SENSEX
NIFTY
GOLD
USD/INR

Weather

19    C
... ...View News by News Source

ಕರ್ನಾಟಕದಲ್ಲಿ ನಾಯಕತ್ವ ಸಂಕಷ್ಟ | ಸೋನಿಯಾ ಗಾಂಧಿಯೊಂದಿಗೆ ಕಾಂಗ್ರೆಸ್ ನ ಉನ್ನತ ನಾಯಕರಿಂದ ಚರ್ಚೆ; ಜನವರಿಯಲ್ಲಿ ಮತ್ತೊಂದು ಸಭೆ ಸಾಧ್ಯತೆ

ಹೊಸದಿಲ್ಲಿ: ರಾಜ್ಯ ಕಾಂಗ್ರೆಸ್‌ ನಲ್ಲಿ ಉಂಟಾಗಿರುವ ನಾಯಕತ್ವ ಬಿಕ್ಕಟ್ಟನ್ನು ಶಮನಗೊಳಿಸಲು ಪಕ್ಷದ ಉನ್ನತ ನಾಯಕತ್ವ ಶನಿವಾರ ತುರ್ತು ಸಮಾಲೋಚನೆ ನಡೆಸಿತು. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅಸಮಾಧಾನ ಹೆಚ್ಚುತ್ತಿರುವ ವಿಚಾರವಾಗಿ ನಡೆದ ಸಭೆಯಲ್ಲಿ ಈ ಬಾರಿ ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರೇ ಸ್ವತಃ ಚರ್ಚೆಯಲ್ಲಿ ಭಾಗವಹಿಸಿದ್ದರು. ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಸಂಘಟನಾ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರು 10-ಜನಪಥ್ ನಿವಾಸಕ್ಕೆ ತೆರಳಿ ಸೋನಿಯಾ ಮತ್ತು ವಿರೋಧಪಕ್ಷದ ನಾಯಕ ರಾಹುಲ್ ಗಾಂಧಿ ಅವರೊಂದಿಗೆ ಸುಮಾರು ಎರಡೂವರೆ ಗಂಟೆಗಳ ಕಾಲ “ಪ್ರಸ್ತುತ ರಾಜಕೀಯ ಪರಿಸ್ಥಿತಿ” ಕುರಿತು ಚರ್ಚಿಸಿದರು. ಸಭೆಯ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ವೇಣುಗೋಪಾಲ್, “ಸಾಮಾನ್ಯ ರಾಜಕೀಯ ಚರ್ಚೆಯ ಜೊತೆಗೆ ಕರ್ನಾಟಕದ ವಿಷಯವೂ ಪ್ರಸ್ತಾಪವಾಯಿತು. ಯಾವುದೇ ನಿರ್ಧಾರ ಹೊರಬರಲಿಲ್ಲ. ಈ ವಿಚಾರವಾಗಿ ಮತ್ತೊಂದು ಸುತ್ತಿನ ಚರ್ಚೆಯೂ ನಡೆಯಲಿದೆ,” ಎಂದು ಸ್ಪಷ್ಟಪಡಿಸಿದರು. ಸೋನಿಯಾ ಗಾಂಧಿ ಕೆಲಕಾಲದಿಂದ ಇಂತಹ ರಾಜಕೀಯ ಸಮಾಲೋಚನೆಗಳಿಂದ ದೂರವಿದ್ದರು. ಆದರೆ ಕರ್ನಾಟಕದ ನಾಯಕತ್ವದ ಕುರಿತ ಚರ್ಚೆಯಲ್ಲಿ ಅವರು ಭಾಗವಹಿಸಿರುವುದು ಕರ್ನಾಟಕದ ವಿಚಾರದಲ್ಲಿ ಹೈಕಮಾಂಡ್ ಗಂಭೀರವಾಗಿದೆ ಎಂಬ ಸೂಚನೆ ನೀಡಿದೆ. ಪಕ್ಷದ ಮೂಲಗಳ ಪ್ರಕಾರ, ಸಂಸತ್ತಿನ ಚಳಿಗಾಲದ ಅಧಿವೇಶನದ ನಂತರ, ಸಾಧ್ಯವಾದರೆ ಜನವರಿ ಮೊದಲ ವಾರದಲ್ಲೇ ಮತ್ತೊಂದು ಸುತ್ತಿನ ಸಭೆ ನಡೆಯುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ. ಸಿದ್ದರಾಮಯ್ಯ–ಶಿವಕುಮಾರ್ ಬಣಗಳ ನಡುವಿನ ಅಧಿಕಾರ ಹಂಚಿಕೆ ಸೂತ್ರದ ವಿಷಯವೇ ವಿವಾದದ ಮೂಲವಾಗಿದ್ದು, ಈ ಕುರಿತಂತೆ ಹೈಕಮಾಂಡ್ ಎರಡೂ ಬಣಗಳಿಗೆ ಸಾರ್ವಜನಿಕವಾಗಿ ಮಾತನಾಡದಂತೆ ಸೂಚನೆ ನೀಡಲಿದೆ. ಅಂತಿಮ ನಿರ್ಧಾರ ಸೋನಿಯಾ ಮತ್ತು ರಾಹುಲ್ ಗಾಂಧಿ ಅವರೊಂದಿಗೆ ಸಮಾಲೋಚನೆಯ ಬಳಿಕವೇ ಹೊರಬೀಳಲಿದೆ ಎಂದು ಖರ್ಗೆ ಈ ಮೊದಲು ಹೇಳಿದ್ದರು. ಇದೇ ಸಂದರ್ಭದಲ್ಲಿ, ಇಬ್ಬರು ನಾಯಕರು ಬ್ರೇಕ್ ಫಾಸ್ಟ್ ಮತ್ತು ಲಂಚ್ ಮೀಟಿಂಗ್ ಮೂಲಕ ಸಭೆಗಳನ್ನು ನಡೆಸಿ ಐಕ್ಯತೆಯನ್ನು ಸಾಧಿಸಲು ನಡೆಸಿದ ಪ್ರಯತ್ನಗಳ ಬಗ್ಗೆ ವೇಣುಗೋಪಾಲ್ ಸೋನಿಯಾ ಅವರಿಗೆ ವಿವರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಸಮಸ್ಯೆಗಳನ್ನು ಪಕ್ಷದ ಒಳಾಂಗಣದಲ್ಲಿ ಚರ್ಚಿಸಬೇಕೆಂಬ ಸೂಚನೆಯನ್ನೂ ಇಬ್ಬರಿಗೂ ನೀಡಲಾಗಿದೆ. ಕೇಂದ್ರದ ನಿರ್ಧಾರಕ್ಕೆ ಬದ್ಧರಾಗಿರುವುದಾಗಿ ಸಿದ್ದರಾಮಯ್ಯ ಹಾಗೂ ಶಿವಕುಮಾರ್ ಇಬ್ಬರೂ ಹೈಕಮಾಂಡ್‌ಗೆ ಭರವಸೆ ನೀಡಿರುವುದಾಗಿ ತಿಳಿದುಬಂದಿದೆ. ಇತ್ತೀಚೆಗೆ ಮಂಗಳೂರಿನಲ್ಲಿ ಸಿದ್ದರಾಮಯ್ಯ ಮತ್ತು ವೇಣುಗೋಪಾಲ್ ನಡುವೆ ನಡೆದ ಮಾತುಕತೆಯೂ ನಡೆದಿದೆ. ಮಲ್ಲಿಕಾರ್ಜುನ ಖರ್ಗೆಯವರೂ ಇಬ್ಬರು ನಾಯಕರೊಂದಿಗೆ ಚರ್ಚೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ. ಸೌಜನ್ಯ : deccanherald.com

ವಾರ್ತಾ ಭಾರತಿ 7 Dec 2025 12:03 am

ದಸಂಸ ಮನುಷ್ಯತ್ವದ ಪರ ಹೋರಾಡಿದೆ : ಸುಬ್ಬು ಹೊಲೆಯಾರ್

ಬೆಂಗಳೂರು : ರಾಜ್ಯದಲ್ಲಿ ಅನೇಕ ಚಳವಳಿಗಳು ಬಂದು ಹೋಗಿವೆ. ವಚನ ಸಾಹಿತ್ಯದ ನಂತರ ಕಮ್ಯುನಿಸ್ಟರನ್ನು ಹೊರತು ಪಡಿಸಿದರೆ, ದಲಿತ ಸಂಘರ್ಷ ಸಮಿತಿ ಒಂದೇ ಮನುಷ್ಯತ್ವದ ಪರವಾಗಿ ಹೋರಾಡಿದ್ದು ಎಂದು ಹಿರಿಯ ಸಾಹಿತಿ ಸುಬ್ಬು ಹೊಲೆಯಾರ್ ಅಭಿಪ್ರಾಯಪಟ್ಟಿದ್ದಾರೆ. ಶನಿವಾರ ನಗರದ ವಿಧಾನಸೌಧ ಮುಂಭಾಗದಲ್ಲಿರುವ ಅಂಬೇಡ್ಕರ್ ಪುತ್ಥಳಿಯ ಎದುರಿಗೆ ದಸಂಸ ವತಿಯಿಂದ ‘ಸಂವಿಧಾನ ಉಳಿಸಿ, ಅಸಮಾನತೆ ಅಳಿಸಿ’ ಎಂಬ ಘೋಷ ವಾಕ್ಯದಡಿ ಆಯೋಜಿಸಿದ್ದ ಪರಿನಿಬ್ಬಾಣದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಡಿ.6ರಂದು ಬೆಳಕು ಹಾರಿ ಹೋಗಿದ್ದಲ್ಲ, ಅದು ಬೆಳಕು ಮತ್ತೊಮ್ಮೆ ಉಜ್ವಲವಾಗಿ ಬೆಳಗಿದ್ದು ಎಂದು ಭಾವಿಸುತ್ತೇನೆ ಎಂದರು. ಅಂಬೇಡ್ಕರ್ ಅಸಮಾನತೆ ಅಳಿಸಲು ಸಂವಿಧಾನದ ಬೆಳಕನ್ನು ಕೊಟ್ಟಿದ್ದಾರೆ. ಅವರು ಒಂದು ಜಾತಿ, ಸಮುದಾಯಕ್ಕೆ ಮೀಸಲಾಗದೇ ಎಲ್ಲರ ಹೃದಯಗಳನ್ನು ಮಿಡಯುವ ಹಾಗೆ ದೇಶಕ್ಕೆ ಉತ್ತಮವಾದ ಸಂವಿಧಾನ ಕೊಟ್ಟಿದ್ದಾರೆ. ಅವರು ನಮ್ಮನ್ನು ಅಗಲಿಲ್ಲ, ಮತ್ತಷ್ಟು ಎಚ್ಚರವಾಗಿರಿ ಎಂದು ಹೇಳಿ ಹೋಗಿದ್ದಾರೆ. ಅವರು ಬದುಕಿನುದ್ದಕ್ಕು ನಮ್ಮ ಪರವಾಗಿ ಎಚ್ಚರವಾಗಿದ್ದರು. ಇದೀಗ ನಾವೆಲ್ಲ ಅವರಷ್ಟೇ ಜಾಗೃತರಾಗಬೇಕಿದೆ. ಅಸಮಾನತೆಯನ್ನು ಅಳಿಸಲು ನಾವೆಲ್ಲರೂ ಸನ್ನದ್ದರಾಗಬೇಕಿದೆ. ದಸಂಸ ರಾಜ್ಯದ ಚಳವಳಿಗಳ ತಾಯಿ ಎಂದು ಹೇಳಿದರೆ ತಪ್ಪಾಗಲಾರದು ಎಂದು ಅವರು ತಿಳಿಸಿದರು. ಕಾರ್ಯಕ್ರಮದಲ್ಲಿ ಸರಕಾರಿ ನೌಕರರ ಸಂಘದ ಖಜಾಂಚಿ ಶಿವರುದ್ರಯ್ಯ ಮಾತನಾಡಿದರು. ದಸಂಸ ಹೋರಾಟಗಾರರಾದ ಮಾವಳ್ಳಿ ಶಂಕರ್, ಇಂದಿರಾ ಕೃಷ್ಣಪ್ಪ, ಶ್ರೀರಾಮ್, ನಿರ್ಮಲಾ, ಪುರುಷೋತ್ತಮ ದಾಸ್, ಬಾಲಕೃಷ್ಣ, ವಕೀಲ ನರಸಿಂಹಮೂರ್ತಿ ಸೇರಿದಂತೆ ಹಲವರು ಭಾಗವಹಿಸಿದ್ದರು.

ವಾರ್ತಾ ಭಾರತಿ 6 Dec 2025 11:57 pm

ಗೌತಮ್ ಗಂಭೀರ್ ಅಲ್ಲ 9 ವಿಕೆಟ್‌ಗಳಿಂದ ಭಾರತ ಗೆದ್ದು ಬೀಗಲು ಇದೇ ಕಾರಣ... Virat Kohli

ಭಾರತ ಕ್ರಿಕೆಟ್ ತಂಡದಲ್ಲಿ ಬಿರುಗಾಳಿ ಎದ್ದಿದ್ದು, ಗೌತಮ್ ಗಂಭೀರ್ ವಿರುದ್ಧ 100 ಕೋಟಿಯನ್ನು ಮೀರಿದ ಭಾರತೀಯ ಕ್ರಿಕೆಟ್ ಅಭಿಮಾನಿಗಳು ಆಕ್ರೋಶ ಹೊರ ಹಾಕುತ್ತಿದ್ದಾರೆ. ಭಾರತ ಕ್ರಿಕೆಟ್ ತಂಡ ಹಾಳು ಮಾಡೋದಕ್ಕೆ ಗೌತಮ್ ಗಂಭೀರ್ ಬಂದಿರೋದು ಅನ್ನೋ ಗಂಭೀರ ಆರೋಪಗಳು ಕೂಡ ಸಂಚಲನ ಸೃಷ್ಟಿ ಮಾಡಿವೆ. ಇದಕ್ಕೆಲ್ಲಾ ಬೆಂಬಲ ನೀಡುವಂತೆ ವಿರಾಟ್ ಕೊಹ್ಲಿ ಇಲ್ಲದೆ ನಡೆದಿದ್ದ ಟೆಸ್ಟ್ ಸರಣಿಯಲ್ಲಿ,

ಒನ್ ಇ೦ಡಿಯ 6 Dec 2025 11:56 pm

ಉತ್ತರ ಕರ್ನಾಟಕ ಸಮಸ್ಯೆಗಳ ಚರ್ಚೆಗೆ ಸರಕಾರ ಬದ್ಧ : ಎಂ.ಬಿ.ಪಾಟೀಲ್

ವಿಜಯಪುರ : ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳ ಬಗ್ಗೆ ಬೆಳಗಾವಿ ಅಧಿವೇಶನದಲ್ಲಿ ಪ್ರತ್ಯೇಕ ಚರ್ಚೆ ಆಗಬೇಕು. ಈ ವಿಚಾರದಲ್ಲಿ ಸರಕಾರ ಕೂಡ ಬದ್ಧವಾಗಿದ್ದು, ಚರ್ಚೆ ಕೂಡ ಆಗುತ್ತೆ. ಪರಿಹಾರ ಕೊಡಲು ನಮ್ಮ ಸರಕಾರ ಬದ್ಧವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ್ ಹೇಳಿದ್ದಾರೆ. ನಗರದಲ್ಲಿ ಬೆಳಗಾವಿಯ ಚಳಿಗಾಲದ ಅಧಿವೇಶನದ ವಿಚಾರಕ್ಕೆ ಸಂಬಂಧಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಬ್ಬು ಬೆಳೆಗಾರರ ಸಮಸ್ಯೆ ವಿಚಾರದಲ್ಲಿ ಕೇಂದ್ರ ಸರಕಾರ ನೆರವಿಗೆ ಬಂತಾ?, ಎಫ್‌ಆರ್‌ಪಿ ಫಿಕ್ಸ್ ಮಾಡುವುದು ಕೇಂದ್ರ ಸರಕಾರ, ಕೇಂದ್ರ ಸರಕಾರ ಒಂದು ರೂಪಾಯಿ ಕೂಡ ಕೊಟ್ಟಿಲ್ಲ ಎಂದು ದೂರಿದರು. ಕೇಂದ್ರ ಸರಕಾರವು ಎಥಿನಾಲ್ ಕೂಡ ಅವರು ಶೇ.50 ರಷ್ಟು ಖರೀದಿ ಮಾಡುತ್ತಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ, ಪ್ರಧಾನಿಯವರಿಗೆ ಹೋಗಿ ಭೇಟಿಯಾದರೂ ಏನಾದರೂ ಕೊಟ್ಟರಾ?, ಸದ್ಯ ಮೆಕ್ಕೆಜೋಳಕ್ಕೆ ಏನಾದರೂ ಕೊಟ್ಟರೂ, ಕಬ್ಬು ಹಾಗೂ ಮೆಕ್ಕೆಜೋಳ ಕೇಂದ್ರ ಸರಕಾರದ ಜವಾಬ್ದಾರಿ ಎಂದು ಹೇಳಿದರು. ಯಡಿಯೂರಪ್ಪ ಸುಪುತ್ರ ವಿಜಯೇಂದ್ರ ರೈತರ ಹೋರಾಟದಲ್ಲಿ ಹೋಗಿ ಮಲಗುತ್ತಾರೆ. ಮೊದಲು ಕೇಂದ್ರದಲ್ಲಿ ಪರಿಹಾರ ಕೊಡಿಸಲಿ. ಕಬ್ಬು ಬೆಳೆಗಾರರ ಹೋರಾಟ, ಮೆಕ್ಕೆಜೋಳದ ಹೋರಾಟ ಕೇಂದ್ರ ಸರಕಾರದ್ದು ಎಂದರು.

ವಾರ್ತಾ ಭಾರತಿ 6 Dec 2025 11:53 pm

ಬೆಳ್ತಂಗಡಿ | ಚಿನ್ನಯ್ಯನಿಗೆ ರಕ್ಷಣೆ ನೀಡಲು ಆಗ್ರಹಿಸಿ ನ್ಯಾಯಾಲಯಕ್ಕೆ ಅಪೀಲು

ಬೆಳ್ತಂಗಡಿ, ಡಿ.6: ಧರ್ಮಸ್ಥಳ ಪ್ರಕರಣದ ಆರೋಪಿ ಚಿನ್ನಯ್ಯನಿಗೆ ಜೀವ ಬೆದರಿಕೆಯಿದ್ದು, ಸೂಕ್ತ ರಕ್ಷಣೆ ನೀಡಬೇಕು ಹಾಗೂ ಆತನಿಗೆ ವಿಧಿಸಿರುವ ಹತ್ತನೇ ನಿಬಂಧನೆಯನ್ನು ಸಡಿಲಗೊಳಿಸಬೇಕು ಎಂದು ಚಿನ್ನಯ್ಯನ ಪರ ವಕೀಲರು ಬೆಳ್ತಂಗಡಿ ನ್ಯಾಯಾಲಯಕ್ಕೆ ಅಪೀಲು ಸಲ್ಲಿಸಿದ್ದಾರೆ. ಸಾಕ್ಷಿ ಸಂರಕ್ಷಣೆ ಕಾಯ್ದೆಯಲ್ಲಿ ರಕ್ಷಣೆ ಪಡೆದಿದ್ದ ಚಿನ್ನಯ್ಯ ಆರೋಪಿಯಾದ ಬಳಿಕ ಆ ರಕ್ಷಣೆಯನ್ನು ಕಳೆದುಕೊಂಡಿದ್ದ. ಇದೀಗ ಸಕ್ಷಮ ಪ್ರಾಧಿಕಾರದ ಮುಂದೆಯೂ ನ್ಯಾಯವಾದಿಗಳು ಚಿನ್ನಯ್ಯನಿಗೆ ರಕ್ಷಣೆ ನೀಡುವಂತೆ ಮನವಿ ಸಲ್ಲಿಸಿದ್ದಾರೆ. ಅದರ ಆಧಾರದಲ್ಲಿ ಆತನಿಗೆ ಜೀವ ಭಯವಿದ್ದು, ಸೂಕ್ತ ರಕ್ಷಣೆ ನೀಡುವಂತೆ ಬೆಳ್ತಂಗಡಿ ನ್ಯಾಯಾಲಯದಲ್ಲೂ ಅರ್ಜಿ ಸಲ್ಲಿಸಲಾಗಿದೆ. ಅದೇ ರೀತಿ ಚಿನ್ನಯ್ಯ ಜಾಮೀನಿನ ಮೇಲೆ ಹೊರ ಬಂದರೆ ಆತ ಸ್ಥಳೀಯ ಠಾಣೆಗೆ ಬಂದು ಸಹಿ ಹಾಕುವಂತೆ ನಿಬಂಧನೆ ವಿಧಿಸಲಾಗಿದ್ದು, ಈ ನಿಬಂಧನೆಯನ್ನು ಸಡಿಲಿಸುವಂತೆಯೂ ನ್ಯಾಯಾಲಯಕ್ಕೆ ಮನವಿ ಸಲ್ಲಿಸಲಾಗಿದೆ. ಚಿನ್ನಯ್ಯ ಜಮೀನು ಲಭಿಸಿದರೆ ಆತನ ಊರಾದ ಮಂಡ್ಯದಲ್ಲಿ ವಾಸಿಸಲು ನಿರ್ಧರಿಸಿದ್ದಾನೆ. ಈ ಹಿನ್ನಲೆಯಲ್ಲಿ ಠಾಣೆಗೆ ಹಾಜರಾತಿಗೆ ವಿನಾಯಿತಿ ನೀಡುವಂತೆಯೂ ವಿನಂತಿಸಲಾಗಿದೆ. ಚಿನ್ನಯ್ಯ ರಕ್ಷಣೆ ಕೋರಿರುವ ಬಗ್ಗೆ, ರಕ್ಷಣೆ ನೀಡುವ ಬಗ್ಗೆ ಬೆಳ್ತಂಗಡಿ ವೃತ್ತ ನಿರೀಕ್ಷಕರಿಂದ ಹಾಗೂ ಇತರ ವಿಚಾರಗಳ ಬಗ್ಗೆ ಎಸ್‌ಐಟಿ ಅಧಿಕಾರಿಗಳಿಂದ ನ್ಯಾಯಾಲಯ ವರದಿ ಕೋರಿದೆ. ಸೆಕ್ಷನ್ 215ರ ಕುರಿತಾದ ವರದಿಯ ಬಗ್ಗೆ ವಾದ ಮಂಡಿಸಲು ವಕೀಲರು ಸಮಯಾವಕಾಶ ಕೋರಿದ್ದು, ಒಟ್ಟು ಪ್ರಕರಣದ ವಿಚಾರಣೆಯನ್ನು ಡಿ.9ಕ್ಕೆ ಮುಂದೂಡಲಾಗಿದೆ.

ವಾರ್ತಾ ಭಾರತಿ 6 Dec 2025 11:50 pm

ಮುಂದುವರಿದ ಇಂಡಿಗೊ ಅವ್ಯವಸ್ಥೆ, ಜನದಿಂದ ಕಂಪನಿಗೆ ಹಿಡಿಶಾಪ, ಸಿಇಒಗೆ ನೋಟಿಸ್‌ ನೀಡಿದ ಕೇಂದ್ರ

ಇಂಡಿಗೊ ವಿಮಾನಯಾನ ಸಂಸ್ಥೆಯ ಗಂಭೀರ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಸರಕಾರ ಕ್ರಮಕ್ಕೆ ಮುಂದಾಗಿದೆ. ಶನಿವಾರ 850 ವಿಮಾನಗಳ ರದ್ದತಿಯಿಂದ ಲಕ್ಷಾಂತರ ಪ್ರಯಾಣಿಕರು ತೊಂದರೆ ಅನುಭವಿಸಿದ್ದು, ವಿಮಾನ ನಿಲ್ದಾಣಗಳಲ್ಲಿ ಊಟ, ನಿದ್ರೆ, ವೈದ್ಯಕೀಯ ನೆರವು ಇಲ್ಲದೆ ಪರದಾಡಿದ್ದಾರೆ. ಸಂಸ್ಥೆಯ ಸಿಇಒಗೆ ಶೋಕಾಸ್ ನೋಟಿಸ್ ನೀಡಲಾಗಿದ್ದು, ಪರಿಸ್ಥಿತಿಯ ಬಗ್ಗೆ ಪ್ರಧಾನಿಗೆ ಮಾಹಿತಿ ನೀಡಲಾಗಿದೆ.

ವಿಜಯ ಕರ್ನಾಟಕ 6 Dec 2025 11:43 pm

Bengaluru | ಕಾರಾಗೃಹದೊಳಗೆ ಸಿಗರೇಟ್ ಪ್ಯಾಕ್ ಕೊಂಡೊಯ್ಯುವಾಗ ಸಿಕ್ಕಿಬಿದ್ದ ವಾರ್ಡನ್!

ಬೆಂಗಳೂರು : ಪರಪ್ಪನ ಅಗ್ರಹಾರ ಕಾರಾಗೃಹದೊಳಗೆ ಸಿಗರೇಟ್ ಪ್ಯಾಕ್‍ಗಳನ್ನು ತೆಗೆದುಕೊಂಡು ಹೋಗುತ್ತಿದ್ದ ಜೈಲಿನ ವಾರ್ಡನ್ ಸಿಕ್ಕಿಬಿದ್ದಿರುವ ಘಟನೆ ವರದಿಯಾಗಿದೆ. ರಾಹುಲ್ ಪಾಟೀಲ್ ಎಂಬಾತ ಬಂಧನಕ್ಕೊಳಗಾದ ಜೈಲು ವಾರ್ಡನ್ ಎಂದು ಗುರುತಿಸಲಾಗಿದೆ. ಈತ ಹಿಂದಿನ ಜೂನ್‍ನಲ್ಲಿ ಬೆಳಗಾವಿ ಜೈಲಿನಿಂದ ಬೆಂಗಳೂರಿನ ಪರಪ್ಪನ ಅಗ್ರಹಾರ ಕಾರಾಗೃಹಕ್ಕೆ ವರ್ಗಾವಣೆಯಾಗಿದ್ದಾರೆ. ಶುಕ್ರವಾರ(ಡಿ.5) ಸಂಜೆ ಕೆಎಸ್‍ಇಎಸ್‍ಎಫ್ ಸಿಬ್ಬಂದಿಯು ಪರಪ್ಪನ ಅಗ್ರಹಾರ ಕಾರಾಗೃಹದ ಮುಖ್ಯದ್ವಾರದ ಬಳಿ ತಪಾಸಣೆ ಮಾಡುತ್ತಿದ್ದಾಗ ಜೈಲ್ ವಾರ್ಡನ್ ರಾಹುಲ್ ಪಾಟೀಲ್ ಕರ್ತವ್ಯಕ್ಕೆ ಬಂದಿದ್ದಾರೆ. ಆ ಸಂದರ್ಭದಲ್ಲಿ ಅವರನ್ನು ತಪಾಸಣೆ ಮಾಡಿದಾಗ ಅವರು ಒಳ ಉಡುಪಿನಲ್ಲಿ ಎರಡು ಸಿಗರೇಟ್ ಪ್ಯಾಕ್‍ಗಳನ್ನು ಇಟ್ಟುಕೊಂಡಿರುವುದು ಗೊತ್ತಾಗಿದೆ. ಈ ಬಗ್ಗೆ ಜೈಲಿನ ಅಧೀಕ್ಷರ ಪರಮೇಶ್ ಎಂಬುವರ ಗಮನಕ್ಕೆ ತರಲಾಗಿದ್ದು, ಇದನ್ನು ಗಂಭೀರವಾಗಿ ಪರಿಗಣಿಸಿದ್ದು, ಘಟನೆ ಆಧಾರದ ಮೇಲೆ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಜೈಲ್ ವಾರ್ಡನ್ ರಾಹುಲ್ ಪಾಟೀಲ್‍ನನ್ನು ಬಂಧಿಸಿ ಅವರ ಬಳಿ ಇದ್ದ ಸಿಗರೇಟ್ ಪ್ಯಾಕ್‍ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.

ವಾರ್ತಾ ಭಾರತಿ 6 Dec 2025 11:42 pm

ಚಳಿಗಾಲದ ಅಧಿವೇಶನದಲ್ಲಿ ಸಮಸ್ಯೆಗಳ ಪರಿಹಾರಕ್ಕೆ ಒತ್ತಾಯ : ಕಾರವಾರದಲ್ಲಿ ಅರಣ್ಯವಾಸಿಗಳ ಬೃಹತ್ ಸಮಾವೇಶ

ಕಾರವಾರ, ಡಿ.6: ಬೆಳಗಾವಿ ಚಳಿಗಾಲದ ಅಧಿವೇಶನದಲ್ಲಿ ಅರಣ್ಯವಾಸಿಗಳ ಭೂಮಿ ಹಕ್ಕಿಗೆ ಸಂಬಂಧಿಸಿದ ಪರಿಹಾರಕ್ಕೆ ಆಗ್ರಹಿಸಿ ಶನಿವಾರ ಕಾರವಾರದಲ್ಲಿ ಅರಣ್ಯವಾಸಿಗಳ ಬೃಹತ್ ಸಮಾವೇಶವನ್ನು ಹಮ್ಮಿಕೊಳ್ಳಲಾಗಿತ್ತು. ಉತ್ತರ ಕನ್ನಡ ಜಿಲ್ಲೆಯ ಮೂಲೆ ಮೂಲೆಯಿಂದಲೂ ಆಗಮಿಸಿ, ಭೂಮಿ ಹಕ್ಕಿಗೆ ಸಂಬಂಧಿಸಿದ ಸಮಸ್ಯೆಗಳಿಗೆ ಪರಿಹಾರ ಒದಗಿಸುವಂತೆ ಚಳಿಗಾಲದ ಅಧಿವೇಶನದಲ್ಲಿ ಚರ್ಚಿಸಬೇಕೆಂದು ಸಮಾವೇಶದಲ್ಲಿ ಪಾಲ್ಗೊಂಡ ಅರಣ್ಯವಾಸಿಗಳು ಸರಕಾರವನ್ನು ಒತ್ತಾಯಿಸಿದರು. ಸಮಾವೇಶಕ್ಕೂ ಮುನ್ನ ರಾಜ್ಯ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಅವರ ನೇತೃತ್ವದಲ್ಲಿ ಅರಣ್ಯವಾಸಿಗಳ ಕಾನೂನು ಜಾಗೃತ ಜಾಥಾವು ನಗರದ ಪ್ರಮುಖ ಬೀದಿಯಲ್ಲಿ ಸಂಚರಿಸಿತು. ನಗರದ ರವೀಂದ್ರನಾಥ ಟ್ಯಾಗೋರ್ ಬಳಿಯಿಂದ ಸಾಗಿದ ಜಾಥಾದಲ್ಲಿ ಘೋಷಣೆ, ಬೇಡಿಕೆ ಮತ್ತು ಹಕ್ಕೊತ್ತಾಯದ ಧ್ವನಿ ಮೊಳಗಿದವು. ಜಾತಿ, ಮತ, ಪಂಥ, ಬೇಧ ಭಾವವಿಲ್ಲದೆ ಒಗ್ಗಟ್ಟಾಗಿ ಸಹಸ್ರಾರರು ಸಂಖ್ಯೆಯಲ್ಲಿ ಅರಣ್ಯವಾಸಿಗಳು ಭಾಗವಹಿಸಿದ್ದರು. ಜಾಥಾವು ಮಾಲಾದೇವಿ ಕ್ರೀಡಾಂಗಣದಲ್ಲಿ ಸಮಾರೋಪಗೊಂಡಿತು. ವಿವಿಧ ಅರಣ್ಯವಾಸಿಗಳ ಕಲಾ ತಂಡವು ಐತಿಹಾಸಿಕ ಅರಣ್ಯವಾಸಿಗಳ ಸಮಾವೇಶಕ್ಕೆ ಮೆರುಗು ತಂದವು. ಮೆರವಣಿಯಲ್ಲಿ ಹೋರಾಟಗಾರರ ವೇದಿಕೆಯ ಉತ್ತರ ಕನ್ನಡ ಜಿಲ್ಲಾ ಸಂಚಾಲಕರಾದ ಇಬ್ರಾಹೀಂ ಗೌಡಳ್ಳಿ, ರಾಜೇಶ್ ಮಿತ್ರ ನಾಯ್ಕ, ಮಾಬ್ಲೇಶ್ವರ ನಾಯ್ಕ ಬೇಡ್ಕಣಿ, ಕುಮಟಾ ಅಧ್ಯಕ್ಷ ಮಂಜುನಾಥ ಮರಾಠಿ ನಾಗೂರು, ಮಹೇಶ ನಾಯ್ಕ ಕಾನಕ್ಕಿ, ಮುಂಡಗೊಡ ಅಧ್ಯಕ್ಷ ಶಿವಾನಂದ ಜೋಗಿ ಮುಂಡಗೋಡ, ಅಂಕೋಲಾ ಅಧ್ಯಕ್ಷ ರಮಾನಂದ ನಾಯಕ ಅಚವೆ, ಯಲ್ಲಾಪುರ ಅಧ್ಯಕ್ಷ ಭೀಮಸಿ ವಾಲ್ಮೀಕಿ, ಜಗದೀಶ್ ಶಿರಳಗಿ, ಪಾಂಡುರಂಗ ನಾಯ್ಕ ಬೆಳಕೆ, ಚಂದ್ರ ಪೂಜಾರಿ ಮಂಚಿಕೇರಿ, ದಿವಾಕರ್ ಮರಾಠಿ ಆನಗೋಡ, ದೇವರಾಜ ಗೊಂಡ, ರಫೀಕ್ ಗಫಾರ್, ಪ್ರಭಾಕರ ವೇಳಿಪ್ ಜೋಯಿಡಾ, ವಿಜು ಪೀಟರ್ ಪಿಲ್ಲೆ, ಶಾಂತರಾಮ ನಾಯ್ಕ ಅಂಕೋಲಾ, ರಾಮು ಕಲಕರಡಿ, ಹರಿಹರ ನಾಯ್ಕ ಓಂಕಾರ, ಸೀತಾರಾಮ ಗೌಡ, ಅರವಿಂದ ಗೌಡ, ಉದಯ ಗುನಗ ಅಚವೆ, ಶಂಕರ್ ಕೊಡಿಯಾ, ಮಾದೇವ ನಾಯಕ ಮತ್ತಿತರರು ಹಾಜರಿದ್ದರು. ಸಹಸ್ರಾರು ಸಂಖ್ಯೆಯಲ್ಲಿ ಆಕ್ಷೇಪ ಸಲ್ಲಿಕೆ ಅರಣ್ಯ ಹಕ್ಕು ಕಾಯ್ದೆ, ನ್ಯಾಯಾಲಯದ ತೀರ್ಪು ಮತ್ತು ಕೇಂದ್ರ ಸರಕಾರದ ಆದೇಶಕ್ಕೆ ವ್ಯತಿರಿಕ್ತವಾಗಿ ಉತ್ತರ ಕನ್ನಡ ಜಿಲ್ಲೆಯಲ್ಲಿ 73 ಸಾವಿರ ಅರ್ಜಿಗಳು ತಿರಸ್ಕರಿಸಿರುವ ಹಿನ್ನೆಲೆಯಲ್ಲಿ ಶನಿವಾರ ಜಿಲ್ಲಾದ್ಯಂತ ಆಗಮಿಸಿದ ಸಹಸ್ರಾರು ಅರಣ್ಯವಾಸಿಗಳು, ಜಿಲ್ಲಾ ಅರಣ್ಯ ಭೂಮಿ ಹಕ್ಕು ಅಧ್ಯಕ್ಷರು ಮತ್ತು ಜಿಲ್ಲಾಧಿಕಾರಿಗೆ ವೈಯಕ್ತಿಕವಾಗಿ ಆಕ್ಷೇಪ ಪತ್ರ ಸಲ್ಲಿಸಿದರು.

ವಾರ್ತಾ ಭಾರತಿ 6 Dec 2025 11:36 pm

ಕಲಬುರಗಿ ಜಿಮ್ಸ್ ಆಸ್ಪತ್ರೆಯಲ್ಲಿ ಅಂಬೇಡ್ಕರ್ ಅವರ 69ನೇ ಮಹಾಪರಿನಿರ್ವಾಣ ಕಾರ್ಯಕ್ರಮ

ಕಲಬುರಗಿ: ಭಾರತರತ್ನ ಡಾಬಿಆರ್ ಅಂಬೇಡ್ಕರ್ ಅವರ 69ನೇ ಮಹಾ ಪರಿನಿರ್ವಾಣ ದಿನವನ್ನು ಕಲಬುರಗಿ ಜಿಮ್ಸ್ ಸರಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಆಯೋಜಿಸಲಾಯಿತು.   ಡಾ.ಬಿ.ಆರ್. ಅಂಬೇಡ್ಕರ್‌ ಅವರ ಭಾವಚಿತ್ರಕ್ಕೆ ಶ್ರದ್ಧಾಭಕ್ತಿಯಿಂದ ಗೌರವ ಪುಷ್ಪ ನಮನ ಸಲ್ಲಿಸಲಾಯಿತು. ಈ ವೇಳೆ ಸ್ಥಳೀಯ ವೈದ್ಯಾಧಿಕಾರಿಗಳಾದ ಡಾ. ನಾಗರಾಜ ಪಾಟೀಲ್, ಡಾ.ಓಂ ಪ್ರಕಾಶ್ ಅಂಬುರೆ, ಡಾ.ವಿನೋದ್‌ ಕುಮಾರ್‌, ಡಾ.ರಘುನಾಥ್ ಕುಲಕರ್ಣಿ, ಡಾ. ಶಾಲಾನಿ ಸಜ್ಜನಶೆಟ್ಟಿ, ಡಾ. ಪ್ರತಿಭಾ ಹಾಗೂ ಸಹಾಯಕ ಆಡಳಿತ ಅಧಿಕಾರಿಗಳಾದ ವೀರಣ್ಣ ಶಿವಪುರ, ಮಲ್ಲಿಕಾರ್ಜುನ ಸಂಗೋಳಾಗಿ, ಹಿರಿಯ ರೆಡಿಯಾಲೋಜಿ ಇಮ್ಯಾಜಿಂಗ್ ಅಧಿಕಾರಿ ಮಲ್ಲರೆಡ್ಡೆಪ್ಪ ಬಡಿಗೇರ, ಫಿಜಿಯೋಥೆರಪಿಸ್ಟ್ ಜೈಶೀಲನಾಥ್‌, ಬಾಳಪ್ಪ, ಫಕೀರಪ್ಪ ದೊಡ್ಡಮನಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.  

ವಾರ್ತಾ ಭಾರತಿ 6 Dec 2025 11:30 pm

ಕೆಸೆಟ್: ಡಿ.10ರಿಂದ 12ರ ವರೆಗೆ ದಾಖಲೆ ಪರಿಶೀಲನೆ

ಬೆಂಗಳೂರು : 2023, 2024 ಮತ್ತು 2025ನೆ ಸಾಲಿನ ಕೆ-ಸೆಟ್ ಪರೀಕ್ಷೆಯಲ್ಲಿ ಅರ್ಹತೆ ಪಡೆದು, ಇದುವರೆಗೂ ಮೂಲ ದಾಖಲೆಗಳ ಪರಿಶೀಲನೆಗೆ ಗೈರಾದವರ ಸಲುವಾಗಿ ಡಿ.10ರಿಂದ 12ರವರೆಗೆ ದಾಖಲೆ ಪರಿಶೀಲನೆ ನಡೆಸಲಾಗುತ್ತಿದೆ ಎಂದು ರಾಜ್ಯ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ತಿಳಿಸಿದ್ದಾರೆ. ಅರ್ಹ ಅಭ್ಯರ್ಥಿಗಳು, ಮೂಲ ದಾಖಲೆಗಳ ಸಮೇತ ಬಂದು ಪರಿಶೀಲನೆ ಮಾಡಿಸಿಕೊಳ್ಳಬೇಕು. ಎಲ್ಲವೂ ಸರಿ ಇದ್ದರೆ ಸ್ಥಳದಲ್ಲೇ ಪ್ರಮಾಣ ಪತ್ರ ನೀಡಲಾಗುತ್ತದೆ. ಡಿ.10ರಂದು ಬೆಳಗಿನ ವೇಳೆಯಲ್ಲಿ 2023ನೆ ಸಾಲಿನ ಅಭ್ಯರ್ಥಿಗಳು ಹಾಗೂ ಅದೇ ದಿನ ಮಧ್ಯಾಹ್ನದ ನಂತರ 2024ನೇ ಸಾಲಿನ ಅಭ್ಯರ್ಥಿಗಳ ದಾಖಲೆ ಪರಿಶೀಲನೆ ಮಾಡಲಾಗುತ್ತದೆ ಎಂದು ಅವರು ಹೇಳಿದ್ದಾರೆ. ಡಿ.11 ಮತ್ತು 12ರಂದು 2025ನೆ ಸಾಲಿನ ಅಭ್ಯರ್ಥಿಗಳ ದಾಖಲೆ ಪರಿಶೀಲನೆ ಇರುತ್ತದೆ. ಹೆಚ್ಚಿನ ವಿವರಗಳಿಗೆ ಕೆಇಎ ವೆಬ್‍ಸೈಟ್ ನೋಡಬೇಕು ಎಂದು ಪ್ರಸನ್ನ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ವಾರ್ತಾ ಭಾರತಿ 6 Dec 2025 11:27 pm

ಮಂಗಳೂರು | ಸರಕಾರದ ಸುತ್ತೋಲೆಗಳ ಸಮರ್ಪಕ ಅನುಷ್ಠಾನದಿಂದ ಕಸಮುಕ್ತ ಸುಸ್ಥಿರ ಸ್ವಚ್ಛ ಗ್ರಾಮ ನಿರ್ಮಾಣ : ವಿಜಯಲಕ್ಷ್ಮಿ

ಮಂಗಳೂರು,ಡಿ.6 : ಸರಕಾರದ ಸುತ್ತೋಲೆಗಳ ಸಮರ್ಪಕ ಅನುಷ್ಠಾನದಿಂದ ಕಸಮುಕ್ತ ಸುಸ್ಥಿರ ಸ್ವಚ್ಛ ಗ್ರಾಮ ನಿರ್ಮಾಣ ಮಾಡಲು ಸಾಧ್ಯ ಎಂದು ಜಿಲ್ಲಾ ಪಂಚಾಯತ್‌ ಉಪ ಕಾರ್ಯದರ್ಶಿ ವಿಜಯಲಕ್ಷ್ಮಿ ತಿಳಿಸಿದ್ದಾರೆ. ಅವರು ಶನಿವಾರ ಮುಡಿಪು ಜನಶಿಕ್ಷಣ ಟ್ರಸ್ಟ್ ನಲ್ಲಿ ನಡೆದ ಬಯಲು ಕಸಾಲಯ ಅವಲೋಕನ, ಸರ್ಕಾರದ ಆದೇಶಗಳು ಮತ್ತು ಜಿಲ್ಲಾ ಪಂಚಾಯತ್‌ ಸುತ್ತೋಲೆಗಳ ಅರಿವು ಅನುಷ್ಠಾನ, ಕಸಮುಕ್ತ ಸುಸ್ಥಿರ ಸ್ವಚ್ಛ ಗ್ರಾಮ ನಿರ್ಮಾಣ ಸಂವಾದ ಸಂಕಲ್ಪ ಕಾರ್ಯಕ್ರಮದಲ್ಲಿ ಮಾತನಾಡಿದರು. ಜಿಲ್ಲೆಯಲ್ಲಿ ಕೆಲವು ಕಡೆ ಕಸನಿರ್ವಹಣೆಯಲ್ಲಿ ಲೋಪ ದೋಷಗಳಿವೆ. ಈ ಹಿನ್ನೆಲೆಯಲ್ಲಿ ಉಳ್ಳಾಲದಂತಹ ಪ್ರದೇಶದಲ್ಲಿ ಸಣ್ಣ ವಿದ್ಯುತ್ ಚಾಲಿತ ವಾಹನಗಳನ್ನು ಬಳಸಿ ತೀರಾ ಒಳರಸ್ತೆಗಳಲ್ಲಿರುವ ಮನೆಗಳಿಗೆ ಹೋಗಿ ಕಸ ಸಂಗ್ರಹ ಮಾಡಲು ಯೋಚಿಸ ಲಾಗುತ್ತಿದೆ ಎಂದು ವಿಜಯಲಕ್ಷ್ಮಿ ವಿವರಿಸಿದರು. ಸರ್ಕಾರದ ಸುತ್ತೋಲೆಗಳನ್ನು ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ತಮ್ಮ ಅಧಿಕಾರ ವ್ಯಾಪ್ತಿಯಲ್ಲಿ ಬಳಸಿಕೊಳ್ಳುವುದು ಮುಖ್ಯ ಎಂದು ತಿಳಿಸಿದರು. ಸಂವಾದದಲ್ಲಿ ರಾಧಾಕೃಷ್ಣ ರೈ ಉಮಿಯ ಮಾತನಾಡಿ, ಸ್ವಚ್ಛತೆ, ಪ್ಲಾಸ್ಟಿಕ್ ಬಳಕೆ ದುಷ್ಪರಿಣಾಮದ ಬಗ್ಗೆ ಸಭೆ, ಸಮಾರಂಭಗಳಲ್ಲಿ ಜಾಗೃತಿ ಮೂಡಿಸಬೇಕಾಗಿದೆ ಎಂದರು. ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಂಡು ಅಧಿಕಾರಿಗಳು, ಜನಪ್ರತಿನಿಧಿಗಳು ಜವಾಬ್ದಾರಿ ವಹಿಸಬೇಕು. ಧಾರ್ಮಿಕ ಕಾರ್ಯಕ್ರಮ, ಸಭೆ, ಸಮಾರಂಭಗಳ ಸಂದರ್ಭ ಪ್ಲಾಸ್ಟಿಕ್ ಬಳಸದಂತೆ ಸೂಚನೆ ನೀಡಬೇಕೆಂದು ರಾಧಾಕೃಷ್ಣ ರೈ ಉಮಿಯ ಸಲಹೆ ನೀಡಿದರು. ಸ್ವಚ್ಛತೆ ಬಗ್ಗೆ ‌ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ನಿರಂತರ ಜಾಗೃತಿ ಮೂಡಿಸಬೇಕು. ಸಭೆ ನಡೆಸಿದರೆ ಸಾಲದು. ಮಸೀದಿಗಳಲ್ಲೂ ಈ ಬಗ್ಗೆ ಜನಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳುವುದಾಗಿ ಅಬ್ದುಲ್ ರಹ್ಮಾನ್ ಕೋಡಿಜಾಲ್ ಭರವಸೆ ನೀಡಿದರು. ಬಾಳೆಪುಣಿ ಮೊದಲು ಸ್ವಚ್ಛ ಗ್ರಾಮ ಆಗಬೇಕು ಎಂದು ಇಬ್ರಾಹಿಂ ತಪ್ಷಿಯಾ ಅಭಿಪ್ರಾಯಪಟ್ಟರು. ಸ್ವಚ್ಛತಾ ಘಟಕ ಸ್ಥಾಪನೆಗೆ ಮುಂದಾದಾಗ ಜನ ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಸರ್ಕಾರದಿಂದ ಸ್ಥಳೀಯ ಐದು ಗ್ರಾಮ ಪಂಚಾಯಿತಿಗಳಿಗೆ ಸ್ಥಳದ ವ್ಯವಸ್ಥೆ ಮಾಡಬೇಕು ಎಂದು ಎಂ.ಕೆ.ಅಶ್ರಫ್ ಮನವಿ ಮಾಡಿದರು‌. ಪ್ಲಾಸ್ಟಿಕ್ ಶಿಕ್ಷಣ ಪಠ್ಯದಲ್ಲಿ ಬಂದರೆ ಶಾಲಾ ಮಟ್ಟದಲ್ಲಿ ಜಾಗೃತಿ ಸಾಧ್ಯ ಎಂದು ಮುತ್ತಪ್ಪ ಹೇಳಿದರು. ಪ್ರತಿಯೊಬ್ಬರೂ ಒಂದಲ್ಲ ಒಂದು ಧಾರ್ಮಿಕ ಕೇಂದ್ರಕ್ಕೆ ಹೋಗುವುದರಿಂದ ಜನರ ಮನಸ್ಥಿತಿ ಬದಲಾಯಿಸಲು ಧಾರ್ಮಿಕ ಕೇಂದ್ರಗಳಿಂದಲೇ ಸಾಧ್ಯ ಎಂದು ಗುರುದತ್ ತಿಳಿಸಿದರು. ಜನಜೀವನ ಅಧ್ಯಕ್ಷ ರಮೇಶ್ ಶೇಣವ, ಕಾರ್ಯಾಧ್ಯಕ್ಷ ರಾಧಾಕೃಷ್ಣ ರೈ ಉಮಿಯ, ಉಳ್ಳಾಲ‌ ತಾಲೂಕು ಪಂಚಾಯತ್‌ ಕಾರ್ಯನಿರ್ವಹಣಾಧಿಕಾರಿ ಗುರುದತ್, ಜಮೀಯತುಲ್ ಫಲಾಹ್ ಜಿಲ್ಲಾ ಕೋಶಾಧಿಕಾರಿ ಕೆ.ಕೆ.ನಾಸೀರ್ ನಡುಪದವು, ಉಳ್ಳಾಲ‌ ತಾಲೂಕು ಅಧ್ಯಕ್ಷ ಅಬ್ದುಲ್ ರಹ್ಮಾನ್ ಕೋಡಿಜಾಲ್, ಬಾಪು ಘನ ಸಂಪನ್ಮೂಲ ಕೇಂದ್ರದ ಮಾಜಿ ಅಧ್ಯಕ್ಷ ಇಬ್ರಾಹಿಂ ತಪ್ಷಿಯಾ ನಡುಪದವು, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಜ್ಯೋತಿ, ಸಜಿಪನಡು ಗ್ರಾ.ಪಂ. ಪಿಡಿಓ ಕೇಶವ ಪೂಜಾರಿ ಪಾವೂರು, ಇರಾ ಗ್ರಾ.ಪಂ. ಅಧ್ಯಕ್ಷ ಉಮ್ಮರ್, ಹರೇಕಳ ಗ್ರಾ.ಪಂ. ಅಧ್ಯಕ್ಷೆ ಗುಲಾಬಿ, ಪಿಡಿಓ ಮುತ್ತಪ್ಪ ಡಿ. ಬೆಳ್ಮ ಗ್ರಾ.ಪಂ. ಪಿಡಿಓ ರಮೇಶ್ ನಾಯ್ಕ್, ಅಂಬ್ಲಮೊಗರು ಗ್ರಾ.ಪಂ. ಅಧ್ಯಕ್ಷ ಇಕ್ಬಾಲ್, ಸ್ವಚ್ಛ ಭಾರತ್ ಮಿಷನ್ ಗ್ರಾಮೀಣ ಮಾಹಿತಿ ಶಿಕ್ಷಣ ಮತ್ತು ಸಂವಹನ ಸಂಯೋಜಕ ದೊಂಬಯ್ಯ ಇಡ್ಕಿದು, ಬಾಳೆಪುಣಿ ಗ್ರಾ.ಪಂ. ಸದಸ್ಯೆ ಸಮೀಮಾ, ಬೋಳಿಯಾರ್ ಗ್ರಾ.ಪಂ‌. ಪಿಡಿಓ ಸುಧಾರಾಣಿ, ಮಂಜನಾಡಿ ಪಿಡಿಓ ರಮ್ಯ, ಕೊಣಾಜೆ ಗ್ರಾ.ಪಂ. ಅಧ್ಯಕ್ಷೆ ಗೀತಾ ಕುಂದರ್, ಪಿಡಿಓ ರಜನಿ, ಕಾರ್ಯನಿರತ ಪತ್ರಕರ್ತರ ಸಂಘದ ದ.ಕ.ಜಿಲ್ಲಾಧ್ಯಕ್ಷ ಬಿ.ಎನ್. ಪುಷ್ಪರಾಜ್, ಸ್ವಚ್ಛತಾ ಸೇನಾನಿ ಓಸ್ವಲ್ಡ್ ಸಲ್ದಾನ ಪುತ್ತೂರು, ಬಾಳೆಪುಣಿ ಗ್ರಾ.ಪಂ. ಸದಸ್ಯೆ ಸೆಮೀಮಾ, ಪುತ್ತೂರು ಕಡಬ ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ, ಕುರ್ನಾಡು ಗ್ರಾ.ಪಂ. ಅಧ್ಯಕ್ಷೆ ಪ್ರೇಮಾ ಗಟ್ಟಿ, ಉಪಾಧ್ಯಕ್ಷ ಎಂ.ಕೆ.ಅಶ್ರಫ್, ಮಾಜಿ ಅಧ್ಯಕ್ಷ ಗಣೇಶ್ ನಾಯಕ್, ಸ್ವಚ್ಛತಾ ಸೇನಾನಿ ಅಬೂಬಕ್ಕರ್ ಜಲ್ಲಿ ಇನ್ನಿತರರು ಉಪಸ್ಥಿತರಿದ್ದರು. ಜನಶಿಕ್ಷಣ ಟ್ರಸ್ಟ್ ನಿರ್ದೇಶಕರಾದ ಶೀನ ಶೆಟ್ಟಿ ಮತ್ತು ಕೃಷ್ಣ ಮೂಲ್ಯ ಕಾರ್ಯಕ್ರಮ ನಿರೂಪಿಸಿದರು.

ವಾರ್ತಾ ಭಾರತಿ 6 Dec 2025 11:25 pm

ಯುಜಿ ವೈದ್ಯಕೀಯ : 3ನೇ ಸುತ್ತಿನ ಪರಿಷ್ಕೃತ ತಾತ್ಕಾಲಿಕ ಫಲಿತಾಂಶ ಪ್ರಕಟ

ಬೆಂಗಳೂರು : ಹೈಕೋರ್ಟ್ ಆದೇಶದ ಪ್ರಕಾರ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸ್‍ನ 3ನೆ ಸುತ್ತಿನ ಸೀಟು ಹಂಚಿಕೆಯ ಪರಿಷ್ಕೃತ ತಾತ್ಕಾಲಿಕ ಫಲಿತಾಂಶವನ್ನು ರಾಜ್ಯ ಪರೀಕ್ಷಾ ಪ್ರಾಧಿಕಾರ (ಕೆಇಎ) ಶನಿವಾರ ಪ್ರಕಟಿಸಿದೆ. ಅ.24ರಂದು ಕೆಇಎ ಪ್ರಕಟಿಸಿದ್ದ ತಾತ್ಕಾಲಿಕ ಫಲಿತಾಂಶವನ್ನು ಹೈಕೋರ್ಟ್ ಆದೇಶದಂತೆ ರದ್ದುಪಡಿಸಲಾಗಿದೆ. ಪರಿಷ್ಕೃತ ತಾತ್ಕಾಲಿಕ ಫಲಿತಾಂಶಕ್ಕೆ ಏನಾದರು ಆಕ್ಷೇಪಣೆಗಳು ಇದ್ದಲ್ಲಿ ಡಿ.7ರಂದು ಮಧ್ಯಾಹ್ನ 3ಗಂಟೆಯೊಳಗೆ ಇ-ಮೇಲ್(keauthority-ka@nic.in) ಮೂಲಕ ಕಳುಹಿಸಬೇಕು ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ತಿಳಿಸಿದ್ದಾರೆ. ಡಿ.8ರಂದು ಬೆಳಗ್ಗೆ 11ರ ನಂತರ ಅಂತಿಮ ಫಲಿತಾಂಶ ಪ್ರಕಟಿಸಲಾಗುತ್ತದೆ. ಸೀಟು ಹಂಚಿಕೆಯಾದವರು ಡಿ.10ರೊಳಗೆ ಶುಲ್ಕ ಪಾವತಿಸಬೇಕು(ಈಗಾಗಲೇ ಪಾವತಿಸಿರುವ ಶುಲ್ಕವನ್ನು ಕಡಿತಗೊಳಿಸುವ ಮೂಲಕ). ಸೀಟು ಖಾತರಿ ಚೀಟಿ ಡೌನ್‍ಲೋಡ್ ಮಾಡಿಕೊಂಡು, ಡಿ.11ರೊಳಗೆ ಕಾಲೇಜುಗಳಲ್ಲಿ ವರದಿ ಮಾಡಿಕೊಳ್ಳಬೇಕು ಎಂದು ಅವರು ತಿಳಿಸಿದ್ದಾರೆ. ಅಭ್ಯರ್ಥಿಗಳು ಈಗಾಗಲೇ ದಾಖಲಿಸಿರುವ ಇಚ್ಚೆ/ಆಯ್ಕೆಗಳನ್ನು ಪರಿಗಣಿಸಿ ಸೀಟು ಹಂಚಿಕೆ ಮಾಡಲಾಗಿದೆ. ಈ ಸುತ್ತಿನಲ್ಲಿ ಸೀಟು ಹಂಚಿಕೆಯಾದವರು ಕಡ್ಡಾಯವಾಗಿ ಸಂಬಂಧಪಟ್ಟ ಕಾಲೇಜಿಗಳಲ್ಲಿ ವರದಿ ಮಾಡಿಕೊಳ್ಳಬೇಕಾಗುತ್ತದೆ ಎಂದು ಪ್ರಸನ್ನ ಹೇಳಿದ್ದಾರೆ. 3ನೆ ಸುತ್ತಿಗೆ ಹೊಸದಾಗಿ ಸೇರ್ಪಡೆಯಾದ 9 ಕಾಲೇಜುಗಳ 443 ಸೀಟುಗಳಿಗೆ ಎಲ್ಲ ಅಭ್ಯರ್ಥಿಗಳನ್ನು ಹಂಚಿಕೆಗೆ ಪರಿಗಣಿಸಲಾಗಿದೆ. 443 ಸೀಟುಗಳನ್ನು ಪಡೆದ ಅಭ್ಯರ್ಥಿಗಳಲ್ಲಿ ಒಟ್ಟು 301 ಅಭ್ಯರ್ಥಿಗಳು, ಈಗಾಗಲೆ ಎಂಬಿಬಿಎಸ್ ಸೀಟನ್ನು ಮೊದಲ ಮತ್ತು ಎರಡನೆ ಸುತ್ತಿನಲ್ಲಿ ಪಡೆದವರಾಗಿದ್ದು, ಅವರಿಂದ ತೆರವಾಗುವ 301 ಸೀಟುಗಳಿಗೆ ಎಲ್ಲ ಅಭ್ಯರ್ಥಿಗಳನ್ನು ಹಂಚಿಕೆಗೆ ಪರಿಗಣಿಸಲಾಗುತ್ತದೆ ಎಂದು ಅವರು ವಿವರಿಸಿದ್ದಾರೆ. ಮೂರನೆ ಸುತ್ತಿನ ಆರಂಭದಲ್ಲಿ ಇದ್ದ ಸೀಟು ಹಾಗೂ ಡಿ.5ರವರೆಗೆ ವಿವಿಧ ಕಾರಣಗಳಿಂದ ರದ್ದುಪಡಿಸಿಕೊಂಡಿರುವ ಸೀಟು ಹಾಗೂ ಮೇಲಿನ ಕ್ರಮದ ಸೀಟು ಹಂಚಿಕೆ ನಂತರ ಉಳಿಕೆಯಾಗುವ ಸೀಟುಗಳನ್ನು ನಿಯಮಾನುಸಾರ ಸೀಟು ಹಂಚಿಕೆಗೆ ಪರಿಗಣಿಸಲಾಗುತ್ತದೆ ಎಂದು ಪ್ರಸನ್ನ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಾರ್ತಾ ಭಾರತಿ 6 Dec 2025 11:25 pm

ಭಾರತ ಇರುವವರೆಗೂ ಡಾ.ಅಂಬೇಡ್ಕರ್ ಅವರ ಹೆಸರು ಅಜರಾಮರ: ಶಾಸಕ ಎಂವೈ ಪಾಟೀಲ್

ಕಲಬುರಗಿ: ಸಂವಿಧಾನ ರಚನೆ ಮಾಡಲು ಡಾ.ಬಿ.ಆರ್ ಅಂಬೇಡ್ಕರ್ ಅವರು ಪಟ್ಟ ಶ್ರಮ ಅಸಾಧಾರಣವಾಗಿದೆ. ಭಾರತ  ಇರುವವರೆಗೆ ಬಾಬಾಸಾಹೇಬರ ಹೆಸರು ಅಜರಾಮರವಾಗಿರುತ್ತದೆ ಎಂದು ಅಫಜಲಪುರ ಶಾಸಕ ಎಂ.ವೈ ಪಾಟೀಲ್ ಹೇಳಿದ್ದಾರೆ. ಅಫಜಲಪುರ ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿರುವ ಅಂಬೇಡ್ಕರ್ ಉದ್ಯಾನವನದಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ 69ನೇ ಮಹಾಪರಿನಿರ್ವಾಣ ದಿನದ ನಿಮಿತ್ತ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಶಾಸಕ ಎಂ.ವೈ ಪಾಟೀಲ್, ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಹಲವು ದೇಶಗಳನ್ನು ಸುತ್ತಿ ಆಯಾ ದೇಶದ ಸಂವಿಧಾನಗಳನ್ನು ಹಗಲು ರಾತ್ರಿಯೆನ್ನದೆ ಅಧ್ಯಯನ ಮಾಡಿ ತಮ್ಮ ಅನಾರೋಗ್ಯದ ನಡುವೆಯೂ ಮಹಾನ್ ಸಂವಿಧಾನ ಕೊಟ್ಟ ದೇಶಭಕ್ತ. ಇತ್ತೀಚೆಗೆ ಕೆಲವು ವ್ಯಕ್ತಿಗಳು ತಾವು ಅಧಿಕಾರಕ್ಕೆ ಬಂದಿರುವುದೇ ಸಂವಿಧಾನವನ್ನು ಬದಲಾಯಿಸುವುದಕ್ಕಾಗಿ ಎಂದು ಹೇಳುತ್ತಿದ್ದಾರೆ. ಇಂಥ ಮಾತುಗಳು ಅಂಬೇಡ್ಕರರಿಗೆ ಬಗೆದ ದ್ರೋಹವಾಗಿದೆ ಎಂದು ಹೇಳಿದರು.   ಮುಖ್ಯ ಅತಿಥಿಗಳಾಗಿದ್ದ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ನಿತಿನ್ ಗುತ್ತೇದಾರ್ ಮಾತನಾಡಿ, ಅಂಬೇಡ್ಕರ್ ಅವರ ದಿವ್ಯ ಬದುಕನ್ನು ನೆನಪಿಸುವ ಸ್ಮಾರಕ ಸದರಿ ಉದ್ಯಾನವನದಲ್ಲಿ ನಿರ್ಮಾಣವಾಗಬೇಕು. ಈ ಬಗ್ಗೆ ಶಾಸಕರು ಮುತುವರ್ಜಿ ವಹಿಸಿ ಅಂಬೇಡ್ಕರ್ ಅವರ ಸ್ಮರಣೆಯನ್ನು ಶಾಶ್ವತವಾಗಿ ಇರುವಂತೆ ಮಾಡಬೇಕು ಎಂದು ಒತ್ತಾಯಿಸಿದರು. ಅಫಜಲ್ಪುರ ತಾಲೂಕು ದಂಡಾಧಿಕಾರಿಗಳಾದ ಸಂಜೀವ್ ಕುಮಾರ್ ದಾಸರ್ ಮಾತನಾಡಿ, ಬಾಬಾ ಸಾಹೇಬ್ ಅಂಬೇಡ್ಕರ್ ಅವರು ತಮ್ಮ ಉಸಿರಿರುವ ತನಕ ನಿರಂತರ ಅಧ್ಯಯನದಲ್ಲಿ ತೊಡಗಿದ್ದರು. ಇಂಥ ಜ್ಞಾನ ಸೂರ್ಯ ನನ್ನು ಪಡೆದ ನಾವೆಲ್ಲರೂ ಧನ್ಯರು ಎಂದು ಹೇಳಿದರು. ಅಫಜಲಪುರ ಪಟ್ಟಣದ ವಿವಿಧ ದಲಿತ  ಮತ್ತು ಪ್ರಗತಿಪರ ಸಂಘಟನೆಗಳ ಮುಖಂಡರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ವೀರಣ್ಣ, ಅಶೋಕ್ ನಾಯಕ, ಮಹಾನಾಯಕ ಅಂಬೇಡ್ಕರ್ ಸಂಘದ ಜಿಲ್ಲಾ ಅಧ್ಯಕ್ಷ ನಾಗೇಶ ಕೊಳ್ಳಿ, ತಾಲೂಕಿನ ದಲಿತ ಮುಖಂಡ ಭೀಮರಾಯ ಗೌರ್, ದಲಿತ ಸಂಘರ್ಷ ಸಮಿತಿಯ ಮುಖಂಡ ಮಹಾಂತೇಶ್ ಬಳಗುಂಡಿ , ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ಮಳೆಂದ್ರ ಡಾಂಗೆ, ತಾಲೂಕು ಕಾಂಗ್ರೆಸ್ ಕಮಿಟಿ ಅಧ್ಯಕ್ಷ ರಮೇಶ್‌ ಪೂಜಾರಿ, ಆಶಾ ಕಿರಣ ಸ್ವಯಂ ಸೇವಾ ಸಮಿತಿಯ ಅಧ್ಯಕ್ಷೆ ಪ್ರಭಾವತಿ ಮೇತ್ರಿ, ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಸವರಾಜ್ ಚಂದಕೋಟೆ, ಪಂಚ ಗ್ಯಾರಂಟಿಗಳ ಅನುಷ್ಠಾನ ಸಮಿತಿಯ ಅಧ್ಯಕ್ಷ ಪ್ರಕಾಶ್ ಜಮಾದಾರ್, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಸಿದ್ಧಾರ್ಥ ಬಸರಿಗಿಡ, ಪುರಸಭೆ ಮುಖ್ಯ ಅಧಿಕಾರಿ ಫಕ್ರುದ್ದೀನ್, ಅರವಿಂದ ದೊಡ್ಡಮನಿ, ರಾಜು ಬಬಲಾದ, ಸಂತೋಷ ಚಲವಾದಿ, ಪ್ರಕಾಶ್‌ ಬನ್ನಟ್ಟಿ ಮತ್ತು ಧಾನು ಪತಾಟೆ ರಾಜು ಅರೆಕರ್ ಉಪಸ್ಥಿತರಿದ್ದರು. ರವಿ ಗೌರ ಕಾರ್ಯಕ್ರಮ ನಿರೂಪಣೆ ಮಾಡಿದರು. ಇದಕ್ಕೂ ಮೊದಲು ಶಾಸಕರಾದ ಎಂ.ವೈ. ಪಾಟೀಲ್ ಮತ್ತು ಇತರ ಅಂಬೇಡ್ಕರ್ ಅನುಯಾಯಿಗಳು ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಮೂರ್ತಿಗೆ ಪುಷ್ಪ ನಮನ ಸಲ್ಲಿಸಿದರು. 

ವಾರ್ತಾ ಭಾರತಿ 6 Dec 2025 11:20 pm

ಸುಪ್ರೀಂಕೋರ್ಟ್ ತೀರ್ಪಿನಲ್ಲಿ ರೋಹಿಂಗ್ಯಾ ನಿರಾಶ್ರಿತರ ವಿರುದ್ಧದ ಅಭಿಪ್ರಾಯಕ್ಕೆ ಬಹಿರಂಗ ವಿರೋಧ: ಸಿಜೆಐಗೆ ಬಹಿರಂಗ ಪತ್ರ ಬರೆದ ನ್ಯಾಯಾಂಗ ತಜ್ಞರು

  ಹೊಸದಿಲ್ಲಿ: ಸುಪ್ರೀಂಕೋರ್ಟ್ ಈ ತಿಂಗಳ 2ರಂದು ನೀಡಿದ ತೀರ್ಪಿನಲ್ಲಿ ರೋಹಿಂಗ್ಯಾ ನಿರಾಶ್ರಿತರ ವಿರುದ್ಧ ವ್ಯಕ್ತಪಡಿಸಿದ ಅಭಿಪ್ರಾಯಗಳಿಗೆ ನಿವೃತ್ತ ನ್ಯಾಯಮೂರ್ತಿಗಳು, ವಕೀಲರು ಮತ್ತು ನ್ಯಾಯಾಂಗ ಹೊಣೆಗಾರಿಕೆ ಮತ್ತು ಸುಧಾರಣಾ ಅಭಿಯಾನ (ಸಿಜೆಎಆರ್) ಕಾರ್ಯಕರ್ತರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ 100ಕ್ಕೂ ಹೆಚ್ಚು ನ್ಯಾಯಾಂಗ ತಜ್ಞರು ಮುಖ್ಯ ನ್ಯಾಯಮೂರ್ತಿಗಳಿಗೆ ಬಹಿರಂಗ ಪತ್ರ ಬರೆದಿದ್ದಾರೆ. ರೋಹಿಂಗ್ಯಾ ನಿರಾಶ್ರಿತರು ಕಸ್ಟಡಿಯಿಂದ ಕಣ್ಮರೆಯಾಗಿದ್ದಾರೆ ಎಂದು ಆಪಾದಿಸಿ ಸಲ್ಲಿಸಿದ ಅರ್ಜಿಯ ಬಗ್ಗೆ ವಿಚಾರಣೆ ನಡೆಸುವ ವೇಳೆ ಸುಪ್ರೀಂಕೋರ್ಟ್ ಈ ಅಭಿಪ್ರಾಯ ವ್ಯಕ್ತಪಡಿಸಿತ್ತು. ಖ್ಯಾತ ಲೇಖಕಿ, ಚಿಂತಕಿ ಮತ್ತು ಮಾನವ ಹಕ್ಕುಗಳ ಹೋರಾಟಗಾರ್ತಿ ಡಾ.ರೀಟಾ ಮಚಾಂಡಾ ಎಂಬವವರು ಅರ್ಜಿ ಸಲ್ಲಿಸಿದ್ದರು. ಸುಪ್ರೀಂಕೋರ್ಟ್ ಪೀಠ ವ್ಯಕ್ತಪಡಿಸಿದ ಅಭಿಪ್ರಾಯಗಳು ಸಂವಿಧಾನಾತ್ಮಕ ಮೌಲ್ಯಗಳಿಗೆ ವಿರುದ್ಧವಾದದ್ದು. ಯಾವ ಸಂವಿಧಾನ, ನಮ್ಮ ಕಾನೂನುಗಳು ಮತ್ತು ಅಂತರರಾಷ್ಟ್ರೀಯ ಕಾನೂನುಗಳು ಯಾವ ನಿರಾಶ್ರಿತರ ಸಮಾನ ಮಾನವೀಯತೆ ಮತ್ತು ಸಮಾನ ಮಾನವಹಕ್ಕುಗಳನ್ನು ರಕ್ಷಿಸಿದೆಯೋ ಅದಕ್ಕೆ ರೋಹಿಂಗ್ಯಾ ನಿರಾಶ್ರಿತರನ್ನು ಅಮಾನವೀಯವಾಗಿಸುವ ಮೂಲಕ ಧಕ್ಕೆಯಾಗಿದೆ. ಎಲ್ಲ ಪ್ರಜೆಗಳು ಸಮಾನತೆ, ಮಾನವೀಯ ಘನತೆ ಮತ್ತು ನ್ಯಾಯದ ನೈತಿಕ ತಳಹದಿಗೆ ಬದ್ಧರಾಗಿರಬೇಕು. ಇತ್ತೀಚಿನ ವಿಚಾರಣೆ ವೇಳೆ ವ್ಯಕ್ತಪಡಿಸಿದ ಅಭಿಪ್ರಾಯಗಳಿಂದ ನಮಗೆ ತೀವ್ರ ಆಘಾತವಾಗಿದೆ ಎಂದು ಗಣ್ಯರು ವಿವರಿಸಿದ್ದಾರೆ. ಅದರಲ್ಲೂ ಮುಖ್ಯವಾಗಿ, ರೋಹಿಂಗ್ಯಾ ಸಮುದಾಯದವರಿಗೆ ನಿರಾಶ್ರಿತರು ಎಂಬ ಸ್ಥಾನಮಾನ ನೀಡಿರುವುದನ್ನೇ ಪ್ರಶ್ನಿಸಲಾಗಿದ್ದು, ಅವರನ್ನು ಭಾರತಕ್ಕೆ ಅಕ್ರಮವಾಗಿ ನುಸುಳಿದವರಿಗೆ ಸಮಾನವಾಗಿ ಬಿಂಬಿಸಲಾಗಿದೆ. ಅಕ್ರಮವಾಗಿ ಪ್ರವೇಶಿಸಲು ಸುರಂಗ ಕೊರೆದಿದ್ದಾರೆ ಎಂಬ ಉಲ್ಲೇಖವನ್ನೂ ಮಾಡಲಾಗಿದೆ. ಹೀಗೆ ಪ್ರವೇಶಿಸಿದವರಿಗೆ, ದೇಶದ ಆಂತರಿಕ ಬಡತನದ ಕಾರಣದಿಂದ ಆಹಾರ, ಆಸರೆ ಮತ್ತು ಶಿಕ್ಷಣ ನೀಡಿರುವುದನ್ನು ಪ್ರಶ್ನಿಲಾಗಿದ್ದು, ಇದು ನಿರಾಶ್ರಿತರಿಗೆ ಸಂವಿಧಾನ ಖಾತರಿಪಡಿಸಿದ ಸೌಲಭ್ಯಗಳ ನಿರಾಕರಣೆಯಾಗಿದೆ; ಅವರನ್ನು ತೃತೀಯ ದರ್ಜೆ ಪ್ರಜೆಗಳನ್ನಾಗಿ ಭಾರತದಲ್ಲಿ ನಡೆಸಿಕೊಳ್ಳಲಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ. ನಿವೃತ್ತ ಹೈಕೋರ್ಟ್ ನ್ಯಾಯಮೂರ್ತಿಗಳಾದ ಎ.ಪಿ.ಶಾ, ಕೆ.ಚಂದ್ರು, ಅಂಜನಾ ಪ್ರಕಾಶ್, ರಾಷ್ಟ್ರೀಯ ನ್ಯಾಯಾಂಗ ಅಕಾಡೆಮಿ ಮಾಜಿ ನಿರ್ದೇಸಕ ಪ್ರೊ.ಮೋಹನ್ ಗೋಪಾಲ್, ಸುಪ್ರೀಂಕೋಟ ಹಿರಿಯ ವಕೀಲ ಡಾ.ರಾಜೀವ್ ಧವನ್, ಚಂದ್ರ ಉದಯ ಸಿಂಗ್, ಕೋಲಿನ ಗೋನ್ಸಾಲ್ವೆನ್ಸ್, ಕಾಮಿನಿ ಜೈಸ್ವಾಲ್, ಮಿಹಿರ್ ದೇಸಾಯಿ, ಗೋಪಾಲ್ ಶಂಕರ ನಾರಾಯಣ, ಗೌತಮ್ ಭಾಟಿಯಾ, ಶಾರೂಕ್ ಅಲಂ, ಪ್ರಶಾಂತ್ ಭೂಷಣ್ ಮತ್ತಿತರರು ಸಹಿ ಮಾಡಿದ್ದಾರೆ.

ವಾರ್ತಾ ಭಾರತಿ 6 Dec 2025 11:04 pm

ಕಲಬುರಗಿ| ಹಳೆ ವೈಷಮ್ಯದಿಂದ ವ್ಯಕ್ತಿಯೋರ್ವನ ಕೊಲೆ

ಕಲಬುರಗಿ: ಹಳೆ ವೈಷಮ್ಯದಿಂದ ವ್ಯಕ್ತಿಯೋರ್ವರನ್ನು ಮಾರಕಾಸ್ತ್ರಗಳಿಂದ ಕಡಿದು ಕೊಲೆ ಮಾಡಿರುವ ಘಟನೆ ಕಮಲಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶನಿವಾರ ರಾತ್ರಿ ನಡೆದಿದೆ. ಕಮಲಾಪುರ ಪಟ್ಟಣದ ನಿವಾಸಿ ಮುಹಮ್ಮದ್ ಹನೀಫ್ (65) ಕೊಲೆಯಾದವರು. ಅದೇ ಗ್ರಾಮದ ರಿಝ್ವಾನ್‌(25) ಎಂಬಾತ ಕೊಲೆ ಕೃತ್ಯ ನಡೆಸಿರುವುದಾಗಿ ತಿಳಿದುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಹಿಂದೆ ರಿಝ್ವಾನ್ ಹಾಗೂ ಮೃತ ಹನೀಫ್ ನಡುವೆ ಜಗಳವಾಗಿತ್ತು. ಇದೇ ಕಾರಣಕ್ಕೆ ಹಳೆ ವೈಷಮ್ಯ ಇಟ್ಟುಕೊಂಡು ಕಮಲಾಪುರದ ಜೇವಣಗಿ ರಸ್ತೆಯ ಕೆಇಬಿ ಕಚೇರಿ ಬಳಿ ಹನೀಫ್ ಅವರನ್ನು ರಿಝ್ವಾನ್ ಕೊಲೆ ಮಾಡಿದ್ದಾನೆ ಎಂದು  ಪೊಲೀಸ್ ಮೂಲಗಳು ತಿಳಿಸಿವೆ. ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಡ್ಡೂರು ಶ್ರೀನಿವಾಸಲು, ಸ್ಥಳೀಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಕಮಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಾರ್ತಾ ಭಾರತಿ 6 Dec 2025 11:00 pm

ತೆಂಕಮಿಜಾರು | ಅಶ್ವತ್ಥಪುರ-ಸಂಪಿಗೆ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಗುದ್ದಲಿ ಪೂಜೆ

ಮೂಡುಬಿದಿರೆ : 1 ಕೋ. ರೂ. ವೆಚ್ಚದಲ್ಲಿ ಅಭಿವೃದ್ಧಿಗೊಳ್ಳಲಿರುವ ತಾಲೂಕಿನ ತೆಂಕಮಿಜಾರು ಗ್ರಾಮ ಪಂಚಾಯತ್ ವ್ಯಾಪ್ತಿಯ ಅಶ್ವತ್ಥಪುರ-ಸಂಪಿಗೆ ಜಿಲ್ಲಾ ಮುಖ್ಯ ರಸ್ತೆಯ ಕಾಮಗಾರಿಗೆ ಶಾಸಕ ಉಮಾನಾಥ ಎ.ಕೋಟ್ಯಾನ್ ಅವರು ಗುದ್ದಲಿಪೂಜೆ ನೆರವೇರಿಸಿದರು. ಈ ಸಂದರ್ಭದಲ್ಲಿ ಪಂಚಾಯತ್ ಅಧ್ಯಕ್ಷೆ ಶಾಲಿನಿ ಕೆ. ಸಾಲ್ಯಾನ್, ಸದಸ್ಯರಾದ ಹರಿಪ್ರಸಾದ್ ಶೆಟ್ಟಿ, ದಿನೇಶ್ ಭಟ್, ರುಕ್ಮಿಣಿ, ಸಮಿತಾ, ನಿಶಾ, ನಮಿತಾ, ಲಕ್ಷ್ಮೀ, ಗೀತಾ, ಮಹೇಶ್, ವಿದ್ಯಾನಂದ ಶೆಟ್ಟಿ, ಬಿಜೆಪಿ ಪುತ್ತಿಗೆ ಮಹಾಶಕ್ತಿ ಕೇಂದ್ರದ ಕಾರ್ಯದರ್ಶಿ ಶ್ಯಾಮ್ ಭಟ್, ಪ್ರಮುಖರಾದ ರಾಘವೇಂದ್ರ ರಾವ್ ಮತ್ತು ಹಿರಿಯರಾದ ಅರುಣ್ ಕುಮಾರ್ ಉಪಸ್ಥಿತರಿದ್ದರು.

ವಾರ್ತಾ ಭಾರತಿ 6 Dec 2025 10:51 pm

ವೈಝಾಗ್ ಮೈದಾನದಲ್ಲಿ ವಿರಾಟ್ ಕೊಹ್ಲಿ ಫುಲ್ ಕಾಮಿಡಿ; ಕುಲ್ದೀಪ್ ಯಾದವ್ ಜೊತೆ ಕಪಲ್ ಡ್ಯಾನ್ಸ್ ಹೇಗಿತ್ತು ನೋಡಿ!

Virat Kohli- Kuldeep Yadav Couple Dance- ಭಾರತದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿಗೆ ಮೈದಾನದಲ್ಲಿ ಪ್ರತಿನಿತ್ಯ ಹೊಸದೇನಾದರೂ ತಮಾಷೆ ಮಾಡದೇ ಹೋದಲ್ಲಿ ಸಮಾಧಾನ ಇಲ್ಲ ಎಂದು ಕಾಣುತ್ತದೆ. ಅವರ ಅಭಿಮಾನಿಗಳು ಅವರ ಆಟದಷ್ಟೇ ಅವರು ನೀಡುವ ಮನರಂಜನೆಯನ್ನೂ ಇಷ್ಟಪಡುತ್ತಾರೆ. ಈ ಬಾರಿ ದಕ್ಷಿಣ ಆಫ್ರಿಕಾ ವಿರುದ್ಧ ಸರಣಿಯಲ್ಲೂ ಅವರ ಅನೇಕ ಹಾವಭಾವಗಳು ವೈರಲ್ ಆಗಿದ್ದವು. ಇದೀಗ ಕುಲ್ದೀಪ್ ಯಾದವ್ ಜೊತೆ ಕಪಲ್ ಡ್ಯಾನ್ಸ್ ಮಾಡಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ವೈರಲ್ ಆಗಿದೆ.

ವಿಜಯ ಕರ್ನಾಟಕ 6 Dec 2025 10:50 pm

ಅಯೋಧ್ಯೆಯ ನೂತನ ಮಸೀದಿ ನಿರ್ಮಾಣ ಯೋಜನೆ 2026ರಲ್ಲಿ ಆರಂಭ ಸಾಧ್ಯತೆ: IICF

ಲಕ್ನೋ,ಡಿ.6: 1992ರಲ್ಲಿ ಅಯೋಧ್ಯೆಯಲ್ಲಿ ಬಾಬರಿ ಮಸೀದಿ ಸಂಘಪರಿವಾರದ ಬೆಂಬಲಿಗರಿಂದ ಧ್ವಂಸಗೊಂಡ 33 ವರ್ಷಗಳ ಬಳಿಕ ಅಯೋಧ್ಯೆಯಿಂದ 25 ಕಿ.ಮೀ. ದೂರದ ಧನ್ನಿಪುರ ಗ್ರಾಮದಲ್ಲಿ ನೂತನ ಮಸೀದಿಯ ನಿರ್ಮಾಣ ಕಾರ್ಯ 2026ರಲ್ಲಿ ಆರಂಭಗೊಳ್ಳಲಿದೆ, ಎಂದು ಯೋಜನೆಯ ಹೊಣೆ ಹೊತ್ತಿರುವ ಇಂಡೊ-ಇಸ್ಲಾಮಿಕ್ ಸಾಂಸ್ಕೃತಿಕ ಪ್ರತಿಷ್ಠಾನ ಶನಿವಾರ ತಿಳಿಸಿದೆ. ಈ ಬಗ್ಗೆ ಟ್ರಸ್ಟ್‌ ನ ಚೇರ್‌ಮನ್ ಝಫರ್ ಫರೂಖಿ ಅವರು ಪಿಟಿಐ ಸುದ್ದಿಸಂಸ್ಥೆ ಜೊತೆ ಮಾತನಾಡುತ್ತಾ, ‘‘ ಎಲ್ಲವೂ ಅಂದುಕೊಂಡಂತೆ ನಡೆದಲ್ಲಿ ಮಸೀದಿಯ ಪರಿಷ್ಕೃತ ವಿನ್ಯಾಸ ಯೋಜನೆಗೆ ಅನುಮೋದನೆಯನ್ನು ಡಿಸೆಂಬರ್ ತಿಂಗಳ ಅಂತ್ಯದೊಳಗೆ ಸಲ್ಲಿಸುವ ಆಶಾವಾದವನ್ನು ಹೊಂದಿದ್ದೇವೆ. 2026ರ ಏಪ್ರಿಲ್‌ ನಲ್ಲಿ ಮಸೀದಿ ನಿರ್ಮಾಣ ಯೋಜನೆಯು ಎಪ್ರಿಲ್ 2026ರಂದು ಆರಂಭಗೊಳ್ಳಲಿದೆ ಎಂದು ಹೇಳಿದ್ದಾರೆ. ಟ್ರಸ್ಟ್ ಸಲ್ಲಿಸಿದ್ದ ಮಸೀದಿಯ ಮೊದಲ ವಿನ್ಯಾಸವನ್ನು ಅಯೋಧ್ಯೆ ಅಭಿವೃದ್ಧಿ ಪ್ರಾಧಿಕಾರ ತಿರಸ್ಕರಿಸಿತ್ತು. ಇದಕ್ಕೂ ಮುನ್ನ ಮಸೀದಿಯ ಅತ್ಯಾಧುನಿಕ ವಿನ್ಯಾಸದ ಬಗ್ಗೆ ಸಮುದಾಯದಿಂದ ಆಕ್ಷೇಪ ವ್ಯಕ್ತವಾಗಿದ್ದರಿಂದ ಐಐಎಸ್‌ಎಫ್ ಅದನ್ನು ಕೈಬಿಟ್ಟಿತ್ತು. ಇದೀಗ ಸಾಂಪ್ರಾದಾಯಿಕ ವಿನ್ಯಾಸದ ಮಸೀದಿಯ ನಕ್ಷೆಯು ಸದ್ಯದಲ್ಲೇ ಸಿದ್ಧವಾಗಲಿದೆ ಎಂದವರು ಹೇಳಿದ್ದಾರೆ. ಈಗಾಗಲೇ ತುಂಬಾ ವಿಳಂಬವಾಗಿರುವ ಮಸೀದಿಯ ನಿರ್ಮಾಣ ಯೋಜನೆಗೆ ಎಡಿಎ ಅನುಮೋದನೆ ಮಹತ್ವದ್ದಾಗಿದೆ. ಆರೆ ಧನ್ನಿಪುರ ಸುತ್ತಮುತ್ತ ನಿವೇಶನದ ಕೊರತೆ ಸೇರಿದಂತೆ ಮಸೀದಿ ನಿರ್ಮಾಣಕ್ಕೆ ಸಂಬಂಧಿಸಿದ ಇತರ ಸಮಸ್ಯೆಗಳ ಬಗ್ಗೆ ಐಐಸಿಎಫ್ ಪರಿಶೀಲನೆ ನಡೆಸುತ್ತಿದೆ ಎಂದು ಫರೂಕಿ ತಿಳಿಸಿದ್ದಾರೆ.

ವಾರ್ತಾ ಭಾರತಿ 6 Dec 2025 10:46 pm

ಮೂಡುಬಿದಿರೆ | ವ್ಯಕ್ತಿ ಆತ್ಮಹತ್ಯೆ : ಪ್ರಕರಣ ದಾಖಲು

ಮೂಡುಬಿದಿರೆ : ವ್ಯಕ್ತಿಯೊರ್ವ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಶನಿವಾರ ಮುಂಜಾನೆ ಪುರಸಭಾ ವ್ಯಾಪ್ತಿಯ ಕಲ್ಲಬೆಟ್ಟುವಿನ ನೀರಲ್ಕೆಯಲ್ಲಿ ನಡೆದಿದೆ. ಕಲ್ಲಬೆಟ್ಟು ನೀರಲ್ಕೆಯ ನಿವಾಸಿ ಕೂಲಿ ಕಾರ್ಮಿಕ ಕೃಷ್ಣಪ್ಪ ಅವರ ಪುತ್ರ ಸಂಜಯ್ ಯಾನೆ ಮುನ್ನಾ(26) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಶುಕ್ರವಾರ ರಾತ್ರಿವರೆಗೆ ಮನೆಯಲ್ಲಿಯೇ ಇದ್ದ ಸಂಜಯ್ ಅವರು ನಂತರ ಮನೆಯಿಂದ ಹೊರ ಹೋಗಿದ್ದಾರೆನ್ನಲಾಗಿದೆ. ಬೆಳಿಗ್ಗೆ ಮನೆ ಹತ್ತಿರದ ಹಾಡಿಯಲ್ಲಿ‌ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ. ಕೂಲಿ ಕಾರ್ಮಿಕರಾಗಿರುವ ಸಂಜಯ್ ಅವರು ಆರ್ಥಿಕ ಸಂಕಷ್ಟವನ್ನು ಅನುಭವಿಸುತ್ತಿದ್ದು, ಇದೇ ಕಾರಣದಿಂದ ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಸ್ಥಳೀಯರು ಸಂಶಯ ವ್ಯಕ್ತ ಪಡಿಸಿದ್ದಾರೆ. ಈ ಬಗ್ಗೆ ಮೂಡುಬಿದಿರೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆತ್ಮಹತ್ಯೆಯ ಯೋಚನೆ ಬಂದಾಗ ಅದನ್ನು ನಿಗ್ರಹಿಸಲು ರಾಜ್ಯ ಸರಕಾರದ ಅರೋಗ್ಯ ಇಲಾಖೆಯ ಹೆಲ್ಪ್ ಲೈನ್ 104 ಸಹಾಯ ಮಾಡುತ್ತದೆ. ಅದರ ಜೊತೆಗೆ Tele-MANAS ನ 14416 ಅನ್ನೂ ಸಂಪರ್ಕಿಸಬಹುದು.

ವಾರ್ತಾ ಭಾರತಿ 6 Dec 2025 10:45 pm

ಕಲಬುರಗಿ ವಲಯ ಯುವಜನೋತ್ಸವ ಕಾರ್ಯಕ್ರಮ: ವಿದ್ಯಾರ್ಥಿಗಳಿಗೆ ಪ್ರಶಸ್ತಿ ವಿತರಣೆ

ಕಲಬುರಗಿ: ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ ಹುಬ್ಬಳ್ಳಿ, ಸಿದ್ಧಾರ್ಥ ಕಾನೂನು ಮಹಾವಿದ್ಯಾಲಯ ಕಲಬುರಗಿ (ಐಕ್ಯೂಎಸಿ) ಸಂಯುಕ್ತಾಶ್ರಯದಲ್ಲಿ ಎರಡು ದಿನಗಳ ಕಲಬುರಗಿ ವಲಯದ ಯುವಜನೋತ್ಸವನ್ನು ನಗರದ ವಿಶ್ವೇಶ್ವರಯ್ಯ ಭವನದಲ್ಲಿ ಆಚರಿಸಲಾಯಿತು.   ಈ ಕಾರ್ಯಕ್ರಮಕ್ಕೆ ಏಂಟು ಕಾನೂನು ಮಹಾವಿದ್ಯಾಲಯಗಳಿಂದ ಸುಮಾರು 200ಕ್ಕೂ ಹೆಚ್ಚಿನ ಸ್ಪರ್ಧಾಳುಗಳು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ಯುವ ಜನೋತ್ಸವವನ್ನು ಯಶ್ವಸ್ವಿಗೊಳಿಸಿದರು. ಶರಣಬಸವ ವಿಶ್ವವಿದ್ಯಾಲಯ ಕುಲಸಚಿವ ಡಾ. ಸಣ್ಣಬಸನಗೌಡ ಜಿ.ಡೋಳ್ಳೆಗೌಡ ಅವರು ವಿದ್ಯಾರ್ಥಿಗಳಿಗೆ ಪ್ರಶಸ್ತಿಗಳನ್ನು ವಿತರಿಸಿ ಮಾತನಾಡಿ, ವಿದ್ಯಾರ್ಥಿಗಳು ಅಧ್ಯಯನದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಿ ತಮ್ಮ ವ್ಯಕ್ತಿತ್ವವನ್ನು ಸರಿಯಾದ ರೀತಿಯಲ್ಲಿ ಬೆಳೆಸಿಕೊಳ್ಳಬೇಕೆಂದು ಹೇಳಿದರು.  ಸಿದ್ಧಾರ್ಥ ಕಾನೂನು ಮಹಾವಿದ್ಯಾಲಯದ ವಿದ್ಯಾರ್ಥಿಗಳು ಅತಿ ಹೆಚ್ಚು ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಥಮ ಸ್ಥಾನವನ್ನು ಪಡೆದುಕೊಂಡು ಕಲಬುರಗಿ ವಲಯ ಯುವಜನೋತ್ಸವದ ಚಾಂಪಿಯನ್ ಆಗಿ ಹೊರ ಹೊಮ್ಮಿದರು. ಜೆ.ಎನ್ಆರ್ ಲಡ್ಡಾ ಕಾನೂನು ಮಹಾವಿದ್ಯಾಲಯ ಸೇಡಂ ರನ್ನರ್ ಅಪ್ ಆಯಿತು. ವಿದ್ಯಾರ್ಥಿಗಳ ಸಾಧನೆಗೆ ಕರ್ನಾಟಕ ಪೀಪಲ್ಸ್ ಎಜುಕೇಶನ್ ಸೊಸೈಟಿಯ ಕಾರ್ಯದರ್ಶಿಗಳಾದ ಶಾಂತಪ್ಪ ಸೂರನ, ಆಡಳಿತಾಧಿಕಾರಿ ಡಾ.ಚಂದ್ರಶೇಖರ್ ಶೀಲವಂತ ಅವರು ಹರ್ಷ ವ್ಯಕ್ತಪಡಿಸಿದ್ದಾರೆ. ಪ್ರಾಚಾರ್ಯ ಡಾ.ಚಂದ್ರಶೇಖರ ಎಸ್, ಕಾರ್ಯಕ್ರಮದ ಸಂಚಾಲಕರಾದ ಡಾ. ತಿಪ್ಪೆಸ್ವಾಮಿ, ಸಂಯೋಜನಾಧಿಕಾರಿಯಾದ ಮಹಾಂತೇಶ್ ಬಿದನೂರ್ ಮತ್ತು ಕಾಲೇಜಿನ ಎಲ್ಲಾ ಸಿಬ್ಬಂದಿಗಳು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.  

ವಾರ್ತಾ ಭಾರತಿ 6 Dec 2025 10:43 pm

ಸುಗಮ ವಾಯುಯಾನದ ಭರವಸೆ ನೀಡಿದ್ದ ಮೋದಿ ವಿಮಾನಗಳ ಹಾರಾಟವನ್ನೇ ನಿಲ್ಲಿಸಿದ್ದಾರೆ: ಕಾಂಗ್ರೆಸ್ ಟೀಕೆ

ಹೊಸದಿಲ್ಲಿ,ಡಿ.6: ಇಂಡಿಗೋ ವಿಮಾನ ಗಳ ಹಾರಾಟ ರದ್ದುಗೊಂಡ ಹಿನ್ನೆಲೆಯಲ್ಲಿ ಜನಸಾಮಾನ್ಯರು ತೊಂದರೆಗೀಡಾಗಿರುವ ಬಗ್ಗೆ ಕೇಂದ್ರ ಸರಕಾರವನ್ನು ಕಾಂಗ್ರೆಸ್ ಪಕ್ಷವು ತರಾಟೆಗೆ ತೆಗೆದುಕೊಂಡಿದೆ.ವಾಯುಯಾನವನ್ನು ಸುಗಮಗೊಳಿಸುವುದಾಗಿ ಪ್ರಧಾನಿ ನರೇಂದ್ರ ಮೋದಿ ಭರವಸೆ ನೀಡಿದ್ದರು. ಆದರೆ ಅವರು ‘ವಾಯುಯಾನವನ್ನೇ ನಿಲ್ಲಿಸಿಬಿಟ್ಟಿದ್ದಾರೆ’ ಎಂದು ಅದು ಟೀಕಿಸಿದೆ. ಹಿಂದೆಂದೂ ಸಂಭವಿಸಿರದಂತಹ ಈ ಬಿಕ್ಕಟ್ಟಿನ ಹೊಣೆಗಾರಿಕೆಯನ್ನು ಕೇಂದ್ರ ನಾಗರಿಕ ವಾಯುಯಾನ ಸಚಿವ ಕೆ.ರಾಮಮೋಹನ್ ನಾಯ್ಡು ತೆಗೆದುಕೊಳ್ಳುವರೇ ಎಂದು ಕಾಂಗ್ರೆಸ್ ಪ್ರಶ್ನಿಸಿದೆ. ಇಂಡಿಗೋ ಅವ್ಯವಸ್ಥೆಯು ಆಕಸ್ಮಿಕವೇನೂ ಅಲ್ಲ. ವಾಯುಯಾನ ಕ್ಷೇತ್ರದಲ್ಲಿ ‘ದ್ವಿಸಾಮ್ಯ’ವನ್ನು ಸೃಷ್ಟಿಸಲು ಬಿಜೆಪಿ ನಡೆಸುತ್ತಿರುವ ನಿರಂತರ ಪ್ರಯತ್ನದ ನೇರ ಫಲಿತಾಂಶ ಇದಾಗಿದೆ ಎಂದು ಕಾಂಗ್ರೆಸ್ ಪಕ್ಷದ ನಾಯಕ ಶಶಿಕಾಂತ್ ಸೆಂಥಿಲ್ ಆಪಾದಿಸಿದ್ದಾರೆ. ಹೊಸದಿಲ್ಲಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು ಇಂಡಿಗೋ ವಿಮಾನಗಳ ಹಾರಾಟ ರದ್ದತಿಯು, ದೇಶದ ವಾಯುಯಾನ ಕ್ಷೇತ್ರವನ್ನು ಮೊಣಕಾಲೂರುವಂತೆ ಮಾಡಿದೆ ಎಂದರು. ವಾಯುಯಾನ ಕ್ಷೇತ್ರದಲ್ಲಿ ಸ್ಪರ್ಧಾತ್ಮಕತೆಯನ್ನು ದಮನಿಸಲು ಕಟಿಬದ್ಧವಾಗಿರುವ ಬಿಜೆಪಿಯು, ಕೆಲವೇ ಕಾರ್ಪೊರೇಟ್ ಜೊತೆಗಾರರಿಗೆ ಅನುಕೂಲಕರವಾಗುವಂತೆ ಇಡೀ ವಾಯುಯಾನ ಕ್ಷೇತ್ರವನ್ನು ಮರುರೂಪಿಸುತ್ತಿದೆ ಎಂದು ಸೆಂಥಿಲ್ ಆಪಾದಿಸಿದರು.

ವಾರ್ತಾ ಭಾರತಿ 6 Dec 2025 10:43 pm

ಉಡುಪಿ | ಡಿ.15ರಿಂದ ಅಣಬೆ, ಜೇನು ಕೃಷಿ ತರಬೇತಿ

ಉಡುಪಿ, ಡಿ.6: ಕೃಷಿ ಇಲಾಖೆಯ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಆತ್ಮ ಯೋಜನೆಯಡಿ ಯುವ ರೈತ ಮತ್ತು ಯುವ ರೈತ ಮಹಿಳೆಯರಿಗೆ ಡಿ.15ರಿಂದ 19ರವರೆಗೆ ಐದು ದಿನಗಳ ಕಾಲ ಅಣಬೆ ಹಾಗೂ ಜೇನು ಕೃಷಿ ಕುರಿತು ತರಬೇತಿ ಕಾರ್ಯಕ್ರಮವನ್ನು ಕುಂದಾಪುರದ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯಲ್ಲಿ ಹಮ್ಮಿಕೊಳ್ಳಲಾಗಿದೆ. ಆಸಕ್ತರು ಡಿ.12ರ ಒಳಗೆ ಮೇಲಿನ ಕಚೇರಿಗೆ ಆಧಾರ್, ಪಹಣೀ ಪತ್ರ, ಬ್ಯಾಂಕ್ ಖಾತೆ ಪ್ರತಿ ಮತ್ತು ಭಾವಚಿತ್ರ ನೀಡಿ ಹೆಸರು ನೋಂದಾಯಿಸಿ ಕೊಳ್ಳಬಹುದು ಎಂದು ಕುಂದಾಪುರ ಸಹಾಯಕ ಕೃಷಿ ನಿರ್ದೇಶಕರ ಪ್ರಕಟಣೆ ತಿಳಿಸಿದೆ.

ವಾರ್ತಾ ಭಾರತಿ 6 Dec 2025 10:39 pm

ಡಿ.7ರ ರಾತ್ರಿ 8 ಗಂಟೆಯೊಳಗೆ ಪೂರ್ಣ ಟಿಕೆಟ್ ದರ ಮರುಪಾವತಿ ಮಾಡಿ: IndiGoಗೆ ಸರಕಾರ ಆದೇಶ

ಹೊಸದಿಲ್ಲಿ: ಸಾವಿರಾರು ವಿಮಾನಯಾನ ಗಳ ರದ್ದತಿಯ ಹಿನ್ನೆಲೆಯಲ್ಲಿ, ಪ್ರಯಾಣಿಕರ ಟಿಕೆಟ್ ಮೊತ್ತವನ್ನು ರವಿವಾರ ರಾತ್ರಿ 8 ಗಂಟೆಯ ಒಳಗೆ ಮರುಪಾವತಿಸುವಂತೆ ನಾಗರಿಕ ವಾಯಯಾನ ಸಚಿವಾಲಯವು ಶನಿವಾರ ಇಂಡಿಗೋ ವಿಮಾನಯಾನ ಸಂಸ್ಥೆಗೆ ಆದೇಶ ನೀಡಿದೆ. ಈ ನಿರ್ದೇಶನವನ್ನು ಪಾಲಿಸಲು ವಿಫಲವಾದರೆ ‘‘ತಕ್ಷಣ ನಿಯಂತ್ರಣ ಕ್ರಮ’’ವನ್ನು ತೆಗೆದುಕೊಳ್ಳಲಾಗುವುದು ಎಂಬ ಎಚ್ಚರಿಕೆಯನ್ನೂ ಅದು ನೀಡಿದೆ. ಯಾರ ಯಾನಗಳು ರದ್ದಾಗಿವೆಯೋ ಆ ಪ್ರಯಾಣಿಕರಿಗೆ ಅವರ ಮೂಲ ಪಾವತಿ ವಿಧಾನಕ್ಕೆ ಟಿಕೆಟ್‌ ನ ಪೂರ್ಣ ಮೊತ್ತ ಮರುಪಾವತಿಯಾಗುತ್ತದೆ. ವಿಮಾನಯಾನವನ್ನು ಮರುನಿಗದಿಪಡಿಸಲು ಇಂಡಿಗೋ ಯಾವುದೇ ಶುಲ್ಕವನ್ನು ಕಡಿತಗೊಳಿಸುವಂತಿಲ್ಲ. ಅದೇ ವೇಳೆ, ಯಾನಗಳ ವಿಳಂಬ ಅಥವಾ ರದ್ದತಿಯಿಂದಾಗಿ ಪ್ರಯಾಣಿಕರಿಂದ ಬೇರ್ಪಡೆಗೊಂಡಿರುವ ಎಲ್ಲಾ ಬ್ಯಾಗ್‌ ಗಳನ್ನು ಪತ್ತೆ ಹಚ್ಚಿ ಅವರ ನಿವಾಸಗಳಿಗೆ ಅಥವಾ ಅವರು ತಿಳಿಸುವ ವಿಳಾಸಗಳಿಗೆ ಮುಂದಿನ 48 ಗಂಟೆಗಳ ಒಳಗೆ ತಲುಪಿಸುವಂತೆಯೂ ಸಚಿವಾಲಯವು ಇಂಡಿಗೋಗೆ ಸೂಚಿಸಿದೆ.

ವಾರ್ತಾ ಭಾರತಿ 6 Dec 2025 10:38 pm

ಕಲಬುರಗಿ ಕೇಂದ್ರ ಕಾರಾಗೃಹದಲ್ಲಿ ಅಂಬೇಡ್ಕರ್‌ ಅವರ 69ನೇ ಮಹಾಪರಿನಿರ್ವಾಣ ಕಾರ್ಯಕ್ರಮ

ಕಲಬುರಗಿ: ಕೇಂದ್ರ ಕಾರಾಗೃಹದಲ್ಲಿ ಅಂಬೇಡ್ಕರರವರ 69ನೇ ಮಹಾಪರಿನಿರ್ವಾಣ ಕಾರ್ಯಕ್ರಮ ಆಯೋಜಿಸಲಾಯಿತು. ಡಾ. ಬಾಬಾಸಾಹೇಬ ಅಂಬೇಡ್ಕರ್‌ ಅವರ ಭಾವ ಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದ ಸಂಸ್ಥೆಯ ಪ್ರಭಾರಿ ಮುಖ್ಯ ಅಧೀಕ್ಷಕರಾದ ಬಿ.ಸುರೇಶ್, ಇಂದು ಬಾಬಾ ಸಾಹೇಬ್‌ ಅಂಬೇಡ್ಕರ್‌ ಅವರು ನಮ್ಮನೆಲ್ಲ ಅಗಲಿದ ದಿನ. ಕೇವಲ ಅವರ ಶರೀರವಷ್ಟೆ ನಮ್ಮಿಂದ ದೂರವಾಗಿದೆ ಎಂದು ಹೇಳಿದೆ.   ಸಹಾಯಕ ಅಧೀಕ್ಷಕ ಚನ್ನಪ್ಪ ಮಾತನಾಡುತ್ತಾ, “ದೇಶ ಸುತ್ತಿ ಕೋಶ ಓದು” ಎಂಬಂತೆ ಡಾ. ಬಾಬಾಸಾಹೇಬ್‌ ಅಂಬೇಡ್ಕರ್‌ ಅವರು ಈ ದೇಶಕ್ಕೆ ಸಂವಿಂಧಾನ ಎಂಬ ಅಮೂಲ್ಯ ರತ್ನ ನೀಡಿದ್ದಾರೆ ಎಂದು ಹೇಳಿದರು.  ಈ ಕಾರ್ಯಕ್ರಮದಲ್ಲಿ ಸಹಾಯಕ ಆಡಳಿತಾಧಿಕಾರಿಗಳಾದ ಭೀಮಾಶಂಕರ್ ಡಾಂಗೆ, ಜೈಲರ್‌ಗಳಾದ ಸುನಂದ ವಿ., ಪುಂಡಲಿಕ ಟಿ.ಕೆ, ಶಾಮ ಬಿದ್ರಿ, ಕಾರಾಗೃಹದ ಎಲ್ಲಾ ಅಧಿಕಾರಿಗಳು, ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು.

ವಾರ್ತಾ ಭಾರತಿ 6 Dec 2025 10:38 pm

ಹಾರಾಟ ನಡೆಸದ IndiGo | 84 ವಿಶೇಷ ರೈಲುಗಳನ್ನು ಘೋಷಿಸಿದ ಭಾರತೀಯ ರೈಲ್ವೇ

ಹೊಸದಿಲ್ಲಿ, ಡಿ. 6: ಇಂಡಿಗೊ ಅಗಾಧ ಪ್ರಮಾಣದಲ್ಲಿ ವಿಮಾನ ಯಾನ ವನ್ನು ರದ್ದುಪಡಿಸಿದ ಹಿನ್ನೆಲೆಯಲ್ಲಿ ಸಂಚಾರ ವ್ಯತ್ಯಯ ಎದುರಿಸುತ್ತಿರುವ ಜನರಿಗೆ ನೆರವು ನೀಡಲು ಭಾರತೀಯ ರೈಲ್ವೆ 84 ವಿಶೇಷ ರೈಲು ಗಳನ್ನು ಶನಿವಾರ ಘೋಷಿಸಿದೆ. ಸಾಧ್ಯವಾದಷ್ಟು ಕಡಿಮೆ ಸಮಯದಲ್ಲಿ ಈ ರೈಲುಗಳ ವ್ಯವಸ್ಥೆ ಮಾಡಲಾಗಿದೆ. ಹೊಸದಿಲ್ಲಿ, ಮುಂಬೈ, ಚೆನ್ನೈ, ಬೆಂಗಳೂರು, ಪಾಟ್ನಾ ಹಾಗೂ ಹೌರಾ ಸೇರಿದಂತೆ ಪ್ರಮುಖ ಕೇಂದ್ರಗಳಲ್ಲಿ ಪ್ರಯಾಣಿಕರ ದಟ್ಟಣೆ ಪರಿಶೀಲಿಸಿದ ಬಳಿಕ ರೈಲುಗಳ ವ್ಯವಸ್ಥೆ ಮಾಡಲಾಗಿದೆ ಎಂದು ರೈಲ್ವೆ ಸಚಿವಾಲಯ ತಿಳಿಸಿದೆ. ಬೇಡಿಕೆಗಳಿಗೆ ಅನುಗುಣವಾಗಿ ವಿಶೇಷ ರೈಲುಗಳ ಸಂಖ್ಯೆ ಹೆಚ್ಚಾಗಬಹುದು ಅಧಿಕಾರಿಗಳು ಹೇಳಿದ್ದಾರೆ. ಲಭ್ಯವಿರುವ ಎಲ್ಲಾ ಸಂಪನ್ಮೂಲಗಳು, ರೈಲುಗಳು ಮತ್ತು ಸಿಬ್ಬಂದಿಯನ್ನು ಬಳಸುವಂತೆ ಎಲ್ಲಾ ವಲಯಗಳಿಗೆ ಸೂಚಿಸಲಾಗಿದೆ. ವಿಮಾನ ರದ್ದತಿಯಿಂದ ತೊಂದರೆಗೊಳಗಾದ ಪ್ರಯಾಣಿಕರಿಗಾಗಿ ರೈಲುಗಳನ್ನು ಸುರಕ್ಷಿತವಾಗಿ ಓಡಿಸುವ ಉದ್ದೇಶ ಹೊಂದಲಾಗಿದೆ ಎಂದು ರೈಲ್ವೇ ಮಂಡಳಿಯ ಕಾರ್ಯನಿರ್ವಾಹಕ ನಿರ್ದೇಶಕ (ಮಾಹಿತಿ ಹಾಗೂ ಪ್ರಚಾರ) ದಿಲೀಪ್ ಕುಮಾರ್ ತಿಳಿಸಿದ್ದಾರೆ.

ವಾರ್ತಾ ಭಾರತಿ 6 Dec 2025 10:35 pm

ಉಡುಪಿ | ಡಿ.17ರಂದು ಉದ್ಯಮಶೀಲರಿಗೆ ಮಾಹಿತಿ ಕಾರ್ಯಾಗಾರ

ಉಡುಪಿ, ಡಿ.6: ಸೂಕ್ಷ್ಮ, ಸಣ್ಣ ಹಾಗೂ ಮಧ್ಯಮ ಉದ್ಯಮಗಳ (ಎಂಎಸ್ಎಂಇ) ಗಳ ಕಾರ್ಯಕ್ಷಮತೆಯನ್ನು ಹೆಚ್ಚಿಸಲು ಹಾಗೂ ಅವುಗಳ ಕಾರ್ಯಚಟುವಟಿಕೆಗಳನ್ನು ವೇಗಗೊಳಿಸಲು ಭಾರತ ಸರ್ಕಾರದ ರ್ಯಾಂಪ್ ಯೋಜನೆಯಡಿ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಬೆಂಗಳೂರು, ಕರ್ನಾಟಕ ತಾಂತ್ರಿಕ ಉನ್ನತೀಕರಣ ಪರಿಷತ್, ಕರ್ನಾಟಕ ತಾಂತ್ರಿಕ ಸಲಹಾ ಸೇವಾ ಸಂಸ್ಥೆ ಬೆಂಗಳೂರು, ಜಿಲ್ಲಾ ಕೈಗಾರಿಕಾ ಕೇಂದ್ರ ಉಡುಪಿ ಹಾಗೂ ಜಿಲ್ಲಾ ಸಣ್ಣ ಕೈಗಾರಿಕಾ ಸಂಘದ ಸಹಯೋಗದಲ್ಲಿ ಡಿ.10ರಂದು ಉಡುಪಿಯ ಹೋಟೆಲ್ ಚಿತ್ತಾರ ಕಂಫರ್ಟ್ಸ್ ನಲ್ಲಿ ಆಯೋಜಿಸಲಾಗಿದ್ದ ಒಂದು ದಿನದ ಮಾಹಿತಿ ಕಾರ್ಯಗಾರವನ್ನು ಕಾರಣಾಂತರಗಳಿಂದ ಮುಂದೂಡಿ ಡಿ.17ರಂದು ಬೆಳಗ್ಗೆ 10 ಗಂಟೆಗೆ ನಗರದ ಕಡಿಯಾಳಿ ಜಂಕ್ಷನ್ ಸಮೀಪದ ದಿ ಓಷಿಯನ್ ಪರ್ಲ್ ನಲ್ಲಿ ಮರು ನಿಗದಿಪಡಿಸಲಾಗಿದೆ ಕಾರ್ಯಕ್ರಮದಲ್ಲಿ ಪ್ರತಿಷ್ಠಿತ ಕಂಪೆನಿಗಳಿಂದ ಆಗಮಿಸುವ ಪರಿಣಿತ ಬೋಧಕರು ಎಂಎಸ್ಎಂಇ ಉದ್ಯಮಶೀಲರಿಗೆ ಉಪಯುಕ್ತ ಮಾಹಿತಿ ನೀಡಲಿದ್ದು, ನೋಂದಾಯಿತ ಎಂ.ಎಸ್.ಎಂ.ಇ ಉದ್ಯಮಶೀಲರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಾಗಾರದ ಸದುಪಯೋಗ ಪಡೆದುಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಕೈಗಾರಿಕಾ ಕೇಂದ್ರ, ಉಡುಪಿ ದೂರವಾಣಿ ಸಂಖ್ಯೆ: 0820-2575650ನ್ನು ಸಂಪರ್ಕಿಸಬಹುದು ಎಂದು ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಾರ್ತಾ ಭಾರತಿ 6 Dec 2025 10:35 pm

IndiGo ಬಿಕ್ಕಟ್ಟು; ವಿಮಾನ ಟಿಕೆಟ್ ದರಕ್ಕೆ ಮಿತಿ ಹೇರಿದ ಸರಕಾರ

ಹೊಸದಿಲ್ಲಿ, ಡಿ. 6: ಇಂಡಿಗೋ ವಿಮಾನ ಯಾನಗಳ ಅಗಾಧ ಅವ್ಯವಸ್ಥೆಯ ಹಿನ್ನೆಲೆಯಲ್ಲಿ, ತುರ್ತು ವಿಮಾನ ಪ್ರಯಾಣಕ್ಕೆ ಹೆಚ್ಚಾಗಿರುವ ಅಗಾಧ ಬೇಡಿಕೆಯನ್ನು ದುರುಪಯೋಗಪಡಿಸಿಕೊಂಡು ಇತರ ವಿಮಾನಯಾನ ಸಂಸ್ಥೆಗಳು ತಮ್ಮ ಟಿಕೆಟ್‌ ಗಳ ಬೆಲೆಯನ್ನು ಅಗಾಧ ಪ್ರಮಾಣದಲ್ಲಿ ಏರಿಸಿವೆ. ಇದನ್ನು ಗಮನಿಸಿರುವ ಸರಕಾರವು ಟಿಕೆಟ್‌ ಗಳ ಬೆಲೆ ನಿಯಂತ್ರಣಕ್ಕೆ ಶನಿವಾರ ಮಧ್ಯಪ್ರವೇಶಿಸಿದೆ. ಕೆಲವು ವಿಮಾನಯಾನ ಸಂಸ್ಥೆಗಳು ತಮ್ಮ ನಿರ್ದಿಷ್ಟ ಮಾರ್ಗಗಳ ಪ್ರಯಾಣ ದರವನ್ನು ಐದರಿಂದ ಹತ್ತು ಪಟ್ಟು ಹೆಚ್ಚಿಸಿದ್ದವು. ಈ ವಿಷಯವನ್ನು ಸರಕಾರವು ‘‘ಅತ್ಯಂತ ಗಂಭಿರ’’ವಾಗಿ ಪರಿಗಣಿಸಿದೆ ಹಾಗೂ ಎಲ್ಲಾ ಬಾಧಿತ ಮಾರ್ಗಗಳಲ್ಲಿ ವಿಮಾನ ಟಿಕೆಟ್‌ ಗಳಿಗೆ ನ್ಯಾಯಸಮ್ಮತ ಬೆಲೆಗಳನ್ನು ಖಾತರಿಪಡಿಸಲು ತನಗಿರುವ ವಿಶೇಷ ನಿಯಂತ್ರಣಾಧಿಕಾರಗಳನ್ನು ಚಲಾಯಿಸಿದೆ ಎಂದು ನಾಗರಿಕ ವಾಯುಯಾನ ಸಚಿವಾಲಯವು ಶನಿವಾರ ಪ್ರಕಟನೆಯೊಂದರಲ್ಲಿ ತಿಳಿಸಿದೆ. ಹೊಸದಾಗಿ ನಿಗದಿಪಡಿಸಲಾಗಿರುವ ಗರಿಷ್ಠ ದರ ಮಿತಿಯನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಎಲ್ಲಾ ವಿಮಾನಯಾನ ಸಂಸ್ಥೆಗಳಿಗೆ ಅಧಿಕೃತ ಸೂಚನೆಯೊಂದನ್ನು ನೀಡಲಾಗಿದೆ. ಪರಿಸ್ಥಿತಿಯು ಸಾಮಾನ್ಯ ಸ್ಥಿತಿಗೆ ಮರಳುವವರೆಗೆ ನೂತನ ದರ ಮಿತಿ ಜಾರಿಯಲ್ಲಿರುತ್ತದೆ.

ವಾರ್ತಾ ಭಾರತಿ 6 Dec 2025 10:31 pm

ಕಲಬುರಗಿ| ಬಾಬರಿ ಮಸೀದಿ ಧ್ವಂಸದ ವೀಡಿಯೊ ಹಂಚಿಕೊಂಡ ಪಾಲಿಕೆ ವ್ಯವಸ್ಥಾಪಕನ ವಿರುದ್ಧ ಪ್ರಕರಣ ದಾಖಲು

ಕಲಬುರಗಿ: ಬಾಬರಿ ಮಸೀದಿ ಧ್ವಂಸ ಮಾಡುತ್ತಿರುವ ಪ್ರಚೋದನಾಕಾರಿ ಸ್ಟೇಟಸ್‌ ಹಾಕಿರುವ ವೀಡಿಯೊ ವೈರಲ್‌ ಬೆನ್ನಲ್ಲೆ ಕಲಬುರಗಿ ಮಹಾನಗರ ಪಾಲಿಕೆ ಕಚೇರಿ ವ್ಯವಸ್ಥಾಪಕ ಅಂಬಾದಾಸ್ ಖತಾಲ್ ವಿರುದ್ಧ ಬ್ರಹ್ಮಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಹಾನಗರ ಪಾಲಿಕೆ ಸದಸ್ಯ ಶೇಖ್ ಅಜ್ಮಲ್ ಅಹ್ಮದ್ ಗೋಳಾ ನೀಡಿದ ದೂರಿನ ಮೇರೆಗೆ ಅಂಬಾದಾಸ್ ಖತಾಲ್ ವಿರುದ್ಧ ಬ್ರಹ್ಮಪುರ ಠಾಣೆ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ. ಅಂಬಾದಾಸ್ ಅವರು 1992ರ ಡಿಸೆಂಬರ್‌ 6ರಂದು ಬಾಬರಿ ಮಸೀದಿ ಧ್ವಂಸ ಮಾಡಿರುವ ದೃಶ್ಯವಿರುವ ವಿಡಿಯೋವನ್ನು ತನ್ನ ವಾಟ್ಸಾಪ್ ಸ್ಟೇಟಸ್ ನಲ್ಲಿ ಹಂಚಿಕೊಂಡಿದ್ದರು. ವೀಡಿಯೊದಲ್ಲಿ ಬನಾಯೆಂಗೆ ಮಂದಿರ ಎಂಬ ಹಾಡು ಇರುವುದು ಕೇಳಿಸುತ್ತಿದೆ. ಅದರಲ್ಲಿ ಹಿಂದೂ ಶೌರ್ಯ ದಿನ 1992ರ ಡಿಸೆಂಬರ್ 6 ಎಂದು ಬರೆಯಲಾಗಿದೆ. ಹೇಳಿದಂತೆ ಅಲ್ಲೇ ಮಂದಿರ ಮಾಡಿದ್ದೇವೆ ಎಂದು ಸ್ಟೇಟಸ್‌ನಲ್ಲಿ ಬರೆದುಕೊಂಡಿರುವುದು ಕಂಡು ಬಂದಿತ್ತು.  ಈ ಕುರಿತ ವೀಡಿಯೊ ವೈರಲ್‌ ಬೆನ್ನಲ್ಲೆ ಅಲ್ಪಸಂಖ್ಯಾತ ಸಮುದಾಯದ ಜನರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡಿ ಪ್ರಚೋದನೆ ನೀಡಿದ ಅಧಿಕಾರಿಯ ವಿರುದ್ಧ ಪ್ರಕರಣ ದಾಖಲಿಸಿ ಸೂಕ್ತ ತನಿಖೆ ನಡೆಸಬೇಕೆಂದು ಕೆಲ ಪಾಲಿಕೆ ಸದಸ್ಯರು ಪಾಲಿಕೆಯ ಆಯುಕ್ತರಿಗೆ ದೂರು ನೀಡಿದ್ದರು. ಅಂಬಾದಾಸ್ ವಿರುದ್ಧ ಬ್ರಹ್ಮಪುರ ಪೊಲೀಸ್ ಠಾಣೆಯಲ್ಲಿ ಕಲಂ 196, 353(ಸಿ) ಬಿಎನ್ ಎಸ್ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

ವಾರ್ತಾ ಭಾರತಿ 6 Dec 2025 10:30 pm

5ನೇ ದಿನವೂ ಹಾರದ IndiGo; 400ಕ್ಕೂ ಅಧಿಕ ಯಾನಗಳ ರದ್ದು

ದರ ಮಿತಿ ನಿಗದಿಪಡಿಸಿದ ಸರಕಾರ

ವಾರ್ತಾ ಭಾರತಿ 6 Dec 2025 10:29 pm

ಉಡುಪಿ | ಗೃಹರಕ್ಷಕರ ಸಾಧನೆ ಇತರರಿಗೆ ಮಾದರಿಯಾಗಲಿ: ಎಎಸ್ಪಿ ಸುಧಾಕರ್ ನಾಯ್ಕ್

ಅಖಿಲ ಭಾರತ ಗೃಹರಕ್ಷಕ ದಿನಾಚರಣೆ

ವಾರ್ತಾ ಭಾರತಿ 6 Dec 2025 10:25 pm

ಕೇರಳ | Tiger Census ನಡೆಸುತ್ತಿದ್ದಾಗ ಕಾಡಾನೆ ದಾಳಿ; ಅರಣ್ಯಾಧಿಕಾರಿ ಮೃತ್ಯು

ತಿರುವನಂತಪುರ, ಡಿ. 6: ಹುಲಿ ಗಣತಿ ನಡೆಸುತ್ತಿದ್ದ ಅರಣ್ಯ ಅಧಿಕಾರಿಯೋರ್ವರನ್ನು ಕಾಡಾನೆಯೊಂದು ತುಳಿದು ಕೊಂದ ಘಟನೆ ಕೇರಳದ ಪಾಲಕ್ಕಾಡ್ ಜಿಲ್ಲೆಯಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕಾಡಾನೆ ದಾಳಿಯಿಂದ ಮೃತಪಟ್ಟ ಅರಣ್ಯ ಇಲಾಖೆ ಅಧಿಕಾರಿಯನ್ನು ಕಾಳಿಮುತ್ತು (52) ಎಂದು ಗುರುತಿಸಲಾಗಿದೆ. ಕಾಳಿ ಮುತ್ತು ಸೇರಿದಂತೆ ಮೂವರು ಅರಣ್ಯಾಧಿಕಾರಿಗಳು ಗಣತಿ ಪ್ರಕ್ರಿಯೆ ನಡೆಸುತ್ತಿರುವಾಗ ಅಟ್ಟಪಾಡಿ ಅರಣ್ಯ ವಲಯದ ಒಳಗೆ ಈ ಘಟನೆ ನಡೆದಿದೆ. ಕೆಲಸ ಮುಗಿಸಿ ಹಿಂದಿರುಗುತ್ತಿದ್ದ ಸಂದರ್ಭ ಕಾಡಾನೆ ಅರಣ್ಯಾಧಿಕಾರಿಗಳ ಮೇಲೆ ದಾಳಿ ನಡೆಸಿದೆ. ಈ ಸಂದರ್ಭ ಎಲ್ಲರೂ ಓಡಿದ್ದಾರೆ. ಘಟನೆಯಲ್ಲಿ ಇಬ್ಬರು ಅಧಿಕಾರಿಗಳು ಸಣ್ಣ ಪುಟ್ಟ ಗಾಯಗಳಿಂದ ಪಾರಾಗಿದ್ದಾರೆ. ಆದರೆ, ಕಾಳಿಮುತ್ತು ಅವರ ಮೃತದೇಹದ ಸಮೀಪದ ಪ್ರದೇಶದಲ್ಲಿ ಅನಂತರ ಪತ್ತೆಯಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ ಕಾಳಿಮುತ್ತು ಅಗಲಿಯ ನೆಲ್ಲಿಪಥಿ ಬುಡಕಟ್ಟು ಪ್ರದೇಶದ ನಿವಾಸಿ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಾರ್ತಾ ಭಾರತಿ 6 Dec 2025 10:24 pm

ಅತ್ಯಾಚಾರ ಪ್ರಕರಣ | ಮಾಂಕ್ಕುಟತ್ತಿಲ್‌ ಗೆ ಬಂಧನದಿಂದ ಮಧ್ಯಂತರ ರಕ್ಷಣೆ

ಹೊಸದಿಲ್ಲಿ, ಡಿ. 6: ಅತ್ಯಾಚಾರ ಪ್ರಕರಣದಲ್ಲಿ ಪಾಲಕ್ಕಾಡ್ ಶಾಸಕ ರಾಹುಲ್ ಮಾಂಕ್ಕುಟತ್ತಿಲ್‌ ಗೆ ಕೇರಳ ಉಚ್ಚ ನ್ಯಾಯಾಲಯ ಶನಿವಾರ ಬಂಧನದಿಂದ ಮಧ್ಯಂತರ ರಕ್ಷಣೆ ನೀಡಿದೆ. ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿ ಮಾಂಕ್ಕುಟತ್ತಿಲ್ ನಿರೀಕ್ಷಣಾ ಜಾಮೀನು ಕೋರಿ ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ. ಬಾಬು ಈ ಆದೇಶ ನೀಡಿದ್ದಾರೆ. ಮಾಂಕ್ಕುಟತ್ತಿಲ್ ಅವರ ಅರ್ಜಿಯನ್ನು ಡಿಸೆಂಬರ್ 15ರಂದು ಆಲಿಸಲಾಗುವುದು. ಅಲ್ಲಿಯವರೆಗೆ ಅವರನ್ನು ಬಂಧಿಸಬಾರದು ಎಂದು ನ್ಯಾಯಾಲಯ ಹೇಳಿದೆ. ಈ ಪ್ರಕರಣದಲ್ಲಿ ತಿರುವನಂತಪುರದ ಸೆಷನ್ಸ್ ನ್ಯಾಯಾಲಯ ನಿರೀಕ್ಷಣಾ ಜಾಮೀನು ನೀಡಲು ನಿರಾಕರಿಸಿತ್ತು. ಅನಂತರ ಅವರು ಉಚ್ಚ ನ್ಯಾಯಾಲಯದ ಮೆಟ್ಟಿಲೇರಿದ್ದರು. ಈ ಬೆಳವಣಿಗೆಯ ಹಿನ್ನೆಲೆಯಲ್ಲಿ ಕೇರಳ ಕಾಂಗ್ರೆಸ್ ಮಾಂಕ್ಕುಟತ್ತಿಲ್ ಅವರನ್ನು ಪಕ್ಷದಿಂದ ಗುರುವಾರ ವಜಾಗೊಳಿಸಿತ್ತು. ಮಹಿಳೆಯೋರ್ವರು ತನ್ನನ್ನು ಮಾಂಕ್ಕುಟತ್ತಿಲ್ ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಿಸಿದ್ದರು. ಅವರು ವಂಚನೆಯ ಮೂಲಕ ತನ್ನ ಒಪ್ಪಿಗೆ ಪಡೆದರು ಹಾಗೂ ಗರ್ಭಪಾತಕ್ಕೆ ಒತ್ತಾಯಿಸಿದರು ಎಂದು ಅವರು ಹೇಳಿದ್ದರು. ಅನಂತರ ನವೆಂಬರ್ 28ರಂದು ಅವರ ವಿರುದ್ಧ ಪ್ರಕರಣ ದಾಖಲಾಯಿತು. ಮಾಂಕ್ಕುಟತ್ತಿಲ್ ವಿರುದ್ಧ ನಿಂದನೆ, ದೂರದಾರರಿಗೆ ಜೀವ ಬೆದರಿಕೆ ಹಾಗೂ ಮಾಹಿತಿ ತಂತ್ರಜ್ಞಾನ ಕಾಯ್ದೆಯ ದುರ್ಬಳಕೆ ಆರೋಪ ಮಾಡಲಾಗಿದೆ. ಮಂಗಳವಾರ ಇನ್ನೋರ್ವ ಮಹಿಳೆ ಮಾಂಕ್ಕುಟತ್ತಿಲ್ ತನಗೆ 2023ರಲ್ಲಿ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ. ಅವರು ಕಾಂಗ್ರೆಸ್‌ ನ ರಾಜ್ಯ ನಾಯಕತ್ವಕ್ಕೆ ಇಮೇಲ್ ಮೂಲಕ ದೂರು ನೀಡಿದ್ದರು. ಈ ದೂರನ್ನು ಪೊಲೀಸರಿಗೆ ಹಸ್ತಾಂತರಿಸಲಾಗಿತ್ತು. ಈ ದೂರಿನ ಹಿನ್ನೆಲೆಯಲ್ಲಿ ಮಾಂಕ್ಕುಟತ್ತಿಲ್ ವಿರುದ್ಧ ಎರಡನೇ ಎಫ್‌ಐಆರ್ ದಾಖಲಿಸಲಾಗಿದೆ.

ವಾರ್ತಾ ಭಾರತಿ 6 Dec 2025 10:19 pm

ಹಿರಿಯಡ್ಕ | ವ್ಯಕ್ತಿ ಆತ್ಮಹತ್ಯೆ : ಪ್ರಕರಣ ದಾಖಲು

ಹಿರಿಯಡ್ಕ, ಡಿ.6: ಅನಾರೋಗ್ಯದಿಂದ ಬಳಲುತ್ತಿದ್ದ ಅಂಜಾರು ಗ್ರಾಮದ ಮೂಡುಕಾಂತರ ಗುಂಡಿ ನಿವಾಸಿ ಮೋಹನ್ ದಾಸ ಪ್ರಭು(69) ಎಂಬವರು ಜೀವನದಲ್ಲಿ ಜಿಗುಪ್ಸೆಗೊಂಡು ಡಿ.5ರಂದು ರಾತ್ರಿ ಮನೆಯ ಬಾವಿಗೆ ನೀರು ಸೇದಲು ಅಳವಡಿಸಿದ ಕಬ್ಬಿಣದ ರಾಟೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆತ್ಮಹತ್ಯೆಯ ಯೋಚನೆ ಬಂದಾಗ ಅದನ್ನು ನಿಗ್ರಹಿಸಲು ರಾಜ್ಯ ಸರಕಾರದ ಅರೋಗ್ಯ ಇಲಾಖೆಯ ಹೆಲ್ಪ್ ಲೈನ್ 104 ಸಹಾಯ ಮಾಡುತ್ತದೆ. ಅದರ ಜೊತೆಗೆ Tele-MANAS ನ 14416 ಅನ್ನೂ ಸಂಪರ್ಕಿಸಬಹುದು.

ವಾರ್ತಾ ಭಾರತಿ 6 Dec 2025 10:19 pm

ಕಲಬುರಗಿ| 8.51 ಲಕ್ಷ ರೂ. ಮೌಲ್ಯದ ಪಡಿತರ ಅಕ್ಕಿ ಅಕ್ರಮ ಸಾಗಾಟ : ಓರ್ವನ ಬಂಧನ

ಕಲಬುರಗಿ: ಯಾದಗಿರಿಯಿಂದ ಮಹಾರಾಷ್ಟ್ರ ಹಾಗೂ ಗುಜರಾತ್‌ ರಾಜ್ಯಕ್ಕೆ ಪಡಿತರ ಅಕ್ಕಿ ಸಾಗಾಟ ಮಾಡುತ್ತಿದ್ದ ವ್ಯಕ್ತಿಯೋರ್ವನನ್ನು ಬಂಧಿಸಿ 8,51,020ರೂ. ಮೌಲ್ಯದ 25 ಕ್ವಿಂಟಾಲ್ ಅಕ್ಕಿ ವಶಪಡಿಸಿಕೊಳ್ಳುವಲ್ಲಿ ವಿಶ್ವವಿದ್ಯಾಲಯ ಪೊಲೀಸರು ಯಶಸ್ವಿಯಾಗಿದ್ದಾರೆ. ಬೀದರ್ ಜಿಲ್ಲೆಯ ಹುಮನಾಬಾದ ತಾಲೂಕಿನ ದುಬಲಗುಂಡಿ ಗ್ರಾಮದ ಲಾರಿ ಚಾಲಕ ರಾಜು ನರಸಿಂಗರಾವ್(28) ಬಂಧಿತ ಆರೋಪಿಯಾಗಿದ್ದಾನೆ. ವಿಶ್ವವಿದ್ಯಾಲಯ ಪೊಲೀಸ್‌ ಠಾಣಾ ವ್ಯಾಪ್ತಿಯ ಗೀತಾ ನಗರ ಸೇಡಂ ರೋಡ ಹತ್ತಿರ ಆರೋಪಿ ರಾಜು ನನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದಾಗ ಅಕ್ರಮ ಅಕ್ಕಿ ಸಾಗಾಟ ಮಾಡುತ್ತಿರುವುದಾಗಿ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಕುರಿತು ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಾರ್ತಾ ಭಾರತಿ 6 Dec 2025 10:17 pm

ಭಾರತದಲ್ಲಿ ಖಾಲಿಸ್ತಾನ್ ಪರ ಚಟುವಟಿಕೆಯಲ್ಲಿ ಸಂಪರ್ಕ; ಸಿಖ್ ಉದ್ಯಮಿಗೆ ಬ್ರಿಟನ್ ನಿರ್ಬಂಧ

ಲಂಡನ್, ಡಿ.6: ಭಾರತದಲ್ಲಿ ಖಾಲಿಸ್ತಾನ್ ಪರ ಭಯೋತ್ಪಾದಕ ಚಟುವಟಿಕೆಗಳಿಗೆ ಆರ್ಥಿಕ ನೆರವು ನೀಡುವ ಜೊತೆಗೆ ಇಂತಹ ಚಟುವಟಿಕೆಗಳನ್ನು ಪ್ರೋತ್ಸಾಹಿಸುತ್ತಿದ್ದ ಆರೋಪದಡಿ ಬ್ರಿಟಿಷ್ ಸಿಖ್ ಉದ್ಯಮಿ ಗುರುಪ್ರೀತ್ ಸಿಂಗ್ ರೆಹಾಲ್ ಮತ್ತು ಅವರಿಗೆ ಸಂಬಂಧಿಸಿದ `ಬಬ್ಬರ್ ಅಕಾಲಿ ಲೆಹರ್' ಗುಂಪಿನ ಮೇಲೆ ಬ್ರಿಟನ್ ಕಠಿಣ ನಿರ್ಬಂಧಗಳನ್ನು ವಿಧಿಸಿದೆ. `ದೇಶೀಯ ಭಯೋತ್ಪಾದನಾ ನಿಗ್ರಹ' ಕಾನೂನನ್ನು ಮೊದಲ ಬಾರಿ ಬಳಸಿ ಗುರುಪ್ರೀತ್ ಸಿಂಗ್ ರೆಹಾಲ್ ವಿರುದ್ಧ ಕ್ರಮ ಕೈಗೊಳ್ಳಲಾಗಿದ್ದು ತಕ್ಷಣ ಅವರ ಆಸ್ತಿಯನ್ನು ಸ್ಥಂಭನಗೊಳಿಸಲಾಗುತ್ತದೆ. ಉನ್ನತ ಗುಪ್ತಚರ ಮೂಲಗಳ ಪ್ರಕಾರ, ಈ ಕ್ರಮವು ಬ್ರಿಟನ್ ಮೂಲದ ಭಯೋತ್ಪಾದಕ ಹಣಕಾಸು ಜಾಲಗಳನ್ನು ಕೆಡವಲು ಮತ್ತು `ಭಾರತ ವಿರೋಧಿ' ಪ್ರತ್ಯೇಕತಾವಾದಿ ಚಟುವಟಿಕೆಗಳಿಗೆ ಆರ್ಥಿಕ ನೆರವನ್ನು ಕಿತ್ತುಹಾಕುವ ಭಾರತದ ಪ್ರಯತ್ನಗಳನ್ನು ಗಮನಾರ್ಹವಾಗಿ ಹೆಚ್ಚಿಸುತ್ತದೆ.

ವಾರ್ತಾ ಭಾರತಿ 6 Dec 2025 10:16 pm

ಕುಂದಾಪುರ | ಬೈಕ್ ಢಿಕ್ಕಿ: ಪಾದಾಚಾರಿ ಮೃತ್ಯು

ಕುಂದಾಪುರ, ಡಿ.6: ಬೈಕೊಂದು ಢಿಕ್ಕಿ ಹೊಡೆದ ಪರಿಣಾಮ ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಡಿ.5ರಂದು ರಾತ್ರಿ ವೇಳೆ ನಡೆದಿದೆ. ಮೃತರನ್ನು ಗೋವಿಂದ ಪೂಜಾರಿ ಎಂದು ಗುರುತಿಸಲಾಗಿದೆ. ಮೆಹಂದಿ ಕಾರ್ಯಕ್ರಮಕ್ಕೆ ಹೋಗಿ ಬಂದು, ಬಸ್ರೂರು ಮೂರಕೈ-ಕೋಣಿ ರಸ್ತೆಯಲ್ಲಿ ಮನೆ ಕಡೆ ನಡೆದುಕೊಂಡು ಹೋಗುತ್ತಿದ್ದ ಗೋವಿಂದ ಪೂಜಾರಿಗೆ ಬಸ್ರೂರು ಮೂರಕೈ ಕಡೆಯಿಂದ-ಕೋಣಿ ಕಡೆಗೆ ಬರುತ್ತಿದ್ದ ಬೈಕ್ ಢಿಕ್ಕಿ ಹೊಡೆಯಿತ್ತೆನ್ನಲಾಗಿದೆ. ಇದರಿಂದ ಗಂಭೀರ ಗಾಯಗೊಂಡ ಅವರು ಚಿಕಿತ್ಸೆ ಫಲಕಾರಿಯಾಗದೆ ಮಣಿಪಾಲ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಅಪಘಾತದಿಂದ ಬೈಕ್ ಸವಾರ ರೋಶನ ಪೂಜಾರಿ ಹಾಗೂ ಸಹಸವಾರ ಅಖೀಲೇಶ ಎಂಬವರು ಗಾಯಗೊಂಡಿದ್ದಾರೆ. ಈ ಬಗ್ಗೆ ಕುಂದಾಪುರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಾರ್ತಾ ಭಾರತಿ 6 Dec 2025 10:16 pm

ಉಡುಪಿ | ವಾಟ್ಸಾಪ್ ಗೆ ಬಂದ APK ಫೈಲ್ ಡೌನ್ಲೋಡ್ ಮಾಡಿ 10.70ಲಕ್ಷ ರೂ. ಕಳೆದುಕೊಂಡ ವ್ಯಕ್ತಿ !

ಉಡುಪಿ, ಡಿ.6: ಅಪರಿಚಿತ ನಂಬರಿನಿಂದ ವಾಟ್ಸಾಪ್ ಗೆ ಬಂದ ಫೈಲ್ನ್ ಅನ್ನು ಡೌನ್ಲೋಡ್ ಮಾಡಿದ ಪರಿಣಾಮ ವ್ಯಕ್ತಿಯೊಬ್ಬರು ತಮ್ಮ ಖಾತೆಯಿಂದ ಲಕ್ಷಾಂತರ ರೂ. ಹಣ ಕಳೆದುಕೊಂಡು ವಂಚನೆ ಒಳಗಾಗಿರುವ ಬಗ್ಗೆ ವರದಿಯಾಗಿದೆ. ಉಡುಪಿ ಕರಂಬಳ್ಳಿಯ ಕಮಲನಾಭ ಬಾಯರಿ ಎಸ್.(57) ಎಂಬವರ ವಾಟ್ಸಾಪ್ ನಂಬರ್ ಗೆ ಡಿ.4 ಹಾಗೂ 5ರಂದು ಅಪರಿಚಿತ ನಂಬರಿನಿಂದ ಎ.ಪಿ.ಕೆ ಫೈಲ್ ಬಂದಿದ್ದು, ಅದನ್ನು ಕಮಲನಾಭ ಡೌನ್ಲೋಡ್ ಮಾಡಿದರು. ಆಗ ಅವರ ಬ್ಯಾಂಕ್ ಖಾತೆಯಿಂದ ಹಂತ ಹಂತವಾಗಿ ಒಟ್ಟು 10,70,000ರೂ. ಹಣ ಕಡಿತವಾಗಿರುವುದು ಕಂಡುಬಂದಿದೆ. ಸೈಬರ್ ವಂಚಕರು ಮೋಸ ಮಾಡಿ ಇವರಿಗೆ ವಂಚನೆ ಮಾಡಿದ್ದಾರೆಂದು ದೂರಲಾಗಿದೆ. ಈ ಬಗ್ಗೆ ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಾರ್ತಾ ಭಾರತಿ 6 Dec 2025 10:13 pm

ಅಂಬೇಡ್ಕರ್ ಅವರ ಬದುಕು, ಬರಹಗಳು ಸಂಶೋಧನೆಗೆ ಸ್ಪೂರ್ತಿ: ಪ್ರೊ. ಶಶಿಕಾಂತ್‌ ಎಸ್. ಉಡಿಕೇರಿ

ಕಲಬುರಗಿ : ಮಹಾನ್ ಮಾನವತಾವಾದಿ ಡಾ.ಬಿ.ಆರ್. ಅಂಬೇಡ್ಕರ್ ಅವರ ಬದುಕು ಮತ್ತು ಬರಹಗಳು ನೈಜತೆಯಿಂದ ಕೂಡಿದೆ. ವಾಸ್ತವಾಂಶಗಳಿoದ ಕೂಡಿದ ಚಿಂತನೆ ಮತ್ತು ವಿಚಾರಗಳ ತಾತ್ವಿಕ ನೆಲೆಯನ್ನು ವಿದ್ಯಾರ್ಥಿ ಸಮೂಹ ಅರ್ಥಮಾಡಿಕೊಂಡರೆ ಮಾತ್ರ ಅವರ ಬದುಕು ಮತ್ತು ಬರಹಗಳ ಅಧ್ಯಯನ ಮತ್ತು ಸಂಶೋಧನೆಗೆ ಸ್ಪೂರ್ತಿ ಸಿಗಲಿದೆ ಎಂದು ಗುಲಬರ್ಗಾ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಶಶಿಕಾಂತ್‌ ಎಸ್. ಉಡಿಕೇರಿ ಹೇಳಿದ್ದಾರೆ.  ಗುಲಬರ್ಗಾ ವಿಶ್ವವಿದ್ಯಾಲಯದ ಡಾ.ಬಿ.ಆರ್. ಅಂಬೇಡ್ಕರ್ ಅಧ್ಯಯನ ಹಾಗೂ ಸಂಶೋಧನಾ ಸಂಸ್ಥೆಯ ಮಹಾತ್ಮ ಗಾಂಧಿ ಸಭಾಂಗಣದಲ್ಲಿ ಆಯೋಜಿಸಿದ  ಡಾ. ಬಿ.ಆರ್. ಅಂಬೇಡ್ಕರ್ ಅವರ ಮಹಾಪರಿನಿರ್ವಾಣ ದಿನ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರೊ. ಶಶಿಕಾಂತ್‌ ಎಸ್. ಉಡಿಕೇರಿ, ಅಮೆರಿಕ ಮತ್ತು ಇನ್ನಿತರ ದೇಶಗಳಲ್ಲಿ ಶಾಂತಿ ಎಂದರೆ ಗಾಂಧಿ, ಸಮಾನತೆ ಎಂದರೆ ಡಾ. ಬಿ. ಆರ್. ಅಂಬೇಡ್ಕರ್ ಎಂಬ ವಿಚಾರಗಳು ಚರ್ಚೆಯಾಗುತ್ತಿವೆ ಎಂದು ಹೇಳಿದರು.   ಬೆಂಗಳೂರು ವಿಶ್ವವಿದ್ಯಾಲಯದ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ವಿಭಾಗದ ಪ್ರಾಧ್ಯಾಪಕ ಹಾಗೂ ಗ್ರಂಥಪಾಲಕ ಡಾ. ರಘುನಂದನ್ ಅವರು ಮುಖ್ಯ ಅತಿಥಿಯಾಗಿ ಮಾತನಾಡಿ, ಸಮಾಜದಲ್ಲಿ ಮೌಢ್ಯವನ್ನು ಎತ್ತಿಹಿಡಿಯುವ ಹುನ್ನಾರ ನಡೆಯುತ್ತಿದೆ. ದೇಶಭಕ್ತಿ ಹೆಸರಿನಲ್ಲಿ ಜಾತಿ ಜಾತಿಗಳ ನಡುವೆ, ಧರ್ಮ ಧರ್ಮಗಳ ನಡುವೆ ಮತ್ತು ವರ್ಗ ವರ್ಗಗಳ ನಡುವೆ ಸಂಘರ್ಷ ಭಾವನೆ ಬೆಳೆಸಲು ಯತ್ನಿಸಲಾಗುತ್ತಿದೆ. ಕೆಲವು ಸಮಾಜ ವಿರೋಧಿ ಶಕ್ತಿಗಳು ವಿಷ ಬೀಜವನ್ನು ಬಿತ್ತುತ್ತಿವೆ. ಬುದ್ಧನ ಮಾರ್ಗದಲ್ಲಿ ನಡೆದ ಡಾ. ಬಿ.ಆರ್. ಅಂಬೇಡ್ಕರ್‌ ಅವರ ಸಮಾನತೆ, ಸಹೋದರತೆ ಸಂದೇಶಗಳನ್ನು ಅರ್ಥ ಮಾಡಿಕೊಳ್ಳಬೇಕಿದೆ ಎಂದು ಹೇಳಿದರು.   ಶೂದ್ರರು ಬ್ರಹ್ಮನ ಕಾಲಿನಿಂದ ಹುಟ್ಟಿದ್ದು ಎಂದು ಹೇಳಿದ ದಿನದಿಂದಲೇ ಅಸಮಾನತೆ ಬೆಳೆದಿದೆ. ಬುದ್ಧ, ಬಸವ ಮತ್ತು ಡಾ. ಬಿ.ಆರ್. ಅಂಬೇಡ್ಕರ್, ಜ್ಯೋತಿಬಾ ಪುಲೆ, ರಾಜಾರಾಂ ಮೋಹನರಾಯ್, ದಯಾನಂದ ಸರಸ್ವತಿ ಇಂತಹ ಮಹನೀಯರ ಹುಟ್ಟಿನಿಂದ ಸಮಾಜದಲ್ಲಿನ ಮೌಢ್ಯತೆ, ಅಜ್ಞಾನ ಮತ್ತು ಅಮಾನವೀಯ ಪದ್ಧತಿ ಮತ್ತು ಅವೈಜ್ಞಾನಿಕ ಪಿಡುಗುಗಳ ನಿವಾರಣೆ ಸಾಧ್ಯವಾಗಿದೆ. ಆದರೆ, ಇಂದು ಸರ್ವಾಧಿಕಾರ ಮನೋಭಾವ ಬೆಳೆಸಿಕೊಂಡವರು ಧರ್ಮವನ್ನು ಮುನ್ನಲೆಗೆ ತಂದು ಜನರ ತಲೆಗೆ ತುಂಬುತ್ತಿದ್ದಾರೆ. ಯುವಕರಿಗೆ ತಪ್ಪು ತಿಳುವಳಿಕೆ ಮೂಡಿಸುವ ಕೆಲ ಗುಂಪುಗಳು ಇಡೀ ಸಮಾಜಕ್ಕೆ ಅಪಾಯ ತಂದೊಡ್ಡುತ್ತಿವೆ. ಪ್ರಜ್ಞಾವಂತರು ಈ ಹುನ್ನಾರವನ್ನು ಅರಿತು ಪ್ರಶ್ನಿಸುವ ಸಾಮರ್ಥ್ಯ ಕಂಡುಕೊಳ್ಳಬೇಕು ಎಂದು ಹೇಳಿದರು.   ಡಾ. ಬಿ. ಆರ್. ಅಂಬೇಡ್ಕರ್ ಅಧ್ಯಯನ ಹಾಗೂ ಸಂಶೋಧನಾ ಸಂಸ್ಥೆಯ ನಿರ್ದೇಶಕ ಪ್ರೊ. ಚಂದ್ರಕಾಂತ ಯಾತನೂರು  ಮಾತನಾಡಿ, ಡಾ. ಬಿ. ಆರ್. ಅಂಬೇಡ್ಕರ್ ಅವರ ಆಶಯಗಳನ್ನು ಪ್ರಜ್ಞಾವಂತರು ಮರೆತಿದ್ದಾರೆ. ಶಿಕ್ಷಣ, ಸಂಘಟನೆ ಮತ್ತು ಹೋರಾಟ ಪ್ರಜ್ಞೆಯನ್ನು ವಿದ್ಯಾವಂತರು ಅರಿತುಕೊಳ್ಳಬೇಕು ಎಂದು ಹೇಳಿದರು.   ಕಾರ್ಯಕ್ರಮದಲ್ಲಿ ಸಿಂಡಿಕೇಟ್ ಸದಸ್ಯ ಎಸ್. ಪಿ. ಸುಳ್ಳದ್, ಮೌಲ್ಯಮಾಪನ ಕುಲಸಚಿವ ಡಾ. ಎನ್. ಜಿ. ಕಣ್ಣೂರು, ವಿತ್ತಾಧಿಕಾರಿ ಜಯಾಂಬಿಕ, ಕುಲಸಚಿವ ಪ್ರೊ. ರಮೇಶ್ ಲಂಡನಕರ್ ಉಪಸ್ಥಿತರಿದ್ದರು. ಕಲಾ ನಿಕಾಯದ ಡೀನ್ ಪ್ರೊ. ಎಚ್. ಟಿ. ಪೋತೆ, ಪ್ರೊ. ಬಸವರಾಜ ಸಣ್ಣಕ್ಕಿ, ಡಾ. ಪ್ರಕಾಶ್ ಕರಿಯಜ್ಜನವರ, ಪ್ರೊ. ಬಿ. ಎಂ. ಬೈನ್, ಪ್ರೊ. ವಿ. ಟಿ. ಕಾಂಬಳೆ ಹಾಗೂ ಸಿಂಡಕೇಟ್ ಸದಸ್ಯರು, ವಿದ್ಯಾವಿಷಯಕ ಪರಿಷತ್ ಸದಸ್ಯರು, ಶಿಕ್ಷಕೇತರ ಸಿಬ್ಬಂದಿ, ಅತಿಥಿ ಉಪನ್ಯಾಸಕರು, ಸಂಶೋಧನಾ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ವಾರ್ತಾ ಭಾರತಿ 6 Dec 2025 10:12 pm

ಕರ್ನಾಟಕ ಸಿಎಂ ಬದಲಾವಣೆ - ಡಿ. 6ರಂದು ಸೋನಿಯಾ ಗಾಂಧಿ ನೇತೃತ್ವದ ಮಹತ್ವದ ಸಭೆಯಲ್ಲಿ ನಿರ್ಧಾರವಾಗಿದ್ದೇನು?

ದೆಹಲಿಯಲ್ಲಿ ಸೋನಿಯಾ ಗಾಂಧಿ ನಿವಾಸದಲ್ಲಿ ಕಾಂಗ್ರೆಸ್ ಹೈಕಮಾಂಡ್ ಕರ್ನಾಟಕದ ರಾಜಕೀಯದ ಬಗ್ಗೆ ಮಹತ್ವದ ಚರ್ಚೆ ನಡೆಸಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ ಗಾಂಧಿ ಕೂಡ ಸಭೆಯಲ್ಲಿ ಭಾಗವಹಿಸಿದ್ದರು. ಮುಖ್ಯಮಂತ್ರಿ ಸ್ಥಾನದ ಬಗ್ಗೆಯೂ ಮಾತುಕತೆ ನಡೆದಿದೆ. ಯಾವುದೇ ಅಂತಿಮ ನಿರ್ಧಾರಕ್ಕೆ ಬಂದಿಲ್ಲ. ಮುಂದಿನ ದಿನಗಳಲ್ಲಿ ಮತ್ತೊಮ್ಮೆ ಸಭೆ ಸೇರಿ ತೀರ್ಮಾನ ಕೈಗೊಳ್ಳಲಾಗುವುದು. ನಾಯಕರಲ್ಲಿ ಒಗ್ಗಟ್ಟು ಇದೆ ಎಂದು ಕೆ.ಸಿ. ವೇಣುಗೋಪಾಲ್ ತಿಳಿಸಿದ್ದಾರೆ.

ವಿಜಯ ಕರ್ನಾಟಕ 6 Dec 2025 10:12 pm

ಮಣಿಪಾಲ | ಮಟ್ಕಾ ನಡೆಸುತ್ತಿದ್ದ ಆರೋಪ : ಓರ್ವ ಆರೋಪಿ ವಶಕ್ಕೆ

ಮಣಿಪಾಲ, ಡಿ.6: ಹೆರ್ಗಾ ಗ್ರಾಮದ ಮಾರ್ಕೇಟ್ ರಸ್ತೆಯ ಬಳಿ ಮಟ್ಕಾ ಜುಗಾರಿ ಆಟ ನಡೆಸುತ್ತಿದ್ದ ಸ್ಥಳೀಯ ನಿವಾಸಿ ಧನಂಜಯ ಶೆಟ್ಟಿ(68) ಎಂಬಾತನನ್ನು ಮಣಿಪಾಲ ಪೊಲೀಸರು ಡಿ.5ರಂದು ಸಂಜೆ ವೇಳೆ ವಶಕ್ಕೆ ಪಡೆದು, 2,270ರೂ. ಹಣವನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಾರ್ತಾ ಭಾರತಿ 6 Dec 2025 10:10 pm

ಧರ್ಮಗ್ರಂಥಗಳ ವಿರುದ್ಧ ಅಪಚಾರವನ್ನು ಅಪರಾಧವನ್ನಾಗಿ ಪರಿಗಣಿಸುವ ಮಸೂದೆ ಮಂಡಿಸಿದ ಆಪ್ ಸಂಸದ

ಹೊಸದಿಲ್ಲಿ,ಡಿ.6: ಆಪ್ ಸಂಸದ ರಾಘವ ಛಡ್ಡಾ ಅವರು ಗುರು ಗ್ರಂಥ ಸಾಹಿಬ್, ಭಗವದ್ಗೀತೆ, ಕುರ್‌ ಆನ್ ಮತ್ತು ಬೈಬಲ್‌ ನಂತಹ ಧಾರ್ಮಿಕ ಗ್ರಂಥಗಳ ವಿರುದ್ಧ ಅಪಚಾರವನ್ನೆಸಗುವ ಕೃತ್ಯಗಳಿಗೆ ಗರಿಷ್ಠ ಶಿಕ್ಷೆಯನ್ನು ಕೋರಿ ರಾಜ್ಯಸಭೆಯಲ್ಲಿ ಖಾಸಗಿ ಸದಸ್ಯರ ಮಸೂದೆಯನ್ನು ಮಂಡಿಸಿದ್ದಾರೆ. ತನ್ನ ಮಸೂದೆಯು ಧಾರ್ಮಿಕ ಗ್ರಂಥಗಳ ವಿರುದ್ಧ ಅಪಚಾರವನ್ನು ಗರಿಷ್ಠ ಶಿಕ್ಷೆಯ ಅಪರಾಧವನ್ನಾಗಿಸಲು ಭಾರತೀಯ ನ್ಯಾಯ ಸಂಹಿತಾಕ್ಕೆ ತಿದ್ದುಪಡಿಯನ್ನು ಪ್ರಸ್ತಾವಿಸಿದೆ ಎಂದು ಛಡ್ಡಾ ಹೇಳಿದರು. ಪಂಜಾಬ್ ಹಲವಾರು ಧರ್ಮನಿಂದನೆ ಪ್ರಕರಣಗಳಿಗೆ ಸಾಕ್ಷಿಯಾಗಿದೆ ಎಂದು ಹೇಳಿದ ಅವರು, ಇಂತಹ ಪ್ರಕರಣಗಳಲ್ಲಿ ಜೀವಾವಧಿ ಶಿಕ್ಷೆಯನ್ನು ವಿಧಿಸಲು ರಾಜ್ಯ ವಿಧಾನಸಭೆಯು 2018ರಲ್ಲಿ ಇಂತಹುದೇ ಮಸೂದೆಯನ್ನು ಅಂಗೀಕರಿಸಿತ್ತು ಎಂದರು. ಆ ಮಸೂದೆಯನ್ನು ರಾಷ್ಟ್ರಪತಿಗಳು ಮರಳಿಸಿದ್ದರು,ನಂತರ ಪಂಜಾಬ್ ವಿಧಾನಸಭೆಯು ಧರ್ಮನಿಂದನೆ ಪ್ರಕರಣಗಳಲ್ಲಿ 10 ವರ್ಷಗಳಿಂದ ಹಿಡಿದು ಜೀವಾವಧಿಯವರೆಗೆ ಗರಿಷ್ಠ ಶಿಕ್ಷೆಯನ್ನು ವಿಧಿಸಲು ಮತ್ತೆ ಹೊಸ ಮಸೂದೆಯನ್ನು ಮಂಡಿಸಿತ್ತು ಎಂದು ಛಡ್ಡಾ ತಿಳಿಸಿದರು. ಜುಲೈನಲ್ಲಿ ಪಂಜಾಬಿನ ಆಪ್ ಸರಕಾರವು 2025ರ ಪಂಜಾಬ್ ಪವಿತ್ರ ಗ್ರಂಥಗಳ ವಿರುದ್ಧ ಅಪರಾಧಗಳ ತಡೆ ಮಸೂದೆಯನ್ನು ರಾಜ್ಯ ವಿಧಾನಸಭೆಯಲ್ಲಿ ಮಂಡಿಸಿತ್ತು. ಧಾರ್ಮಿಕ ಗ್ರಂಥಗಳ ವಿರುದ್ಧ ಅಪಚಾರ ಪ್ರಕರಣಗಳಲ್ಲಿ ಜೀವಾವಧಿ ಶಿಕ್ಷೆ ಮತ್ತು ಗರಿಷ್ಠ 10 ಲಕ್ಷ ರೂ.ಗಳ ದಂಡವನ್ನು ಈ ಮಸೂದೆ ಪ್ರಸ್ತಾವಿಸಿದೆ. ಮಸೂದೆಯನ್ನು ಸಂಬಂಧಿಸಿದವರೊಂದಿಗೆ ಸಮಾಲೋಚನೆಗಾಗಿ ಶಾಸಕರ ಆಯ್ಕೆ ಸಮಿತಿಗೆ ಸಲ್ಲಿಸಲಾಗಿದೆ. ಈ ಮಸೂದೆಯು ಸಾಂವಿಧಾನಿಕ ಮೌಲ್ಯಗಳಿಗೆ ಗಂಭೀರ ಬೆದರಿಕೆಯನ್ನು ಒಡ್ಡುತ್ತದೆ ಮತ್ತು ಜಾತ್ಯತೀತ ಪ್ರಭುತ್ವದ ಮೂಲ ಆಶಯಕ್ಕೆ ವಿರುದ್ಧವಾಗಿದೆ ಎಂದು ಹೇಳಿರುವ ಟೀಕಾಕಾರರು,ಅದು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ದುರ್ಬಲಗೊಳಿಸುವ ಪ್ರತಿಗಾಮಿ ನಡೆಯಾಗಿದೆ ಎಂದು ವಾದಿಸಿದ್ದಾರೆ.

ವಾರ್ತಾ ಭಾರತಿ 6 Dec 2025 10:09 pm

Constitution of India | ಸಂವಿಧಾನ ಪೀಠಿಕೆಯಿಂದ ಜಾತ್ಯತೀತ ಪದವನ್ನು ತೆಗೆಯಿರಿ; ಮಸೂದೆ ಮಂಡಿಸಿದ BJP ಸಂಸದ!

ಹೊಸದಿಲ್ಲಿ,ಡಿ.6: ಸಂವಿಧಾನದ ಪೀಠಿಕೆ ಯಿಂದ ‘ಜಾತ್ಯತೀತ’ ಮತ್ತು ‘ಸಮಾಜವಾದಿ’ ಪದಗಳನ್ನು ತೆಗೆದುಹಾಕಲು ಖಾಸಗಿ ಸದಸ್ಯರ ಮಸೂದೆಯನ್ನು BJP ಸದಸ್ಯ ಭೀಮ ಸಿಂಗ್ ಅವರು ರಾಜ್ಯಸಭೆ ಯಲ್ಲಿ ಮಂಡಿಸಿದ್ದಾರೆ. ಪೀಠಿಕೆಯಲ್ಲಿ ಈ ಪದಗಳ ಅಗತ್ಯವಿಲ್ಲ ಮತ್ತು ತುರ್ತು ಪರಿಸ್ಥಿತಿಯ ಸಮಯದಲ್ಲಿ ಪ್ರಜಾಪ್ರಭುತ್ವ ವಿರೋಧಿ ರೀತಿಯಲ್ಲಿ ಅವುಗಳನ್ನು ಸೇರಿಸಲಾಗಿತ್ತು. ಈ ಪದಗಳು ಗೊಂದಲವನ್ನು ಸೃಷ್ಟಿಸುತ್ತವೆ ಮತ್ತು ಮೂಲ ಸಂವಿಧಾನದ ಭಾಗವಾಗಿರಲಿಲ್ಲ ಎಂದು ಅವರು ಪ್ರತಿಪಾದಿಸಿದರು. ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಅವರು, 1949ರಲ್ಲಿ ಅಂಗೀಕಾರಗೊಂಡ ಸಂವಿಧಾನದ ಪೀಠಿಕೆಯಲ್ಲಿ ಈ ಪದಗಳು ಇರಲಿಲ್ಲ. 1976ರಲ್ಲಿ ತುರ್ತು ಪರಿಸ್ಥಿತಿಯ ಸಮಯದಲ್ಲಿ ಆಗಿನ ಪ್ರಧಾನಿ ಇಂದಿರಾ ಗಾಂಧಿಯವರು ಸಂವಿಧಾನದ 42ನೇ ತಿದ್ದುಪಡಿಯಡಿ ಈ ಪದಗಳನ್ನು ಸೇರಿಸಿದ್ದರು. ಆಗ ಸಂಸತ್ತಿನಲ್ಲಿ ಚರ್ಚೆಯೇ ನಡೆದಿರಲಿಲ್ಲ ಎಂದರು. ಅಟಲ್ ಬಿಹಾರಿ ವಾಜಪೇಯಿ, ಎಲ್.ಕೆ.ಆಡ್ವಾಣಿ, ಮತ್ತು ಜಾರ್ಜ್ ಫೆರ್ನಾಂಡಿಸ್ ಸೇರಿದಂತೆ ಎಲ್ಲ ಪ್ರತಿಪಕ್ಷ ನಾಯಕರನ್ನು ಜೈಲಿಗೆ ತಳ್ಳಲಾಗಿತ್ತು. ಪ್ರಜಾಪ್ರಭುತ್ವದ ಕಗ್ಗೊಲೆಯಾಗಿತ್ತು ಮತ್ತು ಅಂತಹ ಸ್ಥಿತಿಯಲ್ಲಿ ಇಂದಿರಾ ಗಾಂಧಿಯವರು ಇವೆರಡು ಪದಗಳನ್ನು ಸೇರಿಸಿದ್ದರು. ಹೀಗಾಗಿ ನಂತರ ಸೇರ್ಪಡೆಗೊಂಡ ಈ ಎರಡು ಪದಗಳನ್ನು ತೆಗೆದುಹಾಕಬೇಕು ಮತ್ತು ಸಂವಿಧಾನವು ತನ್ನ ಮೂಲರೂಪದಲ್ಲಿ ಇರಬೇಕು ಎಂದು ಹೇಳಿದ ಸಿಂಗ್, ಸಂವಿಧಾನ ಸಭೆಯಲ್ಲಿಯೂ ಈ ಪದಗಳ ಬಗ್ಗೆ ಚರ್ಚೆ ನಡೆದಿತ್ತು ಮತ್ತು ಕರಡು ಸಮಿತಿಯ ಅಧ್ಯಕ್ಷ ಡಾ.ಬಿ.ಆರ್.ಅಂಬೇಡ್ಕರ್ ಈ ಪದಗಳ ಸೇರ್ಪಡೆಯೇಕೆ ಬೇಡ ಎನ್ನುವುದನ್ನು ಕಾರಣಗಳ ಸಹಿತ ಸ್ಪಷ್ಟಪಡಿಸಿದ್ದರು ಎಂದರು. ಇವೆರಡು ಪದಗಳನ್ನು ತುಷ್ಟೀಕರಣ ರಾಜಕೀಯಕ್ಕಾಗಿ ಸೇರಿಸಲಾಗಿತ್ತು ಎಂದು ಆರೋಪಿಸಿದ ಸಿಂಗ್, ‘ಸಮಾಜವಾದಿ’ ಪದವನ್ನು ಅಂದಿನ ಸೋವಿಯತ್ ರಷ್ಯಾವನ್ನು ತೃಪ್ತಿಪಡಿಸಲು ಮತ್ತು ‘ಜಾತ್ಯತೀತ’ ಪದವನ್ನು ಮುಸ್ಲಿಮರನ್ನು ಸಮಾಧಾನಿಸಲು ಸೇರಿಸಲಾಗಿತ್ತು ಎಂದು ವಾದಿಸಿದರು.

ವಾರ್ತಾ ಭಾರತಿ 6 Dec 2025 10:08 pm

ಶಿರ್ವ | ನಾಗರಹಾವು ಕಡಿತದಿಂದ ವ್ಯಕ್ತಿ ಮೃತ್ಯು

ಶಿರ್ವ, ಡಿ.6: ನಾಗರಹಾವು ಕಡಿತಕ್ಕೆ ಒಳಗಾಗಿ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಕುತ್ಯಾರ್ ಎಂಬಲ್ಲಿ ಡಿ.5ರಂದು ಬೆಳಗ್ಗೆ ನಡೆದಿದೆ. ಮೃತರನ್ನು ಮರ್ಣೆ ಗ್ರಾಮದ ಸುರೇಂದ್ರ ಕಿಟ್ಟು ಪೂಜಾರಿ (54) ಎಂದು ಗುರುತಿಸಲಾಗಿದೆ. ಕುತ್ಯಾರು ಗ್ರಾಮದ ಪ್ರಕಾಶ್ ಶೆಟ್ಟಿ ಎಂಬವರ ತೋಟದಲ್ಲಿ ಕೆಲಸ ಮಾಡಿಕೊಂಡಿದ್ದ ಸುರೇಂದ್ರ ಅವರು, ಅಡಿಕೆ ಮರಕ್ಕೆ ಮದ್ದು ಸಿಂಪಡನೆ ಮಾಡುತ್ತಿದ್ದ ವೇಳೆ ನಾಗರಹಾವು ಕಚ್ಚಿತ್ತೆನ್ನಲಾಗಿದೆ. ಇದರಿಂದ ತೀವ್ರವಾಗಿ ಅಸ್ವಸ್ಥಗೊಂಡ ಇವರು, ಕಿನ್ನಿಗೋಳಿ ಆಸ್ಪತ್ರೆಗೆ ಕರೆದುಕೊಂಡು ಹೋಗುವ ದಾರಿ ಮಧ್ಯೆ ಮೃತಪಟ್ಟರೆಂದು ತಿಳಿದುಬಂದಿದೆ. ಈ ಬಗ್ಗೆ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಾರ್ತಾ ಭಾರತಿ 6 Dec 2025 10:07 pm

ಶಿರ್ವ | ಮನೆಗೆ ನುಗ್ಗಿ ಸೊತ್ತು ಕಳವು : ಪ್ರಕರಣ ದಾಖಲು

ಶಿರ್ವ, ಡಿ.6: ಮನೆಗೆ ನುಗ್ಗಿದ ಕಳ್ಳರು ಅಪಾರ ಮೌಲ್ಯದ ಸೊತ್ತುಗಳನ್ನು ಕಳವು ಮಾಡಿರುವ ಘಟನೆ ಶಿರ್ವ ಗ್ರಾಮದಲ್ಲಿ ಡಿ.2ರಿಂದ ಡಿ.4ರ ಮಧ್ಯಾವಧಿಯಲ್ಲಿ ನಡೆದಿದೆ. ಮನೆಯ ಬೀಗ ಒಡೆದು ಒಳನುಗ್ಗಿದ ಕಳ್ಳರು, ಕಾಪಾಟಿನಲ್ಲಿದ್ದ ಒಂದು ಚಿನ್ನದ ಬಳೆ, ಉಂಗುರ, ಬೆಳ್ಳಿಯ ಚೈನ್ ಹಾಗೂ ಒಂದು ಜೊತೆ ಬೆಳ್ಳಿ ಕಿವಿಯ ಓಲೆಗಳನ್ನು ಕಳವು ಮಾಡಿದ್ದಾರೆ. ಇವುಗಳ ಒಟ್ಟು ಮೌಲ್ಯ 27,500ರೂ. ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಾರ್ತಾ ಭಾರತಿ 6 Dec 2025 10:05 pm

ಕಾಪು | ಮನೆಗೆ ನುಗ್ಗಿ ನಗನಗದು ಕಳವು

ಕಾಪು, ಡಿ.6: ಕಾಪು ಕೋಟೆ ಗ್ರಾಮದ ಕಿನ್ನಿಗುಡ್ಡೆ ಬಳಿ ನಿವಾಸಿ ಪ್ರಭಾಕರ ಅಮೀನ್ ಅವರು ಮದುವೆ ಕಾರ್ಯಕ್ರಮಕ್ಕಾಗಿ ಕುಟುಂಬದ ಜೊತೆ ನ.26ರಂದು ಮನೆಗೆ ಬೀಗ ಹಾಕಿ ಮುಂಬೈಗೆ ತೆರಳಿದ್ದರು. ಡಿ.5ರಂದು ಮುಂಬೈನಿಂದ ವಾಪಸ್ಸು ಮನೆಗೆ ಬಂದು ನೋಡಿದಾಗ ಈ ಕಳವು ಪ್ರಕರಣ ಬೆಳಕಿಗೆ ಬಂದಿದೆ. ಕಬ್ಬಿಣದ ರಾಡ್, ಕಬ್ಬಿಣದ ಪಿಕ್ಕಾಸು ಹಾಗೂ ಕತ್ತಿಯನ್ನು ಉಪಯೋಗಿಸಿ ಮನೆಯ ಬಾಗಿಲನ್ನು ಒಡೆದು ಒಳಪ್ರವೇಶಿಸಿದ ಕಳ್ಳರು, ರೂಂನಲ್ಲಿದ್ದ 17,000ರೂ. ನಗದು ಹಾಗೂ 20ಸಾವಿರ ರೂ. ಮೌಲ್ಯದ ಚಿನ್ನದ ಉಂಗುರ, ಒಂದು ಜೊತೆ ಚಿನ್ನದ ಕಿವಿಯೋಲೆ, ಚಿನ್ನದ ಪೆಂಡೆಂಟ್ ಕಳವು ಮಾಡಿದ್ದಾರೆ. ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಾರ್ತಾ ಭಾರತಿ 6 Dec 2025 10:03 pm

ದ.ಕ.ಜಿಲ್ಲಾ ಕಾಂಗ್ರೆಸ್‌ನಿಂದ ಮಹಾಪರಿನಿರ್ವಾಣ ದಿನಾಚರಣೆ

ಮಂಗಳೂರು, ಡಿ.6: ದ.ಕ. ಜಿಲ್ಲಾ ಕಾಂಗ್ರೆಸ್ ಸಮಿತಿತ ವತಿಯಿಂದ ಸಂವಿಧಾನ ಶಿಲ್ಪಿಡಾ.ಬಿ.ಆರ್.ಅಂಬೇಡ್ಕರ್ ಅವರ 69ನೇ ಮಹಾ ಪರಿನಿರ್ವಾಣ ದಿನಾಚರಣೆಯು ಶನಿವಾರ ನಗರದ ಮಲ್ಲಿಕಟ್ಟೆಯ ಕಾಂಗ್ರೆಸ್ ಭವನದಲ್ಲಿ ನಡೆಯಿತು. ಮುಡಾ ಅಧ್ಯಕ್ಷ ಸದಾಶಿವ ಉಳ್ಳಾಲ್ ಮಾತನಾಡಿ, ಸಮ ಸಮಾಜ ನಿರ್ಮಾಣಕ್ಕಾಗಿ ಜೀವನವನ್ನೇ ಮುಡಿಪಾಗಿಟ್ಟ ಡಾ.ಬಿ.ಆರ್.ಅಂಬೇಡ್ಕರ್ ದೇಶದ ಧೀಮಂತ ನಾಯಕ. ಎಲ್ಲಾ ರೀತಿಯ ತಾರತಮ್ಯಗಳಿಂದ ಮುಕ್ತಗೊಳಿಸಿ ಭಾರತವನ್ನು ಕತ್ತಲಿನಿಂದ ಬೆಳಕಿನೆಡೆಗೆ ಕೊಂಡೊಯ್ಯಲು ಅವರು ಶ್ರಮಿಸಿದರು. ನಾವು ಅವರ ತತ್ವಾದರ್ಶ, ಸಿದ್ಧಾಂತವನ್ನು ಜೀವನದಲ್ಲಿ ಅಳವಡಿಸಿಕೊಂಡು ಸಂವಿಧಾನ ಆಶಯಗಳನ್ನು ರಕ್ಷಿಸಬೇಕು ಎಂದು ಹೇಳಿದರು. ಈ ಸಂದರ್ಭ ಮಾಜಿ ಮೇಯರ್ ಶಶಿಧರ್ ಹೆಗ್ಡೆ, ಮುಂಚೂಣಿ ಘಟಕಗಳ ಅಧ್ಯಕ್ಷರಾದ ಇಬ್ರಾಹೀಂ ನವಾಝ್, ಎಸ್.ಅಪ್ಪಿ, ಡಿಸಿಸಿ ಉಪಾಧ್ಯಕ್ಷರಾದ ಶುಭೋದಯ ಆಳ್ವ, ನೀರಜ್ ಚಂದ್ರಪಾಲ್, ಪ್ರಚಾರ ಸಮಿತಿಯ ಜಿಲ್ಲಾಧ್ಯಕ್ಷ ಡೆನ್ನಿಸ್ ಡಿಸಿಲ್ವ, ಮುಖಂಡರಾದ ಕೆ.ಪಿ. ಥೋಮಸ್, ಶಬೀರ್ ಸಿದ್ದಕಟ್ಟೆ, ವಿಕಾಸ್ ಶೆಟ್ಟಿ, ಜೀತೇಂದ್ರ ಸುವರ್ಣ, ಸಬಿತಾ ಮಿಸ್ಕಿತ್, ಆಲ್ವೇನ್ ಪ್ರಕಾಶ್, ಹೈದರ್ ಬೋಳಾರ್, ಸಮರ್ಥ್ ಭಟ್, ನೆಲ್ಸನ್, ಕೇಶವ ಮರೋಳಿ, ಟಿ.ಟಿ. ಗಣೇಶ್, ಪ್ರಶಾಂತ್ ಅಮೀನ್, ಜಾರ್ಜ್, ಜಮಾಲ್ ಸುಳ್ಯ, ನಝೀರ್ ಬಜಾಲ್ ಮತ್ತಿತರರು ಉಪಸ್ಥಿತರಿದ್ದರು. ದ.ಕ.ಜಿಲ್ಲಾ ಕಾಂಗ್ರೆಸ್ ಪರಿಶಿಷ್ಟ ಘಟಕ ಅಧ್ಯಕ್ಷ ದಿನೇಶ್ ಮುಳೂರು ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ಸಫಾಯಿ ಕರ್ಮಚಾರಿ ಘಟಕದ ಅಧ್ಯಕ್ಷ ಪ್ರೇಮ್ನಾಥ್ ಬಳ್ಳಾಲ್ಭಾಗ್ ಸ್ವಾಗತಿಸಿದರು. ಡಿಸಿಸಿ ಉಪಾಧ್ಯಕ್ಷ ಟಿ.ಹೊನ್ನಯ್ಯ ವಂದಿಸಿದರು.

ವಾರ್ತಾ ಭಾರತಿ 6 Dec 2025 10:00 pm

ಕಾಂಗ್ರೆಸ್ ಕಾರ್ಯಕರ್ತ ಗಣೇಶ್ ಗೌಡ ಬರ್ಬರ ಹತ್ಯೆ: ಸಿಎಂ ಖಡಕ್‌ ಎಚ್ಚರಿಕೆ

ರಾಜ್ಯದಲ್ಲಿ ಕಾಂಗ್ರೆಸ್‌ ಕಾರ್ಯಕರ್ತನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಸಖರಾಯಪಟ್ಟಣದ ಕಾಂಗ್ರೆಸ್ ಕಾರ್ಯಕರ್ತ ಗಣೇಶ್ ಗೌಡ ಅವರ ಹತ್ಯೆ ರಾಜ್ಯವನ್ನು ಬೆಚ್ಚಿಬೀಳಿಸಿದೆ. ದತ್ತ ಜಯಂತಿ ಬ್ಯಾನರ್ ವಿಚಾರವಾಗಿ ನಡೆದಿರುವ ಗಲಾಟೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತನ ಬರ್ಬರ ಕೊಲೆಯಾಗಿದೆ. ಕಡೂರು ತಾಲೂಕಿನ ಸಖರಾಯಪಟ್ಟಣ ಸಮೀಪದ ಕಲ್ಮುರುಡೇಶ್ವರ ಮಠದ ಬಳಿ ದತ್ತ ಜಯಂತಿ ಬ್ಯಾನರ್ ತೆರವುಗೊಳಿಸುವ ವಿಚಾರವಾಗಿ

ಒನ್ ಇ೦ಡಿಯ 6 Dec 2025 9:58 pm

ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 6 ಇಂಡಿಗೊ ವಿಮಾನಗಳ ಹಾರಾಟ ರದ್ದು

ಮಂಗಳೂರು, ಡಿ.6: ದೇಶದ ಅತಿ ದೊಡ್ಡ ವಿಮಾನಯಾನ ಸಂಸ್ಥೆಯಾಗಿರುವ ಇಂಡಿಗೊ ಏರ್‌ಲೈನ್ಸ್‌ನ ಭಿಕ್ಕಟ್ಟು ಮುಂದುವರಿದಿದ್ದು, ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಶನಿವಾರ 6 ವಿಮಾನಗಳ ಹಾರಾಟ ರದ್ದಾಗಿದೆ. 3 ಮಂಗಳೂರಿನಿಂದ ಹೊರಡುವ ಮತ್ತು 3 ಆಗಮಿಸಬೇಕಾಗಿದ್ದ ವಿಮಾನಗಳು ರದ್ದಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿದೆ. ಡಿ.7ರಂದು 3 ವಿಮಾನಗಳು ರದ್ದು: ಡಿ.7ರಂದು ಇಂಡಿಗೋ ಮಂಗಳೂರು -ಬೆಂಗಳೂರು (6ಇ256), 6ಇ148/5150 ಮುಂಬೈ-ಮಂಗಳೂರು- ಮುಂಬೈ ವಿಮಾನಗಳ ಹಾರಾಟ ರದ್ದಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿದೆ.

ವಾರ್ತಾ ಭಾರತಿ 6 Dec 2025 9:57 pm

Deepfake ನಿಯಂತ್ರಿಸಲು ಲೋಕಸಭೆಯಲ್ಲಿ ಮಸೂದೆ ಮಂಡನೆ

ಹೊಸದಿಲ್ಲಿ, ಡಿ. 6: ಡೀಪ್ ಫೇಕ್ ಅನ್ನು ನಿಯಂತ್ರಿಸಲು ಸ್ಪಷ್ಟ ಕಾನೂನು ಚೌಕಟ್ಟು ಕೋರಿ ಖಾಸಗಿ ಸದಸ್ಯರ ಮಸೂದೆಯೊಂದನ್ನು ಲೋಕಸಭೆ ಯಲ್ಲಿ ಮಂಡಿಸಲಾಗಿದೆ. ಡೀಕ್‌ಪೇಕ್ ನಿಯಂತ್ರಣ ಮಸೂದೆಯನ್ನು ಶಿವಸೇನೆಯ ನಾಯಕ ಶ್ರೀಕಾಂತ್ ಶಿಂದೆ ಸದನದಲ್ಲಿ ಶುಕ್ರವಾರ ಮಂಡಿಸಿದರು. ಡೀಪ್ ಫೇಕ್‌ ನಲ್ಲಿ ಯಾರೊಬ್ಬರ ಚಿತ್ರವನ್ನು ರಚಿಸುವ ಮೊದಲು ಅನುಮತಿ ಪಡೆಯುವ ಮೂಲಕ ಜನರನ್ನು ರಕ್ಷಿಸುವುದು ಇದರ ಗುರಿಯಾಗಿದೆ. ಕಿರುಕುಳ, ವಂಚನೆ ಹಾಗೂ ಸುಳ್ಳು ಮಾಹಿತಿಯನ್ನು ಹರಡಲು ಡೀಪ್‌ ಫೇಕ್ ಅನ್ನು ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ. ಆದುದರಿಂದ ಕಠಿಣ ನಿಯಮಗಳನ್ನು ತುರ್ತಾಗಿ ಜಾರಿಗೊಳಿಸಬೇಕಾದ ಅಗತ್ಯತೆ ಇದೆ ಎಂದು ಶಿಂಧೆ ಹೇಳಿದ್ದಾರೆ. ಕೆಟ್ಟ ಉದ್ದೇಶದಿಂದ ಡಿಫೇಕ್ ಅಂಶಗಳನ್ನು ಸೃಷ್ಟಿಸುವ ಹಾಗೂ ಹಂಚಿಕೊಳ್ಳುವ ಅಪರಾಧಿಗಳಿಗೆ ವಿಧಿಸುವ ದಂಡಗಳ ಪಟ್ಟಿಯನ್ನು ಕೂಡ ಈ ಮಸೂದೆ ಒಳಗೊಂಡಿದೆ. ಕೃತಕ ಬುದ್ಧಿಮತ್ತೆ, ಡೀಪ್ ಲರ್ನಿಂಗ್, ಡೀಪ್‌ ಫೇಕ್ ತಂತ್ರಜ್ಞಾನದಲ್ಲಿನ ಸುಧಾರಣೆಯು ಮಾಧ್ಯಮಗಳನ್ನು ನಿಯಂತ್ರಿಸಲು ಪ್ರಮುಖ ಸಾಧನವಾಗಿ ಮಾರ್ಪಟ್ಟಿದೆ. ಈ ತಂತ್ರಜ್ಞಾನವನ್ನು ಶಿಕ್ಷಣ, ಮನರಂಜನೆ ಹಾಗೂ ಸೃಜನಶೀಲ ಕೆಲಸಗಳಲ್ಲಿ ಬಳಸಬಹುದು. ಆದರೆ, ದುರ್ಬಳಕೆ ಮಾಡಿಕೊಂಡರೆ ಅದು ವೈಯುಕ್ತಿಕ ಖಾಸಗಿತನ, ರಾಷ್ಟ್ರೀಯ ಭದ್ರತೆ ಹಾಗೂ ಸಾರ್ವಜನಿಕ ನಂಬಿಕೆ ಮೇಲೆ ಪರಿಣಾಮ ಬೀರುವ ಮೂಲಕ ಗಂಭೀರ ಹಾನಿ ಉಂಟು ಮಾಡುತ್ತದೆ ಎಂದು ಶಿಂಧೆ ಹೇಳಿದ್ದಾರೆ. ಪ್ರಸ್ತಾವಿತ ಮಸೂದೆಯು ಭಾರತದಲ್ಲಿ ಡೀಪ್‌ ಫೇಕ್‌ ನ ಸೃಷ್ಟಿ, ವಿತರಣೆ ಹಾಗೂ ಅನ್ವಯವನ್ನು ನಿಭಾಯಸಲು ಸ್ಪಷ್ಟ ಕಾನೂನು ಚೌಕಟ್ಟನ್ನು ಸ್ಥಾಪಿಸುವಂತೆ ಪ್ರಸ್ತಾವಿತ ಮಸೂದೆ ಕೋರಿದೆ ಎಂದು ಅವರು ತಿಳಿಸಿದ್ದಾರೆ. ಈ ಮಸೂದೆ ಡೀಪ್‌ ಫೇಕ್ ಕಾರ್ಯಪಡೆಯನ್ನು ಸ್ಥಾಪಿಸುವ ಗುರಿಯನ್ನು ಕೂಡ ಹೊಂದಿದೆ. ಇದು ರಾಷ್ಟ್ರೀಯ ಭದ್ರತಾ ಅಪಾಯವನ್ನು ನಿಭಾಯಿಸುತ್ತದೆ. ಡೀಪ್‌ ಫೇಕ್‌ ಗಳು ಗೌಪ್ಯತೆ, ಸಾರ್ವಜನಿಕ ಭಾಗವಹಿಸುವಿಕೆ ಹಾಗೂ ಚುನಾವಣೆಗಳ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ಅಧ್ಯಯನ ಮಾಡುತ್ತದೆ ಎಂದು ಶಿಂಧೆ ಹೇಳಿದ್ದಾರೆ.

ವಾರ್ತಾ ಭಾರತಿ 6 Dec 2025 9:55 pm

ದ.ಕ. ಜಿಲ್ಲೆಯಲ್ಲಿ ಡಿ.13 ರಂದು ರಾಷ್ಟ್ರೀಯ ಲೋಕ್ ಅದಾಲತ್

ಮಂಗಳೂರು, ಡಿ.6 : ರಾಷ್ಟ್ರೀಯ ಹಾಗೂ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರಗಳ ನಿರ್ದೇಶನದಂತೆ ತ್ವರಿತ ನ್ಯಾಯ ನೀಡಲು ಮಂಗಳೂರು ಬಂಟ್ವಾಳ, ಬೆಳ್ತಂಗಡಿ, ಪುತ್ತೂರು ಮೂಡಬಿದ್ರೆ ಮತ್ತು ಸುಳ್ಯ ನ್ಯಾಯಾಲಯಗಳ ಆವರಣಗಳಲ್ಲಿ ಡಿ.13 ರಂದು ರಾಷ್ಟ್ರೀಯ ಲೋಕ್ ಅದಾಲತನ್ನು ಆಯೋಜಿಸಲಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಬಸವರಾಜ್ ತಿಳಿಸಿದ್ಧಾರೆ. ಜಿಲ್ಲಾ ನ್ಯಾಯಾಲಯದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅದಾಲತ್ ನಲ್ಲಿ ರಾಜೀ ಸಂಧಾನದ ಮುಖಾಂತರ ಇತ್ಯರ್ಥಪಡಿಸಿಕೊಳ್ಳಬಹುದಾದ ಪ್ರಕರಣಗಳ ಮಾಹಿತಿ ನೀಡಿದರು. ಮೋಟಾರು ವಾಹನ ಅಪಘಾತ ಪ್ರಕರಣಗಳು, ಚೆಕ್ಕು ಅಮಾನ್ಯ ಹಾಗೂ ಬ್ಯಾಂಕ್ ಸಾಲ ವಸೂಲಾತಿ, ಅಕ್ರಮ ಮರಳು ಸಾಗಾಣಿಕೆ, ಕಾರ್ಮಿಕ ಹಾಗೂ ನಷ್ಟ ಪರಿಹಾರ ವಿವಾದಗಳಿಗೆ ಸಂಬಂಧಪಟ್ಟ ಪ್ರಕರಣಗಳು, ವಿಚ್ಚೇದನ ಪ್ರಕರಣವನ್ನು ಹೊರತುಪಡಿಸಿ ವೈವಾಹಿಕ ಹಾಗೂ ಜೀವನಾಂಶ ಪ್ರಕರಣಗಳು, ಗ್ರಾಹಕರ ವಿವಾದಗಳಿಗೆ ಸಂಬಂಧಪಟ್ಟ ಪ್ರಕರಣಗಳು ಭೂಸ್ವಾಧೀನ ಹಾಗೂ ಭೂ ಸ್ವಾಧೀನ ಪರಿಹಾರ ಹಂಚಿಕೆ ಪ್ರಕರಣಗಳು, ವಿದ್ಯುತ್ ಹಾಗೂ ನೀರಿನ ಶುಲ್ಕಕ್ಕೆ ಸಂಬಂಧಪಟ್ಟ ಪ್ರಕರಣಗಳು, ವೇತನ ಭತ್ಯೆಗಳಿಗೆ ಸಂಬಂಧಿಸಿದ ಸೇವಾ ಪ್ರಕರಣಗಳು ಹಾಗೂ ಪಿಂಚಣಿ ಪ್ರಕರಣಗಳು, ಜನನ ಪ್ರಮಾಣ ಪತ್ರಕ್ಕೆ ಸಂಬಂಧಿಸಿದ ಪ್ರಕರಣಗಳು, ಕಾನೂನಾತ್ಮಕವಾಗಿ ರಾಜೀಯಾಗಬಲ್ಲ ಎಲ್ಲಾ ರೀತಿಯ ಸಿವಿಲ್ ಹಾಗೂ ಕ್ರಿಮಿನಲ್ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳಬಹುದಾಗಿದೆ ಎಂದು ಹೇಳಿದರು. ರಾಜೀ ಸಂಧಾನದ ಮೂಲಕ ಪ್ರಕರಣಗಳನ್ನು ಬಗೆಹರಿಸಿಕೊಂಡಲ್ಲಿ ನ್ಯಾಯಾಲಯಕ್ಕೆ ಪಾವತಿಸಲಾದ ಶುಲ್ಕವನ್ನು ಪೂರ್ಣವಾಗಿ ಮರುಪಾವತಿಸಲಾಗುವುದು ಹಾಗೂ ಈ ಆದೇಶದ ವಿರುದ್ಧ ಯಾವುದೇ ಮೇಲ್ಮನವಿ ಇರುವುದಿಲ್ಲ, ಕಡಿಮೆ ಖರ್ಚಿನಲ್ಲಿ ತ್ವರಿತ ನ್ಯಾಯ ಪಡೆದುಕೊಂಡು ತಮ್ಮ ಸಮಯ ಹಾಗು ಸಂಬಂಧಗಳನ್ನು ಉಳಿಸಿಕೊಳ್ಳಲು ಇದೊಂದು ವಿಶೇಷ ಅವಕಾಶವಾಗಿದೆ ಎಂದರು. ಒಟ್ಟು 55,555 ಪ್ರಕರಣ : ಒಟ್ಟು 55,555 ಪ್ರಕರಣಗಳಲ್ಲಿ, ರಾಷ್ಟ್ರೀಯ ಲೋಕ ಅದಾಲತ್ ನಲ್ಲಿ ಇತ್ಯರ್ಥಪಡಿಸಬಹುದಾದ 9,051 ಪ್ರಕರಣಗಳನ್ನು ಗುರುತಿಸಲಾಗಿದೆ. ಇವುಗಳಲ್ಲಿ, 3,818 ಪ್ರಕರಣಗಳನ್ನು ಲೋಕ ಅದಾಲತ್ ಉಲ್ಲೇಖಿಸಲಾಗಿದೆ. ಈ ಮಧ್ಯೆ, 957 ಪ್ರಕರಣಗಳು ರಾಜಿ ಸಂಧಾನದ ಮೂಲಕ ಬಗೆಹರಿಸಲು ಸಿದ್ದವಾಗಿದೆ. 52 ಪ್ರಕರಣಗಳನ್ನು ಈಗಾಗಲೇ ವಿಲೇವಾರಿ ಮಾಡಲಾಗಿದೆ ಮತ್ತು ಇದುವರೆಗೆ 15,47,49,578 ರೂ. ಗಳನ್ನು ವಸೂಲಿ ಮಾಡಲಾಗಿದೆ ಎಂದು ಮಾಹಿತಿ ನೀಡಿದರು. ನ.21 ರಿಂದ ಡಿ.12 ರ ನಡುವೆ ಇತ್ಯರ್ಥಪಡಿಸಿದ ಪ್ರಕರಣಗಳಿಗೆ ಮಾತ್ರ ರಿಯಾಯಿತಿ ಇರುತ್ತದೆ ಮತ್ತು ಕಡಿಮೆ ವೆಚ್ಚದಲ್ಲಿ ದಂಡವನ್ನು ಇತ್ಯರ್ಥಪಡಿಸುವ ಅವಕಾಶವನ್ನು ಸಾರ್ವಜನಿಕರು ಬಳಸಿಕೊಳ್ಳುವಂತೆ ಅವರು ಸಲಹೆ ನೀಡಿದರು. ಹಿಂದಿನ ರಾಷ್ಟ್ರೀಯ ಲೋಕ ಅದಾಲತ್ ನಲ್ಲಿ ಸೆ.13 ರಂದು ಬಾಕಿ ಉಳಿದಿದ್ದ 3,684 ಪ್ರಕರಣಗಳನ್ನು ವಿಲೇವಾರಿ ಮಾಡಲಾಗಿದೆ ಎಂದು ಅವರು ಹೇಳಿದರು. ಜುಲೈನಿಂದ ಅಕ್ಟೋಬರ್ ವರೆಗೆ 90 ದಿನಗಳ ವಿಶೇಷ ಮಧ್ಯಸ್ಥಿಕೆ ಅಭಿಯಾನವನ್ನು ನಡೆಸಲಾಗಿದ್ದು, ಜನವರಿಯಿಂದ ಎರಡನೇ ಅಭಿಯಾನವನ್ನು ನಡೆಸಲಾಗುವುದು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮತ್ತು ಹಿರಿಯ ಸಿವಿಲ್ ನ್ಯಾಯಾಧೀಶೆ ಜೈಬುನ್ನೀಸಾ ಹೇಳಿದರು. ಪ್ರಕರಣಗಳನ್ನು ಬಗೆಹರಿಸಲು ಮಂಗಳೂರಿನಲ್ಲಿ 16 ಸೇರಿದಂತೆ ಜಿಲ್ಲೆಯಲ್ಲಿ 55 ಮಧ್ಯಸ್ಥಗಾರರು ಇದ್ದಾರೆ. ಇದು ಸಾಕಾಗುವುದಿಲ್ಲ ವಿವಿಧ ತಾಲೂಕುಗಳ ನ್ಯಾಯಾಲಯಗಳಿಗೆ ಆವಶ್ಯಕತೆ ಅನುಗುಣವಾಗಿ ಮಧ್ಯಸ್ಥಗಾರರ ನೇಮಕ ಮಾಡಲಾಗುವುದು ಎಂದು ಮಾಹಿತಿ ನೀಡಿದರು.

ವಾರ್ತಾ ಭಾರತಿ 6 Dec 2025 9:54 pm

Gaza ಶಾಂತಿ ಮಂಡಳಿ ಈ ವರ್ಷಾಂತ್ಯಕ್ಕೆ ರಚನೆ: ಅರಬ್, ಪಾಶ್ಚಿಮಾತ್ಯ ರಾಜತಾಂತ್ರಿಕರ ಹೇಳಿಕೆ

ತಂತ್ರಜ್ಞರ ಸಮಿತಿಯ ಬಗ್ಗೆಯೂ ನಿರ್ಧಾರ

ವಾರ್ತಾ ಭಾರತಿ 6 Dec 2025 9:53 pm

ಭಾರತದ ವಿರುದ್ದ ಏಳನೇ ಶತಕ ಗಳಿಸಿ ದಾಖಲೆ ನಿರ್ಮಿಸಿದ ಕ್ವಿಂಟನ್ ಡಿಕಾಕ್

ವಿಶಾಖಪಟ್ಟಣ, ಡಿ.6: ದಕ್ಷಿಣ ಆಫ್ರಿಕಾದ ಆರಂಭಿಕ ಆಟಗಾರ ಕ್ವಿಂಟನ್ ಡಿಕಾಕ್ ಶನಿವಾರ ನಡೆದ ಮೂರನೇ ಏಕದಿನ ಪಂದ್ಯದ ವೇಳೆ ಭಾರತ ತಂಡದ ವಿರುದ್ಧ ತನ್ನ ಏಳನೇ ಏಕದಿನ ಅಂತರ್‌ರಾಷ್ಟ್ರೀಯ ಶತಕವನ್ನು ದಾಖಲಿಸಿದರು. 30ನೇ ಓವರ್‌ ನಲ್ಲಿ 80 ಎಸೆತಗಳಲ್ಲಿ ಹರ್ಷಿತ್ ರಾಣಾ ಬೌಲಿಂಗ್‌ನಲ್ಲಿ ಸಿಕ್ಸರ್ ಸಿಡಿಸುವ ಮೂಲಕ ಶತಕ ಪೂರೈಸಿದರು. ಭಾರತ ತಂಡದ ವಿರುದ್ಧ ಕೇವಲ 23 ಇನಿಂಗ್ಸ್‌ಗಳಲ್ಲಿ ಡಿಕಾಕ್ ಏಳನೇ ಏಕದಿನ ಶತಕ ದಾಖಲಿಸಿದರು. ಇದರೊಂದಿಗೆ ಸನತ್ ಜಯಸೂರ್ಯ ಅವರ ದಾಖಲೆಯನ್ನು ಸರಿಗಟ್ಟಿದರು. ಜಯಸೂರ್ಯ ಕೂಡ 85 ಇನಿಂಗ್ಸ್‌ಗಳಲ್ಲಿ ಏಳು ಶತಕಗಳನ್ನು ಗಳಿಸಿದ್ದರು. ಭಾರತದಲ್ಲಿ ಅತಿ ಹೆಚ್ಚು ಶತಕ ಗಳಿಸಿದ ಪ್ರವಾಸಿ ತಂಡದ ಬ್ಯಾಟರ್ ಎನಿಸಿಕೊಂಡಿರುವ ಡಿಕಾಕ್ ತಮ್ಮದೇ ದೇಶದ ಎಬಿ ಡಿವಿಲಿಯರ್ಸ್ ದಾಖಲೆ(7 ಶತಕ)ಯನ್ನು ಸರಿಗಟ್ಟಿದರು. ಕನಿಷ್ಠ 100 ಏಕದಿನ ಇನಿಂಗ್ಸ್‌ಗಳನ್ನು ಆಡಿರುವ ಬ್ಯಾಟರ್‌ಗಳ ಪೈಕಿ ಡಿಕಾಕ್ ಅವರು ಶೇ.41.81 ದರದಲ್ಲಿ ಅರ್ಧಶತಕವನ್ನು ಶತಕವನ್ನಾಗಿ ಪರಿವರ್ತಿಸಿದ ಸಾಧನೆ ಮಾಡಿದ್ದಾರೆ. ಇದರೊಂದಿಗೆ ವಿರಾಟ್ ಕೊಹ್ಲಿ(41.40 ಶೇ.)ಹಾಗೂ ಹಾಶೀಂ ಅಮ್ಲ(40.91 ಶೇ.)ದಾಖಲೆಯನ್ನು ಹಿಂದಿಕ್ಕಿದ್ದಾರೆ. ಡಿಕಾಕ್ ಅವರು ವಿದೇಶಿ ನೆಲದಲ್ಲಿ ಗರಿಷ್ಠ ಏಕದಿನ ಶತಕಗಳನ್ನು ಗಳಿಸಿದ ಆಟಗಾರರ ಸಾಲಿಗೆ ಸೇರ್ಪಡೆಯಾದರು. ಸಚಿನ್ ತೆಂಡುಲ್ಕರ್ ಹಾಗೂ ಸಯೀದ್ ಅನ್ವರ್ ಅವರು ಯುಎಇನಲ್ಲಿ ತಲಾ ಏಳು ಶತಕ ಹಾಗೂ ಡಿವಿಲಿಯರ್ಸ್ ಭಾರತದಲ್ಲಿ ಹಾಗೂ ರೋಹಿತ್ ಶರ್ಮಾ ಇಂಗ್ಲೆಂಡ್‌ನಲ್ಲಿ 7 ಶತಕಗಳನ್ನು ದಾಖಲಿಸಿದ್ದಾರೆ. ಡಿಕಾಕ್ ಅವರು ನಿಯೋಜಿತ ವಿಕೆಟ್‌ಕೀಪರ್ ಆಗಿ ಒಂದೇ ಎದುರಾಳಿಯ ಎದುರು ಗರಿಷ್ಠ ಶತಕಗಳನ್ನು ಸಿಡಿಸಿದ್ದಾರೆ. ಭಾರತ ವಿರುದ್ಧ ಏಳನೇ ಶತಕ ಸಿಡಿಸುವುದರೊಂದಿಗೆ ಶ್ರೀಲಂಕಾ ವಿರುದ್ಧ ಆ್ಯಡಮ್ ಗಿಲ್‌ಕ್ರಿಸ್ಟ್(6)ಹಾಗೂ ಭಾರತ ವಿರುದ್ಧ ಕುಮಾರ ಸಂಗಕ್ಕರ(6)ನಿರ್ಮಿಸಿದ್ದ ಬ್ಯಾಟಿಂಗ್ ದಾಖಲೆ ಮುರಿದರು. ಭಾರತದಲ್ಲಿ ಗರಿಷ್ಠ ಶತಕ ಗಳಿಸಿದ ಆಟಗಾರರು 7-ಕ್ವಿಂಟನ್ ಡಿಕಾಕ್(23 ಇನಿಂಗ್ಸ್) 7-ಸನತ್ ಜಯಸೂರ್ಯ(85 ಇನಿಂಗ್ಸ್) 6-ಎಬಿ ಡಿ ವಿಲಿಯರ್ಸ್(32 ಇನಿಂಗ್ಸ್) 6- ರಿಕಿ ಪಾಂಟಿಂಗ್(59 ಇನಿಂಗ್ಸ್) 6- ಕುಮಾರ ಸಂಗಕ್ಕರ(71 ಇನಿಂಗ್ಸ್) *ಗರಿಷ್ಠ ಏಕದಿನ ಶತಕ ಗಳಿಸಿದ ನಿಯೋಜಿತ ವಿಕೆಟ್‌ಕೀಪರ್‌ಗಳು 23-ಕುಮಾರ ಸಂಗಕ್ಕರ 23-ಕ್ವಿಂಟನ್ ಡಿಕಾಕ್ 19-ಶಾಯ್ ಹೋಪ್ 16-ಆ್ಯಡಮ್ ಗಿಲ್‌ಕ್ರಿಸ್ಟ್ 11-ಜೋಸ್ ಬಟ್ಲರ್ 10-ಎಬಿಡಿ ವಿಲಿಯರ್ಸ್, ಎಂ.ಎಸ್.ಧೋನಿ ಒಂದೇ ಎದುರಾಳಿಯ ವಿರುದ್ದ ಗರಿಷ್ಠ ಶತಕ ಗಳಿಸಿದ ನಿಯೋಜಿತ ವಿಕೆಟ್‌ಕೀಪರ್‌ಗಳು 7-ಕ್ವಿಂಟನ್ ಡಿಕಾಕ್-ಭಾರತ ವಿರುದ್ಧ 6-ಆ್ಯಡಮ್ ಗಿಲ್‌ಕ್ರಿಸ್ಟ್-ಶ್ರೀಲಂಕಾ ವಿರುದ್ಧ 6-ಕುಮಾರ ಸಂಗಕ್ಕರ-ಭಾರತ ವಿರುದ್ಧ 5-ಕುಮಾರ ಸಂಗಕ್ಕರ-ಬಾಂಗ್ಲಾದೇಶ ವಿರುದ್ಧ 4-ಕ್ವಿಂಟನ್ ಡಿಕಾಕ್-ಶ್ರೀಲಂಕಾ ವಿರುದ್ಧ 4-ಕುಮಾರ ಸಂಗಕ್ಕರ-ಇಂಗ್ಲೆಂಡ್ ವಿರುದ್ಧ

ವಾರ್ತಾ ಭಾರತಿ 6 Dec 2025 9:52 pm

ಕಡೆಗೂ ಬಗೆಹರಿಯಿತು ಇಂಡಿಗೋ ವಿಮಾನ ಸಂಸ್ಥೆಯ ಸಮಸ್ಯೆ! ಶೇ. 95ರಷ್ಟು ಪ್ರಾಬ್ಲಂ ನಿವಾರಿಸಿದ್ದೇವೆ ಎಂದ ಕಂಪನಿ

ಇಂಡಿಗೋ ವಿಮಾನಯಾನ ಸಂಸ್ಥೆಯು ಕಾರ್ಯಾಚರಣೆಯ ಸಮಸ್ಯೆಯನ್ನು ಯಶಸ್ವಿಯಾಗಿ ನಿಭಾಯಿಸುತ್ತಿದ್ದು, ಶುಕ್ರವಾರದಿಂದ ರದ್ದಾಗುತ್ತಿದ್ದ ವಿಮಾನಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ. 95% ಜಾಲ ಸಂಪರ್ಕ ಪುನಃ ಸ್ಥಾಪನೆಯಾಗಿದ್ದು, ಶನಿವಾರ 850 ಕ್ಕಿಂತ ಕಡಿಮೆ ವಿಮಾನಗಳು ರದ್ದಾಗಿವೆ. 1500 ಕ್ಕೂ ಹೆಚ್ಚು ವಿಮಾನಗಳ ಕಾರ್ಯಾಚರಣೆಗೆ ಸಜ್ಜಾಗಿದ್ದು, 135 ಡೆಸ್ಟಿನೇಷನ್ ಸ್ಥಳಗಳಿಗೆ ಪುನಃ ಸಂಪರ್ಕ ಸ್ಥಾಪಿಸಲಾಗಿದೆ. ಪ್ರಯಾಣಿಕರು ವಿಮಾನ ನಿಲ್ದಾಣಕ್ಕೆ ಬರುವ ಮೊದಲು ವಿಮಾನದ ಸ್ಥಿತಿಯನ್ನು ಪರಿಶೀಲಿಸಲು ಸಂಸ್ಥೆ ವಿನಂತಿಸಿದೆ.

ವಿಜಯ ಕರ್ನಾಟಕ 6 Dec 2025 9:43 pm

ಉಡುಪಿ | ಶಿಕ್ಷಕರ ಅರ್ಹತಾ ಪರೀಕ್ಷೆ: ನಿಷೇಧಾಜ್ಞೆ ಜಾರಿ

ಉಡುಪಿ, ಡಿ.6: ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ (ಕೆಎಆರ್‌ಟಿಇಟಿ) ಡಿ.7ರ ರವಿವಾರ ಜಿಲ್ಲೆಯ ಒಟ್ಟು 16 ಪರೀಕ್ಷಾ ಕೇಂದ್ರಗಳಲ್ಲಿ ಬೆಳಗ್ಗೆ 9:00 ಗಂಟೆಯಿಂದ ಸಂಜೆ 4:30ರವರೆಗೆ ನಡೆಯಲಿದ್ದು, ಪರೀಕ್ಷೆಗಳು ಸುಸೂತ್ರವಾಗಿ ಮತ್ತು ದೋಷರಹಿತವಾಗಿ ನಡೆಯಲು ಹಾಗೂ ಪರೀಕ್ಷಾ ಸಂದರ್ಭದಲ್ಲಿ ನಡೆಯಬಹುದಾದ ಎಲ್ಲಾ ರೀತಿಯ ಅವ್ಯವಹಾರಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ನಿಗದಿಪಡಿಸಿದ ಎಲ್ಲಾ ಪರೀಕ್ಷಾ ಕೇಂದ್ರಗಳ ಸುತ್ತಲೂ ಇರುವ ಝೆರಾಕ್ಸ್ ಅಂಗಡಿಗಳನ್ನು ಮುಚ್ಚುವಂತೆ, ಸುತ್ತಲೂ 200ಮೀ. ಪ್ರದೇಶವನ್ನು ನಿಷೇಧಿತ ಪ್ರದೇಶವೆಂದು ಘೋಷಿಸಿ, ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ 2023ರ ಕಲಂ 163ರನ್ವಯ ನಿಷೇಧಾಜ್ಞೆ ಜಾರಿಗೊಳಿಸಿ, ಜಿಲ್ಲಾ ದಂಡಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ ಆದೇಶ ಹೊರಡಿಸಿದ್ದಾರೆ. ಈ ಸಂದರ್ಭದಲ್ಲಿ ಪರೀಕ್ಷಾರ್ಥಿಗಳು ಹಾಗೂ ಪರೀಕ್ಷೆಯಲ್ಲಿ ಕಾರ್ಯ ನಿರ್ವಹಿಸುವ ಅಧಿಕಾರಿಗಳು ಮತ್ತು ಸಿಬ್ಬಂದಿಗಳನ್ನು ಹೊರತುಪಡಿಸಿ, ಇತರ ಯಾವುದೇ ವ್ಯಕ್ತಿ ಅಥವಾ ಐದು ಐದಕ್ಕಿಂತ ಹೆಚ್ಚು ಜನರು ಗುಂಪು ಕೂಡುವುದು ಅಥವಾ ವ್ಯಕ್ತಿಗಳ ಗುಂಪುಗಳ ಪ್ರವೇಶವನ್ನು ಹಾಗೂ ಅನಧಿಕೃತ ವ್ಯಕ್ತಿಗಳಿಗೆ ಪರೀಕ್ಷಾ ಕೇಂದ್ರಗಳ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ಪರೀಕ್ಷಾ ಕೇಂದ್ರಗಳ 200 ಮೀ. ವ್ಯಾಪ್ತಿಯಲ್ಲಿ ಬರುವ ಝೆರಾಕ್ಸ್ ಅಂಗಡಿ, ಸೈಬರ್ ಸೆಂಟರ್, ಬುಕ್‌ಸ್ಟಾಲ್, ಫೋಟೋ ಕಾಪಿಯರ್‌ಗಳನ್ನು ಮುಚ್ಚಲು ಆದೇಶಿಸಲಾಗಿದೆ. ಶಾಲಾ ಶಿಕ್ಷಣ ಇಲಾಖೆ ನಿಗದಿಪಡಿಸಿರುವ ಸೂಚನೆಗಳನ್ನು ಪರೀಕ್ಷಾ ಕೇಂದ್ರದಲ್ಲಿ ಕಟ್ಟುನಿಟ್ಟಾಗಿ ಪಾಲಿಸಬೇಕು. ನಿಷೇಧಾಜ್ಞೆ ಆದೇಶವು ನಿಗದಿ ಪಡಿಸಿದ ಪರೀಕ್ಷಾ ಕೇಂದ್ರಗಳ ವ್ಯಾಪ್ತಿಯ ಸುತ್ತಲೂ ಡಿ.7ರಂದು ಪರೀಕ್ಷಾ ಅವಧಿಯಲ್ಲಿ ಜಾರಿಯಲ್ಲಿರಲಿದೆ ಎಂದು ಜಿಲ್ಲಾಧಿಕಾರಿಗಳ ಪ್ರಕಟಣೆ ತಿಳಿಸಿದೆ.

ವಾರ್ತಾ ಭಾರತಿ 6 Dec 2025 9:43 pm

2,000 ರನ್ ತಲುಪಿದ ದಕ್ಷಿಣ ಆಫ್ರಿಕಾದ ಹಿರಿಯ ಬ್ಯಾಟರ್ Temba Bavuma

ವಿಶಾಖಪಟ್ಟಣ, ಡಿ.6: ಭಾರತ ವಿರುದ್ಧದ ಶನಿವಾರ ನಡೆದ ಮೂರನೇ ಹಾಗೂ ಕೊನೆಯ ಏಕದಿನ ಪಂದ್ಯದ ವೇಳೆ ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡದ ನಾಯಕ ಟೆಂಬಾ ಬವುಮಾ ಏಕದಿನ ಅಂತರ್‌ರಾಷ್ಟ್ರೀಯ ಪಂದ್ಯದಲ್ಲಿ 2,000 ರನ್ ಮೈಲಿಗಲ್ಲು ತಲುಪುವ ಮೂಲಕ ಮಹತ್ವದ ಸಾಧನೆ ಮಾಡಿದರು. 35 ವರ್ಷ, 203 ದಿನಗಳ ವಯಸ್ಸಿನಲ್ಲಿ ಈ ಸಾಧನೆ ಮಾಡಿದ ಹಿರಿಯ ಆಟಗಾರ ಎನಿಸಿಕೊಂಡಿದ್ದಾರೆ. ಬವುಮಾ 53 ಇನಿಂಗ್ಸ್‌ಗಳಲ್ಲಿ ಈ ಮೈಲಿಗಲ್ಲು ತಲುಪಿದ್ದು, ವೇಗವಾಗಿ 2,000 ಏಕದಿನ ರನ್ ಗಳಿಸಿದ ನಾಲ್ಕನೇ ಬ್ಯಾಟರ್ ಎನಿಸಿಕೊಂಡು ಕ್ವಿಂಟನ್ ಡಿಕಾಕ್ ಸಾಧನೆ ಸರಿಗಟ್ಟಿದರು. ಹಾಶೀಂ ಅಮ್ಲ, ರಾಸ್ಸಿ ವಾನ್‌ಡರ್ ಡುಸೆನ್ ಹಾಗೂ ಗ್ಯಾರಿ ಕರ್ಸ್ಟನ್ ಕ್ರಮವಾಗಿ 40, 45 ಹಾಗೂ 50 ಇನಿಂಗ್ಸ್‌ಗಳಲ್ಲಿ ಈ ಮೈಲಿಗಲ್ಲು ತಲುಪಿದ್ದಾರೆ. ರಾಸ್ಸಿ ವಾನ್‌ಡರ್ ಡುಸ್ಸೆನ್ 2,000 ರನ್ ಮೈಲಿಗಲ್ಲು ತಲುಪಿದ ದಕ್ಷಿಣ ಆಫ್ರಿಕಾದ ಎರಡನೇ ಹಿರಿಯ ಆಟಗಾರನಾಗಿದ್ದಾರೆ. ಡುಸೆನ್ 34 ವರ್ಷ ಹಾಗೂ 247 ದಿನಗಳಲ್ಲಿ ಈ ಸಾಧನೆ ಮಾಡಿದ್ದರು.

ವಾರ್ತಾ ಭಾರತಿ 6 Dec 2025 9:42 pm

ಪಿಎಂ ವಿಶ್ವಕರ್ಮ ಯೋಜನೆ | ರಾಜ್ಯಕ್ಕೆ 961 ಕೋಟಿ ರೂ. ಸಾಲ ಸೌಲಭ್ಯ : ಸಂಸದ ಕೋಟ ಶ್ರೀನಿವಾಸ ಪೂಜಾರಿ

ಬ್ರಹ್ಮಾವರ, ಡಿ.6: ನಶಿಸುತ್ತಿರುವ ಸಾಂಪ್ರದಾಯಿಕ ಕುಲಕಸಬುಗಳಿಗೆ ಪ್ರಾಧಾನ್ಯತೆ ನೀಡುವ ನಿಟ್ಟಿನಲ್ಲಿ ಪಿಎಂ ವಿಶ್ವಕರ್ಮ ಯೋಜನೆಯನ್ನು ಜಾರಿಗೆ ತರಲಾಗಿದ್ದು, ಬಹುತೇಕ ಹಿಂದುಳಿದ ವರ್ಗ ಮತ್ತು ಸಾಂಪ್ರದಾಯಿಕ ಕುಲಕಸುಬು ಎಂದು ಪರಿಗಣಿಸಲಾದ 18 ವೃತ್ತಿಗಳಿಗೆ ಪುನರ್ ಚೈತನ್ಯ ನೀಡಲು 12,000 ಕೋಟಿ ರೂ. ಬ್ಯಾಂಕ್ ಭದ್ರತೆ ನೀಡಿ ವಿಶ್ವಕರ್ಮ ಯೋಜನೆಯನ್ನು ಜಾರಿಗೆ ತರಲಾಗಿದೆ ಎಂದು ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ. ಬ್ರಹ್ಮಾವರ ಅಂಚೆ ಕಚೇರಿಯಲ್ಲಿ ಇಂದು ಬೆಳಗ್ಗೆ ನಡೆದ ಕಾರ್ಯಕ್ರಮದಲ್ಲಿ ಸುಮಾರು 15 ಮಂದಿ ವಿಶ್ವಕರ್ಮ ಯೋಜನೆಯ ಫಲಾನುಭವಿಗಳಿಗೆ ಕಿಟ್‌ಗಳನ್ನು ವಿತರಿಸಿ ಅವರು ಮಾತನಾಡುತ್ತಿದ್ದರು. ಈಗಾಗಲೇ ಕರ್ನಾಟಕ ರಾಜ್ಯದಲ್ಲಿ ಕುಶಲಕರ್ಮಿಗಳಿಗಾಗಿ 4,70,000 ಕ್ಕೂ ಹೆಚ್ಚು ಮಂದಿ ತರಬೇತಿ ಪಡೆದಿದ್ದು 1,21,500 ಜನ ಕಡಿಮೆ ಬಡ್ಡಿದರದಲ್ಲಿ ಸಾಲ ಸೌಲಭ್ಯವನ್ನು ಪಡೆದಿದ್ದಾರೆ. ಕರ್ನಾಟಕ ರಾಜ್ಯದಲ್ಲಿ ವಿಶ್ವಕರ್ಮ ಯೋಜನೆಯಡಿಯಲ್ಲಿ ಪ್ರಥಮ ಹಂತದಲ್ಲಿ 9,61,21,000 ರೂ. ಕಡಿಮೆ ಬಡ್ಡಿಯ ಸಾಲ ಬಿಡುಗಡೆ ಮಾಡಲಾಗಿದೆ ಎಂದವರು ವಿವರಿಸಿದರು. ಇದೇ ವೇಳೆ ಉಡುಪಿ ಜಿಲ್ಲೆಯಲ್ಲಿ 6,514 ಜನರಿಗೆ ತರಬೇತಿ ನೀಡಿ 3934 ಜನರಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲಸೌಲಭ್ಯ ನೀಡಲಾಗಿದೆ. ಜಿಲ್ಲೆಯಲ್ಲಿ ಈವರೆಗೆ 38,79,58,000 ರೂ. ಸಾಲ ಸೌಲಭ್ಯ ವಿತರಿಸಲಾಗಿದೆ. 2086 ಜನರಿಗೆ ಟೂಲ್ ಕಿಟ್‌ಗಳನ್ನು ವಿತರಿಸಲಾಗಿದೆ ಎಂದ ಅವರು, ಕುಶಲಕರ್ಮಿಗಳ ಬದುಕಿಗೆ ನವಚೈತನ್ಯ ನೀಡಲು ಪ್ರದಾನಿ ನರೇಂದ್ರ ಮೋದಿ ಈ ಯೋಜನೆಯನ್ನು ಅನುಷ್ಠಾನಗೊಳಿಸಿದ್ದಾರೆ ಎಂದು ಸಂಸದ ಕೋಟ ನುಡಿದರು. ಉಡುಪಿ ಶಾಸಕ ಯಶಪಾಲ್ ಸುವರ್ಣ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ವೇದಿಕೆಯಲ್ಲಿ ವಾರಂಬಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷ ನಿತ್ಯಾನಂದ, ಅಸಿಸ್ಟೆಂಟ್ ಪೋಸ್ಟಲ್ ಸೂಪರಿಡೆಂಟ್ ವಸಂತ್, ಪೋಸ್ಟ್ ಮಾಸ್ಟರ್ ವಿನಯ್, ಅಂಚೆ ಇನ್‌ಸ್ಪೆಕ್ಟರ್ ಎಂ. ಶಂಕರಪ್ಪ ಲಮಾಣಿ, ಕೌಶಲ್ಯ ಅಭಿವೃದ್ಧಿ ಅಧಿಕಾರಿ ಸೀತಾರಾಮ ಶೆಟ್ಟಿ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಭುಜಂಗ ಶೆಟ್ಟಿ, ಬಿರ್ತಿ ರಾಜೇಶ್ ಶೆಟ್ಟಿ, ನಾರಾಯಣ ಎಸ್, ಆರೂರು ರಾಜು ಕುಲಾಲ್ ಮುಂತಾದವರು ಉಪಸ್ಥಿತರಿದ್ದರು.

ವಾರ್ತಾ ಭಾರತಿ 6 Dec 2025 9:40 pm

South Africa ವಿರುದ್ಧ T20 ಸರಣಿಗೆ ಶುಭಮನ್ ಗಿಲ್ ಲಭ್ಯ

ಹೊಸದಿಲ್ಲಿ, ಡಿ.6: ಭಾರತದ T20 ಕ್ರಿಕೆಟ್ ತಂಡದ ಉಪ ನಾಯಕ ಶುಭಮನ್ ಗಿಲ್ ದಕ್ಷಿಣ ಆಫ್ರಿಕಾ ವಿರುದ್ಧ T20 ಸರಣಿಯ ಮೊದಲ ಪಂದ್ಯದಲ್ಲಿ ಆಡಲು ಫಿಟ್ ಆಗಿದ್ದಾರೆಂದು ಘೋಷಿಸಲಾಗಿದೆ. ಗಿಲ್ ಅವರು BCCI ನ ಸೆಂಟರ್ ಆಫ್ ಎಕ್ಸಲೆನ್ಸ್‌ನ ಸ್ಪೋರ್ಟ್ಸ್ ಸೈನ್ಸ್ ಟೀಮ್‌ ನಿಂದ ಆಡಲು ಅನುಮತಿ ಪಡೆದಿದ್ದಾರೆ. ಕೋಲ್ಕತಾ ಟೆಸ್ಟ್ ಪಂದ್ಯದ ವೇಳೆ ಕಾಣಿಸಿಕೊಂಡ ಕುತ್ತಿಗೆ ನೋವಿನ ನಂತರ ಗಿಲ್ ಅವರು ಪುನಶ್ಚೇತನ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಗಿಲ್ ಅವರನ್ನು T20 ತಂಡಕ್ಕೆ ಆಯ್ಕೆ ಮಾಡಲಾಗಿತ್ತು. ಅವರ ಲಭ್ಯತೆಯು ಫಿಟ್ನೆಸ್‌ನ್ನು ಅವಲಂಬಿಸಿದೆ ಎಂದು ಹೇಳಲಾಗಿತ್ತು. ಶುಭಮನ್ ಗಿಲ್ ಅವರು ಸಿಒಇನಲ್ಲಿ ಪುನಶ್ಚೇತನ ಶಿಬಿರವನ್ನು ಯಶಸ್ವಿಯಾಗಿ ಪೂರೈಸಿದ್ದಾರೆ. ಎಲ್ಲ ಮಾದರಿಯ ಕ್ರಿಕೆಟ್‌ಗೆ ಫಿಟ್ ಎಂದು ಘೋಷಿಸಲು ಅಗತ್ಯವಿರುವ ಮಾನದಂಡವನ್ನು ಪೂರೈಸಿದ್ದಾರೆ ಎಂದು ಫಿಸಿಯೊ ಕಮಲೇಶ್ ಜೈನ್, ಕಂಡೀಶನಿಂಗ್ ಕೋಚ್ ಅಡ್ರಿಯಾನ್ ಲಿ ರೋಕ್ಸ್ ಹಾಗೂ ಸ್ಪೋರ್ಟ್ಸ್ ಡಾಕ್ಟರ್ ಡಾ. ಚಾರ್ಲ್ಸ್ ಅವರನ್ನೊಳಗೊಂಡ ಸ್ಪೋಟ್ಸ್ ಸೈನ್ಸ್ ಹಾಗೂ ಮೆಡಿಶಿನ್ ತಂಡ ಪ್ರಕಟನೆಯೊಂದರಲ್ಲಿ ತಿಳಿಸಿದೆ. ಕೋಲ್ಕತಾ ಟೆಸ್ಟ್ ಪಂದ್ಯದ ಎರಡನೇ ದಿನದಾಟದಲ್ಲಿ ಗಿಲ್ ಗಾಯಗೊಂಡಿದ್ದರು. ಅವರು ಕೆಲವು ದಿನಗಳ ಕಾಲ ಆಸ್ಪತ್ರೆಯಲ್ಲಿದ್ದರು. ಈಗ ನಡೆಯುತ್ತಿರುವ ಏಕದಿನ ಸರಣಿಯಿಂದ ಗಿಲ್ ವಂಚಿತರಾಗಿದ್ದರು. ಕೇವಲ T20 ತಂಡದಲ್ಲಿರುವ ಆಟಗಾರರು ಶನಿವಾರ ಕಟಕ್‌ ನಲ್ಲಿ ಒಟ್ಟು ಸೇರಲಿದ್ದು, ರವಿವಾರ ಮೊದಲ ತರಬೇತಿಯನ್ನು ನಿಗದಿಪಡಿಸಲಾಗಿದೆ.

ವಾರ್ತಾ ಭಾರತಿ 6 Dec 2025 9:37 pm

ಕಸ್ಟಮ್ಸ್ ಸರಳೀಕರಣ ಕೇಂದ್ರದ ಮುಂದಿನ ಸುಧಾರಣಾ ಕಾರ್ಯಸೂಚಿ: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್

ಹೊಸದಿಲ್ಲಿ,ಡಿ.6: ಸೀಮಾಸುಂಕ (ಕಸ್ಟಮ್ಸ್)ದ ಸರಳೀಕರಣವು ತನ್ನ ಸರಕಾರದ ಮುಂದಿನ ಬೃಹತ್ ಸುಧಾರಣಾ ಕಾರ್ಯಸೂಚಿಯಾಗಲಿದೆ ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ. ಶ್ರೀಸಾಮಾನ್ಯನ ಕೈಗಳಿಗೆ ಹೆಚ್ಚು ನಗದು ಹಣವನ್ನು ಒದಗಿಸುವ ಮೂಲಕ ಖರೀದಿಸುವಿಕೆಯನ್ನು ಉತ್ತೇಜಿಸುವುದಕ್ಕಾಗಿ ಪ್ರಸಕ್ತ ವಿತ್ತ ವರ್ಷದಲ್ಲಿ ಕೇಂದ್ರ ಸರಕಾರವು ಆದಾಯ ತೆರಿಗೆ ಹಾಗೂ ಸರಕು ಮತ್ತು ಸೇವಾ ತೆರಿಗೆ ( ಜಿಎಸ್‌ಟಿ )ಯ ತರ್ಕಬದ್ಧಗೊಳಿಸುವಿಕೆ ಹಾಗೂ ಸರಳೀಕರಣದಂತಹ ಸುಧಾರಣೆಗಳನ್ನು ಕೈಗೊಂಡಿತ್ತು ಎಂದು ಹೇಳಿದರು. ಕಸ್ಟಮ್ಸ್ ಸುಂಕವನ್ನು ಸಂಪೂರ್ಣವಾಗಿ ಕೂಲಂಕುಶ ಪರಿಶೀಲಿಸುವ ಅಗತ್ಯವಿದೆ. ಕಸ್ಟಮ್ಸ್ ಸುಂಕದ ನಿಯಮಾವಳಿಗಳನ್ನು ಅನುಸರಿಸುವುದು ಪ್ರಯಾಸಕರವಲ್ಲವೆಂಬ ಭಾವನೆಯನ್ನು ಜನತೆಯಲ್ಲಿ ಮೂಡಿಸಲು ಅವುಗಳನ್ನು ನಾವು ಸರಳೀಕರಿಸಬೇಕಾದ ಅಗತ್ಯವಿದೆ ಮತ್ತು ಅದನ್ನು ನಾವು ಇನ್ನಷ್ಟು ಪಾರದರ್ಶಕಗೊಳಿಸಬೇಕಾಗಿದೆ ಎಂದು ವಿತ್ತ ಸಚಿವೆ ತಿಳಿಸಿದರು. ಹಿಂದೂಸ್ತಾನ್ ಟೈಮ್ಸ್ ಸುದ್ದಿಸಂಸ್ಥೆಯು ಹೊಸದಿಲ್ಲಿಯಲ್ಲಿ ಶನಿವಾರ ಆಯೋಜಿಸಿದ ನಾಯಕತ್ವ ಶೃಂಗಸಭೆಯನ್ನುದ್ದೇಶಿಸಿ ಅವರು ಮಾತನಾಡುತ್ತಿದ್ದರು. ಆದಾಯ ತೆರಿಗೆಯಂತೆ, ಕಸ್ಟಮ್ಸ್ ಸುಂಕದಲೂ ಪಾರದರ್ಶಕತೆಯ ತರುವ ಅಗತ್ಯವಿದೆ ಎಂದು ಹೇಳಿದ ಅವರು, ಪ್ರಸ್ತಾವಿತ ಸುಧಾರಣೆಗಳು ಸಮಗ್ರವಾಗಿರಲಿದ್ದು, ಕಸ್ಟಮ್ಸ್ ಸುಂಕ ದರವನ್ನು ತರ್ಕಬದ್ದಗೊಳಿಸಲಿದೆ ಎಂದು ಸಚಿವೆ ತಿಳಿಸಿದರು. 2026ರ ಫೆಬ್ರವರಿ 1ರಂದು ಮಂಡನೆಯಾಗಲಿರುವ ಕೇಂದ್ರ ಬಜೆಟ್‌ನಲ್ಲಿ ಈ ಕುರಿತ ಘೋಷಣೆಗಳನ್ನು ಪ್ರಕಟಿಸುವ ಸಾಧ್ಯತೆಯಿದೆ ಎಂದು ಅವರು ಏಹಳಿದರು ಕಳೆದ ಎರಡು ವರ್ಷಗಳಿಂದ ನಾವು ಸ್ಥಿರವಾಗಿ ಕಸ್ಟಮ್ಸ್ ಸುಂಕದಲ್ಲಿ ಇಳಿಕೆ ಮಾಡಿದ್ದೇವೆ. ಆದರೆ ಕೆಲವು ಸಾಮಾಗ್ರಿಗಳಲ್ಲಿ ನಮ್ಮ ದರಗಳು, ಸಮರ್ಪಕ ಮಟ್ಟಿಕ್ಕಿಂತ ಅಧಿಕವಾಗಿತ್ತು. ಅವುಗಳನ್ನು ಕೂಡಾ ಕಡಿಮೆಗೊಳಿಸಬೇಕಾದ ಅಗತ್ಯವಿದೆ. ಕಸ್ಟಮ್ಸ್ ಸುಂಕದ ಸರಳೀಕರಣವು ನನ್ನ ಮುಂದಿನ ಬೃಹತ್ ‘ಸ್ವಚ್ಛತಾ’ ಕಾರ್ಯವಾಗಿದೆ ಎಂದವರು ಹೇಳಿದರು. ಡಾಲರ್ ವಿರುದ್ಧ ರೂಪಾಯಿ ಮೌಲ್ಯವು ಕುಸಿಯುತ್ತಿರುವ ಬಗ್ಗೆ ಮಾತನಾಡಿದ ನಿರ್ಮಲಾ ಅವರು, ಶೀಘ್ರದಲ್ಲೇ ರೂಪಾಯಿ ಮೌಲ್ಯವು ಸಹಜ ಮಟ್ಟಕ್ಕೆ ತಲುಪಲಿದೆ ಎಂದರು.

ವಾರ್ತಾ ಭಾರತಿ 6 Dec 2025 9:30 pm

West Bengal | ‘ಬಾಬರಿ ಮಸೀದಿ’ ಗೆ ಶಿಲಾನ್ಯಾಸ ಮಾಡಿದ ಅಮಾನತುಗೊಂಡ TMC ಶಾಸಕ ಕಬೀರ್‌

ಕೋಲ್ಕತಾ,ಡಿ.6: ತೃಣಮೂಲ ಕಾಂಗ್ರೆಸ್‌ ನಿಂದ ಅಮಾನತುಗೊಂಡ ಶಾಸಕ ಹುಮಾಯೂನ್ ಕಬೀರ್ ಬಾಬರಿ ಮಸೀದಿ ಮಾದರಿಯ ವಾಸ್ತುವಿನ್ಯಾಸದ ಮಸೀದಿಗೆ ಪಶ್ಚಿಮ ಬಂಗಾಳ ದ ಮುರ್ಷಿದಾಬಾದ್ ಜಿಲ್ಲೆಯಲ್ಲಿ ಶನಿವಾರ ಶಿಲಾನ್ಯಾಸ ಮಾಡಿದ್ದಾರೆ. 1992ರಲ್ಲಿ ಸಂಘಪರಿವಾರದ ಬೆಂಬಲಿಗರು ಅಯೋಧ್ಯೆ ಯಲ್ಲಿನ 16ನೇ ಶತಮಾನದ ಬಾಬರಿ ಮಸೀದಿಯನ್ನು ಧ್ವಂಸಗೊಳಿಸಿದ ವರ್ಷಾಚರಣೆಯ ದಿನದಂದೇ ಈ ಶಿಲಾನ್ಯಾಸ ನಡೆದಿದೆ. ಹುಮಾಯೂನ್ ಕಬೀರ್ ಅವರು ಬೆಲ್ಡಾಂಗಾ ಪಟ್ಟಣದಲ್ಲಿ ಮಸೀದಿಯ ಕಟ್ಟಡದ ಶಿಲಾನ್ಯಾಸವನ್ನು ಔಪಚಾರಿಕವಾಗಿ ರಿಬ್ಬನ್ ಕತ್ತರಿಸುವ ಮೂಲಕ ನೆರವೇರಿಸಿದರು. ಕಾರ್ಯಕ್ರಮದಲ್ಲಿ ಸಾವಿರಾರು ಮಂದಿ ಭಾಗವಹಿಸಿದ್ದರು. ಶಿಲಾನ್ಯಾಸ ಕಾರ್ಯಕ್ರಮದ ಸ್ಥಳದಲ್ಲಿ ಭಾರೀ ಬಿಗುಭದ್ರತೆಯನ್ನು ಏರ್ಪಡಿಸಲಾಗಿತ್ತು. ಪಟ್ಟಣವನ್ನು ಹಾದುಹೋಗುವ ರಾಷ್ಟ್ರೀಯ ಹೆದ್ದಾರಿ 12ರ ಇಕ್ಕೆಲಗಳಲ್ಲಿ ಕ್ಷಿಪ್ರ ಕಾರ್ಯಪಡೆ, ಜಿಲ್ಲಾ ಪೊಲೀಸರು ಹಾಗೂ ಕೇಂದ್ರೀಯ ಪೊಲೀಸ್ ಪಡೆಗಳನ್ನು ನಿಯೋಜಿಸಲಾಗಿತ್ತು. ಈ ಮಸೀದಿಯ ನಿರ್ಮಾಣಕ್ಕೆ ತಡೆಯಾಜ್ಞೆ ನೀಡಬೇಕೆಂದು ಕೋರಿ ಸಲ್ಲಿಸಲಾದ ಅರ್ಜಿಯನ್ನು Calcutta High Court ತಿರಸ್ಕರಿಸಿತ್ತು. ಶಿಲಾನ್ಯಾಸ ಕಾರ್ಯಕ್ರಮದ ಸಂದರ್ಭ ಕಾನೂನು, ಸುವ್ಯವಸ್ಥೆಯನ್ನು ಕಾಪಾಡುವುದು ರಾಜ್ಯ ಸರಕಾರದ ಹೊಣೆಗಾರಿಕೆಯೆಂದು ತಿಳಿಸಿತ್ತು. ಅಯೋಧ್ಯೆಯಲ್ಲಿದ್ದ ಬಾಬರಿ ಮಸೀದಿ ಮಾದರಿಯ ವಾಸ್ತು ವಿನ್ಯಾಸದ ಮಸೀದಿಯನ್ನು ಮುರ್ಶಿದಾಬಾದ್ ಜಿಲ್ಲೆಯಲ್ಲಿ ನಿರ್ಮಿಸಲು ಮಂದಾಗುವ ಮೂಲಕ ಕಬೀರ್ ಅವರು ಕೋಮುವಾದಿ ರಾಜಕೀಯದಲ್ಲಿ ತೊಡಗಿದ್ದಾರೆಂದು ಆರೋಪಿಸಿ TMCಯು ಅವರನ್ನು ಇತ್ತೀಚೆಗೆ ಪಕ್ಷದಿಂದ ಅಮಾನತುಗೊಳಿಸಿತ್ತು.

ವಾರ್ತಾ ಭಾರತಿ 6 Dec 2025 9:28 pm

ನಿರ್ಮಲಾ ಸೀತಾರಾಮನ್‌ರನ್ನ \ಎಂಥವಳೋ ಅವಳು\ ಅಂದ್ರಾ ಸಿದ್ದರಾಮಯ್ಯ? ಅಶೋಕ್ ಆರೋಪ

ಸಿಎಂ ಸಿದ್ದರಾಮಯ್ಯ ಅವರ ಮೇಲೆ ಗಂಭೀರ ಆರೋಪ ಕೇಳಿಬಂದಿದೆ. ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್‌ ಅವರಿಗೆ ಸಿದ್ದರಾಮಯ್ಯ ಏಕವಚನ ಬಳಕೆ ಮಾಡಿದ್ದಾರೆ ಎಂದು ಬಿಜೆಪಿ ಆರೋಪ ಹೊರಿಸಿದೆ. ಈ ಸಂಬಂಧ ವಿರೋಧ ಪಕ್ಷದ ನಾಯಕ ಆರ್.ಅಶೋಕ್‌ ಎಕ್ಸ್‌ ಖಾತೆಯಲ್ಲಿ ವಿಡಿಯೋ ಹಂಚಿಕೊಂಡು ಖಂಡನೆ ವ್ಯಕ್ತಪಡಿಸಿದ್ದಾರೆ. ನಮ್ಮ ದೇಶದ ಗೌರವಾನ್ವಿತ ಹಣಕಾಸು ಸಚಿವೆ ಅವರನ್ನು ಹೀಗೆ ಏಕವಚನದಲ್ಲಿ, ಅಗೌರವದಿಂದ

ಒನ್ ಇ೦ಡಿಯ 6 Dec 2025 9:26 pm

ಇನ್ಮುಂದೆ ಕಚೇರಿ ಸಮಯದ ಬಳಿಕ ಬಾಸ್ ಗೆ ಉತ್ತರಿಸಬೇಕೆಂದಿಲ್ಲ!

ಲೋಕಸಭೆಯಲ್ಲಿ ಸುಪ್ರಿಯಾ ಸುಲೆ ಅವರಿಂದ ಖಾಸಗಿ ಮಸೂದೆ ಮಂಡನೆ

ವಾರ್ತಾ ಭಾರತಿ 6 Dec 2025 9:17 pm

ಯಾದಗಿರಿ| ಮದುವೆ ಮೆರವಣಿಗೆಯಲ್ಲಿ ಗ್ರಾಮ ಪಂಚಾಯತ್ ಸದಸ್ಯನಿಂದ ಫೈರಿಂಗ್‌

ಯಾದಗಿರಿ: ಮದುವೆ ಮೆರವಣಿಗೆಯಲ್ಲಿ ಮುಂಡರಗಿ ಗ್ರಾಮ ಪಂಚಾಯತ್ ಸದಸ್ಯ, ರೌಡಿಶೀಟರ್ ಚಂದ್ರಶೇಖರ್ ಡಬಲ್ ಬ್ಯಾರೆಲ್ ಗನ್ ನಿಂದ ಫೈರಿಂಗ್‌ ಮಾಡಿರುವ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಯಾದಗಿರಿ ಜಿಲ್ಲೆಯ ಗುರುಮಠಕಲ್ ತಾಲೂಕಿನ ಸಿದ್ದಾಪುರ ಗ್ರಾಮದ ಮದುವೆ ಕಾರ್ಯಕ್ರಮವೊಂದರಲ್ಲಿ ಘಟನೆ ನಡೆದಿದೆ. ಚಂದ್ರಶೇಖರ್ ಮದುವೆ ಮೆರವಣಿಗೆಯಲ್ಲಿ ಫೈರಿಂಗ್‌ ಮಾಡುತ್ತಾ ಡ್ಯಾನ್ಸ್ ಮಾಡಿ ಅಲ್ಲಿದ್ದವರಲ್ಲಿ ಭಯಹುಟ್ಟಿಸಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ. ಈ ಕುರಿತು ಗುರುಮಠಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಾರ್ತಾ ಭಾರತಿ 6 Dec 2025 8:51 pm

ದಕ್ಷಿಣ ಆಫ್ರಿಕಾದ ವಿರುದ್ಧ ʼಯಶಸ್ವಿʼ ಚೇಸಿಂಗ್; ಭಾರತಕ್ಕೆ ಸರಣಿ

ರೋಹಿತ್, ಕೊಹ್ಲಿ ಅರ್ಧಶತಕ

ವಾರ್ತಾ ಭಾರತಿ 6 Dec 2025 8:48 pm

ಮೂಡುಬಿದಿರೆ | ಫಾರ್ಚೂನ್ ಪ್ರಮೋಟರ್ಸ್‌ನ 9ನೇ ಯೋಜನೆ ʼಫಾರ್ಚೂನ್ ಔರಾ' ಯೋಜನೆ ಅನಾವರಣ

ಮೂಡುಬಿದಿರೆ: ಇಲ್ಲಿನ ನಾಲ್ವರು ಉದ್ಯಮಿಗಳ ಪಾಲುದಾರಿಕೆಯ ಫಾರ್ಚೂನ್ ಪ್ರಮೋಟರ್ಸ್‌ನ 9ನೇ ವಸತಿ ಮತ್ತು ವಾಣಿಜ್ಯ ಯೋಜನೆಯಾಗಿರುವ 'ಫಾರ್ಚೂನ್ ಔರಾ'ದ (Fortune Aura) ಯೋಜನೆ ಅನಾವರಣ ಸಮಾರಂಭವು ಶನಿವಾರ ಅಲಂಗಾರಿನಲ್ಲಿ ಯಶಸ್ವಿಯಾಗಿ ನಡೆಯಿತು. ಎಸ್‌.ಸಿ.ಡಿ.ಸಿ.ಸಿ. ಬ್ಯಾಂಕ್‌ನ ಅಧ್ಯಕ್ಷ ಡಾ.ಎಂ.ಎನ್. ರಾಜೇಂದ್ರ ಕುಮಾರ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಕಟ್ಟಡ ನಿರ್ಮಾಣದಲ್ಲಿ ವ್ಯವಸ್ಥಿತ ಯೋಜನೆ, ಗುಣಮಟ್ಟದ ಕಾಮಗಾರಿ ಹಾಗೂ ಗ್ರಾಹಕಸ್ನೇಹಿ ಮಾರುಕಟ್ಟೆ ನೀತಿಯನ್ನು ಪಾಲಿಸಿರುವುದರಿಂದ ಅದರ ಯೋಜನೆಗಳು ಯಶಸ್ವಿಯಾಗುತ್ತವೆ. ಗುಣಮಟ್ಟದ ಸೇವೆಯನ್ನು ನೀಡುವ ಮೂಲಕ ಫಾರ್ಚೂನ್ ಸಂಸ್ಥೆಯವರು ಯಶಸ್ವಿಯಾಗಿ ಎಂಟು ಯೋಜನೆಗಳನ್ನು ಪೂರೈಸಿದ್ದು, ಇದೀಗ ಒಂಬತ್ತನೇ ಯೋಜನೆಯನ್ನು ಪ್ರಾರಂಭಿಸಿದ್ದಾರೆ. ಸೌಹಾರ್ದಯುತವಾಗಿ ಮುನ್ನಡೆಸುವುದು ಅವರ ಯಶಸ್ಸಿನ ಗುಟ್ಟು, ಎಂದು ಹೇಳಿದರು. ಮುಂದಿನ ದಿನಗಳಲ್ಲಿ ಮುಂಬೈ, ಬೆಂಗಳೂರಿನಂತಹ ಮಹಾನಗರಗಳಲ್ಲೂ ಸಂಸ್ಥೆಯು ಯೋಜನೆಗಳನ್ನು ಪ್ರಾರಂಭಿಸಲಿ ಎಂದು ಶುಭ ಹಾರೈಸಿದರು. ಪುರಸಭೆ ಮುಖ್ಯಾಧಿಕಾರಿ ಇಂದು ಎಂ. ಕಚೇರಿಯನ್ನು ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಅವರು ಯೋಜನೆಯ ಬ್ರೋಷರ್ ಅನ್ನು ಬಿಡುಗಡೆಗೊಳಿಸಿ ಮಾತನಾಡಿ, ಕಳೆದ ಹತ್ತು ವರ್ಷಗಳಲ್ಲಿ ಬದ್ಧತೆ ಮತ್ತು ನಿಷ್ಠೆಯಿಂದ ಕಟ್ಟಡ ನಿರ್ಮಾಣ ಯೋಜನೆಗಳಲ್ಲಿ ತೊಡಗಿಸಿಕೊಂಡಿರುವ ಫಾರ್ಚೂನ್ ಸಂಸ್ಥೆಯ ಯೋಜನೆಗಳು ಸಂಸ್ಥೆಗೆ ಮತ್ತು ಮೂಡುಬಿದಿರೆಗೆ ಕೀರ್ತಿ ತರುವಂತಾಗಲಿ ಎಂದು ಆಶಿಸಿದರು. ಈ ಸಂದರ್ಭದಲ್ಲಿ ಡಾ.ಎಂ.ಮೋಹನ ಆಳ್ವ ಅವರನ್ನು ಸನ್ಮಾನಿಸಲಾಯಿತು. ಮುಖ್ಯ ಅತಿಥಿಯಾಗಿ ಆಗಮಿಸಿದ್ದ ದಾಯ್ಜಿವರ್ಲ್ಡ್ ಮೀಡಿಯಾದ ಸ್ಥಾಪಕ ನಿರ್ದೇಶಕ ವಾಲ್ಟರ್ ನಂದಳಿಕೆ ಮಾತನಾಡಿ, ಫಾರ್ಚೂನ್ ಸಂಸ್ಥೆಯವರು ಕಟ್ಟುತ್ತಿರುವುದು ಕೇವಲ ಅಪಾರ್ಟ್ಮೆಂಟ್ ಅಲ್ಲ, ಅದು ಸೌಹಾರ್ದತೆಯ ನಿಲಯ. ಸರ್ವಧರ್ಮದ ನಾಲ್ವರು ಪ್ರಮೋಟರ್ಸ್‌ಗಳು ಮುನ್ನಡೆಸುತ್ತಿರುವ ಈ ಸಂಸ್ಥೆಯನ್ನು ಸರ್ವಧರ್ಮದವರು ಇಷ್ಟಪಡುತ್ತಾರೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷೆ ಜಯಶ್ರೀ ಕೇಶವ್, ಸದಸ್ಯ ಪಿ.ಕೆ.ಥೋಮಸ್, ಎಂ.ಸಿ.ಎಸ್. ಬ್ಯಾಂಕ್ ಅಧ್ಯಕ್ಷ ಎಂ.ಬಾಹುಬಲಿ ಪ್ರಸಾದ್ ಹಾಗೂ ವಿಶೇಷ ಕರ್ತವ್ಯ ನಿರ್ವಹಣಾಧಿಕಾರಿ ಚಂದ್ರಶೇಖರ್ ಎಂ. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಫಾರ್ಚೂನ್ ಪ್ರಮೋಟರ್ಸ್‌ನ ಪಾಲುದಾರರಾದ ರೋನಿ ಫೆರ್ನಾಂಡೀಸ್, ಡೆನ್ನೀಸ್ ಪಿರೇರಾ, ಮಹೇಂದ್ರ ವರ್ಮಾ ಜೈನ್, ಅಬುಲ್ ಅಲಾ ಪುತ್ತಿಗೆ, ಕೋ ಪ್ರಮೋಟರ್ಸ್ ಹೆನ್ರಿ ಡಿಸೋಜ ಹಾಗೂ ಸಿರಿಲ್ ಫೆರ್ನಾಂಡಿಸ್ ಉಪಸ್ಥಿತರಿದ್ದರು. ಸಮಾರಂಭದಲ್ಲಿ ಕಟ್ಟಡದ ವಾಸ್ತುಶಿಲ್ಪಿ ಗುಲ್ಷನ್ ರಾಯ್, ಇಂಜಿನಿಯರ್ ಆನಂದ ಭಟ್ ಮತ್ತು ವೀರೇಂದ್ರ ಶೆಟ್ಟಿಗಾರ್ ಅವರನ್ನು ಗೌರವಿಸಲಾಯಿತು. ನಿತೇಶ್ ಬಲ್ಲಾಳ್ ಕಾರ್ಯಕ್ರಮವನ್ನು ನಿರೂಪಿಸಿದರು.  

ವಾರ್ತಾ ಭಾರತಿ 6 Dec 2025 8:48 pm

ರೋಹಿತ್- ವಿರಾಟ್ ಆರ್ಭಟದ ಮಧ್ಯೆ ಜೈಸ್ವಾಲ್ `ಯಶಸ್ವಿ' ಶತಕ!; ಟೆಸ್ಟ್ ಮುಖಭಂಗಕ್ಕೆ ಒಂಡೇಯಲ್ಲಿ ತಿರುಗೇಟು

ಯಶಸ್ವಿ ಜೈಸ್ವಾಲ್ ಅವರ ಅಜೇಯ ಶತಕ ಮತ್ತು ಹಿರಿಯ ಆಟಗಾರರಾದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರ ಮನಮೋಹಕ ಅರ್ಧಶತಕಗಳ ನೆರವಿನಿಂದ ಕೆಎಲ್ ರಾಹುಲ್ ರಾಹುಲ್ ನೇತೃತ್ವದ ಭಾರತ ತಂಡ ಪ್ರವಾಸಿ ದಕ್ಷಿಣ ಆಫ್ರಿಕಾವನ್ನು 9 ವಿಕೆಟ್ ಗಳಿಂದ ಭರ್ಜರಿಯಾಗಿ ಸೋಲಿಸಿದೆ. ಈ ಮೂಲಕ 3 ಪಂದ್ಯಗಳ ಏಕದಿನ ಸರಣಿಯನ್ನು 2-1 ಅಂತರದಿಂದ ತನ್ನದಾಗಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಟೆಸ್ಟ್ ಸರಣಿಯಲ್ಲಿ ಆದ 2-0 ಮುಖಭಂಗಕ್ಕೆ ತಕ್ಕ ತಿರುಗೇಟು ನೀಡಿದೆ.ರಾಂಚಿಯಲ್ಲಿ ನಡೆದ ಪ್ರಥಮ ಏಕದಿನ ಪಂದ್ಯವನ್ನು ಭಾರತ ತಂಡ 17 ರನ್ ಗಳಿಂದ ಜಯಿಸಿತ್ತು. ಬಳಿಕ ರಾಯ್ಪುರದಲ್ಲಿ ನಡೆದ ಎರಡನೇ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡ 4 ವಿಕೆಟ್ ಗಳಿಂದ ಗೆಲ್ಲುವ ಮೂಲಕ ಸರಣಿಯನ್ನು 1-1 ಸಮಬಲ ಸ್ಥಾಪಿಸಿತು. ಶನಿವಾರದಂದು ವಿಶಾಖಪಟ್ಟಣದ ಡಾ ವೈ ಎಸ್ ರಾಜಶೇಖರ್ ರೆಡ್ಡಿ ಕ್ರೀಡಾಂಗಣದಲ್ಲಿ ನಡೆದ ದಲ್ಲಿ ಭಾರತ ತಂಡ ಪಂದ್ಯವನ್ನು ಅಧಿಕಾರಯುತವಾಗಿ ಜಯಿಸುವ ಮೂಲಕ ಪ್ರವಾಸಿ ತಂಡಕ್ಕೆ ತಕ್ಕ ತಿರುಗೇಟು ನೀಡಿತು. ಏಕದಿನ ಸರಣಿಗೂ ಮುನ್ನ ನಡೆದ ಕೋಲ್ಕತಾ ಮತ್ತು ಗುವಾಹಟಿ ಟೆಸ್ಟ್ ಗಳಲ್ಲಿ ಭಾರತ ತಂಡ ದಕ್ಷಿಣ ಆಫ್ರಿಕಾ ವಿರುದ್ಧ ಹೀನಾಯ ಸೋಲನುಭವಿಸಿತ್ತು. ವಿಶಾಖಪಟ್ಟಣದಲ್ಲಿ ಭಾರತ ತಂಡದ ನಾಯಕ ದಕ್ಷಿಣ ಆಫ್ರಿಕಾ ತಂಡವನ್ನು ಬ್ಯಾಟಿಂಗ್ ಗೆ ಇಳಿಸಿದರು. ಈ ಹಿಂದಿನ ಎರಡೂ ಪಂದ್ಯಗಳಲ್ಲಿ ಟಾಸ್ ಗೆದ್ದು ಚೇಸಿಂಗ್ ಮಾಡಿದ್ದ ದಕ್ಷಿಣ ಆಫ್ರಿಕಾ ತಂಡ ಈ ಬಾರಿ ಮೊದಲು ಬ್ಯಾಟಿಂಗ್ ಮಾಡಿ 47.5 ಓವರ್ ಗಳಲ್ಲಿ 270 ರನ್ ಗಳಿಗೆ ಆಲೌಟ್ ಆಯಿತು. ಈ ಮೊತ್ತವನ್ನು ಭಾರತ ತಂಡ ಕೇವಲ ಒಂದು ವಿಕೆಟ್ ಕಳೆದುಕೊಂಡು ಇನ್ನೂ 61 ಎಸೆತಗಳು ಬಾಕಿ ಉಳಿದಿರುವಂತೆ ತಲುಪಿತು.

ವಿಜಯ ಕರ್ನಾಟಕ 6 Dec 2025 8:46 pm

ಶಾಲಾ ವಿದ್ಯಾರ್ಥಿಗಳ ಪ್ರವಾಸಕ್ಕೆ ಮಾರ್ಗಸೂಚಿ ಹೊರಡಿಸಿದ ಎಡಿಜಿಪಿ ಆರ್.ಹಿತೇಂದ್ರ

ಬೆಂಗಳೂರು : ಶಾಲಾ-ಕಾಲೇಜು ವಿದ್ಯಾರ್ಥಿಗಳ ಶೈಕ್ಷಣಿಕ ಪ್ರವಾಸದ ಹಿನ್ನೆಲೆ ಪ್ರಯಾಣ ಮಾಡುವ ಬಸ್ ಸೇರಿದಂತೆ ಇನ್ನಿತರ ವಾಹನಗಳ ಸುರಕ್ಷತೆ ಕುರಿತು ಕೈಗೊಳ್ಳಬೇಕಾದ ಅಗತ್ಯ ಕ್ರಮಗಳನ್ನು ಅನುಸರಿಸುವಂತೆ ಸಂಚಾರ ಹಾಗೂ ರಸ್ತೆ ಸುರಕ್ಷತೆ ಎಡಿಜಿಪಿ ಆರ್.ಹಿತೇಂದ್ರ ಸುತ್ತೋಲೆ ಹೊರಡಿಸಿದ್ದಾರೆ. ಈ ವರ್ಷ ಮುಗಿಯುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದ ಪ್ರವಾಸಿ ಸ್ಥಳಗಳಿಗೆ ಶಾಲಾ-ಕಾಲೇಜು ಆಡಳಿತ ಮಂಡಳಿ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರವಾಸ ಕೈಗೊಳ್ಳುತ್ತಿದೆ. ಕೆಎಸ್ಸಾರ್ಟಿಸಿ ಹಾಗೂ ಖಾಸಗಿ ಬಸ್‍ಗಳಲ್ಲಿ ಹೆಚ್ಚಾಗಿ ಪ್ರವಾಸಕ್ಕೆ ಹೋಗುತ್ತಿದ್ದಾರೆ. ಪ್ರವಾಸಕ್ಕೆ ತೆರಳುವ ಮುನ್ನ ಬಸ್‍ನ ಸ್ಥಿತಿಗತಿಯ ಬಗ್ಗೆ ಆರ್‌ಟಿಒಯಿಂದ ಖಾತ್ರಿಪಡಿಸಿಕೊಂಡಿರಬೇಕು ಎಂದು ತಿಳಿಸಿದ್ದಾರೆ. ಚಾಲಕರು ಯಾವುದೇ ರೀತಿಯ ಮಾದಕ ದ್ರವ್ಯ ಹಾಗೂ ಮದ್ಯಪಾನ ಸೇವನೆ ವ್ಯಸನಿಯಾಗಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ಪ್ರವಾಸದ ಅವಧಿಯಲ್ಲಿ ರಾತ್ರಿ ವೇಳೆ ತಂಗುವ ಅವಶ್ಯಕತೆ ಕಂಡು ಬಂದರೆ ಚಾಲಕರ ಮೇಲೆ ಶಿಕ್ಷಕರು ನಿಗಾವಹಿಸಬೇಕೆಂದು ಸುತ್ತೋಲೆಯಲ್ಲಿ ಹೇಳಿದ್ದಾರೆ. ಪ್ರವಾಸದ ಸಂದರ್ಭದಲ್ಲಿ ಬೇರೆ-ಬೇರೆ ಜಿಲ್ಲೆಗಳಿಗೆ ಪ್ರವಾಸ ಕೈಗೊಂಡಾಗ ಆಯಾ ಜಿಲ್ಲೆಯ ಪೊಲೀಸ್ ನಿಯಂತ್ರಣ ಕೊಠಡಿ ಹಾಗೂ ಸಂಬಂಧಪಟ್ಟ ದೂರವಾಣಿ ಸಂಖ್ಯೆಗಳನ್ನು ಪಡೆದುಕೊಂಡಿರಬೇಕು. ಶೈಕ್ಷಣಿಕ ಪ್ರವಾಸ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಮಾಡಬೇಕಾದ ಹಾಗೂ ಮಾಡಬಾರದ ಕೆಲಸಗಳ ಬಗ್ಗೆ ಸೂಕ್ತ ಮಾಹಿತಿ ನೀಡಬೇಕು. ಶಾಲಾ-ಕಾಲೇಜುಗಳ ಮಂಡಳಿಗಳ ಮುಖ್ಯಸ್ಥರು ಶೈಕ್ಷಣಿಕ ಪ್ರವಾಸ ಕೈಗೊಳ್ಳುವಾಗ ಈ ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಆರ್.ಹಿತೇಂದ್ರ ಸುತ್ತೋಲೆಯಲ್ಲಿ ತಿಳಿಸಿದ್ದಾರೆ. ಶೈಕ್ಷಣಿಕ ವಿದ್ಯಾರ್ಥಿಗಳ ಪ್ರವಾಸ ಕೈಗೊಳ್ಳುವಾಗ ಅನುಸರಿಸಬೇಕಾದ ಕ್ರಮಗಳ ಕುರಿತು ಶಾಲಾ ಶಿಕ್ಷಣ ಇಲಾಖೆ ಮತ್ತು ಸಂಬಂಧಿತ ಪ್ರಾಧಿಕಾರಗಳಿಂದ ಸುತ್ತೋಲೆಗಳು ಆಗಾಗ್ಗೆ ಹೊರಡಿಸಲ್ಪಡುತ್ತವೆ. ಈ ಸುತ್ತೋಲೆಗಳಲ್ಲಿ ಪ್ರವಾಸದ ಉದ್ದೇಶ, ಸುರಕ್ಷತೆ, ಅನುಮತಿ, ವೆಚ್ಚದ ವಿವರಗಳು, ಪೋಷಕರ ಸಮ್ಮತಿ, ತುರ್ತು ಸಂಪರ್ಕ ಮತ್ತು ಮಾರ್ಗದರ್ಶನ ಮುಖ್ಯವಾಗಿದ್ದು, ಇವುಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಆರ್.ಹಿತೇಂದ್ರ ಸೂಚಿಸಿದ್ದಾರೆ. ಪ್ರವಾಸ ಹೊರಡುವ ಮುನ್ನ: ಪ್ರವಾಸದ ಸ್ಥಳ, ದಿನಾಂಕ, ಅವಧಿ, ಶೈಕ್ಷಣಿಕ ಉದ್ದೇಶವನ್ನು ಮೊದಲೇ ನಿರ್ಧರಿಸಿರಬೇಕು. ಶಾಲಾ ಮುಖ್ಯೋಪಾಧ್ಯಾಯರು, ಶಿಕ್ಷಣಾಧಿಕಾರಿಗಳು ಮತ್ತು ಅಗತ್ಯವಿದ್ದರೆ ಜಿಲ್ಲಾಡಳಿತದಿಂದ ಪೂರ್ವಾನುಮತಿ ಪಡೆದುಕೊಳ್ಳುವುದು ಅವಶ್ಯಕ. ಬಸ್‍ಗಳು ಮತ್ತು ಸಾರಿಗೆ ವ್ಯವಸ್ಥೆ ವಿಶ್ವಾಸಾರ್ಹ ಸಂಸ್ಥೆಯಿಂದ ಇರಬೇಕು. ಆ ಬಗ್ಗೆ ಸೂಕ್ತ ಪರಿಶೀಲನೆ ಮಾಡಿಯೇ ಮುಂದುವರೆಯಬೇಕು. ಪ್ರತಿ ಬಸ್‍ನಲ್ಲಿ ಕನಿಷ್ಠ ಒಬ್ಬ ಶಿಕ್ಷಕರು ಮತ್ತು ಒಬ್ಬ ಗಾರ್ಡ್ ಇರುವಂತೆ ನೋಡಿಕೊಳ್ಳಬೇಕು ಎಂದು ಎಡಿಜಿಪಿ ಆರ್.ಹಿತೇಂದ್ರ ತಿಳಿಸಿದ್ದಾರೆ. ಬಸ್‍ನಲ್ಲಿ ಪ್ರಥಮ ಚಿಕಿತ್ಸಾ ಪೆಟ್ಟಿಗೆ ಮತ್ತು ತುರ್ತು ವೈದ್ಯಕೀಯ ಸಂಪರ್ಕದ ವ್ಯವಸ್ಥೆ ಇರಬೇಕು. ಇಲ್ಲದಿದ್ದರೆ ಕಡ್ಡಾಯವಾಗಿ ಇರುವಂತೆ ನೋಡಿಕೊಳ್ಳಬೇಕು. ಪ್ರತಿ 10-15 ವಿದ್ಯಾರ್ಥಿಗಳಿಗೆ ಒಬ್ಬ ಶಿಕ್ಷಕರನ್ನು ಹೊಣೆಗಾರರನ್ನಾಗಿ ನೇಮಿಸಬೇಕು. ವಿದ್ಯಾರ್ಥಿಗಳ ಪೂರ್ಣ ಪಟ್ಟಿ, ಪೋಷಕರ ಮೊಬೈಲ್ ನಂಬರ್ ಸಂಗ್ರಹಿಸಬೇಕು. ಪೋಷಕರ ಅನುಮತಿ ಪತ್ರ ಕಡ್ಡಾಯವಾಗಿ ಪಡೆದುಕೊಳ್ಳಬೇಕು ಎಂದು ಎಡಿಜಿಪಿ ಆರ್.ಹಿತೇಂದ್ರ ಸುತ್ತೋಲೆಯಲ್ಲಿ ಉಲ್ಲೇಖಿಸಿದ್ದಾರೆ.

ವಾರ್ತಾ ಭಾರತಿ 6 Dec 2025 8:43 pm

ಕಲಬುರಗಿ| ನಾಗರಿಕ ಸ್ನೇಹಿಯಾಗಿ ಇ-ಸ್ವತ್ತು ತಂತ್ರಾಂಶ: ಸಚಿವ ಪ್ರಿಯಾಂಕ್ ಖರ್ಗೆ

ಕಲಬುರಗಿ: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಯು ಕರ್ನಾಟಕ ಗ್ರಾಮ ಸ್ವರಾಜ್‌ ಮತ್ತು ಪಂಚಾಯತ್‌ ರಾಜ್‌ ನಿಯಮಗಳು-2025ರ ಅಧಿಸೂಚನೆ ಹೊರಡಿಸಿದ್ದು, ಈ ಹಿಂದೆ ಇದ್ದ ಇ-ಸ್ವತ್ತು ತಂತ್ರಾಂಶವನ್ನು ನಾಗರಿಕ ಸ್ನೇಹಿಯಾಗಿ ಮಾರ್ಪಡಿಸಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ. ಡಿ.1ರಂದು ಮುಖ್ಯ ಮಂತ್ರಿಗಳು ಹಾಗೂ ಉಪ ಮುಖ್ಯ ಮಂತ್ರಿಗಳು ಇ-ಸ್ವತ್ತು 2.O ತಂತ್ರಾಂಶಕ್ಕೆ ಚಾಲನೆ ನೀಡಿದ್ದು, ನಿಯಮಗಳಿಗೆ ಹಾಗೂ ಇ-ಸ್ವತ್ತು ತಂತ್ರಾಂಶದ ಬಳಕೆಗೆ ಸಂಬಂಧಿಸಿದಂತೆ ಸಾರ್ವಜನಿಕರ ಸಹಾಯಕ್ಕಾಗಿ ಇಲಾಖೆಯಿಂದ ಸಹಾಯವಾಣಿಯನ್ನು ಪ್ರಾರಂಭಿಸಲಾಗಿದೆ. ಪ್ರತಿದಿನ ಮೂರು ಸಾವಿರಕ್ಕೂ ಹೆಚ್ಚು ಕರೆಗಳನ್ನು ಸಾರ್ವಜನಿಕರಿಂದ ಸ್ವೀಕರಿಸಲಾಗುತ್ತಿದೆ ಎಂದು ಹೇಳಿದರು.   ಸಹಾಯವಾಣಿಗೆ ಸಾರ್ವಜನಿಕರಿಂದ ಸ್ವೀಕೃತಿಯಾಗುತ್ತಿರುವ ಪ್ರಶ್ನೆಗಳಲ್ಲಿ ಹೆಚ್ಚಿನ ಪ್ರಶ್ನೆಗಳು ಅರ್ಜಿ ಸಲ್ಲಿಸುವ ಪ್ರಕ್ರಿಯೆ, ಅನುಮೋದನೆ ಪ್ರಕ್ರಿಯೆ, ಆಸ್ತಿ ವರ್ಗೀಕರಣವನ್ನು ಆಯ್ಕೆ ಮಾಡುವ ವಿಧಾನ, ಇ-ಸ್ವತ್ತು ನಮೂನೆ ವಿತರಿಸಲು ನಿಗದಿಯಾಗಿರುವ ಕಾಲಾವಧಿ ಹಾಗೂ ತಾಂತ್ರಿಕ ಸಮಸ್ಯೆಗಳಿಗೆ ಸಂಬಂಧಿಸಿದ್ದಾಗಿರುತ್ತವೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ. ಇ-ಸ್ವತ್ತು ಪ್ರಕ್ರಿಯೆ ಹಾಗೂ ತಂತ್ರಾಂಶವನ್ನು ಹೆಚ್ಚು ನಾಗರಿಕ ಸ್ನೇಹಿಯಾಗಿ ಅನುಷ್ಠಾನಗೊಳಿಸಲು ಇಲಾಖೆ ಬದ್ಧವಾಗಿದೆ. ಅದರನ್ವಯ ತಂತ್ರಾಂಶವನ್ನು ಅಭಿವೃದ್ಧಿಪಡಿಸಲಾಗಿರುತ್ತದೆ. ಇವರೆಗೆ 365 ಅರ್ಜಿಗಳನ್ನು ಆನ್‌ಲೈನ್‌ ಮೂಲಕ ಸ್ವೀಕರಿಸಲಾಗಿದ್ದು ಮತ್ತಷ್ಟು ಸರಳೀಕರಿಸಲು ಕ್ರಮವಹಿಸಲಾಗುತ್ತಿದೆ. ಸಾರ್ವಜನಿಕರು ಆತಂಕ ಪಡುವ ಅವಶ್ಯಕತೆ ಇರುವುದಿಲ್ಲ. ಸಾರ್ವಜನಿಕರಿಗೆ ಅರ್ಜಿ ಸಲ್ಲಿಸಲು ಯಾವುದೇ ಕಾಲಾವಧಿಯನ್ನು ನಿಗದಿಪಡಿಸಲಾಗಿರುವುದಿಲ್ಲ. ಗ್ರಾಮ ಪಂಚಾಯಿತಿಗೆ ಭೇಟಿ ನೀಡದೆಯೇ ತಾವಿರುವಲ್ಲಿಯೇ ತಮ್ಮ ಆಸ್ತಿಗೆ ಸಂಬಂಧಿಸಿದಂತೆ ನಮೂನೆಗಳನ್ನು ಇ-ಸ್ವತ್ತು ತಂತ್ರಾಂಶದ ಮೂಲಕ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಈ ಕುರಿತ ಸಮಸ್ಯೆ, ಸಂದೇಹಗಳನ್ನು ಬಗೆಹರಿಸಲು ಸರಕಾರ ಬದ್ದವಾಗಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.   

ವಾರ್ತಾ ಭಾರತಿ 6 Dec 2025 8:38 pm

ಇಂಡಿಗೊ ಸಂಕಟ: ಪಿಜಿ ವೈದ್ಯಕೀಯ ಪ್ರವೇಶಕ್ಕೆ ದಿನಾಂಕ ವಿಸ್ತರಣೆ

ಬೆಂಗಳೂರು : ಇಂಡಿಗೊ ವಿಮಾನಗಳ ಸಂಚಾರ ರದ್ದಾಗಿರುವ ಕಾರಣ ಪ್ರವೇಶ ಪ್ರಕ್ರಿಯೆಯಲ್ಲಿ ಭಾಗವಹಿಸಲು ಸಾಧ್ಯವಾಗದ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ರಾಜ್ಯ ಪರೀಕ್ಷಾ ಪ್ರಾಧಿಕಾರ(ಕೆಇಎ), ಸ್ನಾತಕೋತ್ತರ ವೈದ್ಯಕೀಯ ಕೋರ್ಸ್ ಗಳ ಪ್ರವೇಶಕ್ಕೆ ಡಿ.8ರವರೆಗೆ ದಿನಾಂಕ ವಿಸ್ತರಿಸಿದೆ ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ತಿಳಿಸಿದ್ದಾರೆ. ಶನಿವಾರ ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಅವರು, ಅನೇಕ ವಿದ್ಯಾರ್ಥಿಗಳು ಮನವಿ ಮಾಡಿದ ಕಾರಣ ಈ ತೀರ್ಮಾನ ಮಾಡಲಾಗಿದೆ. ಆಯ್ಕೆ(ಛಾಯ್ಸ್) ದಾಖಲಿಸಲು ಡಿ.8ರಂದು ಬೆಳಗ್ಗೆ 11 ಗಂಟೆವರೆಗೆ ಅವಕಾಶ ನೀಡಲಾಗಿದೆ. ಛಾಯ್ಸ್-1 ಮತ್ತು 2 ದಾಖಲಿಸಿದವರು ಡಿ.8ರಂದು 12.30ರೊಳಗೆ ಶುಲ್ಕ ಪಾವತಿಸಬೇಕು ಎಂದು ಅವರು ಹೇಳಿದ್ದಾರೆ. ಛಾಯ್ಸ್-1 ಆಯ್ಕೆ ಮಾಡಿದ ಅಭ್ಯರ್ಥಿಗಳು ಡಿ.8ರಂದು ಮಧ್ಯಾಹ್ನ 2.30ರವರೆಗೆ ಕೆಇಎ ಕಚೇರಿಯಲ್ಲಿ ಮೂಲ ದಾಖಲೆ ಸಲ್ಲಿಸಬೇಕು. ಮೂಲ ದಾಖಲೆ ಸಲ್ಲಿಸಿದ ನಂತರ ಡಿ.8ರೊಳಗೆ ಪ್ರವೇಶ ಪತ್ರ ಡೌನ್‍ಲೋಡ್ ಮಾಡಿಕೊಂಡು ಕಾಲೇಜುಗಳಿಗೆ ವರದಿ ಮಾಡಿಕೊಳ್ಳಬೇಕು ಎಂದು ಪ್ರಸನ್ನ ಮಾಹಿತಿ ನೀಡಿದ್ದಾರೆ.

ವಾರ್ತಾ ಭಾರತಿ 6 Dec 2025 8:33 pm

ಮಂಡ್ಯಕ್ಕೆ ಕಾರ್ಖಾನೆ ತರಲು ಪ್ರಯತ್ನಿಸುತ್ತಿರುವೆ, ಆದರೆ ಸರಕಾರ ಜಾಗ ನೀಡಿಲ್ಲ: ಎಚ್‌ಡಿ ಕುಮಾರಸ್ವಾಮಿ

ಕೇಂದ್ರ ಸಚಿವ ಎಚ್‌ಡಿ ಕುಮಾರಸ್ವಾಮಿ ಅವರು ಮಂಡ್ಯ ಜಿಲ್ಲೆಯಲ್ಲಿ ಕೈಗಾರಿಕೆ ಸ್ಥಾಪನೆಗೆ ಜಾಗ ಸಿಗುತ್ತಿಲ್ಲ ಎಂದು ಹೇಳಿದ್ದು, ರಾಜ್ಯ ಸರಕಾರ ಬೆಂಬಲದ ಕೊರತೆಯನ್ನು ತೆರೆದಿಟ್ಟಿದ್ದಾರೆ. ಕೃಷಿ ಮೇಳದಲ್ಲಿ ಮಾತನಾಡಿದ ಅವರು, ರೈತರ ಸಮಸ್ಯೆಗಳನ್ನು ಪ್ರಸ್ತಾಪಿಸಿ, ಆಧುನಿಕ ಕೃಷಿ ಪದ್ಧತಿ, ಬೆಂಬಲ ಬೆಲೆ, ಮತ್ತು ಮಧ್ಯವರ್ತಿಗಳ ಹಾವಳಿ ತಪ್ಪಿಸುವ ಬಗ್ಗೆ ತಮ್ಮ ಯೋಜನೆಗಳನ್ನು ವಿವರಿಸಿದರು.

ವಿಜಯ ಕರ್ನಾಟಕ 6 Dec 2025 8:30 pm

ಎಂಬಿಬಿಎಸ್, ಬಿಡಿಎಸ್ ತಾತ್ಕಾಲಿಕ‌ ಹಂಚಿಕೆ ಪಟ್ಟಿ ರದ್ದು; ಹೊಸದಾಗಿ ಪ್ರಕ್ರಿಯೆ ನಡೆಸಲು ಕೆಇಎಗೆ ಹೈಕೋರ್ಟ್ ನಿರ್ದೇಶನ

ಬೆಂಗಳೂರು : ಎಂಬಿಬಿಎಸ್‌ ಮತ್ತು ಬಿಡಿಎಸ್‌ ಕೋರ್ಸ್‌ಗಳ ಪ್ರವೇಶಕ್ಕಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಅಕ್ಟೋಬರ್ 24 ರಂದು ಪ್ರಕಟಿಸಿದ್ದ 3ನೇ ಸುತ್ತಿನ ಕೌನ್ಸೆಲಿಂಗ್‌ನ ತಾತ್ಕಾಲಿಕ ಹಂಚಿಕೆ ಪಟ್ಟಿಯನ್ನು ರದ್ದುಪಡಿಸಿರುವ ಹೈಕೋರ್ಟ್‌ , ಹೊಸದಾಗಿ 3ನೇ ಸುತ್ತಿನ ಕೌನ್ಸೆಲಿಂಗ್‌ ಪ್ರಕ್ರಿಯೆ ಕೈಗೊಳ್ಳಲು ಕೆಇಎಗೆ ನಿರ್ದೇಶಿಸಿದೆ. ಚಂದನಾ ಎಂ. ಚವಾಣ್‌ ಸೇರಿ 26 ವಿದ್ಯಾರ್ಥಿಗಳು ಸಲ್ಲಿಸಿದ್ದ ಪ್ರತ್ಯೇಕ ಅರ್ಜಿಗಳನ್ನು ಭಾಗಶಃ ಮಾನ್ಯ ಮಾಡಿರುವ ನ್ಯಾಯಮೂರ್ತಿ ಬಿ.ಎಂ. ಶ್ಯಾಮ್‌ ಪ್ರಸಾದ್‌, ನ್ಯಾಯಮೂರ್ತಿ ಎಂ.ಐ. ಅರುಣ್‌ ಹಾಗೂ ನ್ಯಾಯಮೂರ್ತಿ ಟಿ.ಎಂ.ನದಾಫ್‌ ಅವರಿದ್ದ ತ್ರಿಸದಸ್ಯ ನ್ಯಾಯಪೀಠ ಈ ಆದೇಶ ನೀಡಿದ್ದು, ಅರ್ಜಿಗಳ ಕುರಿತ ತೀರ್ಪನ್ನು ಪ್ರಾಧಿಕಾರದ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಿಸಲು ನಿರ್ದೇಶನ ನೀಡಿದೆ. ಹೈಕೋರ್ಟ್‌ನ ಈ ಆದೇಶದಿಂದ 2025-26ನೇ ಶೈಕ್ಷಣಿಕ ವರ್ಷಕ್ಕೆ ಉಳಿದಿರುವ ಸುಮಾರು 900 ಪದವಿಪೂರ್ವ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಸೀಟುಗಳ ಪ್ರವೇಶಕ್ಕೆ ಸಂಬಂಧಿಸಿದ ಅನಿಶ್ಚಿತತೆ ದೂರವಾದಂತಾಗಿದೆ. ಹೈಕೋರ್ಟ್ ಆದೇಶವೇನು? ಹೊಸದಾಗಿ ಕೌನ್ಸೆಲಿಂಗ್‌‌ನಲ್ಲಿ ಭಾಗವಹಿಸಲು ಅನುಮತಿ ಪಡೆದ ಅಭ್ಯರ್ಥಿಗಳಿಗೆ ಹೆಚ್ಚುವರಿ 443 ಸೀಟುಗಳಿಗೆ ಕೆಇಎ ಹಂಚಿಕೆ ಪ್ರಕ್ರಿಯೆಯನ್ನು ಕೈಗೊಳ್ಳಬೇಕು ಮತ್ತು ಈ ಪ್ರಕ್ರಿಯೆಯು ಈಗಾಗಲೇ ನಮೂದಿಸಿದ ಆಯ್ಕೆಗಳನ್ನು ಆಧರಿಸಿರಬೇಕು. ಮೊದಲ ಹಂತದಲ್ಲಿ ತೆಗೆದುಕೊಳ್ಳದ ಹೆಚ್ಚುವರಿ ಸೀಟುಗಳನ್ನು ಹಂಚಿಕೆ ಮಾಡಬೇಕು ಮತ್ತು ಪರಿಣಾಮವಾಗಿ ಸೀಟುಗಳ ಹಂಚಿಕೆಗೆ ಕ್ರಮಗಳನ್ನು ತೆಗೆದುಕೊಳ್ಳಬೇಕು. ಡಿಸೆಂಬರ್‌ 17ರೊಳಗೆ ಸಂಪೂರ್ಣ ಪ್ರಕ್ರಿಯೆ ಪೂರ್ಣಗೊಳಿಸಬೇಕು ಎಂದು ನ್ಯಾಯಾಲಯ ಆದೇಶದಲ್ಲಿ ಹೇಳಿದೆ. ಇದೇ ವೇಳೆ, ನ್ಯಾಯಾಲಯದ ಈ ನಿರ್ದೇಶನದಂತೆ ನಡೆಸಲಾಗುವ ಸೀಟು ಹಂಚಿಕೆ ಪ್ರಕ್ರಿಯೆ ನಂತರ ಕೆಇಎ ಸಲ್ಲಿಕೆ ಮಾಡುವ ಅಭ್ಯರ್ಥಿಗಳ ಪಟ್ಟಿಗೆ ಯಾವುದೇ ವಿಳಂಬ ಮಾಡದೆ ಅನುಮೋದನೆ ನೀಡಬೇಕು ಎಂದು ರಾಷ್ಟ್ರೀಯ ವೈದ್ಯಕೀಯ ಆಯೋಗಕ್ಕೆ (ಎನ್‌ಎಂಸಿ) ಸೂಚನೆ ನೀಡಿರುವ ನ್ಯಾಯಾಲಯ, ಮುಂದಿನ ಶೈಕ್ಷಣಿಕ ವರ್ಷಕ್ಕೆ ಹೆಚ್ಚುವರಿ ಸೀಟುಗಳನ್ನು ಅನುಮೋದಿಸಲು ಎನ್‌ಎಂಸಿ ಬಯಸಿದರೆ, ಅವುಗಳನ್ನೂ ಸಹ ಗಮನದಲ್ಲಿರಿಸಿಕೊಂಡು ಸರ್ಕಾರ ಸೀಟು ಮ್ಯಾಟ್ರಿಕ್ಸ್‌ ಅನ್ನು ಪ್ರಕಟಿಸಬೇಕಾಗುತ್ತದೆ ಎಂದು ಆದೇಶದಲ್ಲಿ ತಿಳಿಸಿದೆ. ಜತೆಗೆ, ರಾಜ್ಯಕ್ಕೆ ಹೆಚ್ಚುವರಿ ಸೀಟುಗಳನ್ನು ಅನುಮೋದಿಸುವ ಮೊದಲು ಕೌನ್ಸೆಲಿಂಗ್‌ ಆರಂಭವಾಗಿದೆಯೇ ಆಥವಾ ಇಲ್ಲವೇ ಎಂಬುದನ್ನು ಎನ್‌ಎಂಸಿ ಗಮನಿಸಬೇಕು. ಒಂದು ವೇಳೆ ಸೀಟು ಹಂಚಿಕೆಗೆ ಕೌನ್ಸೆಲಿಂಗ್‌ ಪ್ರಕ್ರಿಯೆ ಆರಂಭವಾಗಿದ್ದರೆ ಹೆಚ್ಚುವರಿ ಸೀಟುಗಳನ್ನು ಪ್ರಸಕ್ತ ಶೈಕ್ಷಣಿಕ ವರ್ಷಕ್ಕೆ ಅನುಮೋದಿಸಬಾರದು. ಸೀಟು ಮ್ಯಾಟ್ರಿಕ್ಸ್‌ ಅನ್ನು ಪ್ರಕಟಿಸುವ ಮುನ್ನ ರಾಜ್ಯ ಸರಕಾರ ಎಲ್ಲ ಆಯಾಮಗಳನ್ನು ಪರಿಶೀಲಿಸಿ, ಆನಂತರ ನಿರ್ಧಾರಗಳನ್ನು ಕೈಗೊಳ್ಳಬೇಕಾಗುತ್ತದೆ ಎಂದು ನ್ಯಾಯಾಲಯ ಆದೇಶಿಸಿದೆ. ಪ್ರಕರಣದ ಹಿನ್ನೆಲೆ: ತಾತ್ಕಾಲಿಕ ಸೀಟು ಆಯ್ಕೆ ಪಟ್ಟಿ ಸಂಬಂಧ ಕಳೆದ ನವೆಂಬರ್ 19ರಂದು ಹೈಕೋರ್ಟ್‌ ವಿಭಾಗೀಯಪೀಠ ಭಿನ್ನ ನಿಲುವು ಪ್ರಕಟಿಸಿತ್ತು. ವಿಭಾಗೀಯ ಪೀಠದ ಇಬ್ಬರೂ ನ್ಯಾಯಮೂರ್ತಿಗಳು ವ್ಯತಿರಿಕ್ತ ತೀರ್ಪು ನೀಡಿದ್ದರಿಂದ, ಪ್ರಕರಣವನ್ನು ಬಗೆಹರಿಸಲು ತ್ರಿಸದಸ್ಯ ನ್ಯಾಯಪೀಠವನ್ನು ರಚನೆ ಮಾಡಲಾಗಿತ್ತು. ಇದೀಗ ಸಮಗ್ರ ವಿಚಾರಣೆ ಬಳಿಕ ತ್ರಿಸದಸ್ಯ ನ್ಯಾಯಪೀಠ ಈ ತೀರ್ಪು ಪ್ರಕಟಿಸಿದೆ.

ವಾರ್ತಾ ಭಾರತಿ 6 Dec 2025 8:29 pm

ಬರೋಬ್ಬರಿ 20 ಸಾವಿರ ರನ್!; ಸಚಿನ್ ತೆಂಡೂಲ್ಕರ್, ವಿರಾಟ್ ಕೊಹ್ಲಿ, ರಾಹುಲ್ ದ್ರಾವಿಡ್ ಸಾಲಿಗೆ ಸೇರಿದ ರೋಹಿತ್ ಶರ್ಮಾ!

India Vs Rohit Sharma- ಭಾರತದ ಮಾಜಿ ನಾಯಕ ರೋಹಿತ್ ಶರ್ಮಾ ದಕ್ಷಿಣ ಆಫ್ರಿಕಾ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ 20,000 ಅಂತರರಾಷ್ಟ್ರೀಯ ರನ್‌ಗಳ ಗಡಿ ದಾಟಿ ಹೊಸ ಮೈಲಿಗಲ್ಲು ನಿರ್ಮಿಸಿದ್ದಾರೆ. ಈ ಸಾಧನೆಯೊಂದಿಗೆ ಸಚಿನ್, ದ್ರಾವಿಡ್, ಕೊಹ್ಲಿ ನಂತರ ಈ ಮೈಲಿಗಲ್ಲು ತಲುಪಿದ ನಾಲ್ಕನೇ ಭಾರತೀಯ ಬ್ಯಾಟರ್ ಎಂಬ ಗೌರವಕ್ಕೆ ಅವರು ಪಾತ್ರರಾಗಿದ್ದಾರೆ. ಈ ಸಾಧನೆ ಮಾಡಿರುವ ವಿಶ್ವದ 14ನೇ ಆಟಗಾರರಾಗಿದ್ದು ಅವರ ಹೆಚ್ಚಿನ ರನ್ ಗಳು ವೈಟ್ ಬಾಲ್ ಕ್ರಿಕೆಟ್ ನಲ್ಲಿ ಬಂದಿವೆ.

ವಿಜಯ ಕರ್ನಾಟಕ 6 Dec 2025 8:28 pm

₹970 ಕೋಟಿ ವಂಚನೆ: ಅಂತಾರಾಷ್ಟ್ರೀಯ ಮಟ್ಟದಲ್ಲಿ 500 ಹೂಡಿಕೆದಾರರಿಗೆ ಟೋಪಿ ಹಾಕಿದ ದಿಲ್ಲಿ ಉದ್ಯಮಿ ಬಂಧನ

ದಿಲ್ಲಿ ಮೂಲದ ಉದ್ಯಮಿ ರವೀಂದ್ರ ನಾಥ್ ಸೋನಿ ಎಂಬಾತನನ್ನು ಕಾನ್ಪುರ ಪೊಲೀಸರು ಬಂಧಿಸಿದ್ದು, ಈತ ಸುಮಾರು 970 ಕೋಟಿ ರೂಪಾಯಿಗಳ ಬೃಹತ್ ಹೂಡಿಕೆ ಹಗರಣ ನಡೆಸಿದ್ದಾನೆ ಎಂದು ಹೇಳಿದ್ದಾರೆ. ಈತ ನಕಲಿ ಕಂಪನಿಗಳನ್ನು ಸೃಷ್ಟಿಸಿ, ವಿದೇಶಿ ವಿನಿಮಯ ವ್ಯಾಪಾರದಲ್ಲಿ ಹೆಚ್ಚಿನ ಲಾಭಾಂಶ ನೀಡುವುದಾಗಿ ನಂಬಿಸಿ ಭಾರತ ಮತ್ತು ದುಬೈನಲ್ಲಿರುವ ನೂರಾರು ಹೂಡಿಕೆದಾರರಿಗೆ ಮೋಸ ಮಾಡಿದ್ದಾನೆ. ಸಂಗ್ರಹಿಸಿದ ಹಣವನ್ನು ಕ್ರಿಪ್ಟೋಕರೆನ್ಸಿ ಮತ್ತು ಹವಾಲಾ ಮಾರ್ಗಗಳ ಮೂಲಕ ಬೇರೆಡೆಗೆ ವರ್ಗಾಯಿಸಿರುವುದು ತನಿಖೆಯಲ್ಲಿ ತಿಳಿದುಬಂದಿದೆ.

ವಿಜಯ ಕರ್ನಾಟಕ 6 Dec 2025 8:26 pm

ಕಲಬುರಗಿ| ಡಾ.ಅಂಬೇಡ್ಕರ್ ಪರಿನಿರ್ವಾಣ: ದಸಂಸ ವತಿಯಿಂದ ಸದಸ್ಯತ್ವ ನೋಂದಣಿ

ಕಲಬುರಗಿ: ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ರವರ 69ನೇ ಪರಿನಿರ್ವಾಣ ದಿನದ ನಿಮಿತ್ತ ಕರ್ನಾಟಕ ದಲಿತ ಸಂಘರ್ಷ ಸಮಿತಿ ಸೇಡಂ ತಾಲೂಕು ಸಮಿತಿಯ ನೇತೃತ್ವದಲ್ಲಿ ಸದಸ್ಯತ್ವದ ನೋಂದಣಿ ಕಾರ್ಯಕ್ರಮ ನಡೆಯಿತು. ಜಿಲ್ಲಾ ಸಂಘಟನಾ ಸಂಚಾಲಕರಾದ ಮಾರುತಿ ಹುಳಗೋಳಕರ ಸದಸ್ಯತ್ವ ನೋಂದಣಿ ಮಾಡುವ ಮೂಲಕ ತಾಲೂಕಿನ ಕಾರ್ಯಕರ್ತರ ಸದಸ್ಯತ್ವ ಸಂಖ್ಯೆ ಹೆಚ್ಚಿಸಲು ತಾಲೂಕು ಸಮಿತಿಗೆ ಕರೆ ನೀಡಿದರು. ಸಂಘಟನೆಯು ಸಾಮಾಜಿಕ, ಅರ್ಥಿಕ, ರಾಜಕೀಯ ಹಾಗೂ ಶೈಕ್ಷಣಿಕ ಕುಂದುಕೊರತೆಗಳನ್ನು ನಿವಾರಿಸಲು ಕರ್ನಾಟಕ ದಲಿತ ಸಂಘರ್ಷ ಸಮಿತಿ ನಿರಂತರ ಪ್ರಯತ್ನಿಸುತ್ತಿದೆ. ರಾಜ್ಯ ಪ್ರಧಾನ ಸಂಚಾಲಕರು ಮಾವಳ್ಳಿ ಶಂಕರ ಅವರು ಅಧ್ಯಯನ ಶಿಬಿರ, ಬುದ್ಧ ಬಸವ ಮತ್ತು ಅಂಬೇಡ್ಕರ್ ರವರ ಜಾಗೃತಿ ಮೂಡಿಸುವ ಕಾರ್ಯಕ್ರಮ ನಿರಂತರ ಮಾಡುತ್ತಾ ಬರುತ್ತಿದ್ದಾರೆ ಎಂದು ಹೇಳಿದರು.  ಕಾರ್ಯಕ್ರಮದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ತಾಲೂಕು ಸಂಚಾಲಕರಾದ ರಾಜು ಡಿ.ಟಿ, ಸಂಘಟನಾ ಸಂಚಾಲಕ ಅಶೋಕ ಬೇಡಕಪಳ್ಳಿ, ಪ್ರವೀಣ ಕುಮಾರ್ ಮಂತ್ರಿ, ಕಾರ್ಯಕರ್ತರಾದ ವಿಠಲ್ ಭರಮಕರ, ಸುನೀಲ್‌ ಕುಮಾರ್‌ ಕೊಳ್ಳಿ, ಹಣಮಂತ ಸಾಗರ, ದೇವಿಂದ್ರ ಹೆಗಡೆ, ಮನೋಹರ ದೊಡ್ಡಮನಿ, ಸಂಜುಕುಮಾರ್‌ ಹೊಸಳ್ಳಿ, ರಾಮಣ್ಣ ಹಳ್ಳಿ, ದಶರಥ ಹೊಸಮನಿ, ಅವಿನಾಶ್ ದೇಗಲಮಡಿ, ಲೋಹಿತ್ ಛೋಟಿಗಿರಣಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ವಾರ್ತಾ ಭಾರತಿ 6 Dec 2025 8:25 pm

AIನಿಂದ ಶೇ.80ರಷ್ಟು ಉದ್ಯೋಗ ಕಡಿತ; ಕಳವಳ ವ್ಯಕ್ತಪಡಿಸಿದ AI ಗುರು

ಮುಂದೊಂದು ದಿನ AI CEOನೂ ಆಗಬಹುದು, ಸರ್ಜರಿಯೂ ಮಾಡಬಹುದು!

ವಾರ್ತಾ ಭಾರತಿ 6 Dec 2025 8:16 pm

ಮಂಗಳೂರು | ʼಮೀಫ್ ಸುಲ್ತಾನ್ ಕಪ್-2025ʼ ಇಂಟರ್-ಸ್ಕೂಲ್ ಫುಟ್ಬಾಲ್ ಪಂದ್ಯಾಟ

ಮಂಗಳೂರು, ಡಿ.6: ಮುಸ್ಲಿಂ ಶಿಕ್ಷಣ ಸಂಸ್ಥೆಗಳ ಒಕ್ಕೂಟ (ಮೀಫ್)ದ ಬೆಳ್ಳಿಹಬ್ಬದ ಪ್ರಯುಕ್ತ ದ.ಕ. ಮತ್ತು ಉಡುಪಿ ಜಿಲ್ಲಾ ಮಟ್ಟದ ಮೀಫ್-ಸುಲ್ತಾನ್ ಕಪ್-2025 ಇಂಟರ್-ಸ್ಕೂಲ್ ಫುಟ್ಬಾಲ್ ಪಂದ್ಯಾಟವು ಶನಿವಾರ ನಗರದ ನೆಹರೂ ಮೈದಾನದಲ್ಲಿ ನಡೆಯಿತು. ಮಂಗಳೂರು ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಪಂದ್ಯಾಟ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕೆ ಕ್ರೀಡೆಗಳು ಅತ್ಯಂತ ಅಗತ್ಯವಾಗಿದೆ. ಶಿಸ್ತು, ತಂಡ ಭಾವನೆ ಮತ್ತು ಸ್ಪರ್ಧಾತ್ಮಕತೆ ಇತ್ಯಾದಿ ಮೌಲ್ಯಗಳನ್ನು ಕ್ರೀಡಾ ವೇದಿಕೆಗಳು ಪರಿಣಾಮಕಾರಿಯಾಗಿ ಬೆಳೆಸುತ್ತವೆ ಎಂದು ಹೇಳಿದರು. ಕುನಿಲ್ ಶಾಲೆಯ ಉಪಾಧ್ಯಕ್ಷ ಪಿ.ಎಸ್.ಮೊಯ್ದಿನ್, ಅಝಾದ್ ಗ್ರೂಪ್ಸ್ ಮಂಗಳೂರು ಮುಖ್ಯಸ್ಥ ಮನ್ಸೂರ್ ಅಹ್ಮದ್ ಅಝಾದ್, ದ.ಕ.ಜಿಲ್ಲಾ ಫುಟ್ಬಾಲ್ ಅಸೋಸಿಯೇಶನ್ ಅಧ್ಯಕ್ಷ ಡಿ.ಎಂ.ಅಸ್ಲಂ ಅತಿಥಿಗಳಾಗಿ ಭಾಗವಹಿಸಿದ್ದರು. ಸಂಜೆ ನಡೆದ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಸುಲ್ತಾನ್ ಗೋಲ್ಡ್ ಆ್ಯಂಡ್ ಡೈಮಂಡ್‌ನ ವ್ಯವಸ್ಥಾಪಕ ನಿರ್ದೇಶಕ ರವೂಫ್ ಸುಲ್ತಾನ್ ವಿಜೇತರಿಗೆ ಟ್ರೋಫಿ ವಿತರಿಸಿದರು. ದ.ಕ. ಮತ್ತು ಉಡುಪಿ ಜಿಲ್ಲೆಯ ವಿವಿಧ ಶಾಲೆಗಳ 34 ತಂಡಗಳ ಸುಮಾರು 500ರಷ್ಟು ವಿದ್ಯಾರ್ಥಿಗಳು ಭಾಗವಹಿಸಿದ್ದ ಈ ಸ್ಪರ್ಧೆಯಲ್ಲಿ ಕುನಿಲ್ ಇಲ್ಮ್ ಅಕಾಡಮಿ ನಾಟೇಕಲ್ (ಪ್ರಥಮ) ಮತ್ತು ಎ.ಆರ್.ಕೆ. ಇಂಗ್ಲಿಷ್ ಮೀಡಿಯಂ ಸ್ಕೂಲ್ ಬೆಂಗ್ರೆ (ದ್ವಿತೀಯ) ಹಾಗೂ ಬೆಂಗ್ರೆ ಎಆರ್‌ಕೆ ಇಂಗ್ಲಿಷ್ ಮೀಡಿಯಂ ಸ್ಕೂಲ್‌ನ ನಿಹಾನ್ (ಅತ್ಯುತ್ತಮ ಡಿಫೆಂಡರ್), ನಾಟೆಕಲ್‌ನ ಕುನಿಲ್ ಇಲ್ಮ್ ಅಕಾಡಮಿಯ ಸುಹೈಲ್ (ಅತ್ಯುತ್ತಮ ಗೋಲ್‌ಕೀಪರ್) ಮತ್ತು ಇಜಾಝ್‌ (ಅತ್ಯುತ್ತಮ ಸ್ಟ್ರೈಕರ್) ಆಗಿ ಮಿಂಚಿದರು. ಟೂರ್ನಿಯಲ್ಲಿ ಭಾಗವಹಿಸಿದ ಕ್ರೀಡಾಪಟುಗಳಿಗೆ ಬೆಳ್ತಂಗಡಿಯ ಮನ್‌ಶರ್ ಪ್ಯಾರಾ ಮೆಡಿಕಲ್ ಕಾಲೇಜ್ ವತಿಯಿಂದ ಉಚಿತ ಪ್ರಥಮ ಚಿಕಿತ್ಸೆ ಮತ್ತು ಮೀಫ್ ಕಾರ್ಯಕಾರಿ ಸಮಿತಿ ಸದಸ್ಯರಿಗೆ ಉಚಿತ ರಕ್ತದೊತ್ತಡ, ಮಧುಮೇಹ ಪರೀಕ್ಷೆ ನಡೆಸಲಾಯಿತು. ಮೀಫ್ ಕೇಂದ್ರ ಘಟಕದ ಅಧ್ಯಕ್ಷ ಮೂಸಬ್ಬ ಪಿ. ಬ್ಯಾರಿ ಅಧ್ಯಕ್ಷತೆ ವಹಿಸಿದರು. ಉಪಾಧ್ಯಕ್ಷ ಪರ್ವೇಝ್ ಅಲಿ, ಸಂಚಾಲಕ ಅದಿಲ್ ಸೂಫಿ, ಸಮಿತಿ ಸದಸ್ಯರಾದ ಬಿ.ಎ.ನಝೀರ್, ಇಕ್ಬಾಲ್ ಕೃಷ್ಣಾಪುರ, ಅಡ್ವಕೇಟ್ ಒಮರ್ ಫಾರೂಕ್, ಅನ್ವರ್ ಗೂಡಿನಬಳಿ, ರಹ್ಮತುಲ್ಲಾ ಬುರೂಜ್, ಫಾರೂಕ್ ಏರ್‌ಲೈನ್ಸ್, ರಝಾಕ್ ಹಜಾಜ್ ಪಾಲ್ಗೊಂಡಿದ್ದರು. ಪ್ರಧಾನ ಕಾರ್ಯದರ್ಶಿ ರಿಯಾಝ್ ಅಹ್ಮದ್ ಕೆ.ಬಿ. ಸ್ವಾಗತಿಸಿದರು. ಕ್ರೀಡಾ ಕಾರ್ಯದರ್ಶಿ ಮುಹಮ್ಮದ್ ಶಾರಿಕ್ ಕಾರ್ಯಕ್ರಮ ನಿರೂಪಿಸಿದರು. ಸಂಚಾಲಕ ಅಝೀಝ್ ಅಂಬರ್‌ವ್ಯಾಲಿ ವಂದಿಸಿದರು.

ವಾರ್ತಾ ಭಾರತಿ 6 Dec 2025 8:13 pm

ಡಿಕೆ ಶಿವಕುಮಾರ್ ಸಿಎಂ ಆದರೆ ರಾಜ್ಯದ ಸ್ಥಿತಿ ಅಧೋಗತಿಗೆ ತಲುಪುತ್ತದೆ : ಮಾಜಿ ಸಚಿವ ಶ್ರೀರಾಮುಲು ವಾಗ್ದಾಳಿ

ಹೊಸಪೇಟೆ : ಡಿಕೆ ಶಿವಕುಮಾರ್ ಒಂದು ವೇಳೆ ಸಿಎಂ ಆದ್ರೆ ರಾಜ್ಯ ಅಧೋಗತಿಗೆ ಹೋಗುತ್ತದೆ ಮಾಜಿ ಸಚಿವ ಶ್ರೀರಾಮುಲು ವಾಗ್ದಾಳಿ ನಡೆಸಿದ್ದಾರೆ. ನಗರದ ಬಿಜೆಪಿ ಕಚೇರಿಯಲ್ಲಿ ನೂತನ ಸದಸ್ಯರ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಮಾಜಿ ಸಚಿವ ಶ್ರೀರಾಮುಲು, ಕಾಂಗ್ರೆಸ್ ನಾಯಕರ ಶಕ್ತಿ ಪ್ರದರ್ಶನ ನಡೆಯುತ್ತಿದೆ. ನಾಯಕರು ಹೋದಲ್ಲೆಲ್ಲ ನೀವೇ ಸಿಎಂ, ನೀವೇ ಸಿಎಂ ಎಂದು ಘೋಷಣೆ ಕೂಗುತ್ತಿದ್ದಾರೆ. ದೇಶದಲ್ಲಿ ಕೇವಲ ಮೂರು ರಾಜ್ಯಗಳಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದೆ. ಕರ್ನಾಟಕದಲ್ಲಿ ಆದಾಯ ಚೆನ್ನಾಗಿದೆ. ಅಧಿವೇಶನದಲ್ಲಿ ರೈತರು, ಖರೀದಿ ಕೇಂದ್ರ, ಭ್ರಷ್ಟಾಚಾರದ ಬಗ್ಗೆ ಧ್ವನಿ ಎತ್ತಲಿದ್ದೇವೆ ಎಂದು ಹೇಳಿದರು.   ರಾಜ್ಯದಲ್ಲಿ ದೊಡ್ಡ ಮಟ್ಟದಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ. ಸರಕಾರದ ನಿರ್ಲಕ್ಷ್ಯದಿಂದ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಸರಕಾರ ಎಲ್ಲಾ ರೀತಿಯಲ್ಲಿ ದಿವಾಳಿ ಆಗಿದೆ. ರಷ್ಯಾದ ಅಧ್ಯಕ್ಷ ಪುಟಿನ್ ಭಾರತಕ್ಕೆ ಬಂದು ಒಪ್ಪಂದ ಮಾಡಿಕೊಂಡಿದ್ದಾರೆ. ಭಾರತ ಎಷ್ಟು ಬಲಿಷ್ಠವಾಗಿದೆ ಎಂಬುದು ಗೊತ್ತಾಗುತ್ತದೆ. ಅಮೆರಿಕವನ್ನು ಎದುರಿಸುವ ಶಕ್ತಿ ಇರುವುದು ಭಾರತಕ್ಕೆ ಮಾತ್ರ ಎಂದು ಹೇಳಿದರು.  

ವಾರ್ತಾ ಭಾರತಿ 6 Dec 2025 8:07 pm

ಕುಂದಾಪುರ | ನ್ಯಾಯಾಂಗ ವ್ಯವಸ್ಥೆಯಲ್ಲಿ ಸಾಮರಸ್ಯದ ಕೆಲಸ ಅಗತ್ಯ : ನ್ಯಾ.ವಿಭು ಬಖ್ರು

ಕೆರಾಡಿಯಲ್ಲಿ ಕಾನೂನು ಅರಿವು -ನೆರವು ಶಿಬಿರ ಉದ್ಘಾಟನೆ

ವಾರ್ತಾ ಭಾರತಿ 6 Dec 2025 8:04 pm

ಉಡುಪಿ | ಸಂಗೀತ ಸಹಿತ ಎಲ್ಲ ಕ್ಷೇತ್ರಗಳಿಗೂ ಎಐ ಬಹಳ ದೊಡ್ಡ ಸವಾಲು : ಡಾ.ಬಿ.ಎ.ವಿವೇಕ ರೈ

ಎರಡು ದಿನಗಳ ಕರಾವಳಿ ಭಜನಾ ಸಮಾವೇಶ

ವಾರ್ತಾ ಭಾರತಿ 6 Dec 2025 7:57 pm

ಚಕ್ಕಮಕ್ಕಿ | ಡಿ.8ರಂದು ದಾರುಲ್ ಬಯಾನ್ ಖಲಂದರಿಯಾ ಸಂಸ್ಥೆಯಲ್ಲಿ ಸಿಲ್ವರ್ ಜುಬಿಲಿ ಮಹಾಸಮ್ಮೇಳನ

ಕೊಟ್ಟಿಗೆಹಾರ : ಮೂಡಿಗೆರೆ ತಾಲೂಕಿನ ಚಕ್ಕಮಕ್ಕಿಯ ದಾರುಲ್ ಬಯಾನ್ ಖಲಂದರಿಯಾ ಎಜುಕೇಷನ್ ಇನ್‌ಸ್ಟಿಟ್ಯೂಟ್ ಡಿ.8ರಂದು ಕ್ಯಾಂಪಸ್ ಆವರಣದಲ್ಲಿ ಸಿಲ್ವರ್ ಜುಬಿಲಿ ಮಹಾಸಮ್ಮೇಳನವನ್ನು ಆಯೋಜಿಸಿದೆ. ಕಾರ್ಯಕ್ರಮ ಸಾಯಂಕಾಲ 4 ಗಂಟೆಗೆ ಆರಂಭಗೊಳ್ಳಲಿದ್ದು, ಮುಖ್ಯ ಅತಿಥಿಗಳಾಗಿ ಸಯ್ಯಿದುಲ್ ಉಲಮಾ ಸಯ್ಯಿದ್ ಜಿಪ್ರಿ ಮುತ್ತುಕೋಯ ತಂಙಳ್‌, ಶೈಖುನಾ ಉಸ್ಮಾನ್ ಫೈಝಿ ತೊಡಾರು, ಮೊಯ್ದ ಫೈಝಿ ಕೊಡಗು, ಇರ್ಷಾದ್ ದಾರಿಮಿ ಅಲ್ ಜಝರಿ ಮಿತ್ತಬೈಲ್, ನವಾಝ್‌ ಮನ್ನಾನಿ ಪಣವೂರು ಮತ್ತಿತರರು ಉಪಸ್ಥಿತರಿರಲಿದ್ದಾರೆ. ಸಮಾರಂಭದ ಅಂತ್ಯದಲ್ಲಿ ಶೈಖುನಾ ಬಂಬ್ರಾಣ ಅಬ್ದುಲ್ ಖಾದರ್ ಖಾಸಿಮಿ ಅವರು ದುಆ ನೆರವೇರಿಸಲಿದ್ದಾರೆ ಎಂದು ಆಯೋಜಕರು ತಿಳಿಸಿದ್ದಾರೆ.

ವಾರ್ತಾ ಭಾರತಿ 6 Dec 2025 7:56 pm

ಅಂಬೇಡ್ಕರ್ ಶ್ರೇಷ್ಠ ಸಂವಿಧಾನವನ್ನು ನೀಡಿದ್ದಾರೆ: ಶಾಸಕ ಚೆನ್ನಾರೆಡ್ಡಿ ಪಾಟೀಲ್

ಯಾದಗಿರಿ: ಸಂವಿಧಾನ ಶಿಲ್ಪಿ ಡಾಬಿಆರ್ ಅಂಬೇಡ್ಕರ್ ರವರ 69ನೇ ಮಹಾಪರಿನಿರ್ವಾಣ ದಿನದ ಅಂಗವಾಗಿ ಶಾಸಕ ಚೆನ್ನಾರೆಡ್ಡಿ ಪಾಟೀಲ್ ತುನ್ನೂರ್‌ ಅವರು ನಗರದ ಅಂಬೇಡ್ಕರ್ ಸರ್ಕಲ್‌ನಲ್ಲಿರುವ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ಸಮರ್ಪಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಚೆನ್ನಾರೆಡ್ಡಿ ಪಾಟೀಲ್, ಜಗತ್ತೇ ಮೆಚ್ಚುವಂತಹ ಮತ್ತು ಸರ್ವ ಸಮುದಾಯಗಳಿಗೆ ಸಮಾನ ಅವಕಾಶ, ನ್ಯಾಯ ಸಿಗುವಂತಹ ಶ್ರೇಷ್ಠ ಸಂವಿಧಾನ ನೀಡಿದವರು ಡಾ.ಬಿ.ಆರ್.ಅಂಬೇಡ್ಕರ್ ಅವರು ಎಂದು ಬಣ್ಣಿಸಿದರು. ನ್ಯಾಯವಾದಿ, ಅರ್ಥಶಾಸ್ತ್ರಜ್ಞ, ತತ್ವಜ್ಞಾನಿ, ಸಮಾಜ ಸುಧಾರಕ ಮತ್ತು ರಾಷ್ಟ್ರನಿರ್ಮಾಣಕಾರರಾಗಿ ಅವರ ಅವಿರತ ಶ್ರಮ ಮತ್ತು ಪ್ರಯತ್ನಗಳು ಆಧುನಿಕ ಭಾರತಕ್ಕೆ ಭದ್ರ ಬುನಾದಿ ಹಾಕಿವೆ ಎಂದು ಹೇಳಿದರು. ಜಿಲ್ಲಾಡಳಿತದ ಪರವಾಗಿ ಮಾಲಾರ್ಪಣೆ ಮಾಡಿ ಮಾತನಾಡಿದ ಡಿಸಿ ಹರ್ಷಲ್ ಭೋಯರ್, ಪ್ರಜಾಪ್ರಭುತ್ವ ವ್ಯವಸ್ಥೆಗೆ ಡಾ.ಅಂಬೇಡ್ಕರ್ ಅವರು ಅತ್ಯುತ್ತಮ ಸಂವಿಧಾನ ನೀಡುವ ಮೂಲಕ ರಾಷ್ಟ್ರದ ಅಭಿವೃದ್ಧಿಗೆ ಭದ್ರ ಬುನಾದಿ ಹಾಕಿದ್ದಾರೆ ಎಂದು ಹೇಳಿದ್ದಾರೆ.   ಈ ಸಂದರ್ಭದಲ್ಲಿ ನಗರಸಭೆ ಪೌರಾಯುಕ್ತ ಉಮೇಶ್‌ ನಾಯಕ್‌, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರಾದ ಎಸ್ ಎಸ್ ಚನ್ನಬಸಪ್ಪ, ತಹಶೀಲ್ದಾರ್ ಸುರೇಶ್ ಅಂಕಲಗಿ, ಸಹಾಯಕ ನಿರ್ದೇಶಕರಾದ ಬೆಬಿ ಲಕ್ಷ್ಮಣ ಹುಲಸವಾರ್, ನಿಲಯ ಮೇಲ್ವಿಚಾರಕರಾದ ದೇವಿಂದ್ರಪ್ಪ, ಮುಹಮ್ಮದ್‌ ಹುಸೇನಿ, ನಿಂಗಣ್ಣ ಸೇರಿ, ಸುನೀಲ್‌ ಪವಾರ್, ನ್ಯಾಯವಾದಿ ಮಹೇಶ್‌ ಎಸ್ ಕುರಕುಂಬಳ, ಕುಪೇಂದ್ರ ವಠಾರ್, ಶ್ಯಾಮಸನ್ ಮಾಲಿಕೆರಿ. ಮಲ್ಲಣ್ಣ ದಾಸನಕೆರಿ, ಭೀಮರಾಯ ಬೊಮ್ಮನ್, ಮಲ್ಲಿಕಾರ್ಜುನ್ ಈಟಿ, ಮಹೇಶ್ ಕುರುಕುಂಬಳ, ಕೈಲಾಸ ಅನ್ವರ್, ಶರಣು ನಾಟೇಕರ್, ಸ್ವಾಮಿ ದೇವ್ ದಾಸನ ಕೇರಿ, ಮಂಜುನಾಥ್ ದಾಸನಕೇರಿ, ನಿಂಗಪ್ಪ ಬೀರ್ನಾಳ್, ಭೀಮಪ್ಪ ಕಾಗಿ, ಮಲ್ಲಿಕಾರ್ಜುನ್, ಶ್ರೀಮಂತ ಚಿನ್ನಕರ್, ಗಾಲಿ ಪಟೇಲ್, ಚಂದ್ರಕಾಂತ್ ಚಲವಾದಿ, ಅವಿನಾಶ್ ಅನ್ವರ್, ವಸಂತ್ ಕುಮಾರ್, ಸಂಪತ್ ಕುಮಾರ್, ಮಂಜುನಾಥ್, ಶ್ರೀಕಾಂತ್ ಸುಂಗಲ್ ಉಪಸ್ಥಿತರಿದ್ದರು.

ವಾರ್ತಾ ಭಾರತಿ 6 Dec 2025 7:53 pm

ಇನ್ನು ಬೆಂಗಳೂರಲ್ಲಿ ಪಾಸ್ ಪೋರ್ಟ್ ಅರ್ಜಿ ಸ್ವೀಕಾರ, ವಿಲೇವಾರಿ ನಿಮ್ಮ ಮನೆ ಮುಂದೆಯೇ! ಮೊಬೈಲ್ ವ್ಯಾನ್ ಮೂಲಕ ಸೇವೆ

ನಾಗರಿಕರ ಅನುಕೂಲಕ್ಕಾಗಿ ಬೆಂಗಳೂರಿನಲ್ಲಿ ಮೊಬೈಲ್ ಪಾಸ್‌ಪೋರ್ಟ್ ವ್ಯಾನ್ ಸೇವೆಗೆ ಚಾಲನೆ ನೀಡಲಾಗಿದೆ. ಯಲಹಂಕದಲ್ಲಿ ಆರಂಭವಾಗಿರುವ ಈ ಸೇವೆಯ ಮೂಲಕ, ಆನ್‌ಲೈನ್ ಅಪಾಯಿಂಟ್‌ಮೆಂಟ್ ಪಡೆದು, ನಿಮ್ಮ ಮನೆಯ ಸಮೀಪದಲ್ಲೇ ಪಾಸ್‌ಪೋರ್ಟ್ ಪ್ರಕ್ರಿಯೆ ಪೂರ್ಣಗೊಳಿಸಬಹುದು. ಬಯೋಮೆಟ್ರಿಕ್ ಸಂಗ್ರಹಿಸಿ, ಪಾಸ್‌ಪೋರ್ಟ್ ನಿಮ್ಮ ಮನೆ ಬಾಗಿಲಿಗೆ ಬರುತ್ತದೆ. ಯಶಸ್ವಿ ಅನುಷ್ಠಾನದ ಬಳಿಕ, ಈ ಸೇವೆ ನಗರದ ಇತರ ಭಾಗಗಳಿಗೂ ವಿಸ್ತರಿಸುವ ಗುರಿ ಇದೆ.

ವಿಜಯ ಕರ್ನಾಟಕ 6 Dec 2025 7:52 pm

ಮಂಗಳೂರು | ಕ್ರೀಡೆಯ ಮೂಲಕ ಮಾದಕ ವ್ಯಸನ ಮುಕ್ತ ಸಮಾಜದ ನಿರ್ಮಾಣಕ್ಕೆ ಪ್ರಯತ್ನ : ಇಮ್ತಿಯಾಝ್‌ ಗೋಳ್ತಮಜಲು

ಯುಇಎ ವತಿಯಿಂದ ಕಬಡ್ಡಿ, ವಾಲಿಬಾಲ್ ಆಟಗಾರರ ಆಯ್ಕೆ ಪಂದ್ಯಾಟ

ವಾರ್ತಾ ಭಾರತಿ 6 Dec 2025 7:52 pm

ಬಂಟ್ವಾಳ | ಅಕ್ಷರ ದಾಸೋಹ ನೌಕರರ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಎಐಸಿಸಿಟಿಯು ವತಿಯಿಂದ ಪ್ರತಿಭಟನೆ

ಬಂಟ್ವಾಳ : ಕೇಂದ್ರ ಸರಕಾರವು ಕಾರ್ಮಿಕ ಕಾಯ್ದೆಗಳನ್ನು ತಿದ್ದುಪಡಿ ಮಾಡಿ ಕಾರ್ಮಿಕ ಸಂಹಿತೆಗಳಾಗಿ ಮಾಡಿರುವುದನ್ನು ತಡೆಯಲು ಹಾಗೂ ಅಕ್ಷರ ದಾಸೋಹ ನೌಕರರ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಎಐಸಿಸಿಟಿಯು ದ.ಕ ಜಿಲ್ಲಾ ಸಮಿತಿ ವತಿಯಿಂದ ಬಿ.ಸಿ.ರೋಡ್ ಮಿನಿ ವಿಧಾನ ಸೌಧದ ಮುಂಭಾಗ ಪ್ರತಿಭಟನೆ ನಡೆಯಿತು. ಪ್ರತಿಭಟನ್ನುದ್ದೇಶಿಸಿ ಎಐಸಿಸಿಟಿಯು ದ.ಕ.ಜಿಲ್ಲಾದ್ಯಕ್ಷ ರಾಮಣ್ಣ ವಿಟ್ಲ, ಜಿಲ್ಲಾ ಕಾರ್ಯದರ್ಶಿ ಮೋಹನ್ ಕೆ.ಇ. . ಕೊಡಗು ಜಿಲ್ಲಾಧ್ಯಕ್ಷ ಮೋಹನ್ ವಿರಾಜ್ ಪೇಟೆ ಮಾತನಾಡಿದರು. ಸಜೇಶ್ ವಿಟ್ಲ, ಸುಲೈಮಾನ್ ಕೆಲಿಂಜ, ಸಂಜೀವ ಬೆಳ್ತಂಗಡಿ, ಅಕ್ಷರ ದಾಸೋಹ ನೌಕರರ ಸಂಘದ ಅಧ್ಯಕ್ಷೆ ಜಯಶ್ರೀ ಆರ್.ಕೆ, ಕಾರ್ಯದರ್ಶಿ ವಾಣಿಶ್ರೀ , ಮುಂತಾದವರು ಭಾಗವಹಿಸಿದ್ದರು. ಪ್ರತಿಭಟನೆಯ ಬಳಿಕ ಬಂಟ್ವಾಳ ತಹಶೀಲ್ದಾರರ ಮೂಲಕ ಕಾರ್ಮಿಕ ಸಚಿವರಿಗೆ ಮನವಿ ಸಲ್ಲಿಸಲಾಯಿತು .

ವಾರ್ತಾ ಭಾರತಿ 6 Dec 2025 7:48 pm

ನಮ್ದೇನೂ ತಪ್ಪಿಲ್ಲ, MLC ಕಿಶೋರ್‌ ಕುಮಾರ್ ಪತ್ನಿಯನ್ನು ಮೋದಿಯವರ ಸ್ವಾಗತಕ್ಕೆ ಕಳಿಸಿದ್ದನ್ನು ಸಮರ್ಥಿಸಿಕೊಳ್ಳುತ್ತೇನೆ: BJP ಜಿಲ್ಲಾಧ್ಯಕ್ಷ ಸತೀಶ್ ಕುಂಪಲ

ವಿಟ್ಲ, ಡಿ.6: ‘ಪಕ್ಷದ ಓರ್ವ ಸಾಮಾನ್ಯ ಮಹಿಳಾ ಕಾರ್ಯಕರ್ತರಾಗಿರುವ MLC ಕಿಶೋರ್ ಕುಮಾರ್‌ ರ ಪತ್ನಿಯನ್ನು ಪ್ರಧಾನಿಯವರ ಸ್ವಾಗತಕ್ಕೆ ಕಳುಹಿಸಿರುವುದರಲ್ಲಿ ಯಾವುದೇ ತಪ್ಪಿಲ್ಲ. ಪಕ್ಷದ ಮಹಿಳಾ ಮೋರ್ಚಾದಲ್ಲಿ ಕೆಲಸ ಮಾಡಿರುವ, ಕಿಶೋರ್‌ ರ ಪತ್ನಿಯನ್ನು ಪ್ರಧಾನಿಯ ಸ್ವಾಗತಕ್ಕೆ ಕಳುಹಿಸಿರುವುದನ್ನು ಜಿಲ್ಲಾಧ್ಯಕ್ಷನಾಗಿ ಸಮರ್ಥಿಸಿಕೊಳ್ಳುತ್ತೇನೆ’ ಎಂದು BJP ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಹೇಳಿದ್ದಾರೆ. ವಿಟ್ಲದಲ್ಲಿಂದು ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಪ್ರಧಾನಿಯವರು ಉಡುಪಿ ಕಾರ್ಯಕ್ರಮಕ್ಕೆ ಆಗಮಿಸಿದ್ದ ಕಾರಣ ಅಲ್ಲಿಯವರು ಎಲ್ಲ ನಿಭಾಯಿಸಿದ್ದು, ದಕ್ಷಿಣ ಕನ್ನಡ ಜಿಲ್ಲೆಯಿಂದ ಕೆಲವರಿಗೆ ಅವಕಾಶ ಕಲ್ಪಿಸಲಾಗಿತ್ತು. ಸಾಮಾನ್ಯ ಕಾರ್ಯಕರ್ತರಿಗೂ ಅವಕಾಶ ನೀಡಲಾಗಿದೆ. ಅದೇ ರೀತಿ ಮಹಿಳಾ ಮೋರ್ಚಾದಲ್ಲಿ ಕೆಲಸ ಮಾಡುವ ವಿಧಾನ ಪರಿಷತ್ ಸದಸ್ಯರ ಪತ್ನಿಗೂ ಅವಕಾಶ ನೀಡಲಾಗಿದೆ. ಇದರಲ್ಲಿ ನಾವು ಯಾವುದೇ ತಪ್ಪು ಮಾಡಿಲ್ಲ ಎಂದು ಹೇಳಿದರು. ವಿಧಾನ ಪರಿಷತ್ ಸದಸ್ಯರ ಪತ್ನಿ ಸಮಾಜದಲ್ಲಿ ಪಕ್ಷದೊಂದಿಗೆ, ಸಂಘಟನೆಯೊಟ್ಟಿಗೆ ಇರುವಂತಹವರು. ಅವರು ಯಾವುದೇ ಅಪರಾಧ ಹಿನ್ನಲೆಯನ್ನು ಹೊಂದಿಲ್ಲ. ಒಬ್ಬ ಸಾಮಾನ್ಯ ಮಹಿಳೆಯನ್ನು ಪ್ರಧಾನಿಯ ಬಳಿಗೆ ಕಳುಹಿಸಿದ್ದನ್ನು ಅನಾವಶ್ಯಕವಾಗಿ ವಿವಾದ ಮಾಡುವ ಬದಲು, ಮುಂದೆ ಇದೇ ರೀತಿ ಅನೇಕ ಕಾರ್ಯಕರ್ತರಿಗೆ ಅವಕಾಶ ನೀಡುವ ಕಾರ್ಯವಾಗಬೇಕೆಂಬುದು ನಮ್ಮ ಆಶಯ ಎಂದರು.

ವಾರ್ತಾ ಭಾರತಿ 6 Dec 2025 7:41 pm

ರಾಯಚೂರು| ಮಹಾಪರಿನಿರ್ವಾಣ ದಿನ: ಸಂವಿಧಾನ ಶಿಲ್ಪಿಗೆ ಗಣ್ಯರಿಂದ ನಮನ

ರಾಯಚೂರು: ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರ ಮಹಾ ಪರಿನಿರ್ವಾಣ ದಿನವನ್ನು ನಗರದ ಡಾ.ಬಿ.ಆರ್ ಅಂಬೇಡ್ಕರ್ ವೃತ್ತದಲ್ಲಿ ಆಚರಿಸಲಾಯಿತು. ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ, ಮಹಾನಗರ ಪಾಲಿಕೆ ಮತ್ತು ಸಮಾಜ ಕಲ್ಯಾಣ ಇಲಾಖೆಯಿಂದ ನಡೆದ ಕಾರ್ಯಕ್ರಮದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಬೀದರ್ ಜಿಲ್ಲೆಯ ಬೌದ್ಧ ಧರ್ಮ ಗುರುಗಳಾದ ಬಂತೇಜಿ, ಕರ್ನಾಟಕ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಅಧ್ಯಕ್ಷರು ಹಾಗೂ ರಾಯಚೂರು ಗ್ರಾಮೀಣ ಕ್ಷೇತ್ರದ ಶಾಸಕರಾದ ಬಸನಗೌಡ ದದ್ದಲ್, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಅಧ್ಯಕ್ಷರಾದ ಮಲ್ಲಿಕಾರ್ಜುನ ಗೌಡ, ಜಿಲ್ಲಾಧಿಕಾರಿಗಳಾದ ನಿತೀಶ್ ಕೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಎಂ.ಪುಟ್ಟಮಾದಯ್ಯ, ರಾಯಚೂರು ಮಹಾನಗರ ಪಾಲಿಕೆಯ ಆಯುಕ್ತರಾದ ಜುಬಿನ್ ಮೊಹಪಾತ್ರ, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರಾದ ಸಿಂಧೂ ರಘು. ಹೆಚ್.ಎಸ್, ಪರಿಶಿಷ್ಟ ಕಲ್ಯಾಣ ವರ್ಗಗಳ ಕಲ್ಯಾಣಾಧಿಕಾರಿಗಳಾದ ಶಿವಮಾನಪ್ಪ, ಸಮಾಜ ಕಲ್ಯಾಣ ಇಲಾಖೆಯ ತಾಲೂಕು ಸಹಾಯಕ ನಿರ್ದೇಶಕರಾದ ಶಿವಪ್ಪ, ಪರಿಶಿಷ್ಟ ಕಲ್ಯಾಣ ವರ್ಗಗಳ ತಾಲೂಕು ಕಲ್ಯಾಣಾಧಿಕಾರಿಗಳಾದ ರುಕ್ಮಿಣೀ ಬಾಯಿ, ಸಮಾಜ ಕಲ್ಯಾಣ ಇಲಾಖೆಯ  ವ್ಯವಸ್ಥಾಪಕರಾದ ರವಿ ಎಂ. ಸೇರಿದಂತೆ ವಿವಿಧ ಇಲಾಖೆಯ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು, ಸಿಬ್ಬಂದಿ, ವಿವಿಧ ಸಂಘ-ಸಂಸ್ಥೆಗಳ ಮುಖಂಡರು ಉಪಸ್ಥಿತರಿದ್ದರು. 

ವಾರ್ತಾ ಭಾರತಿ 6 Dec 2025 7:36 pm