ಕುಂದಾಪುರದ ಯಾಕೂಬ್ ಖಾದರ್ ಗುಲ್ವಾಡಿ ನಿರ್ದೇಶನದ 'ಟ್ರಿಪಲ್ ತಲಾಖ್' ಸಿನೆಮಾ ಗೆ ರಾಜ್ಯ ಪ್ರಶಸ್ತಿ
ಕುಂದಾಪುರ: 2019 ನೇ ಸಾಲಿನ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಗಳನ್ನು ಬುಧವಾರ ಪ್ರಕಟಿಸಲಾಗಿದ್ದು, ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಮೊದಲ ಬಾರಿಗೆ ಕುಂದಾಪುರ ಮೂಲದ ಯಾಕೂಬ್ ಖಾದರ್ ಗುಲ್ವಾಡಿ ಅವರ ಮೊದಲ ನಿರ್ದೇಶನದ ಕನ್ನಡದ ಪ್ರಾದೇಶಿಕ ಭಾಷೆಯಾದ ಬ್ಯಾರಿ ಭಾಷೆಯ ಸಿನಿಮಾ 'ಟ್ರಿಪಲ್ ತಲಾಖ್' ಗೆ ಅತ್ಯುತ್ತಮ ರಾಜ್ಯ ಪ್ರಶಸ್ತಿ ಲಭಿಸಿದೆ. 2017 ರಲ್ಲಿ ಗುಲ್ವಾಡಿ ಟಾಕೀಸ್ ಸಂಸ್ಥೆಯ ಮೂಲಕ ರಿಸರ್ವೇಶನ್ ಎಂಬ ಕನ್ನಡ ಸಿನಿಮಾ ನಿರ್ಮಿಸಿ ಅದಕ್ಕೆ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದ ಚಲನಚಿತ್ರ ಪ್ರಶಸ್ತಿ ಪಡೆದುಕೊಂಡಿತ್ತು. ಇದೀಗ ಇದೇ ಸಂಸ್ಥೆಯ ಬ್ಯಾನರ್ ನಲ್ಲಿ ಬಿಡುಗಡೆಯಾದ ಕನ್ನಡದ ಪ್ರಾದೇಶಿಕ ಭಾಷೆ ಬ್ಯಾರಿ ಭಾಷೆಯ ಸಿನಿಮಾಗೆ ರಾಜ್ಯ ಪ್ರಶಸ್ತಿ ಪಡೆಯುವ ಮೂಲಕ ಸುದ್ದಿ ಮಾಡಿದೆ. ಮುಂಬೈನ ಪ್ರಭನಾರಾಯಣ ಸುವರ್ಣ ಮತ್ತು ಯಾಕೂಬ್ ಖಾದರ್ ಗುಲ್ವಾಡಿ ಜೊತೆಯಾಗಿ ಈ ಸಿನಿಮಾ ನಿರ್ಮಿಸಿದ್ದಾರೆ. 'ಟ್ರಿಪಲ್ ತಲಾಖ್' ಬಗ್ಗೆ ಒಂದಿಷ್ಟು: ತ್ರಿಪಲ್ ತಲಾಖ್ ಸಿನಿಮಾ ಸಮುದಾಯವೊಂದರ ಮಾನವೀಯ ಸಂವೇದನೆಗಳಿಗೆ ಹಿಡಿದ ಭಾವನಾತ್ಮಕ ಕನ್ನಡಿ. ತಲಾಖ್ ಎಂಬ ಮೂರಕ್ಷರವನ್ನು ಒಂದೇ ಉಸಿರಲ್ಲಿ ಮೂರು ಬಾರಿ ಹೇಳಿ ಬಿಟ್ಟರೆ ಸಂಬಂಧಗಳು ಮುರಿದೇ ಹೋಗುತ್ತವೆ ಎಂಬ ಕಲ್ಪನೆಯ ಹಿಂದಿರುವ ನೋವು, ತಲ್ಲಣಗಳಿಗೆ ಮೂರ್ತ ರೂಪ ಕೊಟ್ಟ ಕುಂದಾಪುರದ ಕ್ರಿಯಾಶೀಲ ನಿರ್ದೇಶಕ ಯಾಕೂಬ್ ಖಾದರ್ ಗುಲ್ವಾಡಿಯವರ ಈ ಚಲನಚಿತ್ರ ಒಂದು ಸಾಮಾಜಿಕ ಜವಾಬ್ದಾರಿಯ ರೂಪದಲ್ಲಿ ತೆರೆಯಲ್ಲಿ ಸೆರೆಯಾದ ದೃಶ್ಯಗಳಾಗಿದೆ. ಕುಟುಂಬದ ಮೂಲ ನೆಲೆಯನ್ನೇ ಛಿದ್ರಗೊಳಿಸುವ ಸಮಯ ಸಾಧಕರ ಹಿಂದಿರುವ ನಗ್ನ ಸತ್ಯದ ದರ್ಶನದಂತಿರುವ ಈ ಸಿನಿಮಾ ಸಮುದಾಯದ ಮಹಿಳೆಯರನ್ನು ದಿಗ್ಭ್ರಾಂತಗೊಳಿಸುವ ತಲಾಖ್ ವಿರುದ್ಧ ಜಾಗೃತಿಯ ಸಂದೇಶ ಹರಡುತ್ತಾ ಸಮಸ್ಯೆಯ ದಾರುಣತೆಯನ್ನು ವಿಷಾದೀಕರಿಸುತ್ತಾ ಹೋಗುತ್ತದೆ. ತ್ರಿವಳಿ ತಲಾಖ್ ವಿಚಾರದ ಅಮೂಲಾಗ್ರ ವಿಶ್ಲೇಷಣೆಯೊಂದಿಗೆ ಅಂತರಂಗವನ್ನು ಕೆಣಕುವ ಮತ್ತು ಆತ್ಮ ವಿಮರ್ಶೆ ಮಾಡುವಂತೆ 'ಟ್ರಿಪಲ್ ತಲಾಖ್- ಕುರ್ ಆನ್ ಹೇಳಿಲ್ಲ' ಚಿತ್ರ ಪ್ರೇರೇಪಿಸುತ್ತದೆ. ಬಣ್ಣ ಹಚ್ಚಿದವರು: ಈ ಸಿನಿಮಾಗೆ ಮುಂಬೈಯ ನಾರಾಯಣ ಪ್ರಭಾ ಸುವರ್ಣ ಮತ್ತು ಯಾಕೂಬ್ ಖಾದರ್ ಗುಲ್ವಾಡಿ ನಿರ್ಮಾಪಕರಾಗಿದ್ದು, ಪಿ.ವಿ.ಆರ್ ಸ್ವಾಮಿ ಮತ್ತು ಸತೀಶ್ ಕುಮಾರ್ ಛಾಯಾಗ್ರಹಕರಾಗಿದ್ದರು. ಎಡಿಟರ್ –ಕಲರಿಸ್ಟ್ -ಮೋಹನ್ ಎಲ್ ರಂಗ ಕಹಳೆ, ಸೌಂಡ್ ಮಿಕ್ಸಿಂಗ್ -ಮುನೀಬ್ ಅಹಮದ್, ಹಿನ್ನೆಲೆ ಸಂಗೀತ ಮತ್ತು ಸೌಂಡ್ ಎಫೆಕ್ಟ್ -ಗಿರೀಶ್ ಬಿ.ಎಮ್, ವಸ್ತ್ರವಿನ್ಯಾಸ- ಇಸ್ಮಾಯಿಲ್ ಸರ್ಫುದ್ದೀನ್, ಕಲೆ- ಎ.ಕೆ.ಗುಲ್ವಾಡಿ, ಸಹ ನಿರ್ದೇಶನ –ಪಣಕನ ಹಳ್ಳಿ ಪ್ರಸನ್ನ ಮತ್ತು ರಿಝ್ವಾನ್ ಗುಲ್ವಾಡಿ ಇದ್ದರು. ಕಲಾವಿದರಾಗಿ ರೂಪ ವರ್ಕಾಡಿ, ನವ್ಯ ಪೂಜಾರಿ, ಅಝರ್ ಶಾ, ಮಹಮ್ಮದ್ ಬಡ್ಡೂರ್, ಎಮ್. ಕೆ.ಮಠ, ವಿಶೇಷ ಪಾತ್ರದಲ್ಲಿ ಕುಂದಾಪುರದ ಹಿರಿಯ ವಕೀಲರಾದ ರವಿ ಕಿರಣ್ ಮುರ್ಡೇಶ್ವರ ಮತ್ತು ಎ.ಎಸ್.ಎನ್ ಹೆಬ್ಬಾರ್, ಉಮರ್ ಯು.ಹೆಚ್, ಸುಬ್ರಹ್ಮಣ್ಯ ಶೆಟ್ಟಿ, ನಾರಾಯಣ ಸುವರ್ಣ, ಪ್ರಭಾ ಸುವರ್ಣ, ಎಸ್. ಎಸ್ ಹನೀಫ್, ಜಮಾಲ್ ಕುದ್ರುಮಕ್ಕಿ, ಜಿ.ಟಿ.ಮೊಯಿದೀನ್, ಪಕ್ಕೂರಾಕ, ಬೀಡಿ ಉಸ್ಮಾನಾಕ, ಜಾನೇಟ್, ಅಸ್ಲಮ್ ಕುಂಬ್ರ, ಚಂದ್ರಣ್ಣ, ಸಾದಿಕ್ ಅಲಿ, ಜಾಫರ್, ಕಾವ್ಯ ಮಯ್ಯ, ಆಮೀರ್ ಹಂಝ, ಐಶ್ವರ್ಯ, ಪ್ರತೀಕ್ಷ , ಮಲ್ಲಿಕಾ ಟೀಚರ್, ಮಾಧುರಿ, ಸರೋಜ ಸುರೇಶ್, ಇಕ್ಬಾಲ್ ಎಸ್, ದಿನೇಶ್ ಬೆಟ್ಟ, ಮಾಸ್ಟರ್ ಇಫ್ರಾಝ್, ಮಾಸ್ಟರ್ ಫಹದ್ ಯಾಕೂಬ್, ಬೇಬಿ ಫಹಿಮತುಲ್ ಯುಶ್ರ, ಮಾಸ್ಟರ್ ಸಿಮಾಝ್ ತೆರೆಮೇಲೆ ಕಾಣಿಸಿಕೊಂಡಿದ್ದರು. ಈಗಾಗಲೇ ಈ ಸಿನೆಮಾ ನೈಜೀರಿಯಾದಲ್ಲಿ ನಡೆದ ಅಬುಜ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಮೂರು ವಿಭಾಗದಲ್ಲಿ ಸೆಮಿಫೈನಲ್ ಹಂತ ತಲುಪಿದ್ದು ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಕೂಡ ಭಾರತದ ಉಪ ಭಾಷೆಗಳು ವಿಭಾಗದಲ್ಲಿ ಪ್ರದರ್ಶನ ಕಂಡಿದ್ದಲ್ಲದೆ ಅಮೇರಿಕ, ಇಂಗ್ಲೆಂಡ್ ಸೇರಿದಂತೆ ಹಲವು ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನ ಕಂಡಿದೆ. ಈ ಹಿಂದೆ ನನ್ನ ಮೊದಲ ನಿರ್ಮಾಣದ ರಿಸರ್ವೇಶನ್ ಸಿನಿಮಾಗೆ ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಚಲನಚಿತ್ರೋತ್ಸವ ಪ್ರಶಸ್ತಿ ಬಂದಿತ್ತು. ಸೂಕ್ಷ್ಮ ಸಂವೇದನೆಯ, ಗಟ್ಟಿ ಕಥಾ ಹಂದರವುಳ್ಳ ನನ್ನ ಮೊದಲ ನಿರ್ದೇಶನದ ಟ್ರಿಪಲ್ ತಲಾಖ್ ಗೆ ಕರ್ನಾಟಕದ ಪ್ರಾದೇಶಿಕ ಭಾಷೆಯಾದ ಬ್ಯಾರಿ ಭಾಷೆಯ ರಾಜ್ಯ ಪ್ರಶಸ್ತಿ ಬಂದಿದ್ದು ಸಂತೋಷವಾಗಿದೆ. ಈ ಚಿತ್ರದಲ್ಲಿ ನಟಿಸಿದ ಎಲ್ಲಾ ಕಲಾವಿದರಿಗೂ, ತಂತ್ರಜ್ಞರಿಗೂ, ಸಹ ನಿರ್ಮಾಪಕರಿಗೆ ಮತ್ತು ಸಹಕರಿಸಿದವರಿಗೆ ಕೃತಜ್ಞತೆ. -ಯಾಕೂಬ್ ಖಾದರ್ ಗುಲ್ವಾಡಿ (ಪ್ರಶಸ್ತಿ ವಿಜೇತ ನಿರ್ದೇಶಕ, ನಿರ್ಮಾಪಕ) ಮಹತ್ವಾಕಾಂಕ್ಷೆಯ ' ಟ್ರಿಪಲ್ ತಲಾಖ್' ಚಿತ್ರಕ್ಕೆ ಕರ್ನಾಟಕ ರಾಜ್ಯ ಸರಕಾರವು ಪ್ರಾದೇಶಿಕ ಭಾಷೆಯ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿ ಘೋಷಿಸಿದ್ದು ಸಂತಸ ನೀಡಿದೆ. ಟ್ರಿಪಲ್ ತಲಾಖ್ ಮನೋರಂಜನೆಯ ಜೊತೆಗೆ ಮನ ಕರಗಿಸುವ ಚಿತ್ರವಿದು. ಕಾನೂನು ಸಂದೇಶವನ್ನು ಜನರಿಗೆ ನೀಡುವಲ್ಲಿ ಚಿತ್ರ ಪರಿಣಾಮಕಾರಿಯಾಗಿದೆ. ಚಿತ್ರದ ಕ್ಲೈಮಾಕ್ಸ್ ನಲ್ಲಿನ ನ್ಯಾಯಾಲಯದ ದೃಶ್ಯದಲ್ಲಿ ನ್ಯಾಯಾಧೀಶರಾಗಿ ಪಾತ್ರಮಾಡುವ ಅವಕಾಶ ಸಿಕ್ಕಿತ್ತು. ಗಂಡ- ಹೆಂಡತಿಯ ಬದುಕಿನ ನೈಜಾರ್ಥವನ್ನು ಕಟ್ಟಿ ಕೊಟ್ಟು ಸಂಬಂಧ, ಭಾವನೆಗಳ ಬಗ್ಗೆ ಚಿತ್ರದಲ್ಲಿ ತೆರೆದಿಡಲಾಗಿದೆ. ಸಂವಿಧಾನ ವಿರೋಧಿಯಾಗಿರುವ ತ್ರಿವಳಿ ತಲಾಖ್ ಅಸಿಂಧು ಎಂದು ಸರ್ವೋಚ್ಚ ನ್ಯಾಯಾಲಯದ ತೀರ್ಪನ್ನು ನೀಡಿದ್ದು ಚಿತ್ರದಲ್ಲಿಯೂ ಸಮಾಜಕ್ಕೆ ಉತ್ತಮ ಸಂದೇಶ ನೀಡಲಾಗಿದೆ. - ರವಿಕಿರಣ್ ಮುರ್ಡೇಶ್ವರ, (ಕುಂದಾಪುರದ ಹಿರಿಯ ವಕೀಲರು)
ಮುಂಬೈ | ತಂದೆಗೆ ಹೆದರಿ ಮನೆಯಿಂದ ಓಡಿಹೋಗಿ ಅತ್ಯಾಚಾರದ ಕಥೆ ಕಟ್ಟಿದ ಯುವತಿ
ಮುಂಬೈ: ತಂದೆಗೆ ಹೆದರಿ ಮನೆಯಿಂದ ಓಡಿಹೋದ ಯುವತಿಯೋರ್ವಳು ತನ್ನ ಗುಪ್ತಾಂಗಕ್ಕೆ ಪ್ಲಾಸ್ಟಿಕ್ ನಲ್ಲಿ ಸುತ್ತಿದ ಕಲ್ಲುಗಳು ಮತ್ತು ಸರ್ಜಿಕಲ್ ಬ್ಲೇಡ್ ಹಾಕಿಕೊಂಡು ಅತ್ಯಾಚಾರದ ಕಥೆ ಕಟ್ಟಿದ್ದಾಳೆ ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ. ಮಂಗಳವಾರ ತಡರಾತ್ರಿ ರೈಲ್ವೆ ನಿಲ್ದಾಣದಲ್ಲಿ 20ರ ಹರೆಯದ ಯುವತಿಯೋರ್ವಳು ಪತ್ತೆಯಾಗಿದ್ದು, ಆಕೆಗೆ ಅತ್ಯಾಚಾರವಾಗಿದೆ ಎಂದು ಹೇಳಲಾಗಿತ್ತು. ಆಕೆಯ ಗುಪ್ತಾಂಗದಲ್ಲಿ ಪ್ಲಾಸ್ಟಿಕ್ ನಲ್ಲಿ ಸುತ್ತಿದ ಕಲ್ಲುಗಳು ಮತ್ತು ಸರ್ಜಿಕಲ್ ಬ್ಲೇಡ್ ಪತ್ತೆಯಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿ ಆಟೋ ರಿಕ್ಷಾ ಚಾಲಕನೋರ್ವನನ್ನು ಬಂಧಿಸಲಾಗಿತ್ತು. ಬಂಧಿತ ರಿಕ್ಷಾ ಚಾಲಕನ ಮೇಲೆ ಅತ್ಯಾಚಾರ ಎಸಗಿದ ಆರೋಪ ಹೊರಿಸಲಾಗಿದೆ. ಆದರೆ ಪೊಲೀಸರು ಪ್ರಾಥಮಿಕ ತನಿಖೆಯನ್ನು ನಡೆಸಿದಾಗ ಕಥೆ ಬೇರೆಯದ್ದೇ ಇದೆ ಎಂದು ತಿಳಿದು ಬಂದಿದೆ. ಯುವತಿಯೇ ತನ್ನ ಗುಪ್ತಾಂಗಕ್ಕೆ ಪ್ಲಾಸ್ಟಿಕ್ ನಲ್ಲಿ ಸುತ್ತಿದ ಕಲ್ಲುಗಳು ಮತ್ತು ಸರ್ಜಿಕಲ್ ಬ್ಲೇಡ್ ಹಾಕಿಕೊಂಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸ್ ಮೂಲಗಳು ಸ್ಥಳೀಯ ದಿನಪತ್ರಿಕೆಯೊಂದಕ್ಕೆ ನೀಡಿದ ಮಾಹಿತಿಯ ಪ್ರಕಾರ, ಯುವತಿ ಮುಂಬೈ ಮೆಟ್ರೋಪಾಲಿಟನ್ ಪ್ರದೇಶದ ಟೌನ್ ಶಿಪ್ ನಲಸೊಪಾರಾದಲ್ಲಿರುವ ತನ್ನ ಮನೆಯಿಂದ ಓಡಿ ಹೋಗಿದ್ದಾರೆ. ʼವ್ಯಾಪಾರಿಯಾಗಿರುವ ತಂದೆ ನನಗೆ ಮತ್ತು ನನ್ನ ತಾಯಿಗೆ ದೈಹಿಕವಾಗಿ ನಿಂದನೆ ಮತ್ತು ಹಲ್ಲೆ ನಡೆಸುತ್ತಿದ್ದರು. ಇದರಿಂದ ಮನೆಬಿಟ್ಟು ಬಂದಿದ್ದೇನೆ. ರೈಲ್ವೆ ನಿಲ್ದಾಣದಲ್ಲಿ ಆಟೋ-ರಿಕ್ಷಾ ಚಾಲಕನನ್ನು ಭೇಟಿಯಾಗಿ ತನ್ನ ಸಂಕಷ್ಟ ಮತ್ತು ಕುಟುಂಬದ ಪರಿಸ್ಥಿತಿ ಮತ್ತು ಆತ್ಮಹತ್ಯೆಯ ಆಲೋಚನೆಗಳನ್ನು ಆತನಲ್ಲಿ ಹೇಳಿಕೊಂಡಿದ್ದೇನೆ. ಅವನು ತನ್ನ ಬಗ್ಗೆ ಕನಿಕರ ವ್ಯಕ್ತಪಡಿಸಿ ಮರಳಿ ಮನೆಗೆ ಕರೆದುಕೊಂಡು ಹೋಗುವುದಾಗಿ12 ಕಿ.ಮೀ ದೂರದಲ್ಲಿರುವ ಅರ್ನಾಲಾಕ್ಕೆ ಕರೆದುಕೊಂಡು ಹೋಗಿ ಎರಡು ಬಾರಿ ಅತ್ಯಾಚಾರ ಎಸಗಿದ್ದಾನೆ ಎಂದು ಆಕೆ ಹೇಳಿಕೊಂಡಿದ್ದಾಳೆ ಎಂದು ತಿಳಿಸಿದ್ದಾರೆ. ಆದರೆ ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ. ಮನೆಗೆ ಮತ್ತೆ ಹೋಗಲು ಇಷ್ಟವಿಲ್ಲದ ಯುವತಿ ಗುಪ್ತಾಂಗಕ್ಕೆ ಪ್ಲಾಸ್ಟಿಕ್ ನಲ್ಲಿ ಸುತ್ತಿದ ಕಲ್ಲುಗಳು ಮತ್ತು ಸರ್ಜಿಕಲ್ ಬ್ಲೇಡ್ ಹಾಕಿಕೊಂಡು ಅತ್ಯಾಚಾರದ ಕಥೆ ಹೇಳಿದ್ದಾಳೆ ಎನ್ನುವುದು ಪೊಲೀಸರ ಪ್ರಾಥಮಿಕ ತನಿಖೆಯಿಂದ ಬಯಲಾಗಿದೆ.
ಡಿ.ಕೆ.ಶಿವಕುಮಾರ್ - ಜಾರಕಿಹೊಳಿ ವೈಷಮ್ಯದ ಬೆಂಕಿಗೆ ಟನ್ ಗಟ್ಟಲೆ ತುಪ್ಪ ಸುರಿದ ಜನಾರ್ದನ ರೆಡ್ಡಿ
Fresh Trouble For Congress : ಮುಖ್ಯಮಂತ್ರಿ ಮತ್ತು ಕೆಪಿಸಿಸಿ ಅಧ್ಯಕ್ಷರ ಬದಲಾವಣೆಯ ಬಿಸಿ ತಣ್ಣಗಾಯಿತು ಎನ್ನುವಷ್ಟರಲ್ಲಿ ರಾಜ್ಯ ಕಾಂಗ್ರೆಸ್ಸಿಗೆ ಹೊಸ ಸಂಕಷ್ಟ ಎದುರಾಗುವ ಸಾಧ್ಯತೆಯಿದೆ. ಡಿಸಿಎಂ ಡಿ ಕೆ ಶಿವಕುಮಾರ್ ಅವರು, ಬಿಜೆಪಿ ನಾಯಕ ಶ್ರೀರಾಮುಲು ಅವರನ್ನು ಸಂಪರ್ಕಿಸುತ್ತಿದ್ದಾರೆ. ಆ ಮೂಲಕ, ಸತೀಶ್ ಜಾರಕಿಹೊಳಿ ಅವರನ್ನು ಸೈಡ್ಲೈನ್ ಮಾಡುವ ಹುನ್ನಾರ ಎಂದು ರೆಡ್ಡಿ ಆರೋಪಿಸಿದ್ದು, ಕಾಂಗ್ರೆಸ್ಸಿಗೆ ಹೊಸ ಸಂಕಷ್ಟ ಎದುರಾಗುವಂತೆ ಮಾಡಿದೆ.
IMD Weather Forecast: ಇಂದು ಈ ಭಾಗಗಳಲ್ಲಿ ರಣಭೀಕರ ಮಳೆ ಮುನ್ಸೂಚನೆ
IMD Weather Forecast: ದೇಶದ ಬಹುತೇಕ ರಾಜ್ಯಗಳಲ್ಲಿ ರಣಭೀಕರ ಚಳಿ ಮುಂದುವರೆದಿದೆ. ಇದರ ನಡುವೆಯೂ ಹಲವೆಡೆ ಜಿನುಗು ಮಳೆಯಾಗುತ್ತಿದೆ. ಹಾಗೆಯೇ ಇಂದು (ಜನವರಿ 24) ಈ ಭಾಗಗಳಲ್ಲಿ ಗುಡುಗು ಸಹಿತ ಭಾರೀ ಮಳೆ ಸುರಿಯುವ ಸಾಧ್ಯತೆಯಿದೆ ಎಂದು ಭಾರತೀಯ ಹವಚಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಹಾಗಾದರೆ ಎಲ್ಲೆಲ್ಲಿ ಮಳೆ ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ. ಇದೀಗ
Gold Rate Today ( January 24): ಗೋಲ್ಡ್ ರೇಟ್ ಭಾರೀ ಹೆಚ್ಚಳ: 10 ಗ್ರಾಂ ಚಿನ್ನದ ಬೆಲೆ ಎಷ್ಟಾಗಿದೆ ನೋಡಿ!
ನಿರೀಕ್ಷೆಯಂತೆ ಹೊಸ ವರ್ಷದಲ್ಲಿ ಚಿನ್ನದ ಬೆಲೆ ಗಗನಮುಖಿಯಾಗುತ್ತಿದ್ದು, ಯಾವಾಗಪ್ಪ ಈ ಚಿನ್ನದ ಬೆಲೆ ಇಳಿಯುತ್ತೆ ಎಂದು ಗ್ರಾಹಕರು ಎದುರು ನೋಡುವಂತಾಗಿದೆ. ಚಿನ್ನದ ಬೆಲೆಯಲ್ಲಿ ನಿರಂತರವಾಗಿ ಏರಿಕೆ ಆಗುತ್ತಿದೆ. ಚಿನ್ನಾಭರಣ ಕೊಳ್ಳಲು ಯೋಚಿಸುತ್ತಿರುವವರು ಹಾಗೂ ಚಿನ್ನದ ಮೇಲೆ ಹೂಡಿಕೆ ಮಾಡುವವರಿಗಾಗಿ ಪ್ರತಿನಿತ್ಯದ ಚಿನ್ನದ ಬೆಲೆ ತಿಳಿದುಕೊಳ್ಳಲು ವಿಜಯ ಕರ್ನಾಟಕ ವೆಬ್ಸೈಟ್ ಫಾಲೋ ಮಾಡಿ
ಘಂಟಲಮಲ್ಲಮ್ಮ ಬ್ಯಾರೇಜ್ ನಿರ್ಮಾಣಕ್ಕೆ ಗ್ರೀನ್ ಸಿಗ್ನಲ್ ; ಚಿಕ್ಕಬಳ್ಳಾಪುರ ಜನತೆಗೆ ಸಿಹಿಸುದ್ದಿ ನಿರೀಕ್ಷೆ
ಸಚಿವ ಸ್ಥಾನದ ನಿರೀಕ್ಷೆಯಲ್ಲಿರುವ ಶಾಸಕ ಸುಬ್ಬಾರೆಡ್ಡಿ ಅವರಿಗೆ ಹಲವು ಬಾರಿ ನಿಗಮ ಮಂಡಳಿ ಹುದ್ದೆ ಒಲಿದು ಬಂದರೂ ತಿರಸ್ಕರಿಸಿದ್ದಾರೆ. ಕೊಟ್ಟರೇ ಸಚಿವ ಗಿರಿ ಕೊಡಿ ಎನ್ನುವ ಬೇಡಿಕೆಯೊಂದಿಗೆ ಘಂಟಲಮಲ್ಲಮ್ಮ ಯೋಜನೆಗೆ ಅನುದಾನ ಒದಗಿಸುವ ಬೇಡಿಕೆ ಇಟ್ಟಿದ್ದಾರೆ. ಸದ್ಯಕ್ಕೆ ಸರಕಾರ ಸಹ ಈ ಯೋಜನೆಗೆ ಹಸಿರು ನಿಶಾನೆ ತೋರುವ ಮನಸ್ಸು ಮಾಡಿದಂತಿದೆ. ಸದ್ಯಕ್ಕೆ ಸುಮಾರು 200 ಕೋಟಿ ರೂ.ಗಿಂತ ಹೆಚ್ಚಿನ ವೆಚ್ಚದಲ್ಲಿ ಬ್ಯಾರೇಜ್ ನಿರ್ಮಾಣಕ್ಕೆ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ಪಡೆಯಬೇಕಿದೆ.
ಷೇರುಪೇಟೆ ಹೂಡಿಕೆ ಲಾಭಕ್ಕೆ ಪೂಜೆ: ನಕಲಿ ಗುರೂಜಿ ಮಾತು ನಂಬಿ 13 ಲಕ್ಷ ರೂ. ಕಳೆದುಕೊಂಡ ಬೆಂಗಳೂರು ಮಹಿಳೆ!
Fake Guruji Fraud To Bengaluru Girl : ಬೆಂಗಳೂರಿನಲ್ಲಿ ಮಹಿಳೆಯೊಬ್ಬರಿಗೆ ನಕಲಿ ಗುರೂಜಿ 13 ಲಕ್ಷ ರೂಪಾಯಿ ವಂಚನೆ ಮಾಡಿದ್ದಾನೆ. ಯುವತಿ ಖಾಸಗಿ ಕಂಪನಿ ಉದ್ಯೋಗಿಯಾಗಿದ್ದು, ಷೇರುಪೇಟೆಯಲ್ಲಿ ಹೂಡಿಕೆ ಮಾಡಿದ್ದರು. ಹೆಚ್ಚಿನ ಲಾಭ ಗಳಿಸಿಕೊಡುತ್ತೇನೆ ಎಂದು ನಂಬಿಸಿ ವಿಶೇಷ ಪೂಜೆ ನೆಪದಲ್ಲಿ ಲಕ್ಷಾಂತರ ರೂಪಾಯಿ ವಂಚನೆ ಮಾಡಲಾಗಿದೆ. ಈ ಬಗ್ಗೆ ವಿವರ ಇಲ್ಲಿದೆ.
Mahakumbh Mela 2025: ಹಿಂದೂಗಳಿಗೆ ಹೊಸ ನೀತಿ ಸಂಹಿತೆ, ವಿವರಗಳು
ಲಕ್ನೋ, ಜನವರಿ 24: ಪ್ರಯಾಗ್ರಾಜ್ನಲ್ಲಿ ಮಹಾಕುಂಭ ಮೇಳ-2025 ನಡೆಯುತ್ತಿದೆ. ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಪುಣ್ಯಸ್ನಾನ ಮಾಡುತ್ತಿದ್ದಾರೆ. ಹಿಂದೂಗಳ ಪ್ರಮುಖ ಧಾರ್ಮಿಕ ಉತ್ಸವ ಇದಾಗಿದ್ದು, ವಿಶ್ವದ ವಿವಿಧ ದೇಶಗಳ ಜನರು ಸಹ ಆಗಮಿಸುತ್ತಿದ್ದಾರೆ. ಮಹಾಕುಂಭ ಮೇಳದಲ್ಲಿ ಹಿಂದೂಗಳಿಗೆ ಹೊಸ ನೀತಿ ಸಂಹಿತೆಯನ್ನು ಬಿಡುಗಡೆ ಮಾಡಲಾಗುತ್ತದೆ. ಕಾಶಿ ವಿದ್ವತ್ ಪರಿಷತ್ ಹಿಂದೂಗಳಿಗೆ ಹೊಸ ನೀತಿ ಸಂಹಿತೆಯನ್ನು ಬಿಡುಗಡೆ ಮಾಡಲಿದೆ.
ಶ್ರೀರಾಮುಲು - ಶಾಸಕ ಜನಾರ್ದನ ರೆಡ್ಡಿ ಫೈಟ್ನಿಂದ ಬಿಜೆಪಿಗೆ ಲಾಭ!
ರಾಜ್ಯ ರಾಜಕೀಯದಲ್ಲಿ ನಡೆದಿರುವ ಅನಿರೀಕ್ಷಿತ ಬೆಳವಣಿಗೆ ಭಾರೀ ಚರ್ಚೆಗೆ ದಾರಿ ಮಾಡಿಕೊಟ್ಟಿದೆ. ರಾಜಕೀಯದಲ್ಲಿ ರಾಜಕಾರಣಿಗಳು ಕೆಲವೊಂದು ಪದಗಳನ್ನು ಬಳಸುತ್ತಾರೆ. ಅದು ರಾಜಕೀಯದಲ್ಲಿ ಸದಾ ಚಲಾವಣೆಯಲ್ಲಿ ಇರುವ ನಾಣ್ಯಗಳು ಅವೇ ರಾಜಕೀಯದಲ್ಲಿ ಏನು ಬೇಕಾದರೂ ಆಗಬಹುದು ಎನ್ನುವುದು. ಇದಕ್ಕೆ ತಾಜಾ ಉದಾಹರಣೆಯೆಂದರೆ ಮಾಜಿ ಸಚಿವ ಹಾಗೂ ಬಿಜೆಪಿ ಮುಖಂಡ ಶ್ರೀರಾಮುಲು ಹಾಗೂ ಶಾಸಕ ಜನಾರ್ದನ ರೆಡ್ಡಿ ಅವರ ನಡುವೆ
Karnataka Cold Wave: ರಾಜ್ಯದ ಈ ಜಿಲ್ಲೆಗಳಲ್ಲಿ ಮುಂದಿನ ಒಂದು ವಾರ ಭೀಕರ ಚಳಿ ಮುಂದುವರೆಯುವ ಮುನ್ಸೂಚನೆ
Karnataka Cold Wave: ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಭೀಕರ ಚಳಿ ಮುಂದುವರೆದಿದೆ. ಹಾಗೆಯೇ ಮುಂದಿನ ಒಂದು ವಾರ ರಾಜ್ಯ ರಾಜಧಾನಿ ಸೇರಿದಂತೆ ಈ ಭಾಗಗಲ್ಲಿ ಚಳಿಯ ಪ್ರಮಾಣ ಹೆಚ್ಚಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಹಾಗಾದರೆ ಎಲ್ಲಲ್ಲಿ ಹೆಚ್ಚು ಶೀತ ಇರಲಿದೆ ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ. ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಇಂದು
ಪೌರತ್ವಕ್ಕೆ ಸಂಬಂಧಿಸಿದ ಕಾರ್ಯಾದೇಶದಿಂದ ಪಾರಾಗಲು ಸಿಸೇರಿಯನ್ ಗೆ ಮೊರೆ!
ವಾಷಿಂಗ್ಟನ್: ಅಮೆರಿಕದಲ್ಲಿ ಹುಟ್ಟಿನಿಂದಲೇ ಇರುವ ಪೌರತ್ವದ ಹಕ್ಕನ್ನು ಮೊಟಕುಗೊಳಿಸುವ ಸಂಬಂಧ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕಾರ್ಯಾದೇಶಕ್ಕೆ ಸಹಿ ಮಾಡಿದ ಬೆನ್ನಲ್ಲೇ ಹೊಸ ಆದೇಶ ವಿಧಿಸಿದ ಫೆಬ್ರುವರಿ 20ರ ಗಡುವಿನ ಒಳಗಾಗಿ ಮಕ್ಕಳನ್ನು ಪಡೆಯಬೇಕು ಎಂಬ ಧಾವಂತದಿಂದ ಅವಧಿಪೂರ್ವ ಪ್ರಸವಕ್ಕಾಗಿ ಅಮೆರಿಕದಲ್ಲಿರುವ ಭಾರತೀಯ ದಂಪತಿಗಳು ಸಿಸೇರಿಯನ್ ಗೆ ಮೊರೆ ಹೋಗುವ ವಿಚಿತ್ರ ಸನ್ನಿವೇಶ ಸೃಷ್ಟಿಯಾಗಿದೆ. ಸಂವಿಧಾನದ 14ನೇ ತಿದ್ದುಪಡಿ ಅಡಿಯಲ್ಲಿ ಹುಟ್ಟಿನಿಂದಲೇ ಲಭ್ಯವಾಗುವ ಪೌರತ್ವದ ಹಕ್ಕನ್ನು ರದ್ದುಗೊಳಿಸುವ ಸಂಬಂಧ ಡೊನಾಲ್ಡ್ ಟ್ರಂಪ್ ಅವರು ಆದೇಶ ಹೊರಡಿಸಿದ ಬಳಿಕ, ತಮ್ಮ ಮಕ್ಕಳಿಗೆ ಅಮೆರಿಕದ ಪೌರತ್ವ ದೊರಕಿಸುವ ಧಾವಂತದಲ್ಲಿ ಅವಧಿಪೂರ್ವದಲ್ಲೇ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡು ಮಕ್ಕಳಿಗೆ ಜನ್ಮನೀಡಲು ಬಹಳಷ್ಟು ಗರ್ಭಿಣಿಯರು ಮುಂದಾಗಿದ್ದಾರೆ. ಎಂಟು ಅಥವಾ ಒಂಬತ್ತನೇ ತಿಂಗಳ ಗರ್ಭಿಣಿಯರು ವೈದ್ಯರಲ್ಲಿ ಸಿಸೇರಿಯನ್ ಗಾಗಿ ಮನವಿ ಮಾಡಿಕೊಳ್ಳುತ್ತಿದ್ದಾರೆ. ಎರಡನೇ ಅಥವಾ ಮೂರನೇ ತ್ರೈಮಾಸಿಕ ಅವಧಿಯಲ್ಲಿರುವವರು ಕೂಡಾ ಇದೇ ಮಾರ್ಗವನ್ನು ಅನುಸರಿಸುವ ಸಾಧ್ಯತೆಯನ್ನು ಪರಿಶೀಲಿಸುತ್ತಿದ್ದಾರೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ. ಆದರೆ ತಾಯಿ ಹಾಗೂ ಮಗುವಿಗೆ ಎದುರಾಗಬಹುದಾದ ವಿವಿಧ ಆರೋಗ್ಯ ಸಂಕೀರ್ಣತೆಗಳ ಹಿನ್ನೆಲೆಯಲ್ಲಿ ಈ ಪ್ರವೃತ್ತಿಯನ್ನು ವೈದ್ಯರು ಪ್ರೋತ್ಸಾಹಿಸುತ್ತಿಲ್ಲ ಎಂದು ಹೇಳಲಾಗಿದೆ. ಅವಧಿಪೂರ್ವ ಪ್ರಸವ ಎಂದರೆ 37 ವಾರಕ್ಕಿಂತ ಮೊದಲು ಆಗುವ ಹೆರಿಗೆ ಎಂದು ವಿಶ್ಲೇಷಿಸಲಾಗಿದೆ. ವಿಶ್ವ ಆರೋಗ್ಯಸಂಸ್ಥೆಯ ಪ್ರಕಾರ ಇಂಥ ಅವಧಿಪೂರ್ವ ಹೆರಿಗೆಯಿಂದಾಗುವ ಆರೋಗ್ಯ ಸಂಕೀರ್ಣತೆಗಳು ಐದು ವರ್ಷಕ್ಕಿಂತ ಕೆಳ ವಯಸ್ಸಿನ ಮಕ್ಕಳ ಸಾವಿಗೆ ಪ್ರಮುಖ ಕಾರಣವಾಗಿದೆ.
ರಾಯಚೂರು: ನಿಧಿ ಹುಡುಕಿ ಕೊಡುವುದಾಗಿ ನಂಬಿಸಿ 28 ಲಕ್ಷ ರೂ. ದೋಚಿ ಪರಾರಿಯಾಗಿದ್ದ ಆರೋಪಿ ಬಂಧನ
ರಾಯಚೂರು: ಜಿಲ್ಲೆಯ ಲಿಂಗಸುಗೂರು ತಾಲೂಕಿನ ಹಟ್ಟಿ ಚಿನ್ನದ ಗಣಿ ಬಳಿಯ ಕೋಠಾ ಗ್ರಾಮದಲ್ಲಿ ನಿದಿ ಹುಡುಕಿ ಕೊಡುವುದಾಗಿ ನಂಬಿಸಿ ರೂ. 28 ಲಕ್ಷ ಹಣ ಪಡೆದು ಪರಾರಿಯಾಗಿದ್ದ, ಆರೋಪಿಯನ್ನು ಹಟ್ಟಿ ಠಾಣೆಯ ಪೋಲೀಸರು ಬಂದಿಸಲು ಯಶಸ್ವಿಯಾಗಿದ್ದಾರೆ. ಗಂಗಾವತಿ ತಾಲೂಕಿನ ಉಡುಕಲ್ಲು ಗ್ರಾಮದ ನಿವಾಸಿ ಶರಣಪ್ಪ ತಂದೆ ದುರುಗಪ್ಪ, ( 42) ವರ್ಷ ಬಂದಿತ ಆರೋಪಿ. ಅಗಿದ್ದು ಏನು: ಆರೋಪಿ ಶರಣಪ್ಪ 2023ರ ಮೇ 22ರಂದು ಕೋಠ ಗ್ರಾಮದ ನಿವಾಸಿ ಅಲ್ಲಾಸಾಬ್ ಹೊಲದಲ್ಲಿ ನಿಧಿ ಇದೆ ಹುಡುಕು ಕೊಡುತ್ತೇನೆ ನನಗೆ ಮೊದಲು 28 ಲಕ್ಷ ರೂಪಾಯಿ ಕೊಡಬೇಕು ಎಂದು ಷರತ್ತು ಹಾಕಿದ್ದ, ಅದಕ್ಕೆಒಪ್ಪಿದ ಅಲ್ಲಾಸಾಬ್ ಮುಂಗಡವಾಗಿ ಹಣ ನೀಡಿದ್ದ. ಅದೇ ದಿನ ಅಂದರೆ ಮೇ 22ರಂದು ಮಧ್ಯರಾತ್ರಿ1 ಗಂಟೆಗೆ ಅಲ್ಲಾಸಾಬ್ ಹೊಲಕ್ಕೆ ಕರೆದುಕೊಂಡುಹೋಗಿ ಪೂಜೆ ಮಾಡಿ ಗುದ್ದಲಿಯಿಂದ ತಾನೇ ಗುಂಡಿ ಅಗೆದಿದ್ದಾನೆ. ಅಲ್ಲಿ ತಾನೇ ಇಟ್ಟಿದ್ದ ಕಿತ್ತಾಳೆ ಕೊಡದಲ್ಲಿ ಬಂಗಾರವಿದೆ ಎಂದು ಚೀಲದಲ್ಲಿ ಕಟ್ಟಿ ನೀಡಿದ್ದಾನೆ. ಮನೆಗೆ ಹೋಗಿ ಪ್ರತಿನಿತ್ಯ 11 ತಿಂಗಳ ಕಾಲ ಇದಕ್ಕೆ ಪೂಜೆ ಮಾಡಬೇಕು. ನಂತರ ನಾನು ಮತ್ತೆ ನಿಮ್ಮ ಮನೆಗೆ ಬಂದು ಪೂಜೆ ಮಾಡಿ ಇದನ್ನು ಕಳಚಿಕೊಡುತ್ತೇನೆ ಅಲ್ಲಿಯವರೆಗೆ ನೋಡಬೇಡಿ ಎಂದು ರೂ.28 ಲಕ್ಷ ಹಣ ಪಡೆದು ಪರಾರಿಯಾಗಿದ್ದಾನೆ. ಆರೋಪಿಯ ಮಾತಿನಿಂತೆ 11 ತಿಂಗಳ ಕಾಲ ಅಲ್ಲಾಸಾಬ್ ಪೂಜೆ ಮಾಡಿದ್ದಾನೆ. 2025, ಜನವರಿ 5 ರಂದು ಕಿತ್ತಾಳೆ ಕೊಡದಲ್ಲಿ ಸುತ್ತಿಕೊಟ್ಟ ಚೀಲವನ್ನು ನೋಡಿದಾಗ ಬಂಗಾರದ ಬಣ್ಣಬಳಿದ ಪ್ಲೇಟ್ ಗಳು ಕಂಡು ಗಾಬರಿಯಾಗಿ ತಾವುಮೋಸವಾಗಿದ್ದು ಅರಿವಾಗಿದೆ. ಹಣಕೊಟ್ಟು ಮೋಸ ಹೊಗಿದ್ದ ಅಲ್ಲಾಸಾಬ್, ಕಳೆದ ಜನವರಿ 20 ರಂದು ಹಟ್ಟಿ ಠಾಣೆಯಲ್ಲಿ ದೂರು ದಾಖಲಿಸಿದ್ದರು, ಪಿಎಸ್ಐ ಹೊಸಕೆರಪ್ಪ ನೇತೃತ್ವದ ಪೊಲೀಸರ ತಂಡ ತನಿಖೆ ಕೈಗೊಂಡು ಜನವರಿ 22ರಂದು ಆರೋಪಿಯನ್ನು ಪತ್ತೆ ಮಾಡಿ ಬಂಧಿಸಿದ್ದಾರೆ. ಬಂಧಿತನಿಂದ 5.60 ಲಕ್ಷ ನಗದು ಹಣ , 6 ಗೋಲ್ಡ್ ಬಣ್ಣದ ಕಬ್ಬಿಣದ ಪ್ಲೇಟ್, ತುಂಡುಗಳು ವಶ ಪಡಿಸಿಕೊಂಡಿದ್ದಾರೆ
Government Employee: ಸರ್ಕಾರಿ ನೌಕರರ ಪ್ರಮುಖ ಬೇಡಿಕೆ, ಸರ್ಕಾರಕ್ಕೆ ಸವಾಲು ಏನು
ಬೆಂಗಳೂರು, ಜನವರಿ 24: ಕರ್ನಾಟಕದ ಸರ್ಕಾರಿ ನೌಕರರು ಪ್ರಮುಖ ಬೇಡಿಕೆಯಾದ ಹಳೆ ಪಿಂಚಣಿ ಯೋಜನೆ (ಒಪಿಎಸ್) ಮರು ಜಾರಿಗೊಳಿಸಬೇಕು, ಹೊಸ ಪಿಂಚಣಿ ಯೋಜನೆ (ಎನ್ಪಿಎಸ್) ರದ್ದುಗೊಳಿಸಬೇಕು ಎಂದು ಸರ್ಕಾರದ ಮೇಲೆ ಒತ್ತಡವನ್ನು ಹೇರುತ್ತಿದ್ದಾರೆ. ಈ ಕುರಿತು ಸರ್ಕಾರದ ಗಮನ ಸೆಳೆಯಲು ಫೆಬ್ರವರಿ 7ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಧರಣಿ ನಡೆಸಲಾಗುತ್ತದೆ ಎಂದು ಈಗಾಗಲೇ ರಾಜ್ಯ ಸರ್ಕಾರಿ ನೌಕರರ
ಎರಡನೇ ಬಾರಿ ಅಮೆರಿಕದ ಚುಕ್ಕಾಣಿಯನ್ನು ಕೈಗೆತ್ತಿಕೊಂಡಿರುವ ಡೊನಾಲ್ಡ್ ಟ್ರಂಪ್, ಅಲ್ಲಿನ ಜನಾಂಗೀಯ ವಾದಿ ಮತ್ತು ಬಂಡವಾಳಶಾಹಿ ಶಕ್ತಿಗಳಿಗೆ ಪೂರಕವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಭಾರತದ ಗಂಟಲೊಳಗೆ ಟ್ರಂಪ್ನ ಕಡುಬು ಇಳಿಯುವುದು ಕಷ್ಟವಾಗಿದೆ. ತನ್ನ ಸ್ಥಾನದ ಘನತೆಯನ್ನೇ ಬಲಿಕೊಟ್ಟು ‘ಅಬ್ಕಿ ಬಾರ್ ಟ್ರಂಪ್ ಸರ್ಕಾರ್’ ಎಂದು ಈ ಹಿಂದೆ ಅಮೆರಿಕದ ಭಾರತೀಯ ಅನಿವಾಸಿಗಳ ಮುಂದೆ ಟ್ರಂಪ್ ಪರವಾಗಿ ಘೋಷಣೆಕೂಗಿದ್ದ ನರೇಂದ್ರ ಮೋದಿಯವರ ಮುಖಕ್ಕೆ ಹೊಡೆದಂತಿವೆ ಟ್ರಂಪ್ ತೆಗೆದುಕೊಳ್ಳುತ್ತಿರುವ ನಿರ್ಧಾರಗಳು. ಇಂಧನ, ಕ್ರಿಮಿನಲ್ಗಳಿಗೆ ಕ್ಷಮಾದಾನ ಮತ್ತು ವಲಸೆ ಮುಂತಾದ ವಿಷಯಗಳಿಗೆ ಸಂಬಂಧಿಸಿದ ಹಲವು ಮಹತ್ವದ ಸರಕಾರಿ ಆದೇಶಗಳು ಮತ್ತು ನಿರ್ದೇಶನಗಳಿಗೆ ಅಮೆರಿಕ ಅಧ್ಯಕ್ಷನಾಗಿ ಅಧಿಕಾರ ವಹಿಸಿದ ದಿನವೇ ಡೊನಾಲ್ಡ್ ಟ್ರಂಪ್ ಸೋಮವಾರ ಸಹಿ ಹಾಕಿದ್ದಾರೆ. 2021ರಲ್ಲಿ ಅಮೆರಿಕದ ಸಂಸತ್ ಕಟ್ಟಡ ‘ಕ್ಯಾಪಿಟಲ್’ ಮೇಲೆ ದಾಳಿ ನಡೆಸಿರುವ ಸುಮಾರು 1,500 ಮಂದಿಗೆ ಕ್ಷಮಾದಾನ ನೀಡಿದ್ದಾರೆ. ಅಮೆರಿಕ-ಮೆಕ್ಸಿಕೊ ಗಡಿಯಲ್ಲಿ ರಾಷ್ಟ್ರೀಯ ತುರ್ತು ಪರಿಸ್ಥಿತಿಯನ್ನು ಘೋಷಿಸಿದ್ದಾರೆ, ಪ್ಯಾರಿಸ್ ಹವಾಮಾನ ಒಪ್ಪಂದದಿಂದ ಅಮೆರಿಕವನ್ನು ಹೊರ ತಂದಿದ್ದಾರೆ. ಪಾತಕಿಗಳ ಗುಂಪುಗಳನ್ನು ಭಯೋತ್ಪಾದಕ ಸಂಘಟನೆಗಳು ಎಂಬುದಾಗಿ ಘೋಷಿಸಿದ್ದಾರೆ ಮತ್ತು ಅಮೆರಿಕದ ಖಾಯಂ ನಿವಾಸಿಗಳಲ್ಲದವರ ಅಮೆರಿಕದಲ್ಲಿ ಹುಟ್ಟಿದ ಮಕ್ಕಳಿಗೆ ‘ಜನ್ಮಸಿದ್ಧ ಪೌರತ್ವ’ ಹಕ್ಕನ್ನು ಕೊನೆಗೊಳಿಸುವ ಆದೇಶಕ್ಕೂ ಸಹಿ ಹಾಕಿದ್ದಾರೆ.ಸ್ವಯಂಚಾಲಿತವಾಗಿ ನೀಡಲಾಗುವ ಜನ್ಮಸಿದ್ಧ ಪೌರತ್ವ ಹಕ್ಕನ್ನು ಕೊನೆಗೊಳಿಸುವ ನಿರ್ಧಾರವು ಅಮೆರಿಕದ ವಲಸೆ ನೀತಿಯಲ್ಲಿನ ಮಹತ್ವದ ಬದಲಾವಣೆಯೊಂದಕ್ಕೆ ಸಾಕ್ಷಿಯಾಗಿದೆ. ಈ ನಿರ್ಧಾರವು ತಾತ್ಕಾಲಿಕ ವೀಸಾಗಳಲ್ಲಿ ಅಮೆರಿಕದಲ್ಲಿ ವಾಸಿಸುತ್ತಿರುವ ಲಕ್ಷಾಂತರ ಭಾರತೀಯರ ಮೇಲೆ ಪರಿಣಾಮಗಳನ್ನು ಬೀರಲಿವೆೆ. ಈಗಾಗಲೇ ಅನಿವಾಸಿ ಭಾರತೀಯರು ಇದರ ವಿರುದ್ಧ ಕಾನೂನು ಹೋರಾಟಗಳನ್ನು ಆರಂಭಿಸಿದ್ದಾರೆ. ಈವರೆಗೆ, ಹೆತ್ತವರು ಯಾವುದೇ ದೇಶದ ಪ್ರಜೆಗಳಾಗಿದ್ದರೂ, ಅವರು ಅಮೆರಿಕದಲ್ಲಿ ಸಕ್ರಮ ಅಥವಾ ಅಕ್ರಮ ವಲಸಿಗರಾಗಿದ್ದರೂ ಅವರ ಮಕ್ಕಳು ಅಮೆರಿಕದಲ್ಲಿ ಹುಟ್ಟಿದರೆ ಮಕ್ಕಳಿಗೆ ಸ್ವಯಂಚಾಲಿತವಾಗಿ ಅಮೆರಿಕದ ಪೌರತ್ವ ಸಿಗುತ್ತಿತ್ತು. ಆದರೆ ಈಗ ಅದು ಬದಲಾವಣೆಯಾಗಿದೆ.1868ರಲ್ಲಿ ಜನ್ಮಸಿದ್ಧ ಪೌರತ್ವದ ವಿಧಿಗಳನ್ನು ಒಳಗೊಂಡ 14ನೇ ತಿದ್ದುಪಡಿಯನ್ನು ಅಮೆರಿಕದ ಸಂವಿಧಾನಕ್ಕೆ ತರಲಾಯಿತು. ಈ ತಿದ್ದುಪಡಿಯು ಅಮೆರಿಕದ ನೆಲದಲ್ಲಿ ಹುಟ್ಟಿದ ಬಹುತೇಕ ಎಲ್ಲಾ ಮಕ್ಕಳಿಗೆ ಅಮೆರಿಕದ ಪೌರತ್ವವನ್ನು ನೀಡುತ್ತದೆ ಎಂಬುದಾಗಿ ಹಿಂದಿನಿಂದಲೂ ವ್ಯಾಖ್ಯಾನಿಸುತ್ತಾ ಬರಲಾಗಿದೆ. ‘‘ಅಮೆರಿಕದ ಕಾರ್ಯವ್ಯಾಪ್ತಿಗೆ ಒಳಪಡುವ ಶರತ್ತು ಈಡೇರಿದರೆ, ಅಮೆರಿಕದಲ್ಲಿ ಹುಟ್ಟಿದ ಅಥವಾ ಬೇರೆ ದೇಶದಲ್ಲಿ ಹುಟ್ಟಿ ಅಮೆರಿಕದಲ್ಲಿ ಪೌರತ್ವ ಪಡೆದುಕೊಂಡಿರುವ ಎಲ್ಲಾ ವ್ಯಕ್ತಿಗಳು ಅಮೆರಿಕದ ನಾಗರಿಕರಾಗುತ್ತಾರೆ’’ ಎಂದು 14ನೇ ತಿದ್ದುಪಡಿ ಹೇಳುತ್ತದೆ. 1898ರಲ್ಲಿ, ಅಮೆರಿಕದ ಸುಪ್ರೀಂ ಕೋರ್ಟ್ನ ಆದೇಶವೊಂದು ‘‘ಅಮೆರಿಕದ ಖಾಯಂ ವಾಸಿಗಳಾದರೂ, ಪೌರತ್ವಕ್ಕೆ ಅರ್ಹರಲ್ಲದ ಚೀನಾ ದಂಪತಿಗೆ ಹುಟ್ಟಿದ ಮಗನೂ ಅಮೆರಿಕದ ಸಂಪೂರ್ಣ ಕಾನೂನುಬದ್ಧ ಸ್ಥಾನಮಾನ ಪಡೆಯುವ ಹಕ್ಕು ಹೊಂದಿದ್ದಾನೆ.’’ ಎಂದು ಹೇಳುತ್ತದೆ. ಆದರೆ, ಇದಕ್ಕೆ ವ್ಯತಿರಿಕ್ತವಾಗಿ, ಹೆತ್ತವರ ಪೈಕಿ ಒಬ್ಬರಾದರೂ ಅಮೆರಿಕದ ಪ್ರಜೆಯಲ್ಲದಿದ್ದರೆ ಅವರಿಗೆ ಅಮೆರಿಕದಲ್ಲಿ ಹುಟ್ಟಿದ ಮಕ್ಕಳನ್ನು ಅಮೆರಿಕದ ಪ್ರಜೆಗಳು ಎಂಬುದಾಗಿ ಮಾನ್ಯ ಮಾಡಲಾಗುವುದಿಲ್ಲ ಎಂದು ಟ್ರಂಪ್ ಹೊರಡಿಸಿರುವ ಸರಕಾರಿ ಆದೇಶ ಹೇಳುತ್ತದೆ. ಅಮೆರಿಕದ ಸಂವಿಧಾನಕ್ಕೆ ತರಲಾಗಿರುವ ಈ ಹಿಂದಿನ 14ನೇ ತಿದ್ದುಪಡಿಯನ್ನು ತಪ್ಪಾಗಿ ವ್ಯಾಖ್ಯಾನಿಸಲಾಗಿದೆ ಎಂಬುದಾಗಿ ಟ್ರಂಪ್ ಆಡಳಿತ ವಾದಿಸಿದೆ ಹಾಗೂ ‘‘ಅಮೆರಿಕದ ಕಾರ್ಯವ್ಯಾಪ್ತಿಗೆ ಒಳಪಡುವ ಶರತ್ತು ಈಡೇರಿದರೆ’’ ಎನ್ನುವುದನ್ನು ತನ್ನ ಹಿತಾಸಕ್ತಿಗೆ ಪೂರಕವಾಗಿ ವ್ಯಾಖ್ಯಾನಿಸಲು ಮುಂದಾಗಿದೆ. ‘‘... ಆದರೆ, ಅಮೆರಿಕದಲ್ಲಿ ಹುಟ್ಟಿದ ಪ್ರತಿಯೊಬ್ಬರಿಗೂ ಸಾರ್ವತ್ರಿಕ ಪೌರತ್ವವನ್ನು ನೀಡಬೇಕು ಎಂಬುದಾಗಿ 14ನೇ ತಿದ್ದುಪಡಿ ಯಾವತ್ತೂ ಹೇಳಿಲ್ಲ. ಅಮೆರಿಕದಲ್ಲಿ ಹುಟ್ಟಿದ, ಆದರೆ ಅದರ ಕಾರ್ಯವ್ಯಾಪ್ತಿಗೆ ಒಳಪಡದ ವ್ಯಕ್ತಿಗಳನ್ನು 14ನೇ ತಿದ್ದುಪಡಿಯು ಯಾವತ್ತೂ ಜನ್ಮಸಿದ್ಧ ಪೌರತ್ವದಿಂದ ಹೊರಗಿಟ್ಟಿದೆ’’ ಎಂದು ಟ್ರಂಪ್ ಸಹಿ ಹಾಕಿರುವ ಆದೇಶ ಹೇಳುತ್ತದೆ. ಅಮೆರಿಕವನ್ನು ಅಕ್ರಮವಾಗಿ ಪ್ರವೇಶಿಸುವ ಜನರನ್ನು ಹೊರಗಿಡಲು ಈ ವ್ಯಾಖ್ಯಾನವನ್ನು ಬಳಸಬೇಕು ಎಂಬುದಾಗಿ ಅಮೆರಿಕದ ಬಲಪಂಥೀಯರು ಹೇಳುತ್ತಲೇ ಬಂದಿದ್ದು, ಅದನ್ನೀಗ ಜಾರಿಗೊಳಿಸಲು ಟ್ರಂಪ್ ಮುಂದಾಗಿದ್ದಾರೆ. ಇದು ಭಾರತೀಯರ ಮೇಲೆ ತೀವ್ರ ಪರಿಣಾಮವನ್ನು ಬೀರುವುದರಲ್ಲಿ ಅನುಮಾನವಿಲ್ಲ. ಅಮೆರಿಕದ ಇತ್ತೀಚಿನ ಜನಗಣತಿಯ ಪ್ರಕಾರ, ಅಮೆರಿಕದಲ್ಲಿ 54 ಲಕ್ಷಕ್ಕೂ ಅಧಿಕ ಭಾರತೀಯರು ಇದ್ದಾರೆ. ಇದು ಅಮೆರಿಕದ ಜನಸಂಖ್ಯೆಯ ಸುಮಾರು 1.47 ಶೇಕಡ ಆಗುತ್ತದೆ. ಈ ಪೈಕಿ, ಮೂರನೇ ಎರಡು ಭಾಗ ವಲಸಿಗರಾಗಿದ್ದಾರೆ ಮತ್ತು 34 ಶೇಕಡದಷ್ಟು ಮಂದಿ ಅಮೆರಿಕದಲ್ಲಿ ಹುಟ್ಟಿದವರಾಗಿದ್ದಾರೆ. ಟ್ರಂಪ್ರ ಆದೇಶ ಜಾರಿಯಾದರೆ, ತಾತ್ಕಾಲಿಕ ಉದ್ಯೋಗ ವೀಸಾ ಅಥವಾ ಪ್ರವಾಸಿ ವೀಸಾಗಳಲ್ಲಿ ಅಮೆರಿಕದಲ್ಲಿ ವಾಸಿಸುತ್ತಿರುವ ಭಾರತೀಯ ಪ್ರಜೆಗಳಿಗೆ ಹುಟ್ಟಿದ ಮಕ್ಕಳಿಗೆ ಸ್ವಯಂಚಾಲಿತವಾಗಿ ಪೌರತ್ವ ಲಭಿಸುವುದಿಲ್ಲ. ಅದೂ ಅಲ್ಲದೆ, ಮಕ್ಕಳನ್ನು ಹೆರುವುದಕ್ಕಾಗಿಯೇ ಅಮೆರಿಕಕ್ಕೆ ಪ್ರವಾಸ ಕೈಗೊಳ್ಳುವ ‘ಹೆರಿಗೆ ಪ್ರವಾಸೋದ್ಯಮ’ದ ಪ್ರವೃತ್ತಿಯೂ ಇದರೊಂದಿಗೆ ಕೊನೆಗೊಳ್ಳುತ್ತದೆ. ಅಮೆರಿಕದಲ್ಲಿ ಮಕ್ಕಳನ್ನು ಹೆತ್ತರೆ ಆ ಮಕ್ಕಳಿಗೆ ಆ ದೇಶದ ಪೌರತ್ವ ತನ್ನಿಂತಾನೆ ಸಿಗುತ್ತದೆ ಎನ್ನುವುದು ‘ಹೆರಿಗೆ ಪ್ರವಾಸೋದ್ಯಮ’ದ ಹಿಂದಿನ ಉದ್ದೇಶವಾಗಿದೆ. ತಮ್ಮ ಮಕ್ಕಳಿಗೆ ಅಮೆರಿಕದ ಸ್ವಯಂಚಾಲಿತ ಪೌರತ್ವವನ್ನು ಗಳಿಸಿಕೊಡುವುದಕ್ಕಾಗಿ ಮೆಕ್ಸಿಕನ್ನರು ಮತ್ತು ಭಾರತೀಯರು ‘ಹೆರಿಗೆ ಪ್ರವಾಸೋದ್ಯಮ’ದ ಮಾರ್ಗವನ್ನು ಗರಿಷ್ಠ ಪ್ರಮಾಣದಲ್ಲಿ ಬಳಸಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ! ಅಮೆರಿಕದ ನಿರ್ಧಾರಗಳಿಂದ ಭಾರತ ಕಂಪಿಸಿರುವುದು ಸುಳ್ಳಲ್ಲ. ಅಮೆರಿಕದಲ್ಲಿದ್ದು ಭಾರತದ ಮಧ್ಯಮವರ್ಗಕ್ಕೆ ದೇಶಪ್ರೇಮವನ್ನು ಬೋಧಿಸುವ ಭಾರತೀಯ ಅನಿವಾಸಿಗಳಾಗಿರುವ ಮೋದಿ ಅಭಿಮಾನಿಗಳು ಟ್ರಂಪ್ ತುರುಕಿದ ಕಡುಬನ್ನು ನುಂಗಲೂ ಆಗದೆ, ಉಗುಳಲೂ ಆಗದೆ ಏದುಸಿರು ಬಿಡುತ್ತಿದ್ದಾರೆ. ‘ಅಮೆರಿಕ ತನ್ನ ಮಿತ್ರ’ ಎನ್ನುವುದನ್ನು ಸಾಬೀತು ಪಡಿಸಲು ಹರ ಸಾಹಸ ನಡೆಸುತ್ತಲೇ ಬಂದಿರುವ ಮೋದಿ ನೇತೃತ್ವದ ಸರಕಾರ, ಇದೀಗ ಅಮೆರಿಕದ ನಿರ್ಧಾರಗಳಿಂದ ಆಗಬಹುದಾದ ಅನಾಹುತಗಳನ್ನು ಸರಿದೂಗಿಸಲು ಮತ್ತು ಅಮೆರಿಕವನ್ನು ಮನವೊಲಿಸಲು ಗರಿಷ್ಠ ಪ್ರಯತ್ನ ಪಡುತ್ತಿದೆ. ಅತ್ತ ಅಮೆರಿಕ ತನ್ನ ನಿರ್ಧಾರಗಳನ್ನು ಘೋಷಿಸಿದ ಬೆನ್ನಿಗೇ ಇತ್ತ, 18,000 ಅಕ್ರಮ ವಲಸಿಗರನ್ನು ಕರೆಸಿಕೊಳ್ಳಲು ಸಿದ್ಧ ಎಂದು ಭಾರತ ಹೇಳಿಕೆ ನೀಡಿದೆ. ಅಮೆರಿಕವು ಸ್ವದೇಶಕ್ಕೆ ಕಳುಹಿಸಲು ಸುಮಾರು 18,000 ಭಾರತೀಯರನ್ನು ಅಕ್ರಮ ವಲಸಿಗರು ಎಂದು ಗುರುತಿಸಿದ್ದು, ಇವರ ಗಡಿಪಾರು ಪ್ರಕ್ರಿಯೆಗೆ ಭಾರತ ಪೂರ್ಣ ಸಹಕಾರವನ್ನು ನೀಡಲಿದೆ ಎಂದು ಹೇಳಿದೆ. ಅಕ್ರಮ ವಲಸಿಗರಲ್ಲಿ ಗುಜರಾತ್ ಮೂಲದ ಜನರೇ ಹೆಚ್ಚಿರುವುದು ಗಮನಾರ್ಹವಾಗಿದೆ. ಭಾರತದಲ್ಲಿ ಹೆಚ್ಚುತ್ತಿರುವ ನಿರುದ್ಯೋಗ, ಆರ್ಥಿಕ ಹಿಂಜರಿತ, ರಾಜಕೀಯ ಅರಾಜಕತೆ ಇವೆಲ್ಲವೂ ಅಧಿಕೃತ ಮತ್ತು ಅಕ್ರಮ ವಲಸೆಗಳನ್ನು ಹೆಚ್ಚಿಸಿದೆ. ಇದೀಗ ಅಮೆರಿಕ ಇದನ್ನೇ ಭಾರತಕ್ಕೆ ತಿರುಗುಬಾಣವಾಗಿ ಬಳಸಿದೆ. ಬಹುಶಃ ಈ ನಿರ್ಧಾರಗಳ ಮೂಲಕ ಭಾರತದ ಮೇಲೆ ಪರೋಕ್ಷ ಒತ್ತಡಗಳನ್ನು ಹಾಕಿ ತನ್ನ ಹಿತಾಸಕ್ತಿಯನ್ನು ಸಾಧಿಸುವುದು ಕೂಡ ಟ್ರಂಪ್ಗುರಿಯಾಗಿದೆ. ಮುಂದಿನ ದಿನಗಳಲ್ಲಿ ಈ ಬಿಕ್ಕಟ್ಟುಗಳನ್ನು ಭಾರತ ಹೇಗೆ ನಿಭಾಯಿಸಲಿದೆ ಎನ್ನುವುದನ್ನು ಕಾದು ನೋಡಬೇಕು. ಇದೇ ಸಂದರ್ಭದಲ್ಲಿ ಟ್ರಂಪ್ ಒತ್ತಡಕ್ಕೆ ಸಿಲುಕಿ ಇಂಧನ ಮತ್ತು ರಕ್ಷಣಾ ಒಪ್ಪಂದಗಳಿಗೆ ಸಂಬಂಧಿಸಿ ಭಾರತವು ರಶ್ಯ ಸೇರಿದಂತೆ ಅಮೆರಿಕ ವಿರೋಧಿ ದೇಶಗಳ ಜೊತೆಗೆ ಇಟ್ಟುಕೊಂಡಿರುವ ಸಂಬಂಧಗಳನ್ನು ಹೇಗೆ ನಿಭಾಯಿಸುತ್ತದೆ ಎನ್ನುವುದು ಕೂಡ ಟ್ರಂಪ್-ಮೋದಿ ನಡುವಿನ ಸಂಬಂಧದ ಮುಂದುವರಿಕೆಯಲ್ಲಿ ಮುಖ್ಯ ಪಾತ್ರವಹಿಸುತ್ತದೆ.
ಟ್ರಂಪ್ ಆಡಳಿತದ ಪೌರತ್ವ ಆದೇಶಕ್ಕೆ ಅಮೆರಿಕ ಕೋರ್ಟ್ ತಡೆ
ಸಿಯಾಟೆಲ್: ಅಮೆರಿಕದ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತ ಪೌರತ್ವಕ್ಕೆ ಸಂಬಂಧಿಸಿದಂತೆ ಹೊರಡಿಸಿದ ಕಾರ್ಯಾದೇಶದ ಜಾರಿಗೆ ಫೆಡರಲ್ ನ್ಯಾಯಾಧೀಶರು ಗುರುವಾರ ತಡೆ ವಿಧಿಸಿದ್ದಾರೆ. ಇದನ್ನು ಅಸಂವಿಧಾನಿಕ ಎಂದು ನ್ಯಾಯಾಲಯ ಘೋಷಿಸಿದೆ. ಹುಟ್ಟಿನಿಂದಲೇ ಅಮೆರಿಕದ ಪೌರತ್ವವನ್ನು ಪಡೆಯುವ ಹಕ್ಕನ್ನು ಮೊಟಕುಗೊಳಿಸುವ ಕಾರ್ಯಾದೇಶಕ್ಕೆ ಡೊನಾಲ್ಡ್ ಟ್ರಂಪ್ ತಮ್ಮ ಎರಡನೇ ಅಧ್ಯಕ್ಷಾವಧಿಯ ಮೊದಲ ದಿನವೇ ಸಹಿ ಮಾಡಿದ್ದರು. ರಿಪಬ್ಲಿಕನ್ ಅಧ್ಯಕ್ಷರು ಸೋಮವಾರ ಸಹಿ ಮಾಡಿದ ಕಾರ್ಯಾದೇಶದ ಜಾರಿಗೆ ತಡೆಯೊಡ್ಡುವಂತೆ ಕೋರಿ ಡೆಮಾಕ್ರಟಿಕ್ ಆಡಳಿತದ ನಾಲ್ಕು ರಾಜ್ಯಗಳು ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ ಅಮೆರಿಕದ ಜಿಲ್ಲಾ ನ್ಯಾಯಾಧೀಶ ಜಾನ್ ಕಫ್ನೌರ್ ಈ ತಡೆಯಾಜ್ಞೆ ವಿಧಿಸಿದ್ದಾರೆ. ಇದು ಸಂಪೂರ್ಣವಾಗಿ ಕಾನೂನುಬಾಹಿತ ಆದೇಶ ಎಂದು ಟ್ರಂಪ್ ಕಾರ್ಯಾದೇಶದ ಕುರಿತಂತೆ ಅಮೆರಿಕದ ನ್ಯಾಯಾಂಗ ಇಲಾಖೆಯ ವಕೀಲರಿಗೆ ನ್ಯಾಯಮೂರ್ತಿ ಹೇಳಿದರು. ಟ್ರಂಪ್ ಆದೇಶದ ವಿರುದ್ಧ ನಾಗರಿಕ ಹಕ್ಕು ಸಂಘಟನೆಗಳು ಈಗಾಗಲೇ ಐದು ದಾವೆಗಳನ್ನು ಸಲ್ಲಿಸಿವೆ. ಜತೆಗೆ 22 ರಾಜ್ಯಗಳ ಡೆಮಾಕ್ರಟಿಕ್ ಅಟಾರ್ನಿ ಜನರಲ್ ಗಳು ಕೂಡಾ ದಾವೆ ಸಲ್ಲಿಸಿದ್ದಾರೆ. ಈ ಆದೇಶ ಅಮೆರಿಕ ಸಂವಿಧಾನದ ಸ್ಪಷ್ಟ ಉಲ್ಲಂಘನೆ ಎಂದು ವಾದಿಸಲಾಗಿದೆ. ಈ ಆದೇಶದ ಅನ್ವಯ ಇಂದು ಹುಟ್ಟಿನ ಶಿಶುಗಳು ಅಮೆರಿಕದ ಪೌರರಾಗಲು ಸಾಧ್ಯವಿಲ್ಲ ಎಂದು ವಾಷಿಂಗ್ಟನ್ ಸಹಾಯಕ ಅಟಾರ್ನಿ ಜನರಲ್ ಲಾಲ್ ಪೊಲೊಝೋಲಾ ಅವರು ಅಮೆರಿಕದ ಜಿಲ್ಲಾ ನ್ಯಾಯಾಧೀಶ ಜಾನ್ ಕಫ್ನೌರ್ ಅವರಿಗೆ ವಿಚಾರಣೆ ಆರಂಭದ ವೇಳೆ ಸ್ಪಷ್ಟನೆ ನೀಡಿದ್ದರು.
Gold Price on January 24: ಜನವರಿ 24ರಂದು ಬಂಗಾರ, ಬೆಳ್ಳಿ ದರ ಇಳಿಕೆ: ನಿಮ್ಮೂರಲ್ಲಿ ಎಷ್ಟಿದೆ ಪರಿಶಿಲಿಸಿ
Gold price: ಬಂಗಾರ ದರದಲ್ಲಿ ಹಾವು ಏಣಿ ಆಟದಂತೆ ಏರಿಳಿತ ಆಗುತ್ತಲೇ ಇರುತ್ತದೆ. ಇನ್ನು ನಿನ್ನೆಗೆ ಅಂದರೆ ಜನವರಿ 23ಕ್ಕೆ ಹೋಲಿಸಿದರೆ ಇಂದು (ಜನವರಿ 24) ತುಸು ಇಳಿಕೆಯಾಗಿದೆ. ಹಾಗಾದರೆ ಇಂದು ಕರ್ನಾಟಕ ರಾಜಧಾನಿ ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಬಂಗಾರ ದರ ಎಷ್ಟಿದೆ ಎನ್ನುವ ಅಂಕಿಅಂಶಗಳ ವಿವರವನ್ನು ಇಲ್ಲಿ ಗಮನಿಸಿ. ನಿನ್ನೆ (ಜನವರಿ 23)
ಮೋಕ್ಷಿತಾ ಪೈ 'ಬಿಗ್ ಬಾಸ್' ಜರ್ನಿಯಲ್ಲಿ ಈ 3 ಅಂಶಗಳನ್ನು ನೀವು ಗಮನಿಸಿದ್ದೀರಾ?
Bigg Boss Kannada Season 11 Finale: 'ಬಿಗ್ ಬಾಸ್' ವೀಕ್ಷಕರ ಹಾರ್ಟ್ ಬೀಟ್ ಹೆಚ್ಚಾಗುವ ಕ್ಷಣಕ್ಕೆ ಈಗಾಗಲೇ ಕೌಂಟ್ಡೌನ್ ಸ್ಟಾರ್ಟ್ ಆಗಿದೆ. ಹೌದು, ಫಿನಾಲೆ ಆರಂಭಕ್ಕೆ ಬಾಕಿ ಇರುವುದು ಇನ್ನೂ ಒಂದೇ ದಿನ. ಈಗಾಗಲೇ ಆರು ಮಂದಿಯಲ್ಲಿ ಯಾರು ವಿನ್ನರ್ ಅನ್ನೋ ಚರ್ಚೆ ಶುರುವಾಗಿದೆ. ಮೋಕ್ಷಿತಾ ಪೈ ಕೂಡ ಫಿನಾಲೆ ತಲುಪಿರುವ ಸ್ಪರ್ಧಿಗಳಲ್ಲಿ ಒಬ್ಬರು. ಅಂದಹಾಗೆ, ಮೋಕ್ಷಿತಾ ಪೈ ಅವರ ಈ ಜರ್ನಿಯಲ್ಲಿ ಮೂರು ವಿಶೇಷತೆಗಳಿವೆ. ನೀವು ಅದನ್ನು ಗಮನಿಸಿದ್ದೀರಾ? ಇಲ್ಲವಾದರೆ ಈ ಸ್ಟೋರಿ ಓದಿ.
ವಾಹನ ಖರೀದಿ ಹೆಚ್ಚಳ : ಹಾಸನ ಆರ್ಟಿಒಗೆ ದಾಖಲೆಯ ಆದಾಯ
ಕಳೆದ ಐದು ವರ್ಷದ ಲೆಕ್ಕಾಚಾರ ಹಾಕಿದರೆ ವರ್ಷದಿಂದ ವರ್ಷಕ್ಕೆ ಸರಾಸರಿ 5 ಸಾವಿರ ಅಧಿಕ ವಾಹನಗಳು ಆರ್ಟಿಒ ಕಚೇರಿಯಲ್ಲಿ ನೋಂದಣಿಯಾಗಿವೆ. ವಾಹನ ಖರೀದಿ ಹೆಚ್ಚಿದಂತೆ ಆರ್ಟಿಒ ಇಲಾಖೆಗೆ ಸರಕಾರ ನೀಡುತ್ತಿರುವ ಆದಾಯದ ಗುರಿಯೂ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ. 2024-25ನೇ ಸಾಲಿಗೆ 14 ಕೋಟಿ ರೂ. ಆದಾಯ ಗುರಿ ಕೊಡಲಾಗಿದ್ದು, ಈಗಾಗಲೇ 12 ಕೋಟಿ ರೂ. ವರೆಗೆ ತಲುಪಿದೆ
ಕರ್ನಾಟಕದಲ್ಲಿ ಟೊಮೆಟೊ ದರ ದಿಢೀರ್ ಕುಸಿತ: ಕಲಬುರಗಿ ರೈತರ ಬೆಳೆ ನೆರೆ ರಾಜ್ಯಗಳಲ್ಲಿ ಮಾರಾಟ!
ಮಾರುಕಟ್ಟೆಯಲ್ಲಿ ಟೊಮೆಟೊ ಬೆಲೆ 10 ರೂ.ಗೆ ಕೆಜಿಗೆ ಇರುವುದರಿಂದ ರೈತರಿಗೆ ತೀವ್ರ ನಿರಾಸೆಯಾಗಿದೆ. ರೈತರಿಂದ ಕೇವಲ 100 ರಿಂದ 150 ರೂ. ಕ್ಯಾನ್ ಮಾರಾಟ ಆಗುತ್ತಿದ್ದು, ರೈತರು ಬೆಲೆ ಇಳಿಕೆಯಿಂದ ಹತ್ತಿರದ ನಗರಗಳಲ್ಲಿ ಮಾರಾಟ ಮಾಡಲು ಮುಂದಾಗುತ್ತಿದ್ದಾರೆ. ಸ್ಥಳೀಯ ಮಾರುಕಟ್ಟೆಗೆ ತಂದರೆ ಮಾರುಕಟ್ಟೆಯಲ್ಲಿ ತೀರಾ ಕಡಿಮೆ ಬೆಲೆಗೆ ಮಾರಾಟವಾಗುತ್ತಿರುವುದರಿಂದ ಖರ್ಚು ಮಾಡಿದ ಹಣವೂ ವಾಪಸ್ ಬಾರದಂತಹ ಪರಿಸ್ಥಿತಿ ನಿರ್ಮಾಣವಾಗಿದೆ , ಹೀಗಾಗಿ ಹೊರರಾಜ್ಯಕ್ಕೆ ಮಾರಾಟ ಮಾಡುತ್ತಿದ್ದಾರೆ.
ಉಪ್ಪಿನಂಗಡಿ : ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ಸ್ ಫೆಡರೇಷನ್(ಎಸ್ಸೆಸ್ಸೆಫ್) ಉಪ್ಪಿನಂಗಡಿ ಸೆಕ್ಟರ್ನ ಮಹಾಸಭೆಯು ಜ.23 (ಗುರುವಾರ)ರಂದು ನಡೆಯಿತು. ಎಸ್ಸೆಸ್ಸೆಫ್ ಉಪ್ಪಿನಂಗಡಿ ಡಿವಿಷನ್ ವೀಕ್ಷಕರಾಗಿ ಶಂಶುದ್ದೀನ್ ಹಿಮಾಮಿ ಉರ್ವಲ್ ಪದವು ಅವರು ಮಹಾಸಭೆಯನ್ನು ನಿರ್ವಹಿಸಿದ್ದು, ಅಬ್ದುಲ್ ರಹ್ಮಾನ್ ಮರ್ಝೂಕಿ ಅವರು ಉದ್ಘಾಟಿಸಿದರು. ಇರ್ಷಾದ್ ಮುಯೀನಿ ತರಗತಿ ನಡೆಸಿಕೊಟ್ಟರು. ಕಾರ್ಯದರ್ಶಿ ಅಬ್ದುಲ್ ರಹ್ಮಾನ್ ಅನ್ವರಿ ವರದಿ ಮಂಡಿಸಿದರು. ಎಸ್ಸೆಸ್ಸೆಫ್ ಉಪ್ಪಿನಂಗಡಿ ಡಿವಿಷನ್ ಅಧ್ಯಕ್ಷ ಶರೀಫ್ ಸಖಾಫಿ ಅವರ ನೇತೃತ್ವದೊಂದಿಗೆ ಎಸ್ಸೆಸ್ಸೆಫ್ ಉಪ್ಪಿನಂಗಡಿ ಸೆಕ್ಟರಿಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಅಬ್ದುಲ್ ರಹ್ಮಾನ್ ಮರ್ಝೂಕಿ ವಳಾಲ್, ಪ್ರಧಾನ ಕಾರ್ಯದರ್ಶಿಯಾಗಿ ಅಬ್ದುಲ್ ರಹ್ಮಾನ್ ಅನ್ವರಿ ಕರ್ವೇಲ್, ಕೋಶಾಧಿಕಾರಿಯಾಗಿ ಶಫೀಕ್ ಫಾಲಿಳಿ ಉಪ್ಪಿನಂಗಡಿ, ಉಪಾಧ್ಯಕ್ಷರಾಗಿ ಸಯ್ಯಿದ್ ಸವಾದ್ ತಂಙಳ್ ಕರ್ವೆಲ್, ದಅವಾ ಕಾರ್ಯದರ್ಶಿ ಮುಸ್ತಫಾ ಹಿರೆಬಂಡಾಡಿ, ಮಾಧ್ಯಮ ಕಾರ್ಯದರ್ಶಿ ಬಾಸಿತ್ ವಳಾಲ್, ಕ್ಯಾಂಪಸ್ ಕಾರ್ಯದರ್ಶಿ ಸುಹೈಲ್ ನೆಕ್ಕಿಲಾಡಿ, GD ಕಾರ್ಯದರ್ಶಿ ಸೀಯರ್ ಉಪ್ಪಿನಂಗಡಿ, QD ಕಾರ್ಯದರ್ಶಿ ಉಬೈದ್ ಕರ್ವೆಲ್, ರೈೆಂಬೊ ಕಾರ್ಯದರ್ಶಿ ಇರ್ಫಾನ್ ಬಿಳಿಯೂರ್, ಸಂಚಾಲಕರಾಗಿ ಶಮ್ಮಾಸ್ ಉಪ್ಪಿನಂಗಡಿ, ಸದಸ್ಯರಾಗಿ ಇರ್ಷಾದ್ ಮುಯೀನಿ ಮಠ, ಅನೀಸ್ ಕರ್ವೇಲ್, ಸುಹೈಲ್ ತಂಙಳ್, ಶೆರೀಫ್ ವಳಾಲ್, ರಾಫಿಹ್ ವಳಾಲ್, ಅಪ್ಸಲ್ ಉಪ್ಪಿನಂಗಡಿ, ಸಹಲ್ ಮಠ, ಶಮ್ಮಾಸ್ ಮಠ, ಜುನೈದ್ ಕೊಪ್ಪಳ, ಫಾಲಿಳಿ ಕೊಪ್ಪಳ, ಝಯಾನ್ ಉಪ್ಪಿನಂಗಡಿ, ಸಮಾಝ್ ಮಠ, ಜಾಹಿದ್ ಬಿಲಿಯೂರು, ಆಬಿದಾನ್ ಬಿಳಿಯೂರು ಅವರನ್ನು ಆಯ್ಕೆ ಮಾಡಲಾಗಿದೆ. ನಂತರ ನೂತನ ಕಾರ್ಯದರ್ಶಿಯಾದ ಅಬ್ದುಲ್ ರಹ್ಮಾನ್ ಅನ್ವರಿ ಅವರು ವಂದಿಸಿ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಿದರು.
ಪ್ರವಾಸಿಗರ ಸಂಖ್ಯೆ ಹೆಚ್ಚಿಸಲು ‘ಅಖಿಲ ಭಾರತ ಅಭಿಯಾನ’ಕ್ಕೆ ಕೇರಳ ಚಾಲನೆ
ಬೆಂಗಳೂರು : ಕೇರಳ ರಾಜ್ಯದಿಂದ ಸ್ಥಳೀಯ ಪ್ರವಾಸಿಗರ ಸಂಖ್ಯೆ ಹೆಚ್ಚಿಸಲು ಅಖಿಲ ಭಾರತ ಅಭಿಯಾನಕ್ಕೆ ಚಾಲನೆ ನೀಡಲಾಗಿದ್ದು, ಮುಂಬರುವ ಬೇಸಿಗೆಗೆ ರಜಾದಿನಗಳನ್ನು ಕಳೆಯಲಿಚ್ಛಿಸುವ ಕುಟುಂಬಗಳೆಡೆಗೆ ಅಭಿಯಾನವು ಆಕರ್ಷಿಸಿದೆ ಎಂದು ಕೇರಳ ಸರಕಾರದ ಪ್ರವಾಸೋದ್ಯಮ ಇಲಾಖೆಯ ನಿರ್ದೇಶಕಿ ಸಿಖಾ ಸುರೇಂದ್ರನ್ ತಿಳಿಸಿದರು. ಗುರುವಾರ ನಗರದ ಖಾಸಗಿ ಹೋಟೆಲ್ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಬೇಸಿಗೆ ರಜಾ ಋತುವು ವೇಗವಾಗಿ ಬರುತ್ತಿದ್ದು ನಾವು ಶಾಲಾ ರಜಾದಿನಗಳು ಮತ್ತು ಕುಟುಂಬದ ಜನರನ್ನು ಉದ್ದೇಶಿಸಿ ಹೊಸ ಉತ್ಪನ್ನಗಳನ್ನು ಬಿಡುಗಡೆ ಮಾಡಲಿದ್ದೇವೆ ಎಂದರು. ಈ ಅಭಿಯಾನವು ನಿರ್ದಿಷ್ಟವಾಗಿ ಉತ್ತರ ಕೇರಳಕ್ಕೆ ಮುಖ್ಯವಾಗಿ ಬೇಕಲ್, ವಯನಾಡ್ ಮತ್ತು ಕೋಝಿಕ್ಕೋಡ್ಗಳಿಗೆ ಆದ್ಯತೆ ನೀಡಿದ್ದು, ಇದಲ್ಲದೆ ಅಪಾರ ಸುಧಾರಿಸಿದ ಮೂಲಸೌಕರ್ಯಗಳ ಕಡಿಮೆ ಅರಿವಿನ ತಾಣಗಳನ್ನೂ ಸೇರ್ಪಡೆ ಮಾಡಿದ್ದೇವೆ ಎಂದು ಸಿಖಾ ಸುರೇಂದ್ರನ್ ಹೇಳಿದರು. ಈ ಅಭಿಯಾನವು ಕೇರಳವನ್ನು ತನ್ನ ಅಸಂಖ್ಯ ಛಾಯೆಗಳಲ್ಲಿ ಪ್ರದರ್ಶಿಸಲಿದ್ದು, ಇದು ಈ ತಾಣಗಳಿಗೆ ಮತ್ತು ರಾಜ್ಯವು ಒದಗಿಸುವ ವಿಶಿಷ್ಟ ಪ್ರವಾಸೋದ್ಯಮ ಉತ್ಪನ್ನಗಳಿಗೆ ವಿಸಿಬಿಲಿಟಿ ಹೆಚ್ಚಿಸುವ ಆವಿಷ್ಕಾರಕ ಉತ್ತೇಜನ ಕಾರ್ಯತಂತ್ರವಾಗಿದೆ. ಅಲ್ಲದೆ, ಪ್ರಮುಖ ಮೂಲ ನಗರಗಳಿಂದ ಸಂಭವನೀಯ ಸಂದರ್ಶಕರನ್ನು ನೇರವಾಗಿ ಸಂಪರ್ಕಿಸುತ್ತದೆ ಎಂದು ಸಿಖಾ ಸುರೇಂದ್ರನ್ ತಿಳಿಸಿದರು. ಪ್ರವಾಸಿಗರನ್ನು ಸೆಳೆಯುವ ಹೊಸ ಆಕರ್ಷಣೆಗಳಲ್ಲಿ ಹೆಲಿ-ಟೂರಿಸಂ ಮತ್ತು ಸಮುದ್ರದ ವಿಮಾನದ ಉಪಕ್ರಮಗಳಿದ್ದು, ಅವು ರಾಜ್ಯದಲ್ಲಿನ ತಾಣಗಳನ್ನು ಸಂಪರ್ಕಿತ ಮತ್ತು ಸುಲಭವಾಗಿ ಲಭ್ಯವಾಗುವಂತೆ ಮಾಡುತ್ತವೆ ಎಂದು ಸಿಖಾ ಸುರೇಂದ್ರನ್ ಹೇಳಿದರು. ಹೊಸ ಉತ್ಪನ್ನಗಳೊಂದಿಗೆ ರಾಜ್ಯದ ಪ್ರಮುಖ ಸಂಪತ್ತುಗಳಾದ ಕಡಲತೀರಗಳು, ಗಿರಿಧಾಮಗಳು, ದೋಣಿಮನೆಗಳು ಮತ್ತು ಹಿನ್ನೀರಿನ ವಲಯವು ಸಂದರ್ಶಕರ ಅನುಭವದ ಪೂರ್ಣತೆಯನ್ನು ಎತ್ತಿ ಹಿಡಿಯಲಿದೆ. ಪ್ರಶಾಂತ ನೈಸರ್ಗಿಕ ಸೌಂದರ್ಯ, ಉಜ್ವಲ ಸಂಸ್ಕೃತಿ ಮತ್ತು ಶ್ರೀಮಂತ ಪರಂಪರೆಗೆ ಖ್ಯಾತಿ ಪಡೆದಿರುವ ಕೇರಳ, ತನ್ನ ಸಂದರ್ಶಕರಿಗೆ ಸಾಂಸ್ಕೃತಿಕ ಸಂತೋಷ ಮತ್ತು ಸಾಹಿತ್ಯಿಕ ಕಾರ್ಯಕ್ರಮಗಳ ಮೂಲಕ ರಂಜಿಸುತ್ತದೆ ಎಂದು ಸಿಖಾ ಸುರೇಂದ್ರನ್ ತಿಳಿಸಿದರು. ರಾಜಧಾನಿ ನಗರವು ಫೆಬ್ರವರಿ 15ರಿಂದ 21ರವರೆಗೆ ಕನಕಕ್ಕುನ್ನು ಪ್ಯಾಲೇಸ್ ನಲ್ಲಿ ನಿಶಾಗಂಧಿ ನೃತ್ಯೋತ್ಸವ ಆಯೋಜಿಸಿದ್ದು ಅದರಲ್ಲಿ ಭಾರತದ ಮೂಲೆ ಮೂಲೆಯ ಖ್ಯಾತ ನೃತ್ಯಗಾರರು ಮೋಹಿನಿಯಾಟ್ಟಂ, ಕಥಕ್, ಕೂಚಿಪುಡಿ, ಭರತನಾಟ್ಯ ಮತ್ತು ಮಣಿಪುರಿ ನೃತ್ಯಗಳನ್ನು ಪ್ರದರ್ಶಿಸಲಿದ್ದಾರೆ ಎಂದು ಸಿಖಾ ಸುರೇಂದ್ರನ್ ಹೇಳಿದರು.
ಕರಾವಳಿಯಲ್ಲಿ ಇಳಿದ ಚಳಿ, ಏರಿದ ಬಿಸಿ! ಆರೋಗ್ಯದ ಮೇಲೂ ಪರಿಣಾಮ
ಮಂಗಳೂರು ಪ್ರದೇಶದಲ್ಲಿ ಬಿಸಿಲಿನ ಪ್ರಮಾಣ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ, ಚಳಿಯ ಪ್ರಮಾಣ ಇಳಿಕೆಯಾಗುತ್ತಿದೆ. ಕರ್ನಾಟಕ ಹವಾಮಾನ ಇಲಾಖೆ ವಿಜ್ಞಾನಿಗಳು ಜನವರಿ ಕೊನೆಯ ಭಾಗದ ನಂತರ ಬಿಸಿಲು ಹೆಚ್ಚಾಗಲಿದೆ ಎಂದು ತಿಳಿಸಿದ್ದಾರೆ. ವಾತಾವರಣದಲ್ಲಿ ಚಳಿ ಹಾಗೂ ಬಿಸಿ ಸಮ್ಮಿಶ್ರವಾಗಿರುವುದರಿಂದ ಸಾರ್ವಜನಿಕರಲ್ಲಿ ಆರೋಗ್ಯ ಸಮಸ್ಯೆಗಳು ಕೆಮ್ಮು, ಶೀತದಂಥ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ. ಅದರಿಂದ ಜನರು ಮುಂಜಾಗ್ರತೆ ವಹಿಸುವುದು ಅವಶ್ಯಕ ಎಂದು ವೈದ್ಯರು ಸೂಚಿಸಿದ್ದಾರೆ.
ಬೆಂಗಳೂರಿನಲ್ಲಿ ‘ಗುಜರಾತ್ ಐಟಿ/ಐಟಿಇಎಸ್ ನೀತಿ ರೋಡ್ ಶೋ’
ಬೆಂಗಳೂರು : ಗುಜರಾತಿನ ಗಣೇಶ್ ಹೌಸಿಂಗ್ ಕಾರ್ಪೊರೇಷನ್ ಲಿಮಿಟೆಡ್ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಸಹಭಾಗಿತ್ವದಲ್ಲಿ ‘ಗುಜರಾತ್ ಐಟಿ/ಐಟಿಇಎಸ್ ನೀತಿ’ಗಾಗಿ ಬೆಂಗಳೂರು ನಗರದಲ್ಲಿ ಗುರುವಾರ ಆಯೋಜಿಸಿದ್ದ ರೋಡ್ ಶೋ ಯಶಸ್ವಿಯಾಗಿ ಜರುಗಿತು. ರೋಡ್ ಶೋ ಬಳಿಕ ನಗರದ ಖಾಸಗಿ ಹೋಟೆಲ್ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಗುಜರಾತ್ ಸರಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮೋನಾ ಖಂಧರ್, ಗುಜರಾತ್ ಐಟಿ/ಐಟಿಇಎಸ್ ನೀತಿ 2022-27 ಅತ್ಯಾಧುನಿಕ ತಯಾರಿಕೆ, ಸಂಶೋಧನೆ ಮತ್ತು ಡಿಜಿಟಲ್ ಪರಿವರ್ತನೆ ಜೊತೆಗೆ ಭವಿಷ್ಯಕ್ಕೆ ಸಿದ್ಧವಿರುವ ಕೈಗಾರಿಕಾ ವಾತಾವರಣ ನಿರ್ಮಾಣ ಮಾಡುವ ನಮ್ಮ ದೂರದೃಷ್ಟಿಯನ್ನು ಪ್ರತಿಫಲಿಸುತ್ತದೆ ಎಂದರು. ಗುಜರಾತ್ ರಾಜ್ಯವು ಕೇವಲ ಸ್ಥಳೀಯ ಬೆಳವಣಿಗೆ ಮಾತ್ರ ಆದ್ಯತೆ ನೀಡದೆ 2047ರ ವೇಳೆಗೆ ಭಾರತವು ಅಭಿವೃದ್ಧಿ ದೇಶವಾಗಲು ಮಹತ್ವದ ಪಾತ್ರ ನಿರ್ವಹಿಸಲಿದೆ ಎಂದು ಮೋನಾ ಖಂಧರ್ ಹೇಳಿದರು. ಧೋಲೆರಾದಲ್ಲಿ ಸೆಮಿಕಂಡಕ್ಟರ್ ಕೇಂದ್ರ ಸ್ಥಾಪನೆ, ಜಾಗತಿಕ ಪಾಲುದಾರಿಕೆ, ಕೌಶಲ ವೃದ್ಧಿ ಹಾಗೂ ಸಂಶೋಧನೆಗೆ ಒತ್ತು ನೀಡುವ ಮೂಲಕ ಜಾಗತಿಕ ಸ್ಪರ್ಧೆಯನ್ನು ಸಮರ್ಥವಾಗಿ ಎದುರಿಸಲು ನಾವು ಉದ್ಯಮಗಳು ಮತ್ತು ನವೋದ್ಯಮಗಳನ್ನು ಸಬಲೀಕರಣಗೊಳಿಸುತ್ತಿದ್ದೇವೆ ಎಂದು ಮೋನಾ ಖಂಧರ್ ತಿಳಿಸಿದರು. ಅಹ್ಮದಾಬಾದ್ನಲ್ಲಿ ಅಸ್ತಿತ್ವಕ್ಕೆ ಬರುತ್ತಿರುವ ‘ಮಿಲಿಯನ್ ಮೈಂಡ್ಸ್ ಟೆಕ್ ಸಿಟಿ’-ಯಂತಹ ಯೋಜನೆಗಳು ನಮ್ಮ ಪ್ರಗತಿಯ ಮಹತ್ವಾಕಾಂಕ್ಷೆ ಜೊತೆ ಹೊಂದಿಕೊಳ್ಳುವ ಜಾಗತಿಕ ಮಟ್ಟದ ಮೂಲಸೌಲಭ್ಯಗಳನ್ನು ಒದಗಿಸಿ ತಂತ್ರಜ್ಞಾನ ಮತ್ತು ಆವಿಷ್ಕಾರಕ್ಕೆ ಗುಜರಾತ್ ಆದ್ಯತೆಯ ರಾಜ್ಯವನ್ನಾಗಿಸಲು ನೆರವಾಗಲಿವೆ ಎಂದು ಮೋನಾ ಖಂಧರ್ ಹೇಳಿದರು. ಗಣೇಶ್ ಹೌಸಿಂಗ್ ಕಾರ್ಪೊರೇಷನ್ ಲಿಮಿಟೆಡ್ನ ನಿರ್ದೇಶಕ ಅನ್ಮೋಲ್ ಪಟೇಲ್ ಮಾತನಾಡಿ, ಚೆನ್ನೈನಲ್ಲಿ ನಡೆದ ರೋಡ್ ಶೋ ಯಶಸ್ಸಿನ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ನಮಗೆ ದೊರೆತಿರುವ ಅಗಾಧ ಪ್ರತಿಕ್ರಿಯೆಯಿಂದ ನಾವು ನಿಜವಾಗಿಯೂ ಸ್ಫೂರ್ತಿ ಪಡೆದಿದ್ದೇವೆ. ಐಟಿ/ಐಟಿಇಎಸ್ ವಲಯವನ್ನು ಮುನ್ನಡೆಸುವ ಗುಜರಾತ್ನ ಅಪಾರ ಸಾಮರ್ಥ್ಯದ ಮೇಲಿನ ನಮ್ಮ ನಂಬಿಕೆಯನ್ನು ಇದು ಇನ್ನಷ್ಟು ಬಲಪಡಿಸುತ್ತದೆ ಎಂದರು. ಗುಜರಾತ್ ಸರಕಾರ ಮತ್ತು ಐಟಿ/ಐಟಿಇಎಸ್ ನೀತಿಯ ಬೆಂಬಲದ ನೆರವಿನಿಂದ, ಮಿಲಿಯನ್ ಮೈಂಡ್ಸ್ ಟೆಕ್ ಸಿಟಿ-ಗೆ ಸಂಬಂಧಿಸಿದ ನಮ್ಮ ದೂರದೃಷ್ಟಿಯು ಮತ್ತೊಂದು ಟೌನ್ಶಿಪ್ ಅಭಿವೃದ್ಧಿಪಡಿಸುವುದಕ್ಕೆ ಸೀಮಿತವಾಗಿರದೆ, ಅಭಿವೃದ್ಧಿ ಹೊಂದುತ್ತಿರುವ ಪರಿಸರ ವ್ಯವಸ್ಥೆ ನಿರ್ಮಾಣಕ್ಕೂ ನೆರವಾಗಲಿದೆ. ಇದು ನಾವೀನ್ಯತೆ, ಐಶಾರಾಮಿ ಮತ್ತು ಸಮುದಾಯವು ಒಂದೆಡೆ ಸೇರುವ ಸ್ಥಳವಾಗಿರಲಿದೆ ಎಂದು ಅನ್ಮೋಲ್ ಪಟೇಲ್ ಹೇಳಿದರು. ಗುಜರಾತ್ ಮತ್ತು ಕರ್ನಾಟಕದ ಐಟಿ ಕ್ಷೇತ್ರದ ಪ್ರಮುಖರನ್ನು ಒಂದೆಡೆ ಸೇರಿಸುವ ಮೂಲಕ, ಗುಜರಾತ್ ರಾಜ್ಯವನ್ನು ಐಟಿ ಹೂಡಿಕೆಗಳಿಗೆ ಮೊದಲ ಆಯ್ಕೆಯನ್ನಾಗಿ ಮಾಡುವ ಕಾರ್ಯತಂತ್ರದ ಉಪಕ್ರಮಗಳ ಮೇಲೆ ಬೆಳಕು ಚೆಲ್ಲುವಲ್ಲಿ ಈ ರೋಡ್ ಶೋ ಪ್ರಮುಖ ಪಾತ್ರವಹಿಸಿದೆ. ಬೆಂಗಳೂರಿನ ಉತ್ಸಾಹಿ ತಂತ್ರಜ್ಞಾನ ಸಮುದಾಯದ ತೀವ್ರ ಆಸಕ್ತಿ ಮತ್ತು ಪಾಲ್ಗೊಳ್ಳುವಿಕೆಯು ಐಟಿ ಕ್ಷೇತ್ರದಲ್ಲಿ ಬೆಳವಣಿಗೆಗೆ ವಿಪುಲ ಅವಕಾಶಗಳು ಇರುವುದರ ಬಗೆಗಿನ ನಮ್ಮ ದೃಢ ವಿಶ್ವಾಸವನ್ನು ಪುನರುಚ್ಚರಿಸುತ್ತದೆ ಎಂದು ಅನ್ಮೋಲ್ ಪಟೇಲ್ ತಿಳಿಸಿದರು. ಕಾರ್ಯಕ್ರಮದಲ್ಲಿ ಗುಜರಾತ್ ಇನ್ಫಾರ್ಮ್ಯಾಟಿಕ್ಸ್ ಲಿಮಿಟೆಡ್ನ ವ್ಯವಸ್ಥಾಪಕ ನಿರ್ದೇಶಕ ತುಷಾರ್ ವೈ. ಭಟ್ ಹಾಗೂ ಉದ್ಯಮಿಗಳು, ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು. ಗುಜರಾತ್ ಐಟಿ/ಐಟಿಇಎಸ್ ನೀತಿ 2022-27ರ ಅಡಿಯಲ್ಲಿ ನೀಡಲಾಗುತ್ತಿರುವ ವಿವಿಧ ಉತ್ತೇಜನಾ ಕ್ರಮಗಳ ಕುರಿತು ಸಮಾಲೋಚನಾ ಸಭೆಗಳು ಜರುಗಿದವು.
ಕಳಸ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಖಾಯಂ ವೈದ್ಯರ ಕೊರತೆ; ಆರೋಗ್ಯ ಸೇವೆ ಮರೀಚಿಕೆ
ಚಿಕ್ಕಮಗಳೂರು : ಜಿಲ್ಲೆಯ ಗಡಿ ಭಾಗದಲ್ಲಿರುವ ಕಳಸ ತಾಲೂಕು ಕೇಂದ್ರದ ಸಮುದಾಯದ ಆರೋಗ್ಯ ಕೇಂದ್ರ ನಿರ್ಮಾಣವಾಗಿ ದಶಕ ಕಳೆದಿದ್ದರೂ ಖಾಯಂ ವೈದ್ಯರ ಕೊರತೆಯಿಂದಾಗಿ ಸೊರಗಿ ಹೋಗಿದೆ. ಇದರಿಂದ ತಾಲೂಕಿನಲ್ಲಿ ಅತೀ ಹೆಚ್ಚಿನ ಸಂಖ್ಯೆಯಲ್ಲಿರುವ ಪರಿಶಿಷ್ಟರು ಹಾಗೂ ಕಾರ್ಮಿಕರು ನೆರೆಯ ಜಿಲ್ಲೆಗಳ ಆಸ್ಪತ್ರೆಗೆ ಹೋಗುವಂತಾಗಿದೆ. ಸ್ಥಳೀಯರ ಹೋರಾಟದ ಫಲವಾಗಿ ಇತ್ತೀಚೆಗೆ ಈ ಆಸ್ಪತ್ರೆಗೆ ವೈದ್ಯರೊಬ್ಬರು ನೇಮಕಗೊಂಡಿದ್ದು, ಈ ವೈದ್ಯರ ಕರ್ತವ್ಯಕ್ಕೆ ಕ್ಷುಲ್ಲಕ ಕಾರಣಕ್ಕೆ ಸ್ಥಳೀಯ ರಾಜಕೀಯ ಮುಖಂಡರು ಅಡ್ಡಿಪಡಿಸಿದ್ದರಿಂದ ವೈದ್ಯರು ಕರ್ತವ್ಯಕ್ಕೆ ರಾಜೀನಾಮೆ ನೀಡಿದ್ದಾರೆ. ಪರಿಣಾಮ ಇಲ್ಲಿನ ಬಡ ಜನರಿಗೆ ಆರೋಗ್ಯ ಸೇವೆ ದಕ್ಕದಂತಾಗಿದೆ. ಕಳಸ ತಾಲೂಕು ಕೇಂದ್ರ ಚಿಕ್ಕಮಗಳೂರು ಜಿಲ್ಲಾ ಕೇಂದ್ರದಿಂದ 100 ಕಿ.ಮೀ. ದೂರದಲ್ಲಿದ್ದು, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಗಡಿಯಲ್ಲಿರುವ ಹಿಂದುಳಿದ ತಾಲೂಕು ಕೇಂದ್ರವಾಗಿದೆ. ಈ ತಾಲೂಕಿನಲ್ಲಿ ಎಸ್ಸಿ, ಎಸ್ಟಿ ಸಮುದಾಯದ ಬಡಜನತೆ ಹಾಗೂ ಕಾರ್ಮಿಕ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿ ವಾಸವಾಗಿದ್ದಾರೆ. ಕಳಸದಲ್ಲಿ ಹಿಂದೆ ಪ್ರಾಥಮಿಕ ಆರೋಗ್ಯ ಕೇಂದ್ರದ ಹೊರತಾಗಿ ಖಾಸಗಿ ಆಸ್ಪತ್ರೆಯೊಂದು ಕಾರ್ಯ ನಿರ್ವಹಿಸುತ್ತಿತ್ತು. ಆದರೆ, ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರು, ಮೂಲಸೌಕರ್ಯಗಳ ಕೊರತೆಯಿಂದಾಗಿ ಬಡಜನರೂ ಖಾಸಗಿ ಆಸ್ಪತ್ರೆಯಲ್ಲಿ ದುಪ್ಪಟ್ಟು ಹಣ ನೀಡಿ ಚಿಕಿತ್ಸೆ ಪಡೆಯುವಂತಾಗಿತ್ತು. ಈ ಹಿನ್ನೆಲೆಯಲ್ಲಿ ಸ್ಥಳೀಯ ರಾಜಕೀಯ ಪಕ್ಷಗಳು ಹಾಗೂ ಸಂಘ ಸಂಸ್ಥೆಗಳ ಮುಖಂಡರು ಹಾಗೂ ಸಾರ್ವಜನಿಕರು ಸಮುದಾಯ ಆರೋಗ್ಯ ಕೇಂದ್ರಕ್ಕಾಗಿ ಹೋರಾಟ ನಡೆಸಿದ್ದರು. ಈ ಹೋರಾಟದ ಫಲವಾಗಿ ಕಳಸ ಪಟ್ಟಣಕ್ಕೆ ಸಮುದಾಯದ ಆರೋಗ್ಯ ಮಂಜೂರಾಗಿದ್ದು, ಇದರಿಂದಾಗಿ ಇಲ್ಲಿನ ಬಡಜನರಿಗೆ ಉತ್ತಮ ಆರೋಗ್ಯ ಸಿಗುವ ಭರವಸೆ ಮೂಡಿತ್ತು. ಆದರೆ, ಸಮುದಾಯ ಆರೋಗ್ಯ ಕೇಂದ್ರನಿರ್ಮಾಣವಾದರೂ ಖಾಯಂ ವೈದ್ಯರ ಕೊರತೆಯಿಂದಾಗಿ ಬಡಜನರು ಆರೋಗ್ಯ ಸೇವೆಗಾಗಿ ಮಂಗಳೂರು, ಮೂಡಿಗೆರೆ, ಚಿಕ್ಕಮಗಳೂರು, ಉಡುಪಿಗೆ ಹೋಗುವಂತಾಗಿದೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂಬ ಆಗ್ರಹಗಳು ಸಾರ್ವಜನಿಕರಿಂದ ಕೇಳಿ ಬರುತ್ತಿವೆ. ಕರ್ತವ್ಯಕ್ಕೆ ಪ್ರಭಾವಿಯಿಂದ ಅಡ್ಡಿ: ವೈದ್ಯ ರಾಜೀನಾಮೆ ವೈದ್ಯರ ಕೊರತೆಯಿಂದಾಗಿ ಇಲ್ಲಿನ ಜನರಿಗೆ ಆರೋಗ್ಯ ಸೇವೆ ಸರಿಯಾಗಿ ಸಿಗುತ್ತಿರಲಿಲ್ಲ. ಬರುವ ವೈದ್ಯರು ಒಂದೆರೆಡು ತಿಂಗಳಲ್ಲೇ ಬೇರೆಡೆಗೆ ವರ್ಗಾವಣೆಯಾಗಿ ಹೋಗುತ್ತಿದ್ದರು. ಈ ಅವ್ಯವಸ್ಥೆ ವಿರುದ್ಧ ಅನೇಕ ಬಾರಿ ಹೋರಾಟ ನಡೆಸಿದ್ದೇವೆ. ಪರಿಣಾಮ ಇತ್ತೀಚೆಗೆ ಆಸ್ಪತ್ರೆಗೆ ಇಬ್ಬರು ವೈದ್ಯರು ಬಂದಿದ್ದರು. ಓರ್ವ ವೈದ್ಯರು ವ್ಯಾಸಂಗಕ್ಕೆಂದು ತೆರಳಿದ್ದರು. ಇದ್ದ ಮತ್ತೋರ್ವ ವೈದ್ಯರ ಮೇಲೆ ಸ್ಥಳೀಯ ಪ್ರಭಾವಿ ವ್ಯಕ್ತಿಯೊಬ್ಬರು ಹಲ್ಲೆ, ಬೆದರಿಕೆ ಹಾಕಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ. ದೂರು ದಾಖಲಾಗಿದ್ದರೂ ಕಾನೂನು ಕ್ರಮ ಆಗಿಲ್ಲ. ಇದರಿಂದ ನೊಂದ ವೈದ್ಯರು ರಕ್ಷಣೆ ಸಿಗುವುದಿಲ್ಲ ಎಂದು ಬೇಸತ್ತು ರಾಜೀನಾಮೆ ನೀಡಿದ್ದರಿಂದ ಆಸ್ಪತ್ರೆಯಲ್ಲಿ ಮತ್ತೆ ವೈದ್ಯರ ಕೊರತೆ ಉಂಟಾಗಿದೆ. ಕೂಡಲೇ ಆಸ್ಪತ್ರೆಗೆ ಖಾಯಂ ವೈದ್ಯರನ್ನು ನೇಮಿಸಬೇಕು. ವೈದ್ಯರ ಕರ್ತವ್ಯಕ್ಕೆ ಅಡ್ಡಿಪಡಿಸಿದ ವ್ಯಕ್ತಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸಿಪಿಐ ಕಳಸ ತಾಲೂಕು ಮುಖಂಡ ಲಕ್ಷ್ಮಣ್ ಆಚಾರ್ ಒತ್ತಾಯಿಸಿದ್ದಾರೆ. ಕಳಸ ಸಮುದಾಯದ ಆರೋಗ್ಯ ಕೇಂದ್ರದಲ್ಲಿ ಡಾ.ಮುರುಳಿ ಎಂಬವರು ಕಳೆದ ಒಂದೂವರೆ ವರ್ಷದಿಂದ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದು, ಯಾವುದೇ ದೂರುಗಳು ಇದುವರೆಗೂ ಕೇಳಿ ಬಂದಿಲ್ಲ. ಇತ್ತೀಚೆಗೆ ಕೆಲ ವ್ಯಕ್ತಿಗಳು ವೈದ್ಯರ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆಂದು ಅವರು ಕಳಸ ಪೊಲೀಸರಿಗೆ ದೂರು ನೀಡಿದ್ದಾರೆ. ಸ್ಥಳೀಯ ಪ್ರಭಾವಿಗಳ ವರ್ತನೆಯಿಂದ ನೊಂದು ಡಾ.ಮುರುಳಿ ರಾಜೀನಾಮೆ ನೀಡಿದ್ದಾರೆ. ರಾಜೀನಾಮೆ ಸ್ವೀಕೃತವಾಗಿಲ್ಲ. ಸಮಸ್ಯೆ ಪರಿಹಾರಕ್ಕೆ ಪ್ರಯತ್ನ ನಡೆಸುತ್ತಿದ್ದೇನೆ. ಮುಂದಿನ ಎರಡು ಮೂರು ದಿನಗಳಲ್ಲಿ ಸಮಸ್ಯೆ ಪರಿಹರಿಸಲಾಗುವುದು. ಡಾ.ಅಶ್ವಥ್ ಬಾಬು, ಡಿಎಚ್ಒ
ಬಾಳ್ ಠಾಕ್ರೆ ಜನ್ಮ ಜಯಂತಿಯಂದು ಪರಸ್ಪರ ಪಂಥಾಹ್ವಾನ ನೀಡಿದ ಉದ್ಧವ್, ಏಕನಾಥ್; ಯಾರು, ಏನಂದರು?
ಶಿವಸೇನೆ ಸಂಸ್ಥಾಪಕ ಬಾಳ್ ಠಾಕ್ರೆ ಅವರ ಜನ್ಮಜಯಂತಿ ಅಂಗವಾಗಿ, ಪಕ್ಷದ ಎರಡೂ ಬಣಗಳು ಇಂದು(ಜ.23-ಗುರುವಾರ) ಪ್ರತ್ಯೇಕ ಸಮಾರಂಭ ನಡೆಸಿವೆ. ಶಿವಸೇನೆ(ಯುಬಿಟಿ) ಬಣದ ನಾಯಕ ಉದ್ಧವ್ ಠಾಕ್ರೆ ಅವರು ಏಕನಾಥ್ ಶಿಂಧೆ ಬಣದ ವಿರುದ್ಧ ವಾಗ್ದಾಳಿ ನಡೆಸಿದರೆ, ಏಕನಾಥ್ ಶಿಂಧೆ ಬಣ ತಾವೇ ಬಾಳ್ ಠಾಕ್ರೆ ಅವರ ಸಿದ್ಧಾಂತದ ನೈಜ ವಾರಸುದಾರರು ಎಂದು ಹೇಳಿದೆ. ಎರಡೂ ಬಣಗಳ ಕಿತ್ತಾಟದ ನಡುವೆ ಬಾಳ್ ಠಾಕ್ರೆ ಅವರ ಜನ್ಮ ಜಯಂತಿ ಕಳೆಗುಂದಿದೆ. ಈ ಕುರಿತು ಇಲ್ಲಿದೆ ವರದಿ.
ಬೆಂಗಳೂರು : ಬೆಂಗಳೂರು ವಕೀಲರ ಸಂಘದ ಆಡಳಿತ ಮಂಡಳಿಗೆ ಫೆ.2ರಂದು ಚುನಾವಣೆ ನಡೆಯಲಿದ್ದು, ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ಸ್ಥಾನಕ್ಕೆ ಕೆಪಿಸಿಸಿಯಿಂದ ಯಾವುದೇ ಅಧಿಕೃತ ಅಭ್ಯರ್ಥಿಯನ್ನು ಘೋಷಿಸಿಲ್ಲ ಎಂದು ಕೆಪಿಸಿಸಿ ಮಾಧ್ಯಮ ವಿಭಾಗದ ಮುಖ್ಯಸ್ಥ ರಮೇಶ್ ಬಾಬು ಸ್ಪಷ್ಟನೆ ನೀಡಿದ್ದು, ಇದು ವಿವಾದಕ್ಕೆ ಕಾರಣವಾಗಿದೆ. ಈ ಸಂಬಂಧ ರಮೇಶ್ ಬಾಬು ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಕೆಪಿಸಿಸಿ ಕಾನೂನು ವಿಭಾಗದ ರಾಜ್ಯ ಕಾರ್ಯದರ್ಶಿ ಅಂಜನಮೂರ್ತಿ ಬಿ ಅವರು, ಕಾಂಗ್ರೆಸ್ನಿಂದ ರಮೇಶ್ ಬಾಬು ಅಮಾನತಿಗೆ ಆಗ್ರಹಿಸಿದ್ದಾರೆ. ʼಏಷ್ಯಾದಲ್ಲೇ ಅತಿ ದೊಡ್ಡದಾದ ಬೆಂಗಳೂರು ವಕೀಲರ ಸಂಘ ಚುನಾವಣೆಗಳು ನಡೆಯುತ್ತಿವೆ. ವಿವಿಧ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದು, ಅವರ ಪಕ್ಷಗಳು ತಮ್ಮ ಅಭ್ಯರ್ಥಿಗಳಿಗೆ ಎಲ್ಲಾ ರೀತಿಯಲ್ಲಿ ಸಹಾಯ ಮಾಡುತ್ತಿವೆ. ಆದರೆ ರಮೇಶ್ ಬಾಬು ಅಧ್ಯಕ್ಷ ಸ್ಥಾನಕ್ಕೆ ಕೆಪಿಸಿಸಿಯಿಂದ ಯಾವುದೇ ಅಧಿಕೃತ ಅಭ್ಯರ್ಥಿಯನ್ನು ಘೋಷಿಸಿಲ್ಲ ಎಂದು ಪ್ರಕಟನೆ ಹೊರಡಿಸಿದ್ದಾರೆ. ಈ ಪತ್ರ ಅನಗತ್ಯವಾಗಿತ್ತು. ರಮೇಶ್ ಬಾಬು ಜೆಡಿಎಸ್ ಅಭ್ಯರ್ಥಿಗಳ ಪರವಾಗಿ ಪ್ರಚಾರ ಮಾಡುತ್ತಿದ್ದಾರೆ, ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಾರೆ. ರಮೇಶ್ ಬಾಬು ಅವರ ಈ ಪತ್ರವು ಪಕ್ಷದ ಕಾರ್ಯಕರ್ತರನ್ನು ನಿರಾಶೆಗೊಳಿಸಿದೆ ಮತ್ತು ಗೊಂದಲಕ್ಕೆ ಕಾರಣವಾಗಿದೆʼ ಎಂದು ಅಂಜನಮೂರ್ತಿ ಹೇಳಿದ್ದಾರೆ.
Virender Sehwag: ವಿರೇಂದ್ರ ಸೆಹ್ವಾಗ್ ಬಾಳಲ್ಲಿ ಬಿರುಗಾಳಿ! ಪತ್ನಿಯಿಂದ ವಿಚ್ಛೇದನ
ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ವಿರೇಂದ್ರ ಸೆಹ್ವಾಗ್ ಮತ್ತು ಅವರ ಪತ್ನಿ ಆರತಿ ಅಹ್ಲಾವತ್ ವಿಚ್ಛೇದನದ ಸುದ್ದಿ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ. ಎರಡು ದಶಕಗಳ ದಾಂಪತ್ಯವನ್ನು ಕೊನೆಗೊಳಿಸಲು ಇಬ್ಬರೂ ನಿರ್ಧರಿಸಿದ್ದು ಇಬ್ಬರು ವಿಚ್ಛೇದನ ಪಡೆಯಲಿದ್ದಾರೆ ಎಂದು ವರದಿಯಾಗಿದೆ. 2004ರಲ್ಲಿ ವಿರೇಂದ್ರ ಸೆಹ್ವಾಗ್ ಆರತಿ ಅಹ್ಲಾವತ್ರನ್ನು ಮದುವೆಯಾಗಿದ್ದರು. ಇಬ್ಬರೂ ಇನ್ಸ್ಟಾಗ್ರಾಂನಲ್ಲಿ ಪರಸ್ಪರ ಅನ್ಫಾಲೋ ಮಾಡಿದ
ಮಂತ್ರಿಮಾಲ್ ಎರಡನೇ ಮಹಡಿಯಿಂದ ಜಿಗಿದು ವ್ಯಕ್ತಿ ಆತ್ಮಹತ್ಯೆ
ಬೆಂಗಳೂರು: ಮ mallೇಶ್ವರಂನ ಮಂತ್ರಿ ಮಾಲ್ ನ ಮಾಲ್ ನಲ್ಲಿ 55 ವರ್ಷದ ಮಂಜುನಾಥ್ 2 ಕೋಟಿ ರೂ. ಸಾಲದಿಂದ ಖಿನ್ನತೆಗೆ ಒಳಪಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಹಿಂದೆ ಸೇರಿದ್ದ ಸಾಲದ ಬಾಧೆಯಿಂದ ಈ ಘಟನೆ ನಡೆದಿರಬಹುದು ಎಂದು ಅಂದಾಜಿಸಲಾಗಿದೆ. ಇದೇ ಬೆಂಗಳೂರಿನಲ್ಲಿ ಕಳೆದ ಜ. 6 ರಂದು ಮತ್ತೊಬ್ಬ ದಂಪತಿಯೂ ಅವರ ಮಕ್ಕಳ ಸಹ ಬಾಧೆಯಿಂದ ಆತ್ಮಹತ್ಯೆಗೆ ಶರಣಾಗಿದ್ದರು.
ಐಐಟಿ ಬಾಬಾ ಎಂದೇ ಜನಪ್ರಿಯರಾದ ಅಭಯ್ ಸಿಂಗ್ ಅವರನ್ನು ಜುನಾ ಅಖಾಡದಿಂದ ಹೊರಹಾಕಲು ಕಾರಣವೇನು?
ಒಬ್ಬ ಯಶಸ್ವಿ ಇಂಜಿನಿಯರ್ ಆಧ್ಯಾತ್ಮಿಕ ಜೀವನದತ್ತ ಒಲವು ತೋರಿ ಸನ್ಯಾಸಿಯಾಗಿದ್ದು ವೈರಲ್ ಸುದ್ದಿಯಾಗಿ ಅಭಯ್ ಸಿಂಗ್ ನಂತರ ಐಐಟಿ ಬಾಬಾ ಆಗಿ ಖ್ಯಾತಿ ಪಡೆದ ಇವರನ್ನು ಸದ್ಯ ಜುನಾ ಅಖಾಡದಿಂದ ಹೊರಹಾಕಲಾಗಿದೆ. ಅದಕ್ಕೆ ಕಾರಣ ಇಲ್ಲಿದೆ..
ಬೆಂಗಳೂರು: ಬೆಂಗಳೂರು ವಕೀಲರ ಸಂಘದ ಆಡಳಿತ ಮಂಡಳಿಗೆ ಫೆ.2ರಂದು ಚುನಾವಣೆ ನಡೆಯುಲಿದ್ದು, ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ಸ್ಥಾನಕ್ಕೆ ಕೆಪಿಸಿಸಿಯಿಂದ ಯಾವುದೇ ಅಧಿಕೃತ ಅಭ್ಯರ್ಥಿಯನ್ನು ಘೋಷಿಸಿಲ್ಲ ಎಂದು ಕೆಪಿಸಿಸಿ ವಕ್ತಾರ ರಮೇಶ್ ಬಾಬು ಸ್ಪಷ್ಟಪಡಿಸಿದ್ದಾರೆ. ʼಬೆಂಗಳೂರು ವಕೀಲರ ಸಂಘದ ಪದಾಧಿಕಾರಿಗಳ ಸ್ಥಾನಕ್ಕೆ ನಮ್ಮ ಪಕ್ಷದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಮತ್ತು ಕಾನೂನು ಘಟಕದಲ್ಲಿ ಪದಾಧಿಕಾರಿಗಳಾಗಿರುವ ಅನೇಕರು ಸ್ಪರ್ಧೆ ಮಾಡಿರುತ್ತಾರೆ. ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ಮಾಡಿರುವ ಯಾವುದೇ ಅಭ್ಯರ್ಥಿಯನ್ನು ಕರ್ನಾಟಕ ಪ್ರದೇಶ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ರವರಾಗಲಿ ಮತ್ತು ಪಕ್ಷದ ಕಾನೂನು ಘಟಕದ ರಾಜ್ಯ ಅಧ್ಯಕ್ಷ ಎ.ಎಸ್.ಪೊನ್ನಣ್ಣರವರಾಗಲಿ, ಅಧಿಕೃತ ಅಭ್ಯರ್ಥಿ ಎಂದು ಘೋಷಣೆ ಮಾಡಿರುವುದಿಲ್ಲʼ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಕಲ್ಲಾಪು: ಜ.24ರಂದು ಕುರ್ಆನ್ ಸ್ಪರ್ಧೆ, ಬಹುಮಾನ ವಿತರಣಾ ಕಾರ್ಯಕ್ರಮ
ಮಂಗಳೂರು: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಮದ್ರಸಾ ಅಸೋಸಿಯೇಷನ್ ವತಿಯಿಂದ ಜ. 24ರಂದು ಸಂಜೆ 4.30ಕ್ಕೆ ಮಂಗಳೂರಿನ ಕಲ್ಲಾಪುವಿನ ಯೂನಿಟಿ ಹಾಲ್ ನಲ್ಲಿ ಕುರ್ ಆನ್ ಸ್ಪರ್ಧೆ, ಬಹುಮಾನ ವಿತರಣಾ ಕಾರ್ಯಕ್ರಮ ನಡೆಯಲಿದೆ. ಇಖ್ರಾ ಅರೇಬಿಕ್ ಸ್ಕೂಲ್, ಸಲಫಿ ಎಜುಕೇಶನ್ ಬೋರ್ಡ್(SKSM), ಕರ್ನಾಟಕ ಎಜುಕೇಶನ್ ಬೋರ್ಡ್(KSA), ಜಮಾತ್ ಇ ಇಸ್ಲಾಮಿ ಹಿಂದ್, ದೀನಿಯಾತ್, ಅಸ್ ಸುಫಾ ಅಕಾಡೆಮಿ, ಅಲ್ ನೂರ್ ಅರೇಬಿಕ್ ಅಕಾಡೆಮಿ, ಸಿರಾತ್ ಇ ಮುಸ್ತಕೀಮ್, ಅಲ್ ಫುರ್ಖಾನ್ ಅರೇಬಿಕ್ ಇನ್ಸ್ಟಿಟ್ಯೂಟ್, ಅಲ್ ಖಲಾಮ್ ಅರೇಬಿಕ್ ಅಕಾಡೆಮಿ ಸಹಯೋಗದಲ್ಲಿ ಈ ಕಾರ್ಯಕ್ರಮ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.
Gautam Gambhir: ಸಂಜೆ ಸಿಗು ಹೊಡಿತಿನಿ ಎಂದಿದ್ದ ಗೌತಮ್ ಗಂಭೀರ್; ಸಹ ಆಟಗಾರನಿಂದ ಆರೋಪ
ಭಾರತ ತಂಡದ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಸದ್ಯ ಭಾರತ ತಂಡದ ಹೆಡ್ ಕೋಚ್ ಆಗಿದ್ದಾರೆ. ಅವರ ಕೋಚಿಂಗ್ನಲ್ಲಿ ಭಾರತ ಈಗಾಗಲೇ ಏಕದಿನ ಮತ್ತು ಟೆಸ್ಟ್ ಕ್ರಿಕೆಟ್ನಲ್ಲಿ ಹಲವು ಅವಾಮಾನಕರ ಸೋಲು ಕಂಡಿದ್ದು, ಚಾಂಪಿಯನ್ಸ್ ಟ್ರೋಫಿ ಗೌತಮ್ ಗಂಭೀರ್ ಗೆ ಅಗ್ನಿ ಪರೀಕ್ಷೆಯಾಗಿದ್ದು ಅಲ್ಲಿ ಭಾರತ ಉತ್ತಮ ಪ್ರದರ್ಶನ ನೀಡದೇ ಇದ್ದರೆ ಅವರ ಕೋಚ್ ಹುದ್ದೆಗೆ ಕುತ್ತು
ಸೆಲೂನ್ ದಾಳಿಗೂ ಶ್ರೀರಾಮಸೇನೆಗೂ ಸಂಬಂಧವಿಲ್ಲ: ಜಯರಾಮ ಅಂಬೆಕಲ್ಲು
ಉಡುಪಿ, ಜ.23: ಮಂಗಳೂರಿನಲ್ಲಿ ನಡೆದ ಸೆಲೂನ್ ದಾಳಿಗೂ ಶ್ರೀರಾಮಸೇನೆ ಗೂ ಸಂಬಂಧವಿಲ್ಲ ಎಂದು ಶ್ರೀರಾಮಸೇನೆ ಮಂಗಳೂರು ವಿಭಾಗ ಅಧ್ಯಕ್ಷ ಜಯರಾಮ ಅಂಬೆಕಲ್ಲು ಹೇಳಿದ್ದಾರೆ. ದಾಳಿಯ ಕುರಿತಂತೆ ಹೇಳಿಕೆಯೊಂದನ್ನು ಬಿಡುಗಡೆಗೊಳಿಸಿರುವ ಅವರು, ಇಂದು ಪ್ರಮೋದ್ ಮುತಾಲಿಕರ 70 ನೇ ವರ್ಷದ ಜನ್ಮ ದಿನಾಚರಣೆ ಪ್ರಯುಕ್ತ ಎಲ್ಲಾ ಕಾರ್ಯಕರ್ತರು ಹಾಗೂ ಪದಾಧಿಕಾರಿಗಳು ಪೂಜೆ ಹವನ ಹಾಗೂ ಇನ್ನಿತರ ಕಾರ್ಯ ಕ್ರಮ ನಡೆಸುತ್ತಿದ್ದಾರೆ. ಹೆಚ್ಚಿನ ಪದಾಧಿಕಾರಿಗಳು ಅಯೋಧ್ಯೆ ಹಾಗೂ ಕುಂಭ ಮೇಳ ಪ್ರವಾಸದಲ್ಲಿದ್ದಾರೆ ಎಂದು ಹೇಳಿದ್ದಾರೆ.
Australian Open: ಮಹಿಳಾ ಸಿಂಗಲ್ಸ್ ಉಪಾಂತ್ಯದಲ್ಲಿ ರೋಚಕ ಫೈಟ್: ಸ್ವಿಯಾಟೆಕ್ ಗೆ ಶಾಕ್ ನೀಡಿದ ಕೀಸ್!
ರೋಚಕ ಸೆಮಿಫೈನಲ್ ನಲ್ಲಿ ವಿಶ್ವದ ನಂಬರ್ 2ನೇ ಆಟಗಾರ್ತಿ ಇಗಾ ಸ್ವಿಯಾಟೆಕ್ ಅವರನ್ನು ಸೋಲಿಸಿದ ಅಮೆರಿಕದ 19ನೇ ಶ್ರೇಯಾಂಕಿತೆ ಮ್ಯಾಡಿಸನ್ ಕೀ ಅವರು ಆಸ್ಟ್ರೇಲಿಯನ್ ಓಪನ್ ಗ್ಲಾನ್ ಸ್ಲಾಂ ಟೂರ್ನಿಯ ಫೈನಲ್ ಪ್ರವೇಶಿಸಿದ್ದಾರೆ. ಅಲ್ಲಿ ಅವರು ಎದುರಿಸಬೇಕಿರುವುದು ವಿಶ್ವದ ನಂಬರ್ 1 ಆಟಗಾರ್ತಿ ಎರಿನಾ ಸಬಲೆಂಕಾ ಅವರನ್ನು. ಇಬ್ಬರು ಆಟಗಾರ್ತಿಯರು ಐದು ಬಾರಿ ಮುಖಾಮುಖಿಯಾಗಿದ್ದು 1 ಬಾರಿ ಕೀಸ್ ಅವರು ಬಲಿಷ್ಠ ಸಬಲೆಂಕಾ ಅವರನ್ನು ಪರಾಭವಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹಾಗಾಗಿ ಭಾನುವಾರದ ಪಂದ್ಯ ಏಕಮುಖವಾಗಿ ಸಾಗುವ ಲಕ್ಷಣವಂತೂ ಇಲ್ಲ.
ಕಲಬುರಗಿ: ವಿದ್ಯುತ್ ಸಮಸ್ಯೆ ನೀಗಿಸುವ ನಿಟ್ಟಿನಲ್ಲಿ ಜೆಸ್ಕಾಂ ವ್ಯಾಪ್ತಿಯ ಕಲಬುರಗಿ, ರಾಯಚೂರು, ಕೊಪ್ಪಳ ಹಾಗೂ ವಿಜಯನಗರ ಜಿಲ್ಲೆಯ 10 ವಿದ್ಯುತ್ ಉಪ ವಿತರಣಾ ಕೇಂದ್ರದ 5 ಕಿ.ಮೀ. ವ್ಯಾಪ್ತಿಯಲ್ಲಿ ಕುಸುಮ್ ‘ಸಿ’ ಯೋಜನೆಯಡಿ 43 ಮೆಗಾ ವ್ಯಾಟ್ ಸೋಲಾರ ವಿದ್ಯುತ್ ಉತ್ಪಾದಿಸುವ ಘಟಕ ಸ್ಥಾಪಿಸಲಾಗುತ್ತಿದೆ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ಹೇಳಿದರು. ಗುರುವಾರ ಇಲ್ಲಿನ ಜೆಸ್ಕಾಂನ ನಿಗಮ ಕಚೇರಿ ಸಭಾಂಗಣದಲ್ಲಿ ವಿದ್ಯುತ್ ಸಮಸ್ಯೆ ಕುರಿತು ಜಿಲ್ಲೆಯ ಶಾಸಕರು ಮತ್ತು ಜೆಸ್ಕಾಂ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಅವರು ಮಾತನಾಡಿದರು. ಕಲಬುರಗಿ ಜಿಲ್ಲೆಯ ಹಡಗಿಲ್ ಹಾರುತಿ, ವಿ.ಕೆ.ಸಲಗರ್ ಹಾಗೂ ಗೊಬ್ಬೂರ ಸಬ್ ಸ್ಟೇಷನ್ ವ್ಯಾಪ್ತಿಯಲ್ಲಿ ಈ ಸೋಲಾರ ಘಟಕ ಸ್ಥಾಪಿಸಲಾಗುತ್ತಿದೆ. ಖಾಸಗಿ ಕಂಪನಿಗಳೆ ಸೋಲಾರ ಘಟಕ ಸ್ಥಾಪನೆಗೆ ಬಂಡವಾಳ ಹಾಕಲಿದ್ದು, ಸರ್ಕಾರ ಯಾವುದೇ ಹಣ ಖರ್ಚು ಮಾಡಲ್ಲ. 2.95 ರೂ. ದರದಲ್ಲಿ ಪ್ರತಿ ಯೂನಿಟ್ ವಿದ್ಯುತ್ ಅವರಿಂದ ಖರೀದಿಸಿ ಘಟಕ ಸುತ್ತಮುತ್ತ 5 ಕಿ.ಮೀ. ವ್ಯಾಪ್ತಿಯ 4,456 ರೈತರ ಪಂಪಸೆಟ್ಗಳಿಗೆ ವಿದ್ಯುತ್ ಪೂರೈಸಲಾಗುತ್ತದೆ ಎಂದರು. ರಾಜ್ಯದಾದ್ಯಂತ ಈ ಯೋಜನೆಯಡಿ 400 ಸಬ್ ಸ್ಟೇಷನ್ ವ್ಯಾಪ್ತಿಯಲ್ಲಿ 3,000 ಮೆಗಾ ವ್ಯಾಟ್ ಸೋಲಾರ್ ವಿದ್ಯುತ್ ಉತ್ಪಾದನೆಗೆ ಯೋಜನೆ ಹಾಕಿಕೊಂಡಿದ್ದು, 1 ಮೆಗಾ ವ್ಯಾಟ್ ಘಟಕಕ್ಕೆ 4 ಎಕರೆ ಜಮೀನು ಅವಶ್ಯಕತೆ ಇದೆ. ಇದಕ್ಕಾಗಿ ಸರ್ಕಾರಿ ಜಮೀನು ಉಚಿತವಾಗಿ ಪಡೆಯಲು ಸಚಿವ ಸಂಪುಟ ಒಪ್ಪಿಗೆ ನೀಡಿದ್ದು, ಸರ್ಕಾರಿ ಜಮೀನು ಇಲ್ಲದಿದ್ದಲ್ಲಿ ಖಾಸಗಿ ಜಮೀನು ಲೀಸ್ ಪಡೆದು ಯೋಜನೆ ಸಾಕಾರಗೊಳಿಸಲಾಗುವುದು ಎಂದರು. ಶಾಸಕ ಅಲ್ಲಮಪ್ರಭು ಪಾಟೀಲ ಮಾತನಾಡಿ, ದಕ್ಷಿಣ ವಿಧಾನಸಭಾ ಕ್ಷೇತ್ರದ ಕಲಬುರಗಿ ನಗರದಲ್ಲಿ ಒಂದು ಹೆಚ್ಚುವರಿ ಸಬ್ ಸ್ಟೇಷನ್ ಜೊತೆಗೆ ಪಟ್ಟಣ ಹೋಬಳಿಯಲ್ಲಿ ಒಂದು ವಿದ್ಯುತ್ ಸಬ್ ಸ್ಟೇಷನ್ ಮಂಜೂರು ಮಾಡಬೇಕಿದೆ. ಕಲಬುರಗಿ ನಗರದ ಸೂಪರ್ ಮಾರ್ಕೆಟ್ ಪ್ರದೇಶದಲ್ಲಿ ವಿದ್ಯುತ್ ಲೈನ್ ತಲೆ ಮೇಲೆ ನೇತಾಡುತ್ತಿದ್ದು, ಅವುಗಳನ್ನು ಭೂಗತ ಕೇಬಲ್ (ಅಂಡರ್ ಗ್ರೌಂಡ್) ಅಳವಡಿಸಬೇಕೆಂದರು. ಸಚಿವ ಕೆ.ಜೆ.ಜಾರ್ಜ್ ಮಾತನಾಡಿ ಅದು ಜನನಿಬಿಡಿತ ಪ್ರದೇಶ ಆಗಿರುವುದರಿಂದ ಭೂಗತ ಕೇಬಲ್ ಅಳವಡಿಸುವಂತೆ ಎಂ.ಡಿ. ರವೀಂದ್ರ ಅವರಿಗೆ ಸೂಚಿಸಿದರು. ಶಾಸಕ ಬಸವರಾಜ ಮತ್ತಿಮೂಡ ಮಾತನಾಡಿ ಕ್ಷೇತ್ರದ ಹರಕಂಚಿ, ಶ್ರೀಚಂದ ಸೇರಿದಂತೆ ಹಲವೆಡೆ ಟಿ.ಸಿ. ಕೆಟ್ಟಲ್ಲಿ ಎರಡು ತಿಂಗಳಾದರು ಬದಲಾಯಿಸುತ್ತಿಲ್ಲ. ರೈತರ ಸಮಸ್ಯೆಗೆ ಜೆಸ್ಕಾಂ ತ್ವರಿತರಗತಿಯಲ್ಲಿ ಸ್ಪಂದಿಸಬೇಕು. ಕಮಲಾಪೂರ, ನರೋಣಾ 33 ಕೆ.ವಿ. ಸ್ಟೇಷನ್ಗಳನ್ನು 110 ಕೆ.ವಿ.ಗೆ ಮೇಲ್ದರ್ಜೇಗೇರಿಸಬೇಕೆಂದರು. ಕೆ.ಪಿ.ಟಿ.ಸಿ.ಎಲ್. ಎಂ.ಡಿ ಮತ್ತು ಜೆಸ್ಕಾಂ ಚೇರಮೆನ್ ಪಂಕಜಕುಮಾರ ಪಾಂಡೆ ಮಾತನಾಡಿ ಕಮಲಾಪೂರ ತಾಲೂಕಾ ಕೇಂದ್ರಸ್ಥಾನವಾಗಿರುವುದರಿಂದ ವಿದ್ಯುತ್ ಲೋಡ್ ಬೆಳವಣಿಗೆ ಪರಿಗಣಿಸಿ ಉನ್ನತಿಕರೀಸಲಾಗುವುದು ಎಂದರು. ಅಫಜಲಪೂರ ಶಾಸಕ ಎಂ.ವೈ.ಪಾಟೀಲ ಮಾತನಾಡಿ ಕ್ಷೇತ್ರದ ಶಿವೂರ, ನಂದರ್ಗಾ, ಘೋಳನೂರ, ಅತನುರ, ಬಳ್ಳೂರ್ಗಿ 33.ಕೆ.ವಿ ವಿದ್ಯುತ್ ಉಪ ವಿತರಣಾ ಕೇಂದ್ರಗಳನ್ನು 110 ಕೆ.ವಿ.ಗೆ ಉನ್ನತಿಕರಿಸುವಂತೆ ಕೋರಿದರು. ಬುಧವಾರ ನಡೆದ ಸಭೆಯಲ್ಲಿ ಅಫಜಲಪೂರ ಪಟ್ಟಣಕ್ಕೆ ಹೊಸದಾಗಿ 220 ಕೆ.ವಿ. ಸಬ್ ಸ್ಟೇಷನ್ ಮಂಜೂರು ಮಾಡಲಾಗಿದೆ. ಉಳಿದ ಪ್ರಸ್ತಾವನೆ ಪರಿಶೀಲಿಸಲಾಗುವುದು ಎಂದು ಪಂಕಜಕುಮಾರ ಪಾಂಡೆ ತಿಳಿಸಿದರು. ವಿಧಾನ ಪರಿಷತ್ ಶಾಸಕ ತಿಪ್ಪಣ್ಣಪ್ಪ ಕಮಕನೂರ ಅವರು ವಿವಿಧ ವಿದ್ಯುತ್ ಸಮಸ್ಯೆಗಳನ್ನು ಸಚಿವರ ಮುಂದಿಟ್ಟರು. ಶಾಸಕ ಜಗದೇವ ಗುತ್ತೇದಾರ ಮಾತನಾಡಿ ನೂತನ ಕಾಳಗಿ ತಾಲೂಕಿನಲ್ಲಿ 33ಕೆ.ವಿ. ಸ್ಟೇಷನ್ 110 ಕೆ.ವಿ.ಗೆ ಮೇಲ್ದರ್ಜೇಗೇರಿಸುವಂತೆ ಮನವಿ ಮಾಡಿಕೊಂಡರು. ಎಂ.ಎಲ್.ಸಿ ಬಿ.ಜಿ.ಪಾಟೀಲ ಮಾತನಾಡಿ ಫಿರೋಜಾಬಾದ ಬಳಿ ಕ್ರೆಡಲ್ ಸಂಸ್ಥೆಯಿಂದ 1,000 ಮೆಗಾ ವ್ಯಾಟ್ ಸೋಲಾರ್ ವಿದ್ಯುತ್ ಸ್ಥಾಪಿಸುವ ಕೆಲಸ ಎರಡು ವರ್ಷದಿಂದ ನೆನೆಗುದ್ದಿಗೆ ಬಿದ್ದಿದ್ದು, ಅನುಷ್ಟಾನಕ್ಕೆ ತರಬೇಕೆಂದರು. ಕೆ.ಇ.ಆರ್.ಸಿ. ಅವರು ಬ್ಯಾಟರಿ ಸ್ಟೋರೇಜ್ ಕ್ಯಾಪಾಸಿಟಿ ಅಳವಡಿಸಿಕೊಂಡು ಪ್ರಸ್ತಾವನೆ ಮರು ಸಲ್ಲಿಸಲು ತಿಳಿಸಿರುವುದರಿಂದ ವಿಳಂಬವಾಗಿದೆ ಎಂದು ಸಚಿವರು ಉತ್ತರಿಸಿದರು. ಲೈನ್ ನಿರ್ವಹಣೆ ಮಾಡಿ, ಅವಘಡ ತಪ್ಪಿಸಿ: ಸಭೆಯ ಚರ್ಚೆಯಲ್ಲಿ ಶಾಸಕ ಬಸವರಾಜ ಮತ್ತಿಮೂಡ ಮಾತನಾಡಿ ತಮ್ಮ ಕ್ಷೇತ್ರದ ಹಲವೆಡೆ ಗ್ರಾಮೀಣ ಭಾಗದಲ್ಲಿ ವಿದ್ಯುತ್ ಲೈನ್ ಕೆಳಗೆ ಇಳಿಬಿದ್ದಿದ್ದು, ಅಪಾಯಕ್ಕೆ ಆಹ್ವಾನ ನೀಡುತ್ತಿವೆ. ಇತ್ತೀಚೆಗೆ ವಿದ್ಯುತ್ ತಂತಿ ತಗುಲಿ ರೈತನೊಬ್ಬ ಮೃತಪಟ್ಟಿದ್ದು, ನಿರ್ವಹಣೆ ಕೆಲಸ ನಿರಂತರ ನಡೆಯಬೇಕು ಎಂದು ಪ್ರಸ್ತಾಪಿಸಿದರು. ಇದಕ್ಕೆ ಪ್ರತಿಕ್ರಿಯೆಸಿದ ಸಚಿವ ಕೆ.ಜೆ.ಜಾರ್ಜ್ ಅವರು ಕೂಡಲೆ ಜಿಲ್ಲೆಯ ಎಲ್ಲೆಡೆ 2-3 ತಿಂಗಳಿನಲ್ಲಿ ವಿದ್ಯುತ್ ಲೈನ್ ನಿರ್ವಹಣೆ ಮತ್ತು ಕಂಬಗಳನ್ನು ಸರಿಪಡಿಸುವ ಕೆಲಸ ಪೂರ್ಣಗೊಳಿಸಬೇಕು. ವಿದ್ಯುತ್ ಅವಘಡ ಆದಮೇಲೆ ಪರಿಹಾರ ನೀಡುವುದು ಮುಖ್ಯವಲ್ಲ, ಅವಘಡ ತಪ್ಪಿಸುವ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳುವುದು ಅವಶ್ಯಕತೆ ಇದೆ ಎಂದು ಜೆಸ್ಕಾಂ ಅಧಿಕಾರಿಗಳಿಗೆ ನಿರ್ದೇಶನ ನೀಡಿದಲ್ಲದೆ ಜಿಲ್ಲೆಯ ಎಲ್ಲಾ ಚುನಾಯಿತ ಜನಪ್ರತಿನಿಧಿಗಳನ್ನು ಭೇಟಿ ಮಾಡಿ ಇಲಾಖೆಗೆ ಸಂಬಂಧಿಸಿದಂತೆ ಕ್ಷೇತ್ರಗಳ ಸಮಸ್ಯೆ ಆಲಿಸಿ ಪರಿಹಾರ ಕಲ್ಪಿಸಬೇಕೆಂದು ಸೂಚಿಸಿದರು. ಜೆಸ್ಕಾಂನಿಂದ ಗರಿಷ್ಠ ಪರಿಹಾರ: ಕಲಬುರಗಿ ನಗರದ ಮೋಹನ್ ಲಾಡ್ಜ್ ಬಳಿ ಇತ್ತೀಚೆಗೆ ವಿದ್ಯುತ್ ಅವಘಡದಿಂದ ಎರಡು ಕಾಲು ಕಳೆದುಕೊಂಡು ನಗರದ ಯೂನೈಟೆಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಂತ್ರಸ್ತ ಮಹಿಳೆಗೆ ಜೆಸ್ಕಾಂ 1 ಲಕ್ಷ ರೂ. ಪರಿಹಾರ ನೀಡಿದೆ. ಇಬ್ಬರು ಬುದ್ದಿ ಮಾಂದ್ಯ ಮಕ್ಕಳನ್ನು ಹೊಂದಿರುವ ಸಂತ್ರಸ್ತೆಯ ಇದೂವರೆಗಿನ ಆಸ್ಪತ್ರೆ ವೆಚ್ಚ 12 ಲಕ್ಷ ರೂ. ಆಗಿದ್ದು, ಚಿಕಿತ್ಸೆ ಮುಂದುವರೆದಿದೆ. ಹೀಗಾಗಿ ಆಸ್ಪತ್ರೆ ವೆಚ್ಚ ಜೆಸ್ಕಾಂನಿಂದ ಭರಿಸುವುದಲ್ಲದೆ ಕುಟುಂಬಕ್ಕೆ ಎಲ್ಲಾ ರೀತಿಯ ಪರಿಹಾರ ಒದಗಿಸಬೇಕು ಎಂದು ಶಾಸಕ ಅಲ್ಲಮಪ್ರಭು ಪಾಟೀಲ ಸಚಿವರ ಗಮನ ಸೆಳೆದರು. ಇದಕ್ಕೆ ಸಚಿವರು ಸಮ್ಮತ್ತಿಸಿ ಜೆಸ್ಕಾಂನಿಂದ ಗರಿಷ್ಠ ಪರಿಹಾರ ಒದಗಿಸುವ ಭರವಸೆ ನೀಡಿದರು. ಸಭೆಯಲ್ಲಿ ಜೆಸ್ಕಾಂ ಮುಖ್ಯ ಇಂಜಿನೀಯರ್ (ಕಾರ್ಯಾಚರಣೆ) ಆರ್.ವೆಂಕಟೇಶ ಪ್ರಸಾದ, ಕಲಬುರಗಿ ವಲಯದ ಮುಖ್ಯ ಇಂಜಿನೀಯರ್ ವೆಂಕಟೇಶ ಹಾಲ್ವಿ, ಮುಖ್ಯ ಆರ್ಥಿಕ ಅಧಿಕಾರಿ ಮುರಳೀಧರ ನಾಯಕ್, ಕಲಬುರಗಿ ಮತ್ತು ಯಾದಗಿರಿ ಅಧೀಕ್ಷಕ ಅಭಿಯಂತರರಾದ ಖಂಡೆಪ್ಪ ಸೋನಾವಣೆ ಸೇರಿದಂತೆ ಜೆಸ್ಕಾಂ ಕಾರ್ಯನಿರ್ವಾಹಕ ಇಂಜಿನೀಯರ್ ಗಳು ಹಾಗೂ ಇತರೆ ಹಂತದ ಅಧಿಕಾರಿಗಳು ಭಾಗವಹಿಸಿದ್ದರು.
ಶಿಕ್ಷಣದಿಂದಲೇ ಭಾಷೆ, ಸಂಸ್ಕೃತಿಗಳ ಅಭಿವೃದ್ಧಿ: ಕಲಬುರಗಿ ಡಿಸಿ ಫೌಝಿಯಾ ತರನ್ನುಮ್
ಕಲಬುರಗಿ: ನಮ್ಮ ಭಾಷೆ ಮತ್ತು ಸಂಸ್ಕೃತಿಗಳು ಅಭಿವೃದ್ಧಿಯಾಗಬೇಕಾದರೆ ಶಿಕ್ಷಣದಿಂದಲೇ ಸಾಧ್ಯ ಎಂದು ಜಿಲ್ಲಾಧಿಕಾರಿ ಬಿ ಫೌಜಿಯಾ ತರನ್ನುಮ್ ಹೇಳಿದರು. ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಗುರುವಾರದಂದು ನಗರದ ಕನ್ನಡ ಭವನದ ಸುವರ್ಣ ಸಭಾ ಭವನದಲ್ಲಿ ಆಯೋಜಿಸಿದ “ಕನ್ನಡದ ಚಿನ್ನ 2024” ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿ ಸ್ವೀಕರಿಸಿ, ಅವರು ಮಾತನಾಡಿದರು. ಇತಿಹಾಸ ಮತ್ತು ಸಂಸ್ಕೃತಿಗಳ ಪರಂಪರೆ ಹೊಂದಿದ ಈ ನೆಲದಲ್ಲಿ ಕನ್ನಡದ ಪ್ರೀತಿ ಅಭಿಮಾನಗಳು ಮುಖ್ಯ. ಯಾವುದೇ ಪ್ರಗತಿ ಹೊಂದಬೇಕಾದರೆ ಶಿಕ್ಷಣ ಪಡೆಯಬೇಕು. ಮಹಿಳೆಯರು ಮಾತೃ ಭಾಷೆಯ ಶಿಕ್ಷಣ ಪಡೆಯುವ ಮೂಲಕ ಪ್ರತಿ ಕ್ಷೇತ್ರದಲ್ಲಿ ಗುರಿ ಸಾಧಿಸಬೇಕು. ಇಂಥ ನೆಲದಲ್ಲಿ ನಾವೆಲ್ಲ ಕೃತಜ್ಞರಾಗಿ ಸೇವೆ ಮಾಡುವ ಅವಕಾಶ ದೊರೆತ್ತಿರುವುದು ಹೆಮ್ಮೆ ಪಡುವಂತ್ತಾಗಿದೆ. ನಾನೂ ಕೂಡ ಈ ನೆಲದ ಮಗಳೆಂಬ ಅಭಿಮಾನ ಹೊಂದಿದ್ದೇನೆ ಎಂದು ಸಂತಸ ವ್ಯಕ್ತ ಪಡಿಸಿದರು. ಇಂದು ಜಿಲ್ಲಾಧಿಕಾರಿಯಾಗಿ ಮಾಡುತ್ತಿರುವ ಸೇವೆ ನಮಗೆ ತೃಪ್ತಿ ತಂದಿದೆ. ಈ ನಿಟ್ಟಿನಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಕನ್ನಡದ ಚಿನ್ನ ಪ್ರಶಸ್ತಿ ಕೊಟ್ಟಿರುವುದು ನಮ್ಮ ಜೀವನದಲ್ಲಿ ಮರೆಯಲಾರದ ಅದ್ಭುತ ಕ್ಷಣಗಳು. ಈ ದಿಸೆಯಲ್ಲಿ ಸಾಹಿತ್ಯ ಪರಿಷತ್ತು ಕನ್ನಡ ಕಟ್ಟುವ ಕಾರ್ಯಗಳು ನಿಜಕ್ಕೂ ಅಭಿಮಾನ ಪಡುವಂಥವು. ಈ ಸೇವೆ ಸದಾ ಅನನ್ಯ ಎಂದರು. ಶ್ರೀ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಮುಖ್ಯಸ್ಥರಾದ ಪೂಜ್ಯ ಡಾ. ದಾಕ್ಷಾಯಿಣಿ ಎಸ್ ಅಪ್ಪಾ ಅವರು ಪ್ರಶಸ್ತಿ ಪ್ರದಾನ ಮಾಡಿ, ಜಿಲ್ಲಾಧಿಕಾರಿಗಳಾಗಿ ಸೇವೆ ಸಲ್ಲಿಸುತ್ತಿರುವ ಬಿ.ಫೌಝಿಯಾ ತರನ್ನುಮ್ ಅವರು ಎಲ್ಲಾ ಕ್ಷೇತ್ರಗಳಲ್ಲಿನ ಸೇವೆ ಅನುಕರಣೀಯ. ಅವರಲ್ಲಿನ ಕನ್ನಡದ ತುಡಿತ ಮತ್ತು ಭಾಷಾಭಿಮಾನಗಳು ನಮಗೆಲ್ಲ ಪ್ರೇರಣೆ ನೀಡಿವೆ. ಕನ್ನಡ ಸಾಹಿತ್ಯ ಪರಿಷತ್ತಿನವರು ಕನ್ನಡದ ಚಿನ್ನ ಪ್ರಶಸ್ತಿ ನೀಡಿ ಗೌರವಿಸುತ್ತಿರುವುದು ಹೆಮ್ಮೆಯ ಸಂಗತಿ. ಜತೆಗೆ ಭಾರತ ಚುನಾವಣಾ ಇಲಾಖೆಯಿಂದ ಉತ್ತಮ ಚುನಾವಣಾಧಿಕಾರಿ ಎಂದು ಪ್ರಶಸ್ತಿಗೆ ಆಯ್ಕೆ ಆಗಿರುವುದು ಇಡೀ ಜಿಲ್ಲೆ ಹೆಮ್ಮೆ ಪಡುವಂಥದಾಗಿದೆ, ಇಂಥಹ ಜಿಲ್ಲಾಧಿಕಾರಿಗಳಿಂದ ನಾಡು ನುಡಿಗಳ ಪ್ರಗತಿ ಹೊಂದಲು ಸಾಧ್ಯವಾಗಿದೆ ಎಂದು ಹೇಳಿದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಮಾತನಾಡಿ, ಈ ನೆಲವನ್ನು ಪ್ರೀತಿಸಿ ಕಳಕಳಿ ಹೊಂದಿರುವ ಜಿಲ್ಲಾಧಿಕಾರಿ ಬಿ.ಫೌಝಿಯಾ ತರನ್ನುಮ್ ಅವರು ಮಾತೃಭಾಷೆ ಕಲಿಯುವ ಮೂಲಕ ಭಾಷಾಭಿಮಾನ ತೋರಿದ್ದಾರೆ. ಇಂಥಹ ಕನ್ನಡದ ಜಿಲ್ಲಾಧಿಕಾರಿಗಳು ನಮ್ಮ ಜಿಲ್ಲೆಗೆ ಸಿಕ್ಕಿರುವುದು ನಮ್ಮೆಲ್ಲರ ಸೌಭಾಗ್ಯವಾಗಿದೆ. ಮಕ್ಕಳಲ್ಲಿ ಕನ್ನಡದ ಪ್ರೀತಿ ಮತ್ತು ಅಭಿಮಾನ ಬೆಳೆಸಿ ನಾಡಿಗೆ ಉತ್ತಮ ಸೇವೆ ಸಲ್ಲಿಸುತ್ತಿದ್ದಾರೆ ಎಂದು ಅಭಿನಂದಿಸಿದರು. ಶ್ರೇಷ್ಠ ಕವಿಗಳ ವಾಣಿಯಂತೆ ಸರ್ವ ಜನಾಂಗದ ಶಾಂತಿಯ ತೋಟದಂತೆ ಮತ್ತು ಪರಿಷತ್ತಿನ ಕಾರ್ಯಕ್ರಮಗಳು ನಿತ್ಯೋತ್ಸವದ ರೀತಿಯಲ್ಲಿ ನಿತ್ಯ ನೂತನವಾಗಿ ನಿರಂತರವಾಗಿ ಕೈಗೊಳ್ಳಲಾಗುತ್ತಿದೆ ಎಂದರು. ಪರಿಷತ್ತಿನ ಗೌರವ ಕಾರ್ಯದರ್ಶಿಗಳಾದ ಶಿವರಾಜ ಅಂಡಗಿ, ಧರ್ಮಣ್ಣ ಎಚ್ ಧನ್ನಿ, ಕೋಶಾಧ್ಯಕ್ಷ ಶರಣರಾಜ ಛಪ್ಪರಬಂದಿ, ಧರ್ಮರಾಜ ಜವಳಿ, ಸಿದ್ಧಲಿಂಗ ಬಾಳಿ, ರಾಜೇಂದ್ರ ಮಾಡಬೂಳ ಮತ್ತಿತರರಿದ್ದರು. ಹಿರಿಯ ಸಾಹಿತಿ ಎ.ಕೆ.ರಾಮೇಶ್ವರ, ಭವಾನಿಸಿಂಗ್ ಠಾಕೂರ್, ದೇವೇಂದ್ರಪ್ಪ ಆವಂಟಿ, ರವೀಂದ್ರ ಶಾಬಾದಿ, ರವೀಂದ್ರಕುಮಾರ ಭಂಟನಳ್ಳಿ, ನಾಗರಾಜ ಜಮದರಖಾನಿ, ಚೆನ್ನಮಲ್ಲಯ್ಯ ಹಿರೇಮಠ, ಕಲ್ಯಾಣಕುಮಾರ ಸಂಗಾವಿ, ಗಣೇಶ ಚಿನ್ನಾಕಾರ, ಪ್ರಭವ ಪಟ್ಟಣಕರ್, ಶಕುಂತಲಾ ಪಾಟೀಲ, ಜ್ಯೋತಿ ಕೋಟನೂರ, ಶಿಲ್ಪಾ ಜೋಶಿ, ರೇಣುಕಾ ಸರಡಗಿ, ಗೌರಮ್ಮ ಮಾಕಾ, ಅಮೃತಪ್ಪ ಅಣೂರ, ಮಲ್ಲಿನಾಥ ದೇಶಮುಖ, ವಿಜಯಕುಮಾರ ಸೂಗಿ, ರೇವಣಸಿದ್ದಪ್ಪ ಜೀವಣಗಿ, ಮಂಜುನಾಥ ಕಂಬಾಳಿಮಠ, ಡಾ. ಕೆ.ಎಸ್. ಬಂಧು, ರವಿಕುಮಾರ ಶಹಾಪೂರಕರ್, ವೀರೇಂದ್ರಕುಮಾರ ಕೊಲ್ಲೂರ, ಶಿವಲೀಲಾ ಕಲಗುರ್ಕಿ, ಸಂತೋಫ ಕುಡಳ್ಳಿ, ಡಾ. ರೆಹಮಾನ್ ಪಟೇಲ್, ಮಹ್ಮದ್ ಅಯಾಜೋದ್ದೀನ್ ಪಟೇಲ್, ಕಿರಣ ಗೋಡಬಾಲೆ, ಶಿವಲಿಂಗಪ್ಪ ಅಷ್ಟಗಿ, ವಿನೋದ ಜೇನವೇರಿ, ಪದ್ಮಾಜೀ ಜಿ.ಎಸ್., ಶಿವಶರಣ ಬಡದಾಳ, ಸುರೇಶ ಲೇಂಗಟಿ, ಸಿ.ಎಸ್. ಮಾಲಿಪಾಟೀಲ, ಸಂಜೀವ ಮಾಲೆ, ಬಾಬುರಾವ ಪಾಟೀಲ, ಜ್ಯೋತಿ ಹಿರೇಮಠ ಸೇರಿದಂತೆ ಅನೇಕರು ಭಾಗವಹಿಸಿದ್ದರು.
ಬೆಂಗಳೂರು, ಜ.23: ದಿನ ಬೆಳಗಾದರೆ ಸಾಕು ಯತ್ನಾಳ್, ಅವರದ್ದೇ ಪಕ್ಷದ ರಾಜ್ಯಾಧ್ಯಕ್ಷ ವಿಜಯೇಂದ್ರ ಹಾಗೂ ಅವರ ತಂದೆ ಯಡಿಯೂರಪ್ಪರನ್ನು ಬಾಯಿಗೆ ಬಂದಂತೆ ಬೈಯ್ಯುತ್ತಾ ಓಡಾಡುತ್ತಿದ್ದಾರೆ. ಜನಾರ್ದನ ರೆಡ್ಡಿ ಮತ್ತು ಶ್ರೀರಾಮುಲು ನಡುವೆ ಯುದ್ಧವೇ ನಡೆಯುತ್ತಿದೆ. ಒಕ್ಕಲಿಗ ಅಸ್ತ್ರ ಬಳಸಿರುವ ಸದಾನಂದ ಗೌಡ ಬಣ, ವಿಪಕ್ಷ ನಾಯಕ ಅಶೋಕ್ ಬುಡಕ್ಕೆ ಕಾಯಿಸುತ್ತಿದೆ. ಇದು ರಾಜ್ಯ ಬಿಜೆಪಿಯ ಸದ್ಯದ ಸ್ಥಿತಿ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ವ್ಯಂಗ್ಯವಾಡಿದ್ದಾರೆ. ಗುರುವಾರ ಈ ಸಂಬಂಧ ಎಕ್ಸ್ ಜಾಲತಾಣದಲ್ಲಿ ಪೋಸ್ಟ್ ಹಾಕಿರುವ ಅವರು, ಬಿಜೆಪಿಯ ಮನೆಗೆ ಬೆಂಕಿ ಬಿದ್ದಿದೆ. ಬೆಂಕಿ ಬಿದ್ದಿರುವ ಮನೆಯ ಗಳವನ್ನು ಸ್ವತಃ ಬಿಜೆಪಿ ನಾಯಕರೇ ಇರಿಯುತ್ತಿದ್ದಾರೆ. ಹೀಗಿದ್ದರೂ ವಿಪಕ್ಷ ನಾಯಕ ಅಶೋಕ್ ರವರಿಗೆ ತಮ್ಮ ಪಕ್ಷದ ಬಣ ಬಡಿದಾಟದ ಬಗ್ಗೆ ಚಿಂತೆಯೇ ಇಲ್ಲ ಎಂದು ಟೀಕಿಸಿದ್ದಾರೆ. ಆದರೆ ಅವರು ನಮ್ಮ ಪಕ್ಷದ ಆಂತರಿಕ ವಿಚಾರದ ಬಗ್ಗೆಯೆ ಹಗಲಿರುಳು ತಲೆ ಕೆಡಿಸಿಕೊಂಡು ಕುಳಿತಿರುತ್ತಾರೆ. ತಮ್ಮ ತಟ್ಟೆಯಲ್ಲಿ ಹೆಗ್ಗಣ ಬಿದ್ದಿದ್ದರೂ ಇನ್ನೊಬ್ಬರ ತಟ್ಟೆಯಲ್ಲಿ ಬಿದ್ದಿರುವ ನೊಣದ ಬಗ್ಗೆ ಚಿಂತೆ ಮಾಡಿದರು ಎಂಬುವುದು ಇದಕ್ಕೇ ಅಲ್ಲವೆ.? ಎಂದು ದಿನೇಶ್ ಗುಂಡೂರಾವ್ ಹೇಳಿದ್ದಾರೆ. ಬಣ ರಾಜಕೀಯದಿಂದ ಬೇಯುತ್ತಿರುವ ರಾಜ್ಯ ಬಿಜೆಪಿಯಲ್ಲಿ ಬೆನ್ನಿಗೆ ಚೂರಿ ಹಾಕಲು ಅವರವರೆ ಚಾಕು-ಬಾಕು ಹಿಡಿದು ನಿಂತಿದ್ದಾರೆ. ರಾಜ್ಯ ಬಿಜೆಪಿಯ ಶವ ಪೆಟ್ಟಿಗೆಗೆ ಕೊನೆಯ ಮೊಳೆ ಒಡೆಯಲು ಈಗ ಅನ್ಯರೆ ಬೇಕಾಗಿಲ್ಲ. ಬಿಜೆಪಿ ನಾಯಕರೆ ಕೊನೆಯ ಮೊಳೆ ಒಡೆಯಲಿದ್ದಾರೆ. ಇನ್ನಾದರೂ ಅಶೋಕ್ ನಮ್ಮ ಪಕ್ಷದ ಬಗ್ಗೆ ಚಿಂತಿಸುವುದನ್ನು ಬಿಟ್ಟು, ಸಮಾಧಿ ಸ್ಥಿತಿಯಲ್ಲಿರುವ ಅವರ ಪಕ್ಷವನ್ನು ಉಳಿಸಿಕೊಳ್ಳಲಿ ಎಂದು ಅವರು ತಿರುಗೇಟು ನೀಡಿದ್ದಾರೆ.
‘ಪ್ರಧಾನಿ ಮೋದಿ’ ಅಮಿತ್ ಶಾರನ್ನು ವಜಾಗೊಳಿಸಬೇಕು : ದಸಂಸ ಒಕ್ಕೂಟ ಎಚ್ಚರಿಕೆ
ಬೆಂಗಳೂರು : ‘ಕೇಂದ್ರ ಗೃಹ ಸಚಿವ ಅಮಿತ್ ಶಾ, ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆ ಬಳಿ ಮಂಡಿಯೂರಿ ಕ್ಷಮೆ ಕೇಳಬೇಕು. ಜತೆಗೆ ಪ್ರಧಾನಿ ಮೋದಿಗೆ ಕನಿಷ್ಟ ಜವಾಬ್ದಾರಿ ಇದ್ದರೆ ಅಂಬೇಡ್ಕರ್ಗೆ ಅಪಮಾನ ಮಾಡಿದ ಅಮಿತ್ರನ್ನು ಸಂಪುಟದಿಂದ ವಜಾಗೊಳಿಸಬೇಕು. ಇಲ್ಲವಾದಲ್ಲಿ ನಿಮ್ಮನ್ನೇ ಮನೆಗೆ ಕಳಿಸಬೇಕಾಗುತ್ತದೆ’ ಎಂದು ದಲಿತ ಸಂಘರ್ಷ ಸಮಿತಿಗಳ ಒಕ್ಕೂಟ ಎಚ್ಚರಿಕೆ ನೀಡಿದೆ. ಗುರುವಾರ ನಗರದ ಫ್ರೀಡಂ ಪಾರ್ಕ್ನಲ್ಲಿ ಅಂಬೇಡ್ಕರ್ ಅವರಿಗೆ ಅಪಮಾನ ಮಾಡಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ನಡೆಯನ್ನು ಖಂಡಿಸಿ, ದಲಿತ ಸಂಘರ್ಷ ಸಮಿತಿಗಳ ಒಕ್ಕೂಟದ ವತಿಯಿಂದ ಆಯೋಜಿಸಿದ್ದ ‘ಸಂವಿಧಾನ- ಮನುವಾದ’ ಬೃಹತ್ ಪ್ರತಿಭಟನೆಯಲ್ಲಿ ಮಾತನಾಡಿದ ಹಿರಿಯ ಪತ್ರಕರ್ತ ಹಿರಿಯ ಪತ್ರಕರ್ತ ಇಂದೂಧರ ಹೊನ್ನಾಪುರ, ‘ಸಂವಿಧಾನದ ಆಧಾರದಲ್ಲಿ ರಚನೆಯಾದ ಸದನದಲ್ಲಿ ಅಂಬೇಡ್ಕರ್ ಅವರಿಗೆ ಅಪಮಾನ ಮಾಡಿರುವುದು ಖಂಡನೀಯ’ ಎಂದು ಆಕ್ರೋಶ ವ್ಯಕ್ತಪಸಿದರು. ಗುಜರಾತ್ನಲ್ಲಿ ಕೊಲೆ ಆರೋಪದಡಿಯಲ್ಲಿ ಗಡಿಪಾರಾದ, ಗೋದ್ರಾ ನರಮೇಧದ ರೂವಾರಿಗಳಲ್ಲಿ ಒಬ್ಬರಾದ ಅಮಿತ್ ಶಾ, ದುಷ್ಟ ಮನಸ್ಥಿತಿಯ ಮನುಷ್ಯ. ಅದಕ್ಕಾಗಿಯೇ ಅಂಬೇಡ್ಕರ್ ಅವರನ್ನು ಅವಮಾನಿಸಿದ್ದಾರೆ. ದೇಶದ ಕೋಮುವಾದದ ರುವಾರಿಯಾದ, ದೇಶದಲ್ಲಿ ಅರಾಜಕತೆಯನ್ನು ಉಂಟುಮಾಡುವ ನರೇಂದ್ರ ಮೋದಿ ಅವರು ಅಮಿತ್ ಶಾ ಹೇಳಿರುವುದು ಸರಿಯಾಗಿದೆ ಎಂಬ ವಾದವನ್ನು ಮಾಡುತ್ತಿರುವುದು ಕೂಡ ಖಂಡನೀಯ ಎಂದು ಅವರು ಟೀಕಿಸಿದರು. ಮೋದಿ ನೇತೃತ್ವದ ಸರಕಾರದ ಮಾಡುತ್ತಿರುವ ಅನ್ಯಾಯವನ್ನು ಮಲ್ಲಿಕಾರ್ಜುನ ಖರ್ಗೆಯವರು ಬಯಲಿಗೆಳೆಯುತ್ತಿದ್ದಾರೆ. ಅದಕ್ಕಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಸಚಿವ ಪ್ರಿಯಾಂಕ್ ಖರ್ಗೆ ಅವರ ಮೇಲೆ ಬಿಜೆಪಿ ಅನೇಕ ಆಪಾದನೆಯನ್ನು ಮಾಡಿ, ಅವರನ್ನು ಜೈಲಿಗೆ ಕಳಿಸುವ ಪಿತೂರಿಯನ್ನು ಮಾಡಲಾಗುತ್ತಿದೆ ಎಂದು ಇಂದೂಧರ ಹೊನ್ನಾಪುರ ತಿಳಿಸಿದರು. ಅಂಬೇಡ್ಕರ್ ಅವರು ನಮಗೆ ಅರಿವು, ತಿಳವಳಿಕೆಯನ್ನು ಕೊಟ್ಟಿದ್ದಾರೆ. ಕೋಮುವಾದದ ಸಂಚುಗಳನ್ನು ಬಯಲು ಮಾಡುವ ಚೈತನ್ಯ ದೇಶದ ದಲಿತ ಮತ್ತು ಹಿಂದುಳಿದ ಸಮುದಾಯಗಳಿಗೆ ಇದೆ ಎಂದು ಅವರು ಅಭಿಪ್ರಾಯಪಟ್ಟರು. ದಸಂಸ ಪ್ರಧಾನ ಸಂಚಾಲಕ ಮಾವಳ್ಳಿ ಶಂಕರ್ ಮಾತನಾಡಿ, ಹಿಂದೆ ಮನುಸ್ಮೃತಿ ದೇಶದ ದುಡಿಯುವ ಜನರನ್ನು, ಶೂದ್ರರನ್ನು ಸಾವಿರಾರು ವರ್ಷ ತುಳಿದಿದೆ. ಆ ಕಾಲನ್ನು ಮುರಿದಿದ್ದು ನಮ್ಮ ದೇಶದ ಸಂವಿಧಾನ. ನಾವು ಉಸಿರಾಡಲು ಮೂಲ ಕಾರಣ ಕೂಡ ಸಂವಿಧಾನವಾಗಿದೆ. ಅಂಬೇಡ್ಕರ್ ಅವರ ಅನುಯಾಯಿಗಳು, ವಂಶಸ್ಥರು ಜೇನುಗೂಡು ಇದ್ದಂಗೆ ಅದಕ್ಕೆ ಕೈಯಿಟ್ಟರೆ ನಿಮ್ಮನ್ನು ಸರ್ವನಾಶ ಮಾಡುತ್ತದೆ ಎಂದು ಎಚ್ಚರಿಕೆ ನೀಡಿದರು. ಪ್ರತಿಭಟನೆಯಲ್ಲಿ ಹೋರಾಟಗಾರ್ತಿ ಇಂದಿರಾ ಕೃಷ್ಣಪ್ಪ, ಮುಖಂಡರಾದ ಗುರುಪ್ರಸಾದ್ ಕೆರೆಗೋಡು, ವಿ. ನಾಗರಾಜ್, ಎನ್.ಮುನಿಸ್ವಾಮಿ, ಜೀವನಹಳ್ಳಿ ವೆಂಕಟೇಶ್, ಶೋಷಿತ ಸಮುದಾಯಗಳ ಮಹಾ ಒಕ್ಕೂಟದ ಪ್ರದಾನ ಸಂಚಾಲಕ ರಾಮಚಂದ್ರಪ್ಪ ಮತ್ತಿತರರು ಉಪಸ್ಥಿತರಿದ್ದರು.
ಬೆಂಗಳೂರಿನಲ್ಲಿ ಗಣರಾಜ್ಯೋತ್ಸವ ಪಥ ಸಂಚಲನ: ಕಲಬುರಗಿಯ ಶರಣಬಸವೇಶ್ವರ ವಾಣಿಜ್ಯ ಕಾಲೇಜಿನ ವಿದ್ಯಾರ್ಥಿನಿ ನಿಶಾ ಆಯ್ಕೆ
ಕಲಬುರಗಿ: ಶರಣಬಸವೇಶ್ವರ ವಾಣಿಜ್ಯ ಮಹಾವಿದ್ಯಾಲಯದ ಬಿ.ಕಾಂ.ಅoತಿಮ ವರ್ಷದ ಎನ್.ಎಸ್.ಎಸ್ ವಿದ್ಯಾರ್ಥಿನಿ ನಿಶಾ ರಾಠೋಡ ಅವರು ಬೆಂಗಳೂರಿನಲ್ಲಿ ನಡೆಯುವ ಜ.26ರ ಗಣರಾಜ್ಯೋತ್ಸವದ ಕಾರ್ಯಕ್ರಮದ ಪಥ ಸಂಚಲನದಲ್ಲಿ ಭಾಗವಹಿಸಲು ಆಯ್ಕೆಯಾಗಿದ್ದಾರೆ. ಇವರ ಈ ಆಯ್ಕೆಗೆ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಪೂಜ್ಯ ಡಾ.ಶರಣಬಸವಪ್ಪ ಅಪ್ಪ, ಚೇರಪರ್ಸನ್ ಪೂಜ್ಯ ಡಾ.ದಾಕ್ಷಾಯಣಿ ಎಸ್.ಅಪ್ಪ, ಪೂಜ್ಯ ಚಿ.ದೊಡ್ಡಪ್ಪ ಅಪ್ಪ, ಕಾರ್ಯದರ್ಶಿಗಳಾದ ಬಸವರಾಜ ದೇಶಮುಖ, ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ದಶರಥ ಮೇತ್ರೆ, ಎನ್.ಎಸ್.ಎಸ್ ಅಧಿಕಾರಿ ಪ್ರೊ.ದಯಾನಂದ ಹೊಡಲ್, ನ್ಯಾಕ್ ಸಂಯೋಜಕ ಡಾ.ಸುನಂದಾ ವಾಂಜರಖೇಡೆ, ಎಲ್ಲಾ ಬೋಧಕ, ಬೋಧಕೇತರರು ಹಾಗೂ ವಿದ್ಯಾರ್ಥಿಗಳು ಅಭಿನಂದಿಸಿದ್ದಾರೆ.
ರಾಷ್ಟ್ರ ರಾಜಧಾನಿ ಹೊಸದಿಲ್ಲಿಯ ವಿಧಾನಸಭೆ ಚುನಾವಣಾ ಪ್ರಚಾರದ ಅಖಾಡಕ್ಕೆ ಎಂಟ್ರಿ ಕೊಟ್ಟಿರುವ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಯಮುನಾ ನದಿಯಲ್ಲಿ ಅರವಿಂದ್ ಕೇಜ್ರಿವಾಲ್ ಮತ್ತು ಆಪ್ ಸಚಿವರು ಪುಣ್ಯಸ್ನಾನ ಮಾಡಿ ತೋರಿಸಲಿ ಎಂದು ಸವಾಲು ಹಾಕಿದ್ದಾರೆ. ಯಮುನಾ ನದಿಯನ್ನು ಕಲುಷಿತಗೊಳಿಸುವಲ್ಲಿ ಕಲುಷಿತಗೊಳಿಸುವಲ್ಲಿ ಆಪ್ ಸರ್ಕಾರದ ಪಾತ್ರವಿದೆ ಎಂದು ಆರೋಪಿಸಿರುವ ಯೋಗಿ ಆದಿತ್ಯನಾಥ್, ಅರವಿಂದ್ ಕೇಜ್ರಿವಾಲ್ ಯಮುನಾ ನದಿಯನ್ನು ಕೊಳಕು ಚರಂಡಿಯನ್ನಾಗಿ ಪರಿವರ್ತಿಸಿದ ಅಪರಾಧ ಮಾಡಿದ್ದಾರೆ ಎಂದು ಹರಿಹಾಯ್ದಿದ್ದಾರೆ. ಇಲ್ಲಿದೆ ಮಾಹಿತಿ.
ನಾಳೆ(ಜ.24) ತುರ್ತು ಸಚಿವ ಸಂಪುಟ ಸಭೆ ಕರೆದ ಸಿಎಂ ಸಿದ್ದರಾಮಯ್ಯ
ಬೆಂಗಳೂರು: ಅರಮನೆ ಭೂಮಿಗೆ ಟಿಡಿಆರ್ ನೀಡುವ ವಿಚಾರ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ನಾಳೆ(ಜ.24) ತುರ್ತು ಸಚಿವ ಸಂಪುಟ ಸಭೆ ಕರೆದಿದ್ದಾರೆ. ಅರಮನೆ ಭೂಮಿಗೆ ಟಿಡಿಆರ್ ನೀಡುವ ವಿಚಾರದಲ್ಲಿ ರಾಜಮನೆತನ ಮತ್ತು ರಾಜ್ಯ ಸರಕಾ ರದ ನಡುವಿನ ತಿಕ್ಕಾಟ ನಡೆಯುತ್ತಿದೆ. ಸುಪ್ರೀಂಕೋರ್ಟ್ನಲ್ಲಿ ಅಫಿಡವಿಟ್ ಸಲ್ಲಿಸಬೇಕಾದ ಹಿನ್ನೆಲೆ ಸರಕಾರ ಸಂಪುಟ ಸಭೆಯಲ್ಲಿ ನಿರ್ಣಯ ಮಾಡಬೇಕಿದೆ. ಹೀಗಾಗಿ ಸಿಎಂ ಸಿದ್ದರಾಮಯ್ಯ ನಾಳೆ ಸಂಪುಟ ಸಭೆ ಕರೆದಿದ್ದಾರೆ ಎಂದು ತಿಳಿದು ಬಂದಿದೆ. ಅರಮನೆ ರಸ್ತೆ ಟಿಡಿಆರ್ ಸಂಬಂಧ ಹಿರಿಯ ವಕೀಲರು, ಹಿರಿಯ ಸಚಿವರ ಜತೆ ಚರ್ಚಿಸಿ ಸೂಕ್ತ ತೀರ್ಮಾನ ಕೈಗೊಳ್ಳಲು ಸರಕಾರ ನಿರ್ಧರಿಸಿದೆ. ಟಿಡಿಆರ್ ಪರಿಹಾರ ನೀಡಲು ವಿಳಂಬ ಮಾಡಿದ ರಾಜ್ಯ ಸರಕಾರದ ವಿರುದ್ಧ ಮೈಸೂರು ರಾಜಮನೆತನ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿತ್ತು.
ಮಂಗಳೂರು: ಸೆಲೂನ್ಗೆ ನುಗ್ಗಿ ರಾಮಸೇನೆ ಕಾರ್ಯಕರ್ತರಿಂದ ದಾಂಧಲೆ
ಮಂಗಳೂರು: ನಗರದ ಬಿಜೈ ಕೆಎಸ್ಸಾರ್ಟಿಸಿ ಬಳಿಯ ಯುನಿಸೆಕ್ಸ್ ಸೆಲೂನ್ಗೆ ರಾಮಸೇನೆಯ ಕಾರ್ಯಕರ್ತರು ನುಗ್ಗಿ ದಾಂಧಲೆಗೈದ ಘಟನೆ ಗುರುವಾರ ಮಧ್ಯಾಹ್ನ ನಡೆದಿದೆ. ದಾಂಧಲೆಯ ಬಗ್ಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಲೇ ಎಚ್ಚೆತ್ತುಕೊಂಡ ಪೊಲೀಸರು ರಾಮಸೇನೆಯ ಸ್ಥಾಪಕ ಅಧ್ಯಕ್ಷ ಪ್ರಸಾದ್ ಅತ್ತಾವರ ಹಾಗೂ ಟಿವಿ ಚಾನೆಲ್ನ ಕ್ಯಾಮರಾಮ್ಯಾನ್ ಶರಣ್ ರಾಜ್ ಸಹಿತ 14 ಮಂದಿಯನ್ನು ಸಂಜೆಯೊಳಗೆ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತ ಇತರ ಆರೋಪಿಗಳನ್ನು ಫರಂಗಿಪೇಟೆಯ ಹರ್ಷರಾಜ್ ಯಾನೆ ಹರ್ಷಿತ್, ಮೂಡುಶೆಡ್ಡೆಯ ಮೋಹನದಾಸ್ ಯಾನೆ ರವಿ, ಉಪ್ಪಳದ ಪುರಂದರ, ವಾಮಂಜೂರು ಅಂಬೇಡ್ಕರ್ ನಗರದ ಸಚಿನ್, ಉಳಾಯಿಬೆಟ್ಟುವಿನ ರವೀಶ್, ಬೆಂಜನಪದವು ಶಿವಾಜಿನಗರದ ಸುಖೇತ್, ವಾಮಂಜೂರಿನ ಅಂಕಿತ್, ಮೂಡುಶೆಡ್ಡೆ ಶಿವಾಜಿನಗರದ ಕಾಲಿಮುತ್ತು, ಬೊಂಡಂತಿಲ ತಾರಿಗುಡ್ಡೆಯ ಅಭಿಲಾಶ್, ಮೂಡುಶೆಡ್ಡೆ ಶಿವಾಜಿನಗರದ ದೀಪಕ್, ಸರಿಪಳ್ಳದ ವಿಘ್ನೇಶ್, ಮೂಡುಶೆಡ್ಡೆಯ ಶಿವಾಜಿನಗರದ ಪ್ರದೀಪ್ ಪೂಜಾರಿ ಎಂದು ಗುರುತಿಸಲಾಗಿದೆ. ಈ ಆರೋಪಿಗಳ ವಿರುದ್ಧ ಬರ್ಕೆ ಠಾಣೆಯಲ್ಲಿ ಸೆ.329 (2), 324 (5), 74, 351 (3), 115 (2), 109, 352, 190 ನಡಿ ಪ್ರಕರಣ ದಾಖಲಿಸಲಾಗಿದೆ. *ಪ್ರಕರಣದ ವಿವರ: ನಗರದ ಬಿಜೈ ಕೆಎಸ್ಸಾರ್ಟಿಸಿ ಬಳಿಯ ಆದಿತ್ಯ ಕಾಂಪ್ಲೆಕ್ಟ್ನ ಮೂರನೇ ಮಹಡಿಯಲ್ಲಿ ಕಲರ್ಸ್ ಯುನಿಸೆಕ್ಸ್ ಸೆಲೂನ್ ಕಾರ್ಯಾಚರಿಸುತ್ತಿದೆ.ಈ ಸೆಲೂನ್ಗೆ ಗುರುವಾರ ಪೂರ್ವಾಹ್ನ ಸುಮಾರು 11.50ರ ವೇಳೆಗೆ ರಾಮಸೇನೆಯ ಕಾರ್ಯಕರ್ತರು ಎನ್ನಲಾದ ದುಷ್ಕರ್ಮಿಗಳು ಏಕಾಏಕಿ ನುಗ್ಗಿ ಅವಾಚ್ಯ ಶಬ್ದದಿಂದ ಬೈದು, ಸೆಲೂನ್ನಲ್ಲಿದ್ದ ಸಿಬ್ಬಂದಿಗಳಿಗೆ ಹಲ್ಲೆಗೈದು ಬೆದರಿಸಿದ್ದಾರೆ ಎಂದು ಆರೋಪಿಸಲಾಗಿದೆ. ಸೆಲೂನ್ನಲ್ಲಿದ್ದ ಪೀಠೋಪಕರಣಗಳು, ಟೆಲಿಫೋನ್, ಲಾಫಿಂಗ್ ಬುದ್ಧ, ಕನ್ನಡಿ, ಬಾಗಿಲು ಸಹಿತ ಸಾಮಗ್ರಿಗಳಿಗೆ ಹಾನಿಗೈದಿದ್ದಾರೆ ಎಂದು ದೂರಲಾಗಿದೆ. ಈ ದುಷ್ಕರ್ಮಿಗಳು ಮಹಿಳಾ ಸಿಬ್ಬಂದಿಗೂ ಬೈದು ಬೆದರಿಸಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಈ ಮಧ್ಯೆ ಸೆಲೂನ್ಗೆ ನುಗ್ಗಿದ ರಾಮ ಸೇನೆ ಕಾರ್ಯಕರ್ತರು ಕಾಂಡೋಮ್ಗಳನ್ನು ತಂದು ಬೆಡ್ ಮೇಲೆ ಹಾಕಿದ್ದಾರೆ ಎಂಬ ಆರೋಪವೂ ಕೇಳಿ ಬಂದಿದೆ. *ಸೆಲೂನ್ನಲ್ಲಿ ದಾಂಧಲೆ ನಡೆಸಿರುವುದು ರಾಮ ಸೇನೆಯ ಕಾರ್ಯಕರ್ತರು ಎಂದು ಪ್ರಸಾದ್ ಅತ್ತಾವರನು ಕುಡುಪುವಿನಲ್ಲಿರುವ ತನ್ನ ಮನೆಯಲ್ಲಿ ಸುದ್ದಿಗಾರರೊಂದಿಗೆ ಹೇಳಿಕೊಳ್ಳುತ್ತಿರುವಾಗಲೇ ಪೊಲೀಸರು ದಾಳಿ ನಡೆಸಿ ಬಂಧಿಸಿದ್ದಾರೆ. ಆರೋಪಿಯ ವಿರುದ್ಧ 2009ರಲ್ಲಿ ಮಂಗಳೂರಿನಲ್ಲಿ ನಡೆದ ಪಬ್ ದಾಂಧಲೆ ಪ್ರಕರಣ, 2015ರ ಸೆ.3ರಂದು ಸಾಹಿತಿ ಎಂ.ಎಂ. ಕಲ್ಬುರ್ಗಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಫೇಸ್ಬುಕ್ ಕಮೆಂಟ್ ಹಾಕಿದ ಆರೋಪ, ಮಂಗಳೂರು ವಿವಿ ಕುಲಪತಿ ಹುದ್ದೆ ಕೊಡಿಸುವುದಾಗಿ ನಂಬಿಸಿ 17.50 ಲಕ್ಷ ರೂ. ಪಡೆದು ವಂಚನೆಗೈದ ಆರೋಪವೂ ಇತ್ತು. ಈ ಎಲ್ಲಾ ಪ್ರಕರಣದಲ್ಲಿ ಪೊಲೀಸರು ಈತನನ್ನು ಬಂಧಿಸಿದ್ದರು. *ಟಿವಿ ಚಾನೆಲ್ನ ಕ್ಯಾಮರಾಮ್ಯಾನ್ ಶರಣ್ರಾಜ್ ಬಂಧನ ಪ್ರಕರಣಕ್ಕೆ ಸಂಬಂಧಿಸಿದಂತೆ ಟಿವಿ ಚಾನೆಲ್ನ ಕ್ಯಾಮರಾಮ್ಯಾನ್ ಶರಣ್ ರಾಜ್ ಎಂಬಾತನನ್ನು ಪೊಲೀಸರು ನಗರದಲ್ಲಿ ಬಂಧಿಸಿದ್ದಾರೆ. ರಾಮಸೇನಾ ಸ್ಥಾಪಕ ಪ್ರಸಾದ್ ಅತ್ತಾವರನನ್ನು ಬಂಧಿಸಿದ ಬೆನ್ನಿಗೆ ತನಿಖೆಯನ್ನು ಕೈಗೆತ್ತಿಕೊಂಡ ಪೊಲೀಸರು ಶರಣ್ ರಾಜ್ನನ್ನೂ ತಕ್ಷಣ ಬಂಧಿಸಿದ್ದಾರೆ. ಸೆಲೂನ್ಗೆ ನುಗ್ಗಿ ದಾಂಧಲೆ ನಡೆಸುವಾಗ ಶರಣ್ ರಾಜ್ ಕೂಡ ಅವರೊಂದಿಗೆ ತೆರಳಿ ದೃಶ್ಯಗಳನ್ನು ಸೆರೆ ಹಿಡಿಯುತ್ತಿದ್ದ ಎಂದು ಆರೋಪಿಸಲಾಗಿದೆ. ರಾಮಸೇನೆಯ ಕಾರ್ಯಕರ್ತರ ದಾಂಧಲೆಯ ಬಗ್ಗೆ ಪೂರ್ಣ ಮಾಹಿತಿ ಇದ್ದರೂ ಕೂಡ ಪೊಲೀಸ್ ಇಲಾಖೆಗೆ ಮಾಹಿತಿ ನೀಡಿಲ್ಲ ಎಂಬ ಆರೋಪವು ಶರಣ್ರಾಜ್ನ ವಿರುದ್ಧ ಕೇಳಿ ಬಂದಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿದ್ದ 2009ರ ಮಂಗಳೂರು ಪಬ್ ದಾಂಧಲೆ ಪ್ರಕರಣದ ಸಂದರ್ಭವೂ ದಾಂಧಲೆಕೋರರ ಜೊತೆ ತೆರಳಿ ಶರಣ್ ರಾಜ್ ವಿಡಿಯೋ ಮಾಡಿದ್ದನೆಂಬ ಆರೋಪದ ಮೇರೆಗೆ ಪೊಲೀಸರು ಬಂಧಿಸಿ ಕಾನೂನು ಕ್ರಮ ಜರುಗಿಸಿದ್ದರು. *ನಾವು ಕಳೆದ 2 ವರ್ಷದಿಂದ ಸೆಲೂನ್ ನಡೆಸುತ್ತಿದ್ದೇವೆ. ವಾರಕ್ಕೊಮ್ಮೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಬಂದು ಪರಿಶೀಲನೆ ಮಾಡುತ್ತಿದ್ದಾರೆ. ಈ ದಿನ ದಿಢೀರ್ ನುಗ್ಗಿ ದಾಂಧಲೆ ನಡೆಸಿದ್ದಾರೆ. ಕೆಲವು ವಸ್ತುಗಳನ್ನು ಸ್ವತಃ ಅವರೇ ತಂದು ಬಿಸಾಡಿಸಿದ್ದಾರೆ ಎಂದು ಸೆಲೂನ್ನ ಮಾಲಕ, ಬಿಜೈ ಆನೆಗುಂಡಿ ನಿವಾಸಿ ಸುಧೀರ್ ಶೆಟ್ಟಿ ಆರೋಪಿಸಿದ್ದಾರೆ. ವಸೂಲಿಗಾಗಿ ದಾಂಧಲೆ: ನವೀನ್ ಸೂರಿಂಜೆ ಪ್ರತೀ ದಾಂಧಲೆಯ ಸಂದರ್ಭ ಹಿಂದುತ್ವದ ರಕ್ಷಣೆಗಾಗಿ ನಡೆಸಲಾದ ಕೃತ್ಯ ಎಂದು ಪ್ರಸಾದ್ ಅತ್ತಾವರ ಹೇಳಿಕೊಳ್ಳುತ್ತಿ ದ್ದಾನೆ. ಆದರೆ ಆತ ವಸೂಲಿಗಾಗಿ ದಾಂಧಲೆ ನಡೆಸುತ್ತಿದ್ದಾನೆ. ಈ ಹಿಂದೆ ಅಮ್ನೇಶಿ ಪಬ್ ದಾಂಧಲೆ ಸಂದರ್ಭವೂ ಆತ ವಸೂಲಿಯನ್ನೇ ಅಸ್ತ್ರವಾಗಿಸಿದ್ದ. ಅಂದರೆ ಅಮ್ನೇಶಿ ಪಬ್ನ ಎದುರಿನ ಮತ್ತೊಂದು ಪಬ್ನಿಂದ ಹಫ್ತಾ ಪಡೆದ ಬಳಿಕ ತನ್ನ ಕಾರ್ಯಕರ್ತರೊಂದಿಗೆ ಸೇರಿ ದಾಂಧಲೆ ನಡೆಸಿದ್ದ. ಹಿಂದೆ ಈತನ ಮನೆಗೆ ಪೊಲೀಸರು ದಾಳಿ ನಡೆಸಿದಾಗ ಮಕ್ಕಳ ನೀಲಿಚಿತ್ರದ ವಿಡಿಯೋ ಸಿಕ್ಕಿತ್ತು. ಹಾಗಾಗಿ ಈತನಿಗೆ ನೈತಿಕತೆಯ ಪಾಠ ಮಾಡುವ ಹಕ್ಕಿಲ್ಲ. ಮುಸ್ಲಿಮರ ವಿರುದ್ಧ ಸದಾ ಕೆಂಡ ಕಾರುವ ಬಜರಂಗದಳ, ಶ್ರೀರಾಮ ಸೇನೆಯಿಂದ ಹಿಂದುಳಿದ ಸಮುದಾಯದ ಯುವಕರು ದೂರ ಸರಿಯುತ್ತಿದ್ದಾರೆ. ರಾಮಸೇನೆಯಲ್ಲೂ ಬೆರಳೆಣಿಕೆಯಷ್ಟು ಕಾರ್ಯಕರ್ತರು ಮಾತ್ರ ಇದ್ದಾರೆ. ಹಾಗಾಗಿ ಸಂಘಟನೆಗೆ ಅಮಾಯಕ ಯುವಕರನ್ನು ಸೆಳೆಯಲು ಮತ್ತು ತನ್ನ ವಸೂಲಿ ದಂಧೆ ಮುಂದುವರಿಸಲು ಈ ದಾಂಧಲೆ ಮಾಡಿರುವುದು ಸ್ಪಷ್ಟವಾಗಿದೆ ಎಂದು ಪತ್ರಕರ್ತ ನವೀನ್ ಸೂರಿಂಜೆ ಪ್ರತಿಕ್ರಿಯಿಸಿದ್ದಾರೆ. *ಮಂಗಳೂರಿನ ಸೆಲೂನ್ನಲ್ಲಿ ನಡೆಸಲಾದ ದಾಂಧಲೆಗೆ ಪೊಲೀಸ್ ಕಮಿಷನರ್ ಅನುಪಮ್ ಅಗ್ರವಾಲ್ ನೇರ ಹೊಣೆ. ಕಾನೂನು ಬಾಹಿರ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುವ ಇಂತಹ ಅಧಿಕಾರಿಯನ್ನು ಮಂಗಳೂರು ಹಿಂದೆಂದೂ ಕಂಡಿಲ್ಲ. ಮಸಾಜ್ ಸೆಂಟರ್, ಮರಳು ಮಾಫಿಯಾ, ವೇಶ್ಯಾವಾಟಿಕೆ, ಗ್ಯಾಂಬ್ಲಿಂಗ್ಗಳನ್ನು ನಡೆಸಲು ಕಮಿಷನರ್ ಮುಕ್ತ ಅವಕಾಶ ಒದಗಿಸಿದ್ದಾರೆ. ಅವರನ್ನು ವರ್ಗಾಯಿಸಿ ಎಂದು ಮಂಗಳೂರಿನ ಜನಪರ ಸಂಘಟನೆಗಳು ಹೋರಾಟ ನಡೆಸುತ್ತಾ ಬಂದರೂ ವರ್ಗಾಯಿಸಿಲ್ಲ. ಎಲ್ಲರೂ ಕಮಿಷನರ್ರನ್ನು ರಕ್ಷಿಸುತ್ತಿದ್ದಾರೆ. ಅದೀಗ ಗೂಂಡಾಗಿರಿ ಎಸಗಲು ರಾಮಸೇನೆಗೆ ನೆಪ ಒದಗಿಸಿದೆ ಎಂದು ಸಿಪಿಎಂ ದ.ಕ.ಜಿಲ್ಲಾ ಕಾರ್ಯದರ್ಶಿ ಮುನೀರ್ ಕಾಟಿಪಳ್ಳ ಆರೋಪಿಸಿದ್ದಾರೆ. ಕಳಂಕಿತ ಕಮಿಷನರ್ ಮೇಲೆ ಕ್ರಮ ಕೈಗೊಳ್ಳದ ಉಸ್ತುವಾರಿ ಸಚಿವರು, ಗೃಹ ಸಚಿವರೂ ಇಂದಿನ ಘಟನೆಗೆ ಹೊಣೆಗಾರರು. ಎಲ್ಲರ ವಿರೋಧದ ನಡುವೆಯೂ ಭ್ರಷ್ಟ ಕಮಿಷನರ್ ರಕ್ಷಣೆಗೆ ಟೊಂಕ ಕಟ್ಟಿ ನಿಂತಿದ್ದರು ಎನ್ನಲಾದ ಸ್ಪೀಕರ್ ಯು.ಟಿ. ಖಾದರ್ ಹಾಗೂ ಅವರ ಸೋದರರಿಗೆ ಈಗ ತೃಪ್ತಿಯಾಗಬಹುದು ಎಂದು ಮುನೀರ್ ಕಾಟಿಪಳ್ಳ ವ್ಯಂಗ್ಯವಾಡಿದ್ದಾರೆ. *ಬಿಜೈ ಬಳಿಯ ಕಲರ್ಸ್ ಯುನಿಸೆಕ್ಸ್ ಸೆಲೂನ್ ಮೇಲೆ ರಾಮಸೇನೆ ಕಾರ್ಯಕರ್ತರು ದಾಂಧಲೆ ನಡೆಸಲು ಮಂಗಳೂರು ಪೊಲೀಸ್ ಕಮಿಷನರ್ ಅನುಪಮ್ ಅಗ್ರವಾಲ್ ನೇರ ಹೊಣೆ. ಅನೈತಿಕ ಚಟುವಟಿಕೆಗಳಿಗೆ ಮುಕ್ತ ಅವಕಾಶ ಮಾಡಿಕೊಟ್ಟು ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿರುವ ಕಾರಣಕ್ಕೆ ಮತ್ತೆ ಗೂಂಡಾಗಿರಿ ತಲೆಎತ್ತಿದೆ ಎಂದು ಡಿವೈಎಫ್ಐ ದ.ಕ. ಜಿಲ್ಲಾಧ್ಯಕ್ಷ ಬಿ.ಕೆ. ಇಮ್ತಿಯಾಝ್ ಮತ್ತು ಕಾರ್ಯದರ್ಶಿ ಸಂತೋಷ್ ಬಜಾಲ್ ಆರೋಪಿಸಿದ್ದಾರೆ.
Donald Trump: ಡೊನಾಲ್ಡ್ ಟ್ರಂಪ್ ಶಾಕ್; ಅವಧಿಗೆ ಮುನ್ನವೇ ಹೆರಿಗೆ ಮಾಡಿಸಿಕೊಳ್ಳುತ್ತಿರುವ ಭಾರತೀಯರು
ಅಮೆರಿಕದ 47ನೇ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಬಳಿಕ ಡೊನಾಲ್ಡ್ ಟ್ರಂಪ್ ಹಲವು ಹೊಸ ಆದೇಶಗಳಿಗೆ ಸಹಿ ಹಾಕಿದ್ದಾರೆ. ಅದರಲ್ಲೂ ವಲಸಿಗರ ವಿಚಾರದಲ್ಲಿ ತುಸು ಹೆಚ್ಚೇ ಎನ್ನುವಷ್ಟರು ಕಠಿಣವಾಗಿದ್ದಾರೆ. ಇದೀಗ 127 ವರ್ಷದ ಹಳೆಯ ಸಂವಿಧಾನವನ್ನು ತಿದ್ದುಪಡಿ ಮಾಡುವ ಆದೇಶಕ್ಕೆ ಸಹಿ ಹಾಕಿದ್ದು, ಭಾರತೀಯರಿಗೆ ದೊಡ್ಡ ಆಘಾತ ನೀಡಿದ್ದಾರೆ. ಟ್ರಂಪ್ರ ಹಸ ಕಾನೂನಿಂದ ಪಾರಾಗಲು ಅವಧಿಗೆ ಮುನ್ನವೇ ಹೆರಿಗೆ
ಮಂಗಳೂರು: ಬ್ಯಾಂಕ್ ದರೋಡೆ ಪ್ರಕರಣದ ಆರೋಪಿಗಳು ಪೊಲೀಸ್ ಕಸ್ಟಡಿಗೆ
ಉಳ್ಳಾಲ: ಕೋಟೆಕಾರ್ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲ್ಪಟ್ಟ ಆರೋಪಿಗಳಾದ ಮುರುಗನ್ ಮತ್ತು ಯೊಸಾವೊ ರಾಜೇಂದ್ರನ್ರನ್ನು ಗುರುವಾರ ನ್ಯಾಯಾಲಯಕ್ಕೆ ಹಾಜರುಪಡಿಸ ಲಾಗಿದೆ. ವಿಚಾರಣೆಯ ಬಳಿಕ ನ್ಯಾಯಾಧೀಶರು ಇಬ್ಬರು ಆರೋಪಿಗಳನ್ನು ವಾರಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿದ್ದಾರೆ. ದರೋಡೆಕೋರರಿಂದ ಕಾರು, ಎರಡು ಪಿಸ್ತೂಲು, 4 ಲೈವ್ ಬುಲೆಟ್, 3 ಲಕ್ಷ ರೂ. ನಗದು ಹಾಗೂ 2 ಕೆ.ಜಿ ಚಿನ್ನವನ್ನು ವಶಕ್ಕೆ ಪಡೆದುಕೊಂಡಿರುವ ಕುರಿತು ತಮಿಳುನಾಡಿನ ಅಂಬಸಮುತ್ರಮ್ ನ್ಯಾಯಾಲಯಕ್ಕೆ ಪೊಲೀಸರು ಮಾಹಿತಿ ನೀಡಿದ್ದರು. ಇದೀಗ ಉಳಿದ ಚಿನ್ನಾಭರಣಕ್ಕಾಗಿ ತಮಿಳುನಾಡು ಕಲಕ್ಕಾಡ್ ಸುತ್ತ ಪೊಲೀಸರು ಶೋಧ ಕಾರ್ಯವನ್ನು ಮುಂದುವರಿಸಿದ್ದಾರೆ. ಅಲ್ಲದೆ ತಲೆಮರೆಸಿಕೊಂಡಿರುವ ದರೋಡೆಕೋರರ ಬಂಧನಕ್ಕೆ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಬಂಧಿತ ಇಬ್ಬರು ಆರೋಪಿಗಳನ್ನು ಗುರುವಾರ ರಾತ್ರಿ ಕೃತ್ಯವೆಸಗಿದ ಸ್ಥಳಕ್ಕೆ ಕರೆದೊಯ್ದು ಮಹಜರು ನಡೆಸಲು ಕರೆ ತರಲಾಗಿತ್ತು. ಈ ಸಂದರ್ಭ ಬಿಗು ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.
ಆದೇಶದ ಪುಟಗಳ ಸಂಖ್ಯೆ ಕಡಿಮೆ ಇದ್ದರೂ, ಪುಟಗಟ್ಟಲೆ ಸಂಖ್ಯೆಯ ವಕೀಲರ ಹೆಸರುಗಳು : ಕಳವಳ ವ್ಯಕ್ತಪಡಿಸಿದ ಸುಪ್ರೀಂ ಕೋರ್ಟ್
ಹೊಸದಿಲ್ಲಿ: ಇತ್ತೀಚಿನ ಪ್ರಕರಣಗಳಲ್ಲಿ ಆದೇಶದ ಪುಟಗಳ ಸಂಖ್ಯೆ ಕಡಿಮೆ ಇದ್ದರೂ, ಪುಟಗಟ್ಟಲೆ ಸಂಖ್ಯೆಯ ವಕೀಲರ ಹೆಸರು ನಮೂದಾಗುತ್ತಿರುವುದರ ಕುರಿತು ಗುರುವಾರ ಸುಪ್ರೀಂ ಕೋರ್ಟ್ ಕಳವಳ ವ್ಯಕ್ತಪಡಿಸಿದೆ. ಒಂದು ವೇಳೆ ವಕೀಲರೇನಾದರೂ ನ್ಯಾಯಾಲಯಕ್ಕೆ ಪರಿಣಾಮಕಾರಿಯಾಗಿ ನೆರವು ನೀಡುತ್ತಿದ್ದರೆ, ಅವರ ಹೆಸರನ್ನು ಸೇರ್ಪಡೆ ಮಾಡಲು ನ್ಯಾಯಾಲಯಕ್ಕೆ ಯಾವುದೇ ತೊಂದರೆ ಇಲ್ಲ ಎಂದು ನ್ಯಾ. ಬೇಲಾ ಎಂ. ತ್ರಿವೇದಿ ಹಾಗೂ ನ್ಯಾ. ಸತೀಶ್ ಚಂದ್ರ ಶರ್ಮ ಅವರನ್ನೊಳಗೊಂಡ ನ್ಯಾಯಪೀಠವು ಅಭಿಪ್ರಾಯ ಪಟ್ಟಿತು. “ವಕೀಲರ ಹೆಸರುಗಳು 10 ಪುಟಗಳವರೆಗೆ ಹೋಗುತ್ತಿದ್ದರೆ, ಆದೇಶವು ಕೆಲವೇ ಪುಟಗಳಲ್ಲಿರುತ್ತದೆ. ವಕೀಲರ ಹೆಸರು ಹೇಗೆ ಆದೇಶದಲ್ಲಿ ಸೇರ್ಪಡೆ ಮಾಡಬೇಕು ಎಂಬ ಆಧಾರದಲ್ಲಿ ನಾವು ಆದೇಶಗಳನ್ನು ನೀಡುತ್ತಿಲ್ಲ. ನೀವು ಬಾರ್ ಅನ್ನು ಪ್ರತಿನಿಧಿಸುತ್ತಿರುವುದರಿಂದ, ನಾವು ನಿಮ್ಮ ಪ್ರಕರಣಗಳ ವಿಚಾರಣೆ ನಡೆಸುತ್ತಿದ್ದೇವೆ” ಎಂದು ನ್ಯಾಯಪೀಠ ಅಸಮಾಧಾನ ವ್ಯಕ್ತಪಡಿಸಿತು. ವಾದಿಗಳ ವಕೀಲರಾಗಿ ಹಲವಾರು ವಕೀಲರು ನ್ಯಾಯಾಲಯಕ್ಕೆ ಹಾಜರಾದರೂ, ವಾದ ಮಾಡಿ ಎಂದಾಗ ಯಾರೂ ಕೂಡಾ ವಾದ ಮಾಡುತ್ತಿಲ್ಲ ಎಂದೂ ಸುಪ್ರೀಂ ಕೋರ್ಟ್ ಬೇಸರ ವ್ಯಕ್ತಪಡಿಸಿತು. “ನಾವು ನಿಮಗೆ ಇಲ್ಲಿ ಯಾವುದೇ ಸ್ಥಾನವಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದೇವೆ. ವಕೀಲರೊಂದಿಗೆ ಯಾರೆಲ್ಲ ಸಂಬಂಧಪಟ್ಟಿದ್ದಾರೆ ಅವರ ಹೆಸರುಗಳು ಆದೇಶದಲ್ಲಿವೆ. ಈ ರೀತಿ ಮಾಡಲು ಸಾಧ್ಯವಿಲ್ಲ. ಯಾರಾದರೂ ನಿಮಗೆ ಪರಿಣಾಮಕಾರಿಯಾಗಿ ನೆರವು ನೀಡುತ್ತಿದ್ದರೆ, ಅಂಥವರ ಹೆಸರು ಅಲ್ಲಿರುವಂತೆ ನಾವು ನೋಡಿಕೊಳ್ಳುತ್ತೇವೆ. ನಾವು ಆದೇಶಗಳನ್ನು ಹೊರಡಿಸುತ್ತೇವೆ” ಎಂದು ಸುಪ್ರೀಂ ಕೋರ್ಟ್ ಬಾರ್ ಅಸೋಸಿಯೇಶನ್ ಅನ್ನು ಪ್ರತಿನಿಧಿಸುತ್ತಿರುವ ಹಿರಿಯ ವಕೀಲ ಕಪಿಲ್ ಸಿಬಲ್ ಅವರನ್ನುದ್ದೇಶಿಸಿ ನ್ಯಾಯಾಲಯ ಹೇಳಿತು.
ವಾಂಖೇಡೆ ಸ್ಟೇಡಿಯಮ್ ನಲ್ಲಿ 14,505 ಚೆಂಡುಗಳನ್ನು ಬಳಸಿ ಗಿನ್ನೆಸ್ ವಿಶ್ವ ದಾಖಲೆ
ಮುಂಬೈ : ಮುಂಬೈಯ ವಾಂಖೇಡೆ ಸ್ಟೇಡಿಯಮ್ನಲ್ಲಿ ಕ್ರಿಕೆಟ್ ಚೆಂಡುಗಳ ಮೂಲಕ ಅತ್ಯಂತ ದೊಡ್ಡ ವಾಕ್ಯವೊಂದನ್ನು ಬರೆಯುವ ಮೂಲಕ ಮುಂಬೈ ಕ್ರಿಕೆಟ್ ಅಸೋಸಿಯೇಶನ್ (ಎಂಸಿಎ) ನೂತನ ಗಿನ್ನೆಸ್ ವಿಶ್ವ ದಾಖಲೆಯನ್ನು ನಿರ್ಮಿಸಿದೆ. 14,505 ಕೆಂಪು ಮತ್ತು ಬಿಳಿ ಕ್ರಿಕೆಟ್ ಚೆಂಡುಗಳನ್ನು ಬಳಸಿ ‘‘ಫಿಫ್ಟಿ ಇಯರ್ಸ್ ಆಫ್ ವಾಂಖೆಡೆ ಸ್ಟೇಡಿಯಮ್’’ ಎಂದು ಬರೆಯಲಾಗಿದೆ. ಐತಿಹಾಸಿಕ ವಾಂಖೇಡೆ ಸ್ಟೇಡಿಯಮ್ನ 50ನೇ ವರ್ಷಾಚರಣೆಯ ಅಂಗವಾಗಿ ಏರ್ಪಡಿಸಲಾದ ಆಚರಣೆಗಳ ಭಾಗವಾಗಿ ಈ ಸಾಧನೆಯನ್ನು ಮಾಡಲಾಗಿದೆ. ಈ ಕ್ರಿಕೆಟ್ ಮೈದಾನವು ಹಲವು ಶ್ರೇಷ್ಠ ಭಾರತೀಯ ಕ್ರಿಕೆಟಿಗರ ತವರು ಮೈದಾನವಾಗಿದೆ. ಇದೇ ಮೈದಾನದಲ್ಲಿ 2011ರಲ್ಲಿ ಭಾರತೀಯ ಕ್ರಿಕೆಟ್ ತಂಡವು ತನ್ನ ಎರಡನೇ 50 ಓವರ್ಗಳ ವಿಶ್ವಕಪ್ ಜಯಿಸಿತ್ತು. ‘‘ವಾಂಖೇಡೆ ಸ್ಟೇಡಿಯಮ್ನಲ್ಲಿ, 14,505 ಕೆಂಪು ಮತ್ತು ಬಿಳಿ ಕ್ರಿಕೆಟ್ ಚೆಂಡುಗಳನ್ನು ಬಳಸಿ ‘‘ಫಿಫ್ಟಿ ಇಯರ್ಸ್ ಆಫ್ ವಾಂಖೆಡೆ ಸ್ಟೇಡಿಯಮ್’’ ಎಂದು ಇಂಗ್ಲಿಷ್ನಲ್ಲಿ ವಾಕ್ಯವನ್ನು ರಚಿಸಿ ಮುಂಬೈ ಕ್ರಿಕೆಟ್ ಅಸೋಸಿಯೇಶನ್ ಗಿನ್ನೆಸ್ ವಿಶ್ವ ದಾಖಲೆ ನಿರ್ಮಿಸಲಾಗಿದೆ ಎಂದು ತಿಳಿಸಲು ನಾವು ರೋಮಾಂಚಿತರಾಗಿದ್ದೇವೆ’’ ಎಂದು ಎಂಸಿಎ ಅಧ್ಯಕ್ಷ ಅಜಿಂಕ್ಯ ನಾಯಕ್ ಹೇಳಿದ್ದಾರೆ.
ವಿದ್ಯಾರ್ಥಿಗಳಲ್ಲಿ ಆತ್ಮ ವಿಶ್ವಾಸಕ್ಕಾಗಿ AIITAಯಿಂದ ರಾಜ್ಯ ಮಟ್ಟದ ಆನ್ಲೈನ್ ಸೆಮಿನಾರ್
ಬೆಂಗಳೂರು: ಪರೀಕ್ಷಾ ಒತ್ತಡದಿಂದ ವಿದ್ಯಾರ್ಥಿಗಳಲ್ಲಿ ಭಯ ಮತ್ತು ಆತಂಕ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಅವರಲ್ಲಿ ಆತ್ಮವಿಶ್ವಾಸ ಮೂಡಿಸಲು ಆಲ್ ಇಂಡಿಯಾ ಐಡಿಯಲ್ ಟೀಚರ್ಸ್ ಅಸೋಸಿಯೇಷನ್ (ಐಟಾ) ಕರ್ನಾಟಕ ಜ. 26ರಂದು ರಾತ್ರಿ 9 ಗಂಟೆಗೆ ರಾಜ್ಯಮಟ್ಟದ ಆನ್ಲೈನ್ ಮಾರ್ಗದರ್ಶನ ಮತ್ತು ಮಾಹಿತಿ ಕಾರ್ಯಕ್ರಮವನ್ನು ಆಯೋಜಿಸಿದೆ ಎಂದು ಐಟಾ ರಾಜ್ಯಾಧ್ಯಕ್ಷ ಎಂ.ಆರ್. ಮಾನ್ವಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಬೆಂಗಳೂರಿನ ಖ್ಯಾತ ಮನೋವೈದ್ಯರು ಹಾಗೂ ಉಮ್ಮೀದ್ ವ್ಯಸನ ನಿವಾರಣೆ ಮತ್ತು ಪುನರ್ವಸತಿ ಕೇಂದ್ರದ ಸ್ಥಾಪಕಿ ಡಾ. ಆಸಿಫಾ ಖಲೀಲ್ ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ, ಅವರಲ್ಲಿ ಆತ್ಮವಿಶ್ವಾಸ ಹೆಚ್ಚಿಸಲು ಸೂಕ್ತ ಮಾರ್ಗದರ್ಶನ ನೀಡಲಿದ್ದಾರೆ. ಈ ಕಾರ್ಯಕ್ರಮದಲ್ಲಿ ರಾಜ್ಯದ ಎಸ್.ಎಸ್.ಎಲ್.ಸಿ. ಮತ್ತು ಪಿಯುಸಿ ವಿದ್ಯಾರ್ಥಿಗಳು ಭಾಗವಹಿಸಿ, ತಮ್ಮಲ್ಲಿ ಆತ್ಮವಿಶ್ವಾಸವನ್ನು ಮತ್ತು ಮಾಸನಿಕ ಸ್ಥೈರ್ಯವನ್ನು ಹೆಚ್ಚಿಸಿಕೊಳ್ಳುವಲ್ಲಿ ಅಗತ್ಯ ಸಲಹೆಗಳನ್ನು ಪಡೆಯಬಹುದಾಗಿದೆ. ಲೈವ್ ಪ್ರಸಾರ: ಆನ್ಲೈನ್ ಕಾರ್ಯಕ್ರಮವನ್ನು AIITA Karnataka ಯೂಟ್ಯೂಬ್ ಚಾನೆಲ್ ಮೂಲಕ ಲೈವ್ ಪ್ರಸಾರ ಮಾಡಲಾಗುವುದು. ಇತ್ತೀಚೆಗೆ ರಾಜ್ಯದ ವಿವಿಧ ಭಾಗಗಳಲ್ಲಿ ಪರೀಕ್ಷಾ ಒತ್ತಡದಿಂದಾಗಿ ವಿದ್ಯಾರ್ಥಿಗಳು ಮಾನಸಿಕ ಒತ್ತಡವನ್ನು ಅನುಭವಿಸುತ್ತಿ ರುವ ಘಟನೆಗಳು ವರದಿಯಾಗಿದ್ದು, ಪುತ್ತೂರಿನ ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆಗೆ ಯತ್ನಿಸಿರುವ ಸಂಗತಿ ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ, ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಮತ್ತು ಮಾನಸಿಕ ಸ್ಥೈರ್ಯ ಹೆಚ್ಚಿಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ರಾಜ್ಯಾಧ್ಯಕ್ಷ ಎಂ.ಆರ್. ಮಾನ್ವಿ ತಿಳಿಸಿದ್ದಾರೆ. ರಾಜ್ಯದ ಎಲ್ಲಾ ಪ್ರೌಢಶಾಲೆ ಮತ್ತು ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರು ಸದರಿ ವಿಷಯವನ್ನು ಎಸ್.ಎಸ್.ಎಲ್.ಸಿ. ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ಮತ್ತು ಅವರ ಪಾಲಕರಿಗೆ ಮನವರಿಕೆ ಮಾಡಿಸಿ ಐಟಾದ ಯೂಟ್ಯೂಬ್ ಚಾನೆಲ್ ಲೈವ್ ಪ್ರಸಾರ ಕಾರ್ಯಕ್ರಮವನ್ನು ವೀಕ್ಷಿಸಲು ಪ್ರೇರೇಪಿಸಬೇಕೆಂದು ಪ್ರಕಟಣೆಯಲ್ಲಿ ವಿನಂತಿಸಲಾಗಿದೆ.
ಬಹರಾಯಿಚ್ : ಇತ್ತೀಚಿಗೆ ಕೋಮು ಉದ್ವಿಗ್ನತೆಗಳು ಮತ್ತು ತೋಳಗಳ ದಾಳಿಗಳಿಂದಾಗಿ ಸುದ್ದಿಯಾಗಿದ್ದ ಉತ್ತರ ಪ್ರದೇಶದ ಬಹರಾಯಿಚ್ ಜಿಲ್ಲೆಯಲ್ಲಿ ಬಹಳ ವರ್ಷಗಳಿಂದ ಸದ್ದಿಲ್ಲದೆ ಮೆರೆಯುತ್ತಿರುವ ಕೋಮು ಸಾಮರಸ್ಯದ ಹೃದಯಸ್ಪರ್ಶಿ ಕಥನವೊಂದು ಹೊರಹೊಮ್ಮಿದೆ. ಇಸ್ಲಾಮ್ ಧರ್ಮವನ್ನು ಚಾಚೂ ತಪ್ಪದೆ ಪಾಲಿಸುವ ಮುಹಮ್ಮದ್ ಅಲಿ(58) ಹಿಂದು ದೇಗುಲವನ್ನು ನಿರ್ವಹಿಸುತ್ತಿರುವ ಟ್ರಸ್ಟ್ನ ಅಧ್ಯಕ್ಷ ಮತ್ತು ಉಸ್ತುವಾರಿಯಾಗಿ ಕಳೆದ 18 ವರ್ಷಗಳಿಂದಲೂ ನಿಷ್ಠೆಯಿಂದ ಸೇವೆ ಸಲ್ಲಿಸುತ್ತಿದ್ದಾರೆ. ಬಹರಾಯಿಚ್ ಜಿಲ್ಲಾ ಕೇಂದ್ರದಿಂದ 27 ಕಿ.ಮೀ.ಅಂತರದಲ್ಲಿರುವ ಜೈತಾಪುರ ಬಝಾರ್ನಲ್ಲಿ ಅಲಿ ವೃದ್ಧ ಮಾತೇಶ್ವರಿ ಮಾತಾ ಘುರ್ದೇವಿ ದೇವಸ್ಥಾನದ ಉಸ್ತುವಾರಿಯನ್ನು ನೋಡಿಕೊಳ್ಳುತ್ತಿದ್ದಾರೆ. ಮುಸ್ಲಿಮರೂ ಈ ದೇವಸ್ಥಾನದಲ್ಲಿ ಪೂಜೆ ಸಲ್ಲಿಸುತ್ತಾರೆ. ರೋಝಾ ಮತ್ತು ನಮಾಜ್ನಂತಹ ಇಸ್ಲಾಮಿಕ್ ಸಂಪ್ರದಾಯಗಳನ್ನು ನಿಷ್ಠೆಯಿಂದ ಆಚರಿಸುವ ಅಲಿ ಘುರ್ದೇವಿ ಮತ್ತು ಹನುಮಾನ್ ಅವರ ಆರಾಧನೆಯೊಂದಿಗೆ ತನ್ನ ಅವಳಿ ಪಾತ್ರಗಳನ್ನು ಸಮರ್ಪಣಾ ಭಾವದಿಂದ ನಿರ್ವಹಿಸುತ್ತಿದ್ದಾರೆ. ತನ್ನ ಬದುಕಿಗೆ ತಿರುವನ್ನು ನೀಡಿದ್ದ ಬಾಲ್ಯದಲ್ಲಿಯ ಘಟನೆಯನ್ನು ನೆನಪಿಸಿಕೊಂಡ ಅಲಿ,‘ನನಗೆ ಏಳು ವರ್ಷ ವಯಸ್ಸಾಗಿದ್ದಾಗ ತೊನ್ನು ನನ್ನನ್ನು ಬಾಧಿಸಿತ್ತು ಮತ್ತು ನನ್ನ ಕಣ್ಣುಗಳು ಬಿಳಿಯಾಗಿದ್ದವು. ಎಲ್ಲ ಚಿಕಿತ್ಸೆ ಮಾಡಿದ್ದರೂ ಪ್ರಯೋಜನವಾಗಿರಲಿಲ್ಲ, ನನ್ನ ತಾಯಿ ನನ್ನನ್ನು ಘುರ್ದೇವಿ ದೇವಸ್ಥಾನಕ್ಕೆ ಕರೆದೊಯ್ದಿದ್ದರು,ದೇವಸ್ಥಾನದ ಪವಿತ್ರ ತೀರ್ಥವನ್ನು ಕಣ್ಣಿಗೆ ಹಚ್ಚಿಕೊಂಡಿದ್ದರಿಂದ ನಾನು ಗುಣಮುಖನಾಗಿದೆ ಮತ್ತು ಇದು ದೇವಸ್ಥಾನದೊಂದಿಗೆ ನನ್ನ ಜೀವಿತಾವಧಿಯ ಸಂಬಂಧಕ್ಕೆ ನಾಂದಿ ಹಾಡಿತ್ತು’ ಎಂದು ಹೇಳಿದರು. 2007ರಲ್ಲಿ ದೇವಿ ತನ್ನ ಕನಸಿನಲ್ಲಿ ಬಂದು ದೇಗುಲದಲ್ಲಿ ಸೇವೆ ಸಲ್ಲಿಸುವಂತೆ ಸೂಚಿಸಿದ್ದಳು,ಅಂದಿನಿಂದ ತಾನು ದೇಗುಲದ ಉಸ್ತುವಾರಿಯಾಗಿ ಸೇವೆ ಸಲ್ಲಿಸುತ್ತಿದ್ದೇನೆ ಎಂದರು. ಅಲಿಯವರ ನೇತೃತ್ವದಲ್ಲಿ ದೇವಸ್ಥಾನವು ಬಹಳಷ್ಟು ಅಭಿವೃದ್ಧಿಯನ್ನು ಕಂಡಿದೆ. ಕೊಯ್ಲಿನ ಹಂಗಾಮುಗಳಲ್ಲಿ ಧಾನ್ಯಗಳ ಸಂಗ್ರಹಣೆಯ ಮೂಲಕ ನಿಧಿ ಸಂಚಯದಂತಹ ಹಲವಾರು ಉಪಕ್ರಮಗಳು ದೇವಸ್ಥಾನಕ್ಕೆ ಗಮನಾರ್ಹ ಸಂಪನ್ಮೂಲಗಳಾಗಿವೆ. ಈ ವರ್ಷವೊಂದರಲ್ಲೇ ನಾವು ದೇವಸ್ಥಾನದ ಅಭಿವೃದ್ಧಿಗೆ 2.7 ಲ.ರೂ.ಸಂಗ್ರಹಿಸಿದ್ದೇವೆ ಎಂದು ಅಲಿ ತಿಳಿಸಿದರು. ಸಾರ್ವಜನಿಕರ ದೇಣಿಗೆಗಳು ಮತ್ತು ಸರಕಾರದ ಬೆಂಬಲ ಕೂಡ ದೇವಸ್ಥಾನದ ನವೀಕರಣಕ್ಕೆ ನೆರವಾಗಿದ್ದು,30.40 ಲ.ರೂ.ಗಳನ್ನು ನಿರ್ಮಾಣ ಮತ್ತು ನಿರ್ವಹಣೆಗೆ ಬಳಸಲಾಗಿದೆ. ಇತ್ತೀಚಿಗೆ 2.5 ಲ.ರೂ.ವೆಚ್ಚದಲ್ಲಿ ಜೈಪುರದಿಂದ ತರಿಸಲಾದ ಐದೂವರೆ ಅಡಿ ಎತ್ತರದ ಹನುಮಾನ ವಿಗ್ರಹವನ್ನು ಪ್ರತಿಷ್ಠಾಪಿಸಲಾಗಿದೆ. ‘ನಾನು ಹಿಂದು ಮತ್ತು ಮುಸ್ಲಿಮ್ ಎರಡೂ ಧರ್ಮಗಳನ್ನು ಗೌರವಿಸುತ್ತೇನೆ, ದೇವಸ್ಥಾನಕ್ಕೆ ಸೇವೆ ಸಲ್ಲಿಸುವುದು ನನ್ನ ಭಕ್ತಿ ಮತ್ತು ಕೋಮು ಸೌಹಾರ್ದಕ್ಕೆ ನನ್ನ ಬದ್ಧತೆಯ ಪ್ರತೀಕವಾಗಿದೆ ’ ಎಂದು ಅಲಿ ಹೇಳಿದರು.
ಜ.25: ಮೂಡುಬಿದಿರೆಯಲ್ಲಿ ''ಕೋಟಿ-ಚೆನ್ನಯ' ಜೋಡುಕರೆ ಕಂಬಳ
ಮೂಡುಬಿದಿರೆ: 'ಕೋಟಿ-ಚೆನ್ನಯ' ಜೋಡುಕರೆ ಕಂಬಳ ಸಮಿತಿಯ ವತಿಯಿಂದ ಒಂಟಿಕಟ್ಟೆಯ ಕಡಲಕೆರೆ ನಿಸರ್ಗಧಾಮದ 'ವೀರ ರಾಣಿ ಅಬ್ಬಕ್ಕ ಸಂಸ್ಕೃತಿ ಗ್ರಾಮ' ದಲ್ಲಿ 22ನೇ ವರ್ಷದ ಹೊನಲು ಬೆಳಕಿನ 'ಕೋಟಿ-ಚೆನ್ನಯ' ಜೋಡುಕರೆ ಕಂಬಳೋತ್ಸವವು ಜ.25ರಂದು ನಡೆಯಲಿದೆ ಎಂದು ಶಾಸಕ, ಕಂಬಳ ಸಮಿತಿಯ ಅಧ್ಯಕ್ಷ ಉಮಾನಾಥ ಎ.ಕೋಟ್ಯಾನ್ ತಿಳಿಸಿದರು. ಅವರು ಗುರುವಾರ ಒಂಟಿಕಟ್ಟೆಯ ಸೃಷ್ಟಿ ಗಾಡ೯ನ್ ನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರು. ಸಮಯಕ್ಕೆ ಸರಿಯಾಗಿ ಕಂಬಳವನ್ನು ಆರಂಭಿಸಿ ಆದಷ್ಟು ಬೇಗ ಮುಗಿಸುವ ನಿಟ್ಟಿನಲ್ಲಿ ಬೆಳಿಗ್ಗೆ 7ಕ್ಕೆ ಕಾಯ೯ಕ್ರಮವನ್ನು ಆರಂಭಿಸಲಾಗುವುದು. ಚೌಟರ ಅರಮನೆಯ ಕುಲದೀಪ ಎಂ. ಅಧ್ಯಕ್ಷತೆಯಲ್ಲಿ ಅಲಂಗಾರು ಶ್ರೀ ಬಡಗು ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ವೇ.ಮೂ ಈಶ್ವರ ಭಟ್, ಅಲಂಗಾರು ಚರ್ಚ್ ಧರ್ಮಗುರು ಮೆಲ್ವಿನ್ ನೊರೊನ್ಹಾ, ಪುತ್ತಿಗೆ ನೂರಾನಿ ಮಸ್ಜೀದ್ನ ಮೌಲಾನ ಝಿಯಾವುಲ್ಲ್ , ಸುಧೀರ್ ಹೆಗ್ಡೆ ಕುಂಟಾಡಿ ಅವರೆಲ್ಲರೂ ಒಟ್ಟಾಗಿ ಸೇರಿ ಕಂಬಳ ಕರೆಗೆ ಪ್ರಸಾದ ಹಾಕಿ ಹಾಲನೆರೆಯುವ ಮೂಲಕ ಕಂಬಳಕ್ಕೆ ಚಾಲನೆ ನೀಡಲಿದ್ದಾರೆ. ಮಂಗಳೂರು ಪೊಲೀಸ್ ಆಯುಕ್ತ ಅನುಪಮ ಅಗರ್ವಾಲ್, ರಾಣಿ ಅಬ್ಬಕ್ಕ ಪ್ರತಿಮೆಗೆ ಮಾಲಾರ್ಪಣೆಯನ್ನು ಮಾಡಲಿದ್ದು, ಸಭಾ ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ಮುಲ್ಲೖ ಮುಹಿಲನ್ ಉದ್ಘಾಟಿಸಲಿರುವರು. ಅಂತರಾಷ್ಟ್ರೀಯ ವಾಸ್ತು ತಜ್ಞ ಮೂಲ್ಕಿ ಚಂದ್ರಶೇಖರ ಸ್ವಾಮೀಜಿ ಅವರಿಗೆ ರಾಜ್ಯಮಟ್ಟದ ರಾಣಿ ಅಬ್ಬಕ್ಕ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುವುದು. ಸಂಜೆ ನಡೆಯುವ ಸಭಾ ಕಾಯ೯ಕ್ರಮದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಯಡಿಯೂರಪ್ಪ, ದ.ಕ ಸಂಸದ ಬ್ರಿಜೇಶ್ ಚೌಟ, ಉಡುಪಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ಭಾಗವಹಿಸಲಿದ್ದಾರೆಂದು ತಿಳಿಸಿದರು. ಎಲ್ಲಾ ಕಂಬಳಾಭಿಮಾನಿಗಳಿಗೂ ಬೆಳಿಗ್ಗೆ 11.30 ರಿಂದ 3 ಗಂಟೆಯವರೆಗೂ ಗಂಜಿ ಊಟದ ವ್ಯವಸ್ಥೆ ಇದೆ ಎಂದರು. ಕಂಬಳ ಸಮಿತಿಯ ಪ್ರಧಾನ ಕಾರ್ಯದರ್ಶಿ ಗುಣಪಾಲ ಕಡಂಬ ಮಾತನಾಡಿ, ಈ ಬಾರಿ ವಿಶೇಷವಾಗಿ ಕಂಬಳದ ಆರಂಭ ದಲ್ಲಿ ಕೋಣಗಳನ್ನು ಬಿಡುವಲ್ಲಿ ಸೆನ್ಸಾರ್ ಸಿಸ್ಟಮ್ನ್ನು ಅಳವಡಿಸಲಾಗಿದೆ. ತಂತ್ರಜ್ಞಾನ ವ್ಯವಸ್ಥೆಯನ್ನು ಮೂಡುಬಿದಿರೆಯ ಕೋಟಿ ಚೆನ್ನಯ ಕಂಬಳಕರೆಯಲ್ಲಿ ಪೂರ್ಣವಾಗಿ ಸಿಸ್ಟಮ್ನ್ನು ಅಳವಡಿಸಲಾಗಿದ್ದು ಕೊಟ್ಟ ಸಮಯಾವಧಿ ಮೀರಿದ ನಂತರ ಒಂದೆರಡು ನಿಮಿಷ ಕಾಲಾವಕಾಶ ಮಾತ್ರ ಇರುತ್ತದೆ. ಆನಂತರ ತಕ್ಷಣವೇ ಎರಡು ಕಡೆಯಿಂದಲೂ ಸೆನ್ಸಾರ್ ಸಿಸ್ಟಮ್ ಆನ್ ಆಗಿ ಬಾವುಟ ಹಾರಿಸಲಾಗುತ್ತದೆ. ಅತೀ ವೇಗವಾಗಿ ಕಂಬಳವನ್ನು ಮುಗಿಸುವ ಸಲುವಾಗಿ ತಂತ್ರಜ್ಞಾನವನ್ನಿಟ್ಟು ಈ ಸೆನ್ಸರ್ ಸಿಸ್ಟಮ್ನ್ನು ಅಳವಡಿಸಲಾಗಿದೆ ಎಂದರು. ಕೆಎಂಎಫ್ ಅಧ್ಯಕ್ಷ ಸುಚರಿತ ಶೆಟ್ಟಿ, ಬಿಜೆಪಿ ಮುಲ್ಕಿ-ಮೂಡುಬಿದಿರೆ ಮಂಡಲದ ಅಧ್ಯಕ್ಷ ದಿನೇಶ್ ಪುತ್ರನ್, ಕಂಬಳ ಸಮಿತಿಯ ಕೋಶಾಧ್ಯಕ್ಷರಾದ ಭಾಸ್ಕರ್ ಎಸ್ ಕೋಟ್ಯಾನ್, ಕಂಬಳ ಸಮಿತಿ ಪ್ರಧಾನ ಕಾರ್ಯದರ್ಶಿಗಳಾದ ರಂಜಿತ್ ಪೂಜಾರಿ, ಹರಿಪ್ರಸಾದ್ ಶೆಟ್ಟಿ ಸುದ್ದಿಗೋಷ್ಟಿಯಲ್ಲಿದ್ದರು.
ಬೀದರ್| ಅಪರಿಚಿತ ವಾಹನ ಢಿಕ್ಕಿ; ಇಬ್ಬರು ಬೈಕ್ ಸವಾರರು ಮೃತ್ಯು, ಓರ್ವನಿಗೆ ಗಂಭೀರ ಗಾಯ
ಬೀದರ್: ಬೈಕ್ ಗೆ ಅಪರಿಚಿತ ವಾಹನವೊಂದು ಢಿಕ್ಕಿಯಾದ ಪರಿಣಾಮ ಇಬ್ಬರು ಬೈಕ್ ಸವಾರರು ಮೃತಪಟ್ಟಿದ್ದು, ಅದರಲ್ಲಿದ್ದ ಮತ್ತೋರ್ವ ಗಂಭೀರವಾಗಿ ಗಾಯಗೊಂಡ ಘಟನೆ ಭಾಲ್ಕಿ ತಾಲ್ಲೂಕಿನ ಪಾಂಡರಿ ಗ್ರಾಮದ ಬಳಿ ಇಂದು ನಡೆದಿದೆ. ಮಹಾರಾಷ್ಟ್ರದ ನಾಂದೇಡ್ ಜಿಲ್ಲೆಯವರಾದ ನಾಗುರಾವ್ (40) ಹಾಗೂ ಭಾನುದಾಸ್ (42) ಮೃತ ವ್ಯಕ್ತಿಗಳಾಗಿದ್ದಾರೆ. ಭಾಲ್ಕಿ ಕಡೆಯಿಂದ ಔರಾದ್ (ಬಿ) ಕಡೆಗೆ ಬೈಕ್ ನಲ್ಲಿ ಮೂವರು ತೆರಳುತ್ತಿದ್ದರು. ಮಾರ್ಗಮಧ್ಯ ಪಾಂಡರಿ ಗ್ರಾಮದ ಹತ್ತಿರ ಅಪರಿಚತ ವಾಹನವೊಂದು ಢಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಘಟನೆಯಲ್ಲಿ ಬೈಕ್ ಸವಾರರ ಪೈಕಿ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದರೆ, ಚಂದು ಜಾಧವ ಎಂಬ ವ್ಯಕ್ತಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುವಿಗೆ ಭಾಲ್ಕಿಯ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಬೀದರ್ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ತಿಳಿದು ಬಂದಿದೆ. ಘಟನಾ ಸ್ಥಳಕ್ಕೆ ಮೇಹಕರ್ ಠಾಣೆಯ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.
ಬ್ಯಾರೀಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಮೂರು ದಿನಗಳ ಉಪನ್ಯಾಸ ಕಾರ್ಯಕ್ರಮ
ಮಂಗಳೂರು: ಬ್ಯಾರೀಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಸುಧಾರಿತ ಶಿಕ್ಷಣ ಕಲೆ ಮತ್ತು ವೃತ್ತಿಪರ ಬೆಳವಣಿಗೆ ಶೀರ್ಷಿಕೆಯಡಿ ಮೂರು ದಿನಗಳ ಉಪನ್ಯಾಸಕರಿಗೆ ತರಬೇತಿ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮವನ್ನು ಬ್ಯಾರೀಸ್ ಇನ್ ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಸಿವಿಲ್ ಇಂಜಿನಿಯರಿಂಗ್, ಕಂಪ್ಯೂಟರ್ ಸೈನ್ಸ್ ಮತ್ತು ಇಂಜಿನಿಯರಿಂಗ್, ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ಇಂಜಿನಿಯರಿಂಗ್ ವಿಭಾಗ ಮತ್ತು Internal Quality Assurance Cell(IQAC) ಮತ್ತು ಸಂಸ್ಥೆಯ ಸಂಶೋಧನಾ ಸಮಿತಿಯ ಸಹಯೋಗದೊಂದಿಗೆ ಆಯೋಜಿಸಲಾಗಿದೆ. IQAC ಮುಖ್ಯಸ್ಥೆ ಡಾ. ನಳಿನಿ ಇ.ರೆಬೆಲ್ಲೊ ಸ್ವಾಗತ ಭಾಷಣ ಮಾಡಿ, ಕಾರ್ಯಕ್ರಮದ ಗುರಿ ಮತ್ತು ಆಧುನಿಕ ಶಿಕ್ಷಣದ ಸವಾಲುಗಳನ್ನು ಎದುರಿಸಲು ನವೀನ ಬೋಧನಾ ವಿಧಾನಗಳನ್ನು ಅಳವಡಿಸಿಕೊಳ್ಳುವ ಅಗತ್ಯವನ್ನು ವಿವರಿಸಿದರು. ಬಿಐಟಿಯ ಪ್ರಾಂಶುಪಾಲರಾದ ಡಾ.ಎಸ್.ಐ.ಮಂಝೂರ್ ಬಾಷಾ ಮಾತನಾಡಿ, ಸಮಗ್ರ ಬೆಳವಣಿಗೆ ಮತ್ತು ಪರಿಣಾಮ ಕಾರಿ ಬೋಧನೆಗಾಗಿ ಅಧ್ಯಾಪಕರನ್ನು ರೂಪಿಸುವಲ್ಲಿ ವೃತ್ತಿಪರ ಅಭಿವೃದ್ಧಿ ಕಾರ್ಯಕ್ರಮಗಳ ಪ್ರಾಮುಖ್ಯತೆಯನ್ನು ಹೇಳಿದ್ದಾರೆ. ಕಾರ್ಯಕ್ರಮದ ಮೊದಲ ದಿನ ಅಂಕಿತ್ ಕುಮಾರ್ ಅವರು ಪರಿಣಾಮಕಾರಿ ಬೋಧನಾ ಪ್ರಾವೀಣ್ಯತೆಗಾಗಿ ಸಾವಧಾನತೆ (Mindfulness for Effective Teaching Proficiency) ವಿಚಾರದಲ್ಲಿ ಮಾತನಾಡಿದ್ದಾರೆ. ಒತ್ತಡ ನಿರ್ವಹಣೆ, ವಿದ್ಯಾರ್ಥಿಗಳ ಬಗ್ಗೆ ಸಹಾನುಭೂತಿಯನ್ನು ಬೆಳೆಸುವ ತಂತ್ರಗಳ ಬಗ್ಗೆ ಅರಿವನ್ನು ನೀಡಿದರು. ಶ್ವೇತಾ ಭರತ್ ಅವರು ಪರಿಣಾಮಕಾರಿ ಕಲಿಕೆಗಾಗಿ ಬೋಧನಾ ಕೌಶಲ್ಯಗಳು ಎಂಬ ವಿಚಾರದಲ್ಲಿ ಮಾತನಾಡಿದ್ದು, ಚಟುವಟಿಕೆ ಆಧಾರಿತ ಕಲಿಕೆ, ಸಂವಹನವನ್ನು ಸುಧಾರಣೆ ಸೇರಿದಂತೆ ವಿವಿಧ ವಿಚಾರಗಳ ಬಗ್ಗೆ ಉಪನ್ಯಾಸವನ್ನು ನೀಡಿದ್ದಾರೆ. 2ನೇ ದಿನ ಮಣಿಪಾಲದ MITಯ ECE ವಿಭಾಗದ ಪ್ರಾಧ್ಯಾಪಕ ಡಾ. ಶಂಕರನಾರಾಯಣ ಭಟ್ ಅವರು ʼOutcome-Based Educationʼ (OBE) ಕುರಿತು ಉಪನ್ಯಾಸವನ್ನು ನೀಡಿದ್ದಾರೆ. ಕಾರ್ಯಕ್ರಮದ ಮೂರನೇ ದಿನದಂದು ಮಂಗಳೂರಿನ SJECಯ ಪ್ರಾಧ್ಯಾಪಕರಾದ ಡಾ. ಪುರುಷೋತ್ತಮ ಚಿಪ್ಪಾರ್ ಅವರು ನ್ಯಾವಿಗೇಟಿಂಗ್ ರಿಸರ್ಚ್ ಸಕ್ಸಸ್: ಇನ್ಸೈಟ್ಸ್ ಇನ್ ಪಬ್ಲಿಕೇಶನ್ಸ್, ಎಥಿಕ್ಸ್ ಮತ್ತು ಫಂಡಿಂಗ್( Navigating Research Success: Insights into Publications, Ethics, and Funding) ವಿಚಾರದಲ್ಲಿ ಉಪನ್ಯಾಸ ವನ್ನು ನೀಡಿದ್ದಾರೆ. ಡಾ.ಪುರುಷೋತ್ತಮ ಚಿಪ್ಪಾರ್ ಸಂಶೋಧನಾ ಅಗತ್ಯತೆ ಬಗ್ಗೆ ವಿವರಿಸಿದ್ದು, ಸಂಶೋಧನಾ ಪ್ರಬಂಧ ವನ್ನು ಹೇಗೆ ಸಿದ್ಧಪಡಿಸುವುದು ಎಂಬ ಬಗ್ಗೆ ವಿವರಗಳನ್ನು ನೀಡಿದ್ದಾರೆ. ಇದಲ್ಲದೆ ಅವರು ಸಂಶೋಧನಾ ನಿಧಿ ಪಡೆಯಲು ಅರ್ಜಿ ಸಲ್ಲಿಸುವ ಕುರಿತು ಮಾಹಿತಿ ನೀಡಿದ್ದಾರೆ. ಉಪನ್ಯಾಸ ಕಾರ್ಯಕ್ರಮದಲ್ಲಿ ಪ್ರಾಂಶುಪಾಲರು, ವಿವಿಧ ವಿಭಾಗದ ಮುಖ್ಯಸ್ಥರು ಮತ್ತು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಐಐಸಿ ಸಂಯೋಜಕರಾದ ಡಾ.ಇಮ್ರಾನ್ ಮೊಕಾಶಿ ಧನ್ಯವಾದ ಸಲ್ಲಿಸಿದ್ದು, Basic Science ವಿಭಾಗದ ಪ್ರೊ. ಜಾಯ್ಸನ್ ಎಂ ಧನ್ಯವಾದವನ್ನು ಸಲ್ಲಿಸಿದ್ದಾರೆ.
ಚತ್ತೀಸ್ ಗಢ | 50 ಕಿ.ಗ್ರಾಂ. ಐಇಡಿ ನಿಷ್ಕ್ರಿಯಗೊಳಿಸಿದ ಸಿ ಆರ್ ಪಿ ಎಫ್ ; ತಪ್ಪಿದ ಅತಿ ದೊಡ್ಡ ದುರಂತ
ಬಿಜಾಪುರ : ಚತ್ತೀಸ್ಗಢದ ಬಿಜಾಪುರ ಜಿಲ್ಲೆಯ ಬಸಗುಡ ಹಾಗೂ ಅವಪಲ್ಲಿ ರಸ್ತೆಯಲ್ಲಿ ಪತ್ತೆಯಾದ ಸುಧಾರಿತ ಸ್ಫೋಟಕ ಸಾಧನ (ಐಇಡಿ)ವನ್ನು ನಿಷ್ಕ್ರಿಯಗೊಳಿಸುವ ಮೂಲಕ ಸಂಭವಿಸಬಹುದಾಗಿದ್ದ ಅತಿ ದೊಡ್ಡ ದುರಂತವೊಂದನ್ನು ತಪ್ಪಿಸಲಾಗಿದೆ ಎಂದು ಭದ್ರತಾ ಪಡೆ ಗುರುವಾರ ಪ್ರತಿಪಾದಿಸಿದೆ. ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್ಪಿಎಫ್)ಯ ತಂಡ ಎಂದಿನಂತೆ ಶೋಧ ಕಾರ್ಯಾಚರಣೆ ನಡೆಸುತ್ತಿರುವ ಸಂದರ್ಭ ರಸ್ತೆಯ ಕೆಳಗೆ ಐಇಡಿ ಪತ್ತೆಯಾಯಿತು. ತಿಮಾಪುರದ ಬಸಗುಡ ಹಾಗೂ ಅವಪಲಿ ರಸ್ತೆಯಲ್ಲಿರುವ ದುರ್ಗಾ ದೇವಾಲಯದ ಸಮೀಪದ ಸೇತುವೆಯ ಅಡಿಯಲ್ಲಿ ಶಂಕಿತ ನಕ್ಸಲೀಯರು ಸುಮಾರು 50 ಕಿ.ಗ್ರಾಂ. ಐಇಡಿ ಇರಿಸಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕೂಡಲೇ ಬಾಂಬ್ ನಿಷ್ಕ್ರಿಯ ದಳ (ಬಿಡಿಎಸ್) ಸ್ಥಳಕ್ಕೆ ಧಾವಿಸಿತು. ತಂಡ ಮೆಟಲ್ ಡಿಟೆಕ್ಟರ್ ಮೂಲಕ ಬಾಂಬ್ ಇರುವ ಸೂಚನೆ ಪಡೆಯಿತು. ಆ ಪ್ರದೇಶವನ್ನು ಅಗೆಯಿತು ಹಾಗೂ ಅಲ್ಲಿದ್ದ ಬಾಂಬ್ ಅನ್ನು ನಿಷ್ಕ್ರಿಯಗೊಳಿಸಿತು ಅಧಿಕಾರಿಗಳು ತಿಳಿಸಿದ್ದಾರೆ.
ಬೆಂಗಳೂರು ಸಮುದಾಯದ ಅಧ್ಯಕ್ಷರಾಗಿ ಡಾ.ಬಂಜಗೆರೆ ಜಯಪ್ರಕಾಶ್ ಆಯ್ಕೆ
ಬೆಂಗಳೂರು : ಕರ್ನಾಟಕದ ಸಾಂಸ್ಕೃತಿಕ ಚಳವಳಿಯಲ್ಲಿ ಬಹುಮುಖ್ಯ ಹೆಸರಾಗಿರುವ ಬೆಂಗಳೂರು ಸಮುದಾಯದ ಅಧ್ಯಕ್ಷರಾಗಿ ಹಿರಿಯ ಬಂಡಾಯ ಸಾಹಿತಿ, ಸಂಸ್ಕೃತಿ ಚಿಂತಕ ಡಾ.ಬಂಜಗೆರೆ ಜಯಪ್ರಕಾಶ್ ಆಯ್ಕೆಯಾಗಿದ್ದಾರೆ. ವಿಮರ್ಶಕ, ಅಂಕಣಕಾರ, ಡಾ.ಮಂಜುನಾಥ್ ಬಿ.ಆರ್. ಅವರು ಕಾರ್ಯಾಧ್ಯಕ್ಷರಾಗಿ ಆಯ್ಕೆಯಾಗಿದ್ದು, ಉಪಾಧ್ಯಕ್ಷರಾಗಿ ಎನ್.ಎಸ್.ಸನತ್ಕುಮಾರ್, ಪದ್ಮಾ ಶಿವಮೊಗ್ಗ, ಕಾರ್ಯದರ್ಶಿಯಾಗಿ ಸಂಗಮೇಶ ಶಿವಣಗಿ, ಖಜಾಂಚಿಯಾಗಿ ಫೈರೋಜ್ ಕೆ., ಜಂಟಿ ಕಾರ್ಯದರ್ಶಿಗಳಾಗಿ ನಾಗಲಕ್ಷ್ಮೀ, ಎಂ.ಅನಂತು ಶಾಂದ್ರೇಯ ಅವರು ಆಯ್ಕೆ ಆಗಿದ್ದಾರೆ. ಸದಸ್ಯರನ್ನಾಗಿ ಸಿ.ಕೆ.ಗುಂಡಣ್ಣ, ಜೆ.ಸಿ.ಶಶಿಧರ್, ಕಾವ್ಯ ಅಚ್ಯುತ್, ಪ್ರಣವ್ ವಿ., ಕಿಶನ್, ಎಂ.ವಿ.ಸುರೇಶ್, ದಿಲೀಪ್, ರವೀಂದ್ರನಾಥ ಸಿರಿವರ, ಡಾ.ರವಿಕುಮಾರ್ ಬಾಗಿ ಅವರನ್ನು ಗುರುವಾರ ನಗರದಲ್ಲಿ ನಡೆದ ಸರ್ವ ಸದಸ್ಯರ ಸಭೆಯಲ್ಲಿ ಆಯ್ಕೆ ಮಾಡಲಾಯಿತು ಎಂದು ಪ್ರಕಟನೆ ತಿಳಿಸಿದೆ.
ಜಿಲ್ಲಾಸ್ಪತ್ರೆಯಲ್ಲಿ ಖಾಲಿಯಿರುವ ಹುದ್ದೆಗಳು ಶೀಘ್ರದಲ್ಲೇ ಭರ್ತಿ: ದಿನೇಶ್ ಗುಂಡೂರಾವ್
ರಾಮನಗರ : ಜಿಲ್ಲಾಸ್ಪತ್ರೆಯಲ್ಲಿ ಖಾಲಿಯಿರುವ ವೈದ್ಯರು ಮತ್ತು ಅಗತ್ಯ ಸಿಬ್ಬಂದಿಗಳನ್ನು ಶೀಘ್ರದಲ್ಲಿ ಭರ್ತಿ ಮಾಡಲು ಕ್ರಮ ವಹಿಸಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು. ಗುರುವಾರ ರಾಮನಗರ ಜಿಲ್ಲಾ ಆಸ್ಪತ್ರೆಯಲ್ಲಿ ನಡೆದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲಾಸ್ಪತ್ರೆಯಲ್ಲಿ ವೈದ್ಯರು, ನರ್ಸ್ಗಳು, ಪ್ರಯೋಗಾಲಯ ಸಿಬ್ಬಂದಿಗಳು, ತಂತ್ರಜ್ಞರು ಹಾಗೂ ಗ್ರೂಪ್ ‘ಡಿ’ ನೌಕರರನ್ನು ಭರ್ತಿ ಮಾಡಲು ಕ್ರಮವಹಿಸಲಾಗಿದೆ ಎಂದು ತಿಳಿಸಿದರು. ಜಿಲ್ಲಾಸ್ಪತ್ರೆಯಲ್ಲಿ ಕೆಲವು ಪರೀಕ್ಷೆಗಳನ್ನು ಹೊರಗಡೆ ಮಾಡಿಸಿಕೊಂಡು ಬರಲು ಚೀಟಿ ನೀಡುತ್ತಿರುವುದಾಗಿ ದೂರುಗಳು ಬಂದಿದ್ದು, ಜಿಲ್ಲಾಸ್ಪತ್ರೆಯಲ್ಲಿ ದೊರಕುವ ಸೌಲಭ್ಯಗಳಿಗೆ ಹೊರಗಡೆ ಪರೀಕ್ಷೆ ಮಾಡಿಸಿಕೊಂಡು ಬರಲು ಸೂಚಿಸಬಾರದು ಎಂದು ಅವರು ಹೇಳಿದರು. ಆಸ್ಪತ್ರೆಗೆ ಅಗತ್ಯವಿರುವ ಹೊಸ ಯಂತ್ರೋಪಕರಣಗಳನ್ನು ತುರ್ತಾಗಿ ಪೂರೈಸಲಾಗುವುದು ಹಾಗೂ ಆಸ್ಪತ್ರೆಯಲ್ಲಿ ಲಭ್ಯವಿರುವ ಯಂತ್ರೋಪಕರಣಗಳ ನಿರ್ವಹಣೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸಬೇಕು ಹಾಗೂ ವಾರ್ಷಿಕ ನಿರ್ವಹಣೆಯನ್ನು ಅರ್ಹ ಯಂತ್ರೋಪಕರಣಗಳ ನಿರ್ವಾಹಕರಿಂದ ಮಾಡಿಸುವಂತೆ ದಿನೇಶ್ ಗುಂಡೂರಾವ್ ಸೂಚಿಸಿದರು. ತಾಲೂಕು ಆಸ್ಪತ್ರೆಯು ತುಂಬಾ ಹಳೆಯದಾಗಿದ್ದು ಅದನ್ನು ದುರಸ್ತಿ ಮಾಡಿಸಲು ಸಾಧ್ಯವಿಲ್ಲ. ಆದುದರಿಂದ ಹೊಸ ಆಸ್ಪತ್ರೆಯನ್ನು ನಿರ್ಮಿಸಲು ಕ್ರಮ ವಹಿಸಲಾಗುವುದು. ಜಿಲ್ಲಾಸ್ಪತ್ರೆಯಲ್ಲಿ ಹೆಚ್ಚುವರಿಯಾಗಿ ವೈದ್ಯರು, ನರ್ಸ್ಗಳು, ಪ್ರಯೋಗಾಲಯ ಸಿಬ್ಬಂದಿಗಳು, ತಂತ್ರಜ್ಞರು ಹಾಗೂ ಗ್ರೂಪ್ ‘ಡಿ’ ನೌಕರರನ್ನು ನೇಮಿಸಿಕೊಳ್ಳಲು ಪ್ರಸ್ತಾವನೆಯನ್ನು ಸಲ್ಲಿಸುವಂತೆ ಅವರು ತಿಳಿಸಿದರು. ಆಸ್ಪತ್ರೆಯ ವಿವಿಧ ವಿಭಾಗಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಇದೇ ಸಂದರ್ಭದಲ್ಲಿ ಸ್ತನ ಕ್ಯಾನ್ಸರ್ ಪತ್ತೆಹಚ್ಚುವ ಯಂತ್ರ ಮ್ಯಾಮೋಗ್ರಫಿಯನ್ನು ಉದ್ಪಾಟಿಸಿ, ಇದರ ಸದುಪಯೋಗ ಪಡೆದುಕೊಳ್ಳಬೇಕು. ಹಾಗೂ ಆಸ್ಪತ್ರೆಯ ಸೌಲಭ್ಯಗಳ ಕುರಿತು ಹೊರ ರೋಗಿಗಳೊಂದಿಗೆ ವಿಚಾರಣೆ ನಡೆಸಿದರು. ಜಿಲ್ಲಾಸ್ಪತ್ರೆಯ ಆವರಣದಲ್ಲಿ 50 ಹಾಸಿಗೆಗಳ ಸಾಮರ್ಥ್ಯದ ಕ್ರಿಟಿಕಲ್ ಕೇರ್ ಯೂನಿಟ್ ಕಟ್ಟಡ ನಿರ್ಮಾಣ ಕಾಮಗಾರಿಯನ್ನು ಪರಿಶೀಲಿಸಿದ ದಿನೇಶ್ ಗುಂಡೂರಾವ್, ಪ್ರಸ್ತುತ ಆಸ್ಪತ್ರೆಯಲ್ಲಿ 8 ಐ.ಸಿ.ಯು., 7 ಡಯಾಲಿಸಿಸ್ ಯಂತ್ರಗಳು ಕಾರ್ಯನಿರ್ವಹಿಸುತ್ತಿದ್ದು, ಇದನ್ನು ಹೆಚ್ಚು ಮಾಡಲು ಕ್ರಮವಹಿಸುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಿಗೆ ಸೂಚಿಸಿದರು.
ಬೆಂಗಳೂರು ವಿಮಾನ ನಿಲ್ದಾಣಕ್ಕೆ ‘ಎಸಿಐ’ನಿಂದ ಪ್ರತಿಷ್ಠಿತ ಮಾನ್ಯತೆ
ಬೆಂಗಳೂರು : ಅಂತ್ರಾಷ್ಟ್ರೀಯ ವಿಮಾನ ನಿಲ್ದಾಣಗಳ ಮಂಡಳಿ(ಎಸಿಐ) ಕೊಡಮಾಡುವ ‘ಪ್ರವೇಶ ವರ್ಧಕ ಮಾನ್ಯತೆ’ (ಎಇಎ) ಕಾರ್ಯಕ್ರಮದ ಅಡಿಯಲ್ಲಿ 1ನೇ ಹಂತದ ಮಾನ್ಯತೆ ಪಡೆದ ದೇಶದ ಮೊದಲ ವಿಮಾನ ನಿಲ್ದಾಣ ಎಂಬ ಹೆಗ್ಗಳಿಕೆಗೆ ಬೆಂಗಳೂರಿನ ಕೆಂಪೇಗೌಡ ಅಂತರ್ರಾಷ್ಟ್ರೀಯ ವಿಮಾನ ನಿಲ್ದಾಣ ಪಾತ್ರವಾಗಿದೆ. ಬೆಂಗಳೂರು ವಿಮಾನ ನಿಲ್ದಾಣದಲ್ಲಿ ವಿಶೇಷ ಚೇತನರು ಹಾಗೂ ಹಿರಿಯ ನಾಗರಿಕರು ಸುಲಲಿತವಾಗಿ ಸಂಚರಿಸಲು ಹಾಗೂ ಇತರ ಸೌಲಭ್ಯಗಳನ್ನು ಸರಳವಾಗಿ ಬಳಸಿಕೊಳ್ಳಲು ಸೂಕ್ತ ವ್ಯವಸ್ಥೆ ನಿರ್ಮಿಸಲಾಗಿದೆ. ವಿಶೇಷ ಚೇತನರು ಹಾಗೂ ಹಿರಿಯ ನಾಗರಿಕ ಪ್ರಯಾಣಿಕರ ಅಗತ್ಯತೆಗಳನ್ನು ಪೂರೈಸುವ ಉದ್ದೇಶದಿಂದ ವಿಮಾನ ನಿಲ್ದಾಣದಲ್ಲಿ ಅಗತ್ಯ ಸೌಕರ್ಯ ಒದಗಿಸುವ ಎಇಎ ಕಾರ್ಯಕ್ರಮವನ್ನು ಜಾರಿಗೊಳಿಸಲಾಗಿದೆ. ಇದು ಕೆಂಪೇಗೌಡ ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಎಇಎ ಮಾನ್ಯತೆ ಪಡೆಯಲು ಕಾರಣವಾಗಿದೆ. ಎಇಎ ಮಾನ್ಯತೆಯು ಜಾಗತಿಕ ಬೇಡಿಕೆಗೆ ಅನುಗುಣವಾಗಿ ಸಾರ್ವತ್ರಿಕ ವಿನ್ಯಾಸ, ಲಭ್ಯವಿರುವ ಸೌಲಭ್ಯಗಳ ಮೌಲ್ಯಮಾಪನ, ಸುಧಾರಣೆಗಳನ್ನು ಕಾರ್ಯಗತಗೊಳಿಸುವುದು ಮತ್ತು ಅಂತರ್ ರಾಷ್ಟ್ರೀಯ ಗುಣಮಟ್ಟವನ್ನು ವಿಮಾನ ನಿಲ್ದಾಣದಲ್ಲಿ ರೂಢಿಗತಗೊಳಿಸಿಕೊಳ್ಳಲು ಅನುವು ಮಾಡಿಕೊಡುತ್ತದೆ. ಮೂರು ಪ್ರಗತಿಶೀಲ ಹಂತಗಳನ್ನು ಒಳಗೊಂಡಿರುವ ‘ಪ್ರವೇಶ ವರ್ಧಕ ಮಾನ್ಯತೆ’ ಕಾರ್ಯಕ್ರಮವು ವಿಮಾನ ನಿಲ್ದಾಣಗಳ ಕಾರ್ಯತಂತ್ರ, ನೀತಿ ನಿಯಮಗಳು ಮತ್ತು ಅವುಗಳಿಂದ ದೊರೆಯುವ ಫಲಿತಾಂಶಗಳನ್ನು ಮೌಲ್ಯಮಾಪನ ಮಾಡುತ್ತದೆ. ಪ್ರಯಾಣಿಕರು, ಸಂದರ್ಶಕರು ಮತ್ತು ಸಿಬ್ಬಂದಿ ಸೇರಿದಂತೆ ವಿಮಾನ ನಿಲ್ದಾಣದ ಎಲ್ಲ ಬಳಕೆದಾರರ ಪ್ರಯಾಣ ಅನುಭವದ ಅಭಿಪ್ರಾಯವನ್ನು ಆಧರಿಸಿ ಈ ಮಾನ್ಯತೆಯನ್ನು ನೀಡಲಾಗುತ್ತದೆ. ಬೆಂಗಳೂರು ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸತ್ಯಕಿ ರಘುನಾಥ್ ಈ ಕುರಿತು ಮಾತನಾಡಿ, ‘ಎಸಿಐನಿಂದ ಪ್ರವೇಶ ವರ್ಧಕ ಮಾನ್ಯತೆ ದೊರೆತಿರುವುದು ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಪ್ರತಿಯೊಬ್ಬರಿಗೂ ಸೂಕ್ತ ಸೌಲಭ್ಯ ಒದಗಿಸಲಾಗುತ್ತದೆ ಎಂಬುದನ್ನು ಪ್ರತಿಬಿಂಬಿಸುತ್ತದೆ ಎಂದು ತಿಳಿಸಿದರು. ಎಲ್ಲ ಟರ್ಮಿನಲ್ಗಳಲ್ಲಿ ನಮ್ಮ ಸಿಬ್ಬಂದಿಯನ್ನು ಸಬಲೀಕರಣಗೊಳಿಸಲು ಮತ್ತು ವಿಮಾನ ನಿಲ್ದಾಣದಲ್ಲಿನ ಇತರ ಸಂಸ್ಥೆಗಳ ಜೊತೆ ನಿರಂತರ ಸಹಯೋಗ ಸಾಧಿಸಲು ಕಳೆದ ಕೆಲವು ವರ್ಷಗಳಿಂದ ಹಲವಾರು ಉಪಕ್ರಮಗಳನ್ನು ಪರಿಚಯಿಸಿದ್ದೇವೆ. ವಿಮಾನ ನಿಲ್ದಾಣಕ್ಕೆ ಪ್ರತಿಯೊಬ್ಬರನ್ನೂ ಆತ್ಮೀಯವಾಗಿ ಸತ್ಕರಿಸುವ ನಮ್ಮ ಪ್ರಯತ್ನ ನಿರಂತರವಾಗಿ ಮುಂದುವರೆಯಲಿದೆ ಎಂದು ಅವರು ಸಂತಸ ವ್ಯಕ್ತಪಡಿಸಿದರು. ಇದೀಗ ಬೆಂಗಳೂರು ವಿಮಾನ ನಿಲ್ದಾಣ ಪಡೆದಿರುವ ಈ ಮಾನ್ಯತೆಯು ನಮ್ಮ ಇತರ ಕಾರ್ಯಕ್ರಮಗಳಾದ ‘ಬಿ-ಇನ್ಕ್ಲೂಡೆಡ್ ಮತ್ತು ‘ಸಹಾಯಕ ಸಾಧನ ನೀತಿ’ಗಳ ಮೂಲಕ ಮತ್ತಷ್ಟು ಬಲಗೊಳ್ಳಲಿದೆ. ಇದು ವೈವಿಧ್ಯಮಯ, ಎಲ್ಲರಿಗೂ ಸಮಾನ ಮತ್ತು ಎಲ್ಲರನ್ನೂ ಒಳಗೊಂಡ ಸಂಸ್ಥೆಯನ್ನು ರಚಿಸುವ ಮತ್ತು ಉಳಿಸಿಕೊಳ್ಳುವ ಗುರಿಯನ್ನು ಹೊಂದಿದೆ. ಬೆಂಗಳೂರು ವಿಮಾನ ನಿಲ್ದಾಣವು 2022 ರಲ್ಲಿ ಸನ್ಫ್ಲಾವರ್ ಲ್ಯಾನ್ಯಾರ್ಡ್ ಯೋಜನೆಯನ್ನು ಪರಿಚಯಿಸಿದ್ದು, ಇದು ಗೋಚರಿಸದ ಅಂಗವೈಕಲ್ಯ ಹೊಂದಿರುವವರಿಗೆ ಅಗತ್ಯ ಸೌಲಭ್ಯ ನೀಡುವ ಉದ್ದೇಶವನ್ನು ಹೊಂದಿದೆ ಎಂದು ಅವರು ತಿಳಿಸಿದರು. ಈ ಪ್ರಯತ್ನಗಳು ಸಂಚಾರ ಸಮಸ್ಯೆ ಮತ್ತು ದಿವ್ಯಾಂಗ ಹೊಂದಿರುವ ವ್ಯಕ್ತಿಗಳಿಗೆ ಅಗತ್ಯವಿರುವ ಸೌಲಭ್ಯಗಳನ್ನು ಪ್ರಯಾಣದುದ್ದಕ್ಕೂ ಒದಗಿಸುವುದಾಗಿದೆ. ಜೊತೆಗೆ, ಬೆಂಗಳೂರು ವಿಮಾನ ನಿಲ್ದಾಣವು ವಿಮಾನಯಾನ ಕ್ಷೇತ್ರದಲ್ಲಿ ಸಂಚಾರ ಸಮಸ್ಯೆ ಮತ್ತು ದಿವ್ಯಾಂಗತೆ ಹೊಂದಿರುವ ವ್ಯಕ್ತಿಗಳ ಅನುಭವದ ಮಾನದಂಡವನ್ನು ಹೊಸ ಎತ್ತರಕ್ಕೆ ಏರಿಸುವ ಗುರಿಯನ್ನು ಹೊಂದಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜ.24: ಮೇಯರ್ ಫೋನ್ ಇನ್ ಕಾರ್ಯಕ್ರಮ
ಮಂಗಳೂರು,ಜ.23: ಮಂಗಳೂರು ಮಹಾನಗರಪಾಲಿಕೆಯಲ್ಲಿ ನೇರ ಫೋನ್ ಇನ್ ಕಾರ್ಯಕ್ರಮವು ಜ.24ರ ಪೂ.11ರಿಂದ ಮಧ್ಯಾಹ್ನ 12ರವರೆಗೆ ನಡೆಯಲಿದೆ. ಸಾರ್ವಜನಿಕರು ನೇರ ಫೋನ್ ಇನ್ ಕಾರ್ಯಕ್ರಮದಲ್ಲಿ ಮಾತನಾಡಲು ದೂ.ಸಂ:0824-2220301/0824-2220318ನ್ನು ಸಂಪರ್ಕಿಸುವಂತೆ ಪಾಲಿಕೆ ಪರಿಷತ್ತು ಕಾರ್ಯದರ್ಶಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಬಾಂಗ್ಲಾಕ್ಕೆ ಭೇಟಿ ನೀಡಿದ ಪಾಕ್ ಐಎಸ್ಐ ಮುಖ್ಯಸ್ಥ
ಇಸ್ಲಮಾಬಾದ್ : ಪಾಕಿಸ್ತಾನದ ಗುಪ್ತಚರ ಏಜೆನ್ಸಿ ಐಎಸ್ಐ ಮುಖ್ಯಸ್ಥ ಲೆ|ಜ| ಆಸಿಮ್ ಮಲಿಕ್ ಮಂಗಳವಾರ ಬಾಂಗ್ಲಾದೇಶದ ಢಾಕಾಕ್ಕೆ ಭೇಟಿ ನೀಡಿದ್ದಾರೆ ಎಂದು `ದಿ ಇಕನಾಮಿಕ್ ಟೈಮ್ಸ್' ವರದಿ ಮಾಡಿದೆ. ಎರಡು ದೇಶಗಳ ನಡುವಿನ ಗುಪ್ತಚರ ಏಜೆನ್ಸಿಗಳ ನಡುವೆ ಮಾಹಿತಿ ಹಂಚಿಕೆ ನೆಟ್ವರ್ಕ್ ಸೃಷ್ಟಿಸುವ ಉದ್ದೇಶದಿಂದ ಮಲಿಕ್ ಅವರ ಭೇಟಿಯನ್ನು ಯೋಜಿಸಲಾಗಿದೆ. ಢಾಕಾದಲ್ಲಿ ಮಲಿಕ್ರನ್ನು ಬಾಂಗ್ಲಾದೇಶ ಸೇನೆಯ ಉನ್ನತ ಅಧಿಕಾರಿ ಲೆ|ಜ| ಮುಹಮ್ಮದ್ ಫೈಝರ್ ರಹ್ಮಾನ್ ಸ್ವಾಗತಿಸಿದರು. ಇಬ್ಬರು ಜನರಲ್ಗಳು ಬಲವಾದ ರಕ್ಷಣಾ ಸಂಬಂಧಗಳ ಅಗತ್ಯವನ್ನು ಒತ್ತಿಹೇಳಿದರು. ಬಾಂಗ್ಲಾ ಮತ್ತು ಪಾಕಿಸ್ತಾನಗಳ ನಡುವಿನ ನಿರಂತರ ಪಾಲುದಾರಿಕೆಯು `ಬಾಹ್ಯ ಪ್ರಭಾವಗಳ' ವಿರುದ್ಧ ಚೇತರಿಸಿಕೊಳ್ಳಬೇಕೆಂದು ಪ್ರತಿಪಾದಿಸಿದರು ಎಂದು ವರದಿ ಹೇಳಿದೆ.
ಜ.25-26: ದ.ಕ.ಜಿಲ್ಲಾ ಉಸ್ತುವಾರಿ ಸಚಿವರ ಪ್ರವಾಸ
ಮಂಗಳೂರು: ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಜ.25 ಮತ್ತು 26ರಂದು ಜಿಲ್ಲಾ ಪ್ರವಾಸ ಕೈಗೊಳ್ಳಲಿದ್ದಾರೆ. ಜ.25ರಂದು ರಾತ್ರಿ 9:50ಕ್ಕೆ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದಾರೆ. ಜ.26ರಂದು ಬೆಳಗ್ಗೆ 9ಕ್ಕೆ ನಗರದ ನೆಹರೂ ಮೈದಾನದಲ್ಲಿ ನಡೆಯುವ ಜಿಲ್ಲಾ ಮಟ್ಟದ ಗಣರಾಜ್ಯೋತ್ಸವ ದಿನಾಚರಣೆಯ ಧ್ವಜಾರೋಹಣ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ವೀಕ್ಷಣೆ, 10ಕ್ಕೆ ನೆಹರೂ ಮೈದಾನದಲ್ಲಿ ವಿಂಟೇಜ್ ಕ್ಲಾಸಿಕ್ ಕಾರ್ ಮತ್ತು ಬೈಕ್ ಕಾರ್ನಿವಲ್ 2025 ಕಾರ್ಯಕ್ರಮಕ್ಕೆ ಚಾಲನೆ, 10:30ಕ್ಕೆ ಮಂಗಳೂರು ಲೈಟ್ ಹೌಸ್ಹಿಲ್ನಲ್ಲಿ ಮಹಾತ್ಮ ಗಾಂಧಿ ಶಾಂತಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು. ಪೂ.11:45ಕ್ಕೆ ಗುರುಪುರ ನಾಡಕಚೇರಿ ಉದ್ಘಾಟನೆ, ಸಂಜೆ 4ಕ್ಕೆ ಮಂಗಳೂರು ಪುರಭವನ ಮುಂಭಾಗದ ರಾಜಾಜಿ ಪಾರ್ಕ್ನಲ್ಲಿ ನಡೆಯುವ ಎಸ್ಕೆಎಸೆಸ್ಸೆಫ್ ಮಾನವ ಸರಪಳಿ ಕಾರ್ಯಕ್ರಮ, ಸಂಜೆ 4:30ಕ್ಕೆ ಅಂಬ್ಲಮೊಗರು ಸ.ಹಿ.ಪ್ರಾ ಶಾಲಾ ಶತಮಾನೋತ್ಸವ ಸಂಭ್ರಮ, ಶಾಲಾ ಶತಮಾನೋತ್ಸವ ಸ್ಮಾರಕ ಭವನ ಶಿಲಾನ್ಯಾಸ ಕಾರ್ಯಕ್ರಮ, 5:15ಕ್ಕೆ ಪೆರ್ಮನ್ನೂರು ಬಬ್ಬುಕಟ್ಟೆ, ದ.ಕ.ಜಿಪಂ ಹಿ. ಪ್ರಾ.ಶಾಲೆಯ ಸುವರ್ಣ ಮಹೋತ್ಸವ ಸಂಭ್ರಮದಲ್ಲಿ ಪಾಲ್ಗೊಳ್ಳುವರು. ಸಂಜೆ 6:40ಕ್ಕೆ ಮಂಗಳೂರು ವಿಮಾನ ನಿಲ್ದಾಣದಿಂದ ಬೆಂಗಳೂರಿಗೆ ಪ್ರಯಾಣಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದ್ದಾರೆ.
ಉಡುಪಿ ಜಿಲ್ಲಾ ಅಥ್ಲೆಟಿಕ್ ಅಸೋಸಿಯೇಶನ್ ಕಚೇರಿ ಉದ್ಘಾಟನೆ
ಉಡುಪಿ, ಜ.23: ಉಡುಪಿ ಜಿಲ್ಲಾ ಅಥ್ಲೆಟಿಕ್ ಅಸೋಸಿಯೇಶನ್ ಇದರ ಅಧಿಕೃತ ಜಿಲ್ಲಾ ಕಚೇರಿಯನ್ನು ರಾಜ್ಯ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅಜ್ಜರಕಾಡು ಜಿಲ್ಲಾ ಕ್ರೀಡಾಂಗಣದಲ್ಲಿ ಗುರುವಾರ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾಜಿ ಸಚಿವರಾದ ವಿನಯ ಕುಮಾರ್ ಸೊರಕೆ, ಅಭಯಚಂದ್ರ ಜೈನ್, ಉಡುಪಿ ಜಿಲ್ಲಾಧಿಕಾರಿ ಡಾ.ವಿದ್ಯಾ ಕುಮಾರಿ, ಯುವಜನ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ರೋಶನ್ ಕುಮಾರ್ ಶೆಟ್ಟಿ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಉದಯ ಕುಮಾರ್ ಶೆಟ್ಟಿ ಮುನಿಯಾಲು ಮೊದಲಾದವರು ಉಪಸ್ಥಿತರಿದ್ದರು.
ಯೆಮನ್ನ ಹೌದಿಗಳನ್ನು ವಿದೇಶಿ ಭಯೋತ್ಪಾದಕ ಗುಂಪು ಎಂದು ನಿಯೋಜಿಸಿದ ಟ್ರಂಪ್
ವಾಷಿಂಗ್ಟನ್ : ಯೆಮನ್ನ ಹೌದಿ ಗುಂಪನ್ನು ವಿದೇಶಿ ಭಯೋತ್ಪಾದಕ ಸಂಘಟನೆಯೆಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮರು ನಿಯೋಜಿಸಿದ್ದಾರೆ ಎಂದು ಶ್ವೇತಭವನ ಹೇಳಿದೆ. ಈ ಕ್ರಮವು ಕೆಂಪು ಸಮುದ್ರದಲ್ಲಿ ವಾಣಿಜ್ಯ ನೌಕೆಗಳ ಮೇಲೆ ಹಾಗೂ ನಿರ್ಣಾಯಕ ಕಡಲ ಮಾರ್ಗವನ್ನು ರಕ್ಷಿಸುವ ಅಮೆರಿಕದ ಸಮರನೌಕೆಗಳ ಮೇಲಿನ ದಾಳಿಗಾಗಿ ಹೌದಿ ಸಂಘಟನೆಗೆ ಕಠಿಣ ಆರ್ಥಿಕ ದಿಗ್ಬಂಧನವನ್ನು ವಿಧಿಸಲಿದೆ.
ಜನರ ರಕ್ತ ಹೀರುತ್ತಿರುವ ಮೈಕ್ರೋ ಫೈನಾನ್ಸ್ ಹಾವಳಿಯನ್ನು ನಿರ್ದಯವಾಗಿ ಹತ್ತಿಕ್ಕಿ : ಕುಮಾರಸ್ವಾಮಿ ಆಗ್ರಹ
ಬೆಂಗಳೂರು: ರಾಜ್ಯದಲ್ಲಿ ಬಡ, ಮಧ್ಯಮ ವರ್ಗದ ಜನರ ರಕ್ತ ಹಿಂಡುತ್ತಿರುವ ಮೈಕ್ರೋ ಫೈನಾನ್ಸ್ ಗಳ ಹಾವಳಿಯನ್ನು ನಿರ್ದಯವಾಗಿ ಹತ್ತಿಕ್ಕಬೇಕು ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ರಾಜ್ಯ ಸರಕಾರವನ್ನು ಒತ್ತಾಯ ಮಾಡಿದರು. ನಗರದಲ್ಲಿ ಈ ಬಗ್ಗೆ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಇದನ್ನು ಅಧಿಕಾರಿಗಳು ಅಥವಾ ಜಿಲ್ಲಾಧಿಕಾರಿ ಮಾಡಲು ಸಾಧ್ಯವಿಲ್ಲ. ಸರಕಾರವೇ ಕಠಿಣ ನಿರ್ಧಾರಗಳನ್ನು ಕೈಗೊಳ್ಳಬೇಕು ಎಂದು ಆಗ್ರಹಿಸಿದರು. 2018ರಲ್ಲಿ ಮುಖ್ಯಮಂತ್ರಿ ಆಗಿದ್ದಾಗ ಇಂಥ ಕಿಡಿಗೇಡಿ ಫೈನಾನ್ಸ್ ಗಳಿಂದ ಜನರನ್ನು ರಕ್ಷಣೆ ಮಾಡಬೇಕು ಎಂದು ಋಣಮುಕ್ತ ಕಾಯ್ದೆ ಜಾರಿಗೆ ತಂದೆ. ನನ್ನ ಸರಕಾರ ಹೋಯಿತು, ಆ ಕಾಯ್ದೆಯನ್ನು ಕಸದ ಬುಟ್ಟಿಗೆ ಹಾಕಿದರು ಎಂದು ಅವರು ಬೇಸರ ವ್ಯಕ್ತಪಡಿಸಿದರು. ಅಷ್ಟೇ ಅಲ್ಲ, ಜನರು ಪಡೆದ ಸಾಲವನ್ನು ತೀರಿಸಲಾಗದ ಪರಿಸ್ಥಿತಿ ಸೃಷ್ಟಿಯಾದರೆ ಅದಕ್ಕೆ ಪರಿಹಾರೋಪಾಯ ಏನು? ಎಂಬ ಬಗ್ಗೆ ನಾನು ಆಗ ಆಲೋಚನೆ ಮಾಡಿದ್ದೆ. ಆ ಸಂದರ್ಭದಲ್ಲಿ ಕೇರಳ ಸರಕಾರ ಈ ಸಮಸ್ಯೆ ಬಗೆಹರಿಸಲು ಒಂದು ಆಯೋಗವನ್ನು ರಚನೆ ಮಾಡಿತ್ತು. ಆ ಮಾಹಿತಿ ನನಗಿತ್ತು. ಕೇರಳಕ್ಕೆ ತೆರಳಿ ಖುದ್ದು ಆ ಬಗ್ಗೆ ಅಧ್ಯಯನ ಮಾಡುವ ಉದ್ದೇಶದಿಂದ ನಾನು ಅಂದಿನ ನನ್ನ ಸಂಪುಟದಲ್ಲಿ ಸಹಕಾರ ಸಚಿವರಾಗಿದ್ದ ಬಂಡೆಪ್ಪ ಕಾಶೆಂಪೂರ್ ನೇತೃತ್ವದ ನಿಯೋಗವನ್ನು ಕೇರಳಕ್ಕೆ ಕಳಿಸಿದ್ದೆ. ಅದನ್ನು ಆಧಾರವಾಗಿ ಇಟ್ಟುಕೊಂಡು ನಾನು ಇಲ್ಲಿ ಋಣಮುಕ್ತ ಕಾಯ್ದೆಯನ್ನು ಜಾರಿಗೆ ತಂದೆ. ಆಮೇಲೆ ಅದು ಏನಾಯಿತು? ಎಂದು ಅವರು ಪ್ರಶ್ನಿಸಿದರು. ನನ್ನ ಸರಕಾರ ಹೋದ ನಂತರ ಬಂದ ಸರಕಾರಗಳು ಈ ಕಾಯ್ದೆಯ ಮಹತ್ವವನ್ನೇ ಅರಿತುಕೊಳ್ಳಲಿಲ್ಲ. ಅದರ ಪರಿಣಾಮವೇ ಮೈಕ್ರೋ ಫೈನಾನ್ಸ್ ಗಳ ಉಪಟಳ ಜಾಸ್ತಿ ಆಗಿರುವುದು. ಖಾಸಗಿ ಹಣಕಾಸು ಸಂಸ್ಥೆಗಳು ಯಾವುದೇ ಪರವಾನಗಿ ಅಥವಾ ಅನುಮತಿಯನ್ನೇ ಪಡೆಯದೇ ಕಾನೂನುಬಾಹಿರವಾಗಿ ಈ ರೀತಿ ಹೆಚ್ಚಿನ ಬಡ್ಡಿಗೆ ಸಾಲ ನೀಡಿ ಜನರಿಗೆ ಕಿರುಕುಳ ನೀಡುತ್ತಿವೆ. ಇದನ್ನು ತಾಳಲಾರದೆ ಜನರು ಆತ್ಮಹತ್ಯೆ ಮಾಡಿಕೊಳ್ಳುವ, ಊರನ್ನೇ ಖಾಲಿ ಮಾಡಿ ಹೋಗುವ ದುಸ್ಥಿತಿ ಸೃಷ್ಟಿಯಾಗಿದೆ ಎಂದು ಸಚಿವರು ಕಳವಳ ವ್ಯಕ್ತಪಡಿಸಿದರು. ಚಾಮರಾಜನಗರ ಜಿಲ್ಲೆಯಲ್ಲಿ ಜನರು ಹಳ್ಳಿಗಳನ್ನು ಬಿಟ್ಟಿದ್ದರು. ಮನೆಗಳಿಗೆ ಬೀಗ ಹಾಕಿ ಸಾಲಗಾರರಿಂದ ತಪ್ಪಿಸಿಕೊಂಡರೆ ಸಾಕು ಎನ್ನುವ ಭೀತಿಗೆ ಸಿಲುಕಿದ್ದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪದೇಪದೆ ಹೇಳುತ್ತಾರೆ, ನಾನು ಇಪ್ಪತ್ತು ಸಲವೋ ಮೂವತ್ತು ಸಲವೋ ಚಾಮರಾಜನಗರಕ್ಕೆ ಭೇಟಿ ನೀಡಿದ್ದೇನೆ. ನನ್ನ ಅಧಿಕಾರ ಹೋಗಿಲ್ಲ, ಗಟ್ಟಿಯಾಗಿದ್ದೇನೆ ಎಂದು ಹೇಳುತ್ತಾರೆ. ಅವರೇನೋ ಗಟ್ಟಿಯಾಗಿದ್ದಾರೆ. ಆದರೆ, ನಿಮ್ಮನ್ನು ಮುಖ್ಯಮಂತ್ರಿ ಜಾಗದಲ್ಲಿ ಕೂರಿಸಿರುವ ಆ ಜನ ಏನಾಗಿದ್ದಾರೆ? ಅವರನ್ನು ಗಟ್ಟಿ ಮಾಡಲಿಕ್ಕೆ ಏನು ಮಾಡಿದ್ದೀರಿ? ಅದು ನನ್ನ ಪ್ರಶ್ನೆ ಎಂದು ಕೇಂದ್ರ ಸಚಿವರು ಆಕ್ರೋಶ ವ್ಯಕ್ತಪಡಿಸಿದರು. ರಾಜ್ಯದಲ್ಲಿ ಆಡಳಿತ ವ್ಯವಸ್ಥೆ ಸಂಪೂರ್ಣವಾಗಿ ಕುಸಿದಿದೆ. ಹಾಡಹಗಲೇ ಬ್ಯಾಂಕ್ ಗಳಿಗೆ ನುಗ್ಗಿ ಲೂಟಿ ಮಾಡಲಾಗುತ್ತಿದೆ. ಎಟಿಎಂ ಗಳಿಗೆ ಹಣ ತುಂಬುವ ಸಿಬ್ಬಂದಿಯನ್ನು ಗುಂಡಿಟ್ಟು ಕೊಂದು ಹಗಲಲ್ಲೇ ಹಣ ದೋಚಿ ನೆರೆ ರಾಜ್ಯಕ್ಕೆ ಪರಾರಿ ಆಗುವುದು ಹೀಗೆ, ಅಪರಾಧ ಚಟುವಟಿಕೆಗಳು ರಾಜಾರೋಷವಾಗಿ ನಡೆಯುತ್ತಿವೆ. ರಾಜ್ಯದಲ್ಲಿ ಇಷ್ಟೆಲ್ಲಾ ನಡೆಯುತ್ತಿದ್ದರೂ ನನಗೇನು ಸಂಬಂಧ ಇಲ್ಲವೆಂದು ಗೃಹ ಸಚಿವರು ಹೇಳಿದರೆ ಅರ್ಥವೇನು? ಎಂದು ಕುಮಾರಸ್ವಾಮಿ ಅವರು ಆಕ್ರೋಶ ವ್ಯಕ್ತಪಡಿಸಿದರು.
ಬ್ರಿಟಿಷರ ಪಾಲಿಗೆ 'ನೇತಾಜಿ' ಸಿಂಹ ಸ್ವಪ್ನವಾಗಿದ್ದರು: ಮಹೇಶ ರಡ್ಡಿ ಮುದ್ನಾಳ್
ಯಾದಗಿರಿ: ನೇತಾಜಿ ಸುಭಾಷಚಂದ್ರ ಬೋಸ್ ಅವರ ಕ್ರಾಂತಿಕಾರಿ ಬದುಕು ಎಲ್ಲರಿಗೂ ಮಾದರಿ ಎಂದು ಬಿಜೆಪಿ ಯುವ ನಾಯಕ ಮಹೇಶ ರಡ್ಡಿ ಮುದ್ನಾಳ್ ಹೇಳಿದರು. ನಗರದ ಸುಭಾಷ ಸರ್ಕಲ್ ನಲ್ಲಿ ನೇತಾಜಿ ಜಯಂತಿ ನಿಮಿತ್ಯ ಗುರುವಾರ ಬೆಳಗ್ಗೆ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಮಾತನಾಡಿದ ಅವರು, ದೇಶದ ಸ್ವಾತಂತ್ರ್ಯೋತ್ಸದಲ್ಲಿ ನೇತಾಜಿಯವರ ಕೊಡುಗೆ ಅಪಾರವಾಗಿದೆ. ಗಾಂಧಿಜೀಯವರು ಅಹಿಂಸೆ ಮೂಲಕ ಹೋರಾಟ ಮಾಡಿದರೇ ಇವರು ಕ್ರಾಂತಿ ಮೂಲಕ ಸೆಣಸಾಡಿದ ವೀರಪುತ್ರರಾಗಿದ್ದಾರೆಂದರು. ನೀವು ನನಗೆ ರಕ್ತ ಕೊಡಿ, ನಾನು ನಿಮಗೆ ಸ್ವಾತಂತ್ರ್ಯ ಕೊಡಿಸುತ್ತೆನೆ ಎಂಬ ಮಾತು ಆಗ ದೇಶದ ಲಕ್ಷಾಂತರ ಯುವಕರನ್ನು ಬಡಿದೆಬ್ಬಿಸಿತ್ತು. ಬ್ರಿಟಿಷರಿಗೆ ಇವರು ಸಿಂಹಸ್ವಪ್ನವಾಗಿದ್ದರು. ಇವರ ಹೆಸರು ಕೇಳಿದರೇ ಅವರು ನಡುಗಿ ಹೋಗುತ್ತಿದ್ದರು, ಅವರ ಹುಟ್ಟು ಅಡಗಿಸಿದ ಪರಾಕ್ರಮಿಯಾಗಿದ್ದರೆಂದು ಬಣ್ಣಿಸಿದರು. ನಮ್ಮ ತಾತ ಲಿಂ. ವಿಶ್ವನಾಥ ರಡ್ಡಿ ಮುದ್ನಾಳ್ ಅವರು ನೇತಾಜಿಯವರ ಬಹುದೊಡ್ಡ ಅನುಯಾಯಿಯಾಗಿದ್ದರು. ಅಂತೆಯೇ ನಗರದಲ್ಲಿ ಅವರ ಹೆಸರು ಅಮರವಾಗಿಡಲು ಮೂರ್ತಿ ಸ್ಥಾಪನೆ ಮಾಡಿದ್ದಾರೆಂದು ಹೇಳಿದರು. ಇಂದಿನ ಯುವಕರು ಇವರ ಆರ್ದಶಗಳನ್ನು ಪಾಲಿಸಬೇಕೆಂದು ನುಡಿದರು. ಈ ವೇಳೆ ಖಂಡಪ್ಪ ದಾಸನ,ಮುಡ ಮಾಜಿ ಅಧ್ಯಕ್ಷ ರುದ್ರಗೌಡ ಪಾಟೀಲ್,ಎಮ್.ಕೆ ಬಿದನೂರು,ಡಾ.ಶರಣುರಡ್ಡಿ ಕೋಡ್ಲಾ, ನಗರ ಮಂಡಲ ಅಧ್ಯಕ್ಷ ಲಿಂಗಪ್ಪ ಹತ್ತಿಮನಿ,ಬಸವರಾಜ ಮೋಟನಳ್ಳಿ,ರಾಮರೆಡ್ಡಿ ಅಣಿಬಿ ಹೆಡಗಿಮದ್ರಾ, ನಗರಸಭೆ ಸದಸ್ಯ ಸ್ವಾಮಿದೇವ ದಾಸನಕೆರಿ,ಸೋಮನಾಥ್ ಜೈನ್, ರಮೇಶ ರಾಠೋಡ,ನರೇಂದ್ರ ಗಾಂಧಿ, ನಿಜಾಂ ನಾಗರ, ಫಕ್ರುದ್ದೀನ್, ರವಿ ಬಾಪುರೆ,ರಮೇಶ ದೊಡಮನಿ,ಮಲ್ಲಿಕಾರ್ಜುನ ಕಟ್ಟಿಮನಿ, ಲಕ್ಷ್ಮಿ ಪುತ್ರ ಮಾಲಿಪಾಟೀಲ,ಬಾಪು ಗೌಡ ಮುಷ್ಠುರ,ಶರಣಗೌಡ ಅಲಿಪುರ, ಮಂಜುನಾಥ ಜಡಿ,ಅಜೇಯ ಸಿನ್ನೂರ, ಮಹಾದೇವಪ್ಪ ಗಣಪುರ, ಸುರೇಶ್ ರಾಠೋಡ, ಮಲ್ಲು ಸ್ವಾಮಿ ಗುರುಸುಣಗಿ, ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಯಾದಗಿರಿ ನಗರದ ರೆಡ್ಡಿ ಸಾಬ್ ಗೋದಾಮ್ ನ ವೀರನಿಕೇತನ ಕಟ್ಟಡದಲ್ಲಿ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಜನ್ಮದಿನದ ನಿಮಿತ್ತ 'ಪರಾಕ್ರಮ ದಿನ' ಗುರುವಾರ ಆಚರಿಸಲಾಯಿತು. ಬಿಜೆಪಿ ಯುವ ಮುಖಂಡ ಮಹೇಶರಡ್ಡಿ ಗೌಡ ಮುದ್ನಾಳ, ನೇತಾಜಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮುಖಾಂತರ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಹಿರಿಯರಾದ ಗುಂಡೇರಾವ್, ಅಯ್ಯಣ್ಣ ಹುಂಡೇಕಾರ್, ಸಿದ್ದಣಗೌಡ ವಡಗೇರಾ, ಖಂಡಪ್ಪ ದಾಸನ್ ಸೇರಿದಂತೆ ಎಮ್ ಆರ್ ಎಮ್ ಶಾಲೆಯ ಶಿಕ್ಷಕರು,ಮಕ್ಕಳು ಭಾಗವಹಿಸಿದ್ದರು.
ಯಾದಗಿರಿ: ತೊಗರಿ ಖರೀದಿ ಕೇಂದ್ರಗಳನ್ನು ಆರಂಭಿಸಲು ರೈತ ಸಂಘ ಮನವಿ
ಯಾದಗಿರಿ/ ಸುರಪುರ: ತಾಲೂಕಿನಾದ್ಯಂತ ಸರಕಾರ ತೊಗರಿ ಖರೀದಿ ಕೇಂದ್ರಗಳ ಆರಂಭಿಸಲು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ, ಸಾಮೂಹಿಕ ನಾಯಕತ್ವ ಸಂಘಟನೆ ವತಿಯಿಂದ ಸುರಪುರ ನಗರದ ತಹಶೀಲ್ದಾರ್ ಕಚೇರಿ ಬಂದೆ ಪ್ರತಿಭಟನೆ ನಡೆಸಿ ಒತ್ತಾಯಿಸಲಾಗಿದೆ. ಈ ಸಂದರ್ಭದಲ್ಲಿ ಅನೇಕ ಮುಖಂಡರು ಮಾತನಾಡಿ, ಕೃಷಿ ಉತ್ಪನ್ನ ಮಾರುಕಟ್ಟೆಗಳಲ್ಲಿ ಕಡಿಮೆ ಬೆಲೆಯಲ್ಲಿ ತೊಗರಿ ಖರೀದಿ ಮಾಡುತ್ತಿದ್ದು ಇದರಿಂದ ರೈತರಿಗೆ ತುಂಬಾ ನಷ್ಟವಾಗುತ್ತಿದೆ ಆದ್ದರಿಂದ ಸರ್ಕಾರ ಕನಿಷ್ಠ 8 ಸಾವಿರ ರೂಪಾಯಿಗಳಿಗಿಂತ ಹೆಚ್ಚಿನ ಬೆಲೆಗೆ ತೊಗರಿ ಕೇಂದ್ರಗಳನ್ನು ಆರಂಭಿಸಿ ಖರೀದಿಯನ್ನು ಆರಂಭಿಸಬೇಕು, ಇಲ್ಲದಿದ್ದಲ್ಲಿ ಸಂಘಟನೆಯಿಂದ ಸರ್ಕಾರಗಳ ವಿರುದ್ಧ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದ್ದರು. ನಂತರ ಮುಖ್ಯಮಂತ್ರಿ ಹಾಗೂ ಕೃಷಿ ಸಚಿವರಿಗೆ ಬರೆದ ಮನವಿ ತಹಶೀಲ್ದಾರರ ಮೂಲಕ ಸಲ್ಲಿಸಿದರು. ಈ ಸಂದರ್ಭದಲ್ಲಿ ಹೋರಾಟಗಾರರಾದ ಮಲ್ಲಯ್ಯ ಕಮತಗಿ, ಬುಚ್ಚಪ್ಪ ನಾಯಕ, ಸಂಘದ ತಾಲೂಕ ಅಧ್ಯಕ್ಷ ಹಣಮಂತರಾಯ ಮಡಿವಾಳ, ಸಾಹೇಬಗೌಡ ಮದಲಿಂಗನಾಳ, ಲೋಹಿತ್ ಕುಮಾರ್ ಮಂಗಿಹಾಳ, ವೆಂಕಟೇಶ ಕುಪ್ಪಗಲ್, ತಿಪ್ಪಣ್ಣ ಚಂದಲಾಪುರ, ತಿಮ್ಮಯ್ಯ ತಳವಾರ, ಮರೆಪ್ಪ ನಗರಗುಂಡ, ಬುಡೇಸಾಬ್ ಪಿಂಜಾರ, ಬಾಲರಾಜ್ ಅಂಬಿಗೇರ, ತಿರುಪತಿ ಚೌವ್ಹಾಣ್ ಸೇರಿದಂತೆ ಅನೇಕರು ಭಾಗವಹಿಸಿದ್ದರು.
ಜ.30 ಫ್ಯಾಸಿಸ್ಟ್ ವಿರೋಧಿ ಸಮಾವೇಶ: ಆರ್. ಮಾನಸಯ್ಯ
ಲಿಂಗಸುಗೂರು: ಬಿಜೆಪಿ ಬೆಂಬಲಿತ ಆರೆಸ್ಸೆಸ್ ಸಂಘಟನೆಯ 100 ವರ್ಷ ಪೂರ್ಣಗೊಳ್ಳುವ ಭಾಗವಾಗಿ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸಿ ಸಂವಿಧಾನ, ಪ್ರಜಾಪ್ರಭುತ್ವ ವ್ಯವಸ್ಥೆಯ ಬುಡಮೇಲು ಮಾಡಲು ಹೊರಟಿದೆ. ಪ್ರಜಾಪ್ರಭುತ್ವ, ಜಾತ್ಯಾತಿತತೆ ಹಾಗೂ ಗಣತಂತ್ರ ವ್ಯವಸ್ಥೆ ಉಳಿಯುವ ಎಲ್ಲರೂ ಒಂದಾಗಬೇಕು ಎಂದು ಮನುವಾದಿ-ಫ್ಯಾಸಿಸ್ಟ್ ವಿರೋಧಿ ಜನತಾ ರಂಗದ ಸಹ ಸಂಚಾಲಕ ಆರ್ ಮಾನಸಯ್ಯ ತಿಳಿಸಿದರು. ಅವರಿಂದು ಲಿಂಗಸುಗೂರು ಪಟ್ಟಣದ ಪತ್ರಿಕಾ ಭವನದಲ್ಲಿ ಸುದ್ಧಿಗೋಷ್ಠಿ ನಡೆಸಿ ಮಾತನಾಡಿ, ಆರೆಸ್ಸೆಸ್ ನಾಯಕರು ಸಂವಿಧಾನವನ್ನು ಸ್ಮಾರಕ ಭವನದಲ್ಲಿಟ್ಟು ಪೂಜಿಸುವುದಕ್ಕೆ ಸೀಮಿತಗೊಳಿಸಲಿದೆ. ಸಂವಿಧಾನ ರದ್ದು ಮಾಡಿ ಅದರ ಜಾಗದಲ್ಲಿ ಬ್ರಾಹ್ಮಣವಾದಿ ಧರ್ಮಶಾಸ್ತ್ರವಾದ ಮನುಸ್ಮೃತಿಯನ್ನು ಜಾರಿಗೆ ತರಲು ಹೊರಟಿದೆ. ಭಾರತವನ್ನು ಹಿಂದೂರಾಷ್ಟ್ರ(ವೈದಿಕ ಧರ್ಮದೇಶ) ಎಂದು ಘೋಷಿಸಲು ಸಜ್ಜಾಗಿದೆ. ಉತ್ತರ ಪ್ರದೇಶ, ಮಧ್ಯಪ್ರದೇಶ, ಮಣಿಪುರ ಹಾಗೂ ಛತ್ತೀಸ್ಗಡ ರಾಜ್ಯದಲ್ಲಿ ಈಗಾಗಲೇ ಹಿಂದೂರಾಷ್ಟ್ರ ತಾಲೀಮು ಶುರುವಾಗಿದೆ ಎಂದು ಹೇಳಿದರು. ಆರೆಸ್ಸೆಸ್ ಈ ವರ್ಷದುದ್ದಕ್ಕೂ ಶತ ಜಯಂತಿ ಆಚರಿಸಲು ಮುಂದಾಗಿದೆ. ಇದು ಕೇವಲ ಸಂಘದ ಆಚರಣೆಯಾಗಿ ಇರುವುದಿಲ್ಲ, ಇಡೀ ಸರ್ಕಾರವೇ ಈ ಆಚರಣೆಗೆ ಮುಂದಾಗಿದೆ. ನರೇಂದ್ರ ಮೋದಿ ಮತ್ತು ಬಿಜೆಪಿಯನ್ನು ಮುಂದಿಟ್ಟಿಕೊಂಡು ಆರೆಸ್ಸೆಸ್ ಸಂಘ ಪರಿವಾರವೇ ಕೇಂದ್ರ ಸರ್ಕಾರವನ್ನು ಮುನ್ನೆಡೆಸುತ್ತಿದೆ. ನಾಗರಿಕರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಮನುವಾದಿ-ಫ್ಯಾಸಿಸ್ಟ್ ವಿರೋದಿ ಜನತಾ ರಂಗದಿಂದ ಜ.30 ರಂದು ಲಿಂಗಸುಗೂರಿನಲ್ಲಿ ಆಯ್ದಕ್ಕಿ ಲಕ್ಕಮ ಮೈದಾನದ ಜಗದ್ಗುರು ತಿಂಥಿಣಿ ಮೌನೇಶ್ವರ ಗುರು ಖಾದರಿಪೀರ ವೇದಿಕೆಯಲ್ಲಿ ಸಮಾವೇಶ ಅಯೋಜಿಸಲಾಗಿದೆ ಎಂದು ತಿಳಿಸಿದರು ಆರೆಸ್ಸೆಸ್ ದಾಳಿಗೆ ಪ್ರಾಣ ಬಲಿಕೊಟ್ಟ ಎಂ.ಎಂ.ಕಲಬುರ್ಗಿ, ಗೌರಿಲಂಕೇಶ, ದಾಬೋಲ್ಕರ, ಪನ್ಸಾರೆ ಹಾಗೂ ಗುಜರಾತ್, ದಿಲ್ಲಿ ಮಣಿಪುರದಲ್ಲಿ ಕೊಲೆಗೀಡಾದ ಸಾವಿರಾರು ಜನರ ಶೋಕ ದಿನವೆಂದು ನಾವು ಆಚರರಿಸಲ್ಲಿದ್ದೇವೆ. ಸಮಾವೇಶದಲ್ಲಿ ನಾಡಿನ ಹೆಸರಾಂತ ಚಳವಳಿಗಾರರು, ಧಾರ್ಮಿಕ ಮುಖಂಡರು, ವಿವಿಧ ಮಠಗಳ ಧರ್ಮ ಗುರುಗಳು ಭಾಗವಹಿಸಲಿದ್ದು, ಜನರು ಬಹುಸಂಖ್ಯೆಯಲ್ಲಿ ಆಗಮಿಸಿ ಸಮಾವೇಶವನ್ನು ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು. ಈ ಸಂದರ್ಭದಲ್ಲಿ ಸಮಾವೇಶದ ಸಂಯೋಜಕ ಸಿ.ದಾನಪ್ಪ ಮಸ್ಕಿ, ಸಮಾವೇಶದ ಸಂಯೋಜಕ ಎಂ.ಗಂಗಾಧರ, ಎಂ.ಡಿ.ಅಮೀರ್ ಅಲಿ, ವಿಜಯರಾಣ ಸಿರವಾರ, ಆದೇಶ ನಗನೂರು, ಎಂ.ನಿಸರ್ಗ, ಬಸವರಾಜ ಬಡಿಗೇರ, ಗಂಗಾಧರ ನಾಯಕ, ಖಾಲಿದ್ ಚಾವುಸ್, ಗುಡದಪ್ಪ ಭಂಡಾರಿ ಸೇರಿ ಇತರರು ಇದ್ದರು.
ಕೋಟೇಶ್ವರ ಮೇಪು ಕೊರಗರ ಕಾಲೋನಿಗೆ ಸಂಸದ ಕೋಟ ಭೇಟಿ
ಕುಂದಾಪುರ, ಜ.23: ತಾಲೂಕಿನ ಕೋಟೇಶ್ವರ ಗ್ರಾಪಂ ವ್ಯಾಪ್ತಿಯ ಮೇಪು ಕೊರಗರ ಕಾಲೋನಿಗೆ ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರು ಭೇಟಿ ನೀಡಿ ಕಾಲೋನಿಯ ಮೂಲಭೂತ ಸೌಕರ್ಯಗಳ ಕುರಿತು ಪರಿಶೀಲನೆ ನಡೆಸಿದರು. ಮೇಪು ಕೊರಗ ಕಾಲೋನಿಯಲ್ಲಿ 9 ಕೊರಗ ಕುಟುಂಬಗಳು ವಾಸವಾಗಿದ್ದು, ಇಲ್ಲಿನ ನಿವಾಸಿಗರು ವಾಸ್ತವ್ಯದ ಮನೆ, ಕುಡಿಯುವ ನೀರು, ನಿವೇಶನಗಳ ಬಗ್ಗೆ ಸಂಸದರಿಗೆ ಮಾಹಿತಿ ನೀಡಿ, ಒಂದೇ ಕುಟುಂಬದಿಂದ ವಿಭಜನೆಗೊಂಡವರಿಗೆ ಹೆಚ್ಚುವರಿ ಭೂಮಿಯ ಅಗತ್ಯದ ಬಗ್ಗೆ ತಿಳಿಸಿದರು. ಕುಡಿಯುವ ನೀರಿಗಾಗಿ ಕಾಲೋನಿಗೆ ವಿಶೇಷ ಕುಡಿಯುವ ನೀರಿನ ಘಟಕ ಒದಗಿಸುವಂತೆ ಈ ಸಂದರ್ಭದಲ್ಲಿ ಅವರು ಕೋರಿಕೆ ಸಲ್ಲಿಸಿದರು. ಭೇಟಿಯ ಸಂದರ್ಭದಲ್ಲಿ ಸಂಸದರೊಂದಿಗೆ ಕೋಟೇಶ್ವರ ಗ್ರಾಪಂ ಅಧ್ಯಕ್ಷೆ ರಾಗಿಣಿ ದೇವಾಡಿಗ, ಉಪಾಧ್ಯಕ್ಷೆ ಆಶಾ ವಿ., ಸದಸ್ಯರಾದ ರಾಜಶೇಖರ ಶೆಟ್ಟಿ, ಲೋಕೇಶ್ ಅಂಕದಕಟ್ಟೆ, ನೇತ್ರಾವತಿ, ಪುಟ್ಟಿ, ಸುಶೀಲ ಪೂಜಾರ್ತಿ, ನಾಗರಾಜ ಕಾಂಚನ್, ವಿವೇಕ, ಗುತ್ತಿಗೆದಾರರಾದ ರಾಜೇಶ್ ಉಡುಪ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ದಿನೇಶ್ ನಾಯ್ಕ, ಪರಿಶಿಷ್ಟ ಪಂಗಡದ ಅಧಿಕಾರಿ ವಿಶ್ವನಾಥ್ ಶೆಟ್ಟಿ, ಕೊರಗ ಸಮುದಾಯದ ಮುಖಂಡರಾದ ಗಣೇಶ್ ಕೊರಗ, ಕೃಷ್ಣ ಮೇಪು ಮುಂತಾದವರು ಉಪಸ್ಥಿತರಿದ್ದರು.
ಕೋಲ್ಕತ್ತಾ: ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ನೇತಾಜಿ ಸುಭಾಶ್ ಚಂದ್ರ ಬೋಸ್ ಅವರದ್ದು ಅಚ್ಚಳಿಯದ ಹೆಸರು. ಬ್ರಿಟಿಶರ ಪಾಲಿಗೆ ಸಿಂಹಸ್ವಪ್ನರಾಗಿದ್ದ ನೇತಾಜಿ ಸುಭಾಶ್ ಚಂದ್ರ ಬೋಸ್, ತಾವು ಬದುಕಿದ್ದಷ್ಟೂ ದಿನ ಬ್ರಿಟಿಶರ ನಿದ್ದೆಗೆಡಿಸಿದವರು. ಹೀಗಿದ್ದೂ, ಸ್ವಾತಂತ್ರ್ಯ ಸಂಗ್ರಾಮದ ಅಪ್ರತಿಮ ಸೇನಾನಿಯಾಗಿದ್ದ ನೇತಾಜಿ ಸುಭಾಶ್ ಚಂದ್ರ ಬೋಸ್ ಅವರಿಗೆ ಬ್ರಿಟಿಶ್ ಪೊಲೀಸ್ ಅಧಿಕಾರಿಗಳು ಬರೋಬ್ಬರಿ 93 ವರ್ಷಗಳ ಹಿಂದೆ ಟೀ ಆಮಂತ್ರಿಸಿದ್ದರು. ಅವರಿಗೆ ಟೀ ಕೊಡಮಾಡಿದ್ದ ಕಪ್ ಹಾಗೂ ಸಾಸರ್ ಗಳನ್ನು ಈಗಲೂ ಪಶ್ಚಿ ಬಂಗಾಳದ 24 ಪರಗಣಗಳ ಜಿಲ್ಲೆಯಲ್ಲಿ ಸಂರಕ್ಷಿಸಿಡಲಾಗಿದೆ. ಪ್ರತಿ ವರ್ಷ ಜನವರಿ 23ರಂದು ಈ ಠಾಣೆಯ ಪೊಲೀಸರು ಕೇವಲ ನೇತಾಜಿ ಸುಭಾಶ್ ಚಂದ್ರ ಬೋಸ್ ಅವರ ಜನ್ಮದಿನಾಚರಣೆಯನ್ನು ಮಾತ್ರ ಆಚರಿಸುವುದಿಲ್ಲ; ಬದಲಿಗೆ, 1931ರಲ್ಲಿ ಬ್ರಿಟಿಶರಿಂದ ಬಂಧನಕ್ಕೊಳಗಾಗಿ, ಈ ಠಾಣೆಯಲ್ಲಿ ಕೆಲ ಕಾಲ ಇದ್ದ ಸ್ವಾತಂತ್ರ್ಯ ಹೋರಾಟಗಾರ ನೇತಾಜಿ ಸುಭಾಶ್ ಚಂದ್ರ ಬೋಸ್ ಅವರನ್ನೂ ಸ್ಮರಿಸುತ್ತಾರೆ. ಸುಮಾರು 93 ವರ್ಷಗಳ ಹಿಂದೆ, ಅಕ್ಟೋಬರ್ 11, 1931ರ ಸಂಜೆ 5 ಗಂಟೆಯಂದು ಜಗದ್ದಾಲ್ ನಲ್ಲಿನ ಗೋಲ್ ಘರ್ ಬಳಿ ಬಂಗಾಳ ಸೆಣಬು ಕಾರ್ಖಾನೆ ಕಾರ್ಮಿಕರ ಸಂಘಟನೆ ಆಯೋಜಿಸಿದ್ದ ಸಭೆಯಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ನೇತಾಜಿಯನ್ನು ಬ್ರಿಟಿಶ್ ಪೊಲೀಸರು ಬಂಧಿಸಿದ್ದರು. ನಂತರ, ಅವರನ್ನು ನವೋಪಾರ ಪೊಲೀಸ್ ಠಾಣೆಗೆ ಕರೆದೊಯ್ದು, ಅಲ್ಲಿ ಕೆಲಗಂಟೆಗಳ ಕಾಲ ಅವರನ್ನು ವಶದಲ್ಲಿರಿಸಿಕೊಳ್ಳಅಲಾಗಿತ್ತು. ಈ ವಶದ ಸಂದರ್ಭದಲ್ಲಿ ನೇತಾಜಿ ಸುಭಾಶ್ ಚಂದ್ರ ಬೋಸ್ ಅವರಿಗೆ ಟೀಯನ್ನು ಆಮಂತ್ರಿಸಲಾಗಿತ್ತು. ಆದರೆ, ಆ ಆಮಂತ್ರಣ ಬ್ರಿಟಿಶ್ ಅಧಿಕಾರಿಯಿಂದ ಬಂದಿದ್ದರಿಂದ, ಅವರು ಆ ಆಮಂತ್ರಣವನ್ನು ನಿರಾಕರಿಸಿದ್ದರು. ಸ್ವಾತಂತ್ರ್ಯ ಸಂಗ್ರಾಮದ ದಂತಕತೆ ನೇತಾಜಿ ಸುಭಾಶ್ ಚಂದ್ರ ಬೋಸ್ ಅವರ ಗೌರವಾರ್ಥ ಅಂದು ಅವರಿಗೆ ಟೀಯನ್ನು ಆಮಂತ್ರಿಸಲಾಗಿದ್ದ ಸೆರಾಮಿಕ್ ಕಪ್ ಹಾಗೂ ಸಾಸರ್ ಅನ್ನು ಇಂದಿಗೂ ಆ ಪೊಲೀಸ್ ಠಾಣೆಯಲ್ಲಿ ಸಂರಕ್ಷಿಸಿಡಲಾಗಿದೆ. ನೇತಾಜಿಯ ಗೌರವಾರ್ಥವಾಗಿ ಪೊಲೀಸ್ ಠಾಣೆಯಲ್ಲಿ ಸಣ್ಣದೊಂದು ಸ್ಮಾರಕವನ್ನು ಸ್ಥಾಪಿಸಲಾಗಿದೆ. ಈ ಸ್ಮಾರಕದಲ್ಲಿ ನೇತಾಜಿಯ ಭಾವಚಿತ್ರಗಳನ್ನು ಸಂರಕ್ಷಿಸಿಡಲಾಗಿರುವ ಕಪ್ ಹಾಗೂ ಸಾಸರ್ ಪಕ್ಕ ಇಡಲಾಗಿದೆ. ಆ ಪೊಲೀಸ್ ಠಾಣೆಯ ಒಂದು ಕೋಣೆಯನ್ನು ಗ್ರಂಥಾಲಯವನ್ನಾಗಿಯೂ ಪರಿವರ್ತಿಸಲಾಗಿದ್ದು, ಆ ಗ್ರಂಥಾಲಯದಲ್ಲಿ ನೇತಾಜಿಯ ಜೀವನ ಹಾಗೂ ಪರಂಪರೆಯ ಕುರಿತು ಪುಸ್ತಕಗಳನ್ನು ಪ್ರದರ್ಶನಕ್ಕಿಡಲಾಗಿದೆ. ಈ ಕುರಿತು ಪ್ರತಿಕ್ರಿಯಿಸಿರುವ ನವೋಪಾರ ಪೊಲೀಸ್ ಠಾಣೆಯ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು, “ನಮ್ಮ ಪ್ರೀತಿಪಾತ್ರ ನೇತಾಜಿ ಹೆಜ್ಜೆಯಿರಿಸಿದ್ದ ಪೊಲೀಸ್ ಠಾಣೆಯಲ್ಲಿ ನಾವು ಕೆಲಸ ಮಾಡುತ್ತಿರುವುದಕ್ಕೆ ನಮ್ಮನ್ನು ನಾವು ಅದೃಷ್ಟವಂತರೆಂದೇ ಭಾವಿಸಿದ್ದೇವೆ. ಅವರು ನಮಗೆ ಸ್ಫೂರ್ತಿಯಾಗಿದ್ದಾರೆ. ಅವರು ಇಲ್ಲಿಗೆ ಭೇಟಿ ನೀಡಿದ್ದ ಸಂಗತಿ ವ್ಯಾಪಕವಾಗಿ ತಿಳಿದಿಲ್ಲ ಹಾಗೂ ಸ್ವಾತಂತ್ರ್ಯ ಸಂಗ್ರಾಮ ಇತಿಹಾಸದ ಈ ಅಧ್ಯಾಯವನ್ನು ಎಲ್ಲರೂ ತಿಳಿಯಬೇಕು ಎಂದು ನಾವು ಬಯಸುತ್ತೇವೆ” ಎಂದು ಹೇಳಿದ್ದಾರೆ.
ಸಂಜೀವಿನಿ ಸ್ವ-ಸಹಾಯ ಸಂಘಗಳಿಗೆ 51 ಕೋಟಿ ರೂ. ಶೂನ್ಯ ಬಡ್ಡಿ ಸಾಲ: ಸಂಸದ ಕೋಟ ಶ್ರೀನಿವಾಸ ಪೂಜಾರಿ
ಉಡುಪಿ: ಉಡುಪಿ ಜಿಲ್ಲೆಯಲ್ಲಿ ಅಂದಾಜು 8,454 ಸ್ವ-ಸಹಾಯ ಸಂಘಗಳಿದ್ದು, ಇವುಗಳಲ್ಲಿ ಸುಮಾರು 85,000 ಸದಸ್ಯ ರನ್ನು ಸಂಜೀವಿನಿ ಸಂಘಗಳು ಹೊಂದಿವೆ. ಪಂಚಾಯತ್ ಮಟ್ಟದ ಸಂಜೀವಿನಿ ಸ್ವ-ಸಹಾಯ ಸಂಘಗಳಿಗೆ ಆರ್ಥಿಕ ವ್ಯವ ಹಾರ ಮಾಡಲು ಕೇಂದ್ರ ಸರಕಾರ ಪ್ರತಿ ಸಂಘಕ್ಕೆ 1.50 ಲಕ್ಷ ರೂ.ನಂತೆ 51 ಕೋಟಿ ರೂ. ಶೂನ್ಯ ಬಡ್ಡಿಯ ಸಾಲದ ನೆರವು ನೀಡುತ್ತಿದೆ ಎಂದು ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ. ಮಣಿಪಾಲದಲ್ಲಿರುವ ಉಡುಪಿ ಜಿಲ್ಲಾ ಪಂಚಾಯತ್ನ ಡಾ.ವಿ.ಎಸ್. ಆಚಾರ್ಯ ಸಭಾಂಗಣದಲ್ಲಿ ಸಂಜೀವಿನಿ ಸ್ವ-ಸಹಾಯ ಗುಂಪುಗಳ ಆರ್ಥಿಕ ಸೇರ್ಪಡೆಗಾಗಿ ನಡೆದ ಬ್ಯಾಂಕರ್ಸ್ ಕಾರ್ಯಾಗಾರ ಮತ್ತು ಮಾಹಿತಿ ಶಿಬಿರ ವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡುತಿದ್ದರು. ಜಿಲ್ಲೆಯಲ್ಲಿ 2 ಉತ್ಪಾದನಾ ಕಂಪೆನಿಗಳು ಸ್ಥಾಪನೆಯಾಗಿದ್ದು, ಕಾರ್ಯ ನಿರ್ವಹಿಸುತ್ತಿವೆ. ಕಳೆದ 3 ವರ್ಷಗಳಲ್ಲಿ ಸಂಜೀವಿನಿ ಸ್ವ-ಸಹಾಯ ಸಂಘದ ಆರ್ಥಿಕ ವಹಿವಾಟು 91 ಕೋಟಿ ರೂ.ಮೀರಿದೆ. ಸಂಜೀವಿನಿ ಸಂಘಗಳು 7 ಕಡೆ ಉತ್ಪಾದನಾ ಮಾರಾಟ ಕೇಂದ್ರಗಳನ್ನು ಸ್ಥಾಪಿಸಿವೆ. ಪ್ರತಿ ಪಂಚಾಯತ್ ನಲ್ಲೂ ಕೃಷಿ ಸಖಿ, ಪಶು ಸಖಿ ಮತ್ತು ಎಂಬಿಕೆ, ಎಲ್ಸಿಆರ್ಪಿ ಸಿಬ್ಬಂದಿಗಳು ಕರ್ತವ್ಯ ನಿರ್ವಹಿಸುತ್ತಿದ್ದು, ಪಂಚಾಯತ್ ಮಟ್ಟದ ಆಡಳಿತ ಸಬಲೀಕರಣಕ್ಕೆ ಕಾರಣವಾಗಿವೆ ಎಂದವರು ಹೇಳಿದರು. ಸುಮಾರು 85,000 ಸದಸ್ಯರ ಪೈಕಿ, ಪ್ರತಿ ಸದಸ್ಯರು ಕೇಂದ್ರ ಸರ್ಕಾರದ ಯೋಜನೆಯ ಮೂಲಕ ಸರಳವಾದ ವಿಮಾ ಸೌಲಭ್ಯ ಹೊಂದಬೇಕಿದ್ದು, ರಾಷ್ಟ್ರೀಕೃತ ಬ್ಯಾಂಕುಗಳು, ಇತರೆಲ್ಲಾ ಆರ್ಥಿಕ ಸಂಸ್ಥೆಗಳು ಸ್ವಸಹಾಯ ಸಂಘಗಳ ನೆರವಿಗೆ ಬರಬೇಕಾಗಿದೆ ಎಂದು ಕೋಟ ಶ್ರೀನಿವಾಸ ಪೂಜಾರಿ ಬ್ಯಾಂಕ್ ಅಧಿಕಾರಿಗಳಿಗೆ ಮನವಿ ಮಾಡಿದರು. ಸ್ವ-ಸಹಾಯ ಸಂಘಗಳು ಮುಂದಿನ ದಿನಗಳಲ್ಲಿ ಪ್ರಬಲ ಗ್ರಾಮೀಣ ಆರ್ಥಿಕ ಸಂಸ್ಥೆಗಳಾಗಿ ಮಾರ್ಪಡುವ ಅವಕಾಶವಿದ್ದು, ಇವುಗಳ ಏಳಿಗೆಗೆ ಬ್ಯಾಂಕ್ ಅಧಿಕಾರಿಗಳು ಸಹಕಾರ ನೀಡಬೇಕೆಂದು ಕೋಟ ಆಗ್ರಹಿಸಿದರು. ಕಾರ್ಯಾಗಾರದಲ್ಲಿ ಉಡುಪಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ಪ್ರತೀಕ್ ಬಾಯಲ್, ಕೌಶಲ್ಯಾಭಿವೃದ್ಧಿ ಇಲಾಖೆಯ ಯೋಜನಾ ನಿರ್ದೇಶಕ ಶ್ರೀನಿವಾಸ ರಾವ್, ಲೀಡ್ ಬ್ಯಾಂಕ್ ಮ್ಯಾನೇಜರ್ ಹರೀಶ್, ಎನ್ಆರ್ಎಲ್ಎಮ್ ಯೋಜನೆಯ ಜಿಲ್ಲಾ ಸಮನ್ವಯಾಧಿಕಾರಿ ನವ್ಯ, ಎನ್ಆರ್ಎಲ್ಎಂ ಜಿಲ್ಲಾ ವ್ಯವಸ್ಥಾಪಕ ಅವಿನಾಶ್ ಉಪಸ್ಥಿತರಿದ್ದರು.
ರಣಜಿ: ಕರ್ನಾಟಕ ವಿರುದ್ದ ಪಂಜಾಬ್ 55 ರನ್ಗೆ ಆಲೌಟ್
ಬೆಂಗಳೂರು: ರಣಜಿ ಟ್ರೋಫಿ ಸಿ ಗುಂಪಿನ ಪಂದ್ಯದಲ್ಲಿ ಕರಾರುವಾಕ್ ಬೌಲಿಂಗ್ ಮಾಡಿದ ಕರ್ನಾಟಕದ ವೇಗದ ಬೌಲರ್ಗಳಾದ ವಾಸುಕಿ ಕೌಶಿಕ್(4-16) ಹಾಗೂ ಅಭಿಲಾಶ್ ಶೆಟ್ಟಿ(3-19)ಪಂಜಾಬ್ ಕ್ರಿಕೆಟ್ ತಂಡವನ್ನು ಮೊದಲ ಇನಿಂಗ್ಸ್ ನಲ್ಲಿ ಕೇವಲ 55 ರನ್ಗೆ ಕಟ್ಟಿ ಹಾಕುವಲ್ಲಿ ನೆರವಾದರು. ತನ್ನ ಮೊದಲ ಇನಿಂಗ್ಸ್ ಆರಂಭಿಸಿರುವ ಕರ್ನಾಟಕ ತಂಡವು 4 ವಿಕೆಟ್ಗಳ ನಷ್ಟಕ್ಕೆ 199 ರನ್ ಗಳಿಸಿದ್ದು, 144 ರನ್ ಮುನ್ನಡೆಯಲ್ಲಿದೆ. ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಟಾಸ್ ಜಯಿಸಿದ ಕರ್ನಾಟಕ ತಂಡದ ನಾಯಕ ಮಯಾಂಕ್ ಅಗರ್ವಾಲ್ ಪಂಜಾಬ್ ತಂಡವನ್ನು ಬ್ಯಾಟಿಂಗ್ಗೆ ಇಳಿಸಿದರು. ಪಂಜಾಬ್ ತಂಡವು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರಣಜಿ ಇತಿಹಾಸದಲ್ಲಿ 2ನೇ ಕನಿಷ್ಠ ಮೊತ್ತ ಗಳಿಸಿತು. 2015ರಲ್ಲಿ ಮುಂಬೈ ತಂಡವು 44 ರನ್ ಗಳಿಸಿತ್ತು. ಶುಭಮನ್ ಗಿಲ್ ನಾಯಕತ್ವದ ಪಂಜಾಬ್ ತಂಡವು ಯಾವ ಹಂತದಲ್ಲೂ ಹೋರಾಟವನ್ನು ನೀಡದೆ ಪೆವಿಲಿಯನ್ಗೆ ಪರೇಡ್ ನಡೆಸಿತು. ಆರಂಭಿಕ ಆಟಗಾರನಾಗಿ ಮೈದಾನಕ್ಕಿಳಿದ ಗಿಲ್(4 ರನ್) ಮೊದಲಿಗೆ ವಿಕೆಟ್ ಒಪ್ಪಿಸಿದರು. ಉಳಿದ ಆಟಗಾರರು ಗಿಲ್ರನ್ನು ಅನುಸರಿಸಿದರು. ಪಂಜಾಬ್ ಪರ ರಮಣ್ದೀಪ್ ಸಿಂಗ್(16 ರನ್)ಸರ್ವಾಧಿಕ ಸ್ಕೋರ್ ಗಳಿಸಿದರು. ಎಡಗೈ ವೇಗಿ ಅಭಿಲಾಶ್(3-19)ಶುಭಮನ್ ಗಿಲ್ ವಿಕೆಟನ್ನು ಉರುಳಿಸಿ ಪಂಜಾಬ್ ಬ್ಯಾಟಿಂಗ್ ಪತನಕ್ಕೆ ನಾಂದಿ ಹಾಡಿದರು. 7ನೇ ಓವರ್ನಲ್ಲಿ ಕೌಶಿಕ್ 2 ವಿಕೆಟ್ಗಳನ್ನು ಉರುಳಿಸಿ ಪಂಜಾಬ್ಗೆ ಶಾಕ್ ನೀಡಿದರು. ಪ್ರಸಿದ್ಧ ಕೃಷ್ಣ(2-11)ಹಾಗೂ ಕೌಶಿಕ್ (4-16) ಪಂಜಾಬ್ನ ಮಧ್ಯಮ ಹಾಗೂ ಕೆಳ ಕ್ರಮಾಂಕದ ಬ್ಯಾಟರ್ಗಳನ್ನು ಇನ್ನಿಲ್ಲದಂತೆ ಕಾಡಿದರು. ಬ್ಯಾಟಿಂಗ್ ಆರಂಭಿಸಿರುವ ಕರ್ನಾಟಕದ ಪರ ಯುವ ಬ್ಯಾಟರ್ ಆರ್.ಸ್ಮರಣ್(ಔಟಾಗದೆ 83, 100 ಎಸೆತ, 12 ಬೌಂಡರಿ, 1 ಸಿಕ್ಸರ್)ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ ಚೊಚ್ಚಲ ಅರ್ಧಶತಕ ಗಳಿಸಿದರು. ತನ್ನ ಮೊದಲ ಪ್ರಥಮ ದರ್ಜೆ ಋತುವಿನ ಮೊದಲಾರ್ಧದ 7 ಇನಿಂಗ್ಸ್ಗಳಲ್ಲಿ ಕೇವಲ 145 ರನ್ ಗಳಿಸಿದ್ದ ಎಡಗೈ ಬ್ಯಾಟರ್ ಸ್ಮರಣ್ ಸದ್ಯ ಉತ್ತಮ ಫಾರ್ಮ್ನಲ್ಲಿದ್ದು, ಕರ್ನಾಟಕ ತಂಡ ಇತ್ತೀಚೆಗೆ ವಿಜಯ್ ಹಝಾರೆ ಟ್ರೋಫಿ ಜಯಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಕರ್ನಾಟಕ ತಂಡ 111 ರನ್ಗೆ ಅಗ್ರ 3 ವಿಕೆಟ್ಗಳನ್ನು ಬೇಗನೆ ಕಳೆದುಕೊಂಡಾಗ ಸ್ಮರಣ್ ಹಾಗೂ ಶ್ರೀಜಿತ್ 4ನೇ ವಿಕೆಟ್ಗೆ 81 ರನ್ ಸೇರಿಸಿ ತಂಡವನ್ನು ಆಧರಿಸಿದರು. ಕೆ.ವಿ. ಅನೀಶ್(33 ರನ್), ದೇವದತ್ತ ಪಡಿಕ್ಕಲ್(27 ರನ್), ಕೆ.ಶ್ರೀಜಿತ್(26 ರನ್)ಹಾಗೂ ನಾಯಕ ಅಗರ್ವಾಲ್(20 ರನ್)ಉತ್ತಮ ಆರಂಭ ಪಡೆದರೂ ಮೊತ್ತ ಗಳಿಸಲು ವಿಫಲರಾದರು. ಗುರುವಾರ ಪುನರಾಂಭಗೊಂಡಿರುವ ರಣಜಿ ಪಂದ್ಯದಲ್ಲಿ ಆಡಿರುವ ಟೀಮ್ ಇಂಡಿಯಾದ ಆಟಗಾರರಲ್ಲಿ ರೋಹಿತ್ ಶರ್ಮಾ ಮುಂಬೈ ಪರ 2 ರನ್,ಪಂಜಾಬ್ ಪರ ಗಿಲ್ 4 ಹಾಗೂ ದಿಲ್ಲಿ ಪರ ಪಂತ್ ಕೇವಲ 1 ರನ್ ಗಳಿಸಿದರು. ರವೀಂದ್ರ ಜಡೇಜ ಮಾತ್ರ 5 ವಿಕೆಟ್ ಪಡೆದು ಮಿಂಚಿದ್ದಾರೆ.
75 ವರ್ಷಗಳವರೆಗೆ ಮುಸ್ಲಿಂ ಕುಟುಂಬದೊಂದಿಗಿದ್ದು ಮೃತಳಾದ ಹಿಂದೂ ಮಹಿಳೆಗೆ ಭಾವೈಕ್ಯತೆಯ ಅಂತ್ಯಸಂಸ್ಕಾರ
ಒಂದು ಮುಸ್ಲಿಂ ಕುಟುಂಬವು 75 ವರ್ಷಗಳ ಕಾಲ ತಾವು ಲೋಕದಲ್ಲಿ ಉಳಿದಿದ್ದ ಹಿಂದೂ ಮಹಿಳೆಯ ಅಂತಿಮ ಕ್ರಿಯೆಗಳನ್ನು ಹಿಂದೂ ಸಂಪ್ರದಾಯದಂತೆ ನೆರವೇರಿಸಿದರು. ಮಹಿಳೆಯ ವಿವಾಹಿತ ಪುತ್ರನೂ움을 ಸಮೀಪದ ಕುಟುಂಬವುಟು ಆಕೆಯ ಅಂತಿಮ ದಿನಗಳ ತನಕ ನೋಡಿಕೊಳ್ಳುತ್ತ, ಅಂತಿಮ ವಿಶ್ವಾಸದಿಂದ ಅವರ ಸಂಸ್ಕಾರಗಳನ್ನು ನಡೆಸಿತು. 75 ವರ್ಷಗಳ ಇತಿಹಾಸವು ಭಾವೈಕ್ಯತೆಯನ್ನು ಮೆರೆದಿತು.
ಉಡುಪಿ| ಯಕ್ಷಗಾನ ಕಲಾವಿದನಿಗೆ ಮನೆಯಲ್ಲಿ ಕೂಡಿ ಹಾಕಿ ಹಲ್ಲೆ: ಪ್ರಕರಣ ದಾಖಲು
ಉಡುಪಿ, ಜ.23: ಹಣದ ವ್ಯವಹಾರಕ್ಕೆ ಸಂಬಧಿಸಿ ಯಕ್ಷಗಾನ ಕಲಾವಿದರೊಬ್ಬರನ್ನು ಮನೆಯಲ್ಲಿ ಕೂಡಿ ಹಾಕಿ ಹಲ್ಲೆ ನಡೆಸಿರುವ ಬಗ್ಗೆ ಪಡುಬಿದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪಡುಬಿದ್ರಿ ನಡ್ಸಾಲು ಗ್ರಾಮದ ನಿತಿನ್ ಆಚಾರ್ಯ(31) ಹಲ್ಲೆಗೆ ಒಳಗಾಗಿರುವ ಕಲಾವಿದ. ಸಸಿಹಿತ್ಲು ಶ್ರೀಭಗವತಿ ಯಕ್ಣಗಾನ ಮೇಳದ ಕಲಾವಿದರಾಗಿರುವ ಇವರು, ಅವರ ಸ್ನೇಹಿತ ಪಾವಂಜೆ ಮೇಳದ ಕಲಾವಿದ ಸಚಿನ್ನಿಂದ 2020ರಲ್ಲಿ ಬಡ್ಡಿಗೆ ಸಾಲ ಪಡೆದುಕೊಂಡು ಅಸಲು ಹಾಗೂ ಬಡ್ಡಿಕಟ್ಟುತ್ತಿದ್ದರು. ನಿಗದಿತ ಸಮಯದೊಳಗೆ ಸಾಲವನ್ನು ಕಟ್ಟುತ್ತಿಲ್ಲ ಎಂಬ ಕಾರಣದಿಂದ ಸಚಿನ್, ಆತನ ಉದ್ಯಾವರದಲ್ಲಿರುವ ಮನೆಗೆ ಜ.21ರಂದು ಕರೆದುಕೊಂಡು ಹೋಗಿ, ಅಲ್ಲಿ ಮನೆಯಲ್ಲಿ ಬಲಾತ್ಕಾರವಾಗಿ ಕೂಡಿ ಹಾಕಿದರು. ಅಲ್ಲಿ ಸಚಿನ್, ಆತನ ತಂದೆ ಕುಶಾಲ್ ಹಾಗೂ ಇನ್ನೊರ್ವ ಅಪರಿಚಿತ ವ್ಯಕ್ತಿ ಕಂಬಳದ ಕೋಣಗಳಿಗೆ ಹೊಡೆಯುವ ಬೆತ್ತದಿಂದ ಬೆನ್ನಿಗೆ, ತಲೆಗೆ, ಕಾಲಿಗೆ ಹೊಡೆ ದರಲ್ಲದೆ, ಕಾಲಿನಿಂದ ತುಳಿದು ಕೈಯಿಂದ ಕೆನ್ನೆಗೆ ಹೊಡೆದು ಖಾಲಿ ಬಾಂಡ್ ಪೆಪರ್ಗೆ ಬಲಾತ್ಕಾರವಾಗಿ ಸಹಿ ಪಡೆದುಕೊಂಡರೆಂದು ದೂರಲಾಗಿದೆ. ಹಲ್ಲೆಗೊಳಗಾದ ನಿತಿನ್ ಅದೇ ರಾತ್ರಿ ಪುತ್ತೂರಿನಲ್ಲಿ ನಡೆದ ಯಕ್ಷಗಾನದಲ್ಲಿ ಪಾಲ್ಗೊಂಡಿದ್ದು, ಜ.22ರಂದು ಬೆಳಿಗ್ಗೆ ನೋವು ಜಾಸ್ತಿಯಾದ್ದರಿಂದ ಪಡುಬಿದ್ರೆ ಖಾಸಗಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿದ್ದಾರೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೃದಯ ಜ್ಯೋತಿ ಯೋಜನೆ ಎಲ್ಲ ತಾಲೂಕು ಆಸ್ಪತ್ರೆಗಳಿಗೂ ವಿಸ್ತರಣೆ : ದಿನೇಶ್ ಗುಂಡೂರಾವ್
ರಾಮನಗರ : ಹೃದಯಾಘಾತ ಸಂಭವಿಸಿದ ಸಂದರ್ಭದ ಗೋಲ್ಡನ್ ಹವರ್ನಲ್ಲಿ ಜೀವರಕ್ಷಕ ಚುಚ್ಚುಮದ್ದು ನೀಡುವ ಪುನೀತ್ ರಾಜ್ಕುಮಾರ್ ಹೃದಯ ಜ್ಯೋತಿ ಯೋಜನೆಯನ್ನು ರಾಜ್ಯದ ಎಲ್ಲ ತಾಲೂಕು ಆಸ್ಪತ್ರೆಗಳಿಗೂ ವಿಸ್ತರಿಸಲಾಗುವುದು ಎಂದು ಆರೋಗ್ಯ ಇಲಾಖೆ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು. ಗುರುವಾರ ರಾಮನಗರ ತಾಲೂಕಿನ ಬಿಡದಿ ಹೋಬಳಿಯ ಮಂಚೇಗೌಡನ ಪಾಳ್ಯದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ತಾಲೂಕು ಆರೋಗ್ಯ ಅಧಿಕಾರಿಗಳ ಕಚೇರಿಯ ಸಂಯುಕ್ತಾಶ್ರಯದಲ್ಲಿ ನಿರ್ಮಿಸಲಾಗಿರುವ ನೂತನ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು. ಪುನೀತ್ ಹೃದಯ ಜ್ಯೋತಿ ಯೋಜನೆ ನೂರಾರು ಜನರ ಬದುಕನ್ನು ಉಳಿಸಿದೆ, ಇದೂವರೆಗೆ 250 ಜನರನ್ನು ರಕ್ಷಿಸಲಾಗಿದೆ, ರಾಜ್ಯದ 74 ತಾಲೂಕು ಆಸ್ಪತ್ರೆಗಳಲ್ಲಿ ಈ ಸೌಲಭ್ಯ ಲಭ್ಯವಿದೆ, ಹೃದಯ ಸ್ತಂಭನವಾದಾಗ ವ್ಯಕ್ತಿಗೆ ಒಂದರಿಂದ ಮೂರು ಗಂಟೆ ಅವಧಿಯೊಳಗೆ ಜೀವರಕ್ಷಕ ಚುಚ್ಚುಮದ್ದು ನೀಡುವ ಈ ಯೋಜನೆಯನ್ನು ರಾಜ್ಯಾದ್ಯಂತ ಎಲ್ಲ ತಾಲೂಕು ಆಸ್ಪತ್ರೆಗಳಲ್ಲಿ ವಿಸ್ತರಿಸಲು ಮುಖ್ಯಮಂತ್ರಿ ಒಪ್ಪಿಗೆ ನೀಡಿದ್ದಾರೆ. ಹಾಗಾಗಿ ಈ ಯೋಜನೆಯನ್ನು ಮುಂಬರುವ ಎರಡು ತಿಂಗಳಲ್ಲಿ ರಾಜ್ಯಾದ್ಯಂತ ವಿಸ್ತರಿಸಲಾಗುವುದು ಎಂದು ಅವರು ಹೇಳಿದರು. ರಾಜ್ಯ ಸರಕಾರದ ಮತ್ತೊಂದು ಮಹತ್ವಾಕಾಂಕ್ಷೆ ಯೋಜನೆಯನ್ನು ರೂಪಿಸಿದೆ, ಅದುವೇ ಗೃಹ ಆರೋಗ್ಯ ಯೋಜನೆ. ಪ್ರತಿಯೊಂದು ಮನೆಗೆ ತೆರಳಿ ಮನೆಯ ಸದಸ್ಯರ ಸಂಪೂರ್ಣ ಆರೋಗ್ಯ ತಪಾಸಣೆ ನಡೆಸಿ ಅವರಲ್ಲಿರುವ ಕಾಯಿಲೆಯನ್ನು ಗುರುತಿಸಿ, ಅದನ್ನು ನಿಯಂತ್ರಿಸುವ ಕೆಲಸವನ್ನು ಈ ಯೋಜನೆಯ ಮೂಲಕ ಮಾಡಲಾಗುವುದು ಎಂದು ದಿನೇಶ್ ಗುಂಡೂರಾವ್ ತಿಳಿಸಿದರು. ದೃಷ್ಟಿ ದೋಷಕ್ಕೆ ಉಚಿತ ಚಿಕಿತ್ಸೆ ಹಾಗೂ ಉಚಿತ ಕನ್ನಡಕ ವಿತರಿಸುವ ಆಶಾಕಿರಣ ಯೋಜನೆ ಇದೀಗ ಎಂಟು ಜಿಲ್ಲೆಗಳಲ್ಲಿ ಮಾತ್ರ ಲಭ್ಯವಿದ್ದು, ಆ ಯೋಜನೆಯನ್ನು ಎಲ್ಲ ಜಿಲ್ಲೆಗಳಿಗೂ ವಿಸ್ತರಿಸಲು ಸಚಿವ ಸಂಪುಟದಲ್ಲಿ ಒಪ್ಪಿಗೆ ಪಡೆಯಲಾಗಿದೆ. ಆ ಮೂಲಕ ಕಣ್ಣಿನ ದೋಷವುಳ್ಳವರಿಗೆ ಉಚಿತವಾಗಿ ಆಪರೇಷನ್ ನಡೆಸಿ ಉಚಿತ ಕನ್ನಡಕ ವಿತರಿಸಲಾಗುತ್ತಿದೆ ಎಂದು ಅವರು ಹೇಳಿದರು. ಈ ವರ್ಷದ ಎಪ್ರಿಲ್ ನಂತರ ಆಶಾ ಕಾರ್ಯಕರ್ತೆಯರಿಗೆ 10 ಸಾವಿರ ರೂ.ಗಳ ಗೌರವಧನ ನೀಡುವ ಹೆಜ್ಜೆ ಇಡಲಾಗಿದೆ. ರಾಜ್ಯದಲ್ಲಿರುವ ಆರೋಗ್ಯ ಸೇವೆಗಳನ್ನು ಮತ್ತಷ್ಟು ವಿಸ್ತರಿಸಲು ರಾಜ್ಯ ಸರಕಾರ ಯತ್ನಿಸುತ್ತಿದೆ. ವೈದ್ಯರು ಹಾಗೂ ಸಿಬ್ಬಂದಿಗಳ ಮೇಲೆ ಈ ಇಲಾಖೆ ಅವಲಂಬಿತವಾಗಿದೆ, ವೈದ್ಯರು ಹಾಗೂ ಸಿಬ್ಬಂದಿ ಬದ್ಧತೆಯಿಂದ ಕೆಲಸ ಮಾಡಬೇಕು, ಆಗ ಸಾಕಷ್ಟು ಸಮಸ್ಯೆಗಳು ನೀಗುತ್ತವೆ ಎಂದು ಅವರು ತಿಳಿಸಿದರು. ವೈದ್ಯರು ಸಹಾನುಭೂತಿಯಿಂದ ರೋಗಿಗಳನ್ನು ತಪಾಸಣೆ ಮಾಡಬೇಕು, ಉತ್ತಮ ವರ್ತನೆ ತೋರಬೇಕು, ರೋಗಿಗಳಲ್ಲಿ ಧೈರ್ಯ ತುಂಬಿದಾಗ ಮಾತ್ರ ಅವರಿಗೆ ಮಾನಸಿಕವಾಗಿ ಗಟ್ಟಿಯಾಗುತ್ತಾರೆ ಎಂದ ದಿನೇಶ್ ಗುಂಡೂರಾವ್, ರಾಮನಗರ ಜಿಲ್ಲಾ ಆಸ್ಪತ್ರೆಯಲ್ಲಿರುವ ಸಿಟಿ ಸ್ಕ್ಯಾನ್ ಯಂತ್ರ ದುರಸ್ತಿ ಪಡಿಸಲಾಗುವುದು ಹಾಗೂ ಎಮ್.ಆರ್.ಐ ಯಂತ್ರವನ್ನು ಎರಡು ತಿಂಗಳೊಳಗೆ ಒದಗಿಸಲಾಗುವುದು ಎಂದರು. ಸಂಸದ ಡಾ.ಸಿ.ಎನ್. ಮಂಜುನಾಥ್ ಮಾತನಾಡಿ, ಬದಲಾದ ಜೀವನ ಶೈಲಿಯಿಂದ ಸಾಕಷ್ಟು ಕಾಯಿಲೆಗಳು ಬಂದಿವೆ, ಹೃದಯಾಘಾತ ಕೇವಲ ನಗರ ಪ್ರದೇಶಗಳಿಗಷ್ಟೇ ಅಲ್ಲ ಹಳ್ಳಿಗಳಲ್ಲೂ ಕಂಡು ಬರುತ್ತಿದೆ, ಶ್ರೀಮಂತರಿಂದ ಹಿಡಿದು ಕೂಲಿ ಕಾರ್ಮಿಕರಲ್ಲೂ ಇದು ಕಂಡು ಬರುತ್ತಿದ್ದು ರಾಮನಗರ, ಮಾಗಡಿ ಹಾಗೂ ಕನಕಪುರ ತಾಲೂಕು ಆಸ್ಪತ್ರೆಗಳಲ್ಲಿ ಇದಕ್ಕೆ ಪ್ರಾಥಮಿಕ ಚಿಕಿತ್ಸೆ ನೀಡುವ ಜೀವರಕ್ಷಕ ಚುಚ್ಚುಮದ್ದು ನೀಡಲಾಗುವುದು ಎಂದು ತಿಳಿಸಿದರು. ಈ ಇಂಜೆಕ್ಷನ್ ಹೆಪ್ಪುಗಟ್ಟಿದ ರಕ್ತವನ್ನು ಕರಗಿಸುತ್ತದೆ, 18 ಸಾವಿರ ರೂಪಾಯಿಗಳ ಈ ಇಂಜೆಕ್ಷನ್ ನೀಡಿದಲ್ಲಿ ಹೃದಯಾಘಾತವಾದ ವ್ಯಕ್ತಿ ಮುಂದಿನ ಮೂರು ಗಂಟೆಯೊಳಗೆ ಚಿಕಿತ್ಸೆ ಪಡೆಯಲು ನೆರವಾಗಲಿದೆ. ಈ ಹೃದಯ ಜ್ಯೋತಿ ಯೋಜನೆಗೆ ಚನ್ನಪಟ್ಟಣ ತಾಲೂಕು ಹೊರತಾಗಿದ್ದು, ಚನ್ನಪಟ್ಟಣ ತಾಲೂಕು ಆಸ್ಪತ್ರೆಯನ್ನು ಸೇರಿಸುವಂತೆ ಮನವಿ ಮಾಡಿದ ಅವರು, ಜಿಲ್ಲೆಯ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಪಿಜಿಷಿಯನ್ ಅವಶ್ಯಕತೆ ಇದೆ, ಅವರನ್ನು ನೇಮಕ ಮಾಡುವಂತೆ ಕೋರಿದರು. ಕಾರ್ಯಕ್ರಮದಲ್ಲಿ ಶಾಸಕ ಇಕ್ಬಾಲ್ ಹುಸೇನ್, ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಜಿ.ಎನ್.ನಟರಾಜ್ ಗಾಣಕಲ್, ಜಿಲ್ಲಾ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಕೆ.ರಾಜು, ರಾಮನಗರ ತಾಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಎಚ್.ವಿ.ರಾಜು, ಗೋಪಳ್ಳಿ ಗ್ರಾ.ಪಂ. ಅಧ್ಯಕ್ಷೆ ಮಂಜುಳಾ, ಉಪಾಧ್ಯಕ್ಷ ಶಿವಲಿಂಗಯ್ಯ, ಜಿ.ಪಂ. ಸಿಇಒ ದಿಗ್ವಿಜಯ ಬೋಡ್ಕೆ, ಅಪರ ಜಿಲ್ಲಾಧಿಕಾರಿ ಆರ್.ಚಂದ್ರಯ್ಯ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ನಿರಂಜನ್ ಹಾಗೂ ಇತರ ಗಣ್ಯರು ಉಪಸ್ಥಿತರಿದ್ದರು.
ಸುಭಾಷ್ ಚಂದ್ರ ಬೋಸ್ ಅವರು ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ: ವೀರಭದ್ರಪ್ಪ ಉಪ್ಪಿನ್
ಬೀದರ್: ನೇತಾಜಿ ಸುಭಾಷ್ ಚಂದ್ರ ಬೋಸ್ ರವರು ಅಪ್ಪಟ ದೇಶ ಭಕ್ತರು ಹಾಗೂ ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರರಾಗಿದ್ದರು ಎಂದು ಪಶು ವೈದ್ಯಕೀಯ ವಿಶ್ವ ವಿದ್ಯಾಲಯದ ನಿವೃತ್ತ ಅಧಿಕಾರಿ ವೀರಭದ್ರಪ್ಪ ಉಪ್ಪಿನ್ ಅವರು ಅಭಿಪ್ರಾಯಪಟ್ಟರು. ಅಖಿಲ ಭಾರತ ವಿಶ್ವವಿದ್ಯಾಲಯಗಳ ನೌಕರರ ಒಕ್ಕೂಟ ಹಾಗೂ ಪ್ರಗತಿ ಆರೋಗ್ಯ ಮತ್ತು ಶಿಕ್ಷಣ ಸಂಸ್ಥೆಯಿಂದನಗರದ ಬಸವನಗರ ಬಡಾವಣೆಯಲ್ಲಿ ನಿವೃತ್ತ ಸೈನಿಕರ ಉಪಸ್ಥಿತಿಯಲ್ಲಿ ಆಯೋಜಿಸಲಾದ ನೇತಾಜಿ ಸುಭಾಷ್ ಚಂದ್ರ ಬೋಸ್ ರವರ 127 ನೇ ಜನ್ಮ ದಿನಾಚರಣೆ ಹಾಗೂ ಪರಿಸರ ಜಾಗೃತಿ ಅಭಿಯಾನದಲ್ಲಿ ಅವರು ಮಾತನಾಡಿದರು. ಬ್ರಿಮ್ ಆಸ್ಪತ್ರೆಯ ತಂತ್ರಜ್ಞ ಅಧಿಕಾರಿ ಅರವಿಂದ ಕುಲಕರ್ಣಿ ಅವರು ಮಾತನಾಡುತ್ತಾ, ಇಂದಿನ ದಿನಗಳಲ್ಲಿ ಯುವ ಜನತೆಯಲ್ಲಿ ದೇಶ ಅಭಿಮಾನದ ಕೊರತೆ ಕಂಡು ಬರುತ್ತಿರುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದ ಅವರು, ಚಿಕ್ಕ ವಯಸ್ಸಿನಲ್ಲೇ ಬೋಸ್ರಲ್ಲಿದ್ದ ದೇಶ ಪ್ರೇಮವನ್ನು ಇಂದಿನ ಯುವಜನತೆ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕುಎಂದು ಕರೆ ನೀಡಿದರು. ಈ ಸಂದರ್ಭದಲ್ಲಿ ನಿವೃತ್ತ ಸೈನಿಕ ನರೇಂದ್ರ ಕುಮಾರ್, ನಗರಸಭೆಯ ನಿವೃತ್ತ ಉದ್ಯೋಗಿ ರತ್ನಮ್ಮ, ನಿವೃತ್ತ ಸೈನಿಕರಾದ ಸಂಗಮೇಶ್ ಕಾರಾಮುಂಗಿ, ಗೌತಮ್, ರವಿಕುಮಾರ್, ಪ್ರವೀಣಕುಮಾರ್, ಗಣೇಶ್, ಬಸವರಾಜ್, ನಂದು, ಸುವರ್ಣ, ಶಿಲ್ಪಾರಾಣಿ, ಅನಿತಾ ಹಾಗೂ ಸರಸ್ವತಿ ಸೇರಿದಂತೆ ಬಡಾವಣೆಯ ಹಲವರು ಉಪಸ್ಥಿತರಿದ್ದರು.
ಹಮಾಸ್ ದಾಳಿ ತಡೆಯಲು ವಿಫಲ | ಇಸ್ರೇಲಿ ಮಿಲಿಟರಿ ಮುಖ್ಯಸ್ಥ ರಾಜೀನಾಮೆ
ಜೆರುಸಲೇಂ: ಇಸ್ರೇಲ್ ಮೇಲೆ 2023ರ ಅಕ್ಟೋಬರ್ 7ರಂದು ನಡೆದ ಹಮಾಸ್ ದಾಳಿಯ ಸಂದರ್ಭ ವೈಫಲ್ಯದ ಹೊಣೆಹೊತ್ತು ಇಸ್ರೇಲಿ ಮಿಲಿಟರಿಯ ಮುಖ್ಯಸ್ಥ ಲೆ|ಜ| ಹೆರ್ಝಿ ಹಲೆವಿ ರಾಜೀನಾಮೆ ನೀಡಿರುವುದಾಗಿ ವರದಿಯಾಗಿದೆ. ಅಕ್ಟೋಬರ್ 7ರ ದಾಳಿಯಲ್ಲಿ ಮಿಲಿಟರಿಯ ವೈಫಲ್ಯದ ಹೊಣೆಹೊತ್ತು ಹುದ್ದೆಗೆ ರಾಜೀನಾಮೆ ಸಲ್ಲಿಸುತ್ತಿದ್ದೇನೆ. ಆದರೆ ಮಹತ್ವದ ಯಶಸ್ಸಿನ ಸಂದರ್ಭ ಹುದ್ದೆ ತೊರೆಯುತ್ತಿದ್ದೇನೆ. ಗಾಝಾ ಯುದ್ಧದ ಗುರಿಗಳು ಬಹುತೇಕ ಈಡೇರಿವೆ. ಹಮಾಸ್ ಅನ್ನು ಇನ್ನಷ್ಟು ಶಕ್ತಿಗುಂದಿಸಲು ಸೇನೆಯು ಹೋರಾಟ ಮುಂದುವರಿಸುತ್ತದೆ ' ಎಂದು ರಾಜೀನಾಮೆ ಪತ್ರದಲ್ಲಿ ಹಲೆವಿ ಉಲ್ಲೇಖಿಸಿದ್ದಾರೆ. ಇದರ ಬೆನ್ನಲ್ಲೇ ಗಾಝಾದಲ್ಲಿ ಕಾರ್ಯಾಚರಣೆಯ ಹೊಣೆಹೊತ್ತಿರುವ ಇಸ್ರೇಲ್ನ ದಕ್ಷಿಣ ಮಿಲಿಟರಿ ಕಮಾಂಡ್ನ ಮುಖ್ಯಸ್ಥ ಮೇ|ಜ| ಯಾರೊನ್ ಫಿಂಕೆಲ್ಮಾನ್ ಕೂಡಾ ರಾಜೀನಾಮೆ ಸಲ್ಲಿಸಿದ್ದಾರೆ. ಹೊಣೆ ಹೊತ್ತು ರಾಜೀನಾಮೆ ನೀಡುವ ಮೂಲಕ ಸೇನಾ ಮುಖ್ಯಸ್ಥರು ಮಾದರಿಯಾಗಿದ್ದಾರೆ. ಇದೇ ಮಾದರಿಯನ್ನು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅನುಸರಿಸಬೇಕು ಎಂದು ವಿರೋಧ ಪಕ್ಷ ಮುಖಂಡ ಯಾಯಿರ್ ಲ್ಯಾಪಿಡ್ ಆಗ್ರಹಿಸಿದ್ದಾರೆ.
Maha Kumbh Mela: ಕುಂಭ ಮೇಳದ ಮೊನಾಲಿಸಾ ಡೇರೆಗೆ ನುಗ್ಗಿ ಸೋದರನ ಮೇಲೆ ಹಲ್ಲೆ!
ಮಹಾ ಕುಂಭ ಮೇಳದಲ್ಲಿ ಒಂದೇ ಒಂದು ವಿಡಿಯೋದಿಂದ ದೇಶಾದ್ಯಂತ ಸುದ್ದಿ ಮಾಡಿರುವ ಮೊನಾಲಿಸಾಗೆ ಒಂದಲ್ಲ ಒಂದು ಸಂಕಷ್ಟ ಎದುರಾಗುತ್ತಲೇ ಇದೆ. ತನ್ನ ಆಕರ್ಷಕ ನೋಟ ಮತ್ತು ವಿಶಿಷ್ಠ ಕಣ್ಣುಗಳ ಮೂಲಕ ಸೋಷಿಯಲ್ ಮೀಡಿಯಾ ಸ್ಟಾರ್ ಆಗಿರುವ ಮೊನಾಲಿಸಾ ಭೋಂಸ್ಲೆ ಇದೀಗ ತಾನು ತಂಗಿರುವ ಡೇರೆಗೆ ಕಿಡಿಗೇಡಿಗಳು ನುಗ್ಗಿದ್ದಲ್ಲದೆ ತನ್ನ ಸಹೋದರನ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
6 ದಶಲಕ್ಷ ಸೊಮಾಲಿಯನ್ನರಿಗೆ ತುರ್ತು ನೆರವಿನ ಅಗತ್ಯವಿದೆ: ವಿಶ್ವಸಂಸ್ಥೆ
ವಿಶ್ವಸಂಸ್ಥೆ: ಸೊಮಾಲಿಯಾದಲ್ಲಿ ಸುಮಾರು 6 ದಶಲಕ್ಷ ಜನತೆ, ಅಂದರೆ ದೇಶದ ಜನಸಂಖ್ಯೆಯ ಮೂರನೇ ಒಂದರಷ್ಟು ಜನರಿಗೆ ಈ ವರ್ಷ ತುರ್ತು ನೆರವಿನ ಅಗತ್ಯವಿದೆ ಎಂದು ವಿಶ್ವಸಂಸ್ಥೆ ಬುಧವಾರ ಹೇಳಿದೆ. ಈ ವರ್ಷ ಸುಡಾನ್ಗೆ ನೆರವು ಕಾರ್ಯಕ್ರಮಗಳಿಗೆ 1.43 ಶತಕೋಟಿ ಡಾಲರ್ ದೇಣಿಗೆ ಸಂಗ್ರಹಿಸುವ ಕಾರ್ಯಕ್ಕೆ ವಿಶ್ವಸಂಸ್ಥೆ ಚಾಲನೆ ನೀಡಿದೆ. ವಿಶ್ವದ ಅತೀ ಬಡ ದೇಶಗಳಲ್ಲಿ ಒಂದಾಗಿರುವ ಸೊಮಾಲಿಯಾ ದಶಕಗಳಿಂದಲೂ ಮುಂದುವರಿದಿರುವ ಅಂತರ್ಯುದ್ಧದಿಂದ ಮತ್ತು ಪದೇ ಪದೇ ಸಂಭವಿಸುವ ಪ್ರಾಕೃತಿಕ ದುರಂತಗಳ ಹೊಡೆತದಿಂದ ಜರ್ಝರಿತಗೊಂಡಿದೆ. ಅಲ್ಖೈದಾಗೆ ಸಂಯೋಜಿತ ಅಲ್-ಶಬಾಬ್ ಗುಂಪು ಸರಕಾರದ ವಿರುದ್ಧ ಸಂಘರ್ಷ ನಡೆಸುತ್ತಿದೆ. ಸೊಮಾಲಿಯಾ ಸಂಕೀರ್ಣವಾದ, ಸುದೀರ್ಘವಾದ ಮಾನವೀಯ ಬಿಕ್ಕಟ್ಟನ್ನು ಎದುರಿಸುತ್ತಿದೆ. ಅಕ್ಟೋಬರ್ನಿಂದ ಡಿಸೆಂಬರ್ ಅವಧಿಯಲ್ಲಿ ತೀರಾ ಕಡಿಮೆ ಪ್ರಮಾಣದ ಮಳೆಯಾದ್ದರಿಂದ ಬರಗಾಲದ ಭೀತಿ ಎದುರಾಗಿದೆ ಎಂದು ವಿಶ್ವಸಂಸ್ಥೆಯ ಮಾನವೀಯ ನೆರವಿನ ಏಜೆನ್ಸಿ ಒಸಿಎಚ್ಎ ಹೇಳಿದೆ. ಸೊಮಾಲಿಯಾ ಸರಕಾರದ ಜತೆ ಸೋಮವಾರ ಪ್ರಾರಂಭಿಸಲಾಗಿರುವ ಧನಸಹಾಯ ಮನವಿಯು ದೇಶದಲ್ಲಿ ಸುಮಾರು 4.6 ದಶಲಕ್ಷ ಬಡಜನರಿಗೆ ನೆರವಾಗುವ ಉದ್ದೇಶ ಹೊಂದಿದೆ ಎಂದು ಒಸಿಎಚ್ಎ ಹೇಳಿದೆ.
ಫಿಲಿಪ್ಪೀನ್ಸ್: ಹೊಂಚುದಾಳಿಯಲ್ಲಿ ಇಬ್ಬರು ಯೋಧರು ಮೃತ್ಯು
ಮನಿಲಾ: ದಕ್ಷಿಣ ಫಿಲಿಪ್ಪೀನ್ಸ್ ನಲ್ಲಿ ವಿಶ್ವಸಂಸ್ಥೆ ನೇತೃತ್ವದಲ್ಲಿ ನಡೆಯುತ್ತಿರುವ `ಜೀವನೋಪಾಯ ಯೋಜನೆ'ಯ ಭದ್ರತೆಗಾಗಿ ನಿಯೋಜಿಸಲಾಗಿದ್ದ ಭದ್ರತಾ ಸಿಬ್ಬಂದಿಯ ಮೇಲೆ ಬಂದೂಕುಧಾರಿಗಳು ನಡೆಸಿದ ಹೊಂಚುದಾಳಿಯಲ್ಲಿ ಇಬ್ಬರು ಯೋಧರು ಸಾವನ್ನಪ್ಪಿದ್ದು ಇತರ 12 ಮಂದಿ ಗಾಯಗೊಂಡಿರುವುದಾಗಿ ಮಿಲಿಟರಿ ಅಧಿಕಾರಿಗಳು ಗುರುವಾರ ಹೇಳಿದ್ದಾರೆ. ವಿಶ್ವಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮಕ್ಕೆ ಭದ್ರತೆಗಾಗಿ ನಿಯೋಜಿಸಿದ್ದ ಯೋಧರನ್ನು ಕರೆದೊಯ್ಯುತ್ತಿದ್ದ ಸೇನೆಯ ಟ್ರಕ್ ಮೇಲೆ ಹೊಂಚು ದಾಳಿ ನಡೆಸಿದ್ದು ಟ್ರಕ್ಗೆ ಬೆಂಕಿ ಹಚ್ಚಿದ್ದಾರೆ. ಬಸಿಲಾನ್ ಪ್ರಾಂತ ಸುಮಿಸಿಪ್ ನಗರದಲ್ಲಿ ಬುಧವಾರ ಘಟನೆ ನಡೆದಿದ್ದು ಭದ್ರತಾ ಸಿಬ್ಬಂದಿ ನಡೆಸಿದ ಪ್ರತಿದಾಳಿಯಲ್ಲಿ ಇಬ್ಬರು ಬಂದೂಕುಧಾರಿಗಳು ಹತರಾಗಿದ್ದು ಉಳಿದವರು ಪರಾರಿಯಾಗಿದ್ದಾರೆ ಎಂದು ಫಿಲಿಪ್ಪೀನ್ಸ್ ಸೇನೆಯ ಮುಖ್ಯಸ್ಥ ಲೆ|ಜ| ರಾಯ್ ಗಲಿಡೊ ಹೇಳಿದ್ದಾರೆ. ದಾಳಿಕೋರರಲ್ಲಿ 2014ರಲ್ಲಿ ಸರಕಾರದೊಂದಿಗೆ ಶಾಂತಿ ಒಪ್ಪಂದಕ್ಕೆ ಸಹಿಹಾಕಿದ್ದ ಸಶಸ್ತ್ರ ಹೋರಾಟಗಾರರ ಗುಂಪು `ಮೊರೊ ಇಸ್ಲಾಮಿಕ್ ಲಿಬರೇಷನ್ ಫ್ರಂಟ್'ನ ಕೆಲವು ಸದಸ್ಯರೂ ಇದ್ದರು ಎಂದು ಮಿಲಿಟರಿ ಹೇಳಿದ್ದು ಇವರ ವಿರುದ್ಧ `ಮೊರೊ ಇಸ್ಲಾಮಿಕ್ ಲಿಬರೇಷನ್ ಫ್ರಂಟ್' ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದೆ.
ಎನ್ ಡಿಟಿವಿ ಸಾಲ ಮರುಪಾವತಿ ಪ್ರಕರಣ: ಸಿಬಿಐ ಸಲ್ಲಿಸಿದ ಮುಕ್ತಾಯ ವರದಿ ಸ್ವೀಕರಿಸಿದ ನ್ಯಾಯಾಲಯ
ಹೊಸದಿಲ್ಲಿ: ಎನ್ ಡಿಟಿವಿ ಮಾಧ್ಯಮ ಸಂಸ್ಥೆಯಿಂದ ಸಾಲ ಮರುಪಾವತಿ ಸ್ವೀಕರಿಸುವಲ್ಲಿ ಐಸಿಐಸಿಐ ಬ್ಯಾಂಕ್ ಅಕ್ರಮ ಆರೋಪದ ಪ್ರಕರಣದಲ್ಲಿ ಸಿಬಿಐ ಸಲ್ಲಿಸಿದ ಮುಕ್ತಾಯ ವರದಿಯನ್ನು ತೃಪ್ತಿಕರವಾಗಿದೆ ಎಂದು ದಿಲ್ಲಿ ನ್ಯಾಯಾಲಯ ಗುರುವಾರ ಅಂಗೀಕರಿಸಿದೆ. ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಶೈಲೇಂದರ್ ಮಲಿಕ್ ಅವರು ಸಿಬಿಐ ಸಲ್ಲಿಸಿದ ವರದಿಯನ್ನು ಪರಿಶೀಲಿಸಿದ ನಂತರ ಮುಕ್ತಾಯದ ವರದಿಯನ್ನು ಸ್ವೀಕರಿಸಿದ್ದಾರೆ. ಪ್ರಕರಣದ ದೂರುದಾರರು, ತನಿಖೆಯಿಂದ ತೃಪ್ತರಾಗಿದ್ದು, ಯಾವುದೇ ತಕರಾರು ಅರ್ಜಿ ಸಲ್ಲಿಸಲು ಬಯಸದ ಕಾರಣ ಮುಕ್ತಾಯದ ವರದಿಯನ್ನು ನ್ಯಾಯಾಲಯ ಸ್ವೀಕರಿಸಿದೆ. ಐಸಿಐಸಿಐ ಬ್ಯಾಂಕ್ ಮತ್ತು ಎನ್ ಡಿಟಿವಿ ಪ್ರವರ್ತಕರಾದ ಪ್ರಣಯ್ ರಾಯ್ ಮತ್ತು ರಾಧಿಕಾ ರಾಯ್ ನಡುವಿನ ವಹಿವಾಟಿನಲ್ಲಿ ಯಾವುದೇ ಅಕ್ರಮಗಳು ಕಂಡುಬಂದಿಲ್ಲ ಎಂದು ಆರು ವರ್ಷಗಳ ಸುದೀರ್ಘ ತನಿಖೆಯ ನಂತರ ಸಿಬಿಐ ಕಳೆದ ವರ್ಷ ವಿಶೇಷ ನ್ಯಾಯಾಲಯಕ್ಕೆ ಮುಕ್ತಾಯದ ವರದಿಯನ್ನು ಸಲ್ಲಿಸಿತ್ತು. ಯಾವುದೇ ಸಾರ್ವಜನಿಕ ಸೇವಕ ಅಥವಾ ಐಸಿಐಸಿಐ ಬ್ಯಾಂಕ್ ನ ಅಧಿಕಾರಿಗಳು ಯಾವುದೇ ರಹಸ್ಯ ಅಥವಾ ಕ್ರಿಮಿನಲ್ ಪಿತೂರಿ ಅಥವಾ ಅಧಿಕೃತ ಸ್ಥಾನವನ್ನು ದುರುಪಯೋಗಪಡಿಸಿಕೊಂಡಿಲ್ಲ ಎಂದು ಸಿಬಿಐ ವರದಿಯಲ್ಲಿ ಹೇಳಿಕೊಂಡಿದೆ.
ಒಬ್ಬರನ್ನು ತುಳಿದು ರಾಜಕೀಯ ಮಾಡುವುದು ಕಾಂಗ್ರೆಸ್ನಲ್ಲಿಲ್ಲ : ಚೆಲುವರಾಯಸ್ವಾಮಿ
ಬೆಂಗಳೂರು : ಒಬ್ಬರನ್ನು ತುಳಿದು ರಾಜಕೀಯ ಮಾಡುವುದು ಕಾಂಗ್ರೆಸ್ನಲ್ಲಿಲ್ಲ. ಇದು ನಡೆಯುವುದು ಬಿಜೆಪಿಯಲ್ಲಿ ಮಾತ್ರ ಎಂದು ಕೃಷಿ ಸಚಿವ ಚೆಲುವರಾಯಸ್ವಾಮಿ ತಿಳಿಸಿದ್ದಾರೆ. ಸಚಿವರಾದ ಸತೀಶ್ ಜಾರಕಿಹೊಳಿ, ಕೆ.ಎನ್.ರಾಜಣ್ಣರನ್ನು ಹಣಿಯಲು ಬಿಜೆಪಿ ನಾಯಕ ಶ್ರೀರಾಮುಲು ಅವರನ್ನು ಕಾಂಗ್ರೆಸ್ಗೆ ತರಲು ಡಿ.ಕೆ.ಶಿವಕುಮಾರ್ ಪ್ರಯತ್ನ ಮಾಡುತ್ತಿದ್ದಾರೆ ಎಂಬ ಜನಾರ್ದನ ರೆಡ್ಡಿಯವರ ಹೇಳಿಕೆ ವಿಚಾರವಾಗಿ ನಗರದಲ್ಲಿ ಸುದ್ದಿಗಾರರೊಂದಿಗೆ ಅವರು ಪ್ರತಿಕ್ರಿಯಿಸಿದರು. ಕಾಂಗ್ರೆಸ್ ಪಕ್ಷಕ್ಕೆ ಯಾರೇ ಬಂದರು, ಯಾರನ್ನೂ ತುಳಿಯಲು ಸಾಧ್ಯವಿಲ್ಲ. ಸತೀಶ್ ಜಾರಕಿಹೊಳಿ ಪಕ್ಷದ ಹಿರಿಯ ನಾಯಕರು. ಶ್ರೀರಾಮುಲು ಲೋಕಸಭೆ ಚುನಾವಣೆ ವೇಳೆ ಕಾಂಗ್ರೆಸ್ಗೆ ಬರುತ್ತಾರೆ ಎಂಬ ಮಾತಿತ್ತು. ಕಾಂಗ್ರೆಸ್ ಪಕ್ಷದ ಸಿದ್ಧಾಂತ ಒಪ್ಪಿ ಯಾರೇ ಬಂದರೂ ರಾಜ್ಯ ನಾಯಕರು ಮತ್ತು ಪಕ್ಷದ ಹೈಕಮಾಂಡ್ ಚರ್ಚಿಸಿ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳಲಾಗುತ್ತದೆ ಎಂದು ಚೆಲುವರಾಯಸ್ವಾಮಿ ಹೇಳಿದರು. ಲೋಕಸಭೆ ಉಪಚುನಾವಣೆ ಸಂದರ್ಭದಲ್ಲಿ ಅನೇಕರು ಕಾಂಗ್ರೆಸ್ಗೆ ಬರುತ್ತಾರೆಂಬ ಸುದ್ದಿ ಇತ್ತು. ಆದಾದ ಮೇಲೆ ನಾವು ಮೂರೂ ಉಪಚುನಾವಣೆ ಗೆದ್ದ ಬಳಿಕ ಬಿಜೆಪಿ, ಜೆಡಿಎಸ್ನಿಂದ ಅನೇಕರು ಬರುವುದಕ್ಕೆ ಸಿದ್ಧರಿದ್ದಾರೆ. ಯಾರನ್ನು ಸೇರಿಸಿಕೊಳ್ಳಬೇಕು ಎಂದು ಪಕ್ಷದ ನಾಯಕರು, ಹೈಕಮಾಂಡ್ ತೀರ್ಮಾನ ಮಾಡುತ್ತದೆ. ನಮ್ಮ ಪಕ್ಷದಲ್ಲಿ ಯಾವುದೇ ಗೊಂದಲ ಇಲ್ಲ. ನಮಗೆ ಯಾರ ಅವಶ್ಯಕತೆಯೂ ಇಲ್ಲ, ಪಕ್ಷದ ಸಿದ್ಧಾಂತ ಒಪ್ಪಿ ಬಂದರೆ ಸ್ವಾಗತ ಎಂದು ಚೆಲುವರಾಯಸ್ವಾಮಿ ಹೇಳಿದರು. ಕಾಂಗ್ರೆಸ್ ಹೈಕಮಾಂಡ್ ಸ್ಟ್ರಾಂಗ್ ಇದೆ: ಜನಾರ್ದನ ರೆಡ್ಡಿ ಮೊದಲು ಅವರ ಪಕ್ಷ ಸರಿ ಮಾಡಿಕೊಳ್ಳಲಿ. ಮೊದಲು ಯತ್ನಾಳ್, ರಮೇಶ್ ಜಾರಕಿಹೊಳಿಯನ್ನು ಸರಿ ಮಾಡಿ, ಆಮೇಲೆ ಮಾತನಾಡಲಿ. ಅವರ ಪಕ್ಷದ ಬಣ ರಾಜಕೀಯವನ್ನು ನಿಲ್ಲಿಸಲು ಬಿಜೆಪಿ ಹೈಕಮಾಂಡ್ಗೆ ಸಾಧ್ಯವಾಗಿಲ್ಲ. ಕಾಂಗ್ರೆಸ್ನಲ್ಲಿ ಹೈಕಮಾಂಡ್ ಸ್ಟ್ರಾಂಗ್ ಇದೆ. ಅಲ್ಲದೇ ಎಐಸಿಸಿ ಭದ್ರವಾಗಿದೆ ಎಂದು ಸಚಿವ ಚೆಲುವರಾಯಸ್ವಾಮಿ ತಿಳಿಸಿದರು.
ಕರ್ನಾಟಕ ಕ್ರೀಡಾಕೂಟ| ಜಾಫರ್ ಖಾನ್, ನಿಯೋಲೆ ಕೂಟದ ‘ಶ್ರೇಷ್ಠ ಅತ್ಲೀಟ್’
ಉಡುಪಿ, ಜ.23: ಬೆಂಗಳೂರಿನ ಗಗನ್ ಎಲ್.ಗೌಡ ಹಾಗೂ ನಿಯೋಲೆ ಅನ್ನಾ ಕಾರ್ನೆಲಿಯೋ ಅವರು ಉಡುಪಿಯ ಅಜ್ಜರಕಾಡಿನ ಮಹಾತ್ಮಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಇಂದು ನಡೆದ ಕರ್ನಾಟಕ ಕ್ರೀಡಾಕೂಟ-2025ರ ಅತ್ಲೆಟಿಕ್ ವಿಭಾಗದ 100ಮೀ. ಸ್ಪ್ರಿಂಟ್ನಲ್ಲಿ ಕ್ರಮವಾಗಿ ಪುರುಷರ ಹಾಗೂ ಮಹಿಳೆಯರ ವಿಭಾಗದಲ್ಲಿ ಕೂಟದ ವೇಗದ ಓಟಗಾರರಾಗಿ ಮೂಡಿಬಂದರು. ಅತ್ಯಂತ ರೋಚಕ ಹಾಗೂ ಅತ್ಯಂತ ನಿಕಟವಾಗಿ ಮುಕ್ತಾಯಗೊಂಡ ಪುರುಷರ 100ಮೀ. ಓಟದಲ್ಲಿ ಗಗನ್ ಅವರು 0.01ಸೆ. ಅಂತರದಲ್ಲಿ ತನ್ನ ನಿಕಟ ಪ್ರತಿಸ್ಪರ್ಧಿ ಚಾಮರಾಜನಗರದ ರವಿಕಿರಣ್ ಅವರನ್ನು ಹಿಂದೆ ಸರಿಸಿ ಗುರಿಮುಟ್ಟುವ ಮೂಲಕ ಚಿನ್ನದ ಪದಕವನ್ನು ಗೆದ್ದುಕೊಂಡರು. ರವಿಕಿರಣ್ ಅವರು ಸಹ ದಕ್ಷಿಣ ಕನ್ನಡದ ಸುಜನ್ ಥಾಮಸ್ರನ್ನು 0.01ಸೆ.ನಿಂದ ಹಿಂದಿಕ್ಕಿ ಬೆಳ್ಳಿಪದಕ ಪಡೆದರು. ಪುರುಷರ 100ಮೀ. ಓಟದಲ್ಲಿ ಈ ಕೂಟದ ಅತ್ಯಂತ ರೋಚಕ ಸ್ಪರ್ಧೆ ಕಂಡುಬಂತು. ಓಟದ ಪ್ರಾರಂಭದಿಂದಲೇ ಗಗನ್, ರವಿಕಿರಣ್ ಹಾಗೂ ಸುಜನ್ ನಡುವೆ ಮುನ್ನಡೆಗಾಗಿ ಭಾರೀ ಪ್ರಯತ್ನ ಕಂಡುಬಂತು. ಮೂವರು ಒಂದೇ ಕ್ಷಣದಲ್ಲಿ ಗುರಿಮುಟ್ಟಿದಂತೆ ಕಂಡುಬಂದರೂ, ಕೊನೆಯ ಕೆಮರಾ ಕಣ್ಣಿನ ಮೂಲಕ ಕ್ರೀಡಾಕೂಟದ ತಾಂತ್ರಿಕ ಅಧಿಕಾರಿಗಳು ಹಲವು ಬಾರಿ ಪರಿಶೀಲಿಸಿ ಅಂತಿಮವಾಗಿ ಪದಕ ವಿಜೇತರ ಹೆಸರುಗಳನ್ನು ಪ್ರಕಟಿಸಿದರು. ಮಹಿಳೆಯರ 100ಮೀ.ನಲ್ಲಿ ನಿಯೋಲೆ ಅವರ ಮೇಲುಗೈ ಸ್ಪಷ್ಟವಿತ್ತು. ಉಡುಪಿಯ ಸ್ತುತಿ ಪಿ.ಶೆಟ್ಟಿ ನಿಕಟ ಸ್ಪರ್ಧೆ ನೀಡಲು ಪ್ರಯತ್ನಿಸಿದರೂ ಸ್ವಲ್ಪದರಲ್ಲೇ ವಿಫಲರಾದರು. ಈಗಾಗಲೇ 200ಮೀ.ನಲ್ಲೂ ಬೆಳ್ಳಿ ಪದಕ ಗೆದ್ದಿರುವ ಸ್ತುತಿ ಸ್ಪ್ರಿಂಟ್ನಲ್ಲಿ ಎರಡು ಬೆಳ್ಳಿ ಪದಕ ಗೆದ್ದ ಸಾಧನೆ ಮಾಡಿದರು. ಉಳಿದಂತೆ ಪುರುಷರ ಹೈಜಂಪ್ನಲ್ಲಿ 1.85ಮೀ. ಎತ್ತರ ನೆಗೆದ ಉಡುಪಿಯ ಸಿನನ್ ಅವರು ಜಯಿಸಿದರೆ, ಗುಂಡನ್ನು 15.66ಮೀ. ದೂರ ಎಸೆದ ಪ್ರಜ್ವಲ್ ಶೆಟ್ಟಿ ಉಡುಪಿಗೆ ಮತ್ತೊಂದು ಚಿನ್ನದ ಪದಕ ನೀಡಿದರು. ದಿನದ ಅತ್ಲೆಟಿಕ್ಸ್ ಫಲಿತಾಂಶ: ಪುರುಷರ ವಿಭಾಗ 100ಮೀ.: ಗಗನ್ ಎಲ್.ಗೌಡ ಬೆಂಗಳೂರು (10.63ಸೆ.), 2.ರವಿಕಿರಣ್ ಚಾಮರಾಜನಗರ, 3.ಶಿಜನ್ ಥಾಮಸ್ ದಕ್ಷಿಣ ಕನ್ನಡ. 400ಮೀ. ಹರ್ಡಲ್ಸ್:1.ಭೂಷಣ ಸುನಿಲ್ ಪಾಟೀಲ್ ಬೆಳಗಾವಿ (53.81ಸೆ.), 2.ರಾಹುಲ್ ನಾಯಕ್ ಎನ್. ಮೈಸೂರು, 3.ಭಾಗ್ಯವಂತ ಎನ್. ಕಲಬುರ್ಗಿ. 5,000ಮೀ.:1.ಸಂದೀಪ್ ಟಿ.ಎಸ್. ತುಮಕೂರು (15ನಿ.00.07ಸೆ.), 2.ವೈಭವ ಮಾರುತಿ ಪಾಟೀಲ್ ಬೆಂಗಳೂರು, 3.ಗುರುಪ್ರಸಾದ್ ತುಮಕೂರು. ಹೈಜಂಪ್:1.ಸಿನನ್ ಉಡುಪಿ(1.85ಮೀ.), 2.ಭವಿತ್ಕುಮಾರ್ ಉಡುಪಿ, 3.ಕೆ.ಆರ್.ಯಶ್ವಿನ್ ದಕ್ಷಿಣ ಕನ್ನಡ. ಶಾಟ್ಪುಟ್: 1.ಪ್ರಜ್ವಲ್ ಎಂ.ಶೆಟ್ಟಿ ಉಡುಪಿ (15.66ಮೀ.), 2.ಮುಹಮ್ಮದ್ ಸಕ್ಲೇನ್ ಅಹ್ಮದ್ ಮೈಸೂರು, 3.ಮನುಷ್ ಬಿ. ಮೈಸೂರು. ಮಹಿಳೆಯರ ವಿಭಾಗ 100ಮೀ.:1.ನಿಯೋಲೆ ಅನ್ನಾ ಕಾರ್ನೆಲಿಯೊ ಬೆಂಗಳೂರು (11.93ಸೆ.), 2.ಸ್ತುತಿ ಪಿ.ಶೆಟ್ಟಿ ಉಡುಪಿ, 3.ವರ್ಷಾ ವಿ. ಬೆಂಗಳೂರು. 400ಮೀ. ಹರ್ಡಲ್ಸ್: 1.ದಿಕ್ಷೀತಾ ರಾಮಕೃಷ್ಣ ಗೌಡ, ಉತ್ತರಕನ್ನಡ (1ನಿ.03.1ಸೆ.), 2.ಅಪೂರ್ವ ಆನಂದ ನಾಯ್ಕ್ ಬೆಳಗಾವಿ, 3.ಅರ್ನಿಕಾ ವರ್ಷಾ ಡಿಸೋಜ ಉಡುಪಿ. 5000ಮೀ.:1.ತೇಜಸ್ವಿನಿ ಎನ್.ಎಲ್. ಕೊಡಗು (19ನಿ.27.20ಸೆ.), 2.ಪ್ರಣಾಮ್ಯ ಎನ್. ಶಿವಮೊಗ್ಗ, 3.ಶುಭಾಂಗಿ ಪ್ರಮೋದ್ ಕಾಕತ್ಕರ್ ಬೆಳಗಾವಿ. ಹೈಜಂಪ್: 1.ಪಲ್ಲವಿ ಎಸ್.ಪಾಟೀಲ್ ಯಾದಗಿರಿ (1.76ಮೀ.), 2.ಎಸ್.ಬಿ.ಸುಪ್ರಿಯಾ ಚಿಕ್ಕಮಗಳೂರು, 3.ಎಫ್.ವಿ.ಮೊಂತೆರೋ ದಕ್ಷಿಣ ಕನ್ನಡ.
ಪಶ್ಚಿಮದಂಡೆ: ಇಸ್ರೇಲ್ ದಾಳಿಯಲ್ಲಿ ಇಬ್ಬರು ಮೃತ್ಯು
ರಮಲ್ಲಾ: ಆಕ್ರಮಿತ ಪಶ್ಚಿಮದಂಡೆಯ ಜೆನಿನ್ ನಗರದಲ್ಲಿ ಬುಧವಾರ ರಾತ್ರಿ ನಡೆಸಿದ ಕಾರ್ಯಾಚರಣೆಯಲ್ಲಿ ಇಬ್ಬರು ಫೆಲೆಸ್ತೀನ್ ಸಶಸ್ತ್ರ ಹೋರಾಟಗಾರರನ್ನು ಹತ್ಯೆ ಮಾಡಿರುವುದಾಗಿ ಇಸ್ರೇಲಿ ಮಿಲಿಟರಿ ಗುರುವಾರ ಹೇಳಿದೆ. ಬುರ್ಕಿನ್ ಗ್ರಾಮದ ಮನೆಯೊಂದರಲ್ಲಿ ಇಬ್ಬರು ಸಶಸ್ತ್ರ ಹೋರಾಟಗಾರರು ಇರುವ ಬಗ್ಗೆ ದೊರೆತ ಮಾಹಿತಿಯಂತೆ ಇಸ್ರೇಲ್ ಪಡೆಗಳು ಮನೆಯನ್ನು ಸುತ್ತುವರಿದಿವೆ. ಆಗ ಮನೆಯೊಳಗಿಂದ ಗುಂಡಿನ ದಾಳಿ ಆರಂಭವಾಗಿದ್ದು ಇಸ್ರೇಲ್ ಪಡೆಯ ಪ್ರತಿದಾಳಿಯಲ್ಲಿ ಇಬ್ಬರನ್ನೂ ಹತ್ಯೆ ಮಾಡಲಾಗಿದೆ. ಘರ್ಷಣೆಯಲ್ಲಿ ಓರ್ವ ಯೋಧ ಗಾಯಗೊಂಡಿದ್ದಾನೆ. ಹತರಾದವರನ್ನು ಮುಹಮ್ಮದ್ ನಝಾಲ್ ಮತ್ತು ಕುತೈಬಾ ಶಲಾಬಿ ಎಂದು ಗುರುತಿಸಲಾಗಿದ್ದು ಇವರು ಜನವರಿ 6ರಂದು ಪಶ್ಚಿಮದಂಡೆಯಲ್ಲಿ ಬಸ್ಸಿನ ಮೇಲೆ ಗುಂಡಿನ ದಾಳಿ ನಡೆಸಿದವರು ಎಂದು ಇಸ್ರೇಲ್ ಭದ್ರತಾ ಪಡೆ ಹೇಳಿದೆ. ಜನವರಿ 6ರ ದಾಳಿಯಲ್ಲಿ ಮೂವರು ಇಸ್ರೇಲಿಯನ್ನರು ಮೃತಪಟ್ಟಿದ್ದು ಇತರ 6 ಮಂದಿ ಗಾಯಗೊಂಡಿದ್ದರು.
ದುಬೈನಿಂದ ಮಂಗಳೂರಿಗೆ ಬಂದಿದ್ದ ವ್ಯಕ್ತಿಯಲ್ಲಿ ಮಂಕಿಪಾಕ್ಸ್ ಪತ್ತೆ; ಹೆಚ್ಚಿದ ಆತಂಕ
ತೀವ್ರ ಆತಂಕ ಸೃಷ್ಟಿಸಿರುವ ಮಂಕಿಪಾಕ್ಸ್ ಪ್ರಕರಣ ಉಡುಪಿ ಜಿಲ್ಲೆಯ ಕಾರ್ಕಳ ಮೂಲದ 40 ವರ್ಷದ ವ್ಯಕ್ತಿಯೊಬ್ಬರಲ್ಲಿ ಪತ್ತೆಯಾಗಿದೆ. ಪುಣೆಯ ರಾಷ್ಟ್ರೀಯ ವೈರಾಲಜಿ ಸಂಸ್ಥೆ (ಎನ್ಐವಿ) ಜ.22 ರಂದು ಮಂಕಿಪಾಕ್ಸ್ ಪ್ರಕರಣವನ್ನು ದೃಢಪಡಿಸಿದೆ. ಕಳೆದ 19 ವರ್ಷಗಳಿಂದ ದುಬೈನಲ್ಲಿ ನೆಲೆಸಿರುವ ರೋಗಿಯು ಜ.17 ರಂದು ಮಂಗಳೂರಿಗೆ ಬಂದಿದ್ದಾರೆ. ನಂತರದಲ್ಲಿ ಅವರಲ್ಲಿ ಮಂಕಿಪಾಕ್ಸ್ ರೋಗದ ಲಕ್ಷಣಗಳು ಕಂಡು ಬಂದಿವೆ. ಬಳಿಕ ಜ್ವರ ಬಂದಿದೆ. ಹೀಗಾಗಿ ವೈದ್ಯರನ್ನು ಭೇಟಿಯಾಗಿದ್ದರು. ಮಂಕಿಪಾಕ್ಸ್ ರೋಗಕ್ಕೆ ತುತ್ತಾಗಿರುವ ಅನುಮಾನದ ಮೇರೆಗೆ ತಕ್ಷಣವೇ ವಿವಿಧ ಮಾದರಿಗಳನ್ನು ಬೆಂಗಳೂರು ವೈದ್ಯಕೀಯ ಕಾಲೇಜಿಗೆ (BMC) ಮತ್ತು ಎನ್ಐವಿಗೆ ಕಳುಹಿಸಲಾಗಿತ್ತು.
ನಾನು ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದ ಆಕಾಂಕ್ಷಿಯಲ್ಲ: ಬಸವರಾಜ ಬೊಮ್ಮಾಯಿ
ಹಾವೇರಿ : ನಾನು ಬಿಜೆಪಿ ಪಕ್ಷದ ರಾಜ್ಯಾಧ್ಯಕ್ಷ ಸ್ಥಾನದ ಆಕಾಂಕ್ಷಿ ಅಲ್ಲ. ಪಕ್ಷವನ್ನು ಒಂದೂಗೂಡಿಸುವುದರಲ್ಲಿ ಮುಂದಾಗುವೆ ಎಂದು ಸಂಸದ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ತಮ್ಮ ಹೆಸರು ಕೇಳಿ ಬಂದಿದೆ ಎನ್ನುವ ಕುರಿತು ಗುರುವಾರ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಸಾಮಾಜಿಕ ಜಾಲತಾಣದಲ್ಲಿ ನನ್ನ ಹೆಸರು, ನಿಮ್ಮ ಹೆಸರು ಕೇಳಿ ಬರುತ್ತದೆ. ಅದೆಲ್ಲಾ ಏನೂ ಮಹತ್ವ ಅಲ್ಲ, ನಾನೇನು ಆಕಾಂಕ್ಷಿ ಅಲ್ಲ ಎಂದರು. ಒಬ್ಬಂಟಿಯಾಗಿ ಪಕ್ಷ ಕಟ್ಟುವ ಭ್ರಮೆ ನಮ್ಮಲ್ಲಿ ಇಲ್ಲ. ಎಲ್ಲರೂ ಕೂಡಿದಾಗಲೇ ಒಗ್ಗಟ್ಟಿನ ಶಕ್ತಿ ಆಗುತ್ತದೆ. ಬಿಜೆಪಿ ಜನಮಾನಸದಲ್ಲಿ ಇರುವಂತ ಪಕ್ಷ. ಅದಕ್ಕಾಗಿ ಒಮ್ಮೊಮ್ಮೆ ಪೈಪೋಟಿ ಇರುತ್ತದೆ. ಹಿರಿಯರ ಮಾರ್ಗದರ್ಶನದಲ್ಲಿ ನಾವು ನಡೆಯಬೇಕಾಗುತ್ತದೆ. ಸೌಹಾರ್ದತೆಯಿಂದ ಚುನಾವಣೆ ಆಗುತ್ತದೆ ಎಂದು ಅವರು ಹೇಳಿದರು. ಮಾಜಿ ಸಚಿವ ಶ್ರೀರಾಮುಲು ಹಾಗೂ ಗಾಲಿ ಜನಾರ್ದನ ರೆಡ್ಡಿ ನಡುವೆ ನಡೆಯುತ್ತಿರುವ ವಾಕ್ ಸಮರದ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಬಸವರಾಜ ಬೊಮ್ಮಾಯಿ, ರಾಮುಲು ಹಾಗೂ ಜನಾರ್ದನ ರೆಡ್ಡಿ ಆತ್ಮೀಯ ಸ್ನೇಹಿತರು. ಒಮ್ಮೊಮ್ಮೆ ಈ ರೀತಿ ವ್ಯತ್ಯಾಸಗಳು ಕಂಡು ಬರುತ್ತವೆ. ಆನಂತರ ಎಲ್ಲ ಸರಿಹೋಗುತ್ತದೆ. ಪಕ್ಷದ ಹಿತದೃಷ್ಟಿಯಿಂದ ಇಬ್ಬರ ಹತ್ತಿರ ಸೌಹಾರ್ದ ಭೇಟಿಯಾಗಿ ಸಮಸ್ಯೆ ಬಗೆಹರಿಸುವ ಪ್ರಯತ್ನ ಮಾಡುವೆ ಎಂದು ಹೇಳಿದರು.
ಪಶ್ಚಿಮದಂಡೆಯ ಅಕ್ರಮ ಸ್ವಾಧೀನಕ್ಕೆ ಅವಕಾಶ ನೀಡಬಾರದು: ಸ್ಲೊವೇನಿಯಾ
ಲುಬ್ಲಿಯಾನಾ: ಗಾಝಾದಲ್ಲಿ ಶಾಶ್ವತ ಕದನ ವಿರಾಮ ಜಾರಿಗೊಳ್ಳುವುದು ಅಂತರಾಷ್ಟ್ರೀಯ ಶಾಂತಿ ಮತ್ತು ಭದ್ರತೆಯ ನಿಟ್ಟಿನಲ್ಲಿ ಅತ್ಯಗತ್ಯವಾಗಿದೆ ಎಂದು ಸ್ಲೊವೇನಿಯಾದ ವಿದೇಶಾಂಗ ಇಲಾಖೆ ಪ್ರತಿಪಾದಿಸಿದೆ. ಫೆಲೆಸ್ತೀನ್ಗೆ ರಾಷ್ಟ್ರದ ಸ್ಥಾನಮಾನವನ್ನು ಮಾನ್ಯ ಮಾಡಿರುವ ಸ್ಲೊವೇನಿಯಾ, ಎರಡು ರಾಷ್ಟ್ರ ಪರಿಹಾರ ಸೂತ್ರವನ್ನು ತಕ್ಷಣ ಜಾರಿಗೊಳಿಸುವಂತೆ ಆಗ್ರಹಿಸುತ್ತಿದೆ. ಪಶ್ಚಿಮ ದಂಡೆಯ ಅಕ್ರಮ ಸ್ವಾಧೀನಕ್ಕೆ ಯಾವತ್ತೂ ಅವಕಾಶ ನೀಡಬಾರದು ಎಂದು ಸ್ಲೊವೇನಿಯಾದ ವಿದೇಶಾಂಗ ಸಚಿವೆ ತಂಜಾ ಫಜೋನ್ ಹೇಳಿದ್ದಾರೆ. ಕದನ ವಿರಾಮ ಜಾರಿಗೊಂಡ ಬಳಿಕದ ಬೆಳವಣಿಗೆಯನ್ನು ನಿರೀಕ್ಷೆ ಮತ್ತು ನಿರಾಳತೆಯಿಂದ ಗಮನಿಸುತ್ತಿದ್ದೇವೆ. ಸಂಬಂಧಿತ ಪಕ್ಷಗಳು ಕದನ ವಿರಾಮದ ಅಂಶಗಳಿಗೆ ಎಲ್ಲಾ ಹಂತಗಳಲ್ಲೂ ಬದ್ಧರಾಗಿದ್ದರೆ ಹಗೆತನದ ಶಾಶ್ವತ ನಿಲುಗಡೆ ಮತ್ತು ಈ ಪ್ರದೇಶದಲ್ಲಿ ಬಹುನಿರೀಕ್ಷಿತ ಶಾಂತಿಯ ಉದಯಕ್ಕೆ ಕಾರಣವಾಗುತ್ತದೆ ಎಂದವರು ಹೇಳಿದ್ದಾರೆ.
ಪಶ್ಚಿಮದಂಡೆಯಲ್ಲಿ ಇಸ್ರೇಲಿ ಪಡೆಗಳ ಕಾರ್ಯಾಚರಣೆ | ಸ್ಥಳಾಂತರಗೊಳ್ಳುವಂತೆ ಸ್ಥಳೀಯರಿಗೆ ಸೂಚನೆ
ರಮಲ್ಲ: ಗಾಝಾದಲ್ಲಿ ಕದನ ವಿರಾಮ ಜಾರಿಗೊಂಡ ಎರಡನೇ ದಿನವಾದ ಮಂಗಳವಾರದಿಂದ ಪಶ್ಚಿಮದಂಡೆಯಲ್ಲಿ ಇಸ್ರೇಲಿ ಮಿಲಿಟರಿ ಕಾರ್ಯಾಚರಣೆ ತೀವ್ರಗೊಳಿಸಿದ್ದು ತಕ್ಷಣ ಸ್ಥಳಾಂತರಗೊಳ್ಳುವಂತೆ ಸ್ಥಳೀಯ ನಿವಾಸಿಗಳಿಗೆ ಧ್ವನಿವರ್ಧಕಗಳ ಮೂಲಕ ಎಚ್ಚರಿಕೆ ಸಂದೇಶ ರವಾನಿಸುತ್ತಿದೆ ಎಂದು ವರದಿಯಾಗಿದೆ. ಇಸ್ರೇಲ್ ಸೇನೆ ಡ್ರೋನ್ಗಳಲ್ಲಿ ಹಾಗೂ ಸೇನಾ ವಾಹನಗಳಲ್ಲಿ ಧ್ವನಿವರ್ಧಕದ ಮೂಲಕ ಸ್ಥಳೀಯರಿಗೆ ಸ್ಥಳಾಂತರಗೊಳ್ಳುವಂತೆ ಆದೇಶಿಸುತ್ತಿದೆ. ಇದರಿಂದ ಆತಂಕಗೊಂಡ ನೂರಾರು ಫೆಲೆಸ್ತೀನೀಯರು ಈಗಾಗಲೇ ಪಶ್ಚಿಮದಂಡೆಯ ನಿರಾಶ್ರಿತರ ಶಿಬಿರವನ್ನು ತೊರೆದು ಸುರಕ್ಷಿತ ಪ್ರದೇಶದತ್ತ ತೆರಳುತ್ತಿದ್ದಾರೆ ಎಂದು ಫೆಲೆಸ್ತೀನ್ ಅಧಿಕಾರಿಗಳು ಹೇಳಿದ್ದಾರೆ. ಪಶ್ಚಿಮದಂಡೆಯಲ್ಲಿ ಇರುವ ನಿರಾಶ್ರಿತರ ಶಿಬಿರ ಹಾಗೂ ಜೆನಿನ್ ನಗರದಲ್ಲಿ ಇರುವ ಫೆಲೆಸ್ತೀನಿಯನ್ ಸಶಸ್ತ್ರ ಹೋರಾಟಗಾರರನ್ನು ಬೇರುಸಹಿತ ಕಿತ್ತುಹಾಕುವುದು ಮಂಗಳವಾರ ಆರಂಭಿಸಲಾದ ಕಾರ್ಯಾಚರಣೆಯ ಉದ್ದೇಶವಾಗಿದೆ ಎಂದು ಇಸ್ರೇಲಿ ಮಿಲಿಟರಿ ಹೇಳಿದೆ. ಎರಡು ದಿನದ ಕಾರ್ಯಾಚರಣೆಯಲ್ಲಿ ಕನಿಷ್ಠ 12 ಫೆಲೆಸ್ತೀನೀಯರು ಸಾವನ್ನಪ್ಪಿದ್ದು 40ಕ್ಕೂ ಅಧಿಕ ಮಂದಿ ಗಾಯಗೊಂಡಿರುವುದಾಗಿ ಫೆಲೆಸ್ತೀನಿಯನ್ ಆರೋಗ್ಯ ಇಲಾಖೆ ಹೇಳಿದೆ. ಪಶ್ಚಿಮದಂಡೆಯಲ್ಲಿ ಇಸ್ರೇಲಿ ಮಿಲಿಟರಿ ಬೃಹತ್ ದಾಳಿ ಆರಂಭಿಸಿದ ಹಿನ್ನೆಲೆಯಲ್ಲಿ ಶಿಬಿರದ ನಿವಾಸಿಗಳು ಆತಂಕಗೊಂಡಿದ್ದು ನೂರಾರು ಮಂದಿ ಈಗಾಗಲೇ ಶಿಬಿರ ತೊರೆದಿದ್ದಾರೆ. ಗುಂಡಿನ ಸದ್ದು, ಸ್ಫೋಟಗಳು ಜೆನಿನ್ ನಗರವನ್ನು ನಡುಗಿಸಿವೆ ಎಂದು ಜೆನಿನ್ ನಗರದ ಗವರ್ನರ್ ಅಬು ಅಲ್-ರಬ್ರನ್ನು ಉಲ್ಲೇಖಿಸಿ ಎಎಫ್ಪಿ ಸುದ್ದಿಸಂಸ್ಥೆ ವರದಿ ಮಾಡಿದೆ. ಜೆನಿನ್ನಲ್ಲಿನ ನಿವಾಸಿಗಳಿಗೆ ಸ್ಥಳಾಂತರಗೊಳ್ಳುವ ಆದೇಶದ ಬಗ್ಗೆ ಇದುವರೆಗೆ ಮಾಹಿತಿಯಿಲ್ಲ ಎಂದು ಇಸ್ರೇಲ್ ಸೇನೆ ಪ್ರತಿಕ್ರಿಯಿಸಿದೆ. 2023ರ ಅಕ್ಟೋಬರ್ ತಿಂಗಳಿನಲ್ಲಿ ಗಾಝಾದಲ್ಲಿ ಯುದ್ಧ ಉಲ್ಬಣಗೊಂಡ ಬಳಿಕ ಪಶ್ಚಿಮದಂಡೆ ಪ್ರದೇಶದಿಂದ ಇಸ್ರೇಲ್ ನತ್ತ ಸಾವಿರಾರು ದಾಳಿಯ ಪ್ರಯತ್ನಗಳು ನಡೆದಿವೆ. ಇದೀಗ ನಡೆಯುತ್ತಿರುವ ಕಾರ್ಯಾಚರಣೆಯು ಪಶ್ಚಿಮದಂಡೆಯಲ್ಲಿ ಹೋರಾಟಗಾರರ ವಿರುದ್ಧದ ವ್ಯಾಪಕ ಅಭಿಯಾನದ ಭಾಗವಾಗಿದೆ ಎಂದು ಇಸ್ರೇಲ್ ಅಧಿಕಾರಿಗಳು ಹೇಳಿದ್ದಾರೆ. ` ಫೆಲೆಸ್ತೀನಿಯನ್ ಹೋರಾಟಗಾರರ ಭದ್ರಕೋಟೆ ಎನಿಸಿಕೊಂಡಿರುವ ಪಶ್ಚಿಮದಂಡೆಯಲ್ಲಿ ಆರಂಭಿಸಲಾದ `ಆಪರೇಷನ್ ಕಬ್ಬಿಣದ ಗೋಡೆ'ಯು ಹೋರಾಟಗಾರರನ್ನು ನಿರ್ಮೂಲನೆ ಮಾಡುತ್ತದೆ ಎಂದು ಇಸ್ರೇಲಿ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹೇಳಿದ್ದಾರೆ. *ಸೌದಿ ಅರೆಬಿಯಾ ಖಂಡನೆ ಆಕ್ರಮಿತ ಪಶ್ಚಿಮದಂಡೆಯ ಜೆನಿನ್ ಪ್ರದೇಶದಲ್ಲಿ ಇಸ್ರೇಲಿ ಪಡೆಗಳ ದಾಳಿಯನ್ನು ಸೌದಿ ಅರೆಬಿಯಾ ಖಂಡಿಸಿರುವುದಾಗಿ `ಸೌದಿ ಪ್ರೆಸ್ ಏಜೆನ್ಸಿ' ಗುರುವಾರ ವರದಿ ಮಾಡಿದೆ. ಸಂಬಂಧಿತ ಅಂತರಾಷ್ಟ್ರೀಯ ಕಾನೂನುಗಳು ಮತ್ತು ಒಪ್ಪಂದಗಳ ಇಸ್ರೇಲಿ ಉಲ್ಲಂಘನೆಯನ್ನು ತಡೆಯುವ ನಿಟ್ಟಿನಲ್ಲಿ ಅಂತರಾಷ್ಟ್ರೀಯ ಸಮುದಾಯ ತನ್ನ ಜವಾಬ್ದಾರಿಗಳನ್ನು ನಿರ್ವಹಿಸಬೇಕೆಂಬ ಆಗ್ರಹವನ್ನು ಸೌದಿ ಪುನರುಚ್ಚರಿಸುತ್ತದೆ ಎಂದು ಸೌದಿ ಅರೆಬಿಯಾದ ವಿದೇಶಾಂಗ ಇಲಾಖೆ ಹೇಳಿದೆ. ಈ ಉಲ್ಲಂಘನೆಗಳ ಮುಂದುವರಿಕೆಯು ಹೋರಾಟ ಮತ್ತು ಅವ್ಯವಸ್ಥೆ ಆಕ್ರಮಿತ ಫೆಲೆಸ್ತೀನಿಯನ್ ಪ್ರದೇಶಗಳಿಗೆ ಮರಳಲು ಕಾರಣವಾಗಬಹುದು. ನಾಗರಿಕರ ಭದ್ರತೆ ಮತ್ತು ಸುರಕ್ಷತೆಯನ್ನು ಅಪಾಯಕ್ಕೆ ಸಿಲುಕಿಸುತ್ತದೆ ಮತ್ತು ಪ್ರದೇಶದಲ್ಲಿ ಶಾಂತಿಯ ಸಾಧ್ಯತೆಯನ್ನು ಹಾಳು ಮಾಡುತ್ತದೆ ಎಂದು ಸೌದಿ ಅರೆಬಿಯಾ ಎಚ್ಚರಿಸಿದೆ.
ಚಿತ್ರದುರ್ಗ: ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿಗಳು ಸ್ಥಗಿತವಾಗಿಲ್ಲ. ಆದರೆ, ಶೀಘ್ರಗತಿಯಲ್ಲಿ ಕಾಮಗಾರಿಗಳು ನಡೆಯುತ್ತಿಲ್ಲ. ಗುತ್ತಿಗೆದಾರಿಗೆ ಈ ವರ್ಷ 800 ಕೋಟಿ ರೂ. ಪಾವತಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ಗುರುವಾರ ಜಿಲ್ಲೆಯ ವಾಣಿವಿಲಾಸ ಸಾಗರಕ್ಕೆ ಬಾಗಿನ ಅರ್ಪಿಸಿದ ಬಳಿಕ ಮಾತನಾಡಿದ ಅವರು, ಭದ್ರಾ ಮೇಲ್ದಂಡೆ ಯೋಜನೆಗೆ 5300 ಕೋಟಿ ರೂ.ಗಳನ್ನು ನೀಡುವುದಾಗಿ 2023-24ರ ಕೇಂದ್ರ ಬಜೆಟ್ನಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಘೋಷಿಸಿದ್ದರು. ಆ ವೇಳೆ ಸಿಎಂ ಆಗಿದ್ದ ಬಸವರಾಜ ಬೊಮ್ಮಾಯಿಯವರು ತಮ್ಮ ಬಜೆಟ್ ನಲ್ಲಿಯೂ ಇದನ್ನು ಪುನರುಚ್ಚರಿಸಿದ್ದರು. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಭದ್ರಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆಯನ್ನಾಗಿ ಮಾಡುವುದಾಗಿ ಹೇಳಿದ್ದರು. ಇಷ್ಟು ವರ್ಷಗಳಾದರೂ ಒಂದು ಪೈಸೆಯೂ ರಾಜ್ಯಕ್ಕೆ ಬಂದಿಲ್ಲ. ಸರಕಾರ ಅನೇಕ ಬಾರಿ ಕೇಂದ್ರಕ್ಕೆ ಮನವಿಯನ್ನು ನೀಡಿದ್ದು, ಪ್ರಧಾನಿ, ನಿರ್ಮಲಾ ಸೀತಾರಾಮನ್, ಅಮಿತ್ ಶಾ ಅವರನ್ನೂ ಭೇಟಿ ಮಾಡಲಾಗಿದೆ. ಅವರೇ ಬಜೆಟ್ನಲ್ಲಿ ಘೋಷಣೆ ಮಾಡಿರುವುದನ್ನು ಕೊಡಿ ಎಂದರೂ ಬಿಡುಗಡೆ ಮಾಡಿಲ್ಲ ಎಂದು ದೂರಿದರು. ನಬಾರ್ಡ್ನಲ್ಲಿ ರಾಜ್ಯಕ್ಕೆ ಬರಬೇಕಾದ ಸಾಲದ ಮೊತ್ತ ಕಡಿತವಾಗಿರುವ ಹಿನ್ನೆಲೆಯಲ್ಲಿ ಇತ್ತೀಚೆಗೆ ನಿರ್ಮಲಾ ಸೀತಾರಾಮನ್ರನ್ನು ಭೇಟಿ ಮಾಡಿದಾಗಲೂ ಈ ವಿಷಯವನ್ನು ಪ್ರಸ್ತಾಪಿಸಲಾಯಿತು. ಆದರೆ ಇಂದಿನವರೆಗೂ ಒಂದು ರೂಪಾಯಿ ಬಿಡುಗಡೆಯಾಗಿಲ್ಲ. ಈ ಬಜೆಟ್ನಲ್ಲಿಯಾದರೂ ಹಣ ಮೀಸಲಿಟ್ಟು ಬಿಡುಗಡೆ ಮಾಡಬೇಕೆಂದು ಕೋರಿ ಕೇಂದ್ರಕ್ಕೆ ಬರೆದು ಒತ್ತಡ ಹೇರಲಾಗುವುದು ಎಂದರು. ತಡೆಯಲು ಪ್ರಯತ್ನ: ಹೊಸದುರ್ಗ ತಾಲೂಕಿನ ಹಿನ್ನೀರಿನಲ್ಲಿ ರೈತರ ಜಮೀನು ಮುಳುಗಡೆಯಾಗದ ರೀತಿಯಲ್ಲಿ ತಡೆಯುವ ಪ್ರಯತ್ನವನ್ನು ಸರಕಾರ ಮಾಡಲಿದೆ. ವಾಣಿವಿಲಾಸ ಸಾಗರ ಅಣೆಕಟ್ಟೆಗೆ 115 ವರ್ಷಗಳ ಇತಿಹಾಸವಿದೆ. ಇಷ್ಟು ವರ್ಷಗಳಲ್ಲಿ ಈ ಅಣೆಕಟ್ಟು ಕೋಡಿ ಬಿದ್ದಿರುವುದು ಮೂರು ಬಾರಿ ಮಾತ್ರ. ಅಂದರೆ 1933, 2022 ಹಾಗೂ 2025ರ ಜ.14ರಲ್ಲಿ ಕೋಡಿ ಬಿದ್ದಿದೆ. ಕರ್ನಾಟಕದ ಮೊದಲನೇ ಜಲಾಶಯ ಇದಾಗಿದ್ದು, ನಾಲ್ವಡಿ ಕೃಷ್ಣರಾಜ ಒಡೆಯರ್ ತಾಯಿ ಸಂಪಾಜಮ್ಮಣಿಯವರ ಹೆಸರಿನಲ್ಲಿ ಕಟ್ಟಿಸಿದ್ದು, ವಾಣಿವಿಲಾಸ ಸಾಗರ ಎಂದು ಕರೆಯಲಾಗಿದೆ. 1898ನೆ ಇಸವಿಯಲ್ಲಿ ಪ್ರಾರಂಭವಾಗಿ 1907ರಲ್ಲಿ ಅಣೆಕಟ್ಟು ನಿರ್ಮಾಣ ಮುಕ್ತಾಯವಾಯಿತು. 30 ಟಿಎಂಸಿ ನೀರು ಶೇಖರಣೆ ಮಾಡುವ ಸಾಮರ್ಥ್ಯ ವಿರುವ ಅಣೆಕಟ್ಟು 33 ಸಾವಿರ ಎಕರೆಗೆ ನೀರುಣಿಸುತ್ತದೆ ಎಂದು ವಿವರಿಸಿದರು. ಈ ಜಿಲ್ಲೆಯ ಅನೇಕ ತಾಲೂಕುಗಳು ಬರಪೀಡಿತ ಎಂದು ಆಗ ಹಳೇ ಮೈಸೂರಿನಲ್ಲಿ ರಾಜರ ಪ್ರತಿನಿಧಿಯಾಗಿದ್ದ ಸಂಪಾಜಮ್ಮಣ್ಣಿಯವರು ಈ ಕೆರೆಯನ್ನು ನಿರ್ಮಾಣ ಮಾಡಿದರು. ಈ ಭಾಗದಲ್ಲಿ ಮಳೆ ಕಡಿಮೆಯಿರುವುದರಿಂದ ಅಣೆಕಟ್ಟು ನಿರ್ಮಿಸಿದರೆ ಈ ಭಾಗದ ಜನರಿಗೆ ನೀರು ದೊರೆಯಲಿದೆ ಎಂಬ ಉದ್ದೇಶದಿಂದ ಅವರ ಒಡವೆಗಳನ್ನು ಅಡವಿಟ್ಟು ಸುಮಾರು 45ಲಕ್ಷ ರೂ.ಗಳನ್ನು ವೆಚ್ಚ ಮಾಡಿದ್ದರು ಎಂದು ತಿಳಿಸಿದರು.
ಮಕ್ಕಳು ಪಾಠದ ಜೊತೆಗೆ ಸಾಂಸ್ಕೃತಿಕ ಚಟುವಟಿಕೆ, ಕ್ರೀಡೆಗಳಲ್ಲಿ ಆಸಕ್ತಿ ಬೆಳೆಸಿಕೊಳ್ಳಬೇಕು : ಈಶ್ವರ್ ಖಂಡ್ರೆ
ಬೀದರ್ : ಮಕ್ಕಳು ಪಾಠದ ಜೊತೆಗೆ ಸಾಂಸ್ಕೃತಿಕ ಚಟುವಟಿಕೆ, ಕ್ರೀಡೆಗಳಲ್ಲಿ ಆಸಕ್ತಿ ಬೆಳೆಸಿಕೊಳ್ಳಬೇಕು ಎಂದು ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ ಹೇಳಿದರು. ಅವರು ಇಂದು ಬೀದರನ ಇಂದಿರಾಬಾಯಿ ಗುರುತ್ತಪ್ಪ ಶೇಟಕಾರ್ ಪ್ರೌಢ ಶಾಲೆಯಲ್ಲಿ ಜಿಲ್ಲಾ ಪಂಚಾಯತ್ ಮತ್ತು ಶಾಲಾ ಶಿಕ್ಷಣ ಇಲಾಖೆ ಅವರ ಸಹಭಾಗಿತ್ವದಲ್ಲಿ ಹಮ್ಮಿಕೊಂಡಿದ್ದ 2024-25ನೇ ಸಾಲಿನ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಕಲೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಶಿಕ್ಷಕರು ಮಕ್ಕಳಲ್ಲಿನ ಪ್ರತಿಭೆಯನ್ನು ಗುರುತಿಸಿ ಅವರಿಗೆ ಪ್ರೋತ್ಸಾಹಿಸಬೇಕು. ಪ್ರಶಸ್ತಿ ಗೆಲ್ಲುವುದಕ್ಕಿಂತ ಎಲ್ಲದರಲ್ಲೂ ಭಾಗವಹಿಸುವುದು ಬಹಳ ಮುಖ್ಯವಾಗಿದೆ. ಗ್ರಾಮೀಣ ಪ್ರದೇಶದ ಪ್ರತಿಭೆಗಳಿಗೆ ಪ್ರತಿಭಾ ಕಾರಂಜಿ ಒಂದು ಉತ್ತಮ ವೇದಿಕೆಯಾಗಿದೆ. ಇಲ್ಲಿ ಜಯಗಳಿಸಿ ಮುಂದೆ ರಾಜ್ಯ ಮಟ್ಟದಲ್ಲಿ ಭಾಗವಹಿಸಬಹುದು ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲಾ ಮಕ್ಕಳಿಗೆ ಶುಭ ಹಾರೈಸಿದ ಅವರು, ಮಕ್ಕಳು ಈ ದೇಶದ ನಿಜವಾದ ಸಂಪತ್ತು. ಇಂದಿನ ಮಕ್ಕಳೇ ನಾಳಿನ ಪ್ರಜೆಗಳು ಮತ್ತು ದೇಶ ಮುನ್ನಡೆಸುವವರಾಗಿದ್ದಾರೆ ಎಂದರು. ಈ ಸಂದರ್ಭದಲ್ಲಿ ಪೂಜ್ಯ ಶ್ರೀ ಡಾ. ಶಿವುಕುಮಾರ್ ಮಹಾಸ್ವಾಮಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಗಿರೀಶ್ ಬದೋಲೆ, ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಉಪನಿರ್ದೇಶಕ ಪ್ರಸನ್ನ ಕುಮಾರ್, ಬೀದರ ಶಾಲಾ ಶಿಕ್ಷಣ ಇಲಾಖೆಯ ಪ್ರಭಾರಿ ಶಿಕ್ಷಣಾಧಿಕಾರಿ ಬಸವಂತರಾಯ ಜಿಡ್ಡೆ ಹಾಗೂ ಬೀದರ ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಆರ್.ದೊಡ್ಡೆ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಕೊಣಾಜೆ| 'ಶಾಲೆಯ ಬಳಿ ಗುಡ್ಡ ಕುಸಿತದ ಭೀತಿ, ದಯವಿಟ್ಟು ಸರಿಪಡಿಸಿ'
ಕೊಣಾಜೆ: ಶಾಲೆಯ ಬಳಿ ಗುಡ್ಡ ಕುಸಿಯುವ ಹಂತದಲ್ಲಿದ್ದು, ಮಳೆಗಾಲದಲ್ಲಿ ವಿದ್ಯಾರ್ಥಿಗಳೆಲ್ಲರೂ ಭೀತಿಯಿಂದಲೇ ಪಾಠ ಕೇಳುವ ಸ್ಥಿತಿ ನಿರ್ಮಾಣವಾಗಿದೆ. ಆದ್ದರಿಂದ ದಯವಿಟ್ಟು ತಡೆಗೋಡೆಯನ್ನು ನಿರ್ಮಿಸಿ ಆತಂಕವನ್ನು ದೂರಗೊಳಿಸಿ ಎಂದು ಕೊಣಾಜೆ ಪದವು ಶಾಲೆಯ ವಿದ್ಯಾರ್ಥಿನಿ ಫಾತಿಮತ್ ಧೈಫಾ ಅಳಲು ತೋಡಿಕೊಂಡಳು. ಗುರುವಾರದಂದು ಕೊಣಾಜೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಮಕ್ಕಳ ಹಕ್ಕುಗಳ ವಿಶೇಷ ಗ್ರಾಮ ಸಭೆ ಆಯೋಜಿಸ ಲಾಗಿತ್ತು. ಸಭೆಯಲ್ಲಿ ಗ್ರಾಮದ ವಿವಿಧ ಶಾಲೆಗಳ ವಿದ್ಯಾರ್ಥಿಗಳು ತಮ್ಮ ಶಾಲೆ ಹಾಗೂ ಪರಿಸರದ ಸಮಸ್ಯೆಯ ಬಗ್ಗೆ ಅಳವತ್ತುಕೊಂಡರು. ಗುಡ್ಡ ಕುಸಿತದ ಭೀತಿಯ ಬಗ್ಗೆ ವಿದ್ಯಾರ್ಥಿನಿಯ ಪ್ರಶ್ನೆಗೆ ಉತ್ತರಿಸಿದ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಮುತ್ತಪ್ಪ ಅವರು, ಈ ಬಗ್ಗೆ ಕೂಡಲೇ ಸಮಸ್ಯೆಯ ಬಗ್ಗೆ ಸಂಬಧಪಟ್ಟ ಇಲಾಖೆ, ಅಧಿಕಾರಿಗಳಿಗೆ ತಿಳಿಸಿ ಸಮಸ್ಯೆ ಪರಿಹಾರಕ್ಕೆ ಕ್ರಮ ತೆಗೆದುಕೊಳ್ಳಲಾಗುವುದು ಎಂದರು. ವಿಶ್ವಮಂಗಳ ಶಾಲೆಯ ವಿದ್ಯಾರ್ಥಿನಿ ಅನನ್ಯಾ ಅವರು, ಶಾಲೆಯ ಪರಿಸರದಲ್ಲಿ ಕೆಲವರು ದೂಮಪಾನ ಮಾಡುತ್ತಾರೆ. ಇದರಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ ಎಂದು ಹೇಳಿದಾಗ, ಇದಕ್ಕೆ ಉತ್ತರಿಸಿದ ಪಿಡಿಒ ಇವತ್ತೇ ಶಾಲೆಯ ಪರಿಸರಕ್ಕೆ ಭೇಟಿ ನೀಡಿ ಸ್ಪಾಟ್ ಚೆಕ್ ಮಾಡಿ ಶೀಘ್ರ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಭರವಸೆ ನೀಡಿದರು. ಯುಬಿಎಂಸಿ ಶಾಲೆಯ ರಝಿಮಾ ಶಾಲೆಯ ಬಳಿ ವಾಹನಗಳು ಅತಿ ವೇಗವಾಗಿ, ಭಯಾನಕವಾಗಿ ಹೋಗುತ್ತವೆ ಆದ್ದರಿಂದ ರಸ್ತೆ ಗೆ ಹಂಪ್ಸ್ ಅಳವಡಿಸಿ ಎಂದು ಬೇಡಿಕೆ ಸಲ್ಲಿಸಿದರೆ, ವಿದ್ಯಾರ್ಥಿನಿ ನಿಧಿಶ್ರೀ ಶಾಲೆಯ ಪರಿಸರದಲ್ಲಿ ಸುರಕ್ಷತೆಯ ದೃಷ್ಟಿಯಿಂದ ಬೀಟ್ ಪೋಲೀಸರು ಬಂದು ಹೋಗುವ ವ್ಯವಸ್ಥೆ ಮಾಡಿ ಎಂದು ಕೇಳಿಕೊಂಡಳು. ಅಡ್ಕರೆ ಪಡ್ಪು ಶಾಲೆಯ ವಿದ್ಯಾರ್ಥಿನಿ ಆಯಿಷತ್ ಶಿಫಾ ಅಡ್ಕರೆ ಪಡ್ಪು ಬಳಿ ಹೆಚ್ಚು ಬಸ್ ಓಡಾಟ ಇಲ್ಲ. ಇದರಿಂದ ವಿದ್ಯಾರ್ಥಿಗಳಿಗೆ, ಸ್ಥಳೀಯರಿಗೆ ತೊಂದರೆಯಾಗುತ್ತಿದೆ ಆದ್ದರಿಂದ ಹೆಚ್ಚಿನ ಬಸ್ ಸೌಲಭ್ಯ ಒದಗಿಸಿ ಎಂದು ಬೇಡಿಕೆಯಿಟ್ಟಳು. ಕೊಣಾಜೆ ಪದವು ಶಾಲೆಯ ವಿದ್ಯಾರ್ಥಿ ಡೆಲ್ವಿನ್ ಮೋಸೆಸ್ ಮಾತನಾಡಿ ನಮ್ಮ ಶಾಲೆಯ ಬಳಿ ಕಸದ ತೊಟ್ಟಿ ಇಲ್ಲದೆ ಕಸಗಳ ರಾಶಿ ತುಂಬುತ್ತವೆ. ಆದ್ದದ್ದರಿಂದ ಕಸದ ತೊಟ್ಟಿ ಅಳವಡಿಸಿ ವಿದ್ಯಾರ್ಥಿಗಳೇ ಅದರ ನಿರ್ವಹಣೆ ಮಾಡುತ್ತೇವೆ ಎಂದು ಹೇಳಿದಾಗ ಸಭಿಕರಿಂದ ಚಪ್ಪಾಳೆ ಸದ್ದು ಕೇಳಿಸಿತು. ಹೀಗೆ ಕೊಣಾಜೆ ಗ್ರಾಮದಲ್ಲಿ ಮಕ್ಕಳ ಗ್ರಾಮಸಭೆಯಲ್ಲಿ ಅನೇಕ ಶಾಲೆಯ ವಿದ್ಯಾರ್ಥಿಗಳು ಅವಕಾಶಗಳನ್ನು ಬಳಸಿಕೊಂಡು ಪ್ರಶ್ನೆಗಳ ಸುರಿಮಳೆಗೈದರು. ಬಳಿಕ ಪಂಚಾಯತಿ ಅಧಿಕಾರಿಗಳು ವಿದ್ಯಾರ್ಥಿಗಳ ಎಲ್ಲಾ ಸಮಸ್ಯೆಗಳಿಗೆ ಉತ್ತರಿಸಿ ಬಗೆ ಹರಿಸುವ ಭರವಸೆ ನೀಡಿದರು. ಸಭೆಯಲ್ಲಿ ಎಪಿಡಿ ಫೌಂಡೇಶನ್ ನ ಗೀತಾ ಅವರು ಸ್ವಚ್ಚ ಭಾರತ್ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ಸಭೆಯ ಅಧ್ಯಕ್ಷತೆನ್ನು ಕೊಣಾಜೆ ಪದವು ಶಾಲೆಯ ಒಂಭತ್ತನೇ ತರಗತಿ ವಿದ್ಯಾರ್ಥಿ ಯಜ್ಞೇಶ್ ಅವರು ವಹಿಸಿ ಮಾತನಾಡಿ, ಅಧಿಕಾರಿಗಳು ವಿದ್ಯಾರ್ಥಿಗಳ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಿದ್ದಿರಿ, ಹಾಗೆಯೇ ಅದನ್ನು ಅನುಷ್ಠಾನಗೊಳಿಸಬೇಕು ಎಂಬುದು ನಮ್ಮೆಲ್ಲರ ಬೇಡಿಕೆ ಎಂದರು. ಇದೇ ಸಂದರ್ಭದಲ್ಲಿ ಜಿಲ್ಲಾ ಮತ್ತು ರಾಜ್ಯ ಮಟ್ಟದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ಕೊಣಾಜೆ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಗೀತಾ ದಾಮೋದರ್ ಕುಂದರ್, ಮಂಗಳೂರು ವಿವಿ ಸಮಾಜಕಾರ್ಯ ವಿಭಾಗದ ಉಪನ್ಯಾಸಕಿ ವಿನುತಾ ಪಂಚಾಯತಿ ಸದಸ್ಯ ರವಿ, ಅಂಗನವಾಡಿ ಮೇಲ್ವೀಚಾರಕಿ ನಳಿನಿ, ಪಂಚಾಯತಿ ಸದಸ್ಯ ಇಕ್ಬಾಲ್, ಪಂಚಾಯತಿ ಮಾಜಿ ಉಪಾಧ್ಯಕ್ಷ ರಾಮಕೃಷ್ಣ ಪಟ್ಟೋರಿ, ಪಂಚಾಯತಿ ಕಾರ್ಯದರ್ಶಿ ಚಿತ್ರಾ ಮೊದಲಾದವರು ಉಪಸ್ಥಿತರಿದ್ದರು. ಮಂಗಳೂರು ವಿವಿ ಸಿಂಡಿಕೇಟ್ ಸದಸ್ಯರಾದ ಅಚ್ಯುತ ಗಟ್ಟಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಕೊಣಾಜೆ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮುತ್ತಪ್ಪ ಅವರು ವಂದಿಸಿ, ಕಾರ್ಯಕ್ರಮ ನಿರೂಪಿಸಿದರು. ಇಂದಿನ ಮಕ್ಕಳೇ ನಾಳೆಯ ಸುಂದರ ಭವಿಷ್ಯ. ನಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಸದೃಢವಾಗಿಡ ಬೇಕಾದರೆ ಮೊಬೈಲ್ ನಿಂದ ದೂರವಿದ್ದು ಅದರ ಬಳಕೆಯ ಬಗ್ಗೆ ಎಚ್ಚರವಹಿಸಿ. ಮೊಬೈಲ್ ಅತಿಯಾದ ಬಳಕೆಯಿಂದಾಗಿ ವಿದ್ಯಾರ್ಥಿಗಳ ವರ್ತನೆಗಳಲ್ಲಿ ಬದಲಾವಣೆಗಳಾಗುತ್ತಿವೆ. ಕೇರಳ ಶಾಲೆಗಳಂತೆ ಕರ್ನಾಟಕದ ಶಾಲೆಗಳಲ್ಲೂ ಆಪ್ತಸಮಾಲೋಚಕರ ನೇಮಕವಾಗಬೇಕಿದೆ. -ವಿನುತಾ, ಉಪನ್ಯಾಸಕಿ,ಮಂಗಳೂರು ವಿವಿ
ಎಟಿಎಂ ದರೋಡೆ ಪ್ರಕರಣ: ಗಾಯಾಳು ಶಿವಕುಮಾರ್ ಅವರನ್ನು ಹೈದರಾಬಾದ್ ಆಸ್ಪತ್ರೆಯಲ್ಲಿ ಭೇಟಿಯಾದ ಸಚಿವ ರಹೀಂ ಖಾನ್
ಬೀದರ್ : ಎಟಿಎಂ ದರೋಡೆ ಪ್ರಕರಣದ ಗುಂಡಿನ ದಾಳಿಯಲ್ಲಿ ಗಾಯಗೊಂಡಿದ್ದ ಶಿವಕುಮಾರ್ ಅವರನ್ನು ಪೌರಾಡಳಿತ ಹಾಗೂ ಹಜ್ ಸಚಿವ ರಹಿಂ ಖಾನ್ ಅವರು ಹೈದರಾಬಾದನ ಕೇರ್ ಆಸ್ಪತ್ರೆಯಲ್ಲಿ ಭೇಟಿಯಾಗಿ ಧೈರ್ಯ ತುಂಬಿದರು. ಇಂದು ಬೆಳಿಗ್ಗೆ 10 ಗಂಟೆಗೆ ಬೆಂಗಳೂರಿನಿಂದ ಹೈದರಾಬಾದ್ ಗೆ ಆಗಮಿಸಿದ ಅವರು, ಕೇರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಶಿವಕುಮಾರ್ ಮತ್ತು ಅವರ ಕುಟುಂಬ ಸದಸ್ಯರನ್ನು ಭೇಟಿ ಮಾಡಿ ಸಾಂತ್ವನ ಹೇಳಿ ಆರ್ಥಿಕ ಸಹಾಯ ಮಾಡಿದರು. ಶಿವಕುಮಾರ್ ಈಗ ಅಪಾಯದಿಂದ ಪಾರಾಗಿದ್ದಾರೆ. ಅವರ ಚಿಕಿತ್ಸಾ ವೆಚ್ಚದ ಬಗ್ಗೆ ಚಿಂತಿಸಬೇಡಿ ಎಂದು ಕುಟುಂಬಸ್ಥರಿಗೆ ಭರವಸೆ ನೀಡಿದ ಅವರು, ಶಿವಕುಮಾರ್ ಅವರಿಗೆ ಉತ್ತಮ ಚಿಕಿತ್ಸೆ ನೀಡುವಂತೆ ವೈದ್ಯರಲ್ಲಿ ವಿನಂತಿಸಿ ಅವರ ಆರೋಗ್ಯದ ಬಗ್ಗೆ ವಿವರವಾಗಿ ವಿಚಾರಿಸಿದರು. ಗಾಯಾಳು ಶಿವಕುಮಾರ್ ಶೀಘ್ರ ಗುಣಮುಖರಾಗುವ ಭರವಸೆಯನ್ನು ವೈದ್ಯರು ನೀಡಿದ್ದಾರೆ. ದುರಂತಕ್ಕೆ ಕಾರಣರಾದ ಆರೋಪಿಗಳನ್ನು ಬಂಧಿಸಿ ಕಠಿಣ ಶಿಕ್ಷೆಗೆ ಗುರಿಪಡಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಕುಟುಂಬ ಸದಸ್ಯರಿಗೆ ಹೇಳಿದ ಅವರು, ಗಾಯಗೊಂಡ ಮತ್ತು ಮೃತರ ಕುಟುಂಬಗಳಿಗೆ ಸಕಾಲದಲ್ಲಿ ನೆರವು ನೀಡಲು ಸರ್ಕಾರ ಬದ್ಧವಾಗಿದೆ ಎಂದು ತಿಳಿಸಿದರು.
ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳ ಸೋಗಿನಲ್ಲಿ ವಿಟ್ಲದ ಬೋಳಂತೂರು ನಾರ್ಶದ ಸಿಂಗಾರಿ ಬೀಡಿ ಮಾಲೀಕ ಸುಲೈಮಾನ್ ಎಂಬುವರ ಮನೆಗೆ ನುಗ್ಗಿ ಹಣ ದೋಚಿದ ಪ್ರಕರಣವನ್ನು ಪೊಲೀಸರು ಬೇಧಿಸಿದ್ದು, ಒಬ್ಬ ಆರೋಪಿಯನ್ನು ಗುರುವಾರ (ಜ.23) ಬಂಧಿಸಿದ್ದಾರೆ. ಕೇರಳ ಕೊಲ್ಲಂ ಜಿಲ್ಲೆಯ ಪೆರಿನಾಡ್ ತ್ರಿಕಡವೂರಿನ ಮಾತಿಲಿಲ್ ಚಿರಕಲ್ ಜಂಕ್ಷನ್ ನಿಧಿವಾಧಿಸಿ ಅನಿಲ್ ಫರ್ನಾಂಡಿಸ್ (49) ಬಂಧಿತ ಆರೋಪಿ. ಆತನಿಂದ ಕೃತ್ಯಕ್ಕೆ ಉಪಯೋಗಿಸಿದ ಎರ್ಟಿಗಾ ಕಾರು, 5 ಲಕ್ಷ ರೂ. ನಗದು ಹಾಗೂ ಕೃತ್ಯ ನಡೆಸುವಾಗ ಕಾರಿಗೆ ಅಳವಡಿಸಿದ್ದ ನಕಲಿ ನಂಬರ್ ಪ್ಲೇಟ್ ಅನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಜ.24ರಂದು ಸಾರ್ವಜನಿಕ ಕುರ್ ಆನ್ ಪ್ರವಚನ ಕಾರ್ಯಕ್ರಮ
ಉಳ್ಳಾಲ :ಜಮಾಅತೆ ಇಸ್ಲಾಮಿ ಹಿಂದ್ ಉಳ್ಳಾಲ ಇದರ ಆಶ್ರಯದಲ್ಲಿ ಕನ್ನಡ ದಲ್ಲಿ ಕುರ್ ಆನ್ ಸಂದೇಶ ಎಂಬ ಶೀರ್ಷಿಕೆ ಯಡಿಯಲ್ಲಿ ಸಾರ್ವಜನಿಕ ಕುರ್ ಆನ್ ಪ್ರವಚನ ಕಾರ್ಯಕ್ರಮವು ಜ.24 ಶುಕ್ರವಾರ ಸಂಜೆ ಏಳು ಗಂಟೆಗೆ ದೇರಳಕಟ್ಟೆ ಸಿಟಿ ಗ್ರೌಂಡ್ ನಲ್ಲಿ ನಡೆಯಲಿದೆ ಎಂದು ಉಳ್ಳಾಲ ಸ್ಥಾನೀಯ ಕಾರ್ಯದರ್ಶಿ ಮುಹಮ್ಮದ್ ಮುಬೀನ್ ತಿಳಿಸಿದ್ದಾರೆ. ಅವರು ಪ್ರೆಸ್ ಕ್ಲಬ್ ನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಶ್ರೀ ಮೋಹನ್ ದಾಸ್ ಪರಮಹಂಸ ಸ್ವಾಮೀಜಿ ಯವರ ಸಾನಿಧ್ಯದಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ಮಸ್ಜುದುಲ್ ಹುದಾ ಖತೀಬ್ ಮುಹಮ್ಮದ್ ಕುಂಞಿ ಅವರು ಕನ್ನಡದಲ್ಲಿ ಕುರ್ಆ ಸಂದೇಶವನ್ನು ನೀಡಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಅಖಿಲ ಭಾರತ ಕ್ರೈಸ್ತ ಒಕ್ಕೂಟದ ರಾಜ್ಯಾಧ್ಯಕ್ಷ ಆಲೈನ್ ಡಿಸೋಜ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಪ್ರಸಾದ್ ರೈ ಕಲಿಮಾರ್, ಡಾ. ಅಬ್ದುಲ್ ಶಕೀಲ್ , ಕೆ. ರವೀಂದ್ರ ಶೆಟ್ಟಿ ಉಳಿದೊಟ್ಟು, ಸೈಯ್ಯದ್ ಅಲಿ, ನಿವೃತ್ತ ಶಿಕ್ಷಕ ರವೀಂದ್ರ ರೈ ಹರೇಕಳ, ಪಿ.ಎಮ್. ಅಬ್ಬಾಸ್ ಹಾಜಿ, ಮುಹಮ್ಮದ್ ಯಾಸೀನ್ ಡಿ ಮತ್ತಿತರರು ಭಾಗವಹಿಸಲಿದ್ದಾರೆ ಎಂದು ಹೇಳಿದರು. ಜಮಾಅತೆ ಇಸ್ಲಾಮಿ ಹಿಂದ್ ಸ್ಥಾನೀಯ ಅಧ್ಯಕ್ಷ ಅಬ್ದುಲ್ ಕರೀಂ, ಸದಸ್ಯ ಅಬ್ದುಲ್ ರಹೀಂ, ಸಂಚಾಲಕ ಇಸ್ಹಾಕ್ ಹಸನ್, ನಿಜಾಮುದ್ದೀನ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.