ಅಬುಧಾಬಿ| ಭದ್ರತಾಪಡೆಗಳು ಹೊಡೆದುರುಳಿಸಿದ ಕ್ಷಿಪಣಿಯ ಅವಶೇಷಗಳು ಬಿದ್ದು ಐವರು ಭಾರತೀಯರಿಗೆ ಗಾಯ
ಅಬುಧಾಬಿ: ಭದ್ರತಾಪಡೆಗಳು ಹೊಡೆದುರುಳಿಸಿದ ಬ್ಯಾಲಿಸ್ಟಿಕ್ ಕ್ಷಿಪಣಿಯ ಅವಶೇಷಗಳು ಬಿದ್ದು ಐವರು ಭಾರತೀಯ ಪ್ರಜೆಗಳು ಗಾಯಗೊಂಡಿದ್ದಾರೆ ಎಂದು ಅಬುಧಾಬಿ ಸರಕಾರಿ ಕಚೇರಿ ಪ್ರಕಟನೆಯಲ್ಲಿ ತಿಳಿಸಿದೆ. ಈ ಗಾಯಗಳು ಸ್ವರೂಪವು ಸಾಧಾರಣದಿಂದ ಸಣ್ಣಪುಟ್ಟ ಪ್ರಮಾಣದ್ದಾಗಿವೆ ಎಂದು ಮಾಧ್ಯಮ ಕಚೇರಿ ಹೇಳಿದೆ. ನಗರದ ಖಲೀಫಾ ಆರ್ಥಿಕ ವಲಯದಲ್ಲಿ ಬಿದ್ದಿರುವ ಕ್ಷಿಪಣಿ ಅವಶೇಷಗಳಿಂದ ಉಂಟಾಗಿರುವ ಅಗ್ನಿಯನ್ನು ನಿಯಂತ್ರಿಸುವ ಕಾರ್ಯ ನಡೆಯುತ್ತಿದೆ ಎಂದು ಮಾಧ್ಯಮ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ.
Viral ಆಯ್ತು ಅಕೌಂಟ್ಸ್ ಪ್ರಶ್ನೆಪತ್ರಿಕೆ: ಪರೀಕ್ಷೆಯಲ್ಲೂ ಮಿಂಚಿದ 'ಧುರಂಧರ್: ದಿ ರಿವೆಂಜ್' ಸಿನಿಮಾದ ಪಾತ್ರಗಳು
ಬೆಂಗಳೂರು: ಸಾಮಾನ್ಯವಾಗಿ ಯಾವುದೇ ಒಂದು ಸಿನಿಮಾ ಬಿಡುಗಡೆಯಾದರೆ, ಅದರ ಬಗ್ಗೆ ಚಿತ್ರಮಂದಿರಗಳಲ್ಲಿ, ಅಭಿಮಾನಿಗಳ ಪೇಜ್ಗಳಲ್ಲಿ ಅಥವಾ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗುವುದು ಸಹಜ. ಆದರೆ, ಇದೀಗ ಬಿಡುಗಡೆಯಾಗಿ ಬಾಕ್ಸ್ ಆಫೀಸ್ನಲ್ಲಿ ಸದ್ದು ಮಾಡುತ್ತಿರುವ 'ಧುರಂಧರ್: ದಿ ರಿವೆಂಜ್' ಸಿನಿಮಾ ಮಾತ್ರ ಈ ಎಲ್ಲದರ ಗಡಿ ದಾಟಿ, ನೇರವಾಗಿ ವಿದ್ಯಾರ್ಥಿಗಳ ಪರೀಕ್ಷಾ ಕೊಠಡಿಗೆ ಎಂಟ್ರಿಕೊಟ್ಟಿದೆ. ಹೌದು, ಕಾಮರ್ಸ್ ವಿದ್ಯಾರ್ಥಿಗಳ 'ಅಕೌಂಟ್ಸ್'
ಸರ್ಟಿಫೈಡ್ ಮೀನು ತಿನ್ನಿಸುವ ಹುನ್ನಾರ!
ಸೆನ್ಸರ್ಗಳು, QR ಕೋಡ್ಗಳು, ಜಿಪಿಎಸ್ಗಳನ್ನಾಧರಿಸಿ ನಡೆಯುವ ಈ ಟ್ರೇಸೆಬಿಲಿಟಿ ವ್ಯವಸ್ಥೆಯ ಪ್ರತೀ ಹಂತದಲ್ಲಿ ಮೂಲ ಸೌಕರ್ಯಗಳನ್ನು ಹೊಂದುವುದು, ನಿರ್ವಹಿಸುವುದು, ಸಾಮಾಜಿಕ-ಆರ್ಥಿಕ ತಾರತಮ್ಯಗಳು, ಪ್ರಾದೇಶಿಕ ಭಿನ್ನತೆಗಳು... ಇವೆಲ್ಲವುಗಳ ನಿರ್ವಹಣೆ ದೇಶದೊಳಗಿನ ಮೀನುಗಾರಿಕೆಗೆ ದೊಡ್ಡ ಸವಾಲಾಗಲಿದೆ. ಈ ಸವಲತ್ತುಗಳನ್ನು ಹೊಂದುವ, ನಿಭಾಯಿಸುವ ತಾಕತ್ತು ಇರುವವರು ಮಾತ್ರ ಮೀನುಗಾರರಾಗಿ ಉಳಿಯಲಿದ್ದಾರೆ. ಸೂಟು ಬೂಟಿನ ರೈತರ ರೀತಿಯಲ್ಲೇ ಸೂಟುಬೂಟಿನ ಮೀನುಗಾರರನ್ನು ಸಿದ್ಧಪಡಿಸಲು ಭಾರತ ಸರಕಾರ ಸನ್ನದ್ಧವಾಗಿದೆ. ಸದ್ಯಕ್ಕೆ ಲಭ್ಯವಿರುವ ಮಾಹಿತಿಗಳ ಪ್ರಕಾರ, ನ್ಯಾಷನಲ್ ಫ್ರೇಮ್ವರ್ಕ್ ಆನ್ ಟ್ರೇಸೆಬಿಲಿಟಿ ಇನ್ ಫಿಶರೀಸ್ ಆಂಡ್ ಅಕ್ವಾಕಲ್ಚರ್-2025 ಎಂಬ ಭಾರತ ಸರಕಾರದ ನೀತ್ಯಾತ್ಮಕ ಚೌಕಟ್ಟು, ತಾನು ಯೋಜಿಸಿಕೊಂಡಿರುವ ಸಮಯಾವಧಿಯ ಒಳಗೆ ಅನುಷ್ಠಾನಗೊಳ್ಳುವುದು ಸಾಧ್ಯವಾದರೆ, 2026ರ ಅಂತ್ಯದ ಒಳಗೆ ನಾವೆಲ್ಲ ಸರ್ಟಿಫೈಡ್, ಲೇಬಲ್ಡ್ ಮೀನುಗಳನ್ನೇ ತಿನ್ನಲಿದ್ದೇವೆ! ಸಾಂಪ್ರದಾಯಿಕ ಬಡ ಮೀನುಗಾರರನ್ನು ಸಮುದ್ರದಿಂದ ದೂರ ಕಳುಹಿಸುವ ಮಹಾಯೋಜನೆಯ ಭಾಗವಾಗಿಯೇ ಈ ‘ಟ್ರೇಸೆಬಿಲಿಟಿ’ ತತ್ವ ಮುನ್ನೆಲೆಗೆ ಬರುತ್ತಿದೆ ಎಂಬುದರಲ್ಲಿ ಯಾವುದೇ ಸಂಶಯ ಉಳಿದಿಲ್ಲ. ತಾವು ತಿನ್ನುತ್ತಿರುವ ಮೀನನ್ನು ಜವಾಬ್ದಾರಿಯುತವಾದ, ಪರಿಸರ ಸಹ್ಯವಾದ ವಿಧಾನದಲ್ಲಿ ಹಿಡಿಯಲಾಗಿದೆ ಮತ್ತು ಆ ಮೀನನ್ನು ಹಿಡಿದ ಸಂಸ್ಥೆಯು ನೈಸರ್ಗಿಕ ಸಂಪನ್ಮೂಲಗಳನ್ನು ಪರಿಸರಕ್ಕೆ ಹಾನಿ ಆಗದಂತೆ ಬಳಕೆ ಮಾಡಿದೆ ಎಂಬುದನ್ನು ಆ ಮೀನು ತಿನ್ನುವ ಗ್ರಾಹಕರಿಗೆ ತಿಳಿಸುವ ಮಾರುಕಟ್ಟೆ ಪರಿಕರವೇ ಎಕೊ ಲೇಬಲಿಂಗ್. ಇಂತಹ ಪ್ರಮಾಣೀಕರಣಗಳನ್ನು ಒದಗಿಸುವ ವ್ಯವಸ್ಥೆಯೇ ಕ್ಯಾಚ್ ಸರ್ಟಿಫಿಕೇಷನ್. ವಿಶ್ವಸಂಸ್ಥೆಯ ಸಾಗರ ಕಾನೂನುಗಳ ಸಮಾವೇಶ (UNCLOS) 1982ರಲ್ಲಿ ಸ್ವೀಕರಿಸಿರುವ ನಿರ್ಣಯದ ಅಡಿಯಲ್ಲಿ ಮೀನು ಮತ್ತಿತರ ಜಲ ಸಂಪನ್ಮೂಲಗಳ ಜವಾಬ್ದಾರಿಯುತ ಬಳಕೆಯ ಬಗ್ಗೆ ಹೇಳಲಾಗಿದೆ. 1995ರಲ್ಲಿ ವಿಶ್ವ ಕೃಷಿ ಮತ್ತು ಆಹಾರ ಸಂಸ್ಥೆಯು (FAO) ತನ್ನ ೨೮ನೇ ವಾರ್ಷಿಕ ಸಭೆಯಲ್ಲಿ ಜವಾಬ್ದಾರಿಯುತ ಮೀನುಗಾರಿಕೆಯ ಸಂಹಿತೆಯನ್ನು ಅಳವಡಿಸಿಕೊಂಡಿದ್ದು, ಅಲ್ಲಿಂದೀಚೆಗೆ ಹಲವಾರು ನಿಯಮಗಳು ಈ ನಿಟ್ಟಿನಲ್ಲಿ ರೂಪುಗೊಳ್ಳುತ್ತಾ ಬಂದಿವೆ. ಈ ಅಂತರ್ರಾಷ್ಟ್ರೀಯ ಮಾರ್ಗದರ್ಶಿಗಳಿಗೆ ಅನುಗುಣವಾಗಿ ಭಾರತ ಸರಕಾರವು ಪ್ರಧಾನ ಮಂತ್ರಿ ಮತ್ಸ್ಯ ಸಂಪದಾ ಯೋಜನೆ (PMMSY) ಅಡಿಯಲ್ಲಿ ಸುಸ್ಥಿರ ಮೀನುಗಾರಿಕೆಗಾಗಿ National Framework on Traceability in Fisheries and Aquaculture 2025 ಅನ್ನು ಬಿಡುಗಡೆಗೊಳಿಸಿದ್ದು, 2026ರ ಕೊನೆಯ ಒಳಗೆ ಈ ನೀತ್ಯಾತ್ಮಕ ಚೌಕಟ್ಟನ್ನು ಆರು ಹಂತಗಳ ಯೋಜನೆಯ ಮೂಲಕ ಕಾರ್ಯರೂಪಕ್ಕೆ ತರಲು ನಿರ್ಧರಿಸಿದೆ. ಇದಕ್ಕೆ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಅಡಿ ಬರುವ ಸಾಗರೋತ್ಪನ್ನಗಳ ರಫ್ತು ಅಭಿವೃದ್ಧಿ ಪ್ರಾಧಿಕಾರ (MPEDA)ವನ್ನು ನೋಡಲ್ ಏಜೆನ್ಸಿ ಆಗಿ ಗುರುತಿಸಿದ್ದು, ಅದು ಬ್ರ್ಯಾಂಡ್ ಪ್ರಮೋಷನ್, ಆಮದು-ರಫ್ತುದಾರರ ನೋಂದಣಿ, ರಫ್ತಿಗೆ ಅಗತ್ಯವಿರುವ ವಿವಿಧ ರೀತಿಯ ಕ್ಯಾಚ್ ಸರ್ಟಿಫಿಕೇಟ್ಗಳನ್ನು ಒದಗಿಸಲಿದೆ ಎಂದು ಲೋಕಸಭೆಯಲ್ಲಿ ವಿ. ವೈದ್ಯಲಿಂಗಂ (ಕಾಂಗ್ರೆಸ್) ಅವರಿಗೆ, ಭಾರತದ ಮೀನುಗಾರಿಕಾ ಸಚಿವ ರಾಜೀವ್ ರಂಜನ್ ಸಿಂಗ್ ಉತ್ತರಿಸಿದ್ದಾರೆ (ಚುಕ್ಕೆ ರಹಿತ ಪ್ರಶ್ನೆ 4055; ದಿನಾಂಕ 17-03-2026). ಸಾಗರ ಮತ್ತು ಒಳನಾಡು ಮೀನುಗಾರಿಕೆಗಳೆರಡಕ್ಕೂ ಸಂಬಂಧಿಸಿದಂತೆ ಮೀನುಗಾರಿಕಾ ದೋಣಿಗಳ ನೋಂದಣಿ, ನಿಗಾ, ತಪಾಸಣೆ, ಪ್ರಮಾಣೀಕರಣ, ಸಂಸ್ಕರಣೆ, ದಾಸ್ತಾನು, ರಫ್ತು, ಆಂತರಿಕ ಮಾರುಕಟ್ಟೆ... ಹೀಗೆ ಪ್ರತಿಯೊಂದು ಹಂತದಲ್ಲೂ ಸಾಗರೋತ್ಪನ್ನಗಳ ಶುಚಿತ್ವ, ಆಹಾರದ ಗುಣಮಟ್ಟಗಳ ನಿಯಂತ್ರಣಕ್ಕೆ ಡಿಜಿಟಲ್ ವ್ಯವಸ್ಥೆಯೊಂದರ ಮೂಲಕ ಮ್ಯಾಪಿಂಗ್ ವ್ಯವಸ್ಥೆ ಮಾಡುವುದು; ಮೀನು ಹಿಡಿದ ಜಾಗ, ವಿಧಾನಗಳಿಂದ ಆರಂಭಿಸಿ, ಕೊನೆಯ ಗ್ರಾಹಕರ ತಟ್ಟೆಗೆ ತಲುಪುವ ತನಕವೂ ಪ್ರತೀ ಹಂತದಲ್ಲಿ ‘ಟ್ರೇಸೆಬಿಲಿಟಿ’ ಸಾಧ್ಯಗೊಳಿಸುವ ಮೂಲಕ ಅಂತರ್ರಾಷ್ಟ್ರೀಯ ಮಾರುಕಟ್ಟೆಯಲ್ಲಿ ನಂಬಿಗಸ್ಥಿಕೆ ಗಳಿಸಿಕೊಳ್ಳುವುದು, ಈ ಮಹಾ ಯೋಜನೆಯ ಸ್ಥೂಲ ಉದ್ದೇಶ. ಹೊರನೋಟಕ್ಕೆ ಇದೆಲ್ಲ ಬಹಳ ಸುಂದರ, ಸುಸಜ್ಜಿತ ವ್ಯವಸ್ಥೆ ಎಂದು ಕಾಣಿಸುತ್ತದೆಯಾದರೂ, ಈ ವ್ಯವಸ್ಥೆಯ ಮೊದಲ ಬಲಿಪಶುಗಳು - ಸಾಂಪ್ರದಾಯಿಕ ಮೀನುಗಾರರು. ಭಾರತದ ಮೀನುಗಾರಿಕಾ ವಲಯ ಎಂದರೆ ಅದು ಸಣ್ಣ, ಅತಿಸಣ್ಣ ಮತ್ತು ಸಾಂಪ್ರದಾಯಿಕ ಮೀನುಗಾರರು. ಕಾರ್ಪೊರೇಟ್ ಮೀನುಗಾರಿಕೆ ನಮಗೆ ತೀರಾ ಹೊಸದು. ಈಗಾಗಲೇ ಸಮುದ್ರ ತೀರದಿಂದ ಸುಯೋಜಿತವಾಗಿ ಮತ್ತು ಹಂತ-ಹಂತವಾಗಿ ಎತ್ತಂಗಡಿ ಆಗುತ್ತಿರುವ ಈ ಸಾಂಪ್ರದಾಯಿಕ ಮೀನುಗಾರರು ಇಂತಹ ಆಧುನಿಕ ಮಾರುಕಟ್ಟೆ ನಿಯಮಗಳಿಂದ ಇನ್ನಷ್ಟು ಸಂಕಷ್ಟಕ್ಕೀಡಾಗಲಿದ್ದಾರೆ. ತಾವು ಹಿಡಿದ ಮೀನುಗಳಿಗೆ ಮೊಬೈಲ್ ಅಪ್ಲಿಕೇಷನ್ಗಳನ್ನು ಬಳಸಿ ಅಥವಾ ಬೇರೆ ಡಿಜಿಟಲ್ ಪರಿಕರಗಳ ಮೂಲಕ ಆನ್ಲೈನ್ ಫಾರ್ಮ್ಗಳನ್ನು ಭರ್ತಿ ಮಾಡಿ, ಡಿಜಿಟಲ್ ದಾಖಲೆಗಳನ್ನು ಶೇಖರಿಸಿಟ್ಟುಕೊಳ್ಳಿ, ಹಿಡಿದ ಮೀನುಗಳ ಬಗ್ಗೆ ಪ್ರಮಾಣೀಕರಣ (ಕ್ಯಾಚ್ ಸರ್ಟಿಫಿಕೇಟ್) ಪಡೆಯಲು 1,700-4,000 ರೂ.ಗಳಷ್ಟು ವೆಚ್ಚ ಮಾಡಿ, ತಪಾಸಣಾ ವ್ಯವಸ್ಥೆಗೆ ಹಣಕೊಡಿ, ಜಿಪಿಎಸ್ ಇತ್ಯಾದಿ ವವಸ್ಥೆ ಏರ್ಪಡಿಸಿಕೊಳ್ಳಿ ಎಂದೆಲ್ಲ ಪೀಡಿಸುವ ಸ್ಥಿತಿ ಬಂದರೆ ಅವರು ಸಹಜವಾಗಿಯೇ ಈ ರಗಳೆಗಳು ಬೇಡವೆಂದು ಕೈಚೆಲ್ಲಲಿದ್ದಾರೆ ಎಂಬುದೇ ಈ ಯೋಜನೆಗಳ ಹಿಂದಿರುವ ಚಿಂತನೆ ಎಂದು ಅನ್ನಿಸುತ್ತದೆ. ಸರಕಾರ ತನ್ನ ನೀತ್ಯಾತ್ಮಕ ಚೌಕಟ್ಟಿನ ದಾಖಲೆಯಲ್ಲಿ ಇಂತಹ ಬಡಪಾಯಿಗಳನ್ನೆಲ್ಲ ಒಳಗೊಳ್ಳುವ ಮಾತುಗಳನ್ನು ಹೇಳಿದೆಯಾದರೂ, ಇದು ಬಾಯುಪಚಾರಕ್ಕಿಂತ ಮೇಲಿನದಲ್ಲ ಎಂದು ಅನ್ನಿಸುತ್ತದೆ. MPEDAದ ವಾರ್ಷಿಕ ವರದಿಯ ಪ್ರಕಾರ, ಅದು 2024-25ನೇ ಸಾಲಿನಲ್ಲಿ ಯುರೋಪಿಯನ್ ಒಕ್ಕೂಟಕ್ಕೆ ರಫ್ತಿಗಾಗಿ 9,728 ಕ್ಯಾಚ್ ಸರ್ಟಿಫಿಕೇಟ್ಗಳನ್ನು, ಯುರೋಪಿಯನೇತರ ದೇಶಗಳಿಗೆ ರಫ್ತಿಗಾಗಿ 931 ಕ್ಯಾಚ್ ಸರ್ಟಿಫಿಕೇಟ್ಗಳನ್ನೂ ವಿತರಿಸಿದೆ. ಜಪಾನಿಗೆ ರಫ್ತಿಗಾಗಿ 175 ಜಪಾನ್ ಕ್ಯಾಚ್ ಸರ್ಟಿಫಿಕೇಟ್ಗಳನ್ನು, ಅಮೆರಿಕಕ್ಕೆ ರಫ್ತಿಗಾಗಿ 20,531ರಷ್ಟು DS2031 ಸರ್ಟಿಫಿಕೇಟುಗಳನ್ನು ಮತ್ತಿತರ ಹಲವು ಸರ್ಟಿಫಿಕೇಟ್ಗಳನ್ನು ವಿತರಿಸಿರುವುದಾಗಿ ವರದಿ ಹೇಳುತ್ತಿದೆ. ಇದರಲ್ಲಿ ಪಾಲ್ಗೊಂಡ ಸಣ್ಣ-ಸಾಂಪ್ರದಾಯಿಕ ಮೀನುಗಾರರ ಪ್ರಮಾಣ ಎಷ್ಟೆಂಬುದು ಸ್ಪಷ್ಟವಿಲ್ಲ. ಸೆನ್ಸರ್ಗಳು, QR ಕೋಡ್ಗಳು, ಜಿಪಿಎಸ್ಗಳನ್ನಾಧರಿಸಿ ನಡೆಯುವ ಈ ಟ್ರೇಸೆಬಿಲಿಟಿ ವ್ಯವಸ್ಥೆಯ ಪ್ರತೀ ಹಂತದಲ್ಲಿ ಮೂಲ ಸೌಕರ್ಯಗಳನ್ನು ಹೊಂದುವುದು, ನಿರ್ವಹಿಸುವುದು, ಸಾಮಾಜಿಕ-ಆರ್ಥಿಕ ತಾರತಮ್ಯಗಳು, ಪ್ರಾದೇಶಿಕ ಭಿನ್ನತೆಗಳು... ಇವೆಲ್ಲವುಗಳ ನಿರ್ವಹಣೆ ದೇಶದೊಳಗಿನ ಮೀನುಗಾರಿಕೆಗೆ ದೊಡ್ಡ ಸವಾಲಾಗಲಿದೆ. ಈ ಸವಲತ್ತುಗಳನ್ನು ಹೊಂದುವ, ನಿಭಾಯಿಸುವ ತಾಕತ್ತು ಇರುವವರು ಮಾತ್ರ ಮೀನುಗಾರರಾಗಿ ಉಳಿಯಲಿದ್ದಾರೆ. ಈಗಾಗಲೇ ಕ್ಯಾಚ್ ಸರ್ಟಿಫಿಕೇಟ್ ಪಡೆದು ರಫ್ತಾಗುತ್ತಿರುವ ಸಾಗರೋತ್ಪನ್ನಗಳು ಕೂಡ, ಅಕ್ರಮ ಆಳ ಸಮುದ್ರ ಮೀನುಗಾರಿಕೆ, ಲೈಟ್ ಫಿಷಿಂಗ್ಗಳಂತಹ ಕಳ್ಳಾಟಿಕೆಗಳ ಭಾಗವಾಗಿದ್ದು, ಸುಭಗರ ವೇಷದಲ್ಲಿ ರಫ್ತಾಗಿ ತಮ್ಮ ಗಮ್ಯಗಳನ್ನು ಮುಟ್ಟುತ್ತಿವೆ ಎಂದಾದರೆ, ಈ ಸರ್ಟಿಫಿಕೇಷನ್ ವ್ಯವಸ್ಥೆಯ ಪಾರದರ್ಶಕತೆಯ ಬಗ್ಗೆ ಕೂಡ ಪ್ರಶ್ನೆಗಳನ್ನು ಎತ್ತಬೇಕಾಗುತ್ತದೆ. ಸಾಂಪ್ರದಾಯಿಕ ಮೀನುಗಾರರು ಮಾತ್ರವಲ್ಲದೆ ಕಾರ್ಪೊರೇಟ್ ವಲಯ ದಲ್ಲೂ ಈ ಟ್ರೇಸೆಬಿಲಿಟಿ, ಸರ್ಟಿಫಿಕೇಷನ್ ವ್ಯವಸ್ಥೆಯ ಬಗ್ಗೆ ಪೂರ್ಣ ನಂಬಿಕೆ ಇದ್ದಂತಿಲ್ಲ. ಪಾರದರ್ಶಕತೆ, ಆಂತರಿಕ ಮಾರುಕಟ್ಟೆ ಯನ್ನು ರಕ್ಷಿಸಿಕೊಳ್ಳುವ ಹುನ್ನಾರ, ದೊಡ್ಡ-ಸಣ್ಣ ಸರಬರಾಜುದಾರರ ನಡುವೆ ತಾರತಮ್ಯದ ಸಮರ, ತಂತ್ರಜ್ಞಾನ ಲಭ್ಯತೆ ಮೂಲದ ಮಾರುಕಟ್ಟೆ ತಾರತಮ್ಯ, ಅಂತರ್ರಾಷ್ಟ್ರೀಯ ಮಾನದಂಡಗಳ ಸುಧಾರಣೆ-ಏಕರೂಪತೆ ಇನ್ನೂ ಪೂರ್ಣಪ್ರಮಾಣದಲ್ಲಿ ಸಾಧ್ಯವಾಗದಿರುವುದೇ ಮೊದಲಾದ ಸವಾಲುಗಳ ಚರ್ಚೆ ನಡೆದೇ ಇದೆ. ಇವೆಲ್ಲವಕ್ಕಿಂತ ವೈರುಧ್ಯದ ಇನ್ನೊಂದು ಸಂಗತಿಯೂ ಇದೆ. ಭಾರತದಲ್ಲಿ, ಅದರಲ್ಲೂ ಕರ್ನಾಟಕದ ಕರಾವಳಿಯಲ್ಲಿ ಕಳೆದೊಂದು ದಶಕದಿಂದೀಚೆಗೆ ಅಕ್ರಮವಾಗಿ ನಡೆಯುವ ಆಳಸಮುದ್ರ ಮೀನುಗಾರಿಕೆ, ಲೈಟ್ ಫಿಷಿಂಗ್ ಇತ್ಯಾದಿ ಪರಿಸರ ಹಾನಿಕಾರಕ ಚಟುವಟಿಕೆಗಳ ಕಾರಣದಿಂದಾಗಿ ಮೀನಿಗೆ ಕ್ಷಾಮ ತಲೆದೋರಿದೆ. ಮೀನುಗಳ ಸಂತಾನೋತ್ಪತ್ತಿ ಅವಧಿಯಲ್ಲಿ ಸಾಂಪ್ರದಾಯಿಕ ಮೀನುಗಾರರು ರಜೆಯಲ್ಲಿದ್ದರೆ, ಈ ಆಳಸಮುದ್ರ ಮೀನುಗಾರಿಕೆ ಅವ್ಯಾಹತವಾಗಿ ನಡೆದು ಎಳೆಯ ಮೀನುಗಳನ್ನು ಕೂಡ ಬಿಡದೆ ಹಿಡಿಯಲಾಗುತ್ತಿದೆ ಹಾಗೂ ಅವನ್ನೆಲ್ಲ ಫಿಷ್ ಮೀಲ್ ಉತ್ಪಾದನೆಗೆ ಬಳಸಲಾಗುತ್ತಿದೆ ಎಂಬ ಆಪಾದನೆಗಳಿವೆ. ಕಳೆದ ಐದಾರು ವರ್ಷಗಳಲ್ಲಿ ಭಾರತದ ಸಾಗರೋತ್ಪನ್ನ ರಫ್ತು ಗಮನಾರ್ಹವಾಗಿ ಹೆಚ್ಚಿದೆ. 2020-21ರಲ್ಲಿ 11.49 ಲಕ್ಷ ಮೆಟ್ರಿಕ್ ಟನ್ (43,720.98 ಕೋಟಿ ರೂ.) ಇದ್ದ ಈ ರಫ್ತು 2024-25ರಲ್ಲಿ 16.98 ಲಕ್ಷ ಮೆಟ್ರಿಕ್ ಟನ್ (62,408.45 ಕೋಟಿ ರೂ.)ಗಳಿಗೆ ಏರಿದೆ. ಮೀನಿನ ಕ್ಷಾಮ ಇದೆ ಎಂದು ಹೇಳುತ್ತಲೇ, ಮೀನುಗಾರಿಕೆಯು ಆಂತರಿಕ ಬಳಕೆಯನ್ನು ಕಡೆಗಣಿಸುತ್ತಿರುವುದು ಮತ್ತು ಅದೇ ವೇಳೆಗೆ ರಫ್ತು ಪ್ರಮಾಣ ಹೆಚ್ಚುತ್ತಿರುವುದು ಮೀನುಗಾರಿಕೆಯು ಕಾರ್ಪೊರೇಟೀಕರಣಗೊಳ್ಳುತ್ತಿರುವುದರ ಮತ್ತು ರಫ್ತನ್ನು ಹೆಚ್ಚುಹೆಚ್ಚು ಅವಲಂಬಿಸುತ್ತಿರುವುದರ ಸೂಚನೆ. ಕರಾವಳಿಯ ಉಣ್ಣುವ ಬಟ್ಟಲಿನ ಭಾಗವಾಗಿದ್ದ ಮೀನುಗಾರಿಕೆಯು ಕಾರ್ಪೊರೇಟ್ ವ್ಯವಹಾರವಾಗಿ ಬದಲಾಗುತ್ತಿದ್ದು, ಸಹಜವಾಗಿಯೇ ಬ್ರ್ಯಾಂಡಿಂಗ್, ಸರ್ಟಿಫಿಕೇಷನ್, ಟ್ರೇಸೆಬಿಲಿಟಿ...ಇವೆಲ್ಲವೂ ತಲೆ ಎತ್ತತೊಡಗಿವೆ ಹಾಗೂ ಸಾಂಪ್ರದಾಯಿಕ ಮೀನುಗಾರರು ಇಲ್ಲಿ ಕೊನೆಗೆ ಕಣ್ತುಂಬಿಕೊಳ್ಳುವ ಪ್ರೇಕ್ಷಕ ಮಾತ್ರ ಆಗಿ ಉಳಿಯುತ್ತಾರೆ. ತಂತ್ರಜ್ಞಾನ ಆಧರಿತ ಮೀನುಗಾರಿಕೆಯ ಯಾಂತ್ರಿಕ/ತಾಂತ್ರಿಕ ಕೌಶಲಗಳನ್ನು ಸಾಂಪ್ರದಾಯಿಕ ಮೀನುಗಾರರಿಗೆ ವರ್ಗಾಯಿಸುವಲ್ಲಿ ಗಂಭೀರ ಪ್ರಯತ್ನಗಳು ಆಗಿರದಿರುವುದರಿಂದ, ಇಲ್ಲಿ ಕರಾವಳಿಯಲ್ಲೀಗ ಸಹಜವಾಗಿಯೇ ಸ್ಥಳೀಯರ ಬದಲು ವಲಸೆ ಕಾರ್ಮಿಕರು ಮೀನುಗಾರಿಕೆಯಲ್ಲಿ ತೊಡಗಿಕೊಳ್ಳುತ್ತಿರುವ ಪ್ರಮಾಣ ಹೆಚ್ಚುತ್ತಿದೆ. ಕೇವಲ 30-40 ವರ್ಷಗಳ ಹಿಂದೆ ಅತ್ಯಂತ ಸುಸ್ಥಿರವಾದ, ಪರಿಸರ ಸಹ್ಯವಾದ ಮೀನುಗಾರಿಕೆಯಲ್ಲಿ ತೊಡಗಿದ್ದ ಸ್ಥಳೀಯ ಮೀನುಗಾರ ಸಮುದಾಯವು ಈಗ ಸಮುದ್ರ ತೀರದಿಂದ ದೂರ ಸರಿಯುತ್ತಿದೆ ಮತ್ತು ಪ್ರವಾಸೋದ್ಯಮ, ಹೋಮ್ ಸ್ಟೇಗಳಂತಹ ಮತ್ತೊಂದು ವಾಣಿಜ್ಯ ಕೆಸರುಗುಂಡಿಗೆ ಬಲವಂತವಾಗಿ ತಳ್ಳಲ್ಪಡುತ್ತಿದೆ.
ಕೆಪಿಎಸ್ಸಿ: ಭ್ರಷ್ಟಾಚಾರದ ಉಗಮ ಸ್ಥಾನ
ಕರ್ನಾಟಕ ಲೋಕಸೇವಾ ಆಯೋಗದಲ್ಲಿ ಮೂರು ಹಂತದ ಪರೀಕ್ಷೆಗಳು ನಡೆಯುತ್ತವೆ. ಮೂರೂ ಹಂತದಲ್ಲಿ ಲಂಚ ನೀಡಿದರೆ ಮಾತ್ರ ಅಂತಿಮವಾಗಿ ಹುದ್ದೆ ಸಿಗುತ್ತದೆ. ಪೂರ್ವ ಭಾವಿ ಪರೀಕ್ಷೆಯಲ್ಲಿ ಬಹು ಆಯ್ಕೆಯ ಒಎಂಆರ್ ಶೀಟ್ ಇರುತ್ತದೆ. ಇಲ್ಲೂ ಕೈಚಳಕ ತೋರಿಸುವ ದಲ್ಲಾಳಿಗಳು ಇದ್ದಾರೆ. ಮುಖ್ಯ ಪರೀಕ್ಷೆಯಲ್ಲಿ ಅಕ್ರಮ ನಡೆದಿದೆ ಎಂದು ಸದನದಲ್ಲೇ ಭಾರೀ ಚರ್ಚೆಯಾಯಿತು. ಇನ್ನು ಸಂದರ್ಶನದ ಹಂತದಲ್ಲಿ ಬಾಚಿಕೊಳ್ಳಲು ಆಯೋಗದ ಸದಸ್ಯರು ಬಕಪಕ್ಷಿಯಂತೆ ಕಾದು ಕುಳಿತಿರುತ್ತಾರೆ. ಕರ್ನಾಟಕ ಲೋಕಸೇವಾ ಆಯೋಗದಲ್ಲಿ ಎಲ್ಲ ಭ್ರಷ್ಟ ಬಾಗಿಲುಗಳು ತೆರೆದಿಟ್ಟಿರುವುದರಿಂದ ರಾಜಾರೋಷವಾಗಿ ಭ್ರಷ್ಟಾಚಾರ ನಡೆಯುತ್ತದೆ. ಕೆಪಿಎಸ್ಸಿ ಎಂದೇ ಹೆಚ್ಚು ಜನಪ್ರಿಯವಾಗಿರುವ ಕರ್ನಾಟಕ ಲೋಕಸೇವಾ ಆಯೋಗ ಭ್ರಷ್ಟಾಚಾರದ ಉಗಮ ಸ್ಥಾನ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ. ರಾಜಕಾರಣಿಗಳು ಅರ್ಥಾತ್ ಜನಪ್ರತಿನಿಧಿಗಳು ಭ್ರಷ್ಟರಾಗುವುದಕ್ಕೆ ದುಬಾರಿ ಚುನಾವಣೆಗಳು ಕಾರಣ. ಹಾಗೆಯೇ ಇಡೀ ಆಡಳಿತ ವ್ಯವಸ್ಥೆಯೇ ಭ್ರಷ್ಟಗೊಳ್ಳುವುದಕ್ಕೆ ಕರ್ನಾಟಕ ಲೋಕಸೇವಾ ಆಯೋಗದ ಸಂರಚನೆ ಮತ್ತು ಸ್ವರೂಪ ಪ್ರಮುಖ ಕಾರಣ. ಕರ್ನಾಟಕ ಲೋಕಸೇವಾ ಆಯೋಗದ ಒಟ್ಟು ವ್ಯವಸ್ಥೆಯಲ್ಲಿ ಆಮೂಲಾಗ್ರ ಬದಲಾವಣೆ ತರದ ಹೊರತು ಅಲ್ಲಿ ಪಾರದರ್ಶಕ ನೇಮಕಾತಿ ನಿರೀಕ್ಷಿಸುವುದು ಮೂರ್ಖತನ ಎನಿಸಿಕೊಳ್ಳುತ್ತದೆ. ಇತ್ತೀಚೆಗೆ ಕರ್ನಾಟಕ ಲೋಕಸೇವಾ ಆಯೋಗವು ೩೮೪ ಹುದ್ದೆಗಳಿಗೆ ಮುಖ್ಯ ಪರೀಕ್ಷೆ ನಡೆಸಿ ಅಂತಿಮ ಹಂತದ ಸಂದರ್ಶನದ ವೇಳಾಪಟ್ಟಿ ಪ್ರಕಟಿಸಿತ್ತು. ಮುಖ್ಯ ಪರೀಕ್ಷೆಯಲ್ಲಿ ಅಕ್ರಮ ನಡೆದಿದೆ ಎಂದು ಹಲವು ಉದ್ಯೋಗಾಂಕ್ಷಿಗಳು ಮಾಧ್ಯಮಗಳಿಗೆ ಮಾಹಿತಿ ನೀಡತೊಡಗಿದರು. ಪ್ರತಿಪಕ್ಷ ನಾಯಕ ಆರ್. ಅಶೋಕ್ ಮತ್ತು ಮಾಜಿ ಮಂತ್ರಿಗಳಾದ ಸುರೇಶ್ ಕುಮಾರ್, ಸುನೀಲ್ ಕುಮಾರ್ ಅವರನ್ನು ಸಂಪರ್ಕಿಸಿ ಅಕ್ರಮ ನಡೆದಿರುವ ವಿವರ ನೀಡಿದ್ದರು. ಅಕ್ರಮದ ಸುದ್ದಿ ಮಾಧ್ಯಮಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಸದ್ದು ಮಾಡಿತು. ವಿಧಾನಸಭೆಯಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಸೇರಿದಂತೆ ಹಲವು ಜನ ಆಡಳಿತ ಪಕ್ಷದ ಸದಸ್ಯರು ದನಿಗೂಡಿಸಿ ‘ಸತ್ಯ ಹರಿಶ್ಚಂದ್ರರ’ ಭಾವ ತೀವ್ರತೆಯಲ್ಲಿ ಕರ್ನಾಟಕ ಲೋಕಸೇವಾ ಆಯೋಗದ ಕಾರ್ಯ ವೈಖರಿಯನ್ನು ಕಟುವಾಗಿ ಟೀಕಿಸಿದರು. ಕರ್ನಾಟಕ ಲೋಕಸೇವಾ ಆಯೋಗವನ್ನು ಮುಚ್ಚಬೇಕೆಂದು ಬಲವಾಗಿ ಪ್ರತಿಪಾದಿಸಿದರು. ಕರ್ನಾಟಕ ಲೋಕಸೇವಾ ಆಯೋಗದ ಅಧ್ಯಕ್ಷ ಮತ್ತು ಸದಸ್ಯರ ನೇಮಕಾತಿಯನ್ನು ಅಧಿಕಾರದಲ್ಲಿ ಇರುವ ಸರಕಾರದ ಮುಖ್ಯಸ್ಥರು ಮಾಡಿರುತ್ತಾರೆ ಎಂಬುದನ್ನು ಸಂಪೂರ್ಣವಾಗಿ ಮರೆತಿದ್ದರು. ಒಂದೇ ಒಂದು ಪೈಸೆ ಲಂಚ ಸ್ವೀಕರಿಸದೆ ಕರ್ನಾಟಕ ಲೋಕಸೇವಾ ಆಯೋಗದ ಅಧ್ಯಕ್ಷ, ಸದಸ್ಯರ ನೇಮಕಾತಿ ಮಾಡಿದ್ದರೆ ಅವರೇಕೆ ಎಂಜಲು ಕಾಸಿಗೆ ಕೈ ಚಾಚುತ್ತಾರೆ. ಹಾಲಿ ಇರುವ ಕರ್ನಾಟಕ ಲೋಕಸೇವಾ ಆಯೋಗದಲ್ಲಿ ಕೆಲವರು ಬಿಜೆಪಿ ಆಡಳಿತಾವಧಿಯಲ್ಲಿ ನೇಮಕಗೊಂಡಿದ್ದರೆ ಇನ್ನೂ ಕೆಲವರನ್ನು ಕಾಂಗ್ರೆಸ್ ಸರಕಾರ ನಾಮನಿರ್ದೇಶನ ಮಾಡಿದೆ. ಕರ್ನಾಟಕ ಲೋಕಸೇವಾ ಆಯೋಗದ ಅಧ್ಯಕ್ಷ ಅಥವಾ ಸದಸ್ಯರಾಗಲು ಕೋಟಿ ಕೋಟಿ ಹಣ ನೀಡುವ ವ್ಯಕ್ತಿಗಳು ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಬೇಕೆಂದು ನಿರೀಕ್ಷಿಸಬಹುದೇ? ಆಯಿತು, ಐದಾರು ಜನ ಸದಸ್ಯರು ಒಂದೇ ಒಂದು ಪೈಸೆ ಹಣ ನೀಡದೇ ಕರ್ನಾಟಕ ಲೋಕಸೇವಾ ಆಯೋಗಕ್ಕೆ ನಾಮನಿರ್ದೇಶನಗೊಂಡಿದ್ದಾರೆ ಎಂದೇ ಭಾವಿಸೋಣ. ಹಣ ನೀಡದೆ ಕರ್ನಾಟಕ ಲೋಕಸೇವಾ ಆಯೋಗದ ಸದಸ್ಯರಾದವರು ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸಬೇಕಲ್ಲ ಎಂದು ನಾವು ನಿರೀಕ್ಷೆ ಇಟ್ಟುಕೊಳ್ಳಬಹುದು. ಭ್ರಷ್ಟಾಚಾರ ಮಾಡಲು ಯಥೇಚ್ಛ ಅವಕಾಶ ಇರುವ ಒಂದು ಸಂಸ್ಥೆಯಲ್ಲಿ ಒಡಲುಗೊಂಡ ಮನುಷ್ಯರು ಪ್ರಾಮಾಣಿಕರಾಗಿರಬೇಕು ಎಂದು ನಿರೀಕ್ಷಿಸುವುದು ಬಹುದೊಡ್ಡ ಆದರ್ಶದ ಮಾತಾಗುತ್ತದೆ. ಕರ್ನಾಟಕ ಲೋಕಸೇವಾ ಆಯೋಗ ಇರುವುದೇ ಭ್ರಷ್ಟಾಚಾರ ಮಾಡಲು ಎಂಬ ಪ್ರತೀತಿ ಇರುವಾಗ ಯಾರು ತಾನೆ ಪ್ರಾಮಾಣಿಕರಾಗಿರಲು ಬಯಸುತ್ತಾರೆ. ಅವರ ಕುಟುಂಬ ಸದಸ್ಯರ ಒತ್ತಡಕ್ಕೆ ಮಣಿದಾದರೂ ಭ್ರಷ್ಟಾಚಾರದಲ್ಲಿ ಭಾಗಿಯಾಗುತ್ತಾರೆ. ನನಗೇ ಪರಿಚಯವಿದ್ದ ಆರೇಳು ಜನರು ಒಂದೇ ಒಂದು ಪೈಸೆ ಲಂಚ ಕೊಡದೆ ಕರ್ನಾಟಕ ಲೋಕಸೇವಾ ಆಯೋಗದ ಸದಸ್ಯರಾಗಿದ್ದರು. ಸಾಮಾಜಿಕ ನ್ಯಾಯ, ಪ್ರಾದೇಶಿಕ ನ್ಯಾಯದ ಲೆಕ್ಕಾಚಾರದಲ್ಲಿ ಹಾಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದುಡ್ಡಿಲ್ಲದೆ ನಾಮನಿರ್ದೇಶನ ಮಾಡಿದ್ದರು. ಪುಗಸಟ್ಟೆಯಾಗಿ ಕರ್ನಾಟಕ ಲೋಕಸೇವಾ ಆಯೋಗದ ಸದಸ್ಯರಾದವರು ಹಣ ಕೊಟ್ಟು ಸದಸ್ಯರಾದವರಿಗಿಂತ ಹೆಚ್ಚು ಲಂಚ ಸ್ವೀಕರಿಸಿದ್ದನ್ನು ಕಣ್ಣಾರೆ ಕಂಡಿದ್ದೇನೆ. ಹಣ ಕೊಟ್ಟು ಕರ್ನಾಟಕ ಲೋಕಸೇವಾ ಆಯೋಗದ ಸದಸ್ಯರಾದವರಲ್ಲಿ ಕೆಲವರು ಹಾಕಿದ ಬಂಡವಾಳ ವಾಪಸ್ ಬಂದರೆ ಸಾಕು ಎಂದು ಭಾವಿಸಿ ತಮ್ಮ ಸಮುದಾಯದ ಬಡವರಿಗೆ ಫ್ರೀಯಾಗಿ ನೌಕರಿ ನೀಡಿದ ನಿದರ್ಶನ ಸಿಗುತ್ತವೆ. ಹಣ ಕೊಡದೆ ಕರ್ನಾಟಕ ಲೋಕಸೇವಾ ಆಯೋಗದ ಸದಸ್ಯರಾದ ಕೆಲವರು ತನ್ನವರು ಇತರರು ಎಂಬುದನ್ನು ಲೆಕ್ಕಿಸದೆ ಲೂಟಿ ಮಾಡಿದ್ದನ್ನು ನೋಡಿದ್ದೇನೆ. ಕರ್ನಾಟಕ ಲೋಕಸೇವಾ ಆಯೋಗದ ಒಟ್ಟು ವ್ಯವಸ್ಥೆಯಲ್ಲಿಯೇ ಭ್ರಷ್ಟಾಚಾರ ನಡೆಸಲು ಅವಕಾಶಗಳಿರುವಾಗ ಯಾರು ತಾನೆ ಪ್ರಾಮಾಣಿಕರಾಗಿರಲು ಅಪೇಕ್ಷಿಸುತ್ತಾರೆ? ಯಾವ ನೇಮಕಾತಿ ಪ್ರಾಧಿಕಾರದಲ್ಲಿ ಮನುಷ್ಯರ ಹಸ್ತಕ್ಷೇಪ ಇರುತ್ತದೆಯೋ ಅಲ್ಲೆಲ್ಲ ಭ್ರಷ್ಟಾಚಾರ ಇದ್ದೇ ಇರುತ್ತದೆ. ನೇಮಕಾತಿ ಪ್ರಾಧಿಕಾರದ ಒಟ್ಟು ಸ್ವರೂಪದಲ್ಲೇ ಬಿಗಿಯಾದ ನಿಯಮಗಳನ್ನು ರೂಪಿಸಿದ್ದರೆ ಮಾತ್ರ ಭ್ರಷ್ಟಾಚಾರಕ್ಕೆ ಕಡಿವಾಣ ಬೀಳುತ್ತದೆ. ದೇವರಾಜ ಅರಸು ಅವರ ಕಾಲದಲ್ಲಿ ಶಾಲಾ ಶಿಕ್ಷಕರ ಆಯ್ಕೆಗಾಗಿ ಜಿಲ್ಲಾ ನೇಮಕಾತಿ ಪ್ರಾಧಿಕಾರಗಳನ್ನು ರಚಿಸಲಾಗಿತ್ತು. ಆ ನೇಮಕಾತಿ ಪ್ರಾಧಿಕಾರಗಳಿಗೆ ಪಕ್ಷದ ಕಾರ್ಯಕರ್ತರನ್ನು ಸದಸ್ಯರನ್ನಾಗಿ ನೇಮಕ ಮಾಡುವ ಪರಿಪಾಠ ಇತ್ತು. ಎಸ್. ಬಂಗಾರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ಶಿಕ್ಷಕರ ನೇಮಕಾತಿಗೆ ಹೊಸ ನಿಯಮಗಳನ್ನು ರೂಪಿಸಿದರು. ಕೇವಲ ಅಂಕಗಳು ಮತ್ತು ಮೀಸಲಾತಿ ಆಧಾರದಲ್ಲಿ ಶಿಕ್ಷಕರ ಆಯ್ಕೆ ಪಟ್ಟಿ ಸಿದ್ಧಪಡಿಸಲು ಸೂಚಿಸಿದ್ದರು. ಸಂದರ್ಶನ ವ್ಯವಸ್ಥೆಯನ್ನು ರದ್ದು ಪಡಿಸಿದ್ದರು. ಕಂಪ್ಯೂಟರ್ನಲ್ಲಿ ಅಭ್ಯರ್ಥಿಗಳ ಒಟ್ಟು ಅಂಕಗಳು ಮತ್ತು ಜಾತಿ ಪ್ರವರ್ಗದ ಮಾಹಿತಿ ಫೀಡ್ ಮಾಡಿದರೆ ಅದು ಆಯ್ಕೆ ಪಟ್ಟಿ ಸಿದ್ಧಪಡಿಸಿ ಕೊಡುತ್ತಿತ್ತು. ಆಕ್ಷೇಪಗಳಿಗೆ ಕಾಲಾವಕಾಶ ನೀಡಿ ಅಂತಿಮ ಆಯ್ಕೆ ಪಟ್ಟಿ ಪ್ರಕಟಿಸುತ್ತಿದ್ದರು. ಆಗ ಲಕ್ಷ ಲಕ್ಷ ಜನರಿಗೆ ಒಂದೇ ಒಂದು ಪೈಸೆ ಲಂಚವಿಲ್ಲದೆ ಮನೆ ಬಾಗಿಲಿಗೆ ನೇಮಕಾತಿ ಆದೇಶ ಬಂದಿದ್ದವು. ಅದೇ ಲಂಚರಹಿತ ನೇಮಕಾತಿ ವ್ಯವಸ್ಥೆಯನ್ನು ಎಚ್.ಜಿ. ಗೋವಿಂದೇಗೌಡರು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರಾಗಿದ್ದಾಗ ಮುಂದುವರಿಸಿದ್ದರು. ಶಿಕ್ಷಕ ಹುದ್ದೆಗೆ ಬೇಕಾದ ಅರ್ಹತೆ ಪಡೆದಿರುವಾಗ ಮತ್ತೆ ಪ್ರವೇಶ ಪರೀಕ್ಷೆ ನಡೆಸುವ, ಸಂದರ್ಶನ ನಡೆಸುವ ಅಗತ್ಯವೇ ಇರುವುದಿಲ್ಲ. ಪ್ರವೇಶ ಪರೀಕ್ಷೆ ಮತ್ತು ಸಂದರ್ಶನ ನಡೆಸುವ ವ್ಯವಸ್ಥೆ ಹಣ ಮಾಡಲು ಕಂಡುಕೊಂಡ ಸಾಧನಗಳು. ಆಯ್ಕೆಯಾದ ಪ್ರತಿಭಾವಂತ ಶಿಕ್ಷಕರಲ್ಲಿ ಕೆಲವರಲ್ಲಿ ಬೋಧನಾ ಕೌಶಲ್ಯದ ಕೊರತೆಯಿದ್ದರೆ ಅತ್ಯುತ್ತಮ ತರಬೇತಿ ನೀಡಿ ಆ ಸಾಮರ್ಥ್ಯ ಹೆಚ್ಚಿಸಬಹುದು. ಪ್ರವೇಶ ಪರೀಕ್ಷೆ ಮತ್ತು ಸಂದರ್ಶನ ನಡೆಸುವ ನೆಪದಲ್ಲಿ ಕಡಿಮೆ ಅಂಕ ಗಳಿಸಿರುವ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದರೆ ಅವರನ್ನು ಯಾವ ಹಂತದಲ್ಲೂ ರಿಪೇರಿ ಮಾಡಲು ಸಾಧ್ಯವಿಲ್ಲ. ಕಡಿಮೆ ಅಂಕ ಹೊಂದಿದ ಅಭ್ಯರ್ಥಿಗಳು ಲಂಚ ನೀಡಿ ನೌಕರಿ ಪಡೆದರೆ ಜೀವನದುದ್ದಕ್ಕೂ ಸರಕಾರಕ್ಕೆ ಹೊರೆಯಾಗುತ್ತಾರೆ. ಶಿಕ್ಷಕರ ಆಯ್ಕೆಯಲ್ಲಿ ಲಂಚದ ವಹಿವಾಟು ನಡೆದರೆ ಸರಕಾರಿ ಶಾಲೆಗಳು ಬಡ್ಡಿ ವ್ಯವಹಾರ ನಡೆಸುವ ಕೇಂದ್ರಗಳಾಗುತ್ತವೆ. ಲಂಚ ರಹಿತ ನೇಮಕಾತಿ ನಡೆಸಿ ಸೈ ಎನಿಸಿಕೊಂಡ ಅಂದಿನ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಮತ್ತು ಅಂದಿನ ಶಿಕ್ಷಣ ಮಂತ್ರಿ ಎಚ್.ಜಿ. ಗೋವಿಂದೇಗೌಡರನ್ನು ಫಲಾನುಭವಿ ಶಿಕ್ಷಕರ ಸಮುದಾಯ ಇಂದಿಗೂ ಕೃತಜ್ಞತಾಪೂರ್ವಕವಾಗಿ ಸ್ಮರಿಸಿಕೊಳ್ಳುತ್ತದೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ ಸಚಿವ ಪ್ರಿಯಾಂಕ್ ಖರ್ಗೆಯವರು ಕರ್ನಾಟಕ ಲೋಕಸೇವಾ ಆಯೋಗವನ್ನು ಭ್ರಷ್ಟಾಚಾರದ ಕಾರಣಕ್ಕೆ ಮುಚ್ಚಲೇಬೇಕೆಂದು ಹೇಳುತ್ತಲೇ ಕರ್ನಾಟಕ ಪರೀಕ್ಷಾ ಪ್ರಾಧಿಕಾರವನ್ನು ಹಾಡಿ ಹೊಗಳಿದ್ದಾರೆ. ಒಎಂಆರ್ ಶೀಟ್ಗಳ ಪ್ರವೇಶ ಪರೀಕ್ಷೆ ನಡೆಸಿ ಬೇಕಾಬಿಟ್ಟಿ ಟ್ಯಾಂಪರ್ ಮಾಡಬಹುದು ಎಂದು ಕರ್ನಾಟಕದ ಇನ್ನಿತರ ನೇಮಕಾತಿ ಪ್ರಾಧಿಕಾರಗಳಿಗೆ ಕಲಿಸಿಕೊಟ್ಟ ಕೀರ್ತಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ಸಲ್ಲುತ್ತದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಮೂಲತಃ ಹುಟ್ಟು ಪಡೆದಿದ್ದು ವೃತ್ತಿಪರ ಕೋರ್ಸ್ಗಳ ಪ್ರವೇಶ ಪರೀಕ್ಷೆ ನಡೆಸಿ ಇಂಜಿನಿಯರಿಂಗ್, ಮೆಡಿಕಲ್ ಸೀಟುಗಳ ಹಂಚಿಕೆ ಮಾಡಲು. ವೀರಪ್ಪ ಮೊಯ್ಲಿಯವರ ಕಾಲಕ್ಕೆ ಅಸ್ತಿತ್ವಕ್ಕೆ ಬಂದ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಮತ್ತು ಸಿಇಟಿ ಪರಿಕಲ್ಪನೆ ಆ ಕಾಲಕ್ಕೆ ಕ್ರಾಂತಿಕಾರಕ ಎನಿಸಿತ್ತು. ಯಾವಾಗ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಸೀಟ್ ಬ್ಲಾಕಿಂಗ್ ದಂಧೆಯಲ್ಲಿ ಕೋಟಿ ಕೋಟಿ ಹಣದ ವಹಿವಾಟು ನಡೆಸಲು ಶುರು ಮಾಡಿತೋ ಅಂದಿನಿಂದ ಅದು ವಿಶ್ವಾಸಾರ್ಹತೆ ಕಳೆದುಕೊಳ್ಳತೊಡಗಿತು. ಕರ್ನಾಟಕ ಪರೀಕ್ಷಾ ಪ್ರಾಧಿಕಾರ ವಿಶ್ವಾಸಾರ್ಹ ಸಂಸ್ಥೆಯಲ್ಲ ಎಂಬುದು ಗೊತ್ತಿದ್ದೂ ಸಿದ್ದರಾಮಯ್ಯ ಅವರು ಮೊದಲ ಬಾರಿಗೆ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಪದವಿ ಕಾಲೇಜುಗಳ ಸಹಾಯಕ ಪ್ರಾಧ್ಯಾಪಕರ ಹುದ್ದೆಗಳ ನೇಮಕಾತಿ ಜವಾಬ್ದಾರಿ ಕೊಡಲಾಯಿತು. ಅದಕ್ಕೂ ಮೊದಲು ಪದವಿ ಕಾಲೇಜುಗಳ ಸಹಾಯಕ ಪ್ರಾಧ್ಯಾಪಕರ ನೇಮಕಾತಿಯನ್ನು ಕರ್ನಾಟಕ ಲೋಕಸೇವಾ ಆಯೋಗವೇ ನಡೆಸುತ್ತಿತ್ತು. ಆಗ ಅಂಕಗಳ ಆಧಾರದಲ್ಲಿ ಮೆರಿಟ್ ಪಟ್ಟಿ ಸಿದ್ಧಪಡಿಸಿ ಒಂದು ಐದರ ಅನುಪಾತದಲ್ಲಿ ಸಂದರ್ಶನಕ್ಕೆ ಕರೆಯಲಾಗುತ್ತಿತ್ತು. ಸ್ನಾತಕೋತ್ತರ ಪದವಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ಐವರಲ್ಲಿ ಲಂಚ ನೀಡುವ ಒಬ್ಬರನ್ನು ಆಯ್ಕೆ ಮಾಡಲಾಗುತ್ತಿತ್ತು. ಆಗ ಸ್ಪರ್ಧೆ ಕೇವಲ ಐದು ಜನ ಅಭ್ಯರ್ಥಿಗಳ ನಡುವೆ ಇರುತ್ತಿತ್ತು. ಲಂಚದ ಪ್ರಮಾಣವೂ ಕಡಿಮೆ ಇತ್ತು. ಪದವಿ ಕಾಲೇಜುಗಳ ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಹೊಣೆಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ವಹಿಸಿಕೊಡುತ್ತಲೇ ಲಂಚದ ಪ್ರಮಾಣ ಜಾಸ್ತಿಯಾಯಿತು. ಅಷ್ಟು ಮಾತ್ರವಲ್ಲ ಸ್ಪರ್ಧೆ ಹೆಚ್ಚಾಯಿತು. ಅದಕ್ಕೆ ಮುಖ್ಯ ಕಾರಣ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಹೊಸದಾಗಿ ಪರಿಚಯಿಸಿದ ಪ್ರವೇಶ ಪರೀಕ್ಷೆ ಮತ್ತು ಒಎಂಆರ್ ಶೀಟ್. ಪದವಿ ಕಾಲೇಜುಗಳ ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ಕನಿಷ್ಠ ವಿದ್ಯಾರ್ಹತೆ ಹೊಂದಿದ ಎಲ್ಲರೂ ಸ್ಪರ್ಧಾ ಕಣದಲ್ಲಿದ್ದು ಪೈಪೋಟಿ ನಡೆಸತೊಡಗಿದರು. ಪೈಪೋಟಿ ಹೆಚ್ಚಾದಂತೆ ಹಣದ ಬೇಡಿಕೆ ಜಾಸ್ತಿಯಾಗುತ್ತದೆ. ಒಂದು ಉದಾಹರಣೆ ಮೂಲಕ ಇದನ್ನು ಹೆಚ್ಚು ಸ್ಪಷ್ಟ ಪಡಿಸಬಹುದು. ಪ್ರತಿಶತ ೫೫ರಷ್ಟು ಕನಿಷ್ಠ ಅಂಕ ಪಡೆದವರು ಪದವಿ ಕಾಲೇಜುಗಳಲ್ಲಿ ಸಹಾಯಕ ಪ್ರಾಧ್ಯಾಪಕರಾಗಲು ಅರ್ಹರು. ಕನಿಷ್ಠ ಅರ್ಹತೆ ಪಡೆದ ಲಕ್ಷ ಲಕ್ಷ ಅಭ್ಯರ್ಥಿಗಳು ಅರ್ಜಿ ಸಲ್ಲಿಸುತ್ತಾರೆ. ಎಲ್ಲರೂ ಒಎಂಆರ್ ಶೀಟ್ಗಳ ಮೂಲಕ ನಡೆಸುವ ಬಹು ಆಯ್ಕೆಯ ಪ್ರವೇಶ ಪರೀಕ್ಷೆಗೆ ಹಾಜರಾಗುತ್ತಾರೆ. ಅತ್ಯಂತ ಕಠಿಣವಾದ ಪ್ರಶ್ನೆ ಪತ್ರಿಕೆಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರದವರು ಸಿದ್ಧಪಡಿಸುತ್ತಾರೆ. ಪ್ರವೇಶ ಪರೀಕ್ಷೆಯ ಹಂತದಲ್ಲೇ ಹಣ ಕೊಟ್ಟು ಡೀಲ್ ಮಾಡಿಕೊಂಡವರು ಹೆಚ್ಚು ಅಂಕ ಪಡೆದು ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ಆಯ್ಕೆಯಾಗುತ್ತಾರೆ. ಇಲ್ಲಿ ಮೌಖಿಕ ಸಂದರ್ಶನ ಇರುವುದಿಲ್ಲ. ಮೇಲ್ನೋಟಕ್ಕೆ ಇದೊಂದು ಅತ್ಯಂತ ಪಾರದರ್ಶಕ ಆಯ್ಕೆ ಪ್ರಕ್ರಿಯೆ. ಆದರೆ ತುಸು ಆಳಕ್ಕಿಳಿದು ಇಣುಕಿ ನೋಡಿದರೆ ಅಲ್ಲಿನ ಬ್ರಹ್ಮಾಂಡ ಭ್ರಷ್ಟಾಚಾರ ಕಣ್ಣಿಗೆ ರಾಚುತ್ತದೆ. ಪದವಿ ಮತ್ತು ಸ್ನಾತಕೋತ್ತರ ಪದವಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ಪ್ರತಿಭಾವಂತರು ಆತ್ಮ ವಿಶ್ವಾಸದಲ್ಲೇ ಪ್ರವೇಶ ಪರೀಕ್ಷೆ ಬರೆಯುತ್ತಾರೆ. ಆದರೆ ಫಲಿತಾಂಶ ಅಚ್ಚರಿ ಮೂಡಿಸುತ್ತದೆ. ಪದವಿ, ಸ್ನಾತಕೋತ್ತರ ಪದವಿಯಲ್ಲಿ ಪ್ರತಿಶತ ೮೦ರಷ್ಟು ಅಂಕ ಗಳಿಸಿದವರು ಕರ್ನಾಟಕ ಪರೀಕ್ಷಾ ಪ್ರಾಧಿಕಾರದವರು ನಡೆಸುವ ಪ್ರವೇಶ ಪರೀಕ್ಷೆಯಲ್ಲಿ ಫೇಲ್ ಆಗಿರುತ್ತಾರೆ. ಅಂದರೆ ಹೆಚ್ಚು ಅಂಕ ಗಳಿಸಿ ಮೆರಿಟ್ ಪಟ್ಟಿಯಲ್ಲಿ ಮೇಲೆ ಬರುವುದಿಲ್ಲ. ಆದರೆ ಪದವಿ, ಸ್ನಾತಕೋತ್ತರ ಪದವಿಯಲ್ಲಿ ಪ್ರತಿಶತ ೫೫, ೬೦ ಅಂಕ ಪಡೆದವರು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಪ್ರವೇಶ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದು ನೌಕರಿ ಗಿಟ್ಟಿಸುತ್ತಾರೆ. ಈ ಬಗೆಯ ಪವಾಡ ನಡೆಯಲು ಒಎಂಆರ್ ಶೀಟ್ ಟ್ಯಾಂಪರಿಂಗ್ ಸಹಕರಿಸುತ್ತದೆ. ಅದಕ್ಕಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಲ್ಲಿರುವ ದಲ್ಲಾಳಿಗಳಿಗೆ ಐವತ್ತರಿಂದ ಅರುವತ್ತು ಲಕ್ಷ ಲಂಚ ನೀಡಬೇಕಾಗುತ್ತದೆ. ಒಎಂಆರ್ ಶೀಟ್ ವಶಪಡಿಸಿಕೊಂಡು ನೌಕರಿ ಪಡೆದವರು ಕರ್ನಾಟಕ ಪರೀಕ್ಷಾ ಪ್ರಾಧಿಕಾರವನ್ನು ಹಾಡಿ ಹೋಗಳುತ್ತಾರೆ. ಆದರೆ ಲಂಚ ಕೊಡುವ ಸಾಮರ್ಥ್ಯ ಇಲ್ಲದವರು ಬೀದಿಗೆ ಬಂದು ಹೋರಾಟ ಮಾಡುತ್ತಾರೆ. ಅವರ ರೋದನವನ್ನು ಯಾರೂ ಕೇಳಿಸಿಕೊಳ್ಳುವುದಿಲ್ಲ. ಇತ್ತೀಚೆಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆಯನ್ನು ನಡೆಸುವ ಹೊಣೆ ಹೊತ್ತಿದೆ. ಅಂದರೆ ಕರ್ನಾಟಕ ಸ್ಟೇಟ್ ಲೆವೆಲ್ ಪ್ರವೇಶ ಪರೀಕ್ಷೆ. ಈ ಪ್ರವೇಶ ಪರೀಕ್ಷೆಯಲ್ಲಿ ಅರ್ಹತೆ ಪಡೆದವರು ಕರ್ನಾಟಕದ ಕಾಲೇಜು ಮತ್ತು ವಿಶ್ವವಿದ್ಯಾನಿಲಯಗಳಲ್ಲಿ ಸಹಾಯಕ ಪ್ರಾಧ್ಯಾಪಕರಾಗಲು ಅರ್ಹತೆ ಪಡೆಯುತ್ತಾರೆ. ಇದು ಕೇಂದ್ರ ಸರಕಾರ ನಡೆಸುವ ನೆಟ್ ಪರೀಕ್ಷೆಗೆ ತತ್ಸಮಾನ. ಆದರೆ ರಾಜ್ಯದ ವಿಶ್ವವಿದ್ಯಾನಿಲಯಗಳಲ್ಲಿ ಮಾತ್ರ ಇದಕ್ಕೆ ಬೆಲೆ ಇರುತ್ತದೆ. ಕೆ-ಸೆಟ್ ಪರೀಕ್ಷೆಯನ್ನು ಈ ಮೊದಲು ಮೈಸೂರು ವಿಶ್ವವಿದ್ಯಾನಿಲಯ ನಡೆಸುತ್ತಿತ್ತು. ಅಲ್ಲಿ ಭ್ರಷ್ಟಾಚಾರದ ಆರೋಪ ಕೇಳಿ ಬಂದಿದ್ದರಿಂದ ಅಂದಿನ ಉನ್ನತ ಶಿಕ್ಷಣ ಸಚಿವ ಅಶ್ವತ್ ನಾರಾಯಣ ಅವರು ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ಒಪ್ಪಿಸಿದರು. ಈ ಕೆ-ಸೆಟ್ ಪರೀಕ್ಷೆ ಯುಜಿಸಿ ಮಾನ್ಯತೆ ಪಡೆದಿದೆ. ಪದವಿ ಕಾಲೇಜು ಮತ್ತು ವಿಶ್ವವಿದ್ಯಾನಿಲಯಗಳಲ್ಲಿ ಸಹಾಯಕ ಪ್ರಾಧ್ಯಾಪಕರಾಗಲು ಪದವಿ, ಸ್ನಾತಕೋತ್ತರ ಪದವಿಯಲ್ಲಿ ಅತಿ ಹೆಚ್ಚು ಅಂಕ ಪಡೆದು ನೆಟ್, ಕೆ-ಸೆಟ್ ಅಥವಾ ಪಿಎಚ್ಡಿ ಪದವಿ ಪಡೆದವರನ್ನು ಮತ್ತೆ ಯಾವುದೇ ಪ್ರವೇಶ ಪರೀಕ್ಷೆ ನಡೆಸದೆ ಪರಿಗಣಿಸಬೇಕು. ಪ್ರತಿಭಾವಂತರಿಗೆ ಅವಕಾಶ ನೀಡಿದಂತಾಗುತ್ತದೆ. ಆಗ ಪರೀಕ್ಷಾ ಪ್ರಾಧಿಕಾರ ಮತ್ತು ಒಎಂಆರ್ ಶೀಟಿನ ಅಗತ್ಯವೇ ಬೀಳುವುದಿಲ್ಲ. ದುರಂತ ನೋಡಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸುವ ಕೆ-ಸೆಟ್ ಪರೀಕ್ಷೆಯಲ್ಲಿ ಅರ್ಹತೆ ಪಡೆದ ಅಭ್ಯರ್ಥಿ ಸಹಾಯಕ ಪ್ರಾಧ್ಯಾಪಕರ ನೇಮಕಾತಿಗಾಗಿ ನಡೆಸುವ ಪ್ರವೇಶ ಪರೀಕ್ಷೆಯಲ್ಲಿ ಆಯ್ಕೆಯಾಗುವುದಿಲ್ಲ. ಯಾಕೆಂದರೆ ಲಂಚ ನೀಡಿರುವುದಿಲ್ಲ. ಕರ್ನಾಟಕ ಲೋಕಸೇವಾ ಆಯೋಗದಲ್ಲಿ ಮೂರು ಹಂತದ ಪರೀಕ್ಷೆಗಳು ನಡೆಯುತ್ತವೆ. ಮೂರೂ ಹಂತದಲ್ಲಿ ಲಂಚ ನೀಡಿದರೆ ಮಾತ್ರ ಅಂತಿಮವಾಗಿ ಹುದ್ದೆ ಸಿಗುತ್ತದೆ. ಪೂರ್ವ ಭಾವಿ ಪರೀಕ್ಷೆಯಲ್ಲಿ ಬಹು ಆಯ್ಕೆಯ ಒಎಂಆರ್ ಶೀಟ್ ಇರುತ್ತದೆ. ಇಲ್ಲೂ ಕೈಚಳಕ ತೋರಿಸುವ ದಲ್ಲಾಳಿಗಳು ಇದ್ದಾರೆ. ಮುಖ್ಯ ಪರೀಕ್ಷೆಯಲ್ಲಿ ಅಕ್ರಮ ನಡೆದಿದೆ ಎಂದು ಸದನದಲ್ಲೇ ಭಾರೀ ಚರ್ಚೆಯಾಯಿತು. ಇನ್ನು ಸಂದರ್ಶನದ ಹಂತದಲ್ಲಿ ಬಾಚಿಕೊಳ್ಳಲು ಆಯೋಗದ ಸದಸ್ಯರು ಬಕಪಕ್ಷಿಯಂತೆ ಕಾದು ಕುಳಿತಿರುತ್ತಾರೆ. ಕರ್ನಾಟಕ ಲೋಕಸೇವಾ ಆಯೋಗದಲ್ಲಿ ಎಲ್ಲ ಭ್ರಷ್ಟ ಬಾಗಿಲುಗಳು ತೆರೆದಿಟ್ಟಿರುವುದರಿಂದ ರಾಜಾರೋಷವಾಗಿ ಭ್ರಷ್ಟಾಚಾರ ನಡೆಯುತ್ತದೆ. ಹಿರಿಯ ಶ್ರೇಣಿಯ ಅಧಿಕಾರಿಗಳ ಹುದ್ದೆಗೆ ಮೂರು ಹಂತದ ಪರೀಕ್ಷೆಗಳನ್ನು ನಡೆಸಿಯೂ ಪಾರದರ್ಶಕ ಆಯ್ಕೆ ಮಾಡಬಹುದು ಎನ್ನುವುದನ್ನು ಕೇಂದ್ರ ಲೋಕಸೇವಾ ಆಯೋಗ ರುಜುವಾತು ಪಡಿಸಿದೆ. ಕರ್ನಾಟಕ ಲೋಕಸೇವಾ ಆಯೋಗದಲ್ಲಿ ಅತ್ಯಂತ ಪಾರದರ್ಶಕವಾಗಿ ನೇಮಕಾತಿ ಪ್ರಕ್ರಿಯೆ ನಡೆಸುವ ಇರಾದೆ ನಮ್ಮ ಜನಪ್ರತಿನಿಧಿಗಳಿಗೆ ಇದ್ದಿದ್ದರೆ ವ್ಯವಸ್ಥೆಯನ್ನು ಪುನರ್ ಸಂಘಟಿಸಬೇಕು. ಕೇಂದ್ರ ಲೋಕಸೇವಾ ಆಯೋಗ ಅತ್ಯುತ್ತಮ ಮಾದರಿ ಎನ್ನುವುದು ಎಲ್ಲರ ಅರಿವಿನಲ್ಲಿದೆ. ಅಧ್ಯಕ್ಷರು, ಸದಸ್ಯರ ನೇಮಕಾತಿಯಿಂದ ಹಿಡಿದು ಪರೀಕ್ಷೆ ಮತ್ತು ಸಂದರ್ಶನ ಪ್ರಕ್ರಿಯೆಯನ್ನು ಕೇಂದ್ರ ಲೋಕಸೇವಾ ಆಯೋಗದ ಮಾದರಿಯಲ್ಲಿ ನಡೆಸುವ ವ್ಯವಸ್ಥೆ ರೂಪಿಸಬೇಕು. ಹಾಗೆ ಮಾಡಲು ನಮ್ಮ ಜನಪ್ರತಿನಿಧಿಗಳಿಗೆ ಇಷ್ಟವಿಲ್ಲ. ಯಾಕೆಂದರೆ ಪ್ರಭಾವ ಬೀರಿ ತಮ್ಮ ಸಂಬಂಧಿಕರಿಗೆ ಹುದ್ದೆ ಕೊಡಿಸುವ ಬಯಕೆ ಇರುತ್ತದೆ. ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಮತ್ತು ಇನ್ನಿತರ ಪಕ್ಷಗಳು ಒಟ್ಟಿಗೆ ಸೇರಿ ಕೇಂದ್ರ ಲೋಕಸೇವಾ ಆಯೋಗದ ಮಾದರಿಯಲ್ಲೇ ಕರ್ನಾಟಕ ಲೋಕಸೇವಾ ಆಯೋಗವನ್ನು ಪುನರ್ ಸಂಘಟಿಸಿದರೆ ಭ್ರಷ್ಟಾಚಾರವನ್ನು ನಿಲ್ಲಿಸಬಹುದು. ಎಲ್ಲ ಹಂತದ ನೇಮಕಾತಿಯಲ್ಲಿ ಪಾರದರ್ಶಕ ವ್ಯವಸ್ಥೆ ರೂಪಿಸಿದರೆ ಲಂಚ ರಹಿತ ನೌಕರಿ ಸಾಧ್ಯವಾಗುತ್ತದೆ. ಒಮ್ಮೆ ಲಂಚ ರಹಿತ ನೌಕರಿ ಮತ್ತು ಲಂಚ ರಹಿತ ವರ್ಗಾವಣೆ ನಿಯಮ ಕಟ್ಟುನಿಟ್ಟಾಗಿ ಜಾರಿಗೊಳಿಸಿದರೆ ಆಡಳಿತ ವ್ಯವಸ್ಥೆಯಲ್ಲಿನ ಭ್ರಷ್ಟಾಚಾರ ನಿಯಂತ್ರಣಕ್ಕೆ ಬರುತ್ತದೆ. ಸದನದಲ್ಲಿ ಮಾತನಾಡಿದ ಎಲ್ಲ ಜನಪ್ರತಿನಿಧಿಗಳು ರೋಗದ ಮೂಲ ಗೊತ್ತಿದ್ದರೂ ಕೇವಲ ಕಾಯಿಲೆ ಬಗ್ಗೆ ಹೆಚ್ಚು ಟೀಕಿಸಿದರು. ಎ ಮತ್ತು ಬಿ ಶ್ರೇಣಿಯ ಹುದ್ದೆಗಳನ್ನು ಕೇಂದ್ರ ಲೋಕಸೇವಾ ಆಯೋಗದ ಮಾದರಿಯಲ್ಲಿ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಿ. ಸಿ ಮತ್ತು ಕೆಳಗಿನ ಹುದ್ದೆಗಳನ್ನು ಅಂಕಗಳ ಆಧಾರದಲ್ಲಿ ನೇರ ನೇಮಕಾತಿ ಮಾಡಿಕೊಂಡರೆ ಭ್ರಷ್ಟಾಚಾರಕ್ಕೆ ಆಸ್ಪದ ಇರುವುದಿಲ್ಲ. ಪ್ರಾಥಮಿಕ ಶಾಲಾ ಹಂತದಿಂದ ವಿಶ್ವವಿದ್ಯಾನಿಲಯಗಳ ಮಟ್ಟದವರೆಗಿನ ಶಿಕ್ಷಕರ ಹುದ್ದೆಗಳನ್ನು ಕೇವಲ ಪದವಿ, ಸ್ನಾತಕೋತ್ತರ ಪದವಿ ಅಂಕಗಳ ಆಧಾರದಲ್ಲಿ ಮೆರಿಟ್ ಪಟ್ಟಿ ಸಿದ್ಧಪಡಿಸಿ ಆಯ್ಕೆ ಮಾಡಿದರೆ ಪಾರದರ್ಶಕ ನೇಮಕಾತಿ ಸಾಧ್ಯವಾಗುತ್ತದೆ. ವಿಶ್ವವಿದ್ಯಾನಿಲಯಗಳು ನಡೆಸುವ ಪರೀಕ್ಷೆಗಳ ಮೇಲೆ ನಂಬಿಕೆ ಕಳೆದುಕೊಂಡವರಂತೆ ಪ್ರತೀ ಹುದ್ದೆ ನೇಮಕಾತಿಯಲ್ಲಿ ಪ್ರವೇಶ ಪರೀಕ್ಷೆ ನಡೆಸುವ ಉದ್ದೇಶವಾದರೂ ಏನು? ಅದರಲ್ಲೂ ಒಎಂಆರ್ ಶೀಟ್ ಮೂಲಕ ಪರೀಕ್ಷೆ ನಡೆಸಿ ಆಯ್ಕೆ ಮಾಡುವುದು ಕೇವಲ ಹಣ ಮಾಡುವುದಕ್ಕಾಗಿ. ಬೇರೆ ಘನವಾದ ಉದ್ದೇಶ ಇಲ್ಲ ಎಂಬುದು ಸ್ವಯಂ ಸ್ಪಷ್ಟ. ಕರ್ನಾಟಕ ಲೋಕಸೇವಾ ಆಯೋಗ ಮಾತ್ರವಲ್ಲ ಯಾವ ನೇಮಕಾತಿ ಪ್ರಾಧಿಕಾರವೂ ಒಳ್ಳೆಯದು ಕೆಟ್ಟದ್ದು ಆಗಿರುವುದಿಲ್ಲ. ಅದನ್ನು ನಿಯಂತ್ರಿಸುವವರು ಅದನ್ನು ಭ್ರಷ್ಟ ವ್ಯವಸ್ಥೆಯಾಗಿ ರೂಪಿಸುತ್ತಾರೆ. ವ್ಯವಸ್ಥೆಯ ಲೋಪ ಸರಿಪಡಿಸಿದರೆ ಭ್ರಷ್ಟರ ಆಟವೂ ನಡೆಯುವುದಿಲ್ಲ.
ಮದ್ಯಪಾನ ಮಾಡಿ ಕಾರು ಚಲಾಯಿಸಿದ ಶಂಕೆ: ಗಾಲ್ಫ್ ದಂತಕತೆ ಟೈಗರ್ ವುಡ್ ಬಂಧನ
ಫ್ಲೋರಿಡಾ (ಅಮೆರಿಕ): ಪಿಜಿಎ ವೃತ್ತಿಪರ ಗಾಲ್ಫ್ ಗೆ ಮರಳಿದ ಕೆಲವೇ ದಿನಗಳ ಅಂತರದಲ್ಲಿ ಗಾಲ್ಫ್ ದಂತಕತೆ ಟೈಗರ್ ವುಡ್ ಪಾನಮತ್ತರಾಗಿ ಕಾರು ಚಲಾಯಿಸಿದ ಶಂಕೆಯ ಮೇಲೆ ಬಂಧನಕ್ಕೀಡಾಗಿದ್ದಾರೆ. ಫ್ಲೋರಿಡಾದ ತಮ್ಮ ಮನೆಯ ಬಳಿ ಕಾರು ಪಲ್ಟಿಯಾಗಿ ಸಂಭವಿಸಿದ ಅಪಘಾತದಲ್ಲಿ ಅವರು ಪಾರಾಗಿದ್ದರು. ಪೊಲೀಸರ ಪ್ರಕಾರ, ಟೈಗರ್ ವುಡ್ ತಮ್ಮ ಬಂಧನದ ಬಳಿಕ ಅಸ್ವಸ್ಥತೆಗೊಂಡಿದ್ದಾರೆ. ಅವರನ್ನು ಫ್ಲೋರಿಡಾದಲ್ಲಿರುವ ಮಾರ್ಟಿನ್ ಕೌಂಟಿ ಜೈಲಿಗೆ ಕರೆದೊಯ್ಯಲಾಗಿದೆ. ಮದ್ಯಪಾನದ ಸಾಧ್ಯತೆಯನ್ನು ಪೊಲೀಸರು ತಳ್ಳಿ ಹಾಕಿದ್ದಾರೆ. ಆದರೆ, ಟೈಗರ್ ವುಡ್ ಮೂತ್ರ ಪರೀಕ್ಷೆಗೆ ನಿರಾಕರಿಸಿದ್ದಾರೆ. ಟೈಗರ್ ವುಡ್ ವಿರುದ್ಧ ಪಾನಮತ್ತರಾಗಿ ವಾಹನ ಚಲಾಯಿಸಿದ ಆರೋಪ, ಸ್ವತ್ತಿಗೆ ಹಾನಿ ಮಾಡಿದ ಆರೋಪ ಹಾಗೂ ಕಾನೂನುಬದ್ಧ ಪರೀಕ್ಷೆಗೆ ಒಳಗಾಗಲು ನಿರಾಕರಿಸಿದ ಆರೋಪವನ್ನು ಹೊರಿಸಲಾಗಿದೆ. ಟೈಗರ್ ವುಡ್ ಅವರು ಮತ್ತೊಂದು ಕಾರಿಗೆ ಢಿಕ್ಕಿ ಹೊಡೆಯುವುದಕ್ಕೂ ಮುನ್ನ ಅತಿಯಾದ ವೇಗದಲ್ಲಿ ಕಾರನ್ನು ಚಲಾಯಿಸುತ್ತಿದ್ದರು. ಇದರಿಂದ ಕಾರು ಉರುಳಿ ಬಿದ್ದಿದೆ. ಘಟನೆಯಲ್ಲಿ ಯಾರಿಗೂ ಕೂಡಾ ಗಾಯಗಳಾಗಿಲ್ಲ ಎಂದು ಮಾರ್ಟಿನ್ ಕೌಂಟಿ ಶೆರಿಫ್ ಜಾನ್ ಬುಡೆನ್ಸಿಯೆಕ್ ಹೇಳಿದ್ದಾರೆ.
ಮಾ. 30–ಎ. 9: ಕಿನ್ಯದಲ್ಲಿ ಕೂಟು ಝಿಯಾರತ್ ಕಾರ್ಯಕ್ರಮ
ಉಳ್ಳಾಲ: ಕಿನ್ಯ ಕೇಂದ್ರ ಜುಮಾ ಮಸೀದಿಯಲ್ಲಿ ಅಂತ್ಯವಿಶ್ರಾಂತಿ ಹೊಂದಿರುವ ಹಝ್ರತ್ ವಲಿಯುಲ್ಲಾಹಿ ಹುಸೈನ್ ಮುಸ್ಲಿಯಾರ್ ಅವರ ಹೆಸರಿನಲ್ಲಿ ನಡೆಯುವ ಮುಖಾಂ ಕೂಟು ಝಿಯಾರತ್ ಏ.9 ಗುರುವಾರ ರಾತ್ರಿ ನಡೆಯಲಿದೆ. ಈ ಪ್ರಯುಕ್ತ ಮಾ. 30 ರಿಂದ ಏಪ್ರಿಲ್ 8 ಬುಧವಾರ ರಾತ್ರಿ ವರೆಗೆ ಧಾರ್ಮಿಕ ಪಂಡಿತರಿಂದ ಉಪನ್ಯಾಸ ಕಾರ್ಯಕ್ರಮಗಳು ನಡೆಯಲಿವೆ ಎಂದು ಕಿನ್ಯ ಕೇಂದ್ರ ಜುಮಾ ಮಸೀದಿ ಅಧ್ಯಕ್ಷ ಅಬೂಸ್ವಾಲಿಹ್ ಹಾಜಿ ತಿಳಿಸಿದ್ದಾರೆ. ತೊಕ್ಕೊಟ್ಟು ಪ್ರೆಸ್ ಕ್ಲಬ್ನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಮಾಅತ್ ಅಧ್ಯಕ್ಷ ಅಬೂಸ್ವಾಲಿಹ್ ಹಾಜಿ ಕಿನ್ಯ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಈ ಕೂಟು ಝಿಯಾರತ್ ಕಾರ್ಯಕ್ರಮದ ಉದ್ಘಾಟನೆ ಮಾ. 30 ರಂದು ಸೋಮವಾರ ರಾತ್ರಿ 8.30ಕ್ಕೆ ನಡೆಯಲಿದ್ದು, ಸಯ್ಯಿದ್ ಮುಖ್ತಾರ್ ತಂಙಳ್ ಕುಂಬೋಳ್ ಉದ್ಘಾಟಿಸಲಿದ್ದಾರೆ. ಸಯ್ಯಿದ್ ಅಮೀರ್ ತಂಙಳ್ ಕಿನ್ಯ ದುಆ ಆಶೀರ್ವಚನ ನೀಡಲಿದ್ದಾರೆ. ಕೇಂದ್ರ ಜುಮಾ ಮಸೀದಿಯ ಮುದರ್ರಿಸ್ ಮುಸ್ತಫಾ ಅನ್ಸಾರಿ ಹಾಗೂ ನಿಕಟಪೂರ್ವ ಮುದರ್ರಿಸ್ ಅಬ್ದುಲ್ ಮಜೀದ್ ದಾರಿಮಿ ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ. ಕಿನ್ಯ ಕುತುಬಿಯ ಮದ್ರಸ ಮುಖ್ಯ ಶಿಕ್ಷಕ ಮುದರ್ರಿಬ್ ಮುಹ್ಯುದ್ದೀನ್ ಸಿರಾಜ್ ಹುದವಿ ಭಾಗವಹಿಸಲಿದ್ದಾರೆ ಎಂದು ಹೇಳಿದರು. ಮಾ. 31 ರಿಂದ ಎ. 8ರವರೆಗೆ ಪ್ರತಿದಿನ ರಾತ್ರಿ 8.30ರಿಂದ ವಿವಿಧ ಧಾರ್ಮಿಕ ಪಂಡಿತರಿಂದ ಪ್ರವಚನಗಳು ನಡೆಯಲಿವೆ. ಸಯ್ಯಿದ್ ಶಿಹಾಬುದ್ದೀನ್ ತಂಙಳ್ ಅಲ್ ಬುಖಾರಿ ಕಿನ್ಯ, ಪಿ.ಎ. ಅಹ್ಮದ್ ಬಾಖವಿ ಮಂಜನಾಡಿ, ಖಾಸಿಂ ದಾರಿಮಿ ಕಿನ್ಯ, ಡಾ. ಫಾರೂಕ್ ನಈಮಿ ಕೊಲ್ಲಂ, ಅನಸ್ ಅಮಾನಿ ಪುಷ್ಪಗಿರಿ, ಹುಸೈನ್ ಸಅದಿ ಕೆಸಿರೋಡ್, ಸಿದ್ದೀಕ್ ಅಝ್ಹರಿ ಪಯ್ಯನ್ನೂರು, ಹಂಝ ಮಿಸ್ಬಾಹಿ ಓಟ್ಟಪದವು, ಡಾ. ಸಾಲಿಹ್ ಫೈಝಿ, ಮುಹ್ಯುದ್ದೀನ್ ಹುದವಿ ಸೇರಿದಂತೆ ಹಲವರು ಭಾಗವಹಿಸಿ ಉಪನ್ಯಾಸ ನೀಡಲಿದ್ದಾರೆ. ಎ. 9 ಗುರುವಾರ ರಾತ್ರಿ 8.30ಕ್ಕೆ ಸಮಾರೋಪ ಸಮಾರಂಭ ಹಾಗೂ ಕೂಟು ಝಿಯಾರತ್ ನಡೆಯಲಿದೆ. ಸಯ್ಯಿದ್ ಇಬ್ರಾಹಿಂ ಬಾತಿಷಾ ತಂಙಳ್ ಆನೆಕಲ್, ಸಯ್ಯಿದ್ ಮುಈನ್ ಅಲಿ ಶಿಹಾಬ್ ತಂಙಳ್ ಪಾಣಕ್ಕಾಡ್, ನೌಫಲ್ ಫೈಝಿ, ಸ್ಪೀಕರ್ ಯು.ಟಿ. ಖಾದರ್ ಭಾಗವಹಿಸಲಿದ್ದಾರೆ. ಅಶ್ರಫ್ ರಹ್ಮಾನಿ ಚೌಕಿ ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ. ಅದೇ ದಿನ ರಾತ್ರಿ ಕೂಟು ಝಿಯಾರತ್ ಬಳಿಕ ಅನ್ನದಾನ ನಡೆಯಲಿದೆ. ಸ್ತ್ರೀಯರಿಗೆ ಎ. 9 ಗುರುವಾರ ಮಧ್ಯಾಹ್ನ 2 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಅನ್ನದಾನ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಕಿನ್ಯ ಕೇಂದ್ರ ಜುಮಾ ಮಸೀದಿ ಪ್ರಧಾನ ಕಾರ್ಯದರ್ಶಿ ಕೆ.ಎಸ್. ಅಬ್ದುಲ್ ಖಾದರ್, ಕೋಶಾಧಿಕಾರಿ ಸಾದು ಕುಂಞಿ ಸಾಗ್ ಬಾಗ್, ಉಪಾಧ್ಯಕ್ಷರಾದ ಹಮೀದ್ ಕಿನ್ಯ, ಇಬ್ರಾಹೀಮ್, ಅಬ್ಬು ಹಾಜಿ, ಕಾರ್ಯದರ್ಶಿಗಳಾದ ಇಸ್ಮಾಯಿಲ್ ಹಾಜಿ ಸಾಗ್, ಮೊಹಮ್ಮದ್ ಹಾಜಿ ಉಪಸ್ಥಿತರಿದ್ದರು.
ವಿಜಯನಗರ | ಹಳಿ ಮೇಲೆ ಬಿದ್ದ ವ್ಯಕ್ತಿ ರೈಲಿನಡಿಗೆ ಸಿಲುಕಿ ಮೃತ್ಯು
ವಿಜಯನಗರ, ಮಾ.28: ರೈಲು ಹಳಿ ಬಿದ್ದ ಅಪರಿಚಿತ ವ್ಯಕ್ತಿಯೊಬ್ಬರ ಮೇಲೆ ರೈಲು ಹರಿದ ಪರಿಣಾವ ವ್ಯಕ್ತಿಯು ಸ್ಥಳದಲ್ಲೇ ಮೃತಪಟ್ಟ ದಾರುಣ ಘಟನೆ ವಿಜಯನಗರ ಜಿಲ್ಲೆಯ ಹೊಸಪೇಟೆ ರೈಲು ನಿಲ್ದಾಣದಲ್ಲಿ ನಡೆದಿದೆ. ಶುಕ್ರವಾರ ಸಂಜೆ ಈ ಘಟನೆ ನಡೆದಿದ್ದು, ಅಪರಿಚಿತ ವ್ಯಕ್ತಿ ರೈಲ್ವೇ ಹಳಿ ಮೇಲೆ ಬಿದ್ದಿದ್ದ ಸಂದರ್ಭ ಆತನ ಮೇಲೆ ರೈಲು ಹರಿದ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ. ಇದನ್ನು ಗಮನಿಸಿದ ಸ್ಥಳೀಯರು ರೈಲ್ವೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಸುದ್ದಿ ತಿಳಿದು ಹೊಸಪೇಟೆ ರೈಲ್ವೇ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತ ವ್ಯಕ್ತಿಯ ಗುರುತು ಇನ್ನೂ ಪತ್ತೆಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ. ಮೃತರ ಗುರುತು ಪತ್ತೆಗಾಗಿ ಪೊಲೀಸರು ಸಾರ್ವಜನಿಕರ ಸಹಕಾರ ಕೋರಿದ್ದಾರೆ.
ಪುದುಚೇರಿ: ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ನಿರಾಕರಿಸಿದ ಹಿನ್ನೆಲೆ ಪುದುಚೇರಿ ಕಾಂಗ್ರೆಸ್ ಘಟಕದ ಮಾಜಿ ಅಧ್ಯಕ್ಷ ಎ.ವಿ.ಸುಬ್ರಮಣಿಯನ್ ಪಕ್ಷಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ ಈ ಸಂಬಂಧ ಪುದುಚೇರಿ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ವಿ.ವೈದಿಲಿಂಗಂ ಅವರಿಗೆ ಪತ್ರ ಬರೆದಿರುವ ಎ.ವಿ.ಸುಬ್ರಮಣಿಯನ್, ವೈಯಕ್ತಿಕ ಕಾರಣಗಳಿಂದ ಪಕ್ಷಕ್ಕೆ ರಾಜೀನಾಮೆ ಸಲ್ಲಿಸುತ್ತಿದ್ದೇನೆ ಎಂದು ಹೇಳಿದ್ದಾರೆ. ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಎ.ವಿ.ಸುಬ್ರಮಣಿಯನ್ ಗೆ ಕಾಂಗ್ರೆಸ್ ಟಿಕೆಟ್ ನಿರಾಕರಿಸಿದ ಬೆನ್ನಿಗೇ ಈ ಬೆಳವಣಿಗೆ ನಡೆದಿದೆ. 2021ರಲ್ಲಿ ಅವರನ್ನು ಕಾಂಗ್ರೆಸ್ ಪಕ್ಷವು ಉತ್ತರ ಕರೈಕಲ್ ವಿಧಾನಸಭಾ ಕ್ಷೇತ್ರದಿಂದ ಕಣಕ್ಕಿಳಿಸಿತ್ತು. ಆದರೆ ಅವರು ಪರಾಭವಗೊಂಡಿದ್ದರು. ಕರೈಕಲ್ ವಿಧಾನಸಭಾ ಕ್ಷೇತ್ರದವರಾದ ಸುಬ್ರಮಣಿಯನ್, ಪುದುಚೇರಿ ವಿಧಾನಸಭೆಯ ಸ್ಪೀಕರ್ ಹಾಗೂ ಉಪ ಸ್ಪೀಕರ್ ಆಗಿ ಕಾರ್ಯನಿರ್ವಹಿಸಿದ್ದರು. ಇದಲ್ಲದೆ, ಕಾಂಗ್ರೆಸ್ ಸರಕಾರದಲ್ಲಿ ಸಚಿವರಾಗಿದ್ದರು. 2001ರ ವಿಧಾನಸಭಾ ಚುನಾವಣೆಯಲ್ಲಿ ಕರೈಕಲ್ ಕ್ಷೇತ್ರದಿಂದ ವಿಧಾನಸಭೆಗೆ ಪ್ರವೇಶಿಸಿದ್ದರು.
ಯುದ್ದದ ಸಂಘರ್ಷ : ಪ್ರಧಾನಿ ಕರೆದಿದ್ದ ಸಿಎಂ ಸಭೆಗೆ ಸಿದ್ದರಾಮಯ್ಯ ಗೈರು - ಬಿಜೆಪಿ ಪ್ರತಿಕ್ರಿಯೆ
Siddaramaiah skips All CM Meeting : ಪಶ್ಚಿಮ ಏಷ್ಯಾ ಸಂಘರ್ಷ ಮತ್ತು ತೈಲ ಅಭಾವಕ್ಕೆ ಸಂಬಂಧಿಸಿದಂತೆ, ಪ್ರಧಾನಿ ಮೋದಿ, ಎಲ್ಲಾ ಮುಖ್ಯಮಂತ್ರಿಗಳ ಸಭೆಯನ್ನು ಕರೆದಿದ್ದರು. ಈ ಸಭೆಯಲ್ಲಿ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಗವಹಿಸಿರಲಿಲ್ಲ. ರಾಜ್ಯದ ಪರವಾಗಿ ಕೆಎಚ್ ಮುನಿಯಪ್ಪ ಭಾಗವಹಿಸಿದ್ದರು. ಈ ಬಗ್ಗೆ ಬಿಜೆಪಿ ಪ್ರತಿಕ್ರಿಯೆಯನ್ನು ನೀಡಿದೆ.
ಹಿಂದಿ ರಾಜ್ಯಗಳಲ್ಲಿ ಕನ್ನಡವನ್ನ ಕಡ್ಡಾಯ ಮಾಡಿ: ವಿಜಯೇಂದ್ರಗೆ ನೇರ ಸವಾಲು ಹಾಕಿದ ಕರವೇ ನಾರಾಯಣಗೌಡ
ಬೆಂಗಳೂರು: ಎಸ್ಎಸ್ಎಲ್ಸಿ ವಿದ್ಯಾರ್ಥಿಗಳಿಗೆ ಮೂರನೇ ಭಾಷೆಯ ಹೊರೆ ತಗ್ಗಿಸಿ 'ಗ್ರೇಡಿಂಗ್' ಪದ್ಧತಿ ಜಾರಿಗೆ ತಂದಿರುವ ರಾಜ್ಯ ಸರ್ಕಾರದ ಕ್ರಮವನ್ನು ವಿರೋಧಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷರಾದ ಟಿ.ಎ.ನಾರಾಯಣಗೌಡ ಅವರು ತೀವ್ರ ವಾಗ್ದಾಳಿ ನಡೆಸಿದ್ದಾರೆ. ವಿಜಯೇಂದ್ರ ಅವರ ಹೇಳಿಕೆಯು ಆತ್ಮಘಾತಕ ಹಾಗೂ ಕನ್ನಡದ ಮಕ್ಕಳ ಭವಿಷ್ಯಕ್ಕೆ ಕೊಳ್ಳಿ ಇಡುವಂತಿದೆ ಎಂದು ಅವರು
SSLC ಪರೀಕ್ಷೆ ನಡೆಯುತ್ತಿರುವಾಗಲೇ ಅಂಕ 525ಕ್ಕೆ ಇಳಿಕೆ: ಸರ್ಕಾರದ ವಿರುದ್ಧ ಸುರೇಶ್ ಕುಮಾರ್ ವಾಗ್ದಾಳಿ
ಬೆಂಗಳೂರು: ರಾಜ್ಯದಲ್ಲಿ ಪ್ರಸ್ತುತ ಎಸ್ಎಸ್ಎಲ್ಸಿ (SSLC) ಪರೀಕ್ಷೆಗಳು ಬಿರುಸಿನಿಂದ ನಡೆಯುತ್ತಿವೆ. ಆದರೆ, ಪರೀಕ್ಷೆಯ ಮಧ್ಯದಲ್ಲಿಯೇ ರಾಜ್ಯ ಸರ್ಕಾರ ಮತ್ತು ಶಿಕ್ಷಣ ಇಲಾಖೆ ತೆಗೆದುಕೊಂಡಿರುವ ಈ ದಿಢೀರ್ ನಿರ್ಧಾರವೊಂದು ಇದೀಗ ರಾಜ್ಯದಲ್ಲಿ ಭಾರೀ ವಿವಾದಕ್ಕೆ ಕಾರಣವಾಗಿದೆ. ತೃತೀಯ ಭಾಷೆಯಾದ ಹಿಂದಿ ವಿಷಯದ ಅಂಕಗಳನ್ನು ಮೌಲ್ಯಾಂಕನಕ್ಕೆ (ಒಟ್ಟು ಮೊತ್ತಕ್ಕೆ) ಪರಿಗಣಿಸದೆ, ಎಸ್ಎಸ್ಎಲ್ಸಿ ಪರೀಕ್ಷೆಯ ಒಟ್ಟು ಅಂಕಗಳನ್ನು 625 ರಿಂದ 525ಕ್ಕೆ
ಬೆಂಗಳೂರು: ನಗರದ ಪಿಇಎಸ್ ವಿಶ್ವವಿದ್ಯಾನಿಲಯದ ಇಲೆಕ್ಟ್ರಾನಿಕ್ ಸಿಟಿ ಕ್ಯಾಂಪಸ್ ನಲ್ಲಿ ಪ್ರಾಧ್ಯಾಪಕರೊಬ್ಬರು ಮುಸ್ಲಿಮ್ ವಿದ್ಯಾರ್ಥಿಯನ್ನು ತರಗತಿಯ ವೇಳೆ 13 ಬಾರಿ ‘ಟೆರರಿಸ್ಟ್’ ಎಂದು ಕರೆದಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಈ ಸಂಬಂಧ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ಮಾಹಿತಿಯ ಪ್ರಕಾರ, ಡಾ. ಮುರಳೀಧರ್ ದೇಶಪಾಂಡೆ ಎಂದು ಗುರುತಿಸಲಾದ ಪ್ರಾಧ್ಯಾಪಕರು ಮಾರ್ಚ್ 27ರಂದು ತರಗತಿಯ ವೇಳೆ ವಿದ್ಯಾರ್ಥಿಯನ್ನು 13 ಬಾರಿ ‘ಭಯೋತ್ಪಾದಕ’ ಎಂದು ಕರೆಯುವ ಮೂಲಕ ಅವಮಾನಿಸಿದ್ದಾರೆ ಎಂದು ಹೇಳಲಾಗಿದೆ. ಈ ಘಟನೆ ಸಾರ್ವಜನಿಕ ವಲಯದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. ‘ದಿ ಅಬ್ಸರ್ವರ್ ಪೋಸ್ಟ್’ ವರದಿ ಪ್ರಕಾರ, ಅಫಾನ್ ಎಂಬ ವಿದ್ಯಾರ್ಥಿಯನ್ನು ತರಗತಿಯಲ್ಲಿ ಪ್ರಾಧ್ಯಾಪಕರು ನಿಂದಿಸಿದ್ದಾರೆ ಎನ್ನಲಾಗಿದೆ. “ಇರಾನ್ ಯುದ್ಧವು ನಿಮ್ಮಂತಹವರಿಂದಾಗಿದೆ”, “ಟ್ರಂಪ್ ನಿಮ್ಮನ್ನು ಕರೆದೊಯ್ಯುತ್ತಾರೆ”, “ನೀವು ಮೂರ್ಖರು, ನೀವು ನರಕಕ್ಕೆ ಹೋಗುತ್ತೀರಿ” ಎಂಬ ಹೇಳಿಕೆಗಳನ್ನು ಸುಮಾರು 60 ವಿದ್ಯಾರ್ಥಿಗಳ ಎದುರು ನೀಡಿದ್ದಾರೆ ಎಂದು ವರದಿ ಹೇಳಿದೆ. ಇದರಿಂದಾಗಿ ತರಗತಿಯಲ್ಲಿ ಅವಮಾನಕಾರಿ ವಾತಾವರಣ ನಿರ್ಮಾಣವಾಗಿದೆ ಎಂಬ ಆರೋಪ ಕೇಳಿಬಂದಿದೆ. ಈ ಘಟನೆಗೆ ಸಂಬಂಧಿಸಿದಂತೆ ಸಿಸಿಟಿವಿ ದೃಶ್ಯಾವಳಿಗಳನ್ನು ಅಳಿಸಲಾಗಿದೆ ಎಂಬ ಆರೋಪವೂ ಕೇಳಿಬಂದಿದೆ. ಅಫಾನ್ ಅವರಿಗೆ ಬೆಂಬಲ ನೀಡಿದ ಕೆಲವು ವಿದ್ಯಾರ್ಥಿಗಳನ್ನು “ತರಗತಿಯ ವೇಳೆ ಮಾತನಾಡಿದ ಕಾರಣ” ಅಮಾನತುಗೊಳಿಸಲಾಗಿದೆ ಎಂಬ ವರದಿಯೂ ಹೊರಬಂದಿದೆ. ಈ ಬಗ್ಗೆ ಅಧಿಕೃತ ಮಾಹಿತಿ ಸಿಕ್ಕಿಲ್ಲ. ಘಟನೆಯ ಬಳಿಕ ಪ್ರಾಧ್ಯಾಪಕರು ಕಾಲೇಜಿಗೆ ಕ್ಷಮೆಯಾಚಿಸಿದ್ದಾರೆ ಎನ್ನಲಾಗಿದ್ದು, ಅವರು ಅಫಾನ್ ಅವರಿಗೆ ನೇರವಾಗಿ ಕ್ಷಮೆಯಾಚಿಸಿದ್ದಾರೆಯೇ ಎಂಬುದು ಸ್ಪಷ್ಟವಾಗಿಲ್ಲ. ವಿಡಿಯೋ ಬಹಿರಂಗವಾದ ಬಳಿಕ ಪಿಇಎಸ್ ವಿಶ್ವವಿದ್ಯಾಲಯ ಆಡಳಿತ ತಕ್ಷಣ ಕ್ರಮ ಕೈಗೊಂಡಿದ್ದು, ಪ್ರಾಧ್ಯಾಪಕರನ್ನು ಅಮಾನತುಗೊಳಿಸಿದೆ. ಮಾರ್ಚ್ 27ರ ಅಧಿಕೃತ ಆದೇಶದಲ್ಲಿ, “ವಿದ್ಯಾರ್ಥಿಯಿಂದ ಬಂದ ದೂರನ್ನು ಸ್ವೀಕರಿಸಲಾಗಿದೆ. ಪ್ರಕರಣದ ಕುರಿತು ಸಮಗ್ರ ವಿಚಾರಣೆ ನಡೆಯುವವರೆಗೆ ನಿಮ್ಮನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಲಾಗಿದೆ” ಎಂದು ಉಲ್ಲೇಖಿಸಿ ಆದೇಶ ನೀಡಲಾಗಿದೆ. ಈ ಆದೇಶಕ್ಕೆ ಕುಲಪತಿಗಳು ಸಹಿ ಹಾಕಿದ್ದಾರೆ. ಆದರೆ, ಘಟನೆಯ ಸ್ವರೂಪದ ಬಗ್ಗೆ ಹೆಚ್ಚಿನ ವಿವರ ಅಮಾನತು ಆದೇಶದಲ್ಲಿ ನೀಡಲಾಗಿಲ್ಲ. ಈ ಕುರಿತು SIO ನ PR ಕಾರ್ಯದರ್ಶಿ ಮುಹಮ್ಮದ್ ಹೈಯಾನ್ ಅವರು 'ವಾರ್ತಾ ಭಾರತಿ' ಗೆ ದೂರವಾಣಿ ಮೂಲಕ ಪ್ರತಿಕ್ರಿಯಿಸಿ, ಘಟನೆಯನ್ನು ಖಂಡಿಸಿದ್ದಾರೆ. ಈ ಘಟನೆ ಇಲೆಕ್ಟ್ರಾನಿಕ್ ಸಿಟಿ ಕ್ಯಾಂಪಸ್ ನಲ್ಲಿ ನಡೆದಿದ್ದು, ಸಂಬಂಧಿತ ಪ್ರಾಧ್ಯಾಪಕರ ವಿರುದ್ಧ ಎಫ್ಐಆರ್ ದಾಖಲಿಸಬೇಕು ಎಂದು ಆಗ್ರಹಿಸಿದ್ದಾರೆ. ಇನ್ನೊಂದೆಡೆ, ಎನ್ಎಸ್ಯುಐ ಸಂಘಟನೆಯು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಎನ್ಸಿಆರ್ ದಾಖಲಿಸಿದೆ ಎಂದು ತಿಳಿದುಬಂದಿದೆ. ಆದರೆ, ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೆ ಎಫ್ಐಆರ್ ದಾಖಲಾಗಿಲ್ಲ. ಈ ಕುರಿತು ಸ್ಪಷ್ಟೀಕರಣಕ್ಕಾಗಿ ವಾರ್ತಾ ಭಾರತಿ ವಿಶ್ವವಿದ್ಯಾಲಯಕ್ಕೆ ಇಮೇಲ್ ಕಳುಹಿಸಿದ್ದು, ಡಾ. ಮುರಳೀಧರ್ ದೇಶಪಾಂಡೆ ಅವರಿಂದಲೂ ಪ್ರತಿಕ್ರಿಯೆ ಕೋರಲಾಗಿದೆ. ಅಧಿಕೃತ ಪ್ರತಿಕ್ರಿಯೆ ಲಭಿಸಿದ ಬಳಿಕ ಹೆಚ್ಚಿನ ವಿವರಗಳನ್ನು ಪ್ರಕಟಿಸಲಾಗುತ್ತದೆ. Professor accused of calling Muslim student “terrorist” at PES University, Bengaluru A serious controversy has emerged at PES University, Bengaluru, where professor Dr. Muralidhar Deshpande allegedly made derogatory remarks against a Muslim student, Affan, during a class on… pic.twitter.com/hckZVoTkQo — Genzdigest (@genzdigest) March 27, 2026
ಸೌದಿ ವಾಯುನೆಲೆಯ ಮೇಲೆ ಇರಾನ್ ದಾಳಿ; ಅಮೆರಿಕದ 12 ಸೈನಿಕರಿಗೆ ಗಾಯ, ಇಬ್ಬರ ಸ್ಥಿತಿ ಗಂಭೀರ
ರಿಯಾದ್: ಸೌದಿ ಅರೇಬಿಯಾದ ಪ್ರಿನ್ಸ್ ಸುಲ್ತಾನ್ ವಾಯುನೆಲೆಯ ಮೇಲೆ ಇರಾನ್ ನಡೆಸಿದ ದಾಳಿಯಲ್ಲಿ ಅಮೆರಿಕದ 12 ಸೈನಿಕರು ಗಾಯಗೊಂಡಿದ್ದು, ಅವರಲ್ಲಿ ಇಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ರಾಯಿಟರ್ಸ್ ಸುದ್ದಿ ಸಂಸ್ಥೆ ವರದಿ ಮಾಡಿದೆ. ಇರಾನ್ ವಿರುದ್ಧ ನಾಲ್ಕು ವಾರಗಳ ಹಿಂದೆ ಆರಂಭವಾದ ಯುದ್ಧದ ನಂತರ ಇದುವರೆಗೂ 300ಕ್ಕೂ ಹೆಚ್ಚು ಅಮೆರಿಕದ ಸೈನಿಕರು ಗಾಯಗೊಂಡಿದ್ದಾರೆ ಎಂದು ವರದಿಯು ತಿಳಿಸಿದೆ. ಶುಕ್ರವಾರ ಅಮೆರಿಕದ ಸೈನ್ಯ ನೀಡಿದ ಮಾಹಿತಿಯ ಪ್ರಕಾರ, ಗಾಯಗೊಂಡ 300 ಸೈನಿಕರಲ್ಲಿ 273 ಮಂದಿ ಮತ್ತೆ ಕರ್ತವ್ಯಕ್ಕೆ ಹಿಂತಿರುಗಿದ್ದಾರೆ. ಉಳಿದವರಲ್ಲಿ ಕೆಲವರ ಸ್ಥಿತಿ ಗಂಭೀರವಾಗಿದ್ದು, ಚಿಕಿತ್ಸೆ ಮುಂದುವರಿದಿದೆ ಎಂದು ತಿಳಿಸಲಾಗಿದೆ. ಇದುವರೆಗೆ ನಡೆದಿರುವ ಈ ಸಂಘರ್ಷದಲ್ಲಿ ಅಮೆರಿಕದ ಒಟ್ಟು 13 ಸೈನಿಕರು ಮೃತಪಟ್ಟಿದ್ದಾರೆ ಎಂದು ರಾಯಿಟರ್ಸ್ ವರದಿಯು ಉಲ್ಲೇಖಿಸಿದೆ.
ಮೂಡುಬಿದಿರೆ | ಆಟೋ ರಿಕ್ಷಾ ಢಿಕ್ಕಿ: ಪಾದಚಾರಿಗೆ ಗಂಭೀರ ಗಾಯ
ಮೂಡುಬಿದಿರೆ: ಆಟೋ ರಿಕ್ಷಾವೊಂದು ಢಿಕ್ಕಿ ಹೊಡೆದ ಪರಿಣಾಮ ಪಾದಚಾರಿಯೊಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ರಾಷ್ಟ್ರೀಯ ಹೆದ್ದಾರಿಯ ವಿದ್ಯಾಗಿರಿ-ಮೂಡುಬಿದಿರೆ ಗಾಂಧಿನಗರದಲ್ಲಿ ಶುಕ್ರವಾರ ರಾತ್ರಿ ಸಂಭವಿಸಿದೆ. ಗಾಂಧಿನಗರದ ಕರ್ದಬೆಟ್ಟು ನಿವಾಸಿ ಶಂಕರ್ ಆಚಾರ್ಯ ಗಾಯಗೊಂಡವರು. ಅವರು ಶುಕ್ರವಾರ ರಾತ್ರಿ ಮೂಡುಬಿದಿರೆ ಕಡೆಯಿಂದ ಗಾಂಧಿನಗರದ ಕಡೆಗೆ ನಡೆದುಕೊಂಡು ಹೋಗುತ್ತಿದ್ದ ವೇಳೆ ಶೇಖರ್ ಎಂಬವರು ಚಲಾಯಿಸುತ್ತಿದ್ದ ಆಟೋ ರಿಕ್ಷಾ ಹಿಂದಿನಿಂದ ಢಿಕ್ಕಿ ಹೊಡೆದಿದೆ. ಅಪಘಾತದ ತೀವ್ರತೆಗೆ ಶಂಕರ್ ಆಚಾರ್ಯರ ತಲೆಗೆ ಗಂಭೀರ ಸ್ವರೂಪದ ಗಾಯಗಳಾಗಿವೆ. ತಕ್ಷಣವೇ ಸ್ಥಳೀಯರ ನೆರವಿನಿಂದ ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ.
ರಾಯಚೂರು : ಆರೋಗ್ಯ ಇಲಾಖೆ ಹೊರಗುತ್ತಿಗೆ ನೌಕರರಿಗೆವರ್ಷದಿಂದ ಇಲ್ಲ ಸಂಬಳ!
ರಾಯಚೂರು ಜಿಲ್ಲೆಯ ಸರ್ಕಾರಿ ಆಸ್ಪತ್ರೆಗಳಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ ನೌಕರರಿಗೆ ಕಳೆದ ಒಂದು ವರ್ಷದಿಂದ ನಿಯಮಿತವಾಗಿ ವೇತನ ಪಾವತಿಯಾಗದಿರುವುದು ಅವರ ಜೀವನವನ್ನು ಸಂಕಷ್ಟಕ್ಕೆ ದೂಡಿದೆ. ವೇತನವಿಲ್ಲದೆ ಕುಟುಂಬ ನಿರ್ವಹಣೆ ಮಾಡುವುದು ಅಸಾಧ್ಯವಾಗಿರುವ ಈ ಸಂದರ್ಭದಲ್ಲಿ, ನೇಮಕಾತಿ ಏಜೆನ್ಸಿಗಳು ಬದಲಾಗುತ್ತಿದ್ದರೂ ನೌಕರರ ಬಾಕಿ ವೇತನದ ಸಮಸ್ಯೆ ಮಾತ್ರ ಬಗೆಹರಿಯದೆ ಉಳಿದಿರುವುದು ಹಲವು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ.
ಕಠ್ಮಂಡು: ನೇಪಾಳದ ರಾಜಕೀಯದಲ್ಲಿ ದಿಢೀರ್ ಮಹತ್ವದ ಬೆಳವಣಿಗೆಯೊಂದು ನಡೆದಿದ್ದು, ಭ್ರಷ್ಟಾಚಾರದ ಆರೋಪ ಹೊತ್ತಿರುವ ಮಾಜಿ ಪ್ರಧಾನಿ ಕೆ.ಪಿ. ಶರ್ಮಾ ಒಲಿ ಹಾಗೂ ಮಾಜಿ ಗೃಹ ಸಚಿವ ರಮೇಶ್ ಲೇಖಕ್ ಅವರನ್ನು ಶನಿವಾರ ಬೆಳಿಗ್ಗೆ ಪೊಲೀಸರು ಬಂಧಿಸಿದ್ದಾರೆ. ಕಳೆದ ವರ್ಷ (ಸೆಪ್ಟೆಂಬರ್) ನಡೆದ ಭ್ರಷ್ಟಾಚಾರ ವಿರೋಧಿ 'ಜೆನ್ ಝೀ' (Gen Z) ಯುವಜನತೆಯ ಪ್ರತಿಭಟನೆ ವೇಳೆ ನಡೆದ ಮಾರಣಾಂತಿಕ
ಮೋದಿ - ಟ್ರಂಪ್ ಹೈಲೆವೆಲ್ ಕಾಲ್ನಲ್ಲಿ ಎಲಾನ್ ಮಸ್ಕ್’ಗೆ ಏನು ಕೆಲಸ : ಶಿಷ್ಟಾಚಾರದ ಉಲ್ಲಂಘನೆ?
Elon Musk and Donal Trump : ಎರಡು ದಿನಗಳ ಹಿಂದೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಭಾರತದ ಪ್ರಧಾನಿ ನರೇಂದ್ರ ಮೋದಿ ಜೊತೆ ಮಾತುಕತೆಯನ್ನು ನಡೆಸಿದ್ದರು. ಈ ದೂರವಾಣಿ ಸಂಭಾಷಣೆಯ ವೇಳೆ, ಉದ್ಯಮಿ ಎಲಾನ್ ಮಸ್ಕ್ ಕೂಡಾ ಭಾಗವಹಿಸಿದ್ದರು ಎಂದು ನ್ಯೂಯಾರ್ಕ್ ಟೈಮ್ಸ್ ಪತ್ರಿಕೆ ವರದಿ ಮಾಡಿದೆ. ಇದು ಶಿಷ್ಟಾಚಾರದ ಉಲ್ಲಂಘನೆಯೇ ಎನ್ನುವುದು ಪ್ರಶ್ನೆಯಾಗಿದೆ.
Jowar Price Today: ಕರ್ನಾಟಕದಲ್ಲಿ ಕ್ವಿಂಟಾಲ್ ಜೋಳದ ಬೆಲೆ ಎಷ್ಟಿದೆ, ಮಾರುಕಟ್ಟೆವಾರು ಪಟ್ಟಿ ಇಲ್ಲಿದೆ.
Jowar Price Today in Karnataka: ಕರ್ನಾಟಕದಲ್ಲಿ ಈ ಬಾರಿ ಉತ್ತಮ ಜೋಳದ ಇಳುವರಿ ಬಂದಿದೆ. ಆದರೆ ಪ್ರತಿ ವರ್ಷದಷ್ಟು ಹೇರಳ ಪ್ರಯಾಣದಲ್ಲಿ ಉತ್ಪಾದನೆ ಆಗಲಿಲ್ಲ. ಕಡಿಮೆ ಪ್ರಮಾಣದಲ್ಲಿ ಜೋಳ ಬೆಳೆಯಲಾಗಿದೆ. ಹೀಗಿದ್ದರೂ ಕ್ವಿಂಟಾಲ್ ಜೋಳದ ಬೆಲೆ 1619 ರೂಪಾಯಿಯಿಂದ 4211ರೂಪಾಯಿಯಷ್ಟಿದೆ. ರಾಜ್ಯದ ಬಹುತೇಕ ಕೃಷಿ ಉತ್ಪನ್ನ ಮಾರುಕಟ್ಟೆಗಳಲ್ಲಿ (APMC) ದರ ಕಡಿಮೆ ಇದ್ದು, ರೈತರಿಗೆ ಲಾಭದಾಯಕ
ಸಕಲೇಶಪುರ : ಪ್ರೀ ವೆಡ್ಡಿಂಗ್ ಫೋಟೊಶೂಟ್ ತಂಡದ ಮೇಲೆ ಹಲ್ಲೆ ; 7 ಜನರ ಬಂಧನ
ಸಕಲೇಶಪುರ ತಾಲೂಕು ಬೆಟ್ಟದ ಭೈರವೇಶ್ವರ ದೇಗುಲದಲ್ಲಿ ಸ್ಥಳೀಯರ ಹೆಸರಲ್ಲಿ ಗುಂಡಾಗಿರಿ ಮಾಡಲಾಗಿದೆ. ಬೆಟ್ಟದ ಬೈರವೇಶ್ವರ ದೇಗುಲದಲ್ಲಿ ವಿಡಿಯೋ, ಫೋಟೊ ಶೂಟ್ ಮಾಡುತ್ತಿದ್ದ ಫೋಟೋಗ್ರಾಫರ್ ಗಳ ಮೇಲೆ ಸ್ಥಳೀಯರು ಎಂದು ಹೇಳಿಕೊಂಡ ಕೆಲವರು ಗುಂಡಾಗಿರಿ ಮಾಡಿದ್ದಾರೆ. 7 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
ಅಸ್ಪೃಶ್ಯತೆ, ಜಾತೀಯತೆ ದಲಿತರಿಗೆ ಸಂವಿಧಾನ ಕೊಟ್ಟ ‘ಸ್ಥಾನಮಾನವೆ’?
ಹಿಂದೂ, ಸಿಖ್ ಅಥವಾ ಬೌದ್ಧ ಧರ್ಮಗಳನ್ನು ಹೊರತು ಪಡಿಸಿ ಇತರ ಧರ್ಮವನ್ನು ಆಚರಿಸುವ ಯಾವುದೇ ವ್ಯಕ್ತಿಯನ್ನು ಪರಿಶಿಷ್ಟ ಜಾತಿಯ ಸದಸ್ಯ ಎಂದು ಪರಿಗಣಿಸಲಾಗುವುದಿಲ್ಲ. ಇತರ ಯಾವುದೇ ಧರ್ಮಕ್ಕೆ ಮತಾಂತರವು ಪರಿಶಿಷ್ಟ ಜಾತಿ ‘ಸ್ಥಾನಮಾನ’ದ ತಕ್ಷಣದ ಮತ್ತು ಸಂಪೂರ್ಣ ನಷ್ಟಕ್ಕೆ ಕಾರಣವಾಗುತ್ತದೆ ಎಂದು ಸುಪ್ರೀಂಕೋರ್ಟ್ ಮಂಗಳವಾರ ಹೇಳಿರುವುದು ಚರ್ಚೆಗೆ ಕಾರಣವಾಗಿದೆ. ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡು ಪಾದ್ರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ವ್ಯಕ್ತಿಯೋರ್ವರು ತನ್ನ ಮೇಲೆ ಹಲ್ಲೆ ನಡೆಸಿದ್ದ ವ್ಯಕ್ತಿಗಳ ವಿರುದ್ಧ ಎಸ್ಸಿ-ಎಸ್ಟಿ ಕಾಯ್ದೆಯಡಿ ದಾಖಲಿಸಿದ್ದ ಪ್ರಕರಣಕ್ಕೆ ಸಂಬಂಧಿಸಿ ಉಚ್ಚ ನ್ಯಾಯಾಲಯ ಈ ತೀರ್ಪನ್ನು ನೀಡಿದೆ. ಈ ತೀರ್ಪು ನಿರ್ದಿಷ್ಟ ಹಲ್ಲೆ ಪ್ರಕರಣಕ್ಕಷ್ಟೇ ಸೀಮಿತವಾಗಿ ಉಳಿಯದೆ ದಲಿತರ ಒಟ್ಟಾರೆ ಸಾಮಾಜಿಕ ಬದುಕಿನ ಮೇಲೆ ಪರಿಣಾಮ ಬೀರುವ ಸಾಮರ್ಥ್ಯವನ್ನು ಹೊಂದಿದೆ. ತನ್ನೊಳಗೆ ಹಲವು ವಿರೋಧಾಭಾಸಗಳನ್ನು ಬಚ್ಚಿಟ್ಟುಕೊಂಡಿರುವ ಈ ತೀರ್ಪನ್ನು ಈಗಾಗಲೇ ಹಲವು ಚಿಂತಕರು ಪ್ರಶ್ನಿಸಿದ್ದಾರೆ. ಒಬ್ಬ ಎಸ್ಸಿ ಅಥವಾ ಪರಿಶಿಷ್ಟ ಜಾತಿಯ ವ್ಯಕ್ತಿ ಮತಾಂತರವಾಗುವುದಕ್ಕೆ ಸುಪ್ರೀಂಕೋರ್ಟ್ಗೆ ಯಾವ ಅಭ್ಯಂತರವೂ ಇಲ್ಲ. ಆದರೆ, ಆತ ಕ್ರೈಸ್ತ ಅಥವಾ ಇಸ್ಲಾಮ್ ಧರ್ಮಕ್ಕೆ ಮತಾಂತರವಾಗುವುದರ ಬಗ್ಗೆ ಮಾತ್ರ ತೀರ್ಪಿನಲ್ಲಿ ಆಕ್ಷೇಪವಿದ್ದಂತಿದೆ. ಸುಪ್ರೀಂಕೋರ್ಟ್ ಪರಿಶಿಷ್ಟ ಜಾತಿಯನ್ನು ಒಂದು ‘ಸ್ಥಾನಮಾನ’ವಾಗಿ ಪರಿಗಣಿಸಿದೆ. ಆದರೆ ಈ ‘ಸ್ಥಾನಮಾನ’ವನ್ನು ಪಡೆದ ಜನರು ತಲೆ ತಲಾಂತರಗಳಿಂದ ಪಡೆದ ಸವಲತ್ತುಗಳು ಯಾವುವು ಎನ್ನುವುದು ಸುಪ್ರೀಂಕೋರ್ಟ್ಗೆ ಗೊತ್ತಿಲ್ಲದಿರುವುದೇನೂ ಅಲ್ಲ. ಅದೊಂದು ಸ್ಥಾನವೂ ಅಲ್ಲ, ಮಾನವೂ ಅಲ್ಲ. ಬದಲಿಗೆ ಜಾತಿಯ ಹೆಸರಿನಲ್ಲಿ ಶತಶತಮಾನಗಳಿಂದ ಪಡೆದುಕೊಂಡು ಬಂದ ಅವಮಾನವನ್ನೇ ಸುಪ್ರೀಂಕೋರ್ಟ್ ‘ಸ್ಥಾನಮಾನ’ ಎಂದು ಹೇಳುತ್ತಿದೆ. ಈ ಸ್ಥಾನಮಾನ ರದ್ದಾಗುವುದು ಎಂದರೆ, ಜಾತೀಯತೆ, ಅಸ್ಪಶ್ಯತೆ, ಶೋಷಣೆ ಇತ್ಯಾದಿಗಳಿಂದ ಮುಕ್ತವಾಗುವುದು ಎಂದರ್ಥ. ಎಲ್ಲಿಯವರೆಗೆ ಇವೆಲ್ಲವುಗಳಿಂದ ಪರಿಶಿಷ್ಟ ಜಾತಿಯ ಜನರು ಮುಕ್ತರಾಗುವುದಿಲ್ಲವೋ ಅಲ್ಲಿಯವರೆಗೆ ಈ ‘ಸ್ಥಾನಮಾನ’ ಅವರ ಪಾಲಿಗೆ ಯಾವ ಸುಪ್ರೀಂಕೋರ್ಟ್ ಹೇಳಿದರೂ, ಯಾವ ಧರ್ಮಕ್ಕೆ ಮತಾಂತರವಾದರೂ ರದ್ದಾಗುವುದಿಲ್ಲ. ಇದು ವಾಸ್ತವವಾಗಿದೆ. ‘ಸ್ಥಾನಮಾನ’ವೆಂದು ಸುಪ್ರೀಂಕೋರ್ಟ್ ಯಾವುದನ್ನು ಉಲ್ಲೇಖಿಸಿ ತೀರ್ಪು ನೀಡಿದೆ ಎನ್ನುವುದನ್ನು ಊಹಿಸುವುದು ಕಷ್ಟವಿಲ್ಲ. ಕೋರ್ಟ್ ಕಣ್ಣಿಟ್ಟಿರುವುದು ಪರಿಶಿಷ್ಟ ಜಾತಿಯ ಜನರಿಗೆ ನೀಡಿರುವ ಮೀಸಲಾತಿಯ ಮೇಲೆ. ಹಾಗೆಯೇ ಶೋಷಣೆ, ದೌರ್ಜನ್ಯಗಳಿಂದ ಅವರನ್ನು ರಕ್ಷಿಸುವುದಕ್ಕಾಗಿ ರೂಪಿಸಿರುವ ಕಾನೂನು ಕಾಯ್ದೆಗಳ ಮೇಲೆ. ಇದನ್ನು ಪರೋಕ್ಷವಾಗಿ ಸುಪ್ರೀಂಕೋರ್ಟ್ ಪರಿಶಿಷ್ಟ ಜಾತಿಗಳಿಗೆ ನೀಡಿರುವ ‘ಸವಲತ್ತು’ಗಳು ಎಂದು ಭಾವಿಸಿ ತೀರ್ಪು ನೀಡಿದಂತಿದೆ. ನೀವು ಹಿಂದೂ, ಬೌದ್ಧ, ಸಿಖ್ ಧರ್ಮ ಇವುಗಳನ್ನು ಹೊರತು ಪಡಿಸಿ ಇಸ್ಲಾಮ್ ಅಥವಾ ಕ್ರೈಸ್ತ ಧರ್ಮಕ್ಕೆ ಮತಾಂತರವಾದರೆ ಈ ಸವಲತ್ತುಗಳಿಂದ ವಂಚಿತರಾಗುತ್ತೀರಿ ಎನ್ನುವ ನೇರ ಬೆದರಿಕೆಯನ್ನು ಪರಿಶಿಷ್ಟ ಜಾತಿಯ ಜನರಿಗೆ ನೀಡಲಾಗಿದೆ. ಬೌದ್ಧ, ಸಿಖ್ ಧರ್ಮ ಸ್ವತಂತ್ರ ಧರ್ಮವಾಗಿ ಈಗಾಗಲೇ ಗುರುತಿಸಿಕೊಂಡಿವೆ. ಅಷ್ಟೇ ಅಲ್ಲ, ಅಲ್ಪಸಂಖ್ಯಾತ ಸ್ಥಾನಮಾನವನ್ನೂ ಅವುಗಳು ಪಡೆದುಕೊಂಡಿವೆ. ಹೀಗಿರುವಾಗ ಕ್ರೈಸ್ತ ಧರ್ಮ ಮತ್ತು ಇಸಾಮ್ ಧರ್ಮಕ್ಕೆ ಮತಾಂತರವಾದರೆ ಮಾತ್ರ ಸ್ಥಾನಮಾನ ರದ್ದಾಗುವುದು ಹೇಗೆ? ಎನ್ನುವ ಪ್ರಶ್ನೆಯನ್ನು ಕೆಲವರು ಕೇಳುತ್ತಿದ್ದಾರೆ. ಈ ತೀರ್ಪಿನ ಮೂಲಕ ಸುಪ್ರೀಂಕೋರ್ಟ್ ಪರೋಕ್ಷವಾಗಿ ಬೌದ್ಧಧರ್ಮ ಮತ್ತು ಸಿಖ್ ಧರ್ಮದಲ್ಲಿ ಜಾತೀಯತೆ, ಅಸ್ಪಶ್ಯತೆಗಳು ತಾಂಡವವಾಡುತ್ತಿವೆ. ಆದುದರಿಂದ ಆ ಧರ್ಮಕ್ಕೆ ಮತಾಂತರವಾದರೆ ಪರಿಶಿಷ್ಟರ ಬದುಕಿನಲ್ಲಿ ಯಾವ ಬದಲಾವಣೆಯೂ ಆಗುವುದಿಲ್ಲ ಎಂದು ಹೇಳಿದಂತಾಯಿತು. ಇದೇ ಸಂದರ್ಭದಲ್ಲಿ, ಕ್ರೈಸ್ತ ಮತ್ತು ಇಸ್ಲಾಮ್ ಧರ್ಮಗಳಲ್ಲಿ ಜಾತೀಯತೆ, ಅಸ್ಪಶ್ಯತೆಗಳಿಲ್ಲ ಎಂದು ಸುಪ್ರೀಂಕೋರ್ಟ್ ಕ್ಲೀನ್ಚಿಟ್ ನೀಡಿದಂತಾಗಿದೆ. ಈ ಎರಡು ಧರ್ಮಗಳಿಗೆ ಪರಿಶಿಷ್ಟ ಜಾತಿಯ ಜನರು ಮತಾಂತರವಾದರೆ ಅವರಿಗೆ ಬೇರೆ ಕಾನೂನಿನ ರಕ್ಷಣೆಯ ಅಗತ್ಯವಿಲ್ಲ ಎಂದು ಸುಪ್ರೀಂಕೋರ್ಟ್ ಭಾವಿಸಿದೆ. ಇಸ್ಲಾಮ್ ಮತ್ತು ಕ್ರೈಸ್ತ ಧರ್ಮಕ್ಕೆ ಮತಾಂತರವಾದರೆ ಪರಿಶಿಷ್ಟ ಜಾತಿಯ ಜನರಿಗೆ ಅವರ ಹಿಂದಿನ ‘ಸ್ಥಾನಮಾನ’ ರದ್ದಾಗಿ ಸಂವಿಧಾನದಲ್ಲಿರುವ ಹೊಸ ‘ಸ್ಥಾನಮಾನ’ಗಳು ಸಿಕ್ಕಂತಾಗುತ್ತದೆ ಎಂಬರ್ಥದಲ್ಲಿ ತೀರ್ಪು ಹೊರಬಿದ್ದಿದೆ. ಆದರೆ, ವಾಸ್ತವ ಬೇರೆಯೇ ಇದೆ. ಈ ದೇಶದಲ್ಲಿ ಬೇರೆ ಬೇರೆ ಜಾತಿಗಳಿಂದ ಮತಾಂತರವಾದವರೇ ಅಧಿಕ. ಇಲ್ಲಿ ವೃತ್ತಿ ಮತ್ತು ಜಾತಿ ಒಂದನ್ನೊಂದು ಬೆಸೆದುಕೊಂಡಿವೆೆ. ವೃತ್ತಿಯ ಕಾರಣಕ್ಕಾಗಿಯೇ ಜಾತಿಯನ್ನೂ ನಿಕೃಷ್ಟವಾಗಿ ನೋಡಲಾಗುತ್ತಿದೆ. ಇತರ ಧರ್ಮಗಳಿಗೆ ಮತಾಂತರವಾದರೂ ಒಂದು ತಲೆಮಾರು ಜಾತಿಯನ್ನು ಪೂರ್ಣವಾಗಿ ಕಳಚಿಕೊಂಡು ಸಮಾಜದಲ್ಲಿ ಬದುಕುವುದು ಇಲ್ಲಿ ಸುಲಭವಿಲ್ಲ. ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡ ದಲಿತರು ಹೊಸ ಧರ್ಮದಲ್ಲಿ ‘ದಲಿತ ಕ್ರಿಶ್ಚಿಯನ್ನ’ರಾಗಿ ಬದುಕಬೇಕಾದ ಸ್ಥಿತಿಯಿದೆ. ಹಿಂದೂ ಧರ್ಮದ ಜಾತೀಯತೆ, ಅಸ್ಪಶ್ಯತೆಯಿಂದ ಬಿಡುಗಡೆ ಪಡೆಯುವ ಉದ್ದೇಶದಿಂದ ಮತಾಂತರಗೊಂಡವರು, ಹೊಸ ಧರ್ಮದಲ್ಲೂ ತಮ್ಮ ಜಾತಿಯ ಕಾರಣಕ್ಕಾಗಿ ಶೋಷಣೆಯನ್ನು ಅನುಭವಿಸುವುದು ವಿಪರ್ಯಾಸವೇ ಸರಿ. ಕ್ರೈಸ್ತ, ಇಸ್ಲಾಂ ಧರ್ಮಗಳಿಗೆ ಮೇಲ್ ಜಾತಿಯಿಂದ ಮತಾಂತರಗೊಂಡ ಜನರು ದಲಿತ ಸಮುದಾಯದಿಂದ ಮತಾಂತರಗೊಂಡ ಜನರನ್ನು ಸರಿಸಮನಾಗಿ ಕಾಣುವುದಿಲ್ಲ. ಕ್ರೈಸ್ತ ಧರ್ಮದಲ್ಲಿ ದಲಿತ ಪಾದ್ರಿಗಳೂ ಈ ಜಾತೀಯತೆಯ ನೋವನ್ನನುಭವಿಸುತ್ತಾ ಬದುಕುತ್ತಿದ್ದಾರೆ. ಈ ಕಾರಣಕ್ಕಾಗಿಯೇ ದಲಿತ ಕ್ರಿಶ್ಚಿಯನ್ನರು ತಮ್ಮ ಹಕ್ಕುಗಳಿಗಾಗಿ ಪ್ರತ್ಯೇಕವಾಗಿ ಸಂಘಟಿತರಾಗಿ ಹೋರಾಟ ನಡೆಸುತ್ತಿದ್ದಾರೆ. ಹಾಗೆಯೇ ಬೇರೆ ಬೇರೆ ಜಾತಿಗಳಿಂದ ಇಸ್ಲಾಮ್ ಧರ್ಮಕ್ಕೆ ಮತಾಂತರವಾದ ನೂರಾರು ಜಾತಿಗಳು ತಮ್ಮ ಪೂರ್ವಾಶ್ರಮದ ಹೆಸರುಗಳ ಜೊತೆಗೇ ಬದುಕುತ್ತಿವೆ. ಮುಸ್ಲಿಮರ ನಡುವೆ ಇರುವ ಈ ಜಾತಿಗಳ ಬಗ್ಗೆಯೇ ಹಲವು ಅಧ್ಯಯನಗಳು ನಡೆದಿವೆ. ಇವುಗಳ ಬಗ್ಗೆ ಸುಪ್ರೀಂಕೋರ್ಟ್ಗೆ ಅರಿವಿಲ್ಲದೇ ಇರುವುದು ಖೇದಕರವಾಗಿದೆ. ಇಸ್ಲಾಮ್ ಮತ್ತು ಕ್ರೈಸ್ತ ಧರ್ಮದಲ್ಲಿ ಜಾತಿ ವ್ಯವಸ್ಥೆ ಇಲ್ಲದೇ ಇರಬಹುದು. ಆದರೆ ಭಾರತದ ಸಾಮಾಜಿಕ ವ್ಯವಸ್ಥೆಯಲ್ಲಿ ಒಬ್ಬ ಮತಾಂತರವಾದಾಕ್ಷಣ ತಮ್ಮ ಜಾತಿಯ ಕಳಂಕದಿಂದ ಸಂಪೂರ್ಣ ಹೊರಗೆ ಬರಲು ಸಾಧ್ಯವಿಲ್ಲ. ಮತಾಂತರದಿಂದ ಆರ್ಥಿಕವಾಗಿ, ಸಾಮಾಜಿಕವಾಗಿ ಒಮ್ಮೆಲೆ ಬಲಾಢ್ಯನಾಗಲು ಸಾಧ್ಯವಿಲ್ಲ. ಅದೊಂದು ಪ್ರತಿರೋಧ ಮಾತ್ರವಾಗಿದೆ. ಇಲ್ಲಿ ಮುಸ್ಲಿಮರೇ ತಾವು ಅನುಸರಿಸುತ್ತಿರುವ ಧರ್ಮದ ಕಾರಣಕ್ಕಾಗಿ ಇತರರಿಂದ ದೌರ್ಜನ್ಯಕ್ಕೊಳಗಾಗುತ್ತಿರುವ ದಿನಗಳು ಇವು. ಸಾಚಾರ್ ವರದಿ ಈ ದೇಶದಲ್ಲಿರುವ ಮುಸ್ಲಿಮರನ್ನೇ ‘ನವ ದಲಿತರು’ ಎಂದು ಕರೆದಿರುವಾಗ, ದಲಿತರು ಕ್ರೈಸ್ತರು ಅಥವಾ ಮುಸ್ಲಿಮರಾಗಿ ಬದಲಾದಾಕ್ಷಣ ಸಂವಿಧಾನಕೊಟ್ಟ ಎಲ್ಲ ಹಕ್ಕುಗಳನ್ನು ಕಳೆದುಕೊಳ್ಳುತ್ತಾರೆ ಎನ್ನುವುದು ಅಮಾನವೀಯ ಮಾತ್ರವಲ್ಲ, ಹಿಂದೂ ಧರ್ಮದೊಳಗಿರುವ ಜಾತೀಯತೆ, ಅಸ್ಪಶ್ಯತೆಯ ವಿರುದ್ಧ ಪ್ರತಿರೋಧ ವ್ಯಕ್ತಪಡಿಸದಂತೆ ಅವರ ಬಾಯಿಯನ್ನು ಕಟ್ಟಿ ಹಾಕುವ ಹೊಸ ತಂತ್ರವೂ ಆಗಿದೆ.
ಬೆಂಗಳೂರು: ಚುನಾವಣೆ ಮುಗಿದ ತಕ್ಷಣ ಈ ಹಿಂದೆ ಮಾಡಿದಂತೆ ಕೇಂದ್ರ ಸರ್ಕಾರ ಮತ್ತೆ ಪೆಟ್ರೋಲ್, ಡಿಸೇಲ್ ಬೆಲೆ ಹೆಚ್ಚಳ ಮಾಡಲಿದೆ. ಇದೆಲ್ಲವೂ ಚುನಾವಣೆ ಗಿಮಿಕ್ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದ್ದರು. ಮೊದಲು ನಿಮ್ಮ ರಾಜ್ಯ ಕಾಂಗ್ರೆಸ್ ಸರ್ಕಾರ ತೆರಿಗೆ ಲೂಟಿ ಹೊಡೆಯುವುದನ್ನು ನಿಲ್ಲಿಸಿ ನಂತರ ಬೇರೆಯವರಿಗೆ ಬುದ್ಧಿ ಹೇಳಿ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಗರಂ
SSLC ವಿದ್ಯಾರ್ಥಿಗಳಿಗೆ ಗುಡ್ನ್ಯೂಸ್: ಒಟ್ಟು ಅಂಕ 625ರ ಬದಲು 525ಕ್ಕೆ ಇಳಿಕೆ, ತೃತೀಯ ಭಾಷೆಗೆ ಗ್ರೇಡ್
ಬೆಂಗಳೂರು: ರಾಜ್ಯದ ಎಸ್ಎಸ್ಎಲ್ಸಿ (SSLC) ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರ ಮತ್ತು ಶಾಲಾ ಶಿಕ್ಷಣ ಇಲಾಖೆ ಭರ್ಜರಿ ಸಿಹಿಸುದ್ದಿ ನೀಡಿದೆ. ದಶಕಗಳಿಂದಲೂ ನಡೆದುಕೊಂಡು ಬಂದಿದ್ದ ಪರೀಕ್ಷಾ ಕ್ರಮದಲ್ಲಿ ಮಹತ್ವದ ಬದಲಾವಣೆ ತರಲಾಗಿದ್ದು, ಇನ್ನು ಮುಂದೆ ಎಸ್ಎಸ್ಎಲ್ಸಿ ಒಟ್ಟು ಅಂಕಗಳನ್ನು 625ರ ಬದಲಾಗಿ 525 ಅಂಕಗಳಿಗೆ ಇಳಿಕೆ ಮಾಡಲಾಗಿದೆ. ವಿಶೇಷವಾಗಿ ಹಿಂದಿ ಸೇರಿದಂತೆ ತೃತೀಯ ಭಾಷಾ ವಿಷಯಗಳ ಅಂಕಗಳನ್ನು ವಿದ್ಯಾರ್ಥಿಗಳ
ಸಕಲೇಶಪುರ: ಬೆಟ್ಟದ ಭೈರವೇಶ್ವರ ದೇವಸ್ಥಾನದಲ್ಲಿ ಪ್ರೀ-ವೆಡ್ಡಿಂಗ್ ಶೂಟ್ ವೇಳೆ ಸ್ಥಳೀಯರಿಂದ ಹಲ್ಲೆ
ಹಾಸನ: ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣ ಹಾಗೂ ಧಾರ್ಮಿಕ ಕೇಂದ್ರವಾದ ಸಕಲೇಶಪುರದ ಬೆಟ್ಟದ ಭೈರವೇಶ್ವರ ದೇವಸ್ಥಾನದ ಆವರಣದಲ್ಲಿ ಪ್ರೀ-ವೆಡ್ಡಿಂಗ್ ಫೋಟೋಶೂಟ್ಗಾಗಿ ಬಂದಿದ್ದ ತಂಡದ ಮೇಲೆ ಸ್ಥಳೀಯ ಯುವಕರು ಹಲ್ಲೆ ನಡೆಸಿದ ಆಘಾತಕಾರಿ ಘಟನೆ ವರದಿಯಾಗಿದೆ. ಸುಂದರ ಪರಿಸರ ಮತ್ತು ಪ್ರಕೃತಿ ಸೌಂದರ್ಯಕ್ಕೆ ಹೆಸರಾದ ಈ ದೇವಸ್ಥಾನಕ್ಕೆ ಫೋಟೋಶೂಟ್ಗಾಗಿ ತೆರಳಿದ್ದ ತಂಡಕ್ಕೆ ಈ ಕಹಿ ಅನುಭವ ಉಂಟಾಗಿದೆ. ವರದಿಗಳ
ಮೈಸೂರು : ಇಂದಿರಾ ಕ್ಯಾಂಟೀನ್ಗೆ ಸಂಕಷ್ಟ, ಬಾಕಿ ಹೊರೆಯಿಂದ ಮುಚ್ಚುವ ಸ್ಥಿತಿ
ಬಡವರು ಮತ್ತು ಕಾರ್ಮಿಕರಿಗೆ ಕಡಿಮೆ ದರದಲ್ಲಿ ಪೌಷ್ಟಿಕ ಆಹಾರ ನೀಡುವ ಮೂಲಕ ಹಸಿವು ಮುಕ್ತ ಕರ್ನಾಟಕ ನಿರ್ಮಿಸುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮಹತ್ವಾಕಾಂಕ್ಷೆಯ ಇಂದಿರಾ ಕ್ಯಾಂಟೀನ್ ಯೋಜನೆ, ಮೈಸೂರಿನಲ್ಲಿ ಪ್ರಸ್ತುತ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ.
ಭಾರಿ ಹಿಮಪಾತ: ಲಡಾಖ್ ನಲ್ಲಿ ಐದು ಮೃತದೇಹಗಳು ಪತ್ತೆ
ಲಡಾಕ್: ಶ್ರೀನಗರ- ಲೆಹ್ ಹೆದ್ದಾರಿಯ ಲಡಾಖ್ ಸಮೀಪದ ಝೋಜಿ ಲಾ ಎಂಬಲ್ಲಿ ಸಂಭವಿಸಿದ ಭೀಕರ ಹಿಮಪ್ರವಾಹದಲ್ಲಿ ಕನಿಷ್ಠ ಐದು ಮಂದಿ ಮೃತಪಟ್ಟು ಇತರ ಹಲವು ಮಂದಿ ಗಾಯಗೊಂಡಿದ್ದಾರೆ. ಹಲವು ವಾಹನಗಳು ಹಿಮದಲ್ಲಿ ಹೂತುಹೋಗಿದ್ದು, ಈ ಆಯಕಟ್ಟಿನ ಹೆದ್ದಾರಿಯಲ್ಲಿ ಸಂಚಾರಕ್ಕೆ ತಡೆ ಉಂಟಾಗಿದೆ. ಪೊಲೀಸರು, ಸೇನಾ ಸಿಬ್ಬಂದಿ, ಗಡಿ ರಸ್ತೆ ಸಂಸ್ಥೆ, ಎಸ್ಡಿಆರ್ಎಫ್ ಮತ್ತು ಸೋನ್ಮಾರ್ಗ್ ಜಿಲ್ಲಾಡಳಿತ ಸಿಬ್ಬಂದಿ ಸೇರಿ ಸಮರೋಪಾದಿ ಪರಿಹಾರ ಕಾರ್ಯಗಳನ್ನು ಕೈಗೊಂಡಿದ್ದಾರೆ. ಕನಿಷ್ಠ 15 ವಾಹನಗಳು ಹಿಮದಲ್ಲಿ ಹೂತುಕೊಂಡಿವೆ ಎಂದು ಹೇಳಲಾಗಿದೆ. ಹಿಮಪಾತದಲ್ಲಿ ಸಿಲುಕಿರುವವರ ರಕ್ಷಣೆಗೆ ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ. ಈ ಭೀಕರ ಹಿಮಪಾತದಿಂದಾಗಿ ಶುಕ್ರವಾರ ಸಂಜೆ ಹೆದ್ದಾರಿಯಲ್ಲಿ ವಾಹನ ಸಂಚಾರ ಸ್ಥಗಿತಗೊಂಡಿದೆ ಎಂದು ಪೊಲೀಸರು ಹೇಳಿದ್ದಾರೆ. ಈ ದುರಂತದಲ್ಲಿ ಐದು ಮಂದಿ ಮೃತಪಟ್ಟಿರುವುದನ್ನು ದ್ರಾಸ್ ಉಪವಿಭಾಗಾಧಿಕಾರಿ ವಿಷಾಲ್ ಅತ್ರಿಯವರು ದೃಢಪಡಿಸಿದ್ದಾರೆ. ಮೃತಪಟ್ಟವರಲ್ಲಿ ಮೂವರು ಪುರುಷರು, ಮಹಿಳೆ ಹಾಗೂ ಮಗು ಸೇರಿದ್ದಾರೆ. ಆದಾಗ್ಯೂ ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಅವರು ಎಕ್ಸ್ ಪೋಸ್ಟ್ ನಲ್ಲಿ, ಏಳು ಮಂದಿ ಮೃತಪಟ್ಟಿದ್ದು, ಐವರು ಗಾಯಗೊಂಡಿದ್ದಾಗಿ ವಿವರಿಸಿದ್ದಾರೆ. Avalanche struck the Srinagar–Leh Highway (NH-1) at Zoji La Pass in Ladakh on Friday afternoon, March 27, 2026. The snow slide buried around 12–15 passenger vehicles under thick debris, killing at least 7 people (including a 10-year-old child) and injuring 5 others. pic.twitter.com/mHyZlN6Y9q — World In Last 24hrs (@world24x7hr) March 27, 2026
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ
ಚಿನ್ನ ಮತ್ತು ಬೆಳ್ಳಿ ಖರೀದಿಸಲು ಕಾಯುತ್ತಿರುವ ಗ್ರಾಹಕರಿಗೆ ಹಾಗೂ ಹೂಡಿಕೆದಾರರಿಗೆ ಇಂದಿನ ಮಾರುಕಟ್ಟೆ ಸ್ಥಿತಿಗತಿ ತಿಳಿಯುವುದು ಅತ್ಯಗತ್ಯ. ಇವತ್ತು (ಮಾರ್ಚ್ 28, 2026) ಚಿನ್ನದ ದರದಲ್ಲಿ ಮತ್ತೆ ತುಸು ಏರಿಕೆ ಕಂಡುಬಂದಿದೆ. ಜಾಗತಿಕ ಮಾರುಕಟ್ಟೆಯ ಬದಲಾವಣೆಗಳು, ಡಾಲರ್ ಮೌಲ್ಯದಲ್ಲಿನ ಏರಿಳಿತ ಹಾಗೂ ಎಂಸಿಎಕ್ಸ್ ಫ್ಯೂಚರ್ಸ್ ವಹಿವಾಟಿನ ಪ್ರಭಾವದಿಂದ ದೇಶೀಯ ಮಾರುಕಟ್ಟೆಯಲ್ಲಿ ಹಳದಿ ಲೋಹದ ಬೆಲೆಯಲ್ಲಿ ಪ್ರತಿದಿನ ವ್ಯತ್ಯಾಸವಾಗುತ್ತಲೇ
ಮಧ್ಯಪ್ರಾಚ್ಯ ಬಿಕ್ಕಟ್ಟು : ಸಿಎಂಗಳ ಜತೆ ಪ್ರಧಾನಿ ಸಭೆ, ‘ಟೀಮ್ ಇಂಡಿಯಾ’ ಸ್ಫೂರ್ತಿಗೆ ಕರೆ
ಮಧ್ಯಪ್ರಾಚ್ಯ ಯುದ್ಧದ ಹಿನ್ನೆಲೆಯಲ್ಲಿಉಂಟಾಗಿರುವ ಬಿಕ್ಕಟ್ಟು ಎದುರಿಸುವ ಬಗ್ಗೆ ಚರ್ಚಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಮುಖ್ಯಮಂತ್ರಿಗಳ ಜತೆ ಶುಕ್ರವಾರ ವಿಡಿಯೊ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿದರು. ಬಿಕ್ಕಟ್ಟು ಎದುರಿಸಲು ರಾಜ್ಯಗಳು ಕೈಗೊಂಡ ಸನ್ನದ್ಧತೆಯ ಬಗ್ಗೆ ಮಾಹಿತಿ ಪಡೆದ ಪ್ರಧಾನಿಯವರು, ಎಲ್ಲಾರಾಜ್ಯಗಳು ‘ಟೀಮ್ ಇಂಡಿಯಾ’ ಸ್ಫೂರ್ತಿಯೊಂದಿಗೆ ಸಮನ್ವಯದಲ್ಲಿ ಕೆಲಸ ಮಾಡಬೇಕು ಎಂದು ಕರೆ ನೀಡಿದರು.
ಚಿಕ್ಕಮಗಳೂರು ಎಸ್ಪಿ ಜಿತೇಂದ್ರ ಕುಮಾರ್ ದಯಾಮ ಹೆಸರಲ್ಲಿ ನಕಲಿ ಫೇಸ್ಬುಕ್ ಖಾತೆ: ಸಾರ್ವಜನಿಕರಿಗೆ ಎಚ್ಚರಿಕೆ
ಚಿಕ್ಕಮಗಳೂರು: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿತೇಂದ್ರ ಕುಮಾರ್ ದಯಾಮ ಅವರ ಹೆಸರಿನಲ್ಲಿ ನಕಲಿ ಫೇಸ್ಬುಕ್ ಖಾತೆಯನ್ನು ಸೃಷ್ಟಿಸಿರುವುದು ಬೆಳಕಿಗೆ ಬಂದಿದೆ. ಯಾರೋ ಅಪರಿಚಿತ ವ್ಯಕ್ತಿ ಎಸ್ಪಿ ಅವರ ಹೆಸರನ್ನು ಬಳಸಿಕೊಂಡು ಈ ನಕಲಿ ಖಾತೆ ತೆರೆದಿದ್ದು, ಅದರಲ್ಲಿ ಚಿಕ್ಕಮಗಳೂರು ಪೊಲೀಸ್ ಇಲಾಖೆಗೆ ಸಂಬಂಧಿಸಿದ ಅಧಿಕೃತ ಮಾಹಿತಿಗಳನ್ನು ಪೋಸ್ಟ್ ಮಾಡುತ್ತಿರುವುದು ಗಮನಕ್ಕೆ ಬಂದಿದೆ. ಜಿತೇಂದ್ರ ಕುಮಾರ್ ದಯಾಮ ಅವರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಈ ಖಾತೆಯನ್ನು ಸೃಷ್ಟಿಸಲಾಗಿದೆ ಎಂದು ತಿಳಿದುಬಂದಿದೆ. ನಕಲಿ ಖಾತೆಗಳ ಮೂಲಕ ಸಾರ್ವಜನಿಕರನ್ನು ತಪ್ಪು ದಾರಿಗೆಳೆಯುವ ಅಥವಾ ವಂಚಿಸುವ ಸಾಧ್ಯತೆ ಇರುವುದರಿಂದ ಪೊಲೀಸರು ಎಚ್ಚರಿಕೆ ವಹಿಸುವಂತೆ ಸೂಚಿಸಿದ್ದಾರೆ. ವಿಷಯ ತಿಳಿಯುತ್ತಿದ್ದಂತೆಯೇ ಎಸ್ಪಿ ಜಿತೇಂದ್ರ ಕುಮಾರ್ ಅವರು ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ. ಪ್ರಸ್ತುತ, ಸೈಬರ್ ಪೊಲೀಸರು ಈ ನಕಲಿ ಖಾತೆಯ ಮೂಲವನ್ನು ಪತ್ತೆಹಚ್ಚಲು ತನಿಖೆ ಆರಂಭಿಸಿದ್ದಾರೆ.
ನೇಪಾಳದ ಮಾಜಿ ಪ್ರಧಾನಿ ಕೆ.ಪಿ.ಶರ್ಮಾ ಓಲಿ ಬಂಧನ
ಕಠ್ಮಂಡು: ನೇಪಾಳದ ಮಾಜಿ ಪ್ರಧಾನಿ ಕೆ.ಪಿ.ಶರ್ಮಾ ಓಲಿ ಮತ್ತು ಮಾಜಿ ಗೃಹಸಚಿವ ರಮೇಶ್ ಲೇಖಕ್ ಅವರನ್ನು ಬಂಧಿಸಲಾಗಿದೆ. ಕಳೆದ ವರ್ಷ ನೇಪಾಳದಲ್ಲಿ ನಡೆದ GenZ ಪೀಳಿಗೆಯ ವ್ಯಾಪಕ ಪ್ರತಿಭಟನೆ ಸಂಬಂಧ ಉಭಯ ಮುಖಂಡರನ್ನು ಬಂಧಿಸಲಾಗಿದೆ. ನೇಪಾಳದ ನೂತನ ಪ್ರಧಾನಿಯಾಗಿ ಬಾಲೇನ್ ಶಾ ಪ್ರಮಾಣವಚನ ಸ್ವೀಕರಿಸಿದ ಮರುದಿನವೇ ಇಬ್ಬರನ್ನು ಬಂಧಿಸಲಾಗಿದೆ.
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ
ಬೆಂಗಳೂರು: ರಾಜ್ಯದಲ್ಲಿ ಪ್ರಸ್ತುತ ಬೇಸಿಗೆಯ ಬಿಸಿಲಿನ ಪ್ರಖರತೆ ಏರುತ್ತಿರುವ ಬೆನ್ನಲ್ಲೇ, ವರುಣ ದೇವ ತಂಪೆರೆಯಲು ಮುಂದಾಗಿದ್ದಾನೆ. ಭಾರತೀಯ ಹವಾಮಾನ ಇಲಾಖೆಯ ಇಂದಿನ (ಮಾರ್ಚ್ 28) ಅಧಿಕೃತ ವರದಿಯ ಪ್ರಕಾರ, ಕರ್ನಾಟಕದ ಹವಾಮಾನದಲ್ಲಿ ಭಾರೀ ವೈಪರೀತ್ಯಗಳು ಕಂಡುಬರುತ್ತಿವೆ. ಉತ್ತರ ಕರ್ನಾಟಕದಲ್ಲಿ ಸುಡುವ ಬಿಸಿಲಿದ್ದರೆ, ದಕ್ಷಿಣ ಒಳನಾಡು ಮತ್ತು ಕರಾವಳಿ ಭಾಗಗಳಲ್ಲಿ ಗುಡುಗು, ಮಿಂಚು ಹಾಗೂ ಬಿರುಗಾಳಿ ಸಹಿತ ಮಳೆಯಾಗುವ
ಐಪಿಎಲ್ 2026: ಆರ್ಸಿಬಿ-ಎಸ್ಆರ್ಎಚ್ ಪಂದ್ಯದ ಸಮಯ, ನೇರಪ್ರಸಾರ, ಸಂಪೂರ್ಣ ತಂಡಗಳ ವಿವರ ತಿಳಿಯಿರಿ
RCB Vs SRH Match: ಕ್ರಿಕೆಟ್ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದ ಐಪಿಎಲ್ 2026 ಹಬ್ಬ ಇಂದಿನಿಂದ ಅದ್ಧೂರಿಯಾಗಿ ಆರಂಭವಾಗಲಿದೆ. ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಸನ್ ರೈಸರ್ಸ್ ಹೈದರಾಬಾದ್ ತಂಡವನ್ನು ಎದುರಿಸಲಿದೆ. ಹಾಗಾದ್ರೆ, ಪಂದ್ಯದ ಸಮಯ, ನೇರಪ್ರಸಾರ, ಸ್ಥಳ, ಆಟಗಾರರ ಬಲಾಬಲವನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ. 2025ರಲ್ಲಿ ಚೊಚ್ಚಲ ಪ್ರಶಸ್ತಿಯನ್ನು ಗೆದ್ದಿರುವ
IPL 2026: ಆರ್ಸಿಬಿ-ಎಸ್ಆರ್ಎಚ್ ಉದ್ಘಾಟನಾ ಪಂದ್ಯಕ್ಕೆ ಮಳೆ ಅಡ್ಡಿಯಾಗಲಿದ್ಯಾ? ಹವಾಮಾನ ಇಲಾಖೆ ಹೇಳೋದೇನು?
IPL 2026 RCB Vs SRH: ಐಪಿಎಲ್ 2026 ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ಬೆಂಗಳೂರು ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುವ ಉದ್ಘಾಟನಾ ಪಂದ್ಯದಲ್ಲಿ ಹಾಕಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಸನ್ ರೈಸರ್ಸ್ ಹೈದರಾಬಾದ್ ತಂಡಗಳು ಮುಖಾಮುಖಿಯಾಗಲಿವೆ. ಹಾಗಾದ್ರೆ, ಮಾರ್ಚ್ 28ರಂದು ಬೆಂಗಳೂರಿನಲ್ಲಿ ವಾತಾವರಣ ಹೇಗಿರಲಿದೆ? ಹವಾಮಾನ ಇಲಾಖೆ ಹೇಳೋದೇನು ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಕೊಡಗಿಗೆ ಮೇಲೆ ಎಲ್-ನಿನೋ ಎಫೆಕ್ಟ್ ; ವಾಡಿಕೆಯ ಮುಂಗಾರು ಅನುಮಾನ
ಕರಾವಳಿಯಲ್ಲಿ ಪ್ರತ್ಯಾವರ್ತ ಮಾರುತಗಳ ಪರಿಣಾಮದಿಂದಾಗಿ ಮಾ.28ರ ಸಂಜೆಯಿಂದ ಕೊಡಗು ಸೇರಿದಂತೆ ಮಲೆನಾಡು ಭಾಗಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ. ಮಲೆನಾಡಿನ ಕೆಲವು ಭಾಗಗಳಲ್ಲಿಸಾಮಾನ್ಯ ಮಳೆಯಾಗಬಹುದು ಎಂದು ಹವಾಮಾನ ಇಲಾಖೆ ಅಂದಾಜಿಸಿದೆ. ಈ ಮಳೆ ಏ.5ರವರೆಗೂ ಮುಂದುವರಿಯುವ ಸಾಧ್ಯತೆಯಿದ್ದು, ಬಳಿಕ ಮತ್ತೆ ಬಿಸಿಲಿನ ವಾತಾವರಣ ಕಂಡುಬರಲಿದೆ.
ಜನರ ಮೇಲೆ ಮುದ್ರಾಂಕ ಶುಲ್ಕದ ಭಾರ ಹೊರಿಸಿದ ಬೆಂಗಳೂರು ಕೇಂದ್ರ ನಗರ ಪಾಲಿಕೆ
ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ವ್ಯಾಪ್ತಿಯ 6 ವಿಧಾನಸಭಾ ಕ್ಷೇತ್ರಗಳ 63 ವಾರ್ಡ್ಗಳಲ್ಲಿಮೂಲಸೌಕರ್ಯ ವೃದ್ಧಿಗೆ ಹಣ ಹೊಂದಿಸಲು ಪಾಲಿಕೆಯು ಮುನಿಸಿಪಲ್ ಬಾಂಡ್ಗಳ ಮೊರೆ ಹೋಗಿದೆ. ಅಷ್ಟೇ ಅಲ್ಲ; ಆಸ್ತಿಗಳಿಗೆ ಹೊಸದಾಗಿ ಖಾತಾ ನೀಡಲು ಮುದ್ರಾಂಕ ಶುಲ್ಕದ ಮೇಲೆ ಶೇ.2ರಷ್ಟು ತೆರಿಗೆ ವಿಧಿಸಲು ತೀರ್ಮಾನಿಸಿದೆ. ಈ ಮೂಲಕ ಜನರ ಮೇಲೆ ತೆರಿಗೆ ಭಾರ ಹಾಕಿದೆ.
ಸೇವಾ ಕ್ಷೆೇತ್ರ ಉದ್ಯಮ ಕ್ಷೇತ್ರಗಳಾಗಿರುವ ಕಾಲವಿದು : ಪ್ರೊ.ಬರಗೂರು ರಾಮಚಂದ್ರಪ್ಪ
‘ಉನ್ನತ ಶಿಕ್ಷಣ: ಒಳಗೂ ಹೊರಗೂ’ ಕೃತಿ ಲೋಕಾರ್ಪಣೆ
US Israel Iran War: ಯುದ್ಧ ಆರಂಭವಾಗಿ 1 ತಿಂಗಳು! ಇರಾನ್ನ ಪ್ರಜೆಗಳ ಸಾವಿನ ಸಂಖ್ಯೆ ಬಹಿರಂಗ
ಅಮೆರಿಕ ಇಸ್ರೇಲ್ ಇರಾನ್ ನಡುವಿನ ಯುದ್ಧ ಆರಂಭವಾಗಿ ಒಂದು ತಿಂಗಳಾಗಿದೆ. ಸದ್ಯ ಸಾವಿನ ಸಂಖ್ಯೆ ಬಹಿರಂಗಗೊಂಡಿದ್ದು, ಇರಾನ್ನಲ್ಲಿ ಬರೋಬ್ಬರಿ 1900 ಜನ ಜೀವತೆತ್ತಿದ್ದಾರೆ. 20 ಸಾವಿರ ಮಂದಿಗೆ ಗಾಯಗಳಾಗಿವೆ. ಈ ಬಗ್ಗೆ ರೆಡ್ ಕ್ರಾಸ್ ಸೊಸೈಟಿ ಮಾಹಿತಿ ಬಹಿರಂಗಪಡಿಸಿದೆ. ಇನ್ನು ದಾಳಿ ಪ್ರತಿದಾಳಿ ಮುಂದುವರಿಸಿದ ಇಸ್ರೇಲ್, ಇರಾನ್ ನಡೆಯು ಹೆಚ್ಚಿದ ಜಾಗತಿಕ ಬಿಕ್ಕಟ್ಟು ಸೃಷ್ಟಿಸಲಿದೆ.
ಇಂಡಿಯನ್ ಗ್ರ್ಯಾಂಡ್ ಮುಫ್ತಿ ಎ.ಪಿ.ಅಬೂಬಕ್ಕರ್ ಮುಸ್ಲಿಯಾರ್ ಅವರನ್ನು ಭೇಟಿಯಾದ ಸಚಿವ ಝಮೀರ್ ಅಹ್ಮದ್ ಖಾನ್
ಬೆಂಗಳೂರು : ಕೇರಳ ಚುನಾವಣೆ ಪ್ರಚಾರದಲ್ಲಿರುವ ಸಚಿವ ಝಮೀರ್ ಅಹ್ಮದ್ ಖಾನ್ ಶುಕ್ರವಾರ ಕ್ಯಾಲಿಕಟ್ನಲ್ಲಿ ಮರ್ಕಝ್ ನಾಲೇಜ್ಡ್ ಸಿಟಿಗೆ ಭೇಟಿ ನೀಡಿ, ಇಂಡಿಯನ್ ಗ್ರ್ಯಾಂಡ್ ಮುಫ್ತಿ ಸುಲ್ತಾನುಲ್ ಉಲಮಾ ಎ.ಪಿ.ಅಬೂಬಕ್ಕರ್ ಮುಸ್ಲಿಯಾರ್ ಅವರ ಜೊತೆ ವಿವಿಧ ವಿಷಯಗಳ ಕುರಿತು ಸಮಾಲೋಚನೆ ನಡೆಸಿದರು. ಈ ಸಂದರ್ಭದಲ್ಲಿ ರಾಜ್ಯ ವಕ್ಫ್ ಕೌನ್ಸಿಲ್ ಉಪಾಧ್ಯಕ್ಷ ಮೌಲಾನಾ ಎನ್.ಕೆ.ಎಂ.ಶಾಫಿ ಸಅದಿ ಉಪಸ್ಥಿತರಿದ್ದರು.
ಧರ್ಮಾಧ್ಯಕ್ಷರನ್ನು ಭಾಷೆಯ ಆಧಾರದ ಮೇಲೆ ಆಯ್ಕೆ ಮಾಡುವುದಿಲ್ಲ: ಡಾ.ಪೀಟರ್ ಮಚಾದೋ
ಬೆಂಗಳೂರು : ಕೆಥೊಲಿಕ್ ಧರ್ಮಸಭೆಯು ಧರ್ಮಾಧ್ಯಕ್ಷರನ್ನು ಭಾಷೆ, ಜಾತಿ ಅಥವಾ ಜನಾಂಗೀಯ ಆಧಾರದ ಮೇಲೆ ಆಯ್ಕೆ ಮಾಡುವುದಿಲ್ಲ ಎಂದು ಬೆಂಗಳೂರಿನ ಆರ್ಚ್ ಬಿಷಪ್ (ಮಹಾಧರ್ಮಗುರು) ಡಾ.ಪೀಟರ್ ಮಚಾದೋ ಸ್ಪಷ್ಟಪಡಿಸಿದ್ದಾರೆ. ಶುಕ್ರವಾರ ಪ್ರಕಟಣೆ ಹೋರಾಡಿಸಿರುವ ಅವರು, ಯಾವುದೇ ಒಂದು ಪ್ರಾಂತ್ಯದ ಧರ್ಮಾಧ್ಯಕ್ಷರು ಸೂಕ್ತವಾದ ಅಭ್ಯರ್ಥಿಯನ್ನು ಶಿಫಾರಸು ಮಾಡಬಹುದು. ಆದರೆ, ಅಂತಿಮ ನಿರ್ಧಾರ ಎಂಬುದು ಪೋಪ್ ಅವರ ಕೈಯಲ್ಲಿರುತ್ತದೆ. ಕರ್ನಾಟಕದ ಧರ್ಮಕ್ಷೇತ್ರಗಳ ಪಾಲನಾ ನಾಯಕತ್ವವನ್ನು ವಹಿಸಿಕೊಳ್ಳಲು ಹೆಚ್ಚೆಚ್ಚು ಕನ್ನಡಿಗ ಅಭ್ಯರ್ಥಿಗಳನ್ನು ಶಿಫಾರಸು ಮಾಡಬೇಕು ಎಂದು ವ್ಯಕ್ತಪಡಿಸಿರುವ ಅಭಿಲಾಷೆಯನ್ನು ಗೌರವಿಸುತ್ತೇವೆ. ಆದರೆ, ವ್ಯಾಟಿಕನ್ನ ಪವಿತ್ರ ಪೀಠಕ್ಕೆ ಸಂಭಾವ್ಯ ಧರ್ಮಾಧ್ಯಕ್ಷರ ಎಲ್ಲ ಮಾಹಿತಿಯು ಇರುತ್ತದೆ. ಆದುದರಿಂದ, ಪೋಪ್ ಅವರಿಗೆ ಅತ್ಯಂತ ಸೂಕ್ತ ಎನಿಸುವ ಅಭ್ಯರ್ಥಿಯನ್ನು ಧರ್ಮಾಧ್ಯಕ್ಷರನ್ನಾಗಿ ಆಯ್ಕೆಮಾಡಲಾಗುತ್ತದೆ ಎಂದಿದ್ದಾರೆ. ‘ಸ್ಥಳೀಯ ಭಾಷೆ’ ಎಂಬುದನ್ನು ಬಹುಸಂಖ್ಯಾತ ಭಕ್ತರ ಭಾಷೆ ಎಂದು ಅರ್ಥಮಾಡಿಕೊಳ್ಳಬೇಕೇ ಹೊರತು ರಾಜ್ಯದ ಅಧಿಕೃತ ಭಾಷೆಯೆಂದಲ್ಲ. ರಾಜ್ಯದ ಅಧಿಕೃತ ಭಾಷೆಯನ್ನು ಗೌರವಿಸಬೇಕು, ಕಲಿಯಬೇಕು, ಉತ್ತೇಜಿಸಬೇಕು ಹಾಗೂ ಬಳಸಬೇಕು. ಆದರೆ, ರಾಜ್ಯದ ಅಧಿಕೃತ ಭಾಷೆ ಎಂಬುದು ಯಾವುದೇ ಧರ್ಮಕ್ಷೇತ್ರ ಅಥವಾ ಧರ್ಮಕೇಂದ್ರದ ಬಹುಸಂಖ್ಯಾತ ಕೆಥೊಲಿಕರ ತಾಯ್ನುಡಿಯಾಗಿರಬೇಕಿಲ್ಲ. ಅದಾಗ್ಯೂ, ಎಲ್ಲೆಲ್ಲಿ ಸಾಧ್ಯವಾಗುತ್ತದೆಯೊ, ಅಲ್ಲೆಲ್ಲಾ, ಯಾವುದೇ ತೊಂದರೆಗಳಿಲ್ಲದೆ, ಕನ್ನಡವನ್ನು ಪೂಜಾವಿಧಿ ಭಾಷೆಯನ್ನಾಗಿ ಬಳಸಿಕೊಳ್ಳಲಾಗುವುದು. ಪೂಜಾವಿಧಿಯಲ್ಲಿ ಭಾಗವಹಿಸುವ ಬಹುಸಂಖ್ಯಾತರು ಕನ್ನಡಿಗರಾಗಿದ್ದಾಗ, ವ್ಯಾಟಿಕನ್ ನ ‘ಸ್ಥಳೀಯ ಭಾಷಾ’ ಮಾರ್ಗಸೂಚಿಗಳನ್ನು ಅನುಸರಿಸಲಾಗುತ್ತದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಹರಪನಹಳ್ಳಿ | ರಾಗಿ ಖರೀದಿ ಕೇಂದ್ರದಲ್ಲಿ ಅವ್ಯವಸ್ಥೆ ಆರೋಪ: ಲಾರಿಗಳ ಸಂಖ್ಯೆ ಹೆಚ್ಚಿಸಲು ರೈತರ ದಿಢೀರ್ ಪ್ರತಿಭಟನೆ
ಹರಪನಹಳ್ಳಿ : ನಗರದ ಕೃಷಿ ಮಾರುಕಟ್ಟೆಯಲ್ಲಿ ರಾಗಿ ಖರೀದಿ ಕೇಂದ್ರದಿಂದ ಗೋದಾಮುಗಳಿಗೆ ತೆರಳುವ ಲಾರಿಗಳ ಸಂಖ್ಯೆಯನ್ನು ಹೆಚ್ಚಿಸಬೇಕೆಂದು ಆಗ್ರಹಿಸಿ ರೈತರು ಶುಕ್ರವಾರ ದಿಢೀರ್ ಪ್ರತಿಭಟನೆ ನಡೆಸಿದರು. ಸರ್ಕಾರವು ರೈತರ ರಾಗಿ ಖರೀದಿಗಾಗಿ ಉತ್ತಮ ಬೆಲೆ ನಿಗದಿಪಡಿಸಿ ವ್ಯವಸ್ಥೆ ಕಲ್ಪಿಸಿದ್ದರೂ, ಇಡೀ ತಾಲೂಕಿಗೆ ಕೇವಲ ಒಂದು ಖರೀದಿ ಕೇಂದ್ರವಿರುವುದರಿಂದ ಸಮಸ್ಯೆ ಉಂಟಾಗಿದೆ ಎಂದು ರೈತರು ಆರೋಪಿಸಿದರು. ಕಳೆದ ಎರಡು-ಮೂರು ದಿನಗಳಿಂದ ನೂರಾರು ರೈತರು ತಮ್ಮ ಟ್ರಾಕ್ಟರ್ಗಳನ್ನು ಕೃಷಿ ಮಾರುಕಟ್ಟೆಯಲ್ಲಿ ನಿಲ್ಲಿಸಿ ರಾತ್ರಿಯಿಡೀ ಕಾಯುವ ಪರಿಸ್ಥಿತಿ ಎದುರಿಸುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ತಾಲೂಕಿನ ತೆಲಿಗಿ ಅಥವಾ ಅರಸೀಕೆರೆ ಹೋಬಳಿ ಭಾಗದಲ್ಲಿ ಹೆಚ್ಚುವರಿ ರಾಗಿ ಖರೀದಿ ಕೇಂದ್ರ ಆರಂಭಿಸಬೇಕೆಂದು ರೈತರು ಒತ್ತಾಯಿಸಿದರು. ಸ್ಥಳಕ್ಕೆ ಆಗಮಿಸಿದ ತಹಶೀಲ್ದಾರ್ ಬಿ.ವಿ.ಗಿರೀಶ್ ಬಾಬು ಮಾತನಾಡಿ, ರೈತರು ನೀಡಿರುವ ಟೋಕನ್ ಪ್ರಕಾರ ಬಾರದಿರುವುದರಿಂದ ಅನಾವಶ್ಯಕ ಗೊಂದಲ ಉಂಟಾಗುತ್ತಿದೆ. ಈಗಾಗಲೇ ದಿನಕ್ಕೆ 6 ಲಾರಿಗಳನ್ನು ರಾಗಿ ಸಾಗಣೆಗೆ ಮೀಸಲಿರಿಸಲಾಗಿದ್ದು, ರೈತರು ಟೋಕನ್ ಪ್ರಕಾರ ಬಂದರೆ ಹೆಚ್ಚು ದಿನ ಕಾಯಬೇಕಾಗುವುದಿಲ್ಲ ಎಂದು ತಿಳಿಸಿದರು. ಇದಲ್ಲದೆ, ಹೆಚ್ಚುವರಿಯಾಗಿ ಮತ್ತೊಂದು ಲಾರಿಯನ್ನು ನಿಯೋಜಿಸುವುದಾಗಿ ಭರವಸೆ ನೀಡಿದರು. ಅಗತ್ಯವಿರುವ ಹೋಬಳಿ ಪ್ರದೇಶದಲ್ಲಿ ಮತ್ತೊಂದು ರಾಗಿ ಖರೀದಿ ಕೇಂದ್ರ ತೆರೆಯಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದರು. ಈ ಸಂದರ್ಭದಲ್ಲಿ ತಹಶೀಲ್ದಾರ್ ಕಚೇರಿ ಇನ್ಸ್ಪೆಕ್ಟರ್ ಮಹಾಂತೇಶ್ ಸಜ್ಜನ್, ಸಬ್ ಇನ್ಸ್ಪೆಕ್ಟರ್ ಶಂಭುಲಿಂಗ ಎಸ್. ಹಿರೇಮಠ ಸೇರಿದಂತೆ ರೈತರು ಉಪಸ್ಥಿತರಿದ್ದರು.
‘ಉಪಚುನಾವಣೆ’ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳನ್ನು ಸೋಲಿಸಲು ಒಳಮೀಸಲಾತಿ ಹೋರಾಟಗಾರರ ಕರೆ
ಬೆಂಗಳೂರು : ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಹೋರಾಟಕ್ಕೆ ದ್ರೋಹ ಮಾಡಿದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳನ್ನು ದಾವಣಗೆರೆ ಹಾಗೂ ಬಾಗಲಕೋಟೆ ಕ್ಷೇತ್ರಗಳ ಉಪಚುನಾವಣೆಯಲ್ಲಿ ಸೋಲಿಸಬೇಕು ಎಂದು ಒಳಮೀಸಲಾತಿ ಹೋರಾಟ ಸಮಿತಿಯು ಕರೆ ನೀಡಿದೆ. ಶುಕ್ರವಾರ ನಗರದಲ್ಲಿ ಮುಖಂಡರಾದ ಮಾರಸಂದ್ರ ಮುನಿಯಪ್ಪ, ಅಂಬಣ್ಣ ಅರೋಲಿಕರ್, ಬಸವರಾಜ್ ಕೌತಾಳ್, ನರಸಪ್ಪ ದಂಡೋರ, ಕರಿಯಪ್ಪ ಗುಡಿಮನಿ, ಎಂ.ಗುರುಮೂರ್ತಿ, ಬಿ.ಪಿ.ಪ್ರಕಾಶ್ ಮೂರ್ತಿ, ಆರ್.ಮುನಿಯಪ್ಪ, ಪಿ.ಮೂರ್ತಿ, ಬಿ.ಆರ್.ಭಾಸ್ಕರ್ ಪ್ರಸಾದ್, ವೈ.ಸಿ.ಕಾಂಬ್ಳೆ, ಚಾವಡಿ ಲೋಕೇಶ್ ಜಂಟಿ ಪತ್ರಿಕಾಗೋಷ್ಠಿ ನಡೆಸಿ, 35 ವರ್ಷಗಳಿಂದ ಸಾಮಾಜಿಕ ನ್ಯಾಯದ ಬೇಡಿಕೆಯನ್ನು ಬೆಂಬಲಿಸಿದ್ದ ಕರ್ನಾಟಕದ ಎಲ್ಲ ಪ್ರಜ್ಞಾವಂತರು ನಮ್ಮ ಈ ನಿಲುವನ್ನು ಬೆಂಬಲಿಸಬೇಕು ಎಂದು ಮನವಿ ಮಾಡಿದರು. ಒಳಮೀಸಲಾತಿ ಹೋರಾಟಕ್ಕೆ ಸುಪ್ರೀಂಕೋರ್ಟ್ ತೀರ್ಪಿನ ನಂತರ ಕರ್ನಾಟಕದಲ್ಲಿ ಒಳಮೀಸಲಾತಿ ಜಾರಿಯಾಗುವ ಭರವಸೆಯನ್ನು ಹೋರಾಟಗಾರರು ಹೊಂದಿದ್ದರು. ಆದರೆ ಸರಕಾರ ಈ ವಿಚಾರದಲ್ಲಿ ಎರಡು ವರ್ಷಗಳಿಂದಲೂ ಉದಾಸೀನ ತೋರುತ್ತಿದೆ. ನೆರೆಯ ತೆಲಂಗಾಣ, ಆಂಧ್ರದಲ್ಲಿ ಒಳಮೀಸಲಾತಿ ಜಾರಿ ಮಾಡುವ ಧೃಡ ತೀರ್ಮಾನವನ್ನು ಕೈಗೊಂಡಿದ್ದರು. ಕರ್ನಾಟಕ ಸರಕಾರ ಮಾತ್ರ ಸಾಮಾಜಿಕ ನ್ಯಾಯದ ನಿರಾಕರಣೆ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಒಳಮೀಸಲಾತಿ ಇಲ್ಲದೆ ತುಂಬಲು ಹೊರಟಿದ್ದ 56,432 ಹುದ್ದೆಗಳನ್ನು ಮುಂದಿನ ಸಂಪುಟ ಸಭೆ ನಡೆಯುವವರೆಗೂ ನೇಮಕಾತಿ ಮಾಡಬಾರದು. ಸಾಮಾಜಿಕ ನ್ಯಾಯವನ್ನು ನಿರಾಕರಣೆ ಮಾಡಿದ ಕಾಂಗ್ರೆಸ್ ಸರಕಾರಕ್ಕೆ ಜಗಜೀವನ್ ರಾಮ್, ಅಂಬೇಡ್ಕರ್ ಜಯಂತಿಯನ್ನು ಆಚರಿಸಲು ನೈತಿಕತೆ ಇಲ್ಲ. ವಿಧಾನಸೌಧ ಮುಂಭಾಗದ ಆಚರಣೆ ಸೇರಿದಂತೆ ಜಿಲ್ಲಾ ಮಟ್ಟದಲ್ಲಿ ಈ ಮಹನೀಯರ ಜಯಂತಿಯನ್ನು ಆಚರಿಸಲು ಸರಕಾರ ಮುಂದಾದರೆ ಮುತ್ತಿಗೆ ಹಾಕುತ್ತೇವೆ ಎಂದು ಹೋರಾಟಗಾರರು ಎಚ್ಚರಿಕೆ ನೀಡಿದರು.
ದಾವಣಗೆರೆ ಉಪಚುನಾವಣೆ: ಕಣದಿಂದ ಹಿಂದೆ ಸರಿದ ಬಂಡಾಯ ಅಭ್ಯರ್ಥಿ ಸಾದಿಕ್ ಪೈಲ್ವಾನ್, ಕಾಂಗ್ರೆಸ್ ಬೆಂಬಲಕ್ಕೆ ನಿರ್ಧಾರ
ಕಾಂಗ್ರೆಸ್ ಪಕ್ಷವೇ ನಮಗೆ ಮುಖ್ಯ. ಉಪಚುನಾವಣೆಯಲ್ಲಿ ಪಕ್ಷ ಗೆಲ್ಲಬೇಕು. ದೇಶಕ್ಕೆ ದೊಡ್ಡ ಸಂದೇಶ ಹೋಗಬೇಕು ಎನ್ನುವ ಕಾರಣಕ್ಕೆ ಬಂಡಾಯ ಅಭ್ಯರ್ಥಿ ಸಾದಿಕ್ ಪೈಲ್ವಾನ್ ಅವರು ಸ್ಪರ್ಧೆಯಿಂದ ಹಿಂದೆ ಸರಿದು ಪಕ್ಷಕ್ಕೆ ಬೆಂಬಲ ಸೂಚಿಸಲಿದ್ದಾರೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದರು. ದಾವಣಗೆರೆ ಉಪಚುನಾವಣೆಯಲ್ಲಿ ಬಂಡಾಯ ಅಭ್ಯರ್ಥಿಯಾಗಿದ್ದ ಸಾದಿಕ್ ಪೈಲ್ವಾನ್ ಅವರನ್ನು ಮನವೊಲಿಸಬೇಕು ಎಂದು ಯುವ ಶಾಸಕರಾದ ರಿಜ್ವಾನ್ ಹರ್ಷದ್
ವಿಜಯನಗರ | ಮರಿಯಮ್ಮನಹಳ್ಳಿಯಲ್ಲಿ ಐತಿಹಾಸಿಕ ಜೋಡಿ ರಥೋತ್ಸವ
ವಿಜಯನಗರ, ಹೊಸಪೇಟೆ : ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಮರಿಯಮ್ಮನಹಳ್ಳಿ ಪಟ್ಟಣದಲ್ಲಿ ಶ್ರೀ ಲಕ್ಷ್ಮೀನಾರಾಯಣ ಸ್ವಾಮಿ ಹಾಗೂ ಆಂಜಿನೇಯ ಸ್ವಾಮಿ ಅವರ ಐತಿಹಾಸಿಕ ಜೋಡಿ ರಥೋತ್ಸವವು ಅದ್ಧೂರಿಯಾಗಿ ನಡೆಯಿತು. ವಿಜಯನಗರ ಅರಸರ ಕಾಲದಿಂದಲೂ ನಡೆದುಕೊಂಡು ಬರುತ್ತಿರುವ ಈ ಜಾತ್ರೆ ಸ್ಥಳೀಯರಷ್ಟೇ ಅಲ್ಲದೆ ಸುತ್ತಮುತ್ತಲಿನ ಪ್ರದೇಶಗಳ ಭಕ್ತರಿಗೂ ವಿಶೇಷ ಧಾರ್ಮಿಕ ಮಹತ್ವ ಹೊಂದಿದೆ. ಈ ಜೋಡಿ ರಥೋತ್ಸವವು ವಿಜಯನಗರ ಸಾಮ್ರಾಜ್ಯದ ಐತಿಹಾಸಿಕ ಪರಂಪರೆಯನ್ನು ನೆನಪಿಸುವ ಪ್ರಮುಖ ಆಚರಣೆಯಾಗಿದ್ದು, ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡು ಕಣ್ತುಂಬಿಕೊಂಡರು. ಭದ್ರತೆಯ ದೃಷ್ಟಿಯಿಂದ ವಿಜಯನಗರ ಜಿಲ್ಲಾ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿತ್ತು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್. ಜಾಹ್ನವಿ ಅವರ ನೇತೃತ್ವದಲ್ಲಿ ಡಿಎಸ್ಪಿ ಮಲ್ಲೇಶ್ ದೊಡ್ಮನಿ, ಸಿಪಿಐ ವಿಕಾಸ್ ಲಮಾಣಿ ಹಾಗೂ ಪಿಎಸ್ಐ ತಾರಾಬಾಯಿ ಮಾರ್ಗದರ್ಶನದಲ್ಲಿ ಪೊಲೀಸ್ ಸಿಬ್ಬಂದಿ ವ್ಯಾಪಕ ಭದ್ರತೆ ಒದಗಿಸಿದ್ದರು.
ವಿಜಯನಗರ (ಹೊಸಪೇಟೆ) : ಜಿಲ್ಲೆಯಲ್ಲಿ ಕಳ್ಳಭಟ್ಟಿ ಸಾರಾಯಿ ತಯಾರಿಕೆ, ಅಕ್ರಮ ಮದ್ಯ ಮಾರಾಟ ಮತ್ತು ಸಾಗಣೆಯನ್ನು ಸಂಪೂರ್ಣವಾಗಿ ನಿಯಂತ್ರಿಸಿ ಕಳ್ಳಭಟ್ಟಿ ಮುಕ್ತ ಜಿಲ್ಲೆಯನ್ನಾಗಿಸಬೇಕು ಎಂದು ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಸೂಚನೆ ನೀಡಿದರು. ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಕಳ್ಳಭಟ್ಟಿ ನಿರ್ಮೂಲನೆ ಕುರಿತ ಸ್ಥಾಯಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಅಕ್ರಮ ಮದ್ಯ ತಯಾರಿಕೆ ಮತ್ತು ವಹಿವಾಟಿನ ವಿರುದ್ಧ ಅಧಿಕಾರಿಗಳು ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸಬೇಕು. ಅಕ್ರಮ ಮದ್ಯ ಮಾರಾಟ ಅಥವಾ ಸಾಗಾಟ ಕಂಡುಬಂದಲ್ಲಿ ಯಾವುದೇ ಒತ್ತಡಕ್ಕೆ ಮಣಿಯದೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು. ನೆರೆ ಜಿಲ್ಲೆಗಳು ಹಾಗೂ ರಾಜ್ಯಗಳಿಂದ ಅಕ್ರಮ ಮದ್ಯ ಸಾಗಾಟವಾಗುವ ಸಾಧ್ಯತೆ ಇರುವುದರಿಂದ ಗಡಿ ಪ್ರದೇಶಗಳ ಚೆಕ್ಪೋಸ್ಟ್ಗಳಲ್ಲಿ ತಪಾಸಣೆ ತೀವ್ರಗೊಳಿಸಬೇಕು. ಅಬಕಾರಿ ಮತ್ತು ಪೊಲೀಸ್ ಇಲಾಖೆ ಸಮನ್ವಯದಿಂದ ಕಾರ್ಯನಿರ್ವಹಿಸಿ ಸಂಶಯಾಸ್ಪದ ಸ್ಥಳಗಳ ಮೇಲೆ ನಿರಂತರ ದಾಳಿ ನಡೆಸಬೇಕು ಎಂದರು. ಗ್ರಾಮೀಣ ಪ್ರದೇಶದ ಹೋಟೆಲ್ ಹಾಗೂ ಗೂಡಂಗಡಿಗಳಲ್ಲಿ ಅಕ್ರಮ ಮದ್ಯ ಮಾರಾಟ ತಡೆಯಲು ಬೀಟ್ ಪೊಲೀಸರು ಹಾಗೂ ಅಬಕಾರಿ ನಿರೀಕ್ಷಕರು ಹೆಚ್ಚುವರಿ ಕಾರ್ಯಾಚರಣೆ ನಡೆಸಬೇಕು. ಅಕ್ರಮ ಮದ್ಯ ಸಾಗಣೆಯಲ್ಲಿ ತೊಡಗಿರುವ ವಾಹನಗಳನ್ನು ವಶಪಡಿಸಿಕೊಳ್ಳುವುದರ ಜೊತೆಗೆ ಪ್ರಕರಣ ದಾಖಲಿಸಬೇಕು ಎಂದು ಸೂಚಿಸಿದರು. ಜಿಲ್ಲೆಯ ಜನರ ಆರೋಗ್ಯ ಮತ್ತು ಶಾಂತಿ ಕಾಪಾಡುವುದು ಮುಖ್ಯ ಆದ್ಯತೆ. ಕಳ್ಳಭಟ್ಟಿ ಸಾರಾಯಿ ತಯಾರಿಕೆ ಅಥವಾ ಅಕ್ರಮ ಮಾರಾಟದ ಬಗ್ಗೆ ಸಾರ್ವಜನಿಕರು ನಿರ್ಭಯವಾಗಿ ಮಾಹಿತಿ ನೀಡಬೇಕು. ಮಾಹಿತಿ ನೀಡಿದವರ ವಿವರವನ್ನು ಗೌಪ್ಯವಾಗಿಡಲಾಗುವುದು ಎಂದು ಹೇಳಿದರು. ಅಬಕಾರಿ ಉಪ ಆಯುಕ್ತ ಡಾ.ಮಾದೇಶ್ ಮಾತನಾಡಿ, ಜಿಲ್ಲೆಯಲ್ಲಿ ಪರವಾನಗಿ ಪಡೆದ 160 ಮದ್ಯದಂಗಡಿಗಳು ಕಾರ್ಯನಿರ್ವಹಿಸುತ್ತಿದ್ದು, ಅವುಗಳ ಮೇಲೆ ನಿರಂತರ ನಿಗಾವಹಿಸಲಾಗಿದೆ ಎಂದರು. ನೆರೆ ರಾಜ್ಯಗಳಿಂದ ಅಕ್ರಮವಾಗಿ ಮದ್ಯ ಸಾಗಾಟದ 2023 ರಿಂದ 2026ರ ಫೆಬ್ರವರಿ ಅಂತ್ಯವರೆಗೆ 7 ಪ್ರಕರಣಗಳನ್ನು ದಾಖಲಿಸಿ 293.45 ಲೀಟರ್ ಮದ್ಯ ವಶಪಡಿಸಿಕೊಳ್ಳಲಾಗಿದೆ. ಅಲ್ಲದೆ 2024 ಜುಲೈದಿಂದ 2025 ಜೂನ್ ವರೆಗೆ 892 ದಾಳಿ ಹಾಗೂ 2025 ಜುಲೈದಿಂದ 2026 ಫೆ.16ರವರೆಗೆ 872 ದಾಳಿ ನಡೆಸಿ ಒಟ್ಟು 1,764 ದಾಳಿಗಳಲ್ಲಿ 755 ಲೀಟರ್ ಮದ್ಯ ಹಾಗೂ 152 ಲೀಟರ್ ಬಿಯರ್ ವಶಪಡಿಸಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು. ಸಭೆಯಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಮಂಜುನಾಥ, ಅಪರ ಜಿಲ್ಲಾಧಿಕಾರಿ ಇ. ಬಾಲಕೃಷ್ಣ, ಸಹಾಯಕ ಆಯುಕ್ತ ವಿವೇಕಾನಂದ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.
ರಾಯಚೂರು | ಚಲವಾದಿ ಸಮುದಾಯದ ಬಗ್ಗೆ ಅವಹೇಳನ ಆರೋಪ : ನರಸಪ್ಪ ದಂಡೋರ ವಿರುದ್ಧ ಕ್ರಮಕ್ಕೆ ಆಗ್ರಹ
ರಾಯಚೂರು : ಚಲವಾದಿ ಸಮುದಾಯದ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿರುವ ನರಸಪ್ಪ ದಂಡೋರ ವಿರುದ್ಧ ತೀವ್ರ ಖಂಡನೆ ವ್ಯಕ್ತಪಡಿಸಲಾಗಿದ್ದು, ಇಂತಹ ಬೇಜವಾಬ್ದಾರಿ ಹೇಳಿಕೆಗಳನ್ನು ಮುಂದಿನ ದಿನಗಳಲ್ಲಿ ನೀಡುವುದನ್ನು ನಿಲ್ಲಿಸಬೇಕು ಎಂದು ಕರ್ನಾಟಕ ಚಲುವಾದಿ ಮಹಾಸಭಾ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಅರ್ಚನಾ ಸುಂಕಾರಿ ಹೇಳಿದರು. ಈ ಕುರಿತು ಮಾತನಾಡಿದ ಅವರು, ಡಾ. ಜಿ. ಪರಮೇಶ್ವರ್ ಅವರು ಎಲ್ಲ ಸಮುದಾಯಗಳನ್ನು ಒಗ್ಗೂಡಿಸಿಕೊಂಡು ಸಾಗುವ ನಾಯಕರು. ಎಸ್.ಸಿ. ಮಹದೇವಪ್ಪ ಅವರು ಯಾವುದೇ ಸಮುದಾಯದ ಬಗ್ಗೆ ಹಗುರವಾಗಿ ಅಥವಾ ಕೀಳಾಗಿ ಮಾತನಾಡುವವರಲ್ಲ. ಸಮುದಾಯಗಳ ನಡುವೆ ವೈಮನಸ್ಯ ಉಂಟುಮಾಡುವಂತಹ ಹೇಳಿಕೆಗಳು ಅಥವಾ ಪ್ರಚೋದನಾತ್ಮಕ ಕಾರ್ಯಗಳಲ್ಲಿ ಅವರು ತೊಡಗಿಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಚಲವಾದಿ ಸಮುದಾಯದವರು ಎಂದಿಗೂ ಮಾಲಾ–ಮಾದಿಗ ಎಂದು ಬೇಧಭಾವ ಮೂಡಿಸುವ ರೀತಿಯ ಹೇಳಿಕೆಗಳನ್ನು ನೀಡಿಲ್ಲ. ಮಾದಿಗ ಸಮುದಾಯದ ವಿರುದ್ಧ ಅವಹೇಳನಕಾರಿ ಮಾತುಗಳನ್ನು ಹೇಳುವುದು ಅಥವಾ ಸಮಾಜವನ್ನು ವಿಭಜಿಸುವ ಪ್ರಯತ್ನ ಮಾಡುವುದು ನಮ್ಮ ಸಮುದಾಯದ ಧೋರಣೆ ಅಲ್ಲ ಎಂದು ಹೇಳಿದರು. ಇತ್ತೀಚೆಗೆ ವಿಡಿಯೋ ಅಥವಾ ಹೇಳಿಕೆಗಳ ಮೂಲಕ ಮಾದಿಗರ ವಿರುದ್ಧ ಮಾತನಾಡಿರುವ ಘಟನೆಗಳು ನಡೆದಿಲ್ಲವೆಂದು ತಿಳಿಸಿದ ಅವರು, ಚಲವಾದಿ ಸಮುದಾಯದ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿರುವ ನರಸಪ್ಪ ದಂಡೋರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಮುಂದಿನ ದಿನಗಳಲ್ಲಿ ಇಂತಹ ಹೇಳಿಕೆಗಳನ್ನು ನೀಡದಂತೆ ಎಚ್ಚರಿಕೆ ನೀಡುತ್ತೇವೆ ಎಂದು ಅರ್ಚನಾ ಸುಂಕಾರಿ ತಿಳಿಸಿದರು.
ಹಾರ್ಮುಝ್ ಜಲಸಂಧಿಯ ಮೂಲಕ ಯಾರನ್ನು ಹಾದು ಹೋಗಲು ಬಿಡಬೇಕೆಂದು ಇರಾನ್ ಹೇಗೆ ನಿರ್ಧರಿಸುತ್ತದೆ?
ಯುನೈಟೆಡ್ ಸ್ಟೇಟ್ಸ್-ಇಸ್ರೇಲ್ ಯುದ್ಧಕ್ಕೆ ಪ್ರತಿಕ್ರಿಯೆಯಾಗಿ ಇರಾನ್ ಹಾರ್ಮುಝ್ ಜಲಸಂಧಿಯ ಮೇಲೆ ವಾಸ್ತವಿಕವಾಗಿ ದಿಗ್ಬಂಧನ ವಿಧಿಸಿರುವುದು ದಶಕಗಳಲ್ಲಿಯೇ ಅತ್ಯಂತ ಕೆಟ್ಟ ಇಂಧನ ಬಿಕ್ಕಟ್ಟನ್ನು ಉಂಟುಮಾಡಿದೆ. ತಜ್ಞರು ಜಾಗತಿಕ ಆರ್ಥಿಕ ಹಿಂಜರಿತದ ಬಗ್ಗೆ ಎಚ್ಚರಿಸಿದ್ದಾರೆ. ಜಾಗತಿಕ ತೈಲ ಮತ್ತು ಅನಿಲ ಪೂರೈಕೆಯ ಸುಮಾರು 20 ಪ್ರತಿಶತದಷ್ಟು ಹಾದುಹೋಗುವ ಸಮುದ್ರ ಮಾರ್ಗವನ್ನು ಟೆಹ್ರಾನ್ ಮುಚ್ಚಿದ್ದು ತೈಲ ಕೊರತೆಗೆ ಕಾರಣವಾಗಿದೆ. ಉತ್ತರ ಭಾಗದಲ್ಲಿ ಇರಾನ್ ಮತ್ತು ದಕ್ಷಿಣ ಭಾಗದಲ್ಲಿ ಒಮಾನ್ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ ನಡುವೆ ಇರುವ ಕಿರಿದಾದ ಜಲಸಂಧಿಯ ಬಳಿ ಸುಮಾರು 2,000 ಹಡಗುಗಳು ಸಿಲುಕಿಕೊಂಡಿವೆ. ಗುರುವಾರ, ಇರಾನಿನ ಮಾಧ್ಯಮಗಳು ದೇಶದ ಸಂಸತ್ತು ವಿಶ್ವದ ಏಕೈಕ ಪ್ರಮುಖ ತೈಲ ಮಾರ್ಗವನ್ನು ಸಾಗಿಸುವ ಹಡಗುಗಳಿಗೆ ಸುಂಕ ಸಂಗ್ರಹಿಸಲು ಶಾಸನವನ್ನು ಅಂಗೀಕರಿಸಲು ಪ್ರಯತ್ನಿಸುತ್ತಿದೆ ಎಂದು ವರದಿ ಮಾಡಿದೆ. ಸಂಸತ್ತಿನ ನಾಗರಿಕ ವ್ಯವಹಾರಗಳ ಸಮಿತಿಯ ಅಧ್ಯಕ್ಷರನ್ನು ಉಲ್ಲೇಖಿಸಿ ತಸ್ನಿಮ್ ಮತ್ತು ಫಾರ್ಸ್ ಸುದ್ದಿ ಸಂಸ್ಥೆಗಳ ವರದಿಗಳು, ಕರಡು ಕಾನೂನನ್ನು ಸಿದ್ಧಪಡಿಸಲಾಗಿದೆ. ಶೀಘ್ರದಲ್ಲೇ ಇಸ್ಲಾಮಿಕ್ ಸಮಾಲೋಚನಾ ಸಭೆಯ ಕಾನೂನು ತಂಡವು ಅದನ್ನು ಅಂತಿಮಗೊಳಿಸಲಿದೆ ಎಂದು ತಿಳಿಸಿವೆ. ಈ ಯೋಜನೆಯ ಪ್ರಕಾರ, ಹಾರ್ಮುಝ್ ಜಲಸಂಧಿಯ ಮೂಲಕ ಹಾದುಹೋಗುವ ಹಡಗುಗಳ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಇರಾನ್ ಶುಲ್ಕವನ್ನು ಸಂಗ್ರಹಿಸಬೇಕು ಎಂದು ಅಧಿಕಾರಿಯೊಬ್ಬರು ಹೇಳಿರುವುದಾಗಿ Aljazeera ವರದಿ ಮಾಡಿದೆ. ಇದು ಸ್ವಾಭಾವಿಕ. ಇತರ ಕಾರಿಡಾರ್ ಗಳಂತೆ, ಸರಕುಗಳು ಒಂದು ದೇಶದ ಮೂಲಕ ಹಾದುಹೋದಾಗ, ಸುಂಕವನ್ನು ಪಾವತಿಸಲಾಗುತ್ತದೆ. ಹಾರ್ಮುಝ್ ಜಲಸಂಧಿಯೂ ಒಂದು ಕಾರಿಡಾರ್ ಆಗಿದೆ. ನಾವು ಅದರ ಭದ್ರತೆಯನ್ನು ಖಚಿತಪಡಿಸುತ್ತೇವೆ. ಹಡಗುಗಳು ಮತ್ತು ಟ್ಯಾಂಕರ್ ಗಳು ನಮಗೆ ಸುಂಕವನ್ನು ಪಾವತಿಸಬೇಕಾಗುತ್ತದೆ ಎಂದು ಅಧಿಕಾರಿ ಹೇಳಿರುವುದಾಗಿ ವರದಿ ಉಲ್ಲೇಖಿಸಿದೆ. ಆದರೆ ಆ ದೇಶೀಯ ಕಾನೂನು ಚೌಕಟ್ಟು ಇಲ್ಲದೆಯೂ ಸಹ, ಇರಾನ್ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಜಲಸಂಧಿಯ ಮೂಲಕ ಹಡಗು ಸಂಚಾರವನ್ನು ನಿಯಂತ್ರಿಸಲು ಈಗಾಗಲೇ ಟೋಲ್ ಬೂತ್ ವ್ಯವಸ್ಥೆಯನ್ನು ವಿಧಿಸಿದೆ ಎಂದು ಶಿಪ್ಪಿಂಗ್ ಜರ್ನಲ್ ಲಾಯ್ಡ್ಸ್ ಲಿಸ್ಟ್ ಬುಧವಾರ ವರದಿ ಮಾಡಿದೆ. ►ಟೋಲ್ ವಿಧಿಸುವ ನಿರ್ಧಾರವನ್ನು ಇರಾನ್ ಏಕೆ ತೆಗೆದುಕೊಂಡಿದೆ? ಫೆಬ್ರವರಿ 28 ರಂದು ಅಮೆರಿಕ ಮತ್ತು ಇಸ್ರೇಲ್ ಯುದ್ಧವನ್ನು ಪ್ರಾರಂಭಿಸಿದಾಗಿನಿಂದ ಇರಾನ್ ಹಾರ್ಮುಝ್ ಜಲಸಂಧಿಯನ್ನು ಮುಚ್ಚಿದೆ. ಇದು ಕೊಲ್ಲಿಯಿಂದ ವಿಶ್ವದ ಇತರ ಭಾಗಗಳಿಗೆ ತೈಲ ಮತ್ತು ದ್ರವೀಕೃತ ನೈಸರ್ಗಿಕ ಅನಿಲ (LNG) ಸಾಗಿಸುವ ಹಡಗುಗಳ ಸಾಗಣೆಯನ್ನು ನಿರ್ಬಂಧಿಸಿದೆ. ಈ ಕ್ರಮದಿಂದಾಗಿ ಜಾಗತಿಕ ತೈಲ ಬೆಲೆಗಳು ಬ್ಯಾರೆಲ್ಗೆ 100 ಡಾಲರ್ ಗಿಂತ ಹೆಚ್ಚಾಗಿದೆ. ತೈಲ ಬೆಲೆ ಯುದ್ಧಕ್ಕೂ ಮೊದಲು ಇದ್ದ ಬೆಲೆಗಿಂತ ಸರಿಸುಮಾರು ಶೇಕಡಾ 40 ರಷ್ಟು ಜಿಗಿತವನ್ನು ಕಂಡಿದೆ. ಹೀಗಿರುವಾಗ ಏಷ್ಯಾದ ದೇಶಗಳು ಇಂಧನವನ್ನು ಪಡಿತರಗೊಳಿಸಲು ಮತ್ತು ಕೈಗಾರಿಕಾ ಉತ್ಪಾದನೆಯನ್ನು ಕಡಿತಗೊಳಿಸಲು ಒತ್ತಾಯಿಸಲಾಗಿದೆ. ಗಲ್ಫ್ ಉತ್ಪಾದಕರಿಂದ ತೈಲ ಮತ್ತು ಅನಿಲವನ್ನು ರಫ್ತು ಮಾಡುವ ಏಕೈಕ ಮಾರ್ಗವಾಗಿರುವ ಹಾರ್ಮುಝ್ ಜಲಸಂಧಿಯ ಮೂಲಕ ಹಡಗುಗಳಿಗೆ ಹಾದುಹೋಗಲು ಅವಕಾಶ ನೀಡುವಂತೆ ಹಲವು ದೇಶಗಳು ಇರಾನ್ ಅನ್ನು ವಿನಂತಿಸಿವೆ. ಯುದ್ಧವನ್ನು ಕೊನೆಗೊಳಿಸಲು ಇರಾನ್ ತನ್ನ ಐದು ಷರತ್ತುಗಳಲ್ಲಿ ಹಾರ್ಮುಝ್ ಜಲಸಂಧಿಯ ಮೇಲೆ ಅಧಿಕಾರ ಚಲಾಯಿಸುವ ಹಕ್ಕನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಬೇಕೆಂದು ಒತ್ತಾಯಿಸಿದೆ. ದೇಶವು ಕೆಲವು ಹಡಗುಗಳಿಗೆ ಜಲಸಂಧಿಯ ಮೂಲಕ ಹಾದುಹೋಗಲು 2 ಮಿಲಿಯನ್ ಡಾಲರ್ ಶುಲ್ಕ ವಿಧಿಸುತ್ತಿದೆ ಎಂದು ಇರಾನಿನ ಶಾಸಕ ಅಲಾಯೆದ್ದೀನ್ ಬೊರೊಜೆರ್ಡಿ ಯುನೈಟೆಡ್ ಕಿಂಗ್ಡಮ್ ಮೂಲದ, ಫಾರ್ಸಿ ಭಾಷೆಯ ಉಪಗ್ರಹ ಟಿವಿ ಚಾನೆಲ್ ಇರಾನ್ ಇಂಟರ್ನ್ಯಾಷನಲ್ ಗೆ ತಿಳಿಸಿದ್ದಾರೆ. ಈಗ ಯುದ್ಧಕ್ಕೆ ವೆಚ್ಚಗಳು ಇರುವುದರಿಂದ, ಸ್ವಾಭಾವಿಕವಾಗಿ, ನಾವು ಇದನ್ನು ಮಾಡಬೇಕಿದೆ. ಹಾರ್ಮುಝ್ ಜಲಸಂಧಿಯ ಮೂಲಕ ಹಾದುಹೋಗುವ ಹಡಗುಗಳಿಂದ ಸಾರಿಗೆ ಶುಲ್ಕವನ್ನು ತೆಗೆದುಕೊಳ್ಳಬೇಕು ಎಂದು ಅವರು ಹೇಳಿದ್ದಾರೆ. ►ಜಲಸಂಧಿಯ ಮೂಲಕ ಹಾದುಹೋಗಲು ಎಷ್ಟು ಹಡಗುಗಳು ಕಾಯುತ್ತಿವೆ? ಅಂತರರಾಷ್ಟ್ರೀಯ ಕಡಲ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆರ್ಸೆನಿಯೊ ಡೊಮಿಂಗ್ಯೂಜ್ ಅಲ್ ಜಜೀರಾಗೆ ನೀಡಿದ ಮಾಹಿತಿಯ ಪ್ರಕಾರ, ಜಲಸಂಧಿಯ ಎರಡೂ ಬದಿಗಳಲ್ಲಿ ಸುಮಾರು 2,000 ಹಡಗುಗಳು ಅದರ ಮೂಲಕ ಸಾಗಲು ಕಾಯುತ್ತಿವೆ. ಅನೇಕ ನಿರ್ವಾಹಕರು ದೀರ್ಘ-ದೂರದ ಮಾರ್ಗ ಬದಲಾವಣೆಗೆ ತಕ್ಷಣ ಬದ್ಧರಾಗುವ ಬದಲು ಹಾರ್ಮುಝ್ ನ ಹೊರಗೆ ಇದ್ದಾರೆ ಎಂದು ಸಮುದ್ರ ಗುಪ್ತಚರ ಸೇವೆ ವಿಂಡ್ವಾರ್ಡ್ ಹೇಳಿದೆ. ಮಾರ್ಚ್ 15 ರಿಂದ ರವಿವಾರದವರೆಗಿನ ವಾರದಲ್ಲಿ ಹಾರ್ಮುಝ್ ಜಲಸಂಧಿಯಲ್ಲಿ ಸ್ವಯಂಚಾಲಿತ ಗುರುತಿನ ವ್ಯವಸ್ಥೆ (AIS) ಆನ್ ಆಗಿರುವ ಹಡಗುಗಳ ಕೇವಲ 16 ದಾಟುವಿಕೆಗಳನ್ನು ಗಮನಿಸಲಾಗಿದೆ. ಮಾರ್ಚ್ 13 ರಂದು ರಾತ್ರಿಯಿಡೀ ಮತ್ತು ಮುಂಜಾನೆ ನಾಲ್ಕು ಸರಕು ಹಡಗುಗಳು ಜಲಸಂಧಿಯನ್ನು ದಾಟಿವೆ ಅಥವಾ ದಾಟುತ್ತಿವೆ ಎಂದು ವಿಂಡ್ವಾರ್ಡ್ ಪ್ರತ್ಯೇಕವಾಗಿ ದೃಢಪಡಿಸಿದೆ, ಇದರಲ್ಲಿ ಒಂದು ಪಾಕಿಸ್ತಾನಿ ಹಡಗು ಕೂಡ ಸೇರಿದೆ. 290 ಮೀಟರ್ (950 ಅಡಿ) ಗಿಂತ ಹೆಚ್ಚು ಉದ್ದವಿರುವ ಎಂಟು ಡಾರ್ಕ್ ಹಡಗುಗಳು ಜಲಸಂಧಿಯಲ್ಲಿ ಕಾರ್ಯನಿರ್ವಹಿಸುತ್ತಿರುವುದನ್ನು ಗಮನಿಸಲಾಗಿದೆ. ಅವುಗಳ AIS ಅನ್ನು ಆಫ್ ಮಾಡಲಾಗಿತ್ತು. ಡಾರ್ಕ್ ಹಡಗುಗಳಲ್ಲಿ ಮಾರ್ಚ್ 16 ರಂದು ತೈಲ ಟ್ಯಾಂಕರ್ ಗಳ ಪ್ರಮುಖ ಕೇಂದ್ರವಾದ ಯುಎಇಯ ಖೋರ್ ಫಕ್ಕನ್ ಬಂದರಿನ ಬಳಿ ಗಮನಿಸಿದ ಯುಎಸ್-ಅನುಮೋದಿತ ಹಡಗು ಸೇರಿತ್ತು, ನಂತರ ಅದರ AIS ಅನ್ನು ಆಫ್ ಮಾಡಲಾಯಿತು ಎಂದು ವಿಂಡ್ವಾರ್ಡ್ ಹೇಳಿದೆ. ►ಸುಂಕಗಳನ್ನು ಸಂಗ್ರಹಿಸುವ ಪ್ರಕ್ರಿಯೆ ಏನು? ಇರಾನಿನ ಸಂಸತ್ತು ಟೋಲ್ ಗಳನ್ನು ವಿಧಿಸುವ ಕಾನೂನನ್ನು ಇನ್ನೂ ಅಂಗೀಕರಿಸದಿದ್ದರೂ, ಕಳೆದ ಎರಡು ವಾರಗಳಲ್ಲಿ ಜಲಸಂಧಿಯ ಮೂಲಕ 26 ಹಡಗು ಸಾಗಣೆಗಳು IRGC ಟೋಲ್ ಬೂತ್ ವ್ಯವಸ್ಥೆಯ ಅಡಿಯಲ್ಲಿ ಪೂರ್ವ-ಅನುಮೋದಿತ ಮಾರ್ಗವನ್ನು ಅನುಸರಿಸಿವೆ. ಇದರಲ್ಲಿ ಹಡಗು ನಿರ್ವಾಹಕರು ಪರಿಶೀಲನಾ ಯೋಜನೆಗೆ ಒಳಪಡುವ ಅಗತ್ಯವಿದೆ ಎಂದು ಲಾಯ್ಡ್ಸ್ ಲಿಸ್ಟ್ ಬುಧವಾರ ವರದಿ ಮಾಡಿದೆ. ಈ ಹಡಗುಗಳ AIS ಅನ್ನು ಆನ್ ಮಾಡಲಾಗಿಲ್ಲ. ಜಲಸಂಧಿಯ ಮೂಲಕ ಹಾದುಹೋಗಲು, ಹಡಗು ನಿರ್ವಾಹಕರು ಮೊದಲು IRGCಗೆ ಸಂಪರ್ಕ ಹೊಂದಿದ ಮಧ್ಯವರ್ತಿಗಳನ್ನು ತಲುಪಬೇಕು ಮತ್ತು ಹಡಗಿನ ಎಲ್ಲಾ ವಿವರಗಳನ್ನು ಸಲ್ಲಿಸಬೇಕು. ಇದರಲ್ಲಿ ಅಂತರರಾಷ್ಟ್ರೀಯ ಕಡಲ ಸಂಸ್ಥೆಯ ಸಂಖ್ಯೆ, ಸಾಗಿಸಲಾಗುತ್ತಿರುವ ಸರಕು, ಸಿಬ್ಬಂದಿಯ ಎಲ್ಲಾ ಸದಸ್ಯರ ಹೆಸರುಗಳು ಮತ್ತು ಹಡಗಿನ ಅಂತಿಮ ಗಮ್ಯಸ್ಥಾನ ಸೇರಿವೆ ಎಂದು ಹೊಸ ವ್ಯವಸ್ಥೆಯ ಬಗ್ಗೆ ತಿಳಿದಿರುವ ಮೂಲಗಳು ಲಾಯ್ಡ್ಸ್ ಲಿಸ್ಟ್ಗೆ ತಿಳಿಸಿವೆ. ನಂತರ ಮಧ್ಯವರ್ತಿಗಳು ಮಾಹಿತಿಯನ್ನು IRGCಯ ನೌಕಾ ಕಮಾಂಡ್ ಗೆ ಸಲ್ಲಿಸುತ್ತಾರೆ. ಅವರು ಮಾಹಿತಿಯನ್ನು ಪರಿಶೀಲಿಸುತ್ತಾರೆ. ಹಡಗು ಸ್ಕ್ರೀನಿಂಗ್ ನಲ್ಲಿ ಪಾಸ್ ಆದರೆ, IRGC ಕ್ಲಿಯರೆನ್ಸ್ ಕೋಡ್ ಮತ್ತು ಹಡಗು ಜಲಸಂಧಿಯ ಮೂಲಕ ಹಾದುಹೋಗಲು ತೆಗೆದುಕೊಳ್ಳಬೇಕಾದ ಮಾರ್ಗದ ಸೂಚನೆಗಳನ್ನು ನೀಡುತ್ತದೆ. ಹಡಗು ಜಲಸಂಧಿಯನ್ನು ತಲುಪಿದ ನಂತರ, IRGC ಕಮಾಂಡರ್ ಗಳು VHF ರೇಡಿಯೊದಲ್ಲಿ ಕೂಗಿ ಹಡಗಿನ ಕ್ಲಿಯರೆನ್ಸ್ ಕೋಡ್ ಅನ್ನು ಕೇಳುತ್ತಾರೆ. ಅದಕ್ಕೆ ಹಡಗು ಉತ್ತರಿಸುತ್ತದೆ. ಅನುಮೋದನೆ ಪಡೆದರೆ, ಲಾರಕ್ ದ್ವೀಪದ ಸುತ್ತಲಿನ ದೇಶದ ಪ್ರಾದೇಶಿಕ ನೀರಿನ ಮೂಲಕ ಹಡಗನ್ನು ಕರೆದೊಯ್ಯಲು ಇರಾನ್ ನಿಂದ ದೋಣಿ ಬರುತ್ತದೆ. ಹಡಗುಗಳು IRGC ನೌಕಾಪಡೆಯ ಸ್ಕ್ರೀನಿಂಗ್ ಪರೀಕ್ಷೆಯಲ್ಲಿ ಪಾಸ್ ಆಗದೇ ಇದ್ದರೆ, ಅವುಗಳನ್ನು ಜಲಮಾರ್ಗದ ಮೂಲಕ ಹಾದುಹೋಗಲು ಅನುಮತಿಸಲಾಗುವುದಿಲ್ಲ. ಮಂಗಳವಾರ, IRGC ನೌಕಾಪಡೆಯ ಕಮಾಂಡರ್ ಅಲಿರೆಜಾ ತಂಗ್ಸಿರಿ, ಸೆಲೆನ್ ಎಂಬ ಕಂಟೇನರ್ ಹಡಗನ್ನು ಕಾನೂನು ಶಿಷ್ಟಾಚಾರಗಳನ್ನು ಪಾಲಿಸಲು ವಿಫಲವಾದ ಕಾರಣ ಮತ್ತು ಹಾರ್ಮುಝ್ ಜಲಸಂಧಿಯ ಮೂಲಕ ಹಾದುಹೋಗಲು ಅನುಮತಿಯ ಕೊರತೆಯಿಂದಾಗಿ ಹಿಂದಿರುಗಿಸಲಾಗಿದೆ ಎಂದು ತಮ್ಮ ಎಕ್ಸ್ ಪೋಸ್ಟ್ ನಲ್ಲಿ ಹೇಳಿದ್ದಾರೆ. ಈ ಜಲಮಾರ್ಗದ ಮೂಲಕ ಯಾವುದೇ ಹಡಗನ್ನು ಹಾದುಹೋಗಲು ಇರಾನ್ನ ಕಡಲ ಪ್ರಾಧಿಕಾರದೊಂದಿಗೆ ಸಂಪೂರ್ಣ ಸಮನ್ವಯದ ಅಗತ್ಯವಿದೆ ಎಂದು ಅವರು ಹೇಳಿದ್ದಾರೆ. ಬುಧವಾರ ರಾತ್ರಿ ನಡೆದ ವಾಯುದಾಳಿಯಲ್ಲಿ ತಂಗ್ಸಿರಿ ಮತ್ತು ಇತರ ನೌಕಾ ಕಮಾಂಡ್ ನ ಹಿರಿಯ ಅಧಿಕಾರಿಗಳನ್ನು ಹತ್ಯೆ ಮಾಡಿರುವುದಾಗಿ ಇಸ್ರೇಲ್ ಗುರುವಾರ ಹೇಳಿದೆ. ಇರಾನ್ ಇನ್ನೂ ಅದರ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ►ಸುಂಕವನ್ನು ಯಾರು ಪಾವತಿಸುತ್ತಾರೆ? ಹಾರ್ಮುಝ್ ಜಲಸಂಧಿಯು ಅಮೆರಿಕ ಮತ್ತು ಅದರ ಮಿತ್ರರಾಷ್ಟ್ರಗಳನ್ನು ಹೊರತುಪಡಿಸಿ ಎಲ್ಲರಿಗೂ ಮುಕ್ತವಾಗಿದೆ ಎಂದು ಇರಾನ್ ಹೇಳಿದೆ. ಮಂಗಳವಾರ ಅಂತರರಾಷ್ಟ್ರೀಯ ಕಡಲ ಸಂಘಟನೆಯ 176 ಸದಸ್ಯರಿಗೆ ಕಳುಹಿಸಲಾದ ಪತ್ರದಲ್ಲಿ, ಇರಾನ್ ಹೀಗೆ ಹೇಳಿದೆ: “ಇತರ ದೇಶಗಳಿಗೆ ಸೇರಿದ ಅಥವಾ ಅವುಗಳೊಂದಿಗೆ ಸಂಬಂಧ ಹೊಂದಿರುವ ಹಡಗುಗಳು ಸೇರಿದಂತೆ ಪ್ರತಿಕೂಲವಲ್ಲದ ಹಡಗುಗಳು ಇರಾನ್ ವಿರುದ್ಧದ ಆಕ್ರಮಣಕಾರಿ ಕೃತ್ಯಗಳಲ್ಲಿ ಭಾಗವಹಿಸಬಾರದು ಅಥವಾ ಬೆಂಬಲಿಸಬಾರದು, ಘೋಷಿತ ಸುರಕ್ಷತೆ ಮತ್ತು ಭದ್ರತಾ ನಿಯಮಗಳನ್ನು ಸಂಪೂರ್ಣವಾಗಿ ಪಾಲಿಸಬೇಕು. ಇರಾನಿನ ಅಧಿಕಾರಿಗಳೊಂದಿಗೆ ಸಮನ್ವಯದೊಂದಿಗೆ ಹಾರ್ಮುಝ್ ಜಲಸಂಧಿಯ ಮೂಲಕ ಸುರಕ್ಷಿತ ಮಾರ್ಗದಿಂದ ಪ್ರಯೋಜನ ಪಡೆಯಬಹುದು.” ಇರಾನ್ ಸ್ನೇಹಪರ ರಾಷ್ಟ್ರಗಳೊಂದಿಗೆ ಮಾತುಕತೆ ನಡೆಸಿದ ನಂತರ, ಮಲೇಷ್ಯಾ, ಚೀನಾ, ಈಜಿಪ್ಟ್, ದಕ್ಷಿಣ ಕೊರಿಯಾ ಮತ್ತು ಭಾರತದ ಕೆಲವು ಹಡಗುಗಳಿಗೆ ಜಲಸಂಧಿಯ ಮೂಲಕ ಹಾದುಹೋಗಲು ಅವಕಾಶ ನೀಡಲಾಗಿದೆ. ಇಲ್ಲಿಯವರೆಗೆ ಜಲಸಂಧಿಯನ್ನು ಸಾಗಿಸಿದ ಕನಿಷ್ಠ ಎರಡು ಹಡಗುಗಳು ಚೀನಾದ ಕರೆನ್ಸಿಯಾದ ಯುವಾನ್ ನಲ್ಲಿ ಶುಲ್ಕವನ್ನು ಪಾವತಿಸಿವೆ. ಸೋಮವಾರ ಒಂದು ಸಾಗಣೆಯನ್ನು ಮಧ್ಯವರ್ತಿಯಾಗಿ ಕಾರ್ಯನಿರ್ವಹಿಸುವ ಚೀನೀ ಕಡಲ ಸೇವೆಗಳ ಕಂಪೆನಿಯು ನಡೆಸಿದ್ದು, ಅದು ಇರಾನಿನ ಅಧಿಕಾರಿಗಳಿಗೆ ಪಾವತಿ ಮಾಡಿದೆ. ಆದಾಗ್ಯೂ, ಹಡಗುಗಳು ಎಷ್ಟು ಪಾವತಿಸಿವೆ ಎಂಬುದು ಸ್ಪಷ್ಟವಾಗಿಲ್ಲ ಎಂದು ಲಾಯ್ಡ್ಸ್ ಲಿಸ್ಟ್ ವರದಿ ಮಾಡಿದೆ. ಆದರೆ ಭಾರತ ಸರ್ಕಾರದ ಪ್ರಕಾರ, ಜಲಸಂಧಿಯ ಮೂಲಕ ಭಾರತೀಯ ಹಡಗುಗಳ ಸುರಕ್ಷಿತ ಸಾಗಣೆಯನ್ನು ಖಚಿತಪಡಿಸಿಕೊಳ್ಳಲು ಭಾರತ ಇರಾನ್ ಗೆ ಯಾವುದೇ ಪಾವತಿಗಳನ್ನು ಮಾಡಿಲ್ಲ. ಜಲಸಂಧಿಯ ಮೂಲಕ ನೌಕಾಯಾನ ಮಾಡಲು ಯಾವುದೇ ಅನುಮತಿ ಅಗತ್ಯವಿಲ್ಲ. ಜಲಸಂಧಿಯ ಮೂಲಕ ಸಂಚಾರಕ್ಕೆ ಸ್ವಾತಂತ್ರ್ಯವಿದೆ. ಜಲಸಂಧಿ ಕಿರಿದಾಗಿರುವುದರಿಂದ, ಪ್ರವೇಶ ಮತ್ತು ನಿರ್ಗಮನ ಮಾರ್ಗಗಳನ್ನು ಮಾತ್ರ ಗುರುತಿಸಲಾಗಿದೆ, ಇವುಗಳನ್ನು ಹಡಗು ಮಾರ್ಗಗಳು ಅನುಸರಿಸಬೇಕಾಗುತ್ತದೆ. ಯಾವಾಗ ನೌಕಾಯಾನ ಮಾಡಬೇಕು ಅಥವಾ ಯಾವಾಗ ನೌಕಾಯಾನ ಮಾಡಬಾರದು ಎಂಬುದು ಸನ್ನದು ಮತ್ತು ಹಡಗು ಕಂಪೆನಿಯ ನಿರ್ಧಾರವಾಗಿದೆ ಎಂದು ಭಾರತೀಯ ಬಂದರುಗಳು, ಹಡಗು ಮತ್ತು ಜಲಮಾರ್ಗಗಳ ಸಚಿವಾಲಯದ ವಿಶೇಷ ಕಾರ್ಯದರ್ಶಿ ರಾಜೇಶ್ ಕುಮಾರ್ ಸಿನ್ಹಾ ಮಂಗಳವಾರ ಹೇಳಿದ್ದಾರೆ ಎಂದು ಭಾರತೀಯ ಮಾಧ್ಯಮಗಳು ವರದಿ ಮಾಡಿವೆ. 92,600 ಟನ್ಗಳಿಗಿಂತ ಹೆಚ್ಚು ದ್ರವೀಕೃತ ಪೆಟ್ರೋಲಿಯಂ ಅನಿಲವನ್ನು ಹೊತ್ತ ಎರಡು ಹಡಗುಗಳು ಸಾಗಿವೆ. ಇವು ಗುರುವಾರ ಮತ್ತು ಶನಿವಾರದ ನಡುವೆ ಉಪಖಂಡವನ್ನು ತಲುಪಲಿವೆ ಎಂದು ಸಚಿವಾಲಯ ತಿಳಿಸಿದೆ. ಹಾರ್ಮುಝ್ ಜಲಸಂಧಿಯ ಮೂಲಕ ಕೆಲವು ಸ್ನೇಹಪರ ರಾಷ್ಟ್ರಗಳಿಗೆ ಸಾಗಣೆಗೆ ಅವಕಾಶ ನೀಡುವುದು ತಾರತಮ್ಯವಾಗುತ್ತದೆ ಎಂದು ಭಾರತೀಯ ಕಾನೂನು ಸಂಸ್ಥೆ ಎಎನ್ಬಿ ಲೀಗಲ್ ನ ಪಾಲುದಾರರಾದ ಅಪೂರ್ವ ಮೆಹ್ತಾ ಹೇಳಿದ್ದಾರೆ ಎಂದು Aljazeera ವರದಿ ಉಲ್ಲೇಖಿಸಿದೆ. ಮುಂದಿನ ದಿನಗಳಲ್ಲಿ ಯಾವ ಹಡಗುಗಳು ಟೋಲ್ ಪಾವತಿಸಬೇಕಾಗುತ್ತದೆ ಮತ್ತು ಅಂತಹ ಪಾವತಿಗಳನ್ನು ಯಾವ ಕರೆನ್ಸಿಯಲ್ಲಿ ಮಾಡಲಾಗುತ್ತದೆ ಎಂಬುದು ಪ್ರಸ್ತುತ ಸ್ಪಷ್ಟವಾಗಿಲ್ಲ. ರಾಷ್ಟ್ರಗಳು 'ಟೋಲ್'ಗಳ ಪಾವತಿಗೆ ಒಳಪಟ್ಟಿದ್ದರೂ ಸಹ, ತಮ್ಮ ಸರಕುಗಳನ್ನು ತೆರವುಗೊಳಿಸಲು ಉತ್ಸುಕರಾಗಿರುತ್ತವೆ ಎಂದು ಮೆಹ್ತಾ ಹೇಳಿದ್ದಾರೆ. ►ಜಲಸಂಧಿಯ ಮೂಲಕ ಹಾದುಹೋಗುವ ಹಡಗುಗಳಿಗೆ ಸುಂಕ ವಿಧಿಸುವುದು ಕಾನೂನುಬದ್ಧವೇ? ವಿಶ್ವಸಂಸ್ಥೆಯ ಸಮುದ್ರ ಕಾನೂನು ಸಮಾವೇಶದ (UNCLOS) 38 ನೇ ವಿಧಿಯ ಪ್ರಕಾರ, ಎಲ್ಲಾ ಹಡಗುಗಳು ಮತ್ತು ವಿಮಾನಗಳು ಸಾರಿಗೆ ಮಾರ್ಗದ ಹಕ್ಕನ್ನು ಹೊಂದಿವೆ. ಇದನ್ನು ಯಾವುದೇ ದೇಶವು ಸ್ಥಗಿತಗೊಳಿಸಲು ಸಾಧ್ಯವಿಲ್ಲ. ಸಮಾವೇಶದ 17 ನೇ ವಿಧಿಯ ಅಡಿಯಲ್ಲಿ, ಪ್ರತಿಯೊಂದು ವಿದೇಶಿ ಹಡಗು ಯಾವುದೇ ರಾಷ್ಟ್ರದ ಪ್ರಾದೇಶಿಕ ನೀರಿನಲ್ಲಿ ಹಾದುಹೋಗುವ ಹಕ್ಕನ್ನು ಹೊಂದಿದೆ. UNCLOSನ 19 ನೇ ವಿಧಿಯ ಅಡಿಯಲ್ಲಿ, ಕರಾವಳಿ ರಾಜ್ಯದ ಶಾಂತಿ, ಉತ್ತಮ ಸುವ್ಯವಸ್ಥೆ ಅಥವಾ ಭದ್ರತೆಗೆ ಹಾನಿಯಾಗದಿರುವವರೆಗೆ ಸಾಗಣೆಗೆ ಅನುಮತಿ ಇರುತ್ತದೆ. ಕರಾವಳಿ ರಾಜ್ಯವು ಈ ಮಾರ್ಗವನ್ನು ಪೂರ್ವಾಗ್ರಹ ಪೀಡಿತ ಎಂದು ಪರಿಗಣಿಸಬಹುದಾದ 13 ವರ್ಗಗಳಿವೆ ಎಂದು ಮೆಹ್ತಾ ಹೇಳಿದ್ದಾರೆ. ಕರಾವಳಿ ರಾಜ್ಯವು ಒಂದು ಮಾರ್ಗವು ಸರಿಯಲ್ಲ ಎಂದು ಭಾವಿಸಿದರೆ, ಅದರ ಭದ್ರತೆಯ ರಕ್ಷಣೆಗೆ ಅಂತಹ ರದ್ದು ಅತ್ಯಗತ್ಯವಾದರೆ, ಅದರ ಪ್ರಾದೇಶಿಕ ಸಮುದ್ರದ ನಿರ್ದಿಷ್ಟ ಪ್ರದೇಶಗಳಲ್ಲಿ ವಿದೇಶಿ ಹಡಗುಗಳ ಮುಗ್ಧ ಮಾರ್ಗವನ್ನು ಸ್ಥಗಿತಗೊಳಿಸುವುದು ಸೇರಿದಂತೆ ಅಂತಹ ಮಾರ್ಗವನ್ನು ತಡೆಯಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬಹುದು. ಇರಾನ್ UNCLOS ಗೆ ಸಹಿ ಹಾಕಿದ್ದರೂ, ಅದರ ಸಂಸತ್ತು ಅದನ್ನು ಅಂಗೀಕರಿಸಿಲ್ಲ. ಆದ್ದರಿಂದ UNCLOS ಅಡಿಯಲ್ಲಿ ಅಂತರರಾಷ್ಟ್ರೀಯ ಆಡಳಿತಕ್ಕೆ ಬದ್ಧವಾಗಿಲ್ಲ ಎಂದು ಇರಾನ್ ವಾದಿಸುತ್ತದೆ ಎಂದು ಅವರು ತಿಳಿಸಿದ್ದಾರೆ. ಕಡಲ ಕಾನೂನಿನ ಪ್ರಾಧ್ಯಾಪಕ ಜೇಸನ್ ಚುವಾ, ಅತ್ಯಂತ ಕಿರಿದಾದ ಹಂತದಲ್ಲಿ, ಹಾರ್ಮುಝ್ ಜಲಸಂಧಿಯು ಕೇವಲ 21 ನಾಟಿಕಲ್ ಮೈಲುಗಳು (39 ಕಿಮೀ) ಅಗಲವಿದೆ. UNCLOS ಅಡಿಯಲ್ಲಿ, ಕರಾವಳಿ ರಾಜ್ಯಗಳು ತಮ್ಮ ಕರಾವಳಿಯಿಂದ 12 ನಾಟಿಕಲ್ ಮೈಲುಗಳು (22 ಕಿಮೀ) ಸಮುದ್ರವನ್ನು ತಮ್ಮ ಪ್ರಾದೇಶಿಕ ಜಲವೆಂದು ಹೇಳಿಕೊಳ್ಳಬಹುದು ಎಂದು ಹೇಳಿದ್ದಾರೆ. ಜಲಸಂಧಿಯ ಸಂಪೂರ್ಣ ಅಗಲವು ಇರಾನ್ ಮತ್ತು ಒಮಾನ್ ನ ಅತಿಕ್ರಮಿಸುವ ಪ್ರಾದೇಶಿಕ ಸಮುದ್ರಗಳನ್ನು ಒಳಗೊಂಡಿದೆ. ಒಂದು ದೇಶದ ಪ್ರಾದೇಶಿಕ ನೀರಿನ ಆಚೆಗೆ ಯಾವುದೇ ಎತ್ತರದ ಸಮುದ್ರ ಅಥವಾ ಸಮುದ್ರದ ಕೆಲವು ಭಾಗಗಳಿಲ್ಲ. ಹೀಗಾಗಿ ಇರಾನ್ ಈ ಪ್ರದೇಶದ ಮೇಲೆ ಸಾರ್ವಭೌಮತ್ವವನ್ನು ಪ್ರತಿಪಾದಿಸುತ್ತದೆ. ಆದಾಗ್ಯೂ, ಇರಾನ್ ತನ್ನ ಕರಾವಳಿಯಿಂದ 12 ನಾಟಿಕಲ್ ಮೈಲುಗಳನ್ನು ಮೀರಿದ ಯಾವುದರ ಮೇಲೂ ಯಾವುದೇ ನ್ಯಾಯವ್ಯಾಪ್ತಿಯನ್ನು ಹೊಂದಿಲ್ಲ. ಆದ್ದರಿಂದ ನಿಮ್ಮ ಹಡಗು ಒಮಾನಿನ ಕರಾವಳಿಯನ್ನು ಬಳಸಿದರೆ ಅದು ಟೋಲ್ ವಿಧಿಸಲು ಸಾಧ್ಯವಿಲ್ಲ. ಆದರೆ ಒಮಾನಿ ಅಥವಾ ಇರಾನ್ ಕಡೆಯ ಯಾವುದೇ ಹಡಗಿನ ಮೇಲೆ ಕ್ಷಿಪಣಿಗಳು ಅಥವಾ ಡ್ರೋನ್ಗಳ ಮೂಲಕ ದಾಳಿ ಮಾಡುವ ಹಕ್ಕನ್ನು ಅದು ಕಾಯ್ದಿರಿಸಿದೆ. ಆದ್ದರಿಂದ ನಿಮ್ಮ ಹಡಗು ಸುರಕ್ಷಿತವಾಗಿರಬೇಕೆಂದು ನೀವು ಬಯಸಿದರೆ, ನೀವು ಇರಾನಿನ ಬದಿಯಲ್ಲಿ ಪ್ರಯಾಣಿಸಲು ಮತ್ತು ಪಾವತಿಸಲು ಮತ್ತು ಸುರಕ್ಷಿತ ಮಾರ್ಗವನ್ನು ಪಡೆಯಲು ನಿರ್ಧರಿಸಬಹುದು ಎಂದು ಚುವಾ ಹೇಳಿದ್ದಾರೆ. ಸಶಸ್ತ್ರ ಸಂಘರ್ಷದ ಕಾನೂನುಗಳು ಮತ್ತು ಆತ್ಮರಕ್ಷಣೆಯ ತತ್ವದ ಅಡಿಯಲ್ಲಿ, ಇರಾನ್ ನಂತಹ ಯುದ್ಧೋಚಿತ ರಾಷ್ಟ್ರವು ಶತ್ರುಗಳ ಯುದ್ಧ ಪ್ರಯತ್ನಕ್ಕೆ ಹಡಗುಗಳು ಕೊಡುಗೆ ನೀಡುತ್ತಿಲ್ಲ ಎಂದು ಖಚಿತಪಡಿಸಿಕೊಳ್ಳಲು ಹಡಗುಗಳನ್ನು ಪರಿಶೋಧಿಸುವ ಹಕ್ಕನ್ನು ಹೊಂದಿದೆ ಎಂದು ವಾದಿಸಬಹುದು ಎಂದು ಅವರು ಹೇಳಿದ್ದಾರೆ. ಯುದ್ಧೋಚಿತ ಯುದ್ಧನೌಕೆಗಳು ತಮ್ಮ ರಾಷ್ಟ್ರೀಯತೆಯನ್ನು ಪರಿಶೀಲಿಸಲು ಮತ್ತು ಶತ್ರುಗಳಿಗೆ ಉದ್ದೇಶಿಸಲಾದ ನಿಷಿದ್ಧ ವಸ್ತುಗಳನ್ನು ಪರಿಶೀಲಿಸಲು ವ್ಯಾಪಾರಿ ಹಡಗುಗಳನ್ನು ನಿಲ್ಲಿಸಲು ಮತ್ತು ಹತ್ತಲು ಸಾಂಪ್ರದಾಯಿಕ ಹಕ್ಕನ್ನು ಹೊಂದಿವೆ. ಯುದ್ಧದ ಸಮಯದಲ್ಲಿ ಭೇಟಿ ಮತ್ತು ಶೋಧ ಕಾರ್ಯವಿಧಾನಗಳು ಅನ್ವಯಿಸುತ್ತವೆ. UNCLOS ನ 51 ನೇ ವಿಧಿಯ ಅಡಿಯಲ್ಲಿ ಇದು ಕಾನೂನುಬದ್ಧವಾಗಬೇಕಾದರೆ, ದಾಳಿಯನ್ನು ಹಿಮ್ಮೆಟ್ಟಿಸಲು ಮತ್ತು ಪ್ರಮಾಣಾನುಗುಣವಾಗಿ ಕ್ರಮ ಕೈಗೊಳ್ಳುವುದು ಅಗತ್ಯವಾಗಿರಬೇಕು. ಆದಾಗ್ಯೂ, ಎಲ್ಲಾ ವಾಣಿಜ್ಯ ಸಂಚಾರವನ್ನು ನಿಲ್ಲಿಸುವುದು ಅಥವಾ ಸಾರಿಗೆ ಶುಲ್ಕವನ್ನು ವಿಧಿಸುವುದು ಆತ್ಮರಕ್ಷಣೆಯ ಮಿತಿಗಳನ್ನು ಮೀರುತ್ತದೆ ಮತ್ತು ಕಾನೂನುಬಾಹಿರ ಆರ್ಥಿಕ ಯುದ್ಧವಾಗುತ್ತದೆ ಎಂದು ಚುವಾ ಹೇಳಿದ್ದಾರೆ. ಯುದ್ಧಕಾಲದ ಸುಂಕಗಳು ವರದಿಯಾಗುತ್ತಿರುವುದು ಇದೇ ಮೊದಲಲ್ಲ. ಅಕ್ಟೋಬರ್ 2024 ರಲ್ಲಿ, ಯೆಮೆನ್ನ ಹೌತಿಗಳು ತಮ್ಮ ಕರಾವಳಿಯಲ್ಲಿ ಹಾದುಹೋಗುವ ಹಡಗುಗಳಿಗೆ ಶುಲ್ಕ ವಿಧಿಸುತ್ತಿದ್ದಾರೆ ಎಂದು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ವರದಿಯು ಆರೋಪಿಸಿತ್ತು. ಕೆಲವು ಹಡಗು ಏಜೆನ್ಸಿಗಳಿಂದ ಹೌತಿಗಳು ಅಕ್ರಮ ಶುಲ್ಕವನ್ನು ಸಂಗ್ರಹಿಸಿದ್ದಾರೆ. ಇದರಿಂದಾಗಿ ಅವರ ಹಡಗುಗಳು ಕೆಂಪು ಸಮುದ್ರ ಮತ್ತು ಅಡೆನ್ ಕೊಲ್ಲಿಯ ಮೂಲಕ ದಾಳಿ ಮಾಡದೆ ಸಾಗಲು ಅವಕಾಶ ದೊರಕುತ್ತದೆ ಎಂದು ವಿಶ್ವಸಂಸ್ಥೆಯ ವರದಿ ಹೇಳಿದೆ. ಈ ಅಕ್ರಮ ಸುರಕ್ಷಿತ ಸಾರಿಗೆ ಶುಲ್ಕಗಳಿಂದ ಹೌತಿಗಳ ಗಳಿಕೆಯು ತಿಂಗಳಿಗೆ ಸುಮಾರು 180 ಮಿಲಿಯನ್ ಡಾಲರ್ ಎಂದು ಮೂಲಗಳು ಅಂದಾಜಿಸುತ್ತವೆ ಎಂದು ವರದಿ ಹೇಳಿದ್ದರೂ, ಹೌತಿಗಳು ಈ ಹಕ್ಕುಗಳನ್ನು ನಿರಾಕರಿಸಿದ್ದಾರೆ. ಆ ಸಮಯದಲ್ಲಿ, ಇರಾನ್ ಬೆಂಬಲಿತ ಹೌತಿಗಳು ಫೆಲೆಸ್ತೀನಿಯನ್ನರ ಒಗ್ಗಟ್ಟಿನಲ್ಲಿ ಕೆಂಪು ಸಮುದ್ರದಲ್ಲಿ ವಾಣಿಜ್ಯ ಹಡಗುಗಳ ಮೇಲೆ ದಾಳಿ ನಡೆಸಿದ್ದರು. ಗಾಜಾ ಮೇಲೆ ಇಸ್ರೇಲ್ ನಡೆಸುತ್ತಿರುವ ನರಮೇಧ ಯುದ್ಧವನ್ನು ವಿರೋಧಿಸಿ ಇಸ್ರೇಲ್ಗೆ ಸಂಬಂಧಿಸಿದ ಅಥವಾ ಇಸ್ರೇಲ್ಗೆ ತೆರಳುವ ಹಡಗುಗಳನ್ನು ಗುರಿಯಾಗಿಸಿಕೊಂಡಿದ್ದೇವೆ ಎಂದು ಹೌತಿಗಳು ಹೇಳಿಕೊಂಡಿದ್ದರು. ಇರಾನ್ ಇನ್ನೂ ತನ್ನ ಟೋಲ್ ಬೂತ್ ವ್ಯವಸ್ಥೆಯನ್ನು ಕಾನೂನುಬದ್ಧವಾಗಿ ಅಂಗೀಕರಿಸಿಲ್ಲವಾದರೂ, ಅಬುಧಾಬಿ ರಾಜ್ಯ ತೈಲ ಕಂಪೆನಿ ADNOC ನ ಸಿಇಒ ಸುಲ್ತಾನ್ ಅಲ್-ಜಾಬರ್, ಇರಾನ್ ಹಾರ್ಮುಝ್ ಜಲಸಂಧಿಯ ಮೂಲಕ ಹಾದುಹೋಗುವ ಯಾವುದೇ ನಿರ್ಬಂಧವನ್ನು ಆರ್ಥಿಕ ಭಯೋತ್ಪಾದನೆ ಎಂದು ಬಣ್ಣಿಸಿದ್ದಾರೆ. ಇರಾನ್ ಹಾರ್ಮುಝ್ ಅನ್ನು ಒತ್ತೆಯಾಳಾಗಿಟ್ಟುಕೊಂಡಾಗ, ಪ್ರತಿಯೊಂದು ರಾಷ್ಟ್ರವೂ ಗ್ಯಾಸ್ ಪಂಪ್ನಲ್ಲಿ, ದಿನಸಿ ಅಂಗಡಿಯಲ್ಲಿ, ಔಷಧಾಲಯದಲ್ಲಿ ಸುಲಿಗೆ ಪಾವತಿಸುತ್ತದೆ. ಯಾವುದೇ ದೇಶವು ಜಾಗತಿಕ ಆರ್ಥಿಕತೆಯನ್ನು ಈ ರೀತಿ ಅಸ್ಥಿರಗೊಳಿಸಲು ಬಿಡಲಾಗುವುದಿಲ್ಲ — ಈಗ ಮಾತ್ರ ಅಲ್ಲ, ಎಂದೆಂದಿಗೂ ಇಲ್ಲ ಎಂದು ಅಲ್-ಜಾಬರ್ ಅಮೆರಿಕದಲ್ಲಿ ಮಾಡಿದ ಭಾಷಣದಲ್ಲಿ ಹೇಳಿದ್ದಾರೆ.
APSEZ Port of Refuge: ಭಾರತದ ಕರಾವಳಿಗೆ ರಕ್ಷಾ ಕವಚ: ದೇಶದ ಮೊದಲ ಆಶ್ರಯ ಬಂದರು ಸ್ಥಾಪಿಸಿದ ಅದಾನಿ ಸಮೂಹ
ಅದಾನಿ ಪೋರ್ಟ್ಸ್ ಮತ್ತು ಸ್ಪೆಷಲ್ ಎಕನಾಮಿಕ್ ಝೋನ್ ಲಿಮಿಟೆಡ್ (APSEZ) ಭಾರತದ ಮೊಟ್ಟಮೊದಲ 'ಪೋರ್ಟ್ ಆಫ್ ರಿಫ್ಯೂಜ್' ಅನ್ನು ಕಾರ್ಯಾಚರಣೆಗೆ ತಂದಿದೆ. ಇದು ದೇಶದ ಸಮುದ್ರಯಾನ ತುರ್ತು ಸ್ಪಂದನಾ ಮೂಲಸೌಕರ್ಯವನ್ನು ಬಲಪಡಿಸುವ ನಿಟ್ಟಿನಲ್ಲಿ ಇಟ್ಟಿರುವ ಅತ್ಯಂತ ಮಹತ್ವದ ಹೆಜ್ಜೆಯಾಗಿದೆ. ಭಾರತದ ಕರಾವಳಿಯುದ್ದಕ್ಕೂ ಎದುರಾಗಬಹುದಾದ ಸಮುದ್ರಯಾನ ತುರ್ತು ಪರಿಸ್ಥಿತಿಗಳು ಮತ್ತು ಸಂಕಷ್ಟಕ್ಕೆ ಸಿಲುಕುವ ಹಡಗುಗಳನ್ನು ಸುರಕ್ಷಿತವಾಗಿ ನಿರ್ವಹಿಸುವಲ್ಲಿ ದಶಕಗಳಿಂದ
ಎಫ್ಬಿಐ ಮುಖ್ಯಸ್ಥ ಪಟೇಲ್ ಇ-ಮೇಲ್ಗೆ ಕನ್ನ ಹಾಕಿದ ಇರಾನ್ ಮೂಲದ ಹ್ಯಾಕರ್ಗಳು
ವಾಶಿಂಗ್ಟನ್, ಮಾ.27: ಅಮೆರಿಕದ ಫೆಡರಲ್ ಬ್ಯೂರೊ ಆಫ್ ಇನ್ವೆಸ್ಟಿಗೇಷನ್(ಎಫ್ಬಿಐ) ನಿರ್ದೇಶಕ ಕಾಶ್ ಪಟೇಲ್ ಅವರ ವೈಯಕ್ತಿಕ ಇ-ಮೇಲ್ ಹ್ಯಾಕ್ ಮಾಡಿರುವುದಾಗಿ ಇರಾನ್ಗೆ ಸಂಬಂಧಿಸಿದ ಹ್ಯಾಕರ್ಗಳು ಪ್ರತಿಪಾದಿಸಿದ್ದು ಅವರ ಫೋಟೋಗಳು ಮತ್ತು ವೈಯಕ್ತಿಕ ವಿವರಗಳನ್ನು ಇಂಟರ್ನೆಟ್ನಲ್ಲಿ ಪ್ರಕಟಿಸಿದ್ದಾರೆ ಎಂದು ರಾಯ್ಟರ್ಸ್ ವರದಿ ಮಾಡಿದೆ. `ಹಂದಾಲಾ ಹ್ಯಾಕ್ ಟೀಂ' ಎಂದು ಗುರುತಿಸಲಾಗುವ ಗುಂಪು ತಮ್ಮ ವೆಬ್ಸೈಟ್ನಲ್ಲಿ `ಪಟೇಲ್ ಈಗ ಯಶಸ್ವಿಯಾಗಿ ಹ್ಯಾಕ್ ಮಾಡಲಾದ ಬಲಿಪಶುಗಳ ಪಟ್ಟಿಯಲ್ಲಿ ಅವರ ಹೆಸರನ್ನು ಕಂಡುಕೊಳ್ಳುತ್ತಾರೆ' ಎಂದು ಬರೆದುಕೊಂಡಿದೆ.
ವಾಷಿಂಗ್ಟನ್, ಮಾ.27: ಅಮೆರಿಕ ಮತ್ತು ಇರಾನ್ ನಡುವಿನ ಸಂಭಾವ್ಯ ಮಾತುಕತೆಗೆ ಮಧ್ಯಸ್ಥಿಕೆ ವಹಿಸಲು ಉತ್ಸಾಹ ತೋರುತ್ತಿರುವ ಪಾಕಿಸ್ತಾನದ ವಿಶ್ವಾಸಾರ್ಹತೆಯನ್ನು ಅಮೆರಿಕದ ನಿವೃತ್ತ ಯೋಧ ಕರ್ನಲ್ ಡಗ್ಲಾಸ್ ಮ್ಯಾಕ್ಗ್ರೆಗರ್ ಪ್ರಶ್ನಿಸಿದ್ದಾರೆ. ಪಾಕಿಸ್ತಾನದವರು ಸಹಾಯವನ್ನು ನೀಡುವುದು ಒಂದು ರೀತಿಯಲ್ಲಿ `ಬೆಂಕಿಯಿಂದ ಉರಿಯುತ್ತಿರುವ ಕಟ್ಟಡದಲ್ಲಿರುವ ವ್ಯಕ್ತಿ ನಿಮಗೆ ಬಾಡಿಗೆಗೆ ಕೋಣೆ ನೀಡಿದಂತಾಗುತ್ತದೆ'. ತೀವ್ರ ಆಂತರಿಕ ಸವಾಲನ್ನು ಎದುರಿಸುತ್ತಿರುವ ಪಾಕಿಸ್ತಾನವನ್ನು ತಟಸ್ಥ, ವಿಶ್ವಾಸಾರ್ಹ ರಾಷ್ಟ್ರವೆಂದು ಇಸ್ರೇಲ್ ಪರಿಗಣಿಸುವ ಸಾಧ್ಯತೆಯಿಲ್ಲ. ಅದರ ಬದಲು ವಿವಿಧ ಭೌಗೋಳಿಕ ರಾಜಕೀಯ ಬಣಗಳಾದ್ಯಂತ ತನ್ನ ರಾಜತಾಂತ್ರಿಕ ಸಂಬಂಧಗಳ ಕಾರಣದಿಂದಾಗಿ ಭಾರತವು ವಿಶ್ವಾಸಾರ್ಹ ಪಾತ್ರ ನಿರ್ವಹಿಸಬಹುದು ಎಂದವರು ಸಲಹೆ ನೀಡಿದ್ದಾರೆ.
ಉಳ್ಳಾಲ: ಕೆಎಮ್ ಜೆ, ಎಸ್ ವೈ ಎಸ್ ವತಿಯಿಂದ ಚೆಕ್ ವಿತರಣೆ
ಉಳ್ಳಾಲ, ಆರ್ಥಿಕವಾಗಿ ತೀರಾ ಹಿಂದುಳಿದ ಬಡ ಕುಟುಂಬದ ಮುಅಲ್ಲಿಮ್ ಅವರ ಮಗಳ ಮದುವೆಗೆ 30 ಸಾವಿರ ರೂಪಾಯಿಯ ಚೆಕ್ ವಿತರಣೆ ಕಾರ್ಯಕ್ರಮ ಶುಕ್ರವಾರ ಅಝಾದ್ ನಗರ ಫಾರೂಕ್ ಮಸ್ಜಿದ್ ವಠಾರದಲ್ಲಿ ಬಷೀರ್ ಗುಜರಾತ್ ಅವರ ಅಧ್ಯಕ್ಷತೆ ಯಲ್ಲಿ ಜರುಗಿತು. ಅಬ್ದುಲ್ ಸಮದ್ ಅಹ್ಶನಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಅಬ್ದುಲ್ ಲತೀಫಿ ಪಿಲಾರ್ ಚಕ್ ವಿತರಿಸಿದರು. ಅಬ್ದುಲ್ ಖಾದರ್ , ಸಮೀರ್ ಪಿಲಾರ್ ಮುಹಮ್ಮದ್ ಆಝದ್ ನಗರ ಅಲ್ತಾಫ್ ಕುಂಪಲ ಉಪಸ್ಥಿತರಿದ್ದರು.
ಎಸ್-400, ಮಧ್ಯಮ ಸಾರಿಗೆ ವಿಮಾನ, ಡ್ರೋನ್ ಸಹಿತ ಪ್ರಮುಖ ಖರೀದಿಗಳಿಗೆ ರಕ್ಷಣಾ ಸಚಿವಾಲಯ ಒಪ್ಪಿಗೆ
ಹೊಸದಿಲ್ಲಿ,ಮಾ.27: ರಕ್ಷಣಾ ಸಚಿವಾಲಯವು 2.38 ಲಕ್ಷ ಕೋಟಿ ರೂ.ಗಳ ಬೃಹತ್ ಖರೀದಿ ಪ್ರಸ್ತಾವಕ್ಕೆ ಒಪ್ಪಿಗೆ ನೀಡಿದೆ. ಇವುಗಳಲ್ಲಿ ಭಾರತೀಯ ವಾಯುಪಡೆಗಾಗಿ 60 ಮಧ್ಯಮ ಸಾರಿಗೆ ವಿಮಾನಗಳು, ಐದು ಎಸ್-400 ದೀರ್ಘ ವ್ಯಾಪ್ತಿಯ ವಾಯು ರಕ್ಷಣಾ ವ್ಯವಸ್ಥೆ ಸ್ಕ್ವಾಡ್ರನ್ಗಳು ಮತ್ತು ದೂರ ನಿಯಂತ್ರಿತ ದಾಳಿ ಡ್ರೋನ್ಗಳ (ಆರ್ಪಿಎಸ್ಎ) ನಾಲ್ಕು ಸ್ಕ್ವಾಡ್ರನ್ಗಳು ಹಾಗೂ ಸೇನೆಗಾಗಿ ಫಿರಂಗಿಗಳು,ಮದ್ದುಗುಂಡುಗಳು ಮತ್ತು ನೆಟ್ವರ್ಕ್ ವ್ಯವಸ್ಥೆಗಳು ಸೇರಿವೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆದ ರಕ್ಷಣಾ ಖರೀದಿ ಮಂಡಳಿಯ ಸಭೆಯಲ್ಲಿ ಈ ಅನುಮೋದನೆಗಳನ್ನು ನೀಡಲಾಗಿದೆ. ರಕ್ಷಣಾ ಖರೀದಿಗಳಲ್ಲಿ ಮಧ್ಯಮ ಸಾರಿಗೆ ವಿಮಾನಗಳು ಸಿಂಹಪಾಲು (ಒಂದು ಲ.ಕೋ.ರೂ.) ಹೊಂದಿದ್ದು,ಹಳೆಯ ಸೋವಿಯತ್ ಮೂಲದ ಎನ್-32 ವಿಮಾನಗಳನ್ನು ಬದಲಿಸುವ ದೀರ್ಘ ವಿಳಂಬಿತ ಪ್ರಯತ್ನಗಳಿಗೆ ಚಾಲನೆ ನೀಡಲಿವೆ. ‘ಬಯ್ ಆ್ಯಂಡ್ ಮೇಕ್’ ಆಧಾರದಲ್ಲಿ ಈ ವಿಮಾನಗಳನ್ನು ಖರೀದಿಸಲಾಗುತ್ತಿದ್ದು,12 ವಿಮಾನಗಳು ಸಿದ್ಧ ಸ್ಥಿತಿಯಲ್ಲಿ ಪೂರೈಕೆಯಾದರೆ ಉಳಿದ 48 ವಿಮಾನಗಳನ್ನು ದೇಶೀಯ ಉದ್ಯಮದ ಪಾಲುದಾರಿಕೆಯೊಂದಿಗೆ ಭಾರತದಲ್ಲಿ ತಯಾರಿಸಲಾಗುತ್ತದೆ ಎಂದು ಬಲ್ಲ ಮೂಲಗಳು ತಿಳಿಸಿದವು. 50,000 ಕೋ.ರೂ.ಗಳ ವೆಚ್ಚದಲ್ಲಿ ರಶ್ಯಾಮೂಲದ ಇನ್ನೂ ಐದು ಎಸ್-400 ವಾಯು ರಕ್ಷಣಾ ವ್ಯವಸ್ಥೆಗಳನ್ನು ಖರೀದಿಸಲಾಗುತ್ತಿದೆ. ಆಪರೇಷನ್ ಸಿಂಧೂರ ಸಂದರ್ಭದಲ್ಲಿ ಇವು ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸಿದ್ದವು. ಭಾರತೀಯ ವಾಯುಪಡೆಯು 45,000 ಕೋ.ರೂ.ಗಳ ವೆಚ್ಚದಲ್ಲಿ ಸ್ಥಳೀಯ ನಿರ್ಮಾಣದ ದಾಳಿ ಡ್ರೋನ್ಗಳ ನಾಲ್ಕು ಸ್ಕ್ವಾಡ್ರನ್ಗಳನ್ನೂ ಪಡೆಯಲಿದ್ದು, ಪ್ರತಿ ಸ್ಕ್ವಾಡ್ರನ್ 8ರಿಂದ 10 ಶಸ್ತ್ರಸಜ್ಜಿತ ಮಾನವರಹಿತ ವೈಮಾನಿಕ ವ್ಯವಸ್ಥೆಗಳನ್ನು ಹೊಂದಿರಲಿವೆ. ಇದರ ಜೊತೆಗೆ ಎಸ್ಯು-30 ಎಂಕೆ-1 ಯುದ್ಧವಿಮಾನಗಳ ಜೀವಿತಾವಧಿಯನ್ನು ಹೆಚ್ಚಿಸಲು ಮತ್ತು ಕಾರ್ಯಾಚರಣಾ ಲಭ್ಯತೆಯನ್ನು ಕಾಯ್ದುಕೊಳ್ಳಲು ಅವುಗಳ ಇಂಜಿನ್ಗಳ ಸಂಪೂರ್ಣ ದುರಸ್ತಿಗೂ ಸಚಿವಾಲಯವು ಅನುಮೋದನೆ ನೀಡಿದೆ. ಸೇನೆಗಾಗಿ ಸುಮಾರು 2,500 ಕೋ.ರೂ.ಗಳ ವೆಚ್ಚದಲ್ಲಿ 300 ಧನುಷ್ ಫಿರಂಗಿಗಳ ಖರೀದಿಗೆ ಒಪ್ಪಿಗೆಯನ್ನು ನೀಡಲಾಗಿದ್ದು, ಇದರೊಂದಿಗೆ ಸೇನೆಯ ಬಳಿಯಿರುವ ಈ ಫಿರಂಗಿಗಳ ಸಂಖ್ಯೆ 444ಕ್ಕೆ ಹೆಚ್ಚಲಿದೆ. ಬೋಫೋರ್ಸ್ ವಿನ್ಯಾಸವನ್ನು ಆಧರಿಸಿ ಸ್ಥಳೀಯವಾಗಿ ಅಭಿವೃಧ್ಧಿಗೊಳಿಸಲಾದ ಈ ಫಿರಂಗಿಗಳು 38 ಕಿ.ಮೀ.ವರೆಗೆ ದಾಳಿ ವ್ಯಾಪ್ತಿಯನ್ನು ಹೊಂದಿವೆ. ಕಳೆದ ವರ್ಷ ಪಾಕಿಸ್ತಾನದೊಂದಿಗೆ ಯುದ್ಧದಲ್ಲಿ ತನ್ನ ಸಾಮರ್ಥ್ಯವನ್ನು ಸಾಬೀತುಗೊಳಿಸಿದ್ದ ಆಕಾಶ ತೀರ್ ಜೊತೆ ಸಂಯೋಜಿತ ಏರ್ ಡಿಫೆನ್ಸ್ ಟ್ರ್ಯಾಕ್ಡ್ ಸಿಸ್ಟಮ್ಗಳೊಂದಿಗೆ ಟ್ಯಾಂಕ್ಗಳಲ್ಲಿ ಬಳಸುವ ಕವಚ ಭೇದಕ ಮದ್ದುಗುಂಡುಗಳು, ಹೆಚ್ಚಿನ ಸಾಮರ್ಥ್ಯದ ರೇಡಿಯೊ ರಿಲೇ ವ್ಯವಸ್ಥೆಗಳು ಮತ್ತು ರನ್ವೇ ಅಗತ್ಯವಿಲ್ಲದ ಡ್ರೋನ್ಗಳ ಖರೀದಿಗೂ ಸಭೆಯು ಒಪ್ಪಿಗೆ ನೀಡಿದೆ.
Bengaluru | ಕಾಲೇಜು, ಆರ್ಟಿಒ ಕಚೇರಿಗಳಿಗೆ ಬಾಂಬ್ ಬೆದರಿಕೆ
ಬೆಂಗಳೂರು : ಸಿದ್ದಾರ್ಥ ವೈದ್ಯಕೀಯ ಕಾಲೇಜು ಸೇರಿ ಕೋಲಾರ ಮತ್ತು ಬೆಂಗಳೂರಿನ ವಿವಿಧ ಆರ್ಟಿಒ ಕಚೇರಿಗಳಿಗೆ ದುಷ್ಕರ್ಮಿಗಳು ಬಾಂಬ್ ಬೆದರಿಕೆ ಹಾಕಿರುವ ಘಟನೆ ಬೆಳಕಿಗೆ ಬಂದಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲೂಕಿನ ಟಿ.ಬೇಗೂರು ಬಳಿಯಿರುವ ಸಿದ್ದಾರ್ಥ ವೈದ್ಯಕೀಯ ಕಾಲೇಜಿಗೆ ಇಮೇಲ್ ಮೂಲಕ ಬೆದರಿಕೆ ಸಂದೇಶ ಕಳುಹಿಸಲಾಗಿದೆ. ಈ ಸಂಬಂಧ ಬಾಂಬ್ ನಿಷ್ಕ್ರಿಯ ದಳ, ನೆಲಮಂಗಲ ಗ್ರಾಮಾಂತರ ಪೊಲೀಸರು ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದಾರೆ. ಇತ್ತ ಬೆಂಗಳೂರಿನ ಯಶವಂತಪುರ, ರಾಜಾಜಿನಗರ, ಕೋರಮಂಗಲ ಸೇರಿ ನಗರದ ಹಲವು ಆರ್ಟಿಒ ಕಚೇರಿಗಳನ್ನು ಶುಕ್ರವಾರ ಮಧ್ಯಾಹ್ನ 2 ಗಂಟೆ ಸುಮಾರಿಗೆ ಸ್ಫೋಟಿಸುವುದಾಗಿ ಇ-ಮೇಲ್ ಕಳುಹಿಸಲಾಗಿದೆ. ಈ ಸಂಬಂಧ ಕೋರಮಂಗಲ ಪ್ರಾದೇಶಿಕ ಸಾರಿಗೆ ಅಧಿಕಾರಿಯೊಬ್ಬರು ಎಚ್ಎಸ್ಆರ್ ಲೇಔಟ್ ಪೊಲಿಸ್ ಠಾಣೆಗೆ ದೂರು ನೀಡಿದ್ದಾರೆ.
ಅಂಬಾತನಯ ಮುದ್ರಾಡಿ ಸಂಸ್ಕರಣೆ: ನಾಟಕ ವಿಮರ್ಶಾ ಕೃತಿಗಳ ಆಹ್ವಾನ
ಉಡುಪಿ, ಮಾ.27: ಅಧ್ಯಾಪಕ, ಕವಿ, ಲೇಖಕ, ಯಕ್ಷಗಾನ ಕಲಾವಿದ, ತಾಳಮದ್ದಳೆ ಅರ್ಥದಾರಿ ಅಂಬಾತನಯ ಮುದ್ರಾಡಿ (ಎಂ.ಕೇಶವ ಶೆಟ್ಟಿಗಾರ್) ಸಂಸ್ಕರಣೆಯಲ್ಲಿ ಉಡುಪಿ ರಂಗಭೂಮಿಯು, ಅಂಬಾತನಯ ಮುದ್ರಾಡಿ ಅವರ ಹೆಸರಿನ ಪುಸ್ತಕ ಪ್ರಶಸ್ತಿಯನ್ನು ಕಳೆದ ಎರಡು ವರ್ಷಗಳಿಂದ ನೀಡುತ್ತಾ ಬಂದಿದೆ. ಅಂಬಾತನಯ ಮುದ್ರಾಡಿ ಸಂಸ್ಕರಣೆಯ ತಲ್ಲೂರು ಫ್ಯಾಮಿಲಿ ಟ್ರಸ್ಟ್ ಸಹಯೋಗದ ಉಡುಪಿ ರಂಗಭೂಮಿ ಪುರಸ್ಕಾರ’ ಎಂದು ಕರೆಯಲ್ಪಡುವ ಈ ಪುಸ್ತಕ ಪ್ರಶಸ್ತಿಯು 15,000ರೂ. ನಗದು, ಪ್ರಶಸ್ತಿ ಪತ್ರ, ಸ್ಮರಣಿಕೆಯನ್ನು ಒಳಗೊಂಡಿದೆ. ಪ್ರಸ್ತುತ ಮೂರನೆಯ ವರ್ಷದ (2026ರ) ಪುಸ್ತಕ ಪುರಸ್ಕಾರಕ್ಕೆ ಹಿಂದಿನ ಎರಡು ವರ್ಷಗಳಲ್ಲಿ (2024, 2025ರಲ್ಲಿ ) ಪ್ರಥಮ ಆವೃತ್ತಿಯಲ್ಲಿ ಪ್ರಕಟವಾದ, ನಾಟಕ ರಂಗಕ್ಕೆ ಸಂಬಂಧಿಸಿದ ವಿಮರ್ಶಾ ಕೃತಿಗಳನ್ನು ಆಹ್ವಾನಿಸಲಾಗಿದೆ. 2024 ಮತ್ತು 2025ನೇ ಸಾಲಿನಲ್ಲಿ ಪ್ರಕಟವಾದ ನಾಟಕ ರಂಗಕ್ಕೆ ಸಂಬಂಧಿಸಿದ ವಿಮರ್ಶಾ ಕೃತಿಗಳ ಮೂರು ಪ್ರತಿಗಳನ್ನು ಲೇಖಕ/ ಪ್ರಕಾಶಕರು/ ರಂಗಕರ್ಮಿಗಳು/ ಅಥವಾ ರಂಗಾಸಕ್ತರು ಸ್ಪರ್ಧೆಯ ಸಂಚಾಲಕರಾದ ಬೆಳಗೋಡು ರಮೇಶ ಭಟ್, ‘ದಕ್ಷಿಣ ಕಾಶಿ’ (ಡಿ-1), ಎರಡನೆಯ ಮುಖ್ಯರಸ್ತೆ, ವಾಣಿ ವಿಲಾಸ್ ಮೊಹಲ್ಲಾ, ಮೈಸೂರು - 570 002 (ಮೊಬೈಲ್ 9341091821) ಈ ವಿಳಾಸಕ್ಕೆ ಎಪ್ರಿಲ್ 30ರೊಳಗೆ ತಲುಪುವಂತೆ ಕಳುಹಿಸಿ ಕೊಡಬಹುದು.
ಮಧ್ಯಪ್ರದೇಶ| 2.5 ಕೋಟಿ.ರೂ. ಪ್ರವಾಹ ಪರಿಹಾರ ಹಣ ದುರುಪಯೋಗ: ಕೆಬಿಸಿಯಲ್ಲಿ 50 ಲಕ್ಷ ರೂ.ಗೆದ್ದ ಅಧಿಕಾರಿಯ ಬಂಧನ
ಗ್ವಾಲಿಯರ್, ಮಾ. 27: 2011ರಲ್ಲಿ ಕೌನ್ ಬನೇಗಾ ಕರೋಡ್ ಪತಿ ದೂರದರ್ಶನ ಕಾರ್ಯಕ್ರಮದಲ್ಲಿ 50 ಲಕ್ಷ ರೂ. ಗೆದ್ದು ದೇಶಾದ್ಯಂತ ಖ್ಯಾತಿ ಗಳಿಸಿದ್ದ ಮಹಿಳಾ ತಹಶೀಲ್ದಾರರೊಬ್ಬರನ್ನು ಪ್ರವಾಹ ಪರಿಹಾರಕ್ಕೆ ಮೀಸಲಿರಿಸಲಾಗಿದ್ದ 2.57 ಕೋ.ರೂ.ವನ್ನು ದುರುಪಯೋಗಪಡಿಸಿಕೊಂಡ ಆರೋಪದಲ್ಲಿ ಮಧ್ಯಪ್ರದೇಶದ ಗ್ವಾಲಿಯರ್ನಿಂದ ಗುರುವಾರ ಬಂಧಿಸಲಾಗಿದೆ. 2021ರಲ್ಲಿ ಇಲ್ಲಿನ ಬರೋಡಾ ತಹಶೀಲ್ನಲ್ಲಿ ನಡೆದ ಅಕ್ರಮಗಳ ಆರೋಪದಲ್ಲಿ ಅಮಿತಾ ಸಿಂಗ್ ತೋಮರ್ ಅವರನ್ನು ಗುರುವಾರ ಬಂಧಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ ನಂತರ ನೆರೆಯ ಶಿವಪುರಿಯಲ್ಲಿರುವ ಜೈಲಿನಲ್ಲಿ ಇರಿಸಲಾಗಿದೆ ಎಂದು ಅವರು ಹೇಳಿದ್ದಾರೆ. ‘‘ಬರೋಡಾ ಉಪ ವಿಭಾಗೀಯ ಪೊಲೀಸ್ ಅಧಿಕಾರಿ (ಎಸ್ಡಿಒಪಿ) ಅವನೀತ್ ಶರ್ಮಾ ನೇತೃತ್ವದ ತಂಡ ತೋಮರ್ ಅವರನ್ನು ಗ್ವಾಲಿಯರ್ನ ಚಂದ್ರವದ್ನಿ ನಾಕಾದಲ್ಲಿರುವ ಅವರ ನಿವಾಸದಿಂದ ಬಂಧಿಸಿತು. ತೋಮರ್ ವಿಜಯಪುರದ ತಹಶೀಲ್ದಾರ್ ಆಗಿದ್ದರು. ಆದರೆ, ಜಿಲ್ಲಾಧಿಕಾರಿ ಅರ್ಪಿತ್ ವರ್ಮಾ ಅವರು ತೋಮರ್ ಅವರನ್ನು ಬುಧವಾರ ತಹಶೀಲ್ದಾರ್ ಹುದ್ದೆಯಿಂದ ತೆಗೆದು ಹಾಕಿದರು’’ ಎಂದು ಅಧಿಕಾರಿ ತಿಳಿಸಿದ್ದಾರೆ. ತೋಮರ್ ಅವರು ಇದಕ್ಕಿಂತ ಮೊದಲೇ ಉಚ್ಚ ನ್ಯಾಯಾಲಯ ಹಾಗೂ ಸುಪ್ರೀಂ ಕೋರ್ಟ್ನಲ್ಲಿ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು. ಆದರೆ, ಅವರ ಅರ್ಜಿಯನ್ನು ಎರಡೂ ನ್ಯಾಯಾಲಯಗಳು ತಿರಸ್ಕರಿಸಿದ್ದವು.
ತುಳುವಿನಲ್ಲಿ ಕಾರ್ಯಕ್ರಮವಲ್ಲ; ಅಧ್ಯಯನ ನಡೆಯಬೇಕು: ಡಾ.ಕುಂಬ್ಳೆ
ಉಡುಪಿ, ಮಾ.27: ತುಳುವಿನಲ್ಲಿ ಕಾರ್ಯಕ್ರಮ ಮಾಡಿ ಸಂಭ್ರಮಿದರೆ ಸಾಲದು, ತುಳುವಿನ ಬಗ್ಗೆ ಅಧ್ಯಯನ ನಡೆಯಬೇಕು ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಶ್ರೀಧರ್ಮಸ್ಥಳ ಮಂಜುನಾಥೇಶ್ವರ ತುಳು ಪೀಠದ ಸಂಯೋಜಕ ಡಾ.ಧನಂಜಯ ಕುಂಬ್ಳೆ ಹೇಳಿದ್ದಾರೆ. ತುಳುಕೂಟ ಉಡುಪಿ, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ತುಳು ಪೀಠ, ಮಂಗಳೂರು ವಿಶ್ವವಿದ್ಯಾನಿಲಯ, ಅಜ್ಜರಕಾಡು ಡಾ.ಜಿ.ಶಂಕರ್ ಪ್ರಥಮ ದರ್ಜೆ ಮಹಿಳಾ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರ ಮತ್ತು ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿ ಇವುಗಳ ಸಂಯುಕ್ತ ಆಶ್ರಯದಲ್ಲಿ ಮಹಿಳಾ ಕಾಲೇಜಿನಲ್ಲಿ ನಡೆದ ತುಳುಮಿನದನ -2026ರ ಉದ್ಘಾಟನಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡುತಿದ್ದರು. ನಮ್ಮ ಕರಾವಳಿಯಲ್ಲಿ ಹಲವು ಭಾಷೆಗಳಿವೆ. ಕನ್ನಡ ನಮ್ಮ ಆಡಳಿತ ಭಾಷೆ ಆದರೂ ಕೂಡಾ ತುಳು ಬಾಸೆಗೇ ತನ್ನದೇ ಆದ ಪ್ರಾಧಾನ್ಯತೆ ಇದೆ. ತುಳುನಾಡಿನ ಚರಿತ್ರೆಯ ಪ್ರಕಾರ ನಮ್ಮ ನಾಡನ್ನು ಹಿಂದಿನ ಕಾಲದಲ್ಲಿ ಆಳಿದ ವರು ಕನ್ನಡದವರು. ಹೀಗಾಗಿ ತುಳು ಬಾಸೆಗೆ ಆಡಳಿತದ ಘನತೆ ಸಿಗಲಿಲ್ಲ. ತುಳು ಬಾಸೆಗೆ ಬಹಳ ದೊಡ್ಡ ಜನಪದ ಸಂಸ್ಕೃತಿ ಇದೆ. ತುಳುನಾಡಿನ ಪಾಡ್ದನ, ಒಗಟುಗಳು, ಗಾದೆಗಳು, ಕಥೆಗಳು ಇಂತಹ ಜನಪದ ಸಂಸ್ಕೃತಿ ಯನ್ನು ಉಳಿಸಿ ಬೆಳೆಸುವ ಅಗತ್ಯ ಇದೆ. ಆ ನಿಟ್ಟಿನಲ್ಲಿ ತುಳುವಿಗೆ ಸಂಶೋಧನ ಕೇಂದ್ರದ ಅಗತ್ಯತೆ ಇದೆ. ಸರಕಾರ ಇದನ್ನು ಆದಷ್ಟು ಬೇಗ ನೀಡಬೇಕು ಎಂದವರು ಹೇಳಿದರು. ತುಳುಕೂಟ ಉಡುಪಿಯ ಅಧ್ಯಕ್ಷ ಬಿ.ಜಯಕರ ಶೆಟ್ಟಿ ಇಂದ್ರಾಳಿ ಇವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲಾ ಅತ್ಲೆಟಿಕ್ ಅಸೋಸಿಯೇಶನ್ಸ್ನ ಅಧ್ಯಕ್ಷ ಹರಿಪ್ರಸಾದ್ ರೈ ತುಳುಮಿನದನ ಕಾರ್ಯಕ್ರಮ ವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಶುಭ ಹಾರೈಸಿದರು. ಸಮಾಜ ಸೇವಕಿ ವಿದ್ಯಾ ಲತಾ ಶೆಟ್ಟಿ, ಬನ್ನಂಜೆ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಮಾಧವ ಪೂಜಾರಿ ಬನ್ನಂಜೆ, ಕಾಲೇಜಿನ ಪ್ರಾಚಾರ್ಯ ಸೋಜನ್ ಕೆ.ಜಿ. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ತುಳು ಪೀಠದ ಸಹಾಯಕ ಪ್ರಸಾದ್ ಅಂಚನ್ ವಂದಿಸಿದರೆ, ಪೂರ್ವಿಕಕಾಯಕ್ರಮ ನಿರೂಪಿಸಿದರು. ಸಭಾಕಾರ್ಯಕ್ರಮದ ಬಳಿಕ ತುಳು ಮಿನದನದ ವಿವಿಧ ಸ್ಪರ್ಧೆಗಳು ನಡೆದವು. ಸಮಾರೋಪ: ಸಮಾರೋಪ ಸಮಾರಂಭದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ತುಳುಕೂಟದ ಕಾರ್ಯದರ್ಶಿ ಗಂಗಾಧರ ಕಿದಿಯೂರು, ತುಳುಮಿನದ ಸಂಚಾಲಕ ದಯಾನಂದ ಡಿ., ವಿ.ಕೆ.ಯಾದವ್, ಪ್ರಭಾಕರ ಭಂಡಾರಿ, ಸರೋಜ ಯಶ್ವಂತ್, ಪ್ರಭಾವತಿ, ಕೋಶಾಧಿಕಾರಿ ಚೈತನ್ಯ ಎಮ್.ಜಿ. ಉಪಸ್ಥಿತರಿದ್ದರು.
ಕೇರಳದಲ್ಲೂ ಕರ್ನಾಟಕ ಮಾದರಿ ಗ್ಯಾರಂಟಿ ಜಾರಿ : ಝಮೀರ್ ಅಹ್ಮದ್ ಖಾನ್
ಕ್ಯಾಲಿಕಟ್ : ಕೇರಳದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಕರ್ನಾಟಕ ಮಾದರಿ ಗ್ಯಾರಂಟಿ ಯೋಜನೆ ಅನುಷ್ಠಾನಗೊಳಿಸಲಿದೆ ಎಂದು ಸಚಿವ ಝಮೀರ್ ಅಹ್ಮದ್ ಖಾನ್ ತಿಳಿಸಿದ್ದಾರೆ. ಕೇರಳ ಚುನಾವಣೆ ಪ್ರಚಾರದಲ್ಲಿರುವ ಅವರು, ಶುಕ್ರವಾರ ಕ್ಯಾಲಿಕಟ್ ನ ಬೇಪೂರ್ ವಿಧಾನ ಸಭೆ ಕ್ಷೇತ್ರದ ಯುಡಿಎಫ್ ಅಭ್ಯರ್ಥಿ ಪಿ.ವಿ.ಅನ್ವರ್ ಪರ ಪ್ರಚಾರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು. ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ, ಹೆಣ್ಣು ಮಕ್ಕಳಿಗೆ ಮಾಸಿಕ ಒಂದು ಸಾವಿರ ರೂ., ಪ್ರತಿ ಕುಟುಂಬಕ್ಕೆ 25 ಲಕ್ಷ ರೂ. ವಿಮೆ, ಹಿರಿಯ ನಾಗರಿಕರಿಗೆ 2 ಸಾವಿರ ರೂ. ಮಾಸಿಕ ಪಿಂಚಣಿ, ಐದು ಲಕ್ಷ ರೂ.ವರೆಗೆ ಬಡ್ಡಿ ರಹಿತ ವೃತ್ತಿ ಪ್ರೋತ್ಸಾಹ ಸಾಲ ಯೋಜನೆಗಳನ್ನು ರಾಹುಲ್ ಗಾಂಧಿ ಇಲ್ಲಿಯೂ ಘೋಷಣೆ ಮಾಡಿದ್ದು, ನಮ್ಮ ಪಕ್ಷದ ಸರಕಾರಕ್ಕೆ ಆಶೀರ್ವಾದ ಮಾಡಿ ಎಂದು ಅವರು ಮನವಿ ಮಾಡಿದರು. ಎಲ್ಡಿಎಫ್ ನವರು ಗ್ಯಾರಂಟಿ ಜಾರಿ ಮಾಡಲು ಸಾಧ್ಯವಿಲ್ಲ ಎನ್ನುತ್ತಾರೆ. ಕರ್ನಾಟಕದಲ್ಲೂ ಪ್ರತಿಪಕ್ಷದವರು ಹಾಗೆಯೆ ಹೇಳಿದ್ದರು. ನಾವು ಜಾರಿ ಮಾಡಲಿಲ್ಲವೆ? ಇಲ್ಲಿ ಹತ್ತು ವರ್ಷ ಅಧಿಕಾರ ನಡೆಸಿದ ಅವರ ಸಾಧನೆ ಶೂನ್ಯ ಎಂದು ಝಮೀರ್ ಅಹ್ಮದ್ ಟೀಕಿಸಿದರು. ಕಾರ್ಯಕ್ರಮದ ನಂತರ ಝಮೀರ್ ಅಹ್ಮದ್ ಖಾನ್, ಯಳತ್ತೂರು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿದ್ಯಾ ಬಾಲಕೃಷನ್ ಪರ ರೋಡ್ ಶೋ ನಡೆಸಿದರು.
ಮಂಗಳೂರು: ಕ್ರೇನ್ನಿಂದ ಮಣ್ಣು ತುಂಬಿದ್ದ ಬಕೆಟ್ ಬಿದ್ದು ಕಾರ್ಮಿಕ ಮೃತ್ಯು
ಉಳ್ಳಾಲ: ಹೊಸ ಬಾವಿ ಕೊರೆಯುವ ಕಾಮಗಾರಿ ನಡೆಸುತ್ತಿದ್ದ ವೇಳೆ ಕ್ರೇನ್ ನಿಂದ ಮಣ್ಣು ತುಂಬಿದ್ದ ಕಬ್ಬಿಣದ ಬಕೆಟ್ ಕಾರ್ಮಿಕನ ತಲೆಗೆ ಬಿದ್ದ ಪರಿಣಾಮ ಅವರು ದಾರುಣವಾಗಿ ಮೃತಪಟ್ಟ ಘಟನೆ ಶುಕ್ರವಾರ ಸಂಜೆ ಕುತ್ತಾರು ಪದವಿನ ಸಲಾತ್ ನಗರದಲ್ಲಿ ನಡೆದಿದೆ. ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕು ಮಲ್ಲಾಪುರ ನಿವಾಸಿ ಶಿವಕುಮಾರ ಜಿ.ಕೆ ( 30) ಮೃತರು ಎಂದು ಗುರುತಿಸಲಾಗಿದೆ. ಉಳ್ಳಾಲ ತಾಲೂಕಿನ ಕುತ್ತಾರುವಿನ ಸಲಾತ್ ನಗರದಲ್ಲಿ ಹೊಸ ಬಾವಿ ನಿರ್ಮಾಣ ಕಾಮಗಾರಿ ನಡೆಯುತ್ತಿತ್ತು. ಒಟ್ಟು ಆರು ಜನ ಕೂಲಿ ಕಾರ್ಮಿಕರು ಕೆಲಸದಲ್ಲಿ ನಿರತರಾಗಿದ್ದರು. ಇವರ ಪೈಕಿ ಶಿವಕುಮಾರ್ ಸೇರಿ ಮೂವರು ಕಾರ್ಮಿಕರು ಮೂವತ್ತು ಅಡಿ ಆಳ ಕೊರೆಯಲಾದ ಬಾವಿಯೊಳಗಡೆ ಕೆಲಸ ನಿರ್ವಹಿಸುತ್ತಿದ್ದರು. ಈ ವೇಳೆ ಕ್ರೇನ್ ಮೂಲಕ ಕಬ್ಬಿಣದ ಬಕೆಟ್ನಲ್ಲಿ ಮಣ್ಣು ಮೇಲಕ್ಕೆತ್ತುತ್ತಿದ್ದ ಸಂದರ್ಭ ಕ್ರೇನ್ನ ಕೊಕ್ಕೆಯಿಂದ ಬೇರ್ಪಟ್ಟ ಮಣ್ಣು ತುಂಬಿದ ಬಕೆಟ್ ಶಿವಕುಮಾರ್ ಅವರ ತಲೆ ಮೇಲೆ ಬಿದ್ದಿದೆ. ಗಂಭೀರ ಗಾಯಗೊಂಡಿದ್ದ ಶಿವಕುಮಾರ್ ಅವರನ್ನು ಮೇಲಕ್ಕೆತ್ತಿ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ಸಾಗಿಸಲಾದರೂ ದಾರಿ ಮಧ್ಯೆ ಅವರು ಮೃತಪಟ್ಟಿರುವುದಾಗಿ ತಿಳಿದುಬಂದಿದೆ. ಬಾವಿಯೊಳಗಿದ್ದ ಇತರ ಇಬ್ಬರು ಕಾರ್ಮಿಕರು ಸಣ್ಣ ಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ. ಮೃತ ಶಿವಕುಮಾರ್ ವಿವಾಹಿತರಾಗಿದ್ದು ತನ್ನ ಪತ್ನಿ ಮತ್ತು ಮೂರು ವರ್ಷದ ಗಂಡು ಮತ್ತು ಒಂದು ವರ್ಷದ ಹೆಣ್ಣು ಮಗಳೊಂದಿಗೆ ತೊಕ್ಕೊಟ್ಟುವಿನ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು.
ಇಂಧನ ಆಮದು ಮೇಲಿನ ಹೆಚ್ಚುತ್ತಿರುವ ಅವಲಂಬನೆ: ಮೋದಿ ಸರಕಾರವನ್ನು ತರಾಟೆಗೆ ತೆಗೆದುಕೊಂಡ ಕಾಂಗ್ರೆಸ್
ಹೊಸದಿಲ್ಲಿ, ಮಾ. 27: ಕಚ್ಚಾ ತೈಲ, ಎಲ್ಪಿಜಿ ಮತ್ತು ನೈಸರ್ಗಿಕ ಅನಿಲದ ಆಮದಿನ ಮೇಲೆ ಭಾರತ ಹೆಚ್ಚೆಚ್ಚು ಅವಲಂಬಿಸುತ್ತಿರುವುದಕ್ಕಾಗಿ ಕಾಂಗ್ರೆಸ್ ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ ಸರಕಾರದ ವಿರುದ್ಧ ಆಕ್ರೋಶವನ್ನು ವ್ಯಕ್ತಪಡಿಸಿದೆ. ಸ್ವಾವಲಂಬನೆಗೆ ಸರಕಾರ ನೀಡುತ್ತಿದ್ದ ಒತ್ತು ಏನಾಯಿತು ಎಂದು ಪ್ರಶ್ನಿಸಿದೆ. ‘‘ಅಡುಗೆ ಅನಿಲ ಪೂರೈಕೆ ಬಗ್ಗೆ ಮೋದಿಯವರು ಅಬ್ಬರದ ಭರವಸೆಗಳನ್ನು ನೀಡಿದ್ದರು. ಅದು ಭರವಸೆಯಾಗಿಯೇ ಉಳಿದಿದೆ’’ ಎಂದು ಕಾಂಗ್ರೆಸ್ನ ಸಂಪರ್ಕ ವಿಭಾಗದ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಸಾಮಾಜಿಕ ಮಾಧ್ಯಮ ‘ಎಕ್ಸ್’ನಲ್ಲಿ ಬರೆದಿದ್ದಾರೆ. ಭಾರತ ನೈಸರ್ಗಿಕ ಅನಿಲ ಆಮದನ್ನೇ ಅವಲಂಬಿಸುತ್ತಿದೆ ಎಂದು ಅವರು ಹೇಳಿದ್ದಾರೆ. ‘‘2014-15 ಮತ್ತು 2024-25ರ ನಡುವಿನ ಅವಧಿಯಲ್ಲಿ, ಕಚ್ಚಾ ತೈಲ ಆಮದಿನ ಮೇಲಿನ ಭಾರತದ ಅವಲಂಬನೆ 84 ಶೇ.ದಿಂದ 90 ಶೇ.ಕ್ಕೆ ಹೆಚ್ಚಿದೆ’’ ಎಂದು ಅವರು ಹೇಳಿದರು.
ಅಡುಗೆ ಅನಿಲ ಹಂಚಿಕೆಯಲ್ಲಿ ದಕ್ಷಿಣ ಭಾರತಕ್ಕೆ ಮೋಸ : ಡಿ.ಕೆ.ಶಿವಕುಮಾರ್
ಬೆಂಗಳೂರು : ಹಾರ್ಮುಝ್ ಜಲಸಂಧಿ ದಾಟಿ ಎರಡು ಹಡಗುಗಳು ದೇಶಕ್ಕೆ ಬಂದಿವೆ. ಅದರಲ್ಲಿ ಒಂದನ್ನು ದಕ್ಷಿಣ ಭಾರತದ ರಾಜ್ಯಗಳಾದ ಕರ್ನಾಟಕ, ತಮಿಳುನಾಡಿಗೆ ಕಳುಹಿಸಬಹುದಿತ್ತಲ್ಲವೇ? ಗುಜರಾತಿಗೆ ಏಕೆ ಹೋದವು. ಈಗ ಕೇರಳ, ತಮಿಳುನಾಡಿನಲ್ಲಿ ಚುನಾವಣೆಗಳಿವೆ. ದಕ್ಷಿಣದ ರಾಜ್ಯಗಳಲ್ಲಿ ಅವರ ಪ್ರಭಾವ ಇಲ್ಲ ಎನ್ನುವ ಕಾರಣಕ್ಕೆ ದಕ್ಷಿಣ ಭಾರತವನ್ನು ಕೆಟ್ಟ ದೃಷ್ಟಿಯಿಂದ ನೋಡುತ್ತಿದ್ದಾರೆ ಎಂದು ಕೇಂದ್ರ ಸರಕಾರದ ವಿರುದ್ಧ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕಿಡಿಗಾರಿದರು. ಶುಕ್ರವಾರ ನಗರದ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಈ ಹಿಂದೆ ಎಲ್ಲ ಪೆಟ್ರೋಲ್ ಬಂಕ್ ಗಳಲ್ಲಿ ಮುಸಲ್ಮಾನ ಹೆಣ್ಣುಮಗಳು ಗ್ಯಾಸ್ ನೀಡಿದ್ದಕ್ಕೆ ಧನ್ಯವಾದ ಹೇಳುತ್ತಿರುವ ಹೋರ್ಡಿಂಗ್ ಇರುತ್ತಿತ್ತು. ಈಗ ಏಕೆ ಅದನ್ನೆಲ್ಲಾ ತೆಗೆದು ಹಾಕಿದ್ದಾರೆ. ಕೇಂದ್ರ ಸರಕಾರ ಪ್ರತಿದಿನ ಗ್ರಾಹಕರ ಪಿಕ್ ಪಾಕೆಟ್ ಮಾಡುತ್ತಿದೆ ಎಂದು ದೂರಿದರು. 2014ರ ಮೇ 26 ರಿಂದ ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚಾಗುತ್ತಾ ಹೋಯಿತು. ಪೆಟ್ರೋಲ್ 71 ರೂ., ಡೀಸೆಲ್ ಅನ್ನು 56 ರೂಪಾಯಿಗೆ ನೀಡಲಾಗುತ್ತಿತ್ತು. ಈಗ 103 ರೂಪಾಯಿ ಆಗಿದೆ. ಕಚ್ಚಾ ತೈಲಬೆಲೆ ಕಡಿಮೆ ಇದ್ದರೂ ನಮ್ಮಲ್ಲಿ ಬೆಲೆ ಹೆಚ್ಚಳಕ್ಕೆ ಏನು ಕಾರಣ ಎಂದು ಅವರು ಪ್ರಶ್ನಿಸಿದರು. ಕೇಂದ್ರ ಸರಕಾರ ಇಂಧನ ತೈಲದ ಮೇಲಿನ ವಿಶೇಷ ಹೆಚ್ಚುವರಿ ಅಬಕಾರಿ ಸುಂಕ ಇಳಿಕೆ ಮಾಡಿರುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಶಿವಕುಮಾರ್, ಭಾರತ ಸರಕಾರ ನಮ್ಮನ್ನು ಕೊಲೆ ಮಾಡುತ್ತಿದೆ. ಚುನಾವಣೆಗಾಗಿ ತೈಲ ಬೆಲೆ ಕಡಿಮೆ ಮಾಡಿದ್ದಾರೆ. ನಯಾರ ಕಂಪನಿಯವರು ಇಂಧನ ಬೆಲೆಯನ್ನು ಹೆಚ್ಚಳ ಮಾಡಿದ್ದಾರೆ ಎಂದು ಹರಿಹಾಯ್ದರು. ಚುನಾವಣೆ ಮುಗಿದ ತಕ್ಷಣ ಮತ್ತೆ ಕೇಂದ್ರ ಸರಕಾರ ಪೆಟ್ರೋಲ್, ಡಿಸೇಲ್ ಬೆಲೆ ಹೆಚ್ಚಳ ಮಾಡಲಿದೆ. ಈ ರೀತಿ ಹಿಂದೆಯೂ ಮಾಡಿದ್ದಾರೆ. ಇದೆಲ್ಲವೂ ಚುನಾವಣೆ ಗಿಮಿಕ್. ಕೇಂದ್ರ ಸರಕಾರ ದಿನಕ್ಕೆ 1 ಸಾವಿರ ಕೋಟಿ ರೂ.ಹೆಚ್ಚುವರಿ ತೆರಿಗೆಯನ್ನು ಸಂಗ್ರಹ ಮಾಡುತ್ತಿದೆ. ಇದು ಯಾರಿಗೆ ತಲುಪುತ್ತಿದೆ. ಈ ಹಿಂದೆ ಇಂಧನಗಳ ಬೆಲೆ ಹೆಚ್ಚಿಸಿದಾಗ 100 ನಾಟ್ ಔಟ್ ಎಂದು ಹೋರಾಟ ಮಾಡಿದ್ದೆವು. ಈಗ ಅವರಿಗೆ ಬೇಕಾದಂತಹ ಕಂಪೆನಿಗಳಿಗೆ ಅನುಕೂಲವಾಗಲು ಟ್ರಯಲ್ ರನ್ ಮಾಡುತ್ತಿದ್ದಾರೆ ಎಂದು ಶಿವಕುಮಾರ್ ದೂರಿದರು. ಅಂತರ್ ರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲ ಬೆಲೆ ಏರಿಕೆಯಾಗಿದೆ. ನಮ್ಮ ರಾಜ್ಯದ ಗ್ರಾಹಕರಿಗೆ ಅನಿಲ ಸಿಲಿಂಡರ್ ಅನ್ನು ಸರಿಯಾದ ರೀತಿಯಲ್ಲಿ ನೀಡಲು ಕೇಂದ್ರಕ್ಕೆ ಆಗುತ್ತಿಲ್ಲ ಎಂದು ಉಪ ಮುಖ್ಯಮಂತ್ರಿ ತಿಳಿಸಿದರು.
ಭಾರತ ತಲುಪಿದ 42 ಸಾವಿರ ಮೆಟ್ರಿಕ್ ಟನ್ ಎಲ್ಪಿಜಿ ಹೊತ್ತ ಜಗವಸಂತ್ ಕಾರ್ಗೊ ಹಡಗು
ಅಹ್ಮದಾಬಾದ್,ಮಾ.27: ಮಧ್ಯಪ್ರಾಚ್ಯ ಸಂಘರ್ಷ ಹಾಗೂ ಹಾರ್ಮುಝ್ ಜಲಸಂಧಿಯ ಮುಚ್ಚುಗಡೆ ವಿದ್ಯಮಾನಗಳ ನಡುವೆ ಇನ್ನೊಂದು ಎಲ್ಪಿಜಿ ಕಾರ್ಗೊ ಹಡಗು ‘ಜಗವಸಂತ್’ ಶುಕ್ರವಾರ ಗುಜರಾತ್ನ ಕಾಂಡ್ಲಾ ಬಂದರಿನಲ್ಲಿ ಲಂಗರುಹಾಕಿದೆ. ಈ ಹಡಗು 42 ಸಾವಿರ ಮೆಟ್ರಿಕ್ ಟನ್ ಎಲ್ಪಿಜಿ ಇಂಧನವನ್ನು ಹೊತ್ತು ತಂದಿದೆ. ಜಗವಸಂತ್ ಹಾಗೂ ಇನ್ನೊಂದು ಎಲ್ಪಿಜಿ ಟ್ಯಾಂಕರ್ ನೌಕೆ ಪೈನ್ ಗ್ಯಾಸ್, ಸೋಮವಾರದಂದು ಭಾರತದೆಡೆಗೆ ಪ್ರಯಾಣವನ್ನು ಆರಂಭಿಸಿತ್ತು. ಆರಬ್ಬಿ ಸಮುದ್ರವನ್ನು ತಲುಪಲು ಅಲ್ಪದೂರದ ಹಾಗೂ ನೇರವಾದ ಸಮುದ್ರಮಾರ್ಗವಾದ ಹಾರ್ಮುಝ್ ಜಲಸಂಧಿಯ ಬದಲು ಅಸಾಮಾನ್ಯ ಸಮುದ್ರ ಮಾರ್ಗವಾದ ಖ್ವೆಶಮ್-ಲಾರಕ್ ಸಮುದ್ರ ಕಾಲುವೆ ಮಾರ್ಗವನ್ನು ಬಳಸಿಕೊಂಡಿದ್ದವು. ಈ ಎರಡೂ ಹಡಗುಗಳು ಜೊತೆಯಾಗಿ ಭಾರತಕ್ಕೆ ಪ್ರಯಾಣವನ್ನು ಆರಂಭಿಸಿದ್ದು, ಪರಸ್ಪರ ನಿಕಟವಾಗಿ ಸಂಚರಿಸಿದ್ದವು. ಹಡಗಿನ ಮೇಲೆ ಭಾರತೀಯ ಹಡಗು ಹಾಗೂ ನಾವಿಕರು ಹಾಗೂ ಅಖಿಲ ಭಾರತ ನಾವಿಕರು’ ಎಂಬ ಸಂದೇಶಗಳಿಂದ ಮೊದಲ್ಗೊಂಡು ‘ಪೈನ್ ಗ್ಯಾಸ್ ಇಂಡಿಯನ್ ಶಿಪ್ ಹಾಗೂ ಜೆಜಿ ವಸಂತ್ ಇಂಡ್ ಶಿಪ್ ಆ್ಯಂಡ್ ಕ್ರ್ಯೂ ’ ಮತ್ತಿತರ ಸಂದೇಶಗಳನ್ನು ಒಳಗೊಂಡ ಸಂದೇಶಗಳನ್ನು ಹಡಗಿನ ಮೇಲೆ ಲಗತ್ತಿಸಲಾಗಿತ್ತು. ಈ ಎರಡೂ ಹಡಗುಗಳು ಇರಾನ್ನ ಅಧಿಕಾರಿಗಳಿಂದ ಪೂರ್ವಭಾವಿ ಅನುಮತಿಯನ್ನು ಪಡೆದುಕೊಂಡೇ ಪ್ರಯಾಣವನ್ನು ಆರಂಭಿಸಿದ್ದವು. ‘ಜಗವಸಂತ್’, ಹಾರ್ಮುಝ್ ಜಲಸಂಧಿ ಮುಚ್ಚುಗಡೆಗೊಂಡ ಬಳಿಕ ಭಾರತಕ್ಕೆ ಆಗಮಿಸಿದ ಮೂರನೇ ತೈಲ ಟ್ಯಾಂಕರ್ ಹಡಗು ಆಗಿದೆ. ಇದಕ್ಕೂ ಮುನ್ನ ಇನ್ನೆರಡು ಎಲ್ಪಿಜಿ ಟ್ಯಾಂಕರ್ಗಳಾದ ನಂದಾದೇವಿ ಹಾಗೂ ಶಿವಾಲಿಕ್, ಗುಜರಾತ್ನ ಬಂದರಿಗೆ ಆಗಮಿಸಿದ್ದವು.
ಇರಾನ್ ಶಾಲಾ ಮೇಲಿನ ದಾಳಿ ಘಟನೆಗೆ ನ್ಯಾಯ ಸಿಗಬೇಕಾಗಿದೆ: ವಿಶ್ವಸಂಸ್ಥೆ ಆಗ್ರಹ
ಮಿನಾಬ್ ಶಾಲಾ ಮೇಲಿನ ದಾಳಿ ಯುದ್ಧಾಪರಾಧ, ಉದ್ದೇಶಪೂರ್ವಕ ಕೃತ್ಯ: ಇರಾನ್
ಹಾವೇರಿ ಜಿಲ್ಲೆ ಶಿಗ್ಗಾವಿ ತಾಲೂಕಿನ ಶ್ಯಾಡಂಬಿ ಗ್ರಾಮದಲ್ಲಿ ಮೈಲಾರಲಿಂಗೇಶ್ವರ ಜಾತ್ರಾ ಮಹೋತ್ಸವ ಅದ್ಧೂರಿಯಾಗಿ ನಡೆಯಿತು. ಈ ವೇಳೆ ಗೊರವಯ್ಯ ನೀಲಪ್ಪ ಮಾಕಪ್ಪ ಕಾರ್ಣಿಕ ನುಡಿದಿದ್ದಾರೆ. ಮುತ್ತು ಉತ್ಪತ್ತಿ ಆಯಿತು; ಶಿಶುವಿಗೆ ಹಾಲೇರಿಯಿತಲೇ ಪರಾಕ್ ಎಂದು ಹೇಳಿದ್ದಾರೆ. ಇದರ ಅರ್ಥ ಈ ವರ್ಷ ಉತ್ತಮ ಮಳೆ, ಬೆಳೆಯಾಗಲಿದೆ. ಎಲ್ಲರೂ ಸಂತೋಷದಿಂದ ಇರಲಿದ್ದಾರೆ ಎಂದಾಗಿದೆ.
ಮಾ.28: ಉದ್ಯಮಿ ವೈಟ್ಸ್ಟೋನ್ ಶರೀಫ್ರಿಂದ ವಿದ್ಯಾರ್ಥಿ ವೇತನ ವಿತರಣೆ
ಮಂಗಳೂರು,ಮಾ.27: ವೈಟ್ಸ್ಟೋನ್ ಚಾರಿಟೇಬಲ್ ಟ್ರಸ್ಟ್, ಬೀ ಹ್ಯೂಮನ್ ಮತ್ತು ಪುತ್ತೂರು ಕಮ್ಯೂನಿಟಿ ಸೆಂಟರ್ನ ಸಹಯೋಗದಲ್ಲಿ ಉದ್ಯಮಿ ಬಿ.ಎಂ.ಶರೀಫ್ ಬೋಳಾರ ಅವರಿಂದ 272 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಣೆ ಕಾರ್ಯಕ್ರಮವು ಮಾ. 28ರಂದು ಬೆಳಗ್ಗೆ 9ಕ್ಕೆ ನಗರದ ಪುರಭವನದಲ್ಲಿ ನಡೆಯಲಿದೆ. ದ.ಕ. ಜಿಲ್ಲೆಯ ಉದ್ಯಮಿಯೊಬ್ಬರು ವೈಯುಕ್ತಿಕವಾಗಿ ಇಷ್ಟೊಂದು ಮೊತ್ತದ ವಿದ್ಯಾರ್ಥಿ ವೇತನ ನೀಡುವುದು ಇದು ಮೊದಲ ಬಾರಿಯಾಗಿದೆ. 2025-26ನೆ ವಾರ್ಷಿಕ ಅವಧಿಯಲ್ಲಿ ಶರೀಫ್ ವೈಟ್ಸ್ಟೋನ್ 41 ಲಕ್ಷ ರೂ. ಮೊತ್ತದ ವಿದ್ಯಾರ್ಥಿ ವೇತನವನ್ನು ಪುತ್ತೂರು ಸೆಂಟರ್ನ ವಿದ್ಯಾರ್ಥಿಗಳಿಗೆ ನೀಡಿರುತ್ತಾರೆ ಎಂದು ಪ್ರಕಟನೆ ತಿಳಿಸಿದೆ.
ಯುಎಇಯಲ್ಲಿ ಮುಂದುವರಿದ ಭಾರೀ ಮಳೆಗೆ ರಸ್ತೆಗಳು ಜಲಾವೃತ; ಹಲವೆಡೆ ಕೃತಕ ನೆರೆ
ದುಬೈ: ಯುಎಇಯಾದ್ಯಂತ ಗುರುವಾರ ರಾತ್ರಿ ಗುಡುಗು ಸಹಿತ ಭಾರಿ ಮಳೆಯಾಗಿದ್ದು, ಇದರಿಂದ ಹಲವು ಕಡೆ ಕೃತಕ ನೆರೆಯಾಗಿದ್ದು, ಜನಜೀವನ ಅಸ್ತವ್ಯಸ್ತವಾಗಿತ್ತು. ಗುರುವಾರ ತಡ ರಾತ್ರಿ ಯುಎಇಯ ಅಬುಧಾಬಿ, ದುಬೈ, ಶಾರ್ಜಾ, ಅಜ್ಮಾನ್, ರಾಸ್ ಅಲ್ ಖೈಮಃ ಸೇರಿದಂತೆ ಹಲವಡೆ ಭಾರಿ ಗುಡುಗು, ಮಿಂಚು ಸಹಿತ ಮಳೆ ಆಗಿದೆ. ಇದರಿಂದ ರಾತ್ರಿಯಿಂದಲೇ ಹಲವು ಕಡೆಗಳ ಪ್ರಮುಖ ರಸ್ತೆಗಳು ಜಲಾವೃತಗೊಂಡಿದ್ದು, ಶುಕ್ರವಾರ ರಸ್ತೆಗಳು ಸಂಪೂರ್ಣ ಬಂದಾಗಿತ್ತು. ಇದರಿಂದ ಜನಜೀವನ ಅಸ್ತವ್ಯಸ್ತಗೊಂಡಿತ್ತು. ಜನ ಮನೆಯಿಂದ ಹೊರಬರಲು ಪರದಾಟ ನಡೆಸುವಂತಾಯಿತು. ಗುರುವಾರ ರಾತ್ರಿ ಸುರಿದ ಮಳೆಯಿಂದ ಶುಕ್ರವಾರವೂ ರಸ್ತೆಗಳು ಜಲಾವೃತಗೊಂಡಿದ್ದು, ನೀರು ಹೆಚ್ಚಿನ ಪ್ರಮಾಣ ದಲ್ಲಿ ತುಂಬಿದ್ದ ಕಾರಣ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು. ಭಾರಿ ಮಳೆ ಸುರಿದ ಕಾರಣಕ್ಕೆ ಹೆಚ್ಚಿನ ಜನರು ತಮ್ಮ ವಾಹನಗಳನ್ನು ಹೊರತೆಗೆಯದೇ ತಮ್ಮ ಕಚೇರಿಯ ಕೆಲಸ, ಕಾರ್ಯಗಳನ್ನು ಮನೆಯಲ್ಲಿಯೇ ಮಾಡುವ ಪರಿಸ್ಥಿತಿ ಉಂಟಾಗಿತ್ತು. ಶಾರ್ಜಾದ ನಾನಾ ಭಾಗಗಳು ಮಳೆಯಿಂದಾಗಿ ಜಲಾವೃತಗೊಂಡಿದ್ದು, ಪ್ರಮುಖ ರಸ್ತೆಗಳು ಕೂಡ ನೀರಿನಿಂದ ಸಂಪೂರ್ಣ ಜಲಾವೃತವಾಗಿವೆ. ನ್ಯಾಷನಲ್ ಸೆಂಟರ್ ಆಫ್ ಮೆಟರೋಲಾಜಿ(NCM) ವರದಿ ಪ್ರಕಾರ ರಾಸ್ ಅಲ್ ಖೈಮಃದ ಶೌಕದಲ್ಲಿ ಅತೀ ಹೆಚ್ಚು 77.5 ಮಿಮೀ ಮಳೆಯಾಗಿದೆ. ಮಳೆ ಶನಿವಾರದಿಂದ ಕಡಿಮೆಯಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಹವಾಮಾನ ಇಲಾಖೆ ಶುಕ್ರವಾರ ಭಾರಿ ಮಳೆ ಸುರಿಯುವ ಮುನ್ನೆಚ್ಚರಿಕೆ ನೀಡಿದ್ದರಿಂದ ಇಂದು ಹಲವು ಕಡೆಗಳಲ್ಲಿ ಹೋಟೆಲ್, ಅಂಗಡಿ, ಬಾರ್ಬರ್ ಶಾಪ್ಗಳು, ಲಾಂಡ್ರಿಗಳು ಸೇರಿದಂತೆ ಹಲವಾರು ಸಣ್ಣಪುಟ್ಟ ಅಂಗಡಿಗಳು ಮುಚ್ಚಿದ್ದವು. ಹೆಚ್ಚಿನ ಜನರು ಮನೆಯಿಂದ ಹೊರಬಾರದೇ ಮನೆಯಲ್ಲಿಯೇ ಉಳಿಯುವಂತಾಯಿತು. ಹಲವು ಕಡೆಗಳಲ್ಲಿ ರಸ್ತೆಗಳಲ್ಲಿ ತುಂಬಿರುವ ನೀರನ್ನು ಟ್ಯಾಂಕರ್ ಗಳ ಮೂಲಕ ನಗರಪಾಲಿಕೆ ಖಾಲಿ ಮಾಡುತ್ತಿರುವ ದೃಶ್ಯಗಳು ಕಂಡುಬಂದವು.
ಹೊಸದಿಲ್ಲಿ, ಮಾ. 27: ತೃಣಮೂಲ ಕಾಂಗ್ರೆಸ್ ಸಂಸದ ಡೆರೆಕ್ ಓಬ್ರಿಯಾನ್ ಅವರು ಮಕ್ಕಳು ಹಾಗೂ ಯುವಕರಲ್ಲಿ ಹೆಚ್ಚುತ್ತಿರುವ ಡಿಜಿಟಲ್ ವ್ಯಸನದ ಕುರಿತ ರಾಜ್ಯಸಭೆಯಲ್ಲಿ ಶುಕ್ರವಾರ ಕಳವಳ ವ್ಯಕ್ತಪಡಿಸಿದ್ದಾರೆ. ಡಿಜಿಟಲ್ ವ್ಯಸನದ ಪರಿಣಾಮವಾಗಿ ಪ್ರತಿವರ್ಷ ಸುಮಾರು 20,000 ಮಕ್ಕಳು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ. ಈ ಬಿಕ್ಕಟ್ಟನ್ನು ತುರ್ತಾಗಿ ಪರಿಹರಿಸಲು ಸರಕಾರ ಕ್ರಮ ತೆಗೆದುಕೊಳ್ಳುವಂತೆ ಅವರು ಆಗ್ರಹಿಸಿದ್ದಾರೆ. ರಾಜ್ಯಸಭೆಯಲ್ಲಿ ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾವಿಸಿದ ಡೆರೆಕ್ ಓಬ್ರಿಯಾನ್, ಮಕ್ಕಳು ಹಾಗೂ ಯುವಕರು ದಿನಕ್ಕೆ ಎಂಟು ಗಂಟೆಗಳ ಕಾಲ ಮೊಬೈಲ್ ಫೋನ್ನಲ್ಲೇ ಕಳೆಯುತ್ತಿದ್ದಾರೆ ಎಂದು ಅಧ್ಯಯನ ಹೇಳುತ್ತದೆ. ಇದು ಪ್ರತಿ ವರ್ಷ 100ಕ್ಕೂ ಹೆಚ್ಚು ದಿನಗಳಿಗೆ ಸಮಾನವಾಗಿದೆ ಎಂದರು. 68 ದೇಶಗಳು ಶಾಲೆಗಳಲ್ಲಿ ಮೊಬೈಲ್ ಫೋನ್ಗೆ ಈಗಾಗಲೇ ನಿಷೇಧ ಹೇರಿವೆ ಎಂದು ಅವರು ಗಮನ ಸೆಳೆದರು. ಮೊಬೈಲ್ನಲ್ಲಿ ಅತಿಯಾದ ಸಮಯ ಕಳೆಯುವುದರಿಂದ ನಿದ್ರೆಗೆ ಅಡ್ಡಿ ಉಂಟಾಗುತ್ತದೆ, ಆತಂಕದ ಅಪಾಯವನ್ನು ಹೆಚ್ಚಿಸುತ್ತದೆ ಹಾಗೂ ಮನಸ್ಥಿತಿಯಲ್ಲಿ ಏರುಪೇರಾಗಲು ಕಾರಣವಾಗುತ್ತದೆ ಎಂದು ಹೇಳಿದರು. ಮೊಬೈಲ್ ಬಳಕೆಯು ಡೊಪಮೈನ್ನ ಹೆಚ್ಚಳಕ್ಕೆ ಕಾರಣವಾಗುತ್ತದೆ. ಮೆದುಳು ತ್ವರಿತವಾಗಿ ಪ್ರತಿಫಲ ಸಂಕೇತವನ್ನು ಸ್ವೀಕರಿಸುತ್ತದೆ. ಇದು ವರ್ತನೆಯನ್ನು ಬಲಪಡಿಸುತ್ತದೆ ಹಾಗೂ ಡಿಜಿಟಲ್ ವ್ಯಸನಕ್ಕೆ ಕಾರಣವಾಗುತ್ತದೆ ಎಂದು ಅವರು ತಿಳಿಸಿದರು. ಡೆರೆಕ್ ಓಬ್ರಾಯಾನ್ ಪ್ರಾಯೋಗಿಕ ಸಲಹೆಗಳನ್ನು ಕೂಡ ನೀಡಿದರು. ಫೋನ್ ತೆಗೆದುಕೊಳ್ಳುವ ಮೊದಲು ಏಕೆ ಎಂದು ತಮ್ಮನ್ನು ತಾವೇ ಕೇಳಿಕೊಳ್ಳಬೇಕು. ಅದನ್ನು ಮುಟ್ಟುವ ಮುನ್ನ 10ರವರೆಗೆ ಎಣಿಕೆ ಮಾಡಬೇಕು. ಮೊಬೈಲ್ ಅನ್ನು ಬೇರೆ ಕೊಠಡಿಯಲ್ಲಿ ಚಾರ್ಜ್ ಮಾಡಬೇಕು. ಮಲಗುವ ಮುನ್ನ ಕನಿಷ್ಠ ಎರಡು ಗಂಟೆಗಳ ಮೊದಲು ಮೊಬೈಲ್ ಬಳಸುವುದನ್ನು ತಪ್ಪಿಸಬೇಕು. ಫೋನ್ ಬಳಸುವ ಹಾಗೂ ಬಳಸದ ಸಮಯವನ್ನು ನಿಗದಿಪಡಿಸಬೇಕು ಎಂದು ಅವರು ಸಲಹೆ ನೀಡಿದ್ದಾರೆ. ಸರಕಾರಕ್ಕೆ ಅವರು ಮಾಡಿದ ಮೂರು ಮುಖ್ಯ ಶಿಫಾರಸುಗಳು: ಪ್ರಜ್ಞಾಪೂರ್ವಕ ಬಳಕೆಯನ್ನು ಪ್ರೋತ್ಸಾಹಿಸುವುದು, ಆಫ್ಲೈನ್ ಚಟುವಟಿಕೆಗಳನ್ನು ಉತ್ತೇಜಿಸುವುದು, ಯುವಜನರ ಮಾನಸಿಕ ಆರೋಗ್ಯ ಹಾಗೂ ಡಿಜಿಟಲ್ ಯೋಗಕ್ಷೇಮದ ಕುರಿತು ವ್ಯಾಪಕ ಚರ್ಚೆಯನ್ನು ಆರಂಭಿಸುವುದು. ಡಿಜಿಟಲ್ ವ್ಯಸನದ ಈ ಸಮಸ್ಯೆಯನ್ನು ಸರಕಾರ ಗಂಭೀರವಾಗಿ ಪರಿಗಣಿಸಬೇಕು ಹಾಗೂ ಯುವಜನರ ಮಾನಸಿಕ ಆರೋಗ್ಯವನ್ನು ಸಂಘಟಿತವಾಗಿ ಪರಿಹರಿಸಬೇಕು ಎಂದು ಡೆರೆಕ್ ಓಬ್ರಿಯಾನ್ ಹೇಳಿದ್ದಾರೆ.
ಕಲ್ಲಿದ್ದಲು ಹಗರಣ| ಮಾಜಿ ಸಂಸದ ವಿಜಯ್ ದರ್ದಾ ಸಹಿತ ಮೂವರನ್ನು ಖುಲಾಸೆಗೊಳಿಸಿದ ದಿಲ್ಲಿ ನ್ಯಾಯಾಲಯ
ಹೊಸದಿಲ್ಲಿ, ಮಾ. 27: ಕಲ್ಲಿದ್ದಲು ಬ್ಲಾಕ್ ಹಂಚಿಕೆಗೆ ಸಂಬಂಧಿಸಿದ ಪ್ರಕರಣದಲ್ಲಿ ಮಾಜಿ ಸಂಸದ ವಿಜಯ್ ದರ್ದಾ, ಅವರ ಪುತ್ರ ದೇವೇಂದ್ರ ದರ್ದಾ ಹಾಗೂ ಮಾಜಿ ಕಲ್ಲಿದ್ದಲು ಕಾರ್ಯದರ್ಶಿ ಎಚ್.ಸಿ. ಗುಪ್ತಾ ಅವರನ್ನು ದಿಲ್ಲಿಯ ವಿಶೇಷ ನ್ಯಾಯಾಲಯ ಶುಕ್ರವಾರ ಖುಲಾಸೆಗೊಳಿಸಿದೆ. ಒಂದು ದಶಕಗಳ ಕಾಲ ನಡೆದ ಉನ್ನತ ಮಟ್ಟದ ಕಾನೂನು ಹೋರಾಟಕ್ಕೆ ಅಂತ್ಯ ತಂದಿರುವ ವಿಶೇಷ ಸಿಬಿಐ ನ್ಯಾಯಾಧೀಶರಾದ ಸುನೇಹಾ ಶರ್ಮಾ ಅವರು, ಮನೋಜ್ ಕುಮಾರ್ ಜೈಸ್ವಾಲ್ ಹಾಗೂ ಮೆಸರ್ಸ್ ಎಎಂಆರ್ ಐರನ್ ಆ್ಯಂಡ್ ಸ್ಟೀಲ್ ಪ್ರೈವೇಟ್ ಲಿಮಿಟೆಡ್ ಅನ್ನು ಕೂಡ ಖುಲಾಸೆಗೊಳಿಸಿದ್ದಾರೆ. ಕಲ್ಲಿದ್ದಲು ಹಗರಣದ ಆರೋಪಕ್ಕೆ ಸಂಬಂಧಿಸಿ ಸಿಬಿಐ 50ಕ್ಕೂ ಅಧಿಕ ಪ್ರಕರಣಗಳನ್ನು ದಾಖಲಿಸಿತ್ತು. ಈ ಪ್ರಕರಣ ಮಹಾರಾಷ್ಟ್ರದ ಬಾಂದ್ರಾದಲ್ಲಿ ಕಲ್ಲಿದ್ದಲು ಬ್ಲಾಕ್ ಹಂಚಿಕೆಗೆ ಸಂಬಂಧಿಸಿ ಸಿಬಿಐ ದಾಖಲಿಸಿದ ಮೊದಲ ಆರೋಪ ಪಟ್ಟಿಗೆ ಸಂಬಂಧಿಸಿದೆ. ಪ್ರಾಸಿಕ್ಯೂಷನ್ ಪ್ರಕಾರ ಗುಪ್ತಾ ಅವರೊಂದಿಗೆ ಸೇರಿ ಎಎಂಆರ್ ಐರನ್ ಆ್ಯಂಡ್ ಸ್ಟೀಲ್ ಪ್ರೈವೇಟ್ ಲಿಮಿಟೆಡ್ ಕಲ್ಲಿದ್ದಲು ಬ್ಲಾಕ್ ಹಂಚಿಕೆ ಪಡೆಯಲು ಕೇಂದ್ರ ಕಲ್ಲಿದ್ದಲು ಸಚಿವಾಲಯಕ್ಕೆ ಸಲ್ಲಿಸಿದ ಅರ್ಜಿಯಲ್ಲಿ ಸುಳ್ಳು ಮಾಹಿತಿಯನ್ನು ನೀಡಿದೆ.
ಪೆಟ್ರೋಲ್, ಡೀಸೆಲ್ ಮೇಲಿನ ಅಬಕಾರಿ ಸುಂಕ 10ರೂ. ಕಡಿತ| ತೈಲೋತ್ಪನ್ನಗಳಿಗೆ ರಫ್ತು ಸುಂಕ ಹೇರಿದ ಕೇಂದ್ರ ಸರಕಾರ
ಹೊಸದಿಲ್ಲಿ, ಮಾ. 27: ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಕೇಂದ್ರೀಯ ಅಬಕಾರಿ ಸುಂಕವನ್ನು ಲೀಟರ್ಗೆ 10 ರೂ. ಕಡಿತ ಮಾಡಿರುವುದಾಗಿ ಕೇಂದ್ರ ಸರಕಾರ ಶುಕ್ರವಾರ ಘೋಷಿಸಿದೆ. ಜೊತೆಗೆ, ಭಾರತದಿಂದ ತೈಲ ಹೊರಹೋಗದಂತೆ ಖಾತರಿಪಡಿಸುವುದಕ್ಕಾಗಿ ಪೆಟ್ರೋಲಿಯಂ ಉತ್ಪನ್ನಗಳ ಮೇಲೆ ಹೊಸದಾಗಿ ರಫ್ತು ಸುಂಕವನ್ನು ಹೇರಿದೆ. ಪಶ್ಚಿಮ ಏಶ್ಯ ಸಂಘರ್ಷದ ಹಿನ್ನೆಲೆಯಲ್ಲಿ, ಜಾಗತಿಕದ ಕಚ್ಚಾ ತೈಲ ಬೆಲೆಯಲ್ಲಿ ಆಗಿರುವ ತೀವ್ರ ಹೆಚ್ಚಳದಿಂದ ಭಾರತೀಯ ಬಳಕೆದಾರರನ್ನು ರಕ್ಷಿಸುವುದಕ್ಕಾಗಿ ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ಈ ನಿರ್ಧಾರವನ್ನು ಘೋಷಿಸಿದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಜಾಗತಿಕ ಪೂರೈಕೆ ಸರಣಿಯ ವ್ಯತ್ಯಯಗಳು ಮತ್ತು ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ನಾಗರಿಕರನ್ನು ರಕ್ಷಿಸಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರವು ನಿರಂತರವಾಗಿ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎಂದು ನಿರ್ಮಲಾ ಹೇಳಿದ್ದಾರೆ. ಸರಕಾರದ ಈ ಘೋಷಣೆಯೊಂದಿಗೆ, ಪೆಟ್ರೋಲ್ ಮೇಲಿನ ಅಬಕಾರಿ ಸುಂಕವು 3 ಶೇಕಡಕ್ಕೆ ಇಳಿದಿದೆ ಹಾಗೂ ಡೀಸೆಲ್ ಮೇಲೆ ಯಾವುದೇ ಅಬಕಾರಿ ಸುಂಕ ಇರುವುದಿಲ್ಲ. ಅಬಕಾರಿ ಸುಂಕ ಕಡಿತದ ಜೊತೆಗೆ, ಕೇಂದ್ರ ಸರಕಾರವು ಡೀಸೆಲ್ಗೆ ಲೀಟರ್ಗೆ 21.5 ರೂ. ಮತ್ತು ವೈಮಾನಿಕ ಪೆಟ್ರೋಲ್ಗೆ ಲೀಟರ್ಗೆ 29.5 ರೂ. ರಫ್ತು ಸುಂಕವನ್ನೂ ವಿಧಿಸಿದೆ. ಅಂತರ್ರಾಷ್ಟ್ರೀಯ ತೈಲ ಬೆಲೆಯಲ್ಲಿ ಏರಿಕೆಯಾಗಿರುವ ಹಿನ್ನೆಲೆಯಲ್ಲಿ, ದೇಶದಲ್ಲಿ ಸಾಕಷ್ಟು ಪ್ರಮಾಣದಲ್ಲಿ ತೈಲ ಲಭ್ಯವಿರುವಂತೆ ನೋಡಿಕೊಳ್ಳಲು ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಸರಕಾರ ತಿಳಿಸಿದೆ. ಬೆಲೆ ಕಡಿಮೆಯಾಗುವುದಿಲ್ಲ, ಚುನಾವಣೆಯ ಮೇಲೆ ಕಣ್ಣಿಟ್ಟ ಕ್ರಮ: ಕಾಂಗ್ರೆಸ್ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕ ಕಡಿತದ ಘೋಷಣೆಯನ್ನು ಕೇಂದ್ರ ಸರಕಾರ ಮಾಡಿದೆಯಾದರೂ, ಅದರ ಲಾಭ ತಕ್ಷಣಕ್ಕೆ ಗ್ರಾಹಕರಿಗಾಗಲಿ, ಮಾರಾಟಗಾರರಿಗಾಗಲಿ ಸಿಗುವುದಿಲ್ಲ ಎಂದು ಕಾಂಗ್ರೆಸ್ ಶುಕ್ರವಾರ ಹೇಳಿದೆ. ಅಬಕಾರಿ ಸುಂಕ ಕಡಿತವು ಇಂಧನದ ಚಿಲ್ಲರೆ ಮಾರಾಟದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಕಾಂಗ್ರೆಸ್ ಹೇಳಿದೆ. ‘‘ಕಳೆದ 12 ವರ್ಷಗಳಲ್ಲಿ, ಏಳು ವಿವಿಧ ಸಂದರ್ಭಗಳಲ್ಲಿ ಜಾಗತಿಕ ಕಚ್ಚಾ ತೈಲ ಬೆಲೆಗಳು ಇಳಿದಾಗ, ಭಾರತದಲ್ಲಿ ಗ್ರಾಹಕರು ಪಾವತಿಸುವ ಬೆಲೆಯಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ’’ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಹೇಳಿದ್ದಾರೆ. ‘‘ಇಂದಿನ ಅಬಕಾರಿ ಸುಂಕ ಕಡಿತ ಘೋಷಣೆಯನ್ನು ಮುಂಬರುವ ವಿಧಾನಸಭಾ ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡು ಮಾಡಲಾಗಿದೆ’’ ಎಂದು ಅವರು ಹೇಳಿದರು. ಅಸ್ಸಾಮ್, ಕೇರಳ ಮತ್ತು ಪುದುಚೇರಿ ವಿಧಾನಸಭೆಗಳ ಚುನಾವಣೆ ಎಪ್ರಿಲ್ 9ರಂದು ನಡೆದರೆ, ತಮಿಳುನಾಡು ವಿಧಾನಸಭಾ ಚುನಾವಣೆ ಎಪ್ರಿಲ್ 23ರಂದು ನಡೆಯಲಿದೆ. ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯು ಎಪ್ರಿಲ್ 23 ಮತ್ತು 29ರಂದು ಎರಡು ಹಂತಗಳಲ್ಲಿ ನಡೆಯಲಿದೆ. ಫಲಿತಾಂಶವು ಮೇ 4ರಂದು ಹೊರಬೀಳಲಿದೆ. ‘‘ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಕಡಿಮಯಾಗುತ್ತಿವೆ ಎಂಬ ಸುದ್ದಿಯನ್ನು ದೊಡ್ಡ ಅಕ್ಷರಗಳಲ್ಲಿ ಜನರು ನೋಡುತ್ತಿದ್ದಾರೆ. ತಮ್ಮ ಕಿಸೆಗಳಿಗೆ ಸರಕಾರವು ನೆಮ್ಮದಿ ನೀಡಿದೆ ಎಂಬುದಾಗಿ ಜನರು ಭಾವಿಸಿದರೆ ‘ಅವರು ತಪ್ಪು ತಿಳಿದುಕೊಂಡಿದ್ದಾರೆ’’’ ಎಂದು ಪಕ್ಷದ ಮಾಧ್ಯಮ ಮತ್ತು ಪ್ರಚಾರ ವಿಭಾಗದ ಮುಖ್ಯಸ್ಥ ಪವನ್ ಖೇರಾ ಹೇಳಿದರು. ಸದ್ಯಕ್ಕೆ ಮಾರಾಟಗಾರರಿಗಾಗಲಿ, ಗ್ರಾಹಕರಿಗಾಗಲಿ ತೈಲ ಬೆಲೆ ಕಡಿಮೆಯಾಗುವುದಿಲ್ಲ ಎಂದು ಅವರು ನುಡಿದರು.
ಒಂದನೇ ತರಗತಿ ಸೇರಲು ವಯೋಮಿತಿಯಲ್ಲಿ ಸಡಿಲಿಕೆ | ನಿಯಮ ಸಿಬಿಎಸ್ಇ, ಐಸಿಎಸ್ಇ ಶಾಲೆಗಳಿಗೂ ಅನ್ವಯ : ಮಧುಬಂಗಾರಪ್ಪ
ಬೆಂಗಳೂರು : 2026-27ರ ಶೈಕ್ಷಣಿಕ ಸಾಲಿನಲ್ಲಿ 1ನೆ ತರಗತಿಯ ಪ್ರವೇಶ ವಯೋಮಿತಿಯಲ್ಲಿ ನೀಡಲಾಗಿರುವ 60 ದಿನಗಳ ವಿನಾಯಿತಿಯು ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲ ಪಠ್ಯಕ್ರಮ (ಸಿಬಿಎಸ್ಇ, ಐಸಿಎಸ್ಇ ಒಳಗೊಂಡಂತೆ) ಶಾಲೆಗಳಿಗೂ ಅನ್ವಯಿಸುತ್ತದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧುಬಂಗಾರಪ್ಪ ಸ್ಪಷ್ಟಪಡಿಸಿದ್ದಾರೆ. ಶುಕ್ರವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಬಿಎಸ್ಇ ಮತ್ತು ಇತರೆ ರಾಜ್ಯಗಳ ಪಾಲಿಸಿಗಳನ್ನು ಕೂಲಂಕಷವಾಗಿ ಪರಿಶೀಲಿಸಿ ತೀರ್ಮಾನ ಕೈಗೊಳ್ಳಲಾಗುವುದು. ಈ ಬಗ್ಗೆ ಈಗಾಗಲೇ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳೊಂದಿಗೆ ಚರ್ಚಿಸಲಾಗಿದೆ. ಇತರ ರಾಜ್ಯಗಳಲ್ಲಿನ ಶಿಕ್ಷಣ ಪದ್ಧತಿಯ ಮಾಹಿತಿಯನ್ನು ಕೋರಲಾಗಿದೆ ಎಂದರು. ಇಲಾಖೆಯಿಂದ ಸ್ಪಷ್ಟನೆ ದೊರೆತ ತಕ್ಷಣ ಈ ಕುರಿತಾದ ಗೊಂದಲಗಳು ಬಗೆಹರಿಯಲಿವೆ. ರಾಜ್ಯ ಶಿಕ್ಷಣ ನೀತಿಯ (ಎಸ್ಇಪಿ) ಶಿಫಾರಸುಗಳನ್ನು ಇನ್ನೂ ಸಚಿವ ಸಂಪುಟದ ಮುಂದೆ ಮಂಡಿಸಬೇಕಿದ್ದು, ಒಮ್ಮೆ ಅದನ್ನು ಮಂಡಿಸಿ ಅನುಮೋದನೆ ಪಡೆದ ನಂತರ ಅನ್ವಯವಾಗುವ ಮಾರ್ಗಸೂಚಿಗಳು ಮತ್ತು ಆದೇಶವನ್ನು ಹೊರಡಿಸುತ್ತೇವೆ. ಜತೆಗೆ ಕಿಂಡರ್ ಗಾರ್ಡನ್ ಪ್ರವೇಶದ ವಯೋಮಿತಿಗೆ ಸಂಬಂಧಿಸಿದಂತೆ ಸರಿಯಾದ ಮಾರ್ಗಸೂಚಿಗಳಿಲ್ಲದ ಕಾರಣ, ಪೋಷಕರಿಗೆ ಮತ್ತು ಶಿಕ್ಷಣ ಸಂಸ್ಥೆಗಳಿಗೆ ನಾವು ಸ್ಪಷ್ಟತೆ ನೀಡಬೇಕಾಗಿದೆ ಎಂದು ಅವರು ತಿಳಿಸಿದರು.
ಡಾಲರ್ ಎದುರು 94.28ಕ್ಕೆ ಕುಸಿದ ರೂಪಾಯಿ ಮೌಲ್ಯ
ಮುಂಬೈ, ಮಾ. 27: ಅಮೆರಿಕದ ಡಾಲರ್ ಎದುರು ಭಾರತೀಯ ರೂಪಾಯಿ ವೇಗವಾಗಿ ಕುಸಿಯುತ್ತಾ ಸಾಗುತ್ತಿದೆ. ಶುಕ್ರವಾರ ಹಿಂದಿನ ದಿನದ ಬೆಲೆಗಿಂತ 30 ಪೈಸೆ ಕುಸಿದು 94.28ರಲ್ಲಿ ನೆಲೆಗೊಂಡಿದೆ. ಯುದ್ಧವಿರಾಮದ ಬಗ್ಗೆ ಇರಾನ್ನೊಂದಿಗೆ ಅಮೆರಿಕ ನಡೆಸುತ್ತಿದೆ ಎನ್ನಲಾದ ಮಾತುಕತೆಗಳ ಬಗ್ಗೆ ಇನ್ನೂ ಸ್ಪಷ್ಟತೆ ಮೂಡದಿರುವ ಹಿನ್ನೆಲೆಯಲ್ಲಿ ಆಮದುದಾರರು ಯಾವುದೇ ಅಪಾಯವನ್ನು ತಂದುಕೊಳ್ಳಲು ಬಯಸದೆ ಡಾಲರನ್ನೇ ಹೆಚ್ಚಿನ ಪ್ರಮಾಣದಲ್ಲಿ ಖರೀದಿಸುತ್ತಿರುವುದು ರೂಪಾಯಿ ಪಾತಾಳಕ್ಕಿಳಿಯಲು ಮುಖ್ಯ ಕಾರಣವಾಗಿದೆ. ಮಾತುಕತೆಗಳ ಪ್ರಸ್ತಾಪವು ಕಚ್ಚಾತೈಲ ಬೆಲೆಯ ಹೆಚ್ಚಳವನ್ನು ತಡೆಹಿಡಿದಿದೆಯಾದರೂ, ಅದು ಈಗಲೂ ಬ್ಯಾರಲ್ಗೆ 100 ಡಾಲರ್ಗಿಂತಲೂ ಮೇಲೆಯೇ ಇದೆ. ಇರಾನ್ ಯುದ್ಧ ಆರಂಭಗೊಂಡಂದಿನಿಂದ ರೂಪಾಯಿ ಮೌಲ್ಯ 4 ಶೇಕಡಕ್ಕೂ ಹೆಚ್ಚು ಕುಸಿದಿದೆ. ಯುದ್ಧ ನಿಲ್ಲುವ ಸೂಚನೆ ಇನ್ನೂ ಕಾಣುತ್ತಿಲ್ಲ.
ಐಷಾರಾಮಿ ಕಾರು - ನಕಲಿ ನಂಬರ್ಪ್ಲೇಟ್! ಸಿಕ್ಕಿಬಿದ್ದ ಮುತ್ತಪ್ಪ ರೈ ಪುತ್ರ ರಿಕ್ಕಿ ರೈ - ಕ್ರಿಮಿನಲ್ ಕೇಸ್ ದಾಖಲು
ಅನಿಲ್ ಕುಂಬ್ಳೆ ಸರ್ಕಲ್ನಲ್ಲಿ ಲ್ಯಾಂಬೋರ್ಗಿನಿ ಕಾರಿನೊಂದಿಗೆ ಪುಂಡಾಟ ನಡೆಸಿದ್ದ ರಿಕ್ಕಿ ರೈ ವಿರುದ್ಧ ಈಗ ಕ್ರಿಮಿನಲ್ ಪ್ರಕರಣ ದಾಖಲಾಗಿದೆ. ತನಿಖೆಯ ವೇಳೆ ಅವರು ಕಾರಿಗೆ ನಕಲಿ ನಂಬರ್ ಪ್ಲೇಟ್ ಅಳವಡಿಸಿರುವುದು ಮತ್ತು ಪೊಲೀಸರಿಗೆ ತಪ್ಪು ಮಾಹಿತಿ ನೀಡಿರುವುದು ಬೆಳಕಿಗೆ ಬಂದಿದೆ. ಸದ್ಯ ರಿಕ್ಕಿ ರೈ ನ್ಯಾಯಾಲಯದಿಂದ ನಿರೀಕ್ಷಣಾ ಜಾಮೀನು ಪಡೆದಿದ್ದು, ಕಬ್ಬನ್ ಪಾರ್ಕ್ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ವಾಣಿಜ್ಯ ಎಲ್ಪಿಜಿ ಸಿಲಿಂಡರ್ಗಳ ಪೂರೈಕೆ 70%ಕ್ಕೆ ಏರಿಕೆ ಮಾಡಿದ ಕೇಂದ್ರ ಸರಕಾರ
ಹೊಸದಿಲ್ಲಿ, ಮಾ. 27: ಕೇಂದ್ರ ಸರಕಾರ ಶುಕ್ರವಾರ ವಾಣಿಜ್ಯ ಎಲ್ಪಿಜಿ ಸಿಲಿಂಡರ್ಗಳ ವಿತರಣೆಯನ್ನು ಈಗಿನ 50 ಶೇಕಡದಿಂದ 70 ಶೇಕಡಕ್ಕೆ ಹೆಚ್ಚಿಸಿದೆ. ಪಶ್ಚಿಮ ಏಶ್ಯ ಸಂಘರ್ಷದ ಹಿನ್ನೆಲೆಯಲ್ಲಿ ಎಲ್ಪಿಜಿ ಕೊರತೆಯಿಂದ ಕಂಗೆಟ್ಟಿರುವ ಕೈಗಾರಿಕೆಗಳಿಗೆ ಕೊಂಚ ನೆಮ್ಮದಿ ನೀಡುವ ನಿರೀಕ್ಷೆಯನ್ನು ಇದು ಹುಟ್ಟಿಸಿದೆ. ಹೆಚ್ಚುವರಿ ವಿತರಣೆಯನ್ನು ಕೈಗಾರಿಕೆಗಳಿಗೆ, ಅದರಲ್ಲೂ ಮುಖ್ಯವಾಗಿ ಉಕ್ಕು, ವಾಹನ ನಿರ್ಮಾಣ, ಜವಳಿ, ಬಣ್ಣ ತಯಾರಿಕೆ, ರಾಸಾಯನಿಕಗಳು ಮತ್ತು ಪ್ಲಾಸ್ಟಿಕ್ ಕ್ಷೇತ್ರಗಳಿಗೆ ಒದಗಿಸಲಾಗುತ್ತದೆ ಎಂದು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಮುಖ್ಯ ಕಾರ್ಯದರ್ಶಿಗಳಿಗೆ ಕಳುಹಿಸಿದ ಆದೇಶದಲ್ಲಿ ಕೇಂದ್ರ ಸರಕಾರ ತಿಳಿಸಿದೆ. ಈ ಕ್ಷೇತ್ರಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ ಹಾಗೂ ಅವುಗಳು ಇತರ ಮಹತ್ವದ ಕ್ಷೇತ್ರಗಳಿಗೆ ಆಧಾರವಾಗಿದೆ. ವಾಣಿಜ್ಯ ಎಲ್ಪಿಜಿ ಸಿಲಿಂಡರ್ಗಳ ಹಂಚಿಕೆಯಲ್ಲಿ ಸಂಸ್ಕರಣೆ ಉದ್ಯಮಗಳಿಗೆ ಆದ್ಯತೆ ನೀಡಲಾಗಿದೆ. ವಿಶಿಷ್ಟ ರೀತಿಯಲ್ಲಿ ಬಿಸಿ ಮಾಡುವುದಕ್ಕಾಗಿ ಎಲ್ಪಿಜಿ ಅಗತ್ಯವಿರುವ ಹಾಗೂ ಎಲ್ಪಿಜಿ ಸ್ಥಾನದಲ್ಲಿ ನೈಸರ್ಗಿಕ ಅನಿಲವನ್ನು ಬಳಸಲು ಸಾಧ್ಯವಿಲ್ಲದ ಉದ್ದೇಶಗಳಿಗೆ ಹೆಚ್ಚುವರಿ ವಾಣಿಜ್ಯ ಎಲ್ಪಿಜಿಯನ್ನು ಪೂರೈಸಲಾಗುವುದು. ಪಶ್ಚಿಮ ಏಶ್ಯ ಸಂಘರ್ಷದ ಹಿನ್ನೆಲೆಯಲ್ಲಿ, ಎಲ್ಪಿಜಿ ಮತ್ತು ಎಲ್ಎನ್ಜಿ (ನೈಸರ್ಗಿಕ ಅನಿಲ) ಪೂರೈಕೆಯಲ್ಲಿ ಅಡಚಣೆ ತಲೆದೋರಿದ ಬಳಿಕ, 33 ಕೋಟಿ ಎಲ್ಪಿಜಿ ಗೃಹ ಬಳಕೆದಾರರಿಗೆ ಪೂರೈಕೆಯನ್ನು ಖಾತರಿ ಪಡಿಸುವುದಕ್ಕಾಗಿ ವಾಣಿಜ್ಯ ಬಳಕೆಯ ಎಲ್ಪಿಜಿಯ ಪೂರೈಕೆಯನ್ನು ಕಡಿತಗೊಳಿಸಲಾಗಿತ್ತು. ಆರಂಭದಲ್ಲಿ, ವಾಣಿಜ್ಯ ಬಳಕೆದಾರರ ಸರಾಸರಿ ಮಾಸಿಕ ಅಗತ್ಯದ ಕೇವಲ 20 ಶೇಕಡದಷ್ಟು ಎಲ್ಪಿಜಿಯನ್ನು ಸರಕಾರ ಪೂರೈಸಿತ್ತು. ಜೊತೆಗೆ, ಎಲ್ಪಿಜಿಯಿಂದ ಕೊಳವೆ ಮೂಲಕ ಪೂರೈಸುವ ನೈಸರ್ಗಿಕ ಅನಿಲ (ಪಿಎನ್ಜಿ)ಕ್ಕೆ ಬದಲಾವಣೆಗೊಳ್ಳುವುದನ್ನು ಉತ್ತೇಜಿಸುವ ರಾಜ್ಯಗಳಿಗೆ ಹೆಚ್ಚುವರಿ 10 ಶೇಕಡ ಎಲ್ಪಿಜಿಯನ್ನು ಅದು ನೀಡಿತ್ತು. ಬಳಿಕ, ಪೆಟ್ರೋಲಿಯಂ ಸಚಿವಾಲಯವು ವಾಣಿಜ್ಯ ಎಲ್ಪಿಜಿ ವಿತರಣೆಯನ್ನು ಇನ್ನು 20 ಶೇಕಡದಷ್ಟು ಹೆಚ್ಚಿಸಿತು. ಅದರೊಂದಿಗೆ ವಿತರಣೆಯ 50 ಶೇ.ಕ್ಕೆ ಏರಿತು.
ಐಪಿಎಲ್ ಪಂದ್ಯ ಹಿನ್ನೆಲೆ: ಬಿಎಂಟಿಸಿ, ಮೆಟ್ರೋ ಬಳಸಲು ಸಂಚಾರ ಪೊಲೀಸರ ಮನವಿ
ಬೆಂಗಳೂರು : ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶನಿವಾರ(ಮಾ.28) ಐಪಿಎಲ್ ಕ್ರಿಕೆಟ್ ಪಂದ್ಯ ಹಿನ್ನೆಲೆ ಪ್ರೇಕ್ಷಕರು ಸಾಧ್ಯವಾದಷ್ಟು ಸಾರ್ವಜನಿಕ ಸಾರಿಗೆ ಬಿಎಂಟಿಸಿ ಬಸ್ ಹಾಗೂ ಮೆಟ್ರೋ ಸೇವೆಯನ್ನು ಬಳಸುವಂತೆ ಬೆಂಗಳೂರು ಸಂಚಾರ ಪೊಲೀಸರು ಮನವಿ ಮಾಡಿದ್ದಾರೆ. ಮಾ.28, ಎ.5ರಂದು ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್ ಪಂದ್ಯ ನಡೆಯಲಿರುವ ಹಿನ್ನೆಲೆ ಇಲ್ಲಿನ ಕ್ವೀನ್ಸ್ ರಸ್ತೆಯ ಎರಡು ಬದಿಯಲ್ಲಿ, ಬಾಳೇಕುಂದ್ರಿ ವೃತ್ತದಿಂದ ಕ್ವೀನ್ಸ್ ವೃತ್ತದ ವರೆಗೆ, ಅನಿಲ್ ಕುಂಬ್ಳೆ ವೃತ್ತದಿಂದ ಕ್ವೀನ್ಸ್ ವೃತ್ತದ ವರೆಗೆ ಮತ್ತು ಕ್ವೀನ್ಸ್ ರಸ್ತೆಯಿಂದ ಅನಿಲ್ ಕುಂಬ್ಳೆ ಜಂಕ್ಷನ್ ವರೆಗೆ ರಸ್ತೆಯ ಎರಡೂ ಕಡೆ. ಲಿಂಕ್ ರಸ್ತೆ-ಎಂ.ಜಿ ರಸ್ತೆಯಿಂದ ಕಬ್ಬನ್ ರಸ್ತೆ ವರೆಗೆ. ರಾಜಭವನ ರಸ್ತೆ, ಟಿ.ಚೌಡಯ್ಯ ರಸ್ತೆ ಮತ್ತು ರೇಸ್ ಕೋರ್ಸ್ ರಸ್ತೆ, ಕಬ್ಬನ್ ರಸ್ತೆ ಸೇರಿದಂತೆ ಚಿನ್ನಸ್ವಾಮಿ ಕ್ರೀಡಾಂಗಣ ವ್ಯಾಪ್ತಿಯ ಪ್ರಮುಖ ರಸ್ತೆಗಳಲ್ಲಿ ವಾಹನ ನಿಲುಗಡೆ ನಿಷೇಧಿಸಲಾಗಿದೆ. ಆದರೆ, ಸೆಂಟ್ ಜೋಸೆಫ್ ಇಂಡಿಯನ್ ಹೈಸ್ಕೂಲ್ ಮೈದಾನ, ಸೆಂಟ್ ಜೋಸೆಫ್ ಯುರೋಪಿಯನ್ ಸ್ಕೂಲ್ ಮೈದಾನ, ಮ್ಯೂಸಿಯಂ ರಸ್ತೆ, ಫ್ರೀಡಂ ಪಾರ್ಕ ಎಂಎಲ್ಸಿಪಿ ಪಾರ್ಕಿಗ್ ಸ್ಥಳ, ಗರುಡಾ ಮಾಲ್ ಪಾರ್ಕಿಗ್ ಸ್ಥಳ, ಶಿವಾಜಿನಗರ ಬಸ್ ನಿಲ್ದಾಣದ 1ನೇ ಮಹಡಿ, ಯುಬಿಸಿಟಿ ನಿಲುಗಡೆ ಸ್ಥಳ, ಕಂಠೀರವ ಕ್ರೀಡಾಂಗಣದಲ್ಲಿ ವಾಹನ ನಿಲುಗಡೆಗೆ ಅವಕಾಶ ನೀಡಲಾಗಿದೆ ಎಂದು ಬೆಂಗಳೂರು ನಗರ ಸಂಚಾರ ಪೊಲೀಸರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ದಾಳಿಯ ಗುರಿಯನ್ನು ಗುರುತಿಸಲು ಇರಾನ್ ಗೆ ರಶ್ಯ ಸಹಾಯ: ಜರ್ಮನಿ ಆರೋಪ
ಪ್ಯಾರಿಸ್: ದಾಳಿಯ ಗುರಿಗಳನ್ನು ಗುರುತಿಸಲು ಇರಾನ್ ಗೆ ರಶ್ಯ ಸಹಾಯ ಮಾಡುತ್ತಿದೆ ಎಂದು ಜರ್ಮನಿಯ ವಿದೇಶಾಂಗ ಸಚಿವ ಜೊಹಾನ್ ವಾಡ್ ಫಾಲ್ ಶುಕ್ರವಾರ ಆರೋಪಿಸಿದ್ದಾರೆ. ಇರಾನ್ ಯುದ್ಧವನ್ನು ಬಳಸಿಕೊಂಡು, ಉಕ್ರೇನ್ ಮೇಲೆ ನಡೆಸುತ್ತಿರುವ ದಾಳಿಯಿಂದ ಗಮನವನ್ನು ಬೇರೆಡೆಗೆ ಸೆಳೆಯಲು ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಪ್ರಯತ್ನಿಸುತ್ತಿದ್ದಾರೆ ಎಂದು ಅವರು ಟೀಕಿಸಿದ್ದಾರೆ. ಫ್ರಾನ್ಸ್ ನಲ್ಲಿ ನಡೆಯುತ್ತಿರುವ ಜಿ-7 ಸಭೆಯಲ್ಲಿ ಸುದ್ದಿಗಾರರನ್ನುದ್ದೇಶಿಸಿ ಮಾತನಾಡಿದ ಅವರು, ಮಧ್ಯಪ್ರಾಚ್ಯದ ಉದ್ವಿಗ್ನತೆ ಅಂತ್ಯಗೊಂಡ ನಂತರ ಹಾರ್ಮುಝ್ ಜಲಸಂಧಿಯ ವಿಚಾರದಲ್ಲಿ ಪಾತ್ರವಹಿಸುವ ಕುರಿತು ಜರ್ಮನಿಯ ನಿಲುವಿನ ರೂಪುರೇಷೆಯನ್ನು ಅಂತಿಮಗೊಳಿಸಲು ಅಮೆರಿಕದ ರಾಜ್ಯ ಕಾರ್ಯದರ್ಶಿ ಮಾರ್ಕೊ ರುಬಿಯೊ ಅವರೊಂದಿಗೆ ಮಾತುಕತೆ ನಡೆಸಿದ್ದೇನೆ ಎಂದು ತಿಳಿಸಿದ್ದಾರೆ. “ಪುಟಿನ್ ಅವರು ಉಕ್ರೇನ್ ಮೇಲಿನ ತಮ್ಮ ದಾಳಿಯಿಂದ ಗಮನವನ್ನು ಮಧ್ಯಪ್ರಾಚ್ಯದ ಉದ್ವಿಗ್ನತೆ ಕಡೆಗೆ ತಿರುಗಿಸಲು ಪ್ರಯತ್ನಿಸುತ್ತಿದ್ದಾರೆ,” ಎಂದು ಅವರು ಹೇಳಿದ್ದಾರೆ. “ಈ ಲೆಕ್ಕಾಚಾರ ಯಶಸ್ವಿಯಾಗುವುದಿಲ್ಲ. ಈ ಎರಡು ಬಿಕ್ಕಟ್ಟುಗಳು ಪರಸ್ಪರ ನಿಕಟವಾಗಿ ಸಂಬಂಧ ಹೊಂದಿರುವುದನ್ನು ನಾವು ಸ್ಪಷ್ಟವಾಗಿ ನೋಡುತ್ತಿದ್ದೇವೆ. ಮಹತ್ವದ ಗುರಿಗಳ ಕುರಿತು ರಶ್ಯ ಇರಾನ್ ಗೆ ಮಾಹಿತಿ ನೀಡುತ್ತಿರುವುದು ಸಾಬೀತಾಗಿದೆ,” ಎಂದು ಅವರು ಹೇಳಿದ್ದಾರೆ.
ಉಪಚುನಾವಣೆ : ಕಾಂಗ್ರೆಸ್ ಸ್ಟಾರ್ ಪ್ರಚಾರ ಪಟ್ಟಿ ಪ್ರಕಟ
ಬೆಂಗಳೂರು : ಶಾಮನೂರು ಶಿವಶಂಕರಪ್ಪ ಹಾಗೂ ಎಚ್.ವೈ.ಮೇಟಿ ಅವರ ನಿಧನದಿಂದ ತೆರವಾಗಿರುವ ದಾವಣಗೆರೆ ದಕ್ಷಿಣ ಹಾಗೂ ಬಾಗಲಕೋಟೆ ಕ್ಷೇತ್ರಗಳಿಗೆ ಎಪ್ರಿಲ್ 9ರಂದು ನಡೆಯಲಿರುವ ಉಪಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಸ್ಟಾರ್ ಪ್ರಚಾರಕರ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ, ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಿಸಿಎಂ ಡಿ.ಕೆ.ಶಿವಕುಮಾರ್, ಮುಖ್ಯಮಂತ್ರಿ ಸಿದ್ದರಾಮಯ್ಯ, ಸಂಸದ ಡಾ.ಸೈಯದ್ ನಾಸೀರ್ ಹುಸೇನ್, ಕೆಪಿಸಿಸಿ ಕಾರ್ಯಾಧ್ಯಕ್ಷ ಜಿ.ಸಿ.ಚಂದ್ರಶೇಖರ್, ಶಾಸಕ ತನ್ವೀರ್ ಸೇಠ್ ಹಾಗೂ ಸಚಿವರು, ಶಾಸಕರು, ಪಕ್ಷದ ಪ್ರಮುಖ ಮುಖಂಡರು ಸೇರಿದಂತೆ 40 ಮಂದಿ ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿದ್ದಾರೆ.
ಭಾರತದ ವಿದೇಶಿ ವಿನಿಮಯ ಮೀಸಲು 698.346 ಶತಕೋಟಿ ಡಾಲರ್ ನಿಂದ 11.41 ಶತಕೋಟಿ ಡಾಲರ್ ಗೆ ಕುಸಿತ: RBI ದತ್ತಾಂಶ
ಮುಂಬೈ: ಚಿನ್ನದ ಮೀಸಲು ನಿಧಿ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿರುವ ಹಿನ್ನೆಲೆಯಲ್ಲಿ, ಭಾರತದ ವಿದೇಶಿ ವಿನಿಮಯ ಮೀಸಲು ಮಾರ್ಚ್ 20ಕ್ಕೆ ಅಂತ್ಯಗೊಂಡ ವಾರದಲ್ಲಿ 698.436 ಶತಕೋಟಿ ಡಾಲರ್ ನಿಂದ 11.413 ಶತಕೋಟಿ ಡಾಲರ್ ಗೆ ಕುಸಿದಿದೆ ಎಂದು ಶುಕ್ರವಾರ ಭಾರತೀಯ ರಿಸರ್ವ್ ಬ್ಯಾಂಕ್ ತಿಳಿಸಿದೆ. ಇದಕ್ಕೂ ಮುನ್ನದ ವಾರದಲ್ಲಿ ಒಟ್ಟಾರೆ ವಿದೇಶಿ ವಿನಿಮಯ ಮೀಸಲು 709.759 ಶತಕೋಟಿ ಡಾಲರ್ ನಿಂದ 7.052 ಶತಕೋಟಿ ಡಾಲರ್ ಗೆ ಕುಸಿದಿತ್ತು. ಪಶ್ಚಿಮ ಏಷ್ಯಾ ಬಿಕ್ಕಟ್ಟಿಗೂ ಮುನ್ನ, ಈ ವರ್ಷದ ಫೆಬ್ರವರಿ 27ರಂದು ವಿದೇಶಿ ವಿನಿಮಯ ಮೀಸಲು ಪ್ರಮಾಣ ಸಾರ್ವಕಾಲಿಕ 728.759 ಶತಕೋಟಿ ಡಾಲರ್ ಗೆ ಏರಿಕೆಯಾಗಿತ್ತು. ಮಾರ್ಚ್ 20ಕ್ಕೆ ಅಂತ್ಯಗೊಂಡಂತೆ ವಿದೇಶಿ ವಿನಿಮಯ ಮೀಸಲಿನ ಪ್ರಮುಖ ಭಾಗವಾದ ವಿದೇಶಿ ನಗದು ಸ್ವತ್ತಿನ ಪ್ರಮಾಣವು 557.695 ಶತಕೋಟಿ ಡಾಲರ್ ಗೆ ಹೋಲಿಸಿದರೆ 2.127 ಶತಕೋಟಿ ಡಾಲರ್ನಷ್ಟು ಏರಿಕೆಯಾಗಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ದತ್ತಾಂಶ ತಿಳಿಸಿದೆ. ಆದರೆ, ಈ ವಾರದಲ್ಲಿ ಚಿನ್ನದ ಮೀಸಲು ನಿಧಿ 117.186 ಶತಕೋಟಿ ಡಾಲರ್ ನಿಂದ 13.495 ಶತಕೋಟಿ ಡಾಲರ್ ಗೆ ಇಳಿಕೆಯಾಗಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ತಿಳಿಸಿದೆ. ವಿಶೇಷ ಹಿಂಪಡೆಯುವ ಹಕ್ಕುಗಳು 18.632 ಶತಕೋಟಿ ಡಾಲರ್ ನಿಂದ 65 ದಶಲಕ್ಷ ಡಾಲರ್ ಗೆ ಇಳಿಕೆಯಾಗಿದೆ ಎಂದು ಕೇಂದ್ರೀಯ ಬ್ಯಾಂಕ್ ತಿಳಿಸಿದೆ. ಭಾರತೀಯ ರಿಸರ್ವ್ ಬ್ಯಾಂಕ್ ದತ್ತಾಂಶದ ಪ್ರಕಾರ, ಈ ವಾರದಲ್ಲಿ ಅಂತಾರಾಷ್ಟ್ರೀಯ ಹಣಕಾಸು ನಿಧಿ (IMF)ಯಲ್ಲಿ ಭಾರತದ ಮೀಸಲು ಪ್ರಮಾಣವು 4.833 ಶತಕೋಟಿ ಡಾಲರ್ ಗೆ ಹೋಲಿಸಿದರೆ 19 ದಶಲಕ್ಷ ಡಾಲರ್ನಷ್ಟು ಏರಿಕೆಯಾಗಿದೆ.
ಕಲುಷಿತ ಆಹಾರ ಸೇವನೆಯಿಂದ ಪ್ರತಿವರ್ಷ 1.20 ಲಕ್ಷ ಮಂದಿ ಸಾವು: ಡಾ. ಶರತ್ ಕೆ. ರಾವ್
ಮಣಿಪಾಲ, ಮಾ.27: ದೇಶದಲ್ಲಿ ಕಲುಷಿತ ಆಹಾರ ಸೇವನೆಯಿಂದ ಪ್ರತಿ ವರ್ಷ ಸರಾಸರಿ 1,20,000 ಮಂದಿ ಸಾವನ್ನಪ್ಪುತ್ತಿದ್ದು, ಆ ಕಾರಣದಿಂದ ಆಹಾರ ಸುರಕ್ಷತಾ ಕ್ರಮಗಳ ಬಗ್ಗೆ ಹೆಚ್ಚಿನ ಜಾಗ್ರತೆ ಹಾಗೂ ಅಗತ್ಯ ಕ್ರಮ ಗಳನ್ನು ಕೈಗೊಳ್ಳಬೇಕಾಗಿದೆ ಎಂದು ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಷನ್(ಮಾಹೆ)ಯ ಪ್ರೊ ವೈಸ್ ಚಾನ್ಸಲರ್ (ಆರೋಗ್ಯ ವಿಜ್ಞಾನ) ಡಾ.ಶರತ್ ಕೆ.ರಾವ್ ಹೇಳಿದ್ದಾರೆ. ಮಾಹೆಯ ಆಹಾರ ಮತ್ತು ನೈರ್ಮಲ್ಯ ಮೇಲ್ವಿಚಾರಣಾ ಸಮಿತಿ ಹಾಗೂ ಮಣಿಪಾಲ ಕಸ್ತೂರ್ಬಾ ವೈದ್ಯಕೀಯ ಕಾಲೇಜಿನ ಸಮುದಾಯ ವೈದ್ಯಕೀಯ ವಿಭಾಗದ ಸಹಯೋಗದಲ್ಲಿ ಆಹಾರ ಸುರಕ್ಷತಾ ಕ್ರಮಗಳ ಬಿಗು ಗೊಳಿಸುವ ಕುರಿತು ಸಂಬಂಧಪಟ್ಟ ವಿಭಾಗಗಳ ಪ್ರತಿನಿಧಿಗಳಿಗೆ ಎರಡು ದಿನಗಳ ತರಬೇತಿ ಕಾರ್ಯಗಾರವನ್ನು ಕೆಎಂಸಿಯ ಇಂಟರ್ಯಾಕ್ಟ್ ಸಭಾಂಗಣದಲ್ಲಿ ಉದ್ಘಾಟಿಸಿ ಅವರು ಮಾತನಾಡುತಿದ್ದರು. ಈ ನಿಟ್ಟಿನಲ್ಲಿ ದೊಡ್ಡ ಪ್ರಮಾಣದ ಆಹಾರ ತಯಾರಿಕಾ ಘಟಕಗಳಲ್ಲಿ ಆಹಾರ ಶುಚಿತ್ವ ಕಾಪಾಡಲು ಯಾಂತ್ರಿಕರಣ ಗೊಳಿಸಬೇಕಾದ, ಆಹಾರದ ಪರಿಶುದ್ಧತೆಯನ್ನು ಉತ್ಕ್ರಷ್ಟ ಮಟ್ಟದಲ್ಲಿ ಕಾಯ್ದುಕೊಳ್ಳಬೇಕಾದ ಅಗತ್ಯತೆಗಳ ಬಗ್ಗೆ ಅವರು ವಿಶೇಷ ಒತ್ತು ನೀಡಿದರು. ಕೆಎಂಸಿಯ ಸಹ ಡೀನ್ ಡಾ.ವಿನೋದ್ ಸಿ. ನಾಯಕ್ ಮಾತನಾಡಿ, ಪ್ರಸ್ತುತ ಕಾಲಘಟ್ಟದಲ್ಲಿ ಅಗತ್ಯವಾಗಿ ತಿಳಿದು ಕೊಳ್ಳಬೇಕಾದ ಆಹಾರ ಸುರಕ್ಷತಾ ಕ್ರಮಗಳ ಬಗ್ಗೆ ವಿವರವಾದ ಮಾಹಿತಿ ನೀಡಿದರು. ಕಾರ್ಯಗಾರದ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ರಾಷ್ಟ್ರೀಯ ಆಹಾರ ಸುರಕ್ಷತೆಗಳ ಸಲಹೆಗಾರ ಡಾ. ಪಶುಪತಿ ಮಾತನಾಡಿ, ಸಮುದಾಯ ದಲ್ಲಿ ಆಹಾರ ಸೇವನೆಗೆ ಸಂಬಂಧಿಸಿದ ಅನಾರೋಗ್ಯ ಅಥವಾ ಸಾವು ಸಂಭವಿಸುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಆಹಾರ ಸುರಕ್ಷತೆ ಹಾಗೂ ಗುಣಮಟ್ಟ ಕಾಯ್ದುಕೊಳ್ಳುವುದು ಪ್ರತೀ ಆಹಾರ ತಯಾರಿಕಾ, ಸಂಗ್ರಹಣಾ, ವಿತರಣಾ ಘಟಕಗಳ ಜವಾಬ್ದಾರಿಯಾಗಿದೆ ಎಂದರು. ಮಣಿಪಾಲ ಮಾಹೆ ಕ್ಯಾಂಪಸ್ನ ಆಹಾರ ಮತ್ತು ನೈರ್ಮಲ್ಯ ಮೇಲ್ವಿಚಾರಣಾ ಸಮಿತಿಯ ಮುಖ್ಯಸ್ಥರಾದ ಡಾ. ಅಶ್ವಿನಿಕುಮಾರ್ ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕಾರ್ಯಕ್ರಮ ಸಂಯೋಜಕ ಕಾರ್ಯದರ್ಶಿ ಡಾ. ದಿವ್ಯಾ ಅರವಿಂದ್ ಪ್ರಭು ವಂದಿಸಿದರು. ಡಾ. ರತ್ನಾ ಜಯ್ ಕಾರ್ಯಕ್ರಮ ನಿರೂಪಿಸಿದರು. ಎರಡು ದಿನಗಳ ತರಬೇತಿ ಕಾರ್ಯಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ರಾಷ್ಟ್ರೀಯ ಆಹಾರ ಸುರಕ್ಷತೆಗಳ ಸಲಹೆ ಗಾರರಾದ ಡಾ.ವಿ.ಪಶುಪತಿ, ಆಹಾರ ತಯಾರಿಕಾ ಉಪಕರಣಗಳ ಯಾಂತ್ರೀಕರಣ ತಂತ್ರಜ್ಞ ಪರಿಣಿತ ಅಲೆಕ್ಸ್ ಜಾನ್ ಜೆ., ಮಾಹೆ ಮಣಿಪಾಲ ಕ್ಯಾಂಪಸ್ನ ಆಹಾರ ಮತ್ತು ನೈರ್ಮಲ್ಯ ಮೇಲ್ವಿಚಾರಣಾ ಸಮಿತಿ ಮುಖ್ಯಸ್ಥ ಡಾ.ಅಶ್ವಿನಿ ಕುಮಾರ್, ಸಾಂಕ್ರಾಮಿಕ ರೋಗಗಳ ವಿಭಾಗದ ಮುಖ್ಯಸ್ಥ ಡಾ. ಮುರಳೀಧರ್ ವರ್ಮ, ಸಮುದಾಯ ವೈದ್ಯಕೀಯ ವಿಭಾಗದ ಸಹ ಪ್ರಾಧ್ಯಾಪಕ ಡಾ.ದಿವ್ಯಾ ಅರವಿಂದ್ ಪ್ರಭು, ಎನ್ಐಟಿಕೆ ಸುರತ್ಕಲ್ನ ರಸಾಯನಿಕ ತಂತ್ರಜ್ಞಾನ ವಿಭಾಗದ ಸಹ ಪ್ರಾಧ್ಯಾಪಕ ಡಾ. ಜಗನ್ನಾಥ್ ಟಿ. ಕಲಾಥಿ, ವಾಗ್ಶಾದ ಸಹಾಯಕ ಪ್ರಾಧ್ಯಾಪಕ ಅಜಿತ್ ನಾಯಕ್ ಹಾಗೂ ಆಹಾರ ತಜ್ಞರಾದ ಸುವರ್ಣ ಹೆಬ್ಬಾರ್ ವಿವಿಧ ವಿಷಯಗಳ ಕುರಿತು ಮಾಹಿತಿ ನೀಡಿದರು. ಕಾರ್ಯಗಾರದಲ್ಲಿ 143 ಮಂದಿ ಪ್ರತಿನಿಧಿಗಳು ಭಾಗವಹಿಸಿದ್ದಾರೆ.
ಹಾರ್ಮುಝ್ ಜಲಸಂಧಿಯಲ್ಲಿ ಪಾಕಿಸ್ತಾನದ ಕಪಟ ನಾಟಕ ?
ಟೆಹ್ರಾನ್, ಮಾ.27: ಹಾರ್ಮುಝ್ ಜಲಸಂಧಿಯ ಮೂಲಕ ಸಾಗಲು ಭಾರತ , ಪಾಕಿಸ್ತಾನ ಸೇರಿದಂತೆ ಐದು ರಾಷ್ಟ್ರಗಳ ಹಡಗುಗಳಿಗೆ ಅವಕಾಶ ನೀಡುವುದಾಗಿ ಇರಾನ್ ಘೋಷಿಸಿತ್ತು. ಆದರೆ ಈ ಅವಕಾಶವನ್ನು ಬಳಸಿಕೊಂಡು ಪಾಕಿಸ್ತಾನವು ಅಮೆರಿಕದ ಹಿತಾಸಕ್ತಿಗೆ ಸಂಬಂಧಿಸಿದ ಹಡಗುಗಳನ್ನು ಕರೆತಂದಿದೆ ಎಂದು ಉನ್ನತ ಗುಪ್ತಚರ ಮೂಲಗಳು ಹೇಳಿವೆ. ಪಾಕಿಸ್ತಾನದ ಈ ಕ್ರಮವು ಸಂಘರ್ಷದ ನಿರ್ಣಾಯಕ ಹಂತದಲ್ಲಿ ಲೆಕ್ಕಾಚಾರದ `ಡಬಲ್ ಗೇಮ್' ಎಂದು ಇರಾನ್ ಪರಿಗಣಿಸಿದ್ದು ತೀವ್ರ ಅಸಮಾಧಾನಗೊಂಡಿದೆ ಎಂದು ವರದಿಯಾಗಿದೆ. ತೈಲ ಸಾಗಿಸುವ ಸುಮಾರು 10 ಪಾಕಿಸ್ತಾನಿ ಧ್ವಜ ಹೊಂದಿದ್ದ ಹಡಗುಗಳಿಗೆ ಹಾರ್ಮುಝ್ ಜಲಸಂಧಿ ದಾಟಲು ಅವಕಾಶ ನೀಡಲಾಗಿತ್ತು. ಆದರೆ ಅನುಮತಿಸಲಾದ ಹಡಗುಗಳನ್ನು ಅಮೆರಿಕಕ್ಕೆ ಲಾಭದಾಯಕವಾದ ರೀತಿಯಲ್ಲಿ ಬಳಸಲಾಗಿದೆ ಎಂದು ಗುಪ್ತಚರ ಮೂಲಗಳು ಹೇಳಿವೆ. ಅಮೆರಿಕದ 10 ಹಡಗುಗಳಿಗೆ ಹಾರ್ಮುಝ್ನಲ್ಲಿ ಇರಾನ್ ಅವಕಾಶ ನೀಡಿದೆ ಎಂದು ಅಮೆರಿಕ ಅಧ್ಯಕ್ಷ ಟ್ರಂಪ್ ಹೇಳಿಕೆ ನೀಡಿರುವುದು ಈ ವರದಿಗೆ ಪುಷ್ಟಿ ನೀಡಿದೆ. ಪಾಕಿಸ್ತಾನದ ಹಾರ್ಮುಝ್ ನಡವಳಿಕೆ ಉದ್ದೇಶಪೂರ್ವಕ `ಡಬಲ್ ಗೇಮ್'ನ ಭಾಗವಾಗಿದೆ ಎಂದು ಇರಾನ್ ಅಸಮಾಧಾನ ವ್ಯಕ್ತಪಡಿಸಿರುವುದಾಗಿ ವರದಿಯಾಗಿದೆ.
ರೈಲ್ವೆ ಲೆವೆಲ್ ಕ್ರಾಸಿಂಗ್ನ ಸುರಕ್ಷತೆ ಹೆಚ್ಚಿಸಲು ವಿಚಾರಗೋಷ್ಠಿ
ಉಡುಪಿ: ರೈಲ್ವೆ ಲೆವೆಲ್ ಕ್ರಾಸಿಂಗ್ ಗೇಟ್ಗಳ ಸುರಕ್ಷತೆಯನ್ನು ಹೆಚ್ಚಿಸುವ ಮೂಲಕ ರೈಲು ಪ್ರಯಾಣವನ್ನು ಇನ್ನಷ್ಟು ಆಹ್ಲಾದಕರಗೊಳಿಸುವ ನಿಟ್ಟಿಗೆ ಉನ್ನತ ಮಟ್ಟದ ವಿಚಾರಗೋಷ್ಠಿಯೊಂದನ್ನು ಕೊಂಕಣ ರೈಲ್ವೆಯ ವತಿ ಯಿಂದ ಬೇಲಾಪುರದಲ್ಲಿರುವ ಸಂಸ್ಥೆಯ ಕಾರ್ಪೋರೇಟ್ ಕಚೇರಿ ಸಭಾಂಗಣದಲ್ಲಿ ಗುರುವಾರ ಆಯೋಜಿಸಲಾಗಿತ್ತು. ಈ ವಿಚಾರಗೋಷ್ಠಿಯಲ್ಲಿ ಕೊಂಕಣ ರೈಲ್ವೆಯಲ್ಲಿ ಲೆವೆಲ್ ಕ್ರಾಸಿಂಗ್ ಗೇಟ್ಗಳನ್ನು ನಿರ್ವಹಣೆ ನಡೆಸುವ ಗೇಟ್ಮೆನ್ಗಳು, ಮೇಲ್ವಿಚಾರಕರು, ಸ್ಟೇಶನ್ ಮಾಸ್ಟರ್ಗಳು ಹಾಗೂ ಲೋಕೊ ಪೈಲೆಟ್ಗಳು ಪಾಲ್ಗೊಂಡಿದ್ದರು. ಕೊಂಕಣ ರೈಲ್ವೆಯ (ಕೆಆರ್ಸಿಎಲ್) ಅಧ್ಯಕ್ಷ ಹಾಗೂ ಆಡಳಿತ ನಿರ್ದೇಶಕ (ಸಿಎಂಡಿ) ಸಂತೋಷ್ ಕುಮಾರ್ ಝಾ ಅವರ ಅಧ್ಯಕ್ಷತೆಯಲ್ಲಿ ನಡೆದ ಈ ವಿಚಾರಗೋಷ್ಠಿಯಲ್ಲಿ ಸಂಸ್ಥೆಯ ಆರ್ಥಿಕ ವಿಭಾಗದ ನಿರ್ದೇಶಕ ರಾಜೇಶ್ ಎಂ.ಭಾದಂಗ್ ಹಾಗೂ ದಾರಿ ಮತ್ತು ನಿರ್ವಹಣೆ ನಿರ್ದೇಶಕ ರಾಜೀವ್ ಕುಮಾರ್ ಮಿಶ್ರಾ ಅವರು ಸಂಸ್ಥೆ ಪ್ರಯಾಣಿ ಕರ ಹಾಗೂ ರೈಲ್ವೆಯ ಸುರಕ್ಷತೆಯ ಕುರಿತಂತೆ ತೆಗೆದುಕೊಂಡಿರುವ ಕ್ರಮಗಳ ಕುರಿತು ವಿವರಿಸಿದರು. ಸಂವಾದದ ಸಂದರ್ಭದಲ್ಲಿ ಗೇಟ್ ಉಪಕರಣಗಳನ್ನು ಸರಿಯಾದ ರೀತಿಯಲ್ಲಿ ಸದ್ಭಳಕೆ ಮಾಡಿಕೊಳ್ಳುವ ಕುರಿತು ಒತ್ತು ನೀಡಲಾಯಿತು. ಗೇಟ್ಮನ್ಗಳು, ಲೋಕೊ ಪೈಲೆಟ್ಗಳು ಹಾಗೂ ಸ್ಟೇಶನ್ ಮಾಸ್ಟರ್ಗಳು ಲೆವೆಲ್ ಕ್ರಾಸಿಂಗ್ ಗೇಟ್ಗಳ ಸುರಕ್ಷತೆಗೆ ಕೈಗೊಳ್ಳಬೇಕಾದ ಎಚ್ಚರಿಕೆ ಕ್ರಮಗಳ ಕುರಿತು ಮಾಹಿತಿ ನೀಡಲಾಯಿತು. ಲೆವೆಲ್ ಕ್ರಾಸಿಂಗ್ ಗೇಟ್ಗಳಲ್ಲಿ ಯಾವುದೇ ಅನಿರೀಕ್ಷಿತ ಬೆಳವಣಿಗೆ ಗಳಾದಲ್ಲಿ ತಕ್ಷಣ ಕೈಗೊಳ್ಳಬೇಕಾದ ಕ್ರಮಗಳು ಕುರಿತು, ರೈಲುಗಳ ಸುಗಮ ಸಂಚಾರಕ್ಕಾಗಿ ಗೇಟ್ಗಳಲ್ಲಿ ಪ್ರತಿದಿನ ಅನುಸರಿಸಬೇಕಾದ ಎಚ್ಚರಿಕೆ ಕ್ರಮಗಳ ಕುರಿತೂ ತಿಳುವಳಿಕೆ ನೀಡಲಾಯಿತು. ಅಲ್ಲದೇ ಲೆವೆಲ್ ಕ್ರಾಸಿಂಗ್ ಗೇಟ್ಗಳ ಅಕ್ಕಪಕ್ಕದ ರಸ್ತೆಗಳಲ್ಲಿ ಇರಬೇಕಾದ ಸೂಚನಾ ಫಲಕಗಳು, ಸ್ಪಷ್ಟವಾದ ಮಾರ್ಕಿಂಗ್ಗಳ ಬಗ್ಗೆಯೂ ಗೇಟ್ಮೆನ್ಗಳು ಹಾಗೂ ಸ್ಟೇಷನ್ ಮಾಸ್ಟರ್ಗಳಿಗೆ ಸೂಚನೆಗಳನ್ನು ನೀಡಲಾಯಿತು. ಸಿಎಂಡಿ ಸಂತೋಷ್ಕುಮಾರ್ ಝಾ ಅವರು ಮಾತನಾಡಿ, ಲೆವೆಲ್ ಕ್ರಾಸಿಂಗ್ ಗೇಟ್ಗಳ ಪ್ಯಾನೆಲ್ಗಳಿಗೆ ಸುದೀರ್ಘ ಬಾಳಿಕೆಯ ರಬ್ಬರ್ಗಳನ್ನು ಅಳವಡಿಸುವಂತೆ ಸೂಚಿಸಿದರಲ್ಲದೇ ಇದರಿಂದ ರಸ್ತೆ ಬಳಕೆದಾರರಿಗೆ ಇಲ್ಲಿ ಸಾಗುವುದು ಸುರಕ್ಷಿತ ಹಾಗೂ ಆರಾಮದಾಯಕವಾಗಿರುತ್ತದೆ ಎಂದರು.
Ballari | ಗೋಶಾಲೆಗೆ ಒಂದು ಟ್ರ್ಯಾಕ್ಟರ್ ಕಲ್ಲಂಗಡಿ ದೇಣಿಗೆಯಾಗಿ ನೀಡಿದ ರೈತ
ಬಳ್ಳಾರಿ / ಕಂಪ್ಲಿ : ತಾಲೂಕಿನ ದೇವಸಮುದ್ರ ಕ್ರಾಸ್ ಸಮೀಪದಲ್ಲಿರುವ ಶ್ರೀ ಕಲ್ಯಾಣ ಚೌಕಿಮಠದ ಕಾಮಧೇನು ಗೋಶಾಲೆಯ ಗೋವುಗಳಿಗೆ ಕೊಟ್ಟಾಲ್ ಗ್ರಾಮದ ಪ್ರಗತಿಪರ ರೈತ ಮಾದಿನೇನಿ ನಾಗರಾಜ ಅವರು ಸುಮಾರು ಒಂದು ಟ್ರ್ಯಾಕ್ಟರ್ ನಷ್ಟು ಕಲ್ಲಂಗಡಿ ಹಣ್ಣುಗಳನ್ನು ದೇಣಿಗೆಯಾಗಿ ನೀಡಿದ್ದಾರೆ. ಮೂರು ಎಕರೆ ಪ್ರದೇಶದಲ್ಲಿ ಕಲ್ಲಂಗಡಿ ಬೆಳೆದಿದ್ದ ರೈತ ನಾಗರಾಜ ಅವರು, ಇತ್ತೀಚೆಗೆ ಮಾರುಕಟ್ಟೆಯಲ್ಲಿ ಹಣ್ಣಿನ ಬೆಲೆ ಕುಸಿದಿರುವುದರಿಂದ ಹಾಗೂ ಕೊಯ್ಯುವ ಕೂಲಿಯೂ ಸಿಗದ ಪರಿಸ್ಥಿತಿಯಿಂದ ಹಣ್ಣುಗಳನ್ನು ಹೊಲದಲ್ಲೇ ಹಾಳು ಮಾಡುವ ಬದಲು ಗೋಶಾಲೆಗೆ ನೀಡಲು ಮುಂದಾಗಿದ್ದಾರೆ. ಸಮಾಜ ಸೇವೆಯಲ್ಲಿ ತೊಡಗಿರುವ ಹಾಗೂ ಗೋವುಗಳಿಗೆ ಆಶ್ರಯ ನೀಡುತ್ತಿರುವ ಗೋಶಾಲೆಗೆ ಇದು ಸಹಾಯವಾಗಲಿದೆ ಎಂದು ತಿಳಿಸಿದ್ದಾರೆ. ಕಲ್ಯಾಣ ಚೌಕಿಮಠ ಕಾಮಧೇನು ಗೋಶಾಲೆಯ ಮುಖ್ಯಸ್ಥ ಕೆ.ಎಂ. ಬಸವರಾಜ ಶಾಸ್ತ್ರಿಗಳು ಮಾತನಾಡಿ, ಗೋಶಾಲೆಯಲ್ಲಿ ನೂರಾರು ಗೋವುಗಳನ್ನು ಸಾಕಲಾಗುತ್ತಿದೆ. ಈ ಭಾಗದಲ್ಲಿ ಎರಡನೇ ಬೆಳೆ ಇಲ್ಲದ ಕಾರಣ ಮೇವಿನ ಕೊರತೆ ಉಂಟಾಗಿದೆ. ಇಂತಹ ಸಂದರ್ಭದಲ್ಲಿ ರೈತ ನಾಗರಾಜ ನೀಡಿದ ಕಲ್ಲಂಗಡಿ ಹಣ್ಣುಗಳು ಗೋವುಗಳಿಗೆ ಬಹಳ ಉಪಯೋಗವಾಗಿವೆ ಎಂದು ಕೃತಜ್ಞತೆ ವ್ಯಕ್ತಪಡಿಸಿದರು. ಗೋಶಾಲೆ ಗುಡ್ಡ ಪ್ರದೇಶದಲ್ಲಿದ್ದು, ಮಳೆ ಅಭಾವದಿಂದ ಬೆಳೆಯಿಲ್ಲದ ಪರಿಸ್ಥಿತಿ ಎದುರಾಗಿದೆ. ಹೀಗಾಗಿ ತಾಲೂಕಿನ ಹಾಗೂ ಸುತ್ತಮುತ್ತಲಿನ ರೈತರು ಗೋಶಾಲೆಗೆ ಮೇವು ಒದಗಿಸಲು ಮುಂದಾಗಬೇಕು ಎಂದು ಅವರು ಮನವಿ ಮಾಡಿದರು. ಈ ಸಂದರ್ಭದಲ್ಲಿ ಕೆ.ಎಂ. ಪ್ರದೀಪ, ಮಾದಿನೇನಿ ನಾಗರಾಜ, ಗೋಶಾಲೆಯ ಸಿಬ್ಬಂದಿಗಳು ಹಾಗೂ ಶ್ರೀಮಠದ ಭಕ್ತರು ಉಪಸ್ಥಿತರಿದ್ದರು.
ಇಸ್ರೇಲ್-ಅಮೆರಿಕದ ಮಿತ್ರರಿಗೆ ಹಾರ್ಮುಝ್ ಜಲಸಂಧಿಯನ್ನು ಮುಚ್ಚಲಾಗಿದೆ: IRGC ಘೋಷಣೆ
ಟೆಹ್ರಾನ್, ಮಾ.27: ಇಸ್ರೇಲ್ ಮತ್ತು ಅಮೆರಿಕದ ಮಿತ್ರರಾಷ್ಟ್ರಗಳಿಗೆ ಹಾರ್ಮುಝ್ ಜಲಸಂಧಿಯನ್ನು ಮುಚ್ಚಲಾಗಿದೆ ಮತ್ತು ಇದರ ಮೂಲಕ ಹಾದುಹೋಗಲು ಪ್ರಯತ್ನಿಸುವ ಯಾವುದೇ ಹಡಗುಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಇರಾನ್ನ ಇಸ್ಲಾಮಿಕ್ ರೆವೊಲ್ಯುಷನರಿ ಗಾರ್ಡ್ ಕಾಪ್ರ್ಸ್(ಐಆರ್ಜಿಸಿ) ಕಠಿಣ ಎಚ್ಚರಿಕೆ ರವಾನಿಸಿದೆ. ಈ ಹೇಳಿಕೆಯು ಗಲ್ಫ್ನಲ್ಲಿ ಉದ್ವಿಗ್ನತೆಯನ್ನು ಗಮನಾರ್ಹವಾಗಿ ಹೆಚ್ಚಿಸುತ್ತದೆ ಮತ್ತು ವಿಶ್ವದ ಅತ್ಯಂತ ನಿರ್ಣಾಯಕ ಜಲಸಂಧಿಯ ಸುರಕ್ಷತೆಯ ಬಗ್ಗೆ ಹೊಸ ಭೀತಿಯನ್ನು ಹುಟ್ಟುಹಾಕಿದೆ. ಈ ಮಧ್ಯೆ, ಇಸ್ರೇಲ್ ಮತ್ತು ಅಮೆರಿಕವನ್ನು ಬೆಂಬಲಿಸುವ ದೇಶಗಳೊಂದಿಗೆ ಸಂಪರ್ಕ ಹೊಂದಿರುವ ಹಡಗುಗಳಿಗೆ ನಿರ್ಬಂಧವನ್ನು ವಿಸ್ತರಿಸುವುದಾಗಿ ಇರಾನ್ನ ಅಧಿಕಾರಿಗಳು ಹೇಳಿದ್ದಾರೆ. ಅಮೆರಿಕ ಮತ್ತು ಇಸ್ರೇಲ್ನೊಂದಿಗೆ ಮೈತ್ರಿ ಮಾಡಿಕೊಳ್ಳುವ ಮತ್ತು ಬೆಂಬಲಿಸುವ ದೇಶಗಳ ಬಂದರುಗಳಿಗೆ ಯಾವುದೇ ಹಡಗುಗಳು ಯಾವುದೇ ಮಾರ್ಗದ ಮೂಲಕ ಹಾದುಹೋಗುವುದನ್ನು ನಾವು ತಡೆಯುತ್ತೇವೆ ಎಂದು ಹೇಳಿಕೆ ತಿಳಿಸಿದೆ. ಇರಾನ್ ಈಗ ಸಾರ್ವಜನಿಕವಾಗಿ ಘೋಷಿಸಿದಂತೆ ಜಲಸಂಧಿಯನ್ನು ಮುಚ್ಚಿದರೆ, ಅದು ಪ್ರಮುಖ ಪ್ರಾದೇಶಿಕ ಮತ್ತು ಆರ್ಥಿಕ ಬಿಕ್ಕಟ್ಟನ್ನು ಪ್ರಚೋದಿಸಬಹುದು .
Middle East Crisis: ಪ್ಯಾಲೆಸ್ತೀನಿ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳದೆ ಮಧ್ಯಪ್ರಾಚ್ಯ ಶಾಂತಿ ನೆಲೆಸಲು ಸಾಧ್ಯವೇ ಇಲ್ಲ: ಬರಹಗಾರ ಹರೀಶ್ ಗಂಗಾಧರ್ ಅವರ ಬರಹ ಇಲ್ಲಿದೆ. ಪ್ಯಾಲೆಸ್ತೀನಿ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳದೆ ಮಧ್ಯಪ್ರಾಚ್ಯ ಶಾಂತಿ ನೆಲೆಸಲು ಸಾಧ್ಯವೇ ಇಲ್ಲ. ನಿತ್ಯ ನಿರಂತರ ಯುದ್ಧದಲ್ಲಿದೆ ಎಂಬುದನ್ನು ನಾವು ಎಂದಿಗೂ ಮರೆಯಬಾರದು. ಈ ಬಾರಿ ಯುದ್ಧದ ಬಿಸಿ ನಮಗೂ
ಕಲಬುರಗಿ | ಜಿಲ್ಲಾ ಬಾಸ್ಕೆಟ್ಬಾಲ್ ತಂಡಕ್ಕೆ ಕ್ರೀಡಾ ಉಡುಪುಗಳ ವಿತರಣೆ
ಕಲಬುರಗಿ: ಕಲಬುರಗಿ ಜಿಲ್ಲಾ ಬಾಸ್ಕೆಟ್ಬಾಲ್ ಅಸೋಸಿಯೇಷನ್ ವತಿಯಿಂದ 18 ವರ್ಷದೊಳಗಿನ ಬಾಲಕರ ತಂಡಕ್ಕೆ ಕ್ರೀಡಾ ಉಡುಪುಗಳನ್ನು ದೇಣಿಗೆ ರೂಪದಲ್ಲಿ ವಿತರಿಸಲಾಯಿತು. ಅರುಜೀವ ಆಯುರ್ವೇದ ಸೆಂಟರ್ನ ನಿರ್ದೇಶಕರಾದ ಸಿದ್ದು ಪಾಟೀಲ ಹಾಗೂ ಅಭಿವೃದ್ಧಿ ಅಧಿಕಾರಿಗಳಾದ ಸಿದ್ದುರಾಜ ಗರೂರ ಅವರು ಕ್ರೀಡಾಪಟುಗಳಿಗೆ ಉಡುಪುಗಳನ್ನು ವಿತರಿಸಿ, ತಂಡಕ್ಕೆ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಯುವ ಕ್ರೀಡಾಪಟುಗಳು ಉತ್ತಮ ಸಾಧನೆ ಮಾಡಿ ಜಿಲ್ಲೆಯ ಹೆಮ್ಮೆ ಹೆಚ್ಚಿಸಲಿ ಎಂದು ಅವರು ಆಶಿಸಿದರು. ಕಾರ್ಯಕ್ರಮದಲ್ಲಿ ಕಲಬುರಗಿ ಜಿಲ್ಲಾ ಬಾಸ್ಕೆಟ್ಬಾಲ್ ಅಸೋಸಿಯೇಷನ್ ಅಧ್ಯಕ್ಷರಾದ ಮಲ್ಲಿಕಾರ್ಜುನ್ ಉದನೂರ್, ಕಾರ್ಯದರ್ಶಿಗಳಾದ ಡಾ. ಚಂದ್ರಕಾಂತ್ ಶಿರೋಳಿ ಹಾಗೂ ಜಿಲ್ಲಾ ಬಾಸ್ಕೆಟ್ಬಾಲ್ ತರಬೇತುದಾರ ಪ್ರವೀಣ್ ಪುಣೆ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದು, ತಂಡಕ್ಕೆ ಶುಭಾಶಯ ಕೋರಿದ್ದಾರೆ. ಈ ಕಾರ್ಯಕ್ರಮವು ಯುವ ಕ್ರೀಡಾಪಟುಗಳಿಗೆ ಉತ್ತೇಜನ ನೀಡುವಲ್ಲಿ ಮಹತ್ವದ ಪಾತ್ರ ವಹಿಸಲಿದೆ ಎಂದು ಅಭಿಪ್ರಾಯಪಟ್ಟರು.
ಕಲುಷಿತಗೊಂಡ ಫಲ್ಗುಣಿ ನದಿ| ನಾಗರಿಕರ ಮಾಲಿನ್ಯ ನಿಯಂತ್ರಣ ಮಂಡಳಿ ಕಚೇರಿ ಚಲೋ, ಪ್ರತಿಭಟನೆ
ಮಂಗಳೂರು: ಜೀವನದಿ ಫಲ್ಗುಣಿಗೆ ಮಾಲಿನ್ಯ ಹರಿಸುತ್ತಿರುವ ಕಂಪೆನಿಗಳ ವಿರುದ್ಧ ಕಠಿಣ ಕ್ರಮ ವಹಿಸಬೇಕು ಮತ್ತು ನದಿಯಲ್ಲಿ ಮಾಲಿನ್ಯ ತಡೆಯಲು ನದಿದಂಡೆಯ ಗ್ರಾಮಸ್ಥರನ್ನು ಮಾರಕ ರೋಗಗಳು ಮತ್ತು ಮಾಲಿನ್ಯಗಳಿಂದ ರಕ್ಷಿಸಬೇಕೆಂದು ಆಗ್ರಹಿಸಿ ಡಿವೈಎಫೈ ಮಂಗಳೂರು ನಗರ ಸಮಿತಿ ಮತ್ತು ಫಲ್ಗುಣಿ ನದಿ ಉಳಿಸಿ ಹೋರಾಟ ಸಮಿತಿ ಕೂಳೂರು ನೇತೃತ್ವದಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿ ಚಲೋ ಪ್ರತಿಭಟನೆಯ ಮೂಲಕ ಮಾಲಿನ್ಯ ನಿಯಂತ್ರಣಾ ಮಂಡಳಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು. ಕೂಳೂರು ಫಲ್ಗುಣಿ ನದಿಯನ್ನು ಕೈಗಾರಿಕೆಗಳು ಕಲುಷಿತಗೊಳಿಸುತ್ತಿದ್ದು, ನೀರು ಕಪ್ಪು ಬಣ್ಣಕ್ಕೆ ತಿರುಗಿ ಜಲಚರಗಳೆಲ್ಲ ಸತ್ತು ತೇಲುತ್ತಿವೆ. ನೀರಿನಲ್ಲಿ ಆಮ್ಲಜನಕ ಮಟ್ಟ ಸೊನ್ನೆಗಿಳಿದಿದೆ. ಕೂಳೂರು ಚರ್ಚ್ ಸುತ್ತಮುತ್ತ, ರಾಯಿಕಟ್ಟೆ, ಪಂಜಿಮೊಗರು, ತೋಕೂರು, ಮೇಲ್ ಪ್ಪಳ, ಅತ್ರೆಬೈಲ್, ಬಂಗಕೂಳೂರು, ದಂಬೇಲ್ ಮುಂತಾದ ನದಿ ಪಾತ್ರದ ವ್ಯಾಪ್ತಿಯಲ್ಲಿ ಬಾವಿ ನೀರು ಕಲುಷಿತಗೊಂಡು ಕುಡಿಯಲು ಅಯೋಗ್ಯವಾಗಿದೆ. ನದಿ ನೀರಿನಿಂದ ವಿಪರೀತ ವಾಸನೆ ಬರುತ್ತಿದ್ದು, ಜನರಿಗೆ ವಾಸಿಸಲು ಕಷ್ಟವಾಗುತ್ತಿದೆ. ಇಲ್ಲಿನ ಜಲಮಾಲಿನ್ಯದಿಂದಾಗಿ ಮಾರಕ ಖಾಯಿಲೆಗಳು ಈ ಭಾಗದ ಜನರನ್ನು ಭಾದಿಸುವ ಸಾಧ್ಯತೆ ಇದೆ. ಬಹುಮುಖ್ಯವಾಗಿ ಬೈಕಂಪಾಡಿ ಕೈಗಾರಿಕಾ ವಲಯದಿಂದ ಶುದ್ದೀಕರಿ ಸದ ಕೈಗಾರಿಕಾ ಮಾಲಿನ್ಯ ನೀರು ನದಿ ಸೇರುತ್ತಿದೆ. ಹಲವು ಮಧ್ಯಮ ಕೈಗಾರಿಕೆಗಳು, ಮೀನು ಸಂಸ್ಕರಣೆ, ಮದ್ಯ ತಯಾರಿಕಾ, ಪಾಮ್ ಆಯಿಲ್ ಘಟಕಗಳು ತ್ಯಾಜ್ಯ ನೀರನ್ನು ನೇರವಾಗಿ ಕುಡುಂಬೂರು, ತೋಕೂರು ಹಳ್ಳಗಳಿಗೆ ಹರಿಸಿರುವುದು ಈ ಹಿಂದೆಯೂ ಸಾಕ್ಷಿ ಸಮೇತ ವರದಿಯಾಗಿದೆ. ಕೈಗಾರಿಕಾ ವಲಯಕ್ಕೆ ಅನ್ವಯ ಆಗುವಂತೆ ಕೇಂದ್ರೀಕೃತ ತ್ಯಾಜ್ಯ ಶುದ್ದೀಕರಣ ಘಟಕವನ್ನು ಮಾಲಿನ್ಯ ನಿಯಂತ್ರಣಾ ಮಂಡಳಿ ಹೊಂದಿಲ್ಲ. ಅದಕ್ಕಾಗಿ ಜಾಗ ಮೀಸಲಿಟ್ಟಿದ್ದರೂ ಕಾರ್ಯಯೋಜನೆ ನಡೆದಿಲ್ಲ. ಮರವೂರು ಡ್ಯಾಮ್ ಬಳಿ ಪಡುಶೆಡ್ಡೆ ಬಳಿ ಪಚ್ಚನಾಡಿಯಿಂದ ಎನ್ನಲಾಗುತ್ತಿರುವ ಬೃಹತ್ ಕೊಳವೆ ಮುಖಾಂತರ ಕೊಳಕು ನೀರನ್ನು ನದಿಗೆ ಬಿಡಲಾಗುತ್ತಿದೆ. ಕೂಳೂರು ಪ್ರದೇಶ ದಲ್ಲಿ ಕಲ್ಲಿದ್ದಲು, ಅದಿರು ಹುಡಿಯಂತಹ ಕಪ್ಪು ಧೂಳು ಹಾರಿ ಬರುತ್ತಿದ್ದು, ಇದರಿಂದಾಗಿ ವಸತಿ ಪ್ರದೇಶಗಳಲ್ಲಿ ಧೂಳು ಬೀಳುತ್ತಿರುವುದರಿಂದ ವಾಯುಮಾಲಿನ್ಯ ಉಂಟಾಗುತ್ತಿದೆ. ವಾಹನಗಳ ಮೇಲೆ, ಬಟ್ಟೆಗಳ ಮೇಲೆ ಧೂಳು ಬೀಳುತ್ತಿರುತ್ತಿದೆ ಎಂದು ಪ್ರತಿಭಟನಾ ನಿರತರು ದೂರಿದರು. ಮಂಗಳೂರು ಮಹಾನಗರ ಪಾಲಿಕೆಯ ತೆರೆದ ಚರಂಡಿಗಳಿಂದಲೂ ಕಲುಷಿತ ನೀರು ಅಲ್ಲಲ್ಲಿ ನದಿ ಸೇರುತ್ತಿದೆ. ಮುಂದಿನ ದಿನಗಳಲ್ಲಿ ಜಲಮಾಲಿನ್ಯ ಮತ್ತು ವಾಯುಮಾಲಿನ್ಯದಿಂದಾಗಿ ಸಾರ್ವಜನಿಕರಿಗೆ ಸಮಸ್ಯೆಗಳು ಮತ್ತಷ್ಟು ಉಲ್ಬಣಗೊಳ್ಳುವ ಸಾಧ್ಯತೆ ಇದೆ. ಆದುದರಿಂದ ಮಾಲಿನ್ಯ ನಿಯಂತ್ರಣಾ ಮಂಡಳಿ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಸಮಸ್ಯೆಗಳ ಶಾಶ್ವತ ಪರಿಹಾರಕ್ಕಾಗಿ ಕ್ರಮಕೈಗೊಳ್ಳಬೇಕು. ಪರಿಸ್ಥಿತಿ ಇದೇ ರೀತಿ ಮುಂದುವರಿದಲ್ಲಿ ಹೋರಾಟವನ್ನು ತೀವ್ರಗೊಳಿಸಲಾಗುತ್ತದೆ ಎಂದು ಪ್ರಾದೇಶಿಕ ಮಾಲಿನ್ಯ ನಿಯಂತ್ರಣ ಮಂಡಳಿ ಮತ್ತು ಕೈಗಾರಿಕಾ ಅಭಿವೃದ್ದಿ ಮಂಡಳಿ ಅಧಿಕಾರಿಗಳಿಗೆ ಪ್ರತಿಭಟನಾ ನಿರತರು ಮನವಿ ಸಲ್ಲಿಸಿ ಆಗ್ರಹಿಸಿದರು. ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ವಂದನೀಯ ರೆವರೆಂಡ್ ಫಾದರ್ ವಿಕ್ಟರ್ ವಿಜಯ್ ಲೋಬೋ ಕೂಳೂರು ಪರಿಸರದಲ್ಲಿ ನದಿಯ ಮಾಲಿನ್ಯ ಮತ್ತು ಹಾರುತ್ತಿರುವ ಕೋಕ್ ಪೌಡರ್ ಸಮಸ್ಯೆಗಳಿಂದಾಗಿ ಸ್ಥಳೀಯ ಜನರಿಗೆ ಅನಾರೋಗ್ಯಗಳು ಕಾಡುತ್ತಿದೆ. ಸ್ಥಳೀಯ ಬಾವಿ ನೀರು ಕೂಡ ಕಲುಷಿತಗೊಂಡಿದೆ. ಈ ಬಗ್ಗೆ ಮನವಿ ನೀಡಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಜಿಲ್ಲಾಡಳಿತ ಮತ್ತು ಮಾಲಿನ್ಯ ನಿಯಂತ್ರಣ ಮಂಡಳಿ ಈ ಬಗ್ಗೆ ಎಚ್ಚೆತ್ತುಕೊಳ್ಳ ಬೇಕೆಂದು ಆಗ್ರಹಿಸಿದರು. ಸಭೆಯನ್ನು ಉದ್ದೇಶಿಸಿ ಮಾತನಾಡಿದ ಮುನೀರ್ ಕಾಟಿಪಳ್ಳ, ಬೈಕಂಪಾಡಿ ಕೈಗಾರಿಕಾ ವಲಯದಲ್ಲಿರುವ, ಶುದ್ದೀಕರಣ ಘಟಕಗಳು ಇಲ್ಲದ ಸಣ್ಣ ಕೈಗಾರಿಕೆಗಳಿಗಾಗಿ ಸಿದ್ದಪಡಿಸುತ್ತಿರುವ ಕೇಂದ್ರೀಕೃತ ತ್ಯಾಜ್ಯ ಶುದ್ದೀಕರಣ ಘಟಕದ ಕಾಮಗಾರಿಯನ್ನು ಕಾಲಮಿತಿಯಲ್ಲಿ ಪೂರ್ಣಗೊಳಿಸಬೇಕು, ಶುದ್ದೀಕರಿಸದ ಕೈಗಾರಿಕಾ ತ್ಯಾಜ್ಯ ನೀರನ್ನು ಕಳ್ಳ ದಾರಿಯಲ್ಲಿ ಪಲ್ಗುಣಿಗೆ ಹರಿಸುತ್ತಿರುವ ಕೈಗಾರಿಕಾ ಘಟಕಗಳ ಮೇಲೆ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಪ್ರತಿಭಟನಾ ಸಭೆಗೂ ಮುನ್ನ ನೂರಾರು ಸಾರ್ವಜನಿಕರು ರಾಷಷ್ಟ್ರೀಯ ಹೆದ್ದಾರಿ66ರ ಜೋಕಟ್ಟೆ ಕ್ರಾಸ್ ನಿಂದ ಬೈಕಂಪಾಡಿ ಮಾಲಿನ್ಯ ನಿಯಂತ್ರಣಾ ಮಂಡಳಿ ಕಚೇರಿ ವರೆಗೆ ಕಾಲ್ನಿಡಿಗೆ ಜಾತಾ ನಡೆಸಿ ಕಚೇರಿಗೆ ಮುತ್ತಿಗೆ ಹಾಕಿದರು. ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿ ಡಾ. ಮಹೇಶ್ವರಿ, ಕೈಗಾರಿಕಾ ಅಭಿವೃದ್ದಿ ಮಂಡಳಿಯ ಉಪ ಅಭಿಯಂತರರಾದ ಗಣಪತಿ ಅವರು ಪ್ರತಿಭಟನಾ ನಿರತರಿಂದ ಮನವಿ ಸ್ವೀಕರಿಸಿದರು. ಕೈಗಾರಿಕಾ ವಲಯ, ಹಾರ್ಬರ್, ಎಮ್ ಸಿ ಎಫ್ ಮುಂತಾದ ಬೃಹತ್ ಉದ್ಯಮಗಳ ಬೇಜವಾಬ್ದಾರಿ ನಡೆಗಳಿಂದ ಸ್ಥಳೀಯರು ಗಂಭೀರವಾದ ಆರೋಗ್ಯ ಸಮಸ್ಯೆಗಳಿಗೆ ಒಳಗಾಗುತ್ತಿದ್ದಾರೆ. ಈ ಕುರಿತು ಜಿಲ್ಲಾಡಳಿತದ ಮೌನ ಮುಂದುವರಿದರೆ ಹೋರಾಟ ತೀವ್ರಗೊಳ್ಳಲಿದೆ ಎಂದು ಎಚ್ಚರಿಸಿದರು. ಅಲ್ಲದೇ ನಗರ ಪಾಲಿಕೆಯ ವಿವಿಧೆಡೆಗಳಿಂದ ತೆರೆದ ಚರಂಡಿ ನೀರನ್ನು ನೇರವಾಗಿ ನದಿಗೆ ಬಿಡುವುದನ್ನು ತಕ್ಷಣ ನಿಲ್ಲಿಸಬೇಕು ಎಂದು ಆಗ್ರಹಿಸಿದರು. ಡಿವೈಎಫ್ಐ ಜಿಲ್ಲಾಧ್ಯಕ್ಷ ಬಿ ಕೆ ಇಮ್ತಿಯಾಜ್, ಕಾರ್ಯದರ್ಶಿ ಸಂತೋಷ್ ಬಜಾಲ್ ಉಪಸ್ಥಿತರಿದ್ದರು. ಹೋರಾಟದ ನೇತೃತ್ವವನ್ನು ಮಾಜಿ ಕಾರ್ಪೊರೇಟರ್ ದಯಾನಂದ ಶೆಟ್ಟಿ, ಮುಖಂಡರಾದ ನವೀನ್ ಕೊಂಚಾಡಿ, ತಯ್ಯೂಬ್ ಬೆಂಗ್ರೆ, ಕೂಳೂರು ಮಸೀದಿ ಅದ್ಯಕ್ಷರಾದ ಅಬ್ಬಾಸ್ ಪಂಜಿಮೊಗರು, ಪ್ರಮೀಳಾ ಕೆ, ಪಲ್ಗುಣಿ ನದಿ ಉಳಿಸಿ ಹೋರಾಟ ಸಮಿತಿಯ ಕನಕದಾಸ್ ಕೂಳೂರು, ಡೆಲ್ಸನ್, ಅನಿಲ್ ಅತ್ರೆಬೈಲ್, ಅನಿಲ್ ರಾಯಿಕಟ್ಟೆ ಲತಾ, ರೇಷ್ಮ, ರೀಮಾ, ಖಲೀಲ್ ಪಂಜಿಮೊಗರು, ಜಾನ್ ಮೇಲುಕೊಪ್ಪಲು, ಜುನೈದ್, ಮುಸ್ತಾಫ ಪಂಜಿಮೊಗರು, ಅನಿಲ್ ಡಿ ಸೋಜ, ಬಶೀರ್, ನೌಷಾದ್ ಬಾವು, ಶ್ರೀನಾಥ್ ಕುಲಾಲ್ ಮತ್ತಿತರರು ವಹಿಸಿದ್ದರು ಚರಣ್ ಶೆಟ್ಟಿ ಸ್ವಾಗತಿಸಿ ಸಂತೋಷ್ ಡಿಸೋಜ ವಂದಿಸಿದರು.
ಉಪ ಚುನಾವಣೆಯಲ್ಲಿ ದಾವಣಗೆರೆ ಕಾಂಗ್ರೆಸ್ ಬಂಡಾಯ ಸ್ಪರ್ಧೆ ಮಾಡಿದ್ದ ಸಾದಿಕ್ ಪೈಲ್ವಾನ್ ಹಿಂದೆ ಸರಿದಿದ್ದಾರೆ. ಆದರೆ, ಚುನಾವಣಾ ಆಯೋಗದ ನಿಯಮದ ಪ್ರಕಾರ ಅವರ ಹೆಸರು ಮತಯಂತ್ರದಲ್ಲಿ ಇರಲಿದೆ. ಆಯೋಗವು ಅವರಿಗೆ ಮೈಕ್ ಚಿಹ್ನೆ ಸಹ ನೀಡಿದೆ. ಇದರಿಂದ ಕಾಂಗ್ರೆಸ್ಗೆ ಒಂದಿಷ್ಟು ಮತಗಳು ಕೈತಪ್ಪುವ ಸಾಧ್ಯತೆ ಇದೆ. ಮತ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಮುಂದಿನ ನಡೆ ಏನು?
Koppal | ಹೋಳಿ ಸಂಭ್ರಮದ ವೇಳೆ ಮಾರಕಾಸ್ತ್ರ ಹಿಡಿದು ನೃತ್ಯ : ಐವರ ವಿರುದ್ಧ ಪ್ರಕರಣ ದಾಖಲು
ಕನಕಗಿರಿ : ಯುಗಾದಿ ಹಬ್ಬದ ಮರುದಿನ ಹೋಳಿ (ಬಣ್ಣದಾಟ) ಆಚರಣೆಯ ವೇಳೆ ಸಮೀಪದ ನವಲಿ ತಾಂಡದ ಯುವಕರು ಕಬ್ಬಿಣದ ಮಚ್ಚು ಹಿಡಿದು ನೃತ್ಯ ಮಾಡಿದ ಘಟನೆ ಬೆಳಕಿಗೆ ಬಂದಿದ್ದು, ಈ ನೃತ್ಯದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಕೈಯಲ್ಲಿ ಮಾರಕಾಸ್ತ್ರ ಹಿಡಿದು ನೃತ್ಯ ಮಾಡುತ್ತಿದ್ದ ಶಿವಕುಮಾರ ಅಡವಿಬಾವಿ, ವೆಂಕಟೇಶ ಹಿರೇಮನಿ, ಬಾಲಾಜಿ ದಾರಾಮೀಂಡ್ ಹಾಗೂ ಖಾಲಿ ಕೈಗಳಿಂದ ನೃತ್ಯ ಮಾಡುತ್ತಿದ್ದ ವೆಂಕಟೇಶ ಮತ್ತು ರಮೇಶ ಪೂಜಾರ ವಿರುದ್ಧ ಶಸ್ತ್ರಾಸ್ತ್ರ ಕಾಯಿದೆ ಉಲ್ಲಂಘನೆ ಆರೋಪದಡಿ ಕಾನ್ಸ್ಟೇಬಲ್ ಷರೀಫ್ ಅವರು ದೂರು ನೀಡಿದ್ದು, ಕನಕಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೇರಳ ವಿಧಾನಸಭಾ ಚುನಾವಣೆ| ಎಐಸಿಸಿ ವೀಕ್ಷಕರಾಗಿ ಐವನ್ ಡಿಸೋಜ ನೇಮಕ
ಮಂಗಳೂರು, ಮಾ.27: ಕೇರಳ ವಿಧಾನಸಭಾ ಚುನಾವಣೆಗೆ ಎಐಸಿಸಿ ವೀಕ್ಷಕರಾಗಿ ವಿಧಾನ ಪರಿಷತ್ ಶಾಸಕ ಐವನ್ ಡಿಸೋಜ ಅವರನ್ನು ನೇಮಿಸಲಾಗಿದೆ. ಕೇರಳದ ಏರ್ನಾಕುಲಂ ಮತ್ತು ಕೊಚ್ಚಿಯಲ್ಲಿ ನಡೆಯುವ ಚುನಾವಣೆಗೆ ವೀಕ್ಷಕರಾಗಿ ಐವನ್ ಡಿಸೋಜ ಎ.7ರವರೆಗೆ ಕಾರ್ಯನಿರ್ವಹಿಸಲಿದ್ದಾರೆ. ಈ ಹಿಂದೆ ಎಐಸಿಸಿ ಕಾರ್ಯದರ್ಶಿಯಾಗಿ ಕೇರಳದಲ್ಲಿ ಚುನಾವಣಾ ಉಸ್ತುವಾರಿ ವಹಿಸಿಕೊಂಡಿದ್ದರು ಎಂದು ಪ್ರಕಟನೆ ತಿಳಿಸಿದೆ.
ಉದ್ಯೋಗ ಸ್ಥಳದಲ್ಲಿ ಮಹಿಳೆಯರಿಗೆ ಸುರಕ್ಷಿತ ವಾತಾವರಣ ಅಗತ್ಯ: ಪಲ್ಲವಿ
*ಪೋಶ್ ಕಾಯ್ದೆ 2013ರ ಕುರಿತು ವಿಚಾರ ಸಂಕಿರಣ
ಪ್ರತಿ ತಾಲೂಕಿನಲ್ಲಿ ಬೀದಿನಾಯಿಗಳ ಆಶ್ರಯ ಕೇಂದ್ರ: ದ.ಕ. ಡಿಸಿ ದರ್ಶನ್
ಮಂಗಳೂರು: ಬೀದಿ ನಾಯಿಗಳಿಂದ ತೊಂದರೆಯಾಗುತ್ತಿರುವ ಬಗ್ಗೆ ದೂರುಗಳು ಬರುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಬೀದಿನಾಯಿಗಳ ಆಶ್ರಯ ತಾಣವನ್ನು ನಿರ್ಮಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ತಿಳಿಸಿದ್ದಾರೆ. ದ.ಕ. ಜಿಲ್ಲಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ನಡೆದ ಆರೋಗ್ಯ ಇಲಾಖೆಯ ಜಿಲ್ಲಾ ಕಣ್ಗಾವಲು ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಈಗಾಗಲೇ ಮಂಗಳೂರು ತಾಲೂಕಿನಲ್ಲಿ ಇಂತಹ ಆಶ್ರಯ ಕೇಂದ್ರ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗಿದೆ. ನಗರ ಸ್ಥಳೀಯ ಸಂಸ್ಥೆಗಳು ಮತ್ತು ಗ್ರಾಪಂಗಳಲ್ಲಿ ಬೀದಿ ನಾಯಿಗಳ ನಿಯಂತ್ರಣಕ್ಕೆ ಅವುಗಳ ಜನನ ನಿಯಂತ್ರಣ ಸೇರಿ ದಂತೆ ಸೂಕ್ತ ಕ್ರಮ ನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದರು. ನಾಯಿ ಕಡಿತ, ಹಾವು ಕಡಿತ ಮತ್ತಿತರ ಪ್ರಕರಣಗಳಲ್ಲಿ ಸಂತ್ರಸ್ತರಿಗೆ ನೀಡಬೇಕಾದ ಚುಚ್ಚುಮದ್ದು ಹಾಗೂ ಇತರೆ ಅಗತ್ಯ ಔಷಧಿಗಳನ್ನು ಆರೋಗ್ಯ ಕೇಂದ್ರಗಳಲ್ಲಿ ಸಾಕಷ್ಟು ಸಂಗ್ರಹಿಸಿಡಬೇಕು. ಸಾರ್ವಜನಿಕರು ಇಂತಹ ಪ್ರಕರಣ ಗಳಲ್ಲಿ ವಿಳಂಭಿಸದೆ, ಆದಷ್ಟು ಬೇಗನೇ ಚಿಕಿತ್ಸೆ ಪಡೆದರೆ ಅಪಾಯದಿಂದ ಪಾರಾಗಬಹುದು ಎಂದು ಡಿಸಿ ತಿಳಿಸಿದರು. ನಾಯಿ ಕಡಿತ ಪ್ರಕರಣಗಳ ಸಂಖ್ಯೆಯಲ್ಲಿ ಹೆಚ್ಚಳ ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ನವೀನ್ಚಂದ್ರ ಮಾತನಾಡಿ, ಜಿಲ್ಲೆಯಲ್ಲಿ 2023ರಲ್ಲಿ 20,487, 2024ರಲ್ಲಿ 20,071, 2025ರಲ್ಲಿ 27,481 ಸಾರ್ವಜನಿಕರಿಗೆ ನಾಯಿ ಕಡಿತ ಪ್ರಕರಣಗಳು ವರದಿಯಾಗಿದೆ. ಇದರಲ್ಲಿ ಬೀದಿ ಮತ್ತು ಸಾಕು ನಾಯಿಗಳೆರಡೂ ಇವೆ. 2025ರಲ್ಲಿ ವರದಿಯಾದ ಪ್ರಕರಣಗಳಲ್ಲಿ 21,673 ಪ್ರಕರಣಗಳು ಸಾಕು ನಾಯಿಗಳಿಂದ ಹಾಗೂ 5,808 ಪ್ರಕರಣಗಳು ಬೀದಿ ನಾಯಿಗಳಿಂದ ಸಂಭವಿಸಿದೆ. ಅಲ್ಲದೆ ಕಳೆದ 3 ವರ್ಷಗಳಲ್ಲಿ ನಾಯಿ ಕಡಿತದಿಂದ ಇಬ್ಬರು ಸಾವನ್ನಪ್ಪಿದ್ದಾರೆ ಎಂದರು. ಇಲಿ ಜ್ವರ ಪ್ರಕರಣಕ್ಕೆ ಸಂಬಂಧಿಸಿದಂತೆ 2023ರಲ್ಲಿ 203, 2024ರಲ್ಲಿ 283, 2025ರಲ್ಲಿ 265 ಪ್ರಕರಣಗಳು ವರದಿಯಾಗಿವೆ. ಅಲ್ಲದೆ 2023 ಮತ್ತು 24ರಲ್ಲಿ ಮೂವರು ಸಾವನ್ನಪ್ಪಿದ್ದಾರೆ ಎಂದರು. ಹಾವು ಕಡಿತದಿಂದ 2023ರಲ್ಲಿ 365, 2024ರಲ್ಲಿ 627, 2025ರಲ್ಲಿ 752 ಪ್ರಕರಣಗಳು ವರದಿಯಾಗಿವೆ. ಕಳೆದ 3 ವರ್ಷಗಳಲ್ಲಿ ಜಿಲ್ಲೆಯಲ್ಲಿ 10 ಮಂದಿ ಹಾವು ಕಡಿತದಿಂದ ಸಾವನ್ನಪ್ಪಿದ್ದಾರೆ ಎಂದರು. ಸಭೆಯಲ್ಲಿ ಪಶುಸಂಗೋಪನೆ ಉಪನಿರ್ದೇಶಕ ಅರುಣ್ ಕುಮಾರ್ ಶೆಟ್ಟಿ, ಜಂಟಿ ಕೃಷಿ ನಿರ್ದೇಶಕ ಹೊನ್ನಪ್ಪಗೌಡ ಮತ್ತಿತರರು ಉಪಸ್ಥಿತರಿದ್ದರು.
ಬೆಂಗಳೂರು-ಅರಸೀಕೆರೆ ನಡುವೆ ನೂತನ ಮೆಮು ರೈಲು ಸೇವೆ: ಈಡೇರಿತು ಪ್ರಯಾಣಿಕರ ಬಹುದಿನದ ಬೇಡಿಕೆ
ರಾಜಧಾನಿ ಬೆಂಗಳೂರಿನಿಂದ ತುಮಕೂರು ಮಾರ್ಗವಾಗಿ ಅರಸೀಕೆರೆಗೆ ಸಂಚರಿಸುವ ಸಾವಿರಾರು ಪ್ರಯಾಣಿಕರ ಬಹುಕಾಲದ ಬೇಡಿಕೆಯನ್ನು ಭಾರತೀಯ ರೈಲ್ವೆ ಕೊನೆಗೂ ಈಡೇರಿಸಿದೆ. ಈ ಮಾರ್ಗದಲ್ಲಿ ನೂತನ ಮೆಮು ರೈಲು ಸೇವೆಯನ್ನು ಆರಂಭಿಸಲಾಗಿದ್ದು, ಈ ಕುರಿತು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಅವರು ಮಾಹಿತಿ ಹಂಚಿಕೊಂಡಿದ್ದಾರೆ. ಈ ನೂತನ ಮೆಮು ರೈಲು ಯಲಹಂಕದಿಂದ ಹೊರಟು, ಯಶವಂತಪುರ ಮತ್ತು
ಕಲಬುರಗಿ | ಮಹಿಳೆಯ ಹತ್ಯೆ ಪ್ರಕರಣ : ಜನವಾದಿ ಮಹಿಳಾ ಸಂಘಟನೆಯಿಂದ ಆಕ್ರೋಶ
ಕಲಬುರಗಿ: ಅಫಜಲಪುರ ತಾಲೂಕಿನ ಬಳೂರಗಿ ಸಮೀಪ ನಡೆದ ಪತ್ನಿ ಹತ್ಯೆ ಪ್ರಕರಣವನ್ನು ಖಂಡಿಸಿ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ ಜಿಲ್ಲಾ ಸಮಿತಿ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಮಹಾರಾಷ್ಟ್ರ ಮೂಲದ ಶೈಲಜಾ (25) ಅವರನ್ನು ಆಕೆಯ ಗಂಡ ಅಕ್ಷಯ್ ಎಂಬಾತನು ಗಾಣಗಾಪುರ ದೇವಸ್ಥಾನಕ್ಕೆ ಹೋಗುವುದಾಗಿ ಹೇಳಿ ಕರೆದುಕೊಂಡು ಬಂದು, ಬಳೂರಗಿ ಸಮೀಪದ ರಸ್ತೆ ಪಕ್ಕದಲ್ಲಿ ಹತ್ಯೆ ಮಾಡಿದ ಬಳಿಕ, ಕಾರನ್ನು ಆಕೆಯ ದೇಹದ ಮೇಲೆ ಕಾರು ಹರಿಸಿದ ಅಮಾನುಷ ಕೃತ್ಯವು ಇಡೀ ಸಮಾಜವನ್ನೇ ಬೆಚ್ಚಿಬೀಳಿಸುವಂತಾಗಿದೆ ಎಂದು ಸಂಘಟನೆ ಹೇಳಿದೆ. ಯಾವುದೇ ಕಾರಣಕ್ಕೂ ಕಾನೂನನ್ನು ಕೈಗೆತ್ತಿಕೊಳ್ಳುವುದು ಸರಿಯಲ್ಲ. ಕೌಟುಂಬಿಕ ಕಲಹಗಳಿಗೆ ಹಿಂಸೆಯೇ ಪರಿಹಾರವಲ್ಲ. ಗಂಡನೇ ಸರ್ವಸ್ವವೆಂದು ನಂಬಿ ಬಂದ ಮಹಿಳೆಗೆ ಇಂತಹ ದುರ್ಘಟನೆ ಸಂಭವಿಸಿರುವುದು ಅತ್ಯಂತ ನೋವಿನ ಸಂಗತಿಯಾಗಿದೆ ಎಂದು ಅಭಿಪ್ರಾಯಪಟ್ಟಿದೆ. ಆರೋಪಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು, ಮೃತೆಯ ಕುಟುಂಬಕ್ಕೆ ನ್ಯಾಯ ಒದಗಿಸಬೇಕು ಹಾಗೂ ಇಂತಹ ಘಟನೆಗಳು ಮರುಕಳಿಸದಂತೆ ಸರ್ಕಾರ ಕಾನೂನುಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರಬೇಕು ಎಂದು ಸಂಘಟನೆಯ ಜಿಲ್ಲಾ ಅಧ್ಯಕ್ಷರಾದ ಪದ್ಮಿನಿ ಕಿರಣಗಿ ಹಾಗೂ ಕಾರ್ಯದರ್ಶಿ ಶಾಂತಾ ಸರಡಗಿ ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.
ಬಾಲಕಾರ್ಮಿಕರ ನಿರ್ಮೂಲನೆಗೆ ಟಾಸ್ಕ್ ಫೋರ್ಸ್ ಸಭೆ : ಕೊಪ್ಪಳದಲ್ಲಿ ದಾಳಿ, ಕಿಶೋರ ಕಾರ್ಮಿಕರ ರಕ್ಷಣೆ
ಕೊಪ್ಪಳ : ಬಾಲಕಾರ್ಮಿಕ ಪದ್ಧತಿಯನ್ನು ನಿರ್ಮೂಲನೆಗೊಳಿಸುವ ಉದ್ದೇಶದಿಂದ ತಾಲೂಕು ಮಟ್ಟದ ಟಾಸ್ಕ್ ಫೋರ್ಸ್ ಸಮಿತಿ ಸಭೆ ಹಾಗೂ ದಾಳಿ/ತಪಾಸಣೆ ಕಾರ್ಯಾಚರಣೆಗಳನ್ನು ಗುರುವಾರ ಕೊಪ್ಪಳ ತಾಲೂಕಿನಲ್ಲಿ ಯಶಸ್ವಿಯಾಗಿ ನಡೆಸಲಾಯಿತು. ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ, ನವದೆಹಲಿ ಹಾಗೂ ಜಿಲ್ಲಾಧಿಕಾರಿಗಳ ಸೂಚನೆಯಂತೆ “PAN-INDIA Rescue & Rehabilitation Campaign of Child and Adolescent Labour” ಅಭಿಯಾನದ ಅಂಗವಾಗಿ ಈ ಕಾರ್ಯಕ್ರಮ ಆಯೋಜಿಸಲಾಯಿತು. ಆರಂಭದಲ್ಲಿ ತಾಲೂಕು ಪಂಚಾಯತ್ ಕಾರ್ಯನಿರ್ವಾಹಣಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಟಾಸ್ಕ್ ಫೋರ್ಸ್ ಸಭೆ ನಡೆಯಿತು. ಸಭೆಯನ್ನು ಉದ್ದೇಶಿಸಿ ಮಾತನಾಡಿದ ದುಂಡಪ್ಪ ತುರಾದಿ ಅವರು, ತಾಲೂಕಿನಾದ್ಯಂತ ಬಾಲಕಾರ್ಮಿಕರನ್ನು ಪತ್ತೆ ಮಾಡುವುದು ಎಲ್ಲಾ ಇಲಾಖೆಗಳ ಜವಾಬ್ದಾರಿಯಾಗಿದೆ ಎಂದು ತಿಳಿಸಿದರು. ಪ್ರತಿಯೊಬ್ಬ ಅಧಿಕಾರಿಯೂ ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆಗೆ ಕೈಜೋಡಿಸಬೇಕು ಎಂದು ಸೂಚಿಸಿದರು. ಬೇಸಿಗೆ ವೇಳೆಯಲ್ಲಿ ಮಕ್ಕಳು ಹಳ್ಳ-ಕೊಳ್ಳಗಳಲ್ಲಿ ಈಜಲು ಹೋಗುವುದು ಹಾಗೂ ದನ-ಕುರಿ ಕಾಯುವ ಸಂದರ್ಭಗಳಲ್ಲಿ ಅಪಾಯ ಎದುರಾಗುವ ಸಾಧ್ಯತೆ ಹೆಚ್ಚಿರುವುದರಿಂದ, ಸ್ಥಳೀಯ ಅಧಿಕಾರಿಗಳು, ಶಿಕ್ಷಕರು, ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತರು, ಗ್ರಾಮ ಪಂಚಾಯತ್ ಸದಸ್ಯರು ಮತ್ತು ಪೋಷಕರು ಹೆಚ್ಚಿನ ಜಾಗೃತಿ ವಹಿಸಬೇಕು ಎಂದು ತಿಳಿಸಿದರು. ಬಾಲಕಾರ್ಮಿಕರನ್ನು ಗುರುತಿಸಲು ನಿರಂತರ ತಪಾಸಣೆ ನಡೆಸಬೇಕಿದ್ದು, ಕಾರ್ಮಿಕ ಇಲಾಖೆಯ ಜೊತೆಗೆ ಇತರೆ 11 ಇಲಾಖೆಗಳ ಅಧಿಕಾರಿಗಳಿಗೆ ಕಾಯಿದೆ ಕಲಂ-17ರಡಿ ನಿರೀಕ್ಷಕರಾಗಿ ಅಧಿಕಾರ ನೀಡಲಾಗಿದೆ. ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು 1098 ಮಕ್ಕಳ ಸಹಾಯವಾಣಿ ಸಂಖ್ಯೆಯ ಮಾಹಿತಿಯನ್ನು ಗೋಡೆ ಬರಹಗಳ ಮೂಲಕ ಪ್ರಸಾರ ಮಾಡಲು ಸೂಚಿಸಲಾಗಿದೆ. ಸಭೆಯ ನಂತರ ಕೊಪ್ಪಳ ನಗರದಲ್ಲಿ ದಾಳಿ ಹಾಗೂ ತಪಾಸಣೆ ಕಾರ್ಯಾಚರಣೆ ನಡೆಸಿ, ಹೋಟೆಲ್, ಗ್ಯಾರೇಜ್, ಬೇಕರಿ ಹಾಗೂ ಅಂಗಡಿಗಳಲ್ಲಿ ಪರಿಶೀಲನೆ ನಡೆಸಲಾಯಿತು. ಮಾಲೀಕರಿಗೆ 18 ವರ್ಷದೊಳಗಿನ ಮಕ್ಕಳನ್ನು ಕೆಲಸಕ್ಕೆ ನೇಮಿಸಿಕೊಳ್ಳಬಾರದೆಂದು ಎಚ್ಚರಿಕೆ ನೀಡಲಾಯಿತು. ಈ ವೇಳೆ ನಗರದ “ಮಾಜಿಸಾ ಕಲೇಕ್ಷನ್” ಬಟ್ಟೆ ಅಂಗಡಿಯಲ್ಲಿ ಒಬ್ಬ ಕಿಶೋರ ಕಾರ್ಮಿಕ ಪತ್ತೆಯಾಗಿದ್ದು, ಆತನನ್ನು ರಕ್ಷಿಸಿ ಮುಂದಿನ ಪೋಷಣೆ ಹಾಗೂ ಪುನರ್ವಸತಿಗಾಗಿ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಗೆ ಹಾಜರುಪಡಿಸಲಾಗಿದೆ ಎಂದು ಕಾರ್ಮಿಕ ಇಲಾಖೆ ಪ್ರಕಟಣೆ ತಿಳಿಸಿದೆ. ಕಾರ್ಯಾಚರಣೆಯಲ್ಲಿ ಕಾರ್ಮಿಕ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ನಗರಸಭೆ, ಪೊಲೀಸ್ ಇಲಾಖೆ, ಮಕ್ಕಳ ಸಹಾಯವಾಣಿ 1098 ಸಿಬ್ಬಂದಿ, ಮಹಿಳಾ ಸಾಂತ್ವನ ಕೇಂದ್ರ ಹಾಗೂ ವಿವಿಧ ಸ್ವಯಂಸೇವಾ ಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸಿದ್ದರು.

31 C