ವಿಕ್ಟೋರಿಯಾ ಆಸ್ಪತ್ರೆ ನಂಬಿಕೊಂಡು ಬರುವ ಬಡ ಮಧ್ಯಮ ವರ್ಗದ ರೋಗಿಗಳಿಗೆ ಹೆಚ್ಚಿನ ಅನುಕೂಲ ಸಿಗಲು, ವಿಕ್ಟೋರಿಯಾ ಹೊಸದಾಗಿ 10 ಮಹಡಿಗಳ ಕಟ್ಟಡವನ್ನು ಉದ್ಘಾಟಿಸುತ್ತಿದೆ. ಇದರಲ್ಲಿ ಏನೆಲ್ಲಾ ವಿಶೇಷ ಇದೆ ನೋಡಿ..
ಭಾರತದ GEOX AI ಜಾಗತಿಕ Geolocation Intelligence ವೇದಿಕೆಗಳ ನಡುವೆ ತನ್ನ ಸ್ಥಾನ ನಿರ್ಮಿಸಿಕೊಳ್ಳುತ್ತಿದೆ
ಚಿತ್ರಗಳು ಮತ್ತು ವೀಡಿಯೊಗಳಿಂದ ನೈಜ ಸ್ಥಳವನ್ನು ಗುರುತಿಸುವ AI ವೇದಿಕೆ GEOX AI ಜಾಗತಿಕ ಮಟ್ಟದಲ್ಲಿ ಗಮನ ಸೆಳೆಯುತ್ತಿದೆ
ಲೆಬನಾನ್| ಗುಂಡಿನ ದಾಳಿಯಲ್ಲಿ ಫ್ರಾನ್ಸ್ ಸೈನಿಕ ಮೃತ್ಯು
ಬೈರೂತ್, ಎ.18: ದಕ್ಷಿಣ ಲೆಬನಾನ್ನಲ್ಲಿ ವಿಶ್ವಸಂಸ್ಥೆಯ ಮಧ್ಯಂತರ ಪಡೆ(ಯುಎನ್ಐಎಫ್ಐಎಲ್)ಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಫ್ರಾನ್ಸ್ನ ಸೈನಿಕ ಗುಂಡಿನ ದಾಳಿಯಲ್ಲಿ ಮೃತಪಟ್ಟಿದ್ದು, ಮೂವರು ಯೋಧರು ಗಾಯಗೊಂಡಿರುವುದಾಗಿ ಫ್ರಾನ್ಸ್ ಅಧ್ಯಕ್ಷ ಇಮ್ಯಾನುವೆಲ್ ಮ್ಯಾಕ್ರೋನ್ ಶನಿವಾರ ಹೇಳಿದ್ದು, ಇರಾನ್ ಬೆಂಬಲಿತ ಹಿಜ್ಬುಲ್ಲಾ ಗುಂಪು ದಾಳಿ ನಡೆಸಿದೆ ಎಂದು ಆರೋಪಿಸಿದ್ದಾರೆ. ಲೆಬನಾನ್-ಇಸ್ರೇಲ್ ಕದನ ವಿರಾಮದ ಬಳಿಕ ದಕ್ಷಿಣ ಲೆಬನಾನ್ನಲ್ಲಿ ಸ್ಫೋಟಕಗಳನ್ನು ತೆರವುಗೊಳಿಸುತ್ತಿದ್ದ ಯುಎನ್ಐಎಫ್ಐಎಲ್ ತಂಡದ ಮೇಲೆ ದಾಳಿ ನಡೆಸಲಾಗಿದೆ ಎಂದವರು ಹೇಳಿದ್ದು ಘಟನೆಯ ಬಗ್ಗೆ ತನಿಖೆ ನಡೆಸುವಂತೆ ಲೆಬನಾನ್ ಸರಕಾರವನ್ನು ಆಗ್ರಹಿಸಿದ್ದಾರೆ.
IPL-2026| ಹಸಿರು ಜರ್ಸಿ ಧರಿಸಿ ಆಡಿದ ಆರ್ಸಿಬಿ
ಬೆಂಗಳೂರು, ಎ. 18: ಬೆಂಗಳೂರಿನ ಎಮ್. ಚಿನ್ನಾಸ್ವಾಮಿ ಸ್ಟೇಡಿಯಂನಲ್ಲಿ ಶನಿವಾರ ನಡೆದ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ತಂಡವು ಹಸಿರು ಜರ್ಸಿಯನ್ನು ಧರಿಸಿ ಆಡಿದೆ. ತಂಡವು ತನ್ನ ‘ಹಸಿರು ಉಪಕ್ರಮ’ದ ಭಾಗವಾಗಿ ಪ್ರತಿ ಋತುವಿನಲ್ಲಿ ಹೀಗೆ ಮಾಡುತ್ತಿದೆ. ಮರುಬಳಕೆ ವಸ್ತುಗಳಿಂದ ತಯಾರಿಸಲಾಗಿರುವ ಈ ಜರ್ಸಿಯು, ಸಮತೂಲಿತ ಪರಿಸರಕ್ಕೆ ತಂಡವು ಹೊಂದಿರುವ ಬದ್ಧತೆಯನ್ನು ಸೂಚಿಸುತ್ತದೆ. ತಾನು ಮಾತ್ರ ಜಗತ್ತಿನ ಏಕೈಕ ಇಂಗಾಲ-ಮುಕ್ತ ಟಿ20 ತಂಡ ಎಂಬುದಾಗಿ ಆರ್ಸಿಬಿ ಹೇಳಿಕೊಳ್ಳುತ್ತಿದೆ. 2011ರಲ್ಲಿ ಈ ಉಪಕ್ರಮವನ್ನು ಆರಂಭಿಸಿರುವ ಆರ್ಸಿಬಿ, ಪರಿಸರ ಸಮತೋಲನ ತತ್ವವನ್ನು ಎನ್ನ ಎಲ್ಲಾ ಕಾರ್ಯಗಳಲ್ಲಿ ಅಳವಡಿಸಿಕೊಂಡು ಬರಲಾಗುತ್ತಿದೆ ಎಂದು ಹೇಳುತ್ತಿದೆ.
ಶರ್ವಾಣಿಕಾ ಫಿಡೆ ವಿಶ್ವ ರ್ಯಾಪಿಡ್ ಅಂಡರ್-12 ಬಾಲಕಿಯರ ಚೆಸ್ ಚಾಂಪಿಯನ್
ಚೆನ್ನೈ, ಎ. 18: ಸರ್ಬಿಯದ ವ್ರನ್ಯಾಕ ಬಾನ್ಯದಲ್ಲಿ ನಡೆಯುತ್ತಿರುವ ಫಿಡೆ ವಿಶ್ವ ರ್ಯಾಪಿಡ್ ಅಂಡರ್-12 ಬಾಲಕಿಯರ ಚೆಸ್ ಪಂದ್ಯಾವಳಿಯನ್ನು ಶುಕ್ರವಾರ ಭಾರತದ ಎ.ಎಸ್. ಶರ್ವಾಣಿಕಾ ಗೆದ್ದಿದ್ದಾರೆ. ಈಗಾಗಲೇ ವಿಶ್ವ ಅಂಡರ್-10 ಕ್ಯಾಡೆಟ್ ಚಾಂಪಿಯನ್ ಆಗಿರುವ ಶರ್ವಾಣಿಕಾ ಎರಡು ಸುತ್ತಿನ ಪಂದ್ಯಗಳು ಬಾಕಿಯಿರುವಂತೆಯೇ ವಿಶ್ವ ರ್ಯಾಪಿಡ್ ಅಂಡರ್-12 ಬಾಲಕಿಯರ ಚಾಂಪಿಯನ್ ಆಗಿ ಹೊರಹೊಮ್ಮಿದರು. 11 ಸುತ್ತುಗಳ ಸ್ಪರ್ಧೆಯಲ್ಲಿ, 11 ವರ್ಷದ ಮಹಿಳಾ ಕ್ಯಾಂಡಿಡೇಟ್ ಮಾಸ್ಟರ್ ಶರ್ವಾಣಿಕಾ 10 ಜಯ ಮತ್ತು ಉಕ್ರೇನ್ನ ಡರಿಯಾ ಕ್ರಾವ್ಚುಕ್ ವಿರುದ್ಧ ಒಂದು ಡ್ರಾವನ್ನು ಸಂಪಾದಿಸಿದರು. 9ನೇ ಸುತ್ತಿನಲ್ಲಿ ತನಗಿಂತ ಹೆಚ್ಚಿನ ರ್ಯಾಂಕಿಂಗ್ನ ಸ್ಲೊವೇನಿಯದ ಎಮಾ ಜಾಕ್ಸರನ್ನು ಸೋಲಿಸುವ ಮೂಲಕ ಪ್ರಶಸ್ತಿಯನ್ನು ಖಾತರಿಪಡಿಸಿದರು. ಶರ್ವಾಣಿಕಾ ಒಟ್ಟು 10.5 ಅಂಕಗಳನ್ನು ಗಳಿಸಿ ಪ್ರಶಸ್ತಿ ಜಯಿಸಿದರು. ಇದು ಅವರ ಎರಡನೇ ವಿಶ್ವ ರ್ಯಾಪಿಡ್ ಪ್ರಶಸ್ತಿಯಾಗಿದೆ. ಇದಕ್ಕಿಂತ ಮೊದಲು, ಅವರು ತನ್ನ 9 ವರ್ಷ ಪ್ರಾಯದಲ್ಲಿ ಅಂಡರ್-10 ವಿಭಾಗದಲ್ಲಿ ಚಿನ್ನ ಗೆದಿದ್ದರು. ಹಾಗೂ 2024ರಲ್ಲಿ ಆಲ್ಬೇನಿಯದಲ್ಲಿ ನಡೆದ ಫಿಡೆ ವಿಶ್ವ ರ್ಯಾಪಿಡ್ ಮತ್ತು ಬ್ಲಿಟ್ಝ್ ಚಾಂಪಿಯನ್ಶಿಪ್ನಲ್ಲಿ ಬೆಳ್ಳಿ ಗೆದ್ದಿದ್ದಾರೆ.
2-2ರ ಸಮಬಲದೊಂದಿಗೆ ಭಾರತೀಯ ಮಹಿಳಾ ಹಾಕಿ ತಂಡದ ಅರ್ಜೆಂಟೀನ ಪ್ರವಾಸ ಮುಕ್ತಾಯ
ಚೆನ್ನೈ, ಎ. 18: ಭಾರತೀಯ ಮಹಿಳಾ ಹಾಕಿ ತಂಡವು ತನ್ನ ನಾಲ್ಕು ಪಂದ್ಯಗಳ ಅರ್ಜೆಂಟೀನ ಪ್ರವಾಸವನ್ನು ಶುಕ್ರವಾರ 2-2ರ ಸಮಬಲದೊಂದಿಗೆ ಮುಕ್ತಾಯಗೊಳಿಸಿದೆ. ಭಾರತೀಯ ತಂಡದ ಆರಂಭ ಕಠಿಣವಾಗಿತ್ತಾದರೂ, ಬಳಿಕ ಅದು ಪ್ರತಿಹೋರಾಟ ನೀಡಿ ಕೊನೆಯ ಎರಡು ಪಂದ್ಯಗಳನ್ನು ಗೆದ್ದುಕೊಂಡಿದೆ. ಎಪ್ರಿಲ್ 13ರಂದು ನಡೆದ ಮೊದಲ ಪಂದ್ಯದಲ್ಲಿ, ಭಾರತದ ನವನೀತ್ ಕೌರ್ 22ನೇ ನಿಮಿಷದಲ್ಲಿ ಮತ್ತು ಅನು 29ನೇ ನಿಮಿಷದಲ್ಲಿ ಗೋಲುಗಳನ್ನು ಬಾರಿಸಿದರು. ಆದರೆ, ಅಂತಿಮವಾಗಿ ಅರ್ಜೆಂಟೀನವು ಪಂದ್ಯವನ್ನು 4-2 ಗೋಲುಗಳಿಂದ ಗೆದ್ದಿತು. ಎಪ್ರಿಲ್ 14ರಂದು ನಡೆದ ಎರಡನೇ ಪಂದ್ಯದಲ್ಲಿ, ಭಾರತದ ಇಶಿಕಾ 22ನೇ ನಿಮಿಷದಲ್ಲಿ ಗೋಲು ಬಾರಿಸಿದರಾದರೂ, ಆತಿಥೇಯರು ಅಂತಿಮವಾಗಿ 2-1ರಿಂದ ಪಂದ್ಯ ಗೆದ್ದರು. ಎಪ್ರಿಲ್ 16ರಂದು ನಡೆದ ಮೂರನೇ ಪಂದ್ಯದಲ್ಲಿ ಭಾರತವು ತನ್ನ ಲಯವನ್ನು ಕಂಡುಕೊಂಡಿತು. ಆ ಪಂದ್ಯದಲ್ಲಿ ಅದು ಅರ್ಜೆಂಟೀನವನ್ನು 2-1 ಗೋಲುಗಳ ಅಂತರದಿಂದ ಸೋಲಿಸಿತು. ಭಾರತದ ಪರವಾಗಿ ನವನೀತ್ 26ನೇ ನಿಮಿಷದಲ್ಲಿ ಮತ್ತು ನೇಹಾ 37ನೇ ನಿಮಿಷದಲ್ಲಿ ಗೋಲುಗಳನ್ನು ಬಾರಿಸಿದರು. ಆ ಪಂದ್ಯದ ಹೆಚ್ಚಿನ ಭಾಗ ಭಾರತವು 2-0 ಅಂತರದ ಮುನ್ನಡೆಯನ್ನು ಹೊಂದಿತ್ತು. 52ನೇ ನಿಮಿಷದಲ್ಲಿ ಅರ್ಜೆಂಟೀನ ಪರವಾಗಿ ಗೋರ್ಝಲನಿ ಗೋಲು ಬಾರಿಸಿದರೂ ಭಾರತ ವಿಜಯ ಗಳಿಸಿತು. ಶುಕ್ರವಾರ ನಡೆದ ಕೊನೆಯ ಪಂದ್ಯದಲ್ಲಿ, ಭಾರತವು ಎದುರಾಳಿಯನ್ನು ಶೂಟೌಟ್ನಲ್ಲಿ 3-2 ಗೋಲುಗಳ ಅಂತರದಿಂದ ಸೋಲಿಸಿ ಸರಣಿಯನ್ನು 2-2ರಿಂದ ಡ್ರಾಗೊಳಿಸಿತು. ನಿಯಮಿತ ಅವಧಿಯಲ್ಲಿ ಯಾವುದೇ ತಂಡಕ್ಕೆ ಗೋಲು ಗಳಿಸಲು ಸಾಧ್ಯವಾಗದೆ ಪಂದ್ಯವು 0-0ಯಲ್ಲಿ ಮುಕ್ತಾಯಗೊಂಡಿತು. ಉಭಯ ತಂಡಗಳಿಗೂ ಗೋಲು ಗಳಿಸುವ ಅವಕಾಶಗಳಿದ್ದರೂ, ಅವುಗಳನ್ನು ಕೈಚೆಲ್ಲಿದವು.
Kalaburagi | ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಪಕ್ಷದ ದಿನಾಚರಣೆ: ಧ್ವಜಾರೋಹಣ
ಕಲಬುರಗಿ: ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಪಕ್ಷದ ಸಂಸ್ಥಾಪನಾ ದಿನದ ನಿಮಿತ್ತ ಶನಿವಾರ ನಗರದ ಕೆಬಿಎನ್ ದರ್ಗಾ ರಸ್ತೆಯಲ್ಲಿರುವ ಜಿಲ್ಲಾ ಕಚೇರಿಯಲ್ಲಿ ಪಕ್ಷದ ರಾಜ್ಯ ಉಪಾಧ್ಯಕ್ಷ ಮುಜಾಹಿದ್ ಖುರೇಷಿ ಅವರು ಧ್ವಜಾರೋಹಣ ನೆರವೇರಿಸಿದರು. ಈ ವೇಳೆ ಮಾತನಾಡಿದ ಅವರು, ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ 2011ರ ಏಪ್ರಿಲ್ 18ರಂದು ನವದೆಹಲಿಯಲ್ಲಿ ಸ್ಥಾಪನೆಯಾಗಿ, ಕಲ್ಯಾಣ ರಾಜ್ಯದ ನಿರ್ಮಾಣ ಮತ್ತು ಮೌಲ್ಯಾಧಾರಿತ ರಾಜಕಾರಣವನ್ನು ಪ್ರೋತ್ಸಾಹಿಸುವುದೇ ಪಕ್ಷದ ಪ್ರಮುಖ ಉದ್ದೇಶವಾಗಿದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ರಾಜ್ಯ ಕಾರ್ಯದರ್ಶಿ ಮುಬೀನ್ ಅಹ್ಮದ್, ಜಿಲ್ಲಾ ಅಧ್ಯಕ್ಷ ಸಲೀಂ ಚಿತ್ತಾಪುರಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ನ್ಯಾಯವಾದಿ ಅಬ್ದುಲ್ ಖಾದಿರ್, ಜಿಲ್ಲಾ ಸಮಿತಿ ಸದಸ್ಯರಾದ ಸಲೀಂ ಸಗ್ರಿ, ಅಫ್ಜಲ್ ಖಾನ್, ನಸೀರುದ್ದೀನ್ ಸೇರಿದಂತೆ ಹಲವು ಕಾರ್ಯಕರ್ತರು ಉಪಸ್ಥಿತರಿದ್ದರು.
ನ್ಯಾಯಾಂಗ ವ್ಯವಸ್ಥೆಯಲ್ಲಿ AI ಸಹಾಯಕವಾಗಿ ಉಳಿಯಬೇಕೇ, ಹೊರತು ಪರ್ಯಾಯವಾಗಬಾರದು: ಸಿಜೆಐ ಸೂರ್ಯಕಾಂತ್
ಬೆಂಗಳೂರು: ನ್ಯಾಯಾಧೀಶರ ಗ್ರಹಿಕೆ, ವಿಶ್ಲೇಷಣೆ, ತರ್ಕ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಸನ್ನಿವೇಶಗಳ ಅವಲೋಕನವು ನ್ಯಾಯ ನಿರ್ಣಯದ ಬೆನ್ನೆಲುಬಾಗಿರಬೇಕು. ಹೀಗಾಗಿ ನ್ಯಾಯಾಂಗ ವ್ಯವಸ್ಥೆಯಲ್ಲಿ ಕೃತಕ ಬುದ್ಧಿಮತ್ತೆಯಂತಹ(ಎಐ) ತಂತ್ರಜ್ಞಾನವು ಸಹಾಯಕವಾಗಿ ಉಳಿಯಬೇಕೇ, ಹೊರತು ಪರ್ಯಾಯವಾಗಿರಬಾರದು ಎಂದು ಸುಪ್ರೀಂ ಕೋರ್ಟ್ನ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಅಭಿಪ್ರಾಯಪಟ್ಟಿದ್ದಾರೆ. ಶನಿವಾರ ಜಿಕೆವಿಕೆಯ ಆವರಣದಲ್ಲಿರುವ ಡಾ.ಬಾಬು ರಾಜೇಂದ್ರ ಪ್ರಸಾದ್ ಅಂತರ ರಾಷ್ಟ್ರೀಯ ಸಂಭಾಗಣದಲ್ಲಿ ಕರ್ನಾಟಕ ರಾಜ್ಯ ನ್ಯಾಯಾಂಗ ಅಧಿಕಾರಿಗಳ ಸಂಘವು(ಕೆಜೆಒಎ) ಆಯೋಜಿಸಿದ್ದ 22ನೇ ದ್ವೈವಾರ್ಷಿಕ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಅವರು, ನ್ಯಾಯ ನಿರ್ಣಯದಲ್ಲಿ ಸಹಾನುಭೂತಿ, ಮೌಲ್ಯ ಪ್ರಜ್ಞೆ, ಸಾಂವಿಧಾನಿಕ ಆಶಯಗಳು ಪ್ರಧಾನ ಅಂಶಗಳಾಗಿವೆ. ಇವುಗಳ ಜಾಗವನ್ನು ಯಾವುದೇ ತಾಂತ್ರಿಕತೆಯು ತುಂಬಲಾರದು ಎಂದರು. ಎಐ ಸೇರಿ ಯಾವುದೇ ಆಧುನಿಕ ತಂತ್ರಜ್ಞಾನದ ಅಳವಡಿಕೆಗೆ ನ್ಯಾಯಾಂಗ ವ್ಯವಸ್ಥೆಯು ಹೊರತಾಗಿರಲು ಸಾಧ್ಯವಿಲ್ಲ. ಆದರೆ ನ್ಯಾಯಾಂಗ ವ್ಯವಸ್ಥೆಯಲ್ಲಿ ಎಐ ಅಳವಡಿಕೆಯು ಅನುಕೂಲಗಳೊಂದಿಗೆ ಗಂಭೀರ ಸವಾಲುಗಳನ್ನು ಒಡ್ಡಿದೆ. ಎಐ ತಾಂತ್ರಿಕತೆಯಿಂದಾಗಿ ನಕಲಿ ಉಲ್ಲೇಖಿತ ಪ್ರಕರಣಗಳೂ ಕಾಣಿಸಿಕೊಳ್ಳುತ್ತಿವೆ. ಎಐ ಮೂಲಕ ಲಭ್ಯವಾಗುವ ಮಾಹಿತಿಯನ್ನು ದೃಢೀಕರಿಸಿಕೊಳ್ಳಬೇಕಾದ ಜವಾಬ್ದಾರಿ ಹೆಚ್ಚಾಗುತ್ತಿದ್ದು, ನ್ಯಾಯನಿರ್ಣಯ ಪ್ರಕ್ರಿಯೆಯನ್ನು ಯಾಂತ್ರಿಕವಾಗಿಸಲು ಆಸ್ಪದ ನೀಡಬಾರದು ಎಂದು ಅವರು ತಿಳಿಸಿದರು. ಪ್ರಸ್ತುತ ನ್ಯಾಯಾಂಗ ವ್ಯವಸ್ಥೆಯಲ್ಲಿ ಎಐ ಅಳವಡಿಕೆಯು ತೀವ್ರ ಚರ್ಚಿತ ವಿಷಯವಾಗಿದೆ. ಈ ವ್ಯವಸ್ಥೆಯಲ್ಲಿ ಎಐ ಅನ್ನು ದತ್ತಾಂಶ ಪರಿಶೀಲನೆ, ಪ್ರಕರಣಗಳ ವಿಚಾರಣೆಗೆ ದಿನಾಂಕ ನಿಗದಿ, ಪುನರಾವರ್ತಿತ ಕೆಲಸಗಳ ನಿರ್ವಹಣೆ ಸೇರಿದಂತೆ ದೈನಂದಿನ ಕಾರ್ಯಗಳಿಗೆ ಬಳಸಿಕೊಂಡು ನ್ಯಾಯ ವಿತರಣೆ ಪ್ರಕ್ರಿಯೆಯನ್ನು ತ್ವರಿತಗೊಳಿಸುವುದು ಮುಖ್ಯ ಗುರಿಯಾಗಬೇಕು ಎಂದು ನ್ಯಾಯಮೂರ್ತಿ ಸೂರ್ಯಕಾಂತ್ ಹೇಳಿದರು. ನಮ್ಮ ಸಮಾಜದಲ್ಲಿ ಜನಸಾಮಾನ್ಯರು ವಿಚಾರಣಾ ನ್ಯಾಯಲಯಗಳ ಮೂಲಕವೇ ನ್ಯಾಯಾಂಗ ವ್ಯವಸ್ಥೆಯೊಂದಿಗೆ ಸಂಪರ್ಕಕ್ಕೆ ಬರುತ್ತಾರೆ. ಅನೇಕರು ನಂತರದ ಹಂತದ ಕೋರ್ಟ್ಗಳೊಂದಿಗೆ ಸಂಪರ್ಕಕ್ಕೆ ಬರುವುದೇ ಇಲ್ಲ. ಹೀಗಾಗಿ, ಜನರಿಗೆ ಸಂವಿಧಾನದ ಆಶಯಗಳ ರಕ್ಷಣೆಯ ಬಗ್ಗೆ ವಿಚಾರಣಾ ನ್ಯಾಯಾಲಯದ ಹಂತದಲ್ಲೇ ವಿಶ್ವಾಸ ಮೂಡಬೇಕು. ವ್ಯವಸ್ಥೆ ಬಗೆಗಿನ ನಂಬಿಕೆಯು ಬಲಗೊಳ್ಳುವುದು ಅಥವಾ ಶಿಥಿಲವಾಗುವುದು ವಿಚಾರಣಾ ನ್ಯಾಯಲಯಗಳ ಹಂತವನ್ನೇ ಅವಲಂಬಿಸಿರುತ್ತದೆ ಎಂದು ಅವರು ಹೇಳಿದರು. ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಮಾತನಾಡಿ, ಈಗ ನ್ಯಾಯಾಂಗ ವ್ಯವಸ್ಥೆಯಲ್ಲಿ ಎಐ ಅಳವಡಿಸಬೇಕೇ ಅಥವಾ ಬೇಡವೇ ಎಂಬುದು ಪ್ರಶ್ನೆಯಾಗಿ ಉಳಿದಿಲ್ಲ. ಯಾವ ರೀತಿಯಲ್ಲಿ ಎಐ ಅನ್ನು ಅಳವಡಿಸಬೇಕು ಎಂಬುದಷ್ಟೇ ಈಗಿನ ಪ್ರಶ್ನೆಯಾಗಿದೆ. ಕರ್ನಾಟಕದ ನ್ಯಾಯಾಂಗ ವ್ಯವಸ್ಥೆಯಲ್ಲಿ ದಾಖಲೆಗಳ ಡಿಜಿಟಲೀಕರಣ, ಇ-ಫೈಲಿಂಗ್ ಹಾಗೂ ಕಾಗದರಹಿತ ವ್ಯವಸ್ಥೆ ನಿರ್ಮಿಸುವ ದಿಸೆಯಲ್ಲಿ ಉಪಕ್ರಮಗಳು ಆರಂಭಗೊಂಡಿದ್ದು, ಇದು ವೇಗ ಪಡೆದುಕೊಳ್ಳಬೇಕಾಗಿದೆ ಎಂದು ಅಭಿಪ್ರಾಯಪಟ್ಟರು. ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಡಾ.ನಾಗರತ್ನ ಮಾತನಾಡಿ, ನ್ಯಾಯಾಂಗ ವ್ಯವಸ್ಥೆಗೆ ಎಐ ಅಳವಡಿಸುವಾಗ ಹೆಚ್ಚಿನ ಜವಾಬ್ದಾರಿಯೂ ಅತ್ಯಗತ್ಯ. ಎಐನಿಂದಾಗಿ, ಸುಪ್ರೀಂ ಕೋರ್ಟ್ನಲ್ಲೂ ನಕಲಿ ಪ್ರಕರಣಗಳ ಉಲ್ಲೇಖಗಳು ಕಂಡುಬರುತ್ತಿವೆ. ಇದಕ್ಕೆ ಕಡಿವಾಣ ಹಾಕುವಲ್ಲಿ ವಕೀಲರ ಪಾತ್ರ ಮುಖ್ಯವಾಗುತ್ತದೆ. ಹಾಗೆಯೇ, ವೈಯಕ್ತಿಕ ಮಾಹಿತಿಗಳ ಗೌಪ್ಯತೆ ಮತ್ತು ದತ್ತಾಂಶಗಳ ರಕ್ಷಣೆಯೂ ಪ್ರಮುಖವಾಗುತ್ತದೆ ಎಂದರು. ‘ಬೆಂಗಳೂರಿನ ನ್ಯಾಯಾಲಯಗಳಲ್ಲಿ ಕಡತಗಳ ಸಂಗ್ರಹ ಹಾಗೂ ಲಭ್ಯತೆಯೇ ದೊಡ್ಡ ತೊಡಕಾಗಿತ್ತು. ಈ ಕೊರತೆಯನ್ನು ನೀಗಿಸುವ ಸಲುವಾಗಿ, ಆನೇಕಲ್ನಲ್ಲಿ 1.40 ಲಕ್ಷ ಚದುರು ಅಡಿಗಳಷ್ಟು ವಿಸ್ತೀರ್ಣದಲ್ಲಿ ದಾಖಲೆಗಳ ಸ್ಕ್ಯಾನಿಂಗ್, ಸಂಗ್ರಹ ಹಾಗೂ ಕಡತಗಳ ನಿರ್ವಹಣೆ ಸೌಲಭ್ಯವನ್ನು ಸ್ಥಾಪಿಸಲಾಗುತ್ತಿದ್ದು, ಇದರಿಂದ ಕಾರ್ಯದಕ್ಷತೆ ಹೆಚ್ಚಲಿದೆ’ -ವಿಭು ಬಖ್ರು, ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ
SRH Vs CSK Highlights- ಈಶಾನ್ ಮಾಲಿಂಗ ಮಾರಕ ದಾಳಿಗೆ ನಲುಗಿದ ಚೆನ್ನೈ; ಸನ್ ರೈಸರ್ಸ್ ಗೆ ಗೆಲುವಿನ ನಗು
Sunrisers Hyderabad Vs Chennai Super Kings- ಹೈದರಾಬಾದ್ನಲ್ಲಿ ಶನಿವಾರ ನಡೆದ ರೋಚಕ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಸನ್ ರೈಸರ್ಸ್ ಹೈದರಾಬಾದ್ 10 ರನ್ಗಳ ಜಯ ಸಾಧಿಸಿತು. ಮೊದಲು ಬ್ಯಾಟಿಂಗ್ ಮಾಡಿದ ಹೈದರಾಬಾದ್, ಅಭಿಷೇಕ್ ಶರ್ಮಾ (59) ಅವರ ಸ್ಫೋಟಕ ಅರ್ಧಶತಕ ಹಾಗೂ ಹೆನ್ರಿಚ್ ಕ್ಲಾಸನ್ (59) ನೆರವಿನಿಂದ 194 ರನ್ ಗಳಿಸಿತು. ಗುರಿ ಬೆನ್ನಟ್ಟಿದ ಚೆನ್ನೈ, ಬ್ಯಾಟರ್ಗಳ ವೈಫಲ್ಯದಿಂದ 184 ರನ್ಗಳಿಗೆ ಸೀಮಿತವಾಯಿತು. 3 ವಿಕೆಟ್ ಕಬಳಿಸಿದ ಈಶಾನ್ ಮಾಲಿಂಗ ಹೈದರಾಬಾದ್ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿ ಪಂದ್ಯಶ್ರೇಷ್ಠರಾದರು.
‘ಡಿಜಿಟಲ್ ಅರೆಸ್ಟ್’ ಭೇದಿಸಿದ ಸಿಬಿಐ: ಮಾಜಿ ಬ್ಯಾಂಕ್ ಅಧಿಕಾರಿ ಸಹಿತ ನಾಲ್ವರ ಬಂಧನ
ಹೊಸದಿಲ್ಲಿ/ಹೈದರಾಬಾದ್: ಹಿರಿಯ ನಾಗರಿಕರೊಬ್ಬರನ್ನು ಡಿಜಿಟಲ್ ಬಂಧನದಲ್ಲಿರಿಸಿ 1.6 ಕೋಟಿ ರೂ. ಸುಲಿಗೆ ಮಾಡಿದ, ಸೈಬರ್ ವಂಚನೆಯ ಹಗರಣವನ್ನು ಸಿಬಿಐ ಭೇದಿಸಿದೆ. ಪ್ರಕರಣಕ್ಕೆ ಸಂಬಂಧಿಸಿ ಶನಿವಾರ ತೆಲಂಗಾಣ ಹಾಗೂ ಆಂಧ್ರಪ್ರದೇಶದ ಐದು ಸ್ಥಳಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಿದ್ದು, ಮಾಜಿ ಸಹಾಯಕ ಬ್ಯಾಂಕ್ ಮ್ಯಾನೇಜರ್ ಸಹಿತ ಮೂವರನ್ನು ಬಂಧಿಸಿದೆ. ಸುಪ್ರೀಂಕೋರ್ಟ್ ಆದೇಶದ ಮೇರೆಗೆ ಸಿಬಿಐ ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಂಡಿತ್ತು. ಬಂಧಿತ ಆರೋಪಿಗಳನ್ನು ಇಂಡಸ್ಲ್ಯಾಂಡ್ ಬ್ಯಾಂಕ್ ಮಾಜಿ ಸಹಾಯಕ ಮ್ಯಾನೇಜರ್ ಡುಬ್ಬಕ್ಕ ಮಹೇಶ್ ಹಾಗೂ ರಾಜೇಶ್ ಕನ್ನಾ ಹಾಗೂ ವಾಯಲ ಶ್ರೀನಿವಾಸ್ ಎಂದು ಗುರುತಿಸಲಾಗಿದೆ. ಕಾಲ್ಪನಿಕ ‘ಡಿಜಿಟಲ್ ಬಂಧನದ ’ ಮೂಲಕ ಹಿರಿಯ ನಾಗರಿಕನನ್ನು ಬೆದರಿಸಿ, ಸುಲಿಗೆ ಮಾಡಿದ ಹಣವನ್ನು ನಕಲಿ ಕಂಪೆನಿಯೊಂದರ ಹೆಸರಿನಲ್ಲಿ ತೆರೆಯಲಾದ ಬ್ಯಾಂಕ್ ಖಾತೆಗೆ ವರ್ಗಾಯಿಸಲಾಗಿತ್ತು. ಹಣದ ಮೂಲವನ್ನು ಬಚ್ಚಿಡಲು ವಿವಿಧ ವಾಹಿನಿಗಳ ಮೂಲಕ ಈ ಹಣವು ಖಾತೆಗೆ ಹೋಗುವಂತೆ ಮಾಡಲಾಗಿತ್ತು ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ. ಅಕ್ರಮವಾಗಿ ಬ್ಯಾಂಕ್ ಖಾತೆಯನ್ನು ತೆರೆಯವುದಕ್ಕೆ ಮಹೇಶ್ ನೆರವಾಗಿದ್ದರೆ, ಇನ್ನಿಬ್ಬರು ಅಕ್ರಮ ಹಣದ ವರ್ಗಾವಣೆಯನ್ನು ವ್ಯವಸ್ಥೆಗೊಳಿಸಿದ್ದರೆಂದು ಸಿಬಿಐ ಆಪಾದಿಸಿದೆ. ಆರೋಪಿಗಳಿಗೆ ಸಂಬಂಧಿಸಿದ ಸ್ಥಳಗಲ್ಲಿ ಸಿಬಿಐ ಶೋಧ ಕಾರ್ಯಾಚರಣೆಯ ವೇಳೆ ಹಲವಾರು ಅಕ್ರಮ ದಾಖಲೆಗಳು ಹಾಗೂ ಇಲೆಕ್ಟ್ರಾನಿಕ್ ಉಪಕರಣಗಳು ಪತ್ತೆಯಾಗಿವೆ, ಇದರಿಂದ ಪ್ರಕರಣದ ಬಗ್ಗೆ ಇನ್ನೂ ಹೆಚ್ಚಿನ ಸುಳಿವು ದೊರೆಯಬಹುದೆಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.
ಕೃಷಿಯಲ್ಲಿ ಅತಿಯಾದ ರಾಸಾಯನಿಕ ಬಳಕೆಯಿಂದ ಸ್ವಾವಲಂಬನೆ ಕ್ಷೀಣ: ಡಾ.ಮೋಹನ ಆಳ್ವ
ಮೂಡುಬಿದಿರೆ: ಆಳ್ವಾಸ್ ಕೃಷಿ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆ, ಎಸ್ಕೆಡಿಆರ್ಡಿಪಿ ಹಾಗೂ ಇತರೆ ಸಂಸ್ಥೆಗಳ ಸಹಯೋಗದಲ್ಲಿ `ಸುಸ್ಥಿರ ಕೃಷಿಗಾಗಿ ಸಮಗ್ರ ಕೃಷಿ ಪದ್ಧತಿ' ಕುರಿತ ವಿಚಾರ ಸಂಕಿರಣವು ಮಿಜಾರಿನಲ್ಲಿರುವ ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಶನಿವಾರ ನಡೆಯಿತು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಕಾಯ೯ಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಇಂದು ಕೃಷಿಯಲ್ಲಿ ಹೆಚ್ಚಿನ ಲಾಭ ಪಡೆಯುವ ಉದ್ದೇಶದಿಂದ ರಾಸಾಯನಿಕ ಪದಾರ್ಥಗಳನ್ನು ಅತಿಯಾಗಿ ಬಳಕೆ ಮಾಡುತ್ತಿದ್ದು ಇದರಿಂದ ರೈತರನ್ನು ಸ್ವಾವಲಂಬನೆಯಿಂದ ದೂರ ಮಾಡಿ ಪರಾವಲಂಬಿತೆಯತ್ತ ಕೊಂಡೊಯ್ಯು ತ್ತಿದ್ದು, ಇದರಿಂದ ಮಾನವ ಆರೋಗ್ಯ ಮತ್ತು ಪರಿಸರದ ಮೇಲೆ ಗಂಭೀರ ಹಾನಿ ಉಂಟಾಗುತ್ತಿದೆ ಕೃಷಿ ಕುರಿತು ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮಗಳು ನಿರಂತರವಾಗಿ ನಡೆಯಬೇಕು ಎಂದು ಹೇಳಿದರು. ಭಾರತೀಯ ಕೃಷಿ ಅನುಸಂಧಾನ ಪರಿಷತ್ತಿನ ಕಾಸರಗೋಡು ಕೇಂದ್ರೀಯ ತೋಟಗಾರಿಕಾ ಬೆಳೆಗಳ ಸಂಶೋಧನಾ ಸಂಸ್ಥೆಯ ನಿರ್ದೇಶಕ ಬಾಲಚಂದ್ರ ಹೆಬ್ಬಾರ್ ಮುಖ್ಯ ಅತಿಥಿಯಾಗಿ ಮಾತನಾಡಿ, ತೆಂಗು ಮತ್ತು ಅಡಿಕೆ ಮರಗಳ ಗರಿಗಳಿಂದ ತಯಾರಿಸುವ ಸಾವಯವ ಗೊಬ್ಬರ ಬಳಸುವುದರಿಂದ ಉತ್ತಮ ಇಳುವರಿ ಪಡೆಯಬಹುದು. ಇದರಿಂದ ಮಣ್ಣಿನ ಪೋಷಕಾಂಶ ಹೆಚ್ಚುವುದರ ಜೊತೆಗೆ ಪರಿಸರ ಮಾಲಿನ್ಯವೂ ಕಡಿಮೆ ಯಾಗುತ್ತದೆ. ರಾಸಾಯನಿಕ ಗೊಬ್ಬರಗಳ ಬಳಕೆಯನ್ನು ತಗ್ಗಿಸಲು ಇದು ಪರಿಣಾಮಕಾರಿ ಮಾರ್ಗ ಎಂದರು. ಆಳ್ವಾಸ್ ಕಾಲೇಜಿನ ವ್ಯವಸ್ಥಾಪನ ಟ್ರಸ್ಟಿ ವಿವೇಕ್ ಆಳ್ವ, ಎಸ್ಕೆಡಿಆರ್ಡಿಪಿ ಬಿಸಿ ಟ್ರಸ್ಟ್ನ ಸಿಇಒ ಅನಿಲ್ ಕುಮಾರ್ ಎಸ್.ಎಸ್., ಮಂಗಳೂರು ಕೃಷಿ ಉತ್ಪಾದಕರ ಕಂಪೆನಿಯ ವ್ಯವಸ್ಥಾಪಕ ನಿರ್ದೇಶಕ ಸುನಿಲ್ ಸೋನ್ಸ್, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಪ್ರವೀಣ್ ಕುಮಾರ್, ಕೃಷಿ ವಿಚಾರ ವಿನಿಮಯ ಕೇಂದ್ರದ ಅಧ್ಯಕ್ಷ ಅಭಯ ಕುಮಾರ್, ರೈತ ಮುಖಂಡ ಲಿಯೋ ವಾಲ್ಟರ್ ನಝರತ್ ಮತ್ತಿತರರಿದ್ದರು. ಆಳ್ವಾಸ್ ಕೃಷಿ ವಿಜ್ಞಾನ ಕಾಲೇಜಿನ ಡೀನ್ ಎಸ್. ಎನ್. ವಾಸುದೇವ ಸ್ವಾಗತಿಸಿದರು.
ಸಿದ್ದರಾಮಯ್ಯ ನನ್ನ ರಾಜಕೀಯ ಹೀರೋ, ಹೀರೊಯಿನ್ ಇಂದಿರಾ ಗಾಂಧಿ: ಡಾ.ಜಯಮಾಲ
ಬೆಂಗಳೂರು: ಬಡತನದಿಂದ ಬಂದ ನನಗೆ ಅನ್ನದ ಬೆಲೆ ಚೆನ್ನಾಗಿ ತಿಳಿದಿದ್ದು, ಅನ್ನಭಾಗ್ಯ ನೀಡಿದ ಸಿಎಂ ಸಿದ್ದರಾಮಯ್ಯನವರು ನನ್ನ ರಾಜಕೀಯ ರಂಗದ ಹೀರೋ. ಅಂತೆಯೇ, ರಾಜಕೀಯ ರಂಗದ ಹೀರೊಯಿನ್ ಇಂದಿರಾ ಗಾಂಧಿ ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷೆ, ನಟಿ ಡಾ. ಜಯಮಾಲ ತಿಳಿಸಿದ್ದಾರೆ. ಶನಿವಾರ ನಗರದ ನಯನ ಸಭಾಂಗಣದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಆಯೋಜಿಸಿದ್ದ ‘ಮನೆಯಂಗಳದಲ್ಲಿ ಮಾತುಕತೆ’ ಕಾರ್ಯಕ್ರಮದಲ್ಲಿ ತಿಂಗಳ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಅವರು, ಚಿತ್ರರಂಗದಲ್ಲಿ ರಾಜ್ಕುಮಾರ್ ಹಾಗೂ ರಾಜಕೀಯದಲ್ಲಿ ಸಿದ್ದರಾಮಯ್ಯ ಸಾಹೇಬರು ನನಗೆ ದೇವತಾ ಸ್ವರೂಪವಾಗಿದ್ದಾರೆ ಎಂದರು. ಪಣಂಬೂರಲ್ಲಿ ಬಂದರು ನಿರ್ಮಾಣಕ್ಕಾಗಿ ತಮ್ಮ ಕುಟುಂಬವನ್ನು ಕಾಟಿಪಳ್ಳ ಎನ್ನುವ ಪ್ರದೇಶಕ್ಕೆ ಸ್ಥಳಾಂತರಿಸಲಾಯಿತು. ನನಗೆ ಸುಮಾರು ಮೂರೂವರೆ ವರ್ಷವಿದ್ದಾಗ ನಮ್ಮ ತಂದೆ ಚಿಕ್ಕಮಗಳೂರಿಗೆ ಕರೆದುಕೊಂಡು ಹೋದರು. ಕಡು ಬಡತನದಲ್ಲಿ ಬೆಳೆದ ನಾವು ಒಟ್ಟಾರೆ 7 ಮಂದಿ ಮಕ್ಕಳು. ಹಾಗಾಗಿ, ನಾವು ಹಾಲು ಮತ್ತು ಉಪ್ಪಿಟ್ಟು ಸಿಗುತ್ತದೆಂದು ಶಾಲೆಗೆ ಹೋಗುತ್ತಿದ್ದೆವು. ಇಲ್ಲದಿದ್ದರೆ ಶಾಲೆಗೆ ಹೋಗುತ್ತಿರಲಿಲ್ಲವೆನಿಸುತ್ತದೆ ಎಂದು ಎಂದು ಜಯಮಾಲ ಬಾಲ್ಯದ ನೆನಪುಗಳನ್ನು ಮೆಲುಕು ಹಾಕಿದರು. ನಾಯಕ ನಟರಿಗೆ ಹೋಲಿಸಿದರೆ, ನಟಿಯರಿಗೆ ಸಿನಿಮಾ ಕ್ಷೇತ್ರದಲ್ಲಿ ಆಯಸ್ಸು ಕಡಿಮೆ. ಅಂದಿನ ಕಾಲದಲ್ಲಿ ಮದುವೆಯಾದರೆ ಜನರೇ ನಿರಾಕರಿಸುತ್ತಿದ್ದರು. ಅನೇಕರು ತಮ್ಮ ಮದುವೆಯನ್ನು ಮುಚ್ಚಿಟ್ಟು ನಾನಾ ಸಮಸ್ಯೆಗೆ ಸಿಲುಕಿ ಹಾಕಿಕೊಳ್ಳುತ್ತಿದ್ದರು, ಅವಕಾಶ ವಂಚಿತರಾಗುತ್ತಿದ್ದರು. ಆದರೆ, ಈಗ ಅಂತಹ ಸ್ಥಿತಿ ಬದಲಾಗಿರುವುದು ಸಂತಸದ ಸಂಗತಿ ಎಂದು ಜಯಮಾಲ ತಿಳಿಸಿದರು. ಚಿತ್ರರಂಗದಲ್ಲಿ ಮೇರು ಪರ್ವತವಾಗಿದ್ದ ರಾಜ್ಕುಮಾರ್ ಅವರು ಬದುಕಿನ ಒಂದೊಂದು ಹೆಜ್ಜೆಯನ್ನೂ ಹೇಳಿಕೊಟ್ಟರು. ಯಾರಿಗೂ ನೇರವಾಗಿ ಏನನ್ನೂ ಹೇಳದ ಅವರು, ತಮ್ಮ ನಡವಳಿಕೆ ಮುಖಾಂತರವೇ ಸಂದೇಶ ನೀಡುತ್ತಿದ್ದರು. ಅಲ್ಲದೆ, ನನಗೆ ಸಿಗುವ ಆಹಾರ ಎಲ್ಲರಿಗೂ ಸಿಗಲಿ ಎಂಬ ಉದ್ದೇಶದಿಂದ ಕೆಲಸಗಾರರ ಜತೆಯೇ ಊಟ ಮಾಡುತ್ತಿದ್ದರು. ಅಂತಹ ಶ್ರೇಷ್ಠ ನಟರ ಬೆಂಬಲದ ಹೊರತು ನನಗೆ ನಟನೆ ಸಾಧ್ಯವಾಗುತ್ತಿರಲಿಲ್ಲ ಎಂದು ಜಯಮಾಲ ಹೇಳಿದರು. ಕಾರ್ಯಕ್ರಮದಲ್ಲಿ ಇಲಾಖೆಯ ನಿರ್ದೇಶಕ ಡಾ.ಮಂಜುನಾಥ್ ಸ್ವಾಮಿ ಉಪಸ್ಥಿತರಿದ್ದರು. ರಾಣಿ ಅಬ್ಬಕ್ಕ ಪಾತ್ರ ಜೀವನದ ದೊಡ್ಡ ಕನಸು: ‘ರಾಣಿ ಅಬ್ಬಕ್ಕನ ಪಾತ್ರ ನಿರ್ವಹಿಸುವುದು ನನ್ನ ಜೀವನದ ದೊಡ್ಡ ಕನಸು. ನಾನು ಹೋಗುವ ಮುನ್ನ ರಾಣಿ ಅಬ್ಬಕ್ಕ ಸಿನಿಮಾವನ್ನು ಮಾಡುತ್ತೇನೆ. ವಾಣಿಜ್ಯ ಮಂಡಳಿಯ ಈ ಅವಧಿ ಮುಗಿದ ನಂತರ ಅಬ್ಬಕ್ಕನ ಕುರಿತ ಸಿನಿಮಾ ಮಾಡಬೇಕೆಂಬ ಆಸೆಯಿದೆ’ ಎಂದು ಜಯಮಾಲ ತಿಳಿಸಿದರು. ‘ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ 93 ವರ್ಷಕ್ಕೆ ಕಾಲಿಟ್ಟಿದೆ. ಆದರೆ, ಇಂದಿಗೂ ಮಂಡಳಿಯ ಕಾರ್ಮಿಕರಿಗೆ, ತಂತ್ರಜ್ಞರಿಗೆ ಹಾಗೂ ಉದ್ಯಮದಲ್ಲಿ ತೊಡಗಿಸಿಕೊಂಡ ನಿರ್ದೇಶಕರು ಸೇರಿದಂತೆ ಎಲ್ಲ ವಿಭಾಗದವರಿಗೂ ಸ್ವಂತ ಮನೆಯಿಲ್ಲ. ಈ ಕುರಿತು ಸರಕಾರದ ಮುಂದೆ ಬೇಟಿಕೆಯಿಟ್ಟಿದ್ದು, ಸರಕಾರ ಸೂರು ನೀಡುವ ಭರವಸೆಯಿದೆ’ -ಡಾ.ಜಯಮಾಲಾ, ಅಧ್ಯಕ್ಷೆ, ಕರ್ನಾಟಕ ಚಲಚಿತ್ರ ವಾಣಿಜ್ಯ ಮಂಡಳಿ.
Bengaluru | ಔಷಧಿ ಸರಬರಾಜು ಮಾಡಲು ಟೆಂಡರ್ ಕೊಡಿಸುವುದಾಗಿ ವಂಚನೆ ಪ್ರಕರಣ: ನಕಲಿ ಐಎಎಸ್ ಅಧಿಕಾರಿಯ ಬಂಧನ
ಬೆಂಗಳೂರು: ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಔಷಧಿ ಸರಬರಾಜು ಮಾಡಲು ಸರಕಾರದಿಂದ ಟೆಂಡರ್ ಕೊಡಿಸುವುದಾಗಿ ನಂಬಿಸಿ ಮೆಡಿಕಲ್ ಶಾಪ್ ಮಾಲಕನಿಂದ 41 ಲಕ್ಷ ರೂ. ಹಣ ಪಡೆದು ವಂಚಿಸಿದ ಆರೋಪದಡಿ ನಕಲಿ ಐಎಎಸ್ ಅಧಿಕಾರಿಯನ್ನು ಇಲ್ಲಿನ ಅಮೃತಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಮಿಥುನ್(28) ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ. ಚಿಕ್ಕಮಗಳೂರಿನ ನಿವಾಸಿಯಾಗಿರುವ ದೂರುದಾರ ಸತೀಶ್ ಎಂಬವರಿಗೆ 41 ಲಕ್ಷ ರೂ. ಹಣ ವಂಚಿಸಿದ ಆರೋಪದಡಿ ಈತನನ್ನು ಪೊಲೀಸರು ಬಂಧಿಸಿ ಹೆಚ್ಚಿನ ವಿಚಾರಣೆಗೊಳಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿ ಕಡೂರು ಮೂಲದವನಾಗಿದ್ದು, ಈ ಹಿಂದೆ ಎರಡು ಬಾರಿ ಯುಪಿಎಸ್ಸಿ ಪರೀಕ್ಷೆ ಬರೆದಿದ್ದ. ಇದೇ ಅಧಾರದ ಮೇರೆಗೆ ಸ್ನೇಹಿತರ ಬಳಿ ತಾನು ಐಎಎಸ್ ಅಧಿಕಾರಿಯಾಗಿ ನೇಮಕವಾಗಿದ್ದು, ಪ್ರೊಬೆಷನರಿ ತರಬೇತಿಯಲ್ಲಿದ್ದೇನೆ ಎಂದು ನಂಬಿಸಿದ್ದ. ಅಲ್ಲದೆ, ನಗರದ ಆರೋಗ್ಯಸೌಧದಲ್ಲಿ ಕಾರ್ಯ ನಿರ್ವಹಿಸುತ್ತಿರುವುದಾಗಿ ತಿಳಿಸಿದ್ದ. ಚಿಕ್ಕಮಗಳೂರಿನ ಮಲ್ಲೇಗೌಡ ಸರಕಾರಿ ಆಸ್ಪತ್ರೆಯ ಜಿಲ್ಲಾ ಸರ್ಜನ್ ಡಾ.ಚಂದ್ರಶೇಖರ್ ಅವರನ್ನು ಪರಿಚಯಿಸಿಕೊಂಡು ವೈದ್ಯರು ಹಾಗೂ ಸಿಬ್ಬಂದಿಯೊಂದಿಗೆ ಸಭೆ ನಡೆಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಯು ಆರೋಗ್ಯ ಇಲಾಖೆಯ ಚಿಕ್ಕಮಗಳೂರಿನ ಉಸ್ತುವಾರಿಯಾಗಿದ್ದೇನೆ ಎಂದು ಹೇಳಿದ್ದ ಸುಳ್ಳನ್ನೇ ನಂಬಿದ್ದ ಡಾ.ಚಂದ್ರಶೇಖರ್, ಮೂರು ತಿಂಗಳ ಹಿಂದೆ ದೂರುದಾರ ಸತೀಶ್ ಅವರಿಗೆ ಈತನನ್ನು ಪರಿಚಯಿಸಿದ್ದರು. ಮೆಡಿಕಲ್ ಶಾಪ್ ಇಟ್ಟುಕೊಂಡಿದ್ದ ಸತೀಶ್ ಬಳಿ, ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಔಷಧಿ ಸರಬರಾಜು ಮಾಡಲು ಸರಕಾರಿ ಆದೇಶ ಕೊಡಿಸುವ ಬಗ್ಗೆ ತಿಳಿಸಿದ್ದರು. ಇದನ್ನು ನಂಬಿದ ಸತೀಶ್, ಆರೋಪಿಯನ್ನು ಸಂಪರ್ಕಿಸಿದಾಗ 1.8 ಕೋಟಿ ರೂ.ವರೆಗೂ ಔಷಧಿ ಸರಬರಾಜು ಮಾಡಲು ಆದೇಶ ಕೊಡಿಸುತ್ತೇನೆ. ಇದಕ್ಕೆ ಪ್ರತಿಯಾಗಿ ಶೇ.20ರಷ್ಟು ಮುಂಗಡವಾಗಿ ಕಮಿಷನ್ ನೀಡಬೇಕೆಂದು ಹೇಳಿದ್ದ. ಇದರಂತೆ ಜಕ್ಕೂರು ಬಳಿ 36 ಲಕ್ಷ ರೂ. ಹಣ ವಸೂಲಿ ಮಾಡಿದ್ದ. ಎರಡು ವಾರಗಳ ಬಳಿಕ ಈ ಬಗ್ಗೆ ಪ್ರಶ್ನಿಸಿದಾಗ ಹೆಚ್ಚುವರಿಯಾಗಿ 5 ಲಕ್ಷ ರೂ. ನೀಡುವಂತೆ ಕೇಳಿ ಪಡೆದಿದ್ದ. ಅಲ್ಲದೆ, ಆದೇಶ ಕೊಡಿಸಲು 2 ತಿಂಗಳು ಆಗಲಿದೆ ಎಂದು ಸುಳ್ಳು ಹೇಳಿದ್ದ. ಈ ಬಗ್ಗೆ ಅನುಮಾನಗೊಂಡು ವಿಚಾರಣೆ ನಡೆಸಿದಾಗ ಮಿಥುನ್ ಹೆಸರಿನಲ್ಲಿ ಐಎಎಸ್ ಅಧಿಕಾರಿ ಇಲ್ಲದಿರುವುದು ಗೊತ್ತಾಗಿದೆ. ಈ ಬಗ್ಗೆ ನೀಡಿದ ದೂರಿನ ಮೇರೆಗೆ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೆÇಲೀಸರು ಮಾಹಿತಿ ನೀಡಿದ್ದಾರೆ. ದೂರುದಾರನಿಗೆ ಆರೋಪಿಯನ್ನು ಪರಿಚಯಿಸಿದ್ದ ಚಿಕ್ಕಮಗಳೂರಿನ ಸರಕಾರಿ ಆಸ್ಪತ್ರೆಯ ಸರ್ಜನ್ ಡಾ.ಚಂದ್ರಶೇಖರ್ ಅವರಿಗೆ ವಂಚನೆ ಕೃತ್ಯದಲ್ಲಿನ ಪಾತ್ರದ ಬಗ್ಗೆ ಅರಿಯಲು ವಿಚಾರಣೆಯ ಅಗತ್ಯತೆ ಹಿನ್ನೆಲೆಯಲ್ಲಿ ನೋಟಿಸ್ ನೀಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
IPL 2026 | CSK ವಿರುದ್ಧ ಹೈದರಾಬಾದ್ಗೆ 10 ರನ್ ಗಳ ಜಯ
ಹೈದರಾಬಾದ್: ಇಲ್ಲಿನ ರಾಜೀವ್ ಗಾಂಧಿ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ ಟೂರ್ನಿಯ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ SRH ತಂಡವು 10 ರನ್ ಗಳಿಂದ ಜಯ ಗಳಿಸಿತು. ಸನ್ ರೈಸರ್ಸ್ ಹೈದರಾಬಾದ್ ನೀಡಿದ 195 ರನ್ ಗಳ ಗುರಿ ಪಡೆದ CSK ತಂಡವು 20 ಓವರುಗಳಲ್ಲಿ 8 ವಿಕೆಟ್ ನಷ್ಟಕ್ಕೆ 184 ರನ್ ಗಳಿಸಿತು.
ದಾವಣಗೆರೆ: ಅಬ್ದುಲ್ ಜಬ್ಬಾರ್, ನಸೀರ್ ಅಹ್ಮದ್ ವಜಾಕ್ಕೆ ಖಂಡನೆ
ದಾವಣಗೆರೆ: ವಿಧಾನ ಪರಿಷತ್ ಸದಸ್ಯ ಅಬ್ದುಲ್ ಜಬ್ಬಾರ್ ಅಮಾನತು ಮತ್ತು ಸಿಎಂ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್ ಅವರನ್ನು ಹುದ್ದೆಯಿಂದ ವಜಾಗೊಳಿಸಿರುವುದನ್ನು ಖಂಡಿಸಿ ಜಿಲ್ಲೆಯ ವಿವಿಧ ಮಸೀದಿಗಳ ಅಧ್ಯಕ್ಷರು ಹಾಗೂ ಕಾರ್ಯದರ್ಶಿಗಳು ಕಾಂಗ್ರೆಸ್ ಪಕ್ಷದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಲ್ಪಸಂಖ್ಯಾತರ ಜಾಗೃತಿ ವೇದಿಕೆಯ ಅಧ್ಯಕ್ಷ ಅಬ್ದುಲ್ ಘನಿ ತಾಹಿರ್, ದಾವಣಗೆರೆ ಉಪ ಚುನಾವಣೆಯ ಟಿಕೆಟ್ ಹಂಚಿಕೆಯಲ್ಲಿ ಕಾಂಗ್ರೆಸ್ ನಡೆ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ. ಮುಸ್ಲಿಮ್ ಸಮುದಾಯಕ್ಕೆ ಅವಕಾಶ ನೀಡುವ ಭರವಸೆ ಇದ್ದರೂ, ಕುಟುಂಬ ರಾಜಕಾರಣ, ಜಾತಿ ಮತ್ತು ಹಣದ ಪ್ರಭಾವಕ್ಕೆ ಮಣಿದಿರುವುದು ಜಾತ್ಯತೀತ ಶಕ್ತಿಗಳ ನಿರೀಕ್ಷೆಗಳನ್ನು ಸುಳ್ಳಾಗಿಸಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಈ ಅವಕಾಶವಾದಿ ರಾಜಕಾರಣದಿಂದ ಅಲ್ಪಸಂಖ್ಯಾತರು ಮತ್ತು ಪ್ರಗತಿಪರ ಶಕ್ತಿಗಳಲ್ಲಿ ಬೇಸರ ಉಂಟಾಗಿದೆ. ಫಲಿತಾಂಶ ಏನೇ ಬಂದರೂ ಕಾಂಗ್ರೆಸ್ ನೈತಿಕವಾಗಿ ಸೋತಿದೆ ಎಂಬ ಭಾವನೆ ಮೂಡಿದೆ. ಪರಿಣಾಮವಾಗಿ ಕೆಲವರು ಕಾಂಗ್ರೆಸ್ಗೆ ಮತ ಹಾಕಿದರೂ, ಕೆಲವರು ವಿರೋಧವಾಗಿ ಮತ ಹಾಕಿದ್ದು ಅಥವಾ ಮತದಾನದಿಂದ ದೂರ ಉಳಿದಿದ್ದು, ಸಮುದಾಯದೊಳಗೆ ಗೊಂದಲ ಸ್ಪಷ್ಟಿಯಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು. ತಂಝೀಂ ಮಾಜಿ ಪ್ರಧಾನ ಕಾರ್ಯದರ್ಶಿ ವೈ.ಎಂ.ಫಕ್ರುದ್ದೀನ್ ಮಾತನಾಡಿ, ದಾವಣಗೆರೆಯ ರಾಜಕೀಯ ಗೊಂದಲಗಳ ಪರಿಹರಿಸುವ ಹೊಣೆಗಾರಿಕೆ ಪಕ್ಷದ ಹೈಕಮಾಂಡ್, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಮೇಲಿದೆ. ಚುನಾವಣೆ ನಂತರ ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಗೊಂದಲ ಉಂಟು ಮಾಡಿದ ನಾಯಕರ ಮೇಲೆ ಮೊದಲು ಕ್ರಮ ಕೈಗೊಳ್ಳಬೇಕು. ಆತ್ಮಾವಲೋಕನ ಮಾಡುವ ಬದಲು ಪಕ್ಷ ಅಲ್ಪಸಂಖ್ಯಾತ ನಾಯಕರ ನಡುವೆ ಭಿನ್ನತೆ ಉಂಟು ಮಾಡಲು ಪ್ರಯತ್ನಿಸುತ್ತಿರುವುದು ಮತ್ತಷ್ಟು ಆಕ್ರೋಶಕ್ಕೆ ಕಾರಣವಾಗಿದೆ ಎಂದರು. ಈ ಬೆಳವಣಿಗೆಗಳು ೨೦೨೮ರ ಚುನಾವಣೆಗೆ ಮುನ್ನ ಕಾಂಗ್ರೆಸ್ಗೆ ಎಚ್ಚರಿಕೆಯ ಗಂಟೆಯಾಗಿವೆ. ಅಲ್ಪಸಂಖ್ಯಾತರು, ದಲಿತರು ಮತ್ತು ಜಾತ್ಯತೀತ ಶಕ್ತಿಗಳನ್ನು ನಿರ್ಲಕ್ಷ್ಯ ಮಾಡಿದರೆ ಅವರು ಪಕ್ಷದಿಂದ ದೂರ ಸರಿಯುವ ಸಾಧ್ಯತೆ ಇದೆ. ಈಗಲಾದರೂ ನಾಯಕತ್ವ ತಪ್ಪು ತಿದ್ದಿಕೊಂಡು ನಂಬಿಕೆ ಗಳಿಸಿಕೊಳ್ಳುವುದು ಅಗತ್ಯವಾಗಿದೆ ಎಂದು ಫಕ್ರುದ್ದೀನ್ ಕಿವಿಮಾತು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಕೆಟಿಜೆ ನಗರ ಮಸೀದಿಯ ಸಮೀರ್, ವಿನೋಬನಗರ ಮಸೀದಿಯ ಖಾಸಿಂ ಸಾಬ್, ಖುಬ್ರಾ ಮಸೀದಿಯ ಉಲ್ಮಾ ನಿ ರೆಹಮಾನ್, ಎಸ್ಜೆಎಂ ನಗರದ ನೂರುಲ್ಲಾ ಮಸೀದಿಯ ಖಲೀಮುಲ್ಲಾ, ಭಗತ್ ಸಿಂಗ್ ನಗರದ ಮಸೀದಿಯ ಇ.ಎ.ಜಬ್ಬಾರ್, ಪಾದ್ರಿ ರಾಜಶೇಖರ್ ಸೇರಿದಂತೆ ಬಾಷಾ ನಗರ, ಎಸ್.ಎಸ್.ಎಂ. ನಗರ, ಶಿವಾನಗರ, ಬಾರ್ಲೈನ್ ರೋಡ್, ದೇವರಾಜ್ ಅರಸ್ ಲೇ ಔಟ್, ಸಂತೆಬೆನ್ನೂರು, ಹಿಮಾಮನಗರ, ನರಸರಾಜಪೇಟೆ, ಚೌಕಿಪೇಟೆ, ಬಿಎನ್ ಲೇಔಟ್, ಆಝಾದ್ ನಗರ, ಅಹ್ಮದ್ ನಗರ, ಮುಸ್ತಫ ನಗರ, ರಿಂಗ್ ರಸ್ತೆ, ಮಂಡಕ್ಕಿ ಭಟ್ಟಿ ಲೇಔಟ್, ದೇವರಾಜ್ ನಗರ ಸೇರಿದಂತೆ ಹಲವು ಮಸೀದಿಗಳ ಅಧ್ಯಕ್ಷರು ಕಾರ್ಯದರ್ಶಿಗಳು ಉಪಸ್ಥಿತರಿದ್ದರು.
ಶಿವಮೊಗ್ಗ: ಗಂಟಲಲ್ಲಿ ಚಿಕನ್ ಮೂಳೆ ಸಿಲುಕಿ ಯುವಕ ಮೃತ್ಯು
ಶಿವಮೊಗ್ಗ: ಹುಟ್ಟುಹಬ್ಬದ ಔತಣಕೂಟವೊಂದರಲ್ಲಿ ಭಾಗವಹಿಸಿದ್ದ ಯುವಕನೊಬ್ಬ ಗಂಟಲಲ್ಲಿ ಆಹಾರ ಸಿಲುಕಿ ಕೊಂಡ ಪರಿಣಾಮವಾಗಿ ಮೃತಪಟ್ಟಿರುವ ಘಟನೆ ತಾಲೂಕಿನ ಕುಂಸಿ ಸಮೀಪದ ಚನ್ನಹಳ್ಳಿಯಲ್ಲಿ ವರದಿಯಾಗಿದೆ. ಸಚಿನ್ (21) ಮೃತ ಯುವಕ ಎಂದು ಗುರುತಿಸಲಾಗಿದೆ. ಗ್ರಾಮಸ್ಥರೊಬ್ಬರು ಜನ್ಮ ದಿನದ ಹಿನ್ನೆಲೆ ಗ್ರಾಮದ ಹೊರಗಡೆ ಕಟ್ಟಿಸುತ್ತಿದ್ದ ಮನೆಯ ಬಳಿ ಔತಣಕೂಟ ಏರ್ಪಡಿಸಿದ್ದರು. ಇದೇ ವೇಳೆ ಸಚಿನ್ ಊಟ ಹಾಕಿಸಿಕೊಂಡು ಕಾಮಗಾರಿ ನಡೆಯುತ್ತಿದ್ದ ಮನೆಯೊಳಗೆ ಹೋಗಿದ್ದಾರೆ. ಊರಿನವರೆಲ್ಲರೂ ಊಟ ಮುಗಿಸಿಕೊಂಡು ಮನೆಗೆ ಹೋಗಿದ್ದಾರೆ. ಶುಕ್ರವಾರ ಬೆಳಗ್ಗೆ ಮನೆ ಕಾಮಗಾರಿ ಮಾಡಲು ಹೋದ ಕೆಲಸಗಾರರು ನೋಡಿದಾಗ ಸಚಿನ್ ಮೃತಪಟ್ಟಿರುವುದು ಕಂಡುಬಂದಿದೆ. ವಿಷಯ ತಿಳಿದ ಸಚಿನ್ ಕುಟುಂಬಸ್ಥರು ಮೃತದೇಹವನ್ನು ಮನೆಗೆ ತೆಗೆದುಕೊಂಡು ಹೋಗಿದ್ದಾರೆ. ಗ್ರಾಮಸ್ಥರು ಕುಂಸಿ ಠಾಣೆಗೆ ವಿಷಯ ತಿಳಿಸಿದ್ದು, ತಕ್ಷಣವೇ ಸ್ಥಳಕ್ಕೆ ಬಂದ ಪೊಲೀಸರು ಸಚಿನ್ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಿದ್ದಾರೆ. ಸಚಿನ್ ಮದ್ಯ ಸೇವಿಸಿದ್ದು, ಚಿಕನ್ ಮೂಳೆ ಗಂಟಲಲ್ಲಿ ಸಿಲುಕಿ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ಕುಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೋಚ್ ನವಲ್ ಸಿಂಗ್ ವಿರುದ್ಧ ಕಿರುಕುಳ ಆರೋಪಿಸಿದ ಸುಮಿತ್ ಅಂತಿಲ್, ನೀರಜ್ ಚೋಪ್ರಾ
ಹೊಸದಿಲ್ಲಿ, ಎ. 18: ಭಾರತದ ಉನ್ನತ ಜಾವೆಲಿನ್ ಕೋಚ್ಗಳಲ್ಲಿ ಒಬ್ಬರಾಗಿರುವ ನವಲ್ ಸಿಂಗ್ ಮಾನಸಿಕ ಹಿಂಸೆ ನೀಡುತ್ತಾರೆ ಮತ್ತು ಪದೇಪದೇ ಕೆಟ್ಟ ಭಾಷೆಯಲ್ಲಿ ಬೈಯುತ್ತಾರೆ ಎಂದು ಎರಡು ಬಾರಿ ಪ್ಯಾರಾಲಿಂಪಿಕ್ ಚಾಂಪಿಯನ್ ಸುಮಿತ್ ಅಂತಿಲ್, ಒಲಿಂಪಿಕ್ ಚಾಂಪಿಯನ್ ನೀರಜ್ ಚೋಪ್ರಾ ಹಾಗೂ ಪ್ಯಾರಾಲಿಂಪಿಕ್ ಚಾಂಪಿಯನ್ ಗಳಾದ ನವದೀಪ್ ಸಿಂಗ್ ಮತ್ತು ಸಂದೀಪ್ ಚೌಧರಿ ಆರೋಪಿಸಿದ್ದಾರೆ. ಈ ನಾಲ್ವರು ಅಥ್ಲೀಟ್ ಗಳು ಎಪ್ರಿಲ್ 10ರಂದು ಭಾರತೀಯ ಕ್ರೀಡಾ ಪ್ರಾಧಿಕಾರಕ್ಕೆ ಇಮೇಲ್ ಮೂಲಕ ಲಿಖಿತ ದೂರುಗಳನ್ನು ಸಲ್ಲಿಸಿದ್ದಾರೆ. ಆದರೆ, ದೂರಿನ ಬಳಿಕ ಯಾವುದೇ ಪ್ರಗತಿ ಆಗಿಲ್ಲ ಎಂದು ಸುಮಿತ್ ಹೇಳಿದ್ದಾರೆ ಎಂದು ‘ಸ್ಪೋರ್ಟ್ಸ್ ಸ್ಟಾರ್’ ವರದಿ ಮಾಡಿದೆ. ಸುಮಿತ್ ತಮ್ಮ ದೂರಿನಲ್ಲಿ ಕಳೆದ ವರ್ಷದ ನವೆಂಬರ್ ನಲ್ಲಿ ನಡೆದ ಘಟನೆಯೊಂದನ್ನು ಉಲ್ಲೇಖಿಸಿದ್ದಾರೆ. ಸಚಿನ್ ಯಾದವ್ ಅವರ ಕೋಚ್ ನವಲ್ ಸಿಂಗ್ ತಮ್ಮ ಮ್ಯಾನೇಜರ್ ಗೆ ಒಂದು ರಾತ್ರಿ ಧ್ವನಿ ಸಂದೇಶವನ್ನು ಕಳುಹಿಸಿದ್ದು, ಅದರಲ್ಲಿ ಅತ್ಯಂತ ನಿಂದನಾತ್ಮಕ ಭಾಷೆಯನ್ನು ಬಳಸಿದ್ದಾರೆ ಎಂದು ಸುಮಿತ್ ತಿಳಿಸಿದ್ದಾರೆ. ‘‘ಅವರ ಬೈಗುಳವು ಕೇವಲ ನನಗೆ ಮಾತ್ರವಾಗಿರಲಿಲ್ಲ, ನೀರಜ್ ಚೋಪ್ರಾ ಸೇರಿದಂತೆ ಇತರ ಹಲವಾರು ಭಾರತೀಯ ಜಾವೆಲಿನ್ ಎಸೆತಗಾರರಿಗೂ ಅವರು ಆ ಧ್ವನಿ ಸಂದೇಶದಲ್ಲಿ ಕೆಟ್ಟದಾಗಿ ಬೈದಿದ್ದಾರೆ,’’ ಎಂದು ಹೇಳಿದ್ದಾರೆ. ‘‘ಹಿಂದೆ ಹಲವು ವರ್ಷಗಳ ಕಾಲ ನನಗೆ ಮತ್ತು ನವದೀಪ್ಗೆ ನವಲ್ ಸಿಂಗ್ ಕೋಚ್ ಆಗಿದ್ದರು. ಆ ಸಂದರ್ಭದಲ್ಲಿ ಅವರು ನಿರಂತರವಾಗಿ ನನಗೆ ಕೆಟ್ಟದಾಗಿ ಬೈಯುತ್ತಿದ್ದರು. ಅವರು ಕಂಠಪೂರ್ತಿ ಕುಡಿದು ನಮಗೆ ಗೊತ್ತಿರುವವರಿಗೆ ಧ್ವನಿ ಸಂದೇಶಗಳನ್ನು ಕಳುಹಿಸುತ್ತಿದ್ದರು ಮತ್ತು ಅದರಲ್ಲಿ ನಮಗೆ ಕೆಟ್ಟದಾಗಿ ಬೈಯುತ್ತಿದ್ದರು. ಅವರು ನನ್ನ ಮಾಜಿ ಕೋಚ್ ಎನ್ನುವ ಒಂದೇ ಕಾರಣಕ್ಕೆ ನಾನು ಈವರೆಗೆ ಸಹಿಸಿಕೊಂಡಿದ್ದೆ. ಆದರೆ, ಅವರು ನಮ್ಮ ಕುಟುಂಬ ಸದಸ್ಯರನ್ನೂ ಕೆಟ್ಟದಾಗಿ ಬೈಯಲು ಆರಂಭಿಸಿದಾಗ ಸಹಿಸಲು ಸಾಧ್ಯವಾಗಲಿಲ್ಲ. ಮುಂದಿನ ತಲೆಮಾರಿನ ಅಥ್ಲೀಟ್ ಗಳು ಹೆದರಿಕೆಯಿಲ್ಲದೆ ತರಬೇತಿ ಪಡೆಯಲು ಸಾಧ್ಯವಾಗಬೇಕಾದರೆ ನಾನು ಈಗ ದೂರು ನೀಡುವುದು ಅಗತ್ಯವಾಗಿದೆ. ಇಲ್ಲವಾದರೆ, ಅಥ್ಲೀಟ್ ಆಗಿರುವುದಕ್ಕೆ ಏನು ಅರ್ಥ? ನಾವು ಗೆಲ್ಲುತ್ತಾ ಹೋಗಬಹುದು. ಆದರೆ, ನಮ್ಮ ಕುಟುಂಬ ಸದಸ್ಯರಿಗೆ ಬೈದರೆ, ಅವರಿಗೆ ಗೌರವ ಕೊಡದಿದ್ದರೆ ಏನರ್ಥ?’’ ಎಂದು ಸುಮಿತ್ ಹೇಳಿದರು.
ಬೆಳಗಾವಿ ಯುವಕನ ಹತ್ಯೆ ರಹಸ್ಯ ಭೇದಿಸಿದ ಉತ್ತರ ಕನ್ನಡ ಪೊಲೀಸರು: ಮೂವರು ಆರೋಪಿಗಳ ಬಂಧನ
ಕಾರವಾರ, ಎ.18: ರಸ್ತೆ ಅಪಘಾತದಂತೆ ಬಿಂಬಿಸಿ ಬೆಳಗಾವಿಯ ಯುವಕನನ್ನು ಕಾರು ಸಮೇತ ಸುಟ್ಟು ಹಾಕಿ ಸಾಕ್ಷ್ಯ ನಾಶಪಡಿಸಲು ಯತ್ನಿಸಿದ್ದ ಭೀಕರ ಕೊಲೆ ಪ್ರಕರಣವನ್ನು ಉತ್ತರ ಕನ್ನಡ ಜಿಲ್ಲಾ ಪೊಲೀಸರು ಯಶಸ್ವಿಯಾಗಿ ಭೇದಿಸಿದ್ದಾರೆ. ಈ ಸಂಬಂಧ ಹಳೇ ಹುಬ್ಬಳ್ಳಿಯ ಮೂವರು ಆರೋಪಿಗಳನ್ನು ಬಂಧಿಸಲಾಗಿದ್ದು, ಇದೊಂದು ವೈಯಕ್ತಿಕ ದ್ವೇಷಕ್ಕಾಗಿ ನಡೆದ ಪೂರ್ವ ಯೋಜಿತ ಕೃತ್ಯ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್. ತಿಳಿಸಿದ್ದಾರೆ. ನಗರದಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಎಸ್ಪಿ, ಎಪ್ರಿಲ್ 8ರಂದು ಮುಂಜಾನೆ ಯಲ್ಲಾಪುರದ ತಾಳೆಕುಂಬ್ರಿ ಬಸ್ ನಿಲ್ದಾಣದ ಸಮೀಪದ ರಸ್ತೆಯ ತಗ್ಗಿನಲ್ಲಿ ಕಾರೊಂದು (ಕೆಎ-04/ಎಂಜೆ-8996) ಸಂಪೂರ್ಣ ಸುಟ್ಟು ಕರಕಲಾದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಕಾರಿನೊಳಗೆ ಕೇವಲ ಮಾನವ ಅವಶೇಷ ಮಾತ್ರ ಉಳಿದಿದ್ದರಿಂದ, ಮೇಲ್ನೋಟಕ್ಕೆ ಇದು ಅತಿವೇಗದ ಚಾಲನೆಯಿಂದ ಸಂಭವಿಸಿದ ಅಪಘಾತ ಎಂದು ಭಾವಿಸಲಾಗಿತ್ತು. ಮೃತ ನಿತೀಶ್ ಧಾಪಲೆಯ ತಂದೆ ಜಗನ್ನಾಥ ಧಾಪಳೆ ಅವರು ನೀಡಿದ ಆರಂಭಿಕ ದೂರಿನಂತೆ ಯಲ್ಲಾಪುರ ಠಾಣೆಯಲ್ಲಿ ಅಪಘಾತ ಪ್ರಕರಣ ದಾಖಲಾಗಿತ್ತು. ಆದರೆ, ತನ್ನ ಮಗನ ಸಾವು ಆಕಸ್ಮಿಕವಲ್ಲ. ಇದರಲ್ಲಿ ಯಾರೋ ಸಂಚು ರೂಪಿಸಿದ್ದಾರೆ ಎಂದು ತಂದೆ ಸಂಶಯ ವ್ಯಕ್ತಪಡಿಸಿದ ನಂತರ ತನಿಖೆಯ ದಿಕ್ಕು ಬದಲಾಯಿತು ಎಂದು ವಿವರಿಸಿದರು. ಪ್ರಕರಣದ ಗಂಭೀರತೆಯನ್ನು ಅರಿತು ಯಲ್ಲಾಪುರ ಇನ್ಸ್ಪೆಕ್ಟರ್ ರಮೇಶ್ ಹನಾಪುರ ನೇತೃತ್ವದಲ್ಲಿ ಎರಡು ವಿಶೇಷ ತಂಡಗಳನ್ನು ರಚಿಸಲಾಗಿತ್ತು. ತಾಂತ್ರಿಕ ಮಾಹಿತಿ ಮತ್ತು ಸಿಸಿಟಿವಿ ದೃಶ್ಯಾವಳಿಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿದಾಗ, ಇದೊಂದು ವ್ಯವಸ್ಥಿತವಾಗಿ ನಡೆದ ಹತ್ಯೆ ಎಂಬ ಆಘಾತಕಾರಿ ಸತ್ಯ ಬಯಲಾಯಿತು. ಹಳೇ ಹುಬ್ಬಳ್ಳಿಯ ಚಿಕನ್ ವ್ಯಾಪಾರಿಗಳಾದ ಅಬ್ದುಲ್ ರಹೀಮ್ ಬಶೀರ್ ಅಹ್ಮದ್ ಮುಜಾವರ್ (32), ಮೌಲಾಸಾಬ್ ಬಾವಾಹಾನ್ ವಾಡ (36) ಮತ್ತು ದಾದಾಪೀರ್ ಅಲಿಯಾಸ್ ಅಫ್ತಾಬ್ ಮೆಹಬೂಬ್ ಸಾಬ್ ಬಾಳಸಂಗಿ (22) ಎಂಬವರೇ ಈ ಕೃತ್ಯದ ರೂವಾರಿಗಳೆಂದು ಪೊಲೀಸರು ಪತ್ತೆ ಹಚ್ಚಿ ಅವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರಿಂದ ಕೃತ್ಯಕ್ಕೆ ಬಳಸಲಾದ ಕಾರು ಹಾಗೂ ಎರಡು ಸ್ಕೂಟರ್ಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಆರೋಪಿಗಳನ್ನು ಸದ್ಯ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ನಿತೀಶ್ ಥಾಪಲೆಯನ್ನು ಕೊಲೆ ಮಾಡಿದ ಆರೋಪಿಗಳು, ಅದನ್ನು ಅಪಘಾತವೆಂದು ಬಿಂಬಿಸಲು ಮೃತದೇಹದ ಸಮೇತ ಕಾರಿಗೆ ಬೆಂಕಿ ಹಚ್ಚಿರುವುದು ಸಾಬೀತಾಗಿದೆ. ಅತ್ಯಂತ ಸಂಕೀರ್ಣವಾಗಿದ್ದ ಈ ಹತ್ಯೆ ಪ್ರಕರಣವನ್ನು ಕ್ಷಿಪ್ರವಾಗಿ ಭೇದಿಸಿದ ಇನ್ಸ್ಪ್ಪೆಕ್ಟರ್ ರಮೇಶ್ ಹನಾಪುರ, ಪಿಎಸ್ಸೈಗಳಾದ ರಾಜಶೇಖರ ವಂದಲಿ, ಸಿದ್ದಪ್ಪ ಗುಡಿ ಹಾಗೂ ಇಡೀ ತಂಡದ ಕಾರ್ಯಕ್ಷಮತೆ ಶ್ಲಾಘನೀಯ ಎಂದು ಎಸ್ಪಿ ಹೇಳಿದರು.
ಅಮೆರಿಕ| ಭಾರತೀಯ ವಿದ್ಯಾರ್ಥಿಗಳ ವೀಸಾ ನಿರಾಕರಣೆ ದರ 61%ಕ್ಕೆ ಏರಿಕೆ
ವಾಶಿಂಗ್ಟನ್, ಎ.18: ನೀತಿ ನಿರ್ಬಂಧಗಳು ಮತ್ತು ಕಟ್ಟುನಿಟ್ಟಾದ ಪರಿಶೀಲನೆ ಪ್ರಕ್ರಿಯೆಯ ಹೆಚ್ಚಳದಿಂದಾಗಿ ಅಮೆರಿಕದಲ್ಲಿ ಭಾರತೀಯ ವಿದ್ಯಾರ್ಥಿಗಳ ವೀಸಾ ನಿರಾಕರಣೆ ದರ 61%ಕ್ಕೆ ಏರಿಕೆಯಾಗಿದ್ದು ಇದು ಇತ್ತೀಚಿನ ವರ್ಷಗಳಲ್ಲೇ ಅತ್ಯಧಿಕ ಮಟ್ಟವಾಗಿದೆ. ಅಮೆರಿಕದಲ್ಲಿ ವಿದೇಶಿ ದಾಖಲಾತಿಗಳಲ್ಲಿ ಭಾರತೀಯರ ಪ್ರಾತಿನಿಧ್ಯ 30% ಇದೆ. ಆದರೆ ಭಾರತೀಯ ವಿದ್ಯಾರ್ಥಿಗಳ ನಿರಾಕರಣೆ ಪ್ರಮಾಣವು 2024ರಲ್ಲಿ 53% ಇದ್ದರೆ, 2025ರಲ್ಲಿ 61%ಕ್ಕೆ ಏರಿಕೆಯಾಗಿದೆ ಎಂದು `ಶೋರ್ಲೈಟ್ಸ್' ವರದಿ ಹೇಳಿದೆ. ನೇಪಾಳ, ಬಾಂಗ್ಲಾದೇಶ ಮತ್ತು ಪಾಕಿಸ್ತಾನದಂತಹ ದೇಶಗಳ ವಿದ್ಯಾರ್ಥಿಗಳ ವೀಸಾ ನಿರಾಕರಣೆ ಮಟ್ಟದಲ್ಲೂ ಗಮನಾರ್ಹ ಹೆಚ್ಚಳವಾಗಿದೆ. ನೇಪಾಳ ವಿದ್ಯಾರ್ಥಿಗಳ ವೀಸಾ ನಿರಾಕರಣೆ ದರ 2024ರಲ್ಲಿ 59% ಇದ್ದರೆ 2025ರಲ್ಲಿ 81%ಕ್ಕೆ ಹೆಚ್ಚಿದೆ. ಆದರೆ ಇದೇ ಅವಧಿಯಲ್ಲಿ ಯುರೋಪಿಯನ್ ವಿದ್ಯಾರ್ಥಿಗಳ ವೀಸಾ ನಿರಾಕರಣೆ 9% ಆಗಿತ್ತು. ವೀಸಾ ನಿರಾಕರಣೆ ಹೆಚ್ಚಾಗಿರುವುದು ಮಾತ್ರವಲ್ಲದೆ ಅವು ನಿರ್ದಿಷ್ಟ ಪ್ರದೇಶಗಳಲ್ಲಿ, ವಿಶೇಷವಾಗಿ ಆಫ್ರಿಕಾ ಮತ್ತು ದಕ್ಷಿಣ ಏಷ್ಯಾದಾದ್ಯಂತ ರಚನಾತ್ಮಕವಾಗಿ ಕೇಂದ್ರೀಕೃತವಾಗಿದೆ. ಭಾರತೀಯ ವಿದ್ಯಾರ್ಥಿಗಳ ವೀಸಾ ನಿರಾಕರಣೆ 60%ಕ್ಕೆ ಹೆಚ್ಚಿರುವುದರಿಂದ ನಾವು ವಿದ್ಯಾರ್ಥಿಗಳನ್ನು ನಿರಾಕರಿಸುತ್ತಿಲ್ಲ. ಅಮೆರಿಕದ ವಿಶ್ವವಿದ್ಯಾಲಯಗಳು, ಉದ್ಯೋಗದಾತರು ಮತ್ತು ಆರ್ಥಿಕತೆಗೆ ನಿರ್ಣಾಯಕ ಪ್ರತಿಭೆಯ ಪೈಪ್ಲೈನ್ ಅನ್ನು ಕಡಿತಗೊಳಿಸುತ್ತಿದ್ದೇವೆ' ಎಂದು ವರದಿ ಹೇಳಿದೆ. ವೀಸಾ ನಿರ್ಬಂಧ ವಿಸ್ತರಿಸಿದ ಅಮೆರಿಕ ವಿರೋಧಿ ದೇಶಗಳಿಗೆ ಸಹಾಯ ಮಾಡುವ ಆರೋಪ ಎದುರಿಸುವ ವ್ಯಕ್ತಿಗಳನ್ನು ಮಾತ್ರವಲ್ಲದೆ ಅವರ ಕುಟುಂಬದ ಸದಸ್ಯರನ್ನೂ ಗುರಿಯಾಗಿಸಿ ವೀಸಾ ನಿರ್ಬಂಧಗಳನ್ನು ವಿಸ್ತರಿಸಲಾಗಿದೆ ಎಂದು ಅಮೆರಿಕದ ವಿದೇಶಾಂಗ ಇಲಾಖೆಯ ಹೇಳಿಕೆ ತಿಳಿಸಿದೆ. ಈ ಕ್ರಮವು ರಾಷ್ಟ್ರೀಯ ಭದ್ರತೆಯನ್ನು ರಕ್ಷಿಸುವ ಮತ್ತು ವಿದೇಶಿ ಪ್ರಭಾವವನ್ನು ನಿಗ್ರಹಿಸುವ ಗುರಿಯನ್ನು ಹೊಂದಿದೆ. ಪಶ್ಚಿಮ ಗೋಳಾರ್ಧದಲ್ಲಿ ಅಮೆರಿಕದ ಹಿತಾಸಕ್ತಿಗಳಿಗೆ ವಿರುದ್ಧವಾಗಿ ಕಾರ್ಯನಿರ್ವಹಿಸುತ್ತಿರುವ ಜನರಿಗೆ ಈ ನೀತಿಯು ಅನ್ವಯಿಸುತ್ತದೆ. ಪಶ್ಚಿಮ ಗೋಳಾರ್ಧದಲ್ಲಿ ಅಮೆರಿಕದ ಹಿತಾಸಕ್ತಿಗಳಿಗೆ ವಿರುದ್ಧದ ಚಟುವಟಿಕೆಗಳನ್ನು ನಿರ್ದೇಶಿಸುವ, ಬೆಂಬಲಿಸುವ ಅಥವಾ ಆರ್ಥಿಕ ನೆರವು ಒದಗಿಸುವವರನ್ನು ಒಳಗೊಳ್ಳುತ್ತದೆ ಎಂದು ವಿದೇಶಾಂಗ ಇಲಾಖೆಯ ಮೂಲಗಳು ಹೇಳಿವೆ.
RCB IPL 2026: ತವರಿನಲ್ಲಿ ಡೆಲ್ಲಿ ವಿರುದ್ಧ ಆರ್ಸಿಬಿ ಸೋಲಿಗೆ ಕಾರಣಗಳು
RCB IPL 2026: ಬೆಂಗಳೂರಿನ ಎಂ.ಚಿನ್ನಸ್ವಾಮಿ ಮೈದಾನದಲ್ಲಿ ಶನಿವಾರ ನಡೆದ ರೋಚಕ ಐಪಿಎಲ್ ಹಣಾಹಣಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಹೀನಾಯ ಸೋಲು ಕಂಡಿತು. ಹಾಗಾದ್ರೆ, ಆರ್ಸಿಬಿ ಸೋಲಿಗೆ ಪ್ರಮುಖ ಕಾರಣಗಳೇನು ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ. ಟಾಸ್ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ಅಕ್ಷರ್ ಪಟೇಲ್ ಬೌಲಿಂಗ್
ಶಾಲಾ ವಿದ್ಯಾರ್ಥಿಗಳಿಗೆ ಮರು ನಾಮಕರಣ ಅಭಿಯಾನ ಹಿಂಪಡೆದ ರಾಜಸ್ಥಾನ ಸರಕಾರ
ಜೈಪುರ, ಎ. 18: ಪೋಷಕರು ಹಾಗೂ ಸಾಮಾಜಿಕ ಕಾರ್ಯಕರ್ತರಿಂದ ತೀವ್ರ ವಿರೋಧ ವ್ಯಕ್ತವಾದ ಬಳಿಕ ಶಾಲಾ ವಿದ್ಯಾರ್ಥಿಗಳಿಗೆ ‘‘ಹೆಚ್ಚು ಅರ್ಥಪೂರ್ಣ’’ ಹೆಸರುಗಳನ್ನು ನೀಡುವ ಅಭಿಯಾನವನ್ನು ರಾಜಸ್ಥಾನ ಸರಕಾರ ಶುಕ್ರವಾರ ಹಿಂದೆಗೆದುಕೊಂಡಿದೆ. ‘‘ಸಾರ್ಥಕ್ ನಾಮ್ ಅಭಿಯಾನ್’’ ಎಂಬ ಶೀರ್ಷಿಕೆಯ ಈ ಅಭಿಯಾನವನ್ನು ರಾಜ್ಯ ಶಿಕ್ಷಣ ಇಲಾಖೆ ಎಪ್ರಿಲ್ 13ರಂದು ಆರಂಭಿಸಿತ್ತು. ಇದು ಮುಜುಗುರ ಅಥವಾ ಅವಹೇಳನಕಾರಿ ಅರ್ಥಗಳನ್ನು ಹೊಂದಿರುವ ಹೆಸರಿಗೆ ಬದಲಾಗಿ ವಿದ್ಯಾರ್ಥಿಗಳಿಗೆ ಅರ್ಥಪೂರ್ಣ ಹೆಸರುಗಳನ್ನು ಸೂಚಿಸುವ ಉದ್ದೇಶ ಹೊಂದಿತ್ತು. ಇಂತಹ ಹೆಸರುಗಳು ವಿದ್ಯಾರ್ಥಿಗಳ ಸ್ವಾಭಿಮಾನಕ್ಕೆ ಧಕ್ಕೆ ಉಂಟು ಮಾಡಬಹುದು ಎಂದು ಶಿಕ್ಷಣ ಇಲಾಖೆ ತಿಳಿಸಿತ್ತು. ಅದು ವಿದ್ಯಾರ್ಥಿಗಳ ಪೋಷಕರೊಂದಿಗೆ ಹಂಚಿಕೊಳ್ಳಲು ಗಂಡು ಹಾಗೂ ಹೆಣ್ಣು ಮಕ್ಕಳ 2,950 ಪರ್ಯಾಯ ಹೆಸರುಗಳ ಪಟ್ಟಿಯನ್ನು ಬಿಡುಗಡೆ ಮಾಡಿತ್ತು. ಆದರೆ, ಪಟ್ಟಿಯ ಹಲವು ಹೆಸರುಗಳು ಪುನರಾವರ್ತಿತ ಹಾಗೂ ತಪ್ಪಾಗಿದ್ದವು. ಅದರಲ್ಲಿ ಭಿಕ್ಷಾ (ಭಿಕ್ಷೆ), ಭಯಂಕರ (ಭಯಾನಕ), ಕಲಿಯುಗಿ (ಕತ್ತಲೆಯ ಯುಗ), ಲಜ್ಜಾ (ನಾಚಿಕೆ) ಮತ್ತು ಮಕ್ಕಿ (ನೊಣ) ಮುಂತಾದ ಹೆಸರುಗಳಿದ್ದುವು. ಈ ಕ್ರಮ ವಿವಾದಕ್ಕೆ ಕಾರಣವಾಯಿತು. ಇದು ವೈಯುಕ್ತಿಕ ವಿಷಯದಲ್ಲಿ ಹಸ್ತಕ್ಷೇಪ ಎಂದು ಪೋಷಕರು, ಶಿಕ್ಷಕರು ಹಾಗೂ ತಜ್ಞರು ಬಣ್ಣಿಸಿದ್ದರು. ಈ ಅಭಿಯಾನವು ವಿದ್ಯಾರ್ಥಿಗಳನ್ನು ಶಸಕ್ತಗೊಳಿಸುವ ಬದಲು ಅವರನ್ನು ಅವಮಾನಿಸಬಹುದು ಎಂದು ಟೀಕಾಕಾರರು ಗಮನ ಸೆಳೆದಿದ್ದರು. ಈ ಪಟ್ಟಿಯ ಅಸಂಗತತೆ, ಲಿಂಗದ ಕುರಿತು ಗೊಂದಲ, ತಪ್ಪಾದ ವರ್ಗೀಕರಣ ಮತ್ತು ಸಣ್ಣ ಬದಲಾವಣೆಯೊಂದಿಗೆ ಹೆಸರುಗಳ ಪುನರಾವರ್ತನೆಗಳನ್ನು ಗಮನಿಸಿದ ತಜ್ಞರು, ಈ ಆದೇಶ ದಲಿತ, ಬುಡಕಟ್ಟು ಹಾಗೂ ಇತರ ಹಿಂದುಳಿದ ಸಮುದಾಯಗಳ ಮೇಲೆ ‘‘ಸಾಂಸ್ಕೃತಿಕ ಚೌಕಟ್ಟನ್ನು ಹೇರುವ’’ ಪ್ರಯತ್ನ ಎಂದು ಟೀಕಿಸಿದ್ದರು.
`ಇದು ಹತಾಷ ಪ್ರಧಾನಿಯ ಸುಳ್ಳುಗಳಿಂದ ತುಂಬಿದ ರಾಜಕೀಯ ಭಾಷಣ'; ಮಲ್ಲಿಕಾರ್ಜುನ ಖರ್ಗೆ ಕಿಡಿ
Mallikarjun Kharge On Modi Speech- ಪ್ರಧಾನಿ ಮೋದಿಯವರ ಭಾಷಣವನ್ನು ಸುಳ್ಳುಗಳ ಕಂತೆ ಎಂದು ಕರೆದ ಮಲ್ಲಿಕಾರ್ಜುನ ಖರ್ಗೆ, ಬಿಜೆಪಿ ಮಹಿಳಾ ವಿರೋಧಿ ಹಾಗೂ ಸಂವಿಧಾನ ವಿರೋಧಿ ಎಂದು ಟೀಕಿಸಿದ್ದಾರೆ. ಕಾಂಗ್ರೆಸ್ ಮಹಿಳಾ ಮೀಸಲಾತಿಯನ್ನು ಮೊದಲಿನಿಂದಲೂ ಬೆಂಬಲಿಸುತ್ತಾ ಬಂದಿದ್ದು, ಈಗಿನ ಸೀಮಾ ನಿರ್ಣಯ ಮಸೂದೆಯು ವಿಭಜಕ ನೀತಿಯಾಗಿದೆ ಎಂದು ದೂರಿದ್ದಾರೆ. ಇದೇ ವೇಳೆ, ಕ್ಷೇತ್ರ ಮರುವಿಂಗಡಣೆಯು ಜನಸಂಖ್ಯೆ ನಿಯಂತ್ರಿಸಿದ ದಕ್ಷಿಣ ಭಾರತದ ರಾಜ್ಯಗಳಿಗೆ ಮಾಡುವ ದ್ರೋಹವಾಗಿದ್ದು, ಉತ್ತರ ಭಾರತದ ಪ್ರಾಬಲ್ಯ ಸಾಧಿಸುವ ಬಿಜೆಪಿಯ ಗುಪ್ತ ಅಜೆಂಡಾ ಇದರಲ್ಲಿದೆ ಎಂದು ಕೆಪಿಸಿಸಿ ವಕ್ತಾರ ನಟರಾಜ್ ಗೌಡ ಕಿಡಿಕಾರಿದ್ದಾರೆ.
ಉಕ್ರೇನ್| ಬಂದೂಕುಧಾರಿಯಿಂದ ನಾಗರಿಕರ ಮೇಲೆ ಗುಂಡಿನ ದಾಳಿ: ಐವರು ಮೃತ್ಯು
ಕ್ವೀವ್: ಶನಿವಾರ ಉಕ್ರೇನ್ ನ ರಾಜಧಾನಿ ಕ್ವೀವ್ ನಲ್ಲಿ ಬಂಧೂಕುಧಾರಿಯೊಬ್ಬ ಗುಂಡಿನ ದಾಳಿ ನಡೆಸಿ ಐವರನ್ನು ಹತ್ಯೆಗೈದು ಹಲವರನ್ನು ಗಾಯಗೊಳಿಸಿದ್ದಾನೆ ಎಂದು ಉಕ್ರೇನ್ ಅಧಿಕಾರಿಗಳು ತಿಳಿಸಿದ್ದಾರೆ. ಬಳಿಕ, ಜನರನ್ನು ಒತ್ತೆಯಾಳುಗಳನ್ನಾಗಿರಿಸಿಕೊಂಡಿದ್ದ ಬಂಧೂಕುಧಾರಿಯನ್ನು ಸೂಪರ್ ಮಾರ್ಕೆಟ್ ಒಂದರ ಒಳಗೆ ಹತ್ಯೆಗೈಯ್ಯಲಾಗಿದೆ ಎಂದು ಅವರು ದೃಢಪಡಿಸಿದ್ದಾರೆ. ಬಂಧೂಕುಧಾರಿಯನ್ನು ಬಂಧಿಸುವ ಪ್ರಯತ್ನದಲ್ಲಿ ಆತನನ್ನು ಹತ್ಯೆಗೈಯ್ಯಲಾಗಿದೆ ಎಂದು ಉಕ್ರೇನ್ ಆಂತರಿಕ ವ್ಯವಹಾರಗಳ ಸಚಿವ ಐಹೋರ್ ಕ್ಲಿಮೆಂಕೊ ಕೂಡಾ ದೃಢಪಡಿಸಿದ್ದಾರೆ. ಈ ಚಕಮಕಿಯ ವೇಳೆ ಜನರನ್ನು ಒತ್ತೆಯಾಳಾಗಿರಿಸಿಕೊಂಡಿದ್ದ ಶಂಕಿತ ಆರೋಪಿಯು ಪೊಲೀಸರತ್ತ ಗುಂಡು ಹಾರಿಸಿದ ಎಂದು ಅವರು ತಿಳಿಸಿದ್ದಾರೆ. ಕ್ವೀವ್ ನ ಹೋಲೊಸಿಲ್ವ್ಸ್ಕಿ ಜಿಲ್ಲೆಯಲ್ಲಿ ಈ ಗುಂಡಿನ ಚಕಮಕಿ ನಡೆದಿದೆ. ಘಟನೆ ಬೆನ್ನಿಗೆ ಮಾಹಿತಿ ನೀಡಿರುವ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ, ದಾಳಿಕೋರನನ್ನು ಹತ್ಯೆಗೈಯ್ಯಲಾಗಿದೆ ಎಂದು ಆಂತರಿಕ ವ್ಯವಹಾರಗಳ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ ಹಾಗೂ ಈ ಚಕಮಕಿಯ ವೇಳೆ ಐವರು ಮೃತಪಟ್ಟಿದ್ದಾರೆ ಎಂದು ದೃಢಪಡಿಸಿದ್ದಾರೆ. ಮೃತರ ಕುಟುಂಬದ ಸದಸ್ಯರಿಗೆ ಸಂತಾಪ ಸೂಚಿಸಿರುವ ಝೆಲೆನ್ಸ್ಕಿ, ತನಿಖೆ ಪ್ರಗತಿಯಲ್ಲಿದೆ ಎಂದು ತಿಳಿಸಿದ್ದಾರೆ. “ಕ್ವೀವ್ ನಲ್ಲಿ ನಾಗರಿಕರ ಮೇಲೆ ಗುಂಡಿನ ದಾಳಿ ನಡೆಸಿದ ದಾಳಿಕೋರನನ್ನು ಹತ್ಯೆಗೈಯ್ಯಲಾಗಿದೆ ಎಂದು ಉಕ್ರೇನ್ ಆಂತರಿಕ ವ್ಯವಹಾರಗಳ ಸಚಿವ ಐಹೋರ್ ಕ್ಲಿಮೆಂಕೊ ತಿಳಿಸಿದ್ದಾರೆ. ಎಲ್ಲಾ ಸನ್ನಿವೇಶಗಳನ್ನೂ ಪರಿಶೀಲಿಸಲಾಗುತ್ತಿದೆ. ಸದ್ಯ ಈ ಗುಂಡಿನ ಚಕಮಕಿಯಲ್ಲಿ ಐವರು ಮೃತಪಟ್ಟಿದ್ದಾರೆ ಎಂದು ದೃಢಪಟ್ಟಿದೆ. ಮೃತರ ಕುಟುಂಬದ ಸದಸ್ಯರಿಗೆ ನನ್ನ ಸಂತಾಪಗಳು” ಎಂದು ಹೇಳಿದ್ದಾರೆ. ಈ ಘಟನೆಯ ಕುರಿತು ಉಕ್ರೇನ್ ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.
ವಿಜಯನಗರ | ಹಿರಿಯ ಪತ್ರಕರ್ತ ಅಮನ್ ಕೊಡಗಲಿ ನಿಧನ
ವಿಜಯನಗರ /(ಇಳಕಲ್/ಬಾಗಲಕೋಟೆ): ಹಿರಿಯ ಪತ್ರಕರ್ತ ಅಮನ್ ಕೊಡಗಲಿ (48) ಅವರು ಅನಾರೋಗ್ಯದಿಂದ ಶುಕ್ರವಾರ ನಿಧನರಾದರು. ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಎ.17ರಂದು ಬೆಳಗಿನ ಜಾವ ಸುಮಾರು 8 ಗಂಟೆಗೆ ಇಳಕಲ್ನ ತಮ್ಮ ಸ್ವಗೃಹದಲ್ಲಿ ಕೊನೆಯುಸಿರೆಳೆದಿದ್ದಾರೆ ಎಂದು ಕುಟುಂಬ ಮೂಲಗಳು ತಿಳಿಸಿವೆ. ಅಮನ್ ಕೊಡಗಲಿ ಅವರು ಪತ್ರಿಕಾ ಕ್ಷೇತ್ರದಲ್ಲಿ ನಿಷ್ಠೆ, ಪ್ರಾಮಾಣಿಕತೆ ಹಾಗೂ ಧೈರ್ಯಶಾಲಿ ವರದಿಗಾರಿಕೆಯಿಂದ ಗುರುತಿಸಿಕೊಂಡಿದ್ದರು. ಅನೇಕ ಯುವ ಪತ್ರಕರ್ತರಿಗೆ ಮಾರ್ಗದರ್ಶಕರಾಗಿ ಕಾರ್ಯನಿರ್ವಹಿಸಿ, ಪತ್ರಕರ್ತರ ಸಮಸ್ಯೆಗಳಿಗೆ ಸದಾ ಸ್ಪಂದಿಸುತ್ತಿದ್ದರು. ಪತ್ರಕರ್ತರ ಹಕ್ಕುಗಳಿಗಾಗಿ ಹೋರಾಟ ನಡೆಸಿ, ಸಂಕಷ್ಟದಲ್ಲಿದ್ದವರಿಗೆ ನೆರವಾದ ವ್ಯಕ್ತಿಯಾಗಿ ಸಹೋದ್ಯೋಗಿಗಳು ಅವರನ್ನು ಸ್ಮರಿಸಿದ್ದಾರೆ. ಅವರ ಅಗಲಿಕೆಯಿಂದ ಪತ್ರಿಕಾ ವಲಯಕ್ಕೆ ಅಪಾರ ನಷ್ಟ ಉಂಟಾಗಿದ್ದು, ಸಹೋದ್ಯೋಗಿಗಳು, ಸ್ನೇಹಿತರು ಹಾಗೂ ಸಾರ್ವಜನಿಕರು ದುಃಖ ವ್ಯಕ್ತಪಡಿಸಿದ್ದಾರೆ. ಮೃತರು ಕುಟುಂಬಸ್ಥರು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.
‘ಸೈಯದ್’ ಹೆಸರಿನಲ್ಲಿ ಕಾರ್ಯನಿರ್ವಹಿಸುತ್ತಿದ್ದ ದೇಶ ವಿರೋಧಿ ಚಟುವಟಿಕೆ ನಡೆಸುತ್ತಿದ್ದ ರಾಜುರಾಮ್ ಗೋದಾರನ ಬಂಧನ
ಜೈಸಲ್ಮೇರ್/ಲಕ್ನೋ: ಉತ್ತರ ಪ್ರದೇಶದ ಬಿಜ್ನೋರ್ ನಲ್ಲಿ ಮಾರ್ಚ್–ಎಪ್ರಿಲ್ 2026ರಲ್ಲಿ ನಡೆದ ಸರಣಿ ಬೆಂಕಿಹಚ್ಚುವಿಕೆ ಹಾಗೂ ರಾಷ್ಟ್ರವಿರೋಧಿ ಚಟುವಟಿಕೆಗಳ ತನಿಖೆಯಲ್ಲಿ ಮಹತ್ವದ ಬೆಳವಣಿಗೆ ಕಂಡುಬಂದಿದ್ದು, ʼಸೈಯದ್’ ಹೆಸರಿನಲ್ಲಿ ಕಾರ್ಯನಿರ್ವಹಿಸುತ್ತಿದ್ದ ‘ಮಾಸ್ಟರ್ಮೈಂಡ್’ ರಾಜಸ್ಥಾನದ ಜೈಸಲ್ಮೇರ್ ಜಿಲ್ಲೆಯ ನಾಚ್ನಾ ಪ್ರದೇಶದಿಂದ ರಾಜುರಾಮ್ ಗೋದಾರಾ ಎಂಬಾತನನ್ನು ಉತ್ತರ ಪ್ರದೇಶ ಎಟಿಎಸ್ ಹಾಗೂ ಪೊಲೀಸರು ಬಂಧಿಸಿದ್ದಾರೆ. ರಾಜುರಾಮ್ ಟೆಲಿಗ್ರಾಮ್ ಆಧಾರಿತ ಗುಂಪಿನ ಆಡ್ಮಿನ್ ಆಗಿ ಕಾರ್ಯನಿರ್ವಹಿಸುತ್ತಿದ್ದ. ರಾಜಸ್ಥಾನದ ಜೈಸಲ್ಮೇರ್ ನಿಂದಲೇ ಉತ್ತರ ಪ್ರದೇಶದ ಯುವಕರಿಗೆ ನಿರ್ದೇಶನ ನೀಡುತ್ತಿದ್ದ ಎನ್ನಲಾಗಿದೆ. ಅವನ ಮೊಬೈಲ್ ಸಂಖ್ಯೆಯನ್ನು “ಸೈಯದ್” ಎಂಬ ಹೆಸರಿನಲ್ಲಿ ಸೇವ್ ಮಾಡಲಾಗಿತ್ತು. ಪ್ರಕರಣವನ್ನು ಕಾನೂನುಬಾಹಿರ ಚಟುವಟಿಕೆಗಳು (ತಡೆಗಟ್ಟುವಿಕೆ) ಕಾಯ್ದೆ (UAPA) ಅಡಿಯಲ್ಲಿ ದಾಖಲಿಸಲಾಗಿದ್ದು, ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಹಾಗೂ ATS ಜಂಟಿಯಾಗಿ ತನಿಖೆ ನಡೆಸುತ್ತಿವೆ. ಮಾರ್ಚ್ 24ರಂದು ಗಡಿ ಪ್ರದೇಶದ ಭರೇವಾಲಾ ಗ್ರಾಮದಲ್ಲಿ ರಾಜುರಾಮ್ ನನ್ನು ಮೊದಲ ಬಾರಿ ವಶಕ್ಕೆ ಪಡೆದಿದ್ದರೂ, ಪ್ರಾಥಮಿಕ ವಿಚಾರಣೆಯ ನಂತರ ಬಿಡುಗಡೆ ಮಾಡಲಾಗಿತ್ತು. ಆದರೆ ಆತನ ಮೊಬೈಲ್ ಫೋನ್ ಅನ್ನು ಪರಿಶೀಲನೆಗಾಗಿ ವಶಪಡಿಸಿಕೊಂಡಿದ್ದರು. ವಿಚಾರಣೆಯಲ್ಲಿ ಆತ “ಸೈಯದ್” ಎಂದು ಹೇಳಿಕೊಂಡಿದ್ದರೂ, ಬಳಿಕ ಅವನ ನಿಜವಾದ ಗುರುತು ರಾಜುರಾಮ್ ಗೋದಾರ ಎಂದು ಪತ್ತೆಯಾಯಿತು. ಮೊಬೈಲ್ ಡೇಟಾ ವಿಶ್ಲೇಷಣೆಯಲ್ಲಿ ಅಪರಾಧಕ್ಕೆ ಸಂಬಂಧಿಸಿದ ಮಹತ್ವದ ಸಾಕ್ಷ್ಯಗಳು ದೊರಕಿದ ಹಿನ್ನೆಲೆಯಲ್ಲಿ, ಎಪ್ರಿಲ್ 15ರಂದು ರಾಜುರಾಮ್ ನನ್ನು ಮತ್ತೆ ಬಂಧಿಸಿ ಉತ್ತರ ಪ್ರದೇಶಕ್ಕೆ ಕರೆದೊಯ್ಯಲಾಗಿದೆ. ಘಟನೆಯ ಬಳಿಕ ಗಡಿ ಪ್ರದೇಶಗಳಲ್ಲಿ ಪೊಲೀಸರು ಹಾಗೂ BSF ತೀವ್ರ ಕಟ್ಟೆಚ್ಚರ ವಹಿಸಿದೆ. ಪ್ರಕರಣವು ಮಾರ್ಚ್ 4ರಂದು ಬಿಜ್ನೋರ್ ಜಿಲ್ಲೆಯ ಕಿರಾತ್ ಪುರದಲ್ಲಿ ನಡೆದ ಬೆಂಕಿಹಚ್ಚುವ ಘಟನೆಯಿಂದ ಆರಂಭವಾಯಿತು. ದೇವಸ್ಥಾನದ ಮುಂದೆ ನಿಲ್ಲಿಸಿದ್ದ ಪಿಕಪ್ ವಾಹನಕ್ಕೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಲಾಗಿತ್ತು. ಆರಂಭದಲ್ಲಿ ಸಾಮಾನ್ಯ ಪ್ರಕರಣವೆಂದು ಕಂಡರೂ, ಬಳಿಕ ಇದು ಸಂಘಟಿತ ಪಿತೂರಿಯ ಭಾಗ ಎಂದು ಗೊತ್ತಾಯಿತು ಎಂದು ಉತ್ತರ ಪ್ರದೇಶದ ಎಡಿಜಿ ಅಮಿತಾಭ್ ಯಶ್ ಹೇಳಿದ್ದಾರೆ. ತನಿಖೆಯಲ್ಲಿ ಅಬುಜರ್ ಶಮೀಮ್ ಗೆ “ಅಬು ಬಕರ್” ಎಂಬ ಹೆಸರಿನ ಹ್ಯಾಂಡ್ಲರ್ ಟೆಲಿಗ್ರಾಮ್ ಮೂಲಕ ಸೂಚನೆ ನೀಡುತ್ತಿದ್ದನೆಂಬುದು ಬಹಿರಂಗವಾಗಿದೆ. ನಿರ್ದಿಷ್ಟ ಸಮುದಾಯದ ವಾಹನಗಳನ್ನು ಗುರಿಯಾಗಿಸಿ ಬೆಂಕಿ ಹಚ್ಚಲು ಸೂಚನೆ ನೀಡಲಾಗುತ್ತಿತ್ತು. ಬಳಿಕ ಅದರ ವೀಡಿಯೊಗಳನ್ನು ಕಳುಹಿಸಿದ ಮೇಲೆ ಹಣ ಪಾವತಿಸಲಾಗುತ್ತಿತ್ತು. ರಾಜುರಾಮ್, ಝೈದ್ ಹಾಗೂ ಇತರರು ಸೇರಿ ಈ ಜಾಲವನ್ನು ನಿರ್ವಹಿಸುತ್ತಿದ್ದರು. ಝೈದ್ ನ ಮೊಬೈಲ್ ನಿಂದ ಹಲವಾರು ಸಂಬಂಧಿತ ವೀಡಿಯೊಗಳು ಪತ್ತೆಯಾಗಿವೆ. ರಾಜುರಾಮ್ ತನ್ನ ಮೊಬೈಲ್ ಫೋನ್ ಬದಲಾಯಿಸಿದ್ದರೂ, ಎರಡೂ ಫೋನ್ಗಳನ್ನು ಈಗ ಪರಿಶೀಲಿಸಲಾಗುತ್ತಿದೆ. ಈ ಜಾಲವು ರೈಲ್ವೆ ಹಳಿಗಳಿಗೆ ಹಾನಿ ಮಾಡುವುದು ಸೇರಿದಂತೆ ದೇಶವಿರೋಧಿ ಚಟುವಟಿಕೆಗಳನ್ನು ಮಾಡುತ್ತಿತ್ತು. ಪ್ರಕರಣದಲ್ಲಿ ಬಿಎನ್ಎಸ್, ಶಸ್ತ್ರಾಸ್ತ್ರ ಕಾಯ್ದೆ ಹಾಗೂ ಐಟಿ ಕಾಯ್ದೆಗಳಡಿ ಕ್ರಮ ಕೈಗೊಳ್ಳಲಾಗಿದೆ. ಈವರೆಗೆ ಅಬುಜರ್ ಶಮೀಮ್, ಝೈದ್, ಮನ್ನನ್ ಹಾಗೂ ಸಮೀರ್ ಎಂಬುವರನ್ನು ಬಂಧಿಸಲಾಗಿದೆ. ಸಮೀರ್ ವಿದೇಶಿ ಹ್ಯಾಂಡ್ಲರ್ ಗಳ ಸಂಪರ್ಕದಲ್ಲಿದ್ದನೆಂದು ತಿಳಿದುಬಂದಿದೆ. ತನಿಖೆಯಲ್ಲಿ ರಾಜುರಾಮ್ ಟೆಲಿಗ್ರಾಮ್ ಗುಂಪಿನ ಆಡ್ಮಿನ್ ಎಂಬುದು ದೃಢಪಟ್ಟಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರ ಪ್ರಕಾರ, ಮಾರ್ಚ್ ಹಾಗೂ ಎಪ್ರಿಲ್ ಆರಂಭದಲ್ಲಿ ಕಿರಾತ್ ಪುರ ಮತ್ತು ನಂಗ್ಲಾ ಸೋಟಿ ಪ್ರದೇಶಗಳಲ್ಲಿ ಹಲವು ಬೆಂಕಿಹಚ್ಚುವ ಘಟನೆಗಳು ನಡೆದಿದ್ದು, ವಾಹನಗಳು ಮತ್ತು ಆಸ್ತಿಗಳಿಗೆ ಹಾನಿಯಾಗಿದೆ. ಇದನ್ನು ಕೋಮು ಸಾಮರಸ್ಯ ಕದಡುವ ಪಿತೂರಿ ಎಂದು ಪೊಲೀಸರು ತಿಳಿಸಿದ್ದಾರೆ. ಈ ಜಾಲವು 2026ರ ಜನವರಿಯಿಂದ ಸಕ್ರಿಯವಾಗಿದ್ದು, ಬಿಜ್ನೋರ್ ನಿಂದ ಲಕ್ನೋ, ಮುಂಬೈ ಹಾಗೂ ಜೈಸಲ್ಮೇರ್ ನಗರಗಳಿಗೆ ವಿಸ್ತರಿಸಿದೆ. ಸೌದಿ ಅರೇಬಿಯಾ ಮತ್ತು ದಕ್ಷಿಣ ಆಫ್ರಿಕಾದ ಸಂಪರ್ಕಗಳೂ ಪತ್ತೆಯಾಗಿವೆ. ಸುಮಾರು 15 ರಿಂದ 20 ಸದಸ್ಯರಿರುವ ಈ ಜಾಲವು ಯುವಕರನ್ನು ಮೊದಲು ಇನ್ ಸ್ಟಾಗ್ರಾಂ ಮತ್ತು ಫೇಸ್ ಬುಕ್ ಮೂಲಕ ಸಂಪರ್ಕಿಸಿ ಬಳಿಕ ಟೆಲಿಗ್ರಾಮ್ ಗುಂಪುಗಳಿಗೆ ಸೇರಿಸುತ್ತಿತ್ತು. ಆರ್ಥಿಕವಾಗಿ ಅಥವಾ ಸೈದ್ಧಾಂತಿಕವಾಗಿ ದುರ್ಬಲ ವ್ಯಕ್ತಿಗಳನ್ನು ಗುರಿಯಾಗಿಸಲಾಗುತ್ತಿತ್ತು. ಆರೋಪಿಗಳಿಗೆ ತಮ್ಮ ಪ್ರದೇಶಗಳಲ್ಲಿ ಸುಲಭವಾಗಿ ಹಾನಿ ಮಾಡಬಹುದಾದ ಸ್ಥಳಗಳನ್ನು ಗುರುತಿಸಲು ಸೂಚನೆ ನೀಡಲಾಗುತ್ತಿತ್ತು. ಗೂಗಲ್ ಮ್ಯಾಪ್ ಮತ್ತು ಲೈವ್ ಲೊಕೇಶನ್ ಮೂಲಕ ಚಟುವಟಿಕೆಗಳನ್ನು ಮೇಲ್ವಿಚಾರಣೆ ಮಾಡಲಾಗುತ್ತಿತ್ತು. ಬೆಂಕಿ ಹಚ್ಚಿದ ಬಳಿಕ ವೀಡಿಯೊ/ಫೋಟೊ ಅಪ್ಲೋಡ್ ಮಾಡಿದ ಬಳಿಕವೇ ಹಣ ಪಾವತಿಸಲಾಗುತ್ತಿತ್ತು. ಪ್ರಕರಣದ ಗಂಭೀರತೆ ಹಾಗೂ ವಿದೇಶಿ ಸಂಪರ್ಕಗಳನ್ನು ಗಮನದಲ್ಲಿಟ್ಟುಕೊಂಡು, ಎನ್ಐಎ ಮತ್ತು ಎಟಿಎಸ್ ತಂಡಗಳು ತನಿಖೆಯನ್ನು ಮತ್ತಷ್ಟು ತೀವ್ರಗೊಳಿಸಿವೆ.
ತಂತ್ರಜ್ಞಾನದಿಂದ ನರ್ಸ್ಗಳ ಮಾನವೀಯ ಸ್ಪರ್ಶ ಬದಲಿಸಲಾಗದು: ಡಾ. ಆಶಾ ಶೆಟ್ಟಿ
ಫಾದರ್ ಮುಲ್ಲರ್ ನರ್ಸಿಂಗ್- ಸ್ಪೀಚ್ ಮತ್ತು ಹಿಯರಿಂಗ್ ಕಾಲೇಜು ಪದವಿ ಪ್ರದಾನ ಸಮಾರಂಭ
Harapanahalli | ಉಚ್ಚಂಗಿದುರ್ಗ ಅರಣ್ಯದಲ್ಲಿ 54 ಎಕರೆ ಅತಿಕ್ರಮಣ ತೆರವು
ಹರಪನಹಳ್ಳಿ: ತಾಲೂಕಿನ ಉಚ್ಚಂಗಿದುರ್ಗ ಹಾಗೂ ಕಂಚಿಕೆರೆ ಕಾಯ್ದಿಟ್ಟ ಅರಣ್ಯ ಪ್ರದೇಶಗಳಲ್ಲಿ ಅತಿಕ್ರಮಣವಾಗಿ ಸಾಗುವಳಿ ಮಾಡುತ್ತಿದ್ದ ಒಟ್ಟು 54 ಎಕರೆ ಭೂಮಿಯನ್ನು ಅರಣ್ಯ ಇಲಾಖೆ ಪೊಲೀಸ್ ಭದ್ರತೆಯೊಂದಿಗೆ ಶನಿವಾರ ತೆರವುಗೊಳಿಸಿ ಮರಳಿ ವಶಕ್ಕೆ ಪಡೆದುಕೊಂಡಿತು. ಉಚ್ಚಂಗಿದುರ್ಗ ಸರ್ವೇ ನಂ.1(A) ನಲ್ಲಿ ಕಳೆದ ಎರಡು ದಶಕಗಳಿಂದ 12 ಜನರು ಸುಮಾರು 35 ಎಕರೆಗೂ ಹೆಚ್ಚು ಭೂಮಿಯನ್ನು ಅಕ್ರಮವಾಗಿ ಸಾಗುವಳಿ ಮಾಡುತ್ತಿದ್ದರು. ಇದೇ ರೀತಿ ಕಂಚಿಕೆರೆ ಕಾಯ್ದಿಟ್ಟ ಅರಣ್ಯದಲ್ಲಿ ಇತರೆ ರೈತರು ಸುಮಾರು 19 ಎಕರೆ ಭೂಮಿಯನ್ನು ಒತ್ತುವರಿ ಮಾಡಿಕೊಂಡಿದ್ದರು. ಅರಣ್ಯ ಅತಿಕ್ರಮಣ ತೆರವುಗೊಳಿಸಲು ಅಧಿಕಾರಿಗಳು ಹಲವು ಬಾರಿ ನೋಟಿಸ್ ನೀಡಿದ್ದರೂ, ರೈತರೊಂದಿಗೆ ಸಂಘರ್ಷವೂ ಉಂಟಾಗಿತ್ತು. 2013ರಲ್ಲಿ ರೈತರು ಇಬ್ಬರು ಅರಣ್ಯ ಸಿಬ್ಬಂದಿಗಳ ಮೇಲೆ ಹಲ್ಲೆ ನಡೆಸಿದ ಪ್ರಕರಣವೂ ನ್ಯಾಯಾಲಯದ ಮೆಟ್ಟಿಲೇರಿತ್ತು. ಬಳಿಕ ನ್ಯಾಯಾಲಯವು ಅತಿಕ್ರಮಣ ತೆರವುಗೊಳಿಸುವಂತೆ ಅರಣ್ಯ ಇಲಾಖೆಗೆ ಸೂಚನೆ ನೀಡಿತ್ತು. ನ್ಯಾಯಾಲಯದ ಆದೇಶದಂತೆ ಪೊಲೀಸ್ ಸಹಕಾರದೊಂದಿಗೆ ಅತಿಕ್ರಮಣ ತೆರವುಗೊಳಿಸಲಾಗಿದೆ. ಮುಂದಿನ ಮಳೆಗಾಲದಲ್ಲಿ ಸಸಿ ನೆಟ್ಟು ಅರಣ್ಯವೃದ್ಧಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ವಲಯ ಅರಣ್ಯಾಧಿಕಾರಿ ರಾಜು ಗೊಂದೇಕರ್ ತಿಳಿಸಿದ್ದಾರೆ. ಬಿಸಿಲಿನ ನಡುವೆ ಕಾರ್ಯಾಚರಣೆ : ತಾಲೂಕಿನಲ್ಲಿ 38 ರಿಂದ 40 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶದ ನಡುವೆಯೂ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದರು. ಬೆಳಿಗ್ಗೆ 6 ಗಂಟೆಯಿಂದ ಸಂಜೆ 7ರವರೆಗೆ 50ಕ್ಕೂ ಹೆಚ್ಚು ಅರಣ್ಯ ಮತ್ತು ಪೊಲೀಸ್ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದರು. ಬಿಸಿಲಿನ ತೀವ್ರತೆಗೆ ಬಳಲಿದ ಸಿಬ್ಬಂದಿ ಮರಗಳ ನೆರಳಲ್ಲಿ ವಿಶ್ರಾಂತಿ ಪಡೆಯುತ್ತಿರುವುದು ಕಂಡುಬಂತು. ಕಾರ್ಯಾಚರಣೆಯಲ್ಲಿ ಸಿಪಿಐ ಮಹಾಂತೇಶ್ ಸಜ್ಜನ್ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.
Ballari | ಪ್ಯಾರಚೂಟ್ ತರಬೇತಿಯಲ್ಲಿ ಅಪಘಾತ: 50 ಅಡಿ ಎತ್ತರದಿಂದ ಬಿದ್ದು ಯೋಧನಿಗೆ ಗಂಭೀರ ಗಾಯ
ಬಳ್ಳಾರಿ : ಪ್ಯಾರಚೂಟ್ ತರಬೇತಿ ವೇಳೆ ಆಯತಪ್ಪಿ ಸುಮಾರು 50 ಅಡಿ ಎತ್ತರದಿಂದ ಕೆಳಕ್ಕೆ ಬಿದ್ದ ಯೋಧರೊಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ನಗರದ ಹೊರವಲಯದ ಪಿ.ಡಿ. ಹಳ್ಳಿ ಭಾಗದಲ್ಲಿ ನಡೆದಿದೆ. 25 ವರ್ಷದ ಯೋಧ ಚಿನ್ನರಾಜ್ ಗಾಯಗೊಂಡಿದ್ದಾರೆ. ಶುಕ್ರವಾರ ಬೆಳಿಗ್ಗೆ ಸುಮಾರು 417 ಸೈನಿಕರ ತಂಡ ಪ್ಯಾರಚೂಟ್ ಜಿಗಿತದ ತರಬೇತಿಯಲ್ಲಿ ನಿರತರಾಗಿದ್ದ ವೇಳೆ, ಚಿನ್ನರಾಜ್ ಅವರು ಜಿಗಿಯುವಾಗ ತಾಂತ್ರಿಕ ತೊಂದರೆ ಅಥವಾ ನಿಯಂತ್ರಣ ತಪ್ಪಿದ ಪರಿಣಾಮ ನೇರವಾಗಿ ನೆಲಕ್ಕೆ ಬಿದ್ದಿದ್ದಾರೆ. ಅಪಘಾತದ ಪರಿಣಾಮವಾಗಿ ಅವರ ಕಾಲಿನ ಮೂಳೆ ಮುರಿದು, ತೀವ್ರ ರಕ್ತಸ್ರಾವ ಉಂಟಾಗಿದೆ ಎಂದು ತಿಳಿದುಬಂದಿದೆ. ಗಾಯಗೊಂಡ ಯೋಧನನ್ನು ತಕ್ಷಣವೇ ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ನೀಡಲಾಯಿತು. ಆದರೆ ಗಾಯ ಗಂಭೀರವಾಗಿದ್ದರಿಂದ ವೈದ್ಯರ ಸಲಹೆಯಂತೆ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಕಮಾಂಡ್ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ವಿಶೇಷ ಸೇನಾ ಹೆಲಿಕಾಪ್ಟರ್ ಮೂಲಕ ಯೋಧನನ್ನು ಏರ್ಲಿಫ್ಟ್ ಮಾಡಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿ ಸ್ಥಳೀಯ ಪೊಲೀಸ್ ಮೂಲಗಳಿಂದ ಲಭ್ಯವಾಗಿದೆ.
ಭಾರತಕ್ಕೆ ಬರುತ್ತಿದ್ದ 14 ಹಡಗುಗಳನ್ನು ಹಾರ್ಮುಝ್ನಲ್ಲಿ ತಡೆಗಟ್ಟಿದ ಇರಾನ್: ವರದಿ
ಹೊಸದಿಲ್ಲಿ,ಎ.18: ಹಾರ್ಮುಝ್ ಜಲಸಂಧಿಯನ್ನು ದಾಟಲು ಯತ್ನಿಸಿದ ಭಾರತಕ್ಕೆ ಬರುತ್ತಿದ್ದ 14 ಹಡಗುಗಳ ಸಮೂಹವನ್ನು ಇರಾನ್ನ ಐಆರ್ಜಿಸಿ ಯೋಧರು ತಡೆದು ನಿಲ್ಲಿಸಿರುವುದಾಗಿ ವರದಿಯಾಗಿದೆ. ಈ ಪೈಕಿ ಒಂದು ಜಲಸಂಧಿಯನ್ನು ದಾಟುವಲ್ಲಿ ಸಫಲವಾಗಿದೆಯೆಂದು ತಿಳಿದುಬಂದಿದೆ. ಈ ಹಡಗುಗಳ ಗುಂಪಿನಲ್ಲಿ ಗುಂಡಿನ ದಾಳಿಗೊಳಗಾದ ಎರಡು ನೌಕೆಗಳೂ ಇದ್ದವೆಂದು ತಿಳಿದುಬಂದಿದೆ. ಆದಾಗ್ಯೂ ಎಚ್ಪಿಸಿಎಲ್ಗಾಗಿ ಕಚ್ಚಾ ತೈಲವನ್ನು ಒಯ್ಯುತ್ತಿದ್ದ ಇನ್ನೊಂದು ತೈಲ ಹಡಗು ಹಾರ್ಮುಝ್ ಜಲಸಂಧಿಯನ್ನು ದಾಟಿದ್ದು, ಭಾರತದೆಡೆಗೆ ಸಾಗುತ್ತಿದೆಯೆಂದು ಮೂಲಗಳು ತಿಳಿಸಿವೆ. ಗುಂಡೆಸೆತಕ್ಕೊಳಗಾದ ಎರಡು ಹಡಗುಗಳು ಸೇರಿದಂತೆ ಭಾರತಕ್ಕೆ ಬರುತ್ತಿದ್ದ ಒಟ್ಟು 13 ಹಡಗುಗಳು ಪರ್ಷಿಯನ್ ಕೊಲ್ಲಿಯ ವಿವಿಧ ಪ್ರದೇಶಗಳಿಗೆ ವಾಪಾಸ್ಸಾಗಿದೆಯೆಂದು ಬಲ್ಲ ಮೂಲಗಳು ತಿಳಿಸಿವೆ.
Ballari | ಎಮ್ಮಿಗನೂರಿನಲ್ಲಿ ಉಚಿತ ಕರಾಟೆ ಸಮವಸ್ತ್ರ ವಿತರಣೆ
ಬಳ್ಳಾರಿ / ಕಂಪ್ಲಿ: ತಾಲೂಕಿನ ಎಮ್ಮಿಗನೂರು ಗ್ರಾಮದಲ್ಲಿ ಡಾ. ಅಬ್ದುಲ್ ಕಲಾಂ ಎಸ್ಪಿ ಚಾರಿಟಬಲ್ ಫೌಂಡೇಶನ್ ವತಿಯಿಂದ ಮಕ್ಕಳಿಗೆ ಉಚಿತ ಕರಾಟೆ ಸಮವಸ್ತ್ರ ವಿತರಿಸಲಾಯಿತು. ಈ ಸಂದರ್ಭದಲ್ಲಿ ಫೌಂಡೇಶನ್ ಕಾರ್ಯದರ್ಶಿ ಎಚ್. ಪೀರಾವಲಿ ಮಾತನಾಡಿ, ಅನಾಥ ಹೆಣ್ಣುಮಕ್ಕಳು ಹಾಗೂ ವಿಶೇಷಚೇತನ ಕುಟುಂಬಗಳ ಮಕ್ಕಳಿಗೆ ಉಚಿತ ಕರಾಟೆ ತರಬೇತಿ ನೀಡುವುದರ ಜೊತೆಗೆ ಸಮವಸ್ತ್ರಗಳನ್ನು ವಿತರಿಸಲಾಗುತ್ತಿದೆ ಎಂದು ಹೇಳಿದರು. ಮಕ್ಕಳಲ್ಲಿ ಆತ್ಮವಿಶ್ವಾಸ ಹಾಗೂ ಸ್ವಯಂರಕ್ಷಣೆ ಕೌಶಲ್ಯ ಬೆಳೆಸುವುದು ಸಂಸ್ಥೆಯ ಮುಖ್ಯ ಉದ್ದೇಶವಾಗಿದೆ ಎಂದರು. ರೈತ ಮುಖಂಡ ಜಿ. ನಾಗರೇಡ್ಡಿ ಮಾತನಾಡಿ, ಇಂದಿನ ಪರಿಸ್ಥಿತಿಯಲ್ಲಿ ಯುವಕ-ಯುವತಿಯರು ಆತ್ಮರಕ್ಷಣೆಗೆ ಕರಾಟೆ ಕಲಿಯುವುದು ಅತ್ಯಾವಶ್ಯಕವಾಗಿದೆ ಎಂದು ಅಭಿಪ್ರಾಯಪಟ್ಟರು. ಈ ಕಾರ್ಯಕ್ರಮದಲ್ಲಿ ವಡ್ಡರ ವೀರೇಶ್, ರಾಜಪ್ಪ ಜಡೇಶ್ವರಡ್ಡಿ, ನಾರಾಯಣ, ಬಿ. ರಾಜ, ಎಸ್. ರಾಮಪ್ಪ, ಸಾಧಿಕ್ ಅಲಿ ಸಾಬ್, ಪರಶುರಾಮ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ಮಂಗಳೂರು: ಉತ್ತರ ಪ್ರದೇಶದಲ್ಲಿ ಕಾರ್ಮಿಕರ ಮೇಲೆ ನಡೆದ ಅಮಾನುಷ ದಾಳಿ ಖಂಡಿಸಿ ಪ್ರತಿಭಟನೆ
ಮಂಗಳೂರು: ಉತ್ತರಪ್ರದೇಶದಲ್ಲಿ 500ಕ್ಕೂ ಮಿಕ್ಕಿದ ಅಮಾಯಕ ಕಾರ್ಮಿಕರನ್ನು ಜೈಲಿಗಟ್ಟಿದ ಸರಕಾರದ ಅಮಾನುಷ ದಾಳಿಯನ್ನು ಖಂಡಿಸಿ ಮಂಗಳೂರು ನಗರದಲ್ಲಿ ಶನಿವಾರ ಸಿಐಟಿಯು ನೇತೃತ್ವದಲ್ಲಿ ಪ್ರತಿಭಟನಾ ಸಭೆ ನಡೆಯಿತು. ಕೇಂದ್ರ ಹಾಗೂ ರಾಜ್ಯ ಸರಕಾರಗಳ ಕಾರ್ಮಿಕ ವಿರೋಧಿ ನೀತಿಗಳ ವಿರುದ್ಧ ಘೋಷಣೆ ಕೂಗಿದ ಪ್ರತಿಭಟನಾ ಕಾರರು,ಕಾರ್ಮಿಕರ ಹೋರಾಟಕ್ಕೆ ದ.ಕ.ಜಿಲ್ಲೆಯ ಕಾರ್ಮಿಕ ವರ್ಗದ ಪರವಾಗಿ ಬೆಂಬಲ ವ್ಯಕ್ತಪಡಿಸಿದರು. ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಸಿಐಟಿಯು ದ.ಕ.ಜಿಲ್ಲಾಧ್ಯಕ್ಷ ಬಿ ಎಂ ಭಟ್ ಅವರು ಅಚ್ಛೇದಿನ್ ತರುವುದಾಗಿ ಅಧಿಕಾರಕ್ಕೇರಿದ ನರೇಂದ್ರ ಮೋದಿ ಸರಕಾರ ಕಳೆದ 12 ವರ್ಷಗಳಲ್ಲಿ ಸಮಾಜದಲ್ಲಿ ಸಂಪತ್ತನ್ನು ಸೃಷ್ಟಿಸುವ ಕಾರ್ಮಿಕ ವರ್ಗದ ಮೇಲೆ ತೀವ್ರವಾದ ಪ್ರಹಾರವನ್ನು ನಡೆಸುತ್ತಾ ಬಂದಿದೆ ಎಂದರು. ಸಿಐಟಿಯು ದ.ಕ.ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ರವರು ಮಾತನಾಡಿ, ಕಾರ್ಮಿಕ ಕಾನೂನುಗಳನ್ನು ರದ್ದು ಮಾಡಿದ ಕೇಂದ್ರ ಸರಕಾರ ಕಾರ್ಮಿಕರಿಗೆ ಯಾವುದೇ ರೀತಿಯ ಸಾಮಾಜಿಕ ಭದ್ರತೆಯನ್ನು ನೀಡದೆ ಸತಾಯಿಸುತ್ತಿದೆ ಎಂದು ಹೇಳಿದರು ಪ್ರಾಸ್ತಾವಿಕವಾಗಿ ಮಾತನಾಡಿದ ಸಿಐಟಿಯು ಜಿಲ್ಲಾ ಖಜಾಂಚಿಗಳಾದ ಯೋಗೀಶ್ ಜಪ್ಪಿನಮೊಗರು ಅವರು ಉತ್ತರಭಾರತದಲ್ಲಿ ಕನಿಷ್ಠ ಕೂಲಿಗಾಗಿ ಭುಗಿಲೆದ್ದ ಕಾರ್ಮಿಕರ ಆಕ್ರೋಶ ದೇಶದ ಕಾರ್ಮಿಕ ಚಳುವಳಿಗೆ ಸ್ಪೂರ್ತಿ ನೀಡಿದ್ದು, ದುಡಿಯುವ ವರ್ಗದ ಚಳುವಳಿ ಮಾತ್ರವೇ ದೇಶದ ಅಭಿವೃದ್ಧಿಗೆ ಪೂರಕವಾಗಿ ದೇಶವನ್ನು ಮುನ್ನಡೆಸಬಲ್ಲದು ಎಂದು ಹೇಳಿದರು. ಸಭೆಯನ್ನುದ್ದೇಶಿಸಿ ಸಿಐಟಿಯು ಜಿಲ್ಲಾ ನಾಯಕರಾದ ಸುಕುಮಾರ್ ತೊಕ್ಕೋಟು, ರವಿಚಂದ್ರ ಕೊಂಚಾಡಿ ಮಾತನಾಡಿದರು. ಪ್ರತಿಭಟನೆಯಲ್ಲಿ ಸಿಐಟಿಯು ಜಿಲ್ಲಾ ನಾಯಕರಾದ ನೋಣಯ್ಯ ಗೌಡ, ಜಯಂತಿ ಶೆಟ್ಟಿ, ಜಯಲಕ್ಷ್ಮೀ , ಅಶೋಕ್ ಶ್ರೀಯಾನ್,ಅಶೋಕ್ ಸಾಲ್ಯಾನ್,ದಿನೇಶ್ ಶೆಟ್ಟಿ, ಲೋಕೇಶ್ ಎಂ,ಮೋಹನ್ ಜಲ್ಲಿಗುಡ್ಡೆ, ಪ್ರಗತಿಪರ ಚಿಂತಕರಾದ ಡಾ.ಕೃಷ್ಣಪ್ಪಕೊಂಚಾಡಿ,ರೈತ ನಾಯಕ ಸದಾಶಿವದಾಸ್,ದಲಿತ ಸಂಘಟನೆಯ ಮುಖಂಡರಾದ ಕೃಷ್ಣ ತಣ್ಣೀರುಬಾವಿ, ಯುವಜನ ನಾಯಕರಾದ ನವೀನ್ ಕೊಂಚಾಡಿ,ಮಿಥುನ್,ಮಹಿಳಾ ಮುಖಂಡ ಅಸುಂತ ಡಿ ಸೋಜ ಮುಂತಾದವರು ಉಪಸ್ಥಿತರಿದ್ದರು.
Ballari | ಕಂಪ್ಲಿಯಲ್ಲಿ ಜೆಸ್ಕಾಂ ಉಪವಿಭಾಗ ಕಚೇರಿ ಕಟ್ಟಡಕ್ಕೆ ಶಂಕುಸ್ಥಾಪನೆ
ಬಳ್ಳಾರಿ / ಕಂಪ್ಲಿ: ಸ್ಥಳೀಯ ಜೆಸ್ಕಾಂ ಕಚೇರಿ ಆವರಣದಲ್ಲಿ 2025-26ನೇ ಸಾಲಿನ ಯೋಜನೆಯಡಿ ಸುಮಾರು 150 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾಗುವ ಜೆಸ್ಕಾಂ ಕಾರ್ಯ ಮತ್ತು ಪಾಲನ ಉಪವಿಭಾಗದ ನೂತನ ಕಚೇರಿ ಕಟ್ಟಡಕ್ಕೆ ಶಾಸಕ ಜೆ.ಎನ್.ಗಣೇಶ್ ಅವರು ಶನಿವಾರ ಶಂಕುಸ್ಥಾಪನೆ ನೆರವೇರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ನೂತನ ಉಪವಿಭಾಗ ಕಚೇರಿ ಸ್ಥಾಪನೆಯಿಂದ ಸಾರ್ವಜನಿಕರಿಗೆ ಜೆಸ್ಕಾಂ ಸೇವೆಗಳು ತ್ವರಿತವಾಗಿ ಲಭ್ಯವಾಗಲಿವೆ. ವಿದ್ಯುತ್ ಪೂರೈಕೆ, ನಿರ್ವಹಣೆ ಮತ್ತು ಮೂಲಸೌಕರ್ಯ ಅಭಿವೃದ್ಧಿಗೆ ಇದು ಸಹಾಯಕವಾಗಲಿದೆ. ಕಂಪ್ಲಿ ತಾಲೂಕು ಕೇಂದ್ರದಲ್ಲಿ ಇಂತಹ ಕಚೇರಿ ಅತ್ಯಾವಶ್ಯಕವಾಗಿದ್ದು, ಈಗ ಕಾಮಗಾರಿಗೆ ಚಾಲನೆ ನೀಡಲಾಗಿದೆ ಎಂದು ಹೇಳಿದರು. ಈ ಕಚೇರಿ ಮೂಲಕ ಪಟ್ಟಣ ಹಾಗೂ ತಾಲೂಕಿನ ಗ್ರಾಹಕರು ಮತ್ತು ರೈತರಿಗೆ ವಿದ್ಯುತ್ ಸಂಬಂಧಿತ ಸೇವೆಗಳು ಸ್ಥಳೀಯವಾಗಿ ದೊರೆಯಲಿದ್ದು, ನಿರ್ಮಾಣ, ನಿರ್ವಹಣೆ ಮತ್ತು ದುರಸ್ತಿ ಕಾರ್ಯಗಳ ಮೇಲ್ವಿಚಾರಣೆಯೂ ಸುಲಭವಾಗಲಿದೆ ಎಂದು ತಿಳಿಸಿದರು. ಬಳ್ಳಾರಿ ಗ್ರಾಮೀಣ ಉಪವಿಭಾಗದ ಕಾರ್ಯನಿರ್ವಾಹಕ ಅಭಿಯಂತರ ಹುಸೇನ್ ಸಾಬ್ ಮಾತನಾಡಿ, ಇದುವರೆಗೆ ಹಳೆಯ ಕಟ್ಟಡದಲ್ಲೇ ಉಪವಿಭಾಗ ಕಚೇರಿ ಕಾರ್ಯನಿರ್ವಹಿಸುತ್ತಿತ್ತು. ಈಗ ಸರ್ಕಾರದ ಅನುದಾನದೊಂದಿಗೆ ಕಂಪ್ಲಿ ಹಾಗೂ ಕುರುಗೋಡಿನಲ್ಲಿ ಹೊಸ ಕಟ್ಟಡ ನಿರ್ಮಾಣಕ್ಕೆ ಚಾಲನೆ ಸಿಕ್ಕಿದ್ದು, ಒಂದು ವರ್ಷದೊಳಗೆ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದರು. ಸಿಂಧನೂರಿನಲ್ಲಿ ಅಳವಡಿಸಿರುವ ಸ್ಪನ್ ಪೋಲ್ ಮಾದರಿಯನ್ನು ಕಂಪ್ಲಿ ಕ್ಷೇತ್ರದಲ್ಲೂ ಜಾರಿಗೆ ತರಲು ಅಂದಾಜು 10 ಕೋಟಿ ರೂ. ಯೋಜನೆ ಸಿದ್ಧಪಡಿಸಲಾಗುತ್ತಿದೆ. ಈ ತಂತ್ರಜ್ಞಾನದಿಂದ ವಿದ್ಯುತ್ ಕಂಬಗಳು ಮತ್ತು ತಂತಿಗಳಿಂದ ಉಂಟಾಗುವ ಅಪಘಾತಗಳನ್ನು ತಡೆಗಟ್ಟಲು ಸಾಧ್ಯವಾಗುತ್ತದೆ ಎಂದು ಹೇಳಿದರು. ಎಬಿ ಕೇಬಲ್ ಮತ್ತು ಕವರ್ಡ್ ಕಂಡಕ್ಟರ್ಗಳನ್ನು ಅಳವಡಿಸುವ ಮೂಲಕ ವಿದ್ಯುತ್ ಸುರಕ್ಷತೆ ಹೆಚ್ಚಿಸಲು ಯೋಜಿಸಲಾಗಿದೆ. ಜೆಸ್ಕಾಂ ನೌಕರರ ಶಿಥಿಲಗೊಂಡಿರುವ ವಸತಿ ಗೃಹಗಳ ನಿರ್ಮಾಣಕ್ಕೂ ಆದ್ಯತೆ ನೀಡಲಾಗುವುದು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಗ್ಯಾರಂಟಿ ಯೋಜನೆಯ ಕಂಪ್ಲಿ ತಾಲೂಕು ಅಧ್ಯಕ್ಷ ಕೆ.ಶ್ರೀನಿವಾಸರಾವ್, ಎಪಿಎಂಸಿ ಅಧ್ಯಕ್ಷ ಹಬೀಬ್ ರೆಹಮಾನ್, ಕರ್ನಾಟಕ ರಾಜ್ಯ ದಿಶಾ ಸಮಿತಿ ಸದಸ್ಯ ಎ.ಸಿ.ದಾನಪ್ಪ, ಬಳ್ಳಾರಿಯ ಕಾರ್ಯನಿರ್ವಾಹಕ ಅಭಿಯಂತರ ಮೈನುದ್ಧೀನ್, ಸಹಾಯಕ ಕಾರ್ಯನಿರ್ವಾಹಕರಾರ ಶ್ರೀನಿವಾಸ ಪ್ರಸಾದ್, ಶೇಖ್ ಜಾಫರ್ ಮುಹಮ್ಮದ್, ಎಇ ವಿನೋದ್ ಕುಮಾರ, ಭೀಮೇಶ, ಜೆಇ ಟಿ.ಮಹಾಂತೇಶ, ಮುಹಮ್ಮದ್ ಶಮಿವುಲ್ಲಾ, ಮುಖಂಡರಾದ ಕೆ.ಸುಧಾಕರ, ಜಾಫರ್, ಅಕ್ಕಿ ಜಿಲಾನ್, ರಾಕೇಶ, ಹೊನ್ನಳ್ಳಿ ಶ್ರೀದೇವಿ, ಜೆಸ್ಕಾಂ ಲೈನ್ ಮ್ಯಾನ್ ಗಳಾದ ಬಿ.ಶ್ರೀನಿವಾಸ, ವೆಂಕಟಚಲಂ, ಸಿ.ರಾಜ, ಎನ್.ಉಮೇಶ, ವಿದ್ಯುತ್ ಗುತ್ತಿಗೆದಾರ ಸಿ.ಡಿ.ರಾಜಶೇಖರ ಸೇರಿದಂತೆ ಅನೇಕರಿದ್ದರು.
ನವದೆಹಲಿ: ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ (CBSE) 2026ನೇ ಸಾಲಿನ 12ನೇ ತರಗತಿಯ ಬೋರ್ಡ್ ಪರೀಕ್ಷೆಯ ಫಲಿತಾಂಶಗಳನ್ನು ಶೀಘ್ರದಲ್ಲೇ ಪ್ರಕಟಿಸಲು ಸಕಲ ಸಿದ್ಧತೆಗಳನ್ನು ನಡೆಸುತ್ತಿದೆ. ದೇಶಾದ್ಯಂತ ಲಕ್ಷಾಂತರ ವಿದ್ಯಾರ್ಥಿಗಳು ಮತ್ತು ಪೋಷಕರು ಈ ವರ್ಷದ ಫಲಿತಾಂಶಕ್ಕಾಗಿ ಅತ್ಯಂತ ಕಾತುರದಿಂದ ಕಾಯುತ್ತಿದ್ದಾರೆ. ಮೂಲಗಳ ಪ್ರಕಾರ, ಮೌಲ್ಯಮಾಪನ ಪ್ರಕ್ರಿಯೆಯು ಅಂತಿಮ ಹಂತದಲ್ಲಿದ್ದು, ಯಾವುದೇ ಕ್ಷಣದಲ್ಲಾದರೂ ಮಂಡಳಿಯ ಅಧಿಕೃತ ವೆಬ್ಸೈಟ್ಗಳಲ್ಲಿ ಫಲಿತಾಂಶ
Ballari | ಕಾರ್ಮಿಕರ ಮೇಲಿನ ದಮನ ಖಂಡಿಸಿ ದೋಣಿಮಲೈನಲ್ಲಿ ಎಐಯುಟಿಯುಸಿ ವತಿಯಿಂದ ಪ್ರತಿಭಟನೆ
ಸಂಡೂರು/ಬಳ್ಳಾರಿ: ಆಲ್ ಇಂಡಿಯಾ ಯುನೈಟೆಡ್ ಟ್ರೇಡ್ ಯೂನಿಯನ್ ಸೆಂಟರ್ (AIUTUC) ವತಿಯಿಂದ ತಾಲೂಕಿನ ದೋಣಿಮಲೈನಲ್ಲಿ, ನೋಯ್ಡಾ, ಗ್ರೇಟರ್ ನೋಯ್ಡಾ, ಗುರುಗ್ರಾಮ ಸೇರಿದಂತೆ ರಾಷ್ಟ್ರೀಯ ರಾಜಧಾನಿ ಪ್ರದೇಶ (NCR)ದಲ್ಲಿ ಕಾರ್ಮಿಕರ ಮೇಲೆ ನಡೆಯುತ್ತಿರುವ ದಮನ ಹಾಗೂ ದೌರ್ಜನ್ಯವನ್ನು ಖಂಡಿಸಿ ಭಾರೀ ಪ್ರತಿಭಟನೆ ನಡೆಸಲಾಯಿತು. ಏಪ್ರಿಲ್ 16ರಂದು ರಾಷ್ಟ್ರವ್ಯಾಪಿ ಹೋರಾಟಕ್ಕೆ ಕರೆ ನೀಡಿದ ಹಿನ್ನೆಲೆಯಲ್ಲಿ ಈ ಪ್ರತಿಭಟನೆ ಸಂಘಟಿಸಲಾಯಿತು. ನೋಯ್ಡಾ ಹಾಗೂ ಇತರ ಕೈಗಾರಿಕಾ ಪ್ರದೇಶಗಳಲ್ಲಿ ನಡೆಯುತ್ತಿರುವ ಕಾರ್ಮಿಕರ ಹೋರಾಟಕ್ಕೆ ಬೆಂಬಲ ಸೂಚಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಎಐಯುಟಿಯುಸಿ ಜಿಲ್ಲಾ ಅಧ್ಯಕ್ಷ ಎ. ದೇವದಾಸ್ ಅವರು, ಏಪ್ರಿಲ್ 9ರಂದು ನೋಯ್ಡಾ ಫೇಸ್-2 ಪ್ರದೇಶದಲ್ಲಿ ಸುಮಾರು 50,000ಕ್ಕೂ ಹೆಚ್ಚು ಕಾರ್ಮಿಕರು ತಮ್ಮ ನ್ಯಾಯಸಮ್ಮತ ಹಕ್ಕುಗಳಿಗಾಗಿ ಹೋರಾಟ ಆರಂಭಿಸಿದ್ದು, ಈ ಚಳವಳಿ ಹರಿಯಾಣ, ರಾಜಸ್ಥಾನ, ಗುಜರಾತ್, ಬಿಹಾರ ಸೇರಿದಂತೆ ಹಲವು ರಾಜ್ಯಗಳಿಗೆ ವ್ಯಾಪಿಸಿದೆ ಎಂದು ಹೇಳಿದರು. ಕಾರ್ಮಿಕರು ವೇತನ ಹೆಚ್ಚಳ, ದುಬಾರಿ ಜೀವನಕ್ಕೆ ಹೊಂದುವ ಭತ್ಯೆ, ಕೆಲಸದ ಗಂಟೆಗಳ ನಿಯಂತ್ರಣ, ಕಾನೂನುಬದ್ಧ ಓವರ್ಟೈಮ್, ವಾರದ ವಿಶ್ರಾಂತಿ, ಇಎಸ್ಐ, ಪಿಎಫ್, ಬೋನಸ್, ಉದ್ಯೋಗ ಭದ್ರತೆ, ಸುರಕ್ಷತಾ ಸೌಲಭ್ಯಗಳು ಹಾಗೂ ಗುತ್ತಿಗೆ ಕಾರ್ಮಿಕರ ಖಾಯಂ ನಿಯೋಜನೆ ಸೇರಿದಂತೆ ಹಲವು ಮೂಲಭೂತ ಹಕ್ಕುಗಳಿಗಾಗಿ ಹೋರಾಟ ನಡೆಸುತ್ತಿದ್ದಾರೆ ಎಂದು ವಿವರಿಸಿದರು. ಜಿಲ್ಲಾ ಕಾರ್ಯದರ್ಶಿ ಡಾ. ಪ್ರಮೋದ್ ಮಾತನಾಡಿ, ಕಾರ್ಮಿಕರ ನ್ಯಾಯಸಮ್ಮತ ಬೇಡಿಕೆಗಳನ್ನು ಈಡೇರಿಸುವ ಬದಲು ರಾಜ್ಯ ಸರ್ಕಾರಗಳು ದಮನಾತ್ಮಕ ಕ್ರಮಗಳನ್ನು ಕೈಗೊಳ್ಳುತ್ತಿರುವುದು ಖಂಡನೀಯ ಎಂದು ಹೇಳಿದರು. ಕಾರ್ಮಿಕರನ್ನು ಹಲ್ಲೆ ಮಾಡುವುದು, ಬಂಧಿಸುವುದು ಹಾಗೂ ಮೂಲಭೂತ ಸೌಲಭ್ಯಗಳಿಂದ ವಂಚಿಸುವುದು ಸರ್ಕಾರದ ಕ್ರೂರತೆಯ ಉದಾಹರಣೆಗಳಾಗಿವೆ ಎಂದು ಆರೋಪಿಸಿದರು. ಈ ವೇಳೆ ಎಐಯುಟಿಯುಸಿ ಮುಖಂಡರಾದ ಸುರೇಶ್, ಕಿರಣ್ ಕುಮಾರ್, ಅಂಬರೀಷ್, ಬಾಬು, ಕೃಷ್ಣಪ್ಪ, ಬಸವರಾಜ್, ತಿಮ್ಮಣ್ಣ ಸೇರಿದಂತೆ ಅನೇಕರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಪ್ರತಿಭಟನೆ ವೇಳೆ ಕಾರ್ಮಿಕರ ಹಕ್ಕುಗಳನ್ನು ರಕ್ಷಿಸುವಂತೆ ಸರ್ಕಾರವನ್ನು ಆಗ್ರಹಿಸಿ, ದೇಶವ್ಯಾಪಿ ಹೋರಾಟವನ್ನು ಮತ್ತಷ್ಟು ಬಲಪಡಿಸುವ ಅಗತ್ಯವಿದೆ ಎಂದು ಮುಖಂಡರು ಕರೆ ನೀಡಿದರು.
ಗುರುಪುರ: ಮರ್ಹೂಮ ಸಾರಮ್ಮ ಇಬ್ರಾಹಿಂ ಗೋಳಿಪಡ್ಪು ಸ್ಮರಣಾರ್ಥ ಆಂಬ್ಯುಲೆನ್ಸ್ ಲೋಕಾರ್ಪಣೆ
ಗುರುಪುರ: ಸೋಶಿಯಲ್ ಡೆಮೊಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಗುರುಪುರ ಗ್ರಾಮ ಪಂಚಾಯತ್ ಸಮಿತಿ ವತಿಯಿಂದ ಮರ್ಹೂಮ ಸಾರಮ್ಮ ಇಬ್ರಾಹಿಂ ಗೋಳಿಪಡ್ಪು ಸ್ಮರಣಾರ್ಥ ಆಂಬ್ಯುಲೆನ್ಸ್ ಲೋಕಾರ್ಪಣೆ ಕಾರ್ಯಕ್ರಮವು ಅಡ್ಡೂರು ಜಂಕ್ಷನ್ ನಲ್ಲಿ ಶುಕ್ರವಾರ ಸಂಜೆ ನಡೆಯಿತು. ಹಾಜಿ ಇಬ್ರಾಹಿಂ ಗೋಳಿಪಡ್ಪು ಅವರು ಎಸ್ಡಿಪಿಐ ಗುರುಪುರ ಗ್ರಾಮ ಪಂಚಾಯತ್ ಸಮಿತಿ ಅಧ್ಯಕ್ಷರಾದ ಎಸ್.ಬಿ. ಅಬ್ದುಲ್ ಸತ್ತಾರ್ ರವರಿಗೆ ಆಂಬ್ಯುಲೆನ್ಸ್ ಹಸ್ತಾಂತರಿಸುವ ಮೂಲಕ ಲೋಕಾರ್ಪಣೆ ಗೊಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಮ ಸಮಿತಿಯ ಅಧ್ಯಕ್ಷ ಅಬ್ದುಲ್ ಸತ್ತಾರ್ ವಹಿಸಿದ್ದರು. ಎಸ್ಡಿಪಿಐ ಮಂಗಳೂರು ನಗರ ಜಿಲ್ಲಾ ಕಾರ್ಯಾಧ್ಯಕ್ಷ ಅಶ್ರಫ್ ಅಡ್ಡೂರು ಪ್ರಾಸ್ತಾವಿಕ ಮಾತುಗಳನ್ನಾಡಿದರು. ರಾಜ್ಯ ಕಾರ್ಯದರ್ಶಿ ರಿಯಾಜ್ ಕಡಂಬು ಮುಖ್ಯ ಭಾಷಣಗೈದರು. 2025-26ನೇ ಶೇಕ್ಷಣಿಕ ಸಾಲಿನ ದ್ವಿತೀಯ ಪಿಯುಸಿ ಪರಿಕ್ಷೆಯಲ್ಲಿ ಅತ್ಯಂತ ಹೆಚ್ಚು ಅಂಕ ಗಳಿಸಿದ ವೃಷಾ, ಹಾಜಿರಾ, ಹಲೀಮ, ಅಫ್ರಾ, ನಿಝಾ, ಫಾತಿಮಾ ಹಾಗೂ ಗುರುಪುರ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸಫರ ನಾಸೀರ್, ಸ್ನೇಕ್ ಮಾಸ್ಟರ್ ಇಸ್ಮಾಯಿಲ್ ಅಡ್ಡೂರು, ಹಾಜಿ ಇಬ್ರಾಹಿಂ ಗೋಳಿಪಡ್ಪು, ಎ.ಕೆ.ಮುಸ್ತಾಪ ಅವರನ್ನು ವೇದಿಕೆಯಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ದ.ಕ.ಜಿಲ್ಲಾ ಮದರಸ ಮ್ಯಾನೇಜ್ಮೆಂಟ್ಅಧ್ಯಕ್ಷ ಹಾಜಿ ಎಮ್.ಎಚ್. ಮುಹಿಯುದ್ದೀನ್, ಅಡ್ಡೂರು ಬದ್ರಿಯಾ ಜುಮ್ಮಾ ಮಸೀದಿ ಅಧ್ಯಕ್ಷ ಅಹಮದ್ ಬಾವ ಅಂಗಡಿ ಮನೆ, ಕಾಂಜಿಲಕೋಡಿ ಜುಮ್ಮಾ ಮಸೀದಿ ಅಧ್ಯಕ್ಷ ಝಕರಿಯ ಕೋಡಿಬೆಟ್ಟು, ಅಡ್ಡೂರು ಆಯಿಶಾ ಮಸೀದಿ ಅಧ್ಯಕ್ಷ ಶೌಕತ್ ಅಲಿ, ಅಡ್ಡೂರು ಬದ್ರಿಯಾ ಜುಮಾ ಮಸೀದಿ ಉಪಾಧ್ಯಕ್ಷ ಝೈನುದ್ದೀನ್ ಗರಡಿ, ಎಸ್ಡಿಪಿಐ ಮಂಗಳೂರು ನಗರ ಜಿಲ್ಲಾ ಸಮಿತಿ ಸದಸ್ಯ ಶಾಹೀಕ್ ಪಾಂಡೇಲ್, ಎಸ್ಡಿಪಿಐ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರ ಅಧ್ಯಕ್ಷ ಉಸ್ಮಾನ್ ಗುರುಪುರ, ಉಪಾಧ್ಯಕ್ಷ ಎ.ಕೆ.ರಿಯಾಝ್, ಗುರುಪುರು ಬ್ಲಾಕ್ ಸಮಿತಿ ಅಧ್ಯಕ್ಷ ಶರೀಫ್ ಅಡ್ಡೂರು, ಅಡ್ಡೂರು ಸೆಂಟ್ರಲ್ ಕಮಿಟಿ ಅಧ್ಯಕ್ಷ ಅಬ್ದುಲ್ ರಝಾಕ್ ನಂದ್ಯ, ಬ್ಯಾರಿ ಸಾಹಿತ್ಯ ಪ್ರಶಸ್ತಿ ಪುರಸ್ಕೃತರಾದ ಡಾ. ಇ.ಕೆ ಸಿದ್ದೀಕ್, ಎಸ್ಡಿಪಿಐ ಗುರುಪುರು ಗ್ರಾ.ಪಂ. ಸಮಿತಿ ಉಪಾಧ್ಯಕ್ಷ ಎ.ಕೆ. ಮುಸ್ತಫ, ಗುರುಪುರ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷೆ ಸಫಾರ ನಾಸೀರ್, ಅಡ್ಡೂರು ವಿಮೆನ್ ಇಂಡಿಯಾ ಮೂವ್ಮೆಂಟ್ ಅಧ್ಯಕ್ಷೆ ಶೈನಾಝ್ ಪಿ.ಸಿ. ಅಡ್ಡೂರು ಫೈವ್ ಸ್ಟಾರ್ ಅಧ್ಯಕ್ಷ ಇಲ್ಯಾಸ್ ಹೊಳೆ ಬದಿ, ಕಳಸಗುರಿ ರೋಝ್ ಫ್ರೆಂಡ್ಸ್ ಅಧ್ಯಕ್ಷ ಮುಹಮ್ಮದ್ ಹನೀಫ್, ಎಫ್ ಸಿ ಕೆ ಕೆಳಗಿನ ಕೆರೆ ಅಧ್ಯಕ್ಷ ಆರಿಸ್ ಕೆಳಗಿನಕೆರೆ, ಹೆಲ್ಪಿಂಗ್ ಹ್ಯಾಂಡ್ ಮಂಜೊಟ್ಟಿ ಅಧ್ಯಕ್ಷ ಮನ್ಸೂರ್ ಮಣ್ಣಗುಡ್ಡೆ , ಕಾಂಜಿಲಕೋಡಿ 120ಗೈಸ್ ಅಧ್ಯಕ್ಷ ಕಮಲ್ ಕೋಡಿಬೆಟ್ಟು, ಕಳಸಗುರಿ ಗುರಿ ನವಜ್ಯೋತಿ ಫ್ರೆಂಡ್ಸ್ ಅಧ್ಯಕ್ಷ ಭೋಜ ಮೂಲ್ಯ, ಗುರುಪುರ ಗ್ರಾಮ ಪಂಚಾಯತ್ ಸದಸ್ಯ ಅಶ್ರಫ್, ಮನ್ಸೂರ್, ಶಾಹಿಕ್ ರಿಯಾಝ್, ಬುಶ್ರಾ, ದಿಲ್ಶಾದ್ ಅಝ್ಮೀನ, ರೆಹಾನ ಮೊದಲಾದವರು ಉಪಸ್ಥಿತರಿದ್ದರು. ಅಸ್ತಾರ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಎ.ಕೆ. ರಿಯಾಝ್ ವಂದಿಸಿದರು.
Ballari | ಹಳೇ ವಡ್ಡಿನಕಟ್ಟೆಯಲ್ಲಿ ಆಂಜನೇಯಸ್ವಾಮಿ ದೇವಸ್ಥಾನ ಉದ್ಘಾಟನೆ
ಸಂಡೂರು / ಬಳ್ಳಾರಿ : ತಾಲೂಕಿನ ಚೋರನೂರು ಹೋಬಳಿಯ ಹಳೇ ವಡ್ಡಿನಕಟ್ಟೆ ಗ್ರಾಮದಲ್ಲಿ ನೂತನ ಆಂಜನೇಯಸ್ವಾಮಿ ದೇವಸ್ಥಾನ ಹಾಗೂ ಗೋಪುರದ ಕಳಸ ಉದ್ಘಾಟನಾ ಸಮಾರಂಭ ಭಕ್ತಿ ಭಾವಪೂರ್ಣ ವಾತಾವರಣದಲ್ಲಿ ಭವ್ಯವಾಗಿ ನೆರವೇರಿತು. ವಿವಿಧ ಹೋಮಗಳು, ಪೂಜಾ ವಿಧಿವಿಧಾನಗಳು ಹಾಗೂ 101 ಕುಂಭಗಳ ಮೆರವಣಿಗೆ ವಿವಿಧ ವಾದ್ಯಗಳ ನಾದದೊಂದಿಗೆ ವಿಶೇಷ ಆಕರ್ಷಣೆಯಾಗಿತ್ತು. ಕಾರ್ಯಕ್ರಮಕ್ಕೆ ಮಹರ್ಷಿ ವಾಲ್ಮೀಕಿ ಗುರುಪೀಠ, ರಾಜನಹಳ್ಳಿಯ ಡಾ.ಪ್ರಸನ್ನಾನಂದ ಮಹಾಪುರಿ ಮಹಾಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸಿ ದೇವಸ್ಥಾನ ಉದ್ಘಾಟಿಸಿದರು. ಕೊಟ್ಟೂರು ಕಟ್ಟೆಮನೆ ಹಿರೇಮಠದ ಪರಮಪೂಜ್ಯ ಶ್ರೀ ಯೋಗರಾಜೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳು ಸಹ ಭಾಗವಹಿಸಿ ಆಶೀರ್ವಚನ ನೀಡಿದರು. ಉದ್ಘಾಟನೆಯ ನಂತರ ನಡೆದ ಕಾರ್ಯಕ್ರಮದಲ್ಲಿ ಶ್ರೀ ಯೋಗರಾಜೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳು ಮಾತನಾಡಿ, “ಗಣಿಧಣಿಗಳು ಕೇವಲ ಗಣಿಗಾರಿಕೆಗೆ ಸೀಮಿತರಾಗಿದ್ದರೆ, ಜಗತ್ತಿಗೆ ಅನ್ನ ನೀಡುವ ರೈತರು ನಿಜವಾದ ಧಣಿಗಳು” ಎಂದು ರೈತರ ಮಹತ್ವವನ್ನು ಪ್ರತಿಪಾದಿಸಿದರು. ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಅನೇಕ ಮಹನೀಯರು ತಮ್ಮ ಪ್ರಾಣತ್ಯಾಗ ಮಾಡಿರುವುದನ್ನು ಸ್ಮರಿಸಿದ ಅವರು, ಗ್ರಾಮೀಣ ಸಮಾಜದ ಸೌಹಾರ್ದತೆಯನ್ನು ಉಲ್ಲೇಖಿಸಿ, “ಹಳ್ಳಿಗಳಲ್ಲಿ ವಿವಿಧ ಜಾತಿಯ ಜನರು ಒಗ್ಗಟ್ಟಿನಿಂದ ಬದುಕುತ್ತಿರುವುದು ವಿಶೇಷ. ನಗರ ಜೀವನದ ಪ್ರಭಾವಕ್ಕೆ ಒಳಗಾಗಬಾರದು” ಎಂದು ಸಲಹೆ ನೀಡಿದರು. ಆರೋಗ್ಯ ಸಮಸ್ಯೆಯಿಂದ ಚೇತರಿಸಿಕೊಂಡು ಬಂದ ರಾಜನಹಳ್ಳಿ ಸ್ವಾಮಿಗಳು ತಮ್ಮ ಆಶೀರ್ವಚನದಲ್ಲಿ ಶಾಂತಿ ಮಂತ್ರ ಪಠಿಸಿ, ಎಲ್ಲರೂ ಜಪಿಸುವಂತೆ ಹೇಳಿದರು. ರತ್ನಾಕರನು ಮಹರ್ಷಿ ವಾಲ್ಮೀಕಿಯಾಗಿ ರೂಪಾಂತರಗೊಂಡು ರಾಮಾಯಣ ರಚಿಸಿದ ಉದಾಹರಣೆಯನ್ನು ನೀಡುತ್ತಾ, ಜೀವನದಲ್ಲಿ ಪರಿವರ್ತನೆ ಸಾಧ್ಯವೆಂದು ತಿಳಿಸಿದರು. “ಪ್ರತಿ ಹಳ್ಳಿಯಲ್ಲೂ ಆಂಜನೇಯಸ್ವಾಮಿ ದೇವಸ್ಥಾನ ಭಕ್ತಿ, ಶಕ್ತಿ ಮತ್ತು ಏಕತೆಯ ಸಂಕೇತವಾಗಿದೆ” ಎಂದು ಅವರು ಅಭಿಪ್ರಾಯಪಟ್ಟರು. ಕಾರ್ಯಕ್ರಮದಲ್ಲಿ ಗ್ರಾಮದ ಹಿರಿಯರು, ಮುಖಂಡರು ಹಾಗೂ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಧಾರ್ಮಿಕ ವಿಧಿವಿಧಾನಗಳಲ್ಲಿ ಪಾಲ್ಗೊಂಡು ಆಶೀರ್ವಾದ ಪಡೆದರು. ಈ ಸಮಾರಂಭ ಗ್ರಾಮದಲ್ಲಿ ಧಾರ್ಮಿಕ ಹಾಗೂ ಸಾಂಸ್ಕೃತಿಕ ಉತ್ಸಾಹ ಮೂಡಿಸಿತು.
ನರೇಂದ್ರ ಮೋದಿ ಭಾಷಣದ 5 ಪ್ರಮುಖ ಅಂಶಗಳು; ವಿಪಕ್ಷಗಳ ವಿರುದ್ಧ ಪ್ರಧಾನಿ ಬತ್ತಳಿಕೆಯಿಂದ ಸಿಡಿದವು ಗುಂಡುಗಳು!
ಪ್ರಧಾನಮಂತ್ರಿ ನರೇಂದ್ರ ಮೋದಿ ಇಂದು (ಏ.18-ಶನಿವಾರ) ದೇಶವನ್ನುದ್ದೇಶಿಸಿ ಭಾಷಣ ಮಾಡಿದ್ದು, ನಿನ್ನೆ (ಏ.17-ಶುಕ್ರವಾರ) ಲೋಕಭೆಯಲ್ಲಿ ಮಹಿಳಾ ಮೀಸಲಾತಿ ಮಸೂದೆಯನ್ನು ಸೋಲಿಸಿದ ವಿಪಕ್ಷಗಳಮನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ತಮ್ಮ ಭಾಷಣದುದ್ದಕ್ಕೂ ಕಾಂಗ್ರೆಸ್, ಡಿಎಂಕೆ, ಟಿಎಂಸಿ ಮತ್ತು ಎಸ್ಪಿ ಪಕ್ಷಗಳ ವಿರುದ್ಧ ಕೆಂಡಕಾರಿದ ಪ್ರಧಾನಿ ಮೋದಿ, ಮಹಿಳಾ ಸಮಬಲೀಕರಣದ ವಿರೋಧಿಗಳನ್ನು ಈ ದೇಶದ ಮಹಿಳೆಯರು ಎಂದಿಗೂ ಸಹಿಸುವುದಿಲ್ಲ ಎಂದು ಗುಡುಗಿದರು. ಪ್ರಧಾನಿ ಮೋದಿ ಅವರ ಸುದೀರ್ಘ ಭಾಷಣದ ಪ್ರಮುಖ 5 ಅಂಶಗಳು ಇಲ್ಲಿವೆ.
ಮಂಗಳೂರು ಬಂದರಿಗೆ ಐಷಾರಾಮಿ ಕ್ರೂಸ್ ಹಡಗು “ಸೆವನ್ ಸೀಸ್ ಮರಿನರ್” ಆಗಮನ
ನವ ಮಂಗಳೂರು ಬಂದರು ಪ್ರಾಧಿಕಾರ (NMPA) ಇಂದು ಐಷಾರಾಮಿ ಕ್ರೂಸ್ ಹಡಗು ಸೆವನ್ ಸೀಸ್ ಮರಿನರ್ ಅನ್ನು ಸ್ವಾಗತಿಸಿದ್ದು, ಇದು ಭಾರತದ ಪಶ್ಚಿಮ ಕರಾವಳಿಯಲ್ಲಿ ಕ್ರೂಸ್ ಪ್ರವಾಸೋದ್ಯಮವನ್ನು ಉತ್ತೇಜಿಸುವ ಮತ್ತೊಂದು ಮಹತ್ವದ ಹೆಜ್ಜೆಯಾಗಿದೆ. ಬಹಾಮಾಸ್ ಧ್ವಜ ಹೊಂದಿರುವ ಈ ಹಡಗು ಕೊಚ್ಚಿಯಿಂದ ಆಗಮಿಸಿ, ಬೆರ್ಥ್ ನಂ. 4ರಲ್ಲಿ ನಿಲುಗಡೆಗೊಂಡಿತು. ಹಡಗಿನಲ್ಲಿ ಒಟ್ಟು 607 ಪ್ರಯಾಣಿಕರು ಮತ್ತು 460 ಸಿಬ್ಬಂದಿ ಸದಸ್ಯರು ಇದ್ದರು. ಈ ಹಡಗು ಮರ್ಮುಗೋವ್ ಕಡೆಗೆ ಮುಂದಿನ ಪ್ರಯಾಣವನ್ನು ಮುಂದುವರಿಸುತ್ತಿದೆ. ಹಡಗು ಮತ್ತು ಪ್ರಯಾಣಿಕರ ನಿರ್ವಹಣೆಯನ್ನು ಸುಗಮವಾಗಿ ನಡೆಸಲು NMPA, ಕಸ್ಟಮ್ಸ್, ಇಮಿಗ್ರೇಶನ್, CISF ಹಾಗೂ ಇತರೆ ಸಂಬಂಧಿತ ಸಂಸ್ಥೆಗಳೊಂದಿಗೆ ಸಮನ್ವಯ ಸಾಧಿಸಿತು. ಭೇಟಿ ನೀಡಿದ ಪ್ರವಾಸಿಗರಿಗೆ ಕಾರ್ಕಳ, ಮೂಡಬಿದ್ರಿ, ಪಿಲಿಕುಳ ಹಾಗೂ ಮಂಗಳೂರು ನಗರದ ಪ್ರಮುಖ ಪ್ರವಾಸಿ ತಾಣಗಳಿಗೆ ವಿಶೇಷ ಪ್ರವಾಸ ವ್ಯವಸ್ಥೆ ಮಾಡಲಾಗಿತ್ತು. ಈ ಯಶಸ್ವಿ ಕಾರ್ಯಾಚರಣೆ ನವ ಮಂಗಳೂರು ಬಂದರನ್ನು ಅಂತರಾಷ್ಟ್ರೀಯ ಕ್ರೂಸ್ ಪ್ರವಾಸೋದ್ಯಮದ ಪ್ರಮುಖ ತಾಣವಾಗಿ ರೂಪಿಸುವಲ್ಲಿ ಮತ್ತಷ್ಟು ಬಲ ತುಂಬಿದ್ದು, ಉತ್ತಮ ಮಟ್ಟದ ಸೇವೆಗಳನ್ನು ಒದಗಿಸುವಲ್ಲಿ NMPAಯ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ.
ಲೆಬನಾನ್ನಲ್ಲಿ ಇಸ್ರೇಲ್ ತನ್ನ ಮಿಲಿಟರಿ ಕಾರ್ಯಾಚರಣೆಯನ್ನು ನಿಲ್ಲಸಬೇಕು: ಡೊನಾಲ್ಡ್ ಟ್ರಂಪ್
ವಾಶಿಂಗ್ಟನ್, ಎ.18: ಲೆಬನಾನ್ನಲ್ಲಿ ಇಸ್ರೇಲ್ ತನ್ನ ಮಿಲಿಟರಿ ಕಾರ್ಯಾಚರಣೆಯನ್ನು ನಿಲ್ಲಸಬೇಕು. ಐಡಿಎಫ್(ಇಸ್ರೇಲ್ ಭದ್ರತಾ ಪಡೆ) ಲೆಬನಾನ್ನಲ್ಲಿ ಕಟ್ಟಡಗಳನ್ನು ಸ್ಫೋಟಿಸುವುದನ್ನು ಮುಂದುವರಿಸಲು ಸಾಧ್ಯವಿಲ್ಲ. ಇದಕ್ಕೆ ನಾನು ಅವಕಾಶ ನೀಡುವುದಿಲ್ಲ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಗುರುವಾರ ಘೋಷಿಸಲಾದ ಇಸ್ರೇಲ್-ಲೆಬನಾನ್ ಕದನ ವಿರಾಮದ ಅಂಶಗಳಿಗೆ ಇಸ್ರೇಲ್ನ ಕ್ರಮಗಳು ಹೊಂದಿಕೆಯಾಗಬೇಕು. ಇರಾನ್ನೊಂದಿಗಿನ ಸಂಭಾವ್ಯ ಒಪ್ಪಂದವು ಇಸ್ರೇಲ್ನ ದೀರ್ಘಾವಧಿ ಭದ್ರತೆಗೆ ಪ್ರಯೋಜನಕಾರಿಯಾಗಿದೆ. ರಾಜತಾಂತ್ರಿಕ ನಿರ್ಣಯವು ಅಂತಿಮವಾಗಿ ಇಸ್ರೇಲಿ ಹಿತಾಸಕ್ತಿಗೆ ಪೂರಕವಾಗಿರುತ್ತದೆ ಎಂಬುದನ್ನು ಅವರು(ಇಸ್ರೇಲ್) ಅರ್ಥ ಮಾಡಿಕೊಳ್ಳಬೇಕು' ಎಂದು ಟ್ರಂಪ್ ಹೇಳಿರುವುದಾಗಿ ವರದಿಯಾಗಿದೆ.
ಎ.20ರಂದು ಪಾಕಿಸ್ತಾನದಲ್ಲಿ ಅಮೆರಿಕ, ಇರಾನ್ ಮಾತುಕತೆ: ವರದಿ
ಟೆಹರಾನ್, ಎ.18: ಅಮೆರಿಕ ಮತ್ತು ಇರಾನ್ ನಡುವಿನ ಮತ್ತೊಂದು ಸುತ್ತಿನ ಮಾತುಕತೆ ಇಸ್ಲಮಾಬಾದ್ನಲ್ಲಿ ಎಪ್ರಿಲ್ 20ರಂದು ನಡೆಯುವ ನಿರೀಕ್ಷೆಯಿದೆ ಎಂದು ಇರಾನ್ ಸರಕಾರದ ಮೂಲಗಳನ್ನು ಉಲ್ಲೇಖಿಸಿ ಸಿಎನ್ಎನ್ ಶನಿವಾರ ವರದಿ ಮಾಡಿದೆ. ಈಜಿಪ್ಟ್ ಮತ್ತು ತುರ್ಕಿಯೆ ಬೆಂಬಲದೊಂದಿಗೆ ಪಾಕಿಸ್ತಾನ ಮಾತುಕತೆಗೆ ಮಧ್ಯಸ್ಥಿಕೆ ವಹಿಸಲಿದ್ದು ಎರಡೂ ಕಡೆಯ ನಿಯೋಗವು ರವಿವಾರ ಪಾಕಿಸ್ತಾನಕ್ಕೆ ಆಗಮಿಸುವ ನಿರೀಕ್ಷೆಯಿದೆ ಎಂದು ವರದಿ ಹೇಳಿದೆ. ಈ ಮಧ್ಯೆ, ಅಮೆರಿಕ ಮತ್ತು ಇರಾನ್ ನಡುವಿನ ಅಂತಿಮ ಒಪ್ಪಂದ ಎರಡು ದಿನಗಳ ಒಳಗೆ ಅಂತಿಮಗೊಳ್ಳುವ ಸಾಧ್ಯತೆಯಿದೆ. ಎರಡೂ ದೇಶಗಳ ನಿಯೋಗಗಳು ವಾರಾಂತ್ಯದಲ್ಲಿ ಸಭೆ ಸೇರಿ ಯುದ್ಧವನ್ನು ಕೊನೆಗೊಳಿಸುವ ಒಪ್ಪಂದವನ್ನು ಅಂತಿಮಗೊಳಿಸುವ ನಿರೀಕ್ಷೆಯಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಇರಾನಿಯನ್ನರು ಭೇಟಿಯಾಗಲು ಬಯಸುತ್ತಾರೆ. ಅವರು ಒಪ್ಪಂದ ಮಾಡಿಕೊಳ್ಳಲು ಅತ್ಯಂತ ಉತ್ಸುಕರಾಗಿದ್ದಾರೆ. ಶೀಘ್ರ ಒಪ್ಪಂದ ಅಂತಿಮಗೊಳ್ಳುವ ನಿರೀಕ್ಷೆಯಿದೆ ಎಂದು ಟ್ರಂಪ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ. ಇರಾನ್-ಅಮೆರಿಕ ಮಾತುಕತೆಗೆ ದಿನಾಂಕ ನಿಗದಿಯಾಗಿಲ್ಲ; ಇರಾನ್ ಪಾಕಿಸ್ತಾನದ ಮಧ್ಯಸ್ಥಿಕೆಯಲ್ಲಿ ಇರಾನ್ ಮತ್ತು ಅಮೆರಿಕದ ನಡುವೆ ನಡೆಯಲಿರುವ ಮುಂದಿನ ಸುತ್ತಿನ ಮಾತುಕತೆಗೆ ಯಾವುದೇ ದಿನಾಂಕ ನಿಗದಿಯಾಗಿಲ್ಲ ಎಂದು ಇರಾನ್ನ ಸಹಾಯಕ ವಿದೇಶಾಂಗ ಸಚಿವರು ಶನಿವಾರ ಹೇಳಿದ್ದಾರೆ. ನಾವು ಈಗ ಎರಡು ಕಡೆಯ ನಡುವಿನ ತಿಳುವಳಿಕೆಯ ಚೌಕಟ್ಟನ್ನು ಅಂತಿಮಗೊಳಿಸುವತ್ತ ಗಮನ ಹರಿಸಿದ್ದೇವೆ. ಚೌಕಟ್ಟನ್ನು ಒಪ್ಪಿಕೊಳ್ಳುವವರೆಗೆ ದಿನಾಂಕವನ್ನು ನಿಗದಿಗೊಳಿಸಲು ಸಾಧ್ಯವಿಲ್ಲ. ಫಲಪ್ರದವಾಗುವ ನಿರೀಕ್ಷೆ ಇಲ್ಲದ ಮಾತುಕತೆಯಲ್ಲಿ ಪಾಲ್ಗೊಳ್ಳುವುದರಲ್ಲಿ ಅರ್ಥ ಇಲ್ಲ ಎಂದು ಇರಾನ್ನ ಸಹಾಯಕ ವಿದೇಶಾಂಗ ಸಚಿವ ಸಯೀದ್ ಖತೀಬ್ಜಾದೆ ಶನಿವಾರ ಹೇಳಿದ್ದಾರೆ. ಈ ಮಧ್ಯೆ, ಅಮೆರಿಕ ಮತ್ತು ಇರಾನ್ ನಡುವಿನ ಮತ್ತೊಂದು ಸುತ್ತಿನ ಮಾತುಕತೆ ಇಸ್ಲಮಾಬಾದ್ನಲ್ಲಿ ಎಪ್ರಿಲ್ 20ರಂದು ನಡೆಯುವ ನಿರೀಕ್ಷೆಯಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಸಿಎನ್ಎನ್ ಶನಿವಾರ ವರದಿ ಮಾಡಿದೆ. ಈಜಿಪ್ಟ್ ಮತ್ತು ತುರ್ಕಿಯೆ ಬೆಂಬಲದೊಂದಿಗೆ ಪಾಕಿಸ್ತಾನ ಮಾತುಕತೆಗೆ ಮಧ್ಯಸ್ಥಿಕೆ ವಹಿಸಲಿದ್ದು ಎರಡೂ ಕಡೆಯ ನಿಯೋಗವು ರವಿವಾರ ಪಾಕಿಸ್ತಾನಕ್ಕೆ ಆಗಮಿಸುವ ನಿರೀಕ್ಷೆಯಿದೆ ಎಂದು ವರದಿ ಹೇಳಿದೆ. ಅಮೆರಿಕ ಮತ್ತು ಇರಾನ್ ನಡುವಿನ ಅಂತಿಮ ಒಪ್ಪಂದ ಎರಡು ದಿನಗಳ ಒಳಗೆ ಅಂತಿಮಗೊಳ್ಳುವ ಸಾಧ್ಯತೆಯಿದೆ. ಎರಡೂ ದೇಶಗಳ ನಿಯೋಗಗಳು ವಾರಾಂತ್ಯದಲ್ಲಿ ಸಭೆ ಸೇರಿ ಯುದ್ಧವನ್ನು ಕೊನೆಗೊಳಿಸುವ ಒಪ್ಪಂದವನ್ನು ಅಂತಿಮಗೊಳಿಸುವ ನಿರೀಕ್ಷೆಯಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. `ಇರಾನಿಯನ್ನರು ಭೇಟಿಯಾಗಲು ಬಯಸುತ್ತಾರೆ. ಅವರು ಒಪ್ಪಂದ ಮಾಡಿಕೊಳ್ಳಲು ಅತ್ಯಂತ ಉತ್ಸುಕರಾಗಿದ್ದಾರೆ. ಶೀಘ್ರ ಒಪ್ಪಂದ ಅಂತಿಮಗೊಳ್ಳುವ ನಿರೀಕ್ಷೆಯಿದೆ' ಎಂದು ಟ್ರಂಪ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ.
ವಿಬಿ- ಜಿ ರಾಮ್ಜಿಯಡಿ ಸದ್ಯಕ್ಕಿಲ್ಲ ಹೊಸ ಕಾಮಗಾರಿ: ಕೆಡಿಪಿ ಸಭೆಯಲ್ಲಿ ಜನಪ್ರತಿನಿಧಿಗಳು - ಅಧಿಕಾರಿಗಳ ಚರ್ಚೆ
ಮಂಗಳೂರು: ವಿಬಿ- ಜಿ ರಾಮ್ ಜಿ (ವಿಕಾಸ್ ಭಾರತ್- ಜಿ ರಾಮ್ ಜಿ ) ಯಾಗಿ ಪುನರ್ ನಾಮಕರಣ ಗೊಂಡಿರುವ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ (ಎಂ ನರೇಗಾ)ದಡಿ ಹೊಸ ಕಾಮಗಾರಿ ಗಳಿಗೆ ಇನ್ನೂ ಅನುಮೋದನೆ ದೊರಕಿಲ್ಲ. ಕೇಂದ್ರದಿಂದ ಅಧಿಕೃತ ಅಧಿಸೂಚನೆ ಬಂದಿಲ್ಲ. ಹಾಗಾಗಿ ಕಳೆದ ವರ್ಷದಲ್ಲಿ ಅನುಮೋದನೆಗೊಂಡಿರುವ ಕೆಲಸ ಕಾರ್ಯಗಳು ಮುಂದಿನ ಆರು ತಿಂಗಳವರೆಗೆ ಮುಂದುವರಿಸಲು ಅವಕಾಶ ನೀಡಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ. ದ.ಕ. ಜಿಲ್ಲಾ ಪಂಚಾಯತ್ನ ನೇತ್ರಾವತಿ ಸಭಾಂಗಣದಲ್ಲಿ ಶನಿವಾರ ನಡೆದ ತ್ರೈ ಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ವಿಬಿ- ಜಿ ರಾಮ್ ಜಿ ಕುರಿತಾದ ಚರ್ಚೆಯ ವೇಳೆ ಈ ಪ್ರತಿಕ್ರಿಯೆ ನೀಡಿದರು. ವಿಬಿ- ಜಿ ರಾಮ್ ಜಿ (ವಿಕಾಸ್ ಭಾರತ್- ಜಿ ರಾಮ್ ಜಿ ) ಯೋಜನೆಗೆ ಕೇಂದ್ರ ಸಂಸಸ್ತು ಹಾಗೂ ರಾಷ್ಟ್ರಪತಿಗಳ ಅನುಮೋದನೆ ದೊರಕಿದೆ. ಆದರೆ ಯಾವುದೇ ರಾಜ್ಯಗಳಿಗೆ ಅಧಿಸೂಚನೆ ಬಂದಿಲ್ಲ. ಹಾಗಾಗಿ ಆರು ತಿಂಗಳ ಅವಧಿಗೆ ಹಿಂದಿನ ಅವಧಿಯಲ್ಲಿ ಅನುಮೋದನೆ ದೊರಕಿರುವ ಯೋಜನೆಗಳು ಮುಂದುವರಿಯಲಿವೆ. ಎಪ್ರಿಲ್ ತಿಂಗಳಿಗೆ ರಾಜ್ಯದಲ್ಲಿ 1.30 ಕೋಟಿ ಮಾನವ ದಿನಗಳ ಗುರಿ ನಿಗದಿಪಡಿಸಲಾಗಿದೆ. ಕೇಂದ್ರದ ಯುಕ್ತಧಾರಾ ಪೋರ್ಟಲ್ನಲ್ಲಿ ಪ್ರತಿ ವರ್ಷದ ಕ್ರಿಯಾಯೋಜನೆಯನ್ನು ನೀಡಲಾಗುತ್ತದೆ ಎಂದು ಸಭೆಯಲ್ಲಿ ಉಪಸ್ಥಿತರಿದ್ದ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಯೂ ಆಗಿರುವ ಸಮೀರ್ ಶುಕ್ಲಾ ಮಾಹಿತಿ ನೀಡಿದರು. ಬೆಳ್ತಂಗಡಿಯಲ್ಲಿ 94 ಸಿಯಡಿ 419 ಅರ್ಜಿಗಳು ಬಾಕಿ! ದ.ಕ. ಜಿಲ್ಲೆಯಲ್ಲಿ ಮೂಡಬಿದ್ರೆ, ಕಡಬ ಹೊರತುಪಡಿಸಿ ಉಳಿದೆಲ್ಲಾ ತಾಲೂಕುಗಳಲ್ಲಿ ಬಾಕಿ ಇರುವ ಅರ್ಜಿಗಳ ಸಂಖ್ಯೆ ಶೂನ್ಯ. 94 ಸಿ (ಗ್ರಾಮಾಂತರ) ಪ್ರದೇಶಗಳಲ್ಲಿ ಬೆಳ್ತಂಗಡಿಯಲ್ಲಿ 419 ಅರ್ಜಿಗಳು ವಿಲೇಗಾಗಿ ಬಾಕಿ ಉಳಿದಿವೆ. ಬೆಳ್ತಂಗಡಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬಾಕಿ ಇರುವ ಅರ್ಜಿಗಳು ಯಾವಾಗ ಇತ್ಯರ್ಥವಾಗುವುದು ಎಂದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಸಭೆಯಲ್ಲಿ ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. 2025ರ ಅಕ್ಟೋಬರ್ ಅಂತ್ಯಕ್ಕೆ ದ.ಕ. ಜಿಲ್ಲೆಯಲ್ಲಿ 2041 ಅರ್ಜಿಗಳು 94 ಸಿಯಡಿ ವಿಲೇಗೆ ಬಾಕಿ ಇದ್ದು, ಭಾಗಶ: ಅರಣ್ಯ ಇರುವ ಅರ್ಜಿಗಳನ್ನು ಹೊರತುಪಡಿಸಿ ಎಲ್ಲಾ ಅಜಿರ್ಇಗಳನ್ನು ಡಿಸೆಂಬರ್ ಒಳಗೆ ವಿಲೇಪಡಿಸಲು ತಹಶೀಲ್ದಾರರಿಗೆ ನಿರ್ದೇಶನ ನೀಡಲಾಗಿತ್ತು. ಅದರಂತೆ ಮೂಡಬಿದ್ರೆಯಲ್ಲಿ 43, ಕಡಬದಲ್ಲಿ 20 ಹಾಗೂ ಬೆಳ್ತಂಗಡಿಯಲ್ಲಿ 419 ಅರ್ಜಿಗಳು ವಿಲೇಗೆ ಬಾಕಿ ಇವೆ. ಬಾಕಿ ರುವ ಪ್ರಕರಣಗಳಲ್ಲಿ 480 ಅರಣ್ಯ ಅಭಿಪ್ರಾಯದಿಂದ ಬಾಕಿಯಾಗಿದ್ದು, ಬೆಳ್ತಂಗಡಿಯ 2 ಅರ್ಜಿಗಳು ತಕರಾರು ಆಕ್ಷೇಪದಿಂದ ಬಾಕಿಯಾಗಿವೆ ಎಂದರು. ಮಂದಿನ ಕೆಡಿಪಿ ಸಭೆಯೊಳಗೆ ಎಲ್ಲಾ ಅರ್ಜಿಗಳನ್ನು ವಿಲೇ ಮಾಡಿ ಶೂನ್ಯ ಬಾಕಿ ಆಗುವಂತೆ ಕ್ರಮ ವಹಿಸಿ ಎಂದು ಉಸ್ತುವಾರಿ ಸಚಿವರು ನಿರ್ದೇಶನ ನೀಡಿದರು. ನಗರ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ಏಕ ನಿವೇಶನ ಅನುಮೋದನೆ ಮಡುವಾಗ ಸಮಸ್ಯೆಯಾಗುತ್ತಿದೆ. ಮನೆ ನಿರ್ಮಾಣ ಪ್ರಕ್ರಿಯೆಗಳಿಗೆ ವರ್ಷಾನುಗಟ್ಟಲೆ ಸಮಯವಾಗುತ್ತಿದೆ ಎಂದು ನಾಮನಿರ್ದೇಶಿತ ಸದಸ್ಯ ಹಮೀದ್ ಕಿನ್ಯಾ ಬೇಸರ ವ್ಯಕ್ತಪಡಿಸಿದರು. ಕುಡಿಯುವ ನೀರು, ಪ್ರಾಕೃತಿಕ ವಿಕೋಪ- ಸನ್ನದ್ಧರಾಗಲು ಸೂಚನೆ ಬೇಸಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಹೋಗಲಾಡಿಸುವಿಕೆ ಹಾಗೂ ಮಳೆಗಾಲದ ಪ್ರಾಕೃತಿಕ ವಿಕೋಪ ತಡೆ ಗಟ್ಟುವ ನಿಟ್ಟಿನಲ್ಲಿ ಸೂಕ್ತ ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರು ಜಿಲ್ಲಾಡಳಿತಕ್ಕೆ ನಿರ್ದೇಶನ ನೀಡಿದರು. ಬೇಸಗೆಯ ನೀರಿನ ಬರ ಹಾಗೂ ಮಳೆಗಾಲದ ಪ್ರಾಕೃತಿಕ ಅವಘಡಗಳನ್ನು ಎದುರಿಸಲು ಜಿಲ್ಲಾಡಳಿತ ಕೈಗೊಂಡ ಸಿದ್ಧತೆ ಕುರಿತು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ ಮಾಹಿತಿ ಕೋರಿದಾಗ, ಜಿಲ್ಲಾಧಿಕಾರಿ ದರ್ಶನ್ ವಿವರ ನೀಡಿದರು. ಜನವರಿಯಲ್ಲೇ ಜಿ.ಪಂ. ಸಿಇಒ ಜೊತೆ ಎಲ್ಲ ತಾಲೂಕು ಮಟ್ಟದ ಅಧಿಕಾರಿಗಳ ಸಭೆ ನಡೆಸಲಾಗಿದೆ. ಕುಡಿವ ನೀರಿನ ಅಭಾವ ಇರುವ ಪ್ರದೇಶಗಳ ಪಟ್ಟಿಯನ್ನು ತರಿಸಿಕೊಂಡು ಕೈಗೊಳ್ಳಬೇಕಾದ ಕ್ರಮಗಳ ಕುರಿತಂತೆ ನಿರ್ದೇಶನ ನೀಡಲಾಗಿದೆ. ಕುಡಿವ ನೀರಿನ ಹಾಗೂ ಪ್ರಾಕೃತಿಕ ತೊಂದರೆ ನಿವಾರಣೆಗೆ ಆಯಾ ಸ್ಥಳೀಯ ಆಡಳಿತಗಳಿಗೆ ಸೂಕ್ತ ಕ್ರಮ ಕೈಗೊಳ್ಳುವ ಅಧಿಕಾರ ನೀಡಲಾಗಿದೆ ಎಂದರು. ಈಗಾಗಲೇ ಖಾಸಗಿ ಕೊಳವೆಬಾವಿಗಳನ್ನು ಗುರುತಿಸಲಾಗಿದ್ದು, ಅನಿವಾರ್ಯವಾದರೆ ಅವುಗಳನ್ನು ಬಳಸಿಕೊಳ್ಳಲು ನಿರ್ಧರಿಸಲಾಗಿದೆ. ಅತ್ಯಧಿಕ ಉಷ್ಣಾಂಶ, ಗುಡುಗು, ಸಿಡಿಲು, ಮಳೆ ಮುಂತಾದ ಪ್ರಾಕೃತಿಕ ತೊಂದರೆಗಳನ್ನು ಎದುರಿಸಲು ಆರೋಗ್ಯ ಕೇಂದ್ರಗಳನ್ನೂ ಸನ್ನದ್ಧ ಸ್ಥಿತಿಯಲ್ಲಿ ಇರಿಸಲಾಗಿದೆ. ಭೂಕುಸಿತ ತಡೆಗೆ ಕ್ರಮಕ್ಕೆ ಗ್ರಾಮೀಣ ಪ್ರದೇಶಗಳಿಗೆ 25 ಕೋಟಿ ರು.ಗಳಲ್ಲಿ ಕಾಮಗಾರಿಗೆ ಟೆಂಡರ್ ಪೂರ್ಣಗೊಂಡಿದೆ. ಮಹಾನಗರ ಪಾಲಿಕೆ ವ್ಯಾಪ್ತಿಗೆ 3.50 ಕೋಟಿ ರು. ಬಿಡುಗಡೆಯಾಗಿದ್ದು, ಚರಂಡಿಗಳ ಹೂಳೆತ್ತುವ ಕಾಮಗಾರಿಯೂ ಆರಂಭಗೊಂಡಿದೆ. ಪಾಲಿಕೆಯ 8 ಕಡೆಗಳಲ್ಲಿ ಕೃತಕ ನೆರೆ ಪೀಡಿತ ಪ್ರದೇಶಗಳಲ್ಲಿ ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ ಎಂದರು. ಮಂಗಳೂರು ಮಹಾನಗರಕ್ಕೆ ನೀರು ಪೂರೈಸುವ ತುಂಬೆ ಡ್ಯಾಂನಲ್ಲಿ ನೀರಿನ ಸಂಗ್ರಹ ಇದ್ದು, ಸದ್ಯದ ಮಟ್ಟಿಗೆ ನೀರಿನ ಕೊರತೆ ಇಲ್ಲ. ಜೂ. 15ರ ವರೆಗೆ ಸಾಕಾಗುವಷ್ಟು ನೀರಿನ ಸಂಗ್ರಹ ಇದೆ. ತುಂಬೆ ಡ್ಯಾಂ ಅಲ್ಲದೆ, ಎಎಂಆರ್, ಹರೇಕಳ ಡ್ಯಾಂನಿಂದಲೂ ನೀರು ಪಡೆಯಲಾಗುವುದು. ಪ್ರಸಕ್ತ ನೀರಿನ ಒಳ ಹರಿವು ಇದ್ದು, ಮೇ ಕೊನೆ ವಾರದಲ್ಲಿ ಅವಶ್ಯವಾದರೆ ಸಾರ್ವಜನಿಕರಿಗೆ ಮುಂಚಿತವಾಗಿ ಮಾಹಿತಿ ನೀಡಿ ನೀರಿನ ರೇಶನಿಂಗ್ ಮಾಡಲಾಗು ವುದು ಎಂದು ಜಿಲ್ಲಾಧಿಕಾರಿ ದರ್ಶನ್ ತಿಳಿಸಿದರು. ಗ್ರಾಮೀಣ ಭಾಗದ ಉಳ್ಳಾಲದಲ್ಲಿ ನಾಲ್ಕು ಗ್ರಾಮ ಪಂಚಾಯ್ತಿಗಳಲ್ಲಿ ಟ್ಯಾಂಕರ್ನಲ್ಲಿ ಕುಡಿವ ನೀರು ಪೂರೈಸಲಾ ಗುತ್ತಿದೆ. ಕೊಳವೆಬಾವಿಯಲ್ಲಿ ನೀರಿನ ಕೊರತೆ ಉಂಟಾದರೆ ಶಾಸಕರ ಅಧ್ಯಕ್ಷತೆಯ ಟಾಸ್ಕ್ಫೋರ್ಸ್ ಸಮಿತಿಯ ಅನುಮೋದನೆ ಪಡೆದು ಕಾಮಗಾರಿ ನಡೆಸಬೇಕಾಗುತ್ತದೆ. ಬಹುಗ್ರಾಮ ಕುಡಿವ ನೀರು ಹಾಗೂ ಸಿಂಗಲ್ ವಿಲೇಜ್ ಯೋಜನೆಯಡಿ ಸಾಧ್ಯವಾದಷ್ಟು ಮಟ್ಟಿಗೆ ಕುಡಿವ ನೀರಿನ ಅಭಾವ ನೀಗಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಜಿ.ಪಂ. ಸಿಇಒ ವಿನಾಯಕ ನರ್ವಾಡೆ ತಿಳಿಸಿದರು. ಸಭೆಯಲ್ಲಿ ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಉಪಾಧ್ಯಕ್ಷೆ ಪುಷ್ಪಾ ಅಮರನಾಥ್, ಜಿ.ಪಂ. ಸಿಇಒ ನರ್ವಾಡೆ ವಿನಾಯಕ ಕರ್ಬಾರಿ, ಉಪ ಅರಣ್ಯ ಸಂರಕ್ಷಣಾಧಿಕಾರಿ ರವಿಶಂಕರ್, ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ, ಪೊಲೀಸ್ ವರಿಷ್ಠಾಧಿಕಾರಿ ಡಾ. ಅರುಣ್ ಕುಮಾರ್ ಉಪಸ್ಥಿತರಿದ್ದರು. ಗುರುವಾಯನಕೆರೆಗೆ ಖಾಸಗಿ ಶಿಕ್ಷಣ ಸಂಸ್ಥೆಯ ಕೊಳಚೆ ನೀರು: ಸೂಕ್ತ ಕ್ರಮಕ್ಕೆ ನಿರ್ದೇಶನ ಬೆಳ್ತಂಗಡಿಯ ಗುರುವಾಯನಕೆರೆಗೆ ಖಾಸಗಿ ಶಿಕ್ಷಣ ಸಂಸ್ಥೆಯ ಶುದ್ಧೀಕರಿಸದ ಕೊಳಚೆ ನೀರು ಸೇರಿ ಮಲಿನವಾಗಿರುವ ಪ್ರಕರಣಕ್ಕೆ ಸಂಬಂಧಿಸಿ ಸಂಸ್ಥೆಯ ವಿರುದ್ಧ ಕ್ರಮ ವಹಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಮಾಲಿನ್ಯ ನಿಯಂತ್ರಣ ಮಂಡಳಿ ಸೇರಿದಂತೆ ಸಂಬಂಧಪಟ್ಟ ಇಲಾಖಾ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ದ.ಕ. ಜಿಲ್ಲಾ ಪಂಚಾಯತ್ನ ನೇತ್ರಾವತಿ ಸಭಾಂಗಣದಲ್ಲಿ ಶನಿವಾರ ನಡೆದ ಕೆಡಿಪಿ ಸಭೆಯಲ್ಲಿ ಶಾಸಕ ಹರೀಶ್ ಪೂಂಜಾ ಪ್ರಸ್ತಾವಿಸಿದ ವಿಷಯದ ಮೇರೆಗೆ ಅವರು ಈ ನಿರ್ದೇಶನ ನೀಡಿದರು. ನದಿಗೆ ಯಾವುದೇ ರೀತಿಯಲ್ಲಿ ಕೊಳಚೆ ನೀರು ಹರಿಯದಂತೆ ಮತ್ತು ನದಿ ನೀರು ಮಾಲಿನ್ಯವಾಗದಂತೆ ಕ್ರಮ ವಹಿಸಬೇಕು. ಮಾತ್ರವಲ್ಲದೆ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಮತ್ತೆ ಭೇಟಿ ನೀಡಿ ನದಿಗೆ ಕೊಳಚೆ ನೀರು ಮತ್ತೆ ಸೇರುತ್ತಿರುವುದೇ ಎಂಬುದನ್ನು ಪರಿಶೀಲಿಸಬೇಕು ಎಂದು ತಿಳಿಸಿದರು. ಗುರುವಾಯನಕೆರೆಯ ಸಮೀಪದಲ್ಲಿ ಕಾರ್ಯಾಚರಿಸುತ್ತಿರುವ ಖಾಸಗಿ ಶಿಕ್ಷಣ ಸಂಸ್ಥೆಯ ಕೊಳಚೆ ನೀರು ನದಿಗೆ ಸೇರಿ ಈಗಾಗಲೇ ಅಲ್ಲಿ ಮೀನುಗಳು ಸತ್ತಿವೆ ಎಂದು ವಿಷಯ ಪ್ರಸ್ತಾವಿಸಿದ ಶಾಸಕ ಹರೀಶ್ ಪೂಂಜಾ ಹೇಳಿದರು. ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿಯ ಮಂಗಳೂರು ಪ್ರಾದೇಶಿಕ ಅಧಿಕಾರಿ ಮಾಹಿತಿ ನೀಡಿ, ನದಿ ಮಾಲಿನಯದ ಬಗ್ಗೆ ಪರಿಶೀಲನೆ ನಡೆಸಿ ಈಗಾಗಲೇ ರಾಜ್ಯ ಮಂಡಳಿಗೆ ವರದಿ ನೀಡಲಾಗಿದೆ. ಸಂಸ್ಥೆಯು ಕೊಳಚೆ ನೀರು ಶುದ್ಧೀಕರಣ ಘಟಕ (ಎಸ್ಟಿಪಿ) ನಿರ್ಮಾಣ ಮಾಡದೆ ಅದನ್ನು ನದಿಗೆ ಬಿಟ್ಟಿರುವ ಕಾರಣ ಮೀನುಗಳು ಸತ್ತಿರುವುದು ದೃಢಪಟ್ಟಿದೆ. ಸಂಸ್ಥೆಯಲ್ಲಿ 3500 ಮಂದಿ ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದು, ಅದಕ್ಕೆ ಪೂರಕವಾಗಿ ಎಸ್ಟಿಪಿ ನಿರ್ಮಾಣ ಮಾಡದೆ ಇರುವುದು ಇದಕ್ಕೆ ಕಾರಣವಾಗಿದೆ. ಈ ನಿಟ್ಟಿನಲ್ಲಿ ಸಂಸ್ಥೆಯನ್ನು ಮುಚ್ಚುವಂತೆ ಕೋರಿ ರಾಜ್ಯ ಮಂಡಳಿಗೆ ಸಲ್ಲಿಸಿರುವ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಸಂಸ್ಥೆಯ ವಿರುದ್ಧ ಅಗತ್ಯ ಕ್ರಮಕ್ಕೆ ಶಿಫಾರಸು ಮಾಡಿ ಬೆಳ್ತಂಗಡಿ ತಹಶೀಲ್ದಾರ್, ತಾ.ಪಂ ಕಾರ್ಯನಿರ್ವಹಣಾಧಿಕಾರಿ ಹಾಗೂ ಪಿಡಿಒಗೆ ಪತ್ರ ಬರೆಯಲಾಗಿದೆ. ಈಗಾಗಲೇ ಆಗಿರುವ ಮಾಲಿನ್ಯಕ್ಕೆ ಸಂಸ್ಥೆಗೆ 1.09 ಕೋಟಿ ರೂ. ಪರಿಹಾರ ನೀಡುವಂತೆ ಹಾಗೂ ಕ್ರಿಮಿನಲ್ ಪ್ರಕರಣ ದಾಖಲಿಸುವ ಕುರಿತಂತೆ ಮಾಲಿನ್ಯ ನಿಯಂತ್ರಣ ರಾಜ್ಯ ಮಂಡಳಿಗೆ ಸಲ್ಲಿಸಿರುವ ವರದಿಯಲ್ಲಿ ಶಿಫಾರಸು ಮಾಡಲಾಗಿದೆ. ಆಡಳಿತಾತ್ಮಕ ಅನುಮೋದನೆ ದೊರೆತಾಗ ಸಂಸ್ಥೆಯ ವಿರುದ್ಧ ಜೆಎಂಎಫ್ಸಿ ನ್ಯಾಯಾಲಯದಲ್ಲಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು. ಮಾಹಿತಿ ಪ್ರಕಾರ ಈಗಾಗಲೇ ಸಂಸ್ಥೆಯು ಹೊಸ ಎಸ್ಟಿಪಿ ನಿರ್ಮಾಣಕ್ಕೆ ಒಪ್ಪಿಕೊಂಡಿರುವುದಾಗಿ ಮಾಹಿತಿ ಇದೆ ಎಂದು ಮಾಲಿನ್ಯ ನಿಯಂತ್ರಣಾಧಿಕಾರಿ ಸಭೆಯಲ್ಲಿ ತಿಳಿಸಿದರು. ಇದು ಗಂಭೀರ ವಿಚಾರವಾಗಿದ್ದು ಜಲಮೂಲಗಳಿಗೆ ಕೊಳಚೆ ನೀರು ಹರಿಯದಂತೆ ಕ್ರಮವನ್ನು ವಹಿಸದೆ ಇರುವುದು ತಪ್ಪು. ಸಂಸ್ಥೆಗೆ ಪರಿಹಾರವಾಗಿ ನೀಡಲು ಆದೇಶಿಸಿರುವ ಮೊತ್ತವನ್ನು ಭರಿಸಿಕೊಂಡು ರಾಜ್ಯ ಮಂಡಳಿಯ ನಿರ್ದೇಶನದಂತೆ ಮುಂದಿನ ಕ್ರಮ ವಹಿಸಲು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಸೂಚಿಸಿದರು. ಧರ್ಮಸ್ಥಳ ಗ್ರಾಮ ಪಂಚಾಯತ್ ವ್ಯಾಪ್ತಿಯ ಜೋಡುಸ್ತಾನ ಎಂಬಲ್ಲಿ ಆಶ್ರಯ ಯೋಜನೆಯಡಿ ಒತ್ತುವರಿಯಾಗಿರುವ ಜಮೀನಿಗೆ ಸಂಬಂಧಿಸಿ ಸಮೀಕ್ಷೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಸಭೆಯಲ್ಲಿ ನಿರ್ದೇಶಿಸಿದರು.
ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ 5.70 ಕೆ.ಜಿ. ಹೈಡ್ರೋಪೋನಿಕ್ ಗಾಂಜಾ ವಶ: ಆರೋಪಿಯ ಬಂಧನ
ಬೆಂಗಳೂರು: ದೇವನಹಳ್ಳಿಯಲ್ಲಿರುವ ಕೆಂಪೇಗೌಡ ವಿಮಾನ ನಿಲ್ದಾಣದ ಟರ್ಮಿನಲ್-2ರಲ್ಲಿ ಪ್ರಯಾಣಿಕನೊಬ್ಬನ ಲಗೇಜ್ನಲ್ಲಿ ಬಚ್ಚಿಟ್ಟಿದ್ದ 1.99 ಕೋಟಿ ಮೌಲ್ಯದ 5.70 ಕೆ.ಜಿ. ಹೈಡ್ರೋಪೋನಿಕ್ ಗಾಂಜಾವನ್ನು ಕಸ್ಟಮ್ಸ್ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಎ.18ರಂದು ಬ್ಯಾಂಕಾಕ್ನಿಂದ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ ಪ್ರಯಾಣಿಕನನ್ನು ತಪಾಸಣೆ ಘಟಕದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಪರಿಶೀಲನೆ ನಡೆಸಿದಾಗ ಲಗೇಜ್ನಲ್ಲಿ ಬಚ್ಚಿಟ್ಟಿದ್ದ 1.99 ಕೋಟಿ ಮೌಲ್ಯದ 5.70 ಕೆ.ಜಿ. ಹೈಡ್ರೋಪೋನಿಕ್ ಗಾಂಜಾ ಪತ್ತೆಯಾಗಿದೆ. ಸದ್ಯ, ಆರೋಪಿಯನ್ನು ಬಂಧಿಸಿ ಮಾಲನ್ನು ವಶಕ್ಕೆ ಪಡೆದುಕೊಳ್ಳಲಾಗಿದ್ದು, ಈ ಸಂಬಂಧ ಕೆಂಪೇಗೌಡ ವಿಮಾನ ನಿಲ್ದಾಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಕಸ್ಟಮ್ಸ್ ಅಧಿಕಾರಿಗಳು ತಿಳಿಸಿದ್ದಾರೆ.
ಪತ್ನಿಯಿಂದ ಪತಿಯ ಚಿನ್ನಾಭರಣ ಕಳವು ಆರೋಪ:ಪ್ರಕರಣ ದಾಖಲು
ಉಡುಪಿ, ಎ.18: ತನ್ನ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣಗಳನ್ನು ಪತ್ನಿಯೇ ಕಳವು ಮಾಡಿಕೊಂಡು ಹೋಗಿರುವುದಾಗಿ ಪತಿ ನೀಡಿದ ದೂರಿನಂತೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಾಪು ಉಚ್ಚಿಲದ ಕಿರಣ್ ಕುಮಾರ್ ಪಡುಬಿದ್ರಿಯ ಕಂಪೆನಿಯೊಂದರಲ್ಲಿ ಕೆಲಸವನ್ನು ಮಾಡಿಕೊಂಡಿದ್ದು, ಇವರು ವನಿತಾ ಎಂಬುವರೊಂದಿಗೆ 2016ರಲ್ಲಿ ಮದುವೆಯಾಗಿದ್ದರು. ಬಳಿಕ ದಾಂಪತ್ಯ ಜೀವನದಲ್ಲಿ ವೈಮನಸ್ಸು ಉಂಟಾಗಿ ಪ್ರಸ್ತುತ ಒಂದೇ ಮನೆಯಲ್ಲಿ ಬೇರೆ-ಬೇರೆಯಾಗಿ ಜೀವನ ಸಾಗಿಸುತ್ತಿದ್ದಾರೆ. ಕಿರಣ್ ಕುಮಾರ್ ತನಗೆ ಸಂಬಂಧಪಟ್ಟ ದಾಖಲಾತಿಗಳು ಹಾಗೂ ಬ್ಯಾಂಕ್ ಲಾಕರ್ ಕೀ ಯನ್ನು ಮನೆಯ ಅಲ್ಮಾರಿನಲ್ಲಿ ಇಟ್ಟಿದ್ದರು. ಎ.10ರಂದು ಕಿರಣ್ ಕುಮಾರ್ ಕೆಲಸಕ್ಕೆ ಹೋಗಿದ್ದಾಗ ವನಿತಾ ಅಲ್ಮಾರವನ್ನು ಕೀ ಮೇಕರ್ ಸಹಾಯದಿಂದ ಒಡೆದು ಅದರೊಳಗಿದ್ದ ಬ್ಯಾಂಕ್ ಲಾಕರ್ ಕೀ ಯನ್ನು ಕಳವು ಮಾಡಿಕೊಂಡಿದ್ದರು. ಬಳಿಕ ಲಾಕರ್ ಕೀಯನ್ನು ಬಳಸಿ ಕಿರಣ್ ಕುಮಾರ್ಗೆ ಸಂಬಂಧಪಟ್ಟ 23,67,690ರೂ. ಮೌಲ್ಯದ 169 ಗ್ರಾಂ ಚಿನ್ನವನ್ನು ಕಳವು ಮಾಡಿಕೊಂಡು ಹೋಗಿರುವುದಾಗಿ ದೂರಲಾಗಿದೆ.
ಮಕ್ಕಳು ಬರೆದ ತಂದೆ - ತಾಯಿಯ ನೆನಪುಗಳ ಅತ್ಯುತ್ತಮ ಸಾಹಿತ್ಯ ಕೃತಿ: ಪ್ರೊ. ಬಿ.ಎ.ವಿವೇಕ ರೈ
‘ಕಾರಂತರ ಸುಳಿಯಲ್ಲಿ’ ಅನುವಾದಿತ ಕೃತಿ ಲೋಕಾರ್ಪಣೆ
ಕಾಂಗ್ರೆಸ್ ಪಕ್ಷ ಎಂದಿಗೂ ಮುಸ್ಲಿಮರನ್ನು ಕೈ ಬಿಟ್ಟಿಲ್ಲ: ಶಾಸಕ ಎನ್.ಎ. ಹಾರಿಸ್
ಬೆಂಗಳೂರು: ಕಾಂಗ್ರೆಸ್ ಪಕ್ಷ ಎಂದಿಗೂ ಮುಸ್ಲಿಮರನ್ನು ಕೈ ಬಿಟ್ಟಿಲ್ಲ. ಚುನಾವಣೆಯಲ್ಲಿ ಸ್ಪರ್ಧಿಸಲು ನಮಗೆ ಟಿಕೆಟ್ ಕೊಡಿ ಎಂದು ಕೇಳುವುದು ನಮ್ಮ ಹಕ್ಕು. ಆದರೆ, ಯಾರಿಗೆ ಟಿಕೆಟ್ ಕೊಡಬೇಕು, ಯಾರಿಗೆ ಬೇಡ ಎಂದು ತೀರ್ಮಾನ ಮಾಡುವುದು ಪಕ್ಷಕ್ಕೆ ಬಿಟ್ಟ ವಿಚಾರ ಎಂದು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಹಾಗೂ ಶಾಸಕ ಎನ್.ಎ.ಹಾರಿಸ್ ತಿಳಿಸಿದರು. ಶನಿವಾರ ನಗರದಲ್ಲಿರುವ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಧಾನಪರಿಷತ್ ಸದಸ್ಯ ಅಬ್ದುಲ್ ಜಬ್ಬಾರ್ ಅವರನ್ನು ಕಾಂಗ್ರೆಸ್ ಪ್ರಾಥಮಿಕ ಸದಸ್ಯತ್ವದಿಂದ ವಜಾಗೊಳಿಸಿರುವುದು ಹಾಗೂ ಮುಖ್ಯಮಂತ್ರಿಯ ರಾಜಕೀಯ ಕಾರ್ಯದರ್ಶಿ ಹುದ್ದೆಯಿಂದ ನಸೀರ್ ಅಹ್ಮದ್ ಅವರನ್ನು ಬಿಡುಗಡೆ ಮಾಡಿರುವ ಕುರಿತು ಈ ಮೇಲಿನಂತೆ ಪ್ರತಿಕ್ರಿಯಿಸಿದರು. ಉಲಮಾಗಳು ರಾಜ್ಯದಲ್ಲಿನ ಪ್ರಸಕ್ತ ರಾಜಕೀಯ ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳಬೇಕು. ಏನೇ ಸಮಸ್ಯೆಗಳಿದ್ದರೂ ಅದನ್ನು ನಾಲ್ಕು ಗೋಡೆಗಳ ನಡುವೆ ಕೂತು ಮಾತುಕತೆಯ ಮೂಲಕ ಬಗೆಹರಿಸಿಕೊಳ್ಳಬೇಕು. ಮುಖ್ಯಮಂತ್ರಿ, ಕೆಪಿಸಿಸಿ ಅಧ್ಯಕ್ಷ ಹಾಗೂ ರಾಜ್ಯ ಉಸ್ತುವಾರಿ ಜೊತೆ ಮಾತುಕತೆ ನಡೆಸುವುದಾದರೆ ಅದಕ್ಕೆ ನಾವೆ ವ್ಯವಸ್ಥೆ ಮಾಡುತ್ತೇವೆ ಎಂದು ಅವರು ತಿಳಿಸಿದರು. ದಾವಣಗೆರೆ ಜಿಲ್ಲೆಯಲ್ಲಿ ಹಿರಿಯ ನಾಯಕರ ಪೈಕಿ ಅಬ್ದುಲ್ ಜಬ್ಬಾರ್ ಕೂಡ ಒಬ್ಬರು. ಉಪ ಚುನಾವಣೆಯಲ್ಲಿ ಸ್ಪರ್ಧಿಸಲು ಅವರು ಟಿಕೆಟ್ ಕೇಳಿದ್ದರು. ಆದರೆ, ಈಗಾಗಲೆ ಅವರು ಹಾಲಿ ವಿಧಾನಪರಿಷತ್ ಸದಸ್ಯರಾಗಿದ್ದಾರೆ. ಅವರು ಟಿಕೆಟ್ ಕೇಳುವುದರಲ್ಲಿ ತಪ್ಪೇನು ಇಲ್ಲ. ಆದರೆ, ಟಿಕೆಟ್ ಬೇರೆಯವರಿಗೆ ಘೋಷಣೆಯಾದ ನಂತರ ಏನೆಲ್ಲ ಬೆಳವಣಿಗೆ ಆಯಿತು ಎಂದು ಗಮನಿಸಬೇಕು ಎಂದು ಹಾರಿಸ್ ಹೇಳಿದರು. ಮುಸ್ಲಿಮರಿಗೆ ಈ ಬಾರಿ ಟಿಕೆಟ್ ಕೊಡುವಂತೆ ನಾವು ಕೇಳಿದೆವು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲರೂ ಒಂದಾಗಿ ಹೋಗಬೇಕು. ಅಬ್ದುಲ್ ಜಬ್ಬಾರ್ ವಿರುದ್ಧ ಕೈಗೊಂಡ ಕ್ರಮ ಇಡೀ ಸಮುದಾಯದ ವಿರುದ್ಧದ ಕ್ರಮ ಅಲ್ಲ. ಯಾರು ತಪ್ಪು ಮಾಡಿದ್ದಾರೋ ಅವರ ವಿರುದ್ಧ ಕ್ರಮ ಕೈಗೊಂಡಿದ್ದಾರೆ. ಅಲ್ಪಸಂಖ್ಯಾತ ಸಮುದಾಯದ ಎಲ್ಲರ ಮೇಲೂ ಕ್ರಮ ಕೈಗೊಂಡಿದ್ದಾರಾ? ಇಲ್ಲವಲ್ಲ ಎಂದು ಅವರು ತಿಳಿಸಿದರು. ನಸೀರ್ ಅಹ್ಮದ್ ಅವರು ಮುಖ್ಯಮಂತ್ರಿಯ ರಾಜಕೀಯ ಕಾರ್ಯದರ್ಶಿಯಾಗಿದ್ದರು. ಸಿದ್ದರಾಮಯ್ಯನವರ ಆಪ್ತರಾಗಿದ್ದಾರೆ. ಯಾವ ಕಾರಣಕ್ಕಾಗಿ ನಸೀರ್ ಅಹ್ಮದ್ ವಿರುದ್ಧ ಕ್ರಮ ಕೈಗೊಳ್ಳಲಾಯಿತು ಎಂದು ಗೊತ್ತಿಲ್ಲ. ಹಿಂದಿನ ಸರಕಾರದ ಅವಧಿಯಲ್ಲಿ ಅಝಾನ್, ಹಲಾಲ್, ಹಿಜಾಬ್, ಶಾಲೆ, ಕಾಲೇಜು, ಮದ್ರಸಾದ ವಿಚಾರಗಳಲ್ಲಿ ಏನೆಲ್ಲ ಬೆಳವಣಿಗೆ ಆಯಿತು ಎಂಬುದನ್ನು ನಾವು ಮರೆಯಬಾರದು ಎಂದು ಹಾರಿಸ್ ಹೇಳಿದರು. ನಮ್ಮ ಮೀಸಲಾತಿಯನ್ನೇ ಕಸಿದು ಬೇರೆ ಸಮುದಾಯಗಳಿಗೆ ಹಂಚಿದ್ದರು. ಈ ವಿಚಾರ ಈಗ ನ್ಯಾಯಾಲಯದಲ್ಲಿದೆ. ಆದಷ್ಟು ಬೇಗ ಈ ಸಮಸ್ಯೆಯನ್ನು ಬಗೆಹರಿಸಿ, ನಮ್ಮ ಮೀಸಲಾತಿ ನಮಗೆ ಸಿಗುವಂತೆ ಮಾಡಲು ಸರಕಾರ ಕ್ರಮ ಕೈಗೊಳ್ಳಲಿದೆ. ಈ ಸಂಬಂಧ ನಾವೆಲ್ಲ ಸೇರಿ ಒತ್ತಡ ಹಾಕುತ್ತಿದ್ದೇವೆ ಎಂದು ಹಾರಿಸ್ ತಿಳಿಸಿದರು.
ಸಿಂಗಾಪುರದ ಕಂಪೆನಿಯಿಂದ ಮಣಿಪಾಲದ ಕಂಪೆನಿಗೆ 33 ಕೋಟಿ ರೂ. ವಂಚನೆ: ಪ್ರಕರಣ ದಾಖಲು
ಮಣಿಪಾಲ, ಎ.18: ಸಿಂಗಾಪುರದ ಕಂಪೆನಿಯೊಂದು ಮಣಿಪಾಲ ಕಂಪೆನಿಗೆ 33 ಕೋಟಿ ರೂ. ಹಣ ವಂಚಿಸಿರುವ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದೀಲಿಪ್ ಆರ್.ಅಡಿಗ (35) ಎಂಬವರು ಮಣಿಪಾಲ ಲಕ್ಷ್ಮೀಂದ್ರ ನಗರದಲ್ಲಿ ಎಮ್.ಎನ್.ಶೆಟ್ಟಿ ಟೆಕ್ನಾಲಜಿ ಪ್ರವೈಟ್ ಲಿಮಿಟೆಡ್ ಕಂಪೆನಿಯನ್ನು ನಡೆಸಿಕೊಂಡಿದ್ದರು. ಸಿಂಗಾಪುರ ಕಂಪೆನಿಯೊಂದರ ಸಿಇಓ ಆನಂದರಾವ್ ಎಂಬವರು ದೀಲಿಪ್ ಗೆ ಕರೆ ಮಾಡಿ ಕಂಪನಿಯಲ್ಲಿ ತಯಾರಾಗುವ ಸಿಎಂಎಸ್ ಪ್ರೋಡೆಕ್ಟ್ನ್ನು ಪಡೆದುಕೊಳ್ಳುವ ಬಗ್ಗೆ ಮಾತುಕತೆ ನಡೆಸಿದ್ದರು. ದೀಲಿಪ್ ಹೇಳಿದ ವ್ಯಾಲ್ಯೂಶೆನ್ ಪಟ್ಟಿಯನ್ನು ಇಮೇಲ್ ಮುಖಾಂತರ ನೋಡಿ 2019ರ ಜೂನ್ನಲ್ಲಿ 35ಲಕ್ಷ ರೂ. ನಗದು ಹಾಗೂ ಸಿಂಗಾಪುರ ಕಂಪನಿಯ 17.5 ಲಕ್ಷ ಶೇರ್ಗಳನ್ನು ನೀಡುವುದಾಗಿ ಆನಂದ ರಾವ್ ತಿಳಿಸಿದ್ದನು. ಈ ಶೇರ್ ಮೂರು ವರ್ಷದ ಬಳಿಕ 33 ಕೋಟಿ ಆಗಲಿದ್ದು ಕಂಪನಿಯ ಶೇರ್ 3 ವರ್ಷದಲ್ಲಿ 9 ಸಾವಿರ ಕೋಟಿ ಆಗುವುದಾಗಿ ಸುಳ್ಳು ಮಾಹಿತಿಯನ್ನು ನೀಡಿದ್ದನು. 2020ರ ಎಪ್ರಿಲ್ನಲ್ಲಿ ಶೇರ್ ತೆಗೆದುಕೊಳ್ಳುವ ಅಗ್ರಿಮೆಂಟ್ ಕಳುಹಿಸಿ ಕೊಟ್ಟಿದ್ದು ಅಗ್ರಿಮೆಂಟ್ನಂತೆ ಇವರು ವ್ಯವಹಾರ ಮಾಡಿಕೊಂಡಿದ್ದರು. ಈ ಅಗ್ರಿಮೆಂಟಿನಲ್ಲಿ ವ್ಯವಹಾರ ಆಗುವಾಗ ಸಿಂಗಾಪುರದ ಕಂಪನಿಯಲ್ಲಿ 35 ಮಿಲಿಯನ್ ಶೇರ್ ಇತ್ತು ಎಂಬುವುದಾಗಿ ಸುಳ್ಳು ಮಾಹಿತಿಯನ್ನು ನಮೂದಿಸಲಾಗಿತ್ತು. ಈ ಅಗ್ರಿಮೆಂಟ್ಗೆ ದೀಲಿಪ್ ಹಾಗೂ ಆನಂದ ರಾವ್ ಸಹಿ ಮಾಡಿದ್ದರು. ಅಗ್ರಿಮೆಂಟ್ ಆದ ಬಳಿಕ ಕಂಪನಿಯವರು ಹೇಳಿದಂತೆ ದೀಲಿಪ್ ಪ್ರೋಡೆಕ್ಟನ್ನು ಅವರಿಗೆ ಕಳುಹಿಸಿದ್ದರು. 2023ರ ಎ.6ರಂದು ಅಗ್ರಿಮೆಂಟ್ ಪ್ರಕಾರ ಮಾಡಿಕೊಂಡ ಒಪ್ಪಂದವು 3 ವರ್ಷಕ್ಕೆ ಮುಗಿದಿದ್ದು. ಅದರ ಪ್ರಕಾರ ವ್ಯಾಲ್ಯೂಷನ್ ವರದಿಯನ್ನು ನೀಡುವಂತೆ ಇ-ಮೇಲ್ ಮೂಲಕ ಕೋರಿಕೊಂಡಿದ್ದರು. ಆನಂದ ರಾವ್ ಕಂಪನಿಯ ಶೇರ್ ಪಾಲುದಾರರಾದ ಶ್ಯಾಮ್ದೀಪ್ ಎಂಬವರಿಗೆ 2024ರ ಅ.6ರಂದು ಇ-ಮೇಲ್ ಮುಖಾಂತರ ಒಂದು ಮಾಹಿತಿಯನ್ನು ಕಳುಹಿಸಿದ್ದು ಆ ಮಾಹಿತಿಯಲ್ಲಿ ಒಪ್ಪಂದದ ಬಗ್ಗೆ ಧೃಡಪಡಿಸಿದ್ದರು. ಅಲ್ಲದೇ ಪೋನ್ ಮೂಲಕ ಶ್ಯಾಮ್ದೀಪ್ಗೆ ವೀರಪ್ಪನ್ ಸುಬ್ರಹ್ಮಣ್ಯ ಅವರಿಂದ ಆನಂದ್ ರಾವ್ ಪೋನ್ ಮಾಡಿಸಿ 6.9 ಕೋಟಿ ನಗದು ಮತ್ತು 20 ಲಕ್ಷ ಶೇರ್ನ್ನು ನೀಡುವುದಾಗಿ ತಿಳಿಸಿದ್ದರು. ಆನಂದರಾವ್, ಕಂಪನಿಯ ಚೇರ್ಮೆನ್ ಪೀಟರ್ ಜಪ್ರೀ ಜರ್ಮೈನ್ ಹಾಗೂ ಸಿ.ಟಿ.ಓ ರಾಘವೇಂದ್ರ ಅಗರವಾಲ, ನಿರ್ದೇಶಕರಾದ ಸ್ಮಿತಾ ಶಾಹು ಮತ್ತು ಕಂಪನಿ ಬೋರ್ಡ್ ಸದಸ್ಯರಾದ ಅಸುತೋಷ್ ಶ್ರೀವತ್ಸವ ಸೇರಿಕೊಂಡು ದೀಲಿಪ್ ಕಂಪನಿಯಲ್ಲಿ ವ್ಯವಹಾರ ಮಾಡುವಂತೆ ನಂಬಿಸಿ ಕಂಪನಿಯಿಂದ ಬರಬೇಕಾದ 33 ಕೋಟಿ ರೂ. ಹಣವನ್ನು ನೀಡದೇ ನಂಬಿಸಿ ಮೋಸ ಮಾಡಿರುವುದಾಗಿ ದೂರಲಾಗಿದೆ.
ಮಹಿಳಾ ಮೀಸಲಾತಿ ತಡೆದ ವಿಪಕ್ಷಗಳ ಕೃತ್ಯ 'ಭ್ರೂಣಹತ್ಯೆ'ಗೆ ಸಮಾನ: ಕಾಂಗ್ರೆಸ್, ಟಿಎಂಸಿ, ಡಿಎಂಕೆ ವಿರುದ್ಧ ಮೋದಿ ಗುಡುಗು
ನವದೆಹಲಿ: ಮಹಿಳಾ ಮೀಸಲಾತಿ ಮಸೂದೆ ವಿರುದ್ಧ ಪ್ರತಿಪಕ್ಷಗಳು ಕೈಗೊಂಡಿರುವ ನಿಲುವನ್ನು ಪ್ರಧಾನಿ ನರೇಂದ್ರ ಮೋದಿ ತೀವ್ರವಾಗಿ ಖಂಡಿಸಿದ್ದಾರೆ. ವಿರೋಧ ಪಕ್ಷಗಳ ಈ ನಡೆಯನ್ನು 'ಹೆಣ್ಣು ಭ್ರೂಣಹತ್ಯೆ'ಗೆ ಹೋಲಿಸಿರುವ ಅವರು, ಕಾಂಗ್ರೆಸ್, ತೃಣಮೂಲ ಕಾಂಗ್ರೆಸ್ (TMC), ಮತ್ತು ಡಿಎಂಕೆ ಪಕ್ಷಗಳೇ ಇದಕ್ಕೆ ನೇರ ಹೊಣೆ ಹಾಗೂ ಅಪರಾಧಿಗಳು ಎಂದು ಗುಡುಗಿದ್ದಾರೆ. ನಮ್ಮ ಅತ್ಯುತ್ತಮ ಪ್ರಯತ್ನಗಳ ಹೊರತಾಗಿಯೂ ನಾರಿ ಶಕ್ತಿಯ
Belur | ಕೊನೆಗೂ ಒಂಟಿ ಕೋರೆ ಕಾಡಾನೆ ಸೆರೆ; ಮೂರು ದಿನಗಳ ಕಾರ್ಯಾಚರಣೆ ಯಶಸ್ವಿ
ಬೇಲೂರು: ತಾಲೂಕಿನಲ್ಲಿ ಆತಂಕ ಸೃಷ್ಟಿಸಿದ್ದ ಒಂಟಿ ಕೋರೆ ಕಾಡಾನೆಯನ್ನು ಸೆರೆಹಿಡಿಯುವ ಕಾರ್ಯಾಚರಣೆ ಮೂರನೇ ದಿನ ಯಶಸ್ವಿಯಾಗಿ ಪೂರ್ಣಗೊಂಡಿದೆ. ಕಳೆದ ಕೆಲವು ದಿನಗಳಿಂದ ಜನರಲ್ಲಿ ಭೀತಿ ಮೂಡಿಸಿದ್ದ ಈ ದೈತ್ಯಾಕಾರದ ಕಾಡಾನೆಯನ್ನು ಹಿಡಿಯಲು ಅರಣ್ಯ ಇಲಾಖೆಯು ವಿಶೇಷ ತಂಡವನ್ನು ರಚಿಸಿ ಹಗಲು-ರಾತ್ರಿ ಕಾರ್ಯಾಚರಣೆ ನಡೆಸುತ್ತಿತ್ತು. ಇಂದು ಬೆಳಿಗ್ಗೆ ಕಾರ್ಯಾಚರಣೆ ಆರಂಭಿಸಿದ ಅರಣ್ಯ ಇಲಾಖೆಯ ತಂಡವು ಬೇಲೂರು ತಾಲೂಕಿನ ಕಾನಳ್ಳಿ ಅರಣ್ಯ ಪ್ರದೇಶದಲ್ಲಿ ಕಾಡಾನೆಯಿರುವ ಸ್ಥಳವನ್ನು ನಿಖರವಾಗಿ ಪತ್ತೆಹಚ್ಚಿತು. ಇಟಿಎಫ್ (ಎಲಿಫೆಂಟ್ ಟಾಸ್ಕ್ ಫೋರ್ಸ್) ಸಿಬ್ಬಂದಿ ಹಾಗೂ ಅನುಭವಿಗಳಾದ ಕುಮ್ಕಿ ಆನೆಗಳ ಸಹಾಯದಿಂದ ಕಾಡಾನೆಯನ್ನು ಸುತ್ತುವರಿದು ನಿಯಂತ್ರಣಕ್ಕೆ ತರಲು ಕಾರ್ಯಚರಣೆ ಆರಂಭಿಸಲಾಯಿತು. ಕಾರ್ಯಾಚರಣೆಯಲ್ಲಿ ಪ್ರಮುಖ ಘಟ್ಟವಾಗಿ, ವೈದ್ಯರು ಕಾಡಾನೆಗೆ ಅರವಳಿಕೆ ಚುಚ್ಚುಮದ್ದು ನೀಡಿದರು. ಇಂಜೆಕ್ಷನ್ ನೀಡುತ್ತಿದ್ದಂತೆಯೇ, ಒಂಟಿ ಕೋರೆ ಕಾಡಾನೆ ಹಾಗೂ ಅದರ ಜೊತೆಯಲ್ಲಿದ್ದ ‘ಕ್ಯಾಪ್ಟನ್’ ಕಾಡಾನೆ ಏಕಾಏಕಿ ಓಡಲು ಆರಂಭಿಸಿತು. ಇದರಿಂದ ಕೆಲಕಾಲ ಗೊಂದಲ ಉಂಟಾದರೂ, ಕಾರ್ಯಾಚರಣಾ ತಂಡವು ಸಮರ್ಥವಾಗಿ ಎರಡೂ ಕಾಡಾನೆಗಳನ್ನು ಬೇರ್ಪಡಿಸಲು ಯಶಸ್ವಿಯಾಯಿತು. ಸ್ವಲ್ಪ ದೂರ ಓಡಿದ ಬಳಿಕ ಅರವಳಿಕೆಯ ಪರಿಣಾಮದಿಂದ ಒಂಟಿ ಕೋರೆ ಕಾಡಾನೆ ಪ್ರಜ್ಞೆ ತಪ್ಪಿ ನೆಲಕ್ಕುರುಳಿತು. ತಕ್ಷಣವೇ ಕುಮ್ಕಿ ಆನೆಗಳು ಕಾಡಾನೆಯನ್ನು ಸುತ್ತುವರಿದು ಭದ್ರತೆ ಒದಗಿಸಿತು. ನಂತರ ಸಿಬ್ಬಂದಿ ಕಾಡಾನೆಗೆ ನೀರು ಹಾಕಿ ಆರೈಕೆ ನಡೆಸಿ, ಸುರಕ್ಷಿತವಾಗಿ ಹಗ್ಗಗಳನ್ನು ಕಟ್ಟುವ ಮೂಲಕ ಸ್ಥಳಾಂತರಕ್ಕೆ ಸಿದ್ಧತೆ ನಡೆಸಿದರು. ಈ ಯಶಸ್ವಿ ಕಾರ್ಯಾಚರಣೆಯಿಂದ ಹಲವು ದಿನಗಳಿಂದ ಆತಂಕದಲ್ಲಿದ್ದ ಬೇಲೂರು ಭಾಗದ ಜನರು ನಿಟ್ಟುಸಿರು ಬಿಟ್ಟಿದ್ದಾರೆ. ಅರಣ್ಯ ಇಲಾಖೆಯ ಧೈರ್ಯಶಾಲಿ ಕ್ರಮ ಹಾಗೂ ಸಮನ್ವಯದಿಂದ ದೊಡ್ಡ ಅಪಾಯ ತಪ್ಪಿದಂತಾಗಿದೆ. ಸ್ಥಳಾಂತರದ ನಂತರ ಕಾಡಾನೆಯನ್ನು ಸುರಕ್ಷಿತ ಅರಣ್ಯ ಪ್ರದೇಶಕ್ಕೆ ಕಳುಹಿಸುವ ಯೋಜನೆ ರೂಪಿಸಲಾಗಿದ್ದು, ಮುಂದಿನ ಕ್ರಮ ಗಳನ್ನು ಇಲಾಖೆಯು ಕೈಗೊಂಡಿದೆ.
ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಗೆಲ್ಲಬಹುದಾಗಿದ್ದ ಪಂದ್ಯವನ್ನು RCB ಕಳೆದುಕೊಂಡದ್ದು ಹೇಗೆ? ಇಲ್ಲಿದೆ 6 ಕಾರಣ
RCB Vs DC Match Highlights- ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಆರ್ಸಿಬಿ ತಂಡವು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 6 ವಿಕೆಟ್ಗಳ ಆಘಾತಕಾರಿ ಸೋಲು ಅನುಭವಿಸಿತು. ಉತ್ತಮ ಆರಂಭದ ಹೊರತಾಗಿಯೂ ಮಧ್ಯಮ ಕ್ರಮಾಂಕದ ವೈಫಲ್ಯದಿಂದ ಆರ್ಸಿಬಿ 175 ರನ್ಗಳ ಸಾಧಾರಣ ಮೊತ್ತಕ್ಕೆ ತೃಪ್ತಿಪಟ್ಟಿತು. ಅಕ್ಷರ್ ಪಟೇಲ್ ಮತ್ತು ಕುಲದೀಪ್ ಯಾದವ್ ಅವರ ಚಾಣಾಕ್ಷ ಬೌಲಿಂಗ್ ಆರ್ಸಿಬಿಯನ್ನು ಕಟ್ಟಿಹಾಕಿತು. ಡೆಲ್ಲಿ ತಂಡ ಆರಂಭಿಕ ಕುಸಿತ ಕಂಡರೂ, ಕೆಎಲ್ ರಾಹುಲ್ (57) ಮತ್ತು ಸ್ಟಬ್ಸ್ (60*) ಅವರ ಸಮಯೋಚಿತ ಜೊತೆಯಾಟ ಹಾಗೂ ಅಂತಿಮ ಓವರ್ನಲ್ಲಿ ಡೇವಿಡ್ ಮಿಲ್ಲರ್ ಸಿಡಿಸಿದ ಸಿಕ್ಸರ್ಗಳು ಡೆಲ್ಲಿಗೆ ರೋಚಕ ಗೆಲುವು ತಂದುಕೊಟ್ಟವು.
ಕೊಡವೂರು ಶಂಕರನಾರಾಯಣ ದೇವಸ್ಥಾನದಲ್ಲಿ ಮಹಾ ರುದ್ರಯಾಗ
ಉಡುಪಿ, ಎ.18: ಕೊಡವೂರಿನಲ್ಲಿರುವ ಮಹೋತಭಾರ ಶ್ರೀಶಂಕರ ನಾರಾಯಣ ದೇವಸ್ಥಾನದಲ್ಲಿ ಅಪರೂಪದಲ್ಲಿ ಅಪರೂಪದ್ದಾದ ಮಹಾ ರುದ್ರಯಾಗ ಮೇ ತಿಂಗಳ 14ರಿಂದ 19ರವರೆಗೆ ನಡೆಯಲಿದೆ ಎಂದು ಮಹಾ ರುದ್ರಯಾಗ ಸಮಿತಿಯ ಕಾರ್ಯಾಧ್ಯಕ್ಷ ಪ್ರಸಾದ್ರಾಜ್ ಕಾಂಚನ್ ತಿಳಿಸಿದ್ದಾರೆ. ಕೊಡವೂರು ಶಂಕರನಾರಾಯಣ ದೇವಸ್ಥಾನದ ಆವರಣದಲ್ಲಿ ಇಂದು ಕರೆದ ಸುದ್ದಿಗೋಷ್ಠಿಯಲ್ಲಿ ಅವರು ಈ ವಿಷಯ ತಿಳಿಸಿದರು. ಆರು ದಿನಗಳ ಕಾಲ ನಡೆಯುವ ರುದ್ರಯಾಗದ ಸಂದರ್ಭದಲ್ಲಿ ವಿವಿಧ ಧಾರ್ಮಿಕ, ಮನರಂಜನೆ, ಕ್ರೀಡೋತ್ಸವ, ಆರೋಗ್ಯ ಶಿಬಿರ ಹಾಗೂ ಉದ್ಯೋಗ ಮೇಳವನ್ನೂ ಹಮ್ಮಿಕೊಳ್ಳಲಾಗುವುದು ಎಂದವರು ತಿಳಿಸಿದರು. ಇದಕ್ಕೆ ಪೂರ್ವಭಾವಿಯಾಗಿ ಮೇ 10ರಿಂದ 20ರವರೆಗೆ ಎಲ್ಲಾ ವಯೋಮಾನದವರ ಮನೋರಂಜನೆಗಾಗಿ ಬೃಹತ್ ವಸ್ತು ಪ್ರದರ್ಶನ, ಮಾರಾಟ ಮೇಳವನ್ನು ಆಯೋಜಿಸಲಾಗುತ್ತದೆ. ಮೇ 14ರಂದು ಮಲ್ಪೆ ಯಿಂದ ಕೊಡವೂರು ದೇವಸ್ಥಾನದವರೆಗೆ ಭವ್ಯ ಹೊರೆಕಾಣಿಕೆ ಮೆರವಣಿಯನ್ನು ಸಹ ಆಯೋಜಿಸಲಾಗುತ್ತದೆ ಎಂದು ಕಾಂಚನ್ ತಿಳಿಸಿದರು. ಮೇ15ರಿಂದ ಮಹಾ ರುದ್ರಯಾಗ, ಗಣಯಾಗದ ಧಾರ್ಮಿಕ ವಿಧಿವಿಧಾನಗಳು ಪ್ರಾರಂಭಗೊಳ್ಳುತ್ತವೆ.ಪ್ರತಿದಿನ ಸಂಜೆ ಧಾರ್ಮಿಕ ಹಾಗೂ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸಹ ಹಮ್ಮಿಕೊಳ್ಳಲಾಗುತ್ತದೆ. ಮೇ 16ರಂದು ಸಾರ್ವಜನಿಕರಿಗಾಗಿ ಆರೋಗ್ಯ ಶಿಬಿರ ನಡೆಯಲಿದೆ ಎಂದರು. ಮೇ 17ರಂದು ಮಲ್ಪೆ ಕಡಲತೀರದಲ್ಲಿ ತುಳುನಾಡಿನ ಸಾಂಪ್ರದಾಯಿಕ ಕ್ರೀಡೋತ್ಸವ ನಡೆಯಲಿವೆ. ಅಲ್ಲದೆ ಅಂದು ಸಂಜೆ ಮಲ್ಪೆ ಕಡಲತೀರದಲ್ಲಿ ವಾರಣಸಿಯ ಪುರೋಹಿತರಿಂದ ಗಂಗಾರತಿಯನ್ನು ಆಯೋಜಿಸಲಿದ್ದು, ಇದರಲ್ಲಿ ರಾಜ್ಯದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಭಾಗವಹಿಸುವರು. 18ರಂದು ಬೃಹತ್ ಉದ್ಯೋಗ ಮೇಳ ನಡೆಯಲಿದ್ದು, ಈಗಾಗಲೇ ಹಲವು ಬಹುರಾಷ್ಟ್ರೀಯ ಕಂಪೆನಿಗಳು ಸೇರಿ 50ಕ್ಕೂ ಅಧಿಕ ಕಂಪೆನಿಗಳು ನೊಂದಣಿಗೊಂಡಿದ್ದು, ಒಟ್ಟಾರೆ 100 ಕಂಪೆನಿಗಳು ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದರು. ವಿಶೇಷವಾಗಿ ಐದು ಸಾವಿರ ಮಹಿಳೆಯರಿಗೆ ಮಹಾ ರುದ್ರಯಾಗ ಸಂಕಲ್ಪದಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸ ಲಾಗುವುದು. ಮೇ 19ರಂದು ಮಹಾ ರುದ್ರಯಾಗದ ಪೂರ್ಣಾಹುತಿ ನಡೆಯಲಿದೆ. ಪ್ರತಿದಿನದ ಸಾಂಸ್ಕೃತಿಕ ಕಾರ್ಯಕ್ರಮಗಳು ಸಂಜೆ 5ರಿಂದ ರಾತ್ರಿ 8ಗಂಟೆಯವರೆಗೆ ನಡೆಯಲಿದೆ. ಪತ್ರಿಕಾಗೋಷ್ಠಿಯಲ್ಲಿ ಶಂಕರನಾರಾಯಣ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಪ್ರಕಾಶ್ ಕೊಡವೂರು, ವಾದಿರಾಜ ತಂತ್ರಿ ಪುತ್ತೂರು, ತಾರನಾಥ ಪೂಜಾರಿ, ರಮೇಶ್ ತಿಂಗಳಾಯ, ಬಾಲಕೃಷ್ಣ ಕೊಡವೂರು, ಧನಂಜಯ ಮಲ್ಪೆ, ನಂದಕಿಶೋರ್, ವಾದಿರಾಜ ಮುಂತಾದವರು ಉಪಸ್ಥಿತರಿದ್ದರು.
ಎ.20ರಂದು ಉಡುಪಿ ಜಿಲ್ಲಾ ಬಾಸ್ಕೆಟ್ಬಾಲ್ ಸಂಘ ಉದ್ಘಾಟನೆ
ಉಡುಪಿ, ಎ.18: ಹೊಸದಾಗಿ ಅಸ್ತಿತ್ವಕ್ಕೆ ಬರಲಿರುವ ಉಡುಪಿ ಜಿಲ್ಲಾ ಬಾಸ್ಕೆಟ್ಬಾಲ್ ಅಸೋಸಿಯೇಷನ್ಗೆ ಕರ್ನಾಟಕ ರಾಜ್ಯ ಬಾಸ್ಕೆಟ್ಬಾಲ್ ಅಸೋಸಿಯೇಷನ್ನಿಂದ ಅಧಿಕೃತ ಮಾನ್ಯತೆ ಲಭಿಸಿದ್ದು, ಸಂಘದ ಉದ್ಘಾಟನೆ ಎ.20ರಂದು ಸೋಮವಾರ ಮಣಿಪಾಲದ ಮಾಧವಕೃಪಾ ಶಾಲೆಯ ಆವರಣದಲ್ಲಿ ಉದ್ಘಾಟನೆಗೊಳ್ಳಲಿದೆ ಎಂದು ಅಸೋಸಿಯೇಷನ್ನ ಅಧ್ಯಕ್ಷ ಪ್ರಸಾದ್ರಾಜ್ ಕಾಂಚನ್ ತಿಳಿಸಿದ್ದಾರೆ. ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಘದ ಉದ್ಘಾಟನೆಯೊಂದಿಗೆ 16, 17 ಹಾಗೂ 19 ವರ್ಷದೊಳಗಿನ ವಯೋಮಿತಿಯ ಬಾಲಕ-ಬಾಲಕಿಯರಿಗಾಗಿ ಮೊದಲ ಜಿಲ್ಲಾ ಮಟ್ಟದ ಬಾಸ್ಕೆಟ್ಬಾಲ್ ಟೂರ್ನಿಯೂ ನಡೆಯಲಿದೆ ಎಂದರು. ಬಾಸ್ಕೆಟ್ಬಾಲ್ ಸಂಘಟನೆ ಉಡುಪಿ ಜಿಲ್ಲೆಯಲ್ಲಿ ಪ್ರಾರಂಭಗೊಂಡು 25 ವರ್ಷಗಳಾದರೂ, ರಾಜ್ಯ ಸಂಘದ ಮಾನ್ಯತೆ ಪಡೆದ ಅಧಿಕೃತ ಸಂಘವೊಂದು ಇದುವರೆಗೆ ಇದ್ದಿರಲಿಲ್ಲ. ಈ ಕೊರತೆಯನ್ನು ಇದೀಗ ನೀಗಿಸಲಾಗಿದ್ದು, ಇದರಿಂದ ರಾಜ್ಯ ಮಟ್ಟದ ಬಾಸ್ಕೆಟ್ಬಾಲ್ ಟೂರ್ನಿಗಳಲ್ಲಿ ಜಿಲ್ಲಾ ತಂಡ ವೊಂದು ಭಾಗವಹಿಸಲು ಸಾಧ್ಯವಾಗಲಿದೆ ಎಂದರು. ಸಂಘದ ಮನವಿಗೆ ಪೂರಕವಾಗಿ ಸ್ಪಂಧಿಸಿರುವ ರಾಜ್ಯ ಸಂಸ್ಥೆ ಇದೀಗ ತನ್ನ ನೇತೃತ್ವದ ಸಂಘಕ್ಕೆ ಅಧಿಕೃತ ಮಾನ್ಯತೆ ನೀಡಿದೆ. ಅಜ್ಜರಕಾಡಿನಲ್ಲಿರುವ ಜಿಲ್ಲಾ ಕ್ರೀಡಾಂಗಣದಲ್ಲಿ ಬಾಸ್ಕೆಟ್ಬಾಲ್ಗಾಗಿ ಸಿಂಥೆಟಿಕ್ ಕೋರ್ಟ್ ಒಂದರ ನಿರ್ಮಾಣ ನಡೆಯಲಿದೆ. ಬಳಿಕ ಇಲ್ಲಿ ವಿವಿಧ ಟೂರ್ನಿಗಳನ್ನು ನಡೆಸಲು ಸಾಧ್ಯವಾಗಲಿದೆ ಎಂದು ಪ್ರಸಾದ್ರಾಜ್ ಕಾಂಚನ್ ತಿಳಿಸಿದರು. ಜಿಲ್ಲಾ ಬಾಸ್ಕೆಟ್ಬಾಲ್ ಸಂಘವನ್ನು ಎ.20ರಂದು ಬೆಳಗ್ಗೆ 9:30ಕ್ಕೆ ಮಾಹೆ ವಿವಿಯ ಪ್ರೊ ಚಾನ್ಸಲರ್ ಡಾ.ಎಚ್.ಎಸ್. ಬಲ್ಲಾಳ್ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಎಸ್ಪಿ ಹರಿರಾಮ್ ಶಂಕರ್, ಉಡುಪಿ ಜಿಲ್ಲಾ ಅಥ್ಲೆಟಿಕ್ ಸಂಸ್ಥೆಯ ಅಧ್ಯಕ್ಷ ಹರಿಪ್ರಸಾದ್ ರೈ, ಮಾಜಿ ಅಂತಾರಾಷ್ಟ್ರೀಯ ಬಾಸ್ಕೆಟ್ಬಾಲ್ ಆಟಗಾರ ಜುಗನ್ ಎಸ್.ಧ್ಯಾನೇಶ್ವರನ್, ಮಾಧವ ಕೃಪಾ ಶಾಲೆಯ ಪ್ರಿನ್ಸಿಪಾಲ್ ಸ್ವಾತಿ ಕುಲಕರ್ಣಿ ಹಾಗೂ ಕರೆಸ್ಪಾಡೆಂಟ್ ಚಂದ್ರಶೇಖರ ಪ್ರಭು ಭಾಗವಹಿಸಲಿದ್ದಾರೆ. ಜಿಲ್ಲಾ ಬಾಸ್ಕೆಟ್ಬಾಲ್ ಟೂರ್ನಿಯ ಸಮಾರೋಪ ಹಾಗೂ ಬಹುಮಾನ ವಿತರಣಾ ಸಮಾರಂಭ ಸಂಜೆ 5:30ಕ್ಕೆ ನಡೆಯಲಿದ್ದು, ಜಿಲ್ಲಾ ಕ್ರೀಡಾಧಿಕಾರಿ ಡಾ.ರೋಶನ್ಕುಮಾರ್ ಶೆಟ್ಟಿ, ಸಂಘದ ಉಪಾದ್ಯಕ್ಷ ಅಮ್ಮುಂಜೆ ಪ್ರಭಾಕರ ನಾಯಕ್, ಡಾ.ಕೆ.ಶ್ರೀಧರ್ ರಂಗನಾಥ ಪೈ, ಸ್ವಾತಿ ಕುಲಕರ್ಣಿ ಉಪಸ್ಥಿತರಿರುವರು ಎಂದರು. ಉದ್ಘಾಟನಾ ಸಮಾರಂಭದ ಬಳಿಕ ಜಿಲ್ಲಾ ಮಟ್ಟದ ವಿವಿಧ ವಯೋಮಾನ ಬಾಸ್ಕೆಟ್ಬಾಲ್ ಪಂದ್ಯಾಟ ನಡೆಯಲಿದೆ. ಪ್ರತಿ ವಿಭಾಗದಲಿಲ ತಲಾ ಆರು ತಂಡಗಳು ಭಾಗವಹಿಸಲಿವೆ. ಮುಂದೆ ವಿವಿಧ ವಿದ್ಯಾಸಂಸ್ಥೆ ಗಳಲ್ಲಿರುವ ಬಾಸ್ಕೆಟ್ಬಾಲ್ ಕೋರ್ಟ್ಗಳನ್ನು ಬಳಸಿಕೊಂಡು ಜಿಲ್ಲೆಯ ಬಾಸ್ಕೆಟ್ಬಾಲ್ ಆಸಕ್ತ ವಿದ್ಯಾರ್ಥಿಗಳಿಗೆ ತರಬೇತಿ ನೀಡಲಾಗುತ್ತದೆ ಎಂದು ಪ್ರಸಾದ್ರಾಜ್ ಕಾಂಚನ್ ನುಡಿದರು. ಪತ್ರಿಕಾಗೋಷ್ಠಿಯಲ್ಲಿ ಸಂಘದ ಕಾರ್ಯದರ್ಶಿ ಎ.ಕೆ.ಹುಸೇನ್, ಖಜಾಂಚಿ ವಿನಯಕ್, ಕಾರ್ಯಕಾರಿ ಸಮಿತಿ ಸದಸ್ಯ ನಂದಕಿಶೋರ್ ಉಪಸ್ಥಿತರಿದ್ದರು.
ಹೊಸದಿಲ್ಲಿ,ಎ.18: ಹಾರ್ಮುಝ್ ಜಲಸಂಧಿಯಲ್ಲಿ ಶನಿವಾರ ಭಾರತೀಯ ಧ್ವಜ ಹೊತ್ತ ಹಡಗಿನ ಮೇಲೆ ನಡೆದ ಗುಂಡಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿ ಭಾರತವು ಇರಾನ್ ರಾಯಭಾರಿ ಡಾ. ಮೊಹಮ್ಮದ್ ಫಥಾಲಿ ಅವರನ್ನು ಕರೆಸಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಪ್ರದೇಶದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆಯ ನಡುವೆಯೇ ಈ ರಾಜತಾಂತ್ರಿಕ ಕ್ರಮ ಕೈಗೊಳ್ಳಲಾಗಿದೆ. ಸರಕಾರಿ ಮೂಲಗಳ ಪ್ರಕಾರ, ನಾಗರಿಕ ಸಾಗಣೆಯಲ್ಲಿ ತೊಡಗಿದ್ದ ಹಡಗುಗಳ ಮೇಲೆ ಇರಾನ್ ಪಡೆಗಳು ಗುಂಡು ಹಾರಿಸಿದ ಘಟನೆಗಳ ಕುರಿತು ಗಂಭೀರ ಪ್ರಶ್ನೆಗಳು ಕೇಳಿಬಂದಿವೆ. ಈ ಹಿನ್ನೆಲೆಯಲ್ಲಿ ಭಾರತವು ತನ್ನ “ಗಂಭೀರ ಕಳವಳ ಮತ್ತು ಅಸಮಾಧಾನ”ವನ್ನು ವ್ಯಕ್ತಪಡಿಸಿದೆ. ಕಾರ್ಯತಂತ್ರದ ದೃಷ್ಟಿಯಿಂದ ಅತ್ಯಂತ ಮಹತ್ವದ ಜಲಮಾರ್ಗವಾಗಿರುವ ಹಾರ್ಮುಝ್ ಜಲಸಂಧಿಯಲ್ಲಿ ಭಾರತೀಯ ಧ್ವಜ ಹೊತ್ತ ಹಡಗಿನ ಮೇಲಿನ ದಾಳಿಯ ಘಟನೆ ಬಳಿಕ ವಿದೇಶಾಂಗ ಸಚಿವಾಲಯವು ತಕ್ಷಣ ಕ್ರಮ ಕೈಗೊಂಡು ಇರಾನ್ ರಾಯಭಾರಿಯನ್ನು ಕರೆಸಿದೆ ಎಂದು ತಿಳಿದುಬಂದಿದೆ. ಇದೇ ವೇಳೆ, ಘಟನೆಯ ಕುರಿತು ಟೆಹ್ರಾನ್ನಿಂದ ಸ್ಪಷ್ಟೀಕರಣ ಪಡೆಯುವ ನಿರೀಕ್ಷೆಯಿದೆ. ವಿಶ್ವದ ಅತ್ಯಂತ ಜನನಿಬಿಡ ಸಮುದ್ರ ಮಾರ್ಗಗಳಲ್ಲಿ ಒಂದಾದ ಈ ಜಲಸಂಧಿಯಲ್ಲಿ ಸಂಚರಿಸುವ ಹಡಗುಗಳ ವಿರುದ್ಧ ಇರಾನ್ ಪಡೆಗಳು ಯಾವ ಅಧಿಕಾರದಡಿ ದಾಳಿ ನಡೆಸಿವೆ ಎಂಬ ಪ್ರಶ್ನೆಯನ್ನು ಭಾರತ ಮುಂದಿಟ್ಟಿದೆ.
ಬೆಂಗಳೂರು: ‘ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಉಳಿಸಿಕೊಳ್ಳುವ ಹೋರಾಟದಲ್ಲಿ ಕಾಂಗ್ರೆಸ್ ನೇತೃತ್ವದ ವಿಪಕ್ಷಗಳು ಹಾಗೂ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರ ಪಾತ್ರ ಭವಿಷ್ಯತ್ತಿನಲ್ಲಿ ಅತ್ಯಂತ ನಿರ್ಣಾಯಕವಾಗಿರಲಿದೆ’ ಎಂದು ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ತಿಳಿಸಿದ್ದಾರೆ. ಶನಿವಾರ ಎಕ್ಸ್ ನಲ್ಲಿ ಪೋಸ್ಟ್ ಹಾಕಿರುವ ಅವರು, ‘ರಾಹುಲ್ ಗಾಂಧಿ ನೇತೃತ್ವದಲ್ಲಿ ದೇಶದ ವಿರೋಧ ಪಕ್ಷಗಳು ತೋರಿಸಿದ ನಿಲುವು, ಕೇವಲ ಮಸೂದೆಗಳ ವಿರುದ್ಧವಲ್ಲ, ಅದರ ಹಿಂದಿರುವ ಆರೆಸೆಸ್ಸ್ ಕೇಂದ್ರಿತ ಸಿದ್ಧಾಂತಾತ್ಮಕ ಚಿಂತನೆಯನ್ನು ಸೋಲಿಸಿದ ವಿಪಕ್ಷಗಳ ಒಗ್ಗಟ್ಟಿನ ಹೋರಾಟಕ್ಕೆ ಸಿಕ್ಕ ಜಯ. ಇದು ಸಂವಿಧಾನ ಉಳಿಸುವ ಸಂಘಟಿತ ಹೋರಾಟಕ್ಕೆ ಸಿಕ್ಕ ಜಯ. ಅಂತಿಮವಾಗಿ ಈ ಹೋರಾಟ ಇನ್ನೂ ಮುಗಿದಿಲ್ಲ. ಇದು ಸಂಸತ್ತಿನ ಒಳಗೆ-ಹೊರಗೆ ಮುಂದುವರಿಯುವ ಸಿದ್ಧಾಂತಗಳ ಸಂಘರ್ಷ’ ಎಂದು ಹೇಳಿದ್ದಾರೆ. ‘ಭಾರತ ದೇಶವು ಸ್ವಾತಂತ್ರ್ಯವನ್ನು ಪಡೆದದ್ದು ಲಕ್ಷಾಂತರ ಜನರ ತ್ಯಾಗ, ಹೋರಾಟ ಮತ್ತು ಬಲಿದಾನದ ಫಲ. ಆದರೆ ಆ ಸ್ವಾತಂತ್ರ್ಯದ ಆಶಯವನ್ನು ಕ್ರಮೇಣವಾಗಿ, ವ್ಯವಸ್ಥಿತವಾಗಿ ಸಿದ್ಧಾಂತದ ಆಧಾರದ ಮೇಲೆ ಮರು ಸಂರಚಿಸಲು ಆರೆಸೆಸ್ಸ್ ಕೇಂದ್ರಿತ ಸಂಘಟನೆಗಳು ದೀರ್ಘಕಾಲದಿಂದ ಪ್ರಯತ್ನಿಸುತ್ತಲೇ ಇದೆʼ ಎಂದು ಅವರು ಉಲ್ಲೇಖಿಸಿದ್ದಾರೆ. ಸಂಸತ್ತಿನಲ್ಲಿ ನಡೆದ ನಿನ್ನೆಯ ಘಟನೆಗಳನ್ನು ಭಾರತದ ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ಯಾವುದೇ ಒಂದು ಸಿದ್ಧಾಂತ, ಒಂದು ಸಂಘಟನೆ, ಸಂಪೂರ್ಣ ಅಧಿಕಾರವನ್ನು ತನ್ನ ನಿಯಂತ್ರಣಕ್ಕೆ ತರಲು ಸಾಧ್ಯವಿಲ್ಲ ಎಂಬ ಎಚ್ಚರಿಕೆಯನ್ನು ನೀಡಿದೆ. ಸಂಸತ್ತಿನ ಪ್ರಕ್ರಿಯೆಯೂ ಕೇವಲ ಬಿಜೆಪಿಯ ಸೋಲು ಅಥವಾ ಜಯದ ಪ್ರಶ್ನೆಯಲ್ಲ, ಇದು ಆರೆಸೆಸ್ಸ್ ನ ಸೈದ್ದಾಂತಿಕ ರಾಜಕೀಯ ವಿಸ್ತರಣೆಗೆ ಎದುರಾದ ಮೊದಲ ಭಾರಿ ಹಿನ್ನಡೆ’ ಎಂದು ಅವರು ವಿಶ್ಲೇಷಿಸಿದ್ದಾರೆ. ‘ಸಂವಿಧಾನದಡಿಯಲ್ಲಿ ನೊಂದಾವಣೆಯೇ ಆಗದ ಆರೆಸೆಸ್ಸ್ ಸಂಘಟನೆ ತನ್ನ ನೂರು ವರ್ಷದ ಇತಿಹಾಸದಲ್ಲಿ ಸಮಾಜದ ಒಳಗಿನ ವಿಭಿನ್ನತೆಯನ್ನು ಜಾತಿ, ಧರ್ಮ, ನಂಬಿಕೆ ಹಾಗೂ ಜನರ ಭಾವನೆಗಳನ್ನು ರಾಜಕೀಯ ಉಪಕರಣಗಳಾಗಿ ಬಳಸಿಕೊಂಡು ಒಂದು ನಿರ್ದಿಷ್ಟ ಸಾಂಸ್ಕೃತಿಕ-ರಾಜಕೀಯ ಏಕಾಧಿಪತ್ಯದ ಕಲ್ಪನೆಯನ್ನು ಬೆಳೆಸಲು ಯತ್ನಿಸುತ್ತಲಿದೆ ಎಂಬುದು ನನ್ನ ಸ್ಪಷ್ಟ ಅಭಿಪ್ರಾಯ ಎಂದು ಅವರು ತಿಳಿಸಿದ್ದಾರೆ. ನಿನ್ನೆ ಸಂಸತ್ತಿನಲ್ಲಿ ವಿಪಕ್ಷಗಳು ನೀಡಿದ ಶಾಸನಾತ್ಮಕ ಪ್ರತಿರೋಧವನ್ನು ಕೇವಲ ರಾಜಕೀಯ ವಿರೋಧವಾಗಿ ನೋಡಲು ಸಾಧ್ಯವಿಲ್ಲ. ಬಿಜೆಪಿಯನ್ನು ಇಲ್ಲಿ ಕೇವಲ ರಾಜಕೀಯ ಪಕ್ಷವೆಂದು ನೋಡಿದರೆ ವಿಶ್ಲೇಷಣೆ ಅಪೂರ್ಣವಾಗುತ್ತದೆ. ಅದು ಆರೆಸೆಸ್ಸ್ ನ ಸಿದ್ಧಾಂತಾತ್ಮಕ ಪ್ರಯೋಗಶಾಲೆಯಿಂದ ಹೊರಬಂದ ರಾಜಕೀಯ ರೂಪವಾಗಿದೆ. ಆರೆಸೆಸ್ಸ್ ಸಿದ್ಧಾಂತದ ನೆರಳಿನಲ್ಲಿ ನಡೆಯುತ್ತಿರುವ ಅಧಿಕಾರ ಕೇಂದ್ರೀಕರಣದ ಪ್ರಯತ್ನಗಳಿಗೆ ಬಿಜೆಪಿ ಪಕ್ಷವೂ ವೇದಿಕೆ ಎಂದು ಪರಿಭಾವಿಸಬೇಕಾಗಿದೆ ಎಂದು ಅವರು ತಿಳಿಸಿದ್ದಾರೆ. ಭಾರತ ದೇಶವು ಸ್ವಾತಂತ್ರ್ಯವನ್ನು ಪಡೆದದ್ದು ಲಕ್ಷಾಂತರ ಜನರ ತ್ಯಾಗ, ಹೋರಾಟ ಮತ್ತು ಬಲಿದಾನದ ಫಲ. ಆದರೆ ಆ ಸ್ವಾತಂತ್ರ್ಯದ ಆಶಯವನ್ನು ಕ್ರಮೇಣವಾಗಿ, ವ್ಯವಸ್ಥಿತವಾಗಿ ಸಿದ್ಧಾಂತದ ಆಧಾರದ ಮೇಲೆ ಮರು ಸಂರಚಿಸಲು @RSSorg ಕೇಂದ್ರಿತ ಸಂಘಟನೆಗಳು ದೀರ್ಘಕಾಲದಿಂದ ಪ್ರಯತ್ನಿಸುತ್ತಲೇ ಇದೆ. ಸಂಸತ್ತಿನಲ್ಲಿ ನಡೆದ ನಿನ್ನೆಯ ಘಟನೆಗಳನ್ನು ಭಾರತದ… — Hariprasad.B.K. (@HariprasadBK2) April 18, 2026
Kuknoor | ಭಟಪನಹಳ್ಳಿಯಲ್ಲಿ ಇಟಗಿ ಭೀಮಾಂಬಿಕಾ ಜಾತ್ರೆ : 11 ಜೋಡಿಗಳ ಸಾಮೂಹಿಕ ವಿವಾಹ, ರಥೋತ್ಸವ
ಸೌಹಾರ್ದವೇ ಸಾರ್ಥಕ ಜೀವನದ ಮಾರ್ಗ: ಫಕೀರ ಸಿದ್ದರಾಮ ಮಹಾಸ್ವಾಮಿ
ಮಣಿಪುರ| ಇಬ್ಬರು ಮಕ್ಕಳ ಹತ್ಯೆ ಖಂಡಿಸಿ ಮತ್ತೆ ಭುಗಿಲೆದ್ದ ಪ್ರತಿಭಟನೆ
ಇಂಫಾಲ, ಎ. 18: ಟ್ರೋಂಗ್ಲಾಓಬಿಯಲ್ಲಿ ನಡೆದ ಬಾಂಬ್ ದಾಳಿಯಲ್ಲಿ ಇಬ್ಬರು ಮಕ್ಕಳ ಹತ್ಯೆಯನ್ನು ಖಂಡಿಸಿ ಮಣಿಪುರದ ಇಂಫಾಲ್ ಪೂರ್ವದಲ್ಲಿ ಶುಕ್ರವಾರ ರಾತ್ರಿ ಜನರು ದೊಡ್ಡ ಸಂಖ್ಯೆಯಲ್ಲಿ ಬೀದಿಗಿಳಿದು ಪ್ರತಿಭಟನೆ ನಡೆಸಿದ್ದಾರೆ. ಇಂಫಾಲ ಪೂರ್ವದ ಖುರೈ ಲ್ಯಾಮ್ಲಾಂಗ್ ಬಝಾರ್ನಲ್ಲಿ ರಾತ್ರಿ ಪ್ರತಿಭಟನೆಗಳು ಭುಗಿಲೆದ್ದವು. ಅಲ್ಲಿ ದೊಡ್ಡ ಸಂಖ್ಯೆ ಜನರು ಕರ್ಫ್ಯೂ ಉಲ್ಲಂಘಿಸಿ ರ್ಯಾಲಿಯಲ್ಲಿ ಪಾಲ್ಗೊಂಡರು. ಇದರಿಂದ ಪರಿಸ್ಥಿತಿ ಉದ್ವಿಗ್ನಗೊಂಡಿತು. ಭದ್ರತಾ ಪಡೆಗಳು ಗುಂಪನ್ನು ನಿಯಂತ್ರಿಸಲು ಮುಂದಾದವು. ಅವರು ಪ್ರತಿಭಟನಕಾರರನ್ನು ಚದುರಿಸಲು ಅಶ್ರವಾಯು ಸೆಲ್ ಪ್ರಯೋಗಿಸಿದರು. ಈ ಸಂದರ್ಭ ನಡೆದ ಘರ್ಷಣೆಯಲ್ಲಿ ಹಲವರು ಗಾಯಗೊಂಡರು. ಗಾಯಗೊಂಡವರನ್ನು ಜವಾಹರ್ಲಾಲ್ ನೆಹರೂ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ ದಾಖಲಿಸಲಾಯಿತು.
Yadgiri | ಮುಂಬೈ-ಬೆಂಗಳೂರು ವಂದೇಭಾರತ್ ರೈಲು ಆರಂಭಿಸಿ: ಭೀಮುನಾಯಕ್ ಆಗ್ರಹ
ಯಾದಗಿರಿ : ಬೆಂಗಳೂರು–ಮುಂಬೈ ವಂದೇ ಭಾರತ್ ಶಯನಯಾತ್ರೆ (ಸ್ಲೀಪರ್) ರೈಲು ಶೀಘ್ರ ಆರಂಭವಾಗಲಿದೆ ಎಂದು ಘೋಷಣೆ ನೀಡಿದ್ದರೂ, ಇದುವರೆಗೆ ಸೇವೆ ಆರಂಭವಾಗದಿರುವುದು ಅನುಮಾನಗಳಿಗೆ ಕಾರಣವಾಗಿದ್ದು, ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಟಿ.ಎನ್. ಭೀಮನಾಯಕ್ ಆಗ್ರಹಿಸಿದ್ದಾರೆ. ಈ ಕುರಿತು ಹೇಳಿಕೆ ನೀಡಿದ ಅವರು, ಈ ರೈಲು ಗಂಟೆಗೆ 160 ಕಿ.ಮೀ ವೇಗದಲ್ಲಿ ಸಂಚರಿಸುವ ಸಾಮರ್ಥ್ಯ ಹೊಂದಿದ್ದು, ಯಾದಗಿರಿ–ಬೆಂಗಳೂರು ನಡುವಿನ ಪ್ರಯಾಣವನ್ನು ಕೇವಲ ಐದುವರೆ ಗಂಟೆಗಳಲ್ಲಿ ಹಾಗೂ ಯಾದಗಿರಿ–ಮುಂಬೈ ನಡುವಿನ ಪ್ರಯಾಣವನ್ನು ಸುಮಾರು ಏಳು ಗಂಟೆಗಳಲ್ಲಿ ಮುಗಿಸಬಹುದಾಗಿದೆ ಎಂದು ತಿಳಿಸಿದರು. ಈ ರೈಲು ಆರಂಭವಾದರೆ ಕಲ್ಯಾಣ ಕರ್ನಾಟಕ ಭಾಗದ ಆರ್ಥಿಕತೆಗೆ ವೇಗ ಸಿಗಲಿದ್ದು, ವೇಗದ ಸಾರಿಗೆ ವ್ಯವಸ್ಥೆಗೆ ಮಹತ್ವದ ಬಲ ಸಿಗಲಿದೆ. ಆದ್ದರಿಂದ ಈ ರೈಲನ್ನು ತಕ್ಷಣ ಆರಂಭಿಸಬೇಕು ಎಂದು ಅವರು ಒತ್ತಾಯಿಸಿದರು. ಹುಬ್ಬಳ್ಳಿ–ಬೆಳಗಾವಿ ಮಾರ್ಗದಲ್ಲಿ ರೈಲು ಓಡಿಸುವ ಬದಲು ನಮ್ಮ ಭಾಗಕ್ಕೆ ಸಿಗಬೇಕಾದ ರೈಲನ್ನು ವಿಳಂಬ ಮಾಡಬಾರದು. ಅಗತ್ಯವಿದ್ದರೆ ಬೇರೆ ಮಾರ್ಗದಲ್ಲಿ ಹೆಚ್ಚುವರಿ ರೈಲು ಹಾಕಬಹುದು, ಆದರೆ ಕಲ್ಯಾಣ ಕರ್ನಾಟಕಕ್ಕೆ ಸಿಗಬೇಕಾದ ಸೇವೆಯನ್ನು ವಿಳಂಬಿಸುವುದು ಸರಿಯಲ್ಲ ಎಂದು ಹೇಳಿದರು. ಇದೇ ವೇಳೆ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ನೀಡಿದ ಹೇಳಿಕೆಗೆ ವಾರ ಕಳೆದರೂ ವೇಳಾಪಟ್ಟಿ ಪ್ರಕಟವಾಗದಿರುವುದು ಅಸಮಾಧಾನಕರ. ಈ ಹಿಂದೆ ನಮ್ಮ ಭಾಗಕ್ಕೆ ಸಿಗಬೇಕಿದ್ದ ಐಐಐಟಿ ಯೋಜನೆಯನ್ನು ಧಾರವಾಡಕ್ಕೆ ವರ್ಗಾಯಿಸಿದಂತೆ ಮತ್ತೆ ಅನ್ಯಾಯವಾದರೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು. ಈ ಕುರಿತು ರಾಯಚೂರು ಮತ್ತು ಕಲಬುರಗಿ ಸಂಸದರು ಕೂಡಲೇ ಎಚ್ಚೆತ್ತುಕೊಂಡು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರುವಂತೆ ಅವರು ಆಗ್ರಹಿಸಿದರು.
ನೊಯ್ಡಾ ಹಿಂಸಾಚಾರದ ಮಾಸ್ಟರ್ ಮೈಂಡ್ ತಮಿಳುನಾಡಿನಲ್ಲಿ ಬಂಧನ
ಕಾರ್ಮಿಕರ ಪ್ರತಿಭಟನೆ ವೇಳೆ ನಡೆದಿದ್ದ ಹಿಂಸಾಚಾರ
Yadgiri | ಮಹಿಳಾ ಮೀಸಲಾತಿ ಮಸೂದೆ ಅಸಂವಿಧಾನಿಕ ತಂತ್ರ: ಭೀಮಣ್ಣ ಮೇಟಿ
ಯಾದಗಿರಿ: ಮಹಿಳೆಯರ ಹೆಸರಿನಲ್ಲಿ ಸಂವಿಧಾನಕ್ಕೆ ಧಕ್ಕೆ ತರುವ ಅಸಂವಿಧಾನಿಕ ತಂತ್ರವನ್ನು ಬಳಸಿಕೊಂಡು ಮಂಡಿಸಲಾದ ಮಹಿಳಾ ಮೀಸಲಾತಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾಗಿದೆ ಎಂದು ಕೆಪಿಸಿಸಿ ಪ್ರಚಾರ ಸಮಿತಿ ರಾಜ್ಯ ಉಪಾಧ್ಯಕ್ಷ ಡಾ.ಭೀಮಣ್ಣ ಮೇಟಿ ಹೇಳಿದ್ದಾರೆ. ಈ ಕುರಿತು ಪತ್ರಿಕಾ ಹೇಳಿಕೆ ನೀಡಿದ ಅವರು, ಇದು ನಿಜವಾದ ಮಹಿಳಾ ಮೀಸಲಾತಿ ಬಿಲ್ ಅಲ್ಲ. ಬದಲಾಗಿ ಚುನಾವಣಾ ವ್ಯವಸ್ಥೆಯ ಮೇಲೆ ಹಿಡಿತ ಸಾಧಿಸಲು ಕೇಂದ್ರ ಸರ್ಕಾರ ಪ್ರಯತ್ನಿಸಿದೆ ಎಂದು ಆರೋಪಿಸಿದರು. ಲೋಕಸಭೆಯಲ್ಲಿ ಪ್ರತಿಪಕ್ಷಗಳು ಒಂದಾಗಿ, ಮೋದಿ ನೇತೃತ್ವದ ಸರ್ಕಾರ ಮಂಡಿಸಿದ ಮಸೂದೆಯನ್ನು ಒಪ್ಪಲು ಸಾಧ್ಯವಿಲ್ಲ ಎಂಬ ಸಂದೇಶ ನೀಡಿವೆ. ಬಿಜೆಪಿ ಸರ್ಕಾರಕ್ಕೆ ಮಹಿಳೆಯರ ಬಗ್ಗೆ ನಿಜವಾದ ಕಾಳಜಿ ಇಲ್ಲ ಎಂದು ಅವರು ಟೀಕಿಸಿದರು. ಭಾರತ ಪ್ರಜಾಪ್ರಭುತ್ವ ರಾಷ್ಟ್ರವಾಗಿದ್ದು, ಮಹಿಳಾ ಮೀಸಲಾತಿ ಹೆಸರಿನಲ್ಲಿ ಕ್ಷೇತ್ರ ಮರುವಿಂಗಡಣೆ ಮೂಲಕ ರಾಜಕೀಯ ಲಾಭ ಪಡೆಯಲು ಯತ್ನಿಸಲಾಗಿದೆ. ಈ ಹಿನ್ನೆಲೆಯಲ್ಲಿ ಲೋಕಸಭೆಯಲ್ಲಿ ಸರ್ಕಾರಕ್ಕೆ ಮುಖಭಂಗವಾಗಿದೆ ಎಂದು ಹೇಳಿದರು. ಮಹಿಳಾ ಸಬಲೀಕರಣಕ್ಕಿಂತ ರಾಜಕೀಯ ಲಾಭವೇ ಕೇಂದ್ರ ಸರ್ಕಾರದ ಉದ್ದೇಶವಾಗಿದೆ. ನಾರಿಯರ ಹೆಸರಿನಲ್ಲಿ ರಾಜಕೀಯ ಮಾಡುತ್ತಿರುವ ಬಿಜೆಪಿ ವಿರುದ್ಧ ಜನರು ಮುಂದಿನ ದಿನಗಳಲ್ಲಿ ತಕ್ಕ ಪ್ರತಿಕ್ರಿಯೆ ನೀಡಲಿದ್ದಾರೆ ಎಂದು ಅವರು ಎಚ್ಚರಿಸಿದರು.
ಮಹಿಳಾ ಮೀಸಲಾತಿಗೆ ನಮ್ಮ ವಿರೋಧವಿಲ್ಲ ಎಂದ ಸಿಎಂ ಸಿದ್ದರಾಮಯ್ಯ
ಬೆಂಗಳೂರು: ಮಹಿಳಾ ಮೀಸಲಾತಿ ಮಸೂದೆ ಜಾರಿಗೆ ತರುವ ವಿಚಾರದಲ್ಲಿ ನಮ್ಮ ಪಕ್ಷದ ಹಾಗೂ ವೈಯಕ್ತಿಕವಾಗಿ ನನ್ನ ಯಾವುದೇ ವಿರೋಧವಿಲ್ಲ. ಆದರೆ, ಕೇಂದ್ರ ಸರ್ಕಾರವು ಈ ವಿಚಾರದಲ್ಲಿ ಸ್ಪಷ್ಟ ರಾಜಕೀಯ ಮಾಡುತ್ತಿದೆ ಎಂದು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತೀವ್ರ ವಾಗ್ದಾಳಿ ನಡೆಸಿದ್ದಾರೆ. ಅವರು ಏಪ್ರಿಲ್ 18ರಂದು ಬೆಂಗಳೂರಿನ ಪ್ರತಿಷ್ಠಿತ ಶಾಂಗ್ರಿಲಾ ಹೋಟೆಲ್ನಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮವೊಂದರ ಬಳಿಕ ಮಾಧ್ಯಮ
ವಿಪಕ್ಷಗಳು ಮಾಡಿದ ನಾರಿಶಕ್ತಿಯ ಭ್ರೂಣ ಹತ್ಯೆಗೆ ಕ್ಷಮೆ ಇಲ್ಲ; ದೇಶವನ್ನುದ್ದೇಶಿಸಿ ನರೇಂದ್ರ ಮೋದಿ ಭಾಷಣ
ಪ್ರಧಾನಮಂತ್ರಿ ನರೇಂದ್ರ ಮೋದಿ ಇಂದು (ಏ.18-ಶನಿವಾರ) ದೇಶವನ್ನುದ್ದೇಶಿಸಿ ಭಾಷಣ ಮಾಡಿದ್ದು, ನಿನ್ನೆ (ಏ.17-ಶುಕ್ರವಾರ) ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ವಿರುದ್ಧ ಮತ ಚಲಾಯಿಸಿದ ವಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಮಹಿಳಾ ಸಬಲೀಕರಣಕ್ಕೆ ದೊರೆತ ಐತಿಹಾಸಿಕ ಅವಕಾಶವನ್ನು ಭಾರತ ಕಳೆದುಕೊಂಡಿರುವುದು ಬೇಸರದ ಸಂಗತಿ ಎಂದು ಪ್ರಧಾನಿ ಮೋದಿ ತಮ್ಮ ಭಾಷಣದಲ್ಲಿ ಹೇಳಿದ್ದಾರೆ. ಸಂಸತ್ತಿನ ವಿಶೇಷ ಅಧಿವೇಶನವು ಸಂವಿಧಾನದ 131ನೇ ತಿದ್ದುಪಡಿ ಮಸೂದೆಯನ್ನು ಪಾಸ್ ಮಾಡದಿರುವ ಹಿನ್ನೆಲೆಯಲ್ಲಿ, ಪ್ರಧಾನಿ ಮೋದಿ ಅವರ ಇಂದಿನ ಭಾಷಣ ಮಹತ್ವ ಪಡೆದುಕೊಂಡಿದೆ.
ಪಡುಬಿದ್ರೆ ದೇವಸ್ಥಾನದ ಬ್ರಹ್ಮಕಲಶೋತ್ಸವ: ಎ.26ರಂದು ಹಸಿರು ಹೊರೆಕಾಣಿಕೆ
ಡಾ. ಎಂ.ಎನ್. ರಾಜೇಂದ್ರ ಕುಮಾರ್ ರಿಂದ ಚಾಲನೆ
ಸಂಸತ್ನ ಬಜೆಟ್ ಅಧಿವೇಶನಕ್ಕೆ ತೆರೆ| ರಾಜ್ಯಸಭೆ, ಲೋಕಸಭೆ ಅಧಿವೇಶನ ಅನಿರ್ದಿಷ್ಟಾವಧಿಗೆ ಮುಂದೂಡಿಕೆ
ಹೊಸದಿಲ್ಲಿ,ಎ.18: ಸಂಸತ್ನ ಬಜೆಟ್ ಅಧಿವೇಶನ ಶನಿವಾರ ಮುಕ್ತಾಯಗೊಂಡಿದ್ದು, ರಾಜ್ಯಸಭೆ ಹಾಗೂ ಲೋಕಸಭೆಯನ್ನು ಅನಿರ್ದಿಷ್ಟಾವಧಿಯವರೆಗೆ ಮುಂದೂಡಲಾಗಿದೆ. ಜನವರಿ 28ರಂದು ಆರಂಭಗೊಂಡ ಬಜೆಟ್ ಅಧಿವೇಶನದ ಅವಧಿಯಲ್ಲಿ ರಾಜ್ಯಸಭೆಯು ಒಟ್ಟು 157 ತಾಸುಗಳ ಹಾಗೂ 40 ನಿಮಿಷಗಳ ಕಾಲ ಕಾರ್ಯನಿರ್ವಹಿಸಿದೆಯೆಂದು ರಾಜ್ಯಸಭಾಧ್ಯಕ್ಷ ಸಿ.ಪಿ.ರಾಧಾಕೃಷ್ಣನ್ ಅವರು ತಿಳಿಸಿದರು. ಎಪ್ರಿಲ್ 16ರಿಂದ 18ರವರೆಗೆ ನಡೆದ ಮೂರು ದಿನಗಳ ವಿಶೇಷ ಬೈಠಕ್ನಲ್ಲಿ ಹರಿವಂಶ್ ಅವರನ್ನು ರಾಜ್ಯಸಭೆಯ ಉಪಾಧ್ಯಕ್ಷರಾಗಿ ಮೂರನೇ ಅವಧಿಗೆ ಆಯ್ಕೆ ಮಾಡಿತೆಂದು ಅವರು ತಿಳಿಸಿದರು. ಬಜೆಟ್ ಅಧಿವೇಶನದ ಆರಂಭದಲ್ಲಿ ರಾಷ್ಟ್ರಪತಿಯವರ ಭಾಷಣ ಮೇಲಿನ ವಂದನಾ ನಿರ್ಣಯದ ಕುರಿತ ಚರ್ಚೆಯಲ್ಲಿ 79 ಮಂದಿ ಸದಸ್ಯರು ಪಾಲ್ಗೊಂಡಿದ್ದರು .2026-27ನೇ ಸಾಲಿನ ಕೇಂದ್ರ ಬಜೆಟ್ ಕುರಿತ ವಿಸ್ತೃತ ಚರ್ಚೆಯಲ್ಲಿ 97 ಮಂದಿ ಸದಸ್ಯರು ಭಾಗವಹಿಸಿದ್ದರು. ಭಾರತ-ಅಮೆರಿಕ ವ್ಯಾಪಾರ ಒಪ್ಪಂದ ಹಾಗೂ ಪಶ್ಚಿಮ ಏಶ್ಯಾ ಪರಿಸ್ಥಿತಿಯ ಕುರಿತಾಗಿಯೂ ಸದಸ್ಯರು ಸ್ವಯಂಪ್ರೇರಿತ ಹೇಳಿಕೆಗಳನ್ನು ನೀಡಿದ್ದಾರೆಂದು ಅವರು ತಿಳಿಸಿದರು. ಈ ಬಜೆಟ್ ಅಧಿವೇಶನದಲ್ಲಿ ಒಟ್ಟು 117 ಪ್ರಶ್ನೆಗಳನ್ನು ಕೇಳಲಾಗಿತ್ತು. 446 ಶೂನ್ಯ ವೇಳೆಯಲ್ಲಿ ಹೇಳಿಕೆಗಳನ್ನು ನೀಡಲಾಗಿತ್ತು ಹಾಗೂ 207 ವಿಶೇಷ ಉಲ್ಲೇಖಗಳನ್ನು ಮಾಡಲಾಗಿತ್ತು ಎಂದವರು ತಿಳಿಸಿದರು. ಲೋಕಸಭೆಯ ಬಜೆಟ್ ಅಧಿವೇಶನವು ಶನಿವಾರ ಪೂರ್ವಾಹ್ನ 11:00 ಗಂಟೆಗೆ ಮುಕ್ತಾಯಗೊಂಡಿದ್ದು, ಸ್ಪೀಕರ್ ಓಂ ಬಿರ್ಲಾ ಅವರು ಸದನವನ್ನು ಅನಿರ್ದಿಷ್ಟಾವಧಿಗೆ ಮುಂದೂಡಿದರು. ಲೋಕಸಭೆಯ ಬಜೆಟ್ಅಧಿವೇಶನ ಮುಕ್ತಾಯದ ಮುನ್ನಾ ದಿನ ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿಗೆ ಅವಕಾಶ ಮಾಡಿಕೊಡುವ ಸಂವಿಧಾನ ತಿದ್ದುಪಡಿ ಮಸೂದೆಯು ಮೂರನೇ ಎರಡರಷ್ಟು ಬಹುಮತ ಪಡೆಯಲು ವಿಫಲವಾಗಿ, ಬಿದ್ದು ಹೋಗಿದೆ. ಸಂವಿಧಾನ ತಿದ್ದುಪಡಿ ಮಸೂದೆಯು ಲೋಕಸಭಾ ಸ್ಥಾನಗಳನ್ನು 543ರಿಂದ 816ಕ್ಕೆ ವಿಸ್ತರಿಸುವ ಪ್ರಸ್ತಾವನೆಯನ್ನು ಕೂಡಾ ಮಾಡಿತ್ತು.
ಹಟ್ಟಿ | ಕಾರ್ಮಿಕರ ಹಕ್ಕುಗಳಿಗಾಗಿ ಹಟ್ಟಿ ಚಿನ್ನದ ಗಣಿಯಲ್ಲಿ ಪ್ರತಿಭಟನೆ
ಹಟ್ಟಿ: ದೇಶವ್ಯಾಪಿ ಕಾರ್ಮಿಕರ ಹಕ್ಕುಗಳಿಗಾಗಿ ಏಪ್ರಿಲ್ 17ರಂದು ನೀಡಿದ ಕರೆ ಹಿನ್ನೆಲೆಯಲ್ಲಿ (ಸಿಐಟಿಯು) ನೇತೃತ್ವದಲ್ಲಿ ಹಟ್ಟಿ ಚಿನ್ನದ ಗಣಿಯ ಕ್ಯಾಂಪ್ನಲ್ಲಿ ಕಾರ್ಮಿಕರು ಪ್ರತಿಭಟನೆ ನಡೆಸಿದರು. ಕೈಗಾರಿಕಾ ಪ್ರದೇಶಗಳಲ್ಲಿ ಕಾರ್ಮಿಕರ ಮೇಲೆ ನಡೆಯುತ್ತಿರುವ ದಮನವನ್ನು ಖಂಡಿಸಿ, ನೋಯ್ಡಾ, ಗುರುಗ್ರಾಮ್ ಸೇರಿದಂತೆ ರಾಷ್ಟ್ರೀಯ ರಾಜಧಾನಿ ಪ್ರದೇಶದ ಕಾರ್ಮಿಕರ ಹೋರಾಟಕ್ಕೆ ಬೆಂಬಲ ಸೂಚಿಸಿ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಮುಖಂಡರು, ದೇಶದಾದ್ಯಂತ ಕಾರ್ಮಿಕರ ಹಕ್ಕುಗಳನ್ನು ಕುಗ್ಗಿಸಲಾಗುತ್ತಿದೆ ಎಂದು ಆರೋಪಿಸಿದರು. ಗುತ್ತಿಗೆ ಕಾರ್ಮಿಕ ವ್ಯವಸ್ಥೆ, ಕಡಿಮೆ ವೇತನ, ದುಸ್ಥಿತಿ ಕೆಲಸದ ಪರಿಸ್ಥಿತಿಗಳು ಹಾಗೂ ಕಾರ್ಮಿಕ ವಿರೋಧಿ ಕಾನೂನುಗಳ ವಿರುದ್ಧ ಹೋರಾಟ ಅಗತ್ಯವಾಗಿದೆ ಎಂದು ಹೇಳಿದರು. ಕಾರ್ಮಿಕರು ತಿಂಗಳಿಗೆ 26,000 ರೂ. ಕನಿಷ್ಠ ವೇತನ, 8 ಗಂಟೆಗಳ ಕೆಲಸದ ಅವಧಿ, ಡಬಲ್ ಓವರ್ಟೈಮ್, PF, ESI ಸೇರಿದಂತೆ ಮೂಲಭೂತ ಸೌಲಭ್ಯಗಳನ್ನು ಒದಗಿಸುವಂತೆ ಆಗ್ರಹಿಸಿದರು. ಜೊತೆಗೆ ಗುತ್ತಿಗೆ ಕಾರ್ಮಿಕರಿಗೆ ಖಾಯಂ ಕಾರ್ಮಿಕರ ಸಮಾನ ಹಕ್ಕುಗಳನ್ನು ನೀಡಬೇಕು ಎಂದು ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ಭಾಗವಹಿಸಿದವರು ಸರ್ಕಾರದ ದಮನ ನೀತಿಯನ್ನು ಖಂಡಿಸಿ, ಬಂಧಿತ ಕಾರ್ಮಿಕರನ್ನು ತಕ್ಷಣ ಬಿಡುಗಡೆ ಮಾಡಬೇಕು ಮತ್ತು ಸುಳ್ಳು ಪ್ರಕರಣಗಳನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದರು. ಕಾರ್ಮಿಕರ ಹೋರಾಟವನ್ನು ದಮನದಿಂದ ನಿಲ್ಲಿಸಲು ಸಾಧ್ಯವಿಲ್ಲ, ಅದು ಇನ್ನಷ್ಟು ಬಲಗೊಳ್ಳುತ್ತದೆ ಎಂದು ಮುಖಂಡರು ಎಚ್ಚರಿಸಿದರು. ಈ ಪ್ರತಿಭಟನೆಯಲ್ಲಿ ಸಿಐಟಿಯು ಸಂಘಟನೆಯ ಜಿಲ್ಲಾ ಜಂಟಿ ಕಾರ್ಯದರ್ಶಿ ರಮೇಶ ವೀರಾಪೂರು, ಹ.ಚಿ.ಗ. ಕಾರ್ಮಿಕ ಮುಖಂಡರಾದ ವೆಂಕೋಬ್ ಮಿಯ್ಯಾಪೂರ, ರಮೇಶ ಬಾಬು, ಚಂದ್ರಶೇಖರ್ ನೆಲೋಗಿ, ಮೊಹಿನುದ್ದೀನ್, ಕೆಪಿಆರ್ ಎಸ್ ಮುಖಂಡ ಪೆಂಚಲಯ್ಯ, ಸಿಐಟಿಯುನ ಶೇಖ್ ಬಡೆ, ಫಕೃದ್ದೀನ್, ಅಲ್ಲಾಭಕ್ಷ, ಶ್ರೀಧರ್, ರಫಿ ಮಲ್ಲಾಪೂರು, ಬಸವರಾಜ್ ನಗನೂರು, ಜೆಎಂಎಸ್ ಮುಖಂಡರಾದ ವನಜಾಕ್ಷಿ, ಶಾಂತಕುಮಾರಿ, ದುರುಗಮ್ಮ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
RCB Vs DC IPL 2026: ಮಿಲ್ಲರ್ 'ಕಿಲ್ಲರ್' ಆಟಕ್ಕೆ ಮಣಿದ ಆರ್ಸಿಬಿ
RCB Vs DC IPL 2026: ಬೆಂಗಳೂರಿನ ಚಿನ್ನಸ್ವಾಮಿಯಲ್ಲಿ ಶನಿವಾರ (ಏಪ್ರಿಲ್ 18) ನಡೆದ ರೋಚಕ ಐಪಿಎಲ್ ಪಂದ್ಯದಲ್ಲಿ ಡೇವಿಡ್ ಮಿಲ್ಲರ್ ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡವು ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ 6 ವಿಕೆಟ್ಗಳ ಭರ್ಜರಿ ಜಯ ದಾಖಲಿಸಿದೆ. ಸ್ಟಬ್ಸ್, ಕನ್ನಡಿಗ ಕೆಎಲ್ ರಾಹುಲ್ ಸಹ ಈ ಗೆಲುವಿಗೆ ಪ್ರಮುಖ ಕಾರಣಕರ್ತರಾಗಿದ್ದಾರೆ.
ರಶ್ಯದಿಂದ ತೈಲ ಖರೀದಿ ನಿರ್ಬಂಧ ವಿನಾಯಿತಿ 30 ದಿನ ವಿಸ್ತರಣೆ: ಅಮೆರಿಕ ಘೋಷಣೆ
ವಾಶಿಂಗ್ಟನ್,ಎ.18 ಭಾರತ ಸೇರಿದಂತೆ ಜಗತ್ತಿನಾದ್ಯಂತದ ರಾಷ್ಟ್ರಗಳಿಗೆ ರಶ್ಯದ ತೈಲ ಖರೀದಿ ಮೇಲಿನ ನಿರ್ಬಂಧಗಳಿಂದ ನೀಡಿರುವ ವಿನಾಯಿತಿಯನ್ನು ಇನ್ನೂ 30 ದಿನಗಳವರೆಗೆ ವಿಸ್ತರಿಸುವುದಾಗಿ ಅಮೆರಿಕ ಶುಕ್ರವಾರ ಘೋಷಿಸಿದೆ. ಅಮೆರಿಕದ ವಿದೇಶಾಂಗ ಸಚಿವಾಲಯವು ಶುಕ್ರವಾರ ತಡರಾತ್ರಿ ಈ ಬಗ್ಗೆ ಆದೇಶವನ್ನು ಹೊರಡಿಸಿದೆ. ಆದಾಗ್ಯೂ ಇರಾನ್ನಿಂದ ಇಂಧನವನ್ನು ಖರೀದಿಸುವುದಕ್ಕೆ ಪರವಾನಗಿಯನ್ನು ನೀಡಲಾಗಿಲ್ಲ. ಎರಡು ದಿನಗಳ ಹಿಂದೆ ಅಮೆರಿಕದ ವಿತ್ತ ಕಾರ್ಯದರ್ಶಿ ಸ್ಕಾಟ್ ಬೆಸ್ಸೆಂಟ್ ಅವರು, ರಶ್ಯದಿಂದ ತೈಲ ಖರೀದಿ ನಿರ್ಬಂಧಗಳಿಗೆ ನೀಡಲಾಗಿರುವ ವಿನಾಯಿತಿಯನ್ನು ವಿಸ್ತರಿಸುವುದಿಲ್ಲವೆಂದು ಹೇಳಿದ್ದರು. ಆದರೆ ದಿಢೀರ್ ಬೆಳವಣಿಗೆಯೊಂದರಲ್ಲಿ ಅಮೆರಿಕ ತನ್ನ ನಿಲುವನ್ನು ಬದಲಾಯಿಸಿದೆ. ಎಪ್ರಿಲ್ 17ರಂದು ಅಥವಾ ಅದಕ್ಕೆ ಮುನ್ನ ಹಡಗುಗಳಿಗೆ ಲೋಡ್ ಮಾಡಲಾದ ರಶ್ಯದ ಕಚ್ಚಾ ತೈಲ ಹಾಗೂ ಪೆಟ್ರೋಲಿಯಂ ಉತ್ಪನ್ನಗಳನ್ನು ಖರೀದಿಸಲು ತಾನು ಅವಕಾಶ ನೀಡುವುದಾಗಿ ಅಮೆರಿಕ ಘೋಷಿಸಿದೆ. ಭಾರತ ನಿರಾಳ? ಅಮೆರಿಕ-ಇರಾನ್ ಯುದ್ಧದ ಬಳಿಕ ಜಾಗತಿಕ ತೈಲ ಪೂರೈಕೆಯಲ್ಲಿ ತೀವ್ರ ಕೊರತೆಯುಂಟಾದ ಹಿನ್ನೆಲೆಯಲ್ಲಿ ಅಮೆರಿಕವು ರಶ್ಯದಿಂದ ತೈಲ ಖರೀದಿಯ ಮೇಲೆ ತಾನು ವಿಧಿಸಿದ್ದ ನಿರ್ಬಂಧಗಳನ್ನು ಮಾರ್ಚ್ನಲ್ಲಿ ತಾತ್ಕಾಲಿಕವಾಗಿ ತೆರವುಗೊಳಿಸಿತ್ತು. ಆದರೆ ಈ ರಿಯಾಯಿತಿಯ ಅವಧಿಯನ್ನು ವಿಸ್ತರಿಸಿರುವುದು ಭಾರತಕ್ಕೆ ಭಾರೀ ಪ್ರಯೋಜನಕಾರಿಯಾಗಲಿದೆ. ಅಮೆರಿಕ ರಶ್ಯದ ತೈಲ ಖರೀದಿಯ ಮೇಲಿನ ನಿರ್ಬಂಧಗಳನ್ನು ತಾತ್ಕಾಲಿಕವಾಗಿ ತೆರವುಗೊಳಿಸಿದ ಬೆನ್ನಲ್ಲೇ ಭಾರತವು ರಶ್ಯದಿಂದ 30 ದಶಲಕ್ಷ ಬ್ಯಾರೆಲ್ ತೈಲ ಖರೀದಿಗೆ ಆರ್ಡರ್ ಮಾಡಿತ್ತು. ಭಾರತವು ತನ್ನ ತೈಲ ಹಾಗೂ ಇಂಧನ ಅವಶ್ಯಕತೆಗಳಿಗಾಗಿ ಶೇ.90ರಷ್ಟು ಅಮದನ್ನೇ ಅವಲಂಭಿಸಿದೆ. ಹೀಗಾಗಿ ರಶ್ಯದ ನಿರ್ಬಂಧಗಳ ಮೇಲಿನ ರಿಯಾಯಿತಿಯ ಗಡುವನ್ನು ವಿಸ್ತರಣೆ ಮಾಡಿರುವುದು ಭಾರತಕ್ಕೆ ತಾತ್ಕಾಲಿಕವಾಗಿ ನಿರಾಳತೆಯನ್ನು ತಂದಿದೆ. ಅಮೆರಿಕ-ಇರಾನ್ ಯುದ್ಧದ ಹಿನ್ನೆಲೆಯಲ್ಲಿ ಮಧ್ಯಪ್ರಾಚ್ಯದ ರಾಷ್ಟ್ರಗಳಿಂದ ತೈಲ ಪೂರೈಕೆಗಳು ಒತ್ತಡದಲ್ಲಿರುವುದರಿಂದ ಭಾರತವು ಕಚ್ಚಾ ತೈಲಕ್ಕಾಗಿ ರಶ್ಯವನ್ನು ಹೆಚ್ಚಾಗಿ ಅವಲಂಭಿಸಿದೆ.
Afzalpur | ಕಾಯಕ–ದಾಸೋಹದಿಂದ ಆರ್ಥಿಕ ಸಮಾನತೆ ಸಾಧ್ಯ: ಡಾ.ವಾಸುದೇವ ಸೇಡಂ
ಅಫಜಲಪುರ: ಪ್ರತಿಯೊಬ್ಬರೂ ಸತ್ಯಶುದ್ಧವಾದ ಕಾಯಕ ಮಾಡಿ, ಅದರ ಫಲವನ್ನು ಸಮಾಜದೊಂದಿಗೆ ದಾಸೋಹದ ರೂಪದಲ್ಲಿ ಹಂಚಿಕೊಂಡರೆ ಆರ್ಥಿಕ ಸಮಾನತೆ ಸಾಧ್ಯವಾಗುತ್ತದೆ. ಕಾಯಕ ಮತ್ತು ದಾಸೋಹ ಆರ್ಥಿಕತೆಯ ಎರಡು ಪ್ರಮುಖ ಸ್ತಂಭಗಳಾಗಿವೆ ಎಂದು ಗುವಿವಿ ವಿಶ್ರಾಂತ ಪ್ರಾಧ್ಯಾಪಕ ಡಾ. ವಾಸುದೇವ ಸೇಡಂ ಎಚ್. ಹೇಳಿದರು. ತಾಲೂಕಿನ ಗೊಬ್ಬುರವಾಡಿ ತಾಂಡಾದ ಸಂತ ಸೇವಾಲಾಲ ಮಹಾರಾಜ ಆಶ್ರಮದಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗ ವತಿಯಿಂದ ಬಸವ ಜಯಂತಿ ಅಂಗವಾಗಿ ಆಯೋಜಿಸಿದ್ದ ಸರಣಿ ಉಪನ್ಯಾಸ ಮಾಲಿಕೆ–8ರಲ್ಲಿ “ಬಸವಣ್ಣನವರ ಆರ್ಥಿಕ ಚಿಂತನೆಗಳು” ವಿಷಯದ ಕುರಿತು ಅವರು ಮಾತನಾಡಿದರು. ಬಸವಣ್ಣನವರ ಆರ್ಥಿಕ ಚಿಂತನೆಗಳು ಕೇವಲ ಸಿದ್ಧಾಂತಗಳಲ್ಲ, ಅವು ಸಮಾನತೆ ಮತ್ತು ಸಾಮಾಜಿಕ ನ್ಯಾಯದ ಆಧಾರದ ಮೇಲೆ ರೂಪುಗೊಂಡ ಪ್ರಾಯೋಗಿಕ ಜೀವನ ಮೌಲ್ಯಗಳಾಗಿವೆ ಎಂದು ಹೇಳಿದರು. “ಕಾಯಕವೇ ಕೈಲಾಸ”, “ದಾಸೋಹ ತತ್ವ” ಹಾಗೂ “ಆರ್ಥಿಕ ಸಮಾನತೆ” ಎಂಬ ಬಸವ ತತ್ವಗಳು ಇಂದಿನ ಸಮಾಜಕ್ಕೂ ಮಾರ್ಗದರ್ಶಕವಾಗಿವೆ ಎಂದು ಅಭಿಪ್ರಾಯಪಟ್ಟರು. ಕಾರ್ಯಕ್ರಮದಲ್ಲಿ ಆಶ್ರಮದ ಪೀಠಾಧಿಪತಿ ಪೂಜ್ಯ ಬಳಿರಾಮ ಮಹಾರಾಜ, ಉಪನ್ಯಾಸಕ ಹಾಗೂ ಬಳಗದ ಅಧ್ಯಕ್ಷ ಎಚ್.ಬಿ.ಪಾಟೀಲ, ಗೌರವ ಸಲಹೆಗಾರ ಶಿವಯೋಗೆಪ್ಪಾ ಎಸ್. ಬಿರಾದಾರ, ಪ್ರಮುಖರಾದ ಹರಿಶ್ಚಂದ್ರ ಪವಾರ, ಜಗನಾಥ ರಾಠೋಡ, ರಾಮಚಂದ್ರ ಜಾಧವ, ಜೈರಾಮ ಜಾಧವ,ಮಂಜುನಾಥ ಪವಾರ, ಸುಧೀರ ಜಾಧವ, ದತ್ತು ರಾಠೋಡ, ಗೀತಾ ರಾಠೋಡ ಇತರರಿದ್ದರು.
ಒತ್ತಡಮಯ ಬದುಕಿಗೆ ಮ್ಯಾರಥಾನ್ ಪೂರಕ: ಡಾ.ಬಿ.ದಿನೇಶ್
ಕೊಣಾಜೆ; ಮ್ಯಾರಥಾನ್ನಂತಹ ಕ್ರೀಡೆಗಳು ಕೇವಲ ದೈಹಿಕ ಸಾಮರ್ಥ್ಯವನ್ನು ಹೆಚ್ಚಿಸುವುದು ಮಾತ್ರವಲ್ಲದೆ, ಮಾನಸಿಕ ಕ್ಷಮತೆಯನ್ನೂ ಬೆಳೆಸುತ್ತದೆ. ಇಂದಿನ ಒತ್ತಡಮಯ ಬದುಕಿಗೆ ಇದು ಪೂರಕವಾಗಿದೆ. ಎನ್ಎಸ್ಎಸ್ ಯೋಜನೆಯ ಮೂಲಕ ಇಂತಹ ಒಂದು ಅದ್ಭುತ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದು ಶ್ಲಾಘನೀಯವಾಗಿದೆ ಎಂದು ಬೆಂಗಳೂರಿನ ಶ್ರೀ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕರಾದ ಡಾ.ಬಿ.ದಿನೇಶ್ ಹೇಳಿದರು. ನಿಟ್ಟೆ ಇನ್ಸ್ಟಿಟ್ಯೂಟ್ ಆಫ್ ಅಲೈಡ್ ಹೆಲ್ತ್ ಸೈನ್ಸಸ್ನ ಎನ್ಎಸ್ಎಸ್ ಘಟಕ, ಕರ್ನಾಟಕ ಸರ್ಕಾರದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಕೇಂದ್ರ ಸರ್ಕಾರದ ಎನ್ಎಸ್ಎಸ್ ಪ್ರಾದೇಶಿಕ ನಿರ್ದೇಶನಾಲಯದ ಸಹಯೋಗದೊಂದಿಗೆ ದೇರಳಕಟ್ಟೆಯ ಕೆ.ಎಸ್.ಹೆಗ್ಡೆ ಆಡಿಟೋರಿಯಮ್ ಮುಂಭಾಗದಲ್ಲಿ ಶನಿವಾರ ಮುಂಜಾನೆ 5K ಮತ್ತು 10K ಎನ್ಎಸ್ಎಸ್ ಮ್ಯಾರಥಾನ್ ಗೆ ಚಾಲನೆ ನೀಡಿ ಅವರು ಮಾತನಾಡಿದರು. ನಿಟ್ಟೆ ಪರಿಗಣಿತ ವಿವಿಯ ಸಹ ಕುಲಾಧಿಪತಿ ಡಾ.ಎಂ. ಶಾಂತಾರಾಮ ಶೆಟ್ಟಿ ಮಾತನಾಡಿ ನಿಟ್ಟೆ ಸಂಸ್ಥೆಯು ಯಾವಾಗಲೂ ಶೈಕ್ಷಣಿಕ ಅಭಿವೃದ್ಧಿಯ ಜೊತೆಗೆ ವಿದ್ಯಾರ್ಥಿಗಳ ಸಮಗ್ರ ಬೆಳವಣಿಗೆಗೆ ಒತ್ತು ನೀಡುತ್ತಿದೆ.ಇಂದಿನ ಈ ಮ್ಯಾರಥಾನ್ ನಮ್ಮ ಸಮುದಾಯದ ಸ್ವಾಸ್ಥ್ಯ ಮತ್ತು ಸಂಘಟಿತ ಪ್ರಯತ್ನಕ್ಕೆ ಸಾಕ್ಷಿಯಾಗಿದೆಯೆಂದರು. ನಿಟ್ಟೆ ಪರಿಗಣಿತ ವಿವಿಯ ಕುಲಾಧಿಪತಿ ವಿಶಾಲ್ ಹೆಗ್ಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.ಎನ್ಎಸ್ಎಸ್ ಪ್ರಾದೇಶಿಕ ನಿರ್ದೇಶಕ ಗಿರಿಧರ್ ಉಪಾಧ್ಯಾಯ,ರಾಜ್ಯ ಎನ್ಎಸ್ಎಸ್ ಅಧಿಕಾರಿ ಡಾ.ಪ್ರತಾಪ್ ಲಿಂಗಯ್ಯ ಮುಖ್ಯ ಅತಿಥಿಗಳಾಗಿದ್ದರು.ಎನ್ಎಸ್ಎಸ್ ಸಂಯೋಜಕರಾದ ಶಶಿಕುಮಾರ್ ಶೆಟ್ಟಿ,ಡೀನ್ ಪ್ರೊ.ಡಾ.ಜಯಪ್ರಕಾಶ್ ಶೆಟ್ಟಿ,ಕಾರ್ಯಕ್ರಮ ಸಂಯೋಜಕರಾದ ಪ್ರತಿಮಾ ರೈ,ಅಂಶ್ಯಾ ರೈ ಹಾಗೂ ಡಾ.ವರ್ಷಾ ಶೆಟ್ಟಿ ಉಪಸ್ಥಿತರಿದರು. ಮ್ಯಾರಥಾನ್ನಲ್ಲಿ ದೇಶದ 150 ಕ್ಕೂ ಹೆಚ್ಚು ವಿದ್ಯಾಸಂಸ್ಥೆಗಳ ಸುಮಾರು 1700 ವಿದ್ಯಾರ್ಥಿಗಳು,ಎನ್ಎಸ್ಎಸ್ ಸ್ವಯಂ ಸೇವಕರು,ಅಧ್ಯಾಪಕರು,ಸಿಬ್ಬಂದಿಗಳು ಹಾಗೂ ಗೋವಾ ಮೂಲದ ಅಂಗವೈಕಲ್ಯ ಹೊಂದಿರುವ ವಿವೇಕ್ ಸಿಂಗ್ ಭಾಗವಹಿಸುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾದರು.
Aland | ಶಿಕ್ಷಣವೇ ಸಮಾನತೆಯ ದಾರಿ: ರಾಜೇಂದ್ರ ಕಡಗನ್
ಆಳಂದ: ಡಾ. ಅಂಬೇಡ್ಕರ್ ಅವರ ಚಿಂತನೆಗಳು ಇಂದಿಗೂ ಸಮಾಜಕ್ಕೆ ದಿಕ್ಕು ತೋರಿಸುತ್ತಿವೆ. ಶಿಕ್ಷಣದ ಮೂಲಕವೇ ವ್ಯಕ್ತಿ ಹಾಗೂ ಸಮಾಜದ ಅಭಿವೃದ್ಧಿ ಸಾಧ್ಯವೆಂದು ಸಂಪನ್ಮೂಲ ವ್ಯಕ್ತಿ ರಾಜೇಂದ್ರ ಕಡಗನ್ ಅವರು ಹೇಳಿದರು. ಪಟ್ಟಣದ ತಾಲೂಕು ಸಮಾಜ ಕಲ್ಯಾಣ ಇಲಾಖೆಯ ಆಶ್ರಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಡಾ.ಬಿ.ಆರ್.ಅಂಬೇಡ್ಕರ್ ಮೆಟ್ರಿಕ್ ನಂತರದ ಬಾಲಕರ ವಸತಿನಿಲಯದಲ್ಲಿ ಸಂವಿಧಾನ ಶಿಲ್ಪಿ ಭಾರತ ರತ್ನ ಡಾ.ಬಿ.ಆರ್.ಅಂಬೇಡ್ಕರ್ ಅವರ 135ನೇ ಜಯಂತಿ ಆಚರಣೆ ಹಾಗೂ ನಿಲಯದಲ್ಲಿ ಅತ್ಯಧಿಕ ಅಂಕಗಳನ್ನು ಪಡೆದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸುವ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸಕರಾಗಿ ಅವರು ಮಾತನಾಡಿದರು. ವಿದ್ಯಾರ್ಥಿಗಳು ಶ್ರಮಪಟ್ಟು ವಿದ್ಯಾಭ್ಯಾಸದಲ್ಲಿ ಮುಂದುವರಿಯಬೇಕು ಹಾಗೂ ತಮ್ಮ ಸಾಧನೆಗಳ ಮೂಲಕ ಸಮಾಜಕ್ಕೆ ಮಾದರಿಯಾಗಬೇಕು ಎಂದು ಸಲಹೆ ನೀಡಿದರು. ಕಾರ್ಯಕ್ರಮದಲ್ಲಿ ನಿಲಯ ಮೇಲ್ವಿಚಾರಕರಾದ ಸಿದ್ಧರಾಮ ಸಾಲೇಗಾಂವ ಮತ್ತು ನಿಲಯ ಪಾಲಕರಾದ ಗುಂಡೇರಾಯ ಅವರು ಅತಿಥಿಗಳಾಗಿ ಉಪಸ್ಥಿತರಿದ್ದರು. ವೇದಿಕೆಯಲ್ಲಿ ಪಿಯುಸಿ ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಪಡೆದ ಅಂಕುಶ ರಾಜೇಂದ್ರ, ಅರುಣ ಮಹಾದೇವ ಹಾಗೂ ಲವ ರಾಜೇಂದ್ರ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮವನ್ನು ನಿವೃತ್ತ ಸೈನಿಕ ಸಂಘದ ಅಧ್ಯಕ್ಷ ಸಿದ್ಧಲಿಂಗ ಮಲಶೆಟ್ಟಿ ನಿರೂಪಿಸಿದರು. ನಿಲಯಪಾಲಕರಾದ ನಿಂಗಣ್ಣ ದೊಡ್ಡಮನಿ ಸ್ವಾಗತಿಸಿದರು. ಈ ಸಂದರ್ಭದಲ್ಲಿ ಸಮತಾಲೋಕ ಶಿಕ್ಷಣ ಸಮಿತಿ ಹಾಗೂ ನಿವೃತ್ತ ಸೈನಿಕ ಸಂಘದ ಆಶ್ರಯದಲ್ಲಿ ನಡೆಯುತ್ತಿರುವ ಸೈನಿಕ ತರಬೇತಿ ಕೇಂದ್ರದ ಪ್ರಶಿಕ್ಷಣಾರ್ಥಿಗಳು, ವಸತಿನಿಲಯದ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
Aland | ಕಬ್ಬು ಪೂರೈಸಿದ ರೈತರ ಬಿಲ್ ಪಾವತಿಗೆ ವಿಳಂಬವಾದರೆ ಹೋರಾಟ
ಆಳಂದ: ತಾಲೂಕಿನ ಭೂಸನೂರ ಬಳಿ ತಾಲೂಕಿನ ಭೂಸನೂರ ಎನ್ಎಸ್ಎಲ್ ಸಕ್ಕರೆ ಕಾರ್ಖಾನೆಗೆ ಕಬ್ಬು ಪೂರೈಸಿದ ರೈತರಿಗೆ ಬಿಲ್ ಪಾವತಿ ಮಾಡದೇ ಹೋದಲ್ಲಿ ರೈತರೊಂದಿಗೆ ಕಾರ್ಖಾನೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಗುವುದು ಎಂದು ಕರ್ನಾಟಕ ರಕ್ಷಣಾ ವೇದಿಕೆಯ ನಿಂಬರಗಾ ಹೋಬಳಿ ಘಟಕದ ಅಧ್ಯಕ್ಷ ಬಸವರಾಜ ಯಳಸಂಗಿ ಎಚ್ಚರಿಸಿದರು. ತಾಲೂಕಿನ ಭೂಸನೂರ ಬಳಿಯಿರುವ ಎನ್ಎಸ್ಎಲ್ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿಯ ಉಪಾಧ್ಯಕ್ಷರಿಗೆ ಲಿಖಿತವಾಗಿ ಬೇಡಿಕೆಯ ಮನವಿ ಸಲ್ಲಿಸಿ ಒತ್ತಾಯಿಸಿರುವ ಅವರು, ಕಬ್ಬು ಪೂರೈಕೆ ಮಾಡಿದ ರೈತರಿಗೆ ಬಿಲ್ ತಕ್ಷಣವೇ ಪಾವತಿಗೆ ಒತ್ತಾಯಿಸಿ ಮನವಿ ಸಲ್ಲಿಸಲಾಯಿತು. ರೈತರಿಗೆ ಬಿಲ್ ಇದುವರೆಗೂ ಪಾವತಿ ಮಾಡದೆ ಇರುವುದು ರೈತರಿಗೆ ತೊಂದರೆ ಎದುರಾಗಿದೆ. ಕಾರ್ಖಾನೆಯಿಂದ ಕಬ್ಬಿನ್ ಬಿಲ್ಪಾವತಿಗೆ ವಿಳಂಬದಿಂದಾಗಿ ರೈತರು ಗಂಭೀರ ಆರ್ಥಿಕ ಸಂಕಷ್ಟವನ್ನು ಎದುರಿಸತೊಡಗಿದ್ದಾರೆ. ಕೃಷಿ ಚುಟುವಟಿಕೆಗಳಿಗೆ ಮುಂದುವರೆಸಲು ತೊಂದರೆ ಆಗಿದೆ. ತಕ್ಷಣವೇ ಕಬ್ಬಿನ ಬಿಲ್ ರೈತರ ಖಾತೆಗೆ ಪಾವತಿಸಬೇಕು. ಇಲ್ಲವಾದಲ್ಲಿ ರೈತರೊಂದಿಗೆ ಕಾಖಾನೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಗುವುದು ಎಂದು ಮನವಿ ಸಲ್ಲಿಸಿ ಎಚ್ಚರಿಸಿದರು. ಕರವೇ ವಲಯ ಅಧ್ಯಕ್ಷ ಬಸವರಾಜ ಯಳಸಂಗಿ, ಕರ್ನಾಟಕ ರಾಜ್ಯ ರೈತ ಸಂಘದ ಹಾಗೂ ಹಸಿರು ಸೇನೆ ನಿಂಬರಗಾ ಅಧ್ಯಕ್ಷ ಧರ್ಮರಾಯ ಎಸ್.ಕಾಮಣಗೊಳ ಸೇರಿದಂತೆ ಇತರರು ಉಪಸ್ಥಿತರಿದ್ದು, ರೈತರ ಕಬ್ಬಿನ ಬಿಲ್ ತಕ್ಷಣಕ್ಕೆ ನೀಡಬೇಕು ಎಂದು ಆಗ್ರಹಿಸಿದರು. ಮನವಿ ಸ್ವೀಕರಿಸಿದ ಕಾರ್ಖಾನೆ ಉಪಾಧ್ಯಕ್ಷರು ಈಕುರಿತು ಬಿಲ್ಪಾವತಿಗೆ ಕ್ರಮ ವಹಿಸಲಾಗುತ್ತದೆ ಎಂದು ಭರವಸೆ ನೀಡಿದರು.
ಉಡುಪಿ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಆಮಂತ್ರಣ ಪತ್ರಿಕೆ ಬಿಡುಗಡೆ
ಉಡುಪಿ, ಎ.18: ಕನ್ನಡ ಸಾಹಿತ್ಯ ಪರಿಷತ್ ಉಡುಪಿ ತಾಲೂಕು ಘಟಕ ಇದರ ವತಿಯಿಂದ ಮೇ 3ರಂದು ಡಾ.ಭಾಸ್ಕರಾಂನಂದ ಕುಮಾರ್ ಅವರ ಸರ್ವಾಧ್ಯಕ್ಷತೆಯಲ್ಲಿ ನಡೆಯಲಿರುವ 16ನೇ ಕನ್ನಡ ಸಾಹಿತ್ಯ ಸಮ್ಮೇಳನ ಭೀಷ್ಮೋತ್ಸವದ ಆಮಂತ್ರಣ ಪತ್ರಿಕೆಯನ್ನು ಸಾಂಸ್ಕೃತಿಕ ರಾಯಭಾರಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಮೋಹನ್ ಆಳ್ವ ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ಕಸಾಪ ಉಡುಪಿ ತಾಲೂಕು ಅಧ್ಯಕ್ಷ ರವಿರಾಜ್ ಎಚ್.ಪಿ., ಕಸಾಪ ಗೌರವ ಸಲಹೆಗಾರರಾದ ಉಡುಪಿ ವಿಶ್ವನಾಥ್ ಶೆಣೈ, ಪ್ರೊ.ಶಂಕರ್, ಗೌರವ ಕಾರ್ಯದರ್ಶಿಗಳಾದ ಜನಾರ್ದನ್ ಕೊಡವೂರು, ರಂಜನಿ ವಸಂತ್, ಗೌರವ ಕೋಶಾದ್ಯಕ್ಷ ರಾಜೇಶ್ ಭಟ್ ಪಣಿಯಾಡಿ, ಮಾಧ್ಯಮ ಪ್ರತಿನಿಧಿ ಆಸ್ಟ್ರೋ ಮೋಹನ್, ಸಂಘಟನಾ ಕಾರ್ಯದರ್ಶಿ ರಾಘವೇಂದ್ರ ಪ್ರಭು ಕರ್ವಾಲು, ವಸಂತ್, ದೀಪಾ ಕರ್ಕಿ, ಚಂದ್ರಶೇಖರ್, ಸಾಮಾಜಿಕ ಜಾಲತಾಣ ಸಂಚಾಲಕ ಸಿದ್ದಬಸಯ್ಯ ಸ್ವಾಮಿ ಚಿಕ್ಕಮಠ ಮೊದಲಾದವರು ಉಪಸ್ಥಿತರಿದ್ದರು.
ಉಡುಪಿ ನೂತನ ಬಿಷಪ್ ಡಾ.ಲೆಸ್ಲಿ ಕ್ಲಿಫರ್ಡ್ ಡಿಸೋಜರ ಪೀಠಾರೋಹಣಕ್ಕೆ ಸಿದ್ಧತೆ
ಉಡುಪಿ, ಎ.18: ಕಲ್ಯಾಣಪುರದ ಮಿಲಾಗ್ರಿಸ್ ಕಾಲೇಜು ಮೈದಾನದಲ್ಲಿ ಎ.20ರಂದು ನಡೆಯಲಿರುವ ಉಡುಪಿ ಧರ್ಮಕ್ಷೇತ್ರದ ದ್ವಿತೀಯ ಧರ್ಮಾಧ್ಯಕ್ಷ ಅತಿ ವಂ.ಡಾ.ಲೆಸ್ಲಿ ಕ್ಲಿಫರ್ಡ್ ಡಿಸೋಜ ಅವರ ಪೀಠಾ ರೋಹಣ ಸಮಾರಂಭಕ್ಕೆ ಸಿದ್ದತೆಗಳು ಪೂರ್ಣಗೊಂಡಿವೆ. ಸಂತೆಕಟ್ಟೆ ಬಸ್ ನಿಲ್ಡಾಣದಿಂದ ಮಿಲಾಗ್ರಿಸ್ ಪ್ರಧಾನಾಲಯಕ್ಕೆ ತೆರಳುವ ಮಾರ್ಗವನ್ನು ಸಂಪೂರ್ಣವಾಗಿ ಅಲಂಕ ರಿಸಲಾಗಿದ್ದು ಬೃಹತ್ ಗಾತ್ರದ ಸ್ವಾಗತ ಕಮಾನುಗಳನ್ನು ಅಳವಡಿಸಲಾಗಿದೆ. ದಾರಿಯುದ್ದಕ್ಕೂ ಶುಭಾಶಯ ಕೋರುವ ಫ್ಲೆಕ್ಸ್ ಅಳವಡಿಕೆ ಮಾಡಲಾಗಿದೆ. ಕಾರ್ಯಕ್ರಮದ ಪ್ರಧಾನ ವೇದಿಕೆ ಸಿದ್ದಗೊಂಡಿದ್ದು ಅದರಲ್ಲಿ ನೂತನ ಧರ್ಮಾಧ್ಯಕ್ಷರ ಅಭಿಷೇಕ ಹಾಗೂ ಪೀಠಾರೋಹಣ ಸಮಾರಂಭ ಪವಿತ್ರ ಬಲಿಪೂಜೆಯೊಂದಿಗೆ ನೆರವೇರಲಿದೆ. ವೇದಿಕೆಯಲ್ಲಿ ಸುಮಾರು 35 ಧರ್ಮಾಧ್ಯಕ್ಷರು ಆಸೀನರಾಗಲಿದ್ದು ಬಲಿಪೂಜೆಯ ಬಳಿಕದ ಸಾರ್ವಜನಿಕ ಅಭಿನಂದನಾ ಸಮಾರಂಭ ಕೂಡ ಅದೇ ವೇದಿಕೆಯಲ್ಲಿ ಜರುಗಲಿದೆ. ಭಕ್ತಾದಿಗಳಿಗೆ ಕುಳಿತುಕೊಳ್ಳಲು ಬೃಹತ್ ಪೆಂಡಾಲ್ ವ್ಯವಸ್ಥೆಗಳನ್ನು ಮಾಡಲಾಗಿದೆ. ಬಿಸಿಲಿನ ಶಾಖ ವಿಪರೀತ ಇರುವ ನಿಟ್ಟಿನಲ್ಲಿ ಸಾಕಷ್ಟು ಸಂಖ್ಯೆ ಫ್ಯಾನ್ ವ್ಯವಸ್ಥೆಯ ಜೊತೆಗೆ ಕುಡಿಯವ ನೀರಿನ ವ್ಯವಸ್ಥೆಗಳನ್ನು ಮಾಡಲಾಗಿದೆ. ಧರ್ಮಾಧ್ಯಕ್ಷರ ದೀಕ್ಷಾ ಸಮಾರಂಭ ಅತ್ಯಂತ ಪವಿತ್ರ ಕಾರ್ಯಕ್ರಮ ವಾಗಿದ್ದು ಈ ವೇಳೆಯಲ್ಲಿ ವೇದಿಕೆಯ ಬಳಿ ಕಾರ್ಯಕ್ರಮದ ಪಾವಿತ್ರ್ಯತೆ ಯನ್ನು ಕಾಪಾಡುವ ಸಲುವಾಗಿ ಸಾರ್ವಜನಿಕರಿಗೆ ಛಾಯಾಗ್ರಹಣ ಮತ್ತು ವೀಡಿಯೋ ಗ್ರಫಿ ನಿಷೇಧಿಸಿದೆ. ಮಾಧ್ಯಮದವರಿಗೆ ಫೋಟೊ ಮತ್ತು ವೀಡಿಯೊಗೆ ಸೂಕ್ತ ವ್ಯವಸ್ಥೆಗಳನ್ನು ಮಾಡಲಾಗಿದೆ. ಧರ್ಮಾಧ್ಯಕ್ಷರ ದೀಕ್ಷಾ ಸಮಾರಂಭವನ್ನು ಸಂಪೂರ್ಣವಾಗಿ ನೇರಪ್ರಸಾರ ಮಾಡಲಾಗುತ್ತಿದ್ದು ವಿದೇಶದಲ್ಲಿರುವ ಕ್ರೈಸ್ತ ಭಕ್ತಾದಿಗಳು ಕೂಡ ಕಾರ್ಯಕ್ರಮ ವೀಕ್ಷಿಸುವ ವ್ಯವಸ್ಥೆ ಮಾಡಲಾಗಿದೆ. ಕಾರ್ಯಕ್ರಮದ ಯಶಸ್ಸಿಗಾಗಿ ವಿವಿಧ ಸಮಿತಿಗಳ ಮೂಲಕ ತಯಾರಿಗಳು ಭರದಿಂದ ನಡೆದಿದ್ದು ಕೊನೆಯ ಹಂತದ ಕೆಲಸಗಳು ಮಾತ್ರ ಬಾಕಿ ಇವೆ. ಪಾರ್ಕಿಂಗ್ ಸ್ಥಳಗಳು: ಮಿಲಾಗ್ರಿಸ್ ಪ್ರಧಾನಾಲಯದ ಆವರಣದಲ್ಲಿ ನುನ್ಸಿಯೋ, ಕಾರ್ಡಿನಲ್, ಆರ್ಚ್ ಬಿಷಪ್ ಮತ್ತು ಇತರ ಧರ್ಮಾ ಧ್ಯಕ್ಷರುಗಳು, ಮಾಧ್ಯಮ ಹಾಗೂ ಗಾಯನ ತಂಡದ ವಾಹನಗಳು, ಮಿಲಾಗ್ರಿಸ್ ಆಂಗ್ಲ ಮಾಧ್ಯಮ ಶಾಲೆ ಹಾಗೂ ಕಾಲೇಜು ಆವರಣದಲ್ಲಿ ಧರ್ಮಗುರುಗಳು ಹಾಗೂ ಧರ್ಮಭಗಿನಿಯರು, ಸಂತೆಕಟ್ಟೆ ಮೌಂಟ್ ರೋಸರಿ ಚರ್ಚ್ ಆವರಣದಲ್ಲಿ ಸಾರ್ವಜನಿಕರ ವಾಹನಗಳಿಗೆ ಅವಕಾಶ ಕಲ್ಪಿಸಲಾಗಿದೆ. ವಿಲ್ಸನ್ ಫೆರ್ನಾಂಡಿಸ್ ಮೈದಾನದಲ್ಲಿ ಶಂಕರಪುರ ಮತ್ತು ಶಿರ್ವ ಚರ್ಚಿನ ಭಕ್ತಾದಿಗಳ ವಾಹನಗಳು(ಬಸ್ಸುಗಳನ್ನು ಹೊರತುಪಡಿಸಿ), ಪೈ ಶಾಲಾ ಆವರಣದಲ್ಲಿ ಗೌರವ ಅತಿಥಿಗಳು, ಜೊವಿಟಾ ಮೈದಾನ ಹಾಗೂ ರಸ್ತೆಯ ಇಕ್ಕೆಲ ಗಳಲ್ಲಿ ದ್ವಿಚಕ್ರ ವಾಹನಗಳನ್ನು ನಿಲ್ಲಿಸಲು ಅವಕಾಶವಿದೆ. ಮಿಲಾಗ್ರಿಸ್ ಹೋಮ್ನಲ್ಲಿ ಧರ್ಮಾಧ್ಯಕ್ಷರುಗಳ ವಾಹನಗಳು, ಆಲ್ವಿನ್ ನಜರೆತ್ ಮೈದಾನದಲ್ಲಿ ಕೆಮ್ಮಣ್ಣು, ಮೌಂಟ್ ರೋಸರಿ, ತೊಟ್ಟಂ, ಮಿಲಾಗ್ರಿಸ್ ಚರ್ಚಿನ ಭಕ್ತಾದಿಗಳ ವಾಹನ ನಿಲುಗಡೆಗೆ ಮತ್ತು ವಾಹನ ದಟ್ಟಣೆ ಹೆಚ್ಚಾದಲ್ಲಿ ನೇಜಾರು ಮೈದಾನದಲ್ಲಿ ಕೂಡ ನಿಲುಗಡೆಗೆ ಅವಕಾಶ ನೀಡಲಾಗಿದೆ. ಸಂತೆಕಟ್ಟೆ ಮೌಂಟ್ ರೋಸರಿ ಚರ್ಚ್ ಆವರಣದಲ್ಲಿ ವಾಹನ ನಿಲುಗಡೆ ಮಾಡುವವರಿಗೆ ಕಾರ್ಯಕ್ರಮದ ಸ್ಥಳದ ವರೆಗೆ ತಲುಪಿಸಲು ಪ್ರತ್ಯೇಕ ಬಸ್ಸುಗಳು ಮತ್ತು ಟೆಂಪೋ ವ್ಯವಸ್ಥೆ ಮಾಡಲಾಗಿದೆ.
ಅಫಜಲಪುರ–ಅರ್ಜುಣಗಿ ನಡುವೆ ಬಸ್ ಸಂಚಾರ ಪುನರಾರಂಭ: ಗ್ರಾಮಸ್ಥರಲ್ಲಿ ಹರ್ಷ
ಅಫಜಲಪುರ: ಬಡದಾಳ ಮಾರ್ಗವಾಗಿ ಅರ್ಜುಣಗಿ ಗ್ರಾಮಕ್ಕೆ ಬರುತ್ತಿದ್ದ ಬಸ್ ಸಂಚಾರ ಸ್ಥಗಿತಗೊಂಡಿದ್ದರಿಂದ ಗ್ರಾಮಸ್ಥರು ಹಾಗೂ ಶಾಲಾ-ಕಾಲೇಜು ವಿದ್ಯಾರ್ಥಿಗಳು ತೀವ್ರ ತೊಂದರೆ ಅನುಭವಿಸುತ್ತಿದ್ದರು. ಈ ಹಿನ್ನೆಲೆಯಲ್ಲಿ ಇದೀಗ ಅಫಜಲಪುರ ಬಸ್ ನಿಲ್ದಾಣದಿಂದ ದುಧನಿ ಮಾರ್ಗವಾಗಿ ಅರ್ಜುಣಗಿ ಗ್ರಾಮದವರೆಗೆ ಹೊಸ ಬಸ್ ಸಂಚಾರವನ್ನು ಆರಂಭಿಸಲಾಗಿದೆ. ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಅಧ್ಯಕ್ಷ ಅರುಣಕುಮಾರ ಪಾಟೀಲರು ಹಾಗೂ ಘಟಕ ವ್ಯವಸ್ಥಾಪಕ ಎ.ಎ. ಬೋವಿ ನೀಡಿದ ಭರವಸೆಯಂತೆ ಬಸ್ ಸೇವೆ ಪುನರಾರಂಭಗೊಂಡಿದ್ದು, ಗ್ರಾಮಸ್ಥರಲ್ಲಿ ಸಂತೋಷ ವ್ಯಕ್ತವಾಗಿದೆ. ಶನಿವಾರ ಅರ್ಜುಣಗಿ ಗ್ರಾಮಕ್ಕೆ ಮೊದಲ ಬಾರಿಗೆ ಬಂದ ಬಸ್ಗೆ ಪೂಜೆ ನೆರವೇರಿಸಲಾಯಿತು. ಇದೇ ವೇಳೆ ಬಸ್ ಸಿಬ್ಬಂದಿಯನ್ನು ಗ್ರಾಮಸ್ಥರು ಸನ್ಮಾನಿಸಿ ಗೌರವಿಸಿದರು. ಗ್ರಾಮದ ಬಹುಕಾಲದ ಸಮಸ್ಯೆಗೆ ಸ್ಪಂದನೆ ದೊರೆತಿರುವುದು ಸಂತಸದ ವಿಚಾರವಾಗಿದ್ದು, ಹೊಸ ಬಸ್ ಸಂಚಾರದಿಂದ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಗ್ರಾಮಸ್ಥರು ಅಭಿಪ್ರಾಯಪಟ್ಟರು. ಈ ಸಂದರ್ಭದಲ್ಲಿ ಗುರುಶಾಂತ್ ಬಿರಾದಾರ್, ಬಾಬು ಮಾಲಿ ಪಾಟೀಲ್, ಮಹದೇವಪ್ಪ ಕೋಣೆ, ಸುದೀಪ್ ಹಂಗರಗಿ, ಈರಣ್ಣ ಹಂಗರಗಿ, ರಹೇಮಾನ ಮನಿಯಾರ, ಶಶಿಕಾಂತ ಚವಾಣ, ಶಂಕರ್ ಚವಾಣ್, ತುಕಾರಾಮ ಚವಾಣ, ಗೋವಿಂದ ರಾಠೋಡ, ಕೆಕೆಆರ್ಟಿಸಿ ಸಿಬ್ಬಂದಿಗಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
ಸುರಕ್ಷಿತ ಕ್ರಮ ಕೈಗೊಂಡರೂ ಹೆಚ್ಚುತ್ತಿವೆ ಅಪಘಾತಗಳ ಸಂಖ್ಯೆ: 2025 ರಲ್ಲಿ 43,129 ಪ್ರಕರಣ, 11,324 ಸಾವು
ಯಾದಗಿರಿಯಲ್ಲಿ ಶುಕ್ರವಾರ ನಡೆದ ಭೀಕರ ಅಪಘಾತ ಬೆಚ್ಚಿಬೀಳಿಸುವಂತಿದೆ. ಖಾಸಗಿ ಬಸ್ ಮತ್ತು ಕಾರಿನ ನಡುವೆ ನಡೆದ ಅಪಘಾತದಲ್ಲಿ 6 ಮಂದಿ ಮೃತಪಟ್ಟಿದ್ದಾರೆ. ರಾಜ್ಯದಲ್ಲಿ ಇತ್ತೀಚಿನ ದಿನಗಳಲ್ಲಿ ಇಂತಹ ಹಲವು ಭೀಕರ ಅಪಘಾತಗಳು ಸಂಭವಿಸಿವೆ. ಇದನ್ನು ನಿಯಂತ್ರಣ ಮಾಡಲು ಸಾರಿಗೆ ಇಲಾಖೆ ಸಾಕಷ್ಟು ಕ್ರಮಗಳನ್ನು ಕೈಗೊಳ್ಳುತ್ತಿದೆ. ಹಾಗಿದ್ದರೂ ಅಪಘಾತ ನಿಯಂತ್ರಣ ಮತ್ತು ಸಾವು ನೋವಿಗೆ ಕಡಿವಾಣ ಹಾಕಲು ಸಾಧ್ಯವಾಗಿಲ್ಲ. ಇದನ್ನು ನಿಯಂತ್ರಣ ಮಾಡುವುದು ಕೂಡಾ ಸವಾಲಿನ ಸಂಗತಿಯಾಗಿದೆ. ಈ ಕುರಿತಾದ ಮತ್ತಷ್ಟು ವಿವರ ಇಲ್ಲಿದೆ.
Kalaburagi | ಗೋದುತಾಯಿ ವಿದ್ಯಾರ್ಥಿನಿಯರಿಂದ ‘ವಿಶ್ವಪಾರಂಪರಿಕ ನಡಿಗೆ’
ಕಲಬುರಗಿ : ವಿಶ್ವಪಾರಂಪರಿಕ ದಿನಾಚರಣೆ ಅಂಗವಾಗಿ ಗೋದುತಾಯಿ ದೊಡ್ಡಪ್ಪ ಅಪ್ಪ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಪದವಿ ಮಹಿಳಾ ಮಹಾವಿದ್ಯಾಲಯದ ವಿದ್ಯಾರ್ಥಿನಿಯರು ಮತ್ತು ಪ್ರಾಧ್ಯಾಪಕರು ವಿಶ್ವಪಾರಂಪರಿಕ ನಡಿಗೆಯಲ್ಲಿ ಭಾಗವಹಿಸಿದ್ದರು. ಶನಿವಾರ ಬೆಳಗ್ಗೆ ಮಹಾವಿದ್ಯಾಲಯ ಹಾಗೂ ಶರಣಬಸವ ವಿಶ್ವವಿದ್ಯಾಲಯದ ಬಿಬಿಎ ಟೂರಿಸಮ್ ಮತ್ತು ಟ್ರಾವೆಲ್ ವಿಭಾಗದ ಸಂಯುಕ್ತಾಶ್ರಯದಲ್ಲಿ ಮಹಾವಿದ್ಯಾಲಯದ ವಿದ್ಯಾರ್ಥಿನಿಯರು ಶರಣಬಸವೇಶ್ವರ ದೇವಸ್ಥಾನದಿಂದ ಬಹುಮನಿ ಕೋಟೆವರೆಗೆ ನಡೆದರು. ಮಹಾವಿದ್ಯಾಲಯದ ಪ್ರಾಚಾರ್ಯೆ ಡಾ.ಸೀಮಾ ಪಾಟೀಲ್ ಅವರು ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿ, ಪಾರಂಪರಿಕ ಸ್ಮಾರಕಗಳು ನಮ್ಮ ಪೂರ್ವಿಕರಿಂದ ನಮಗೆ ಬಳುವಳಿ ಆಗಿ ಬಂದ ಆಸ್ತಿಗಳು ಅವುಗಳನ್ನು ಸಂರಕ್ಷಣೆ ಮಾಡುವುದು ನಮ್ಮೆಲ್ಲರ ಜವಾಬ್ದಾರಿ ಎಂದು ಹೇಳಿದರು. ಸಂಪನ್ಮೂಲ ವ್ಯಕ್ತಿಯಾದ ಹಿರಿಯ ಪ್ರಾಧ್ಯಾಪಕ ಡಾ.ಶಂಭುಲಿಂಗ ವಾಣಿಯವರು ಐತಿಹಾಸಿಕ ಸ್ಥಳಗಳು ಹಾಗೂ ಕಲಬುರಗಿ ಕೋಟೆಯ ಮಾಹಿತಿಯನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು. ಈ ಕಾರ್ಯಕ್ರಮದಲ್ಲಿ ಮಹಾವಿದ್ಯಾಲಯದ ದೈಹಿಕ ನಿರ್ದೇಶಕಿ ಡಾ.ರಾಜಲಕ್ಷ್ಮಿ, ಇತಿಹಾಸ ವಿಭಾಗದ ಮುಖ್ಯಸ್ಥ ಸಂತೋಷ್ ಪೂಜಾರಿ, ರಾಜ್ಯಶಾಸ್ತ್ರದ ಪ್ರಾಧ್ಯಾಪಕ ಪಂಡಿತ್ಬಿ. ಮದುಗುಣಕಿ, ಶರಣಬಸವ ವಿವಿಯ ಬಿಬಿಎ ಟೂರಿಸಮ್ ಮತ್ತು ಟ್ರಾವೆಲ್ ವಿಭಾಗದ ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿನಿಯರು ಭಾಗವಹಿಸಿದ್ದರು.
Bengaluru | ಸಾಲದ ಹಣ ಹಿಂತಿರುಗಿಸದಕ್ಕೆ ತಂಗಿ-ಮೈದುನನ ಅಪಹರಿಸಿ ಹಲ್ಲೆ: ಅಕ್ಕ-ಭಾವ ಸಹಿತ ಮೂವರ ಬಂಧನ
ಬೆಂಗಳೂರು: ಸಾಲದ ಹಣವನ್ನು ಹಿಂತಿರುಗಿಸದ ಕಾರಣ ತಂಗಿ ಮತ್ತು ಮೈದುನನನ್ನು ಅಪಹರಿಸಿ ಹಲ್ಲೆ ಮಾಡಿದ ಆರೋಪದಡಿ ಅಕ್ಕ ಮತ್ತು ಭಾವ ಸೇರಿದಂತೆ ಮೂವರು ಆರೋಪಿಗಳನ್ನು ಇಲ್ಲಿನ ಹೆಬ್ಬಗೋಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಹಲ್ಲೆಗೊಳಗಾದ ಪೃಥ್ವಿ ಎಂಬವರು ನೀಡಿದ ದೂರಿನನ್ವಯ ಸಹೋದರಿ ಪ್ರಪುಲ್ಲಾ, ಭಾವ ಸಲೀಂ ಶೇಕ್, ಈತನ ಸಹಚರ ಬಿರೇಶ್ ಎಂಬವರನ್ನು ಬಂಧಿಸಿ ಹೆಚ್ಚಿನ ವಿಚಾರಣೆಗೊಳಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಹೆಬ್ಬಗೋಡಿಯ ಅನಂತನಗರದಲ್ಲಿ ವಾಸವಾಗಿರುವ ದೂರುದಾರ ಮಹಿಳೆ ಹಾಗೂ ಪತಿ ಅಭಿಜಿತ್ ಅವರ ಮನೆಗೆ ಎ.14ರ ರಾತ್ರಿ ಆರೋಪಿಗಳು ಬಂದು ಏಕಾಏಕಿ ಹಲ್ಲೆ ನಡೆಸಿದ್ದಾರೆ. ಹಣಕಾಸಿನ ವ್ಯವಹಾರ ಸಂಬಂಧ ಪೊಲೀಸ್ ಠಾಣೆಗೆ ಕರೆದೊಯ್ಯುವುದಾಗಿ ಹೇಳಿ ಕಾರಿನಲ್ಲಿ ಕೂರಿಸಿ ಅಪಹರಿಸಿದ್ದರು. ಮಾರ್ಗ ಮಧ್ಯೆ ಕಾರಿನಿಂದ ಇಳಿದು ಪರಾರಿಗೆ ಯತ್ನಿಸಿದರೂ ಹಲ್ಲೆ ಮಾಡಿ ನಾಗರಬಾವಿಯಲ್ಲಿ ಮನೆಗೆ ಕರೆದೊಯ್ದು ಗೃಹಬಂಧನದಲ್ಲಿ ಇರಿಸಿದ್ದರು ಎಂದು ದೂರಿನಲ್ಲಿ ಆರೋಪಿಸಲಾಗಿದೆ.
Chittapur | ಕುಂಬಾರ ಮಹಾಸಭಾ ಅಧ್ಯಕ್ಷರಾಗಿ ವಿಶ್ವನಾಥ ಆಯ್ಕೆ
ಚಿತ್ತಾಪುರ : ಅಖಿಲ ಭಾರತ ಕುಂಬಾರರ ಮಹಾಸಭಾದ ರಾಜ್ಯ ಘಟಕದಿಂದ ಚಿತ್ತಾಪುರ ತಾಲೂಕು ಘಟಕಕ್ಕೆ ನೂತನ ಅಧ್ಯಕ್ಷರನ್ನಾಗಿ ಸಮಾಜ ಸೇವಕ ವಿಶ್ವನಾಥ ಎಸ್.ಕುಂಬಾರ ಅವರನ್ನು ನೇಮಕ ಮಾಡಲಾಗಿದೆ. ಸಮಾಜ ಸೇವೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ವಿಶ್ವನಾಥ ಕುಂಬಾರ ಅವರ ಬದ್ಧತೆ ಮತ್ತು ಕಾರ್ಯ ವೈಖರಿ ಪರಿಗಣಿಸಿ ಮಹಾಸಭಾದ ರಾಜ್ಯ ಅಧ್ಯಕ್ಷರಾದ ನಿತ್ಯಾ ಭರಣ ಚೌಡಶೆಟ್ಟಿ, ಈ ನೇಮಕಾತಿ ಆದೇಶ ಹೊರಡಿಸಿದ್ದಾರೆ. ಸಂಘಟನೆಯ ನಿಯಮಾವಳಿಗಳಿಗೆ ಬದ್ಧರಾಗಿ ಶಿಸ್ತಿನಿಂದ ಸಮಾಜದ ಹಿತರಕ್ಷಣೆ ಕೆಲಸ ಮಾಡುವಂತೆ ಸೂಚಿಸಲಾಗಿದೆ. ತಾಲೂಕು ಮಟ್ಟದಲ್ಲಿ ಸಮಾಜವನ್ನು ಸಂಘಟನೆ ಮಾಡುವುದಲ್ಲದೇ ಸಮಾಜದ ಚಟುವಟಿಕೆಗಳನ್ನು ಮುನ್ನೆಡೆಸುವುದು ಸಮಾಜದ ಯುವಶಕ್ತಿ ಹಾಗೂ ಹಿಂದುಳಿದ ವರ್ಗಗಳ ಏಳಿಗೆಗಾಗಿ ವಿಶೇಷ ಕಾರ್ಯಕ್ರಮ ರೂಪಿಸುವುದು ಸಮಾಜದ ಒಳಿತಿಗೆ ಶ್ರಮಿಸಬೇಕು ಎಂದು ಆದೇಶ ಪತ್ರದಲ್ಲಿ ಸೂಚಿಸಲಾಗಿದೆ.
300 ಕ್ವಿಂಟಾಲ್ ಬಿತ್ತನೆ ಬೀಜಕ್ಕೆ ಬೇಡಿಕೆ ಸಲ್ಲಿಕೆ: ಕಲ್ಲೇಶ್ ಪ್ರಸಾದ್
ಉಡುಪಿ ತಾಲೂಕು ಮಟ್ಟದ ಮಳೆಗಾಲ ಪೂರ್ವಸಿದ್ಧತಾ ಸಭೆ
Kalaburagi | ರಾಷ್ಟ್ರದಲ್ಲೇ ದಾಖಲೆ ಪ್ರಮಾಣದಲ್ಲಿ 40 ಸಾವಿರ ಪ್ರಕರಣ ಇತ್ಯರ್ಥ : ಬಿ.ವೆಂಕಟ್ ಸಿಂಗ್
ಮಾಹಿತಿ ಹಕ್ಕು ಕಾಯ್ದೆ ಕಾರ್ಯಾಗಾರ
ಮಲಬದ್ಧತೆಗೆ ಪರಿಹಾರವಾಗಿರುವ ಔಷಧ ಯಾವುದು? ತಜ್ಞರು ಹೇಳುವುದೇನು?
ಕಪ್ಪು ಒಣದ್ರಾಕ್ಷಿಯನ್ನು ತಿನ್ನುವುದು ವಾಸ್ತವದಲ್ಲಿ ಮಲಬದ್ಧತೆಗೆ ಉತ್ತಮ ಔಷಧಿಯಾಗಲಿದೆ.
Kalaburagi | ಬಾಕಿ ವೇತನ, ಭತ್ಯೆ ಬಿಡುಗಡೆಗೆ ಆಗ್ರಹಿಸಿ ಗುಲ್ಬರ್ಗಾ ವಿವಿಯ ಗುತ್ತಿಗೆ ನೌಕರರ ಧರಣಿ
ಕಲಬುರಗಿ: ಗುಲ್ಬರ್ಗ ವಿಶ್ವವಿದ್ಯಾಲಯದಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಸೇವೆ ಸಲ್ಲಿಸುತ್ತಿರುವ ನೌಕರರಿಗೆ ಕಳೆದ ಮೂರು ತಿಂಗಳಿನಿಂದ ವೇತನ ಪಾವತಿಯಾಗದ ಹಿನ್ನೆಲೆಯಲ್ಲಿ, “ಗುಲ್ಬರ್ಗಾ ವಿಶ್ವವಿದ್ಯಾಲಯದ ಗುತ್ತಿಗೆ ನೌಕರರ ಕಲ್ಯಾಣ ಸಂಘ”ದ ವತಿಯಿಂದ ಕಾರ್ಯಸೌಧದ ಮುಂದೆ ಶನಿವಾರ ಧರಣಿ ನಡೆಸಲಾಯಿತು. ಈ ವೇಳೆ ಕುಲಪತಿ ಪ್ರೊ. ಶಶಿಕಾಂತ್ ಹುಡಿಕೇರಿ, ಕುಲಸಚಿವ ಪ್ರೊ. ರಮೇಶ್ ಲಂಡನ್ಕರ್ ಹಾಗೂ ಸಿಂಡಿಕೇಟ್ ಸದಸ್ಯ ಉದಯಕಾಂತ ಪಾಟೀಲ ಅವರಿಗೆ ಮನವಿ ಸಲ್ಲಿಸಿ, 2026ರ ಜನವರಿ, ಫೆಬ್ರವರಿ ಮತ್ತು ಮಾರ್ಚ್ ತಿಂಗಳ ಬಾಕಿ ವೇತನವನ್ನು ತಕ್ಷಣ ಬಿಡುಗಡೆ ಮಾಡುವಂತೆ ಒತ್ತಾಯಿಸಿದರು. ಜೊತೆಗೆ 2025-26ನೇ ಸಾಲಿನ ತುಟ್ಟಿಭತ್ಯೆ (DA) ನೀಡಬೇಕೆಂದೂ ಆಗ್ರಹಿಸಿದರು. ಕಡಿಮೆ ವೇತನ – ಹೆಚ್ಚಿನ ಕೆಲಸ : ವಿಶ್ವವಿದ್ಯಾಲಯದ ಕಾಯಂ ನೌಕರರು ನಿವೃತ್ತಿಯಾಗುತ್ತಿರುವುದರಿಂದ ಅವರ ಕೆಲಸದ ಹೊರೆ ಗುತ್ತಿಗೆ ನೌಕರರ ಮೇಲೆ ಬೀಳುತ್ತಿದೆ. 15-20 ವರ್ಷಗಳಿಂದ ಕಡಿಮೆ ವೇತನದಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದರೂ, ವೇತನ ವಿಳಂಬದಿಂದ ಕುಟುಂಬ ನಿರ್ವಹಣೆ ಕಷ್ಟವಾಗಿದೆ ಎಂದು ನೌಕರರು ಅಳಲು ತೋಡಿಕೊಂಡಿದ್ದಾರೆ. ಕಾರ್ಮಿಕ ಇಲಾಖೆ ನಿಯಮದಂತೆ ಪ್ರತಿ ತಿಂಗಳ 7ರೊಳಗೆ ವೇತನ ಪಾವತಿಸಬೇಕು. ಆದರೆ ಮೂರು ತಿಂಗಳು ಸಂಬಳ ಸಿಗದಿರುವುದು ಗಂಭೀರ ಸಮಸ್ಯೆಯಾಗಿದ್ದು, ಇದರಿಂದ ಮಕ್ಕಳ ಶಿಕ್ಷಣ ಹಾಗೂ ವೃದ್ಧ ಪೋಷಕರ ಆರೈಕೆಯಲ್ಲೂ ತೊಂದರೆ ಉಂಟಾಗಿದೆ ಎಂದು ತಿಳಿಸಿದ್ದಾರೆ. ಕುಲಪತಿಗಳು “ನೀವು ನಮ್ಮ ನೌಕರರು ಅಲ್ಲ” ಎಂದು ಹೇಳುತ್ತಿರುವುದರ ಬಗ್ಗೆ ಸ್ಪಷ್ಟನೆ ನೀಡಬೇಕು. ಹಾಗಿದ್ದರೆ ನಾವು ಕಳೆದ ಹಲವು ವರ್ಷಗಳಿಂದ ಯಾರ ಅಡಿಯಲ್ಲಿ ಕೆಲಸ ಮಾಡುತ್ತಿದ್ದೇವೆ ಎಂಬ ಪ್ರಶ್ನೆಯನ್ನು ನೌಕರರು ಎತ್ತಿದ್ದಾರೆ. ಆರ್ಥಿಕ ಸಂಕಷ್ಟದಿಂದ ಜೀವನ ಸಂಕಷ್ಟಕ್ಕೆ ಸಿಲುಕಿರುವ ಹಿನ್ನೆಲೆಯಲ್ಲಿ, ತಕ್ಷಣವೇ ಬಾಕಿ ವೇತನ ಬಿಡುಗಡೆ ಮಾಡಿ ಸಮಸ್ಯೆಗೆ ಪರಿಹಾರ ಕಲ್ಪಿಸಬೇಕು ಎಂದು ಗುತ್ತಿಗೆ ನೌಕರರು ಒತ್ತಾಯಿಸಿದ್ದಾರೆ. ಈ ಸಂದರ್ಭದಲ್ಲಿ ಸಂಘದ ಗೌರವ ಅಧ್ಯಕ್ಷರಾದ ವಿಜಯಕುಮಾರ ಕೆಂಗನಾಳ, ಅಧ್ಯಕ್ಷರಾದ ಶೀಲಪ್ರಕಾಶ ದೊಡ್ಡಮನಿ ಹಾಗೂ ಕಾರ್ಯದರ್ಶಿ ಚಂದ್ರಶಾ ಎಂ.ಎಸ್. ಅವರ ನೇತೃತ್ವದಲ್ಲಿ 150ಕ್ಕೂ ಹೆಚ್ಚು ನೌಕರರಿಂದ ಧರಣಿ ಮಾಡಿ ಮನವಿ ಸಲ್ಲಿಸಲಾಯಿತು.
RCB Vs DC- ಬರ್ತ್ ಡೇ ಬಾಯ್ ಕೆಎಲ್ ರಾಹುಲ್ ಅರ್ಧಶತಕದ ಬಳಿಕ ಮಿಲ್ಲರ್ ಆರ್ಭಟ; ರೋಚಕ ಪಂದ್ಯದಲ್ಲಿ ಡೆಲ್ಲಿ ಮೇಲುಗೈ
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಈ ಬಾರಿಯೂ ಕನ್ನಡಿಗ ಕೆಎಲ್ ರಾಹುಲ್ ಅವರದ್ದೇ ಹವಾ. ಅದರಲ್ಲೂ ಬರ್ತ್ ಡೇ ಸ್ಪೆಷಲ್ ಆಗಿ ಸೊಗಸಾದ ಅರ್ಧಶತಕ. ಅವರು ಔಟಾದ ಬಳಿಕ ಪಂದ್ಯದ ಮೇಲೆ ಹಿಡಿತ ಸಾಧಿಸಲು ಯತ್ನಿಸಿದ ಆರ್ ಸಿಬಿಗೆ ಮುಳುವಾಗಿದ್ದು ಡೇವಿಡ್ ಮಿಲ್ಲರ್! ಅಂತಿಮ ಓವರ್ ವರೆಗೂ ಸಾಗಿದ ರೋಮಾಂಚಕ ಪಂದ್ಯದಲ್ಲಿ ಅವರು ಹೊಡೆದ 2 ಸಿಕ್ಸರ್ ಗಳ ನೆರವಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡವು ತಂಡದ ವಿರುದ್ಧ 6 ವಿಕೆಟ್ ಗಳ ಜಯ ದಾಖಲಿಸಿತು. ಈ ಮೂಲಕ ಆಡಿದ 5 ಪಂದ್ಯಗಳಲ್ಲಿ 3 ಗೆಲುವ ಸಂಪಾದಿಸಿದ ಅಕ್ಷರ್ ಪಟೇಲ್ ಬಳಗ 6 ಅಂಕಗಳೊಂದಿಗೆಯಲ್ಲಿ 4ನೇ ಸ್ಥಾನಕ್ಕೇರಿದೆ. ಆರ್ ಸಿಬಿ ಪಂದ್ಯ ಸೋತರೂ 8 ಅಂಕಗಳೊಂದಿಗೆ 2ನೇ ಸ್ಥಾನದಲ್ಲಿ ಮುಂದುವರಿದಿದೆ. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಏಪ್ರಿಲ್ 18ರ ಭಾನುವಾರದಂದು ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ನಿಗದಿತ 20 ಓವರ್ ಗಳಲ್ಲಿ 175 ರನ್ ಗಳನ್ನು ಗಳಿಸಿತು. ಇದಕ್ಕುತ್ತರವಾಗಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಇನ್ನೂ 1 ಎಸೆತಗಳು ಬಾಕಿ ಉಳಿದಿರುವಂತೆ 4 ವಿಕೆಟ್ ಕಳೆದುಕೊಂಡು ಜಯಭೇರಿ ಬಾರಿಸಿದರು. () ಫಿಲ್ ಸಾಲ್ಟ್ ಅರ್ಧಶತಕ ಇದಕ್ಕೂ ಮೊದಲು ಟಾಸ್ ಸೋತು ಬ್ಯಾಟಿಂಗ್ ಗೆ ಇಳಿಸಲ್ಪಟ್ಟ ಆರ್ ಸಿಬಿಯ ಆರಂಭಿಕರಾದ ವಿರಾಟ್ ಕೊಹ್ಲಿ (13 ಎಸೆತದಲ್ಲಿ 19 ರನ್) ಮತ್ತು ಫಿಲ್ ಸಾಲ್ಟ್ (38 ಎಸೆತದಲ್ಲಿ 63 ರನ್) ಅವರು ಪವರ್ ಪ್ಲೇನಲ್ಲಿ ಓವರ್ ಗೆ 10 ರನ್ ನಂತೆ ರನ್ ಗಳಿಸತೊಡಗಿದರು. 6ನೇ ಓವರ್ ನಲ್ಲಿ ಉತ್ತಮವಾಗಿ ಆಡುತ್ತಿದ್ದ ವಿರಾಟ್ ವಿಕೆಟ್ ಪತನವಾಯಿತು. ಆ ಬಳಿಕ ಫಿಲ್ ಸಾಲ್ಟ್ ಅವರು ಅರ್ಧಶತಕಕ್ಕಾಗಿ 30 ಎಸೆತಗಳನ್ನು ತೆಗೆದುಕೊಂಡರು. ದೇವದತ್ ಪಡಿಕ್ಕಲ್(13 ಎಸೆತದಲ್ಲಿ 18 ರನ್) ಅವರ ಜೊತೆ ಎರಡನೇ ವಿಕೆಟ್ ಗೆ 47 ರನ್ ಗಳ ಜೊತೆಯಾಟವಾಡಿದರು. ಚಂಡದ ಮೊತ್ತ 105 ಆಗಿದ್ದಾಗ ಫಿಲ್ ಸಾಲ್ಟ್ ವಿಕೆಟ್ ಪತನವಾಯಿತು. ಆ ಬಳಿಕ ಮಧ್ಯಮ ಕ್ರಮಾಂಕದಲ್ಲಿ ಎಲ್ಲಾ ಬ್ಯಾಟರ್ ಗಳು ಇನ್ನಿಂಗ್ಸ್ ಕಟ್ಟಲು ವಿಫಲರಾದರು. (17 ಎಸೆತಗಳಲ್ಲಿ 28) ಅವರು ಔಟಾದ ಬಳಿಕ ಅಂತೂ ವಿಕೆಟ್ ಗಳು ಪಟಪಟನೆ ಬಿದ್ದಿದ್ದರಿಂದ ತಂಡ ದೊಡ್ಡ ಮೊತ್ತ ಗಳಿಸಲು ಸಾಧ್ಯವಾಗಲಿಲ್ಲ. ರಾಯಲ್ ಚಾಲೆಂಜರ್ಸ್ ಬೆಂಗಳೂರು 20 ಓವರ್ ಗಳಲ್ಲಿ 175/8, ಸಾಲ್ಟ್ 63(38), ಡೇವಿಡ್ 28(17) ಕೊಹ್ಲಿ 19(13), ಪಡಿಕ್ಕಲ್ 18(13), ಅಕ್ಷರ್ 18ಕ್ಕೆ 2, ಕುಲ್ದೀಪ್ 32ಕ್ಕೆ2, ಎನ್ ಗಿಡಿ 39ಕ್ಕೆ2, ಮುಕೇಶ್ 32ಕ್ಕೆ 1. ಕೆಎಲ್ ರಾಹುಲ್ 57(34)ಸ ತ್ರಿಸ್ಟನ್ ಸ್ಟಬ್ಸ್ ಅಜೇಯ 60(47), ಅಕ್ಷರ್ ಪಟೇಲ್ ಗಾಯಾಳುವಾಗಿ ನಿವೃತ್ತಿ(26(19), ಡೇವಿಡ್ ಮಿಲ್ಲರ್ ಅಜೇಯ 22(10), ಭುವನೇಶ್ವರ ಕುಮಾರ್ 28ಕ್ಕೆ 3, ಕೃನಾಲ್ ಪಾಂಡ್ಯ 24ಕ್ಕೆ 1.
ಕ್ಷೇತ್ರ ಪುನರ್ವಿಂಗಡಣೆಗೆ ಮಹಿಳಾ ಮೀಸಲಾತಿ ಮುಖವಾಡ ಮಾತ್ರ: ಡಾ.ಗಣನಾಥ ಎಕ್ಕಾರು
ಉಡುಪಿ ಜಿಲ್ಲಾ ಕಾಂಗ್ರೆಸ್ ಪ್ರತಿಭಟನೆ
ನೀರಿನ ಯೋಜನೆಗೆ ವರದಿ ಸಿದ್ಧಪಡಿಸಿ, ಸರಕಾರಕ್ಕೆ ಸಲ್ಲಿಕೆ: ಕಿರಣ್ ಕೊಡ್ಗಿ
ಕುಂದಾಪುರ ಪುರಸಭೆ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆ
ಉಡುಪಿ, ಎ.18: ಉಡುಪಿ ಧರ್ಮಕ್ಷೇತ್ರದ ದ್ವಿತೀಯ ಧರ್ಮಾಧ್ಯಕ್ಷರಾಗಿ ಅತಿ ವಂ. ಡಾ. ಲೆಸ್ಲಿ ಕ್ಲಿಫರ್ಡ್ ಡಿ’ಸೋಜಾರ ಧರ್ಮಾಧ್ಯಕ್ಷರ ಅಭಿಷೇಕ ಹಾಗೂ ಪೀಠಾರೋಹಣ ಸಮಾರಂಭ ಎ.20 ಸೋಮವಾರ ಕಲ್ಯಾಣಪುರದ ಮಿಲಾಗ್ರಿಸ್ ಕಾಲೇಜು ಮೈದಾನದಲ್ಲಿ ನೆರವೇರಲಿದೆ. ಇದೇ ವೇಳೆ ಧರ್ಮಕ್ಷೇತ್ರದ ಪ್ರಥಮ ಧರ್ಮಾಧ್ಯಕ್ಷರಾಗಿ ಡಾ. ಜೆರಾಲ್ಡ್ ಐಸಾಕ್ ಲೋಬೊ ತಮ್ಮ ದೂರದೃಷ್ಠಿತ್ವ ಚಿಂತನೆಯ ಭದ್ರಬುನಾದಿಯೊಂದಿಗೆ ಸದೃಢ ಧರ್ಮಕ್ಷೇತ್ರವಾಗಿ 14 ವರ್ಷಗಳ ಕಾಲ ಮುನ್ನಡೆಸಿ ಪ್ರಸ್ತುತ ನಿವೃತ್ತಿ ಯಾಗಿದ್ದಾರೆ. 2012ರ ಜುಲೈ 16ರಂದು ಪೋಪ್ ಬೆನೆಡಿಕ್ಟ್ ಘಿಗಿI ಅವರು ಮಂಗಳೂರಿ ನಿಂದ ಪ್ರತ್ಯೇಕಿಸಿ ಉಡುಪಿ ಧರ್ಮ ಪ್ರಾಂತದ ಘೋಷಣೆ ಮಾಡಿದ್ದರು. ಅಂದು ಶಿವಮೊಗ್ಗ ಧರ್ಮಕ್ಷೇತ್ರದ ಧರ್ಮಾಧ್ಯಕ್ಷರಾಗಿದ್ದ ಡಾ.ಜೆರಾಲ್ಡ್ ಐಸಾಕ್ ಲೋಬೊ ಅವರನ್ನು ಉಡುಪಿಗೆ ಮೊದಲ ಧರ್ಮಾಧ್ಯಕ್ಷರಾಗಿ ನೇಮಕ ಮಾಡಲಾಯಿತು. ಈ ಧರ್ಮಕ್ಷೇತ್ರವು ಕಾರ್ಕಳ, ಕುಂದಾಪುರ, ಕಾಪು, ಬೈಂದೂರು, ಹೆಬ್ರಿ, ಬ್ರಹ್ಮಾವರ ಹಾಗೂ ಉಡುಪಿ ತಾಲೂಕುಗಳನ್ನು ಒಳಗೊಂಡಿದೆ. ಬಿಷಪ್ ಜೆರಾಲ್ಡ್ ಅವರು ಧರ್ಮಾಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಸಂಪೂರ್ಣ ಹೊಸ ಧರ್ಮಕ್ಷೇತ್ರವನ್ನು ಪ್ರಾರಂಭಿಸಿ ಇದೀಗ ದೇಶದಲ್ಲಿಯೇ ಒಂದು ಮಾದರಿ ಧರ್ಮಪ್ರಾಂತವನ್ನಾಗಿಸಿದ ಕೀರ್ತಿ ಇವರದ್ದಾಗಿದೆ. ತನ್ನ ವೈಯುಕ್ತಿಕ ಆಶೆ ಆಕಾಂಕ್ಷೆಗಳಿಗೆ ಗಮನ ನೀಡದೆ, ಯಾವುದೇ ವೈಭವ ಆಡಂಬರಗಳಿಗೆ ಮುಂದಾಗದೇ, ಉಡುಪಿ ಚರ್ಚಿನ ಅಂದಿನ ಸೈಂಟ್ ಮೇರಿಸ್ ಶಾಲೆಯನ್ನು ಧರ್ಮಾಧ್ಯಕ್ಷರ ನಿವಾಸ ಮತ್ತು ಕಚೇರಿಗಳಿಗೆ ಮೀಸಲಾಗಿರಿಸಿ ತಮ್ಮ ಅಧಿಕಾರವನ್ನು ಆರಂಭಿಸಿದ್ದರು. ತಮಗೆ ಐಶಾರಾಮಿ ಮನೆ ಬೇಕು ಎನ್ನುವ ಚಿಂತೆ ಮಾಡದೆ ಶಾಲೆಯ ಒಂದು ತರಗತಿ ಕೋಣೆಯನ್ನು ತಮ್ಮ ವಾಸ್ತವ್ಯಕ್ಕೆ ಉಪಯೋಗಿಸಿ ಇಂದಿಗೆ ನಿವೃತ್ತಿಯಾಗುವ ಸಮಯದಲ್ಲಿ ಕೂಡ ಅದೇ ಕೋಣೆಯಲ್ಲಿ ಒಂದು ಮೇಜು, ಕುರ್ಚಿ ಮತ್ತು ಮಂಚದಲ್ಲಿಯೇ ಸತತ 14 ವರ್ಷಗಳನ್ನು ಕಳೆದವರು ಬಿಷಪ್ ಜೆರಾಲ್ಡ್ ಲೋಬೊ. ತಾನು ಸಾಮಾನ್ಯನಂತೆ ಬದುಕಿದ್ದರೂ ಮುಂದಿನ ಧರ್ಮಧ್ಯಕ್ಷರು ಅಂತಹ ಜೀವನ ಕಾಣಬಾರದು ಎಂಬ ನಿಟ್ಟಿನಲ್ಲಿ ಸುಸಜ್ಜಿತವಾದ ಧರ್ಮಾಧ್ಯಕ್ಷರ ನಿವಾಸ ನಿರ್ಮಾಣಕ್ಕೆ ಈಗಾಗಲೇ ಚಾಲನೆ ನೀಡಿದ್ದು ಅದೀಗ ನಿರ್ಮಾಣದ ಕೊನೆಯ ಹಂತದಲ್ಲಿದೆ. ತನ್ನ ಸಮುದಾಯದ ಜನರು ಸಮಾಜದಲ್ಲಿ ಉನ್ನತ ಸ್ಥಾನದಲ್ಲಿರಬೇಕು. ಪ್ರತಿಯೊಬ್ಬರೂ ಕೂಡ ಆರ್ಥಿಕವಾಗಿ, ಸಾಮಾಜಿಕವಾಗಿ ಸಬಲರಾಗಬೇಕು ಎಂಬ ಅಪೇಕ್ಷೆಯೊಂದಿಗೆ ವಿಶೇಷವಾದ ’ಪಾಸ್ಟರಲ್ ಪ್ಲ್ಯಾನ್ 2025’ ತಯಾರಿಸಿ ಅದನ್ನು ಕಾರ್ಯಗತಗೊಳಿಸಲು ಧರ್ಮಗುರು ಗಳೊಂದಿಗೆ ಸೇರಿಕೊಂಡು ಹಗಲಿರುಳು ಶ್ರಮಿಸಿದ ಕೀರ್ತಿ ಅವರದ್ದು. ಇದರ ಪರಿಣಾಮ ಇಂದು ಉಡುಪಿ ಧರ್ಮಪ್ರಾಂತದಲ್ಲಿ ಅಳವಡಿಸಿಕೊಂಡ ಈ ಪಾಸ್ಟರಲ್ ಪ್ಲ್ಯಾನ್ ಇಡೀ ಭಾರತದ ಧರ್ಮಪ್ರಾಂತಗಳಿಗೆ ಮಾತ್ರವಲ್ಲದೆ ವಿದೇಶದ ಹಲವಾರು ಧರ್ಮಪ್ರಾಂತ ಗಳಿಗೂ ಕೂಡ ಮಾದರಿಯಾಗಿದೆ ಎನ್ನುವುದು ವಿಶೇಷವಾಗಿದೆ. ಅದನ್ನೇ ಮುಂದುವರಿಸಿ 2030ರ ಹೊಸ ಯೋಜನೆ ಅನುಷ್ಠಾನ ಪ್ರಸ್ತುತ ನಡೆಯುತ್ತಿದೆ. ಯುವಜನರ ಶಿಕ್ಷಣಕ್ಕೆ ಮಹತ್ವ: ಸಮುದಾಯದ ಮಕ್ಕಳು ಉತ್ತಮ ಶಿಕ್ಷಣ ಹೊಂದಬೇಕು. ಪ್ರತಿ ಕುಟುಂಬದ ಮಗು ಕನಿಷ್ಠ ಪದವಿ ಶಿಕ್ಷಣ ಮುಗಿಸು ವುದರೊಂದಿಗೆ ಉತ್ತಮ ಕೆಲಸ ಪಡೆದು ಕುಟುಂಬವನ್ನು ನಿರ್ವಹಿಸಿಕೊಂಡು ಹೋಗು ವಂತಾಗಬೇಕು ಎಂಬ ನಿಟ್ಟಿನಲ್ಲಿ ವಿಶೇಷ ಯೋಜನೆ ರೂಪಿಸಿದರು. ಧರ್ಮಪ್ರಾಂತದ ಶೈಕ್ಷಣಿಕ ನಿಧಿಯನ್ನು ಆರಂಭಿಸಿ ಅದರ ಮೂಲಕ ಬಡ ಮಕ್ಕಳ ಶಿಕ್ಷಣಕ್ಕೆ ದಾರಿದೀಪವಾದರು. ಉನ್ನತ ವ್ಯಾಸಂಗ ಮಾಡಲು ಇಚ್ಚಿಸುವ ಮಕ್ಕಳಿಗೆ ಬಡ್ಡಿರಹಿತ ಸಾಲ ಯೋಜನೆಯ ಮೂಲಕ ಬಡ ಮಕ್ಕಳ ಜೀವನದಲ್ಲಿ ಆಶಾಕಿರಣವಾದರು. ಸಮುದಾಯದ ಮಕ್ಕಳು ಸರಕಾರಿ ಹುದ್ದೆಗಳನ್ನು ಪಡೆಯಬೇಕು ಎಂಬ ಸದುದ್ದೇಶದಿಂದ ನಿರಂತರ ಪ್ರಯತ್ನ ಮಾಡಿದ್ದಲ್ಲದೆ ಅವರಿಗೆ ಧರ್ಮಪ್ರಾಂತದ ಮೂಲಕ ಸೂಕ್ತ ತರಬೇತಿ ನೀಡುವಂತೆ ಮಾಡಿದರು. ಇದರ ಪರಿಣಾಮವಾಗಿ ಇಂದು ಹಲವಾರು ಯುವಜನರು ಉನ್ನತ ಸಾಧನೆ ತೋರಲು ಸಾಧ್ಯವಾಗಿದೆ. ಮಹಿಳೆಯರ ಸಬಲೀಕರಣ: ಮಹಿಳೆಯರು ಕುಟುಂಬದಲ್ಲಿ ಯಾರನ್ನೂ ಕೂಡ ಅವಲಂಬಿತರಾಗಿರದೆ ಸ್ವಂತವಾಗಿ ದುಡಿದು ತಮ್ಮ ಹಾಗೂ ಕುಟುಂಬದ ಪೋಷಣೆ ಮಾಡಬೇಕು ಎಂಬ ನಿಟ್ಟಿನಲ್ಲಿ ಸ್ವಸಹಾಯ ಸಂಘಗಳನ್ನು ಸ್ಥಾಪಿಸಿ ದ್ದಲ್ಲದೆ ಇವುಗಳ ಮೂಲಕ ಇಂದು ಧರ್ಮಪ್ರಾಂತದಲ್ಲಿ ಮಹಿಳೆ ಯರೇ ನಡೆಸುವಂತಹ ಒಂದು ಬ್ಯಾಂಕ್ ರಚನೆ ಮಾಡುವುದರ ಮೂಲಕ ಮಹಿಳೆಯರನ್ನು ಸಬಲೀಕರಣಗೊಳಿಸುವಲ್ಲಿ ಮುಖ್ಯಪಾತ್ರ ವಹಿಸಿದ್ದಾರೆ. ಬಡವರ ಆಶಾಕಿರಣ: ತನ್ನ ಧರ್ಮಪ್ರಾಂತದಲ್ಲಿ ಯಾರೂ ಬಡತನದ ರೇಖೆಗಿಂತ ಕೆಳಸಗೆ ಯಾರೂ ಇರಬಾರದು ಎಂಬ ಕನಸು ಕಂಡವರು ಬಿಷಪ್ ಜೆರಾಲ್ಡ್ ಲೋಬೊ. ಪ್ರತಿ ವರ್ಷ ಬಡವರಿಗಾಗಿ ಧರ್ಮಪ್ರಾಂತದ ಸಂಪದ ಸಂಸ್ಥೆಯ ಮೂಲಕ ಬಡವರಿಗಾಗಿ 50ಕ್ಕೂ ಅಧಿಕ ಮನೆ ನಿರ್ಮಾಣಕ್ಕೆ ನೆರವು, ಆರೋಗ್ಯ ಸಮಸ್ಯೆಯಿಂದ ಬಳಲುವವರಿಗೆ ಆರ್ಥಿಕ ನೆರವು ನೀಡಿದ್ದು ಕಳೆದ 14 ವರ್ಷಗಳಲ್ಲಿ ಹಲವು ಕೋಟಿಗಳಿಗೂ ಮಿಕ್ಕಿದ ನೆರವು ಬಡವರಿಗೆ ನೀಡುವ ಮೂಲಕ ಅವರ ಕಣ್ಣಿರು ಒರೆಸುವ ಕಾರ್ಯಕ್ಕೆ ನೆರವಾಗಿದ್ದಾರೆ. ಅನುಗ್ರಹ ಪಾಲನಾ ಕೇಂದ್ರ: ಧರ್ಮಪ್ರಾಂತದಲ್ಲಿ 21 ಆಯೋಗಗಳ ಮೂಲಕ ಪ್ರತಿಯೊಂದು ಕಾರ್ಯ ಚಟುವಟಿಕೆ ಗಳು ನಡೆಯುತ್ತಿದ್ದು ಇದಕ್ಕಾಗಿ ಸೂಕ್ತ ಕಚೇರಿಗಳಿರಬೇಕೆಂಬ ನಿಟ್ಟಿನಲ್ಲಿ ಅಂಬಾಗಿಲು ಸಮೀಪದ ಕಕ್ಕುಂಜೆ ಬಳಿ ಸುಸಜ್ಜಿತವಾದ ಅನುಗ್ರಹ ಪಾಲನಾ ಕೇಂದ್ರ ಸ್ಥಾಪನೆ ಬಿಷಪ್ ಜೆರಾಲ್ಡ್ ಅವರ ಬಹುದೊಡ್ಡ ಸಾಧನೆ ಎನ್ನಬಹುದು. ಈ ಕೇಂದ್ರದ ಮೂಲಕ ಧರ್ಮಪ್ರಾಂತದ ಧಾರ್ಮಿಕ, ಸಾಮಾಜಿಕ ಶೈಕ್ಷಣಿಕ ಪ್ರಗತಿಗೆ ಬಹುದೊಡ್ಡ ಸೇವೆ ನೀಡಿದಂತಾಗಿದೆ. ಧರ್ಮಪ್ರಾಂತಕ್ಕೆ ಪ್ರತ್ಯೇಕ ಪತ್ರಿಕೆ: ಧರ್ಮಪ್ರಾಂತದ ಆಗುಹೋಗುಗಳ ಮಾಹಿತಿ ಸಮುದಾಯದ ಪ್ರತಿಯೊಬ್ಬರಿಗೂ ಲಭಿಸಬೇಕು ಎಂಬ ನಿಟ್ಟಿನಲ್ಲಿ ಉಜ್ವಾಡ್ ಪತ್ರಿಕೆಯ ಸ್ಥಾಪನೆಗೆ ಬಿಷಪ್ ಜೆರಾಲ್ಡ್ ಅವರು ಕಾರಣ. ಮೊದಲು ಮಾಸಿಕವಾಗಿದ್ದ ಪತ್ರಿಕೆ ಪ್ರಸ್ತುತ ಪಾಕ್ಷಿಕವಾಗಿ ಪ್ರಕಟಗೊಳ್ಳುತ್ತಿದ್ದು 12 ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿದ್ದು ಅತೀ ಹೆಚ್ಚು ಜಾಹೀರಾತುದಾರರನ್ನು ಹೊಂದಿದೆ ಎಂಬ ಹೆಮ್ಮೆ ಅದಕ್ಕಿದೆ. ಅಲ್ಲದೆ ಧರ್ಮಪ್ರಾಂತಕ್ಕೆ ಸರ್ವ ಸುಸಜ್ಜಿತ ವಾದ ಅನುಸ್ವರ ಹೆಸರಿನಲ್ಲಿ ರೆಕಾರ್ಡಿಂಗ್ ಸ್ಟುಡಿಯೋ ಸಹ ನಿರ್ಮಿಸಿದ್ದು ಈ ಮೂಲಕ ಧರ್ಮಪ್ರಾಂತದ ಒಳ್ಳೆಯ ಸುದ್ದಿಗಳನ್ನು ಯೂಟ್ಯೂಬ್ ಚಾನಲ್ ಮುಖಾಂತರ ಸಮಾಜಕ್ಕೆ ತೋರ್ಪಡಿಸುವ ಕಾರ್ಯ ನಡೆದಿದೆ. ನಿವೃತ್ತ ಧರ್ಮಗುರುಗಳಿಗೆ ಮಿಲಾಗ್ರಿಸ್ ಹೋಮ್: ತಮ್ಮ ಜೀವನದ ಹಲವು ವರ್ಷಗಳನ್ನು ಚರ್ಚು, ಸಂಸ್ಥೆಗಳಲ್ಲಿ ಜನರ ಆಧ್ಯಾತ್ಮಿಕ, ಸಾಮಾಜಿಕ ಸೇವೆಗಳಿಗೆ ಮಿಸಲಾಗಿರಿಸಿದ ಹಿರಿಯ ಧರ್ಮಗುರುಗಳು ತಮ್ಮ ಜೀವನದ ನಿವೃತ್ತಿಯ ಬಳಿಕದ ಕಾಲವನ್ನು ಸಂತೋಷದಿಂದ, ಸಮಾಧಾನದಿಂದ ಕಳೆಯಬೇಕು ಎಂಬ ನಿಟ್ಟಿನಲ್ಲಿ ಕಲ್ಯಾಣಪುರ ದಲ್ಲಿ ಸುಸಜ್ಜಿತವಾದ ನಿವೃತ್ತ ಯಾಜಕರ ನಿವಾಸ ಮಿಲಾಗ್ರಿಸ್ ಹೋಮ್ ನಿರ್ಮಾಣ ಮಾಡಿರುವುದು ಬಿಷಪ್ ಜೆರಾಲ್ಡ್ ಅವರು ಇನ್ನೊಂದು ಸಾಧನೆಯಾಗಿದೆ. ಸೌಹಾರ್ದ ಸಮಾಜ ನಿರ್ಮಾಣಕ್ಕೆ ಬುನಾದಿ: ಉಡುಪಿ ಎಂಬುದು ಅಷ್ಟ ಮಠಗಳ ಊರು. ಇಲ್ಲಿ ಎಲ್ಲಾ ಧರ್ಮದ ಜನರು ಸೌಹಾರ್ದತೆಯಿಂದ ಬದುಕುತ್ತಾರೆ. ಕೆಲವು ಸಂದರ್ಭಗಳಲ್ಲಿ ಕೋಮು ದಳ್ಳುರಿಯ ಕಿಡಿ ಈ ಜಿಲ್ಲೆಗೆ ಬಾರ ದಂತೆ ಎಲ್ಲಾ ಧರ್ಮಗಳೊಂದಿಗೆ ಸೌಹಾರ್ದತೆಯ ಸಂದೇಶ ಸಾರುವಲ್ಲಿ ಮೊದಲ ಹೆಜ್ಜೆ ಇರಿಸಿದವರು ಬಿಷಪ್ ಜೆರಾಲ್ಡ್. ಪ್ರತಿ ಚರ್ಚುಗಳಲ್ಲಿ ಸೌಹಾರ್ದ ಸಮಿತಿಗಳನ್ನು ರಚಿಸಿ ಈ ಮೂಲಕ ಸ್ಥಳೀಯ ಮಟ್ಟದಲ್ಲಿ ಸೌಹಾರ್ದತೆಗೆ ಮೊದಲ ಪ್ರಾಶಸ್ತ್ಯ ನೀಡಿದರು. ಇತರ ಧರ್ಮಗಳ ಕಾರ್ಯಕ್ರಮಗಳಿಗೆ ಭೇಟಿ ನೀಡಿ ಪರಸ್ಪರ ಸೌಹಾರ್ದತೆಗೆ ಸಾಕ್ಷಿಯಾಗಿದ್ದಾರೆ. ಜನಸಾಮಾನ್ಯರ ಬಿಷಪ್: ಉನ್ನತ ಹುದ್ದೆಯಲ್ಲಿದ್ದರೂ ಕೂಡ ಮಕ್ಕಳು, ಯುವಕರು, ವೃದ್ದರು ಎಂಬ ಭೇಧಭಾವ ಮಾಡದೆ ಎಲ್ಲರೊಂದಿಗೆ ಬೆರೆತು ಬಾಳುವ ವಿಶೇಷ ಗುಣ ಬಿಷಪ್ ಜೆರಾಲ್ಡ್ ಲೋಬೊ ಅವರದ್ದಾಗಿದೆ. ಎಲ್ಲಾ ಧರ್ಮದ ಧಾರ್ಮಿಕ ನಾಯಕರೊಂದಿಗೆ, ಎಲ್ಲಾ ಪಕ್ಷದ ರಾಜಕೀಯ ಮುಖಂಡರೊಂದಿಗೆ ಉತ್ತಮ ಭಾಂಧವ್ಯ ಹೊಂದಿದ್ದರು. ಇದರಿಂದ ಇತರ ಧರ್ಮದವರು ಕೂಡ ಇವರನ್ನು ಜನಸಾಮಾನ್ಯರ ಬಿಷಪ್ ಎಂದು ಕರೆಯುತ್ತಿದ್ದಾರೆ. ಹೊಸ ತಂತ್ರಜ್ಞಾನಕ್ಕೆ ಮಹತ್ವ: ಜಗತ್ತು ಎಐ ತಂತ್ರಜ್ಞಾನದತ್ತ ಮುನ್ನುಗ್ಗುತ್ತಿದ್ದರೆ ಧರ್ಮಪ್ರಾಂತದ ಮಕ್ಕಳು ಮತ್ತು ಯುವಜನರೊಂದಿಗೆ ಕೂಡ ಅದೇ ಎಐ ಭಾಷೆಗಳ ಮೂಲಕ ಧರ್ಮಗುರುಗಳು ಮಾತನಾಡುವ ಅನಿವಾರ್ಯತೆ ಇಂದಿನ ಸಮಾಜದ್ದಾಗಿದೆ. ಇದನ್ನು ಮನಗಂಡ ಬಿಷಪ್ ಜೆರಾಲ್ಡ್ ಲೋಬೊ ಧರ್ಮಗುರುಗಳಿಗೆ ಕಾಲಕಾಲಕ್ಕೆ ಕೃತಕ ಬುದ್ದಿಮತ್ತೆಯ ಅರಿವು ನೀಡುವ ಕಾರ್ಯಾಗಾರಗಳ ಮೂಲಕ ಅವರನ್ನೂ ಕೂಡ ಇಂದಿನ ತಂತ್ರಜ್ಞಾನಕ್ಕೆ ಅನುಗುಣ ವಾಗಿ ತಯಾರು ಮಾಡುವ ವಿಶೇಷ ಕಾರ್ಯ ಮಾಡಿದ್ದಾರೆ. ಇತರ ಕ್ರೈಸ್ತ ಸಭೆಗಳೊಂದಿಗೆ ಐಕ್ಯತಾ ಸಂಬಂಧ: ರೋಮನ್ ಕಥೊಲಿಕ್ ಸಮುದಾಯಕ್ಕೆ ಮಾತ್ರವಲ್ಲದೆ ಇತರ ಕ್ರೈಸ್ತ ಸಭೆಗಳಾದ ಸಿಎಸ್ಐ, ಸೀರಿಯನ್ ಓರ್ಥೊಡಕ್ಸ್ ಹಾಗೂ ಇನ್ನಿತರ ಸಭೆಗಳೊಂದಿಗೆ ಅತ್ಯುತ್ತಮ ಸಂಬಂಧ ಹೊಂದಿದ್ದ ಬಿಷಪ್ ಅವರು ಅಗಾಗ ಎಲ್ಲಾ ಸಭೆಗಳನ್ನು ಒಗ್ಗೂಡಿಸಿ ಕಾರ್ಯಕ್ರಮಗಳನ್ನು ಮಾಡುವ ಮೂಲಕ ಕ್ರೈಸ್ತರು ನಾವೆಲ್ಲಾ ಒಂದು ಎಂಬ ಭಾವನೆ ಪ್ರತಿಯೊಬ್ಬರಲ್ಲಿ ಮೂಡಿಸಿದ್ದರು. ಇದರಿಂದಾಗಿ ಇತರ ಸಭೆಗಳ ಜನರೂ ಕೂಡ ಬಿಷಪ್ ಜೆರಾಲ್ಡ್ಲೋಬೊ ಅವರ ಬಗ್ಗೆ ‘ನಮ್ಮ ಬಿಷಪ್’ ಎಂಬ ಭಾವನೆ ತೋರಿಸುತ್ತಿದ್ದಾರೆ. ಧರ್ಮಪ್ರಾಂತದ ಧರ್ಮಾಧ್ಯಕ್ಷರಾಗಿ 14 ವರ್ಷಗಳ ಸುಧೀರ್ಘ ಸೇವೆಯಲ್ಲಿ ತನ್ನ ಧರ್ಮಪ್ರಾಂತ ಹಾಗೂ ತನ್ನ ಸಮುದಾಯದ ಏಳಿಗೆಗಾಗಿ ಸತತವಾಗಿ ಹಗಲಿರುಳು ದುಡಿದು ಪ್ರಸ್ತುತ ನಿವೃತ್ತಿಯಾಗಿ ತನ್ನ ಸೇವಾ ದಂಡವನ್ನು ಹೊಸ ಧರ್ಮಾಧ್ಯಕ್ಷರಿಗೆ ಹಸ್ತಾಂತರಿಸುವ ತವಕದಲ್ಲಿದ್ದಾರೆ. ಬಾಲ್ಯಾವಸ್ಥೆಯಿಂದ ಪ್ರೌಢಾವಸ್ಥೆಗೆ ತಲುಪಿರುವ ಉಡುಪಿ ಧರ್ಮಪ್ರಾಂತ ಇಂದು ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕವಾಗಿ ಸಬಲತೆಯನ್ನು ಕಂಡಿದೆ ಇದಕ್ಕೆ ಮುಖ್ಯ ಕಾರಣ ಬಿಷಪ್ ಜೆರಾಲ್ಡ್ ಲೋಬೊ ಅವರ ಅವಿರತ ಪರಿಶ್ರಮ. ಬಿಷಪ್ ಡಾ. ಜೆರಾಲ್ಡ್ ಅವರು ಹಾಕಿದ ಭದ್ರ ಅಡಿಪಾಯ, ನೀಡಿದ ಸ್ಪಷ್ಟವಾದ ಗುರಿ ಸದೃಢವಾಗಿ ಮುಂದುವರಿಯಲಿ ಎಂದು ಹಾರೈಸೋಣ.
IPL 2026 | RCB ವಿರುದ್ಧ ದಿಲ್ಲಿಗೆ ರೋಚಕ ಜಯ
ಬೆಂಗಳೂರು: ಇಲ್ಲಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶನಿವಾರ ಐಪಿಎಲ್ ಟೂರ್ನಿಯ ಪಂದ್ಯದಲ್ಲಿ RCB ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ರೋಚಕ ಜಯ ಗಳಿಸಿದೆ.
ಇದು ಒಂದು ಐತಿಹಾಸಿಕ ರಾತ್ರಿಯಾಗಬೇಕಿತ್ತು. ತಲೆಮಾರುಗಳಿಂದ ಕಾಯುತ್ತಿದ್ದ ಮಹಿಳೆಯರಿಗೆ ಸೂಕ್ತ ಪ್ರಾತಿನಿಧ್ಯ ನೀಡುವ ನಿಟ್ಟಿನಲ್ಲಿ ಭಾರತವು ನಿರ್ಣಾಯಕ ಹೆಜ್ಜೆ ಇಡುವ ರಾತ್ರಿ ಇದಾಗಬೇಕಿತ್ತು. ಆದರೆ, ಮಹಿಳೆಯರ ಏಳಿಗೆಯನ್ನು ಯಾರು ನಿಜವಾಗಿಯೂ ಬಯಸುತ್ತಾರೆ ಮತ್ತು ಅಧಿಕಾರ ಹಂಚಿಕೊಳ್ಳುವ ಸಮಯ ಬಂದಾಗ ಯಾರು ಹಿಂದೇಟು ಹಾಕುತ್ತಾರೆ ಎಂಬುದನ್ನು ಬಯಲು ಮಾಡಿದ ರಾತ್ರಿಯಾಗಿ ಇದು ಬದಲಾಯಿತು. ಏಪ್ರಿಲ್ 17 ರಂದು, ಲೋಕಸಭೆಯಲ್ಲಿ
ಬೆಂಗಳೂರಿನಲ್ಲಿ ದೃಢಪಟ್ಟ ಹಕ್ಕಿಜ್ವರ: ಸರಿಯಾಗಿ ಬೇಯಿಸಿ ಕೋಳಿ ಮಾಂಸ, ಮೊಟ್ಟೆ ಸೇವಿಸಿ ಎಂದು ಆರೋಗ್ಯ ಇಲಾಖೆ ಮನವಿ
ಬೆಂಗಳೂರಿನಲ್ಲಿ ಹಕ್ಕಿಜ್ವರ ದೃಢಪಟ್ಟಿದೆ. ಹೆಸರಘಟ್ಟದ ಮತ್ಕೂರು ಗ್ರಾಮದ ಕೋಳಿ ಸಾಕಾಣಿಕೆ ತರಬೇತಿ ಕೇಂದ್ರದಲ್ಲಿ ಇದೇ ತಿಂಗಳ 14 ರಂದು ತಪಾಸಣೆ ನಡೆಸಿದಾಗ ಭೋಪಾಲ್ ವರದಿಯ ಪ್ರಕಾರ H5N1 ಹಕ್ಕಿಜ್ವರ ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಎಲ್ಲಾ ರೀತಿಯ ಮುನ್ನೆಚ್ಚರಿಕೆಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಹಕ್ಕಿ ಜ್ವರದ ಹಿನ್ನೆಲೆಯಲ್ಲಿ ಯಾವುದೇ ರೀತಿಯ ಆತಂಕ ಬೇಡ ಎಂದು ಆರೋಗ್ಯ ಇಲಾಖೆ ತಿಳಿಸಿದೆ. ಅಲ್ಲದೆ, ಸರಿಯಾಗಿ ಬೇಯಿಸಿ ಕೋಳಿ ಮಾಂಸ ಮತ್ತು ಮೊಟ್ಟೆ ಸೇವಿಸಿ ಎಂದು ಮನವಿ ಮಾಡಿದೆ.
‘ಟಗರು ಸುಮ್ ಸುಮ್ಮನೆ ಗುದ್ದಲ್ಲ, ಈಗ ಗುರಾಯಿಸ್ತಾ ಇದೆ’: ಸಿದ್ದರಾಮಯ್ಯ ಪರ ಮಹದೇವಪ್ಪ ಭರ್ಜರಿ ಬ್ಯಾಟಿಂಗ್!
ಟಗರು ಸುಮ್ ಸುಮ್ಮನೆ ಗುದ್ದಲ್ಲ, ಈಗ ಗುರಾಯಿಸ್ತಾ ಇದೆ. ಸಮಯ ಬಂದಾಗ ಏನು ಮಾಡಬೇಕೋ ಅದನ್ನು ಮಾಡುತ್ತದೆ ಎಂದು ಸಿಎಂ ಸಿದ್ದರಾಮಯ್ಯ ಅವರ ಪರವಾಗಿ ಡಾ. ಎಚ್ ಸಿ ಮಹದೇವಪ್ಪ ಭರ್ಜರಿ ಬ್ಯಾಟಿಂಗ್ ಮಾಡಿದ್ದಾರೆ. ಬೆಂಗಳೂರಿನಲ್ಲಿ ಶನಿವಾರ ಈ ಕರಿತಾಗಿ ಮಾತನಾಡಿದ ಅವರು, ಆಪ್ತರ ವಿರುದ್ಧ ಸರಣಿ ಕ್ರಮಗಳು ಆದರೂ ಸಿಎಂ ಸಿದ್ದರಾಮಯ್ಯ ಅವರ ಮೌನದ ಬಗ್ಗೆ ಕೆ ಎನ್ ರಾಜಣ್ಣ ಅವರ ಹೇಳಿಕೆಗೆ ಈ ರೀತಿಯಲ್ಲಿ ಪ್ರತಿಕ್ರಿಯೆ ನೀಡಿದರು.
ವಿರಾಟ್ ಕೊಹ್ಲಿ ಅವರು ಕನ್ನಡಿಗ ಕೆಎಲ್ ರಾಹುಲ್ ಕ್ಯಾಚ್ ಹಿಡಿಯುತ್ತಿದ್ದಂತೆ ಖುಷಿಯಲ್ಲಿ ತೇಲಾಡಿದ ಅನುಷ್ಕಾ ಶರ್ಮಾ
RCB Vs DC IPL 2026: ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ರೋಚಕ ಪಂದ್ಯದಲ್ಲಿ ಆರ್ಸಿಬಿ ನೀಡಿದ 176 ರನ್ಗಳ ಗುರಿ ಬೆನ್ನಟ್ಟಿದ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಲ್ಕನೇ ವಿಕೆಟ್ ಪತನವಾಗಿದೆ. ಸ್ಪೋಟಕ ಬ್ಯಾಟಿಂಗ್ ಆಡಿದ ಕನ್ನಡಿಗ ಕೆ.ಎಲ್. ರಾಹುಲ್ ಅವರ ವಿಕೆಟ್ ಪಡೆಯುವಲ್ಲಿ ಕೃನಾಲ್ ಪಾಂಡ್ಯ ಯಶಸ್ವಿಯಾಗಿದ್ದಾರೆ. ಕೊಹ್ಲಿ ಅವರು ರಾಹುಲ್ ಅವರ ಕ್ಯಾಚ್ ಹಿಡಿದ

22 C