ಕರಾವಳಿ ಪ್ರವಾಸೋದ್ಯಮದ ಅಡೆತಡೆಗಳನ್ನು ಕಾನೂನು ಮೂಲಕ ಬಗೆಹರಿಸಬೇಕು: ಡಿ.ಕೆ. ಶಿವಕುಮಾರ್
ಮಂಗಳೂರು, ಜ.10: ಕರಾವಳಿ ಪ್ರವಾಸೋದ್ಯಮಕ್ಕೆ ಅಡ್ಡಿಯಾಗಿರುವ ಸಮಸ್ಯೆಗಳನ್ನು ಕಾನೂನುಬದ್ಧವಾಗಿ ಪರಿಹರಿಸಿ, ಹೊಸ ಹಾಗೂ ಪ್ರತ್ಯೇಕ ಪ್ರವಾಸೋದ್ಯಮ ನೀತಿಯನ್ನು ರೂಪಿಸುವ ಅಗತ್ಯವಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು. ಮಂಗಳೂರು ಅತ್ತಾವರದ ಖಾಸಗಿ ಹೋಟೆಲ್ನಲ್ಲಿ ಶನಿವಾರ ನಡೆದ ಕರಾವಳಿ ಕರ್ನಾಟಕ ಪ್ರವಾಸೋದ್ಯಮ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು, ಈ ನಿಟ್ಟಿನಲ್ಲಿ ಕರಾವಳಿಯ ಮೂರು ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಹಿರಿಯ ಅಧಿಕಾರಿಗಳು, ಜನಪ್ರತಿನಿಧಿಗಳು ಹಾಗೂ ಪ್ರವಾಸೋದ್ಯಮ ಕ್ಷೇತ್ರದ ಪಾಲುದಾರರನ್ನು ಒಳಗೊಂಡ ಕಾರ್ಯಯೋಜನೆಯನ್ನು ರೂಪಿಸಲು ಸೂಚಿಸಲಾಗಿದೆ ಎಂದು ತಿಳಿಸಿದರು. ಕರಾವಳಿ ಪ್ರದೇಶವೆಂದರೆ ಸೌಂದರ್ಯ, ಜ್ಞಾನ ಮತ್ತು ಸಂಪತ್ತಿನ ನೆಲೆ ಎಂದು ಹೇಳಿದ ಡಿಕೆಶಿ, “ಎಷ್ಟೊಂದು ಸಾಮರ್ಥ್ಯ ಇದ್ದರೂ ಕರಾವಳಿ ಪ್ರದೇಶ ಏಕೆ ಹಿಂದುಳಿದಿದೆ ಎಂಬುದು ಅರ್ಥವಾಗುವುದಿಲ್ಲ. ಕೊಡಗು ಸೇರಿ ಸುಮಾರು 300 ಕಿಲೋಮೀಟರ್ ಉದ್ದದ ಕರಾವಳಿ ಇತಿಹಾಸವನ್ನು ನೋಡಿದರೆ, ಇಲ್ಲಿನ ಹಿರಿಯರು ರಾಷ್ಟ್ರಕ್ಕೆ ಬ್ಯಾಂಕಿಂಗ್ ವ್ಯವಸ್ಥೆ, ಶಿಸ್ತು ಮತ್ತು ಶಿಕ್ಷಣದ ಪರಂಪರೆಯನ್ನು ನೀಡಿದ್ದಾರೆ. ಇದು ಶಿಕ್ಷಣದ ಹಬ್ ಆಗಿದ್ದು, ವೈದ್ಯಕೀಯ, ಎಂಜಿನಿಯರಿಂಗ್ ಮತ್ತು ಪಿಯು ಶಿಕ್ಷಣದ ಮೂಲಕ ಮಾನವ ಸಂಪನ್ಮೂಲವನ್ನು ಸೃಷ್ಟಿಸುತ್ತಿದೆ. ಇಂತಹ ವ್ಯವಸ್ಥೆ ರಾಜ್ಯದ ಬೇರೆ ಯಾವುದೇ ಜಿಲ್ಲೆಗಳಲ್ಲಿ ಕಾಣುವುದಿಲ್ಲ,” ಎಂದರು. ಇಲ್ಲಿನ ಜನರು ಉದ್ಯೋಗ ಮತ್ತು ಅವಕಾಶಗಳಿಗಾಗಿ ಹೊರರಾಜ್ಯ ಹಾಗೂ ವಿದೇಶಗಳಿಗೆ ತೆರಳುತ್ತಿರುವುದು ವಿಷಾದಕರ ಎಂದು ಹೇಳಿದ ಅವರು, “ನಮ್ಮ ಪ್ರಕೃತಿ, ಕಡಲತೀರಗಳು ಗೋವಾಕ್ಕೆ ಸಮಾನವಾಗಿವೆ. ಆದರೂ ನಾವು ಎಲ್ಲೋ ಎಡವಿದ್ದೇವೆ. ಈ ತಪ್ಪುಗಳನ್ನು ಸರಿಪಡಿಸಿ ಹೂಡಿಕೆದಾರರನ್ನು ಆಕರ್ಷಿಸಲು ಹೊಸ, ಪ್ರತ್ಯೇಕ ಪ್ರವಾಸೋದ್ಯಮ ನೀತಿ ಅಗತ್ಯವಿದ್ದು, ಅದರ ಚರ್ಚೆಯನ್ನು ಮಂಗಳೂರಿನಿಂದಲೇ ಆರಂಭಿಸಲಾಗುವುದು,” ಎಂದು ಹೇಳಿದರು. ಸ್ಪೀಕರ್ ಯು.ಟಿ. ಖಾದರ್ ಮಾತನಾಡಿ, ಕರ್ನಾಟಕದ ಅಭಿವೃದ್ಧಿಯಲ್ಲಿ ಕರಾವಳಿ ಜಿಲ್ಲೆಗಳು ಮಹತ್ವದ ಪಾತ್ರ ವಹಿಸುತ್ತವೆ ಎಂದರು. ಪ್ರವಾಸೋದ್ಯಮವನ್ನು ಕೈಗಾರಿಕೆಯಾಗಿ ಪರಿಗಣಿಸಬೇಕೆಂದು ಒತ್ತಾಯಿಸಿದ ಅವರು, “ಕೈಗಾರಿಕೆಗಳಿಗೆ ಕೆಐಎಡಿಬಿ ಮೂಲಕ ಭೂಸ್ವಾಧೀನ ಮಾಡಿ ಮೂಲಸೌಕರ್ಯ ಒದಗಿಸುವಂತೆ, ಪ್ರವಾಸೋದ್ಯಮ ಇಲಾಖೆಯೂ ಬೀಚ್ ಮತ್ತು ನದಿ ಪ್ರವಾಸೋದ್ಯಮಕ್ಕಾಗಿ ಭೂಸ್ವಾಧೀನ ಮಾಡಿದರೆ ಹೂಡಿಕೆದಾರರು ಇಲ್ಲಿ ಹೂಡಿಕೆ ಮಾಡಲು ಮುಂದೆ ಬರುತ್ತಾರೆ. ಈ ಬಗ್ಗೆ ಪ್ರವಾಸೋದ್ಯಮ ಮತ್ತು ಕೈಗಾರಿಕಾ ಇಲಾಖೆ ಒಟ್ಟಾಗಿ ಸಮಗ್ರ ನಿರ್ಧಾರ ಕೈಗೊಳ್ಳಬೇಕು,” ಎಂದು ಹೇಳಿದರು. ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ಶಾಸಕ ಸುನಿಲ್ ಕುಮಾರ್, ಸಂದರ್ಭೋಚಿತವಾಗಿ ಮಾತನಾಡಿದರು. ಪ್ರವಾಸೋದ್ಯಮ ಇಲಾಖೆಯ ಕಾರ್ಯದರ್ಶಿ ಕೆ.ವಿ. ತಿಲೋಕಚಂದ್ರ ಪ್ರಾಸ್ತಾವಿಕ ಭಾಷಣ ಮಾಡಿ, ಕರಾವಳಿಯ ಮೂರು ಜಿಲ್ಲೆಗಳನ್ನು ಬಹು ಉತ್ಪನ್ನ ಪ್ರವಾಸೋದ್ಯಮ ಗಮ್ಯಸ್ಥಾನಗಳಾಗಿ ರೂಪಿಸಬೇಕಾಗಿದೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಮೀನುಗಾರಿಕಾ ಸಚಿವ ಮಂಕಾಳ ವೈದ್ಯ, ಸಂಸದರು ಕ್ಯಾಪ್ಟನ್ ಬ್ರಿಜೇಶ್ ಚೌಟ, ಕೋಟ ಶ್ರೀನಿವಾಸ್ ಪೂಜಾರಿ, ಶಾಸಕರು ವೇದವ್ಯಾಸ ಕಾಮತ್, ರಾಜೇಶ್ ನಾಯ್ಕ್, ಯಶಪಾಲ್ ಸುವರ್ಣ, ಸುರೇಶ್ ಕುಮಾರ್, ಕಿಶೋರ್ ಕುಮಾರ್, ಕಿರಣ್ ಕೊಡ್ಗಿ, ಸತೀಶ್ ಶೈಲ್, ಐವನ್ ಡಿಸೋಜ, ರಾಜೇಗೌಡ, ಮೆಸ್ಕಾಂ ಅಧ್ಯಕ್ಷ ಹರೀಶ್ ಕುಮಾರ್ ಹಾಗೂ ವಿವಿಧ ನಿಗಮ–ಮಂಡಳಿಗಳ ಅಧ್ಯಕ್ಷರಾದ ಎಂ.ಎ. ಗಫೂರ್, ಶಾಲೆಟ್ ಪಿಂಟೋ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಪ್ರವಾಸೋದ್ಯಮ ಇಲಾಖೆಯ ಆಯುಕ್ತ ಅಕ್ರಮ್ ಪಾಷಾ ಸ್ವಾಗತಿಸಿದರು. ಮಂಜುಳಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
ಪುತ್ತೂರು–ಕುಂಬ್ರ ಮರ್ಕಝುಲ್ ಹುದಾ ಮಹಿಳಾ ಕಾಲೇಜಿನ ಸೌದಿ ಅರೇಬಿಯಾ–ಜಿದ್ದಾ ಘಟಕದ ಮಹಾಸಭೆಯು ಜಿದ್ದಾದ ಶರಫಿಯಾ ಮಹಬ್ಬ ಸ್ಕ್ವೇರ್ ಸಭಾಂಗಣದಲ್ಲಿ ಕೇಂದ್ರ ಸಮಿತಿ ಕಾರ್ಯಾಧ್ಯಕ್ಷ ಡಾ. ಎಂ.ಎಸ್.ಎಂ. ಝೃನೀ ಕಾಮಿಲ್ ಅವರ ನೇತೃತ್ವದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ನೂತನ ಜಿದ್ದಾ ಘಟಕದ ಸಮಿತಿಯನ್ನು ರಚಿಸಲಾಯಿತು. ಸಲಹೆಗಾರರು ಫಾರೂಕ್ ಸಅದಿ ಹೆಚ್ ಕಲ್ಲು, ಫಾರೂಕ್ ಕಾಟಿಪಳ್ಳ, ಶಂಸುದ್ದೀನ್ ಮುಸ್ಲಿಯಾರ್ ಕೊಡಗು, ಮನ್ಸೂರ್ ಕಾಟಿಪಳ್ಳ, ಇಖ್ಬಾಲ್ ಹಾಜಿ ಉಳ್ಳಾಲ್. ಪದಾಧಿಕಾರಿಗಳು ಗೌರವಾಧ್ಯಕ್ಷರು: ಸಯ್ಯಿದ್ ನಾಫಿ ತಂಙಳ್ ನೂಜಿ ಅಧ್ಯಕ್ಷರು: ಅಬ್ದುಲ್ ರಹ್ಮಾನ್ ಗಂಟಾಲ್ಕಟ್ಟೆ ಪ್ರಧಾನ ಕಾರ್ಯದರ್ಶಿ: ಮುಹಮ್ಮದ್ ತಬ್ಶೀರ್ ಹನೀಫಿ ಸೂರಿಂಜೆ ಕೋಶಾಧಿಕಾರಿ: ಮುಸ್ತಫಾ ಕಡಂಗ ಉಪಾಧ್ಯಕ್ಷರು ಅಶ್ರಫ್ ಎಂ.ಎಸ್. ಕಕ್ಕಿಂಜೆ, ಕೆ.ಟಿ. ಮುಹಮ್ಮದ್ ಹಾಜಿ ಕುಕ್ಕಾಜೆ, ಶಂಸುದ್ದೀನ್ ಮಡಂತ್ಯಾರ್. ಕಾರ್ಯದರ್ಶಿಗಳು ನಾಸಿರುದ್ದೀನ್ ಹೆಚ್ ಕಲ್ಲು, ರಫೀಕ್ ಗರಗಂದೂರು, ಶಾಫಿ ಪರ್ಪುಂಜ. ಕಾರ್ಯಕಾರಿ ಸದಸ್ಯರು ರಫೀಕ್ ಎರ್ಮಾಳ್, ಫಾರೂಕ್ ಬಂಟ್ವಾಳ, ಇಬ್ರಾಹಿಂ ಬಂಡಾಡ್, ಶಂಸುದ್ದೀನ್ ಕುಂತೂರು, ರಫೀಕ್ ನೆಲ್ಲಿಹುದಿಕೇರಿ, ಸುಲೈಮಾನ್ ಬಂಡಾಡ್, ಅಬ್ದುಲ್ ಲತೀಫ್ ಮರಕಡ, ಯಹ್ಯಾ ಝುಹ್ರಿ ಬಾಜಾರ, ಆರಿಫ್ ಉಚ್ಚಿಲ, ಹಾಸಿಫ್ ಪಕ್ಷಿಕೆರೆ, ಬಶೀರ್ ಗರಗಂದೂರು, ಜಾಬಿರ್ ಕೊಂಡಂಗೇರಿ, ನವಾಝ್ ಕೂಳೂರು, ಯಹ್ಯಾ ಹಾರೂನಿ ಬಿಳಿಯೂರು, ಆಸಿಫ್ ಕೋಟ, ಮನ್ಸೂರ್ ಕಲ್ಕಟ್ಟ, ನಾಸಿರ್ ಮಂಚಿ, ಅಬ್ದುಲ್ ಫತ್ತಾಹ್ ಅಮ್ಮುಂಜೆ, ಫಝಲ್ ದೇರಳಕಟ್ಟೆ, ಶರೀಫ್ ಸುಂಟಿಕೊಪ್ಪ ಅವರನ್ನು ಆಯ್ಕೆ ಮಾಡಲಾಯಿತು. ಮರ್ಕಝುಲ್ ಹುದಾ ಜಿದ್ದಾ ಘಟಕದ ಉಸ್ತುವಾರಿಯಾಗಿದ್ದ ಅಶ್ರಫ್ ಎಂ.ಎಸ್. ಕಕ್ಕಿಂಜೆ ಅವರು ಮಹಾಸಭೆಯ ಅಧ್ಯಕ್ಷತೆ ವಹಿಸಿದ್ದರು. ಕೆಸಿಎಫ್ ರಾಷ್ಟ್ರೀಯ ಸಮಿತಿ ಅಧ್ಯಕ್ಷ ಹಾಗೂ ಮರ್ಕಝುಲ್ ಹುದಾ ಸೌದಿ ಅರೇಬಿಯಾ ಸಂಚಾಲಕರಾದ ಅಬ್ದುಲ್ ರಶೀದ್ ಸಖಾಫಿ ಮಿತ್ತೂರು ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕೆಸಿಎಫ್ ನಾಯಕರಾದ ಫಾರೂಕ್ ಸಅದಿ ಹೆಚ್ಕಲ್, ಫಾರೂಕ್ ಕಾಟಿಪಳ್ಳ, ಮನ್ಸೂರ್ ಕಾಟಿಪಳ್ಳ ಹಾಗೂ ಕೊಡಗು ಸುನ್ನೀ ವೆಲ್ಫೇರ್ ಅಸೋಸಿಯೇಷನ್ (ಕಿಸ್ವಾ) ನಾಯಕರಾದ ಶಂಸುದ್ದೀನ್ ಮುಸ್ಲಿಯಾರ್ ಪೆರಾಜೆ, ಸುಹೈಲ್ ಸುಲ್ತಾನಿ ಬೇತ್ರಿ ಮತ್ತು ಮುಸ್ತಫಾ ಕಡಂಗ ಅವರು ನೂತನ ಸಮಿತಿಗೆ ಶುಭ ಹಾರೈಸಿದರು. ಸಯ್ಯಿದ್ ನಾಫಿ ತಂಙಳ್ ನೂಜಿ ಅವರು ದುಆ ನೆರವೇರಿಸಿದರು. ಕುಂಬ್ರ ಮರ್ಕಝ್ ಜಿದ್ದಾ ವಲಯ ಸಂಚಾಲಕ ಮುಸ್ತಫಾ ಸಖಾಫಿ ಗರಗಂದೂರು ಅವರು ಸ್ವಾಗತ ಭಾಷಣ ಮಾಡಿ, ಕೊನೆಯಲ್ಲಿ ವಂದಿಸಿದರು.
ಕೃಷ್ಣಾ ಮೇಲ್ದಂಡೆ ಯೋಜನೆಗೆ ಕೇಂದ್ರ ಸರ್ಕಾರದಿಂದ ಸಿಗದ ಸಹಕಾರ: ಡಿ.ಕೆ. ಶಿವಕುಮಾರ್ ಬೇಸರ
ವಿಜಯಪುರ: ಕೃಷ್ಣಾ ಮೇಲ್ದಂಡೆ ಯೋಜನೆಗೆ ಕೇಂದ್ರ ಸರ್ಕಾರ ಸಹಕಾರ ನೀಡುತ್ತಿಲ್ಲ. ಈ ಯೋಜನೆಗೆ ಅಧಿಸೂಚನೆ ಹೊರಡಿಸುತ್ತಿಲ್ಲ. ನೆರೆ ರಾಜ್ಯಗಳು ದಾವೆಗಳ ಮೂಲಕ ಯೋಜನೆ ಜಾರಿಗೆ ಅಡಚಣೆ ಉಂಟು ಮಾಡುತ್ತಿವೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಬೇಸರ ವ್ಯಕ್ತಪಡಿಸಿದರು. ಕಮಲ ಕೆರೆಯಲ್ಲಿದ್ದರೆ ಚೆಂದ, ತೆನೆ ಹೊಲದಲ್ಲಿದ್ದರೆ ಚೆಂದ. ದಾನ ಧರ್ಮ ಮಾಡುವ ಕೈ ಅಧಿಕಾರದಲ್ಲಿದ್ದರೆ ಚೆಂದ ಎಂದು
ಬೇಡ್ತಿ-ವರದಾ ನದಿಗಳ ಜೋಡಣೆ ಈ ಭಾಗಕ್ಕೆ ಲಾಭದಾಯಕವೇ: ಕೃಷ್ಣ ಭಟ್ರ ವಿಶ್ಲೇಷಣೆ
ಬೆಂಗಳೂರು: ಉತ್ತರ ಕರ್ನಾಟಕದಲ್ಲಿ ಕೆಲವು ಜಿಲ್ಲೆಗಳಿಗೆ ಕುಡಿಯಲು ಹಾಗೂ ನೀರಾವರಿಗೆ ನೀರೊದಗಿಸಬಲ್ಲ ಎರಡು ಪ್ರಮುಖ ನದಿಗಳ ಜೋಡಣೆ ವಿಚಾರ ಮುನ್ನೆಲೆಗೆ ಬಂದಿದೆ. ಇದಕ್ಕೆ ಕೇಂದ್ರ ಸರ್ಕಾರ ಡಿಪಿಆರ್ ತಯಾರಿಕೆಗೆ ನಿರ್ಧಾರ ಮಾಡಿರುವುದು ಕಾರಣವಾಗಿದೆ. ಬೇಡ್ತಿ ಹಾಗೂ ವರದಾ ನದಿಗಳ ಜೊಡಣೆಯಿಂದ ದಶಕಗಳ ಹಿಂದಿನ ಪ್ರಸ್ತಾವಿತ ಯೋಜನೆ. ಇದಕ್ಕೆ ವಿರೋಧ, ಯೋಜನೆ ಸಂಪೂರ್ಣ ವಿವರ ಬಗ್ಗೆ ಫ್ರೀಲ್ಯಾನ್ಸರ್ನಲ್ಲಿ ಕನ್ನಡ
ಭಾರತದಿಂದ ಟಿ-20 ವಿಶ್ವಕಪ್ ಪಂದ್ಯಗಳನ್ನು ಸ್ಥಳಾಂತರಿಸುವಂತೆ ಬಾಂಗ್ಲಾದೇಶ ಆಗ್ರಹ; ಬಿಸಿಸಿಐ ಹೇಳಿದ್ದೇನು?
ಹೊಸದಿಲ್ಲಿ: ಭಾರತದಲ್ಲಿ ನಡೆಯಲಿರುವ ತನ್ನ ಟಿ-20 ವಿಶ್ವಕಪ್ ಪಂದ್ಯಗಳನ್ನು ಶ್ರೀಲಂಕಾಗೆ ಸ್ಥಳಾಂತರಿಸುವಂತೆ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯನ್ನು (ICC) ಆಗ್ರಹಿಸಿರುವ ಬಾಂಗ್ಲಾದೇಶದ ಕುರಿತು ಕೊನೆಗೂ ಮೌನ ಮುರಿದಿರುವ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI), ಇದು ನನ್ನ ವ್ಯಾಪ್ತಿಯಲ್ಲಿಲ್ಲ ಎಂದು ಪ್ರತಿಕ್ರಿಯಿಸಿದೆ. ಇತ್ತೀಚಿನ ಬಾಂಗ್ಲಾದೇಶದಲ್ಲಿನ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಬಾಂಗ್ಲಾದೇಶದ ಆಟಗಾರ ಮುಸ್ತಫಿಝುರ್ ರಹ್ಮಾನ್ ರನ್ನು ತಂಡದಿಂದ ಕೈಬಿಡುವಂತೆ IPL ತಂಡ ಕೋಲ್ಕತ್ತಾ ನೈಟ್ ರೈಡರ್ಸ್ ಗೆ BCCI ಸೂಚಿಸಿದ ಹಿನ್ನೆಲೆಯಲ್ಲಿ ಭಾರತ ಮತ್ತು ಬಾಂಗ್ಲಾದೇಶದ ನಡುವಿನ ಉದ್ವಿಗ್ನತೆ ಮತ್ತಷ್ಟು ಬಿಗಡಾಯಿಸಿದೆ. ಮುಸ್ತಫಿಝುರ್ ರಹ್ಮಾನ್ ರನ್ನು ತಂಡಕ್ಕೆ ಸೇರಿಸಿಕೊಂಡ ನಡೆಯ ಕುರಿತು ಕೋಲ್ಕತ್ತಾ ನೈಟ್ ರೈಡರ್ಸ್ ಟೀಕೆಗೆ ಗುರಿಯಾಗಿತ್ತು. ನಂತರ ಮುಸ್ತಫಿಝುರ್ ರಹ್ಮಾನ್ ರನ್ನು ತಂಡದಿಂದ ಬಿಡುಗಡೆಗೊಳಿಸುವಂತೆ ಕೋಲ್ಕತ್ತಾ ನೈಟ್ ರೈಡರ್ಸ್ ಫ್ರಾಂಚೈಸಿಗೆ BCCI ಸೂಚಿಸಿದೆ. ಅಬುಧಾಬಿಯಲ್ಲಿ ನಡೆದ ಹರಾಜು ಪ್ರಕ್ರಿಯೆಯಲ್ಲಿ ಬಾಂಗ್ಲಾ ವೇಗಿ ಮುಸ್ತಫಿಝುರ್ ರಹ್ಮಾನ್ ರನ್ನು ಕೋಲ್ಕತ್ತಾ ನೈಟ್ ರೈಡರ್ಸ್ 9.2 ಕೋಟಿ ರೂ. ಮೊತ್ತ ತೆತ್ತು ಖರೀದಿಸಿತ್ತು. ಮುಸ್ತಫಿಝುರ್ ರಹ್ಮಾನ್ ರನ್ನು ಕೋಲ್ಕತ್ತಾ ನೈಟ್ ರೈಡರ್ಸ್ ತಂಡದಿಂದ ಬಿಡುಗಡೆಗೊಳಿಸಿರುವ ಹಿನ್ನೆಲೆಯಲ್ಲಿ ಮಧ್ಯಪ್ರವೇಶಿಸಿರುವ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ಹಾಗೂ ಬಾಂಗ್ಲಾದೇಶ ಸರಕಾರ, ಭದ್ರತಾ ಕಳವಳದ ಕಾರಣಕ್ಕೆ ಭಾರತದಲ್ಲಿ ನಿಗದಿಯಾಗಿರುವ ತನ್ನ ಟಿ-20 ವಿಶ್ವಕಪ್ ಪಂದ್ಯಗಳನ್ನು ಶ್ರೀಲಂಕಾಗೆ ಸ್ಥಳಾಂತರಿಸುವಂತೆ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಗೆ ಮನವಿ ಮಾಡಿದ್ದವು. ಈ ಕುರಿತು ಬಾಂಗ್ಲಾದೇಶ ಸರಕಾರ ಹಾಗೂ ಬಾಂಗ್ಲಾ ಕ್ರಿಕೆಟ್ ಮಂಡಳಿಯು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯೊಂದಿಗೆ ಇಮೇಲ್ ವಿನಿಮಯವನ್ನು ಮುಂದುವರಿಸಿದ್ದರೂ, ಇದುವರೆಗೆ ಈ ಕುರಿತು ಯಾವುದೇ ಸ್ಪಷ್ಟ ನಿರ್ಧಾರ ಕೈಗೊಂಡಿಲ್ಲ.
ಸರಿತಾ ರೈ, ಪ್ರಹ್ಲಾದ್ ಕುಳಲಿ ಸೇರಿದಂತೆ 40 ಮಂದಿ ಪತ್ರಕರ್ತರಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ
ಹಿರಿಯ ಪತ್ರಕರ್ತೆ ಸರಿತಾ ರೈ ಸೇರಿದಂತೆ 40 ಮಂದಿ ಪತ್ರಕರ್ತರಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ ದೊರಕಿದೆ. ಹಿರಿಯ ಪತ್ರಕರ್ತ ಪ್ರಹ್ಲಾದ್ ಕುಳಲಿ ಅವರಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿಯ ಸಿವಿ ರಾಜಗೋಪಾಲ್ ದತ್ತಿ ಪ್ರಶಸ್ತಿ ಸಿಕ್ಕಿದೆ. ಅದೇ ರೀತಿಯಲ್ಲಿ ಬಸವರಾಜ ದೊಡ್ಡಮನಿ ಕೃಷಿ ಪತ್ರಿಕೋದ್ಯಮ ದತ್ತಿ ಪ್ರಶಸ್ತಿ- ಸಿದ್ದೇಶ್ ತ್ಯಾಗಟೂರು ಹಾಗೂ ಕೆಯು ಡಬ್ಲ್ಯು.ಜೆ. ದತ್ತಿ ಪ್ರಶಸ್ತಿಗೆ ಕೆ ಆನಂದ ಶೆಟ್ಟಿ ಆಯ್ಕೆಯಾಗಿದ್ದಾರೆ. ಯಾರಿಗೆಲ್ಲಾ ಪ್ರಶಸ್ತಿ ಸಿಕ್ಕಿದೆ ಎಂಬುವುದರ ಕುರಿತಾದ ವಿವರ ಇಲ್ಲಿದೆ.
28ಲಕ್ಷ ಸಂಬಳ ನೀಡುವ ಕೆಲಸ ಬಿಟ್ಟು ಸ್ವಂತ ಉದ್ಯಮದ ಒಡತಿಯಾದ ಬೆಂಗಳೂರಿನ CA: ಆಕೆಯ ಜರ್ನಿಗೆ ನೆಟ್ಟಿಗರು ಫಿದಾ!
ಬೆಂಗಳೂರಿನ ಸಿಎ ಮೀನಾಲ್ ಗೋಯಲ್ 28 ಲಕ್ಷ ವಾರ್ಷಿಕ ಸಂಬಳದ ಪ್ರತಿಷ್ಠಿತ ಉದ್ಯೋಗವನ್ನು ತ್ಯಜಿಸಿದ್ದಾರೆ. ಸ್ವಂತ ಉದ್ಯಮದ ಕನಸು ಕಂಡ ಅವರು, ಆರಂಭಿಕ ಕಷ್ಟಗಳ ನಡುವೆಯೂ ಛಲ ಬಿಡದೆ ಮುಂದುವರಿದಿದ್ದಾರೆ. ಅನ್ಅಕಾಡೆಮಿ ಜೊತೆಗಿನ ಫ್ರೀಲಾನ್ಸ್ ಪ್ರಾಜೆಕ್ಟ್ ಅವರಿಗೆ ತಿರುವು ನೀಡಿದ್ದು, ಕೇವಲ 25 ಸಾವಿರದ ಆ ಒಂದು ಪ್ರಾಜೆಕ್ಟ್ ನಿಂದ ಇಂದು 5 ಜನರ ತಂಡದೊಂದಿಗೆ ಸ್ವಂತ ಕಂಪನಿ ನಡೆಸುತ್ತಿದ್ದು, ತಿಂಗಳಿಗೆ 5 ಲಕ್ಷ ಆದಾಯ ಗಳಿಸುತ್ತಿದ್ದಾರೆ. ಅವರ ಧೈರ್ಯ ಅನೇಕರಿಗೆ ಸ್ಫೂರ್ತಿಯಾಗಿದ್ದು, ನೆಟ್ಟಿಗರು ಈಕೆಯ ಜರ್ನಿಗೆ ಶ್ಲಾಘನೆ ವ್ಯಕ್ತಪಡಿಸುತ್ತಿದ್ದಾರೆ.
ನೊಬೆಲ್ ಶಾಂತಿ ಪ್ರಶಸ್ತಿಗೆ ನನ್ನಷ್ಟು ಆರ್ಹ ಬೇರೆ ಯಾರೂ ಇಲ್ಲ: ಡೊನಾಲ್ಡ್ ಟ್ರಂಪ್
ಭಾರತ, ಪಾಕ್ ನಡುವಿನ ಸಂಘರ್ಷ ನಿಲ್ಲಿಸಿದ್ದೇನೆ ಎಂದು ಪುನರುಚ್ಛರಿಸಿದ ಅಮೆರಿಕ ಅಧ್ಯಕ್ಷ
IND Vs NZ ODI : ಸಂಭಾವ್ಯ ಭಾರತ ತಂಡದಲ್ಲಿ ಯಾರೆಲ್ಲಾ - ಎಲ್ಲರ ಕಣ್ಣು ಇವರೊಬ್ಬರ ಮೇಲೆ!
All eyes of Shubman Gill : ಟಿ20 ವಿಶ್ವಕಪ್ ಕ್ರೀಡಾಕೂಟಕ್ಕೆ ಮುನ್ನ, ಭಾರತ ಮತ್ತು ನ್ಯೂಜಿಲ್ಯಾಂಡ್ ತಂಡದ ನಡುವೆ ಮೂರು ಏಕದಿನ ಸರಣಿ ಮತ್ತು ಐದು ಟಿ20 ಸರಣಿ ಪಂದ್ಯಾವಳಿ ನಡೆಯಲಿದೆ. ಏಕದಿನ ಸರಣಿಯ ಮೊದಲ ಪಂದ್ಯ ನಾಳೆ (ಜ. 11) ವಡೋದರದಲ್ಲಿ ನಡೆಯಲಿದೆ. ಎಲ್ಲರ ಕಣ್ಣು ಶುಬ್ಮನ್ ಗಿಲ್ ಮೇಲಿದೆ, ಯಾಕೆಂದರೆ ಅವರನ್ನು ವಿಶ್ವಕಪ್’ಗೆ ಆಯ್ಕೆ ಮಾಡಲಾಗಲಿಲ್ಲ.
ಮಣಿಪಾಲ | ಬೈಕ್ ಡಿವೈಡರ್ಗೆ ಢಿಕ್ಕಿ: ಸವಾರ ಸ್ಥಳದಲ್ಲಿಯೇ ಮೃತ್ಯು
ಮಣಿಪಾಲ, ಜ.9: ಬೈಕೊಂದು ರಸ್ತೆ ಮಧ್ಯೆ ಇರುವ ಡಿವೈಡರ್ಗೆ ಢಿಕ್ಕಿ ಹೊಡೆದ ಪರಿಣಾಮ ಸವಾರರೊಬ್ಬರು ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಜ.10ರಂದು ನಸುಕಿನ ವೇಳೆ 3ಗಂಟೆ ಸುಮಾರಿಗೆ ಲಕ್ಷ್ಮೀಂದ್ರ ನಗರದ ಸುಧಾ ಫನಿರ್ಚರ್ ಎದುರು ರಾಷ್ಟ್ರೀಯ ಹೆದ್ದಾರಿ 169ಎ ರಲ್ಲಿ ನಡೆದಿದೆ. ಮೃತರನ್ನು ಕುಂಜಿಬೆಟ್ಟು ಬುಡ್ನಾರ್ ರಸ್ತೆ ನಿವಾಸಿ ಪ್ರವೀಣ್ ಶೆಟ್ಟಿ(36) ಎಂದು ಗುರುತಿಸಲಾಗಿದೆ. ಉಡುಪಿ ಕಡೆಯಿಂದ ಮಣಿಪಾಲ ಕಡೆ ಹೋಗುತ್ತಿದ್ದ ಬೈಕ್ ಡಿವೈಡರ್ಗೆ ಢಿಕ್ಕಿ ಹೊಡೆಯಿತ್ತೆನ್ನಲಾಗಿದೆ. ಇದರಿಂದ ರಸ್ತೆಗೆ ಬಿದ್ದು ಗಂಭೀರವಾಗಿ ಗಾಯಗೊಂಡ ಪ್ರವೀಣ್ ಶೆಟ್ಟಿ ಸ್ಥಳದಲ್ಲಿಯೇ ಮೃತಪಟ್ಟರೆಂದು ತಿಳಿದುಬಂದಿದೆ. ಇವರು ಒಂದೂವರೆ ಹಿಂದೆಯಷ್ಟೇ ವಿವಾಹವಾಗಿರುವುದಾಗಿ ತಿಳಿದು ಬಂದಿದೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಯುವ ಮನಸುಗಳನ್ನು ಹಾಳು ಮಾಡುವ ಅಡಲ್ಟ್ ಸಿನಿಮಾ: ಡಾ ರೂಪಾ ರಾವ್ ಬರಹ
ಬೆಂಗಳೂರು: ಕನ್ನಡದ 'ಟಾಕ್ಸಿಕ್' ಸಿನಿಮಾ ಟೀಸರ್ ರಿಲೀಸ್ ಆಗಿದ್ದು, ಅದರಲ್ಲಿನ ಕೆಲ ದೃಶ್ಯಗಳು ಸುದ್ದಿಯಾದವು. ಆನ್ಲೈನ್ನಲ್ಲಿ ಸಾಕಷ್ಟು ಚರ್ಚೆಗಳು ಶುರುವಾಗಿದ್ದು ನೋಡಿದ್ದೇವೆ. ಸಿನಿಮಾಗಳು, ವೆಬ್ಸಿರೀಸ್ಗಳಲ್ಲಿ ತೋರಿಸುವ ಲೈಂಗಿಕತೆಯ ದೃಶ್ಯಗಳು ಮಕ್ಕಳ ಮೇಲೆ ಹೇಗೆಲ್ಲ ಮನೋವೈಜ್ಞಾನಿಕವಾಗಿ ಪರಿಣಾಮ ಬೀರುತ್ತವೆ. ಯುವ ಮನಸ್ಸಿನ ಮೇಲೆ ಈ ವಿಚಾರಗಳ ನಿರಂತರ ದಾಳಿ, ಲೈಂಗಿಕತೆ ಆಲೋಚನೆಗಳಿಂದ ಮನಸ್ಸು, ಮೆದುಳಿನಲ್ಲಿನ ಆಗುವ ಬದಲಾವಣೆ, ಸಂಬಂಧ
ಸಿಂಧನೂರು | ಜ.11ರಂದು 'ಮತದಾರರ ವಿಶೇಷ ಪರಿಷ್ಕರಣೆ' ವಿರೋಧಿ ಸಂವಾದ
ಚಿಂತಕ ಶಿವಸುಂದರ್ ಭಾಗಿ
ಸಿದ್ದು 2.0 ಸರ್ಕಾರ ಎಸಗಿರುವ 10 ಸಾಮಾಜಿಕ ಅನ್ಯಾಯಗಳು
ಆತ್ಮೀಯರೇ , ಸಿದ್ಧರಾಮಯ್ಯನವರು ದೇವರಾಜ ಅರಸರ ದಾಖಲೆಯನ್ನು ಮೀರಿ ಅತಿ ಹೆಚ್ಚು ಕಾಲ ಮುಖ್ಯಮಂತ್ರಿಯಾದವರೆಂಬ ಇತಿಹಾಸ ಸೃಷ್ಟಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಮಾಧ್ಯಮಗಳಲ್ಲಿ ಅವರ ಸಾಧನೆಯ ಬಗ್ಗೆ ಜಾಹಿರಾತುಗಳ, ಪ್ರಗತಿಪರರ ಹೇಳಿಕೆಗಳ ಮಹಾಪೂರ ಹರಿಯತೊಡಗಿದೆ. ಇವೆಲ್ಲದರಲ್ಲೂ ಒಂದಷ್ಟು ಸತ್ಯವಿದೆ. ಸಾಮಾಜಿಕ ನ್ಯಾಯದ ಪರವಾದ , ಸಂವಿಧಾನ ಪರವಾದ, ಕೋಮು ಸೌಹಾರ್ದ ಪರವಾದ ಸಿದ್ಧರಾಮಯ್ಯನವರ ಸ್ಪಷ್ಟ ಹಾಗೂ ಖಡಕ್ ಮಾತುಗಳು ದಲಿತ ಮತ್ತು ದಮನಿತರಲ್ಲಿ ಭರವಸೆಯನ್ನು ಹುಟ್ಟಿಸಿದ್ದು ನಿಜ. ಆದರೆ ಆ ಭರವಸೆಗಳನ್ನು ಸಿದ್ದು ನೇತೃತ್ವದ ಕಾಂಗ್ರೆಸ್ ಸರ್ಕಾರ ಈಡೇರಿಸಿದೆಯೇ ಅಥವಾ ಬಿಜೆಪಿ ಕಾಲದ ವಂಚನೆಗಳನ್ನು ಮುಂದುವರೆಸಿವೆಯೇ? ಸಿದ್ದರಾಮಯ್ಯನವರ ಸಾಧನೆಗಳ ಬಗ್ಗೆ ಸಾಕಷ್ಟು ಉತ್ರೇಕ್ಷಿತ ಚರ್ಚೆಯಾಗುತ್ತಿದೆ. ಆದರೆ ಸಿದ್ಧರಾಮಯ್ಯನವರ ಅಧಿಕಾರ ಕಾಲಘಟ್ಟದಲ್ಲಿ ಕಾಂಗ್ರೆಸ್ಸಿನ ಜಾಯಮಾನಕ್ಕೆ ತಕ್ಕಂತೆ ಮೃದು ಹಿಂದೂತ್ವಕ್ಕೆ ಪೂರಕವಾದ , ಕಾರ್ಪೊರೇಟ್ ಪರವಾದ ಹಲವಾರು ಸಾಮಾಜಿಕ ಆನ್ಯಾಯಗಳು ನಡೆದಿವೆ. ನಡೆಯುತ್ತಿವೆ.. ಅವುಗಳಲ್ಲಿ ಹತ್ತು ಪ್ರಮುಖ ಸಾಮಾಜಿಕ ಅನ್ಯಾಯಗಳು ಇಂತಿವೆ: 1. ಸಂಘಿ ಶ್ರೀಗಳಿಂದ ಆಶೀರ್ವಚನ : ಅಧಿಕಾರಕ್ಕೆ ಬಂದಕೂಡಲೇ ಹೊಸ ಶಾಸಕರ ತರಬೇತಿಯ ಹೆಸರಿನಲ್ಲಿ ಕಾಂಗ್ರೆಸ್ ಪಕ್ಷದಿಂದ ಆಯ್ಕೆಯಾದ ಸ್ಪೀಕರ್ ಇಂದ ಸಂಘಿ ಮನಸ್ಥಿತಿಯ ಶ್ರೀಗಳಿಂದ ಆಶೀರ್ವಚನ 2. ಬಾಬಾಬುಡನ್ ದರ್ಗಾದಲ್ಲಿ ಸಂಘಿಗಳ ಅಜೇಂಡಾ ಜಾರಿ: ಬಾಬಾಬುಡನ್ ದರ್ಗಾ ವಿಷಯದಲ್ಲಿ ತನ್ನದೇ ಸರ್ಕಾರದ ನಿಲುವಿಗೆ ವಿರುದ್ಧವಾಗಿ ಸಂಘಿಗಳ ಆಗ್ರಹಕ್ಕೆ ತಕ್ಕಂತೆ ಅರ್ಚಕನ ನೇಮಕಾತಿಗೆ ಒಪ್ಪಿಗೆ 3. SCSP , TSP ನಿಧಿಯ ದುರ್ಬಳಕೆ: ಗ್ಯಾರಂಟಿಗಳಿಗೆ ಬೇಕಾದ ಸಂಪನ್ಮೂಲವನ್ನು ಆಡಳಿತ ಸುಧಾರಣೆ, ಆರ್ಥಿಕ ಅಭಿವೃದ್ಧಿ ಸಾಧಿಸುವ ಮೂಲಕ ಅಧಿಕ ತೆರಿಗೆ ಸಂಪನ್ಮೂಲ ಕ್ರೂಢೀಕರಣ ಮತ್ತು ಭ್ರಷ್ಟಾಚಾರ ನಿಗ್ರಹದ ಮೂಲಕ ಪೂರೈಸುವುದಾಗಿ ಪ್ರಣಾಳಿಕೆಯಲ್ಲಿ ಹೇಳಿದ್ದರೂ ಅವೇನನ್ನು ಮಾಡದೆ SCSP , TSP ನಿಧಿಯಾ ದುರ್ಬಳಕೆ ಮತ್ತು ತಳಸಮುದಾಯಗಳ ಇತರ ಎಲ್ಲಾ ಕಲ್ಯಾಣ ಕಾರ್ಯಕ್ರಮಗಳಿಗೆ ಹಣದ ಕೊರತೆ. ಈ ದುರ್ಬಳಕೆಯ ಬಗ್ಗೆ ಬಿಜೆಪಿಗೆ ಯಾವುದೇ ವಿಮ್ಸರಿಹೆ ಮಾಡುವ ಅಧಿಕಾರವಿಲ್ಲ. ಏಕೆಂದರೆ ಅವರ ಆಳ್ವಿಕೆಯ ರಾಜ್ಯಗಳಲ್ಲಿ ಇದನ್ನು ಅವರು ಜಾರಿಗೂ ತಂದಿಲ್ಲ. ಆದರೆ ಬಾಧಿತ ಸಮುದಾಯಗಳ ದೃಷ್ಟಿಯಲ್ಲಿ ಇದೊಂದು ಮಹಾ ಸಾಮಾಜಿಕ ಅನ್ಯಾಯವೇ ಅಲ್ಲವೇ? 4. ಬಲಿಷ್ಠ ಜಾತಿಗಳಿಗೆ ಮಣಿದು ಕಾಂತರಾಜ್ ವರದಿ- ಸಾಮಾಜಿಕ ನ್ಯಾಯ ಮೂಲೆಗುಂಪು : ಸಾಮಾಜಿಕ ನ್ಯಾಯ ಜಾರಿ ಮಾಡಲು ಅತ್ಯಗತ್ಯವಾಗಿದ್ದ ಜಾತಿಗಳ ಸಾಮಾಜಿಕ ಸ್ಥಿತಿಗತಿಯ ಸಮೀಕ್ಷೆಯ ಕಾಂತರಾಜ್ ವರದಿಯನ್ನು ಬಿಜೆಪಿಯ ಮತ್ತು ಕಾಂಗ್ರೆಸ್ಸಿನೊಳಗಿನ ಮನುವಾದಿಗಳ ಒತ್ತಡಕ್ಕೆ ಮಣಿದು ನಿರಾಕರಣೆ. ತಯಾರಿಯಿಲ್ಲದ, ಮತ್ತೊಂದು ಅವಸರದ , ಅಪೂರ್ಣ ಸಾರದಲ್ಲಿ ಪರಿಣಾಮಕಾರಿಯಲ್ಲದ ಸಾಮಾಜಿಕ ಸಮೀಕ್ಷೆ ನಡೆಸಿದೆ. ಇದು ಮನುವಾದಿ ಬಿಜೆಪಿ ಯ 5. ಪರಿಶಿಷ್ಟರ ಒಳಮೀಸಲಲ್ಲಿ ಅಲೆಮಾರಿಗಳಿಗೆ ಮಹಾ ಅನ್ಯಾಯ : ಸುಪ್ರೀಂ ತೀರ್ಪು ಬಂದ ನಂತರವೂ ಒಳಮೀಸಲಾತಿ ಅನುಷ್ಠಾನಕ್ಕೆ ಮೀನಮೇಷ. ವೈಜ್ಞಾನಿಕವಾದ ನ್ಯಾ. ನಾಗಮೋಹನ್ ದಾಸ್ ವರದಿ ತಿರಸ್ಕಾರ . ಪ್ರಶ್ನಾರ್ಹ 6:6:5 ಸೂತ್ರ ಜಾರಿ. ಎಲ್ಲಕ್ಕಿಂತ ಹೆಚ್ಚಯಾಗಿ ಪರಿಶಿಷ್ಟರಲ್ಲೆ ಅತ್ಯಂತ ಹಿಂದುಳಿದ ಅಲೆಮಾರಿಗಳನ್ನು ಪರಿಶಿಷ್ಟರಲ್ಲಿ ಸಾಪೇಕ್ಷವಾಗಿ ಮುಂದುವರೆದ ಜಾತಿಗಳ ಜೊತೆ ಸೇರಿಸಿ, ಅಲೆಮಾರಿಗಳು ಹಿಂದುಳಿದಿಲ್ಲ ಎಂದು ಹೈಕೋರ್ಟಿನಲ್ಲಿ ವಾದಿಸಿರುವ ಮಹಾದ್ರೋಹ. 6. ನಕ್ಸಲ್ ಶರಣಾಗಾತಿಯ ಬಗ್ಗೆ ಅಪ್ರಾಮಾಣಿಕ ಧೋರಣೆ : ಸಿದ್ದು ಸರ್ಕಾರದ ನಕ್ಸಲ್ ಶರಣಾಗತಿ ಯೋಜನೆಗೂ ಬಿಜೆಪಿ ಸರ್ಕಾರಗಳ ಶರಣಾಗತಿ ಯೋಜನೆಗೂ ಸಾರದಲ್ಲಿ ಯಾವುದೇ ವ್ಯತ್ಯಾಸವಿಲ್ಲ. ವಿಕ್ರಂ ಗೌಡ ರನ್ನು ಸೆರೆ ಹಿಡಿಯಬಹುದಾಗಿದ್ದರೂ ಕ್ರೂರವಾಗಿ ಕೊಂದು ಹಾಕಿ ಅದನ್ನು ಹೆಮ್ಮೆಯಿಂದ ಸಿದ್ದು ಸರ್ಕಾರವೂ ಸಮರ್ಥಿಸಿಕೊಂಡಿತ್ತು. ಸಿದ್ದು ಮೊದಲ ಅವಧಿಯಲ್ಲಿ ಶರಣಾಗತರಾದ ಕನ್ಯಾಕುಮಾರಿ ಇನ್ನಿದುವರೆಗೂ ಸೆರೆಯಲ್ಲೇ. ಪದ್ಮನಾಭ ಇನ್ನಿತರ ಶರಣಾಗತರಾದ ನಕ್ಸಲರಿಗೆ ಪುನರ್ ವಸತಿಯೂ ಇಲ್ಲ. ತ್ವರಿತವಾದ ನ್ಯಾಯ ಪ್ರಕ್ರಿಯೆಯೂ ಇಲ್ಲ. ಹೋದವರ್ಷ ಶರಣಾಗತರಾದ ಆರು ನಕ್ಸಲರ ವಿಷಯದಲ್ಲೂ ಉದ್ದುದ್ದು ಹೇಳಿಕೆಗಳು ಬಿಟ್ಟರೆ ಪರಿಣಾಮಕಾರಿಯಾದ ಆಡಳಿತಾತ್ಮಕ ಅಥವಾ ಅನ್ಯಾಯಿಕ ಪ್ರಕ್ರಿಯೆಗಳೂ ನಡೆಯುತ್ತಿಲ್ಲ. ಇದಕ್ಕೆ ತದ್ವಿರುದ್ಧವಾಗಿ ಬಿಜೆಪಿ ಶಾಸಿತಾ ರಾಜ್ಯಗಳಲ್ಲಿ ಕೇಸುಗಳನ್ನೂ ವಾಪಾಸ್ ಪಡೆಯಲಾಗುತ್ತಿದೆ., ತ್ವರಿತ ಪುನರ್ ವಸತಿಯನ್ನೂ ಮಾಡಲಾಗುತ್ತಿದೆ. 7. ದೇವನಹಳ್ಳಿ ರೈತರಿಗೆ ಅನ್ಯಾಯ ಮತ್ತು ಸೇಡಿನ ಕ್ರಮ : ದೇವನಹಳ್ಳಿಯ ರೈತರ ಜಮೀನಿನ ಭೂ ಸ್ವಾಧೀನ ಪ್ರಕ್ರಿಯೆ ಕಬಿಡುವುದಾಗಿ ಘೋಷಿಸಿ ಪ್ರಗತಿಪರ , ರೈತ ಸಂಘಟನೆಗಳಿಂದ ಅಪಾರವಾಗಿ ಹೊಗಳಿಸಿಕೊಂಡಿದ್ದ ಸಿದ್ದು ಸರ್ಕಾರ ಡಿ ನೋಟಿಫಿಕೇಶನ್ ಮಾಡಿರಲೇ ಇಲ್ಲ. ಕೊನೆಗೆ ಡಿಸೇಂಬರ್ ನಲ್ಲಿ ಮಾಡಿದ ಆದೇಶದಲ್ಲಿ ರೈತರು ಆಗ್ರಹಿಸುತ್ತಿದ್ದಂತೆ ಸರಳ ಡಿ ನೋಟಿಫಿಕ್ಸಷನ್ ಮಾಡದೆ, ರೈತರು ಕೇಳದಿದ್ದರೂ ಅದನ್ನು ಕಾನೂನಲ್ಲೇ ಇಲ್ಲದ ರೀತಿಯಲ್ಲಿ ಶಾಶ್ವತ ಕೃಷಿ ವಲಯ ಎಂದು ಘೋಶಿಸಿ, ಪರೋಕ್ಷವಾಗಿ ಆ ರೈತರನ್ನು ಕೃಷಿ ಬಂಡವಾಳಶಾಹಿಗಳ ಗುಲಾಮರನ್ನಾಗಿ ಮಾಡಲು ಯೋಜನೆ ರೂಪಿಸುತ್ತಿದೆ. ಸೇಡು ತೀರಿಸಿಕೊಳ್ಳುತ್ತಿದೆ. 2013 ರಲ್ಲಿ ತನ್ನ ನೇತೃತ್ವದ UPA ಸರ್ಕಾರ ರೈತರ ಜಮೀನನನ್ನು ಅವರ ಒಪ್ಪಿಗೆ ಇಲ್ಲದೆ ವಶಪಡಿಸಿಕೊಳ್ಳಬಾರದೆಂಬ ನೀತಿಗೂ ತಾನೇ ಕಾರ್ಪೊರೇಟ್ ಪರವಾದ ತಿದ್ದುಪಡಿಗಳನ್ನು ತಂದು ಬಿಜೆಪಿ ಸರ್ಕಾರದಂತೆ ತಾನೂ ರೈತದ್ರೋಹ ಬಗೆದಿದೆ. 8. ಕಾಂಗ್ರೆಸ್ಬು ಸರ್ಕಾರ- ಬಿಜೆಪಿ ಬುಲ್ಡೋಜರ್? : ಕೋಗಿಲು, ಥಣಿಸಂದ್ರ ಇನ್ನಿತರ ಬೆಂಗಳೂರಿನಲ್ಲಿಇರಬಹುದಾದ 1200 ಕ್ಕೂ ಹೆಚ್ಚು ಅನಧಿಕೃತಾ ಸ್ಲಮ್ ಗಳಲ್ಲಿ ಪ್ರಾಣಿಗಳಂತೆ ಬದುಕುತ್ತಿರುವ ಆದರೆ ಈ ದೇಶದ ನಾಗರಿಕರೇ ಆದ ಸ್ಲಾಮ್ ವಾಸಿಗಳಿಗೆ ಘನತೆಯಿಂದ ಬದುಕಲು ಅವಕಾಶ ಕಲ್ಪಿಸಬೇಕಾದದ್ದು ಸಾಮಾಜಿಕ ನ್ಯಾಯ. ಬಿಜೆಪಿ ಸರ್ಕಾರಗಳು ಅವರನ್ನು ನಾಗರಿಕರೇ ಅಲ್ಲವೆಂದು ಬುಲ್ಡೋಜರ್ ಚಲಾಯಿಸುತ್ತದೆ. ಅದು ಸಾಮಾಜಿಕ ಅನ್ಯಾಯ. ಅನಾಗರಿಕ. ಅಮಾನವೀಯ. ಆದರೆ ನು ಸಾಮಾಜಿಕ ನ್ಯಾಯಕ್ಕೆ ಬದ್ಧ ಎನ್ನುವ ಸಿದ್ದು ಸರ್ಕಾರ ಕೂಡ ರಾತ್ರೋರಾತ್ರಿ ಬುಲ್ಡೋಜರ್ ಹರಿಸಿ ಬಡ ಗುಡಿಸಲುವಾಸಿಗಳನ್ನು ಬೀದಿ ಪಾಲು ಮಾಡುತ್ತಿದೆ.. ಕಾರ್ಪೊರೇಟ್ ಅಭಿವೃದ್ಧಿಗಾಗಿ. ಹಾಗಿದ್ದಲ್ಲಿ ಮೋದಿಯ ಕಾರ್ಪೊರೇಟ್ ವಿಕಸಿತ ಭಾರತಕ್ಕೂ, ಸಿದ್ದು ಸರ್ಕಾರದ ಬಿಲ್ಡ್ರರ್ ಗಳ ಗ್ರೇಟರ್ ಬೆಂಗಳೂರಿಗೂ ಏನು ವ್ಯತ್ಯಾಸ . ಬಿಜೆಪಿಯ ಬುಲೆಟ್ ಟ್ರೈ ನ್ ನಗರ ನೀತಿಯಲ್ಲಿ ಸ್ಲಮ್ ಭಾರತದ ಅಭಿವೃದ್ಧಿಯ ನೀಲನಕ್ಷೆಯೇ ಇಲ್ಲ. ಹಾಗೆಯೇ , ಸಿದ್ದು ಸರ್ಕಾರದ ಟನೆಲ್ ರೋಡ ನಗರ ಯೋಜನೆಯಲ್ಲಿ ನಗರದ ಬಡವರಿಲ್ಲ. ಬಿಜೆಪಿಯ ಬುಲ್ಡೋಜರ್ ಎಷ್ಟು ಸಾಮಾಜಿಕ ಅನ್ಯಾಯವೋ ಕಾಂಗ್ರೆಸ್ಸಿನ ಬುಲ್ಡೋಜರ್ ಕೂಡ ಅಷ್ಟೇ ಸಾಮಾಜಿಕ ಅನ್ಯಾಯ .. 9. KPS ಶಾಲೆಗಳು: ಅಹಿಂದ ವರ್ಗದ ಮಕ್ಕಳಿಗೆ ಅಕ್ಷರ ಅನ್ಯಾಯ : ಬಿಜೆಪಿ ಸರ್ಕಾರ ತನ್ನ ಜನವಿರೋಧಿ , ಜನದ್ರೋಹಿ ಹಿಂದೂತ್ವ ವಾದಿ ಕಾರ್ಪೊರೇಟ್ ಪರ ರಾಷ್ಟ್ರೀಯ ಶಿಕ್ಷಣ ನೀತಿ (NEP) ಯ ಭಾಗವಾಗಿ ಸರ್ಕಾರಿ ಶಾಲೆಗಳ ಮುಚ್ಚುವಿಕೆಯ ಹೆಸರಿನ ಮಹಾನ್ ಸಾಮಾಜಿಕ ಅನ್ಯಾಯದ ಯೋಜನೆಯನ್ನು ಜಾರಿ ಮಾಡಿದೆಯಷ್ಟೆ. ಈಗ ಸಾಮಾಜಿಕ ನ್ಯಾಯದ ಸಿದ್ದು ಸರ್ಕಾರ ಕೂಡ ಅದೇ ಉದ್ದೇಶದಿಂದ KPS ಮತ್ತು ಮ್ಯಾಗ್ನೆಟ್ ಶಾಲಾ ಯೋಜನೆಯನ್ನು ವೇಗವಾಗಿ ಜಾರಿಗೆ ತರುತ್ತಿದೆ. ಇದರಿಂದಾಗಿ 32000 ಸರ್ಕಾರಿ ಶಾಲೆಗಳನ್ನು ಮುಚ್ಚಿ ಗ್ರಾಮೀಣ ಪ್ರದೇಶದ ಅಹಿಂದ ವರ್ಗದ ಬಡ ಮಕ್ಕಳಿಗೆ ಸಿಗುತ್ತಿದ್ದ ಕಳಪೆ ಗುಣಮಟ್ಟದ್ದೇ ಆದರೂ ಅಲ್ಪಸ್ವಲ್ಪ ಅಕ್ಷರ ಭಾಗ್ಯವನ್ನೂ ಕೂಡಾ ಸಿದ್ದು ಸರ್ಕಾರ ವಂಚಿಸುತ್ತಿದೆ. KPS ಶಾಲೆಯ ಹೆಸರಿನಲ್ಲಿ ಬಾಲ್ಯಾವಸ್ಥೆಯ ಮಕ್ಕಳ ಶೈಕ್ಷಣಿಕ ಸಾಮಾಜೀಕರಣಕ್ಕೆ ಸಂಪೂರ್ಣ ವಿರೋಧಿಯಾದ ಕಾರ್ಪೊರೇಟ್ ವಾದಿ ಶೈಕ್ಷಣಿಕ ನೀತಿಯನ್ನು ಜಾರಿಗೆ ತಂದು ಅಹಿಂದ ಸಮುದಾಯಕ್ಕೆ ಮಹಾ ಶೆಕ್ಷಣಿಕ ಅನ್ಯಾಯವನ್ನು ಮಾಡುತ್ತಿದೆ. 10. ಬಿಜೆಪಿ ಸರ್ಕಾರ ಗೋಹತ್ಯಾ, APMC ನೀತಿಗಳ ಮುಂದುವರಿಕೆ : ಕಾಂಗ್ರೆಸ್ ಸರ್ಕಾರವೇ ಅಧಿಕಾರಕ್ಕೆ ಬಂದು ಎರಡೂವರೆ ವರ್ಷಾಗಳಾಗುತ್ತಾ ಬಂದರು ಬಿಜೆಪಿ ಸರ್ಕಾರ ಜಾರಿಗೆ ತಂದ ಭೂ ಹಿಡುವಳಿ,ಖಾಸಗಿ APMC , ಗೋಹತ್ಯಾ ನಿಷೇಧ ಕಾಯಿದೆ ಇತ್ಯಾದಿಗಳನ್ನು ಈವರೆಗೆ ಮುಂದುವರೆಸಿಕೊಂಡೆ ಹೋಗುತ್ತಿದೆ. ಸಾರವಿಷ್ಟೇ.... ಸಿದ್ಧಾರಾಮಯ್ಯ ವ್ಯಕ್ತಿಯಾಗಿ ಎಷ್ಟೇ ಸಾಮಾಜಿಕ ಕಳಕಳಿ ಇದ್ದರೂ, ಇರದಿದ್ದರೂ ಅವರು ಕಾಂಗ್ರೆಸ್ ಪಕ್ಷದ ಮುಖ್ಯಮಂತ್ರಿ ಯಾಗಿದ್ದಾರೆ. ಅವರ ಸಕ್ರಿಯ ಒಪ್ಪಿಗೆ ಅಥವಾ ಗಾಂಧಾರಿ ಕುರುಡಿನ ಒಪ್ಪಿಗೆಯ ಮೂಲಕವೇ ಈ ಎಲ್ಲಾ ಸಾಮಾಜಿಕ ಅನ್ಯಾಯದ ಯೋಜನೆಗಳು ಜಾರಿಗೆ ಬಂದಿವೆ. ಇದರ ಅರ್ಥ ಇದಕ್ಕಿಂತ ಬಿಜೆಪಿ ಉತ್ತಮ ಎಂದಲ್ಲ. ಬಿಜೆಪಿ ಅಪಾಯ. ಕಾಂಗ್ರೆಸ್ ನಿರಾಶೆ. ಬಿಜೆಪಿ ಸಮಸ್ಯೆ. ಕಾಂಗ್ರೆಸ್ ಸಮಸ್ಯೆಯ ಮುಂದುವರಿಕೆ. ಸಿದ್ದು ಮುಖ್ಯಮಂತ್ರಿ ಯಾಗಿದ್ದರೂ ಬಿಜೆಪಿಯ ಬಂಡವಾಳಶಾಹಿ ಮತ್ತು ಬ್ರಾಹ್ಮಣಶಾಹಿ ನೀತಿಗಳನ್ನು ಕಾಂಗ್ರೆಸ್ ಸರ್ಕಾರ ಮೃದುವಾಗಿ ಮುಂದುವರಿಸುತ್ತದೆ. ಬಿಜೆಪಿ ಅದೇ ನೀತಿಗಳನ್ನು ಉಗ್ರವಾಗಿ ಜಾರಿ ಮಾಡುತ್ತದೆ. ಹೀಗಾಗಿ ಸಾರಾಂಶ : ಕಾಂಗ್ರೆಸ್- ಬಿಜೆಪಿ ಒಂದೇ ಅಲ್ಲ. ಆದರೆ ಅವೆರೆಡರ ನಡುವೆ ವ್ಯತ್ಯಾಸ ಹೆಚ್ಚೇನಿಲ್ಲ. ಆದ್ದರಿಂದ ಕೇವಲ ಪಕ್ಷಗಳು ಬದಲಾದರೆ ಬದುಕು ಹಸನಾಗುವುದಿಲ್ಲ. ಕಾಂಗ್ರೆಸ್ಸಿನ ಮೂಲಕ ಫ್ಯಾಶಿಸಂ ಸೋಲಿಸುವ ಭ್ರಮೆ ಫಲಿಸುವುದಿಲ್ಲ. ಕನಿಷ್ಠ ಸಿದ್ದು ಸರ್ಕಾರದ ಕಳೆದ ಎರಡೂವರೆ ವರ್ಷದ ಆಳ್ವಿಕೆ ಆ ಬ್ರಾಂತಿಯನ್ನು ಕಳಚಬೇಕು. ಸಂವಿಧಾನ ಆಶಯಗಳಾದ ಸ್ವಾತಂತ್ರ್ಯ, ಸಮಾನತೆ ಮತ್ತು ಬಂಧುತ್ವದ ಸಾಕಾರಕ್ಕೆ ಮತ್ತೊಂದು ಸ್ವಾತಂತ್ರ್ಯ ಹೋರಾಟ ಕಟ್ಟದೆ ದೇಶಕ್ಕೆ ಉಳಿಗಾಲವಿಲ್ಲ. ಫ್ಯಾಶಿಸಂ ಇಂದ ಮುಕ್ತಿ ಇಲ್ಲ.ಅಲ್ಲವೇ?
ಕುಸಿಯಲು ನಿರಾಕರಿಸುತ್ತಿರುವ ಚಿನ್ನ; ಇಂದಿನ ದರವೆಷ್ಟು?
ಭೌಗೋಳಿಕ ರಾಜಕೀಯದ ಉದ್ವಿಘ್ನ ಸ್ಥಿತಿಯಲ್ಲಿ ವಿದೇಶಿ ಮಾರುಕಟ್ಟೆಯಲ್ಲಿ ಅಸ್ಥಿರ ನಿಲುವು ಮುಖ್ಯವಾಗಿ ಚಿನ್ನಕ್ಕೆ ಬೇಡಿಕೆ ಹೆಚ್ಚಿಸಿದೆ. ಸಂಕ್ರಾಂತಿ ಹಬ್ಬಕ್ಕೆ ಚಿನ್ನದ ಬೆಲೆ ಕುಸಿಯುವ ಆಸೆಯಲ್ಲಿದ್ದವರಿಗೆ ನಿರಾಸೆಯಾಗಿದೆ. ಕಳೆದ ಕೆಲವು ವಾರಗಳಿಂದ ಚಿನ್ನದ ಬೆಲೆ ಏರಿಕೆ ಮತ್ತು ಇಳಿಕೆಯಾಗುತ್ತಿದೆ. ಎರಡು ದಿನಗಳ ಸತತ ಇಳಿಕೆಯ ನಂತರ ನಿನ್ನೆ ಅಲ್ಪಮಟ್ಟಿಗೆ ಏರಿಕೆಯಾಗಿತ್ತು. ಇಂದು ದೊಡ್ಡ ಪ್ರಮಾಣದಲ್ಲಿ ಏರಿಕೆಯಾಗಿದೆ. ಹೀಗಾಗಿ ವಾರಾಂತ್ಯಕ್ಕೆ ಕುಸಿತದ ಆಶಯದಲ್ಲಿದ್ದವರಿಗೆ ನಿರಾಸೆಯಾಗಿದೆ. ಭೌಗೋಳಿಕ ರಾಜಕೀಯದ ಉದ್ವಿಘ್ನ ಸ್ಥಿತಿಯಲ್ಲಿ ವಿದೇಶಿ ಮಾರುಕಟ್ಟೆಯಲ್ಲಿ ಅಸ್ಥಿರ ನಿಲುವು ಮುಖ್ಯವಾಗಿ ಚಿನ್ನಕ್ಕೆ ಬೇಡಿಕೆ ಹೆಚ್ಚಿಸಿದೆ. ಮಂಗಳೂರಿನಲ್ಲಿ ಇಂದಿನ ಚಿನ್ನದ ದರವೆಷ್ಟು? ಶನಿವಾರ ಜನವರಿ 10ರಂದು ಬೆಳಗಿನ 11 ಗಂಟೆಯ ವಹಿವಾಟಿನಲ್ಲಿ ಮಂಗಳೂರಿನಲ್ಲಿ ಚಿನ್ನದ ಬೆಲೆ ಮತ್ತೆ ದಿಢೀರ್ ಏರಿಕೆ ಕಂಡಿದೆ. ಬೆಳಗಿನ ವಹಿವಾಟಿನಲ್ಲಿ ಒಂದು ಗ್ರಾಂ 24 ಕ್ಯಾರೆಟ್ ಚಿನ್ನದ ದರ 14,046 (+115) ರೂ. ಗೆ ತಲುಪಿದೆ. ಒಂದು ಗ್ರಾಂ 22 ಕ್ಯಾರೆಟ್ ಚಿನ್ನದ ದರ 12,875 (+105) ರೂ. ಮತ್ತು ಒಂದು ಗ್ರಾಂ 18 ಕ್ಯಾರೆಟ್ ಚಿನ್ನದ ದರ 10,534 + ₹86 ರೂ. ಬೆಲೆಗೆ ತಲುಪಿದೆ. ಭಾರತದಲ್ಲಿ 24 ಕ್ಯಾರೆಟ್ ಚಿನ್ನ ಶನಿವಾರ 1 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ 14,046 ರೂ. ಆಗಿದ್ದು, ನಿನ್ನೆ ಇದು13,931 ರೂ. ಆಗಿತ್ತು. ಹಾಗಾಗಿ 1 ಗ್ರಾಂ ಬೆಲೆ 115 ರೂ. ಏರಿಕೆಯಾಗಿದೆ. 1 ಗ್ರಾಂ 22 ಕ್ಯಾರೆಟ್ ಚಿನ್ನವು ಶನಿವಾರ 12,875 ರೂ. ಗೆ ಲಭ್ಯವಿದ್ದು, ನಿನ್ನೆ ಇದು 12,770 ರೂ. ಆಗಿತ್ತು, ಎಂದರೆ 105 ರೂ. ಹೆಚ್ಚಾಗಿದೆ. ಶನಿವಾರ 1 ಗ್ರಾಂ 18 ಕ್ಯಾರೆಟ್ ಚಿನ್ನದ ಬೆಲೆ 10,534 ರೂ. ಆಗಿದ್ದು, ನಿನ್ನೆ 10,448 ರೂ. ಆಗಿತ್ತು; ಇದರರ್ಥ 86 ರೂ.ಏರಿಕೆಯಾಗಿದೆ. ಭಾರತದ ವಿವಿಧ ನಗರಗಳಲ್ಲಿ ಎಷ್ಟಿದೆ ಬೆಲೆ? ಬೆಂಗಳೂರು: 24 ಕ್ಯಾರೆಟ್ ಚಿನ್ನ 14,046 ರೂ., 22 ಕ್ಯಾರೆಟ್ 12,875 ರೂ., 18 ಕ್ಯಾರೆಟ್ 10,534 ರೂ. - ಬಹುತೇಕ ಎಲ್ಲಾ ನಗರಗಳಂತೆ ಸ್ಥಿರ ಬೆಲೆ. ಚೆನ್ನೈ: 24 ಕ್ಯಾರೆಟ್ ಚಿನ್ನ 13,965 ರೂ., 22 ಕ್ಯಾರೆಟ್ 12,900 ರೂ., 18 ಕ್ಯಾರೆಟ್ 10,765 ರೂ. - ಚಿನ್ನದ ಬೆಲೆ ನಗರದಲ್ಲಿ ಸ್ವಲ್ಪ ಕಡಿಮೆ. ಮುಂಬೈ: 24 ಕ್ಯಾರೆಟ್ ಚಿನ್ನ 14,046 ರೂ., 22 ಕ್ಯಾರೆಟ್ 12,875 ರೂ., 18 ಕ್ಯಾರೆಟ್ 10,534 ರೂ. - ದೈನಂದಿನ ಮಾರುಕಟ್ಟೆ ಬೆಲೆಗಳಿಗೆ ಸಮಾನವಾಗಿದೆ. ದೆಹಲಿ: 24 ಕ್ಯಾರೆಟ್ ಚಿನ್ನ 14,061 ರೂ., 22 ಕ್ಯಾರೆಟ್. 12,890 ರೂ, 18 ಕ್ಯಾರೆಟ್ 10,549 ರೂ. - ನಗರದಲ್ಲಿ 24 ಕ್ಯಾರೆಟ್ ಚಿನ್ನವು ಗರಿಷ್ಠ ಬೆಲೆಗೆ ಲಭ್ಯ. ಕೋಲ್ಕತ್ತಾ: 24 ಕ್ಯಾರೆಟ್ ಚಿನ್ನ 14,046 ರೂ., 22 ಕ್ಯಾರೆಟ್ 12,875 ರೂ., 18 ಕ್ಯಾರೆಟ್ 10,534 ರೂ. - ಮಾರುಕಟ್ಟೆ ಸರಾಸರಿ ಬೆಲೆಯೊಂದಿಗೆ ಲಭ್ಯ. ಹೈದರಾಬಾದ್: 24 ಕ್ಯಾರೆಟ್ ಚಿನ್ನ 14,046 ರೂ., 22 ಕ್ಯಾರೆಟ್ 12,875 ರೂ., 18 ಕ್ಯಾರೆಟ್ 10,534 ರೂ. - ಚಿನ್ನದ ಬೆಲೆ ರಾಜ್ಯದಲ್ಲಿ ಸ್ಥಿರವಾಗಿದೆ. ಕೇರಳ: 24 ಕ್ಯಾರೆಟ್ ಚಿನ್ನ 14,046 ರೂ., 22 ಕ್ಯಾರೆಟ್ 12,875 ರೂ., 18 ಕ್ಯಾರೆಟ್ 10,534 ರೂ. - ಸಾಮಾನ್ಯ ಮಾರುಕಟ್ಟೆ ಬೆಲೆಯೊಂದಿಗೆ ಲಭ್ಯ. ಅಹಮದಾಬಾದ್: 24 ಕ್ಯಾರೆಟ್ ಚಿನ್ನ 14,051 ರೂ., 22 ಕ್ಯಾರೆಟ್ 12,880 ರೂ., 18 ಕ್ಯಾರೆಟ್ 10,539 ರೂ. - 24K ಚಿನ್ನ ಮಾರುಕಟ್ಟೆ ಬೆಲೆಗೆ ಸಮೀಪ. ಭಾರತದಲ್ಲಿ ಬೆಳ್ಳಿ ಬೆಲೆ ಶನಿವಾರ ಭಾರತದಲ್ಲಿ ಬೆಳ್ಳಿಯ ಬೆಲೆಗಳಲ್ಲಿ ಏರಿಕೆ ಕಂಡು ಬಂದಿದೆ. 1 ಗ್ರಾಂ ಬೆಳ್ಳಿ ಶನಿವಾರ 260 ರೂ. ಗೆ ಲಭ್ಯವಿದ್ದು, ನಿನ್ನೆ ರೂ. 249 ಆಗಿತ್ತು, ಇದರಿಂದ ರೂ. 11 ಹೆಚ್ಚಾಗಿದೆ. 10 ಗ್ರಾಂ ಬೆಳ್ಳಿ ಬೆಲೆ ಶನಿವಾರ 2,600 ರೂ. ಆಗಿದ್ದು, ನಿನ್ನೆಯ ಬೆಲೆ 2,490 ರೂ. ಹೋಲಿಸಿದರೆ ರೂ. 110 ಹೆಚ್ಚಾಗಿದೆ.
ಚಾಮುಂಡಿ ಬೆಟ್ಟದಲ್ಲಿ ಪ್ರಸಾದ ಪಡೆಯೋದು ಭಕ್ತರಿಗೆ ಸುಲಭ; ತಿರುಪತಿ ಮಾದರಿ ಹಲವು ಸೌಲಭ್ಯ ಒದಗಿಸಲು ಕಾಮಗಾರಿ ಶುರು
ಚಾಮುಂಡಿ ಬೆಟ್ಟದಲ್ಲಿ ಭಕ್ತರಿಗೆ ಇನ್ನಷ್ಟು ಸೌಲಭ್ಯ ಕಲ್ಪಿಸಲು ಕೇಂದ್ರದ ಪ್ರಸಾದ ಯೋಜನೆಯಡಿ ಕಾಮಗಾರಿ ಆರಂಭವಾಗಿದೆ. ಶಾಶ್ವತ ವೇದಿಕೆ, ಕ್ಯೂ ಮಂಟಪ, ಮಾಹಿತಿ ಕೇಂದ್ರ, ಚಪ್ಪಲಿ ಇಡುವ ಜಾಗ, ಟಿಕೆಟ್ ಕೌಂಟರ್ಗಳು ನಿರ್ಮಾಣವಾಗುತ್ತಿವೆ. 46 ಕೋಟಿ ರೂ. ವೆಚ್ಚದ ಈ ಯೋಜನೆ 9 ತಿಂಗಳಲ್ಲಿ ಪೂರ್ಣಗೊಳ್ಳಲಿದ್ದು, ಪ್ರವಾಸೋದ್ಯಮ ಇಲಾಖೆ ಮೇಲ್ವಿಚಾರಣೆ ನಡೆಸುತ್ತಿದೆ.
ಕಾಸರಗೋಡು ಕರ್ನಾಟಕದ ಒಂದು ಭಾಗ ಎಂಬುವುದು ನಮ್ಮ ಪ್ರತಿಪಾದನೆ: ಡಿಕೆ ಸುರೇಶ್
ಕೇರಳದಲ್ಲಿ ಭಾಷಾ ಮಸೂದೆಯ ವಿವಾದದ ಹಿನ್ನೆಲೆಯಲ್ಲಿ ಸಂಸದೆ ಪ್ರಿಯಾಂಕಾ ಗಾಂಧಿ ವಿರುದ್ದ ಬಿಜೆಪಿ ಟ್ವೀಟ್ ವಿಚಾರಕ್ಕೆ ಮಾಜಿ ಸಂಸದ ಡಿಕೆ ಸುರೇಶ್ ಪ್ರತಿಕ್ರಿಯೆ ನೀಡಿದ್ದಾರೆ. ಪ್ರಿಯಾಂಕಾ ಗಾಂಧಿಯವರನ್ನು ಎಲ್ಲಾ ವಿಚಾರಗಳಿಗೆ ಎಳೆದು ತಂದಿಲ್ಲ ಕರೆ ತಂದಿಲ್ಲ ಅಂದರೆ ಬಿಜೆಪಿಗರಿಗೆ ನಿದ್ದೆ ಬರಲ್ಲ. ಹಿಂದಿ ಹೇರಿಕೆ ಪ್ರವೃತ್ತಿ ಬಗ್ಗೆ ಬಿಜೆಪಿಯವರು ಸ್ಪಷ್ಟೀಕರಣ ಕೊಡಲಿ. ಅನವಶ್ಯಕ ವಿಚಾರಗಳಿಗೆ ಪ್ರಿಯಾಂಕಾ ಗಾಂಧಿ ಅವರ ಹೆಸರು ಎಳೆದು ತರೋದು ಸರಿಯಿಲ್ಲ ಎಂದು ತಿರುಗೇಟು ನೀಡಿದರು. ಈ ಕುರಿತಾಗಿ ಅವರು ಏನು ಮಾತನಾಡಿದ್ದಾರೆ ಎಂಬ ವಿವರ ಇಲ್ಲಿದೆ.
ಕರಾವಳಿ ಪ್ರದೇಶಕ್ಕೆ ಪ್ರತ್ಯೇಕ ಪ್ರವಾಸೋದ್ಯಮ ನೀತಿ : ಡಿ.ಕೆ.ಶಿವಕುಮಾರ್
ಮಂಗಳೂರು : ಕರಾವಳಿ ಕರ್ನಾಟಕದ ಪ್ರವಾಸೋದ್ಯಮವನ್ನು ಕೇರಳ ಮತ್ತು ಗೋವಾ ಮಾದರಿಯಲ್ಲಿ ಅಭಿವೃದ್ಧಿಪಡಿಸಬೇಕು. ಇದಕ್ಕಾಗಿ ಕರಾವಳಿ ಪ್ರದೇಶಕ್ಕೆ ಪ್ರತ್ಯೇಕ ಪ್ರವಾಸೋದ್ಯಮ ನೀತಿಯನ್ನು ರೂಪಿಸಲಾಗುವುದು ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು. ಕರಾವಳಿ ಕರ್ನಾಟಕ ಪ್ರವಾಸೋದ್ಯಮ ಸೇರಿದಂತೆ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಸಲುವಾಗಿ ಅವರು ಶನಿವಾರ ಬೆಳಗ್ಗೆ ಮಂಗಳೂರಿಗೆ ಆಗಮಿಸಿದ್ದು, ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದರು. ಕರಾವಳಿಯ ಪ್ರವಾಸೋದ್ಯಮ ಅಭಿವೃದ್ಧಿಯ ವಿಷಯದಲ್ಲಿ ಹಿಂದಿನ ಸರ್ಕಾರಗಳು ವಿಫಲವಾಗಿವೆ. ಮಂಗಳೂರಿನ ಜನರು ಉದ್ಯೋಗಕ್ಕಾಗಿ ಮುಂಬೈ, ದುಬೈ ಮತ್ತು ಬೆಂಗಳೂರಿಗೆ ವಲಸೆ ಹೋಗುತ್ತಾರೆ. ಇಲ್ಲಿನ ನೈಸರ್ಗಿಕ ಸಂಪನ್ಮೂಲಗಳನ್ನು ಸರಿಯಾಗಿ ಬಳಸಿಕೊಳ್ಳಲಾಗಿಲ್ಲ. ನಾನು ಈ ಪ್ರದೇಶದ ಎಲ್ಲಾ ಶಾಸಕರೊಂದಿಗೆ ಮಾತನಾಡಿದ್ದೇನೆ. ಅವರು ಪ್ರವಾಸೋದ್ಯಮದ ಉತ್ತೇಜನದಲ್ಲಿ ಹೆಚ್ಚಿನ ಆಸಕ್ತಿ ತೋರಿಸಿದ್ದಾರೆ. ಪ್ರವಾಸೋದ್ಯಮ ನೀತಿಯ ಬಗ್ಗೆ ನಾವು ಚರ್ಚಿಸಿದ್ದೇವೆ ಎಂದು ಡಿ.ಕೆ.ಶಿವಕುಮಾರ್ ಹೇಳಿದರು. ಇಲ್ಲಿ ಕೆಲವು ವಿಶೇಷ ಯೋಜನೆಗಳನ್ನು ಜಾರಿಗೆ ತರುವ ಅವಶ್ಯಕತೆಯಿದೆ. ವಿದೇಶ, ಮುಂಬೈ ಮತ್ತು ಬೆಂಗಳೂರಿನಿಂದ ಅನೇಕರು ತಮ್ಮ ಊರಿಗೆ ಮರಳಲು ಮತ್ತು ಅಭಿವೃದ್ಧಿಗಾಗಿ ಈ ಪ್ರದೇಶದಲ್ಲಿ ಹೂಡಿಕೆ ಮಾಡಲು ಇಚ್ಛೆ ವ್ಯಕ್ತಪಡಿಸಿದ್ದಾರೆ. ಹೂಡಿಕೆಯು ಕೌಶಲ್ಯ ಮತ್ತು ಪ್ರತಿಭಾನ್ವಿತ ಸ್ಥಳೀಯ ಯುವಕರಿಗೆ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ ಎಂದು ಅವರು ಹೇಳಿದರು. ಉದ್ಯೋಗಕ್ಕಾಗಿ ವಿದೇಶಕ್ಕೆ ಹೋಗುವ ಬದಲು, ಸ್ಥಳೀಯವಾಗಿ ಉದ್ಯೋಗವನ್ನು ಸೃಷ್ಟಿಸಬಹುದು. ಈ ನಿಟ್ಟಿನಲ್ಲಿ ಉದ್ಯಮಿಗಳು ಮತ್ತು ಅಧಿಕಾರಿಗಳೊಂದಿಗೆ ನಾವು ಚರ್ಚೆ ನಡೆಸುತ್ತೇವೆ. ಈಗ ಇರುವ ಸಮಸ್ಯೆಗಳನ್ನು ಮತ್ತು ಹೂಡಿಕೆ ಮಾಡಲು ಸಿದ್ಧರಿರುವ ಉದ್ಯಮಿಗಳಿಗೆ ಸರ್ಕಾರವು ಹೇಗೆ ಬೆಂಬಲ ನೀಡಬಹುದು ಎಂಬುದನ್ನು ನಾವು ಪರಿಶೀಲಿಸುತ್ತೇವೆ. ಖಾಸಗಿ ಸಹಭಾಗಿತ್ವವೂ ಅಗತ್ಯವಾಗಿರುತ್ತದೆ ಎಂದು ಅವರು ಹೇಳಿದರು. ಉದ್ಯಮಿಗಳು ಮತ್ತು ಸಾರ್ವಜನಿಕ ಪ್ರತಿನಿಧಿಗಳು ಸಹಕರಿಸಬೇಕು. ಪ್ರವಾಸೋದ್ಯಮ ಸಮಾವೇಶದಲ್ಲಿ ಸಿಆರ್ಝಡ್ ಅಧಿಕಾರಿಗಳು, ರಕ್ಷಣಾ ಮತ್ತು ಕರಾವಳಿ ಪೊಲೀಸರು ಸಹ ಭಾಗವಹಿಸುತ್ತಾರೆ. ಇಲ್ಲಿ ಒಂದೇ ಒಂದು ಪಂಚತಾರಾ ಹೋಟೆಲ್ ಇಲ್ಲ. ಎಲ್ಲವನ್ನೂ ಅಭಿವೃದ್ಧಿಪಡಿಸಬೇಕಾಗಿದೆ ಎಂದು ಅವರು ಹೇಳಿದರು. Box ಕೇಂದ್ರ ಸರಕಾರ ಮನರೇಗಾ ಹೆಸರು ಬದಲಾವಣೆ ಮತ್ತು ಕಾನೂನು ತಿದ್ದುಪಡಿ ವಿರುದ್ಧ ಎಲ್ಲ ವಿಧಾನ ಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ವತಿಯಿಂದ ಜನವರಿ 26 ರಿಂದ 5 ರಿಂದ 10 ಕಿಲೋ ಮೀಟರ್ ಪಾದಯಾತ್ರೆ ನಡೆಸಲಾಗುವುದು ಎಂದು ಉಪ ಮುಖ್ಯಮಂತ್ರಿ ಡಿಕೆಶಿ ತಿಳಿಸಿದರು.
ಇರಾನ್ನಲ್ಲಿ ಮುಂದುವರಿದ ಪ್ರತಿಭಟನೆ: ಬಲವಾದ ಆರ್ಥಿಕ, ಮಿಲಿಟರಿ ಕ್ರಮದ ಎಚ್ಚರಿಕೆ ನೀಡಿದ ಟ್ರಂಪ್
“ಮಡುರೊ ಅವರನ್ನು ಸೆರೆಹಿಡಿದಂತೆ, ಇರಾನ್ ಟ್ರಂಪ್ರನ್ನು ಸೆರೆ ಹಿಡಿಯಬೇಕು” ಎಂದ ಇರಾನ್ ಅಧಿಕಾರಿ
ಡಿವೋರ್ಸಿ ಮಹಿಳೆ ಜೊತೆ ಮದುವೆ ನಾಟಕ; ಮಗು ಕೊಟ್ಟು, 36 ಲಕ್ಷ ಕೊಂಡೊಯ್ದ ಆಸಾಮಿ
ಮೋಹನ್ ರಾಜ್ ಎಂಬಾತ ವಿಚ್ಛೇದಿತ ಮಹಿಳೆಯೊಬ್ಬರಿಗೆ ಹೊಸ ಬಾಳು ಕೊಡುವುದಾಗಿ ನಂಬಿಸಿ ಮದುವೆಯಾಗಿ, ಸುಮಾರು 36 ಲಕ್ಷ ರೂಪಾಯಿ ಹಣ ಮತ್ತು ಒಡವೆಗಳನ್ನು ದೋಚಿ ಪರಾರಿಯಾಗಿರುವ ಘಟನೆ ಬೆಂಗಳೂರಿನ ಬನಶಂಕರಿಯಲ್ಲಿ ನಡೆದಿದೆ. ಸಂತ್ರಸ್ತೆ ನ್ಯಾಯಕ್ಕಾಗಿ ಬನಶಂಕರಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದರೂ, ಪೊಲೀಸರು ತಮಗೆ ನ್ಯಾಯ ನೀಡುವ ಬದಲು ಬೆದರಿಕೆ ಹಾಕುತ್ತಿದ್ದಾರೆ ಎಂದು ಆಕೆ ದೂರಿದ್ದಾರೆ.
GBA : ಐದು ಪಾಲಿಕೆಗಳ 369 ವಾರ್ಡ್ ಕರಡು ಮೀಸಲಾತಿ - ಯಾವ ಕ್ಯಾಟಗರಿಗೆ ಎಷ್ಟು ವಾರ್ಡ್? ಇಲ್ಲಿದೆ ಮಾಹಿತಿ
Greater Bengaluru Authority : ಹೊಸದಾಗಿ ಅಸ್ತಿತ್ವಕ್ಕೆ ಬಂದ ಗ್ರೇಟರ್ ಬೆಂಗಳೂರು ಪ್ರಾಧಿಕಾರದ (GBA) ಐದು ನಗರಪಾಲಿಕೆಗಳ ಕರಡು ಮೀಸಲಾತಿಯನ್ನು ಪ್ರಕಟಿಸಲಾಗಿದೆ. ಮಹಿಳೆಯರಿಗೆ ಎಷ್ಟು, ಸಾಮಾನ್ಯ ವರ್ಗ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಕ್ಕೆ ಎಷ್ಟು ವಾರ್ಡ್, ಮೀಸಲಾತಿ ಎನ್ನುವ ಮಾಹಿತಿಯನ್ನು ಇದರಲ್ಲಿ ಉಲ್ಲೇಖಿಸಲಾಗಿದೆ.
ಮಹಿಳೆಯರಿಗೆ ಮತ್ತೊಂದು ಗುಡ್ ನ್ಯೂಸ್: ಗೃಹಲಕ್ಷ್ಮಿ ಡಿಜಿಟಲ್ ಮಾರ್ಕೆಟಿಂಗ್ ಗೆ ಚಾಲನೆ
ಬೆಂಗಳೂರು: ರಾಜ್ಯ ಸರ್ಕಾರ ಗೃಹ ಲಕ್ಷ್ಮಿ ಯೋಜನೆ ಮೂಲಕ ಮಹಿಳೆಯರಿಗೆ ಪ್ರತಿ ತಿಂಗಳು 2000 ರೂಪಾಯಿ ಹಣವನ್ನ ಜಮಾ ಮಾಡುತ್ತಿದೆ. ಈಗಾಗಲೇ ಸರ್ಕಾರ ಗೃಹ ಲಕ್ಷ್ಮಿ ಸಹಾಕರ ಬ್ಯಾಂಕ್ ಮೂಲಕ 3 ಲಕ್ಷದವರೆಗೂ ಸಾಲ ನೀಡುವ ಯೋಜನೆಗೆ ಮುಂದಾಗಿದ್ದು, ಇದೀಗ ಮಹಿಳೆಯರಿಗೆ ಮತ್ತೊಂದು ಗುಡ್ ನ್ಯೂಸ್ ನೀಡಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲ ಚೇತನರು
ಮಂಗಳೂರು : ಪಿಲಿಕುಳದಲ್ಲಿ 'ಮೈಕಲ್ ಡಿಸೋಜ ಮತ್ತು ಕುಟುಂಬ' ಗಾಲ್ಫ್ ಅಕಾಡೆಮಿಗೆ ಶಿಲಾನ್ಯಾಸ
ಮಂಗಳೂರು : ಪಿಲಿಕುಳ ನಿಸರ್ಗಧಾಮದ ಬಳಿ ನವೀಕರಣಗೊಂಡ ಪಿಲಿಕುಲ ಗಾಲ್ಫ್ ಕೋರ್ಸ್ ಲೋಕಾರ್ಪಣೆ ಹಾಗೂ ನೂತನವಾದ ನಿಟ್ಟೆ ವಿನಯ್ ಹೆಗ್ಡೆ ಮೆಮೋರಿಯಲ್ ಕ್ಲಬ್ ಹೌಸ್ ಉದ್ಘಾಟನಾ ಸಮಾರಂಭ ಶುಕ್ರವಾರ ನಡೆಯಿತು. ಇದೇ ವೇಳೆ ಮೈಕಲ್ ಡಿಸೋಜ ಮತ್ತು ಕುಟುಂಬ ಗಾಲ್ಫ್ ಅಕಾಡೆಮಿಗೆ ಶಿಲಾನ್ಯಾಸ ಸಮಾರಂಭವನ್ನು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ನೆರವೇರಿಸಿದರು. ಖ್ಯಾತ ಅನಿವಾಸಿ ಭಾರತೀಯ ಉದ್ಯಮಿ ಹಾಗು ವಿಷನ್ ಕೊಂಕಣಿಯ ಪ್ರವರ್ತಕ, ಕೊಡುಗೈ ದಾನಿ ಮೈಕಲ್ ಡಿಸೋಜ ಅವರು ಯುವಜನರಿಗೆ ತರಬೇತಿ ನೀಡುವ ಉದ್ದೇಶದಿಂದ ಈ ಗಾಲ್ಫ್ ಅಕಾಡೆಮಿಯನ್ನು ಪ್ರಾಯೋಜಿಸಿದ್ದಾರೆ. ಸಂಸದ ಕ್ಯಾ.ಬ್ರಿಜೇಶ್ ಚೌಟ, ಶಾಸಕ ರಾದ ಉಮಾನಾಥ ಕೋಟ್ಯಾನ್, ಡಾ.ಭರತ್ ಶೆಟ್ಟಿ, ವಿಧಾನ ಪರಿಷತ್ ಶಾಸಕರಾದ ಐವನ್ ಡಿಸೋಜ, ಮಂಜುನಾಥ್ ಭಂಡಾರಿ, ಜಿಲ್ಲಾಧಿಕಾರಿ ದರ್ಶನ್ ಎಚ್.ವಿ., ಗಾಲ್ಫ್ ಕ್ಲಬ್ ನ ಕ್ಯಾಪ್ಟನ್ ಮನೋಜ್ ಶೆಟ್ಟಿ, ಕಾರ್ಯದರ್ಶಿ ಗಿರೀಶ್ ರಾವ್, ಕೋಶಾಧಿಕಾರಿ ನಿತಿನ್ ಜೆ.ಶೆಟ್ಟಿ, ಮೈಕಲ್ ಡಿಸೋಜಾ ಹಾಗೂ ಇನ್ನಿತರರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಮೈಕಲ್ ಡಿಸೋಜ ಅವರನ್ನು ಜಿಲ್ಲಾಡಳಿತದ ವತಿಯಿಂದ ಸನ್ಮಾನಿಸಿ ಅಭಿನಂದಿಸಲಾಯಿತು. ಪಿಲಿಕುಳ ಗಾಲ್ಫ್ ಕೋರ್ಸ್ ನಲ್ಲಿ ಜ.31 ರಂದು ಭಾರತದ ಮೊದಲ ಫ್ಲಡ್ ಲೈಟ್ ಪ್ರೊ-ಆಮ್ ಗಾಲ್ಫ್ ಟೂರ್ನಮೆಂಟ್ ನಡೆಯಲಿದೆ.
ರಾಯಚೂರು | 9 ರಿಂದ 14 ವರ್ಷದ ಹೆಣ್ಣುಮಕ್ಕಳಿಗೆ ಉಚಿತ ಹೆಚ್ಪಿವಿ ಲಸಿಕೆಗೆ ಜಾಗೃತಿ ನೀಡಿ : ಡಾ.ಸುರೇಂದ್ರ ಬಾಬು
ಹೆಚ್ಪಿವಿ ಲಸಿಕೆ ಕುರಿತ ತರಬೇತಿ ಕಾರ್ಯಾಗಾರ
ಭಾರತ-ನೇಪಾಳ ಗಡಿ ಮೂಲಕ ವೀಸಾ ಇಲ್ಲದೆ ದೇಶ ಪ್ರವೇಶಿಸಿದ ಚೀನಿ ಮಹಿಳೆ ಬಂಧನ
ಭಾರತ-ನೇಪಾಳ ಗಡಿ ಮೂಲಕ ಅಕ್ರಮವಾಗಿ ಭಾರತ ಪ್ರವೇಶಿಸಲು ಯತ್ನಿಸಿದ ಚೀನಿ ಮಹಿಳೆಯನ್ನು ಮಹಾರಾಜಗಂಜ್ ಜಿಲ್ಲೆಯಲ್ಲಿ ಬಂಧಿಸಲಾಗಿದೆ. ಯಾವುದೇ ಮಾನ್ಯ ವೀಸಾ ಮತ್ತು ಪಾಸ್ಪೋರ್ಟ್ ಇಲ್ಲದೆ ದೇಶ ಪ್ರವೇಶಿಸುತ್ತಿದ್ದ ಹುಯಾಜಿಯಾ ಜಿ ಎಂಬುವವರನ್ನು ಸಶಸ್ತ್ರ ಸೀಮಾ ಬಲ್ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಭಾಷಾ ಸಮಸ್ಯೆಯಿಂದಾಗಿ ಹೆಚ್ಚಿನ ಮಾಹಿತಿ ಸಂಗ್ರಹಿಸಲು ಸಾಧ್ಯವಾಗಿಲ್ಲ ಎಂದು ತಿಳಿಸಿದ್ದು, ಹೆಚ್ಚಿನ ತನಿಖೆ ಮುಂದುವರಿದಿದೆ.
KEA Exam Guidelines: ಸ್ಪರ್ಧಾತ್ಮಕ ಪರೀಕ್ಷೆ ಬರೆಯುವವರು ಗಮನಿಸಿ: ಕಟ್ಟುನಿಟ್ಟಿನ ವಸ್ತ್ರಸಂಹಿತೆ, ಏನಿದೆ- ಏನಿಲ್ಲ?
ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (KEA), ಕೆಪಿಎಸ್ಸಿ, ಶಿಕ್ಷಣ ಮಂಡಳಿಗಳು ಸೇರಿದಂತೆ ಇತರ ಸಂಸ್ಥೆಗಳು ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಗಳು, ಪ್ರವೇಶ ಪರೀಕ್ಷೆ, ವಿವಿಧ ಇಲಾಖೆಗಳ ನೇಮಕಾತಿಗೆ ಪರೀಕ್ಷೆಗೆ ಹಾಜರಾಗುವಾಗ ಯಾವೆಲ್ಲ ನಿಯಮಗಳಿರುತ್ತವೆ. ಕಡ್ಡಾಯ ನಿಯಮಗಳ ಪಾಲನೆ, ಪರೀಕ್ಷಾ ಕೇಂದ್ರ ಪ್ರವೇಶಿಸುವ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳಿಗೆ ಇರುವ ರೂಲ್ಸ್ ಏನು? ಯಾವೆಲ್ಲ ವಸ್ತುಗಳು ನಿಷೇಧ ಹಾಗೂ ಅನುಮತಿ
ನಾಯಕತ್ವ ಬದಲಾವಣೆಯ ಗೊಂದಲದ ನಡುವೆ ಡಿಕೆಶಿ ಬಾಯಲ್ಲಿ ನಂಬಿಕೆ, ತಾಳ್ಮೆಯ ಮಾತು: ದಿಢೀರ್ ಬದಲಾವಣೆಗೆ ಕಾರಣ ಏನು
ನಾಯಕತ್ವ ಬದಲಾವಣೆಯ ಗೊಂದಲದ ನಡುವೆ ಡಿಸಿಎಂ ಡಿಕೆ ಶಿವಕುಮಾರ್ ಬಾಯಲ್ಲಿ ನಂಬಿಕೆ ಹಾಗೂ ತಾಳ್ಮೆಯ ಮಾತುಗಳು ಕೇಳಿಬರುತ್ತಿವೆ. ಶುಕ್ರವಾರ ವಿಜಯಪುರದಲ್ಲಿ ನಡೆದ ಕಾರ್ಯಕ್ರಮದ ವೇದಿಕೆಯಲ್ಲಿ ಡಿಕೆ ಶಿವಕುಮಾರ್ ಈ ಮಾತನ್ನಾಡಿದ್ದರು. ಇದೀಗ ಅವರ ಮಾತುಗಳು ನಾನಾ ರೀತಿಯ ಚರ್ಚೆಗೆ ಹಾಗೂ ವಾಖ್ಯಾನಕ್ಕೆ ಕಾರಣವಾಗುತ್ತಿದೆ. ಹಾಗಾದರೆ ಈ ದಿಢೀರ್ ಬದಲಾವಣೆಗೆ ಕಾರಣ ಏನು? ಎಂಬುವುದು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ. ಹಾಗಾದರೆ ಡಿಕೆ ಶಿವಕುಮಾರ್ ಮಾತುಗಳು ತಂತ್ರಗಾರಿಕೆಯಿಂದ ಕೂಡಿವೆಯೇ? ಎಂಬವುದು ಇದೀಗ ಕಾಂಗ್ರೆಸ್ ಪಾಳಯದಲ್ಲಿ ನಡೆಯುತ್ತಿರುವ ಚರ್ಚೆ.
ಶಿಕ್ಷಣ ಕ್ಷೇತ್ರ: ಸರಕಾರಿ v/s ಖಾಸಗಿ
ಕರ್ನಾಟಕ ಸರಕಾರ ಪ್ರಾಥಮಿಕ, ಪ್ರೌಢ, ಪದವಿ ಪೂರ್ವ, ಪದವಿ ಮತ್ತು ವಿಶ್ವವಿದ್ಯಾನಿಲಯಗಳ ಗುಣಮಟ್ಟ ಸುಧಾರಣೆಗೆ ಸಾವಿರಾರು ಕೋಟಿ ರೂ. ವ್ಯಯ ಮಾಡಿದೆ. ಆದರೆ ಗುಣಮಟ್ಟ ಕಾಯ್ದುಕೊಳ್ಳಲು ಸಾಧ್ಯವಾಗಿಲ್ಲ. ಜವಾಹರ ನವೋದಯ ವಸತಿ ಶಾಲೆಗಳು, ಕೇಂದ್ರೀಯ ವಿದ್ಯಾಲಯಗಳು ಸರಕಾರಿ ವ್ಯವಸ್ಥೆಯ ಭಾಗವಾಗಿಯೇ ಗುಣಮಟ್ಟದ ಶಿಕ್ಷಣ ನೀಡುತ್ತಿವೆ. ಆದರೆ ಕರ್ನಾಟಕ ಸರಕಾರದ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪ್ರಾಥಮಿಕ, ಪ್ರೌಢ, ಪದವಿ ಪೂರ್ವ ಮತ್ತು ಪದವಿ ಕಾಲೇಜುಗಳು ಮೂಲಭೂತ ಸೌಕರ್ಯಗಳಿಂದ ಬಳಲುತ್ತಿವೆ. ಇಡೀ ಸರಕಾರಿ ಶಿಕ್ಷಣ ವ್ಯವಸ್ಥೆ ಹಾಳಾಗಲು ನಮ್ಮ ಜನ ಪ್ರತಿನಿಧಿಗಳ ಪಾತ್ರ ಹಿರಿದಾಗಿದೆ. ಬರೋಬ್ಬರಿ ನಲವತ್ತು ವರ್ಷಗಳ ಹಿಂದೆ ಕೇಂದ್ರ ಸರಕಾರದ ಮಾನವ ಸಂಪನ್ಮೂಲ ಇಲಾಖೆಯು ಜವಾಹರ ನವೋದಯ ಶಾಲೆಗಳನ್ನು ಆರಂಭಿಸಿತ್ತು. ಆಗ ದಿ. ರಾಜೀವ್ ಗಾಂಧಿಯವರು ಭಾರತದ ಪ್ರಧಾನ ಮಂತ್ರಿಯಾಗಿದ್ದರು. ಅವರು ಡೆಹ್ರಾಡೂನ್ನ ದಿ ಡೂನ್ ಸ್ಕೂಲ್ನಲ್ಲಿ ವಿದ್ಯಾಭ್ಯಾಸ ನಡೆಸಿದ್ದರು. ದಿ ಡೂನ್ ಸ್ಕೂಲ್ ಅತ್ಯುತ್ತಮ ಗುಣಮಟ್ಟದ ವಸತಿ ಶಾಲೆ. ಶ್ರೀಮಂತರ ಮಕ್ಕಳು ಓದುವ ಮತ್ತು ಅತ್ಯಂತ ದುಬಾರಿ ವೆಚ್ಚದ ಪ್ರತಿಷ್ಠಿತ ಶಾಲೆ. ತನಗೆ ದೊರೆತ ಗುಣಮಟ್ಟದ ಶಿಕ್ಷಣ ಭಾರತದ ಗ್ರಾಮೀಣ ಭಾಗದ ಬಡ, ಹಿಂದುಳಿದ, ದಲಿತ ಮಕ್ಕಳಿಗೂ ಸಿಗುವಂತಾಗಲಿ ಎಂದು ದಿ. ರಾಜೀವ್ ಗಾಂಧಿಯವರು ಅತ್ಯುತ್ತಮ ಜವಾಹರ ನವೋದಯ ಶಾಲೆಗಳನ್ನು ಆರಂಭಿಸಿದ್ದರು. ಅತ್ಯುತ್ತಮ ಗುಣಮಟ್ಟದ ಶಿಕ್ಷಣಕ್ಕೆ ಹೆಸರಾದ ಈ ಜವಾಹರ ನವೋದಯ ವಸತಿ ಶಾಲೆಗಳಲ್ಲಿ ಆರರಿಂದ ಹನ್ನೆರಡನೆಯ ತರಗತಿಯವರೆಗೆ ಶಿಕ್ಷಣ ನೀಡಲಾಗುತ್ತದೆ. ಕೇಂದ್ರ ಸರಕಾರದ ಶಿಕ್ಷಣ ಇಲಾಖೆಯಡಿ ಕಾರ್ಯನಿರ್ವಹಿಸುತ್ತಿರುವ (ಈ ಮೊದಲು ಮಾನವ ಸಂಪನ್ಮೂಲ ಇಲಾಖೆಯಾಗಿತ್ತು) ಜವಾಹರ ವಸತಿ ಶಾಲೆಗಳನ್ನು ನವೋದಯ ವಿದ್ಯಾಲಯ ಸಮಿತಿಯು ನಿಗಾ ವಹಿಸುತ್ತದೆ. ನವೋದಯ ವಸತಿ ಶಾಲೆಗಳ ಜಿಲ್ಲಾ ಮಟ್ಟದ ಸಮಿತಿಗೆ ಆಯಾ ಜಿಲ್ಲಾಧಿಕಾರಿಗಳು ಅಧ್ಯಕ್ಷರಾಗಿರುತ್ತಾರೆ. ಸಿ.ಬಿ.ಎಸ್. ಇ. ಆಫಿಲೇಷನ್ ಹೊಂದಿರುವ ಈ ವಸತಿ ಶಾಲೆಗಳಲ್ಲಿ ಗ್ರಾಮೀಣ ಭಾಗದ ಪ್ರತಿಶತ ಎಪ್ಪತ್ತರಷ್ಟು ವಿದ್ಯಾರ್ಥಿಗಳಿಗೆ ಪ್ರವೇಶಾವಕಾಶ ನೀಡಲಾಗುತ್ತಿದೆ. ಪ್ರತಿಶತ ಇಪ್ಪತ್ತೈದು ಸೀಟುಗಳು ನಗರ ಪ್ರದೇಶದ ಮಕ್ಕಳಿಗೆ ಮೀಸಲಾಗಿವೆ. ಅಷ್ಟು ಮಾತ್ರವಲ್ಲ ಪ್ರತಿಶತ 33ರಷ್ಟು ಸೀಟುಗಳು ಹುಡುಗಿಯರಿಗೆ ನಿಗದಿಪಡಿಸಲಾಗಿದೆ. ಕೇಂದ್ರ ಸರಕಾರದ ಮೀಸಲಾತಿ ನಿಯಮಾನುಸಾರ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳ ಮಕ್ಕಳಿಗೆ ಸೀಟುಗಳನ್ನು ನಿಗದಿಪಡಿಸಲಾಗಿದೆ. ಪ್ರತಿಶತ ಮೂರರಷ್ಟು ದಿವ್ಯಾಂಗ ಮಕ್ಕಳ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದೆ. ಕನಿಷ್ಠ ಐದರಿಂದ ಗರಿಷ್ಠ 30 ಎಕರೆ ಜಮೀನಿನಲ್ಲಿ ಜವಾಹರ ವಸತಿ ಶಾಲೆಗಳ ಕ್ಯಾಂಪಸ್ಗಳನ್ನು ನಿರ್ಮಾಣ ಮಾಡಲಾಗಿದೆ. ಭಾರತದಾದ್ಯಂತ ಒಟ್ಟು 661 ಜವಾಹರ ನವೋದಯ ವಸತಿ ಶಾಲೆಗಳು ಕಾರ್ಯ ನಿರ್ವಹಿಸುತ್ತಿವೆ. ತಲಾ ಹತ್ತು ಜವಾಹರ ನವೋದಯ ವಸತಿ ಶಾಲೆಗಳನ್ನು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನಸಂಖ್ಯೆ ಹೆಚ್ಚಾಗಿರುವ ಪ್ರದೇಶಗಳಲ್ಲಿ ಸ್ಥಾಪಿಸಲಾಗಿದೆ. ಕರ್ನಾಟಕ ರಾಜ್ಯದಲ್ಲಿ ಒಟ್ಟು 31 ಜವಾಹರ ನವೋದಯ ವಸತಿ ಶಾಲೆಗಳು ಕಾರ್ಯ ನಿರ್ವಹಿಸುತ್ತಿವೆ. ಭಾರತದಾದ್ಯಂತ ಮೂರು ಲಕ್ಷಕ್ಕೂ ಹೆಚ್ಚು ಮಕ್ಕಳು ಈ ಜವಾಹರ ನವೋದಯ ವಸತಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ಪಡೆಯುತ್ತಿದ್ದಾರೆ. ಕೇಂದ್ರ ಸರಕಾರ ಪ್ರಸ್ತುತ ಪ್ರತೀ ವರ್ಷ ನಾಲ್ಕು ಸಾವಿರ ಕೋಟಿ ಹಣವನ್ನು ಈ ವಸತಿ ಶಾಲೆಗಳ ನಿರ್ವಹಣೆಗಾಗಿ ಖರ್ಚು ಮಾಡುತ್ತಿದೆ. ಪ್ರವೇಶ ಪರೀಕ್ಷೆಯ ಮೂಲಕ ವಿದ್ಯಾರ್ಥಿಗಳನ್ನು ಸೇರಿಸಿಕೊಳ್ಳಲಾಗುತ್ತಿದೆ. ಹೆಚ್ಚು ಕಡಿಮೆ ಉಚಿತವಾಗಿ ಶಿಕ್ಷಣ ನೀಡಲಾಗುತ್ತಿದೆ. 1986ರಿಂದ ಇಲ್ಲಿಯವರೆಗೆ ಅದೆಷ್ಟೋ ಸರಕಾರಗಳು ಕೇಂದ್ರ ಮತ್ತು ರಾಜ್ಯದಲ್ಲಿ ಬದಲಾವಣೆಯಾಗಿವೆ. ಆದರೆ ಜವಾಹರ ನವೋದಯ ವಸತಿ ಶಾಲೆಗಳಲ್ಲಿನ ಶಿಕ್ಷಣದ ಗುಣಮಟ್ಟವನ್ನು ಹಾಗೆಯೇ ಕಾಯ್ದುಕೊಳ್ಳಲಾಗಿದೆ. ಒಡಲುಗೊಂಡ ಮನುಷ್ಯರೇ ಕಳೆದ ನಲುವತ್ತು ವರ್ಷಗಳಿಂದ ಜವಾಹರ ನವೋದಯ ವಸತಿ ಶಾಲೆಗಳನ್ನು ನಿರ್ವಹಿಸುತ್ತಿದ್ದಾರೆ. ಬಿಜೆಪಿ ಸರಕಾರ ಬಂದ ಮೇಲೆ ಜವಾಹರ ಹೆಸರನ್ನು ಮಾತ್ರ ಕಿತ್ತು ಹಾಕಿದೆ. ಆದರೆ ದಿ. ರಾಜೀವ್ ಗಾಂಧಿಯವರ ಕನಸಿನ ಶಾಲೆಗಳ ಗುಣಮಟ್ಟ ಹಾಗೆಯೇ ಮುಂದುವರಿದಿದೆ. ಅವರ ಸಂಕಲ್ಪ ಅದೆಷ್ಟು ದೃಢವಾಗಿದ್ದಿರಬೇಕು! ಜವಾಹರಲಾಲ್ ನೆಹರೂ ಅವರು ಭಾರತದ ಪ್ರಧಾನಿಯಾಗಿದ್ದಾಗ (1965)ಎಲ್ಕೆಜಿಯಿಂದ ಪಿಯುಸಿಯವರೆಗೆ ಗುಣಮಟ್ಟದ ಶಿಕ್ಷಣ ನೀಡುವ ಕೇಂದ್ರೀಯ ವಿದ್ಯಾಲಯಗಳನ್ನು ಸ್ಥಾಪಿಸಲಾಗಿತ್ತು. ಕೇಂದ್ರ ಸರಕಾರದ ಶಿಕ್ಷಣ ಮಂತ್ರಾಲಯ ವ್ಯಾಪ್ತಿಯಲ್ಲಿ ‘ಕೇಂದ್ರೀಯ ವಿದ್ಯಾಲಯ ಸಂಘಟನ್’ ಎಂಬ ಸ್ವಾಯತ್ತ ಸಂಸ್ಥೆಯನ್ನು ಸ್ಥಾಪಿಸಲಾಗಿದೆ. ಅದರಡಿ ಕೇಂದ್ರೀಯ ವಿದ್ಯಾಲಯಗಳು ಕಾರ್ಯ ನಿರ್ವಹಿಸುತ್ತಿವೆ. ದೇಶದಲ್ಲಿ ಒಟ್ಟು 1289 ಕೇಂದ್ರೀಯ ವಿದ್ಯಾಲಯಗಳು ಕಾರ್ಯ ನಿರ್ವಹಿಸುತ್ತಿವೆ. ಕರ್ನಾಟಕದಲ್ಲಿ ಕೇವಲ 54 ಕೇಂದ್ರೀಯ ವಿದ್ಯಾಲಯಗಳು ಕ್ರಿಯಾಶೀಲವಾಗಿವೆ. ಈ ಕೇಂದ್ರೀಯ ವಿದ್ಯಾಲಯಗಳಲ್ಲಿ ಸಾಮಾನ್ಯವಾಗಿ ಕೇಂದ್ರ ಸರಕಾರದ ಮಕ್ಕಳಿಗೆ ಪ್ರವೇಶಾವಕಾಶ ನೀಡಲಾಗುತ್ತದೆ. ಸೀಟುಗಳು ಮಿಕ್ಕಿ ಉಳಿದರೆ ಸ್ಥಳೀಯರಿಗೂ ಅವಕಾಶ ಕಲ್ಪಿಸುತ್ತಾರೆ. ಶಿಕ್ಷಣದ ವ್ಯಾಪಾರೀಕರಣ ಭರದಿಂದ ಸಾಗುತ್ತಿರುವಾಗ, ಖಾಸಗಿ ಶಿಕ್ಷಣ ಸಂಸ್ಥೆಗಳ ಕಬಂಧ ಬಾಹುಗಳು ಎಲ್ಲೆಡೆ ಚಾಚುತ್ತಿರುವಾಗಲೂ ಜವಾಹರ ನವೋದಯ ವಸತಿ ಶಾಲೆಗಳು, ಕೇಂದ್ರೀಯ ವಿದ್ಯಾಲಯಗಳು ತಮ್ಮ ಎಂದಿನ ಗುಣಮಟ್ಟದ ಶಿಕ್ಷಣದೊಂದಿಗೆ ಮುಂದುವರಿಯುತ್ತಿವೆ. ಬಡತನದ ಬವಣೆಯಲ್ಲೂ ಅಸಂಖ್ಯಾತ ಐಎಎಸ್, ಐಪಿಎಸ್ ಅಧಿಕಾರಿಗಳು ಮತ್ತು ವೈದ್ಯರು ಶಿಕ್ಷಣ ಪಡೆದು ಮೇಲೆ ಬಂದಿದ್ದು ಈ ಜವಾಹರ ನವೋದಯ ವಸತಿ ಶಾಲೆಗಳ ಗುಣಮಟ್ಟದ ಶಿಕ್ಷಣದಿಂದ. ದಿ. ರಾಜೀವ್ ಗಾಂಧಿಯವರು ಕಂಡ ಕನಸನ್ನು ಅಕ್ಷರಶಃ ಜವಾಹರ ನವೋದಯ ವಸತಿ ಶಾಲೆಗಳು ಸಾಕಾರಗೊಳಿಸುತ್ತಿವೆ. ಜವಾಹರ ನವೋದಯ ವಸತಿ ಶಾಲೆಗಳ ಕ್ಯಾಂಪಸ್ಗಳು ಗ್ರಾಮೀಣ ಪ್ರದೇಶದಲ್ಲೇ ನೆಲೆ ನಿಂತಿವೆ. ಒಂದು ಕಾಲದಲ್ಲಿ ಕರ್ನಾಟಕ ಗುಣಮಟ್ಟದ ಶಿಕ್ಷಣಕ್ಕೆ ಹೆಸರಾಗಿತ್ತು. ಸರಕಾರಿ-ಖಾಸಗಿ ಶಾಲಾ ಕಾಲೇಜುಗಳ ನಡುವೆ ಪೈಪೋಟಿ ಇರಲಿಲ್ಲ. ಸರಕಾರಿ ಶಾಲಾ ಕಾಲೇಜುಗಳು ಸಾಮಾನ್ಯವಾಗಿ ಗ್ರಾಮೀಣ ಪ್ರದೇಶದಲ್ಲಿ ಹೆಚ್ಚು ಕ್ರಿಯಾಶೀಲವಾಗಿದ್ದವು. ಕ್ರಿಶ್ಚಿಯನ್ ಮಿಷನರಿ ನಡೆಸುತ್ತಿರುವ ಆಂಗ್ಲ ಮಾಧ್ಯಮದ ಶಾಲೆಗಳು ಹಣಕ್ಕಾಗಿ ಶಿಕ್ಷಣ ನೀಡುತ್ತಿರಲಿಲ್ಲ. ಮಠ ಮಾನ್ಯಗಳು ನಡೆಸುತ್ತಿರುವ ಶಾಲಾ ಕಾಲೇಜುಗಳು ಸರಕಾರಿ ಶಾಲಾ ಕಾಲೇಜುಗಳಿಗೆ ಪೂರಕವಾಗಿ ಕಾರ್ಯ ನಿರ್ವಹಿಸುತ್ತಿದ್ದವು. ಜಾಗತೀಕರಣದ ನಂತರ ಆದ್ಯತೆಗಳು ಬದಲಾದವು. ಹಳ್ಳಿಗಳು ಸೊರಗತೊಡಗಿದವು. ಗ್ರಾಮೀಣ ಪ್ರದೇಶದ ಆರ್ಥಿಕತೆ ಕುಸಿಯತೊಡಗಿತು. ಇಂಗ್ಲಿಷ್ ಶಿಕ್ಷಣದ ವ್ಯಾಮೋಹ ಹೆಚ್ಚತೊಡಗಿತು. ಆಂಗ್ಲ ಮಾಧ್ಯಮದಲ್ಲಿ ಓದಿದರೆ ಮಾತ್ರ ನಮ್ಮ ಮಕ್ಕಳು ಕಾಲದ ಪೈಪೋಟಿ ಗೆಲ್ಲಬಲ್ಲರು ಎಂಬ ಭ್ರಮೆ ಸೃಷ್ಟಿಯಾಯಿತು. ಕನ್ನಡ ಆಂಗ್ಲ ಮಾಧ್ಯಮಗಳ ನಡುವೆ ಬಹು ದೊಡ್ಡ ಕಂದಕ ನಿರ್ಮಾಣವಾಯಿತು. ನ್ಯಾಯಾಲಯಗಳು ಆಂಗ್ಲ ಮಾಧ್ಯಮದ ಪರ ತೀರ್ಪು ನೀಡಿದವು. ದಿನೇ ದಿನೇ ಗ್ರಾಮೀಣ ಪ್ರದೇಶದಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣದ ಗುಣಮಟ್ಟ ಕುಸಿಯತೊಡಗಿತು. ಕಾಲದ ಅಗತ್ಯಕ್ಕೆ ತಕ್ಕಂತೆ ಸರಕಾರಿ ಶಾಲಾ ಕಾಲೇಜುಗಳು ಗುಣಾತ್ಮಕ ಬದಲಾವಣೆ ತಂದುಕೊಳ್ಳದೆ ಇರುವುದರಿಂದ, ನಗರ ಪಟ್ಟಣಗಳಲ್ಲಿ ಆಂಗ್ಲ ಮಾಧ್ಯಮದ ಶಾಲೆಗಳು ನಾಯಿ ಕೊಡೆಗಳಂತೆ ತಲೆ ಎತ್ತಿದವು. ಶಾಲಾ ಶಿಕ್ಷಣದ ಅಧಿಕಾರಿಗಳು, ಪದವಿ ಕಾಲೇಜುಗಳ ಪ್ರಿನ್ಸಿಪಾಲರು, ವಿಶ್ವವಿದ್ಯಾನಿಲಯಗಳ ಪ್ರಾಧ್ಯಾಪಕರು, ಕುಲಪತಿಗಳು, ಸಿಂಡಿಕೇಟ್ ಸದಸ್ಯರು, ಮಂತ್ರಿಗಳು-ಎಲ್ಲರೂ ಸೇರಿ ಸರಕಾರಿ ಶಿಕ್ಷಣ ವ್ಯವಸ್ಥೆಯನ್ನು ಹಾಳು ಮಾಡಿದರು. ಕರ್ನಾಟಕದಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳು ಈ ಮಟ್ಟದಲ್ಲಿ ಬೆಳೆದು ನಿಲ್ಲಲು ಇಲ್ಲಿಯವರೆಗೆ ಆಡಳಿತ ನಡೆಸಿದ ಸರಕಾರಗಳೇ ಕಾರಣ.ಸರಕಾರಿ ಶಾಲಾ ಕಾಲೇಜು ಮತ್ತು ವಿಶ್ವವಿದ್ಯಾನಿಲಯಗಳು ಶಿಕ್ಷಣದ ಗುಣಮಟ್ಟ ಕಾಯ್ದುಕೊಂಡಿದ್ದರೆ, ಖಾಸಗಿ ಶಿಕ್ಷಣ ಸಂಸ್ಥೆಗಳು ಈ ಮಟ್ಟದಲ್ಲಿ ಸರಕಾರದ ಹಂಗು ತೊರೆದು ಸವಾಲು ಒಡ್ಡುತ್ತಿರಲಿಲ್ಲ. ದಿ. ರಾಜೀವ ಗಾಂಧಿಯವರು ತನಗೆ ದೊರೆತ ಗುಣಮಟ್ಟದ ಶಿಕ್ಷಣ ಗ್ರಾಮೀಣ ಭಾಗದ ಬಡ ಮಕ್ಕಳಿಗೂ ದೊರೆಯಲಿ ಎಂಬ ಮಹಾನ್ ಸಂಕಲ್ಪದೊಂದಿಗೆ ಆರಂಭಿಸಿದ ಜವಾಹರ ನವೋದಯ ವಸತಿ ಶಾಲೆಗಳು ಕಾಲದ ಸವಾಲುಗಳನ್ನು ಮೆಟ್ಟಿ ನಿಂತು ಮುಂದುವರಿದಿವೆ. ಆದರೆ, ಕರ್ನಾಟಕ ಸರಕಾರದ ಶಾಲಾ ಕಾಲೇಜು ಮತ್ತು ವಿಶ್ವವಿದ್ಯಾನಿಲಯಗಳು ಯಾಕೆ ಗುಣಮಟ್ಟ ಕಾಯ್ದು ಕೊಳ್ಳುವಲ್ಲಿ ವಿಫಲವಾದವು? ಹಾಗೆ ನೋಡಿದರೆ, ಕರ್ನಾಟಕ ಸರಕಾರ ಪ್ರಾಥಮಿಕ, ಪ್ರೌಢ, ಪದವಿ ಪೂರ್ವ, ಪದವಿ ಮತ್ತು ವಿಶ್ವವಿದ್ಯಾನಿಲಯಗಳ ಗುಣಮಟ್ಟ ಸುಧಾರಣೆಗೆ ಸಾವಿರಾರು ಕೋಟಿ ರೂ. ವ್ಯಯ ಮಾಡಿದೆ. ಆದರೆ ಗುಣಮಟ್ಟ ಕಾಯ್ದುಕೊಳ್ಳಲು ಸಾಧ್ಯವಾಗಿಲ್ಲ. ಜವಾಹರ ನವೋದಯ ವಸತಿ ಶಾಲೆಗಳು, ಕೇಂದ್ರೀಯ ವಿದ್ಯಾಲಯಗಳು ಸರಕಾರಿ ವ್ಯವಸ್ಥೆಯ ಭಾಗವಾಗಿಯೇ ಗುಣಮಟ್ಟದ ಶಿಕ್ಷಣ ನೀಡುತ್ತಿವೆ. ಆದರೆ ಕರ್ನಾಟಕ ಸರಕಾರದ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪ್ರಾಥಮಿಕ, ಪ್ರೌಢ, ಪದವಿ ಪೂರ್ವ ಮತ್ತು ಪದವಿ ಕಾಲೇಜುಗಳು ಮೂಲಭೂತ ಸೌಕರ್ಯಗಳಿಂದ ಬಳಲುತ್ತಿವೆ. ಇಡೀ ಸರಕಾರಿ ಶಿಕ್ಷಣ ವ್ಯವಸ್ಥೆ ಹಾಳಾಗಲು ನಮ್ಮ ಜನ ಪ್ರತಿನಿಧಿಗಳ ಪಾತ್ರ ಹಿರಿದಾಗಿದೆ. ಒಬ್ಬ ಶಾಸಕ ತನ್ನ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಮಂಜೂರು ಮಾಡಿಸಿಕೊಳ್ಳುವ ಶಾಲೆ ಕಾಲೇಜುಗಳ ನಿರ್ಮಾಣದಲ್ಲಿ ವಿಶೇಷ ಮುತುವರ್ಜಿ ವಹಿಸಿದ್ದರೆ ಈ ಮಟ್ಟದಲ್ಲಿ ಶಿಕ್ಷಣ ವ್ಯವಸ್ಥೆ ಹಾಳಾಗುತ್ತಿರಲಿಲ್ಲ. ಶಾಲೆ ಕಾಲೇಜುಗಳನ್ನು ಮಂಜೂರು ಮಾಡಿಸಿಕೊಳ್ಳುವ ಶಾಸಕ ಅವುಗಳ ನಿರ್ಮಾಣದ ಹಂತದಲ್ಲಿ ತನ್ನ ಸ್ವಂತ ಮನೆ ಕಟ್ಟುವಾಗ ತೆಗೆದುಕೊಳ್ಳುವಾಗಿನ ಕಾಳಜಿ ಕಕ್ಕುಲಾತಿ ವಹಿಸಿದ್ದರೆ ಮೂಲಭೂತ ಸೌಕರ್ಯಗಳ ಗುಣಮಟ್ಟ ಕಾಯ್ದು ಕೊಳ್ಳಬಹುದಿತ್ತು. ಕಾಲಕಾಲಕ್ಕೆ ಶಿಕ್ಷಕರ ನೇಮಕಾತಿಗೆ ನಿಗಾ ವಹಿಸಿದ್ದರೆ ಎಲ್ಲ ಸರಕಾರಿ ಶಾಲಾ ಕಾಲೇಜುಗಳು, ಜವಾಹರ ನವೋದಯ ವಸತಿ ಶಾಲೆಗಳಂತೆ ಕಂಗೊಳಿಸುತ್ತಿದ್ದವು. ಶಾಲೆ ಕಾಲೇಜುಗಳನ್ನು ಮಂಜೂರು ಮಾಡಿಸಿಕೊಳ್ಳುವ ಜನಪ್ರತಿನಿಧಿಗಳು ಕೇವಲ ಕಮಿಷನ್ ಸಿಕ್ಕರೆ ಸಾಕು ಎಂದು ಉದಾಸೀನತೆ ತೋರಿದ್ದರಿಂದಲೇ ಸರಕಾರಿ ಶಾಲಾ ಕಾಲೇಜುಗಳು ಅವ್ಯವಸ್ಥೆಯ ಆಗರವಾಗಿವೆ. ಇದಕ್ಕೆ ಕಾರಣ: ನಮ್ಮ ರಾಜಕಾರಣಿಗಳ ಶಿಕ್ಷಣ ಸಂಸ್ಥೆಗಳು. ನಮ್ಮ ರಾಜಕಾರಣಿಗಳು ನಡೆಸುತ್ತಿರುವ ಶಿಕ್ಷಣ ಸಂಸ್ಥೆಗಳು ನಳ ನಳಿಸುತ್ತಿರುತ್ತವೆ. ದಿಲ್ಲಿ ಸ್ಕೂಲ್, ನ್ಯಾಶನಲ್ ಪಬ್ಲಿಕ್ ಸ್ಕೂಲ್ ಸಹಯೋಗದಲ್ಲಿ ನಡೆಸುವ ಆ ಶಾಲೆಗಳ ನಿರ್ಮಾಣಕ್ಕೆ ಹಣ ಹರಿದು ಹೋಗಿದ್ದು ಸರಕಾರಿ ವ್ಯವಸ್ಥೆಯಿಂದಲೇ. ಒಮ್ಮೆ ಜನಪ್ರತಿನಿಧಿಗಳು ಸರಕಾರಿ ಶಾಲಾ ಕಾಲೇಜುಗಳ ಕಟ್ಟಡ ನಿರ್ಮಾಣದಲ್ಲಿ ದುಡ್ಡು ಹೊಡೆಯಲು ಆರಂಭಿಸಿದರೋ ಅದು ಚಾಳಿಯಾಗಿ ಬದಲಾಯಿತು. ಇಲ್ಲಿ ಎಲ್ಲ ಪಕ್ಷ, ಪ್ರದೇಶದ ಜನಪ್ರತಿನಿಧಿಗಳು ಸೇರಿದ್ದಾರೆ. ತನ್ನ ಮತಕ್ಷೇತ್ರದ ವ್ಯಾಪ್ತಿಯ ಸರಕಾರಿ ಶಾಲಾ ಕಾಲೇಜುಗಳನ್ನು ಅತ್ಯಂತ ಶ್ರದ್ಧೆಯಿಂದ ದೇಗುಲಗಳಂತೆ ನಿರ್ಮಾಣ ಮಾಡಿದವರು ವಿರಳ. ಹಣ ಮಾಡಲು ನಮ್ಮ ಸರಕಾರಿ ಶಾಲಾ ಕಾಲೇಜು ವ್ಯವಸ್ಥೆಯನ್ನೇ ಬುಡ ಮೇಲು ಮಾಡಲಾಗಿದೆ. ಸರಕಾರಿ ವಸತಿ ನಿಲಯಗಳಿಗೆ ಕೋಟಿ ಕೋಟಿ ಹಣ ವ್ಯಯಿಸಿದರೂ ಗುಣಮಟ್ಟದ ವ್ಯವಸ್ಥೆ ರೂಪಿಸಲು ಸಾಧ್ಯವಾಗುತ್ತಿಲ್ಲ. ಬಡ ಮಕ್ಕಳು ತಿನ್ನುವ ಅನ್ನದಲ್ಲೂ ಹಣ ಹೊಡೆಯುವ ಚಾಳಿ ರೂಢಿಸಿಕೊಂಡರೆ ಗುಣಮಟ್ಟ ಸಾಧಿಸುವುದು ಸಾಧ್ಯವಾಗುವುದಿಲ್ಲ. ಜವಾಹರ ನವೋದಯ ವಸತಿ ಶಾಲೆಗಳ ಮಾದರಿಯಲ್ಲಿ ಕರ್ನಾಟಕದಲ್ಲೂ 1999ರಲ್ಲಿ ವಸತಿ ಶಾಲೆಗಳನ್ನು ಆರಂಭಿಸಲಾಯಿತು. ಮೊರಾರ್ಜಿ ವಸತಿ ಶಾಲೆಗಳು ಆರಂಭದಲ್ಲಿ ಗುಣಮಟ್ಟ ಕಾಯ್ದುಕೊಂಡಿದ್ದವು. ವಸತಿ ಶಾಲೆಗಳ ನಿರ್ಮಾಣ ಮತ್ತು ನಿರ್ವಹಣೆಯಲ್ಲಿ ದುಡ್ಡು ಯಾವಾಗ ಹೊಡೆಯಲು ಆರಂಭಿಸಿದರೋ ಅಂದಿನಿಂದ ಅವುಗಳ ಗುಣಮಟ್ಟವೇ ಕುಸಿಯಿತು. ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ ನಾಮಕಾವಾಸ್ತೆ ಸ್ವಾಯತ್ತ ಸಂಸ್ಥೆ. ಅದು ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ಧನದಾಹಕ್ಕೆ ಸಂಪೂರ್ಣ ಹಳಿ ತಪ್ಪಿದೆ. ಈ ಸಂಸ್ಥೆಯಡಿ ಒಟ್ಟು 821 ವಸತಿ ಶಾಲೆಗಳು ಕಾರ್ಯ ನಿರ್ವಹಿಸುತ್ತಿವೆ. ಮೊರಾರ್ಜಿ ವಸತಿ ಶಾಲೆಗಳ ಜೊತೆಗೆ, ಇಂದಿರಾ ಗಾಂಧಿ, ಡಾ. ಬಿ.ಆರ್. ಅಂಬೇಡ್ಕರ್, ನಾರಾಯಣ ಗುರು, ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಗಳನ್ನು ಆರಂಭಿಸಲಾಯಿತು. ಈ ಎಲ್ಲ ವಸತಿ ಶಾಲೆಗಳಲ್ಲಿ ಆರರಿಂದ ಹತ್ತನೆ ತರಗತಿಯವರೆಗೆ ಶಿಕ್ಷಣ ನೀಡಲಾಗುತ್ತಿದೆ. ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಗಳು ಬಾಲಕಿಯರಿಗಾಗಿ ಮೀಸಲಿವೆ. ರಾಜ್ಯದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದಾಗ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆಗಳನ್ನು ಆರಂಭಿಸಿತು. ಈ ವಸತಿ ಶಾಲೆಗಳಲ್ಲಿ ಆರರಿಂದ ಹನ್ನೆರಡನೇ ತರಗತಿಯವರೆಗೆ ಶಿಕ್ಷಣ ನೀಡಲಾಗುತ್ತಿದೆ. ಹೊಸ ವಸತಿ ಶಾಲೆಗಳನ್ನು ಆರಂಭಿಸುವುದೇ ಕಟ್ಟಡ ನಿರ್ಮಾಣ ಮತ್ತು ಅದರಲ್ಲಿ ದುಡ್ಡು ಹೊಡೆಯಲು ಎಂಬಂತಾಗಿದೆ. ಹಳೆಯ ವಸತಿ ಶಾಲೆಗಳಲ್ಲಿ ಶಿಕ್ಷಣದ ಗುಣಮಟ್ಟ ಸುಧಾರಿಸುವ ಪ್ರಯತ್ನ ಯಾರೂ ಮಾಡಲಿಲ್ಲ. ಸದ್ಯ ಕರ್ನಾಟಕದಲ್ಲಿ ವಸತಿ ಶಾಲೆಗಳು, ಸರಕಾರಿ ಶಾಲಾ ಕಾಲೇಜುಗಳು ಆರಂಭಿಸುವುದೇ ಕಟ್ಟಡ ನಿರ್ಮಾಣಕ್ಕೆ. ಆ ಕಟ್ಟಡ ನಿರ್ಮಾಣದಲ್ಲಿ ದುಡ್ಡು ಹೊಡೆಯಲು. ಅತ್ಯುತ್ತಮ ಮೂಲಭೂತ ಸೌಕರ್ಯ ಕಲ್ಪಿಸುವುದು ಯಾರೊಬ್ಬರ ಆದ್ಯತೆಯಾಗಿ ಉಳಿದಿಲ್ಲ. ಗುಣಮಟ್ಟದ ಶಿಕ್ಷಣ ಯಾರಿಗೂ ಬೇಕಿಲ್ಲ. ಒಂದು ಬಾರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದಿ. ರಾಜೀವ್ ಗಾಂಧಿಯವರ ಕನಸಿನ ಜವಾಹರ ನವೋದಯ ವಸತಿ ಶಾಲೆಗಳಿಗೆ ಭೇಟಿ ಕೊಡಬೇಕು. ಅವುಗಳ ಗುಣಮಟ್ಟದ ಜೊತೆಗೆ ಕರ್ನಾಟಕ ಸರಕಾರದ ವ್ಯಾಪ್ತಿಯ ವಸತಿ ಶಾಲೆಗಳ ಗುಣಮಟ್ಟವನ್ನು ತುಲನೆ ಮಾಡಬೇಕು. ಈ ವಸತಿ ಶಾಲೆಗಳಲ್ಲಿ ಎಚ್.ಸಿ. ಮಹದೇವಪ್ಪ, ಶಿವರಾಜ್ ತಂಗಡಗಿಯವರ ಮಕ್ಕಳು, ಮೊಮ್ಮಕ್ಕಳು ಓದಲು ಸಾಧ್ಯವೇ ಎನ್ನುವುದನ್ನು ಊಹಿಸಿಕೊಳ್ಳಬೇಕು. ಆಗ ಮಾತ್ರ ಗುಣಮಟ್ಟ ಸುಧಾರಿಸಬಹುದು. ಕರ್ನಾಟಕ ಸರಕಾರ ಪಬ್ಲಿಕ್ ಶಾಲೆಗಳನ್ನು ನಡೆಸುತ್ತಿದೆ. ಈಗಾಗಲೇ 309 ಕರ್ನಾಟಕ ಪಬ್ಲಿಕ್ ಶಾಲೆಗಳು ಕಾರ್ಯ ನಿರ್ವಹಿಸುತ್ತಿವೆ. ಎಲ್ಕೆಜಿಯಿಂದ ಹನ್ನೆರಡನೇ ತರಗತಿಯವರೆಗೆ ಶಿಕ್ಷಣ ನೀಡಲಾಗುತ್ತಿದೆ. ಇನ್ನೂ 900 ಹೊಸ ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ಆರಂಭಿಸುವುದಾಗಿ ಶಾಲಾ ಶಿಕ್ಷಣ ಮಂತ್ರಿ ಮಧು ಬಂಗಾರಪ್ಪ ಹೇಳಿದ್ದಾರೆ. ಈಗಿರುವ ಕರ್ನಾಟಕ ಪಬ್ಲಿಕ್ ಶಾಲೆಗಳು ಗುಣಮಟ್ಟದಲ್ಲಿ ಖಾಸಗಿ ಶಾಲೆಗಳೊಂದಿಗೆ ಸ್ಪರ್ಧೆ ಮಾಡಲಾರವು. 900 ಹೊಸ ಕರ್ನಾಟಕ ಪಬ್ಲಿಕ್ ಶಾಲೆಗಳು ಹಣ ಹೊಡೆಯಲು ನಿರ್ಮಾಣ ಮಾಡಿದರೆ ಯಾರಿಗೂ ಪ್ರಯೋಜನ ಇಲ್ಲ. ಮಧು ಬಂಗಾರಪ್ಪ ಅವರಿಗೆ ನಿಜವಾಗಿಯೂ ಅತ್ಯುತ್ತಮ ಗುಣಮಟ್ಟದ ಶಿಕ್ಷಣ ವ್ಯವಸ್ಥೆ ರೂಪಿಸುವ ಇರಾದೆ ಇದ್ದರೆ, ದಿ. ರಾಜೀವ್ ಗಾಂಧಿ ಮೇಲೆ ಗೌರವ ಇದ್ದಿದ್ದರೆ ಜವಾಹರ ನವೋದಯ ವಸತಿ ಶಾಲೆಗಳ ಗುಣಮಟ್ಟದಲ್ಲಿ ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ನಿರ್ಮಾಣ ಮಾಡಲಿ. ರಾಜೀವ್ ಗಾಂಧಿ ಕರ್ನಾಟಕ ಸರಕಾರಕ್ಕೆ ಆದರ್ಶವಾಗದಿದ್ದರೆ ಕರ್ನಾಟಕ ಸರಕಾರ ಶಿಕ್ಷಣ ವ್ಯವಸ್ಥೆಗೆ ಕಾಯಕಲ್ಪ ನೀಡಲು ಸಾಧ್ಯವಿಲ್ಲ. ಕರ್ನಾಟಕ ಸರಕಾರದ ವ್ಯಾಪ್ತಿಯ ವಿಶ್ವವಿದ್ಯಾನಿಲಯಗಳು ಖಾಸಗಿ ವಿಶ್ವವಿದ್ಯಾನಿಲಯಗಳ ಎದುರು ಮಂಕಾಗಿ ಕಾಣುತ್ತಿವೆ. ಭಾರತೀಯ ವಿಜ್ಞಾನ ಸಂಸ್ಥೆ ಸೇರಿದಂತೆ ಹನ್ನೊಂದಕ್ಕೂ ಹೆಚ್ಚು ಕೇಂದ್ರ ಸರಕಾರದ ಅನುದಾನದಡಿ ಕಾರ್ಯ ನಿರ್ವಹಿಸುತ್ತಿರುವ ಶಿಕ್ಷಣ ಸಂಸ್ಥೆ ಕರ್ನಾಟಕದಲ್ಲಿ ಕಾರ್ಯ ನಿರ್ವಹಿಸುತ್ತಿವೆ. ಆ ಎಲ್ಲ ಸಂಸ್ಥೆಗಳು ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ನಿರ್ಮಾಣವಾಗಿದ್ದವು. ಸರಕಾರಿ ವ್ಯವಸ್ಥೆಯಲ್ಲೂ ಅತ್ಯುತ್ತಮ ಶಿಕ್ಷಣ ಸಂಸ್ಥೆಗಳನ್ನು ನಿರ್ಮಾಣ ಮಾಡಬಹುದು ಎಂಬುದಕ್ಕೆ ಜವಾಹರ ನವೋದಯ ವಸತಿ ಶಾಲೆಗಳು, ಕೇಂದ್ರೀಯ ವಿದ್ಯಾಲಯಗಳು ಸಾಕ್ಷಿಯಾಗಿ ನಿಂತಿವೆ. ಅಹಿಂದ ವರ್ಗಗಳೇ ಹೆಚ್ಚು ಅವಲಂಬಿಸಿರುವ ಸರಕಾರಿ ಶಾಲಾ ಕಾಲೇಜು ಮತ್ತು ವಿಶ್ವವಿದ್ಯಾನಿಲಯಗಳನ್ನು ಅಭಿವೃದ್ಧಿ ಪಡಿಸಿದರೆ ಖಾಸಗಿ ಶಿಕ್ಷಣ ಸಂಸ್ಥೆಗಳು ನಿಯಂತ್ರಣಕ್ಕೆ ಬರುತ್ತವೆ. ಇಲ್ಲದಿದ್ದರೆ ಅವು ಮಧ್ಯಮ ವರ್ಗದವರ ಪಾಲಿಗೂ ಗಗನ ಕುಸುಮವಾಗುತ್ತವೆ. ಖಾಸಗಿಯೆಂದರೆ ಗುಣಮಟ್ಟದ ಶಿಕ್ಷಣ ಎಂಬುದು ಕೇವಲ ಹುಸಿ ಪ್ರಚಾರ. ಅತ್ಯುತ್ತಮ ಕಟ್ಟಡ ಮತ್ತು ಮೂಲಭೂತ ಸೌಕರ್ಯಗಳ ಕಾರಣಕ್ಕೆ ಆಕರ್ಷಿಸುಸುತ್ತಿವೆ. ನಿಜವಾದ ಪ್ರತಿಭಾವಂತರು ಕಾರ್ಯ ನಿರ್ವಹಿಸುತ್ತಿರುವುದು ಸರಕಾರಿ ಶಾಲಾ ಕಾಲೇಜು ಮತ್ತು ವಿಶ್ವವಿದ್ಯಾನಿಲಯಗಳಲ್ಲಿ. ಆದರೆ ಸರಕಾರಿ ಶಾಲಾ ಕಾಲೇಜು ಮತ್ತು ವಿಶ್ವವಿದ್ಯಾನಿಲಯಗಳು ಅತ್ಯುತ್ತಮ ಗುಣಮಟ್ಟದ ಮೂಲಭೂತ ಸೌಕರ್ಯಗಳ ಕಾರಣಕ್ಕೆ ಹಿಂದೆ ಬಿದ್ದಿವೆ.
2026ರ ಸ್ಪೋಟಕ ಭವಿಷ್ಯ - ಜಾಗತಿಕ ತಲ್ಲಣ : ಇಡೀ ವಿಶ್ವಕ್ಕೆ 'ಮೂರನೇ ಮಹಾಯುದ್ದದ’ ಮುನ್ನುಡಿ ಬರೆದ ಅಮೆರಿಕ
Astro Prediction : ಅಮೆರಿಕಾದ ಅಧ್ಯಕ್ಷರಾಗಿ ಆಯ್ಕೆಯಾದ ನಂತರ ಡೊಲಾಲ್ಡ್ ಟ್ರಂಪ್ ತೆಗೆದುಕೊಳ್ಳುತ್ತಿರುವ ನೀತಿ, ವಿಶ್ವಕ್ಕೆ ಮಾರಕವಾಗುವ ಸಾಧ್ಯತೆಯಿದೆ ಎಂದು ಜ್ಯೋತಿಷ್ಯ ಭವಿಷ್ಯ ಹೇಳುತ್ತಿದೆ. ಈ ಮಾತನ್ನು ಬಾಬಾ ವಂಗಾರ ಭವಿಷ್ಯದಲ್ಲೂ ಉಲ್ಲೇಖಿಸಲಾಗಿತ್ತು. ಇನ್ನು, ಕೋಡಿಮಠದ ಶ್ರೀಗಳೂ 2026 ವಿಶ್ವಕ್ಕೆ ಕಠಿಣ ವರುಷವಾಗಲಿದೆ ಎಂದು ಹೇಳಿದ್ದರು.
ಸಂಪಾದಕೀಯ | ಗಾಡ್ಗೀಳ್ ವರದಿ: ಅರಣ್ಯ ರೋದನ!
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಅಮೆರಿಕದ ಮಿನಿಯಾಪೊಲಿಸ್ನಲ್ಲಿ ಇಮಿಗ್ರೇಷನ್ ಅಧಿಕಾರಿ ನಡೆಸಿದ ಗುಂಡಿನ ದಾಳಿಗೆ ರೆನೀ ಗುಡ್ ಮೃತಪಟ್ಟಿದ್ದರು. ಈ ಘಟನೆಗೆ ಸಂಬಂಧಿಸಿ ಮತ್ತೊಂದು ನೂತನ ವಿಡಿಯೋ ರಿಲೀಸ್ ಆಗಿದ್ದು, ಕಾನೂನು ತಜ್ಞರು ಈ ವಿಡಿಯೋ ಬಗ್ಗೆ ಮಾತನಾಡಿದ್ದಾರೆ. ಫೋನ್ ಹಿಡಿದು ಚಿತ್ರೀಕರಿಸುತ್ತಾ ವಿಡಿಯೋ ಮಾಡುವವರಿಗೆ ಹೇಗೆ ತಾನೇ ಆತ್ಮರಕ್ಷಣೆಯ ಭಯವಿರುತ್ತದೆ. ಅವರು ಸಲೀಸಾಗಿ ಶೂಟ್ ಮಾಡಿದ್ದಾರೆ ಎಂದು ಕಾನೂನು ತಜ್ಞರು ಆರೋಪಿಸಿದ್ದಾರೆ.
ಪರ ಇರುವವರಿಗೆ ಪಿಪಿಪಿ; ವಿರೋಧಕ್ಕೆ ಪೆಪ್ಪೆಪ್ಪೆ!
ದೇಶದ ಒಕ್ಕೂಟ ಸರಕಾರವು ಕರ್ನಾಟಕದಂತಹ ಸಂಪನ್ಮೂಲ ಸಹಿತ ರಾಜ್ಯಗಳಿಂದ ತೆರಿಗೆಯಾಗಿ ಶೇಖರಿಸುವ ಪ್ರತೀ ಒಂದು ರೂಪಾಯಿಗೆ, ಅಲ್ಲಿಂದ ವಾಪಸ್ ಕೊಡುತ್ತಿರುವ ಮೊತ್ತ ಕೇವಲ 14-15 ಪೈಸೆಗಳು. ಉಳಿದ 85 ಪೈಸೆಗಳನ್ನು ಕೇಂದ್ರ ಸರಕಾರ ತನ್ನ ಮನಸ್ಸಿಗೆ ಬಂದಂತೆ ಖರ್ಚು ಮಾಡುತ್ತಿದೆ ಎಂಬ ದೂರು ಕಳೆದ ಎರಡು ವರ್ಷಗಳಿಂದ ಮತ್ತೆ ಮತ್ತೆ ಕೇಳಿಬರುತ್ತಿದ್ದು, ಅದರಲ್ಲಿರುವ ವಾಸ್ತವಾಂಶಗಳ ಕಾರಣಕ್ಕೆ ಆ ಕೂಗು ಧ್ವನಿ ಪಡೆಯುತ್ತಿದೆ. ಈಗ ಪ್ರಕಟಗೊಂಡಿರುವ ಪಿಪಿಪಿ ಪೈಪ್ಲೈನ್ ಕೂಡ ಆ ದೂರನ್ನು ಮತ್ತಷ್ಟು ಖಚಿತಪಡಿಸಲಿದೆ. ತಾವು ಇಂತಿಂತಹ ಸರಕಾರಿ ಆಸ್ತಿಗಳನ್ನೆಲ್ಲ ಮುಂದಿನ ಮೂರು ವರ್ಷಗಳಲ್ಲಿ (FY 2026-2028) ಜಂಟಿ ಅಭಿವೃದ್ಧಿಗೆಂದು ಪರಭಾರೆ ಮಾಡಲಿದ್ದೇವೆ, ಹಾಗಾಗಿ ಸಿದ್ಧರಾಗಿರಿ ಎಂಬ ಸೂಚನೆಯನ್ನು ಹೂಡಿಕೆದಾರರಿಗೆ ನೀಡುವುದಕ್ಕಾಗಿ, ಭಾರತ ಸರಕಾರದ ಹಣಕಾಸು ಇಲಾಖೆಯು ಈ ವಾರದ ಆದಿಯಲ್ಲಿ (ಜನವರಿ 06) ಪಬ್ಲಿಕ್ ಪ್ರೈವೇಟ್ ಪಾರ್ಟ್ನರ್ಷಿಪ್ ಯೋಜನೆಗಳ ಪೈಪ್ಲೈನನ್ನು ಪ್ರಕಟಿಸಿದೆ. ಮುಂದಿನ ಮೂರು ವರ್ಷಗಳಲ್ಲಿ 17ಲಕ್ಷ ಕೋಟಿ ರೂ.ಗಳಿಗೂ ಮಿಕ್ಕಿ ಮೌಲ್ಯದ ಸರಕಾರಿ ಯೋಜನೆಗಳು ಖಾಸಗಿ ಸಹಭಾಗಿತ್ವದಲ್ಲಿ ಜಾರಿಗೊಳ್ಳಲಿವೆ. ‘‘ಸಂಭಾವ್ಯ ಪಿಪಿಪಿ ಯೋಜನೆಗಳಿಗೆ ಹೂಡಿಕೆದಾರರಿಗೆ ಮತ್ತು ಡೆವಲಪರ್ಗಳಿಗೆ ತಮ್ಮ ಯೋಜನೆಗಳನ್ನು ರೂಪಿಸಿಕೊಳ್ಳುವಲ್ಲಿ ಮತ್ತು ಹೂಡಿಕೆಗೆ ಮಾಹಿತಿಯುತ ತೀರ್ಮಾನಗಳನ್ನು ಕೈಗೊಳ್ಳುವಲ್ಲಿ ಅನುಕೂಲ ಆಗುವಂತೆ ಈ ಪೈಪ್ಲೈನ್ ಪ್ರಕಟಣೆಯು ಒಂದು ಮುನ್ನೋಟವನ್ನು ಒದಗಿಸುತ್ತದೆ’’ ಎಂದು ಹಣಕಾಸು ಸಚಿವಾಲಯ ಹೇಳಿರುವ ಬಗ್ಗೆ ಮಾಧ್ಯಮಗಳು ವರದಿ ಮಾಡಿವೆ. ಕಳೆದ ಬಜೆಟ್ನಲ್ಲಿ (FY26) ಮಾಡಲಾಗಿದ್ದ ಪ್ರಕಟಣೆಗೆ ಅನುಸಾರವಾಗಿ, ಕೇಂದ್ರ-ರಾಜ್ಯ ಸರಕಾರಗಳ ಪಿಪಿಪಿ ಬದ್ಧತೆಗಳನ್ನು ಸುಸೂತ್ರಗೊಳಿಸುವ ಮತ್ತು ಹೂಡಿಕೆಗಳಿಗೆ ವೇಗ ನೀಡುವ ಉದ್ದೇಶದಿಂದ ಈ ವ್ಯವಸ್ಥೆ ಮಾಡಲಾಗಿದ್ದು, ಇದರ ಅಡಿಯಲ್ಲಿ ಭಾರತ ಸರಕಾರದ 13.15 ಲಕ್ಷ ಕೋಟಿ ರೂ.ಗಳ 232 ಯೋಜನೆಗಳು ಮತ್ತು ರಾಜ್ಯ ಸರಕಾರಗಳ 3.85 ಲಕ್ಷ ಕೋಟಿ ರೂ.ಗಳ 620 ಯೋಜನೆಗಳು 2028ರ ಒಳಗೆ ಕಾರ್ಯರೂಪಕ್ಕೆ ಬರಲಿವೆಯಂತೆ. ಬರುತ್ತಿರುವ ಪಿಪಿಪಿ ಯೋಜನೆಗಳಲ್ಲಿ ಸಿಂಹಪಾಲು (8.77 ಲಕ್ಷ ಕೋಟಿ ರೂ.) ಹೆದ್ದಾರಿಗಳ ನಿರ್ಮಾಣಕ್ಕೆ. ಆ ಬಳಿಕದ್ದು ವಿದ್ಯುತ್ ಕ್ಷೇತ್ರ (3.45 ಲಕ್ಷ ಕೋಟಿ ರೂ.). ರಾಜ್ಯವಾರು ನೋಡಿದರೆ, ಕೇಂದ್ರ ಸರಕಾರದ ಊರುಗೋಲು ರಾಜ್ಯ ಆಗಿರುವ ಆಂಧ್ರಕ್ಕೆ ಸಿಂಹಪಾಲು (1.16 ಲಕ್ಷ ಕೋಟಿ ರೂ.). ನಂತರದ ಸ್ಥಾನಗಳು ತಮಿಳುನಾಡು (87,640 ಕೋಟಿ ರೂ.) ಮತ್ತು ಮಧ್ಯಪ್ರದೇಶಕ್ಕೆ (65,496 ಕೋಟಿ ರೂ.) ಕರ್ನಾಟಕಕ್ಕೆ ಏನು? 2028ರ ತನಕ ಕರ್ನಾಟಕಕ್ಕೆ ತೆಗೆದಿರಿಸಿರುವ ಒಟ್ಟು ಪಿಪಿಪಿ ಯೋಜನೆಗಳು ಕೇವಲ ಎಂಟು ಮತ್ತು ಅವಕ್ಕೆ ಒಟ್ಟು ಹೂಡಿಕೆಯ ಪ್ರಮಾಣ ಕೇವಲ 12,374.36 ಕೋಟಿ ರೂ.ಗಳು. ದೇಶದ ಒಕ್ಕೂಟ ಸರಕಾರವು ಕರ್ನಾಟಕದಂತಹ ಸಂಪನ್ಮೂಲ ಸಹಿತ ರಾಜ್ಯಗಳಿಂದ ತೆರಿಗೆಯಾಗಿ ಶೇಖರಿಸುವ ಪ್ರತೀ ಒಂದು ರೂಪಾಯಿಗೆ, ಅಲ್ಲಿಂದ ವಾಪಸ್ ಕೊಡುತ್ತಿರುವ ಮೊತ್ತ ಕೇವಲ 14-15 ಪೈಸೆಗಳು. ಉಳಿದ 85 ಪೈಸೆಗಳನ್ನು ಕೇಂದ್ರ ಸರಕಾರ ತನ್ನ ಮನಸ್ಸಿಗೆ ಬಂದಂತೆ ಖರ್ಚು ಮಾಡುತ್ತಿದೆ ಎಂಬ ದೂರು ಕಳೆದ ಎರಡು ವರ್ಷಗಳಿಂದ ಮತ್ತೆ ಮತ್ತೆ ಕೇಳಿಬರುತ್ತಿದ್ದು, ಅದರಲ್ಲಿರುವ ವಾಸ್ತವಾಂಶಗಳ ಕಾರಣಕ್ಕೆ ಆ ಕೂಗು ಧ್ವನಿ ಪಡೆಯುತ್ತಿದೆ. ಈಗ ಪ್ರಕಟಗೊಂಡಿರುವ ಪಿಪಿಪಿ ಪೈಪ್ಲೈನ್ ಕೂಡ ಆ ದೂರನ್ನು ಮತ್ತಷ್ಟು ಖಚಿತಪಡಿಸಲಿದೆ. ಏಕೆಂದರೆ, ಕರ್ನಾಟಕಕ್ಕೆ ಮಂಜೂರಾಗಿರುವ 8 ಯೋಜನೆಗಳು ಒಂದೋ ಆಳುವ ಪಕ್ಷದ ಪ್ರಭಾವಿಗಳಿರುವ ಕ್ಷೇತ್ರಗಳದು, ಇಲ್ಲವೇ ಆಳುವ ಪಕ್ಷದ ಮಿತ್ರರಾಗಿರುವ ಕಾರ್ಪೊರೇಟ್ ಆನಿಗಳಿಗೆ, ಊರುಗೋಲು ರಾಜಕೀಯ ಸಹವರ್ತಿಗಳಿಗೆ ಅನುಕೂಲ ಮಾಡಿಕೊಡುವಂತಹವು. ಅವನ್ನು ಪಿಪಿಪಿ ಮೂಲಕ ಮಾಡಿಸುವುದು ಎಂದರೆ, ಆನಿಗಳಿಗೆ ವಿಶೇಷವಾಗಿ, ಆ ಕ್ಷೇತ್ರಗಳಲ್ಲಿ ಮುಕ್ತಹಸ್ತ ನೀಡಿದಂತೆ! ಕರ್ನಾಟಕಕ್ಕೆ ಉದ್ದೇಶಿತವಾಗಿರುವ ಎಂಟು ಯೋಜನೆಗಳ ಪಟ್ಟಿ ಕೆಳಗಿದೆ ನೋಡಿ: 1. ಕಾರ್ಕಳದಲ್ಲಿ ಟೆಕ್ಸ್ಟೈಲ್ ಪಾರ್ಕ್ (2,797 ಕೋಟಿ ರೂ.) 2. ಮಂಡ್ಯದಲ್ಲಿ ವೃಂದಾವನ ಗಾರ್ಡನ್ ಅನ್ನು ಅಮ್ಯೂಸ್ಮೆಂಟ್ ಪಾರ್ಕ್ ಆಗಿ ಅಭಿವೃದ್ಧಿ (2,663.74 ಕೋಟಿ ರೂ.) 3. ಗದಗದಲ್ಲಿ ಘನತ್ಯಾಜ್ಯ ಸಂಸ್ಕರಣಾ ಘಟಕ (8.73 ಕೋಟಿ ರೂ.) 4. ಕಾರವಾರ, ಹಳೆಮಂಗಳೂರು, ಮಲ್ಪೆ ಬಂದರುಗಳ ನಿರ್ವಹಣೆಗೆ, ಖಔಒಖಿ ನೆಲೆಯಲ್ಲಿ (ಅಂದರೆ ರಿಪೇರಿ, ಕಾರ್ಯಾಚರಣೆ, ನಿರ್ವಹಣೆ, ವರ್ಗಾವಣೆ - ಶರತ್ತಿನ ಮೇರೆಗೆ) ನಿರ್ವಾಹಕರ ನೇಮಕ: (40.12 ಕೋಟಿ ರೂ.) 5. ಉತ್ತರಕನ್ನಡದ ಮಂಕಿ ಬಂದರು ಅಭಿವೃದ್ಧಿ (3,433 ಕೋಟಿ ರೂ.) 6. ಮೈಸೂರು-ಹಾಸನ- ಶ್ರೀರಂಗಪಟ್ಟಣ-ಬೇಲೂರು-ಹಳೆಬೀಡು ಪ್ರವಾಸೋದ್ಯಮ ಸರ್ಕ್ಯೂಟ್ ಅಭಿವೃದ್ಧಿ (231.77 ಕೋಟಿ ರೂ.) 7. ಬೆಂಗಳೂರು ನಗರಪಾಲಿಕೆ ವ್ಯಾಪ್ತಿಯಲ್ಲಿ ಸ್ಮಾರ್ಟ್ ಮೀಟರ್ ವ್ಯವಸ್ಥೆ (200 ಕೋಟಿ ರೂ.) 8. ಅರ್ಕಾವತಿ ನದಿ ಪುನರುತ್ಥಾನ, ತಿಪ್ಪಗೊಂಡನಹಳ್ಳಿ ತನಕ (3,000 ಕೋಟಿ ರೂ.) ಈ ಎಂಟೂ ಯೋಜನೆಗಳನ್ನು ಸ್ವಲ್ಪ ಆಳವಾಗಿ ಗಮನಿಸಿದರೆ, ಇವುಗಳ ಉದ್ದೇಶ ಏನೆಂಬುದು ಅರ್ಥ ಆಗುತ್ತದೆ. ಒಕ್ಕೂಟ ವ್ಯವಸ್ಥೆಯ ಆರ್ಥಿಕ ಸಮತೋಲನ ಮರುಪರಿಶೀಲನೆ ಅಗತ್ಯವಿದೆ. ಈ ಎಲ್ಲ ಬೆಳವಣಿಗೆಗಳು ಒಕ್ಕೂಟ ವ್ಯವಸ್ಥೆಯಲ್ಲಿ ಕೇಂದ್ರ-ರಾಜ್ಯಗಳ ನಡುವಿನ ಕೊಡುಕೊಳ್ಳುವಿಕೆ ಸಂಬಂಧ ಗಳನ್ನು ಮರುಪರಿಶೀಲಿಸಬೇಕಾಗಿರುವ ಅಗತ್ಯವನ್ನು ಒತ್ತಿ ಹೇಳುತ್ತಿವೆ. ಸದ್ಯ ಇರುವ ಸ್ಥಿತಿಯಲ್ಲೇ ಮುಂದುವರಿದರೆ ಇನ್ನು 10-15 ವರ್ಷಗಳಲ್ಲಿ ರಾಜ್ಯಗಳು ಭಿಕ್ಷಾಪಾತ್ರೆ ಹಿಡಿದು ಕೇಂದ್ರ ಸರಕಾರದ ಎದುರು ಅಥವಾ ರಾಜ್ಯದ ಸಂಪನ್ಮೂಲಗಳ ಕಡಿವಾಣವನ್ನು ತಮ್ಮ ಮುಷ್ಟಿಯಲ್ಲಿ ಇರಿಸಿಕೊಂಡಿರುವ ಕಾರ್ಪೊರೇಟ್ ಆನಿಗಳ ಎದುರು ಸೆರಗೊಡ್ಡಿ ನಿಲ್ಲುವುದು ಅನಿವಾರ್ಯ ಆಗಲಿದೆ. ಈ ವಾದವನ್ನು ಸಮರ್ಥಿಸುವುದಕ್ಕೆ 2023-24ರ PRS ವಿಶ್ಲೇಷಣೆ ಆಧರಿತ ಕೆಲವು ಅಂಕಿಅಂಶಗಳು ಇಲ್ಲಿವೆ: 1. ದೇಶದ ಎಲ್ಲ ರಾಜ್ಯಗಳು ಇಂದು ತಮ್ಮ ಒಟ್ಟು ಆದಾಯದ ಶೇ. 62 ಭಾಗವನ್ನು ಕೇವಲ ಸಾಲಕ್ಕೆ ಬಡ್ಡಿ ಮರುಪಾವತಿ, ಸಂಬಳಗಳು, ಪಿಂಚಿಣಿ ಮತ್ತು ಸಬ್ಸಿಡಿಗಳಿಗೆ ವೆಚ್ಚ ಮಾಡುತ್ತಿವೆ. ಇನ್ನೊಂದೆಡೆ ಆದಾಯದಲ್ಲಿ ಕೊರತೆ ಕಾಣಿಸಿಕೊಳ್ಳುತ್ತಿದೆ. 2015-16ರಿಂದ 2023-24ರ ನಡುವೆ, ದೇಶದ ಎಲ್ಲ ರಾಜ್ಯಗಳೂ ಬಜೆಟ್ ಅಂದಾಜಿಗಿಂತ ಸರಾಸರಿ ಶೇ. 10 ಕಡಿಮೆ ಆದಾಯ ಸಂಗ್ರಹಿಸಿದ್ದರೆ, ಕರ್ನಾಟಕ ಮಾತ್ರ ಬಜೆಟ್ನಲ್ಲಿ ಸೂಚಿಸಿದ ಗುರಿಗಳನ್ನು ಯಶಸ್ವಿಯಾಗಿ ತಲುಪಿದೆ. ತನ್ನ ಅವೈಜ್ಞಾನಿಕ ವ್ಯವಹಾರಗಳ ಫಲವಾಗಿ ಕೇಂದ್ರ ಸರಕಾರವು ರಾಜ್ಯಗಳನ್ನು ಅನಿವಾರ್ಯ ಸಾಲದ ಸುಳಿಗೆ ಸಿಲುಕಿಸಿ, ಸಂಗ್ರಹವಾದ ತೆರಿಗೆ ಸಂಪನ್ಮೂಲಗಳ ಮೇಲೆ ತನ್ನ ಹಿಡಿತ ಇರಿಸಿಕೊಂಡು, ಅವನ್ನು ತನ್ನ ಮೂಗಿನ ನೇರಕ್ಕೆ ವ್ಯಯಿಸುವುದು ಆರೋಗ್ಯವಂತ ಒಕ್ಕೂಟ ವ್ಯವಸ್ಥೆಯ ಲಕ್ಷಣ ಅಲ್ಲ. 2. ದೇಶದ 24 ರಾಜ್ಯಗಳು ತಮ್ಮ ಆದಾಯದ ಸರಾಸರಿ ಶೇ. 9ನ್ನು ಸಬ್ಸಿಡಿಗಳಿಗಾಗಿ ನೀಡುತ್ತಿವೆ, ಅದರಲ್ಲಿ ಸಂಪನ್ಮೂಲ ಹೆಚ್ಚಿರುವ ರಾಜ್ಯಗಳು ರಾಷ್ಟ್ರೀಯ ಸರಾಸರಿಗಿಂತ ಹೆಚ್ಚೇ ಪ್ರಮಾಣದ ಸಬ್ಸಿಡಿ ನೀಡುತ್ತಿವೆ. ಕರ್ನಾಟಕ (ಶೇ. 14), ತಮಿಳುನಾಡು (ಶೇ. 14), ಪಂಜಾಬ್ (ಶೇ. 21)ನಂತಹ ರಾಜ್ಯಗಳು ತಮ್ಮ ಆದಾಯದಲ್ಲಿ ದೊಡ್ಡ ಪಾಲನ್ನು ಸಬ್ಸಿಡಿಗೆಂದೇ ವ್ಯಯಿಸಿದರೆ (2023-24 Actuals), ರಾಜ್ಯದ ಅಭಿವೃದ್ಧಿಗೆ ಸ್ವಂತ ಸಂಪನ್ಮೂಲಗಳ ಕೊರತೆ ಬರುವುದು ಸಹಜ. 3. 15ನೇ ಹಣಕಾಸು ಆಯೋಗವು ಜಿಎಸ್ಟಿಯ ಮೂಲಕ ಜಿಡಿಪಿಯ ಶೇ. 7ರಷ್ಟು ತೆರಿಗೆ ಆದಾಯ ನಿರೀಕ್ಷಿಸಿದ್ದರೆ, ಅದು 2015-16ರಲ್ಲಿ ಜಿಡಿಪಿಯ ಶೇ. 6.5 ಇದ್ದುದು, ಈಗ 2023-24ರಲ್ಲಿ ಶೇ. 5.5ಕ್ಕೆ ಇಳಿದಿದೆ. ಆದರೆ ತುತ್ತೂರಿ ಮಾಧ್ಯಮಗಳು ಮಾತ್ರ ಸರಾಸರಿ ಪ್ರಮಾಣದಲ್ಲಿನ ಇಳಿಕೆಯನ್ನು ಮುಚ್ಚಿಟ್ಟು, ಮೊತ್ತದ ಹೆಚ್ಚಳವನ್ನು ಮಾತ್ರ ಪ್ರಚಾರದ ಸರಕಾಗಿ ಬಿತ್ತರಿಸುತ್ತಿವೆ. 4. 11ರಿಂದ 14ನೇ ಹಣಕಾಸು ಆಯೋಗ ಅವಧಿಯಲ್ಲಿ ರಾಜ್ಯಗಳಿಗೆ ವರ್ಗಾವಣೆ ಆಗಬೇಕಾದ ಷರತ್ತುರಹಿತ ಅನುದಾನಗಳ ಪ್ರಮಾಣವು ಶೇ. 44ರಿಂದ ಶೇ. 68ಕ್ಕೆ ಏರಿದ್ದರೆ, 15ನೇ ಹಣಕಾಸು ಆಯೋಗದ ಅವಧಿಯಲ್ಲಿ ಅದು ಶೇ. 64ಕ್ಕೆ ಇಳಿದಿದೆ. 5. 2024-25ನೇ ಸಾಲಿನ ವೇಳೆಗೆ ರಾಜ್ಯಗಳ ಸಾಲದ ಪ್ರಮಾಣವು ಜಿಡಿಪಿಯ ಸರಾಸರಿ ಶೇ. 27.5 ತಲುಪಿದೆ. ಆರ್ಥಿಕ ಜವಾಬ್ದಾರಿ ಮತ್ತು ಬಜೆಟ್ ನಿಭಾವಣೆ (FRMB)ಯ ಶಿಸ್ತಿನ ನಿಯಮಗಳ ಪ್ರಕಾರ, ಈ ಸಾಲದ ಪ್ರಮಾಣವು ಜಿಡಿಪಿಯ ಶೇ. 20ಕ್ಕಿಂತ ಕೆಳಗಿರಬೇಕು. ಗುಜರಾತ್, ಮಹಾರಾಷ್ಟ್ರ ಮತ್ತು ಒಡಿಶಾ ಬಿಟ್ಟರೆ ಬೇರಾವ ರಾಜ್ಯಗಳಿಗೂ ಇದನ್ನು ಸಾಧಿಸಲಾಗಿಲ್ಲ. ಈ ಎಲ್ಲ ಮ್ಯಾಕ್ರೊ ಅಂಕಿಅಂಶಗಳು ಒಟ್ಟಾಗಿ ಹೇಳುತ್ತಿರುವುದು-ಕೇಂದ್ರ ರಾಜ್ಯಗಳ ನಡುವಿನ ಆರ್ಥಿಕ ಅಸಮತೋಲನ ಮತ್ತು ಸಂಪತ್ತಿನ ಹಂಚಿಕೆಯಲ್ಲಿ ಕೃತಕವಾಗಿ ಸೃಷ್ಟಿ ಮಾಡಲಾಗುತ್ತಿರುವ ಅಸಮತೋಲನದ ಕುರಿತು. ಈ ಕುರಿತು ರಾಜ್ಯಗಳು ಎಚ್ಚರಗೊಳ್ಳಲು ಇದು ಸಕಾಲ.
ʼನಿಮ್ಮ ಕೆಲಸದ ಮೇಲೆ ಗಮನಹರಿಸಿʼ: ಉಮರ್ ಖಾಲಿದ್ ಗೆ ಪತ್ರ ಬರೆದ ಜೋಹ್ರಾನ್ ಮಮ್ದಾನಿಗೆ ಭಾರತ ಖಡಕ್ ಸಂದೇಶ
ದೆಹಲಿ ಗಲಭೆ ಪ್ರಕರಣದ ಆರೋಪಿ ಉಮರ್ ಖಾಲಿದ್ಗೆ ನ್ಯೂಯಾರ್ಕ್ ಮೇಯರ್ ಜೋಹ್ರಾನ್ ಮಮ್ದಾನಿ ಪತ್ರ ಚರ್ಚೆಗೆ ಗ್ರಾಸವಾದ ವಿಚಾರದ ಕುರಿತು ಭಾರತದ ವಿದೇಶಾಂಗ ಸಚಿವಾಲಯ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಮಮ್ದಾನಿ ಪತ್ರದ ಬಗ್ಗೆ ಮಾತನಾಡಿ ಇತರ ದೇಶಗಳ ಆಂತರಿಕ ವಿಚಾರಗಳಲ್ಲಿ ಮೂಗು ತೂರಿಸುವ ಬದಲು ತಮ್ಮ ಜವಾಬ್ದಾರಿಗಳ ಮೇಲೆ ಗಮನಹರಿಸುವಂತೆ ಎಚ್ಚರಿಕೆ ನೀಡಿದ್ದಾರೆ.
ಕಲಬುರಗಿ | ದ್ವಿತೀಯ ಪಿಯು ಪೂರ್ವ ಸಿದ್ಧತಾ ಪರೀಕ್ಷೆಯ ಇಂಗ್ಲಿಷ್ ಪ್ರಶ್ನೆ ಪತ್ರಿಕೆ ಸೋರಿಕೆ : ಪ್ರಕರಣ ದಾಖಲು
ಕಲಬುರಗಿ: ನಗರದಲ್ಲಿ ಜ.8ರಂದು ನಡೆದ ದ್ವಿತೀಯ ಪಿಯುಸಿ ಪೂರ್ವ ಸಿದ್ಧತಾ ಪರೀಕ್ಷೆಯ ಇಂಗ್ಲಿಷ್ ಭಾಷಾ ಪ್ರಶ್ನೆ ಪತ್ರಿಕೆ ಸೋರಿಕೆಯಾದ ಆರೋಪ ಕೇಳಿಬಂದಿದ್ದು, ಈ ಸಂಬಂಧ ಇಲ್ಲಿನ ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಜ. 8ರಂದು ಬೆಳಿಗ್ಗೆ 10 ರಿಂದ ಮಧ್ಯಾಹ್ನ 1ರ ವರೆಗೆ ಇಂಗ್ಲಿಷ್ ಭಾಷಾ ಪರೀಕ್ಷೆ ನಿಗದಿಯಾಗಿತ್ತು. ಆದರೆ, ಪರೀಕ್ಷೆ ಆರಂಭಕ್ಕೂ ಮೊದಲೇ ಅನಾಮಿಕ ವ್ಯಕ್ತಿಗಳು ಪ್ರಶ್ನೆ ಪತ್ರಿಕೆಯನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿದ್ದರು. ಈ ಗಂಭೀರ ಲೋಪವನ್ನು ಪರಿಗಣಿಸಿದ ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ (ಡಿಡಿಪಿಐ) ಸುರೇಶ್ ಅಕ್ಕಣ್ಣ ಅವರು, ಪತ್ರಿಕೆ ಸೋರಿಕೆ ಮಾಡಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ದೂರು ನೀಡಿದ್ದಾರೆ. ಸುರೇಶ್ ಅಕ್ಕಣ್ಣ ಅವರ ದೂರಿನ ಮೇರೆಗೆ ಸ್ಟೇಷನ್ ಬಝಾರ್ ಪೊಲೀಸರು, ಠಾಣೆ ಗುನ್ನೆ 02/2026 ಕಲಂ:03 ಪಬ್ಲಿಕ್ ಎಕ್ಸಾಮಿನೇಷನ್ (ಪ್ರಿವೆಂಶನ್ ಆಫ್ ಅನ್ಸರ್ ಮೀನ್ಸ್) ಆಕ್ಟ್ 805 ಮತ್ತು 324(2) ಬಿ.ಎನ್.ಎಸ್ ಮತ್ತು ಕಲಂ:24(ಎ) ದಿ ಕರ್ನಾಟಕ ಎಶುಕೇಶನ್ ಎಕ್ಸ್ 1983 ನೇದ್ದರ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಪ್ರಾರಂಭಿಸಿದ್ದಾರೆ.
IMD Weather Forecast: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ: ಭೀಕರ ಚಳಿ ನಡುವೆ ಈ ಭಾಗದಲ್ಲಿ ಭಾರೀ ಮಳೆ ಮುನ್ಸೂಚನೆ
IMD Weather Forecast: ದೇಶದ ಬಹುತೇಕ ರಾಜ್ಯಗಳಲ್ಲಿ ದಟ್ಟ ಮಂಜಿನ ಜೊತೆ ಭಾರೀ ಚಳಿಗಾಳಿ ಬೀಸುತ್ತಿದೆ. ಈ ನಡುವೆಯೇ ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಪರಿಣಾಮ ಹಲವು ಭಾಗಗಳಲ್ಲಿ ಮಳೆ ಸುರಿಯುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಹಾಗಾದ್ರೆ ಎಲ್ಲೆಲ್ಲಿ ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ. ಭಾರತೀಯ ಹವಾಮಾನ ಇಲಾಖೆ
ರಾಯಚೂರು | ಅಪೂರ್ಣಗೊಂಡ ಅಂಗನವಾಡಿ ಅರ್ಜಿ ಸಲ್ಲಿಕೆಗೆ ಜ.15 ರವರೆಗೆ ಅವಕಾಶ
ರಾಯಚೂರು: ತಾಲ್ಲೂಕಿನ ಗಿಲ್ಲೇಸೂಗೂರು ಶಿಶು ಅಭಿವೃದ್ಧಿ ಯೋಜನಾ ವ್ಯಾಪ್ತಿಯ 13 ಅಂಗನವಾಡಿ ಕಾರ್ಯಕರ್ತೆ ಹಾಗೂ 29 ಸಹಾಯಕಿಯರ ಹುದ್ದೆಗಳಿಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳಿಗೆ, ತಮ್ಮ ಅಪೂರ್ಣ ಅರ್ಜಿಗಳನ್ನು ಪೂರ್ಣಗೊಳಿಸಲು ಜನವರಿ 15ರವರೆಗೆ ಕಾಲಾವಕಾಶ ನೀಡಲಾಗಿದೆ. ಅರ್ಜಿ ಸಲ್ಲಿಸುವ ಪ್ರಕ್ರಿಯೆಯಲ್ಲಿ ಒಟ್ಟು 4 ಹಂತಗಳಿದ್ದು, ಅನೇಕ ಅಭ್ಯರ್ಥಿಗಳು ಈ ಹಂತಗಳನ್ನು ಪೂರ್ಣಗೊಳಿಸದಿರುವುದು ಕಂಡುಬಂದಿದೆ. ಅಂತಹ ಅಭ್ಯರ್ಥಿಗಳು ಈ ಕೆಳಗಿನ ಹಂತಗಳನ್ನು ಪೂರ್ಣಗೊಳಿಸಲು ಸೂಚಿಸಲಾಗಿದೆ. ಆನ್ಲೈನ್ ತಂತ್ರಾಂಶದಲ್ಲಿ ನಿಗದಿತ ಅರ್ಜಿ ನಮೂನೆಯಲ್ಲಿ ಅಗತ್ಯ ಮಾಹಿತಿ ತುಂಬುವುದು. ಅಭ್ಯರ್ಥಿಯ ಭಾವಚಿತ್ರ ಹಾಗೂ ಸಹಿಯನ್ನು ಅಪ್ಲೋಡ್ ಮಾಡುವುದು. ಎಲ್ಲಾ ಅಗತ್ಯ ಮೂಲ ದಾಖಲಾತಿಗಳನ್ನು ಅಪ್ಲೋಡ್ ಮಾಡುವುದು. ಆಧಾರ್ ಸಂಖ್ಯೆ ನಮೂದಿಸಿ, ಇ-ಹಸ್ತಾಕ್ಷರದೊಂದಿಗೆ (e-Sign) ಅರ್ಜಿಯನ್ನು ಅಂತಿಮವಾಗಿ ಸಲ್ಲಿಸುವುದು. ಅಭ್ಯರ್ಥಿಗಳು ವೆಬ್ಸೈಟ್ ವಿಳಾಸ: https://karnemakaone.kar.nic.in/abcd/ ನಲ್ಲಿ ಜ.15ರ ಒಳಗಾಗಿ ಅರ್ಜಿ ಪ್ರಕ್ರಿಯೆ ಪೂರ್ಣಗೊಳಿಸಬೇಕು. ಒಂದು ವೇಳೆ ಅರ್ಜಿಗಳು ಅಪೂರ್ಣವಾಗಿದ್ದಲ್ಲಿ ಅಂತಹ ಅರ್ಜಿಗಳನ್ನು ನೇರವಾಗಿ ತಿರಸ್ಕರಿಸಲಾಗುವುದು ಎಂದು ಯೋಜನಾಧಿಕಾರಿಗಳು ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಗಿಲ್ಲೇಸೂಗೂರು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಯನ್ನು ಕಚೇರಿ ವೇಳೆಯಲ್ಲಿ ಸಂಪರ್ಕಿಸಬಹುದಾಗಿದೆ.
ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗ್ರೀನ್ಲ್ಯಾಂಡ್ ಅನ್ನು ಸ್ವಾಧೀನಪಡಿಸಿಕೊಳ್ಳುವ ತಮ್ಮ ನಿಲುವನ್ನು ಪುನರುಚ್ಚರಿಸಿದ್ದಾರೆ. ರಷ್ಯಾ ಮತ್ತು ಚೀನಾ ಈ ಪ್ರದೇಶವನ್ನು ವಶಪಡಿಸಿಕೊಳ್ಳುವ ಸಾಧ್ಯತೆಯಿರುವುದರಿಂದ ಅಮೆರಿಕಾ ಅದನ್ನು ತನ್ನ ನೆರೆಹೊರೆಯವರಾಗಿ ನೋಡಲು ಬಯಸುವುದಿಲ್ಲ ಹಾಗಾಗಿ ಅಮೆರಿಕಾದ ರಾಷ್ಟ್ರೀಯ ಭದ್ರತೆಗೆ ಗ್ರೀನ್ ಲ್ಯಾಂಡ್ ಅವಶ್ಯಕ ಎಂದು ತಿಳಿಸಿದ್ದಾರೆ. ಅಲ್ಲದೆ, ಗ್ರೀನ್ ಲ್ಯಾಂಡ್ ಮೇಲೆ ಡೆನ್ಮಾರ್ಕ್ನ ಹಕ್ಕನ್ನು ಪ್ರಶ್ನಿಸಿರುವ ಟ್ರಂಪ್,ಸುಲಭವಾಗಿ ಒಪ್ಪಂದ ಸಾಧ್ಯವಾಗದಿದ್ದರೆ ಕಠಿಣ ಮಾರ್ಗವನ್ನು ಆರಿಸಿಕೊಳ್ಳುವುದಾಗಿ ಹೇಳಿದ್ದಾರೆ. ಈ ವೇಳೆ ನಾನು NATO ಪರವಾಗಿದ್ದೇನೆ ಹಾಗಾಗಿ ನಾನು ಹೇಳುವುದನ್ನು ಅವರು ಅರ್ಥಮಾಡಿಕೊಳ್ಳಬೇಕು ನಾನಿಲ್ಲದಿದ್ದರೆ NATO ಇರುತ್ತಿರಲಿಲ್ಲ ಎಂದು ತಿಳಿಸುವ ಮೂಲಕ ಗ್ರೀನ್ ಲ್ಯಾಂಡ್ ಪಡೆದುಕೊಳ್ಳಲು ತಾವೂ ಯಾವ ಹಂತಕ್ಕೆ ಹೋಗವುದಕ್ಕೂ ಸಿದ್ದ ಎಂದು ಸ್ಪಷ್ಟಪಡಿಸಿದ್ದಾರೆ.
ಖಾಸಗಿ ದಂತ ವೈದ್ಯಕೀಯ ಕಾಲೇಜಿನ 22 ವರ್ಷದ ವಿದ್ಯಾರ್ಥಿನಿ ಯಶಸ್ವಿನಿ ಎಸ್. ಆತ್ಮಹತ್ಯೆ ಮಾಡಿಕೊಂಡಿದ್ದರು. ಅಧ್ಯಾಪಕರ ಕಿರುಕುಳವೇ ಇದಕ್ಕೆ ಕಾರಣ ಎಂದು ಆರೋಪಿಸಿ, ನೂರಾರು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು. ಕಣ್ಣು ನೋವು ಎಂದು ರಜೆ ಹಾಕಿದ್ದಕ್ಕೆ ಎಷ್ಟು ಡ್ರಾಪ್ಸ್ ಹಾಕಿಕೊಂಡೆ ಎಂದು ಕಿರುಕುಳ ನೀಡಿದ್ದಾರೆ ಎಂದು ಪೋಷಕರು ಆರೋಪಿಸಿದ್ದಾರೆ. ಕಾಲೇಜು ಆಡಳಿತ ಮಂಡಳಿ ಮತ್ತು ಸಂಬಂಧಪಟ್ಟ ಅಧ್ಯಾಪಕರ ವಿರುದ್ಧ ಕಠಿಣ ಕ್ರಮಕ್ಕೆ ವಿದ್ಯಾರ್ಥಿಗಳು ಒತ್ತಾಯಿಸಿದ್ದಾರೆ.
ಆತ್ಮೀಯ ಪಿಣರಾಯಿ ವಿಜಯನ್ ಅವರೇ.. ಇಂತಿ ನಿಮ್ಮ ಸಿದ್ದರಾಮಯ್ಯ : ಕೇರಳ ಸಿಎಂಗೆ ಪತ್ರ
Kannada Vs Malayalam : ಇತ್ತೀಚೆಗೆ ಬೆಂಗಳೂರು ಕೋಗಿಲು ಕ್ರಾಸ್’ನಲ್ಲಿ ಅಕ್ರಮ ಶೆಡ್ ತೆರವು ವಿಚಾರದಲ್ಲಿ ಕೇರಳ ಮೂಗು ತೂರಿಸಿತ್ತು. ಈಗ, ಕರ್ನಾಟಕದ ಜೊತೆ ಭಾಷಾ ಸಂಘರ್ಷಕ್ಕೆ ಕೇರಳ ಇಳಿದಿದೆ. ಈ ಸಂಬಂಧ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಗೆ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ರವನ್ನು ಬರೆದಿದ್ದಾರೆ. ಇದಕ್ಕೆ, ಕೇರಳದಿಂದ ಇನ್ನಷ್ಟೇ ಪ್ರತಿಕ್ರಿಯೆ ಬರಬೇಕಿದೆ.
ಅರಾವಳಿ ಪರ್ವತ ಶ್ರೇಣಿಯ ಮೇಲೆ ಗಣಿಗಾರಿಕೆ ನಡೆಸುವುದಕ್ಕೆ ಕೇಂದ್ರ ಸರಕಾರ ಯೋಜನೆ ರೂಪಿಸುತ್ತಿರುವ ಹೊತ್ತಿನಲ್ಲೇ, ಹಿರಿಯ ಪರಿಸರ ವಿಜ್ಞಾನಿ ಮಾಧವ ಗಾಡ್ಗೀಳ್ ನಮ್ಮ ನಡುವಿನಿಂದ ವಿದಾಯ ಹೇಳಿದ್ದಾರೆ. ಗಾಡ್ಗೀಳ್ ಎಂದಾಗ ನೆನಪಾಗುವುದು ಪಶ್ಚಿಮಘಟ್ಟಗಳು. ಬದುಕಿನುದ್ದಕ್ಕೂ ಈ ಪಶ್ಚಿಮಘಟ್ಟದ ಜೀವ ವೈವಿಧ್ಯಗಳಿಗಾಗಿ ಮಿಡಿದ ಗಾಡ್ಗೀಳ್, ಪಶ್ಚಿಮ ಘಟ್ಟಕ್ಕೆ ಸಂಬಂಧಿಸಿದ ವರದಿಗಳಿಗಾಗಿ ಪರ-ವಿರೋಧ ಎರಡನ್ನೂ ಕಟ್ಟಿಕೊಂಡರು. ಗುಜರಾತ್, ಮಹಾರಾಷ್ಟ್ರ, ಗೋವಾ, ಕರ್ನಾಟಕ, ಕೇರಳ ಮತ್ತು ತಮಿಳು ನಾಡಿನಲ್ಲಿ ಹಬ್ಬಿರುವ 1, 64, 280 ಚದರ ಕಿ. ಮೀ. ಪಶ್ಚಿಮಘಟ್ಟಗಳಲ್ಲಿ ಓಡಾಡಿ ಅಲ್ಲಿನ ಮರಗಿಡಗಳು ಮಾತ್ರವಲ್ಲ, ಆದಿವಾಸಿಗಳು, ಬುಡಕಟ್ಟು ಸಮುದಾಯಗಳ ಜನರ ಒಳಗಿನ ಮಾತುಗಳಿಗೆ ಕಿವಿಯಾದವರು. ಕರ್ನಾಟಕವು ಪಶ್ಚಿಮಘಟ್ಟದ ದೊಡ್ಡ ಪಾಲನ್ನು ಹೊಂದಿರುವುದರಿಂದ, ಗಾಡ್ಗೀಳ್ ಅವರನ್ನು ರಾಜ್ಯದ ಜನತೆ ಈಗಲೂ ಸ್ಮರಿಸುತ್ತಿದ್ದಾರೆ. ಗಾಡ್ಗೀಳ್ ವರದಿಯನ್ನು ಜಾರಿ ಮಾಡಬೇಕು ಎಂದು ಪರಿಸರ ವಾದಿಗಳ ದೊಡ್ಡ ಗುಂಪು ಹೋರಾಟ ಮಾಡುತ್ತಿರುವ ನಡುವೆ, ಗಾಡ್ಗೀಳ್ ವರದಿ ಯಾವ ಕಾರಣಕ್ಕೂ ಜಾರಿಯಾಗಬಾರದು ಎಂದು ಕೆಲವು ಹಿತಾಸಕ್ತಿಗಳು ಹಟಕ್ಕೆ ಬಿದ್ದವು. ಗಾಡ್ಗೀಳ್ ವರದಿ ರಾಜಕಾರಣಿಗಳಿಗೆ ನುಂಗಲಾರದ ತುತ್ತಾದಾಗ, ಕಸ್ತೂರಿ ರಂಗನ್ ನೇತೃತ್ವದಲ್ಲಿ ಇನ್ನೊಂದು ಸಮಿತಿಯನ್ನು ರಚಿಸಿ ಗಾಡ್ಗೀಳ್ ವರದಿಯನ್ನು ಸಮಾಧಿ ಮಾಡಲಾಯಿತು. ಪಶ್ಚಿಮಘಟ್ಟಗಳಿಗೆ ಸಂಬಂಧಿಸಿದ ಈ ಎರಡೂ ವರದಿಗಳು ಇಂದು ಅನುಷ್ಠಾನಗೊಳ್ಳದೆ ಧೂಳು ತಿನ್ನುತ್ತಿವೆ. ಮೌನಕಣಿವೆ ಹೋರಾಟ, ಅಪ್ಪಿಕೋ ಚಳವಳಿ, ಪಶ್ಚಿಮ ಘಟ್ಟ ಉಳಿಸಿ ಈ ಎಲ್ಲ ಸುದೀರ್ಘ ಹೋರಾಟಗಳ ಪರಿಣಾಮವಾಗಿ 2010ರಲ್ಲಿ ಗಾಡ್ಗೀಳ್ ನೇತೃತ್ವದಲ್ಲಿ ಸಮಿತಿ ರಚನೆಯಾಯಿತು. ಸಮಿತಿಯ ಬಹುತೇಕ ಮಂದಿ ಪಶ್ಚಿಮಘಟ್ಟ ಪರಿಸರದ ಭಾಗದ ಜನರೇ ಆಗಿದ್ದರು. 2011ರ ಆಗಸ್ಟ್ನಲ್ಲಿ ಎರಡು ಸಂಪುಟಗಳ ವರದಿಯನ್ನು ಗಾಡ್ಗೀಳ್ ಸಮಿತಿ ಕೇಂದ್ರ ಸರಕಾರಕ್ಕೆ ಸಲ್ಲಿಸಿತು. ಸುಮಾರು ಒಂದು ವರ್ಷಗಳ ಕಾಲ ಈ ವರದಿಯನ್ನು ಕೇಂದ್ರ ತನ್ನ ಬಳಿ ಇಟ್ಟುಕೊಂಡಿತು. ವರದಿ ಸಲ್ಲಿಕೆಯಾಗಿರುವುದನ್ನು ಅಧಿಕೃತವಾಗಿ ಬಹಿರಂಗಪಡಿಸುವುದಕ್ಕೆ ಸರಕಾರಕ್ಕೆ ಒಂದು ವರ್ಷ ಬೇಕಾಯಿತು. ಪಶ್ಚಿಮಘಟ್ಟದ ಶೇ. 78ಕ್ಕೂ ಹೆಚ್ಚಿನ ಪ್ರದೇಶಗಳಿಗೆ ಅಂದರೆ ಸುಮಾರು 1,29,037 ಚ. ಕಿ. ಮೀ. ಪ್ರದೇಶಕ್ಕೆ ರಕ್ಷಣೆಯನ್ನು ನೀಡಬೇಕು ಎಂದು ಗಾಡ್ಗೀಳ್ ವರದಿಯಲ್ಲಿ ಆಗ್ರಹಿಸಿದ್ದರು. ನಾಡಿನಲ್ಲಿ ಹೆಚ್ಚುತ್ತಿರುವ ಪ್ರಕೃತಿ ವಿಕೋಪ, ಕಾಡುನಾಶ ಚರ್ಚೆಗೆ ಬಂದಾಗಲೆಲ್ಲ ಗಾಡ್ಗೀಳ್ ವರದಿಯೂ ಮುನ್ನೆಲೆಗೆ ಬರುತ್ತಿತ್ತು. ಗಾಡ್ಗೀಳ್ ವರದಿಯೇನಾದರೂ ಜಾರಿಗೆ ಬಂದದ್ದೇ ಆದರೆ ಸರಕಾರದ ಆಪ್ತ ಭೂಮಾಲಕರು, ಕಾರ್ಪೊರೇಟ್ ದೊರೆಗಳ ‘ಅಭಿವೃದ್ಧಿ ಕಾರ್ಯಾಚರಣೆ’ಗೆ ಧಕ್ಕೆಯಾಗುವ ಸಾಧ್ಯತೆಗಳಿದ್ದವು. ಮೋದಿ ಸರಕಾರ ಅಧಿಕಾರಕ್ಕೆ ಬಂದ ಬಳಿಕವಂತೂ ಗಾಡ್ಗೀಳ್ ವರದಿ ಅನುಷ್ಠಾನ ದೂರದ ಮಾತಾಯಿತು. ಗಾಡ್ಗೀಳ್ ವರದಿ ಜಾರಿಗೊಂಡಿದ್ದರೆ ಕೇರಳದಲ್ಲಿ ಸಂಭವಿಸಿದಂತಹ ಹಲವು ವಿಕೋಪಗಳನ್ನು ತಡೆಯುವ ಸಾಧ್ಯತೆಗಳಿತ್ತು ಎಂದು ಪರಿಸರ ತಜ್ಞರು ಅಭಿಪ್ರಾಯ ಪಡುತ್ತಾರೆ. ಪರಿಸರವಾದಿಗಳ ಬಾಯಿ ಮುಚ್ಚಿಸಲು ಮತ್ತು ಗಾಡ್ಲೀಳ್ ವರದಿಯನ್ನು ತೆಳುಗೊಳಿಸುವುದಕ್ಕಾಗಿಯೇ ಕಸ್ತೂರಿ ರಂಗನ್ ವರದಿಯನ್ನು ಸರಕಾರ ತರಿಸಿಕೊಂಡಿತು. ಕಸ್ತೂರಿ ರಂಗನ್ ವರದಿಯು ಸಂರಕ್ಷಿತ ಪ್ರದೇಶದ ವ್ಯಾಪ್ತಿಯನ್ನು ಕಿರಿದುಗೊಳಿಸಿತು. ಮುಖ್ಯವಾಗಿ ಕಸ್ತೂರಿ ರಂಗನ್ ವರದಿಯು ಪರಿಸರವಾದಿಗಳು ಮತ್ತು ಸರಕಾರದ ನಡುವೆ ಒಂದು ಸೇತುವೆಯನ್ನು ಅಥವಾ ಮಧ್ಯಸ್ಥಿಕೆಯನ್ನು ವಹಿಸಿತ್ತು. ಇದರ ಪ್ರಕಾರ 59,949 ಚ.ಕಿ. ಮೀ. ಪ್ರದೇಶದಲ್ಲಿ ಗಣಿಗಾರಿಕೆ, ಕ್ವಾರಿ, ಮರಳುಗಾರಿಕೆ, ಪರಿಸರ ವಿರೋಧಿ ಕೈಗಾರಿಕೆ, ಉಷ್ಣ ವಿದ್ಯುತ್, ಜಲವಿದ್ಯುತ್, ಪವನವಿದ್ಯುತ್ ಯೋಜನೆಗಳು ಸಂಪೂರ್ಣ ನಿಷೇಧಿತ. ವರದಿ ಜಾರಿಯಾದ ಬಳಿಕ ಮುಂದಿನ ಐದು ವರ್ಷದೊಳಗೆ ಈಗಿರುವ ಎಲ್ಲ ರೀತಿಯ ಗಣಿಗಾರಿಕೆ ಸ್ಥಗಿತವಾಗಬೇಕು. 20,000 ಚ. ಮೀ.ಗಿಂತ ಹೆಚ್ಚು ವಿಸ್ತೀರ್ಣದ ಯಾವುದೇ ನಿರ್ಮಾಣ ಕೈಗೆತ್ತಿಕೊಳ್ಳುವಂತಿಲ್ಲ. ಗಾಡ್ಗೀಳ್ ವರದಿ ಪರಿಸರ ನಿಷ್ಠವಾಗಿತ್ತು ಮಾತ್ರವಲ್ಲ, ಅದು ಸ್ಥಳೀಯ ಆದಿವಾಸಿಗಳ ಹಿತಾಸಕ್ತಿಗೆ ಪೂರಕವಾಗಿತ್ತು. ಕಾಡುಗಳ ರಕ್ಷಣೆಯ ಹೊಣೆಯನ್ನು ಆದಿವಾಸಿಗಳು ನಿಭಾಯಿಸಬಲ್ಲರು ಎನ್ನುವ ಆಶಯ ಅದರಲ್ಲಿತ್ತು. ಆದರೆ ಕಸ್ತೂರಿರಂಗನ್ ವರದಿ ಬಹಳಷ್ಟು ವಿನಾಯಿತಿಗಳನ್ನು ನೀಡಿತು. ಇಷ್ಟಾದರೂ ಕರ್ನಾಟಕ ಸರಕಾರವೂ ಸೇರಿದಂತೆ ಬಹುತೇಕ ರಾಜ್ಯಗಳು ಕಸ್ತೂರಿ ರಂಗನ್ ವರದಿಯನ್ನೂ ವಿರೋಧಿಸಿದ್ದವು. ಪಶ್ಚಿಮಘಟ್ಟ ಎಂದರೆ ಕೇವಲ ಅರಣ್ಯ ಪ್ರದೇಶ ಮತ್ತು ಪ್ರಾಣಿ ವೈವಿಧ್ಯಗಳಿಗೆ ಸಂಬಂಧಿಸಿದ್ದಾದರೆ ಇಷ್ಟು ಸಮಸ್ಯೆಯಿರುತ್ತಿರಲಿಲ್ಲವೇನೋ. ಗಾಡ್ಗೀಳ್ ವರದಿಯು ಈ ಪ್ರದೇಶಗಳನ್ನು ನೈಸರ್ಗಿ ಕ ವಲಯ ಮತ್ತು ಸಾಂಸ್ಕೃತಿಕ ವಲಯವಾಗಿ ವಿಂಗಡಿಸಿದೆ. ನೈಸರ್ಗಿಕ ವಲಯದಲ್ಲಿ ಅರಣ್ಯ ಇಲಾಖೆ ಅಧೀನಕ್ಕೊಳಪಟ್ಟಿರುವ ಭೂಭಾಗವಿದೆ. ಇಲ್ಲಿ ಆದಿವಾಸಿಗಳನ್ನು ಬಿಟ್ಟರೆ ಬೇರೆ ಜನವಸತಿ ಇಲ್ಲ. ಇವರನ್ನು ಒಕ್ಕಲೆಬ್ಬಿಸುವುದು ಸರಕಾರಕ್ಕೇನೂ ಕಷ್ಟವಿಲ್ಲ. ಸಾಂಸ್ಕೃತಿಕ ವಲಯವೆಂದರೆ ಇಲ್ಲಿ ಖಾಸಗಿ ಭೂ ಒಡೆತನವಿದೆ. ಒಟ್ಟಾರೆ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಐದು ಕೋಟಿಯಷ್ಟು ಜನವಸತಿ ಇದೆ ಎಂದು ಕಸ್ತೂರಿ ರಂಗನ್ ವರದಿ ಹೇಳುತ್ತಿದೆ. ಖಾಸಗಿ ಭೂಮಾಲಕರು ರಾಜಕೀಯ ಶಕ್ತಿಗಳ ಜೊತೆಗೆ ಕೈ ಜೋಡಿಸಿರುವುದು ಕಸ್ತೂರಿ ರಂಗನ್ ವರದಿಗೆ ಸಮಸ್ಯೆಯಾಯಿತು. ಅಷ್ಟೇ ಅಲ್ಲ, ಖಾಸಗಿ ವಲಯಗಳು ಈ ಪ್ರದೇಶದ ಮೇಲೆ ಗಣಿಗಾರಿಕೆಗಾಗಿ ಕಣ್ಣಿಟ್ಟಿವೆ. ಸರಕಾರಗಳು ಈ ಖಾಸಗಿ ವಲಯದ ಜೊತೆಗೆ ಶಾಮೀಲಾಗಿವೆ. ಈ ಭಾಗದ ಸ್ಥಳೀಯ ಭೂಮಾಲಕರು ಇದು ತಮಗೆ ಆರ್ಥಿಕವಾಗಿ ಲಾಭದಾಯಕವಾಗಲಿದೆ ಎಂದು ಬಲವಾಗಿ ನಂಬಿದ್ದಾರೆ. ಹಾಗೆ ನಂಬಿದವರಿಗೆ ಈ ಎರಡೂ ವರದಿಗಳೂ ಅನುಷ್ಠಾನಗೊಳ್ಳುವುದು ಬೇಕಾಗಿಲ್ಲ. ಇದು ಅಭಿವೃದ್ಧಿಗೆ ಮಾರಕವಾಗಲಿದೆ, ಯಾವುದೇ ಅತ್ಯಗತ್ಯವಾದ ಮೂಲಭೂತ ಅಭಿವೃದ್ಧಿ ಕಾಮಗಾರಿಗಳಿಗೆ ಈ ವರದಿಗಳು ತೊಡಕಾಗಲಿವೆ ಎಂದು ನಂಬಿದ್ದಾರೆ. ವಿಪರ್ಯಾಸವೆಂದರೆ, ಪಶ್ಚಿಮಘಟ್ಟ ಉಳಿಸುವ ಬಗ್ಗೆ ಚರ್ಚೆ ನಡೆಯುತ್ತಿರುವ ಮಧ್ಯೆಯೇ ದೇಶಾದ್ಯಂತ ಅರಣ್ಯ ಪ್ರದೇಶಗಳಲ್ಲಿ ಎಗ್ಗಿಲ್ಲದೆ ಗಣಿಗಾರಿಕೆಗಳಿಗೆ ಸರಕಾರ ಅನುಮತಿಯನ್ನು ನೀಡುತ್ತಾ ಬಂದಿದೆ. ಇವೆಲ್ಲದರ ನಡುವೆ, ರಾಜಸ್ಥಾನ, ಹರ್ಯಾಣ, ದಿಲ್ಲಿ ಮತ್ತು ಗುಜರಾತ್ ರಾಜ್ಯಗಳಲ್ಲಿ ಹರಡಿಕೊಂಡಿರುವ ಅರಾವಳಿಯಲ್ಲಿ ಗಣಿಗಾರಿಕೆ ನಡೆಸುವುದಕ್ಕಾಗಿ ನಿಯಮವನ್ನೇ ಬದಲಿಸಲು ಮುಂದಾಯಿತು. ಸುಪ್ರೀಂಕೋರ್ಟನ್ನು ಕೂಡ ಸರಕಾರ ತನ್ನ ದುರುದ್ದೇಶಕ್ಕೆ ಬಳಸಿಕೊಂಡಿತು. ಆದರೆ ಪರಿಸರವಾದಿಗಳು ಇದರ ಬಗ್ಗೆ ದೊಡ್ಡ ಧ್ವನಿಯಲ್ಲಿ ಮಾತನಾಡುತ್ತಿದ್ದಂತೆಯೇ ಸರಕಾರ ಬಾಲ ಮಡಚಿಕೊಂಡಿತು. ಸುಪ್ರೀಂಕೋರ್ಟ್ ಕೂಡ ತನ್ನ ತೀರ್ಪನ್ನು ತಿದ್ದಿಕೊಳ್ಳುವ ಸ್ಥಿತಿ ನಿರ್ಮಾಣವಾಯಿತು. ಅರಾವಳಿಯಲ್ಲಿ ಗಣಿಗಾರಿಕೆಗಳು ಆರಂಭವಾದರೆ, ಅದು ನಗರಗಳ ವಾಯುಮಾಲಿನ್ಯವನ್ನು ಇನ್ನಷ್ಟು ಭೀಕರವಾಗಿಸಲಿದೆ. ಆದರೆ ಈ ಭಾಗದಲ್ಲಿರುವ ಖನಿಜ ಸಂಪತ್ತಿನ ಮೇಲೆ ಕಣ್ಣು ಹಾಕಿರುವ ಸರಕಾರ ಮತ್ತು ಅದರ ಬೆನ್ನಿಗಿರುವ ಕಾರ್ಪೊರೇಟ್ ಶಕ್ತಿಗಳು ಅರಾವಳಿಯನ್ನು ಅದರಷ್ಟಕ್ಕೇ ಬಿಡುತ್ತಾರೆ ಎನ್ನುವಂತಿಲ್ಲ. ಇದಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ವಿಚಾರಣೆ ಮುಂದುವರಿದಿದೆ. ನಾವು ಉಸಿರಾಡುತ್ತಿರುವ ಗಾಳಿ, ಕುಡಿಯುವ ನೀರು ವಿಷವಾಗುತ್ತಿರುವ ಹೊತ್ತಿಗೆ ಗಾಡ್ಗೀಳ್ ನಮ್ಮ ನಡುವಿನಿಂದ ಅಗಲಿದ್ದಾರೆ. ಪರಿಸರ ಪರವಾದ ಧ್ವನಿ ನಿಜಕ್ಕೂ ಅರಣ್ಯ ರೋದನವಾಗಿ ಬದಲಾಗಿದೆ.
Karnataka Weather: ಶೀತಗಾಳಿ ನಡುವೆ ಬೆಂಗಳೂರು ಸೇರಿ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಎರಡು ದಿನ ಮಳೆ ಸಾಧ್ಯತೆ
Karnataka Weather: ರಾಜ್ಯದ ಬಹುತೇಕ ಭಾಗಗಲ್ಲಿ ಚಳಿ ಪ್ರಮಾಣ ಹೆಚ್ಚಾಗುತ್ತಲಿದೆ. ಈ ನಡುವೆಯೇ ಎಡರು ದಿನ ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಸಾಧಾರಣ ಮಳೆ ಬೀಳುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಹಾಗಾದ್ರೆ ಎಲ್ಲೆಲ್ಲಿ ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ. ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಇಂದು (ಜನವರಿ 10) ಬೆಳಗ್ಗೆ
ಮೈಸೂರು ಮಹಾನಗರ ಪಾಲಿಕೆ ಇನ್ಮುಂದೆ ಗ್ರೇಟರ್ ಮೈಸೂರು: ಯಾವೆಲ್ಲಾ ಪ್ರದೇಶಗಳು ಸೇರ್ಪಡೆ?
ಮೈಸೂರು ಮಹಾನಗರ ಪಾಲಿಕೆ ಈಗ 'ಬೃಹತ್ ಮೈಸೂರು ಮಹಾನಗರ ಪಾಲಿಕೆ'ಯಾಗಿ ವಿಸ್ತರಣೆಗೊಂಡಿದೆ. ಹೊರವಲಯದ ನಗರಸಭೆ, ಪಟ್ಟಣ ಪಂಚಾಯಿತಿ, ಗ್ರಾಮ ಪಂಚಾಯಿತಿಗಳು ಸೇರ್ಪಡೆಯಾಗಿವೆ. 86.31 ಚ.ಕಿ.ಮೀ. ವ್ಯಾಪ್ತಿ 341.44 ಚ.ಕಿ.ಮೀ.ಗೆ ವಿಸ್ತರಿಸಲಾಗಿದೆ. ಮೂಲಸೌಕರ್ಯ ಅಭಿವೃದ್ಧಿ, ಸುಗಮ ಆಡಳಿತ ಇದರ ಮುಖ್ಯ ಉದ್ದೇಶವಾಗಿದೆ. ಯಾವೆಲ್ಲಾ ಪ್ರದೇಶಗಳು ಈ ಬೃಹತ್ ಮೈಸೂರು ಮಹಾನಗರ ಪಾಲಿಕೆ ವ್ಯಾಪ್ತಿಗೆ ಸೇರ್ಪಡೆಯಾಗಿವೆ, ಇದಕ್ಕೆ ಆಕ್ಷೇಪಣೆಗಳಿದ್ದರೆ ಸಲ್ಲಿಸುವುದು ಹೇಗೆ? ಈ ರೀತಿಯ ಎಲ್ಲ ವಿವರಗಳನ್ನು ನೋಡಿ..
ದಾವಣಗೆರೆ ದಕ್ಷಿಣ ವಿಧಾನಸಭೆ ಕ್ಷೇತ್ರದ ಉಪ ಚುನಾವಣೆ; ಫೆ.14 ರಂದು ಅಂತಿಮ ಪಟ್ಟಿ ರಿಲೀಸ್, ರೇಸ್ನಲ್ಲಿ ಇರೋದ್ಯಾರು?
ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಅವರ ನಿಧನದಿಂದ ತೆರವಾದ ಸ್ಥಾನಕ್ಕೆ ಉಪ ಚುನಾವಣೆ ನಡೆಯಲಿದೆ. ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಬೈ ಎಲೆಕ್ಷನ್ ಸದ್ಯ ರಾಜಕೀಯ ಜಿದ್ದಾಜಿದ್ದಿಗೆ ಕಾರಣವಾಗಿದೆ. ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಪಕ್ಷಗಳಲ್ಲಿ ಹಲವು ಆಕಾಂಕ್ಷಿಗಳು ಸ್ಪರ್ಧಿಸಲು ಸಜ್ಜಾಗಿದ್ದಾರೆ. ಕಾಂಗ್ರೆಸ್ ಕೋಟೆಯಲ್ಲಿ ಕಮಲ ಅರಳಿಸಲು ಬಿಜೆಪಿ ಉತ್ಸುಕತೆ ತೋರಿದೆ. ಯಾರಿಗೆ ಟಿಕೆಟ್ ಸಿಗುತ್ತದೆ ಎಂದು ಕಾದು ನೋಡಬೇಕಾಗಿದೆ. ಇನ್ನು ಯಾರ್ಯಾರು ರೇಸ್ನಲ್ಲಿದ್ದಾರೆ ಎಂಬ ಮಾಹಿತಿ ಈ ಲೇಖನದಲ್ಲಿ ಇದೆ. ಫೆ. 14 ರಂದು ಅಂತಿಮ ಪಟ್ಟಿ ಬಿಡುಗಡೆಯಾಗಲಿದೆ ಎಂದು ಹೇಳಲಾಗುತ್ತಿದೆ
Uttar Pradesh | ರಾಮಮಂದಿರ ಸುತ್ತ 15 ಕಿ.ಮೀ ವ್ಯಾಪ್ತಿಯಲ್ಲಿ ಮಾಂಸಾಹಾರ ವಿತರಣೆ ನಿಷೇಧ
ಲಕ್ನೋ: ಅಯೋಧ್ಯೆಯ ರಾಮ ಮಂದಿರದ ಸುತ್ತ 15 ಕಿಲೋಮೀಟರ್ ವ್ಯಾಪ್ತಿಯಲ್ಲಿ ಮಾಂಸಾಹಾರ ವಿತರಣೆಯನ್ನು ಅಯೋಧ್ಯೆ ಜಿಲ್ಲಾ ಆಡಳಿತ ಸಂಪೂರ್ಣವಾಗಿ ನಿಷೇಧಿಸಿದೆ. ಅಯೋಧ್ಯೆ ಪಟ್ಟಣದ ‘ಪಾಂಚ್ ಕೋಸಿ ಪರಿಕ್ರಮಾ’ ವ್ಯಾಪ್ತಿಯಲ್ಲಿ ಆಹಾರ ವಿತರಣಾ ಸಂಸ್ಥೆಗಳು ಮಾಂಸಾಹಾರ ಪೂರೈಸುತ್ತಿವೆ ಎಂಬ ದೂರುಗಳು ಬಂದ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ ಅಯೋಧ್ಯೆ ಪಟ್ಟಣದ ಹೋಟೆಲ್ಗಳು ಮತ್ತು ಹೋಮ್ಸ್ಟೇಗಳಿಗೆ ಎಚ್ಚರಿಕೆ ನೀಡಲಾಗಿದ್ದು, ಅತಿಥಿಗಳಿಗೆ ಮಾಂಸಾಹಾರ ಹಾಗೂ ಮದ್ಯ ವಿತರಿಸದಂತೆ ಸ್ಪಷ್ಟ ಸೂಚನೆ ನೀಡಲಾಗಿದೆ. ಈ ಕುರಿತು ಪ್ರತಿಕ್ರಿಯಿಸಿದ ಅಯೋಧ್ಯೆ ಸಹಾಯಕ ಆಹಾರ ಆಯುಕ್ತ ಮಾಣಿಕ್ ಚಂದ್ರ ಸಿಂಗ್ ಅವರು, “ಈಗಾಗಲೇ ನಿಷೇಧ ಜಾರಿಯಲ್ಲಿದ್ದರೂ, ಪ್ರವಾಸಿಗಳಿಗೆ ಆನ್ಲೈನ್ ಆರ್ಡರ್ ಮೂಲಕ ಮಾಂಸಾಹಾರ ಪೂರೈಕೆ ನಡೆಯುತ್ತಿದೆ ಎಂಬ ದೂರುಗಳು ಬಂದಿವೆ. ಇದನ್ನು ಗಮನಿಸಿ ಆನ್ಲೈನ್ ಮಾಂಸಾಹಾರ ವಿತರಣೆಯನ್ನೂ ನಿಷೇಧಿಸಲಾಗಿದೆ,” ಎಂದು ತಿಳಿಸಿದ್ದಾರೆ. “ಎಲ್ಲ ಹೋಟೆಲ್ಗಳು, ಅಂಗಡಿಮಾಲೀಕರು ಹಾಗೂ ಆಹಾರ ವಿತರಣಾ ಕಂಪನಿಗಳಿಗೆ ನಿಷೇಧ ಆದೇಶದ ಬಗ್ಗೆ ಮಾಹಿತಿ ನೀಡಲಾಗಿದೆ. ಆದೇಶದ ಕಟ್ಟುನಿಟ್ಟಾದ ಅನುಸರಣೆಯನ್ನು ಖಚಿತಪಡಿಸಲು ಆಡಳಿತದಿಂದ ನಿರಂತರ ನಿಗಾ ವಹಿಸಲಾಗುವುದು,” ಎಂದು ಸಹಾಯಕ ಆಹಾರ ಆಯುಕ್ತರು ಸ್ಪಷ್ಟಪಡಿಸಿದ್ದಾರೆ. ಇನ್ನೊಂದೆಡೆ, ಅಯೋಧ್ಯೆ ಮಹಾನಗರ ಪಾಲಿಕೆ (ಎಎಂಸಿ) ಕಳೆದ ಮೇ ತಿಂಗಳಲ್ಲಿ ರಾಮಪಥದ 14 ಕಿಲೋಮೀಟರ್ ವ್ಯಾಪ್ತಿಯಲ್ಲಿ ಮದ್ಯ ಮತ್ತು ಮಾಂಸ ಮಾರಾಟ ನಿಷೇಧಿಸುವ ನಿರ್ಣಯವನ್ನು ಅಂಗೀಕರಿಸಿದ್ದರೂ, ರಾಮಪಥದ sepanjang ಇನ್ನೂ ಇಪ್ಪತ್ತನಾಲ್ಕಕ್ಕೂ ಹೆಚ್ಚು ಲೈಸನ್ಸ್ ಪಡೆದ ಮದ್ಯದ ಅಂಗಡಿಗಳು ಕಾರ್ಯನಿರ್ವಹಿಸುತ್ತಿರುವುದು ಗಮನಾರ್ಹವಾಗಿದೆ.
ಬೆಳ್ತಂಗಡಿ| ಬೆಂಕಿ ಆಕಸ್ಮಿಕ; ಚಾರ್ಮಾಡಿ ಘಾಟಿ ಮಧ್ಯೆ ಹೊತ್ತಿ ಉರಿದ ಮೆಕ್ಕೆ ಜೋಳ ಸಾಗಾಟದ ಲಾರಿ
ಬೆಳ್ತಂಗಡಿ: ಚಾರ್ಮಾಡಿ ಘಾಟಿಯ ಎರಡನೆಯ ತಿರುವಿನಲ್ಲಿ ಮೆಕ್ಕೆ ಜೋಳ ಸಾಗಾಟದ ಲಾರಿಯೊಂದು ಬೆಂಕಿಗೆ ಆಹುತಿಯಾದ ಘಟನೆ ಶುಕ್ರವಾರ ರಾತ್ರಿ ವೇಳೆ ಸಂಭವಿಸಿದೆ. ಸ್ಥಳಕ್ಕೆ ಆಗಮಿಸಿದ ಸ್ಥಳೀಯರು ಹಾಗು ಅಗ್ನಿಶಾಮಕ ದಳದವರು ಬೆಂಕಿ ನಂದಿಸುವ ಕಾರ್ಯ ಮಾಡಿದ್ದಾರೆ. ಲಾರಿ ಸಂಪೂರ್ಣ ಸುಟ್ಟು ಕರಕಲಾಗಿದೆ ಎಂದು ತಿಳಿದು ಬಂದಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.
ಇರಾನ್ ಅರಾಜಕತೆ: ಟ್ರಂಪ್ ಮಧ್ಯಪ್ರವೇಶಕ್ಕೆ ಮಾಜಿ ದೊರೆಯ ಪುತ್ರ ಆಗ್ರಹ
ವಾಷಿಂಗ್ಟನ್: ಇರಾನ್ನ ಕೊನೆಯ ಶಾಹ್ ಮೊಹಮ್ಮದ್ ರೆಝಾ ಪಹ್ಲವಿ ಅವರ ಗಡೀಪಾರುಗೊಂಡ ಪುತ್ರ ರೆಝಾ ಪಹ್ಲವಿ ಅವರು, ಇರಾನ್ನಲ್ಲಿ ನಡೆಯುತ್ತಿರುವ ವ್ಯಾಪಕ ಪ್ರತಿಭಟನೆಗಳ ಹಿನ್ನೆಲೆಯಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಶುಕ್ರವಾರ ಸಂಪರ್ಕಿಸಿ ತಕ್ಷಣ ಮಧ್ಯಪ್ರವೇಶಿಸುವಂತೆ ಆಗ್ರಹಿಸಿದ್ದಾರೆ. ಇರಾನ್ನಲ್ಲಿ ನಡೆಯುತ್ತಿರುವ ಸ್ಥಿತಿಗತಿಗಳನ್ನು ವಿವರಿಸಿದ ಪಹ್ಲವಿ, ದೇಶದಲ್ಲಿ ಇಂಟರ್ನೆಟ್ ಹಾಗೂ ಲ್ಯಾಂಡ್ಲೈನ್ ಸಂಪರ್ಕ ಸಂಪೂರ್ಣ ಸ್ಥಗಿತಗೊಂಡಿದ್ದು, ಪ್ರತಿಭಟನಾಕಾರರು ಗುಂಡೇಟು ಎದುರಿಸುತ್ತಿದ್ದಾರೆ ಎಂದು ಹೇಳಿದ್ದಾರೆ. ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು, ಟ್ರಂಪ್ ಅವರ “ತುರ್ತು ಮತ್ತು ತಕ್ಷಣದ ಗಮನ, ಬೆಂಬಲ ಹಾಗೂ ಕ್ರಮ”ಕ್ಕೆ ಮನವಿ ಮಾಡಿದ್ದಾರೆ. “ಮಾನ್ಯ ಅಧ್ಯಕ್ಷರೇ, ಇದು ನಿಮ್ಮ ಗಮನ, ಬೆಂಬಲ ಮತ್ತು ಕ್ರಮಕ್ಕೆ ಮಾಡುತ್ತಿರುವ ತುರ್ತು ಹಾಗೂ ತಕ್ಷಣದ ಕರೆ. ನಿನ್ನೆ ರಾತ್ರಿ ಲಕ್ಷಾಂತರ ಸಾಹಸಿ ಇರಾನಿಗರು ಬೀದಿಗಿಳಿದು ಗುಂಡುಗಳನ್ನು ಎದುರಿಸುತ್ತಿರುವುದನ್ನು ನೀವು ನೋಡಿರಬಹುದು. ಇಂದು ಅವರು ಗುಂಡೇಟು ಮಾತ್ರವಲ್ಲದೆ, ಸಂಪೂರ್ಣ ಸಂಪರ್ಕ ನಿಷೇಧವನ್ನೂ ಎದುರಿಸುತ್ತಿದ್ದಾರೆ. ಇಂಟರ್ನೆಟ್ ಇಲ್ಲ, ದೂರವಾಣಿ ಸಂಪರ್ಕವೂ ಇಲ್ಲ,” ಎಂದು ಅವರು ಎಕ್ಸ್ನಲ್ಲಿ ಬರೆದಿದ್ದಾರೆ. “ಜನರ ಕೈಯಲ್ಲಿ ತನ್ನ ಆಡಳಿತ ಅಂತ್ಯವಾಗಲಿದೆ ಎಂಬ ಭೀತಿಯಿಂದ, ಅಲಿ ಖಮೇನಿಯವರು ಜನರ ಮೇಲೆ ಕ್ರೂರ ದಮನದ ಬೆದರಿಕೆ ಒಡ್ಡಿದ್ದಾರೆ. ಪ್ರತಿಭಟನಾಕಾರರನ್ನು ಬೆಂಬಲಿಸುವ ನಿಮ್ಮ ಬಲಿಷ್ಠ ಘೋಷಣೆಯೇ ಆಡಳಿತವನ್ನು ಆತಂಕಕ್ಕೀಡು ಮಾಡಿದೆ. ಈ ಯುವ ಹೀರೊಗಳನ್ನು ಹತ್ಯೆ ಮಾಡಲು ಸಂಪರ್ಕ ನಿಷೇಧವನ್ನು ಅವರು ಬಳಸುತ್ತಿದ್ದಾರೆ,” ಎಂದು ಆರೋಪಿಸಿದ್ದಾರೆ. ಇರಾನ್ ಜನರು ಮತ್ತೊಮ್ಮೆ ಬೀದಿಗಿಳಿದು ಪ್ರತಿಭಟನೆ ನಡೆಸಲಿದ್ದು, “ಸಮಯ ಅತ್ಯಂತ ಅಮೂಲ್ಯವಾಗಿದೆ” ಎಂದು ಹೇಳಿ ಟ್ರಂಪ್ ಅವರನ್ನು ತಕ್ಷಣ ಮಧ್ಯಪ್ರವೇಶಿಸುವಂತೆ ಮನವಿ ಮಾಡಿದ್ದಾರೆ. “ನಾನು ಜನರನ್ನು ಸ್ವಾತಂತ್ರ್ಯಕ್ಕಾಗಿ ಹೋರಾಡಲು ಬೀದಿಗೆ ಕರೆತಂದಿದ್ದೇನೆ. ಭಾರಿ ಸಂಖ್ಯೆಯಲ್ಲಿ ಬೀದಿಗಿಳಿದು ಭದ್ರತಾ ಪಡೆಗಳನ್ನು ಮಣಿಸಲು ಅವರು ನಿನ್ನೆ ಯಶಸ್ವಿಯಾಗಿದ್ದಾರೆ. ನಿಮ್ಮ ಎಚ್ಚರಿಕೆಯೇ ಆಡಳಿತದ ಪಡೆಗಳನ್ನು ಹಿಂದೆ ಸರಿಯುವಂತೆ ಮಾಡಿದೆ. ಆದರೆ ಸಮಯ ಅತ್ಯಂತ ಮುಖ್ಯ. ಜನರು ಮತ್ತೆ ಬೀದಿಗಿಳಿಯಲಿದ್ದಾರೆ. ದಯವಿಟ್ಟು ಅವರಿಗೆ ಸಹಾಯ ಮಾಡಿ,” ಎಂದು ಅವರು ಹೇಳಿದ್ದಾರೆ. “ನೀವು ಶಾಂತಿಯ ನಾಯಕ ಹಾಗೂ ನಿಮ್ಮ ಮಾತಿಗೆ ಬದ್ಧರಾಗಿರುವ ವ್ಯಕ್ತಿ ಎಂದು ನಾನು ನಂಬಿದ್ದೇನೆ. ಇರಾನ್ ಜನರ ರಕ್ಷಣೆಗೆ ಮಧ್ಯಪ್ರವೇಶಿಸಲು ದಯವಿಟ್ಟು ಸಿದ್ಧರಾಗಿ,” ಎಂದು ರೆಝಾ ಪಹ್ಲವಿ ಅವರು ತಮ್ಮ ಸಂದೇಶದಲ್ಲಿ ಆಗ್ರಹಿಸಿದ್ದಾರೆ.
ದ್ವೇಷ ಭಾಷಣ ತಡೆ ಬಿಲ್ಗೆ ಬ್ರೇಕ್; ಒಳಮೀಸಲಾತಿ ಸೇರಿ, 3 ಪ್ರಮುಖ ಬಿಲ್ಗಳು ಬಾಕಿ ಉಳಿಸಿಕೊಂಡ ಲೋಕಭವನ
ಬೆಳಗಾವಿಯ ಚಳಿಗಾಲದ ಅಧಿವೇಶದಲ್ಲಿ ಅಂಗೀಕಾರವಾದ 22 ವಿಧೇಯಕಗಳ ಪೈಕಿ 19ಕ್ಕೆ ಮಾತ್ರ ರಾಜ್ಯಪಾಲರು ಸಹಿ ಹಾಕಿದ್ದಾರೆ. ಬಹುನಿರೀಕ್ಷಿತ ಎಸ್ಸಿ ಒಳಮೀಸಲಾತಿ ವಿಧೇಯಕ ಸೇರಿದಂತೆ ಮೂರು ಪ್ರಮುಖ ವಿಧೇಯಕಗಳಿಗೆ ಇನ್ನೂ ಅಂಕಿತ ಬಿದ್ದಿಲ್ಲ.
ಮಧ್ಯರಾತ್ರಿ ಇಲಿ ಪಾಷಾಣ ಆರ್ಡರ್ ಮಾಡಿದ್ದ ಗೃಹಿಣಿ; ಕಣ್ಣೀರು ಗಮನಿಸಿದ ಬ್ಲಿಂಕಿಟ್ ಬಾಯ್, ಮುಂದೆ ಮಾಡಿದ್ದಿಷ್ಟು
ತಮಿಳುನಾಡಿನಲ್ಲಿ ಹೃದಯಸ್ಪರ್ಶಿ ಘಟನೆಯೊಂದು ನಡೆದಿದೆ. ಬ್ಲಿಂಕಿಟ್ ಡೆಲಿವರಿ ಬಾಯ್ವೊಬ್ಬರು ಆತ್ಮಹತ್ಯೆ ಮಾಡಿಕೊಳ್ಳಲು ಹೊರಟಿದ್ದ ಮಹಿಳೆಯ ಪ್ರಾಣ ಉಳಿಸಿದ್ದಾರೆ. ಇಲಿ ಪಾಷಾಣ ಆರ್ಡರ್ ಮಾಡಿದ್ದ ಮಹಿಳೆಯೊಬ್ಬರು ಅದನ್ನು ಡೆಲಿವರಿ ಬಾಯ್ನಿಂದ ತೆಗೆದುಕೊಳ್ಳುವಾಗ ಅಳುತ್ತಿದ್ದರು ಇದನ್ನು ಗಮಿನಿಸಿದ ಆತನಿಗೆ ಏನೋ ಸರಿಯಿಲ್ಲ ಎಂದು ಅವರಿಗೆ ಸಾಂತ್ವಾನ ಹೇಳಿ ಆರ್ಡರ್ ವಾಪಸ್ತೆಗೆದುಕೊಂಡು ಹೋಗಿದ್ದಾರೆ. ಸದ್ಯ ಅವರ ಬಗ್ಗೆ ಆನ್ಲೈನ್ನಲ್ಲಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಜನವರಿ 10ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ
Petrol, Diesel Price: ಪೆಟ್ರೋಲ್, ಡೀಸೆಲ್ ದರದಲ್ಲಿ ಜಾಸ್ತಿ ಅಲ್ಲದಿದ್ದರೂ, ಸ್ವಲ್ಪ ಪ್ರಮಾಣದಲ್ಲಾದ್ರೂ ಏರಿಳಿತ ಆಗುತ್ತಿರುತ್ತದೆ. ಹಾಗಾದರೆ, ಇಂದು (ಜನವರಿ 10) ಬೆಂಗಳೂರು ಸೇರಿದಂತೆ ರಾಜ್ಯದ ಉಳಿದ ಜಿಲ್ಲೆಗಳಲ್ಲಿ ಲೀಟರ್ ಪೆಟ್ರೋಲ್, ಡೀಸೆಲ್ ಬೆಲೆ ಎಷ್ಟಿದೆ ಎನ್ನುವ ಅಂಕಿಅಂಶಗಳನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ. ಶಕ್ತಿಯ ಮೂಲಗಳು ಎನಿಸಿಕೊಂಡಿರುವ ಪೆಟ್ರೋಲ್ ಮತ್ತು ಡೀಸೆಲ್ ಇಂಧನ ಅತ್ಯವಶ್ಯಕವಾಗಿ ಬೇಕಾಗುವ ಸಂಪನ್ಮೂಲಗಳಾಗಿವೆ.
ದೇವಸ್ಥಾನಗಳಲ್ಲಿ ಸೇವಾ ಶುಲ್ಕ ಹೆಚ್ಚಳ: ಬಿಜೆಪಿ ಆರೋಪಕ್ಕೆ ಸಚಿವ ರಾಮಲಿಂಗಾರೆಡ್ಡಿ ಸ್ಪಷ್ಟನೆ
ರಾಜ್ಯ ಸರ್ಕಾರವು ಇತ್ತೀಚೆಗೆ ದೇವಸ್ಥಾನಗಳಲ್ಲಿ ಸೇವಾ ಶುಲ್ಕ ಹೆಚ್ಚಳ ಮಾಡಿದೆ. ಇದಕ್ಕೆ ವಿರೋಧ ವ್ಯಕ್ತಪಡಿಸಿರುವ ಬಿಜೆಪಿ, ಸೇವಾ ಕಾಣಿಕೆ ಹೆಸರಿನಲ್ಲಿ ಭಕ್ತರ ಸುಲಿಗೆ ಮಾಡಲು ಮುಂದಾಗಿದೆ ಎಂದು ಆರೋಪ ಮಾಡಿದೆ. ಇದಕ್ಕೆ ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ ಸ್ಪಷ್ಟನೆ ನೀಡಿದ್ದಾರೆ. ಅಲ್ಲದೆ ಈ ಹಿಂದೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಯಾವೆಲ್ಲ ದೇವಸ್ಥಾನಗಳಲ್ಲಿ ಸೇವಾ ಶುಲ್ಕ ಹೆಚ್ಚಳವಾಗಿತ್ತು ಎಂದು
ಬಡವರ ಬಾದಾಮಿ ಶೇಂಗಾ, ಗಾಣದ ಎಣ್ಣೆಗೂ ಬಂಪರ್ ಬೆಲೆ; ಆವಕ ಕುಸಿತದಿಂದ ರೈತರಿಗೆ ಭಾರೀ ನಿರಾಸೆ
ಚಿತ್ರದುರ್ಗ ಜಿಲ್ಲೆಯಲ್ಲಿ ಈ ಬಾರಿ ಮುಂಗಾರು ಮಳೆ ಕೈಕೊಟ್ಟಿದೆ. ಆದರೆ, ಈ ಮಧ್ಯೆ ಇತ್ತ ಶೇಂಗಾ ಬೆಲೆ ಏರಿಕೆಯಾಗಿರುವುದು ರೈತರಲ್ಲಿ ಕೊಂಚ ಬೇಸರವನ್ನುಂಟು ಮಾಡಿದೆ. ಆವಕ ಕುಸಿತದ ಮಧ್ಯೆ ಶೇಂಗಾ ಇಳಿಕೆಯಾಗಿರುವುದು ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ.ಎಪಿಎಂಸಿಗಳಿಗೆ ಬರುವ ಶೇಂಗಾ ಪ್ರಮಾಣ ಶೇ.50ರಷ್ಟು ಕುಸಿದಿದೆ. ಆವಕ ಕಡಿಮೆಯಾದ ಕಾರಣ ಶೇಂಗಾ ಬೆಲೆ ಗಗನಕ್ಕೇರಿದೆ. ರಾಜ್ಯದ ಇತರ ಜಿಲ್ಲೆಗಳಲ್ಲೂ ಇದೇ ಪರಿಸ್ಥಿತಿ ಇದೆ. ಇದರಿಂದ ಶೇಂಗಾ ಎಣ್ಣೆ, ಬೀಜದ ದರ ಹೆಚ್ಚಳವಾಗುವ ನಿರೀಕ್ಷೆ ಇದೆ.
ಇ-ಖರೀದಿ ವ್ಯವಸ್ಥೆಯನ್ನು ತಾಂತ್ರಿಕವಾಗಿ ಪರಿಷ್ಕರಿಸಿ; ಕರ್ನಾಟಕ ಸರ್ಕಾರಕ್ಕೆ ಹೈಕೋರ್ಟ್ ಆದೇಶ
ಸಾರ್ವಜನಿಕ ಕಾಮಗಾರಿಗಳ ಟೆಂಡರ್ ಪ್ರಕ್ರಿಯೆಯಲ್ಲಿನ ನ್ಯೂನತೆಗಳನ್ನು ಸರಿಪಡಿಸಲು, ರಾಜ್ಯದ ಇ-ಖರೀದಿ ವ್ಯವಸ್ಥೆಯನ್ನು ತಾಂತ್ರಿಕವಾಗಿ ಪರಿಷ್ಕರಿಸುವಂತೆ ಹೈಕೋರ್ಟ್ ಸರ್ಕಾರಕ್ಕೆ ಆದೇಶಿಸಿದೆ. ನಕಲಿ ದಾಖಲೆಗಳ ವಂಚನೆ ತಡೆಯಲು ಸ್ವಯಂಚಾಲಿತ ವ್ಯವಸ್ಥೆ ಮತ್ತು ರಿಯಲ್-ಟೈಮ್ ಪರಿಶೀಲನೆ ಕಡ್ಡಾಯಗೊಳಿಸಲು ನಿರ್ದೇಶನ ಕೊಟ್ಟಿದೆ. ಇದು ಸಾರ್ವಜನಿಕ ಬೊಕ್ಕಸಕ್ಕೆ ಹಾನಿ ಮತ್ತು ವ್ಯವಸ್ಥೆಯ ಸಮಗ್ರತೆಗೆ ಧಕ್ಕೆ ತರುತ್ತಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ಉತ್ತರ ಪ್ರದೇಶದ ಶೀತಗಾಳಿಯ ನಡುವೆಯೂ, 9 ವರ್ಷದ ವಂಶಿಕಾ ಯಾದವ್ 450 ಕಿ.ಮೀ. ದೂರವನ್ನು ಸ್ಕೇಟಿಂಗ್ ಮೂಲಕ ಕ್ರಮಿಸಿ ಅಯೋಧ್ಯೆಗೆ ತಲುಪಿದ್ದಾಳೆ. ಆರು ದಿನಗಳ ಪ್ರಯಾಣದ ನಂತರ ರಾಮಲಲ್ಲಾನ ದರ್ಶನ ಪಡೆದು ಧನ್ಯತಾ ಭಾವ ಹೊಂದಿದ್ದಾಳೆ. ಆಕೆಯ ದೃಢಸಂಕಲ್ಪವನ್ನು ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಶ್ಲಾಘಿಸಿದೆ.
Belagavi | ಪತ್ನಿಯ ಕೊಂದು ಪತಿ ಆತ್ಮಹತ್ಯೆ
ಬೆಳಗಾವಿ : ತಾಲೂಕಿನ ತುರಕರ ಶೀಗಿಹಳ್ಳಿ ಗ್ರಾಮದಲ್ಲಿ ಶುಕ್ರವಾರ ಪತ್ನಿಯನ್ನು ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿದ ಪತಿ, ಬಳಿಕ ತಾನೂ ನೇಣಿಗೆ ಶರಣಾದ ಘಟನೆ ವರದಿಯಾಗಿದೆ. ಯಲ್ಲವ್ವ ಶಿವಪ್ಪ ಕಂಬಳಿ (43) ಹತ್ಯೆಯಾದವರಾಗಿದ್ದು, ಶಿವಪ್ಪ ಸಣ್ಣಬಸಪ್ಪ ಕಂಬಳಿ (52) ಆತ್ಮಹತ್ಯೆ ಮಾಡಿಕೊಂಡವರು ಎಂದು ಗುರುತಿಸಲಾಗಿದೆ. ಪತ್ನಿ ತವರು ಮನೆಗೆ ತೆರಳುವ ವಿಚಾರವಾಗಿ ದಂಪತಿಯ ನಡುವೆ ಜಗಳ ನಡೆದಿತ್ತು ಎನ್ನಲಾಗಿದೆ. ಒಂದು ವಾರದ ಹಿಂದೆ ಯಲ್ಲವ್ವ ಅವರ ತಾಯಿ ನಿಧನರಾಗಿದ್ದು, ಆ ದುಃಖದ ಹಿನ್ನೆಲೆಯಲ್ಲಿ ಯಲ್ಲವ್ವ ಅವರು ತವರು ಮನೆಗೆ ಹೋಗಲು ಶುಕ್ರವಾರ ಸಿದ್ಧತೆ ಮಾಡಿಕೊಂಡಿದ್ದರು. ಈ ವಿಷಯ ತಿಳಿದ ಪತಿ ಶಿವಪ್ಪ ಅವರು ಆಕ್ರೋಶಗೊಂಡು ಪತ್ನಿಯ ಮೇಲೆ ಕೊಡಲಿಯಿಂದ ಹಲ್ಲೆ ನಡೆಸಿ ಕೊಲೆ ಮಾಡಿರುವುದಾಗಿ ಕಿತ್ತೂರು ಪೊಲೀಸರು ತಿಳಿಸಿದ್ದಾರೆ. ಘಟನೆ ಕುರಿತು ಕಿತ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
9.5 ಲಕ್ಷ ಲಂಚ ಸ್ವೀಕಾರ : ಕೇಂದ್ರೀಯ ವಿದ್ಯುತ್ ಸಂಶೋಧನಾ ಸಂಸ್ಥೆಯ ಜಂಟಿ ನಿರ್ದೇಶಕ ಸಹಿತ ಇಬ್ಬರ ಬಂಧನ
ಬೆಂಗಳೂರು : ಭ್ರಷ್ಟಾಚಾರದ ಪ್ರಕರಣದಲ್ಲಿ ಕೇಂದ್ರೀಯ ವಿದ್ಯುತ್ ಸಂಶೋಧನಾ ಸಂಸ್ಥೆಯ(ಸಿಪಿಆರ್ಐ) ಜಂಟಿ ನಿರ್ದೇಶಕ ಸಹಿತ ಇಬ್ಬರನ್ನು ಕೇಂದ್ರೀಯ ತನಿಖಾ ದಳ(ಸಿಬಿಐ)ದ ಅಧಿಕಾರಿಗಳು ಬಂಧಿಸಿರುವುದಾಗಿ ವರದಿಯಾಗಿದೆ. ಸಿಪಿಆರ್ಐ ಜಂಟಿ ನಿರ್ದೇಶಕ ರಾಜಾರಾಮ್ ಮೋಹನ್ರಾವ್ ಚೆನ್ನು ಎಂಬುವರು 9.5 ಲಕ್ಷ ರೂ. ಲಂಚ ಸ್ವೀಕರಿಸುವ ವೇಳೆ ಸಿಬಿಐ ದಾಳಿ ನಡೆಸಿ ಬಂಧಿಸಿದ್ದು, ಲಂಚ ನೀಡುತ್ತಿದ್ದ ಸುಧೀರ್ ಗ್ರೂಪ್ ಆಫ್ ಕಂಪೆನಿಯ ನಿರ್ದೇಶಕ ಅತುಲ್ ಖನ್ನಾ ಕೂಡ ಬಂಧನಕ್ಕೊಳಗಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ. ಜಂಟಿ ನಿರ್ದೇಶಕ ರಾಜಾರಾಮ್ ನಿವಾಸದ ಮೇಲೆ ದಾಳಿ ನಡೆಸಿದ ಸಿಬಿಐ, 3.50 ಕೋಟಿ ರೂ. ನಗದು, 4 ಲಕ್ಷ ರೂ.ಗಳಿಗೂ ಅಧಿಕ ಮೌಲ್ಯದ ವಿದೇಶಿ ಕರೆನ್ಸಿಗಳನ್ನೂ ಜಪ್ತಿ ಮಾಡಿಕೊಂಡಿದೆ. ಅಮೆರಿಕನ್ ಡಾಲರ್, ಹಾಂಕಾಂಗ್ ಡಾಲರ್, ಸಿಂಗಪೂರ್ ಡಾಲರ್, ಇಂಡೋನೇಶ್ಯಾ ರುಪಯ್ಯ, ಮಲೇಷ್ಯಾ ರಿಂಗಿಟ್, ಯುರೋ ಯುವನ್, ಸ್ವೀಡಿಶ್ ಕ್ರೊನ ಮತ್ತು ಯುಎಇ ದಿರ್ಹಾಮ್ಗಳು ಪತ್ತೆಯಾಗಿವೆ. ಸುಧೀರ್ ಗ್ರೂಪ್ ಆಫ್ ಕಂಪೆನಿಯ ಎಲೆಕ್ಟ್ರಿಕಲ್ ಉಪಕರಣಗಳ ತಪಾಸಣಾ ವರದಿ ನೀಡಲು ಜಂಟಿ ನಿರ್ದೇಶಕ ರಾಜಾರಾಮ್ ಚೆನ್ನು ಲಂಚ ಪಡೆಯುತ್ತಿದ್ದರು ಎಂದು ಅನಾಮಧೇಯ ವ್ಯಕ್ತಿ ಸಿಬಿಐಗೆ ದೂರು ನೀಡಿದ್ದರು.
ಕೆಇಎ: ಇಂದು, ನಾಳೆ ನೇಮಕಾತಿ ಪರೀಕ್ಷೆ
ಬೆಂಗಳೂರು : ತಾಂತ್ರಿಕ ಶಿಕ್ಷಣ, ಬಿಡಿಎ, ಬೆಂಗಳೂರು ಜಲಮಂಡಳಿ, ಕೆಎಸ್ಡಿಎಲ್, ಕೃಷಿ ಮಾರಾಟ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳಲ್ಲಿನ ಖಾಲಿ ಹುದ್ದೆಗಳ ನೇಮಕಾತಿಗೆ ಜ.10 ಮತ್ತು ಜ.11ರಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಲಿಖಿತ ಪರೀಕ್ಷೆ ನಡೆಸುತ್ತಿದ್ದು, ಸಕಲ ಸಿದ್ಧತೆ ಮಾಡಿಕೊಂಡಿದೆ. ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ಪ್ರಕಟನೆ ಹೊರಡಿಸಿದ್ದು, ಜ.10ರಂದು ಬೆಂಗಳೂರು, ಕಲ್ಬುರ್ಗಿ ಮತ್ತು ಧಾರವಾಡದ 25 ಕೇಂದ್ರಗಳಲ್ಲಿ ನಡೆಯುವ ಪರೀಕ್ಷೆಯನ್ನು 9,936 ಮಂದಿ ಹಾಗೂ ಜ.11ರಂದು 12 ಜಿಲ್ಲೆಗಳ 259 ಕೇಂದ್ರಗಳಲ್ಲಿ ನಡೆಯುವ ಪರೀಕ್ಷೆಯನ್ನು 1.03 ಲಕ್ಷ ಮಂದಿ ಬರೆಯುತ್ತಿದ್ದಾರೆ ಎಂದು ತಿಳಿಸಿದ್ದಾರೆ. ಪಾರದರ್ಶಕ ಹಾಗೂ ಅಕ್ರಮಗಳಿಗೆ ಅವಕಾಶ ಇಲ್ಲದಂತೆ ಪರೀಕ್ಷೆಗಳನ್ನು ನಡೆಸಲು ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಪರೀಕ್ಷಾ ಕೊಠಡಿಯಲ್ಲಿ ಸಿಸಿಟಿವಿ ಜತೆಗೆ ಜಾಮರ್ ಕೂಡ ಹಾಕಿದ್ದು, ಎಲೆಕ್ಟ್ರಾನಿಕ್ ವಸ್ತುಗಳ ಬಳಕೆಗೆ ನಿರ್ಬಂಧ ವಿಧಿಸಲಾಗಿದೆ. ಮುಖಚಹರೆ ಪತ್ತೆ ತಂತ್ರಜ್ಞಾನ ಬಳಸಿಯೇ ಅಭ್ಯರ್ಥಿಗಳನ್ನು ಪರೀಕ್ಷಾ ಕೇಂದ್ರದ ಒಳಗೆ ಬಿಡಲಾಗುತ್ತದೆ. ವಸ್ತ್ರ ಸಂಹಿತೆ ಇದ್ದು, ಅಭ್ಯರ್ಥಿಗಳು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಅವರು ಹೇಳಿದ್ದಾರೆ. ವಿವಿಧ ಹುದ್ದೆಗಳಿಗೆ ಪ್ರತ್ಯೇಕ ಪರೀಕ್ಷೆ ನಡೆಯುತ್ತಿರುವುದರಿಂದ ತಮಗೆ ಅನ್ವಯವಾಗುವ ದಿನ ನಿಗದಿತ ಕೇಂದ್ರಕ್ಕೆ ಹೋಗಿ ಪರೀಕ್ಷೆ ಬರೆಯಬೇಕು. ವಿವರಗಳಿಗೆ ಕೆಇಎ ವೆಬ್ ಸೈಟ್ ನೋಡಬೇಕು ಎಂದು ಅವರು ಸಲಹೆ ನೀಡಿದ್ದಾರೆ.
ವೆನೆಜುವೆಲಾದ ಮತ್ತೊಂದು ತೈಲ ಹಡಗನ್ನು ಸೀಜ್ ಮಾಡಿದ ಅಮೆರಿಕ - ವಾರದಲ್ಲಿ ಇದು ಐದನೇ ಆಯಿಲ್ ಟ್ಯಾಂಕರ್
ಅಮೆರಿಕವು ವೆನೆಜುವೆಲಾದ ದಿಗ್ಬಂಧನವನ್ನು ಉಲ್ಲಂಘಿಸಲು ಯತ್ನಿಸಿದ್ದ 'ಓಲಿನಾ' ಎಂಬ ತೈಲ ಟ್ಯಾಂಕರ್ ಅನ್ನು ವಶಪಡಿಸಿಕೊಂಡಿದೆ. ಇದು ಕಳೆದ ಕೆಲವು ವಾರಗಳಲ್ಲಿ ಅಮೆರಿಕ ವಶಪಡಿಸಿಕೊಂಡ ಐದನೇ ಹಡಗಾಗಿದ್ದು, ಮಾದಕವಸ್ತು ಕಳ್ಳಸಾಗಣೆ ಮತ್ತು ನಿರ್ಬಂಧಿತ ತೈಲ ಸಾಗಣೆಯನ್ನು ತಡೆಯುವ ಕಾರ್ಯಾಚರಣೆಯ ಭಾಗವಾಗಿದೆ.
ಜ.12 ರಿಂದ ಜ.16ರ ವರೆಗೆ ಮೂಡುಬಿದಿರೆಯ ಸ್ವರಾಜ್ಯ ಮೈದಾನದಲ್ಲಿ ಅಂತರ್ ವಿವಿ ಕ್ರೀಡಾಕೂಟ : ಡಾ.ಭಗವಾನ್
ಬೆಂಗಳೂರು : ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿವಿ(ಆರ್ಜಿಯುಎಚ್ಎಸ್) ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಸಹಯೋಗದಲ್ಲಿ ಜ.12ರಿಂದ ಜ.16ರ ವರೆಗೆ ಮೂಡುಬಿದಿರೆಯ ಸ್ವರಾಜ್ಯ ಮೈದಾನದಲ್ಲಿ 85ನೇ ಅಖಿಲ ಭಾರತ ಪುರುಷ ಹಾಗೂ ಮಹಿಳೆಯರ ಅಂತರ್ ವಿಶ್ವವಿದ್ಯಾಲಯ ಅಥ್ಲೆಟಿಕ್ ಚಾಂಪಿಯನ್ ಶಿಪ್ ಕ್ರೀಡಾಕೂಟವನ್ನು ಆಯೋಜಿಸಲಾಗಿದೆ ಎಂದು ವಿವಿಯ ಕುಲಪತಿ ಡಾ.ಭಗವಾನ್ ಬಿ.ಸಿ. ಹೇಳಿದ್ದಾರೆ. ಶುಕ್ರವಾರ ನಗರದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಕ್ರೀಡಾಕೂಟದಲ್ಲಿ ದೇಶದ 312ಕ್ಕೂ ಅಧಿಕ ವಿಶ್ವವಿದ್ಯಾಲಯಗಳ 4,288 ಅಥ್ಲೀಟ್ಗಳು ಹಾಗೂ ಸುಮಾರು 1,000 ಕ್ರೀಡಾಧಿಕಾರಿಗಳು ಭಾಗವಹಿಸಲಿದ್ದಾರೆ. ಕ್ರೀಡಾಕೂಟದಲ್ಲಿ ತಲಾ ಎರಡು ವಿಭಾಗದಲ್ಲಿ 47 ಸ್ಪರ್ಧೆಗಳು ನಡೆಯಲಿದ್ದು, ಹೊನಲು ಬೆಳಕಿನ ವ್ಯವಸ್ಥೆ ಮತ್ತು ಅತ್ಯಾಧುನಿಕ ಫೋಟೋ ಫಿನಿಶಿಂಗ್ ತಂತ್ರಜ್ಞಾನದ ವ್ಯವಸ್ಥೆಯನ್ನು ಮಾಡಲಾಗಿದೆ. ಕ್ರೀಡಾಕೂಟವನ್ನು ಖೇಲೋಇಂಡಿಯಾ ಹಾಗೂ ಅಂತರಾಷ್ಟ್ರೀಯ ವಿಶ್ವವಿದ್ಯಾಲಯಗಳ ಕ್ರೀಡಾಕೂಟಕ್ಕೆ ಮಾನದಂಡವಾಗಿ ಪರಿಗಣಿಸಲಾಗುವುದು ಎಂದರು. ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯವು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಸಹಯೋಗದೊಂದಿಗೆ ಈ ಹಿಂದೆ 72, 75 ಹಾಗೂ 80ನೇ ಅಥ್ಲೆಟಿಕ್ ಕ್ರೀಡಾಕೂಟವನ್ನು ಆಯೋಜಿಸಿತ್ತು. ಇದೀಗ, 85ನೇ ಕ್ರೀಡಾಕೂಟವನ್ನು 4ನೇ ಬಾರಿಗೆ ಆಯೋಜಿಸಲಾಗುತ್ತಿದ್ದು, ಕ್ರೀಡಾಕೂಟದಲ್ಲಿ ಭಾಗವಹಿಸುವ ಎಲ್ಲ ವಿಶ್ವವಿದ್ಯಾಲಯಗಳು ಮತ್ತು ವಿದ್ಯಾರ್ಥಿಗಳಿಗೆ ಆನ್ಲೈನ್ ನೋಂದಣಿ ಸೌಲಭ್ಯವನ್ನು ನೀಡಲಾಗಿದೆ ಎಂದು ಅವರು ಹೇಳಿದರು. ಉದ್ಘಾಟನಾ ಸಮಾರಂಭ : ಜ.12ರಂದು ಸಂಜೆ 4:30ಕ್ಕೆ ವಿಧಾನಸಭೆಯ ಸ್ವೀಕರ್ ಡಾ. ಯು.ಟಿ. ಖಾದರ್ ಕ್ರೀಡಾಕೂಟವನ್ನು ಉದ್ಘಾಟಿಸಿ, ಕ್ರೀಡಾಜ್ಯೋತಿಯನ್ನು ಸ್ವೀಕರಿಸಲಿದ್ದಾರೆ. ದಕ್ಷಿಣ ಕನ್ನಡ ಲೋಕಸಭಾ ಸದಸ್ಯ ಕ್ಯಾಪ್ಟನ್ ಬ್ರಿಜೇಶ್ ಚೌಟ ಧ್ವಜಾರೋಹಣವನ್ನು ನೆರೆವೇರಿಸಲಿದ್ದಾರೆ. ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್, ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ್ ಆರ್. ಪಾಟೀಲ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ ಎಂದು ಡಾ. ಭಗವಾನ್ ಬಿ.ಸಿ. ಮಾಹಿತಿ ನೀಡಿದರು. ಸಮಾರಂಭದಲ್ಲಿ ಮೂಲ್ಕಿ-ಮೂಡುಬಿದಿರೆ ಕ್ಷೇತ್ರದ ಶಾಸಕ ಉಮಾನಾಥ ಎ. ಕೋಟ್ಯಾನ್, ಮಾಜಿ ಸಚಿವ ಅಭಯಚಂದ್ರ ಜೈನ್, ಸೆನೆಟ್ ಸದಸ್ಯರಾದ ಡಾ. ಶ್ರೀನಿವಾಸ ಎನ್.ಟಿ., ಎಚ್. ಸಿ. ಬಾಲಕೃಷ್ಣ, ರಿಝ್ವಾನ್ ಅರ್ಶದ್, ಪುಟ್ಟಣ್ಣ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ(ವೈದ್ಯಕೀಯ ಶಿಕ್ಷಣ) ಅಪರ ಮುಖ್ಯ ಕಾರ್ಯದರ್ಶಿ ಮುಹಮ್ಮದ್ ಮೊಹಸಿನ್, ಆಳ್ವಾಸ್ ಶಿಕ್ಷಣ ಪ್ರತಿμÁ್ಠನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಸೇರಿದಂತೆ ದಕ್ಷಿಣ ಕನ್ನಡ ಹಾಗೂ ಉಡುಪಿ ಕ್ಷೇತ್ರದ ಹಾಲಿ ಮತ್ತು ಮಾಜಿ ಸಂಸದರು, ಶಾಸಕರು ಹಾಗೂ ಪರಿಷತ್ನ ಸದಸ್ಯರು ಉಪಸ್ಥಿತರಿರಲಿದ್ದಾರೆ ಎಂದು ಅವರು ತಿಳಿಸಿದರು. ಆಕರ್ಷಕ ಸಾಂಸ್ಕೃತಿಕ ಮೆರವಣಿಗೆ: ಕ್ರೀಡಾಕೂಟದ ಸ್ಪರ್ಧೆಗಳು ಜ.12ರಂದು ಬೆಳಗ್ಗೆ 6:30ರಿಂದಲೇ ಆರಂಭವಾಗಲಿದ್ದು, ಅಂದು ಸಂಜೆ ಕ್ರೀಡಾಕೂಟದ ಉದ್ಘಾಟನೆ ಮತ್ತು ಸಾಂಸ್ಕೃತಿಕ ಮೆರವಣಿಗೆ ನಡೆಯಲಿದೆ. ನಮ್ಮ ದೇಶದ ವಿವಿಧ ಕಲೆ-ಸಂಸ್ಕೃತಿಗಳನ್ನು ಬಿಂಬಿಸುವ ಕಲಾತಂಡಗಳು ಈ ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿವೆ ಎಂದು ಅವರು ತಿಳಿಸಿದರು. ವಾಕಥಾನ್: ರಾಜೀವ್ ಗಾಂಧಿ ವಿವಿ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಸಂಯೋಜಿತ ಕಾಲೇಜುಗಳು, ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ(ಎನ್ಸಿಬಿ) ಮತ್ತು ದಿಶಾ ಭೋದ್ ಫೌಂಡೇಶನ್ ಸಹಯೋಗದೊಂದಿಗೆ ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಜ.13 ರಂದು ಬೆಳಗ್ಗೆ 7 ಗಂಟೆಗೆ ನಶಾ ಮುಕ್ತ ಭಾರತ ಮತ್ತು ಅಂಗಾಂಗ ದಾನ ಅಭಿಯಾನದ ವಾಕಥಾನ್ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ, ರಾಜೀವ್ ಗಾಂಧಿ ವಿವಿ ಕುಲಸಚಿವ ಅರ್ಜುನ್ ಒಡೆಯರ್, ಕುಲಸಚಿವ(ಮೌಲ್ಯಮಾಪನ) ಡಾ. ರಿಯಾಜ್ ಬಾಷಾ ಎಸ್. ಇದ್ದರು.
ಜನಾಂಗಗಳ ನಡುವೆ ದ್ವೇಷ ಬಿತ್ತಲಾಗುತ್ತಿದೆ : ಪ್ರೊ.ಎಸ್.ಜಿ.ಸಿದ್ದರಾಮಯ್ಯ
ಬೆಂಗಳೂರು : ‘ದೇಶ, ಜನಾಂಗಗಳ ನಡುವೆ ದ್ವೇಷ ಬಿತ್ತುವ ಕೆಲಸ ನಡೆಯುತ್ತಿದೆ. ಇದರಿಂದ, ವಿಶ್ವವ್ಯಾಪಿಯಾಗಿ ನಡೆಯುತ್ತಿರುವ ಹಿಂಸೆ, ಕ್ರೌರ್ಯ, ರಕ್ತಪಾತ ತಡೆಯಲು ಸಾಂಸ್ಕೃತಿಕ ಮನಸ್ಸುಗಳು ಎಚ್ಚೆತ್ತುಕೊಳ್ಳಬೇಕು. ಸಾಂಸ್ಕೃತಿಕ ಮೌಲ್ಯ ಮಾತ್ರ ಜಗತ್ತನ್ನು ಬೆಸೆಯಲು ಸಾಧ್ಯ’ ಎಂದು ಹಿರಿಯ ಸಾಹಿತಿ ಪ್ರೊ.ಎಸ್.ಜಿ. ಸಿದ್ದರಾಮಯ್ಯ ತಿಳಿಸಿದ್ದಾರೆ. ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ವತಿಯಿಂದ ನಗರದ ಮಲ್ಲತ್ತಹಳ್ಳಿಯ ಕಲಾಗ್ರಾಮದಲ್ಲಿ ಶುಕ್ರವಾರ ಆಯೋಜಿಸಿದ್ದ ‘2025ನೇ ಸಾಲಿನ ಗೌರವ ಪ್ರಶಸ್ತಿ ಪ್ರದಾನ ಹಾಗೂ 2024ನೇ ಸಾಲಿನ ಪುಸ್ತಕ ಬಹುಮಾನ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು, ಜಗತ್ತಿನ ಅತ್ಯಂತ ಧುರಿತ ಕಾಲಘಟ್ಟದಲ್ಲಿ ನಾವು ಜೀವಿಸುತ್ತಿದ್ದು, ಹಿಂದೆಂದೂ ಕಾಣದಂತಹ ವಿಷಮ ವಾತಾವರಣ ಜಗತ್ತನ್ನು ತುಂಬಿಕೊಂಡಿದೆ ಎಂದು ಬೇಸರ ವ್ಯಕ್ತಪಡಿಸಿದರು. ಸಣ್ಣ ಮನಸ್ಸಿನ, ದುಷ್ಟ ಬುದ್ಧಿಯ ಹಾಗೂ ದೂರ್ತ ನಡೆಯ ರಾಜಕಾರಣಿಗಳು ಜಗತ್ತಿನ ಎಲ್ಲ ದೇಶಗಳಲ್ಲಿಯೂ ತುಂಬಿಕೊಂಡಿದ್ದಾರೆ. ಲಕ್ಷಾಂತರ ಕೋಟಿ ಹಣವನ್ನು ಲೂಟಿ ಮಾಡಿಕೊಂಡು ಹೋಗಿರುವವರ ಕುರಿತು ಜನಸಾಮಾನ್ಯರಿಗೆ ಚಿಂತೆಯಿಲ್ಲ. ಆದರೆ, ಒಂದು ಹೊತ್ತಿನ ತುತ್ತಿಗೂ ಕಷ್ಟಪಡುತ್ತಿರುವ ಜನರಿಗೆ ಅನ್ನ ಹಾಕಿದರೆ ಇಡೀ ದೇಶವೇ ದಿವಾಳಿಯಾಯಿತು ಎಂದು ಬೊಬ್ಬೆ ಹಾಕುತ್ತಾರೆ. ಇಂತಹ ಸಂದರ್ಭದಲ್ಲಿ 12ನೇ ಶತಮಾನದ ಚಳವಳಿ ಹೆಚ್ಚು ಕಾಡಿಸುತ್ತದೆ ಎಂದು ಹೇಳಿದರು. ಬಸವಣ್ಣ ಅವರು ಎಂದಿಗೂ ದಾಸೋಹವನ್ನು ‘ಬಿಟ್ಟಿ ಕೂಳು’ ಎನ್ನಲಿಲ್ಲ. ಅದು ದುಡಿಯುವವನಿಗೆ ಶಕ್ತಿ ಒದಗಿಸುವ ವಿತರಣಾ ತತ್ವ. ಇಂತಹ 12ನೇ ಶತಮಾನದ ಕಾರ್ಮಿಕ ಚಳವಳಿಯ ಮರುಸೃಷ್ಟಿಯ ತುರ್ತು ಇದೆ. ಎಂದು ತಿಳಿಸಿದರು. ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಅಧ್ಯಕ್ಷ ಡಾ.ಚನ್ನಪ್ಪ ಕಟ್ಟಿ ಮಾತನಾಡಿ, ‘ಏಕ ಸಂಸ್ಕೃತಿಯ ಆರಾಧಕರಲ್ಲದ ನಮಗೆ ಸಾಂಸ್ಕೃತಿಕ ಬಹುತ್ವ ಅತೀ ಮುಖ್ಯ. ಕುವೆಂಪು ಭಾಷಾಭಾರತಿ ಪ್ರಾಧಿಕಾರದ ಅನುವಾದದ ಮೂಲಕ ಹೊಸ-ಹೊಸ ಸಾಹಿತ್ಯ ಪಂಥಗಳ ಪರಿಚಯ ಹಾಗೂ ಅದರಲ್ಲಿ ಒಳಗೊಳ್ಳುವ ನವ ನವೀನವಾದ ಸಿದ್ಧಾಂತಗಳು ಜನರಿಗೆ ತಲುಪಬೇಕು. ಈ ಮೂಲಕ ಒಂದು ಸಂಸ್ಕೃತಿ ಇನ್ನೊಂದು ಸಂಸ್ಕೃತಿಯನ್ನು ಪರಸ್ಪರ ಗೌರವಿಸಬೇಕು ಎಂಬ ಮೂಲ ಆಶಯದಿಂದ ಕಾರ್ಯನಿರ್ವಹಿಸುತ್ತಿದೆ ಎಂದು ತಿಳಿಸಿದರು. ಗೌರವ ಪ್ರಶಸ್ತಿ ಪುರಸ್ಕೃತೆ ಡಾ.ಕೆ.ಆರ್.ಸಂಧ್ಯಾರೆಡ್ಡಿ ಮಾತನಾಡಿದರು. ಜೆ.ವಿ.ಕಾರ್ಲೊ, ಡಾ.ಕೆ.ಆರ್.ಸಂಧ್ಯಾರೆಡ್ಡಿ, ಪ್ರೊ.ವನಮಾಲಾ ವಿಶ್ವನಾಥ, ಡಾ.ವಿಠಲರಾವ್ ಟಿ.ಗಾಯಕ್ವಾಡ್, ಡಾ.ಜೆ.ಪಿ.ದೊಡಮನಿ ಅವರಿಗೆ 2025ನೇ ಸಾಲಿನ ಗೌರವ ಪ್ರಶಸ್ತಿ ಹಾಗೂ ಡಾ.ನಟರಾಜ್ ಹೊನ್ನವಳ್ಳಿ, ಡಾ. ಸದಾನಂದ ಆರ್., ಕಾರ್ತಿಕ್ ಆರ್., ಡಾ. ಮಲ್ಲೇಶಪ್ಪ ಸಿದ್ರಾಂಪೂರ, ಡಾ.ದೇವರಾಜ್ ಎನ್. ಅವರಿಗೆ 2024ನೇ ಸಾಲಿನ ಪುಸ್ತಕ ಬಹುಮಾನ ಪ್ರದಾನ ಮಾಡಲಾಯಿತು. ಈ ವೇಳೆ ಪ್ರಶಸ್ತಿ ಪುರಸ್ಕೃತರ ಪರಿಚಯ ಪುಸ್ತಕವನ್ನು ಬಿಡುಗಡೆಗೊಳಿಸಲಾಯಿತು. ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ರಿಜಿಸ್ಟ್ರಾರ್ ದತ್ತಪ್ಪ ಸಾಗನೂರ ಮತ್ತಿತರರು ಉಪಸ್ಥಿತರಿದ್ದರು.
ಮಲೆಯಾಳಿ ಭಾಷಾ ಮಸೂದೆಯಿಂದ ಕನ್ನಡಿಗರ ಮೇಲೆ ದುಷ್ಪರಿಣಾಮ: ಕೇರಳ ಸಿಎಂಗೆ ಸಿದ್ದರಾಮಯ್ಯ ಪತ್ರ
ಕೇರಳ ವಿಧಾನಸಭೆಯಲ್ಲಿ ಮಂಡನೆಯಾಗಿರುವ ಮಲೆಯಾಳಿ ಭಾಷಾ ಮಸೂದೆಯಿಂದ ಗಡಿಭಾಗದ ಜಿಲ್ಲೆಗಳಲ್ಲಿ, ವಿಶೇಷವಾಗಿ ಕಾಸರಗೋಡಿನಲ್ಲಿ ನೆಲೆಸಿರುವ ಕನ್ನಡಿಗರ ಮೇಲೆ ದುಷ್ಪರಿಣಾಮಗಳು ಬೀಳಲಿವೆ ಎಂಬ ಚರ್ಚೆಗಳು ಜೋರಾಗಿವೆ. ಈ ಕುರಿತು ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಗೆ ಸಿಎಂ ಸಿದ್ದರಾಮಯ್ಯ ಅವರು ಪತ್ರ ಬರೆದಿದ್ದು, ಮಸೂದೆಯ ಪುನರ್ ಪರಿಶೀಲನೆಗೆ ಒತ್ತಾಯಿಸಿದ್ದಾರೆ. ಆ ಪತ್ರದ ಪ್ರಮುಖ ಅಂಶಗಳು ಹೀಗಿವೆ. ಪರಸ್ಪರ ಗೌರವ,
Bengaluru | ಯುವತಿಯಿಂದ 2ಲಕ್ಷ ರೂ.ಸುಲಿಗೆ; ಗುರೂಜಿ ವಿರುದ್ಧ ಎಫ್ಐಆರ್ ದಾಖಲು
ಬೆಂಗಳೂರು : ಮದುವೆಯಾಗಲು ಪೂಜೆ ಮಾಡಬೇಕು ಎಂಬ ನೆಪವೊಡ್ಡಿ ಯುವತಿಯಿಂದ 2 ಲಕ್ಷ ರೂಪಾಯಿ ಹಣ ಸುಲಿಗೆ ಮಾಡಿದ ಆರೋಪದಡಿ ಗುರೂಜಿ ವಿರುದ್ಧ ಇಲ್ಲಿನ ಆಡುಗೋಡಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. 21 ವರ್ಷದ ಯುವತಿ ನೀಡಿದ ದೂರಿನನ್ವಯ ಚಂದ್ರಶೇಖರ್ ಸುಗತ್ ಗುರೂಜಿ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆಡುಗೋಡಿಯ ಪಿ.ಜಿ.ಯೊಂದರಲ್ಲಿ ನೆಲೆಸಿದ್ದ ಯುವತಿ, ಖಾಸಗಿ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ. 2025ರ ಡಿಸೆಂಬರ್ನಲ್ಲಿ ಇನ್ಸ್ಟಾಗ್ರಾಂ ನೋಡುವಾಗ ‘ಚಂದ್ರಶೇಖರ್ ಸುಗತ್ ಗುರೂಜಿಯಿಂದ ಎಲ್ಲಾ ಕಷ್ಟಗಳನ್ನು ಪರಿಹರಿಸಲಾಗುವುದು’ ಎಂಬ ಜಾಹೀರಾತು ನೋಡಿ ಪ್ರೇರಿತಗೊಂಡಿದ್ದರು. ಅನಂತರ ಮೊಬೈಲ್ ಸಂಖ್ಯೆ ಪಡೆದು ಗುರೂಜಿಗೆ ಕರೆ ಮಾಡಿ ತನಗೆ ಮದುವೆಯಾಗಲಿದೆಯಾ ಎಂದು ಪ್ರಶ್ನಿಸಿದ್ದಳು. ಇದಕ್ಕೆ ಉತ್ತರಿಸಿದ ಗುರೂಜಿ, ಮದುವೆಯಾಗಲಿದೆ. ಆದರೆ, ಹಣ ಖರ್ಚಾಗಲಿದೆ ಎಂದು ಹೇಳಿದ್ದರು. ಅದರಂತೆ ಆತನ ಮಾತನ್ನು ನಂಬಿ ಹಂತ-ಹಂತವಾಗಿ 2 ಲಕ್ಷ ರೂ.ವರೆಗೆ ಹಣ ನೀಡಿದ್ದಾಳೆ. ಆತ ಹೇಳಿದಂತೆ ಪೂಜೆ ಮಾಡಿದ್ದಾಳೆ. ಆದರೆ, ಮದುವೆಯಾಗದಿದ್ದರೆ ಹಣ ವಾಪಸ್ ನೀಡುವುದಾಗಿ ಹೇಳಿದ್ದ ಗುರೂಜಿ, ಮರಳಿ ಹಣ ನೀಡದೆ ಧಮಕಿ ಹಾಕಿದ್ದಾರೆ ಎಂದು ದೂರಿನಲ್ಲಿ ಯುವತಿ ಆರೋಪಿಸಿದ್ದಾಳೆ. ಈ ಸಂಬಂಧ ಪ್ರಕರಣ ದಾಖಲಾಗುತ್ತಿದ್ದಂತೆ ಆರೋಪಿ ಚಂದ್ರಶೇಖರ್ ಸುಗತ್ ಗುರೂಜಿ ನಾಪತ್ತೆಯಾಗಿದ್ದು, ಆತನ ಪತ್ತೆಗಾಗಿ ಶೋಧಕಾರ್ಯ ಕೈಗೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಕಲ್ಯಾಣ ಕರ್ನಾಟಕದ ಸಮಗ್ರ ಅಭಿವೃದ್ಧಿ ಕ್ರಮ ಕೈಗೊಳ್ಳಿ : ಮಾಜಿ ಸಚಿವ ವಿ.ಶ್ರೀನಿವಾಸಗೌಡ
ʼʼಪ್ರತ್ಯೇಕ ರಾಜ್ಯಕ್ಕಾಗಿ ಹೋರಾಡಿದರೆ ಬೆಂಬಲʼʼ
Bengaluru | ಥಣಿಸಂದ್ರದಲ್ಲಿ ಮನೆಗಳು ಧ್ವಂಸ: ಸರಕಾರದ ನಡೆಗೆ ಮುಸ್ಲಿಮ್ ಯುನೈಟೆಡ್ ಫ್ರಂಟ್ ಆಕ್ರೋಶ
ಬೆಂಗಳೂರು : ಥಣಿಸಂದ್ರದಲ್ಲಿ ಬೆಳ್ಳಂಬೆಳಗ್ಗೆ ಬುಲ್ಡೋಜರ್ ಬಳಸಿ ಮನೆಗಳನ್ನು ಧ್ವಂಸ ಮಾಡುವ ಮೂಲಕ ಬಡವರ ಸೂರನ್ನು ಕಸಿದುಕೊಂಡಿರುವ ರಾಜ್ಯ ಸರಕಾರದ ನಡೆ ಅತ್ಯಂತ ಖಂಡನೀಯ ಎಂದು ಮುಸ್ಲಿಮ್ ಯುನೈಟೆಡ್ ಫ್ರಂಟ್ ಆಕ್ರೋಶ ವ್ಯಕ್ತಪಡಿಸಿದೆ. ಸರಕಾರಕ್ಕೆ ಸ್ವಲ್ಪವಾದರೂ ಮಾನವೀಯತೆ ಇದ್ದಿದ್ದರೆ, ಥಣಿಸಂದ್ರದ ನಿವಾಸಿಗಳನ್ನು ಪ್ರಾಣಿಗಳಂತೆ ನಡೆಸಿಕೊಳ್ಳುತ್ತಿರಲಿಲ್ಲ. ಈ ಭೂಮಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ(ಬಿಡಿಎ)ಕ್ಕೆ ಸೇರಿದ್ದರೆ, ಅಲ್ಲಿನ ನಿವಾಸಿಗಳಿಗೆ ಸುಳ್ಳು ಭರವಸೆಗಳನ್ನು ನೀಡಿ ಭೂಮಿಯನ್ನು ನೋಂದಾಯಿಸಲು ಸಹಾಯ ಮಾಡಿದ ಅಧಿಕಾರಿಗಳು ಮತ್ತು ರಾಜಕೀಯ ನಾಯಕರ ವಿರುದ್ಧ ಕ್ರಮ ಕೈಗೊಳ್ಳಬೇಕಿತ್ತು ಎಂದು ಮುಸ್ಲಿಮ್ ಯುನೈಟೆಡ್ ಫ್ರಂಟ್ನ ಸಂಚಾಲಕ ಮಸೂದ್ ಅಬ್ದುಲ್ ಖಾದರ್ ಕಿಡಿಗಾರಿದರು. ಥಣಿಸಂದ್ರದಲ್ಲಿ ಬಿಡಿಎ ವತಿಯಿಂದ ಮನೆಗಳನ್ನು ಧ್ವಂಸಗೊಳಿಸಿರುವ ಸ್ಥಳಕ್ಕೆ ಮುಖಂಡರ ನಿಯೋಗದೊಂದಿಗೆ ಭೇಟಿ ನೀಡಿ, ಸ್ಥಳೀಯರೊಂದಿಗೆ ಸಮಾಲೋಚನೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದೇ ವಿಳಾಸಕ್ಕೆ ವಿದ್ಯುತ್ ಸಂಪರ್ಕ, ಪಡಿತರ ಚೀಟಿ, ಮತದಾರರ ಗುರುತಿನ ಚೀಟಿ ಮತ್ತು ಆಧಾರ್ ಕಾರ್ಡ್ಗಳನ್ನು ನೀಡಿದ ಸರಕಾರಿ ಅಧಿಕಾರಿಗಳ ವಿರುದ್ಧ ಸರಕಾರ ಕ್ರಮ ಕೈಗೊಳ್ಳಬೇಕಿತ್ತು ಎಂದು ಹೇಳಿದರು. ಪೂರ್ವ ಸೂಚನೆ ಇಲ್ಲದೆ, ಬುಲ್ಡೋಜರ್ಗಳು ಮತ್ತು ಹೆಚ್ಚಿನ ಸಂಖ್ಯೆಯ ಪೊಲೀಸರೊಂದಿಗೆ ಬಂದು ಇದ್ದಕ್ಕಿದ್ದಂತೆ ಮನೆಗಳನ್ನು ಕೆಡವುದು ಮತ್ತು ಅವರಿಗೆ ಮನೆಯಲ್ಲಿನ ವಸ್ತುಗಳನ್ನು ಎತ್ತುಕೊಳ್ಳಲು ಅವಕಾಶ ನೀಡದಿರುವುದು, ಮಕ್ಕಳು, ಮಹಿಳೆಯರು ಮತ್ತು ವೃದ್ಧರನ್ನು ನೋಡಿಕೊಳ್ಳದಿರುವುದು ಕೇವಲ ಧ್ವಂಸ ಕೃತ್ಯವಲ್ಲ, ಅಮಾನವೀಯ ಮತ್ತು ಅಸಹ್ಯಕರ ಕೃತ್ಯ ಎಂದು ಅವರು ಕಿಡಿಗಾರಿದರು. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಈ ಕ್ರಮವು ಬಿಡಿಎ ಅಧ್ಯಕ್ಷ ಮತ್ತು ಶಾಸಕರ ಅರಿವಿಲ್ಲದೆ ನಡೆಯಲು ಸಾಧ್ಯವಿಲ್ಲ. ಕಳೆದ ವಾರ, ಕೋಗಿಲು ಬಳಿ ನಡೆದ ಧ್ವಂಸ ಕಾರ್ಯಾಚರಣೆಯಲ್ಲಿ ನೂರಾರು ಮಂದಿ ಸಂತ್ರಸ್ತರಾಗಿದ್ದಾರೆ. ಆಡಳಿತ ನಡೆಸುವವರು ಅಲ್ಲಿನ ಜನರಿಗೆ ನೀಡಿದ ಆಶ್ವಾಸನೆಗಳನ್ನು ಈವರೆಗೆ ಈಡೆರಿಸಿಲ್ಲ. ಈಗ ಮತ್ತೊಮ್ಮೆ ಬಡವರ ಮೇಲೆ ಗದಾಪ್ರಹಾರ ನಡೆಸಿದ್ದಾರೆ ಎಂದು ಮಸೂದ್ ಅಬ್ದುಲ್ ಖಾದರ್ ತಿಳಿಸಿದರು. ಇದೇ ಸಂದರ್ಭದಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಝಮೀರ್ ಅಹ್ಮದ್ ಖಾನ್ ಮತ್ತು ಬಿಡಿಎ ಅಧ್ಯಕ್ಷ ಎನ್.ಎ.ಹಾರಿಸ್ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿ, ಈ ಕ್ರಮಕ್ಕೆ ಆಕ್ಷೇಪ ವ್ಯಕ್ತಪಡಿಸಿದರು ಮತ್ತು ಸಂತ್ರಸ್ತರಿಗೆ ನ್ಯಾಯ ಒದಗಿಸುವಂತೆ ಅವರು ಆಗ್ರಹಿಸಿದರು. ಕರ್ನಾಟಕ ಮುಸ್ಲಿಮ್ ಯುನೈಟೆಡ್ ಫ್ರಂಟ್ನ ಜಂಟಿ ಸಂಚಾಲಕ ಮುಹಮ್ಮದ್ ಯೂಸುಫ್ ಕನ್ನಿ ಮಾತನಾಡಿ, ಅನ್ಯಾಯದ ವಿರುದ್ಧ ಧ್ವನಿ ಎತ್ತಬೇಕು. ಮುಸ್ಲಿಮರು, ದಲಿತರು, ದುರ್ಬಲ ವರ್ಗಗಳು ಮತ್ತು ಕಾರ್ಮಿಕರು ಕರ್ನಾಟಕದಲ್ಲಿ ಕಾಂಗ್ರೆಸ್ ಅನ್ನು ಅಧಿಕಾರಕ್ಕೆ ತರಲು ಉತ್ತಮ ಕೆಲಸ ಮಾಡಿದ್ದರು, ಆದರೆ ಇಂದು ಅದೇ ಜನರ ಮೇಲೆ ಒಂದು ರೀತಿಯ ದಬ್ಬಾಳಿಕೆ ಪ್ರಾರಂಭವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಜಮೀಯತ್ ಉಲಮಾ ಬೆಂಗಳೂರು ನಗರ ಘಟಕದ ಅಧ್ಯಕ್ಷ ಮೌಲಾನಾ ಹಫೀಝ್ ಮುಹಮ್ಮದ್ ಫಾರೂಕ್, ಜಮಾಅತೆ ಇಸ್ಲಾಮಿ ಹಿಂದ್ ರಾಜ್ಯ ಕಾರ್ಯದರ್ಶಿ ಲಬೀದ್ ಶಾಫಿ, ಮುಸ್ಲಿಮ್ ಯುನೈಟೆಡ್ ಫ್ರಂಟ್ ಜಂಟಿ ಕಾರ್ಯದರ್ಶಿ ಅಲ್ಲಾಹ್ ಬಕ್ಷ್ ಅದಾವುಲ್ ಆಮ್ರಿ, ಸೋಲಿಡಾರಿಟಿ ಯೂತ್ ಮೂವ್ವೆಂಟ್ ರಾಜ್ಯಾಧ್ಯಕ್ಷ ಡಾ.ನಸೀಮ್ ಅಹ್ಮದ್, ಎಜಾಝ್ ಅಹ್ಮದ್ ನಿಯೋಗದಲ್ಲಿ ಉಪಸ್ಥಿತರಿದ್ದರು.
ಅಫಜಲಪುರ | ಜ.21 ರಂದು ನಿಜಶರಣ ಅಂಬಿಗರ ಚೌಡಯ್ಯನವರ ಜಯಂತಿ; ಪೂರ್ವಭಾವಿ ಸಭೆ
ಅಫಜಲಪುರ : ಜ.21 ರಂದು ನಿಜ ಶರಣ ಅಂಬಿಗರ ಚೌಡಯ್ಯ ನವರ ಜಯಂತೋತ್ಸವ ಹಾಗೂ ಅಂಬಿಗರ ಚೌಡಯ್ಯನವರ ಭವನ ಉದ್ಘಾಟನೆ ಹಿನ್ನಲೆ ತಾಲೂಕಿನ ದೇವಲ ಗಾಣಗಾಪೂರ ಗ್ರಾಮದ ದಿ.ವಿಠಲ ಹೇರೂರವರ ಶಕ್ತಿ ಕೇಂದ್ರದಲ್ಲಿ ದೇವಲ ಗಾಣಗಾಪೂರ ವಲಯದ ಕೋಲಿ ಕಬ್ಬಲಿಗ ಸಮಾಜದ ವತಿಯಿಂದ ಸಮಾಜ ಪೂರ್ವಭಾವಿ ಸಭೆ ಜರುಗಿತು. ಸಭೆಯಲ್ಲಿ ಜ.21 ರಂದು ನಿಜಶರಣ ಅಂಬಿಗರ ಚೌಡಯ್ಯನವರ ಜಯಂತೋತ್ಸವ ಬಹು ಅದ್ದೂರಿಯಾಗಿ ಭಕ್ತಿ ಭಾವದಿಂದ ಸಡಗರ ಸಂಭ್ರಮದಿಂದ ಆಚರಣೆ ಮಾಡುವುದಾಗಿ ಮುಖಂಡರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ನಂತರ ಸಮಾಜದ ಹಿರಿಯ ಮುಖಂಡರ ಸಮ್ಮುಖದಲ್ಲಿ ನೂತನ ಸಮಾಜದ ಹಂಗಾಮಿ ಪದಾಧಿಕಾರಿಗಳ ಆಯ್ಕೆ ಜರುಗಿತು. ದೇವಲ ಗಾಣಗಾಪೂರ ವಲಯದ ಕೋಲಿ ಸಮಾಜದ ನೂತನ ಹಂಗಾಮಿ ಅಧ್ಯಕ್ಷರಾಗಿ ಯಲ್ಲಪ್ಪ ರಮಗಾ ಅವರನ್ನು ಆಯ್ಕೆ ಮಾಡಲಾಯಿತು. ಪ್ರಧಾನ ಕಾರ್ಯದರ್ಶಿಯಾಗಿ ಓಂಕಾರ ಹೇರೂರ ಅವರನ್ನು ಆಯ್ಕೆ ಮಾಡಿ ಶುಭ ಕೋರಲಾಯಿತು. ಈ ಸಂದರ್ಭದಲ್ಲಿ ಸಭೆಯಲ್ಲಿ ಈರಣ್ಣ ಡಾಂಗೆ, ಬಲವಂತ ಜಕಬಾ,ಈರಣ್ಣ ಹಾಗರಗುಂಡಗಿ,ಗುರು ಹೇರೂರ, ಸಿದ್ದು ಡಾಂಗೆ, ಶ್ರೀಪಾದ ಮಾಳಗೆ, ರಾಮು ಹೇರೂರ,ಚಂದಪ್ಪ ದೇವರಮನಿ,ರಾಕೇಶ ವಡಗೇರಿ,ಯಲ್ಲಪ್ಪ ರಮಗಾ ಯಲ್ಲಪ್ಪ ಮುದಕಣ್ಣ, ಮಲ್ಲು ನಿಂಬರ್ಗಿ,ದಿಗಂಬರ ಕಾಡಹುಲಿ,ಶಾಂತಪ್ಪ ಮುದಕಣ್ಣ,ಮಲ್ಲು ನಿಂಬರ್ಗಿ, ರಾಘು ಘತ್ತರಗಿ ಸೇರಿದಂತೆ ಅನೇಕರಿದ್ದರು. .
ಕಲಬುರಗಿ| ಟ್ರಾಫಿಕ್ ಸಿಗ್ನಲ್, ಸಿಬ್ಬಂದಿ ನಿಯೋಜಿಸುವಂತೆ ಅಭಿವೃದ್ಧಿ ಪರ ಸಮಿತಿಯಿಂದ ಮನವಿ
ಕಲಬುರಗಿ: ನಗರದ ಹಳೆ ಆರ್.ಟಿ.ಓ ಕ್ರಾಸ್ (ರಾಜಾಪುರ ಕ್ರಾಸ್ ಸೇಡಂ ರಸ್ತೆ) ಬಳಿ ತಕ್ಷಣವೇ ಟ್ರಾಫಿಕ್ ಸಿಗ್ನಲ್ ಅಳವಡಿಸುವುದು ಹಾಗೂ ಟ್ರಾಫಿಕ್ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸುವಂತೆ ಕಲಬುರಗಿ ಅಭಿವೃದ್ಧಿ ಪರ ಸಮಿತಿ ವತಿಯಿಂದ ನಗರ ಪೊಲೀಸ್ ಆಯುಕ್ತ ಡಾ.ಶರಣಪ್ಪ ಎಸ್.ಡಿ. ಅವರಿಗೆ ಮನವಿ ಸಲ್ಲಿಸಿ, ಒತ್ತಾಯಿಸಲಾಯಿತು. ಕಳೆದ ವರ್ಷ ಈ ಕುರಿತು ಈಗಾಗಲೇ ಮನವಿ ಸಲ್ಲಿಸಿದ್ದರೂ, ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ. ಟ್ರಾಫಿಕ್ ಸಿಗ್ನಲ್ ಮತ್ತು ಪೊಲೀಸ್ ವ್ಯವಸ್ಥೆ ಇಲ್ಲದ ಕಾರಣ ಈ ಜಂಕ್ಷನ್ನಲ್ಲಿ ಪ್ರತಿದಿನ ಭಾರಿ ವಾಹನಗಳ ಸಂಚಾರದಿಂದ ಟ್ರಾಫಿಕ್ ಜಾಮ್ ಉಂಟಾಗಿ ಅಪಘಾತಗಳು ಹಾಗೂ ಅನಾಹುತಗಳು ನಿರಂತರವಾಗಿ ಸಂಭವಿಸುತ್ತಿವೆ. ಈ ಪ್ರದೇಶದಲ್ಲಿ ಶಾಲೆಗೆ ಹೋಗುವ ಮಕ್ಕಳ ಸಂಚಾರವೂ ಹೆಚ್ಚಿರುವುದರಿಂದ ಸಾರ್ವಜನಿಕರ ಹಾಗೂ ಮಕ್ಕಳ ಸುರಕ್ಷತೆ ಗಂಭೀರ ಅಪಾಯಕ್ಕೆ ಒಳಗಾಗಿದೆ ಎಂದು ಸಮಿತಿಯ ಸದಸ್ಯರು ಆತಂಕ ವ್ಯಕ್ತಪಡಿಸಿದ್ದಾರೆ. ಈ ಸಂದರ್ಭದಲ್ಲಿ ಸಮಿತಿಯ ಅಧ್ಯಕ್ಷ ಲೂಯಿಸ್ ಕೋರಿ, ಮಲ್ಲಿಕಾರ್ಜುನ, ಸಾಗರ್, ಚಂದ್ರಶೇಖರ ಮಡಿವಾಳ, ಮುಬೀನ್ ಅಹ್ಮದ್, ಮಲ್ಲಿನಾಥ ಬಿರಾದಾರ, ಶಿವಲಿಂಗಯ್ಯ ಮಾಥಪಾಟಿ, ರಮೇಶ್ ಕಮಲಾಪುರ, ಮತ್ತಿತ್ತರರು ಇದ್ದರು.
ರಾಯಚೂರು ಉತ್ಸವ : ಜ.19ರಂದು ಖೋಖೋ ಸ್ಪರ್ಧೆ
ರಾಯಚೂರು : ರಾಯಚೂರು ಜಿಲ್ಲೆಯಲ್ಲಿ ಜನವರಿ-2026ರ ಮಾಹೆಯಲ್ಲಿ ಜರುಗುವ ಎಡೆದೊರೆ ನಾಡು ರಾಯಚೂರು ಜಿಲ್ಲಾ ಉತ್ಸವ 2026ರ ಕಾರ್ಯಕ್ರಮದಲ್ಲಿ ವಿವಿಧ ಕ್ರೀಡೆಗಳನ್ನು ಆಯೋಜಿಸಲಾಗಿದೆ. ಜ.19, 20ರಂದು ಜಿಲ್ಲಾ ಕ್ರೀಡಾಂಗಣದಲ್ಲಿ ಬೆಳಗ್ಗೆ 9 ಗಂಟೆಗೆ ರಾಜ್ಯ ಮಟ್ಟದ ಖೋಖೋ ಸ್ಪರ್ಧೆಯನ್ನು ಆಯೋಜನೆ ಮಾಡಲಾಗಿದೆ. ಆಸಕ್ತರು ಈ ಪಂದ್ಯಗಳ ನೋಡಲ್ ಅಧಿಕಾರಿಗಳಾದ ಸಿಂಧನೂರಿನ ಟಿಪಿಇಒ ಸೋಮಲಿಂಗಪ್ಪ ಮೊಬೈಲ್ ಸಂಖ್ಯೆ: 7975743096 ಅಥವಾ ದೈಹಿಕ ಶಿಕ್ಷಕರಾದ ನರಹರಿರಾವ್ ಅವರ ಮೊಬೈಲ್ ಸಂಖ್ಯೆ: 9880184457ಗೆ ಸಂಪರ್ಕಿಸಿ ತಂಡದ ಹೆಸರು ನೋಂದಾಯಿಸಬಹುದಾಗಿದೆ. ಕ್ರೀಡೆಗಳಲ್ಲಿ ಆಸಕ್ತರು ಭಾಗವಹಿಸಿ ರಾಯಚೂರು ಜಿಲ್ಲೆ ಹೆಮ್ಮೆಪಡುವಂತಹ ಕ್ರೀಡೋತ್ಸವ ಮೂಡಿಬರಲು ಸಹಕರಿಸಿ ರಾಯಚೂರು ಉತ್ಸವವನ್ನು ಯಶಸ್ವಿಗೊಳಿಸಲು ಎಲ್ಲಾ ಕ್ರೀಡಾಪಟುಗಳು ಮತ್ತು ಸಾರ್ವಜನಿಕರಲ್ಲಿ ವಿನಂತಿಸಿದೆ ಎಂದು ಅಪರ ಜಿಲ್ಲಾಧಿಕಾರಿಗಳಾದ ಶಿವಾನಂದ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ರಾಯಚೂರು ಉತ್ಸವ ಆಚರಣೆ ಅಂಗವಾಗಿ ಎಲ್ಲಾ ತಾಲೂಕುಗಳಲ್ಲಿ ಜ.21ರಂದು ಮ್ಯಾರಾಥಾನ್ ಓಟ ಹಾಗೂ ಜ.25ರಂದು ಸೈಕ್ಲಿಂಗ್ ಅನ್ನು ಸರಕಾರಿ ನೌಕರರಿಗೆ ಮತ್ತು ಸಾರ್ವಜನಿಕರಿಗೆ ಆಯೋಜಿಸುವಂತೆ ಸಂಬಂಧಿಸಿದ ತಹಶೀಲ್ದಾರರಿಗೆ ರಾಯಚೂರು ಉತ್ಸವ ಆಚರಣಾ ಕಾರ್ಯಕಾರಿ ಸಮಿತಿಯ ಅಧ್ಯಕ್ಷರು ಆಗಿರುವ ಜಿಲ್ಲೆಯ ಜಿಲ್ಲಾಧಿಕಾರಿಗಳಾದ ನಿತೀಶ್ ಕೆ. ಅವರು ಸೂಚಿಸಿದ್ದಾರೆ.
ರಾಯಚೂರು ಉತ್ಸವ-2026 : ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಕಲಾತಂಡಗಳಿಂದ ಅರ್ಜಿ ಆಹ್ವಾನ
ರಾಯಚೂರು: ಜಿಲ್ಲೆಯ ಹೆಮ್ಮೆಯ 'ಎಡೆದೊರೆ ನಾಡು ರಾಯಚೂರು ಉತ್ಸವ-2026' ಜ.29, 30 ಮತ್ತು 31ರಂದು ಅತ್ಯಂತ ವೈಭವಯುತವಾಗಿ ಜರುಗಲಿದೆ. ಈ ಉತ್ಸವವನ್ನು ವಿಶಿಷ್ಟ ಹಾಗೂ ಆಕರ್ಷಣೀಯವಾಗಿ ಆಚರಿಸುವ ನಿಟ್ಟಿನಲ್ಲಿ ಜಿಲ್ಲೆಯ ಅತ್ಯುತ್ತಮ ಕಲಾತಂಡಗಳನ್ನು ಆಯ್ಕೆ ಮಾಡಲು ಜಿಲ್ಲಾಡಳಿತ ನಿರ್ಧರಿಸಿದೆ. ಉತ್ಸವದ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ರಾಯಚೂರು ಜಿಲ್ಲೆಯ ವೇದಿಕೆ ಕಲಾತಂಡಗಳು ಹಾಗೂ ಜಾನಪದ ಕಲಾತಂಡಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆಸಕ್ತ ಕಲಾವಿದರು ಮತ್ತು ತಂಡಗಳು ತಮ್ಮ ಸ್ವವಿವರದ ಮಾಹಿತಿಯನ್ನು ಒಳಗೊಂಡ ಅರ್ಜಿಯನ್ನು ಜನವರಿ 12ರ ಒಳಗಾಗಿ ಇ-ಕಚೇರಿಗೆ ಸಲ್ಲಿಸಬೇಕೆಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಜಿಲ್ಲೆಯ ಸ್ಥಳೀಯ ಪ್ರತಿಭೆಗಳಿಗೆ ಆದ್ಯತೆ ನೀಡುವ ನಿಟ್ಟಿನಲ್ಲಿ ಈ ಆಯ್ಕೆ ಪ್ರಕ್ರಿಯೆ ನಡೆಯಲಿದ್ದು, ನಿಗದಿತ ಅವಧಿಯೊಳಗೆ ಅರ್ಜಿ ಸಲ್ಲಿಸುವಂತೆ ಕೋರಲಾಗಿದೆ.
ವಿಜಯನಗರ | ಕರ್ನಾಟಕ ಮಾಧ್ಯಮ ಅಕಾಡಮಿಯ ವಾರ್ಷಿಕ ಪ್ರಶಸ್ತಿಗೆ ಕೆ.ಲಕ್ಷ್ಮಣ್ ಆಯ್ಕೆ
ವಿಜಯನಗರ : ಕರ್ನಾಟಕ ಮಾಧ್ಯಮ ಅಕಾಡೆಮಿ ವತಿಯಿಂದ 2025ನೇ ಸಾಲಿನ ವಾರ್ಷಿಕ ಪ್ರಶಸ್ತಿಗೆ ಸಂಯುಕ್ತ ಕರ್ನಾಟಕ ವರದಿಗಾರಾದ ಕೆ. ಲಕ್ಷ್ಮಣ ಅವರು ಆಯ್ಕೆಯಾಗಿದ್ದಾರೆ. ಒಟ್ಟು 30 ಹಿರಿಯ ಪತ್ರಕರ್ತರನ್ನು ವಾರ್ಷಿಕ ಪ್ರಶಸ್ತಿಗೆ ಆಯ್ಕೆ ಮಾಡಿದ್ದು, ವಿವಿಧ ದತ್ತಿ ಪ್ರಶಸ್ತಿಗೆ 10 ಪತ್ರಕರ್ತರಿಗೆ ಆಯ್ಕೆ ಮಾಡಿ ಮಾಧ್ಯಮ ಅಕಾಡೆಮಿ ಅಧ್ಯಕ್ಷೆ ಆಯೇಶಾ ಖಾನಂ ಮತ್ತು ಕಾರ್ಯದರ್ಶಿ ಸಹನಾ ಎಂ ಅವರು ಆದೇಶ ಹೊರಡಿಸಿದ್ದಾರೆ. 50 ಸಾವಿರ ರೂ. ನಗದು ಮತ್ತು ಪ್ರಶಸ್ತಿ ಫಲಕ ಹೊಂದಿದೆ ಎಂದು ಆದೇಶದಲ್ಲಿ ತಿಳಿಸಿದ್ದಾರೆ.
ಕ್ಯಾಲಿಫೋರ್ನಿಯಾ: ಎಲಾನ್ ಮಸ್ಕ್ ಮಾಲಕತ್ವದ AI ಚಾಟ್ಬಾಟ್ ‘ಗ್ರೋಕ್’ ಜನರ ಲೈಂಗಿಕ ಪ್ರಚೋದಕ ಡೀಪ್ಫೇಕ್ ಚಿತ್ರಗಳನ್ನು ರಚಿಸುತ್ತಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಜಾಗತಿಕ ಮಟ್ಟದಲ್ಲಿ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ, ಗ್ರೋಕ್ ತನ್ನ ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಬಳಸಿ ಯಾವುದೇ ಚಿತ್ರಗಳನ್ನು ರಚಿಸುವ ಅಥವಾ ಸಂಕಲಿಸುವ ಅವಕಾಶವನ್ನು ಬಹುತೇಕ ಬಳಕೆದಾರರಿಗೆ ನಿರ್ಬಂಧಿಸಿದೆ. ಎಲಾನ್ ಮಸ್ಕ್ರ ಎಕ್ಸ್ ಸಾಮಾಜಿಕ ಮಾಧ್ಯಮ ವೇದಿಕೆಯ ಮೂಲಕ ಪ್ರವೇಶ ಪಡೆಯಬಹುದಾದ ಗ್ರೋಕ್ ಎಐ ಚಾಟ್ಬಾಟ್, ದುರುದ್ದೇಶಪೂರಿತ ಬಳಕೆದಾರರ ಮನವಿಗೆ ಸ್ಪಂದಿಸಿ ಮಹಿಳೆಯರನ್ನು ಬಿಕಿನಿ ಧರಿಸಿದಂತೆ ಅಥವಾ ಲೈಂಗಿಕ ಪ್ರಚೋದಕ ರೂಪದಲ್ಲಿ ತೋರಿಸುವಂತೆ ಚಿತ್ರಗಳನ್ನು ಮಾರ್ಪಡಿಸುತ್ತಿದೆ ಎಂದು ಸಂಶೋಧಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕೆಲವು ಪ್ರಕರಣಗಳಲ್ಲಿ ಮಕ್ಕಳ ಚಿತ್ರಗಳನ್ನೂ ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ ಎಂದು ಸಂಶೋಧಕರು ಎಚ್ಚರಿಕೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ವಿಶ್ವದ ಹಲವು ದೇಶಗಳು ಎಕ್ಸ್ ಸಾಮಾಜಿಕ ಮಾಧ್ಯಮ ವೇದಿಕೆಯನ್ನು ಖಂಡಿಸಿದ್ದು, ಅದರ ವಿರುದ್ಧ ತನಿಖೆಗೂ ಆದೇಶಿಸಿವೆ. ಈ ಬೆಳವಣಿಗೆಯ ನಡುವೆ, “ಚಿತ್ರಗಳ ರಚನೆ ಮತ್ತು ಸಂಕಲನವನ್ನು ಪಾವತಿಸಿದ ಚಂದಾದಾರರಿಗೆ ಮಾತ್ರ ಸೀಮಿತಗೊಳಿಸಲಾಗಿದೆ. ಈ ವೈಶಿಷ್ಟ್ಯಗಳಿಗೆ ಪ್ರವೇಶ ಪಡೆಯಲು ನೀವು ಚಂದಾದಾರರಾಗಬಹುದು” ಎಂದು ಚಿತ್ರಗಳ ಮಾರ್ಪಾಡು ಕುರಿತ ಮನವಿಗಳಿಗೆ ಗ್ರೋಕ್ ಶುಕ್ರವಾರ ಪ್ರತಿಕ್ರಿಯಿಸಿದೆ. ಗ್ರೋಕ್ಗೆ ಇರುವ ಚಂದಾದಾರರ ಸಂಖ್ಯೆ ಸಾರ್ವಜನಿಕವಾಗಿ ಲಭ್ಯವಿಲ್ಲ. ಆದರೆ, ಹಿಂದಿನ ದಿನಗಳಿಗೆ ಹೋಲಿಸಿದರೆ ಗ್ರೋಕ್ ರಚಿಸುತ್ತಿದ್ದ ಲೈಂಗಿಕ ಪ್ರಚೋದಕ ಚಿತ್ರಗಳ ಸಂಖ್ಯೆಯಲ್ಲಿ ಗಮನಾರ್ಹ ಇಳಿಕೆ ಕಂಡುಬಂದಿದೆ ಎಂದು ವರದಿಯಾಗಿದೆ. ಗ್ರೋಕ್ನ ಕಾನೂನುಬಾಹಿರ ಹಾಗೂ ಭಯಾನಕ ವರ್ತನೆ ವಿರುದ್ಧ ಯೂರೋಪಿಯನ್ ಒಕ್ಕೂಟ ಕಠಿಣ ಕ್ರಮಕ್ಕೆ ಮುಂದಾಗಿದ್ದು, ಫ್ರಾನ್ಸ್, ಭಾರತ, ಮಲೇಶಿಯಾ ಅಧಿಕಾರಿಗಳು ಹಾಗೂ ಬ್ರೆಝಿಲ್ ನ ಸಂಸದರು ಎಕ್ಸ್ ಸಾಮಾಜಿಕ ಮಾಧ್ಯಮ ವೇದಿಕೆಯ ವಿರುದ್ಧ ತನಿಖೆಗೆ ಆದೇಶಿಸಿದ್ದಾರೆ.
ಬಳ್ಳಾರಿ | ಮಾಧ್ಯಮಗಳು ಸಮಾಜ ಸುಧಾರಣೆಯ ಹಾದಿಯಲ್ಲಿ ಸಾಗಲಿ : ಮುಂಡರಗಿ ನಾಗರಾಜ
'ವಾರ್ತಾಲಾಪ' ಕಾರ್ಯಾಗಾರ
ಬಳ್ಳಾರಿ | ಮಹನೀಯರ ಜಯಂತಿಯನ್ನು ಅರ್ಥಪೂರ್ಣ ಆಚರಣೆಗೆ ನಿರ್ಧಾರ : ಮುಹಮ್ಮದ್ ಝುಬೇರ್ ಎನ್.
ಬಳ್ಳಾರಿ : ಜಿಲ್ಲಾ ಕೇಂದ್ರದಲ್ಲಿ ವಿವಿಧ ಮಹನೀಯರ ಜಯಂತಿ ಕಾರ್ಯಕ್ರಮಗಳನ್ನು ಅಚ್ಚುಕಟ್ಟಾಗಿ ಹಾಗೂ ಅರ್ಥಪೂರ್ಣವಾಗಿ ಆಚರಿಸಲು ಜಿಲ್ಲಾಡಳಿತ ಎಲ್ಲಾ ರೀತಿಯ ಸಿದ್ಧತೆಗಳನ್ನು ಕೈಗೊಂಡಿದೆ ಎಂದು ಅಪರ ಜಿಲ್ಲಾಧಿಕಾರಿ ಮುಹಮ್ಮದ್ ಝುಬೇರ್ ಎನ್. ಅವರು ತಿಳಿಸಿದರು. ನಗರದ ಹಳೆಯ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಅಧಿಕಾರಿಗಳು ಹಾಗೂ ಸಮುದಾಯದ ಮುಖಂಡರೊಂದಿಗೆ ಹಮ್ಮಿಕೊಳ್ಳಲಾಗಿದ್ದ ಪೂರ್ವಭಾವಿ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ನಗರದ ಡಾ. ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ಜ.19 ರಂದು ಮಹಾಯೋಗಿ ವೇಮನ ಜಯಂತಿ, ಜ.21 ರಂದು ಅಂಬಿಗರ ಚೌಡಯ್ಯ ಜಯಂತಿ ಹಾಗೂ ಜ.25 ರಂದು ಸವಿತಾ ಮಹರ್ಷಿ ಜಯಂತಿ ಕಾರ್ಯಕ್ರಮಗಳನ್ನು ಅರ್ಥಪೂರ್ಣವಾಗಿ ಆಚರಿಸಲಾಗುವುದು ಎಂದು ಹೇಳಿದರು. ಶಿವಶರಣರು ಅಥವಾ ದಾರ್ಶನಿಕರು ಕೇವಲ ಒಂದು ಸಮುದಾಯಕ್ಕೆ ಸೀಮಿತವಲ್ಲ. ಅವರ ಜೀವನ ಹಾಗೂ ಚಿಂತನೆಗಳನ್ನು ಮುಂದಿನ ಪೀಳಿಗೆಗೆ ತಲುಪಿಸುವುದು ನಮ್ಮ ಜವಾಬ್ದಾರಿ. ಸರ್ಕಾರದ ಆದೇಶದಂತೆ ಸಭೆ-ಸಮಾರಂಭಗಳಲ್ಲಿ ಹೂಗುಚ್ಛ ಅಥವಾ ಫಲಬುಟ್ಟಿ ನೀಡುವಂತಿಲ್ಲ, ಕೇವಲ ಪುಸ್ತಕ ನೀಡಲು ಮಾತ್ರ ಅವಕಾಶವಿದೆ, ಎಂದು ಎಡಿಸಿ ಸ್ಪಷ್ಟಪಡಿಸಿದರು. ಕಟ್ಟುನಿಟ್ಟಿನ ಸೂಚನೆಗಳು: ಬ್ಯಾನರ್ ಮತ್ತು ಡಿಜೆ: ಬ್ಯಾನರ್ ಅಳವಡಿಕೆಗೆ ಮಹಾನಗರ ಪಾಲಿಕೆಯಿಂದ ಕಡ್ಡಾಯವಾಗಿ ಅನುಮತಿ ಪಡೆಯಬೇಕು. ಮೆರವಣಿಗೆಯಲ್ಲಿ ಡಿಜೆ ಅಥವಾ ಹೆಚ್ಚಿನ ಶಬ್ದದ ಧ್ವನಿವರ್ಧಕಗಳ ಬಳಕೆಗೆ ಅವಕಾಶವಿಲ್ಲ. ಮೆರವಣಿಗೆ: ಸಾಂಸ್ಕೃತಿಕ ಕಲಾತಂಡಗಳೊಂದಿಗೆ ಮೆರವಣಿಗೆ ನಡೆಯಲಿದ್ದು, ಸಾರ್ವಜನಿಕರಿಗೆ ತೊಂದರೆಯಾಗದಂತೆ ಪೊಲೀಸ್ ಇಲಾಖೆ ಮುನ್ನೆಚ್ಚರಿಕೆ ವಹಿಸಬೇಕು. ಉಪನ್ಯಾಸ: ಮಹನೀಯರ ಬದುಕಿನ ಕುರಿತು ಪರಿಣಿತರಿಂದ ವಿಶೇಷ ಉಪನ್ಯಾಸ ಹಮ್ಮಿಕೊಳ್ಳಬೇಕು. ಸೌಕರ್ಯ: ಕಾರ್ಯಕ್ರಮದ ಸ್ಥಳದಲ್ಲಿ ಕುಡಿಯುವ ನೀರು ಹಾಗೂ ಸ್ವಚ್ಛತೆ ಕಾಪಾಡುವಂತೆ ಪಾಲಿಕೆ ಅಧಿಕಾರಿಗಳಿಗೆ ಸೂಚಿಸಲಾಯಿತು. ಸಭೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ. ನಾಗರಾಜ, ಮಹಾನಗರ ಪಾಲಿಕೆ ಹಾಗೂ ಪೊಲೀಸ್ ಅಧಿಕಾರಿಗಳು, ಡಿಡಿಪಿಐ, ಡಿಡಿಪಿಯು ಮತ್ತು ವಿವಿಧ ಸಮಾಜದ ಮುಖಂಡರು ಉಪಸ್ಥಿತರಿದ್ದರು.
ಸಿರುಗುಪ್ಪ | ಜಾನಪದ ಸಾಹಿತ್ಯ ಜೀವನ ಮೌಲ್ಯಗಳ ಅಕ್ಷಯ ಪಾತ್ರೆ : ಸಿ.ಬಿ.ಚಿಲ್ಕರಾಗಿ
ಸಿರುಗುಪ್ಪ: ಜನಪದ ಸಾಹಿತ್ಯವು ಕೇವಲ ಮನರಂಜನೆಯ ಸಾಧನವಲ್ಲ, ಅದು ಸಾಂಸ್ಕೃತಿಕ ಸಂರಕ್ಷಣೆ ಮತ್ತು ನೈತಿಕ ಶಿಕ್ಷಣದ ಪ್ರಬಲ ಮಾಧ್ಯಮವಾಗಿದೆ. ಆಧುನಿಕ ಜಗತ್ತಿನ ಜಂಜಾಟಗಳ ನಡುವೆ ಜನಪದ ಸಾಹಿತ್ಯವು ಮಾನವನಿಗೆ ಸಾತ್ವಿಕ ಪ್ರೇರಣೆ ನೀಡುತ್ತಿದೆ ಎಂದು ಬೆಂಗಳೂರು ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯ ಸಿ.ಬಿ. ಚಿಲ್ಕರಾಗಿ ಹೇಳಿದರು. ತಾಲ್ಲೂಕಿನ ಸಿರಿಗೇರಿ ಗ್ರಾಮದ ಸರ್ಕಾರಿ ಪದವಿ ಪೂರ್ವ ಸಂಯುಕ್ತ ಕಾಲೇಜಿನಲ್ಲಿ ಬೆಂಗಳೂರು ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸಹಯೋಗದೊಂದಿಗೆ ಶುಕ್ರವಾರ ಆಯೋಜಿಸಿದ್ದ ‘ಜಾನಪದ ಸಾಹಿತ್ಯದಲ್ಲಿ ಜೀವನ ಮೌಲ್ಯಗಳು’ ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಮುಖ್ಯ ಉಪನ್ಯಾಸ ನೀಡಿದ ಉಪನ್ಯಾಸಕ ಚಾಂದ್ ಬಾಷಾ ಅವರು, ಜಾನಪದ ಸಾಹಿತ್ಯವು ಸತ್ಯ, ಸಹನೆ, ವಿನಯ ಹಾಗೂ ಕುಟುಂಬ ಮೌಲ್ಯಗಳ ಅಕ್ಷಯ ಪಾತ್ರೆಯಾಗಿದೆ. ತಾಯಿ-ತವರು ಪ್ರೀತಿ ಮತ್ತು ಮಾನವೀಯತೆಯನ್ನು ಮೌಖಿಕ ಪರಂಪರೆಯ ಮೂಲಕ ಪೀಳಿಗೆಯಿಂದ ಪೀಳಿಗೆಗೆ ದಾಟಿಸುತ್ತಾ ಬಂದಿರುವ ಈ ಸಾಹಿತ್ಯವು ಇಂದಿಗೂ ಬದುಕಿನ ದಾರಿದೀಪವಾಗಿದೆ ಎಂದರು. ಜನಪದ ಸಾಹಿತ್ಯವು ಗಾದೆಗಳು, ಒಗಟುಗಳು, ಲಾಾವಣಿಗಳು ಹಾಗೂ ಬಯಲಾಟದಂತಹ ವಿಶಿಷ್ಟ ಪ್ರಕಾರಗಳ ಮೂಲಕ ಜೀವನದ ಕಠಿಣ ಪಾಠಗಳನ್ನು ಅತ್ಯಂತ ಸರಳವಾಗಿ ಸಾಮಾನ್ಯರಿಗೂ ಅರ್ಥವಾಗುವಂತೆ ತಿಳಿಸಿಕೊಡುತ್ತದೆ ಎಂದು ಅವರು ವಿವರಿಸಿದರು. ಬಳ್ಳಾರಿಯ ಚಕೋರ ಸಾಹಿತ್ಯ ವೇದಿಕೆಯ ಜಿಲ್ಲಾ ಸಂಚಾಲಕ ತಿಪ್ಪೇರುದ್ರ ಸಂಡೂರು ಕಾರ್ಯಕ್ರಮದ ಪ್ರಾಸ್ತಾವಿಕ ನುಡಿಗಳನ್ನಾಡಿದರು. ನಿವೃತ್ತ ವೈದ್ಯಾಧಿಕಾರಿ ಡಾ.ಟಿ.ಮೃತ್ಯುಂಜಯ ಸ್ವಾಮಿ ಅವರು ವಿಷಯದ ಕುರಿತು ಮಾತನಾಡಿದರು. ವೇದಿಕೆಯಲ್ಲಿ ಕವಿ ಅಬ್ದುಲ್ ಹೈ ತೋರಣಗಲ್ಲು, ಉಪನ್ಯಾಸಕರಾದ ಬಕಾಡೆ ಪಂಪಾಪತಿ, ನೆನೆಕ್ಕಿ ಹೊನ್ನೂರ ಸ್ವಾಮಿ, ಪ್ರಾಚಾರ್ಯ ಎಚ್. ಜಿ. ವಿಶ್ವನಾಥ ಗೌಡ, ನಿವೃತ್ತ ಮುಖ್ಯ ಶಿಕ್ಷಕ ಜೆ. ರಾಣಿಪ್ಪ, ಬಸವರಾಜ್, ನಿತಿನ್, ಈರಣ್ಣ ಸೇರಿದಂತೆ ಕಾಲೇಜಿನ ಸಿಬ್ಬಂದಿ ವರ್ಗ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಇನ್ನೊಂದು ತೈಲ ಟ್ಯಾಂಕರನ್ನು ವಶಪಡಿಸಿಕೊಂಡ ಅಮೆರಿಕ
ವಾಶಿಂಗ್ಟನ್, ಜ. 9: ವೆನೆಝುವೆಲಾ ವಿರುದ್ಧ ತನ್ನ ಒತ್ತಡ ಅಭಿಯಾನವನ್ನು ಅಮೆರಿಕ ಮುಂದುವರಿಸಿದ್ದು, ಕೆರಿಬಿಯನ್ ನಲ್ಲಿ ಇನ್ನೊಂದು ತೈಲ ಟ್ಯಾಂಕರನ್ನು ವಶಪಡಿಸಿಕೊಂಡಿದೆ. ತನ್ನ ಪಡೆಗಳು ಯಾವುದೇ ಪ್ರತಿರೋಧವಿಲ್ಲದೆ ‘ಒಲೀನಾ’ ಟ್ಯಾಂಕರನ್ನು ವಶಪಡಿಸಿಕೊಂಡಿವೆ ಎಂದು ಶುಕ್ರವಾರ ನೀಡಿದ ಹೇಳಿಕೆಯಲ್ಲಿ ಅಮೆರಿಕ ಸೇನೆಯ ದಕ್ಷಿಣ ಕಮಾಂಡ್ ತಿಳಿಸಿದೆ. ಆದರೆ, ತೈಲ ಟ್ಯಾಂಕರನ್ನು ಯಾಕೆ ವಶಪಡಿಸಿಕೊಳ್ಳಲಾಗಿದೆ ಎಂಬುದನ್ನು ಅದು ತಿಳಿಸಿಲ್ಲ. ಅಲ್ಲದೆ, ಟ್ಯಾಂಕರ್ ಎಸಗಿರುವ ಉಲ್ಲಂಘನೆಗಳ ವಿವರಗಳನ್ನೂ ನೀಡಿಲ್ಲ. ಹಿಂದೆ, ರಷ್ಯಾದ ತೈಲವನ್ನು ಸಾಗಿಸುತ್ತಿದ್ದ ಕಾರಣ ಈ ಟ್ಯಾಂಕರ್ಗೆ ಅಮೆರಿಕ ನಿಷೇಧ ವಿಧಿಸಿತ್ತು ಎಂದು ‘ವಾಲ್ ಸ್ಟ್ರೀಟ್ ಜರ್ನಲ್’ ವರದಿ ಮಾಡಿದೆ. ರಷ್ಯಾ ಧ್ವಜ ಹೊಂದಿರುವ ‘ಮರಿನೇರ’ ತೈಲ ಟ್ಯಾಂಕರ್ ಸೇರಿದಂತೆ ಎರಡು ತೈಲ ಟ್ಯಾಂಕರ್ಗಳನ್ನು ಅಮೆರಿಕ ಪಡೆಗಳು ವಶಪಡಿಸಿಕೊಂಡ ಎರಡು ದಿನಗಳ ಬಳಿಕ ಈ ಕಾರ್ಯಾಚರಣೆ ನಡೆದಿದೆ. ವೆನೆಝುವೆಲಾ ಅಧ್ಯಕ್ಷ ನಿಕೊಲಸ್ ಮಡುರೊ ಅವರ ಅಪಹರಣದ ಬಳಿಕ, ನಿಷೇಧಿತ ತೈಲ ಟ್ಯಾಂಕರ್ಗಳ ಮೇಲಿನ ನಿರ್ಬಂಧವನ್ನು ಜಾರಿಗೊಳಿಸಲು ಅಮೆರಿಕ ಪಣತೊಟ್ಟಿದೆ.
ವಿಜಯನಗರ | ಕಾರು ನಿಯಂತ್ರಣ ತಪ್ಪಿ ಮರಕ್ಕೆ ಢಿಕ್ಕಿ : ಓರ್ವ ಮೃತ್ಯು
ವಿಜಯನಗರ (ಹೊಸಪೇಟೆ) : ಕಾರು ನಿಯಂತ್ರಣ ತಪ್ಪಿ ಮರಕ್ಕೆ ಢಿಕ್ಕಿ ಹೊಡೆದ ಪರಿಣಾಮ ಓರ್ವ ಮೃತಪಟ್ಟು, ಇನ್ನೊರ್ವ ಗಂಭೀರವಾಗಿ ಗಾಯಗೊಂಡಿರುವ ಘಟನೆ ಹೊಸಪೇಟೆಯ ಹೊರವಲಯದ ಭಟ್ರಳ್ಳಿ ಆಂಜನೇಯ ದೇಗುಲದ ಬಳಿ ನಡೆದಿದೆ. ಮೃತರನ್ನು ಹೊಸಪೇಟೆಯ ಎಂಪಿ ಪ್ರಕಾಶ ನಗರದ ನಿವಾಸಿ ಮಂಜುನಾಥ( 36) ಎಂದು ಗುರುತಿಸಲಾಗಿದೆ. ಕಾರು ಚಾಲಕ ರವಿ ಗಾಯಗೊಂಡಿದ್ದು, ಪ್ರಾಣ ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ. ಇಬ್ಬರು ರೈಲ್ವೆ ಸ್ಟೇಷನ್ ಬಳಿ ಹೋಟೆಲ್ ನಲ್ಲಿ ಊಟ ಮುಗಿಸಿಕೊಂಡು ಮನೆಗೆ ಹೋಗುವಾಗ ನಿಯಂತ್ರಣ ತಪ್ಪಿ ಮರಕ್ಕೆ ಢಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ ಎನ್ನಲಾಗಿದೆ.
ಏರ್ಪೋರ್ಟ್ನಲ್ಲಿ ಟ್ಯಾಕ್ಸಿ ಸೇವೆಗಳಿಗೆ ಹೊಸ ನಿಯಮ ಜಾರಿ - ‘ಟರ್ಮಿನಲ್ 1’ನಲ್ಲಿನ ತೊಂದರೆಗೆ ಗುಡ್ ಬೈ
ಕೆಂಪೇಗೌಡ ವಿಮಾನ ನಿಲ್ದಾಣದ ಟರ್ಮಿನಲ್-1 ರ ಆಗಮನ ದ್ವಾರದಲ್ಲಿ ಸಂಚಾರ ದಟ್ಟಣೆ ಹೆಚ್ಚಾಗಿದ್ದರಿಂದ ಪ್ರಯಾಣಿಕರ ಅನುಕೂಲಕ್ಕೆ ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಮತ್ತು ಬಿಐಎಎಲ್ ಅಧ್ಯಕ್ಷರು ಭೇಟಿ ನೀಡಿದರು. ವಾಲೆಟ್ ಪಾರ್ಕಿಂಗ್, ಮಲ್ಟಿ ಲೆವೆಲ್ ಪಾರ್ಕಿಂಗ್, ಶಬ್ದರಹಿತ ವಲಯ, ಖಾಸಗಿ ಹಾಗೂ ವಾಣಿಜ್ಯ ವಾಹನಗಳ ನಿಯಂತ್ರಣ, ಟ್ಯಾಕ್ಸಿ ಸೇವೆಗಳಿಗೆ ಹೊಸ ಮಾನದಂಡ, ಶಟಲ್ ಸೇವೆ, ಸಹಾಯ ಡೆಸ್ಕ್, ಹಿರಿಯ ನಾಗರಿಕರಿಗೆ ವಿಶೇಷ ಸೌಲಭ್ಯ ಸೇರಿದಂತೆ ಹಲವು ಸುಧಾರಣೆಗಳನ್ನು ಜಾರಿಗೆ ತರಲಾಗಿದೆ.
Venezuela ವಿಪಕ್ಷ ನಾಯಕಿ ಮರಿಯಾ ಕೊರಿನಾ ನನಗೆ ತಮ್ಮ ನೊಬೆಲ್ ಶಾಂತಿ ಪ್ರಶಸ್ತಿಯನ್ನು ನೀಡಬಹುದು: ಡೊನಾಲ್ಡ್ ಟ್ರಂಪ್
ಅದು ಆಗಲ್ಲ ಎಂದು ಸ್ಪಷ್ಟನೆ ನೀಡಿದ ನೊಬೆಲ್
ವಿಜಯನಗರ | ಹಂಪಿ ಕನ್ನಡ ವಿವಿಯಲ್ಲಿ ಕಂಬಾರರ 89ನೇ ಜನ್ಮದಿನೋತ್ಸವ
ವಿದ್ಯಾರ್ಥಿಗಳಿಂದ 'ಜೋಕುಮಾರಸ್ವಾಮಿ' ನಾಟಕದ ಅದ್ದೂರಿ ಪ್ರದರ್ಶನ
Himachal Pradesh | 500 ಅಡಿ ಆಳದ ಕಣಿವೆಗೆ ಉರುಳಿ ಬಿದ್ದ ಖಾಸಗಿ ಬಸ್: 12 ಮಂದಿ ಮೃತ್ಯು; 35 ಮಂದಿಗೆ ಗಾಯ
ಹೊಸದಿಲ್ಲಿ: ಶುಕ್ರವಾರ ಖಾಸಗಿ ಬಸ್ವೊಂದು ಕಣಿವೆಯ ರಸ್ತೆಯಲ್ಲಿ ನಿಯಂತ್ರಣ ತಪ್ಪಿ 500 ಅಡಿ ಆಳದ ಪ್ರಪಾತಕ್ಕೆ ಉರುಳಿದ ಪರಿಣಾಮ, 12 ಮಂದಿ ಮೃತಪಟ್ಟಿದ್ದು, ಕನಿಷ್ಠ 35 ಮಂದಿಗೆ ಗಾಯಗಳಾಗಿವೆ. ಈ ಘಟನೆ ಹಿಮಾಚಲ ಪ್ರದೇಶದ ಸಿರ್ಮೌರ್ ಜಿಲ್ಲೆಯಲ್ಲಿ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ರಾಜಗಢ ಮಾರ್ಗವಾಗಿ ಶಿಮ್ಲಾದಿಂದ ಕುಪ್ವಿಗೆ ತೆರಳುತ್ತಿದ್ದ ಬಸ್, ನಹಾನ್ ನಿಂದ ಸುಮಾರು 95 ಕಿಮೀ ದೂರದಲ್ಲಿರುವ ಹರಿಪುರ್ಧರ್ ಗ್ರಾಮದ ಬಳಿ ನಿಯಂತ್ರಣ ಕಳೆದುಕೊಂಡು ಪ್ರಪಾತಕ್ಕೆ ಪಲ್ಟಿಯಾಗಿದೆ ಎಂದು ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ. ಹಲವಾರು ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿರುವುದರಿಂದ, ಮೃತರ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಬಸ್ ನ ಒಟ್ಟಾರೆ ಆಸನ ಸಾಮರ್ಥ್ಯ 39 ಮಾತ್ರವಿದ್ದರೂ, ಆಸನ ಸಾಮರ್ಥ್ಯ ಮೀರಿ ಪ್ರಯಾಣಿಕರು ಇದ್ದ ಕಾರಣ ಅಪಘಾತ ಸಂಭವಿಸಿದೆ ಎಂದು ಅವರು ತಿಳಿಸಿದ್ದಾರೆ. ತುರ್ತು ರಕ್ಷಣಾ ತಂಡಗಳು ಘಟನಾ ಸ್ಥಳಕ್ಕೆ ಧಾವಿಸುವುದಕ್ಕೂ ಮುನ್ನ, ಸ್ಥಳೀಯ ನಿವಾಸಿಗಳು ಹಾಗೂ ದಾರಿಹೋಕರು ಗಾಯಗೊಂಡಿದ್ದ ಪ್ರಯಾಣಿಕರನ್ನು ರಕ್ಷಿಸಲು ನೆರವು ನೀಡುತ್ತಿರುವ ದೃಶ್ಯಾವಳಿ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಈ ಕುರಿತು ಪ್ರತಿಕ್ರಿಯಿಸಿದ ಸಿರ್ಮೌರ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಶ್ಚಿಂತ್ ಸಿಂಗ್ ನೇಗಿ, “ಬಸ್ ಅಪಘಾತದಲ್ಲಿ ಈವರೆಗೆ 12 ಮಂದಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದ್ದು, ಮೃತರ ಸಂಖ್ಯೆ ಇನ್ನಷ್ಟು ಏರಿಕೆಯಾಗುವ ಸಾಧ್ಯತೆ ಇದೆ. ರಕ್ಷಣಾ ಕಾರ್ಯಾಚರಣೆ ಪ್ರಗತಿಯಲ್ಲಿದೆ” ಎಂದು ತಿಳಿಸಿದ್ದಾರೆ. ಅಪಘಾತದ ಕುರಿತು ತೀವ್ರ ಸಂತಾಪ ವ್ಯಕ್ತಪಡಿಸಿರುವ ಹಿಮಾಚಲ ಪ್ರದೇಶ ಮುಖ್ಯಮಂತ್ರಿ ಸುಖ್ವಿಂದರ್ ಸಿಂಗ್ ಸುಖು, ಸಂತ್ರಸ್ತರ ಕುಟುಂಬಗಳಿಗೆ ಸಾಂತ್ವನ ಹೇಳಿದ್ದಾರೆ. “ಅಪಘಾತದ ಸುದ್ದಿ ನನ್ನನ್ನು ತೀವ್ರವಾಗಿ ದುಃಖ ತಂದಿದೆ. ಅಪಘಾತದಲ್ಲಿ ತಮ್ಮ ಜೀವ ಕಳೆದುಕೊಂಡವರಿಗೆ ನನ್ನ ಸಂತಾಪಗಳು. ದುಃಖಿತ ಕುಟುಂಬಗಳಿಗೆ ನನ್ನ ಸಂಪೂರ್ಣ ಸಹಾನುಭೂತಿ” ಎಂದು ಅವರು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಅಪಘಾತದ ಕುರಿತು ಕೇಂದ್ರ ಆರೋಗ್ಯ ಸಚಿವ ಜೆ.ಪಿ. ನಡ್ಡಾ ಕೂಡ ಸಂತಾಪ ವ್ಯಕ್ತಪಡಿಸಿದ್ದು, “ಈ ಅಪಘಾತ ತೀವ್ರ ಆಘಾತ ತಂದಿದೆ” ಎಂದು ಹೇಳಿದ್ದಾರೆ.
ಬಳ್ಳಾರಿ ಬ್ಯಾನರ್ ಗಲಾಟೆ: ಗನ್ಮ್ಯಾನ್ ಹೊರತು ಪಡಿಸಿ 25 ಆರೋಪಿಗಳಿಗೆ ಜಾಮೀನು
ಬೆಂಗಳೂರು : ಬಳ್ಳಾರಿಯಲ್ಲಿ ನಡೆದ ಬ್ಯಾನರ್ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ರೈಮ್ ನಂಬರ್ 4ರಲ್ಲಿನ 25 ಆರೋಪಿಗಳಿಗೆ ಜಾಮೀನು ನೀಡಿ ಬೆಂಗಳೂರಿನ 42ನೇ ಎಸಿಜೆಎಂ ಕೋರ್ಟ್ ಶುಕ್ರವಾರ ಆದೇಶ ಹೊರಡಿಸಿದೆ. ಬಳ್ಳಾರಿ ಬ್ಯಾನರ್ ಗಲಾಟೆ ಸಂಬಂಧ ಬ್ರೂಸ್ಪೇಟೆ ಠಾಣೆಯಲ್ಲಿ ಒಟ್ಟು 6 ಪ್ರಕರಣ ದಾಖಲಾಗಿವೆ. ಗನ್ಮ್ಯಾನ್ಗಳಾದ ಗುರುಚರಣ್ ಸಿಂಗ್, ಬಲ್ಜಿತ್ ಸಿಂಗ್ ಹಾಗೂ ಮಹೇಂದ್ರ ಸಿಂಗ್ ಸೇರಿದಂತೆ ಕಾಂಗ್ರೆಸ್ನ 10, ಬಿಜೆಪಿಯ 11 ಕಾರ್ಯಕರ್ತರು ಸೇರಿದಂತೆ ಒಟ್ಟು 26 ಜನರನ್ನು ಪೊಲೀಸರು ಬಂಧಿಸಿದ್ದರು. ಜ.5ರಂದು ಪ್ರಮುಖ ಆರೋಪಿ ಗುರುಚರಣ್ ಸಿಂಗ್ ಸೇರಿ 26 ಆರೋಪಿಗಳಿಗೆ 14 ದಿನ ನ್ಯಾಯಾಂಗ ಬಂಧನ ವಿಧಿಸಿ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಆದೇಶ ಹೊರಡಿಸಿತ್ತು. ಆದೇಶ ಬೆನ್ನಲ್ಲೇ ಆರೋಪಿಗಳನ್ನು ಪರಪ್ಪನ ಅಗ್ರಹಾರ ಜೈಲಿಗೆ ಪೊಲೀಸರು ಶಿಫ್ಟ್ ಮಾಡಿದ್ದರು. ಬಳ್ಳಾರಿಯ ಬ್ರೂಸ್ಪೇಟೆ ಠಾಣೆಯಲ್ಲಿ ಕೇಸ್ ದಾಖಲಾಗಿತ್ತು. ಪ್ರಕರಣದ ಪ್ರಮುಖ ಆರೋಪಿ ಖಾಸಗಿ ಗನ್ ಮ್ಯಾನ್ ಗುರುಚರಣ್ ಸಿಂಗ್ಗೆ ಸಂಬಂಧಿಸಿದ ಗನ್ನಿಂದಲೇ 12 ಎಂಎಂ ಬುಲೆಟ್ ಫೈರ್ ಮಾಡಿದ್ದಾನೆ. ಹೀಗಾಗಿ ಗುರುಚರಣ್ ಸಿಂಗ್ ಹೊರತು ಪಡಿಸಿ ಕ್ರೈಮ್ ನಂಬರ್ 4ರಲ್ಲಿನ 25 ಬಂಧಿತ ಆರೋಪಿಗಳಿಗೆ ಜಾಮೀನು ಮಂಜೂರು ಮಾಡಲಾಗಿದೆ.
I-PAC ಮೇಲೆ ED ದಾಳಿ ಖಂಡಿಸಿ ಮಮತಾ ಬೀದಿಗಿಳಿದು ಪ್ರತಿಭಟನೆ
ಕೋಲ್ಕತಾ, ಜ.9: ರಾಜಕೀಯ ಸಲಹಾ ಸಂಸ್ಥೆ I-PAC ಕಚೇರಿ ಹಾಗೂ ಅದರ ನಿರ್ದೇಶಕ ಪ್ರತೀಕ್ ಜೈನ್ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ (ED) ನಡೆಸಿದ ಶೋಧವನ್ನು ಖಂಡಿಸಿ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಹಾಗೂ ತೃಣಮೂಲ ಕಾಂಗ್ರೆಸ್ ಅಧ್ಯಕ್ಷೆ ಮಮತಾ ಬ್ಯಾನರ್ಜಿ ಶುಕ್ರವಾರ ಕೋಲ್ಕತಾದಲ್ಲಿ ನಡೆದ ಪ್ರತಿಭಟನಾ ರ್ಯಾಲಿಗೆ ನೇತೃತ್ವ ವಹಿಸಿದರು. ನಗರದ ವಿವಿಧ ಭಾಗಗಳಲ್ಲಿ ನಡೆದ ರ್ಯಾಲಿಯಲ್ಲಿ ತೃಣಮೂಲ ಕಾಂಗ್ರೆಸ್ ನಾಯಕರು ಹಾಗೂ ಕಾರ್ಯಕರ್ತರು ಪಾಲ್ಗೊಂಡು, ಕೇಂದ್ರೀಯ ತನಿಖಾ ಸಂಸ್ಥೆಗಳ ದುರ್ಬಳಕೆಯ ವಿರುದ್ಧ ಘೋಷಣೆಗಳನ್ನು ಕೂಗಿದರು. ಮುನ್ನೆಚ್ಚರಿಕೆ ಕ್ರಮವಾಗಿ ನಗರದಲ್ಲಿ ವ್ಯಾಪಕ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿತ್ತು. I-PAC ಕಚೇರಿ ಹಾಗೂ ಪ್ರತೀಕ್ ಜೈನ್ ನಿವಾಸದ ಮೇಲೆ ನಡೆದ ದಾಳಿಯು ಪಕ್ಷದ ದತ್ತಾಂಶ ಮತ್ತು ಚುನಾವಣಾ ಕಾರ್ಯತಂತ್ರವನ್ನು ಗುರಿಯಾಗಿಟ್ಟುಕೊಂಡ ಕ್ರಮವಾಗಿದೆ ಎಂದು ತೃಣಮೂಲ ಕಾಂಗ್ರೆಸ್ ಆರೋಪಿಸಿದೆ. ED ಕ್ರಮದ ವಿರುದ್ಧ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದ ವೇಳೆ ತಮ್ಮ ಕೆಲವು ನಾಯಕರನ್ನು ಪೊಲೀಸರು ಬಲವಂತವಾಗಿ ತೆರವುಗೊಳಿಸಿದ್ದಾರೆ ಎಂದೂ ಪಕ್ಷವು ದೂರಿದೆ. ಕೇಂದ್ರ ಸರ್ಕಾರವು ಪ್ರತಿಪಕ್ಷಗಳ ಮೇಲೆ ಒತ್ತಡ ಹೇರುವ ಉದ್ದೇಶದಿಂದ ಜಾರಿ ನಿರ್ದೇಶನಾಲಯವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ತೃಣಮೂಲ ಕಾಂಗ್ರೆಸ್ ವಾಗ್ದಾಳಿ ನಡೆಸಿದೆ. ಈ ಕ್ರಮವನ್ನು ಖಂಡಿಸಿ ಪಶ್ಚಿಮ ಬಂಗಾಳದಾದ್ಯಂತ ಹಾಗೂ ರಾಷ್ಟ್ರಮಟ್ಟದಲ್ಲಿ ಪ್ರತಿಭಟನೆಗಳನ್ನು ನಡೆಸಲಾಗುವುದು ಎಂದು ಪಕ್ಷವು ತಿಳಿಸಿದೆ. ಕಲ್ಲಿದ್ದಲು ಹಗರಣಕ್ಕೆ ಸಂಬಂಧಿಸಿದ 2020ರ ಅಕ್ರಮ ಹಣ ವರ್ಗಾವಣೆ ಪ್ರಕರಣದ ಭಾಗವಾಗಿ I-PAC ಸಂಬಂಧಿತ ತನಿಖೆ ನಡೆಯುತ್ತಿದೆ ಎಂದು ED ಈ ಮೊದಲು ಹೇಳಿಕೆ ನೀಡಿತ್ತು. I-PAC ತನ್ನ ವೆಬ್ಸೈಟ್ನಲ್ಲಿ ತೃಣಮೂಲ ಕಾಂಗ್ರೆಸ್ ಮತ್ತು ಪಶ್ಚಿಮ ಬಂಗಾಳ ಸರ್ಕಾರವನ್ನು ತನ್ನ ಗ್ರಾಹಕರಾಗಿ ಉಲ್ಲೇಖಿಸಿದೆ. ಗೋವಾ ಚುನಾವಣೆಗೆ ಸಂಪರ್ಕ? ಕಲ್ಲಿದ್ದಲು ಕಳ್ಳಸಾಗಣೆ ಜಾಲದ ಕುರಿತು ED ನಡೆಸುತ್ತಿರುವ ತನಿಖೆಯಲ್ಲಿ, 2021–22ರ ಗೋವಾ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಅಪರಾಧ ಆದಾಯ ಬಳಕೆಯಾಗಿದೆ ಎಂಬ ಶಂಕೆಯನ್ನೂ ಪರಿಶೀಲಿಸಲಾಗುತ್ತಿದೆ ಎಂದು ತನಿಖಾ ಮೂಲಗಳು ತಿಳಿಸಿವೆ. ಕಳ್ಳಸಾಗಣೆಯಿಂದ ಗಳಿಸಲಾದ ಹಣವನ್ನು ಹವಾಲಾ ಮಾರ್ಗಗಳ ಮೂಲಕ ವರ್ಗಾವಣೆ ಮಾಡಲಾಗಿದೆ ಎಂಬ ಆರೋಪಗಳು ತನಿಖೆಯ ಭಾಗವಾಗಿವೆ. ಗೋವಾ ಚುನಾವಣಾ ಅವಧಿಯಲ್ಲಿ I-PAC ಜೊತೆ ಕಾರ್ಯನಿರ್ವಹಿಸಿದ್ದ ಕೆಲವು ಸಂಸ್ಥೆಗಳ ಪಾತ್ರದ ಕುರಿತಾಗಿಯೂ ತನಿಖೆ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸೌಹಾರ್ದ ಸಮಾಜಕ್ಕಾಗಿ ಬದುಕಿದ ವಿನಯ ಹೆಗ್ಡೆ ಎಲ್ಲರಿಗೂ ಆದರ್ಶ: ಅಜಿತ್ ಕುಮಾರ್ ರೈ ಮಾಲಾಡಿ
ಮಂಗಳೂರು: ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ ನಿಟ್ಟೆ ವಿನಯ ಹೆಗ್ಡೆ ಸೌಹಾರ್ದ ಸಮಾಜಕ್ಕಾಗಿ ಬದುಕಿದ ಅವರ ಜೀವನ ಶೈಲಿ ಎಲ್ಲರಿಗೂ ಆದರ್ಶ, ಅವರ ಕೊಡುಗೆ ಸಮಾಜಕ್ಕೆ ದೊಡ್ಡದು. ಅವರ ನೆನಪು ಶಾಶ್ವತ. ಸರಳ ಸಜ್ಜನಿಕೆಯ ವ್ಯಕ್ತಿತ್ವದ ವಿನಯ ಹೆಗ್ಡೆ ಅವರು ನಮ್ಮೆಲ್ಲರ ಮನಸ್ಸಿನಲ್ಲಿ ಚಿರಕಾಲ ಉಳಿಯು ತ್ತದೆ ಎಂದು ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷರಾದ ಕೆ ಅಜಿತ್ ಕುಮಾರ್ ರೈ ಮಾಲಾಡಿ ತಿಳಿಸಿದರು. ಬಂಟ್ಸ್ ಹಾಸ್ಟೇಲ್ ಶ್ರೀರಾಮಕೃಷ್ಣ ಕಾಲೇಜ್ ಬಳಿ ಇರುವ ಶ್ರೀಮತಿ ಗೀತಾ ಎಸ್ ಎಂ ಶೆಟ್ಟಿ ಸಭಾಂಗಣದಲ್ಲಿ ಇತ್ತೀಚೆಗೆ ಅಗಲಿದ ನಿಟ್ಟೆ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ವಿನಯ ಹೆಗ್ಡೆಯವರಿಗೆ ಸಲ್ಲಿಸಿದ ಶ್ರದ್ದಾಂಜಲಿ ನುಡಿನಮನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ವಿನಯ ಹೆಗ್ಡೆ ಬಂಟ ಸಮಾಜಕ್ಕೆ ಮಾತ್ರವಲ್ಲ ಸಮಸ್ತ ಸಮಾಜಕ್ಕೆ ಮಹತ್ವನೀಡಿ,ಬಹುತೇಕ ರಿಗೆ ಉದ್ಯೋಗ ನೀಡಿ ಬದುಕು ನೀಡಿದವರು. ಸಮಾಜದ ಎಲ್ಲಾ ಜನರೊಂದಿಗೆ ಸೌಹಾರ್ದ ಪಪರಂಪರೆಯನ್ನು ಉಳಿಸಿಕೊಂಡು ಬಂದ ಅಪರೂಪದ ವ್ಯಕ್ತಿ. ಹೆಸರಿಗೆ ತಕ್ಕಂತೆ ವಿನಯ ವಂತ ಸಹೃದ ಯದ ವ್ಯಕ್ತಿ ಯಾಗಿ ದ್ದರು. ವಿನಯ ಹೆಗ್ಡೆಯವರ ಜೀವನ ಶೈಲಿ ನಮಗೆಲ್ಲರಿಗೂ ಮಾದರಿ. ಅವರಂತೆ ಇನ್ನೋರ್ವ ಬಂಟ ಇಲ್ಲ. ವಿನಯ ಹೆಗ್ಡೆಯವರ ನೆನಪು ನಮ್ಮ ಮನಸ್ಸಿನಲ್ಲಿ ಚಿರಕಾಲ ಉಳಿಯುತ್ತದೆ. ಅವರು ನಡೆದ ಹಾದಿಯಲ್ಲಿ ನಾವು ಮುನ್ನಡೆಯೋಣ ಎಂದರು. ಕರ್ನಲ್ ಶರಶ್ಚಂದ್ರ ಭಂಡಾರಿ ಮಾತನಾಡಿ ವಿನಯ ಹೆಗ್ಡೆಯವರ ಆದರ್ಶ ಜೀವನ ಒಳ್ಳೆಯ ಗುಣಗಳನ್ನು ನಮ್ಮ ಜೀವನದಲ್ಲಿ ಅಳವಡಿಸೋಣ. ಮಂಗಳೂರು ನಗರದಲ್ಲಿ ವಿನಯ ಹೆಗ್ಡೆಯವರ ಮೂರ್ತಿಯನ್ನು ಪ್ರತಿಷ್ಢಾಪಿಸಿ ಅವರ ಹೆಸರನ್ನು ರಸ್ತೆ ಮತ್ತು ಸರ್ಕಲ್ ಗೆ ಇಡೋಣ ಎಂದರು. ವಿದ್ಯಾಧರ ಶೆಟ್ಟಿ ಕೊಲ್ನಾಡ್ ಗುತ್ತು ಮಾತನಾಡಿ ವಿನಯ ಹೆಗ್ಡೆಯವರ ನಿಧನ ಸಮಾಜಕ್ಕೆ ತುಂಬಲಾರದ ನಷ್ಟ. ಅವರ ಸರಳ ಬದುಕಿನಲ್ಲಿ ಕೆಲಸದ ಬಗ್ಗೆ ಬದ್ದತೆಯನ್ನು ಕಾಣಬಹುದಿತ್ತು. ಬಂಟ ಸಮಾಜದಲ್ಲಿ ಅವರ ಜೀವನ ವ್ಯರ್ಥ ಆಗಲಿಲ್ಲ ಎಂದರು. ಬಂಟರ ಯಾನೆ ನಾಡವರ ಮಾತೃ ಸಂಘದ ಪ್ರಧಾನ ಕಾರ್ಯದರ್ಶಿ ಕೆ ಎಂ ಶೆಟ್ಟಿ, ಮಾಜಿ ಮೇಯರ್ ಶಶಿಧರ ಹೆಗ್ಡೆ, ಡಾ ಆಶಾ ಜ್ಯೋತಿ ರೈ ಭಾಸ್ಕರ ರೈ ಕುಕ್ಕುವಳ್ಳಿ ಮಾತನಾಡಿದರು. ಸಂಘದ ಉಪಾಧ್ಯಕ್ಷ ಕಾವು ಹೇಮನಾಥ ಶೆಟ್ಟಿ, ನಿಟ್ಟೆ ಗುತ್ತು ರವಿರಾಜ ಶೆಟ್ಟಿ, ಶೆಡ್ಡೆ ಮಂಜುನಾಥ ಭಂಡಾರಿ, ಉಮೇಶ್ ರೈ ಪದವು ಮೇಗಿನ ಮನೆ, ಕೃಷ್ಣಪ್ರಸಾದ್ ರೈ, ಜಯರಾಮ ಸಾಂತಾ ಮೊದಲಾದವರು ಉಪಸ್ಥಿತರಿದ್ದರು. ಕೆ ಪುರುಷೋತ್ತಮ ಭಂಡಾರಿ ಅಡ್ಯಾರ್ ಕಾರ್ಯ ಕ್ರಮ ನಿರ್ವಹಿಸಿದರು. ಕಾವು ಹೇಮನಾಥ ಶೆಟ್ಟಿ ವಂದಿಸಿದರು.
ವೆನೆಝುವೆಲ ಅಧ್ಯಕ್ಷೆ ಭಾರೀ ಬೆಲೆ ತೆರಬೇಕಾಗಬಹುದು: ಟ್ರಂಪ್ ಬೆದರಿಕೆ
ಅಮೆರಿಕವು ವೆನೆಝುವೆಲವನ್ನು ಆಳುವುದು ಮತ್ತು ಅಲ್ಲಿನ ಬೃಹತ್ ತೈಲ ನಿಕ್ಷೇಪಗಳನ್ನು ಬಳಸುವುದು ಎಂದು ಮಡುರೊ ಅಪಹರಣದ ಬಳಿಕ ಟ್ರಂಪ್ ಹೇಳಿದ್ದರು. ಆದರೆ, ವೆನೆಝುವೆಲದ ಮಧ್ಯಂತರ ಅಧ್ಯಕ್ಷೆ ಡೆಲ್ಸಿ ರೋಡ್ರಿಗ್ಸ್ಗೆ ಸಹಕಾರ ನೀಡಲಾಗುವುದು ಎಂದು ಅಮೆರಿಕ ಸರಕಾರ ಬಳಿಕ ಹೇಳಿತು. ಆದರೂ, ಮಧ್ಯಂತರ ಸರಕಾರದ ನೀತಿಯನ್ನು ತಾನು ರೂಪಿಸುವುದಾಗಿ ಟ್ರಂಪ್ ಆಡಳಿತ ಹೇಳಿದೆ ಹಾಗೂ ಅಮೆರಿಕದ ಬೇಡಿಕೆಗಳನ್ನು ನಿರ್ಲಕ್ಷಿಸಿದರೆ ಎರಡನೇ ಹಂತದ ಸೇನಾ ಕಾರ್ಯಾಚರಣೆಗಳನ್ನು ನಡೆಸುವ ಬೆದರಿಕೆಯನ್ನು ಅದು ಪದೇ ಪದೇ ಒಡ್ಡಿದೆ. ‘‘ಸರಿಯಾದುದನ್ನು ಅವರು (ವೆನೆಝುವೆಲದ ಮಧ್ಯಂತರ ಅಧ್ಯಕ್ಷೆ) ಮಾಡದಿದ್ದರೆ, ಅವರು ಭಾರೀ ದೊಡ್ಡ ಬೆಲೆಯನ್ನು ತೆರಬೇಕಾಗುತ್ತದೆ. ಬಹುಷಃ ಅದು ಮಡೊರೊ ತೆತ್ತ ಬೆಲೆಗಿಂತಲು ಹೆಚ್ಚಾಗಬಹುದು’’ ಎಂದು ‘ದ ಅಟ್ಲಾಂಟಿಕ್’ನ ರವಿವಾರದ ಸಂಚಿಕೆಗೆ ನೀಡಿದ ಸಂದರ್ಶನವೊಂದರಲ್ಲಿ ಟ್ರಂಪ್ ಹೇಳಿದ್ದಾರೆ.
ಯಾದಗಿರಿ | ವೆನೆಜುವೆಲಾ ಮೇಲೆ ಅಮೆರಿಕ ದಾಳಿ ಖಂಡಿಸಿ ಎಸ್ಯುಸಿಐ ಪ್ರತಿಭಟನೆ
ಯಾದಗಿರಿ : ಅಮೆರಿಕನ್ ಸಾಮ್ರಾಜ್ಯಶಾಹಿಗಳು ವೆನೆಜುವೆಲಾ ದೇಶದ ಮೇಲೆ ನಡೆಸಿರುವ ಮಿಲಿಟರಿ ದಾಳಿಯನ್ನು ಖಂಡಿಸಿ, ಎಸ್ಯುಸಿಐ (ಕಮ್ಯುನಿಸ್ಟ್) ಪಕ್ಷದ ಜಿಲ್ಲಾ ಸಂಘಟನಾ ಸಮಿತಿಯು ಇಂದು ನಗರದ ಸುಭಾಷ್ ವೃತ್ತದಲ್ಲಿ ಬೃಹತ್ ಪ್ರತಿಭಟನೆ ನಡೆಸಿತು. ಪಕ್ಷದ ಕೇಂದ್ರ ಸಮಿತಿಯು ಜ.6 ರಿಂದ 12 ರವರೆಗೆ ದೇಶಾದ್ಯಂತ ಪ್ರತಿಭಟನೆ ನಡೆಸಲು ಕರೆ ನೀಡಿದ ಹಿನ್ನೆಲೆಯಲ್ಲಿ ಈ ಹೋರಾಟ ಹಮ್ಮಿಕೊಳ್ಳಲಾಗಿತ್ತು. ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಪಕ್ಷದ ರಾಜ್ಯ ವಿಸ್ತೃತ ಸಮಿತಿ ಸದಸ್ಯ ಕಾ.ಕೆ.ಸೋಮಶೇಖರ್ ಅವರು, ಈ ದಾಳಿಯು ಕೇವಲ ವೆನೆಜುವೆಲಾದ ಮೇಲಷ್ಟೇ ಅಲ್ಲ, ಇಡೀ ಲ್ಯಾಟಿನ್ ಅಮೆರಿಕದ ಸಾರ್ವಭೌಮತ್ವದ ಮೇಲೆ ನಡೆದ ದಾಳಿಯಾಗಿದೆ. ವಿಶ್ವದ ಅತಿ ಹೆಚ್ಚು ತೈಲ ನಿಕ್ಷೇಪ ಹೊಂದಿರುವ ವೆನೆಜುವೆಲಾ ಮೇಲೆ ತನ್ನ ಅಧಿಪತ್ಯ ಸ್ಥಾಪಿಸಲು ಅಮೆರಿಕ ಮಿಲಿಟರಿ ಬಲವನ್ನು ಬಳಸುತ್ತಿದೆ. ಸಂವಿಧಾನಿಕವಾಗಿ ಆಯ್ಕೆಯಾದ ನಾಯಕರನ್ನು ಕಡೆಗಣಿಸಿ, ತನ್ನ ಕೈಗೊಂಬೆ ಸರ್ಕಾರವನ್ನು ಸ್ಥಾಪಿಸಲು ಹೊರಟಿರುವುದು ಅಂತರಾಷ್ಟ್ರೀಯ ನಿಯಮಗಳ ಉಲ್ಲಂಘನೆಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಜಗತ್ತಿನಾದ್ಯಂತ ಜನರು ಅಮೆರಿಕದ ಈ ಕ್ರೂರ ನಡೆಯನ್ನು ವಿರೋಧಿಸುತ್ತಿದ್ದಾರೆ. ಆದರೆ ಭಾರತ ಸರ್ಕಾರವು ಅಮೆರಿಕದ ವಿರುದ್ಧ ಕಠಿಣ ನಿಲುವು ತಳೆಯದೆ ಮೃದು ಧೋರಣೆ ಪ್ರದರ್ಶಿಸುತ್ತಿದೆ. ಇದು ಭಾರತದ ಸಾಮ್ರಾಜ್ಯಶಾಹಿ ವಿರೋಧಿ ಪರಂಪರೆಗೆ ವಿರುದ್ಧವಾದುದು ಎಂದು ಸೋಮಶೇಖರ್ ಟೀಕಿಸಿದರು. ಜಿಲ್ಲಾ ಕಾರ್ಯದರ್ಶಿ ಕಾ.ಶರಣಗೌಡ ಗೂಗಲ್ ಮಾತನಾಡಿ, ಈ ಅಪರಾಧ ಸದೃಶ ದಾಳಿಯ ವಿರುದ್ಧ ಎಲ್ಲಾ ಯುದ್ಧ ವಿರೋಧಿ ಮತ್ತು ಶಾಂತಿಪ್ರಿಯ ಜನರು ಎದ್ದು ನಿಲ್ಲಬೇಕು. ಅಮೆರಿಕನ್ ಸಾಮ್ರಾಜ್ಯಶಾಹಿ ಶಕ್ತಿಗಳು ಲ್ಯಾಟಿನ್ ಅಮೆರಿಕದಿಂದ ತಕ್ಷಣ ಹಿಂದೆ ಸರಿಯುವಂತೆ ಒತ್ತಾಯಿಸಬೇಕು ಎಂದು ಕರೆ ನೀಡಿದರು. ಪ್ರತಿಭಟನೆಯಲ್ಲಿ ಪಕ್ಷದ ಸದಸ್ಯರಾದ ಡಿ.ಉಮಾದೇವಿ, ಜಮಾಲ್ ಸಾಬ್, ಶಿಲ್ಪಾ ಬಿ.ಕೆ., ಸುಭಾಷ್ ಚಂದ್ರ ಬಾವನೋರ್, ಭೀಮರೆಡ್ಡಿ ಹಿರೇಬಾನರ್, ನಾಗರಾಜ ಹೇರೂರು ಸೇರಿದಂತೆ ಹಲವರು ಪಾಲ್ಗೊಂಡಿದ್ದರು.
ಅಂತರ್ರಾಷ್ಟ್ರೀಯ ನಿಯಮಗಳು ನನಗೆ ಅನ್ವಯಿಸುವುದಿಲ್ಲ: ಟ್ರಂಪ್
ವಾಶಿಂಗ್ಟನ್, ಜ. 9: ಅಂತರ್ರಾಷ್ಟ್ರೀಯ ನಿಯಮಗಳು ತನಗೆ ಅನ್ವಯವಾಗುವುದಿಲ್ಲ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ವೆನೆಝುವೆಲದ ಅಧ್ಯಕ್ಷ ನಿಕೊಲಸ್ ಮಡುರೊ ಅವರನ್ನು ಅಪಹರಿಸಿದ ಬಳಿಕ, ಜಗತ್ತಿನಾದ್ಯಂತ ತಾನು ಅನುಸರಿಸುತ್ತಿರುವ ಆಕ್ರಮಣಕಾರಿ ನೀತಿಗಳನ್ನು ‘‘ನನ್ನ ನೈತಿಕತೆ’’ ಮಾತ್ರ ನಿಯಂತ್ರಿಸಬಲ್ಲದು ಎಂದು ಅವರು ಹೇಳಿದ್ದಾರೆ. ‘‘ನನಗೆ ಅಂತರ್ರಾಷ್ಟ್ರೀಯ ಕಾನೂನಿನ ಅಗತ್ಯವಿಲ್ಲ. ನಾನು ಜನರಿಗೆ ಹಾನಿ ಮಾಡುತ್ತಿಲ್ಲ’’ ಎಂದು ಗುರುವಾರ ‘ನ್ಯೂಯಾರ್ಕ್ ಟೈಮ್ಸ್’ನೊಂದಿಗೆ ಮಾತನಾಡಿದ ಅವರು ಹೇಳಿದರು. ನೀವು ಅಂತರ್ರಾಷ್ಟ್ರೀಯ ಕಾನೂನನ್ನು ಪಾಲಿಸಬೇಕಾಗುತ್ತದೆಯೇ ಎಂಬ ಪ್ರಶ್ನೆಗೆ ಟ್ರಂಪ್, ‘‘ಹೌದು’’ ಎಂದು ಉತ್ತರಿಸಿದರು. ಆದರೆ, ಅದು ಅಂತರ್ರಾಷ್ಟ್ರೀಯ ಕಾನೂನಿಗೆ ನೀವು ಕೊಡುವ ವ್ಯಾಖ್ಯೆಯನ್ನು ಅವಲಂಬಿಸುತ್ತದೆ ಎಂದು ಹೇಳಿದರು. ಶನಿವಾರ ಮುಂಜಾನೆ ಅಮೆರಿಕ ಸೇನೆಯು ವೆನೆಝುವೆಲದ ಮೇಲೆ ದಾಳಿ ನಡೆಸಿ ದೇಶದ ಅಧ್ಯಕ್ಷ ನಿಕೊಲಸ್ ಮಡುರೊ ಮತ್ತು ಅವರ ಪತ್ನಿಯನ್ನು ಅಮೆರಿಕಕ್ಕೆ ಅಪಹರಿಸಿದೆ. ದಾಳಿಯ ವೇಳೆ, ರಾಜಧಾನಿ ಕ್ಯಾರಕಸ್ ಮತ್ತು ವೆನೆಝುವೆಲ ಸೇನಾ ನೆಲೆಗಳ ಮೇಲೆ ಬಾಂಬ್ಗಳನ್ನು ಹಾಕಿದೆ. ವೆನೆಝುವೆಲ ಅಧ್ಯಕ್ಷರ ಅಪಹರಣವು ವಿಶ್ವಸಂಸ್ಥೆ ಸನ್ನದಿನ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ವೀಕ್ಷಕರು ಹೇಳುತ್ತಾರೆ. ಯವುದೇ ದೇಶದ ಭೂಭಾಗ ಸಾರ್ವಭೌಮತೆ ಅಥವಾ ರಾಜಕೀಯ ಸ್ವಾತಂತ್ರ್ಯದ ವಿರುದ್ಧ ಬಲ ಪ್ರಯೋಗಿಸುವುದು ಅಥವಾ ಬಲಪ್ರಯೋಗದ ಬೆದರಿಕೆ ಹಾಕುವುದನ್ನು ಈ ಸನ್ನದು ನಿಷೇಧಿಸುತ್ತದೆ.
ಸಾಲದ ಆಮಿಷ ಒಡ್ಡಿ ಆನ್ಲೈನ್ ವಂಚನೆ: ಪ್ರಕರಣ ದಾಖಲು
ಮಂಗಳೂರು: ಸಾಲದ ಆಮಿಷವೊಡ್ಡಿ ವ್ಯಕ್ತಿಯೊಬ್ಬರಿಗೆ ಆನ್ಲೈನ್ ಮೂಲಕ ವಂಚಿಸಿದ ಬಗ್ಗೆ ನಗರದ ಸೈಬರ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸೆಪ್ಟಂಬರ್ನಲ್ಲಿ ತನಗೆ ಅಪರಿಚಿತ ವ್ಯಕ್ತಿಯೊಬ್ಬ ವಾಟ್ಸ್ಆ್ಯಪ್ ಮೂಲಕ ಸಂದೇಶ ಕಳುಹಿಸಿ ಬೆಂಗಳೂರಿನ ಜಯಪ್ರಕಾಶ್ ಫೈನಾನ್ಸ್ ಎಂಬುದಾಗಿ ಪರಿಚಯಿಸಿಕೊಂಡ. ಬಳಿಕ ತನಗೆ 50,000 ರೂ. ವೈಯಕ್ತಿಕ ಸಾಲವನ್ನು ಶೀಘ್ರವಾಗಿ ನೀಡುವುದಾಗಿ ಕರೆ ಮಾಡಿ ತಿಳಿಸಿದ್ದ. ತಾನು ಆ ಬಗ್ಗೆ ವಿಚಾರಿಸಿದಾಗ ಕೃತಿಕಾ ಎಂಬಾಕೆ ಮಾತನಾಡಿ ಸಾಲ ಮಂಜೂರು ಮಾಡುವುದಾಗಿ ತಿಳಿಸಿದ್ದಳು. ಬಳಿಕ ಆ ಕಂಪನಿಯ ಮ್ಯಾನೇಜರ್ ಎಂದು ಪರಿಚಯಿಸಿಕೊಂಡ ಶ್ರೀವಾತ್ಸವ್ ಎಂಬಾತ ಬೇರೆ ಬೇರೆ ರೀತಿಯ ಶುಲ್ಕಗಳನ್ನು ಪಾವತಿಸುವಂತೆ ತಿಳಿಸಿದ್ದಾನೆ. ಅದನ್ನು ನಂಬಿದ ತಾನು ಸೆ.8ರಿಂದ 23ರವರೆಗೆ ಅಪರಿಚಿತ ವ್ಯಕ್ತಿಗಳು ತಿಳಿಸಿದ ಬೇರೆ ಬೇರೆ ಗೂಗಲ್ ಪೇ ನಂಬರ್ಗಳಿಗೆ ಯುಪಿಐ ಮುಖಾಂತರ ತನ್ನ ಬ್ಯಾಂಕ್ ಖಾತೆಯಿಂದ ಹಂತ ಹಂತವಾಗಿ 2,15,000 ರೂ.ಗಳನ್ನು ವರ್ಗಾಯಿಸಿದ್ದೆ. ನಂತರ ತಾನು ಸಾಲದ ಹಣ ಮಂಜೂರು ಮಾಡುವಂತೆ ಕೇಳಿದಾಗ ಮತ್ತಷ್ಟು ಶುಲ್ಕಗಳನ್ನು ಪಾವತಿಸುವಂತೆ ಸೂಚಿಸಿದ್ದಾರೆ. ಆದರೆ ಆ ವ್ಯಕ್ತಿಗಳು ಯಾವುದೇ ಸಾಲವನ್ನು ನೀಡದೆ ಮತ್ತು ತಾನು ಪಾವತಿಸಿದ ಹಣವನ್ನು ವಾಪಾಸ್ ನೀಡದೆ ಆನ್ಲೈನ್ ಮೋಸ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಮಂಗಳೂರು| ವೀಸಾ ನೀಡುವುದಾಗಿ ಹೇಳಿ ಹಣ ಪಡೆದು ವಂಚನೆ; ಪ್ರಕರಣ ದಾಖಲು
ಮಂಗಳೂರು, ಜ.9: ವೀಸಾ ನೀಡುವುದಾಗಿ ಹೇಳಿ ರೋಯನ್ ಆಲ್ವಿನ್ ಲೋಬೋ ಮತ್ತು ರಿಯೋನ್ ತೌರೋ ಎಂಬವರಿಂದ ಹಣ ಪಡೆದು ವಂಚಿಸಿರುವ ಸ್ಟ್ಯಾನಿ ಡಿಸೋಜ ಮತ್ತವರ ಪುತ್ರಿ ರೆಮಿ ಡಿಸೋಜ ವಿರುದ್ಧ ಮಂಗಳೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವೃತ್ತಿಯಲ್ಲಿ ಚಾಲಕನಾಗಿರುವ ರೋಯನ್ ಆಲ್ವಿನ್ ಲೋಬೋ ಮತ್ತವರ ಅಕ್ಕನ ಮಗ ರಿಯೋನ್ ತೌರೋ ವಿದೇಶ ದಲ್ಲಿ ಕೆಲಸ ಹುಡುಕುತ್ತಿದ್ದರು. 2024ರ ಡಿಸೆಂಬರ್ನಲ್ಲಿ ಮೂಲ್ಕಿ ಕಿನ್ನಿಗೋಳಿಯ ಗುರುಗಳು ಯುರೋಪ್ ದೇಶದಲ್ಲಿ ಕೆಲಸಗಳಿದೆ. ಬೇಕಾದವರು ಉಡುಪಿಯಲ್ಲಿರುವ ಡೊನಾಲ್ಡ್ ಮಾಲಕತ್ವದ ಸುವಿಧಾ ಕೇಂದ್ರವನ್ನು ಸಂಪರ್ಕಿಸುವಂತೆ ತಿಳಿಸಿದ್ದರು. ಅದರಂತೆ ರೋಯನ್ ಆಲ್ವಿನ್ ಲೋಬೋ ಹಾಗೂ ರಿಯೋನ್ ತೌರೋ ಉಡುಪಿಗೆ ತೆರಳಿ ನೀಡಿದ ಸ್ಟ್ಯಾನಿ ಡಿಸೋಜರನ್ನು ಸಂಪರ್ಕಿಸಿದಾಗ ವೀಸಾ ಇದೆ ಎಂದಿದ್ದರು. ಅದರಂತೆ ಇಬ್ಬರಿಂದ 5 ಲಕ್ಷ ರೂ. ಪಡೆದು ವೀಸಾ ನೀಡದೆ ವಂಚಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಬೀದರ್ | ಫೆ.15ರವರೆಗೆ ‘ಕಲಿಕೆಯೇ ಕಲ್ಯಾಣ’ ಅಭಿಯಾನ : ಆಶಿಫ್
ಬೀದರ್ : ‘ಕಲಿಕೆಯೇ ಕಲ್ಯಾಣ’ ಅಭಿಯಾನ ಡಿ.15ರಿಂದ ಆರಂಭವಾಗಿದ್ದು, ಫೆ. 15ರವರೆಗೆ ಜರುಗಲಿದೆ ಎಂದು ಎಸ್ಐಒ ರಾಜ್ಯ ಕಾರ್ಯದರ್ಶಿ ಆಶಿಫ್ ಅವರು ಹೇಳಿದ್ದಾರೆ. ನಗರದ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಸ್ಟೂಡೆಂಟ್ ಇಸ್ಲಾಮಿಕ್ ಆರ್ಗನೈಝೆಶನ್ಆಫ್ ಇಂಡಿಯಾ ಸಂಘಟನೆಯು ಸೆಂಟರ್ ಫಾರ್ ಎಜುಕೇಷನಲ್ ರೀಸರ್ಚ್ ಅಂಡ್ ಅನಾಲಿಸಿಸ್ ಸಹಯೋಗದೊಂದಿಗೆ ಅಭಿಯಾನ ಜರುಗಲಿದೆ. ಶೇ.65 ಶಾಲೆಗಳಲ್ಲಿ ಒಬ್ಬರೇ ಶಿಕ್ಷಕರು ಕೆಲಸ ನಿರ್ವಹಿಸುತ್ತಿದ್ದಾರೆ. ಹಾಗೆಯೇ ಭಾಷೆಯ ಸಮಸ್ಯೆ ಪ್ರಮುಖವಾಗಿ ಕಾಡುತ್ತಿದೆ. ಶಿಕ್ಷಣಕ್ಕೆ ಬಡ ಜನರಿಗೆ ಸರಕಾರಿ ಶಾಲೆಗಳೇ ಆಧಾರವಾಗಿದ್ದು ಅಲ್ಲಿನ ಪ್ರಮುಖ ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸುವ ಕೆಲಸವಾಗುತ್ತಿದೆ ಎಂದು ತಿಳಿಸಿದರು. ಈ ವೇಳೆ ಎಸ್ಐಒ ಸಂಘಟನೆಯ ಬೀದರ್ ಯೂನಿಟ್ ಅಧ್ಯಕ್ಷ ಸಯ್ಯದ್ ಇಝಾನ್ ಅಹ್ಮದ್ ಹಾಗೂ ಆರಿಫೋದ್ದೀನ್ ಉಪಸ್ಥಿತರಿದ್ದರು.
ಶೀಘ್ರದಲ್ಲೇ ಬಾಂಗ್ಲಾದೇಶಕ್ಕೆ ಜೆಫ್-17 ತಂಡರ್ ಯುದ್ಧವಿಮಾನ ಪೂರೈಕೆ: ಪಾಕಿಸ್ತಾನ ಸೇನೆ ಘೋಷಣೆ
ಇಸ್ಲಾಮಾಬಾದ್, ಜ. 9: ಪಾಕಿಸ್ತಾನದಲ್ಲಿ ನಿರ್ಮಾಣಗೊಳ್ಳುತ್ತಿರುವ ‘ಜೆಎಫ್-17 ತಂಡರ್’ ಯುದ್ಧವಿಮಾನಗಳನ್ನು ಬಾಂಗ್ಲಾದೇಶಕ್ಕೆ ಮಾರಾಟ ಮಾಡುವ ಒಪ್ಪಂದವೊಂದಕ್ಕೆ ಶೀಘ್ರವೇ ಸಹಿ ಹಾಕಲಾಗುವುದು ಎಂದು ಪಾಕಿಸ್ತಾನಿ ಸೇನೆ ಘೋಷಿಸಿದೆ. ಪಾಕಿಸ್ತಾನ ವಾಯುಪಡೆಯ ಮುಖ್ಯಸ್ಥ ಏರ್ ಚೀಫ್ ಮಾರ್ಶಲ್ ಝಹೀರ್ ಅಹ್ಮದ್ ಬಾಬರ್ ಸಿದು ಮತ್ತು ಬಾಂಗ್ಲಾದೇಶದ ವಾಯುಪಡೆ ಮುಖ್ಯಸ್ಥ ಏರ್ ಚೀಫ್ ಮಾರ್ಶಲ್ ಹಸನ್ ಮಹ್ಮೂದ್ ಖಾನ್ ನಡುವೆ ಮಾತುಕತೆ ನಡೆದ ಬಳಿಕ ಈ ಬೆಳವಣಿಗೆ ನಡೆದಿದೆ. ಪಾಕಿಸ್ತಾನಿ ವಾಯುಪಡೆಯ ಸಮರ ದಾಖಲೆಯನ್ನು ಬಾಂಗ್ಲಾದೇಶದ ಏರ್ ಚೀಫ್ ಮಾರ್ಶಲ್ ಶ್ಲಾಘಿಸಿದರು ಹಾಗೂ ತನ್ನ ದೇಶದ ವಾಯುಪಡೆಯನ್ನು ಬಲಪಡಿಸಲು ಮತ್ತು ಕಣ್ಗಾವಲನ್ನು ಹೆಚ್ಚಿಸಲು ನೆರವು ನೀಡುವಂತೆ ಕೋರಿದರು ಎಂದು ಪಾಕಿಸ್ತಾನಿ ಸೇನೆಯ ಮಾಧ್ಯಮ ಘಟಕ ಇಂಟರ್-ಸರ್ವಿಸಸ್ ಪಬ್ಲಿಕ್ ರಿಲೇಶನ್ಸ್ (ಐಎಸ್ಪಿಆರ್)ನ ಹೇಳಿಕೆಯೊಂದು ತಿಳಿಸಿದೆ. ಮಾತುಕತೆಯ ವೇಳೆ, ಸೂಪರ್ ಮುಶ್ಶಾಕ್ ತರಬೇತಿ ವಿಮಾನಗಳನ್ನು ಕ್ಷಿಪ್ರವಾಗಿ ಹಸ್ತಾಂತರಿಸಲಾಗುವುದು ಎಂಬ ಭರವಸೆಯನ್ನೂ ಬಾಂಗ್ಲಾದೇಶದ ವಾಯುಪಡೆಯ ಮುಖ್ಯಸ್ಥರಿಗೆ ನೀಡಲಾಯಿತು ಎಂದು ಹೇಳಿಕೆ ತಿಳಿಸಿದೆ. ‘ಸೂಪರ್ ಮುಶ್ಶಾಕ್’ ಹಗುರ, 2-3 ಆಸನಗಳ ಒಂಟಿ ಇಂಜಿನ್ ವಿಮಾನವಾಗಿದೆ. ಈ ವಿಮಾನವನ್ನು ಮುಖ್ಯವಾಗಿ ತರಬೇತಿ ಉದ್ದೇಶಕ್ಕೆ ಬಳಸಲಾಗುತ್ತದೆ. ಈ ವಿಮಾನವನ್ನು ಈಗಾಗಲೇ ಪೈಲಟ್ ತರಬೇತಿಗಾಗಿ ಅಝರ್ಬೈಜಾನ್, ತುರ್ಕಿಯೆ, ಇರಾನ್, ಇರಾಕ್ ಮುಂತಾದ ದೇಶಗಳು ಬಳಸುತ್ತಿವೆ.
ಉಡುಪಿ, ಜ.9: ಉಡುಪಿ ತಾಲೂಕು ಕುತ್ಪಾಡಿ ಗ್ರಾಮದ ನಿವಾಸಿ ಧನ್ರಾಜ್ (43) ಎಂಬವರು ಕಳೆದ ಆಗಸ್ಟ್ 22ರಂದು ಅಪರಾಹ್ನ 12:30ರ ಸುಮಾರಿಗೆ ಮನೆಯಿಂದ ಹೊರಗೆ ಹೋದವರು ಇದುವರೆಗೂ ವಾಪಾಸು ಬಾರದೇ, ಸಂಬಂಧಿಕರ ಮನೆಗೂ ಹೋಗದೇ ನಾಪತ್ತೆಯಾಗಿದ್ದಾರೆ. 5 ಅಡಿ 8 ಇಂಚು ಎತ್ತರ, ಸಾಧಾರಣ ಮೈಕಟ್ಟು, ಗೋಧಿ ಮೈಬಣ್ಣ ಹೊಂದಿದ್ದು, ಕನ್ನಡ, ತುಳು ಹಾಗೂ ಹಿಂದಿ ಭಾಷೆ ಮಾತನಾಡುತ್ತಾರೆ. ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಉಡುಪಿ ನಗರ ಪೊಲೀಸ್ ಠಾಣಾಧಿಕಾರಿಗಳಿಗೆ ಮಾಹಿತಿ ನೀಡುವಂತೆ ಪ್ರಕಟಣೆ ತಿಳಿಸಿದೆ.
ಯಾದಗಿರಿ | ನೀಲಹಳ್ಳಿಯಲ್ಲಿ ಶಿಥಿಲಗೊಂಡ ನೀರಿನ ಟ್ಯಾಂಕ್; ಜೀವ ಕೈಯಲ್ಲಿ ಹಿಡಿದು ಓಡಾಡುವ ಸ್ಥಿತಿ : ಉಮೇಶ ಮುದ್ನಾಳ
ಯಾದಗಿರಿ: ತಾಲ್ಲೂಕಿನ ಸೈದಾಪುರ ಸಮೀಪದ ನೀಲಹಳ್ಳಿ ಗ್ರಾಮದ ಸರ್ಕಾರಿ ಶಾಲೆಯ ಪಕ್ಕದಲ್ಲೇ ಇರುವ ಶಿಥಿಲಗೊಂಡ ನೀರಿನ ಟ್ಯಾಂಕ್ ಯಾವುದೇ ಕ್ಷಣದಲ್ಲಿ ಕುಸಿಯುವ ಹಂತದಲ್ಲಿದ್ದು, ಇದನ್ನು ಕೂಡಲೇ ನೆಲಸಮಗೊಳಿಸಬೇಕು ಎಂದು ಅಖಿಲ ಭಾರತೀಯ ಕೋಲಿ ಸಮಾಜದ ರಾಜ್ಯ ಸಂಘಟನಾ ಕಾರ್ಯದರ್ಶಿ ಉಮೇಶ ಕೆ. ಮುದ್ನಾಳ ಆಗ್ರಹಿಸಿದ್ದಾರೆ. ಗ್ರಾಮಕ್ಕೆ ಭೇಟಿ ನೀಡಿದ ಅವರು, ಕೆಟ್ಟು ನಿಂತಿರುವ ಶುದ್ಧ ಕುಡಿಯುವ ನೀರಿನ ಘಟಕ (RO Plant) ಹಾಗೂ ಪಾಚಿಗಟ್ಟಿ ಬೀಳುವ ಹಂತದಲ್ಲಿರುವ ಟ್ಯಾಂಕನ್ನು ವೀಕ್ಷಿಸಿದರು. ಬಳಿಕ ಗ್ರಾಮಸ್ಥರೊಂದಿಗೆ ದಿಢೀರ್ ಪ್ರತಿಭಟನೆ ನಡೆಸಿದ ಅವರು, ಮುಂದಿನ ದಿನಗಳಲ್ಲಿ ಸಮಸ್ಯೆ ಬಗೆಹರಿಯದಿದ್ದರೆ ಯಾದಗಿರಿ-ಸೈದಾಪುರ ಮುಖ್ಯ ರಸ್ತೆ ಬಂದ್ ಮಾಡಿ ಜಿಲ್ಲಾಡಳಿತದ ವಿರುದ್ಧ ಬೃಹತ್ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು. ಸುಮಾರು 5,000 ಜನಸಂಖ್ಯೆ ಹೊಂದಿರುವ ಈ ಗ್ರಾಮದಲ್ಲಿ ವರ್ಷಗಳ ಹಿಂದೆ ನಿರ್ಮಿಸಲಾದ ನೀರಿನ ಟ್ಯಾಂಕ್ ಸಂಪೂರ್ಣ ಶಿಥಿಲಗೊಂಡಿದೆ. ಸಿಮೆಂಟ್ ಕಿತ್ತು ಹೋಗಿದ್ದು, ಕಬ್ಬಿಣದ ರಾಡುಗಳು ಹೊರಬಂದಿವೆ. ಟ್ಯಾಂಕ್ ಪಕ್ಕದಲ್ಲೇ ಶಾಲೆಯಿದ್ದು, ಮಕ್ಕಳು ಹಾಗೂ ಸಾರ್ವಜನಿಕರು ಭಯದಲ್ಲೇ ಓಡಾಡುವಂತಾಗಿದೆ. ಅಲ್ಲದೆ, ಜೆಸ್ಕಾಂ ವಿದ್ಯುತ್ ತಂತಿಗಳು ಟ್ಯಾಂಕ್ ಮೇಲ್ಭಾಗದಲ್ಲೇ ಹಾದು ಹೋಗಿದ್ದು, ಟ್ಯಾಂಕ್ ಕುಸಿದರೆ ಭಾರಿ ಅನಾಹುತ ಸಂಭವಿಸುವ ಸಾಧ್ಯತೆಯಿದೆ ಎಂದು ಅವರು ಆರೋಪಿಸಿದರು. ಕಳೆದ 4 ವರ್ಷಗಳಿಂದ ಗ್ರಾಮದ ಶುದ್ಧ ಕುಡಿಯುವ ನೀರಿನ ಘಟಕ ದುರಸ್ತಿಯಿಲ್ಲದೆ ಕೆಟ್ಟು ನಿಂತಿದೆ. ಗ್ರಾಮದ ಚರಂಡಿಗಳು ತುಂಬಿ ಹೋಗಿದ್ದು, ಸೊಳ್ಳೆಗಳ ಕಾಟದಿಂದ ರೋಗರುಜಿನಗಳು ಹರಡುತ್ತಿವೆ. ಜಿಲ್ಲಾಡಳಿತಕ್ಕೆ ಹಲವು ಬಾರಿ ಮನವಿ ಮಾಡಿದರೂ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ವಹಿಸಿದ್ದಾರೆ. ಕೂಡಲೇ ನೂತನ ಟ್ಯಾಂಕ್ ನಿರ್ಮಾಣ ಮಾಡಬೇಕು ಮತ್ತು ಚರಂಡಿಗಳಿಗೆ ಬ್ಲೀಚಿಂಗ್ ಪೌಡರ್ ಸಿಂಪಡಿಸಿ ಸ್ವಚ್ಛತೆಗೆ ಆದ್ಯತೆ ನೀಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ಶಂಕರ, ನರಸಪ್ಪ, ಸಿದ್ರಾಮ, ಪವನ, ಹಣಮಂತ, ಮಲ್ಲಪ್ಪ, ಬಾಲಪ್ಪ, ಶೇಖಪ್ಪ, ಮಲ್ಲೇಶಿ, ರಾಜಪ್ಪ, ನಾಗೇಶ, ಸೈದಪ್ಪ, ರಮೇಶ, ರಾಚಪ್ಪ, ನಾಗಪ್ಪ ಬನ್ನಪ್ಪ, ಉಸೇನಪ್ಪ, ಸಾಬರೆಡ್ಡಿ ಭೀಮಪ್ಪ. ಲಕ್ಷ್ಮೀ, ಇಂದ್ರಮ್ಮ, ಸೋಲೊಚನಮ್ಮ, ಪದ್ಮಾವತಿ, ಮಲ್ಲಮ್ಮ, ಕಮಲಮ್ಮ, ಶ್ರೀದೇವಿ, ಸಂಗೀತಾ, ನಾಗಮ್ಮ, ತಾರಮ್ಮ, ಸುಶಿಲಮ್ಮ ಸೇರಿದಂತೆ ಅನೇಕರು ಭಾಗವಹಿಸಿದ್ದರು.
ಕರ್ನಾಟಕ ಗೂಂಡಾ ರಾಜ್ಯವಾಗಿದೆ: ನಳಿನ್ ಕುಮಾರ್ ಕಟೀಲ್ ಆರೋಪ
ಉಡುಪಿ: ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ರಾಜ್ಯವನ್ನು ಗೂಂಡಾ ರಾಜ್ಯವನ್ನಾಗಿ ಮಾಡಿದೆ ಎಂದು ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ ಹಾಗೂ ಮಾಜಿ ಸಂಸದ ನಳಿನ್ ಕುಮಾರ್, ಹುಬ್ಬಳ್ಳಿಯಲ್ಲಿ ಮಹಿಳೆ ಯೊಬ್ಬರನ್ನು ವಿವಸ್ತ್ರಗೊಳಿಸಿದ ಪ್ರಕರಣದ ಹಿನ್ನೆಲೆಯಲ್ಲಿ ಆರೋಪಿಸಿದರು. ಉಡುಪಿ ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಈ ಸರಕಾರ ಬಂದಾಲೇ ಪಾಕಿಸ್ತಾನ ಪರ ಘೋಷಣೆ ಕೂಗಲಾಯಿತು, ವಿಜಯೋತ್ಸವದಲ್ಲಿ ಪಾಕಿಸ್ತಾನ ಧ್ವಜ ಹಾರಿತು, ಬೆಳಗಾವಿ ಯಲ್ಲಿ ಮುನಿಯೊಬ್ಬರ ಹತ್ಯೆ ಆಯಿತು. ಹಲ್ಲೆ ಗೂಂಡಾ ವರ್ತನೆಗಳು ಇಲ್ಲಿ ನಿತ್ಯ ನಿರಂತರವಾಗಿದೆ. ಹೀಗಾಗಿ ಇವರಿಂದ ಕರ್ನಾಟಕ ಗೂಂಡಾ ರಾಜ್ಯವಾಗಿದೆ ಎಂದರು. ರಾಜ್ಯದಲ್ಲಿ ಅತ್ಯಾಚಾರಗಳು ಜಾಸ್ತಿ ಆಗುತ್ತಿವೆ. ಕೆಡಿಪಿ ಸಭೆಯಲ್ಲಿ ನಮ್ಮ ಶಾಸಕರ ಮೇಲೆ ಕಾಂಗ್ರೆಸ್ ಶಾಸಕರು ಕೈ ಎತ್ತುತ್ತಾರೆ. ಬಳ್ಳಾರಿಯಲಿ ಗುಂಡು ಹೊಡೆಯುತ್ತಾರೆ. ಶಾಸಕರ ಸಹವರ್ತಿ ಅವರದ್ದೇ ಕಾರ್ಯಕರ್ತನನ್ನು ಕೊಲ್ಲು ತ್ತಾರೆ. ಇದು ಕಾಂಗ್ರೆಸ್ ಸರಕಾರದ ಮಾನಸಿಕತೆಯನ್ನು ತೋರಿಸುತ್ತದೆ. ಈ ಎಲ್ಲಾ ಕೃತ್ಯಗಳನ್ನು ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳು ಸಮರ್ಥನೆ ಮಾಡುತ್ತಾರೆ ಎಂದರು. ರಾಮರಾಜ್ಯದ ಗಾಂಧಿಯ ಕನಸನ್ನು ಕಾಂಗ್ರೆಸ್ ನನಸಾಗಿಸಿಲ್ಲ, ಆದರೆ ಇದು ರಾವಣ ರಾಜ್ಯ. ಕರ್ನಾಟಕ ಲಂಕಾಪುರ ಆಗುತ್ತಿದೆ. ರಾವಣನು ಕೂಡ ಸಿದ್ದರಾಮಯ್ಯನಂತೆ ಬುದ್ದಿವಂತನಿದ್ದ. ರಾವಣ ಕೂಡ ಸಿದ್ದರಾಮಯ್ಯ ನವರಂತೆ ಅದ್ಭುತ ಜ್ಞಾನಿಯಾಗಿದ್ದ. ಹೀಗಾಗಿ ಸಿದ್ದರಾಮಯ್ಯರ ಹೆಸರು ಬದಲಾವಣೆಯಾಗುತ್ತಿದೆಯಾ ಎಂಬ ಸಂಶಯ ಎಂದರು. ಇದಕ್ಕೆ ಮುನ್ನ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಕೇಂದ್ರ ಸರಕಾರ ಜಾರಿಗೆ ತಂದಿರುವ ವಿಕಸಿತ ಭಾರತ ಉದ್ಯೋಗ ಖಾತರಿ ಮತ್ತು ಜೀವನೋಪಾಯ ಮಿಷನ್ (ವಿಬಿ-ಜಿ.ರಾಮ್-ಜಿ) ಯೋಜನೆಯನ್ನು ಸಮರ್ಥಿಸಿ ಮಾತನಾಡಿದರು. ಇದರ ವಿರುದ್ಧ ಕಾಂಗ್ರೆಸ್ ಅಪಪ್ರಚಾರ ಮಾಡುತ್ತಿದೆ ಎಂದು ಆರೋಪಿಸಿದರು.

22 C