಯೆಲ್ ಮತ್ತು ಇತರ ಉತ್ಪನ್ನಗಳ ಮೇಲೆ ಅಮೆರಿಕ ಶೇ 25ರಷ್ಟು ಸುಂಕ ವಿಧಿಸಬಹುದಾಗಿದೆ. ಡೊನಾಲ್ಡ್ ಟ್ರಂಪ್ ಸುಂಕದ ಬೆದರಿಕೆಯನ್ನು ಹಿಂತೆಗೆದುಕೊಂಡಿದ್ದರೂ, ಭಾರತ ರಷ್ಯಾದಿಂದ ತೈಲ ಖರೀದಿಸಿದಲ್ಲಿ ಸುಂಕ ದಂಡವನ್ನು ವಿಧಿಸಲು ಬಾಗಿಲು ತೆರೆಯುವಂತಹ ವ್ಯವಸ್ಥೆಯನ್ನು ಒಪ್ಪಂದದಲ್ಲಿ ಮಾಡಿಕೊಂಡಿದ್ದಾರೆ ಎಂದು ಅವರು ‘ಎಕ್ಸ್’ ಸಾಮಾಜಿಕ ಜಾಲತಾಣದಲ್ಲಿ ಬ್ರಹ್ಮ ಅವರು ಬರೆದಿದ್ದಾರೆ. ರಷ್ಯಾದಿಂದ ತೈಲ ಆಮದು ಇಲ್ಲ ಎನ್ನುವ ಷರತ್ತು ಪರಿಣಾಮವಾಗಿ ಭಾರತವು ರಿಯಾಯಿತಿ ದರದ ರಷ್ಯಾದ ಕಚ್ಚಾ ತೈಲದ ಬದಲಿಗೆ ಮಾರುಕಟ್ಟೆ ಬೆಲೆಯ ಅಮೆರಿಕದ ತೈಲವನ್ನು ಖರೀದಿಸಬೇಕಾಗುತ್ತದೆ. ಹೀಗಾಗಿ ತೈಲ ಆಮದು ಇನ್ನಷ್ಟು ದುಬಾರಿಯಾಗಲಿದೆ ಮತ್ತು ದೂರದಿಂದ ತರಬೇಕಾಗಿ ಬಂದು ಸಾಗಾಟ ವೆಚ್ಚವೂ ಏರಲಿದೆ. ಅಂದರೆ ಭಾರತದ ತೈಲ ಆಮದು ಶುಲ್ಕವು ವರ್ಷಕ್ಕೆ 4 ಶತಕೋಟಿ ಡಾಲರ್ ನಷ್ಟು ಏರಲಿದೆ. “ಅಮೆರಿಕದ ಉದ್ದೇಶ ಸ್ಪಷ್ಟವಾಗಿದೆ. ಭಾರತದ ಇಂಧನ ಭದ್ರತೆಯನ್ನು ತೆಗೆದು ಹಾಕುವುದು. ಮತ್ತು ಹೆಚ್ಚು ದುಬಾರಿ ಮತ್ತು ಭೌಗೋಳಿಕವಾಗಿ ದೂರವಿರುವ ಅಮೆರಿಕದ ಸಪ್ಲೈಯರ್ನಿಂದ ಇಂಧನವನ್ನು ಖರೀದಿಸುವಂತೆ ಮಾಡುವುದು” ಎಂದು ಅವರು ಹೇಳಿದ್ದಾರೆ. ಆದರೆ ಭಾರತ ಇನ್ನೂ ತನ್ನ ನಿಲುವನ್ನು ಸ್ಪಷ್ಟಪಡಿಸಿಲ್ಲ. ರಷ್ಯಾದಿಂದ ತೈಲ ಖರೀದಿಸುವುದನ್ನು ನಿಲ್ಲಲು ಬದ್ಧವಾಗಿದೆ ಎಂಬ ಟ್ರಂಪ್ ಆಡಳಿತದ ಹೇಳಿಕೆಯನ್ನು ಭಾರತ ದೃಢಪಡಿಸಿಲ್ಲ ಅಥವಾ ನಿರಾಕರಿಸಿಲ್ಲ. ಭಾರತದ ರಾಜತಾಂತ್ರಿಕ ಹೇಳಿಕೆ ಭಾರತದ ಇಂಧನ ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಮಾರುಕಟ್ಟೆ ಪರಿಸ್ಥಿತಿಗಳು ಮತ್ತು ಅಂತಾರಾಷ್ಟ್ರೀಯ ಮಾರುಕಟ್ಟೆಯ ಕಾರ್ಯಯೋಜನೆಗಳ ಆಧಾರದ ಮೇಲೆ ಇಂಧನ ಖರೀದಿಯನ್ನು ವೈವಿಧ್ಯಮಯಗೊಳಿಸಲಾಗುವುದು (ಅಂದರೆ ಒಬ್ಬ ವ್ಯಕ್ತಿ, ಕಂಪನಿ ಅಥವಾ ಘಟಕವು ತಮ್ಮ ಹಣವನ್ನು ಒಂದೇ ವಿಷಯದ ಮೇಲೆ ಕೇಂದ್ರೀಕರಿಸುವ ಬದಲು ವಿವಿಧ ವಸ್ತುಗಳು, ಪೂರೈಕೆದಾರರು, ವಲಯಗಳು ಅಥವಾ ಆಸ್ತಿ ವರ್ಗಗಳಲ್ಲಿ ತಮ್ಮ ಖರೀದಿ ಶಕ್ತಿಯನ್ನು ಹರಡುವುದು) ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಹೇಳಿದೆ. ಇದು ಕಳೆದ ಅನೇಕ ತಿಂಗಳುಗಳಿಂದ ಅಮೆರಿಕದ ಸುಂಕದ ಬೆದರಿಕೆ ವಿರುದ್ಧ ಭಾರತ ಪ್ರಯೋಗಿಸುತ್ತಿರುವ ರಾಜತಾಂತ್ರಿಕ ಅಸ್ತ್ರವಾಗಿದೆ. ಈ ಬಗ್ಗೆ ಮಾಧ್ಯಗಳ ಜೊತೆಗೆ ಮಾತನಾಡಿರುವ ವಾಣಿಜ್ಯ ಸಚಿವ ಪೀಯೂಶ್ ಗೋಯಲ್, “ರಷ್ಯಾದಿಂದ ಇಂಧನ ಖರೀದಿ ನಿಲ್ಲಿಸಲಾಗುತ್ತಿದೆಯೇ ಎನ್ನುವ ಪ್ರಶ್ನೆಗೆ ವಿದೇಶಾಂಗ ಸಚಿವಾಲಯ ಉತ್ತರಿಸಲಿದೆ” ಎಂದು ಪ್ರತಿಕ್ರಿಯಿಸಿದ್ದಾರೆ. ಆದರೆ ವಿದೇಶಾಂಗ ವ್ಯವಹಾರ ‘ರಾಜತಾಂತ್ರಿಕ ಹೇಳಿಕೆ’ಯನ್ನೇ ಪುನರುಚ್ಛರಿಸುತ್ತಿದೆ. ಅಮೆರಿಕದ ಕಾರ್ಯಕಾರಿ ಆದೇಶ ಆದರೆ ಅಮೆರಿಕದ ಅಧ್ಯಕ್ಷರು ತಮ್ಮ ಕಾರ್ಯಕಾರಿ ಆದೇಶದಲ್ಲಿ ಸ್ಪಷ್ಟವಾಗಿ ಹೇಳಿದ್ದಾರೆ. “ಭಾರತವು ರಷ್ಯಾದಿಂದ ನೇರವಾಗಿ ಅಥವಾ ಪರೋಕ್ಷವಾಗಿ ಇಂಧನ ಆಮದನ್ನು ನಿಲ್ಲಿಸಲು ಬದ್ಧವಾಗಿದೆ. ಅಮೆರಿಕದಿಂದ ಅಮೆರಿಕ ಸಂಯುಕ್ತ ಸಂಸ್ಥಾನದ ಇಂಧನ ಉತ್ಪನ್ನಗಳನ್ನು ಅದು ಖರೀದಿಸಲಿದೆ. ಹಾಗೆಯೇ ಮುಂದಿನ 10 ವರ್ಷಗಳವರೆಗೆ ರಕ್ಷಣಾ ಸಹಕಾರವನ್ನು ವಿಸ್ತರಿಸಲು ಒಂದು ಚೌಕಟ್ಟಿಗೆ ಬದ್ಧವಾಗಿದೆ” ಎಂದು ಅಮೆರಿಕದ ಅಧ್ಯಕ್ಷರ ಕಾರ್ಯಕಾರಿ ಆದೇಶವು ಹೇಳುತ್ತದೆ. ಭಾರತದ ಮೇಲಿನ ಈ ಸುಂಕಗಳಿಗೆ ವ್ಲಾದಿಮಿರ್ ಪುಟಿನ್ ಅವರ ಮಾಸ್ಕೋ ಆಡಳಿತವು ಒಂದು ಕಾರಣ. ರಷ್ಯಾದ ಫೆಡರೇಶನ್ ನಿಂದ ಅಮೆರಿಕಕ್ಕೆ ಇರುವ ಬೆದರಿಕೆಯನ್ನು ಎದುರಿಸಲು ಕರ್ತವ್ಯಗಳನ್ನು ಮಾರ್ಪಡಿಸುವುದು ಎಂದು ಕಾರ್ಯಕಾರಿ ಆದೇಶದಲ್ಲಿ ಹೇಳಲಾಗಿದೆ. ಈ ಆದೇಶವು ಭಾರತ ಮತ್ತು ಅಮೆರಿಕದ ಜಂಟಿ ಹೇಳಿಕೆಯ ಘೋಷಣೆಗೆ ಭಿನ್ನವಾಗಿದೆ. ಅದರಲ್ಲಿ “ಮಧ್ಯಂತರ ಒಪ್ಪಂದಕ್ಕೆ ಚೌಕಟ್ಟು” ಎಂದು ಘೋಷಿಸಲಾಗಿದೆ. ಭಾರತವು ನೇರವಾಗಿ ಮತ್ತು ಪರೋಕ್ಷವಾಗಿ ರಷ್ಯಾದಿಂದ ಇಂಧನ ಆಂದು ಪುನರಾರಂಭಿಸಿರುವುದು ಪತ್ತೆಯಾದಲ್ಲಿ ಶೇ 25ರಷ್ಟು ದಂಡ ಸುಂಕವನ್ನು ಮತ್ತೆ ವಿಧಿಸಲಾಗುವುದು ಎಂದು ಕಾರ್ಯಕಾರಿ ಆದೇಶ ಹೇಳುತ್ತದೆ. ಸುಂಕದ ಬೆದರಿಕೆಯಂತಹ ಆರ್ಥಿಕ ದಬ್ಬಾಳಿಕೆ: ಒಟ್ಟಿನಲ್ಲಿ ಉಕ್ರೇನ್ ಯುದ್ಧಕ್ಕೆ ಹಣ ಒದಗಿಸುವುದು ಎನ್ನುವ ಕಾರಣಕ್ಕೆ ರಷ್ಯಾದಿಂದ ಇಂಧನ ಖರೀದಿ ಮೇಲೆ ಭಾರತಕ್ಕೆ ಶೇ 25 ಸುಂಕ ಸೇರಿದಂತೆ ಭಾರತದ ರಫ್ತುಗಳ ಮೇಲೆ 2025 ಆಗಸ್ಟ್ನಿಂದ ಅಮೆರಿಕ ಶೇ 50ರಷ್ಟು ಸುಂಕ ಹೇರಿದೆ. ಇದೀಗ ದ್ವಿಪಕ್ಷೀಯ ಮಾತುಕತೆಯ ನಂತರ ಅಮೆರಿಕ ಶೇ 25ರಷ್ಟು ಸುಂಕವನ್ನು ಹಿಂತೆಗೆದುಕೊಂಡಿದೆ. ಜಂಟಿ ಹೇಳಿಕೆಯಲ್ಲಿ ಎರಡೂ ದೇಶಗಳು ರಷ್ಯಾದ ಹೆಸರನ್ನು ಉಲ್ಲೇಖಿಸದೆ ಇದ್ದರೂ ಭಾರತ ಅಮೆರಿಕದಿಂದ ಮುಂದಿನ ಐದು ವರ್ಷಗಳಲ್ಲಿ 500 ಶತಕೋಟಿ ಡಾಲರ್ ಇಂಧನ ಮತ್ತು ಇತರ ಉತ್ಪನ್ನಗಳ ಖರೀದಿಗೆ ಬದ್ಧವಾಗಿದೆ. ಇಂಧನ ಸುಂಕದ ಹೆಸರಿನಲ್ಲಿ ಟ್ರಂಪ್ ಮಾಡುತ್ತಿರುವ ರಾಜಕೀಯಕ್ಕೆ ಇದು ಮತ್ತೊಂದು ಗರಿಯಾಗಿದೆ ಎಂದು ಬ್ರಹ್ಮ ಚೆಲ್ಲಾನಿ ಅಭಿಪ್ರಾಯಪಟ್ಟಿದ್ದಾರೆ. ಇದಕ್ಕೆ ಮೊದಲು ಟ್ರಂಪ್ ಜಪಾನ್ನಿಂದ 550 ಶತಕೋಟಿ ಡಾಲರ್, ದಕ್ಷಿಣ ಕೊರಿಯಾದಿಂದ 350 ಶತಕೋಟಿ ಡಾಲರ ಮತ್ತು ಮಲೇಷ್ಯಾದಿಂದ 70 ಶತಕೋಟಿ ಡಾಲರ್ನಷ್ಟು ವ್ಯಾಪಾರಿ ಬದ್ಧತೆಗಳನ್ನು ಪಡೆದಿದ್ದಾರೆ. “ಅಮೆರಿಕ ಮತ್ತು ಭಾರತದ ದ್ವಿಪಕ್ಷೀಯ ಸರಕುಗಳ ವ್ಯಾಪಾರ 2025ರಲ್ಲಿ 132.13 ಶತಕೋಟಿ ಡಾಲರ್ಗಳಷ್ಟೇ ಇತ್ತು. ಇದೀಗ ಹೊಸ ವ್ಯಾಪಾರ ಒಪ್ಪಂದದಿಂದ ಭಾರತ ಅಮೆರಿಕದಿಂದ ವಾರ್ಷಿಕವಾಗಿ 100 ಶತಕೋಟಿ ಡಾಲರ್ ನಷ್ಟು ಹೆಚ್ಚುವರಿ ಆಮದು ಮಾಡಿಕೊಳ್ಳಬೇಕಿದೆ. ಹೀಗಾಗಿ ಅಮೆರಿಕ ಭಾರತದ ಜೊತೆಗಿನ ದ್ವಿಪಕ್ಷೀಯ ಸಂಬಂಧವನ್ನು ವಿರೂಪಗೊಳಿಸಿದೆ. ರಫ್ತುವಿನಲ್ಲಿ ಏರಿಕೆ ಏನೂ ಇಲ್ಲದೆ, ಆಮದಿನಲ್ಲಿ ಏರಿಕೆಯಿಂದ ಭಾರತ 200 ಶತಕೋಟಿ ಡಾಲರ್ ನಷ್ಟು ವ್ಯಾಪಾರ ಕೊರತೆಯನ್ನು ಎದುರಿಸಲಿದೆ” ಎಂದು ಬ್ರಹ್ಮ ಚೆಲ್ಲಾನಿ ವಿಶ್ಲೇಷಿಸಿದ್ದಾರೆ. ಕೃಪೆ: hindustantimes.com

ವಾರ್ತಾ ಭಾರತಿ 8 Feb 2026 3:29 pm

ಪುತ್ತೂರು ಕುಂಬ್ರ ಮರ್ಕಝುಲ್ ಹುದಾ ಸೊಹಾರ್ ಘಟಕಕ್ಕೆ ನೂತನ ಪದಾಧಿಕಾರಿಗಳ ಆಯ್ಕೆ

ಪುತ್ತೂರು: ಕುಂಬ್ರ ಮರ್ಕಝುಲ್ ಹುದಾ ಮಹಿಳಾ ಕಾಲೇಜಿನ ಒಮಾನ್ ನ ನೂತನ ಘಟಕವನ್ನು ಸೊಹಾರ್ ನಲ್ಲಿ ಕೇಂದ್ರ ಸಮಿತಿಯ ಕಾರ್ಯಾಧ್ಯಕ್ಷ ಡಾ.ಎಮ್ಮೆಸ್ಸೆಂ ಝೃನಿ ಕಾಮಿಲ್ ನೇತೃತ್ವದಲ್ಲಿ ಅಸ್ತಿತ್ವಕ್ಕೆ ತರಲಾಯಿತು ಸಲಹೆಗಾರರಾಗಿ ಉಮರ್ ಫಾರೂಕ್ ಹಾಜಿ ಕುಕ್ಕಾಜೆ, ಡಾ ಅಬ್ದುಲ್ ರಝಾಕ್ ಮಣಿಪಾಲ್, ಹಸನ್ ಬಾವಾ ಬಜ್ಪೆ, ಸಿದ್ದೀಕ್ ಮಾಂಬ್ಳಿ, ಇಕ್ಬಾಲ್ ಎರ್ಮಾಲ್, ರಫೀಕ್ ಚೆನ್ನೈ, ಅಧ್ಯಕ್ಷರಾಗಿ ಮುಹಮ್ಮದ್ ರಫೀಕ್ ಅಹ್ಸನಿ ಕಳತ್ತೂರು, ಪ್ರಧಾನ ಕಾರ್ಯದರ್ಶಿಯಾಗಿ ನಈಮುದ್ದೀನ್ ಈಶ್ವರಮಂಗಲ, ಕೋಶಾಧಿಕಾರಿಯಾಗಿ ಮುಬೀನ್ ಜೋಕಟ್ಟೆ, ಉಪಾಧ್ಯಕ್ಷರಾಗಿ ಇಕ್ಬಾಲ್ ಮದನಿ ಚೆನ್ನಾರ್, ಆರಿಫ್ ಮದಕ, ಕಾರ್ಯದರ್ಶಿಗಳಾಗಿ ಸಿನಾನ್ ಮದನಿ ನಗರ, ಮುನೀರ್ ಕುತ್ತಾರ್ ಆಯ್ಕೆಯಾಗಿದ್ದಾರೆ. ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಅಸ್ಲಮ್ ಶಿರಸಿ, ಅಬ್ಬಾಸ್ ಕುಂತೂರು, ಅಬ್ದುಲ್ ಮಜೀದ್ ಕರೋಪಾಡಿ, ಅಬ್ದುಲ್ ಮಜೀದ್ ಕುಕ್ಕಾಜೆ, ಶಫೀಕ್ ಎಲಿಮಲೆ, ಅರ್ಶದ್ ಸಜಿಪ, ಅಬ್ದುಲ್ ವಹ್ಹಾಬ್ ಮದ್ದಡ್ಕ, ಅಬ್ದುಲ್ ಅಝೀಝ್ ಬಜ್ಪೆ, ಪರ್ವೇಝ್ ಮಂಚಿ, ಝಿಯಾದ್ ಬಾರೆಬೆಟ್ಟು, ರಮೀಝ್ ಹರೇಕಳ ಅವರನ್ನು ಆರಿಸಲಾಯಿತು. ಸೊಹಾರ್, ಸಲ್ಲಾನ್ ಕೆಸಿಎಫ್ ಸಭಾಂಗಣದಲ್ಲಿ ನಡೆದ ಸಭೆಯ ಅಧ್ಯಕ್ಷತೆಯನ್ನು ಮರ್ಕಝುಲ್ ಹುದಾ ಒಮಾನ್ ರಾಷ್ಟೀಯ ಪ್ರಧಾನ ಕಾರ್ಯದರ್ಶಿ ಸಿದ್ದೀಕ್ ಮಾಂಬ್ಳಿ ವಹಿಸಿದ್ದರು. ರಾಷ್ಟೀಯ ಸಮಿತಿಯ ನಿರ್ವಾಹಕ ಕಾರ್ಯದರ್ಶಿ ಎಂ.ಎಸ್.ಉಬೈದುಲ್ಲಾ ಸಖಾಫಿ ಮಿತ್ತೂರು ಉದ್ಘಾಟಿಸಿದರು. ಎಸ್ ವೈ ಎಸ್ ಕರ್ನಾಟಕ ರಾಜ್ಯ ಸಮಿತಿ ನಾಯಕ ಅಬ್ದುಲ್ ಅಝೀಝ್ ಮಿಸ್ಬಾಹಿ ಮೈಸೂರು ಶುಭ ಹಾರೈಸಿದರು

ವಾರ್ತಾ ಭಾರತಿ 8 Feb 2026 3:26 pm

ವ್ಯಕ್ತಿಪೂಜೆ ಮತ್ತು ಸಮೂಹ ಸನ್ನಿ

ವ್ಯಕ್ತಿಪೂಜೆ ಮತ್ತು ಸಮೂಹ ಸನ್ನಿ ಈ ಎರಡೂ ಭಾರತದ ಸಾಮಾಜಿಕ-ಮಾನಸಿಕ ಆರೋಗ್ಯಕ್ಕೆ ಬಹಳ ಗಂಭೀರವಾಗಿ ಪರಿಗಣಿಸಬೇಕಾಗಿರುವ ಮುಖ್ಯ ಅಂಶಗಳು. ಇವೆರಡನ್ನು ಮನೋವಿಜ್ಞಾನ, ವರ್ತನೆ ವಿಜ್ಞಾನ, ಸಮಾಜಶಾಸ್ತ್ರ, ರಾಜಕೀಯ ಮತ್ತು ದೇಶದ ಅಭಿವೃದ್ಧಿ-ಈ ಎಲ್ಲ ದೃಷ್ಟಿಕೋನಗಳಿಂದ ಸರಳವಾಗಿ ಆದರೆ ಆಳವಾಗಿ ಅರ್ಥ ಮಾಡಿಕೊಳ್ಳಲು ಪ್ರಯತ್ನಿಸೋಣ. ಭಾರತದಲ್ಲಿ ಇಂದು ಎರಡು ಪ್ರಬಲ ಸಾಮಾಜಿಕ ಮತ್ತು ಸಂಕಲಿತ ಮನಸ್ಥಿತಿಗಳಾದ ಈ ಸಮಸ್ಯೆಗಳನ್ನು ರೋಗಗಳು ಎಂದೇ ಕರೆಯಬಹುದು. ಏಕೆಂದರೆ ಇವೆರಡೂ ಸಾಮಾನ್ಯ ಜನರ ಮನಸ್ಸನ್ನು ಈ ಹಿಂದೆ ನಿಧಾನವಾಗಿ ಆದರೆ ಈಗ ಬಹಳ ವೇಗವಾಗಿ ಮತ್ತು ಗಂಭೀರವಾಗಿ ಹಾಳುಮಾಡುತ್ತಿವೆ. ಸುಮ್ಮನೆ ಹಿಂದಕ್ಕೊಮ್ಮೆ ತಿರುಗಿ ನೋಡುತ್ತಾ, ಈಗಿನ ವಿದ್ಯಮಾನಗಳನ್ನು ಗಮನಿಸಿದರೆ, ಈ ವ್ಯಕ್ತಿಪೂಜೆ (Hero Worship) ಮತ್ತು ಮತ್ತೊಂದು, ಸಮೂಹ ಸನ್ನಿ, ಗುಂಪು ಮನಸ್ಥಿತಿ ಅಥವಾ ಗುಂಪು ಹಿಂಸಾತ್ಮಕ ವರ್ತನೆ (Mob Mentality) ಈ ಎರಡೂ ಸೇರಿ ಜನರನ್ನು ಚಿಂತನೆ ಮಾಡದವರನ್ನಾಗಿ, ವಾಸ್ತವ ಅಂಶಗಳನ್ನು ಪರಿಶೀಲನೆ ಮಾಡದವರನ್ನಾಗಿ, ಮತ್ತು ಭವಿಷ್ಯದ ಬಗ್ಗೆ ದೃಷ್ಟಿಯನ್ನು ಕಳೆದುಕೊಳ್ಳುವವರನ್ನಾಗಿ ಮಾಡುತ್ತಿವೆ. ಈ ವಿಷಯವಾಗಿ ಮನೋವೈಜ್ಞಾನಿಕ ನೆಲೆಯಿಂದ ನೋಡುವುದಾದರೆ, ಮಾನವನ ಮೆದುಳು ಭದ್ರತೆಯನ್ನು ಹುಡುಕುತ್ತದೆ. ಒಬ್ಬ ‘ಹೀರೋ’ ಅಥವಾ ‘ನಾಯಕ’ ನಮ್ಮ ಪರವಾಗಿ ಯೋಚಿಸುತ್ತಾನೆ, ನಿರ್ಧಾರ ತೆಗೆದುಕೊಳ್ಳುತ್ತಾನೆ ಎನ್ನುವ ಭ್ರಮೆ ಜನರಿಗೆ ಆರಾಮ ಕೊಡುತ್ತದೆ. ಇದನ್ನು ‘Authority Bias’ ಎನ್ನುತ್ತಾರೆ. ಜೊತೆಗೆ Emotional Dependency ಉಂಟಾಗುತ್ತದೆ. ಅದರಿಂದಾಗಿ ತಮ್ಮ ಹೀರೋನನ್ನು ಪ್ರಶ್ನಿಸುವುದು ಎಂದರೆ ತನ್ನದೇ ಗುರುತನ್ನು ತಾನೇ ಪ್ರಶ್ನಿಸಿದಂತೆ ಆರಾಧಕರಿಗೆ ಅನ್ನಿಸುತ್ತದೆ. ಆದ್ದರಿಂದ ತರ್ಕಕ್ಕಿಂತ ಭಾವನೆ ಗೆಲ್ಲುತ್ತದೆ. ಇದನ್ನು ವರ್ತನೆ ವಿಜ್ಞಾನ (Behavioural Science) ಪ್ರಕಾರ ನೋಡುವುದಾದರೆ, ಗುಂಪಿನಲ್ಲಿ ಇದ್ದಾಗ ವ್ಯಕ್ತಿಯ ವೈಯಕ್ತಿಕ ಜವಾಬ್ದಾರಿ ಕರಗುತ್ತದೆ. ಇದನ್ನು Deindividuation ಎಂದು ಕರೆಯುತ್ತಾರೆ. ಒಬ್ಬನೇ ಇದ್ದರೆ ತಪ್ಪು ಅನ್ನಿಸುವುದು. ಗುಂಪಿನಲ್ಲಿ ಇದ್ದರೆ ‘‘ಎಲ್ಲರೂ ಮಾಡ್ತಿದ್ರು’’ ಎನ್ನುವ ನೆಪ. ಇದರಿಂದ ಆಗುವುದೇನು? ಸುಳ್ಳು ಸುದ್ದಿಯನ್ನು ನಂಬುವುದು, ಹಿಂಸಾತ್ಮಕ ಪ್ರತಿಕ್ರಿಯೆ ನೀಡುವುದು, ತಕ್ಷಣದ ಕೋಪ ಅಥವಾ ಹಠಾತ್ತನೆ ತಮ್ಮ ಪ್ರತಿಕ್ರಿಯೆನ್ನು ತೋರುವುದು, ದೀರ್ಘಕಾಲದ ಚಿಂತನೆಯಂತೂ ನಾಶವೇ ಆಗಿಬಿಡುತ್ತದೆ. ಭಾರತದಲ್ಲಿ ಜಾತಿ, ಧರ್ಮ, ಭಾಷೆ, ಸಿನೆಮಾ, ರಾಜಕೀಯವೇ ಮೊದಲಾದ ಕಾರಣದಿಂದ ಹುಟ್ಟಿಕೊಳ್ಳುವ ವ್ಯಕ್ತಿಪೂಜೆ ಕೊನೆಗೊಳ್ಳುವುದು ಸಮೂಹ ಸನ್ನಿ ಮತ್ತು ಅದರ ಪರಿಣಾಮಗಳಿಂದ. ನಿಜ ಹೇಳಬೇಕೆಂದರೆ, ಇವೆಲ್ಲವೂ ಗುಂಪು ಗುರುತಿನ (Group Identity) ಆಧಾರದಲ್ಲೇ ಇರುತ್ತದೆ. ನಾನು ಈ ಜಾತಿ, ಅವರು ಆ ಧರ್ಮ, ಇದು ನಮ್ಮ ಭಾಷೆ, ಇವನು ನಮ್ಮ ನೆಚ್ಚಿನ ಹೀರೋ; ಹೀಗೆ ‘ನಾವು’ ಮತ್ತು ‘ಅವರು’ ಎಂಬ ವಿಭಜನೆಯಾಗುತ್ತದೆ. ಪ್ರಶ್ನೆ ಕೇಳುವವನು ಅವರ ಶತ್ರುವಾಗುತ್ತಾನೆ. ವಿಭಿನ್ನ ಅಭಿಪ್ರಾಯವನ್ನೇ ದ್ರೋಹ ಎಂದು ಪರಿಗಣಿಸಲಾಗುತ್ತದೆ. ಇದರಿಂದ ಸಂವಾದದ ಸಂಸ್ಕೃತಿ (Culture of Dialogue) ನಾಶವಾಗುತ್ತದೆ. ಇನ್ನು ಹೀರೋ ಆರಾಧನೆ ರಾಜಕೀಯದಲ್ಲಿ ಅತ್ಯಂತ ಅಪಾಯಕಾರಿ. ಸಿಕ್ಕಾಪಟ್ಟೆ ಬಿಲ್ಡಪ್ಪುಗಳಿಂದಲೇ, ಏನೇನೂ ಅರ್ಹತೆಗಳಿರದಿದ್ದರೂ ನಾಯಕ ದೇವರಾಗುತ್ತಾನೆ, ವ್ಯವಸ್ಥೆ ಅಪ್ರಸ್ತುತವಾಗುತ್ತದೆ, ಆ ರಾಜಕೀಯ ದೇವರು ಮಾಡುವ ನೀತಿಗಳು ಪ್ರಶ್ನೆಗೆ ಒಳಗಾಗುವುದಿಲ್ಲ. ಇದರಿಂದ ಸಾಮಾಜಿಕ ಸಂಸ್ಥೆಗಳು ದುರ್ಬಲವಾಗುತ್ತವೆ, ಸಂವಿಧಾನಕ್ಕಿಂತ ವ್ಯಕ್ತಿ ದೊಡ್ಡವನು ಆಗುತ್ತಾನೆ, ಜನರು ನಾಗರಿಕರಾಗುವುದಿಲ್ಲ, ಅನುಯಾಯಿಗಳಾಗುತ್ತಾರೆ, ಅಲ್ಲಿಗೆ ಪ್ರಜಾಪ್ರಭುತ್ವದಲ್ಲಿ ಇದು ಮರಣಮೃದಂಗವಾಗುತ್ತದೆ. ಯಾವುದೇ ಪ್ರಗತಿಶೀಲ ದೇಶಗಳಿಗೆ ಬೇಕಾಗಿರುವುದು ವಿಮರ್ಶಾತ್ಮಕ ಚಿಂತನೆ, ವೈಜ್ಞಾನಿಕ ಮನೋಭಾವ, ವಾಸ್ತವಾಧಾರಿತ ನಿರ್ಧಾರ, ದೀರ್ಘಾವಧಿ ದೃಷ್ಟಿ. ಆದರೆ ವ್ಯಕ್ತಿಪೂಜೆ ಮತ್ತು ಸಮೂಹಸನ್ನಿ ಅಥವಾ ಗುಂಪು ಮನಸ್ಥಿತಿ ಇರುವ ಸಮಾಜದಲ್ಲಿ ಆಗುವುದೇನೆಂದರೆ, ಭಾವನೆ ಆಧಾರಿತ ನೀತಿಗಳು ವಿಜೃಂಭಿಸುತ್ತವೆ. ಜನರ ಭಾವುಕ ಅಂಶಗಳನ್ನು ಕೆರಳಿಸುವ, ಪ್ರೇರೇಪಿಸುವ ಕೆಲಸಗಳಾಗುತ್ತವೆ. ಅದರಿಂದ ತಾತ್ಕಾಲಿಕ ಗೆಲುವು ಖಂಡಿತ ಸಿಗುತ್ತದೆ. ಏಕೆಂದರೆ ವಿವೇಚನೆ ಮತ್ತು ವಿವೇಕಕ್ಕಿಂತ ತ್ವರಿತವಾಗಿ ಕೆಲಸ ಮಾಡುವುದು ಭಾವೋದ್ರೇಕಗಳೇ. ಆದರಿಂದ ಇದರಿಂದ ದೇಶದ ಪ್ರಗತಿಯ ವಿಷಯದಲ್ಲಿ ದೀರ್ಘಾವಧಿ ನಷ್ಟವಾಗಿ ಭವಿಷ್ಯದ ಪೀಳಿಗೆಗೆ ಸಹಿಸಲಾರದಷ್ಟು ಭಾರ ಬೀಳುವುದು. ಭಾರತದಲ್ಲಿ ಕಾಣುವ ಕೆಲವು ಉದಾಹರಣೆಗಳನ್ನು ಗಮನಿಸಿ. ಸಿನೆಮಾ ನಟನ ಮಾತೇ ಸತ್ಯ ಎನ್ನುವ ಮನಸ್ಥಿತಿ, ವಾಟ್ಸ್ಆ್ಯಪ್ ಫಾರ್ವರ್ಡ್ಗಳನ್ನು ಪರಿಶೀಲನೆ ಇಲ್ಲದೆ ನಂಬುವುದು, ಪ್ರಶ್ನೆ ಕೇಳುವವರ ಮೇಲೆ ದೇಶದ್ರೋಹದ ಆರೋಪ, ಗುಂಪಿನಲ್ಲಿ ಹಿಂಸೆ, ಅತ್ಯಾಚಾರಗಳನ್ನು ಮಾಡಿದರೂ ಪಶ್ಚಾತ್ತಾಪ ಇಲ್ಲದಿರುವುದು; ಇವೆಲ್ಲವೂ ಚಿಂತನೆ ಸಾಯುತ್ತಿರುವ ಸೂಚನೆಗಳು. ಸರಿ, ಇದಕ್ಕೆ ಪರಿಹಾರ ಏನು? ಸಿನೆಮಾ, ರಾಜಕೀಯ; ಯಾವುದೇ ಹೀರೋಗಳನ್ನು ಮೆಚ್ಚಬಹುದು. ಅವರ ಕಾರ್ಯಾಧಾರಿತವಾಗಿ ಟೀಕೆ ಮತ್ತು ಪ್ರಶಂಸೆಗಳನ್ನೂ ಮಾಡಬೇಕು. ಖಂಡಿತವಾಗಿ ಪೂಜಿಸಬಾರದು. ಗುಂಪಿನ ಭಾಗವಾಗಬಹುದು, ನಮ್ಮದು ಸಾಂಘಿಕ ಜೀವನ. ಅಗತ್ಯಗಳು ಬಂದಾಗ ಸಾಮೂಹಿಕವಾಗಿ ಒಗ್ಗಟ್ಟಾಗಬೇಕು. ಆದರೆ ಅದೇ ಗುಂಪಿನ ಗುಲಾಮರಾಗಬಾರದು. ಪ್ರಶ್ನೆ ಕೇಳುವುದು ದೇಶದ್ರೋಹವಲ್ಲ, ವಾಸ್ತವವಾಗಿ ಅದು ದೇಶಪ್ರೇಮ. ನಮ್ಮ ಈಗಿನ ಮತ್ತು ಮುಂದಿನ ಮಕ್ಕಳಿಗೆ ಭಕ್ತಿ ಅಲ್ಲ, ಚಿಂತನೆ ಕಲಿಸಬೇಕು.

ವಾರ್ತಾ ಭಾರತಿ 8 Feb 2026 3:17 pm

ದೇಶದ ಬತ್ತಳಿಕೆಯಲ್ಲಿ ಮತ್ತೊಂದು ಅಸ್ತ್ರ: ಗಾಂಡೀವ ಕ್ಷಿಪಣಿ!

ಗಾಂಡೀವ ಕ್ಷಿಪಣಿಯ ಮಹತ್ವದ ವಿಚಾರವೆಂದರೆ, ಇದು ಇಂಧನ ಎಷ್ಟು ವೇಗವಾಗಿ ದಹಿಸುತ್ತದೆ ಎನ್ನುವುದನ್ನೂ ನಿಯಂತ್ರಿಸಬಲ್ಲದು! ಹಳೆಯ ಕ್ಷಿಪಣಿಗಳು ತಮ್ಮ ಗುರಿಯ ಬಳಿ ಸಮೀಪಿಸುವಾಗ ತಮ್ಮ ಶಕ್ತಿಯನ್ನು ಕಳೆದುಕೊಳ್ಳುತ್ತವೆ. ಆದರೆ, ಗಾಂಡೀವ ಕ್ಷಿಪಣಿ ಹಾರಾಟದ ಕೊನೆಯ ತನಕವೂ ತನ್ನ ಶಕ್ತಿಯನ್ನು ಕಾಪಾಡಿಕೊಳ್ಳುತ್ತದೆ. ಈ ಶಕ್ತಿಯ ಅನುಕೂಲತೆಯನ್ನು ‘ನೋ ಎಸ್ಕೇಪ್ ರೆನ್’ ಎಂದು ಕರೆಯಲಾಗಿದ್ದು, ಗಾಂಡೀವ ಇದನ್ನು ೨೦೦ಕ್ಕೂ ಹೆಚ್ಚು ಕಿಲೋಮೀಟರ್ ವ್ಯಾಪ್ತಿಗೆ ಹೊಂದಿದೆ. ನೀವು ಮನೆಯಲ್ಲಿ ಸುದ್ದಿಯನ್ನು ಗಮನಿಸುವಾಗ, ಭಾರತದ ರಕ್ಷಣಾ ಕ್ಷೇತ್ರದ ಕುರಿತ ಬಹುದೊಡ್ಡ ಸುದ್ದಿಯೊಂದು ನಿಮ್ಮನ್ನು ತಲುಪುವುದನ್ನು ಊಹಿಸಿ. ಫೆಬ್ರವರಿ ೩, ೨೦೨೬ರಂದು ಭಾರತ ಒಂದು ವಿಶೇಷ ಸಾಧನೆಯನ್ನು ನಿರ್ಮಿಸಿದೆ. ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್ಡಿಒ) ಅಸ್ತ್ರ ‘ಗಾಂಡೀವ’ ಎನ್ನುವ ಅತ್ಯಂತ ಶಕ್ತಿಶಾಲಿ ಕ್ಷಿಪಣಿಯನ್ನು ಯಶಸ್ವಿಯಾಗಿ ಪರೀಕ್ಷಿಸಿದೆ. ಆದರೆ, ನಿಜಕ್ಕೂ ಈ ಕ್ಷಿಪಣಿಯ ವೈಶಿಷ್ಟ್ಯವೇನು? ಇದರ ಕುರಿತು ನಾವೇಕೆ ಆಸಕ್ತಿ ತೋರಬೇಕು? ಇದರ ಮುಖ್ಯ ವಿಚಾರಗಳನ್ನು ಸಾಧ್ಯವಾದಷ್ಟೂ ಸರಳವಾಗಿ ಈ ಲೇಖನದ ಮೂಲಕ ತಿಳಿಯಲು ಪ್ರಯತ್ನಿಸೋಣ. ಮೊದಲನೆಯದಾಗಿ, ನಾವು ಇದರ ಹೆಸರನ್ನು ಅರ್ಥ ಮಾಡಿಕೊಳ್ಳೋಣ. ಭಾರತೀಯ ಸಂಪ್ರದಾಯದಲ್ಲಿ, ಅಸ್ತ್ರ ಎಂದರೆ ಆಯುಧವಾಗಿದ್ದು, ಪೌರಾಣಿಕ ಕಥೆಗಳಲ್ಲಿ ಈ ಪದದ ಪ್ರಯೋಗಗಳಿವೆ. ಗಾಂಡೀವ ಎನ್ನುವುದು ಮಹಾಭಾರತದಲ್ಲಿ ಅರ್ಜುನ ಬಳಸಿದ್ದ ಮಾಯಾವಿ ಬಿಲ್ಲು. ನೂತನ ಕ್ಷಿಪಣಿಗೆ ಗಾಂಡೀವ ಎಂದು ಹೆಸರಿಟ್ಟಿರುವುದು ಭಾರತ ಆಗಸದಲ್ಲಿ ತನ್ನದೇ ಆದ ಮಾಯಾವಿ ಅಸ್ತ್ರವನ್ನು ಸೃಷ್ಟಿಸಿರುವುದಕ್ಕೆ ಸಾಕ್ಷಿಯಾಗಿದೆ. ಈ ಕ್ಷಿಪಣಿಗೆ ಅಸ್ತ್ರ ಮಾರ್ಕ್ ೩ ಎಂದು ಹೆಸರಿಡಲಾಗಿದ್ದು, ಇದೊಂದು ಗಾಳಿಯಿಂದ ಗಾಳಿಗೆ ದಾಳಿ ನಡೆಸುವ ಕ್ಷಿಪಣಿಯಾಗಿದೆ. ಅಂದರೆ, ಇದನ್ನು ಆಗಸದಲ್ಲಿ ಯುದ್ಧ ವಿಮಾನಗಳಿಂದ ಬಿಡುಗಡೆಗೊಳಿಸಿ, ಶತ್ರುಗಳ ಏರ್ಕ್ರಾಫ್ಟ್ ಅನ್ನು ನಾಶಪಡಿಸಲಾಗುತ್ತದೆ. ಈಗ ಎದುರಾಗಿರುವ ದೊಡ್ಡ ಪ್ರಶ್ನೆಯೆಂದರೆ, ಈ ಕ್ಷಿಪಣಿ ಹೇಗೆ ಹಾರಾಡುತ್ತದೆ? ನಿಜವಾದ ಮ್ಯಾಜಿಕ್ ನಡೆಯುವುದು ಇಲ್ಲಿ. ನಾವು ಕೇಳಿರುವ ಸಾಕಷ್ಟು ಕ್ಷಿಪಣಿಗಳು ಇಂಧನವನ್ನು ದಹಿಸಲು ತಮ್ಮದೇ ಆದ ಆಮ್ಲಜನಕವನ್ನು ಒಯ್ಯುತ್ತವೆ. ಇದನ್ನು ಬೆಂಕಿಯನ್ನು ಸೃಷ್ಟಿಸಲು ಬೇಕಾದ ಎಲ್ಲವನ್ನೂ ಹೊಂದಿರುವ ಬೆಂಕಿ ಕಡ್ಡಿಯೊಂದರ ಮಾದರಿಯಲ್ಲಿ, ದಹಿಸಲು ಬೇಕಾದ ಎಲ್ಲವನ್ನೂ ಹೊಂದಿರುವ ರಾಕೆಟ್ಗೆ ಹೋಲಿಸಬಹುದು. ಆದರೆ, ಈ ವ್ಯವಸ್ಥೆಯಲ್ಲಿ ಒಂದು ತೊಂದರೆಯಿದೆ. ನೀವು ಕ್ಷಿಪಣಿಯ ಒಳಗೆ ಆಮ್ಲಜನಕವನ್ನೂ ತುಂಬಿಸಿ ಒಯ್ದರೆ, ಹೆಚ್ಚಿನ ಇಂಧನವನ್ನು ಒಯ್ಯಲು ಸಾಧ್ಯವಿಲ್ಲ. ಕಡಿಮೆ ಇಂಧನ ಎಂದರೆ ಕ್ಷಿಪಣಿ ಹೆಚ್ಚು ದೂರಕ್ಕೆ ಸಾಗಲು ಸಾಧ್ಯವಿಲ್ಲ. ಇದರೊಡನೆ, ಒಂದು ಬಾರಿ ಈ ರೀತಿಯ ಮೋಟರ್ ದಹಿಸಲು ಆರಂಭಿಸಿದಾಗ, ಅದು ಒಂದು ಕ್ಯಾಂಡಲ್ ರೀತಿಯಲ್ಲಿ ಇಂಧನ ಮುಗಿಯುವ ತನಕ ನಿರಂತರವಾಗಿ ಉರಿಯುತ್ತದೆ. ಒಂದು ಬಾರಿ ಉರಿಯಲು ಆರಂಭಗೊಂಡರೆ, ಅದನ್ನು ಮತ್ತೆ ನಿಯಂತ್ರಿಸಲು ಸಾಧ್ಯವಿಲ್ಲ. ಆದರೆ, ಗಾಂಡೀವ ಮಾತ್ರ ಸಂಪೂರ್ಣ ಭಿನ್ನವಾದ, ಬಹಳಷ್ಟು ಸ್ಮಾರ್ಟ್ ಆದ ಆಯುಧ. ಈ ಕ್ಷಿಪಣಿ ಸಾಲಿಡ್ ಫ್ಯುಯಲ್ ಡಕ್ಟೆಡ್ ರ್ಯಾಮ್ಜೆಟ್ ತಂತ್ರಜ್ಞಾನವನ್ನು (ಎಸ್ಎಫ್ಡಿಆರ್) ಬಳಸುತ್ತದೆ. ಆಮ್ಲಜನಕವನ್ನು ತನ್ನೊಳಗೆ ಹೊತ್ತೊಯ್ಯುವ ಬದಲು, ಕ್ಷಿಪಣಿ ತನ್ನ ಮುಂಭಾಗದಲ್ಲಿರುವ ವಿಶೇಷ ನಾಳಗಳ ಮೂಲಕ ಆಮ್ಲಜನಕವನ್ನು ಹೀರುತ್ತದೆ. ಇದು ದ್ವಿಚಕ್ರವಾಹನಗಳ ಇಂಜಿನ್ಗಳು ಗಾಳಿಯನ್ನು ಉಸಿರಾಡುವ ಪ್ರಕ್ರಿಯೆಯನ್ನು ಹೋಲುತ್ತದೆ. ಈ ಕ್ಷಿಪಣಿ ಭಾರವಾದ ಆಕ್ಸಿಡೈಸರ್ಗಳನ್ನು ಹೊತ್ತೊಯ್ಯುವ ಅಗತ್ಯ ಇಲ್ಲದ್ದರಿಂದ, ಇದು ಇನ್ನೂ ಹೆಚ್ಚಿನ ಇಂಧನವನ್ನು ಒಯ್ಯಲು ಸಾಧ್ಯವಾಗುತ್ತದೆ. ಹೆಚ್ಚಿನ ಇಂಧನ ಹೊರಬಲ್ಲದು ಎಂದಾಗ, ಕ್ಷಿಪಣಿ ಹೆಚ್ಚು ದೂರ ಕ್ರಮಿಸಬಲ್ಲದು. ವಿಜ್ಞಾನಿಗಳು ಗಾಂಡೀವ ಕ್ಷಿಪಣಿ ೩೫೦ ಕಿಲೋಮೀಟರ್ಗಳಷ್ಟು ದೂರದಲ್ಲಿರುವ ಗುರಿಗಳ ಮೇಲೆ ದಾಳಿ ನಡೆಸಬಲ್ಲದು ಎಂದಿದ್ದಾರೆ. ಇದು ದಿಲ್ಲಿಯಿಂದ ಜೈಪುರಕ್ಕೆ ಸಾಗುವಷ್ಟರ ಅಂತರವಾಗಿದೆ! ಈ ಕ್ಷಿಪಣಿಯ ಇನ್ನೊಂದು ಮಹತ್ವದ ವಿಚಾರವೆಂದರೆ, ಇದು ಇಂಧನ ಎಷ್ಟು ವೇಗವಾಗಿ ದಹಿಸುತ್ತದೆ ಎನ್ನುವುದನ್ನೂ ನಿಯಂತ್ರಿಸಬಲ್ಲದು! ಹಳೆಯ ಕ್ಷಿಪಣಿಗಳು ತಮ್ಮ ಗುರಿಯ ಬಳಿ ಸಮೀಪಿಸುವಾಗ ತಮ್ಮ ಶಕ್ತಿಯನ್ನು ಕಳೆದುಕೊಳ್ಳುತ್ತವೆ. ಆದರೆ, ಗಾಂಡೀವ ಕ್ಷಿಪಣಿ ಹಾರಾಟದ ಕೊನೆಯ ತನಕವೂ ತನ್ನ ಶಕ್ತಿಯನ್ನು ಕಾಪಾಡಿಕೊಳ್ಳುತ್ತದೆ. ಈ ಶಕ್ತಿಯ ಅನುಕೂಲತೆಯನ್ನು ‘ನೋ ಎಸ್ಕೇಪ್ ರೆನ್’ ಎಂದು ಕರೆಯಲಾಗಿದ್ದು, ಗಾಂಡೀವ ಇದನ್ನು ೨೦೦ಕ್ಕೂ ಹೆಚ್ಚು ಕಿಲೋಮೀಟರ್ ವ್ಯಾಪ್ತಿಗೆ ಹೊಂದಿದೆ. ಆದರೆ, ಇಂತಹ ಕ್ಷಿಪಣಿಯೊಂದನ್ನು ನಿರ್ಮಿಸುವುದು ಸರಳ ವಿಚಾರವಲ್ಲ. ಇಂಜಿನಿಯರ್ಗಳು ನಿಜಕ್ಕೂ ನೈಜ ಸಮಸ್ಯೆಗಳನ್ನು ಎದುರಿಸಿದ್ದಾರೆ. ಇದರ ಬಹುದೊಡ್ಡ ಸಮಸ್ಯೆ ಎಂದರೆ, ರ್ಯಾಮ್ಜೆಟ್ ಇಂಜಿನ್ ಸರಿಯಾಗಿ ಕಾರ್ಯ ನಿರ್ವಹಿಸಬೇಕೆಂದರೆ, ಗಾಳಿ ಬಹಳ ವೇಗವಾಗಿ, ಅಂದರೆ ಸೂಪರ್ಸಾನಿಕ್ ವೇಗದಲ್ಲಿ (ಶಬ್ದಕ್ಕಿಂತ ಹೆಚ್ಚಿನ ವೇಗ) ಹರಿಯುತ್ತಿರಬೇಕು. ಇದಕ್ಕಾಗಿ ಭಾರತೀಯ ವಿಜ್ಞಾನಿಗಳು ಮಾಡಿದ್ದೇನು? ಅವರು ಕ್ಷಿಪಣಿಯನ್ನು ಮೊದಲು ಅವಶ್ಯಕ ವೇಗಕ್ಕೆ ತಲುಪಿಸುವ ಬೂಸ್ಟರ್ ಒಂದನ್ನು ಅಳವಡಿಸಿದರು. ಆ ನಂತರವೇ ರ್ಯಾಮ್ಜೆಟ್ ಇಂಜಿನ್ ಚಾಲನೆಗೊಳ್ಳುವಂತೆ ಮಾಡಿದರು. ಇದು ಅತ್ಯುತ್ಕೃಷ್ಟ ಇಂಜಿನಿಯರಿಂಗ್ ಕಾರ್ಯವಾಗಿದೆ. ಫೆಬ್ರವರಿ ೩ರ ಪರೀಕ್ಷೆಯ ಸಂದರ್ಭದಲ್ಲಿ, ಕ್ಷಿಪಣಿಯನ್ನು ಭೂಮಿಯಿಂದಲೇ ಉಡಾವಣೆಗೊಳಿಸಲಾಗಿದ್ದರೂ, ಅದು ಕೇವಲ ಪರೀಕ್ಷಾರ್ಥವಾಗಿದೆ. ನೈಜ ಕಾರ್ಯಾಚರಣೆಯಲ್ಲಿ, ಯುದ್ಧ ವಿಮಾನಗಳು ಈ ಕ್ಷಿಪಣಿಗಳನ್ನು ಹೊತ್ತೊಯ್ದು, ಆಗಸದಿಂದ ಉಡಾವಣೆಗೊಳಿಸುತ್ತವೆ. ಎತ್ತರದಿಂದ ಬಿಡುಗಡೆಗೊಳಿಸಿದಾಗ, ಈ ಕ್ಷಿಪಣಿಗೆ ಗಾಳಿಯ ಪ್ರತಿರೋಧವೂ ಕಡಿಮೆ ಇರುವುದರಿಂದ ಇನ್ನಷ್ಟು ವೇಗವಾಗಿ ಸಾಗುತ್ತದೆ. ಆದ್ದರಿಂದ, ಕ್ಷಿಪಣಿಯ ನೈಜ ವ್ಯಾಪ್ತಿ ನಾವು ಪರೀಕ್ಷೆಯಲ್ಲಿ ಕಂಡದ್ದಕ್ಕಿಂತಲೂ ಹೆಚ್ಚಾಗಿರುತ್ತದೆ. ಗಾಂಡೀವ ಕ್ಷಿಪಣಿ ಭಾರತಕ್ಕೆ ಮುಖ್ಯವಾಗುವುದು ಏಕೆ? ಮೊದಲನೆಯದಾಗಿ, ಕೆಲವೇ ದೇಶಗಳ ಬಳಿ ಇಂತಹ ಆಧುನಿಕ ತಂತ್ರಜ್ಞಾನ ಲಭ್ಯವಿದೆ. ಎರಡನೆಯದಾಗಿ, ಭಾರತ ಇನ್ನು ಈ ಮಾದರಿಯ ಶಕ್ತಿಶಾಲಿ ಆಯುಧಕ್ಕಾಗಿ ಇತರ ದೇಶಗಳ ಮೇಲೆ ಅವಲಂಬಿತವಾಗಿರುವ ಅಗತ್ಯವಿಲ್ಲ. ಇದನ್ನು ಭಾರತ ಸರಕಾರ ಆತ್ಮನಿರ್ಭರ ಭಾರತ ಅಥವಾ ಸ್ವಾವಲಂಬಿ ಭಾರತ ಎಂದು ಪ್ರತಿಪಾದಿಸುತ್ತಿದೆ. ಮೂರನೆಯದಾಗಿ, ಅಸ್ತ್ರ ಸರಣಿ ದಿನೇ ದಿನೇ ಶಕ್ತಿಶಾಲಿಯಾಗಿ ಬೆಳೆಯುತ್ತಿದೆ. ಅಸ್ತ್ರ ಮಾರ್ಕ್ ೧ ಈಗಾಗಲೇ ಭಾರತೀಯ ವಾಯು ಸೇನೆಯ ಬಳಕೆಯಲ್ಲಿದೆ. ಈ ವರ್ಷ ಮಾರ್ಕ್ ೨ ಸಿದ್ಧವಾಗುತ್ತಿದೆ. ಇನ್ನು ಮಾರ್ಕ್ ೩, ಗಾಂಡೀವ ಕ್ಷಿಪಣಿಯೂ ಸಜ್ಜಾಗುತ್ತಿದೆ. ಇವೆಲ್ಲ ಕ್ಷಿಪಣಿಗಳು ಜೊತೆಯಾಗಿ, ಭಾರತದ ಆಕಾಶವನ್ನು ೧೦೦ರಿಂದ ೩೫೦ ಕಿಲೋಮೀಟರ್ ವ್ಯಾಪ್ತಿಯಲ್ಲಿ ರಕ್ಷಿಸಬಲ್ಲವು. ವಿಜ್ಞಾನಿಗಳು ಕ್ಷಿಪಣಿ ೨೦೨೮ರ ವೇಳೆಗೆ ಭಾರತೀಯ ವಾಯುಸೇನೆಯ ಬಳಕೆಗೆ ಲಭ್ಯವಾಗಲಿದೆ ಎಂದು ನಿರೀಕ್ಷಿಸಿದ್ದಾರೆ. ಇದು ಸಿದ್ಧವಾದ ತಕ್ಷಣ, ದೇಶೀಯ ನಿರ್ಮಾಣದ ತೇಜಸ್ ಯುದ್ಧ ವಿಮಾನ ಮತ್ತು ರಫೇಲ್ ಯುದ್ಧ ವಿಮಾನಗಳಿಗೆ ಅಳವಡಿಸಲಾಗುತ್ತದೆ. ಈ ಸಂಯೋಜನೆ ಭಾರತೀಯ ವಾಯು ಸೇನೆಯನ್ನು ಅಸಾಧಾರಣ ಶಕ್ತಿಶಾಲಿ ಮತ್ತು ಸ್ವಾವಲಂಬಿಯಾಗಿಸಲಿದೆ. ಇದು ಕೇವಲ ಒಂದು ಕ್ಷಿಪಣಿಗೆ ಸೀಮಿತವಾದ ವಿಚಾರವಲ್ಲ. ಇದು ಭಾರತದ ಭವಿಷ್ಯದ ವಿಚಾರವೂ ಆಗಿದ್ದು, ಇಂಜಿನಿಯರಿಂಗ್ ಮತ್ತು ವಿಜ್ಞಾನವನ್ನು ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಮತ್ತು ಭಾರತ ರಕ್ಷಣಾ ಕ್ಷೇತ್ರದಲ್ಲಿ ನಿಜಕ್ಕೂ ಸ್ವಾತಂತ್ರ್ಯ ಮತ್ತು ಸ್ವಾವಲಂಬನೆ ಸಾಧಿಸುವುದಕ್ಕೂ ಮುಖ್ಯವಾಗಿದೆ. ಭಾರತೀಯ ಯುದ್ಧ ವಿಮಾನಗಳು ಗಾಂಡೀವದಂತಹ ದೇಶೀಯ ಆಯುಧಗಳ ಮೂಲಕ ಭಾರತದ ಆಗಸವನ್ನು ರಕ್ಷಿಸುವಾಗ ನಮಗೆ ಈ ಕ್ಷಣ ಐತಿಹಾಸಿಕವಾದುದು ಎನ್ನುವುದು ತಿಳಿದುಬರುತ್ತದೆ. ಇದು ಶಕ್ತಿಶಾಲಿ ಮತ್ತು ಸ್ವಾವಲಂಬಿಯಾದ ಭವಿಷ್ಯದ ಭಾರತವಾಗಿದೆ!

ವಾರ್ತಾ ಭಾರತಿ 8 Feb 2026 3:16 pm

ಸಾರ್ಥಕ ಪಯಣಗಳ ಮನಸ್ಪರ್ಶಿ ಚಿತ್ರಣ

ಸಾಧಕರನ್ನು ಸನ್ಮಾನಿಸುವುದು ಇತ್ತೀಚಿನ ದಿನಗಳಲ್ಲಿ ವ್ಯಾಪಕವಾಗಿ ಕಾಣಬಹುದಾದ ಒಂದು ಸಾಮಾಜಿಕ ವಿದ್ಯಮಾನ. ಗೌರವ, ಪ್ರಶಸ್ತಿ ಇವುಗಳಿಂದಾಚೆಗೂ ತೆರೆಮರೆಯಲ್ಲಿದ್ದುಕೊಂಡೇ ವ್ಯಕ್ತಿಗತ ಬದುಕಿನಲ್ಲಿ ಅಸಾಧ್ಯ ಎನ್ನುವಂತಹುದನ್ನು ಸಾಧಿಸುವ ಯಶೋಗಾಥೆಗಳು ಸಹ ಅಪಾರ ಸಂಖ್ಯೆಯಲ್ಲಿರುತ್ತವೆ. ಪಾತಾಳದಿಂದ ಉಪ್ಪರಿಗೆ ತಲುಪುವ ಬದುಕಿನ ಪಯಣದಲ್ಲಿ ವ್ಯಕ್ತಿಗಳು ಎದುರಿಸುವ ಸಂಕಟಗಳು ಹೇಗೆ ಅವರಲ್ಲಿ ಬದುಕುವ ಛಲ ಮೂಡಿಸುತ್ತದೆ ಎಂದು ನಿರೂಪಿಸುವ ಇಂತಹ ಆದರ್ಶಗಾಥೆಗಳು ಭವಿಷ್ಯದ ಸಮಾಜಕ್ಕೆ ಮಾರ್ಗದರ್ಶಕವಾಗಿ ಉಳಿಯುತ್ತವೆ. ಆದರೆ ಇದು ಸಾಧ್ಯವಾಗಬೇಕೆಂದರೆ ಇಂತಹ ಅಪರೂಪದ ವ್ಯಕ್ತಿಗಳ ಸಾಧನೆಯನ್ನು ದಾಖಲಿಸಬೇಕು. ಈ ಸಮಾಜಮುಖಿ ಕಾಯಕವನ್ನು ಪತ್ರಿಕೋದ್ಯಮ ವೃತ್ತಿಯಲ್ಲಿರುವ ಎ.ಆರ್. ಮಣಿಕಾಂತ್ ತಮ್ಮ ‘ನವಿಲುಗರಿ’ ಕೃತಿಯಲ್ಲಿ ನೆರವೇರಿಸಿದ್ದಾರೆ. ೩೨ ಯಶೋಗಾಥೆ-ಜೀವನಗಾಥೆ ಗಳ ‘ನವಿಲುಗರಿ’ಯಲ್ಲಿ ಜೀವನ ಸೌಂದರ್ಯವಿರುವಂತೆಯೇ, ಸಾಮಾನ್ಯ ಜನರ ಜೀವನೋಪಾಯದ ಕಷ್ಟ ಕಾರ್ಪಣ್ಯಗಳ ದರ್ಶನವೂ ಅಡಗಿದೆ. ಬಡತನದ ಬೇಗೆಯಲ್ಲಿ ಬೆಂದು ಹಸನಾಗುವ ಬದುಕುಗಳು ಒಂದು ಹಂತ ದಾಟಿದ ಮೇಲೆ ಮುನ್ನಡೆಯ ಏಣಿಯಲ್ಲಿ ಕೆಳಗಿಳಿಯದೆಯೇ ಶಿಖರ ತಲುಪುವುದು ಅಪರೂಪದ ಪ್ರಕರಣಗಳಲ್ಲಿ ಮಾತ್ರ. ಪ್ರಾಮಾಣಿಕ ಪ್ರಯತ್ನ, ಶ್ರಮ ಪಡುವ ತಾಳ್ಮೆ ಮತ್ತು ಎಲ್ಲ ಅಡೆತಡೆಗಳನ್ನೂ ದಾಟುವ ಸಹನೆ-ಕ್ಷಮತೆ ವ್ಯಕ್ತಿಯ ಬದುಕಿಗೆ ಹೊಸ ರೂಪ ನೀಡುತ್ತದೆ. ಅಂತಹ ಅಪರೂಪ ವ್ಯಕ್ತಿಗಳ ಜೀವನಗಾಥೆಯನ್ನು, ಎಂತಹ ಕಷ್ಟಗಳೆದುರಾದರೂ ಮನುಜ ಸಂಬಂಧಗಳ ನೈತಿಕ ಜವಾಬ್ದಾರಿಯನ್ನು ಅರಿತು ಮಕ್ಕಳ ಬಾಳಿಗೆ ಬೆಳಕಾಗುವ ತಾಯಂದಿರನ್ನೂ ಮಣಿಕಾಂತ್ ಅವರು ಅದ್ಭುತ ಶೈಲಿಯಲ್ಲಿ ಓದುಗರ ಮುಂದಿರಿಸಿದ್ದಾರೆ. ಸೂಕ್ಷ್ಮ ಸಂವೇದನೆಯ ಶೋಧ ಹೃದಯಸ್ಪರ್ಶಿಯಾದ ಪಯಣಗಳಲ್ಲಿ ಕೆಲವನ್ನು ಉಲ್ಲೇಖಿಸುವುದಾದರೆ, ಮೊದಲು ಕಾಣುವುದು ‘ರೌಡಿ ಆಗಿದ್ದವನು ರಿಯಲ್ ಹೀರೋ ಆಗಿಬಿಟ್ಟ’ ಎಂಬ ಲೇಖನ. ‘‘Criminals are not born they are made’’ ಎಂಬ ಆಂಗ್ಲ ನಾಣ್ಣುಡಿಗೆ ಸಾಕ್ಷಿಯಾಗಿ ಈ ಬರಹದ ಕೇಂದ್ರ ವ್ಯಕ್ತಿ ಅಖಿಲೇಶ್ ಪೌಲ್ ನಮ್ಮೆದುರು ನಿಲ್ಲುತ್ತಾರೆ. ಕರ್ಮಫಲದ ಮೌಢ್ಯದಿಂದಾಚೆ ಯೋಚಿಸಿದಾಗ, ನಮ್ಮ ಸುತ್ತಲಿನ ಸಮಾಜವೇ ಅಪರಾಧ ಮತ್ತು ಅಪರಾಧಿಯನ್ನು ಸೃಷ್ಟಿಸುತ್ತಿರುತ್ತದೆ. ಅಖಿಲೇಶ್ ಈ ರೀತಿಯ ಒಂದು ಸಮಾಜದಿಂದಲೇ ವಾಸ್ತವಗಳಿಗೆ ವಿಮಖನಾಗಿ, ರೌಡಿಶೀಟರ್ ಹಣೆಪಟ್ಟಿ ಗಳಿಸಿ, ಆನಂತರ ಕೊಳಗೇರಿ ಮಕ್ಕಳಿಗೆ ಫುಟ್ಬಾಲ್ ಕಲಿಸುತ್ತಲೇ ಅಂತರ್ರಾಷ್ಟ್ರೀಯ ಕ್ರೀಡಾಪಟುವಾಗಿ ಹೊರಹೊಮ್ಮುವ ಹಾದಿಯನ್ನು ಮಣಿಕಾಂತ್ ಮನಮುಟ್ಟುವಂತೆ ತೆರೆದಿಡುತ್ತಾರೆ. ಆಧುನಿಕ ಜೀವನ ವಿಧಾನದ ವಿಭಕ್ತ ಕುಟುಂಬಗಳಲ್ಲಿ ಮನುಜ ಸಂಬಂಧಗಳ ಸೂಕ್ಷ್ಮತೆಯೇ ಶಿಥಿಲವಾಗುತ್ತಿರುವ ಹೊತ್ತಿನಲ್ಲಿ ಜೀವನದ ಕೆಲವು ಸಣ್ಣಪುಟ್ಟ ಪ್ರಸಂಗಗಳು ಹೇಗೆ ಮನಃಪರಿವರ್ತನೆಗೆ ಕಾರಣವಾಗುತ್ತದೆ ಎನ್ನುವುದನ್ನು ‘ಚಪ್ಪಲಿಗೆ ಚುಚ್ಚಿದ ಪಿನ್...’ ಬರಹದಲ್ಲಿ ಮಣಿಕಾಂತ್ ಸಂವೇದನಾತ್ಮಕವಾಗಿ ಪರಿಚಯಿಸುತ್ತಾರೆ. ನಾವು ಕೆಟ್ಟುಹೋಗಿದೆ ಎಂದು ಪರಿಭಾವಿಸುವ ಸಮಾಜದ ಗರ್ಭದಲ್ಲೇ ಕೆಲವು ಆದರ್ಶಗಳೂ ಅಡಗಿರುವುದನ್ನು ‘‘ಕಷ್ಟ ಆಗುತ್ತೆ ಮಗೂ...’’ ಕಥನದಲ್ಲೂ ಗುರುತಿಸಬಹುದು. ಸಹಾನುಭೂತಿ, ಸೂಕ್ಷ್ಮ ಸಂವೇದನೆಗೆ ಆರ್ಥಿಕ ಸ್ಥಿತಿಗತಿಗಳು ಮಾಪಕಗಳಾಗುವುದಿಲ್ಲ ಎನ್ನುವುದನ್ನು ಈ ಅಧ್ಯಾಯಗಳು ದಾಖಲಿಸುತ್ತವೆ. ಸಾಮಾನ್ಯವಾಗಿ ಅಂತಃಕರಣ, ಅನುಕಂಪ ಮುಂತಾದ ಔದಾತ್ಯಗಳು ಜೀವನಾನುಭವದ ನೆಲೆಯಲ್ಲಿ ಮೂಡುತ್ತವೆ. ಮತ್ತೊಂದು ಜೀವದ ನೋವಿಗೆ ಸ್ಪಂದಿಸುವ ಮನೋಭಾವ, ನೋವುಂಡ ಜೀವದಲ್ಲೇ ಸ್ಫುರಿಸುತ್ತದೆ ಎನ್ನುವುದು ಪಾರಂಪರಿಕ ತಿಳುವಳಿಕೆ. ಇದಕ್ಕೆ ಅಪವಾದವೇನೋ ಎನ್ನುವಂತೆ ನಮಗೆ ನಿಹಾರಿಕಾ ಎಂಬ ಬಾಲಕಿ ಎದುರಾಗುತ್ತಾಳೆ. ‘ನಿಹಾರಿಕೆಯ ಒಡಲಲ್ಲಿತ್ತು...’ ಲೇಖನ ಓದುಗರಲ್ಲಿ ಕುತೂಹಲ ಹುಟ್ಟಿಸುತ್ತಲೇ ಕೊನೆಯಲ್ಲಿ ಕಣ್ಣಂಚನ್ನು ಒದ್ದೆ ಮಾಡುತ್ತದೆ. ಒಬ್ಬ ಬಾಲಕಿ ತನ್ನ ಸಹಪಾಠಿಯ ನೋವಿಗೆ ಸಾಂತ್ವನ ಹೇಳಲು ತನ್ನ ತಲೆಗೂದಲನ್ನೇ ತ್ಯಾಗಮಾಡುವುದು ಊಹಿಸಲೂ ಸಾಧ್ಯವಾಗದ ಒಂದು ಪ್ರಸಂಗ. ಮಣಿಕಾಂತ್ ಅವರ ಸೌಹಿತ್ಯಿಕ ಸೂಕ್ಷ್ಮತೆಗೆ ಈ ಲೇಖನ ಸಾಕ್ಷಿಯಾಗಿ ನಿಲ್ಲುತ್ತದೆ. ಈ ಕೃತಿಯಲ್ಲಿ ವರ್ತಮಾನದ ಕ್ರೀಡಾ ಜಗತ್ತನ್ನು ಜಾಗೃತಗೊಳಿಸುವ ಕಥನ ಎಂದರೆ ‘ಜಿದ್ದಾಜಿದ್ದಿನ ಅಂಗಳದಲ್ಲಿ...’. ಇಬ್ಬರು ಜಗದ್ವಿಖ್ಯಾತ ಆಟಗಾರರ ನಡುವಿನ ಬಾಂಧವ್ಯವನ್ನು ಕುರಿತ ಈ ಲೇಖನ ಮಾರುಕಟ್ಟೆಮಯವಾಗಿರುವ ಕ್ರಿಕೆಟ್ ಎಂಬ ಸುಂದರ ಕ್ರೀಡೆಯನ್ನು ಅಣಕಿಸುವಂತಿದೆ. ಉಭಯ ತಂಡಗಳ ಆಟಗಾರರು ಹಸ್ತಲಾಘವ ನೀಡಲು ನಿರಾಕರಿಸುತ್ತಿರುವ ಈ ಹೊತ್ತಿನಲ್ಲಿ ಜೆಸ್ಸಿ ಓವನ್ಸ್ ಮತ್ತು ಲುಸ್ಸಿ ಲಾಂಜ್ ಎಂಬ ಭಿನ್ನ ದೇಶಗಳ ಒಲಂಪಿಕ್ ಪಟುಗಳ ನಡುವೆ ಏರ್ಪಡುವ ಬಾಂಧವ್ಯ, ಮಾನವ ಸಮಾಜವನ್ನು ವಿಭಜಿಸುತ್ತಲೇ ಇರುವ ಎಲ್ಲ ದುಷ್ಟ ಭಾವನೆಗಳನ್ನೂ ಒಮ್ಮೆಲೇ ಕೆಡವಿಹಾಕಿಬಿಡುತ್ತದೆ. ಮನೆಮನೆಗೆ ಪೇಪರ್ ಹಾಕುವ ಹುಡುಗ ಅತ್ಯುನ್ನತ ಔದ್ಯಮಿಕ ಪದವಿಗೇರುವ ‘ಸುದ್ದಿ ಹಂಚುತ್ತಿದ್ದ ಶಿವೂ...’, ಒಂದು ಅನಾಥ ಮಗುವಿಗೆ ತನ್ನ ಜನ್ಮವೃತ್ತಾಂತ ತಿಳಿಯುವುದು ತಡವಾದರೂ ತಾಯಿ ಮಮತೆಯನ್ನು ತನ್ನ ಒಡಲಲ್ಲಿಟ್ಟುಕೊಂಡು ಬದುಕುವ ‘ರಾಜನ ಕಥೆ’, ನೈಜ ಮನುಜ ಪ್ರೀತಿಗೆ ಬೇಕಿರುವುದು ಮಾನವೀಯ ಗುಣ ಮತ್ತು ಪರಸ್ಪರ ಸ್ಪಂದಿಸುವ ಔದಾತ್ಯ ಮಾತ್ರ ಎನ್ನುವುದನ್ನು ಹೃದಯಂಗಮವಾಗಿ ನಿರೂಪಿಸುವ ‘ಒಂದು ಅಮರ ಪ್ರೇಮದ ಕಥೆ...’, ದೇಶಗಳನ್ನು ವಿಭಜಿಸುವ ಕೃತ ಗಡಿರೇಖೆಗಳು ಮನುಷ್ಯರ ನಡುವೆ ಗೋಡೆ ಕಟ್ಟುವುದಿಲ್ಲ ಎಂದು ಮನಮುಟ್ಟುವಂತೆ ಹೇಳುವ ‘ಆಲಿಸಿರಿ...ಮಹಮದ್ ಅಲಿ...’ ಕಥನ ಇವೆಲ್ಲವೂ ಸಹ ‘ನವಿಲುಗರಿ’ಯಲ್ಲಿ ನಳನಳಿಸುವ ಜೀವನಗಾಥೆಗಳು. ಪತ್ರಿಕೋದ್ಯಮದಲ್ಲಿದ್ದು, ಸದಾ ಜನರ ಒಡನಾಟದಲ್ಲಿರುವ ಲೇಖಕ ಎ.ಆರ್. ಮಣಿಕಾಂತ್ ತಮ್ಮ ‘ನವಿಲುಗರಿ’ ಕೃತಿಯ ಮೂಲಕ ಭವಿಷ್ಯದ ತಲೆಮಾರನ್ನು, ವರ್ತಮಾನದ ಅಸೂಕ್ಷ್ಮ ಮನಸ್ಸುಗಳನ್ನು ಜಾಗೃತಗೊಳಿಸುವಂತಹ ವಿಭಿನ್ನ ಆಯಾಮಗಳ ವ್ಯಕ್ತಿ ಜೀವನವನ್ನು ಕನ್ನಡದ ಓದುಗರ ಮುಂದಿಟ್ಟಿದ್ದಾರೆ. ಮಣಿಕಾಂತ್ ಅವರ ಅದ್ಭುತ ಕಥನ ಶೈಲಿ ಮತ್ತು ಸಂವೇದನಾಶೀಲ ಭಾಷೆ, ಈ ಪುಸ್ತಕವನ್ನು ಓದಿ ಕಪಾಟಿನಲ್ಲಿಟ್ಟರೂ ಸಹ ಅದರ ಅಂತಃಸತ್ವ ಮತ್ತು ಅಂತರಾಳವನ್ನು ಹೃದಯದಲ್ಲೇ ಇಟ್ಟುಕೊಳ್ಳುವಂತೆ ಪ್ರೇರೇಪಿಸುತ್ತದೆ. ನೀಲಿಮಾ ಪ್ರಕಾಶನದ ಈ ಕೃತಿ ಜೀವಪ್ರೀತಿಯನ್ನು ಇಮ್ಮಡಿಗೊಳಿಸುವ ಒಂದು ಸಾಹಿತ್ಯಿಕ ಫಸಲು.

ವಾರ್ತಾ ಭಾರತಿ 8 Feb 2026 3:13 pm

ಹಟ್ಟಿ ಚಿನ್ನದ ಗಣಿಗೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಭೇಟಿ

ರಾಯಚೂರು: ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ಹಟ್ಟಿ ಚಿನ್ನದ ಗಣಿಗೆ (HGML) ಭಾನುವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ವಿಧಾನ ಪರಿಷತ್ ಸದಸ್ಯ ಶರಣೇಗೌಡ ಪಾಟೀಲ್ ಬಯ್ಯಾಪುರ ಅವರ ಪುತ್ರನ ವಿವಾಹ ಕಾರ್ಯಕ್ರಮದ ನಿಮಿತ್ತ ಲಿಂಗಸುಗೂರು ತಾಲೂಕಿಗೆ ಆಗಮಿಸಿದ್ದ ಅವರು, ಈ ಸಂದರ್ಭದಲ್ಲಿ ಹಟ್ಟಿ ಚಿನ್ನದ ಗಣಿ ಕಂಪನಿಗೆ ಭೇಟಿ ನೀಡಿದರು. ಅವರು ಕಾರ್ಮಿಕರೊಂದಿಗೆ ಕೆಲಕಾಲ ಸಮಾಲೋಚನೆ ನಡೆಸಿದ್ದು, ಕಾರ್ಮಿಕ ಮುಖಂಡರು ಗಣಿಗೆ ಸಂಬಂಧಿಸಿದ ಕೆಲ ಸಮಸ್ಯೆಗಳ ಬಗ್ಗೆ ಗಮನ ಸೆಳೆದಿದ್ದಾರೆ ಎನ್ನಲಾಗಿದೆ. ಈ ಸಂದರ್ಭದಲ್ಲಿ ಸಚಿವ ಶಿವರಾಜ್ ತಂಗಡಗಿ, ಶಾಸಕ, ಹಟ್ಟಿ ಚಿನ್ನದ ಗಣಿ ಕಂಪನಿಯ ಅಧ್ಯಕ್ಷ ಜೆ.ಟಿ. ಪಾಟೀಲ್, ವ್ಯವಸ್ಥಾಪಕ ನಿರ್ದೇಶಕಿ ಶಿಲ್ಪಾ, ಎಂಎಲ್‌ಸಿ ಬಸನಗೌಡ ಬಾದರ್ಲಿ, ಮಾಜಿ ಶಾಸಕ ಡಿ.ಎಸ್. ಹುಲಗೇರಿ ಸೇರಿದಂತೆ ಇತರರು ಉಪಸ್ಥಿತರಿದ್ದರು. ಇದೇ ವೇಳೆ ಹಟ್ಟಿ ನಾಗರಿಕ ವೇದಿಕೆಯಿಂದ ಉಪ ಮುಖ್ಯಮಂತ್ರಿ ಅವರಿಗೆ ಮನವಿ ಸಲ್ಲಿಸಿ, ಹಟ್ಟಿ ಪಟ್ಟಣವನ್ನು ತಾಲೂಕು ಕೇಂದ್ರವನ್ನಾಗಿ ಘೋಷಿಸಬೇಕೆಂದು ಮನವಿ ಮಾಡಲಾಯಿತು.

ವಾರ್ತಾ ಭಾರತಿ 8 Feb 2026 3:10 pm

ವಿಸ್ಮಯ ಲೋಕ ಅನಾವರಣಗೊಳಿಸಿದ ಕೃಷಿ ಮೇಳ

ಕೃಷಿ ಮೇಳದಲ್ಲಿ ಕೀಟಗಳ ಭಕ್ಷ್ಯ!

ವಾರ್ತಾ ಭಾರತಿ 8 Feb 2026 3:04 pm

KSRTC ಸಂಸ್ಥೆ ಯೂ-ಟರ್ನ್: ಬಸ್ ಮೇಲಿನ ಜಾಹೀರಾತು ಕಿತ್ತರೆ ಬೀಳುತ್ತೆ ಎಫ್‌ಐಆರ್

ಬೆಂಗಳೂರು: ಬೆಂಗಳೂರು ಸೇರಿದಂತೆ ರಾಜ್ಯದ ಸಾರಿಗೆ ಬಸ್‌ಗಳ ಹೊರ ಭಾಗದಲ್ಲಿ ಅಳವಡಿಸಿದ್ದ ತಂಬಾಕು ಉತ್ಪನ್ನಗಳ ಜಾಹೀರಾತು ನಿರ್ಬಂಧಿಸಿದ್ದ ಸರ್ಕಾರ ತೆರವಿಗೆ ಎರಡು ವಾರಗಳ ಗಡುವು ನೀಡಿತ್ತು. ಇದೀಗ ನಿಯಮಗಳನ್ವಯ ಜಾಹೀರಾತು ಅಳವಡಿಕೆಯು ಸಾರಿಗೇತರ ಆದಾಯ ಮೂಲವಾಗಿದೆ. ಬಸ್ಸುಗಳಲ್ಲಿನ ಜಾಹೀರಾತುಗಳನ್ನು ಅಕ್ರಮವಾಗಿ ತೆರವುಗೊಳಿಸಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಮುಂದಾಗಿದೆ. ಈ ಮೂಲಕ ಸರ್ಕಾರ ಉಲ್ಟಾ ಹೊಡೆಯಿತಾ ಎಂಬ

ಒನ್ ಇ೦ಡಿಯ 8 Feb 2026 3:01 pm

ಚಡಚಣ ತಾಲೂಕಿನ 13 ಗ್ರಾಪಂಗಳ ಸದಸ್ಯರ ಅವಧಿ ನಾಳೆ ಮುಕ್ತಾಯ : ಗ್ರಾ.ಪಂ.ಗೆ ಆಡಳಿತಾಧಿಕಾರಿ ನೇಮಕ..!

ಶಿವಾನಂದ ಶಿವಶರಣ ಚಡಚಣ : ಗ್ರಾಮಗಳ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ನಿರ್ವವಹಿಸುತ್ತಿರುವ ಗ್ರಾಮ ಪಂಚಾಯತ್ ಚುನಾಯಿತ ಪ್ರತಿನಿಧಿಗಳ ಅಧಿಕಾರಾವಧಿ ಮುಕ್ತಾಯ ಸನ್ನಿಹಿತವಾಗಿದೆ. ಗ್ರಾಪಂನಲ್ಲಿ ಪಿಡಿಒ,ಆಡಳಿತಾಧಿಕಾರಿ ಆಡಳಿತ ಶುರವಾಗಲಿದೆ. ಇನ್ನೊಂದಡೆ ಚುನಾವಣೆ ಚಟುವಟಿಕೆಗಳು ಕೂಡ ಗರಿಗೆದರಿವೆ. 2020-21ರಲ್ಲಿ ಅಸ್ತಿತ್ವಕ್ಕೆ ಬಂದಿದ್ದ ಗ್ರಾಮ ಪಂಚಾಯತ್‌ಗಳ ಅವಧಿ ಮುಗಿಯುತ್ತಿದ್ದು, ಚಡಚಣ ತಾಲೂಕು ವ್ಯಾಪ್ತಿಯಲ್ಲಿ ಒಳಪಡುವ 13 ಗ್ರಾಪಂಗಳ ಒಟ್ಟು 271 ಸದಸ್ಯರ ಅಧಿಕಾರಾವಧಿ ಫೆ.3ರಿಂದ ಫೆ.9ರಂದು ಮುಕ್ತಾಯಗೊಳ್ಳುತ್ತಿದ್ದು, ಸರಕಾರ ಆಡಳಿತಾಧಿಕಾರಿಗಳ ನೇಮಕ ಮಾಡಿ ಆದೇಶ ಹೊರಡಿಸಿದೆ. ರಾಜ್ಯ ಸರಕಾರ ಎಪ್ರಿಲ್-ಮೇ ತಿಂಗಳೊಳಗೆ ಚುನಾವಣೆ ನಡೆಸುವ ಚಿಂತನೆ ಮಾಡುತ್ತಿದೆ. ನೂತನ ಗ್ರಾಪಂ ಪ್ರತಿನಿಧಿಗಳು ಆಯ್ಕೆಯಾಗುವವರೆಗೆ ಆಡಳಿತಾಧಿಕಾರಿಗಳಿಂದ ಸ್ಥಳೀಯ ಸಮಸ್ಯೆಗಳಿಗೆ ಸೂಕ್ತ ಸ್ಪಂದನೆ ಸಿಗುತ್ತಿಲ್ಲ, ವಾರ್ಡ್ ಪ್ರತಿನಿಧಿಗಳು ಇಲ್ಲದೆ ಮೂಲ ಸೌಕರ್ಯಗಳಾದ ಕುಡಿಯುವ ನೀರು, ಸ್ವಚ್ಛತೆ, ಸೇರಿದಂತೆ ದೈನಂದಿನ ಕೆಲಸಗಳು ನನೆಗುದಿಗೆ ಬೀಳಲಿದೆಯೇ ಎಂಬುದು ಸಾರ್ವಜನಿಕರ ಆತಂಕವಾಗಿದೆ. ಇನ್ನೇನು ಈಗಿರುವ ಗ್ರಾಪಂ ಸದಸ್ಯರ ಅವಧಿ ಮುಗಿಯುತ್ತಿದಂತೆ. ಊರು ಕೇರಿಗಳ ಕಟ್ಟೆಗಳ ಮೇಲೆ ಚುನಾವಣೆ ಮಾತುಗಳು ಶುರುವಾಗಿವೆ. ವಾರ್ಡ್‌ಗಳಲ್ಲಿ ಆಕಾಂಕ್ಷಿಗಳ ಮುಖದಲ್ಲಿ ನಗು ಎದು ಕಾಣುತ್ತಿದ್ದೆ. ಮತದಾರರ ಓಲೈಕೆಗೆ ಇನ್ನಿಲ್ಲದ ಕಸರತ್ತಿನ ಚಟುವಟಿಕೆಗಳು ಶುರುವಾಗಿವೆ. ಆಡಳಿತಾಧಿಕಾರಿಗಳ ನೇಮಕ: ತಾಲೂಕಿನ 13 ಗ್ರಾಮ ಪಂಚಾಯತ್‌ಗಳ ಚುನಾಯಿತ ಪ್ರತಿನಿಧಿಗಳ 5 ವರ್ಷದ ಅಧಿಕಾರಾವಧಿ ಫೆ. 9ರಂದು ಮುಕ್ತಾಯಗೊಳ್ಳಲಿದ್ದು, ಆಡಳಿತಾಧಿಕಾರಿಗಳನ್ನು ನೇಮಕ ಮಾಡಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ. ಗ್ರಾಪಂ ಆಡಳಿತಾಧಿರಿಗಳು: ನಿವರಗಿ, ಹಲಸಂಗಿ, ಲೋಣಿ ಬಿ.ಕೆ. ಗ್ರಾಪಂಗಳಿಗೆ ಶಿವದತ್ತ ಕೊಟ್ಟಲಗಿ, ರೇವತಗಾಂವ, ಕೇರೂರ, ದೇವರ ನಿಂಬರಗಿ ಗ್ರಾಪಂಗಳಿಗೆ ಗುರುಮೂರ್ತಿ ಬಸರಗಿ, ಹತ್ತಳ್ಳಿ - ಸಾಹೇಬಗೌಡ ಜುಂಜರವಾಡಿ, ಇಂಚೆಗೇರಿ, ಬರಡೋಲ, ಜಿಗಜೇವಣಗಿ ಗ್ರಾಪಂಗಳಿಗೆ ಡಾ.ಎಂ.ಎಸ್.ಗಂಗನಳ್ಳಿ, ಧೂಳಖೇಡ, ನಂದರಗಿ, ಉಮರಜ ಗ್ರಾಪಂಗಳಿಗೆ ಚಿದಾನಂದ ಕಟ್ಟಿಮನಿಯವರನ್ನು ಆಡಳಿತಾಧಿಕಾರಿಗಳನ್ನಾಗಿ ನೇಮಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ. ತಾ ಲೂಕು ಮತ್ತು ಜಿಪಂ ಇಲ್ಲದೇ ಹಲವು ವರ್ಷ ಕಳೆದಿವೆ. ಗ್ರಾಮಗಳ ಆಧಾರ ಸ್ಥಂಬವಾಗಿರುವ ಗ್ರಾಪಂಗೆ ಅದೇ ರೀತಿ ವಿಳಂಬಕ್ಕೆ ಅವಕಾಶ ನೀಡದೇ ಸರಕಾರ ಅದಷ್ಟು ಬೇಗನೆ ಅಧಿಸೂಚನೆ ಹೊರಡಿಸಿ, ನಿಯಮಿತ ಅವಧಿಯಲ್ಲಿ ಚುನಾವಣೆ ನಡೆಸುವ ಮೂಲಕ ನೂತನ ಜನಪ್ರತಿನಿಧಿಗಳ ಆಡಳಿತಕ್ಕೆ ಅವಕಾಶ ಕಲ್ಪಿಸಬೇಕು. -ಸುರೇಶಗೌಡ ಪಾಟೀಲ, ಗ್ರಾಪಂ ಸದಸ್ಯ ಧೂಳಖೇಡ ಸ ರಕಾರ ಗ್ರಾಪಂ ಆಡಳಿತಾಧಿಕಾರಿಗಳ ಅಧಿಕಾರ ಮತ್ತು ಕರ್ತವ್ಯಗಳ ಕುರಿತು ಈಗಾಗಲೇ ಸುತ್ತೋಲೆ ಹೊರಡಿಸಿದೆ, ಗ್ರಾಪಂ ಪಿಡಿಒ ಮತ್ತು ನೇಮಕ ಮಾಡಿದ ಅಧಿಕಾರಿಗಳ ಸಭೆ ನಡೆಸಲಾಗುವುದು. ಮುಂದಿನ ಜನಪ್ರತಿನಿಧಿಗಳ ಆಯ್ಕೆಯಾಗುವವರಗೆ ಗ್ರಾಮಗಳಲ್ಲಿ ಕುಡಿಯುವ ನೀರು, ಸ್ವಚ್ಛತೆ, ವಿದ್ಯುತ್, ಸೇರಿದಂತೆ ಮೂಲ ಸೌಕರ್ಯಗಳ ಕೊರತೆ ಆಗದಂತೆ ಕ್ರಮಕೈಗೊಳ್ಳಲಾಗುವುದು. -ಸಂಜಯ ಖಡಗೇಕರ, ಇಒ ತಾಪಂ ಚಡಚಣ

ವಾರ್ತಾ ಭಾರತಿ 8 Feb 2026 2:55 pm

ʼಚಕ್ರಮೊಗ್ಗುʼ : ಇದನ್ನು ಸೇರಿಸಿದರೆ ಚಹಾಕೆ ʼಫೈವ್‌ಸ್ಟಾರ್ ಟಚ್ʼ... ಇದರಲ್ಲಿದೆ ದಮ್ ಬಿರಿಯಾನಿ ಘಮದ ರಹಸ್ಯ!

ದಮ್ ಬಿರಿಯಾನಿ ಪಾತ್ರೆಯ ಮುಚ್ಚಳ ತೆರೆದಾಗ ಮೂಗಿಗೆ ಅಡರುವ ಘಮವಿದೆಯಲ್ಲಾ...! ಆ ಸುವಾಸನೆಯ ಹಿಂದಿರುವ ಮಾಂತ್ರಿಕ ಪದಾರ್ಥದ ಹೆಸರೇ ಚಕ್ರಮೊಗ್ಗು! ಇಂಗ್ಲಿಷ್‌ನಲ್ಲಿ ಸ್ಟಾರ್ ಅನಿಸ್, ಮಲಯಾಳಂನಲ್ಲಿ ತಕ್ಕೋಲಂ ಎಂದು ಕರೆಯಲ್ಪಡುವ ಈ ಸುಗಂಧ ವ್ಯಂಜನ ಕೇವಲ ಒಂದು ಮಸಾಲೆ ಪದಾರ್ಥವಲ್ಲ. ಬದಲಾಗಿ ಭೋಜನಕ್ಕೆ ರಾಜ ಗಾಂಭೀರ್ಯ ನೀಡುವ ಅಮೂಲ್ಯ ವಸ್ತು ಎಂದರೆ ಅತಿಶಯೋಕ್ತಿಯಾಗಲಾರದು. ►‌ ಎಂಟು ಎಸಳುಗಳ ಸುಗಂಧ...! ಚೈನೀಸ್ ಪಾಕ ಪದ್ಧತಿಯಲ್ಲಿ ಬಳಕೆಯಾಗುತ್ತಿದ್ದ ಚಕ್ರಮೊಗ್ಗು ಅನಂತರ ಜಾಗತಿಕವಾಗಿ ಗುರುತಿಸಿಕೊಂಡಿತು. ಎಂಟು ಎಸಳುಗಳ ಇದರ ನಕ್ಷತ್ರಾಕಾರದ ರೂಪ ಇದನ್ನು ಇತರ ಸುಗಂಧ ಮಸಾಲೆ ಪದಾರ್ಥಗಳಿಗಿಂತ ಭಿನ್ನವಾಗಿಸಿದೆ. ತಿಳಿಯಾದ ಸಿಹಿಯ ಜೊತೆಗೆ ತೀಕ್ಷ್ಣವಾದ ಸುಗಂಧ ಚಕ್ರಮೊಗ್ಗಿನ ವಿಶೇಷತೆಯಾಗಿದೆ. ಬಿರಿಯಾನಿ, ಮಾಂಸದ ಅಡುಗೆ, ಪಲಾವ್ ಇತ್ಯಾದಿಗಳಿಗೆ ಒಂದು ರಾಯಲ್ ಟಚ್ ನೀಡಲು ಇದರ ಒಂದು ಸಣ್ಣ ತುಂಡು ಹಾಕಿದರೆ ಸಾಕಾಗುತ್ತದೆ. ►ಆಡಂಬರ ಔತಣಕೂಟಗಳ ನಕ್ಷತ್ರ... ಪ್ರಾಚೀನ ಕಾಲದಿಂದಲೂ ತಕ್ಕೋಲಂ ರಾಜಮನೆತನದ ಆಡಂಬರ ಔತಣಕೂಟಗಳ ಅನಿವಾರ್ಯ ಭಾಗವಾಗಿದೆ. ಮೊಘಲಾಯ್ ಭಕ್ಷ್ಯಗಳು, ಲಖ್ನವಿ ಬಿರಿಯಾನಿಗಳಲ್ಲಿ ತಕ್ಕೋಲ ಸೇರಿಸುವುದರಿಂದ ಖಾದ್ಯದ ರುಚಿ ಹೆಚ್ಚಿಸಲು ಸಹಾಯ ಮಾಡುತ್ತದೆ. ಮೇಲೋಗರಗಳಲ್ಲಿ ಮಾತ್ರವಲ್ಲ, ವಿದೇಶಗಳಲ್ಲಿ ತಕ್ಕೋಲಂ, ಕೇಕ್‌ಗಳು, ಜಾಮ್‌ಗಳು ಹಣ್ಣಿನ ಸಲಾಡ್‌ಗಳಲ್ಲಿ ಒಂದು ಸರ್ಪೈಸ್ ಇಂಗ್ರೇಡಿಯಂಟಾಗಿ ಬಳಸಲಾಗುತ್ತದೆ. ಕೆಲವೆಡೆ ಚಹಾ, ಕಾಫಿಗಳಲ್ಲಿಯೂ ಇದನ್ನು ಸೇರಿಸಲಾಗುತ್ತದೆ. ► ರುಚಿಯಲ್ಲಿ ಮಾತ್ರವಲ್ಲ, ಗುಣದಲ್ಲಿಯೂ ಸ್ಟಾರ್... ಅಡುಗೆ ಮನೆಯ ಆಡಂಬರ ವಸ್ತು ಎಂಬುದರಾಚೆಗೆ ಚಕ್ರಮೊಗ್ಗಿಗೆ ಮಿಗಿಲಾದ ಆರೋಗ್ಯ ಗುಣಗಳಿವೆ. ಊಟದ ಬಳಿಕ ಇದನ್ನು ಸೇರಿಸಿದ ನೀರನ್ನು ಕುಡಿಯುವುದು ಜೀರ್ಣಕ್ರಿಯೆ ಸುಲಭವಾಗಲು ನೆರವಾಗುತ್ತದೆ. ಅಷ್ಟೇ ಅಲ್ಲದೆ ವೈರಲ್ ಜ್ವರದ ವಿರುದ್ಧ ಹೋರಾಡಲು ಸಹಾಯ ಮಾಡುವ ಶಿಕಿಮಿಕ್ ಆಸಿಡ್ ಚಕ್ರಮೊಗ್ಗಿನಲ್ಲಿ ಧಾರಾಳವಿದೆ. ವಿವಿಧ ಕಫದ ಸಿರಪ್‌ಗಳಲ್ಲಿ ಇದರ ಅಂಶವನ್ನು ಉಪಯೋಗಿಸಲಾಗುತ್ತಿದೆ. ಅದೇ ರೀತಿ, ಬಾಯಿಯ ದುರ್ಗಂಧ ನಿವಾರಣೆಗಾಗಿ ಬಹಳ ಹಿಂದಿನಿಂದಲೂ ತಕ್ಕೋಲವನ್ನು ಬಳಸಲಾಗುತ್ತಿದೆ. ► ಚಕ್ರಮೊಗ್ಗುವಿನ ಸಂಗ್ರಹ ಹೇಗೆ? ಚಕ್ರಮೊಗ್ಗಿನ ಸುಗಂಧ ಮತ್ತು ಗುಣಗಳು ದೀರ್ಘಕಾಲ ಉಳಿಯಲು ಅದನ್ನು ಸಂಗ್ರಹಿಸಿಡುವ ರೀತಿಯಲ್ಲೂ ಶ್ರದ್ಧೆ ಅಗತ್ಯ. ಗಾಳಿಯಾಡದ ಗಾಜಿನ ಜಾಡಿಯಲ್ಲಿ ಅಥವಾ ಬಾಟಲಿಯಲ್ಲಿಟ್ಟು ನೇರವಾಗಿ ಬೆಳಕು ಬೀರದ ಜಾಗದಲ್ಲಿಡಬೇಕು. ತೇವಾಂಶ ಸ್ಪರ್ಶವಾದರೆ ಇದರ ಸುಗಂಧ ಬೇಗನೆ ನಷ್ಟವಾಗುತ್ತದೆ. ತಕ್ಕೋಲವನ್ನು ಇಡಿಯಾಗಿಟ್ಟರೆ ಒಂದು ವರ್ಷದ ತನಕ ಹಾಳಾಗದಂತೆ ನೋಡಿಕೊಳ್ಳಬಹುದು. ಪುಡಿಮಾಡಿದ ಬಳಿಕ ಇದರ ಸುಗಂಧ ಕೂಡಲೆ ಮಾಯವಾಗುವುದರಿಂದ ಅಗತ್ಯಕ್ಕೆ ಬೇಕಾದಷ್ಟು ಮಾತ್ರ ಆಗಾಗ ಪುಡಿಮಾಡಿ ಉಪಯೋಗಿಸುವುದು ಒಳ್ಳೆಯದು. ► ಚಕ್ರಮೊಗ್ಗಿನಿಂದ ರಾಯಲ್ ಮಸಾಲೆ ಚಹಾ! ಸಾಮಾನ್ಯ ಚಹಾವನ್ನು ಒಂದು ಐಷಾರಾಮಿ ಪಾನೀಯವಾಗಿ ಪರಿವರ್ತಿಸಲು ಚಕ್ರಮೊಗ್ಗಿಗೆ ಸಾಧ್ಯವಿದೆ. ಮನೆಗೆ ಅತಿಥಿಗಳು ಬಂದಾಗ ಇದನ್ನು ಪರೀಕ್ಷಿಸಿ ನೋಡಬಹುದು. - ಬೇಕಾಗುವ ಪದಾರ್ಥಗಳು ನೀರು- ಒಂದು ಕಪ್ ಚಹಾಹುಡಿ- ಒಂದು ಟೇಬಲ್ ಸ್ಪೂನ್ ಸಕ್ಕರೆ-ರುಚಿಗೆ ತಕ್ಕಷ್ಟು ಚಕ್ರಮೊಗ್ಗು-ಒಂದು ಸಣ್ಣ ಎಸಳು ಏಲಕ್ಕಿ-1 ಸಣ್ಣ ತುಂಡು ಜಜ್ಜಿದ ಶುಂಠಿ ತಯಾರಿಸುವ ವಿಧಾನ: ಒಂದು ಪಾತ್ರೆಯಲ್ಲಿ ನೀರು ಹಾಕಿ ಕುದಿಸಬೇಕು. ಅದಕ್ಕೆ ಜಜ್ಜಿದ ಶುಂಠಿ, ಏಲಕ್ಕಿ, ಚಕ್ರಮೊಗ್ಗಿನ ಎಸಳು ಸೇರಿಸಬೇಕು. ನೀರು ಚೆನ್ನಾಗಿ ಕುದಿದು ಮಸಾಲೆಗಳ ಅಂಶ ನೀರಿಗೆ ಹರಡಿದಾಗ ಚಹಾಹುಡಿ ಸೇರಿಸಬೇಕು. ಚಹಾ ಚೆನ್ನಾಗಿ ಕುದಿಯಲು ಆರಂಭಿಸಿದ ಬಳಿಕ ಹಾಲು ಸೇರಿಸಿ ಮತ್ತೊಮ್ಮೆ ಕುದಿಸಬೇಕು. ರುಚಿಗೆ ತಕ್ಕಷ್ಟು ಸಕ್ಕರೆ ಸೇರಿಸಿ ಸೋಸಿ ತೆಗೆಯಬೇಕು. ಕೃಪೆ: manoramaonline.com

ವಾರ್ತಾ ಭಾರತಿ 8 Feb 2026 2:52 pm

ಸಿರ್ಸಿ | ಕಾರು ಅಪಘಾತ: ಆರು ವರ್ಷದ ಬಾಲಕ ಮೃತ್ಯು, ನಾಲ್ವರು ಗಂಭೀರ

ಭಟ್ಕಳ: ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಉರುಳಿಬಿದ್ದ ಪರಿಣಾಮ ಆರು ವರ್ಷದ ಬಾಲಕ ಸ್ಥಳದಲ್ಲೇ ಮೃತಪಟ್ಟು, ನಾಲ್ವರು ಗಾಯಗೊಂಡ ಘಟನೆ ಸಿರ್ಸಿ ಸಮೀಪದ ಸಿರ್ಸಿಮಕ್ಕಿ ಬಳಿ ಶನಿವಾರ ನಡೆದಿದೆ. ಮೃತ ಬಾಲಕನನ್ನು ಸಿರ್ಸಿಯ ಕಸ್ತೂರುಬಾ ನಗರದ ನಿವಾಸಿ ಮುಹಮ್ಮದ್ ಅಲಿ ಸೌದಾಗರ್ ಎಂಬವರ ಪುತ್ರ ಅಮಾನುಲ್ಲಾ ಸೌದಾಗರ್ ಎಂದು ಗುರುತಿಸಲಾಗಿದೆ. ಮುಹಮ್ಮದ್ ಅಲಿ ಪತ್ನಿ, ಪುತ್ರ ಸೇರಿದಂತೆ ಐವರು ಕುಟುಂಬಸ್ಥರೊಂದಿಗೆ ಪ್ರಯಾಣಿಸುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ. ಗಾಯಗೊಂಡವರಲ್ಲಿ ಮುಹಮ್ಮದ್ ಅಲಿ ಸೌದಾಗರ್ ಹಾಗೂ ತಾಯಿ ಶಿರಿನ್ ಬಾನು ಸೇರಿದ್ದು, ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಶಿಕ್ಷಕ ದಂಪತಿಯಾಗಿರುವ ಮುಹಮ್ಮದ್ ಅಲಿ ಮತ್ತು ಶಿರಿನ್ ಬಾನು ಅವರು ಶಾಲಾ ರಜೆಯ ಹಿನ್ನೆಲೆಯಲ್ಲಿ ಕುಟುಂಬ ಸಮೇತ ಶಿರೂರಿನಿಂದ ಸಿರ್ಸಿಗೆ ತೆರಳುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ಅಫಘಾತದ ಬಗ್ಗೆ ಸಿರ್ಸಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಾರ್ತಾ ಭಾರತಿ 8 Feb 2026 2:49 pm

ಭಾರತ-ಅಮೆರಿಕ ವ್ಯಾಪಾರ ಒಪ್ಪಂದದಿಂದ ಕೃಷಿ ವಲಯದ ಮೇಲೆ ಏನು ಪರಿಣಾಮ ಬೀರಲಿದೆ? ಇಲ್ಲಿದೆ ಮಾಹಿತಿ...

ಭಾರತ ಮತ್ತು ಅಮೆರಿಕದ ಒಪ್ಪಂದದ ಚೌಕಾಸಿಯಲ್ಲಿ ಭಾರತೀಯ ಸೋಯಾಬೀನ್ ರೈತರು ಮತ್ತು ಸಂಸ್ಕರಣ ಉದ್ಯಮಕ್ಕೆ ಪ್ರಮುಖ ನಷ್ಟವಾಗಿದೆ. ಭಾರತ ಮತ್ತು ಅಮೆರಿಕದ ನಡುವಿನ ದ್ವಿಪಕ್ಷೀಯ ಒಪ್ಪಂದದ ಸಂದರ್ಭದಲ್ಲಿ ಸೋಯಾಬೀನ್, ಜೋಳ, ಇಂಧನ ಎಥೆನಾಲ್, ಹತ್ತಿ, ಡೈರಿ ಮತ್ತು ಕೋಳಿ ಉತ್ಪನ್ನಗಳ ಆಮದಿಗೆ ಭಾರತ ತನ್ನ ಮಾರುಕಟ್ಟೆಯನ್ನು ತೆರೆದಿಲ್ಲ ಎಂದು ಹೇಳಲಾಗುತ್ತಿದೆ. ಆದರೆ ಅಮೆರಿಕದ ಇತರ ಕೃಷಿ ಉತ್ಪನ್ನಗಳಿಗೆ ಸುಂಕಗಳನ್ನು ತೆಗೆದು ಹಾಕುವ ಅಥವಾ ಕಡಿಮೆ ಮಾಡುವ ಮೂಲಕ ಹೆಚ್ಚಿನ ಮಾರುಕಟ್ಟೆಯ ಪ್ರವೇಶವನ್ನು ಒದಗಿಸಿದೆ. ಡಿಸ್ಟಿಲರ್ಸ್ ಡ್ರೈಡ್ ಗ್ರೈನ್ಸ್ ವಿತ್ ಸೊಲ್ಯುಬಲ್ಸ್ (DDGS), ಸೋಯಾಬೀನ್ ಎಣ್ಣೆ, ಪಶು ಆಹಾರಕ್ಕಾಗಿ ರೆಡ್ ಸೋರ್ಗಮ್, ಮರದ ಬೀಜಗಳು, ತಾಜಾ ಮತ್ತು ಸಂಸ್ಕರಿತ ಹಣ್ಣುಗಳು, ವೈನ್ ಮತ್ತು ಸ್ಪಿರಿಟ್ಗಳು ಮತ್ತು ‘ಹೆಚ್ಚುವರಿ ಉತ್ಪನ್ನಗಳಿಗೆ” ತನ್ನ ಮಾರುಕಟ್ಟೆಯನ್ನು ತೆರೆದಿದೆ. ಇವು ಮೇಲ್ನೋಟಕ್ಕೆ ಭಾರತೀಯ ರೈತರ ಮೇಲೆ ನೇರ ಪರಿಣಾಮ ಬೀರುವುದಿಲ್ಲ. ಏಕೆಂದರೆ ಈ ಉತ್ಪನ್ನಗಳಿಗೆ ದೇಸಿ ಇಳುವರಿ ಕಡಿಮೆ ಇದೆ. ಆದರೆ ಇದು ಅಷ್ಟು ಸರಳವಾದ ವಿಷಯವಲ್ಲ. ಮೊತ್ತ ಮೊದಲಿಗೆ ‘ಹೆಚ್ಚುವರಿ ಉತ್ಪನ್ನಗಳು’ ಎನ್ನುವುದನ್ನು ಸ್ಪಷ್ಟವಾಗಿ ವ್ಯಾಖ್ಯಾನಿಸಲಾಗಿಲ್ಲ. ಇನ್ನು DDGS ವಿಚಾರಕ್ಕೆ ಬಂದಲ್ಲಿ, ಇದು ಮೂಲತಃ ಜೋಳ ಮತ್ತು ಇತರ ಏಕದಳ ಧಾನ್ಯಗಳಿಂದ ಉತ್ಪಾದಿಸಿದ ಎಥೆನಾಲ್ ನ ಉಪ ಉತ್ಪನ್ನವಾಗಿದೆ. ಜೋಳ ಅಥವಾ ಅಕ್ಕಿಯಲ್ಲಿ ಪಿಷ್ಟದ ಹುದುಗುವಿಕೆಯಿಂದ ಎಥೆನಾಲ್ ಅನ್ನು ಉತ್ಪತ್ತಿಸಿದ ನಂತರ ಬಟ್ಟಿ ಇಳಿಸುವಿಕೆಯ ಮೂಲಕ ಬೇರ್ಪಡಿಸಿ ಉಳಿದ ತೇವಾಂಶದ ಧಾನ್ಯದ ಮ್ಯಾಷ್ ಅನ್ನು ಇನ್ನಷ್ಟು ಒಣಗಿಸಲಾಗುತ್ತದೆ. ಹಾಗೆ ದೊರೆಯುವ DDGS ಒಂದು ಪ್ರೊಟೀನ್ ಸಮೃದ್ಧವಾಗಿರುವ ವಸ್ತುವಾಗಿದೆ. ಇದು ವಸ್ತುಶಃ ಕಡಿಮೆ ವೆಚ್ಚದ ಪರ್ಯಾಯ ಪಶು ಆಹಾರವಾಗಿದೆ. ಭಾರತದ ಕೋಳಿ, ದನ ಮತ್ತು ಜಲಚರ ಜೀವಿಗಳಿಗೆ ಆಹಾರ ತಯಾರಕರು ಸಾಮಾನ್ಯವಾಗಿ ಬಳಸುವ ಪ್ರೊಟೀನ್ ಮೂಲವೆಂದರೆ ಸೋಯಾಬೀನ್, ಹತ್ತಿಬೀಜ, ನೆಲಗಡಲೆ, ಸಾಸಿವೆ ಅಥವಾ ಅಕ್ಕಿ ಹೊಟ್ಟುಗಳಿಂದ ಎಣ್ಣೆಯನ್ನು ಹೊರತೆಗೆದ ನಂತರ ಪಡೆದ ಉಳಿದ ಎಣ್ಣೆ ತೆಗೆದ ನಂತರ ಉಳಿದ ಶೇಷ. ಇವು DDGSಗಿಂತ ಹೆಚ್ಚು ದುಬಾರಿಯಾಗಿವೆ. ಭಾರತದಲ್ಲಿ ಎಣ್ಣೆಬೀಜ ಸಂಸ್ಕರಣಾಗಾರರು ಪ್ರಸ್ತುತ ಶೇ 46 ಪ್ರೊಟೀನ್ ಹೊಂದಿರುವ ಸೋಯಾಬೀನ್ DOC ಅನ್ನು ಪ್ರತಿ ಕೆಜಿಗೆ 43-44 ರೂ. ಗಳಿಗೆ ಮಾರಾಟ ಮಾಡುತ್ತಿದ್ದಾರೆ. ಇದಕ್ಕೆ ವಿರುದ್ಧವಾಗಿ ಶೇ 42ರಷ್ಟು ಪ್ರೊಟೀನ್ ಕಂಟೆಂಟ್ ಹೊಂದಿರುವ ಅಕ್ಕಿಯಿಂದ ತಯಾರಿಸಿದ DDGS ಯನ್ನು ಪ್ರತಿ ಕೆಜಿಗೆ 30 ರೂ.ನಂತೆ ಮಾರಲಾಗುತ್ತದೆ. ಜೋಳದ DDGS ಯಲ್ಲಿ ಶೇ 27ರಷ್ಟು ಪ್ರೊಟೀನ್ ಇದ್ದು, ಪ್ರತಿ ಕೆಜಿಗೆ ರೂ 24-24.5ಕ್ಕೆ ಮಾರಾಟವಾಗುತ್ತಿದೆ. ಹೀಗಾಗಿ ಪ್ರೊಟೀನ್ ಕಂಟೆಂಟ್ ಹೊಂದಿಸಿದ ಬಳಿಕವೂ DDGS ಸೋಯಾಬೀನ್ ಆಹಾರಕ್ಕಿಂತ ಹೆಚ್ಚು ಅಗ್ಗವಾಗಿ ದೊರೆಯಲಿದೆ. ಅಮೆರಿಕದಿಂದ ಆಮದು ಮಾಡಿಕೊಂಡರೆ ಇನ್ನಷ್ಟು ಅಗ್ಗವಾಗಿ ದೊರೆಯಲಿದೆ. ಅಮೆರಿಕವು ಜಗತ್ತಿನಲ್ಲೇ ಅತಿ ಹೆಚ್ಚು ಜೋಳ ಮತ್ತು ಎಥೆನಾಲ್ ಉತ್ಪಾದಕ ಮತ್ತು ರಫ್ತು ರಾಷ್ಟ್ರವಾಗಿದೆ. ಮತ್ತು DDGS ಅನ್ನು ಈ ಆಹಾರ ಧಾನ್ಯದಿಂದಲೇ ತಯಾರಿಸಲಾಗುತ್ತದೆ. ಭಾರತ ಅಮೆರಿಕನ್ ಜೋಳ ಮತ್ತು ಎಥೆನಾಲ್ ಇಂಧನವಾಗಿ ಬಳಕೆಗೆ ಆಮದನ್ನು ನಿರಾಕರಿಸಿದ್ದರೂ, DDGS ಅನ್ನು ಅಮೆರಿಕದಿಂದ ಭಾರತಕ್ಕೆ ಬರಲು ಬಾಗಿಲು ತೆರೆದಿದೆ. ಭಾರತದ ಪಶು ಆಹಾರ ಉತ್ಪಾದಕ ಸಂಘಟನೆಯ (CLFMA) ಅಧ್ಯಕ್ಷರಾಗಿರುವ ದಿವ್ಯಾ ಕುಮಾರ್ ಗುಲಾಟಿ ಪ್ರಕಾರ, “ಭಾರತೀಯ ಡಿಸ್ಟಿಲರಿಗಳಿಂದ ಬರುವ ಮೆಕ್ಕೆ ಜೋಳದ DDGS ಪ್ರತಿ ಬಿಲಿಯನ್ಗೆ 100-200 ಭಾಗಗಳಷ್ಟು ಅಫ್ಲಾಟಾಕ್ಸಿನ್ಗಳನ್ನು (ಧಾನ್ಯದ ಮೇಲೆ ಬೆಳೆಯುವ ಕೆಲವು ಶಿಲೀಂಧ್ರ ಮೌಲ್ಡ್ಗಳಿಂದ ಉತ್ಪತ್ತಿಯಾಗುತ್ತದೆ) ಹೊಂದಿದ್ದು, ಇದು ಬ್ರಾಯ್ಲರ್ ಕೋಳಿಗಳು ಮತ್ತು ಹೈನುಗಾರಿಕಾ ಪಶು ಆಹಾರ ಪದಾರ್ಥವಾಗಿ ಸೂಕ್ತವಲ್ಲ. ಮೊಟ್ಟೆ ಕೋಳಿ ಎಂದು ಕರೆಯುವ ಕೋಳಿಗಳಿಗೆ ಆಹಾರವಾಗಿ ಬಳಸಬಹುದು. ಅಮೆರಿಕದಿಂದ ಆಮದಾಗುವ DDGS ಜೋಳ ಪ್ರತಿ ಬಿಲಿಯನ್ಗೆ 20 ಭಾಗಗಳಿಗಿಂತ ಕಡಿಮೆಯಿದೆ. ಇದು ಅಫ್ಲಾಟಾಕ್ಸಿನ್ಗಳಿಗೆ ಸಾಮಾನ್ಯವಾಗಿ ಅಂಗೀಕರಿಸಲಾದ ನಿಯಂತ್ರಕ ಸುರಕ್ಷತಾ ಮಿತಿ.” ವಿವರಿಸಿ ಹೇಳುವುದಾದರೆ, ಬಾರತೀಯ ಕೋಳಿಸಾಕಣೆ, ಹೈನುಗಾರಿಕೆ ಮತ್ತು ಜಲಚರ ಉದ್ಯಮಕ್ಕೆ ಅಗ್ಗದ ಮತ್ತು ಉತ್ತಮ ಗುಣಮಟ್ಟದ ಪಶುಆಹಾರ ದೊರೆಯಲಿದೆ. ಆದರೆ ಈ DDGS ತಳೀಯವಾಗಿ ಮಾರ್ಪಡಿಸಿದ ಜೋಳದಿಂದ ತಯಾರಾಗುತ್ತದೆ ಎನ್ನುವುದು ಮತ್ತೊಂದು ವಿಚಾರ. 2024ರಲ್ಲಿ ಅಮೆರಿಕ 3.1 ಶತಕೋಟಿ ಡಾಲರ್ ಮೌಲ್ಯದ 12.2 ದಶಲಕ್ಷ ಟನ್ಗಳಷ್ಟು DDGS ಅನ್ನು ರಫ್ತು ಮಾಡಿದೆ. ಮಾತ್ರವಲ್ಲದೆ, 4.3 ಶತಕೋಟಿ ಡಾಲರ್ ಮೌಲ್ಯದ 1.91 ಶತಕೋಟಿ ಗ್ಯಾಲನ್ಗಳಷ್ಟು ಎಥೆನಾಲ್ ಮತ್ತು 13.7 ಶತಕೋಟಿ ಡಾಲರ್ ಮೌಲ್ಯದ 61.7 ದಶಲಕ್ಷ ಟನ್ಗಳಷ್ಟು ಜೋಳವನ್ನು ರಫ್ತು ಮಾಡಿದೆ. ರೆಡ್ ಸೋರ್ಗಮ್ (ನವಣೆ) ಆಮದಿನ ಮೇಲೆ ಸುಂಕವನ್ನು ಕಡಿಮೆಗೊಳಿಸಲಾಗಿದೆ ಅಥವಾ ಶೂನ್ಯ ಸುಂಕ ವಿಧಿಸಲಾಗಿದೆ. ಇದರಿಂದಲೂ ಭಾರತದ ಪಶು ಆಹಾರದ ವಲಯವು ಲಾಭ ಪಡೆಯಬಹುದು. ಅಮೆರಿಕ ವಿಶ್ವದ ಅತಿದೊಡ್ಡ ನವಣೆ ಉತ್ಪಾದಕ ಮತ್ತು ರಫ್ತುದಾರ ರಾಷ್ಟ್ರವಾಗಿದೆ. ಭಾರತ ಮತ್ತು ಅಮೆರಿಕದ ಒಪ್ಪಂದದ ಚೌಕಾಸಿಯಲ್ಲಿ ಭಾರತೀಯ ಸೋಯಾಬೀನ್ ರೈತರು ಮತ್ತು ಸಂಸ್ಕರಣ ಉದ್ಯಮಕ್ಕೆ ಪ್ರಮುಖ ನಷ್ಟವಾಗಿದೆ. ಸ್ಥಳೀಯ ಎಥೆನಾಲ್ ಧಾನ್ಯ ಆಧರಿತ ಡಿಸ್ಟಿಲರಿಗಳು ಮೆಕ್ಕೆಜೋಳ ಮತ್ತು ಅಕ್ಕಿಯಿಂದ DDGS ಅನ್ನು ಉಪ ಉತ್ಪನ್ನವಾಗಿ ಮಾರಾಟ ಮಾಡುತ್ತವೆ, ಸಂಸ್ಕರಿಸಿದ ಪ್ರತಿ 100 ಕೆಜಿ ಸೋಯಾಬೀನ್ ಸುಮಾರು 18 ಕೇಜಿ ಎಣ್ಣೆ ಮತ್ತು 82 ಕೇಜಿ DOC ಅನ್ನು ನೀಡುತ್ತದೆ. ಅಮೆರಿಕದ ಜೊತೆಗೆ ವ್ಯಾಪಾರ ಒಪ್ಪಂದದಿಂದ DDGS ಮತ್ತು ಕಡಿಮೆ ಸುಂಕದ ಸೋಯಾಬೀನ್ ಎಣ್ಣೆ ಆಮದಿಗೆ ಅವಕಾಶವಾಗಿದೆ. ಮುಖ್ಯವಾಗಿ ಮಧ್ಯಪ್ರದೇಶ, ಮಹಾರಾಷ್ಟ್ರ ಮತ್ತು ರಾಜಸ್ಥಾನದಲ್ಲಿ 13 ದಶಲಕ್ಷ ಹೆಕ್ಟೇರ್ಗಳಲ್ಲಿ ದ್ವಿದಳ ಧಾನ್ಯದ ಎಣ್ಣೆ ಬೀಜವನ್ನು ಬೆಳೆಯುವ ರೈತರಿಗೆ ಹಾನಿಯಾಗಬಹುದು. ಕಚ್ಚಾ ಸೋಯಾಬೀನ್ ಎಣ್ಣೆಯ ಮೇಲೆ ಆಮದು ಸುಂಕ ಈಗ ಶೇ 16.5ರಷ್ಟಿದೆ. ಭಾರತ 2024-25ರಲ್ಲಿ ಅರ್ಜೆಂಟಿನಾದಿಂದ 4.8 ಮಿಲಿಯನ್ ಟನ್, ಬ್ರೆಝಿಲ್ ನಿಂದ 1.1 ಮಿಲಿಯನ್ ಟನ್, ರಷ್ಯಾದಿಂದ 0.4 ಮಿಲಿಯನ್ ಟನ್ ಮತ್ತು ಅಮೆರಿಕದಿಂದ 0.2 ಮಿಲಿಯನ್ ಟನ್ ಸೋಯಾಬೀನ್ ಎಣ್ಣೆಯನ್ನು ಭಾರತ ಆಮದು ಮಾಡಿಕೊಂಡಿದೆ. ಇದೀಗ ಅಮೆರಿಕದಿಮದ ಸುಂಕರಹಿತವಾಗಿ ಬರುವ ಎಣ್ಣೆ ಮಾರುಕಟ್ಟೆಯನ್ನು ಆಕರ್ಷಿಸುವ ಸಾಧ್ಯತೆಯಿದೆ. DDGS ರೂಪದಲ್ಲಿ ಜೋಳ ಮತ್ತು ಸೋಯಾಬೀನ್ನ ಉತ್ಪನ್ನಗಳು ಹೆಚ್ಚಿನ ಪ್ರಮಾಣದಲ್ಲಿ ಭಾರತದ ಮಾರುಕಟ್ಟೆಗಳನ್ನು ಪ್ರವೇಶಿಸಲಿವೆ. ಭಾರತ ಒಣಹಣ್ಣುಗಳನ್ನು ಹೆಚ್ಚು ಉತ್ಪಾದಿಸದ ರಾಷ್ಟ್ರವಾಗಿರುವ ಕಾರಣದಿಂದ ವಾಲ್ನಟ್, ಬಾದಾಮಿ ಮತ್ತು ಪಿಸ್ತಾ ಮೇಲೆ ಆಮದು ಸುಂಕ ಕಡಿತದಿಂದ ಭಾರತೀಯ ರೈತರ ಮೇಲೆ ಹೆಚ್ಚು ಪರಿಣಾಮ ಬೀರದೆ ಇರಬಹುದು. ಅಮೆರಿಕದ ಮರದ ಕಡಲೆಗಳನ್ನು ಭಾರತ ಅತಿಹೆಚ್ಚು ಆಮದು ಮಾಡಿಕೊಳ್ಳುತ್ತಿದೆ. ಹೀಗಾಗಿ ಸುಂಕ ಕಡಿತದಿಂದ ಬೆಲೆ ತಗ್ಗಬಹುದು. ಕೃಪೆ: indianexpress.com

ವಾರ್ತಾ ಭಾರತಿ 8 Feb 2026 2:46 pm

ʼದಲೈಲಾಮ ಎಂದಿಗೂ ಜೆಫ್ರಿ ಎಪ್ಸ್ಟೀನ್ ಭೇಟಿ ಮಾಡಿಲ್ಲʼ: ಎಪ್ಸ್ಟೀನ್‌ ಫೈಲ್ಸ್‌ ನಲ್ಲಿ ದಲೈಲಾಮ ಹೆಸರು ಎಂಬ ವರದಿಗಳಿಗೆ ದಲೈಲಾಮ ಕಚೇರಿ ಸ್ಪಷ್ಟನೆ

ಅಮೆರಿಕಾ ಸೇರಿದಂತೆ ಜಾಗತಿಕವಾಗಿ ಹಲವು ಪ್ರಬಲ ನಾಯಕರು ಹಾಗೂ ಉದ್ಯಮಿಗಳು ಸೇರಿದಂತೆ ಪ್ರಬಲರ ಪಾಲಿಗೆ ಮುಳ್ಳಾಗಿ ಪರಿಣಮಿಸಿರುವ ಲೈಂಗಿಕ ಹಗರಣದ ಅಪರಾಧಿ ಜೆಫ್ರಿ ಎಪ್ಸ್ಟೀನ್‌ ಫೈಲ್ಸ್ ಪ್ರಕರಣ ಸದ್ಯ ಟಿಬೆಟಿಯನ್ ಬೌದ್ಧ ನಾಯಕ ದಲೈ ಲಾಮ ಅವರ ತಲೆಗೂ ಸುತ್ತಿಕೊಂಡಿದ್ದು, ಅಮೆರಿಕಾದ ನ್ಯಾಯಾಂಗ ಇಲಾಖೆ ಬಹಿರಂಗಗೊಳಿಸಿದ ಎಪ್ಸ್ಟೀನ್‌ ಫೈಲ್ಸ್ ನಲ್ಲಿ ಬರೋಬ್ಬರಿ 169 ಬಾರಿ ದಲೈ ಲಾಮ ಅವರ ಹೆಸರು ಕಾಣಿಸಿಕೊಂಡಿದೆ ಎಂಬ ವರದಿಗಳಾಗುತ್ತಿತ್ತು. ಈ ಬೆನ್ನಲ್ಲೇ, ಸಾಕಷ್ಟು ಸಂಚಲನವನ್ನು ಮೂಡಿಸಿದ ಈ ವರದಿಗಳ ಕುರಿತು ಸ್ಪಷ್ಟನೆ ನೀಡಿ ದಲೈ ಲಾಮಾ ಅವರ ಕಚೇರಿ ಹೇಳಿಕೆ ಬಿಡುಗಡೆ ಮಾಡಿದ್ದು, ದಲೈ ಲಾಮಾ ಎಂದಿಗೂ ಜೆಫ್ರಿ ಎಪ್ಸ್ಟೀನ್ ಭೇಟಿ ಮಾಡಿಲ್ಲ ಎಂದು ತಿಳಿಸಿದೆ.

ವಿಜಯ ಕರ್ನಾಟಕ 8 Feb 2026 2:44 pm

Uttar Pradesh | ವಾಟ್ಸ್ ಆ್ಯಪ್ ಗ್ರೂಪ್ ಮೂಲಕ ಬಹುರಾಜ್ಯ ಹೂಡಿಕೆ ವಂಚನೆ ನಡೆಸುತ್ತಿದ್ದ ಜಾಲವನ್ನು ಭೇದಿಸಿದ ಪೊಲೀಸರು

► ಆರು ರಾಜ್ಯಗಳಿಂದ 12 ಮಂದಿಯನ್ನು ಬಂಧಿಸಿದ ಪೊಲೀಸರು ►ವಂಚನೆಗೆ 600 ವಾಟ್ಸ್ ಆ್ಯಪ್ ಗ್ರೂಪ್ ರಚಿಸಿದ್ದ ಆರೋಪಿಗಳು

ವಾರ್ತಾ ಭಾರತಿ 8 Feb 2026 2:32 pm

Benjamin Netanyahu: ಅಮೆರಿಕ ಅಧ್ಯಕ್ಷರ ಭೇಟಿಗೆ ನಿರ್ಧಾರ ಮಾಡಿದ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು

ಅಮೆರಿಕ &ಇಸ್ರೇಲ್ ಅತ್ಯಂತ ಆಪ್ತ ಸಂಬಂಧ ಹೊಂದಿದ್ದು, ಎರಡೂ ದೇಶಗಳು ಒಬ್ಬರನ್ನು ಬಿಟ್ಟು ಮತ್ತೊಬ್ಬರು ಇರಲಾರರು. ಹೀಗೆ ಎರಡೂ ದೇಶಗಳು ಒಟ್ಟಿಗೆ ಸಾಗುತ್ತಿದ್ದು, ಅದರಲ್ಲೂ ಮಧ್ಯಪ್ರಾಚ್ಯ ಭಾಗದಲ್ಲಿ ಅಮೆರಿಕ &ಇಸ್ರೇಲ್ ಒಗ್ಗಟ್ಟಿನಿಂದ ಹೋರಾಡಿ ಒಂದು ಸಾಮ್ರಾಜ್ಯವನ್ನೇ ಕಟ್ಟಿಕೊಂಡಿವೆ. ಹೀಗಿದ್ದಾಗ ಇರಾನ್ ಪರಮಾಣು ಬಾಂಬ್ ಪರೀಕ್ಷೆ ನಡೆಸುತ್ತಿದೆ ಎಂಬ ಆರೋಪಗಳ ನಡುವೆ ಭಾರಿ ಕಠಿಣ ತೀರ್ಮಾನ

ಒನ್ ಇ೦ಡಿಯ 8 Feb 2026 2:24 pm

ಜಿ.ಟಿ. ದೇವೇಗೌಡರಿಗೆ ನಿಯತ್ತೂ ಇಲ್ಲ, ಪಕ್ಷನಿಷ್ಠೆಯೂ ಇಲ್ಲ : ಎಚ್.ಡಿ ಕುಮಾರಸ್ವಾಮಿ ವಾಗ್ದಾಳಿ

ಮೈಸೂರು, ಫೆ. 8: ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ. ದೇವೇಗೌಡರಿಗೆ ನಿಯತ್ತೂ ಇಲ್ಲ, ಪಕ್ಷನಿಷ್ಠೆಯೂ ಇಲ್ಲ. ಅವರು ಜೆಡಿಎಸ್ ಜೊತೆಯೂ ಇಲ್ಲ ಎಂದು ಕೇಂದ್ರ ಸಚಿವ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿ.ಟಿ. ದೇವೇಗೌಡರು ಬೇರೆ ಬೇರೆ ಮಹಾನ್ ನಾಯಕರ ಜೊತೆಗೆ ಇದ್ದಾರೆ. ಪಕ್ಷದ ಬಗ್ಗೆ ನಿಯತ್ತು, ನಿಷ್ಠೆ ಯಾವುದೂ ಇಲ್ಲದವರನ್ನು ನಾವು ಜೊತೆಯಲ್ಲಿ ಇಟ್ಟುಕೊಳ್ಳಬೇಕೇ? ಎಂದು ಪ್ರಶ್ನಿಸಿದರು. ಇನ್ನು ಮುಂದೆ ಪದೇ ಪದೇ ಜಿ.ಟಿ. ದೇವೇಗೌಡರ ಹೆಸರನ್ನು ಪ್ರಸ್ತಾಪಿಸಬೇಡಿ. ನನ್ನ ಮನಸ್ಸಿಗೆ ಬಹಳ ನೋವಾಗುವ ಘಟನೆಗಳು ನಡೆದಿವೆ ಎಂದು ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದರು. ಮುಂದಿನ ಚುನಾವಣೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದಿಂದ ಸ್ಪರ್ಧಿಸಲು ಬಹಳಷ್ಟು ಜನ ಇದ್ದಾರೆ. ಅಲ್ಲಿ ಯಾರೇ ನಿಂತರೂ ಗೆಲ್ಲುತ್ತಾರೆ. ನನಗೂ ಚಾಮುಂಡೇಶ್ವರಿ ಕ್ಷೇತ್ರಕ್ಕೂ ಭಾವನಾತ್ಮಕ ಸಂಬಂಧವಿದೆ. ಇವರು ಬಹಳಷ್ಟು ಜನರನ್ನು ಮೆರೆಸಿದ್ದೇನೆ ಎಂದು ಹೇಳಿಕೊಳ್ಳುತ್ತಾರೆ. ಈಗ ಯಾರೋ ಒಬ್ಬರನ್ನು ಮೆರೆಸಲು ಹೊರಟಿದ್ದಾರೆ. ಅವರಿಗೆ ನಿಯತ್ತು ಇದೆಯೇ? ಪಕ್ಷದ ಕಾರ್ಯಕರ್ತರಿಗೆ ನೋವಾಗಬಾರದು ಎಂಬ ಕಾರಣಕ್ಕೆ ಈ ವಿಷಯ ಹೇಳುತ್ತಿದ್ದೇನೆ ಎಂದು ತಿಳಿಸಿದರು. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಮೈಸೂರು ಜಿಲ್ಲೆಯ ಎಲ್ಲ 11 ಕ್ಷೇತ್ರಗಳಲ್ಲಿ ಜೆಡಿಎಸ್–ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ ಎಂದು ಅವರು ಹೇಳಿದರು. “ರಾಜ್ಯದ ಇಂದಿನ ಪರಿಸ್ಥಿತಿ ನೋಡಿದರೆ ನಾನು ಇಲ್ಲೇ ಇರಬೇಕಿತ್ತು ಎನ್ನಿಸುತ್ತಿದೆ. ಕಾಲ ಬಂದಾಗ ಮತ್ತೆ ರಾಜ್ಯಕ್ಕೆ ಬರುತ್ತೇನೆ.” - ಎಚ್.ಡಿ. ಕುಮಾರಸ್ವಾಮಿ, ಕೇಂದ್ರ ಸಚಿವ

ವಾರ್ತಾ ಭಾರತಿ 8 Feb 2026 2:23 pm

ಗಂಗನದೊಡ್ಡಿಯಲ್ಲಿ ಚಿರತೆ ಹಾವಳಿ: ಥರ್ಮಲ್ ಡ್ರೋನ್ ಮೂಲಕ ಕಾರ್ಯಾಚರಣೆ

ಚಾಮರಾಜನಗರ: ಜಿಲ್ಲೆಯ ಹನೂರು ತಾಲೂಕಿನ ಸೊಳೇರಿಪಾಳ್ಯ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗಂಗನದೊಡ್ಡಿ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷಗೊಂಡಿರುವ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಥರ್ಮಲ್ ಡ್ರೋನ್ ಮೂಲಕ ಕಾರ್ಯಾಚರಣೆ ನಡೆಸಿದೆ. ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಸೊಳೇರಿಪಾಳ್ಯ ಗ್ರಾಮ ಪಂಚಾಯ್ತಿಯ ಗಂಗನದೊಡ್ಡಿ ಗ್ರಾಮದ ಭಾಸ್ಕರ್ ಅವರ ಜಮೀನಿನಲ್ಲಿ ಚಿರತೆ ಕಾಣಿಸಿಕೊಂಡಿದ್ದು, ಕಳೆದ ಒಂದು ವರ್ಷದಿಂದ ಈ ಪ್ರದೇಶದಲ್ಲಿ ದನ–ಕರುಗಳು ಚಿರತೆಯ ಬಲಿಯಾಗುತ್ತಿವೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಚಿರತೆ ಹಾವಳಿಯಿಂದ ಆತಂಕಗೊಂಡ ಗಂಗನದೊಡ್ಡಿ ಗ್ರಾಮದ ರೈತರು ಅರಣ್ಯ ಅಧಿಕಾರಿಗಳಿಗೆ ಮನವಿ ಸಲ್ಲಿಸಿ, ಅತಿ ಶೀಘ್ರದಲ್ಲಿ ಚಿರತೆಯನ್ನು ಸೆರೆಹಿಡಿಯುವಂತೆ ಒತ್ತಾಯಿಸಿದ್ದಾರೆ. ಈ ಹಿನ್ನೆಲೆಯಲ್ಲಿ ತಡರಾತ್ರಿ 11 ಗಂಟೆ ಸುಮಾರಿಗೆ ಥರ್ಮಲ್ ಡ್ರೋನ್ ಮೂಲಕ ನಡೆಸಿದ ಕಾರ್ಯಾಚರಣೆಯಲ್ಲಿ ಚಿರತೆ ಪ್ರತ್ಯಕ್ಷಗೊಂಡಿದೆ. ಶೀಘ್ರದಲ್ಲೇ ಚಿರತೆಯನ್ನು ಸೆರೆಹಿಡಿಯಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ.

ವಾರ್ತಾ ಭಾರತಿ 8 Feb 2026 2:09 pm

ಚಾಮರಾಜನಗರ : ತಾಳವಾಡಿ ಸಮೀಪ ಮರಿಯಾನೆ ಮೃತದೇಹ ಪತ್ತೆ

ಚಾಮರಾಜನಗರ: ಜಿಲ್ಲೆಗೆ ಹೊಂದಿಕೊಂಡಿರುವ ತಮಿಳುನಾಡಿನ ತಾಳವಾಡಿ ಸಮೀಪದ ಜೀರಗಹಳ್ಳಿ ಅರಣ್ಯ ವ್ಯಾಪ್ತಿಯ ಅರುಳವಾಡಿ ಗ್ರಾಮದಲ್ಲಿ ಮರಿಯಾನೆ ಸಾವನ್ನಪ್ಪಿರುವ ಘಟನೆ ನಡೆದಿದೆ. ಈ ಸಂಬಂಧ ತಮಿಳುನಾಡು ಅರಣ್ಯಾಧಿಕಾರಿಗಳು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಚಾಮರಾಜನಗರ ಜಿಲ್ಲೆಗೆ ಹೊಂದಿಕೊಂಡಿರುವ ತಮಿಳುನಾಡಿನ ಸತ್ಯಮಂಗಲಂ ಹುಲಿ ಸಂರಕ್ಷಿತ ಪ್ರದೇಶದ ತಾಳವಾಡಿ ಸಮೀಪದ ಜೀರಗಹಳ್ಳಿ ಅರಣ್ಯದ ಅರುಳವಾಡಿ ಗ್ರಾಮದಲ್ಲಿ ಮರಿಯಾನೆ ಘರ್ಷಣೆಯಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ. ಇದನ್ನು ಕಂಡ ಸ್ಥಳೀಯ ರೈತರು ಜೀರಗಹಳ್ಳಿ ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ಪಡೆದ ತಕ್ಷಣ ಸ್ಥಳಕ್ಕೆ ಆಗಮಿಸಿದ ತಮಿಳುನಾಡು ಅರಣ್ಯಾಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದು, ಮರಿಯಾನೆ ಸಾವಿನ ನಿಖರ ಕಾರಣ ಮರೋತ್ತರ ಪರೀಕ್ಷೆಯ ಬಳಿಕ ತಿಳಿಯಲಿದೆ ಎಂದು ಅರಣ್ಯ ಸಿಬ್ಬಂದಿ ತಿಳಿಸಿದ್ದಾರೆ.

ವಾರ್ತಾ ಭಾರತಿ 8 Feb 2026 2:04 pm

ಮೆಟ್ರೋ ಪ್ರಯಾಣಿಕರಿಗೆ ದರ ಏರಿಕೆ ಶಾಕ್! ಫೆ.9ರಿಂದ ಮೆಟ್ರೋ ದರ ಏರಿಕೆ ಫಿಕ್ಸ್‌ ಎಂದ BMRCL; ಎಷ್ಟಿರಲಿದೆ ದರ?

ವಿವಾದದ ನಡುವೆ ಮೆಟ್ರೋ ದರ ಏರಿಕೆ ಇಲ್ಲ ಎಂಬ ಸುದ್ದಿಗಳು ಕೇಳಿ ನಿರಾಳರಾಗಿದ್ದ ಮೆಟ್ರೋ ಪ್ರಯಾಣಿಕರಿಗೆ BMRCL ಶಾಕ್‌ ನೀಡಿದ್ದು, ನಾಳೆಯಿಂದ ಮೆಟ್ರೋ ದರ ಏರಿಕೆ ಜಾರಿಯಾಗುವುದು ಪಕ್ಕಾ ಎಂದು ಸ್ಪಷ್ಟನೆ ನೀಡಿದ್ದಾರೆ. ಈ ಕುರಿತು ಮಾಹಿತಿ ನೀಡಿದ ಬಿಎಂಆರ್‌ ಸಿಎಲ್‌ ಎಂಡಿ ರವಿಶಂಕರ್ ಮೆಟ್ರೋ ದರ ಏರಿಕೆಗೆ ಕೆಂದ್ರ ಹಾಗೂ ರಾಜ್ಯ ಸರ್ಕಾರಗಳಿಂದ ಯಾವುದೇ ಅಧಿಕೃತ ಆದೇಶ ಬಂದಿಲ್ಲ. ಹಾಗಾಗಿ ಆದೇಶಗಳು ಬರುವವರೆಗೂ ಮೆಟ್ರೋ ದರ ಏರಿಕೆ ವಿಚಾರದಲ್ಲಿ ಯಾವುದೇ ಬದಲಾವಣೆಗಳಿರುವುದಿಲ್ಲ ಎಂದು ತಿಳಿಸಿದ್ದು, ಫೆ.9ರಿಂದಲೇ ಈ ದರ ಏರಿಕೆ ಬಿಸಿ ತಟ್ಟಲಿದೆ ಎಂದು ತಿಳಿಸಿದ್ದಾರೆ. ಯಾವ ಮಾರ್ಗಗಳಲ್ಲಿ ಮೆಟ್ರೋ ದರ ಎಷ್ಟು ಹೆಚ್ಚಳ ವಾಗಲಿದೆ ಎಂಬ ಮಾಹಿತಿ ಇಲ್ಲಿದೆ.

ವಿಜಯ ಕರ್ನಾಟಕ 8 Feb 2026 1:58 pm

ರಾಜ್ಯ ಸರಕಾರ ಖಾಲಿ ಚೆಂಬನ್ನು 2 ವರ್ಷದಿಂದ ಜನರಿಗೆ ಕೊಡುತ್ತಿದೆ: ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಎಚ್‌ಡಿಕೆ ಕಿಡಿ

ಮೆಟ್ರೋ ಬೆಲೆ ಏರಿಕೆಗೆ ಕೇಂದ್ರ ಹೊಣೆ ಎಂದು ರಾಜ್ಯ ಸರ್ಕಾರದ ಸುಳ್ಳು ಹೇಳುತ್ತಿದೆ. ಕೇಂದ್ರ ಸರಕಾರದ ಜೊತೆ ರಾಜ್ಯ ಸರಕಾರ ಒಳ್ಳೆ ಸಂಬಂಧ ಇಟ್ಟು ಕೊಳ್ಳಲಿ. ಎಲ್ಲದಕ್ಕೂ ಕೇಂದ್ರ ಸರ್ಕಾರದ ಕಡೆ ಬೆರಳು ತೋರಿಸುವ ಕೆಲಸವನ್ನು ರಾಜ್ಯ ಸರ್ಕಾರ ಬಿಡಬೇಕು. ಪ್ರಧಾನ ಮಂತ್ರಿಗಳನ್ನು ಬೀದಿಗೆ ಬಾಯಿಗೆ ಬಂದಂತೆ ಬೈಯ್ಯೋದು. ಅಮೇಲೆ ಪತ್ರ ಕಳಿಸೋದು. ಈ ವರ್ತನೆಯನ್ನು ರಾಜ್ಯ ಸರಕಾರ ಬದಲಿಯಿಸಿ ಕೊಳ್ಳಬೇಕು ಎಂದು ಮೈಸೂರಿನಲ್ಲಿ ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ ನಡೆಸಿ ಹೇಳಿದರು.

ವಿಜಯ ಕರ್ನಾಟಕ 8 Feb 2026 1:51 pm

ಉಕ್ರೇನ್ ಹೊಟ್ಟೆಗೆ ತಣ್ಣೀರು ಬಟ್ಟೆ, ವ್ಯಾಪಾರ ಹಾಗೂ ವ್ಯವಹಾರಕ್ಕೂ ಬಿತ್ತು ಕಲ್ಲು... Ukraine Businesses

ಉಕ್ರೇನ್ ದೇಶಕ್ಕೆ ಪೆಟ್ಟಿನ ಮೇಲೆ ಪೆಟ್ಟು ಕೊಡುತ್ತಿರುವ ರಷ್ಯಾ, ಸಾಲು ಸಾಲು ಸಂಕಷ್ಟಕ್ಕೆ ಸಿಲುಕುವ ರೀತಿ ಮಾಡುತ್ತಿದೆ ಎಂಬ ಆರೋಪ ಇದೆ. ಅದರಲ್ಲೂ ರಷ್ಯಾ ನಡೆಸಿರುವ ದಾಳಿ ಪರಿಣಾಮ ಉಕ್ರೇನ್ ದೇಶದ ವಿದ್ಯುತ್ ವ್ಯವಸ್ಥೆ ಸಂಪೂರ್ಣ ಹಾಳಾಗಿ ಹೋಗಿದ್ದು, ಎಲ್ಲಿ ನೋಡಿದರೂ ಬರೀ ಕತ್ತಲೆಯೇ ತುಂಬಿ ಹೋಗಿದೆ. ಉಕ್ರೇನ್ ಜನ ಕೂಡ ಚಳಿಗಾಲದ ಸಮಯದಲ್ಲಿ ಕರೆಂಟ್ ಇಲ್ಲದೆ,

ಒನ್ ಇ೦ಡಿಯ 8 Feb 2026 1:39 pm

ಪಾವಗಡದಿಂದ ವಾಷಿಂಗ್ಟನ್ ವರೆಗೆ !

ಐಎಎಸ್‌ಗೆ ಸೇರುವುದು ನನ್ನ ಜೀವನವನ್ನೇ ಬದಲಾಯಿಸಿದ ಅನುಭವವಾಗಿತ್ತು. ಇಂತಹದ್ದೊಂದು ಸಾಧ್ಯವಾಗಬಹುದು ಎಂದು ನನ್ನ ಕುಟುಂಬದ ಯಾರೂ ಎಣಿಸಿರಲೇ ಇಲ್ಲ. ನನ್ನ ಹಳ್ಳಿಯಲ್ಲಿ, ಕೆಲವು ಹಿರಿಯರು ನನ್ನ ಸಾಧನೆ ಬಗ್ಗೆಯೇ ಸಂಶಯಪಟ್ಟಿದ್ದರು. ಅಂತಹ ದೊಡ್ಡ ಹುದ್ದೆ ನಮಗೆ ಹೇಗೆ ಸಿಗಲು ಸಾಧ್ಯ ಎಂದು ಅವರು ಹೇಳಿದ್ದರು. ಐಎಎಸ್ ಗೆ ಸೇರಲು ಯಾರಿಗಾದರೂ ಲಂಚ ನೀಡಬೇಕಾಯಿತೇ ಎಂದು ನನ್ನ ಹೈಸ್ಕೂಲ್‌ನಲ್ಲಿ ಕೆಲಸ ಮಾಡುತ್ತಿದ್ದ ಕ್ಲರ್ಕ್ ನನ್ನಲ್ಲಿ ಕೇಳಿದ್ದ. ಈ ಹುದ್ದೆ ತಹಶೀಲ್ದಾರ್ ಹುದ್ದೆಗಿಂತ ಮೇಲಿನದ್ದೇ ಅಥವಾ ಕೆಳಗಿನದ್ದೇ ಎಂದು ಕೆಲವರು ನನ್ನಲ್ಲಿ ಪ್ರಶ್ನಿಸಿದ್ದರು. ಕವಿ ಹೃದಯದ ಲುತ್ಫುಲ್ಲಾ ಕೆ. ಅತೀಕ್ ಅವರು ಮೂಲತಃ ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನವರು. ಕೃಷಿ ಕುಟುಂಬದಿಂದ ಬಂದ ಇವರು, 1991ರಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನಿಯಾಗಿ ಐಎಎಸ್ ಗೆ ಆಯ್ಕೆಯಾದವರು. ಮಂಗಳೂರಿನಲ್ಲಿಅಸಿಸ್ಟೆಂಟ್ ಕಮಿಷನರ್ ಆಗಿ ವೃತ್ತಿ ಜೀವನ ಪ್ರಾರಂಭಿಸಿದ ಇವರು ಮಂಗಳೂರಿನ ಅಳಿಯನೂ ಹೌದು. ಕರ್ತವ್ಯ ನಿರ್ವಹಿಸಿದ ಎಲ್ಲೆಡೆ ಜನಪರ ಕಳಕಳಿಯ ದಕ್ಷ ಅಧಿಕಾರಿ ಎಂದು ಮನ್ನಣೆ ಗಳಿಸಿದವರು. ಲೇಖಕ, ಅನುವಾದಕರಾಗಿಯೂ ಗಮನ ಸೆಳೆದವರು. ಮುಖ್ಯಮಂತ್ರಿ ಸಿದ್ದರಾಮಯ್ಯನವರ ಅಪರ ಮುಖ್ಯ ಕಾರ್ಯದರ್ಶಿ ಹಾಗೂ ಹಣಕಾಸು ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಯಾಗಿ, ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಅವರ ಜಂಟಿ ಕಾರ್ಯದರ್ಶಿಯಾಗಿ, ವಿಶ್ವ ಬ್ಯಾಂಕ್ ಕಾರ್ಯನಿರ್ವಾಹಕ ನಿರ್ದೇಶಕರ ಹಿರಿಯ ಸಲಹೆಗಾರನಾಗಿ ಹಲವು ಪ್ರತಿಷ್ಠಿತ ಹುದ್ದೆಗಳನ್ನು ಸಮರ್ಥವಾಗಿ ನಿಭಾಯಿಸಿ ನ್ಯಾಯ ಒದಗಿಸಿದವರು. ರಾಜ್ಯದ ಅಪರ ಮುಖ್ಯ ಕಾರ್ಯದರ್ಶಿಯಾಗಿ ಸೇವೆಯಿಂದ ನಿವೃತ್ತರಾದ ಅತೀಕ್ ಅವರು ಈಗ ಬೆಂಗಳೂರು ಬಿಸಿನೆಸ್ ಕಾರಿಡಾರ್   ಆಕಸ್ಮಿಕ ಐಎಎಸ್ ಅಧಿಕಾರಿಯ ಕಥನ ಮೇ 2002ರಂದು ನಾನು ವಾಷಿಂಗ್ಟನ್ ಡಿ.ಸಿ.ಗೆ ಪಯಣಿಸುತ್ತಿದ್ದ ವಿಮಾನ ಇನ್ನೇನು ಡಲ್ಲಿಸ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿಯುತ್ತಿದ್ದಂತೆಯೇ, ವಿಮಾನದ ಸಿಬ್ಬಂದಿ ವಲಸೆ ಅರ್ಜಿಯನ್ನು ತುಂಬಿಸಲು ನನ್ನ ಕೈಗಿತ್ತ. ಅದರಲ್ಲಿ ಹುಟ್ಟೂರು ಕಾಲಂನಲ್ಲಿ ಪಾವಗಡ ಎಂದು ನಮೂದಿಸಿದಾಗ, ವಾಸ್ತವಿಕತೆ ತಟ್ಟನೆ ನನ್ನನ್ನು ಎಚ್ಚರಿಸಿತು: ನಾನು ದೇವರೂ ಕಡೆಗಣಿಸಿದ ಪಾವಗಡ ಎಂಬ ಊರಿನವನು. ಬೇಸಿಗೆಯ ಉರಿ ಸೆಕೆಯನ್ನು ತಾಳಲಾರದೆ ಮನೆಯ ಹೊರಗೆ ಮಲಗುತ್ತಿದ್ದ ಮಕ್ಕಳ ಮೇಲೆ ಕತ್ತೆಕಿರುಬ ಅಥವಾ ತೋಳದ (ಯಾವುದು ಎಂದು ಯಾರಿಗೂ ಖಚಿತವಿಲ್ಲ) ದಾಳಿಗಳಿಗೆ ಆ ಊರು ಕುಖ್ಯಾತವಾಗಿತ್ತು. ಅಂತಹ ಊರಿನಿಂದ ವಿಶ್ವದಲ್ಲೇ ಅತ್ಯಂತ ಶಕ್ತಿಶಾಲಿ ರಾಜಧಾನಿಗೆ ಕಾಲಿರಿಸುವುದು ನನ್ನಲ್ಲಿ ಕ್ಷಣಕಾಲ ಹೆಮ್ಮೆಯ ಭಾವನೆ ಮೂಡಿಸಿತು. ಇದು ಸುಮಾರು 25 ವರ್ಷಗಳ ಹಿಂದೆ ಎಂಬುವುದನ್ನು ನೆನಪಿಡಿ. ಅಂದು ವಿದೇಶ ಪಯಣ ಅಂದರೆ ಐಎಎಸ್ ಅಧಿಕಾರಿಗಳಿಗೂ ಸಾಮಾನ್ಯ ವಿಷಯವಾಗಿರಲಿಲ್ಲ.   ನಾನು ಶಿಥಿಲಾವಸ್ಥೆಯಲ್ಲಿದ್ದ ಒಂದು ಉರ್ದು ಶಾಲೆಯಲ್ಲಿ ಕಲಿತವನು. ನನ್ನ ತಂದೆಯವರೇ ಅಲ್ಲಿನ ಮುಖ್ಯೋಪಾಧ್ಯಾಯರಾಗಿದ್ದರು. ಉಪಾಧ್ಯಾಯರ ಮಗನಾಗಿರುವುದು ಸುಲಭದ ಮಾತಲ್ಲ. ನನ್ನ ನಡತೆ ಬಗ್ಗೆ ಹೆಚ್ಚಿನ ನಿರೀಕ್ಷೆಗಳಿದ್ದವು. ಒಳ್ಳೆಯ ವಿದ್ಯಾರ್ಥಿ ಎಂಬ ಹೊಗಳಿಕೆ ನನಗೆ ಸಿಗುತ್ತಿದ್ದರೂ, ನನ್ನ ತರಗತಿಯೇನೂ ನಿಜವಾಗಿ ಉನ್ನತ ವರ್ಗದ್ದಾಗಿರಲಿಲ್ಲ. ತರಗತಿಯಲ್ಲಿದ್ದ ಎಲ್ಲ ಮಕ್ಕಳು ಅತ್ಯಂತ ಬಡತನದ ಹಿನ್ನೆಲೆಯವರು. ಅವರ ತಂದೆ ತಾಯಂದಿರು ಅಲ್ಪ ಶಿಕ್ಷಣ ಅಥವಾ ಶಿಕ್ಷಣವನ್ನೇ ಪಡೆಯದವರು. ನಾನೂ ಅವರಲ್ಲಿ ಒಬ್ಬನಾಗಿದ್ದೆ. ಆದರೆ ನನ್ನ ಮನೆಯಲ್ಲಿ ಕಲಿಕೆಗೆ ಪೂರಕ ವಾತಾವರಣವಿತ್ತು. ಶಿಕ್ಷಕರಾಗಿದ್ದ ನನ್ನ ತಂದೆ ಬಹಳಷ್ಟನ್ನು ಸಾಧಿಸಬಲ್ಲವರಾಗಿದ್ದರು. ಆದರೆ ರೈತನ ಮಗನಾಗಿ (ಸ್ವಲ್ಪ ಜಮೀನು ಹೊಂದಿದ್ದ ನನ್ನ ಅಜ್ಜ ಅದನ್ನು ಕೌಟುಂಬಿಕ ವಿವಾದದಲ್ಲಿ ಕಳೆದುಕೊಂಡಿದ್ದರು.) ಕೆಲವೇ ವರ್ಷಗಳ ವಿದ್ಯಾಭ್ಯಾಸ ಅವರಿಗೆ ದೊರೆತಿತ್ತು. ಲೋವರ್ ಸೆಕಂಡರಿ ನಂತರ ಕಲಿಯಲು ಅವರಿಗೆ ಸಾಧ್ಯವಾಗಿರಲಿಲ್ಲ. ಅಂದಿನ ಕಾಲದಲ್ಲಿ ಲೋವರ್ ಸೆಕಂಡರಿ ಅಂದರೆ ಪದವಿ ರೀತಿಯಲ್ಲಿ ಇತ್ತು. ಲೋವರ್ ಸೆಕಂಡರಿ ಅಂದರೆ 7 ವರ್ಷಗಳ ಕಲಿಕೆ ಎಂದು ನನಗೆ ನಂತರ ಗೊತ್ತಾಯಿತು. ಆ ಬಳಿಕ ನನ್ನ ತಂದೆಯವರು ಮೈಸೂರಿಗೆ ತೆರಳಿ ಬೋಧನೆಯಲ್ಲಿ ಡಿಪ್ಲೊಮಾ ಪಡೆದರು. ಆ ಕಾಲದಲ್ಲಿ ಶಿಕ್ಷಕರ ಕೊರತೆ ಬಹಳ ಇತ್ತು. ಆಗ ತುಮಕೂರಿನಲ್ಲಿ ಜಿಲ್ಲಾ ಶಿಕ್ಷಣಾಧಿಕಾರಿ (ಡಿಇಒ)ಯಾಗಿ ಅಬ್ದುಲ್ ಅಝೀಝ್ ಎಂಬವರಿದ್ದರು. ನನ್ನ ತಂದೆ ಬೋಧನೆಯಲ್ಲಿ ಡಿಪ್ಲೊಮಾ ಪಡೆದಿರುವುದನ್ನು ತಿಳಿದುಕೊಂಡ ಅವರು, ತಂದೆಗೆ ಕೆಲಸ ನೀಡಿದರು ಎಂದು ನನಗೆ ಆನಂತರ ಗೊತ್ತಾಯಿತು. ನನ್ನ ತಂದೆಯವರು ಕೇವಲ ಲೋವರ್ ಸೆಕಂಡರಿ ಮಾಡಿದ್ದರೂ, ಇಂಗ್ಲಿಷ್ ಮೇಲಿನ ಅವರ ಹಿಡಿತ ನಂತರ ನನಗೆ ಆಶ್ಚರ್ಯ ಮೂಡಿಸಿತ್ತು. ನಾನು ಉರ್ದು ಮಾಧ್ಯಮದಲ್ಲಿ ಕಲಿತರೂ, ಇಂಗ್ಲಿಷ್ ಓದಲು ಮತ್ತು ಬರೆಯಲು ತಂದೆಯಿಂದ ಕಲಿತೆ. ಉರ್ದು ಕಾವ್ಯಗಳ ಕುರಿತಾದ ವಿಶೇಷ ಆಸಕ್ತಿಯನ್ನೂ ನಾನು ತಂದೆಯಿಂದಲೇ ಕಲಿತೆ. ನನ್ನ ಇಡೀ ಐಎಎಸ್ ವೃತ್ತಿ ಬದುಕಿನಲ್ಲಿ ಉರ್ದು ಸಾಹಿತ್ಯದ ಬಗ್ಗೆ ಅದರಲ್ಲೂ ಉರ್ದು ಕಾವ್ಯದ ಮೇಲಿನ ಪ್ರೇಮ ನಿರಂತರವಾಗಿ ಮುಂದುವರಿಯಿತು. ಅದರ ಬಗ್ಗೆ ಹೆಚ್ಚಿನ ಮಾತು ನಂತರ; ಮೊದಲಿಗೆ ನಾನು ಹೇಗೆ ಐಎಎಸ್‌ಗೆ ಬಂದೆ ಎಂಬುವುದನ್ನು ನಿಮಗೆ ಹೇಳುತ್ತೇನೆ. ನಮ್ಮ ಜಮೀನು ನೋಡಿಕೊಳ್ಳುತ್ತಿದ್ದ ಅಡಪ್ಪ ಎಂಬಾತ, ನಾನು ಪಿಯುಸಿ ಪರೀಕ್ಷೆಗೆ ಸಿದ್ಧತೆ ಮಾಡುತ್ತಿದ್ದ ಸಂದರ್ಭದಲ್ಲಿಯೇ ಕೆಲಸಕ್ಕೆ ಬರುವುದನ್ನು ನಿಲ್ಲಿಸಿದ. ಪಿಯುಸಿ ಪರೀಕ್ಷೆಗೆ ಇನ್ನು ಕೆಲವೇ ವಾರಗಳಿದ್ದವು. ಆದರೆ ನನ್ನ ತಂದೆ ನನ್ನನ್ನು ದನಗಳನ್ನು ಮೇಯಿಸಲು ಜಮೀನಿಗೆ ಕಳುಹಿಸಿದರು. ‘‘ಪುಸ್ತಕಗಳನ್ನು ಸಹ ತಗೊಂಡು ಹೋಗು, ದನಗಳು ಮೇಯುತ್ತಿರುವಾಗ ಓದು’’ - ಇದು ನನ್ನ ತಂದೆಯವರ ಆಜ್ಞೆಯಾಗಿತ್ತು. ಹಾಗೆ, ಒಂದು ಕೈಯಲ್ಲಿ ಪುಸ್ತಕ, ಇನ್ನೊಂದು ಕೈಯಲ್ಲಿ ದನದ ಹಗ್ಗವನ್ನು ಹಿಡಿದುಕೊಂಡು ನಾನು ಜಮೀನಿಗೆ ಹೋಗಬೇಕಾಯಿತು. ಪರೀಕ್ಷೆಯಲ್ಲಿ ನನ್ನ ಸಾಧನೆ ಕಳಪೆಯಾಗಿತ್ತು. ಆದರೂ 1982ರ ಆ ವರ್ಷ ಕೊರಟಗೆರೆ ಜೂನಿಯರ್ ಕಾಲೇಜಿನ ಪಿಸಿಎಂಬಿ ವಿಭಾಗದಲ್ಲಿ ನಾನೇ ಟಾಪರ್ ಆಗಿದ್ದೆ. ಪಿಯುಸಿಯಲ್ಲಿ ಕಡಿಮೆ ಅಂಕಗಳು ಬಂದ ಕಾರಣ ಯಾವುದಾದರೂ ಇಂಜಿನಿಯರಿಂಗ್ ಕಾಲೇಜಿನಲ್ಲಿ ಪ್ರವೇಶ ಸಿಗುವ ಆಸೆಯನ್ನು ನಾನು ಇಟ್ಟುಕೊಳ್ಳುವಂತಿರಲಿಲ್ಲ. ನನ್ನ ತಂದೆಯವರು ಕೃಷಿ ಬಗ್ಗೆ ಹೆಚ್ಚಿನ ಒಲವು ಹೊಂದಿದ್ದರು. ಕೃಷಿ ವಿಶ್ವವಿದ್ಯಾನಿಲಯದಲ್ಲಿ ಕೃಷಿಕರ ಮಕ್ಕಳಿಗೆ ಆದ್ಯತೆ ನೀಡುವ ಬಗ್ಗೆ ಕೆಲವು ಗೆಳೆಯರು ಅವರಿಗೆ ಹೇಳಿದ್ದರು. ಹಾಗೆ ನಾನು ತಂದೆಯವರ ಜಮೀನಿನ ಆರ್‌ಟಿಸಿ ಪ್ರತಿಯೊಂದಿಗೆ ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯಕ್ಕೆ ಅರ್ಜಿ ಸಲ್ಲಿಸಿದೆ. ಆದರೆ ನನಗೆ ಧಾರವಾಡ ಕಾಲೇಜಿನಲ್ಲಿ ಪ್ರವೇಶ ದೊರೆಯಿತು. ಆ ದಿನಗಳಲ್ಲಿ 450 ಕಿ.ಮೀ ಅಂದರೆ ಬಹಳ ದೂರವಾಗಿತ್ತು. ಆದರೂ ತಂದೆ ನನ್ನನ್ನು ಹೇಗೋ ಅಲ್ಲಿಗೆ ಕಳುಹಿಸಿದರು. ಇಲ್ಲಿ ಧಾರವಾಡದಲ್ಲಿ ನಾನು ಮೊದಲ ಬಾರಿಗೆ ಐಎಎಸ್ ಬಗ್ಗೆ ಕೇಳಿದೆ. ಹಾಗೆ ನಾನು ಐಎಎಸ್ ಪರೀಕ್ಷೆ ಬರೆಯಲು ನಿರ್ಧರಿಸಿದೆ. ಅದನ್ನು ನಾನು ಎಂ.ಎಸ್ಸಿ ಕಲಿಯುತ್ತಿದ್ದಾಗ ಹಾಗೂ ಆ ಬಳಿಕ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್, ಅಹ್ಮದಾಬಾದ್‌ನಲ್ಲಿ ಸಂಶೋಧನಾ ಸಹಾಯಕನಾಗಿ ಕಾರ್ಯನಿರ್ವಹಿಸುತ್ತಿದ್ದ ಅವಧಿಯಲ್ಲಿ ಬರೆದೆ. ಐಎಎಸ್ ಅಧಿಕಾರಿಯಾಗುವುದೆಂದರೇನು ಎಂಬ ಬಗ್ಗೆ ನನಗೆ ಯಾವುದೇ ಐಡಿಯಾ ಇರಲಿಲ್ಲ. ಆದರೂ ಹೇಗಾದರೂ ಮಾಡಿ ಪ್ರಯತ್ನಿಸಿ ಅದನ್ನು ಸಾಧಿಸಬೇಕು ಎಂಬ ಭಾವನೆ ನನ್ನಲ್ಲಿ ಬಲವಾಗಿತ್ತು. ನಾನು ಮೂರನೇ ಪ್ರಯತ್ನದಲ್ಲಿ ಮುಖ್ಯ ಪರೀಕ್ಷೆಯಲ್ಲಿ ಪಾಸಾಗಿ ಸಂದರ್ಶನಕ್ಕೆ ದೆಹಲಿಗೆ ಹೋದೆ. ಸಂದರ್ಶನವನ್ನು ನಾನು ಚೆನ್ನಾಗಿ ಮಾಡಿದೆ ಎಂದು ನನಗೆ ಅನಿಸಿತ್ತು. ನಾನು ಮತ್ತೆ ಅಹ್ಮದಾಬಾದ್ ಗೆ ಹಿಂದಿರುಗಿ ಕೆಲವು ತಿಂಗಳು ಕೆಲಸ ಮಾಡಿದೆ. ಈ ಅವಧಿಯಲ್ಲಿಯೇ ಫಲಿತಾಂಶ ಪ್ರಕಟವಾಯಿತು. ಪತ್ರಿಕೆಗಳಲ್ಲಿ ಪ್ರಕಟವಾದ ಪಟ್ಟಿಯಲ್ಲಿ ನನ್ನ ಹೆಸರು ಇರುವುದನ್ನು ಐಐಎಂನಲ್ಲಿನ ನನ್ನ ಸಹೋದ್ಯೋಗಿಯೊಬ್ಬರು ನೋಡಿದರು.   ಐಎಎಸ್‌ಗೆ ಸೇರುವುದು ನನ್ನ ಜೀವನವನ್ನೇ ಬದಲಾಯಿಸಿದ ಅನುಭವವಾಗಿತ್ತು. ಇಂತಹದ್ದೊಂದು ಸಾಧ್ಯವಾಗಬಹುದು ಎಂದು ನನ್ನ ಕುಟುಂಬದ ಯಾರೂ ಎಣಿಸಿರಲೇ ಇಲ್ಲ. ನನ್ನ ಹಳ್ಳಿಯಲ್ಲಿ, ಕೆಲವು ಹಿರಿಯರು ನನ್ನ ಸಾಧನೆ ಬಗ್ಗೆಯೇ ಸಂಶಯಪಟ್ಟಿದ್ದರು. ಅಂತಹ ದೊಡ್ಡ ಹುದ್ದೆ ನಮಗೆ ಹೇಗೆ ಸಿಗಲು ಸಾಧ್ಯ ಎಂದು ಅವರು ಹೇಳಿದ್ದರು. ಐಎಎಸ್ ಗೆ ಸೇರಲು ಯಾರಿಗಾದರೂ ಲಂಚ ನೀಡಬೇಕಾಯಿತೇ ಎಂದು ನನ್ನ ಹೈಸ್ಕೂಲ್‌ನಲ್ಲಿ ಕೆಲಸ ಮಾಡುತ್ತಿದ್ದ ಕ್ಲರ್ಕ್ ನನ್ನಲ್ಲಿ ಕೇಳಿದ್ದ. ಈ ಹುದ್ದೆ ತಹಶೀಲ್ದಾರ್ ಹುದ್ದೆಗಿಂತ ಮೇಲಿನದ್ದೇ ಅಥವಾ ಕೆಳಗಿನದ್ದೇ ಎಂದು ಕೆಲವರು ನನ್ನಲ್ಲಿ ಪ್ರಶ್ನಿಸಿದ್ದರು. ಏನೇ ಇರಲಿ, ಒಮ್ಮೆ ಐಎಎಸ್ ಗೆ ಸೇರಿದ ಬಳಿಕ, ನಾನು ಏನೋ ಸಾಧಿಸಿದ್ದೇನೆ ಅಥವಾ ಇದ್ದಕ್ಕಿದ್ದಂತೆ ನಾನು ಶ್ರೇಷ್ಠನಾಗಿದ್ದೇನೆ ಎಂಬ ಭಾವನೆ ನನಗೆ ಬರಲಿಲ್ಲ. ನಾನು ಅತ್ಯಂತ ವಿನೀತನಾಗಿಯೇ ಇದ್ದೆ. ಮಸ್ಸೂರಿಯಲ್ಲಿರುವ ನಮ್ಮ ತರಬೇತಿ ಕೇಂದ್ರದಲ್ಲಿ ರೂಮ್ ಬಾಯ್ ನನ್ನ ಶೂಗಳನ್ನು ಪಾಲಿಶ್ ಮಾಡಲು ಬಂದಿದ್ದ. ಅದು ಆತನ ನಿತ್ಯದ ಕೆಲಸದ ಭಾಗವಾಗಿತ್ತು. ನನ್ನ ಶೂಗಳನ್ನು ಇನ್ನೊಬ್ಬರು ಪಾಲಿಶ್ ಮಾಡುವುದು ಸರಿಯಲ್ಲ ಎಂಬ ಭಾವನೆ ನನ್ನದಾಗಿತ್ತು. ನನ್ನ ಶೂ ಪಾಲಿಶ್ ಮಾಡುವುದು ಬೇಡ ಎಂದು ಅವನಿಗೆ ಹೇಳಿದೆ. ನನ್ನ ಶಾಲೆಯ ಗುರುಗಳು ಮತ್ತು ಊರಿನ ಹಿರಿಯರು ಊರಿನಲ್ಲಿ ನನ್ನನ್ನು ಸನ್ಮಾನಿಸಿದ್ದರು. ಎಲ್ಲರ ಗಮನದ ಕೇಂದ್ರ ಬಿಂದುವಾಗಿರುವುದು ಕಂಡು ನನ್ನ ಹೃದಯ ತುಂಬಿ ಬಂದಿತ್ತು. ನಾವೆಲ್ಲರೂ ಯಾವತ್ತೂ ಗುರುಗಳಿಗೆ ಹಾಗೂ ಊರಿನ ಹಿರಿಯರಿಗೆ ವಿಧೇಯ ಮತ್ತು ಆಜ್ಞಾಪಾಲಕರಾಗಿಯೇ ಇರುತ್ತಿದ್ದೆವು. ನಾನು ಐಎಎಸ್ ಆದ ಬಳಿಕವೂ ನನಗೆ ಬದಲಾಗಲು ಸಾಧ್ಯವಾಗಿಲ್ಲ. ಎಷ್ಟೆಂದರೆ, ಒಮ್ಮೆ ನನ್ನ ಗ್ರಾಮದ ಗ್ರಾಮ ಲೆಕ್ಕಿಗ ‘‘ಸಾರ್, ನೀವು ಇಷ್ಟು ಮೃದು ಮತ್ತು ಸಭ್ಯರಾಗಿದ್ದರೆ, ಐಎಎಸ್ ನಲ್ಲಿ ಹೇಗೆ ಬದುಕುಳಿಯುತ್ತೀರಿ’’ ಎಂದು ಕೇಳಿದ್ದ.   ಪ್ರೊಬೆಷನರಿ ಅವಧಿಯಲ್ಲಿ ನಾನು ಬಹಳಷ್ಟು ಸಾಹಿತ್ಯ ಓದಿದೆ. ಸಂಗೀತ ಕೇಳಿದೆ, ವಿಶೇಷವಾಗಿ ಇಕ್ಬಾಲ್ ಬಾನು, ಅಬಿದಾ ಪರ್ವೀನ್, ನೂರ್ ಜಹಾನ್, ಜಗಜಿತ್ ಸಿಂಗ್ ಮುಂತಾದವರು ಹಾಡಿದ ಫೈಜ್ ಅಹ್ಮದ್ ಫೈಜ್ ಮತ್ತು ಗಾಲಿಬ್ ಅವರ ಗಂಭೀರ ಉರ್ದು ಕವಿತೆಗಳನ್ನು. ಅದೇ ಸಮಯದಲ್ಲಿ, ನಾನು ಫ್ರಾಂಜ್ ಕಾಫ್ಕಾ ಅವರ ‘ದಿ ಟ್ರಯಲ್’ ಪುಸ್ತಕ ಓದಿದೆ. ಗಿರೀಶ್ ಕಾಸರವಳ್ಳಿ ಅವರ ಪ್ರಶಸ್ತಿ ವಿಜೇತ ಚಲನಚಿತ್ರ ತಬರನ ಕಥೆ ನೋಡಿದೆ. ಫೈಜ್ ಅಹ್ಮದ್ ಫೈಜ್ ಅವರ ಪ್ರಣಯ ಮತ್ತು ಕ್ರಾಂತಿಕಾರಿ ಕವಿತೆಗಳನ್ನು ಓದಿದೆ. ಇವೆಲ್ಲವೂ ನನ್ನನ್ನು ಐಎಎಸ್ ನಲ್ಲಿ ಬಹಳ ವಿಭಿನ್ನವಾಗಿಸಿದವು. ನಾನು ನನ್ನನ್ನು ಕಾಫ್ಕಾ ಅವರ ‘ಟ್ರಯಲ್’ನ ಜೋಸೆಫ್ ಕೆ. ಮತ್ತು ‘ತಬರನ ಕಥೆ’ಯ ತಬರನೊಂದಿಗೆ ಹೆಚ್ಚು ಗುರುತಿಸಿಕೊಂಡೆ. ಪಿಂಚಣಿಗಾಗಿ ತಬರ ನಡೆಸುವ ಹೋರಾಟ ನನ್ನನ್ನು ಎಷ್ಟರ ಮಟ್ಟಿಗೆ ಪ್ರಭಾವಿಸಿತೆಂದರೆ, ನನ್ನ ಬಳಿಗೆ ಬರುವ ಯಾವುದೇ ಅರ್ಜಿದಾರನಲ್ಲೂ ನನಗೆ ತಬರನೇ ಕಾಣುತ್ತಿದ್ದ. ಜನರು ಐಎಎಸ್ ಅಧಿಕಾರಿಗಳಿಂದ ಒಂದು ರೀತಿಯ ದೊಡ್ಡಸ್ತಿಕೆ ನಡವಳಿಕೆಯನ್ನು ನಿರೀಕ್ಷಿಸಿದರೂ, ನಾನು ಐಎಎಸ್ ಅಧಿಕಾರಿಯಾಗಿದ್ದೂ, ಈ ರೀತಿ ಜನಸಾಮಾನ್ಯರೊಂದಿಗೆ ನಿಲ್ಲುವುದು ನನಗೆ ಸಹಜವಾಗಿಯೇ ಬಂದಿತ್ತು. ನಾನು ಉತ್ತರ ಕನ್ನಡ ಜಿಲ್ಲೆಯ ಹಳ್ಳಿಗಳಲ್ಲಿ ಪ್ರಯಾಣಿಸಿದಾಗ ನನಗೆ ಗೇಬ್ರಿಯಲ್ ಗಾರ್ಸಿಯಾ ಮಾರ್ಕ್ವೆಜ್ ನ ‘ವನ್ ಹಂಡ್ರೆಂಡ್ ಇಯರ್ ಆಫ್ ಸಾಲಿಟ್ಯೂಡ್’ ನೆನಪಾಗುತ್ತಿತ್ತು. ಉತ್ತರ ಕನ್ನಡ ಜಿಲ್ಲೆಯಲ್ಲಿ ನಾನು ಬರಹಗಾರರು ಮತ್ತು ಕವಿಗಳೊಂದಿಗೆ ಸಮಯ ಕಳೆದೆ. ಆ ಸಮಯದಲ್ಲಿಯೇ ನಾನು ಫೈಜ್ ಅಹ್ಮದ್ ಫೈಜ್ ಅವರ ಕವಿತೆಗಳನ್ನು ಕನ್ನಡಕ್ಕೆ ಭಾಷಾಂತರಿಸಿದೆ. ಫೈಜ್ ಅವರಲ್ಲಿ ನನಗೆ ಮಾನವೀಯತೆ ಹಾಗೂ ದುರ್ಬಲರಿಗಾಗಿನ ಪ್ರೇಮ ದೊರೆಯಿತು. ಕಾರ್ಮಿಕರು, ಗುಮಾಸ್ತರು, ಪೋಸ್ಟ್ ಮ್ಯಾನ್, ರೈತರು ಮುಂತಾದವರನ್ನು ಅಭಿಸಂಬೋಧಿಸುವ ಅವರ ‘ಇಂತೆಸಾಬ್’ ಕವಿತೆ ನನಗೆ ಸ್ಫೂರ್ತಿ ನೀಡಿತು. ದಬ್ಬಾಳಿಕೆ ಮತ್ತು ಕತ್ತಲೆಯನ್ನು ಎದುರಿಸುತ್ತಿರುವ ಜನರಿಗೆ ಫೈಜ್ ಕವಿತೆ ಆಶಾಭಾವನೆ ನೀಡಿತ್ತು. ಯಾವತ್ತಾದರೂ ಭಾವನಾತ್ಮಕ ತುಮುಲಕ್ಕೆ ಒಳಗಾದಾಗ ಅಥವಾ ವ್ಯವಸ್ಥೆಯಿಂದ ಅನ್ಯಾಯವಾಗಿದೆ ಎಂದು ನಾನು ಭಾವಿಸಿದಾಗ ಫೈಜ್ ಅವರ ‘‘ನಾನು ನನ್ನ ಪ್ರಿಯತಮೆಯನ್ನು ಭೇಟಿ ಮಾಡುವಾಗ ಅವರು ದೀಪಗಳನ್ನು ಆರಿಸಬಹುದು, ಅವರು ಚಂದ್ರನನ್ನೇ ಆರಿಸಲು ಯತ್ನಿಸಲಿ’’ ಎಂಬ ಸಾಲುಗಳನ್ನು ನೆನಪಿಸಿಕೊಳ್ಳುತ್ತಿದ್ದೆ.   ನಮ್ಮಂತಹ ಸಮಾಜದಲ್ಲಿ ಆಡಳಿತ ಮತ್ತು ಆಡಳಿತ ವ್ಯವಸ್ಥೆಯನ್ನು ಕೆಲವೊಮ್ಮೆ ತೀರಾ ಮಾನವೀಯತೆಯನ್ನೇ ಕಳೆದುಕೊಳ್ಳುವ ಅನುಭವವಾಗಿ, ಅಥವಾ ಸಂವೇದನೆಯನ್ನು ಇಲ್ಲವಾಗಿಸುವ ಅನುಭವವಾಗಿಯೇ ಸಾಮಾನ್ಯವಾಗಿ ನೋಡಲಾಗುತ್ತದೆ. ಆದರೆ ಬಾಲ್ಯದಿಂದ ನಾನು ಪಡೆದ ಸಂಸ್ಕಾರ, ನನ್ನ ತಂದೆ ತಾಯಿಯಿಂದ ಪಡೆದುಕೊಂಡ ಶಿಕ್ಷಣ (ಅವರು ಅದನ್ನು ಯಾವತ್ತೂ ನನಗೆ ಪ್ರತ್ಯೇಕವಾಗಿ ಕಲಿಸಲು ಪ್ರಯತ್ನಿಸದಿದ್ದರೂ) ಮತ್ತು ಸಾಹಿತ್ಯ ಮತ್ತು ಕಾವ್ಯ, ಆಡಳಿತದಲ್ಲಿ ಸರಿಯಾದ ಕೆಲಸ ಮಾಡಲು ನನಗೆ ಪ್ರೇರಣೆ ನೀಡಿದವು.

ವಾರ್ತಾ ಭಾರತಿ 8 Feb 2026 1:28 pm

Shreyanka Patil: ಕನ್ನಡತಿ, ಆರ್‌ಸಿಬಿ ಆಟಗಾರ್ತಿ ಶ್ರೇಯಾಂಕಾ ಪಾಟೀಲ್‌ಗೆ ಯಾವುದೇ ಗ್ರೇಡ್‌ ನೀಡದ ಬಿಸಿಸಿಐ

Shreyanka Patel: ಬಿಎಸಿಸಿಐ ಶೀಘ್ರದಲ್ಲೇ ಭಾರತದ ಪುರುಷ ಮತ್ತು ಮಹಿಳಾ ಕ್ರಿಕೆಟ್ ತಂಡದ ಹೊಸ ಕೇಂದ್ರ ಒಪ್ಪಂದವನ್ನು ಪ್ರಕಟಿಸಲಿದೆ. ಅದರಂತೆಯೇ ಈ ಬಾರಿಗೆ ಮಹಿಳಾ ತಂಡದ ಒಪ್ಪಂದದಲ್ಲಿ 21 ಆಟಗಾರ್ತಿಯರಿಗೆ ಸ್ಥಾನ ಸಿಗಲಿದ್ದು, ಹರ್ಮನ್‌ಪ್ರೀತ್ ಕೌರ್, ಸ್ಮೃತಿ ಮಂಧಾನ ಮತ್ತು ಜೆಮಿಮಾ ರೋಡ್ರಿಗಸ್ ಎ ಗ್ರೇಡ್‌ನಲ್ಲಿ ವಾರ್ಷಿಕ 50 ಲಕ್ಷ ರೂಪಾಯಿ ವೇತನ ಪಡೆಯಲಿದ್ದಾರೆ. ಆದರೆ, ಕನ್ನಡತಿ

ಒನ್ ಇ೦ಡಿಯ 8 Feb 2026 1:26 pm

ಕರ್ಪೂರದ ಗಿರಿ

ಪತ್ರಿಕೆಗಳ ಬೆಂಗಳೂರು ಆವೃತ್ತಿ ಮಾತ್ರ ಪ್ರಕಟವಾಗುತ್ತಿದ್ದವು. ಸ್ಥಳೀಯ ಪತ್ರಿಕೆಗಳು ಮುಂಜಾನೆಯೇ ಓದಲು ಸಿಗುತ್ತಿದ್ದವು.. ರಾಜ್ಯಮಟ್ಟದ ಪತ್ರಿಕೆಗಳನ್ನು ಪಾಠ ಪ್ರವಚನ, ಲ್ಯಾಬ್ ಮುಗಿಸಿಕೊಂಡು ಸಾಯಂಕಾಲ ಓದುತ್ತಿದ್ದೆ. ಆಗಿನ ಶಾಸಕರು, ಮಂತ್ರಿಗಳ ಸುದ್ದಿಗಳು ಪದ್ಮಪ್ರಸಾದ್ ಅವರ ಸುದ್ದಿಗಳೊಡನೆ ಪೈಪೋಟಿ ಮಾಡಲು ಸಾಧ್ಯವಿರಲಿಲ್ಲ. ಆಗಿನ ಕಾಲದಲ್ಲೇ ಪದ್ಮಪ್ರಸಾದ್ ಕಲಬುರ್ಗಿ ನಗರದ ಮಹಾದಾನಿಗಳ ಸಾಲಿನಲ್ಲಿ ಸೇರಿದ್ದರು. ಒಂದಲ್ಲ ಒಂದು ಕಾರ್ಯಕ್ರಮಕ್ಕೆ ಮುಖ್ಯ ಅತಿಥಿ, ಉದ್ಘಾಟಕ, ಅಧ್ಯಕ್ಷ ಇತ್ಯಾದಿ ವೈವಿಧ್ಯಮಯ ಪಾತ್ರಗಳಲ್ಲಿ ಪಾಲ್ಗೊಂಡು ಸುದ್ದಿಯಲ್ಲಿ ಇರುತ್ತಿದ್ದರು. ಅಲ್ಲಿಯವರೆಗೆ ನಾನು ಅವರ ಭಾವಚಿತ್ರಗಳನ್ನು ಪತ್ರಿಕೆಗಳಲ್ಲಿ ನೋಡಿದ್ದೆ.. ರಾಜಶೇಖರ ಹತಗುಂದಿ, ವೃತ್ತಿಯಲ್ಲಿ ಪತ್ರಕರ್ತ ಪ್ರವೃತ್ತಿಯಲ್ಲಿ ಕಥೆಗಾರ. ಅಗ್ನಿ ವಾರ ಪತ್ರಿಕೆಯ ಸಂಪಾದಕರಾಗಿ, ಜನವಾಹಿನಿಯಲ್ಲಿ ವರದಿಗಾರರಾಗಿ ಸೇವೆ ಸಲ್ಲಿಸಿದ್ದಾರೆ. ಪ್ರಸ್ತುತ ವಾರ್ತಾ ಭಾರತಿಗೆ ಅಂಕಣ ಬರೆಯುತ್ತಿದ್ದಾರೆ.. ಕಾಲ ಬೆಳದಿಂಗಳ ಸಿರಿ, ಬೆಟ್ಟಕ್ಕೆ ಚಳಿ, ಸುಖವು ಬೀದಿಯ ನೆರಳು, ಗೇಟು ದಾಟಿದ ಬಳಿಕ-ಇವರ ಕಥಾ ಸಂಕಲನಗಳು. ಬುದ್ಧನ ನಾಡಿನಲ್ಲಿ, ಬಯಲ ಹುಡಿ, ಎಡ ಹೊತ್ತಿನ-ಇವರ ಇನ್ನಿತರ ಪ್ರಕಟಿತ ಪುಸ್ತಕಗಳು. ಕರ್ನಾಟಕ ಮಾಧ್ಯಮ ಅಕಾಡಮಿಯ ವಾರ್ಷಿಕ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡಮಿಯ ಸಾಹಿತ್ಯ ಶ್ರೀ ಪ್ರಶಸ್ತಿ, ಗುಲ್ಬರ್ಗಾ ವಿ ವಿ ಯ ಗೌರವ ಡಾಕ್ಟರೇಟ್ ಪದವಿಗೆ ಭಾಜನರಾಗಿದ್ದಾರೆ. ಸದ್ಯ ಬೆಂಗಳೂರಿನಲ್ಲಿ ವಾಸಿಸುತ್ತಿದ್ದಾರೆ. ಇದು ಪದ್ಮಪ್ರಸಾದನ ಕತೆ ನಾನು ಕಂಡಿದ್ದು ಅಲ್ಪ.. ಸಾರ್ವಜನಿಕ ಬದುಕಿನಲ್ಲಿ ವದಂತಿಗಳಾಗಿ ಹರಡಿ, ಕೊನೆಗೆ ದಂತ ಕತೆಯ ಸ್ವರೂಪ ಪಡೆದ ಎಲ್ಲವೂ ಈ ಪದ್ಮಪ್ರಸಾದ ಜೀವನ ಕಥನದ ಹೂರಣ.ಪದ್ಮಪ್ರಸಾದನ ಕತೆಯಲ್ಲಿ ವಾಸ್ತವ ಮತ್ತು ಕಲ್ಪಕತೆಯ ಪ್ರಮಾಣ ನನ್ನ ಊಹೆಗೂ ನಿಲುಕಿಲ್ಲ. ನಾನು ಕಂಡ, ಕೇಳಿದ, ಪತ್ರಿಕೆಯಲ್ಲಿ ಸುದ್ದಿ ರೂಪದಲ್ಲಿ ಅಚ್ಚಾದ ಮತ್ತು ಕಲಬುರಗಿಯಂಥ ದೊಡ್ಡ ಶಹರಿನಲ್ಲಿ ಜನನಿತವಾದ ಎಲ್ಲ ಸಂಗತಿಗಳನ್ನು ನಿಮ್ಮ ಮುಂದೆ ಇಡುತ್ತೇನೆ. ಹಂಸ ಕ್ಷೀರ ನ್ಯಾಯ ದಯಪಾಲಿಸುವ ಹೊಣೆ ಓದುಗರದು. ಪದ್ಮಪ್ರಸಾದನ ಕತೆಯಲ್ಲಿನ ಕಟು ಸತ್ಯ ಗೊತ್ತಿರುವುದು ಕಥಾ ನಾಯಕನ ಅಂತ:ಸ್ಸಾಕ್ಷಿಗೆ ಮತ್ತು ದೈವ ಸ್ವರೂಪಿ ಸಾರ್ವಜನಿಕರ ಶುದ್ಧ ಆತ್ಮಗಳಿಗೆ.ಒಡಕು ಬಾಯಿ ಸತ್ಯವನ್ನು, ತಡವರಿಸುವ ನಾಲಿಗೆ ಸುಳ್ಳುಗಳನ್ನು ಹೇಳುವುದು ಕಾಲಾನುಕಾಲದಿಂದ ನಡೆದುಕೊಂಡು ಬಂದ ವಾಡಿಕೆಯಾಗಿದೆ. ಸುಳ್ಳುಗಳಲ್ಲಿನ ಸತ್ಯ, ಸತ್ಯದೊಳಗಿನ ಅಸತ್ಯವನ್ನು ಕಾಲದ ಒರೆಗಲ್ಲು ಪತ್ತೆ ಮಾಡಿ ಅನಾವರಣಗೊಳಿಸುತ್ತಲೇ ಇದೆ. ಮೂಗಿಗಿಂತ ಮೂಗುತಿ ಭಾರವಾಗಬಾರದು. ಈಗ ನೇರ ಕತೆಗೆ ಬರುತ್ತೇನೆ. ಸುಮಾರು ನಲುವತ್ತು ವರುಷಗಳ ಹಿಂದಿನ ಮಾತು. ನಾನು ಹತಗುಂದಿಯಲ್ಲೇ ವಾಸವಿದ್ದ ದಿನಗಳು. ಹತಗುಂದಿ ಗ್ರಾಮ ಕಲಬುರಗಿ ನಗರದಿಂದ ಇಪ್ಪತ್ತು ಕಿಲೋಮೀಟರ್ ದೂರದಲ್ಲಿದೆ. ಹೊಲದಲ್ಲಿ ಬೆಳೆದ ತರಕಾರಿಯನ್ನು ಕಲಬುರಗಿ ಸೂಪರ್ ಮಾರ್ಕೆಟ್ ಗೆ ತಂದು ಹರಾಜು ಮೂಲಕ ಮಾರುವುದು ಆಗಿನ ಪದ್ಧತಿಯಾಗಿತ್ತು.. ಈಗಿನಂತೆ ರೈತ ಬೆಳೆದ ತರಕಾರಿಯನ್ನು ನೇರ ಗ್ರಾಹಕರಿಗೆ ತಲುಪಿಸುವ ಮಾರುಕಟ್ಟೆ ವ್ಯವಸ್ಥೆ ಆಗ ಇರಲಿಲ್ಲ. ಹೊಲದಲ್ಲಿ ಬೆಳೆಯುವ ಚವಳಿಕಾಯಿ, ಬೆಂಡಿಕಾಯಿಗಳನ್ನು ಗೋಣಿ ಚೀಲದಲ್ಲಿ ತುಂಬಿಕೊಂಡು ಮಾರಲು ಕಲಬುರಗಿಗೆ ಬರುತ್ತಿದ್ದೆ.ಹತಗುಂದಿಯಿಂದ ಕಲಬುರಗಿಗೆ ಈಗಿನಂತೆ ನೇರ ಬಸ್ಸುಗಳು ಇರಲಿಲ್ಲ. ಹತಗುಂದಿಯಿಂದ ಪಟ್ಟಣ ಪಾಟಿಯವರೆಗೆ ತರಕಾರಿ ತುಂಬಿದ ಗೋಣಿ ಚೀಲವನ್ನು ತಲೆ ಮೇಲೆ ಹೊತ್ತುಕೊಂಡು ಬರುತ್ತಿದ್ದೆ. ಪಟ್ಟಣ ಪಾಟಿಯಿಂದ ಕೆಂಪು ಬಸ್ಸು ಹತ್ತಿದರೆ ಕಲಬುರಗಿಯ ಶಹಾಬಜಾರ್ ನಾಕಾದ ಬಳಿ ಇಳಿಸುತ್ತಿತ್ತು. ಶಹಾ ಬಜಾರ್ ನಾಕಾದಿಂದ ಸೂಪರ್ ಮಾರ್ಕೆಟ್ ಗೆ ಬರಲು ಸೈಕಲ್ ರಿಕ್ಷಾದವರು ಒಪ್ಪುತ್ತಿರಲಿಲ್ಲ. ಒಂದೊಮ್ಮೆ ಒಪ್ಪಿಕೊಂಡರೂ ಸಿಕ್ಕಾಪಟ್ಟೆ ಬಾಡಿಗೆ ಕೇಳುತ್ತಿದ್ದರು. ಹಣ ಉಳಿಸಲು ನಾನು ಶಹಾ ಬಜಾರ್ ನಾಕಾದಿಂದ ಮದನ್ -ಪ್ರಕಾಶ ಟಾಕೀಸ್ ವರೆಗೆ ಮಾತ್ರ ಸೈಕಲ್ ರಿಕ್ಷಾದಲ್ಲಿ ಬರುತ್ತಿದ್ದೆ. ಬಹಮನಿ ಸುಲ್ತಾನರ ಕೋಟೆ ಎದುರಿಗಿನ ರಸ್ತೆ ಈ ಎರಡು ಟಾಕೀಸ್ ನಡುವೆ ಹಾಯ್ದು ಹೋದ ರಸ್ತೆಗೆ ಕೂಡುತ್ತಿತ್ತು. ಕೋಟೆ ಎದುರಿನ ರಸ್ತೆಯಲ್ಲಿ ಹಾದು ಸೂಪರ್ ಮಾರ್ಕೆಟ್ ಗೆ ಹೋಗಬಹುದಾಗಿತ್ತು.. ಆದರೆ ಆ ರಸ್ತೆಯಲ್ಲಿ ಸಿಂಧಿಖಾನಿ ಇರುವುದರಿಂದ, ಹಾಡಹಗಲೇ ಕುಡಿದವರು ತೂರಾಡುತ್ತ ಅಡ್ಡಡ್ಡ ಬರುತ್ತಿದ್ದರು.. ಅನಿವಾರ್ಯವಾಗಿ ನಾನು ತರಕಾರಿಯ ಗೋಣಿ ಚೀಲವನ್ನು ಮದನ್ - ಪ್ರಕಾಶ ಟಾಕೀಸ್ ಮಧ್ಯದ ರಸ್ತೆಯಲ್ಲಿ ಇಳಿದು ಪುಟ್ಟ ಗಲ್ಲಿಯ ಮೂಲಕ ಹಾಯ್ದು ಸೂಪರ್ ಮಾರ್ಕೆಟ್ ತಲುಪುತ್ತಿದ್ದೆ. ಆ ಎರಡೂ ಚಿತ್ರಮಂದಿರಗಳಿಗಿಂತ ಹೆಚ್ಚು ಜನಸಂದಣಿ ಆ ಪುಟ್ಟ ಗಲ್ಲಿಯಲ್ಲಿ ಜಮಾಯಿಸಿರುತ್ತಿತ್ತು. ಭಾರವಾದ ತರಕಾರಿಯ ಚೀಲ ಹೊತ್ತು ಆ ಗಲ್ಲಿಯ ದಟ್ಟ ಜನಸಂದಣಿಯಿಂದ ಪಾರಾಗಲು ಹರಸಾಹಸ ಪಡಬೇಕಾಗಿತ್ತು. ಯಾಕಾಗಿ ಆ ದಟ್ಟ ಜನಸಂದಣಿ ಎಂಬುದು ಎಷ್ಟೋ ವರ್ಷಗಳ ಕಾಲ ನನಗೆ ಅರ್ಥವೇ ಆಗಿರಲಿಲ್ಲ.   ದಟ್ಟ ಜನಸಂದಣಿ ಇರುವ ಆ ಇಕ್ಕಟ್ಟಿನ ರಸ್ತೆಯ ಅಕ್ಕ ಪಕ್ಕ ಅಂಗಡಿ ಮುಂಗಟ್ಟುಗಳಿದ್ದರೂ ಶೆಟರ್ ಹಾಕಿರುತ್ತಿದ್ದರು. ಆದರೂ ಜನ ಒಳ ಹೊರಗೆ ಅನುಮಾನಾಸ್ಪದ ರೀತಿಯಲ್ಲಿ ಓಡಾಡುತ್ತಿದ್ದರು. ಯಾವುದೋ ರಹಸ್ಯ ಭೇದಿಸಲು ಕಾಯುತ್ತಿರುವ ಹಾಗೆ ಜನ ಸೇರಿಕೊಳ್ಳುತ್ತಿದ್ದರು.ಆ ಪುಟ್ಟ ಗಲ್ಲಿಯ ಇಕ್ಕೆಲದಲ್ಲೂ ಪದ್ಮಪ್ರಸಾದ್ ಅವರಿಗೆ ಸೇರಿದ ಅಂಗಡಿ ಮುಂಗಟ್ಟುಗಳು ಇದ್ದವು ಎನ್ನುವುದು ಎಷ್ಟೋ ವರ್ಷಗಳ ನಂತರ ನನಗೆ ಗೊತ್ತಾಯಿತು. ಅಷ್ಟು ಮಾತ್ರವಲ್ಲ ಆ ಪದ್ಮಪ್ರಸಾದ್ ಯಾರು ಎನ್ನುವುದು ಆಗ ನನಗೆ ತಿಳಿದಿರಲಿಲ್ಲ. ಇಕ್ಕಟ್ಟಿನ ರಸ್ತೆಯ ಆ ಪುಟ್ಟ ಗಲ್ಲಿಯಲ್ಲಿ ಅಪಾರ ಪ್ರಮಾಣದ ಜನಸಂದಣಿ ಇದ್ದರೂ ಹತ್ತಿರದಲ್ಲೇ ಇದ್ದ ಮದನ್ ಮತ್ತು ಪ್ರಕಾಶ ಟಾಕೀಸ್ ಗಳು ನೊಣ ಹೊಡೆಯುತ್ತಿದ್ದವು. ಅಪರೂಪಕ್ಕೆ ಡಾ. ರಾಜ್‌ಕುಮಾರ್, ಅಮಿತಾಬ್ ಬಚ್ಚನ್ ಸಿನೆಮಾಗಳು ಇದ್ದಾಗ ಮಾತ್ರ ಆ ಎರಡೂ ಚಿತ್ರಮಂದಿರಗಳು ಹೌಸ್ ಫುಲ್ ಆಗಿರುತ್ತಿದ್ದವು. ಆ ಎರಡೂ ಚಿತ್ರಮಂದಿರಗಳು ಹೌಸ್ ಫುಲ್ ಆಗಿದ್ದಾಗಲೂ ಆ ಪುಟ್ಟ ಗಲ್ಲಿಯ ಜನಸಂದಣಿ ಮಾತ್ರ ಕರಗುತ್ತಿರಲಿಲ್ಲ.ಅಂದ ಹಾಗೆ ಆ ಪುಟ್ಟ ಗಲ್ಲಿಯ ಕಿರಿದಾದ ಹಾದಿಗೆ ಮಹಾವೀರ ರಸ್ತೆ ಎಂದು ನಾಮಕರಣ ಮಾಡಿದ್ದರು. ಆ ರಸ್ತೆಯಲ್ಲಿ ಮಹಾವೀರ ಮಂದಿರವಾಗಲಿ, ಅವರ ಮೂರ್ತಿಯಾಗಲಿ ಯಾವುದೂ ಇರಲಿಲ್ಲ. ಆ ಪುಟ್ಟ ಗಲ್ಲಿಯ ಜನಸಂದಣಿಯನ್ನು ಭಾರದ ತರಕಾರಿ ಚೀಲ ಹೊತ್ತು ದಾಟಲು ಸಾಕಷ್ಟು ಸಮಯ ಹಿಡಿಯುತ್ತಿತ್ತು. ನನ್ನ ಪುಟ್ಟ ಹೆಗಲು ಅಸಹಕಾರ ತೋರುತ್ತಿತ್ತು. ಪಟ್ಟು ಬಿಡದೆ ಕಾಲು ಹೆಜ್ಜೆ ಹಾಕುತ್ತಿತ್ತು. ಅತೀವ ಯಾತನೆ ಅನುಭವಿಸುತ್ತಾ ಆ ಪುಟ್ಟ ಗಲ್ಲಿ ದಾಟಿ ಸೂಪರ್ ಮಾರ್ಕೆಟ್ ತಲುಪುತ್ತಿದ್ದೆ. ತರಕಾರಿ ಹರಾಜಿನಲ್ಲಿ ಮಾರಾಟವಾಗಿ ನಾಲ್ಕು ಕಾಸು ಕೈಗೆ ಬಂದಾಗ ಖುಷಿಯಾಗುತ್ತಿತ್ತು. ಕಿರಿದಾದ ರಸ್ತೆಯ ದಟ್ಟ ಜನಸಂದಣಿಯ ಆ ಪುಟ್ಟ ಗಲ್ಲಿ ದಾಟುವ ಸಂಕಟವನ್ನು ನೂರಾರು ಬಾರಿ ಅನುಭವಿಸಿದ್ದೇನೆ. ಪ್ರತಿಬಾರಿ ಅಪ್ಪನನ್ನು ಶಪಿಸುತ್ತಿದ್ದೆ. ಆದರೆ ಕಾಸು ಎಣಿಸುವಾಗ ಮನೆಯ ಯಜಮಾನಿಕೆಯ ಗತ್ತು ಮೈ ಮನದಲ್ಲಿ ಮಿಂಚಿನಂತೆ ಸಂಚಾರವಾಗಿ ನಿರಾಳ ಭಾವ ಅನುಭವಿಸುತ್ತಿದ್ದೆ. ಎಸ್.ಎಸ್.ಎಲ್.ಸಿ ಮುಗಿಸಿ ಕಲಬುರಗಿಗೆ ಓದಲು ಬಂದಾಗ ಪದ್ಮಪ್ರಸಾದ್ ಬೆಳೆಯುತ್ತ ಹೋದ. ಎಸ್.ಬಿ. ಸೈನ್ಸ್ ಕಾಲೇಜಿನಲ್ಲಿ ಪ್ರಥಮ ಪಿ. ಯು. ಸಿ ಗೆ ಪ್ರವೇಶ ಪಡೆದಾಗ ಹೊಸ ಜಗತ್ತಿನ ಪರಿಚಯವಾಗತೊಡಗಿತು. ಕಾಲೇಜಿನ ಗ್ರಂಥಾಲಯದಲ್ಲಿ ಎಲ್ಲ ಪ್ರಮುಖ ದಿನಪತ್ರಿಕೆ, ವಾರಪತ್ರಿಕೆಗಳು ಓದಲು ಸಿಗುತ್ತಿದ್ದವು. ಕನ್ನಡದ ಅತ್ಯುತ್ತಮ ಪುಸ್ತಕಗಳು ಆ ಗ್ರಂಥಾಲಯದಲ್ಲಿ ಲಭ್ಯವಿದ್ದವು. ಒಂದು ಬದಿಯ ಪುಸ್ತಕ ಕಪಾಟಿನ ಮೇಲೆ ‘ಮಹಾದಾನಿ’ ಪದ್ಮಪ್ರಸಾದ್ ಕೊಡುಗೆ ಎಂದು ದಪ್ಪಕ್ಷರದಲ್ಲಿ ಬರೆದ ಬೋರ್ಡ್ ನೇತಾಡುತ್ತಿತ್ತು. ಸ್ಥಳೀಯ ಮತ್ತು ರಾಜ್ಯ ಮಟ್ಟದ ಪತ್ರಿಕೆಗಳಲ್ಲಿ ಹೆಚ್ಚು ಕಮ್ಮಿ ಪ್ರತೀ ದಿನ ಪದ್ಮಪ್ರಸಾದ್ ಅವರ ಫೋಟೋ ಸಹಿತ ಸುದ್ದಿಗಳು ಪ್ರಕಟವಾಗುತ್ತಿದ್ದವು. ಕುಷ್ಠ ರೋಗಿಗಳ ಕಾಲೋನಿಯಲ್ಲಿ ಹೆಲ್ತ್ ಚೆಕ್ ಅಪ್ ಕ್ಯಾಂಪ್, ಅನ್ನದಾನ, ಬಟ್ಟೆ - ಹೊದಿಕೆ ಹಂಚಿಕೆ, ಕೊಳೆಗೇರಿ ಮಕ್ಕಳಿಗೆ ಉಚಿತ ಪುಸ್ತಕ, ನೋಟ್ ಬುಕ್ ಮತ್ತು ಸಮವಸ್ತ್ರ ಹಂಚಿಕೆ ಇತ್ಯಾದಿ ಸುದ್ದಿಗಳು ಕಾಣಿಸಿಕೊಳ್ಳುತ್ತಿದ್ದವು. ಆಗ ಪತ್ರಿಕೆಗಳ ಬೆಂಗಳೂರು ಆವೃತ್ತಿ ಮಾತ್ರ ಪ್ರಕಟವಾಗುತ್ತಿದ್ದವು. ಸ್ಥಳೀಯ ಪತ್ರಿಕೆಗಳು ಮುಂಜಾನೆಯೇ ಓದಲು ಸಿಗುತ್ತಿದ್ದವು. ರಾಜ್ಯಮಟ್ಟದ ಪತ್ರಿಕೆಗಳನ್ನು ಪಾಠ ಪ್ರವಚನ, ಲ್ಯಾಬ್ ಮುಗಿಸಿಕೊಂಡು ಸಾಯಂಕಾಲ ಓದುತ್ತಿದ್ದೆ. ಆಗಿನ ಶಾಸಕರು, ಮಂತ್ರಿಗಳ ಸುದ್ದಿಗಳು ಪದ್ಮಪ್ರಸಾದ್ ಅವರ ಸುದ್ದಿಗಳೊಡನೆ ಪೈಪೋಟಿ ಮಾಡಲು ಸಾಧ್ಯವಿರಲಿಲ್ಲ. ಆಗಿನ ಕಾಲದಲ್ಲೇ ಪದ್ಮಪ್ರಸಾದ್ ಕಲಬುರಗಿ ನಗರದ ಮಹಾದಾನಿಗಳ ಸಾಲಿನಲ್ಲಿ ಸೇರಿದ್ದರು. ಒಂದಲ್ಲ ಒಂದು ಕಾರ್ಯಕ್ರಮಕ್ಕೆ ಮುಖ್ಯ ಅತಿಥಿ, ಉದ್ಘಾಟಕ, ಅಧ್ಯಕ್ಷ ಇತ್ಯಾದಿ ವೈವಿಧ್ಯಮಯ ಪಾತ್ರಗಳಲ್ಲಿ ಪಾಲ್ಗೊಂಡು ಸುದ್ದಿಯಲ್ಲಿ ಇರುತ್ತಿದ್ದರು. ಅಲ್ಲಿಯವರೆಗೆ ನಾನು ಅವರ ಭಾವಚಿತ್ರಗಳನ್ನು ಪತ್ರಿಕೆಗಳಲ್ಲಿ ನೋಡಿದ್ದೆ. ಇಂಥ ಮಹಾ ದಾನಿಗಳ ಕೃಪೆ ನನ್ನ ಮೇಲೂ ಬೀಳಬಾರದೇ ಅಂದುಕೊಂಡಿದ್ದೆ. ಅವರನ್ನು ಹತ್ತಿರದಿಂದ ನೋಡಬೇಕು, ಮಾತನಾಡಿಸಬೇಕು ಅಂತ ಅನಿಸುತ್ತಿತ್ತು. ಪತ್ರಿಕೆಗಳಲ್ಲಿನ ಅವರ ಸುದ್ದಿಗಳ ಮಹಾಪೂರದಿಂದಾಗಿ ಪದ್ಮಪ್ರಸಾದ್ ಎಂಬ ಮಹದಾನಿ ಮಾತ್ರ ನನ್ನ ಮನ:ಪಟಲದ ಮೇಲೆ ಖಾಯಂ ಆಗಿ ನೆಲೆ ನಿಂತರು. ನಮ್ಮ ಕಾಲೇಜಿನ ವಾರ್ಷಿಕೋತ್ಸವದ ಉದ್ಘಾಟನೆಗೆಂದು ಪದ್ಮಪ್ರಸಾದ್ ಅವರನ್ನು ಕರೆಸಿದ್ದರು. ಆಮಂತ್ರಣ ಪತ್ರ ಪ್ರಕಟವಾದ ದಿನದಿಂದ ಅವರನ್ನು ನೋಡಬೇಕೆಂಬ ಹಂಬಲ, ತುಡಿತ ತೀವ್ರಗೊಳ್ಳುತ್ತಿತ್ತು. ಹಂಬಲ ಮತ್ತಷ್ಟು ಬಲಗೊಳ್ಳುವ ಮೊದಲೇ ಆ ದಿನ ಬಂದೇ ಬಿಡ್ತು.ಕಾರ್ಯಕ್ರಮ ಆರಂಭವಾಗುವ ಮೊದಲೇ ಹೆಂಡತಿ ಸಮೇತ ಪದ್ಮಪ್ರಸಾದ್ ಅವರು ಪದ್ಮಿನಿ ಪ್ರೀಮಿಯರ್ ಕಾರಿನಿಂದ ಇಳಿದರು. ಪ್ರಾಂಶುಪಾಲರು ಮತ್ತು ಇನ್ನಿತರ ಸಿಬ್ಬಂದಿ ಅವರನ್ನು ಆದರದಿಂದ ಸ್ವಾಗತಿಸಿದರು. ನಮಗೆ ಬಯೋಲೋಜಿ ಕಲಿಸುತ್ತಿದ್ದ ಶಾಂತಿನಾಥ್ ಸರ್ ಪದ್ಮಪ್ರಸಾದ್ ದಂಪತಿಯ ಕಾಲಿಗೆರಗಿ ಆಶೀರ್ವಾದ ಪಡೆದರು. ವಿದ್ಯಾರ್ಥಿಗಳಾದ ನಮಗೆ ಅವರನ್ನು ಹತ್ತಿರದಿಂದ ನೋಡುವ, ಕಾಲು ಮುಟ್ಟಿ ನಮಸ್ಕಾರ ಮಾಡುವ ಅವಕಾಶ ದೊರೆಯಲಿಲ್ಲ. ಆದರೆ ನಾನು ಮಾತ್ರ ಅವರನ್ನು ಹತ್ತಿರದಿಂದ ಕಣ್ಣು ತುಂಬಿಸಿಕೊಳ್ಳುವ ಹಂಬಲದಿಂದ ವಿದ್ಯಾರ್ಥಿಗಳಿಗೆ ನಿಗದಿಯಾಗಿರುವ ಸ್ಥಳದಲ್ಲಿ ಮೊದಲ ಸಾಲಿನಲ್ಲಿ ಕೂತೆ. ವೇದಿಕೆ ಕಾರ್ಯಕ್ರಮ ಶುರುವಾಯಿತು. ಕನ್ನಡ ಕಲಿಸುವ ಸಿದ್ದಲಿಂಗಪ್ಪ ಸರ್ ಕಾರ್ಯಕ್ರಮದ ನಿರೂಪಣೆಯ ಜವಾಬ್ದಾರಿ ಹೊತ್ತಿದ್ದರು. ಮಹಾದಾನಿ ಪದ್ಮಪ್ರಸಾದ್ ದಂಪತಿಯನ್ನು ವೇದಿಕೆಗೆ ಆಹ್ವಾನಿಸಿದರು. ‘ಮಹಾದಾನಿ’ ಪದ್ಮಪ್ರಸಾದ್ ಮತ್ತು ಮಹಾಸಾದ್ವಿ ಪದ್ಮಾವತಿ ಅಮ್ಮನವರು ವೇದಿಕೆಯನ್ನು ಅಲಂಕರಿಸಬೇಕು ಎಂಬ ಸಿದ್ದಲಿಂಗಪ್ಪ ಸರ್ ಅವರ ಆವೇಶಭರಿತ ಅಹ್ವಾನದೊಂದಿಗೆ ಚಪ್ಪಾಳೆ ಸೇರಿ ಸಂಭ್ರಮ ನೂರುಪಟ್ಟು ಹೆಚ್ಚಾಯಿತು. ಸಾಕ್ಷಾತ್ ಶಿವ ಪಾರ್ವತಿಯರಂತೆ ಪದ್ಮಪ್ರಸಾದ್ ಮತ್ತು ಪದ್ಮಾವತಿ ದಂಪತಿ ಕೈಜೋಡಿಸಿ ವಂದಿಸುತ್ತಾ ನಗುಮೊಗದಿ ವೇದಿಕೆಯ ಕುರ್ಚಿಯಲ್ಲಿ ಆಸೀನರಾದರು. ಪದ್ಮಪ್ರಸಾದ್ ಅವರ ಪಕ್ಕದಲ್ಲಿ ಆಡಳಿತ ಮಂಡಳಿಯ ಸದಸ್ಯ ಶಂಕರರಾವ್ ದೇಶಮುಖರು ಕೂತಿದ್ದರು. ದೇಶಮುಖರು ಪದ್ಮಾವತಿಯವರನ್ನೇ ದಿಟ್ಟಿಸಿ ನೋಡುತ್ತಿದ್ದರು. ನೀಳ ಮೂಗು, ಅಗಲವಾದ ಹಣೆ, ಆ ಹಣೆಯ ಮೇಲೆ ಕುಂಕುಮ, ಕಿವಿಯ ತುದಿಯಲ್ಲಿ ಜೋತು ಬಿದ್ದ ಬಂಗಾರದ ಓಲೆ, ಶುಭ್ರ ಬಿಳಿ ಧೋತರ, ಅದಕ್ಕೊಪ್ಪುವ ತಿಳಿ ಕಾವಿಯ ನೆಹರೂ ಶರ್ಟ್ ಪೋಷಾಕಿನಲ್ಲಿ ಪದ್ಮಪ್ರಸಾದ್ ಇಂದ್ರ ಲೋಕದ ದೇವೇಂದ್ರನಂತೆ ಕಾಣುತ್ತಿದ್ದರು. ಅವರ ಹೆಂಡತಿ ಪದ್ಮಾವತಿಯವರು ಅತಿ ಸುಂದರಿ. ನಮ್ಮೂರಲ್ಲಿ ಅಂಥ ಹೆಣ್ಣುಮಗಳನ್ನೇ ನಾನು ನೋಡಿರಲಿಲ್ಲ. ಮುಖ ಸೌಂದರ್ಯ ಮತ್ತು ದೇಹದ ನಿಲುವಿಗೆ ಹೊಂದುವ ಸೀರೆ, ಕುಪ್ಪಸ ಪದ್ಮಾವತಿಯವರ ಆಕರ್ಷಣೆ ಹೆಚ್ಚಿಸಿದ್ದವು. ಸಿನೆಮಾ ನಟಿಯರಿಗೂ ಮೀರಿದ ಸೌಂದರ್ಯ ಹೊತ್ತಿದ್ದ ಪದ್ಮಾವತಿ ಅಮ್ಮನವರ ನಗುಮೊಗ, ಲವಲವಿಕೆ ನೋಡಿದರೆ ಸುಂದರ ಗೊಂಬೆ ಕೂಡಿಸಿದ್ದಾರೆ ಎಂಬ ಭಾವ ಮೂಡುತ್ತಿತ್ತು. ಆ ಸುಂದರ ದಂಪತಿಯನ್ನು ಶಾಂತಿನಾಥ ಸರ್ ಅವರು ಅತಿ ಸುಂದರವಾಗಿ ಹೊಗಳಿ ಪರಿಚಯಿಸಿದರು. ನಿರೂಪಣೆ ಮಾಡುತ್ತಿದ್ದ ಸಿದ್ದಲಿಂಗಪ್ಪ ಸರ್ ಮತ್ತು ಶಾಂತಿನಾಥ ಸರ್ ಹೊಗಳುವ ಸ್ಪರ್ಧೆಯಲ್ಲಿ ಪೈಪೋಟಿಗೆ ಬಿದ್ದಿದ್ದರು. ‘ಭೂಲೋಕದಲ್ಲಿ ಸಾಕ್ಷಾತ್ ದೇವರಂತೆ ಬದುಕುತ್ತಿರುವ ಪದ್ಮಪ್ರಸಾದ್ ದಂಪತಿಗಳು ನಮ್ಮ ವರ್ಣನೆಗೆ ಮೀರಿದವರು’ ಎಂದು ಹೇಳಿ ಕನ್ನಡದ ಮೇಷ್ಟ್ರು ಸಿದ್ದಲಿಂಗಪ್ಪ ಸರ್ ಹೊಗಳಿಕೆಗೆ ವಿರಾಮ ಹೇಳಿದರು. ನನ್ನ ಊರಲ್ಲಿ ಬೈಯುವ, ದರ್ಪ ತೋರುವ, ಅಪಮಾನಿಸುವ ಶ್ರೀಮಂತ ದಂಪತಿಯನ್ನು ನೋಡಿದ್ದೆ. ಅಪರೂಪಕ್ಕೆ ಅಲ್ಲೊಬ್ಬರು ಇಲ್ಲೊಬ್ಬರು ಒಳ್ಳೆಯವರು ಇದ್ದರು. ಆದರೆ ಬಡತನವನ್ನು, ಬಡವರನ್ನು ನಿಕೃಷ್ಟವಾಗಿ ಕಂಡವರೇ ಹೆಚ್ಚಾಗಿದ್ದರು. ಪದ್ಮಪ್ರಸಾದ್ ದಂಪತಿಯ ಶಿಸ್ತು ಸಂಯಮ, ನಯ ನಾಜೂಕು ಘನ ಗಾಂಭೀರ್ಯ ಕಂಡು ಮನುಷ್ಯ ರೂಪದ ದೇವರಂತೆ ಭಾಸವಾದರು. ಅವರ ದಾನ ಧರ್ಮದ ಸುದ್ದಿಗಳು ನೆನಪಿಸಿಕೊಂಡು ಪದ್ಮಪ್ರಸಾದ್ ದಂಪತಿಗಳನ್ನು ಆರಾಧಿಸಲು ಶುರು ಮಾಡಿಕೊಂಡೆ. ಅವತ್ತು ನನಗೆ ನಿರಾಸೆ ಮೂಡಿಸಿದ್ದು: ಪದ್ಮಪ್ರಸಾದ್ ಅವರ ಆಶೀರ್ವಚನದಂತಿರುವ ಅನಾಕರ್ಷಕ ಭಾಷಣ. ತಮ್ಮ ದಾನ ಧರ್ಮದ ಬಗ್ಗೆಯೇ ಹೆಚ್ಚು ಹೇಳಿಕೊಂಡರು. ನೀವೂ ಮಹಾದಾನಿಗಳಾಗಬೇಕೆಂದು ಕರೆ ಕೊಟ್ಟರು. ಫೀಸು ಕಟ್ಟಲು, ಪುಸ್ತಕ ಖರೀದಿಸಲು ಪರದಾಡುವ ನಾವು ಮಹಾದಾನಿಯಾಗುವುದು ಹೇಗೆ ಎಂಬ ಚಿಂತೆ ಕಾಡತೊಡಗಿತ್ತು. ಆದರೆ ಮಹಾದಾನಿ ಬಿರುದು ಹೊತ್ತ ಪದ್ಮಪ್ರಸಾದ್ ನನ್ನೊಳಗೆ ಬೆಳೆಯುತ್ತಲೇ ಹೋದರು. ಮುಂದೆ ನಾನು ಎಂ. ಎ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಮುಗಿಸಿ ಸ್ಥಳೀಯ ಪತ್ರಿಕೆಯೊಂದರಲ್ಲಿ ಉಪಸಂಪಾದಕ ನೌಕರಿಗೆ ಸೇರಿಕೊಂಡೆ. ಇಬ್ಬರು ಮೊಳೆ ಜೋಡಿಸುವವರು ಬಿಟ್ಟರೆ ವರದಿಗಾರಿಕೆಯಿಂದ ಹಿಡಿದು ಇಡೀ ಪತ್ರಿಕೆ ರೂಪಿಸುವ ಹೊಣೆ ನನ್ನದಾಗಿತ್ತು.ಸಂಬಳ ಕಡಿಮೆಯಿದ್ದರೂ ಬರವಣಿಗೆಯ ಚಟ ತೀರಿಸಿಕೊಳ್ಳಲು ಸದವಕಾಶ ಎಂದು ಭಾವಿಸಿ ಆ ಪತ್ರಿಕೆಯಲ್ಲೇ ನೆಲೆ ನಿಂತೆ. ಆ ಪತ್ರಿಕೆ ಸೇರಿ ವರದಿಗಾರಿಕೆ ಆರಂಭಿಸಿದ ಮೇಲೆ ಜಗತ್ತಿನ ಹಲವು ಮುಖಗಳು ಪರಿಚಯವಾದವು. ಆ ಪತ್ರಿಕೆ ಸೇರದೆ ಬ್ಯಾಂಕ್ ಅಥವಾ ಇನ್ನಿತರ ಇಲಾಖೆಯ ನೌಕರಿಗೆ ಸೇರಿದ್ದರೆ ಈ ಅನುಭವದಿಂದ ವಂಚಿತವಾಗುತ್ತಿದ್ದೆ. ಬದುಕಿಗೆ ಹಲವು ಬಣ್ಣಗಳಿವೆ ಎಂಬ ಸತ್ಯವನ್ನೇ ಒಪ್ಪಿಕೊಳ್ಳುವ ಮನಸ್ಥಿತಿ ಕಳೆದುಕೊಳ್ಳುತ್ತಿದ್ದೆ. ಪತ್ರಿಕೆಗೆ ಸೇರಿದ ಮೇಲೆಯೂ ಮಹಾದಾನಿ ಪದ್ಮಪ್ರಸಾದ್ ಅವರ ದಾನ ಧರ್ಮ, ಸಮಾಜ ಸೇವೆ, ಸಾಮೂಹಿಕ ವಿವಾಹ ಇತ್ಯಾದಿ ಸುದ್ದಿಗಳನ್ನು ಬರೆದಿದ್ದೇನೆ. ಅವರಿಗೆ ಡಾಕ್ಟರೇಟ್, ರಾಜ್ಯೋತ್ಸವ ಪ್ರಶಸ್ತಿ ದೊರೆತ ಸುದ್ದಿಗಳನ್ನು ಅತ್ಯಂತ ಸಂಭ್ರಮದಿಂದ ಪ್ರಕಟಿಸಿದ್ದೇನೆ. ಒಂದು ದಿನ ಜಿಲ್ಲೆಗೆ ಹೊಸದಾಗಿ ಬಂದ ಪೊಲೀಸ್ ವರಿಷ್ಠಾಧಿಕಾರಿ ಪತ್ರಿಕಾ ಪ್ರಕಟಣೆ ಹೊರಡಿಸಿದ್ದರು. ಆ ಸುದ್ದಿ ಓದಿ ನಾನು ಕ್ಷಣ ಕಾಲ ಸ್ತಂಭೀಭೂತನಾದೆ. ಒಮ್ಮೆ ಮತ್ತೊಮ್ಮೆ, ಮಗದೊಮ್ಮೆ ಹೀಗೆ ಐದಾರು ಸಲ ಓದಿದೆ. ಆರಂಭದಲ್ಲಿ ಪೊಲೀಸ್ ಇಲಾಖೆಯ ಮೇಲೆಯೇ ಅನುಮಾನ ಬಂತು. ಪೊಲೀಸ್ ಇಲಾಖೆಯ ಪ್ರಕಟಣೆ ಹೊರಬಿದ್ದ ದಿನ ಪತ್ರಿಕೆಯ ಮಾಲಕರು ದಿಲ್ಲಿಗೆ ಹೋಗಿದ್ದರು. ಪತ್ರಿಕೆಯ ಮಾಲಕರಿಗೆ ರಾಜಕಾರಣದಲ್ಲಿ ಹೆಚ್ಚು ಆಸಕ್ತಿ ಇರುವುದರಿಂದ ಸುದ್ದಿಯ ಹೊಣೆಗಾರಿಕೆ ನನ್ನದೇ ಆಗಿತ್ತು. ಆ ಸುದ್ದಿ ನೋಡಿ ಆತ್ಮ ಸಾಕ್ಷಿ ಕಲಕಿತು. ಅಂತೂ ಇಂತೂ ಧೈರ್ಯ ಮಾಡಿ ಪೊಲೀಸ್ ಇಲಾಖೆಯವರು ಕೊಟ್ಟ ಸುದ್ದಿ ಪ್ರಕಟಿಸಿದೆ. ಆ ವಿಷಯ ವ್ಯಕ್ತಿಗತವಾಗಿ ನನಗೆ ಬಹಳ ನೋವನ್ನುಂಟು ಮಾಡಿತ್ತು. ಆತ್ಮ ಸಾಕ್ಷಿಗೂ ಮಿಗಿಲಾದ ಸಿದ್ದಾಂತ ಇನ್ನೊಂದಿಲ್ಲ ಎಂಬ ಸರಳ ಸತ್ಯ ಆರಿತಿದ್ದೆ. ಆ ಸುದ್ದಿಯ ಸಾರಾಂಶ ಇಷ್ಟೇ ಇತ್ತು. ಮದನ್ - ಪ್ರಕಾಶ ಟಾಕೀಸ್ ಬಳಿಯಿರುವ ಕಿರಿದಾದ ರಸ್ತೆಯ ಆ ಪುಟ್ಟ ಗಲ್ಲಿಯ ಅಂಗಡಿ ಮುಂಗಟ್ಟುಗಳ ಮೇಲೆ ಪೊಲೀಸರು ದಾಳಿ ಮಾಡಿದ್ದರು. ಏಳೆಂಟು ಕಡೆ ಬ್ಲೂ ಫಿಲಂ ಪ್ರದರ್ಶಿಸುವುದನ್ನು ಸಾಕ್ಷಿ ಸಮೇತ ಪತ್ತೆ ಹಚ್ಚಿ ಅದರ ಯಜಮಾನ ಪದ್ಮಪ್ರಸಾದ್ ಮೇಲೆ ಪ್ರಕರಣ ದಾಖಲಿಸಿದ್ದರು. ಮರುದಿನದ ಎಲ್ಲಾ ಪತ್ರಿಕೆಗಳ ಮೇಲೆ ಕಣ್ಣಾಡಿಸಿದೆ. ಯಾವ ಪತ್ರಿಕೆಯಲ್ಲೂ ಪದ್ಮಪ್ರಸಾದ್ ಅವರ ಇನ್ನೊಂದು ಮುಖ ಪರಿಚಯಿಸುವ ಸುದ್ದಿ ಪ್ರಕಟವಾಗಿರಲಿಲ್ಲ. ಸುದ್ದಿ ಪ್ರಕಟಿಸಿದ ನನಗೆ ಯಾರೋ ಕರೆ ಮಾಡಿ ಬೆದರಿಕೆ ಹಾಕಿದರು. ವಿಷಯ ಪತ್ರಿಕೆಯ ಮಾಲಕರಿಗೆ ತಿಳಿಸಿದೆ. ಒಂದು ಸ್ಪಷ್ಟೀಕರಣ ಪ್ರಕಟಿಸಲು ಸೂಚಿಸಿದರು. ಆಮೇಲೆ ತಿಳಿದುಕೊಳ್ಳುವ ಕುತೂಹಲಕ್ಕೆ ಅವರಿವರ ಬಳಿ ಹೋಗಿ ಕಿವಿಗೊಟ್ಟು ಪದ್ಮಪ್ರಸಾದ್ ಕುರಿತ ಮಾಹಿತಿ ಸಂಗ್ರಹಿಸಿದೆ. ಮತ್ತಷ್ಟು ಭಯಾನಕ ಸತ್ಯಗಳು ಗಮನಕ್ಕೆ ಬಂದವು. ಎಲ್ಲ ರಾಜಕೀಯ ಪಕ್ಷಗಳಿಗೆ ಬೇಕಾಗಿದ್ದ ಪದ್ಮಪ್ರಸಾದ್ ನಗರದ ಅತ್ಯಂತ ಪ್ರಭಾವಿ ಮತ್ತು ಶ್ರೀಮಂತ ವ್ಯಕ್ತಿ ಎಂಬುದು ತಿಳಿಯಿತು. ಮಂತ್ರಿ, ಶಾಸಕರು ಮತ್ತು ಅಧಿಕಾರಿಗಳನ್ನು ಬುಟ್ಟಿಗೆ ಹಾಕಿಕೊಳ್ಳಲು ತಲೆ ಹಿಡಿಯುತ್ತಾನೆ. ಸ್ವತಃ ಹೆಂಡತಿಯ ತಂಗಿಯನ್ನು ಮಂತ್ರಿಯೊಬ್ಬರ ಬಳಿ ಕಳುಹಿಸಿದ್ದನು ಎಂದು ಕೆಲವರು ವೀಕ್ಷಕ ವಿವರಣೆ ನೀಡಿದರು. ಮಹಾದಾನಿ ಪದ್ಮಪ್ರಸಾದ್ ಅವರ ಹೆಣ್ಣು ಬಾಕತನಕ್ಕೆ ಬೇಸತ್ತು ಪದ್ಮಾವತಿ ಅಮ್ಮನವರು ಮೂರು ಬಾರಿ ಆತ್ಮ ಅತ್ಯೆಗೆ ಯತ್ನಿಸಿದ್ದರು ಎಂಬುದು ಗುಸುಗುಸು, ಪಿಸಿ ಪಿಸಿಯಲ್ಲಿ ತಿಳಿದು ಬಂತು. ಪದ್ಮಪ್ರಸಾದ್ ಅವರ ಇಬ್ಬರು ತಮ್ಮಂದಿರು ಸಾತ್ವಿಕ ಬದುಕು ನಡೆಸುತ್ತಿದ್ದಾರೆ. ಪದ್ಮಾವತಿ ಅಮ್ಮನವರ ಒಳ್ಳೆಯತನವೇ ಆತನನ್ನು ಕಾಪಾಡಿದೆ ಎಂದು ವೇದಾಂತ ಹೇಳಿದರು.ಪದ್ಮಪ್ರಸಾದ್ ಕೊರೋನಾ ಕಾಲದಲ್ಲಿ ಸಾವಿನ ಮನೆ ಪ್ರವೇಶಿಸಿ ಹೊರಬಂದರು. ಹಿರಿಯರು ಮಾಡಿದ ಪುಣ್ಯ ಕಾಪಾಡಿತು ಎಂದು ಕೆಲವರು ವ್ಯಾಖ್ಯಾನಿಸಿದರು. ಕಳೆದ ತಿಂಗಳು ನಾನು ಕಲಬುರಗಿಗೆ ಹೋದಾಗ ಹುಮನಾಬಾದ ರಸ್ತೆಯಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿತು. ಆ ಅಪಘಾತದಲ್ಲಿ ಪದ್ಮಪ್ರಸಾದ್ ತೀವ್ರ ಗಾಯಗೊಂಡಿದ್ದರು. ಅವರನ್ನು ಬದುಕಿಸಲು ಹೈದ್ರಾಬಾದ್ ಆಸ್ಪತ್ರೆಯೊಂದರ ತಜ್ಞ ವೈದ್ಯರು ಶಕ್ತಿ ಮೀರಿ ಪ್ರಯತ್ನಿಸಿದರು. ಆದರೆ ಚಿಕಿತ್ಸೆ ಫಲಕಾರಿಯಾಗಲಿಲ್ಲ. ಹಿರಿಯರ ಪುಣ್ಯವು ನೆರವಿಗೆ ಬರಲಿಲ್ಲ.ಪದ್ಮಪ್ರಸಾದ್ ಅವರ ಸಾವಿನ ಸುದ್ದಿಗಳು ವಿಜೃಂಬಿಸಿದವು.. ಗಣ್ಯರು ಕಂಬನಿ ಮಿಡಿದರು. ಮಹಾದಾನಿಯ ನಿರ್ಗಮನಕ್ಕೆ ಬಂಧು ಬಾಂಧವರು ನಾಲ್ಕು ದಿನ ಶೋಕಿಸಿದರು. ಪದ್ಮಾವತಮ್ಮನವರ ಕಣ್ಣ ಹನಿಗಳು ಬತ್ತಿದವು.

ವಾರ್ತಾ ಭಾರತಿ 8 Feb 2026 1:23 pm

Gold: ಒಂದೇ ವಾರದಲ್ಲಿ ಚಿನ್ನ-ಬೆಳ್ಳಿ ದರದ ಸ್ಥಿತಿ ಏನಾಗಿದೆ? ಇಂದಿನ ಬೆಲೆ ಮಾಹಿತಿ, ವರದಿ

ಬೆಂಗಳೂರು: ಚಿನ್ನ ಬೆಳ್ಳಿ ದರದಲ್ಲಿ ಅಲ್ಪ ಸಮಯದಲ್ಲೇ ಭಾರೀ ಬದಲಾವಣೆ ಆಗಿದೆ. ವಾರದ ಅಂತರದಲ್ಲಿ ನಿರಂತರವಾಗಿ ಹೆಚ್ಚಾಗಿದ್ದ ಈ ಲೋಹಗಳ ಬೆಲೆಗಳು ದಿನಗಳ ಅಂತರದಲ್ಲಿ ಭರ್ಜರಿ ಇಳಿಕೆ ಆಗಿ, ಸಹಜ ಸ್ಥಿತಿಯತ್ತ ಮರಳಿವೆ. ಏರಿಕೆ ಕಂಡಿದ್ದ ಚಿನ್ನವು ತನ್ನ ಮೌಲ್ಯದಲ್ಲಿ ಸ್ಥಿರತೆ ಕಾಯ್ದುಕೊಳ್ಳುತ್ತಿದೆ. ಆದರೆ ಬೆಳ್ಳಿ ನಿರಂತರ ಇಳಿಕೆ ದರದಲ್ಲಿ ಸ್ಥಿರತೆ ಕಾಯ್ದುಕೊಂಡಿಲ್ಲ, ಅದು ಇನ್ನಷ್ಟು ಆಗುವ

ಒನ್ ಇ೦ಡಿಯ 8 Feb 2026 1:20 pm

ಕಾವ್ಯ ಸಂಗಮ

ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಚಿಕ್ಕಜೋಗಿಹಳ್ಳಿ ತಾಂಡಾ ಇವರ ಊರು. ಪಶುವೈದ್ಯಾಧಿಕಾರಿಯಾಗಿ 6 ವರ್ಷ ಹಳ್ಳಿಯಲ್ಲಿ ಸೇವೆ ಮಾಡಿದವರು. 2011ರಿಂದ ಕೆ ಎ ಎಸ್ ಅಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.ಪ್ರಸಕ್ತ ನಗರಾಭಿವೃದ್ದಿ ಮತ್ತು ನಗರ ಯೋಜನೆ ಸಚಿವರ ಆಪ್ತ ಕಾರ್ಯದರ್ಶಿಯಾಗಿ ಸೇವೆ ನಿರ್ವಹಿಸುತ್ತಿದ್ದಾರೆ.   ಮಲದ ಗುಂಡಿ ಅವಳು ಪುಟ್ಟ ಬಾಲಕಿ ಮಲ ಹೊರುತ್ತಿದ್ದಳು ವಂಶಪಾರಂಪರ್ಯ ಕಸುಬು ಇವಳು ಮಾಡುತ್ತಿದ್ದಳು ಪುಟ್ಟ ಕೈ ಬೊಗಸೆಯೊಳು ಆಗಸದ ಹಂಬಲ ಬಾಚಿದ್ದು ವಿಸರ್ಜನೆಯ ಮಲ ಸಾಮೂಹಿಕ ವಿಸರ್ಜನಾ ಗುಂಡಿಲಿ ಈಗ ಬಂದಿದೆ ಹೊಸ ಕಾನೂನು ಅನಿಷ್ಟ ಪದ್ಧತಿಯು ಬುಡ ಮೇಲು ಇನ್ನು ಆದರೆ ವಾಸ್ತವನೇ ಬೇರೆ ಅದೇ ಪದ್ಧತಿ ಮಜುಲು ಬೇರೆ, ಹೆಸರು ಬೇರೆ. ಇವಳೂ ನೋಡುವಳು ಬೇರೆ ಮಕ್ಕಳಂತೆ ಪಾಯಿಕಾನೆಯ ಗುಂಡಿಯ ಒಳಗಿಳಿದ ಅವರಪ್ಪನನು ಇಳಿದೊನು ಹೊರಬಾರಲೇಯಿಲ್ಲ ಶಾಲೆ ಬಿಟ್ಟು ಇವಳು ಕ್ಲೀನ್ ಮಾಡೋಕೆ ಇಳಿದಳಲ್ಲ ಇವಳೇ ಮುಂದೊಂದು ದಿನ ತಾಯಿಯಾಗಬಹುದು ತನ್ನ ಮಗುವ ಹೇಸಿಗೆ ಎಂದು ಭಾವಿಸಿ ಈಗ ಶುಚಿ ಮಾಡುತ್ತಿರಬಹುದು ಹೊತ್ತ ಮಲ ಸೋರಿ ಹಣೆಗೆ ಹಟ್ಟೆಯಾದಂತೆ ಕಂದಾಚಾರಕೆ ಭಾವನೆಗಳೇ ಮರುಗಟ್ಟಿರಬಹುದು. ಪ್ರತಿಯೊಂದು ರಸ್ತೆಗಳು ಮಾತಾಡುತ್ತಿವೆ ರಸ್ತೆ ಗಳೂ... ಆತ್ಮಗಳೂ... ಮಾತಾಡಿವೆ. ಪ್ರತಿಯೊಂದು ರಸ್ತೆಗಳು ಮಾತಾಡುತ್ತಿವೆ ಜ್ವಲಂತ ಸಾಕ್ಷಿಯಾಗಿ, ಕುರುಹನ್ನು ಕೈಯಲ್ಲಿಡಿದು... ಛೇ....ಇದೊಂದು ತಪ್ಪಿಸಬಹುದಿತ್ತು ಎಂದು ಮರುಗಿ ರಸ್ತೆಗಳು ಹೆಪ್ಪುಗಟ್ಟಿ ಮಲಗಿವೆ..... ಅಮ್ಮ ಹೆಲ್ಮಟ್ ಕೊಟ್ಟರೂ ಬೇಡ ಎಂದ ಹುಡುಗಿ ರಸ್ತೆಗೆ ತಲೆ ಕೊಟ್ಟಾಗ ಅತ್ತಿವೆ..... ಅಪ್ಪ ನೀ ಇನ್ನೂ ಸಣ್ಣವ ಬೇಡ ನಿನಗೆ ಗಾಡಿ ಎಂದರೂ ಕೇಳದ ಹುಡುಗನಿಗಾಗಿ ರಸ್ತೆಗಳು ಚಿಂತಿಸಿವೆ. ಮೊನ್ನೆ ನಾಲ್ಕು ರಸ್ತೆಗಳು, ಸಂಧಿಸುವ ಬಿಂದುವಲ್ಲಿ ಸೇರಿ ಇಲ್ಲಿ ನೋಡು ಹಂಪ್ಸ್ ಇಲ್ಲ...ಮತ್ತಿಲ್ಲಿ ಮಿರರ್.... ಸೂಚನಾ ಫಲಕದ ವಿಳಾಸ ಹುಡುಕಬೇಕಿದೆ...!!! ರಸ್ತೆಯ ಮೇಲೇ ಎಲ್ಲ ವ್ಯವಹಾರ, ... ಪುಟ್ ಪಾತ್ ಅನ್ನು ದೇವರೇ ಹುಡುಕಬೇಕು ರಸ್ತೆಗಿಲ್ಲಿ.... ಮಿರಿಮಿರಿ ಬೆಳಕಿನ ಡಾಬ, ಸುರಪಾನ ಪೋಶಿಸಿದರೆ ಇತ್ತ ಕುಡಿದು ರಸ್ತೆಗೂ ತಲೆ ತಿರುಗಿಸಿ... ಮಂಪರಿನಲ್ಲಿ ಬಿದ್ದ ಸವಾರ ಆಸ್ಪತ್ರೆ ಸೇರದೇ.... ಯಾರದ್ದೋ ಮೊಬೈಲ್‌ನಲ್ಲಿ ಸೆರೆ ಆಗಿದ್ದಕ್ಕೆ ವ್ಯಾಕುಲಗೊಂಡಿವೆ ಇನ್ನು ಏನೇನು ?? ನೊಡಬೇಕು ಈ ಕಣ್ಣಲಿ !!! ಎಂದು ರಸ್ತೆಗಳು ಅಳುತ್ತಿವೆ... ತನ್ನ ಹೃದಯದಲ್ಲಿ ಉಂಟಾದ ತಗ್ಗುಗಳಿಗೆ, ಕಳಪೆ ಕಾಮಗಾರಿಗೆ, ಕಂಟ್ರಾಕ್ಟರನ್ನು ಕಟಕಟೆಗೆ ನಿಲ್ಲಿಸಲು ಅಣಿಯಾಗಿವೆ. ಒಂದೊಂದು ರಸ್ತೆ ಒಂದೊಂದು ಕತೆ ಹೇಳುತ್ತಿವೆ ರಸ್ತೆಯಲ್ಲಿ ಸತ್ತ ಆತ್ಮಗಳು... ರಸ್ತೆಗಳು... ಸೇರಿ ದನಿಯಿಲ್ಲದ ಮಾತಿನಲಿ ಕೂಗಿಹೇಳುತ್ತಿವೆ ನಾಳೆ ನೀವು ಇಲ್ಲಿ ಕತೆ ಆಗಬೇಡಿರೆಂದು......   ನೀನು ನನ್ನನು ಬಿಟ್ಟುಹೋಗಿ ಬಹಳ ದಿನಗಳಾಗಿವೆ ಜೊತೆಯಲ್ಲಿದ್ದ ನಿನ್ನಯ ನೆನಪುಗಳು ಕೊಂಡಿಕಳಚಿ ಒಂದೊಂದಾಗಿ ದೂರ ಹೋಗುತ್ತಿವೆ ದಿನವೂ ನೂರಾರು ಮುಖಗಳು ಎದಿರಾಗುತ್ತವೆ ನಿನಗೆ-ನನಗೆ ಸ್ವಲ್ಪ ನಗು ಮಾತು ಕಥೆ..... ಅದರ ಮಧ್ಯೆ ನಿನ್ನ ನೆನಪು ನನ್ನಯ ಮಾತೇ ನಿಲ್ಲಿಸಿ ಬಿಡುತ್ತಿದೆ..... ಅವಳೊಂದಿಗೆ ಏನು ಮಾತು ಎಂದು ಹೋಗಲಿ ನೆನಪಿಗೆ ಬೆಲೆ ಕೊಟ್ಟು ಬಂದರೆ ನಿನ್ನ ನೆನಪಿಗೆ ಕೊಬ್ಬು ಹೆಚ್ಚಾಗಿ ತಿರುಗಿ ನೊಡದೇ ದೂರ ಸರಿಯುತ್ತೆ..... ಹೋಗಲಿ ಬಿಡು ಎಂದು ಸುಮ್ಮನಾಗಿದ್ದ ನನಗೆ ನನ್ನ ಉಸಿರೂ, ಆತ್ಮಸಾಕ್ಷಿ ಕೇಳುತ್ತದೆ ನನ್ನ ನೆನಪು ಮಾತನಾಡಿಸುತ್ತಿಲ್ಲವೆ ಅವಳಿಗೆ ???? ನನ್ನೆದೆಯೊಳು ತಲೆ ಬಚ್ಚಿಟ್ಟಾಗ ತಾಗಿದ ಬಿಸಿ ಜ್ವರ ತರಿಸುತ್ತಿಲ್ಲವೆ ಅವಳಿಗೆ....????

ವಾರ್ತಾ ಭಾರತಿ 8 Feb 2026 1:20 pm

ಪ್ರತಿಭಾ ಪಲಾಯನ

ಪ್ರೊಫೆಸರ್‌ಗೆ ನಿನ್ನೆಯ ಪುರಸಭೆಯಲ್ಲಿ ನಡೆದ ಸಭೆ ಕಣ್ಣಮುಂದೆ ಬಂತು. ತಾವು ಅಡಿಗಡಿಗೆ ಹೇಳುತ್ತಿದ್ದ ವಿಚಾರ, ವಿವರಗಳೆಲ್ಲ ಬಾಲು ಜೊತೆಗಿನ ಮಾತುಗಳೇ ಆಗಿದ್ದವು. ಹಾಗೆ ಭಾಷಣ ಮಾಡುತ್ತಿದ್ದಾಗ ಮುಂದಿನ ಸಾಲಿನಲ್ಲೇ ಕುಳಿತಿದ್ದ ಬಾಲುನ ಕಡೆಗೆ ಒಮ್ಮೆ ಕೂಡ ನೋಡುವ ಧೈರ್ಯವೇ ಬರಲಿಲ್ಲವಲ್ಲ. ಒಳಗಿನ ಬೆಂಕಿಯನ್ನು ನೀರು ಮತ್ತು ಪ್ರೀತಿಯಿಂದ ಹದಮಾಡಿ ಅಭಿವ್ಯಕ್ತಿ ಮಾಡುವ ಕಲೆ ಅಗ್ರಹಾರ ಕೃಷ್ಣಮೂರ್ತಿಯವರಿಗೆ ಸಿದ್ಧಿಸಿದೆ. ತುಮಕೂರು ಜಿಲ್ಲೆಯಜೆಟ್ಟಿ ಅಗ್ರಹಾರದ ಕೃಷ್ಣಮೂರ್ತಿ, ಕನ್ನಡಎಂ. ಎ. ಪದವೀಧರರು. ಎಪ್ಪತ್ತರ ದಶಕದಲ್ಲಿ ಹಲವು ಲೇಖಕರನ್ನು ಬೆಳೆಸಿದ ಸಮಾಜವಾದಿ ಯುವಜನ ಸಭಾದಲ್ಲಿ ಎಂ.ಡಿ.ನಂಜುಂಡಸ್ವಾಮಿ, ಲಂಕೇಶ್, ಗೋಪಾಲಗೌಡ ರಶಿಷ್ಯರು. ಒಂದೆರಡು ವರ್ಷ ಕಾಶಿ ವಿಶ್ವವಿದ್ಯಾನಿಲಯದಲ್ಲಿ ಅಧ್ಯಾಪಕರಾಗಿದ್ದರು. ಕೆಲವುವರ್ಷ ಆಕಾಶವಾಣಿಯಲ್ಲಿ ಹಾಗೂ ಬೆಂಗಳೂರಿನ ಕೇಂದ್ರ ಸಾಹಿತ್ಯ ಅಕಾಡಮಿಯ ಪ್ರಾದೇಶಿಕ ಕಾರ್ಯದರ್ಶಿಯಾಗಿಯೂ ಕಾರ್ಯನಿರ್ವಹಿಸಿದ್ದಾರೆ. ತುಮಕೂರುಜಿಲ್ಲೆಯ ಜಾನಪದ ಆಚರಣೆಯೊಂದನ್ನು ಅಧ್ಯಯನ ಮಾಡಿ ‘ಬೆಳ್ದಿಂಗ್ಳಪ್ಪನ ಪೂಜೆ’ ಕೃತಿ ಹಾಗೂ ‘ನೀರುಮತ್ತು ಪ್ರೀತಿ’ ಕಾದಂಬರಿ ಪ್ರಕಟಿಸಿದ್ದು, ಕಾದಂಬರಿಗೆ ಸಾಹಿತ್ಯ ಅಕಾಡಮಿಯ ಪ್ರಶಸ್ತಿ ದೊರೆತಿದೆ. ರಾಜ್ಯೋತ್ಸವ ಪ್ರಶಸ್ತಿ, ಕೆಂಪೇಗೌಡ ಪ್ರಶಸ್ತಿ ಸೇರಿದಂತೆ ಹಲವು ಗೌರವ ಪ್ರಶಸ್ತಿಗಳನ್ನು ಇವರು ಪಡೆದಿದ್ದಾರೆ. ಪ್ರೊಫೆಸರ್ ರಾಮಕೃಷ್ಣಯ್ಯ ಬೆಳಗ್ಗೆ ಐದಕ್ಕೆ ಎದ್ದು ವಾಕಿಂಗ್‌ಗೆ ಸಿದ್ಧರಾಗುತ್ತಾರೆ. ಅಡಿಗೆಯವಳು ಬರೋಕು ಮುಂಚೆ ತಾವೇ ಒಂದು ದೊಡ್ಡ ಮಗ್ ಟೀ ಮಾಡ್ಕೊಂಡು, ಎರಡು ಮಾರಿ ಬಿಸ್ಕತ್ತಿನ ಜೊತೆ ಏನಾದರೂ ಓದುತ್ತಾ ತುಂಬಾ ನಿಧಾನವಾಗಿ ತಮ್ಮ ಟೀಯನ್ನು ಗುಟುಕರಿಸುತ್ತಾ ಕುಳಿತುಕೊಳ್ಳುತ್ತಾರೆ. ಅದೇ ಹೊತ್ತಿಗೆ ಅವರ ಬೆಂಗಾವಲಾಗಿ ವಾಕಿಂಗ್ ಹೋಗುವ ಸಿದ್ದೇಗೌಡ ತಾನು ರಡಿಯಾಗಿದ್ದೀನಿ ಎಂದು ತಿಳಿಸಲೋಸುಗ ಅವರ ಮುಂದೆ ಒಂದೆರಡು ಬಾರಿ ಠಳಾಯಿಸುತ್ತಾನೆ. ಪ್ರತಿದಿನ ಹಾಗೆ ಠಳಾಯಿಸುವಾಗ ಓದುತ್ತಿರುವ ಪುಸ್ತಕದಿಂದಲೊ ಅಥವಾ ಕೆಲವು ದಿನಗಳಲ್ಲಿ ಓದಲು ಸಮಯ ಸಾಲದೇ ಉಳಿದ ಯಾವುದಾದರೂ ಒಂದು ತಂಗಳು ಪತ್ರಿಕೆಯಿಂದಲೋ ತಲೆಯೆತ್ತಿ, ಅವನ ಮುಖ ನೋಡಿ ಕಿಚನ್ ಕಡೆ ಮುಖ ಮಾಡುತ್ತಾನೆ. ಅದರ ಅರ್ಥ, ‘ನಿನಗೂ ಮಾಡಿಟ್ಟಿದ್ದೀನಿ ಹೋಗಿ ಕುಡಿದು ಬಾ’ ಎಂಬುದಾಗಿರುತ್ತದೆ. ಅದನ್ನು ಅರ್ಥ ಮಾಡಿಕೊಳ್ಳುವ ಸಿದ್ದೇಗೌಡ ಒಂದು ಅನನ್ಯ ಭಂಗಿಯ ಮುಖಮುದ್ರೆ ಮಾಡಿ ಕೃತಜ್ಞತೆಯನ್ನು, ನಾಚಿಕೆಯ ನಗುವನ್ನೂ ತೋರಿ ಕಿಚನ್ ಕಡೆ ಹೋಗುತ್ತಾನೆ. ಮುಚ್ಚಿಟ್ಟ ಒಂದು ಸ್ಟೀಲ್ ಲೋಟದಲ್ಲಿನ ಟೀಗೆ ಇನ್ನೊಂದು ಚಮಚ ಸಕ್ಕರೆ ಹಾಕಿಕೊಳ್ಳುವುದು ಅವನ ರೂಢಿ. ಅಲ್ಲೇ ಇರುವ ಮರದ ಸ್ಟೂಲಿನ ಮೇಲೆ ಕುಳಿತು ಆದಷ್ಟು ಬೇಗ ಟೀ ಕುಡಿದು, ಕಪ್ಪನ್ನು ತೊಳೆದಿಟ್ಟು ಇವರ ಬಳಿಗೆ ಬರುವ ವೇಳೆಗೆ ಹೆಚ್ಚು ಕಡಿಮೆ ಇವರೂ ಟೀಯೂ ಮುಗಿಸಿರುತ್ತಾರೆ. ಇವರ ಮಗ್ಗನ್ನೂ ಒಯ್ದು ಕಿಚನ್ ಸಿಂಕಿನಲ್ಲಿ ತೊಳೆದಿಟ್ಟು ಬರುತ್ತಾನೆ. ಆನಂತರವೇ ಇಬ್ಬರೂ ವಾಕಿಂಗ್ ಹೊರಡುವುದು. ಅವರು ಮುಂದೆ ಮುಂದೆ ಹೆಜ್ಜೆ ಹಾಕುತ್ತಾರೆ, ಅವರ ಹಿಂದೆ ಸಿದ್ದೇಗೌಡ. ಕ್ಯಾಂಪಸ್‌ನಲ್ಲಿ ನಡೆದಿರಬಹುದಾದ, ಇವರ ಗಮನಕ್ಕೆ ಬಾರದ ಯಾವುದಾದರೂ ಸುದ್ದಿಗಳಿದ್ದರೆ ಅಂಥವು ಸಿದ್ದೇಗೌಡನ ಮೂಲಕ ಇವರ ಕಿವಿ ಮುಟ್ಟುತ್ತಿದ್ದುದು ಇಂಥ ವಾಕಿಂಗಿನ ಪ್ರಶಸ್ತವಾದ ಮತ್ತು ಪ್ರಶಾಂತ ಸಮಯದಲ್ಲೇ. ಹಾಗೆ ಏನಾದರೂ ಹೇಳುವಂಥ ಸಂಗತಿಗಳಿದ್ದರೆ, ಸಾಮಾನ್ಯವಾಗಿ ಅವರ ಹಿಂದೆ ಹೆಜ್ಜೆ ಹಾಕುತ್ತ ನಡೆಯುವ ಸಿದ್ದೇಗೌಡ ಅವರ ಪಕ್ಕದಲ್ಲೇ ನಡೆಯುತ್ತ ಅರುಹುತ್ತಾನೆ. ಇಂಥ ದೃಶ್ಯಗಳನ್ನು ಕ್ಯಾಂಪಸ್‌ನಲ್ಲಿ ಅದೇ ಹೊತ್ತಿಗೆ ವಾಕಿಂಗ್ ಮಾಡುವ ಬೇರೆಬೇರೆ ಫ್ಯಾಕಲ್ಟಿಯ ಕೆಲವರು ಗಮನಿಸುತ್ತಾರೆ. ಅವರಲ್ಲಿ ಒಬ್ಬಿಬ್ಬರು ಸೀನಿಯರ್‌ಗಳು ಇವರಿಗೆ ಗುಡ್ ಮಾರ್ನಿಂಗ್ ಹೇಳುವುದುಂಟು. ಉಳಿದ ಜೂನಿಯರ್‌ಗಳು ಅಥವಾ ಎದುರಾಗುವ ಹಾಸ್ಟಲಿನ ಕೆಲವು ವಿದ್ಯಾರ್ಥಿ ವಿದ್ಯಾರ್ಥಿನಿಯರು ರಸ್ತೆಯ ಇನ್ನೊಂದು ಮಗ್ಗುಲಿಗೆ ಸರಿದು ಓರೆಗಣ್ಣಲ್ಲೇ ಇವರತ್ತ ನೋಡುತ್ತ ದಾಟಿ ಹೋಗುತ್ತಾರೆ. ಇದು ಪ್ರತಿದಿನದ ಕ್ರಮ. ಪ್ರೊಫೆಸರರ ಪತ್ನಿ ಮಗಳ ಹೆರಿಗೆಯ ಕಾಲದಲ್ಲಿ ಜೊತೆಗಿರಲೆಂದು ಸಿಯಾಟೆಲ್‌ಗೆ ವಿಮಾನ ಹತ್ತಿದ ಮರುದಿನ ಬೆಳಗ್ಗೆಯೇ ರಾಮಕೃಷ್ಣಯ್ಯ ಟೀ ಮಾಡಿಕೊಳ್ಳುತ್ತಿದ್ದ ಕಿಚನ್‌ಗೆ ಬಂದ ಸಿದ್ದೇಗೌಡ, ‘ನೀವು ಒಂದು ಕಿತ ಹೇಳ್ಕೊಡಿ ಸಾಯೇಬ್ರೇ, ನಿಮ್ಮ ಥರಾನೇ ಮಾಡ್ಕೊಡ್ತೀನಿ’, ಅಂದಿದ್ದ. ಅದಾದ ನಂತರವೂ ಕೆಲವು ಬಾರಿ ಕೇಳಿದ್ದುಂಟು; ಆದರೂ ರಾಮಕೃಷ್ಣಯ್ಯ ಸಿದ್ದೇಗೌಡನ ಮಾತನ್ನು ಕಿವಿಗೆ ಹಾಕಿಕೊಳ್ಳುವುದಿರಲಿ ಅವನು ಕಿಚನ್‌ನಲ್ಲಿ ನಿಲ್ಲುವುದಕ್ಕೂ ಬಿಡುತ್ತಿರಲಿಲ್ಲ. ಏನಾದರೂ ಸಣ್ಣಪುಟ್ಟ ಕೆಲಸದ ನೆವಹೇಳಿ ಅವನನ್ನು ಹೊರಗೆ ಕಳಿಸುತ್ತಿದ್ದರು. ಅವರಿಗೆ ತಾವು ಟೀ ಮಾಡುವ ವಿಧಾನವನ್ನು ಮತ್ತೊಬ್ಬರಿಗೆ ಕಲಿಸುವ ಅಥವಾ ತಿಳಿಸುವ ಮನಸ್ಸು ಸುತರಾಂ ಇರಲಿಲ್ಲ. ತಮ್ಮ ಹೆಂಡತಿಗೆ ವಿನಾ ಬೇರಾರಿಗೂ ಅವರು ಹೇಳಿಕೊಟ್ಟಿದ್ದೂ ಇಲ್ಲ. ನೆಂಟರಿಷ್ಟರ ಮನೆಗಳಿಗೆ ಹೋದ ಸಂದರ್ಭದಲ್ಲಿ ಕಾಫಿ, ಟೀ ಏನು ಕುಡಿತೀರಿ ಎಂದು ಅಭ್ಯಾಗತರು ಕೇಳಿದರೆ, ‘ಟೀ ಕುಡಿತೀನಿ, ನನ್ನ ಟೀ ನಾನೇ ಮಾಡ್ಕೊತೀನಿ’, ಎಂದು ಸೀದಾ ಅವರ ಅಡಿಗೆಮನೆಗೆ ನುಗ್ಗಿ ಬಿಡುತ್ತಾರೆ. ಪತ್ನಿ ಜೊತೆಯಲ್ಲಿದ್ದರೆ, ‘ನನ್ನ ಟೀ ಇವಳು ಮಾಡಿಕೊಡುತ್ತಾಳೆ’, ಅನ್ನುತ್ತಾರೆ. ಅವರ ಈ ರೂಢಿ ಹೆಚ್ಚುಕಡಿಮೆ ಅವರ ಹತ್ತಿರದ ನೆಂಟರಿಷ್ಟರಿಗೆಲ್ಲ ತಿಳಿದಿರುವಂಥದ್ದು. ಇದೇ ಪದ್ಧತಿಯನ್ನು ಅವರು ತಮ್ಮ ಕೆಲವು ಆತ್ಮೀಯ ಸ್ನೇಹಿತರ ಮನೆಗಳಿಗೆ ಹೋದಾಗಲೂ ಅನುಸರಿಸುವುದುಂಟು. ಒಬ್ಬಿಬ್ಬರು, ‘ಇದ್ಯಾವ ಸೀಮೆ ಟೀ ಮಾಡಾಟ ಇವ್ರದ್ದು. ಎಲ್ಲಿಂದ, ಯಾರಿಂದ ಕಲ್ತರೋ ದೇವರಿಗೇ ಗೊತ್ತು’, ಎಂದು ಮರೆಯಲ್ಲಿ ಮುಸಿಮುಸಿ ಮಾಡುತ್ತಿದ್ದುದುಂಟು.   ಈಗ್ಗೆ ಸುಮಾರು ಹದಿನೈದು ವರ್ಷಗಳ ಹಿಂದೆ, ‘ಇಂಡೋ ಚೈನಾ ಫ್ರೆಂಡ್‌ಶಿಪ್ ಅಸೋಸಿಯೇಶನ್’, ಚೀನಾ ದೇಶಕ್ಕೆ ಕಳಿಸಿದ್ದ ಒಂದು ನಿಯೋಗದಲ್ಲಿ ಇವರು ಒಬ್ಬ ಸದಸ್ಯರಾಗಿ ಮೂರ್ನಾಲ್ಕು ವಾರಗಳ ಕಾಲ ಬೀಜಿಂಗ್ ಮುಂತಾದ ಕೆಲವು ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಸುತ್ತಾಡಿ ಬಂದಿದ್ದರು. ಅಲ್ಲಿನ ಟೀ ಪ್ರಮೋಶನ್ ಮಾರುಕಟ್ಟೆಗಳಲ್ಲಿ ತಮ್ಮ ಕಂಪೆನಿಗಳ ನಾನಾ ಬ್ರ್ಯಾಂಡ್‌ಗಳ, ನಾನಾ ಪರಿಮಳಗಳ ಟೀಪುಡಿಯನ್ನು ಪ್ರವಾಸಿಗರಿಗೆ ಮಾರುವ ಮುನ್ನ ತೆರೆದ ಸ್ಕರ್ಟ್ ಧರಿಸಿದ ಚೀನೀ ಮಹಿಳೆಯರು ತಾವು ಪ್ರವಾಸಿಗರಿಗಾಗಿಯೇ ಕಲಿತಿದ್ದ ಇಂಗ್ಲಿಷ್ ಭಾಷೆಯನ್ನು ಚೀನೀ ಭಾಷೆಯ ಉಚ್ಚಾರಣೆಯಲ್ಲಿ ವಿವರಿಸುತ್ತಾ ಪ್ರವಾಸಿಗರನ್ನು ತಮ್ಮ ಎದುರಿಗೇ ಕೂರಿಸಿಕೊಂಡು ಟೀ ಮಾಡಿ ಕೊಡುವುದನ್ನು ಪ್ರೊಫೆಸರ್ ರಾಮಕೃಷ್ಣಯ್ಯ ಅತೀವ ಗಮನಕೊಟ್ಟು ನೋಡಿಕೊಂಡಿದ್ದರು. ಗುಂಪು ಗುಂಪುಗಳಲ್ಲಿ ಬರುತ್ತಿದ್ದ ನೂರಾರು ಪ್ರವಾಸಿಗರೆಲ್ಲರನ್ನೂ ಸಂಭಾಳಿಸುತ್ತಾ ಚಾಕಚಕ್ಯತೆಯಿಂದ ಆ ಮಹಿಳೆಯರು ಟೀ ಮಾಡಿಕೊಡುತ್ತಿದ್ದುದು, ಅದನ್ನು ಕುಡಿಯುತ್ತಿದ್ದ ಪ್ರತಿಯೊಬ್ಬರೂ ಅಲ್ಲಿಂದ ಹೊರಡುವ ಮುನ್ನ ಟೀ ಪುಡಿಯ ಡಬ್ಬಿಗಳನ್ನು ಕೊಳ್ಳಲೇಬೇಕೆಂದು ಮನಸ್ಸು ಮಾಡುತ್ತಿದ್ದುದನ್ನು ಕಂಡು ಆಶ್ಚರ್ಯಗೊಂಡಿದ್ದರು. ಚೀನಾ ದೇಶದಲ್ಲೇ ಉಳಿದು ಟೀ ಮಾರುಕಟ್ಟೆಯಲ್ಲಿ ಒಂದು ಸಣ್ಣ ಉದ್ಯಮವನ್ನೇಕೆ ಶುರುಮಾಡಬಾರದೆಂಬ ಆಲೋಚನೆ ಕೂಡ ಆ ಗಳಿಗೆಯಲ್ಲಿ ಅವರ ತಲೆಯಲ್ಲಿ ಮಿಂಚಿನಂತೆ ಸುಳಿದು ಮಾಯವಾಗಿತ್ತು. ರಾಮಕೃಷ್ಣಯ್ಯ ಆ ಟೀವಿದ್ಯೆಯನ್ನು ಮರೆಯದೆ ಈವರೆಗೆ ಪಾಲಿಸಿಕೊಂಡು ತಮ್ಮ ಟೀಯನ್ನು ತಾವೇ ಮಾಡಿಕೊಂಡು ಕುಡಿಯುತ್ತ ಬಂದಿದ್ದಾರೆ. ಅವರ ಹೆಂಡತಿಗೆ ಬಿಟ್ಟು ಇನ್ನೊಬ್ಬರಿಗೆ ಟೀ ಮಾಡುವ ಗುಟ್ಟನ್ನು ಬಿಟ್ಟುಕೊಟ್ಟಿರಲಿಲ್ಲವಷ್ಟೇ ಅಲ್ಲ, ಇದನ್ನು ಯಾರಿಗೂ ಹೇಳಿಕೊಡಕೂಡದು ಎಂದು ಹೆಂಡತಿಗೆ ತಾಕೀತನ್ನೂ ಮಾಡಿದ್ದರು. ಹಲವಾರು ಜಾತಿಯ ಮರಗಿಡಗಳು ದಟ್ಟವಾಗಿ ಬೆಳೆದಿದ್ದ ಕ್ಯಾಂಪಸ್‌ನ ನಡುವೆಯೇ ಅವರ ಬಂಗಲೆ. ಪ್ರತಿದಿನ ವಾಕಿಂಗ್ ಮಾಡುತ್ತಿದ್ದುದೂ ಕ್ಯಾಂಪಸ್‌ನ ಒಳಗೇ. ಇಂದು ಬಂಗಲೆಯಿಂದ ಹೊರಕ್ಕೆ ಹೆಜ್ಜೆಯಿಡುವಷ್ಟರಲ್ಲೇ ಮೇನ್ ಗೇಟಿನ ವಾಚ್‌ಮನ್ ಧಾವಿಸಿ ಬಂದು ಬಾಲು ಬಂದಿರುವ ವಿಷಯ ತಿಳಿಸಿದ. ಇಷ್ಟು ಬೆಳಗ್ಗೇನೆ ಯಾಕೆ ಬಂದಿದಾನೆ, ಯಾಕೆ ಗೇಟಲ್ಲೇ ಇದಾನೆ, ಕರಕೊಂಡು ಬಾ ಅಂದರು ಪ್ರೊಫೆಸರ್. ಸಾರ್ ಅವರು ತುಂಬಾ ಜನರ ಜೊತೆ ಬಂದಿದಾರೆ, ಎಂಟ್ಹತ್ತು ಜನ ಇದಾರೆ, ಕ್ಯಾಮರಾ, ಮೈಕು ಎಲ್ಲಾ ತಂದಿದಾರೆ. ನೀವೇ ಗೇಟಿನ ಹತ್ತಿರಕ್ಕೆ ಬರಬೇಕು ಅಂತ ದಬಾಯಿಸ್ತಾ ಇದಾರೆ ಎಂದು ಗಾಬರಿಯಿಂದ ಹೇಳಿದ. ಇವರಿಗೆ ತಲೆಬುಡ ಅರ್ಥವಾಗದೆ ವೇಟಿಂಗ್ ರೂಮಿನ ಸೋಫದಲ್ಲಿ ಒಂದು ಗಳಿಗೆ ಕೂತು ಯೋಚಿಸತೊಡಗಿದರು. ಈ ಬಂಗಲೆಯೊಳಕ್ಕೆ ಯಾವ ಗಳಿಗೆಯಲ್ಲಿ ಬೇಕಾದರೂ ಬರುವ ಸ್ವಾತಂತ್ರ್ಯ ಬಾಲುಗೆ ಇದ್ದೇಯಿತ್ತು. ತಾವು ಇಲ್ಲದೇ ಇರುವಾಗಲೂ ಬಂದು ಹೋಗುವಷ್ಟು ಸಲುಗೆ ಪಡೆದಿದ್ದ ಆಸಾಮಿ. ಬಂಗಲೆಯಲ್ಲಿ ಆಗಿಂದಾಗ್ಗೆ ಏರ್ಪಾಡಾಗುತ್ತಿದ್ದ ಪಾರ್ಟಿಗಳಿಗೆ ತಡರಾತ್ರಿಗಳಲ್ಲಿ ಫೋನ್ ಕೂಡ ಮಾಡದೆ ಬಂದು ಸೇರಿಕೊಳ್ಳುತ್ತಿದ್ದ ಎಷ್ಟೋ ಸಂದರ್ಭಗಳಿದ್ದವು. ಹಾಗಿದ್ದರೂ ಇವತ್ತು ಇಷ್ಟು ಬೆಳಗ್ಗೆ ಬೆಳಗ್ಗೆ ಇವನಿಗೆ ಏನಾಗಿದೆ ಎಂದುಕೊಂಡು ಅವರಿಗೆ ಅಯೋಮಯವೆನಿಸಿತು. ಕುಳಿತಿದ್ದಲ್ಲೇ ಕೈಗಳನ್ನು ಕಟ್ಟಿಕೊಂಡು ಸ್ವಲ್ಪವೇ ಸ್ಥೂಲವಾಗಿದ್ದ ಹೊಟ್ಟೆಯಮೇಲಿಟ್ಟುಕೊಂಡು ನಿಧಾನವಾಗಿ ಎದುರಿನ ಗೋಡೆಯನ್ನು ದಿಟ್ಟಿಸತೊಡಗಿದರು. ಗೋಡೆಯ ಮೇಲೆ ಗಾಂಧೀ ಮತ್ತು ಬಸವಣ್ಣನವರ ಫೋಟೋಗಳು ತೂಗುಬಿದ್ದಿದ್ದವು. ಸ್ವಲ್ಪವೇ ಪಕ್ಕದಲ್ಲಿ ರಾಷ್ಟ್ರಾಧ್ಯಕ್ಷ ಮತ್ತು ಪ್ರಧಾನಮಂತ್ರಿಗಳ ಫೋಟೋಗಳಿದ್ದವು. ಗೋಡೆಯ ಕಡೆ ದಿಟ್ಟಿಸುತ್ತಲೇ ಅವರು ಸಿದ್ದೇಗೌಡನನ್ನು ಕರೆದು, ಅದೇನು ಸರಿಯಾಗಿ ವಿಚಾರಿಸಿಕೊಂಡು ಅವನನ್ನು ಕರಕೊಂಡು ಬಾ ಎಂದು ಹೇಳಿ ವಾಕಿಂಗ್ ಶೂ ಬಿಚ್ಚಿಟ್ಟು ಒಳಗಡೆಗೆ ನಡೆದರು. ಸಿದ್ದೇಗೌಡ ವಾಪಸ್ ಬರಲು ಸ್ವಲ್ಪ ಕಾಲವೇ ಹಿಡಿಯಿತು. ಆವೇಳೆಗೆ ಅಡಿಗೆಯವಳೂ ಬಂದು ಅಡಿಗೆಮನೆಯ ಹಿಂದಿನ ಬಾಗಿಲನ್ನು ತೆರೆದು ತನ್ನ ಕೆಲಸದಲ್ಲಿ ತೊಡಗಿದಳು. ಸಿದ್ದೇಗೌಡ ತನ್ನ ಕೈಯಲ್ಲಿ ಒಂದು ಬಂಡಲ್ ಸುದ್ದಿಪತ್ರಿಕೆಗಳನ್ನು ಹಿಡಿದು ಬಂದು ಅವನ್ನೆಲ್ಲ ರಾಮಕೃಷ್ಣಯ್ಯನವರ ಕೈಗೆ ಕೊಟ್ಟ. ಮೇನ್ ಗೇಟಿನ ಬಳಿ ಬಾಲು ಬಹಳ ಆವೇಶದಿಂದ, ಕ್ರೋಧಾವಿಷ್ಟನಾಗಿ ಮಾತಾಡುತ್ತ ಹೇಳಿದ್ದ ವಿವರಗಳನ್ನೆಲ್ಲ ತನಗೆ ತಿಳಿದಂತೆ ಸಂಕ್ಷಿಪ್ತವಾಗಿ ನಿರೂಪಿಸತೊಡಗಿದ. ಹಾಗೆ ನಿರೂಪಿಸುವಾಗ ಪ್ರೊಫೆಸರರ ಬೆನ್ನಿನ ಕಡೆಗಿದ್ದ ಕಿಟಕಿಯ ಆಚೆಗೆ ಮೂಡುತ್ತಿದ್ದ ನೇಸರದ ಕಡೆಗೆ ದೃಷ್ಟಿ ನೆಟ್ಟಿದ್ದನೇ ವಿನಾ ಅಪ್ಪಿತಪ್ಪಿಯೂ ಇವರ ಮುಖ ನೋಡುತ್ತಿರಲಿಲ್ಲ. ಇವತ್ತಿನ ಕನ್ನಡ, ಇಂಗ್ಲಿಷ್ ಎಲ್ಲಾ ಪತ್ರಿಕೆಗಳಲ್ಲಿ ಮುಖಪುಟಗಳಲ್ಲೇ ಬಂದಿರುವ, ಪ್ರೊಫೆಸರ್ ರಾಮಕೃಷ್ಣಯ್ಯ ನಿನ್ನೆ ಸಂಜೆ ಪುರಭವನದಲ್ಲಿ ಮಾಡಿದ ಇಡೀ ಭಾಷಣದ ಎಲ್ಲಾ ಪಾಯಿಂಟ್‌ಗಳನ್ನು ಬಾಲು ಮೊನ್ನೆ ರಾತ್ರಿ ಬಂಗಲೆಯಲ್ಲಿ ನಡೆದ ಪಾರ್ಟಿಯಲ್ಲಿ ಹೇಳಿದ್ದನಂತೆ. ಪಾರ್ಟಿಯಲ್ಲಿ ಪ್ರೊಫೆಸರ್ ಜೊತೆಗೆ ಹಿಸ್ಟರಿ ಡಿಪಾರ್ಟಮೆಂಟ್‌ನ ಡಾ. ಶೇಖರಪ್ಪ, ಕನ್ನಡ ಡಿಪಾರ್ಟಮೆಂಟ್‌ನ ಪ್ರೊ. ನಾಗಣ್ಣ ಇನ್ನೂ ಒಂದಿಬ್ಬರೂ ಇದ್ದರಂತೆ. ರಾಮಕೃಷ್ಣಯ್ಯನವರೆ ಏನಯ್ಯಾ ಬಾಲು ಇಷ್ಟೊಂದು ವಿಷಯ ತಿಳ್ಕೊಂಡಿದೀಯಾ ಅಂತ ಫುಲ್ ಖುಷಿಯಾಗಿ ಇನ್ನೊಂದು ಸ್ಕಾಚ್ ಹಾಕಯ್ಯ ಅಂತ ಅವರೇ ಅವನ ಗ್ಲಾಸಿಗೆ ಸುರಿದರಂತೆ. ನೀನು ಅದ್ಯಾವುದೊ ಅಡ್ವರ್ಟೈಜಿಂಗ್ ಏಜನ್ಸಿಯಲ್ಲಿ ನೌಕರಿ ಮಾಡೋ ಬದ್ಲಾಗಿ ನಮ್ಮ ಯೂನಿವರ್ಸಿಟಿಯ ಯಾವುದಾದರೂ ಡಿಪಾರ್ಟಮೆಂಟ್‌ನಲ್ಲಿರಬೇಕಾಗಿತ್ತು ಕಣಯ್ಯಾ ಅಂದರಂತೆ. ಸಿದ್ದೇಗೌಡ ನಿರೂಪಿಸಿದಂತೆ, ಬಾಲುಗೆ ತುಂಬಾ ಕೋಪ ಬಂದಿರುವುದು ನಿನ್ನೆ ಪುರಭವನದ ಸಭೆಯ ಇಡೀ ಭಾಷಣದಲ್ಲಿ ತಾನು ಹೇಳಿದ್ದ ಪ್ರತಿಯೊಂದೊಂದು ಪಾಯಿಂಟನ್ನೂ ಬಿಡದೆ ಹೇಳುತ್ತಿದ್ದ ಹೊತ್ತಿನಲ್ಲಿ ತನಗೆ ಒಂದು ಸಣ್ಣ ಕ್ರೆಡಿಟ್ ಕೊಡೋದಿರಲಿ, ಅಪ್ಪಿತಪ್ಪಿಯೂ ಒಂದು ಸಲ ಕೂಡ ತನ್ನ ಕಡೆಗೆ ಕಣ್ಣೆತ್ತಿಯೂ ನೋಡದಿರುವ ಪ್ರೊಫೆಸರ್ ರಾಮಕೃಷ್ಣಯ್ಯನವರದ್ದು ಕ್ರೂರ ನಡವಳಿಕೆಯಾಗಿತ್ತಂತೆ. ಅಲ್ಲದೆ ಹೀಗೆ ಅವರು ಮಾಡುತ್ತಿರುವುದು ಇದೇ ಮೊದಲನೇ ಸಲವಲ್ಲವಂತೆ. ಈ ಹಿಂದೆಯೂ - ಆಶ್ರಮದಲ್ಲಿ ಅಡಿಗೆ ಮಾಡುವವರು ಬ್ರಾಹ್ಮಣರೇ ಆಗಿರಬೇಕನ್ನೋದನ್ನು ತೀವ್ರವಾಗಿ ಗಾಂಧೀಜಿ ವಿರೋಧಿಸಿದ ವಿಷಯವಾಗಲೀ, ಗಾಂಧೀಜಿ ತಮ್ಮನ್ನು ತಾವು ಅರ್ಧ ಹೆಣ್ಣು ಎಂದು ಕರೆದುಕೊಂಡಿದ್ದ ವಿಚಾರವಾಗಲಿ, ತಮಿಳುನಾಡಿನ ನಾನ್ ಬ್ರಾಹ್ಮಿನ್ ಮೂಮೆಂಟ್‌ನ ಹಿಸ್ಟರಿಯ ವಿಚಾರವಾಗಲಿ, ಜ್ಞಾನಿಗಳು, ತಪಸ್ವಿಗಳು ಮಾತ್ರ ಮರಗಿಡಗಳ ಪ್ರಶಾಂತ ವಾತಾವರಣಗಳಲ್ಲಿ ಚಿಂತನೆ ಮಾಡುತ್ತಾ ತಪಸ್ಸು ಮಾಡುವಂತೆಯೇ ಕುವೆಂಪು ಅವರ ನೇಗಿಲಯೋಗಿಯೂ ಉಳುತ್ತಲೇ ತಾನು ಬದುಕಿರುವ ಜಗತ್ತಿಗೆ ಅನ್ನ ಕೊಡುವ ಬಗ್ಗೆ ಚಿಂತನೆಯ ತಪಸ್ಸನ್ನು ಮಾಡುತ್ತಿರುತ್ತಾನೆ ಎಂದು ಒಂದು ಪೆಗ್ ಸ್ಕಾಚ್ ಜಾಸ್ತಿ ಏರಿಸಿದ್ದ ಗಳಿಗೆಯಲ್ಲೇ ಬಾಲು ಹೇಳಿದ್ದನ್ನು ಕೇಳಿ ರಾಮಕೃಷ್ಣಯ್ಯನವರು ದಿಗ್ಮೂಢರಾಗಿ ಎಷ್ಟೋ ಹೊತ್ತು ಮಾತೇ ಆಡಿರಲಿಲ್ಲವಂತೆ. ಇಂಥ ಇನ್ನೂ ಎಷ್ಟೋ ಸಂಗತಿಗಳನ್ನು ಬಾಲು ಅಥೆಂಟಿಕ್ ವಿವರಗಳೊಂದಿಗೆ ಹೇಳುತ್ತಿದ್ದುದನ್ನೆಲ್ಲ ಪ್ರೊಫೆಸರ್ ನಿನ್ನೆಯ ಹಾಗೆಯೇ, ಇವೆಲ್ಲ ತಮ್ಮ ದಿವ್ಯ ಬುದ್ಧಿಮತ್ತೆಯಲ್ಲಿ ಸ್ಫುರಿಸಿರುವ ವಿದ್ವತ್ ವಿಚಾರಗಳೋ ಎಂಬಂತೆ ಬೇರೆಬೇರೆ ಕಡೆಗಳಲ್ಲಿ ಭಾಷಣಗಳನ್ನು ಮಾಡುತ್ತಿದ್ದಾಗಲೆಲ್ಲ ಬಾಲುಗೆ ಸಂಕಟವಾಗುತ್ತಿತ್ತಂತೆ. ಇನ್ನುಮುಂದೆ ಇಂಥ ಚಿಂತಕರ ಸಹವಾಸವೇ ಬೇಡ ಅನಿಸಿಬಿಟ್ಟಿದೆಯಂತೆ.... ಸಿದ್ದೇಗೌಡ ನಿರೂಪಿಸುತ್ತಲೇ ಇದ್ದ.... ಪ್ರೊಫೆಸರ್‌ಗೆ ನಿನ್ನೆಯ ಪುರಸಭೆಯಲ್ಲಿ ನಡೆದ ಸಭೆ ಕಣ್ಣಮುಂದೆ ಬಂತು. ತಾವು ಅಡಿಗಡಿಗೆ ಹೇಳುತ್ತಿದ್ದ ವಿಚಾರ, ವಿವರಗಳೆಲ್ಲ ಬಾಲು ಜೊತೆಗಿನ ಮಾತುಗಳೇ ಆಗಿದ್ದವು. ಹಾಗೆ ಭಾಷಣ ಮಾಡುತ್ತಿದ್ದಾಗ ಮುಂದಿನ ಸಾಲಿನಲ್ಲೇ ಕುಳಿತಿದ್ದ ಬಾಲುನ ಕಡೆಗೆ ಒಮ್ಮೆ ಕೂಡ ನೋಡುವ ಧೈರ್ಯವೇ ಬರಲಿಲ್ಲವಲ್ಲ. ಅವನ ತಿಳುವಳಿಕೆಯ ಶ್ರೀಮಂತಿಕೆಯ ಬಗ್ಗೆ ಹೊಟ್ಟೆಕಿಚ್ಚು, ಈರ್ಷೆಯೇ ನನ್ನಲ್ಲಿದೆಯಲ್ಲವೇ? ಅವನಲ್ಲಿ ಕ್ರೋಧವುಂಟಾಗಿರುವುದು ಸಹಜವೇ ಅಲ್ಲವೇ? ಎನ್ನುವ ಭಾವನೆಗಳು ಮೂಡತೊಡಗಿದವು. ಆದರೂ ಅವರು ಅವನ್ನೆಲ್ಲ ಮನಸ್ಸಿನ ಮೂಲೆಗೆ ಸರಿಸಿ ಸಿದ್ದೇಗೌಡನ ನಿರೂಪದ ಕಡೆ ಗಮನಕೊಟ್ಟರು. ಸಿದ್ದೇಗೌಡ ಈ ಬಾರಿ ಕಿಟಕಿಯ ನೇಸರದ ಕಡೆಯ ದೃಷ್ಟಿಯನ್ನು ಕೊಂಚ ತಗ್ಗಿಸಿ ಪ್ರೊಫೆಸರರ ಮುಖವನ್ನೇ ದಿಟ್ಟಿಸುತ್ತ ಮುಂದುವರಿಸಿದ... ಈಗ ಪ್ರೊಫೆಸರ್ ರಾಮಕೃಷ್ಣಯ್ಯನವರು ಮೇನ್ ಗೇಟಿನ ಹತ್ರ ಬಂದು, ಇಲ್ಲಿರುವ ಮೀಡಿಯಾದವರ ಮುಂದೆ ಬಹಿರಂಗವಾಗಿ ತಪ್ಪಾಯ್ತು ಅಂತ ನನ್ನ ಕ್ಷಮಾಪಣೆ ಕೇಳಬೇಕು. ಅಲ್ಲಿಯವರೆಗೆ ನಾನು ಈ ಜಾಗ ಬಿಟ್ಟು ಕದಲೋದಿಲ್ಲ.... ಉಪವಾಸಕ್ಕೇ ಕುಳಿತುಬಿಡುವೆ ಎಂದು ಹೇಳುತ್ತ ಬಾಲು ಗೇಟಿನ ಮುಂದೆ ಕುಳಿತೇಬಿಟ್ಟ ಸಾರ್.... ಐದಾರು ನಿಮಿಷಗಳ ಕಾಲ ಗಾಢವಾಗಿ ಯೋಚಿಸುತ್ತಿದ್ದ ರಾಮಕೃಷ್ಣಯ್ಯ ನಿಧಾನವಾಗಿ ಎದ್ದು ವೇಟಿಂಗ್ ರೂಮಿನ ಸೋಫದಲ್ಲಿ ಕುಳಿತು ಕಳಚಿಟ್ಟಿದ್ದ ಶೂಗಳನ್ನು ಕಟ್ಟಿಕೊಂಡರು. ಸಿದ್ದೇಗೌಡ ಮೇನ್ ಗೇಟಿನ ಕಡೆಗೆ ಹೆಜ್ಜೆಹಾಕತೊಡಗಿದ. ರಾಮಕೃಷ್ಣಯ್ಯ ಉದಾಸ ಭಾವದಲ್ಲಿ, ಬಿಗಿಯೆನಿಸಿದ ಉಸಿರಾಟದಲ್ಲಿ, ನಿಧಾನವಾಗಿ ಹೆಜ್ಜೆಹಾಕುತ್ತ ಅಡಿಗೆಮನೆ ಕಡೆ ನಡೆದರು. ಅಡಿಗೆಯಾಕೆ ಗ್ಯಾಸ್ ಒಲೆಯ ಮುಂದೆ ಬೆಳಗಿನ ನಾಷ್ಟದ ತಯಾರಿಯಲ್ಲಿದ್ದಳು. ಇವರು ತೆರೆದಿದ್ದ ಅಡಿಗೆಮನೆಯ ಹಿಂಬಾಗಿನಿಂದ ಹೊರನಡೆದು ಕಾಂಪೌಂಡ್ ಗೋಡೆ ಹತ್ತಿ ಎರಡೂ ಕೈಗಳನ್ನು ಕಾಂಪೌಂಡ್ ಗೋಡೆಯ ಮೇಲೆ ಊರಿ ಆಚೆಗೆ ಜಾರಿ ಹುಲ್ಲು, ಪಾರ್ಥೇನಿಯಂ ಬೆಳೆದಿದ್ದ ನೆಲಕ್ಕೆ ಕುಳಿತರು. ಸಾವರಿಸಿಕೊಂಡು ಮೇಲೆದ್ದು ದಟ್ಟವಾಗಿ ಬೆಳೆದಿದ್ದ ಮರಗಿಡಗಳ ನಡುವೆ ಮರೆಯಾದರು.

ವಾರ್ತಾ ಭಾರತಿ 8 Feb 2026 1:16 pm

ಸ್ವತಂತ್ರ ಮಾಧ್ಯಮಗಳನ್ನು ಓದುಗರೇ ಹಣ ನೀಡಿ ಬೆಳೆಸಲಿ

ಭಾರತದ ವಿಶ್ವಾಸಾರ್ಹ ಡಿಜಿಟಲ್ ಮ್ಯಾಗಝಿನ್ Scroll.in ಅಸ್ತಿತ್ವಕ್ಕೆ ಬಂದು ೧೨ ವರ್ಷಗಳು ತುಂಬಿದವು. ಮುಖ್ಯವಾಹಿನಿಯ ಮಾಧ್ಯಮಗಳು ಪ್ರಜಾಪ್ರಭುತ್ವದಲ್ಲಿನ ತಮ್ಮ ಪ್ರಾಥಮಿಕ ಜವಾಬ್ದಾರಿಯನ್ನು ನಿಭಾಯಿಸುವುದರಿಂದ ಹಿಂದೆ ಸರಿಯಲು ಆರಂಭಿಸಿದಾಗ ಈ ಡಿಜಿಟಲ್ ಮಾಧ್ಯಮ ೨೦೧೪ರಲ್ಲಿ ಜನ್ಮ ತಳೆಯಿತು. ಆ ಸಮಯದಲ್ಲಿ, ಸಾಮಾಜಿಕ ಮಾಧ್ಯಮಗಳು, ಅದರಲ್ಲೂ ಮುಖ್ಯವಾಗಿ ಫೇಸ್ಬುಕ್ ಭಾರತದಲ್ಲಿ ವೇಗವಾಗಿ ವಿಸ್ತರಣೆಯಾಗುತ್ತಿತ್ತು. ಅದರಿಂದಾಗಿ ಸುದ್ದಿ ವಿತರಣೆಯ ವ್ಯಾಪ್ತಿಯೂ ಹಿಗ್ಗಿತು. Scroll.in ನೂತನ ಡಿಜಿಟಲ್ ಮಾಧ್ಯಮವು ಸ್ಥಳಕ್ಕೆ ಹೋಗಿ ವರದಿ ಮಾಡುತ್ತಿದ್ದ ರೀತಿ ಮತ್ತು ಸ್ಪಷ್ಟವಾಗಿ ಸುದ್ದಿಯನ್ನು ಹೇಳುವ ಅದರ ಶೈಲಿಯು ಓದುಗರ ಗಮನ ಸೆಳೆಯಿತು. ಅದರ ಫಲವಾಗಿ Scroll.in ಕಡಿಮೆ ಅವಧಿಯಲ್ಲಿ ಒಂದು ಕೋಟಿ ಓದುಗರನ್ನು ತಲುಪಿತು. ಅದು ನಿಧಾನವಾಗಿ, ಕಿಕ್ಕಿರಿದ ಮಾಧ್ಯಮ ಕ್ಷೇತ್ರದಲ್ಲಿ ತನ್ನ ವಿಶಿಷ್ಠ ಸ್ಥಾನವನ್ನು ಭದ್ರಪಡಿಸುತ್ತಾ ಸಾಗಿತು ಹಾಗೂ ದೇಶದಲ್ಲಿ ದಶಕಗಳಿಂದ ಇದ್ದ ಹಲವಾರು ಪ್ರತಿಷ್ಠಿತ ಮಾಧ್ಯಮ ಸಂಸ್ಥೆಗಳನ್ನು ಹಿಂದಿಕ್ಕಿ ೬೪ ಪ್ರತಿಷ್ಠಿತ ಮಾಧ್ಯಮ ಪ್ರಶಸ್ತಿಗಳನ್ನು ಪಡೆಯಿತು. ಈ ಸ್ವತಂತ್ರ ಮಾಧ್ಯಮವು ಹಿರಿಯ ಪತ್ರಕರ್ತ ನರೇಶ್ ಫೆರ್ನಾಂಡಿಸ್ ಅವರ ಕಲ್ಪನೆಯ ಕೂಸಾಗಿತ್ತು. ಬಹುಮುಖ ಬರಹಗಾರ ಹಾಗೂ ಸಂಪಾದಕರಾಗಿರುವ ನರೇಶ್ ಫೆರ್ನಾಂಡಿಸ್ ಭಾರತ ಮತ್ತು ಅಮೆರಿಕದ ಹಲವು ಮಾಧ್ಯಮ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದಾರೆ. ‘‘ನನಗೆ ಟೈಮ್ಸ್ ಆಫ್ ಇಂಡಿಯಾ, ಅಸೋಸಿಯೇಟೆಡ್ ಪ್ರೆಸ್, ವಾಲ್ ಸ್ಟ್ರೀಟ್ ಜರ್ನಲ್ ಮತ್ತು ಟೈಮ್ ಔಟ್ ಮಾಧ್ಯಮ ಸಂಸ್ಥೆಗಳಲ್ಲಿ ಕೆಲಸ ಮಾಡಿದ ಅನುಭವವಿದೆ. ಈ ಸಂಸ್ಥೆಗಳಲ್ಲಿ ನಾನು ಕಲಿತ ನಿಷ್ಠುರತೆಯನ್ನು Scroll.in ಬಿಂಬಿಸಬೇಕು ಎನ್ನುವುದು ನನ್ನ ಬಯಕೆಯಾಗಿತ್ತು’’ ಎಂದು ‘ವಾರ್ತಾಭಾರತಿ’ಯ ೨೦೨೫ರ ವಾರ್ಷಿಕ ವಿಶೇಷ ಸಂಚಿಕೆಗೆ ನೀಡಿರುವ ಮುಕ್ತ ಸಂದರ್ಶನದಲ್ಲಿ ಅವರು ಹೇಳುತ್ತಾರೆ. ಕಳೆದ ೧೨ ವರ್ಷಗಳಲ್ಲಿ Scroll.inನ ಅಮೋಘ ಯಾನ, ಸ್ವತಂತ್ರ ಮಾಧ್ಯಮಗಳು ಚಂದಾದಾರಿಕೆ ಮಾದರಿಯನ್ನು ಅಳವಡಿಸಿಕೊಳ್ಳಬೇಕಾದ ಅಗತ್ಯ, ಬಲಪಂಥೀಯ ಟ್ರೋಲ್‌ಗಳು ಮತ್ತು ನಿಂದಕರು, ಪತ್ರಿಕೋದ್ಯಮದ ಮೇಲೆ ಕೃತಕ ಬುದ್ಧಿಮತ್ತೆಯ ಪ್ರಭಾವ ಹಾಗೂ ಭಾರತದಲ್ಲಿ ಸ್ವತಂತ್ರ ಮಾಧ್ಯಮಗಳ ಭವಿಷ್ಯ ಮುಂತಾದ ಮಹತ್ವದ ವಿಷಯಗಳ ಬಗ್ಗೆ ಅವರು ಇಲ್ಲಿ ವಿವರವಾಗಿ ಮಾತನಾಡಿದ್ದಾರೆ. ಸಂದರ್ಶನದ ಆಯ್ದ ಭಾಗಗಳು ಇಲ್ಲಿವೆ ► Scroll.in ಗೆ ೨೦೨೬ ಜನವರಿಯಲ್ಲಿ ೧೨ ವರ್ಷ ತುಂಬುತ್ತದೆ. ೨೦೧೪ರಲ್ಲಿ ಇದನ್ನು ಯಾಕೆ ಆರಂಭಿಸಿದಿರಿ ಎಂದು ಹೇಳಬಹುದೇ? ನರೇಶ್ ಫೆರ್ನಾಂಡಿಸ್: ಪ್ರಜಾಪ್ರಭುತ್ವವೊಂದರಲ್ಲಿ ಮಾಧ್ಯಮಗಳು ಯಾವ ಪಾತ್ರವನ್ನು ವಹಿಸಬೇಕೆಂದು ನಾವೆಲ್ಲ ತುಂಬಾ ಹಿಂದಿನಿಂದ ನಂಬಿಕೊಂಡು ಬಂದಿದ್ದೇವೆಯೋ, ೨೦೧೪ರಲ್ಲಿ ಆ ಪಾತ್ರವನ್ನು ಮುಖ್ಯವಾಹಿನಿಯ ಮಾಧ್ಯಮಗಳು ನಿರ್ವಹಿಸುತ್ತಿಲ್ಲ ಎಂಬಂತೆ ಕಂಡಿತು. ಆ ಸಮಯದಲ್ಲಿ ಮಾಧ್ಯಮಗಳ ಮೇಲಿನ ಪ್ರಮುಖ ಒತ್ತಡ ಕಾರ್ಪೊರೇಟ್ ಸೆನ್ಸಾರ್‌ಶಿಪ್ ಆಗಿತ್ತು. ಬೃಹತ್ ಕಂಪೆನಿಗಳು ಸಂಪಾದಕೀಯ ಆದ್ಯತೆಗಳ ಮೇಲೆ ಪ್ರಭಾವ ಬೀರುತ್ತಿದ್ದವು ಮತ್ತು ಅವುಗಳೇ ಮಾಧ್ಯಮ ಕಾರ್ಯಸೂಚಿಯನ್ನು ರೂಪಿಸುತ್ತಿದ್ದವು. ಈ ನಡುವೆ, ಇಂಟರ್ನೆಟ್ ಹೆಚ್ಚೆಚ್ಚು ವ್ಯಾಪಕವಾಗುತ್ತಾ ಸಾಗುತ್ತಿತ್ತು. ಮುದ್ರಣ ಪತ್ರಿಕೆಗೆ ಹೋಲಿಸಿದರೆ ಡಿಜಿಟಲ್ ಪತ್ರಿಕೆಯೊಂದನ್ನು ತುಂಬಾ ಕಡಿಮೆ ವೆಚ್ಚದಲ್ಲಿ ಆರಂಭಿಸಬಹುದಾಗಿತ್ತು. ಡಿಜಿಟಲ್ ಮಾಧ್ಯಮದಲ್ಲಿ ಪತ್ರಿಕೆ ವಿತರಣೆಗೆ ಸಂಬಂಧಿಸಿದ ಸಾಗಾಟ ಸವಾಲುಗಳಿರಲಿಲ್ಲ. ಅದೂ ಅಲ್ಲದೆ, ಆ ವೇಳೆಗೆ, ಸ್ಥಳಕ್ಕೆ ಹೋಗಿ ವರದಿ ಮಾಡುವುದನ್ನು ಹೆಚ್ಚಿನ ಪತ್ರಿಕೆಗಳು ನಿಲ್ಲಿಸಲು ಆರಂಭಿಸಿದ್ದವು. ಅದು ಮುಂದುವರಿಯಬೇಕು ಎಂದು ನಾವು ಬಯಸಿದೆವು. ದೇಶಾದ್ಯಂತ ನಡೆಯುತ್ತಿದ್ದ ಘಟನಾವಳಿಗಳ ಸಾಕಷ್ಟು ವಿವರವಾದ ವರದಿ ಓದುಗರಿಗೆ ಸಿಗುತ್ತಿಲ್ಲ ಎಂದು ಅನಿಸುತ್ತಿತ್ತು. ಭಾರತೀಯ ಜನಜೀವನದ ಯಾವ ಕ್ಷೇತ್ರಗಳನ್ನು ಮುಖ್ಯವಾಹಿನಿಯ ಮಾಧ್ಯಮಗಳು ನಿರ್ಲಕ್ಷಿಸುತ್ತಿದ್ದವೋ, ಅವುಗಳ ಬಗ್ಗೆ ವರದಿ ಮಾಡುವ ಪಾತ್ರವನ್ನು ನಾವು ವಹಿಸಬೇಕೆಂದು ನಿರ್ಧರಿಸಿದೆವು. ಕಾಶ್ಮೀರ, ಈಶಾನ್ಯ ಭಾರತ ಮತ್ತು ಮಧ್ಯ ಭಾರತದಂಥ ಭೌಗೋಳಿಕ ವಲಯಗಳು ಹಾಗೂ ಕಾರ್ಮಿಕ, ಸಾರ್ವಜನಿಕ ಆರೋಗ್ಯ, ಜಾತಿ ಮತ್ತು ಕೋಮು ಉದ್ವಿಗ್ನತೆ ಮುಂತಾದ ಕ್ಷೇತ್ರಗಳಿಗೆ ಹೆಚ್ಚಿನ ಗಮನ ನೀಡಲು ನಿರ್ಧರಿಸಲಾಯಿತು. ವರದಿಗಾರಿಕೆಯಲ್ಲಿ, ರಾಜಕೀಯಕ್ಕೆ ನೀಡುವಷ್ಟೇ ಮಹತ್ವವನ್ನು ಸಂಸ್ಕೃತಿಗೂ ನೀಡಲು ನಾವು ಮುಂದಾದೆವು. ಚಲನಚಿತ್ರಗಳು, ಪುಸ್ತಕಗಳು ಮತ್ತು ಮಾನವ ಅನುಭವದ ವೈಚಿತ್ರ್ಯ ಮತ್ತು ರಚನಾತ್ಮಕತೆಯನ್ನು ಹಿಡಿದಿಡುವ ವಿಭಿನ್ನ ಸುದ್ದಿಗಳಿಗೆ ಆದ್ಯತೆ ನೀಡಲು ನಾವು ನಿರ್ಧರಿಸಿದೆವು. ಈ ಉದ್ದೇಶಗಳಿಗಾಗಿ, ನಮ್ಮಲ್ಲಿ ಶಕ್ತಿಶಾಲಿ ‘ಫೀಚರ್ಸ್’ ವಿಭಾಗವಿದೆ. ಕಾಲ ಸರಿದಂತೆ, ನಮ್ಮ ಬಜೆಟ್‌ಗಳು ಕಿರಿದಾಗುತ್ತಾ ಬಂದರೂ, ನಮ್ಮ ಗುರಿಗಳನ್ನು ಕಾಯ್ದುಕೊಂಡು ಬರಲು ಪ್ರಯತ್ನಿಸಿದ್ದೇವೆ. ನಮ್ಮ ವರದಿಗಾರರ ಜಾಲ ಈಗ ಹಿಂದಿನಷ್ಟು ವ್ಯಾಪಕವಾಗಿ ಇಲ್ಲದಿದ್ದರೂ ನಾವು ನಮ್ಮ ಗುರಿಗಳಿಂದ ವಿಚಲಿತರಾಗಿಲ್ಲ. ►  ೨೦೧೪ರಲ್ಲಿ Scroll.in ಆರಂಭವಾದಾಗ ಯಾವ ಸಂಪಾದಕೀಯ ಮಾನದಂಡಗಳನ್ನು ನೀವು ಹಾಕಿಕೊಂಡಿರಿ?  ಸಂಪಾದಕೀಯ ಮಾನದಂಡಗಳನ್ನು ನಿಖರವಾಗಿ ನಿರೂಪಿಸುವುದು ಕಷ್ಟ. ಟೈಮ್ಸ್ ಆಫ್ ಇಂಡಿಯಾ, ಅಸೋಸಿಯೇಟೆಡ್ ಪ್ರೆಸ್, ಒಂದು ಟಿ.ವಿ. ಚಾನೆಲ್, ವಾಲ್ ಸ್ಟ್ರೀಟ್ ಜರ್ನಲ್ ಮತ್ತು ಟೈಮ್ ಔಟ್ ಮಾಧ್ಯಮ ಸಂಸ್ಥೆಗಳಲ್ಲಿ ಕೆಲಸ ಮಾಡಿರುವ ಅನುಭವವನ್ನು ನಾನು ಹೊಂದಿದ್ದೇನೆ. ಈ ಸಂಸ್ಥೆಗಳಿಂದ ನಾನು ಕಲಿತುಕೊಂಡ ನಿಷ್ಠುರತೆಯನ್ನು Scroll.in ಬಿಂಬಿಸಬೇಕೆಂದು ನಾನು ಬಯಸಿದ್ದೆ. ಎಲ್ಲವೂ ವಿವರವಾಗಿ ವರದಿಯಾಗುವಂತೆ ನೋಡಿಕೊಳ್ಳುವುದು ನಮ್ಮ ನಿಲುವು ಆಗಿತ್ತು. ಕೇವಲ ಟೆಲಿಫೋನ್ ಸಂಭಾಷಣೆಗಳೊಂದನ್ನೇ ಅವಲಂಬಿಸುವ ಬದಲು, ವರದಿಗಾರರು ಸ್ಥಳಕ್ಕೆ ಹೋಗಿ ಘಟನೆಗಳನ್ನು ನೋಡಿದ ಜನರೊಂದಿಗೆ ನೇರವಾಗಿ ಮಾತನಾಡುವುದಕ್ಕೆ ನಾವು ಒತ್ತು ನೀಡುತ್ತಿದ್ದೆವು. ಸಾಮಾನ್ಯ ಓದುಗರಿಗೆ ಅರ್ಥವಾಗುವ ಸ್ಪಷ್ಟ ಶೈಲಿಯಲ್ಲಿ ವರದಿಗಳನ್ನು ಬರೆಯಲೂ ನಾವು ನಿರ್ಧರಿಸಿದೆವು. ಆಡಂಬರದ ಭಾಷೆಯನ್ನು ಬಿಟ್ಟೆವು ಮತ್ತು ವೃತ್ತಿಪರರು ಬಳಸುವ ಪದಗಳಿಗೆ ಸರಳ ವಿವರಣೆಗಳನ್ನು ನೀಡಿದೆವು. ನಿಮ್ಮ ಅಜ್ಜಿಗೂ ಅರ್ಥವಾಗುವಂತೆ ಸುದ್ದಿಗಳನ್ನು ಬರೆಯಬೇಕೆಂದು ನಾನು ನನ್ನ ಸಹೋದ್ಯೋಗಿಗಳಿಗೆ ಆಗಾಗ ನೆನಪಿಸುತ್ತಿದ್ದೆ. ಈ ಮೌಲ್ಯಗಳನ್ನು ನಂಬಿ ಪಾಲಿಸುವ ಪ್ರಬಲ ತಂಡವೊಂದನ್ನು ನಾವು ಕಟ್ಟಿದೆವು. ಯಾವುದೇ ನಿರ್ದಿಷ್ಟ ರಾಜಕೀಯ ಪಕ್ಷದತ್ತ ವಾಲಿದ್ದೇವೆ ಎಂಬುದಾಗಿ ಜನರು ಭಾವಿಸಬಾರದು ಎಂಬ ಕಾರಣಕ್ಕಾಗಿ ಸಂಪಾದಕೀಯ ಪುಟದಲ್ಲಿ ರಾಜಕಾರಣಿಗಳ ಲೇಖನಗಳನ್ನು ಪ್ರಕಟಿಸದಿರಲೂ ನಾವು ನಿರ್ಧರಿಸಿದೆವು. ಇದು ಆರಂಭದಿಂದಲೂ ಇರುವ ನಮ್ಮ ನಿಲುವುಗಳ ಪೈಕಿ ಒಂದಾಗಿದೆ. ►  ಅಸ್ತಿತ್ವಕ್ಕೆ ಬಂದ ಬಳಿಕ Scroll.in ಶೀಘ್ರವಾಗಿ ಜನಪ್ರಿಯವಾಯಿತು ಮತ್ತು ತನ್ನದೇ ಸ್ಥಾನವೊಂದನ್ನು ಕಂಡುಕೊಂಡಿತು. ಅದು ಅಷ್ಟು ಬೇಗ ಜನಪ್ರಿಯತೆಯನ್ನು ಪಡೆದುಕೊಳ್ಳುತ್ತದೆ ಎಂಬುದಾಗಿ ನೀವು ನಿರೀಕ್ಷಿಸಿದ್ದಿರಾ? Scroll.in ಗೆ ದೊರೆತ ಧನಾತ್ಮಕ ಪ್ರತಿಕ್ರಿಯೆಯನ್ನು ಕಂಡು ನಮಗೆ ಹಿತವಾದ ಅಚ್ಚರಿಯಾಗಿತ್ತು. ಆ ಕಾಲದಲ್ಲಿ, ಭಾರತದಲ್ಲಿ ಸಾಮಾಜಿಕ ಮಾಧ್ಯಮಗಳು, ಅದರಲ್ಲೂ ಮುಖ್ಯವಾಗಿ ಫೇಸ್ಬುಕ್ ಕ್ಷಿಪ್ರವಾಗಿ ವ್ಯಾಪಿಸುತ್ತಿತ್ತು. ಹಾಗಾಗಿ, ನಮ್ಮ ಮಾಧ್ಯಮದ ಸುದ್ದಿಗಳ ವಿತರಣೆಯು ವಿಶಾಲ ವ್ಯಾಪ್ತಿಯಲ್ಲಿ ನಡೆಯಿತು. ನಾವು ಕಡಿಮೆ ಸಮಯದಲ್ಲಿ ಸುಮಾರು ಒಂದು ಕೋಟಿ ಓದುಗರನ್ನು ತಲುಪಿದೆವು. ಇದನ್ನು ಸಾಧಿಸಲು ಮುದ್ರಣ ಮಾಧ್ಯಮಕ್ಕೆ ಹಲವಾರು ವರ್ಷಗಳೇ ಬೇಕಾಗುತ್ತಿದ್ದವು. ನಾವು ಸ್ವಲ್ಪ ಅಸಾಂಪ್ರದಾಯಿಕ ವಿಧಾನವನ್ನು ಅನುಸರಿಸಿದೆವು. ದೈನಂದಿನ ವರದಿಗಾರಿಕೆಗೆ, ಪತ್ರಕರ್ತರನ್ನು ನೇಮಿಸಿಕೊಳ್ಳುವ ಬದಲು, ಯಾರ ಕೆಲಸ ನಮಗೆ ಮೆಚ್ಚುಗೆಯಾಗಿದೆಯೋ ಮತ್ತು ನಾವು ಯಾರೊಂದಿಗೆ ಕೆಲಸ ಮಾಡಲು ಬಯಸಿದ್ದೇವೆಯೋ ಅವರನ್ನು ನಾವು ಸಂಪರ್ಕಿಸಿದೆವು. ಹಾಗಾಗಿ, ರಕ್ಷಣೆ ಅಥವಾ ಗೃಹ ಸಚಿವಾಲಯ ಮುಂತಾದ ಕೆಲವೊಂದು ಸಾಂಪ್ರದಾಯಿಕ ಕ್ಷೇತ್ರಗಳಲ್ಲಿ ವರದಿ ಮಾಡುವ ವರದಿಗಾರರ ಕೊರತೆಯನ್ನು ನಾವು ಎದುರಿಸುತ್ತಿದ್ದೇವೆ. ಆದರೆ, ತಮಗೆ ಪ್ರಾಮಾಣಿಕ ಆಸಕ್ತಿಯುಳ್ಳ ವಿಷಯಗಳ ಬಗ್ಗೆ ಮೋಹದಿಂದ ಬರೆಯುವ ಲೇಖಕರು ನಮ್ಮಲ್ಲಿದ್ದರು. ಅವರ ಈ ಆಸಕ್ತಿಯನ್ನು ಓದುಗರು ಗುರುತಿಸಿದ್ದಾರೆ. ಜನರು ಗುರುತಿಸಿದ ನಮ್ಮ ಮೊದಲ ಮಹತ್ವದ ಕಾರ್ಯಕ್ರಮ, ಸುಪ್ರಿಯಾ ಶರ್ಮಾರ ‘ವಿಂಡೋ ಸೀಟ್’. ೨೦೧೪ರ ಚುನಾವಣಾ ಪ್ರಚಾರದ ಅವಧಿಯಲ್ಲಿ, ಅವರು ರೈಲಿನಲ್ಲಿ ಅಸ್ಸಾಮಿನಿಂದ ಕಾಶ್ಮೀರಕ್ಕೆ ಪ್ರಯಾಣಿಸಿದರು. ಈ ಪ್ರಯಾಣದ ಅವಧಿಯಲ್ಲಿ ಅವರು ಪ್ರತಿದಿನ ಒಂದು ನಿರ್ದಿಷ್ಟ ಪಟ್ಟಣದಲ್ಲಿ ಇಳಿದು ಅಲ್ಲಿನ ವರದಿಯನ್ನು ಬರೆದು ಕಳುಹಿಸಿದರು. ಅದು ಕಠಿಣ ಕ್ಷೇತ್ರ-ವರದಿಯಾಗಿತ್ತು. ಸುದ್ದಿಯನ್ನು ವಿವರಿಸುವ ಅವರ ವಿಧಾನವು ಸ್ಪಷ್ಟತೆಯಿಂದ ಕೂಡಿತ್ತು ಮತ್ತು ಓದುಗರಲ್ಲಿ ಆಸಕ್ತಿ ಹುಟ್ಟಿಸುತ್ತಿತ್ತು. ಆ ವಿಧಾನವು ನಮಗೆ ಮಾದರಿಯಾಯಿತು.    ಇಂಥ ಸುದ್ದಿಗಳಿಗೆ ಆಗ ಬರವಿತ್ತೇ? ಅಥವಾ ಅವುಗಳನ್ನು ಓದುಗರು ಬಯಸುತ್ತಿದ್ದರೇ?  ಆ ಕಾಲದಲ್ಲಿದ್ದ ಕೆಲವು ಆನ್‌ಲೈನ್ ಮಾಧ್ಯಮಗಳ ಪೈಕಿ ‘ರೆಡಿಫ್ಯೂಶನ್’ (Rediffusion) ಒಂದಾಗಿತ್ತು. ಆದರೆ, ಆಗ ಅದರ ಅವನತಿ ಆರಂಭವಾಗಿತ್ತು. ‘ಫಸ್ಟ್‌ಪೋಸ್ಟ್’ ದೊಡ್ಡ ವೆಬ್‌ಸೈಟ್ ಆಗಿತ್ತು. ಆದರೆ, ಅದು ಮುಖ್ಯವಾಗಿ ಬ್ರೇಕಿಂಗ್ ವೀವ್ಸ್ ಗೆ ಹೆಚ್ಚಿನ ಗಮನ ನೀಡಿತ್ತು. ಅಂದರೆ ಘಟನೆಗಳ ಬಗ್ಗೆ ಅದು ತಕ್ಷಣ ವಿಶ್ಲೇಷಣೆಗಳನ್ನು ನೀಡುತ್ತಿತ್ತು. ಹಾಗಾಗಿ, ಏನನ್ನು ಯೋಚಿಸಬೇಕು ಎಂಬುದನ್ನು ಓದುಗರಿಗೆ ಹೇಳುವ ಬದಲು, ಅವರಿಗೆ ವಾಸ್ತವ ಸಂಗತಿಗಳನ್ನು ಒದಗಿಸಬೇಕು ಎಂಬುದಾಗಿ ನಾವು ಭಾವಿಸಿದೆವು. ನಾವು ಅದನ್ನೇ ಮಾಡಿದೆವು. ►  ಆರಂಭದಲ್ಲಿ Scroll.in ಗೆ ಯಾರು ನೆರವು ನೀಡಿದರು ಹಾಗೂ ಈಗ ಅದಕ್ಕೆ ಯಾರು ನೆರವು ನೀಡುತ್ತಿದ್ದಾರೆ?  ಮಾಧ್ಯಮ ಮತ್ತು ಇತರ ಉದ್ಯಮಗಳಲ್ಲಿ ಹೂಡಿಕೆ ಮಾಡುತ್ತಿದ್ದ ಕಂಪೆನಿಯೊಂದು ನಮ್ಮಲ್ಲಿ ಹೂಡಿಕೆ ಮಾಡಿತು. ಅದರೊಂದಿಗೆ ನಮ್ಮ ಯಾನ ಆರಂಭವಾಯಿತು. ಇಂದು ಚಂದಾ ಮತ್ತು ಜಾಹೀರಾತಿನಿಂದ ನಮಗೆ ಆದಾಯ ಬರುತ್ತಿದೆ. ಓದುಗರ ನೆರವನ್ನು ಎಷ್ಟು ಪಡೆಯಲು ಸಾಧ್ಯವೋ ಅಷ್ಟನ್ನು ಪಡೆಯಲು ಪ್ರಯತ್ನಿಸುತ್ತಿದ್ದೇವೆ. ►  ಓದುಗರ ಬೆಂಬಲ ಸಾಕಾಗುವಷ್ಟು ಇದೆಯೇ?  ಪಕ್ಷಪಾತರಹಿತ ಸುದ್ದಿ ಬೇಕಾದರೆ, ಸ್ವತಂತ್ರ ಪತ್ರಿಕೋದ್ಯಮಕ್ಕೆ ಹಣಕಾಸು ನೆರವಿನ ಅಗತ್ಯವಿದೆ ಎನ್ನುವುದನ್ನು ಭಾರತೀಯ ಓದುಗರು ಅರ್ಥಮಾಡಿಕೊಳ್ಳುತ್ತಾರೆ ಎಂದು ನಾವು ಭಾವಿಸುತ್ತೇವೆ. ಎಲ್ಲಾ ಸ್ವತಂತ್ರ ಮಾಧ್ಯಮಗಳು ಈ ವಿಷಯದಲ್ಲಿ ಸಂಕಷ್ಟವನ್ನು ಎದುರಿಸುತ್ತಿವೆ. ►  ಅಂದರೆ, ಓದುಗರು ಸುದ್ದಿಗಳಿಗಾಗಿ ಹಣ ಪಾವತಿಸಲು ಹಿಂದೆಮುಂದೆ ನೋಡುತ್ತಾರೆ ಎನ್ನುವುದು ನಿಮ್ಮ ಮಾತಿನ ಅರ್ಥವೇ? ಇದು ಜಾಗತಿಕ ಸಮಸ್ಯೆಯಾಗಿದೆ. ಹೆಚ್ಚಿನ ಜನರು ಆನ್‌ಲೈನ್ ಸುದ್ದಿ ಉಚಿತವಾಗಿ ಸಿಗಬೇಕೆಂದು ಈಗಲೂ ನಿರೀಕ್ಷಿಸುತ್ತಾರೆ. ಆದರೆ, ಮುದ್ರಿತ ಪತ್ರಿಕೆ ಉಚಿತವಾಗಿ ಸಿಗಬೇಕೆಂದು ಅವರು ನಿರೀಕ್ಷಿಸುವುದಿಲ್ಲ. ►  ಹಾಗಾದರೆ, Scroll.in ೧೨ ವರ್ಷ ಹೇಗೆ ಬದುಕಿತು?  ಇದೊಂದು ಏರಿಳಿತಗಳ ಪ್ರಯಾಣವಾಗಿದೆ. ಹಾಗಾಗಿಯೇ, ನಾವೀಗ ಸಣ್ಣ ಮ್ಯಾಗಝಿನ್‌ಗೆ ಹೋಲಿಸಬಹುದಾದ ಒಂದು ಸಣ್ಣ ತಂಡವಾಗಿದ್ದೇವೆ. ಆದರೆ, ಬ್ರೇಕಿಂಗ್ ಸುದ್ದಿಗಳನ್ನು ಕೊಡುವ ಸುದ್ದಿಸಂಸ್ಥೆಗಳ ವೇಗದಲ್ಲಿ ಕೆಲಸ ಮಾಡುತ್ತಿದ್ದೇವೆ. ಸೀಮಿತ ಸಂಪನ್ಮೂಲಗಳ ಹಿನ್ನೆಲೆಯಲ್ಲಿ, ಪ್ರಾಯೋಗಿಕವಾಗಿ ಯಾವ ಸುದ್ದಿಗಳನ್ನು ವರದಿ ಮಾಡಬಹುದು ಎನ್ನುವುದನ್ನು ಪ್ರತಿ ದಿನ ನಾವು ನಿರ್ಧರಿಸಬೇಕಾಗುತ್ತದೆ. ನಮ್ಮ ಓದುಗರಿಗೆ ಮಾಹಿತಿ ನೀಡುವ ನಮ್ಮ ಬದ್ಧತೆಯು ಈ ಸಂಪನ್ಮೂಲಗಳ ಎಚ್ಚರಿಕೆಯ ಬಳಕೆಯನ್ನು ಅವಲಂಬಿಸಿದೆ. ►  ಹೆಚ್ಚಿನ ಸ್ವತಂತ್ರ ಮಾಧ್ಯಮ ಸಂಸ್ಥೆಗಳು ಚಂದಾದಾರಿಕೆ ಮಾದರಿಯನ್ನು ಅವಲಂಬಿಸಿವೆ. ಈ ಮಾದರಿ ಯಶಸ್ವಿಯಾಗಿದೆಯೇ?  ಅಂತಿಮವಾಗಿ, ಇದುವೇ ಏಕೈಕ ತಾಳಿಕೊಳ್ಳಬಹುದಾದ (sustainable) ಮಾದರಿ. ಈ ಮಾದರಿ ತಮ್ಮಲ್ಲಿ ಯಶಸ್ವಿಯಾಗಿದೆ ಎಂಬುದಾಗಿ ಕೆಲವು ಸ್ವತಂತ್ರ ಮಾಧ್ಯಮಗಳು ಹೇಳಿವೆ. ಚಂದಾದಾರರಾಗುವಂತೆ ಓದುಗರ ಮನವೊಲಿಸಲು ನಾವೆಲ್ಲರೂ ನಮ್ಮದೇ ಆದ ವಿಧಾನಗಳಲ್ಲಿ ಪ್ರಯತ್ನಿಸುತ್ತಿದ್ದೇವೆ. ಇಲ್ಲೊಂದು ವಿರೋಧಾಭಾಸವಿದೆ. ಮುದ್ರಣಗೊಳ್ಳುವ ಪತ್ರಿಕೆಗಳಿಗೆ ಖರ್ಚಿದೆ ಎನ್ನುವುದನ್ನು ಜನರು ಸ್ವೀಕರಿಸುತ್ತಾರೆ, ಆದರೆ, ಇಂಟರ್ನೆಟ್‌ನಲ್ಲಿ ಎಲ್ಲವೂ ಉಚಿತವಾಗಿ ಬೇಕೆಂದು ಅವರು ನಿರೀಕ್ಷಿಸುತ್ತಾರೆ. ಇಂಟರ್ನೆಟ್‌ನಲ್ಲಿ ಉನ್ನತ ಗುಣಮಟ್ಟದ ಪತ್ರಿಕೋದ್ಯಮವನ್ನು ಮಾಡುವುದು ಪತ್ರಿಕೆಯೊಂದನ್ನು ಮುದ್ರಿಸುವಷ್ಟೇ ವೆಚ್ಚದಾಯಕವಾಗಿದೆ ಎನ್ನುವುದನ್ನು ನಾವು ಜನರಿಗೆ ಮನವರಿಕೆ ಮಾಡಬೇಕಾಗಿದೆ. ►  ಈ ರೀತಿಯ ಮನವೊಲಿಕೆ ಯಶಸ್ವಿಯಾಗುತ್ತಿದೆಯೇ?  ಅದು ನಿಧಾನವಾಗಿ ಯಶಸ್ವಿಯಾಗುತ್ತಿದೆ. ಜನರು ದಶಕಗಳ ಕಾಲ ಉಚಿತ ಆನ್‌ಲೈನ್ ವಿಷಯಗಳಿಗೆ ಒಗ್ಗಿ ಹೋಗಿದ್ದಾರೆ. ಅಭಿವೃದ್ಧಿ ಹೊಂದಿರುವ ದೇಶಗಳಲ್ಲೂ, ಹಣ ಪಾವತಿಸುವಂತೆ ಜನರ ಮನವೊಲಿಸುವಲ್ಲಿ ಮಾಧ್ಯಮ ಸಂಸ್ಥೆಗಳು ಪರದಾಡುತ್ತಿವೆ. ಇದು ಜಾಗತಿಕ ಸಮಸ್ಯೆ. ►  ಸ್ವತಂತ್ರ ಮಾಧ್ಯಮಗಳು ಸಹಯೋಗದ ಮೂಲಕ ಈ ಬಿಕ್ಕಟ್ಟನ್ನು ನಿವಾರಿಸಲು ಸಾಧ್ಯವೇ?  ಉದಾಹರಣೆಗೆ; ಚುನಾವಣಾ ವರದಿಗಾಗಿ ಮತ್ತು ಚುನಾವಣಾ ಬಾಂಡ್‌ಗಳ ವಿಷಯದಲ್ಲಿ The Wire, The News Minute, News Laundry ಮತ್ತು The Caravan ಜೊತೆಗೆ Scroll.in ಸಹಯೋಗ ಮಾಡಿಕೊಂಡಿತ್ತು. ಚುನಾವಣಾ ವರದಿಗಾರಿಕೆ ಮತ್ತು ಚುನಾವಣಾ ಬಾಂಡ್‌ಗಳ ತನಿಖೆ ಮುಂತಾದ ಹಲವಾರು ಮಹತ್ವದ ಸಂದರ್ಭಗಳಲ್ಲಿ ನಾವು ಸಹಯೋಗದಿಂದ ಕೆಲಸ ಮಾಡಿದ್ದೇವೆ. ಆದರೆ, ನಮ್ಮದೇ ಆದ ಸ್ಪಷ್ಟ ಗುರುತನ್ನು ಕಾಪಾಡಿಕೊಳ್ಳುವುದು ನಮಗೆಲ್ಲರಿಗೂ ಅಗತ್ಯವಾಗಿದೆ. ಪ್ರತಿಯೊಂದು ಮಾಧ್ಯಮಕ್ಕೂ ತನ್ನದೇ ಆದ ಗುರಿಯಿದೆ. ಇದರಿಂದ ಓದುಗರಿಗೆ ಪ್ರಯೋಜನವಿದೆ. ಸಹಯೋಗವು ಆರ್ಥಿಕತೆಗೆ ಮೂಲಭೂತ ಬದಲಾವಣೆಯನ್ನೇನೂ ತರುವುದಿಲ್ಲ. ಅಲ್ಲದೆ, ಅದು ಸ್ವಾವಲಂಬಿ ಮಾದರಿಯೊಂದನ್ನು ಸ್ವಯಂಚಾಲಿತವಾಗಿ ಸೃಷ್ಟಿಸುವುದೂ ಇಲ್ಲ. ಅಂತಿಮವಾಗಿ, ಪ್ರತಿಯೊಂದು ಸಂಸ್ಥೆಯು ತನ್ನನ್ನು ತಾನೇ ಆಧರಿಸಿಕೊಳ್ಳಬೇಕು.ಕೇವಲ ಒಂದು ಸ್ವತಂತ್ರ ಡಿಜಿಟಲ್ ಧ್ವನಿಯಿರುವ ಮಾಧ್ಯಮ ಕ್ಷೇತ್ರವು ಏಕತಾನತೆಯಿಂದ ಕೂಡಿರುತ್ತದೆ ಮತ್ತು ಅದು ಅನಾರೋಗ್ಯಕರವಾಗಿರುತ್ತದೆ. ವಿಭಿನ್ನ ಧ್ವನಿಗಳು ಇರುವುದು ಅಗತ್ಯ. ►  ಪ್ರಮುಖ ಪತ್ರಿಕೋದ್ಯಮ ಪ್ರಶಸ್ತಿಗಳಲ್ಲಿ, Scroll.in ಮುಂತಾದ ಸ್ವತಂತ್ರ ಮಾಧ್ಯಮಗಳು ಸ್ಥಾಪಿತ ಮಾಧ್ಯಮಗಳನ್ನು ಹಿಂದಿಕ್ಕುತ್ತಿವೆ. ಇದು ಅವುಗಳ ವಿಶ್ವಾಸಾರ್ಹತೆಯನ್ನು ಹೆಚ್ಚಿಸುತ್ತದೆಯೇ? ಹಾಗೆಂದು ನನಗೆ ಅನಿಸುತ್ತದೆ. ಸುಪ್ರಿಯಾ ಶರ್ಮಾ ಪತ್ರಿಕೋದ್ಯಮದಲ್ಲಿ ರಾಮನಾಥ ಗೋಯೆಂಕಾ ಶ್ರೇಷ್ಠತಾ ಪ್ರಶಸ್ತಿ ಪಡೆದ ಮೊದಲ ಡಿಜಿಟಲ್ ಪತ್ರಕರ್ತೆ. ಅದು ೧೨ ವರ್ಷಗಳ ಹಿಂದೆ. ಅಂದಿನಿಂದ, ನೀವು ಗಮನಿಸಿರುವಂತೆ, ಡಿಜಿಟಲ್ ಮತ್ತು ಸ್ವತಂತ್ರ ಮಾಧ್ಯಮಗಳು ಹೆಚ್ಚೆಚ್ಚು ಪ್ರಶಸ್ತಿಗಳನ್ನು ಪಡೆದುಕೊಂಡಿವೆ. Scroll.in ಈವರೆಗೆ ೬೪ ಪ್ರಶಸ್ತಿಗಳನ್ನು ಪಡೆದುಕೊಂಡಿದೆ. ಇತರ ಮಾಧ್ಯಮ ಸಂಸ್ಥೆಗಳಿಗೆ ಹೋಲಿಸಿದರೆ, ಕಿರಿಯನಾಗಿರುವ ಸ್ವತಂತ್ರ ಮಾಧ್ಯಮ ಸಂಸ್ಥೆಯೊಂದಕ್ಕೆ ಇದು ಕಳಪೆ ಸಾಧನೆಯೇನೂ ಅಲ್ಲ. ಆದರೆ, ಭಾರತದಲ್ಲಿ ರಾಜಕೀಯ ಮತ್ತು ಮಾಧ್ಯಮ ವ್ಯಾಖ್ಯಾನ ಎಷ್ಟು ಧ್ರುವೀಕರಣಗೊಂಡಿದೆಯೆಂದರೆ, ಈ ಪ್ರಶಸ್ತಿಗಳು ಪಕ್ಷಪಾತಪೂರಿತವಾಗಿವೆ ಎಂಬುದಾಗಿ ಟ್ರೋಲ್‌ಗಳು ಕೆಲವು ಸಲ ಹೇಳಿಕೊಳ್ಳುತ್ತಾರೆ. ಸ್ವತಂತ್ರ ಪತ್ರಿಕೋದ್ಯಮವನ್ನು ಗಂಭೀರವಾಗಿ ತೆಗೆದುಕೊಳ್ಳುವಂತೆ ಹಿಂದುತ್ವ ಬೆಂಬಲಿಗರಿಗೆ ಪ್ರಶಸ್ತಿಗಳು ಮನವರಿಕೆ ಮಾಡಿಕೊಡುತ್ತವೆ ಎಂಬುದಾಗಿ ನಾನು ಭಾವಿಸುವುದಿಲ್ಲ. ►  ಬಲಪಂಥೀಯ ಮಾಧ್ಯಮಗಳು ಮತ್ತು ಟೀಕಾಕಾರರಿಂದ ಯಾವ ಸವಾಲುಗಳನ್ನು ನೀವು ಎದುರಿಸುತ್ತಿದ್ದೀರಿ?  ಹಿಂದೆ, ಓಪ್ ಇಂಡಿಯಾ ಮುಂತಾದ ಬಲಪಂಥೀಯ ಸುಳ್ಳು-ಪ್ರಚಾರ (propaganda) ವೆಬ್‌ಸೈಟ್‌ಗಳು ನಮ್ಮ ಬಗ್ಗೆ ಪ್ರಕಟಿಸುವ ನಕಾರಾತ್ಮಕ ಲೇಖನಗಳಿಂದ ನಾನು ನೊಂದುಕೊಳ್ಳುತ್ತಿದ್ದೆ. ಈಗ ಅವುಗಳನ್ನು ಒಂದು ಕಿವಿಯಿಂದ ಕೇಳಿ ಇನ್ನೊಂದು ಕಿವಿಯಿಂದ ಬಿಡುತ್ತಿದ್ದೇನೆ. ಆ ಲೇಖನಗಳಲ್ಲಿ ಸೈದ್ಧಾಂತಿಕ ಆಡಂಬರ ಇರುತ್ತದೆಯೇ ಹೊರತು ಮೌಲಿಕ ಟೀಕೆಗಳಿಲ್ಲ. ನಾವು ಗೌರವಿಸುವ ಜನರು ನಮ್ಮನ್ನು ಟೀಕಿಸಿದಾಗ, ನಾವು ಖಂಡಿತವಾಗಿಯೂ ಅದನ್ನು ಗಮನಿಸುತ್ತೇವೆ. ಆದರೆ, ಈ ರೀತಿಯ ನಿಂದನೆಗಳಲ್ಲಿ ಯಾವುದೇ ಸತ್ವವಿಲ್ಲ. ►  ಈಗಿನ ಸರಕಾರವನ್ನು ಟೀಕಿಸಿದ ಬಳಿಕ, ಮಾಧ್ಯಮವನ್ನು ನಡೆಸಿಕೊಂಡು ಹೋಗುವುದು ಕಷ್ಟ ಎಂದು ನಿಮಗೆ ಅನಿಸಿದೆಯೇ? ಮಾಹಿತಿಯನ್ನು ದಿನೇ ದಿನೇ ಹೆಚ್ಚೆಚ್ಚು ನಿರ್ಬಂಧಿಸುತ್ತಿರುವುದು ದೊಡ್ಡ ಸಮಸ್ಯೆಯಾಗಿದೆ. ಪ್ರಧಾನಿಯವರು ಪತ್ರಿಕಾಗೋಷ್ಠಿಗಳಲ್ಲಿ ಮಾತನಾಡುವುದಿಲ್ಲ. ನಿಯಮಿತವಾಗಿ ನಡೆಯುವ ರಾಷ್ಟ್ರೀಯ ಸಮೀಕ್ಷೆಗಳು ನಿಂತಿವೆ. ನಮ್ಮಲ್ಲಿ ಇನ್ನೂ ಪರಿಷ್ಕೃತ ಜನಗಣತಿ ಅಂಕಿಅಂಶಗಳಿಲ್ಲ. ಮಾಹಿತಿ ಹಕ್ಕು ಕಾಯ್ದೆಯನ್ನು ದುರ್ಬಲಗೊಳಿಸಲಾಗಿದೆ. ಅಂಕಿಅಂಶಗಳು ದೊರೆಯದಿರುವಾಗ ಸರಕಾರದ ನಿರ್ವಹಣೆಯ ಮೌಲ್ಯಮಾಪನ ಮಾಡುವುದು ಕಷ್ಟ. ಇನ್ನೊಂದು ಕಡೆಯಿಂದ ಕಾನೂನು ಒತ್ತಡಗಳಿವೆ. ಲಾಕ್‌ಡೌನ್ ಸಂದರ್ಭದಲ್ಲಿ ವಾರಣಾಸಿಯಿಂದ ನಾನು ಮತ್ತು ಸುಪ್ರಿಯಾ ಶರ್ಮಾ ಮಾಡಿರುವ ವರದಿಗಳಿಗಾಗಿ ನಮ್ಮ ವಿರುದ್ಧ ಮೊಕದ್ದಮೆಗಳನ್ನು ದಾಖಲಿಸಲಾಗಿದೆ. ಅಲಹಾಬಾದ್ ಹೈಕೋರ್ಟ್ ನಮಗೆ ಬಂಧನದಿಂದ ರಕ್ಷಣೆ ನೀಡಿದೆ. ನಮ್ಮ ವಿರುದ್ಧ ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆಯಡಿ ಮೊಕದ್ದಮೆಗಳನ್ನು ದಾಖಲಿಸಲಾಗಿದೆ. ►  ನಿಮಗೆ ತುಂಬಾ ಅವಹೇಳನಕಾರಿ ಸಂದೇಶಗಳೂ ಬರುತ್ತಿರಬಹುದು...  ಹೌದು, ತುಂಬಾ ನಿಂದನಾತ್ಮಕ ಸಂದೇಶಗಳು ಬರುತ್ತಿವೆ. ಆರಂಭಿಕ ದಿನಗಳಲ್ಲಿ ನೋವಾಗುತ್ತಿತ್ತು. ಆದರೆ ಈಗ ಅದು ದೈನಂದಿನ ಕಾರ್ಯಕ್ರಮದಂತೆ ಆಗಿದೆ. ಇಂಥ ಹೆಚ್ಚಿನ ಸಂದೇಶಗಳು ಸಾಮಾಜಿಕ ಮಾಧ್ಯಮ ಟ್ರೋಲ್‌ಗಳಿಂದ ಬರುತ್ತವೆ. ಆದರೆ, ನಾವು ದಾರಿತಪ್ಪಿದವರು ಅಥವಾ ದೇಶವಿರೋಧಿಗಳು ಎಂಬುದಾಗಿ ಆರೋಪಿಸಿ ನಮ್ಮ ‘ಓದುಗರ ಪತ್ರಗಳು’ ವಿಳಾಸಕ್ಕೂ ಸಂದೇಶಗಳು ಬರುತ್ತವೆ. ಇಂಥ ಸಂದೇಶಗಳನ್ನು ಸ್ವೀಕರಿಸುವುದು ಈಗ ನಮ್ಮ ಕೆಲಸದ ಒಂದು ಭಾಗವೇ ಆಗಿದೆ. ► ಮುಂದಿನ ಐದು ವರ್ಷಗಳಲ್ಲಿ Scroll.in ಎಲ್ಲಿರುತ್ತದೆ?  ಆಗಲೂ ನಾವಿರುತ್ತೇವೆ, ಆಗಲೂ ಜೀವಂತವಾಗಿ ಇರುತ್ತೇವೆ, ಆಗಲೂ ನಮ್ಮ ಓದುಗರನ್ನು ಹುರಿದುಂಬಿಸುತ್ತಾ ಇರುತ್ತೇವೆ. ಆ ವೇಳೆಗೆ, ರಾಜಕೀಯ ಮತ್ತು ಆರ್ಥಿಕ ಒತ್ತಡಗಳಿಗೆ ಹೆಚ್ಚುವರಿಯಾಗಿ, ನಾವು ತಾಂತ್ರಿಕ ಸವಾಲುಗಳನ್ನೂ ಎದುರಿಸಬೇಕಾಗುತ್ತದೆ. ಪ್ರೇಕ್ಷಕರು ಏನನ್ನು ನೋಡುತ್ತಾರೋ ಅದನ್ನು ಸಾಫ್ಟ್‌ವೇರ್‌ಗಳು ಪ್ರಭಾವಿಸುತ್ತವೆ ಮತ್ತು ಕೃತಕ ಬುದ್ಧಿಮತ್ತೆಯು (AI)ಮಾಧ್ಯಮ ಬಳಕೆಯ ವಿಧಾನವನ್ನೇ ಪರಿವರ್ತಿಸುತ್ತಿದೆ. ಕೃತಕ ಬುದ್ಧಿಮತ್ತೆಯು ನಮ್ಮೆಲ್ಲರನ್ನೂ ಅಳಿಸಿ ಹಾಕಲೂಬಹುದು. ಕೃತಕ ಬುದ್ಧಿಮತ್ತೆ ಚಾಲಿತ ಬದಲಾವಣೆಗಳಿಂದಾಗಿ ಎಲ್ಲೆಡೆಯೂ ಓದುವಿಕೆ ನಶಿಸುತ್ತಿದೆ.   ►  ಕೃತಕ ಬುದ್ಧಿಮತ್ತೆಯ ಸವಾಲನ್ನು ನೀವು ಹೇಗೆ ಎದುರಿಸುತ್ತೀರಿ?  ಪತ್ರಿಕೋದ್ಯಮವನ್ನು ಹೇಗೆ ಮಾಡಬೇಕೆಂದು ನಾವು ಭಾವಿಸುತ್ತೇವೆಯೋ ಹಾಗೆ ಮಾಡುವುದನ್ನು ಮುಂದುವರಿಸುತ್ತೇವೆ. ಅದರಾಚೆಗೆ ನಾವು ಮಾಡುವಂಥದ್ದು ಏನೂ ಇಲ್ಲ. ಚಿಂತನಶೀಲ ಮತ್ತು ನಿಷ್ಠ ಓದುಗರು ನಮ್ಮನ್ನು ಹುಡುಕಿಕೊಂಡು ಬರುವುದನ್ನು ಮುಂದುವರಿಸುತ್ತಾರೆ ಎಂದು ನಾವು ನಂಬಬೇಕು. ►  ‘ವಾರ್ತಾಭಾರತಿ’ಗೆ ನೀವು ಯಾವ ಸಲಹೆಯನ್ನು ನೀಡಬಯಸುತ್ತೀರಿ?  ನಾವು ನಮ್ಮ ಮಾಧ್ಯಮವನ್ನು ಆರಂಭಿಸಿದಾಗ, ಹೆಚ್ಚಿನ ಮಾಧ್ಯಮಗಳು ಎನಾಲಿಟಿಕ್ಸ್ (ಓದುಗರು ಯಾವ ಲಿಂಕ್‌ಗಳನ್ನು ಒತ್ತುತ್ತಾರೆ ಮತ್ತು ಯಾವುದಕ್ಕೆ ಲೈಕ್‌ಗಳನ್ನು ಕೊಡುತ್ತಾರೆ ಎನ್ನುವುದನ್ನು ತೋರಿಸುವ ದತ್ತಾಂಶ)ಗೆ ಹೆಚ್ಚಿನ ಒತ್ತು ನೀಡುತ್ತಿದ್ದವು. ಓದುಗರು ಬಯಸುವುದು ಇದನ್ನು ಎಂಬುದಾಗಿ ತಾವು ಭಾವಿಸಿದ ವಿಷಯಗಳಿಗೆ ಅವುಗಳು ತಮ್ಮ ಸುದ್ದಿಗಳನ್ನು ಹೊಂದಿಸಿಕೊಳ್ಳುತ್ತಿದ್ದವು. ಇದು ಓದುಗರನ್ನು ಬುದ್ಧಿವಂತರಲ್ಲ ಎಂಬುದಾಗಿ ಭಾವಿಸುವುದಾಗಿದೆ. ನಾವು ಓದುಗರು ಬುದ್ಧಿವಂತರು ಎಂಬುದಾಗಿ ನಂಬಬೇಕು. ವಿಶ್ವಾಸ ನಿರ್ಮಾಣ ಆಗುವುದು ಸ್ಥಿರ, ಪ್ರಾಮಾಣಿಕ ಪತ್ರಿಕೋದ್ಯಮದ ಮೂಲಕವೇ ಹೊರತು, ಆಯಾಯ ಕಾಲದ ಪ್ರವೃತ್ತಿಗಳ ಹಿಂದೆ ಹೋಗುವುದರಿಂದ ಅಲ್ಲ. ಶ್ರದ್ಧೆ, ಪಾರದರ್ಶಕತೆ ಮತ್ತು ತಪ್ಪುಗಳನ್ನು ಒಪ್ಪಿಕೊಳ್ಳುವುದರಿಂದ ಮಾಧ್ಯಮಗಳು ಮತ್ತು ಓದುಗರ ನಡುವೆ ನಿಧಾನವಾಗಿ ವಿಶ್ವಾಸ ಬೆಳೆಯುತ್ತದೆ. ನಾವು ಪ್ರತಿ ದಿನವೂ ಉತ್ತಮ ಪತ್ರಿಕೋದ್ಯಮವನ್ನು ಮಾಡುತ್ತಿರಬೇಕು, ಅಷ್ಟೆ.

ವಾರ್ತಾ ಭಾರತಿ 8 Feb 2026 1:13 pm

ನಿಯಮ ಉಲ್ಲಂಘಿಸಿ ಕಲ್ಲುಪುಡಿ ಮಾಡುವ ಕ್ರಷರ್ ಸ್ಥಾಪನೆ

ತೆರಿಗೆ ಪಾವತಿಸದ ಕ್ರಷರ್ ಮಾಲಕ: ಆರೋಪ

ವಾರ್ತಾ ಭಾರತಿ 8 Feb 2026 1:07 pm

ಜನಾಂಗವೊಂದನ್ನು ನಿರಾಯುಧಗೊಳಿಸುವುದು ದೇಶದ ಕತ್ತು ಹಿಚುಕಿದಂತೆ

‘ಈ ಹೊತ್ತಿನ ಭರತ ಖಂಡ ಹಿಂದೂಸ್ಥಾನ, ಹಿಂದೂಗಳಿಗೆ ಸೇರಿದ್ದಾಗಿದೆ. ಮುಸ್ಲಿಮರಿಗೆ ಪಾಕಿಸ್ತಾನ-ಬಾಂಗ್ಲಾ ದೇಶ ಕೊಟ್ಟಾಗಿದೆ. ಇಲ್ಲಿರಬೇಕಾದವರು ಹಿಂದೂಗಳು ಮಾತ್ರ!’ ಎಂದು ಹಾದಿಬೀದಿಯಲ್ಲಿ ಅರಚಾಡುವ ಪರಿ ಭಯಾನಕವಾದುದಾಗಿದೆ. ಇವರಿಗೆ ರವೀಂದ್ರ ನಾಥ ಟಾಗೋರ್, ಬುದ್ಧ-ಬಸವಣ್ಣ, ಕನಕ-ನಾರಾಯಣಗುರು, ಪಂಪ-ಕುವೆಂಪು ಬೋಧಿಸಿದ್ದ ಸೌಹಾರ್ದ ಭಾರತ, ಸಾಮರಸ್ಯ ಭಾರತ ಬೇಕಿಲ್ಲ. ‘ಶ್ರೇಷ್ಠ ವ್ಯಸನಿಗಳ ಜಾತಿ ಭಾರತ’ ಬೇಕಿದೆ. ಅದಕ್ಕಾಗಿ ಏನೆಲ್ಲಾ ತಂತ್ರ-ಕುತಂತ್ರಗಳನ್ನು ರಾಜಾರೋಷವಾಗಿ ಮಾಡಲು ಬೀದಿಗೆ ಇಳಿದಿದ್ದಾರೆ. ಪಾರ್ಲಿಮೆಂಟ್‌ನಲ್ಲೂ ಅಗತ್ಯವಿರುವ ಕಾನೂನು-ಕಟ್ಟಳೆ ಮಾಡುವತ್ತಲೂ ಹೊರಟಿರುವುದನ್ನು ಕಂಡಾಗ, ಇವರು ದೇಶವನ್ನು ಎಲ್ಲಿಗೆ ಕೊಂಡೊಯ್ಯಬಹುದು ಎಂಬ ಭಯಾತಂಕಗಳು ಎದೆಯೊಳಗೆ ಧಾಂಗುಡಿಯಿಡುತ್ತಿವೆ. ಹಿರಿಯ ಪತ್ರಕರ್ತ, ಲೇಖಕ ಜಾಣಗೆರೆ ವೆಂಕಟರಾಮಯ್ಯ ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನ ಜಾಣಗೆರೆಯವರು. ಓದಿದ್ದು ಬಿ.ಕಾಂ. ಆದರೂ ಸಾಹಿತ್ಯ ಹಾಗೂ ಪತ್ರಿಕೋದ್ಯಮ ಅವರ ಆಸಕ್ತಿದಾಯಕ ಕ್ಷೇತ್ರವಾಗಿತ್ತು. ‘ಪ್ರಪಾತ’, ‘ನನ್ನ ನೆಲ ನನ್ನ ಜನ’, ‘ಕಪ್ಪು ನ್ಯಾಯ’, ‘ದಡ’, ‘ನೆಲೆ’, ‘ಗರ’, ‘ಮಹಾನದಿ’, ‘ಮಾಯಾನಗರಿಯಲ್ಲಿ ಮಾಯಾಶಿಲ್ಪಿ’, ‘ಸುಡುಗುಂಡುಗಳ ನಾಡಲ್ಲಿ ಶಾಂತಿಯ ಕನಸು’, ‘ಸವೆಯದ ಹಾದಿ’, ‘ಎದೆಯಾಳ’, ‘ಬೆಂಕಿ ಮತ್ತು ಬೆಳಕು’ ಇವರ ಪ್ರಮುಖ ಕೃತಿಗಳು. ಇವರಿಗೆ ವಿ.ನಾಗರಾಜರಾವ್ ಸಮೂಹ ಮಾಧ್ಯಮ ಪ್ರಶಸ್ತಿ, ಕನ್ನಡ ಸಾಹಿತ್ಯ ಅಕಾಡಮಿ ಪ್ರಶಸ್ತಿ, ಎಚ್.ಕೆ. ವೀರಣ್ಣಗೌಡ ಪ್ರಶಸ್ತಿ, ವಿ.ಚಿ. ಸಾಹಿತ್ಯ ಪ್ರತಿಷ್ಠಾನದ ಪ್ರಶಸ್ತಿ, ರುಕ್ಮಿಣಿಬಾಯಿ ಸ್ಮಾರಕ ಪ್ರಶಸ್ತಿ ಮುಂತಾದ ಪ್ರಶಸ್ತಿಗಳು ಲಭಿಸಿವೆ. ರೂಪಲೇಖ, ಲಂಕೇಶ್ ಪತ್ರಿಕೆ, ನಮ್ಮನಾಡು, ಅಭಿಮಾನಿ, ಅರಗಿಣಿ, ಈ ಸಂಜೆ, ಜಾಣಗೆರೆ ಪತ್ರಿಕೆಗಳಲ್ಲಿ ಸಹ ಸಂಪಾದಕರು, ಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. ಭರತ ಖಂಡವು ಬಹು ಕಾಲದಿಂದ ‘ಬಹುತ್ವ ಭಾರತ’ವಾಗಿಯೆ ಉಳಿದುಕೊಂಡು ಬಂದಿದೆ. ಜಾತಿ-ಮತ-ಧರ್ಮ- ಭಾಷೆ-ಸಂಸ್ಕೃತಿ-ಆಚರಣೆಗಳಲ್ಲಿ ವೈವಿಧ್ಯತೆಯನ್ನು ಹೊಂದಿದ್ದು, ಇಡೀ ವಿಶ್ವದಲ್ಲಿ ಅದಕ್ಕಾಗಿ ಪ್ರಸಿದ್ಧಿಯನ್ನು ಪಡೆದಿರುವುದು ವಿಶಿಷ್ಟ ಹೆಗ್ಗಳಿಕೆಯಾಗಿದೆ. ಇಲ್ಲಿಯ ಶಾಂತಿ-ಸಾಮರಸ್ಯ-ಐಕ್ಯ-ಭಾವೈಕ್ಯಗಳಿಗೆ ಎಲ್ಲರ ಕೊಡುಗೆ ಅಪಾರವಾಗಿದೆ. ವಿವಿಧ-ವಿಭಿನ್ನ ಜಾತಿ-ಮತ-ಭಾಷೆ-ಪರಂಪರೆಯ ದೇಶವಾಗಿದ್ದರೂ, ಇಲ್ಲಿಯ ಸೌಹಾರ್ದ ಭಾವವನ್ನು ಬೇರಾವ ದೇಶದಲ್ಲೂ ಕಾಣಲು ಸಾಧ್ಯವಿಲ್ಲವೆಂಬುದನ್ನು ವಿಶ್ವವೇ ಅರಿತುಕೊಂಡು ವಿಸ್ಮಯಗೊಂಡಿದೆ. ಇಲ್ಲಿಯ ಕವಿ ಪುಂಗವರು, ಚಿಂತಕರು, ಸಂತರು, ಫಕೀರರು ‘ಮಾನವ ಕುಲಂ ತಾನೊಂದೆ ವಲಂ, ಕುಲಕುಲವೆಂದು ಹೊಡೆದಾಡದಿರಿ ನಿಮ್ಮ ಕುಲದ ನೆಲೆಯನೇನಾದರೂ ಬಲ್ಲಿರಾ, ಕಾಯಕವೆ ಕೈಲಾಸ, ದೇವನೊಬ್ಬ ನಾಮ ಹಲವು, ಈಶ್ವರ ಅಲ್ಲಾ ತೇರೆ ನಾಮ್, ವಿಶ್ವ ಮಾನವ ಸಂದೇಶ’ ಮುಂತಾದವನ್ನು ಹೇಳಿ ಹೋಗಿದ್ದಾರೆಯೆ ಹೊರತಾಗಿ ಜಾತಿ-ಮತ-ಧರ್ಮಗಳ ನಡುವಿನ ಭೇದಭಾವವನ್ನು ಹುಟ್ಟು ಹಾಕಿದ್ದ ಉದಾರಣೆಗಳಿಲ್ಲ. ‘ಎಲ್ಲ ಮತ-ಧರ್ಮಗಳ ಸಾರವೂ ಒಂದೆ’ ಎಂದು ಸಾರಿದ್ದನ್ನೂ ನಾವೆಲ್ಲರೂ ಮನದುಂಬಿಕೊಂಡಿದ್ದೇವೆ. ಇದೇ ಭರತ ಖಂಡವನ್ನು ಪ್ರಪಂಚದ ಹಲವಾರು ದೇಶಗಳವರು ಆಳಿದ್ದಾರೆ. ವಿವಿಧ ಧರ್ಮದವರೂ ದೇಶವನ್ನಾಳಿದ ಇತಿಹಾಸ ನಮ್ಮೊಂದಿಗಿದೆ. ದೇಶದೊಳಗಡೆಯೆ ಸುಮಾರು 560 ಚಕ್ರವರ್ತಿ-ದೊರೆ-ಸಾಮಂತರು-ಪಾಳೇಗಾರರು ಪ್ರತ್ಯೇಕ ಸಾಮ್ರಾಜ್ಯ-ಪ್ರಾಂತ-ರಾಜ್ಯ-ಪ್ರದೇಶವನ್ನಾಳುತ್ತಿದ್ದ ಕಾಲವೂ ಇದ್ದಿತ್ತು ಎಂಬುದನ್ನು ನೆನೆದಾಗ, ಅದೆಲ್ಲವನ್ನೂ ಅರಗಿಸಿಕೊಳ್ಳುವ ಶಕ್ತಿ-ಸಾಮರ್ಥ್ಯ ಈ ಭರತ ಭೂಮಿಯಲ್ಲಿದ್ದುದನ್ನು ಅರಿತುಕೊಂಡಿರುವ ನಾವು ಈ ಭೂಮಿಯ ಬಗ್ಗೆ ವಿಸ್ಮಯಗೊಂಡಿದ್ದೇವೆ.   ಅಂತಹ ಭರತ ಖಂಡವು ಇಲ್ಲಿಗೆ 78 ವರ್ಷಗಳ ಮುನ್ನ ದಾಸ್ಯ ವಿಮೋಚನೆಗೊಂಡು ಸ್ವತಂತ್ರಗೊಂಡಿದ್ದು ಸಾತ್ವಿಕ ಹಾಗೂ ನೈತಿಕ ಹೋರಾಟದ ಫಲವಾಗಿ ಎಂಬುದನ್ನು ಯಾರೂ ಮರೆಯಲಾಗದು. ಅಂತಹ ಹೋರಾಟಕ್ಕೆ ಕೂಡಾ 100 ವರ್ಷಗಳ ಇತಿಹಾಸವಿದೆ. ಮೊಗಲರು, ಡಚ್ಚರು, ಫ್ರೆಂಚರು, ಬ್ರಿಟಿಷರು ಮುಂತಾಗಿ ನೂರಾರು ವರ್ಷ ಕಾಲ ಆಳಿದ ನಂತರ ದೇಶ ಸ್ವತಂತ್ರಗೊಂಡು 8 ದಶಕಗಳೇ ಆಗಿವೆ. ಹೋರಾಟವು ಕೂಡಾ ಒಂದೇ ತೆರದಲ್ಲಿ ಸಾಗಲು ಸಾಧ್ಯವಾಗಲಿಲ್ಲ. ಅಹಿಂಸಾ ಮಾರ್ಗ-ಹಿಂಸಾ ಮಾರ್ಗಗಳಲ್ಲಿ ಹೋರಾಟ ನಡೆದಿತ್ತು. ಹಿಂಸೆಯಿಂದ ಮಾತ್ರ ಪರಕೀಯರನ್ನು ಓಡಿಸಬಲ್ಲೆವು ಎಂದುಕೊಂಡಿದ್ದ ತೀವ್ರವಾದಿಗಳು; ಅಹಿಂಸಾ ಮಾರ್ಗದಿಂದಲೇ ಪರಕೀಯರನ್ನು ಮಣಿಸಬಹುದು ಎಂದು ಭಾವಿಸಿದ್ದ ಸೌಮ್ಯವಾದಿಗಳು ಎರಡೂ ದಿಕ್ಕಿನಿಂದ ಹೋರಾಟ ನಡೆಸಿ, ಅಂತಿಮವಾಗಿ ಅಹಿಂಸಾ ವಾದಕ್ಕೆ ಬ್ರಿಟಿಷ್ ಪ್ರಭುಗಳು ಮಣಿದಿದ್ದನ್ನು ಇತಿಹಾಸ ದಾಖಲಿಸುತ್ತದೆ. ಇಂತಹ ಸ್ವಾತಂತ್ರ್ಯ ಹೋರಾಟ ತೀವ್ರ ಸ್ವರೂಪದಲ್ಲಿ ಜರುಗುತ್ತಿದ್ದಾಗಲೆ ದೇಶದೊಳಗಡೆ ಸ್ವಾತಂತ್ರ್ಯ ವಿರೋಧಿ ಶಕ್ತಿಗಳೂ ಸಕ್ರಿಯವಾಗಿದ್ದವೆಂಬುದನ್ನು ಅರಿತಾಗ ಆಘಾತವುಂಟಾಗುತ್ತದೆ. ಅವರು ಪಕ್ಕಾ ಕೋಮುವಾದಿಗಳಾಗಿ ಅದರ ಆಧಾರದ ಮೇಲೆ ದೇಶವನ್ನು ವಿಭಜಿಸಲು ಸಂಚು ಹೂಡಿದ್ದ ಷಡ್ಯಂತ್ರವನ್ನು ದೇಶೀಯರು ಎಂದಿಗೂ ಮರೆಯಲಾಗದಂತೆ ಅಚ್ಚೊತ್ತಿದೆ. ಹಿಂದುತ್ವ ವಾದವನ್ನು ಮುನ್ನೆಲೆಗೆ ತಂದಿದ್ದ ‘ಹಿಂದೂ ಮಹಾಸಭಾ’ ಒಂದೆಡೆಗಿದ್ದರೆ, ಇಸ್ಲಾಮ್ ವಾದವನ್ನು ಪ್ರತಿಪಾದಿಸುತ್ತಿದ್ದ ‘ಇಂಡಿಯನ್ ಮುಸ್ಲಿಮ್ ಲೀಗ್’ ಇನ್ನೊಂದೆಡೆಗೆ ತಮ್ಮದೇ ತರ್ಕವನ್ನು ಮಂಡಿಸುತ್ತಾ ಸ್ವಾತಂತ್ರ್ಯ ಹೋರಾಟವನ್ನು ದುರ್ಬಲಗೊಳಿಸುತ್ತಾ ಹೊರಟಿದ್ದುದು ಕರಾಳ ಇತಿಹಾಸವಾಗಿತ್ತು. ಈ ಕೋಮುವಾದಿಗಳಿಗೆ ಸ್ವಾತಂತ್ರ್ಯಕ್ಕಿಂತ ಧರ್ಮಾಧಾರಿತ ಆಡಳಿತ ಮುಖ್ಯವಾಗಿತ್ತು. ಅಂದರೆ, ಮತ-ಧರ್ಮದ ಆಧಾರದಲ್ಲಿ ಭರತ ಖಂಡವನ್ನು ಹೋಳು ಮಾಡಿಬಿಡುವ ಹುನ್ನಾರ ಇವರ ಪ್ರಮುಖ ಅಜೆಂಡಾ ಆಗಿತ್ತು. ಅದರಲ್ಲೂ ಹಿಂದೂ ಮಹಾಸಭಾದ ಪ್ರಭೃತಿಗಳು ‘ಹಿಂದುಳಿದವರಿಗೆ, ಅಸ್ಪಶ್ಯರಿಗೆ, ದರಿದ್ರರಿಗೆ ಸ್ವಾತಂತ್ರ್ಯ ಕೊಡುವುದಾದರೆ, ಅಂತಹ ಸ್ವಾತಂತ್ರ್ಯ ಬೇಡವೇ ಬೇಡ’ ಎಂದು ಬ್ರಿಟಿಷರಿಗೆ ಆಗ್ರಹಿಸಿದ್ದು ಅಂದಿನ ಕರಾಳ ಅಧ್ಯಾಯವಾಗಿತ್ತು. ಸಾವಿರಾರು ವರ್ಷಗಳ ಹಿಂದೆ ಇದೇ ಪುರೋಹಿತಶಾಹಿ ಪಟ್ಟಭದ್ರರು ದೇಶದ ಜನರನ್ನು ‘ವರ್ಣಾಶ್ರಮ ಧರ್ಮ’ದ ಹೆಸರಲ್ಲಿ ವಿಭಜಿಸಿದ್ದು ಕೂಡಾ ಈ ಭೂಮಿ ಮೇಲಿನ ಮೊದಲ ಭಯೋತ್ಪಾದಕ ಕೃತ್ಯವಾಗಿದೆ. ಬ್ರಹ್ಮನ ತಲೆಯಿಂದ ಹುಟ್ಟಿದ ಬ್ರಾಹ್ಮಣರು ಶ್ರೇಷ್ಠರು, ಭುಜಗಳಿಂದ ಬಂದವರು ಕ್ಷತ್ರಿಯರು, ಹೊಟ್ಟೆಯಿಂದ ಹುಟ್ಟಿದವರು ವೈಶ್ಯರು ಎಂದು ವಿಂಗಡಿಸಿದ್ದವರೇ ಪಾದದಿಂದ ಹುಟ್ಟಿದವರು ಶೂದ್ರರು-ಪಂಚಮರೆಂದು ಅಪ್ಪಣೆ ಕೊಡಿಸಿದ್ದು ಮಾನವ ಜನ್ಮದ ಚರಿತ್ರೆಯಲ್ಲಿ ಮೊದಲ ಅಪಚಾರವಾದುದಾಗಿದೆ. ಶ್ರೇಷ್ಠರ ಸೇವೆಗೈಯುವುದೆ ಉಳಿದೆಲ್ಲರ ‘ಪರಮ ಕರ್ತವ್ಯ’ವೆಂದು ಕಟ್ಟಾಜ್ಞೆ ವಿಧಿಸಿ ಸಾವಿರಾರು ವರ್ಷ ಕಾಲ ಶೂದ್ರರು-ಪಂಚಮರನ್ನು ದೇವರು-ಧರ್ಮದ ಹೆಸರಿನಲ್ಲಿ ಹೀನಾಯವಾಗಿ ನಡೆಸಿಕೊಂಡ ಪರಿಯನ್ನು ಪೂರ್ವಿಕರು ಅನುಭವಿಸಿದ್ದಾರೆ. ಅದರ ಚಹರೆಗಳನ್ನು ಕಂದಾಚಾರ-ಮೌಢ್ಯಗಳ ರೂಪದಲ್ಲಿ ಉತ್ತರಾಧಿಕಾರಿಗಳಿಗೆ ಬಿಟ್ಟು ಹೋಗಿರುವುದು ಜೀವಂತವಾಗಿ ಉಳಿದುಕೊಂಡಿವೆ. ಶ್ರೇಷ್ಠರ ನಂತರ ಬರುವ ಕ್ಷತ್ರಿಯರು-ವೈಶ್ಯರು ಕೂಡಾ ನೆಮ್ಮದಿಯಿಂದ ಜೀವನ ಸಾಗಿಸಲು ಬಿಟ್ಟಿರಲಿಲ್ಲ ಎಂಬುದನ್ನು ಚರಿತ್ರೆ ಬಿಚ್ಚಿಟ್ಟಿದೆ. ಪರದೇಶಿಗಳ ಆಡಳಿತದಲ್ಲೂ ಈ ಶ್ರೇಷ್ಠರು ಸುರಕ್ಷಿತವಾಗಿ-ಸುಖದಿಂದಿದ್ದರು ಎಂಬುದು ಕೂಡಾ ದಾಖಲಾಗಿ ಹೋಗಿದೆ. ಅಂಥವರದ್ದೇ ಪ್ರಸ್ತುತದಲ್ಲಿ ಮೇಲುಗೈ ಆಗಿರುವುದು ದೌರ್ಭಾಗ್ಯದ ಸಂಗತಿ. ಜಾತಿ-ಮತ-ದೇವರ ಹೆಸರಲ್ಲಿ ದೇಶೀಯರಲ್ಲಿ ಮಂಕುಬೂದಿ ಎರಚಿ, ಅದರ ಅಮಲನ್ನು ಮಿದುಳಿಗೇರಿಸಿ ಅಧಿಕಾರದ ದಂಡವನ್ನು ಕೈಗೆತ್ತಿಕೊಂಡಿದ್ದು ದೇಶವು ಅರಗಿಸಿಕೊಳ್ಳಲಾಗದ ಸಂಗತಿಯಾಗಿದೆ. ‘ಜನಾಂಗ ದ್ವೇಷ’ವನ್ನು ದೇಶವ್ಯಾಪಿ ಹರಡುತ್ತಾ ಹೊರಟ ದುರುಳತನ ಸದ್ಯದಲ್ಲಿ ವಿಜೃಂಭಿಸಿದೆ. ಆಡಳಿತಗಾರರು ಮಾತೆತ್ತಿದರೆ ಮುಸ್ಲಿಮ್-ಪಾಕಿಸ್ತಾನ-ಭಯೋತ್ಪಾದನೆ ಮುಂತಾಗಿ ಎತ್ತಿ ಹೇಳುತ್ತಾ ಜನ ಸಮುದಾಯದ ಮನದಲ್ಲಿ ಜನಾಂಗೀಯ ದ್ವೇಷದ ಕಿಡಿ ಹೊತ್ತಿಸಲು ದಶಕಗಳಿಂದ ವ್ಯವಸ್ಥಿತವಾಗಿ ಪ್ರಯತ್ನಿಸಿರುವುದನ್ನು ಕಂಡು ಹೌಹಾರುವಂತಾಗಿದೆ.   ‘ಈ ಹೊತ್ತಿನ ಭರತ ಖಂಡ ಹಿಂದೂಸ್ಥಾನ, ಹಿಂದೂಗಳಿಗೆ ಸೇರಿದ್ದಾಗಿದೆ. ಮುಸ್ಲಿಮರಿಗೆ ಪಾಕಿಸ್ತಾನ-ಬಾಂಗ್ಲಾ ದೇಶ ಕೊಟ್ಟಾಗಿದೆ. ಇಲ್ಲಿರಬೇಕಾದವರು ಹಿಂದೂಗಳು ಮಾತ್ರ!’ ಎಂದು ಹಾದಿಬೀದಿಯಲ್ಲಿ ಅರಚಾಡುವ ಪರಿ ಭಯಾನಕವಾದುದಾಗಿದೆ. ಇವರಿಗೆ ರವೀಂದ್ರ ನಾಥ ಟಾಗೋರ್, ಬುದ್ಧ-ಬಸವಣ್ಣ, ಕನಕ-ನಾರಾಯಣಗುರು, ಪಂಪ-ಕುವೆಂಪು ಬೋಧಿಸಿದ್ದ ಸೌಹಾರ್ದ ಭಾರತ, ಸಾಮರಸ್ಯ ಭಾರತ ಬೇಕಿಲ್ಲ. ‘ಶ್ರೇಷ್ಠ ವ್ಯಸನಿಗಳ ಜಾತಿ ಭಾರತ’ ಬೇಕಿದೆ. ಅದಕ್ಕಾಗಿ ಏನೆಲ್ಲಾ ತಂತ್ರ-ಕುತಂತ್ರಗಳನ್ನು ರಾಜಾರೋಷವಾಗಿ ಮಾಡಲು ಬೀದಿಗೆ ಇಳಿದಿದ್ದಾರೆ. ಪಾರ್ಲಿಮೆಂಟ್‌ನಲ್ಲೂ ಅಗತ್ಯವಿರುವ ಕಾನೂನು-ಕಟ್ಟಳೆ ಮಾಡುವತ್ತಲೂ ಹೊರಟಿರುವುದನ್ನು ಕಂಡಾಗ, ಇವರು ದೇಶವನ್ನು ಎಲ್ಲಿಗೆ ಕೊಂಡೊಯ್ಯಬಹುದು ಎಂಬ ಭಯಾತಂಕಗಳು ಎದೆಯೊಳಗೆ ಧಾಂಗುಡಿಯಿಡುತ್ತಿವೆ. ದೇಶದ ಪ್ರಪ್ರಥಮ ಪ್ರಧಾನಿ ಜವಾಹರಲಾಲ್ ನೆಹರೂ ಅಧಿಕಾರ ವಹಿಸಿಕೊಂಡಾಗ ದೇಶವು ದೈನ್ಯಾವಸ್ಥೆಯಲ್ಲಿತ್ತು. ಬಡತನ-ಹಸಿವು-ಅನಕ್ಷರತೆ-ಮೌಢ್ಯಗಳ ತವರಾಗಿತ್ತು. ಅಂತಹ ದಾರಿದ್ರ್ಯ ತುಂಬಿದ್ದ ದೇಶವನ್ನು ವಿಶ್ವದಲ್ಲೆ ಅಭಿವೃದ್ಧಿ ಹೊಂದಿದ ದೇಶವಾಗಿ ರೂಪಿಸುವ ಅನಿವಾರ್ಯತೆ ಅವರ ಮುಂದೆ ಸವಾಲಾಗಿ ನಿಂತಿತ್ತು. ಮೊದಲು ದೇಶಕ್ಕೊಂದು ‘ಸರ್ವರಿಗೂ ಸಮ ಪಾಲು-ಸರ್ವರಿಗೂ ಸಮ ಬಾಳು’ ಎಂಬರ್ಥದ ‘ಸಂವಿಧಾನ’ ರೂಪುಗೊಳ್ಳಬೇಕಿತ್ತು. ಅದನ್ನು ವಿಶ್ವದ ಬಹು ದೊಡ್ಡ ಕಾನೂನು ತಜ್ಞ-ಅರ್ಥಶಾಸ್ತ್ರಜ್ಞರೆನಿಸಿದ್ದ ಡಾ. ಬಿ.ಆರ್. ಅಂಬೇಡ್ಕರ್ ನೇತೃತ್ವದಲ್ಲಿ ‘ಸಂವಿಧಾನ ರಚನಾ ತಂಡ’ವನ್ನು ರೂಪಿಸಿ, ಅವರಿಂದ ವಿಶ್ವದಲ್ಲೆ ಅಪೂರ್ವವೆನಿಸುವ ‘ಭಾರತ ಸಂವಿಧಾನ’ವನ್ನು ರಚಿಸುವಂತೆ ಮಾಡಿ, ಅದನ್ನು ಸರ್ವಾನುಮತದಿಂದ ಅಂಗೀಕರಿಸಿ, ಅದರ ಆಣತಿಯಂತೆ ದೇಶವನ್ನು ಮುನ್ನಡೆಸಲು ಅಡಿಯಿಟ್ಟಿದ್ದು ರೋಚಕ ಇತಿಹಾಸ. ಆದ್ಯತೆಗಳ ಆಧಾರದ ಮೇಲೆ ಕೃಷಿ, ಶಿಕ್ಷಣ, ಕೈಗಾರಿಕೆ, ಆರೋಗ್ಯ ಕ್ಷೇತ್ರಗಳಲ್ಲಿ ಸ್ವಾವಲಂಬನೆ ಮತ್ತು ಪ್ರಗತಿ ಸಾಧಿಸಲು ಪಣ ತೊಟ್ಟಿದ್ದು ಸ್ವತಂತ್ರ ಭಾರತದ ಮಹತ್ವದ ಕ್ಷಣವಾಗಿತ್ತು. ಶೈಕ್ಷಣಿಕ-ವೈಜ್ಞಾನಿಕ ಸಂಸ್ಥೆಗಳನ್ನು ಸ್ಥಾಪಿಸುವುದು, ಕೃಷಿಯನ್ನು ಆಧುನೀಕರಣಗೊಳಿಸುವುದು, ಬೃಹತ್ ಉದ್ಯಮಗಳ ಸ್ಥಾಪನೆ ಮಾಡುವುದು, ದೇಶದೆಲ್ಲೆಡೆ ಆರೋಗ್ಯ ಕೇಂದ್ರಗಳ ನಿರ್ಮಾಣ ಮಾಡುವುದು, ಅದಕ್ಕಾಗಿ ಪಂಚವಾರ್ಷಿಕ ಯೋಜನೆಗಳನ್ನು ರೂಪಿಸಿದ್ದು ಸಾಧಾರಣ ಸಂಗತಿಯಲ್ಲ. ಅವರು ಆಳ್ವಿಕೆ ಮಾಡಿದ್ದ 17 ವರ್ಷಗಳಲ್ಲಿ ದೇಶವನ್ನು ರಕ್ಷಣಾ ಕ್ಷೇತ್ರದಿಂದ ಹಿಡಿದು ಕೃಷಿ ಕ್ಷೇತ್ರದವರೆಗೆ ಸ್ವಾವಲಂಬಿ ದೇಶವಾಗಿ ಪರಿವರ್ತಿಸಿದ್ದರು. ಅವರೆಂದೂ ಧರ್ಮ-ದೇವರ ಮುಖವಾಡ ಧರಿಸಲಿಲ್ಲ. ಧಾರ್ಮಿಕ ಆಚರಣೆಗೆ ಮುಂದಾಗಲಿಲ್ಲ. ದೇವಾಲಯಗಳ ಉದ್ಘಾಟನೆ-ಧ್ಯಾನ-ಪೂಜೆ-ತಪಸ್ಸು ಇತ್ಯಾದಿಗಳಿಗೆ ಮುಂದಾಗಲಿಲ್ಲ. ಜನರ ನೆಮ್ಮದಿಯೇ ಮುಖ್ಯ, ದೇಶದ ಅಭಿವೃದ್ಧಿಯೇ ಗುರಿ ಎಂದು ಹೊರಟು ಯಶಸ್ವಿಯಾಗಿದ್ದು ಅದ್ಭುತ ಇತಿಹಾಸವಾಗಿದೆ. ಆದರೆ, 11 ವರ್ಷಗಳಿಂದ ದೇಶವನ್ನಾಳುತ್ತಿರುವ ನರೇಂದ್ರ ಮೋದಿಯವರು ವಿದೇಶ ಪ್ರವಾಸ, ದೇವಾಲಯಗಳ ಉದ್ಘಾಟನೆ, ಪ್ರತಿಮೆಗಳ ಸ್ಥಾಪನೆ, ಭವನಗಳ ನಿರ್ಮಾಣ, ಚುನಾವಣೆಯ ಭಾಷಣ ಇತ್ಯಾದಿಗಳಲ್ಲೆ ದಿನವಹಿ 20 ಗಂಟೆ ಕಾಲ ಮಗ್ನರಾಗಿರುತ್ತಿದ್ದಾರೆ. ಪ್ರತೀ ಭಾಷಣಗಳಲ್ಲಿ ‘ಪಾಕಿಸ್ತಾನ, ಭಯೋತ್ಪಾದನೆ, ಮುಸ್ಲಿಮರು’ ಎಂಬ ವಿಚಾರಗಳನ್ನು ಪ್ರಸ್ತಾಪ ಮಾಡದೆ ಮಾತು ಮುಗಿಸುವುದಿಲ್ಲ. ‘ಇವು ನಮ್ಮ ಶತ್ರುಗಳು’ ಎಂದು ಪರೋಕ್ಷವಾಗಿ ಹೇಳುತ್ತಾ ಜನಮನದಲ್ಲಿ ವಿಷ ಬೀಜ ಬಿತ್ತುವ ಕಾರ್ಯವನ್ನು ವ್ಯವಸ್ಥಿತವಾಗಿ ಮಾಡುತ್ತಿರುವುದು ವಿಪರ್ಯಾಸದ ಸಂಗತಿ. ಅವರಿಗೆ ದೇಶದ ಹಿಂದೂವಾದಿ ಸಂಘ ಪರಿವಾರ, ಧರ್ಮದ ಅಮಲೇರಿಸಿಕೊಂಡ ಧರ್ಮಾಂಧರು ಅಡಿಯಾಳುಗಳಂತೆ ಅಲ್ಪಸಂಖ್ಯಾತರ ಮೇಲೆ ಹಲ್ಲೆ-ದಾಳಿ-ದಬ್ಬಾಳಿಕೆ-ಆಸ್ತಿ ನಾಶ-ಮಸೀದಿ ನೆಲಸಮ ಇತ್ಯಾದಿ ನೀಚ ಕೃತ್ಯಗಳಲ್ಲಿ ದೇಶದಾದ್ಯಂತ ತೊಡಗಿರುವುದನ್ನು ಸರಕಾರಗಳು ಮೂಕ ಪ್ರೇಕ್ಷಕರಂತೆ ನೋಡುತ್ತಿರುವುದು ವಿಷಾದದ ಸಂಗತಿಯಾಗಿದೆ. ಅವರನ್ನು ತಡೆಯಬೇಕಾದ, ಶಿಕ್ಷೆಗೆ ಗುರಿಪಡಿಸಬೇಕಾದ ಕಾನೂನು ವ್ಯವಸ್ಥೆ ಒಮ್ಮೊಮ್ಮೆ ಕೈಕಟ್ಟಿ ಕೂರುವ, ಇನ್ನೊಮ್ಮೆ ಕಾನೂನು ಸಂರಕ್ಷಣೆ ತನ್ನ ಕರ್ತವ್ಯವೆಂಬಂತೆ ಚುರುಕಾಗಿ, ಮತ್ತೆ ತೆಪ್ಪಗಾಗುವ ಪ್ರಯತ್ನಗಳು ವಿಚಿತ್ರವಾಗಿ ನಡೆಯುತ್ತಿವೆ. ಮುಸ್ಲಿಮ್ ಸಮುದಾಯಕ್ಕೆ ಒಳಿತು ಮಾಡುವ ಉದ್ದೇಶದಂತೆ ಬಿಂಬಿಸಲು ತಲಾಖ್, ವಕ್ಫ್ ಆಸ್ತಿಪಾಸ್ತಿಗಳ ಮುಟ್ಟುಗೋಲಿಗೆ ಕೈ ಹಾಕಿರುವ ಪ್ರಕರಣಗಳೂ ಆ ಸಮುದಾಯದಲ್ಲಿ ಅಸ್ಥಿರ ಭಾವನೆ ಮೂಡಿಸಲು ನೆರವಾಗಿವೆ. 1993ರ ಡಿಸೆಂಬರ್ 6ರಂದು ಅಯೋಧ್ಯೆಯಲ್ಲಿದ್ದ ಬಾಬರಿ ಮಸೀದಿ ಧ್ವಂಸದಿಂದ ಹಿಡಿದು ಮಸೀದಿಗಳ ನೆಲಸಮ, ವಕ್ಫ್ ಆಸ್ತಿಗಳ ಮೇಲೆ ಕಾನೂನು ಕಣ್ಣು, ಮುಸ್ಲಿಮರ ಖಾಸಗಿ ಆಸ್ತಿಪಾಸ್ತಿಗಳ ಮೇಲೆ ಬುಲ್ಡೋಜರ್ ಹರಿಸುವವರೆಗಿನ ನೂರಾರು ಪ್ರಕರಣಗಳು ಈ 32 ವರ್ಷಗಳಲ್ಲಿ ಜರುಗಿ ಹೋಗಿವೆ. ಬಾಬರಿ ಮಸೀದಿ ಧ್ವಂಸವನ್ನು ವಿರೋಧಿಸಿ ಆರಂಭವಾದ ಭಯೋತ್ಪಾದಕ ಕೃತ್ಯಗಳು ಇತ್ತೀಚೆಗಿನ ದಿಲ್ಲಿ ಕಾರ್ ಬ್ಲಾಸ್ಟ್‌ವರೆಗೆ ಘಟಿಸಿರುವುದನ್ನು ದೇಶದ ಜನತೆ ಕಂಡು ಬೆಚ್ಚಿಬೀಳುತ್ತಿದ್ದಾರೆ. ಕೆಲವು ಭಯೋತ್ಪಾದಕ ಕೃತ್ಯಗಳಿಗೆ ಪೂರ್ವ ಹಿನ್ನೆಲೆಗಳೇ ಅರ್ಥವಾಗದಂತೆ ನಿಗೂಢವಾಗಿ ಉಳಿದುಬಿಟ್ಟಿವೆ. ಸರಕಾರ ಹೇಳಿದ್ದೆ ಸತ್ಯವೆಂದು ನಂಬುವ ವಾತಾವರಣ ನಿರ್ಮಾಣವಾಗಿದೆ. ಒಂದೊಂದು ಚುನಾವಣೆ ನಡೆಯುವ ಪೂರ್ವದಲ್ಲೂ ದೇಶದೊಳಗಡೆ ಒಂದೊಂದು ಭಯೋತ್ಪಾದಕ ಕೃತ್ಯಗಳು ಸಂಭವಿಸುತ್ತಿರುವ ಸಂದರ್ಭದಲ್ಲೂ ಸತ್ಯ ತಿಳಿಯಲಾಗದೆ ಜನತೆ ವಿಷಾದದ ಕೂಪದಲ್ಲಿ ನರಳುತ್ತಿದ್ದಾರೆ. ‘ಮುಸ್ಲಿಮರನ್ನು ದೇಶದಿಂದ ಓಡಿಸಬೇಕು’ ಎಂಬ ಮಾತುಗಳು ಬಿಜೆಪಿ ನಾಯಕರ ಬಾಯಲ್ಲಿ ರಾಜಾರೋಷಾಗಿ ಹೊರ ಬೀಳುತ್ತಿವೆ. ಪ್ರಧಾನಿ ಅಂತಹದನ್ನು ಖಂಡಿಸುವುದಿಲ್ಲ. ಅಂಥವರ ಮೇಲೆ ಕ್ರಮ ಕೈಗೊಳ್ಳುವಂತೆ ಸೂಚಿಸುವುದಿಲ್ಲ. ಒಮ್ಮೊಮ್ಮೆ ಅವರೇ ಅದಕ್ಕಿಂತ ಭಯಂಕರವಾಗಿ ಮಾತಾಡಿ ಚುನಾವಣೆ ಲಾಭ ಪಡೆದುಕೊಳ್ಳುತ್ತಾರೆ. ಅವರ ಮೇಲೆ ಚುನಾವಣಾ ಆಯೋಗ ಯಾವುದೇ ಧ್ವನಿಯೆತ್ತದೆ ತೆಪ್ಪಗಿರುತ್ತದೆ. ಇಂತಹ ಮತೀಯ-ದೈವೀಕ ವಿಚಾರಗಳಲ್ಲಿ ಪ್ರಚೋದನೆಗೈಯುವ ಪ್ರಚಾರ ಭಾಷಣದಿಂದ ಒಂದರ ನಂತರ ಮತ್ತೊಂದು ಚುನಾವಣೆಯನ್ನು ಗೆದ್ದುಕೊಳ್ಳುತ್ತಲೇ ಹೊರಟಿರುವುದು ವಿಪರ್ಯಾಸವಾಗಿದೆ. 2024ರ ಲೋಕಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷಕ್ಕೆ ಅಧಿಕಾರಕ್ಕೇರಲು ಬಹುಮತವೇ ಬರಲಿಲ್ಲ. ವಿಪಕ್ಷಗಳು ಆಡಳಿತ ಪಕ್ಷಕ್ಕೆ ಸವಾಲು ಹಾಕುವಂಥ ರೀತಿಯಲ್ಲಿ ಸ್ಥಾನ ಗಳಿಸಿದ್ದನ್ನು ಕಂಡ ಬಿಜೆಪಿ ತೆಲುಗು ದೇಶಂ ಮತ್ತು ಜನತಾದಳ-ಯು ನೆರವಿನಿಂದ ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿಯುವಲ್ಲಿ ಯಶಸ್ವಿಯಾಗಿಬಿಟ್ಟಿತು. ‘ಈ ಬಾರಿ ನಮಗೆ 400 ಸೀಟು ಕೊಡಿ’ ಎಂದು ಜೋರಾದ ಧ್ವನಿಯಲ್ಲೆ ಒತ್ತಾಯಿಸಿದ್ದರು. ಅವರಲ್ಲಿ ವಿಶ್ವಾಸ ಕಳೆದುಕೊಂಡಿದ್ದ ಜನತೆ ಕೇವಲ 240ಕ್ಕೆ ತಳ್ಳಿದ್ದು ಅದ್ಭುತ ಬೆಳವಣಿಗೆಯಾಗಿತ್ತು. ಇತರ ಪಕ್ಷಗಳ ಬೆಂಬಲ ಯಾಚಿಸುವಂತಾದ ಇವರು ಇನ್ನು ತೀವ್ರತರವಾದ ಆಟಾಟೋಪ ನಡೆಸಲಾರರು ಅಂದುಕೊಂಡಿದ್ದು ಕೂಡಾ ಸುಳ್ಳಾಗಿದೆ. ಅಲ್ಲಿಂದ ಪಾಕ್ ಮತ್ತು ಮುಸ್ಲಿಮ್ ದ್ವೇಷ ಕಾರುವಿಕೆಯನ್ನು ವಿಪರೀತಕ್ಕೊಯ್ದಿದ್ದಾರೆ. ಅದರಲ್ಲೂ ಅವರ ಪಕ್ಷವೇ ಆಡಳಿತ ನಡೆಸುವ ಉತ್ತರ ಪ್ರದೇಶ, ಅಸ್ಸಾಂ ಮತ್ತಿತರ ರಾಜ್ಯಗಳಲ್ಲಿ ಮುಸ್ಲಿಮರ ಬದುಕನ್ನು ಅಸ್ಥಿರಗೊಳಿಸುವ ಕೆಲಸವನ್ನು ಸರಕಾರಿ ಪ್ರಾಯೋಜನೆಯೊಡನೆ ಮಾಡಲಾಗುತ್ತಿದೆ. ಮುಸ್ಲಿಮ್ ಸಮುದಾಯದ ಆಸ್ತಿಪಾಸ್ತಿಗಳನ್ನು ಬುಲ್ಡೋಜರ್ ಹರಿಸಿ ನಾಶಗೊಳಿಸುವ, ವಿನಾಕಾರಣ ಹಲ್ಲೆ ನಡೆಸುವ, ಅವರ ಬದುಕನ್ನೇ ಬೀದಿಪಾಲಾಗಿಸುವ ಕೃತ್ಯಗಳು ಕಾನೂನು ಭಯವಿಲ್ಲದೆ ನಡೆಸುತ್ತಾ ಹೊರಟು ಇತರ ರಾಜ್ಯಗಳ ಮೇಲೂ ದುಷ್ಟರಿಣಾಮ ಬೀರುತ್ತಿವೆ. 2024ರ ಲೋಕಸಭಾ ಚುನಾವಣೆ ಪೂರ್ವದಲ್ಲಿ ಸಿಎಎ, ಸಿಎಆರ್ ರೂಪದ ಏಕರೂಪ ಕಾನೂನು ಜಾರಿಗೊಳಿಸಲು ಮೋದಿ ನೇತೃತ್ವದ ಸರಕಾರ ಷಡ್ಯಂತ್ರ ನಡೆಸಿತ್ತು. ದೇಶಾದ್ಯಂತ ಭಾರೀ ಪ್ರಮಾಣದ ಪ್ರತಿರೋಧವೊಡ್ಡಿದ್ದನ್ನು ಕಂಡು ತುಸು ಅಳುಕಿದ್ದುಂಟು. ಕೆಲವು ಕಡೆ ಹಿಂಸಾಚಾರವೂ ನಡೆದಿದ್ದನ್ನು ಗಮನಿಸಿ ಅದರ ಅನುಷ್ಠಾನವನ್ನು ಮುಂದೂಡಿ ತಾತ್ಕಾಲಿಕ ವಿರಾಮ ನೀಡಿತ್ತು. ಆ ಹೋರಾಟದ ಹೆಸರಲ್ಲಿ ಬಂಧಿತರಾದವರಲ್ಲಿ ಕೆಲವರಿನ್ನೂ ಬಿಡುಗಡೆಯಾಗದೆ ಜೈಲಲ್ಲಿ ಕೊಳೆಯುತ್ತಿರುವ ದುರಂತ ಹಾಗೇ ಉಳಿದಿದೆ. ಆದರಿಂದು ಎಸ್‌ಐಆರ್. ಹೆಸರಲ್ಲಿ ಮುಸ್ಲಿಮ್ ಸಮುದಾಯದ ಮೇಲೆ ದಾಳಿ-ದಬ್ಬಾಳಿಕೆಯನ್ನು ವ್ಯವಸ್ಥಿತವಾಗಿ ಮಾಡಲಾಗುತ್ತಿದೆ. ಬಹಳಷ್ಟು ಮುಸ್ಲಿಮ್ ಜನ ಸಮುದಾಯದ ಮತ ಹಕ್ಕನ್ನು ಪರಿಷ್ಕರಣೆ ಹೆಸರಲ್ಲಿ ಕಸಿಯುವ ತಂತ್ರಗಾರಿಕೆ ನಡೆಯುತ್ತಿದೆ. ಬಿಹಾರದಲ್ಲಿ ಎಸ್‌ಐಆರ್ ಹೆಸರಲ್ಲಿ ಲಕ್ಷಲಕ್ಷ ಸಂಖ್ಯೆಯ ಮುಸ್ಲಿಮ್ ಸಮುದಾಯದವರ ಮತ ಹಕ್ಕನ್ನು ಕಿತ್ತುಕೊಳ್ಳುವ ರಾಜಾರೋಷದ ನೀಚ ಕೃತ್ಯ ನಡೆದುಬಿಟ್ಟಿತು. ಸುಪ್ರೀಂ ಕೋರ್ಟ್ ‘ಮತ ಪಟ್ಟಿಯಿಂದ ತೆಗೆಯಲಾದ ಮತದಾರರ ಪಟ್ಟಿ ಸಲ್ಲಿಸಿ’ ಎಂದು ಹೇಳಿದ್ದರೂ, ಅವರು ಸಲ್ಲಿಸುವ ಮುನ್ನವೆ ಆಯೋಗ ಚುನಾವಣೆ ನಡೆಸಿ ಅಂದುಕೊಂಡಂತೆ ಜಯದ ಫಲಿತಾಂಶವನ್ನು ಬಿಜೆಪಿ ನಾಯಕರ ಕೈಗೆ ಕೊಟ್ಟು ಪುಣ್ಯ ಕಟ್ಟಿಕೊಂಡಿತು. ಈಗ ಅದೇ ಎಸ್‌ಐಆರ್ ಅನ್ನು ದೇಶದ ಎಲ್ಲಾ ರಾಜ್ಯಗಳಿಗೂ ವಿಸ್ತರಿಸಲು ಚುನಾವಣೆ ಆಯೋಗ ಮುಂದಾಗಿದೆ. ಅದನ್ನು ವಿರೋಧಿಸುವ ವಿಪಕ್ಷಗಳ ಪ್ರಶ್ನೆಗೆ ಉತ್ತರಿಸುವ ಗೋಜಿಗೂ ಹೋಗದೆ ಮುಗುಮ್ಮಾಗಿ ಉಳಿದಿದೆ. ‘ಮತಗಳ್ಳತನ’ದ ಕೂಗಿಗೆ ಕನಿಷ್ಠ ಪ್ರತಿಕ್ರಿಯೆಯನ್ನೂ ನೀಡದ ಚು. ಆಯೋಗಕ್ಕೆ ಬಿಜೆಪಿ ಶಭಾಶ್‌ಗಿರಿಯನ್ನು ನೀಡುತ್ತಿದೆ. ಕೇಂದ್ರ ಸರಕಾರವೆ ನೇಮಿಸಿಕೊಂಡವರು ಚು.ಆಯೋಗದ ಅಧಿಕಾರ ಸ್ಥಾನದಲ್ಲಿ ಕೂತು ಸರಕಾರಕ್ಕೆ ಪೂರ್ಣ ಪ್ರಮಾಣದಲ್ಲಿ ನ್ಯಾಯ ಸಲ್ಲಿಸುತ್ತಿದ್ದಾರೆಂಬ ಗುಮಾನಿ ದೇಶದ ಜನರಲ್ಲಿ, ವಿಪಕ್ಷಗಳವರಲ್ಲಿ ಕಾಡುತ್ತಿದ್ದರೂ, ಅದನ್ನು ತಡೆಯುವ ಮಾರ್ಗ ತಿಳಿಯದೆ ಮೂಕ ಪ್ರೇಕ್ಷಕರಾಗುತ್ತಿರುವುದು ಆತಂಕಕಾರಿ ಸಂಗತಿಯಾಗಿದೆ. ‘ಹಿಂದೂ ರಾಷ್ಟ್ರ’ ರೂಪಿಸುವ ಮಹದಾಸೆ ಹೊತ್ತು ಹೊರಟಿರುವ ಕೇಂದ್ರ ಸರಕಾರ ಮತ್ತು ಅದಕ್ಕೆ ಬೆಂಬಲವಾಗಿ ನಿಂತಿರುವ ಸಂಘ ಪರಿವಾರ ತನ್ನ ಮೊದಲ ಟಾರ್ಗೆಟ್ ಆಗಿ ಮುಸ್ಲಿಮರನ್ನು ಆಯ್ದುಕೊಂಡಿದೆ. ಅವರ ಮತ ಕಸಿಯುವ ಮೂಲಕ ನಿರಾಯುಧರನ್ನಾಗಿ ಮಾಡಿಬಿಟ್ಟರೆ ಅವರ ಮೂಲಭೂತ ಹಕ್ಕು ಇನ್ನಿಲ್ಲವಾಗುವಂತೆ ಮಾಡಬಹುದೆಂದು ಆಡಳಿತಗಾರರು ಭಾವಿಸಿರುವಂತಿದೆ. ಬಹಳಷ್ಟು ಮುಸ್ಲಿಮರಿಗೆ ಮತವಿಲ್ಲದೆ ನಿರಾಯುಧರಾದ ಮೇಲೆ ಕ್ರೈಸ್ತರ ಮೇಲೆ ಇದೇ ಪ್ರಹಾರ ಮಾಡಬಹುದೆಂಬ ಲೆಕ್ಕಾಚಾರವಿಟ್ಟುಕೊಂಡಿರುವಂತಿದೆ. ಆನಂತರ ದೇಶದ ಬಹುಸಂಖ್ಯಾತ ಎಸ್‌ಸಿ/ಎಸ್‌ಟಿಗಳನ್ನು ಟಾರ್ಗೆಟ್ ಮಾಡುವ ವ್ಯವಸ್ಥಿತ ಸಂಚಿರುವುದು ಸ್ಪಷ್ಟವಾಗುತ್ತಿದೆ. ಅಲ್ಲಿಗೆ ಅವರು ಅಂದುಕೊಂಡಿದ್ದೆಲ್ಲಾ ಯಶಸ್ವಿಯಾಗಬಲ್ಲದು. ಆಗ ‘ಸಂವಿಧಾನ’ವನ್ನು ಸುಲಭವಾಗಿ ಮೂಲೆಗೆಸೆದು ಅದರ ಜಾಗದಲ್ಲಿ ‘ಮನುಸ್ಮತಿ’ಯನ್ನು ಪ್ರತಿಷ್ಠಾಪಿಸುವ ಆಸೆಯನ್ನು ಕ್ಷಣಾರ್ಧದಲ್ಲಿ ಅನುಷ್ಠಾನಕ್ಕೆ ತರುವ ಮಹದುದ್ದೇಶ ನಿರಾತಂಕವಾಗಿ ಈಡೇರಲು ಅಡ್ಡಿಯಿಲ್ಲ ಎಂದು ವ್ಯವಸ್ಥಿತ ಯೋಜನೆ ರೂಪಿಸಿರುವುದು ಸುಸ್ಪಷ್ಟವಾಗಿರುವುದಂತೂ ಸತ್ಯ. ಅಂತಹ ದೇಶಕ್ಕೆ ಮಾರಕವಾದ ‘ಮನುಸ್ಮತಿ’ ಹೇರಿಕೆಯನ್ನು ದೇಶದ ಮಹಾಜನತೆ ಮೂಕ ಪ್ರೇಕ್ಷಕರಂತೆ ನೋಡಬೇಕಾದ ಕಾಲಘಟ್ಟ ಬಂದಲ್ಲಿ ದೇಶದ ಭವಿಷ್ಯ ಏನಾದೀತು? ದೇಶ ವಿಭಜನೆಗೆ ಗಾಂಧೀಜಿ ಕಾರಣಕರ್ತರು ಎಂದು ಸಮಯ ಸಂದರ್ಭ ಸಿಕ್ಕಾಗಲೆಲ್ಲಾ ಭಯಂಕರವಾಗಿ ಟೀಕಿಸುವ ಮೂಲಕ ಗಾಂಧೀಜಿಯವರನ್ನು ಜನರ ಮುಂದೆ ‘ಖಳನಾಯಕ’ರನ್ನಾಗಿಸುವ ಸಂಘ ಪರಿವಾರಿಗರು, ಅಂತಹ ವಿಭಜನೆಗೆ ತಾವೇ ಮೂಲ ಕಾರಣಕರ್ತರು ಎಂಬುದನ್ನು ಎಂದೂ ಒಪ್ಪಿಕೊಂಡಿಲ್ಲದಿರುವುದು ವಿಪರ್ಯಾಸದ ಸಂಗತಿ. ಇದೇ ಮನುವಾದಿಗಳು ಇತಿಹಾಸದ ಆ ಘಟನೆಯನ್ನು ಮರೆ ಮಾಚುವ ನೀಚತನವೂ ನಡೆದಿದೆ. ಬ್ರಿಟಿಷರು ಭಾರತ ದೇಶವನ್ನು ಸ್ವತಂತ್ರಗೊಳಿಸಿ ಬ್ರಿಟನ್‌ಗೆ ಹಿಂದಿರುಗಲು ಸಿದ್ಧವಾಗಿರುತ್ತಾರೆ. ಆಗ ಹಿಂದೂ ಮಹಾಸಭಾ ಮತ್ತು ಇಂಡಿಯನ್ ಮುಸ್ಲಿಮ್ ಲೀಗ್‌ನಂಥ ಕೋಮುವಾದಿ ಸಂಘಟನೆಗಳು ದೇಶ ವಿಭಜನೆಗೆ ಪಟ್ಟು ಹಿಡಿದಿರುತ್ತವೆ. ದೇಶ ಸ್ವತಂತ್ರಗೊಳ್ಳುವ ಪವಿತ್ರ ಕ್ಷಣವನ್ನು ಕಾಣುವ ಹಂಬಲದಿಂದ ಗಾಂಧೀಜಿ ನೆಹರೂ-ಪಟೇಲ್ ಮತ್ತಿತರ ನಾಯಕರೊಡನೆ ಸ್ವಾತಂತ್ರ್ಯ ಹೋರಾಟದಲ್ಲಿ ತೊಡಗಿದ್ದ ಮಹಮದಾಲಿ ಜಿನ್ನಾ ಅವರನ್ನೂ ಕರೆಸಿಕೊಂಡು ಕಡೆಯ ಸಂಧಾನದ ಪ್ರಯತ್ನ ಮಾಡುತ್ತಾರೆ. ನೆಹರೂ, ಪಟೇಲ್ ಮತ್ತಿತರನ್ನು ಮನವೊಲಿಸಿ ದೇಶ ವಿಭಜನೆ ತಡೆಯುವ ಉದ್ದೇಶದಿಂದ ‘ಮಿಸ್ಟರ್ ಜಿನ್ನಾ, ಸಹಸ್ರಾರು ವರ್ಷಗಳಿಂದ ಭರತ ಖಂಡ ವಿದೇಶಿಗರ ಆಡಳಿತದಲ್ಲಿಯೂ ಅಖಂಡವಾಗಿಯೇ ಉಳಿದಿತ್ತು. ಈಗ ಸ್ವತಂತ್ರಗೊಂಡ ನಂತರವೂ ಅಖಂಡ ಭಾರತವಾಗಿಯೇ ಉಳಿಯಬೇಕು. ದೇಶ ವಿಭಜನೆಯಾಗುವುದು ಬೇಡ. ನೆಹರೂ-ಪಟೇಲ್ ಒಪ್ಪಿದ್ದಾರೆ. ಅದಕ್ಕಾಗಿ ಒಂದು ಕೆಲಸ ಮಾಡೋಣ. ಸ್ವತಂತ್ರ ಭಾರತದ ಮೊದಲ ಪ್ರಧಾನಿ ನೀವೇ ಆಗಿ ಎಂಬುದು ನಮ್ಮೆಲ್ಲರ ಅಭಿಲಾಶೆಯಾಗಿದೆ!’ ಎಂದಾಗ ಜಿನ್ನಾ ಅಚ್ಚರಿಗೊಳ್ಳುತ್ತಾರೆ. ಆದರೆ, ಅಂತಹದೊಂದು ಅಪೂರ್ವವಾದ ಅವಕಾಶವನ್ನು ತಿರಸ್ಕರಿಸುತ್ತಾ ‘ಬಾಪೂಜಿ, ಬೇಕೋ ಬೇಡವೋ, ಈಗಾಗಲೇ ಹಿಂದೂ-ಮುಸ್ಲಿಮರ ನಡುವೆ ದ್ವೇಷಾಸೂಯೆ ವಿಪರೀತಕ್ಕೆ ಹೋಗಿಬಿಟ್ಟಿದೆ. ಈ ಹಂತದಲ್ಲಿ ತೇಪೆ ಹಾಕುವುದರಿಂದ ಪ್ರಯೋಜನವಾಗದು. ದೇಶ ವಿಭಜನೆಯೇ ಸೂಕ್ತ!’ ಎಂದುಬಿಟ್ಟಾಗ ಗಾಂಧೀಜಿಯವರ ಕೈ ಕಟ್ಟಿದಂತಾಗುತ್ತದೆ. ವಿಭಜನೆಯ ಕ್ಷಣವನ್ನು ನೆನೆದು ಕಣ್ಣೀರಾಗುತ್ತಾರೆ. ಆಗ ನೆಹರೂ ಭಾರತದ ಪ್ರಥಮ ಪ್ರಧಾನಿಯಾಗುತ್ತಾರೆ. ಪಟೇಲ್ ಉಪ ಪ್ರಧಾನಿ ಮತ್ತು ಗೃಹಮಂತ್ರಿಯಾಗುತ್ತಾರೆ. ಅನಾರೋಗ್ಯದಿಂದ ನರಳುತ್ತಿದ್ದ ಪಟೇಲರು ಎರಡ್ಮೂರು ವರ್ಷಗಳಲ್ಲೇ ಇನ್ನಿಲ್ಲವಾಗುತ್ತಾರೆ. ಹಾಗೆ ವಿಭಜನೆಗೊಂಡ ಪಾಕಿಸ್ತಾನದ ಮೊದಲ ಪ್ರಧಾನಿಯಾದ ಮಹಮದಾಲಿ ಜಿನ್ನಾರೂ ಅನಾರೋಗ್ಯ ನಿಮಿತ್ತ ಎರಡು ವರ್ಷಗಳಲ್ಲೆ ನಿಧನ ಹೊಂದುತ್ತಾರೆ. ಇಂತಹ ಇತಿಹಾಸವನ್ನು ತಿರುಚುವ, ತಮ್ಮದೇ ಕತೆ ಹೇಳುವ ಸಂಘ ಪರಿವಾರಿಗಳು ಈ ಹೊತ್ತಿಗೂ ಸತ್ಯವನ್ನು ಒಪ್ಪಿಕೊಳ್ಳಲು ಸಿದ್ಧವಿಲ್ಲ. ಅತ್ತ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಡಲು ಅಹರ್ನಿಶಿ ದುಡಿದ ಗಾಂಧೀಜಿಯನ್ನು, ಆಧುನಿಕ ಭಾರತದ ಶಿಲ್ಪಿ ನೆಹರೂರನ್ನು, ಸಮಾಜವಾದಿ ಸಿದ್ಧಾಂತದ ಸಂವಿಧಾನ ರಚಿಸಿಕೊಟ್ಟ ಅಂಬೇಡ್ಕರ್‌ರನ್ನು ನಿತ್ಯ ಭಜನೆ ರೂಪದಲ್ಲಿ ವಿರೋಧಿಸುತ್ತಲೆ ಇದ್ದಾರೆ. ಅತ್ತ ಪಾಕ್ ಮತ್ತು ಮುಸ್ಲಿಮರನ್ನು ಟೀಕಿಸುವ ನಿತ್ಯ ಕಾರ್ಯ ಮಾಡಿಕೊಂಡಿರುವವರಿಗೆ ಜಿನ್ನಾ ಅಖಂಡ ಭಾರತದ ಮೊದಲ ಪ್ರಧಾನಿಯಾಗುವುದನ್ನು ನಿರಾಕರಿಸಿದ್ದ ಉದಾರ ಭಾವದ ದೊಡ್ಡತನ ಅರ್ಥವಾಗದೆ ಉಳಿದಿರುವುದಾದರೂ ಏತಕ್ಕೆ? ಒಂದು ವೇಳೆ ಜಿನ್ನಾ ಮೊದಲ ಪ್ರಧಾನಿಯಾಗಿದ್ದರೆ ಸಹಿಸಿಕೊಳ್ಳುತ್ತಿದ್ದರೆ? ಅಷ್ಟೇ ಅಲ್ಲ, ಅಖಂಡ ಭಾರತದಲ್ಲಿ ಮುಸ್ಲಿಮರೂ ಬಹುಸಂಖ್ಯಾತರಾಗಿರುತ್ತಿದ್ದರೆ ಹಿಂದೂಗಳು ಪ್ರಧಾನಿ ಪಟ್ಟಕ್ಕೇರುವುದು ಸುಲಭವಿತ್ತೆ? ಮೋದಿಯಂತಹ ಹಿಂದುಳಿದ ವರ್ಗದವರು ಪ್ರಧಾನಿಯಾಗುವ ಕನಸು ಕಟ್ಟಲಾಗುತ್ತಿತ್ತೆ? ಇಂಥ ವಾಸ್ತವಿಕ ಸಂಗತಿಗಳನ್ನು ಮೂಲೆಗುಂಪು ಮಾಡಿ ಅವಾಸ್ತವಿಕ ಸಂಗತಿಗಳನ್ನೇ ಮುಗ್ಧ ಭಾರತೀಯರ ತಲೆಯಲ್ಲಿ ತುಂಬುತ್ತಾ, ಮತ್ತೊಂದು ಜನಾಂಗವನ್ನು ನಿರಾಯುಧರನ್ನಾಗಿ ಮಾಡ ಹೊರಟಿರುವ ಇವರು ಭರತ ಖಂಡವನ್ನು ಐಕ್ಯ ಭಾರತವನ್ನಾಗಿ ಉಳಿಸಬಲ್ಲರೆ?

ವಾರ್ತಾ ಭಾರತಿ 8 Feb 2026 1:06 pm

ತೆಕ್ಕಲಕೋಟೆಯಲ್ಲಿ ಉತ್ಖನನದಲ್ಲಿ 5 ಸಾವಿರ ವರ್ಷ ಹಳೆಯ ಮಾನವನ ಅಸ್ಥಿಪಂಜರ, ಮಡಕೆ ಪತ್ತೆ: ಆಗೆಲ್ಲಾ ಶವಸಂಸ್ಕಾರ ಹೇಗೆ ನಡೆಯುತ್ತಿತ್ತು ಗೊತ್ತಾ?

ಲಕ್ಕುಂಡಿ ಉತ್ಖನನ, ನಿಧಿ ಪತ್ತೆ, ಪ್ರಾಚೀನ ವಸ್ತುಗಳ ಪತ್ತೆ ರಾಜ್ಯದಾದ್ಯಂತ ದೊಡ್ಡ ಸುದ್ದಿಯಲ್ಲಿರುವಾಗಲೇ ಬಳ್ಳಾರಿಯ ತೆಕ್ಕಲಕೋಟೆಯಲ್ಲಿ ಕಳೆದ ಹಲವು ವರ್ಷಗಳಿಂದ ನಡೆಯುತ್ತಿರುವ ಉತ್ಖನನ ಕಾರ್ಯ ಮುನ್ನಲೆಗೆ ಬಂದಿದ್ದು, 5 ಸಾವಿರ ವರ್ಷಗಳ ಹಳೆಯ ಅಸ್ಥಿಪಂಜರ ಪತ್ತೆಯಾಗಿವೆ.

ವಿಜಯ ಕರ್ನಾಟಕ 8 Feb 2026 1:04 pm

ಟಿ-20 ವಿಶ್ವಕಪ್ | ತಂಡಕ್ಕೆ ಮರಳಿದ ವಾಷಿಂಗ್ಟನ್ ಸುಂದರ್

ಮುಂಬೈ: ಟಿ-20 ವಿಶ್ವಕಪ್ ಪ್ರಾರಂಭಕ್ಕೂ ಮುನ್ನ ಭಾರತ ತಂಡ ಗಾಯಾಳುಗಳ ಸಮಸ್ಯೆಗೆ ಗುರಿಯಾಗಿತ್ತು. ವಿಶೇಷವಾಗಿ, ಆಲ್ ರೌಂಡರ್ ವಾಷಿಂಗ್ಟನ್ ಸುಂದರ್ ಗಾಯಗೊಂಡು ಟೂರ್ನಿಯಿಂದಲೇ ಹೊರ ಬಿದ್ದಿದ್ದರು. ಆದರೆ, ಈಗ ಅವರು ಸಂಪೂರ್ಣವಾಗಿ ಚೇತರಿಸಿಕೊಂಡಿದ್ದು, ಫೆಬ್ರವರಿ 12ರಂದು ನಮೀಬಿಯಾ ತಂಡದ ವಿರುದ್ಧ ನಡೆಯಲಿರುವ ಪಂದ್ಯದಲ್ಲಿ ಕಣಕ್ಕಿಳಿಯಲಿದ್ದಾರೆ ಎಂದು ವರದಿಯಾಗಿದೆ. ಅಮೆರಿಕ ವಿರುದ್ಧದ ಪಂದ್ಯ ಮುಕ್ತಾಯಗೊಂಡ ಬಳಿಕ ಮಾತನಾಡಿದ ನಾಯಕ ಸೂರ್ಯಕುಮಾರ್ ಯಾದವ್, “ವಾಷಿಂಗ್ಟನ್ ಸುಂದರ್ ಫಿಟ್ ಆಗಿದ್ದು, ನಮೀಬಿಯಾ ಎದುರಿನ ಪಂದ್ಯಕ್ಕೂ ಮುನ್ನ ಅವರು ದಿಲ್ಲಿಯಲ್ಲಿ ತಂಡವನ್ನು ಸೇರಿಕೊಳ್ಳಲಿದ್ದಾರೆ” ಎಂದು ತಿಳಿಸಿದ್ದಾರೆ. “ಜಸ್ ಪ್ರೀತ್ ಬುಮ್ರಾ ತೀವ್ರ ಜ್ವರದಿಂದ ಬಳಲುತ್ತಿದ್ದಾರೆ. ಆರಂಭಿಕ ಬ್ಯಾಟರ್ ಅಭಿಷೇಕ್ ಶರ್ಮ ಕೂಡಾ ಇಲ್ಲಿನ ಹವಾಮಾನಕ್ಕೆ ಹೊಂದಿಕೊಂಡಿಲ್ಲ. ಹೀಗಾಗಿ, ಅಭಿಷೇಕ್ ಶರ್ಮ ಬದಲು ಸಂಜು ಸ್ಯಾಮ್ಸನ್ ಫೀಲ್ಡಿಂಗ್ ಕರ್ತವ್ಯ ನಿರ್ವಹಿಸಿದರು” ಎಂದು ಅವರು ಹೇಳಿದ್ದಾರೆ. ನ್ಯೂಝಿಲೆಂಡ್ ವಿರುದ್ಧದ ಏಕದಿನ ಸರಣಿಯ ಸಂದರ್ಭದಲ್ಲಿ ವಾಷಿಂಗ್ಟನ್ ಸುಂದರ್ ಪಾರ್ಶ್ವ ನೋವು ಹಾಗೂ ಪಕ್ಕೆಲುಬಿನ ಸ್ನಾಯು ಸೆಳೆತಕ್ಕೆ ಈಡಾಗಿದ್ದರು. ಗಾಯಕ್ಕೆ ಚಿಕಿತ್ಸೆ ಪಡೆಯುತ್ತಿದ್ದ ಅವರು ಇದೀಗ ಸಂಪೂರ್ಣವಾಗಿ ಫಿಟ್ ಆಗಿದ್ದಾರೆ ಎಂದು ವೈದ್ಯಕೀಯ ಮತ್ತು ಕ್ರೀಡಾ ವಿಜ್ಞಾನ ತಂಡ ಮಾಹಿತಿ ನೀಡಿದೆ. ಹೀಗಾಗಿ, ದಿಲ್ಲಿಯಲ್ಲಿ ನಮೀಬಿಯಾ ತಂಡದ ವಿರುದ್ಧ ನಡೆಯಲಿರುವ ಪಂದ್ಯದಲ್ಲಿ ಅವರು ಭಾರತ ತಂಡವನ್ನು ಸೇರ್ಪಡೆಯಾಗಲಿದ್ದಾರೆ.

ವಾರ್ತಾ ಭಾರತಿ 8 Feb 2026 1:02 pm

ಫೆ.9ರಿಂದ 11ರವರೆಗೆ ಬಂಡೀಪುರದಲ್ಲಿ ಬಿಗ್ ಕ್ಯಾಟ್ಸ್ ‌ ಅಲಯನ್ಸ್ ಶೃಂಗಸಭೆ

ಶೃಂಗಸಭೆಯಲ್ಲಿ 23 ದೇಶಗಳು ಭಾಗಿ

ವಾರ್ತಾ ಭಾರತಿ 8 Feb 2026 12:58 pm

ಮೈಸೂರಿಗರಿಗೆ ಸಿಗದ ಹೈಟೆಕ್ ಮತ್ಸ್ಯದರ್ಶಿನಿ ರುಚಿ: ಯಾವಾಗ ನೇರವೇರಲಿದೆ ಕರಾವಳಿ ಮೀನೂಟ ಸವಿಯುವ ಮೈಸೂರು ಜನತೆ ಕನಸು?

ಮೈಸೂರಿನಲ್ಲಿ ಕರಾವಳಿ ಶೈಲಿಯ ಬಾಡೂಟ ಸವಿಯುವ ವ್ಯವಸ್ಥೆ ಮಾಡಲು ಹೈಟೆಕ್‌ ಮತ್ಸ್ಯದರ್ಶಿನಿ ಆರಂಭಿಸುವ ಯೋಜನೆ ಘೊಷಿಸಿ ಒಂದು ವರ್ಷ ಕಳೆದಿದೆ. ಅದಾಗ್ಯೂ, ಮೀನೂಡ ಸವಿಯುವ ಮೈಸೂರಿನ ಜನತೆಯ ಆಸೆ ಇನ್ನೂ ಹಾಗೆ ಉಳಿದಿದ್ದು, ನಾನಾ ಕಾರಣಗಳಿಂದ ಅನುದಾನ ಬಿಡುಗಟಡೆಯಾಗಿದ್ದರೂ ವಿಳಂಬವಾಗಿದೆ. ಸದ್ಯ, ಇದೀಗಿ ಎಲ್ಲಾ ತಾಂತ್ರಿಕ ಅನುಮೋದನೆಗಳು ಪೂರ್ಣಗೊಂಡಿದ್ದು, ಒಂದೆರಡು ವಾರಗಳಲ್ಲಿ 80 ಲಕ್ಷ ವೆಚ್ಚದ ಅನುದಾನ ಸೇರಿದಂತೆ 30ಲಕ್ಷ ಹೆಚ್ಚುವರಿ ಹಣದೊಂದಿಗೆ ಮೈಸೂರಿನ ಹೈಟೆಕ್‌ ಮತ್ಸ್ಯದರ್ಶಿನಿ ಯೋಜನೆಯ ಕೆಲಸ ಆರಂಭಗೊಳಲಿದೆ.

ವಿಜಯ ಕರ್ನಾಟಕ 8 Feb 2026 12:57 pm

ಅಮೆರಿಕದ ವೈನ್- ವಿಸ್ಕಿಗಳ ಮೇಲಿನ ಸುಂಕ ಕಡಿತದಿಂದ ಭಾರತೀಯ ಕಂಪನಿಗಳ ಮೇಲೆ ಪರಿಣಾಮ ಬೀರುತ್ತಾ?

ಅಮೆರಿಕ-ಭಾರತದ ನಡುವಿನ ವ್ಯಾಪಾರ ಒಪ್ಪಂದದಿಂದ ಭಾರತೀಯ ಕಂಪನಿಗಳಿಗೆ ಯಾವ ರೀತಿಯ ಪ್ರಭಾವ ಬೀರಲಿದೆ ಎಂಬ ಲೆಕ್ಕಾಚಾರಗಳು ಶುರುವಾಗಿದ್ದು, ಅಮೆರಿಕದ ವೈನ್‌-ವಿಸ್ಕಿಗಳ ಆಮದು ಸುಂಕ ಕಡಿತದಿಂದ ಭಾರತದ ವಿಸ್ಕಿ ಮಾರುಕಟ್ಟೆ ಮೇಲಿನ ಪರಿಣಾಮವನ್ನು ಇಲ್ಲಿ ವಿಶ್ಲೇಷಿಸಲಾಗಿದೆ.

ವಿಜಯ ಕರ್ನಾಟಕ 8 Feb 2026 12:44 pm

ಬ್ಲ್ಯಾಕ್ ಸ್ಪಾಟ್‌ಗಳಾಗುತ್ತಿವೆ ರಾಷ್ಟ್ರೀಯ ಹೆದ್ದಾರಿಯ ಯೂಟರ್ನ್‌ಗಳು

ಹಳೆಯಂಗಡಿಯಿಂದ ಸುರತ್ಕಲ್‌ವರೆಗೆ 6 ದಿನಗಳಲ್ಲಿ 7 ಅಪಘಾತಗಳು

ವಾರ್ತಾ ಭಾರತಿ 8 Feb 2026 12:43 pm

ಫ್ಯಾಶಿಸಂ ಮತ್ತು ಬುದ್ಧಿಜೀವಿಬರಹಗಾರರು

ವಸಂತ ಬನ್ನಾಡಿ ಬರಹಗಳೆಂದರೆ ವಸಂತ ಕಾಲದ ಹಕ್ಕಿ ಇಂಚರಗಳಲ್ಲ. ಅವುಗಳು ವರ್ತಮಾನದ ಮುಖವಾಡಗಳನ್ನು ಹರಿಯುವ ಕೂರಂಬುಗಳು. ಇವರು ಮೂಲತಃ ಉಡುಪಿ ಜಿಲ್ಲೆಯ ಕೋಟಸ ಮೀಪದ ಬನ್ನಾಡಿಯವರು. ರಂಗಭೂಮಿಯ ಮೂಲಕವೇ ಇವರು ವರ್ತಮಾನಕ್ಕೆ ಸ್ಪಂದಿಸುತ್ತಾ ಬಂದವರು. ನಲ್ವತ್ತಕ್ಕೂ ಮಿಕ್ಕಿ ನಾಟಕಗಳನ್ನು ನಿರ್ದೇಶಿಸಿದ್ದಾರೆ. ಮೂರು ನಾಟಕಗಳನ್ನು ಅನುವಾದಿಸಿದ್ದಾರೆ. ಐದು ಕವನ ಸಂಕಲನಗಳನ್ನು ಹೊರತಂದಿದ್ದಾರೆ. ಬೆಕ್ಟ್ ಕವಿತೆಗಳನ್ನು ಕನ್ನಡಕ್ಕೆ ತಂದಿದ್ದಾರೆ. ಸಮಾಜ ವಿಜ್ಞಾನ ಪತ್ರಿಕೆ ‘ಅರಿವು ಬರಹ’ದ ಸಂಪಾದಕರಲ್ಲಿ ಒಬ್ಬರು. ಇವರ ‘ಕಡಲ ಧ್ಯಾನ’ಕ್ಕಾಗಿ ಶಾ. ಬಾಲುರಾವ್ ಟ್ರಸ್ಟ್ ವತಿಯಿಂದ ಬಿಎಂಶ್ರೀ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ಪುತಿನ ಪ್ರಶಸ್ತಿ, ಕರ್ನಾಟಕ ನಾಟಕ ಅಕಾಡಮಿ ಪ್ರಶಸ್ತಿ ಸೇರಿದಂತೆ ಹಲವು ಗೌರವಗಳು ಇವರ ಸಾಧನೆಗೆ ಸಂದಿವೆ. ಕೇಂದ್ರ ಸರಕಾರದ ಸಿಎಎ-ಎನ್‌ಆರ್‌ಸಿಗೆ ಪ್ರತಿರೋಧ ತೋರಿ ನಾಟಕ ಅಕಾಡಮಿ ಪ್ರಶಸ್ತಿಯನ್ನು 2019ರಲ್ಲಿ ಇವರು ಮರಳಿಸಿದ್ದಾರೆ. ಫ್ಯಾಶಿಸಂ ವಿರುದ್ಧದ ಹೋರಾಟದಲ್ಲಿ ಬುದ್ಧಿಜೀವಿ ಬರಹಗಾರರ ಪಾತ್ರದಬಗ್ಗೆ ಇಲ್ಲಿ ಬರೆದಿದ್ದಾರೆ. ಒಬ್ಬ ಲೇಖಕ ಫ್ಯಾಶಿಸ್ಟ್ ಗುಣಗಳನ್ನು ಪ್ರಜ್ಞಾಪೂರ್ವಕವಾಗಿ ಅಳವಡಿಸಿಕೊಂಡಿರುವ ಒಂದು ಪಕ್ಷದ ಜೊತೆ ನೇರವಾಗಿ ಕಾಣಿಸಿಕೊಳ್ಳಬಹುದೆ? ಅದರ ವಕ್ತಾರರ ಜೊತೆ ವೇದಿಕೆ ಹಂಚಿಕೊಳ್ಳಬಹುದೆ? ಅಂತಹ ಎಲ್ಲ ಲಕ್ಷಣಗಳೂ ಈಚೆಗೆ ಕಾಣಿಸಿಕೊಳ್ಳುತ್ತಿವೆ. ಸಮಯ ಸಂದರ್ಭ ಬಂದಾಗ, ಸಹನೀಯ ಎನಿಸುವ ಪಕ್ಷವೊಂದರಿಂದ ಸ್ಥಾನಮಾನ ಪಡೆಯುವುದು ತಪ್ಪಲ್ಲ ಎಂಬ ವಾತಾವರಣ, ಹೆಚ್ಚಿನ ಅವಕಾಶ ದೊರೆಯುವುದಾದರೆ ಫ್ಯಾಶಿಸ್ಟರ ಜೊತೆಗೆ ಸೇರಿಕೊಳ್ಳುವುದು ತಪ್ಪೇ ಅಲ್ಲ ಎಂಬ ನಿರ್ಲಜ್ಜತನಕ್ಕೆ ದಾರಿ ಮಾಡಿಕೊಟ್ಟಂತಿದೆ. ಬರಹಗಾರನೊಬ್ಬ ಭ್ರಷ್ಟ ಬುದ್ಧಿಜೀವಿಯಾಗಿ ಬದಲಾಗಿರುವ ಬಿಕ್ಕಟ್ಟಿನ ಕಾಲ ಇದು. ನಮ್ಮಲ್ಲಿ ಬರಹಗಾರರೆಂದರೆ ಕಥೆ, ಕವಿತೆ, ಕಾದಂಬರಿ ಬರೆಯುವವರು. ಇವರನ್ನು ಬುದ್ಧಿಜೀವಿಗಳು ಎನ್ನಬಹುದೆ? ಇಟಲಿಯ ಚಿಂತಕ ಅಂಟೋನಿಯೊ ಗ್ರಾಮ್ಶಿಯ ಪ್ರಕಾರ ಪ್ರತಿಯೊಬ್ಬರೂ ಬುದ್ಧಿಜೀವಿಗಳೇ. ಈ ಅರ್ಥದಲ್ಲಿ ಬರಹಗಾರ ಕೂಡ ಬುದ್ಧಿಜೀವಿಯೇ. ಗ್ರಾಮ್ಶಿ ಮುಂದುವರಿದು ಎರಡು ಬಗೆಯ ಬುದ್ಧಿಜೀವಿಗಳನ್ನು ಗುರುತಿಸುತ್ತಾನೆ. ಜೀವಂತ ಅಥವಾ ಸಾವಯವ ಬುದ್ಧಿಜೀವಿಗಳು ಮತ್ತು ಸಾಂಪ್ರದಾಯಿಕ ಅಥವಾ ಪರಂಪರಾಗತ ಬುದ್ಧಿಜೀವಿಗಳು. ತನ್ನ ತಜ್ಞತೆಯಿಂದ ಬಂಡವಾಳಶಾಹಿಗೆ ಪೂರಕವಾಗಿ ಕೆಲಸ ಮಾಡುತ್ತಲೇ ಅದನ್ನು ಎದುರು ಹಾಕಿಕೊಳ್ಳಲೂ ತಯಾರಿರುವವನು ಜೀವಂತ ಬುದ್ಧಿಜೀವಿ. ಬಂಡವಾಳಶಾಹಿಯ ಏಳಿಗೆಗೆ ದುಡಿಯುವವನಾದ್ದರಿಂದ, ಕ್ರಾಂತಿಕಾರಿ ವರ್ಗ, ತನ್ನ ಪರವಾಗಿ ವರ್ತಿಸಿದರೂ ಆತನನ್ನು ಅನುಮಾನದಿಂದ ನೋಡುತ್ತದೆ. ಇತ್ತ ಬಂಡವಾಳಶಾಹಿ ವರ್ಗ ಕೂಡ ಆತ ಯಾವ ಹೊತ್ತಿಗೂ ತನ್ನ ವಿರುದ್ಧ ತಿರುಗಿ ಬೀಳಬಹುದಾದ್ದರಿಂದ ಅವನನ್ನು ವಿಶ್ವಾಸಾರ್ಹ ವ್ಯಕ್ತಿಯೆಂದು ಪರಿಗಣಿಸುವುದಿಲ್ಲ. ಆದ್ದರಿಂದ ಜೀವಂತ ಬುದ್ಧಿಜೀವಿ ಯಾವತ್ತೂ ಒಂಟಿ. ಸಾಂಪ್ರದಾಯಿಕ ಬುದ್ಧಿಜೀವಿಗಳು ತಮ್ಮ ಬಗ್ಗೆಯೇ ತಾವು ಅತೀವ ಹೆಮ್ಮೆ ಹೊಂದಿರುತ್ತಾರೆ. ಸಮಾಜ ಇವರನ್ನು ಗೌರವಿಸುತ್ತದೆ. ಸರಕಾರ ಇವರಿಗೆ ಗಣ್ಯ ಸ್ಥಾನಮಾನ ನೀಡುತ್ತದೆ. ತನ್ನ ಆದರ್ಶ ನಿಲುವು ಮತ್ತು ಸಾಹಿತ್ಯ ಶ್ರೇಷ್ಠತೆಯ ಮೂಲಕ, ಸಮಾಜದಲ್ಲಿ ತಾನೊಂದು ಸ್ಥಾನಮಾನ ಗಳಿಸಿಕೊಂಡಿದ್ದೇನೆ ಎಂದು ಅವನು ಭಾವಿಸುತ್ತಾನೆ. ತನ್ನಿಷ್ಟದಂತೆ ಬರೆಯುವುದರ ಮೂಲಕ, ತಾನು ಸರ್ವತಂತ್ರ ಸ್ವತಂತ್ರ ಎಂದೂ ಆತ ಅಂದುಕೊಳ್ಳುತ್ತಾನೆ. ಕನ್ನಡದ ಬಹುತೇಕ ಬುದ್ಧಿಜೀವಿ ಬರಹಗಾರರನ್ನು ಈ ಗುಂಪಿಗೆ ಸೇರಿಸಬಹುದು. ಅವರು ಸರ್ವತಂತ್ರರು ಎಂಬುದು ಸತ್ಯಕ್ಕೆ ದೂರವಾದ ಮಾತು ಎಂಬುದು ಬೇರೆ ವಿಷಯ. ಬೌದ್ಧಿಕ ಚಟುವಟಿಕೆ ಪ್ರತ್ಯೇಕ ಸಂಗತಿ ಏನೂ ಅಲ್ಲವಲ್ಲ. ಬೂರ್ಜ್ವಾ ವರ್ಗದ ಮನ್ನಣೆಗೆ ಹಾತೊರೆಯುವ ಪೆಟ್ಟಿ ಬೂರ್ಜ್ವಾ ಸಂಸ್ಕೃತಿಯ ಭಾಗ ಆತ.   ಯಾವುದೇ ಸಾಮಾಜಿಕ, ರಾಜಕೀಯ ತಲ್ಲಣಗಳಿಗೂ ಸ್ಪಂದಿಸದೇ ಇರುವುದಕ್ಕೆ, ಆತನ ವರ್ಗಪ್ರಜ್ಞೆಯೇ ಕಾರಣ. ಕನ್ನಡದ ಬಹುತೇಕ ಬರಹಗಾರರು ಈ ಗುಂಪಿಗೆ ಸೇರಿದವರು. ಯಾವ ಸರಕಾರ ಬಂದರೂ ಏನೇ ತಳಮಳ ಸಂಭವಿಸಿದರೂ ಅವರು ನಿರ್ಲಿಪ್ತರು. ಹೆಚ್ಚೆಂದರೆ ಸಣ್ಣ ಪ್ರತಿರೋಧ ತೋರಿಯಾರು. ಇದೊಂದು ಸಹಜ ದಾರಿ ಎಂಬಂತಾಗಿ ಬಿಟ್ಟಿದೆ. ಇದೀಗ ಮೂರನೆಯ ಬುದ್ಧಿಜೀವಿ ಗುಂಪೊಂದು ಕನ್ನಡದಲ್ಲಿ ಕಾಣಿಸಿಕೊಂಡಿದೆ. ಬಲಪಂಥೀಯ ರಾಜಕಾರಣದ ವಕ್ತಾರರಾಗಿ ಇವರು ಕಾಣಿಸಿಕೊಂಡಿದ್ದಾರೆ. ಫ್ಯಾಶಿಸ್ಟ್ ಸರ್ವಾಧಿಕಾರವನ್ನು ಕೂಡ ಯಾವ ನಾಚಿಕೆಯೂ ಇಲ್ಲದೆ ಇವರು ಸಮರ್ಥಿಸಬಲ್ಲರು. ಇವರನ್ನು ಹುಸಿ ಬುದ್ಧ್ದಿ ಜೀವಿಗಳು ಎನ್ನಬಹುದು. ಒಬ್ಬ ಲೇಖಕ ಫ್ಯಾಶಿಸ್ಟ್ ಗುಣಗಳನ್ನು ಪ್ರಜ್ಞಾಪೂರ್ವಕವಾಗಿ ಅಳವಡಿಸಿಕೊಂಡಿರುವ ಒಂದು ಪಕ್ಷದ ಜೊತೆ ನೇರವಾಗಿ ಕಾಣಿಸಿಕೊಳ್ಳಬಹುದೆ? ಅದರ ವಕ್ತಾರರ ಜೊತೆ ವೇದಿಕೆ ಹಂಚಿಕೊಳ್ಳಬಹುದೆ? ಅಂತಹ ಎಲ್ಲ ಲಕ್ಷಣಗಳೂ ಈಚೆಗೆ ಕಾಣಿಸಿಕೊಳ್ಳುತ್ತಿವೆ. ಸಮಯ ಸಂದರ್ಭ ಬಂದಾಗ, ಸಹನೀಯ ಎನಿಸುವ ಪಕ್ಷವೊಂದರಿಂದ ಸ್ಥಾನಮಾನ ಪಡೆಯುವುದು ತಪ್ಪಲ್ಲ ಎಂಬ ವಾತಾವರಣ, ಹೆಚ್ಚಿನ ಅವಕಾಶ ದೊರೆಯುವುದಾದರೆ ಫ್ಯಾಶಿಸ್ಟರ ಜೊತೆಗೆ ಸೇರಿಕೊಳ್ಳುವುದು ತಪ್ಪೇ ಅಲ್ಲ ಎಂಬ ನಿರ್ಲಜ್ಜತನಕ್ಕೆ ದಾರಿ ಮಾಡಿಕೊಟ್ಟಂತಿದೆ. ಬರಹಗಾರನೊಬ್ಬ ಭ್ರಷ್ಟ ಬುದ್ಧಿಜೀವಿಯಾಗಿ ಬದಲಾಗಿರುವ ಬಿಕ್ಕಟ್ಟಿನ ಕಾಲ ಇದು. ಇಬ್ಬರು ಫ್ಯಾಶಿಸ್ಟ್ ಸರ್ವಾಧಿಕಾರಿಗಳ ಅಂತ್ಯ: ಫ್ಯಾಶಿಸಂ ಅಂದರೆ ಏನು ಎಂದು ತಿಳಿದುಕೊಳ್ಳುವ ಮೊದಲು, ಜಗತ್ತು ಕಂಡ ಇಬ್ಬರು ಕ್ರೂರ ಫ್ಯಾಶಿಸ್ಟ್ ಸರ್ವಾಧಿಕಾರಿಗಳ ಕುರಿತು ತಿಳಿದುಕೊಳ್ಳುವುದು ಒಳ್ಳೆಯದು ಅನಿಸುತ್ತದೆ. ಅವರ ಅಂತ್ಯದೊಂದಿಗೆ ಎರಡನೆಯ ಮಹಾಯುದ್ಧವೂ ಮುಕ್ತಾಯಗೊಂಡದ್ದು ಚರಿತ್ರೆಯ ಮಹಾನ್ ರುದ್ರ ಘಟನೆಗಳಲ್ಲಿ ಒಂದು. ಆ ಇಬ್ಬರು ಫ್ಯಾಶಿಸ್ಟರೆಂದರೆ, ಇಟಲಿಯ ಬೆನಿಟೊ ಮುಸ್ಸೋಲಿನಿ ಮತ್ತು ಜರ್ಮನಿಯ ಅಡಾಲ್ಫ್ ಹಿಟ್ಲರ್. ಯುದ್ಧದಲ್ಲಿ ತನಗೆ ಸೋಲು ಖಚಿತ ಎಂದು ಅರಿವಾಗುತ್ತಿದ್ದಂತೆ ಮುಸ್ಸೋಲಿನಿ 27 ಎಪ್ರಿಲ್ 1945 ರಂದು ಮಡದಿ ಕ್ಲಾರಾ ಜೊತೆಗೆ ಸ್ವಿಟ್ಸರ್‌ಲ್ಯಾಂಡ್ ಗೆ ಪರಾರಿಯಾಗಲು ಪ್ರಯತ್ನಿಸಿದ. ಹೋರಾಟಗಾರರ ಗುಂಡಿಗೆ ಬಲಿಯಾದ. ಅಷ್ಟಕ್ಕೇ ಮುಗಿಯಲಿಲ್ಲ. ರೊಚ್ಚಿಗೆದ್ದ ಜನರು ಆತನ ಶವದ ಮೇಲೆರಗಿದರು. ಮನಬಂದಂತೆ ಥಳಿಸಿದರು. ಕಾಲಿನಿಂದ ತುಳಿದರು. ತಲೆಯನ್ನು ವಿರೂಪಗೊಳಿಸಿದರು. ಇಬ್ಬರ ಶವಗಳನ್ನೂ ಮಿಲಾನ್ ನಗರದ ಚೌಕಿಯಲ್ಲಿ ತಲೆಕೆಳಗಾಗಿ ನೇತುಹಾಕಲಾಯಿತು.   ಹೋರಾಟವನ್ನು ಹತ್ತಿಕ್ಕಲು ಮುಸ್ಸೋಲಿನಿ ಅದೇ ಚೌಕದಲ್ಲಿ ಕೆಲವೇ ತಿಂಗಳುಗಳ ಹಿಂದೆ ಹದಿನೈದು ಮಂದಿಯನ್ನು ಗುಂಡಿಕ್ಕಿ ಕೊಂದು ನೇತುಹಾಕಿದ್ದು ಹೀಗೆ ಕ್ರೂರವಾಗಿ ಸೇಡು ತೀರಿಸಿಕೊಳ್ಳಲು ಕಾರಣವಾಗಿತ್ತು. ನೇತಾಡುತ್ತಿದ್ದ ಶವಗಳ ಮೇಲೆ ಕಲ್ಲು ತೂರುವುದನ್ನು ಜನ ನಿಲ್ಲಿಸಲೇ ಇಲ್ಲ. ಮುಸ್ಸೋಲಿನಿಯ ಇಂಥದೊಂದು ಭೀಕರ ಅಂತ್ಯದ ಸುದ್ದಿ ತಿಳಿದ ಹಿಟ್ಲರ್, ಜೀವಂತ ಸೆರೆ ಸಿಕ್ಕಿದರೆ ತನಗೂ ಅದೇ ಗತಿ ಕಾದಿದೆ ಎಂದು ತಿಳಿದು, ಅಡಗಿಕೊಂಡಿದ್ದ ಬಂಕರಿನೊಳಗೆ ತಲೆಗೆ ಗುಂಡು ಹೊಡೆದುಕೊಂಡು ಸತ್ತ.ಮುಸ್ಸೋಲಿನಿ ಸತ್ತ ಎರಡು ದಿನಗಳಲ್ಲಿಯೇ ಹಿಟ್ಲರ್‌ನ ಅಂತ್ಯವೂ ಆಗಿತ್ತು. ಜನತೆಯ ಸ್ವಾತಂತ್ರ್ಯವನ್ನು ಕಸಿದುಕೊಂಡು ತಮಗಾಗದವರ ಹತ್ಯೆಗೆ ಕಾರಣರಾದ ಮುಸ್ಸೋಲಿನಿ ಮತ್ತು ಹಿಟ್ಲರ್ ಅಂತ್ಯದೊಂದಿಗೆ ಫ್ಯಾಶಿಸಂ ನ ಅಂತ್ಯ ಆಗಿದೆಯೇ ಎಂದರೆ ಖಂಡಿತ ಇಲ್ಲ. ಹಲವಾರು ದೇಶಗಳಲ್ಲಿ ಅದು ಹಲವು ರೂಪಗಳಲ್ಲಿ ಇವತ್ತಿಗೂ ಜೀವಂತವಿದೆ. ಇಲ್ಲಿ ಗಮನಿಸಬೇಕಾದ ಬಹಳ ಮುಖ್ಯ ಅಂಶವೆಂದರೆ, ಬಹಳಷ್ಟು ಜನ ಮುಸ್ಸೋಲಿನಿ ಮತ್ತು ಹಿಟ್ಲರ್ ನಿರಂಕುಶ ಅಧಿಕಾರವನ್ನು ತಮ್ಮ ಮೇಲೆ ಹೇರಿದ್ದರು ಎಂದು ಅಂದುಕೊಂಡಿರಲೇ ಇಲ್ಲ. ಅವರ ಅರಾಧಕರಾಗಿದ್ದರು ಬೇರೆ. ಹಿಟ್ಲರ್‌ನ ಸಭೆಗಳಿಗೆ ಸೇರುತ್ತಿದ್ದ ಲಕ್ಷಾಂತರ ಜನರು ಮತ್ತು ಅವರ ಉನ್ಮಾದಕ್ಕಿಂತ ಬೇರೆ ಸಾಕ್ಷಿ ಬೇಕೆ? ಫ್ಯಾಶಿಸಂ ಅನ್ನು ಎದುರಿಸುವಲ್ಲಿನ ಬಹುದೊಡ್ಡ ಸವಾಲು ಇದು. ಏನಿದು ಫ್ಯಾಶಿಸಂ?: ಫ್ಯಾಶಿಸ್ಟ್ ಪ್ರಭುತ್ವ ಮತ್ತು ಫ್ಯಾಶಿಸಂ ಎಂಬ ಪದಪ್ರಯೋಗಳನ್ನು ಈಚಿನ ವರ್ಷಗಳಲ್ಲಿ ನಾವು ಹೆಚ್ಚು ಹೆಚ್ಚಾಗಿ ಬಳಸುತ್ತಿದ್ದೇವೆ. ಉದಾಹರಣೆಗೆ, ಭಾರತ ಇಂದು ಪ್ರಜಾಪ್ರಭುತ್ವದ ಹೆಸರಿನಲ್ಲಿ ಫ್ಯಾಶಿಸಂ ಗುಣಲಕ್ಷಣಗಳನ್ನು ವೇಗವಾಗಿ ಅಳವಡಿಸಿಕೊಳ್ಳುತ್ತಿರುವ ಪ್ರಭುತ್ವವಾಗಿ ಬೆಳೆಯುತ್ತಿದೆ ಎಂಬ ಮಾತು ಸರ್ವತ್ರ ಕೇಳಿ ಬರುತ್ತಿದೆ. ಇದು ನಿಜ ಕೂಡ. ಆದರೆ ಹಾಗೆ ಹೇಳುವ ನಮಗೆ, ಫ್ಯಾಶಿಸಂ ಅಂದರೆ ಏನು, ಅದರ ಮೂಲ ಯಾವುದು ಎಂಬುದರ ಸ್ಪಷ್ಟ ಅರಿವಿರುವ ಹಾಗಿಲ್ಲ.ಹಾಗೆ ನೋಡಿದರೆ, ಫ್ಯಾಶಿಸಂ ಒಂದೊಂದು ದೇಶದಲ್ಲಿಯೂ ಬೇರೆ ಬೇರೆ ಸ್ವರೂಪದಲ್ಲಿ ಕಾಣಿಸಿಕೊಳ್ಳುವುದರಿಂದ ಅದನ್ನು ಸ್ಪಷ್ಟವಾಗಿ ವ್ಯಾಖ್ಯಾನಕ್ಕೆ ಒಳಪಡಿಸಲು ಸಾಧ್ಯವಾಗುತ್ತಿಲ್ಲ. ಕನ್ನಡದಲ್ಲಿ ಫ್ಯಾಶಿಸಂ ಗೆ ಸರಿಯಾದ ಪರ್ಯಾಯ ಪದ ಇಲ್ಲ. ಆದುದರಿಂದ ಸದ್ಯ ಅದನ್ನು ಫ್ಯಾಶಿಸಂ ಎಂದೇ ಕರೆಯಬಹುದು ಮತ್ತು ಅದರ ವ್ಯಾಪ್ತಿಯನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಬಹುದು. ಫ್ಯಾಶಿಸಂ ಪದವನ್ನು ಮೊದಲು ಪ್ರಯೋಗಿಸಿದವನು ಇಟಲಿಯ ಬೆನಿಟೊ ಮುಸ್ಸೋಲಿನಿ. 1919 ರಲ್ಲಿ ಆತ ತಾನು ಕಟ್ಟಿದ ರಾಜಕೀಯ ಚಳವಳಿಗೆ ಫ್ಯಾಶಿಸಂ ಎಂದು ಕರೆದ. ರೋಮ್ ಸಾಮ್ರಾಜ್ಯದ ಶಕ್ತಿಯನ್ನು ಸೂಚಿಸುತ್ತಿದ್ದ ‘ಫ್ಯಾಶಿಸ್’ ಅನ್ನು ತನ್ನ ಸಂಕೇತವಾಗಿ ಅಳವಡಿಸಿಕೊಂಡ. ಈ ಸಂಕೇತ ಕಬ್ಬಿಣದ ಸರಳನ್ನು ಸುತ್ತಿದ ಕೊಡಲಿಯನ್ನು ಒಳಗೊಂಡಿತ್ತು. ಒಂದು ಕಬ್ಬಿಣದ ಸರಳನ್ನಾದರೆ ಸುಲಭದಲ್ಲಿ ಮುರಿಯಬಹುದು. ಆದರೆ ಹಲವು ಸರಳುಗಳನ್ನು ಒಟ್ಟಾಗಿ ಬಿಗಿದರೆ, ಅದನ್ನು ಮುರಿಯುವುದು ಕಷ್ಟ ಎಂಬ ತತ್ವವನ್ನು ಹೊರಡಿಸುತ್ತಿದ್ದ ಸಂಕೇತ ಇದು. ಅಂದರೆ ಬಲಿಷ್ಠತೆಗೆ ಒತ್ತು ಕೊಡುವಂಥದ್ದು. ಸರಕಾರಕ್ಕೆ ಸಂಪೂರ್ಣ ಅಧಿಕಾರವನ್ನು ನೀಡುವ ಮೂಲಕ ಅದನ್ನು ಬಲಿಷ್ಠ ವ್ಯವಸ್ಥೆಯಾಗಿ ಬೆಳೆಸಬೇಕು ಎಂಬುದನ್ನು ಸಮರ್ಥಿಸುವ ಈ ಸಿದ್ಧಾಂತವನ್ನು ಮುಸ್ಸೋಲಿನಿ ಅಳವಡಿಸಿಕೊಂಡಿದ್ದ. ಮುಸ್ಸೋಲಿನಿ ಬಳಿಕ ಅನೇಕ ದೇಶಗಳು: ಫ್ಯಾಶಿಸ್ಟ್ ಪ್ರಭುತ್ವವನ್ನು ಸ್ಥಾಪಿಸುವ ದಾರಿ ಹಿಡಿದವು. ಅವುಗಳಲ್ಲಿ ಅತಿ ಹೇಯವಾದದ್ದು ಮುಸ್ಸೋಲಿನಿಯ ಅಭಿಮಾನಿಯಾಗಿದ್ದ ಅಡಾಲ್ಫ್ ಹಿಟ್ಲರ್ ಜರ್ಮನಿಯಲ್ಲಿ ಸ್ಥಾಪಿಸಿದ ನಾಝಿ ಫ್ಯಾಶಿಸ್ಟ್ ಪ್ರಭುತ್ವ. ಫ್ಯಾಶಿಸಂ ಕಂಡುಕೊಂಡ ಅತಿರೇಕದ ಮತ್ತು ಅತ್ಯಂತ ಕುರೂಪದ ವ್ಯವಸ್ಥೆ ನಾಝಿಸಂ. ಪ್ರಭುತ್ವದ ಸಂಪೂರ್ಣ ನಿಯಂತ್ರಣ ಮತ್ತು ರಾಷ್ಟ್ರೀಯವಾದವನ್ನು ಪ್ರತಿಪಾದಿಸುತ್ತಿದ್ದ ಫ್ಯಾಶಿಸಂ ಗೆ ಜನಾಂಗೀಯ ಶ್ರೇಷ್ಠತೆಯ ಘಾತಕ ಮತ್ತು ಮೊನಚನ್ನು ಅಳವಡಿಸಿಕೊಂಡ ಹಿಟ್ಲರ್‌ನ ನಾಝಿಸಂ, ಅಂತಿಮವಾಗಿ ಅರುವತ್ತು ಲಕ್ಷ ಯಹೂದಿಗಳ ಮಾರಣ ನರಮೇಧಕ್ಕೆ ಸಾಕ್ಷಿಯಾಯಿತು. ಫ್ಯಾಶಿಸಂನತ್ತ ಹೆಜ್ಜೆ ಹಾಕುವ ಮೊದಲು ಮುಸ್ಸೋಲಿನಿ ಇಟಲಿಯ ಸೋಷಿಯಲಿಸ್ಟ್ ಪಾರ್ಟಿಯ ಕ್ರಾಂತಿಕಾರಿ ಎಡಪಂಥೀಯ ಬಣದ ನಾಯಕನಾಗಿದ್ದ ಎಂಬುದು ಆಶ್ಚರ್ಯ ಹುಟ್ಟಿಸುವ ವಿಷಯ. ಈ ಕ್ರಾಂತಿಕಾರಿ ಎಡಪಂಥೀಯ ಬಣ ಇಟಲಿಯ ಸೋಸೋಷಿಯಲಿಸ್ಟ್ ಪಾರ್ಟಿಯ ಒಳಗೆ ಇದ್ದ, ಲಿಬರಲ್ ಪಕ್ಷಗಳ ಜೊತೆಗೆ ವಿಷಯಾಧಾರಿತ ಹೊಂದಾಣಿಕೆಯನ್ನು ಮಾಡಿಕೊಳ್ಳುವುದರಲ್ಲಿ ನಂಬಿಕೆ ಹೊಂದಿದ್ದ ಸುಧಾರಣಾವಾದಿ ಬಣದ ನಿಲುವನ್ನು ವಿರೋಧಿಸುತ್ತಿದ್ದ ಬಣವಾಗಿತ್ತು. ಈ ಸಂದರ್ಭದಲ್ಲಿ ಮಾರ್ಕ್ಸ್ ವಾದಕ್ಕೆ ಹೊಸ ವ್ಯಾಖ್ಯಾನವನ್ನೇ ನೀಡಿದ ಗ್ರಾಮ್ಶಿ ಮತ್ತು ಮುಸ್ಸೋಲಿನಿ ಜೊತೆಯಾಗಿ ಕೆಲಸ ಮಾಡುತ್ತಿದ್ದರು.1915 ರ ಹೊತ್ತಿಗೆ ಸೋಷಿಯಲಿಸ್ಟ್ ಪಾರ್ಟಿಯ ಮುಖವಾಣಿಯಾಗಿದ್ದ ‘ಅವಂತಿ’ ಯ ಸಂಪಾದಕನಾಗಿ ಮುಸ್ಸೋಲಿನಿ ಕೆಲಸ ಮಾಡುತ್ತಿದ್ದರೆ,ಗ್ರಾಮ್ಶಿ ಅದೇ ಪತ್ರಿಕೆಯಲ್ಲಿ ರಾಜಕೀಯ ವಿಶ್ಲೇಷಣೆಯ ಲೇಖನಗಳನ್ನು ಬರೆಯುತ್ತಿದ್ದ. ಮೊದಲ ಮಹಾಯುದ್ಧದ ವೇಳೆಗೆ, ಮುಸ್ಸೋಲಿನಿಸಮಾಜವಾದದಿಂದ ಕಳಚಿಕೊಂಡು ಫ್ಯಾಶಿಸ್ಟ್ ಆಗಿ ಪರಿವರ್ತನೆಗೊಂಡ. 1928 ರಲ್ಲಿ ಪ್ರಜಾಪ್ರಭುತ್ವವನ್ನು ವಿಸರ್ಜಿಸಿ ಫ್ಯಾಶಿಸ್ಟ್ ಸರ್ವಾಧಿಕಾರವನ್ನು ಸ್ಥಾಪಿಸಿದ. ಫ್ಯಾಶಿಸಂನ ಚಹರೆಗಳನ್ನು ಗುರುತಿಸುವುದು ಹೇಗೆ?: ಫ್ಯಾಶಿಸಂ ಧುತ್ತನೆ ಆವರಿಸುವುದಿಲ್ಲ. ಸುಲಭದಲ್ಲಿ ಕಾಣುವಷ್ಟು ದೃಗ್ಗೋಚರವೂ ಅಲ್ಲ. ಪ್ರಜಾಪ್ರಭುತ್ವದ ಒಳಗೇ ಅದನ್ನು ನಿಧಾನವಾಗಿ ಸ್ಥಾಪಿಸುವ ಪ್ರಯತ್ನಗಳು ನಡೆಯುತ್ತಿರುತ್ತವೆ. ಮೇಲು ನೋಟಕ್ಕೆ ಎಲ್ಲವೂ ಸಹಜವಾಗಿಯೇ ಇವೆ ಅನಿಸಿಬಿಡುತ್ತವೆ.ಫ್ಯಾಶಿಸಂ ನ ಹರಡುವಿಕೆಯನ್ನು ಈ ಕೆಳಗಿನ ಚಹರೆಗಳಲ್ಲಿ ಗುರುತಿಸಬಹುದು - ಸರ್ವಾಧಿಕಾರಿ ಪ್ರಭುತ್ವವನ್ನು ಗತವೈಭವ ಮತ್ತು ಧರ್ಮದ ಶ್ರೇಷ್ಠ ಮೌಲ್ಯಗಳ ಆಧಾರದಲ್ಲಿ ಕಟ್ಟಬೇಕು ಎಂದು ನಂಬಿಸಲಾಗುತ್ತದೆ. ಅಂತಹ ಪ್ರಭುತ್ವ ನಿರೂಪಿಸುವ ಸಮಾಜ, ಸಂಸ್ಕೃತಿ, ನೈತಿಕತೆಗಳಿಗೆ ಎಲ್ಲ ಪ್ರಜೆಗಳು ತಲೆಬಾಗಬೇಕು ಎಂದು ವಿಧಿಸಲಾಗುತ್ತದೆ. ಇಂತಹ ಸರ್ವವ್ಯಾಪಿ ಪ್ರಭುತ್ವವನ್ನು ಕಟ್ಟಲು ಒಬ್ಬ ದೈವೀಶಕ್ತಿಯುಳ್ಳ ನಾಯಕ ಮತ್ತು ಅವನ ಆಜ್ಞೆಯನ್ನು ವಿಧೇಯವಾಗಿ ಜಾರಿಗೊಳಿಸುವ ರಾಷ್ಟ್ರಪ್ರೇಮಿ ಸಂಘಟನೆಗಳು ತೀರಾ ಅವಶ್ಯಕ ಎಂದು ಸಾರಲಾಗುತ್ತದೆ. ಈ ಅಂಶಗಳನ್ನು ಭಾರತದ ಇಂದಿನ ಸನ್ನಿವೇಶದ ಜೊತೆ ಹೋಲಿಸಿ ನೋಡಿದರೆ, ಎಲ್ಲವೂ ಸ್ವಯಂ ಸ್ಪಷ್ಟವಿದೆ. ಪಟ್ಟಿ ಇಷ್ಟಕ್ಕೇ ಮುಗಿಯುವುದಿಲ್ಲ: ಸರ್ವಾಧಿಕಾರಕ್ಕೆ ಸಮ್ಮತಿಯನ್ನು ಹುಟ್ಟು ಹಾಕಲು ಮಾಧ್ಯಮಗಳನ್ನು ಬಳಸಿಕೊಳ್ಳಲಾಗುತ್ತದೆ. ಸಮೂಹ ಮಾಧ್ಯಮಗಳನ್ನು ಸಂಪೂರ್ಣವಾಗಿ ಪ್ರಭುತ್ವದ ಆರಾಧನೆಯಲ್ಲಿ ತೊಡಗಿಸಲಾಗುತ್ತದೆ.ದಿನದ ಇಪ್ಪತ್ತನಾಲ್ಕು ಗಂಟೆಯೂ ಸುಳ್ಳುಗಳನ್ನು ಪುನರುಚ್ಚರಿಸಲಾಗುತ್ತದೆ. ದಿನಪತ್ರಿಕೆಗಳನ್ನು ಸರಕಾರದ ಮುಖವಾಣಿಗಳನ್ನಾಗಿಸಲಾಗುತ್ತದೆ. ಭ್ರಷ್ಟಾಚಾರ ಬಹಳ ಸಹಜವಾದುದು ಎಂಬಂತೆ ನಂಬಿಸಲಾಗುತ್ತದೆ. ಚರಿತ್ರೆಯನ್ನು ಪುನರ‌್ರಚಿಸುವ ಪ್ರಯತ್ನ ಸತತವಾಗಿ ನಡೆಯುತ್ತದೆ. ತರಗತಿಯ ಪಠ್ಯಗಳನ್ನು ತಿದ್ದಲಾಗುತ್ತದೆ. ರಾಜಕೀಯ ಹಿಂಸೆಯನ್ನು ಸಹಜವಾಗಿಸಲಾಗುತ್ತದೆ.ಕ್ರಿಮಿನಲ್ ಅನುಯಾಯಿಗಳನ್ನು ಕ್ಷಮಿಸಲಾಗುತ್ತದೆ. ಗುಪ್ತಚರ ಪೊಲೀಸ್ ಪಡೆಯನ್ನು ಸಕ್ರಿಯಗೊಳಿಸಲಾಗುತ್ತದೆ. ಚುನಾವಣಾ ಫಲಿತಾಂಶಗಳನ್ನು ತಿರುಚಲಾಗುತ್ತದೆ. ಚುನಾವಣಾ ಆಯೋಗದ ಸ್ವಾತಂತ್ರ್ಯವನ್ನು ಮೊಟಕುಗೊಳಿಸಲಾಗುತ್ತದೆ. ಕೋರ್ಟುಗಳು ಪ್ರಭುತ್ವದ ಆಣತಿಯ ಪ್ರಕಾರ ನಡೆಯುವಂತೆ ನೋಡಿಕೊಳ್ಳಲಾಗುತ್ತದೆ.ಎಲ್ಲಕ್ಕಿಂತ ಮುಖ್ಯವಾಗಿ ಅಲ್ಪಸಂಖ್ಯಾತರನ್ನು ದೇಶದ ವೈರಿಗಳು ಎಂದು ಬಿಂಬಿಸಲಾಗುತ್ತದೆ. ಅವರ ಕುರಿತು ಅಸಹನೆ ಎಲ್ಲೆಲ್ಲೂ ಹಬ್ಬುವಂತೆ ಮಾಡಲಾಗುತ್ತದೆ.ಕೋಮು ಗಲಭೆಗಳು ನಡೆಯುವಂತೆ ಪ್ರಚೋದಿಸಲಾಗುತ್ತದೆ.ಪ್ರಜೆಗಳನ್ನು ಹತ್ತಿಕ್ಕಲು ಮಿಲಿಟರಿಯನ್ನು ಉಪಯೋಗಿಸಲಾಗುತ್ತದೆ. ಅಮಾಯಕರನ್ನು ಪ್ರಭುತ್ವದ ಹಿಂಸೆಗೆ ಜವಾಬ್ದಾರರನ್ನಾಗಿ ಮಾಡಲಾಗುತ್ತದೆ. ಭಯದ ಹರಡುವಿಕೆ ಮೂಲಕ ಅಧಿಕಾರಕ್ಕೆ ಬರಲು ಪ್ರಯತ್ನಿಸಲಾಗುತ್ತದೆ. ವಿಜ್ಞಾನವನ್ನು ಐಡಿಯಾಲಜಿ ಮೂಲಕ ಬದಿಗೆ ಸೇರಿಸಲಾಗುತ್ತದೆ. ಇದನ್ನೆಲ್ಲಾ ಬಿಡಿಬಿಡಿಯಾಗಿ ನೋಡುವ ದೇಶದ ಪ್ರಜೆಗಳಿಗೆ ಎಲ್ಲವೂ ಸಹಜವೆನಿಸಿ ಬಿಡುತ್ತದೆ. ಈಗ ಭಾರತದಲ್ಲಿ ಆಗುತ್ತಿರುವ ಹಾಗೆ. ಇದರಿಂದಾಗಿ, ದೇಶ ಚೆನ್ನಾಗಿ ನಡೆಯುತ್ತಿದೆ ಎಂಬ ಭ್ರಮೆ ಹಬ್ಬತೊಡಗುತ್ತದೆ. ಕಾಲಕಾಲಕ್ಕೆ ಚುನಾವಣೆ ನಡೆಯುತ್ತಿರುವ ಪ್ರಜಾಪ್ರಭುತ್ವ ದೇಶ ತಮ್ಮದು ಎಂದು ಜನ ಬೀಗುತ್ತಿರುತ್ತಾರೆ.ಆದರೆ ಚುನಾವಣೆಯಲ್ಲಿ ಭಾರೀ ಬಹುಮತ ಬರಲು ಫ್ಯಾಶಿಸ್ಟರು ಎಲ್ಲ ಪ್ರಯತ್ನಗಳನ್ನೂ ಮಾಡುತ್ತಿದ್ದಾರೆ ಎಂಬುದು ಪ್ರಜೆಗಳ ಗಮನಕ್ಕೇ ಬರುವುದಿಲ್ಲ. ಅಂತಹ ಭಾರೀ ಬಹುಮತ ಬಂದ ಮೇಲೆಯೇ ಮುಸ್ಸೋಲಿನಿಸರ್ವಾಧಿಕಾರವನ್ನು ಸ್ಥಾಪಿಸಿದ್ದು. ಫ್ಯಾಶಿಸಂ ನ ಆರ್ಥಿಕ ತಳಹದಿ: ಭಾರೀ ಬಂಡವಾಳಶಾಹಿ, ಗ್ರಾಮೀಣ ಶ್ರೀಮಂತರು ಮತ್ತು ನಗರದ ಮಧ್ಯಮ ವರ್ಗ, ಇವುಗಳ ನಡುವೆ ಒಗ್ಗಟ್ಟು ಸ್ಥಾಪಿಸಲು ಫ್ಯಾಶಿಸಂ ಪ್ರಯತ್ನಿಸುತ್ತದೆ.ಇವುಗಳಿಗೆ ಆರ್ಥಿಕ ತಳಹದಿಯನ್ನು ಒದಗಿಸುತ್ತದೆ. ನಗರಗಳ ಮಧ್ಯಮ ವರ್ಗ, ಕೆಳ ಮಧ್ಯಮ ವರ್ಗ ಮತ್ತು ಕಾರ್ಮಿಕ ವರ್ಗಗಳಿಂದ ಬಂದ ಜನರ ಸಂಘಟಿತ ಪಡೆಯನ್ನು ಕಟ್ಟುತ್ತದೆ. ಈ ಸಂದರ್ಭದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಹೊಂದಿರುವ ಸರಕಾರಗಳ ದೌರ್ಬಲ್ಯಗಳನ್ನು ಬಳಸಿಕೊಳ್ಳುತ್ತದೆ. ಅಧಿಕಾರಕ್ಕೆ ಬರುವ ಮೊದಲು ಜನಮರುಳು ಘೋಷಣೆಗಳನ್ನು ಕೂಗುತ್ತಾ ಅಧಿಕಾರಕ್ಕೆ ಬಂದಮೇಲೆ ಬಂಡವಾಳಶಾಹಿ ಜೊತೆ ಶಾಮೀಲಾಗುತ್ತದೆ. ಪ್ರಜಾಪ್ರಭುತ್ವವನ್ನು ನಾಶಪಡಿಸಿ ಸರ್ವಾಧಿಕಾರದ ಪ್ರಭುತ್ವವನ್ನು ಜನತೆಯ ಮೇಲೆ ಹೇರುತ್ತದೆ. ಮೇಲಿನ ಅಂಶಗಳನ್ನು ಇಂದಿನ ಭಾರತೀಯ ಸಂದರ್ಭದಲ್ಲಿ ಸ್ಪಷ್ಟವಾಗಿ ಗುರುತಿಸಬಹುದು. ಭಾರತದ ಇಂದಿನ ಪ್ರಭುತ್ವ ಬಂಡವಾಳಶಾಹಿಯ ಹಿತ ಕಾಯುವುದನ್ನೇ ತನ್ನ ಪ್ರಮುಖ ಗುರಿಯಾಗಿಸಿಕೊಂಡಿದೆ.ಹಳ್ಳಿಗಳಲ್ಲಿ ಫ್ಯೂಡಲ್ ವ್ಯವಸ್ಥೆ ಇನ್ನೂ ಜೀವಂತವಾಗಿದ್ದು,ಬಹು ಸಂಖ್ಯಾತ ಶ್ರೀಮಂತರು ಪ್ರಭುತ್ವದ ಜೊತೆಗಿದ್ದಾರೆ.ನಗರಗಳ ಅಕ್ಷರಸ್ಥ ಮಾಧ್ಯಮ ವರ್ಗಕ್ಕೆ ಫ್ಯಾಶಿಸಂ ಅಂದರೆ ಏನೆಂದೇ ಗೊತ್ತಿಲ್ಲ. ತಿಳಿದುಕೊಳ್ಳುವ ಆಸಕ್ತಿಯೂ ಇಲ್ಲ. ಅಂತಿಮವಾಗಿ ಅವರು ನಿಲ್ಲುವುದು ಫ್ಯಾಶಿಸ್ಟ್ ಶಕ್ತಿಗಳ ಜೊತೆಗೇ. ಮಧ್ಯಮ ವರ್ಗ,ಕೆಳಮಧ್ಯಮ ವರ್ಗದ ಜೊತೆಗೆ ಕಾರ್ಮಿಕ ವರ್ಗವನ್ನೂ ತನ್ನ ತೆಕ್ಕೆಗೆ ಸೆಳೆದುಕೊಳ್ಳಲು ಫ್ಯಾಶಿಸಂ ಪ್ರಯತ್ನಿಸುತ್ತದೆ. ಈ ವರ್ಗಗಳನ್ನು ಒಳಗೊಳ್ಳುತ್ತಿರುವ ಇಲ್ಲಿನ ಆರೆಸ್ಸೆಸ್ ಎಂಬುದು ಮುಸ್ಸೋಲಿನಿ ಕಟ್ಟಿದ ಬ್ಲಾ ್ಯಕ್ ಶರ್ಟ್ ಪಡೆಯನ್ನು ನೇರವಾಗಿ ಹೋಲುತ್ತದೆ ಎಂಬುದನ್ನು ಗಮನಿಸಬೇಕು.ಬ್ಲಾ ್ಯಕ್ ಶರ್ಟ್ ಪಡೆಯಲ್ಲಿ ಇದ್ದುದೂ ಆ ಕಾಲದ ಇಟಲಿಯ ಬಡ ಯುವಕರೇ.ಮುಸ್ಸೋಲಿನಿ ಅಧಿಕಾರಕ್ಕೆ ಬರಲು ಕಾರಣರಾದವರೇ ಈ ಬ್ಲಾ ್ಯಕ್ ಶರ್ಟ್ ಎಂಬ ಆರೆ ಸೈನಿಕ ಪಡೆ. ಫ್ಯಾಶಿಸಂ ನ ಬೆಳವಣಿಗೆಗೆ ಬಡವರು ಸೇರಿದಂತೆ ಸಾಮಾನ್ಯ ಪ್ರಜೆಗಳ ಒಪ್ಪಿಗೆ ಪಡೆವ ಈ ವಿಚಿತ್ರ ವಿದ್ಯಮಾನವನ್ನು ಮೊದಲು ಗುರುತಿಸಿದವನೆಂದರೆ ಗ್ರಾಮ್ಶಿ. ಪ್ರಭುತ್ವದ ಯಜಮಾನಿಕೆಯನ್ನು ಒಮ್ಮೆ ಪ್ರಜೆಗಳು ಕಣ್ಣುಮುಚ್ಚಿ ಒಪ್ಪಿಕೊಂಡರೆ ಫ್ಯಾಶಿಸಂ ಸ್ಥಾಪನೆ ತೀರಾ ಸುಲಭವಾಗಿ ಬಿಡುತ್ತದೆ ಎಂದು ಅವನು ಹೇಳಿದ.ಪ್ರಸ್ತುತ ಭಾರತದಲ್ಲಿ ಆಗುತ್ತಿರುವುದೂ ಅದೇ. ಭಾರತದ ಮಟ್ಟಿಗೆ ಈ ವಿದ್ಯಮಾನ 1990ರಿಂದ ಶುರುವಾಯಿತು. ಕಳೆದ ಹತ್ತು ವರ್ಷಗಳಿಂದ ಇನ್ನಷ್ಟು ವೇಗವನ್ನು ಪಡೆದುಕೊಂಡಿದೆ. ಗುಜರಾತ್ ಹಿಂಸಾಕಾಂಡ ಮತ್ತು ರಾಮ ಜನ್ಮ ಭೂಮಿ ಚಳವಳಿ ಜನಸಾಮಾನ್ಯರನ್ನು ಒಳಗೊಂಡ ರೀತಿಯಲ್ಲಿ ಇದನ್ನು ನೋಡಬಹುದು. ಜೊತೆಗೆ ಖಾಸಗೀಕರಣ ಮತ್ತು ಉದಾರೀಕರಣಗಳು ಸ್ವರ್ಗವನ್ನೇ ಭೂಮಿಗೆ ತರಲಿವೆ ಎಂಬ ಭ್ರಮೆಯನ್ನು ಯುವಕರಲ್ಲಿ ಸಾರ್ವತ್ರಿಕವಾಗಿ ಹರಡಲಾಗಿದೆ. ಬುದ್ಧಿಜೀವಿಗಳು ಏನು ಮಾಡಬಹುದು?: ಅತ್ಯಂತ ನಿರಾಶಾದಾಯಕ ಸನ್ನಿವೇಶ ಇದು.ಇಂತಹ ಸನ್ನಿವೇಶದಲ್ಲಿ ನಾವೆಲ್ಲರೂ ಸೂಕ್ಷ್ಮಜ್ಞರಾಗಿರಬೇಕು ಎಂದು ಹೇಳುವುದು ಬಹಳ ಸುಲಭ. ಹಾಗೆ ನೋಡಿದರೆ ಮುಸ್ಸೋಲಿನಿ ಮತ್ತು ಹಿಟ್ಲರ್ ಸೂಕ್ಷ್ಮಜ್ಞರೇ ಆಗಿದ್ದರು. ಆರಂಭದಲ್ಲಿ ಹೇಳಿರುವಂತೆ, ಮುಸ್ಸೋಲಿನಿ ಸೋಷಿಯಲಿಸ್ಟ್ ಪಕ್ಷದ ನಾಯಕನಾಗಿದ್ದ. ಗ್ರಾಮ್ಶಿಯ ಜೊತೆಗಿದ್ದ. ಹೇಗೆ ಬದಲಾಗಿ ಬಿಟ್ಟ! ಹಿಟ್ಲರ್ ಕೂಡ ಒಬ್ಬ ವರ್ಣ ಚಿತ್ರ ಕಲಾವಿದನಾಗಿದ್ದ. ಬಿಥೋವನ್ ಸಂಗೀತ ಕೇಳುತ್ತಾ ಕಣ್ಣೀರು ಹಾಕುತ್ತಿದ್ದ. ಫ್ಯಾಶಿಸ್ಟರು ಕೂಡ ಆರ್ಥಿಕ, ಸಾಮಾಜಿಕ ಸಂದರ್ಭದ ಉತ್ಪನ್ನಗಳೇ ಸರಿ. ನಾಝಿ ವ್ಯವಸ್ಥೆ ಕೂಡ,ಅಂದಿನ ಚಾರಿತ್ರಿಕ ಘಟ್ಟದಲ್ಲಿ ಜರ್ಮನ್ ಬಂಡವಾಳಶಾಹಿ ವ್ಯವಸ್ಥೆ ಎದುರಿಸಿದ ಬಿಕ್ಕಟ್ಟಿನಿಂದ ತಪ್ಪಿಸಿಕೊಳ್ಳಲು ಪ್ರಭುತ್ವ ನಿಯಂತ್ರಣವನ್ನು ಅನುಸರಿಸಿತು ಎಂಬ ಮಾತಿದೆ. ಈಗ ತಿರುಗಿ ನೋಡಿದರೆ, ಅವರ ಹೀನಾಯ ಅಂತ್ಯದ ಬಗ್ಗೆ ಸಂಭ್ರಮ ಪಡುವಂಥದ್ದೇನೂ ಇಲ್ಲ. ಈಗಿನ ಮುಖ್ಯವಾದ ಪ್ರಶ್ನೆಯೆಂದರೆ, ಫ್ಯಾಶಿಸಂ ಅನ್ನು ತಡೆಯುವುದು ಹೇಗೆ ಎಂಬುದು. ಇದು ಅತ್ಯಂತ ನಿರಾಶೆಯ ಕಾಲ. ಚಾರಿತ್ರಿಕ ಬಿಕ್ಕಟ್ಟಿನ ಕಾಲ.ಫ್ಯಾಶಿಸಂ ಜನರ ಬೆಂಬಲವನ್ನು ವೇಗವಾಗಿ ಗಳಿಸಿಕೊಳ್ಳುತ್ತಿದೆ.ಮಾಧ್ಯಮಗಳು ಮತ್ತು ಹುಸಿ ಬುದ್ಧಿಜೀವಿ ಬರಹಗಾರರು ಆಗಲೇ ಗೆರೆಯ ಆಚೆ ಬದಿ ಹೋಗಿಬಿಟ್ಟಿದ್ದಾರೆ. ಎಲ್ಲ ಬಗೆಯ ಫ್ಯಾಶಿಸ್ಟ್ ಶಕ್ತಿಗಳಿಗೆ ತಮ್ಮನ್ನು ತಾವು ಮಾರಿಕೊಂಡು ಬಿಟ್ಟಿದ್ದಾರೆ.ಉಳಿದಂತೆ,ಅಳಿದುಳಿದ ಸಾಂಪ್ರದಾಯಿಕ ಬುದ್ಧಿಜೀವಿಗಳು ವ್ಯಕ್ತಿವಾದದ ಹೆಸರಿನಲ್ಲಿ ಪ್ರಭುತ್ವ ನೀಡುವ ಸಣ್ಣಪುಟ್ಟ ಆಮಿಷಗಳಿಗೆ ಸುಲಭದಲ್ಲಿ ಬಲಿಯಾಗುತ್ತಿದ್ದಾರೆ. ಬುದ್ಧಿಜೀವಿ ಬರಹಗಾರರ ಮಾತು ಹಾಗಿರಲಿ.ಸಮಾಜವಾದಿ ಪಕ್ಷಗಳ ಪತನ ಸಣ್ಣದೇನಲ್ಲ.ಬಂಡವಾಳದ ಸಮರ್ಥ ನಿರ್ವಹಣೆಯೇ ತಮ್ಮ ಗುರಿ ಎಂದು ಯೋಚಿಸಿದ ದಿನದಿಂದಲೇ ಸಮಾಜವಾದಿಗಳು, ಬಲಪಂಥೀಯ ಶಕ್ತಿಗಳ ವಶವರ್ತಿಯಾಗಿಬಿಟ್ಟಿದ್ದರು. ಅದರ ಪರಿಣಾಮವಾಗಿಯೇ ಆ ಎಲ್ಲ ಪಕ್ಷಗಳು ಛಿದ್ರವಾಗಿ ಹೋದುವು. ಬಂಡವಾಳಶಾಹಿ ವ್ಯವಸ್ಥೆ ಕಾರ್ಮಿಕರ ಸರಕಾರದ ಅಡಿ ಈಗಿರುವುದಕ್ಕಿಂತ ಚೆನ್ನಾಗಿ ನಡೆದೀತು ಎಂದು ಯೋಚಿಸುವುದೇ ಒಂದು ವಿರೋಧಾಭಾಸ ಎಂಬುದನ್ನೂ ಕಮ್ಯುನಿಷ್ಟರು ಆದಷ್ಟು ಬೇಗ ಅರಿಯಬೇಕಾಗಿದೆ.ಇದು ಎಂಥ ಬಿಕ್ಕಟ್ಟಿನ ಕಾಲವೆಂದರೆ, ಹೋರಾಟದ ಸಂದರ್ಭದಲ್ಲಿಯೂ ಇಲ್ಲಿ ಎಲ್ಲ ಫ್ಯಾಶಿಸ್ಟ್ ವಿರೋಧಿ ಶಕ್ತಿಗಳ ನಡುವೆ ಒಮ್ಮತ ಮೂಡುವುದು ಸಾಧ್ಯವಾಗುತ್ತಿಲ್ಲ. ಆದರೂ ಇದು ನಿರಾಶೆಯಿಂದ ಕೈಕಟ್ಟಿ ಕುಳಿತುಕೊಳ್ಳುವ ಸಮಯವಲ್ಲ. ಫ್ಯಾಶಿಸಂ ವಿರುದ್ಧದ ಹೋರಾಟ ಎಂಬುದು ಮುಖ್ಯವಾಗಿ ಒಂದು ರಾಜಕೀಯ ಪ್ರಶ್ನೆ.ಇದನ್ನು ಎಲ್ಲ ಹೋರಾಟಗಾರರೂ ಅರಿತುಕೊಳ್ಳಬೇಕಾಗಿದೆ. ಸದ್ಯದ ಸ್ಥಿತಿಯ ಸಮಗ್ರ ಅರಿವಿನಿಂದ ನಡೆಯಬೇಕಾದ ಹೋರಾಟವಿದು. ಇದರಲ್ಲಿ ತಮ್ಮ ಪಾತ್ರವೂ ಇದೆ ಎಂಬುದನ್ನು ಬುದ್ಧಿಜೀವಿ ಬರಹಗಾರರೂ ಅರಿತುಕೊಳ್ಳಬೇಕಾಗಿದೆ. ನಿಜವಾದ ಬುದ್ಧಿಜೀವಿ ಬರಹಗಾರ ಇಂದಿನ ಈ ಸ್ಥಿತಿಯನ್ನು ಬದಲಾಯಿಸಲು ಹೋರಾಡುವ ಸಂಕಲ್ಪವನ್ನು ತೊಡಬೇಕಾಗಿದೆ. ಸುಖೀರಾಜ್ಯದ ಕಲ್ಪನೆಯೇ ಬಿಕ್ಕಟ್ಟಿಗೆ ಸಿಲುಕಿರುವಾಗ, ಫ್ಯಾಶಿಸ್ಟ್ ಪ್ರಭುತ್ವದ ಸೆರಗಿನೊಳಗೆ ಸೇರಿಕೊಳ್ಳುವ ಅವಕಾಶವಾದಿ ನಿಲುವು ಆತ್ಮಘಾತಕವೇ ಸರಿ.

ವಾರ್ತಾ ಭಾರತಿ 8 Feb 2026 12:34 pm

ಪ್ರಾಧ್ಯಾಪಕರೇ ಜಾತಿ ಭೂತದಲ್ಲಿ ಸಿಲುಕಿದರೆ ವಿವಿಗಳನ್ನು ಕಾಪಾಡುವವರು ಯಾರು?!

ವಿದ್ಯಾರ್ಥಿಗಳು ವಿಶ್ವವಿದ್ಯಾನಿಲಯದ ಕ್ಯಾಂಪಸ್ಗೆ ಕಾಲಿಟ್ಟಾಗ ಅವರ ಮುಂದೆ ಕಾಣುವ ಮೊದಲ ದೊಡ್ಡ ಪ್ರಭಾವಶಾಲಿ ವ್ಯಕ್ತಿತ್ವ ಎಂದರೆ ಅದು ಅಲ್ಲಿನ ಪ್ರಾಧ್ಯಾಪಕರು. ಅವರು ಕಲಿಸುವ ಪಾಠಕ್ಕಿಂತಲೂ ಹೆಚ್ಚಾಗಿ, ಅವರ ನಡೆ-ನುಡಿ, ಮೌಲ್ಯಮಾಪನ ವಿಧಾನ, ಅವಕಾಶ ನೀಡುವ ಕ್ರಮ ಮತ್ತು ಮಾರ್ಗದರ್ಶನ ವಿದ್ಯಾರ್ಥಿಯ ಆತ್ಮವಿಶ್ವಾಸವನ್ನು ರೂಪಿಸುತ್ತದೆ. ಆದರೆ ಇಂದು ಕಾಲೇಜು ಮತ್ತು ವಿವಿಗಳಲ್ಲಿ ಹೆಚ್ಚಿನ (ಎಲ್ಲರೂ ಅಲ್ಲ) ಪ್ರಾಧ್ಯಾಪಕರೇ ಜಾತಿ ಭೂತದ ಒಳಗೆ ಸಿಲುಕಿಕೊಂಡಿದ್ದಾರೆ. ವಿವಿಗಳೇ ದೊಡ್ಡ ಜಾತಿ ಕೂಪಗಳಾಗಿವೆ. ವಿವಿಗಳಲ್ಲಿ ಜಾತಿ ಹೊರಗೆ ಕಾಣುವಷ್ಟು ಗದ್ದಲದ ರೂಪದಲ್ಲೇ ಇರಬೇಕೆಂದಿಲ್ಲ; ಬಹುತೇಕ ‘ಸಂಸ್ಕೃತಿ’, ‘ಶಿಸ್ತು’, ‘ಮೆರಿಟ್’, ‘ಸ್ಟ್ಯಾಂಡರ್ಡ್’ ಎಂಬ ಸುಂದರ ಪದಗಳ ಒಳಗೇ ಅಡಗಿಕೊಂಡು ನಿಧಾನವಾಗಿ ಗೊತ್ತಿಲ್ಲದಂತೆ ಕೆಲಸ ಮಾಡುತ್ತದೆ. ನಾವು ಜಾತಿ ಸಮಸ್ಯೆಯನ್ನು ‘ಹಳ್ಳಿಯ ಸಮಸ್ಯೆ’ ಎಂದು ಬಿಟ್ಟು ಮುಂದೆ ಹೋಗುವ ಕಾಲ ಮುಗಿದಿದೆ; ಅದು ಕ್ಯಾಂಪಸ್ನೊಳಗೂ ಇದೆ ಎಂದು ಒಪ್ಪಿಕೊಳ್ಳಬೇಕು. ಹೆಚ್ಚಿನ ಬಾರಿ ಸೌಮ್ಯ ಮಾತಿನ ಮೂಲಕ ಅಧ್ಯಯನ ವಿಭಾಗಗಳಲ್ಲಿ ವಿದ್ಯಾರ್ಥಿಗಳಿಗೆ ತನ್ನ ಸ್ಥಾನ ಕಡಿಮೆ ಎಂಬ ಭಾವನೆ ಮೂಡಿಸಲಾಗುತ್ತದೆ. ಕೆಲವೊಮ್ಮೆ ‘‘ನೀವು quota ಮೂಲಕ ಬಂದಿರಾ? ನಮ್ಮ ಗುಂಪು ಅಲ್ವ?’’ ಎಂಬ ಪ್ರಶ್ನೆಯ ರೂಪದಲ್ಲಿ ವಿದ್ಯಾರ್ಥಿಯ ಮನೋಭಾವನೆಯನ್ನು ಮೊದಲು ಕುಗ್ಗಿಸುವ ಪ್ರಯತ್ನ ನಡೆಯುತ್ತದೆ. ಕೆಲವೊಮ್ಮೆ ‘‘ನಿಮ್ಮ ಭಾಷೆ ಸರಿಯಾಗಿಲ್ಲ’’, ‘‘ನಿಮ್ಮ ಬರವಣಿಗೆ ಸರಿಯಿಲ್ಲ’’, ‘‘ನಿಮ್ಮಲ್ಲಿ ಶೈಕ್ಷಣಿಕ, ಸಂಸ್ಕೃತಿ ಇಲ್ಲ’’ ಎಂಬ ಸಾಮಾನ್ಯೀಕರಣಗಳ ಮೂಲಕ ವಿದ್ಯಾರ್ಥಿಯನ್ನು ಅಸಮರ್ಥನಂತೆ ತೋರಿಸಲಾಗುತ್ತದೆ. ಕೆಲವೊಮ್ಮೆ ಜಾತಿ ವಿಷಯವನ್ನು ‘‘ನೀವು ನಿಮ್ಮ ಹಿನ್ನೆಲೆಗೆ ತಕ್ಕಂತೆ ಹೊಂದಿಕೊಳ್ಳಬೇಕು’’ ಎಂದು ವಿದ್ಯಾರ್ಥಿಗೆ ಹೇಳುವ ಮೂಲಕ ಎಲ್ಲಾ ಜಾತಿಯ ವಿದ್ಯಾರ್ಥಿಯ ತಲೆಗೆ ತುಂಬಲಾಗುತ್ತದೆ. ಇನ್ನೂ ಕೆಲವೊಮ್ಮೆ ಜಾತಿವಾದವು ಮಾತಿನಲ್ಲೇ ಕಾಣುವುದಿಲ್ಲ; ಕೆಲವೊಮ್ಮೆ ಅದು ಪ್ರಾಧ್ಯಾಪಕರು ವಿದ್ಯಾರ್ಥಿಗಳಿಗೆ ನೀಡುವ ಅವಕಾಶಗಳ ಹಂಚಿಕೆಯಲ್ಲಿ ಕಾಣುತ್ತದೆ. ಯಾರಿಗೆ ಸೆಮಿನಾರ್ಗಳಿಗೆ ಅವಕಾಶ, ಯಾರಿಗೆ ಲೇಖನಗಳನ್ನು ಬರೆಯಲು ಅವಕಾಶ, ಯಾರಿಗೆ ಲ್ಯಾಬ್ಗಳ ಮೇಲ್ವಿಚಾರಣೆ ಅವಕಾಶ, ಯಾರಿಗೆ ವಿಭಾಗದ ಅಧ್ಯಕ್ಷರ ಬೆಂಬಲ ಇವೆಲ್ಲವೂ ಸಮಾನವಾಗಿ ನಡೆಯದೇ ಇದ್ದಾಗ ಜಾತಿಯ ಅಸಮಾನತೆ ಆ ವಿಭಾಗದ ಒಳಗೆ ನಿಧಾನವಾಗಿ ಬೇರು ಬಿಡುತ್ತದೆ ಮತ್ತು ಒಂದು ಹಂತದಲ್ಲಿ ಅದು ವಿವಿಯ ಭಾಗವಾಗಿಯೇ ಕಾಣಿಸಿಕೊಳ್ಳುತ್ತದೆ. ಇದನ್ನು ಮೇಲ್ವರ್ಗದ ವಿದ್ಯಾರ್ಥಿಗಳು ಸೇರಿದಂತೆ ಎಲ್ಲಾ ವರ್ಗದ ವಿದ್ಯಾರ್ಥಿಗಳು ಅನುಭವಿಸುತ್ತಾರೆ. ಯಾವ ಸಮಿತಿಗಳಿಂದಲೂ ಇವೆಲ್ಲವನ್ನು ಪತ್ತೆ ಹಚ್ಚಲು ಸಾಧ್ಯವಿಲ್ಲ! ವಿವಿಗಳಲ್ಲಿ ಜಾತಿವಾದದ ಮತ್ತೊಂದು ಅಪಾಯಕಾರಿ ಮುಖವೆಂದರೆ ಅದು ಮೌಲ್ಯಮಾಪನ ವ್ಯವಸ್ಥೆಯೊಳಗೆ ನುಸುಳುವುದು. ಆಂತರಿಕ ಮೌಲ್ಯಮಾಪನ, ಮೌಖಿಕ ಪರೀಕ್ಷೆ ಅಂಕಗಳು, ಪ್ರಾಕ್ಟಿಕಲ್ಸ್ ಅಂಕಗಳು, ಹಾಜರಾತಿ ಇತ್ಯಾದಿ ಬಹುತೇಕ ಶಿಕ್ಷಕರ ವೈಯಕ್ತಿಕ ನಿರ್ಧಾರಕ್ಕೆ ಬಿಟ್ಟಿರುವ ಭಾಗಗಳು. ಹೆಚ್ಚಿನ ಬಾರಿ ಇವುಗಳು ಜಾತಿ ನಿಶ್ಯಬ್ದವಾಗಿ ಕೆಲಸ ಮಾಡುತ್ತದೆ. ವಿವಿಗಳಲ್ಲಿ ಈ ವಿಚಾರಗಳಲ್ಲಿ ಪಾರದರ್ಶಕತೆ ಕಡಿಮೆ ಇದ್ದು ಜಾತಿ ಪಕ್ಷಪಾತ ಸುಲಭವಾಗಿ ಒಳ ಪ್ರವೇಶಿಸುತ್ತದೆ. ವಿದ್ಯಾರ್ಥಿಗೆ ಕಡಿಮೆ ಅಂಕ ನೀಡಿದಾಗ ಅವನು ಅಥವಾ ಅವಳು ಇದು ಅನ್ಯಾಯ ಎಂದು ಸಾಬೀತುಪಡಿಸಲು ಕಷ್ಟವಾಗುತ್ತದೆ. ಏಕೆಂದರೆ ಇದು ಶೈಕ್ಷಣಿಕ ಮೌಲ್ಯಮಾಪನ ಎಂದು ಪ್ರಾಧ್ಯಾಪಕರು ಹೇಳುತ್ತಾರೆ. ಹೀಗಾಗಿ ವಿವಿಗಳಲ್ಲಿ ಜಾತಿ ತಾರತಮ್ಯ ಕಾನೂನಾತ್ಮಕವಾಗಿ ಹಿಡಿಯಲಾಗದಷ್ಟು ಸೂಕ್ಷ್ಮವಾಗಿ ಕೆಲಸ ಮಾಡುವ ಸಾಧ್ಯತೆ ಇದೆ. ಇದರಿಂದಲೇ ಅನೇಕ ವಿದ್ಯಾರ್ಥಿಗಳ ಭವಿಷ್ಯ ಹಾಳಾಗುತ್ತದೆ ಎಂಬ ಭಯವು ಅವರ ಧ್ವನಿಯನ್ನು ನುಂಗಿಬಿಡುತ್ತದೆ. ತಾವು ಯಾರಿಗೂ ತಾರತಮ್ಯ ಮಾಡಲ್ಲ ಎಂದು ಪ್ರಾಧ್ಯಾಪಕರು ಹೇಳುತ್ತಾರೆ. ಆದರೆ ಅವರ ಕೈಯಲ್ಲಿ ಇರುವ internal marks ಮಾತ್ರ ಬೇರೆ ಭಾಷೆ ಮಾತನಾಡುತ್ತದೆ. ಪಿಎಚ್.ಡಿ./ಸಂಶೋಧನಾ ವಿದ್ಯಾರ್ಥಿ ವಿಚಾರದಲ್ಲಿ ಜಾತಿ ದೊಡ್ಡ ಟ್ರಂಪ್ ಕಾರ್ಡ್. ವಿವಿಗಳಲ್ಲಿ ಹೆಚ್ಚಿನ ಬಾರಿ ಕೆಲವು ಮಾರ್ಗದರ್ಶಕರು ತಮ್ಮ ಜಾತಿ ವಿದ್ಯಾರ್ಥಿಗಳನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ. ತನ್ನ ಮಾರ್ಗದರ್ಶಕರ ಬೆಂಬಲ ಪಡೆಯದಿದ್ದರೆ ವಿದ್ಯಾರ್ಥಿಯ ಸಂಶೋಧನೆ ದಿಕ್ಕು ತಪ್ಪುತ್ತದೆ, ಸಮಯ ವ್ಯರ್ಥವಾಗುತ್ತದೆ, ಆತ್ಮವಿಶ್ವಾಸ ಕುಸಿಯುತ್ತದೆ ಮತ್ತು ಕೆಲವೊಮ್ಮೆ ಅಧ್ಯಯನವೇ ಮಧ್ಯದಲ್ಲಿ ನಿಂತುಹೋಗುತ್ತದೆ. ಗೈಡ್ಗಳ ಜಾತಿ ಕಿತ್ತಾಟದಿಂದ ಅವರವರ ವಿದ್ಯಾರ್ಥಿಗಳು ಸಹ ಬೇರೆ ಬೇರೆ ಗುಂಪುಗಳಾಗುವ ಸಾಧ್ಯತೆ ಇರುತ್ತದೆ. ವಿಭಾಗದ ಪಿಎಚ್.ಡಿ. ಸಮಿತಿಯ ಪ್ರಾಧ್ಯಾಪಕರುಗಳ ನಡುವೆ ಒಳಗೊಳಗಿನ ಕಿತ್ತಾಟ, ಜಾತಿ ರಾಜಕೀಯ ಕೊನೆಗೆ ವಿದ್ಯಾರ್ಥಿಯ ಭವಿಷ್ಯವನ್ನೇ ಹಾಳು ಮಾಡುತ್ತಿದೆ. ‘‘ನಿಮ್ಮ ಸಂಶೋಧನಾ ಸಾಮರ್ಥ್ಯ ಕಡಿಮೆ’’ ಎಂಬ ಸಾಮಾನ್ಯೀಕರಣ ಅಥವಾ ‘‘ನೀವು ಈ ವಿಷಯಕ್ಕೆ ಸೂಕ್ತ ಅಲ್ಲ ನಿಮ್ಮ ಥೀಸಿಸ್ ವರ್ಕ್ ಸರಿಯಿಲ್ಲ’’ ಎಂಬ ತಿರಸ್ಕಾರ ಇವುಗಳೆಲ್ಲವೂ ಸಂಶೋಧನಾ ವಿದ್ಯಾರ್ಥಿಯ ಆತ್ಮವಿಶ್ವಾಸವನ್ನು ನಿಧಾನವಾಗಿ ಸದ್ದಿಲ್ಲದೆ ಕುಗ್ಗಿಸುತ್ತವೆ. ಒಂದೊಮ್ಮೆ ವಿವಿಗೆ ದೂರು ಕೊಟ್ಟರೆ ಅವರ ಗೈಡ್ ಬದಲಾವಣೆ, ರಿಸರ್ಚ್ ತಡೆ, ಮೌಲ್ಯಮಾಪನದಲ್ಲಿ ಕಿರುಕುಳ ಅಥವಾ ‘trouble maker’ ಎಂಬ ಲೇಬಲ್ ಬರುವ ಭಯ ಇರುತ್ತದೆ. ಇಂತಹ ವಿಚಾರಗಳನ್ನು ಮಾಮೂಲು ಅಥವಾ ಸಣ್ಣದು ಎಂದು ಮರೆಮಾಚುವ ಪ್ರವೃತ್ತಿ ಹೆಚ್ಚಾಗಿರುತ್ತದೆ. ಕೆಲವೊಮ್ಮೆ ಸಂಸ್ಥೆಗಳು ತಮ್ಮ ಪ್ರತಿಷ್ಠೆ ಉಳಿಸಲು ಸಮಸ್ಯೆಯನ್ನೇ ನಿರಾಕರಿಸುತ್ತವೆ. ‘‘ನಮ್ಮ ಕ್ಯಾಂಪಸ್ನಲ್ಲಿ ತಾರತಮ್ಯ ಇಲ್ಲ’’ ಎಂಬ ಮಾತು ಸಮಸ್ಯೆ ಪರಿಹಾರವಲ್ಲ; ಅದು ಸಮಸ್ಯೆಯನ್ನು ಮುಚ್ಚಿಹಾಕುವ ಪ್ರಯತ್ನ ಎನ್ನಬಹುದು. ಇಂತಹ ಅನುಭವಗಳು ಒಬ್ಬ ವಿದ್ಯಾರ್ಥಿಯ ಜೀವನಕ್ಕೆ ಮಾತ್ರವಲ್ಲ, ಒಂದು ಸಮುದಾಯದ ಶಿಕ್ಷಣ ಪ್ರಗತಿಗೂ ದೊಡ್ಡ ಹಿನ್ನಡೆಯಾಗಿ ಪರಿಣಮಿಸುತ್ತವೆ. ಅಲ್ಪಸಂಖ್ಯಾತ ಅಥವಾ ದಮನಿತ ಹಿನ್ನೆಲೆಯಿಂದ ಬಂದ ವಿದ್ಯಾರ್ಥಿಗಳು ಈಗಾಗಲೇ ಸಾಮಾಜಿಕ-ಆರ್ಥಿಕ ಸವಾಲುಗಳನ್ನು ಎದುರಿಸಿಕೊಂಡು ಬಂದಿರುತ್ತಾರೆ. ಅವರಿಗೆ ಕ್ಯಾಂಪಸ್ನಲ್ಲಿ ಸಮಾನ ಅವಕಾಶ ಸಿಗಬೇಕಾದರೆ, ಪ್ರಾಧ್ಯಾಪಕರಿಂದ ಬೆಂಬಲ ಮತ್ತು ನ್ಯಾಯ ಅತ್ಯಂತ ಮುಖ್ಯ. ಆದರೆ ಇಲ್ಲಿ ಕೆಲವು ಪ್ರಾಧ್ಯಾಪಕರೇ ದೊಡ್ಡ ಸಮಸ್ಯೆಯಾಗುತ್ತಾರೆ. ಇಂತಹ ವರ್ತನೆಗಳನ್ನು ಇದು ಅವರ ವೈಯಕ್ತಿಕ ಅಭಿಪ್ರಾಯ ಎಂದು ಬಿಡಬಾರದು, ಏಕೆಂದರೆ ಜಾತಿಯ ಬಗೆಗಿನ ಶಿಕ್ಷಕನ ವೈಯಕ್ತಿಕ ಅಭಿಪ್ರಾಯ ತರಗತಿಯಲ್ಲಿ ತುಂಬಾ ಶಕ್ತಿಯುತವಾಗಿ ಕೆಲಸ ಮಾಡುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಪ್ರಶ್ನೆ ಏನೆಂದರೆ, ಜಾತಿವಾದವು ವಿವಿಗಳ ಕ್ಯಾಂಪಸ್ನಲ್ಲಿ ಏಕೆ ಗಟ್ಟಿಯಾಗಿ ಉಳಿಯುತ್ತಿದೆ? ಕಾರಣ ಒಂದೇ ಅಲ್ಲ. ಮೊದಲನೆಯದು, ನಮ್ಮ ಸಮಾಜದ ಜಾತಿ ಮನಸ್ಥಿತಿ ಕ್ಯಾಂಪಸ್ ಗೇಟ್ ಬಳಿ ನಿಲ್ಲುವುದಿಲ್ಲ; ಅದು ಒಳಗೂ ವೇಗವಾಗಿ ಬರುತ್ತದೆ ಮತ್ತು ಕೆಲವೊಮ್ಮೆ ಶೈಕ್ಷಣಿಕ ಎನ್ನುವ ವೇಷ ಹಾಕಿಕೊಂಡು ಇನ್ನಷ್ಟು ಬಲವಾಗಿ ಕಾರ್ಯನಿರ್ವಹಿಸುತ್ತದೆ. ಎರಡನೆಯದು, ಸಂಸ್ಥೆಗಳಲ್ಲಿನ ಅಧಿಕಾರ ವ್ಯವಸ್ಥೆ ಮತ್ತು ಗುಂಪುಗಾರಿಕೆ. ಕೆಲವೊಮ್ಮೆ ವಿಭಾಗಗಳಲ್ಲಿ ಒಂದು ನಿರ್ದಿಷ್ಟ ಗುಂಪಿನ ಪ್ರಭಾವ ಹೆಚ್ಚಾಗಿರುತ್ತದೆ. ಅವರು ನೇಮಕಾತಿ, ಪಾಠ ಪ್ರವಚನ, ತರಗತಿಗಳ ಹಂಚಿಕೆ, ಕಮಿಟಿಗಳು ಹೀಗೆ ವಿಭಾಗದ ಒಳಗೆ ಎಲ್ಲದರ ಮೇಲೂ ಹಿಡಿತ ಇಟ್ಟುಕೊಳ್ಳುತ್ತಾರೆ. ಒಂದು ಅಧ್ಯಯನ ವಿಭಾಗದಲ್ಲಿ ನೂರೆಂಟು ಗುಂಪುಗಳಿರುತ್ತವೆ. ಹೆಚ್ಚಿನ ಬಾರಿ ವಿದ್ಯಾರ್ಥಿಗಳು ಅಥವಾ ಕಿರಿಯ ಪ್ರಾಧ್ಯಾಪಕರು ಜಾತಿ ಆಧಾರಿತ ಅವಮಾನ ಅನುಭವಿಸಿದರೂ ದೂರು ಕೊಡಲು ಹೆದರುತ್ತಾರೆ. ಇದಕ್ಕೆಲ್ಲ ಯುಜಿಸಿಯ ಬಳಿ ಔಷದಿ ಇದೆಯೇ? ಇರುವುದಿಲ್ಲ. ಬದಲಾಗಿ ಯುಜಿಸಿ ಇನ್ನೊಂದಿಷ್ಟು ಕ್ರಮಗಳನ್ನು ಕೈಗೊಳ್ಳಬಹುದು. ಎಲ್ಲಾ ವಿವಿಗಳು ‘Faculty Behaviour & Ethics Code’ ಎಂಬ ಸ್ಪಷ್ಟ ಸಂಹಿತೆಯನ್ನು ರೂಪಿಸಬೇಕು. ಮೊದಲನೆಯದಾಗಿ ‘ಕ್ಯಾಂಪಸ್ ಸಮಾನತೆ ಆಡಿಟ್’ (Equity Audit) ಎಂಬ ವ್ಯವಸ್ಥೆಯನ್ನು ಜಾರಿಗೆ ತರಬೇಕು. ಈಗ ಕಾಲೇಜುಗಳಿಗೆ ನ್ಯಾಕ್ ಅಂಕಗಳು ಇವೆ. ಆದರೆ ‘ಸಮಾನತೆ ಸೂಚ್ಯಂಕ’ (Equity Index) ಎಲ್ಲಿದೆ ಎಂಬ ಪ್ರಶ್ನೆ ಬಹಳ ಮುಖ್ಯ. ಪ್ರತೀ ಸಂಸ್ಥೆಯಲ್ಲೂ ವರ್ಷಕ್ಕೊಮ್ಮೆ ‘ಜಾತಿ ವಿರೋಧಿ ಮತ್ತು ಒಳಗೊಳ್ಳುವಿಕೆಯ ವರದಿ’ ಕಡ್ಡಾಯವಾಗಬೇಕು ಮತ್ತು ಅದು ಕೇವಲ ವಿವಿಯ ವೆಬ್ಸೈಟ್ನಲ್ಲಿ ಹಾಕಿ ಮುಗಿಸುವ ಕೆಲಸವಾಗಬಾರದು; ಅದರ ಮೇಲೆ ಥರ್ಡ್ ಪಾರ್ಟಿ ಪರಿಶೀಲನೆ ನಡೆಯಬೇಕು. ಇದೇ ರೀತಿಯಲ್ಲಿ ಯುಜಿಸಿಯು ‘Anonymous Complaint & Protection System’ ಅನ್ನು ಬಲಪಡಿಸಬೇಕು. ಅನೇಕ ವಿದ್ಯಾರ್ಥಿಗಳು ಅವಮಾನ ಅನುಭವಿಸಿದರೂ ದೂರು ಕೊಡಲು ಹೆದರುತ್ತಾರೆ. ಇದರಿಂದ ದೂರು ಕೊಟ್ಟವರ ರಕ್ಷಣೆ, ಸಮಯಕ್ಕೆ ಸರಿಯಾಗಿ ತನಿಖೆ ಮತ್ತು ತಾರತಮ್ಯದ ವಿರುದ್ಧ ಶೂನ್ಯ ಸಹಿಷ್ಣುತೆ ಸಾಧ್ಯ. ಕ್ಯಾಂಪಸ್ನ ಜಾತಿ ತಾರತಮ್ಯದ ವಿಚಾರ ಕುರಿತು ಪ್ರಾಧ್ಯಾಪಕರುಗಳಿಗೆ ಕಾರ್ಯಾಗಾರಗಳನ್ನು ಕಡ್ಡಾಯ ಮಾಡಬೇಕು. ಇಂತಹವುಗಳನ್ನು ಹೆಚ್ಚಿನ ಪ್ರಾಧ್ಯಾಪಕರು ವ್ಯರ್ಥ ಪ್ರಯತ್ನ ಎಂದುಕೊಳ್ಳುತ್ತಾರೆ, ಆದರೆ ತರಬೇತಿ ಎಂದರೆ ಉಪದೇಶವಲ್ಲ; ಅದು ಮನಸ್ಥಿತಿ ಬದಲಾವಣೆ. ಮೆರಿಟ್ ಎಂಬ ಪದವನ್ನು ಜಾತಿ ಮುಚ್ಚಿಕೊಳ್ಳಲು ಬಳಸುವ ಪ್ರವೃತ್ತಿ, ಸಂಸ್ಕೃತಿ ಎಂಬ ಹೆಸರಿನಲ್ಲಿ ಹೊರಗುಳಿಸುವಿಕೆ, ಅನುಭವ ಎಂಬ ಹೆಸರಿನಲ್ಲಿ ಅವಕಾಶ ಕಸಿದುಕೊಳ್ಳುವುದು-ಇವೆಲ್ಲವನ್ನು ಗುರುತಿಸಿ ತಡೆಗಟ್ಟಲು ಇಂತಹ ತರಬೇತಿ ಸಹಾಯ ಮಾಡುತ್ತದೆ. ಕೆಲವು ಪ್ರಾಧ್ಯಾಪಕರು ತಮ್ಮ ಜ್ಞಾನ ಹೆಚ್ಚಿಸಿಕೊಳ್ಳಲು ವರ್ಷಕ್ಕೆ ಒಂದು ಸೆಮಿನಾರ್ಗಳಿಗೆ ಹೋಗುವುದಿಲ್ಲ, ಆದರೆ ತಮ್ಮ ಪೂರ್ವಗ್ರಹ ವಿಚಾರಗಳನ್ನು ಅಪ್ಡೇಟ್ ಮಾಡಿಕೊಳ್ಳಲು ದಿನಕ್ಕೆ ಮೂರು ಬಾರಿ ಮೀಟಿಂಗ್ ಮಾಡುತ್ತಾರೆ. ಆದ್ದರಿಂದ ತರಬೇತಿ ಅಂದರೆ ಯಾರನ್ನೋ ಬದಲಾಯಿಸಲು ಅಲ್ಲ, ನಮ್ಮನ್ನು ನಾವು ಸರಿಪಡಿಸಿಕೊಳ್ಳಲು ಎಂಬ ಸಂದೇಶವಾಗಬೇಕು. ಅಲ್ಲದೆ ಪ್ರತೀ ವಿಶ್ವವಿದ್ಯಾನಿಲಯದಲ್ಲಿ Mentorship & Inclusion Cells ಅನ್ನು ಕಾರ್ಯನಿರ್ವಹಿಸುವಂತೆ ಮಾಡುವುದು. ಎಲ್ಲಾ ವರ್ಗದ ವಿದ್ಯಾರ್ಥಿಗಳಿಗೆ ಮಾರ್ಗದರ್ಶಕ ವ್ಯವಸ್ಥೆ ಇದ್ದರೆ, ಅವರು ಎದುರಿಸುವ ಅಕಾಡಮಿಕ್ ಹಾಗೂ ಸಾಮಾಜಿಕ ಅಡಚಣೆಗಳನ್ನು ದಾಟಲು ಸಹಾಯವಾಗುತ್ತದೆ. ಜೊತೆಗೆ ವಿವಿಯು ಬೋಧನೇತರ ಹುದ್ದೆಗಳನ್ನು ಹಂಚುವಾಗ ಪಾರದರ್ಶಕತೆ ತರಬೇಕು. ಕೆಲವೊಮ್ಮೆ ಜಾತಿವಾದವು ನೇರವಾಗಿ ‘ನೀನು ಕಡಿಮೆ’ ಎಂದು ಹೇಳುವುದಿಲ್ಲ; ಅದು ‘ನಿನಗೆ ಅವಕಾಶವೇ ಕೊಡಲ್ಲ’ ಎಂಬ ರೀತಿಯಲ್ಲಿ ಕೆಲಸ ಮಾಡುತ್ತದೆ. ಅದಕ್ಕೆ ಪರಿಹಾರ ಪಾರದರ್ಶಕತೆ ಮಾತ್ರ. ಜಾತಿ ತಾರತಮ್ಯವನ್ನು ಕೇವಲ ಶಿಸ್ತು ಕ್ರಮ, ಎಚ್ಚರಿಕೆ, ಕಾನೂನು ಕ್ರಮ ಇತ್ಯಾದಿಗಳಿಂದ ಸರಿ ಮಾಡಲು ಸಾಧ್ಯವಿಲ್ಲ. ಇಲ್ಲಿ ಸೂಕ್ಷ್ಮತೆ ಮತ್ತು ಅರಿವು ಬಹಳ ಮುಖ್ಯ. ಪ್ರಾಧ್ಯಾಪಕರು ಸಮಾಜವನ್ನು ಬದಲಾಯಿಸುವ ಶಕ್ತಿ ಹೊಂದಿದ್ದಾರೆ; ಆದ್ದರಿಂದ ಅವರು ಮೊದಲು ತಮ್ಮ ಮನಸ್ಥಿತಿಯನ್ನು ಬದಲಾಯಿಸಿಕೊಳ್ಳಬೇಕು. ನಮ್ಮ ದೇಶದಲ್ಲಿ ಸಮಿತಿಗಳ ವರದಿಗಳು ಅಷ್ಟು ವೇಗವಾಗಿ ಬರುತ್ತವೆ ಎಂದರೆ, ಕೆಲವೊಮ್ಮೆ ಸಮಸ್ಯೆ ಪರಿಹಾರಕ್ಕಿಂತ ವರದಿ ಸಂಗ್ರಹವೇ ದೊಡ್ಡ ಸಾಧನೆಯಂತೆ ಕಾಣುತ್ತದೆ. ಭಾರತದ ವಿವಿಗಳಲ್ಲಿ ಜಾತಿ ಕೇವಲ ಆಡಳಿತಾತ್ಮಕ ಸಮಸ್ಯೆಯಲ್ಲ; ಅದು ಸಾಮಾಜಿಕ ಮನಸ್ಥಿತಿ, ಸಂಸ್ಥೆಯ ಸಂಸ್ಕೃತಿ ಮತ್ತು ಅಧ್ಯಾಪಕರ ಮನೋಭಾವದ ಸಮಸ್ಯೆ.

ವಾರ್ತಾ ಭಾರತಿ 8 Feb 2026 12:29 pm

ದ್ವಿರಾಷ್ಟ್ರ ಸಿದ್ದಂತದ ಅಪರಾಧಿಗಳು

ಎಲ್ಲಾ ಹಿಂದೂ ನಾಯಕರು ದೇಶಭಕ್ತರಾಗಿರಲಿಲ್ಲ ಮತ್ತು ಅದೇ ರೀತಿ ಎಲ್ಲಾ ಮುಸ್ಲಿಮರೂ ದೇಶವಿರೋಧಿಗಳಾಗಿರಲಿಲ್ಲ. ಹೆಚ್ಚಿನ ಮುಸ್ಲಿಮ್ ವ್ಯಕ್ತಿಗಳು ಮತ್ತು ಮುಸ್ಲಿಮ್ ಸಾಮುದಾಯಿಕ ಸಂಸ್ಥೆಗಳು ಹಾಗೂ ಸಂಘಟನೆಗಳು ದ್ವಿರಾಷ್ಟ್ರ ಸಿದ್ಧಾಂತ ಮತ್ತು ಪಾಕಿಸ್ತಾನದ ಸೃಷ್ಟಿಯ ವಿರೋಧಿಗಳಾಗಿದ್ದರು. ಅವರು ತಮ್ಮ ಸರ್ವಸ್ವವನ್ನೂ ಪಣಕ್ಕಿಟ್ಟು ಪ್ರತ್ಯೇಕತಾವಾದವನ್ನು ವಿರೋಧಿಸಿ ಹೋರಾಡಿದ್ದರು. ಈ ಹೋರಾಟದಲ್ಲಿ ಅದೆಷ್ಟೋ ಮಂದಿ ತಮ್ಮ ಪ್ರಾಣಗಳನ್ನೂ ತ್ಯಾಗ ಮಾಡಿದ್ದರು. ಅತ್ಯಂತ ದುಃಖಕರ ಸಂಗತಿಯೆಂದರೆ, ದ್ವಿರಾಷ್ಟ್ರ ಸಿದ್ಧಾಂತದ ರಾಜಕೀಯವನ್ನು ಆನುವಂಶಿಕವಾಗಿ ಪಡೆದ ಹಿಂದೂ ರಾಷ್ಟ್ರೀಯವಾದಿಗಳ ವಾರಸುದಾರರೇ ಇಂದು ಭಾರತವನ್ನು ಆಳುತ್ತಿದ್ದಾರೆ. ಡಾ. ಶಂಸುಲ್ ಇಸ್ಲಾಮ್ ದೇಶದ ಖ್ಯಾತ ರಾಜಕೀಯ ವಿಜ್ಞಾನಿ ಹಾಗೂ ದಿಲ್ಲಿ ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕರು. ಅಪಾರ ಅಧ್ಯಯನ, ವಿದ್ವತ್ತು ಹಾಗೂ ಹೋರಾಡುವ ಛಲ ಇವೆಲ್ಲವೂ ಸೇರಿದರೆ ಶಂಸುಲ್ ಇಸ್ಲಾಮ್ ಸಿಗುತ್ತಾರೆ. ಭಾರತದ ರಾಷ್ಟ್ರೀಯತೆ, ಕೋಮುವಾದ ಹಾಗೂ ಬಲಪಂಥೀಯ ರಾಜಕೀಯದ ಬೆಳವಣಿಗೆಗಳ ಕುರಿತು ಅಧಿಕಾರಯುತವಾಗಿ ಬರೆಯಬಲ್ಲವರು ಹಾಗೂ ಮಾತಾಡಬಲ್ಲವರು ಡಾ. ಶಂಸುಲ್ ಇಸ್ಲಾಮ್. ಆರೆಸ್ಸೆಸ್ ನ ಉದಯ, ಉದ್ದೇಶ, ಬೆಳವಣಿಗೆ ಹಾಗೂ ಅದರ ರಾಜಕೀಯದ ಬಗ್ಗೆ ಅವರಷ್ಟು ವಿವರವಾಗಿ, ಗಾಢವಾಗಿ ತಿಳಿದುಕೊಂಡ ವಿದ್ವಾಂಸರು ತೀರಾ ವಿರಳ. ಆರೆಸ್ಸೆಸ್ ಕುರಿತು ಹಲವಾರು ಮಹತ್ವದ ಕೃತಿಗಳನ್ನು ರಚಿಸಿದ್ದಾರೆ. ದೇಶದ ಸೌಹಾರ್ದ ಪರಂಪರೆ ಹಾಗೂ ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಎತ್ತಿ ಹಿಡಿಯುವ ಹಾಗು ದ್ವೇಷ ರಾಜಕೀಯವನ್ನು ವಿರೋಧಿಸುವ ಕೆಲಸವನ್ನು ಅವಿರತವಾಗಿ ಮಾಡಿಕೊಂಡು ಬಂದಿರುವ ಅಪರೂಪದ ವಿದ್ವಾಂಸ - ಡಾ. ಶಂಸುಲ್ ಇಸ್ಲಾಮ್ ಭಾರತದ ಮುಸ್ಲಿಮರೆಲ್ಲಾ ಒಕ್ಕೊರಲಿನಿಂದ ಪಾಕಿಸ್ತಾನ ಎಂಬ ಪ್ರತ್ಯೇಕ ರಾಷ್ಟ್ರಕ್ಕಾಗಿ ಬೇಡಿಕೆ ಮಂಡಿಸಿ ದೇಶದ ವಿಭಜನೆಗೆ ಕಾರಣರಾದರು ಎಂಬುದು ಹಿಂದುತ್ವವಾದಿ ದಂಡುಗಳು ಸತತ ಪ್ರಚಾರ ಮಾಡುತ್ತಿರುವ ಒಂದು ಮಹಾ ಸುಳ್ಳಾಗಿದೆ. ದೇಶದಲ್ಲಿ ಮುಸ್ಲಿಮ್ ಸಮಾಜದ ದಮನಕ್ಕಾಗಿ ಈ ಸುಳ್ಳನ್ನು ಬಳಸಲಾಗುತ್ತಿದೆ. ಮುಸ್ಲಿಮ್ ಲೀಗ್ ಎಂಬ ಪಕ್ಷವು ಮುಸ್ಲಿಮರಿಗಾಗಿ ಒಂದು ಪ್ರತ್ಯೇಕ ದೇಶದ ಬೇಡಿಕೆ ಮಂಡಿಸಿ 1947 ದೇಶದ ವಿಭಜನೆಗೆ ಕಾರಣವಾಯಿತು ಎಂಬುದು ನಿಜ. ಹಾಗೆಯೇ ದೇಶದ ಮುಸಲ್ಮಾನರ ಒಂದು ದೊಡ್ಡ ವರ್ಗವನ್ನು ತನ್ನ ಬೇಡಿಕೆಯ ಬೆಂಬಲಿಗರಾಗಿ ಪರಿವರ್ತಿಸುವಲ್ಲಿ ಆ ಪಕ್ಷವು ಯಶಸ್ವಿಯಾಯಿತು ಎಂಬುದರಲ್ಲೂ ಸಂಶಯವಿಲ್ಲ. ಅದೇ ವೇಳೆ, ಭಾರತೀಯ ಮುಸ್ಲಿಮರ ಒಂದು ಬೃಹತ್ ಸಮೂಹ ಮತ್ತು ಅವರ ಹಲವು ನಾಯಕರು ಮತ್ತು ಸಂಘಟನೆಗಳು ಪಾಕಿಸ್ತಾನ ಎಂಬ ಪ್ರತ್ಯೇಕ ದೇಶದ ಬೇಡಿಕೆಯನ್ನು ವಿರೋಧಿಸಿದ್ದರೆಂಬುದು ಕೂಡಾ ಅಷ್ಟೇ ಪ್ರಮುಖ ಸತ್ಯವಾಗಿದೆ. ಪ್ರಸ್ತುತ ವಿಭಜನೆ ವಿರೋಧಿ ಮುಸ್ಲಿಮರು, ಮುಸ್ಲಿಮ್ ಲೀಗ್ ಪಕ್ಷವನ್ನು ತಾತ್ವಿಕವಾಗಿ ವಿರೋಧಿಸಿದ್ದು ಮಾತ್ರವಲ್ಲದೆ, ಬೀದಿಗಳಲ್ಲೂ ಆ ಪಕ್ಷದ ವಿರುದ್ಧ ಘರ್ಷಣೆಗೆ ಇಳಿದಿದ್ದರು. ಅವರ ವಿರುದ್ಧ ಹೋರಾಟದಲ್ಲಿ ಹಲವು ಮುಸ್ಲಿಮರು ತಮ್ಮ ಜೀವಗಳನ್ನೂ ಬಲಿಯರ್ಪಿಸಿದ್ದರು. ಇಷ್ಟಾಗಿಯೂ ವಿಭಜನೆಗಾಗಿ ಎಲ್ಲ ಭಾರತೀಯ ಮುಸ್ಲಿಮರನ್ನು ಅಪರಾಧೀಕರಿಸುವ ಮುಸ್ಲಿಮ್ ವಿರೋಧಿ ರಾಜಕೀಯ ಅಪಪ್ರಚಾರ ಜಾರಿಯಲ್ಲಿದೆ. ದುರದೃಷ್ಟವಶಾತ್ ಹೆಚ್ಚಿನ ಮುಸ್ಲಿಮರಿಗೆ ಕೂಡಾ ಮುಸ್ಲಿಮ್ ಲೀಗ್ ರಾಜಕೀಯವನ್ನು ರಾಜಕೀಯವಾಗಿಯೂ, ಧಾರ್ಮಿಕವಾಗಿಯೂ, ಶಾರೀರಿಕವಾಗಿಯೂ ವಿರೋಧಿಸಿದ್ದ ತಮ್ಮ ಹಿರಿಯರ ಪರಂಪರೆಯ ಅರಿವಿಲ್ಲವಾದ್ದರಿಂದ ಸುಳ್ಳಿನ ಪ್ರಚಾರಕರಿಗೆ ತಮ್ಮ ಕಿಡಿಗೇಡಿ ಕೆಲಸ ಸುಲಭವಾಗಿ ಬಿಟ್ಟಿದೆ.   1940 ಮಾರ್ಚ್ 23 ರಂದು ಮುಸ್ಲಿಮ್ ಲೀಗ್ ಪಕ್ಷವು ತನ್ನ ಲಾಹೋರ್ ಅಧಿವೇಶನದಲ್ಲಿ ಪಾಕಿಸ್ತಾನ ಎಂಬ ಪ್ರತ್ಯೇಕ ದೇಶ ಸ್ಥಾಪಿಸಬೇಕೆಂಬ ನಿರ್ಣಯ ಕೈಗೊಂಡಿತು. ಇದಕ್ಕೆ ಉತ್ತರವಾಗಿ ವಿಭಜನೆ ವಿರೋಧಿ ಮುಸ್ಲಿಮರು ಮುಂದಿನ ತಿಂಗಳಲ್ಲೇ ದೆಹಲಿಯ ಚಾಂದಿಣಿ ಚೌಕ್ ನಲ್ಲಿ ‘ಮುಸ್ಲಿಮ್ ಆಝಾದ್ ಕಾನ್ಫರೆನ್ಸ್’ ಎಂಬ ಬೃಹತ್ ಸಮಾವೇಶವೊಂದನ್ನು ಆಯೋಜಿಸಿದರು. ಅದರಲ್ಲಿ ಭಾರತದ ಬಹುತೇಕ ಎಲ್ಲ ಭಾಗಗಳಿಂದ ಬಂದ 1,400 ಕ್ಕೂ ಹೆಚ್ಚಿನ ಪ್ರತಿನಿಧಿಗಳು ಭಾಗವಹಿಸಿದ್ದರು. ಸಿಂಧ್ ಪ್ರಾಂತದ ಪ್ರಧಾನಿ ಅಲ್ಲಾ ಬಕ್ಷ್ ಈ ಸಮಾವೇಶದ ಅಧ್ಯಕ್ಷತೆ ವಹಿಸಿದ್ದರು. ಆಲ್ ಇಂಡಿಯಾ ಜಮೀಯತುಲ್ ಉಲಮಾ, ಆಲ್ ಇಂಡಿಯಾ ಮೂಮಿನ್ ಕಾನ್ಫರೆನ್ಸ್, ಆಲ್ ಇಂಡಿಯಾ ಮಜ್ಲಿಸೆ ಅಹ್ರಾರ್, ಆಲ್ ಇಂಡಿಯಾ ಶಿಯಾ ಪಾಲಿಟಿಕಲ್ ಕಾನ್ಫರೆನ್ಸ್, ಖುದಾಯಿ ಖಿದ್ಮತ್ಗಾರ್, ಬೆಂಗಾಲ್ ಕೃಷಿಕ್ ಪ್ರೊಜಾ ಪಾರ್ಟಿ, ಆಲ್ ಇಂಡಿಯಾ ಮುಸ್ಲಿಮ್ ಪಾರ್ಲಿಮೆಂಟರಿ ಬೋರ್ಡ್, ಅಂಜುಮನೆ ವತನ್ -ಬಲೂಚಿಸ್ತಾನ್, ಆಲ್ ಇಂಡಿಯಾ ಮುಸ್ಲಿಮ್ ಮಜ್ಲಿಸ್, ಜಮೀಯ್ಯತ್ ಅಹ್ಲೆ ಹದೀಸ್ - ಹೀಗೆ ಹಲವು ಮುಂಚೂಣಿಯ ಮುಸ್ಲಿಮ್ ಸಂಘಟನೆಗಳ ಪ್ರನಿಧಿಗಳು ಪ್ರಸ್ತುತ ಸಮಾವೇಶದಲ್ಲಿ ಭಾಗವಹಿಸಿದ್ದರು. ಬಿಹಾರ, ಸಂಯುಕ್ತ ಪ್ರಾಂತ, ಕೇಂದ್ರೀಯ ಪ್ರಾಂತ, ವಾಯವ್ಯ ಗಡಿ (ಓWಈ) ಪ್ರಾಂತ, ಮದ್ರಾಸ್, ಒರಿಸ್ಸಾ ಬೆಂಗಾಲ್, ಬಲೂಚಿಸ್ತಾನ್, ಮಲಬಾರ್, ದೆಹಲಿ, ಅಸ್ಸಾಂ, ರಾಜಸ್ಥಾನ್, ಕಾಶ್ಮೀರ್, ಹೈದರಾಬಾದ್ ಮತ್ತು ಹಲವು ರಾಜ್ಯಗಳ ಮತ್ತು ಭಾರತದ ಎಲ್ಲ ಭಾಗಗಳನ್ನು ಪ್ರನಿಧಿಸುವ ಚುನಾಯಿತ ನಿಯೋಗಗಳು ಕೂಡಾ ‘ಮುಸ್ಲಿಮ್ ಆಝಾದ್ ಕಾನ್ಫರೆನ್ಸ್’ ನ ಭಾಗವಾಗಿದ್ದವು. ಹೀಗೆ, ಪ್ರಸ್ತುತ ಸಮಾವೇಶವು ‘ಭಾರತದ ಮುಸ್ಲಿಮ್ ಬಹುಸಂಖ್ಯಾತರನ್ನು’ ಪ್ರತಿನಿಧಿಸುವ ಸಮಾವೇಶವಾಗಿತ್ತೆಂಬ ಬಗ್ಗೆ ಯಾವುದೇ ಸಂಶಯಕ್ಕೆ ಎಡೆಯೇ ಇರಲಿಲ್ಲ. ಭಾರತದ ಮುಸ್ಲಿಮ್ ನಾಯಕರ ಪೈಕಿ ಡಾ.ಮುಕ್ತಾರ್ ಅಹ್ಮದ್ ಅನ್ಸಾರಿ ಆರಂಭದಿಂದಲೂ ಮುಸ್ಲಿಮ್ ಲೀಗ್ ನ ಕೋಮುವಾದಿ ರಾಜಕೀಯವನ್ನು ತೀವ್ರವಾಗಿ ವಿರೋಧಿಸುತ್ತಾ ಬಂದಿದ್ದರು. ಖಾನ್ ಅಬ್ದುಲ್ ಗಫ್ಫಾರ್ ಖಾನ್, ಶೌಕತುಲ್ಲಾ ಖಾನ್, ಸಯ್ಯದ್ ಅಬ್ದುಲ್ಲಾ ಬರೇಲ್ವಿ, ಶೇಕ್ ಮುಹಮ್ಮದ್ ಅಬ್ದುಲ್ಲಾ, ಎ.ಎಂ. ಖ್ವಾಜ, ಮೌಲಾನಾ ಆಝಾದ್ ಮುಂತಾದ ಗಣ್ಯರು ಮುಸ್ಲಿಮ್ ಲೀಗ್ ವಿರೋಧಿ ಅಭಿಯಾನದಲ್ಲಿ ಸದಾ ಮುಂಚೂಣಿಯಲ್ಲಿದ್ದರು. ಜಂಇಯ್ಯತುಲ್ ಉಲಮಾದಂತಹ ಮುಸ್ಲಿಮ್ ಧಾರ್ಮಿಕ ವಿದ್ವಾಂಸರ ಬೃಹತ್ ಸಂಘಟನೆಗಳು ಮುಸ್ಲಿಮ್ ಲೀಗ್ ನವರ ‘ಟೂ ನೇಷನ್ ಥಿಯರಿ’ ಯನ್ನು ವಿರೋಧಿಸುವ ಮತ್ತು ಹಿಂದೂಗಳು ಹಾಗೂ ಮುಸ್ಲಿಮರು ಸಾಮರಸ್ಯದೊಂದಿಗೆ ಜೊತೆಯಾಗಿ ಬಾಳುವ ಸಂಯುಕ್ತ ಭಾರತದ ಕಲ್ಪನೆಯನ್ನು ಬೆಂಬಲಿಸುವ ಅನೇಕರು ಕಿರು ಪುಸ್ತಕಗಳನ್ನು ಉರ್ದು ಭಾಷೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಪ್ರಕಟಿಸಿ ವಿತರಿಸಿದ್ದವು. ‘ಮುಸ್ಲಿಮ್ ಅಝಾದ್ ಕಾನ್ಫರೆನ್ಸ್’ ಸಮಾವೇಶದ ನೇತೃತ್ವ ವಹಿಸಿದ್ದ ಯುವ ನಾಯಕ ಅಲ್ಲಾ ಬಕ್ಷ್ ಸುಮ್ರೋ ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ, ಮುಸ್ಲಿಮ್ ಲೀಗ್ ನ ‘ಪಾಕಿಸ್ತಾನ್ ರೆಸೊಲ್ಯೂಶನ್’ ಅನ್ನು ಭಾರತ ಮತ್ತು ಮುಸ್ಲಿಮರ ಪಾಲಿಗೆ ಮಾರಕ ನಿರ್ಧಾರ ಎಂದು ಘೋಷಿಸಿದರು. ಗಾಂಧೀಜಿಯವರನ್ನು ಹಿಂದೂ ರಾಷ್ಟ್ರೀಯವಾದಿಗಳು ಹತ್ಯೆ ಮಾಡುವ ಬಹಳ ಹಿಂದೆಯೇ, ಸಿಂಧ್‌ನ ಶಿಕಾರ್‌ಪುರ ಪಟ್ಟಣದಲ್ಲಿ 1943 ರ ಮೇ 14 ರಂದು ಅಲ್ಲಾ ಬಕ್ಷ್ ಅವರನ್ನು ಹತ್ಯೆ ಮಾಡಲಾಯಿತು. ಪ್ರತ್ಯೇಕತಾವಾದಿ ಮುಸ್ಲಿಮ್ ಲೀಗ್ ನವರು ನೇಮಿಸಿದ ವೃತ್ತಿಪರ ಕೊಲೆಗಡುಕರು ಈ ಕೃತ್ಯವನ್ನು ಎಸಗಿದ್ದರು. ಅಲ್ಲಾ ಬಕ್ಷ್ ಅವರು ಮುಸ್ಲಿಮ್ ಲೀಗ್ ಮತ್ತು ಅದರ ಪಾಕಿಸ್ತಾನ ಬೇಡಿಕೆಯ ವಿರೋಧಿಯಾಗಿದ್ದರು ಮತ್ತು ಏಕತೆಯ ಸಂಕೇತವಾಗಿದ್ದರು. ಭಾರತವನ್ನು ಹಿಂದೂ ರಾಷ್ಟ್ರವಾಗಿ ಪರಿವರ್ತಿಸುವ ಹಿಂದುತ್ವದ ಯೋಜನೆಗೆ ಗಾಂಧೀಜಿಯವರು ಅತಿದೊಡ್ಡ ಅಡಚಣೆಯಾಗಿದ್ದಂತೆಯೇ, ಲೀಗ್ ನವರ ದ್ವಿರಾಷ್ಟ್ರ ಯೋಜನೆಗೆ ಅಲ್ಲಾ ಬಕ್ಷ್ ಅವರು ಅತಿ ದೊಡ್ಡ ತೊಡಕಾಗಿದ್ದರು. ಆದ್ದರಿಂದ ಅವರನ್ನು ಮುಗಿಸುವುದು ವಿಭಜನವಾದಿಗಳಿಗೆ ಅನಿವಾರ್ಯವಾಗಿತ್ತು.   ಪಾಕಿಸ್ತಾನ ವಿರೋಧಿ ಚಳವಳಿಯಲ್ಲಿ ತೊಡಗಿದ್ದ ಎಲ್ಲಾ ಪ್ರಮುಖ ಮುಸ್ಲಿಮ್ ನಾಯಕರನ್ನು ಗುರಿಯಾಗಿಸಿ ಅವರ ಮೇಲೆ ನಡೆಸುವ ಅಭಿಯಾನ ಆರಂಭವಾಯಿತು. ಅವರ ಮನೆಗಳನ್ನು ಲೂಟಿ ಮಾಡಲಾಯಿತು, ಕುಟುಂಬ ಸದಸ್ಯರ ಮೇಲೆ ದಾಳಿ ಮಾಡಲಾಯಿತು, ಅವರು ತಂಗಿದ್ದ ಅಥವಾ ಮುಸ್ಲಿಮರನ್ನುದ್ದೇಶಿಸಿ ಭಾಷಣಗಳನ್ನು ಮಾಡಿದ್ದ ಮಸೀದಿಗಳ ಮೇಲೂ ಆಕ್ರಮಣ ನಡೆಸಿ ಅವುಗಳನ್ನು ಹಾನಿಗೊಳಿಸಲಾಯಿತು. ಉತ್ತರ ಪ್ರದೇಶ ಮತ್ತು ಬಿಹಾರದಲ್ಲಿ ಪ್ರಖ್ಯಾತ ವಿದ್ವಾಂಸ ಶೇಕುಲ್ ಇಸ್ಲಾಮ್ ಮೌಲಾನಾ ಹುಸೇನ್ ಅಹ್ಮದ್ ಮದನಿ ಅವರ ಮೇಲೆ ಹಿಂಸಾತ್ಮಕ ದಾಳಿಗಳು ನಡೆದವು. ಮೌಲಾನಾ ಆಝಾದ್, ಅಹ್ರಾರ್ ನಾಯಕ ಹಬೀಬುರ‌್ರಹಮಾನ್, ಮೌಲಾನಾ ಇಸ್ಹಾಕ್ ಸಂಭಲಿ, ಹಾಫಿಝ್ ಇಬ್ರಾಹೀಮ್, ಮೌಲಾನಾ ಎಂ. ಕಾಸಿಂ ಶಹಜಹಾನ್ಪುರಿ ಮುಂತಾದ ಹಲವು ಮುಂಚೂಣಿಯ ಮುಸ್ಲಿಮ್ ವಿದ್ವಾಂಸರ ಹತ್ಯೆಗೆ ಯತ್ನಗಳು ನಡೆದವು. ಕೆಲವೆಡೆ ವಿಭಜನೆ ವಿರೋಧಿ ಉಲಮಾಗಳ ಮೇಲೆ ಖಡ್ಗಗಳಿಂದ ದಾಳಿ ನಡೆಸಿ ಅವರ ಅಂಗಾಂಗಗಳನ್ನು ಕತ್ತರಿಸಲಾಯಿತು. ಹಲವರನ್ನು ಗುಂಡು ಹಾರಿಸಿ ಕೊಲ್ಲಲಾಯಿತು. ದೆಹಲಿಯಲ್ಲಿ ಜಮೀಯತುಲ್ ಉಲಮಾ ಕಚೇರಿಗೆ ಬೆಂಕಿ ಹಚ್ಚಲಾಯಿತು. ಮೂಮಿನ್ ಕಾನ್ಫರೆನ್ಸ್‌ನವರು ಆಯೋಜಿಸಿದ್ದ ವಿಭಜನೆ ವಿರೋಧಿ ಸಭೆಗಳು ದಾಳಿಯ ವಿಶೇಷ ಗುರಿಗಳಾಗಿದ್ದವು. ಅದರ ಅನೇಕ ಕಾರ್ಯಕರ್ತರನ್ನು ಕೊಲ್ಲಲಾಯಿತು. ಮುಸ್ಲಿಮ್ ಲೀಗ್ ವಿರುದ್ಧ ಮೂಮಿನ್ ಕಾನ್ಫರೆನ್ಸ್ ಸಂಘಟನೆಯು ಯುದ್ಧವನ್ನೇ ಸಾರಿ ಬಿಟ್ಟಿತು. ದೇವ್ ಬಂದ್‌ನ ‘ದಾರುಲ್ ಮುಅಲ್ಲಿಮೀನ್’ ಸಂಸ್ಥೆಯವರು ಪ್ರಕಾಶಿಸಿರುವ ಆಸಿರ್ ಅದ್ರವಿ ಅವರ ‘ತಹೀಕೆ ಆಝಾದಿ ಔರ್ ಮುಸಲ್ಮಾನ್’ ಗ್ರಂಥದಲ್ಲಿರುವ ಮಾತುಗಳು ಗಮನಾರ್ಹವಾಗಿವೆ: ದೇಶಾದ್ಯಂತ ಮುಸ್ಲಿಮ್ ಲೀಗ್ ಪಕ್ಷದವರು ಗೌರವಾನ್ವಿತ ರಾಷ್ಟ್ರೀಯವಾದಿ ಉಲಮಾ (ಮುಸ್ಲಿಮ್ ವಿದ್ವಾಂಸರು) ಗಳನ್ನು ಮತ್ತು ನಾಯಕರನ್ನು ಹೇಗೆ ನಡೆಸಿಕೊಂಡಿದ್ದರೆಂಬುದನ್ನು ವಿವರಿಸಲು ನೋವಾಗುತ್ತದೆ. ಅವರ ವರ್ತನೆಯು ತೀರಾ ಹೇಯ, ಕ್ರೂರ ಹಾಗೂ ಅಮಾನವೀಯವಾಗಿತ್ತು. ಹಳ್ಳಿ, ಪಟ್ಟಣ ಮತ್ತು ನಗರಗಳಲ್ಲಿ ರಾಷ್ಟ್ರೀಯವಾದಿಗಳ ಸಭೆಗಳ ಮೇಲೆ ಯೋಜಿತ ದಾಳಿಗಳನ್ನು ನಡೆಸಲಾಯಿತು ಮತ್ತು ಕಲ್ಲುಗಳ ಮಳೆ ಸುರಿಸಲಾಯಿತು. ಮುಸ್ಲಿಮ್ ಲೀಗ್‌ನ ಸ್ವಯಂಸೇವಕ ಪಡೆಗಳು ರಾಷ್ಟ್ರೀಯವಾದಿ ಮುಸ್ಲಿಮರ ವಿರುದ್ಧ ಅತ್ಯುಗ್ರ ಸ್ವರೂಪದ ಹಿಂಸಾಚಾರದಲ್ಲಿ ತೊಡಗಿದ್ದವು. ರಾಷ್ಟ್ರೀಯವಾದಿ ಮುಸ್ಲಿಮರು ಪ್ರಯಾಣಿಸುತ್ತಿರುವಾಗ ದಾರಿಯಲ್ಲೇ ಅವರನ್ನು ಗುರಿಯಾಗಿಸಿ ಅವರ ಮೇಲೆ ಹಲ್ಲೆ ನಡೆಸಲಾಗುತ್ತಿತ್ತು. ಎಷ್ಟೆಂದರೆ, ಅವರಿಗೆ ಪ್ರಯಾಣಿಸುವುದೇ ಕಷ್ಟಕರವಾಗಿ ಬಿಟ್ಟಿತ್ತು. ಮುಸ್ಲಿಮ್ ಲೀಗ್ ಅನ್ನು ವಿರೋಧಿಸುವವರೆಲ್ಲರೂ ಭಾರೀ ಭಯದ ವಾತಾವರಣದಲ್ಲಿ ಬದುಕಬೇಕಾಗಿತ್ತು. ಅವರ ನಾಯಕರನ್ನು ಪ್ರಶ್ನಿಸುವ ಅಥವಾ ಆಕ್ಷೇಪಿಸುವ ಧೈರ್ಯ ತೋರಿದವರೆಲ್ಲಾ ಭಯಾನಕ ಪರಿಣಾಮಗಳನ್ನು ಎದುರಿಸಬೇಕಾಗಿತ್ತು.   ಈ ಎಲ್ಲಾ ಸತ್ಯಗಳ ಹೊರತಾಗಿಯೂ, ಮುಸ್ಲಿಮರು ಮಾತ್ರ ವಿಭಜನೆಗೆ ಹೊಣೆಗಾರರಾಗಿದ್ದರೆಂದು ಮತ್ತು ಅವರೇ ದ್ವಿರಾಷ್ಟ್ರ ಸಿದ್ಧಾಂತದ ಪ್ರತಿಪಾದಕರೆಂದು ಆರೋಪಿಸಿ ಅವರನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವ ಶ್ರಮ ನಡೆಯುತ್ತಿದೆ. ಬಾಲ ಗಂಗಾಧರ ತಿಲಕ್, ಲಾಲಾ ಲಜಪತ್ ರಾಯ್, ಮದನ್ ಮೋಹನ್ ಮಾಳವೀಯ, ಎಂ.ಎಸ್. ಆನೆ, ಬಿ.ಎಸ್. ಮೂಂಜೆ, ಎಂ.ಆರ್. ಜಯಕರ್, ಎನ್.ಸಿ. ಕೇಲ್ಕರ್, ಸ್ವಾಮಿ ಶ್ರದ್ಧಾನಂದ ಮುಂತಾದ ಪ್ರಮುಖ ಹಿಂದೂ ರಾಷ್ಟ್ರೀಯವಾದಿ ನಾಯಕರು (ಅವರಲ್ಲಿ ಕೆಲವರು ಕಾಂಗ್ರೆಸ್ ನಾಯಕರಾಗಿದ್ದರು) ಎಲ್ಲರಿಗೂ ಸಮಾನ ಸ್ಥಾನಮಾನ ವಿರುವ ಭಾರತವನ್ನು ಒಪ್ಪಿರಲಿಲ್ಲ. ಅವ್ರೆಲ್ಲಾ ಕೇವಲ ಹಿಂದುಗಳಿಗಾಗಿ ಮೀಸಲಾಗಿರುವ ಭಾರತವನ್ನು ಬಯಸಿದ್ದರು. ಭಾರತವು ಮೂಲತಃ ಹಿಂದೂ ರಾಷ್ಟ್ರವಾಗಿದ್ದು ಅದನ್ನು ಹಾಗೆಯೇ ಉಳಿಸಿಕೊಳ್ಳಬೇಕು ಎಂಬುದು ಅವರ ನಿಲುವಾಗಿತ್ತು. ಇಷ್ಟಾಗಿಯೂ ಅವರೆಲ್ಲಾ ಅವರು ‘ಮಹಾನ್ ಭಾರತೀಯ ರಾಷ್ಟ್ರೀಯವಾದಿಗಳು’ ಎಂದೇ ಕರೆಸಿಕೊಂಡರು. ಭಾರತದಲ್ಲಿ ಬಹುಸಂಖ್ಯಾತ ಸಮಾಜದ ಕೋಮುವಾದಿಗಳಿಗೆ, ತಮ್ಮ ಕೋಮುವಾದವನ್ನು ರಾಷ್ಟ್ರೀಯವಾದದ ತೆರೆಯ ಮರೆಯಲ್ಲಿ ಅಡಗಿಸಿಡುವುದಕ್ಕೆ ಅವಕಾಶವಿತ್ತು. ಮದನ್ ಮೋಹನ್ ಮಾಳವೀಯ ಅವರು ಇದಕ್ಕೆ ಅತ್ಯಂತ ಉಜ್ವಲ ಉದಾಹರಣೆಯಾಗಿದ್ದಾರೆ. ಅವರು 1909 ರಿಂದ 1918 ರ ತನಕ ಮತ್ತು 1933 ರಲ್ಲಿ, ಸಂಯುಕ್ತ ಭಾರತದ ಕಲ್ಪನೆಯನ್ನು ಪ್ರತಿಪಾದಿಸುತ್ತಿದ್ದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿದ್ದರು. ಅದೇ ವೇಳೆ ಅವರು 1923,1924 ಮತ್ತು 1936 ರಲ್ಲಿ ಹಿಂದೂ ಮಹಾ ಸಭಾದ ಅಧಿವೇಶನಗಳ ಅಧ್ಯಕ್ಷರೂ ಆಗಿದ್ದರು! ‘ಹಿಂದಿ, ಹಿಂದೂ, ಹಿಂದುಸ್ಥಾನ್’ ಎಂಬ ವಿಭಾಜಕ ಘೋಷಣೆ ಕೂಡಾ ಅವರದೇ ಸೃಷ್ಟಿಯಾಗಿತ್ತು. ಅವರು ಕೋಮುದ್ವೇಷವನ್ನು ಹರಡುವ ಕ್ರಿಯೆಯಲ್ಲಿ ಸಕ್ರಿಯರಾಗಿದ್ದರು ಎಂಬುದಕ್ಕೆ ಧಾರಾಳ ಪುರಾವೆಗಳಿದ್ದರೂ ಅವರನ್ನು ಭಾರತದ ಒಬ್ಬ ಮಹಾ ರಾಷ್ಟ್ರೀಯವಾದಿ ನಾಯಕ ಎಂದೇ ಗುರುತಿಸಲಾಗುತ್ತದೆ. ಮುಸ್ಲಿಮ್ ನಾಯಕರ ಪೈಕಿ ಯಾರೆಲ್ಲ ಬಹುಧರ್ಮೀಯ ಭಾರತದಲ್ಲಿ ನಂಬಿಕೆ ಉಳ್ಳವರಾಗಿದ್ದರು ಮತ್ತು ಯಾರೆಲ್ಲಾ ಮುಸ್ಲಿಮರಿಗಾಗಿ ಪಾಕಿಸ್ತಾನ ಎಂಬ ಪ್ರತ್ಯೇಕ ರಾಷ್ಟ್ರವನ್ನು ಬಯಸಿದ್ದರು ಎಂದು ಪ್ರತ್ಯೇಕಿಸಿ ಗುರುತಿಸುವುದು ಸರಿ ಎಂದಾದರೆ ಈ ನಿಯಮವನ್ನು ಹಿಂದೂ ನಾಯಕರಿಗೂ ಅನ್ವಯಿಸಬೇಕಾಗುತ್ತದೆ. ನಾವು ಭಾರತೀಯ ರಾಷ್ಟ್ರೀಯತೆಯನ್ನು ಅಧ್ಯಯನ ಮಾಡುವಾಗ, ಸಾಮಾನ್ಯವಾಗಿ ಹಿಂದೂಗಳಲ್ಲಿ ಎಲ್ಲರೂ ರಾಷ್ಟ್ರೀಯವಾದಿಗಳಾಗಿದ್ದರು ಆದರೆ ಮುಸ್ಲಿಮರಲ್ಲಿ ಕೆಲವರು ಮಾತ್ರ ದೇಶಪ್ರೇಮಿಗಳಾಗಿದ್ದರು ಮತ್ತು ಉಳಿದವರೆಲ್ಲಾ ರಾಷ್ಟ್ರ ವಿರೋಧಿ ಮುಸ್ಲಿಮ್‌ಲೀಗ್‌ನೊಂದಿಗಿದ್ದರು ಎಂದು ನಮ್ಮನ್ನು ನಂಬಿಸಲಾಗುತ್ತದೆ. ಈ ಗೊಂದಲವನ್ನು ನಿವಾರಿಸಬೇಕಿದ್ದರೆ, ನಾವು ಭಾರತೀಯ ಸಂದರ್ಭದಲ್ಲಿ ರಾಷ್ಟ್ರೀಯತೆ ಅಂದರೇನು ಎಂಬುದನ್ನು ಸ್ಪಷ್ಟವಾಗಿ ವ್ಯಾಖ್ಯಾನಿಸಬೇಕಾಗುತ್ತದೆ. ಬಹುಧರ್ಮೀಯ, ಜಾತ್ಯತೀತ ರಾಷ್ಟ್ರವೇ ಭಾರತೀಯ ರಾಷ್ಟ್ರೀಯತೆ ಎಂದಾದರೆ ಈ ಕಲ್ಪನೆಯನ್ನು ನಂಬುವವರನ್ನು ಮಾತ್ರ ನೈಜ ರಾಷ್ಟ್ರೀಯವಾದಿಗಳೆಂದು ಹಾಗೂ ದೇಶಪ್ರೇಮಿಗಳೆಂದು ಗುರುತಿಸಬಹುದು. ಆದರೆ ಕೋಮುವಾದಿ ಹಿಂದೂಗಳು ಅಥವಾ ಹಿಂದೂ ರಾಷ್ಟ್ರೀಯವಾದಿ ನಾಯಕರ ಬಗ್ಗೆ ಚರ್ಚಿಸುವಾಗ ಹೆಚ್ಚಿನವರು ಈ ನೀತಿಯನ್ನು ಪಾಲಿಸುವುದಿಲ್ಲ. ಸ್ಪಷ್ಟವಾಗಿ ಬಹು ಸಂಸ್ಕೃತಿಯ ಭಾರತದ ವಿರುದ್ಧ ನಿಂತಿದ್ದವರನ್ನು ಇಂದಿಗೂ ರಾಷ್ಟ್ರೀಯವಾದದ ಸಂಕೇತಗಳಾಗಿ ಪರಿಗಣಿಸಲಾಗುತ್ತದೆ. ನಿಜವಾಗಿ ಹಿಂದೂ ರಾಷ್ಟ್ರೀಯವಾದವನ್ನು ಪ್ರತಿಪಾದಿಸುತ್ತಿದ್ದ ನಾಯಕರು ಕೂಡಾ ಮುಸ್ಲಿಮ್ ಪ್ರತ್ಯೇಕತಾವಾದವನ್ನು ಪ್ರತಿಪಾದಿಸುತ್ತಿದ್ದ ಮುಸ್ಲಿಮ್ ಲೀಗ್ ನಷ್ಟೇ ಸ್ಪಷ್ಟವಾಗಿ ರಾಷ್ಟ್ರ ವಿರೋಧಿಗಳಾಗಿದ್ದರು.   ಈ ಮಾನದಂಡದ ಪ್ರಕಾರ ಎಲ್ಲಾ ಹಿಂದೂ ನಾಯಕರು ದೇಶಭಕ್ತರಾಗಿರಲಿಲ್ಲ ಮತ್ತು ಅದೇ ರೀತಿ ಎಲ್ಲಾ ಮುಸ್ಲಿಮರೂ ದೇಶವಿರೋಧಿಗಳಾಗಿರಲಿಲ್ಲ. ಹೆಚ್ಚಿನ ಮುಸ್ಲಿಮ್ ವ್ಯಕ್ತಿಗಳು ಮತ್ತು ಮುಸ್ಲಿಮ್ ಸಾಮುದಾಯಿಕ ಸಂಸ್ಥೆಗಳು ಹಾಗೂ ಸಂಘಟನೆಗಳು ದ್ವಿರಾಷ್ಟ್ರ ಸಿದ್ಧಾಂತ ಮತ್ತು ಪಾಕಿಸ್ತಾನದ ಸೃಷ್ಟಿಯ ವಿರೋಧಿಗಳಾಗಿದ್ದರು. ಅವರು ತಮ್ಮ ಸರ್ವಸ್ವವನ್ನೂ ಪಣಕ್ಕಿಟ್ಟು ಪ್ರತ್ಯೇಕತಾವಾದವನ್ನು ವಿರೋಧಿಸಿ ಹೋರಾಡಿದ್ದರು. ಈ ಹೋರಾಟದಲ್ಲಿ ಅದೆಷ್ಟೋ ಮಂದಿ ತಮ್ಮ ಪ್ರಾಣಗಳನ್ನೂ ತ್ಯಾಗ ಮಾಡಿದ್ದರು. ಅತ್ಯಂತ ದುಃಖಕರ ಸಂಗತಿಯೆಂದರೆ, ದ್ವಿರಾಷ್ಟ್ರ ಸಿದ್ಧಾಂತದ ರಾಜಕೀಯವನ್ನು ಆನುವಂಶಿಕವಾಗಿ ಪಡೆದ ಹಿಂದೂ ರಾಷ್ಟ್ರೀಯವಾದಿಗಳ ವಾರಸುದಾರರೇ ಇಂದು ಭಾರತವನ್ನು ಆಳುತ್ತಿದ್ದಾರೆ. ಸ್ವಾತಂತ್ರ್ಯ ಹೋರಾಟದಲ್ಲಿ ಯಾವುದೇ ಪಾತ್ರ ವಹಿಸದೆ, ಮುಸ್ಲಿಮ್ ಲೀಗ್ ಮತ್ತು ಬ್ರಿಟಿಷ್ ಆಡಳಿತಗಾರರೊಂದಿಗೆ ಸಹಕರಿಸಿದ ಮೂಂಜೆ, ಸಾವರ್ಕರ್ ಮತ್ತು ಗೋಳ್ವಾಲ್ಕರ್ ಥರದವರ ಸಂತತಿಗಳು ಇಂದು ದೇಶದ ಚುಕ್ಕಾಣಿ ಹಿಡಿದಿದ್ದು ಭಾರತೀಯ ಮುಸ್ಲಿಮರ ದೇಶನಿಷ್ಠೆಯನ್ನು ಪ್ರಶ್ನಿಸುತ್ತಿವೆ. ಇದೀಗ ಭಾರತೀಯ ಮುಸ್ಲಿಮರು, ರಾಷ್ಟ್ರವಿರೋಧಿ ಹಿಂದುತ್ವವಾದಿಗಳ ಕಡೆಯಿಂದ ತಮ್ಮ ವಿರುದ್ಧ ನಡೆಯುತ್ತಿರುವ ಅಪಪ್ರಚಾರಗಳ ಮುಂದೆ ಕ್ಷಮಾಪನಾ ಧೋರಣೆ ಅನುಸರಿಸುವ ಬದಲು, ಸುಳ್ಳಿನ ಪ್ರಚಾರಕರಿಗೆ ಸವಾಲೊಡ್ಡುವ ಕೆಲಸ ಮಾಡಬೇಕಾಗಿದೆ. ಐತಿಹಾಸಿಕ ಸತ್ಯಗಳೆಲ್ಲವೂ ತಮ್ಮ ಪರವಾಗಿವೆ ಎಂಬುದನ್ನು ಅವರು ಮನಗಾಣಬೇಕು. ಭಾರತೀಯ ಮುಸ್ಲಿಮರೆಂದರೆ ಮುಸ್ಲಿಮ್ ಲೀಗ್ ಮತ್ತು ಅದರ ದ್ವಿರಾಷ್ಟ್ರ ಸಿದ್ಧಾಂತವನ್ನು ಹಾಗೂ ಪಾಕಿಸ್ತಾನದ ಬೇಡಿಕೆಯನ್ನು ಅತ್ಯುಗ್ರವಾಗಿ ವಿರೋಧಿಸಿದ್ದ ಅದ್ಭುತ ಹೋರಾಟಗಾರರ ಸಂತತಿಗಳು. ಅವರು ಪಾಕಿಸ್ತಾನದ ರಚನೆಯನ್ನು ಎಂದೂ ಒಪ್ಪಿರಲಿಲ್ಲ. ನಿಜವಾಗಿ ಅವರು ಭಾರತವನ್ನು ವಿಭಜಿಸಲು ಬ್ರಿಟಿಷ್ ಆಡಳಿತಗಾರರು, ಮುಸ್ಲಿಮ್ ಲೀಗ್ ಮತ್ತು ಕಾಂಗ್ರೆಸ್ ನಡುವೆ ನಡೆದಿದ್ದ ಒಪ್ಪಂದದ ಅಸಹಾಯಕ ಬಲಿಪಶುಗಳಾಗಿದ್ದಾರೆ. ಭಾರತದ ವಿಭಜನೆಗೆ ಕಾಂಗ್ರೆಸ್ ಪಕ್ಷವು ತನ್ನ ಒಪ್ಪಿಗೆ ನೀಡಿದ ಬಳಿಕ ಜೂನ್ 1947 ರಲ್ಲಿ ‘ಗಡಿನಾಡ ಗಾಂಧಿ’ ಖಾನ್ ಅಬ್ದುಲ್ ಗಪ್ಫಾರ್ ಖಾನ್ ಅವರು ಗಾಂಧೀಜಿಯವರನ್ನುದ್ದೇಶಿಸಿ ನೀಡಿದ ಈ ಕೆಳಗಿನ ಹೇಳಿಕೆಯು, ಪಾಕಿಸ್ತಾನ ವಿರೋಧಿ ಮುಸ್ಲಿಮರು ಅನುಭವಿಸಿದ್ದ ವ್ಯಾಪಕ ವಿಶ್ವಾಸದ್ರೋಹದ ಭಾವನೆಯನ್ನುಪ್ರತಿಬಿಂಬಿಸುತ್ತದೆ. ಅವರು ಬರೆದ ಮಾತುಗಳು ಹೀಗಿದ್ದವು: ನಾವು ಪಖ್ತೂನ್ ಗಳು ಸ್ವಾತಂತ್ರ್ಯಕ್ಕಾಗಿ ನಿಮ್ಮ ಜೊತೆ ನಿಂತು ಅಪಾರ ತ್ಯಾಗ ಬಲಿದಾನಗಳನ್ನು ನೀಡಿದೆವು. ಆದರೆ ನೀವು ನಮಗೆ ಮೋಸಮಾಡಿದಿರಿ ಮತ್ತು ನಮ್ಮನ್ನು ತೋಳಗಳ ಮುಂದೆ ಎಸೆದು ಬಿಟ್ಟಿರಿ...... ಇಂದು ಭಾರತವನ್ನು ಆಳುತ್ತಿರುವ ಸಾವರ್ಕರ್ ಮತ್ತು ಗೋಳ್ವಾಲ್ಕರ್ ಅವರ ಸಂತತಿಗಳು ದ್ವಿರಾಷ್ಟ್ರ ಸಿದ್ಧಾಂತವನ್ನು ಪ್ರತಿಪಾದಿಸಿದ ಮತ್ತು ಜಿನ್ನಾ ಅವರೊಂದಿಗೆ ಮೈತ್ರಿ ಮಾಡಿಕೊಂಡ ಪರಂಪರೆಯವರಾಗಿದ್ದಾರೆ. ಅದೇವೇಳೆ, ಭಾರತದ ಮುಸ್ಲಿಮರು ವಿಭಜನೆಯನ್ನು ಮತ್ತು ಧರ್ಮದ ಆಧಾರದಲ್ಲಿ ದೇಶವನ್ನು ವಿಂಗಡಿಸುವುದನ್ನು ಬಲವಾಗಿ ವಿರೋಧಿಸಿದವರ ಸಂತತಿಗಳಾಗಿದ್ದಾರೆ. ಮುಸ್ಲಿಮರಿಗೆ ದೇಶವನ್ನು ವಿಭಜಿಸದಿರಲು ಬಲವಾದ ಕಾರಣವಿತ್ತು. ಖ್ಯಾತ ಕವಿ ಶಮೀಮ್ ಕರ್ಹಾನಿ ಅವರು ಬರೆದ ‘ಪಾಕಿಸ್ತಾನ್ ಚಾಹನೆ ವಾಲೋಂ ಸೆ’ (ಪಾಕಿಸ್ತಾನವನ್ನು ಬಯಸುವವರಿಗೆ) ಶೀರ್ಷಿಕೆಯ ಪಾಕಿಸ್ತಾನ ವಿರೋಧಿ ಕವಿತೆಯಿಂದ ಒಂದುಗೂಡಿದ ಪ್ರಜಾಸತ್ತಾತ್ಮಕ-ಜಾತ್ಯತೀತ ಭಾರತದ ಕಡೆಗೆ ಅವರ ಸಂಕಲ್ಪ ಮತ್ತು ಬದ್ಧತೆ ಸ್ಪಷ್ಟವಾಗಿದೆ, ಇದು ಮುಸ್ಲಿಮ್ ಲೀಗ್ ವಿರುದ್ಧ ಭಾರತೀಯ ಮುಸ್ಲಿಮರ ಗೀತೆಯಾಯಿತು. ಮುಸ್ಲಿಮ್ ಲೀಗ್ ಪಾಕಿಸ್ತಾನದ ಬೇಡಿಕೆಯನ್ನು ಧಾರ್ಮಿಕ ಯೋಜನೆಯನ್ನಾಗಿ ಪರಿವರ್ತಿಸಿದ್ದರಿಂದ, ಶಮೀಮ್ ಕರ್ಹಾನಿ ಅದೇ ಶಬ್ದಕೋಶದಲ್ಲಿ ಪ್ರತಿಕ್ರಿಯಿಸಿದರು. ಪ್ರತಿಯೊಬ್ಬ ಭಾರತೀಯ ಮುಸ್ಲಿಮ್ ಇದರ ಬಗ್ಗೆ ಹೆಮ್ಮೆ ಪಡಬೇಕು.

ವಾರ್ತಾ ಭಾರತಿ 8 Feb 2026 12:28 pm

KODAGU | ಎಸ್ ಡಿಪಿಐ ರಾಜ್ಯಾಧ್ಯಕ್ಷ ಪ್ರಯಾಣಿಸುತ್ತಿದ್ದ ಕಾರಿನಲ್ಲಿ ಏಕಾಏಕಿ ಬೆಂಕಿ: ಅಪಾಯದಿಂದ ಪಾರು

ಕೊಡಗು: ಎಸ್ ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಪ್ರಯಾಣಿಸುತ್ತಿದ್ದ ಕಾರಿನಲ್ಲಿ ಏಕಾಏಕಿ ಕಾಣಿಸಿಕೊಂಡ ಘಟನೆ ರವಿವಾರ ಮುಂಜಾನೆ ಕುಶಾಲನಗರ ತಾಲೂಕಿನ ಆನೆಕಾಡು ಬಳಿ ರಾಷ್ಟ್ರೀಯ ಹೆದ್ದಾರಿ 275ರಲ್ಲಿ ಸಂಭವಿಸಿದೆ. ಚಲಿಸುತ್ತಿದ್ದ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡಿರುವುದು ಅರಿವಿಗೆ ಬರುತ್ತಿದ್ದಂತೆ ಅಬ್ದುಲ್ ಮಜೀದ್ ಹಾಗೂ ಕಾರು ಚಾಲಕ ಕಾರಿನಿಂದ ಇಳಿದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕ್ಷಣಾರ್ಧದಲ್ಲಿ ಬೆಂಕಿಯಿಂದ ಇಡೀ ಕಾರು ಭಸ್ಮವಾಗಿದೆ. ಮಾಹಿತಿ ಪಡೆದ ಕುಶಾಲನಗರ ಅಗ್ನಿಶಾಮಕ ದಳ, ಸ್ಥಳಕ್ಕೆ ಆಗಮಿಸಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಯಿತು. ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಬೆಂಕಿ ಕಾಣಿಸಿಕೊಳ್ಳಲು ನಿಖರ ಕಾರಣ ತಿಳಿದಿಲ್ಲ. ಕಾರು ಸಂಪೂರ್ಣ ಹಾನಿಗೀಡಾಗಿದೆ.  

ವಾರ್ತಾ ಭಾರತಿ 8 Feb 2026 12:28 pm

ದೇವರಕಾಡನ್ನು ಹುಡುಕುತ್ತಾ

ಆನೆ ಸಾಕಲು ಹೊರಟು ಸುದ್ದಿಯಾದ ಲೇಖಕಿ ಸಹನಾ ಕಾಂತಬೈಲು ಕೃಷಿ ಬದುಕಿನಲ್ಲಿ ಬರಹಗಳ ಫಸಲು ತೆಗೆಯುತ್ತಿರುವವರು. ಮೂಲತಃ ಕೊಡಗು ಮತ್ತು ದಕ್ಷಿಣ ಕನ್ನಡದ ಗಡಿಭಾಗವಾದ ಸಂಪಾಜೆಯ ದಬ್ಬಡ್ಕ ಎನ್ನುವ ಕುಗ್ರಾಮದವರು. ಕತೆ, ಕವನ, ಪ್ರಬಂಧಗಳಿಗಾಗಿ ಗುರುತಿಸಲ್ಪಟ್ಟಿರುವ ಇವರು 60ಕ್ಕೂ ಮಿಕ್ಕಿ ಕೃಷಿಕ ಮಹಿಳೆಯರ ಯಶೋಗಾಥೆಯನ್ನು ಬರೆದಿದ್ದಾರೆ. ಕವಿತೆಯ ಮೂಲಕ ಬರಹವನ್ನಾರಂಭಿಸಿದ ಸಹನಾ ತಮ್ಮ, ಸ್ವಾನುಭವ, ಪ್ರಾಮಾಣಿಕ, ದಿಟ್ಟ ಬರಹಗಳ ಮೂಲಕ ನಾಡಿನಾದ್ಯಂತ ಚಿರಪರಿಚಿತರು. ಅವರ ‘ಆನೆ ಸಾಕಲು ಹೊರಟವಳು’ ಕೃತಿಗೆ ಅಜೂರ ಪ್ರತಿಷ್ಠಾನದ ರಾಜ್ಯ ಪ್ರಶಸ್ತಿ ದೊರಕಿದೆ. ಈ ಕೃತಿ ಒಟ್ಟು ನಾಲ್ಕು ಮುದ್ರಣಗಳನ್ನು ಕಂಡಿದೆ. ಇವರ ಮತ್ತೊಂದು ಕೃತಿ ‘ಇದು ಬರಿ ಮಣ್ಣಲ್ಲ’ ಲಲಿತ ಪ್ರಬಂಧಗಳ ಸಂಕಲನ . ಶಿವಮೊಗ್ಗ ಕರ್ನಾಟಕ ಸಂಘದ ಹಾ. ಮಾ. ನಾಯಕ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿಯ ದತ್ತಿ ಪ್ರಶಸ್ತಿ ಸೇರಿದಂತೆ ಇವರ ಕೃತಿಗಳಿಗೆ ಹಲವು ಗೌರವಗಳು ಸಂದಿವೆ. ದೇವರ ಕಾಡಿನಲ್ಲಿ ದೇವರನ್ನು ಹುಡುಕುವ ಪ್ರಯತ್ನವೊಂದನ್ನು ಈ ಬರಹದಲ್ಲಿ ಮಾಡಿದ್ದಾರೆ. ಪುಸ್ತಕದಲ್ಲಿ ಇರುವುದನ್ನು ಓದಿದರೆ ಪ್ರಯೋಜನವಿಲ್ಲ. ಸ್ವತಃ ನೋಡಿ ತಿಳಿದುಕೊಳ್ಳಬೇಕು ಎಂಬ ತುಡಿತ ನನಗೆ ಉಂಟಾಯಿತು. ಕೊಡಗಿನಲ್ಲಿ ದೇವರಕಾಡು ಎಲ್ಲಿದೆ ಎಂದು ಹುಡುಕಲು ಶುರುಮಾಡಿದೆ. ‘ಮಡಿಕೇರಿ ಸಮೀಪ ಕಾಟಕೇರಿ ಎಂಬ ಊರಲ್ಲಿ ದೇವರಕಾಡು ಇದೆ. ರಸ್ತೆ ಬದಿಯಲ್ಲೇ ಇರುವುದರಿಂದ ಹೋಗಿ ನೋಡುವುದು ಸುಲಭ’ ಎಂದರು ಒಬ್ಬರು. ನನಗೆ ಇಷ್ಟು ಮಾಹಿತಿ ಸಾಕಿತ್ತು. ನಾನು ಮಧ್ಯಾಹ್ನ ಸುಮಾರು 12 ಗಂಟೆಯಷ್ಟು ಹೊತ್ತಿಗೆ ನಮ್ಮೂರಿನಿಂದ ಕಾಟಕೇರಿಯಾಗಿ ಹೋಗುವ ಮೈಸೂರು ಬಸ್ಸು ಹತ್ತಿದೆ. ಕೊಡಗು ಜಿಲ್ಲೆಯ ಬಹುತೇಕ ಗ್ರಾಮಗಳಲ್ಲಿ ‘ದೇವರಕಾಡು’ ಎಂಬ ಕಾಡು ಇದೆ. ಕೊಡಗಿನಲ್ಲಿ ಒಟ್ಟು 1,214 ದೇವರಕಾಡುಗಳಿವೆ ಎಂಬ ಸುದ್ದಿಯನ್ನು ಈಚೆಗೆ ಪತ್ರಿಕೆಯೊಂದರಲ್ಲಿ ಓದಿದೆ. ನಾನು ಮದುವೆಯಾಗಿ ಕೊಡಗಿಗೆ ಬಂದು 35 ವರ್ಷಗಳಾಗಿವೆ. ದೇವರಕಾಡು ಎಂದು ಹೆಸರು ಕೇಳಿದ್ದು ಬಿಟ್ಟರೆ ಅದು ಕೊಡಗಿನಲ್ಲಿ ಎಲ್ಲಿದೆ? ನಾನೂ ಕಾಡಿನ ಮಧ್ಯೆಯೇ ವಾಸವಾಗಿರುವುದು. ಆದರೆ ನಮ್ಮ ಕಾಡನ್ನು ಯಾಕೆ ದೇವರಕಾಡೆಂದು ಕರೆಯುವುದಿಲ್ಲ? ದೇವರಕಾಡಿನ ಐತಿಹ್ಯವೇನು ಎಂದು ನನಗೆ ಕೊಡಗಿನವಳಾದರೂ ಗೊತ್ತಿರಲಿಲ್ಲ. ಎಲ್ಲಾ ಕಾಡುಗಳು ಯಾಕೆ ದೇವರಕಾಡು ಆಗುವುದಿಲ್ಲ ಎಂಬ ಪ್ರಶ್ನೆ ನನ್ನನ್ನು ಕಾಡತೊಡಗಿತು. ‘ದೇವರಕಾಡಿನ ಬಗ್ಗೆ ಅರಣ್ಯ ಇಲಾಖೆ ಪ್ರಕಟಿಸಿದ ಒಂದು ಇಂಗ್ಲಿಷ್ ಪುಸ್ತಕ ಇದೆ’ ಎಂಬ ಮಾಹಿತಿ ಯಾರಿಂದಲೋ ಸಿಕ್ಕಿತು. ಮನೆಯಿಂದ 15 ಕಿ.ಮೀ. ದೂರದ ವಲಯ ಅರಣ್ಯಾಧಿಕಾರಿಗಳ ಕಚೇರಿಗೆ ಹೋಗಿ ಕೇಳಿದರೆ, ‘ಆ ಪುಸ್ತಕ ಇಲ್ಲಿ ಇಲ್ಲ. ಮಡಿಕೇರಿಯ ಅರಣ್ಯಭವನದಲ್ಲಿ ಇದೆ. ತರಿಸಿಕೊಡುತ್ತೇವೆ’ ಎಂದು ಹೇಳಿದರೇ ವಿನಾ ತರಿಸಿಕೊಡಲಿಲ್ಲ. ಮಡಿಕೇರಿ ಅರಣ್ಯಭವನಕ್ಕೆ ಹೋಗಿ ಕೇಳಿದಾಗ ಅವರು, ‘ಲೈಬ್ರರಿಯಲ್ಲಿ ಇದೆ. ಹುಡುಕಬೇಕಷ್ಟೆ. ಹುಡುಕಿ ಇಡುತ್ತೇವೆ. ಇನ್ನೊಮ್ಮೆ ಬನ್ನಿ’ ಎಂದರು. ಎಲ್ಲರಲ್ಲೂ ಈ ಬಗ್ಗೆ ವಿಚಾರಿಸುವುದೇ ನನ್ನ ಕೆಲಸವಾಯಿತು. ನಮ್ಮೂರಿನ ಒಬ್ಬರು ಹಿರಿಯರು, ‘ಕೊಡಗಿನ ದೇವಕಾಡಿನ ವಿಶ್ಲೇಷಣೆ ಎಂಬ ಒಂದು ಪುಸ್ತಕ ಕೊಡವ ಸಾಹಿತ್ಯ ಅಕಾಡಮಿಯಿಂದ ಪ್ರಕಟವಾಗಿದೆ. ಅದರಲ್ಲಿ ಮಾಹಿತಿ ಸಿಗಬಹುದು’ ಎಂದರು. ಅದರಂತೆ ನಾನು ಮಡಿಕೇರಿಯಲ್ಲಿರುವ ಕೊಡವ ಸಾಹಿತ್ಯ ಅಕಾಡಮಿಗೆ ಹೋಗಿ ಪುಸ್ತಕ ಖರೀದಿಸಿ ತಂದು ಓದಲುತೊಡಗಿದೆ.   ಕೊಡಗು ಕಾಡುಗಳಿಂದ ಕೂಡಿದ ಜಿಲ್ಲೆ. ಕಾಡಿನಲ್ಲಿ ಹುಟ್ಟಿ ಬೆಳೆದು ವಿಕಾಸ ಹೊಂದಿದ ಮಾನವನಿಗೆ ಕಾಡಿನ ಮಹತ್ವದ ಅರಿವಿತ್ತು. ಕಾಡನ್ನು ನಾಶಪಡಿಸಿದರೆ ಹುಲಿ, ಚಿರತೆ, ಕಾಡುಹಂದಿ, ಆನೆ, ಕಾಡೆಮ್ಮೆ ಮುಂತಾದ ಕಾಡುಪ್ರಾಣಿಗಳು ನಾಡಿಗೆ ದಾಳಿಯಿಟ್ಟು ಕಾಡುತ್ತವೆಯೆಂಬ ಭೀತಿ ನಮ್ಮ ಪೂರ್ವಜರಿಗಿತ್ತು. ಇದನ್ನರಿತ ಪೂರ್ವಜರು ಅರಣ್ಯಪ್ರದೇಶಗಳನ್ನು ದೇವರ ಹೆಸರಿನಲ್ಲಿ ಪೂಜಿಸಿ ಸಂರಕ್ಷಿಸುವ ಸಂಪ್ರದಾಯವನ್ನು ಜಾರಿಗೆ ತಂದರು. ಕೊಡಗಿನ ಹೆಚ್ಚಿನ ಗ್ರಾಮದಲ್ಲಿಯೂ ಸ್ವಲ್ಪ ಜಾಗವನ್ನು ಇದು ದೇವರಿಗೆ ಸೇರಿದ ಕಾಡೆಂದು ಮತ್ತು ಇಲ್ಲಿ ಮರಗಳನ್ನು ಕಡಿಯುವಂತಿಲ್ಲ, ಸೌದೆಯನ್ನು ತೆಗೆಯುವಂತಿಲ್ಲ, ಹಸುಗಳನ್ನು ಮೇಯಿಸುವಂತಿಲ್ಲ, ದೇವರ ಕಾಡಿನೊಳಗೆ ಯಾರೂ ಪ್ರವೇಶಿಸುವಂತಿಲ್ಲ ಹೀಗೆ ಹಲವಾರು ಷರತ್ತುಗಳನ್ನು, ನಿರ್ಬಂಧ ಮತ್ತು ನಿಯಮಗಳನ್ನು ಮಾಡಿದ್ದರು. ಇವೆಲ್ಲವನ್ನು ಪಾಲಿಸದೆ ಹೋದರೆ ಕಾಡಿನಲ್ಲಿರುವ ದೇವರು ಮನೆಯವರಿಗೂ, ಊರಿಗೂ ತೊಂದರೆ ಉಂಟುಮಾಡುತ್ತಾನೆಂದು ಭಯ ಪಡಿಸುತ್ತಿದ್ದರು. ಹಿಂದಿನ ಕಾಲದಲ್ಲಿ ಅತೀ ಹೆಚ್ಚು ಕಾಡುಗಳಿದ್ದರೂ ಮುಂದೆ ಕಾಡುಗಳು ನಾಶವಾಗಿಬಿಡಬಹುದು ಎಂದು ದೇವರ ಹೆಸರಿನಲ್ಲಾದರೂ ಕಾಡುಗಳು ಉಳಿಯಲಿ ಎಂಬ ಮನೋಭಾವದಿಂದ ಜನರಲ್ಲಿ ಭಯಭಕ್ತಿಯನ್ನು ತಂದು, ಎಲ್ಲಾ ಕಾಲದಲ್ಲೂ ದೇವರಕಾಡನ್ನು ಪೂಜಿಸಿ ಸಂರಕ್ಷಿಸುವ ವ್ಯವಸ್ಥೆಯನ್ನು ಇಲ್ಲಿನ ಹಿರಿಯರು ರೂಪಿಸಿದರು. ಈಗಲೂ ಕೊಡಗಿನಲ್ಲಿ ದೇವರಕಾಡುಗಳು ಹಾಗೆಯೇ ಉಳಿದಿವೆ. ದೇವರಕಾಡಿನಲ್ಲಿ ನಿಗದಿ ಪಡಿಸಿದ ದಿನದಲ್ಲಿ ದೊಡ್ಡ ಹಬ್ಬ ನಡೆಯುತ್ತದೆ. ಹಬ್ಬಗಳಲ್ಲಿ ದೇವರಕಾಡಿಗೆ ಹೋಗಿ ದೇವರನ್ನು ಪ್ರಾರ್ಥಿಸಿ ಪೂಜೆ ಸಲ್ಲಿಸುತ್ತಾರೆ ಮತ್ತು ಅವರದೇ ಆದ ಹಾಡು, ನ್ಯತ್ಯಗಳನ್ನು ನಡೆಸುತ್ತಾರೆ. ದೇವರಕಾಡು ಕೊಡಗಿನ ಗ್ರಾಮದ ಧಾರ್ಮಿಕ ಕೇಂದ್ರ ಮಾತ್ರ ಅಲ್ಲ ಗ್ರಾಮದ ಒಗ್ಗಟ್ಟನ್ನು, ಕೊಡಗಿನ ಸಂಸ್ಕೃತಿ, ಪರಂಪರೆಯನ್ನು ರಕ್ಷಿಸಿದೆ. ಕೊಡಗಿನ ಎಲ್ಲ ಮೂಲನಿವಾಸಿಗಳಿಗೂ ಇಲ್ಲಿ ಸ್ಥಾನ ಇದೆ, ಜವಾಬ್ದಾರಿ ಇದೆ. ದೇವರಕಾಡು ಯಾರೊಬ್ಬನ ಆಸ್ತಿಯೂ ಅಲ್ಲ. ಅದು ಗ್ರಾಮದ ಆಸ್ತಿ. ಈಗ ಅದು ಅರಣ್ಯ ಇಲಾಖೆಯ ಕೈಕೆಳಗೆ ಇದೆ. ಹೀಗೆ ಅನೇಕ ವಿಷಯಗಳು ಆ ಪುಸ್ತಕದಿಂದ ನನಗೆ ಸಿಕ್ಕಿತು. ಪುಸ್ತಕದಲ್ಲಿ ಇರುವುದನ್ನು ಓದಿದರೆ ಪ್ರಯೋಜನವಿಲ್ಲ. ಸ್ವತಃ ನೋಡಿ ತಿಳಿದುಕೊಳ್ಳಬೇಕು ಎಂಬ ತುಡಿತ ನನಗೆ ಉಂಟಾಯಿತು. ಕೊಡಗಿನಲ್ಲಿ ದೇವರಕಾಡು ಎಲ್ಲಿದೆ ಎಂದು ಹುಡುಕಲು ಶುರುಮಾಡಿದೆ. ‘ಮಡಿಕೇರಿ ಸಮೀಪ ಕಾಟಕೇರಿ ಎಂಬ ಊರಲ್ಲಿ ದೇವರಕಾಡು ಇದೆ. ರಸ್ತೆ ಬದಿಯಲ್ಲೇ ಇರುವುದರಿಂದ ಹೋಗಿ ನೋಡುವುದು ಸುಲಭ’ ಎಂದರು ಒಬ್ಬರು. ನನಗೆ ಇಷ್ಟು ಮಾಹಿತಿ ಸಾಕಿತ್ತು. ನಾನು ಮಧ್ಯಾಹ್ನ ಸುಮಾರು 12 ಗಂಟೆಯಷ್ಟು ಹೊತ್ತಿಗೆ ನಮ್ಮೂರಿನಿಂದ ಕಾಟಕೇರಿಯಾಗಿ ಹೋಗುವ ಮೈಸೂರು ಬಸ್ಸು ಹತ್ತಿದೆ. ಟಿಕೆಟ್ ಪಡಕೊಳ್ಳುವಾಗ ಗೊತ್ತಾಯಿತು ಕಾಟಕೇರಿಯಲ್ಲಿ ಬಸ್ಸನ್ನು ನಿಲ್ಲಿಸುವುದಿಲ್ಲ. ಮಡಿಕೇರಿಯಲ್ಲೇ ನಿಲ್ಲಿಸುವುದು ಎಂದು. ಕಾಟಕೇರಿಯಿಂದ ಮಡಿಕೇರಿಗೆ ಆರು ಕಿ.ಮೀ. ದೂರ. ನಾನು ಮಡಿಕೇರಿಯಲ್ಲಿ ಬಸ್ಸಿನಿಂದ ಇಳಿದು ಕಾಟಕೇರಿಗೆ ಹೋಗಲು ವಾಹನಕ್ಕೆ ಕಾಯುತ್ತ ನಿಂತಿರುವಾಗ ಒಂದು ಜೀಪು ಬಂತು. ಅದು ಕಾಟಕೇರಿಗೆ ಹೋಗುತ್ತದೆ ಎಂದು ಗೊತ್ತಾಗಿ ಅದರಲ್ಲಿ ಹತ್ತಿದೆ. ಅದು ಬಾಡಿಗೆ ಜೀಪಲ್ಲ. ಅದರಲ್ಲಿ ಗಂಡ-ಹೆಂಡತಿಯಷ್ಟೇ ಇದ್ದರು. ‘ನಾನು ಕಾಟಕೇರಿಯಲ್ಲಿರುವ ದೇವರಕಾಡನ್ನು ನೋಡಲು ಹೋಗುತ್ತಿದ್ದೇನೆ. ಕಾಟಕೇರಿಯಲ್ಲಿ ಅದು ಎಲ್ಲಿದೆಯೆಂದು ನಿಮಗೆ ಗೊತ್ತಾ’ ಎಂದು ಅವರಲ್ಲಿ ಕೇಳಿದೆ. ಅದಕ್ಕವರು ಹೇಳಿದರು, ‘ಅಪ್ಪೇಂದ್ರಿಯಪ್ಪ ದೇವರಕಾಡು ಎಂದು ಅದನ್ನು ಕರೆಯುತ್ತಾರೆ. ಅಲ್ಲಿ ಅಪ್ಪೇಂದ್ರಿಯಪ್ಪ ದೇವಸ್ಥಾನ ಇದೆ. ಅದಕ್ಕೆ ಪೂಜೆ ಮಾಡುವ ಭಟ್ಟರ ಮನೆ ಅಲ್ಲೇ ಸಮೀಪ ಇದೆ. ಅವರಲ್ಲಿ ಕೇಳಿದರೆ ಅವರು ದೇವರಕಾಡಿನ ಎಲ್ಲ ಮಾಹಿತಿಗಳನ್ನು ಕೊಡುತ್ತಾರೆ. ಮೊದಲು ಭಟ್ಟರ ಮನೆಗೆ ಹೋಗಿ. ಆಮೇಲೆ ದೇವರಕಾಡಿಗೆ ಹೋಗಿ. ಅಲ್ಲಿಗೆ ಹೋಗಲು ವಾಹನಗಳಿಲ್ಲ. ನೀವು 2 ಕಿ.ಮೀ.ನಷ್ಟು ನಡೆಯಬೇಕಾಗುತ್ತದೆ. ದಾರಿಯಲ್ಲಿ ಕಾಟಿಗಳು ಸಿಕ್ಕರೂ ಸಿಗಬಹುದು. ಎಚ್ಚರ’ ಎಂದರು. ನಾನು ನನ್ನ ಮನೆಯಿಂದ ಪೇಟೆಗೆ ಹೋಗಬೇಕಾದರೆ ಆನೆ ನಡೆಯುವ ದಾರಿಯಲ್ಲಿ 8 ಕಿ.ಮೀ. ನಡೆಯುವವಳಿಗೆ 2 ಕಿ.ಮೀ. ನಡೆಯುವುದೇನು ಮಹಾ ಎಂದುಕೊಂಡು ಜೀಪು ಇಳಿದು ಅವರು ತೋರಿಸಿದ ದಾರಿಯಲ್ಲಿ ನಡೆಯತೊಡಗಿದೆ.   ದಟ್ಟ ಕಾಡಿನ ಹಾದಿ ಅದು. ಮನುಷ್ಯರ ಸುಳಿವಿಲ್ಲ. ಒಂದೂ ಮನೆಯಿಲ್ಲ. ಹಾಗೇ ಮುಂದೆ ಸಾಗುತ್ತಿದ್ದಾಗ ಒಂದು ಸ್ಕೂಟಿ ಬಂತು. ಅದನ್ನು ನಿಲ್ಲಿಸಿ ಕೇಳಿದೆ, ‘ಅಪ್ಪೇಂದ್ರಿಯಪ್ಪ ದೇವಸ್ಥಾನಕ್ಕೆ ಪೂಜೆ ಮಾಡುವ ಭಟ್ಟರ ಮನೆ ಎಲ್ಲಿ ಬರುತ್ತದೆ?’ ಆ ಸವಾರ ಹೇಳಿದ, ‘ಇಲ್ಲಿಂದ ಸ್ವಲ್ಪ ಮುಂದಕ್ಕೆ ಹೋಗುವಾಗ ಮಾರ್ಗದಿಂದ ಎಡಕ್ಕೆ ಕೆಳಗೆ ಇಳಿಯುವ ಒಂದು ರಸ್ತೆ ಕಾಣುತ್ತದೆ. ಅದರಲ್ಲಿ ಸಾಗಿದರೆ ಭಟ್ಟರ ಮನೆ ಸಿಗುತ್ತದೆ’. ನಾನು ನಡೆಯುತ್ತಾ ಹೋಗುತ್ತಿರಬೇಕಾದರೆ ಒಂದು ಕಡೆ ಎಡಗಡೆಗೆ ಇಳಿಯುವ ರಸ್ತೆ ಕಾಣಿಸಿತು. ಅದರಲ್ಲೇ ಇಳಿಯುತ್ತಾ ಹೋದೆ. ಹೋದಷ್ಟೂ ಮುಗಿಯದ ರಸ್ತೆ. ಇಲ್ಲಿ ಕಾಡುಗಳಿಲ್ಲ ಬದಲಾಗಿ ರಸ್ತೆಯ ಎರಡು ಬದಿಯಲ್ಲೂ ಕಾಫಿ ತೋಟ. ನಡೆದೂ ನಡೆದೂ ಆಯಾಸವಾಯಿತು. ಕೊನೆಗೂ ರಸ್ತೆ ಅಂತ್ಯ ಕಂಡಿತು. ಅಲ್ಲಿ ಒಂದೇ ಒಂದು ಮನೆಯಿರಲಿಲ್ಲ. ಮೇಲೆ ನೋಡಿದರೂ ಬೆಟ್ಟ. ಕೆಳಗೆ ನೋಡಿದರೂ ಬೆಟ್ಟ. ಬೆಟ್ಟದಲ್ಲಿ ಹಣ್ಣು ತುಂಬಿದ ಕಾಫಿ ಗಿಡಗಳ ನಡುನಡುವೆ ದೊಡ್ಡ ದೊಡ್ಡ ಮರಗಳು. ಎಲ್ಲಿಯೆಂದು ಭಟ್ಟರ ಮನೆ ಹುಡುಕುವುದು ಎಂದು ನಾನು ಚಿಂತಾಕ್ರಾಂತಳಾಗಿ ಯೋಚಿಸುತ್ತಿರುವಾಗ ಬೆಟ್ಟದ ಮೇಲ್ಭಾಗದಲ್ಲಿ ಹೆಣ್ಣು ಧ್ವನಿಗಳು ಮಾತಾಡುತ್ತಿರುವುದು ಕೇಳಿಸಿತು. ಕೇಳಿಸಿದ್ದಷ್ಟೆ ಕಾಣುತ್ತಿರಲಿಲ್ಲ. ನಾನು ಅಲ್ಲಿಗೆ ಹೋಗುವ ಪ್ರಯತ್ನ ಮಾಡಿದೆ. ಆ ಬೆಟ್ಟ ಎಷ್ಟು ಇಳಿಜಾರಾಗಿತ್ತೆಂದರೆ ನನಗೆ ಅದನ್ನು ಏರಲು ಸಾಧ್ಯವಾಗಲಿಲ್ಲ. ಕಾಫಿ ಕೊಯ್ಯುವವರು ಹೇಗೆ ಈ ಬೆಟ್ಟ ಹತ್ತಿ ಕಾಫಿ ಕೊಯ್ಯುತ್ತಾರಪ್ಪಾ ಎಂಬ ಪ್ರಶ್ನೆ ಮನದಲ್ಲಿ ಮೂಡಿತು. ನಾನು ನಿಂತಲ್ಲಿಂದಲೇ ‘ಕೂ’ ಎಂದು ಕೂಗು ಹಾಕಿದೆ. ಆ ಕಡೆಯಿಂದ ‘ಓ! ಯಾರೂ? ಕಾಫಿ ಕೊಯ್ಯಲು ಬಂದವರಾ’ ಎಂದು ಕೇಳಿದರು. ‘ನನಗೆ ಇಲ್ಲಿ ಇರುವ ಭಟ್ಟರ ಮನೆಗೆ ಹೋಗಬೇಕು. ದಾರಿ ಯಾವುದು? ಹೇಗೆ ಸಾಗಬೇಕು’ ಎಂದು ಕೇಳಿದೆ. ‘ಬಂದ ದಾರಿಯಲ್ಲೇ ಹಿಂದಿರುಗಿ. ಮಾರ್ಗದಲ್ಲೇ ಮುಂದುವರಿಯಿರಿ. ಚೂರು ಮುಂದೆ ಹೋದಾಗ ಎಡಕ್ಕೆ ಕೆಳಗೆ ಇಳಿಯುವ ರಸ್ತೆ ಕಾಣುತ್ತದೆ. ಅದರಲ್ಲಿ ಹೋದರೆ ಭಟ್ಟರ ಮನೆ ಸಿಗುತ್ತದೆ’ ಎಂದರು. ನಾನು ತಿರುಗಿ ಹಿಂದೆ ಬಂದ ಮಾರ್ಗದಲ್ಲೇ ಮುಂದುವರಿದೆ. ಆಗ ನನ್ನೆದುರು ಸುಮಾರು 50ರ ಆಸುಪಾಸಿನ ಹೆಂಗಸೊಬ್ಬಳು ನಡೆದು ಬರುತ್ತಿರುವುದು ಕಾಣಿಸಿತು. ನನ್ನನ್ನು ನೋಡಿ ಅವಳು ಮಾತಿಗೆ ತೊಡಗಿದಳು. ಅವಳು ಬೆಟ್ಟದ ತುದಿಯಲ್ಲಿರುವ ಅವಳ ತೋಟಕ್ಕೆ ನೀರು ಹಾಯಿಸಲು ಹೋದವಳಂತೆ. 2018ರ ಕೊಡಗು ಭೂಕುಸಿತದಲ್ಲಿ ಅವಳ ಭಾವ, ಭಾವನ ಮೂವರು ಗಂಡುಮಕ್ಕಳು ನೆಲಸಮಾಧಿ ಆಗಿದ್ದರಂತೆ. ಅಲ್ಲಿದ್ದ ಎಲ್ಲರ ಮನೆಯೂ ಕೊಚ್ಚಿಹೋಗಿತ್ತಂತೆ. ಸರಕಾರ ಅಲ್ಲೇ ಸ್ವಲ್ಪ ಮುಂದಕ್ಕೆ ಅವರಿಗೆಲ್ಲ ಸಾಲಲ್ಲಿ ಮನೆ ಕಟ್ಟಿಸಿ ಕೊಟ್ಟಿದೆಯಂತೆ. ಒಟ್ಟು 80 ಮನೆ ಇದೆಯಂತೆ. ಆದರೆ ಅವಳಿಗೆ ಅಲ್ಲಿ ಇರುವುದು ಬೇಡವಂತೆ. ಯಾಕೆಂದರೆ ಅವಳು ಮೊದಲು ಇದ್ದದ್ದು ಒಂಟಿ ಮನೆಯಲ್ಲಂತೆ. ಈಗ ಹತ್ತಿರ ಹತ್ತಿರ ಮನೆಯಂತೆ. ಎಷ್ಟು ಹತ್ತಿರವೆಂದರೆ ಒಂದು ಮನೆಯಲ್ಲಿ ಬೇಯಿಸಿದ ಅಡುಗೆಯ ಪರಿಮಳ ಪಕ್ಕದ ಮನೆಯವರ ಮೂಗಿಗೂ ಬಡಿಯುತ್ತದಂತೆ. ಮನೆಯಲ್ಲಿ ಪಿಸಪಿಸನೆ ಮಾತಾಡಿದರೂ ಪಕ್ಕದ ಮನೆಯವರಿಗೆ ಕೇಳಿಸುತ್ತದಂತೆ. ಮಾತಾಡುತ್ತಾ ಅವಳು ‘ಈಗ ಇರುವ ಮನೆಯಲ್ಲಿ ಚೂರೂ ಸಾತಂತ್ರ್ಯವೇ ಇಲ್ಲ’ ಎಂದು ವ್ಯಥೆ ಪಟ್ಟಳು. ‘ಮೊದಲಿದ್ದ ಜಾಗದಲ್ಲೇ ಮನೆ ಕಟ್ಟಿಸಿಕೊಡಲು ಸಂಬಂಧಪಟ್ಟವರಿಗೆ ಹೇಳಬೇಕಿತ್ತು’ ಎಂದೆ ನಾನು. ‘ಹೇಳಿದೆವು. ಆದರೆ ಅಲ್ಲಿ ಮನೆ ಕಟ್ಟಲು ಸರಕಾರದ ಪರ್ಮಿಶನ್ ಇಲ್ಲ. ಮುಂದೆಯೂ ಬೆಟ್ಟ ಕುಸಿಯುವ ಸಾಧ್ಯತೆ ಇದೆಯಂತೆ. ನಾವು ನಮ್ಮ ತೋಟವನ್ನಷ್ಟೇ ಇಟ್ಟುಕೊಳ್ಳಬಹುದು’ ಎಂದಳು. ನನಗೆ ಸರಕಾರ ಸಾಲಲ್ಲಿ ಕಟ್ಟಿಸಿದ ಅವರ ಮನೆಯನ್ನೆಲ್ಲ ನೋಡುವ ಬಯಕೆಯಾಯಿತು. ಆದರೆ ಅವಳ ಜೊತೆ ಮನೆ ನೋಡಲು ಹೋದರೆ ನಾನು ಬಂದ ಕೆಲಸ ಆಗಬೇಕಲ್ಲ? ‘ನಾನು ದೇವರಕಾಡು ನೋಡಲು ಬಂದಿದ್ದೇನೆ. ದೇವರಕಾಡಿನ ದೇವರಿಗೆ ಪೂಜೆ ಮಾಡುವ ಭಟ್ಟರ ಮನೆಗೆ ಮೊದಲು ಹೋಗಬೇಕು. ಭಟ್ಟರ ಮನೆ ಎಲ್ಲಿದೆ?’ ಎಂದು ಕೇಳಿದೆ. ಅವಳು ಅಲ್ಲೇ ಎಡಗಡೆಗೆ ಕೆಳಗೆ ಇಳಿದು ಹೋಗುವ ದಾರಿ ಕಡೆ ಕೈ ತೋರಿಸಿ, ‘ಇದೇ ದಾರಿಯಲ್ಲಿ ಮುಂದುವರಿದರೆ ಭಟ್ಟರ ಮನೆ ಸಿಗುತ್ತದೆ. ಅಲ್ಲಿ ಎರಡು ದೈತ್ಯ ನಾಯಿಗಳಿವೆ. ಕಚ್ಚುವ ನಾಯಿಯನ್ನು ಗೂಡಲ್ಲಿ ಹಾಕುತ್ತಾರೆ. ಇನ್ನೊಂದು ಹೊರಗೆ ಅಡ್ಡಾಡಿಕೊಂಡು ಇರುತ್ತದೆ. ಯಾವುದಕ್ಕೂ ಕೋಲು ಹಿಡಿದುಕೊಂಡು ಹೋಗಿ. ನಾನು ನಿಮ್ಮ ಜೊತೆ ಬರುತ್ತಿದ್ದೆ. ಆದರೆ ನನಗೆ ನಾಯಿಯ ಹೆದರಿಕೆ’ ಎಂದಳು. ವಾಸ್ತವ ಏನೆಂದರೆ ಅಲ್ಲಿ ಮಾರ್ಗದಿಂದ ಎರಡು ಕಡೆ ಎಡಗಡೆಗೆ ಇಳಿದು ಹೋಗುವ ರಸ್ತೆ ಇತ್ತು. ಮೊದಲು ಸಿಗುವ ರಸ್ತೆ ಬಿಟ್ಟು ಎರಡನೆಯ ಸಾರಿ ಸಿಗುವ ಎಡಗಡೆಗೆ ಇಳಿಯುವ ರಸ್ತೆಯಲ್ಲಿ ಹೋಗಬೇಕಿತ್ತು. ಸ್ಕೂಟಿ ಸವಾರ ಕೊಟ್ಟ ಮಾಹಿತಿ ತಪ್ಪೋ ಅಥವಾ ನಾನು ಗ್ರಹಿಸಿದ್ದು ತಪ್ಪೋ ಗೊತ್ತಾಗಲಿಲ್ಲ. ಈಗಲಾದರೂ ದಾರಿ ಸಿಕ್ಕಿತಲ್ಲ ಎಂದು ಅಂದುಕೊಂಡು ನಾನು ಅಲ್ಲಿ ಬಿದ್ದಿರುವ ಸಣ್ಣ ಕೋಲನ್ನು ಹಿಡಿದೆ. ‘ಓ ಇದು ಸಾಲುವುದಿಲ್ಲ. ದೊಡ್ಡ ಕೋಲನ್ನು ಹಿಡಿದುಕೊಳ್ಳಿ’ ಎಂದು ಹೇಳಿದಳು. ನಾನು ಗಿಡದ ದೊಡ್ಡ ಗೆಲ್ಲೊಂದನ್ನು ಮುರಿದು ಸೊಪ್ಪನ್ನೆಲ್ಲ ಸವರಿ, ಕೋಲು ಮಾಡಿ ನಡೆಯುತ್ತಾ ಹೋದೆ. ಹಳೆಕಾಲದ ಸಣ್ಣ ಹಂಚಿನ ಮನೆಯೆದುರು ನಿಂತೆ. ನನ್ನ ಸೊಂಟದೆತ್ತರದ ನಾಯಿ ನನ್ನತ್ತಲೇ ಬಂತು. ಇದ್ದ ಧೈರ್ಯವನ್ನೆಲ್ಲ ಒಟ್ಟುಗೂಡಿಸಿ ಕೋಲು ಮೇಲೆತ್ತಿ ‘ಭಟ್ರೇ’ ಎಂದು ಕರೆದೆ. 40ರ ಆಸುಪಾಸಿನ ತರುಣರೊಬ್ಬರು ಹೊರಗೆ ಬಂದು ಏನು ಬೇಕು ಎಂದು ಕೇಳಿದರು. ನಾನು ಬಂದ ಉದ್ದೇಶ ಹೇಳಿದೆ. ಅವರು ದೇವರಕಾಡಿನ ದೇವರಿಗೆ ಪೂಜೆ ಮಾಡುವ ಅರ್ಚಕರಾಗಿದ್ದರು. ಅಷ್ಟರಲ್ಲಿ ವಯಸ್ಸಾದ ಹೆಂಗಸೊಬ್ಬರು ಬಂದು ‘ಮಜ್ಜಿಗೆ ಬೇಕಾ’ ಎಂದು ವಿಚಾರಿಸಿದರು. ನಾನು ‘ಬೇಕು’ ಎಂದೆ. ಅವರು ಅರ್ಚಕರ ತಾಯಿ ಎಂಬುದು ಗೊತ್ತಾಯಿತು. ಮಜ್ಜಿಗೆ ಕುಡಿಯುತ್ತಿರಬೇಕಾದರೆ ‘ನಿಮಗೆ ಊಟ ಆಗಿದಾ?’ ಕೇಳಿದರು. ಹೊಟ್ಟೆ ಹಸಿವೆಯಿಂದ ಚುರುಗುಟ್ಟುತ್ತಿತ್ತು. ‘ಆಗಿಲ್ಲ’ ಹೇಳಿದೆ. ‘ಹಾಗಾದರೆ ಮೊದಲು ಊಟ ಮಾಡಿ. ನಂತರ ಮಾತನಾಡೋಣ’ ಎನ್ನುತ್ತಾ ನಾನು ಇರುವಲ್ಲಿಗೇ ಒಂದು ಕುರ್ಚಿ ತಂದು ಕೊಟ್ಟರು. ಅರ್ಚಕರ ಹತ್ತಿರ ಅನ್ನ ಬಡಿಸಲು ಹೇಳಿದರು. ಅವರು ಒಂದು ಬಟ್ಟಲು ತುಂಬ ಗೋಪುರದಂತೆ ಅನ್ನ ಹಾಕಿ ತಂದರು. ‘ಅಷ್ಟು ಬೇಡ. ಅದರ ಅರ್ಧ ಸಾಕು’ ಎಂದೆ. ಅವರು ಅದರ ಕಾಲುಭಾಗ ಮಾತ್ರ ತೆಗೆದು ‘ಇಷ್ಟು ಊಟ ಮಾಡಬಹುದು’ ಎಂದರು. ಅದರ ಮೇಲೆ ಬೂದುಗುಂಬಳದ ಮಜ್ಜಿಗೆ ಹುಳಿ ಸುರಿದರು. ಉಪ್ಪಿನಕಾಯಿ ನೆಂಜಿಕೊಳ್ಳಲು ಕೊಡುತ್ತಾರೇನೋ ಎಂದು ಕಾದೆ. ಕೇಳಲು ಸಂಕೋಚವಾಯಿತು. ನಾನು ಊಟ ಮಾಡಲು ಶುರು ಮಾಡಿದೆ. ಮಜ್ಜಿಗೆಹುಳಿ ಬಹಳ ರುಚಿಯಾಗಿತ್ತು. ಕೊನೆಗೂ ಉಪ್ಪಿನಕಾಯಿ ಬರಲಿಲ್ಲ. ಭಟ್ಟರ ಮನೆಯಲ್ಲಿ ಉಪ್ಪಿನಕಾಯಿ ಏಕೆ ಇರಲಿಲ್ಲ ಎಂದು ನನಗೆ ಗೊತ್ತಾಗಲಿಲ್ಲ. ಊಟದ ನಂತರ ಅವರು ದೇವರಕಾಡಿನ ಆಚಾರವಿಚಾರದ ಬಗ್ಗೆ ಮಾತಾಡಿದರು. ‘ನಾನು ದೇವರಕಾಡಿನ ದೇವರಿಗೆ ಪ್ರತೀ ತಿಂಗಳು ಸಂಕ್ರಾಂತಿಯ ನಂತರ ಬರುವ ಮಂಗಳವಾರದಂದು ಪೂಜೆ ಮಾಡಲು ಮಾತ್ರ ಹೋಗುವುದು. ಆಮೇಲೆ ಹೋಗುವುದಿಲ್ಲ. ನಾನು ದಾರಿ ಹೇಳುತ್ತೇನೆ. ನೀವು ಹೋಗಿ ನೋಡಿ’ ಎಂದು ಹೇಳಿದರು. ‘ಅದು ಹಳೆ ದೇವಸ್ಥಾನವಾ?’ ನಾನು ಕೇಳಿದೆ. ‘ಹೌದು. ಅದು ಬಹಳ ಪುರಾತನ ದೇವಸ್ಥಾನ. ಅಲ್ಲಿ ಇರುವ ದೇವರ ಹೆಸರು ಅಪ್ಪೇಂದ್ರಿಯಪ್ಪ. ಅಪ್ಪೇಂದ್ರಿಯಪ್ಪ ಎಂದರೆ ಈಶ್ವರ. ಹಿಂದೆ ಈಶ್ವರ ಬೇಟೆಯಾಡುತ್ತ ಈ ಕಾಡಿಗೆ ಬಂದು ಇಲ್ಲೇ ನೆಲೆ ನಿಂತನಂತೆ. ಈ ಗುಡಿಯನ್ನು ಕಟ್ಟಿಸಿದ್ದು ಕೊಡಗಿನ ದೊರೆ ಚಿಕ್ಕವೀರರಾಜೇಂದ್ರ ಎಂದು ಹೇಳುತ್ತಾರೆ. ಅವನು ರಾತ್ರಿಬೆಳಗಾಗುವುದರೊಳಗೆ ಇದನ್ನು ಕಟ್ಟಿಸಿದನಂತೆ. ದೇವಸ್ಥಾನದ ಜೀರ್ಣೋದ್ಧಾರ ಆಗಿಲ್ಲ. ಅದು ಇದ್ದ ಹಾಗೆಯೇ ಇದೆ. ಅದಕ್ಕೆ ಜಾತ್ರೆ ಸಮಯದಲ್ಲಿ ಸುಣ್ಣಬಣ್ಣ ಕೊಡಲಾಗುತ್ತದೆ. ಅದು ಬಿಟ್ಟರೆ ಬೇರೆ ಏನೂ ನವೀಕರಣ ಮಾಡಲಿಲ್ಲ. ಅಪ್ಪೇಂದ್ರಿಯಪ್ಪ ದೇವಸ್ಥಾನದ ಎದುರು ಇರುವ ರಸ್ತೆಯಲ್ಲಿ ಸಾಗಿದರೆ ಅಪ್ಪೇಂದ್ರಿಯಪ್ಪ ದೇವರಕಾಡು ಸಿಗುತ್ತದೆ. ಈ ದೇವರಕಾಡಿನ ತುದಿಯಲ್ಲಿ ಭದ್ರಕಾಳಿ ಗುಡಿ ಇದೆ. ಅಲ್ಲಿಗೆ ಯಾರೂ ಹೋಗುವ ಹಾಗೆ ಇಲ್ಲ. ಹೆಂಗಸರು ಯಾವತ್ತೂ ಹೋಗಬಾರದು. ನಾನೂ (ಅರ್ಚಕರೂ) ಹೋಗಲಿಕ್ಕೆ ಇಲ್ಲ. ಎರಡು ವರ್ಷಕ್ಕೊಮ್ಮೆ ಆಗುವ ಜಾತ್ರಾ ಸಮಯದಲ್ಲಿ ಇಲ್ಲಿನ ಮೂಲನಿವಾಸಿಗಳು ಮಾತ್ರ ಹೋಗುತ್ತಾರೆ. ಅಂದು ಮೂಲನಿವಾಸಿಗಳು ಸಾಂಪ್ರದಾಯಿಕ ಉಡುಗೆ ತೊಟ್ಟು ಭದ್ರಕಾಳಿ ದೇವಿಯ ಪೂಜೆ ಮಾಡಿ ಗುಡಿಯ ಒಳಗೆ ಇರುವ ಜಿಂಕೆಯ ಕೊಂಬನ್ನು ಧರಿಸಿ ನೃತ್ಯ ಮಾಡುತ್ತ ಅಪ್ಪೇಂದ್ರಿಯಪ್ಪ ದೇವಸ್ಥಾನಕ್ಕೆ ಬರುತ್ತಾರೆ. ಅಲ್ಲಿಯೂ ನರ್ತನ ಮಾಡುತ್ತಾರೆ. ಇಲ್ಲಿ ನಡೆಯುವ ನೃತ್ಯವನ್ನು ಸಾರ್ವಜನಿಕರು ವೀಕ್ಷಿಸಬಹುದು. ನೃತ್ಯ ಮುಗಿದ ಮೇಲೆ ಜಿಂಕೆಕೊಂಬುಗಳನ್ನು ಮತ್ತೆ ಭದ್ರಕಾಳಿ ಗುಡಿಯಲ್ಲೇ ಇರಿಸಲಾಗುತ್ತದೆ’ ಎಂದರು ಹಾಗೂ ಮನೆ ಮೇಲೆ ಹಾದು ಹೋಗುವ ದೇವಸ್ಥಾನದ ದಾರಿಯನ್ನು ತೋರಿಸಿದರು. ನಾನು ದೇವರಕಾಡಿನ ದೇವರಾದ ಅಪ್ಪೇಂದ್ರಿಯಪ್ಪನ ದರ್ಶನ ಪಡೆಯಲು ಭಟ್ಟರು ಸೂಚಿಸಿದ ರಸ್ತೆಯಲ್ಲಿ ಸಾಗಿದೆ. ಭಟ್ಟರ ಮನೆಯಿಂದ ಕಾಲು ಕಿ.ಮೀ.ನಷ್ಟು ನಡೆದರೆ ಈ ದೇವರ ಗುಡಿ ಸಿಗುತ್ತದೆ. ಒಬ್ಬನೇ ಒಳ ಹೋಗಬಹುದಾದಷ್ಟು ಅವಕಾಶವಿರುವ ಸಪೂರಕ್ಕೆ ಎತ್ತರವಾಗಿ ಇರುವ ಮಣ್ಣಿನ ದೇವಸ್ಥಾನ ಅದು. ದೇವಸ್ಥಾನದ ನಾಲ್ಕು ಸುತ್ತಲೂ ಗೋಡೆಯ ಮೇಲೆ ಗಂಡುಹೆಣ್ಣಿನ, ಆನೆ, ಹುಲಿ, ಕಾಡುಹಂದಿ ಮುಂತಾದ ವನ್ಯಪ್ರಾಣಿಗಳ ಚಿತ್ರವನ್ನು ತುಂಬ ಕಲಾತ್ಮಕವಾಗಿ ಬಿಡಿಸಲಾಗಿದೆ. ದೇವಸ್ಥಾನದ ಪ್ರಾಕಾರದಲ್ಲಿ ಪ್ರಾಣಿಗಳ ಮಣ್ಣಿನ ಪ್ರತಿಕೃತಿಗಳೂ ಇದ್ದವು. ಬೀಗ ಹಾಕಿದ್ದರಿಂದ ಅಪ್ಪೇಂದ್ರಿಯಪ್ಪನ ದರ್ಶನವಾಗಲಿಲ್ಲ. ಹೊರಗಿನಿಂದಲೇ ದೇವರಿಗೆ ಸಾಷ್ಟಾಂಗ ನಮಸ್ಕಾರ ಮಾಡಿದೆ. ದೇವರಕಾಡು ಹುಡುಕುತ್ತಾ ದೇವಸ್ಥಾನದ ಎದುರು ಇರುವ ದಾರಿಯಲ್ಲಿ ನಡೆಯುತ್ತ ಸಾಗಿದಾಗ ಒಂದು ಕಡೆ ಕಾಡಿನ ಬದಿಯಲ್ಲಿ ದೊಡ್ಡ ಕಬ್ಬಿಣದ ಗೇಟು ಕಂಡಿತು. ಗೇಟಿನ ಮೇಲ್ಭಾಗದಲ್ಲಿ ಕಮಾನಿನಾಕಾರದಲ್ಲಿ ‘ಅಪ್ಪೇಂದ್ರಿಯಪ್ಪ ದೇವರಕಾಡು’ ಎಂದು ಬರೆದಿತ್ತು. ನಾನು ಹುಡುಕುತ್ತಿದ್ದ ದೇವರಕಾಡು ಕಣ್ಣಮುಂದೆಯೇ ಬಂದು ನಿಂತಿತ್ತು. ಸಂತಸದಿಂದ ಕುಣಿದಾಡುವಂತಾಯಿತು. ಗೇಟು ತೆರೆದೇ ಇತ್ತು. ಒಳಗೆ ಕಾಲಿಟ್ಟೆ. ಸೊಳ್ಳೆಯೂ ಒಳ ಹೋಗಲು ಸಾಧ್ಯವಿಲ್ಲದಂತಹ ಕಾಡು ಅದು. ಮೇಲೇರಲು ದಾರಿಯೇ ಇರಲಿಲ್ಲ. ದಾರಿ ಮಾಡಿಕೊಂಡು ಮೇಲೇರಲು ಸಾಧ್ಯವೂ ಇರಲಿಲ್ಲ. ಇನ್ನು ನಾನು ಮನೆದಾರಿ ಹಿಡಿಯುವುದೇ ಸರಿ ಎಂದು ಮಾರ್ಗಕ್ಕೆ ಕಾಲಿಟ್ಟೆ. ಊರಿನವರೊಬ್ಬರು ಅದೇ ದಾರಿಯಾಗಿ ತಮ್ಮ ಮನೆಗೆ ಹೋಗುತ್ತಿದ್ದವರು ನನ್ನಲ್ಲಿ, ‘ನೀವು ಇಲ್ಲಿಗೆ ಒಬ್ಬರೇ ಬಂದಿರಾ? ಇಲ್ಲಿ ಕಾಟಿಗಳಿವೆ. ಈ ತೆರೆದ ಗೇಟಿನಿಂದಲೇ ಅವು ಕೆಳಗೆ ಇಳಿದು ಬರುತ್ತವೆ, ಹುಷಾರು’ ಎಂದರು. ಆಗಲೇ ಗಂಟೆ ಐದೂವರೆಯಾಗಿತ್ತು. ಇನ್ನು 2 ಕಿ.ಮೀ. ನಡೆಯಬೇಕು. ಕಾಟಕೇರಿಯಲ್ಲಿ ನನ್ನೂರಿಗೆ ಹೋಗುವ ಬಸ್ಸು ನಿಲ್ಲಿಸುವುದಿಲ್ಲ. ಅಪರಿಚಿತ ಪರಿಸರ. ಕತ್ತಲೆ ಬೇರೆ ಆಗುತ್ತಿದೆ. ಊರು ಸೇರುವುದು ಹೇಗೋ ಎಂದು ಚಿಂತಿಸುತ್ತ ಆತುರಾತುರವಾಗಿ ನಡೆಯತೊಡಗಿದೆ. ಹಿಂದಿನಿಂದ ಒಂದು ಕಾರು ಬಂದು ನನ್ನೆದುರು ನಿಂತಿತು. ನಾನು ಹಿಂದೆಮುಂದೆ ನೋಡದೆ ‘ಕಾಟಕೇರಿ ಮೈನ್‌ರೋಡ್’ ಎನ್ನುತ್ತ ಕಾರು ಹತ್ತಿದೆ. ಹತ್ತಿಯೇನೋ ಬಿಟ್ಟೆ. ಕಾಟಿಯ ಭಯ ಆಗದವಳಿಗೆ ಈಗ ಒಳಗಿರುವವರನ್ನು ನೋಡಿ ಭಯವಾಗತೊಡಗಿತು. ಅವರೆಲ್ಲರೂ ಯುವಕರು. ಒಬ್ಬನ ಬಾಯಿಂದ ಸಿಗರೇಟ್ ವಾಸನೆ ಬರುತ್ತಿತ್ತು. ಇನ್ನೊಬ್ಬ ಹೆಂಡದ ಅಮಲಿನಲ್ಲಿದ್ದ. ಸ್ವಲ್ಪ ಸರಿ ಇದ್ದದ್ದು ಡ್ರೈವರ್ ಮಾತ್ರ. ನನಗೆ ಎದೆ ಹೊಡೆದುಕೊಳ್ಳತೊಡಗಿತು. ಅಪ್ಪೇಂದ್ರಿಯಪ್ಪ ದೇವರೇ ಕಾಪಾಡು ಎಂದು ಮನದಲ್ಲೇ ಪ್ರಾರ್ಥಿಸಿದೆ. ‘ನಾವು ಮಡಿಕೇರಿಗೆ ಹೋಗುವವರು. ಇಲ್ಲಿ ಕಟ್ಟಡ ಕಟ್ಟುವ ಕೆಲಸಕ್ಕೆ ಬಂದಿದ್ದೇವೆ’ ಎಂದರು. ನನಗೆ ಚೂರು ಧೈರ್ಯ ಬಂದು ‘ನಾನು ಪತ್ರಕರ್ತೆ. ಪತ್ರಿಕೆಯೊಂದಕ್ಕೆ ದೇವರಕಾಡಿನ ವರದಿ ಮಾಡಲು ಬಂದಿದ್ದೇನೆ. ಕಾಟಕೇರಿಯಲ್ಲಿ ನಮ್ಮೂರಿಗೆ ಹೋಗುವ ಬಸ್ಸುಗಳು ನಿಲ್ಲುವುದಿಲ್ಲ. ನಾನೂ ಮಡಿಕೇರಿಗೆ ಬರುತ್ತೇನೆ’ ಎಂದೆ. ನಾನು ರೈತಮಹಿಳೆ ಎಂದರೆ ನನ್ನನ್ನು ಮೋಸಗೊಳಿಸುವವರು ಇರುತ್ತಾರೆ. ಪತ್ರಕರ್ತೆ ಎಂದರೆ ಹೆದರುತ್ತಾರೆ ಎಂಬುದು ನಾನು ಅನುಭವದಿಂದ ಕಂಡುಕೊಂಡ ಸತ್ಯ. ಈಗಲೂ ಹಾಗೆಯೇ ಆಯಿತು. ಅವರು ಮುಂದೆ ಮಾತು ಬೆಳೆಸದೆ ಸುಮ್ಮನಿದ್ದರು. ನನ್ನನ್ನು ಮಡಿಕೇರಿ ಬಸ್‌ಸ್ಟ್ಯಾಂಡ್‌ನಲ್ಲಿ ಇಳಿಸಿ ಹೊರಟುಹೋದರು. ಆರೂವರೆ ಗಂಟೆಗೆೆ ಮಂಗಳೂರಿಗೆ ಹೋಗುವ ಬಸ್ ಬಂತು. ಅದರಲ್ಲಿ ಹತ್ತಿ ಕಲ್ಲುಗುಂಡಿಯಲ್ಲಿ ಇಳಿದು ಮಬ್ಬುಗತ್ತಲಿನಲ್ಲಿ ನನ್ನ ಮನೆ ಕಡೆಗೆ ಸಾಗುತ್ತಿರುವಾಗ ಕಲ್ಲು ಹೊತ್ತ ಒಂದು ಲಾರಿ ಊರ ಕಡೆಗೆ ಹೋಗುತ್ತಿರುವುದು ಕಾಣಿಸಿತು. ಇದನ್ನು ಬಿಟ್ಟರೆ ಮನೆಗೆ ಹೋಗುವ ಬೇರೆ ವಾಹನ ಸಿಗುವುದಿಲ್ಲ ಎಂದು ನಾನು ಅದನ್ನು ಏರಿ ದೇವರಕಾಡಿನ ದೇವರನ್ನು ನೆನೆಯುತ್ತಾ ಮನೆ ಸೇರಿದೆ.

ವಾರ್ತಾ ಭಾರತಿ 8 Feb 2026 12:24 pm

ನಾಡೋಜ ಪಂಪ

ಜೈನ ಮತ್ತು ಲಿಂಗಾಯತ ಧರ್ಮಮಾರ್ಗದ ಓದಿನ ಜಾಡು ಹಿಡಿದು ಈ ನೆಲದ ಬದುಕಿನ ದರ್ಶನವನ್ನು ಕಾಣುವ ಕಟ್ಟುವ ಕ್ರಿಯೆ ಆಗಬೇಕಿದೆ. ಆದರೆ ನಮ್ಮಲ್ಲಿ ನೆಲದ ಬದುಕಿನ ಅನುಭವಾತ್ಮಕ ದೃಷ್ಟಿ ಧೋರಣೆಗಳನ್ನು ಬಹು ಹಿಂದಿನಿಂದಲೂ ಕಡೆಗಣಿಸುತ್ತಲೇ ನಡೆದಿದ್ದೇವೆ. ನಮ್ಮ ಜನಪದ ಸಾಹಿತ್ಯವನ್ನು ‘ಗೊರವರ ಡುಂಡುಚಿ ಬೀರರ ಬೀದಿವರೆ’ ಎಂದು ಕಡೆಗಾಣಿಸಿ ನಡೆದಂತೆ, ಈ ಧರ್ಮಗಳ ಆವರಣದೊಳಗಿನ ಪಠ್ಯಗಳನ್ನು ಅವುಗಳ ಸೂಕ್ಷ್ಮ ಸಂವಹನೆಯ ಭಿನ್ನತೆಯನ್ನು ಕಡೆಗಾಣಿಸಿಯೇ ಭಾರತೀಯ ಎಂಬ ಓದಿನ ಕಣ್ಣು ಪಟ್ಟಿಗೆ ಸಿಕ್ಕಿಸಿಕೊಂಡ ಓದುಗಳಾಗಿ ಮುಂದುವರಿಸಿದ್ದೇವೆ. ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಎಂ.ಎ. ಪದವಿ ಪಡೆದಿರುವ ಪ್ರೊ. ಎಸ್. ಜಿ. ಸಿದ್ದರಾಮಯ್ಯ, ಕನ್ನಡ ಅಧ್ಯಾಪಕರಾಗಿ, ಪ್ರಾಧ್ಯಾಪಕರಾಗಿ, ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾಗಿಸೇವೆ ಸಲ್ಲಿಸಿದ ಇವರು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿದ್ದರು. ವಚನಗಳು, ಶರಣ ಸಂಸ್ಕೃತಿ, ದೇಸಿ ಮಾರ್ಗದ ಬಗ್ಗೆ ಒಲವುಳ್ಳವರು. ‘ಗಾಲ್ಫ್ ಉಬ್ಬಿನ ಮೇಲೆ’, ‘ಕಾಡುವ ಬೇಲಿಹೂ’, ‘ಅವಳೆದೆಯ ಜಂಗಮ’, ‘ಸೊಲ್ಲು ಫಲವಾಗಿ’, ‘ಮರುಜೇವಣಿ’, ‘ಕರೆಬಳೆಗ’, ‘ಬೀದಿ ಅಲ್ಲಮ’, ‘ಕಾಯಮಾಯದ ಕಾಡು’, ‘ಅರಿವು ನಾಚಿತ್ತು’ ಎಂಬ ಕವನ ಸಂಕಲನಗಳನ್ನು; ‘ದಂಡೆ’, ‘ದಾಳ’, ‘ಅನ್ನದಾತ’ ಎಂಬ ನಾಟಕಗಳು, ‘ಅಂಬಿಗರ ಚೌಡಯ್ಯ’- ‘ಒಂದುಓದು’, ‘ಯಡೆಕುಂಟೆ ಗೆಣೆಸಾಲು’, ‘ಕೇಡಿಲ್ಲವಾಗಿ’, ‘ಸಾಲಾವಳಿ’, ‘ನಿಶಬ್ದದ ಜಾಡು’, ‘ಕಣ್ಣಗಾಯದ ಕಾಲುದಾರಿಗಳು’, ಯಡೆಸಾಲು ಎಂಬ ವಿಮರ್ಶಾಕೃತಿಗಳು; ‘ಕನ್ನಡ ಪುಸ್ತಕ ಜಗತ್ತು’ ಎಂಬ ಅನುಭವ ಕಥನವನ್ನು ಕನ್ನಡ ಸಾಹಿತ್ಯಲೋಕಕ್ಕೆ ಕೊಡುಗೆಯಾಗಿ ನೀಡಿದ್ದಾರೆ. 3 ಬಾರಿ ಕರ್ನಾಟಕ ಸಾಹಿತ್ಯ ಅಕಾಡಮಿ ಬಹುಮಾನ, ಜಿ.ಎಸ್.ಶಿವರುದ್ರಪ್ಪ ಕಾವ್ಯ ಪ್ರಶಸ್ತಿ, ಪು.ತಿ.ನ. ಕಾವ್ಯ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳನ್ನು ಪಡೆದಿರುವ ಇವರು ಪ್ರಗತಿಪರ ಚಿಂತಕರಾಗಿ ಗುರುತಿಸಿಕೊಂಡಿದ್ದಾರೆ. ಪ್ರವೇಶ : ಕುರಿತೋದದೆಯುಂ ಕಾವ್ಯ ಪ್ರಯೋಗ ಪರಿಣತಿ ಮತಿಗಳ್ ನಾಡವರ್ಗಳ್ ಎಂದು ಕವಿರಾಜಮಾರ್ಗಕಾರ ಕನ್ನಡಿಗರ ಕಾವ್ಯ ರಚನಾ ಚಾತುರ್ಯದ ಬಗ್ಗೆ ಹೇಳಿದ್ದಾನೆ. ಇದು ಜನಪದ ಕವಿಗಳಿಗೆ ಸಂಬಂಧಿಸಿದಂತೆ ಬರೆದ ಮಾತು. ಜಾನಪದಕ್ಕೆ ಪರಂಪರೆ ಇದೆಯೇ ಹೊರತು, ಇತಿಹಾಸ ಇಲ್ಲ; ಅಂದರೆ ಇರುವ ಇತಿಹಾಸವನ್ನು ನಿಖರವಾಗಿ ಹೇಳಲಾಗುವುದಿಲ್ಲ. ಆದರೆ ಪರಂಪರೆ ಎಂಬುದು ಇತಿಹಾಸವನ್ನು ಜೀರ್ಣಿಸಿಕೊಂಡು ಬೆಳೆದದ್ದು, ವರ್ತಮಾನವಾಗಿಯೂ ಮುಂದುವರಿಯುತ್ತಿರುವುದು. ಅಲ್ಲಮ ಪ್ರಭುಗಳು ಹೇಳುವಂತೆ ‘‘ಹಿಂದಣ ಅನಂತವನು ಮುಂದಣ ಅನಂತವನು ಒಂದು ದಿನ ಒಳಗೊಂಡಿತ್ತು ನೋಡಾ, ಆ ಒಂದು ದಿನವನೊಳಕೊಂಡು ಮಾತಾಡುವ ಮಹಾಂತರ ಕಂಡುಬಲ್ಲವರಾರಯ್ಯ?’’ ಈ ಮಾತನ್ನು ಜನಪದ ಕವಿಗಳ ಕಾವ್ಯ ರಚನಾ ಚಾತುರ್ಯಕ್ಕೆ ಅನ್ವಯಿಸುವ ಮಾತಾಗಿಯೂ ಬಳಸಿಕೊಳ್ಳಬಹುದು ಅನ್ನಿಸುತ್ತದೆ. ನಮ್ಮ ಕನ್ನಡದಲ್ಲಿರುವ ಜನಪದ ಮಹಾಕಾವ್ಯಗಳು ಒಂದಲ್ಲ ಎರಡಲ್ಲ ಹಲವಿವೆ. ಜಾತಿಗೊಂದು ಕುಲಚರಿತೆಯ ಪುರಾಣ ಕಾವ್ಯಗಳಿವೆ. ಕೆಲವು ಜಾತಿಗಳಲ್ಲಿ ಅರ್ಥಾತ್ ಕುಲಗಳಲ್ಲಿ ಎರಡು ಮೂರು ಕಾವ್ಯಗಳಿವೆ. ಇವು ಕುಲದ ಮೂಲಪುರುಷರಿಗೆ ಸಂಬಂಧಿಸಿದ ಕುಲ ಕಥನಗಳಾಗಿವೆ. ಆದರೆ ಈ ಎಲ್ಲಾ ಕುಲಕಥನಗಳಿಗೆ ನಿರ್ದಿಷ್ಟ ಕಾಲದ ರಚನೆಗಳೆಂದು ಗುರುತಿಸಲಾಗುವುದಿಲ್ಲ. ಅಲ್ಲದೆ ಅವುಗಳು ಈಗಿರುವ ಸ್ವರೂಪದಲ್ಲಿಯೇ ಅವು ಹುಟ್ಟಿದ ಸಂದರ್ಭದಲ್ಲಿ ಇದ್ದವೆಂದು ಹೇಳಲಾಗದು. ಕಾರಣ ಜನಪದ ಪುರಾಣಕಾವ್ಯಗಳು ಸಮೂಹಸೃಷ್ಟಿಗಳು. ಯಾರೋ ಒಬ್ಬ ವ್ಯಕ್ತಿ ಇವುಗಳ ಸೃಷ್ಟಿಗೆ ನಿಮಿತ್ತವಾದರೂ ಅವನು ಸಮಷ್ಟಿಯಲ್ಲಿ ಕರಗಿ ಇಡೀ ಸೃಷ್ಟಿ ಸಮಷ್ಟಿಯ ಸೃಷ್ಟಿಯಾಗಿ ಹರಿವು ಕಂಡುಕೊಳ್ಳುತ್ತದೆ. ಕಾಲಕ್ಕೆ ತಕ್ಕಂತೆ ಪರಿಸರಕ್ಕೆ ತಕ್ಕಂತೆ ಅದರ ಸದ್ಯೋಜಾತ ಪ್ರತಿಭೆಯ ಹರಿವು ಇರುತ್ತದೆ ಹೀಗಾಗಿ ಜನಪದ ಕಾವ್ಯಕ್ಕೆ ಕಾಲ ನಿರ್ದಿಷ್ಟತೆಯನ್ನು ಗುರುತಿಸಲಾಗದು. ಈ ಮೇಲಿನ ವಿವರಣೆಯ ಹಿನ್ನೆಲೆಯಲ್ಲಿ ಅನಕ್ಷರಸ್ಥ ಪರಂಪರೆಗೆ ಇತಿಹಾಸವಿದ್ದೂ ಅದು ನಿಖರತೆಯಲ್ಲಿ ನಿರ್ದುಷ್ಟತೆಯಲ್ಲಿ ಗುರುತಿಸಲಾಗುವುದಿಲ್ಲ. ಆದರೆ ಅಕ್ಷರ ಪರಂಪರೆಗೆ ಇತಿಹಾಸವಿದೆ. ಅದು ಬರವಣಿಗೆಯ ಮುಖೇನದಲ್ಲಿ ಉಳಿದ ಇತಿಹಾಸ, ಕೆಲವೊಮ್ಮೆ ನಿರ್ದುಷ್ಟತೆ ನಿಖರತೆ ಇಲ್ಲೂ ಸಿಗದೆ ಹೋಗಬಹುದು. ಆದರೆ ಪಠ್ಯದೊಳಗಿನ ಅಂತಃ ಪ್ರಮಾಣುವನ್ನು ಆಧರಿಸಿದಂತೆ ಕಾಲವನ್ನು ಕುರಿತು ಮಾತಾಡಬಹುದು. ಹೆಚ್ಚು ಕಡಿಮೆಯ ಅಂತರದಲ್ಲಿ ಕಾಲ ನಿರ್ಣಯಕ್ಕೆ ಬರುವ ಸಾಧ್ಯತೆಗಳು ಇರುತ್ತವೆ. ಅಕ್ಷರ ಪರಂಪರೆಯ ಇತಿಹಾಸ : ಅಕ್ಷರ ಪರಂಪರೆಯ ಕನ್ನಡ ಸಾಹಿತ್ಯದ ಇತಿಹಾಸವನ್ನು ಗಮನಿಸಿದರೆ ಜೈನ ಕವಿಗಳು ಕನ್ನಡದಲ್ಲಿ ಮೊದಲು ಬರೆದವರು ಎಂಬುದು ನಿರ್ವಿವಾದದ ಸಂಗತಿ. ಈಗ ಲಭ್ಯವಿರುವ ಕವಿರಾಜಮಾರ್ಗ ಕನ್ನಡದ ಮೊಟ್ಟ ಮೊದಲ ಕೃತಿಯಾದರೂ ಇದು ಕಾವ್ಯ ಕೃತಿ ಅಲ್ಲ; ಇದೊಂದು ಲಾಕ್ಷಣಿಕ ಗ್ರಂಥ. ಕವಿರಾಜಮಾರ್ಗ ಹೆಸರೇ ಹೇಳುವಂತೆ ಕವಿಗಳಿಗೆ ಕಾವ್ಯ ರಚನೆಯನ್ನು ಕುರಿತು ಹೇಗೆ ಬರೆಯಬೇಕು ಎಂಬ ಬಗ್ಗೆ ಲಕ್ಷಣ ಸೂತ್ರಗಳನ್ನು ವಿವರಿಸುವ ಮಾರ್ಗಸೂಚಿ ಗ್ರಂಥ ಇದಾಗಿದೆ. ಆದರೆ ಇದನ್ನು ಆದಿ ಗ್ರಂಥ ಎಂದು ಹೇಳಲಾಗದು. ಕಾರಣ ನದಿ ಹರಿಯುತ್ತಿದ್ದಾಗ ಅದಕ್ಕೆ ಅಣೆಕಟ್ಟು ಹಾಕಿ ನಾವು ನದಿಯ ನೀರನ್ನು ನಮಗೆ ಬೇಕಾದಲ್ಲಿಗೆ ಬಳಸಿಕೊಳ್ಳುವಂತೆ. ನದಿಯೇ ಇಲ್ಲದಿದ್ದು ಮೊದಲು ಅಣೆಕಟ್ಟನ್ನು ಕಟ್ಟಿ ಆಮೇಲೆ ನದಿಯನ್ನು ಹರಿಸಲಾಗುವುದಿಲ್ಲ. ನದಿ ನಿಸರ್ಗ ಸಹಜ ಹರಿವು. ಅಣೆಕಟ್ಟು ಮನುಷ್ಯನ ಕೃತಕ ಸೃಷ್ಟಿ. ಅದೇ ರೀತಿ ಮೊದಲು ಅನುಭವ ಜನ್ಯವಾದ ಸಾಹಿತ್ಯ ಸೃಷ್ಟಿ ಆಗಿದ್ದು ಅದರ ವಿನ್ಯಾಸ ಸ್ವರೂಪವನ್ನು ಗ್ರಹಿಸಿ ಆನಂತರ ಅದಕ್ಕೆ ಲಕ್ಷಣ ಗ್ರಂಥ ರಚಿಸುವ ಸಾಧ್ಯತೆ ಇರುತ್ತದೆ. ಆದ್ದರಿಂದಲೇ ಕವಿರಾಜಮಾರ್ಗಕ್ಕೂ ಪೂರ್ವದಲ್ಲಿ ಕನ್ನಡದಲ್ಲಿ ಕಾವ್ಯ ರಚನೆಗಳಾಗಿವೆ. ಆದರೆ ಅವು ನಮಗೆ ಲಭ್ಯವಿಲ್ಲ. ಕವಿಗಳು ಇದ್ದರೆಂಬುದಕ್ಕೆ ಕೆಲವು ಕವಿಗಳ ಉಲ್ಲೇಖ ಕವಿರಾಜಮಾರ್ಗದಲ್ಲಿಯೇ ಇದೆ. ಅಸಗ, ಗುಣನಂದಿ ಇತ್ಯಾದಿ ಹೆಸರುಗಳು ಇವೆ. ಆದರೆ ಅವರ ಕಾವ್ಯ ಕೃತಿಗಳ ಉಲ್ಲೇಖವಾಗಲಿ ಹೆಸರಾಗಲಿ ಇಲ್ಲ. ಈ ಎಲ್ಲಾ ಕಾರಣಗಳಿಂದ ಕವಿರಾಜಮಾರ್ಗವೇ ಕನ್ನಡದ ಮೊದಲ ಲಭ್ಯ ಕೃತಿ ಎಂಬುದು ಸದ್ಯಕ್ಕೆ ನಿರ್ವಿವಾದವಾಗಿ ಒಪ್ಪಿಕೊಂಡ ಸಂಗತಿ. ಇದರ ಕರ್ತೃವನ್ನು ಕುರಿತು ಕೆಲವು ಕಾಲದವರೆಗೆ ನೃಪತುಂಗ ಎಂಬುದು ಹೆಚ್ಚು ಪ್ರಚಲಿತವಿದ್ದ ಹೆಸರು. ಆದರೆ ಬಾಹ್ಯ ಮತ್ತು ಆಂತರಿಕ ಪ್ರಮಾಣುಗಳ ಆಧಾರದಿಂದ ಈಗ ಇದರ ಕರ್ತೃ ಶ್ರೀವಿಜಯ ಎಂಬುದು ಸಾಬೀತಾಗಿರುವ ಸಂಗತಿ. ‘‘ನೃಪತುಂಗ ದೇವಾಭಿಮತಮಪ್ಪ ಶ್ರೀವಿಜಯಕೃತ ಕವಿರಾಜಮಾರ್ಗಂ’’ ಎಂಬುದು ವಿವಾದವಿಲ್ಲದೆ ಒಪ್ಪಿಕೊಂಡ ಸತ್ಯ.   ಕವಿರಾಜಮಾರ್ಗದ ನಂತರದಲ್ಲಿ ಲಭ್ಯವಾದ ಕೃತಿ ‘ವಡ್ಡಾರಾಧನೆ’ ಇದು ಗದ್ಯ ಕೃತಿ. ಕಥನಗಳ ಕೃತಿಯಾದರೂ ಇದು ಗದ್ಯಕೃತಿ. ಈ ಕೃತಿಯ ಕರ್ತೃವಿನ ಬಗೆಗೂ ಹಲವು ಕಾಲದವರೆಗೂ ವಿವಾದಗಳಿದ್ದವು. ಅವನು ಶಿವಕೋಟ್ಯಾಚಾರ್ಯನೋ? ರೇವಕೋಟಚಾರ್ಯನೋ? ಇದಕ್ಕೆ ಸಂಬಂಧಿಸಿದಂತೆ ಕನ್ನಡ ಲಿಪಿಕಾರರಲ್ಲಿ ಆದ ಬರವಣಿಗೆಯ ‘ಶಿ’ ‘ರೆ’ ಅಕ್ಷರ ದೋಷಕಾರಣದಿಂದ ಅದು ಶಿವ-ರೇವ ವ್ಯತ್ಯಾಸದ ಜಿಜ್ಞಾಸೆಯೂ ನಡೆದದ್ದು ಚರ್ಚಿತ ಸತ್ಯ. ಈ ಮೇಲಿನ ಚಾರಿತ್ರಿಕ ವಸ್ತು ಸಂಗತಿಗಳ ಹಿನ್ನೆಲೆಯಲ್ಲಿ ಈಗ ಕನ್ನಡದ ಕಾವ್ಯ ರಚನೆಗೆ ಸಂಬಂಧಿಸಿದಂತೆ ಜೈನರೇ ಆದಿ ರಚಯಿತರು, ಜೈನಧರ್ಮದ ಕವಿಗಳೇ ಕನ್ನಡ ಅಕ್ಷರ ಪರಂಪರೆಯ ಆದಿವಕ್ತಾರರು ಎಂಬುದು ವಸ್ತು ಸತ್ಯ. ಇದಕ್ಕಿರುವ ಚಾರಿತ್ರಿಕ ಹಿನ್ನೆಲೆಯನ್ನು ಮರೆತು ಮುಂದೆ ಹೋಗುವಂತಿಲ್ಲ, ಏಕೆಂದರೆ ಚರಿತ್ರೆಯನ್ನು ಮರೆತು ವರ್ತಮಾನವನ್ನು ಅರ್ಥೈಸಿಕೊಳ್ಳಲಾಗದು, ಚರಿತ್ರೆ ಮತ್ತು ವರ್ತಮಾನದ ಅರಿವಿಲ್ಲದೆ ಭವಿಷ್ಯವನ್ನು ಕಟ್ಟಲಾಗದು. ಇದನ್ನು ಕುರಿತೆ ಅಲ್ಲಮಪ್ರಭುಗಳು ‘‘ಅರಿವು ಅರಿವು ಎನ್ನುತ್ತಿಪ್ಪಿರಿ ಅರಿವು ಸಾಮಾನ್ಯಮೇ? ಹಿಂದಣ ಹೆಜ್ಜೆಯ ನೋಡಿಕೊಂಡಲ್ಲದೆ ನಿಂದ ಹೆಜ್ಜೆಯನರಿಯಲಾಗದು. ಮುಂದಣ ಹೆಜ್ಜೆಯುಳಿದಲ್ಲದೆ ಒಂದು ಪಾದ ನೆಲೆಗೊಳ್ಳದು’’ ಎಂದು ಭೂತ-ವರ್ತಮಾನ-ಭವಿಷ್ಯದ ಸಂಸ್ಕೃತಿ ನಿರ್ಮಾಣದ ಬಗ್ಗೆ ಮಾತನಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಇಡೀ ಕನ್ನಡ ಸಾಹಿತ್ಯ ಸಂಸ್ಕೃತಿಯ ಬಗ್ಗೆ ಮಾತನಾಡುವಾಗ ನಮಗೆ ಈ ತ್ರಿಕಾಲ ಪ್ರಜ್ಞೆಯ ಅರಿವು ಇರಬೇಕು. ಚಾರಿತ್ರಿಕ ಹಿನ್ನೆಲೆ : ಈ ದೇಶದಲ್ಲಿ ವೈದಿಕ ಶಾಹಿಯು ಚಾತುರ್ವರ್ಣ ವ್ಯವಸ್ಥೆಯ ಮುಖೇನ ಸಮಾಜವನ್ನು ಒಡೆದಿತ್ತು. ವರ್ಣನೀತಿಯ ನೆಲೆಯಲ್ಲಿ ಧರ್ಮಸೂಕ್ಷ್ಮಗಳನ್ನು ರಚಿಸಿ ಅದನ್ನೇ ಕರ್ಮಸಿದ್ಧಾಂತವಾಗಿಸಿ ನಂಬಿಸಲಾಗಿತ್ತು. ಶಿಕ್ಷಣವನ್ನು ಎಲ್ಲರ ಹಕ್ಕಾಗಿಸದೆ ಕೇವಲ ವರ್ಣ ಶ್ರೇಷ್ಠರ ಅಧಿಕಾರವಾಗಿಸಿತ್ತು ತನ್ಮುಖೇನ ಸಂಸ್ಕೃತ ಭಾಷೆಯನ್ನು ದೇವ ಭಾಷೆ ಎಂದು ಕರೆದು ಅದನ್ನು ವೈದಿಕರು ಮತ್ತು ಕ್ಷತ್ರಿಯರನ್ನು ಬಿಟ್ಟು ಬೇರೆಯವರು ಕಲಿಯದಂತೆ ವಿಧಿ ನಿಷೇಧಗಳನ್ನು ಹಾಕಿತ್ತು. ಭೂಮಿ ಮತ್ತು ಸಂಪತ್ತನ್ನು ಕೆಲವು ವರ್ಣಗಳಿಗೆ ಮಾತ್ರ ಸೀಮಿತಗೊಳಿಸಿದಂತೆ ವಂಚಿತರ ಬದುಕನ್ನು ನರಕವಾಗಿಸಿತ್ತು. ಇದರ ವಿರುದ್ಧ ಸಿಡಿದಂತೆ ಹಲವು ಧರ್ಮಗಳು ಹುಟ್ಟಿದವು, ಹಲವು ಪಂಥ ಸಿದ್ಧಾಂತಗಳು ಹುಟ್ಟಿದವು. ಇವುಗಳೆಲ್ಲವೂ ಜನರ ಭಾಷೆಯಲ್ಲಿ ಧರ್ಮ ಪ್ರಚಾರಕ್ಕೆ ಸಿದ್ಧಾಂತ ತತ್ವ ಪ್ರಚಾರಕ್ಕೆ ತೊಡಗಿದವು. ಜೈನಧರ್ಮ ಪ್ರಾಕೃತ ಭಾಷೆಯಲ್ಲಿ ತನ್ನ ತತ್ವ ಸಿದ್ಧಾಂತಗಳನ್ನು ಹೇಳಿದರೆ ಬೌದ್ಧರು ಪಾಳಿಯಲ್ಲಿ ಬೋಧಿಸಿದರು. ಸಹಜವಾಗಿ ಅವುಗಳ ಪ್ರಚಾರ ವಿಸ್ತರಿಸಿದಂತೆ ಅವರು ಆಯಾ ಪ್ರದೇಶಗಳ ಪ್ರಾದೇಶಿಕ ಭಾಷೆಯನ್ನು ಅವಲಂಬಿಸಿದರು. ಧರ್ಮ ಪ್ರಚಾರದ ಜೊತೆಗೆ ಸಾಹಿತ್ಯ ಕೃಷಿಯಲ್ಲೂ ತೊಡಗಿದರು. ಕರ್ನಾಟಕದ ಸಂದರ್ಭದಲ್ಲಿ ವೈದಿಕಕ್ಕೆ ವಿರುದ್ಧವಾಗಿ ಮೊದಲು ಜೈನರು ಆನಂತರದಲ್ಲಿ ಲಿಂಗಾಯತರು ಧರ್ಮ ಪ್ರಚಾರದಲ್ಲಿ ತೊಡಗಿದರು. ಸಹಜವಾಗಿ ಈ ನೆಲದ ಭಾಷೆಯಾದ ಕನ್ನಡವನ್ನು ಅವರು ತಮ್ಮ ಸಾಹಿತ್ಯ ರಚನೆಗೆ ಬಳಸಿದ್ದರು. ಬೌದ್ಧಧರ್ಮ ಈ ನಾಡಿಗೆ ಕಾಲಿಟ್ಟು ಪಸರಿಸಿದ ಕುರುಹುಗಳಿದ್ದರೂ ಅದು ಇಲ್ಲಿ ಬೇರೂರಿ ಬೆಳೆಯಲಿಲ್ಲ. ಅದಕ್ಕೆ ಕಾರಣ ಕೇವಲ ಕರ್ನಾಟಕದ ಮಿತಿಯಲ್ಲಿ ಅಲ್ಲದೆ ಇಡೀ ದೇಶದಲ್ಲಿ ಬೌದ್ಧಧರ್ಮವನ್ನು ದೇಶ ಬಿಟ್ಟು ಹೋಗುವಂತೆ ಮಾಡಲಾಯಿತು ಎಂಬುದಕ್ಕೆ ಇನ್ನೂ ಬೌದ್ಧಧರ್ಮದ ಕುರುಹುಗಳು ಪಳೆಯುಳಿಕೆಗಳಂತೆ ಕಾಣುತ್ತಿರುವುದೇ ಚಾರಿತ್ರಿಕ ಸಾಕ್ಷಿಗಳಾಗಿವೆ. ಆದರೆ ಕರ್ನಾಟಕದಲ್ಲಿ ಬೌದ್ಧಧರ್ಮದ ಆಶ್ರಯದಲ್ಲಿ ಸಾಹಿತ್ಯ ರಚನೆಯಾಯಿತು ಎಂಬುದು ಇನ್ನೂ ನಿಗೂಢ ಸಂಗತಿಯೇ ಆಗಿದೆ. ಈ ದೇಶದಲ್ಲಿ ಹುಟ್ಟಿ ಬೆಳೆದ ಮಾನವೀಯ ಅಂತಃಕರಣದ ಆ ಧರ್ಮ ದೇಶದ ಉದ್ದಗಲಕ್ಕೂ ವ್ಯಾಪಿಸಿದ್ದರ ಕುರುಹುಗಳಿರುವ ಹಿನ್ನೆಲೆಯನ್ನು ನೋಡಿದರೆ ಕರ್ನಾಟಕವೂ ಅದರ ಆಶ್ರಯ ತಾಣವಾಗಿತ್ತೆಂಬುದನ್ನು ಅಲ್ಲಗಳೆಯಲಾಗುವುದಿಲ್ಲ. ಆದರೆ ಸಾಹಿತ್ಯ ರಚನೆಗೆ ಸಂಬಂಧಿಸಿದಂತೆ ಅದರ ಕೂನುಕುಂಡ್ರುಗಳಿರದಷ್ಟು ಶೂನ್ಯತೆ ಆವರಿಸಿರುವುದು ವಾಸ್ತವ ಸತ್ಯ. ವೈದಿಕವನ್ನು ವಿರೋಧಿಸಿದಂತೆ ಹುಟ್ಟಿದ ಜೈನ ಲಿಂಗಾಯತ ಧರ್ಮಗಳು ಈ ದೇಶದ ಪುರಾಣಕಾವ್ಯಗಳನ್ನು ಹೇಗೆ ಕಂಡವು ಎಂಬುದು ಮುಖ್ಯ ವಿಚಾರ. ಈ ಎರಡೂ ಧರ್ಮಗಳು ವೈದಿಕ ಪಠ್ಯಗಳಾದ ವೇದ ಆಗಮ ಸ್ಮತಿ ಶೃತಿ ತರ್ಕ ಪುರಾಣಗಳನ್ನು ವಿರೋಧಿಸಿದವು. ಹೀಗೆ ವಿರೋಧಿಸಿದ ರೀತಿಯಲ್ಲಿ ಎರಡು ಬಗೆಗಳನ್ನು ಕಾಣುತ್ತೇವೆ. ಒಂದು ಮುರಿದು ಕಟ್ಟುವ ವಿಧಾನ. ಎರಡು ಸಾರಾಸಗಟು ತಿರಸ್ಕರಿಸಿದ ವಿಧಾನ. ಕಾವ್ಯ ಪುರಾಣಗಳಾದ ರಾಮಾಯಣ ಮಹಾಭಾರತಗಳನ್ನು ವೈದಿಕವು ತನ್ನ ಮನುಧರ್ಮ ಪ್ರತಿಪಾದನೆಗಾಗಿ ಸಮರ್ಥವಾಗಿ ಬಳಸಿಕೊಂಡಿತು. ಕರ್ಮಸಿದ್ಧಾಂತ ರಾಜನೀತಿ ವರ್ಣನೀತಿ ಇತ್ಯಾದಿಗಳನ್ನು ಈ ಕಥಾನಕಗಳ ಮೂಲಕ ಜನಸಾಮಾನ್ಯರ ಬದುಕಿನ ನಂಬಿಕೆಗಳಾಗಿಸಿತು. ಜನಸಾಮಾನ್ಯರ ಕಥೆಗಳಾಗಿದ್ದ ರಾಮಾಯಣ ಮಹಾಭಾರತಗಳ ವೈದಿಕವು ಪುರಾಣ ಕಾವ್ಯಗಳನ್ನಾಗಿ ಬೆಳೆಸಿತ್ತು. ಬಳಸಿತ್ತು. ಜೈನರು ಈ ಪುರಾಣಗಳನ್ನು ಮರು ನಿರೂಪಿಸುವುದಕ್ಕೆ ತೊಡಗಿದಾಗ ಅವುಗಳನ್ನು ಮುರಿದು ಕಟ್ಟುವುದಕ್ಕೆ ಮುಂದಾದರು. ಆದರೆ ವಚನ ಧರ್ಮದವರು ಅವುಗಳನ್ನು ಸಾರಾಸಗಟು ತಿರಸ್ಕರಿಸಿದರು. ಪುರಾಣವೆಂಬುದು ಪುಂಡರಗೋಷ್ಠಿ ಎಂದು ಕರೆದರು. ಭಾಷೆೆ ಮತ್ತು ಭಾಷೆಯ ವಿಳಾಸ : ಸಂಸ್ಕತವನ್ನು ದೇವಭಾಷೆ ಎಂದು ಕರೆದ ವೈದಿಕವು ಭಾಷೆಯೊಳಗಿನ ಜ್ಞಾನವನ್ನು ವಿದ್ಯೆ ಎಂದು ಕರೆಯಿತು. ಇದಕ್ಕೆ ಸರಸ್ವತಿಯನ್ನು ಅಧಿದೇವತೆಯನ್ನಾಗಿಸಿತು. ಧನಕ್ಕೆ ಲಕ್ಷ್ಮಿ ಅಧಿದೇವತೆಯಾದಂತೆ ವಿದ್ಯೆಗೆ ಸರಸ್ವತಿ ಅಧಿದೇವತೆಯಾದಳು. ಆದರೆ ಜೈನರಿಗೆ ಭಾಷೆೆ ಎಂಬುದು ದೇವರ ಭಾಷೆೆಯಾಗದೆ ಅದು ಜನರ ಭಾಷೆಯಾಗಿ ಮಾನ್ಯತೆ ಪಡೆಯಿತು. ಭಾಷೆಯೊಳಗೆ ಜ್ಞಾನವೆಂಬುದು ಜನರ ನಡುವಿನ ಸಾಧಕನ ಸಾಧನೆಯ ಫಲವಾಗಿ ಕಂಡಿತು. ಅಂಥ ಜ್ಞಾನವನ್ನು ಜಿನವಾಣಿ ಎಂದು ಗೌರವಿಸಿತು. ಹಾಗೆಯೇ ಶರಣರಿಗೆ ಮಾತು ಎಂಬುದು ವಚನ. ಮಾತಿನೊಳಗಿನ ಜ್ಞಾನ ಲಿಂಗಸ್ವರೂಪಿಯಾಗಿ ಕಂಡಿತು. ಏಕೆಂದರೆ ಜಂಗಮ ತತ್ವದಲ್ಲಿ ನಂಬಿಕೆ ಇಟ್ಟುಕೊಂಡ ಈ ಧರ್ಮದಲ್ಲಿ ಇಷ್ಟಲಿಂಗವು ಸರ್ವಸಮಾನತೆಯ ದ್ಯೋತಕವಾದದ್ದು. ಅರುಹಿನ ಕುರುಹಾಗಿರುವುದು ಲಿಂಗಾಂಗ ಸಾಮರಸ್ಯದಲ್ಲಿ ಅಂಗವನ್ನೇ ಲಿಂಗಮಯವಾಗಿಸುವುದು. ದೇಹವೇ ದೇವಾಲಯವಾದ ಮೇಲೆ ಆ ದೇಹದ ಜೀವ ದೇವಭಾವನೇ ಸರಿ. ಆ ಕಾರಣದಿಂದಲೇ ಅವನ ಮಾತು ಅವನ ಅಂತರಂಗದ ಮಾತಾಗಿ ಮಾತೆ ಜ್ಯೋತಿರ್ಲಿಂಗವಾಯಿತು. ಭಾಷೆೆ ಮತ್ತು ಜ್ಞಾನವನ್ನು ಕುರಿತು ಎರಡೂ ಧರ್ಮಗಳಲ್ಲಿ ಒಂದು ಸಮಾನ ಅಂಶವನ್ನು ಕಾಣಬಹುದು ಅದೆಂದರೆ ವೈದಿಕದ ಸರಸ್ವತಿ ಪರಿಕಲ್ಪನೆಯನ್ನು ಎರಡೂ ವಿರೋಧಿಸಿವೆ. ಈ ನೆಲೆಯಿಂದಲೇ ಅವುಗಳ ಚಿಂತನೆ, ದರ್ಶನ, ಮೀಮಾಂಸೆ ಧೋರಣೆ ಎಲ್ಲವೂ ವೈದಿಕಕ್ಕಿಂತ ಭಿನ್ನ ನೆಲೆಯಲ್ಲಿ ಹರಿದಿವೆ. ಈ ವಿಚಾರಗಳನ್ನು ಮರೆತು ನಾವು ಕನ್ನಡ ಸಾಹಿತ್ಯವನ್ನು ಓದುವುದೆಂದರೆ ಅದು ಅಪಮಾರ್ಗದ ಓದೇ ಸರಿ. ಜೈನ ಮತ್ತು ಲಿಂಗಾಯತ ಧರ್ಮಮಾರ್ಗದ ಓದಿನ ಜಾಡು ಹಿಡಿದು ಈ ನೆಲದ ಬದುಕಿನ ದರ್ಶನವನ್ನು ಕಾಣುವ ಕಟ್ಟುವ ಕ್ರಿಯೆ ಆಗಬೇಕಿದೆ. ಆದರೆ ನಮ್ಮಲ್ಲಿ ನೆಲದ ಬದುಕಿನ ಅನುಭವಾತ್ಮಕ ದೃಷ್ಟಿ ಧೋರಣೆಗಳನ್ನು ಬಹು ಹಿಂದಿನಿಂದಲೂ ಕಡೆಗಣಿಸುತ್ತಲೇ ನಡೆದಿದ್ದೇವೆ. ನಮ್ಮ ಜನಪದ ಸಾಹಿತ್ಯವನ್ನು ‘ಗೊರವರ ಡುಂಡುಚಿ ಬೀರರ ಬೀದಿವರೆ’ ಎಂದು ಕಡೆಗಾಣಿಸಿ ನಡೆದಂತೆ, ಈ ಧರ್ಮಗಳ ಆವರಣದೊಳಗಿನ ಪಠ್ಯಗಳನ್ನು ಅವುಗಳ ಸೂಕ್ಷ್ಮ ಸಂವಹನೆಯ ಭಿನ್ನತೆಯನ್ನು ಕಡೆಗಾಣಿಸಿಯೇ ಭಾರತೀಯ ಎಂಬ ಓದಿನ ಕಣ್ಣು ಪಟ್ಟಿಗೆ ಸಿಕ್ಕಿಸಿಕೊಂಡ ಓದುಗಳಾಗಿ ಮುಂದುವರಿಸಿದ್ದೇವೆ. ಈ ಸೂಕ್ಷ್ಮತೆಗಳ ಅರಿವಿಗೆ ಆಯಾ ಧರ್ಮಗಳ ಪ್ರಾತಿನಿಧಿಕ ಸ್ವರೂಪದ ಕವಿಗಳನ್ನು ಅವರ ದೃಷ್ಟಿ ಧೋರಣೆಯ ಅನುಸಂಧಾನವನ್ನು ಅವರ ಕಾವ್ಯ ಭಾಗಗಳ ಉಲ್ಲೇಖದೊಂದಿಗೆ ನಡೆಸುವುದು ಸೂಕ್ತವೆನಿಸುತ್ತದೆ. ಪಂಪನ ಕವಿತೆ : ಪಂಪನನ್ನು ಕನ್ನಡದ ಆದಿ ಕವಿ ಎಂದು ಕರೆಯುತ್ತೇವೆ. ಹಾಗೆಯೇ ಅವನು ಮಾರ್ಗ ಪ್ರವರ್ತಕ ಕವಿಯೂ ಆಗಿದ್ದಾನೆ. ಲೌಕಿಕ ಕಾವ್ಯ ಮತ್ತು ಆಗಮಿಕ ಕಾವ್ಯ ಎಂಬ ಎರಡು ಕಾವ್ಯ ಮಾರ್ಗಗಳನ್ನು ಹಾಕಿಕೊಟ್ಟ ಕವಿ. ಜೈನ ತೀರ್ಥಂಕರನ್ನು ಕುರಿತು ಬರೆದ ಕಾವ್ಯವನ್ನು ಆಗಮಿಕ ಅರ್ಥಾತ್ ಧಾರ್ಮಿಕ ಕಾವ್ಯ ಎಂದು ಕರೆದ. ಆದರೆ ವೈದಿಕ ಪುರಾಣಗ್ರಂಥಗಳನ್ನು ಲೌಕಿಕದ ಕಣ್ಣಿನಲ್ಲಿ ಕಂಡು ಕಟ್ಟಿದ್ದರಿಂದ ಅವುಗಳನ್ನು ಲೌಕಿಕ ಕಾವ್ಯ ಎಂದು ಕರೆದ. ಈ ದೃಷ್ಟಿ ಭಿನ್ನತೆಯಲ್ಲಿಯೇ ಧಾರ್ಮಿಕ ಮತ್ತು ಲೌಕಿಕಕ್ಕೆ ಇರುವ ಭಿನ್ನತೆ ಯಾವುದು? ಯಾಕೆ ಈ ಭಿನ್ನತೆಗಳನ್ನು ಮಾಡಿಕೊಂಡ? ಆಗಮಿಕ ಅಂದಾಗ ಅದು ಲೋಕಕ್ಕೆ ಅತೀತವಾದುದೇ? ಅಥವಾ ಲೋಕದೊಳಗೆ ಅರ್ಥ ಪಡೆದುಕೊಂಡ ಆಗಮಿಕವೇ? ಲೌಕಿಕ ಅಂದಾಗ ಅದು ಮುಂಚೆ ಏನಾಗಿತ್ತು? ಈಗ ಏನಾಗಿಸಿ ಕಾಣುತ್ತಿದ್ದಾನೆ? ಜೈನರ ಆಗಮಿಕ ಕಾವ್ಯಕ್ಕೂ ವೈದಿಕ ಪುರಾಣವನ್ನು ಲೌಕಿಕದ ಕಣ್ಣಿನಲ್ಲಿ ಕಾಣುತ್ತಿರುವ ಈ ದೃಷ್ಟಿಗೂ ಎಲ್ಲಿಯಾದರೂ ಸಾಮ್ಯವಿದೆಯೇ? ಅಥವಾ ವಿರೋಧವಿದೆಯೇ? ಅಲ್ಲದೆ ವೈದಿಕ ಧರ್ಮ ದೃಷ್ಟಿ ಮತ್ತು ಜೈನ ಧರ್ಮ ದೃಷ್ಟಿ ಇವುಗಳ ವ್ಯತ್ಯಾಸಗಳು ಕಾವ್ಯ ಸ್ವರೂಪದಲ್ಲಿ ಹೇಗೆ ಬಿಂಬಿತವಾಗಿವೆ! ಈ ಎಲ್ಲಾ ಪ್ರಶ್ನಾವಳಿಗಳ ನೆಲೆಯಲ್ಲಿ ನಮ್ಮ ಓದಿನ ಕ್ರಮದ ವಿಶಿಷ್ಟತೆ ಮತ್ತು ಅನನ್ಯತೆಯ ಅರಿವು ನಮಗಾಗುತ್ತದೆ. ಆದ್ದರಿಂದಲೇ ಈ ಅರಿವನ್ನು ಪಂಪನೆ ತನ್ನ ಆಗಮಿಕ ಕಾವ್ಯದಲ್ಲಿ ಕಟ್ಟಿಕೊಟ್ಟಿದ್ದಾನೆ. ಪರಮ ಜಿನೇಂದ್ರ ವಾಣಿಯೇ ಸರಸ್ವತಿ ಬೇರದು ಪೆಣ್ಣ ರೂಪಮಂ ಧರಿಯಿಸಿ ನಿಂದುದಲ್ತದುವೆ ಭಾವಿಸಿಯೋದುವ ಕೇಳ್ವ ಪೂಜಿಪಾ ದರಿಸುವ ಭವ್ಯಕೋಟಿಗೆ ನಿರಂತರ ಸೌಖ್ಯಮನೀವುದಾನದ ರ್ಕೆರೆದಪೆನಾ ಸರಸ್ವತಿಯೆ ಮಾಳ್ಕೆಮಗಿಲ್ಲಿಯೆ ವಾಗ್ವಿಳಾಸಮಂ ಈ ಪದ್ಯದಲ್ಲಿ ನೇರವಾಗಿ ವೈದಿಕ ಜ್ಞಾನಕಲ್ಪನೆಯ ಮೂಲವನ್ನೇ ಪಂಪ ಒಡೆದಿದ್ದಾನೆ. ಭಾಷೆ ಮತ್ತು ಅದರ ಮುಖೇನ ಸಂವಹನವಾಗುವ ಜ್ಞಾನವನ್ನು ನೆಲದ ವಾಣಿಯೆಂದು ಕರೆದಿದ್ದಾನೆ. ಜಿನ ಎಂಬವನು ಎಲ್ಲೋ ಹೊರಗಿನಿಂದ ಬಂದವನಲ್ಲ. ಈ ನೆಲದ ಬದುಕಿನಲ್ಲಿ ಆದವನು. ಅವನ ಆಗುವಿಕೆಯಲ್ಲಿ ವಾಣಿಯೂ ಆಗುತ್ತದೆ, ಸಾಗುತ್ತದೆ. ಅದು ಹೆಣ್ಣರೂಪಿನದಲ್ಲ; ಅದು ಅಮೂರ್ತ. ಅದು ಭಾವಿಸುವುದು, ಅಕ್ಷರ ರೂಪದಲ್ಲಿ ಓದಿದಂತೆ ಭಾವಿಸುವುದು, ಓದಿದ್ದನ್ನು ಕೇಳಿದಂತೆ ಭಾವಿಸುವುದು, ಭಾವಿಸುತ್ತಾ ಅದನ್ನು ಬದುಕಿನ ಭಾಗವಾಗಿಸಿಕೊಂಡು ಪೂಜಿಸುವುದು, ಆದರಿಸಿ ಗೌರವಿಸುವುದು. ಹೀಗೆ ಮಾಡುವುದರಿಂದ ಪ್ರತಿಯೊಬ್ಬರೂ ಭವ್ಯವಾಗುತ್ತಾರೆ. ಭವರೋಗವನ್ನು ದಾಂಟಿದ ಭವ್ಯರಾಗುತ್ತಾರೆ. ಇಂಥ ಭವ್ಯಮಾದವರಿಗೆ ಆ ಓದು ನಿರಂತರವೂ ಸೌಖ್ಯವನ್ನು ನೀಡುತ್ತದೆ. ಜ್ಞಾನಿಯಾದವನು ದುಃಖಿಯಾಗಲಾರ. ಜ್ಞಾನದ ಬಲದಿಂದ ಅಜ್ಞಾನದ ಕೇಡು ನೋಡಿದಂತೆ ಸುಖಿಯಾಗುತ್ತಾನೆ. ಸೌಖ್ಯವನ್ನು ಕಾಣುತ್ತಾನೆ. ಇದು ಈ ಜ್ಞಾನವೆಂಬುದು ನನಗೆ ನನ್ನದೇ ವಿಳಾಸವನ್ನು ಕರುಣಿಸಲಿ ಅರ್ಥಾತ್ ಇದನ್ನು ಬೇರೆಯವರಿಗೆ ಮುಟ್ಟಿಸುವುದಕ್ಕೆ ನಾನು ಬಳಸುವ ಭಾಷೆ ನನ್ನ ಅನನ್ಯತೆಯದಾಗಲಿ. ನನ್ನದೇ ಭಾಷೆಯೆಂಬ ವ್ಯಕ್ತಿವಿಶಿಷ್ಟತೆಯದಾಗಲಿ ಎಂದು ಪಂಪ ಪ್ರಾರ್ಥಿಸುತ್ತಾನೆ. ಇದು ಶುಷ್ಕ ಪ್ರಾರ್ಥನೆಯಲ್ಲ; ತನ್ನ ಶ್ರಮ ಪರಿಶ್ರಮದ ನೆಲೆಯಲ್ಲಿ ತಾನೇ ಆರ್ಜಿಸುವ ಭಾಷಾ ಪ್ರಯೋಗ ಮತ್ತು ಬುದ್ಧಿ ಭಾವಗಳ ವಿದ್ಯುದಾಲಿಂಗನ ರೂಪಿಯಾದ ಪ್ರತಿಭಾ ಸಂಪತ್ತನ್ನು ಅರ್ಥಾತ್ ಜ್ಞಾನಸಂಪತ್ತನ್ನು ಕುರಿತಾಗಿ ಶ್ರದ್ಧೆಯಿಂದ ಆಡುವ ಮಾಡುವ ಪ್ರಾರ್ಥನೆ ಇದಾಗಿದೆ ಬಸವಣ್ಣನ ವಚನ : ಪಂಪನ ಈ ಪದ್ಯ ಇಡೀ ಕನ್ನಡ ಸಾಹಿತ್ಯ ಪರಂಪರೆ ಮುಂದೆ ಹೇಗೆ ಬೆಳೆಯಿತು ಮುಂದುವರಿಯಿತು ಎಂಬುದನ್ನು ಹೇಳುತ್ತಿದೆ. ಕನ್ನಡ ಕಾವ್ಯ ಮೀಮಾಂಸೆಯ ಎಳೆಗಳನ್ನು ಇಲ್ಲಿ ಕಾಣಬಹುದಾಗಿದೆ. ಪದವಾಗಿವೆ ನಮ್ಮ ಎದೆಯಲ್ಲಿ, ಅದಾವ ನಮ್ಮ ಜೋಳ ಉಳಿದಾವ ನಮ್ಮ ಹಾಡು ಇತ್ಯಾದಿ ಪದರೂಪದ ಜಾನಪದ ಜಗತ್ತಿನ ಕಾವ್ಯ ಮೀಮಾಂಸೆಗೆ ಸರಿಸಮತೆಯಲ್ಲಿ ಹರಿದ ಮೀಮಾಂಸ ದೃಷ್ಟಿ ಇಲ್ಲಿಯೂ ಇದೆ. ಇದು ಇನ್ನೂ ನಿಚ್ಚಳವಾಗಿ ಕಾಣಬೇಕೆಂದರೆ ಕನ್ನಡದ ವಚನ ಧರ್ಮವಾದ ಶರಣ ಧರ್ಮದ ಸಂಘಟನಾ ಶಕ್ತಿಯಾದ ಬಸವಣ್ಣನವರ ವಚನವನ್ನು ಇಲ್ಲಿ ಉದಾಹರಣೆಗೆ ತೆಗೆದುಕೊಳ್ಳಬಹುದು. ತಾಳಮಾನ ಸರಿಸವನರಿಯೇ ಓಜೆ ಬಜಾವಣೆ ಲೆಕ್ಕವನರಿಯೆ ಅಮೃತಗಣ ದೇವಗಣವನರಿಯೆ ಕೂಡಲಸಂಗಮದೇವ ನಿನಗೆ ಕೇಡಿಲ್ಲವಾಗಿ ಆನು ಒಲಿದಂತೆ ಹಾಡುವೆ. ಮೇಲು ನೋಟಕ್ಕೆ ಛಂದೋ ಬಂದವನ್ನು ವಿರೋಧಿಸಿದಂತೆ ಕೇಳುವ ಇಲ್ಲಿನ ಮಾತುಗಳ ಮುಖ್ಯ ಧ್ವನಿ ಇರುವುದು ‘ನಿನಗೆ ಕೇಡಿಲ್ಲವಾಗಿ ಆನು ಒಲಿದಂತೆ ಹಾಡುವೆ...’ ಎಂಬ ಸಾಲಿನಲ್ಲಿ . ನಿನಗೆ ಎಂದರೆ ಕೂಡಲಸಂಗಮ ದೇವನಿಗೆ ಕೇಡಿಲ್ಲವಾಗಿ ಎಂದು ಅರ್ಥೈಸಿಕೊಂಡರೆ ಅದು ಕೇವಲ ಪ್ರತಿಪದಾರ್ಥ. ಆದರೆ ಅದರ ಭಾವವಿರುವುದು ಕೂಡಲಸಂಗಮದೇವರಿಗೆ ಸದೃಶವಾದ ಸಮಾಜಕ್ಕೆ, ಜನತೆಗೆ ಜನರ ಬದುಕಿಗೆ ಕೇಡಿಲ್ಲವಾಗಿ ಒಲಿದಂತೆ ಹಾಡುವುದು. ಸಮಾಜ-ಜನತೆ-ಬದುಕು ಕೂಡಿಕೊಂಡದ್ದೇ ಕೂಡಲಸಂಗಮ. ಕೂಡಲ ಎಂಬುದು ಕನ್ನಡ ಪದ ಸಂಗಮ ಎಂಬುದು ಸಂಸ್ಕೃತ ಪದ ಈ ಎರಡೂ ಪದಗಳ ಅರ್ಥ ಒಂದೇ ಅದು ಐಕ್ಯ. ಆನು ಎಂದರೆ ನಾನು. ಇಲ್ಲಿ ನಾನು ಎಂಬುದು ಅಂದರೆ ವ್ಯಷ್ಟಿ-ಸಮಷ್ಟಿಯಲ್ಲಿ ಲೀನವಾಗುವುದು; ವ್ಯಕ್ತಿಯ ಸ್ವಾತಂತ್ರ್ಯ ಸಮಷ್ಟಿಯ ಹಿತದಲ್ಲಿ ಐಕ್ಯವಾಗುವುದು. ಹೀಗಾದಾಗ ಅಲ್ಲಿ ವ್ಯಕ್ತಿ ಹಿತ ಮತ್ತು ಸಮಷ್ಟಿಹಿತ ಪರಸ್ಪರ ಪೂರಕವಾಗಿ ವ್ಯಕ್ತಿಯ ಮಾತು ಸಮಷ್ಟಿಯ ಮಾತಾಗಿ ಮೂಡುತ್ತದೆ. ಸಾಹಿತ್ಯ ಎಂಬುದರ ಅರ್ಥವೇ ಸಹಿತತ್ವವನ್ನು ಒಳಗೊಂಡದ್ದು. ಇಲ್ಲಿ ಸಹಿತತ್ವ ಯಾರದ್ದು ಎಂದರೆ ಅದು ವ್ಯಕ್ತಿ ಮತ್ತು ಸಮಷ್ಟಿಯದ್ದು. ವ್ಯಕ್ತಿಯ ಹಿತವನ್ನು ಮಾತ್ರ ಹಾರೈಸಿದರೆ ಅದು ಸ್ವಾರ್ಥ, ಸಮಷ್ಟಿಯ ಹಿತವನ್ನು ಮಾತ್ರ ಹಾರೈಸಿದರೆ ಅದು ಬಲಿದಾನ. ಎರಡರ ಹಿತವನ್ನು ಕಾಯುವುದೇ ಸಹಿತತ್ವ ಅದು ಸಾಹಿತ್ಯ. ಈ ಹಿನ್ನೆಲೆಯಲ್ಲಿ ಬಸವಧರ್ಮ ಅರ್ಥಾತ್ ಕನ್ನಡದ ವಚನಧರ್ಮ ಈ ಬಗೆಯ ತಾತ್ವಿಕ ವಿಚಾರಗಳನ್ನು ಒಳಗೊಂಡದ್ದಾಗಿದೆ. ಇಂಥ ಶರಣ ಧರ್ಮದ ಚಿಂತನೆಗಳ ಚಳವಳಿಯ ಉಪ ಉತ್ಪನ್ನಗಳೇ ವಚನಗಳು. ಅವು ಶರಣರ ವಚನಗಳು ಪಂಪನ ಜಿನವಾಣಿಗಳು ಜನಪದರ ಪದವಾವೆ ನಮ್ಮ ಎದೆಯಲ್ಲಿಯ ಪದಗಳು. ಹೀಗೆ ಜನಪದ ಧಾರೆಯ ಮೌಖಿಕ ಪರಂಪರೆಯಲ್ಲಿ ಪಂಪನ ಕಾವ್ಯಮಾರ್ಗದ ಜಿನವಾಣಿಯಲ್ಲಿ ಬಸವಣ್ಣನು ಸಂಘಟಿಸಿದ ಶರಣರ ಚಳವಳಿಯ ಉಪ ಉತ್ಪನ್ನಗಳಾದ ವಚನಗಳ ಜ್ಯೋತಿರ್ಲಿಂಗ ರೂಪದಲ್ಲಿ ಕನ್ನಡದ್ದೇ ಆದ ಕಾವ್ಯ ಮೀಮಾಸದೃಷ್ಟಿ ಹರಿದು ಬಂದಿದೆ ಇದು ಕನ್ನಡ ಪ್ರಜ್ಞೆಯು ಕಟ್ಟಿದ ಮೀಮಾಂಸೆ. ಕನ್ನಡ ಬದುಕಿನ ಗರ್ಭದಿಂದ ಒಡಮೂಡಿದ ಮೀಮಾಂಸೆ. ಪುರಾಣಗಳನ್ನು ಮುರಿದು ಕಟ್ಟಿದ ಜೈನ ಮಾರ್ಗ: ರಾಮಾಯಣ ಮಹಾಭಾರತಗಳು ಈ ದೇಶದ ಭೌಗೋಳಿಕ ಸ್ಪರ್ಶದಲ್ಲಿ ಬೇರು ಬಿಟ್ಟು ಬೆಳೆದಿರುವ ಬದುಕಿನ ಚರಿತ್ರೆಗಳು. ಜನಪದರಲ್ಲಿ ಕುಲಚರಿತ್ರೆಗಳಿರುವಂತೆ ಈ ದೇಶದ ಸಮಸ್ತ ಬದುಕನ್ನು ಆದಷ್ಟು ಬೃಹತ್ ಪ್ರಮಾಣದಲ್ಲಿ ಒಳಗೊಂಡಂತೆ ನಿರೂಪಿಸಿರುವ ನೆಲದ ಕುಲಚರಿತೆಗಳು. ಆದ್ದರಿಂದಲೇ ಈ ದೇಶದಲ್ಲಿ ಹುಟ್ಟಿರುವ ಎಲ್ಲ ಭಾಗಗಳಲ್ಲಿ ಈ ಕುಲಚರಿತೆಗಳ ಕಥೆಯ ಬಿಳಲುಗಳಿವೆ. ಅದರದೇ ಆದ ಭಾಷಿಕ ಸಾಂಸ್ಕೃತಿಕ ನೆಲದಲ್ಲಿ ಅವು ಬೇರು ಬಿಟ್ಟು ಬೆಳೆದಿವೆ. ಆ ಸುತ್ತಲಿನ ನೆಲದ ಭೌಗೋಳಿಕ ಪ್ರಾಕೃತಿಕ ವೈಲಕ್ಷಣ್ಯಗಳಲ್ಲಿ ಕಥೆಯ ಬೇರುಗಳನ್ನು ಇಳಿಸಿ ಜನಮಾನಸದಲ್ಲಿ ಉಸಿರಾಡಿವೆ. ಹೀಗಾಗಿಯೇ ರಾಮಾಯಣ ಮಹಾಭಾರತಗಳು ಕೇವಲ ಏಕ ಮಾದರಿಯ ಕಥೆಗಳಾಗಿ ಉಳಿದಿಲ್ಲ. ಅವು ಬಹುತ್ವ ಭಾರತದ ಬಹುಸಂಸ್ಕೃತಿಯ ಮಾದರಿಗಳು. ಇಷ್ಟಾಗಿಯೂ ಅವುಗಳಲ್ಲಿ ಒಂದು ಸಾಂಗತ್ಯವಿದೆ; ಅದು ಕಥೆಯ ಮಯ್ಗೆಡಲೀಯದ ಸ್ವರೂಪಸಾಂಗತ್ಯ. ಇದೇ ಅವುಗಳು ಕೇವಲ ಕಥೆಗಳಾಗಿ ಉಳಿಯದೆ ಪುರಾಣಗಳಾಗಿ ಬೆಳೆಯಲು ಕಾರಣವಾಗಿರುವುದು. ಈ ಬೇರು ಬಿಳಲಿನ ಸಂಬಂಧ ಎಷ್ಟು ಸಹಜ ಸಂಸ್ಕೃತಿಯಾಗಿದೆ ಎಂದರೆ ಭಾಷಾ ರಚನೆಯ ಒಳಗೂ ಭಾಷಿಕ ಜಾಯಮಾನವನ್ನು ಮಿಡಿಸುವ ನರ ತಂತುಗಳ ಸದೃಶದ ನುಡಿಗಟ್ಟುಗಳಾಗಿ ಉಸಿರಾಡಿವೆ. ಇಂಥ ರಾಮಾಯಣ ಮಹಾಭಾರತಗಳೆಂಬ ನೆಲದ ಕುಲಚರಿತೆಗಳನ್ನು ಸುಲಭವಾಗಿ ಅಪಹರಿಸಿದ ವೈದಿಕ ತನ್ನ ಬೇಳೆ ಬೇಯಿಸಿಕೊಳ್ಳಲು ತೊಡಗಿತು. ಅವುಗಳ ಬಹುತ್ವ ಗುಣವನ್ನು ನಾಶ ಮಾಡುತ್ತಾ ಅದರದೇ ಆದ ಏಕ ಮಾದರಿಯನ್ನು ನಾಟಿ ಹಾಕತೊಡಗಿತು. ತನ್ನ ಧರ್ಮದ ವರ್ಣನೀತಿಯ ಎಲ್ಲಾ ತಾತ್ವಿಕತೆಗಳನ್ನು ಅದಕ್ಕೆ ಇಂಜೆಕ್ಟ್ ಮಾಡತೊಡಗಿದೆ. ಇದರ ಪರಿಣಾಮ ಅಲ್ಲಿ ಕಲ್ಪಿತ ಕಥೆಗಳು ಸೇರಿಸಲ್ಪಟ್ಟವು. ಪ್ರಕ್ಷಿಪ್ತಗಳು ಬೆರಕೆಯಾದುವು. ವ್ಯಾಸ ವಾಲ್ಮೀಕಿಗಳು ಕಟ್ಟಿದ ಕಾವ್ಯ ಕಥಾ ಭಾಗಗಳು ಅವರ ಈ ಕೈಚಳಕಕ್ಕೆ ಭಿತ್ತಿಗಳಾಗಿ ಒದಗಿ ಬಂದವು. ಬರ ಬರುತ್ತಾ ಯಾವುದು ಮೂಲ ಯಾವುದು ಸೇರ್ಪಡೆ ಎಂಬ ದ್ವಂದ್ವರಾಜಕಾರಣದಲ್ಲಿ ವರ್ಣಹಿತಕ್ಕಾಗಿ ಕಟ್ಟಿದ ಸೇರ್ಪಡೆಯ ಕಲ್ಪಿತಗಳೇ ಮೂಲದ ಭ್ರಮೆ ಬಿತ್ತಿ ಜನಮಾನಸದಲ್ಲಿ ನಂಬಿಕೆಯ ಬಿಂಬಗಳಾದವು. ಹೀಗಾಗಿ ಮನುಷ್ಯ ಮಾತ್ರದವರಾಗಿ ಉಸಿರಾಡುತ್ತಿದ್ದ ಮೂಲ ಪಾತ್ರಗಳೆಲ್ಲ ಇಲ್ಲಿ ಕಪ್ಪು ಬಿಳುಪಿನ ವರ್ಣನೀತಿಯ ಪ್ರತಿಪಾದಕ ಪಾತ್ರಗಳಾದವು. ಕೆಲವರು ದೇವರಾದರು, ಕೆಲವರು ಮಾನವರಾದರು ಹಲವರು ಅಲ್ಪಮಾನವರಾದರು, ಸ್ವಲ್ಪಮಾನವರಾದರು. ದೇವರ ಬಾಯಲ್ಲಿ ಭಗವದ್ಗೀತೆ ಮೂಡಿತು. ಸ್ವಲ್ಪ ಮಾನವರು ವಾನರ ಮೂರ್ತಿಗಳಾದರು, ಅಲ್ಪ ಮಾನವರು ರಾಕ್ಷಸಾಕೃತಿಗಳಾದರು. ಇದೇ ನಿಜವಾದ ರಾಮಾಯಣ ಮಹಾಭಾರತ ಕಥನಗಳೆಂದು ನಂಬಿಸಲಾಯಿತು. ಮೂಲದವು ಮರೆಯಾಗಿ ವರ್ಣದವು ಮರೆಯತೊಡಗಿದವು. ಆನಂತರದಲ್ಲಿ ಇವುಗಳನ್ನೇ ರಾಜಕೀಯ ವಿಶ್ಲೇಷಕರು, ಸಾಹಿತ್ಯ ವಿಮರ್ಶಕರು, ದಾರ್ಶನಿಕ ಪಂಡಿತರು, ಕುಲಮೂಲ ಸಮಾಜ ವಿಶ್ಲೇಷಕರು ಅವರವರ ದೃಷ್ಟಿ ಹರಿಸಿ ವ್ಯಾಖ್ಯಾನಿಸತೊಡಗಿದರು. ಆದರೆ ವರ್ಣವ್ಯವಸ್ಥೆ ವಿರುದ್ಧ ಈ ನೆಲದಲ್ಲಿ ಹುಟ್ಟಿದ ಧರ್ಮಗಳು ಈ ಪುರಾಣಕಥೆಗಳನ್ನು ಹೇಗೆ ನೋಡಿದವು ಎಂಬುದು ಬಹಳ ಮುಖ್ಯ ವಿಚಾರ. ಈ ಹಿಂದೆಯೇ ಪ್ರಸ್ತಾಪಿಸಿದಂತೆ, ಜೈನರು ಈ ಪುರಾಣಗಳನ್ನು ಅವುಗಳ ಮಹತ್ವದ ಕಾರಣದಲ್ಲಿ ತಿರಸ್ಕರಿಸದೆ ಮುರಿದು ಕಟ್ಟುವುದಕ್ಕೆ ತೊಡಗಿದರು. ಆದರೆ ಶರಣರು ಈ ಪುರಾಣಗಳನ್ನು ಸಾರಾ ಸಗಟಾಗಿ ತಿರಸ್ಕರಿಸಿದರು. ಪುರಾಣವೆಂಬುದು ಪುಂಡರಗೋಷ್ಠಿ ಎಂದು ಕರೆದರು. ಇಡೀ ವಚನ ಚಳವಳಿಯೇ ವೈದಿಕದ ವಿರುದ್ಧವಾಗಿ ಹುಟ್ಟಿದ್ದು. ಆದ್ದರಿಂದ ವೈದಿಕವನ್ನು ಪ್ರತಿನಿಧಿಸುವ ವೇದ, ಆಗಮ, ಪುರಾಣ, ಸ್ಮತಿ, ಶೃತಿ ಇವುಗಳನ್ನು ಶರಣರು ಸಾರಾಸಗಟು ತಿರಸ್ಕರಿಸಿದರು. ನಮ್ಮ ನಡಾವಳಿಗೆ ನಮ್ಮ ಪುರಾತನ ನುಡಿಯೇ ಇಷ್ಟವಯ್ಯಾ ಸ್ಮತಿಗಳು ಸಮುದ್ರದ ಪಾಲಾಗಲಿ ಶ್ರುತಿಗಳು ವೈಕುಂಠವ ಸೇರಲಿ ಪುರಾಣಗಳು ಅಗ್ನಿಯ ಸೇರಲಿ ಆಗಮಗಳು ವಾಯುವ ಹೊಂದಲಿ ಎಮ್ಮ ನುಡಿ ಕಪಿಲಸಿದ್ಧಮಲ್ಲಿಕಾರ್ಜುನ ಮಹಾಲಿಂಗದ ಹೃದಯದೊಳು ಗ್ರಂಥಿಯಾಗಿರಲಿ ಎಂದು ಸಿದ್ದರಾಮಣ್ಣನವರು ವೈದಿಕಕ್ಕೆ ವಿರುದ್ಧವಾಗಿ ಶರಣರ ವಚನಗಳನ್ನೇ ತಮ್ಮ ಧರ್ಮದ ನಡೆನುಡಿ ಸಿದ್ಧಾಂತದ ಪಠ್ಯಗಳೆಂದು ಸಾರಿದ್ದಾರೆ. ಆದಿಪುರಾಣ ಅಸುರರಿಗೆ ಮಾರಿ ವೇದ ಪುರಾಣ ಹೋತಿಂಗೆ ಮಾರಿ ರಾಮ ಪುರಾಣ ರಕ್ಕಸರಿಗೆ ಮಾರಿ ಭಾರತ ಪುರಾಣ ಗೋತ್ರಕ್ಕೆ ಮಾರಿ ಎಲ್ಲ ಪುರಾಣ ಕರ್ಮಕ್ಕೆ ಮೊದಲು ನಿಮ್ಮ ಪುರಾಣಕ್ಕೆ ಪ್ರತಿ ಇಲ್ಲ ಕೂಡಲಸಂಗಮದೇವ ಎಂದು ಬಸವಣ್ಣನವರು ರಾಮಾಯಣ ಮಹಾಭಾರತ ಕಥಾನಕದೊಳಗಿನ ಕೇಡಿನ ವಿಷಯ ಕುರಿತು ಮಾತನಾಡಿದ್ದಾರೆ. ಹೀಗೆ ಬಹುತೇಕ ವಚನಕಾರರು ವೈದಿಕ ಪಠ್ಯಗಳನ್ನು ಕುರಿತು ನಿರಾಕರಣೆಯ ಮಾತುಗಳನ್ನೇ ಆಡಿದ್ದಾರೆ. ಪಂಪನು ವೈದಿಕ ಪುರಾಣ ಕಾವ್ಯಗಳನ್ನು ಲೌಕಿಕದ ನೆಲೆಯಲ್ಲಿ ಕಂಡು ಅವುಗಳ ವೈದಿಕ ದೃಷ್ಟಿಯನ್ನು ಮುರಿದು ಮಾನವೀಯ ನೆಲೆಯಲ್ಲಿ ಮರುಸೃಷ್ಟಿಗೆ ಒಡ್ಡಿದ್ದಾನೆ. ‘ಬೆಳಗುವೆನಿಲ್ಲಿ ಲೌಕಿಕಮಂ’ ಎಂದು ಮಹಾಭಾರತದ ಕಥೆಯನ್ನು ಮಾನವರ ಮನೋಸಂಘರ್ಷಗಳ ವರ್ಗ-ವರ್ಣ ಸಂಘರ್ಷಗಳ ಸಂಗ್ರಾಮ ಕಥನವಾಗಿ ಮರು ನಿರೂಪಿಸುವುದಕ್ಕೆ ತೊಡಗಿದ್ದಾನೆ. ಅವನ ಸಾಹಿತ್ಯ ಸಂವೇದನೆ ಸಹಜವಾಗಿ ವಂಚಿತರ ಬಡವರ ತುಳಿತಕ್ಕೊಳಗಾದವರ ಪರವಾಗಿ ಮಿಡಿದಂತೆ ನಡೆದಿದೆ. ಆದ್ದರಿಂದಲೇ ಅವನ ಕಾವ್ಯದಲ್ಲಿ ವಾಚ್ಯದ ನೆಲೆಯ ಘೋಷಣೆಗಿಂತ ಧ್ವನಿಯ ನೆಲೆಯ ದರ್ಶನ ಮುಖ್ಯವಾಗುತ್ತದೆ. ಪಂಪನು ತನ್ನ ಕೃತಿಗೆ ಇಟ್ಟ ಹೆಸರು ‘ವಿಕ್ರಮಾರ್ಜುನ ವಿಜಯ’. ಆದರೆ ಅಲ್ಲಿ ಲೌಕಿಕದ ತಾಂತ್ರಿಕ ಕಾರಣಕ್ಕಾಗಿ ಅಂದರೆ ಜೋಳದ ಪಾಳಿಗಾಗಿ ಕಥೆಯಲ್ಲಿ ಅರ್ಜುನನನ್ನು ಕಥಾನಾಯಕನನ್ನಾಗಿ ಮಾಡಿ, ತನಗೆ ಆಶ್ರಯ ನೀಡಿದ ಪ್ರಭು ಅರಿಕೇಸರಿಯನ್ನು ಅರ್ಜುನನಿಗೆ ಸಮೀಕರಿಸಿ ಕಥೆ ಹೇಳತೊಡಗುತ್ತಾನೆ. ಈ ಸಮೀಕರಣ ತನ್ನ ಜೋಳದ ಪಾಳಿಯ ಕಾರಣದಿಂದಾಗಿ ಆಗಿರುವುದರಿಂದ ಹಲವು ಬಗೆಯ ಇಕ್ಕಟುಗಳಿಗೆ ಕವಿ ಪಂಪ ಸಿಕ್ಕಿಕೊಳ್ಳುತ್ತಾನೆ. ಆದರೂ ಇಡೀ ಮಹಾಭಾರತ ಕಥನವನ್ನು ಉಪಾಖ್ಯಾನಗಳ ಹಂಗು ಹರಿದುಕೊಂಡು ಸಮಾಹಿತ ಸಮಾಸಿತ ರೂಪದಲ್ಲಿ ಕಟ್ಟತೊಡಗುತ್ತಾನೆ. ಆದರೆ ನಾಯಕನನ್ನಾಗಿ ಅರ್ಜುನನ್ನು ಆರಿಸಿಕೊಂಡರೂ ಅವನ ಸೃಜನ ಪ್ರತಿಭೆಯ ಕಣ್ಣಿಗೆ ಅರ್ಜುನನಿಗಿಂತ ಕರ್ಣನೆ ನಿಜವಾದ ಮಹಾ ನಾಯಕನಾಗಿ ಕಂಡು ಅವನಿಗೆ ಕರಗಿದವನಾಗಿದ್ದಾನೆ. ಕಾರಣ ಅರ್ಜುನನ ಪರಾಕ್ರಮ, ರಾಜ್ಯಭ್ರಷ್ಟ ಸ್ಥಿತಿ, ವನವಾಸ ಇತ್ಯಾದಿಗಳಿಗಿಂತ ಪಂಪನನ್ನು ಕಾಡಿರುವುದು ಮಹಾಭಾರತದೊಳಗಿನ ವರ್ಣನೀತಿ. ಕಾನೀನನಾಗಿ ಹುಟ್ಟಿದ ಕರ್ಣ, ಸೂತಪುತ್ರನಾಗಿ ಬೆಳೆದಂತೆ ಸೂತ ಸಮುದಾಯಗಳ ವರ್ಣ ನೀತಿಯ ಮುಖೇಣದ ವಂಚನೆ, ಅವಮಾನ, ಶಿಕ್ಷಣ ಪಡೆಯಲು ಪಟ್ಟ ಪಡಿಪಾಟಲು ಕೃಷ್ಣನ ಭೇದ ನೀತಿ, ದುರ್ಯೋಧನ ದ್ವೇಷಾಗ್ನಿಗೆ ಬಳಕೆಯಾದ ವಿಧಾನ ಇತ್ಯಾದಿ ಇಕ್ಕಟ್ಟುಗಳ ನಡುವೆಯೂ ಕರ್ಣ ತೋರುವ ನಿಷ್ಠುರ ನಂಬಿಕೆ ಪಂಪನ ಕವಿ ಹೃದಯವನ್ನು ಗೆದ್ದಿವೆ. ಆ ಕಾರಣದಿಂದಲೇ ಪಂಪನ ಕವಿಹೃದಯದ ಕಣ್ಣಿಗೆ ಮಹಾಭಾರತದ ಕಥನ ಕರ್ಣರಸಾಯನವಾಗಿ ಕಂಡಿದೆ ನೆನೆಯದಿರಣ್ಣ ಭಾರತದೊಳಿಂ ಪೆರರಾರುಮನ್ ಒಂದೇ ಚಿತ್ತದಿಮ್ ನೆನೆವೊಡೆ ಕರ್ಣನಂ ನೆನೆಯ ಕರ್ಣನೊಳ್ ಆರ್ ದೊರೆ, ಕರ್ಣನೇರು ಕರ್ಣನ ಕಡು ನನ್ನಿ ಕರ್ಣನ ಆಳವಂಕದ ಕರ್ಣನ ಚಾಗಂ ಎಂದು ಕರ್ಣನ ಪಡೆಮಾತಿನೊಳ್ ಪುದಿದು ಕರ್ಣ ರಸಾಯನಮಲ್ತೆ ಭಾರತಂ ಹೀಗೆ ಇಡೀ ಮಹಾಭಾರತವನ್ನು ಕರ್ಣನ ಕರುಣಾಜನಕ ಪರಿಸ್ಥಿತಿಯ ನಡುವೆಯೂ ಅವನ ಮೆರೆಯುವ ಸತ್ಯನಿಷ್ಠೆ ತ್ಯಾಗ ಗುಣಗಳಿಂದ ಅವನು ಉದಾತ್ತನಾಗಿದ್ದಾನೆ. ಅವನ ಕಥನ ಕಾರಣದಿಂದ ಮಹಾಭಾರತ ಕರ್ಣರಸಾಯನವಾಗಿದೆ ಎಂದು ಹಾಡಿಹೊಗಳಿದ್ದಾನೆ. ತನ್ನ ಆಶ್ರಯದಾತನಾದ ಅರಿ ಕೇಸರಿಯನ್ನು ಮರೆತು ಪಂಪನ ಲೌಕಿಕ ಜೀವನ ಮೀಮಾಂಸೆ ಇಲ್ಲಿ ಮಾತನಾಡಿದೆ. ಇದು ಜಿನವಾಣಿ; ಲೋಕದರ್ಶನದ ಪರಮ ಜಿನೇಂದ್ರವಾಣಿ. ಅದೇ ರೀತಿ ಪಂಪನು ತನ್ನ ವೈದಿಕ ವಿರೋಧಿ ನಿಲುವನ್ನು ದ್ರೋಣ-ಅಶ್ವಥ್ಥಾಮರ ಪಾತ್ರ ಚಿತ್ರಣಗಳ ಸಂದರ್ಭದಲ್ಲಿ ತೋರಿದ್ದಾನೆ. ದ್ರೋಣನು ಮಾತೆತ್ತಿದರೆ ಕುಲದ ಪ್ರಶ್ನೆಯನ್ನು ಮುಂದೊಡ್ಡಿದಂತೆ ಕರ್ಣನ ಪರಾಕ್ರಮಕ್ಕೆ ಸವಾಲೆಸೆಯುತ್ತಿದ್ದ ವರ್ಣ ನೀತಿಯನ್ನು ವಿರೋಧಿಸಿ ಕರ್ಣನ ಬಾಯಲ್ಲಿ ಕುಲಮನೆ ಮುನ್ನಮುಗ್ಗಡಿಪಿರೇಂಗಳ ನಿಮ್ಮ ಕುಲಂಗಳ್ ಆಂತು ಮಾರ್ಮಲೆವವನ್ ಅಟ್ಟಿ ತಿಂಬುವೆ? ಕುಲಂ ಕುಲಮಲ್ತು ಚಲಂ ಕುಲಂ ಗುಣಂ ಕುಲಂ ಅಭಿಮಾನಮೊಂದೆ ಕುಲಂ ಬಗೆವಾಗಳ್ ಈಗಳ್ ಈ ಕಲಹದೊಳ್ ಅಣ್ಣ ನಿಮ್ಮ ಕುಲವಾಕುಲಮಂ ನಿಮಗುಂಟು ಮಾಡುಗುಂ. ಎಂದು ಹೇಳಿಸಿದ್ದಾನೆ ಈ ಮಾತು ವರ್ಣ ನೀತಿಯ ಕುಲದ ಪರಿಕಲ್ಪನೆಗೆ ಎದಿರೇಟು ಕೊಟ್ಟ ಮಾತು. ಕುಲದ ಬಗೆಗಿನ ಪಂಪನ ವ್ಯಾಖ್ಯಾನ ಮನುಷ್ಯನ ಸಾಧನೆ ಸಿದ್ಧಿಗಳ ಜತೆ ಮಾನವೀಯ ಅಂತಃಕರಣ ಮತ್ತು ಸ್ವಾಭಿಮಾನಶೀಲತೆಗಳನ್ನು ಹೇಳುತ್ತಿದೆ. ಹೀಗೆ ಮಹಾಭಾರತದ ಕಥಾ ಚೌಕಟ್ಟಿನಲ್ಲಿ ಚಾತುರ್ವರ್ಣ ನೀತಿಯ ತರತಮತೆಯನ್ನೂ ತಿರಸ್ಕರಿಸಿದ ಲೋಕದರ್ಶನವನ್ನು ಕಾಣಿಸಿದ್ದಾನೆ. ಪಂಪನ ಲೋಕದೃಷ್ಟಿ ಈ ದೇಶದ ಸಾಮಾಜಿಕ ಸಾಂಸ್ಕೃತಿಕ, ಆರ್ಥಿಕ, ಶೈಕ್ಷಣಿಕ ಅಭಿವೃದ್ಧಿಗೆ ದೊಡ್ಡ ತೊಡಕಾಗಿರುವ ಚಾತುರ್ವರ್ಣ ನೀತಿಯ ವಿರುದ್ಧವಾಗಿ ಬಂಡೆದ್ದು ಸಮಾನತೆಗೆ ಸಾಮರಸ್ಯಕ್ಕೆ ಹಾತೊರೆದ ಲೌಕಿಕ ದೃಷ್ಟಿಯೇ ಆಗಿದೆ. ಆದ್ದರಿಂದ ವೈದಿಕ ಆಕ್ರಮಣಕಾರಿ ದೃಷ್ಟಿ ಧೋರಣೆಗಳಿಂದ ಬಿಡಿಸಿ ಮಹಾಭಾರತವನ್ನು ಮಾನವೀಯ ನೆಲೆಯ ಅಂತಃಕರಣದಲ್ಲಿ ಕಾಣುವ ಕಟ್ಟುವ ಕಾರ್ಯವನ್ನು ತುಂಬಾ ಯಶಸ್ವಿಯಾಗಿ ಪಂಪನು ನಿರ್ವಹಿಸಿದ್ದಾನೆ. ಹೀಗೆ ನಿರ್ವಹಿಸುವಲ್ಲಿ ಈ ನೆಲದ ವಿವೇಕವನ್ನು ಕನ್ನಡ ಪ್ರಜ್ಞೆಯನ್ನೂ ಮರೆಯದೆ ಕಥಾನಕದ ನಿರ್ವಹಣೆಯಲ್ಲಿ ಅಂತರ್ಗತಗೊಳಿಸಿ ರಚಿಸಿದ್ದಾನೆ ಆ ಕಾರಣದಿಂದಲೇ ನಿಜದ ನೆಲೆಯಲ್ಲಿ ಪಂಪ ಕನ್ನಡದ ನಾಡೋಜ.

ವಾರ್ತಾ ಭಾರತಿ 8 Feb 2026 12:21 pm

ಕಾರ್ಕಳ: ಅರುಣೋದಯ ವಿಶೇಷ ಶಾಲೆಗೆ ನೀರಿನ ಟ್ಯಾಂಕ್ ಕೊಡುಗೆ

ಕಾರ್ಕಳ: ಜೆಸಿಐ ಕಾರ್ಕಳ ಹಾಗೂ ಬಂಡಿ ಮಠ ಫೌಂಡೇಶನ್ ಕಾರ್ಕಳ ಇವರ ಸಹಭಾಗಿತ್ವದಲ್ಲಿ ಕಾರ್ಕಳದ ಅರುಣೋದಯ ವಿಶೇಷ ಮಕ್ಕಳ ಶಾಲೆಗೆ ಮೂರು ಸಿಂಟೆಕ್ಸ್ ನೀರಿನ ಟ್ಯಾಂಕ್‌ಗಳನ್ನು ಕೊಡುಗೆಯಾಗಿ ನೀಡಲಾಯಿತು. ಈ ಸಂದರ್ಭದಲ್ಲಿ ಕಾರ್ಕಳ ಲೋಕೋಪಯೋಗಿ ಇಲಾಖೆಯ ಸಹಾಯಕ ಇಂಜಿನಿಯರ್ ಸೋಮಶೇಖರ್, ಜೆಸಿಐ ಕಾರ್ಕಳದ ಅಧ್ಯಕ್ಷ ಜೆಸಿ ಅವಿನಾಶ್ ಶೆಟ್ಟಿ, ಕಾರ್ಕಳ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಮೊಹಮ್ಮದ್ ಶರೀಫ್, ಜೆಸಿಐ ವಲಯ–15ರ ಕಾರ್ಯಕ್ರಮ ವಿಭಾಗದ ನಿರ್ದೇಶಕ ವಿಘ್ನೇಶ್ ಪ್ರಸಾದ್, ಜೆಸಿಐ ಕಾರ್ಕಳದ ಉಪಾಧ್ಯಕ್ಷ ರಿಜ್ವಾನ್ ಖಾನ್, ಕಾರ್ಯದರ್ಶಿ ಸುಶಾಂತ್ ಶೆಟ್ಟಿ, ಕೋಶಾಧಿಕಾರಿ ಮಂಜುನಾಥ್ ರಾವ್, ಪೂರ್ವಾಧ್ಯಕ್ಷ ರೋಷನ್ ಡಿ. ಮಲ್ಲೋ ಉಪಸ್ಥಿತರಿದ್ದರು. ಅರುಣೋದಯ ವಿಶೇಷ ಶಾಲೆಯ ಮುಖ್ಯ ಶಿಕ್ಷಕ ಹನುಮಂತಪ್ಪ, ಶಿಕ್ಷಕರಾದ ಗಿರೀಶ್ ಅಶ್ರೀತ್, ಕಾಂತಮ್ಮ, ಪ್ರತಿಮಾ ಸೇರಿದಂತೆ ಸಿಬ್ಬಂದಿವರ್ಗ ಹಾಗೂ ವಿಶೇಷ ಮಕ್ಕಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.  

ವಾರ್ತಾ ಭಾರತಿ 8 Feb 2026 12:16 pm

ಇದು ಹಿಂದೂ ಪಾಕಿಸ್ತಾನವೆ?

ಬಹುಸಂಖ್ಯಾತರ ಧರ್ಮವನ್ನು ರಾಷ್ಟ್ರದ ಸಾರ್ವಜನಿಕ ಗುರುತಿನ ಕೇಂದ್ರವನ್ನಾಗಿ ಮಾಡುವುದು, ಮುಲ್ಲಾಗಳು, ಪುರೋಹಿತರು, ಸನ್ಯಾಸಿಗಳು ಅಥವಾ ರಬ್ಬಿಗಳ ಇಚ್ಛೆಗೆ ಅನುಗುಣವಾಗಿ ಕಾನೂನುಗಳು, ನೀತಿಗಳು ಮತ್ತು ಸಂಸ್ಥೆಗಳನ್ನು ವಿನ್ಯಾಸಗೊಳಿಸುವುದು, ಸುನ್ನಿ, ಶಿಯಾ, ಬೌದ್ಧ ಅಥವಾ ಯಹೂದಿಗಳಂತಹ ವಿವಿಧ ದೇಶಗಳಲ್ಲಿ ಹಾನಿಕಾರಕ ಫಲಿತಾಂಶಗಳನ್ನು ನೀಡಿದೆ. ಹಿಂದೂಗಳು ಹೇಗಾದರೂ ಈ ನಿಯಮದಿಂದ ವಿನಾಯಿತಿ ಪಡೆದಿದ್ದಾರೆ ಎಂದು ಭಾವಿಸಲು ಯಾವುದೇ ಕಾರಣವಿಲ್ಲ. ಸ್ವಾತಂತ್ರ್ಯ ಮತ್ತು ವಿಭಜನೆಯ ಎರಡು ತಿಂಗಳ ನಂತರ, 1947ರ ಅಕ್ಟೋಬರ್ 15 ರಂದು, ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ ಅವರು ಪ್ರಾಂತಗಳ ಮುಖ್ಯಮಂತ್ರಿಗಳಿಗೆ ಪತ್ರ ಬರೆದರು: ‘ಪಾಕಿಸ್ತಾನದಿಂದ ಏನೇ ಪ್ರಚೋದನೆ ಬಂದರೂ, ಅಲ್ಲಿನ ಮುಸ್ಲಿಮೇತರರಿಗೆ ಏನೇ ಅವಮಾನಗಳು ಮತ್ತು ಭಯಾನಕತೆಗಳು ಉಂಟಾದರೂ, ನಾವು ಈ ಅಲ್ಪಸಂಖ್ಯಾತರನ್ನು ನಾಗರಿಕ ರೀತಿಯಲ್ಲಿ ನಡೆಸಿಕೊಳ್ಳಬೇಕು. ನಾವು ಅವರಿಗೆ ಭದ್ರತೆ ಮತ್ತು ನಾಗರಿಕರ ಹಕ್ಕುಗಳನ್ನು ನೀಡಬೇಕು.’ ಜಾತ್ಯತೀತತೆ ಮತ್ತು ಅಲ್ಪಸಂಖ್ಯಾತರಿಗೆ ಸಮಾನ ಹಕ್ಕುಗಳ ಬಗೆಗಿನ ನೆಹರೂ ಅವರ ಬದ್ಧತೆಯು ಅವರ ಕಾಂಗ್ರೆಸ್ ಪಕ್ಷದೊಳಗೆ ಸಹ ಸಾರ್ವತ್ರಿಕವಾಗಿ ಇರಲಿಲ್ಲ. ಅದರಲ್ಲಿ ಸಂಪ್ರದಾಯವಾದಿ ಹಿಂದೂಗಳು ಸಾಕಷ್ಟು ಮಟ್ಟಿಗೆ ಇದ್ದರು. ಆದರೂ, ಪ್ರಧಾನ ಮಂತ್ರಿಯಾಗಿ, ಅವರು ಸ್ವತಃ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರೆಸ್ಸೆಸ್) ಮತ್ತು ಜನಸಂಘವನ್ನು ಪ್ರತಿನಿಧಿಸುವ ಹಿಂದುತ್ವದ ಶಕ್ತಿಗಳನ್ನು ಅಂಚಿನಲ್ಲಿಡಲು ಶ್ರಮಿಸಿದರು. ಅವರ ಮರಣದ ನಂತರದ ದಶಕಗಳಲ್ಲಿ ಮಾತ್ರವೇ ಆರೆಸ್ಸೆಸ್ ಮತ್ತು ಜನಸಂಘದ ನಂತರದ ರೂಪವಾದ ಭಾರತೀಯ ಜನತಾ ಪಕ್ಷ (ಬಿಜೆಪಿ) ಪ್ರಭಾವಶಾಲಿಯಾಗಿ ಬೆಳೆದವು. ಇದರ ಪರಿಣಾಮವಾಗಿ, ಆಗಸ್ಟ್ 1947ರ ನಂತರ ತನ್ನ ನೆರೆಯವರಿಗಿಂತ ವಿಭಿನ್ನವಾದ, ಹೆಚ್ಚು ಒಳಗೊಳ್ಳುವ, ಮಾರ್ಗವನ್ನು ರೂಪಿಸಿಕೊಳ್ಳಲು ಆಶಿಸಿದ್ದ ನಮ್ಮ ರಾಷ್ಟ್ರವು, ಧಾರ್ಮಿಕ ವಿಷಯಕ್ಕೆ ಸಂಬಂಧಿಸಿದಂತೆ ಈಗ ಪಾಕಿಸ್ತಾನಕ್ಕೆ ಹತ್ತಿರವಾಗುತ್ತಿದೆ. ಕಳೆದ ಮೂರು ಸಾರ್ವತ್ರಿಕ ಚುನಾವಣೆಗಳಲ್ಲಿ ಬಿಜೆಪಿಯಿಂದ ಆಯ್ಕೆಯಾದ 800ಕ್ಕೂ ಹೆಚ್ಚು ಸಂಸತ್ ಸದಸ್ಯರಲ್ಲಿ ಒಬ್ಬರೂ ಮುಸ್ಲಿಮರಲ್ಲ ಎಂಬ ಅಂಶದಲ್ಲಿ ಇಂದು ಭಾರತದ ಬಹುಸಂಖ್ಯಾತತೆಯ ಪಾತ್ರವು ಸ್ಪಷ್ಟವಾಗಿದೆ. ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರ ನೇತೃತ್ವದಲ್ಲಿ ಬಿಜೆಪಿ ಹಿಂದೂ ಮತಬ್ಯಾಂಕನ್ನು ರಚಿಸಲು ಪ್ರಯತ್ನಿಸಿದೆ. ಹಿಂದೂಗಳ ಬೆಂಬಲದ ಆಧಾರದ ಮೇಲೆ ಮಾತ್ರ ಚುನಾವಣೆಗಳಲ್ಲಿ ಹೋರಾಡಿ ಗೆಲ್ಲುತ್ತದೆ. ‘ಹಿಂದೂ ಮೊದಲು’ ರಾಜಕೀಯವು ಅವರನ್ನು ಅಧಿಕಾರಕ್ಕೆ ತರುತ್ತಿದ್ದಂತೆ, ಸಂಘ ಪರಿವಾರವು ಭಾರತೀಯ ಮುಸ್ಲಿಮರನ್ನು (ಮತ್ತು ಕೆಲವೊಮ್ಮೆ ಭಾರತೀಯ ಕ್ರಿಶ್ಚಿಯನ್ನರನ್ನು ಸಹ) ಕಿರುಕುಳ ಮತ್ತು ರಾಕ್ಷಸೀಕರಿಸುವ ಮೂಲಕ ಸಾಮಾಜಿಕವಾಗಿ ತನ್ನ ಪ್ರಾಬಲ್ಯವನ್ನು ಬಲಪಡಿಸಿದೆ. ಒಂದು ಕಾಲದಲ್ಲಿ ಮುಸ್ಲಿಮರು ಪ್ರಮುಖ ಕ್ಯಾಬಿನೆಟ್ ಹುದ್ದೆಗಳನ್ನು ಹೊಂದಿದ್ದರು. ಪ್ರಮುಖ ಸರಕಾರಿ ಇಲಾಖೆಗಳನ್ನು (ರಾಜತಾಂತ್ರಿಕ ದಳ ಮತ್ತು ಗುಪ್ತಚರ ಬ್ಯೂರೋ ಸೇರಿದಂತೆ) ನಡೆಸುತ್ತಿದ್ದರು. ಸುಪ್ರೀಂ ಕೋರ್ಟ್ ಮತ್ತು ಭಾರತೀಯ ವಾಯುಪಡೆಯ ಮುಖ್ಯಸ್ಥರಾಗಿದ್ದರು. ವಾಸ್ತವವಾಗಿ, ಜೀವಂತ ಸ್ಮರಣೆಯಲ್ಲಿ, ನರೇಂದ್ರ ಮೋದಿಯವರ ತವರು ರಾಜ್ಯದ ಎರಡು ನಗರಗಳು ಮುಸ್ಲಿಮ್ ಸಂಸದರನ್ನು ಆರಿಸಿದವು. ಆದರೂ, ಈಗ ಸಾರ್ವಜನಿಕ ಜೀವನದಲ್ಲಿ ಪ್ರಮುಖ ಸ್ಥಾನದಲ್ಲಿ ಯಾವುದೇ ಮುಸ್ಲಿಮ್ ಇಲ್ಲ. ಕಾರ್ಮಿಕ ವರ್ಗದ ಮುಸ್ಲಿಮರನ್ನು ನೋಡಿದರೆ, ಅವರು ವಸತಿ ಮತ್ತು ಉದ್ಯೋಗದಲ್ಲಿ ತಾರತಮ್ಯಕ್ಕೆ ಒಳಗಾಗುತ್ತಾರೆ ಮತ್ತು ನಿಯಮಿತವಾದ ಅಪಹಾಸ್ಯ ಮತ್ತು ಅವಮಾನಕ್ಕೆ ಒಳಗಾಗುತ್ತಾರೆ. ಇದು ಹೆಚ್ಚಾಗಿ (ಗುಂಪು ಹತ್ಯೆ ಮತ್ತು ಮನೆ ಧ್ವಂಸದಲ್ಲಿ) ಗುರಿ ಮಾಡಲಾದ ಹಿಂಸಾಚಾರದ ರೂಪವನ್ನು ಪಡೆಯುತ್ತದೆ. ಹಿಂದೂ ಬಹುಸಂಖ್ಯಾತವಾದವು ಕಾನೂನು ರಂಗದಲ್ಲಿಯೂ ವ್ಯಕ್ತವಾಗುತ್ತದೆ. ನಾಗರಿಕರ ತಿದ್ದುಪಡಿ ಕಾಯ್ದೆಯು ಮುಸ್ಲಿಮರ ವಿರುದ್ಧ ಸ್ಪಷ್ಟವಾಗಿ ತಾರತಮ್ಯ ಮಾಡಿದೆ ಮತ್ತು 370ನೇ ವಿಧಿಯನ್ನು ರದ್ದುಗೊಳಿಸುವುದಕ್ಕೂ ಜಮ್ಮು-ಕಾಶ್ಮೀರ ಭಾರತದ ಏಕೈಕ ಮುಸ್ಲಿಮ್ ಬಹುಸಂಖ್ಯಾತ ರಾಜ್ಯವಾಗಿತ್ತು ಎಂಬ ಅಂಶಕ್ಕೂ ಸಂಬಂಧವಿಲ್ಲದೆ ಇರಲಿಲ್ಲ. ಸಾಂಕೇತಿಕ ಮಟ್ಟದಲ್ಲಿ, ಬಹುಸಂಖ್ಯಾತವಾದವು ಭಾರತದ ಅತಿದೊಡ್ಡ ರಾಜ್ಯದ ಮುಖ್ಯಮಂತ್ರಿಯ ಕೇಸರಿ ನಿಲುವಂಗಿಯಲ್ಲಿ ಮತ್ತು ಹೊಸ ರಾಮ ದೇವಾಲಯದ ಉದ್ಘಾಟನೆಯ ಅಧ್ಯಕ್ಷತೆಯನ್ನು ಪ್ರಧಾನ ಮಂತ್ರಿ ವಹಿಸುವುದರಲ್ಲಿ ಗೋಚರಿಸುತ್ತದೆ. ನಮ್ಮ ಅತ್ಯಂತ ಶಕ್ತಿಶಾಲಿ ರಾಜಕಾರಣಿಗಳ ಈ ಸಂಕೇತವು ಮುಖ್ಯ ನ್ಯಾಯಮೂರ್ತಿಗಳು ಮತ್ತು ಸೇನಾ ಜನರಲ್‌ಗಳು ಸೇರಿದಂತೆ ಹಿರಿಯ ಸಾರ್ವಜನಿಕ ಅಧಿಕಾರಿಗಳನ್ನು ಸಹ ಸಾಂವಿಧಾನಿಕ ಮಾನದಂಡಗಳನ್ನು ಬಹಿರಂಗವಾಗಿ ಉಲ್ಲಂಘಿಸಲು ಮತ್ತು ಅವರು ಮೊದಲು ಹಿಂದೂಗಳು ಮತ್ತು ನಂತರ ಮಾತ್ರ ಭಾರತೀಯರು ಎಂಬಂತೆ ವರ್ತಿಸಲು ಪ್ರೋತ್ಸಾಹಿಸುತ್ತದೆ. ಹಿಂದುತ್ವವು ಜನಪ್ರಿಯ ಸಂಸ್ಕೃತಿಯನ್ನು ಸಹ ಭೇದಿಸಿದೆ. ಒಂದು ಕಾಲದಲ್ಲಿ ಜಾತ್ಯತೀತತೆಯ ಭದ್ರಕೋಟೆಯಾಗಿದ್ದ ಬಾಲಿವುಡ್ ಈಗ ಹಿಂದೂಯೇತರರನ್ನು ಕೆಟ್ಟದಾಗಿ ಬಿಂಬಿಸುವ ಚಲನಚಿತ್ರಗಳನ್ನು ಪ್ರದರ್ಶಿಸುವ ಸಾಧ್ಯತೆ ಹೆಚ್ಚುತ್ತಿದೆ. ಪಶ್ಚಿಮ ಬಂಗಾಳದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗಳಿಗೆ ಬಿಜೆಪಿ ನಡೆಸುತ್ತಿರುವ ಪ್ರಚಾರದಲ್ಲಿ ಬಹುಸಂಖ್ಯಾತ ಧರ್ಮಾಂಧತೆಯ ಬಹಿರಂಗ ಅಭಿವ್ಯಕ್ತಿ ವ್ಯಕ್ತವಾಗುತ್ತಿದೆ. ಪಕ್ಷದ ನಾಯಕರು, ಭಾರತದ ಕೇಂದ್ರ ಗೃಹ ಸಚಿವರು ಮತ್ತು ವಿಶೇಷವಾಗಿ ಅಸ್ಸಾಂ ಮುಖ್ಯಮಂತ್ರಿಯವರ ಭಾಷಣಗಳು, ಹಿಂದೂಗಳನ್ನು ಪ್ರಚೋದಿಸುವ ಗುರಿಯನ್ನು ಹೊಂದಿವೆ. ಅವು ಭಾರತೀಯ ಮುಸ್ಲಿಮರ ಮೇಲಿನ ದ್ವೇಷವನ್ನು ಅವರ ಮನಸ್ಸು ಮತ್ತು ಹೃದಯಗಳಲ್ಲಿ ತುಂಬುವಂತೆ ಮಾಡುತ್ತವೆ. ಉನ್ನತ ನ್ಯಾಯಾಂಗವು (ಈ ಲೇಖನ ಬರೆಯುವ ಸಮಯದಲ್ಲಿ) ಯಾವುದೇ ರಾಜಕಾರಣಿಯನ್ನು ಪರಿಶೀಲನೆಗೆ ಒಳಪಡಿಸದಿರುವುದು ಆಘಾತಕಾರಿಯಾಗಿದೆ. ಅದು ನಮ್ಮ ಸಾರ್ವಜನಿಕ ಸಂಸ್ಥೆಗಳ ನೈತಿಕ ಅವನತಿಯ ಲಕ್ಷಣವೂ ಆಗಿದೆ. ರಾಜಕೀಯ ಮತ್ತು ಕಾನೂನಿನಲ್ಲಿ, ಸಂಕೇತ ಮತ್ತು ಸಾರದಲ್ಲಿ, ನುಡಿ ಮತ್ತು ನಡೆಯಲ್ಲಿ, ಭಾರತವು ಪಾಕಿಸ್ತಾನದಂತೆಯೇ ಆಗುತ್ತಿದೆ. ಆದರೆ ಇಲ್ಲಿ ಇತರ ಧರ್ಮಗಳ ಸಹನಾಗರಿಕರನ್ನು ಆಳುವವರು ಮುಸ್ಲಿಮರಲ್ಲ, ಹಿಂದೂಗಳು ಮಾತ್ರ. ಇಂದು ಹಿಂದೂ ಬಹುಸಂಖ್ಯಾತವಾದದ ಪ್ರಬಲ ಸ್ಥಾನವನ್ನು ವಿವರಿಸುವಾಗ, ಇದೆಲ್ಲವೂ ಮೇ 2014ರಿಂದಷ್ಟೇ ಶುರುವಾದದ್ದಲ್ಲ ಎಂದು ಒತ್ತಿ ಹೇಳಬೇಕು. ಇದು ತುಂಬಾ ಹಳೆಯ ಬೇರುಗಳನ್ನು ಹೊಂದಿದೆ. ಹಿಂದುತ್ವದ ಆಳವಾದ ಇತಿಹಾಸವಿದೆ. ಅದರ ಮೈಲಿಗಲ್ಲುಗಳಲ್ಲಿ 19ನೇ ಶತಮಾನದಲ್ಲಿ ಹಿಂದೂ ಮಿಷನರಿ ಸಮಾಜಗಳ ಚಟುವಟಿಕೆಗಳು, 20ನೇ ಶತಮಾನದಲ್ಲಿ ಹಿಂದೂ ಮಹಾಸಭಾದ ಚಟುವಟಿಕೆಗಳು ಮತ್ತು 1925ರಲ್ಲಿ ಆರೆಸ್ಸೆಸ್ ಸ್ಥಾಪನೆ ಸೇರಿವೆ. ಜವಾಹರಲಾಲ್ ನೆಹರೂ ಪ್ರಧಾನಿಯಾಗಿದ್ದ ವರ್ಷಗಳಲ್ಲಿ, ಹಿಂದುತ್ವವು ಹಿಂಜರಿತದಿಂದ ಕೂಡಿತ್ತು. ಆದರೂ ಅದು ಯಾವಾಗಲೂ ಹಿನ್ನೆಲೆಯಲ್ಲಿತ್ತು. ನೆಹರೂ ನಂತರದ ಕಾಂಗ್ರೆಸ್‌ನ ತಪ್ಪುಗಳ ಮೂಲಕ ಹಿಂದೂ ಬಲಪಂಥೀಯರಿಗೆ ಬೆಳೆಯಲು ಮತ್ತು ವಿಸ್ತರಿಸಲು ಅವಕಾಶ ನೀಡಲಾಯಿತು. ಇಲ್ಲಿ ವಿಶೇಷವಾಗಿ ತಪ್ಪಿತಸ್ಥರು ರಾಜೀವ್ ಗಾಂಧಿ. ಅವರು ಪ್ರಧಾನಿಯಾಗಿ ಸುಪ್ರೀಂ ಕೋರ್ಟ್‌ನ ಶಾಬಾನು ತೀರ್ಪನ್ನು ರದ್ದುಗೊಳಿಸುವ ಮೂಲಕ ಮುಸ್ಲಿಮ್ ತೀವ್ರಗಾಮಿಗಳಿಗೆ ಮತ್ತು ಬಾಬರಿ ಮಸೀದಿಯ ಪಕ್ಕದಲ್ಲಿರುವ ಅಯೋಧ್ಯೆಯಲ್ಲಿರುವ ಒಂದು ಸಣ್ಣ ದೇವಾಲಯದ ಬೀಗಗಳನ್ನು ತೆರೆಯುವ ಮೂಲಕ ಹಿಂದೂ ತೀವ್ರಗಾಮಿಗಳಿಗೆ ಜಾಗ ಮಾಡಿಕೊಟ್ಟರು. ಈ ತಪ್ಪುದಾರಿಗೆಳೆಯುವ ಕೃತ್ಯಗಳ ಬಗ್ಗೆ ಪತ್ರಕರ್ತೆ ನೀರಜಾ ಚೌಧರಿ ಆ ಸಮಯದಲ್ಲಿ ಎಚ್ಚರಿಸಿದ್ದರು. ‘‘ಚುನಾವಣಾ ಲಾಭಕ್ಕಾಗಿ ಸರಕಾರವು ಎರಡೂ ಸಮುದಾಯಗಳನ್ನು ಓಲೈಸುವ ನೀತಿಯನ್ನು ಅನುಸರಿಸುತ್ತಿರುವುದು ವಿಷವರ್ತುಲವಾಗಿದ್ದು, ಅದನ್ನು ಮುರಿಯುವುದು ಕಷ್ಟಕರವಾಗುತ್ತದೆ’’ ಎಂದಿದ್ದರು. ಎಡಪಂಥೀಯ ಸಂಸದ ಸೈಫುದ್ದೀನ್ ಚೌಧರಿ ಹೆಚ್ಚು ಸ್ಪಷ್ಟವಾಗಿ ಮಾತನಾಡುತ್ತಾ, ‘‘ರಾಜೀವ್ ಗಾಂಧಿ ಭಾರತವನ್ನು 21ನೇ ಶತಮಾನಕ್ಕೆ ಕೊಂಡೊಯ್ಯುವ ಬಗ್ಗೆ ಮಾತನಾಡುತ್ತಿರುವಾಗ, ಅವರ ಕೆಲಸಗಳು ಅವರಿಗೆ ಮುಲ್ಲಾಗಳು ಮತ್ತು ಪಂಡಿತರಂತೆ ಪ್ರಾಚೀನ ಮನಸ್ಸು ಇದೆ ಎಂದು ಸೂಚಿಸುತ್ತವೆ’’ ಎಂದು ಹೇಳಿದ್ದರು. ನೆಹರೂ ಧರ್ಮವನ್ನು ರಾಜಕೀಯದಿಂದ ದೂರವಿಡಲು ಶ್ರಮಿಸಿದರು. ಅವರ ಮೊಮ್ಮಗ ಅದನ್ನು ಸಿನಿಕವಾಗಿ ಮತ್ತು ಸಾಧನವಾಗಿ ತಂದರು. ರಾಜೀವ್ ಗಾಂಧಿಯವರ ನೀತಿಗಳು ಬಿಜೆಪಿಯ ಕೈಗೆ ಸಿಕ್ಕವು. ಏಕೆಂದರೆ, ಅವರ ಸರಕಾರವು ಧರ್ಮವನ್ನು ದೇಶ ರಚನೆಯ ಆಧಾರವನ್ನಾಗಿ ಮಾಡಿದ ನಂತರ, ಅನಿವಾರ್ಯವಾದರೆ, ಅವರ ಜನಸಂಖ್ಯೆಯಲ್ಲಿ ಅಸಮತೋಲನವಾದರೆ, ಹಿಂದೂ ತೀವ್ರಗಾಮಿಗಳು ಮುಸ್ಲಿಮ್ ತೀವ್ರಗಾಮಿಗಳಿಗಿಂತ ಹೆಚ್ಚಿನ ಪ್ರಯೋಜನವನ್ನು ಪಡೆಯುತ್ತಾರೆ. ಅಯೋಧ್ಯೆಯಲ್ಲಿ ಬೀಗಮುದ್ರೆ ತೆರೆಯುವಿಕೆಯು ಸಂಘ ಪರಿವಾರವು ಬಾಬರಿ ಮಸೀದಿಯನ್ನು ಕೆಡವಿ ಅದರ ಬದಲಿಗೆ ರಾಮನಿಗೆ ಭವ್ಯವಾದ ದೇವಾಲಯವನ್ನು ನಿರ್ಮಿಸಲು ದೇಶಾದ್ಯಂತ ಚಳವಳಿಯನ್ನು ಪ್ರಾರಂಭಿಸಲು ಧೈರ್ಯ ತುಂಬಿತು. 1984ರ ಚುನಾವಣೆಯಲ್ಲಿ ಬಿಜೆಪಿ ಕೇವಲ 2 ಸ್ಥಾನಗಳನ್ನು ಗೆದ್ದಿತ್ತು. ಆದರೆ ಒಂದೂವರೆ ದಶಕದೊಳಗೆ ದೇಶದಲ್ಲಿ ಪ್ರಮುಖ ಪಕ್ಷವಾಗಿ ಹೊರಹೊಮ್ಮಿತು. ಮೊದಲ ಬಿಜೆಪಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಬಹುಮತದ ಪ್ರವೃತ್ತಿಗಳು, ಅವರ ಪಕ್ಷವು ಅನೇಕ ಸಮ್ಮಿಶ್ರ ಪಾಲುದಾರರೊಂದಿಗೆ ಕೆಲಸ ಮಾಡಬೇಕಾಗಿ ಬಂದಿದ್ದರಿಂದ ಸೀಮಿತವಾಗಿತ್ತು. ಬಿಜೆಪಿಯ ಎರಡನೇ ಪ್ರಧಾನಿ ಸತತ ಎರಡು ಬಾರಿ ಸಂಸತ್ತಿನಲ್ಲಿ ಬಹುಮತ ಗಳಿಸಿದರು ಮತ್ತು ಮೂರನೇ ಬಾರಿಗೆ ಸ್ವಲ್ಪ ಕಡಿಮೆಯಾದರೂ, ‘ಹಿಂದೂ ಮೊದಲು’ ಎಂಬ ಕಾರ್ಯಸೂಚಿಯನ್ನು ಜಾರಿಗೆ ತರುವಲ್ಲಿ ತಾವು ನಿರ್ದಯಿ ಎಂದು ತೋರಿಸಿದ್ದಾರೆ. ನರೇಂದ್ರ ಮೋದಿ ಮತ್ತು ಅವರ ಬಲಗೈ ಬಂಟ ಅಮಿತ್ ಶಾ, ರಾಜಕೀಯದಲ್ಲಿ ಆಸಕ್ತಿ ಅಪರೂಪಕ್ಕೊಮ್ಮೆ ಮತ್ತು ಅಸ್ಥಿರವಾಗಿ ಕಾಣಿಸಬಹುದಾದ ಪ್ರಸ್ತುತ ಪೀಳಿಗೆಯ ಕಾಂಗ್ರೆಸ್ ವಂಶಸ್ಥರಿಗಿಂತ ಸೈದ್ಧಾಂತಿಕವಾಗಿ ಹೆಚ್ಚು ಬದ್ಧರಾಗಿದ್ದಾರೆ ಮತ್ತು ಅಧಿಕಾರವನ್ನು ಗೆಲ್ಲುವ ಮತ್ತು ಉಳಿಸಿಕೊಳ್ಳುವತ್ತ ಹೆಚ್ಚು ಗಮನಹರಿಸಿದ್ದಾರೆ. ಏಕೆಂದರೆ ಅವರ ರಾಜಕೀಯದ ಆಸಕ್ತಿ ವಿರಳವಾಗಿ ಮತ್ತು ಅನಿಯಮಿತವಾಗಿ ಕಾಣಿಸಬಹುದು. ಪರಿಣಾಮವಾಗಿ, ಸಂಘ ಪರಿವಾರವು ಪ್ರಭಾವ ಮತ್ತು ಶಕ್ತಿಯಲ್ಲಿ ಸ್ಥಿರವಾಗಿ ಬೆಳೆದಿದೆ. ಆದರೆ ಕಾಂಗ್ರೆಸ್ ಕ್ಷೀಣಿಸಿದೆ ಮತ್ತು ಕೊಳೆತಿದೆ. ಹಿಂದೂ ಬಲಪಂಥೀಯ ಸಿದ್ಧಾಂತವಾದಿಗಳು ಕೆಲವೊಮ್ಮೆ ಇಂದು ಭಾರತದಲ್ಲಿ ನಡೆಯುತ್ತಿರುವುದು ನಾಗರಿಕತೆಯ ಪುನರುಜ್ಜೀವನ ಎಂದು ಹೇಳಿಕೊಳ್ಳುತ್ತಾರೆ. ಇದು ಸಂಪೂರ್ಣವಾಗಿ ಸುಳ್ಳು. ಬಿಜೆಪಿ ಮತ್ತು ಆರೆಸ್ಸೆಸ್‌ನ ನಾಯಕರು ಮತ್ತು ಕಾರ್ಯಕರ್ತರು ಬೌದ್ಧಿಕ ವಿರೋಧಿಗಳು. ಅವರಿಗೆ ಭಾರತೀಯ ಕಲೆ, ವಾಸ್ತುಶಿಲ್ಪ, ಸಂಗೀತ ಅಥವಾ ತತ್ವಶಾಸ್ತ್ರದ ಮಹಾನ್ ಸಾಧನೆಗಳಲ್ಲಿ ಹೆಚ್ಚಿನ ಆಸಕ್ತಿ ಇಲ್ಲ, ಅವುಗಳನ್ನು ಸಮಕಾಲೀನ ಜಗತ್ತಿಗೆ ಪ್ರಸ್ತುತವಾಗಿಸುವ ಬಯಕೆ ಇಲ್ಲ. ಅವರ ಆಸಕ್ತಿ ಬೇರೆಡೆಗೆ, ಹಿಂದೂಗಳಲ್ಲದ ಭಾರತೀಯರ ಮೇಲೆ, ವಿಶೇಷವಾಗಿ ಮುಸ್ಲಿಮರ ಮೇಲೆ ಹಿಂದೂಗಳ ರಾಜಕೀಯ, ಆರ್ಥಿಕ, ಕಾನೂನು ಮತ್ತು ಸಾಂಸ್ಥಿಕ ಶ್ರೇಷ್ಠತೆಯನ್ನು ಘೋಷಿಸುವಲ್ಲಿ ಇದೆ. ಆದ್ದರಿಂದ ನಾವು ಇಂದು ಭಾರತದಲ್ಲಿ ನೋಡುತ್ತಿರುವುದು ನಾಗರಿಕತೆಯ ನವೀಕರಣವಲ್ಲ, ಬದಲಾಗಿ ಬಹಿರಂಗವಾಗಿ ಬಹುಸಂಖ್ಯಾತರ ಕಾರ್ಯಸೂಚಿಯ ಪ್ರತಿಪಾದನೆಯಾಗಿದೆ. ಒಟ್ಟಾರೆಯಾಗಿ, 2026ರಲ್ಲಿ ಭಾರತವು ಹಿಂದೆಂದಿಗಿಂತಲೂ ಹಿಂದೂ ಪಾಕಿಸ್ತಾನವಾಗುವುದರ ಸಮಿಪದಲ್ಲಿದೆ. ಇದನ್ನು ಹಿಮ್ಮೆಟ್ಟಿಸಿ, ಭವಿಷ್ಯದಲ್ಲಿ ಜಾತ್ಯತೀತ, ಪಂಗಡೇತರ ದೇಶವನ್ನು ಬೆಳೆಸಬಹುದೇ? ಅದು ಉತ್ತರಿಸಲು ಅಸಾಧ್ಯವಾದ ಪ್ರಶ್ನೆಯಾಗಿದೆ. ಆದರೂ, ಇತರ ದೇಶಗಳ ಅನುಭವವನ್ನು ನೋಡಿದಾಗ, ರಾಜಕೀಯದೊಂದಿಗಿನ ಧರ್ಮದ ಬೆರೆಸುವಿಕೆಯು ಎಲ್ಲಿಯೂ ಉತ್ತಮವಾಗಿ ಕೆಲಸ ಮಾಡಿಲ್ಲ ಎಂದು ತೋರುತ್ತದೆ. ಪಾಕಿಸ್ತಾನದ ಗುರುತಿನ ಕೇಂದ್ರವಾಗಿ ಇಸ್ಲಾಮ್ ಅನ್ನು ಮಾಡುವುದರಿಂದ ಅದರ ಆರ್ಥಿಕ ಮತ್ತು ರಾಜಕೀಯ ನಿರೀಕ್ಷೆಗಳಿಗೆ ತೀವ್ರ ಹಾನಿಯಾಗಿದೆ. ಅದು ಸ್ಥಾಪನೆಯಾದ ಜಾತ್ಯತೀತ ತತ್ವಗಳನ್ನು ತ್ಯಜಿಸುವುದರಿಂದ ಬಾಂಗ್ಲಾದೇಶಕ್ಕೆ ಹೆಚ್ಚು ಹಾನಿಯಾಗುತ್ತಿದೆ. ಅಭಿವೃದ್ಧಿ ಹೊಂದಿದ ದೇಶವಾಗಲು ಇರಾನ್‌ಗೆ ಎಲ್ಲಾ ಆರ್ಥಿಕ ಮತ್ತು ಸಾಂಸ್ಕೃತಿಕ ಸಾಮರ್ಥ್ಯವಿತ್ತು. ಬಹುಸಂಖ್ಯಾತವಾದದ ಪ್ರತಿಪಾದನೆಯಿಂದ ಬಳಲುತ್ತಿರುವ ಇಸ್ಲಾಮಿಕ್ ರಾಷ್ಟ್ರಗಳು ಮಾತ್ರ ಅಲ್ಲ. 1970ರ ದಶಕದಲ್ಲಿ, ಶಿಕ್ಷಣ, ಆರೋಗ್ಯ, ಲಿಂಗ ಸಮಾನತೆ ಮತ್ತು ಅಭಿವೃದ್ಧಿಯ ಇತರ ಗುರುತುಗಳಲ್ಲಿ ಶ್ರೀಲಂಕಾ ಭಾರತಕ್ಕಿಂತ ಬಹಳ ಮುಂದಿತ್ತು. ಸಿಂಹಳ ಬೌದ್ಧ ಧರ್ಮಾಂಧತೆಯ ಉದಯ ಮತ್ತು ಅದು ಹುಟ್ಟುಹಾಕಿದ ಅಂತರ್ಯುದ್ಧ ಇಲ್ಲದಿದ್ದರೆ, ಬೆಂಗಳೂರು ಮತ್ತು ಹೈದರಾಬಾದ್‌ನಂತೆ ಕೊಲಂಬೊ ಮತ್ತು ಕ್ಯಾಂಡಿ ಕೂಡ ಐಟಿ ಕ್ರಾಂತಿಯ ಕೇಂದ್ರಗಳಾಗಿ ಹೊರಹೊಮ್ಮಬಹುದಿತ್ತು. ಅಂತಿಮವಾಗಿ, ಹಿಂದುತ್ವದವರಿಗೆ ತುಂಬಾ ಪ್ರಿಯವಾದ ಇಸ್ರೇಲ್ ದೇಶವು ಆಧುನಿಕ ಯಹೂದಿ ಧರ್ಮದಲ್ಲಿನ ಅತ್ಯಂತ ಪ್ರತಿಗಾಮಿ ಪ್ರವೃತ್ತಿಗಳಿಂದ ಸಾಧ್ಯವಾಗಿಸಿದ ಯುದ್ಧ ಅಪರಾಧಗಳ ಮೂಲಕ ವಿಶ್ವ ವ್ಯವಸ್ಥೆಯಿಂದ ಹೊರಗುಳಿಯುತ್ತಿದೆ. ಬಹುಸಂಖ್ಯಾತರ ಧರ್ಮವನ್ನು ರಾಷ್ಟ್ರದ ಸಾರ್ವಜನಿಕ ಗುರುತಿನ ಕೇಂದ್ರವನ್ನಾಗಿ ಮಾಡುವುದು, ಮುಲ್ಲಾಗಳು, ಪುರೋಹಿತರು, ಸನ್ಯಾಸಿಗಳು ಅಥವಾ ರಬ್ಬಿಗಳ ಇಚ್ಛೆಗೆ ಅನುಗುಣವಾಗಿ ಕಾನೂನುಗಳು, ನೀತಿಗಳು ಮತ್ತು ಸಂಸ್ಥೆಗಳನ್ನು ವಿನ್ಯಾಸಗೊಳಿಸುವುದು, ಸುನ್ನಿ, ಶಿಯಾ, ಬೌದ್ಧ ಅಥವಾ ಯಹೂದಿಗಳಂತಹ ವಿವಿಧ ದೇಶಗಳಲ್ಲಿ ಹಾನಿಕಾರಕ ಫಲಿತಾಂಶಗಳನ್ನು ನೀಡಿದೆ. ಹಿಂದೂಗಳು ಹೇಗಾದರೂ ಈ ನಿಯಮದಿಂದ ವಿನಾಯಿತಿ ಪಡೆದಿದ್ದಾರೆ ಎಂದು ಭಾವಿಸಲು ಯಾವುದೇ ಕಾರಣವಿಲ್ಲ.

ವಾರ್ತಾ ಭಾರತಿ 8 Feb 2026 12:16 pm

ರಷ್ಯಾದ ಮೆಡಿಕಲ್‌ ಕಾಲೇಜಿನಲ್ಲಿ ಚಾಕು ಇರಿತ ದಾಳಿ, 4 ಭಾರತೀಯರಿಗೆ ಗಾಯ: ಗಾಯದ ರಕ್ತದಿಂದ ಗೋಡೆ ಮೇಲೆ ನಾಜಿ ಚಿಹ್ನೆ ಚಿತ್ರಿಸಿ ವಿಕೃತಿ ಮೆರೆದ 15ರ ಬಾಲಕ!

ರಷ್ಯಾದ ಉಫಾ ನಗರದಲ್ಲಿರುವ ವೈದ್ಯಕೀಯ ವಿಶ್ವವಿದ್ಯಾಲಯದ ವಿದೇಶಿ ವಸತಿ ನಿಲಯದ ಮೇಲೆ ಶಸ್ತ್ರಸಜ್ಜಿತ ಅಪ್ರಾಪ್ತನೊಬ್ಬ ದಾಳಿ ನಡೆಸಿದ್ದು, ಈ ದಾಳಿಯಲ್ಲಿ 4 ಭಾರತೀಯ ವಿದ್ಯಾರ್ಥಿಗಳು ಸೇರಿದಂತೆ ಹಲವರು ಗಾಯಗೊಂಡಿರುವ ಘಟನೆ ನಡೆದಿದೆ. ಇನ್ನು, ಈ ದಾಳಿಕೋರ ನಿಷೇಧಿತ ನವ-ನಾಜಿ ಉಗ್ರ ಸಂಘಟನೆಯ ಸಂಪರ್ಕವನ್ನು ಹೊಂದಿದ್ದು, ಘಟನೆಯ ಬಳಿಕ ಗಾಯಗೊಂಡವರ ರಕ್ತದಿಂದ ಅಲ್ಲಿನ ಗೋಡೆಗಳ ಮೇಲೆ ನಾಜಿ ಚಿಹ್ನೆಗಳನ್ನು ಚಿತ್ರಿಸಿ ವಿಕೃತಿ ಮೆರೆದಿದ್ದಾನೆ. ಅಷ್ಟೇ ಅಲ್ಲದೆ, ಬಂಧನದ ವೇಳೆ ತನನ್ನು ತಾನೂ ದೈಹಿಕವಾಗಿ ಹಲ್ಲೆಗೊಳಪಡಿಸಿಕೊಂಡಿದ್ದು, ತಕ್ಷಣವೇ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದ್ದು,ಈತನ ಸ್ಥಿತಿ ಗಂಭೀರವಾಗಿದೆ. ಇನ್ನು, ಈ ದುರ್ಘಟನೆಯನ್ನು ದೃಢಪಡಿಸಿರುವ ಭಾರತೀಯ ರಾಯಭಾರ ಕಚೇರಿ ಗಾಯಗೊಂಡಿರುವ ವಿದ್ಯಾರ್ಥಿಗಳ ಸಹಾಯಕ್ಕೆ ಉಫಾ ನಗರಕ್ಕೆ ತೆರಳುವುದಾಗಿ ತಿಳಿಸಿದೆ.

ವಿಜಯ ಕರ್ನಾಟಕ 8 Feb 2026 12:12 pm

ಪಿಲಾರು: ಉಚಿತ ವೈದ್ಯಕೀಯ ಶಿಬಿರ

ಉಳ್ಳಾಲ: ಪಿಲಾರು ಶಾಲಾ ಮೇಲುಸ್ತುವಾರಿ ಹಾಗೂ ಶಾಲಾಭಿವೃದ್ಧಿ ಸಮಿತಿ, ನಾಗರಿಕ ಹಿತರಕ್ಷಣಾ ವೇದಿಕೆ, ಹಳೇ ವಿದ್ಯಾರ್ಥಿ ಸಂಘ ಪಿಲಾರ್, ಓಂ ಶಕ್ತಿ ಅಯ್ಯಪ್ಪ ಭಕ್ತ ವೃಂದ ಕುಜುಮಗದ್ದೆ ಇವುಗಳ ಆಶ್ರಯದಲ್ಲಿ ಯೆನೆಪೊಯ ವೈದ್ಯಕೀಯ ಕಾಲೇಜು ಆಸ್ಪತ್ರೆಯ ಸಹಯೋಗದಲ್ಲಿ ವೈದ್ಯಕೀಯ ಹಾಗೂ ವಿವಿಧ ತಪಾಸಣೆ ಶಿಬಿರವು ಪಿಲಾರ್ ದ.ಕ. ಜಿ.ಪಂ. ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ರವಿವಾರ ನಡೆಯಿತು. ಡಾ.ಅಶ್ವಿನಿ ಮಾತನಾಡಿ, ವೈದ್ಯಕೀಯ ಶಿಬಿರದ ಮಹತ್ವ, ಆರೋಗ್ಯ ಸಮಸ್ಯೆ ಮತ್ತದರ ಪರಿಹಾರದ ಬಗ್ಗೆ ಮಾಹಿತಿ ನೀಡಿದರು. ಕೌನ್ಸಿಲರ್ ದೀಪಕ್ ಪಿಲಾರ್ ಮಾತನಾಡಿ ಶುಭಹಾರೈಸಿದರು. ಕಾರ್ಯಕ್ರಮ ದಲ್ಲಿ ಕೌನ್ಸಿಲರ್ ಪರ್ವೀನ್ ಸಾಜಿದ್, ಲಕ್ಷ್ಮೀ ಪೂಜಾರಿ, ಪ್ರವೀಣ್, ಶಾಲಾ ಮುಖ್ಯೋಪಾಧ್ಯಾಯಿನಿ ಗ್ರೆಟ್ಟಾ, ಡಾ.ವಿನುತಾ, ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಹನೀಫ್, ಸಾಜಿದ್ ಮತ್ತಿತರರು ಉಪಸ್ಥಿತರಿದ್ದರು ಕಾರ್ಯಕ್ರಮದ ಸಂಯೋಜಕ ರಝಾಕ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.  

ವಾರ್ತಾ ಭಾರತಿ 8 Feb 2026 12:08 pm

ಪ್ರಕೃತಿಯೊಂದಿಗೆ ಲೀನವಾದ ಶರಣರು

ಜಾಗತಿಕ ತಾಪಮಾನ ಏರಿಕೆ, ಸರಾಸರಿ ಗಾಳಿಯನ್ನು ಹೆಚ್ಚಿಸುವ ವಿದ್ಯಮಾನ, ಕಳೆದ ಒಂದರಿಂದ ಎರಡು ಶತಮಾನಗಳಲ್ಲಿ ಏರಿಕೆಯಾಗಿದೆ ಎಂದು ವಿಜ್ಞಾನಿಗಳ ಅಭಿಮತ. ಭೂಮಿಯ ಹವಾಮಾನವನ್ನು ಅವರು ಇಪ್ಪತ್ತನೇ ಶತಮಾನದ ಮಧ್ಯಭಾಗದಿಂದ ವಿವಿಧ ಹವಾಮಾನ ವಿದ್ಯಮಾನಗಳ (ಉದಾಹರಣೆಗೆ ತಾಪಮಾನ, ಮಳೆ ಮತ್ತು ಬಿರುಗಾಳಿಗಳು) ಮತ್ತು ಸಂಬಂಧಿತ ಪ್ರಭಾವಗಳಿಂದ ವಿವರವಾದ ಅವಲೋಕನಗಳನ್ನು ಸಂಗ್ರಹಿಸಿದ್ದಾರೆ. ‘ಸಿಕಾ’ ಕಾವ್ಯನಾಮದ ಡಾ. ಕಾವ್ಯಶ್ರೀ ಮಹಾಗಾಂವಕರ ಕಲ್ಯಾಣ ಕರ್ನಾಟಕದ ಗಡಿನಾಡು ಬೀದರಿನ ಸಾಂಸ್ಕೃತಿಕ ಹಾಗೂ ಸಾಹಿತ್ಯಕ ಪರಿವಾರದ ಮಗಳು. ಸರಕಾರಿ ಪಾಲಿಟೆಕ್ನಿಕ್ ಕಾಲೇಜ್ ಬೀದರಿನಲ್ಲಿ ಡಿಪ್ಲೊಮ ಇನ್ ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್. ಮೈಸೂರು ಮುಕ್ತ ವಿಶ್ವವಿದ್ಯಾಲಯದಿಂದ ಕನ್ನಡ ಸ್ನಾತಕೋತ್ತರ. ಕಲಬುರಗಿಯ ‘ಶರಣಬಸವ ವಿಶ್ವವಿದ್ಯಾಲಯ’ ದಿಂದ ಪಿಎಚ್.ಡಿ ಪದವಿ ಪಡೆದಿದ್ದಾರೆ. ಪ್ರೇಮ ಕಾವ್ಯ, ಒಳ್ಕಲ್ಲ ಒಡಲು ಇವರ ಪ್ರಕಟಿತ ಕಾದಂಬರಿ. ಬೆಳಕಿನೆಡೆಗೆ, ಪ್ರಳಯದಲ್ಲೊಂದು ಪ್ರಣತಿ, ಆಮೆ ಮೇಲೊಂದಾನೆ ಇವರ ಪ್ರಕಟಿತ ಕಥಾ ಸಂಕಲನ. 20ಕ್ಕೂ ಅಧಿಕ ಕೃತಿಗಳನ್ನು ಇವರು ಪ್ರಕಟಿಸಿದ್ದಾರೆ. ಶರಣ ಸಾಹಿತ್ಯಕ್ಕೂ ಪರಿಸರಕ್ಕೂ ಇರುವ ಅವಿನಾಭಾವ ನಂಟನ್ನು ಇಲ್ಲಿ ದಾಖಲಿಸಿದ್ದಾರೆ. ಆಧುನಿಕ ಜೀವನ ಶೈಲಿಯನ್ನು ಮೆಲುಕು ಹಾಕುತ್ತ, ಅಂತರಂಗಕ್ಕೆ ಪ್ರಶ್ನೆಗಳ ರವಾನಿಸುತ್ತ ಸಾಗಿದರೆ, ಮನುಷ್ಯ ಮತ್ತು ಪ್ರಕೃತಿ ಎರಡು ಭಿನ್ನ ಆಯಾಮಗಳಾಗಿ ಕಾಣುತ್ತವೆ. ಇದು ಅವಾಸ್ತವ ಎನಿಸಬಹುದು, ಆದರೂ ಪ್ರಸ್ತುತ ಬದುಕಿನ ವಾಸ್ತವ ನೆಲೆಯಾಗಿದೆ. ವಿಜ್ಞಾನ, ತಂತ್ರಜ್ಞಾನಗಳಿಂದ ಅತ್ಯಂತ ಮುಂದುವರಿದ ಮಾನವನ ಅಭಿವೃದ್ಧಿಗೊಂಡ ಜೀವನದ ವ್ಯಂಗ್ಯವೂ ಹೌದು. ಪ್ರಕೃತಿ ಒಳಗೊಂಡ ಅನೇಕ ತತ್ವಗಳಿಂದಲೇ ಮನುಷ್ಯನ ನಿರ್ಮಾಣವಾಗಿರುವ ಸತ್ಯವು ಮರೆವಿನಂಚಿಗೆ ಹೋದ ಭ್ರಮೆಗೊಳಗಾಗಿದೆ. ಆ ಮರೆವು ಭವಿಷ್ಯದಲ್ಲಿ ಇಡೀ ಮನುಕುಲವನ್ನೇ ಅಳಿವಿನಂಚಿಗೆ ತಳ್ಳುವ ಅಪಾಯದಲ್ಲಿದೆ. ಪ್ರಕೃತಿಯೊಂದಿಗಿನ ಸಂಬಂಧವನ್ನು ಮತ್ತೆ ಮತ್ತೆ ಜ್ಞಾಪಿಸಿಕೊಳ್ಳುವ ತುರ್ತು ಇಂದಿನದಾಗಿದೆ. ಪ್ರಸ್ತುತದಲ್ಲಿ ಬಳಸುತ್ತಿರುವ ವೈಜ್ಞಾನಿಕ, ತಾಂತ್ರಿಕ ಉಪಕರಣಗಳು ಮಾನವರನ್ನು ಆವರಿಸಿ ನಿಸರ್ಗ ದೂರಾಗುತ್ತಿರುವ ಅಪಾಯಗಳನ್ನು ಗ್ರಹಿಸುವುದು ಸೂಕ್ತ. ಮನುಷ್ಯ ಮತ್ತು ಪ್ರಕೃತಿ ಒಂದೇ ಎನ್ನುವ ಭಾವವನ್ನು ಪರಿಭಾವಿಸಿಕೊಳ್ಳ ಬೇಕಾದ ಸಮಯವಿದು. ಶರಣರಂತೆ ಮನಸ್ಸು ಆರ್ದ್ರಗೊಳ್ಳದ ಹೊರತು ಪ್ರಕೃತಿ ತತ್ವಗಳು ಜೀರ್ಣವಾಗುವುದು ಕಷ್ಟಸಾಧ್ಯ. ‘ಒಲೆ ಹತ್ತಿ ಉರಿದಡೆ ನಿಲಬಹುದಲ್ಲದೆ ಧರೆ ಹತ್ತಿ ಉರಿದಡೆ ನಿಲಲುಬಾರದು’ ಬಸವಣ್ಣನ ವಚನದ ಸಾಲು ಇಂದಿನ ಭೂಮಿಯ ತಾಪಮಾನದ ಹಿನ್ನೆಲೆಯಲ್ಲಿ ಅರುಹಿದಂತಿದೆ. ಇಂದು ಪ್ರಚಲಿತವಾಗಿರುವ ಪರಿಸರ ಹಾಗೂ ಪ್ರಜ್ಞೆ ಶಬ್ದಗಳು, ವೈಜ್ಞಾನಿಕವಾದ ಹೊಸ ಅನ್ವೇಷಣೆಯಿಂದ ಹುಟ್ಟಿಕೊಂಡವು. ವಿಶ್ವವ್ಯಾಪಿಯಾಗಿ ಹೇಳಲಾಗುವ ‘ಗ್ಲೋಬಲ್ ವಾರ್ಮಿಂಗ್’ ಅನ್ನು ವಿಜ್ಞಾನಿಗಳು ಸಂಶೋಧನೆಯ ಮೂಲಕ ಕಂಡುಕೊಂಡ ಆವಿಷ್ಕಾರ. ಅದುವೇ ‘ಜಾಗತಿಕ ತಾಪಮಾನ’. ಇಂದಿನ ‘ಪರಿಸರ ವಿಜ್ಞಾನ’ ಮತ್ತು ‘ಪರಿಸರ ಪ್ರಜ್ಞೆ’, ಅಂದು ಹನ್ನೆರಡನೇ ಶತಮಾನದಲ್ಲಿ ಪರಿಸರವೇ ಪ್ರಕೃತಿಯಾಗಿ, ಶರಣರ ಬದುಕನ್ನು ವ್ಯಾಪಿಸಿಕೊಂಡಿತ್ತು. ವಿಜ್ಞಾನಲೋಕದಲ್ಲಿ ಮತ್ತೆ ಮತ್ತೆ ನಡೆಯುತ್ತಿರುವ ಪ್ರಯೋಗಗಳ ಫಲಿತಾಂಶ ಇಂದು ನಮ್ಮ ಮುಂದಿದೆ. ಭೂಮಿಯ ವಾತಾವರಣ ಮತ್ತು ಸಸ್ಯ ಜೀವನದ ಮೇಲೆ ಇಂಗಾಲದ ಡೈಆಕ್ಸೆ ಡ್‌ನ, ಹೆಚ್ಚುತ್ತಿರುವ ಸಾಂದ್ರತೆಯ ಪರಿಣಾಮಗಳನ್ನು ಅಧ್ಯಯನ ಮಾಡಲಾಗಿದೆ. ಭೂಮಿಯ ಹವಾಮಾನವನ್ನು ಮಾರ್ಪಡಿಸುವಲ್ಲಿ ಹಸಿರುಮನೆ ಅನಿಲಗಳ ಪಾತ್ರದ ಮಹತ್ವವನ್ನು ಜನಜನಿತಗೊಳಿಸಲಾಯಿತು. ಜಾಗತಿಕ ತಾಪಮಾನ ಏರಿಕೆ, ಸರಾಸರಿ ಗಾಳಿಯನ್ನು ಹೆಚ್ಚಿಸುವ ವಿದ್ಯಮಾನ, ಕಳೆದ ಒಂದರಿಂದ ಎರಡು ಶತಮಾನಗಳಲ್ಲಿ ಏರಿಕೆಯಾಗಿದೆ ಎಂದು ವಿಜ್ಞಾನಿಗಳ ಅಭಿಮತ. ಭೂಮಿಯ ಹವಾಮಾನವನ್ನು ಅವರು ಇಪ್ಪತ್ತನೇ ಶತಮಾನದ ಮಧ್ಯಭಾಗದಿಂದ ವಿವಿಧ ಹವಾಮಾನ ವಿದ್ಯಮಾನಗಳ (ಉದಾಹರಣೆಗೆ ತಾಪಮಾನ, ಮಳೆ ಮತ್ತು ಬಿರುಗಾಳಿಗಳು) ಮತ್ತು ಸಂಬಂಧಿತ ಪ್ರಭಾವಗಳಿಂದ ವಿವರವಾದ ಅವಲೋಕನಗಳನ್ನು ಸಂಗ್ರಹಿಸಿದ್ದಾರೆ. ಹವಾಮಾನ (ಉದಾಹರಣೆಗೆ ಸಾಗರದ ಪ್ರವಾಹಗಳು ಮತ್ತು ವಾತಾವರಣದ ರಾಸಾಯನಿಕ ಸಂಯೋಜನೆ) ಈ ಡೇಟಾ ಭೂವೈಜ್ಞಾನಿಕ ಸಮಯದ ಆರಂಭದಿಂದಲೂ ಭೂಮಿಯ ಹವಾಮಾನವು ಬಹುತೇಕ ಎಲ್ಲಾ ಕಾಲಾವಧಿಯಲ್ಲಿ ಬದಲಾಗಿದೆ ಎಂದು ಸೂಚಿಸುತ್ತದೆ. ಹಾಗೆಯೇ ಕನಿಷ್ಠ ಕೈಗಾರಿಕಾ ಕ್ರಾಂತಿಯ ಆರಂಭದಿಂದಲೂ ಮಾನವ ಚಟುವಟಿಕೆಗಳು ಇಂದಿನ ವೇಗ ಮತ್ತು ವ್ಯಾಪ್ತಿಯ ಮೇಲೆ ಬೆಳೆಯುತ್ತಿರುವ ಪ್ರಭಾವವನ್ನು ಹೊಂದಿವೆ. ಅದರ ಪರಿಣಾಮವಾಗಿ ಈ ಹವಾಮಾನ ಬದಲಾವಣೆಯನ್ನು ಎದುರಿಸಬೇಕಾಗಿದೆ. ಜಾಗತಿಕ ತಾಪಮಾನ ನಿಯಂತ್ರಿಸಲು ಮೂಡಿಸುವ ಅರಿವು ‘ಪರಿಸರ ಪ್ರಜ್ಞೆ’. ಇನ್ನೊಂದು ಮಾತಿನಲ್ಲಿ ಹೇಳುವುದಾದರೆ ಪ್ರಕೃತಿ ಸಂರಕ್ಷಣೆಯೇ ಮನುಷ್ಯನಿಗಿರಬೇಕಾದ ಪರಿಸರ ಪ್ರಜ್ಞೆ. ಅಂದರೆ ಮನುಕುಲದ ಸುತ್ತಲೂ ಆವರಿಸಿರುವ ಪ್ರಕೃತಿ. ನಿಸರ್ಗದಲ್ಲಿರುವ ಭೂಮಿ, ಆಕಾಶ, ಅಗ್ನಿ, ವಾಯು, ಜಲ ಎಲ್ಲವೂ ಕೂಡಿದ ಒಟ್ಟು ಅಂಶವೇ ಪ್ರಕೃತಿ. ವಚನ ಸಾಹಿತ್ಯದಲ್ಲಿ ಪರಿಸರ ಪ್ರಜ್ಞೆಯನ್ನು ಪ್ರಕೃತಿ ಶಬ್ದದ ಹಿನ್ನೆಲೆಯಲ್ಲಿ ಗ್ರಹಿಸುವ ಪ್ರಯತ್ನವಿದು. ಮನುಷ್ಯ ಮತ್ತು ಪ್ರಕೃತಿಯ ನಡುವಿನ ಸಂಬಂಧವಿರುವ ಅನೇಕ ವಚನಗಳು ಲಭಿಸುತ್ತವೆ. ಅವುಗಳ ವಿಭಿನ್ನ ಆಯಾಮಗಳು ಕಾಣಸಿಗುತ್ತವೆ. ಶರಣರ ಚಿಂತನಾ ಕ್ರಮದಲ್ಲಿ ‘ಪ್ರಜ್ಞೆ’ ಎನ್ನುವುದು ಮನುಷ್ಯನಲ್ಲಿ ಆಂತರಿಕವಾಗಿ ನಡೆಯುವ ಕ್ರಿಯೆ. ಒಳಗಿನ ಮನೋಲೋಕದಲ್ಲಿ ಹೌದು ಎನಿಸಿದರೆ ಮಾತ್ರ ‘ಅರಿವು’ ಮೂಡಿ, ಪ್ರಜ್ಞೆ ಜಾಗೃತವಾಗುತ್ತದೆ. ಆದ್ದರಿಂದ ಪ್ರಜ್ಞೆ ಎನ್ನುವುದು ಅಂತರಂಗದಲ್ಲಿ ನಡೆದು ನೆಲೆಗೊಳ್ಳಬೇಕಾದ ಪ್ರಕ್ರಿಯೆ. ‘ಪರಿಸರ’ ಮನುಷ್ಯನ ಸುತ್ತಮುತ್ತಲಿನ ಹೊರಲೋಕ. ಬಾಹ್ಯವಾಗಿ ಕಂಡು ಬರುವಂತಹವು. ಒಂದು ಅಂತರಂಗದ ಅರಿವು ಆದರೆ, ಇನ್ನೊಂದು ಅರಿವಿನ ಮೇಲೆ ಪ್ರಭಾವ ಬೀರುವಂತಹದ್ದು. ಅವು ನಿಸರ್ಗದ ಪಂಚತತ್ವಗಳಾದ ಭೂಮಿ, ಆಕಾಶ, ಅಗ್ನಿ, ವಾಯು, ಜಲ. ಒಟ್ಟಾರೆ ಹೇಳುವುದಾದರೆ ಸೃಷ್ಟಿ, ನಿಸರ್ಗ, ಪ್ರಕೃತಿ ಎಂದು ಭಿನ್ನಭಿನ್ನವಾಗಿ ಕರೆಯಬಹುದು.   ಶರಣರು ತಮ್ಮ ವಚನಗಳಲ್ಲಿ ಪ್ರಮುಖವಾಗಿ ಹೇಳಿದ್ದೇನೆಂದರೆ, ಮೊದಲು ಮನಸ್ಸು ಶುದ್ಧ ಮಾಡಿಕೊಂಡು, ನಂತರ ಪರಿಸರ ಸ್ವಚ್ಛವಾಗಿಡಬೇಕು. ಬಸವಣ್ಣ ಸರಳವಾದ ಏಳು ಬೇಡಗಳನ್ನು ಉಲ್ಲೇಖಿಸುತ್ತ ಮಹತ್ವದ ಸಂದೇಶವನ್ನು ರವಾನಿಸಿರುವುದು ವಿಶೇಷ. ಈ ವಚನದಲ್ಲಿ ಮನುಷ್ಯನ ಆಂತರ್ಯದ ಶುಚಿತ್ವ ಬಾಹ್ಯ ಶುಚಿತ್ವಕ್ಕೆ ದಾರಿಯಾಗುವ ಪರಿಯ ಸೂಕ್ಷ್ಮತೆ ಗಮನೀಯ. ‘ಕಲಬೇಡ ಕೊಲಬೇಡ ಹುಸಿಯ ನುಡಿಯಲು ಬೇಡ ಮುನಿಯಬೇಡ ಅನ್ಯರಿಗೆ ಅಸಹ್ಯಪಡಬೇಡ ತನ್ನ ಬಣ್ಣಿಸಬೇಡ ಇದಿರ ಹಳಿಯಲು ಬೇಡ ಇದೇ ಅಂತರಂಗ ಶುದ್ಧಿ, ಇದೇ ಬಹಿರಂಗ ಶುದ್ಧಿ, ಇದೇ ನಮ್ಮ ಕೂಡಲಸಂಗಮದೇವನೊಲಿಸುವ ಪರಿ’. ಇದೇ ಮಾತನ್ನು ಕೃಷಿ ಕಾಯಕದ ಮುದ್ದಣನ ವಚನದಲ್ಲೂ ಕಾಣುತ್ತೇವೆ. ‘ಅಂಗವೇ ಭೂಮಿಯಾಗಿ ಲಿಂಗವೇ ಬೆಳೆಯಾಗಿ ವಿಶ್ವಾಸವೆಂಬ ಬತ್ತ ಬಲಿದು ಉಂಡು ಸುಖಿಯಾಗಿರಬೇಕೆಂದ ಕಾಮಭೀಮ ಜೀವಧನದೊಡೆಯ’ ತನ್ನ ವ್ಯವಸಾಯದ ಕೆಲಸದಲ್ಲಿ ಭೂಮಿಯನ್ನು ಹದಗೊಳಿಸಿದಂತೆ, ಮೊದಲು ದೇಹವನ್ನೂ ಹದಗೊಳಿಸಬೇಕೆನ್ನುವ ಮಾತಿದೆ. ಅಂಗ ಮತ್ತು ಲಿಂಗದ ಸಾಮರಸ್ಯವಿದ್ದರೆ, ಫಲ ಸಿಗುವುದರೊಂದಿಗೆ, ವಿಶ್ವಾಸ ಮೂಡಿ, ಸುಖ ಲಭಿಸುತ್ತದೆನ್ನುವ ವಿಚಾರ ಮುದ್ದಣನದು. ಹೀಗೆ ಮನಸ್ಸು ಶುಭ್ರವಾದ ಬಳಿಕ ಬಾಹ್ಯದಲ್ಲಿರುವ ಭೂಮಿ, ಆಕಾಶ, ಅಗ್ನಿ, ವಾಯು, ಜಲ ಪಂಚಭೂತಗಳನ್ನು ಶುದ್ಧವಾಗಿಡಲು ಮುಂದಾಗಬೇಕಾಗುತ್ತದೆ. ಇದನ್ನು ಜನಪದೀಯರು ತ್ರಿಪದಿಯಲ್ಲಿ ಋಣಾತ್ಮಕವಾಗಿ ಹೇಳಿರುವುದನ್ನು ಗಮನಿಸಬಹುದು. ‘ಹೊತ್ತಾರೆ ಎದ್ದು ಯಾರ್‌ಯಾರ ನೆನೆಯಲಿ ಎಳ್ಳು ಜೀರಿಗೆ ಬೆಳೆಯುವ ಭೂಮ್ತಾಯ ಎದ್ದೊಂದು ಗಳಿಗೆ ನೆನದೇನ’ ಈ ಭೂಮಿಯನ್ನು ತಾಯಿಯೆಂದು ಆರಾಧಿಸುವ ಜನಪದೀಯರಲ್ಲಿರುವುದು ಪ್ರಕೃತಿ ಭಕ್ತಿ. ಇದನ್ನೇ ಶರಣ ಚೆನ್ನಬಸವಣ್ಣ ಹೇಳುವ ರೀತಿ ಹೀಗಿದೆ, ‘ನಾನು ಮೆಟ್ಟುವ ಭೂಮಿಯ ಭಕ್ತನ ಮಾಡಿದಲ್ಲದೆ ಮೆಟ್ಟೆನಯ್ಯಾ ನಾ ನೋಡುತಿಹ ಆಕಾಶದ ಚಂದ್ರಸೂರ್ಯರ ಭಕ್ತರ ಮಾಡಿದಲ್ಲದೆ ನಾ ನೋಡೆನಯ್ಯಾ ಜಲವ ಭಕ್ತನ ಮಾಡಿದಲ್ಲದೆ ನಾನು ಬಳಸೆನಯ್ಯಾ ನಾನು ಕೊಂಬ ಹದಿನೆಂಟು ಧಾನ್ಯವ ಭಕ್ತನ ಮಾಡಿದಲ್ಲದೆ ಕೊಳ್ಳೆನು ಕೂಡಲಚೆನ್ನಸಂಗಾ ನಿಮ್ಮಾಣೆ’ ಈ ಪ್ರಕೃತಿ ಮನುಷ್ಯನಿಗೆ ‘ಕೊಡುವ ಕೈ’ ಇದ್ದಂತೆ. ಮನುಷ್ಯ ತನ್ನ ಜೀವಿತಾವಧಿಯಲ್ಲಿ ಜೀವನ ಸಾಗಿಸಲು ಬೇಕಾದುದೆಲ್ಲವನ್ನೂ ಪ್ರಕೃತಿಯಿಂದಲೇ ಪಡೆದುಕೊಳ್ಳುತ್ತಾನೆ. ಮೇಲೆ ಉಲ್ಲೇಖಿಸಿದ ಚೆನ್ನಬಸವಣ್ಣನ ವಚನದಲ್ಲೂ ಅದೇ ಆಶಯವಿದೆ. ಭೂಮಿ ನೀಡಿ ನೀಡಿ ಭಕ್ತನಾಗಿರುವ ಪರಿಯನ್ನು ಕಾಣುತ್ತೇವೆ. ಅದರಂತೆಯೇ ನಾವೂ ಭಕ್ತಿ ಭಾವನೆಯಿಂದ ಭೂಮಿಯನ್ನು ಪೂಜಿಸಬೇಕು, ಆರಾಧಿಸಬೇಕು ಎನ್ನುವ ಭಾವವಿದೆ. ಆಕಾಶದಲ್ಲಿರುವ ಸೂರ್ಯ ಚಂದ್ರರು, ಬೇಸಾಯಕ್ಕೆ ಬಳಸುವ ನೀರು, ಬೆಳೆದ ಬೆಳೆ ಕೊಳ್ಳುವ ಬಗೆ, ಎಲ್ಲವನ್ನೂ ಭಕ್ತಿಯಿಂದ ಗೌರವಿಸುವ ಗುಣ ವೇದ್ಯವಾಗುತ್ತದೆ. ಭಕ್ತಿಭಾವ, ಆರಾಧನೆ ಎಂದರೆ ಸಂರಕ್ಷಣೆ ಎಂದೇ ಅರ್ಥ. ಇದೇ ಅಂಶವನ್ನು ಅಕ್ಕನ ವಚನದಲ್ಲಿ ವೈಯಕ್ತಿಕ ನೆಲೆಯ ಆಶಯದೊಂದಿಗೆ ಗ್ರಹಿಸಬಹುದು. ‘ಒಡಲ ಕಳವಳಕ್ಕಾಗಿ ಅಡವಿಯ ಹೊಕ್ಕೆನು ಗಿಡು ಗಿಡುದಪ್ಪದೆ ಬೇಡಿದೆನೆನ್ನಂಗಕ್ಕೆಂದು ಅವು ನೀಡಿದವು ತಮ್ಮ ಲಿಂಗಕ್ಕೆಂದು ಆನು ಬೇಡಿ ಭವಿಯಾದೆನು ಅವು ನೀಡಿ ಭಕ್ತರಾದವು ಇನ್ನು ಬೇಡಿದೆನಾದರೆ ಚೆನ್ನಮಲ್ಲಿಕಾರ್ಜುನಯ್ಯಾ ನಿಮ್ಮಾಣೆ’   ಮನುಷ್ಯನ ದೇಹಕ್ಕೆ ಜೀವಂತವಿರುವ ತನಕ ಹಸಿವು, ನೀರಡಿಕೆ ತಪ್ಪುವುದಿಲ್ಲ. ಹಸಿವಿನ ತಾಪ, ದಾಹ ತಾಳಿಕೊಳ್ಳಲು ಅಸಾಧ್ಯವೆನಿಸುತ್ತದೆ. ಆಗ ಗಿಡ ಮರಗಳನ್ನು ಬೇಡಿ, ಅವುಗಳ ಫಲಗಳ ಪಡೆದು ಹೊಟ್ಟೆ ತುಂಬಿಸಿಕೊಳ್ಳುವ ಪ್ರಮೇಯ ಮನುಷ್ಯನದು. ಅವು ಭಕ್ತಿಭಾವದಿಂದ ಲಿಂಗಕ್ಕೆಂದು ನೀಡಿ ಭಕ್ತರಾದರೆ, ತಾನು ಬೇಡಿ ಭವಿಯಾದೆನು ಎನಿಸಿದಾಗ ಆಣೆ ಮಾಡಿ ಬೇಡುವುದಿಲ್ಲವೆಂದು ಅಕ್ಕ ನಿರ್ಧರಿಸುತ್ತಾಳೆ. ಪ್ರಕೃತಿಯಿಂದ ಪಡೆದ ನಾವು ಭವಿ ಎನ್ನುವ ಭಾವನೆ ಅಕ್ಕನಲ್ಲಿದ್ದರೆ, ಜೇಡರ ದಾಸಿಮಯ್ಯ ಸಕಲವೂ ಪ್ರಕೃತಿಗೇ ಅರ್ಪಿತ ಎನ್ನುವ ಭಾವ ತಳೆಯುತ್ತ ಹೀಗೆ ಹೇಳುತ್ತಾನೆ, ‘ಇಳೆ ನಿಮ್ಮ ದಾನ ಬೆಳೆ ನಿಮ್ಮ ದಾನ ಸುಳಿದು ಬೀಸುವ ಗಾಳಿ ಅದು ನಿಮ್ಮ ದಾನ ನಿಮ್ಮ ದಾನವನುಂಡು ಅನ್ಯರ ಹೊಗಳುವ ಕುನ್ನಿಗಳನೇನೆಂಬೆ ರಾಮನಾಥಾ’ ಅಕ್ಕ ತನ್ನಂತೆಯೇ ಈ ಪ್ರಕೃತಿಯೂ ಜೀವಾತ್ಮವಿರುವ, ಜೀವಸತ್ವ ಹೊಂದಿದೆ ಎನ್ನುವ ಕಳಕಳಿಯ ಭಾವ ಹೊಂದಿದವಳು. ಅದಕ್ಕಾಗಿ ತನ್ನ ಚೆನ್ನಮಲ್ಲಿಕಾರ್ಜುನನ ಹುಡುಕಾಟದಲ್ಲಿ ತನ್ನ ಸುತ್ತಮುತ್ತಲು ಆವರಿಸಿರುವ ಇಡೀ ಪ್ರಕೃತಿಯ ಮೊರೆ ಹೋಗುತ್ತಾಳೆ. ವನದಲ್ಲಿರುವ ಪಶು, ಪಕ್ಷಿ, ಗಿಡ, ಮರಗಳನ್ನು ಕರುಳು ಬಗೆದು ನಿವೇದಿಸಿಕೊಳ್ಳುತ್ತಾಳೆ. ಇದು ಮೇಲ್ನೋಟಕ್ಕೆ ಬಾಹ್ಯ ಹುಡುಕಾಟವೆನಿಸಿದರೂ, ಅದರೊಳಗಿನ ಆಂತರಿಕ ಹುಡುಕಾಟವನ್ನೂ ಗಮನಿಸಬಹುದು. ‘ಅಳಿಸಂಕುಲವೆ ಮಾಮರವೆ ಬೆಳುದಿಂಗಳೆ ಕೋಗಿಲೆಯೆ ನಿಮ್ಮನೆಲ್ಲರನೂ ಒಂದ ಬೇಡುವೆನು ಎನ್ನೊಡೆಯ ಚೆನ್ನಮಲ್ಲಿಕಾರ್ಜುನದೇವ ಕಂಡಡೆ ಕರೆದು ತೋರಿರೆ’ ಮಧುವಿಗಾಗಿ ಹಾರುತ್ತ, ಝೇಂಕರಿಸುತ್ತ ಸುತ್ತುತ್ತಿರುವ ದುಂಬಿಗಳನ್ನು, ಮಾವಿನ ಮರವನ್ನು, ಜೀವಜಗತ್ತಿಗೆ ಬೆಳಕು ಕೊಡುವ ಚಂದಿರನನ್ನು, ಮಧುರವಾಗಿ ಹಾಡುವ ಕೋಗಿಲೆಯನ್ನು ಬೇಡುತ್ತಾಳೆ. ಇದೇ ಭಾವವಿರುವ ಇನ್ನೊಂದು ವಚನದಲ್ಲಿ ‘ನೀವು ಕಾಣಿರೆ?’ ಎಂದು ಪ್ರತಿ ಸಾಲಿನಲ್ಲೂ ಪುನರುಕ್ತಿಯಾಗಿ ಕೇಳುತ್ತಾಳೆ. ಅಲ್ಲಿಯ ಕಾವ್ಯ ಸೌಂದರ್ಯವನ್ನು ಕೆಳಗಿನ ವಚನದಲ್ಲಿ ಕಾಣಬಹುದು. ಅಂತ್ಯದಲ್ಲಿ ‘ನೀವು ಹೇಳಿರೇ’ ಎಂದು ಆಗ್ರಹಿಸುವ ಧಾಟಿ ಅಪ್ಯಾಯಮಾನ. ‘ಚಿಲಿಮಿಲಿಯೆಂದೋದುವ ಗಿಳಿಗಳಿರಾ, ನೀವು ಕಾಣಿರೇ, ನೀವು ಕಾಣಿರೇ? ಸರವೆತ್ತಿ ಪಾಡುವ ಕೋಗಿಲೆಗಳಿರಾ ನೀವು ಕಾಣಿರೆ, ನೀವು ಕಾಣಿರೇ? ಎರಗಿ ಬಂದಾಡುವ ತುಂಬಿಗಳಿರಾ, ನೀವು ಕಾಣಿರೆ, ನೀವು ಕಾಣಿರೇ? ಕೊಳನ ತಡಿಯೊಳಗಾಡುವ ಹಂಸಗಳಿರಾ, ನೀವು ಕಾಣಿರೆ, ನೀವು ಕಾಣಿರೇ? ಗಿರಿಗಹ್ವರದೊಳಗಾಡುವ ನವಿಲುಗಳಿರಾ, ನೀವು ಕಾಣಿರೆ, ನೀವು ಕಾಣಿರೇ? ಚೆನ್ನಮಲ್ಲಿಕಾರ್ಜುನ ಎಲ್ಲಿದ್ದಿಹನೆಂದು ನೀವು ಹೇಳಿರೇ’ ಅಕ್ಕ ತನ್ನ ವಚನಗಳಲ್ಲಿ ಪ್ರತಿಮೆ ಮತ್ತು ರೂಪಕಗಳನ್ನಾಗಿ ಪ್ರಕೃತಿಯಲ್ಲಿರುವ ಪಕ್ಷಿ ಮತ್ತು ಪ್ರಾಣಿಗಳನ್ನು ಬಳಸುತ್ತಾಳೆ. ವಾಸ್ತವದ ನೆಲೆಯಲ್ಲಿ ಅವುಗಳಿಗೆ ಸ್ಪಂದಿಸುವ ಶಕ್ತಿ ಇಲ್ಲವೆಂದು ಗೊತ್ತಿದ್ದರೂ ತನ್ನ ಸಂಗಾತಿಗಳಾಗಿರಲಿ ಎಂದು ಬಯಸುತ್ತಾಳೆ. ನಮ್ಮ ಮನದ ಇಂಗಿತ ಮತ್ತು ದುಗುಡವನ್ನು ಮನುಷ್ಯರೊಂದಿಗೆ ಹೇಳಿಕೊಂಡರೆ ಸೂಕ್ತ ಸ್ಪಂದನೆ ಸಿಗದೆ ದುರುಪಯೋಗವಾಗುವ ಅಪಾಯವೇ ಹೆಚ್ಚು. ಆದ್ದರಿಂದ ಮನುಷ್ಯರಿಗಿಂತ ಪ್ರಾಣಿ, ಪಕ್ಷಿಗಳು ವಿಶ್ವಾಸಾರ್ಹವು, ಹಾಗೆಯೇ ಪ್ರಕೃತಿ ಹೆಚ್ಚು ಅಪ್ಯಾಯಮಾನವೆಂದು ಭಾವಿಸುತ್ತಾಳೆ. ಆಕೆಯ ಒಂಟಿ ಪಯಣಕ್ಕೆ ಯಾವುದೇ ರೀತಿಯ ಅಪಾಯ ಪ್ರಕೃತಿಯಿಂದ ಆಗುವುದಿಲ್ಲ ಎಂಬ ಅಕ್ಕನ ವಿಶ್ವಾಸದಲ್ಲಿ ಭಾವಸ್ಪಂದನೆಯ ತೀವ್ರತೆಯೂ ಇದೆ. ಅಕ್ಕನಿಗೆ ಸದಾ ಚೆನ್ನಮಲ್ಲಿಕಾರ್ಜುನನನ್ನು ಪಡೆಯುವ ಮಹತ್ವಾಕಾಂಕ್ಷೆ. ತನ್ನ ಜೀವಾತ್ಮವನ್ನು ಪರಮಾತ್ಮನಲ್ಲಿ ಕಾಣುವ ಬಯಕೆಯ ಕನಸು ಕಂಡವಳು. ಅದಕ್ಕಾಗಿ ಒಬ್ಬಂಟಿಯಾಗಿ ಪ್ರಕೃತಿಯೊಂದಿಗೆ ಪಯಣ ಬೆಳೆಸಿರುವುದು ವಿಶೇಷ. ಅವಳಲ್ಲಿ ಹುಡುಕಾಟದ ತೀವ್ರತೆ, ದೃಢ ಸಂಕಲ್ಪ, ಆತ್ಮ ವಿಶ್ವಾಸ ಎಲ್ಲವೂ ಇದೆ. ಆ ಕಾರಣಕ್ಕಾಗಿಯೇ ತಾನಂದುಕೊಂಡ ಗಮ್ಯವನ್ನು ತಲುಪುತ್ತಾಳೆ. ವ್ಯಕ್ತಿ ಅತ್ಯಂತ ಸೂಕ್ಷ್ಮಜೀವಿ, ಭಾವಜೀವಿ, ಪ್ರಕೃತಿ ಪ್ರೇಮಿಯಾಗಿ, ಅಂತಿಮವಾಗಿ ವಾಸ್ತವವಾದಿಯಾದಲ್ಲಿ ಅದ್ಭುತ ಪ್ರತಿಮೆಗಳನ್ನು ಬಳಸಬಹುದು. ಹಾಗೆ ಗಮನಿಸುವಾಗ ಅಲ್ಲಮನ ಈ ವಚನ ಅರ್ಥಪೂರ್ಣ. ‘ಎತ್ತಣ ಮಾಮರ ಎತ್ತಣ ಕೋಗಿಲೆ ಎತ್ತಣಿಂದೆತ್ತ ಸಂಬಂಧವಯ್ಯಾ? ಬೆಟ್ಟದ ಮೇಲಣ ನೆಲ್ಲಿಯ ಕಾಯಿ ಸಮುದ್ರದೊಳಗಣ ಉಪ್ಪು ಎತ್ತಣಿಂದೆತ್ತ ಸಂಬಂಧವಯ್ಯಾ? ಗುಹೇಶ್ವರಲಿಂಗಕೆಯೂ ಎಮಗೂ ಎತ್ತಣಿಂದೆತ್ತ ಸಂಬಂಧವಯ್ಯಾ?’ ಪ್ರಕೃತಿಯಲ್ಲಿ ಮಾವು ಮತ್ತು ಕೋಗಿಲೆ, ನೆಲ್ಲಿಕಾಯಿ ಮತ್ತು ಉಪ್ಪು, ಆತ್ಮ ಮತ್ತು ಪರಮಾತ್ಮ, ಇವುಗಳ ಸಂಬಂಧವನ್ನು ಅಲ್ಲಮನು ಬಹಳ ಕೌತುಕದಿಂದ ಕಾಣುತ್ತಾನೆ. ವಸಂತ ಋತುವಿನಲ್ಲಿ ಬರುವ ಫಲ ಮಾವಿಗೂ, ಕೋಗಿಲೆಯ ಸಂತಸದ ಕುಹೂ ಕುಹೂ ಕೂಗಿಗೂ ಇರುವ ಅವಿನಾಭಾವ ಸಖ್ಯವನ್ನು ಮನಗಾಣಿಸುತ್ತಾನೆ. ಹಾಗೆಯೇ ಎಲ್ಲೋ ಗುಡ್ಡ, ಬೆಟ್ಟದಲ್ಲಿ ಬೆಳೆಯುವ ನೆಲ್ಲಿಕಾಯಿಗೂ, ಸಮುದ್ರದ ಜಲದಲ್ಲಿ ಸಂಸ್ಕರಣೆಗೂ ಮುನ್ನ ಅಡಗಿರುವ ಉಪ್ಪಿಗೂ ಇರುವ ರುಚಿಯ ನಂಟನ್ನು ಆಶ್ಚರ್ಯದಿಂದ ಕಾಣುತ್ತಾನೆ. ಅಲ್ಲಮ ಹೇಳುವಂತೆ ಇವುಗಳೆಲ್ಲಾ ಎಲ್ಲೆಲ್ಲೋ ದೂರವಿರಬಹುದು. ಆದರೆ ಎಲ್ಲವೂ ಒಂದಕ್ಕೊಂದು ಹತ್ತಿರವಾಗಿವೆ. ಅದು ಕಣ್ಣಿಗೆ ಕಾಣದೆ, ಶಬ್ದಗಳಲ್ಲಿ ಸೆರೆ ಹಿಡಿಯಲು ಸಾಧ್ಯವಾಗದೆ, ಕಣ್ಣಿಗೆ ಕಾಣುವಂತೆ ಸಂಬಂಧ ಗೋಚರಿಸದೆ ಇರಬಹುದು. ಸುಪ್ತವಾಗಿ ಅಡಗಿರುವ ಆ ಸಂಬಂಧವನ್ನು ಗ್ರಹಿಸುವುದು, ಕಂಡುಕೊಳ್ಳುವುದು, ನಮ್ಮ ಸೂಕ್ಷ್ಮತೆಗೆ ಬಿಟ್ಟಿದ್ದು. ಮನುಷ್ಯನೊಳಗೆ ಸೂಕ್ಷ್ಮ ಸಂವೇದನೆಗಳು ಇದ್ದಾಗ ಮಾತ್ರ ಆತ್ಮ ಮತ್ತು ಪರಮಾತ್ಮನ ಪ್ರಜ್ಞೆ ಮೂಡಲು ಸಾಧ್ಯ. ಅದೇ ಮನುಷ್ಯನಿಗೆ ಮತ್ತು ಗುಹೇಶ್ವರನಿಗೆ ಇರುವ ಅವಿನಾಭಾವ ಸಂಬಂಧ. ಅದೇ ಅರಿವಿನ ಪಥ. ಸೃಷ್ಟಿಯ ಆರಂಭದಿಂದಲೂ ಪ್ರಕೃತಿ ತನ್ನ ಕೊಡುಗೆಯನ್ನು ಮನುಕುಲಕ್ಕೆ ಹೇರಳವಾಗಿ ನೀಡುತ್ತಲೇ ಬಂದಿದೆ. ಅದರೊಳಗಿನ ವಿಸ್ಮಯವನ್ನು ಅಕ್ಕ ಕೌತುಕದಿಂದ ಕಾಣುತ್ತಾಳೆ. ಅದನ್ನೇ ಒಂದೊಂದಾಗಿ ಪ್ರಶ್ನಿಸುತ್ತ ಚೆನ್ನಮಲ್ಲಿಕಾರ್ಜುನನ ಪರಿಯನ್ನು ಆವಿಷ್ಕರಿಸುತ್ತಾಳೆ. ‘ಈಳೆ ನಿಂಬೆ ಮಾವು ಮಾದಲಕೆ ಹುಳಿ ನೀರನೆರೆದವರಾರಯ್ಯಾ? ಕಬ್ಬು ಬಾಳೆ ಹಲಸು ನಾರಿವಾಳಕ್ಕೆ ಸಿಹಿ ನೀರನೆರೆದವರಾರಯ್ಯಾ? ಕಳವೆ ರಾಜಾನ್ನ ಶಾಲ್ಯನ್ನಕ್ಕೆ ಓಗರದ ಉದಕವನೆರೆದವರಾರಯ್ಯಾ? ಮರುಗ ಮಲ್ಲಿಗೆ ಪಚ್ಚೆ ಮುಡಿವಾಳಕ್ಕೆ ಪರಿಮಳದುದಕವನೆರೆದವರಾರಯ್ಯ? ಇಂತೀ ಜಲ ಒಂದೇ ನೆಲ ಒಂದೇ ಆಕಾಶ ಒಂದೇ ಒಂದೇ ಜಲವು ಹಲವು ದ್ರವ್ಯಂಗಳ ಕೂಡಿ ತನ್ನ ಪರಿ ಬೇರಾಗಿಹ ಹಾಂಗೆ ಎನ್ನ ದೇವ ಚೆನ್ನಮಲ್ಲಿಕಾರ್ಜುನಯ್ಯನು ಹಲವು ಜಗಂಗಳ ಕೂಡಿಕೊಂಡಿರ್ದಡೇನು? ತನ್ನ ಪರಿ ಬೇರೆ!’ ಪ್ರಕೃತಿಯಲ್ಲಿ ಅಡಗಿಕೊಂಡಿರುವ ರುಚಿಯ ಅನಾವರಣದ ವಿಸ್ಮಯ ಅಕ್ಕನಿಗೆ ಕುತೂಹಲಕಾರಿ. ಆ ಚೆನ್ನಮಲ್ಲಿಕಾರ್ಜುನ ದೇವನೇ ಈ ವಿಶೇಷ, ವಿಭಿನ್ನತೆಗೆ ಕಾರಣವೆಂದು ಪರಿಭಾವಿಸುತ್ತಾಳೆ. ಎಲ್ಲವೂ ನೀರು, ಭೂಮಿ, ಆಕಾಶ, ಗಾಳಿ, ಬೆಳಕನ್ನೇ ಅವಲಂಬಿಸಿದ್ದರೂ ವಿವಿಧ ರೂಪದಲ್ಲಿ ಹಣ್ಣು, ಹೂವು ಹೊರಹೊಮ್ಮುವುದು. ಅದೇ ರೀತಿ ಈ ಜಗತ್ತಿನಲ್ಲಿರುವ ಎಲ್ಲಾ ಜೀವ ರಾಶಿಗಳು ಬದುಕು ಸಾಗಿಸುತ್ತಿದ್ದರೂ, ಎಲ್ಲರ ಮಧ್ಯೆ ಅವನ ರೀತಿಯೇ ಬೇರೆ ಎಂದು ವಿಶೇಷವಾಗಿ ಕಾಣುವ ಮನಸ್ಸು ಅಕ್ಕನದು. ಹೀಗೆ ಅಕ್ಕ ಪ್ರಕೃತಿಯ ವೈವಿಧ್ಯತೆ ಮತ್ತು ವೈಶಿಷ್ಟ್ಯಗಳಲ್ಲಿಯೇ ತನ್ನ ಇಷ್ಟದೈವ ಚೆನ್ನಮಲ್ಲಿಕಾರ್ಜುನನನ್ನು ಕಾಣುವಳು. ಹಾಗೆಯೇ ಅಲ್ಲಿಯ ದೃಷ್ಟಾಂತಗಳ ಮೂಲಕ ಅವನ ಇರುವನ್ನು ಚಿತ್ರಿಸುವಳು. ಇದು ಮೇಲ್ನೋಟಕ್ಕೆ ಚೆನ್ನಮಲ್ಲಿಕಾರ್ಜುನನನ್ನು ದರ್ಶಿಸುತ್ತದೆ. ಆದರೂ ನಿಸರ್ಗದ ವಿಸ್ಮಯ ಅರಿಯುವ ಪರಿ ಇದಾಗಿದೆ. ಪ್ರಕೃತಿ ಕೊಟ್ಟ ಸುಂದರ ಕಾಣಿಕೆಗಳನ್ನು ಅಷ್ಟೇ ಪ್ರಜ್ಞಾಪೂರ್ವಕವಾಗಿ ಗ್ರಹಿಸುವ, ಅನುಭವಿಸುವ ಉತ್ಸಾಹ ಇದರಲ್ಲಿದೆ. ಶರಣ ದಸರಯ್ಯ ತನ್ನ ಅನೇಕ ವಚನಗಳಲ್ಲಿ ಮನುಷ್ಯಜೀವಿಯಂತೆ ಪಶು, ಪಕ್ಷಿಗಳೂ ಸೂಕ್ಷ್ಮ ಜೀವಿಗಳು. ಅದೇರೀತಿ ಸಸ್ಯಗಳಲ್ಲಿಯೂ ಜೀವವಿದೆಯೆಂದು ಈ ವಚನದಲ್ಲಿ ನಿರೂಪಿಸಿದ್ದಾನೆ. ‘ಸರ್ವಮಯ ನಿನ್ನ ಬಿಂದುವಾದಲ್ಲಿ ಆವುದನಹುದೆಂಬೆ, ಆವುದನಲ್ಲಾಯೆಂಬೆ? ಸರ್ವಚೇತನ ನಿನ್ನ ತಂತ್ರಗಳಿಂದ ಆಡುವವಾಗಿ ಇನ್ನಾವುದ ಕಾಯುವೆ, ಇನ್ನಾವುದ ಕೊಲುವೆ? ತರುಲತೆ ಸ್ಥಾವರ ಜೀವಂಗಳೆಲ್ಲಾ ನಿನ್ನ ಕಾರುಣ್ಯದಿಂದೊಗೆದವು. ಆರ ಹರಿದು ಇನ್ನಾರಿಗೆ ಅರ್ಪಿಸುವೆ? ತೊಟ್ಟು ಬಿಡುವನ್ನಕ್ಕ ನೀ ತೊಟ್ಟುಬಿಟ್ಟ ಮತ್ತೆ ನೀ ಬಿಟ್ಟರೆಂದು ಎತ್ತಿ ಪೂಜಿಸುತಿರ್ದೆ ದಸರೇಶ್ವರನೆಂದು’ ಈ ವಚನದಲ್ಲಿ ಹಸಿರು ಗಿಡ, ಅವುಗಳ ಎಲೆ, ಅಲ್ಲೇ ಅರಳುವ ಹೂವುಗಳು, ಎಲ್ಲವೂ ಆ ಸೃಷ್ಟಿಯ ಕೃಪೆಯಿಂದ ಲಭಿಸಿದಂತವು. ಅವುಗಳಿಗೂ ಜೀವ ಚೈತನ್ಯವಿರುವುದರಿಂದ ಗಿಡದಿಂದೇ ಕಿತ್ತು ಪಡೆದರೆ ಜೀವಹಾನಿ ಮಾಡಿದಂತೆ ಎಂದು ಭಾವಿಸುತ್ತಾನೆ. ಕಾಯುವವನು ತಾನಲ್ಲ, ಕೊಲ್ಲುವವನು ತಾನಲ್ಲ, ಆದ್ದರಿಂದ ತಾನಾಗಿಯೇ ಉದುರಿದ ಹೂಗಳನ್ನು ಮಾತ್ರ ಪೂಜೆಗೆ ಬಳಸುವುದಾಗಿ ನಿವೇದಿಸಿಕೊಳ್ಳುತ್ತಾನೆ. ಪ್ರಕೃತಿಯೆಡೆಗೆ ಶರಣರು ತೋರಿದ ಅಪಾರ ಕಾಳಜಿ, ಭಕ್ತಿ, ರಕ್ಷಣೆಯ ಪ್ರತೀಕವಾಗಿ ಬಿಂಬಿಸಲಾಗಿದೆ. ಶರಣರು ಪ್ರಕೃತಿ ವಿಕೋಪಗಳನ್ನು ವಿಭಿನ್ನ ದೃಷ್ಟಿಯಿಂದ ನೋಡುವ ಪರಿ ಅನನ್ಯ. ಈ ಸೃಷ್ಟಿ ಸಹಜವಾಗಿ ಎಷ್ಟು ಸುಂದರವಾಗಿ ಕಾಣುತ್ತದೊ, ಅಷ್ಟೇ ಸಹಜವಾಗಿ ಅಲ್ಲೋಲ ಕಲ್ಲೋಲಗಳೂ ಘಟಿಸುತ್ತವೆ. ಉದಾಹರಣೆಗೆ ಭೂಕಂಪ, ಸುನಾಮಿ, ಅತಿವೃಷ್ಟಿ, ಸುಂಟರಗಾಳಿ ಮುಂತಾದವು. ಇಂತಹ ವಿಕೋಪದ ಸಂದರ್ಭವನ್ನು ಮನುಷ್ಯ ಹೇಗೆ ಧೈರ್ಯದಿಂದ ಎದುರಿಸಬೇಕು ಎನ್ನುವುದನ್ನು ಅಲ್ಲಮಪ್ರಭುಗಳ ಈ ವಚನ ನಿರೂಪಿಸುತ್ತದೆ. ‘ಕೆಂಡದ ಮಳೆ ಕರೆವಲ್ಲಿ ಉದಕವಾಗಿರಬೇಕು ಜಲಪ್ರಳಯವಾದಲ್ಲಿ ವಾಯುವಿನಂತಿರಬೇಕು ಮಹಾಪ್ರಳಯವಾದಲ್ಲಿ ಆಕಾಶದಂತಿರಬೇಕು ಜಗತ್ಪ್ರಳಯವಾದಲ್ಲಿ ತನ್ನ ತಾ ಬಿಡಬೇಕು ಗುಹೇಶ್ವರನೆಂಬ ಲಿಂಗ ತಾನಾಗಿರಬೇಕು’ ಪ್ರಕೃತಿ, ಮನುಷ್ಯ ಹಾಗೂ ಮನುಷ್ಯನ ಅಸ್ತಿತ್ವ ಅರಿತುಕೊಂಡ ಮೇಲೆ, ಹುಟ್ಟು-ಸಾವು ಇದರ ವಾಸ್ತವಿಕ ನೆಲೆ ತಿಳಿಯುವುದು ಅವಶ್ಯಕ. ಅದೇ ಬದುಕಿನ ಅಂತಿಮ ಸತ್ಯ. ಹುಟ್ಟಿನೊಂದಿಗೇ ಹುಟ್ಟುವ ಸಾವು, ಅದನ್ನು ಗೆಲ್ಲುವ ರೀತಿಯನ್ನು ಅಲ್ಲಮನ ಮೇಲಿನ ವಚನ ಅನಾವರಣಗೊಳಿಸುತ್ತದೆ. ನಮ್ಮ ಬದುಕಿನಲ್ಲಿ ಕಷ್ಟಗಳು ಯಾವ ರೂಪದಲ್ಲಾದರೂ ಬರಬಹುದು. ಅದನ್ನು ಊಹೆ ಮಾಡಲು ಸಾಧ್ಯವಾಗುವುದಿಲ್ಲ. ಅವು ಮುನ್ಸೂಚನೆ ಇಲ್ಲದೆ ಬಂದು, ಮೈ ಮೇಲೆ ಎರಗಿ ಬಿಡುತ್ತವೆ. ಆಗ ಆತ್ಮವಿಶ್ವಾಸದಿಂದ ಆಲೋಚಿಸುತ್ತ, ಕೆಂಡದ ಮಳೆಯಾದರೆ, ಸ್ವತಃ ನೀರಾಗಬೇಕು. ಜಲಪ್ರಳಯವಾದರೆ, ವಾಯುವಿನ ಸ್ವರೂಪ ಪಡೆಯಬೇಕು. ಬಿರುಗಾಳಿ ಬೀಸಿದರೆ ಆಕಾಶದಲ್ಲಿ ತೇಲಬೇಕು. ಇಡೀ ಬ್ರಹ್ಮಾಂಡವೇ ಆಪತ್ತಿನಲ್ಲಿದ್ದರೆ ಸಂತೋಷದಿಂದ ತನ್ನ ತಾ ಬಿಟ್ಟು ಮೈ ಮರೆಯಬೇಕು. ಇಡೀ ಜಗತ್ತೇ ಪ್ರಳಯದಲ್ಲಿ ತೊಳೆದುಕೊಂಡು ಹೋಗುತ್ತಿದ್ದರೆ, ಮನುಷ್ಯನಾದವನು ಆ ಪರಿಸ್ಥಿತಿಗನುಗುಣವಾಗಿ ತನ್ನ ಪ್ರಾಣವನ್ನು ಬಿಡಲು ನಿರ್ಧರಿಸಬೇಕು. ಆ ನಿರ್ಧಾರದಲ್ಲಿ ಧೈರ್ಯ ತುಂಬಿರಬೇಕೆ ಹೊರತು ಯಾವುದೇ ಅನುಮಾನ, ವಿಷಾದಗಳಿರಬಾರದು. ಮನುಷ್ಯ ತನ್ನ ಜೀವನದ ನೆಲೆಯನ್ನು ಅರಿವಿನ ಪಥದ ಮೂಲಕ, ಪ್ರಕೃತಿಯ ಸಹಾಯದಿಂದ ಅರಿಯುವ ಪ್ರಯತ್ನ ಮಾಡಿದರೆ, ಆಗ ಬದುಕಿನ ರಹಸ್ಯ ವಿಸ್ಮಯಕಾರಿಯಾಗಿ ಉಳಿಯುವುದಿಲ್ಲ. ಅಕ್ಕನ ಈ ವಚನದ ಉದಾಹರಣೆ ಮಾನವ ಮತ್ತು ಪ್ರಕೃತಿ ಎರಡೂ ಬೇರೆ ಬೇರೆ ಅಲ್ಲವೇ ಅಲ್ಲ ಎಂದು ನಿರೂಪಿಸುತ್ತದೆ. ‘ಪೃಥ್ವಿ ಪೃಥ್ವಿಯ ಕೂಡದ ಮುನ್ನ ಅಪ್ಪು ಅಪ್ಪುವ ಕೂಡದ ಮುನ್ನ ತೇಜ ತೇಜವ ಕೂಡದ ಮುನ್ನ ವಾಯು ವಾಯುವ ಕೂಡದ ಮುನ್ನ ಆಕಾಶ ಆಕಾಶವ ಕೂಡದ ಮುನ್ನ ಪಂಚೇಂದ್ರಿಯಂಗಳೆಲ್ಲ ಹಂಚುಹರಿಯಾಗದ ಮುನ್ನ ಚೆನ್ನಮಲ್ಲಿಕಾರ್ಜುನಂಗೆ ಶರಣೆನ್ನಿರೆ’ ಈ ಸೃಷ್ಟಿಯು ಪಂಚಭೂತಗಳಿಂದ ಕೂಡಿರುವ ಸತ್ಯದೊಂದಿಗೆ ತೆರೆದುಕೊಳ್ಳುತ್ತ, ಬದುಕಿನ ವ್ಯಾಖ್ಯಾನವನ್ನು ಅಕ್ಕ ಅರುಹುತ್ತಾಳೆ. ಪೃಥ್ವಿ, ಅಪ್ಪು, ತೇಜ, ವಾಯು ಮತ್ತು ಆಕಾಶ ಇವು ಪಂಚಭೂತಗಳು. ಅಂದರೆ ಮಣ್ಣು, ನೀರು, ಅಗ್ನಿ, ಬೆಳಕು ಮತ್ತು ಆಕಾಶ. ಮನುಷ್ಯನಲ್ಲಿರುವ ಪಂಚೇಂದ್ರಿಯಗಳು ಕಣ್ಣು, ಕಿವಿ, ಮೂಗು, ನಾಲಗೆ ಮತ್ತು ಚರ್ಮ. ಇದೇ ವಿವರಣೆಯನ್ನು ಗಮನದಲ್ಲಿಟ್ಟುಕೊಂಡು, ಸಮೀಕರಿಸಿದ ವಚನವಿದು. ಸೃಷ್ಟಿ ತತ್ವಗಳಾದ ಪಂಚಭೂತಗಳು ಮತ್ತು ಮನುಷ್ಯನ ಒಳಗಿರುವ ಪಂಚೇಂದ್ರಿಯಗಳು, ಎರಡೂ ಒಂದೇ ಎನ್ನುವ ಭಾವ ತಳೆದಾಗ ಮೇಲಿನ ವಚನ ಹೆಚ್ಚುಹೆಚ್ಚು ಅರ್ಥಗರ್ಭಿತವಾಗಿ ಮನದಾಳಕ್ಕಿಳಿಯುತ್ತದೆ. ಇಂತಹ ಪ್ರಕೃತಿ ಮತ್ತು ಮನುಷ್ಯನ ನಡುವಿನ ಸಂಬಂಧವನ್ನು ಅರಿವು ಮತ್ತು ಪ್ರಜ್ಞೆಯ ಹಿನ್ನೆಲೆಯಲ್ಲಿ ಕಂಡುಕೊಂಡು, ಮನುಷ್ಯನ ಅಸ್ತಿತ್ವವನ್ನು ಪರಾಮರ್ಶಿಸುವುದು ಸೂಕ್ತ. ಪಂಚಭೂತಗಳಿಂದ ಕೂಡಿದ ಈ ಜಗತ್ತಿನೊಂದಿಗೆ, ಪಂಚೇಂದ್ರಿಯಗಳಿಂದ ಕೂಡಿದ ಮಾನವ ಲೀನವಾಗುತ್ತಾನೆಂದು ಹೇಳುವುದೇ ಈ ವಚನದ ಮೂಲ ಆಶಯವಾಗಿದೆ. ಒಟ್ಟಾರೆ ಬಸವಾದಿ ಶರಣರು ಇಡೀ ಬ್ರಹ್ಮಾಂಡದ ಅಸ್ತಿತ್ವ, ಅದರ ಪರಿಕಲ್ಪನೆ, ಪ್ರಕೃತಿ ಪ್ರಜ್ಞೆ, ಆಂತರಿಕ ಅರಿವು ಇಟ್ಟುಕೊಂಡೇ ವಿಶಿಷ್ಟ ಜೀವನ ಸಾಗಿಸಿದರು. ಬಸವಣ್ಣ ಹೇಳುವಂತೆ, ‘ವಿಶ್ವವೇ ನನ್ನ ಮನೆ ಮಾನವ ಜನಾಂಗವೇ ನನ್ನ ಕುಟುಂಬ’ ಎನ್ನುವ ವಿಶಾಲ ಮನೋಭಾವ ಪ್ರತಿಯೊಬ್ಬ ಶರಣರಲ್ಲೂ ಇದ್ದುದರಿಂದಲೇ, ಇಡೀ ಸೃಷ್ಟಿಯನ್ನು ಒಪ್ಪಿಕೊಳ್ಳುವ, ಅಪ್ಪಿಕೊಳ್ಳುವ ಹೃದಯ ವೈಶಾಲ್ಯ ಅವರಲ್ಲಿತ್ತು. ಇಂದು ನಾವು ಹೇಳುವ ‘ಗ್ಲೋಬಲೈಸೇಷನ್’ ಪರಿಕಲ್ಪನೆ ಅಂದು ಕಂಡ ಕನಸಾಗಿದೆ. ಇಡೀ ಮನುಕುಲಕ್ಕೇ ಮಾದರಿಯಾದ ವಚನ ಸಾಹಿತ್ಯದ ಸತ್ವ ಮತ್ತು ಶಕ್ತಿ ಇಂದಿಗೂ ಪ್ರಸ್ತುತ.

ವಾರ್ತಾ ಭಾರತಿ 8 Feb 2026 11:58 am

ಜಿನ್ನಾ ಎಷ್ಟು ಧಾರ್ಮಿಕ ?

ಧರ್ಮದ ಹೆಸರಲ್ಲಿ ಪಾಕಿಸ್ತಾನ ಎಂಬ ದೇಶವನ್ನು ಸ್ಥಾಪಿಸಿದ ಮತ್ತು ಪಾಕಿಸ್ತಾನದವರು ‘ಕಾಯಿದೆ ಆಝಮ್’ (ಸರ್ವೋನ್ನತ ನಾಯಕ) ಎಂದು ಕರೆಯುವ, ಮುಹಮ್ಮದ್ ಅಲಿ ಜಿನ್ನಾ ಎಂಬ ವ್ಯಕ್ತಿ ಭಾರತ ಅಥವಾ ಪಾಕಿಸ್ತಾನ ಅಥವಾ ಅಖಂಡ ಭಾರತದ ಮುಸಲ್ಮಾನರ ಬಹುಸಂಖ್ಯಾತರನ್ನು ಪ್ರತಿನಿಧಿಸುತ್ತಿರಲಿಲ್ಲ. ಭಾರತ ಮತ್ತು ಪಾಕಿಸ್ತಾನದ ಮುಸ್ಲಿಮರಲ್ಲಿ ಸುನ್ನಿ ಮತ್ತು ಶಿಯಾ ಎಂಬ ಎರಡು ಪ್ರಮುಖ ಪಂಥಗಳಿವೆ. ಅವರಲ್ಲಿ ಸುನ್ನಿಗಳು ಬಹುಸಂಖ್ಯಾತರು. ಪಾಕಿಸ್ತಾನದಲ್ಲಿ ಶಿಯಾಗಳ ಸಂಖ್ಯೆ ಹೆಚ್ಚೆಂದರೆ 15ಶೇ. ಇರಬಹುದು. ಪಾಕಿಸ್ತಾನ ಎಂಬ ಪ್ರತ್ಯೇಕ ರಾಷ್ಟ್ರದ ಸ್ಥಾಪನೆಯು ಅಂದಿನ ಭಾರತೀಯ ಮುಸ್ಲಿಮ್ ಸಮಾಜದ ಒಮ್ಮತದ ತೀರ್ಮಾನವಾಗಿರಲಿಲ್ಲ. ಜಿನ್ನಾ ಎಂಬ ವ್ಯಕ್ತಿಯ ನಾಯಕತ್ವದಲ್ಲಿ ಮುಸ್ಲಿಮ್ ಲೀಗ್ ಎಂಬ ಪಕ್ಷವು ಆರಂಭಿಸಿದ ಪ್ರತ್ಯೇಕತಾವಾದಿ ಆಂದೋಲನವು ಒಂದು ಕಡೆ ಬ್ರಿಟಿಷರ ಅಗತ್ಯವಾಗಿತ್ತು. ಇನ್ನೊಂದು ಕಡೆ ಅದು ಕೆಲವು ಮಹತ್ವಾಕಾಂಕ್ಷಿ ಪುಢಾರಿಗಳ ಸಂದರ್ಭ ಸಾಧಕ ಸಂಚಿನ ಫಲವಾಗಿತ್ತು. ಅದರಲ್ಲಿ ಧರ್ಮವು ಕೇವಲ ಜನರನ್ನು ಭಾವನಾತ್ಮಕವಾಗಿ ಮಂಕುಗೊಳಿಸಲು ಬಳಸಲಾದ ಅಸ್ತ್ರ ಮಾತ್ರವಾಗಿತ್ತು. ಕೇವಲ ಧರ್ಮವು ಒಂದು ರಾಷ್ಟ್ರದ ಸ್ಥಾಪನೆಗೆ ಪರ್ಯಾಯ ಬುನಾದಿಯಾಗಲು ಸಾಧ್ಯವಿಲ್ಲ . ಅಂತಹ ದೇಶದ ಸ್ಥಾಪನೆಯ ಹೊಣೆಯನ್ನು ಇಸ್ಲಾಮ್ ಧರ್ಮದ ಮೇಲೆ ಹೊರಿಸುವುದು ಖಂಡಿತ ನ್ಯಾಯವಲ್ಲ. ಧರ್ಮದ ಹೆಸರಲ್ಲಿ ಪಾಕಿಸ್ತಾನ ಎಂಬ ದೇಶವನ್ನು ಸ್ಥಾಪಿಸಿದ ಮತ್ತು ಪಾಕಿಸ್ತಾನದವರು ‘ಕಾಯಿದೆ ಆಝಮ್’ (ಸರ್ವೋನ್ನತ ನಾಯಕ) ಎಂದು ಕರೆಯುವ, ಮುಹಮ್ಮದ್ ಅಲಿ ಜಿನ್ನಾ ಎಂಬ ವ್ಯಕ್ತಿ ಭಾರತ ಅಥವಾ ಪಾಕಿಸ್ತಾನ ಅಥವಾ ಅಖಂಡ ಭಾರತದ ಮುಸಲ್ಮಾನರ ಬಹುಸಂಖ್ಯಾತರನ್ನು ಪ್ರತಿನಿಧಿಸುತ್ತಿರಲಿಲ್ಲ. ಭಾರತ ಮತ್ತು ಪಾಕಿಸ್ತಾನದ ಮುಸ್ಲಿಮರಲ್ಲಿ ಸುನ್ನಿ ಮತ್ತು ಶಿಯಾ ಎಂಬ ಎರಡು ಪ್ರಮುಖ ಪಂಥಗಳಿವೆ. ಅವರಲ್ಲಿ ಸುನ್ನಿಗಳು ಬಹುಸಂಖ್ಯಾತರು. ಪಾಕಿಸ್ತಾನದಲ್ಲಿ ಶಿಯಾಗಳ ಸಂಖ್ಯೆ ಹೆಚ್ಚೆಂದರೆ 15ಶೇ. ಇರಬಹುದು. ಜಿನ್ನಾ ಪ್ರಸ್ತುತ ಅಲ್ಪಸಂಖ್ಯಾತ ಶಿಯಾ ಪಂಥಕ್ಕೆ ಸೇರಿದವರು. ಶಿಯಾಗಳಲ್ಲೂ ಇಸ್ಮಾಯಿಲಿ ಖೋಜಾ ಎಂಬೊಂದು ತೀರಾ ಸಣ್ಣ ಉಪಪಂಥವಿದೆ. ಜಿನ್ನಾ ಜನಿಸಿದ್ದು ಆ ಸಣ್ಣ ಉಪಪಂಥದಲ್ಲಿ. ಜಿನ್ನಾ ಮುಸ್ಲಿಮ್ ಬಹುಸಂಖ್ಯಾತರನ್ನು ಪ್ರತಿನಿಧಿಸುತ್ತಿದ್ದರು ಎಂದು ವಾದಿಸುವವರ ವಾದದ ಪೊಳ್ಳುತನವನ್ನು ಬಯಲಿಗೆಳೆಯಲು ಈ ಸತ್ಯವೊಂದೇ ಸಾಕು.   ಧರ್ಮದ ಜೊತೆಗೂ ಜಿನ್ನಾರಿಗೆ ಯಾವುದೇ ವಿಶೇಷ ನಂಟಿರಲಿಲ್ಲ. ಸಿಗಾರ್, ವೈನ್, ಪೋರ್ಕ್, ಸೂಟು ಬೂಟು ಮತ್ತು ಪಾಶ್ಚಿಮಾತ್ಯ ಸಂಸ್ಕೃತಿಯ ಜೊತೆ ಅವರಿಗಿದ್ದ ಅಭೇದ್ಯ ನಂಟು ಯಾರ ಪಾಲಿಗೂ ಗುಟ್ಟಾಗಿರಲಿಲ್ಲ. ಸ್ವತಃ ಜಿನ್ನಾ ಕೂಡಾ ಈ ವಿಷಯದಲ್ಲಿ ಯಾವುದೇ ಗೌಪ್ಯ ಪಾಲಿಸಿರಲಿಲ್ಲ. 1892 ರಲ್ಲಿ ಜಿನ್ನಾ ತನ್ನ 16 ನೇ ವಯಸ್ಸಿನಲ್ಲಿ ತನ್ನ ಬಂಧುವೇ ಆಗಿದ್ದ 14 ರ ಹರೆಯದ ಎಮಿಬಾಯ್ ಯನ್ನು ವಿವಾಹವಾದರು. ವಿವಾಹದ ಒಂದು ವರ್ಷದ ಬಳಿಕ ಎಮಿಬಾಯ್ ನಿಧನರಾದರು. 1918 ರಲ್ಲಿ ಜಿನ್ನಾ ತಮ್ಮ 42ನೇ ವಯಸ್ಸಿನಲ್ಲಿ, ಪಾರ್ಸಿ ಸಮುದಾಯಕ್ಕೆ ಸೇರಿದ 18 ರ ಹರೆಯದ ರತ್ತನ್ ಬಾಯ್ ಎಂಬ ಹೆಣ್ಣನ್ನು ಪ್ರೀತಿಸಿ ವಿವಾಹವಾದರು. ಆಕೆ ಸರ್ ದಿನ್ ಶಾ ಪೆಟಿಟ್ ಎಂಬ ಶ್ರೀಮಂತ ಪಾರ್ಸಿ ವರ್ತಕನ ಮಗಳು. 1929ರಲ್ಲಿ ಆಕೆ ನಿಧನರಾದರು. 1919 ರಲ್ಲಿ ಆಕೆಯ ಮೂಲಕ ಜಿನ್ನಾರಿಗೆ ಜನಿಸಿದ ಏಕೈಕ ಮಗಳು ದೀನಾ ಜಿನ್ನಾ. 1938 ರಲ್ಲಿ ದೀನಾ ವಿವಾಹವಾದದ್ದು ಕೂಡಾ ನಿವೆಲ್ಲಿ ವಾಡಿಯಾ ಎಂಬೊಬ್ಬ ಪಾರ್ಸಿ ವರ್ತಕನನ್ನು. ಆಕೆ ತನ್ನ ತಂದೆ ನಿರ್ಮಿಸಿದ ಪಾಕಿಸ್ತಾನಕ್ಕೆ ವಲಸೆ ಹೋಗಲಿಲ್ಲ. ತನ್ನ ಪತಿಯ ಜೊತೆ ಭಾರತದ ನಾಗರಿಕಳಾಗಿ ಇಲ್ಲೇ ಉಳಿದುಕೊಂಡರು. 2017 ರಲ್ಲಿ ನ್ಯೂಯಾರ್ಕ್ ನಲ್ಲಿ ನಿಧನರಾದರು. ಭಾರತದ ಪ್ರಸಿದ್ಧ ಉದ್ಯಮಿ ಹಾಗೂ ‘ಬಾಂಬೆ ಡೈಯಿಂಗ್’ ಕಂಪೆನಿಯ ಸ್ಥಾಪಕ ನುಸ್ಲಿ ವಾಡಿಯಾ ಆಕೆಯ ಪುತ್ರ. ಹೀಗೆ ಧರ್ಮದೊಂದಿಗೆ ಯಾವುದೇ ವಿಶೇಷ ಸಂಬಂಧವೇ ಇಲ್ಲದಿದ್ದ ಒಬ್ಬ ವ್ಯಕ್ತಿ ಸ್ಥಾಪಿಸಿದ ದೇಶ ಪಾಕಿಸ್ತಾನ.

ವಾರ್ತಾ ಭಾರತಿ 8 Feb 2026 11:52 am

ನಿಜಾಮ್ ಕಾಲದಲ್ಲಿ ಸಂಗೀತದ ಅನುರಣನ

ಹೈದ್ರಾಬಾದ್‌ನ ನಿಜಾಮ್ ಅವರನ್ನು ಕೋಮುವಾದಿ, ಹೇಡಿ, ದುರ್ಬಲ ದೊರೆ ಮತ್ತು ಮತಾಂಧ ಎಂದು ಬಿಂಬಿಸುವ ಪ್ರಯತ್ನಗಳು ನಡೆದಿವೆ. ಭಾರತದ ಬಹುಪಾಲು ಪ್ರಾಂತೀಯ ರಾಜರು ಆಸೆ ಪಟ್ಟಂತೆ ಹೈದ್ರಾಬಾದ್ ರಾಜ್ಯದ ನಿಜಾಮ್ ಅವರು ಭಾರತ ಒಕ್ಕೂಟದಲ್ಲಿ ವಿಲೀನವಾಗಲು ಒಪ್ಪಿಕೊಂಡಿರಲಿಲ್ಲ. ನಿಜಾಮ್ ಅವರನ್ನು ದಾರಿ ತಪ್ಪಿಸಿದ್ದು ಅವರ ಆಪ್ತ ಖಾಸಿಂ ರಝ್ವಿ ಎಂಬ ದಳಪತಿ. ಖಾಸಿಂ ರಝ್ವಿ ಮಹತ್ವಾಕಾಂಕ್ಷಿ ವ್ಯಕ್ತಿಯಾಗಿದ್ದ. ರಜಾಕಾರ್ ಎಂಬ ಮುಸ್ಲಿಮ್ ಪ್ರತ್ಯೇಕವಾದಿ ತಂಡ ಕಟ್ಟಿ ಅರಾಜಕತೆ ಸೃಷ್ಟಿಸಿದ. ಹೆಸರಾಂತ ಸಂಗೀತಗಾರ್ತಿಯಾಗಿರುವ ಡಾ. ಜಯದೇವಿ ಜಂಗಮಶೆಟ್ಟಿ ಯವರು ಮೂಲತಃ ರಾಯಚೂರಿನವರು. ಸಂಗೀತದಲ್ಲಿ ವಿದ್ವತ್ ವಿಶಾರದಾ ಪದವೀಧರೆ. ‘ವಚನ ಗಾಯನ ಪರಂಪರೆ-ಒಂದು ಸಂಗೀತಾತ್ಮಕ ಅಧ್ಯಯನ’ ಸಂಶೋಧನಾ ಕೃತಿಗಾಗಿ ಇವರಿಗೆ ಪಿಎಚ್‌ಡಿ ಪದವಿ ಸಂದಿದೆ. ಇವರು ಭಾರತಾದ್ಯಂತ ಮತ್ತು ವಿದೇಶಗಳಲ್ಲಿಯೂ ಸಂಗೀತ ಗಾಯನ ಕಾರ್ಯಕ್ರಮಗಳನ್ನು ನೀಡಿ ಹೆಸರಾಗಿದ್ದಾರೆ. ಸಿನಿಮಾಗಳಿಗೂ ಸಂಗೀತ ನಿರ್ದೇಶ ಮಾಡಿದ್ದಾರೆ. ಶಾಸ್ತ್ರೀಯ ಗಾಯನ, ವಚನ ಗಾಯನ, ದಾಸವಾಣಿ ಮತ್ತು ಭಜನ್ ಸಂಗೀತದಲ್ಲಿ ಇವರ ಅನೇಕ ಆಲ್ಬಮ್‌ಗಳು ಬೆಂಗಳೂರಿನ ಪ್ರತಿಷ್ಠಿತ ಲಹರಿ ಕಂಪೆನಿಯಿಂದ ಬಿಡುಗಡೆಗೊಂಡು ಖ್ಯಾತಿ ಗಳಿಸಿವೆ. ಸದ್ಯ ಜಯದೇವಿ ಅವರು ಕಲಬುರ್ಗಿಯಲ್ಲಿರುವ ಕರ್ನಾಟಕ ಕೇಂದ್ರೀಯ ವಿವಿಯ ಸಂಗೀತ ಮತ್ತು ಲಲಿತ ಕಲಾ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಡಾ. ಮಲ್ಲಿಕಾರ್ಜುನ ಮನ್ಸೂರ್ ಯುವ ರಾಷ್ಟ್ರೀಯ ಪುರಸ್ಕಾರ ಸೇರಿದಂತೆ ಹಲವು ಪ್ರತಿಷ್ಠಿತ ಪ್ರಶಸ್ತಿಗಳನ್ನು ತಮ್ಮ ಸಾಧನೆಗಳಿಗಾಗಿ ಪಡೆದುಕೊಂಡಿದ್ದಾರೆ. ನಿಜಾಮ್ ಕಾಲದಲ್ಲಿ ಕಲ್ಯಾಣ ಕರ್ನಾಟಕದ ಸಾಂಸ್ಕೃತಿಕ ಬದುಕನ್ನು ಸಂಗೀತ ಹೇಗೆ ಪೊರೆದಿದೆ ಎನ್ನುವುದನ್ನು ಈ ಬರಹದಲ್ಲಿ ಅನುರಣಿಸಿದ್ದಾರೆ. ಈಗಿನ ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳು ಸ್ವಾತಂತ್ರ್ಯ ಪೂರ್ವ ಭಾರತದಲ್ಲಿ ಹೈದ್ರಾಬಾದ್‌ನ ನಿಜಾಮ್ ರಾಜ್ಯದ ಭಾಗವಾಗಿದ್ದವು. ಬೀದರ್, ಕಲ್ಬುರ್ಗಿ ಮತ್ತು ರಾಯಚೂರು ಜಿಲ್ಲೆಗಳು ನಿಜಾಮ್ ರಾಜ್ಯದಲ್ಲೇ ಅಸ್ತಿತ್ವಕ್ಕೆ ಬಂದಿದ್ದವು. ಬಳ್ಳಾರಿ ಜಿಲ್ಲೆ ಮದ್ರಾಸ್ ಪ್ರಾಂತದ ಭಾಗವಾಗಿತ್ತು. ಭಾರತಕ್ಕೆ ಸ್ವಾತಂತ್ರ್ಯ ಲಭಿಸಿ, ಭಾಷಾವಾರು ಪ್ರಾಂತಗಳ ರಚನೆಯಾಗಿ, ಕರ್ನಾಟಕ ಏಕೀಕರಣಗೊಂಡ ಮೇಲೆ ಬಳ್ಳಾರಿ ಕಲ್ಬುರ್ಗಿ ವಿಭಾಗದ ಭಾಗವಾಯಿತು. ಜೆ. ಎಚ್. ಪಟೇಲರು ಮುಖ್ಯಮಂತ್ರಿಯಾಗಿದ್ದಾಗ ಆಡಳಿತದ ಅನುಕೂಲದ ದೃಷ್ಟಿಯಿಂದ ಯಾದಗಿರಿ ಮತ್ತು ಕೊಪ್ಪಳ ಜಿಲ್ಲೆಗಳನ್ನು ಸೃಜಿಸಲಾಯಿತು. ಅದಕ್ಕಿಂತ ಮೊದಲು ಯಾದಗಿರಿ ಕಲ್ಬುರ್ಗಿ ಜಿಲ್ಲೆಯ ಅವಿಭಾಜ್ಯ ಅಂಗವಾಗಿತ್ತು. ಕೊಪ್ಪಳ ಜಿಲ್ಲೆಯನ್ನು ರಾಯಚೂರು ಜಿಲ್ಲೆಯಿಂದ ಬೇರ್ಪಡಿಸಲಾಯಿತು. ಆಪರೇಷನ್ ಕಮಲದ ವಾಗ್ದಾನವಾಗಿ ವಿಜಯನಗರ ಜಿಲ್ಲೆಯನ್ನು ಅಂದಿನ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರು ಹೊಸಪೇಟೆ ಶಾಸಕ ಆನಂದ್‌ಸಿಂಗ್ ಅವರಿಗೆ ನೀಡಲಾಯಿತು. ಹೈದ್ರಾಬಾದ್ ಕರ್ನಾಟಕ ಪ್ರದೇಶವನ್ನು ಕಲ್ಯಾಣ ಕರ್ನಾಟಕವೆಂದು ಯಡಿಯೂರಪ್ಪ ಅವರ ಕಾಲಾವಧಿಯಲ್ಲಿಯೇ ಮರು ನಾಮಕರಣವಾಯಿತು. ಈಗಿನ ತೆಲಂಗಾಣ, ಮಹಾರಾಷ್ಟ್ರದ ವಿದರ್ಭ ಮತ್ತು ಕರ್ನಾಟಕದ ಕಲ್ಬುರ್ಗಿ, ಬೀದರ್, ರಾಯಚೂರು ಜಿಲ್ಲೆಗಳನ್ನು ಒಳಗೊಂಡ ಹೈದ್ರಾಬಾದ್ ಕರ್ನಾಟಕ ಪ್ರದೇಶ ನಿಜಾಮ್ ರಾಜ್ಯದ ವ್ಯಾಪ್ತಿಗೆ ಸೇರಿದ್ದವು.   ಸ್ವಾತಂತ್ರ್ಯ ಪೂರ್ವ ಭಾರತದಲ್ಲಿ ಆರು ಜನ ನಿಜಾಮರು ಆಡಳಿತ ನಡೆಸಿದ್ದರು. ಹೈದ್ರಾಬಾದ್ ರಾಜ್ಯದ ಏಳನೇಯ ಮತ್ತು ಕೊನೆಯ ನಿಜಾಮ್ ಸ್ವಾತಂತ್ರ್ಯ ಪೂರ್ವ ಮತ್ತು ಸ್ವಾತಂತ್ರ್ಯ ನಂತರದ ಭಾರತದಲ್ಲಿ ಆಡಳಿತ ನಡೆಸುವ ಅವಕಾಶ ಪಡೆದಿದ್ದರು. ಏಳನೇಯ ಮತ್ತು ಕೊನೆಯ ನಿಜಾಮ್ ಅವರ ಹೆಸರು ಮೀರ್ ಉಸ್ಮಾನ್ ಅಲಿ ಖಾನ್ ಏಳನೇಯ ಅಸಫ್ ಝಾ ಎಂದು ಇತ್ತು. ಎಪ್ರಿಲ್ 6, 1898ರಂದು ಜನಿಸಿ ಫೆಬ್ರವರಿ 24,1967ರಂದು ನಿಧನ ಹೊಂದಿದ್ದರು. 1911ನೇ ಇಸ್ವಿಯಲ್ಲಿ ಹೈದ್ರಾಬಾದ್ ನಿಜಾಮ್ ರಾಜ್ಯದ ಅಧಿಕಾರದ ಗದ್ದುಗೆ ಏರಿದ್ದ ಮೀರ್ ಉಸ್ಮಾನ್ ಅಲಿ ಅಸಫ್ ಝಾ (ಏಳು)ಅವರು 1948ರವರಗೆ ರಾಜರಾಗಿ ಅಧಿಕಾರದಲ್ಲಿ ಇದ್ದರು. ಸ್ವಾತಂತ್ರ್ಯಾ ನಂತರದ ಆಂಧ್ರಪ್ರದೇಶ ರಾಜ್ಯದ ಮೊದಲ ರಾಜ್ಯಪಾಲರಾಗಿ ಕಾರ್ಯ ನಿರ್ವಹಿಸಿದ್ದರು. ಹೈದ್ರಾಬಾದ್‌ನ ನಿಜಾಮ್ ಅವರನ್ನು ಕೋಮುವಾದಿ, ಹೇಡಿ, ದುರ್ಬಲ ದೊರೆ ಮತ್ತು ಮತಾಂಧ ಎಂದು ಬಿಂಬಿಸುವ ಪ್ರಯತ್ನಗಳು ನಡೆದಿವೆ. ಭಾರತದ ಬಹುಪಾಲು ಪ್ರಾಂತೀಯ ರಾಜರು ಆಸೆ ಪಟ್ಟಂತೆ ಹೈದ್ರಾಬಾದ್ ರಾಜ್ಯದ ನಿಜಾಮ್ ಅವರು ಭಾರತ ಒಕ್ಕೂಟದಲ್ಲಿ ವಿಲೀನವಾಗಲು ಒಪ್ಪಿಕೊಂಡಿರಲಿಲ್ಲ. ನಿಜಾಮ್ ಅವರನ್ನು ದಾರಿ ತಪ್ಪಿಸಿದ್ದು ಅವರ ಆಪ್ತ ಖಾಸಿಂ ರಝ್ವಿ ಎಂಬ ದಳಪತಿ. ಖಾಸಿಂ ರಝ್ವಿ ಮಹತ್ವಾಕಾಂಕ್ಷಿ ವ್ಯಕ್ತಿಯಾಗಿದ್ದ. ರಜಾಕಾರ್ ಎಂಬ ಮುಸ್ಲಿಮ್ ಪ್ರತ್ಯೇಕವಾದಿ ತಂಡ ಕಟ್ಟಿ ಅರಾಜಕತೆ ಸೃಷ್ಟಿಸಿದ. ಕೊಲೆ, ಸುಲಿಗೆ, ದಂಗೆ, ನಡೆಸುವ ಮೂಲಕ ರಜಾಕಾರ್ ಚಳವಳಿಯನ್ನು ದಿಕ್ಕು ತಪ್ಪಿಸಿದ. ಹಾಗೆ ನೋಡಿದರೆ ಬಹುಸಂಖ್ಯಾತ ಹಿಂದೂ-ಮುಸ್ಲಿಮ್ ಸಮುದಾಯಗಳಿಗೆ ಮುಸ್ಲಿಮ್ ಪ್ರತೇಕತಾವಾದಿ ತಂಡದ ಬಗ್ಗೆ, ಅದರ ರಾಜಕೀಯ ಹಿತಾಸಕ್ತಿ ಬಗ್ಗೆ ಸಹಮತ ಇರಲಿಲ್ಲ. ಹೈದ್ರಾಬಾದ್‌ನ ಏಳನೇ ನಿಜಾಮ್ ಮೀರ್ ಉಸ್ಮಾನ್ ಅಲಿ ಖಾನ್ ಅಸಫ್ ಝಾ ಅವರಿಗೆ ಸ್ವತಂತ್ರ ದೇಶವಾಗಿ ಉಳಿಯುವ ಆಸೆಯೇನೋ ಇತ್ತು. ಆದರೆ ಪಾಕಿಸ್ತಾನದೊಂದಿಗೆ ಸೇರುವ ಬಯಕೆ ಇರಲಿಲ್ಲ. ಅಂದಿನ ಗೃಹ ಮಂತ್ರಿ ಸರ್ದಾರ್ ವಲ್ಲಭ ಬಾಯಿ ಪಟೇಲ್ ಅವರ ಸಕಾಲದ ಮಧ್ಯಸ್ಥಿಕೆಯಿಂದ ನಿಜಾಮ್ ದೊರೆತನದ ಹೈದ್ರಾಬಾದ್ ರಾಜ್ಯ 1948ರಂದು ಭಾರತ ಒಕ್ಕೂಟದ ಭಾಗವಾಯಿತು. ರಜಾಕಾರ್ ಚಳವಳಿ ಮಾತ್ರ ನಿಜಾಮ್ ಸಾಮ್ರಾಜ್ಯದ ಬಹುದೊಡ್ಡ ಕಪ್ಪು ಚುಕ್ಕಿಯಾಗಿಯೇ ಉಳಿಯಿತು. ಅಸಂಖ್ಯಾತ ಹಿಂದೂ-ಮುಸ್ಲಿಮರು ಸಾವು ನೋವಿಗೆ ಈಡಾದರು. ಆದರೆ ಹಿಂದೂ-ಮುಸ್ಲಿಮ್‌ಭಾವೈಕ್ಯಕ್ಕೆೆ ರಜಾಕಾರ್ ಚಳವಳಿಯಂತಹ ಅತ್ಯಂತ ಕೆಟ್ಟಗಳಿಗೆಯೂ ಸಾಕ್ಷಿಯಾಯಿತು. ಖಾಸಿಂ ರಝ್ವಿಯ ವಿಕೃತಿಗೆ ಸಾಮಾನ್ಯ ಜನತೆ ಭಾವೈಕ್ಯದ ಮದ್ದು ಕಂಡುಕೊಂಡರು. ಪರಸ್ಪರ ಜೀವ ರಕ್ಷಿಸಿಕೊಂಡರು. ಹಿಂದೂಗಳು ಮುಸ್ಲಿಮರನ್ನು, ಮುಸ್ಲಿಮರು ಹಿಂದೂಗಳ ರಕ್ಷಣೆಗೆ ನಿಂತು ಖಾಸಿಂ ರಝ್ವಿಯ ರಾಕ್ಷಸಿ ಕೃತ್ಯವನ್ನು ಮೆಟ್ಟಿ ನಿಂತರು.   ಮೀರ್ ಉಸ್ಮಾನ್ ಅಲಿ ಖಾನ್ ಅಸಫ್ ಝಾ ಅವರ ಫಲಾನುಭವಿಗಳೇ ಅವರನ್ನು ಮತಾಂಧ ಎಂದು ಬಿಂಬಿಸಿ ಅಪಪ್ರಚಾರ ಮಾಡಿದರು. ಹೈದ್ರಾಬಾದ್ ರಾಜ್ಯದ ನಿಜಾಮ್ ಮೀರ್ ಉಸ್ಮಾನ್ ಅಲಿಯವರು ಬ್ರಿಟಿಷರ ವಿರುದ್ಧ ವಿರೋಚಿತವಾಗಿ ಹೋರಾಟ ಮಾಡಿದ ನಿದರ್ಶನ ದೊರೆಯುವುದಿಲ್ಲ. ಆದರೆ ಅವರು ಅಭಿವೃದ್ಧಿಗೆ ಮೊದಲ ಆದ್ಯತೆ ಕೊಡುವ ರಾಜರಾಗಿದ್ದರು. ಕಲೆ, ಸಾಹಿತ್ಯ, ಸಂಗೀತದ ಪೋಷಕರಾಗಿದ್ದರು. ಸರ್ವರನ್ನು ಸಮಭಾವದಿಂದ ಕಾಣುವ ಮಾನವತಾವಾದಿಯಾಗಿದ್ದರು ಎಂಬುದನ್ನು ಅಸಂಖ್ಯಾತ ದಾಖಲೆಗಳು ಸಾಕ್ಷಿ ನುಡಿಯುತ್ತವೆ. ಆಧುನಿಕ ಹೈದ್ರಾಬಾದ್ ನಗರ ನಿರ್ಮಾಣ, ಉಸ್ಮಾನಿಯ ವಿಶ್ವವಿದ್ಯಾನಿಲಯ, ಆಸ್ಪತ್ರೆ, ಸ್ಟೇಟ್ ಬ್ಯಾಂಕ್ ಹೈದ್ರಾಬಾದ್ ಹೆಸರಿನ ಬ್ಯಾಂಕ್ ಸ್ಥಾಪನೆ, ಬೇಗಂ ಪೇಟೆ ವಿಮಾನ ನಿಲ್ದಾಣ, ಹೈ ಕೋರ್ಟ್ ಸ್ಥಾಪನೆ, ಉಸ್ಮಾನ್ ಸಾಗರ್, ಹಿಮಾಯತ್ ಸಾಗರ್ ಮತ್ತು ನಿಜಾಮ್ ಸಾಗರ್ ಆಣೆಕಟ್ಟುಗಳ ನಿರ್ಮಾಣ ಅವರ ಕನಸಿನ ಕೂಸುಗಳು. ನಿಜಾಮ್ ರಾಜ್ಯ ಆರ್ಥಿಕವಾಗಿ ಶಕ್ತಿಶಾಲಿಯಾಗಿತ್ತು. ಪ್ರಪಂಚದ ಶ್ರೀಮಂತರ ಸಾಲಿನಲ್ಲಿ ನಿಲ್ಲುವ ಆರ್ಥಿಕ ಬಲ ಪಡೆದುಕೊಂಡಿದ್ದರು. ಅಂದಿನ ಅಮೆರಿಕದ ಜಿಡಿಪಿಯ ಪ್ರತಿಶತ ಎರಡರಷ್ಟು ಸಂಪತ್ತು ಮೀರ್ ಉಸ್ಮಾನ್ ಅಲಿ ಖಾನ್ ಹೊಂದಿದ್ದರು. ಗಾಂಧಿವಾದಿ ವಿನೋಭಾ ಬಾವೆಯವರು ಭೂದಾನ ಚಳವಳಿ ಆರಂಭಿಸಿದಾಗ ಹದಿನಾಲ್ಕು ಸಾವಿರ ಎಕರೆ ಭೂಮಿಯನ್ನು ಹೈದ್ರಾಬಾದ್‌ನ ಏಳನೇಯ ನಿಜಾಮ್ ಮೀರ್ ಉಸ್ಮಾನ್ ಅಲಿ ಖಾನ್ ಅವರು ದಾನ ಮಾಡುತ್ತಾರೆ. ಮೀರ್ ಉಸ್ಮಾನ್ ಅಲಿ ಖಾನ್ ಅವರು ಸಾಹಿತ್ಯ, ಸಂಗೀತ ಮತ್ತು ಲಲಿತ ಕಲೆಗಳ ಆರಾಧಕರಾಗಿದ್ದರು. ಜಾತ್ಯತೀತ ಮನೋಭಾವ ರೂಢಿಸಿಕೊಂಡಿದ್ದರು. ಖ್ಯಾತ ಹಿಂದೂಸ್ತಾನಿ ಗಾಯಕ ಪಂ. ಮೋತಿಲಾಲ್ ಅವರು ಕಾಶ್ಮೀರದ ಮಹಾರಾಜಾ ಪ್ರತಾಪ್ ಸಿಂಗ್ ಅವರ ಆಸ್ಥಾನ ಗಾಯಕರಾಗಿದ್ದರು. ಮೇವಾಟಿ ಘರಾಣಾದ ಪ್ರಮುಖ ಸಂಗೀತಗಾರರಾಗಿದ್ದ ಪಂ. ಮೋತಿಲಾಲ್ ಮೂಲತಃ ಹರಿಯಾಣ ರಾಜ್ಯದ ಫತೇಹಾಬಾದ್ ಜಿಲ್ಲೆಯ ಪಿಲಿಮಾಂಡೋರಿ ಗ್ರಾಮದ ಸಂಪ್ರದಾಯಸ್ಥ ಬ್ರಾಹ್ಮಣರು. ಪಂ. ಮೋತಿಲಾಲ್ ಅವರದು ಬಹು ದೊಡ್ಡ ಸಂಸಾರ. ಖ್ಯಾತ ಹಿಂದೂಸ್ತಾನಿ ಶಾಸ್ತ್ರೀಯ ಗಾಯಕ ಪಂ. ಜಸರಾಜ್ ಸೇರಿ ಪಂ. ಮಣಿರಾಮ, ಪಂ. ಪ್ರತಾಪ್ ನಾರಾಯಣರೆಂಬ ಮೂರು ಜನ ಮಕ್ಕಳು. ಪಂ. ಮೋತಿಲಾಲ್ ಅವರಿಗೆ ಪಂ. ಜ್ಯೋತಿಲಾಲ್ ಎಂಬ ಸಹೋದರನಿದ್ದ. ತಮ್ಮನೊಂದಿಗೆ ಸೇರಿ ಪಂ. ಮೋತಿಲಾಲ್ ಜುಗಲ್ ಬಂದಿ ಗಾಯನ ಮಾಡುತ್ತಿದ್ದರು. ಪಂ. ಮೋತಿಲಾಲ್ ಅವರು ಖಯಾಲ್ ಗಾಯನವಲ್ಲದೆ, ದೃಪದ್, ಧಮಾರ್, ಠುಮ್ರಿ, ಟಪ್ಪಾ, ಭಜನ್ ಮತ್ತು ಹವೇಲಿ ಸಂಗೀತದಲ್ಲಿ ಹೆಸರು ಮಾಡಿದ್ದರು.   ಕಾಶ್ಮೀರದ ಮಹಾರಾಜಾ ಪ್ರತಾಪ್ ಸಿಂಗ್ ಆಸ್ಥಾನದ ಸಂಗೀತಗಾರರಾಗಿದ್ದ ಪಂ. ಮೋತಿಲಾಲ್ ಅವರು ಅಲ್ಲಿನ ದಿವಾನರ ಜೊತೆಗೆ ಜಗಳ ಮಾಡಿಕೊಂಡು ರಾಜಾಶ್ರಯ ತೊರೆಯುತ್ತಾರೆ. ಪಂ. ಮೋತಿಲಾಲ್ ಅವರ ಸಂಗೀತ ಪ್ರತಿಭೆ, ಖ್ಯಾತಿ ಮತ್ತು ದಿವಾನರ ಜೊತೆಗಿನ ಮನಸ್ತಾಪದ ಅಹಿತ ಘಟನೆಯ ಸುದ್ದಿ ತಿಳಿದ ಮೀರ್ ಉಸ್ಮಾನ್ ಅಲಿ ಖಾನ್ ಅಸಫ್ ಝಾ ಅವರು ತಮ್ಮ ಆಸ್ಥಾನ ಗಾಯಕರಾಗಲು ಅವರಿಗೆ ಆಹ್ವಾನ ನೀಡುತ್ತಾರೆ. ಹೈದ್ರಾಬಾದ್ ನಿಜಾಮ್ ಅವರ ಆಸ್ಥಾನ ಗಾಯಕರಾಗಲು ಪಂ. ಮೋತಿಲಾಲ್ ಅವರು ಮನಸಾರೆ ಒಪ್ಪಿಕೊಳ್ಳುತ್ತಾರೆ. ಇನ್ನೇನು ನಿಜಾಮ್ ಆಸ್ಥಾನ ಸೇರಿಕೊಳ್ಳಬೇಕು ಎನ್ನುವಷ್ಟರಲ್ಲಿ ಪಂ. ಮೋತಿಲಾಲ್ ಅವರು ಅಸು ನೀಗುತ್ತಾರೆ. ಬೇರೊಬ್ಬ ರಾಜನಾದರೆ ಅಗಲಿದ ಗಾಯಕನಿಗೆ ಶ್ರದ್ಧಾಂಜಲಿ ಅರ್ಪಿಸಿ ಆ ವಿಷಯ ಅಲ್ಲಿಗೆ ಸಮಾಪ್ತಿ ಮಾಡುತ್ತಿದ್ದರು. ಆದರೆ ಮೀರ್ ಉಸ್ಮಾನ್ ಅಲಿ ಖಾನ್ ಅವರು ಪಂ. ಮೋತಿಲಾಲ್ ಅವರ ಕುಟುಂಬ ಬೀದಿ ಪಾಲಾಗಲು ಬಿಡುವುದಿಲ್ಲ. ಅವರ ಹಿರಿಯ ಪುತ್ರ ಪಂ. ಮಣಿರಾಮನನ್ನು ಆಸ್ಥಾನ ಗಾಯಕರನ್ನಾಗಿ ನೇಮಕ ಮಾಡಿಕೊಳ್ಳುತ್ತಾರೆ. ಪಂ. ಮಣಿರಾಮ ಅವರೊಂದಿಗೆ ಅವರ ಸಮಸ್ತ ಕುಟುಂಬವೇ ಹೈದ್ರಾಬಾದ್‌ಗೆ ವಲಸೆ ಬರುತ್ತದೆ. ಪಂ. ಜಸರಾಜ್ ಅವರಿಗೆ ಆಗ ಕೇವಲ ನಾಲ್ಕು ವರ್ಷ ವಯಸ್ಸು. ಪದ್ಮ ವಿಭೂಷಣ ಪಂ. ಜಸರಾಜ್ ಅವರು ಸಂಗೀತದ ಬದುಕು ಕಟ್ಟಿಕೊಂಡಿದ್ದೆ ನಿಜಾಮ್ ಅವರ ಆಸ್ಥಾನದಲ್ಲಿ. ಪಂ. ಮೋತಿಲಾಲ್ ಅವರ ಹಿರಿಯ ಪುತ್ರ ಪಂ. ಮಣಿರಾಮ ಅವರು 1934 ರಿಂದ 1944 ರವರೆಗೆ ಅಂದರೆ ಸುಮಾರು ಹತ್ತು ವರ್ಷಗಳ ಕಾಲ ನಿಜಾಮ್ ರಾಜ್ಯದ ಆಸ್ಥಾನ ಗಾಯಕರಾಗಿ ಕಾರ್ಯ ನಿರ್ವಹಿಸುತ್ತಾರೆ. ವಾಸಕ್ಕೆ ಬಹುದೊಡ್ಡ ಮನೆ, ಕೈತುಂಬಾ ಸಂಬಳ ಮತ್ತು ಬೇರೆಡೆಗೆ ಸಂಗೀತ ಕಾರ್ಯಕ್ರಮ ನಡೆಸಲು ಮುಕ್ತ ಅವಕಾಶ ನೀಡಿರುತ್ತಾರೆ. ಪಂ. ಜಸರಾಜ್ ಅವರು ಹೈದ್ರಾಬಾದ್ ಸಂಸ್ಥಾನದೊಂದಿಗೆ ನಿರಂತರ ಸಂಪರ್ಕ ಇಟ್ಟುಕೊಂಡಿದ್ದರು. ನಿಜಾಮ್ ರಾಜ್ಯದಲ್ಲಿ ಎಲ್ಲ ಕಲೆಗಳನ್ನು ಪೋಷಿಸಲಾಗುತ್ತಿತ್ತು. ಸಂಗೀತ ಮತ್ತು ಇನ್ನಿತರ ಕಲೆಗಳಿಗೆ ಉತ್ತೇಜನ ನೀಡಲು ಪ್ರತೇಕ ವಿಭಾಗವನ್ನು ತೆರೆದಿದ್ದರು. ಆ ವಿಭಾಗದಲ್ಲಿ ಎಲ್ಲ ಕಲಾ ಪ್ರಕಾರಗಳ ನೂರಾರು ಜನ ಕಲಾವಿದರಿಗೆ ಉದ್ಯೋಗ ಅವಕಾಶ ಕಲ್ಪಿಸಿದ್ದರು. ಮೀರ್ ಉಸ್ಮಾನ್ ಅಲಿ ಖಾನ್ ಅವರು ಆಸ್ಥಾನ ಗಾಯಕ ಪಂ. ಮಣಿರಾಮ ಅವರೊಂದಿಗೆ ಹಿರಿಯ ಗಾಯಕರಾದ ಉಸ್ತಾದ್ ಬಡೇ ಗುಲಾಮ ಅಲಿ ಖಾನ್, ಉಸ್ತಾದ್ ಅಝೀಝ್ ಅಹ್ಮದ್ ವಾರಸಿ, ಬೇಗಂ ಅಖ್ತರ್ ಅವರಿಗೂ ಅಲ್ಲಿ ಅವಕಾಶ ಕಲ್ಪಿಸಿದ್ದರು. ಆಗಿನ ಕಾಲದಲ್ಲಿ ಸಂಗೀತಗಾರರಿಗೆ ಅತಿ ಹೆಚ್ಚು ಸಂಭಾವನೆ ನೀಡಲಾಗುತ್ತಿತ್ತು. ಪ್ರತಿ ತಿಂಗಳು ರೂ. ಐವತ್ತು ಸಂಭಾವನೆ ನೀಡಿ ಪ್ರತೇಕ ಕಾರ್ಯಕ್ರಮಗಳಿಗೆ ವಿಶೇಷ ಭತ್ತೆ ಪಡೆಯುವ ಅವಕಾಶ ಮಾಡಿಕೊಟ್ಟಿದ್ದರು. ಹೈದ್ರಾಬಾದ್‌ನ ನಿಜಾಮ್ ಎಲ್ಲ ಕಲೆಗಳನ್ನು ಅಪಾರವಾಗಿ ಗೌರವಿಸುತ್ತಿದ್ದರು. ವಿಶೇಷವಾಗಿ ಸಂಗೀತವನ್ನು ಆತ್ಮ ಸಂಗಾತವನ್ನಾಗಿ ಮಾಡಿಕೊಂಡಿದ್ದರು. ಹಾಗಾಗಿ ಹೈದ್ರಾಬಾದ್ ನಗರದಲ್ಲಿ ಆಗ ನಿತ್ಯ ಸಂಗೀತ ಅನುರಣಿಸುತ್ತಿತ್ತು. ನಿಜಾಮ್ ಅವರ ಆಸ್ಥಾನಕ್ಕೆ ದಿಲ್ಲಿ, ಲಕ್ನೊ ಮತ್ತು ಇನ್ನಿತರ ಪ್ರದೇಶಗಳಿಂದ ಖ್ಯಾತ ಗಾಯಕರು ಆಗಮಿಸಿ ಸಂಗೀತ ಕಚೇರಿ ನಡೆಸಿ ಕೊಡುತ್ತಿದ್ದರು. ಉಸ್ತಾದ್ ಇನಾಯತ್ ಖಾನ್, ಉಸ್ತಾದ್ ತನರಸ್ ಖಾನ್, ಉಸ್ತಾದ್ ರಝೀಯುದ್ದೀನ್ ಬಾಹುದ್ದೀನ್ ಖಾನ್ ಅವರಂತಹ ದಿಗ್ಗಜ ಕಲಾವಿದರನ್ನು ಆಹ್ವಾನಿಸುತ್ತಿದ್ದರು. ವಿಶೇಷವೆಂದರೆ, ಕರ್ನಾಟಕ ಸಂಗೀತ ಪರಂಪರೆಯ ಖ್ಯಾತ ವೀಣಾ ವಾದಕ ವೀಣೆ ಶೇಷಣ್ಣನವರು ಕೂಡ ಹೈದ್ರಾಬಾದ್ ನಗರಕ್ಕೆ ಆಗಮಿಸಿ ನಿಜಾಮ್ ಅವರ ಆಸ್ಥಾನದಲ್ಲಿ ಸಂಗೀತ ಕಚೇರಿ ನಡೆಸಿಕೊಡುತ್ತಿದ್ದರು. ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದಲ್ಲಿ ಖಯಾಲ್ ಗಾಯನ ಎಂಬುದು ಅತ್ಯಂತ ಜನಪ್ರಿಯ ಮತ್ತು ಪ್ರಮುಖ ಗಾಯನ ಪ್ರಕಾರ. ಖಯಾಲ್ ಗಾಯನ ಪ್ರಕಾರದ ಬೆಳವಣಿಗೆಯಲ್ಲಿ ಹೈದ್ರಾಬಾದ್ ರಾಜ್ಯದ ನಿಜಾಮ್ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ. ಹಲವು ಘರಾಣಾ ಪರಂಪರೆಯಲ್ಲಿ ಗೋಖಲೆ ಘರಾಣಾವು ಒಂದು. ಗೋಖಲೆ ಘರಾಣೆಯ ಮೂಲ ಹೈದ್ರಾಬಾದ್ ನಿಜಾಮ್ ಸಂಸ್ಥಾನದಲ್ಲಿ ಕಾಣಬಹುದಾಗಿದೆ. ಹಿಂದೂಸ್ತಾನಿ ಸಂಗೀತದ ಹುಟ್ಟು ಮತ್ತು ಬೆಳವಣಿಗೆಗೆ ಮೊಗಲರು ಪ್ರಮುಖ ಕಾರಣ. ಮೊಗಲ್ ಸಾಮ್ರಾಜ್ಯದ ಕವಿ, ಚಿಂತಕ, ಸೂಫಿ ಅಮೀರ್ ಖುಸ್ರೋ ಹಿಂದೂಸ್ತಾನಿ ಸಂಗೀತವನ್ನು ಅದರಲ್ಲೂ ಖಯಾಲ್ ಗಾಯನ ಪದ್ಧತಿಗೆ ಹೊಸ ರೂಪ ಕೊಟ್ಟವರು. ತಾನ್ ಸೇನರಂತಹ ಮಹಾನ್ ಗಾಯಕರಿಗೆ ಆಶ್ರಯ ನೀಡಿದ ಕೀರ್ತಿ ಮೊಗಲ್ ಆಳರಸರಿಗೆ ಸಲ್ಲುತ್ತದೆ. ಮೊಗಲ್ ಸಾಮ್ರಾಜ್ಯದ ಕೊನೆಯ ದೊರೆ ಬಹಾದ್ದೂರ್ ಶಾ ಜಾಫರ್ ಅಧಿಕಾರ ಕಳೆದುಕೊಂಡ ಮೇಲೆ ಅಸಂಖ್ಯಾತ ಸಾಹಿತಿ, ಕಲಾವಿದರಿಗೆ ಆಶ್ರಯವಿಲ್ಲದಂತಾಗುತ್ತದೆ. ಮೊಗಲ್ ಆಸ್ಥಾನದ ಬಹುಪಾಲು ಸಾಹಿತಿಗಳು, ಸಂಗೀತಗಾರರು ಹೈದ್ರಾಬಾದ್ ರಾಜ್ಯದತ್ತ ಮುಖ ಮಾಡುತ್ತಾರೆ. ಅಲ್ಲಿಂದ ವಲಸೆ ಬಂದ ಕಲಾವಿದರಿಗೆ ಮೀರ್ ಉಸ್ಮಾನ್ ಅಲಿ ಖಾನ್ ಅವರು ಆಶ್ರಯ ನೀಡುತ್ತಾರೆ. ಸಂಗೀತ ಕಲಾವಿದರ ಗಾಯನ, ಕವಿಗಳ ಕಾವ್ಯ ಮತ್ತು ಚಿಂತಕರ ವಿಚಾರಧಾರೆಗಳನ್ನು ಜನಮಾನಸಕ್ಕೆ ತಲುಪಿಸಲು ಸ್ವಂತ ರೇಡಿಯೊ ಸ್ಟೇಷನ್ ಸ್ಥಾಪಿಸುತ್ತಾರೆ. 1935ರಲ್ಲಿ ನಿಜಾಮ್ ರಾಜ್ಯದ ಮೊದಲ ಅಧಿಕೃತ ರೇಡಿಯೊ ಸ್ಟೇಷನ್ ಮೀರ್ ಉಸ್ಮಾನ್ ಅಲಿ ಖಾನ್ ಅವರ ಮುಂದಾಳತ್ವದಲ್ಲಿ ಆರಂಭವಾಗುತ್ತದೆ. ಆಗ ಸಿನೆಮಾ ಸಂಗೀತ ಹೆಚ್ಚು ಕೇಳಿ ಬರುತ್ತಿರಲಿಲ್ಲ. ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಸೇರಿದಂತೆ ಖವ್ವಾಲಿ, ಸೂಫಿ, ಗಝಲ್ ಮತ್ತು ಲೋಕ ಸಂಗೀತದ ಪ್ರಸಾರಕ್ಕೆ ಡೆಕ್ಕನ್ ರೇಡಿಯೊ ಸ್ಟೇಷನ್ ಬಹು ದೊಡ್ಡ ವೇದಿಕೆಯಾಗಿ ಪರಿಣಮಿಸಿತು. ವಾದ್ಯ ಮತ್ತು ಗಾಯನ ಪ್ರಕಾರದ ಕಾರ್ಯಕ್ರಮಗಳು ಬಿತ್ತರಗೊಳ್ಳುತ್ತಿದ್ದವು. ಖ್ಯಾತ ಸಂಗೀತಗಾರ ರೋಷನ್ ಅಲಿಯವರು ಡೆಕ್ಕನ್ ರೇಡಿಯೊದ ಮೊದಲ ನಿರ್ದೇಶಕರಾಗಿ ನೇಮಕಗೊಂಡಿದ್ದರು. ಖ್ಯಾತ ಗಝಲ್ ಗಾಯಕ ಎಂ.ಎ. ರವೂಫ್ ಅವರು ಡೆಕ್ಕನ್ ರೇಡಿಯೊ ಸ್ಟುಡಿಯೊದ ಕಾರ್ಯ ನಿರ್ವಾಹಕ ಅಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಾರೆ. ಅವರ ಅಧಿಕಾರವಧಿಯಲ್ಲಿ ಡೆಕ್ಕನ್ ರೇಡಿಯೊ ಅಪಾರ ಜನಪ್ರಿಯತೆ ಗಳಿಸುತ್ತದೆ. ಮೂವತ್ತು ನಲುವತ್ತರ ದಶಕದಲ್ಲಿ ಡೆಕ್ಕನ್ ರೇಡಿಯೊ ಹೈದ್ರಾಬಾದ್ ರಾಜ್ಯದಲ್ಲಿ ಮನೆ ಮಾತಾಗುತ್ತದೆ. ಅದರ ಖ್ಯಾತಿ ಎಲ್ಲೆಡೆ ಹಬ್ಬುತ್ತದೆ. ಡೆಕ್ಕನ್ ರೇಡಿಯೊದ ಖ್ಯಾತಿಗೆ ಮಾರು ಹೋಗಿ ಅನೇಕ ರಾಷ್ಟ್ರ ಮಟ್ಟದ ಖ್ಯಾತಿಯ ಸಂಗೀತಗಾರರು ಸಂಗೀತ ಕಚೇರಿ ನಡೆಸಿಕೊಡುತ್ತಾರೆ. ಖ್ಯಾತ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತಗಾರರಾದ ಉಸ್ತಾದ್ ಫಯಾಝ್ ಖಾನ್, ಉಸ್ತಾದ್ ಬಡೇ ಗುಲಾಮ ಅಲಿ ಖಾನ್, ವಿದುಷಿ ಹೀರಾಬಾಯಿ ಬಡೋದೇಕರ್, ಅವರ ತಂಗಿ ಸರಸ್ವತಿ ರಾಣೆಯವರು ಪ್ರಸ್ತುತ ಪಡಿಸಿದ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಕಾರ್ಯಕ್ರಮಗಳು ಡೆಕ್ಕನ್ ರೇಡಿಯೊ ಸ್ಟೇಷನ್ ಮೂಲಕ ಪ್ರಸಾರಗೊಂಡಿವೆ. ವಿಶೇಷವೆಂದರೆ ಕಿರಾಣಾ ಘರಾಣೆಯ ಸ್ಥಾಪಕ ಪಂ. ಸವಾಯಿ ಗಂಧರ್ವರ ಸಂಗೀತ ಗುರು ಉಸ್ತಾದ್ ಅಬ್ದುಲ್ ಕರೀಂ ಖಾನ್ ಸಾಹೇಬರು ಎರಡು ಬಾರಿ ಹೈದ್ರಾಬಾದ್ ನಗರಕ್ಕೆ ಆಗಮಿಸಿ ಡೆಕ್ಕನ್ ರೇಡಿಯೊದಲ್ಲಿ ಸಂಗೀತ ಕಾರ್ಯಕ್ರಮ ನೀಡುತ್ತಾರೆ. ನಿಜಾಮ್ ಕಾಲದ ಡೆಕ್ಕನ್ ರೇಡಿಯೊ ಕೇವಲ ಖ್ಯಾತ ನಾಮ ಸಂಗೀತಗಾರರಿಗಷ್ಟೇ ವೇದಿಕೆಯಾಗಿರಲಿಲ್ಲ.. ಅಸಂಖ್ಯಾತ ಸ್ಥಳೀಯ ಕಲಾವಿದರಿಗೆ ಪ್ರೋತ್ಸಾಹ ನೀಡಿ ಬೆಳೆಸಿದೆ. ಸಾರಂಗಿ ವಾದಕ ಉಸ್ತಾದ್ ಖಯಾಮ್ ಹುಸೇನ್ ಖಾನ್, ಹಾರ್ಮೋನಿಯಂ ವಾದಕ ಪಂ. ವೆಂಕಟ್ ರಾವ್, ಪಂ. ಅಂಬಾ ಪ್ರಸಾದ್, ತಬಲಾ ವಾದಕ ಉಸ್ತಾದ್ ಶೇಕ್ ದಾವೂದ್, ಜಲತರಂಗ ವಾದಕ ಮತ್ತು ಖ್ಯಾತ ಗಾಯಕರಾದ ಜಿ. ಎನ್. ದಾಂಟ್ಲೆ, ಹೆಸರಾಂತ ಗಾಯಕರಾದ ಶಂಕರ್ ಲಾಲ್ ಮಾಸ್ಟರ್, ವಸುಮತಿ ದಾಂಟ್ಲೆ, ಅಂಬಾದಾಸ್ ಆಪ್ಟೆ, ವಿಠ್ಠಲ್ ರಾವ್ ಮುಂತಾದವರು ಡೆಕ್ಕನ್ ರೇಡಿಯೊ ಮೂಲಕ ಬೆಳಕಿಗೆ ಬಂದು ಖ್ಯಾತಿ ಪಡೆದ ಸ್ಥಳೀಯ ಕಲಾವಿದರು. ಡೆಕ್ಕನ್ ರೇಡಿಯೊ ಒಂದು ಜಾತಿ, ಒಂದು ಧರ್ಮ, ಒಂದು ಭಾಷೆಗೆ ಸೀಮಿತವಾಗಿರಲಿಲ್ಲ. ಆಗ ಹೈದ್ರಾಬಾದ್ ರಾಜ್ಯದಲ್ಲಿ ಉರ್ದು, ಕನ್ನಡ, ತೆಲುಗು ಮತ್ತು ಮರಾಠಿ ಭಾಷೆಗಳನ್ನಾಡುವ ಜನರಿದ್ದರು. ಎಲ್ಲ ಸ್ಥಳೀಯ ಭಾಷೆಗಳಿಗೆ ಡೆಕ್ಕನ್ ರೇಡಿಯೊ ಅವಕಾಶ ಕಲ್ಪಿಸುತ್ತಿತ್ತು. ಜನಪದ ಸಂಗೀತ ಮತ್ತು ವಾದ್ಯ ಪ್ರಕಾರಗಳನ್ನು ಹೆಚ್ಚು ಜನಪ್ರಿಯಗೊಳಿಸಿದ್ದೇ ಡೆಕ್ಕನ್ ರೇಡಿಯೊ ಸ್ಟೇಷನ್. ಆ ಭಾಗದಲ್ಲಿ ದಖನಿ ಡೋಲಕ್ ಕೆ ಗೀತ ಜನಮಾನಸದಲ್ಲಿ ಜನಪ್ರಿಯತೆ ಪಡೆದ ಒಂದು ಕಲಾ ಪ್ರಕಾರ. ಡೋಲಕ್ ವಾದ್ಯವನ್ನು ಬಾರಿಸುತ್ತ ಗೀತೆಗಳನ್ನು ಹಾಡುವ ಸಂಗೀತ ಶೈಲಿ ಹೈದ್ರಾಬಾದ್ ರಾಜ್ಯದಲ್ಲಿ ವಿಶೇಷವಾಗಿ ಬಳಸಲಾಗುತ್ತದೆ. ಮದುವೆ, ಮುಂಜಿ, ನಾಮಕರಣ ಸೇರಿದಂತೆ ಅನೇಕ ಸಭೆ ಸಮಾರಂಭಗಳಲ್ಲಿ ಈ ಗಾಯನ ಪದ್ಧತಿಯನ್ನು ಪ್ರಸ್ತುತ ಪಡಿಸುವ ವಾಡಿಕೆಯಿದೆ. ಈ ಸಂಪ್ರದಾಯ ಈಗಲೂ ಈ ಭಾಗದಲ್ಲಿ ಅತ್ಯಂತ ಜನಪ್ರಿಯ ಕಲಾಪ್ರಕಾರವಾಗಿ ಜೀವಂತವಾಗಿ ಉಳಿದಿದೆ. ದಖನಿ ಡೋಲಕ್ ಗೀತೆಗಳಿಗೆ ಹೆಸರು ಮಾಡಿದ್ದ ಖ್ಯಾತ ಗಾಯಕರಾದ ನೂರ್ ಜಹಾನ್, ಭರತ್ ಪುರಿ, ಖನೀಝ್ ಫಾತಿಮಾ, ಕಮರ್ ಜಹಾನ್, ಬಂಗಾರಿ ಬಾಯಿ ಮುಂತಾದವರು ಡೆಕ್ಕನ್ ರೇಡಿಯೊದಲ್ಲಿ ಹಾಡಿ ಈ ಕಲಾ ಪ್ರಕಾರವನ್ನು ಜನಮಾನಸದಲ್ಲಿ ಖಾಯಂ ಆಗಿ ನೆಲೆ ನಿಲ್ಲುವಂತೆ ಮಾಡಿದ್ದರು. ಹೈದ್ರಾಬಾದ್ ರಾಜ್ಯದ ನಿಜಾಮ್ ಮೀರ್ ಉಸ್ಮಾನ್ ಅಲಿ ಖಾನ್ ಅವರು ಭಾರತೀಯ ಸಂಗೀತದ ಜೊತೆಗೆ ಪಶ್ಚಿಮದ ಸಂಗೀತವನ್ನು ಗೌರವಿಸುತ್ತಿದ್ದರು. ಬ್ರಿಟಿಷರು ಯುರೋಪ್ ಮತ್ತು ಕಂಪನಿ ಸರಕಾರದ ಗಣ್ಯರನ್ನು ಸ್ವಾಗತಿಸಲು ಒಂದು ತಾತ್ಕಾಲಿಕ ಪಾಶ್ಚಿಮಾತ್ಯ ವಾದ್ಯ ಗೋಷ್ಠಿ ತಂಡ ಕಟ್ಟಿದ್ದರು. ಆದರೆ ಮೀರ್ ಮೆಹಬೂಬ್ ಅಲಿ ಖಾನ್ ಮತ್ತು ಮೀರ್ ಉಸ್ಮಾನ್ ಅಲಿ ಖಾನ್ ಒಂದು ಸ್ವತಂತ್ರ ಬ್ರಿಟಿಷ್ ವಾದ್ಯ ಗೋಷ್ಠಿ ತಂಡ ಕಟ್ಟಿ ಹೈದ್ರಾಬಾದ್ ನಗರದ ಭಾಗ -ಏ -ಆಮ್ ಸಾರ್ವಜನಿಕ ಉದ್ಯಾನವನದಲ್ಲಿ ಪ್ರದರ್ಶನಕ್ಕೆ ಇರಿಸುತ್ತಾರೆ. ನಿಜಾಮ್ ಆಸ್ಥಾನದಲ್ಲಿ ಆಫ್ರಿಕಾದ ಸಿದ್ಧಿ ಸಮುದಾಯದವರ ‘ಮಾರ್ಫಾ ಮ್ಯೂಸಿಕ್’ ಕೂಡಾ ಆಶ್ರಯ ಪಡೆದಿದೆ. ಪೂರ್ವ ಆಫ್ರಿಕಾದ ಸಿದ್ಧಿ ಸಮುದಾಯದವರು ನಿಜಾಮ್ ಸೈನ್ಯದೊಳಗೆ ಗಾರ್ಡ್ ಗಳಾಗಿ ಕಾರ್ಯ ನಿರ್ವಹಿಸುತ್ತಿರುತ್ತಾರೆ. ಸಿದ್ಧಿ ಸಮುದಾಯದವರ ಅಸ್ಮಿತೆಯಂತಿರುವ ಮಾರ್ಫಾ ಸಂಗೀತವನ್ನು ನಿಜಾಮ್ ಗುರುತಿಸಿ ಅವಕಾಶ ಕಲ್ಪಿಸುತ್ತಾರೆ. ವಿಶೇಷ ಸಂಭ್ರಮ ಆಚರಣೆಯ ಸಂದರ್ಭದಲ್ಲಿ ವಿವಿಧ ಸಂಗೀತ ಕಲಾ ಪ್ರಕಾರಗಳ ಜೊತೆಗೆ ಸಿದ್ಧಿ ಸಮುದಾಯದವರ ಮಾರ್ಫಾ ಸಂಗೀತ ಪ್ರದರ್ಶನಕ್ಕೆ ಅವಕಾಶ ಮಾಡಿಕೊಡುತ್ತಾರೆ. ಹೀಗಾಗಿ ಮಾರ್ಫಾ ಸಂಗೀತ ಹೈದ್ರಾಬಾದ್ ನಗರದಲ್ಲಿ ಜನಪ್ರಿಯ ಕಲಾಪ್ರಕಾರವಾಗಿ ನೆಲೆ ನಿಂತಿದೆ. ಅದನ್ನು ಗುರುತಿಸಿ ಜನಪ್ರಿಯಗೊಳಿಸಿದ ಕೀರ್ತಿ ನಿಜಾಮ್ ದೊರೆಗಳಿಗೆ ಸಲ್ಲಬೇಕು.   ಹೈದ್ರಾಬಾದ್ ರಾಜ್ಯದ ನಿಜಾಮರು ಪರಂಪರಾಗತವಾಗಿ ಸಂಗೀತ, ಸಾಹಿತ್ಯ ಮತ್ತು ಇನ್ನಿತರ ಲಲಿತ ಕಲೆಗಳಿಗೆ ಪೋಷಕರಾಗಿದ್ದರು. ಏಳನೇಯ ನಿಜಾಮ್ ಮೀರ್ ಉಸ್ಮಾನ್ ಅಲಿ ಖಾನ್ ಅಸಫ್ ಝಾ ಸಂಗೀತ ಮತ್ತು ವಿವಿಧ ಲಲಿತ ಕಲೆಗಳಿಗೆ ವಿಶೇಷ ಉತ್ತೇಜನ ನೀಡಿ ಪೋಷಣೆ ಮಾಡಿದ್ದರು. ಅವರ ಕಾಲದಲ್ಲಿ ಹೈದ್ರಾಬಾದ್ ಸಂಗೀತದ ಕೇಂದ್ರವಾಗಿತ್ತು. ಅವರ ತಾತ ಮುತ್ತಾತರು ಸಂಗೀತ ಮತ್ತು ಇನ್ನಿತರ ಲಲಿತ ಕಲೆಗಳ ಪೋಷಕರಾಗಿದ್ದರು. ಮೊದಲ ಮತ್ತು ಎರಡನೆಯ ನಿಜಾಮ್ ಅವರ ಆಸ್ಥಾನದಲ್ಲಿ ಮಾಲಕ್ ಬಾಯಿ -ಮಾಲಕ್ ಚಾಂದ್ ಎಂಬ ಹೆಸರಿನ ನೃತ್ಯಗಾರ್ತಿ ಇದ್ದಳು. ಮುಖ್ಯ ನೃತ್ಯಗಾರ್ತಿಯಾಗಿದ್ದ ಆಕೆ ಕವಯಿತ್ರಿ ಮತ್ತು ಸಲಹೆಗಾರ್ತಿಯಾಗಿಯೂ ಕಾರ್ಯ ನಿರ್ವಹಿಸುತ್ತಿದ್ದಳು. ಆಕೆಯ ಬುದ್ಧಿವಂತಿಕೆಯನ್ನು ಎಲ್ಲರೂ ಗೌರವಿಸುತ್ತಿದ್ದರು. ಜಾತಿ, ಧರ್ಮ ಮೀರಿ ಪ್ರತಿಭೆಯನ್ನು ಗುರುತಿಸಿ ಗೌರವಿಸುವ ಸತ್ಸಂಪ್ರದಾಯ ನಿಜಾಮ್ ವಂಶದವರ ಅವಿಭಾಜ್ಯ ಅಂಗವೆನಿಸಿದೆ. ಏಳನೇಯ ನಿಜಾಮ್ ಮೀರ್ ಉಸ್ಮಾನ್ ಅಲಿ ಖಾನ್ ಅವರು ಅಸಫ್ ಝಾ ಅವರು ಆತ್ಯಂತಿಕ ನೆಲೆಯಲ್ಲಿ ಸಂಗೀತವನ್ನು ಪ್ರೀತಿಸಿದರು. ಹೈದ್ರಾಬಾದ್ ಕರ್ನಾಟಕ ಪ್ರದೇಶದಲ್ಲಿ ಈ ಹೊತ್ತಿಗೂ ಖವ್ವಾಲಿ, ಸೂಫಿ, ಗಝಲ್ ಮತ್ತು ಭಕ್ತಿ ಸಂಗೀತ ನಿತ್ಯ ಅನುರಣಿಸುತ್ತಿರುವುದು ನಿಜಾಮ್ ಕಾಲದ ದಿವ್ಯ ಸಂಗೀತ ಪರಂಪರೆಯಿಂದಾಗಿ. ಭಾವೈಕ್ಯ, ಸೌಹಾರ್ದ, ಸಾಮರಸ್ಯ ಎಂಬ ಪದ ಪುಂಜಗಳ ಹಂಗಿಲ್ಲದೆ ಹೈದ್ರಾಬಾದ್ ಕರ್ನಾಟಕದ ಸಂಗೀತ ತನ್ನಷ್ಟಕ್ಕೆ ತಾನೆ ಸರ್ವ ಧರ್ಮ, ಸರ್ವ ಸಮುದಾಯಗಳ ಅನಾಹತ ನಾದವನ್ನು ಪ್ರತಿನಿಧಿಸುತ್ತದೆ. ಹೈದ್ರಾಬಾದ್ ರಾಜ್ಯದ ನಿಜಾಮ್ ಅವರು ವಿಶೇಷವಾಗಿ ಏಳನೇಯ ನಿಜಾಮ್ ಮೀರ್ ಉಸ್ಮಾನ್ ಅಲಿ ಖಾನ್ ಅಸಫ್ ಝಾ ಅವರನ್ನು ಭಾರತೀಯ ಸಂಗೀತ ಪರಂಪರೆ ಅತ್ಯಂತ ಗೌರವಪೂರ್ವಕವಾಗಿ ಸ್ಮರಿಸುತ್ತದೆ. ನಿಜಾಮ್ ಕಾಲದ ಸಂಗೀತ ಕುರಿತು ವಿಶೇಷ ಅಧ್ಯಯನ ಕೈಗೊಳ್ಳುವವರಿಗೆ ಪೀಠಿಕೆಯಷ್ಟೇ ಒದಗಿಸಿದ್ದೇನೆ. ಗಂಭೀರ ಅಧ್ಯಯನದ ಅಗತ್ಯವಿದೆ.

ವಾರ್ತಾ ಭಾರತಿ 8 Feb 2026 11:48 am

ವಿವಾಹ ಆಮಂತ್ರಣ ಪತ್ರಿಕೆ ನೀಡಲು ತೆರಳುತ್ತಿದ್ದ ಕುಟುಂಬದ ಮೇಲೆ ಹರಿದ ಕಾರು: ಮೂವರು ಮೃತ್ಯು

ರೇವಾ (ಮಧ್ಯಪ್ರದೇಶ): ವಿವಾಹ ಆಮಂತ್ರಣ ಪತ್ರಿಕೆ ನೀಡಲು ಬೈಕ್ ನಲ್ಲಿ ತೆರಳುತ್ತಿದ್ದ ಕುಟುಂಬದ ಸದಸ್ಯರ ಮೇಲೆ ವೇಗವಾಗಿ ಬಂದ ಆಡಿ ಕಾರೊಂದು ಹರಿದ ಪರಿಣಾಮ, ಮೂವರು ಮೃತಪಟ್ಟಿರುವ ಘಟನೆ ಮಧ್ಯಪ್ರದೇಶದ ರೇವಾ ಜಿಲ್ಲೆಯಲ್ಲಿ ಶನಿವಾರ ಸಂಜೆ ನಡೆದಿದೆ. ಮೃತರನ್ನು ಭಾಗ್ವತ್ ವಿಶ್ವಕರ್ಮ (55), ಅವರ ಪುತ್ರ ಶಿವಂ ವಿಶ್ವಕರ್ಮ ಹಾಗೂ ಅವರ ಸಂಬಂಧಿಕ ಮಹಿಳೆಯಾದ ಶೀತಲ್ ವಿಶ್ವಕರ್ಮ ಎಂದು ಗುರುತಿಸಲಾಗಿದೆ. ಅವರು ತಮ್ಮ ಕುಟುಂಬದ ವಿವಾಹ ಆಮಂತ್ರಣ ಪತ್ರಿಕೆಯನ್ನು ವಿತರಿಸಲು ಬೈಕ್ ನಲ್ಲಿ ತೆರಳುತ್ತಿದ್ದರು ಎನ್ನಲಾಗಿದೆ. ಭಾಗ್ವತ್ ಅವರ ಹಿರಿಯ ಪುತ್ರನ ವಿವಾಹ ಫೆಬ್ರವರಿ 24ರಂದು ನಿಗದಿಯಾಗಿತ್ತು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಆದರೆ, ವಿವಾಹದ ಸಂಭ್ರಮ ದಿಢೀರನೆ ಶೋಕವಾಗಿ ಮಾರ್ಪಟ್ಟಿದ್ದು, ಭಾಗ್ವತ್ ಅವರ ನಿವಾಸದಿಂದ ಕೇವಲ 2 ಕಿಮೀ ದೂರವಿರುವ ರೇವಾ-ಪ್ರಯಾಗ್ ರಾಜ್ ಹೆದ್ದಾರಿಯ ಕೋಸ್ತಾ ಗ್ರಾಮದ ಬಳಿ ಈ ಅಪಘಾತ ಸಂಭವಿಸಿದೆ. ಪ್ರಯಾಗ್ ರಾಜ್ ನಿಂದ ವೇಗವಾಗಿ ಬರುತ್ತಿದ್ದ ಕಾರು, ಅವರ ಬೈಕ್ ಗೆ ಢಿಕ್ಕಿ ಹೊಡೆದು, ಬಳಿಕ ರಸ್ತೆ ವಿಭಜಕಕ್ಕೆ ಢಿಕ್ಕಿ ಹೊಡೆಯಿತು ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದ್ದಾರೆ. ಢಿಕ್ಕಿಯ ತೀವ್ರತೆಗೆ ಬೈಕ್‌ ನಲ್ಲಿದ್ದ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಭಾಗ್ವತ್ ಹಾಗೂ ಶಿವಂ ಚಚೈ ನಿವಾಸಿಗಳಾಗಿದ್ದು, ಶೀತಲ್ ಅವರು ರಥಾರ ಸಮೀಪ ವಾಸಿಸುತ್ತಿದ್ದರು ಎನ್ನಲಾಗಿದೆ. 

ವಾರ್ತಾ ಭಾರತಿ 8 Feb 2026 11:42 am

ಸಂಗೀತದ ಪೈಲ್ವಾನ್ ಐದನಿಯ ಐಕಾನ್

ದಣಿವಿರದ ದನಿ ಪದ ಧನಿಕನೊಡನೆ ಸಂವಾದ

ವಾರ್ತಾ ಭಾರತಿ 8 Feb 2026 11:31 am

ಸುಸ್ಥಿರ ಅಭಿವೃದ್ಧಿಗೆ ಲಿಂಗತ್ವ ಸಮನ್ಯಾಯ ಅಗತ್ಯ

ಶಿಕ್ಷಣ ರಂಗದಲ್ಲಿ ತಳಹಂತದ ಅಧ್ಯಾಪಕರಲ್ಲಿ ಗರಿಷ್ಠ ಸಂಖ್ಯೆಯಲ್ಲಿರುವ ಶಿಕ್ಷಕಿಯರು ಉನ್ನತ ಶಿಕ್ಷಣ ವಲಯಕ್ಕೆ ಬಂದಾಗ ಯಾಕೆ ವಿರಳರಾಗುತ್ತಾರೆ? ಎಲ್ಲ ಪರೀಕ್ಷೆಗಳ ಫಲಿತಾಂಶಗಳ ಪ್ರಮಾಣದಲ್ಲಿ ಮುಂದಿರುವ ಹೆಣ್ಣುಮಕ್ಕಳು ಸಂಶೋಧನಾ ರಂಗದಲ್ಲಿ, ವೃತ್ತಿಪರತೆಯಲ್ಲಿ, ಅಧಿಕಾರದ ಕೇಂದ್ರಗಳಲ್ಲಿ, ನಿರ್ಣಯ ತೆಗೆದುಕೊಳ್ಳುವ ಜಾಗಗಳಲ್ಲಿ, ರಾಜಕೀಯ ಕ್ಷೇತ್ರದಲ್ಲಿ ಕಾಣುವುದಿಲ್ಲ ಯಾಕೆ? ಇದಕ್ಕೂ ಸಮಾಜದ ಪುರುಷ ಪ್ರಧಾನ ಚಿಂತನಾಕ್ರಮಕ್ಕೂ ಇರುವ ನೇರವಾದ ಸಂಬಂಧವನ್ನು ನಾವು ಅಧ್ಯಯನ ಮಾಡಿ, ವಿಶ್ಲೇಷಿಸಿ, ಬದಲಾವಣೆಗೆ ಪರಿಣಾಮಕಾರಿಯಾದ ಉಪಕ್ರಮಗಳನ್ನು ಕೈಗೊಳ್ಳಲು ಕಟಿಬದ್ಧರಾಗಬೇಕಿದೆ. ಕಾವ್ಯ, ಕಥೆ, ಲಲಿತ ಪ್ರಬಂಧ, ವಿಮರ್ಶೆ, ಸಂಶೋಧನೆ ಎಲ್ಲೆಲ್ಲ ಮಹಿಳಾ ಚರಿತ್ರೆಯ ಬೇರುಗಳು ಹರಡಿಕೊಂಡಿವೆಯೋ ಅಲ್ಲೆಲ್ಲ ಸಬೀಹಾ ಭೂಮಿಗೌಡ ಇದ್ದಾರೆ. ಮೂಲತಃ ಮೈಸೂರಿನವರಾಗಿರುವ ಸಬಿಹಾ ಮಂಗಳೂರು ವಿವಿಯ ಸ್ನಾತಕೋತ್ತರ ಕೇಂದ್ರದ ನಿರ್ದೇಶಕರಾಗಿ ಹಾಗೂ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿವಿಯ ಕುಲಪತಿಗಳಾಗಿ ಕಾರ್ಯನಿರ್ವಹಿಸಿದ್ದಾರೆ. ೧೮ ಸ್ವತಂತ್ರಮತ್ತು ೨೮ ಸಂಪಾದಿತಕೃತಿಗಳನ್ನು ಪ್ರಕಟಿಸಿರುವ ಇವರು, ‘ದಕ್ಷಿಣ ಕನ್ನಡಜಿಲ್ಲೆಯಲ್ಲಿ ಸಣ್ಣ ಕತೆಗಳಹುಟ್ಟು ಬೆಳವಣಿಗೆ’ ಮಹಾ ಪ್ರಬಂಧಕ್ಕೆ ಪಿಎಚ್‌ಡಿಯನ್ನು ಪಡೆದಿದ್ದಾರೆ. ಮಹಿಳೆಯ ಮೇಲೆ ನಡೆಯುವ ಶೋಷಣೆಯ ವಿವಿಧ ರೂಪಗಳನ್ನು ಚರ್ಚಿಸುತ್ತಲೇ, ಸಮತೆಯ ಕಡೆ ಸಮನ್ವಯ ದಾರಿಯೊಂದನ್ನು ಈ ಲೇಖನದಲ್ಲಿ ಅವರು ಕಂಡುಕೊಂಡಿದ್ದಾರೆ. ಇರುವ ಸ್ಥಿತಿಗಿಂತ ಉತ್ತಮ ಸ್ಥಿತಿಗೆ ಏರುವುದನ್ನು ಅಭಿವೃದ್ಧಿ ಎಂದು ಗುರುತಿಸುತ್ತಾ, ಇದೊಂದು ಧನಾತ್ಮಕ ಬದಲಾವಣೆಯನ್ನು ತರುವ ಬೆಳವಣಿಗೆಯ ಪ್ರಕ್ರಿಯೆ ಎಂದು ಗುರುತಿಸಲಾಗುತ್ತದೆ. ಅಭಿವೃದ್ಧಿಯನ್ನು ಒಂದು ಪ್ರದೇಶ ಅಥವಾ ಜಿಲ್ಲೆಯ ನೆಲೆಯಲ್ಲಿ ಗುರುತಿಸುವ ಸಂದರ್ಭದಲ್ಲಿ, ಎಲ್ಲೆಲ್ಲಿ ವಿಶಾಲವಾದ ಮತ್ತು ಒಳ್ಳೆಯ ರಸ್ತೆಗಳು, ಭವ್ಯ ಕಟ್ಟಡಗಳು, ಹತ್ತುಹಲವು ಕಾರ್ಖಾನೆಗಳು, ಆಡಳಿತ ಕಚೇರಿಗಳ ಉಪಸ್ಥಿತಿ, ಅನೇಕ ಶಾಲೆ, ಕಾಲೇಜುಗಳ ಸೌಲಭ್ಯ, ಆರೋಗ್ಯ ಸೇವೆಗಳ ಲಭ್ಯತೆ, ಅಂದವಾದ ಉದ್ಯಾನವನಗಳು ಇತ್ಯಾದಿಗಳು ಇರುತ್ತವೋ ಅವು ಆ ಪ್ರದೇಶದ ಅಭಿವೃದ್ಧಿಯ ಸೂಚಕಗಳೆಂದು ಗುರುತಿಸಲಾಗುತ್ತದೆ.   ಅಭಿವೃದ್ಧಿ ಎಂದರೆ ಇಷ್ಟಿದ್ದರೆ ಸಾಕೇ? ಇದು ಸುಸ್ಥಿರ ಅಭಿವೃದ್ಧಿಯೇ? ಅಭಿವೃದ್ಧಿಗೂ ಸುಸ್ಥಿರ ಅಭಿವೃದ್ಧಿಗೂ ಮೂಲಭೂತ ವ್ಯತ್ಯಾಸಗಳು ಇವೆಯೇ? ಇದ್ದಲ್ಲಿ ಅವು ಯಾವುವು? ಸುಸ್ಥಿರ ಅಭಿವೃದ್ಧಿಯ ಪರಿಕಲ್ಪನೆ ಯಾವಾಗ ಮುನ್ನಡೆಗೆ ಬಂದಿತು? ಅದಕ್ಕೂ ಲಿಂಗತ್ವ ಸಮನ್ಯಾಯಕ್ಕೂ ಸಂಬಂಧವಿದೆಯೇ? ಇದ್ದಲ್ಲಿ ಅದರ ಸ್ವರೂಪವೇನು? ಇವೇ ಮುಂತಾದ ಪ್ರಶ್ನೆಗಳನ್ನು ಕೇಳಿಕೊಳ್ಳೋಣ. ೧೯೮೯ ರಲ್ಲಿ ಮೊತ್ತ ಮೊದಲ ಬಾರಿಗೆ ಸುಸ್ಥಿರ ಅಭಿವೃದ್ಧಿಯ ಪರಿಕಲ್ಪನೆ ಬಳಕೆಗೆ ಬಂದಿತು. ಅಭಿವೃದ್ಧಿಯ ಓಟದಲ್ಲಿ ನಾವು ಕೆಲವೇ ಕೆಲವರ ಹಿತವನ್ನು ಮಾತ್ರ ಗಮನಿಸಿದ ತಪ್ಪನ್ನು ಎಸಗಿದ್ದೇವೆ. ನಿರ್ದಿಷ್ಟ ವರ್ಗ, ಗುಂಪಿನ, ಸಮುದಾಯದ ಅಭಿವೃದ್ಧಿಯನ್ನೇ ಸಮಾಜದ ಸರ್ವರ ಅಭಿವೃದ್ಧಿ ಎಂದು ವ್ಯಾಖ್ಯಾನಿಸಿ, ಅವರ ಹಿತವನ್ನೇ ಎಲ್ಲರ ಹಿತ, ಪ್ರದೇಶದ ಹಿತವೆಂದು ನಂಬಿಸಿಬಿಟ್ಟಿದ್ದೇವೆ. ಇಂತಹ ಅಭಿವೃದ್ಧಿಯು ಸಾಮಾನ್ಯವಾಗಿ ಉಳ್ಳವರ, ಬಂಡವಾಳಿಗರ, ಅಧಿಕಾರಸ್ಥರ, ಮೇಲ್ಜಾತಿಗಳ, ಅಕ್ಷರಸ್ಥರ ಮತ್ತು ನಗರವಾಸಿಗಳ ಹಿತವನ್ನಷ್ಟೇ ಗಮನಿಸಿದೆ. ಹೀಗಾಗಿ ಬಹುಸಂಖ್ಯಾತರ, ಗ್ರಾಮೀಣರ, ಬಡವರ, ಅನಕ್ಷರಸ್ಥರ ಅಗತ್ಯ, ನಿರೀಕ್ಷೆ, ಸಕ್ರಿಯ ಪಾಲ್ಗೊಳ್ಳುವಿಕೆ ಮತ್ತು ಅವರ ಹಿತವನ್ನು ಪರಿಗಣಿಸಿದ ಅಭಿವೃದ್ಧಿಯನ್ನು ಸುಸ್ಥಿರ ಅಭಿವೃದ್ಧಿಯೆಂದು ಪರಿಗಣಿಸಬೇಕಿದೆ. ಅಭಿವೃದ್ಧಿಯು ಲಿಂಗತ್ವದ ಮೇಲೆ ಬೀರಿದ ಪರಿಣಾಮಗಳನ್ನು ಐದು ನೆಲೆಗಳಲ್ಲಿ ಗಮನಿಸಬಹುದು. ಅವುಗಳೆಂದರೆ ಲಿಂಗಾನುಪಾತ, ಶಿಕ್ಷಣ, ಆರೋಗ್ಯ, ಆರ್ಥಿಕತೆ ಮತ್ತು ಪರಿಸರ. ಲಿಂಗಾನುಪಾತ : ಸಂತಾನ ನಿಯಂತ್ರಣದ ಆವಿಷ್ಕಾರವು ಪ್ರಗತಿಯ ಹಾದಿಯಲ್ಲಿನ ದೊಡ್ಡ ಕೊಡುಗೆ ಎನಿಸಿದೆ. ಅಷ್ಟೇ ಅಲ್ಲ ಮಹಿಳೆಯರಿಗೆ ತಮ್ಮ ದೇಹದ ಮೇಲಿನ ಹಕ್ಕನ್ನು ಮೊತ್ತಮೊದಲ ಬಾರಿಗೆ ಒದಗಿಸಿ, ಅವರ ಬದುಕಿನಲ್ಲಿ ಊಹಾತೀತ ಬದಲಾವಣೆಯನ್ನು ತಂದುದು ನಮಗೆಲ್ಲ ಗೊತ್ತಿರುವ ಸಂಗತಿ. ಇಂತಹ ವಿಜ್ಞಾನದ ಆವಿಷ್ಕಾರದ ಭಾಗವಾದ ಆಮ್ನಿಯೋ ಸಿಂಥೆಸಿಸ್ ನ ಉದ್ದೇಶವು ಭ್ರೂಣದ ಆರೋಗ್ಯವನ್ನು ಪ್ರಸವ ಪೂರ್ವದಲ್ಲಿ ತಿಳಿದು, ಅದರ ಆರೋಗ್ಯದ ಕುರಿತು ಮುಂಜಾಗ್ರತೆ ವಹಿಸಲು ಇದು ವರದಾನವಾಯಿತು. ಆದರೆ ಸಂತಾನ ನಿಯಂತ್ರಣ ಎಂಬುದು ಕುಟುಂಬದಲ್ಲಿ ಮಕ್ಕಳ ಸಂಖ್ಯೆಯನ್ನು ನಿಯಂತ್ರಿಸುವ ಬದಲು, ಮಗುವಿನ ಲಿಂಗದ ಆಯ್ಕೆ(ಸೆಲೆಕ್ಷನ್)ಯ ಉದ್ದೇಶಕ್ಕೆ ಬಳಕೆಯಾಗ ತೊಡಗಿತು. ಇದಕ್ಕೆ ಗಂಡು ಮಗುವಿನ ಕುರಿತ ಸಾಂಪ್ರದಾಯಿಕವಾದ ಚಿಂತನೆಯು ಪ್ರಮುಖವಾದ ಕಾರಣ. ಉಳ್ಳವರಲ್ಲಿ ಆಸ್ತಿಯು ಬೇರೆಕಡೆ ವರ್ಗಾವಣೆ ಆಗದಂತೆ ತಡೆಯಲು ಲಿಂಗದ ಆಯ್ಕೆಯ ಪ್ರಕ್ರಿಯೆ ಪ್ರಬಲವಾಯಿತು. ಹೀಗೆ ಭ್ರೂಣದ ಆರೋಗ್ಯದ ಸ್ಥಿತಿಗತಿಯನ್ನು ಅರಿಯಲು ಜಾರಿಗೆ ಬಂದ ತಂತ್ರಜ್ಞಾನವು ಹೆಣ್ಣು ಭ್ರೂಣ ಹತ್ಯೆಗೆ ನಾಂದಿ ಆಯ್ತು. ತಂತ್ರಜ್ಞಾನದ ಇಂಥ ಕ್ರೂರ ಮತ್ತು ಅಮಾನವೀಯ ವಿರೂಪಿತ ಅಳವಡಿಕೆಯ ವಿರುದ್ಧ ಆರಂಭವಾದ ಹೋರಾಟವು ಮೂರು ದಶಕಗಳ ಬಳಿಕವೂ ಇನ್ನೂ ಮುಗಿದಿಲ್ಲ. ಹೊಸ ಹೊಸ ರೂಪದಲ್ಲಿ ಮತ್ತು ಗುಟ್ಟು ಗುಟ್ಟಾಗಿ ಎಲ್ಲೆಡೆ ತನ್ನ ಕ್ರೂರ ಬಾಹುಗಳನ್ನು ವಿಸ್ತರಿಸಿಕೊಂಡಿದೆ. ತೀರ ಇತ್ತೀಚೆಗೆ ಬೆಂಗಳೂರು, ಮಂಡ್ಯ, ಶ್ರೀರಂಗಪಟ್ಟಣ ಮತ್ತು ಮೈಸೂರು ಮುಂತಾದ ಪಟ್ಟಣಗಳಲ್ಲಿ ಬೆಳಕಿಗೆ ಬಂದ ಅಕ್ರಮ ಸ್ತ್ರೀ ಭ್ರೂಣ ಹತ್ಯೆಯ ಪ್ರಕರಣಗಳು ಇದಕ್ಕೆ ಜೀವಂತ ಸಾಕ್ಷಿಗಳು. ಲಿಂಗಾನುಪಾತವು ಕರ್ನಾಟಕದಲ್ಲಿ ಗಂಭೀರ ಸಮಸ್ಯೆ ಆಗಿದೆ ಎಂಬುದನ್ನು ಇದು ಸೂಚಿಸುತ್ತದೆ. ೧೯೭೧ರಲ್ಲಿ ಸಾವಿರಕ್ಕೆ ೯೫೭ರಷ್ಟು ಇದ್ದ ಲಿಂಗಾನುಪಾತವು ೨೦೧೧ರಲ್ಲಿ ೯೭೩ ರಷ್ಟು ಹೆಚ್ಚಾಗಿದೆ ಎಂದು ಮೇಲ್ನೋಟಕ್ಕೆ ಗೋಚರಿಸಿದರೂ ಆರು ವರ್ಷದೊಳಗಿನ ಹೆಣ್ಣುಮಕ್ಕಳ ಸಂಖ್ಯೆಯು ಕ್ರಮವಾಗಿ ೯೭೮ ರಿಂದ ೯೪೮ ರಷ್ಟು ಕುಸಿತ ಕಂಡಿರುವುದು ಕಳವಳಕಾರಿಯಾದ ವಿಷಯ. ಕಳೆದ ಐದು ದಶಕಗಳ ಹಿಂದಿಗಿಂತ ಇಂದು ಶಿಕ್ಷಣ, ನಗರೀಕರಣ, ಉದ್ಯೋಗೀಕರಣ, ಆರ್ಥಿಕ ಅಭಿವೃದ್ಧಿ, ಆರೋಗ್ಯ ಸೇವೆಗಳ ಲಭ್ಯತೆ ಇವೇ ಮುಂತಾದವು ಉತ್ತಮ ಸ್ಥಿತಿಯಲ್ಲಿ ಇದ್ದಾಗ್ಯೂ ಲಿಂಗಾನುಪಾತದ ಕುಸಿತವು ಅಭಿವೃದ್ಧಿಯ ಕುರಿತ ಸಾಂಪ್ರದಾಯಿಕ ಚಿಂತನೆಗಳ ಮರು ವಿಮರ್ಶೆಯ ಅಗತ್ಯವನ್ನು ಸೂಚಿಸುತ್ತದೆ.   ೨೦೧೩-೧೫ ರಲ್ಲಿ ಗ್ರಾಮೀಣ ಭಾಗದಲ್ಲಿ ೯೬೭ರಷ್ಟಿದ್ದ ಲಿಂಗಾನುಪಾತವು ೨೦೧೭-೧೯ರಲ್ಲಿ ೯೪೧ಕ್ಕೆ ಇಳಿದಿದೆ. ನಗರದಲ್ಲಿ ೨೦೧೩-೧೫ ರಲ್ಲಿ ೮೮೭ರಷ್ಟಿದ್ದ ಲಿಂಗಾನುಪಾತವು ೮೭೩ ರಷ್ಟು ಕಳವಳಕಾರಿಯಾಗಿ ಕುಗ್ಗಿದೆ. ಇಂದು ಎಲ್ಲೆಲ್ಲಿ ನಗರೀಕರಣ, ನೀರಾವರಿ ಸೌಕರ್ಯ ಮತ್ತು ವೈದ್ಯಕೀಯ ಸೌಲಭ್ಯಗಳು ಹೆಚ್ಚಾಗಿವೆಯೋ ಅಲ್ಲಿ ಲಿಂಗಾನುಪಾತವು ಕುಸಿಯುತ್ತ ಸಾಗಿದೆ. ಗ್ರಾಮೀಣರ ಮನೋಭಾವವು ಹೆಣ್ಣುಶಿಶುವಿನ ಕುರಿತ ನಕಾರಾತ್ಮಕ ನಿಲುವನ್ನು ಹೊಂದಿರುವುದನ್ನು ಅಂಕಿ ಅಂಶಗಳು ದೃಢಪಡಿಸುತ್ತವೆ. ಇಂತಹ ಕಳವಳಕಾರಿ ಲಿಂಗಾನುಪಾತವು ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ, ಮಾನವ ಕಳ್ಳ ಸಾಗಣೆ, ಪ್ರವಾಸಿ ಲೈಂಗಿಕೋದ್ಯಮ ಮುಂತಾದ ಇನ್ನಿಷ್ಟು ಭೀಕರವಾದ ಮಹಿಳೆಯರ ಶೋಷಣೆಗೆ ದಾರಿ ಮಾಡಿಕೊಡುತ್ತಿವೆ. ಶಿಕ್ಷಣ : ಶಿಕ್ಷಣವು ವ್ಯಕ್ತಿಯ ಚಿಂತನೆಯ ಮಟ್ಟವನ್ನು ಹೆಚ್ಚಿಸುತ್ತದೆ, ವೈಚಾರಿಕತೆ ಮತ್ತು ವೈಜ್ಞಾನಿಕತೆಯನ್ನು ಬೆಳೆಸುತ್ತದೆ, ವ್ಯಕ್ತಿಯನ್ನು ಸ್ವಾವಲಂಬಿಯನ್ನಾಗಿ ಮತ್ತು ಪ್ರಜ್ಞಾವಂತ ನಾಗರಿಕರನ್ನಾಗಿ ಸೃಷ್ಟಿಸುತ್ತದೆ ಎಂದು ನಂಬಲಾಗಿತ್ತು. ೧೯೭೧ರಲ್ಲಿ ೨೯.೪೫ಶೇ. ಇದ್ದ ಮಹಿಳಾ ಸಾಕ್ಷರತೆಯು ೨೦೧೧ರ ಹೊತ್ತಿಗೆ ೭೪.೦೪ ಶೇ. ಗೆ ಹೆಚ್ಚಿದೆ. ಇದೊಂದು ಗಮನಾರ್ಹ ಮತ್ತು ಹೆಮ್ಮೆ ಪಡಬೇಕಾದ ಸಂಗತಿ ಎಂದು ಮೇಲ್ನೋಟಕ್ಕೆ ಅನಿಸುತ್ತದೆ. ಕಳೆದ ಅರ್ಧ ಶತಮಾನದಲ್ಲಿ ಮಹಿಳೆಯರು ಗಣನೀಯ ಸಂಖ್ಯೆಯಲ್ಲಿ ಉನ್ನತ ಶಿಕ್ಷಣ ಕ್ಷೇತ್ರವನ್ನು ಪ್ರವೇಶಿಸಿದ್ದಾರೆ, ಹೊರದುಡಿಮೆಗೆ ತೆರೆದುಕೊಂಡಿದ್ದಾರೆ. ತಮಗೆ ನಿರ್ಬಂಧಿತವಾದ ಹಲವು ಕ್ಷೇತ್ರಗಳನ್ನು ಪ್ರವೇಶಿಸಿ, ತಮ್ಮ ಸಾಮರ್ಥ್ಯ ಮತ್ತು ಪ್ರಾವೀಣ್ಯವನ್ನು ಮೆರೆದಿರುವುದು ನಿಜ. ಇಂದು ಯಾವುದೇ ಶಿಕ್ಷಣ ಸಂಸ್ಥೆಗಳಲ್ಲಿ ಪದವಿ ಮತ್ತು ಸ್ನಾತಕ ಪದವಿ ಕೋರ್ಸುಗಳಲ್ಲಿ ಓದುತ್ತಿರುವವರಲ್ಲಿ ೭೫ ಶೇ. ದಷ್ಟು ವಿದ್ಯಾರ್ಥಿಗಳು ಹೆಣ್ಣುಮಕ್ಕಳು. ಈ ಬಗ್ಗೆ ಸಂಭ್ರಮಿಸುವ ಹೊತ್ತಲ್ಲೇ, ಪುರುಷ ಪ್ರಧಾನ ಸಾಮಾಜಿಕತೆಯು ಹೆಣ್ಣುಮಕ್ಕಳಿಗೆ ಒದಗಿಸಿದ ಉದ್ಯೋಗ ರಂಗದ ಅವಕಾಶವನ್ನು ಸ್ವಲ್ಪ ಕೂಲಂಕಷವಾಗಿ ವಿಶ್ಲೇಷಿಸಬೇಕು. ಶಿಕ್ಷಣ ರಂಗದಲ್ಲಿ ತಳಹಂತದ ಅಧ್ಯಾಪಕರಲ್ಲಿ ಗರಿಷ್ಠ ಸಂಖ್ಯೆಯಲ್ಲಿರುವ ಶಿಕ್ಷಕಿಯರು ಉನ್ನತ ಶಿಕ್ಷಣ ವಲಯಕ್ಕೆ ಬಂದಾಗ ಯಾಕೆ ವಿರಳರಾಗುತ್ತಾರೆ? ಎಲ್ಲ ಪರೀಕ್ಷೆಗಳ ಫಲಿತಾಂಶಗಳ ಪ್ರಮಾಣದಲ್ಲಿ ಮುಂದಿರುವ ಹೆಣ್ಣುಮಕ್ಕಳು ಸಂಶೋಧನಾ ರಂಗದಲ್ಲಿ, ವೃತ್ತಿಪರತೆಯಲ್ಲಿ, ಅಧಿಕಾರದ ಕೇಂದ್ರಗಳಲ್ಲಿ, ನಿರ್ಣಯ ತೆಗೆದುಕೊಳ್ಳುವ ಜಾಗಗಳಲ್ಲಿ, ರಾಜಕೀಯ ಕ್ಷೇತ್ರದಲ್ಲಿ ಕಾಣುವುದಿಲ್ಲ ಯಾಕೆ? ಇದಕ್ಕೂ ಸಮಾಜದ ಪುರುಷ ಪ್ರಧಾನ ಚಿಂತನಾಕ್ರಮಕ್ಕೂ ಇರುವ ನೇರವಾದ ಸಂಬಂಧವನ್ನು ನಾವು ಅಧ್ಯಯನ ಮಾಡಿ, ವಿಶ್ಲೇಷಿಸಿ, ಬದಲಾವಣೆಗೆ ಪರಿಣಾಮಕಾರಿಯಾದ ಉಪಕ್ರಮಗಳನ್ನು ಕೈಗೊಳ್ಳಲು ಕಟಿಬದ್ಧರಾಗಬೇಕಿದೆ. ಇದೇ ಸಂದರ್ಭದಲ್ಲಿ ಶಿಕ್ಷಣದ ಹೆಸರಿನಲ್ಲಿ ನಾವು ಎಳೆಯರಿಗೆ ಯಾವ ಉಣಿಸನ್ನು, ಯಾವ ತಿರುಳನ್ನು ಮತ್ತು ಮಾದರಿಯನ್ನು ನೀಡುತ್ತಿದ್ದೇವೆ ಎಂಬುದು ಚರ್ಚಾರ್ಹ ಸಂಗತಿ. ‘ ವಸಾಹತುಶಾಹಿಯು ತನ್ನ ಅನುಕೂಲಕ್ಕೆ ಕ್ಲರಿಕಲ್ ವರ್ಗವನ್ನು ನಿರ್ಮಿಸಲು ಬೇಕಾದ ಶಿಕ್ಷಣವನ್ನು ನೀಡಿತು ’ ಎಂದು ಆರೋಪಿಸಿದಂತೆ, ಸ್ವತಂತ್ರ ಭಾರತದಲ್ಲಿ ಶಿಕ್ಷಣವನ್ನು ನೀಡುವಾಗ ಮಕ್ಕಳಲ್ಲಿ ವೈಚಾರಿಕತೆ ಮತ್ತು ವೈಜ್ಞಾನಿಕತೆಯನ್ನು ಬೆಳೆಸದೆ, ಪುರುಷ ಪ್ರಧಾನ ಮೌಲ್ಯಗಳನ್ನೇ ಗಂಡು-ಹೆಣ್ಣು ಮಕ್ಕಳಲ್ಲಿ ಬೆಳೆಸುವ ಪಠ್ಯಗಳ ಮಾದರಿಗಳನ್ನು ನೀಡುತ್ತಿದ್ದೇವೆ. ಪ್ರಾಥಮಿಕ ಶಾಲಾ ಪಠ್ಯಗಳ ಪಾಠಗಳಲ್ಲಿ ಲಿಂಗ ತಾರತಮ್ಯದ ಹಸಿಹಸಿ ಮಾದರಿಗಳನ್ನು ಭಾಷೆ, ಪಾತ್ರಗಳು, ಚಿತ್ರ, ವೃತ್ತಿ ಇತ್ಯಾದಿ ನೆಲೆಗಳಲ್ಲಿ ಉಣಪಡಿಸಲಾಗಿದೆ. ಪ್ರಶ್ನಿಸುವ ಮನೋಭಾವವನ್ನು ಎಳವೆಯಿಂದ ಹತ್ತಿಕ್ಕಿ, ಮಕ್ಕಳನ್ನು ಹೇಳಿದ್ದನ್ನು ಪಾಲಿಸುವ ಗೊಂಬೆಗಳನ್ನಾಗಿ ಮಾಡಲಾಗುತ್ತಿದೆ. ಸಮಾನ ಶಿಕ್ಷಣ, ವೃತ್ತಿ, ಜವಾಬ್ದಾರಿ, ಸ್ಥಾನಮಾನಗಳನ್ನು ಸ್ತ್ರೀ-ಪುರುಷರು ಹೊಂದಿದ್ದರೂ ಗೃಹಕೃತ್ಯದ ಜವಾಬ್ದಾರಿ ಇಂದಿಗೂ ಹೆಣ್ಣಿನದೇ ಎಂಬ ನಿಲುವನ್ನು ಯುವಕರು ಹೊಂದಿರುವುದಕ್ಕೂ ಈ ಮೌಲ್ಯಗಳ ಉಣಿಸೇ ಕಾರಣವಾಗಿದೆ.   ಇನ್ನೊಂದೆಡೆ, ಜನಪದ ಜ್ಞಾನವನ್ನು ಅಕಾಡಮಿಕ್ ವಲಯ ಹೇಗೆ ನಿರ್ಲಕ್ಷ ,ಉಪೇಕ್ಷೆ ಮತ್ತು ತಾತ್ಸಾರದಿಂದ ಕಂಡಿದೆಯೋ, ಅವೈಜ್ಞಾನಿಕ ಎಂದು ಹೀಗಳೆದಿದೆಯೋ, ಅದೇ ರೀತಿ ಮಹಿಳೆಯರ ಅನುಭವ ಮೂಲದ ಜ್ಞಾನವನ್ನು ಅಕಾಡಮಿಕ್ ವಲಯವು ನಿರ್ಲಕ್ಷಿಸಿ, ಪರಿಧಿ ಆಚೆ ಇಟ್ಟಿದೆ. ಅವರು ಪೀಳಿಗೆಯಿಂದ ಪಡೆದ ಜ್ಞಾನವನ್ನೆಲ್ಲ ಉಪೇಕ್ಷಿಸಿದೆ. ಓರ್ವ ಹೆಣ್ಣುಮಗಳು ತನ್ನ ಸುತ್ತಲ ಪರಿಸರದಲ್ಲಿ ಆಹಾರವಾಗಿ ಉಪಯೋಗಿಸಬಹುದಾದ ನೂರಾರು ಸಸ್ಯ ಪ್ರಭೇದಗಳನ್ನು ಗುರುತಿಸಿ, ಆಹಾರಕ್ಕೂ ವೈದ್ಯಕೀಯಕ್ಕೂ ಬಳಸಿದರೆ ಅದಕ್ಕೆ ಮಾರುಕಟ್ಟೆ ಸಂಸ್ಕೃತಿಯಲ್ಲಿ ಬೆಲೆ ಇಲ್ಲ; ಅವುಗಳನ್ನು ಗುರುತಿಸಲಾಗದಿದ್ದರೂ ಪದವಿ ಪಡೆದ ಏಕೈಕ ಕಾರಣಕ್ಕೆ ವ್ಯಕ್ತಿಯು ಬಾಟನಿ ತಜ್ಞ ಎನಿಸಿಕೊಳ್ಳಬಹುದು! ಹಸುಗೂಸಿನಿಂದ ಮುದುಕರವರೆಗಿನ ಎಲ್ಲರಿಗೆ ಯಾವ ಯಾವ ಆಹಾರವನ್ನು ಕೊಡಬೇಕು, ಯಾವ ಯಾವಾಗ ಕೊಡಬೇಕು, ಯಾವ ಋತುಮಾನದಲ್ಲಿ ಯಾವ್ಯಾವ ಆಹಾರ ಕೊಡಬೇಕು, ಯಾವ ಹದದಲ್ಲಿ ಬೇಯಿಸಿ, ಯಾವ ಪ್ರಮಾಣದಲ್ಲಿ ವಿಭಿನ್ನ ವಸ್ತುಗಳನ್ನು ಬೆರೆಸಿ ಆಹಾರ ತಯಾರಿಸಬೇಕು ಎಂಬುದನ್ನು ಮಹಿಳೆಯರು ತಮ್ಮ ಪರಂಪರೆಯ ತಿಳುವಳಿಕೆ ಮತ್ತು ನಿರಂತರ ಸಂಶೋಧನಾಶೀಲತೆಯ ಮೂಲಕ ಕಂಡುಕೊಂಡಿದ್ದಾರೆ. ಆದರೆ ಅದಕ್ಕಿಲ್ಲದ ಬೆಲೆ ಫುಡ್ ಸೈನ್ಸ್ ಪದವಿ ಪಡೆದರೆ ಲಭ್ಯವಾಗುತ್ತದೆ! ಇದು ಶಿಕ್ಷಣ ರಂಗದ ರಾಜಕೀಯ. ಆದುದರಿಂದ ಅಕ್ಷರಮೂಲದ, ಪಠ್ಯ ಮೂಲದ, ಶಾಲಾ-ಕಾಲೇಜು ಆವರಣದೊಳಗಿನ ಶಿಕ್ಷಣವೇ ನಿಜವಾದ ಶಿಕ್ಷಣ ಎಂಬ ಭದ್ರ ನಿಲುವು ಮಹಿಳೆಯರ ಜ್ಞಾನ ಪರಂಪರೆಯನ್ನು ಅಗೌರವದಿಂದ ಕಂಡುದು ಮಾತ್ರವಲ್ಲ, ಅದನ್ನು ಅದರ ನಿರಾಕರಣೆಯನ್ನು ಮಾಡುತ್ತಿರುವುದರಿಂದ ಮಹಿಳೆಗೆ ಘನತೆಯ ಬದುಕನ್ನು ಕಟ್ಟಿಕೊಳ್ಳಲು ಇದು ನೆರವಾಗಿಲ್ಲ. ಆದುದರಿಂದ ಇಲ್ಲಿ ಅಭಿವೃದ್ಧಿ ಎಂಬುದು ಮತ್ತೆ ಸಮಾಜದ ಒಂದು ಗುಂಪಿನ ಮೂಗಿನ ನೇರಕ್ಕೆ ರೂಪಿತವಾಗಿ, ಪೋಷಿತವಾಗಿ ಚಲಾವಣೆಗೊಳ್ಳುತ್ತಿವೆ. ಆರ್ಥಿಕ ರಂಗ : ಸಾಮಾನ್ಯವಾಗಿ ದೇಶದ ಆರ್ಥಿಕ ಅಭಿವೃದ್ಧಿಯನ್ನು ಜಿಡಿಪಿ ಮತ್ತು ತಲಾ ವರಮಾನವನ್ನು ಆಧರಿಸಿ ನಿರ್ಧರಿಸಲಾಗುತ್ತದೆ ಆದರೆ ಅವಷ್ಟೇ ಆರ್ಥಿಕ ಸಬಲೀಕರಣದ ಮಾನದಂಡಗಳು ಆದರೆ ಸಾಕೇ? ಅದೂ ಪುರುಷ ಪ್ರಧಾನ ಮೌಲ್ಯಗಳು ಬಲವಾಗಿ ಮತ್ತು ಗಾಢವಾಗಿ ಬೇರೂರಿರುವ ವ್ಯವಸ್ಥೆಯಲ್ಲಿ ಜಿಡಿಪಿಗಳು ಹೇಳುವ ಸತ್ಯಗಳು ಅಥವಾ ಜಿಡಿಪಿ ಮತ್ತು ತಲಾ ವರಮಾನ ನೀಡುವ ಅಂಕಿ ಅಂಶಗಳು ವಾಸ್ತವ ಸತ್ಯಗಳನ್ನು ಮತ್ತು ಲಿಂಗತ್ವದ ನೆಲೆಯ ಸತ್ಯಗಳನ್ನು ಹೇಳುವುದಿಲ್ಲ. ಹೀಗಾಗಿ ಮಾನವ ಅಭಿವೃದ್ಧಿ ಸೂಚ್ಯಂಕಗಳು (ಹೆಚ್ ಡಿ ಐ) ಮಾತ್ರ ವಾಸ್ತವ ಸತ್ಯಗಳಿಗೆ ಹತ್ತಿರವಾಗಿರಬಲ್ಲವು. ಹೆಚ್ ಡಿ ಐ ಎಂಬುದು ಜನರ ಜ್ಞಾನದ ಮಟ್ಟ, ಜೀವನ ಮಟ್ಟ, ಆರೋಗ್ಯ ಸೌಲಭ್ಯ ಇತ್ಯಾದಿಗಳನ್ನು ಆಧರಿಸಿ ಅಭಿವೃದ್ಧಿಯನ್ನು ನಿರ್ಧರಿಸುತ್ತದೆ. ಕರ್ನಾಟಕವು ಮೊತ್ತ ಮೊದಲು ಹೆಚ್‌ಡಿಐ ಮೂಲಕ ಅಭಿವೃದ್ಧಿಯನ್ನು ಅಳೆಯುವ ಕ್ರಮವನ್ನು ಪ್ರಯೋಗಿಸಿ ಕ್ರಾಂತಿಕಾರಿ ಹೆಜ್ಜೆಗಳನ್ನು ಇಟ್ಟಿದ್ದನ್ನು ಮರೆಯುವಂತಿಲ್ಲ. ಮಧ್ಯಮ ವರ್ಗದ ಬಹುತೇಕ ಕುಟುಂಬದ ಹೆಣ್ಣುಮಕ್ಕಳೇ ಅಪೌಷ್ಟಿಕತೆಯಿಂದ ಬಳಲುತ್ತಿರುವುದು ನಮ್ಮ ಮುಂದಿರುವ ವಾಸ್ತವ. ಹೀಗಿರುವಾಗ ಬಿಪಿಎಲ್ ಕುಟುಂಬದ ಹೆಣ್ಣುಮಕ್ಕಳ ಅಪೌಷ್ಟಿಕತೆಯ ಪ್ರಮಾಣವನ್ನು ಊಹಿಸುವುದೂ ಕಷ್ಟ. ಇಂದು ಕಾಲೇಜು ಮತ್ತು ವಿಶ್ವವಿದ್ಯಾನಿಲಯಗಳಲ್ಲಿ ಓದುವ ಅನೇಕ ಯುವತಿಯರು ಕೂಡ ಅಪೌಷ್ಟಿಕತೆಯಿಂದ ಹೊರತಾಗಿಲ್ಲ. ಗರ್ಭಿಣಿಯರು ಮತ್ತು ಹಾಲೂಡಿಸುವ ತಾಯಂದಿರಲ್ಲಿ ಕಡಿಮೆ ತೂಕ ಮತ್ತು ಅಪೌಷ್ಟಿಕತೆ ಗರಿಷ್ಠ ಪ್ರಮಾಣದಲ್ಲಿದೆ. ಇತ್ತೀಚಿನ ಅಂಕಿಅಂಶಗಳ ಪ್ರಕಾರ ಕರ್ನಾಟಕದಲ್ಲಿ ೧.೩ ಲಕ್ಷ ಮಕ್ಕಳು (ಐದು ವರ್ಷಕ್ಕಿಂತ ಕಿರಿಯರು) ಈ ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ ಮತ್ತು ಅದರಲ್ಲೂ ೧೧,೦೦೦ಕ್ಕಿಂತ ಹೆಚ್ಚು ಮಕ್ಕಳು ತೀವ್ರವಾದ ಅಪೌಷ್ಟಿಕತೆಗೆ ಒಳಗಾಗಿದ್ದಾರೆ. ಹೀಗಿರುವಾಗ ಅಭಿವೃದ್ಧಿಯ ನಮ್ಮ ಸಾಂಪ್ರದಾಯಿಕ ದೃಷ್ಟಿಕೋನವನ್ನು ಬದಲಾಯಿಸುವ ಮತ್ತು ಸುಸ್ಥಿರ ಅಭಿವೃದ್ಧಿಯನ್ನು ಸಾಧಿಸಲು ಮಾರ್ಗೋಪಾಯಗಳ ಹುಡುಕಾಟ ಮತ್ತು ಆ ಹಾದಿಯ ಚಲನೆ ನಮ್ಮ ಸಮಾಜದ ತುರ್ತಾಗಬೇಕಿದೆ. ಇಂದಿಗೂ ಬಹುತೇಕ ಕುಟುಂಬಗಳಲ್ಲಿ ತಂಗಳು ಉಣ್ಣುವವರು ಮನೆಯಲ್ಲಿ ಕೊನೆಯಲ್ಲಿ ಉಳಿದದ್ದನ್ನು ಉಣ್ಣುವವರು ಹೆಂಗಸರೇ ಇದು ಸಸ್ಯಾಹಾರ ಮಾಂಸಾಹಾರ ಸೇವನೆಯ ಕುಟುಂಬಗಳಲ್ಲಿ ಏಕರೂಪವಾಗಿ ಗೋಚರಿಸುತ್ತದೆ. ಕೆಲವು ಕಡೆಗಳಲ್ಲಿ ಮಾಂಸಾಹಾರದ ಅಡುಗೆ ಮಾಡುವುದು ಮಾತ್ರ ಹೆಂಗಸರ ಕೆಲಸವಾದರೆ, ಅದನ್ನು ಎಲ್ಲರಿಗೂ ಹಂಚುವುದು ಗಂಡಸರಂತೆ! ಇಂಥ ಪದ್ಧತಿ ಕೆಲವು ಕಡೆ ಮಾತ್ರ ಕಂಡರೂ ಅದರ ಹಿಂದಿನ ತರ್ಕ ಚಿಂತನಾರ್ಹ. ಕೆಲವೆಡೆ ಕೋಳಿ ಕಾಲು ಮತ್ತು ಕೋಳಿ ತಲೆಯನ್ನು ಗಂಡಸರು ತಿಂದರೆ, ಅವರ ತಲೆ ಮತ್ತು ಕಾಲು ನಡುಗುತ್ತದೆ ಎಂಬ ನಂಬಿಕೆಯನ್ನು ಹುಟ್ಟುಹಾಕಿ, ಅಷ್ಟಾದರೂ ಮಾಂಸದ ತುಂಡುಗಳು ಹೆಂಗಸರ ಪಾಲಿಗೆ ಉಳಿಯುವಂತೆ ಮಾಡಿದ್ದು ಕೇಳಿ ಬರುತ್ತದೆ. ಇಂಥ ನಿದರ್ಶನಗಳು ಹಲವು. ಮನೆಯ ದುಡಿಮೆಯಲ್ಲಿ ಸ್ತ್ರೀ ಪುರುಷರು ಸಮವಾಗಿ ಭಾಗಿಗಳಾದರೂ ಹಣದ ಯಜಮಾನಿಕೆ ಆಯಾ ಕುಟುಂಬದ ಪುರುಷರ ಕೈಯಲ್ಲಿ ಇಂದಿಗೂ ಇದೆ. ಹೀಗಾಗಿ ಕುಟುಂಬ ಮತ್ತು ಅದರ ಸದಸ್ಯರ ಅಗತ್ಯಗಳಲ್ಲಿ ಪುರುಷ ಸದಸ್ಯರ ಅಗತ್ಯಗಳು ಆದ್ಯತೆಯನ್ನು ಪಡೆಯುತ್ತವೆ. ಇದನ್ನು ಕೇವಲ ಪುರುಷರು ಮಾಡುತ್ತಾರೆ ಎಂದಲ್ಲ, ಪುರುಷ ಪ್ರಧಾನ ಚಿಂತನಾಧಾರೆಯ ಬಲಿಪಶುಗಳಾದ ಎಲ್ಲ ಸ್ತ್ರೀ- ಪುರುಷರು ಇಂತಹ ತಪ್ಪನ್ನು ಮಾಡುವುದು ಕಂಡುಬರುತ್ತದೆ. ಯು ಎನ್ ಡಿ ಪಿ ಯು ೨೦೨೨ ರಲ್ಲಿ ೧೯೩ ರಾಷ್ಟ್ರಗಳ ಎಚ್ ಡಿ ಐ ಯಲ್ಲಿ ಭಾರತದ ಸ್ಥಾನ ೧೩೪ ಎಂದು ಗುರುತಿಸಿದ್ದು, ಈಗ ೧೩೦ನೇ ಸ್ಥಾನದಲ್ಲಿದೆ. ನಮ್ಮ ಬೃಹತ್ ದೇಶದ ಅಕ್ಕಪಕ್ಕದ ಪುಟ್ಟ ರಾಷ್ಟ್ರಗಳಾದ ಶ್ರೀಲಂಕಾ, ಭೂತಾನ್ ಇವು ಕ್ರಮವಾಗಿ ೮೯ ಮತ್ತು ೧೨೫ನೇ ಸ್ಥಾನದಲ್ಲಿದ್ದು, ನಮಗಿಂತ ಉತ್ತಮ ಸ್ಥಾನದಲ್ಲಿವೆ. ಪಕ್ಕದ ಬಾಂಗ್ಲಾದೇಶವು ನಮ್ಮಂತೆ ೧೩೦ನೇ ಸ್ಥಾನವನ್ನು ಹಂಚಿಕೊಂಡಿದೆ. ಹೀಗಿರುವಾಗ ಇಂದಿಗೂ ನಮ್ಮ ಸರಕಾರಗಳು ಮತ್ತು ರಾಜಕಾರಣಿಗಳು ಜಿಡಿಪಿಯನ್ನು ಏರಿಸುವ ಮಾತಾಡುತ್ತಾರೆ ಹೊರತು ಎಚ್ ಡಿ ಐ ಯನ್ನು ಹೆಚ್ಚಿಸುವ ಕುರಿತು ಚಿಂತಿಸುತ್ತಿಲ್ಲ. ಈ ಕುರಿತು ಜಾಣ ಕಿವುಡು ಮತ್ತು ಕುರುಡುತನವನ್ನು ಪ್ರದರ್ಶಿಸುತ್ತಿರುವುದು ದುರಂತ. ಸಂಘಟಿತ ಮತ್ತು ಅಸಂಘಟಿತ ವಲಯ ಎರಡರಲ್ಲೂ ದುಡಿಯುವ ಮಹಿಳೆಯರು ಲಿಂಗತ್ವಪೂರ್ವ ಗ್ರಹಗಳ ಪಿಡುಗಿಗೆ ಒಳಗಾಗಿದ್ದಾರೆ. ಲಿಂಗತ್ವಪೂರ್ವಾಗ್ರಹಗಳು ಸ್ತ್ರೀ-ಪುರುಷರ ವೇತನ, ರಜಾ ಸೌಲಭ್ಯ, ಅವಶ್ಯಕತೆಗಳ ಸೃಷ್ಟಿ, ಲೈಂಗಿಕ ದುರ್ಬಳಕೆ ಇತ್ಯಾದಿಗಳ ಮೇಲೆ ಪರಿಣಾಮವನ್ನು ಬೀರಿವೆ. ಕೆಲಸದ ಸ್ಥಳದಲ್ಲಿ ಲೈಂಗಿಕ ದೌರ್ಜನ್ಯ ತಡೆ ಕಾಯ್ದೆ ತಾತ್ವಿಕವಾಗಿ ಜಾರಿಯಾದರೂ ಹೆಣ್ಣುಮಕ್ಕಳು ಮುಕ್ತವಾಗಿ ತಮ್ಮ ಮೇಲಾದ ಶೋಷಣೆಯ ವಿರುದ್ಧ ದೂರು ನೀಡಲು ಧೈರ್ಯ ತೋರುವ ವಾತಾವರಣವಿಲ್ಲ. ಒಂದೊಮ್ಮೆ ದೂರು ನೀಡಿದಾಗ ಸರಿಯಾದ ವಿಚಾರಣೆ ನಡೆಯುವ, ತಪ್ಪಿತಸ್ಥರಿಗೆ ಶಿಕ್ಷೆಯಾಗುವ ವಾತಾವರಣವು ಸಮಾಜದಲ್ಲಿ ಇನ್ನೂ ಮಸುಕಾಗಿಯೇ ಇದೆ. ಹೀಗಾಗಿ ಮಹಿಳೆಗೆ ಘನತೆಯಿಂದ ಬದುಕುವ ವಾತಾವರಣ ಇನ್ನೂ ರೂಪುಗೊಂಡಿಲ್ಲ. ಅಲ್ಪ ವೇತನ, ಹೆಚ್ಚಿನ ದುಡಿಮೆ, ವಿಶ್ರಾಂತಿರಹಿತ ದುಡಿಮೆ, ಸಂಘಟಣೆಯ ನಿರಾಕರಣೆ ಇತ್ಯಾದಿಗಳು ಅವರ ಘನತೆಯ ಬದುಕಿಗೆ ತೊಡಕಾಗಿವೆ. ಪರಿಸರ ಮತ್ತು ಸುಸ್ಥಿರ ಅಭಿವೃದ್ಧಿ: ಆದಿವಾಸಿಗಳು, ಬುಡಕಟ್ಟು ಸಮುದಾಯಗಳು ಕಾಡಿನಲ್ಲಿ ವಾಸಿಸುತ್ತಾ ತಮ್ಮ ಕಾಡನ್ನು ನಾಳಿನ ಜನಾಂಗಕ್ಕೆ ಕಾಪಿಡುವವರು ಆಗಿದ್ದರು. ಒಂದು ಮರವನ್ನು ಅನಿವಾರ್ಯವಾಗಿ ಕಡಿಯಲೇಬೇಕಾದಾಗ, ಅದರ ಮುಂದೆ ತಮ್ಮ ಅನಿವಾರ್ಯತೆಯನ್ನು ತಿಳಿಸಿ, ಕ್ಷಮಿಸಲು ಕೋರಿ, ಇನ್ನೊಂದು ಅಂತಹ ಸಸಿಯನ್ನು ನೆಟ್ಟು, ಆ ಬಳಿಕವೇ ಮರವನ್ನು ಕಡಿಯುತ್ತಿದ್ದರು. ಒಣಗಿದ ಗೆಲ್ಲುಗಳನ್ನು ಅವರು ಕಡಿದು, ದಿನದ ಅಗತ್ಯಗಳನ್ನು ಪೂರೈಸಿಕೊಳ್ಳುತ್ತಾರೆಯೇ ಹೊರತು, ಹಸಿ ಗೆಲ್ಲನ್ನು ಅವರು ಕಡಿಯುವುದಿಲ್ಲ. ಕಾಡಿನ ಪ್ರತಿಯೊಂದು ಉತ್ಪನ್ನವನ್ನು ಅತ್ಯಂತ ಎಚ್ಚರಿಕೆಯಿಂದ ಮತ್ತು ಮುಂದಿನ ಪೀಳಿಗೆಗೆ ಉಳಿಯುವಂತೆ ಅವರು ಬಳಸುವವರು. ಆಧುನಿಕತೆಯ ಹೆಸರಿನಲ್ಲಿ ಇಂದು ಪರಿಸರದ ಉತ್ಪನ್ನಗಳ ಮೇಲಿನ ದಾಳಿ ಎಗ್ಗಿಲದೆ ನಡೆದಿದೆ. ಕಾಡಿನ ಮೂಲನಿವಾಸಿಗಳನ್ನು ಹೊರಗಟ್ಟಿ, ಗಣಿಗಾರಿಕೆ, ಮರಮಟ್ಟುಗಳ ಸಾಗಣೆಯನ್ನು ಆಧುನಿಕ ಉಪಕರಣಗಳ ಮೂಲಕ ಕ್ಷಣಮಾತ್ರದಲ್ಲಿ ಲೂಟಿ ಹೊಡೆಯುವುದನ್ನೇ ಅಭಿವೃದ್ಧಿ ಎಂಬ ಜನಾಭಿಪ್ರಾಯ ರೂಪಣೆಯನ್ನು ಮಾಡಲಾಗಿದೆ. ಕೃಷಿಯಲ್ಲಿ ಆಧುನಿಕ ರಾಸಾಯನಿಕಗಳ ಬಳಕೆಯಿಂದ ಒಂದೆಡೆ ಮಣ್ಣಿನ ಫಲವತ್ತತೆಯನ್ನು ನಾಶ ಮಾಡಿದರೆ, ನೀರು, ಗೊಬ್ಬರ, ಬೀಜದ ಸಂರಕ್ಷಣೆ, ಬೆಳೆಗಳ ಕಟಾವು ಇತ್ಯಾದಿ ಎಲ್ಲ ಕೆಲಸಗಳಲ್ಲಿ ಸ್ವಾವಲಂಬಿಯಾಗಿದ್ದ ಕೃಷಿಕರನ್ನು ಇಂದು ಪರಾವಲಂಬಿಗಳನ್ನಾಗಿ ಮಾಡಲಾಗಿದೆ. ಕೃಷಿಯಲ್ಲಿ ಮಹಿಳೆಯ ಪಾಲ್ಗೊಳ್ಳುವಿಕೆ, ಬೆಳೆಯ ನಿರ್ಧಾರದಲ್ಲಿ ಅವಳ ಅಭಿಪ್ರಾಯದ ನಿರಾಕರಣೆಯಿಂದ ಬಹು ಬೆಳೆಯ ಕೃಷಿ ಪದ್ಧತಿಯು ನಾಶವಾಗಿ, ಮಾರುಕಟ್ಟೆ ಆಧಾರಿತ ಏಕ ಬೆಳೆ ಪದ್ಧತಿಗೆ ರೈತರನ್ನು ದೂಡಿ, ಅವರ ಬದುಕನ್ನು ಹೊಸಕಿ ಹಾಕಿದೆ. ಅಭಿವೃದ್ಧಿಯು ಕೇವಲ ಮಧ್ಯವರ್ತಿಗಳ, ಬಂಡವಾಳಿಗರ, ಅಧಿಕಾರಸ್ಥರ ಮೂಗಿನ ನೇರಕ್ಕೆ, ಅವರ ಅನುಕೂಲತೆಗೆ ಮಾತ್ರ ರೂಪಿತವಾಗಿದೆ. ಇವೆಲ್ಲವೂ ಮಹಿಳೆಯರ ಆರ್ಥಿಕ ಮತ್ತು ಆರೋಗ್ಯದ ಮೇಲೆ ಗಂಭೀರ ಪರಿಣಾಮಗಳನ್ನು ಬೀರಿವೆ. ಒಂದೆಡೆ ಮಹಿಳೆಯನ್ನು ಪ್ರಕೃತಿಗೆ, ನಿಸರ್ಗಕ್ಕೆ ಹೋಲಿಸುತ್ತಾ ಅವಳ ಮತ್ತು ಪರಿಸರದ ಮೇಲೆ ನಿರಂತರ ದಬ್ಬಾಳಿಕೆಯನ್ನು ಅಭಿವೃದ್ಧಿಯ ಹೆಸರಿನಲ್ಲಿ ಮಾಡಲಾಗುತ್ತಿದೆ. ಸುಸ್ಥಿರ ಅಭಿವೃದ್ಧಿಯು ಇಂಥ ನಿಲುವು, ಯೋಜನೆ ಮತ್ತು ಕಾರ್ಯಗಳನ್ನು ಸ್ಪಷ್ಟವಾಗಿ ವಿರೋಧಿಸುತ್ತ, ಸಮಾಜದ ಎಲ್ಲ ವರ್ಗಗಳ ಹಿತದ ನೆಲೆಯಿಂದ ಅಭಿವೃದ್ಧಿಯ ಕಲ್ಪನೆಯನ್ನು ಮರು ಕಟ್ಟಲು ಒತ್ತಾಯಿಸುತ್ತದೆ. ನಾವಿಂದು ಸುಸ್ಥಿರ ಅಭಿವೃದ್ಧಿಯಿಂದ ಎಷ್ಟು ದೂರ ಸಾಗಿ ಬಂದಿದ್ದೇವೆ ಎಂದರೆ ಅದನ್ನು ಕಲ್ಪಿಸಿಕೊಳ್ಳಲೂ ನಾವು ಅಸಮರ್ಥರಾಗಿದ್ದೇವೆ. ಎಲ್ಲರ ಹಿತವನ್ನು ಗಮನಿಸುವ, ಎಲ್ಲರಿಗೂ ಸಮಾನವಾಗಿ ಭಾಗವಹಿಸುವ ಅವಕಾಶವಿರುವ, ಎಲ್ಲರಿಗೂ ಸಮಾನ ಪ್ರಯೋಜನದ ಹಂಚಿಕೆ ಇರುವ, ಭವಿಷ್ಯದ ಪೀಳಿಗೆಗೂ ಪ್ರಾಕೃತಿಕ ಸಂಪತ್ತನ್ನು ಉಳಿಸುವ ಎಚ್ಚರ ಇರುವ, ಯಾವ ಅನಾರೋಗ್ಯಕರ ಸ್ಪರ್ಧೆಗೂ ಅವಕಾಶವಿಲ್ಲದ, ಅಭಿವೃದ್ಧಿಯ ಪರಿಕಲ್ಪನೆಯೇ ಸುಸ್ಥಿರ ಅಭಿವೃದ್ಧಿ. ಸಮಷ್ಠಿ ಪ್ರಜ್ಞೆ ಮತ್ತು ಲಿಂಗತ್ವ ಸಮನ್ವಯದ ದೃಷ್ಟಿಕೋನಗಳು ಇಂದು ನಾವು ಕಾಣುತ್ತಿರುವ ಸಾಮಾಜಿಕ ವ್ಯವಸ್ಥೆಯೊಳಗಿನ ಕ್ರೌರ್ಯ ಮತ್ತು ಅವಾಂತರಗಳನ್ನು ಕಡಿಮೆ ಮಾಡಬಲ್ಲದು.

ವಾರ್ತಾ ಭಾರತಿ 8 Feb 2026 11:22 am

ಅಲ್-ಜುಬೈಲ್ : JAMWA ಮಹಾಸಭೆ

ಜಿಸಿಸಿ ಅಧ್ಯಕ್ಷರಾಗಿ ಮುಹಮ್ಮದ್ ಶರೀಫ್, ಪೂರ್ವ ಪ್ರದೇಶದ ಅಧ್ಯಕ್ಷರಾಗಿ ಇಕ್ಬಾಲ್ ಬೊಟ್ಟು

ವಾರ್ತಾ ಭಾರತಿ 8 Feb 2026 11:12 am

ಐಕ್ಯತೆಯ ಬದುಕು ದೇಶದ ಸರ್ವತೋಮುಖ ಅಭಿವೃದ್ಧಿಗೆ ಪೂರಕ: ಇಬ್ರಾಹಿಂ ಗಡಿಯಾರ್

ಬಂಟ್ವಾಳ: ಸಾಮರಸ್ಯ ಹಾಗೂ ಸಹಬಾಳ್ವೆಯ ಸಮಾಜದ ನಿರ್ಮಾಣದ ಜೊತೆಗೆ ಸಾಮಾಜಿಕ, ಸಾಂಸ್ಕೃತಿಕ ಹಾಗೂ ಕ್ರೀಡಾ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ ಕೊಡಾಜೆ ಐಕ್ಯ ವೇದಿಕೆಯ ಕಾರ್ಯ ಶ್ಲಾಘನೀಯವಾಗಿದೆ ಎಂದು ದುಬಾಯಿಯ ಗಡಿಯಾರ್ ಗ್ರೂಪ್ ಆಫ್ ಕಂಪೆನಿಗಳ ಮಾಲೀಕ ಇಬ್ರಾಹಿಂ ಗಡಿಯಾರ್ ಮೆಚ್ಚುಗೆ ವ್ಯಕ್ತಪಡಿಸಿದರು. ಕೊಡಾಜೆ ಐಕ್ಯ ವೇದಿಕೆಯ ಕಚೇರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಮಾತನಾಡಿದ ಅವರು, ಊರಿನಲ್ಲಿ ಯಾವುದೇ ಜಾತಿ, ಧರ್ಮ, ಮತಭೇದವಿಲ್ಲದ ವಾತಾವರಣ ನಿರ್ಮಾಣ ಅತೀ ಅಗತ್ಯವಾಗಿದ್ದು, ಈ ನಿಟ್ಟಿನಲ್ಲಿ ಎಲ್ಲರೂ ಕೈಜೋಡಿಸಿದಾಗ ದೇಶದ ಸರ್ವತೋಮುಖ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದು ಹೇಳಿದರು. ಲಯನ್ ಡಾ. ಎ. ಮನೋಹರ್ ರೈ ಮಾತನಾಡಿ, ಜನರ ಕಷ್ಟಗಳಿಗೆ ಸ್ಪಂದಿಸುವ ಸಂಘಟನೆಗಳು, ಅದಕ್ಕೆ ಸಹಕಾರ ನೀಡುವ ದಾನಿಗಳು ಹಾಗೂ ಏಕತೆಯ ಭಾವನೆಯನ್ನು ಮೈಗೂಡಿಸಿಕೊಂಡವರು ಸರ್ವಶ್ರೇಷ್ಠರು ಎಂದು ಅಭಿಪ್ರಾಯಪಟ್ಟರು. ಐಕ್ಯ ವೇದಿಕೆಯ ಅಧ್ಯಕ್ಷ ಅಶ್ರಫ್ ಭಾರತ್ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಈ ವೇಳೆ ಇಬ್ರಾಹಿಂ ಗಡಿಯಾರ್ ಅವರ ಸಾಮಾಜಿಕ ಸೇವೆಯನ್ನು ಗುರುತಿಸಿ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಐಕ್ಯ ವೇದಿಕೆಯ ಗೌರವಾಧ್ಯಕ್ಷ ಲತೀಫ್ ನೇರಳಕಟ್ಟೆ, ಸ್ಥಾಪಕಾಧ್ಯಕ್ಷ ಫಾರೂಕ್ ಗೋಳಿಕಟ್ಟೆ, ಸಾಂಸ್ಕೃತಿಕ ಕಾರ್ಯದರ್ಶಿ ಮನ್ಸೂರ್ ನೇರಳಕಟ್ಟೆ, ನಿಕಟಪೂರ್ವ ಕೋಶಾಧಿಕಾರಿ ರಿಯಾಝ್ ನೇರಳಕಟ್ಟೆ ಮೊದಲಾದವರು ಉಪಸ್ಥಿತರಿದ್ದರು.      

ವಾರ್ತಾ ಭಾರತಿ 8 Feb 2026 11:05 am

ಅಯೋಧ್ಯೆಯಲ್ಲಿ ಈಗ್ಯಾರು ಪಾಗಲ್ ದಾಸ್ ಇಲ್ಲ ಅಯೋಧ್ಯೆ ದುಃಖಿತಗೊಂಡಿದೆ

ಬಿಜೆಪಿ ಮತ್ತು ವಿಶ್ವ ಹಿಂದೂ ಪರಿಷತ್‌ನಿಂದ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದ ನೆಪದಲ್ಲಿ ಪ್ರಾರಂಭಿಸಲಾದ ಉಗ್ರ ಆಂದೋಲನವನ್ನು ವಿರೋಧಿಸುವಲ್ಲಿ ಸ್ವಾಮಿ ಪಾಗಲ್‌ದಾಸ್ ಅವರ ಪಾತ್ರವನ್ನು ಉಲ್ಲೇಖಿಸದ ಹೊರತು ಅವರ ಪರಿಚಯ ಪೂರ್ಣವಾಗುವುದಿಲ್ಲ. ಆ ದಿನಗಳಲ್ಲಿ, ಈ ಆಂದೋಲನದ ವಿರುದ್ಧ ಕೆಲವೊಮ್ಮೆ ಬಹಿರಂಗವಾಗಿ ಮತ್ತು ಕೆಲವೊಮ್ಮೆ ಮೌನವಾಗಿ ಪ್ರತಿರೋಧ ವ್ಯಕ್ತಪಡಿಸಿದ್ದರು. ರಾಮಮಂದಿರಕ್ಕಾಗಿ ಸತ್ಯ, ಘನತೆ ಮತ್ತು ನ್ಯಾಯದ ಬಲಿಯನ್ನು ಕೊಡಲು ತಾವು ಖಂಡಿತವಾಗಿಯೂ ಒಪ್ಪುವುದಿಲ್ಲ ಮತ್ತು ಈ ಕುರಿತ ಪ್ರಯತ್ನದಲ್ಲಿ ತಾವಾಗಲಿ ಅಥವಾ ತಮ್ಮ ಸಂಗೀತ ಸಾಧನೆಯಾಗಲಿ ಭಾಗಿಯಾಗುವುದಿಲ್ಲ ಎಂದು ಪದೇ ಪದೇ ಸ್ಪಷ್ಟಪಡಿಸಿದರು. ‘ಕಣ್ಣ ಕಣಿವೆ’ಯಲ್ಲಿ ಅಮೃತದ ನೆನಪುಗಳನ್ನಿಟ್ಟುಕೊಂಡು ದಿಲ್ಲಿಯ ಡೈರಿಯ ಪುಟಗಳ ತಿರುವುವ ರೇಣುಕಾ ನಿಡಗುಂದಿ ಮೂಲತಃ ಧಾರವಾಡದವರು. ಮೂರು ದಶಕದಿಂದಲೂ ದೆಹಲಿಯಲ್ಲಿ ವಾಸ, ಖಾಸಗೀ ಕಂಪನಿಯೊಂದರಲ್ಲಿ ಉದ್ಯೋಗ, ದೆಹಲಿ ಕರ್ನಾಟಕ ಸಂಘದ ’ಮುಖವಾಣಿ ‘ಅಭಿಮತ’ ದ ಸಂಪಾದಕ ಬಳಗದಲ್ಲಿ ಸಕ್ರಿಯವಾಗಿ ಕಾರ್ಯ ನಿರ್ವಹಿಸಿದ್ದಾರೆ, ಡಾ.ಪುರುಷೋತ್ತಮ ಬಿಳಿಮಲೆಯವರ ಸಂಪಾದಕತ್ವದಲ್ಲಿ ರಾಜಧಾನಿಯಲ್ಲಿ ಕರ್ನಾಟಕ ಪುಸ್ತಕವನ್ನು ಸಂಪಾದಿಸಿದ್ದು ಅನೇಕ ಕಥೆ, ಕವನ, ಲೇಖನಗಳು ನಾಡಿನ ಪ್ರಮುಖ ಪತ್ರಿಕೆಗಳಲ್ಲಿ, ಮಾಸಿಕಗಳಲ್ಲಿ ಪ್ರಕಟಗೊಂಡಿವೆ. ಕಣ್ಣ ಕಣಿವೆ, ದಿಲ್ಲಿ ಡೈರಿಯ ಪುಟಗಳು, ಅಮೃತ ನೆನಪುಗಳು, ನಮ್ಮಿಬ್ಬರ ನಡುವೆ ಇವರ ಇತರ ಕೃತಿಗಳು. ಡಾ. ಅಂಬೇಡ್ಕರ್ ಅವರ ಸಂಪಾದಕೀಯಗಳ ಬರಹ ಸಂಗ್ರಹ ‘ಮೂಕನಾಯಕ’ ಇವರ ಇನ್ನೊಂದು ಪ್ರಮುಖ ಕೃತಿ. ಅಯೋಧ್ಯೆಯಲ್ಲಿ ಸಂಗೀತದ ಲಯದ ಜೊತೆಗೆ ಸತ್ಯ, ನ್ಯಾಯ, ನಿಷ್ಠೆಯನ್ನು ಎತ್ತಿ ಹಿಡಿದ ಪಾಗಲ್‌ದಾಸ್ ವ್ಯಕ್ತಿತ್ವವನ್ನು ಲೇಖಕಿ ಕಟ್ಟಿಕೊಟ್ಟಿದ್ದಾರೆ. ಅಯೋಧ್ಯೆಯಲ್ಲಿ ಬಹಳ ಹಿಂದಿನಿಂದಲೂ ಒಂದು ಗಾದೆ ಪ್ರಚಲಿತದಲ್ಲಿದೆ - ಎಲ್ಲಿ ವೃದ್ಧರು ಸೇರುವರೋ, ಅಲ್ಲಿ ಹಣದ ಕೊರತೆ; ಎಲ್ಲಿ ಯುವಕರು ಸೇರುವರೋ, ಅಲ್ಲಿ ಮೃದಂಗ ಬಾರಿಸುವುದು! ಅಂದರೆ, ವೃದ್ಧರು ಸೇರಿದಲ್ಲಿ ಉಪ್ಪು, ಎಣ್ಣೆ, ಉರುವಲಿನ ಕೊರತೆಯ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಾರೆ, ಆದರೆ ಯುವಕರ ಗುಂಪು ತಲೆ ಕೆಡಿಸಿಕೊಳ್ಳುವಂತಹ ಪರಿಸ್ಥಿತಿಯಲ್ಲೂ ಉಲ್ಲಾಸದಿಂದಿರುತ್ತಾರೆ. ಹೇಗಾದರೂ ಮಾಡಿ ತಮ್ಮನ್ನು ತಾವು ಸಂತೋಷವಾಗಿಟ್ಟುಕೊಳ್ಳುತ್ತಾರೆ, ಮೃದಂಗ ಬಾರಿಸುತ್ತಾರೆ! ಮೃದಂಗ, ಅದಕ್ಕೆ ‘ಪಖಾವಜ್’ ಎಂಬ ಇನ್ನೊಂದು ಹೆಸರೂ ಇದೆ, ಉಲ್ಲಾಸದ ವಾದ್ಯ, ಸಂತೋಷದ ಅಭಿವ್ಯಕ್ತಿ. ಆದರೆ, 1992ರ ಡಿಸೆಂಬರ್ 6ರಂದು ಏನಾಯಿತೋ, ಅದರ ನಂತರ ಅಯೋಧ್ಯೆಯಲ್ಲಿ ಹರ್ಷೋಲ್ಲಾಸದ ದನಿ ಅಡಗಿಹೋಗಿದೆ. ಸಂತೋಷಪಡಲು ಒಂದೇ ಒಂದು ನಿಜವಾದ ಕಾರಣವೂ ಉಳಿದಿಲ್ಲ ಎನಿಸುತ್ತದೆ. ಬಹುಶಃ ಆ ಕಾರಣಕ್ಕಾಗಿಯೇ ಅಲ್ಲಿ ಹಲವು ಸರಕಾರಿ, ಖಾಸಗಿ ಕಾರ್ಯಕ್ರಮಗಳು ನಡೆಯುತ್ತಿದ್ದರೂ, ಮೃದಂಗದ ನಾದ ಕೇಳುವುದಿಲ್ಲ. ಅದರ ಯಾವುದೇ ಮೂಲೆಯಿಂದಲೂ ಇಲ್ಲ! ಮೃದಂಗ ಬಾರಿಸುವವರು ಉಳಿದಿಲ್ಲ ಎಂದಲ್ಲ. ಮೊದಲನೆಯದಾಗಿ ಅವರಿಗೆ ಬಾರಿಸಲು ಮನಸ್ಸಿಲ್ಲ, ಮತ್ತು ಒಲ್ಲದ ಮನಸ್ಸಿನಿಂದ ಒತ್ತಾಯಪೂರ್ವಕ ಬಾರಿಸಲು ಕುಳಿತರೆ, ಅದು ಬೇಡದ ಸಮಯದಲ್ಲಿ ಶಹನಾಯಿ ಬಾರಿಸುತ್ತಿರುವಂತೆ, ಮೃದಂಗವಲ್ಲ, ತಮ್ಮ ಎದೆಯನ್ನೇ ಬಡಿದುಕೊಳ್ಳುತ್ತಿರುವಂತೆ ಭಾಸವಾಗುತ್ತದೆ. ಅಯೋಧ್ಯೆಯಲ್ಲಿ ಈಗ ಪಾಗಲ್‌ದಾಸ್ ಯಾರೂ ಇಲ್ಲ. ಬಹುಶಃ ಅವರ ಬಗ್ಗೆ ನಿಮಗೆ ಗೊತ್ತಿಲ್ಲ.   ಉತ್ತರಪ್ರದೇಶದ ದೇವರಿಯಾ ಜಿಲ್ಲೆಯ ಮರೆಲಿ ಗ್ರಾಮ ನಿವಾಸಿಯಾದ ಜಾನಕಿ ದೇವಿ, 1920 ರ ಆಗಸ್ಟ್ 15ರಂದು ಗಂಡುಮಗುವಿಗೆ ಜನ್ಮ ನೀಡಿ, ಅವನಿಗೆ ರಾಮಶಂಕರ್ ಎಂದು ಹೆಸರಿಸಿದಾಗ, ಅವರಿಗೂ ಸಹ ಈ ರಾಮಶಂಕರ್ ಒಂದು ದಿನ ಅವರನ್ನು ಅಂತರ್‌ರಾಷ್ಟ್ರೀಯ ಖ್ಯಾತಿಯ ಮೃದಂಗ ಮಹರ್ಷಿ, ಮೃದಂಗಾಚಾರ್ಯ ಸ್ವಾಮಿ ಪಾಗಲ್‌ದಾಸ್ ಅವರ ತಾಯಿಯನ್ನಾಗಿ ಮಾಡುತ್ತಾರೆಂದು ಗೊತ್ತಿರಲಿಲ್ಲ. ಅದೇ ರೀತಿ 1997 ರ ಜನವರಿ 20, 21 ರಂದು ಅಯೋಧ್ಯೆಯ ಪ್ರಮೋದ್ ವನದಲ್ಲಿರುವ ಹನುಮತ್ ವಿಶ್ವಕಲಾ ಸಂಗೀತ ಆಶ್ರಮದಲ್ಲಿ ಅವರು ಇಹವನ್ನು ತ್ಯಜಿಸಿದಾಗ ಜನರು ಕೇವಲ ಒಬ್ಬ ಸಂಗೀತಗಾರನನ್ನು ಮಾತ್ರವಲ್ಲದೆ, ಸತ್ಯ, ಘನತೆ ಮತ್ತು ನ್ಯಾಯದ ರಕ್ಷಕನನ್ನೂ ಕಳೆದುಕೊಂಡಿದ್ದೇವೆ ಎಂದು ದುಃಖಿಸಿದ್ದು ಸಹಜವೇ. . ಹಾಗೆಯೇ, ಅವರ ಜನ್ಮ ದಿನಾಂಕವೇ ಮುಂದೆ ದೇಶದ ಸ್ವಾತಂತ್ರ್ಯ ದಿನಾಂಕವಾಗಲಿದೆ ಎಂದು ಆಗ ಯಾರೂ ಹೇಳಲು ಸಾಧ್ಯವಿರಲಿಲ್ಲ. ವಾಸ್ತವವಾಗಿ ಏನಾಯಿತೆಂದರೆ, ರಾಮಶಂಕರ್ ಇನ್ನೂ 13-14 ವರ್ಷದವನಾಗಿದ್ದಾಗ, ಅವನ ಮನಸ್ಸು ಮನೆಯಿಂದ ಬೇಸರಗೊಂಡು ಓಡಿಹೋಗಿ ಅಯೋಧ್ಯೆಗೆ ಬಂದನು ಮತ್ತು ಬಂಗಾಲಿ ಬಾಬಾ ಎಂದು ಪ್ರಸಿದ್ಧರಾಗಿದ್ದ ಮಹಂತ್ ರಾಮ್ಕಿಶುನ್ ದಾಸ್ ಅವರಿಂದ ದೀಕ್ಷೆ ಪಡೆದು ಹನುಮಾನ್ ಗಢಿಯ ಬಾಬಾ ರಾಮ್ ಸುಖದಾಸ್ ಅವರ ಬಳಿ ವಾಸಿಸಲು ಪ್ರಾರಂಭಿಸಿದನು. ಕೇವಲ ಒಂದು ವರ್ಷದ ನಂತರ, ಅವನೊಳಗಿದ್ದ ನಟನೆಯ ಆಸೆ ತೀವ್ರವಾಗಿ, ಅವನು ಬಿಹಾರದ ಒಂದು ನಾಟಕ ಕಂಪೆನಿಯನ್ನು ಸೇರಿಕೊಂಡನು. ನಂತರ, ಒಂದರ ನಂತರ ಒಂದರಂತೆ ನಾಟಕ ಕಂಪೆನಿಗಳಲ್ಲಿ ತನ್ನ ಪ್ರತಿಭೆಯನ್ನು ಪ್ರದರ್ಶಿಸುತ್ತಾ ಬಹಳಷ್ಟು ಹೆಸರು ಗಳಿಸಿದನು, ಆದರೆ ಅವನ ಕಲಾವಿದನ ಮನಸ್ಸಿಗೆ ಇಷ್ಟರಿಂದ ತೃಪ್ತಿಯಾಗಲಿಲ್ಲ. ಅವನ ಅಸಮಾಧಾನವು ಅವನನ್ನು ಪಾಟ್ನಾದ ಪ್ರಸಿದ್ಧ ಸಂಗೀತಗಾರ ನೇಪಾಳ ಸಿಂಗ್ (ಈಗ ದಿವಂಗತ) ಬಳಿಗೆ ಕರೆದೊಯ್ಯಿತು, ಅಲ್ಲಿ ಅವನು ಐದು ವರ್ಷಗಳ ಕಾಲ ತಬಲಾ ನುಡಿಸಲು ಕಲಿತನು. ನಂತರ ಇಪ್ಪತ್ತು ವರ್ಷಗಳ ಕಾಲ ಅಯೋಧ್ಯೆಯ ಸ್ವಾಮಿ ಭಗವಾನ್‌ದಾಸ್, ಬಾಬಾ ಠಾಕೂರ್‌ದಾಸ್ ಮತ್ತು ರಾಮ್ ಮೋಹಿನಿ ಶರಣ್‌ರಿಂದ ಮೃದಂಗ ನುಡಿಸುವ ಶಿಕ್ಷಣ ಪಡೆದನು. ಮೃದಂಗ ವಾದನದಲ್ಲಿ ಪರಿಣತಿ ಹೊಂದಿದ್ದರೂ, ತಬಲಾ ವಾದನದಲ್ಲಿ ತನಗೆ ಇನ್ನೂ ಹೆಚ್ಚಿನ ಕೌಶಲ್ಯದ ಅಗತ್ಯವಿದೆ ಎಂದು ಅವನಿಗೆ ಅನಿಸಿತು, ಆದ್ದರಿಂದ ಅವನು ಪಂಡಿತ್ ಸಂತಶರಣ್ ‘ಮಸ್ತ್’ ಬಳಿಗೆ ಬಂದು ಅವರ ಶಿಷ್ಯತ್ವವನ್ನು ಸ್ವೀಕರಿಸಿದನು ಮತ್ತು ಮುಂದಿನ ಹತ್ತು ವರ್ಷಗಳನ್ನು ತಬಲಾ ವಾದನಕ್ಕಾಗಿ ಮೀಸಲಿಟ್ಟನು. ಸಂತಶರಣ್ ‘ಮಸ್ತ್’, ಇವರನ್ನು ಅವನು ತನ್ನ ವಿದ್ಯಾಗುರು ಎಂದು ಪರಿಗಣಿಸಿದ್ದನು, ಇವರೇ ರಾಮಶಂಕರ್‌ನಿಗೆ ‘ ಪಾಗಲ್ದಾಸ್’ ಎಂಬ ಬಿರುದು ನೀಡಿದ್ದು. ಇದಕ್ಕೂ ಒಂದು ಆಸಕ್ತಿದಾಯಕ ಕಥೆಯಿದೆ. ರಾಮಶಂಕರ್ ನಟನೆ ಮತ್ತು ಸಂಗೀತದ ಹುಚ್ಚನಾಗಿದ್ದನು, ಜೊತೆಗೆ ಕವಿತೆಗಳನ್ನು ರಚಿಸುವ ಮೂಲಕ ಕವಿತ್ವದಲ್ಲೂ ಕೈ ಹಾಕಲು ಶುರುಮಾಡಿದ್ದನು. ಒಂದು ದಿನ ಮಾತನಾಡುವಾಗ ‘ಮಸ್ತ್’ ಅವನಿಗೆ ತನ್ನ ಕವಿತೆಗಳಿಗೆ ‘ಪಾಗಲ್’ ಎಂಬ ಅಡ್ಡಹೆಸರನ್ನು ಬಳಸಬೇಕೆಂದು ಹೇಳಿದರು. ರಾಮಶಂಕರ್ ಇದನ್ನು ಗುರುವಿನ ಆಜ್ಞೆಯೆಂದು ಪರಿಗಣಿಸಿ ರಾಮಶಂಕರ್‌ದಾಸ್ ‘ಪಾಗಲ್’ ಆದನು ಮತ್ತು ಅಂತರ್‌ರಾಷ್ಟ್ರೀಯ ಖ್ಯಾತಿಯನ್ನು ಗಳಿಸುತ್ತಾ-ಗಳಿಸುತ್ತಾ ಕೇವಲ ಪಾಗಲ್‌ದಾಸ್ ಆಗಿ ಉಳಿದನು- ನಂತರ ಅವಧ್ ವಿಶ್ವವಿದ್ಯಾಲಯವು ಗೌರವ ಡಿ. ಲಿಟ್ ಪದವಿಯನ್ನು ನೀಡಿ ಈ ಸ್ವಾಮಿಯನ್ನು ಡಾಕ್ಟರ್ ಕೂಡ ಮಾಡಿತು. ಅಷ್ಟರಲ್ಲಿಯೇ ದೇಶದ ಮೂಲೆ ಮೂಲೆಯ ಡಜನ್‌ಗಟ್ಟಲೆ ಪ್ರತಿಷ್ಠಿತ ಸಂಗೀತ ಸಂಸ್ಥೆಗಳ ಗೌರವ, ಅಭಿನಂದನೆ ಮತ್ತು ಪದವಿಗಳು ಅವರ ಖಾತೆಗೆ ಸೇರಿದ್ದವು. ಸಂಗೀತಗಾರರು ಅವರನ್ನು ಮೃದಂಗ್ ಸಮ್ರಾಟ್, ಮೃದಂಗ್ ಮಾರ್ತಂಡ, ಮೃದಂಗ್ಮಣಿ, ಮೃದಂಗ್ಕೇಶರಿ, ತಬಲಾ ಶಾಸ್ತ್ರಿ, ಪಖಾವಜ್ ವಿಝಾರ್ಡ್, ಸಂಗೀತಸಾಮ್ರಾಟ್ ಮತ್ತು ಪಖಾವಜ್‌ದಾಸ್ ಎಂದೆಲ್ಲಾ ಕರೆಯಲು ಶುರು ಮಾಡಿದ್ದರು. ಪದ್ಮಭೂಷಣ ಉಸ್ತಾದ್ ಅಲ್ಲಾವುದ್ದೀನ್ ಅವರು ಅವರನ್ನು ತಮ್ಮ ಮಾನಸಪುತ್ರನನ್ನಾಗಿ ಮಾಡಿಕೊಂಡಿದ್ದರು ಮತ್ತು ಅವರನ್ನು ‘ಎರಡನೇ ಕುದೌ ಸಿಂಗ್’ ಎಂದು ಕರೆಯುತ್ತಿದ್ದರು. ‘ಎರಡನೇ ಕುದೌ ಸಿಂಗ್’ ಆಗುವುದರ ಅರ್ಥ?’ ‘ಅವಧಿ ಘರಾನಾ’ದ ಪ್ರತಿನಿಧಿ ವಾದಕರಾಗಿರುವುದು. (ಮಹಾನ್ ಪಖಾವಜ್ ವಾದಕ ಕುದೌ ಸಿಂಗ್ ಹೆಸರಿನಿಂದ ಕರೆಯಲಾಗುವ ಈ ಘರಾನಾ, ಉತ್ತರ ಭಾರತದ ಅತ್ಯಂತ ಹಳೆಯ ಮತ್ತು ಪ್ರತಿಷ್ಠಿತವಾಗಿದ್ದು ತನ್ನ ವಿಶಿಷ್ಟವಾದ ಶೈಲಿಗೆ ಜನಪ್ರಿಯವಾಗಿದೆ. ಇದರಲ್ಲಿ ಕಠಿಣ ತಿಹಾಯಿಗಳು ಮತ್ತು ಬೋಲ್ ಗಳನ್ನು ಬಳಸಲಾಗುತ್ತದೆ ). ಇಂತಹ ಸ್ವೀಕಾರ ವಿರಳರಿಗೆ ಮಾತ್ರ ಲಭ್ಯವಾಗುತ್ತದೆ. ಕೆಲವೇ ಕೆಲವರು ಸ್ವತಂತ್ರ ವಾದನ, ಗಾಯನ-ವಾದನ ಮತ್ತು ನರ್ತನದ ಜೊತೆಗೆ ವಾದನ ಶೈಲಿ, ವಾಕ್ಚಾತುರ್ಯ, ಲಯಗಾರಿಕೆ ಮತ್ತು ವ್ಯಾಖ್ಯಾನಾತ್ಮಕ ಪ್ರಸ್ತುತಿ ಇತ್ಯಾದಿಗಳಲ್ಲಿ ಒಂದೇ ರೀತಿಯಲ್ಲಿ ಸಮರ್ಥರಾಗಿರುತ್ತಾರೆ ಮತ್ತು ಸರ್ವಸಾಮಾನ್ಯರನ್ನು ಪ್ರಭಾವಿಸಲು ಶಕ್ತರಾಗಿರುತ್ತಾರೆ, ಆದರೆ ಸ್ವಾಮಿ ಪಾಗಲ್‌ದಾಸ್ ಇವರಿಗಿಂತಲೂ ಮುಂದೆ ಹೋಗಿ ಸಂಗೀತ ಸಭೆಗಳು ಮತ್ತು ಸಮಾರಂಭಗಳ ಕಣ್ಮಣಿಯಾದರು.   ಆದರೆ ಬಿಜೆಪಿ ಮತ್ತು ವಿಶ್ವ ಹಿಂದೂ ಪರಿಷತ್‌ನಿಂದ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದ ನೆಪದಲ್ಲಿ ಪ್ರಾರಂಭಿಸಲಾದ ಉಗ್ರ ಆಂದೋಲನವನ್ನು ವಿರೋಧಿಸುವಲ್ಲಿ ಸ್ವಾಮಿ ಪಾಗಲ್‌ದಾಸ್ ಅವರ ಪಾತ್ರವನ್ನು ಉಲ್ಲೇಖಿಸದ ಹೊರತು ಅವರ ಪರಿಚಯ ಪೂರ್ಣವಾಗುವುದಿಲ್ಲ. ಆ ದಿನಗಳಲ್ಲಿ, ಈ ಆಂದೋಲನದ ವಿರುದ್ಧ ಕೆಲವೊಮ್ಮೆ ಬಹಿರಂಗವಾಗಿ ಮತ್ತು ಕೆಲವೊಮ್ಮೆ ಮೌನವಾಗಿ ಪ್ರತಿರೋಧ ವ್ಯಕ್ತಪಡಿಸಿದ್ದರು. ರಾಮಮಂದಿರಕ್ಕಾಗಿ ಸತ್ಯ, ಘನತೆ ಮತ್ತು ನ್ಯಾಯದ ಬಲಿಯನ್ನು ಕೊಡಲು ತಾವು ಖಂಡಿತವಾಗಿಯೂ ಒಪ್ಪುವುದಿಲ್ಲ ಮತ್ತು ಈ ಕುರಿತ ಪ್ರಯತ್ನದಲ್ಲಿ ತಾವಾಗಲಿ ಅಥವಾ ತಮ್ಮ ಸಂಗೀತ ಸಾಧನೆಯಾಗಲಿ ಭಾಗಿಯಾಗುವುದಿಲ್ಲ ಎಂದು ಪದೇ ಪದೇ ಸ್ಪಷ್ಟಪಡಿಸಿದರು. ಅಯೋಧ್ಯೆಯಲ್ಲಿ ಹಿಂದೂ-ಮುಸ್ಲಿಮ್ ಸೌಹಾರ್ದವನ್ನು ಪ್ರತಿಪಾದಿಸಿದ್ದರಿಂದ ಹಾಗೂ ಧ್ವಂಸದ ವಿರುದ್ಧ ಧ್ವನಿ ಎತ್ತಿದ್ದರಿಂದಾಗಿ ಅವರು ಹೆಚ್ಚಾಗಿ ರಾಷ್ಟ್ರೀಯ ಸ್ವಯಂಸೇವಕ ಸಂಘದವರ ಕಣ್ಣಿಗೆ ಕಿರಿಕಿರಿ ಆಗಿದ್ದರು. ಒಂದು ಸಮಯದಲ್ಲಿ ವಿಶ್ವ ಹಿಂದೂ ಪರಿಷತ್ ಅವರ ವಿರುದ್ಧ ಸಭೆಗಳನ್ನು ನಡೆಸಲು ಮತ್ತು ಅವರ ಭಂಡಾರಗಳ ಪತ್ರಗಳನ್ನು ನಿಲ್ಲಿಸಲು ಮುಂದಾಗಿತ್ತು. ಇದು ಅವರ ಸಜ್ಜನಿಕೆ ಮತ್ತು ಸಂಗೀತ ಸಾಧನೆಗೆ ಮಾಡಿದ ಅವಮಾನಕರ ತಿರಸ್ಕಾರದ ಕ್ರಮವಾಗಿತ್ತು, ಜೊತೆಗೆ ಅವರನ್ನು ತಮ್ಮ ಕಡೆಗೆ ಸೆಳೆಯಲು ಹಾಕಿದ ಸಂಪೂರ್ಣ ಅನ್ಯಾಯದ ಒತ್ತಡವೂ ಆಗಿತ್ತು. ಆದರೆ ಸ್ವಾಮಿ ಪಾಗಲ್‌ದಾಸ್ ಬಗ್ಗಲಿಲ್ಲ. ಒಬ್ಬ ಸಂಗೀತಗಾರನಾಗಿ ತಾನು ಮನುಷ್ಯರಲ್ಲಿ ಜಾತಿ, ಧರ್ಮ ಮತ್ತು ಪಂಗಡ ಇತ್ಯಾದಿಗಳ ಆಧಾರದ ಮೇಲೆ ಯಾವುದೇ ತಾರತಮ್ಯ ಮಾಡಬಾರದು ಎಂಬ ತಮ್ಮ ನಂಬಿಕೆಯಲ್ಲಿ ಯಾವುದೇ ಬದಲಾವಣೆಯನ್ನು ಮಾಡಲಿಲ್ಲ. ಈ ಘಟನೆಯ ನಂತರ ಉಂಟಾದ ರಾಜಕೀಯ ಮತ್ತು ಸಾಮಾಜಿಕ ಧ್ರುವೀಕರಣದಲ್ಲಿ ಅವರು ಪ್ರತಿರೋಧದ ನಾಯಕರಾಗಿ ಕಾಣಿಸಿಕೊಂಡರು. ಇದಕ್ಕಾಗಿ ಗಿರಫ್ತಾರುಗಳು, ಧಮಕಿಗಳು ಮತ್ತು ಸಾಮಾಜಿಕ ತೊಂದರೆಗಳನ್ನು ಎದುರಿಸಿದರು. ಅಯೋಧ್ಯೆಯಂತಹ ಸೂಕ್ಷ್ಮ ಪ್ರದೇಶದಲ್ಲಿ ಇದು ಅವರ ಮೇಲೆ ಭಾರವಾದ ಒತ್ತಡವನ್ನು ಹೇರಿತು, ಮತ್ತು ಅವರ ಸಂಗೀತ ಸಾಧನೆಯನ್ನು ಸಂಪೂರ್ಣವಾಗಿ ನಿಲ್ಲಿಸಿತು. ಯಾವುದೇ ಪರಿಹಾರದಲ್ಲಿ ಯಾರಾದರೂ ಸೋಲು ಅಥವಾ ಗೆಲುವಿನ ಭಾವನೆ ಹೊಂದಿದ್ದರೆ, ಅದು ಶಾಶ್ವತವಾಗಿ ಉಳಿಯುವುದಿಲ್ಲ. ಹಿಂದೂ-ಮುಸ್ಲಿಮ್ ದ್ವೇಷದ ಪ್ರತಿಪಾದಕರನ್ನು ಅವರು ಪ್ರಶ್ನಿಸುತ್ತಿದ್ದರು, ಯಾವ ದೇಶದಲ್ಲಿ ಹಿಂದೂ ಮಹಿಳೆಯರ ‘ಸೌಭಾಗ್ಯದ ಚಿಹ್ನೆಗಳ’ ಉತ್ಪಾದನೆ ಮತ್ತು ತಯಾರಿಕೆಯಲ್ಲಿ ಮುಸ್ಲಿಮರು ದೊಡ್ಡ ಪಾತ್ರ ವಹಿಸುತ್ತಾರೋ, ಅಲ್ಲಿ ಈ ದ್ವೇಷಕ್ಕೆ ಎಲ್ಲಿ ಮತ್ತು ಎಷ್ಟು ಜಾಗ ಇರಬೇಕು? ಪಾಗಲ್ ದಾಸ್ ಅವರ ಶಿಷ್ಯರು ಹೇಳುವ ಪ್ರಕಾರ, ಅಯೋಧ್ಯೆಯಲ್ಲಿ ಶಾಂತಿ ಪ್ರಯತ್ನಗಳ ಭಾಗವಾಗಿ ಪ್ರಖ್ಯಾತ ರಂಗಕರ್ಮಿ ಸಫ್ದರ್ ಹಾಶ್ಮಿ ಒಮ್ಮೆ ಅವರನ್ನು ಭೇಟಿಯಾಗಲು ಅವರ ಸಂಗೀತ ಆಶ್ರಮಕ್ಕೆ ಬಂದಾಗ, ಅವರು ಅವರೊಂದಿಗೆ ಹೀಗೆ ಹೇಳಿದ್ದರು - ನಿಮ್ಮ ಶಾಂತಿಯ ಆಸೆಯನ್ನು ನಾನು ಸ್ವಾಗತಿಸುತ್ತೇನೆ, ಆದರೆ ಪ್ರಸ್ತುತ ಪರಿಸ್ಥಿತಿಗಳಲ್ಲಿ ಇದು ತುಂಬಾ ಕಠಿಣವಾದ ಕೆಲಸ ಎಂದು ನೀವು ಅರ್ಥಮಾಡಿಕೊಳ್ಳಬೇಕು. ಬಾಬರಿ ಮಸೀದಿಯ ಧ್ವಂಸದ ನಂತರದ ‘ಬದಲಾದ’ ಅಯೋಧ್ಯೆಯಲ್ಲಿ ಪಾಗಲ್ ದಾಸ್ ತುಂಬಾ ಅಶಾಂತಿಯಿಂದ ಇರುತ್ತಿದ್ದರು. ತೀರಾ ವಿಚಲಿತರಾಗಿದ್ದರು, ದುಃಖಿತರಾಗಿದ್ದರು, ಗೊಂದಲಕ್ಕೊಳಗಾಗಿದ್ದರು ಮತ್ತು ಆಂತರಿಕ ಸಂಘರ್ಷದಿಂದ ಬಳಲುತ್ತಿದ್ದರು. ಸತ್ಯ ಹೇಳಬೇಕೆಂದರೆ, ಆ ಸಮಯವೇ ಅಂತಹದ್ದಾಗಿತ್ತು ಮತ್ತು ಅವರು ಸಾಧ್ಯವಾದಷ್ಟು ರಕ್ಷಿಸಿಕೊಂಡು ಬಂದ ಮೌಲ್ಯಗಳು ಮತ್ತು ಘನತೆಗಳನ್ನು ಅವರದೇ ಅಂಗಳದಲ್ಲಿ ಮತ್ತು ಅವರದೇ ಜನರ ಸಮ್ಮುಖದಲ್ಲಿ ಹತ್ತಿಕ್ಕುತ್ತಿದ್ದ ಶಕ್ತಿಗಳು ಎಲ್ಲರನ್ನೂ ಅಸಹಾಯಕರನ್ನಾಗಿ ಮಾಡಲು ಮತ್ತು ಗೇಲಿ ಮಾಡಲು ಸಿದ್ಧವಾಗಿದ್ದವು. ಇತಿಹಾಸವನ್ನು ಬದಲಿಸುವ ಹೆಸರಿನಲ್ಲಿ, ಅವರು ಇತಿಹಾಸವನ್ನು ನಾಶಪಡಿಸುತ್ತಿದ್ದರು, ವರ್ತಮಾನವನ್ನು ಅವಮಾನಿಸುತ್ತಿದ್ದರು ಮತ್ತು ಭವಿಷ್ಯದ ಕಲ್ಪನೆಯೂ ಭಯಾನಕವಾಗುವಂತಹ ಪರಿಸ್ಥಿತಿಗಳನ್ನು ಸೃಷ್ಟಿಸುತ್ತಿದ್ದರು. ಪಾಗಲ್‌ದಾಸ್ ಅವರ ಈ ದುಃಖ ಕೇವಲ ಅವರೊಬ್ಬರದ್ದಾಗಿರಲಿಲ್ಲ. ನ್ಯಾಯವನ್ನು ಬಯಸುವ, ಸತ್ಯವನ್ನು ರಕ್ಷಿಸಲು ಬಯಸುವ, ಅಯೋಧ್ಯೆಯ ಘನತೆಯನ್ನು ಉಳಿಸಿಕೊಳ್ಳಲು ಬಯಸುವ ಮತ್ತು ತಪ್ಪು ನಡೆಯುವುದನ್ನು ಸಹಿಸದ ಎಲ್ಲರದ್ದಾಗಿತ್ತು! ಪಾಗಲ್‌ದಾಸ್ ನಿಧನದ ನಂತರ, ಆ ದಿನಗಳ ಹಿಂದಿ ಯುವ ಕವಿ ಬೋಧಿಸತ್ವ ಅವರು ‘ಪಾಗಲ್‌ದಾಸ್’ ಎಂಬ ಶೀರ್ಷಿಕೆಯಡಿಯಲ್ಲಿಯೇ ಒಂದು ದೊಡ್ಡ ಭಾವನಾತ್ಮಕ ಮತ್ತು ಸ್ಪರ್ಶದ ಕವಿತೆಯನ್ನು ರಚಿಸಿದರು, ಅದಕ್ಕಾಗಿ ಅವರಿಗೆ 1999 ರ ಪ್ರತಿಷ್ಠಿತ ಭಾರತ ಭೂಷಣ ಅಗರ್ವಾಲ್ ಪ್ರಶಸ್ತಿ ಲಭಿಸಿತು. ಈ ಕವಿತೆಯಲ್ಲಿ ಅವರು ಆ ದುಃಖದ ಬಗ್ಗೆ ವಿವರವಾಗಿ ಹೇಳುತ್ತಾರೆ: ಸ್ವಾಮಿ ಪಾಗಲ್‌ದಾಸ್ ಅಯೋಧ್ಯೆಯಲ್ಲಿ ದುಃಖಿತರಾಗಿದ್ದರು, ಭೂತನಾಥ ಬನಾರಸ್‌ನಲ್ಲಿ, ಬುದ್ಧ ಕಪಿಲವಸ್ತುವಿನಲ್ಲಿ, ಕಾಳಿದಾಸ ಉಜ್ಜಯಿನಿಯಲ್ಲಿ, ಬೆಳೆಗಳು ಹೊಲಗಳಲ್ಲಿ, ಎಲೆಗಳು ಮರಗಳ ಮೇಲೆ, ಜನರು ದಿಲ್ಲಿಯಲ್ಲಿ, ಪಾಟ್ನಾದಲ್ಲಿ, ಪ್ರಪಂಚದಾದ್ಯಂತ ! ಅಂತಹ ಪರಿಸ್ಥಿತಿಯಲ್ಲಿ ದುಃಖಿಗಳಾಗಿದ್ದರು. ಪಾಗಲ್‌ದಾಸ್ ಮೃದಂಗ ನುಡಿಸುವುದನ್ನು ಸಹ ಬಿಟ್ಟಿದ್ದರು, ಬಣ್ಣ ಹಚ್ಚುವುದನ್ನು ಮರೆತಿದ್ದರು, ಸಮಾರಂಭಗಳನ್ನು ತ್ಯಜಿಸಿದ್ದರು, ನಿಯಮಗಳನ್ನು ಮರೆತಿದ್ದರು, ತುಂಬುವ ವಿಧಾನ ನೆನಪಿರಲಿಲ್ಲ, ಜನರಿಂದ ದೂರವಿರಲು ಪ್ರಾರಂಭಿಸಿದ್ದರು, ಲೋಮ ವಿಲೋಮಕ್ಕೆ ಅವಕಾಶವಿರಲಿಲ್ಲ. ಗಮನಾರ್ಹ ಸಂಗತಿಯೆಂದರೆ, ಆ ದೀನ ಅಸಹಾಯಕತೆಯ ಕಾಲದಲ್ಲೂ ಪಾಗಲ್‌ದಾಸ್ ನ್ಯಾಯದ ಹಾದಿಯಿಂದ ವಿಚಲಿತರಾಗಲು ಒಪ್ಪಿರಲಿಲ್ಲ. ಲಂಕೆಯಲ್ಲಿ ವಿಭೀಷಣನಂತೆ ಅವರು ಅಯೋಧ್ಯೆಯಲ್ಲಿ ಇರಬೇಕಾಗಿ ಬಂದರೂ ಸಹ! 1993ರ ಆಗಸ್ಟ್ 15ರಂದು ಸಹಮತ್ (ಸಫ್ದರ್ ಹಾಶ್ಮಿ ಮೆಮೋರಿಯಲ್ ಟ್ರಸ್ಟ್) ಶಬನಮ್ ಹಾಶ್ಮಿ ನೇತೃತ್ವದಲ್ಲಿ ಅಯೋಧ್ಯೆಯಲ್ಲಿ ತನ್ನ ಬಹುಪ್ರಚಾರಿತ ‘ಮುಕ್ತನಾದ್’ ಕಾರ್ಯಕ್ರಮವನ್ನು ಆಯೋಜಿಸಿದಾಗ, ಅದನ್ನು ತಡೆಯಲು ಮತ್ತು ವಿಫಲಗೊಳಿಸಲು ಪ್ರಯತ್ನಿಸುತ್ತಿದ್ದ ಸರಕಾರದ ಕೆಂಗಣ್ಣುಗಳಿಗೆ ಹೆದರದೆ ಸ್ವಾಮಿ ಪಾಗಲ್‌ದಾಸ್ ಅದರ ಉದ್ಘಾಟನೆಗೆ ಹೋದರು. ಆದರೆ, ಆಡಳಿತವು ಅವರ ದಾರಿಯಲ್ಲಿ ಅದೆಷ್ಟು ಅಡೆತಡೆಗಳನ್ನು ಸೃಷ್ಟಿಸಿತೆಂದರೆ ಅವರು ಸಮಯಕ್ಕೆ ಸರಿಯಾಗಿ ಮುಕ್ತನಾದ್ ಸ್ಥಳಕ್ಕೆ ತಲುಪಲು ಸಾಧ್ಯವಾಗಲಿಲ್ಲ. ಮೊದಲು ಅವರ ವಾಹನವನ್ನು ತಡೆಯಲಾಯಿತು, ನಂತರ ಭದ್ರತೆಯ ನೆಪ ಹೇಳಿ ನಡೆದುಕೊಂಡು ಹೋಗುವುದನ್ನು ಸಹ ತಡೆಯಲು ಪ್ರಯತ್ನಿಸಲಾಯಿತು, ಆದರೆ ಇದೆಲ್ಲವೂ ಮುಕ್ತನಾದ್‌ನಲ್ಲಿ ಅವರ ಭಾಗವಹಿಸುವಿಕೆಯನ್ನು ತಡೆಯಲು ಸಾಧ್ಯವಾಗಲಿಲ್ಲ. ಅವಿವಾಹಿತರಾಗಿದ್ದ ಹನುಮಾನ್ ಭಕ್ತ ಸ್ವಾಮಿ ಪಾಗಲ್ ದಾಸ್ ಅವರ ವ್ಯಕ್ತಿತ್ವ ಹಲವು ವಿಧಗಳಲ್ಲಿ ವಿಶಿಷ್ಟವಾಗಿತ್ತು. ಅವರು ತಮ್ಮ ಉಳಿತಾಯದ ಒಂದು ಭಾಗವನ್ನು ಉತ್ತರ ಪ್ರದೇಶ ಸಂಗೀತ ನಾಟಕ ಅಕಾಡಮಿಗೂ ನೀಡಿದ್ದರು, ಅದರಿಂದ ಅಕಾಡಮಿಯು ಸ್ವಾಮಿ ಭಗವಾನ್‌ದಾಸ್ ಮೃದಂಗಾಚಾರ್ಯರ ಸ್ಮರಣಾರ್ಥ ಧ್ರುಪದ್ ಸಮಾರೋಹಗಳನ್ನು ಆಯೋಜಿಸುತ್ತದೆ. ನಾವು ಮೊದಲೇ ಹೇಳಿದಂತೆ, ಸ್ವಾಮಿ ಭಗವಾನ್‌ದಾಸ್ ಪಾಗಲ್‌ದಾಸ್‌ರ ಆರಾಧ್ಯ ದೈವಗಳಲ್ಲಿ ಒಬ್ಬರಾಗಿದ್ದರು. ಅಕಾಡಮಿಯು 1995 ರಲ್ಲಿ ಸ್ವಾಮಿ ಪಾಗಲ್‌ದಾಸ್‌ಗೆ ತನ್ನ ರತ್ನ ಸದಸ್ಯತ್ವವನ್ನು ನೀಡುವ ಘೋಷಣೆ ಮಾಡಿತ್ತು, ಆದರೆ ಅದು ಅವರಿಗೆ ಮರಣೋತ್ತರವಾಗಿ 1999ರಲ್ಲಿ ಲಭಿಸಿತು. ಮಧ್ಯಕಾಲದಲ್ಲಿ ಅಯೋಧ್ಯೆಯ ನಿವಾಸಿ ವೈರಾಗಿಗಳು ನಿರ್ಗುಣ ಸಂತ ಕವಿ ಪಲ್ಟೂದಾಸ್ ಅವರನ್ನು ಜೀವಂತವಾಗಿ ಸುಟ್ಟಾಗ ಎಷ್ಟು ದುಃಖಿತವಾಗಿತ್ತೋ, ಪಾಗಲ್ ದಾಸರನ್ನು ಕಳೆದುಕೊಂಡು ಇಂದಿಗೂ ಅಷ್ಟೇ ದುಃಖಿತವಾಗಿದೆ. ಅಯೋಧ್ಯೆಯ ಈ ದುಃಖ ಈಗ ಯಾವಾಗ ದೂರವಾಗುವುದೋ? ಸದ್ಯಕ್ಕೆ ಅಲ್ಲಿ ಯಾವುದೇ ಪಾಗಲ್‌ದಾಸ್ ವಾಸಿಸುತ್ತಿಲ್ಲ.

ವಾರ್ತಾ ಭಾರತಿ 8 Feb 2026 11:03 am

ನೀವು ಕಾಣಿರೆ ಶುದ್ಧ ಜೋಳದ ರೊಟ್ಟಿ?

ಹೊಸ ತಲೆಮಾರಿನ ಅನೇಕರು ರೊಟ್ಟಿ ಮಾಡುತ್ತಿಲ್ಲ, ಉಣ್ಣುತ್ತಿಲ್ಲ. ಹೀಗಾಗಿ ಮುಂಜಾನೆಯೇ ರೊಟ್ಟಿ ತಟ್ಟುವ ಸದ್ದು ಕೇಳುವುದು ಅಪರೂಪವಾಗುತ್ತಿದೆ. ಮುಂಜಾನೆ ಯಾಕೆ ನಸುಕಿನಲ್ಲಿ ರೊಟ್ಟಿ ಬಡಿಯುವವರ ಸದ್ದಿಗೆ ಏಳುತ್ತಿದ್ದ ನೆನಪಿದೆ. ಹಾಗೆಯೇ ಪುಂಡಿಪಲ್ಯ ಇದ್ದರೆ ಸಾಕು. ಅದರ ಮೇಲೆ ಖಾರದಪುಡಿ ಹಾಗೂ ಒಳ್ಳೆಣ್ಣೆ ಹಾಕಿಕೊಂಡು ಉಂಡರೆ ಮತ್ತೇನೂ ಬೇಡ. ಅದರಲ್ಲೂ ತಂಗಳ ರೊಟ್ಟಿಗೆ ಪುಂಡಿಪಲ್ಯ ಅಗದೀ ಛಲೋ. ಹಾಗೆಯೇ ತಂಗಳರೊಟ್ಟಿಗೆ ಹುಳಬಾಣದೊಂದಿಗೆ ಖಾರದಪುಡಿ ಮೇಲೊಂದಿಷ್ಟು ಅಡುಗೆಎಣ್ಣೆ ಹಾಕಿಕೊಂಡು ಉಂಡರೆ ಆಹಾ ಎನ್ನಬೇಕು. ಗಣೇಶ ಅಮೀನಗಡ ಎಂದರೆ ಓಡಾಡುವ ರಂಗಭೂಮಿ. ಹೆಗಲ ಜೋಳಿಗೆಯಲ್ಲಿ ಪುಸ್ತಕಗಳ ಬುತ್ತಿ ಗಂಟು. ಮೂಲತಃ ಬಾಗಲಕೋಟೆ ಜಿಲ್ಲೆಯವರಾಗಿರುವ ಅಮೀನಗಡ, ‘ಕನ್ನಡ ಬಂಡಾಯ ಕಾವ್ಯದಲ್ಲಿ ಪ್ರತಿಮಾ ಸಂವಿಧಾನ’ ಸಂಶೋಧನಾ ಪ್ರಬಂಧಕ್ಕೆ ಡಾಕ್ಟರೇಟ್ ಪಡೆದುಕೊಂಡಿದ್ದಾರೆ. ವೃತ್ತಿಯಲ್ಲಿ ಪತ್ರಕರ್ತರಾದರೂ, ಪ್ರವೃತ್ತಿಯಲ್ಲಿ ರಂಗಭೂಮಿಯ ಜೊತೆಗೆ ಸಂಬಂಧ ಬೆಸೆದುಕೊಂಡವರು. ಪ್ರಯೋಗ ಪ್ರಸಂಗ, ಏಣಗಿ ಬಾಳಪ್ಪ ಅವರ ಕುರಿತ ‘ಬಣ್ಣದ ಬದುಕಿನ ಚಿನ್ನದ ದಿನಗಳು, ಕೈದಿಗಳ ಕಥನ, ಬದುಕು ಬದಲಿಸಿದ ಹಳೆ ಸ್ಕೂಟರ್, ಮಾತು ಹಾಡಾಗಲಿ ಹಾಡು ಮಾತಾಗಲಿ, ವೈದ್ಯ ಲೋಕದ ನಕ್ಷತ್ರ, ಬಂಗಾರದ ಮನುಷ್ಯ ಮೊದಲಾದವು ಇವರ ಕೃತಿಗಳು. ಸೇಡಂನ ಅಮ್ಮ ಪ್ರಶಸ್ತಿ, ನಾಟಕ ಅಕಾಡಮಿ ಪ್ರಶಸ್ತಿ, ಸಾಹಿತ್ಯ ಅಕಾಡಮಿ ಪುಸ್ತಕ ಪ್ರಶಸ್ತಿ ಇವರ ಸಾಧನೆಗೆ ಸಂದ ಗೌರವಗಳು. ಬಿಸಿಲ ನಾಡಿನ ಬದುಕನ್ನು ಪೊರೆವ ಜೋಳದ ರೊಟ್ಟಿಯ ರುಚಿಯ ಸೊಗಡನ್ನು ಇಲ್ಲಿ ಹಂಚಿದ್ದಾರೆ. ಶುದ್ಧ ಸಸ್ಯಾಹಾರಿ ಹೋಟೆಲ್ ಎನ್ನುವ ನಾಮಫಲಕವಿರುವ ಹಾಗೆ ಶುದ್ಧ ಜೋಳದ ರೊಟ್ಟಿ ಖಾನಾವಳಿ ಅಥವಾ ಅಕ್ಕಿ ಹಿಟ್ಟು ಬೆರೆಸದ ರೊಟ್ಟಿ ಖಾನಾವಳಿ ಎನ್ನುವ ಬೊರ್ಡ್ ಹುಡುಕುತ್ತಿರುವೆ. ಖರೇನ... ತೆಳ್ಳಗೆ, ಬೆಳ್ಳಗೆ ರೊಟ್ಟಿ ಮೋಡಿ ಮಾಡುತ್ತವೆ. ಉಂಡರೆ ಮೋಸ ಮಾಡುತ್ತವೆ. ಇದೂ ಖರೇನ. ಚಿಲಿಮಿಲಿ ಎಂದು ಓದುವ ಗಿಳಿಗಳಿರಾ ನೀವು ಕಾಣಿರೆ, ನೀವು ಕಾಣಿರೆ ಸರವೆತ್ತಿ ಪಾಡುವ ಕೋಗಿಲೆಗಳಿರಾ ನೀವು ಕಾಣಿರೆ ನೀವು ಕಾಣಿರೆ ಎರಗಿ ಬಂದಾಡುವ ತುಂಬಿಗಳಿರಾ ನೀವು ಕಾಣಿರೆ, ನೀವು ಕಾಣಿರೆ ಎಂದು ಅಕ್ಕಮಹಾದೇವಿಯು ವಚನದ ಮೂಲಕ ಚೆನ್ನಮಲ್ಲಿಕಾರ್ಜುನನ್ನು ಹುಡುಕುವ ಬಗೆಯನ್ನು ಹಿಡಿದಿಟ್ಟಿದ್ದಾಳೆ. ಗಿಳಿಗಳೆ, ಕೋಗಿಲೆಗಳೆ, ದುಂಬಿಗಳೆ ನೀವು ಕಾಣಿರೆ ಎಂದು ಕೇಳುವ ಹಾಗೆ ಶುದ್ಧ ಜೋಳದ ರೊಟ್ಟಿಯ ನೀವು ಕಂಡಿರೆ, ನೀವು ಕಂಡಿರೆ ಎಂದು ಕೇಳುವ ಪರಿಸ್ಥಿತಿ ಬಂದಿದೆ. ಕ್ಷಮೆ ಇರಲಿ, ಶುದ್ಧ ರೊಟ್ಟಿಯ ಸಲುವಾಗಿ ಅಕ್ಕನ ವಚನವನ್ನು ಉದಾಹರಿಸಿದ್ದಕ್ಕೆ. ಜೋಳದ ರೊಟ್ಟಿಗಳು ಉತ್ತರ ಕರ್ನಾಟಕ, ಕಲ್ಯಾಣ ಕರ್ನಾಟಕದಲ್ಲಿ ಸಿಗುವುದು ಸಾಮಾನ್ಯ. ಉಳಿದ ಕಡೆ ಅಪರೂಪವೆಂದಾಗಿತ್ತು. ಈಗ ಹಾಗಿಲ್ಲ. ಎಲ್ಲ ಊರುಗಳಲ್ಲೂ ಜೋಳದ ರೊಟ್ಟಿ ಸಿಗುತ್ತವೆ. ಆದರೆ ಶುದ್ಧ ಜೋಳದ ರೊಟ್ಟಿ ಸಿಗುವುದು ಕಷ್ಟಸಾಧ್ಯ. ಮನೆಗಳಲ್ಲಿ ಮಾತ್ರ ಸಿಗಬಹುದು. ಆದರೆ ಮೈಸೂರಲ್ಲಿ ವಾಸಿಸುವ ನನ್ನಂಥವನು ಉತ್ತರ ಕರ್ನಾಟಕ, ಕಲ್ಯಾಣ ಕರ್ನಾಟಕದಲ್ಲಿ ತಿರುಗಾಡುವಾಗ ತಮ್ಮ ಮನೆಗಳಿಗೆ ಕರೆದೊಯ್ದವರು ಶುದ್ಧ ಜೋಳದ ರೊಟ್ಟಿ ಕೊಡುತ್ತಾರೆ. ಆದರೆ ಎಲ್ಲ ಕಡೆ ಮನೆಗಳಿಗೆ ಕರೆಯುವುದಿಲ್ಲ. ಕಾರ್ಯಕ್ರಮ, ಮದುವೆ ಮೊದಲಾದ ಸಮಾರಂಭಗಳಲ್ಲಿ ಜೋಳದ ರೊಟ್ಟಿಯ ಊಟವಿರುತ್ತದೆಯೇನೋ ನಿಜ. ಆದರೆ ಶುದ್ಧ ಜೋಳದ ರೊಟ್ಟಿ ಸಿಗುವುದಿಲ್ಲ ಎನ್ನುವುದೇ ವ್ಯಥೆ. ಉತ್ತರ ಕರ್ನಾಟಕ, ಕಲ್ಯಾಣ ಕರ್ನಾಟಕದತ್ತ ಹೋದರೆ ಮನೆಯಾಕೆ ಕೇಳುವುದೊಂದೇ ‘ಜ್ವಾಳದ ಹಿಟ್ಟು ತಗೊಂಡು ಬರ್ರಿ, ಛಲೋ ಜ್ವಾಳದ ಹಿಟ್ಟು. ಅಕ್ಕಿ ಹಿಟ್ಟು ಬೆರೆಸದ ಜ್ವಾಳದ ಹಿಟ್ಟು. ಮತ್ತೇನೂ ಬ್ಯಾಡ್ರಿ’ ಎನ್ನುವ ಒಂದೇ ಬೇಡಿಕೆ. ಹುಬ್ಬಳ್ಳಿಗೆ ಹೋದಾಗ ಸಿದ್ಧಾರೂಢ ಮಠದ ಮಗ್ಗುಲಲ್ಲಿರುವ ಗಿರಣಿಯಲ್ಲಿ ಛಲೋ ಜೋಳ ಹಾಕಿಕೊಡ್ತಾರ ಎಂದ ಗೆಳೆಯರ ಮಾತು ನಂಬಿ ಅಲ್ಲಿಗೆ ಹೋದೆ. ಹಾಗೆ ಹೋಗುವಾಗ ಐದು ಕಿಲೊ ಛಲೋ ಜೋಳವನ್ನೂ ಒಯ್ದಿದ್ದೆ. ಅವರು ಜೋಳ ತೆಗೆದುಕೊಂಡು ‘ಇಲ್ಲೇ ಕುಂದರ್ರಿ. ಹಿಟ್ಟು ಮಾಡಿಕೊಡ್ತೀವ್ರಿ’ ಅಂದ್ರು. ಹಾಗೆ ಗಿರಣಿ ಹೊರಗೆ ಕುಳಿತೆ. ಸ್ವಲ್ಪ ಹೊತ್ತಲ್ಲಿ ಜೋಳದ ಹಿಟ್ಟು ತಂದುಕೊಟ್ಟರು. ಅವರು ಕೊಟ್ಟ ಹಿಟ್ಟು ಬಿಳಿಯಾಗಿತ್ತು. ಮನೆಯಾಕೆ ಏನನ್ನುತ್ತಾಳೋ ಎಂಬ ಅಳುಕಿನಲ್ಲಿ ಮೈಸೂರಿಗೆ ಒಯ್ದರೆ ‘ಅಕ್ಕಿ ಹಿಟ್ಟು ಬೆರೆಸ್ಯಾರ’ ಎಂದು ದೂರಿದಳು. ಇಂಥ ಅನುಭವಗಳು ಹೆಚ್ಚುತ್ತಿವೆ. ನಮ್ಮ ಜೋಳವನ್ನೇ ಗಿರಣಿಗೆ ಒಯ್ದರೂ ಅಲ್ಲಿನವರೇ ಅಕ್ಕಿ ಹಿಟ್ಟು ಬೆರೆಸಿ ಕೊಟ್ಟರೆ ಏನು ಮಾಡುವುದು? ಮೈಸೂರಿನಲ್ಲೂ ಜೋಳದ ಹಿಟ್ಟು ಸಿಗುತ್ತದೆ ನಿಜ. ಆದರೆ... ಜೋಳವನ್ನು ಗಿರಣಿಗೆ ಒಯ್ದು ಬೀಸಿಕೊಂಡು ಬಂದರೆ ರೊಟ್ಟಿಯ ಬಣ್ಣ ಬದಲಾಗುತ್ತದೆ, ರುಚಿಯೂ ಇರುವುದಿಲ್ಲ. ರಾಗಿ, ಗೋಧಿ, ಅರಿಸಿನ, ಕಡ್ಲೆ... ಹೀಗೆ ಎಲ್ಲ ಪದಾರ್ಥಗಳೊಂದಿಗೆ ಬೀಸುವುದರಿಂದ ಜೋಳದ ಹಿಟ್ಟು ಚೆನ್ನಾಗಿರುವುದಿಲ್ಲ. ಉತ್ತರ ಕರ್ನಾಟಕ, ಕಲ್ಯಾಣ ಕರ್ನಾಟಕದಲ್ಲಿ ಜೋಳವನ್ನು ಪ್ರತ್ಯೇಕವಾಗಿ ಬೀಸಲಾಗುತ್ತದೆ. ಆದರೆ ಅಪರಿಚಿತನೆಂದು ಅಕ್ಕಿಹಿಟ್ಟು ಬೆರೆಸಿಕೊಟ್ಟರೆ? ಒಂದು ಕಿಲೋ ಜೋಳಕ್ಕೆ 45-50 ರೂಪಾಯಿ ದರ ಇರುವಾಗ ಜೋಳ ಕೊಳ್ಳುವವರು ಕಡಿಮೆ. ಕೊಂಡರೂ ರೇಷನ್ ಅಕ್ಕಿಯ ಹಿಟ್ಟು ಬೆರೆಸಿ ರೊಟ್ಟಿ ಮಾಡುತ್ತಾರೆ ಮನೆಗಳಲ್ಲೂ. ಎಲ್ಲರ ಮನೆಗಳಲ್ಲಲ್ಲ ಎನ್ನುವುದು ಮುಖ್ಯ. ಇದಕ್ಕಾಗಿ ಗೆಳೆಯರನ್ನು ಕೇಳಿದರೆ ತಮ್ಮ ಮನೆಯಲ್ಲಿರುವ ಜೋಳದ ಹಿಟ್ಟು ಕಳಿಸುತ್ತಾರೆ. ಇದಕ್ಕಾಗಿ ದುಡ್ಡೂ ಪಡೆಯುವುದಿಲ್ಲ. ನಾನು ಕೊಡುತ್ತೇನೆಂದರೂ ಅವರು ಬೇಡವೆನ್ನುತ್ತಾರೆ. ಈ ಭಿಡೆಯೇ ಬೇಡವೆಂದು ಅಂಗಡಿಗಳಲ್ಲಿ ಸಿಗುವ ಜೋಳದ ಹಿಟ್ಟು ಕೊಂಡು ಒಯ್ದರೆ ಮನೆಯಾಕೆಯಿಂದ ಬೈಸಿಕೊಳ್ಳುವುದು ಕಟ್ಟಿಟ್ಟ ಬುತ್ತಿ. ಇದಕ್ಕಾಗಿ ಕಟಗ ರೊಟ್ಟಿ ತಂದರೆ ಅವು ಹಪ್ಪಳದ ಹಾಗಿರುತ್ತವೆ. ಅನೇಕ ಕಡೆ ರೊಟ್ಟಿಯನ್ನು ಬಡಿದು ಅಂದರೆ ತಟ್ಟಿರುವುದಿಲ್ಲ. ಲಟ್ಟಿಸಿರುತ್ತಾರೆ ಮೇಲಾಗಿ ಅಕ್ಕಿಯ ಹಿಟ್ಟು ಬೆರೆಸಿರುತ್ತಾರೆ. ಹೀಗಾಗಿ ಬೆಳ್ಳನೆಯ, ತೆಳ್ಳನೆಯ ಕಟಗ ರೊಟ್ಟಿಗೆ ಮಾರುಹೋಗಿ ತಿಂದರೆ ಬೇಸರವಾಗುತ್ತದೆ. ಅವುಗಳನ್ನು ಯಂತ್ರದಿಂದ ಮಾಡಿದವುಗಳಾಗಿರುತ್ತವೆ. ಈಚಿನ ವರ್ಷಗಳಲ್ಲಿ ಮದುವೆ ಮೊದಲಾದ ಸಮಾರಂಭಗಳಲ್ಲಿ ಯಂತ್ರದಿಂದ ಮಾಡಿದ ರೊಟ್ಟಿಗಳನ್ನೇ ತಂದಿರುತ್ತಾರೆ. ನಾವೆಲ್ಲ ಚಿಕ್ಕವರಿದ್ದಾಗ ಓಣಿಯ ಮಹಿಳೆಯರೆಲ್ಲ ಸೇರಿ ಬಡಿದು, ಒಲೆಯೂರಿಯಲ್ಲಿ ಕಟಗ ರೊಟ್ಟಿ ಮಾಡುವುದು ನೆನಪಿಗೆ ಬರುತ್ತದೆ. ನಮ್ಮ ಅವ್ವಂದಿರು ರೊಟ್ಟಿ ಮಾಡುವಾಗಲೇ ಕಟಗ ರೊಟ್ಟಿ ಮಾಡುತ್ತಿದ್ದರು. ಈಗೀಗ ಯಂತ್ರದಿಂದ ಮಾಡಿದ ರೊಟ್ಟಿಗೆ ಎಣಗಾಯಿ ಎಂಬ ಪಲ್ಯ ಬಡಿಸುತ್ತಾರೆ. ಅದು ಎಣಗಾಯಿಯೂ ಆಗಿರುವುದಿಲ್ಲ. ಬದನೆಕಾಯಿ ಪಲ್ಯವಷ್ಟೇ ಆಗಿರುತ್ತದೆ. ಹೀಗೆ ಜವಾರಿ ಊಟ ಮಾಡುವ ನನ್ನಂಥವನಿಗೆ, ಜವಾರಿ ಊಟ ಸಿಗುವುದು ಅಪರೂಪವಾಗುತ್ತಿದೆ. ಏಕೆಂದರೆ ಯಾವುದೇ ಖಾನಾವಳಿಗೆ ಹೋದರೂ ಅಕ್ಕಿ ಹಿಟ್ಟು ಬೆರೆಸಿದ ಬಿಸಿ ರೊಟ್ಟಿ ಬಡಿಸುತ್ತಾರೆ. ಆರಿದ್ದು ಅಂದರೆ ತಣ್ಣಗಿನ ರೊಟ್ಟಿ ತಿಂದರೆ ರುಚಿಯಿರುವುದಿಲ್ಲ. ಬಿಳಿ ಬಣ್ಣವಷ್ಟೇ ಚೆಂದ. ಮೈಸೂರಿನಲ್ಲಿಯೇ ನಾಲ್ಕನೆಯ ತರಗತಿಯಿಂದ ಓದುತ್ತ ಈಗ ಇಂಜಿನಿಯರಿಂಗ್ ಓದುವ ನನ್ನ ಮಗ ನೇಸರನಿಗೆ ಬಿಸಿರೊಟ್ಟಿ ಮಾಡಿದ ದಿನ ಆತನ ತಾಯಿ ರಮಿಸಿ ಉಣಿಸುತ್ತಾಳೆ. ಏನು ಊಟ ಎಂದು ಕೇಳುವ ಅವನಿಗೆ ರೊಟ್ಟಿ ಎಂದರೆ ‘ರೋಟಿನಾ? ಒಲ್ಲೆ’ ಎನ್ನುವ ಅವನಿಗೆ ಅವನ ತಾಯಿಯೇ ಉಣಿಸುತ್ತಾಳೆ. ‘ಎಂಥಾ ಪುಣ್ಯ ಮಾಡಿ ನೀನು! ನಮ್ಮವ್ವ ನನಗ ಉಣಿಸಲಿಲ್ಲ?’ ಎಂದರೆ ನಗುತ್ತಾನೆ. ಇನ್ನು ಮನೆಯಾಕೆ ‘ಅವ್ವಾರ ಕಡೆಯಿಂದ ಉಣಿಸಿಕೊಳ್ಳಾಕ ಪುಣ್ಯ ಮಾಡಿರಬೇಕು, ನೀವೆಲ್ಲ ನಾಲ್ಕೈದು ಮಕ್ಕಳಿದ್ರಿ. ಕೂಳು ಕುಚ್ಚಾಕ ಅತ್ತೆಯವರಿಗೆ ಪುರುಸೊತ್ತಿರಲ್ಲ. ಇನ್ನ ಉಣಸಾಕ ಎಲ್ಲಿ ಸವುಡು ಇರ‌್ತದ?’ ಎಂದು ಕೇಳುತ್ತಾಳೆ. ಇನ್ನು ಜೋಳದ ಅಂಬಲಿ, ಜೋಳದ ನುಚ್ಚು, ಜೋಳದ ಕಡಬು ಮಾಡಿದ ದಿನ ಅವುಗಳ ಮಹತ್ವ ತಿಳಿಸಿ, ಒತ್ತಾಯಿಸಿ ಉಣಿಸಬೇಕು ಮಗನಿಗೆ. ನಾವೆಲ್ಲ ಚಿಕ್ಕವರಿದ್ದಾಗ ಅಂದರೆ ಎಂಭತ್ತರ ದಶಕದಲ್ಲಿ ರೊಟ್ಟಿಯೇ ಸರ್ವಸ್ವವಾಗಿತ್ತು. ಮುಂಜಾನೆ ಅವ್ವ ಒಲೆಯ ಮುಂದೆ ಕುಂತು ರೊಟ್ಟಿ ಬಡಿದರೆ, ತಂಗಿಯು ಹಿಂಡಿಕಲ್ಲಿನಲ್ಲಿ ಶೇಂಗಾದ ಚಟ್ನಿ ಮಾಡಿದ್ದನ್ನು ತಿಂದರೆ ಸ್ವರ್ಗ. ಹಾಗೆ ನಾಲ್ಕೈದು ರೊಟ್ಟಿ ತಿಂದರೆ ಸಂಜೆಯವರೆಗೂ ಹೊಟ್ಟೆ ಹಸಿಯುತ್ತಿರಲಿಲ್ಲ. ಸಂಜೆ ಹಸಿವಾದರೆ ಮತ್ತೆರಡು ರೊಟ್ಟಿಗಳನ್ನು ಕೈಯಲ್ಲಿ ಹಿಡಿದುಕೊಂಡು, ಖಾರದ ಮೇಲೆ ಶೇಂಗಾ ಎಣ್ಣೆ ಅಥವಾ ಕುಸುಬಿಎಣ್ಣೆ ಹಾಕಿಕೊಂಡು ಮಾಳಿಗೆ ಮೇಲೆ ಕುಂತು ಉಣ್ಣುತ್ತಿದ್ದೆವು. ಸ್ವಲ್ಪ ಬಿಡುವಿದ್ದರೆ ಉಳ್ಳಾಗಡ್ಡಿಯನ್ನು ಕೈಯಿಂದ ಜಜ್ಜಿ, ಎರಡು ಹೋಳು ಮಾಡಿ ರೊಟ್ಟಿಯೊಂದಿಗೆ ಉಂಡರೆ ಅದೇ ನಮಗೆ ಸ್ನ್ಯಾಕ್ಸ್ ಆಗಿತ್ತು. ಆಗೆಲ್ಲ ಪಾನಿಪೂರಿ ನಮ್ಮ ಊರಿಗೆ ಕಾಲಿಟ್ಟಿರಲಿಲ್ಲ. ಯಾವಾಗಲಾದರೊಮ್ಮೆ ಹದಿನೈದು ಪೈಸೆ ಕೊಟ್ಟು ವಗ್ಗರಣೆ ಚುರುಮುರಿಯನ್ನು ತಂದು ತಿಂದರೆ ಅದೇ ಸ್ನ್ಯಾಕ್ಸ್ ಆಗಿತ್ತು. ದೀಪಾವಳಿಗೊಮ್ಮೆ ಚಹಾದಂಗಡಿಗೆ ಅಜ್ಜನ ಜೊತೆಗೆ ಹೋಗಿದ್ದು ಬಿಟ್ಟರೆ ಮರುವರ್ಷ ದೀಪಾವಳಿಯ ದಿನವೇ ಹೋಗುತ್ತಿದ್ದೆವು. ಈಗೆಲ್ಲ ಕೂಸುಗಳನ್ನು ಎತ್ತಿಕೊಂಡೇ ಹೋಟೆಲುಗಳಿಗೆ ಹೋಗುತ್ತಾರೆ. ಬಾಲ್ಯದಲ್ಲೇ ಹೋಟೆಲಿನ ರುಚಿ ಹತ್ತಿಸುತ್ತಾರೆ. ಮಕ್ಕಳ ಜನ್ಮದಿನ, ವಿವಾಹ ವಾರ್ಷಿಕೋತ್ಸವ... ಹೀಗೆ ಯಾವುದೇ ಸಮಾರಂಭಗಳನ್ನು ಹೋಟೆಲಿನಲ್ಲಿ ಹಮ್ಮಿಕೊಳ್ಳುವುದರಿಂದ ಮನೆಯೂಟ ರುಚಿಸುವುದು ಕಷ್ಟವೇ. ಇದರೊಂದಿಗೆ ಹೊಸ ತಲೆಮಾರಿನ ಅನೇಕರು ರೊಟ್ಟಿ ಮಾಡುತ್ತಿಲ್ಲ, ಉಣ್ಣುತ್ತಿಲ್ಲ. ಹೀಗಾಗಿ ಮುಂಜಾನೆಯೇ ರೊಟ್ಟಿ ತಟ್ಟುವ ಸದ್ದು ಕೇಳುವುದು ಅಪರೂಪವಾಗುತ್ತಿದೆ. ಮುಂಜಾನೆ ಯಾಕೆ ನಸುಕಿನಲ್ಲಿ ರೊಟ್ಟಿ ಬಡಿಯುವವರ ಸದ್ದಿಗೆ ಏಳುತ್ತಿದ್ದ ನೆನಪಿದೆ. ಹಾಗೆಯೇ ಪುಂಡಿಪಲ್ಯ ಇದ್ದರೆ ಸಾಕು. ಅದರ ಮೇಲೆ ಖಾರದಪುಡಿ ಹಾಗೂ ಒಳ್ಳೆಣ್ಣೆ ಹಾಕಿಕೊಂಡು ಉಂಡರೆ ಮತ್ತೇನೂ ಬೇಡ. ಅದರಲ್ಲೂ ತಂಗಳ ರೊಟ್ಟಿಗೆ ಪುಂಡಿಪಲ್ಯ ಅಗದೀ ಛಲೋ. ಹಾಗೆಯೇ ತಂಗಳರೊಟ್ಟಿಗೆ ಹುಳಬಾಣದೊಂದಿಗೆ ಖಾರದಪುಡಿ ಮೇಲೊಂದಿಷ್ಟು ಅಡುಗೆಎಣ್ಣೆ ಹಾಕಿಕೊಂಡು ಉಂಡರೆ ಆಹಾ ಎನ್ನಬೇಕು. ಇನ್ನು ತಂಗಳ ರೊಟ್ಟಿಗೆ ಉಪ್ಪು, ಮಜ್ಜಿಗೆ ಹಾಕಿಕೊಂಡು ಉಣ್ಣುತ್ತಿದ್ದೆವು. ತಂಗಳು ಇಲ್ಲವೆ ಕಟಗ ರೊಟ್ಟಿಗಳ ಮೇಲೆ ಬಿಸಿಯಾದ ಸಾರು, ಚಟ್ನಿಪುಡಿ ಹಾಕಿಕೊಂಡು ಹಸಿಉಳ್ಳಾಗಡ್ಡಿ ಜೊತೆಗೆ ಉಂಡರೆ ವಾ... ಎನ್ನಬೇಕು. ರೊಟ್ಟಿ ವಿಶೇಷ ಎಂದರೆ, ಹಸಿಚಟ್ನಿಗೆ, ಒಣಚಟ್ನಿಪುಡಿಗೆ, ಹೆಸರುಕಾಳು, ಅಲಸಂದಿಕಾಲು, ಹುರುಳಿಕಾಳು ಪಲ್ಯ ಇದ್ದರೆ ಅದ್ಭುತ ಊಟವಾಗುತ್ತದೆ. ಚಟ್ನಿ, ಚಟ್ನಿಪುಡಿ, ಪಲ್ಯಗಳಿಲ್ಲವೆಂದರೆ ಸಬ್ಬಸಿಗೆ, ಮೆಂತ್ಯೆ, ಬದನೆ ಹಾಗೂ ಉಳ್ಳಾಗಡ್ಡಿಯನ್ನು ಸಣ್ಣಗೆ ಕತ್ತರಿಸಿ, ಖಾರದೊಂದಿಗೆ ಕಲಸಿ ರೊಟ್ಟಿಯೊಂದಿಗೆ ಉಂಡರೆ ಆಹಾ ಎನ್ನಬೇಕು. ಹೀಗೆ ಎಲ್ಲ ಪಲ್ಯಕ್ಕೂ ಹೊಂದಿಕೊಳ್ಳುವ ಹಾಗೂ ಕಾಂಬಿನೇಷನ್ ಗುಣ ರೊಟ್ಟಿಗಿದೆ. ಆದರೆ ಒಬ್ಬಳೇ ಮಗಳಿರುವ ಮನೆಗಳಲ್ಲಿ ಅಡುಗೆ ಕಲಿಸುವುದೇ ಕಷ್ಟವಾಗಿರುವಾಗ ಇನ್ನು ರೊಟ್ಟಿ ಮಾಡಲು ಬರುತ್ತದೆಯೇ? ಸುಲಭವಾಗಿ ಕೊಂಡುಕೊಳ್ಳಲು ರೊಟ್ಟಿ, ಪಲ್ಯ ಸಿಗುವುದರಿಂದ, ಉತ್ತರ ಕರ್ನಾಟಕ, ಕಲ್ಯಾಣ ಕರ್ನಾಟಕದಲ್ಲೂ ಕಟಗ ರೊಟ್ಟಿಗಳನ್ನು ಅಂಗಡಿಗಳಲ್ಲಿ ಮಾರುವುದರಿಂದ, ಗಂಡ-ಹೆಂಡತಿ ಉದ್ಯೋಗಸ್ಥರಾಗಿದ್ದರೆ... ಹೀಗೆ ಅನೇಕ ಕಾರಣಗಳ ಜೊತೆಗೆ ರೊಟ್ಟಿಯನ್ನೇ ತಿನ್ನಬೇಕೆಂದು ಹಟವಿದ್ದವರು ರೊಟ್ಟಿ ಮಾಡುವವರನ್ನು ನೇಮಿಸಿಕೊಳ್ಳುತ್ತಾರೆ. ವಿಜಾಪುರ, ಬಾಗಲಕೋಟೆಯಂಥ ಬಿಳಿಜೋಳ ಹೆಚ್ಚು ಬೆಳೆಯುವ ಜಿಲ್ಲೆಗಳಲ್ಲಿಯೇ ನಾಷ್ಟಾದ ಸಂಸ್ಕೃತಿ ಹೆಚ್ಚುತ್ತಿದೆ. ನ್ಯಾರಿ ಸಂಸ್ಕೃತಿ ಕಡಿಮೆಯಾಗುತ್ತಿದೆ. ನ್ಯಾರಿ ಎಂದರೆ ಹಿಂದಿನ ದಿನದ ಆಹಾರ ಪದಾರ್ಥವನ್ನು ತಂಗಳ ರೊಟ್ಟಿಯೊಂದಿಗೆ ಉಣ್ಣುವುದಾಗಿತ್ತು. ಇದರಲ್ಲಿ ಜುನಕದ ವಡೆ, ಕಾಳುಪಲ್ಯ, ಚಟ್ನಿಗಳನ್ನು ಮೊಸರಿನೊಂದಿಗೆ ಕಲಸಿ ಉಣ್ಣುತ್ತಿದ್ದೆವು. ಆಗೆಲ್ಲ ಬುಟ್ಟಿ ತುಂಬ ರೊಟ್ಟಿಗಳಿರುತ್ತಿದ್ದವು. ಈಗೆಲ್ಲ ನಿಮಗೆರಡು, ನನಗೆರಡು ಎಂದು ಲೆಕ್ಕ ಹಾಕಿ ರೊಟ್ಟಿ ಮಾಡುವವರು ಹೆಚ್ಚಿರುವಾಗ ಜೊತೆಗೆ ತಂಗಳನ್ನು ತಿನ್ನುವುದು ಆರೋಗ್ಯಕರವಲ್ಲ ಎನ್ನುವ ತಿಳಿವಳಿಕೆ ಹೆಚ್ಚಿದ ಪರಿಣಾಮ ನ್ಯಾರಿ ಕಡಿಮೆಯಾಗಿ ನಾಷ್ಟಾ, ಟಿಫಿನ್ ಹೆಚ್ಚಿವೆ. ಹಾಗೆಯೇ ರೊಟ್ಟಿ ಎಣಗಾಯಿ, ಸಪ್ಪನಬ್ಯಾಳಿ ಪಲ್ಯ ಮಾಡುವುದು ಬಿಟ್ಟು ಪಲಾವ್ ಮಾಡುವ ಪ್ರವೃತ್ತಿ ಹೆಚ್ಚುತ್ತಿದೆ. ಈಚೆಗೆ ವಿಜಾಪುರದಲ್ಲಿ ನಡೆದ ಸಮಾರಂಭದಲ್ಲಿ ಅತಿಥಿಯಾಗಿ ಭಾಗವಹಿಸಿದ್ದಾಗ ‘ದಿನಾಲೂ ಮುಂಜಾನೆ ಯಾರು ರೊಟ್ಟಿ ಮಾಡ್ತೀರಿ ಕೈ ಎತ್ರಿ?’ ಎಂದು ಕೇಳಿದೆ. ನೆರೆದಿದ್ದ ಮಹಿಳೆಯರಲ್ಲಿ ಬೆರಳೆಣಿಕೆಯಷ್ಟು ಮಾತ್ರ ಕೈ ಎತ್ತಿದರು! ಇನ್ನು ಜೋಳದ ಕಡಬು, ಜೋಳದ ನುಚ್ಚು, ಜೋಳದ ಅಂಬಲಿ, ರೊಟ್ಟಿ ಮುಟಗಿ, ಥಾಲಿಪಟ್ಟು ಯಾರು ಮಾಡ್ತೀರಿ ಎಂದು ಕೇಳುವುದಿಲ್ಲ ಎಂದಾಗ ಎಲ್ಲರೂ ನಕ್ಕರು. ಮುಂಜಾನೆದ್ದು ಅವಲಕ್ಕಿ, ಉಪ್ಪಿಟ್ಟು, ಇಡ್ಲಿ, ವಡೆ ನಾಷ್ಟಾಕ್ಕಾದರೆ ಮಧ್ಯಾಹ್ನ ರೊಟ್ಟಿಯ ಬಡಿಯುವವರು ಅಪರೂಪವಾಗುತ್ತಿದ್ದಾರೆ. ಇದು ನಗರಗಳಲ್ಲಿ ಹೆಚ್ಚು. ರೊಟ್ಟಿ ತಿಂದವ ಗಟ್ಟಿ ಅಕ್ಕಿ ತಿಂದ ಹಕ್ಕಿ ಎನ್ನುವ ಗಾದೆಮಾತನ್ನು ಬಳಸಬೇಕೋ ಬೇಡವೋ ಎನ್ನುವ ಗೊಂದಲದಲ್ಲಿರುವೆ. ಏಕೆಂದರೆ ಬಿಳಿಜೋಳ ಬೆಳೆಯುವುದೂ ಕಡಿಮೆಯಾಗುತ್ತಿದೆ ಎನ್ನುವುದು ವಾಸ್ತವ. ಜೋಳದ ಕಣಜ ವಿಜಾಪುರ ಜಿಲ್ಲೆಯಲ್ಲಿಯೇ ಬಿಳಿಜೋಳ ಬೆಳೆಯುವುದು ಕಡಿಮೆಯಾಗುತ್ತಿದೆ ಎನ್ನುವುದು ಆತಂಕದ ಸಂಗತಿ. ಇದು ವಾಣಿಜ್ಯ ಬೆಳೆಗಳ ಹೆಚ್ಚಳ ಜೊತೆಗೆ ಬದಲಾದ ಆಹಾರ ಪದ್ಧತಿಯ ಪರಿಣಾಮ. ‘ಕಳೆದ ಆರು ವರ್ಷಗಳಲ್ಲಿ ವಿಜಾಪುರ ಜಿಲ್ಲೆಯಲ್ಲಿ ಜೋಳ ಬೆಳೆಯುವ ಕ್ಷೇತ್ರ ಶೇ. 60ರಷ್ಟು ಕಡಿಮೆಯಾಗಿದೆ’ ಎನ್ನುವ ವಾಸ್ತವಾಂಶ ಹೇಳುತ್ತಾರೆ ಪತ್ರಕರ್ತ ಮಿತ್ರರಾದ ವಿಜಾಪುರದ ವಾಸುದೇವ ಹೆರಕಲ್ಲ. 2019-20ರಲ್ಲಿ ವಿಜಾಪುರ ಜಿಲ್ಲೆಯಲ್ಲಿ 1.081 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಜೋಳ ಬೆಳೆಯಲಾಗಿತ್ತು. 2024-25ರ ವೇಳೆಗೆ 45.60 ಸಾವಿರ ಹೆಕ್ಟೇರ್ ಪ್ರದೇಶಕ್ಕೆ ಇಳಿಕೆಯಾಗಿದೆ. ಇದು ಕೃಷಿ ಇಲಾಖೆಯ ದಾಖಲೆಗಳ ಪ್ರಕಾರ. ‘ಜೋಳ ಬೆಳೆಯುವುದು ಕಡಿಮೆಯಾಗುವುದರಿಂದ ಜಾನುವಾರುಗಳಿಗೂ ಮೇವು ಸಿಗುತ್ತಿಲ್ಲ’ ಎನ್ನುವ ಆತಂಕ ಅವರದು. ಹೀಗೆಯೇ ‘ಬಾಗಲಕೋಟೆ ಜಿಲ್ಲೆಯಲ್ಲಿ 1.30 ಲಕ್ಷ ಹೆಕ್ಟೇರ್‌ನಲ್ಲಿ ಜೋಳ ಬೆಳೆಯಲಾಗುತ್ತಿತ್ತು. ಈಗ 90 ಸಾವಿರ ಹೆಕ್ಟೇರ್‌ಗೆ ಇಳಿದಿದೆ. ಇದು ನಿಧಾನವಾಗಿ ಅಂದರೆ ಕಳೆದ 10-15 ವರ್ಷಗಳಿಂದ ಈಚೆಗೆ ಇಳಿದ ಪ್ರಮಾಣ’ ಎನ್ನುತ್ತಾರೆ ಪತ್ರಕರ್ತಮಿತ್ರ ಬಸವರಾಜ ಹವಾಲ್ದಾರ. ಇದೆಲ್ಲ ಅನ್ನಭಾಗ್ಯ ಯೋಜನೆ ಆರಂಭವಾದ ಮೇಲೆ ಆದ ಪರಿಣಾಮ ಇರಬಹುದು. ಅಂದರೆ ಪ್ರತೀ ತಿಂಗಳು ಐದು ಕಿಲೊ ಅಕ್ಕಿ ಸಿಗುವುದರಿಂದ ಬಹುತೇಕ ಕುಟುಂಬಗಳು ಜೋಳದ ಪದಾರ್ಥಗಳ ಬದಲು ಅಕ್ಕಿಯ ಪದಾರ್ಥಗಳನ್ನು ಊಟ, ಉಪಾಹಾರದಲ್ಲಿ ಬಳಸುತ್ತಿವೆ. ಅನೇಕ ರೈತರು ತಮ್ಮ ಮನೆಗಷ್ಟೇ ಜೋಳ ಬೆಳೆಯುತ್ತಾರೆ. ಒಣಬೇಸಾಯದ ಪ್ರದೇಶದಲ್ಲಿ ಹೆಚ್ಚು ಜೋಳ ಬೆಳೆಯುತ್ತಾರೆ. ಆದರೆ ಮಳೆ ಕೈಕೊಟ್ಟರೆ ಮುಗಿಯಿತು ಎನ್ನುವ ಸ್ಥಿತಿ. ಇಂಥ ಪ್ರದೇಶದಲ್ಲಿ ಬೆಳೆದ ಜೋಳವೇ ಈಗ ಮುಕ್ತ ಮಾರುಕಟ್ಟೆಯಲ್ಲಿ ದೊರಕುತ್ತದೆ. ಇಂಥ ರೈತರು ತಮ್ಮ ಮನೆಯ ಬಳಿ ಬರುವ ಮಾರಾಟಗಾರರರಿಗೆ ಮಾರುತ್ತಾರೆ ಹೊರತು ಎಪಿಎಂಸಿಗೆ ತರುತ್ತಿಲ್ಲ. ಹೀಗೆ ಒಂದೆಡೆ ಜೋಳ ಬೆಳೆಯುವುದು ಕಡಿಮೆಯಾಗುವುದರ ಜೊತೆಗೆ ಬಳಸುವವರೂ ಕಡಿಮೆಯಾಗುತ್ತಿದ್ದಾರೆ. ಊರಿಗೆ ಹೊರಟರೆ ಮನೆಗಳಲ್ಲಿ ಬಿಸಿರೊಟ್ಟಿ ಮಾಡಿ ಬುತ್ತಿ ಕಟ್ಟಿಕೊಡುತ್ತಿದ್ದರು. ಈಗ ಬುತ್ತಿ ಕಟ್ಟುವವರು ಕಡಿಮೆ. ಒಯ್ಯುವವರೂ ಕಡಿಮೆ. ಆದರೂ ಜಾತ್ರೆ, ಸಂಕ್ರಮಣ, ಚರಗ ಚೆಲ್ಲಲೆಂದು ಎಳ್ಳು ಹಚ್ಚಿದ ಜೋಳ ಹಾಗೂ ಸಜ್ಜೆಯ ರೊಟ್ಟಿ ಮಾಡಿಕೊಂಡು ಬುತ್ತಿ ಕಟ್ಟಿಕೊಂಡು ಹೊರಡುವವರಿದ್ದಾರೆ. ಕೊಪ್ಪಳದ ಗವಿಮಠದ ಜಾತ್ರೆಗೆ ಪ್ರತೀ ವರ್ಷ ಭಕ್ತರೇ 20 ಲಕ್ಷ ರೊಟ್ಟಿ ಮಾಡಿಕೊಂಡು ಒಯ್ಯುತ್ತಾರೆ! ಹೀಗೆಯೇ ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಡಂಬಳ ಗ್ರಾಮ ಹಾಗೂ ನರಗುಂದ ತಾಲೂಕಿನ ಶಿರೋಳ ಗ್ರಾಮ ರೊಟ್ಟಿಜಾತ್ರೆಯೆಂದೇ ಪ್ರಸಿದ್ಧವಾಗಿವೆ. ಗದಗದ ತೋಂಟದಾರ್ಯ ಮಠದ ಈ ಶಾಖಾಮಠಗಳಲ್ಲಿ ಜಾತ್ರೆಗೆಂದು ಭಕ್ತರು ಹಾಗೂ ಮಠಗಳಲ್ಲೂ ಲಕ್ಷಾಂತರ ಕಟಗ ರೊಟ್ಟಿಗಳನ್ನು ಸಿದ್ಧಪಡಿಸುತ್ತಾರೆ. ಇದಲ್ಲದೆ ಹುಬ್ಬಳ್ಳಿಯ ಸಿದ್ಧಾರೂಢ ಮಠದ ಜಾತ್ರೆಗೆ ಅದರಲ್ಲೂ ಕೌದಿಪೂಜೆ ದಿನ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ದರೂರು ಗ್ರಾಮದ ರೈತರಾದ ಸಿದಗೊಂಡ ಗುಮತಾಜಿ ಅವರು ಸಿಹಿಪದಾರ್ಥದ ಜೊತೆಗೆ ಸಜ್ಜೆ, ಜೋಳದ ಎರಡು ಸಾವಿರಕ್ಕೂ ಮಿಕ್ಕಿ ಕಟಗ ರೊಟ್ಟಿ ಒಯ್ಯುತ್ತಾರೆ. ಬಂದ ಭಕ್ತರಿಗೆ ದಾಸೋಹವೆಂದು ಬಡಿಸುತ್ತಾರೆ. ಅಲ್ಲದೆ ಪ್ರತೀ ಅಮಾವಾಸ್ಯೆಯ ದಿನ ಹುಬ್ಬಳ್ಳಿ ಸಿದ್ಧಾರೂಢ ಮಠಕ್ಕೆ ಸಿಹಿಅಡುಗೆ ಜೊತೆಗೆ 200 ಕಟಗ ರೊಟ್ಟಿ ಒಯ್ಯುತ್ತಾರೆ. ಬಂದ ಭಕ್ತರು ಪ್ರಸಾದವೆಂದು ಹಿಂಡಿ, ಹುಳಬಾಣ ಹಾಗೂ ರೊಟ್ಟಿಗಳನ್ನು ಮನೆಗೆ ಒಯ್ಯುತ್ತಾರೆ. ‘ಹಿಂಗ ನಲವತ್ತು ವರ್ಷಗಳಿಂದ ಚಾಲ್ತಿ ಐತ್ರಿ. ಅಜ್ಜಾವ್ರ ನಡೆಸಿಕೊಂಡು ಹೊಂಟಾರ. ಭಕ್ತಿ ಕಾರಣ. ಯಾನ ಬರ್ಲಿ ಸಿದ್ಧಾರೂಢರ ಮ್ಯಾಲ ನಂಬಿಕೆ’ ಎನ್ನುತ್ತಾರೆ ಸಿದಗೊಂಡ ಗುಮತಾಜಿ ಅವರ ಕಾಕಾ ಬಾಳಪ್ಪ ಗುಮತಾಜಿ. ಹೀಗೆ ರೊಟ್ಟಿ ಉಣ್ಣುವವರು ಹೆಚ್ಚಲಿ ಜೊತೆಗೆ ಮಾಡುವವರು ಹೆಚ್ಚಲಿ. ಹಾಗೆಯೇ ಮುತ್ತಿನಂಥ ಜೋಳ ಬೆಳೆಯುವುದು ಹೆಚ್ಚಲಿ. ಈಮೂಲಕ ನಮ್ಮ ಆಹಾರ ಸಂಸ್ಕೃತಿ ಉಳಿದು, ಬೆಳೆಯಲಿ. ರೊಟ್ಟಿ ಉಂಡು ಗಟ್ಟಿಯಾಗುವ ಜವಾರಿ ಮಂದಿಯೂ ಹೆಚ್ಚಲಿ.

ವಾರ್ತಾ ಭಾರತಿ 8 Feb 2026 10:52 am

ಬಸವನಬಾಗೇವಾಡಿ ಅಭಿವೃದ್ದಿಗೆ ಸರ್ಕಾರದ ಆಯವ್ಯಯದತ್ತ ಬಸವ ಭಕ್ತರ ಚಿತ್ತ: ಬಸವಣ್ಣ ಜನಿಸಿದೂರಿಗೆ ಈ ಬಾರಿ ಬಜೆಟ್‌ ನಲ್ಲಿ ಭರ್ಜರಿ ಕೊಡುಗೆ ಸಿಗುತ್ತಾ?

ಬಸವಣ್ಣನವರನ್ನು ಕರುನಾಡಿನ ಸಾಂಸ್ಕೃತಿಕ ನಾಯಕರೆಂದು ರಾಜ್ಯ ಸರ್ಕಾರ ಈಗಾಗಲೇ ಹೆಮ್ಮೆಯಿಂದ ಘೋಷಿಸಿದೆ. ಅಲ್ಲದೆ, ಬಸವನಬಾಗೇವಾಡಿ ಪ್ರತ್ಯೇಕ ಅಭಿವೃದ್ಧಿ ಪ್ರಾಧಿಕಾರ ರಚಿಸಿ 1 ವರ್ಷ ಕಳೆದಿದ್ದು, ಈವರೆಗೂ ಕೇವಲ ಆಯುಕ್ತ ನೇಮಕ ಹೊರತು ಪಡಿಸಿ ಬೇರೆ ಅಭಿವೃದ್ದಿ ಕಾರ್ಯ ನಡೆದಿಲ್ಲ. ಹಾಗಾಗಿ ಈ ಬಾರಿಯ ರಾಜ್ಯ ಬಜೆಟ್‌ ನತ್ತ ಬಸವ ಭಕ್ತರ ಚಿತ್ತ ನೆಟ್ಟಿದ್ದು, ಈ ಬಾರಿಯಾದರೂ ಬಸವನಬಾಗೇವಾಡಿ ಅಭಿವೃದ್ದಿಗೆ ಕೊಡುಗೆ ನೀಡುತ್ತಾರೋ ಇಲ್ಲವೋ ಎಂದು ಕಾದು ನೋಡುತ್ತಿದ್ದಾರೆ. ಹಾಗಾದ್ರೆ ಬಸವಣ್ಣ ಜನಿಸಿದೂರಿನ ಅಭಿವೃದ್ದಿಗೆ ಅಲ್ಲಿನ ಜನರ ಬೇಡಿಕೆಗಳೇನು ನೋಡಿ..

ವಿಜಯ ಕರ್ನಾಟಕ 8 Feb 2026 10:35 am

ಭಾರತ-ಅಮೆರಿಕ ಒಪ್ಪಂದಕ್ಕೆ ವಿರೋಧ: ರೈತರ ಸಂಘಟನೆಗಳಿಂದ ಫೆ.12ಕ್ಕೆ ಬೃಹತ್ ಪ್ರತಿಭಟನೆಗೆ ಕರೆ

ನವದೆಹಲಿ: ಭಾರತ ಮತ್ತು ಅಮೆರಿಕ ಮಧ್ಯ ಬಹುನಿರೀಕ್ಷೆಯ ವ್ಯಾಪಾರ ಒಪ್ಪಂದ ಏರ್ಪಟ್ಟಿದೆ. ಇದರ ಬೆನ್ನಲ್ಲೆ ಭಾರತದಲ್ಲಿ ರೈತಪರ ಸಂಘಟನೆಗಳು ಈ ಅಂತಾರಾಷ್ಟ್ರೀಯ ಒಪ್ಪಂದ ವಿರೋಧಿಸಿವೆ. ಒಪ್ಪಂದ ಕುರಿತು ಮಾಹಿತಿ ನೀಡಿದ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯುಷ್ ಗೋಯೆಲ್ ಅವರು ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿವೆ. ಇದೇ ಫೆಬ್ರವರಿ 12ರಂದು ಬೃಹತ್ ಪ್ರತಿಭಟನೆಗೆ ಕರೆ ನೀಡಿವೆ. ಶನಿವಾರ

ಒನ್ ಇ೦ಡಿಯ 8 Feb 2026 10:32 am

ಜಾರ್ಜಿಯಾ | ಅಟ್ಲಾಂಟ ಕನ್ನಡಿಗರಿಂದ ಸಂಕ್ರಾಂತಿ ಹಬ್ಬದ ಸಂಭ್ರಮಾಚರಣೆ

ವರದಿ : ಕೆ. ಆರ್.ಶ್ರೀನಾಥ್, ಅಟ್ಲಾಂಟ ಯುಎಸ್ಎ: ಜಾರ್ಜಿಯಾದ ಅಟ್ಲಾಂಟದಲ್ಲಿರುವ 'ನೃಪತುಂಗ ಕನ್ನಡ ಕೂಟ'ದ ವತಿಯಿಂದ ಮಕರ ಸಂಕ್ರಾತಿ 'ಸುಗ್ಗಿ ಸಂಭ್ರಮ' ಕಾರ್ಯಕ್ರಮ ಫೆ.7ರಂದು ನಡೆಯಿತು. ಇಲ್ಲಿನ 625 ಜೇಮ್ಸ್ ರೋಡ್ ನಲ್ಲಿರುವ ಡೆಸನ ಮಿಡ್ಲ್ ಸ್ಕೂಲ್ ನಲ್ಲಿ ಜರುಗಿದ ಸಮಾರಂಭಕ್ಕೆ ಆಗಮಿಸಿದ ಕನ್ನಡಿಗರನ್ನು ನೃಪತುಂಗ ಕನ್ನಡ ಕೂಟದ ಸದಸ್ಯರು ಎಳ್ಳು, ಬೆಲ್ಲ ನೀಡಿ ಆತ್ಮೀಯವಾಗಿ ಸ್ವಾಗತಿಸಿದರು.  ವಿಶ್ವೇಶ ಭಟ್ ಅವರಿಂದ ಸಂಗೀತ ಕಾರ್ಯಕ್ರಮ ಕೇರಂ, ರಂಗೋಲಿ ಬಿಡಿಸುವ, ಗಾಳಿಪಟ ಹಾರಿಸುವ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಅಂತ್ಯಾಕ್ಷರಿ ಹಾಗೂ ಕೋಲಾಟ ಕಾರ್ಯಕ್ರಮಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕನ್ನಡಿಗರು ಭಾಗವಹಿಸಿ ಆನಂದಿಸಿದರು. ಸ್ಥಳೀಯ ಕನ್ನಡಿಗ ಪ್ರಕಾಶ್ ರಾಮಚಂದ್ರ ಗೌಡ ತಮ್ಮ ಸುಮಧುರ ಕಂಠದಿಂದ ಹಲವಾರು ಕನ್ನಡ ಗೀತೆಗಳನ್ನು ಹಾಡಿ ಗಮನಸೆಳೆದರು. ಸಂಜೆ ಪ್ರಮುಖ ಆಕರ್ಷಣೆಯಾಗಿ ಕುಂದಾಪುರ ಮೂಲದ ವಿಶ್ವೇಶ ಭಟ್ ಅವರಿಂದ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಿಕ್ಕಿರಿದು ತುಂಬಿದ್ದ ಸಭಾಂಗಣದಲ್ಲಿ ಜಾನಪದ, ಶಾಸ್ತ್ರೀಯ, ಸಿನೆಮಾ ಹಾಗೂ ಸುಗಮ ಸಂಗೀತದ ಹೊಸ ಮಿಶ್ರಣವನ್ನು ಸಭಿಕರಿಗೆ ನೀಡಿ ರಂಜಿಸಿದರು. ಪ್ರಕಾಶ್ ರಾಮಚಂದ್ರಗೌಡ  ವಿಶ್ವೇಶ ಭಟ್ ರೊಂದಿಗೆ ಸ್ಥಳೀಯ ಪ್ರತಿಭೆಗಳಾದ ಜ್ಯೋತ್ಸ್ನಾ ರಾವ್ ಹಾಗೂ ಶ್ರೀಪ್ರಿಯ ಶ್ರೀನಿವಾಸ್ ಸಹ ಅದ್ಭುತವಾಗಿ ಹಾಡಿದರು. ಭಾಗವಹಿಸಿದ ಕಲಾವಿದರನ್ನು ಕೋಕಾ ಕೋಲಾ ಕಂಪೆನಿಯ ಗ್ಲೋಬಲ್ ಮಾರ್ಕೆಟಿಂಗ್ ಟೆಕ್ನಾಲಜಿಯ ಉಪಾಧ್ಯಕ್ಷ ಶೇಖರ್ ಗೌಡ ಸನ್ಮಾನಿಸಿದರು. ಮನೋರಂಜನೆ ಕಾರ್ಯಕ್ರಮಗಳನ್ನು ನೃಪತುಂಗ ಕನ್ನಡ ಕೂಟದ ಉಪಾಧ್ಯಕ್ಷ ಭರತ್ ತೇಜಸ್ವಿ ನಿರ್ವಹಿಸಿದರು. ಕೂಟದ ಪದಾಧಿಕಾರಿಗಳು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.

ವಾರ್ತಾ ಭಾರತಿ 8 Feb 2026 10:02 am

ಭಾರತದ ಜೊತೆಗೆ ಗಲ್ವಾನ್ ಘರ್ಷಣೆ ನಂತರ ಪಮಾಣು ಪರೀಕ್ಷೆ ನಡೆಸಿದ್ದ ಚೀನಾ: ಟ್ರಂಪ್ ತಂಡದ ಆರೋಪ | Donald Trump

ಭಾರತ ಮತ್ತು ಚೀನಾ ನಡುವೆ 2020 ಕೊರೊನಾ ಕಂಟಕದ ಸಮಯದಲ್ಲಿ ಭೀಕರ ಯುದ್ಧ ನಡೆದು ಹೋಗುವ ಆತಂಕ ಆವರಿಸಿತ್ತು. ಗಾಲ್ವಾನ್ ಕಣಿವೆಯ ಘರ್ಷಣೆ ನಂತರ, ಎರಡೂ ದೇಶಗಳು ಯುದ್ಧಕ್ಕೆ ಸಿದ್ಧತೆ ನಡೆಸಿರುವ ಭಯ ಆವರಿಸಿತ್ತು. ಇದೇ ವಿಚಾರವಾಗಿ ಈಗ ಮತ್ತೊಂದು ಸ್ಫೋಟಕ ಆರೋಪವನ್ನ ಮಾಡಿದೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ತಂಡ. ಗಾಲ್ವಾನ್ ಕಣಿವೆ ಘರ್ಷಣೆ

ಒನ್ ಇ೦ಡಿಯ 8 Feb 2026 9:57 am

ದಾಂಡೇಲಿ-ಅಳ್ನಾವರ ರೈಲಿಗೆ ಕೇಂದ್ರ ಸಚಿವ ಸೋಮಣ್ಣ ಚಾಲನೆ : 10ರೂ. ನಲ್ಲಿ ದಾಂಡೇಲಿ ಟು ಅಳ್ನಾವರ ಟ್ರಾವೆಲ್‌ !

ದಾಂಡೇಲಿ ಮತ್ತು ಅಳ್ನಾವರ ನಡುವೆ ರೈಲು ಸಂಚಾರ ಮತ್ತೆ ಆರಂಭವಾಗಿದ್ದು, ಇದಕ್ಕೆ ಕೇಂದ್ರ ಸಚಿವ ವಿ.ಸೋಮಣ್ಣಫೆ.7ರಂದು ಅಧಿಕೃತವಾಗಿ ಮರುಚಾಲನೆ ನೀಡಿದ್ದಾರೆ. ಇನ್ನು, ಈ ವೇಳೆ, ಮಾತನಾಡಿದ ಅವರು ದಾಂಡೇಲಿಯಿಂದ ಕೇವಲ 10.ರೂ.ದಲ್ಲಿ ಅಳ್ನಾವರಕ್ಕೆ ಹೋಗಬಹುದು ಎಂದು ತಿಳಿಸಿದ್ದಾರೆ. ಅಲ್ಲದೆ , ಈ ರೈಲನ್ನು ಹುಬ್ಬಳಿಯವರೆಗೂ ವಿಸ್ತರಿಸಲು ಪ್ರಯತ್ನ ಮಾಡಬೇಕೆಂದು ರೈಲ್ವೆ ಅಧಿಕಾರಿಗಳಿಗೆ ಆದೇಶಿಸಿದ್ದಾರೆ. ಇನ್ನು, ಇದು ಈ ಭಾಗದಲ್ಲಿ ಪ್ರವಾಸೋದ್ಯಮಕ್ಕೆ ಮತ್ತಷ್ಟು ಉತ್ತೇಜನ ನೀಡಲಿದ್ದು, ದಾಂಡೇಲಿ ಜನರ ಬಹುದಿನದ ಕನಸು ನನಸಾಗಿದೆ.

ವಿಜಯ ಕರ್ನಾಟಕ 8 Feb 2026 9:41 am

ವಿಟ್ಲ : ಬೈಕ್ ಢಿಕ್ಕಿ; ಮಹಿಳೆ ಮೃತ್ಯು, ಸವಾರ ಗಂಭೀರ

ವಿಟ್ಲ:  ಮಹಿಳೆಯೊಬ್ಬರಿಗೆ ಬೈಕ್ ಢಿಕ್ಕಿ ಹೊಡೆದ ಪರಿಣಾಮ  ಸ್ಥಳದಲ್ಲೇ ಮೃತಪಟ್ಟಿದ್ದು, ಬೈಕ್ ಸವಾರ ಗಂಭೀರವಾಗಿ ಗಾಯಗೊಂಡಿರುವ ಘಟನೆ ವಿಟ್ಲ ಬಸ್‌ಸ್ಟ್ಯಾಂಡ್ ಸಮೀಪ ರವಿವಾರ ಬೆಳಿಗ್ಗೆ ನಡೆದಿದೆ. ಮೃತ ಮಹಿಳೆಯನ್ನು ವಿಟ್ಲ ಮುಡ್ನೂರು ಗ್ರಾಮದ ಮರುವಾಳ ನಿವಾಸಿ ಸೀತಾ ಶೆಟ್ಟಿ (68) ಎಂದು ಗುರುತಿಸಲಾಗಿದೆ. ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡ ಬೈಕ್ ಸವಾರನನ್ನು ಸ್ಥಳೀಯರು ಖಾಸಗಿ ಆಸ್ಪತ್ರೆಗೆ ರವಾನಿಸಿದ್ದಾರೆ. ಬೈಕ್ ಸವಾರ ಪುತ್ತೂರು ಮೂಲದವರು ಎಂದು ತಿಳಿದು ಬಂದಿದೆ. ಅಪಘಾತದ ರಭಸಕ್ಕೆ ಬೈಕ್ ಸುಮಾರು 50 ಮೀಟರ್ ದೂರ ಬಿದ್ದಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. ಸ್ಥಳೀಯರು ತಮ್ಮ ದ್ವಿಚಕ್ರ ವಾಹನದಲ್ಲಿ ಗಾಯಾಳುವನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ದಿದ್ದಾರೆ ಎಂದು ತಿಳಿದು ಬಂದಿದೆ ಘಟನಾ ಸ್ಥಳಕ್ಕೆ ವಿಟ್ಲ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ವಾರ್ತಾ ಭಾರತಿ 8 Feb 2026 9:37 am

ಬೆಣ್ಣಿಹಳ್ಳ ನೆರೆ ಭೀತಿ ತಪ್ಪಿಸಲು 200 ಕೋಟಿ ರೂ.ಕಾಮಗಾರಿಗೆ ಫೆ.8 ಕ್ಕೆ ಚಾಲನೆ: 37 ಗ್ರಾಮಗಳ ಜನರಿಗೆ ಪ್ರವಾಹದಿಂದ ಸಿಗಲಿದೆ ನೆಮ್ಮದಿ

ನೂರಾರು ವರ್ಷಗಳಿಂದ ಬೆಣ್ಣಿಹಳ್ಳದ ನೆರೆಯಿಂದ ಬೆಳೆಹಾನಿ, ಆಸ್ತಿ ಹಾನಿ ಅನುಭವಿಸುತ್ತಿದ್ದ ಸುಮಾರು 20 ಸಾವಿರ ಹೆಕ್ಟೇರ್‌ ಪ್ರದೇಶವು ಹೊಸ 200 ಕೋಟಿ ರೂ ಯೋಜನೆಯಿಂದ ಮುಕ್ತಗೊಳ್ಳುವ ದಿನಗಳು ಹತ್ತಿರವಾಗುತ್ತಿವೆ. ಹಲವಾರು ಗ್ರಾಮಗಳು ಮಳೆಗಾಲದ ಸಂದರ್ಭದಲ್ಲಿ ಮುಳುಗಡೆಯ ಭೀತಿಯಿಂದ ನಿಟ್ಟುಸಿರು ಬಿಡುವಂತಾಗಿದೆ.

ವಿಜಯ ಕರ್ನಾಟಕ 8 Feb 2026 9:36 am

ನರ್ಸರಿ ಪರೀಕ್ಷೆ – ನಿರೀಕ್ಷೆಗಳ ವಯಸ್ಸಲ್ಲ ; ಓದಿನ ಮೊದಲ ಮೆಟ್ಟಿಲು ಅಷ್ಟೇ!

ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬುದು ಜನಜನಿತ ಗಾದೆ. ಮಕ್ಕಳ ಭವಿಷ್ಯ ಎಷ್ಟು ಮುಖ್ಯವೋ ಅವರನ್ನು ಆರಂಭದಿಂದಲೇ ಸರಿಯಾದ ರೀತಿಯಲ್ಲಿ ಭವಿಷ್ಯತ್ತಿದಾಗಿ ತಯಾರಿ ಮಾಡುವುದು ಕೂಡ ಅಷ್ಟೇ ಪ್ರಮುಖವಾದದ್ದು. ಆದರೆ, ಆ ಬೆಳೆಸುವ, ಕಲಿಕೆಯ ಕ್ರಮ ಯಾವುದು? ನರ್ಸರಿ ಓದುವಾಗಲೇ ಕಠಿಣ ಕ್ರಮ ಅನುಸರಿಸಬೇಕಾ, ಸ್ವಚ್ಛಂದವಾಗಿ ಆಡಲು ಬಿಟ್ಟು ನೈಜವಾಗಿ ಬೆಳೆಸಬೇಕಾ? ಈ ವಿಷಯಗಳನ್ನು ಪೋಷಕರು, ಶಿಕ್ಷಕರು ಅತ್ಯಂತ ಜಾಗರೂಕತೆಯಿಂದ ಪರಿಶೀಲಿಸುವ ಅಗತ್ಯವಿದೆ. ಇದಕ್ಕೆ ಪೂರಕವಾಗಿ ಲೇಖಕಿ ಗೀತಾ ಅವರು ಪ್ರಬುದ್ಧ ಲೇಖನ ಬರೆದಿದ್ದಾರೆ.

ವಿಜಯ ಕರ್ನಾಟಕ 8 Feb 2026 9:25 am

ಇತಿಹಾಸ ಬರೆದ ಎಸ್‌ಕೆವೈ: ಟಿ20 ವಿಶ್ವಕಪ್‌ನಲ್ಲೇ ದುಬಾರಿ ಬೌಲರ್ ಎನಿಸಿದ ಸೌರಭ್!

ಮುಂಬೈ: ಭಾರತ ಮತ್ತು ಅಮೆರಿಕ ತಂಡಗಳ ನಡುವಿನ ಟಿ20 ವಿಶ್ವಕಪ್ ಟೂರ್ನಿಯ ಮೊದಲ ಪಂದ್ಯ ಆಘಾತಗಳು ಹಾಗೂ ಅದ್ಭುತಗಳಿಗೆ ಸಾಕ್ಷಿಯಾಯಿತು. ಎರಡು ವಿಶಿಷ್ಟ ದಾಖಲೆಗಳು ಇಡೀ ಪಂದ್ಯದ ಸ್ವಾರಸ್ಯವನ್ನು ಬಿಂಬಿಸಿವೆ. ಅಮೆರಿಕದ ಬೌಲರ್ ಸೌರಭ್ ನೇತ್ರವಾಲ್ಕರ್ ನಾಲ್ಕು ಓವರ್‌ಗಳಲ್ಲಿ 65 ರನ್ ನೀಡಿದರೂ ಯಾವುದೇ ವಿಕೆಟ್ ಕಬಳಿಸಲು ಸಾಧ್ಯವಾಗಲಿಲ್ಲ. ಇದು ಟಿ20 ವಿಶ್ವಕಪ್ ಇತಿಹಾಸದಲ್ಲೇ ಅತ್ಯಂತ ದುಬಾರಿ ಬೌಲಿಂಗ್ ಎಂಬ ದಾಖಲೆಯಾಗಿದೆ. ಇದಕ್ಕೂ ಮೊದಲು 2007ರಲ್ಲಿ ಜೋಹಾನ್ಸ್‌ಬರ್ಗ್‌ನಲ್ಲಿ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಶ್ರೀಲಂಕಾದ ಸನತ್ ಜಯಸೂರ್ಯ ಯಾವುದೇ ವಿಕೆಟ್ ಪಡೆಯದೆ 64 ರನ್‌ಗಳನ್ನು ನೀಡಿದ್ದು, ಅದುವರೆಗೆ ದುಬಾರಿ ಬೌಲಿಂಗ್ ದಾಖಲೆಯಾಗಿತ್ತು. ಪತನದ ಅಂಚಿನಲ್ಲಿದ್ದ ತಂಡವನ್ನು ಮೇಲಕ್ಕೆತ್ತುವ ಪ್ರಯತ್ನದಲ್ಲಿ ಭಾರತ ತಂಡದ ನಾಯಕ ಸೂರ್ಯಕುಮಾರ್ ಯಾದವ್ ಕೊನೆಯ ಓವರ್‌ಗಳಲ್ಲಿ ನಿರ್ದಯವಾಗಿ ಬೌಲರ್‌ಗಳನ್ನು ದಂಡಿಸಿದ್ದು ಇದಕ್ಕೆ ಪ್ರಮುಖ ಕಾರಣವಾಯಿತು. ಕೇವಲ 49 ಎಸೆತಗಳಲ್ಲಿ 84 ರನ್ ಸಿಡಿಸಿದ ಎಸ್ಕೆವೈ ತಂಡವನ್ನು ಅಪಾಯದಿಂದ ಪಾರು ಮಾಡಿದರು. ಇದು ಟಿ20 ವಿಶ್ವಕಪ್ ಇತಿಹಾಸದ ಚೊಚ್ಚಲ ಇನಿಂಗ್ಸ್‌ನಲ್ಲಿ ಯಾವುದೇ ತಂಡದ ನಾಯಕನಿಂದ ಗಳಿಸಲಾದ ಎರಡನೇ ಗರಿಷ್ಠ ಸ್ಕೋರ್ ಆಗಿದೆ. 2009ರಲ್ಲಿ ಕ್ರಿಸ್ ಗೇಲ್ ಗಳಿಸಿದ 88 ರನ್‌ಗಳು ಅತ್ಯಧಿಕ ಸ್ಕೋರ್ ಎನಿಸಿವೆ. ಭಾರತದ ವಿರುದ್ಧ 2021ರಲ್ಲಿ ದುಬೈನಲ್ಲಿ 68 ರನ್ ಗಳಿಸಿದ ಬಾಬರ್ ಅಝಂ, 2007ರಲ್ಲಿ ಜೋಹಾನ್ಸ್‌ಬರ್ಗ್‌ನಲ್ಲಿ 65 ರನ್ ಗಳಿಸಿದ ಮಹೇಲಾ ಜಯವರ್ಧನೆ ಹಾಗೂ ವೆಸ್ಟ್ ಇಂಡೀಸ್ ವಿರುದ್ಧ ಜೋಹಾನ್ಸ್‌ಬರ್ಗ್‌ನಲ್ಲಿ 61 ರನ್ ಗಳಿಸಿದ್ದ ಅಶ್ರಫ್ ನಂತರದ ಸ್ಥಾನಗಳಲ್ಲಿ ಇದ್ದಾರೆ. ಶನಿವಾರದ ಪಂದ್ಯದಲ್ಲಿ ಭಾರತ 6 ವಿಕೆಟ್ ನಷ್ಟಕ್ಕೆ 77 ರನ್ ಗಳಿಸಿದ್ದಾಗ 16ನೇ ಓವರ್‌ನಲ್ಲಿ ಎಸ್ಕೆವೈ ಪ್ರತಿದಾಳಿ ಆರಂಭಿಸಿದರು. ಸೌರಭ್ ನೇತ್ರವಾಲ್ಕರ್ ವಿರುದ್ಧ ಮೂರು ಬೌಂಡರಿ ಹಾಗೂ ಒಂದು ಸಿಕ್ಸರ್ ಸಿಡಿಸಿ ಭಾರತದ ಚೇತರಿಕೆಗೆ ಕಾರಣರಾದರು. ನೇತ್ರವಾಲ್ಕರ್ ಅವರ ಅಂತಿಮ ಓವರ್‌ನಲ್ಲಿ ಎಸ್ಕೆವೈ 21 ರನ್ ಸಿಡಿಸಿ, ಭಾರತ 160 ರನ್ ಗಡಿ ದಾಟಲು ನೆರವಾದರು.

ವಾರ್ತಾ ಭಾರತಿ 8 Feb 2026 8:56 am

ಕಲ್ಲಡ್ಕ ಪ್ರಭಾಕರ್‌ ಭಟ್‌ ವಿರುದ್ಧದ ಪ್ರಕರಣಕ್ಕೆ ಕರ್ನಾಟಕ ಹೈಕೋರ್ಟ್‌ನಿಂದ ತಡೆ

ಕಲ್ಲಡ್ಕ ಪ್ರಭಾಕರ್ ಭಟ್ ಸಲ್ಲಿಸಿದ ಅರ್ಜಿಯ ಪರ ಹೈಕೋರ್ಟ್ ತೀರ್ಪು ನೀಡಿದ್ದು, ಸದ್ಯಕ್ಕೆ ರಿಲೀಫ್ ಸಿಕ್ಕಿದೆ. ಧ್ವೇಷ ಭಾಷಣಕ್ಕೆ ಸಂಬಂಧಿಸಿದ ಎಲ್ಲಾ ತನಿಖೆ ಹಾಗೂ ಪ್ರಕ್ರಿಯೆಗೆ ಸದ್ಯಕ್ಕೆ ತಡೆ ನೀಡಿ ಮಧ್ಯಂತರ ತಡೆಯಾಜ್ಞೆಯನ್ನು ಕರ್ನಾಟಕ ಹೈಕೋರ್ಟ್ ಹೊರಡಿಸಿದೆ.

ವಿಜಯ ಕರ್ನಾಟಕ 8 Feb 2026 8:41 am

ಮತದಾರರ ಪಟ್ಟಿಗೆ ಸೇರ್ಪಡೆ ವಿವಾದ ರಾಜಕೀಯ ಪ್ರೇರಿತ: ಸೋನಿಯಾ ಗಾಂಧಿ

ಹೊಸದಿಲ್ಲಿ: ಭಾರತೀಯ ಪೌರತ್ವ ಪಡೆಯುವ ಮೂರು ವರ್ಷಗಳ ಮುನ್ನವೇ, 1980ರಲ್ಲಿ ಮತದಾರರ ಪಟ್ಟಿಗೆ ಹೆಸರು ಸೇರಿಸಲಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿ ಎಫ್‌ಐಆರ್ ದಾಖಲಿಸುವಂತೆ ಕೋರಿದ್ದ ಮನವಿಯನ್ನು ತಿರಸ್ಕರಿಸಿದ ಮ್ಯಾಜಿಸ್ಟ್ರೇಟ್ ಕೋರ್ಟ್ ಆದೇಶವನ್ನು ಪ್ರಶ್ನಿಸಿ ದೆಹಲಿ ಹೈಕೋರ್ಟ್‌ನಲ್ಲಿ ಸಲ್ಲಿಸಲಾದ ಕ್ರಿಮಿನಲ್ ಪರಿಷ್ಕರಣೆ ಅರ್ಜಿಯನ್ನು ರಾಜಕೀಯ ಪ್ರೇರಿತ ಹಾಗೂ ಕ್ಷುಲ್ಲಕ ಎಂದು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಬಣ್ಣಿಸಿದ್ದಾರೆ. ವಿಶೇಷ ನ್ಯಾಯಾಧೀಶ ವಿಶಾಲ್ ಗೋಂಗೆ ಅವರ ಸಮ್ಮುಖದಲ್ಲಿ ರೋಸ್ ಅವೆನ್ಯೂ ಸೆಷನ್ಸ್ ಕೋರ್ಟ್‌ನಲ್ಲಿ ಸಲ್ಲಿಸಿರುವ ಅರ್ಜಿಯ ಪ್ರಕಾರ, ಇಟಲಿ ಮೂಲದ ಸೋನಿಯಾ ಗಾಂಧಿಯವರ ಹೆಸರನ್ನು ನಕಲಿ ದಾಖಲೆಗಳ ಮೂಲಕ ಮತದಾರರ ಪಟ್ಟಿಗೆ ಸೇರಿಸಲಾಗಿದೆ ಎಂಬ ಆರೋಪ ಮಾಡಲಾಗಿದೆ. ಆದರೆ ಇದು ಸಂಪೂರ್ಣ ತಪ್ಪುಕಲ್ಪನೆ ಹಾಗೂ ಕಾನೂನು ಪ್ರಕ್ರಿಯೆಯ ದುರ್ಬಳಕೆಗೆ ನಡೆಸಿರುವ ಪ್ರಯತ್ನವಾಗಿದೆ ಎಂದು ಕಾಂಗ್ರೆಸ್ ಪ್ರತಿಪಾದಿಸಿದೆ. ಪ್ರಕರಣದಲ್ಲಿ ಎಫ್‌ಐಆರ್ ದಾಖಲಿಸಲು ನಿರಾಕರಿಸಿ ಮ್ಯಾಜಿಸ್ಟ್ರೇಟ್ ವೈಭವ್ ಚೌರಾಸಿಯಾ ನೀಡಿದ್ದ ಆದೇಶವನ್ನು ಪ್ರಶ್ನಿಸಿ ವಿಕಾಸ್ ತ್ರಿಪಾಠಿ ಎಂಬವರು ಅರ್ಜಿ ಸಲ್ಲಿಸಿದ್ದಾರೆ. ಈ ಸಂಬಂಧ 2025ರ ಡಿಸೆಂಬರ್ 9ರಂದು ಸೋನಿಯಾ ಗಾಂಧಿಗೆ ನೋಟಿಸ್ ನೀಡಲಾಗಿದ್ದು, ನ್ಯಾಯಾಧೀಶ ಗೋಂಗೆ ಅವರು ಶನಿವಾರ ಉತ್ತರವನ್ನು ಪರಿಶೀಲಿಸಿ ಪ್ರಕರಣದ ವಿಚಾರಣೆಯನ್ನು ಫೆಬ್ರವರಿ 21ಕ್ಕೆ ನಿಗದಿಪಡಿಸಿದ್ದಾರೆ. ಪೌರತ್ವ ಸಂಬಂಧಿತ ವಿಷಯಗಳು ನೇರವಾಗಿ ಕೇಂದ್ರ ಸರ್ಕಾರದ ಅಧಿಕಾರ ವ್ಯಾಪ್ತಿಗೆ ಬರುವುದಾಗಿ ವಿಚಾರಣಾ ನ್ಯಾಯಾಲಯ ಸ್ಪಷ್ಟಪಡಿಸಿದೆ. ಅಲ್ಲದೆ, ಚುನಾವಣಾ ವ್ಯಾಜ್ಯಗಳ ಇತ್ಯರ್ಥದ ಅಧಿಕಾರ ಭಾರತದ ಚುನಾವಣಾ ಆಯೋಗಕ್ಕೆ ಸೇರಿದೆ ಎಂದು ಸೋನಿಯಾ ಗಾಂಧಿ ವಾದಿಸಿದ್ದಾರೆ. ಆದ್ದರಿಂದ ಐಪಿಸಿ ಅಥವಾ ಬಿಎನ್‌ಎಸ್ ಅಪರಾಧಗಳ ವ್ಯಾಪ್ತಿಯಲ್ಲಿ ಇಂತಹ ಖಾಸಗಿ ದೂರುಗಳನ್ನು ಪುರಸ್ಕರಿಸಲಾಗುವುದಿಲ್ಲ ಎಂದು ಅವರು ಪ್ರತಿಪಾದಿಸಿದ್ದಾರೆ. ಸಂವಿಧಾನದ 329ನೇ ವಿಧಿಯ ಪ್ರಕಾರ ಅಧಿಕಾರ ಪ್ರತ್ಯೇಕತೆಯ ಸಿದ್ಧಾಂತಕ್ಕೆ ಇದು ಸ್ಪಷ್ಟ ಉಲ್ಲಂಘನೆಯಾಗುತ್ತದೆ ಎಂದು ಅವರು ಹೇಳಿದ್ದಾರೆ.

ವಾರ್ತಾ ಭಾರತಿ 8 Feb 2026 8:30 am

Rajasthan | ಮೂರು ಮಹಡಿ ಕಟ್ಟಡ ಕುಸಿತ: ಇಬ್ಬರು ಮೃತ್ಯು, ಹಲವರು ಸಿಲುಕಿರುವ ಶಂಕೆ

ಹೊಸದಿಲ್ಲಿ: ರಾಜಸ್ಥಾನದ ಕೋಟಾ ನಗರದಲ್ಲಿ ಶನಿವಾರ ಸಂಜೆ ಮೂರು ಮಹಡಿ ಕಟ್ಟಡ ಕುಸಿದು ಸಂಭವಿಸಿದ ದುರಂತದಲ್ಲಿ ಕನಿಷ್ಠ ಇಬ್ಬರು ಮೃತಪಟ್ಟಿದ್ದು, ಹಲವು ಮಂದಿ ಅವಶೇಷಗಳಡಿ ಸಿಲುಕಿಕೊಂಡಿರುವ ಭೀತಿ ಇದೆ. ರಾಜಸ್ಥಾನ ಸಚಿವ ಮದನ್ ದಿಲಾವರ್ ಜೀವಹಾನಿಯನ್ನು ದೃಢಪಡಿಸಿದ್ದಾರೆ. ತಲ್ವಂಡಿ ಪ್ರದೇಶದಲ್ಲಿ ಈ ದುರಂತ ಸಂಭವಿಸಿದ್ದು, ಕಟ್ಟಡದೊಳಗೆ ರೆಸ್ಟೋರೆಂಟ್ ಕಾರ್ಯನಿರ್ವಹಿಸುತ್ತಿತ್ತು ಎಂದು ತಿಳಿದು ಬಂದಿದೆ. ಇದು ಪ್ರಮುಖ ದುರಂತ ಎಂದು ಬಣ್ಣಿಸಿರುವ ರಾಜಸ್ಥಾನ ಸಚಿವ ಮದನ್ ದಿಲಾವರ್, ಮೂರು ಮಹಡಿ ಕಟ್ಟಡ ಕುಸಿದ ಪರಿಣಾಮ ಇದುವರೆಗೆ ಇಬ್ಬರು ಮೃತಪಟ್ಟಿದ್ದಾರೆ ಎಂದು ದೃಢಪಡಿಸಿದ್ದಾರೆ. ಒಂಬತ್ತು ಮಂದಿಯನ್ನು ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ನಾಲ್ವರನ್ನು ಒಳರೋಗಿಗಳಾಗಿ ದಾಖಲಿಸಲಾಗಿದ್ದು, ಇತರರ ಪೈಕಿ ಮೂವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅವರು ವಿವರಿಸಿದ್ದಾರೆ. ಘಟನೆ ಕುರಿತು ತನಿಖೆ ನಡೆಯುತ್ತಿದ್ದು, ಪರಿಹಾರ ಕಾರ್ಯಾಚರಣೆ ಪ್ರಗತಿಯಲ್ಲಿದೆ ಎಂದು ತಿಳಿಸಿದ್ದಾರೆ. ಮಾಹಿತಿ ತಿಳಿದ ತಕ್ಷಣ ಪೊಲೀಸ್ ತಂಡಗಳು ಹಾಗೂ ಪರಿಹಾರ ಕಾರ್ಯಾಚರಣೆ ದಳಗಳು ಸ್ಥಳಕ್ಕೆ ಧಾವಿಸಿದ್ದು, ಇದುವರೆಗೆ ಐದು ಮಂದಿಯನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಧಿಕೃತ ಮೂಲಗಳು ಹೇಳಿವೆ. ಕುಸಿದು ಬಿದ್ದ ಕಟ್ಟಡದೊಳಗೆ ಗ್ರಾಹಕರು ಹಾಗೂ ಹೋಟೆಲ್ ಉದ್ಯೋಗಿಗಳು ಸಿಲುಕಿಕೊಂಡಿದ್ದಾರೆ ಎನ್ನಲಾಗಿದೆ. “ಹಲವರು ಅವಶೇಷಗಳಡಿ ಸಿಲುಕಿಕೊಂಡಿರುವ ಸಾಧ್ಯತೆ ಇದೆ. ಪೊಲೀಸರು ಹಾಗೂ ಆಡಳಿತ ಯಂತ್ರ ಸ್ಥಳದಲ್ಲಿದ್ದು, ರಕ್ಷಣೆ ಮತ್ತು ಪರಿಹಾರ ಕಾರ್ಯಾಚರಣೆ ಪ್ರಗತಿಯಲ್ಲಿದೆ. ಕೆಲವರನ್ನು ಅವಶೇಷಗಳಡಿಯಿಂದ ಹೊರತೆಗೆದುಕೊಳ್ಳಲಾಗಿದೆ” ಎಂದು ಸ್ಥಳಕ್ಕೆ ಭೇಟಿ ನೀಡಿದ ಶಾಸಕ ಸಂದೀಪ್ ಶರ್ಮಾ ವಿವರಿಸಿದ್ದಾರೆ.

ವಾರ್ತಾ ಭಾರತಿ 8 Feb 2026 8:16 am

ರಷ್ಯಾದ ಕಾಲೇಜಿನಲ್ಲಿ ಚೂರಿ ಇರಿತ: ನಾಲ್ವರು ಭಾರತೀಯ ವಿದ್ಯಾರ್ಥಿಗಳಿಗೆ ಗಾಯ

ಹೊಸದಿಲ್ಲಿ: ರಷ್ಯಾದ ಉಫಾ ನಗರದಲ್ಲಿ ನಡೆದ ಚೂರಿ ಇರಿತ ಘಟನೆಯಲ್ಲಿ ನಾಲ್ವರು ಭಾರತೀಯ ವಿದ್ಯಾರ್ಥಿಗಳು ಸೇರಿದಂತೆ ಹಲವರು ಗಾಯಗೊಂಡಿದ್ದಾರೆ ಎಂದು ಮಾಸ್ಕೊದಲ್ಲಿರುವ ಭಾರತೀಯ ರಾಯಭಾರ ಕಚೇರಿ ತಿಳಿಸಿದೆ. ರಷ್ಯಾದ ಬಷ್ಕಕೋರ್ಟೊಸ್ತಾನ್ ಗಣರಾಜ್ಯದ ವಿಶ್ವವಿದ್ಯಾನಿಲಯದ ಹಾಸ್ಟೆಲ್‌ನಲ್ಲಿರುವ ಕ್ರೀಡಾ ಹಾಲ್‌ನಲ್ಲಿ ವಿದೇಶಿ ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು ಚೂರಿ ಇರಿತದ ದಾಳಿ ನಡೆದಿರುವುದಾಗಿ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಈ ಹಿನ್ನೆಲೆಯಲ್ಲಿ ಭಾರತೀಯ ರಾಯಭಾರ ಕಚೇರಿ ಎಕ್ಸ್‌ (X) ಪೋಸ್ಟ್ ಮೂಲಕ ಮಾಹಿತಿ ನೀಡಿದೆ. ಘಟನೆಯಲ್ಲಿ ಇಬ್ಬರು ಪೊಲೀಸ್ ಅಧಿಕಾರಿಗಳೂ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. “ಉಫಾದಲ್ಲಿ ದುರದೃಷ್ಟಕರ ದಾಳಿಯೊಂದು ನಡೆದಿದೆ. ನಾಲ್ವರು ಭಾರತೀಯರು ಸೇರಿದಂತೆ ಹಲವರು ಗಾಯಗೊಂಡಿದ್ದಾರೆ. ಭಾರತೀಯ ರಾಯಭಾರ ಕಚೇರಿ ಸ್ಥಳೀಯ ಅಧಿಕಾರಿಗಳು ಹಾಗೂ ಕಝಾನ್‌ನಲ್ಲಿರುವ ದೂತಾವಾಸದೊಂದಿಗೆ ಸತತ ಸಂಪರ್ಕದಲ್ಲಿದ್ದು, ಗಾಯಾಳು ವಿದ್ಯಾರ್ಥಿಗಳಿಗೆ ಅಗತ್ಯ ನೆರವು ಒದಗಿಸಲು ಕ್ರಮ ಕೈಗೊಂಡಿದೆ” ಎಂದು ಮಾಸ್ಕೊದಲ್ಲಿರುವ ಭಾರತೀಯ ರಾಯಭಾರ ಕಚೇರಿ ಸ್ಪಷ್ಟಪಡಿಸಿದೆ.

ವಾರ್ತಾ ಭಾರತಿ 8 Feb 2026 8:00 am

ತುಮಕೂರಿನ ಕುಟುಂಬವನ್ನೇ ಮುಗಿಸಿದ ಗೇಮಿಂಗ್‌ ಗೀಳು: ಪಶ್ಚಾತ್ತಾಪದಲ್ಲಿ ಕುಟುಂಬದ ನಾಲ್ವರ ಆತ್ಮಹತ್ಯೆ?

ಮೊಬೈಲ್‌ ಹಾಗೂ ಗೇಮಿಂಗ್ ಗೀಳು ಹಲವು ಜೀವಗಳನ್ನು ಬಲಿಪಡೆಯುತ್ತಿರುವ ಘಟನೆಗಳು ಮರುಕಳಿಸುತ್ತಿವೆ, ಕರ್ನಾಟಕದ ತುಮಕೂರಿನ ಗುಬ್ಬಿಯ ಒಂದು ಕುಟುಂಬವೇ ಇದರಿಂದ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಕಿಗೆ ಬಂದಿದೆ. ಬಾಲಕನ ಗೇಮಿಂಗ್ ಗೀಳು ಬಿಡಿಸಲು ಹೋಗಿ ಕೊಲೆಯಲ್ಲಿ ಅಂತ್ಯವಾಗಿತ್ತು. ಈ ಪಶ್ಚಾತಾಪದಿಂದ ಇಡೀ ಕುಟುಂಬವೇ ಈಗ ಸಾನ್ನಪ್ಪಿರುವ ಘಟನೆ ಬೆಳಕಿಗೆ ಬಂದಿದೆ.

ವಿಜಯ ಕರ್ನಾಟಕ 8 Feb 2026 7:51 am

Karnataka Weather: ರಾಜ್ಯಾದ್ಯಂತ 30 ಡಿ.ಸೆ. ದಾಟಿದ ಗರಿಷ್ಠ ತಾಪಮಾನ, 5 ದಿನದ ಹವಾಮಾನ ಮುನ್ಸೂಚನೆ

ಬೆಂಗಳೂರು: ರಾಜಧಾನಿ ಬೆಂಗಳೂರು ಸೇರಿದಂತೆ ಕರ್ನಾಟಕದ ಬಹುತೇಕ ಎಲ್ಲ ಜಿಲ್ಲೆಗಳಲ್ಲಿ ಗರಿಷ್ಠ ತಾಪಮಾನ 30 ಡಿಗ್ರಿ ಸೆಲ್ಸಿಯಸ್ ದಾಟಿದೆ. ಕೆಲವು ಜಿಲ್ಲೆಗಳಲ್ಲಿ ಸಾಮಾನ್ಯಕ್ಕಿಂತ ಕಡಿಮೆ ಕನಿಷ್ಠ ತಾಪಮಾನ ದಾಖಲಾಗುವ ಮೂಲಕ ಕೊಂಚ ಚಳಿ ಹಾಗೂ ಮಂಜಿನ ವಾತಾವರಣ ದಾಖಲಾಗಿದೆ. ಐದು ದಿನ ರಾಜ್ಯದಾದ್ಯಂತ ಹಗಲು ಒಣಹವೆ ಮುಂದುವರಿಯಲಿದೆ ಎಂದು ರಾಜ್ಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬೆಂಗಳೂರಿನಲ್ಲಿ

ಒನ್ ಇ೦ಡಿಯ 8 Feb 2026 7:30 am

ಮಂಗಳೂರಲ್ಲಿ 7 ವರ್ಷದ ಬಾಲಕಿಯ ಅತ್ಯಾಚಾರ-ಕೊಲೆ ಎಸಗಿದ್ದ ಆರೋಪಿಗಳಿಗೆ ತಕ್ಕ ಶಿಕ್ಷೆ ಕೊಟ್ಟ ಕರ್ನಾಟಕ ಹೈಕೋರ್ಟ್: ಮಹತ್ವದ ಆದೇಶ

5 ವರ್ಷದ ಹಿಂದೆ 7 ವರ್ಷ 7 ತಿಂಗಳಿನ ಅಪ್ರಾಪ್ತೆಯ ಮೇಲೆ ಸಾಮೂಹಿಕ ಅತ್ಯಾಚಾರ, ಕೊಲೆ ಇಡೀ ಸಮಾಜ ತಲೆತಗ್ಗಿಸುವಂತಹ ಕೆಲಸ ಮಾಡಿದ ಮೂವರು ಅಪರಾಧಿಗಳು, ಮತ್ತೆ ಶಿಕ್ಷೆ ರದ್ದು ಕೋರಿ ಹೈಕೋರ್ಟ್ ಮೆಟ್ಟಿಲೇರಿದಾಗ ಛೀಮಾರಿ ಹಾಕಿದ ಕೋರ್ಟ್, ಗಲ್ಲುಶಿಕ್ಷೆಯನ್ನು ಕಾಯಂಗೊಳಿಸಿದೆ.

ವಿಜಯ ಕರ್ನಾಟಕ 8 Feb 2026 7:24 am