ಸಂಶೋಧನೆಯು ಜವಾಬ್ದಾರಿಯುತ ಬೌದ್ಧಿಕಯಾನ : ಪ್ರೊ.ರಹಮತ್ ತರೀಕೆರೆ
ಬೆಂಗಳೂರು : ನಮ್ಮ ಕಾಲಕ್ಕೆ ಸೂಕ್ತವಾದ ನಮಗೆ ಇಷ್ಟವಾಗುವ ಕೃತಿಯೊಂದನ್ನು ಕುರಿತು ಅನುಸಂಧಾನ ರೀತಿಯು ನಿಜವಾದ ಬದ್ಧತೆಯುಳ್ಳದ್ದು. ಸಂಶೋಧನೆಯು ಅಂತಹ ಸಾಮಾಜಿಕ ಜವಾಬ್ದಾರಿಯುಳ್ಳ ಬೌದ್ಧಿಕಯಾನವಾಗಿದೆ ಎಂದು ಸಂಸ್ಕೃತ ಚಿಂತಕಪ್ರೊ.ರಹಮತ್ ತರೀಕೆರೆ ಅಭಿಪ್ರಾಯಪಟ್ಟಿದ್ದಾರೆ. ರವಿವಾರ ಬೆಂಗಳೂರಿನ ಕನ್ನಡ ಸಂಶೋಧನ ಅಕಾಡಮಿ ವತಿಯಿಂದ ನಗರದ ಸುರಾನ ಕಾಲೇಜಿನಲ್ಲಿ ಅಕಾಡಮಿಯ ಪ್ರಥಮ ವಾರ್ಷಿಕೋತ್ಸವ ಪ್ರಯುಕ್ತ ಆಯೋಜಿಸಲಾಗಿದ್ದ ‘ಸಮಕಾಲೀನ ಕನ್ನಡ ಸಂಶೋಧನೆಯ ಚಹರೆಗಳು ಮತ್ತು ಸಾಧ್ಯತೆಗಳು’ ಹಾಗೂ ‘ಬಾನು ಮುಷ್ತಾಕ್ ಅವರ ಕಥನ ಸಾಹಿತ್ಯದ ತಾತ್ವಿಕತೆ’ ಕುರಿತಾದ ಒಂದು ದಿನದ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸಂಶೋಧನಾರ್ಥಿಗಳು ಮುಕ್ತ ಮನಸ್ಸಿನಿಂದ ಸಂಶೋಧನೆಯಲ್ಲಿ ತೊಡಗಬೇಕು. ಎಲ್ಲಿ ನಿಜವಾದ ಜ್ಞಾನವಿರುವುದೋ ಅಲ್ಲಿಗೆ ನಾವೇ ಹೋಗಿ ನಮ್ಮ ಬೌದ್ಧಿಕತೆಯನ್ನು ಹೆಚ್ಚಿಸಿಕೊಳ್ಳಬೇಕು. ನಿಜವಾದ ಸಂಶೋಧನೆಯು ಆರಂಭವಾಗುವುದೇ ಪಿಎಚ್.ಡಿ ನಂತರ. ಯಾಕೆಂದರೆ ಪಿಎಚ್.ಡಿ ಎಂಬುದು ತರಬೇತಿ ಮಾತ್ರವಾಗಿರುತ್ತದೆ. ಆದರೆ ಪಿಎಚ್.ಡಿ ಪದವಿ ಪಡೆದ ನಂತರ ಅನೇಕರು ಬರೆಯುವುದನ್ನೇ ಬಿಟ್ಟುಬಿಡುತ್ತಾರೆ. ಕೆಲವರು ಪುಸ್ತಕಗಳನ್ನೇ ಬರೆಯಬೇಕೆಂಬ ಹಠಕ್ಕೆ ಬೀಳುತ್ತಾರೆ. ಬದಲಾಗಿ ವರ್ತಮಾನಕ್ಕೆ ಬೇಕಾಗುವ ಪುಟ್ಟ ಪುಟ್ಟ ಲೇಖನಗಳನ್ನು ಬರೆಯಬೇಕಿದೆ ಎಂದರು. ಸಂಶೋಧನೆಯಲ್ಲಿ ವಿವರಗಳನ್ನು ಸುರಿಯುತ್ತಾ ಹೋಗುವುದನ್ನು ಬಿಟ್ಟು ಅವುಗಳು ಏನನ್ನು ಧ್ವನಿಸುತ್ತಿವೆ ಎಂಬುದನ್ನು ಶೋಧಿಸಿಕೊಳ್ಳಬೇಕಿದೆ. ಯಾವುದೇ ಪರಿಕಲ್ಪನೆಯನ್ನು ಏಕಮುಖಿಯಾಗಿ ನೋಡದೆ ಬಹುಮುಖಿಯಾಗಿ ಬಹುಶಿಸ್ತೀಯ ನೆಲೆಯಲ್ಲಿ ಹುಡುಕಿಕೊಳ್ಳುವುದು ಸೂಕ್ತ ಎಂದು ಹೇಳಿದರು. ಇದೇ ವೇಳೆ ಬೂಕರ್ ಪ್ರಶಸ್ತಿ ಪುರಸ್ಕೃತ ಬಾನು ಮುಷ್ತಾಕ್ ಅವರ ಕಥನ ಸಾಹಿತ್ಯದ ಒಳನೋಟಗಳನ್ನು ಕುರಿತಾದ ಪ್ರಬಂಧ ಸಂಕಲನ ‘ಎದೆಯ ನುಡಿ’ ಹಾಗೂ ರಾಷ್ಟ್ರಮಟ್ಟದ ಬಹುಶಿಸ್ತೀಯ ಕನ್ನಡ ಲೇಖನ ಸ್ಪರ್ಧೆಯ ಲೇಖನಗಳುಳ್ಳ ‘ಅರಿವು ಅಸ್ಮಿತೆ’ ವಿಶೇಷ ಸಂಚಿಕೆಯನ್ನು ಬಿಡುಗಡೆ ಮಾಡಲಾಯಿತು. ಈ ಸಂದರ್ಭದಲ್ಲಿ ವಿಮರ್ಶಕ ಡಾ.ನಾಗರಾಜ ತಲಘಟ್ಟಪುರ, ಡಾ.ರಂಗನಾಥ ಕಂಟನಕುಂಟೆ, ಡಾ. ಅಮರೇಂದ್ರ ಹೊಲ್ಲಂಬಳ್ಳಿ, ಸಂಶೋಧನಾ ಅಕಾಡಮಿಯ ಅಧ್ಯಕ್ಷ ಡಾ.ರವಿಕುಮಾರ ಪಿ.ಜಿ, ಪ್ರಧಾನ ಕಾರ್ಯದರ್ಶಿ ಡಾ.ನಾಗೇಶ್.ಎನ್., ನಿರ್ದೇಶಕ ಡಾ.ಕುಪ್ಪನಹಳ್ಳಿ ಎಂ.ಭೈರಪ್ಪ, ಡಾ.ಗೀತಾ.ಡಿ., ಡಾ. ಚಂದ್ರಮೂರ್ತಿ, ಡಾ.ಸೂರ್ಯಕೀರ್ತಿ, ಡಾ.ಈರಯ್ಯ ಹಂಪಾಪುರ, ಡಾ.ಕುಮಾರ ಇಂದ್ರಬೆಟ್ಟ, ಡಾ. ಮಹೇಶ್ ಎಂ ಮತ್ತಿತರರು
ಶೀಘ್ರದಲ್ಲೆ ರಾಜ್ಯದ ಜನತೆಗೆ ವಿದ್ಯುತ್ ದರ ಏರಿಕೆ ಬಿಸಿ ಸಾಧ್ಯತೆ?
ಬೆಂಗಳೂರು : ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಸಂಕಷ್ಟಕ್ಕೆ ಸಿಲುಕಿರುವ ರಾಜ್ಯದ ಜನ ಸಾಮಾನ್ಯರಿಗೆ, ಶೀಘ್ರದಲ್ಲೇ ವಿದ್ಯುತ್ ದರ ಏರಿಕೆ ಬಿಸಿಯೂ ತಟ್ಟುವ ಸಾಧ್ಯತೆಗಳಿವೆ. ವಿದ್ಯುತ್ ಪೂರೈಕೆ ಕಂಪೆನಿಗಳು ನಷ್ಟದ ಸುಳಿಗೆ ಸಿಲುಕಿದ್ದು, ಆದಾಯವನ್ನು ಸರಿದೂಗಿಸಲು ವಿದ್ಯುತ್ ದರ ಏರಿಕೆ ಮಾಡುವಂತೆ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣಾ ಆಯೋಗಕ್ಕೆ ಎಸ್ಕಾಂಗಳು ಪ್ರಸ್ತಾವನೆ ಸಲ್ಲಿಸಿವೆ. ಪ್ರತಿ ಯೂನಿಟ್ಗೆ 1 ರೂ.ನಂತೆ ವಿದ್ಯುತ್ ದರ ಏರಿಕೆ ಮಾಡಬೇಕು ಎಂದು ಮನವಿ ಮಾಡಿವೆ ಎಂದು ಗೊತ್ತಾಗಿದೆ. ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗಕ್ಕೆ ಎಸ್ಕಾಂಗಳು ಪ್ರಸ್ತಾವನೆ ಸಲ್ಲಿಸಿದ್ದು, ಸಾರ್ವಜನಿಕ ವಿಚಾರಣೆಯ ನಂತರ ಅಂತಿಮ ನಿರ್ಧಾರ ಕೈಗೊಳ್ಳಲಾಗುತ್ತದೆ. ಪ್ರತಿ ಯೂನಿಟ್ಗೆ 8 ರಿಂದ 10 ಪೈಸೆಗಳಷ್ಟು ಇರಬಹುದು ಎಂದು ಅಂದಾಜಿಸಲಾಗಿದೆ. ಎಪ್ರಿಲ್ 1 ರಿಂದ ಪರಿಷ್ಕೃತ ದರ ಜಾರಿಗೆ ಬರುವ ಸಾಧ್ಯತೆ ಇದ್ದು, ಕೈಗಾರಿಕೆ, ವಾಣಿಜ್ಯ ಮತ್ತು ಗೃಹ ಬಳಕೆದಾರರ ಮೇಲೆ ಪರಿಣಾಮ ಬೀರುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.
Mandya | ನೇಣುಬಿಗಿದ ಸ್ಥಿತಿಯಲ್ಲಿ ತಾಯಿ, ಮಗಳ ಮೃತದೇಹ ಪತ್ತೆ
ಮಂಡ್ಯ : ಮಳವಳ್ಳಿ ತಾಲೂಕಿನ ದಳವಾಯಿ ಕೋಡಿಹಳ್ಳಿ ಗ್ರಾಮದಲ್ಲಿ ತಾಯಿ, ಮಗಳ ಮೃತದೇಹ ನೇಣುಬಿಗಿದ ಸ್ಥಿತಿಯಲ್ಲಿ ರವಿವಾರ ಬೆಳಗ್ಗೆ ಪತ್ತೆಯಾಗಿರುವ ಘಟನೆ ನಡೆದಿರುವುದು ವರದಿಯಾಗಿದೆ. ಗ್ರಾಮದ ಮಹೇಶ ಎಂಬವರ ಪತ್ನಿ ಶಕುಂತಲಾದೇವಿ (46) ಹಾಗೂ ಪುತ್ರಿ ಪ್ರಿಯಾಂಕಾ (19) ಅವರ ಮೃತದೇಹಗಳು ಮನೆಯಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿವೆ. ಪಕ್ಕದ ಮನೆಯವನ ಬೆದರಿಕೆ ಹಾಗೂ ಕಿರುಕುಳದಿಂದ ಬೇಸತ್ತು ಪತ್ನಿ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮೃತ ಶಕುಂತಲಾ ಪತಿ ಮಹೇಶ ಪೊಲೀಸರಿಗೆ ದೂರು ನೀಡಿದ್ದಾರೆ. ತನ್ನ ಮಗಳಾದ ಪ್ರಿಯಾಂಕಳಿಗೆ ಮದುವೆ ಮಾಡುವ ಸಿದ್ದತೆಯಲ್ಲಿ ನಮ್ಮ ಕುಟುಂಬ ತೊಡಗಿರುವಾಗ ಪಕ್ಕದ ಮನೆಯ ಮುತ್ತುರಾಜ್ ಎಂಬಾತ ಮದುವೆ ಮಾಡಲು ಬಿಡುವುದಿಲ್ಲ ಎಂದು ಬೆದರಿಕೆ ಹಾಕುತ್ತ ಕಿರುಕಳ ನೀಡುತ್ತಿದ್ದ ಇದರಿಂದ ಮನನೊಂದು ತಾಯಿ, ಮಗಳಿಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮಹೇಶ ದೂರಿನಲ್ಲಿ ಆರೋಪಿಸಿದ್ದಾರೆ. ಈ ಸಂಬಂಧ ಹಲಗೂರು ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ರಿಯಾದ್/ಹೊಸದಿಲ್ಲಿ: “ನಾನು ವಿಮಾನ ನಿಲ್ದಾಣಕ್ಕೆ ಹೋಗುತ್ತಿದ್ದೇನೆ, ಜೈ ಮಾತಾ ದಿ” ಎಂದು ಸಂದೇಶ ರವಾನಿಸಿದ್ದ ಜಾರ್ಖಂಡ್ ಮೂಲದ 40 ವರ್ಷದ ವ್ಯಕ್ತಿಯೊಬ್ಬರು ಜನವರಿ 10ರಿಂದ ಸೌದಿ ಅರೇಬಿಯಾದಲ್ಲಿ ನಾಪತ್ತೆಯಾಗಿದ್ದಾರೆ ಎಂದು ಅವರ ಕುಟುಂಬದ ಸದಸ್ಯರು ಅಳಲು ತೋಡಿಕೊಂಡಿದ್ದಾರೆ. ಈ ಸಂದೇಶ ರವಾನಿಸಿದ ವೇಳೆ ತಾನುಳಿದುಕೊಂಡಿದ್ದ ವಾಸ್ತವ್ಯದಿಂದ ಅವರು ಭಾರತಕ್ಕೆ ಮರಳಲು ಜಿದ್ದಾ ವಿಮಾನ ನಿಲ್ದಾಣಕ್ಕೆ ತೆರಳುತ್ತಿದ್ದರು ಎನ್ನಲಾಗಿದೆ. ಆದರೆ, ಅವರು ವಿಮಾನ ನಿಲ್ದಾಣವನ್ನು ತಲುಪಿಯೇ ಇಲ್ಲ ಎಂದು ಕುಟುಂಬದ ಸದಸ್ಯರು ಶಂಕಿಸಿದ್ದಾರೆ. ಸೌದಿ ಅರೇಬಿಯಾದಲ್ಲಿ ನಾಪತ್ತೆಯಾಗಿರುವ ವ್ಯಕ್ತಿಯನ್ನು ಜಾರ್ಖಂಡ್ ನ ಧನ್ ಬಾದ್ ಜಿಲ್ಲೆಯ ಸಿಂದ್ರಿ ಗ್ರಾಮದ ನಿವಾಸಿ ಚಂದ್ರಶೇಖರ್ ಕುಮಾರ್ ಎನ್ನಲಾಗಿದ್ದು, ಅವರು ಜುಲೈ 2025ರಲ್ಲಿ ಗುಜರಾತ್ ಮೂಲದ ನೇಮಕಾತಿ ಏಜೆಂಟ್ ಮೂಲಕ ಉದ್ಯೋಗಕ್ಕಾಗಿ ಸೌದಿ ಅರೇಬಿಯಾಗೆ ಪ್ರಯಾಣ ಬೆಳೆಸಿದ್ದರು ಎನ್ನಲಾಗಿದೆ. ಚಂದ್ರಶೇಖರ್ ಕುಮಾರ್ ಈ ಹಿಂದೆ ಸೌದಿ ಅರೇಬಿಯಾ ಹಾಗೂ ದುಬೈನಲ್ಲಿ ಉದ್ಯೋಗ ನಿರ್ವಹಿಸಿದ್ದು, ಅವರಿಗೆ ಆ ಪ್ರಾಂತ್ಯಗಳು ಪರಿಚಿತವಾಗಿವೆ ಎಂದು ಅವರ ಸೋದರಳಿಯ ಸಾಹಿಲ್ ಕುಮಾರ್ ತಿಳಿಸಿದ್ದಾರೆ. ಸಾಹಿಲ್ ಕುಮಾರ್ ಪ್ರಕಾರ, ಜುಲೈ 24, 2025ರಂದು ಮುಂಬೈನಿಂದ ಸೌದಿ ಅರೇಬಿಯಾಗೆ ಪ್ರಯಾಣ ಬೆಳೆಸಿದ್ದ ಚಂದ್ರಶೇಖರ್ ಕುಮಾರ್, ಗುತ್ತಿಗೆ ಆಧಾರದಲ್ಲಿ ಅಲ್ ಝಮೀಲ್ ಮೆಟಲ್ ವರ್ಕ್ಸ್ ಫ್ಯಾಕ್ಟರಿಯಲ್ಲಿ ಉದ್ಯೋಗಕ್ಕೆ ಸೇರ್ಪಡೆಯಾಗಿದ್ದರು ಎನ್ನಲಾಗಿದೆ. ಆರಂಭದಲ್ಲಿ ಮೂರು ತಿಂಗಳ ವೀಸಾ ನೀಡಿದ್ದ ಕಂಪನಿಯು, ಬಳಿಕ, ಅವರ ಉದ್ಯೋಗ ಮುಂದುವರಿಯಲಿದೆ ಎಂದು ಭರವಸೆ ನೀಡಿದ ಮೇಲೆ ಅವರ ವೀಸಾ ಅವಧಿ ವಿಸ್ತರಣೆಗೊಂಡಿತ್ತು. ಜನವರಿ 8ರಂದು ನಾನು ಶೀತ ಹಾಗೂ ಜ್ವರದಿಂದ ಬಳಲುತ್ತಿದ್ದೇನೆ ಎಂದು ಚಂದ್ರಶೇಖರ್ ಕುಮಾರ್ ಮಾಹಿತಿ ನೀಡಿದ್ದರು ಎಂದು ಅವರ ಸೋದರಳಿಯ ಸಾಹಿಲ್ ತಿಳಿಸಿದ್ದಾರೆ. ಈದ್ ಬಳಿಕ, ಚಂದ್ರಶೇಖರ್ ರ ಟಿಕೆಟ್ ವೆಚ್ಚವನ್ನು ಮರುಪಾವತಿ ಮಾಡಲಾಗುವುದು ಎಂದು ಭರವಸೆ ನೀಡಿದ್ದ ಕಂಪನಿಯು, ಸ್ವಂತ ಖರ್ಚಿನಲ್ಲಿ ಭಾರತಕ್ಕೆ ಮರಳುವಂತೆ ಅವರಿಗೆ ಸೂಚಿಸಿತ್ತು. ಜನವರಿ 10ರಂದು ಜಿದ್ದಾದಿಂದ ಅಹಮದಾಬಾದ್ ಗೆ ಮರಳಲು ಅವರು ಇಂಡಿಗೊ ವಿಮಾನವನ್ನು ಟಿಕೆಟ್ ಕಾಯ್ದಿರಿಸಿದ್ದರು. ತದನಂತರ, ವಾರಣಾಸಿ ಮತ್ತು ಧನ್ ಬಾದ್ ಗೆ ರೈಲಿನಲ್ಲಿ ಪ್ರಯಾಣಿಸುವ ಯೋಜನೆಯನ್ನು ಅವರು ಹೊಂದಿದ್ದರು ಎಂದು ಸಾಹಿಲ್ ಹೇಳಿದ್ದಾರೆ. ಅವರು ನಾಪತ್ತೆಯಾಗಿ ಒಂದು ತಿಂಗಳೇ ಆಗಿದ್ದರೂ, ಅವರ ನಾಪತ್ತೆಯ ಕುರಿತು ಇದುವರೆಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ ಎಂದು ಚಂದ್ರಶೇಖರ್ ಕುಮಾರ್ ಕುಟುಂಬದ ಸದಸ್ಯರು ತಿಳಿಸಿದ್ದಾರೆ. ಈ ವಿಷಯದಲ್ಲಿ ತುರ್ತಾಗಿ ಮಧ್ಯಪ್ರವೇಶಿಸಬೇಕು ಎಂದು ಅವರು ಸರಕಾರಕ್ಕೆ ಮನವಿ ಮಾಡಿದ್ದಾರೆ.
Russia: ರಷ್ಯಾ ದೇಶಕ್ಕೆ ಭರ್ಜರಿ ಬಂಪರ್ ನಿರೀಕ್ಷೆ, ಉಕ್ರೇನ್ ಜೊತೆ ಶಾಂತಿ ಒಪ್ಪಂದದ ನಂತರ ಭೂಭಾಗ ಹೆಚ್ಚುವ ಸಾಧ್ಯತೆ
ರಷ್ಯಾ ಈಗಾಗಲೇ ಉಕ್ರೇನ್ ವಿರುದ್ಧ ಎಲ್ಲಾ ರೀತಿಯ ತಂತ್ರ ಪ್ರಯೋಗಿಸಿ ಯುದ್ಧ ಮಾಡುತ್ತಿದೆ, ತನ್ನ ಬಳಿ ಇರುವ ದೊಡ್ಡ ದೊಡ್ಡ ಅಸ್ತ್ರಗಳನ್ನ ಪ್ರಯೋಗ ಮಾಡಿ ಉಕ್ರೇನ್ ದೇಶ ನಲುಗಿ ಹೋಗುವ ರೀತಿಯೇ ದಾಳಿ ಮಾಡಿದೆ. ಈ ಪೈಕಿ ಚಳಿಗಾಲದ ಸಮಯದಲ್ಲಿ ನಡೆದ ದಾಳಿ ಪರಿಣಾಮ ಈಗಾಗಲೇ ಉಕ್ರೇನ್ ದೇಶದ ಜನರು ಜೀವ ಉಳಿಸಿಕೊಳ್ಳಲು ವಲಸೆ ಹೋಗುವ ವಾತಾವರಣ
ಚಳಿಗಾಲದ ಒಲಿಂಪಿಕ್ಸ್ ವಿರೋಧಿಸಿ ಇಟಲಿಯಲ್ಲಿ ಪ್ರತಿಭಟನೆ
ಮಿಲಾನ್ (ಇಟಲಿ): ಚಳಿಗಾಲದ ಒಲಿಂಪಿಕ್ಸನ್ನು ಪ್ರತಿಭಟಿಸಿ ಸಾವಿರಾರು ಜನರು ಶನಿವಾರ ಇಟಲಿಯ ಮಿಲಾನ್ ನಗರದಲ್ಲಿ ಮೆರವಣಿಗೆ ನಡೆಸಿದರು. ಈ ಸಂದರ್ಭದಲ್ಲಿ ಕೆಲವು ಪ್ರತಿಭಟನಾಕಾರರು ಪಟಾಕಿಗಳನ್ನು ಸಿಡಿಸಿ ಪೊಲೀಸರೊಂದಿಗೆ ಘರ್ಷಣೆ ನಡೆಸಿದರು. ಪ್ರದರ್ಶನಕಾರರು ಬೆಂಕಿಯ ಉಂಡೆಗಳು ಮತ್ತು ಕಲ್ಲುಗಳನ್ನು ಪೊಲೀಸರತ್ತ ಎಸೆದರು. ಪೊಲೀಸರು ಜಲಫಿರಂಗಿ ಧಾರೆ ಬಳಸಿ ಪ್ರತಿಭಟನಾಕಾರರನ್ನು ಚದುರಿಸಿದರು. ಇಟಲಿಯ ಉತ್ತರದ ನಗರ ಮಿಲಾನ್ನಲ್ಲಿ ಚಳಿಗಾಲದ ಒಲಿಂಪಿಕ್ ಕ್ರೀಡಾಕೂಟದ ಉದ್ಘಾಟನಾ ಸಮಾರಂಭ ನಡೆದ ಒಂದು ದಿನದ ಬಳಿಕ ಈ ಪ್ರತಿಭಟನೆ ನಡೆದಿದೆ. ಕ್ರೀಡಾಕೂಟದಲ್ಲಿ ಕೃತಕ ಮಂಜುಗಡ್ಡೆ ಬಳಕೆ ಮತ್ತು ಮರಗಳನ್ನು ಕಡಿಯುವುದನ್ನು ಪ್ರತಿಭಟನಾಕಾರರು ವಿರೋಧಿಸುತ್ತಿದ್ದಾರೆ. ಅದೂ ಅಲ್ಲದೆ, ಈ ಕ್ರೀಡಾಕೂಟದಿಂದಾಗಿ ಇಟಲಿಯ ಆರ್ಥಿಕ ಮತ್ತು ಫ್ಯಾಶನ್ ರಾಜಧಾನಿಯಲ್ಲಿ ಉಂಟಾಗಿರುವ ವಸತಿ ಬಿಕ್ಕಟ್ಟಿನ ವಿರುದ್ಧವೂ ಅವರು ಪ್ರತಿಭಟಿಸುತ್ತಿದ್ದಾರೆ. ‘‘ಪರಿಸರ ಮತ್ತು ಸಾಮಾಜಿಕ ಕಳಕಳಿಗೆ ಈ ಕ್ರೀಡಾಕೂಟವು ಹೊಂದಿಕೆಯಾಗುವುದಿಲ್ಲ. ಈ ಕ್ರೀಡಾಕೂಟದ ಕಾಲ ಮುಗಿದುಹೋಗಿದೆ’’ ಎಂದು ಯುವ ಪ್ರತಿಭಟನಾಕಾರರೊಬ್ಬರು ಎಎಫ್ಪಿ ಸುದ್ದಿಸಂಸ್ಥೆಗೆ ತಿಳಿಸಿದರು. ಈ ಕ್ರೀಡಾಕೂಟಕ್ಕಾಗಿ ನಿರ್ಮಿಸಲಾಗುತ್ತಿರುವ ಮೂಲಸೌಕರ್ಯವು ಸೂಕ್ಷ್ಮ ಪರ್ವತ ವಾತಾವರಣದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ ಎಂದು ಅದರ ಟೀಕಾಕಾರರು ಆರೋಪಿಸುತ್ತಾರೆ. ಕಳೆದ ವಾರಾಂತ್ಯದಲ್ಲಿ ಟುರಿನ್ ನಗರದಲ್ಲಿ ಹಿಂಸಾತ್ಮಕ ಪ್ರತಿಭಟನೆ ನಡೆದಿತ್ತು. ಆ ಘಟನೆಯಲ್ಲಿ 100ಕ್ಕೂ ಅಧಿಕ ಪೊಲೀಸರು ಗಾಯಗೊಂಡಿದ್ದರು.
ಆಗಸದಲ್ಲಿ ವ್ಯವಸ್ಥಾ ವೈಫಲ್ಯ: ಡಿಜಿಸಿಎ ಪರೀಕ್ಷೆ ಅನಿವಾರ್ಯವಾಗಿಸಿದ ವಿಜಯಪುರದ ವಿಮಾನ ಪತನ!
ಉತ್ತರ ಕರ್ನಾಟಕದ ವಿಜಯಪುರದಲ್ಲಿ ಅಭ್ಯಾಸ ನಿರತ ತರಬೇತಿ ವಿಮಾನವೊಂದು ಪತನವಾಗಿದೆ. ಇಬ್ಬರು ತರಬೇತುದಾರರು ಬದುಕುಳಿದಿದ್ದಾರೆ. ಈ ಅಪಘಾತಗಳು ವಿಮಾನ ಹಾರಾಟ ತರಬೇತಿ ಕಾರ್ಯಾಚರಣೆಗಳ ಮೇಲೆ ಗಂಭೀರ ಹಾಗೂ ಅಸಮಾಧಾನಕರ ಪ್ರಶ್ನೆಯನ್ನು ಮೂಡಿಸಿವೆ. ಈ ಘಟನೆಯಲ್ಲಿ ಗ್ರಾಮಸ್ಥರ ಧೈರ್ಯದ ಬಗ್ಗೆ ಮೆಚ್ಚುಗೆ ವ್ಯಕ್ತವಾಗಿದೆ. ತರಬೇತುದಾರರ ಸಮಯ ಪ್ರಶ್ನೆ ಜೀವ ಉಳಿಸಿದೆ. ಈ ಬಗ್ಗೆ ಸಮಗ್ರ ಲೇಖನ ಇಲ್ಲಿದೆ.
ಕಲಬುರಗಿ| ಬಸವಗೀತೆ ಸತ್ಯ ಸಂವಾದ 9 ಸಂಪುಟಗಳ ಪುಸ್ತಕ ಲೋಕಾರ್ಪಣೆ
ಕಲಬುರಗಿ: ಓದುವ, ಬರೆಯುವ ಪರಿಪಾಠ ಕಡಿಮೆಯಾಗಿರುವ ಈ ದಿನಗಳಲ್ಲಿ ಪುಸ್ತಕ ಸಂಸ್ಕೃತಿ ಬೆಳೆಸುವ ನಿಟ್ಟಿನಲ್ಲಿ ಹೆಚ್ಚಿನ ಪುಸ್ತಕಗಳು ಬಿಡುಗಡೆಯಾಗುತ್ತಿರುವುದು, ಪ್ರಕಟವಾಗುತ್ತಿರುವುದು ಅಭಿಮಾನದ ಸಂಗತಿ ಎಂದು ವಿಶ್ರಾಂತ ಪ್ರಾಧ್ಯಾಪಕಿ ಡಾ. ನೀಲಾಂಬಿಕಾ ಪೊಲೀಸ್ ಪಾಟೀಲ್ ಅಭಿಪ್ರಾಯಪಟ್ಟರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ವತಿಯಿಂದ ನಗರದ ಕನ್ನಡ ಭವನದಲ್ಲಿ ರವಿವಾರ ಸಂಜೆ ಆಯೋಜಿಸಿದ್ದ ಸುದ್ದಿಮೂಲ ಕನ್ನಡ ದಿನಪತ್ರಿಕೆಯ ಸಂಪಾದಕ ಬಸವರಾಜ ಸ್ವಾಮಿ ವಿರಚಿತ ಬಸವಗೀತೆ ಸತ್ಯಸಂವಾದ (9 ಸಂಪುಟಗಳ ಗುಚ್ಛ) ಪುಸ್ತಕ ಲೋಕಾರ್ಪಣೆ ಮಾಡಿ ಮಾತನಾಡಿದ ಅವರು, ಕಲಬುರಗಿ ಈಗ ಪುಸ್ತಕ ಹಬ್ ಆಗುತ್ತಿದೆ. ಭವಿಷ್ಯತ್ತಿನಲ್ಲಿ ಪುಸ್ತಕಗಳ ಸ್ಥಾನಮಾನ ಏನು? ಎಂಬುದರ ಬಗ್ಗೆ ಗಂಭೀರವಾಗಿ ಆಲೋಚಿಸಬೇಕು ಎಂದು ತಿಳಿಸಿದರು. ಪುಸ್ತಕಗಳ ಕುರಿತು ಮಾತನಾಡಿದ ಡಾ. ಶ್ರೀಶೈಲ ನಾಗರಾಳ ಅವರು, ಬಸವಣ್ಣ ಹಾಗೂ ಆತನ ಸಮಕಾಲೀನರು ಪರಸ್ಪರ ನಡೆಸಿರುವ ಸತ್ಯ ಸಂವಾದ ಬಹಳ ಅಪರೂಪದ್ದಾಗಿದೆ. ಮಾಂತ್ರಿಕ ವಾಸ್ತವಿಕ ತಂತ್ರ ಬಳಸಿ ಬರೆದಿರುವ ಈ ಕೃತಿ ಕನ್ನಡದಲ್ಲಿ ಹೊಸ ಪ್ರಯೋಗ ಎಂದರು. 1571 ಪುಟಗಳ ವ್ಯಾಪ್ತಿಯ ಈ ಸಂಪುಟದಲ್ಲಿ ಬಸವಣ್ಣ ಹಾಗೂ ಆತನ ಸಮಕಾಲೀನ ಶರಣರು ನಡೆಸಿದ ಪ್ರಶ್ನೋತ್ತರಗಳಿವೆ. ಬದುಕಿನ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಒದಗಿಸುವಂತಿವೆ. ಓದುಗರೊಡನೆ ಅನುಶೀಲನೆ ಮಾಡಿ ಬಿಡುವು ಕೊಟ್ಟು ಮತ್ತೊಂದು ವಿಷಯದ ಕಡೆಗೆ ಎಳೆದೊಯ್ಯುವಂತಿದೆ ಎಂದು ತಿಳಿಸಿದರು. ಮುಖ್ಯ ಅತಿಥಿಯಾಗಿದ್ದ ಪ್ರಗತಿಪರ ಚಿಂತಕ ಪ್ರೊ. ಆರ್.ಕೆ. ಹುಡಗಿ ಮಾತನಾಡಿ, ಭಗವದ್ಗೀತೆಗೆ ಪ್ರತಿರೋದಂತಿರುವ ಬಸವಗೀತೆ ಪ್ರತಿಯೊಬ್ಬರ ಮನೆಯಲ್ಲಿರಬೇಕಾದ ಪುಸ್ತಕವಾಗಿದೆ ಎಂದು ತಿಳಿಸಿದರು. ಕೃತಿಕಾರ ಬಸವರಾಜ ಸ್ವಾಮಿ ಮಾತನಾಡಿ, ಮನೋಕಾಯವನ್ನು ಜ್ಞಾನಕಾಯವನ್ನಾಗಿ ಮಾಡಿಕೊಂಡಿದ್ದ ಶರಣರು ದೇಹಧರ್ಮ, ಪ್ರಕೃತಿಧರ್ಮದ ಬಗ್ಗೆ ಮಾತನಾಡಿದ್ದಾರೆ. ಮಹಾಪುರುಷರದ್ದು ಧರ್ಮ ಸ್ಥಾಪನೆಯ ಗುರಿಯಾಗಿರಲಿಲ್ಲ ಅವರು ಸ್ಥಾಪಿಸಿದ್ದು ಮನುಷ್ಯ ಧರ್ಮ, ಸಹಜ ಧರ್ಮ, ಸರಳ ಧರ್ಮ ಎಂದು ವಿವರಿಸಿದರು. ಮುಖ್ಯ ಅತಿಥಿಯಾಗಿದ್ದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ಡಾ. ಶಿವರಂಜನ ಸತ್ಯಂಪೇಟೆ ಪ್ರಾಸ್ತಾವಿಕ ಮಾತನಾಡಿ, ವಚನಗಳ ಅಧ್ಯಯನ, ಸಂಗ್ರಹ, ಸಂಶೋಧನೆ ಕಾರ್ಯದ ಜೊತೆಗೆ ವಚನಗಳ ವಿವಿಧ ಆಯಾಮಗಳ ಬಗ್ಗೆ ಗುರುತಿಸಲಾಗುತ್ತಿದೆ. ಆದರೆ ವಚನಗಳ ಆಳ-ಅಗಲಕ್ಕೆ ಈವರೆಗೆ ಏರಲಾಗುತ್ತಿಲ್ಲ. ವಚನಗಳ ಬೆಳಕು, ಬೆಡಗು ಬೆರಗು ಮೂಡಿಸುವಂಥದ್ದಾಗಿದೆ ಎಂದರು. ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಬಾಬುರಾವ್ ಯಡ್ರಾಮಿ, ಸಂಘದ ಮಾಜಿ ರಾಜ್ಯ ಉಪಾಧ್ಯಕ್ಷ ಭವಾನಿಸಿಂಗ್ ಠಾಕೂರ ವೇದಿಕೆಯಲ್ಲಿದ್ದರು. ಜಿಲ್ಲಾ ಕಸಾಪ ಕೋಶಾಧ್ಯಕ್ಷ ಶರಣರಾಜ ಛಪ್ಪರಬಂದಿ ಅಧ್ಯಕ್ಷತೆ ವಹಿಸಿದ್ದರು. ಶಿವರಾಜ ಅಣಜಗಿ ನಿರೂಪಿಸಿದರು. ಸೋಮೇಶಗೌಡ ನಂದಿಕೂರ ಸ್ವಾಗತಿಸಿದರು. ಬಾಬುರಾವ ಕೋಬಾಳ ಪ್ರಾರ್ಥನೆಗೀತೆ ಹಾಡಿದರು. ಶ್ರೇಯಾ, ಸಹಸ್ರಾ ವಚನ ನೃತ್ಯ ಪ್ರದರ್ಶಿಸಿದರು. ರವೀಂದ್ರ ಶಾಬಾದಿ, ಧರ್ಮಣ್ಣ ಧನ್ನಿ, ಎಸ್.ಎಸ್. ಪಾಟೀಲ, ಶರಣು ನೀರಡಗಿ, ಚಂದ್ರಕಾಂತ ತಡಪಳ್ಳಿ, ಡಾ. ಅಶೋಕ ದೊಡ್ಡಮನಿ, ವಿನೋದ ಜನೆವೆರಿ, ನಿಜಲಿಂಗ ದೊಡ್ಡಮನಿ, ಪಿಡ್ಡಪ್ಪ ಜಾಲಗಾರ, ವಿಠ್ಠಲ ಚಿಕಣಿ, ಶಿವಕುಮಾರ ತೊಟ್ನಳ್ಳಿ, ಸಂಜೀವಕುಮಾರ ಕಾಂಬಳೆ, ದೇವೇಂದ್ರಪ್ಪ ಅವಂಟಿ ಇತರರು ಉಪಸ್ಥಿತರಿದ್ದರು.
ಅಧ್ಯಯನ, ಸಂಶೋಧನೆಗಳಿಂದ ಯಶಸ್ಸು: ಯು.ಕೆ. ಮೋನು
‘ಪುಟ್ಟ ರೋಗಿಗಳು ಮತ್ತು ದೊಡ್ಡ ನಿರ್ಧಾರಗಳು’ ವೈದ್ಯಕೀಯ ಕಾರ್ಯಗಾರ
Rafah Crossing: ಗಾಜಾ ಜನರಿಗೆ ರಫಾ ಬಾಗಿಲು ರೀ ಓಪನ್, ಶಾಂತಿ ಸ್ಥಾಪನೆಗೆ ಮೊದಲು ಲಕ್ಷಾಂತರ ಜನರಿಗೆ ರಿಲೀಫ್
ಗಾಜಾ ಪಟ್ಟಿಯಲ್ಲಿ ಶಾಂತಿ ಸ್ಥಾಪನೆ ಮಾಡಲು ಈಗಾಗಲೇ ಅಮೆರಿಕ ಹಾಗೂ ಇಸ್ರೇಲ್ ಮಹತ್ವದ ಪ್ಲಾನ್ ಮಾಡಿವೆ. ಅರಬ್ ದೇಶಗಳು ಸೇರಿದಂತೆ ಮಧ್ಯಪ್ರಾಚ್ಯದ ಬಹುತೇಕ ದೇಶಗಳು ಗಾಜಾ ಪಟ್ಟಿ ಶಾಂತಿಯ ವಿಚಾರದಲ್ಲಿ ಅಮೆರಿಕ ಹಾಗೂ ಇಸ್ರೇಲ್ ಬೆನ್ನಿಗೆ ನಿಂತಿವೆ. ಈ ಮೂಲಕ ಗಾಜಾ ಜನರು ನೆಮ್ಮದಿಯ ನಿಟ್ಟುಸಿರು ಬಿಡುವ ಸಮಯ ಕೂಡ ಬಂದಿದ್ದು, ಮತ್ತೊಂದು ಕಡೆ ತಮ್ಮ ಕುಟುಂಬದವರ
ಮಾ.4ರಿಂದ ಶ್ರೀ ಭಗವತೀ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ; ಆಮಂತ್ರಣ ಪತ್ರಿಕೆ ಬಿಡುಗಡೆ
ಹಳೆಯಂಗಡಿ: ಸಸಿಹಿತ್ಲುವಿನ ಶ್ರೀ ಭಗವತೀ ದೇವಸ್ಥಾನದಲ್ಲಿ ಮಾ.4ರಿಂದ ಮಾ.8ರ ವರೆಗೆ ನಡೆಯಲಿರುವ ಬ್ರಹ್ಮಕಲಶೋತ್ಸವದ ಆಮಂತ್ರಣ ಪತ್ರಿಕೆಯನ್ನು ರವಿವಾರ ಬಿಡುಗಡೆಗೊಳಿಸಲಾಯತು. ಆಮಂತ್ರಣ ಪತ್ರಿಕೆಯನ್ನು ಮುಲ್ಕಿ ಸೀಮೆಯ ಅಸರು ದುಗ್ಗಣ್ಣ ಸಾವಂತರು ಬಿಡುಗಡೆಗೊಳಿಸಿದರು. ಈ ಸಂದರ್ಭ ಮುಂಬೈ ಉದ್ಯಮಿ ಗಂಗಾಧರಶೆಟ್ಟಿ ಸಸಿಹಿತ್ಲು, ಚಂದ್ರ ಶೇಖರ ನಾನಿಲ್ ಹಳೆಯಂಗಡಿ, ಸುನಿಲ್ ಆಳ್ವ, ದಿವಾಕರ ಸಾಮಾನಿ,ಕಿಶೋರ್ ಗುರಿಕಾರ,ಸತೀಶ ಶೆಟ್ಟಿ, ಉದಯ ಅಗ್ಗಿದ ಕಳಿಯ, ಗೀತಾಂಜಲಿ, ಕಸ್ತೂರಿ ಪಂಜ, ಬೋಜ ಗುರಿಕಾರ ಮೊದಲಾದವರು ಉಪಸ್ಥಿತರಿದ್ದರು.
ಡಿವೈಎಫ್ಐ ಬೆಂಗ್ರೆ ಘಟಕದಿಂದ ರಕ್ತದಾನ ಶಿಬಿರ
ಮಂಗಳೂರು,ಫೆ.8: ಡಿವೈಎಫ್ಐ ಬೆಂಗ್ರೆ 11ನೇ ವಾರ್ಡ್ ನೇತೃತ್ವದಲ್ಲಿ ನಗರದ ಫಾದರ್ ಮುಲ್ಲರ್ ಆಸ್ಪತ್ರೆಯ ಸಹಯೋಗದೊಂದಿಗೆ ಕಸಬಾ ಬೆಂಗ್ರೆಯ ಮದ್ರಸದಲ್ಲಿ ರಕ್ತದಾನ ಶಿಬಿರ ನಡೆಯಿತು. ಡಿವೈಎಫ್ಐ ದ.ಕ.ಜಿಲ್ಲಾಧ್ಯಕ್ಷ ಬಿ.ಕೆ. ಇಮ್ತಿಯಾಝ್ ಉದ್ಘಾಟಿಸಿ ಮಾತನಾಡಿದರು. ಡಿವೈಎಫ್ಐ ಮಾಜಿ ರಾಜ್ಯ ಅಧ್ಯಕ್ಷ ಸುನಿಲ್ ಕುಮಾರ್ ಬಜಾಲ್ ರಕ್ತದಾನದ ಮಹತ್ವದ ಬಗ್ಗೆ ಮಾತನಾಡಿದರು. ಬೆಂಗ್ರೆ ಡಿವೈಎಫ್ಐ ಮಾಜಿ ಅಧ್ಯಕ್ಷ ಹಮೀದ್ ಹಾಜಿ, ಮಂಗಳೂರು ನಗರ ಘಟಕದ ಅಧ್ಯಕ್ಷ ನವೀನ್ ಕೊಂಚಾಡಿ, ಮರ್ಕಝುನ್ನೂರು ಮದ್ರಸ ಅಧ್ಯಕ್ಷ ಕುಂಞಿಮೋನು, ವೈದ್ಯರಾದ ಡಾ. ರೀನಾ ಕಾರ್ಲಿನ್, ಕಸ್ಬಾ ಗ್ರಾಜುಯೇಟ್ ಫೊರಮ್ ಅಧ್ಯಕ್ಷ ಅಬ್ದುಲ್ ರಫೀಕ್, ಮುಖಂಡರಾದ ಶ್ರೀನಾಥ್ ಕಾಟಿಪಳ್ಳ, ಪಿ.ಜಿ ರಫೀಕ್, ಕೃಷ್ಣ ತಣ್ಣೀರುಬಾವಿ, ತೈಯೂಬ್ ಬೆಂಗ್ರೆ, ನೌಶಾದ್ ಬೆಂಗ್ರೆ, ಡಿವೈಎಫ್ಐ ಬೆಂಗ್ರೆ 11ನೇ ಘಟಕದ ಅಧ್ಯಕ್ಷ ಮುಹಮ್ಮದ್ ರಫೀಕ್ ಉಪಸ್ಥಿತರಿದ್ದರು. ಘಟಕದ ಪ್ರಮುಖರಾದ ಸಾಹಿಲ್, ತಂಝೀಲ್, ಕಬೀರ್, ನಿಸಾರ್, ಮುಹಾಝ್, ತಸ್ರೀಫ್, ಹನೀಫ್, ನಾಸಿರ್ ಬಾಸ್, ರಿಝ್ವಾನ್, ಝಿಮ್, ಶಾರೂಕ್, ಆಸಿಫ್, ಕಬೀರ್, ಶರೀಫ್ ಸಹಕರಿಸಿದರು.
ಭಾರತ್ ಬೀಡಿ ವರ್ಕ್ಸ್ ಸಂಸ್ಥೆಯ ಸಂಸ್ಥಾಪಕರ 113 ನೇ ಜನ್ಮ ದಿನಾಚರಣೆ
ಮಂಗಳೂರು: 30 ಮಾರ್ಕಿನ ಬೀಡಿಗಳ ತಯಾರಕರಾದ ಭಾರತ್ ಬೀಡಿ ವರ್ಕ್ಸ್ ಪ್ರೈವೇಟ್ ಲಿಮಿಟೆಡ್ ನ ಸಂಸ್ಥಾಪಕರಾದ ಮಂಜುನಾಥ ಪೈ ಅವರ 113 ನೇ ಜನ್ಮ ದಿನಾಚರಣೆ ಸಂಸ್ಥೆಯ ಕೇಂದ್ರ ಕಚೇರಿಯಲ್ಲಿ ನಡೆಯಿತು. ಸಂಸ್ಥೆಯ ಕಾರ್ಯಕಾರಿ ನಿರ್ದೇಶಕರಾದ ಸುಬ್ರಾಯ ಎಂ. ಪೈ ಅವರು ಸಂಸ್ಥೆಯು ನಡೆದು ಬಂದ ದಾರಿ, ಸಂಸ್ಥಾಪಕರು ಸಮಾಜಕ್ಕೆ ನೀಡಿದ ಕೊಡುಗೆ, ಸಂಸ್ಥಾಪಕರ ದೂರ ದೃಷ್ಟಿಯ ಬಗ್ಗೆ ವಿವರಿಸಿದರು. ಕಾರ್ಯಕ್ರಮದಲ್ಲಿ ವಿವಿಧ ಬ್ಯಾಂಕುಗಳ ಅಧಿಕಾರಿಗಳು, ತಮ್ಮ ಅನಿಸಿಕೆಯನ್ನು ಹೇಳಿದರು. ರಮೇಶ್ ಪೈ ನಿಪ್ಪಾಣಿ ಅವರು ಸಂಸ್ಥಾಪಕರ ಬಗ್ಗೆ ಗುಣಗಾನ ಮಾಡಿದರು. ಲೆಕ್ಕ ಪರಿಶೋಧಕ ಸಿ. ಎ. ಶಿವಾನಂದ ಪೈ ಅವರು ಸಂಸ್ಥೆ ನಡೆದು ಬಂದ ಬಗ್ಗೆ ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು. ಈ ಕಾರ್ಯಕ್ರಮದಲ್ಲಿ ಸಂಸ್ಥೆಯ ನಿರ್ದೇಶಕರಾದ ನಾಗೇಂದ್ರ ಡಿ ಪೈ, ಆನಂದ ಜಿ. ಪೈ, ವೆಂಕಟೇಶ ಎಂ. ಪೈ ಹಾಗೂ ರಫ್ತು ಮಾರುಕಟ್ಟೆ ವಿಭಾಗದ ಆಡಳಿತ ಅಧಿಕಾರಿ ಅಭಿಷೇಕ್ ಎನ್. ಪೈ ಉಪಸ್ಥಿತರಿದ್ದರು. ಸಂಸ್ಥೆಯ ನಿರ್ದೇಶಕ ಸುಧೀರ್ ಎಂ.ವಂದಿಸಿದರು.
ಎಪ್ಸ್ಟೀನ್ ಫೈಲ್ಸ್ : ಬ್ರಿಟನ್ ಪ್ರಧಾನಿಯ ಸಿಬ್ಬಂದಿ ಮುಖ್ಯಸ್ಥ ಮೋರ್ಗನ್ ರಾಜೀನಾಮೆ
ಲಂಡನ್: ಲೈಂಗಿಕ ಅಪರಾಧಿ ಜೆಫ್ರಿ ಎಪ್ಸ್ಟೀನ್ ಜೊತೆ ಸಂಪರ್ಕದಲ್ಲಿದ್ದ ಪೀಟರ್ ಮ್ಯಾಂಡಲ್ಸನ್ ಅವರನ್ನು ಅಮೆರಿಕಾಕ್ಕೆ ರಾಯಭಾರಿಯನ್ನಾಗಿ ನೇಮಿಸಿದ ವಿವಾದಕ್ಕೆ ಸಂಬಂಧಿಸಿ ಬ್ರಿಟನ್ ಪ್ರಧಾನಿ ಸ್ಟಾರ್ಮರ್ ಅವರ ಸಿಬ್ಬಂದಿ ಮುಖ್ಯಸ್ಥ(ಮುಖ್ಯ ಆಡಳಿತಾಧಿಕಾರಿ) ಮೋರ್ಗನ್ ಮೆಕ್ಸ್ವೀನಿ ರವಿವಾರ ರಾಜೀನಾಮೆ ನೀಡಿರುವುದಾಗಿ ವರದಿಯಾಗಿದೆ. `ಮ್ಯಾಂಡಲ್ಸನ್ ರನ್ನು ನೇಮಿಸುವ ನಿರ್ಧಾರ ತಪ್ಪಾಗಿದೆ. ಆತ ನಮ್ಮ ಪಕ್ಷಕ್ಕೆ, ದೇಶಕ್ಕೆ ಮತ್ತು ರಾಜಕೀಯದ ಕ್ಷೇತ್ರದ ವಿಶ್ವಾಸಕ್ಕೆ ಹಾನಿ ಎಸಗಿದ್ದಾರೆ. ಕೂಲಂಕುಷವಾಗಿ ಆಲೋಚಿಸಿದ ಬಳಿಕ ರಾಜೀನಾಮೆಗೆ ನಿರ್ಧರಿಸಿದ್ದೇನೆ' ಎಂದು ಮೆಕ್ಸ್ವೀನಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ವಿದ್ಯಾರ್ಥಿ ನಾಯಕ ಉಸ್ಮಾನ್ ಹಾದಿ ಹತ್ಯೆಯ ತನಿಖೆಗೆ ವಿಶ್ವಸಂಸ್ಥೆ ಸಹಾಯ ಕೋರಿದ ಬಾಂಗ್ಲಾದೇಶ
ಢಾಕ: ವಿದ್ಯಾರ್ಥಿ ನಾಯಕ ಉಸ್ಮಾನ್ ಹಾದಿಯ ಹತ್ಯೆ ಪ್ರಕರಣದ ತನಿಖೆಗೆ ಆಗ್ರಹಿಸಿ ಬಾಂಗ್ಲಾದೇಶದಲ್ಲಿ ಪ್ರತಿಭಟನೆ ತೀವ್ರಗೊಳ್ಳುತ್ತಿದ್ದಂತೆಯೇ ಬಾಂಗ್ಲಾದೇಶ ಸರಕಾರ ತನಿಖೆಯಲ್ಲಿ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಏಜೆನ್ಸಿಯ ಸಹಾಯ ಕೋರಿದೆ ಎಂದು ವರದಿಯಾಗಿದೆ. ಜಿನೆವಾದಲ್ಲಿ ಬಾಂಗ್ಲಾದೇಶದ ನಿಯೋಗವು `ಉಸ್ಮಾನ್ ಹಾದಿ ಹತ್ಯೆಯ ನ್ಯಾಯಯುತ, ನಿಷ್ಪಕ್ಷಪಾತ ಮತ್ತು ತ್ವರಿತ ತನಿಖೆಯನ್ನು ಬೆಂಬಲಿಸುವಂತೆ ಕೋರುವ ರಾಜತಾಂತ್ರಿಕ ಟಿಪ್ಪಣಿಯನ್ನು ಮಾನವ ಹಕ್ಕುಗಳಿಗಾಗಿನ ವಿಶ್ವಸಂಸ್ಥೆಯ ಹೈಕಮಿಷನರ್ (ಒಎಚ್ಸಿಎಚ್ಆರ್) ಕಚೇರಿಗೆ ಸಲ್ಲಿಸಿದೆ. ತನಿಖೆಯನ್ನು ಬೆಂಬಲಿಸಲು ಮಾನವ ಹಕ್ಕುಗಳ ಏಜೆನ್ಸಿಯಿಂದ ತಾಂತ್ರಿಕ ಮತ್ತು ಸಾಂಸ್ಥಿಕ ಸಹಾಯವನ್ನು ವಿನಂತರಿಸಲಾಗಿದೆ ಎಂದು ಮಧ್ಯಂತರ ಸರಕಾರದ ಮೂಲಗಳನ್ನು ಉಲ್ಲೇಖಿಸಿ ಎಎಫ್ಪಿ ವರದಿ ಮಾಡಿದೆ.
ದಿಲ್ಲಿ: ಫ್ಲೈಓವರ್ ನಲ್ಲಿ ನಿಲ್ಲಿಸಿದ್ದ ಕಾರಿನಲ್ಲಿ ಮೂವರ ಮೃತದೇಹಗಳು ಪತ್ತೆ
ಹೊಸದಿಲ್ಲಿ: ಪಶ್ಚಿಮ ದಿಲ್ಲಿಯ ಪೀರಗಢಿ ಫ್ಲೈಓವರ್ ನಲ್ಲಿ ರವಿವಾರ ನಿಲ್ಲಿಸಿದ್ದ ಕಾರೊಂದರಲ್ಲಿ ಮೂವರ ಮೃತದೇಹಗಳು ಪತ್ತೆಯಾಗಿವೆ. ಎತ್ತರದ ರಸ್ತೆಯಲ್ಲಿ ಶಂಕಾಸ್ಪದವಾಗಿ ವಾಹನವೊಂದನ್ನು ನಿಲ್ಲಿಸಿರುವ ಕುರಿತು ಅಗ್ನಿ ಶಾಮಕ ದಳ ಕರೆ ಸ್ವೀಕರಿಸಿದ ಬಳಿಕ ಈ ಘಟನೆ ಬೆಳಕಿಗೆ ಬಂದಿದೆ. ಅಗ್ನಿ ಶಾಮಕ ದಳದ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದಾಗ ಅಲ್ಲಿ ಕಾರೊಂದು ನಿಲ್ಲಿಸಿರುವುದು ಕಂಡು ಬಂತು. ಕಾರನ್ನು ಒಳಗಿನಿಂದ ಲಾಕ್ ಮಾಡಲಾಗಿತ್ತು. ಅದರ ಒಳಗಡೆ ಮೂವರ ಮೃತದೇಹಗಳು ಕಂಡು ಬಂತು. ಕೂಡಲೇ ಪೊಲೀಸರಿಗೆ ಮಾಹಿತಿ ನೀಡಲಾಯಿತು. ಸ್ಥಳಕ್ಕೆ ಧಾವಿಸಿ ಪರಿಶೀಲಿಸಿದ ಬಳಿಕ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಮೃತಪಟ್ಟವರನ್ನು ರಣದೀರ್ ಸಿಂಗ್ (60), ಲಕ್ಷ್ಮೀ ಸಿಂಗ್ (40), ಸಿವ ನಾರಾಯಣ್ (46) ಎಂದು ಪೊಲೀಸರು ಗುರುತಿಸಿದ್ದಾರೆ. ರಣಧೀರ ಹಾಗೂ ಶಿವ ನಾರಾಯಣ ರನಹೋಲಾದ ನಿವಾಸಿ, ಲಕ್ಷ್ಮೀ ಜಹಾಂಗೀರ್ಪುರಿಯ ನಿವಾಸಿ. ಕಾರು ರಣಧೀರ್ ಸಿಂಗ್ ಗೆ ಸೇರಿದ್ದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ಮೃತದೇಹಗಳಲ್ಲಿ ಗಾಯದ ಗುರುತುಗಳು ಇಲ್ಲ. ಮೂವರು ವ್ಯಕ್ತಿಗಳ ಮೌಲ್ಯಯುತ ವಸ್ತುಗಳು ಕಾರಿನ ಒಳಗೆ ಇತ್ತು. ಆದುದರಿಂದ ಸಾವಿಗೆ ಕಾರಣ ಏನು ಎಂಬ ಪ್ರಶ್ನೆ ಹುಟ್ಟಿಕೊಂಡಿದೆ.
ಯುಎಸ್–ಭಾರತ ವ್ಯಾಪಾರ ಒಪ್ಪಂದ: ಬಿಜೆಪಿ ಸರಕಾರದ ಶರಣಾಗತಿ: ಸಿಪಿಐ(ಎಂ) ತೀವ್ರ ಟೀಕೆ
ಕಲಬುರಗಿ: ಭಾರತ–ಅಮೆರಿಕ ನಡುವೆ ನಡೆಯುತ್ತಿರುವ ತಥಾಕಥಿತ ‘ಮಧ್ಯಂತರ ವ್ಯಾಪಾರ ಒಪ್ಪಂದ’ದ ವಿವರಗಳು ನಿಧಾನವಾಗಿ ಬಹಿರಂಗಗೊಳ್ಳುತ್ತಿದ್ದು, ಈ ಒಪ್ಪಂದದಲ್ಲಿ ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ಅಮೆರಿಕದ ಎದುರು ಶರಣಾಗಿರುವುದು ಸ್ಪಷ್ಟವಾಗುತ್ತಿದೆ ಎಂದು ಸಿಪಿಐ(ಎಂ) ಪೊಲಿಟ್ಬ್ಯುರೊ ಹೇಳಿಕೊಂಡಿದೆ. ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿದ ಸಿಪಿಐ(ಎಂ) ಕಲಬುರಗಿ ಜಿಲ್ಲಾ ಕಾರ್ಯದರ್ಶಿ ಕೆ.ನೀಲಾ, ಅಮೆರಿಕದಿಂದ ಆಮದು ಆಗುವ ಹಣ್ಣುಗಳು, ಹತ್ತಿ, ಮರದ ಕಾಯಿ ಉತ್ಪನ್ನಗಳು, ಸೋಯಾಬೀನ್ ಎಣ್ಣೆ ಸೇರಿದಂತೆ ಹಲವು ಆಹಾರ ಮತ್ತು ಕೃಷಿ ಉತ್ಪನ್ನಗಳ ಮೇಲೆ ಭಾರತ ಸರ್ಕಾರ ಶೂನ್ಯ ಸುಂಕ ವಿಧಿಸಲು ಒಪ್ಪಿಕೊಂಡಿದೆ. ಈ ನಿರ್ಧಾರವು ದೇಶದಾದ್ಯಂತ ಲಕ್ಷಾಂತರ ಸೇಬು ಬೆಳೆಗಾರರು, ಹತ್ತಿ ಹಾಗೂ ಸೋಯಾ ರೈತರ ಜೀವನೋಪಾಯಕ್ಕೆ ಗಂಭೀರ ಹೊಡೆತ ನೀಡಲಿದೆ ಎಂದು ಹೇಳಿದ್ದಾರೆ. ಹಿಮಾಚಲ ಪ್ರದೇಶ, ಜಮ್ಮು–ಕಾಶ್ಮೀರ ಸೇರಿದಂತೆ ವಿವಿಧ ರಾಜ್ಯಗಳ ಸೇಬು ಬೆಳೆಗಾರರು ಈಗಾಗಲೇ ನ್ಯೂಜಿಲ್ಯಾಂಡ್ ಮೊದಲಾದ ದೇಶಗಳೊಂದಿಗೆ ಮಾಡಲಾದ ಹಿಂದಿನ ವ್ಯಾಪಾರ ಒಪ್ಪಂದಗಳಿಂದ ಸಂಕಷ್ಟ ಅನುಭವಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಅಮೆರಿಕದೊಂದಿಗೆ ಹೊಸ ಒಪ್ಪಂದವು ಅವರ ಬದುಕನ್ನು ಮತ್ತಷ್ಟು ನಾಶಗೊಳಿಸುವ ಭೀತಿ ಇದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಇದಲ್ಲದೆ, ಆಹಾರ ಮತ್ತು ಕೃಷಿ ಉತ್ಪನ್ನಗಳ ಮೇಲಿನ ಸುಂಕೇತರ ಅಡೆತಡೆಗಳನ್ನು (ನಾನ್-ಟಾರಿಫ್ ಬ್ಯಾರಿಯರ್ಸ್) ತೆಗೆದುಹಾಕಲು ಕೇಂದ್ರ ಸರಕಾರ ಒಪ್ಪಿಕೊಂಡಿದೆ ಎಂಬ ವರದಿಗಳು ಆತಂಕಕಾರಿ. ಇದರ ಪರಿಣಾಮವಾಗಿ ಭಾರತೀಯ ರೈತರಿಗೆ ನೀಡಲಾಗುತ್ತಿರುವ ಬೆಂಬಲ ಮತ್ತು ಸಬ್ಸಿಡಿಗಳನ್ನು ಹಿಂಪಡೆಯುವ ಪರಿಸ್ಥಿತಿ ಉಂಟಾಗಲಿದೆ. ಇದರಿಂದ ಭಾರೀ ಸಬ್ಸಿಡಿಗಳನ್ನು ಪಡೆಯುತ್ತಿರುವ ಅಮೆರಿಕದ ಕೃಷಿ ಉತ್ಪನ್ನಗಳೊಂದಿಗೆ ಭಾರತೀಯ ರೈತರು ಸ್ಪರ್ಧಿಸಬೇಕಾದ ಅನಿವಾರ್ಯತೆ ಎದುರಾಗಲಿದೆ ಎಂದು ಹೇಳಿದರು. ರಷ್ಯಾದಿಂದ ತೈಲ ಖರೀದಿಸುವುದು ಸೇರಿದಂತೆ ಭಾರತದ ವಿದೇಶಾಂಗ ಹಾಗೂ ಆರ್ಥಿಕ ಧೋರಣೆಗಳ ಬಗ್ಗೆ ಅಮೆರಿಕ ನಿರ್ದೇಶನ ನೀಡುವಂತಾಗಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೊರಡಿಸಿರುವ ಕಾರ್ಯಕಾರಿ ಆದೇಶವು ಈ ನಿರ್ದೇಶನಗಳ ಅನುಷ್ಠಾನಕ್ಕೆ ವ್ಯವಸ್ಥೆ ಮಾಡಿದ್ದು, ಉಲ್ಲಂಘನೆಯಾದರೆ ಸುಂಕ ಹೇರುವ ಬೆದರಿಕೆಯನ್ನು ಒಡ್ಡಲಾಗಿದೆ. ಇದು ಬಿಜೆಪಿ ನೇತೃತ್ವದ ಸರಕಾರದ ಲಜ್ಜಾಸ್ಪದ ಶರಣಾಗತಿಯಾಗಿದೆ ಎಂದು ಆರೋಪಿಸಿದ್ದಾರೆ. ಈ ವ್ಯಾಪಾರ ಒಪ್ಪಂದದ ಸಂಪೂರ್ಣ ವಿವರಗಳನ್ನು ತಕ್ಷಣವೇ ಸಂಸತ್ತಿನ ಮುಂದೆ ಮಂಡಿಸಿ ಸಾರ್ವಜನಿಕಗೊಳಿಸಬೇಕು, ಭಾರತೀಯ ಕಾರ್ಮಿಕರು, ರೈತರು ಹಾಗೂ ಸಾಮಾನ್ಯ ಜನರ ಹಿತಾಸಕ್ತಿಗಳಿಗೆ ಧಕ್ಕೆಯಾಗುವ ಯಾವುದೇ ಒಪ್ಪಂದಕ್ಕೆ ಸಹಿ ಹಾಕುವುದನ್ನು ಕೇಂದ್ರ ಸರ್ಕಾರ ತಕ್ಷಣವೇ ಕೈಬಿಡಬೇಕು ಎಂದು ಆಗ್ರಹಿಸಿದ್ದಾರೆ.
ಮಲೇಷ್ಯಾ ಜೊತೆ ಭಾರತದ ಭರ್ಜರಿ ವ್ಯಾಪಾರ ಒಪ್ಪಂದ, ಯಾವ ಯಾವ ಕ್ಷೇತ್ರದಲ್ಲಿ ಬಂಪರ್ ತಿಳಿಯಿರಿ | India And Malaysia
ಭಾರತ ಇದೀಗ ಜಗತ್ತಿನ ಬಹುತೇಕ ಎಲ್ಲಾ ದೊಡ್ಡ ದೊಡ್ಡ ದೇಶಗಳ ಜೊತೆಗೆ ಒಪ್ಪಂದ ಮಾಡುತ್ತಾ, ವ್ಯಾಪಾರ ಕ್ಷೇತ್ರದಲ್ಲಿ ದೊಡ್ಡ ಸಾಧನೆ ಮಾಡಲು ಮುಂದೆ ನುಗ್ಗುತ್ತಿದೆ. ಹೀಗಿದ್ದಾಗ ಯುರೋಪ್ ಸೇರಿ ಅಮೆರಿಕ ಜೊತೆಗೂ ಭಾರತ ಈಗಾಗಲೇ ಮಹತ್ವದ ಒಪ್ಪಂದಗಳಿಗೆ ಸಹಿ ಹಾಕಿದೆ. ಭವಿಷ್ಯದ ದೃಷ್ಟಿ ಇಟ್ಟುಕೊಂಡು ನೋಡುವುದಾದರೆ ಭಾರತ ಇದೀಗ ಮಾಡಿಕೊಳ್ಳುತ್ತಿರುವ ಒಪ್ಪಂದಗಳು ಭಾರಿ ಲಾಭ ತಂದುಕೊಡಲಿವೆ. ಇಂತಹ
ಅಪಘಾತದಲ್ಲಿ ಮೃತಪಟ್ಟ ಪತ್ನಿ, ಮಗುವಿನ ಮೃತದೇಹವನ್ನು ಶವಾಗಾರದಲ್ಲಿರಿಸಿ ಎಸ್ಐಆರ್ ವಿಚಾರಣೆಗೆ ಹಾಜರಾದ ಪತಿ!
ಕೋಲ್ಕತಾ: ರಸ್ತೆ ಅಪಘಾತದಲ್ಲಿ ಮೃತಪಟ್ಟ ಪತ್ನಿ ಹಾಗೂ ಮಗುವಿನ ಮೃತದೇಹವನ್ನು ಶವಾಗಾರದಲ್ಲಿರಿಸಿ ಪತಿ ವಿಶೇಷ ತೀವ್ರ ಪರಿಷ್ಕರಣೆ (ಎಸ್ಐಆರ್)ಯ ವಿಚಾರಣೆಗೆ ಹಾಜರಾದ ಘಟನೆ ಮಾಲ್ಡಾದಲ್ಲಿ ಶುಕ್ರವಾರ ನಡೆದಿದೆ. ಈ ಘಟನೆ ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆಯ ಕುರಿತು ಮತ್ತೊಮ್ಮೆ ವಿವಾದ ಹಾಗೂ ಚರ್ಚೆಗೆ ಕಾರಣವಾಗಿದೆ. ಪಶ್ಚಿಮ ಬಂಗಾಳದಲ್ಲಿ ಮತದಾರರ ಪಟ್ಟಿಯ ಪರಿಷ್ಕರಣೆಯ ವಿಚಾರಣೆಯ ಹಂತದ ನಿಗದಿತ ಮುಕ್ತಾಯಕ್ಕೆ ಒಂದು ದಿನಕ್ಕಿಂತ ಮುನ್ನ ಈ ಘಟನೆ ಸಂಭವಿಸಿದೆ. ಶಿಕ್ಷಕ ಮುಹಮ್ಮದ್ ಯಾಸಿನ್ ಅನ್ಸಾರಿ ತನ್ನ ಪತ್ನಿ ಹಲೀಮಾ ಖಾತುನ್ ಹಾಗೂ ಅವರ 9 ತಿಂಗಳ ಮಗುವಿನೊಂದಿಗೆ ಎಸ್ಐಆರ್ ವಿಚಾರಣಾ ಕೇಂದ್ರಕ್ಕೆ ತಲುಪಲು ರಿಕ್ಷಾದಲ್ಲಿ ಬಸ್ ಸ್ಟ್ಯಾಂಡ್ ಗೆ ತೆರಳುತ್ತಿದ್ದರು. ಈ ಸಂದರ್ಭ ಅವರು ಪ್ರಯಾಣಿಸುತ್ತಿದ್ದ ರಿಕ್ಷಾ ಮಗುಚಿ ಅಪಘಾತ ಸಂಭವಿಸಿದೆ. ಹಲೀಮಾ ಖಾತುನ್ ಸ್ಥಳದಲ್ಲೇ ಮೃತಪಟ್ಟರು. ಗಂಭೀರ ಗಾಯಗೊಂಡಿದ್ದ ಮಗು ಆಸ್ಪತ್ರೆಯಲ್ಲಿ ಮೃತಪಟ್ಟಿತು ಎಂದು ಅವರ ಭಾವ ಅಬ್ದುರ್ ರೆಹ್ಮಾನ್ ಅನ್ಸಾರಿ ತಿಳಿಸಿದ್ದಾರೆ. ಅರ್ಜಿಗಳಲ್ಲಿ ವ್ಯತ್ಯಾಸ ಇದ್ದುದರಿಂದ ಮುಹಮ್ಮದ್ ಯಾಸಿನ್ ಅನ್ಸಾರಿ ಹಾಗೂ ಹಲೀಮಾ ಖಾತುನ್ ಗೆ ಸಮನ್ಸ್ ನೀಡಲಾಗಿತ್ತು. ‘‘ನಾವು ಎಸ್ಐಆರ್ ವಿಚಾರಣೆಗಾಗಿ ಹೋಗಿದ್ದೆವು. ಇಲ್ಲದೆ ಇದ್ದರೆ ಹೋಗುತ್ತಿರಲಿಲ್ಲ’’ ಎಂದು ಮುಹಮ್ಮದ್ ಯಾಸಿನ್ ಅನ್ಸಾರಿ ತಿಳಿಸಿದ್ದಾರೆ. ಘಟನೆ ಕುರಿತಂತೆ ರಾಜ್ಯದ ಆಡಳಿತಾರೂಢ ಟಿಎಂಸಿ ಚುನಾವಣಾ ಆಯೋಗ ಹಾಗೂ ಬಿಜೆಪಿ ನೇತೃತ್ವದ ಕೇಂದ್ರ ಸರಕಾರವನ್ನು ತರಾಟೆಗೆ ತೆಗೆದುಕೊಂಡಿದೆ. ಮಾಲ್ಡಾ ಜಿಲ್ಲೆಯ ಯುವ ತೃಣಮೂಲ ಕಾಂಗ್ರೆಸ್ ನ ಅಧ್ಯಕ್ಷ ಪ್ರಸನ್ಜಿತ್ ದಾಸ್, ಬಿಜೆಪಿಗಾಗಿ ಚುನಾವಣಾ ಆಯೋಗ ಜನರಿಗೆ ತೊಂದರೆ ನೀಡುತ್ತಿರುವುದನ್ನು ಹಾಗೂ ಜೀವಗಳನ್ನು ಬಲಿ ತೆಗೆದುಕೊಳ್ಳುತ್ತಿರುವುದನ್ನು ನಾವು ಬಲವಾಗಿ ಖಂಡಿಸುತ್ತೇವೆ ಎಂದಿದ್ದಾರೆ. ಈ ನಡುವೆ ಬಿಜೆಪಿಯ ಸ್ಥಳೀಯ ವಕ್ತಾರ ಅಮ್ಲಾನ್ ಭಾದುರಿ, ಪಶ್ಚಿಮ ಬಂಗಾಳದಲ್ಲಿ ಸಂಭವಿಸುವ ಸಾವುಗಳನ್ನು ಟಿಎಂಸಿ ರಾಜಕೀಯಗೊಳಿಸುತ್ತಿದೆ ಎಂದು ಹೇಳಿದ್ದಾರೆ.
ಬಳ್ಳಾರಿ| ತೆಕ್ಕಲಕೋಟೆ ಬಳಿ ಉತ್ಖನನ ವೇಳೆ 5 ಸಾವಿರ ವರ್ಷ ಹಳೆಯ ಅಸ್ಥಿಪಂಜರಗಳು ಪತ್ತೆ
ತೆಕ್ಕಲಕೋಟೆ : ಜಿಲ್ಲೆಯ ಸಿರಗುಪ್ಪ ತಾಲೂಕಿನ ತೆಕ್ಕಲಕೋಟೆ ಪಟ್ಟಣದ ಗೌಡ್ರ ಮೂಲೆ ಬೆಟ್ಟದಲ್ಲಿ ನಡೆಯುತ್ತಿರುವ ಉತ್ಖನನದ ವೇಳೆ ಐತಿಹಾಸಿಕ ಎರಡು ಮಾನವ ಅಸ್ಥಿಪಂಜರಗಳು ಪತ್ತೆಯಾಗಿವೆ. ಅಮೆರಿಕಾದ ಹಾರ್ಟ್ವಿಕ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕಿ ಹಾಗೂ ಉತ್ಖನನ ತಂಡದ ಸಹ ನಿರ್ದೇಶಕಿ ನಮಿತಾ ಎಸ್. ಸುಗಂಧಿ ನೇತೃತ್ವದ ಸಂಶೋಧಕರ ತಂಡ ಈ ಉತ್ಖನನ ಕಾರ್ಯವನ್ನು ನಡೆಸುತ್ತಿದೆ. ಕಳೆದ ವಾರ ಮಣ್ಣನ್ನು ಅಗೆದಾಗ ಮೊದಲು ಮಾನವ ಮೂಳೆಗಳು ಪತ್ತೆಯಾಗಿದ್ದು, ನಂತರ ಮತ್ತಷ್ಟು ಆಳವಾಗಿ ಅಗೆದಾಗ ಸುಮಾರು 5.5 ಅಡಿ ಉದ್ದದ ಎರಡು ಸಂಪೂರ್ಣ ಮಾನವ ಅಸ್ಥಿಪಂಜರಗಳು ಒಂದರ ಪಕ್ಕದಲ್ಲೊಂದು ಪತ್ತೆಯಾಗಿವೆ. ಅಸ್ಥಿಪಂಜರಗಳು ಯಾವುದೇ ರೀತಿಯಲ್ಲಿ ಹಾಳಾಗದೆ ಉತ್ತಮ ಸ್ಥಿತಿಯಲ್ಲಿ ದೊರೆತಿದ್ದು, ಮೃತದೇಹಗಳ ಮೇಲೆ ಕಲ್ಲುಗಳನ್ನು ಇಟ್ಟು ಶವಸಂಸ್ಕಾರ ಮಾಡಿದ ಪದ್ಧತಿಯ ಸ್ಪಷ್ಟ ಕುರುಹುಗಳು ಕಂಡುಬಂದಿವೆ. ಅವಶೇಷಗಳ ಸುತ್ತ ಮಡಿಕೆ ಚೂರುಗಳು, ಸೂಕ್ಷ್ಮ ಶಿಲಾಯುಗದ ಅವಶೇಷಗಳು ಹಾಗೂ ಮಾನವ ಆಯುಧ ಬಳಕೆಗೆ ಸಂಬಂಧಿಸಿದ ಸಾಕ್ಷ್ಯಗಳು ಪತ್ತೆಯಾಗಿವೆ. ಇದರಿಂದ ಇದು ನವಶಿಲಾಯುಗ ಅಥವಾ ಪ್ರಾಗೈತಿಹಾಸಿಕ ಕಾಲದ ಪ್ರಮುಖ ಮಾನವ ನೆಲೆ ಆಗಿರಬಹುದೆಂದು ತಜ್ಞರು ಅಂದಾಜಿಸಿದ್ದಾರೆ. ಪತ್ತೆಯಾದ ಅಸ್ಥಿಪಂಜರಗಳು ಸುಮಾರು 3,000 ರಿಂದ 5,000 ವರ್ಷಗಳ ಹಿಂದಿನವು ಆಗಿರಬಹುದೆಂದು ಹೇಳಲಾಗಿದ್ದು, ನಿಖರ ಕಾಲಮಾನದ ನಿರ್ಧಾರಕ್ಕಾಗಿ ಕಾರ್ಬನ್ ಡೇಟಿಂಗ್ ಪರೀಕ್ಷೆಗೆ ಒಳಪಡಿಸಲು ಅಧಿಕಾರಿಗಳು ನಿರ್ಧರಿಸಿದ್ದಾರೆ. ಉತ್ಖನನ ಕಾರ್ಯದ ನಿರ್ದೇಶಕರಾದ ಪರಂಪರೆ ಇಲಾಖೆ ಉಪ ನಿರ್ದೇಶಕ ಆರ್. ಶೇಜೇಶ್ವರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ತೆಕ್ಕಲಕೋಟೆ ಪ್ರದೇಶವನ್ನು ಸಂರಕ್ಷಿಸುವ ಅಗತ್ಯವಿದೆ ಎಂದು ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ. ಪ್ರೊ. ನಮಿತಾ ಎಸ್ ಸುಗಂಧಿ: ಅಮೆರಿಕದ ಹಾಟ್೯ ವಿಕ್ ವಿಶ್ವವಿದ್ಯಾಲಯ ಪ್ರೊ. ನಮಿತಾ ಎಸ್ ಸುಗಂಧಿ, 2019ರಲ್ಲಿ ಮೊದಲ ಬಾರಿಗೆ ತೆಕ್ಕಲಕೋಟೆಗೆ ಉತ್ಖನನಕ್ಕೆ ಬಂದಿದ್ದರು. ನಂತರ 2025 ರಲ್ಲಿ ಸಂಶೋಧನಾ ಪ್ರಬಂಧ ಸಿದ್ದಪಡಿಸಲು ಎರಡನೇ ಸಲ ಭೇಟಿ ನೀಡಿದ್ದರು. ಜೊತೆಗೆ Man and Environment – Tekkalakote ಪ್ರಬಂಧ ಮಂಡನೆಯನ್ನೂ ಮಾಡಿದ್ದರು. ಪ್ರಸ್ತುತವಾಗಿ ಮೂರನೇ ಬಾರಿ ಭೇಟಿ ನೀಡಿರುವ ನಮಿತಾ, ಉತ್ಖನನ ಕಾರ್ಯದಲ್ಲಿ ನಿರತರಾಗಿದ್ದಾರೆ. ಯಾಕೆ ಇದೇ ಸ್ಥಳ ಆಯ್ಕೆ ಮಾಡಿದರು? ಮೈಸೂರು ಪ್ರಾಶ್ಚವಸ್ತು ಇಲಾಖೆಯ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದ್ದ ಎಮ್ ಎಸ್ ನಾಗರಾಜ ರಾವ್, 1964 ರಲ್ಲಿ ಉತ್ಖನನ ಮಾಡಿ ತೆಕ್ಕಲಕೋಟೆ ಇತಿಹಾಸವನ್ನು ಜಗತ್ತಿಗೆ ತಿಳಿಯಪಡಿಸಿದ್ದರು. ಈ ಬಗ್ಗೆ ಪುಸ್ತಕದಲ್ಲಿ ವಿವರಣೆಯನ್ನೂ ನೀಡಿದ್ದಾರೆ. ಈ ಪುಸ್ತಕ ಓದಿದ ನಮಿತಾ ಎಸ್ ಸುಗಂಧಿ, ಕುತೂಹಲದಿಂದ ಸಂಶೋಧನೆಗೆ ತೆಕ್ಕಲಕೋಟೆಯನ್ನು ಆಯ್ಕೆ ಮಾಡಿಕೊಂಡಿದ್ದಾರೆ.
ಭತ್ತದ ಕೃಷಿ ಸಾಧಕಿ ಬೆಳುವಾಯಿಯ ಪ್ರೇಮಾ ಹೆಗ್ಡೆ ಮಾಲಾಡಿಬೀಡುಗೆ ಪ್ರಥಮ ಸ್ಥಾನ
ಮೂಡುಬಿದಿರೆ: 2022-23ನೆ ಸಾಲಿನಲ್ಲಿ ಕೃಷಿ ಪ್ರಶಸ್ತಿ ಕಾರ್ಯಕ್ರಮದಡಿ ಭತ್ತ( ಮುಂಗಾರು- ಮಳೆಯಾಶ್ರಿತ)ದಲ್ಲಿ ಮಹಿಳಾ ವಿಭಾಗದಲ್ಲಿ ಮೂಡುಬಿದಿರೆ ಬೆಳುವಾಯಿಯ ಪ್ರೇಮಾ ಹೆಗ್ಡೆ ಮಾಲಾಡಿಬೀಡು ಅವರು ರಾಜ್ಯಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ. ಅವರನ್ನು ರೂ.1.25 ಲಕ್ಷ ನಗದು ಸಹಿತ ಗೌರವಿಸಲಾಯಿತು. ಬೆಂಗಳೂರಿನಲ್ಲಿ ನಡೆದ ಅಂತಾರಾಷ್ಟ್ರೀಯ ವಾಣಿಜ್ಯ ಮೇಳ ಹಾಗೂ ಉತ್ಪಾದನೋತ್ತರ ಕೃಷಿ,- ಸಶಕ್ತೀಕರಣ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದ ರಾಮಯ್ಯ ಪ್ರಶಸ್ತಿ ಪ್ರದಾನ ಮಾಡಿದರು.
ರಾಯಚೂರು| ಹಟ್ಟಿ ಪಟ್ಟಣಕ್ಕೆ ಡಿಪೋ ಮಂಜೂರು ಮಾಡುವಂತೆ ಡಿಸಿಎಂ ಡಿ.ಕೆ ಶಿವಕುಮಾರ್ಗೆ ಮನವಿ
ರಾಯಚೂರು: ಲಿಂಗಸುಗೂರು ತಾಲೂಕಿನ ಹಟ್ಟಿ ಪಟ್ಟಣಕ್ಕೆ ಬಸ್ ಡಿಪೋ ಮಂಜೂರು ಮಾಡಬೇಕು ಎಂದು ಒತ್ತಾಯಿಸಿ ಹಟ್ಟಿ ಪಟ್ಟಣ ನಾಗರಿಕ ಸಮಿತಿಯಿಂದ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರಿಗೆ ಮನವಿ ಸಲ್ಲಿಸಲಾಯಿತು. ದೇಶದಲ್ಲಿಯೇ ಏಕೈಕ ಚಿನ್ನದ ಗಣಿಯನ್ನು ಹೊಂದಿದ ಹಟ್ಟಿ ಪಟ್ಟಣವು ರಾಯಚೂರು ಜಿಲ್ಲೆಯಲ್ಲಿ ಜನಸಂಖ್ಯೆಯಲ್ಲಿ ನಾಲ್ಕನೇ ಸ್ಥಾನ ಹೊಂದಿದೆ. ಸರಕಾರಿ ಹಾಗೂ ಖಾಸಗಿ ಸೇರಿದಂತೆ ಒಟ್ಟು 22 ಪ್ರಾಥಮಿಕ ಶಾಲೆಗಳು, 12 ಪ್ರೌಢಶಾಲೆಗಳು, 3 ಪದವಿ ಪೂರ್ವ ಕಾಲೇಜು, 2 ಪದವಿ ಕಾಲೇಜು, 1 ಕೇಂದ್ರೀಯ ವಿದ್ಯಾಲಯ, 2 ಐಟಿಐ ಕಾಲೇಜುಗಳಿವೆ. ಹಟ್ಟಿ ಪಟ್ಟಣವು ಲಿಂಗಸುಗೂರು ತಾಲೂಕಿನಲ್ಲೇ ಅತ್ಯಂತ ದೊಡ್ಡ ಪಟ್ಟಣವಾಗಿದೆ. 2011ರ ಜನಗಣತಿಯ ಪ್ರಕಾರ ಹಟ್ಟಿ ಪಟ್ಟಣದ ಜನಸಂಖ್ಯೆ 29814, ಇದು ಜಿಲ್ಲೆಯ ನಾಲ್ಕನೇಯ ಅತಿಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ಪಟ್ಟಣವಾಗಿದೆ. ಹಟ್ಟಿ ಪಟ್ಟಣವು ಸುತ್ತಲಿನ 40 ಹಳ್ಳಿಗಳಿಗೆ ಕೇಂದ್ರ ಸ್ಥಾನವಾಗಿದ್ದು, ಶಿಕ್ಷಣ, ವ್ಯಾಪಾರ ವಹಿವಾಟು, ಬ್ಯಾಂಕ್ ಕೆಲಸಗಳು, ವಾರದ ಸಂತೆ (ವಾರದಲ್ಲಿ ಎರಡು ದಿನ ಸಂತೆ ನಡೆಯುತ್ತದೆ) ಹೀಗೆ ಹಟ್ಟಿ ಪಟ್ಟಣವನ್ನೇ ಸುತ್ತಲಿನ ಹಳ್ಳಿಗಳ ಜನರು ಅವಲಂಬಿಸಿದ್ದಾರೆ. ಹಟ್ಟಿ ಚಿನ್ನದ ಗಣಿಯು ಭಾರತದ ಏಕೈಕ ಚಿನ್ನದ ಗಣಿಯಾಗಿರುವುದರಿಂದ ರಾಜ್ಯದ 31 ಜಿಲ್ಲೆಗಳ ಜನರು ಹಾಗೂ ನಾಲ್ಕಾರು ರಾಜ್ಯದ ಜನರು ಹಟ್ಟಿಯಲ್ಲಿ ವಾಸಿಸುತ್ತಿದ್ದಾರೆ. ಹಟ್ಟಿಯಿಂದ ಬೇರೆ ಬೇರೆ ಊರುಗಳಿಗೆ ಸಂಚರಿಸಲು ಬಸ್ಸುಗಳಿರುವುದಿಲ್ಲ. ಹಟ್ಟಿ ಪಟ್ಟಣಕ್ಕೆ ಲಿಂಗಸಗೂರು ಡಿಪೋದಿಂದ ಸರಿಯಾದ ಸಮಯಕ್ಕೆ ಬಸ್ಸುಗಳು ಬರುತ್ತಿಲ್ಲ. ಹಟ್ಟಿ ಪಟ್ಟಣಕ್ಕೆ ಅಂತರರಾಜ್ಯ ಮತ್ತು ಅಂತರ ಜಿಲ್ಲಾ ಬಸ್ಸುಗಳ ಬೇಡಿಕೆ ಇದ್ದು ಹಾಗೂ ಹೊಸ ಬಸ್ ಡಿಪೋ ಮಂಜೂರು ಮಾಡುವಂತೆ ಸುಮಾರು 30 ವರ್ಷಗಳಿಂದ ವಿವಿಧ ಸಂಘಟನೆಗಳಿಂದ ಹಲವಾರು ಹೋರಾಟಗಳು, ಧರಣಿ ಸತ್ಯಾಗ್ರಹ ಚಳುವಳಿಗಳು ಮಾಡುತ್ತಾ ಬರಲಾಗಿದೆ. ಆದರೆ ಇಲ್ಲಿಯವರೆಗೆ ಯಾವುದೇ ಪ್ರಯೋಜನವಾಗಿಲ್ಲ ಎಂದು ದೂರಿದರು. ಈ ವೇಳೆ ನಾಗರಿಕ ಸಮಿತಿಯ ಅಧ್ಯಕ್ಷ ಸುರೇಶ್ ಗೌಡ ಗುರಿಕಾರ್, ಪ್ರಧಾನ ಕಾರ್ಯದರ್ಶಿ ವೆಂಕಟೇಶ್ ಹಾಗೂ ಉಪಾಧ್ಯಕ್ಷ ದಯಾನಂದ ಉಪಸ್ಥಿತರಿದ್ದರು.
ಪೌರತ್ವದ ಹೆಸರಿನಲ್ಲಿ ಪ್ರತ್ಯೇಕತೆಗೆ ಅವಕಾಶ ಕಲ್ಪಿಸಲು ಬಿಡಬಾರದು: ಕೇರಳ ಸಿಎಂ ಪಿಣರಾಯಿ ವಿಜಯನ್
► ಸಮಸ್ತ ಶತಾಬ್ದಿ ಅಂತಾರಾಷ್ಟ್ರೀಯ ಮಹಾ ಸಮ್ಮೇಳನಕ್ಕೆ ತೆರೆ► ಕುನಿಯಕ್ಕೆ ಹರಿದುಬಂದ ಜನಸಾಗರ
25ಕ್ಕೂ ಅಧಿಕ ಮಂದಿಗೆ ಒಂದೇ ಮಹಡಿ ಮಾರಾಟ: ಗುರುಗ್ರಾಮದ ರಿಯಲ್ ಎಸ್ಟೇಟ್ ಉದ್ಯಮಿಯ ಬಂಧನ
ಗುರುಗ್ರಾಮ: ಕಟ್ಟಡದ ಒಂದೇ ಮಹಡಿಯನ್ನು 25ಕ್ಕೂ ಅಧಿಕ ಮಂದಿಗೆ ಮಾರಾಟ ಮಾಡುವ ಮೂಲಕ 500 ಕೋಟಿ ರೂ. ವಂಚನೆ ನಡೆಸಿದ ಆರೋಪದಲ್ಲಿ ಇಲ್ಲಿನ ರಿಯಲ್ ಎಸ್ಟೇಟ್ ಉದ್ಯಮಿ ಹಾಗೂ 32 ಮೈಲ್ಸ್ಟೋನ್ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಧ್ರುವ ದತ್ತ್ ಶರ್ಮಾನನ್ನು ಬಂಧಿಸಲಾಗಿದೆ. ಶುಕ್ರವಾರ ಬಂಧಿತರಾದ ದ್ರುವದತ್ತ್ ನನ್ನು ಗುರುಗ್ರಾಮ ಪೊಲೀಸರು ನಗರದ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಆರು ದಿನಗಳ ಪೊಲೀಸ್ ಕಸ್ಟಡಿ ವಿಧಿಸಲಾಗಿದೆ. ಕಟ್ಟಡವೊಂದರ ಒಂದೇ ಮಹಡಿಯನ್ನು ನೀಡುವುದಾಗಿ ಹೇಳಿಕೊಂಡು 25ಕ್ಕೂ ಅಧಿಕ ಮಂದಿಯಿಂದ ಒಟ್ಟು 500 ಕೋಟಿ ರೂ. ಅಧಿಕ ಹಣವನ್ನು ವಂಚಿಸಿದ್ದಾನೆಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ. ಟ್ರಾಮ್ವೆಂಚರ್ಸ್ ಪ್ರೈವೇಟ್ ಲಿಮಿಟೆಡ್ ನ ಪ್ರತಿನಿಧಿಯೊಬ್ಬರು ಈಗ 32 ಮೈಲ್ಸ್ಟೋನ್ ವಿಸ್ತಾಸ್ ಪ್ರೈವೇಟ್ ಲಿಮಿಟೆಡ್ ಎಂದು ಮರುನಾಮಕರಣಗೊಂಡಿರುವ ಆ್ಯಪ್ರಾ ಮೋಟೆಲ್ಸ್ ವಿರುದ್ಧ ದೂರು ನೀಡಿದ್ದರು. 2021ರಲ್ಲಿ 32 ಮೈಲ್ಸ್ಟೋನ್ ವಿಸ್ತಾಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ನಿರ್ದೇಶಕರು ಟ್ರಾಮ್ವೆಂಚರ್ಸ್ ಸಂಸ್ಥೆಯನ್ನು ಸಂಪರ್ಕಿಸಿ, ಗುರುಗ್ರಾಮ್ ನ 32 ಮೈಲ್ಸ್ಟೋನ್ ಸಂಕೀರ್ಣದಲ್ಲಿರುವ 3 ಸಾವಿರ ಚದರ ಅಡಿಯ ಮೊದಲ ಅಂತಸ್ತನ್ನು ಮಾರಾಟ ಮಾಡುವ ಕೊಡುಗೆ ನೀಡಿದ್ದರು. 2.5 ಕೋಟಿ ರೂ.ಗೆ ಈ ಡೀಲ್ ಕುದುರಿದ್ದು, ಸೆ.21ರಂದು ಮೊತ್ತವನ್ನು ಪಾವತಿಸಲಾಗಿತ್ತು. ಆದರೆ ಒಡೆತನಕ್ಕೆ ಸಂಬಂಧಪಟ್ಟ ಅಗತ್ಯ ದಾಖಲೆಗಳನ್ನು ಅವರು ಪಡೆಯದೆ ಇದ್ದಾಗ, ಟ್ರಾಮ್ ವೆಂಚರ್ಸ್ ದೂರು ನೀಡಿತ್ತು. ಆನಂತರ ಪೊಲೀಸರು ತನಿಖೆ ನಡೆಸಿದಾಗ 2022 ಹಾಗೂ 2023ರ ನಡುವೆ ಒಂದೇ ಮಹಡಿಯ ಮಾಲಕತ್ವದ ಕುರಿತ ಪ್ರಮುಖ ದಾಖಲೆಗಳ್ನು ಇತರ 25 ಮಂದಿಗೆ ನೀಡಿರುವುದು ಬೆಳಕಿಗೆ ಬಂದಿತ್ತು. ಪ್ರಕರಣಕ್ಕೆ ಸಂಬಂಧಿಸಿ ಆರ್ಥಿಕ ಅಪರಾಧದಳವು ತನಿಖೆ ನಡೆಸಿದ ಬಳಿಕ ಧ್ರುವದತ್ತ್ ಶರ್ಮಾನನ್ನು ಶನಿವಾರ ಬಂಧಿಸಲಾಯಿತೆಂದು ಪೊಲೀಸರು ತಿಳಿಸಿದ್ದಾರೆ.
ಭಾರೀ ಉದ್ಯೋಗ ಕಡಿತದ ಬೆನ್ನಲ್ಲೇ ವಾಷಿಂಗ್ಟನ್ ಪೋಸ್ಟ್ ಸಿಇಒ ಹುದ್ದೆಗೆ ಲೂಯಿಸ್ ರಾಜೀನಾಮೆ
ವಾಷಿಂಗ್ಟನ್: ಭಾರೀ ಉದ್ಯೋಗ ಕಡಿತದ ಕ್ರಮ ಕೈಗೊಂಡ ಕೆಲ ದಿನಗಳ ಬಳಿಕ ವಿಲ್ ಲೂಯಿಸ್ ʼವಾಷಿಂಗ್ಟನ್ ಪೋಸ್ಟ್' ಸುದ್ದಿಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಇಒ) ಮತ್ತು ಪ್ರಕಾಶಕ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದಾರೆ. 2023ರಲ್ಲಿ ಹುದ್ದೆಗೆ ನೇಮಕಗೊಂಡಿದ್ದ ಲೂಯಿಸ್ ತಮ್ಮ ರಾಜೀನಾಮೆ ಪತ್ರವನ್ನು ಫೆಬ್ರವರಿ 7ರಂದು ಇ-ಮೇಲ್ ಮೂಲಕ ರವಾನಿಸಿದ್ದು ಎರಡು ವರ್ಷಗಳ ಸಾಂಸ್ಥಿಕ ರೂಪಾಂತರದ ನಂತರ ಇದು ಹುದ್ದೆಯಿಂದ ನಿರ್ಗಮಿಸಲು ಸೂಕ್ತ ಸಮಯವಾಗಿದೆ ಎಂದು ಉಲ್ಲೇಖಿಸಿರುವುದಾಗಿ ವರದಿಯಾಗಿದೆ. ಉದ್ಯೋಗ ಕಡಿತದಿಂದ 300ಕ್ಕೂ ಹೆಚ್ಚು ಪತ್ರಕರ್ತರು ಕೆಲಸ ಕಳೆದುಕೊಂಡಿರುವ ಬಗ್ಗೆ ವ್ಯಾಪಕ ಟೀಕೆ, ಖಂಡನೆ ವ್ಯಕ್ತವಾಗಿತ್ತು.
ಒಬಾಮಾರನ್ನು ಕೋತಿಗಳಂತೆ ತೋರಿಸಿದ ವೀಡಿಯೊಗೆ ಟ್ರಂಪ್ ಖಂಡನೆ; ಕ್ಷಮೆ ಯಾಚಿಸಲು ನಕಾರ
ವಾಷಿಂಗ್ಟನ್: ತನ್ನ ಸಾಮಾಜಿಕ ಮಾಧ್ಯಮದಲ್ಲಿ ಶೇರ್ ಮಾಡಲಾದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಮತ್ತವರ ಪತ್ನಿ ಮಿಷೆಲ್ ಒಬಾಮಾರನ್ನು ಕೋತಿಗಳಂತೆ ತೋರಿಸುವ ವೀಡಿಯೊವನ್ನು ಖಂಡಿಸುವುದಾಗಿ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದು, ಆದರೆ ಈ ಬಗ್ಗೆ ಕ್ಷಮೆ ಯಾಚಿಸಲು ನಿರಾಕರಿಸಿದ್ದಾರೆ. ಟ್ರಂಪ್ ಅವರ `ಟ್ರುಥ್ ಸೋಷಿಯಲ್' ಸಾಮಾಜಿಕ ಮಾಧ್ಯಮದಲ್ಲಿ ಶೇರ್ ಮಾಡಿಕೊಳ್ಳಲಾದ ವೀಡಿಯೊವನ್ನು ಸುಮಾರು 12 ಗಂಟೆಗಳ ಬಳಿಕ ಹಿಂಪಡೆಯಲಾಗಿತ್ತು. ಈ ವೀಡಿಯೊವನ್ನು ಖಂಡಿಸುತ್ತೀರಾ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಟ್ರಂಪ್, ಖಂಡಿತಾ. ಆದರೆ ಈ ವೀಡಿಯೊವನ್ನು ಸಂಪೂರ್ಣ ನೋಡದೆ ಶೇರ್ ಮಾಡಿಕೊಳ್ಳಲಾಗಿದೆ. ವೀಡಿಯೊದ ಆರಂಭದಲ್ಲಿ 2020ರ ಚುನಾವಣಾ ಅಕ್ರಮದ ಬಗ್ಗೆ ಪ್ರತಿಪಾದನೆಯಿತ್ತು. ಆದ್ದರಿಂದ ಅದನ್ನು ನನ್ನ ಸಿಬ್ಬಂದಿಗೆ ಕಳುಹಿಸಿದ್ದೆ. ಸಾಮಾನ್ಯವಾಗಿ ಅವರು ಸಂಪೂರ್ಣವಾಗಿ ಪರಿಶೀಲಿಸಿದ ಬಳಿಕ ಶೇರ್ ಮಾಡುತ್ತಾರೆ. ಬಹುಷಃ ಇದನ್ನು ಪೂರ್ಣ ನೋಡದೆ ಶೇರ್ ಮಾಡಿರಬೇಕು. ವೀಡಿಯೊವನ್ನು ಖಂಡಿಸುತ್ತೇನೆ. ಆದರೆ ಇದರಲ್ಲಿ ನನ್ನದೇನೂ ತಪ್ಪಿಲ್ಲದ ಕಾರಣ ಕ್ಷಮೆ ಯಾಚಿಸುವುದಿಲ್ಲ' ಎಂದು ಹೇಳಿರುವುದಾಗಿ ವರದಿಯಾಗಿದೆ. ವೀಡಿಯೊವನ್ನು ಕಚೇರಿಯ ಸಿಬ್ಬಂದಿಯೊಬ್ಬರು ಪ್ರಮಾದದಿಂದ ಪೋಸ್ಟ್ ಮಾಡಿದ್ದು, ಇದರ ಸಂಪೂರ್ಣ ವಿಷಯವನ್ನು ಅಧ್ಯಕ್ಷರು ಗಮನಿಸಿದ ತಕ್ಷಣ ಅದನ್ನು ತೆಗೆದು ಹಾಕಲಾಗಿದೆ ಎಂದು ಶ್ವೇತಭವನದ ಅಧಿಕಾರಿಗಳು ಹೇಳಿದ್ದಾರೆ.
ಪಡುಬಿದ್ರಿ: ಖಾಸಗಿ ಬಸ್ಸೊಂದು ಢಿಕ್ಕಿ ಹೊಡೆದ ಪರಿಣಾಮ ರಸ್ತೆ ಬದಿ ನಿಂತಿದ್ದ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ರವಿವಾರ ಸಂಜೆ ಪಡುಬಿದ್ರಿ ಜಂಕ್ಷನ್ನಲ್ಲಿ ನಡೆದಿದೆ. ಮೃತರನ್ನು ಪಡುಬಿದ್ರಿ ಕಂಚಿನಡ್ಕ ನಿವಾಸಿ ಶೇಖರ್ (48) ಎಂದು ಗುರುತಿಸಲಾಗಿದೆ. ಅತಿ ವೇಗ ಅಜಾಗರೂಕತೆ ಯಿಂದ ಚಲಾಯಿಸಿಕೊಂಡು ಬಂದ ಬಸ್, ರಸ್ತೆ ಬದಿ ನಿಂತಿದ್ದ ಶೇಖರ್ ಅವರಿಗೆ ಡಿಕ್ಕಿ ಹೊಡೆಯುತ್ತೆನ್ನಲಾಗಿದೆ. ಇದರಿಂದ ರತ್ತೆಗೆ ಬಿದ್ದು ಗಂಭೀರವಾಗಿ ಗಾಯಗೊಂಡ ಅವರು ಉಡುಪಿ ಖಾಸಗಿ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮತ ಪಟ್ಟರು ಎಂದು ತಿಳಿದು ಬಂದಿದೆ ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣವು ದಾಖಲಾಗಿದೆ. ಅವಿವಾಹಿತರಾಗಿರುವ ಶೇಖರ್ ಸೆಕ್ಯೂರಿಟಿ ಗಾಡ್೯ ಕೆಲಸ ನಿರ್ವಹಿಸುತ್ತಿದ್ದರು. ಮೃತರು ತಾಯಿ, ಸಹೋದರ ಹಾಗೂ ಮೂವರು ಸಹೋದರಿಯರನ್ನು ಅಗಲಿದ್ದಾರೆ.
ಉಡುಪಿ: ಸರಕಾರಿ ಆಸ್ಪತ್ರೆಗಳ ಖಾಸಗೀಕರಣ ವಿರೋಧಿಸಿ ಆರೋಗ್ಯ ಹಕ್ಕಿನ ಜಾಥಾ
ಫೆ.10ರಂದು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ
ಸಿಬಿಸಿಐನ ಮೊದಲ ದಲಿತ ಮುಖ್ಯಸ್ಥರಾಗಿ ಹೈದರಾಬಾದ್ ಆರ್ಚ್ ಬಿಷಪ್ ಕಾರ್ಡಿನಲ್ ಪೂಲಾ ಅಂಥೋನಿ ನೇಮಕ
ಕೊಚ್ಚಿ: ಕ್ಯಾಥೋಲಿಕ್ ಬಿಷಪ್ಸ್ ಕಾನ್ಫರೆನ್ಸ್ ಆಫ್ ಇಂಡಿಯಾದ (ಸಿಬಿಸಿಐ) ಅಧ್ಯಕ್ಷರಾಗಿ ಕಾರ್ಡಿನಲ್ ಪೂಲಾ ಅಂಥೋನಿ ಅವರು ಆಯ್ಕೆಯಾಗಿದ್ದು, ದೇಶದಲ್ಲಿಯ ಕ್ಯಾಥೋಲಿಕ್ ಚರ್ಚ್ ಗಳ ಉನ್ನತ ಮಂಡಳಿಯ ಮೊದಲ ದಲಿತ ಮುಖ್ಯಸ್ಥ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಫೆ.7ರಂದು ಬೆಂಗಳೂರಿನಲ್ಲಿ ನಡೆದ ಸಿಬಿಸಿಐನ 37ನೇ ಸಾಮಾನ್ಯ ಸಭೆಯಲ್ಲಿ 64ರ ಹರೆಯದ ಕಾರ್ಡಿನಲ್ ಪೂಲಾ ಅಂಥೋನಿಯವರನ್ನು ಆಯ್ಕೆ ಮಾಡಲಾಗಿದ್ದು, ಇದು ಭಾರತದ ಸುಮಾರು ಎರಡು ಕೋಟಿ ಕ್ಯಾಥೊಲಿಕ್ ಕೈಸ್ತರಿಗೆ ಐತಿಹಾಸಿಕ ಘಳಿಗೆಯಾಗಿದೆ. ದೇಶಾದ್ಯಂತದಿಂದ ಬಿಷಪ್ ಗಳು ಧಾರ್ಮಿಕ ಸೇವೆ, ಸಾಮಾಜಿಕ ಮತ್ತು ಆಡಳಿತಾತ್ಮಕ ವಿಷಯಗಳನ್ನು ಚರ್ಚಿಸಲು ಸಭೆಯಲ್ಲಿ ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಎರಡು ವರ್ಷಗಳ ಅವಧಿಗೆ ನೂತನ ಪದಾಧಿಕಾರಿಗಳನ್ನೂ ಆಯ್ಕೆ ಮಾಡಲಾಯಿತು. ಪ್ರಥಮ ಉಪಾಧ್ಯಕ್ಷರಾಗಿ ತಿರುವನಂತಪುರದ ಆರ್ಚ್ ಬಿಷಪ್ ಥೋಮಸ್ ಮಾರ್ ಕೂರಿಲೋಸ್, ದ್ವಿತೀಯ ಉಪಾಧ್ಯಕ್ಷರಾಗಿ ಕೊಟ್ಟಾಯಂ ಆರ್ಚ್ ಬಿಷಪ್ ಮ್ಯಾಥ್ಯೂ ಮೂಲಕ್ಕಟ್ ಆಯ್ಕೆಯಾದರು. ಸಿಬಿಸಿಐನ ರಾಷ್ಟ್ರೀಯ ಉಪಕ್ರಮಗಳ ಸಂಘಟನೆಯನ್ನು ಮುಂದುವರಿಸಲು ಆರ್ಚ್ ಬಿಷಪ್ ಅನಿಲ್ ಕೌಟೊ ಅವರನ್ನು ಮಹಾ ಕಾರ್ಯದರ್ಶಿಯಾಗಿ ಪುನರಾಯ್ಕೆ ಮಾಡಲಾಗಿದೆ. ಈ ನಾಯಕತ್ವವು ಲ್ಯಾಟಿನ್, ಸೈರೋ-ಮಲಂಕರ್ ಮತ್ತು ಸೈರೋ-ಮಲಬಾರ್ ಪಂಗಡಗಳ ಪ್ರಾತಿನಿಧ್ಯದೊಂದಿಗೆ ಚರ್ಚ್ ನ ಧಾರ್ಮಿಕ ಮತ್ತು ಪೂಜಾ ವೈವಿಧ್ಯತೆಯನ್ನು ಪ್ರತಿಬಿಂಬಿಸುತ್ತದೆ, ತನ್ಮೂಲಕ ಸಿಬಿಸಿಐನ ಎಲ್ಲರನ್ನೂ ಒಳಗೊಳ್ಳುವ ಪ್ರವೃತ್ತಿಯನ್ನು ಎತ್ತಿ ತೋರಿಸಿದೆ. ನಿರ್ಗಮಿತ ಪದಾಧಿಕಾರಿಗಳಾದ ಆರ್ಚ್ ಬಿಷಪ್ ಮಾರ್ ಆ್ಯಂಡ್ರೂಸ್ ತಳಹತ್, ಆರ್ಚ್ ಬಿಷಪ್ ಜಾರ್ಜ್ ಅಂಥೋನಿಸ್ವಾಮಿ ಮತ್ತು ಬಿಷಪ್ ಜೋಸೆಫ್ ಮಾರ್ ಥೋಮಸ್ ಅವರ ನಾಯಕತ್ವವನ್ನು ಸಭೆಯು ಪ್ರಶಂಸಿಸಿತು.
ನೇತ್ರಜ್ಯೋತಿ ಕಾಲೇಜಿನಲ್ಲಿ ಫಿಸಿಯೋಥೆರಪಿ ಕ್ಲಿನಿಕ್ ಉದ್ಘಾಟನೆ
ಉಡುಪಿ: ನಗರದ ನೇತ್ರಜ್ಯೋತಿ ಕಾಲೇಜಿನಲ್ಲಿ ಫಿಸಿಯೋಥೆರಪಿ ಕ್ಲಿನಿಕ್ ಅನ್ನು ಮಣಿಪಾಲ ಕಾಲೇಜು ಆಫ್ ಹೆಲ್ತ್ ಸೈನ್ಸ್ನ ಡೀನ್ ಡಾ. ಅರುಣ್ ಮಯ್ಯ ಇವರು ದೀಪ ಬೆಳಗಿಸಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಮನುಷ್ಯನಿಗೆ ಬದುಕಿನ ಎಲ್ಲಾ ಹಂತಗಳಲ್ಲೂ ಫಿಸಿಯೋಥೆರಪಿ ಚಿಕಿತ್ಸೆಯ ಅವಶ್ಯಕತೆ ಇರುತ್ತದೆ. ಆರೋಗ್ಯ ಪೂರ್ಣ ಬದುಕಿಗೆ ಇದು ಅತ್ಯಗತ್ಯ. ನೇತ್ರ ಜ್ಯೋತಿ ಕಾಲೇಜಿನಲ್ಲಿ ಪ್ರಾರಂಭ ವಾದ ಸುಸಜ್ಜಿತ ಫಿಸಿಯೋಥೆರಪಿ ಕ್ಲಿನಿಕ್ನ ಪ್ರಯೋಜನವನ್ನು ಎಲ್ಲರು ಪಡೆಯುವಂತಾಗಬೇಕು ಎಂದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಉಜ್ವಲ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕ ಪುರುಷೋತ್ತಮ ಶೆಟ್ಟಿ ಮಾತನಾಡಿ, ಭವಿಷ್ಯದಲ್ಲಿ ನೇತ್ರ ಜ್ಯೋತಿ ಕಾಲೇಜು ಶ್ರೇಷ್ಠ ಸಂಸ್ಥೆಯಾಗಿ ಮೂಡಿ ಬರಲಿ ಎಂದು ಶುಭ ಹಾರೈಸಿ ದರು. ಮತ್ತೊಬ್ಬ ಅತಿಥಿ ಬಡಗುಬೆಟ್ಟು ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಅಧ್ಯಕ್ಷ ಇಂದ್ರಾಳಿ ಜಯಕರ ಶೆಟ್ಟಿ ಅವರು ಸಂಸ್ಥೆಗೆ ಶುಭ ಹಾರೈಸಿದರು. ಅಧ್ಯಕ್ಷತೆ ವಹಿಸಿದ್ದ ನೇತ್ರಜ್ಯೋತಿ ಕಾಲೇಜಿನ ಸಂಸ್ಥಾಪಕ ಅಧ್ಯಕ್ಷ ಡಾ. ಕೃಷ್ಣಪ್ರಸಾದ್ ಕೂಡ್ಲು ಮಾತನಾಡಿ, ವೈದ್ಯಕೀಯ ಕ್ಷೇತ್ರದಲ್ಲಿ ಪರಿಪೂರ್ಣತೆ ಪಡೆಯಲು ಅರೆ ವೈದ್ಯಕೀಯ ಸಿಬ್ಬಂದಿಗಳ ಪಾತ್ರ ಬಹಳ ಮುಖ್ಯ ಎಂದರು. ನೇತ್ರ ಜ್ಯೋತಿ ಕಾಲೇಜಿನ ಅಧ್ಯಕ್ಷೆ ರಶ್ಮಿ ಕೃಷ್ಣಪ್ರಸಾದ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕಾಲೇಜಿನ ಮುಖ್ಯ ಕಾರ್ಯ ನಿರ್ವಹಣಾ ಧಿಕಾರಿ ಡಾ. ಗೌರಿ ಪ್ರಭು ನೇತ್ರಜ್ಯೋತಿ ಫಿಸಿಯೋಥೆರಪಿ ಕ್ಲಿನಿಕ್ನಲ್ಲಿ ಸಿಗುವ ಸೌಲಭ್ಯಗಳ ಕುರಿತು ತಿಳಿಸಿದರು. ವೇದಿಕೆಯಲ್ಲಿ ನೇತ್ರಜ್ಯೋತಿ ಚಾರಿಟಬಲ್ ಟ್ರಸ್ಟ್ನ ಟ್ರಸ್ಟಿ ರಘುರಾಮ್ ರಾವ್ ಉಪಸ್ಥಿತರಿದ್ದರು. ಕಾಲೇಜಿನ ಸಂಚಾಲಕ ಮಾಧವ ಪೂಜಾರಿ ಸ್ವಾಗತಿಸಿ ಉಪನ್ಯಾಸಕಿ ಶ್ರಾವ್ಯ ವಂದಿಸಿದರು. ಉಪನ್ಯಾಸಕಿ ಶ್ರುತಿ ಕಾರ್ಯಕ್ರಮ ನಿರೂಪಿಸಿದರು.
ಉಡುಪಿ: ಚೊಚ್ಚಲ ವಿಶ್ವಕಪ್ ಗೆದ್ದ ಭಾರತದ ಅಂಧ ಮಹಿಳಾ ಕ್ರಿಕೆಟ್ ತಂಡಕ್ಕೆ ಸನ್ಮಾನ
ಉಡುಪಿ: ಕಳೆದ ನವೆಂಬರ್ ತಿಂಗಳಲ್ಲಿ ನಡೆದ ಮೊದಲ ಬಾರಿಗೆ ನಡೆದ ಅಂಧ ಮಹಿಳೆಯರ ವಿಶ್ವಕಪ್ ಕ್ರಿಕೆಟ್ ಚಾಂಪಿಯನ್ಷಿಪ್ನ್ನು ಜಯಿಸಿ ದಾಖಲೆ ಬರೆದ ಭಾರತದ ಅಂಧ ಮಹಿಳಾ ತಂಡಕ್ಕೆ ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಷನ್ (ಮಾಹೆ) ವಿವಿ ವತಿಯಿಂದ ಶನಿವಾರ ರಾತ್ರಿ ಸನ್ಮಾನಿಸಲಾಯಿತು. ಮಣಿಪಾಲದ ಫಾರ್ಚ್ಯೂನ್ ಇನ್ ವ್ಯಾಲಿವ್ಯೆನಲ್ಲಿ ನಡೆದ ಈ ವಿಶೇಷ ಸನ್ಮಾನ ಸಮಾರಂಭದಲ್ಲಿ ತಂಡದ ಸದಸ್ಯ ರನ್ನು ಸನ್ಮಾನಿಸಿ ಮಾತನಾಡಿದ ಮಾಹೆಯ ಕುಲಪತಿ ಲೆ.ಜ.(ಡಾ.)ಎಂ.ಡಿ. ವೆಂಕಟೇಶ್, ಅಂಧ ಮಹಿಳಾ ಕ್ರಿಕೆಟ್ ತಂಡದ ಅದ್ಭುತ ಕ್ರೀಡಾ ಮನೋಭಾವ ಮತ್ತು ದೃಢಸಂಕಲ್ಪಕ್ಕೆ ಸಂದ ಗೌರವವಿದು. ಕ್ರೀಡಾ ಸಾಧನೆಯು ದೈಹಿಕ ಮಿತಿಗಳಿಗೆ ಸೀಮಿತವಾಗಿಲ್ಲ, ಬದಲಾಗಿ ಅದು ಅವಕಾಶ ಮತ್ತು ಅಂತರ್ಗತವಾದ ದೃಢಸಂಕಲ್ಪವನ್ನು ಅವಲಂಬಿಸಿದೆ ಎಂಬುದನ್ನು ಆಟಗಾರರು ಸಾಬೀತುಪಡಿಸಿದ್ದಾರೆ ಎಂದರು. ಮಾಹೆಯ ಪ್ರೊ ಚಾನ್ಸಲರ್ ಡಾ. ಹೆಚ್. ಎಸ್. ಬಲ್ಲಾಳ್ ಮಾತನಾಡಿ, ವ್ಯವಸ್ಥಿತ ತರಬೇತಿಯಿಂದ ಇಂದು ಅಂಧ ಕ್ರೀಡಾಪಟುಗಳು ಅಂತಾ ರಾಷ್ಟ್ರೀಯ ಮಟ್ಟದಲ್ಲಿ ಮಿಂಚುತ್ತಿದ್ದಾರೆ. ಇವರು ಸಮಾಜದ ಸಾಂಪ್ರದಾಯಿಕ ಗ್ರಹಿಕೆಗಳನ್ನು ಮೆಟ್ಟಿ ನಿಂತು ಸಾಧನೆ ಮಾಡಿದ್ದಾರೆ ಎಂದು ಶ್ಲಾಘಿಸಿದರು. ವಿಶ್ವಕಪ್ ವಿಜೇತ ತಂಡದ ಪರವಾಗಿ ಮಾತನಾಡಿದ ಸೀಮಾದಾಸ್, ತಂಡದ ಹೆಚ್ಚಿನ ಸದಸ್ಯೆಯರು ತೀರಾ ಬಡ ಕುಟುಂಬದಿಂದ ಬಂದವರಾಗಿದ್ದು ಗೆಲ್ಲುವ ಛಲದಿಂದ ಈ ಸಾಧನೆ ಮಾಡಿದ್ದಾರೆ. ಗುರಿ ಮತ್ತು ಛಲವಿದ್ದರೆ ಯಾವ ಸಾಧನೆಯೂ ಅಸಾಧ್ಯವಲ್ಲ ಎಂಬುದನ್ನು ಇವರು ತೋರಿಸಿಕೊಟ್ಟಿದ್ದಾರೆ ಎಂದರು. ಇದೇ ಸಂದರ್ಭದಲ್ಲಿ ಅಂಧರ ಆರ್ಥಿಕ ಸಬಲೀಕರಣದ ಉದ್ದೇಶಕ್ಕಾಗಿ ಬ್ಯಾಂಕ್ ಆಫ್ ಬರೋಡಾದ ಬ್ರೈಲ್ ಲಿಪಿ ಆಧಾರಿತ ಕ್ರೆಡಿಟ್ ಕಾರ್ಡ್ನ್ನು ಅಧಿಕೃತವಾಗಿ ಬಿಡುಗಡೆ ಮಾಡಲಾಯಿತು. ಬ್ಯಾಂಕ್ ಆಫ್ ಬರೋಡಾದ ಮುಖ್ಯ ಪ್ರಧಾನ ವ್ಯವಸ್ಥಾಪಕ ರವೀಂದ್ರ ರೈ ಎಂ. ಹಾಗೂ ಮಾಹೆಯ ಸಹ ಕುಲಾಧಿಪತಿ ಡಾ. ಹೆಚ್. ಎಸ್. ಬಲ್ಲಾಳ್ ಜಂಟಿಯಾಗಿ ಕಾರ್ಡ್ನ್ನು ಬಿಡುಗಡೆ ಮಾಡಿದರು. ಈ ಸಂದರ್ಭದಲ್ಲಿ ಮಾಹೆ ಟ್ರಸ್ಟಿ ವಸಂತಿ ಆರ್. ಪೈ, ಮಾಹೆಯ ಪ್ರೋ ವೈಸ್ ಚಾನ್ಸಲರ್ಗಳಾದ ಡಾ. ನಾರಾಯಣ ಸಭಾಹಿತ್, ಡಾ.ಶರತ್ ಕೆ. ರಾವ್, ರಿಜಿಸ್ಟ್ರಾರ್ ಡಾ.ಪಿ.ಗಿರಿಧರ್ ಕಿಣಿ, ಸಿಒಒ ಡಾ.ಆನಂದ್ ವೇಣುಗೋಪಾಲ್ ಅಲ್ಲದೇ ಮಾಹೆ ಅಂಗಸಂಸ್ಥೆಗಳ ಮುಖ್ಯಸ್ಥರು ಉಪಸ್ಥಿತರಿದ್ದರು. ಅಂಗವಿಕಲರ ಸಂಸ್ಥೆ ‘ಸಮರ್ಥನಂ’ ಹಾಗೂ ಭಾರತೀಯ ಅಂಧರ ಕ್ರಿಕೆಟ್ ಅಸೋಸಿಯೇಷನ್ ಸಹಯೋಗ ದೊಂದಿಗೆ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಸಮರ್ಥನಂ ಸಂಸ್ಥೆಯ ಸಂಸ್ಥಾಪಕ ಮಹಾಂತೇಶ್ ಜಿ. ಕಿವಡಸಣ್ಣವರ್ ಹಾಗೂ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದ ಸಮಾಜ ಸೇವಕ ರಾಯನ್ ಉಪಸ್ಥಿತರಿದ್ದರು. ಎಂಸಿಎಚ್ಪಿ ಡೀನ್ ಡಾ. ಜಿ.ಅರುಣ್ ಮಯ್ಯ ಸ್ವಾಗತಿಸಿದರೆ, ಮಾಹೆ ರಿಜಿಸ್ಟ್ರಾರ್ ಡಾ.ಪಿ. ಗಿರಿಧರ್ ಕಿಣಿ ವಂದಿಸಿದರು.
ನಾವು ನಂಬಿಕೆ ಇಟ್ಟಿಕೊಂಡಿದ್ದು ಮನುಷ್ಯ ಧರ್ಮ, ಮಾನವೀಯತೆ ಧರ್ಮ: ಸಿಎಂ ಸಿದ್ದರಾಮಯ್ಯ
ಹುಬ್ಬಳ್ಳಿ ತಾಲ್ಲೂಕಿನ ಶಿರಗುಪ್ಪಿ ಗ್ರಾಮದಲ್ಲಿ ಬೆಣ್ಣೆಹಳ್ಳ ಪ್ರವಾಹ ನಿಯಂತ್ರಣ ಕಾಮಗಾರಿಗೆ ಶಂಕುಸ್ಥಾಪನೆ ಮತ್ತು ನವಲಗುಂದ ವಿಧಾನಸಭಾ ಕ್ಷೇತ್ರದ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿರುವ ಅವರು, ನವಲಗುಂದ ವಿಧಾನಸಭಾ ಕ್ಷೇತ್ರದಲ್ಲಿ ಹಲವಾರು ಅಭಿವೃದ್ಧಿ ಕೆಲಸಗಳಿಗೆ ಚಾಲನೆ ನೀಡಲಾಗಿದೆ. ಅಣ್ಣಿಗೇರಿಗೆ ಯುಜಿಡಿ ಮಾಡುವ ಕುರಿತು ಬಜೆಟ್ನಲ್ಲಿ ಚರ್ಚಿಸಲಾಗುವುದು. ಈ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ ಮಾಡಲು ಶ್ರಮಿಸಲಾಗುವುದು ಎಂದಿದ್ದಾರೆ. ಬೆಣ್ಣೆ
Humnabad | ಸೇತುವೆಗೆ ಬೈಕ್ ಢಿಕ್ಕಿ; ಒಂದೇ ಕುಟುಂಬದ ಮೂವರು ಮೃತ್ಯು
ಹುಮನಾಬಾದ್ : ರಸ್ತೆ ಬದಿಯ ಸೇತುವೆಗೆ ಬೈಕ್ ಢಿಕ್ಕಿ ಹೊಡೆದ ಪರಿಣಾಮವಾಗಿ ಒಂದೇ ಕುಟುಂಬದ ಮೂವರು ಸ್ಥಳದಲ್ಲಿಯೇ ಮೃತಪಟ್ಟ ಘಟನೆ ತಾಲೂಕಿನ ಹಳ್ಳಿಖೆಡ್ (ಬಿ) ಗ್ರಾಮದ ಹತ್ತಿರ ರವಿವಾರ ನಡೆದಿದೆ. ರಾಜೇಶ್ವರ್ ಗ್ರಾಮದ ನಿವಾಸಿಗಳಾದ ವೆಂಕಟ್ (40), ಶಿಲ್ಪಾ (35) ಹಾಗೂ ರಕ್ಷಿತಾ (12) ಮೃತಪಟ್ಟ ಬೈಕ್ ಸವಾರರಾಗಿದ್ದಾರೆ. ದಿಗಂಬರ್ (15) ಗಂಭೀರವಾಗಿ ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಬ್ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ. ಹಳ್ಳಿಖೆಡ್ (ಬಿ) ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದ್ದು, ರಾಜೇಶ್ವರ್ ಗ್ರಾಮದ ನಿವಾಸಿ ವೆಂಕಟ್ ತನ್ನ ಪತ್ನಿ ಮಕ್ಕಳ ಜೊತೆಗೆ ಬೀದರ್ ಗೆ ಹೋಗಿ ಬರುವಾಗ ಈ ಒಂದು ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ.
ಅಹಿಂದ ಸಮುದಾಯಗಳ ಜನಸಂಖ್ಯೆಗೆ ಅನುಗುಣವಾಗಿ ಬಜೆಟ್ನಲ್ಲಿ ಅನುದಾನ ಒದಗಿಸಲು ಸಿ.ಎಂ.ಇಬ್ರಾಹೀಂ ಆಗ್ರಹ
ಬೆಂಗಳೂರು : ‘ರಾಜ್ಯದಲ್ಲಿನ ಅಲ್ಪಸಂಖ್ಯಾತ, ಹಿಂದುಳಿದ ಹಾಗೂ ದಲಿತ (ಅಹಿಂದ) ಸಮುದಾಯಗಳ ಜನಸಂಖ್ಯೆಗೆ ಅನುಗುಣವಾಗಿ ಬಜೆಟ್ನಲ್ಲಿ ಅನುದಾನವನ್ನು ಮೀಡಲಿಸಬೇಕು. ಆದರೆ, ಸರಕಾರಗಳು ಸೂಕ್ತ ಅನುದಾನ ಮೀಸಲಿಡುತ್ತಿಲ್ಲ. ಹೀಗಾಗಿ ಆ ವರ್ಗದ ಜನರು ಪ್ರಶ್ನೆ ಮಾಡಬೇಕು’ ಎಂದು ಕೇಂದ್ರದ ಮಾಜಿ ಸಚಿವ ಸಿ.ಎಂ.ಇಬ್ರಾಹೀಂ ಇಂದಿಲ್ಲಿ ತಿಳಿಸಿದ್ದಾರೆ. ರವಿವಾರ ವಸಂತ ನಗರದಲ್ಲಿನ ಲಿಡ್ಕರ್ ಭವನದಲ್ಲಿ ‘ಅಹಿಂದ ಚಳುವಳಿ’ ವತಿಯಿಂದ ಏರ್ಪಡಿಸಿದ್ದ ಗ್ರೇಟರ್ ಬೆಂಗಳೂರು ಪ್ರಾಧಿಕಾರ(ಜಿಬಿಎ) ಮತ್ತು ಸ್ಥಳೀಯ ಸಂಸ್ಥೆಗಳ ಚುನಾವಣೆ ಸಂಬಂಧ ‘ಅಹಿಂದ ಸಮುದಾಯಗಳ ಜಾಗೃತಿ ಸಭೆ’ಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸಂವಿಧಾನದ ಆಶಯದಂತೆ ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ತತ್ವದ ಆಧಾರದಲ್ಲಿ, ಆಯವ್ಯಯದಲ್ಲಿ ಅಹಿಂದ ಸಮುದಾಯಗಳ ಜನಸಂಖ್ಯೆಗೆ ಅನುಗುಣವಾಗಿ ಹಣ ಒದಗಿಸಬೇಕು ಎಂದು ಆಗ್ರಹಿಸಿದರು. ರಾಜ್ಯದಲ್ಲಿ ಯಾವ ವರ್ಗದ ಜನರು ಎಷ್ಟು ಸಂಖ್ಯೆಯಲ್ಲಿದ್ದಾರೆಂಬುದನ್ನು ತಿಳಿಯಲು ಸರಕಾರ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಸಮೀಕ್ಷೆ ನಡೆಸಿದೆ. ಆದರೆ, ಆ ವರದಿಯನ್ನು ಈವರೆಗೆ ಬಿಡುಗಡೆ ಆಗಿಲ್ಲ. ಈ ಕುರಿತು ಯಾರೂ ಕೇಳುತ್ತಿಲ್ಲ?. ಅಹಿಂದ ಸಮುದಾಯಗಳು ಇದೀಗ ಬುದ್ಧಿವಂತರಾಗಿದ್ದಾರೆ, ಆದರೆ, ಸಂಘಟಿತರಾಗಿಲ್ಲ. ಈ ಬಗ್ಗೆ ಸಮುದಾಯದ ಪ್ರಮುಖರು ಗಂಭೀರವಾಗಿ ಚಿಂತಿಸಬೇಕು ಎಂದು ಅವರು ಕರೆ ನೀಡಿದರು. ಸಭೆಯಲ್ಲಿ ಪಾಲ್ಗೊಂಡಿದ್ದ ಮಾಜಿ ಸಚಿವ ಬಿ.ಸೋಮಶೇಖರ್ ಮಾತನಾಡಿ, ಕರ್ನಾಟಕ ರಾಜ್ಯದಲ್ಲಿ ಎಡಗೈ ಹಾಗೂ ಬಲಗೈ ಸಮುದಾಯದವರು ಒಂದಾದರೆ ಕನಿಷ್ಟ ಪಕ್ಷ 80 ಕ್ಷೇತ್ರಗಳನ್ನು ಗೆಲ್ಲಬಹುದು. ಜೊತೆಯಲ್ಲಿ ಮುಸ್ಲಿಮ್ ಮತ್ತು ಅತಿಹಿಂದುಳಿದ ಸಮುದಾಯಗಳು ಒಗ್ಗೂಡಿದರೆ ಮುಂದಿನ ದಿನಗಳಲ್ಲಿ ಸರಕಾರ ಅಹಿಂದ ಸಮುದಾಯದ ಕೈಗೆ ಸಿಗಲಿದೆ. ಇದನ್ನು ಅರಿತು ಒಗ್ಗಟ್ಟಿನ ಹೋರಾಟಕ್ಕೆ ಅಹಿಂದ ಸಮುದಾಯಗಳು ಮುಂದಾಗಬೇಕು ಎಂದು ಕೋರಿದರು. ಸಭೆಯ ಅಧ್ಯಕ್ಷತೆಯನ್ನು ಎಲ್.ಎನ್.ಮೂರ್ತಿ ವಹಿಸಿದ್ದು, ಮಾಜಿ ಶಾಸಕ ಎಂ.ಪಿ.ಕುಮಾರಸ್ವಾಮಿ, ಮಾಜಿ ಸಂಸದ ವಿ.ಎಸ್.ಉಗ್ರಪ್ಪ, ರಾಜ್ಯ ಸಂಚಾಲಕ ಎಸ್.ಮೂರ್ತಿ ಪಾಲ್ಗೊಂಡಿದ್ದರು. ಅಹಿಂದ ಚಳುವಳಿ ಪದಾಧಿಕಾರಿಗಳಾದ ವೆಂಕಟೇಶ ಗೌಡ, ಅಶೋಕ್ ಕುಮಾರ್, ವೆಂಕಟೇಶ್, ಸುರೇಂದ್ರ. ತಾಜ್ ಪಾಷ, ಮೊಹಮ್ಮದ್ ಸನಾವುಲ್ಲಾ, ಎ.ಜಿ. ಕೈಸಾರ್, ಸಿದ್ದಾರ್ಥ ಜೈನ್, ರೆ. ಎಡ್ವಿನ್ ಭಾಗವಹಿಸಿದ್ದರು.
ನಿಂದನೆ ಆರೋಪ | ನಿರ್ಮಾಪಕ ಕನಕಪುರ ಶ್ರೀನಿವಾಸ್ ವಿರುದ್ಧ ಜೋಗಿ ಪ್ರೇಮ್ ದೂರು; ಎಫ್ಐಆರ್ ದಾಖಲು
ಬೆಂಗಳೂರು : ನಿಂದನೆ ಆರೋಪದಡಿ ಸಿನಿಮಾ ನಿರ್ಮಾಪಕ ಕನಕಪುರ ಶ್ರೀನಿವಾಸ್ ವಿರುದ್ಧ ನಟ, ನಿರ್ದೇಶಕ ಜೋಗಿ ಪ್ರೇಮ್ ಇಲ್ಲಿನ ಕೆ.ಪಿ.ಅಗ್ರಹಾರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಫೆ.8ರಂದು ಕೆ.ಪಿ.ಅಗ್ರಹಾರ ಠಾಣೆಗೆ ಪ್ರೇಮ್ ಜೋಗಿ ದೂರು ನೀಡಿದ್ದು, ಕನಕಪುರ ಶ್ರೀನಿವಾಸ್ ಅವರು ತಮ್ಮ ವಿರುದ್ಧ ನಿಂದನೆ ಹಾಗೂ ಅವಾಚ್ಯವಾಗಿ ಮಾತನಾಡಿದ್ದು, ನನ್ನ ಗೌರವಯುತ ಸಾರ್ವಜನಿಕ ಜೀವನಕ್ಕೆ ಧಕ್ಕೆಯಾಗಿದೆ ಎಂದು ಆರೋಪಿಸಿದ್ದಾರೆ. ಪ್ರೇಮ್ ಅವರ ದೂರಿನನ್ವಯ ಶ್ರೀನಿವಾಸ್ ವಿರುದ್ಧ ಭಾರತೀಯ ನ್ಯಾಯ ಸಂಹಿತೆ ಕಾಯ್ದೆಯ ಕಲಂ 352 (ಸಾರ್ವಜನಿಕ ಶಾಂತಿಭಂಗ, ಉದ್ದೇಶಪೂರ್ವಕ ಅವಮಾನ) ಆರೋಪದಡಿ ಎಫ್ಐಆರ್ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ದೂರಿನ ವಿವರ: ‘ನಾನು ನಿರ್ದೇಶಕನಾಗಿದ್ದು, ಕುಟುಂಬದೊಂದಿಗೆ ವಾಸವಾಗಿದ್ದೇನೆ. ಸಣ್ಣಪುಟ್ಟ ಚಲನಚಿತ್ರಗಳಲ್ಲಿ ನಟಿಸಿಕೊಂಡು ಹಾಗೂ ಹಲವಾರು ಚಲನಚಿತ್ರಗಳ ನಿರ್ದೇಶನ ಮಾಡಿ ಹಂತ ಹಂತವಾಗಿ ಬೆಳೆದಿದ್ದೇನೆ. ನಾನು ನಿರ್ದೇಶನ ಮಾಡಿದ ಚಲನಚಿತ್ರಗಳು ದೇಶಾದ್ಯಂತ ಬಿಡುಗಡೆಯಾಗಿವೆ. ಈ ಮೂಲಕ ನನ್ನದೇ ಆದ ಜನಪ್ರಿಯತೆ ಹಾಗೂ ಗೌರವ ಸಂಪಾದಿಸಿಕೊಂಡು ಸಮಾಜದಲ್ಲಿ ಒಳ್ಳೆಯ ನಿರ್ದೇಶಕನಾಗಿ ಗೌರವಯುತವಾಗಿ ಜೀವನ ನಡೆಸುತ್ತಿದ್ದೇನೆ. ದಿನಾಂಕ 5-2-2026ರಂದು ‘ಕಾಟನ್ ಪೇಟೆ’ ಚಲನಚಿತ್ರದ ನಿರ್ಮಾಪಕ ಆರ್.ಶ್ರೀನಿವಾಸ ಯಾನೆ ಕನಕಪುರ ಶ್ರೀನಿವಾಸ ಎಂಬವರು ಜಿ.ಟಿ.ಮಾಲ್ನಲ್ಲಿ ಮೇಲ್ಕಂಡ ಚಲನಚಿತ್ರದ ಬಿಡುಗಡೆಯ ಪತ್ರಿಕಾಗೋಷ್ಠಿ ನಡೆಸಿದ್ದು, ನನ್ನನ್ನು ವೈಯಕ್ತಿಕವಾಗಿ ಗುರಿಯಾಗಿಸಿ ಸಾರ್ವಜನಿಕ ವೇದಿಕೆಯಲ್ಲಿ ಅವಾಚ್ಯ ಶಬ್ದಗಳಿಂದ ಬೈದು ನಿಂದಿಸಿದ್ದಾರೆ. ಈ ಸಂಬಂಧ ಸಾರ್ವಜನಿಕ ವೇದಿಕೆಗಳಾದ ಯೂಟ್ಯೂಬ್ ಮತ್ತು ಕೆಲವು ಮಾಧ್ಯಮಗಳಲ್ಲಿ ನನ್ನ ಬಗ್ಗೆ ಪ್ರಚಾರವಾಗುತ್ತಿದ್ದು, ತುಂಬಾ ಅವಮಾನವಾಗುತ್ತಿದೆ. ಸಾರ್ವಜನಿಕವಾಗಿ ನನಗೆ ವೈಯಕ್ತಿಕವಾಗಿ ನಿಂದಿಸಿ ನನ್ನ ಗೌರವಾಯುತವಾದ ವೃತ್ತಿ ಜೀವನಕ್ಕೆ ಧಕ್ಕೆ ಉಂಟುಮಾಡಿ ಮಾನಹಾನಿ ಮಾಡಿರುವ ಕನಕಪುರ ಶ್ರೀನಿವಾಸ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ಜೋಗಿ ಪ್ರೇಮ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಕೋಗಿಲು ಬಡಾವಣೆ ತೆರವು ಕಾರ್ಯಾಚರಣೆ ; ಬಿಎಸ್ಡಬ್ಲ್ಯುಎಂಎಲ್ ವಿರುದ್ಧ ಕ್ರಮಕ್ಕೆ ಆಗ್ರಹ
ಬೆಂಗಳೂರು : ಕೋಗಿಲು ಬಡಾವಣೆಯಲ್ಲಿ ಬಡವರ್ಗದವರು ವಾಸವಿದ್ದ ಶೆಡ್ಗಳ ತೆರವುಗೊಳಿಸುವ ಸೂಕ್ಷ್ಮ ವಿಚಾರದಲ್ಲಿ ರಾಜ್ಯ ಸರಕಾರಕ್ಕೆ ಮುಜುಗರ ಉಂಟು ಮಾಡಿದ ಬೆಂಗಳೂರು ಘನ ತ್ಯಾಜ್ಯ ನಿರ್ವಹಣಾ ಕಂಪೆನಿ (ಬಿಎಸ್ಡಬ್ಲ್ಯುಎಂಎಲ್) ಸಿಇಒ ಕರೀಗೌಡ ವಿರುದ್ಧ ಕ್ರಮ ಕೈಗೊಳ್ಳುವಂತೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಗೆ ಕೆಪಿಸಿಸಿ ಬೆಂಗಳೂರು ಪಶ್ಚಿಮ ಜಿಲ್ಲಾ ಕಾಂಗ್ರೆಸ್ ಸಮಿತಿ ಪತ್ರ ಬರೆದು ಒತ್ತಾಯಿಸಿದೆ. ಇಲ್ಲಿನ ವಾಸೀಮ್ ಮತ್ತು ಫಕೀರ್ ಕಾಲನಿಗಳಲ್ಲಿ ಜನರು ಅಕ್ರಮವಾಗಿ ಮನೆ ನಿರ್ಮಿಸಿಕೊಂಡಿದ್ದ ಆರೋಪ ಕೇಳಿಬಂದ ನಂತರ ಅವುಗಳನ್ನು ತೆರವುಗೊಳಿಸುವ ಪ್ರಕ್ರಿಯೆಗೂ ಮೊದಲು ಸಮೀಕ್ಷೆ ನಡೆಸಿ, ಪ್ರಕ್ರಿಯೆ ಪಾಲಿಸಬೇಕಿತ್ತು ಎಂದು ಹೈಕೋರ್ಟ್ ಮೌಖಿಕ ಸೂಚನೆ ನೀಡಿತ್ತು. ಆದರೆ, ಬಿಎಸ್ಡಬ್ಲ್ಯುಎಂಎಲ್ ಸಿಇಒ ಕರೀಗೌಡ ನೇತೃತ್ವದಲ್ಲಿ ಕೈಗೊಳ್ಳಲಾಗಿದ್ದ ತೆರವು ಕಾರ್ಯಾಚರಣೆಯಿಂದ ಮನೆಗಳನ್ನು ನೆಲಸಮ ಮಾಡಲಾಯಿತು. ಜತೆಗೆ, ನಿವಾಸಿಗಳಿಗೆ ಪುನರ್ವಸತಿಯನ್ನು ಸರಕಾರವೇ ಕಲ್ಪಿಸಬೇಕು. ಇದರಿಂದ ಸರಕಾರಕ್ಕೂ ಆರ್ಥಿಕ ನಷ್ಟ ಉಂಟಾಗುವಂತಾಗಿದೆ. ಅಲ್ಲದೆ, ಇಂತಹ ಇರುಸು ಮುರುಸು ಪರಿಸ್ಥಿತಿಗೆ ಬಿಎಸ್ಡಬ್ಲ್ಯುಎಂಎಲ್ನೇ ನೇರ ಹೊಣೆ ಎಂದು ಸಮಿತಿಯ ಉಪಾಧ್ಯಕ್ಷ ಕುಶಾಲ್ ಹುರುವೇಗೌಡ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಘಟನೆಯ ಹಿನ್ನೆಲೆಯನ್ನು ಪರಿಶೀಲಿಸಿದಾಗ ಸಂಸ್ಥೆ ಕೂಡ ತೆರವು ಕಾರ್ಯಾಚರಣೆ ವೇಳೆ ಹಲವು ಲೋಪದೋಷ ಎಸಗಿದೆ.ಬಿಬಿಎಂಪಿ ಹೆಸರಿನಲ್ಲಿತ್ತು ಎನ್ನಲಾದ ಆ ಸ್ಥಳವನ್ನು ಬಿಎಸ್ಡಬ್ಲ್ಯುಎಂ ಎಲ್ ತನ್ನ ಸುಪರ್ದಿಗೆ ಪಡೆದಿರುವ ಯಾವುದೇ ದಾಖಲೆಗಳು ಲಭ್ಯವಿಲ್ಲ. ಹೀಗಾಗಿ, ಸುಪರ್ದಿಗೆ ಪಡೆಯದೇ ಆ ಜಮೀನಿನ ಅತಿಕ್ರಮಣ ತೆರವು ಮಾಡಿರುವುದು ಕಾನೂನುಬಾಹಿರ ಕ್ರಮವಾಗಿದೆ. ಆ ಸ್ಥಳದಲ್ಲಿ 2013ರಿಂದಲೇ ಅತಿಕ್ರಮಣ ಜಾರಿಯಲ್ಲಿದೆ ಎಂದು ನ್ಯಾಯಾಲಯಕ್ಕೆ ದಾಖಲೆ ಸಲ್ಲಿಕೆಯಾಗಿದೆ. ಒಂದು ವೇಳೆ ಬಿಎಸ್ಡಬ್ಲ್ಯುಎಂಎಲ್ ಸುಪರ್ದಿಗೆ ಪಡೆದಿದ್ದರೆ ಆ ಬಗ್ಗೆ ಸಂಸ್ಥೆಯ ಅಧಿಕಾರಿಗಳು ಸರಕಾರದ ಗಮನಕ್ಕೆ ತಂದಿಲ್ಲ. ನೂರಾರು ಜನರು ವಾಸವಿರುವ ಮನೆಗಳನ್ನು ತೆರವುಗೊಳಿಸುವ ಸೂಕ್ಷ್ಮ ವಿಚಾರವನ್ನು ಸರಕಾರಕ್ಕೆ ಗಮನಕ್ಕೆ ತರಬೇಕಿತ್ತು. ಒತ್ತುವರಿ ತೆರವು ಕಾರ್ಯಾಚರಣೆಯನ್ನು ಕಂದಾಯ ಇಲಾಖೆ ಸೇರಿದಂತೆ ಸಂಬಂಧಿಸಿದ ಇಲಾಖೆಗಳ ಮೂಲಕ ಕ್ರಮಬದ್ಧವಾಗಿ ನಡೆಸಬೇಕಿತ್ತು.ನಿಯಮ ಪಾಲಿಸದೆ ಏಕಪಕ್ಷೀಯ ನಿರ್ಧಾರ ಕೈಗೊಂಡಿರುವ ಆರೋಪ ಕೇಳಿ ಬಂದಿದೆ. ಬಿಎಸ್ಡಬ್ಲ್ಯುಎಂಎಲ್ ಸಂಸ್ಥೆಯು ಕಂಪೆನಿ ಕಾಯ್ದೆಯಡಿ ಸ್ಥಾಪಿತ ಸಂಸ್ಥೆಯಾಗಿದೆ. ಇದಕ್ಕೆ ಸ್ವಯಂ ತೆರವು ಕಾರ್ಯಾಚರಣೆ ಕೈಗೊಳ್ಳುವ ಅಧಿಕಾರ ಇಲ್ಲ. ತೆರವು ಕಾರ್ಯಾಚರಣೆಗೆ ಬಳಸಿರುವ ಯಂತ್ರಗ ಮತ್ತು ಕಾರ್ಮಿಕರು ಬಿಎಸ್ಡಬ್ಲ್ಯುಎಂಎಲ್ ಸಂಸ್ಥೆಗೆ ಒಳಪಟ್ಟಿಲ್ಲ. ಸಂಸ್ಥೆಯು ಯಾವುದೇ ಸಂಸ್ಥೆಗೆ ಯಂತ್ರಗಳು ಮತ್ತು ಕಾರ್ಮಿಕರ ಸರಬರಾಜಿಗೆ ಕಾರ್ಯಾದೇಶ ನೀಡಿಲ್ಲ. ಹೀಗಾಗಿ, ತೆರವು ಕಾರ್ಯಾಚರಣೆಗೆ ಅಧಿಕೃತವಾಗಿ ಯಾವುದೇ ತಯಾರಿ ನಡೆಸದೇ ಅನಧಿಕೃತ ಮತ್ತು ಖಾಸಗಿ ಮೂಲಗಳಿಂದ ತೆರವು ಕಾರ್ಯಾಚರಣೆ ಕೈಗೊಳ್ಳುವುದು ಕಾನೂನುಬಾಹಿರ. ಸೂಕ್ತ ಕಾನೂನು ಕ್ರಮ ಅನುಸರಿಸದೇ ಗುಡಿಸಲುಗಳ ತೆರವುಗೊಳಿಸುವ ಕಾರ್ಯಾಚರಣೆ ನಡೆಸಿ ಸರಕಾರಕ್ಕೆ ಮುಜುಗರ ಉಂಟು ಮಾಡಿದ್ದಲ್ಲದೇ ಪುನರ್ವಸತಿಯ ಆರ್ಥಿಕ ನಷ್ಟಕ್ಕೆ ಬಿಎಸ್ಡಬ್ಲ್ಯುಎಂ ಎಲ್ ಕಾರಣವಾಗಿದೆ. ಸರಕಾರಕ್ಕೆ ಆಗಿರುವ ನಷ್ಟವನ್ನು ಅವರಿಂದಲೇ ವಸೂಲು ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಅವರು ಪತ್ರದಲ್ಲಿ ಒತ್ತಾಯಿಸಿದ್ದಾರೆ.
ತುಮಕೂರಿನಲ್ಲಿ 3 ಕಾರುಗಳ ನಡುವೆ ಸರಣಿ ಅಪಘಾತ: ಇಬ್ಬರು ಸ್ಥಳದಲ್ಲೇ ಸಾವು! ಜೆಡಿಎಸ್ ವಕ್ತಾರನ ಸ್ಥಿತಿ ಗಂಭೀರ
ತುಮಕೂರಿನಲ್ಲಿ ಕಾರುಗಳ ನಡುವೆ ಸರಣಿ ಅಪಘಾತವಾಗಿದೆ. ಇಬ್ಬರು ಸುರೇಶ್, ಮುರಳಿ ಎಂಬುವವರು ಸ್ಥಳದಲ್ಲಿಯೇ ಸಾವಿಗೀಡಾಗಿದ್ದಾರೆ. ಇನ್ನು ಜೆಡಿಎಸ್ ವಕ್ತಾರ ಜಯಣ್ಣ ಸ್ಥಿತಿ ಗಂಭೀರವಾಗಿದೆ. ನಗರ ಬಾಣವರ ಗೇಟ್ ಬಳಿ ಈ ಘಟನೆ ನಡೆಸಿದೆ. ಆದಿಚುಂಚನಗಿರಿಯಲ್ಲಿ ಖಾಸಗಿ ಕಾರ್ಯಕ್ರಮಕ್ಕೆ ತೆರಳಿ ವಾಪಸ್ ಆಗುವಾಗ ಈ ಘಟನೆ ನಡೆದಿದೆ.
ಸುಳ್ಳು ಆಶ್ವಾಸನೆ ಆರೋಪ: ಮತದಾನ ಬಹಿಷ್ಕಾರದ ಬ್ಯಾನರ್ ಹಾಕಿ ಆಕ್ರೋಶ ವ್ಯಕ್ತಪಡಿಸಿದ ಗ್ರಾಮಸ್ಥರು
ಸುಳ್ಯ: ರಾಜಕಾರಣಿಗಳು ಸುಳ್ಳು ಆಶ್ವಾಸನೆ ನೀಡಿ ನಮ್ಮನ್ನು ಕಡೆಗಣಿಸಿದ್ದಾರೆ” ಎಂದು ಆರೋಪಿಸಿ ಗ್ರಾಮಸ್ಥರು ಮತದಾನ ಬಹಿಷ್ಕಾರದ ಬ್ಯಾನರ್ ಅಳವಡಿಸಿದ ಘಟನೆ ಸುಳ್ಯ ತಾಲೂಕಿನ ದೇವಚಳ್ಳ ಗ್ರಾಮದ ವಾಲ್ತಾಜೆ ಎಂಬಲ್ಲಿ ನಡೆದಿದೆ. ದೇವಚಳ್ಳ ಗ್ರಾಮದ “ವಾಲ್ತಾಜೆ-ಕರಂಗಲ್ಲು ರಸ್ತೆಯ ಬಲ್ಕಜೆ ತಿರುವು ಹಾಗೂ ವಾಲ್ತಾಜೆ ಮಲೆರ್ಕುಮೇರಿ ರಸ್ತೆಗೆ ಸುಳ್ಳು ಆಶ್ವಾಸನೆ ಕೊಟ್ಟು ಕಾಂಕ್ರೀಟೀಕರಣ ಮಾಡಿಸುವುದೆಂದು ಗುದ್ದಲಿ ಪೂಜೆ ಮಾಡಿಸಿ ಲಾಡು ತಿಂದು ಚಪ್ಪಾಳೆ ತಟ್ಟಿಸಿಕೊಂಡು ಹೋದ ರಾಜಕಾರಣಿಗಳಿಗೆ ಧಿಕ್ಕಾರ. ಇದೇ ರೀತಿ ನಮ್ಮನ್ನು ಕಡೆಗಣಿಸಿದ್ದೇ ಆದಲ್ಲಿ ಮುಂದಿನ ಚುನಾವಣೆಯನ್ನು ಬಹಿಷ್ಕರಿಸಲಾಗುವುದು” ಎಂಬ ಬ್ಯಾನರ್ ಅನ್ನು ಅಳವಡಿಸಿ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶಬರಿಮಲೆ ಚಿನ್ನ ಲೂಟಿ ಪ್ರಕರಣ: ಬಾಗಿಲು ಚೌಕಟ್ಟು ಪದರಗಳ ಬಗ್ಗೆ ಅನುಮಾನ
ಶಬರಿಮಲೆಯಿಂದ ಚಿನ್ನ ಲೇಪನದ ಹೆಸರಲ್ಲಿ ಅಕ್ರಮವಾಗಿ ಹೊರ ಕೊಂಡೊಯ್ಯಲಾದ ಬಾಗಿಲು ಚೌಕಟ್ಟು ಪದರಗಳ ಬಗ್ಗೆ ಅನುಮಾನ ದಟ್ಟವಾಗಿದೆ. ತನಿಖಾ ತಂಡವು ಫೆ.9 ರಂದು ಹೈಕೋರ್ಟ್ಗೆ ವರದಿ ಸಲ್ಲಿಸಲಿದೆ. ನಷ್ಟವಾದ ಚಿನ್ನದ ಅಂದಾಜು ಪ್ರಮಾಣ ಮತ್ತು ಹೆಚ್ಚಿನ ಪರೀಕ್ಷೆಯ ಅಗತ್ಯವನ್ನು ತಿಳಿಸಲಿದೆ.
ಕಾಂತಾಬಾರೆ - ಬೂದಾಬಾರೆ ಕಂಬಳ: ಅಂಚೆ ಲಕೋಟೆ ಬಿಡುಗಡೆ
ಮಂಗಳೂರು: ತುಳುನಾಡಿನ ಮೂಲ ಸಂಪ್ರದಾಯವನ್ನು ಉಳಿಸಿಕೊಂಡು ಆಧುನಿಕತೆಯನ್ನು ಮೈಗೂಡಿಸಿಕೊಂಡಿ ರುವ ಐಕಳಬಾವ ಐತಿಹಾಸಿಕ ಕಾಂತಾಬಾರೆ-ಬೂದಾಬಾರೆ ಕಂಬಳದ ಸುವರ್ಣ ಮಹೋತ್ಸವದ ನೆನಪಿಗಾಗಿ ಭಾರತೀಯ ಅಂಚೆ ಇಲಾಖೆಯು ಐಕಳ ಅಂಚೆ ಕಚೇರಿಯಲ್ಲಿ ಶನಿವಾರ ವಿಶೇಷ ಅಂಚೆ ಲಕೋಟೆಯನ್ನು ಬಿಡುಗಡೆಗೊಳಿಸಿತು. ಮಂಗಳೂರು ಅಂಚೆ ವಿಭಾಗದ ಹಿರಿಯ ಅಂಚೆ ಅಧೀಕ್ಷಕ (ಪ್ರಭಾರ) ಪಿ. ದಿನೇಶ್ ವಿಶೇಷ ಅಂಚೆ ಲಕೋಟೆಯನ್ನು ಬಿಡುಗಡೆ ಮಾಡಿದರು. ಕಂಬಳದ ಕಾರ್ಯಾಧ್ಯಕ್ಷ ಚಿತ್ತರಂಜನ್ ಭಂಡಾರಿ, ಮಂಗಳೂರು ಪ್ರಧಾನ ಅಂಚೆ ಕಚೇರಿಯ ವರಿಷ್ಠ ಅಂಚೆ ಪಾಲಕ ಲೋಕನಾಥ ಎಂ., ಕಂಬಳ ಸಂಚಾಲಕ ಮುರಳೀಧರ ಶೆಟ್ಟಿ, ಕರ್ನಾಟಕ ಬ್ಯಾಂಕ್ ಜನರಲ್ ಮ್ಯಾನೇಜರ್ ಜಯನಾಗರಾಜ ರಾವ್ ಉಪಸ್ಥಿತರಿದ್ದರು. ಮಂಗಳೂರು ವಿಭಾಗದ ಮಾರುಕಟ್ಟೆ ಅಧಿಕಾರಿ ಸುಭಾಷ್ ಸಾಲ್ಯಾನ್ ವಂದಿಸಿದರು. ದಯಾನಂದ ಕತ್ತಲಸರ್ ಕಾರ್ಯಕ್ರಮ ನಿರೂಪಿಸಿದರು.
ಮಾನವೀಯ ಸಂದೇಶ ವೇದಿಕೆಯಿಂದ ‘ಹಸಿವು ಮುಕ್ತ ಭಾರತ ದಿನ’ ಆಚರಣೆ
ಭಟ್ಕಳ: ಮಾನವೀಯ ಮೌಲ್ಯಗಳನ್ನು ಸಮಾಜದೊಳಗೆ ಗಟ್ಟಿಗೊಳಿಸುವ ಉದ್ದೇಶದಿಂದ ಮಾನವೀಯ ಸಂದೇಶ ವೇದಿಕೆಯು ಫೆ.8ರಂದು ರಾಷ್ಟ್ರವ್ಯಾಪಿಯಾಗಿ ‘ಹಸಿವುಮುಕ್ತ ಭಾರತ ದಿನ’ವನ್ನು ಆಚರಿಸಿತು. ಇದರ ಭಾಗವಾಗಿ ಭಟ್ಕಳ ಶಾಖೆಯ ವತಿಯಿಂದ ನಗರದ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದ ಎದುರು ಸಾರ್ವಜನಿಕರಿಗೆ ತಿಂಡಿ ಹಾಗೂ ಪಾನೀಯಗಳನ್ನು ವಿತರಿಸುವ ಮೂಲಕ ಕಾರ್ಯಕ್ರಮಕ್ಕೆ ಅರ್ಥಪೂರ್ಣ ಚಾಲನೆ ನೀಡಲಾಯಿತು. ಈ ಸಂದರ್ಭ ಮಾತನಾಡಿದ ಮಾನವೀಯ ಸಂದೇಶ ವೇದಿಕೆಯ ಮುಖಂಡ ಮುಹಮ್ಮದ್ ಯಾಸೀನ್, ಫೆ.8ನ್ನು ಪ್ರತಿವರ್ಷವೂ ಮಾನವೀಯ ಸಂದೇಶ ವೇದಿಕೆಯ ವತಿಯಿಂದ ‘ಹಸಿವುಮುಕ್ತ ಭಾರತ ದಿನ’ವಾಗಿ ಆಚರಿಸಲಾ ಗುತ್ತಿದ್ದು, ಹಸಿವು ನಿರ್ಮೂಲನೆ ಮತ್ತು ಮಾನವೀಯ ಕಾಳಜಿಯ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು ಇದರ ಮುಖ್ಯ ಉದ್ದೇಶ ಎಂದು ಹೇಳಿದರು. ದೇಶದ ವಿವಿಧ ರಾಜ್ಯಗಳಲ್ಲಿಯೂ ಸಾರ್ವಜನಿಕ ಸ್ಥಳಗಳಲ್ಲಿ ತಿಂಡಿ–ಪಾನೀಯ ವಿತರಣೆ, ಆಸ್ಪತ್ರೆಗಳಿಗೆ ಭೇಟಿ, ಬಡಕುಟುಂಬಗಳಿಗೆ ಆಹಾರ ಹಾಗೂ ಅಗತ್ಯ ಸಹಾಯ ವಿತರಿಸು ವಂತಹ ಸಾಮಾಜಿಕ ಸೇವಾ ಚಟುವಟಿಕೆಗಳನ್ನು ಒಂದೇ ದಿನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು. ಮಾನವೀಯತೆಯ ಸಂದೇಶವನ್ನು ಕ್ರಿಯಾತ್ಮಕವಾಗಿ ಸಮಾಜದೊಳಗೆ ತಲುಪಿಸುವ ನಿಟ್ಟಿನಲ್ಲಿ ವೇದಿಕೆಯು ವರ್ಷಪೂರ್ತಿ ವಿವಿಧ ಸಾಮಾಜಿಕ ಸೇವಾ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದ್ದು, ಹಸಿವುಮುಕ್ತ ಭಾರತ ದಿನವು ಅದರ ಪ್ರಮುಖ ಅಭಿಯಾನಗಳಲ್ಲಿ ಒಂದಾಗಿದೆ ಎಂದು ಅವರು ಹೇಳಿದರು. ಕಾರ್ಯಕ್ರಮದಲ್ಲಿ ಮಾನವೀಯ ಸಂದೇಶ ವೇದಿಕೆಯ ಭಟ್ಕಳ ಶಾಖೆಯ ಕಾರ್ಯಕರ್ತರು ಭಾಗವಹಿಸಿ ಸಾರ್ವಜನಿಕರಿಗೆ ತಿಂಡಿ ಹಾಗೂ ಪಾನೀಯಗಳನ್ನು ವಿತರಿಸಿದರು.
ಯಾದಗಿರಿ| ರಮಾಬಾಯಿ ಅಂಬೇಡ್ಕರ್ ಅವರ 128ನೇ ಜಯಂತಿ ಆಚರಣೆ
ಯಾದಗಿರಿ: ಅಂಬೇಡ್ಕರ್ ಸೇವಾ ಸಮಿತಿ ಯಾದಗಿರಿ ಜಿಲ್ಲಾ ಸಮಿತಿ ವತಿಯಿಂದ ಮಾತೋಶ್ರೀ ರಮಾಬಾಯಿ ಅಂಬೇಡ್ಕರ್ ಅವರ 128ನೇ ಜಯಂತಿಯನ್ನು ನಗರದ ಕೋಟಗಾರವಾಡದಲ್ಲಿರುವ ರಮಾಬಾಯಿ ಅಂಬೇಡ್ಕರ್ ಭವನದಲ್ಲಿ ಆಚರಿಸಲಾಯಿತು. ಜಯಂತಿಯ ಅಂಗವಾಗಿ 5ರಿಂದ 8ನೇ ತರಗತಿ ಮಕ್ಕಳಿಗೆ ಮಾತೋಶ್ರೀ ರಮಾಬಾಯಿ ಅಂಬೇಡ್ಕರ್ ಅವರ ಜೀವನ ಚರಿತ್ರೆ ಕುರಿತು 20 ಅಂಕಗಳ ಕಿರು ಪರೀಕ್ಷೆಯನ್ನು ಆಯೋಜಿಸಲಾಗಿತ್ತು. ಇದೇ ವೇಳೆ ನಿಂಗಪ್ಪ ಕೊಲ್ಲೂರು ಧಮ್ಮಚಾರಿಗಳಿಂದ ಬುದ್ಧ ವಂದನೆ ನೆರವೇರಿಸಲಾಯಿತು. ಕಾರ್ಯಕ್ರಮದಲ್ಲಿ ಮಾತನಾಡಿದ ಅಂಬೇಡ್ಕರ್ ಸೇವಾ ಸಮಿತಿ ಯಾದಗಿರಿ ಜಿಲ್ಲಾ ಅಧ್ಯಕ್ಷ ರಾಹುಲ್ ಕೊಲ್ಲೂರಕರ್, ಮಾತೋಶ್ರೀ ರಮಾಬಾಯಿ ಅಂಬೇಡ್ಕರ್ ಅವರು ಬಾಬಾಸಾಹೇಬ್ ಡಾ.ಬಿ.ಆರ್. ಅಂಬೇಡ್ಕರ್ ಅವರ ಜೀವನದಲ್ಲಿ ವಹಿಸಿದ ಮಹತ್ವದ ಪಾತ್ರ, ಅವರ ತ್ಯಾಗ, ದಿಟ್ಟ ನಿರ್ಣಯಗಳು ಹಾಗೂ ವಿದ್ಯಾಭ್ಯಾಸಕ್ಕಾಗಿ ಅವರು ಅನುಭವಿಸಿದ ಸಂಕಷ್ಟಗಳು ಇಂದಿನ ಪೀಳಿಗೆಗೆ ದಾರಿದೀಪವಾಗಿವೆ ಎಂದು ಹೇಳಿದರು. ಕಿರು ಪರೀಕ್ಷೆಯಲ್ಲಿ ರೇಣುಕಾ ಸೈದಪ್ಪ ಪ್ರಥಮ ಬಹುಮಾನ, ಮಾನಸ ದ್ವಿತೀಯ ಬಹುಮಾನ ಹಾಗೂ ವೆಂಕಟೇಶ್ ತೃತೀಯ ಬಹುಮಾನ ಪಡೆದುಕೊಂಡರು. ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ನೋಟ್ಬುಕ್ ಹಾಗೂ ಪೆನ್ಗಳನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ಕಾಶೀನಾಥ್ ಕಣೆಕಲ್, ಮೌನೇಶ್ ಗಿರೆಪ್ಪನೋರ್, ಆಂಜನೇಯ ಭಂಡಾರಿ, ಮಲ್ಲಪ್ಪ ಕೌಳೂರ್, ಆನಂದ್ ತುಮಕೂರು, ರಮೇಶ್ ಗಣಪುರ, ಕುಮಾರ್ ಅರಿಕೇರಿ, ರಾಧಾಕೃಷ್ಣ ಕೌಳೂರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಉಳ್ಳಾಲ: ಬೃಹತ್ ರಕ್ತದಾನ, ಉಚಿತ ಕಣ್ಣು, ಮೂಳೆ ತಪಾಸಣೆ ಶಿಬಿರ
ಉಳ್ಳಾಲ: ಬ್ಲಡ್ ಹೆಲ್ಪ್ ಲೈನ್ ಕಲ್ಲಾಪು ಇದರ ಆಶ್ರಯದಲ್ಲಿ ಯೆನೆಪೋಯ ಮೆಡಿಕಲ್ ಕಾಲೇಜು ದೇರಳಕಟ್ಟೆ ಕೆಎಸ್ ಹೆಗ್ಡೆ ಮೆಡಿಕಲ್ ಕಾಲೇಜು, ಪ್ರಸಾದ್ ನೇತ್ರಾಲಯ, ಕಣಚೂರು ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ ಕೆಎಮ್ ಸಿ ಆಸ್ಪತ್ರೆ ಮಂಗಳೂರು ಇದರ ಸಹಯೋಗದೊಂದಿಗೆ ಬೃಹತ್ ರಕ್ತದಾನ, ಉಚಿತ ಕಣ್ಣು ತಪಾಸಣೆ ಹಾಗೂ ಮೂಳೆ ತಪಾಸಣಾ ಶಿಬಿರ ಕಲ್ಲಾಪು ಆಝಾದ್ ಮೈದಾನದಲ್ಲಿ ನಡೆಯಿತು. ಸ್ಪೀಕರ್ ಯುಟಿ ಖಾದರ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಜನರಿಗೆ ಚಿಕಿತ್ಸೆ ಗೆ ಆಸ್ಪತ್ರೆಯೇ ಸೀಮಿತ ಆಗಬಾರದು. ಕೆಲವು ಬಾರಿ ಇಂತಹ ವೈದ್ಯಕೀಯ ಶಿಬಿರ ಜನರ ಪ್ರಯೋಜನಕ್ಕೆ ಬರುತ್ತದೆ. ಈ ರೀತಿ ಕ್ಯಾಂಪ್ ಮಾಡಿ ಜನರ ಆರೋಗ್ಯ ಉಳಿಸುವ ಮೂಲಕ ಉತ್ತಮ ಸಮಾಜ ಸೇವೆ ಬ್ಲಡ್ ಹೆಲ್ಪ್ ಲೈನ್ ಕಲ್ಲಾಪು ಮಾಡುತ್ತಿರುವುದು ಶ್ಲಾಘನೀಯ ಎಂದರು. ಈ ಸಂದರ್ಭ ಪ್ರಕಾಶ್ ಕುಂಪಲ, ದರ್ಗಾ ಅಧ್ಯಕ್ಷ ಹನೀಫ್ ಹಾಜಿ, ಪ್ರವೀಣ್ ಶೆಟ್ಟಿ ಮೇಗಿನ ಮನೆ, ಚಂದ್ರ ಹಾಸ್ ಪಂಡಿತ್ ಹೌಸ್, ಸುಹೈಲ್ ಕಂದಕ್, ವಿಶ್ವನಾಥ ನಾಯ್ಕ, ಯುಬಿ ಸಲೀಮ್, ನಾಸೀರ್ ಸಾಮಣಿಗೆ, ರಿಯಾಝ್, ಪಿರೋಝ್ ಮಲಾರ್, ಕಮಲಾಕ್ಷ ಮತ್ತಿತರರು ಭಾಗವಹಿಸಿ ಶುಭ ಹಾರೈಸಿದರು. ಈ ಶಿಬಿರದಲ್ಲಿ ಉಳ್ಳಾಲ ತಾಲೂಕು ವ್ಯಾಪ್ತಿಯ ವಿವಿಧ ಕಡೆಗಳಿಂದ ಸಹಸ್ರಾರು ಸಂಖ್ಯೆಯಲ್ಲಿ ಜನರು ಭಾಗವಹಿಸಿ ಶಿಬಿರದ ಪ್ರಯೋಜನ ಪಡೆದರು. ಬಹಳಷ್ಟು ಯುವಕರು ರಕ್ತದಾನ ಮಾಡುವ ಮೂಲಕ ಪ್ರಶಂಸೆಗೆ ಪಾತ್ರರಾದರು.
ಬಾವಿಗೆ ಹಾರಿ ಎಲೆಕ್ಟ್ರಿಷಿಯನ್ ಆತ್ಮಹತ್ಯೆ
ಉಡುಪಿ, ಫೆ.8: ವೈಯಕ್ತಿಕ ಕಾರಣದಿಂದ ಮನನೊಂದ ಎಲೆಕ್ಟ್ರಿಷಿಯನ್ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಅಂಬಾಗಿಲು ಸಮೀಪದ ಕಕ್ಕುಂಜೆ ಎಂಬಲ್ಲಿ ಶನಿವಾರ ರಾತ್ರಿ ವೇಳೆ ನಡೆದಿದೆ. ಮೃತರನ್ನು ಕಕ್ಕುಂಜೆಯ ನಿವಾಸಿ ಅರ್ಚಕ ವಾಸುದೇವ ನಾಯಕ್ ಎಂಬವರ ಮಗ ಪುರುಷೋತ್ತಮ ನಾಯಕ್(52) ಎಂದು ಗುರುತಿಸ ಲಾಗಿದೆ. ಮಣಿಪಾಲದ ವ್ಯಾಲ್ಯೂವೀವ್ ಹೋಟೆಲ್ನಲ್ಲಿ ಎಲೆಕ್ಟ್ರಿಷಿಯನ್ ವಿಭಾಗದಲ್ಲಿ ಅಸಿಸ್ಟೆಂಟ್ ಸೂಪರ್ವೈಸರ್ ಆಗಿ ಕೆಲಸ ಮಾಡಿಕೊಂಡಿದ್ದ ಇವರು, ಕಳೆದ ಒಂದು ವಾರದಿಂದ ಸರಿಯಾಗಿ ನಿದ್ದೆ ಬರುತ್ತಿಲ್ಲವೆಂದು ಮಾನಸಿಕ ಖಿನ್ನತೆಗೆ ಒಳಗಾಗಿದ್ದರು. ಇದೇ ಚಿಂತೆಯಲ್ಲಿ ಅವರು ಮನೆಯ ಬಳಿಯಿರುವ ತೋಟದ ಬಾವಿ ಕಬ್ಬಿಣದ ಪೈಪ್ಗೆ ಹಗ್ಗ ಕಟ್ಟಿ ಹಾರಿ ಆತ್ಮಹತ್ಯೆ ಮಾಡಿಕೊಂಡರು. ಜಿಗಿದ ರಭಸಕ್ಕೆ ಅವರ ರುಂಡ ಬೇರ್ಪಟ್ಟಿದ್ದು, ದೇಹದ ಭಾಗ ಬಾವಿಯಲ್ಲಿದ್ದರೆ, ರುಂಡ ಹಗ್ಗದಲ್ಲಿ ನೇತಾಡುತ್ತಿತ್ತು. ಇವರು ಕಕ್ಕುಂಜೆಯ ಕಟ್ಟೆಮಹಾದೇವಿ ದೇವಸ್ಥಾನದ ಆಡಳಿತ ಮಂಡಳಿಯ ಕಾರ್ಯದರ್ಶಿ ಯಾಗಿದ್ದರು. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ʼನಮ್ಮ ಮೆಟ್ರೋʼ ದರ ಏರಿಕೆ ಸ್ಥಗಿತ : ಬಿಎಂಆರ್ಸಿಎಲ್
ಬೆಂಗಳೂರು : ಬೆಂಗಳೂರು ನಮ್ಮ ಮೆಟ್ರೋ ರೈಲು ನಿಗಮ ನಿಯಮಿತ (ಬಿಎಂಆರ್ಸಿಎಲ್) ಫೆ.9ರಿಂದ ವಾರ್ಷಿಕ ಸ್ವಯಂಚಾಲಿತ ಪರಿಷ್ಕೃತ ದರ ಏರಿಕೆಯ ಪ್ರಸ್ತಾವನೆಯನ್ನು ಮುಂದಿನ ಆದೇಶದ ವರೆಗೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ಬಿಎಂಆರ್ಸಿಎಲ್ ತಿಳಿಸಿದೆ. ರವಿವಾರ ಈ ಕುರಿತು ಪ್ರಕಟನೆ ನೀಡಿರುವ ಬಿಎಂಆರ್ಸಿಎಲ್, ಪರಿಷ್ಕೃತ ದರ ಕುರಿತು ಅಂತಿಮ ನಿರ್ಧಾರವನ್ನು ನಿರ್ದೇಶಕರ ಮಂಡಳಿಯ ಪರಿಶೀಲನೆಯ ನಂತರ ಪ್ರಕಟಿಸಲಾಗುವುದು. ಬಿಎಂಆರ್ಸಿಎಲ್ ಬೆಂಗಳೂರು ನಾಗರಿಕರಿಗೆ ಸುರಕ್ಷಿತ, ನಂಬಿಕಾರ್ಹ ಮತ್ತು ಕೈಗೆಟುಕುವ ನಮ್ಮ ಮೆಟ್ರೋ ಸೇವೆಗಳನ್ನು ಒದಗಿಸಲು ಸದಾ ಬದ್ಧವಾಗಿದೆ ಎಂದು ಸ್ಪಷ್ಟಪಡಿಸಿದೆ. ಫೆ.5ರಂದು ನಮ್ಮ ಮೆಟ್ರೋ ರೈಲ್ವೆ ಪ್ರಯಾಣ ದರ ಏರಿಕೆಯಾಗಲಿದ್ದು, ನಾಳೆ(ಫೆ.9)ಯಿಂದ ಜಾರಿಗೆ ಬರಲಿದೆ ಎಂದು ಬಿಎಂಆರ್ಸಿಎಲ್ ತಿಳಿಸಿತ್ತು. ಆದರೆ, ಈ ವಿಚಾರವು ರಾಜ್ಯ ಸರಕಾರ ಹಾಗೂ ಬಿಜೆಪಿ ಸಂಸದರ ನಡುವೆ ಆರೋಪ-ಪ್ರತ್ಯಾರೋಪಕ್ಕೆ ಕಾರಣವಾಗಿತ್ತು. ಇದೀಗ ಜನ ಸಾಮಾನ್ಯರ ಒತ್ತಡದ ಹಿನ್ನೆಲೆಯಲ್ಲಿ ದರ ಪರಿಷ್ಕರಣೆಯನ್ನು ಬಿಎಂಆರ್ಸಿಎಲ್ ಕೈಬಿಟ್ಟಿದೆ.
ಬೆಂಗಳೂರು : ಭಾರತ ಮತ್ತು ಅಮೆರಿಕ ನಡುವಿನ ಮಧ್ಯಂತರ ವ್ಯಾಪಾರ ಒಪ್ಪಂದ ಹಿಂದೆ ಜೆಫ್ರಿ ಎಪ್ಸ್ಟೀನ್ ಫೈಲ್ಸ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಸಂಪುಟದ ಸದಸ್ಯರ ಹೆಸರುಗಳಿಂದಾಗಿ ಸೃಷ್ಟಿಯಾಗಿರುವ ಒತ್ತಡದ ಭಾಗ ಇದೆಯೇ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ಭಾರತ ಮತ್ತು ಅಮೆರಿಕ ನಡುವಿನ ಮಧ್ಯಂತರ ವ್ಯಾಪಾರ ಒಪ್ಪಂದ ವಿಚಾರವಾಗಿ ರವಿವಾರ ತಮ್ಮ ಎಕ್ಸ್ ಖಾತೆಯಲ್ಲಿ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ, ಜೆಫ್ರಿ ಎಪ್ಸ್ಟೀನ್ ಫೈಲ್ಸ್ ನಲ್ಲಿ ಕಾಣಿಸಿಕೊಂಡಿರುವ ಪ್ರಧಾನಿ ನರೇಂದ್ರ ಮೋದಿ ಮತ್ತು ಸಂಪುಟದ ಸದಸ್ಯರ ಹೆಸರುಗಳಿಂದಾಗಿ ಸೃಷ್ಟಿಯಾಗಿರುವ ಒತ್ತಡದ ಭಾಗವಾಗಿ ಕೇಂದ್ರ ಸರಕಾರ ದೇಶ ವಿರೋಧಿಯಾಗಿರುವ ಒಪ್ಪಂದಕ್ಕೆ ಒಪ್ಪಿಕೊಂಡಿದೆ ಎಂಬ ಆರೋಪವನ್ನು ನಿರಾಕರಿಸಲು ಸಾಧ್ಯವೇ? ಎಂದು ಕೇಳಿದ್ದಾರೆ. ರೈತರ ಆತ್ಮಹತ್ಯೆ: ಭಾರತ ಮತ್ತು ಅಮೆರಿಕ ನಡುವಿನ ಮಧ್ಯಂತರ ವ್ಯಾಪಾರ ಒಪ್ಪಂದವನ್ನು ಒಪ್ಪಿಕೊಂಡು ಸ್ವಾಗತಿಸುವ ಮೂಲಕ ಪ್ರಧಾನಿ ಮೋದಿ ಅಮೆರಿಕಕ್ಕೆ ಸಂಪೂರ್ಣ ಶರಣಾಗಿದ್ದಾರೆ. ಮುಂದಿನ ದಿನಗಳಲ್ಲಿ ಈ ಒಪ್ಪಂದ 140 ಕೋಟಿ ಭಾರತೀಯರಿಗೆ, ಅದರಲ್ಲಿಯೂ ಮುಖ್ಯವಾಗಿ ದೇಶದ 72 ಕೋಟಿ ರೈತರ ಪಾಲಿಗೆ ಮರಣಶಾಸನ ಆಗಲಿರುವುದು ಖಂಡಿತ ಎಂದು ಉಲ್ಲೇಖಿಸಿದ್ದಾರೆ. ಭಾರತಕ್ಕೆ ಹೋಲಿಸಿದರೆ ಅತೀ ಹೆಚ್ಚಿನ ಪ್ರಮಾಣದ ಸಬ್ಸಿಡಿ ಪಡೆಯುತ್ತಿರುವ ಅಮೆರಿಕದ ರೈತರು ಭಾರತದ ಕೃಷಿ ಉತ್ಪನ್ನಗಳಿಗಿಂತ ಕಡಿಮೆ ಬೆಲೆಗೆ ತಮ್ಮ ಬೆಳೆಗಳನ್ನು ಮಾರಾಟ ಮಾಡಲು ಸಾಧ್ಯವಿದೆ. ಈ ಅಪಾಯವನ್ನು ತಪ್ಪಿಸಲಿಕ್ಕಾಗಿಯೇ ಇಲ್ಲಿಯವರೆಗಿನ ಎಲ್ಲ ಸರಕಾರಗಳು ಅಮೆರಿಕದಿಂದ ಆಮದಾಗುತ್ತಿರುವ ಕೃಷಿ ಉತ್ಪನ್ನಗಳ ಮೇಲೆ ಹೆಚ್ಚಿನ ಪ್ರಮಾಣದ ಸುಂಕ ಹೇರುತ್ತಾ ಬಂದಿವೆ. ಈಗ ಈ ಆಮದು ಸುಂಕವನ್ನು ರದ್ದುಗೊಳಿಸದರೆ ದೇಶದ ಮಾರುಕಟ್ಟೆಗಳಲ್ಲಿ ಅಮೆರಿಕದ ಅಗ್ಗದ ದರದ ಆಹಾರಧಾನ್ಯ, ಹಣ್ಣು, ತರಕಾರಿ ಮತ್ತು ಡೇರಿ ಉತ್ಪನ್ನಗಳು ಲಗ್ಗೆ ಇಡಲಿದೆ.. ಇದರಿಂದ ಭಾರತದ ರೈತರು ದಿವಾಳಿ ಸ್ಥಿತಿ ತಲುಪಲಿದ್ದು, ಅವರಿಗೆ ಆತ್ಮಹತ್ಯೆ ಬಿಟ್ಟರೆ ಬೇರೆ ದಾರಿ ಇಲ್ಲದ ಸ್ಥಿತಿ ನಿರ್ಮಾಣವಾಗಬಹುದು ಎಂದೂ ಅವರು ತಿಳಿಸಿದ್ದಾರೆ. ಎರಡು ದೇಶಗಳ ನಡುವಿನ ಸಂಬಂಧಗಳು ಸಮಾನತೆ ಮತ್ತು ಪರಸ್ಪರ ಗೌರವದ ಬುನಾದಿಯ ಮೇಲೆ ಸ್ಥಾಪನೆಯಾಗಬೇಕಾಗುತ್ತದೆ. ಅದು ಒತ್ತಡ, ಬೆದರಿಕೆ ಮತ್ತು ಏಕಪಕ್ಷೀಯ ನೀತಿ-ನಿರ್ಧಾರಗಳ ಹೇರಿಕೆಯಿಂದ ನಡೆಯಬಾರದು. ಆದರೆ ಭಾರತ ಮತ್ತು ಅಮೆರಿಕ ನಡುವಿನ ಮಧ್ಯಂತರ ವ್ಯಾಪಾರ ಒಪ್ಪಂದ ಕಾರ್ಯರೂಪಕ್ಕೆ ಬಂದಿರುವ ವಿಧಿ-ವಿಧಾನಗಳನ್ನು ಗಮನಿಸಿದರೆ ಇದು ಒಡೆಯನ ಅಜ್ಞೆಗೆ ಸೇವಕ ತಲೆಯಾಡಿಸಿದಂತಿದೆ ಎಂದು ಅವರು ಹೇಳಿದ್ದಾರೆ. ರಷ್ಯಾದಿಂದ ತೈಲ ಖರೀದಿಸುತ್ತಿದ್ದ ಭಾರತವನ್ನು ಮಣಿಸುವ ಉದ್ದೇಶದಿಂದಲೇ ಭಾರತೀಯ ಸರಕುಗಳ ಮೇಲಿನ ಸುಂಕವನ್ನು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಏರಿಸಿದ್ದರು. ಈಗ ಅದನ್ನು ಶೇಕಡಾ 25ರಿಂದ ಶೇಕಡಾ 18ಕ್ಕೆ ಇಳಿಸಿ ಭಾರತಕ್ಕೆ ಮಹದುಪಕಾರ ಮಾಡಿದಂತೆ ನಾಟಕವಾಡಿದ್ದಾರೆ. ಇದಕ್ಕೆ ಪ್ರತಿಯಾಗಿ ಅಮೆರಿಕದ ಸರಕುಗಳ ಮೇಲಿನ ಸುಂಕವನ್ನು ಭಾರತ ಸೊನ್ನೆಗಿಳಿಸಿದೆ. ಮೇಲ್ನೋಟದಲ್ಲಿಯೇ ಈ ತಾರತಮ್ಯದಿಂದ ಆಗಿರುವ ಅನ್ಯಾಯ ಸ್ಪಷ್ಟವಾಗಿ ಕಾಣುತ್ತಿದ್ದರೂ, ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಇದನ್ನು ಸ್ವಾಗತಿಸಿರುವುದು ಭಾರತದ 149 ಕೋಟಿ ಜನರಿಗೆ ಮಾಡುತ್ತಿರುವ ಮಹಾದ್ರೋಹವಾಗಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ವಿಶ್ವಗುರುವಿನ ಕಿರೀಟವನ್ನು ಟ್ರಂಪ್ ಕುಟ್ಟಿ ಪುಡಿ ಮಾಡುತ್ತಿದ್ದಾರೆ : ಸಿದ್ದರಾಮಯ್ಯ ಅಮೆರಿಕದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಅವರನ್ನು ತಲೆಮೇಲೆ ಕೂರಿಸಿ ಮೆರೆದಾಡಿದ್ದ ಪ್ರಧಾನಿ ನರೇಂದ್ರ ಮೋದಿಯವರ 56 ಇಂಚಿನ ಎದೆ ಮತ್ತು ವಿಶ್ವಗುರುವಿನ ಕಿರೀಟವನ್ನು ಡೊನಾಲ್ಡ್ ಟ್ರಂಪ್ ಪ್ರತಿದಿನ ಕುಟ್ಟಿ ಪುಡಿ ಮಾಡುತ್ತಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಟೀಕಿಸಿದ್ದಾರೆ. ಅಮೆರಿಕದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಅವರನ್ನು ತಲೆಮೇಲೆ ಕೂರಿಸಿ ಮೆರೆದಾಡಿದ್ದ ನರೇಂದ್ರ ಮೋದಿ ಅವರು ಈಗ ಅದೇ ಟ್ರಂಪ್ ಅವರ ಆಜ್ಞಾಪಾಲಕರಾಗುವ ದೈನೇಸಿ ಸ್ಥಿತಿಗೆ ಬಂದಿರುವುದು ವಿಷಾದನೀಯ ಬೆಳವಣಿಗೆಯಾಗಿದೆ ಎಂದು ಹೇಳಿದ್ದಾರೆ. ಸದ್ಯ ಭಾರತ ಶೇ.40ರಷ್ಟು ತೈಲವನ್ನು ರಷ್ಯಾದಿಂದ ಖರೀದಿಸುತ್ತಿದೆ. ಇದೀಗ ಡೊನಾಲ್ಡ್ ಟ್ರಂಪ್ ಅವರ ಆದೇಶಕ್ಕೆ ತಲೆಬಾಗಿರುವ ಪ್ರಧಾನಿ ನರೇಂದ್ರ ಮೋದಿ ಅವರು ರ ಷ್ಯಾ ದಿಂದ ತೈಲ ಖರೀದಿಯನ್ನು ಕೈಬಿಟ್ಟು ಅಮೆರಿಕ ಮತ್ತು ವೆನಿಜುವೆಲಾ ದೇಶಗಳಿಂದ ತೈಲ ಖರೀದಿಸಲು ಒಪ್ಪಿಕೊಂಡಿರುವುದು ಈ ಒಪ್ಪಂದದ ಮುಖ್ಯಾಂಶವಾಗಿದೆ. ಇದು ಭಾರತದ ಸಂಪೂರ್ಣ ಶರಣಾಗತಿಯಾಗಿದೆ. ಇದರಿಂದ ಮುಂದಿನ ದಿನಗಳಲ್ಲಿ ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯಾಗಲಿದ್ದು ಅದರ ಪರಿಣಾಮವಾಗಿ ಉಳಿದ ಅಗತ್ಯವಸ್ತುಗಳು ಕೂಡಾ ದುಬಾರಿಯಾಗಲಿದೆ ಎಂದು ಅವರು ಹೇಳಿದ್ದಾರೆ. ದೇಶದ ಗೌರವ ಉಳಿಸಲು ಪ್ರಧಾನಿ ಮೋದಿ ರಾಜೀನಾಮೆ ನೀಡಲಿ: ಸಿದ್ದರಾಮಯ್ಯ ಆಗ್ರಹ ವಿದೇಶಾಂಗ ನೀತಿಯಿಂದ ಹಿಡಿದು ಆರ್ಥಿಕ ಮತ್ತು ಸಾಮಾಜಿಕ ನೀತಿಯವರೆಗೂ ಎಲ್ಲ ರಂಗಗಳಲ್ಲಿಯೂ ಸಂಪೂರ್ಣವಾಗಿ ವಿಫಲವಾಗಿರುವ ಪ್ರಧಾನಿ ನರೇಂದ್ರ ಮೋದಿ ದೇಶದ ಗೌರವ ಉಳಿಸಲು ಈ ಕೂಡಲೇ ರಾಜೀನಾಮೆ ನೀಡಲಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ. ಜಾಗತಿಕವಾಗಿ ಭಾರತ ಹಿಂದೆಂದೂ ಇಷ್ಟೊಂದು ದುರ್ಬಲವಾಗಿರಲಿಲ್ಲ. ರಾಜತಾಂತ್ರಿಕವಾಗಿ ಎದುರಾಗುವ ಒತ್ತಡಗಳನ್ನು ಇಲ್ಲಿಯ ವರೆಗಿನ ಎಲ್ಲ ಪ್ರಧಾನಿಗಳು ಸಮರ್ಥವಾಗಿ ಎದುರಿಸಿ ಭಾರತದ ಸಾರ್ವಭೌಮತೆ ಮತ್ತು ಗೌರವವನ್ನು ಕಾಪಾಡಿಕೊಂಡು ಬಂದಿದ್ದಾರೆ. ಆದರೆ, ಪ್ರಧಾನಿ ಮೋದಿ ವಿದೇಶಾಂಗ ನೀತಿಯಿಂದ ಹಿಡಿದು ಆರ್ಥಿಕ ಮತ್ತು ಸಾಮಾಜಿಕ ನೀತಿಯವರೆಗೂ ಎಲ್ಲ ರಂಗಗಳಲ್ಲಿಯೂ ಸಂಪೂರ್ಣವಾಗಿ ವಿಫಲವಾಗಿದ್ದು, ರಾಜೀನಾಮೆ ಕೊಟ್ಟು ದೇಶದ ಮತ್ತು ಅಳಿದುಳಿದ ಅವರ ಗೌರವವನ್ನು ಉಳಿಸಿಕೊಳ್ಳುವುದು ಒಳ್ಳೆಯದು ಎಂದು ತಿಳಿಸಿದ್ದಾರೆ. ದೇಶದ ಮೊದಲ ಪ್ರಧಾನಿ ಪಂಡಿತ ಜವಾಹರಲಾಲ ನೆಹರೂ ಅವರ ಅಲಿಪ್ತ ನೀತಿ ಭಾರತವನ್ನು ವಿಶ್ವಗುರುವನ್ನಾಗಿ ಮಾಡಿತ್ತು. ಪ್ರಧಾನಿ ಇಂದಿರಾಗಾಂಧಿ ದೈತ್ಯ ಅಮೆರಿಕದ ಒತ್ತಡವನ್ನು ಕೂಡಾ ಲೆಕ್ಕಿಸದೆ ಪಾಕಿಸ್ಥಾನವನ್ನು ಮಣಿಸಿದ್ದು ಈಗ ಇತಿಹಾಸವಾಗಿದೆ. ಜಾಗತಿಕವಾಗಿ ಎಲ್ಲ ದೇಶಗಳು ಆರ್ಥಿಕ ಹಿಂಜರಿತದಿಂದ ತತ್ತರಿಸುತ್ತಿದ್ದಾಗ ಭಾರತದ ಆರ್ಥಿಕ ಸಾರ್ವಭೌಮತೆಯನ್ನು ಕಾಪಾಡಿದ್ದ ಡಾ.ಮನಮೋಹನ್ ಸಿಂಗ್ ಅವರು ಹೊಸ ಆರ್ಥಿಕ ಯುಗದ ಪ್ರವರ್ತಕರಾಗಿದ್ದರು. ಆದರೆ ಇಂದು ವಿಶ್ವದಲ್ಲಿ ಭಾರತಕ್ಕೆ ಮಿತ್ರರಿಗಿಂತ ಶತ್ರುಗಳ ಸಂಖ್ಯೆ ಹೆಚ್ಚಾಗಿದೆ. ವಿದೇಶಾಂಗ ನೀತಿ ಎಂದರೆ ಭಾಷಣ, ಘೋಷಣೆ, ಕೈಕುಲುಕಾಟ ಮತ್ತು ಸ್ವಪ್ರಚಾರವಷೇ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿದುಕೊಂಡಂತಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್, ಪತ್ನಿಗೆ 17 ವರ್ಷ ಜೈಲು ಶಿಕ್ಷೆ
ಇಸ್ಲಮಾಬಾದ್: ತೋಷಖಾನಾ ಪ್ರಕರಣದಲ್ಲಿ ಪಾಕಿಸ್ತಾನದ ಮಾಜಿ ಪ್ರಧಾನಿ, ಪಾಕಿಸ್ತಾನ್ ತೆಹ್ರೀಕೆ ಇನ್ಸಾಫ್(ಪಿಟಿಐ) ಪಕ್ಷದ ಮುಖ್ಯಸ್ಥ ಇಮ್ರಾನ್ ಖಾನ್ ಮತ್ತು ಅವರ ಪತ್ನಿ ಬುಷ್ರಾ ಬೀಬಿಗೆ ವಿಶೇಷ ನ್ಯಾಯಾಲಯ 17 ವರ್ಷ ಜೈಲು ಶಿಕ್ಷೆ ವಿಧಿಸಿರುವುದಾಗಿ ವರದಿಯಾಗಿದೆ. 2023ರ ಆಗಸ್ಟ್ ನಿಂದ ಜೈಲಿನಲ್ಲಿರುವ ಖಾನ್ ವಿರುದ್ಧ ಹಲವು ಪ್ರಕರಣ ದಾಖಲಾಗಿದೆ. ಇಮ್ರಾನ್ ಹಾಗೂ ಅವರ ಪತ್ನಿಗೆ ಪಾಕಿಸ್ತಾನ ದಂಡ ಸಂಹಿತೆಯ ಸೆಕ್ಷನ್ 409ರಡಿ(ನಂಬಿಕೆಯ ಉಲ್ಲಂಘನೆ) ತಲಾ 10 ವರ್ಷ ಕಠಿಣ ಜೈಲುಶಿಕ್ಷೆ ಹಾಗೂ ಭ್ರಷ್ಟಾಚಾರ ತಡೆ ಕಾಯ್ದೆಯ ವಿವಿಧ ಸೆಕ್ಷನ್ಗಳಡಿ 7 ವರ್ಷ ಜೈಲುಶಿಕ್ಷೆ ವಿಧಿಸಲಾಗಿದೆ ಎಂದು ವಿಶೇಷ ನ್ಯಾಯಾಲಯದ ತೀರ್ಪಿನಲ್ಲಿ ಉಲ್ಲೇಖಿಸಲಾಗಿದೆ.
ಹೂಡಿಕೆ ಹೆಸರಿನಲ್ಲಿ 14 ಲಕ್ಷ ರೂ. ಆನ್ಲೈನ್ ವಂಚನೆ: ಪ್ರಕರಣ ದಾಖಲು
ಉಡುಪಿ, ಫೆ.8: ಹೂಡಿಕೆ ಹೆಸರಿನಲ್ಲಿ ವ್ಯಕ್ತಿಯೊಬ್ಬರಿಗೆ ಲಕ್ಷಾಂತರ ರೂ. ಆನ್ಲೈನ್ ವಂಚನೆ ಎಸಗಿರುವ ಬಗ್ಗೆ ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸುರತ್ಕಲ್ ಮೂಲದ ಇರ್ಫಾನ್(40) ಎಂಬವರು ಉಡುಪಿಯ ವಿವಿಧ ಬ್ಯಾಂಕ್ಗಳಲ್ಲಿ ಖಾತೆಗಳನ್ನು ಹೊಂದಿದ್ದು, ಇವರಿಗೆ 2025ರ ಆ.3ರಂದು ವಿವಿಧ ಆನ್ಲೈನ್ ಪೋನ್ ಕರೆಗಳು ಬಂದಿತ್ತು. ಅದರಲ್ಲಿ ವಿಶಾಲ್ ರಾವ್ ಎಂಬಾತ ಹಣ ಹೂಡಿಕೆ ಬಗ್ಗೆ ತಿಳಿಸಿದ್ದನು. ಅದರಂತೆ ಆರೋಪಿ ತಿಳಿಸಿದ ವಿವಿಧ ಖಾತೆಗಳಿಗೆ ಇರ್ಫಾನ್ ಆ.3ರಿಂದ ನ.29ರವರೆಗೆ ಒಟ್ಟು 14,07,025 ರೂ. ಹಣವನ್ನು ವರ್ಗಾವಣೆ ಮಾಡಿದ್ದರು. ಆದರೆ ಆರೋಪಿಗಳು ಹೂಡಿಕೆ ಮಾಡಿದ ಹಣವನ್ನಾಗಲೀ ಅಥವಾ ಲಾಭಾಂಶವನ್ನಾಗಲಿ ನೀಡದೇ ಮೋಸ ಮಾಡಿರುವುದಾಗಿ ದೂರಲಾಗಿದೆ.
ಕಾರ್ಕಳ, ಫೆ.8: ಕುಕ್ಕುಂದೂರು ಗ್ರಾಮದ ನಕ್ರೆ ಬೈಲ್ಬೆಟ್ಟು ಎಂಬಲ್ಲಿ ಫೆ.7ರಂದು ರಾತ್ರಿ ಅಂದರ್ ಬಾಹರ್ ಇಸ್ಪೀಟ್ ಜುಗಾರಿ ಆಡುತ್ತಿದ್ದ ಇಬ್ಬರನ್ನು ಕಾರ್ಕಳ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಮನೆಯ ಮೊದಲನೆ ಮಹಡಿಯಲ್ಲಿ ಮಂಗಳೂರಿನ ಅಪ್ರಿತ್ ಹಾಗೂ ನಿಶಾಂತ್ ಎಂಬವರು ಅಂದರ್ ಬಾಹರ್ ಜುಗಾರಿ ಆಟ ಆಡುತ್ತಿದ್ದು, ಈ ಕುರಿತು ಖಚಿತ ಮಾಹಿತಿಯಂತೆ ದಾಳಿ ನಡೆಸಿದ ಪೊಲೀಸರು, 22690ರೂ. ನಗದು, 9 ಮೊಬೈಲ್ ಫೋನ್ ಸಹಿತ ಆರೋಪಿಗಳನ್ನು ವಶಕ್ಕೆ ಪಡೆದು ಕೊಂಡಿದ್ದಾರೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಟ್ಟು ಬೀಚ್ನಲ್ಲಿ ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆ
ಕಾಪು, ಫೆ.8: ಮಟ್ಟು ಗ್ರಾಮದ ನಿತ್ಯಾನಂದ ರಾಮ ಭಜನಾ ಮಂದಿರ ಸಮೀಪದ ಸಮುದ್ರ ತೀರದಲ್ಲಿ ಫೆ.7ರಂದು ಸಂಜೆ ವೇಳೆ ಸುಮಾರು 40-50 ವರ್ಷ ಪ್ರಾಯದ ಅಪರಿಚಿತ ಗಂಡಸಿನ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮೃತದೇಹವನ್ನು ಕಾಪು ಪ್ರಾಥಮಿಕ ಆರೋಗ್ಯ ಕೇಂದ್ರದ ಶವಾಗಾರದಲ್ಲಿ ಇರಿಸಲಾಗಿದೆ. ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಬ್ಬಿನ ಗದ್ದೆಗೆ ಬಿದ್ದ ಲಘು ವಿಮಾನ; ಇಬ್ಬರು ಪೈಲಟ್ಗಳಿಗೆ ಗಾಯ
ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಮಂಗಳೂರು ಗ್ರಾಮದಲ್ಲಿ ಲಘು ವಿಮಾನವೊಂದು ಕಬ್ಬಿನ ಗದ್ದೆಗೆ ಬಿದ್ದಿದೆ. ವಿಮಾನದಲ್ಲಿ ತೈಲ ಖಾಲಿಯಾದ ಕಾರಣ ಗ್ರಾಮದ ಜಮೀನಿಗೆ ಬಿದ್ದಿದೆ. ಪ್ರಾಥಮಿಕ ಮಾಹಿತಿ ಪ್ರಕಾರ, ಘಟನೆಯಿಂದ ಪ್ರಾಣಾಪಾಯ ಸಂಭವಿಸಿಲ್ಲ. ಆದರೆ ಪೈಲಟ್ ಹಾಗೂ ತರಬೇತಿ ಇಬ್ಬರಿಗೂ ತೀವ್ರ ಗಾಯಗಳಾಗಿದ್ದು ಚಿಕಿತ್ಸೆಗೆಂದು ಬೆಳಗಾವಿಗೆ ಸ್ಥಳಾಂತರಿಸಲಾಗಿದೆ.
ಟಿ20 ವಿಶ್ವಕಪ್ | ಅಫ್ಘಾನ್ ವಿರುದ್ಧ ನ್ಯೂಝಿಲ್ಯಾಂಡ್ ಗೆ 5 ವಿಕೆಟ್ ಜಯ
ಚೆನ್ನೈ, ಫೆ. 8: ಟಿ20 ವಿಶ್ವಕಪ್ ನ ‘ಡಿ’ ಗುಂಪಿನ ಪಂದ್ಯವೊಂದರಲ್ಲಿ ರವಿವಾರ, ಟಿಮ್ ಸೈಫರ್ಟ್ರ ಆಕ್ರಮಣಕಾರಿ ಅರ್ಧ ಶತಕದ ನೆರವಿನಿಂದ ನ್ಯೂಝಿಲ್ಯಾಂಡ್ ತಂಡವು ಅಫ್ಘಾನಿಸ್ತಾನವನ್ನು ಐದು ವಿಕೆಟ್ಗಳಿಂದ ಸೋಲಿಸಿದೆ. ಸೈಫರ್ಟ್ 42 ಎಸೆತಗಳಲ್ಲಿ ಏಳು ಬೌಂಡರಿಗಳು ಮತ್ತು ಮೂರು ಸಿಕ್ಸರ್ ಗಳನ್ನು ಒಳಗೊಂಡ 65 ರನ್ ಗಳನ್ನು ಸಿಡಿಸಿದರು. ಗೆಲ್ಲಲು 20 ಓವರ್ಗಳಲ್ಲಿ 183 ರನ್ಗಳ ಗುರಿಯನ್ನು ಪಡೆದ ನ್ಯೂಝಿಲ್ಯಾಂಡ್ 13 ಎಸೆತಗಳು ಬಾಕಿಯಿರುವಂತೆಯೇ ಗುರಿಯನ್ನು ತಲುಪಿತು. ಅದು 17.5 ಓವರ್ಗಳಲ್ಲಿ ಐದು ವಿಕೆಟ್ಗಳನ್ನು ಕಳೆದುಕೊಂಡು 183 ರನ್ ಗಳನ್ನು ಗಳಿಸಿತು. ಸೈಫರ್ಟ್ ಮತ್ತು ಗ್ಲೆನ್ ಫಿಲಿಪ್ಸ್ ಮೂರನೇ ವಿಕೆಟ್ ಗೆ 47 ಎಸೆತಗಳಲ್ಲಿ 74 ರನ್ಗಳನ್ನು ಕೂಡಿಸಿ ತಂಡದ ಇನಿಂಗ್ಸ್ ಗೆ ಸ್ಥಿರತೆ ತಂದರು. ಅದಕ್ಕೂ ಮೊದಲು ನ್ಯೂಝಿಲ್ಯಾಂಡ್ 14 ರನ್ ಗಳನ್ನು ಗಳಿಸುವಷ್ಟರಲ್ಲಿ ಎರಡು ವಿಕೆಟ್ ಗಳನ್ನು ಕಳೆದುಕೊಂಡು ಸಂಕಷ್ಟದಲ್ಲಿತ್ತು. ಫಿಲಿಪ್ಸ್ 25 ಎಸೆತಗಳಲ್ಲಿ 42 ರನ್ಗಳನ್ನು ಗಳಿಸಿದರು. ಇದು ಟಿ20 ವಿಶ್ವಕಪ್ ಗಳಲ್ಲಿ ನ್ಯೂಝಿಲ್ಯಾಂಡ್ ಯಶಸ್ವಿಯಾಗಿ ಬೆಂಬತ್ತಿದ ಗರಿಷ್ಠ ಮೊತ್ತವಾಗಿದೆ. ಅಫ್ಘಾನಿಸ್ತಾನ ಸ್ಪಿನ್ನರ್ ಮುಜೀಬುರ್ರಹ್ಮಾನ್ ಎರಡನೇ ಓವರ್ ನಲ್ಲಿ ಫಿನ್ ಅಲನ್ ಮತ್ತು ರಚಿನ್ ರವೀಂದ್ರರ ವಿಕೆಟ್ ಗಳನ್ನು ಸತತ ಎರಡು ಎಸೆತಗಳಲ್ಲಿ ಉರುಳಿಸಿದಾಗ ನ್ಯೂಝಿಲ್ಯಾಂಡ್ ಸಂಕಷ್ಟಕ್ಕೆ ಒಳಗಾಯಿತು. ಆದರೆ, ಬಳಿಕ ಸೈಫರ್ಟ್ 39 ಎಸೆತಗಳಲ್ಲಿ ಅರ್ಧ ಶತಕ ಗಳಿಸುವ ಮೂಲಕ ತಂಡವನ್ನು ಮರಳಿ ಹಳಿಗೆ ತಂದರು. ಅವರಿಗೆ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ನೀಡಲಾಯಿತು. ಬಳಿಕ ಮಾರ್ಕ್ ಚಾಪ್ಮನ್ 17 ಎಸೆತಗಳಲ್ಲಿ 28 ರನ್ಗಳನ್ನು ಗಳಿಸಿದರು. ಡ್ಯಾರಿಲ್ ಮಿಚೆಲ್ 14 ಎಸೆತಗಳಲ್ಲಿ 25 ರನ್ಗಳನ್ನು ಸಿಡಿಸಿ ಔಟಾಗದೆ ಉಳಿದರು. ಅಂತಿಮವಾಗಿ ನಾಯಕ ಮಿಚೆಲ್ ಸ್ಯಾಂಟ್ನರ್ 8 ಎಸೆತಗಳಲ್ಲಿ 17 ರನ್ಗಳನ್ನು ಸಿಡಿಸಿ ತಂಡವನ್ನು ವಿಜಯದ ತೀರಕ್ಕೆ ತಲುಪಿಸಿ ಔಟಾಗದೆ ಉಳಿದರು. ಇದಕ್ಕೂ ಮೊದಲು, ಟಾಸ್ ಗೆದ್ದ ಅಫ್ಘಾನಿಸ್ತಾನ ಮೊದಲು ಬ್ಯಾಟಿಂಗ್ ನಡೆಸಿತು. ಅದು ಗುಲ್ಬದೀನ್ ನಯೀಬ್ರ ಅರ್ಧ ಶತಕದ ನೆರವಿನಿಂದ 20 ಓವರ್ಗಳಲ್ಲಿ ಆರು ವಿಕೆಟ್ಗಳ ನಷ್ಟಕ್ಕೆ 182 ರನ್ಗಳನ್ನು ಕಲೆಹಾಕಿತು. ಗುಲ್ಬದೀನ್ ನಯೀಬ್ 35 ಎಸೆತಗಳಲ್ಲಿ 63 ರನ್ಗಳನ್ನು ಬಾರಿಸಿದರು. ನಯೀಬ್ ಮತ್ತು ಸಿದ್ದೀಕುಲ್ಲಾ ಅತಲ್ (24 ಎಸೆತಗಳಲ್ಲಿ 29 ರನ್) ಮೂರನೇ ವಿಕೆಟ್ಗೆ 51 ಎಸೆತಗಳಲ್ಲಿ 79 ರನ್ಗಳನ್ನು ಕೂಡಿಸಿದರು. ಆರಂಭಿಕ ಬ್ಯಾಟರ್ ರಹ್ಮಾನುಲ್ಲಾ ಗುರ್ಬಾಝ್ 22 ಎಸೆತಗಳಲ್ಲಿ 27 ರನ್ಗಳನ್ನು ಗಳಿಸಿ ಉತ್ತಮ ಆರಂಭ ಒದಗಿಸಿದರು. ದರ್ವಿಶ್ ರಸೂಲಿ 13 ಎಸೆತಗಳಲ್ಲಿ 20 ರನ್ಗಳನ್ನು ಮಾಡಿದರು.
ಹುಮನಾಬಾದ್ ತಾಲೂಕು ಆಡಳಿತದಿಂದ ಕೈಗಾರಿಕಾ ಪ್ರದೇಶದ ಕಾರ್ಖಾನೆಗಳಿಗೆ ಭೇಟಿ : ಪರಿಶೀಲನೆ
ಹುಮನಾಬಾದ್: ಪಟ್ಟಣದ ಹೊರವಲಯದ ಕೈಗಾರಿಕಾ ಪ್ರದೇಶದಲ್ಲಿನ ಕಾರ್ಖಾನೆಗಳಿಗೆ ತಹಶೀಲ್ದಾರ್, ತಾಲೂಕು ಪಂಚಾಯತ್ ಇಒ ಹಾಗೂ ಡಿವೈಎಸ್ಪಿ ಸೇರಿದಂತೆ ಇತರೆ ಅಧಿಕಾರಿಗಳ ತಂಡ ಶನಿವಾರ ಭೇಟಿ ನೀಡಿ, ಪರೀಶೀಲನೆ ನಡೆಸಿತು. ಈ ವೇಳೆ ಮಾತನಾಡಿದ ತಹಶೀಲ್ದಾರ್ ಅಂಜುಂ ತಬಸ್ಸುಮ್, ನಾವು ಈ ಕೈಗಾರಿಕಾ ಪ್ರದೇಶದ ಬಹುತೇಕ ಕೈಗಾರಿಕೆಗಳಿಗೆ ತಂಡ ರಚಿಸಿಕೊಂಡು ಬಂದು ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇವೆ. ಕೆಲವೊಂದು ಕಾರ್ಖಾನೆಗಳದ್ದು ಕೆಐಎಡಿಬಿ ಡಾಕ್ಯುಮೆಂಟ್ ನಲ್ಲಿ ಸೆಲ್ ಮತ್ತು ಲೀಜ್ ಆಗಿದ್ದು ಒಂದು ಹೆಸರು ಇದೆ. ಆದರೆ ಇಲ್ಲಿ ಬಂದು ನೋಡಿದಾಗ ಬೇರೆ ಕೆಲಸ ನಡೆಯುತ್ತಿದೆ. ಹಾಗಾಗಿ ಇದರ ಸಂಪೂರ್ಣ ವರದಿಯನ್ನು ತಹಶೀಲ್ದಾರ್, ಡಿವೈಎಸ್ಪಿ ಹಾಗೂ ಪಂಚಾಯತ್ ನವರಿಗೆ ಕೊಡಬೇಕು ಎಂದು ಇದಕ್ಕೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಹೇಳಿದರು. ಸಣ್ಣ ಕೈಗಾರಿಕೆಗಳಿಗೂ ಭೇಟಿ ನೀಡಿ ಪರಿಶೀಲನೆ ನಡೆಸಲಾಗಿದೆ. ಅಲ್ಲಿಯೂ ಕೂಡ ಡಾಕ್ಯುಮೆಂಟ್ ನಲ್ಲಿರುವ ಹೆಸರು ಬೇರೆ ಹಾಗೂ ಇಲ್ಲಿ ಕೆಲಸ ನಡೆಯುತ್ತಿರುವುದು ಬೇರೆ ಇದೆ. ಹಾಗಾಗಿ ಇದರ ಬಗ್ಗೆ ಗೊಂದಲವಾಗಬಾರದು. ಆದ್ದರಿಂದ ಇದಕ್ಕೆ ಸಂಬಂಧಿಸಿದ ಅಧಿಕಾರಿಗಳು ಮೇಲಾಧಿಕಾರಿಗಳ ಚರ್ಚೆ ಮಾಡಿ ಮಾಹಿತಿ ನೀಡುತ್ತೇವೆ ಎಂದು ಹೇಳಿದ್ದಾರೆ. ಇಲ್ಲಿ ಎಸ್ಒಪಿ ಹಾಗೂ ನಿಯಮಗಳ ಹಾಗೆ ಯಾವುದೇ ರೀತಿ ಕೆಲಸ ಆಗುತ್ತಿಲ್ಲ ಎಂದರೆ ಇದಕ್ಕೆ ಸಂಬಂಧಿಸಿದ ಅಧಿಕಾರಿ ವಿರುದ್ಧ ಕಠಿಣ ಕ್ರಮ ಆಗುತ್ತದೆ. ಹಾಗಾಗಿ ಆದಷ್ಟು ಬೇಗ ವರದಿ ಸಲ್ಲಿಸಲು ಅವರನ್ನು ಹೇಳಿದ್ದೇವೆ ಎಂದು ಮಾಹಿತಿ ನೀಡಿದರು. ಈ ಕೈಗಾರಿಕಾ ಪ್ರದೇಶದಲ್ಲಿ ಯಾವುದೇ ರೀತಿಯಲ್ಲಿ ನಿಯಮ ಮೀರಿ ಕೆಲಸ ಆಗಬಾರದು. ಸಾರ್ವಜನಿಕರಿಗೆ ಹಾಗೂ ಪ್ರಾಣಿ ಪಕ್ಷಿಗಳಿಗೆ ಅದರಿಂದ ತೊಂದರೆ ಆಗಬಾರದು ಎಂದು ಕಟ್ಟು ನಿಟ್ಟಾಗಿ ಅಧಿಕಾರಿಗಳಿಗೆ ತಿಳಿಸಲಾಗಿದೆ ಎಂದರು. ಈ ಸಂದರ್ಭದಲ್ಲಿ ತಾಲೂಕು ಪಂಚಾಯತ್ ಇಒ ದೀಪಿಕಾ ನಾಯ್ಕರ್, ಡಿವೈಎಸ್ಪಿ ಮಡೋಳಪ್ಪ, ಪರಿಸರ ಮಾಲಿನ್ಯ ಅಧಿಕಾರಿ ಮೃತ್ಯುಂಜಯ ಹಾಗೂ ಕಾರ್ಮಿಕ ಅಧಿಕಾರಿ ರಾಹುಲ್ ಸೇರಿದಂತೆ ಸಣ್ಣ ಹಾಗೂ ಬೃಹತ್ ಕೈಗಾರಿಕೆ ಇಲಾಖೆ, ಜೆಸ್ಕಾಂ, ಅಗ್ನಿಶಾಮಕ ದಳ ಅಧಿಕಾರಿಗಳು ಉಪಸ್ಥಿತರಿದ್ದರು.
ಆರು ಪ್ರಮುಖ ಒಪ್ಪಂದಗಳಿಗೆ ಭಾರತ-ಮಲೇಶ್ಯಾ ಸಹಿ
ದ್ವಿಪಕ್ಷೀಯ ವಹಿವಾಟಿನಲ್ಲಿ ಸ್ಥಳೀಯ ಕರೆನ್ಸಿ ಬಳಸಲು ನಿರ್ಧಾರ
Bengaluru | ಡೆತ್ನೋಟ್ ಬರೆದಿಟ್ಟು ಬಾಡಿ ಬಿಲ್ಡರ್ ಆತ್ಮಹತ್ಯೆ
ಬೆಂಗಳೂರು : ಪ್ರೀತಿಸಿದ ಯುವತಿಗೆ ಬೇರೊಬ್ಬನ ಜತೆ ಮದುವೆ ನಿಶ್ಚಯವಾಯಿತೆಂದು ಮನನೊಂದು ಡೆತ್ನೋಟ್ ಬರೆದಿಟ್ಟು ಯುವಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ ಮಹಾಲಕ್ಷ್ಮೀ ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವರದಿಯಾಗಿದೆ. ಫೆ.7ರ ಶನಿವಾರ ಸಂಜೆ ಘಟನೆ ನಡೆದಿದೆ. ಮನೆಯಲ್ಲಿ ನೇಣು ಬಿಗಿದುಕೊಂಡು ಕಿರಣ್(26) ಎಂಬ ಯುವಕ ಸಾವನ್ನಪ್ಪಿದ್ದಾರೆ. ಇವರು ಮೂರು ವರ್ಷಗಳಿಂದ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದರು. ಆಕೆಗೆ ಬೇರೆ ಯುವಕನ ಜತೆ ಮದುವೆ ನಿಶ್ಚಯವಾದ ಕಾರಣ, ಯುವತಿ ಹಾಗೂ ಆಕೆಯ ತಾಯಿಯ ಹೆಸರನ್ನು ಡೆತ್ನೋಟ್ನಲ್ಲಿ ಉಲ್ಲೇಖಿಸಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದುಬಂದಿದೆ. ಹಲವು ವರ್ಷಗಳಿಂದ ಜಿಮ್ ಟ್ರೈನರ್, ಬಾಡಿ ಬಿಲ್ಡರ್ ಆಗಿ ಗುರುತಿಸಿಕೊಂಡಿದ್ದ ಕಿರಣ್, ಮೂರು ವರ್ಷಗಳಿಂದ ಯುವತಿಯನ್ನು ಪ್ರೀತಿಸುತ್ತಿದ್ದರು. ಆದರೆ, ತನಗೆ ಬೇರೆ ಯುವಕನೊಂದಿಗೆ ಮದುವೆ ನಿಶ್ಚಯವಾಗಿದೆ ಎಂದಿದ್ದ ಯುವತಿ, ಆಮಂತ್ರಣ ಪತ್ರಿಕೆ ತೋರಿಸಿದ್ದರು ಎಂಬ ಮಾಹಿತಿ ಇದೆ. ಇದರಿಂದಾಗಿ ಕಿರಣ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಈ ಘಟನಾ ಸ್ಥಳಕ್ಕೆ ಮಹಾಲಕ್ಷ್ಮೀ ಲೇಔಟ್ ಠಾಣೆಯ ಪೊಲೀಸರು ಭೇಟಿ ನೀಡಿ ಪರೀಶೀಲಿಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಈ ಸಂಬಂಧ ಯುವತಿ ಹಾಗೂ ಆಕೆಯ ಕುಟುಂಬಸ್ಥರ ವಿರುದ್ಧ ಮಹಾಲಕ್ಷ್ಮೀ ಲೇಔಟ್ ಠಾಣೆಗೆ ಕಿರಣ್ ಕುಟುಂಬಸ್ಥರು ದೂರು ನೀಡಿದ್ದು, ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಸಿಎಂ ಬದಲಾವಣೆ ವಿಚಾರ ಹೈಕಮಾಂಡ್ಗೆ ಬಿಟ್ಟಿದ್ದು : ಸಚಿವ ದಿನೇಶ್ ಗುಂಡೂರಾವ್
ಬೀದರ್ : ಯಾರೇ ಏನೇ ಹೇಳಿದರೂ ಸಿಎಂ ಬದಲಾವಣೆ ಆಗಲ್ಲ. ಈ ಬಗ್ಗೆ ತೀರ್ಮಾನ ಪಕ್ಷದ ವರಿಷ್ಠರು ಮಾಡುತ್ತಾರೆ. ಅದರ ಬಗ್ಗೆ ನಾವು ಯಾರು ಕೂಡ ತಲೆಕೆಡಿಸಿಕೊಳ್ಳುವ ಅವಶ್ಯಕತೆ ಇಲ್ಲ. ಅದರ ಚರ್ಚೆ ಮಾಡುವ ಅವಶ್ಯಕತೆ ಇಲ್ಲ. ಒಬ್ಬೊಬ್ಬರ ಹೇಳಿಕೆಗಳಿಂದ ಈ ರೀತಿ ಅನಾವಶ್ಯಕ ಚರ್ಚೆಯಾಗುತ್ತದೆ. ಹೈಕಮಾಂಡ್ ತೀರ್ಮಾನಕ್ಕೆ ಎಲ್ಲರೂ ಬದ್ಧರಾಗಿದ್ದೇವೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು. ನಗರದ ವಿಮಾನ ನಿಲ್ದಾಣದಲ್ಲಿ ರವಿವಾರ ಪತ್ರಕರ್ತರೊಂದಿಗೆ ಮಾತನಾಡಿದ ಸಚಿವ ದಿನೇಶ್ ಗುಂಡೂರಾವ್, ನಮ್ಮ ಪಕ್ಷದಲ್ಲಿ ಯಾವುದೇ ರೀತಿಯ ಗುಂಪುಗಾರಿಕೆ ಇಲ್ಲ. ಭಿನ್ನಮತ ಕೂಡ ಇಲ್ಲ. ಅಧಿವೇಶನದಲ್ಲಿಯೂ ಕೂಡ ಸಿಎಂ, ಡಿಸಿಎಂ ಹಾಗೂ ನಾವೆಲ್ಲರೂ ಒಗ್ಗಟ್ಟಾಗಿದ್ದೇವೆ. ಪಕ್ಷದ ಹಿತದೃಷ್ಟಿಯಿಂದ ಮುಂದೆ ಏನು ಮಾಡಬೇಕು ಅದನ್ನು ಹೈಕಮಾಂಡ್ ಮಾಡುತ್ತದೆ. ಇದರ ಬಗ್ಗೆ ಮಾತಾಡುವ ಅವಶ್ಯಕತೆ ಇಲ್ಲ. ಸಿಎಂ, ಡಿಸಿಎಂ ಅವರು ಕೂಡ ಹೈಕಮಾಂಡ್ ಹೇಳಿದ ಹಾಗೆ ನಡೆಯುತ್ತಾರೆ ಎಂದು ಹೇಳಿದ್ದಾರೆ. ಹಾಗಾಗಿ ಅದರ ಬಗ್ಗೆ ಚರ್ಚೆ ಮಾಡುವ ಅವಶ್ಯಕತೆ ಇಲ್ಲ ಎಂದರು. ಇವಿಎಂ ಬಗ್ಗೆ ಪ್ರತಿಕ್ರಿಯೆ ನೀಡಿದ ಸಚಿವ ದಿನೇಶ್ ಗುಂಡೂರಾವ್, ಈಗಾಗಲೇ ಬೆಂಗಳೂರಿನ ಮಹಾನಗರ ಪಾಲಿಕೆಯ ಚುನಾವಣೆಗಳು ಬ್ಯಾಲೆಟ್ ಪೇಪರ್ ಅಲ್ಲಿ ಮಾಡಬೇಕು ಎಂದಾಗಿದೆ. ಅನೇಕ ಆಧುನಿಕ ರಾಷ್ಟ್ರಗಳು ಕೂಡ ಇವಿಎಂ ಮೇಲೆ ನಂಬಿಕೆ ಇಟ್ಟುಕೊಳ್ಳುತ್ತಿಲ್ಲ. ಇವಿಎಂ ಕೂಡ ಹಸ್ತಕ್ಷೇಪ ಮಾಡುವ ಅವಶ್ಯಕತೆ ಇರುತ್ತದೆ. ಹಾಗಾಗಿ ದೊಡ್ಡ ದೊಡ್ಡ ರಾಷ್ಟ್ರಗಳು ಕೂಡ ಇವಿಎಂ ಉಪಯೋಗ ಮಾಡುವುದಿಲ್ಲ. ಇವಿಎಂ ನಲ್ಲಿ ತಪ್ಪು ಇದೆ ಅಂತ ನಾನು ಹೇಳುತ್ತಿಲ್ಲ. ಆದರೆ ತಪ್ಪು ಇರುವಂತಹ ಸಂಶಯ ಇದೆ. ಹಾಗಾಗಿ ಯಾವುದೇ ಸಂಶಯಕ್ಕೆ ಆಸ್ಪದ ಇರಬಾರದು. ಚುನಾವಣಾ ಆಯೋಗ ಇದನ್ನು ಸ್ಪಷ್ಟವಾಗಿ, ಪಾರದರ್ಶಕತೆಯಿಂದ ನೋಡಲಿಲ್ಲ. ನಮ್ಮ ಸಮಸ್ಯೆಯನ್ನು ಬಗೆಹರಿಸಲಿಲ್ಲ ಎಂದು ಹೇಳಿದರು.
ದಿಢೀರನೆ ಎಂಟ್ರಿಕೊಟ್ಟ ಮೊದಲ ಪತ್ನಿ : ಎರಡನೇ ಮದುವೆಗೆ ಸಜ್ಜಾಗುತ್ತಿದ್ದವ ಕಕ್ಕಾಬಿಕ್ಕಿ
ಎರಡನೇ ಮದುವೆ ವೇಳೆ ತಾಳಿ ಕಟ್ಟಲು ಸಜ್ಜಾಗುತ್ತಿದ್ದವಗೆ ಮೊದಲ ಪತ್ನಿ ಶಾಕ್ ನೀಡಿದ್ದಾಳೆ. ಇನ್ನೇನು ತಾಳಿ ಕಟ್ಟಬೇಕು ಎನ್ನುವಷ್ಟರಲ್ಲಿ ಮೊದಲ ಪತ್ನಿ ಎಂಟ್ರಿಯಾಗಿದ್ದಾಳೆ. ಮದುವೆಯಾಗಲು ಹೊರಟಿದ್ದ ಭೂಪ ಕಕ್ಕಾಬಿಕ್ಕಿಯಾಗಿದ್ದಾನೆ. ಎರಡು ಕುಟುಂಬಸ್ಥರ ನಡುವೆ ಮಾತಿನ ಚಕಮಕಿ ನಡೆದಿದೆ. ಮದುವೆಯ ಗಂಡು ಪೊಲೀಸರ ಅತಿಥಿಯಾಗಿದ್ದಾನೆ.
ಪರಿಶಿಷ್ಟರಿಗೆ ಮೀಸಲಿಟ್ಟ ಹಣ ಅನ್ಯ ಉದ್ದೇಶಕ್ಕೆ ಬಳಸಬೇಡಿ : ಛಲವಾದಿ ನಾರಾಯಣಸ್ವಾಮಿ ಆಗ್ರಹ
ಬೆಂಗಳೂರು : ಎಸ್ಸಿ-ಎಸ್ಟಿ ವರ್ಗದ ವರ್ಗದವರಿಗೆ ಗ್ಯಾರಂಟಿಗಳ ಮೂಲಕ ನೀಡುವ ಸೌಲಭ್ಯವನ್ನು ಸಾಮಾನ್ಯ ನಿಧಿಯಿಂದಲೇ ಭರಿಸಬೇಕು. ಪರಿಶಿಷ್ಟರ ಕಲ್ಯಾಣಕ್ಕಾಗಿ ಮೀಸಲಿಟ್ಟ ಹಣವನ್ನು ಯಾವುದೇ ಕಾರಣಕ್ಕೆ ಗ್ಯಾರಂಟಿ ಯೋಜನೆಗಳಿಗೆ ಬಳಕೆ ಮಾಡಬಾರದು ಎಂದು ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಆಗ್ರಹಿಸಿದ್ದಾರೆ. ರವಿವಾರ ಈ ಸಂಬಂಧ ಸಚಿವ ಡಾ.ಎಚ್.ಸಿ.ಮಹದೇವಪ್ಪಗೆ ಪತ್ರ ಬರೆದಿರುವ ಅವರು, ಮೂರು ವರ್ಷಗಳಲ್ಲಿ ಅನ್ಯ ಉದ್ದೇಶಗಳಿಗೆ ಬಳಸಲಾದ 38,870ಕೋಟಿ ರೂ.ಹಣವನ್ನು ಎಸ್ಸಿಪಿ-ಟಿಎಸ್ಪಿ ಯೋಜನೆಗೆ ಮರುಪಾವತಿಸಿ, ಬಾಕಿ ಉಳಿದಿರುವ ಅಭಿವೃದ್ಧಿ ಕಾಮಗಾರಿಗಳಿಗೆ ಬಳಸಬೇಕು. 2026-27ನೇ ಸಾಲಿನ ಬಜೆಟ್ನಲ್ಲಿ ಎಸ್ಸಿಪಿ-ಟಿಎಸ್ಪಿ ಹಣವನ್ನು ಗ್ಯಾರಂಟಿಗಳಿಗೆ ಬಳಸುವುದಿಲ್ಲವೆಂದು ಲಿಖಿತ ಭರವಸೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ. ಬಜೆಟ್ನಲ್ಲಿ ಎಸ್ಸಿಪಿ-ಟಿಎಸ್ಪಿ ನಿಧಿಯು ಕೇವಲ ಆಯಾ ಸಮುದಾಯಗಳ ನೇರ ಅಭಿವೃದ್ಧಿ ಕಾರ್ಯಗಳಿಗೆ ಮಾತ್ರ ಬಳಕೆಯಾಗುವಂತೆ ಕಟ್ಟುನಿಟ್ಟಿನ ನಿಯಮ ಜಾರಿಗೊಳಿಸಬೇಕು. ರಾಜಕೀಯ ಲಾಭಕ್ಕಾಗಿ ಶೋಷಿತ ಸಮುದಾಯಗಳ ಹಕ್ಕನ್ನು ಕಸಿದುಕೊಳ್ಳುವ ಮಾರ್ಗ ಬಿಟ್ಟು, ಅವರಿಗೆ ಸಾಂವಿಧಾನಿಕವಾಗಿ ಸಲ್ಲಬೇಕಾದ ಪಾಲನ್ನು ತಲುಪಿಸಬೇಕು ಎಂದು ಅವರು ಕೋರಿದ್ದಾರೆ. ಪರಿಶಿಷ್ಟರ ಬಡತನ ಮತ್ತು ಅಸಹಾಯಕತೆಯನ್ನು ಸರಕಾರದ ಆರ್ಥಿಕ ಹೊರೆ ಇಳಿಸಿಕೊಳ್ಳಲು ಬಳಸಿಕೊಳ್ಳುವ ಕುತಂತ್ರವನ್ನು ಖಂಡಿಸಬೇಕಿದೆ. ಈ ಸಮುದಾಯಗಳ ಸರ್ವಾಂಗೀಣ ಅಭಿವೃದ್ಧಿ ಕುಂಠಿತವಾದರೆ ಅದಕ್ಕೆ ಸರಕಾರವೇ ನೇರ ಹೊಣೆಯಾಗುತ್ತದೆ. ಈ ಬಗ್ಗೆ ಸರಕಾರವು ಸಕಾರಾತ್ಮಕ ನಿರ್ಧಾರ ತೆಗೆದುಕೊಳ್ಳದಿದ್ದರೆ, ಬೀದಿಗಿಳಿದು ಹೋರಾಟ ಮಾಡುವುದು ಅನಿವಾರ್ಯವಾಗುತ್ತದೆ ಎಂದು ನಾರಾಯಣಸ್ವಾಮಿ ಎಚ್ಚರಿಕೆ ನೀಡಿದ್ದಾರೆ.
ಪುಷ್ಪಮಾಲಾ ಎ.ಅಣ್ಣಿಗೇರಿ, ಗುರುರಾಜ್ಗೆ ‘ಎಸ್.ಪಿ.ವರದರಾಜು ಪ್ರಶಸ್ತಿ’ : ಡಾ.ಬರಗೂರು ರಾಮಚಂದ್ರಪ್ಪ
ಬೆಂಗಳೂರು : ಇಪ್ಪತ್ತನೇ ವರ್ಷದ ಎಸ್.ಪಿ.ವರದರಾಜು ರಂಗಭೂಮಿ ಪ್ರಶಸ್ತಿಗೆ ಪುಷ್ಪಮಾಲಾ ಎ.ಅಣ್ಣೀಗೇರಿ ಮತ್ತು ಚಲನಚಿತ್ರ ಪ್ರಶಸ್ತಿಗೆ ಗುರುರಾಜು ಅವರು ಭಾಜನರಾಗಿದ್ದಾರೆ ಎಂದು ಹಿರಿಯ ಸಾಹಿತಿ ನಾಡೋಜ ಡಾ.ಬರಗೂರು ರಾಮಚಂದ್ರಪ್ಪ ತಿಳಿಸಿದ್ದಾರೆ. ರವಿವಾರ ಈ ಕುರಿತು ಪ್ರಕಟನೆ ನೀಡಿರುವ ಅವರು, ಎಸ್.ಪಿ.ವರದರಾಜು ಆತ್ಮೀಯ ಬಳಗದ ವತಿಯಿಂದ ಪ್ರತಿವರ್ಷ, ರಂಗಭೂಮಿ ಮತ್ತು ಚಲನಚಿತ್ರ ಕ್ಷೇತ್ರದ ತಲಾ ಒಬ್ಬರಿಗೆ ಎಸ್.ಪಿ.ವರದರಾಜು ಪ್ರಶಸ್ತಿಯನ್ನು ನೀಡಲಾಗುತ್ತಿದೆ. ತಮ್ಮ ಏಳನೇ ವಯಸ್ಸಿಗೆ ರಂಗಭೂಮಿ ಪ್ರವೇಶ ಮಾಡಿದ ಪುಷ್ಪಮಾಲಾ ಎ.ಅಣ್ಣಿಗೇರಿ ಅವರು ಕರ್ನಾಟಕದ ಬಹುಪಾಲು ನಾಟಕ ಕಂಪೆನಿಗಳಲ್ಲಿ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದಾರೆ ಎಂದು ತಿಳಿಸಿದ್ದಾರೆ. 75 ವರ್ಷ ತುಂಬಿರುವ ಗುರುರಾಜ್ ಅವರು ಕನ್ನಡ ಚಿತ್ರರಂಗದಲ್ಲಿ ಸಹ ನಿರ್ದೇಶನ, ನಿರ್ಮಾಣ ನಿರ್ವಹಣೆ ಸೇರಿ ವಿವಿಧ ವಿಭಾಗಗಳಲ್ಲಿ ದುಡಿದಿದ್ದಾರೆ. ಸ್ವತಂತ್ರವಾಗಿ ಎರಡು ಚಲನಚಿತ್ರಗಳನ್ನು ನಿರ್ದೇಶಿಸಿದ್ದಾರೆ ಎಂದು ತಿಳಿಸಿದ್ದಾರೆ. ವರದರಾಜು ಪ್ರಶಸ್ತಿ ಪ್ರಧಾನ ಸಮಾರಂಭವು ಫೆ.14ರಂದು ಸಂಜೆ 5ಗಂಟೆಗೆ ಬೆಂಗಳೂರಿನ ಭಾರತ ಸೈಟ್ಸ್ ಮತ್ತು ಗೈಡ್ಸ್ನ ಕೊಂಡಜ್ಜಿ ಬಸಪ್ಪ ಸಭಾಂಗಣದಲ್ಲಿ ನಡೆಯಲಿದ್ದು, ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಕನ್ನಡದ ಪ್ರಸಿದ್ಧ ಚಲನಚಿತ್ರ ಕಲಾವಿದೆಯರಾದ ಅಂಬಿಕಾ ಮತ್ತು ಗೀತಾ, ರಾಮಕೃಷ್ಣ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ. ಗಾಯಕಿ ಮಂಜುಳಾ ಗುರುರಾಜ್ ಅವರು ಡಾ.ರಾಜಕುಮಾರ್ ಅವರ ಜೊತೆಗೆ ಹಾಡಿದ ಕೆಲವು ಚಿತ್ರಗೀತೆಗಳ ಗಾಯನವನ್ನು ನಡೆಸಿಕೊಡಲಿದ್ದಾರೆ. ಡಾ.ರಾಜಕುಮಾರ್ ಮತ್ತು ವರದರಾಜು ಅವರ ಕುಟುಂಬದ ಪ್ರತಿನಿಧಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ 2.97 ಕೋಟಿ ಮೌಲ್ಯದ ಹೈಡ್ರೋಪೋನಿಕ್ ಗಾಂಜಾ ವಶ
ಬೆಂಗಳೂರು : ದೇವನಹಳ್ಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ವಿಶೇಷ ಕಾರ್ಯಾಚರಣೆ ನಡೆಸಿ ವಿದೇಶದಿಂದ ಅಕ್ರಮವಾಗಿ ಸಾಗಿಸಲಾಗುತ್ತಿದ್ದ 2.97 ಕೋಟಿ ರೂ. ಮೌಲ್ಯದ ಹೈಡ್ರೋಪೋನಿಕ್ ಗಾಂಜಾವನ್ನು ವಶಪಡಿಸಿಕೊಂಡು ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಮೂವರು ಆರೋಪಿಗಳನ್ನು ಬಂಧಿಸಿರುವುದಾಗಿ ವರದಿಯಾಗಿದೆ. ಥಾಯ್ಲೆಂಡ್ನ ಪುಕೆಟ್ ಹಾಗೂ ಮಲೇಶಿಯಾದಿಂದ ಕೆಐಎಬಿಗೆ ಆಗಮಿಸಿದ್ದ ಮೂವರು ಪ್ರಯಾಣಿಕರ ಲಗೇಜ್ ಬ್ಯಾಗ್ಗಳನ್ನು ಇಮಿಗ್ರೇಷನ್ ವಿಭಾಗದಲ್ಲಿ ಪರಿಶೀಲಿಸಿದಾಗ, ಪ್ಯಾಕೆಟ್ಗಳಾಗಿ ಅಡಗಿಸಿಟ್ಟಿದ್ದ ಒಟ್ಟು 8.5 ಕೆ.ಜಿ. ಹೈಡ್ರೋಪೋನಿಕ್ ಗಾಂಜಾ ಪತ್ತೆಯಾಗಿದೆ ಎಂದು ಮೂಲಗಳು ತಿಳಿಸಿವೆ. ಸದ್ಯ, ಆರೋಪಿಗಳ ವಿರುದ್ಧ ಕಸ್ಟಮ್ಸ್ ಅಧಿಕಾರಿಗಳು ಕಾನೂನು ಕ್ರಮ ಜರುಗಿಸಿರುವುದಾಗಿ ತಿಳಿದುಬಂದಿದೆ.
ಸೇಡಂ| ಉಚಿತ ಹೃದಯ ತಪಾಸಣಾ ಶಿಬಿರಕ್ಕೆ ಸಚಿವ ಡಾ. ಶರಣಪ್ರಕಾಶ್ ಪಾಟೀಲ್ ಚಾಲನೆ
ಸೇಡಂ: ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ, ಪೂಜ್ಯ ಶ್ರೀ ಮಡಿವಾಳಯ್ಯ ಸ್ವಾಮಿ ಸ್ಮಾರಕ ಚಿರಾಯು ಆಸ್ಪತ್ರೆ ಹಾಗೂ ಡಾ. ಶರಣಪ್ರಕಾಶ ಪಾಟೀಲ್ ಅಭಿಮಾನಿ ಬಳಗದ ಸಹಯೋಗದಲ್ಲಿ ರವಿವಾರ ನಗರದ ಕೊತ್ತಲ ಬಸವೇಶ್ವರ ದೇವಾಲಯದ ನಾಗೇಂದ್ರಪ್ಪ ಬಿ. ಪಾಟೀಲ್ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿದ್ದ ಉಚಿತ ಹೃದಯ ತಪಾಸಣೆ ಶಿಬಿರವನ್ನು ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ಅವರು ಚಾಲನೆ ನೀಡಿದರು. ಈ ವೇಳೆ ಮಾತನಾಡಿದ ಸಚಿವ ಡಾ.ಶರಣಪ್ರಕಾಶ್ ಪಾಟೀಲ್, ಕಲ್ಯಾಣ ಕರ್ನಾಟಕ ಭಾಗದ ಜನರು ಸುಸಜ್ಜಿತ ಚಿಕಿತ್ಸೆಗೆ ಬೆಂಗಳೂರಿನಂತಹ ದೂರದ ನಗರಗಳಿಗೆ ತೆರಳುವ ಅವಶ್ಯಕತೆ ತಪ್ಪಿಸುವ ಉದ್ದೇಶದಿಂದ ಕಲಬುರಗಿಯನ್ನೇ ಸಮಗ್ರ ಹೆಲ್ತ್ ಕೇರ್ ಹಬ್ ಆಗಿ ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಹೇಳಿದರು. ಕಲಬುರಗಿಯಲ್ಲಿ ಈಗಾಗಲೇ ಜಿಮ್ಸ್, ಕಿದ್ವಾಯಿ, ಟ್ರಾಮಾ ಸೆಂಟರ್ ಹಾಗೂ ತಾಯಿ-ಮಕ್ಕಳ ಆಸ್ಪತ್ರೆಗಳು ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿವೆ. ಇದರ ಮುಂದಿನ ಹಂತವಾಗಿ ಬೆಂಗಳೂರಿನ ಖ್ಯಾತ ಇಂದಿರಾಗಾಂಧಿ ಮಕ್ಕಳ ಆಸ್ಪತ್ರೆ ಹಾಗೂ ನಿಮ್ಹಾನ್ಸ್ ಆಸ್ಪತ್ರೆಯ ಶಾಖೆಗಳನ್ನು ಕಲಬುರಗಿಯಲ್ಲಿ ಸ್ಥಾಪಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಇದರಿಂದ ಈ ಭಾಗದಲ್ಲಿ ಆರೋಗ್ಯ ಸೇವೆಗೆ ಹೊಸ ದಿಕ್ಕು ದೊರೆಯಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು. ಹೃದಯದ ಆರೋಗ್ಯಕ್ಕೆ ವೈದ್ಯರ ಪಂಚಸೂತ್ರ ಕಾರ್ಯಕ್ರಮದಲ್ಲಿ ಜಯದೇವ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ವೀರೇಶ್ ಪಾಟೀಲ್ ಸಾರ್ವಜನಿಕರಲ್ಲಿ ಆರೋಗ್ಯ ಜಾಗೃತಿ ಮೂಡಿಸಿ ಹೃದಯ ಆರೋಗ್ಯ ಕಾಪಾಡಿಕೊಳ್ಳಲು ಈ ಸಲಹೆಗಳನ್ನು ನೀಡಿದರು. ಶಿಬಿರದಲ್ಲಿ ನೂರಾರು ಜನರಿಗೆ ಇಸಿಜಿ, ಶುಗರ್, ರಕ್ತದೊತ್ತಡ, 2ಡಿ ಇಕೋ ತಪಾಸಣೆಗಳನ್ನು ಮಾಡಲಾಯಿತು. ಜಯದೇವ ಆಸ್ಪತ್ರೆಯ ವೈದ್ಯಕೀಯ ಆಡಳಿತಾಧಿಕಾರಿ ಡಾ. ರುದ್ರಪ್ಪ ಗುಗವಾಡ ಮಾತನಾಡಿದರು. ಕಾರ್ಯಕ್ರಮದಲ್ಲಿ ಕೊತ್ತಲ ಬಸವೇಶ್ವರ ದೇವಾಸ್ಥಾನದ ಪೂಜ್ಯ ಶ್ರೀ ಡಾ. ಸದಾಶಿವ ಮಹಾಸ್ವಾಮಿಗಳು, ಹಾಲಪಯ್ಯ ವಿರಕ್ತ ಮಠದ ಪೂಜ್ಯ ಶ್ರೀ ಪಂಚಾಕ್ಷರ ಮಹಾಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸಿದ್ದರು. ಕೃಷಿ ಸಮಾಜದ ರಾಜ್ಯ ಸದಸ್ಯ ಬಸವರಾಜ ಪಾಟೀಲ್ ಊಡಗಿ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ವಿಶ್ವನಾಥ ಪಾಟೀಲ್ ಬೊಮ್ಮನಳ್ಳಿ, ಬಸವರಾಜ ರೇವಗೊಂಡ, ಬ್ಲಾಕ್ ಕಾಂಗ್ರೆಸ್ ಸಮಿತಿಯ ಪದಾಧಿಕಾರಿಗಳು ಹಾಗೂ ಅಭಿಮಾನಿ ಬಳಗದ ಸದಸ್ಯರು ಉಪಸ್ಥಿತರಿದ್ದರು.
ಭಾರತ-ಅಮೆರಿಕ ವ್ಯಾಪಾರ ಒಪ್ಪಂದ ವಿರೋಧಿಸಿ ಫೆ. 12ರಂದು ರಾಷ್ಟ್ರವ್ಯಾಪಿ ಪ್ರತಿಭಟನೆಗೆ ಕರೆ ನೀಡಿದ ರೈತ ಸಂಘಟನೆಗಳು
ಕೇಂದ್ರ ಸಚಿವ ಪಿಯೂಷ್ ಗೋಯಲ್ ರಾಜೀನಾಮೆಗೆ ಸಂಯುಕ್ತ ಕಿಸಾನ್ ಮೋರ್ಚಾ ಆಗ್ರಹ
ಯುನಿವೆಫ್: ರಮಝಾನ್ ಸ್ವಾಗತ ಕಾರ್ಯಕ್ರಮ
ಮಂಗಳೂರು: ಯುನಿವೆಫ್ ಕರ್ನಾಟಕದ ವತಿಯಿಂದ ರಮಝಾನ್ ಸ್ವಾಗತ ಕಾರ್ಯಕ್ರಮವು ನಗರದ ಕಂಕನಾಡಿಯ ಜಮೀಯತುಲ್ ಫಲಾಹ್ ಹಾಲ್ನಲ್ಲಿ ಜರುಗಿತು. ರಮಝಾನ್ ನಮ್ಮನ್ನು ಬದಲಿಸಲಿ ಎಂಬ ವಿಷಯದಲ್ಲಿ ಮಾತನಾಡಿದ ಯುನಿವೆಫ್ ಅಧ್ಯಕ್ಷ ರಫೀಉದ್ದೀನ್ ಕುದ್ರೋಳಿ ಉಪವಾಸ ಕೇವಲ ಆಹಾರಕ್ಕೆ ಮಾತ್ರ ಸೀಮಿತವಲ್ಲ. ಮಾತು ಮತ್ತು ಕೃತಿಗಳಲ್ಲೂ ಅದು ಪ್ರತಿಬಿಂಬಿಸ ಬೇಕು. ರಮಝಾನ್ ಪಾಪ ವಿಮೋಚನೆಯ ತಿಂಗಳು. ರಮಝಾನ್ ದೊರಕಿಯೂ ಪಾಪ ವಿಮೋಚನೆ ಮಾಡಿಸಿಕೊ ಳ್ಳದವನು ನಷ್ಟ ಹೊಂದಿದವರಲ್ಲಾಗುತ್ತಾನೆ. ಪ್ರತಿನಿತ್ಯ ದೇವಸ್ಮರಣೆ ಮತ್ತು ರಾತ್ರಿಗಳಲ್ಲಿ ವಿಶೇಷ ಪ್ರಾರ್ಥನೆ, ದಿಕ್ರ್ಗಳ ಮೂಲಕ ಅಲ್ಲಾಹನ ಸಾಮಿಪ್ಯ ಗಳಿಸಲು ಪ್ರಯತ್ನಿಸಬೇಕು ಎಂದರು. ರಮಝಾನ್ ಕುರ್ಆನಿನ ತಿಂಗಳೂ ಆಗಿದೆ. ಆದುದರಿಂದ ಕುರ್ಆನ್ ಪಾರಾಯಣ ಮತ್ತು ಅಧ್ಯಯನಕ್ಕೆ ಹೆಚ್ಚಿನ ಸಮಯ ಮೀಸಲಿಡಬೇಕು ಎಂದ ರಫೀಉದ್ದೀನ್ ಕುದ್ರೋಳಿ ರಮಝಾನ್ ಕುರಿತಂತೆ ಸಭಿಕರ ಪ್ರಶ್ನೆಗಳಿಗೆ ಉತ್ತರಿಸಿದರು. ಕಾರ್ಯಕ್ರಮದ ಸಂಚಾಲಕ ಹಫೀಝ್ ಶೇಖ್ ಸ್ವಾಗತಿಸಿದರು. ಸಹಸಂಚಾಲಕ ಫಹೀಮುದ್ದೀನ್ ಕಿರಾಅತ್ ಪಠಿಸಿದರು. ಮಂಗಳೂರು ಶಾಖಾಧ್ಯಕ್ಷ ಉಬೈದುಲ್ಲಾ ಬಂಟ್ವಾಳ ಪ್ರಾಸ್ತಾವಿಕ ಮಾತುಗಳನ್ನಾಡಿದರು. ವೇದಿಕೆಯಲ್ಲಿ ಮಂಗಳೂರು ಶಾಖೆಯ ಸದಸ್ಯ ಮೆಹಬೂಬ್ ಸಿ.ಕೆ. ಮತ್ತು ಹಿತೈಷಿ ಅಬ್ದುಲ್ ಖಾದರ್ ಉಪಸ್ಥಿತರಿದ್ದರು.
ಮದುವೆಯಾದರೆ ಹುಷಾರ್... ಯುವಕನಿಂದ ಕೊಲೆ ಬೆದರಿಕೆ: ತಾಯಿ ಮಗಳು ಆತ್ಮಹತ್ಯೆ
ಮಳವಳ್ಳಿ ತಾಲೂಕಿನ ದಳವಾಯಿ ಕೋಡಿಹಳ್ಳಿ ಗ್ರಾಮದಲ್ಲಿ ತಾಯಿ ಮಗಳು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ. ದಳವಾಯಿ ಕೋಡಿಹಳ್ಳಿ ಗ್ರಾಮದ ಎಂ.ಮಹೇಶ್ ಎಂಬುವರ ಪತ್ನಿ ಶಕುಂತಲಾ (37), ಮಗಳು ಪ್ರಿಯಾ (18) ಆತ್ಮಹತ್ಯೆ ಮಾಡಿಕೊಂಡವರು. ಪ್ರಿಯಾಗೆ ಮದುವೆ ಆಗದಂತೆ ಯುವಕನೊಬ್ಬ ಬೆದರಿಕೆ ಹಾಕಿದ್ದು, ಮರ್ಯಾದೆಗೆ ಅಂಜಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಜನವರಿ 31 ರಂದು ಕೇರಳ ಮೂಲದ 26 ವರ್ಷದ ಡೇಟಾ ಸೈಂಟಿಸ್ಟ್ ವಿಷ್ಣು ಜಯಕುಮಾರ್ ಇಂಗ್ಲೆಂಡ್ನ ವೆಸ್ಟ್ ಮಿಡ್ಲ್ಯಾಂಡ್ಸ್ ಕೌಂಟಿಯ ಕವೆಂಟ್ರಿಯಲ್ಲಿರುವ ನೈಟ್ಕ್ಲಬ್ನಲ್ಲಿ ಪಾರ್ಟಿಗೆ ಹೋಗಿದ್ದರು. ಗೆಳೆಯರ ಜತೆಗೆ ಹೋಗಿದ್ದ ಅವರು ಅಂದು ರಾತ್ರಿ ಮನೆಗೆ ಮರಳಿರಲಿಲ್ಲ. ವಿಷ್ಣು ನಾಪತ್ತೆಯಾಗಿ ಮೂರು ದಿನಗಳ ನಂತರ ಕ್ಲಬ್ನಿಂದ ಕೇವಲ ಒಂದು ನಿಮಿಷದ ನಡಿಗೆ ದೂರದಲ್ಲಿರುವ ಸ್ವಾನ್ಸ್ವೆಲ್ ಪಾರ್ಕ್ನಲ್ಲಿರುವ ಈಜುಕೊಳದಲ್ಲಿ ಅವರ ಮೃತದೇಹ ಪತ್ತೆಯಾಗಿತ್ತು. ವಿಷ್ಣು ಸಾವಿನ ಬಗ್ಗೆ ಕುಟುಂಬ ಮತ್ತು ಸ್ನೇಹಿತರು ಅನುಮಾನ ವ್ಯಕ್ತಪಡಿಸಿದ್ದು ತನಿಖೆಗೆ ಒತ್ತಾಯಿಸಿದ್ದಾರೆ. ಜನವರಿಯಲ್ಲಿಯೇ ವಿಷ್ಣು ಮನೆಗೆ ಬರಬೇಕಿತ್ತು. ಹೊಸ ಪ್ರಾಜೆಕ್ಟ್ ಪೂರ್ಣಗೊಳಿಸಬೇಕಾಗಿದ್ದರಿಂದ ಆತನಿಗೆ ಬರಲಾಗಲಿಲ್ಲ. ನಾವು ಅಲ್ಲಿನ ಪೊಲೀಸರೊಂದಿಗೆ ಮಾತುಕತೆ ನಡೆಸುತ್ತಿದ್ದೇವೆ. ಅವರು ನಮಗೆ ಉತ್ತರಿಸುತ್ತಾರೆ ಎಂದು ನಾವು ಭಾವಿಸುತ್ತೇವೆ ಎಂದು ವಿಷ್ಣುವಿನ ಅಪ್ಪ ಜಯಕುಮಾರ್ ಹೇಳಿದ್ದಾರೆ. ತಿರುವನಂತಪುರದ ಅಟ್ಟಿಂಗಲ್ ಅವನವಾಂಚೇರಿ ನಿವಾಸಿಯಾದ ವಿಷ್ಣುವಿನ ಮೃತದೇಹಕ್ಕಾಗಿ ಅಪ್ಪ ಜಯಕುಮಾರ್ ಮತ್ತು ತಾಯಿ ಶಮ್ನಾ ಕಾಯುತ್ತಿದ್ದು, ವೆಸ್ಟ್ ಮಿಡ್ಲ್ಯಾಂಡ್ಸ್ ಪೊಲೀಸರ ವಕ್ತಾರರು ಸಾವನ್ನು ಅನುಮಾನಾಸ್ಪದವೆಂದು ಪರಿಗಣಿಸುತ್ತಿಲ್ಲ ಎಂದು ಹೇಳಿಕೆ ನೀಡಿದ್ದಾರೆ. ಕಝಕೂಟಂನ ಮರಿಯನ್ ಎಂಜಿನಿಯರಿಂಗ್ ಕಾಲೇಜಿನಿಂದ ಬಿ.ಟೆಕ್ ಪದವಿ ಪಡೆದ ವಿಷ್ಣು , 2023 ರಲ್ಲಿ ಕವೆಂಟ್ರಿ ವಿಶ್ವವಿದ್ಯಾಲಯದಿಂದ ಡೇಟಾ ಸೈನ್ಸ್ನಲ್ಲಿ ಎಂಎಸ್ಸಿ ಪೂರ್ಣಗೊಳಿಸಿದ್ದರು. ವಿಶ್ವವಿದ್ಯಾನಿಲಯದಲ್ಲಿ ವಿಷ್ಣು ಅವರ ಬ್ಯಾಚ್ಮೇಟ್ ಮತ್ತು ಖಾಸಗಿ ಸಂಸ್ಥೆಯಲ್ಲಿ ಅವರ ಸಹೋದ್ಯೋಗಿಯಾಗಿದ್ದ ಅರ್ಜುನ್ ಪಿ, ವಿಷ್ಣು ಯಾವತ್ತೂ ಖಿನ್ನತೆಗೊಳಗಾಗಿರಲಿಲ್ಲ. ಮಲ್ಟಿಪ್ಲೇಯರ್ ಆನ್ಲೈನ್ ಆಟಗಳ ಅಪಾರ ಅಭಿಮಾನಿಯಾಗಿದ್ದ ಆತ. ನಾವಿಬ್ಬರೂ ಜತೆಯಾಗಿ ಆಟವಾಡುತ್ತಿದ್ದೆವು. ಕೆಲಸ ಮುಗಿಸಿದ ನಂತರ ನಾವು ಆಗಾಗ್ಗೆ ಸುತ್ತಾಡುತ್ತಿದ್ದೆವು . ಅಂದು ಕ್ಲಬ್ನಲ್ಲಿ ನಡೆದ ನೈಟ್ ಪಾರ್ಟಿಗೆ ಆತ ಹೋಗುವ ಯಾವುದೇ ಪ್ಲಾನ್ ಇರಲಿಲ್ಲ . ಅಂದು ಆತ ಕೇರಳಿಗರಲ್ಲದ ತಮ್ಮ ಇಬ್ಬರು ಸ್ನೇಹಿತರೊಂದಿಗೆ ಪಾರ್ಟಿಗೆ ಹೋಗಿದ್ದರು. ಆ ರಾತ್ರಿ ವಿಷ್ಣು ಜೊತೆಗಿದ್ದ ಸ್ನೇಹಿತರಲ್ಲಿ ಒಬ್ಬರು ವಿಷ್ಣು ಕ್ಲಬ್ ನಿಂದ ಹೊರಗೆ ಹೋಗಿದ್ದಾನೆ ಎಂದು ನಮಗೆ ತಿಳಿಸಿದ್ದರು. ಪಾರ್ಟಿಗೆ ಹೋದವರಲ್ಲಿ ಒಬ್ಬ ಅಲ್ಲಿಂದ ಬೇಗ ಹೋಗಿದ್ದು, ಮತ್ತೊಬ್ಬ ವಿಷ್ಣು ಜತೆಗೇ ಇದ್ದ ಎನ್ನಲಾಗಿದೆ. ಮಧ್ಯರಾತ್ರಿಯ ಸುಮಾರಿಗೆ ವಿಷ್ಣು ತನಗಾಗಿ ಕ್ಯಾಬ್ ಬುಕ್ ಮಾಡಿದ್ದಾನೆ. ವಿಷ್ಣುವನ್ನು ಬೀದಿಯಲ್ಲೇ ಬಿಟ್ಟು ಸ್ನೇಹಿತ ಕ್ಯಾಬ್ ನಲ್ಲಿ ಅಲ್ಲಿಂದ ಹೋಗಿದ್ದ. ಈಗ ಆತನ ಫೋನ್ ಸ್ವಿಚ್ ಆಫ್ ಆಗಿದೆ ಎಂದು ಅರ್ಜುನ್ ಹೇಳಿದ್ದಾರೆ. ಕ್ಯಾಬ್ ಬುಕ್ ಮಾಡಲು ಬಳಸಲಾಗಿದ್ದ ಕಾರಣ ಇನ್ನೊಬ್ಬ ವ್ಯಕ್ತಿ ಆಕಸ್ಮಿಕವಾಗಿ ವಿಷ್ಣುವಿನ ಫೋನ್ ತೆಗೆದುಕೊಂಡಿದ್ದಾನೆ ಎಂದು ಸ್ನೇಹಿತನೊಬ್ಬ ಹೇಳಿದ್ದಾನೆ. ವಿಷ್ಣು ಎರಡು ದಿನದಿಂದ ಕಾಣೆಯಾಗಿದ್ದಾರೆ ಎಂದು ಅವರ ಕಾಮನ್ ಫ್ರೆಂಡ್ ಒಬ್ಬರು ನಮಗೆ ತಿಳಿಸಿದ್ದರು.ಆದರೆ ಒಂದು ದಿನದ ನಂತರ ಫೋನ್ ವಿಷ್ಣುವಿನ ರೂಮ್ಮೇಟ್ಗೆ ಹಿಂತಿರುಗಿಸಲಾಗಿತ್ತು ಎಂದು ಅರ್ಜುನ್ ಹೇಳಿರುವುದಾಗಿ onmanorama.com ವರದಿ ಮಾಡಿದೆ. ಫೆಬ್ರವರಿ 3 ರಂದು, ವಿಷ್ಣುವಿನ ಮೃತದೇಹ ಕೊಳದಲ್ಲಿ ಪತ್ತೆಯಾಗುವ ಒಂದು ದಿನದ ಮೊದಲು, ಸ್ಪಾಟೆಡ್ ಕವೆಂಟ್ರಿ ಸಿಟಿ ಎಂಬ ಫೇಸ್ಬುಕ್ ಪುಟದಲ್ಲಿ ಒಂದು ಪೋಸ್ಟ್ ಕಾಣಿಸಿಕೊಂಡಿತು. ಅದು ಕಾಣೆಯಾದ ಭಾರತೀಯ ವ್ಯಕ್ತಿಯ ಬಗ್ಗೆಯಾಗಿತ್ತು. ರವಿವಾರ ಬೆಳಿಗ್ಗೆ 5 ಗಂಟೆ ಸುಮಾರಿಗೆ ಕಾಸ್ಬಾ ನೈಟ್ಕ್ಲಬ್ ಬಳಿಯ ಸರೋವರದ ಬಳಿ ಅತ ಕೊನೆಯದಾಗಿ ಕಾಣಿಸಿಕೊಂಡಿದ್ದ. ಅವ ಸಿಕ್ಕಾಪಟ್ಟೆ ಕುಡಿದಿದ್ದ, ಅವನಿಗೆ ಪ್ರಜ್ಞೆ ಇರಲಿಲ್ಲ. ಅವನ ಬಳಿ ಫೋನ್ ಇರಲಿಲ್ಲ. ನಾನೇ ಪೊಲೀಸರಿಗೆ ಕರೆ ಮಾಡಿ ಕಾಣೆಯಾದ ವ್ಯಕ್ತಿಯ ಬಗ್ಗೆ ದೂರು ದಾಖಲಿಸಿದ್ದೆ. ತುರ್ತು ಅಧಿಕಾರಿ ವಿಷ್ಣು ವಯಸ್ಕನಾಗಿದ್ದಾನೆ. ಮನೆಗೆ ಹಿಂತಿರುಗಬೇಕೋ ಬೇಡವೋ ಎಂಬುದು ಅವನಿಗೆ ಬಿಟ್ಟಿದ್ದು ಎಂದು ಹೇಳಿರುವುದಾಗಿ ಪೋಸ್ಟ್ ನಲ್ಲಿದೆ. ನನಗೆ ಏನು ಮಾಡಬೇಕೆಂದು ತಿಳಿದಿಲ್ಲ. ನಾನು ಸಿಕ್ಕಾಪಟ್ಟೆ ಚಿಂತೆಯಲ್ಲಿದ್ದೇನೆ ಎಂದು ಪೋಸ್ಟ್ ನಲ್ಲಿ ಬರೆದಿತ್ತು. ನೈಟ್ಕ್ಲಬ್ನಲ್ಲಿ ವಿಷ್ಣು ಜತೆಗೆ ಇದ್ದ ವ್ಯಕ್ತಿಗಳಲ್ಲಿ ಒಬ್ಬರು ಈ ಸಂದೇಶವನ್ನು ಪೋಸ್ಟ್ ಮಾಡಿರುವುದಾಗಿ ವಿಷ್ಣುವಿನ ಸ್ನೇಹಿತರು ಹೇಳಿದ್ದಾರೆ. ಏತನ್ಮಧ್ಯೆ ಈ ಪೋಸ್ಟ್ ಬಗ್ಗೆ ವಿಷ್ಣುವಿನ ಸ್ನೇಹಿತರು ಮತ್ತು ಸಂಬಂಧಿಕರು ಸಂದೇಹ ವ್ಯಕ್ತಪಡಿಸಿದ್ದಾರೆ. ವಿಷ್ಣುವಿನ ರೂಮ್ಮೇಟ್ಗಳು ಸೇರಿದಂತೆ ಅವರನ್ನು ಚೆನ್ನಾಗಿ ಬಲ್ಲವರಿಗೆ ಗೊತ್ತು ವಿಷ್ಣು ಯಾವತ್ತೂ ಅಷ್ಟೊಂದು ಕುಡಿಯಲ್ಲ ಎಂಬುದು. ಆ ರಾತ್ರಿ ಅಲ್ಲಿ ಏನಾಯಿತು ಎಂಬುದರ ಬಗ್ಗೆ ನಮಗೆ ಅನುಮಾನವಿದೆ. ವಿಷ್ಣು ಬಳಿ ಜಾಕೆಟ್ ಇಲ್ಲ, ಫೋನ್ ಇಲ್ಲ ಎಂದು ನಮಗೆ ತಿಳಿಸಲಾಯಿತು. ಟೈಮ್ಲೈನ್ನಲ್ಲಿಯೂ ಅಂತರಗಳಿವೆ. ಕುಟುಂಬವಾಗಿ ದೂರದಲ್ಲಿ ವಾಸಿಸುತ್ತಿರುವುದರಿಂದ ನಾವು ಅಸಹಾಯಕರಾಗಿದ್ದೇವೆ. ಸತ್ಯ ಹೊರ ಬರಬೇಕು ಎಂದು ಸಂಬಂಧಿ ಅರ್ಜುನ್ ಜಾನಿ ಹೇಳಿದ್ದಾರೆ. ಕೆವೆಂಟ್ರಿಯಲ್ಲಿರುವ ವಿಷ್ಣುವಿನ ಸ್ನೇಹಿತರಿಗೂ ಕೂಡಾ ಈ ಸಾವಿನ ಸುದ್ದಿ ನಂಬಲಾಗುತ್ತಿಲ್ಲ. ಆ ಫೇಸ್ ಬುಕ್ ಪೋಸ್ಟ್ ಗೆ ಕಾಮೆಂಟ್ ಮಾಡಿದ ಸ್ನೇಹಿತರೊಬ್ಬರು, ವಿಷ್ಣು ಪೂಲ್ ಬಳಿ ಒಬ್ಬಂಟಿಯಾಗಿ ಉಳಿದುಕೊಂಡಿದ್ದೇಕೆ? ಎಂದು ಕೇಳಿದಾಗ ಪೋಸ್ಟ್ ಬರೆದ ವ್ಯಕ್ತಿ ವಿಷ್ಣು ಅಲ್ಲಿಂದ ಬರುವುದಿಲ್ಲ ಎಂದು ಹೇಳಿರುವುದಾಗಿ ಉತ್ತರಿಸಿದ್ದಾನೆ. ಕೆಲವು ವಿಷಯಗಳು ಇನ್ನೂ ಸ್ಪಷ್ಟವಾಗಿಲ್ಲ ಅಂತಾರೆ ವಿಷ್ಣುವಿನ ಸ್ನೇಹಿತರು. ಪೊಲೀಸರು ಹೇಳಿಕೆಗಳನ್ನು ಸಂಗ್ರಹಿಸಿ ವಿಷ್ಣುವಿನ ಫೋನ್ ಅನ್ನು ವಶಪಡಿಸಿಕೊಂಡಿದ್ದಾರೆ. ಸಾವಿನ ಕಾರಣ ಇನ್ನೂ ತಿಳಿದುಬಂದಿಲ್ಲ. ವಿಷ್ಣುವಿಗೆ ಕೆನಡಾದಲ್ಲಿ ಗೋಕುಲ್ ಎಂಬ ಸಹೋದರನಿದ್ದಾನೆ. ವಿಷ್ಣು ಆಟ ಮತ್ತು ಸೀರೀಸ್ ಗೀಳನ್ನು ಹೊಂದಿದ್ದ ವಿನೋದ ಪ್ರಿಯ ವ್ಯಕ್ತಿ. ಅವರಿಗೆ ಏನಾದರೂ ಸಮಸ್ಯೆಗಳಿದ್ದರೆ, ನಮಗೆ ಹೇಳುತ್ತಿದ್ದರು. ಅವರು ಕೆಲಸದ ಮೇಲೆ ಗಮನಹರಿಸಿದ್ದರು. ಆ ರಾತ್ರಿ ಏನಾಯಿತು ಎಂಬುದರ ಬಗ್ಗೆ ನಮಗೆ ತಿಳಿದಿಲ್ಲ ಎಂದು ಅರ್ಜುನ್ ಹೇಳಿರುವುದಾಗಿ ವರದಿ ಉಲ್ಲೇಖಿಸಿದೆ. ವಿಷ್ಣುವಿನ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಕುಟುಂಬ ಈ ಬಗ್ಗೆ ತನಿಖೆಗೆ ಒತ್ತಾಯಿಸಿದೆ. ಪ್ರಕರಣದ ತನಿಖೆ ನಡೆಸಬೇಕು, ಮೃತದೇಹವನ್ನು ತಾಯ್ನಾಡಿಗೆ ಕರೆತರಬೇಕು ಎಂದು ಕೇರಳದ ಸಂಸದ ಅಡೂರ್ ಪ್ರಕಾಶ್ ಭಾರತೀಯ ರಾಯಭಾರಿ ಕಚೇರಿಗೆ ಪತ್ರ ಬರೆದಿದ್ದಾರೆ.
ಕಲಬುರಗಿ| ಕೋಲಿ ಸಮಾಜದ ಸದಸ್ಯತ್ವ ನೋಂದಣಿ ಅಭಿಯಾನಕ್ಕೆ ಚಾಲನೆ
ಕಾಳಗಿ: ಕೋಲಿ ಸಮಾಜದ ನೂತನ ಅಧ್ಯಕ್ಷರ ಆಯ್ಕೆ ನಿಮಿತ್ತವಾಗಿ ತಾಲೂಕಿನಾದ್ಯಂತ ಕೋಲಿ ಸಮಾಜದ ಸದಸ್ಯತ್ವ ನೋಂದಣಿ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಸಮಾಜದ ತಾಲೂಕು ಪ್ರಧಾನ ಕಾರ್ಯದರ್ಶಿ ಸಿದ್ದು ಕೇಶ್ವರ ಹೇಳಿದರು. ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿದ್ದು ಕೇಶ್ವರ ಅವರು, ತಾಲೂಕಿನಾಧ್ಯಂತ ಫೆ.8 ರಿಂದ ಫೆ.21ರವರೆಗೆ ಕೋಲಿ ಸಮಾಜದ ಅಜೀವ ಸದಸ್ಯತ್ವ ಅಭಿಯಾನ ನಡೆಯಲಿದ್ದು, ಪ್ರತಿ ಗ್ರಾಪಂಯಿಂದ ಕನಿಷ್ಠ 25 ಜನರು ಸದಸ್ಯತ್ವ ಪಡೆದುಕೊಳ್ಳಬಹುದಾಗಿದೆ. ಸದಸ್ಯತ್ವ ನೋಂದಣಿ ಮಾಡಿಕೊಳ್ಳುವವರು ಶುಲ್ಕ ನಗದು 1500ರೂ. ನೀಡಿ ಅಜೀವ ಸದಸ್ಯತ್ವ ಪಡೆದುಕೊಳ್ಳಬೇಕು. ಇಲ್ಲಿ ಸದಸ್ಯತ್ವ ಪಡೆದುಕೊಂಡ ವ್ಯಕ್ತಿಗಳು ಮಾತ್ರ ಸಮಾಜದ ತಾಲೂಕಾಧ್ಯಕ್ಷ ಚುನಾವಣೆಗೆ ನಿಲ್ಲಲು ಅರ್ಹರಾಗಿರುತ್ತಾರೆ ಎಂದರು. ಸದಸ್ಯತ್ವ ಪಡೆದವರು ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ ಅಭ್ಯರ್ಥಿಗಳಿಗೆ ಇವರು ಮಾತ್ರ ಮತ ಚಲಾಯಿಸಲು ಹಕ್ಕನ್ನು ಹೊಂದಿರುತ್ತಾರೆ ಎಂದು ಸಮಾಜದ ಸಭೆಯಲ್ಲಿ ನಿರ್ಣಯ ಮಾಡಲಾಗಿದೆ. ಈ ಸದಸ್ಯತ್ವ ಅಭಿಯಾನದಲ್ಲಿ ಪ್ರಸ್ತುತ ಇರುವ ತಾಲೂಕು ಸಮಿತಿಯ 26 ಜನರು ಸಕ್ರಿಯವಾಗಿ ತೊಡಗಲಿದ್ದಾರೆ ಎಂದು ತಿಳಿಸಿದರು. ಫೆ.21 ಕ್ಕೆ ಸದಸ್ಯತ್ವ ಅಭಿಯಾನ ಮುಗಿಯುತ್ತಿದ್ದಂತೆ ತಾಲೂಕು ಕೋಲಿ ಸಮಾಜ ಅಧ್ಯಕ್ಷರ ಚುನಾವಣೆ ಪ್ರಕ್ರಿಯೆಗಳು ಜರುಗಲಿದೆ ಎಂದು ತಿಳಿಸಿದ ಅವರು, ಸದಸ್ಯತ್ವ ನೊಂದಣಿಗಾಗಿ 9902601425, 9980320821, 8197254266 ಸಂಪರ್ಕಿಸುವಂತೆ ಕೋರಿದರು. ಈ ಸಂದರ್ಭದಲ್ಲಿ ಕೋಲಿ ಸಮಾಜದ ತಾಲೂಕಾಧ್ಯಕ್ಷ ರೇವಣಸಿದ್ದಪ್ಪ ಮುಕರಂಬಿ, ಯುವ ಘಟಕ ತಾಲೂಕಾಧ್ಯಕ್ಷ ಶಿವಕುಮಾರ್ ಕಮಕನೂರ, ಹಿರಿಯ ಮುಖಂಡ ಶಿವರಾಯ ಕೊಲಿ, ಮುಖಂಡರಾದ ಜಗನ್ನಾಥ ಚಂದನಕೇರಿ, ಜಗನ್ನಾಥ ತೇಲಿ, ಪ್ರಭಾಕಾರ ರಟಕಲ್, ಭೀಮರಾಯ ಮಲಘಾಣ, ಶ್ರೀಶೈಲ ತೆಗಲತ್ತಿಪ್ಪಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಸುನ್ನೀ ಯುವಜನ ಸಂಘದಿಂದ 14ನೇ ವರ್ಷದ ಸಾಮೂಹಿಕ ವಿವಾಹ
ಉಳ್ಳಾಲ: ಸುನ್ನೀ ಯುವಜನ ಸಂಘವು ಕಳೆದ 14 ವರ್ಷಗಳಿಂದ ಬಡ ಕುಟುಂಬಗಳ 87 ಹೆಣ್ಮಕ್ಕಳ ವಿವಾಹ ನಡೆಸುವ ಮೂಲಕ ಹೆಣ್ಮಕ್ಕಳು ಹಾಗೂ ಅವರ ಕುಟುಂಬಗಳ ಕಣ್ಣೀರು ಒರೆಸುವ ಮಹತ್ಕಾರ್ಯ ಮಾಡಿದೆ ಎಂದು ಕರ್ನಾಟಕ ಸುನ್ನೀ ಜಂಇಯತುಲ್ ಉಲಮಾ ಕಾರ್ಯದರ್ಶಿ ಹುಸೈನ್ ಸಅದಿ ಕೆ.ಸಿ.ರೋಡು ನುಡಿದರು. ಉಚ್ಚಿಲದ ಖಾಸಗಿ ಸಭಾಂಗಣದಲ್ಲಿ ಸುನ್ನೀ ಯುವಜನ ಸಂಘ (ಎಸ್ವೈಎಸ್) ಮ್ಯಾರೇಜ್ ಸೆಲ್ ಕೆ.ಸಿ.ರೋಡು ಇದರ ಆಶ್ರಯದಲ್ಲಿ ರವಿವಾರ ನಡೆದ 14ನೇ ವರ್ಷದ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮದ ನೇತೃತ್ವ ವಹಿಸಿ ಅವರು ಸಂದೇಶ ನೀಡಿದರು. ಈ ವರ್ಷ ಸಂಘಟನೆಯ ಆಶ್ರಯದಲ್ಲಿ ಇಬ್ಬರು ಹೆಣ್ಮಕ್ಕಳ ವಿವಾಹವು ಸಭಾಂಗಣದಲ್ಲಿ ನಡೆದಿದೆ. ಇನ್ನೂ ಮೂರು ಹೆಣ್ಮಕ್ಕಳ ವಿವಾಹವು ಅವರ ಮನೆಗಳಲ್ಲಿ ನಡೆಯಲಿದೆ. ಸಂಘಟನೆಯಿಂದ ಅಗತ್ಯ ಆರ್ಥಿಕ ನೆರವು ನೀಡಲಾಗಿದೆ. ಜೊತೆಗೆ ಆರ್ಥಿಕವಾಗಿ ಹಿಂದುಳಿದವರಿಗೆ ವೈದ್ಯಕೀಯ ನೆರವು, ಪಡಿತರ ವಿತರಣೆ ಹಾಗೂ ಮನೆ ನಿರ್ಮಾಣಕ್ಕೆ ಸಹ ಸಂಘಟನೆಯಿಂದ ಸಹಕಾರ ನೀಡಲಾಗುತ್ತಿದೆ ಎಂದು ಹುಸೈನ್ ಸಅದಿ ಕೆ.ಸಿ.ರೋಡ್ ತಿಳಿಸಿದರು. 407 ಉಚ್ಚಿಲ ಎಸ್. ಜುಮಾ ಮಸೀದಿಯ ಮುದರ್ರಿಸ್ ಇಬ್ರಾಹಿಂ ಫೈಝಿ ನಿಖಾ ಖುತ್ಬಾ ಪಾರಾಯಣಗೈದರು. ಕಾರ್ಯಕ್ರಮದಲ್ಲಿ ವಿಧಾನಸಭಾಧ್ಯಕ್ಷ ಯು.ಟಿ. ಖಾದರ್, ಎಸ್ವೈಎಸ್ ಮ್ಯಾರೇಜ್ ಸೆಲ್ ಅಧ್ಯಕ್ಷ ಅಬ್ಬಾಸ್ ಹಾಜಿ ಪೆರಿಬೈಲ್, ಉಪಾಧ್ಯಕ್ಷರಾದ ಯುಬಿಎಂ ಮುಹಮ್ಮದ್ ಹಾಜಿ, ಅಬ್ಬಾಸ್ ಹಾಜಿ ಕೊಮರಂಗಳ, ಪಿ.ಐ. ಅಹ್ಮದ್ ಕುಂಞಿ ಪಿಲಿಕೂರು, ಸಹಸಂಚಾಲಕರಾದ ಉಸ್ಮಾನ್ ಕೊಮರಂಗಳ, ಕೆ.ಎಂ. ಫಾರೂಕ್ ಬಟ್ಟಪ್ಪಾಡಿ, ಬಿ.ಎಚ್. ಇಸ್ಮಾಯಿಲ್, ಹಂಝ ಅಜ್ಜಿನಡ್ಕ, ಕೋಶಾಧಿಕಾರಿ ಎಂ.ಪಿ. ಮುಹಮ್ಮದ್ ಉಪಸ್ಥಿತರಿದ್ದರು. ಎಸ್ಜೆಯು ವಲಯ ಪ್ರಧಾನ ಕಾರ್ಯದರ್ಶಿ ಮುನೀರ್ ಸಖಾಫಿ ಅಲ್ಫುರ್ಖಾನಿ ಪ್ರಾಸ್ತಾವಿಕವಾಗಿ ಮಾತನಾಡಿ ದರು. ಎಸ್ವೈಎಸ್ ಮ್ಯಾರೇಜ್ ಸೆಲ್ ಸಂಚಾಲಕ ಎನ್.ಎಸ್. ಉಮರ್ ಮಾಸ್ಟರ್ ಕಾರ್ಯಕ್ರಮ ನಿರೂಪಿಸಿದರು.
ಬಾಳೆಹಣ್ಣು ಸೇವಿಸುವ ಬಗ್ಗೆ ವೈದ್ಯರ ಸಲಹೆ ಏನು?
ಬಾಳೆಹಣ್ಣುಗಳು ಆಂಟಿ ಆಕ್ಸಿಡಂಟ್ನಲ್ಲಿ ಸಮೃದ್ಧವಾಗಿವೆ. ಅವು ಆಕ್ಸಿಡೇಟಿವ್ ಒತ್ತಡವನ್ನು ಕಡಿಮೆಗೊಳಿಸುತ್ತವೆ. ಹೀಗಾಗಿ ಆಹಾರದ ನಡುವೆ ಸೂಕ್ತ ತಿನಿಸನ್ನು ಆರಿಸಿಕೊಳ್ಳಬೇಕೆಂದರೆ ಹುರಿದ ಅಥವಾ ಕರಿದ ವಸ್ತುಗಳ ಬದಲಾಗಿ ಬಾಳೆಹಣ್ಣು ಉತ್ತಮ ಆಯ್ಕೆಯಾಗಿರುತ್ತದೆ. ಒಂದು ಸೇಬು ತಿಂದರೆ ವೈದ್ಯರನ್ನು ದೂರ ಇಡಬಹುದು ಎನ್ನುವ ವಾಕ್ಯ ಬಹಳ ಜನಜನಿತ. ಆದರೆ ದೆಹಲಿಯ ವಸಂತ್ ಕುಂಜ್ನಲ್ಲಿರುವ ಫೋರ್ಟಿಸ್ ಆಸ್ಪತ್ರೆಯ ಜಠರಕರುಳಿನ ತಜ್ಞ ಮತ್ತು ಯಕೃತ್ತು ತಜ್ಞರಾದ ಡಾ ಶುಭಂ ವತ್ಸ್ಯ ಅವರ ಪ್ರಕಾರ ಸೇಬಿನ ಬದಲು ಬಾಳೆಹಣ್ಣು ತಿನ್ನುವುದರಿಂದ ವೈದ್ಯರನ್ನು ದೂರ ಇಡಬಹುದು. ಬಾಳೆಗಿಡದ ಹಣ್ಣು ಬಾಳೆ. ವಾಸ್ತವದಲ್ಲಿ ಒಂದು ದೈತ್ಯ ಗಿಡಮೂಲಿಕೆ. ಉಷ್ಣವಲಯದ ಹವಾಮಾನದಲ್ಲಿ ನೈಸರ್ಗಿಕವಾಗಿ ಕಂಡುಬರುತ್ತದೆ ಮತ್ತು ಸೇವಿಸುವುದು ಸರಳ. ಮಾಗಿದ ಬಾಳೆಹಣ್ಣುಗಳು ದಪ್ಪನಾದ ಮತ್ತು ಸರಳವಾಗಿ ಸುಲಿಯಬಹುದಾದ ಸಿಪ್ಪೆಯನ್ನು ಹೊಂದಿರುತ್ತವೆ. ಹೀಗಾಗಿ ಹೆಚ್ಚು ಶ್ರಮವಿಲ್ಲದೆ ಸಿಪ್ಪೆ ಸುಲಿದು ತಿನ್ನಬಹುದಾಗಿದೆ. View this post on Instagram A post shared by Dr. Shubham Vatsya (@dr.shubhamvatsya) 118 ಗ್ರಾಮ್ಗಳಷ್ಟು ತೂಕವಿರುತ್ತವೆ ಮತ್ತು ಈ ಕೆಳಗಿನ ಪೋಷಕಾಂಶಗಳನ್ನು ಹೊಂದಿರುತ್ತವೆ: 105 ಕ್ಯಾಲೋರಿಗಳು 88.4 ಗ್ರಾಂ ನೀರು 1.29 ಗ್ರಾಂ ಪ್ರೋಟೀನ್ 26.9 ಗ್ರಾಂ ಕಾರ್ಬೋಹೈಡ್ರೇಟ್ಗಳು 14.4 ಗ್ರಾಂ ಸಕ್ಕರೆ 3.07 ಗ್ರಾಂ ಫೈಬರ್ 0.39 ಗ್ರಾಂ ಕೊಬ್ಬು ಬಾಳೆಹಣ್ಣಿನಲ್ಲಿ ಪೊಟ್ಯಾಶಿಯಂ, ವಿಟಮಿನ್ ಬಿ6 ಮತ್ತು ವಿಟಮಿನ್ ಸಿ ಸಮೃದ್ಧವಾಗಿದೆ. ಡಾ ಶುಭಂ ವತ್ಸ್ಯ ಅವರ ಪ್ರಕಾರ ನಿತ್ಯವೂ ಸೇವಿಸಿದರೆ ಬಾಳೆಹಣ್ಣು ಜಠರದ ಆರೋಗ್ಯಕ್ಕೆ ಮತ್ತು ಒಟ್ಟು ದೇಹದ ಆರೋಗ್ಯಕ್ಕೆ ಉತ್ತಮ. ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿರುವ ಡಾ ಶುಭಂ ವತ್ಸ್ಯ ಪ್ರಕಾರ, “ಬಾಳೆಹಣ್ಣು ಸರಳವಾಗಿ ತಿನ್ನುವ ಮತ್ತು ಜಠರಸ್ನೇಹಿ ಸ್ನ್ಯಾಕ್.” ಅವರು ಹೇಳುವ ಪ್ರಕಾರ, “ಹಣ್ಣಿನಲ್ಲಿ ರೆಸಿಸ್ಟಂಟ್ ಪಿಷ್ಠ ಮತ್ತು ಪ್ರಿಬಯಾಟಿಕ್ ಫೈಬರ್ಗಳಿವೆ. ಇವು ಆರೋಗ್ಯಕರ ಜಠರದ ಬ್ಯಾಕ್ಟೀರಿಯಕ್ಕೆ ಆಹಾರ ಒದಗಿಸಲು ನೆರವಾಗುತ್ತವೆ. ಇದು ಆರೋಗ್ಯಕರ ಕರುಳಿನ ಬ್ಯಾಕ್ಟೀರಿಯವನ್ನು ಪೋಷಿಸಲು ಸಹಾಯ ಮಾಡುತ್ತದೆ.” ಈ ಬ್ಯಾಕ್ಟೀರಿಯಗಳು ಬ್ಯುಟೈರೇಟ್ನಂತಹ ಶಾರ್ಟ್-ಚೈನ್ ಕೊಬ್ಬಿನಾಮ್ಲಗಳನ್ನು ರೂಪಿಸಲು ಫೈಬರ್ಗಳನ್ನು ಹುದುಗಿಸುತ್ತವೆ. ಅವು ಈ ಕೆಳಗಿನ ಲಾಭಗಳನ್ನು ಒದಗಿಸುತ್ತವೆ: • ಕರುಳನ್ನು ರಿಪೇರಿ ಮಾಡುವುದು • ಉರಿಯೂತ ಕಡಿಮೆ ಮಾಡುವುದು • ದೀರ್ಘಕಾಲೀನ ಕರುಳಿನ ಆರೋಗ್ಯ ಸುಧಾರಿಸುವುದು ಅಧ್ಯಯನಗಳು ಹೇಳಿರುವ ಪ್ರಕಾರ, ಹಸಿ ಬಾಳೆಕಾಯಿ ಬಲವಾದ ಅಲ್ಸರ್ ವಿರೋಧಿ ಗುಣಗಳನ್ನು ಹೊಂದಿವೆ. ಪರಿಣಾಮವಾಗಿ ಬಾಳೆ ಕಾಯಿ ಹೊಟ್ಟೆಯ ಒಳಪದರಕ್ಕೆ ಉತ್ತಮ ನೈಸರ್ಗಿಕ ರಕ್ಷಣೆ ಒದಗಿಸಬಹುದು ಎಂದು ಡಾ ಶುಭಂ ವತ್ಸ್ಯ ಅಭಿಪ್ರಾಯಪಟ್ಟಿದ್ದಾರೆ. ರಕ್ತದೊತ್ತಡದ ನಿಯಂತ್ರಣ ನಿತ್ಯವೂ ಬಾಳೆಹಣ್ಣಿನ ಸೇವನೆಯಿಂದ ಕರುಳಿನ ಆರೋಗ್ಯ ಸುಧಾರಿಸುವುದು ಮಾತ್ರವಲ್ಲ, ಬಾಳೆಹಣ್ಣು ಪೊಟ್ಯಾಶಿಯಂನಲ್ಲಿ ಸಮೃದ್ಧವಾಗಿರುವ ಕಾರಣ ರಕ್ತದೊತ್ತಡವನ್ನು ನಿಯಂತ್ರಿಸುವ ಅತ್ಯಗತ್ಯ ಖನಿಜವನ್ನು ಹೊಂದಿದೆ. ಬಾಳೆಹಣ್ಣುಗಳು ಆಂಟಿ ಆಕ್ಸಿಡಂಟ್ನಲ್ಲಿ ಸಮೃದ್ಧವಾಗಿವೆ. ಅವು ಆಕ್ಸಿಡೇಟಿವ್ ಒತ್ತಡವನ್ನು ಕಡಿಮೆಗೊಳಿಸುತ್ತವೆ. ಹೀಗಾಗಿ ಆಹಾರದ ನಡುವೆ ಸೂಕ್ತ ತಿನಿಸನ್ನು ಆರಿಸಿಕೊಳ್ಳಬೇಕೆಂದರೆ ಹುರಿದ ಅಥವಾ ಕರಿದ ವಸ್ತುಗಳ ಬದಲಾಗಿ ಬಾಳೆಹಣ್ಣು ಉತ್ತಮ ಆಯ್ಕೆಯಾಗಿರುತ್ತದೆ. ಕೃಪೆ: hindustantimes.com --- ಮೇಲಿನ ಲೇಖನದಲ್ಲಿರುವ ವಿವರಗಳು ಸಾಮಾಜಿಕ ಮಾಧ್ಯಮಗಳಲ್ಲಿ ತಜ್ಞರು ಹೇಳಿರುವ ಸಲಹೆಗಳಾಗಿವೆ. ನಿಮ್ಮ ಆರೋಗ್ಯಕ್ಕೆ ಸಂಬಂಧಿಸಿದ ನಿರ್ಧಾರಗಳನ್ನು ಸ್ವತಃ ವೈದ್ಯರನ್ನು ಸಂಪರ್ಕಿಸಿ ತೆಗೆದುಕೊಳ್ಳಬೇಕು.
ಕೃಷಿ ಕ್ಷೇತ್ರದ ಮುಂದಿನ ಹಂತಕ್ಕೆ ಕೇಂದ್ರದ ಬೆಂಬಲ ಬೇಕು : ಸಚಿವ ಚಲುವರಾಯಸ್ವಾಮಿ
ಅಂತಾರಾಷ್ಟ್ರೀಯ ವಾಣಿಜ್ಯ ಮೇಳ-2026
ನಮ್ಮ ಮೆಟ್ರೋ ದರ ಏರಿಕೆ ನಿರ್ಧಾರದಿಂದ ಬಿಎಂಆರ್ಸಿಎಲ್ ಕೊನೆಗೂ ಹಿಂದಕ್ಕೆ ಸರಿದಿದೆ. ಸೋಮವಾರದಿಂದ ಯಾವುದೇ ದರ ಏರಿಕೆ ಇಲ್ಲ. ಹಿಂದಿನ ದರದಲ್ಲಿಯೇ ಟಿಕೆಟ್ ಪಡೆದು ಪ್ರಯಾಣಿಸಬಹುದು. ಇನ್ನೂ ದರ ಏರಿಕೆಗೆ ಪ್ರಯಾಣಿಕರು, ಸಾರ್ವಜನಿಕರಿಗೆ ಭಾರೀ ವಿರೋಧ ವ್ಯಕ್ತವಾಗಿತ್ತು. ಅಲ್ಲದೇ ಕೇಂದ್ರ ರಾಜ್ಯ ಸರ್ಕಾರದ ಜನಪ್ರತಿನಿಧಿಗಳು ಕೂಡ ಪರಸ್ಪರ ವಾಗ್ದಾಳಿ ನಡೆಸಿದ್ದರು.
ಕಲಬುರಗಿ| ಕಳೆದುಹೋದ ಚಿನ್ನದ ಸರ ಪತ್ತೆ ಹಚ್ಚಿ ವಾರೀಸುದಾರರಿಗೆ ಹಸ್ತಾಂತರಿಸಿದ ರೈಲ್ವೆ ಇಲಾಖೆ
ಕಲಬುರಗಿ: ಹಾಸನ್- ಸೋಲಾಪುರ ಎಕ್ಸ್ಪ್ರೆಸ್ ನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯ ಶೌಚಾಲಯದ ಕಮೋಡ್ ಒಳಗೆ ನಾಪತ್ತೆಯಾಗಿರುವ ಚಿನ್ನದ ಸರವನ್ನು ಸೋಲಾಪುರ ವಿಭಾಗದ ಸೆಂಟ್ರಲ್ ರೈಲ್ವೆ ಮೆಕ್ಯಾನಿಕಲ್ ಕ್ಯಾರೇಜ್ ಮತ್ತು ವ್ಯಾಗನ್ ವಿಭಾಗದ ಬಯೋ-ಟಾಯ್ಲೆಟ್ ನಿರ್ವಹಣಾ ತಂಡ ಹಾಗೂ ರೈಲ್ವೆ ರಕ್ಷಣಾ ಪಡೆ (ಆರ್ಪಿಎಫ್) ಸಿಬ್ಬಂದಿಯ ಸಹಕಾರದಿಂದ ಬಯೋ-ಟಾಯ್ಲೆಟ್ ಟ್ಯಾಂಕ್ನಿಂದ ಚಿನ್ನದ ಸರವನ್ನು ಸುರಕ್ಷಿತವಾಗಿ ಪತ್ತೆಹಚ್ಚಿ ಹಸ್ತಾಂತರಿಸುವಲ್ಲಿ ಯಶಸ್ವಿಯಾಗಿದ್ದಾರೆ. ರೈಲು ಪ್ರಯಾಣದ ಮಾರ್ಗಮಧ್ಯೆ ಶೌಚಾಲಯದ ಕಮೋಡ್ ಒಳಗೆ ಚಿನ್ನದ ಸರ ಬಿದ್ದಿತ್ತು. ಈ ಬಗ್ಗೆ ರೈಲ್ ಮದದ್” ಪೋರ್ಟಲ್ ನಲ್ಲಿ ದೂರು ದಾಖಲಿಸಲಾಗಿತ್ತು. ದೂರು ಆಲಿಸಿದ ಆನ್ಬೋರ್ಡ್ ಸಿಬ್ಬಂದಿ ಹುಡುಕಾಟ ಆರಂಭಿಸಿದ್ದರು, ಸೋಲಾಪುರ ನಿಲ್ದಾಣಕ್ಕೆ ರೈಲು ತಲುಪುತ್ತಿದ್ದಂತೆ ಸೋಲಾಪುರ ವಿಭಾಗದ ಅಧಿಕಾರಿಗಳು ತಕ್ಷಣ ಕಾರ್ಯಾಚರಣೆ ನಡೆಸಿ ಆಭರಣವನ್ನು ಆರ್ಪಿಎಫ್ ಸಿಬ್ಬಂದಿಯ ಸಮ್ಮುಖದಲ್ಲಿ ಪ್ರಯಾಣಿಕೆಗೆ ಹಸ್ತಾಂತರಿಸಿದ್ದಾರೆ. ರೈಲ್ವೆ ಸಿಬ್ಬಂದಿ ನೀಡಿದ ತ್ವರಿತ ಸ್ಪಂದನೆ ಮತ್ತು ಸಹಕಾರಕ್ಕೆ ಪ್ರಯಾಣಿಕರು ಸಂತೋಷ ವ್ಯಕ್ತಪಡಿಸಿದರು. ಸೋಲಾಪುರ ವಿಭಾಗವು ಪ್ರಯಾಣಿಕರ ಸುರಕ್ಷತೆ, ದೂರುಗಳ ತಕ್ಷಣದ ಪರಿಹಾರ ಮತ್ತು ಮಾನವೀಯ ಸೇವೆಗಾಗಿ ಸದಾ ಬದ್ಧವಾಗಿರುತ್ತದೆ ಎಂದು ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.
ಕೆಸಿಎಫ್ ಸೌತ್ ಝೋನ್ ವತಿಯಿಂದ ರಕ್ತದಾನ ಶಿಬಿರ
ಬಹರೈನ್, ಫೆ.8: ಕೆಸಿಎಫ್ ಬಹರೈನ್ ಸೌತ್ ಝೋನ್ ವತಿಯಿಂದ ಸಲ್ಮಾನಿಯಾ ಮೆಡಿಕಲ್ ಕ್ಯಾಂಪಸ್ನಲ್ಲಿ ಕೆಸಿಎಫ್ ಡೇ ಭಾಗವಾಗಿ ಇತ್ತೀಚೆಗೆ ರಕ್ತದಾನ ಶಿಬಿರ ನಡೆಯಿತು. ನಾರ್ತ್ ಝೋನ್ ಅಧ್ಯಕ್ಷ ಅಹ್ಮದ್ ಉಸ್ತಾದ್ ದುಆಗೈದರು. ಸೌತ್ ರೆನ್ ಅಧ್ಯಕ್ಷ ಸೈಯ್ಯಿದ್ ಪೆರ್ಲ ಅಧ್ಯಕ್ಷತೆ ವಹಿಸಿದರು. ಕೆಸಿಎಫ್ ಸೌತ್ ಝೋನ್ ಕಾರ್ಯದರ್ಶಿ ಔಫ್ ಸಅದಿ ಉಜಿರೆ, ಕೋಶಾಧಿಕಾರಿ ಶಾಫಿ ಕಂಬಳಬೆಟ್ಟು, ಝೋನ್ ನಾಯಕರಾದ ಅಶ್ರಫ್ ಇಂದ್ರಾಜೆ, ಅಶ್ರಫ್ ಬೋವಿಕ, ನವಾಝ್ ಮುಡಿಮಾರ್, ಫಯಾಝ್ ಉಜಿರೆಬೆಟ್ಟು, ಶಿರಾಜ್ ರೆಂಜ, ಮುಝಮ್ಮಿಲ್ ಪೆರ್ನೆ ಹಾಗೂ ರಾಷ್ಟ್ರೀಯ ಸಮಿತಿಯ ನಾಯಕರಾದ ಜಮಾಲುದ್ದೀನ್ ವಿಟ್ಲ, ಹಾರಿಸ್ ಸಂಪ್ಯ, ಖಲಂದರ್ ಉಸ್ತಾದ್, ಮನ್ಸೂರ್ ಬೆಳ್ಮ, ಸೂಫಿ ಪೈಂಪಚ್ಚಾಲ್, ರಝಾಕ್ ಆನೆಕಲ್, ಮೂಸಾ ಪೈಂಬಚ್ಚಾಲ್ ಭಾಗವಹಿಸಿದ್ದರು.
ಕೊಟ್ಟ ಮಾತಿಗೆ ತಪ್ಪಲಾರೆನು : ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಭರವಸೆ
ನನ್ನ ಕ್ಷೇತ್ರದ ಜನತೆಗೆ ಕೊಟ್ಟ ಎಲ್ಲಾ ಭರವಸೆಗಳನ್ನು, ಮಾತುಗಳನ್ನು ಹಂತಹಂತವಾಗಿ ಈಡೇರಿಸುತ್ತಿದ್ದೇನೆ. ಕ್ಷೇತ್ರದ ಅಭಿವೃದ್ಧಿ ಆಗುತ್ತಿದೆ. ಜನರ ಮುಖದಲ್ಲಿ ಖುಷಿ ನೋಡಿ ಧನ್ಯತಾಭಾವ ಮೂಡುತ್ತಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದ್ದಾರೆ. ಮೂಲಸೌಲಭ್ಯಗಳ ಅಭಿವೃದ್ಧಿ ಸೇರಿದಂತೆ ಜನರಿಗೆ ಅಗತ್ಯವಿರುವ ಎಲ್ಲಾ ರೀತಿ ಕೆಲಸ ಮಾಡಲಾಗುತ್ತಿದೆ ಎಂದರು.
ʼಅಂತಾರಾಷ್ಟ್ರೀಯ ವಾಣಿಜ್ಯ ಮೇಳ-2026ʼ
ಪರಸ್ಪರರ ಧಾರ್ಮಿಕ ಕೇಂದ್ರಗಳ ಸಂದರ್ಶನದಿಂದ ಸೌಹಾರ್ದತೆ ನಿರ್ಮಾಣ ಸಾಧ್ಯ: ಪ್ರೊ.ಸುರೇಂದ್ರನಾಥ್ ಶೆಟ್ಟಿ
ಉಡುಪಿ, ಫೆ.8: ಜಾತಿ ಧರ್ಮಗಲ ಮಧ್ಯೆ ಉತ್ತಮ ಬಾಂಧವ್ಯ ಮೂಡಿ ಬರಬೇಕಾದರೆ ಕೇವಲ ಭಾಷಣ, ಲೇಖನ ಗಳಿಂದ ಮಾತ್ರ ಸಾಧ್ಯವಿಲ್ಲ. ನಮ್ಮ ನಮ್ಮ ಧಾರ್ಮಿಕ ಕೇಂದ್ರಗಳಿಗೆ ಪರಸ್ಪರರು ಭೇಟಿ ಮಾಡಿ ಅರಿತುಕೊಳ್ಳು ವುದರಿಂದ ನಮ್ಮನ್ನು ಒಟ್ಟುಗೂಡಿಸಿ ಸೌಹಾರ್ದತೆ ಮೂಡಿಸಲು ಸಹಕಾರಿ ಯಾಗುತ್ತದೆ ಎಂದು ಉಡುಪಿ ಎಂಜಿಎಂ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದ ನಿವೃತ್ತ ಮುಖ್ಯಸ್ಥ ಪ್ರೊ.ಸುರೇಂದ್ರನಾಥ ಶೆಟ್ಟಿ ಕೊಕ್ಕರ್ಣೆ ಹೇಳಿದ್ದಾರೆ. ಜಮಾಅತೇ ಇಸ್ಲಾಮೀ ಹಿಂದ್ ಉಡುಪಿ, ಎಸ್ಐಓ ಉಡುಪಿ ಜಿಲ್ಲೆ ಹಾಗೂ ಇಂದ್ರಾಳಿ ನೂರಾನಿ ಮಸೀದಿಯ ಯಂಗ್ಮೆನ್ಸ್ ಅಸೋಸಿಯೇಶನ್ ಸಹಯೋಗದಲ್ಲಿ ಇಂದ್ರಾಳಿ ನೂರಾನಿ ಮಸೀದಿಯಲ್ಲಿ ರವಿವಾರ ಹಮ್ಮಿ ಕೊಳ್ಳಲಾದ ಸಾರ್ವಜನಿಕರಿಗೆ ಮಸೀದಿ ಸಂದರ್ಶನ ಕಾರ್ಯಕ್ರಮದಲ್ಲಿ ಅವರು ಮಾತನಾಡುತಿದ್ದರು. ಮಸೀದಿ ನೋಡ ಬನ್ನಿ ಪರಿಕಲ್ಪನೆ ನನ್ನ ಮನಸ್ಸನ್ನು ಸೆಳೆದಿದೆ. ಈ ಮಸೀದಿ ನೋಡ ಬನ್ನಿ ಪರಿಕಲ್ಪನೆಯ ಹಿಂದೆ ಸೌಹಾರ್ದತೆಯ ಸಂದೇಶ ಅಡಗಿದೆ. ನಾವು ನಿಮ್ಮಲ್ಲಿಗೆ ಮಾತ್ರವಲ್ಲ ನೀವು ನಮ್ಮಲ್ಲಿಗೂ ಬರಬೇಕು ಎಂಬ ಪರಸ್ಪರ ಅರ್ಥೈಸುವಿಕೆಯ ಸಂದೇಶ ಕೂಡ ಇದೆ. ಇಂದು ನಮ್ಮೊಳಗೆ ವಿಶ್ವಾಸದ ಕೊರತೆ ಇದೆ. ಆ ವಿಶ್ವಾಸದ ಕೊರತೆ ದೂರ ಮಾಡಿ ಪರಸ್ಪರ ನಂಬಿಕೆ ಮೂಡಿಸುವ ಹಾಗೂ ತಿಳುವಳಿಕೆ ಕೊಡುವ ಕೆಲಸ ಇಂತಹ ಕಾರ್ಯ ಕ್ರಮಗಳಿಂದ ಸಾಧ್ಯವಾಗುತ್ತದೆ ಎಂದರು. ದೇವಸ್ಥಾನ, ಮಸೀದಿ, ಚರ್ಚ್ಗಳಲ್ಲಿನ ಸೌಂದರ್ಯವನ್ನು ಆಸ್ವಾದಿಸಲು ಬೇಕಾಗಿರುವ ಮುಖ್ಯವಾಗಿ ನಮ್ಮ ಹೃದಯ ಸೌಂದರ್ಯತೆಯಾಗಿದೆ. ಆದರೆ ಇಂದು ನಮ್ಮಲ್ಲಿ ಹೃದಯ ಸೌಂದರ್ಯತೆ ಇಲ್ಲವಾಗಿದೆ. ಇದರಿಂದ ಪರಸ್ಪರರು ಅರ್ಥ ಮಾಡಿಕೊಳ್ಳಲು ಆಗುತ್ತಿಲ್ಲ. ಹೃದಯ ಸೌಂದರ್ಯತೆ ಇದ್ದರೆ ಮಾತ್ರ ಧರ್ಮಧರ್ಮಗಳ ಮಧ್ಯೆ ಉತ್ತಮ ಸಂಬಂಧ ಬೆಳೆಯಲು ಸಾಧ್ಯವಾಗುತ್ತದೆ ಎಂದು ಅವರು ಅಭಿಪ್ರಾಯ ಪಟ್ಟರು. ಕರಾವಳಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಂ.ಎ.ಗಫೂರ್, ಹಿರಿಯ ಚಿಂತಕ ಪ್ರೊ.ಫಣಿರಾಜ್, ಜಮಾಅತೆ ಇಸ್ಲಾಮೀ ಹಿಂದ್ನ ಅಕ್ಬರ್ ಅಲಿ, ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ವಿದ್ಯಾ ಸರಸ್ವತಿ, ಉಡುಪಿ ಜಿಲ್ಲಾ ಶರಣ ಸಾಹಿತ್ಯ ಪ್ರರಿಷತ್ ಅಧ್ಯಕ್ಷ ಡಾ.ನಿರಂಜನ್ ಸಿ., ಉಡುಪಿ ಜಿಲ್ಲಾ ಅಲ್ಪಸಂಖ್ಯಾತರ ವೇದಿಕೆ ಅಧ್ಯಕ್ಷ ಚಾರ್ಲ್ಸ್ ಆ್ಯಂಬ್ಲರ್, ಧರ್ಮಗುರು ಫಾ.ವಿಲಿಯಂ ಮಾರ್ಟಿಸ್, ಪವರ್ ಸಂಸ್ಥೆಯ ಮಾಜಿ ಅಧ್ಯಕ್ಷೆ ಸಾಧನಾ ಮಲ್ಯ, ಮಸೀದಿ ಆಡಳಿತಾಧಿಕಾರಿ ಮುಹಮ್ಮದ್ ಹುಸೇನ್, ಮಸೀದಿ ಮಾಜಿ ಅಧ್ಯಕ್ಷ ಶಬ್ಬೀರ್ ಮೊದಲಾದವರು ಉಪಸ್ಥಿತರಿದ್ದರು. ಸಾಮಾಜಿಕ ಕಾರ್ಯಕರ್ತ ಇದ್ರೀನ್ ಹೂಡೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಶ್ರಫ್ ಕುಂಜಿಬೆಟ್ಟು ಸ್ವಾಗತಿಸಿ ದರು. ಅಬ್ದುಲ್ ಅಝೀಝ್ ಉದ್ಯಾವರ ಕಾರ್ಯಕ್ರಮ ನಿರೂಪಿಸಿದರು. ಕಾಂಗ್ರೆಸ್ ಮುಖಂಡ ಪ್ರಸಾದ್ರಾಜ್ ಕಾಂಚನ್ ಸಹಿತ ಹಲವು ಗಣ್ಯರು ಬೆಳಗ್ಗೆಯಿಂದ ಸಂಜೆಯವರೆಗೆ ಮಸೀದಿಗೆ ಭೇಟಿ ನೀಡಿದರು.
ನಿಯತ್ತು, ನಿಷ್ಠೆ ಯಾವುದು ಇಲ್ಲದ ಜಿಟಿ ದೇವೇಗೌಡರು ನಮ್ಮ ಜೊತೆಯಲ್ಲಿ ಇಲ್ಲ - ಎಚ್ಡಿ ಕುಮಾರಸ್ವಾಮಿ ಗರಂ
ಜೆಡಿಎಸ್ ಹಿರಿಯ ನಾಯಕ, ಶಾಸಕ ಜಿಟಿ ದೇವೇ ಗೌಡ ಅವರ ಬಗ್ಗೆ ಎಚ್ಡಿ ಕುಮಾರಸ್ವಾಮಿ ಕಿಡಿಕಾರಿದ್ದಾರೆ. ಅವರು ನಮ್ಮ ಜತೆ ಇಲ್ಲ, ಅವರ ಬಗ್ಗೆ ಪದೇ ಪದೇ ಮಾತನಾಡಬೇಡಿ ಎಂದಿದ್ದಾರೆ. ನಮ್ಮ ಪಕ್ಷದ ಬಗ್ಗೆ ನಿಯತ್ತು, ನಿಷ್ಠೆ ಅವರಿಗೆ ಇಲ್ಲ. ಅಂತಹವರನ್ನು ನಮ್ಮ ಜತೆ ಇಟ್ಟುಕೊಳ್ಳಬೇಕಾ ಎಂದು ಪ್ರಶ್ನೆ ಮಾಡಿದ್ದಾರೆ. ಈ ಮೂಲಕ ಜಿಟಿ ದೇವೇ ಗೌಡ ಹಾಗೂ ಗೌಡರ ಕುಟುಂಬದ ನಡುವಿನ ಮನಸ್ಥಾಪ ಮತ್ತೊಂದು ಹಂತಕ್ಕೆ ಹೋಗಿದೆ.
ಪಂಚವರ್ಣದಿಂದ ಅಭಿಯಾನ: ತೆಕ್ಕಟ್ಟೆ ಕೊಮೆ ಬೀಚ್ ಕ್ಲಿನಿಂಗ್
ಕೋಟ, ಫೆ.8: ಪಂಚವರ್ಣ ಯುವಕ ಮಂಡಲ ಕೋಟ ಪ್ರವರ್ತಿತ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲ ಕೋಟ ಇವರ ನೇತೃತ್ವದಲ್ಲಿ ಗೀತಾನಂದ ಫೌಂಡೇಶನ್ ಮಣೂರು, ಸಮುದ್ಯತಾ ಗ್ರೂಪ್ಸ್ ಕೋಟ, ಜೆಸಿಐ ಕೋಟ ಸಿನಿಯರ್ ಲಿಜನ್, ಹಂದಟ್ಟು ಮಹಿಳಾ ಬಳಗದ ಸಹಯೋಗದೊಂದಿಗೆ ತೆಕ್ಕಟ್ಟೆ ಗ್ರಾಮಪಂಚಾಯತ್ ಎಸ್ಎಲ್ಆರ್ಎಂ ಘಟಕ ಇವರ ಸಂಯೋಜನೆಯೊಂದಿಗೆ ಬೀಚ್ ಕ್ಲಿನಿಂಗ್ ಭಾಗವಹಿಸಿ ಬಹುಮಾನ ಗೆಲ್ಲಿ ಎಂಬ ವಿನೂತನವಾಗಿ ಬೀಚ್ ಕ್ಲಿನಿಂಗ್ ಅಭಿಯಾನವನ್ನು ರವಿವಾರ ತೆಕ್ಕಟ್ಟೆ ಕೊಮೆ ಬೀಚ್ನಲ್ಲಿ ಹಮ್ಮಿಕೊಳ್ಳಲಾಗಿತ್ತು. ಮುಖ್ಯ ಅತಿಥಿಗಳಾಗಿ ಮೊಗವೀರ ಯುವ ಸಂಘದ ನಿಯೋಜಿತ ಉಡುಪಿ ಜಿಲ್ಲಾಧ್ಯಕ್ಷ ರವೀಶ್ ಕೊರವಡಿ, ಕೊಮೆ ಕೊರವಡಿ ವಿವಿದ್ದೋದೇಶ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗೋಪಾಲ ಪೂಜಾರಿ, ಮೊಗವೀರ ಯುವ ಸಂಘಟನೆ ಕೋಟೇಶ್ವರ ಘಟಕದ ಅಧ್ಯಕ್ಷ ರಾಘವೇಂದ್ರ ಹರಪ್ಪನಕೆರೆ, ಕೋಶಾಧಿಕಾರಿ ರಾಜೇಶ್ ಕಾಂಚನ್, ಪಂಚ ವರ್ಣ ಯುವಕಮಂಡಲದ ಸದಸ್ಯ ಮಹೇಶ್ ಬೆಳಗಾವಿ, ನಿಕಟಪೂರ್ವ ಅಧ್ಯಕ್ಷ ಅಜಿತ್ ಆಚಾರ್ಯ, ಗಿರೀಶ್ ಆಚಾರ್ಯ, ಪಂಚವರ್ಣ ಮಹಿಳಾ ಮಂಡಲದ ಅಧ್ಯಕ್ಷೆ ಲಲಿತಾ ಪೂಜಾರಿ, ತೆಕ್ಕಟ್ಟೆ ಎಸ್ಎಲ್ಆರ್ಎಂ ಘಟಕದ ನಿರ್ವಾಹಕಿ ರೇವತಿ ತೆಕ್ಕಟ್ಟೆ ಉಪಸ್ಥಿತರಿದ್ದರು. ಕಾರ್ಯಕ್ರಮ ಸಂಯೋಜಕ ರವೀಂದ್ರ ಕೋಟ ಸ್ವಾಗತಿಸಿದರು. ಮಹಿಳಾ ಮಂಡಲದ ಕಾರ್ಯಾಧ್ಯಕ್ಷೆ ಕಲಾವತಿ ಅಶೋಕ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ತೆಕ್ಕಟ್ಟೆ ಗ್ರಾಪಂ ಹಾಗೂ ಎಸ್ಎಲ್ಆರ್ಎಂ ಘಟಕದ ನಿರ್ವಾಹಕಿ ರೇವತಿ ತೆಕ್ಕಟ್ಟೆ ಸಹಕಾರದೊಂದಿಗೆ ನಡೆದ ಕಾರ್ಯಕ್ರಮದಜಲ್ಲಿ ತೆಕ್ಕಟ್ಟೆ ಹಾಗೂ ಸಮೀಪದ ಕೋಟ ಭಾಗದ ಮಕ್ಕಳು ಸ್ವಇಚ್ಛೆಯಿಂದ ಭಾಗಿಯಾಗಿದ್ದರು. ಈ ಸ್ವಚ್ಛತಾ ಅಭಿಯಾನದಲ್ಲಿ ಭಾಗವಹಿಸಿದ ಎಲ್ಲಾ ಯುವ ಸಮುದಾಯಕ್ಕೆ ಸ್ಟೀಲ್ ನೀರಿನ ಬಾಟಲಿ ನೀಡಲಾಯಿತು.
ಪೆಟ್ರೋಲ್-ಡೀಸೆಲ್ ದರ ಮುಂದಿನ ದಿನಗಳಲ್ಲಿ ಏರಲಿದೆ: ಸಿಎಂ ಸಿದ್ದರಾಮಯ್ಯ ಎಚ್ಚರಿಕೆ
ಬೆಂಗಳೂರು: ಭಾರತ ಮತ್ತು ಅಮೆರಿಕ ನಡುವಿನ ಮಧ್ಯಂತರ ವ್ಯಾಪಾರ ಒಪ್ಪಂದವನ್ನು ಒಪ್ಪಿಕೊಂಡು ಸ್ವಾಗತಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕಕ್ಕೆ ಸಂಪೂರ್ಣವಾಗಿ ಶರಣಾಗಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಗಂಭೀರ ಆರೋಪ ಮಾಡಿದ್ದಾರೆ. ಈ ಒಪ್ಪಂದ ಮುಂದಿನ ದಿನಗಳಲ್ಲಿ ದೇಶದ 140 ಕೋಟಿ ಜನರಿಗೆ, ಅದರಲ್ಲೂ ಮುಖ್ಯವಾಗಿ 72 ಕೋಟಿ ರೈತರ ಪಾಲಿಗೆ ಮರಣಶಾಸನವಾಗಲಿದೆ. ಇದರಿಂದ ಮುಂದಿನ ದಿನಗಳಲ್ಲಿ
ದಿ.ಫ್ರಾನ್ಸಿಸ್ ದಾಂತಿ ಸ್ಮಾರಕ ಸಾಹಿತ್ಯ ಪುರಸ್ಕಾರಕ್ಕೆ ಕೃತಿಗಳ ಆಹ್ವಾನ
ಉಡುಪಿ, ಫೆ.8: ದಿ|ಫ್ರಾನ್ಸಿಸ್ ದಾಂತಿ ಸ್ಮಾರಕ ಪ್ರತಿಷ್ಠಾನ ಮತ್ತು ಕಥೋಲಿಕ್ ಸಭಾ ಉಡುಪಿ ಪ್ರದೇಶ ಜಂಟಿ ಆಶ್ರಯದಲ್ಲಿ ಕರ್ನಾಟಕ ರಾಜ್ಯಮಟ್ಟದ ದಿ ಫ್ರಾನ್ಸಿಸ್ ದಾಂತಿ ಸ್ಮಾರಕ ಸಾಹಿತ್ಯ ಪುರಸ್ಕಾರ -2025ಕ್ಕೆ ಕಥೊಲಿಕ್ ಕೊಂಕಣಿ ಕ್ರೈಸ್ತರಿಂದ 2025 ಜನವರಿಯಿಂದ 2025 ಡಿಸೆಂಬರ್ ವರೆಗೆ ಪ್ರಕಟಪಡಿಸಿದ ಕನ್ನಡ ಭಾಷೆಯ ಕೃತಿಗಳನ್ನು ಆಹ್ವಾನಿಸಲಾಗಿದೆ. ಪುರಸ್ಕಾರಕ್ಕೆ ಯೋಗ್ಯವಾದ ಕೃತಿಗಳು ಧಾರ್ಮಿಕ, ವೈಚಾರಿಕ, ವೈಜ್ಞಾನಿಕ, ಐತಿಹಾಸಿಕ, ಸಮಾಜಶಾಸ್ತ್ರ, ಜಾನಪದ ಅಧ್ಯಯನ, ಜೀವನಚರಿತ್ರೆ, ವ್ಯಕ್ತಿಚಿತ್ರಣ, ಸಂಪಾದಿತ ಕೃತಿಗಳ ಸಂಗ್ರಹ, ಕೊಂಕಣಿಯಿಂದ ಭಾಷಾಂತ ರಿತ ಕೃತಿಗಳು, ಕಥಾ ಸಂಗ್ರಹ, ಕಾದಂಬರಿ, ಕಾವ್ಯ ಸಂಗ್ರಹ, ನಾಟಕ, ಕಿರು ನಾಟಕ ಸಂಗ್ರಹ ಕಳುಹಿಸಬಹುದು. ಒಂದು ಬಾರಿ ಪ್ರಶಸ್ತಿ ಪಡೆದ ವ್ಯಕ್ತಿಗೆ ಪುನ: ಭಾಗವಹಿಸಲು ಅವಕಾಶವಿರುವುದಿಲ್ಲ. ಪ್ರಶಸ್ತಿ 25,000ರೂ. ನಗದು, ಸ್ಮರಣಿಕೆ ನೀಡಿ ಶಾಲು ಹೊದಿಸಿ ಕಥೊಲಿಕ್ ಸಭಾ ಉಡುಪಿ ಪ್ರದೇಶದ ವಾರ್ಷಿಕ ಮಹಾಸಭೆಯಲ್ಲಿ ಸನ್ಮಾನಿಸಲಾಗುವುದು. ತಮ್ಮ ಕೃತಿಗಳ ಮುದ್ರಿತ 4 ಪ್ರತಿಗಳನ್ನು ಮಾ.31ರ ಒಳಗೆ ಅಲೋನ್ಸ್ ಡಿಕೋಸ್ಟಾ, ಸಂಚಾಲಕರು, ದಿ ಫ್ರಾನ್ಸಿಸ್ ದಾಂತಿ ಸ್ಮಾರಕ ಪ್ರತಿಷ್ಠಾನ, ಕಥೊಲಿಕ್ ಸಭಾ ಉಡುಪಿ ಪ್ರದೇಶ, 1ನೇ ಮಹಡಿ, ಅನುಗ್ರಹ, ಪಾಲನಾ ಕೇಂದ್ರ ಕಕ್ಕುಂಜೆ, ಸಂತೆಕಟ್ಟೆ ಪೋಸ್ಟ್, ಉಡುಪಿ -576105 ವಿಳಾಸಕ್ಕೆ ಕಳುಹಿ ಸಲು ಹಾಗೂ ಹೆಚ್ಚಿನ ಮಾಹಿತಿಗಾಗಿ ಮೊ-90359 96144 ಸಂಪರ್ಕಿಸಲು ಪ್ರಕಟಣೆಯಲ್ಲಿ ಕೋರಲಾಗಿದೆ.
ಮುಂಬೈ: ಕಳೆದ ತಿಂಗಳು ನಡೆದಿದ್ದ ಮಹಾರಾಷ್ಟ್ರ ನಗರ ಸಂಸ್ಥೆಗಳ ಚುನಾವಣೆಗಳಲ್ಲಿ ವಂಚನೆ ಮತ್ತು ಅಕ್ರಮಗಳ ಆರೋಪಗಳ ನಡುವೆಯೇ ಶನಿವಾರ ನಡೆದ ಜಿಲ್ಲಾ ಪರಿಷದ್ ಚುನಾವಣೆ ಸಂದರ್ಭದಲ್ಲಿ ಚುನಾವಣಾ ಅಧಿಕಾರಿಗಳಿಂದ ಸ್ಪಷ್ಟ ಲೋಪಗಳನ್ನು ಬೆಟ್ಟು ಮಾಡಿರುವ ಎರಡು ತಾಜಾ ಘಟನೆಗಳು ವರದಿಯಾಗಿವೆ. PTI ಸುದ್ದಿಸಂಸ್ಥೆಯ ಪ್ರಕಾರ ಜಿಲ್ಲಾ ಪರಿಷದ್ ಚುನಾವಣೆ ಸಂದರ್ಭದಲ್ಲಿ ಅಕ್ಲೂಜ್ ಮತ್ತು ಛತ್ರಪತಿ ಸಂಭಾಜಿನಗರದ ಎರಡು ಮತಗಟ್ಟೆಗಳಲ್ಲಿ ರಾಜಕೀಯ ಮುಖಂಡರ ಅಪ್ರಾಪ್ತ ವಯಸ್ಕ ಪುತ್ರರು ಮತಗಳನ್ನು ಚಲಾಯಿಸಿರುವುದು ಬೆಳಕಿಗೆ ಬಂದಿದೆ. ಮೊದಲ ಘಟನೆಯಲ್ಲಿ ಅಕ್ಲೂಜ್ ನ ಯಶವಂತ ನಗರದ ಮತಗಟ್ಟೆಗೆ ತಂದೆ ಅರ್ಜುನ ಸಿಂಗ್ ಮೋಹಿತೆ ಪಾಟೀಲ್ ಜೊತೆ ಬಂದಿದ್ದ 14ರ ಹರೆಯದ ಬಾಲಕ ಮತ ಚಲಾಯಿಸಿದ್ದಾನೆ ಎನ್ನಲಾಗಿದೆ. ಪಾಟೀಲ್ ಸೋಲಾಪುರದ ಮಾಳಶಿರಸ್ನಿಂದ ಎನ್ಸಿಪಿ(ಎಸ್ಪಿ) ಅಭ್ಯರ್ಥಿಯಾಗಿದ್ದಾರೆ. ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ವೀಡಿಯೊ ಪಾಟೀಲ್ ರ ಪುತ್ರ ಅವರ ಪಕ್ಕದಲ್ಲಿ ನಿಂತುಕೊಂಡು ಇವಿಎಂ ಬಟನ್ ಒತ್ತುತ್ತಿರುವುದನ್ನು ತೋರಿಸಿದೆ. ತನ್ನ ಮಗನನ್ನು ಸಮರ್ಥಿಸಿಕೊಂಡಿರುವ ಪಾಟೀಲ್,‘ಮತದಾನ ಹೇಗೆ ನಡೆಯುತ್ತದೆ ಎನ್ನುವುದನ್ನು ನೋಡಲು ನನ್ನ ಮಗ ಬಯಸಿದ್ದ,ಹೀಗಾಗಿ ನಾನು ಆತನನ್ನು ಮತಗಟ್ಟೆಯೊಳಗೆ ಕರೆದೊಯ್ದಿದ್ದೆ. ಮತಗಟ್ಟೆ ಅಧಿಕಾರಿಗಳು ಆಕ್ಷೇಪಿಸಿದ್ದರಾದರೂ ನಾನು ಮತವನ್ನು ಚಲಾಯಿಸುವಾಗ ಪಕ್ಕದಲ್ಲಿ ನಿಂತುಕೊಳ್ಳಲು ಆತನಿಗೆ ಅವಕಾಶ ನೀಡುವಂತೆ ಕೋರಿಕೊಂಡಿದ್ದೆ. ಇದರಲ್ಲಿ ಆಕ್ಷೇಪಾರ್ಹವಾದ ಏನಾದರೂ ಇದೆ ಎಂದು ನಾನು ಭಾವಿಸಿಲ್ಲ’ ಎಂದು ಸಮಜಾಯಿಷಿ ನೀಡಿದ್ದಾರೆ. ಇನ್ನೊಂದು ಘಟನೆಯಲ್ಲಿ ಪೈಠನ್ ನ ಶಿವಸೇನೆ ಶಾಸಕ ವಿಲಾಸ ಭುಮ್ರೆಯವರು ಮತದಾನದ ಸಮಯದಲ್ಲಿ ತನ್ನ ಹತ್ತರ ಹರೆಯದ ಮಗನೊಂದಿಗೆ ಮತಗಟ್ಟೆ ಪ್ರವೇಶಿಸಿದ್ದರು. ಇವಿಎಂ ಬಳಿ ಮಗನನ್ನು ಕರೆದೊಯ್ದಿದ್ದ ಅವರು ಆತನ ಬೆರಳಿಗೆ ಅಳಿಸಲಾಗದ ಶಾಯಿಯನ್ನು ಹಚ್ಚಲು ಅವಕಾಶ ಮಾಡಿಕೊಟ್ಟಿದ್ದರು ಎನ್ನಲಾಗಿದೆ. ಚುನಾವಣಾ ನಿಯಮಗಳ ಪ್ರಕಾರ ನೋಂದಾಯಿತ ಮತದಾರರು ಮಾತ್ರ ಇವಿಎಂ ಬಳಿ ಹೋಗಲು ಅನುಮತಿಯಿದೆ. ಘಟನೆಯ ಕುರಿತು ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ದಿಲೀಪ ಸ್ವಾಮಿಯವರು,ಆರೋಪದ ಕುರಿತು ವಿವರವಾದ ವರದಿಯನ್ನು ಸಲ್ಲಿಸುವಂತೆ ಚುನಾವಣಾ ಆಯೋಗವು ಸೂಚಿಸಿದೆ. ಇದೊಂದು ಗಂಭೀರ ಘಟನೆಯಾಗಿದೆ. ವಿವರವಾದ ತನಿಖೆಯನ್ನು ನಡೆಸಲಾಗುವುದು ಮತ್ತು ಹೊಣೆಗಾರಿಕೆಯನ್ನು ನಿಗದಿಗೊಳಿಸಲಾಗುವುದು. ಚುನಾವಣಾಧಿಕಾರಿ ಮತ್ತು ಶಾಯಿ ಹಚ್ಚಿದ ಸಿಬ್ಬಂದಿ ವಿರುದ್ಧ ಕ್ರಮವನ್ನು ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ನವಲಗುಂದ ಕ್ಷೇತ್ರವನ್ನು ಮಾದರಿ ಕ್ಷೇತ್ರ ಮಾಡಲು ಶ್ರಮ : ಮುಖ್ಯಮಂತ್ರಿ ಸಿದ್ದರಾಮಯ್ಯ
ʼಬೆಣ್ಣೆಹಳ್ಳ ಪ್ರವಾಹ ನಿಯಂತ್ರಣ ಕಾಮಗಾರಿ ಶಂಕು ಸ್ಥಾಪನೆʼ
ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರು ಹಾಜಬ್ಬರ ರೀತಿ ಇರಬೇಕು: ಸ್ಪೀಕರ್ ಯು.ಟಿ. ಖಾದರ್
ಹರೇಕಳ ಹಾಜಬ್ಬರ ಪಿಯು ಕಾಲೇಜು ಕಟ್ಟಡಕ್ಕೆ ಶಿಲಾನ್ಯಾಸ
ಕೊಪ್ಪಳ| ಸ್ಪಿರಿಟ್ ಕುಡಿದು ಇಬ್ಬರು ಯುವಕರು ಮೃತ್ಯು
ಕೊಪ್ಪಳ: ಸ್ಪಿರಿಟ್ ಕುಡಿದು ಇಬ್ಬರು ಯುವಕರು ಮೃತಪಟ್ಟ ಘಟನೆ ಕೊಪ್ಪಳ ತಾಲೂಕಿನ ಕೂಕನಪಳ್ಳಿ ಗ್ರಾಮದಲ್ಲಿ ನಡೆದಿದೆ. ಕೂಕನಪಳ್ಳಿಯ ರಮೇಶ ಹೊಸಳ್ಳಿ, ಅಮರಯ್ಯ ಹಿರೇಮಠ ಮೃತರು. ಫೆ.4ರಂದು ಜಮೀನಿನಲ್ಲಿ ಪಾರ್ಟಿ ಮಾಡಲು ಹೋಗಿದ್ದಾಗ ಈ ಘಟನೆ ನಡೆದಿದೆ. ಸಾರಾಯಿ ಎಂದು ಸ್ಪಿರಿಟ್ ಕುಡಿದ ರಮೇಶ್, ಶರಣಪ್ಪ ಹಂಚಿನಾಳ ಮತ್ತು ಆಮರಯ್ಯ ಹಿರೇಮಠ ಅವರ ಅರೋಗ್ಯದಲ್ಲಿ ಏರು ಪೇರು ಆಗಿದ್ದು ಇವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ರಮೇಶ್ ಚಿಕಿತ್ಸೆ ಫಲಿಸದೆ ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟಿದ್ದು, ಹುಬ್ಬಳ್ಳಿಯಲ್ಲಿ ಅಮರಯ್ಯ ಹಿರೇಮಠ ಮೃತಪಟ್ಟಿದ್ದಾನೆ. ಮೃತ ರಮೇಶ್ ಅವರ ತಂದೆ ನೀಡಿದ ದೂರಿನ ಆಧಾರದ ಮೇಲೆ ಮುನಿರಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕರ್ನಾಟಕಕ್ಕೆ ಯಾವುದೇ ರೈಲ್ವೆ ಯೋಜನೆ ನೀಡದೆ ಅನ್ಯಾಯ : ರಮೇಶ್ ಬಾಬು
ಬೆಂಗಳೂರು : ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಕರ್ನಾಟಕದ ರೈಲ್ವೆ ಯೋಜನೆಗಳ ಕುರಿತು ಸುಳ್ಳು ಹೇಳಿಕೆ ನೀಡಿದ್ದು, ಕರ್ನಾಟಕ ರಾಜ್ಯಕ್ಕೆ ರೈಲ್ವೆ ಯೋಜನೆಗಳನ್ನಾಗಲಿ, ಕೇಂದ್ರದಿಂದ ಅನುದಾನ ಅಥವಾ ಸಹಾಯಧನವನ್ನಾಗಲಿ ನೀಡದೆ ನಿರಂತರವಾಗಿ ಅನ್ಯಾಯ ಮಾಡುತ್ತಿದೆ ಎಂದು ಕೆಪಿಸಿಸಿ ಮಾಧ್ಯಮ ವಿಭಾಗದ ಅಧ್ಯಕ್ಷ ಹಾಗೂ ಪರಿಷತ್ ಸದಸ್ಯ ರಮೇಶ್ ಬಾಬು ಟೀಕಿಸಿದ್ದಾರೆ. ರವಿವಾರ ಈ ಸಂಬಂಧ ಪ್ರಕಟಣೆ ನೀಡಿರುವ ಅವರು, ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಸುದ್ದಿಗೋಷ್ಟಿ ನಡೆಸಿ ‘ಬುಲೆಟ್ ಟ್ರೈನ್ ಕಾರಿಡಾರ್ಗಳಿಂದ ಕರ್ನಾಟಕಕ್ಕೆ ಲಾಭ’ ಎಂದು ಹೇಳಿರುವುದು ಸುಳ್ಳು, ಅಸಂಬದ್ಧ ಮತ್ತು ಜನರನ್ನು ದಾರಿತಪ್ಪಿಸುವ ಯತ್ನ. ಇತರೆ ರಾಜ್ಯಗಳಿಗೆ ನೀಡಿರುವ ಯೋಜನೆಗಳಲ್ಲಿ ಮುಂದುವರೆದ ಭಾಗವಾಗಿ ಕರ್ನಾಟಕವನ್ನು ತಲುಪುತ್ತಿರುವ ರೈಲು ಯೋಜನೆಗಳಿಗೆ ಕರ್ನಾಟಕಕ್ಕೆ ನೀಡಿರುವ ಯೋಜನೆಗಳ ರೀತಿಯಲ್ಲಿ ಸುಳ್ಳು ಪ್ರಚಾರ ಮಾಡಲಾಗುತ್ತಿದೆ ಎಂದು ದೂರಿದ್ದಾರೆ. ಬುಲೆಟ್ ಟ್ರೈನ್ ಕಾರಿಡಾರ್ ಕರ್ನಾಟಕಕ್ಕೆ ಲಾಭವಾಗುತ್ತದೆ ಎನ್ನುವುದು ರಾಜಕೀಯ ವಂಚನೆ ಹೊರತು ಇನ್ನೇನೂ ಅಲ್ಲ. ಕೇಂದ್ರ ಸರಕಾರವು ಹಿಂದಿನ ಯುಪಿಎ ಸರಕಾರದ ಅವಧಿಯಲ್ಲಿ, ಆಗಿನ ರೈಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ ಕರ್ನಾಟಕಕ್ಕಾಗಿ ಪ್ರಸ್ತಾಪಿಸಿದ್ದ ಅನೇಕ ಮಹತ್ವದ ರೈಲ್ವೆ ಯೋಜನೆಗಳನ್ನು ಜಾರಿಗೆ ತರಲು ವಿಫಲವಾಗಿದೆ ಎಂದು ಅವರು ಟೀಕಿಸಿದ್ದಾರೆ. ಹೊಸ ರೈಲು ಮಾರ್ಗಗಳು, ಡಬ್ಲಿಂಗ್ ಮತ್ತು ಎಲೆಕ್ಟ್ರಿಫಿಕೇಶನ್ ಯೋಜನೆಗಳು, ಉತ್ತರ ಕರ್ನಾಟಕ–ಹೈದರಾಬಾದ್, ಕಲಬುರಗಿ–ಬೀದರ್, ಹುಬ್ಬಳ್ಳಿ–ಅಂಕೋಲಾ ಮುಂತಾದ ಸಂಪರ್ಕ ಯೋಜನೆಗಳು, ದಕ್ಷಿಣ ಪಶ್ಚಿಮ ರೈಲ್ವೆ ವಲಯದ ಬಲವರ್ಧನೆ ಈ ಎಲ್ಲ ಯೋಜನೆಗಳು ಕೇಂದ್ರದ ನಿರ್ಲಕ್ಷ್ಯದಿಂದ ವರ್ಷಗಳ ಕಾಲ ಧೂಳು ತಿನ್ನುತ್ತಿವೆ. ಇದು ಕೇವಲ ಆಡಳಿತ ವೈಫಲ್ಯವಲ್ಲ, ಕರ್ನಾಟಕದ ವಿರುದ್ಧದ ಬಿಜೆಪಿ ಸರಕಾರದ ರಾಜಕೀಯ ಪ್ರತೀಕಾರ ಎಂದು ಅವರು ವಾಗ್ದಾಳಿ ನಡೆಸಿದ್ದಾರೆ. ಕರ್ನಾಟಕಕ್ಕೆ ಸಂಬಂಧಿಸಿದ ರೈಲ್ವೆ ವಿಷಯದ ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕದ ರೈಲ್ವೆ ರಾಜ್ಯ ಸಚಿವ ಸೋಮಣ್ಣರನ್ನು ಉದ್ದೇಶಪೂರ್ವಕವಾಗಿ ಆಹ್ವಾನಿಸದೇ ಇರುವುದು, ಇದು ಕೇವಲ ಶಿಷ್ಟಾಚಾರದ ಉಲ್ಲಂಘನೆಯಲ್ಲ. ಬಿಜೆಪಿಯ ಒಳಜಗಳ, ಗುಂಪುಗಾರಿಕೆ ಮತ್ತು ಕರ್ನಾಟಕದ ನಾಯಕರನ್ನು ತುಳಿದು ಹಾಕುವ ಮನಸ್ಥಿತಿಯ ಪ್ರತಿಬಿಂಬ. ಕರ್ನಾಟಕದ ವಿಷಯದ ಮೇಲೆ ಕರ್ನಾಟಕದ ಸಚಿವರೇ ಇಲ್ಲದೆ ಪತ್ರಿಕಾಗೋಷ್ಠಿ ಯಾಕೆ? ಎಂದು ಅವರು ಪ್ರಶ್ನಿಸಿದ್ದಾರೆ. ಇದು ಕೇಂದ್ರ ಸರಕಾರದ ತೀರ್ಮಾನವೇ, ಅಥವಾ ಬಿಜೆಪಿ ಒಳರಾಜಕೀಯದ ಫಲವೇ?. ಉತ್ತರ ಭಾರತದ ರಾಜ್ಯಗಳಿಗೆ ಸಾವಿರಾರು ಕೋಟಿ ರೂ.ಯೋಜನೆಗಳು, ಕರ್ನಾಟಕಕ್ಕೆ ಮಾತ್ರ ಭ್ರಮೆ ಮತ್ತು ಸುಳ್ಳು ಹೇಳಿಕೆಗಳೇ?. ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಕರ್ನಾಟಕದ ಜನತೆಗೆ ಸ್ಪಷ್ಟ ಉತ್ತರ ಕೊಡಬೇಕು. ಖರ್ಗೆ ಅವಧಿಯಲ್ಲಿ ಪ್ರಸ್ತಾಪಿಸಲಾದ ಯೋಜನೆಗಳನ್ನು ಯಾಕೆ ಜಾರಿಗೆ ತರಲಾಗಿಲ್ಲ?. ಕರ್ನಾಟಕಕ್ಕೆ ನೀಡಬೇಕಾದ ನ್ಯಾಯಸಮ್ಮತ ರೈಲ್ವೆ ಅನುದಾನವನ್ನು ಯಾಕೆ ತಡೆಹಿಡಿಯಲಾಗಿದೆ? ಎಂದು ಅವರು ಕೇಳಿದ್ದಾರೆ.
ಮಣಿಪಾಲ ಮ್ಯಾರಥಾನ್: ಸತೀಶ್ ಕುಮಾರ್-ಸೆನೈಟ್ ಚಾಂಪಿಯನ್
20,000ಕ್ಕೂ ಅಧಿಕ ಕ್ರೀಡಾಪಟುಗಳು ಭಾಗಿ: 25 ಲಕ್ಷ ರೂ. ನಗದು ಬಹುಮಾನ
Adani Vidarbha Development ವಿದರ್ಭ ಅಭಿವೃದ್ಧಿಗೆ ಅದಾನಿ ಗ್ರೂಪ್ನಿಂದ 70,000 ಕೋಟಿ ರೂ. ಹೂಡಿಕೆ ಯೋಜನೆ
ವಿದರ್ಭ ಪ್ರದೇಶದ ಅಭಿವೃದ್ಧಿಗಾಗಿ ಅದಾನಿ ಗ್ರೂಪ್ 70,000 ಕೋಟಿ ರೂ. ಮೊತ್ತದ ಯೋಜನೆಯನ್ನು ಘೋಷಿಸಿದೆ. ವಿದರ್ಭ ಪ್ರದೇಶದ ಅಭಿವೃದ್ಧಿಗಾಗಿ 70,000 ಕೋಟಿ ಮೊತ್ತದ ದೀರ್ಘಕಾಲೀನ ಹೂಡಿಕೆ ಯೋಜನೆಗಳನ್ನು ಅದಾನಿ ಗ್ರೂಪ್ ಘೋಷಿಸಿದೆ. ಈ ಹೂಡಿಕೆಯು ಇಂಧನ, ಮೂಲಸೌಕರ್ಯ, ಲಾಜಿಸ್ಟಿಕ್ಸ್, ವಿಮಾನಯಾನ ಮತ್ತು ಸಮುದಾಯ ಅಭಿವೃದ್ಧಿ ಕ್ಷೇತ್ರಗಳಲ್ಲಿ ನಡೆಯಲಿದೆ. ಈ ಯೋಜನೆಯ ಮೂಲಕ ವಿದರ್ಭವನ್ನು ಶುದ್ಧ ಇಂಧನ, ಕೈಗಾರಿಕಾ
ದಲಿತ ಯುವಕನ ಶೂಟೌಟ್ ಪ್ರಕರಣ ಸಿಓಡಿ ತನಿಖೆಗೆ ಪ್ರಸ್ತಾವ: ಎಸ್ಪಿ ಹರಿರಾಂ ಶಂಕರ್
ಜಿಲ್ಲಾ ದಲಿತರ ಕುಂದು ಕೊರತೆ ಸಭೆ
ಕಾಂಗ್ರೆಸ್ ಸಂಸದ ಗೌರವ್ ಗೊಗೊಯ್ ಪಾಕಿಸ್ತಾನದೊಂದಿಗೆ ಸಂಪರ್ಕ ಪ್ರಕರಣ : ಗೃಹ ಸಚಿವಾಲಯಕ್ಕೆ ಹಸ್ತಾಂತರಿಸಲು ನಿರ್ಧಾರ
ಅಸ್ಸಾಂ ಕಾಂಗ್ರೆಸ್ ಸಂಸದ ಗೌರವ್ ಗೊಗೊಯ್ ಪಾಕಿಸ್ತಾನದೊಂದಿಗೆ ಸಂಪರ್ಕ ಹೊಂದಿದ್ದಾರೆ ಎನ್ನುವ ಪ್ರಕರಣವನ್ನು ಗೃಹ ಸಚಿವಾಲಯಕ್ಕೆ ಹಸ್ತಾಂತರಿಸಲು ಅಸ್ಸಾಂ ಸಚಿವ ಸಂಪುಟ ನಿರ್ಧರಿಸಿದೆ. ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಸಿಎಂ ಹಿಮಂತ ಶರ್ಮಾ ಈ ವಿಷಯವನ್ನು ತಿಳಿಸಿದ್ದಾರೆ. ಈ ಬೆಳವಣಿಗೆ ಅಸ್ಸಾಂ ರಾಜಕೀಯದಲ್ಲಿ ಸಂಚಲನ ಮೂಡಿಸಿದೆ.
ವ್ಯಂಗ್ಯಚಿತ್ರಗಳು ಮೊನಚು ಕಳೆದುಕೊಳ್ಳುತ್ತಿವೆ : ಜಿ.ಎನ್.ಮೋಹನ್
ವಾರ್ಷಿಕ ವ್ಯಂಗ್ಯಚಿತ್ರ ಪ್ರದರ್ಶನ
ಬೇರೆಯವರೊಂದಿಗೆ ಲವರ್ ವಿವಾಹ ನಿಶ್ಚಯ: ಬೆಂಗಳೂರಿನಲ್ಲಿ ಬಾಡಿ ಬಿಲ್ಡರ್ ಸಾವಿಗೆ ಶರಣು! ಡೆತ್ನೋಟ್ ಪತ್ತೆ
ಬೆಂಗಳೂರಿನ ಜಿಮ್ ಟ್ರೈನರ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಪ್ರೀತಿಸಿದ ಯುವತಿಯು ಬೇರೊಬ್ಬ ಯುವಕನೊಟ್ಟಿಗೆ ಎಂಗೇಜ್ಮೆಂಟ್ ಮಾಡಿಕೊಂಡಳು ಎಂಬ ಕಾರಣಕ್ಕೆ ಬೇಸತ್ತು ಸಾವಿಗೆ ಶರಣಾಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಮೃತ ವ್ಯಕ್ತಿ ಬರೆದ ಡೆಡ್ನೋಟ್ಗಳು ಪೊಲೀಸರಿಗೆ ಲಭ್ಯವಾಗಿದ್ದು, ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈ ಬಗ್ಗೆ ಹೆಚ್ಚಿನ ವಿವರ ಇಲ್ಲಿದೆ.

19 C