ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ)ವಿಧೇಯಕ-2025 : ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರ
ʼಪೊಲೀಸರು ಸ್ವಯಂ ಪ್ರೇರಿತ ದೂರು ದಾಖಲಿಸಲು ತಿದ್ದುಪಡಿʼ
ಡಿ.21: ದಕ್ಷಿಣ ಕನ್ನಡದಲ್ಲಿ 1,41,594 ಮಕ್ಕಳಿಗೆ ಪಲ್ಸ್ ಪೋಲಿಯೊ ಲಸಿಕೆ
ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಡಿ.21ರಂದು ನಡೆಯಲಿರುವ 2025ನೇ ಸಾಲಿನ ಪಲ್ಸ್ ಪೋಲಿಯೊ ಕಾರ್ಯಕ್ರಮದಲ್ಲಿ 1,41,594 ಮಕ್ಕಳಿಗೆ ಪಲ್ಸ್ ಪೋಲಿಯೊ ಲಸಿಕೆ ನೀಡಲಾಗುವುದು ಎಂದು ದ.ಕ. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಎಚ್.ಆರ್. ತಿಮ್ಮಯ್ಯ ತಿಳಿಸಿದ್ದಾರೆ. ದ.ಕ. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾಹಿತಿ ನೀಡಿದರು. ಪಲ್ಸ್ ಪೋಲಿಯೊ ಲಸಿಕೆ ನೀಡಲು ಜಿಲ್ಲೆಯಲ್ಲಿ 921 ಸ್ಥಿರ ಬೂತ್, 32 ಟ್ರಾನ್ಸಿಟ್, ಮಂಗಳೂರು ನಗರದಲ್ಲಿ ಮೂರು ಮೊಬೈಲ್ ಬೂತ್ ಸೇರಿದಂತೆ 956 ಬೂತ್ಗಳಲ್ಲಿ ಮಕ್ಕಳಿಗೆ ಪಲ್ಸ್ ಪೋಲಿಯೊ ಲಸಿಕೆ ನೀಡಲಾಗುವುದು ಎಂದರು. ಐದು ವರ್ಷಕ್ಕಿಂತ ಕೆಳಗಿನ 29,203 ಮಕ್ಕಳಿಗೆ ಬಂಟ್ವಾಳದಲ್ಲಿ , ಬೆಳ್ತಂಗಡಿಯಲ್ಲಿ 18,091, ಮಂಗಳೂರಿನಲ್ಲಿ 66, 062, ಪುತ್ತೂರಿನಲ್ಲಿ 19, 958 ಮತ್ತು ಸುಳ್ಯದಲ್ಲಿ 8,280 ಮಕ್ಕಳಿಗೆ ಲಸಿಕೆ ನೀಡಲಾಗುವುದು ಎಂದು ವಿವರಿಸಿದರು. ಲಸಿಕೆ ನೀಡಿಕೆಗೆ ಬಂಟ್ವಾಳದಲ್ಲಿ 202 ಬೂತ್, ಬೆಳ್ತಂಗಡಿ 166, ಮಂಗಳೂರಿನಲ್ಲಿ 363, ಪುತ್ತೂರಿನಲ್ಲಿ 148, ಸುಳ್ಯದಲ್ಲಿ 77 ಬೂತ್ಗಳ ವ್ಯವಸ್ಥೆ ಮಾಡಲಾಗಿದೆ. ಬಸ್ ನಿಲ್ದಾಣ, ರೈಲ್ವೇ ಸ್ಟೇಷನ್, ವಿಮಾನ ನಿಲ್ದಾಣಗಳಂತಹ ಸ್ಥಳಗಳಲ್ಲಿ ಟ್ರಾನ್ಸಿಟ್ ತಂಡಗಳು ಮಕ್ಕಳಿಗೆ ಲಸಿಕೆ ನೀಡಲಿದೆ ಎಂದರು. ಡಿ.21ರಂದು ಬೆಳಗ್ಗೆ 8ರಿಂದ 5ರ ವರೆಗೆ 0-5 ವರ್ಷದೊಳಗಿನ ಪ್ರತಿಯೊಂದು ಮಗುವಿಗೂ 2 ಜೀವ ರಕ್ಷಕ ಪೋಲಿಯೊ ಲಸಿಕೆ ನೀಡಲಾಗುವುದು. ಯಾವುದೇ ಒಂದು ಮಗು ಲಸಿಕೆ ವಂಚಿತವಾಗಬಾರದು ಎಂಬ ಉದ್ದೇಶದೊಂದಿಗೆ ಗರಿಷ್ಠ ಪ್ರಯತ್ನ ನಡೆಸಲಾಗುವುದು. ಒಂದು ವೇಳೆ ಆ ದಿನ ಲಸಿಕೆ ಪಡೆಯಲು ಸಾಧ್ಯವಾಗದಿರುವ ಮಕ್ಕಳಿಗೆ ಡಿ.22, 23 ಮತ್ತು 24ರಂದು ಜಿಲ್ಲೆ ನಗರ ಪ್ರದೇಶಗಳಲ್ಲಿ , ಡಿ.22 ಮತ್ತು ಡಿ.23ರಂದು ಗ್ರಾಮೀಣ ಪ್ರದೇಶದಲ್ಲಿ ಮನೆ ಮನೆಗಳಿಗೆ ತೆರಳಿ ಪಲ್ಸ್ ಪೋಲಿಯೊ ಲಸಿಕೆ ಕೊಡಿಸಲಾಗುವುದು ಎಂದು ವಿವರಿಸಿದರು. 1995-96ರಲ್ಲಿ ಪ್ರಾರಂಭವಾದ ಪಲ್ಸ್ ಪೋಲಿಯೊ ಅಭಿಯಾನ ಅದ್ಬುತವಾಗಿ ಸಾಧನೆಯನ್ನು ಮಾಡಿದೆ. ಪೋಲಿಯೊ ಒಂದು ಸಾಂಕ್ರಾಮಿಕ ರೋಗ, ಪೋಲಿಯೊ ರೋಗಾಣುಗಳು ಕಲುಷಿತ ನೀರಿನಿಂದ ಅಥವಾ ಆಹಾರದಿಂದ ದೇಹವನ್ನು ಸೇರುತ್ತದೆ. ಈ ರೋಗಾಣುಗಳು ಮಕ್ಕಳ ದೇಹ ಪ್ರವೇಶಿಸಿದರೆ ಅವರು ಶಾಶ್ವತ ಅಂಗವಿಕಲಾಗುತ್ತಾರೆ. 0-5 ವರ್ಷದ ಒಳಗಿನ ಮಕ್ಕಳನ್ನು ಬಾಧಿಸುವ ಪೋಲಿಯೊ ವೈರಸ್ ಮುಖ್ಯವಾಗಿ ನರಮಂಡಲವನ್ನು ಬಾಧಿಸುತ್ತದೆ. ಗಂಟಲು ನೋವು, ತಲೆನೋವು,ವಾಂತಿ, ಬೆನ್ನುನೋವು, ಮಾಂಸಖಂಡಗಳ ನೋವು ಮುಂತಾದ ಸಣ್ಣ ಪ್ರಮಾಣದ ತೊಂದೆರೆಯಿಂದ ತೊಡಗಿ ನರಮಂಡಲ, ನರಗಳ ಬಲಹೀನತೆ ಉಂಟಾಗಬಹುದು. ಉಸಿರಾಟದ ತೊಂದರೆ ಕಾಣಿಸಿಕೊಳ್ಳಬಹುದು. ವ್ಯಕ್ತಿಯಿಂದ ವ್ಯಕ್ತಿಗೆ ಹರಡುವ ಈ ವೈರಸ್ ರೋಗ ಪ್ರತಿರೋಧ ಇಲ್ಲದವರನ್ನು ಬಾಧಿಸುತ್ತದೆ. ಈ ರೋಗಕ್ಕೆ ಚಿಕಿತ್ಸೆ ಇಲ್ಲ. ಆದರೆ ಈ ರೋಗವು ಬಾರದಂತೆ ಪರಿಣಾಮಕಾರಿಯಾದ ಪೋಲಿಯೊ ಲಸಿಕೆ ನೀಡುವುದರಿಂದ ಈ ರೋಗವನ್ನು ತಡೆಗಟ್ಟಬಹುದು ಎಂದು ಡಾ. ತಿಮ್ಮಯ್ಯ ಹೇಳಿದರು. ನಮ್ಮ ದೇಶದಲ್ಲಿ 2011ರ ಜನವರಿ 13ರಂದು ಕೊನೆಯ ಬಾರಿಗೆ ಪೋಲಿಯೊ ಪ್ರಕರಣ ಕಂಡು ಬಂದಿರುತ್ತದೆ. ನಮ್ಮ ರಾಜ್ಯದಲ್ಲಿ 2007ರಲ್ಲಿ ಕೊನೆಯ ಪೋಲಿಯೊ ಪ್ರಕರಣ ಕಂಡು ಬಂದಿತ್ತು. 2014 ಮಾರ್ಚ್ 27ಕ್ಕೆ ನಮ್ಮ ದೇಶವನ್ನು ಪೋಲಿಯೊ ಸಾಂಕ್ರಾಮಿಕ ದೇಶಗಳ ಪಟ್ಟಿಯಿಂದ ಹೊರಗಿಡಲಾಗಿದೆ ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಆರ್ಸಿಎಚ್ ಅಧಿಕಾರಿ ಡಾ.ರಾಜೇಶ್ ಹಾಗೂ ಆರೋಗ್ಯ ಶಿಕ್ಷಣಾಧಿಕಾರಿ ಜ್ಯೋತಿ ಉಪಸ್ಥಿತರಿದ್ದರು.
Post Office FD: ಪೋಸ್ಟ್ ಆಫೀಸ್ ನಲ್ಲಿ 10,000 ರೂಪಾಯಿ ಹೂಡಿಕೆ ಮಾಡಿದರೆ ನಿಮಗೆ ಸಿಗುವ ಲಾಭ ಗೊತ್ತಾ?
ಹಣವನ್ನು ಉಳಿತಾಯ ಮಾಡುವುದು ಎಷ್ಟು ಮುಖ್ಯವೋ, ಅದನ್ನು ಸರಿಯಾದ ಜಾಗದಲ್ಲಿ ಹೂಡಿಕೆ ಮಾಡುವುದು ಅಷ್ಟೇ ಮುಖ್ಯ. ಸುರಕ್ಷಿತವಾಗಿ ಹಣವನ್ನು ಹೂಡಿಕೆ ಮಾಡಲು ಬಯಸುವ ಜನರಿಗೆ ಅಂಚೆ ಕಚೇರಿಯ ಟೈಮ್ ಡೆಪಾಸಿಟ್ (Time Deposit) ಅಥವಾ ಎಫ್ಡಿ (FD) ಅತ್ಯುತ್ತಮ ಆಯ್ಕೆಯಾಗಿದೆ. ಬಹಳಷ್ಟು ಜನರಲ್ಲಿ ಒಂದು ಸಾಮಾನ್ಯ ಪ್ರಶ್ನೆ ಇರುತ್ತದೆ: “ನಾನು ಸಣ್ಣ ಮೊತ್ತದ ಹಣವನ್ನು ಹೂಡಿಕೆ ಮಾಡಿದರೆ ನನಗೆ ಎಷ್ಟು ಲಾಭ ಸಿಗಬಹುದು?” ಉದಾಹರಣೆಗೆ, ನೀವು ಕೇವಲ 10,000 ರೂಪಾಯಿಗಳನ್ನು ಈ ಯೋಜನೆಯಲ್ಲಿ ಇಟ್ಟರೆ ನಿಮಗೆ ಸಿಗುವ ... Read more The post Post Office FD: ಪೋಸ್ಟ್ ಆಫೀಸ್ ನಲ್ಲಿ 10,000 ರೂಪಾಯಿ ಹೂಡಿಕೆ ಮಾಡಿದರೆ ನಿಮಗೆ ಸಿಗುವ ಲಾಭ ಗೊತ್ತಾ? appeared first on Karnataka Times .
ಡಿಕೆ ಶಿವಕುಮಾರ್ ತವರಲ್ಲೇ ಇದೆಂಥಾ ಅಮಾನುಷ; ಪ್ರೀತಿಯ ನಾಟಕವಾಡಿ, ವಿಡಿಯೋ ಮುಂದಿಟ್ಟು ಯುವತಿ ಮೇಲೆ ಗ್ಯಾಂಗ್ರೇಪ್
ರಾಮನಗರದಲ್ಲಿ ಅಮಾನುಷ ಕೃತ್ಯವೊಂದು ಬೆಳಕಿಗೆ ಬಂದಿದೆ. ಯುವತಿಯನ್ನು ಪ್ರೀತಿಸುವ ನಾಟಕವಾಡಿ, ಆಕೆ ಜೊತೆ ಲೈಂಗಿಕ ಸಂಪರ್ಕ ಬೆಳೆಸಿದ್ದಲ್ಲದ್ದೇ, ತಮ್ಮ ಖಾಸಗಿ ಕ್ಷಣದ ವಿಡಿಯೋಗಳನ್ನು ಮುಂದಿಟ್ಟುಕೊಂಡು ಬೆದರಿಕೆ ಹಾಕಿದ್ದ ಘಟನೆ ರಾಮನಗರದ ಮಾಗಡಿಯಲ್ಲಿ ನಡೆದಿದೆ. ಸದ್ಯ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ವಿಚಾರಣೆಯನ್ನು ಮುಂದುವರೆಸಿದ್ದಾರೆ.
ಬೆಂಗಳೂರಿನ ದೊಡ್ಡಬೆಳ್ಳೆಯ ಅಪಾರ್ಟ್ಮೆಂಟ್ ಸಂಕೀರ್ಣದ ನಿವಾಸಿಗಳ ಕಲ್ಯಾಣ ಸಂಘದ ವಿರುದ್ಧ ಎಫ್ಐಆರ್ ದಾಖಲಾಗಿದೆ. ಈ ಸಂಘವು ಅನಧಿಕೃತ ನಿಯಮಗಳನ್ನು ರೂಪಿಸಿ, ಅಪರಾಧ ಎಸಗಿದ ನಿವಾಸಿಗಳಿಗೆ ಕಾನೂನುಬಾಹಿರವಾಗಿ ದಂಡ ವಿಧಿಸಿದೆ. ಖಾಸಗಿ ಭದ್ರತಾ ಏಜೆನ್ಸಿಯೂ ಈ ಕೃತ್ಯಗಳಲ್ಲಿ ಶಾಮೀಲಾಗಿತ್ತು. ಇದು ಅಪಾರ್ಟ್ಮೆಂಟ್ ಸಂಕೀರ್ಣದೊಳಗೆ ಅಕ್ರಮ ನ್ಯಾಯಾಂಗ ವ್ಯವಸ್ಥೆಯನ್ನು ನಡೆಸಿದಂತಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
BPL Card: ಬಿ.ಪಿ.ಎಲ್ ಕಾರ್ಡ್ ಆದಾಯ ಮಿತಿ ಪರಿಷ್ಕರಣೆ: ಬಿಗ್ ಅಪ್ಡೇಟ್ ಕೊಟ್ಟ ಕೆ.ಎಚ್.ಮುನಿಯಪ್ಪ
ಬೆಳಗಾವಿ: ರಾಜ್ಯ ಸರ್ಕಾರ ಬಿ.ಪಿ.ಎಲ್.ಕಾರ್ಡ್ ಆದಾಯ ಮಿತಿ ಪರಿಷ್ಕರಣೆಗೆ ಚಿಂತನೆ ನಡೆಸಿದೆ ಎಂದು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಹಾಗೂ ಕಾನೂನು ಮಾಪನಶಾಸ್ತ್ರ ಇಲಾಖೆ ಸಚಿವ ಕೆ.ಎಚ್.ಮುನಿಯಪ್ಪ ಹೇಳಿದರು. ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲದ ಅಧಿವೇಶನದಲ್ಲಿ ಗುರುವಾರ ವಿಧಾನಸಭೆಯ ಪ್ರಶ್ನೋತ್ತರ ಕಲಾಪದಲ್ಲಿ ಬಂಟ್ವಾಳ ಶಾಸಕ ರಾಜೇಶ್ ನಾಯಕ್ ಹಾಗೂ ಶ್ರವಣಬೆಳಗೊಳ ಶಾಸಕ
ಗಡಿಭಾಗ ಜಿಲ್ಲೆಗಳಲ್ಲಿ ಕಡ್ಡಾಯವಾಗಿ ಕನ್ನಡ ಬೋಧನೆಗೆ ಕ್ರಮ : ಮಧುಬಂಗಾರಪ್ಪ
ಬೆಳಗಾವಿ : ರಾಜ್ಯದ ಬೆಳಗಾವಿ, ಬೀದರ್, ಚಾಮರಾಜನಗರ ಸೇರಿದಂತೆ ಗಡಿ ಭಾಗದ ಜಿಲ್ಲೆಗಳಲ್ಲಿನ ಸರಕಾರಿ ಶಾಲೆಗಳಲ್ಲಿ ಕಡ್ಡಾಯವಾಗಿ ಕನ್ನಡ ಭಾಷೆಯನ್ನು ಬೋಧನೆ ಮಾಡಬೇಕು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಎಸ್.ಮಧು ಬಂಗಾರಪ್ಪ ಸೂಚನೆ ನೀಡಿದ್ದಾರೆ. ಗುರುವಾರ ವಿಧಾನಸಭೆಯಲ್ಲಿ ಬಿಜೆಪಿ ಸದಸ್ಯ ಶರಣು ಸಲಗಾರ್ ಕೇಳಿದ ಪ್ರಶ್ನೆಗೆ ಉತ್ತರ ನೀಡಿದ ಅವರು, ಆಂಗ್ಲ ಮಾಧ್ಯಮ ಶಿಕ್ಷಕರ ಇಂಡಕ್ಷನ್ ಕಾರ್ಯಕ್ರಮ ತರಬೇತಿಯು ಸರಕಾರಿ ಶಾಲಾ ಶಿಕ್ಷಕರನ್ನು ಆಂಗ್ಲ ಮಾಧ್ಯಮ ವಿಭಾಗಗಳಿಗೆ ಸಜ್ಜುಗೊಳಿಸಲು ವಿಶೇಷವಾಗಿ ಗ್ರಾಮೀಣ ಹಿನ್ನೆಲೆಯಿಂದ ಬಂದ ವೈವಿದ್ಯಮಯ ಕಲಿಯುವವರಿಗೆ ಆಂಗ್ಲ ಭಾಷಾ ಪ್ರಾವೀಣ್ಯತೆ, ಆತ್ಮವಿಶ್ವಾಸ, ಡಿಜಿಟಲ್ ಕೌಶಲ್ಯಗಳು ಮತ್ತು ಬೋಧನಾ ವಿಧಾನಗಳನ್ನು ರೂಪಿಸಲಾಗುತ್ತಿದೆ ಎಂದರು. ತರಗತಿಯ ಬೋಧನೆ ಮತ್ತು ಆಂಗ್ಲ ಭಾಷಾ ಕಲಿಕೆಯಲ್ಲಿ ವಿದ್ಯಾರ್ಥಿಗಳ ತೊಡಗಿಸಿಕೊಳ್ಳುವಿಕೆಯನ್ನು ಸುಧಾರಿಸುವ ನಿಟ್ಟಿನಲ್ಲಿ ಮುಂದಿನ ಶೈಕ್ಷಣಿಕ ಸಾಲಿನವರಗೆ ಎಲ್ಲ ಶಿಕ್ಷಕರನ್ನು ದ್ವಿ-ಭಾಷಾ ಮಾಧ್ಯಮ ಬೋಧನೆಗೆ ತರಬೇತುಗೊಳಿಸಲಾಗುತ್ತಿದೆ. 2025-26ನೇ ಸಾಲಿನ ಆಯವ್ಯಯ ಘೋಷಣೆಯಲ್ಲಿ ಕಲ್ಯಾಣ ಕರ್ನಾಟಕ ಭಾಗದಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಖಾಲಿ ಇರುವ ಶಿಕ್ಷಕರ ಹುದ್ದೆಗಳನ್ನು ನೇಮಕ ಮಾಡಲು ಕ್ರಮ ವಹಿಸಲಾಗಿದೆ. ಸದರಿ ಹುದ್ದೆಗಳಲ್ಲಿ ದ್ವಿ-ಭಾಷಾ ಮಾಧ್ಯಮ ಭೋಧನೆಗೆ ಶಿಕ್ಷಕರನ್ನು ನೇಮಕ ಮಾಡಲು ಆದ್ಯತೆ ನೀಡಲಾಗುವುದು ಎಂದು ಹೇಳಿದರು.
ವಿರೋಧ ಪಕ್ಷಗಳ ಗದ್ದಲದ ನಡುವೆಯೇ ಲೋಕಸಭೆಯಲ್ಲಿ G RAM G ಮಸೂದೆ ಅಂಗೀಕಾರ
ಹೊಸದಿಲ್ಲಿ: ವಿರೋಧ ಪಕ್ಷಗಳ ಗದ್ದಲದ ನಡುವೆಯೇ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಗೆ ಮರುನಾಮಕರಣ ಮಾಡುವ G RAM G ಮಸೂದೆ ಲೋಕಸಭೆಯಲ್ಲಿ ಅಂಗೀಕಾರಗೊಂಡಿದೆ. ಮಸೂದೆ ಮಂಡಿಸಿ ಮಾತನಾಡಿದ ಕೇಂದ್ರ ಕೃಷಿ ಸಚಿವ ಶಿವರಾಜ್ ಚೌಹಾಣ್, ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಲ್ಲಿ ಸಾಕಷ್ಟು ಕುಂದುಕೊರತೆಯಿದ್ದು, ರಾಜ್ಯ ಸರಕಾರಗಳು ಕೂಲಿ ಕಾರ್ಮಿಕರ ಮೇಲೆ ಹೆಚ್ಚು ವೆಚ್ಚ ಮಾಡುತ್ತಿವೆ. ಆದರೆ, ಸಾಮಗ್ರಿಗಳ ಖರೀದಿಯ ಮೇಲೆ ಕಡಿಮೆ ವೆಚ್ಚ ಮಾಡುತ್ತಿವೆ ಎಂದು ಹೇಳಿದರು. ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಗೂ ಮುನ್ನವೇ ಈ ಹಿಂದಿನ ಸರಕಾರಗಳು ಉದ್ಯೋಗ ಖಾತರಿ ಯೋಜನೆಗಳಿಗೆ ಚಾಲನೆ ನೀಡಿದ್ದವು ಎಂದೂ ಅವರು ಪ್ರತಿಪಾದಿಸಿದರು. ನರೇಂದ್ರ ಮೋದಿ ನೇತೃತ್ವದ ಸರಕಾರ ನಿರಂಕುಶವಾಗಿ ಯೋಜನೆಗಳ ಹೆಸರನ್ನು ಬದಲಿಸುತ್ತಿದೆ ಎಂಬ ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ಅವರ ಆರೋಪವನ್ನು ಅಲ್ಲಗಳೆದ ಶಿವರಾಜ್ ಚೌಹಾಣ್, ನೆಹರೂ ಹಾಗೂ ಗಾಂಧಿ ಹೆಸರಿನಲ್ಲಿ ಜಾರಿಗೊಳಿಸಲಾಗಿರುವ ಯೋಜನೆಗಳ ಪಟ್ಟಿಯನ್ನು ಸದನದ ಮುಂದೆ ಮಂಡಿಸಿದರು.
ಪ್ರಸೂತಿ ಆರೈಕೆ ಯೋಜನೆ: ತಾಯಿ-ಮಗುವಿನ ಆರೋಗ್ಯ ರಕ್ಷಣೆಗೆ 4,000 ರೂ.ವರೆಗೆ ಆರ್ಥಿಕ ನೆರವು! ಸೌಲಭ್ಯ ಪಡೆಯುವುದು ಹೇಗೆ?
ಕರ್ನಾಟಕ ಸರ್ಕಾರವು ಗರ್ಭಿಣಿಯರು ಮತ್ತು ಮಕ್ಕಳ ಆರೋಗ್ಯ ಸುಧಾರಿಸಲು 'ಪ್ರಸೂತಿ ಆರೈಕೆ' ಯೋಜನೆಯನ್ನು ಜಾರಿಗೆ ತಂದಿದೆ. ಬಿಪಿಎಲ್, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಗರ್ಭಿಣಿಯರಿಗೆ ಆರ್ಥಿಕ ನೆರವು ನೀಡಲಾಗುತ್ತದೆ. ಸರ್ಕಾರಿ ಆಸ್ಪತ್ರೆಯಲ್ಲಿ ಹೆರಿಗೆ ಮಾಡಿಸಿಕೊಂಡರೆ ಸಾಮನ್ಯ ಮಹಿಳೆಯರಿಗೆ 2000 ರೂಪಾಯಿ ಪ್ರೋತ್ಸಾಹಧನ ಸಿಗುತ್ತದೆ. ಎಸ್ಸಿ/ಎಸ್ಟಿ ಮಹಿಳೆಯರಿಗೆ 4000 ರೂ.ಗಳ ನೆರವು ಲಭ್ಯವಿದೆ. ಮಡಿಲು ಕಿಟ್ ಕೂಡ ನೀಡಲಾಗುತ್ತದೆ.
Karnataka Weather: ರಾಜ್ಯದ ಈ ಜಿಲ್ಲೆಗಳಲ್ಲಿ ದಾಖಲೆಯ ಶೀತಗಾಳಿ ಬೀಸುವ ಮುನ್ಸೂಚನೆ: ಇಲ್ಲಿವೆ ಮುಂಜಾಗ್ರತಾ ಕ್ರಮಗಳು
Karnataka Weather: ರಾಜ್ಯದಲ್ಲಿ ಭಾರೀ ಚಳಿ ಮುಂದುವರೆದಿದೆ. ಹಾಗೆಯೇ, ಮುಂದಿನ ದಿನಗಳಲ್ಲಿ ಹಲವಾರು ಜಿಲ್ಲೆಗಳಲ್ಲಿ ಶೀತಗಾಳಿ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಹಾಗಾದ್ರೆ, ಎಲ್ಲೆಲ್ಲಿ ಹಾಗೂ ಪಾಲಿಸಬೇಕಾದ ಮುಂಜಾಗ್ರತಾ ಕ್ರಮಗಳೇನು ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ. ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಇಂದು (ಡಿಸೆಂಬರ್ 18) ಬೆಳಗ್ಗೆ ದಟ್ಟ ಮಂಜಿನ ಜೊತೆ
SHIVAMOGGA | ಕರ್ತವ್ಯದಲ್ಲಿದ್ದ ಎಎಸ್ಸೈಯವರ ಮಾಂಗಲ್ಯ ಸರವನ್ನೇ ಎಗರಿಸಿದ ಕಳ್ಳರು
ಶಿವಮೊಗ್ಗ: ಕರ್ತವ್ಯ ನಿರತ ಎಎಸ್ಸೈ ಮಾಂಗಲ್ಯ ಸರವನ್ನೇ ಕಳ್ಳರು ಕದ್ದಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ಪ್ರತಿಭಟನೆಯ ಹಿನ್ನೆಲೆ ಶಿವಮೊಗ್ಗ ಬಿಜೆಪಿ ಕಚೇರಿಗೆ ಬಂದೋಬಸ್ತ್ಗೆಂದು ಎಎಸ್ಸೈ ಅಮೃತಾಬಾಯಿ ಬಂದಿದ್ದರು. ಪ್ರತಿಭಟನೆಯ ವೇಳೆ ಕಳ್ಳರು ಕೈಚಳಕ ತೋರಿದ್ದು, ಅವರ ಕತ್ತಲ್ಲಿದ್ದ 60 ಗ್ರಾಂ ಮಾಂಗಲ್ಯಸರವನ್ನು ಎಗರಿಸಿದ್ದಾರೆ. ಪೊಲೀಸ್ ಅಧಿಕಾರಿ ಎಂಬ ಭಯವೂ ಇಲ್ಲದೆ ಕಳ್ಳರು ಕೃತ್ಯ ನಡೆಸಿದ್ದು, ದೊಡ್ಡಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಯಡಿಯೂರಪ್ಪ ಹೆಸರು ಹಾಳಾಗಲು ಪುತ್ರನೇ ಕಾರಣ : ವಿಜಯೇಂದ್ರ ವಿರುದ್ದ ಡಿಕೆಶಿ ಗುರುತರ ಆರೋಪ
DK Shivakumar on BY Vijayendra : ಸದನದಲ್ಲಿ ಭಾಗವಹಿಸುವುದನ್ನು ಬಿಟ್ಟು, ಎಲ್ಲೆಲ್ಲೋ ತಪ್ಪಿಸಿಕೊಂಡು ಓಡಾಡುವುದಲ್ಲ. ತಂದೆಯ ಹೆಸರು ಹಾಳಾಗಲು ವಿಜಯೇಂದ್ರನೇ ಕಾರಣ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದ್ದಾರೆ. ಗೃಹಲಕ್ಷ್ಮಿ ವಿಚಾರದಲ್ಲಿ ಯಾವುದೇ ಸುಳ್ಳು ಮಾಹಿತಿಯನ್ನು ಸಚಿವೆ ನೀಡಿಲ್ಲ ಎಂದು ಡಿಸಿಎಂ ಹೇಳಿದ್ದಾರೆ.
ವಿಜಯೇಂದ್ರ ಕಲೆಕ್ಷನ್ ಕಿಂಗ್: ಡಿ.ಕೆ.ಶಿವಕುಮಾರ್ ಆರೋಪ
ಅವರು ತಪ್ಪಿಸಿಕೊಂಡು ಓಡಾಡದೆ ಅಸೆಂಬ್ಲಿಯಲ್ಲಿ ಮಾತನಾಡಲಿ''
VB– G RAM G 2025 ಮಸೂದೆಗೆ ಲೋಕಸಭೆ ಅಂಕಿತ; ಗಾಂಧಿ ಹೆಸರು ಕೈಬಿಟ್ಟಿದ್ದಕ್ಕೆ ಪ್ರತಿ ಹರಿದು ಹಾಕಿದ ವಿಪಕ್ಷಗಳು!
ಅಂತೂ ಇಂತೂ ಲೋಕಸಭೆಯಲ್ಲಿ ಕೇಂದ್ರ ಸರ್ಕಾರದ ಬಯಕೆ ಈಡೇರಿದೆ. MGNREGA ಯೋಜನೆಯನ್ನು VB– G RAM G ಎಂದು ಮರುನಾಮಕರಣ ಮಾಡುವ ಕೇಂದ್ರದ ಪ್ರಸ್ತಾವನೆಯನ್ನು ಲೋಕಸಭೆ ಅಂಗೀಕರಿಸಿದೆ. ಆದರೆ ಈ ಯೋಜನೆಯಿಂದ ಮಹಾತ್ಮ ಗಾಂಧಿ ಅವರ ಹೆಸರನ್ನು ಕೈಬಿಟ್ಟಿದ್ದನ್ನು ಖಂಡಿಸಿ, ವಿಪಕ್ಷ ಸದಸ್ಯರು ಮಸೂದೆಯ ಪ್ರತಿಯನ್ನು ಹರಿದು ಹಾಕಿ ತಮ್ಮ ಆಕ್ರೋಶ ಹೊರಹಾಕಿದ್ದಾರೆ. ಸದ್ಯ ಸ್ಪೀಕರ್ ಓಂ ಬಿರ್ಲಾ ಅವರು ಲೋಕಸಭೆ ಕಲಾಪವನ್ನು ನಾಳೆ (ಡಿ.19)ವರೆಗೆ ಮುಂದೂಡಿದ್ದಾರೆ. ಇಲ್ಲಿದೆ ಮಾಹಿತಿ.
Home Loan ಇದ್ದವರು ಈ ಒಂದು ಕೆಲಸ ಮಾಡಿದ್ರೆ ಲಕ್ಷ ಲಕ್ಷ ಬಡ್ಡಿ ಉಳಿಸಬಹುದು..!
ಸ್ವಂತ ಮನೆ ಹೊಂದುವ ಕನಸು ನನಸಾಗಲು ಇಂದಿನ ಕಾಲದಲ್ಲಿ ಗೃಹ ಸಾಲ (Home Loan) ಪಡೆಯುವುದು ಅನಿವಾರ್ಯ ಮತ್ತು ಸಾಮಾನ್ಯವಾಗಿದೆ. ಆದರೆ, 20 ಅಥವಾ 25 ವರ್ಷಗಳ ಕಾಲ ಪ್ರತಿ ತಿಂಗಳು ಕಂತು ಪಾವತಿಸುವುದು ದೊಡ್ಡ ಆರ್ಥಿಕ ಹೊರೆಯಾಗಿ ಪರಿಣಮಿಸುತ್ತದೆ. ಹೆಚ್ಚಿನ ಸಂದರ್ಭಗಳಲ್ಲಿ, ನಾವು ಪಡೆದ ಅಸಲು ಮೊತ್ತಕ್ಕಿಂತ ಹೆಚ್ಚಿನ ಹಣವನ್ನು ಕೇವಲ ಬಡ್ಡಿಯ ರೂಪದಲ್ಲೇ ಬ್ಯಾಂಕ್ಗಳಿಗೆ ಪಾವತಿಸುತ್ತೇವೆ. ಬ್ಯಾಂಕಿಂಗ್ ತಜ್ಞರು ಮತ್ತು ಆರ್ಥಿಕ ಸಲಹೆಗಾರರ ಪ್ರಕಾರ, ಒಂದು ಸರಳ ಆರ್ಥಿಕ ಶಿಸ್ತನ್ನು ಪಾಲಿಸಿದರೆ ನೀವು ಬ್ಯಾಂಕ್ಗೆ ... Read more The post Home Loan ಇದ್ದವರು ಈ ಒಂದು ಕೆಲಸ ಮಾಡಿದ್ರೆ ಲಕ್ಷ ಲಕ್ಷ ಬಡ್ಡಿ ಉಳಿಸಬಹುದು..! appeared first on Karnataka Times .
ನಾಸಿಕ್ನಲ್ಲಿ ಸಿಂಹಸ್ಥ ಕುಂಭ ಮೇಳಕ್ಕೆ ಸಿದ್ಧತೆ: 54 ಎಕರೆ ಜಾಗದಲ್ಲಿ 1,800 ಮರಗಳ ತೆರವು ವಿವಾದ
2026ರ ಅಕ್ಟೋಬರ್ನಲ್ಲಿ ನಾಸಿಕ್ನಲ್ಲಿ ನಡೆಯಲಿರುವ ಸಿಂಹಸ್ಥ ಕುಂಭ ಮೇಳಕ್ಕೆ ಭರ್ಜರಿ ಸಿದ್ಧತೆಗಳು ನಡೆಯುತ್ತಿವೆ. ಈ ಬಾರಿ 12.5 ಕೋಟಿ ಜನ ಭೇಟಿ ನೀಡುವ ನಿರೀಕ್ಷೆಯಿದೆ. ಮೇಳದ ಪ್ರಮುಖ ಆಕರ್ಷಣೆಯಾದ ಸನ್ಯಾಸಿಗಳ ವಸತಿಗಾಗಿ 1,800 ಮರಗಳನ್ನು ತೆರವುಗೊಳಿಸುವ ಪ್ರಸ್ತಾವನೆಗೆ ತೀವ್ರ ವಿರೋಧ ವ್ಯಕ್ತವಾಗಿದೆ. ಪರಿಸರವಾದಿಗಳು ಪ್ರತಿಭಟನೆ ನಡೆಸುತ್ತಿದ್ದು, ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಮರಗಳ ತೆರವುಗೆ ತಡೆ ನೀಡಿದೆ.
ಹಠಕ್ಕೆ ಬಿದ್ದು ಜಾಗತಿಕ ದೇಶಗಳ ಮೇಲೆ ಸುಂಕ ಸಮರ ಸಾರಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ತಮ್ಮ ಸುಂಕ ನೀತಿಯಿಂದಾಗಿ ಅಮೆರಿಕದ ಖಜಾನೆಗೆ 200 ಬಿಲಿಯನ್ ಡಾಲರ್ ಹಣ ಹರಿದುಬಂದಿದೆ ಎಂದು ಪ್ರತಿಪಾದಿಸಿದ್ದಾರೆ. ಅದೇ ರೀತಿ ಸುಂಕದ ಲಾಭಾಂಶವನ್ನು ಪ್ರತಿ ಅಮೆರಿಕನ್ ಪ್ರಜೆಯೊಂದಿಗೆ ಹಂಚಿಕೊಳ್ಳುವುದಾಗಿ ಹೇಳಿರುವ ಟ್ರಂಪ್, ಅದರ ಮೊದಲ ಭಾಗವಾಗಿ ಸುಮಾರು 1.45 ಮಿಲಿಯನ್ ಅಮೆರಿಕನ್ ಯೋಧರಿಗೆ ತಲಾ 1,776 ಅಮೆರಿಕನ್ ಡಾಲರ್ ವಾರಿಯರ್ ಡಿವಿಡೆಂಡ್ ನೀಡುವುದಾಗಿ ಘೋಷಿಸಿದ್ದಾರೆ.
ಬಿಪಿಎಲ್ ಕಾರ್ಡ್ ಆದಾಯ ಮಿತಿ ಪರಿಷ್ಕರಣೆಗೆ ಚಿಂತನೆ: ಸಚಿವ ಕೆ.ಎಚ್.ಮುನಿಯಪ್ಪ
ಬೆಳಗಾವಿ ಸುವರ್ಣ ಸೌಧ ಡಿ.18: ರಾಜ್ಯ ಸರಕಾರ ಬಿ.ಪಿ.ಎಲ್. ಕಾರ್ಡ್ ಆದಾಯ ಮಿತಿ ಪರಿಷ್ಕರಣೆಗೆ ಚಿಂತನೆ ನಡೆಸಿದೆ ಎಂದು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಹಾಗೂ ಕಾನೂನು ಮಾಪನಶಾಸ್ತ್ರ ಇಲಾಖೆ ಸಚಿವ ಕೆ.ಎಚ್.ಮುನಿಯಪ್ಪ ಹೇಳಿದ್ದಾರೆ. ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನ ಮಂಡಲದ ಅಧಿವೇಶನದಲ್ಲಿ ಗುರುವಾರ ವಿಧಾನಸಭೆಯ ಪ್ರಶ್ನೋತ್ತರ ಕಲಾಪದಲ್ಲಿ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಹಾಗೂ ಶ್ರವಣಬೆಳಗೊಳ ಶಾಸಕ ಬಾಲಕೃಷ್ಣ.ಸಿ.ಎನ್. ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿ ಅವರು ಮಾತನಾಡುತ್ತಿದ್ದರು. ಕೇಂದ್ರ ಸರಕಾರ ಬಿ.ಪಿ.ಎಲ್ ಕಾರ್ಡ್ದಾರರ ಆದಾಯ ಮಿತಿಯನ್ನು ರೂ.1.20 ಲಕ್ಷಕ್ಕೆ ಮಿತಿಗೊಳಿಸಿದೆ. ಆದರೆ ಕೂಲಿ ಕೆಲಸಗಾರರಿಗೂ ಪ್ರತಿದಿನ ರೂ.500 ಕೂಲಿ ದೊರೆಯುತ್ತದೆ. ಇದರ ಆಧಾರದಲ್ಲಿ ಕೂಲಿ ಮಾಡುವವರ ಆದಾಯವೂ ವರ್ಷಕ್ಕೆ ರೂ.1.80 ಲಕ್ಷಕ್ಕೂ ಅಧಿಕವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಪರಿಷ್ಕರಿಸಲು ಚಿಂತನೆ ನಡೆದಿದೆ ಎಂದರು. ಕೇಂದ್ರ ಸರಕಾರ ರಾಜ್ಯದಲ್ಲಿ 7,75,206 ಶಂಕಾಸ್ಪದ ಪಡಿತರ ಫಲಾನುಭವಿಗಳನ್ನು ಗುರುತಿಸಿದೆ. ರಾಜ್ಯದಲ್ಲಿ 4.53 ಲಕ್ಷ ಬಿ.ಪಿ.ಎಲ್ ಹಾಗೂ 1.25 ಲಕ್ಷ ಎ.ಪಿ.ಎಲ್ ಕಾರ್ಡ್ ಹೊಂದಿರುವ ಕುಟುಂಬಗಳಿವೆ. ರಾಜ್ಯದ ಜನಸಂಖ್ಯೆಗೆ ಹೊಲಿಸಿದರೆ ಶೇ.73 ರಷ್ಟು ಕುಟುಂಬಗಳು ಬಿ.ಪಿ.ಎಲ್ ಕಾರ್ಡ್ ಪಡೆದಿವೆ. ರಾಜ್ಯವು ಜಿ.ಎಸ್.ಟಿ ಪಾವತಿ, ಆದಾಯ ತೆರಿಗೆ ಪಾವತಿಯಲ್ಲಿ ದೇಶದಲ್ಲಿ ಮುಂಚೂಣಿಯಲ್ಲಿದೆ. ಈ ಅಂಶವನ್ನು ಪರಿಗಣಿಸಿದರೆ ಬಿ.ಪಿ.ಎಲ್. ಕುಟುಂಬಗಳ ಪ್ರಮಾಣ ಶೇ.50 ರಷ್ಟು ಇರಬೇಕಿತ್ತು. ಆದರೆ ಇದಕ್ಕೂ ಹೆಚ್ಚಿನ ಕುಟುಂಬ ಬಿ.ಪಿ.ಎಲ್. ಕಾರ್ಡು ಪಡೆದಿವೆ. ರಾಜ್ಯದಲ್ಲಿ ಆದ್ಯತಾ ಪಡಿತರ ಚೀಟಿಗಳನ್ನು ಪಡೆಯುವ ಹಾಗೂ ಹೊರಗಿಡುವ ಬಗ್ಗೆ 2017ರಲ್ಲಿ ಮಾನದಂಡಗಳನ್ನು ರೂಪಿಸಿದೆ. ಇದರ ಅನ್ವಯ ಸರ್ಕಾರಿ, ಅನುದಾನಿತ ಸಂಸ್ಥೆಗಳು, ಮಂಡಳಿ, ನಿಗಮ, ಸ್ವಾಯತ್ತ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿರುವ ನೌಕರರು, ಆದಾಯ, ಸೇವಾ ಹಾಗೂ ಜಿ.ಎಸ್.ಟಿ ತೆರಿಗೆ ಪಾವತಿ ಮಾಡುವ ಕುಟುಂಬಗಳಿಗೆ ಬಿ.ಪಿ.ಎಲ್ ಕಾರ್ಡ್ ನೀಡುವುದಿಲ್ಲ. ಆದಾಯ ಮಿತಿ ಪರಿಷ್ಕರಣೆಗೆ ಚಿಂತನೆ ನಡೆಸಿರುವುದರಿಂದ, ತಾತ್ಕಾಲಿಕವಾಗಿ ಯಾವುದೇ ಬಿ.ಪಿ.ಎಲ್.ಕಾರ್ಡುಗಳನ್ನು ರದ್ದು ಮಾಡದಂತೆ ಅಧಿಕಾರಿಗಳಿಗೆ ಸೂಚನೆ ನೀಡಿರುವುದಾಗಿ ಎಂದು ಸಚಿವ ಕೆ.ಎಚ್.ಮುನಿಯಪ್ಪ ಹೇಳಿದರು. ಸದ್ಯ ವೈದ್ಯಕೀಯ ಆಧಾರದಲ್ಲಿ ಮಾತ್ರ ಬಿ.ಪಿ.ಎಲ್ ಕಾರ್ಡು ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಒಂದು ವೇಳೆ ಕುಟುಂಬದ ಸದಸ್ಯರು ನೌಕರಿಗೆ ಸೇರಿದ್ದಾರೆ ಎನ್ನುವ ಕಾರಣದಿಂದ ಬಿ.ಪಿ.ಎಲ್ ಕಾರ್ಡು ರದ್ದಾಗಿದ್ದರೆ, ಬಾಧಿತ ಕುಟುಂಬದವರು ನೌಕರಿಗೆ ಸೇರಿದವರು ತಮ್ಮೊಂದಿಗೆ ವಾಸವಾಗಿಲ್ಲ ಎನ್ನುವ ಕಾರಣ ನೀಡಿ, ಸಂಬಂಧಪಟ್ಟ ತಹಶೀಲ್ದಾರರಿಗೆ ಅರ್ಜಿ ಸಲ್ಲಿಸಿದರೆ 15 ದಿನದ ಒಳಗಾಗಿ ಬಿ.ಪಿ.ಎಲ್ ಕಾರ್ಡು ನೀಡಲಾಗುವುದು. ಬಂಟ್ವಾಳ ಕ್ಷೇತ್ರದಲ್ಲಿ 2023-24ನೇ ಸಾಲಿನವರೆಗೆ ರೂ.48,715 ಕುಟುಂಬಗಳಿಗೆ ಬಿ.ಪಿ.ಎಲ್ ಕಾರ್ಡು ನೀಡಲಾಗಿದೆ. 2023 ರಿಂದ ಜನವರಿ 2025ವರೆಗೆ ಒಟ್ಟು 688 ಬಿ.ಪಿ.ಎಲ್ ಕಾರ್ಡು ವಿತರಿಸಲಾಗಿದೆ. 99 ಕುಟಂಬಗಳ ಬಿ.ಪಿ.ಎಲ್ ಕಾರ್ಡು ರದ್ದುಪಡಿಸಲಾಗಿದೆ. ಶ್ರವಣಬೆಳಗೊಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 930 ಬಿ.ಪಿ.ಎಲ್ ಕಾರ್ಡುಗಳನ್ನು ಎ.ಪಿ.ಎಲ್ ಕಾರ್ಡುಗಳಾಗಿ ಪರಿವರ್ತಿಸಲಾಗಿದೆ ಎಂದು ಸಚಿವ ಕೆ.ಎಚ್.ಮುನಿಯಪ್ಪ ತಿಳಿಸಿದರು. ಶ್ರವಣಬೆಳಗೊಳ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 964 ಹೊಸ ಬಿ.ಪಿ.ಎಲ್ ಕಾರ್ಡ್ ನೀಡುವ ಅರ್ಜಿಗಳು ಬಾಕಿಯಿವೆ. ಕೂಡಲೇ ಕ್ರಮ ಕೈಗೊಳ್ಳುವಂತೆ ಶಾಸಕ ಬಾಲಕೃಷ್ಣ.ಸಿ.ಎನ್. ಸಚಿವರಲ್ಲಿ ಕೋರಿದರು.
ಏಕತಾ ಪ್ರತಿಮೆ ವಿನ್ಯಾಸಕ, ಪ್ರಸಿದ್ಧ ಶಿಲ್ಪಿ ರಾಮ್ ಸುತಾರ್ ನಿಧನ
ನೋಯ್ಡಾ: ಗುಜರಾತ್ನಲ್ಲಿನ ವಿಶ್ವದ ಅತಿ ಎತ್ತರದ ಏಕತಾ ಪ್ರತಿಮೆಯನ್ನು ವಿನ್ಯಾಸಗೊಳಿಸಿದ ಪ್ರಸಿದ್ಧ ಶಿಲ್ಪಿ ರಾಮ್ ಸುತಾರ್ ಅವರು ನೋಯ್ಡಾದ ತಮ್ಮ ನಿವಾಸದಲ್ಲಿ ನಿಧನರಾದರು. ವಯೋಸಹೋಜ ಕಾಯಿಲೆಯಿಂದ ಬಳಲುತ್ತಿದ್ದ ರಾಮ್ ಸುತಾರ್ ಅವರು ಬುಧವಾರ ಮಧ್ಯರಾತ್ರಿ ತಮ್ಮ ನಿವಾಸದಲ್ಲಿ ನಿಧನರಾದರು ಎಂದು ಅವರ ಪುತ್ರ ಅನಿಲ್ ಸುತಾರ್ ಗುರುವಾರ ಮಾಧ್ಯಮಗಳಿಗೆ ತಿಳಿಸಿದ್ದಾರೆ. 1925ರ ಫೆಬ್ರವರಿ 19ರಂದು ಮಹಾರಾಷ್ಟ್ರದ ಧುಲೆ ಜಿಲ್ಲೆಯ ಗೊಂಡೂರ್ ಗ್ರಾಮದಲ್ಲಿ ಜನಿಸಿದ ಸುತಾರ್ ಅವರು ಬಾಲ್ಯದಿಂದಲೇ ಶಿಲ್ಪಕಲೆಯತ್ತ ಆಕರ್ಷಿತರಾಗಿದ್ದರು. ಮುಂಬೈನ ಜೆಜೆ ಸ್ಕೂಲ್ ಆಫ್ ಆರ್ಟ್ ಅಂಡ್ ಆರ್ಕಿಟೆಕ್ಚರ್ನಿಂದ ಚಿನ್ನದ ಪದಕ ಪಡೆದಿರುವ ರಾಮ್ ಸುತಾರ್ ವೃತ್ತಿ ಜೀವನದಲ್ಲಿ ಮಹತ್ವದ ಸಾಧನೆಗೈದಿದ್ದಾರೆ. ಅವರ ಅತ್ಯುತ್ತಮ ವಿನ್ಯಾಸಗಳಲ್ಲಿ ಧ್ಯಾನಸ್ಥ ರೀತಿಯಲ್ಲಿ ಕುಳಿತಿರುವ ಮಹಾತ್ಮ ಗಾಂಧಿಯವರ ಪ್ರತಿಮೆಗಳು ಮತ್ತು ಸಂಸತ್ತಿನ ಆವರಣದಲ್ಲಿ ಕುದುರೆ ಸವಾರಿ ಮಾಡುತ್ತಿರುವ ಛತ್ರಪತಿ ಶಿವಾಜಿಯ ಪ್ರತಿಮೆಗಳು ಸೇರಿವೆ. ಬೆಂಗಳೂರಿನ ವಿಮಾನ ನಿಲ್ದಾಣದಲ್ಲಿರುವ ಕೆಂಪೇಗೌಡರ ಪ್ರತಿಮೆ, ಗುಜರಾತ್ನಲ್ಲಿರುವ ಸರ್ದಾರ್ ವಲ್ಲಭಬಾಯಿ ಪಟೇಲ್ ಅವರ ಪ್ರತಿಮೆಯನ್ನು ಇವರೇ ವಿನ್ಯಾಸಗೊಳಿಸಿದ್ದರು. ಸುತಾರ್ ಅವರಿಗೆ 1999ರಲ್ಲಿ ಪದ್ಮಶ್ರೀ ಮತ್ತು 2016ರಲ್ಲಿ ಪದ್ಮಭೂಷಣ ಪ್ರಶಸ್ತಿಗಳನ್ನು ನೀಡಲಾಯಿತು. ಇತ್ತೀಚೆಗೆ, ರಾಜ್ಯದ ಅತ್ಯುನ್ನತ ಪ್ರಶಸ್ತಿಯಾದ “ಮಹಾರಾಷ್ಟ್ರ ಭೂಷಣ ಪುರಸ್ಕಾರ”ವನ್ನು ಅವರಿಗೆ ನೀಡಲಾಗಿತ್ತು.
ಟೋಲ್ ಸಂಗ್ರಹದಲ್ಲಿ ಮಹತ್ವದ ಬದಲಾವಣೆ: ವಾಹನ ಸವಾರರಿಗೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಗುಡ್ನ್ಯೂಸ್
ನವದೆಹಲಿ: ಕೇಂದ್ರ ಸರ್ಕಾರವು ಟೋಲ್ ವ್ಯವಸ್ಥೆಯ ವಿಚಾರದಲ್ಲಿ ಭರ್ಜರಿ ಗುಡ್ನ್ಯೂಸ್ ನೀಡಿದೆ. ದೇಶದಾದ್ಯಂತ ಟೋಲ್ ವ್ಯವಸ್ಥೆಯನ್ನು ಸುಧಾರಿಸುವ ನಿಟ್ಟಿನಲ್ಲಿ ಹಲವು ಹೊಸ ಮಾದರಿಗಳನ್ನು ಅಳವಡಿಸಿಕೊಳ್ಳಲಾಗುತ್ತಿದೆ. ಇತ್ತೀಚಿನ ವರ್ಷಗಳಲ್ಲಿ ಫಾಸ್ಟ್ ಟ್ಯಾಗ್ ಅದಕ್ಕೊಂದು ಉದಾಹರಣೆಯಾಗಿದೆ. ಇದೀಗ ಮತ್ತೊಂದು ಅತ್ಯಾಧುನಿಕ ವ್ಯವಸ್ಥೆಯನ್ನು ಅಳವಡಿಸಿಕೊಳ್ಳುತ್ತಿರುವುದಾಗಿ ಕೇಂದ್ರ ರಸ್ತೆ ಸಾರಿಗೆ ಮತ್ತು ರಾಷ್ಟ್ರೀಯ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ರಾಜ್ಯಸಭೆಗೆ ತಿಳಿಸಿದ್ದಾರೆ.
14 ವರ್ಷಗಳ ಜರ್ಮನಿ ಜೀವನದ ನಂತರವೂ ಕಾಡುತ್ತಿದೆ ಕನ್ನಡದ ಕೊರಗು - 'ಕರುನಾಡಿಗೆ ಮರಳುತ್ತೇನೆ' ಎಂದ ಮಹಿಳೆ
ಜರ್ಮನಿಯಲ್ಲಿ 14 ವರ್ಷಗಳಿಂದ ವಾಸಿಸುತ್ತಿರುವ ಮಂಗಳೂರು ಮೂಲದ ಮಹಿಳೆಯೊಬ್ಬರು, ತಮ್ಮ ಊರಿನ ಸಂಸ್ಕೃತಿ, ಹಬ್ಬ-ಹರಿದಿನಗಳನ್ನು ಮಿಸ್ ಮಾಡಿಕೊಳ್ಳುತ್ತಿರುವುದಾಗಿ ಹೇಳಿ, ಸ್ವದೇಶಕ್ಕೆ ಮರಳುವ ಇಂಗಿತ ವ್ಯಕ್ತಪಡಿಸಿದ್ದಾರೆ. ಜರ್ಮನಿಯ ಸುಂದರ ಜೀವನ, ಭಾಷೆ, ಸ್ನೇಹಿತರಿದ್ದರೂ ತವರಿಗೆ ಮರಳುವ ಬಯಕೆ ಅವರಲ್ಲಿದೆ. ಆದರೆ, ಭಾರತದ ಸಾಮಾಜಿಕ ಸಮಸ್ಯೆಗಳ ಬಗ್ಗೆಯೂ ಚಿಂತಿಸಿದ್ದಾರೆ.
ಕೊಪ್ಪಳ : ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ ಅವರನ್ನು ಸಿಲುಕಿಸಿ ಕಿರುಕುಳ ನೀಡಲಾಗುತ್ತಿದೆ ಎಂದು ಆರೋಪಿಸಿ ಕಾಂಗ್ರೆಸ್ ಕಾರ್ಯಕರ್ತರು ಕೊಪ್ಪಳದ ಬಿಜೆಪಿ ಕಚೇರಿಯನ್ನು ಮುತ್ತಿಗೆ ಹಾಕಿ ಪ್ರತಿಭಟಿಸಿದರು. ನಗರದಲ್ಲಿರುವ ಬಿಜೆಪಿ ಕಚೇರಿಗೆ ಮುತ್ತಿಗೆ ಹಾಕಿದ ಕಾಂಗ್ರೆಸ್ ಕಾರ್ಯಕರ್ತನ್ನು ಪೊಲೀಸರು ತಡೆದು ನಿಲ್ಲಿಸಿದರು. ಇದರಿಂದ ಕಾರ್ಯಕರ್ತರು ಬಿಜೆಪಿ ಕಚೇರಿಯ ಮುಂದೆ ಪ್ರತಿಭಟನೆ ನಡೆಸಿ ಬಿಜೆಪಿ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ಹೊರಹಾಕಿದರು. ಈ ವೇಳೆ ಬಿಜೆಪಿ ಕಚೇರಿ ಮುಚಿತ್ತು. ಈ ಸಂದರ್ಭದಲ್ಲಿ ಕೊಪ್ಪಳ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೃಷ್ಣ ಇಟ್ಟಂಗಿ, ಕಾಂಗ್ರೆಸ್ ವಕ್ತಾರೆ ಶೈಲಾಜಾ ಹಿರೇಮಠ್, ಮಂಜುನಾಥ್ ಗೊಂಡಬಾಳ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಮೀದ್ ಮನಿಯಾರ್, ಅಕ್ಬರ್ ಪಲ್ಟನ್, ಮಲ್ಲು ಪೂಜಾರ್, ಮುತ್ತುರಾಜ್ ಕುಷ್ಟಗಿ, ಗಾಳೆಪ್ಪ ಪೂಜಾರ್, ಪ್ರಸನ್ನ ಗಡಾದ್, ಕಿಶೋರಿ ಬುದುನೂರು ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.
ಅಮೆರಿಕದ ಸುಂಕದಿಂದ ತಮಿಳುನಾಡಿನ ಜವಳಿ, ಚರ್ಮೋದ್ಯಮದ ಮೇಲೆ ತೀವ್ರ ಪರಿಣಾಮ: ಪ್ರಧಾನಿಗೆ ಪತ್ರ ಬರೆದ ಸಿಎಂ ಸ್ಟಾಲಿನ್
ಚೆನ್ನೈ: ಭಾರತದ ರಫ್ತಿನ ಮೇಲೆ ಅಮೆರಿಕ ಶೇ.50ರಷ್ಟು ಸುಂಕ ವಿಧಿಸಿರುವುದರಿಂದ ಮಾನವೀಯ ಮತ್ತು ಆರ್ಥಿಕ ಬಿಕ್ಕಟ್ಟು ಎದುರಾಗುವ ಸಾಧ್ಯತೆ ಇದೆ ಎಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಕಳವಳ ವ್ಯಕ್ತಪಡಿಸಿದ್ದಾರೆ. ಈ ಸಮಸ್ಯೆಯನ್ನು ಪರಿಹರಿಸಲು ತುರ್ತು ಮಧ್ಯಪ್ರವೇಶಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ. ಅಮೆರಿಕದ ಸುಂಕಗಳು ತಮಿಳುನಾಡಿನ ಜವಳಿ, ಉಡುಪು ಮತ್ತು ಚರ್ಮೋದ್ಯಮವನ್ನು ಕುಂಠಿತಗೊಳಿಸಿದ್ದು, ಇದರ ಪರಿಣಾಮವಾಗಿ 15,000 ಕೋಟಿ ರೂ.ಗಳಷ್ಟು ಆರ್ಡರ್ಗಳ ನಷ್ಟವಾಗಿದೆ. ಲಕ್ಷಾಂತರ ಉದ್ಯೋಗಗಳು, ವಿಶೇಷವಾಗಿ ಮಹಿಳೆಯರ ಉದ್ಯೋಗಗಳು ಗಂಭೀರ ಅಪಾಯದಲ್ಲಿವೆ ಎಂದು ಎಂ.ಕೆ. ಸ್ಟಾಲಿನ್ ಹೇಳಿದ್ದಾರೆ. ಭಾರತದ ನಿಟ್ವೇರ್ ರಾಜಧಾನಿ ತಿರುಪ್ಪೂರಿನಲ್ಲಿ ರಫ್ತುದಾರರು 15,000 ಕೋಟಿ ರೂಪಾಯಿಗಳ ಅಪಾರ ಆರ್ಡರ್ಗಳ ನಷ್ಟವನ್ನು ವರದಿ ಮಾಡಿದ್ದಾರೆ. ವಿವಿಧ ಘಟಕಗಳಲ್ಲಿ 30% ವರೆಗಿನ ಬಲವಂತದ ಉತ್ಪಾದನಾ ಕಡಿತವೂ ಸೇರಿದೆ. ಹೊಸ ಆರ್ಡರ್ಗಳು ಕೂಡ ಆತಂಕಕಾರಿ ದರದಲ್ಲಿ ಕಡಿಮೆಯಾಗುತ್ತಿವೆ. ಇದು ತಿರುಪ್ಪೂರು, ಕೊಯಮತ್ತೂರು, ಈರೋಡ್ ಮತ್ತು ಕರೂರ್ ಜಿಲ್ಲೆಗಳ ರಫ್ತುದಾರರಿಗೆ ಒಟ್ಟಾರೆಯಾಗಿ ದಿನಕ್ಕೆ 60 ಕೋಟಿ ರೂ.ಗಳ ಆದಾಯ ನಷ್ಟಕ್ಕೆ ಕಾರಣವಾಗಿದೆ. ಇದು ಅನೇಕ ಸಣ್ಣ ಮತ್ತು ಮಧ್ಯಮ ಉದ್ಯಮಗಳನ್ನು ಕುಸಿತದ ಅಂಚಿಗೆ ತಳ್ಳಿದೆ. ವೆಲ್ಲೂರು, ರಾಣಿಪೇಟೆ ಮತ್ತು ತಿರುಪತ್ತೂರು ಜಿಲ್ಲೆಗಳಲ್ಲಿರುವ ಪಾದರಕ್ಷೆಗಳ ಘಟಕಗಳಲ್ಲಿಯೂ ಇದೇ ರೀತಿಯ ನಿರಾಶಾದಾಯಕ ಸನ್ನಿವೇಶ ಕಂಡುಬಂದಿದೆ. ಸಾಧ್ಯವಾದಷ್ಟು ಬೇಗ ದ್ವಿಪಕ್ಷೀಯ ಒಪ್ಪಂದದ ಮೂಲಕ ಈ ಸುಂಕ ಸಮಸ್ಯೆಯನ್ನು ಪರಿಹರಿಸುವಲ್ಲಿ ಆದ್ಯತೆ ನೀಡಬೇಕು. ತ್ವರಿತ ನಿರ್ಧಾರ ನಮ್ಮ ರಫ್ತುದಾರರ ಭವಿಷ್ಯವನ್ನು ಪುನರುಜ್ಜೀವನಗೊಳಿಸುವುದಲ್ಲದೆ, ವಿಶ್ವಾಸಾರ್ಹ ಜಾಗತಿಕ ಉತ್ಪಾದನಾ ಕೇಂದ್ರವಾಗಿ ಭಾರತದ ಸ್ಥಾನವನ್ನು ಬಲಪಡಿಸುತ್ತದೆ. ಈ ಬಿಕ್ಕಟ್ಟನ್ನು ಪರಿಹಾರಗೊಳಿಸುವುದನ್ನು ನಾನು ಎದುರು ನೋಡುತ್ತಿದ್ದೇವೆ ಎಂದು ಸ್ಟಾಲಿನ್ ಅವರು ಪ್ರಧಾನಿಗೆ ಬರೆದ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
2026ರಲ್ಲಿ ಮತ್ತಷ್ಟು ಏರಲಿದೆ ಚಿನ್ನದ ಬೆಲೆ!
► ಚಿನ್ನದ ಸತತ ಏರಿಕೆಗೆ ಕಾರಣವೇನು? ►ಇಂದಿನ ಚಿನ್ನದ ದರವೆಷ್ಟು?
Explained: ಸಾವಿಗೂ ಡಿಸೆಂಬರ್ ತಿಂಗಳಿಗೂ ಏನು ನಂಟು? ವರ್ಷದ ಕೊನೆ ತಿಂಗಳಲ್ಲಿ ದು:ಖದ ಛಾಯೆ ಉಂಟು!
ನವೆಂಬರ್-ಡಿಸೆಂಬರ್ ಬಂತೆಂದರೆ ಸಾಕು ಬರೀ ಸಾವಿನ ಸುದ್ದಿಯನ್ನೇ ಕೇಳಬೇಕಾಗುತ್ತದೆ ಹೀಗೆ ಯಾರಾದರೂ ಗೊಣಗುವುದನ್ನು ನೀವು ಕೇಳಿದ್ದೀರಾ? ಏಕೆ ನವೆಂಬರ್ ಅಥವಾ ಡಿಸೆಂಬರ್ ತಿಂಗಳಲ್ಲಿ ಹೆಚ್ಚು ಸಾವು ಸಂಭವಿಸುತ್ತವೆ? ಇದಕ್ಕೆ ವೈಜ್ಞಾನಿಕ ಕಾರಣಗಳೇನೆ ಇದ್ದರೂ, ವಿವಿಧ ವರ್ಷಗಳಲ್ಲಿ ಡಿಸೆಂಬರ್ ತಿಂಗಳಲ್ಲಿ ನಮ್ಮನ್ನು ಅಗಲಿದ ಹಲವು ಗಣ್ಯರ ಪಟ್ಟಿಯನ್ನು ಇಲ್ಲಿ ಕೊಡಲಾಗಿದೆ. ರಾಜಕೀಯ, ಸಿನಿಮಾ, ಸಾಹಿತ್ಯ ಹೀಗ ವಿವಿಧ ಕ್ಷೇತ್ರಗಳಲ್ಲಿ ಅಪ್ರತಿಮ ಸಾಧನೆ ಮಾಡಿದ್ದ ಈ ಗಣ್ಯರು ಡಿಸೆಂಬರ್ ತಿಂಗಳಲ್ಲೇ ಇಹಲೋಕ ತ್ಯಜಿಸಿದ್ದು ಕಾಕತಾಳೀಯ.
VB-G RAM G ಮಸೂದೆ ಗ್ರಾಮೀಣ ಕಾರ್ಮಿಕರು, ರೈತ ಕುಟುಂಬಗಳಿಗೆ ದ್ರೋಹ ಮಾಡುತ್ತದೆ: ಸಂಯುಕ್ತ ಕಿಸಾನ್ ಮೋರ್ಚಾ
MGNREGAವನ್ನು ರಕ್ಷಿಸಲು ಮುಂದೆ ಬರುವಂತೆ ಯುವಕರು, ರೈತರಿಗೆ ಕರೆ
ದ್ವೇಷ ಭಾಷಣ ಮತ್ತು ದ್ವೇಷಾಪರಾಧಗಳ ತಡೆ ಕಾಯ್ದೆ ಸ್ವಾಗತಾರ್ಹ ಆದರೆ...!
ಭಾರತ ವಿಶ್ವದ ಶ್ರೇಷ್ಠ ಸಂಸದೀಯ ಪ್ರಜಾಪ್ರಭುತ್ವದ ಸಂವಿಧಾನ ಹೊಂದಿರುವ ರಾಷ್ಟ್ರ. ಸಂವಿಧಾನದ ಸಮಸಮಾಜದ ಕನಸುಗಳು ಇದರ ಪೂರ್ವ ಪೀಠಿಕೆ ಮತ್ತು ನಿರ್ದೇಶನಾ ತತ್ವಗಳಲ್ಲಿ ಅಡಗಿದೆ. ಇವು ಆಳುವ ಸರಕಾರಗಳು ಜಾರಿಗೊಳಿಸುವ ಕಾಯ್ದೆ ಕಾನೂನುಗಳಾಗಿ ರೂಪುಗೋಳ್ಳುವುದರ ಮೇಲೆ ಅಡಕಗೊಂಡಿರುತ್ತವೆ. ಭಾರತದ ಧಾರ್ಮಿಕ ಅಲ್ಪಸಂಖ್ಯಾತರು ವಿಶೇಷವಾಗಿ ಮುಸ್ಲಿಮ್ ಸಮುದಾಯಗಳು ಧಾರ್ಮಿಕತೆಯ ನೆಪದಲ್ಲಿ ದೇಶಾದ್ಯಂತ ಪ್ರಮುಖವಾಗಿ ಕರ್ನಾಟಕದಲ್ಲಿ ಸಾಮಾಜಿಕ ಶೋಷಣೆ, ಬಹಿಷ್ಕಾರ, ಹಿಂಸೆ, ಸಾವು, ದೌರ್ಜನ್ಯ, ಅಂಚಿಗೆ ತಳ್ಳುವಿಕೆ, ಹಕ್ಕು ಮತ್ತು ಅವಕಾಶಗಳ ವಂಚನೆಗೆ ನಿರಂತರವಾಗಿ ಒಳಪಟ್ಟಿದ್ದಾರೆ. ಅಲ್ಲದೆ ದ್ವೇಷ ಭಾಷಣಗಳ ರಾಜಕಾರಣದಿಂದ ನಾಗರಿಕ ಹಕ್ಕುಗಳಿಂದ ವಂಚಿಸಲ್ಪಟ್ಟಿದ್ದಾರೆ. ಧರ್ಮ, ಭಾಷೆ, ಪ್ರದೇಶ, ಮದುವೆ, ಆಹಾರ, ಪ್ರಾರ್ಥನಾ ಪದ್ಧತಿ, ಸಂಸ್ಕೃತಿ ವಿಧಾನ, ಧಾರ್ಮಿಕ ಆಚರಣೆ, ಉಡುಗೆ ತೊಡುಗೆ, ರಾಜಕೀಯ ಭಿನ್ನ ಅಭಿಪ್ರಾಯಗಳು ಇಂತಹ ಹಲವಾರು ಕಾರಣಗಳನ್ನು ಬಳಸಿಯೇ ಧಾರ್ಮಿಕ ದೌರ್ಜನ್ಯಗಳ ಹುಟ್ಟಿಗೆ ಧಾರ್ಮಿಕ ದ್ವೇಷ ಭಾಷಣಗಳು ನಿರಂತರವಾಗಿ ಎಗ್ಗಿಲ್ಲದೆ ಸಕ್ರಿಯವಾಗಿದ್ದು ಫಲವನ್ನು ಉಣ್ಣುತ್ತಿವೆ. ಧರ್ಮದ್ವೇಷವೇ ಮತ ಬ್ಯಾಂಕಾಗಿ ಪರಿವರ್ತನೆಯಾಗುತ್ತಿರುವ, ಏಕಧರ್ಮದ ಸಾಂಸ್ಕೃತಿಕ ರಾಜಕಾರಣವೇ ಪ್ರಭುತ್ವದ ಪಾಲಕ ಸ್ಥಾನದಲ್ಲಿರುವ ಈ ಸಂದಿಗ್ಧ ಕಾಲಘಟ್ಟದ ನಮ್ಮ ರಾಜ್ಯದಲ್ಲಿ ‘ಕರ್ನಾಟಕ ದ್ವೇಷ ಭಾಷಣ ಮತ್ತು ದ್ವೇಷಾಪರಾಧಗಳ (ಪ್ರತಿಬಂಧಕ) ಮಸೂದೆ - ೨೦೨೫’ನ್ನು ಜಾರಿಗೊಳಿಸುವ ಕಾಂಗ್ರೆಸ್ ಸರಕಾರದ ಪ್ರಯತ್ನ ಮಹತ್ವ ಹಾಗೂ ಸ್ವಾಗತಾರ್ಹದ ಹೆಜ್ಜೆಯಾಗಿದೆ. ದ್ವೇಷ ಭಾಷಣಗಳು ಶಿಕ್ಷಾರ್ಹ ಅಪರಾಧವೆಂದು ಪರಿಗಣಿಸುವ ಈ ಮಸೂದೆ, ಸಾಮಾಜಿಕ ನ್ಯಾಯದ ದಿಕ್ಕಿನಲ್ಲಿ ಒಂದು ಐತಿಹಾಸಿಕ ಹೆಜ್ಜೆ. ಇಡೀ ದೇಶಕ್ಕೆ ಆದರ್ಶಪ್ರಾಯ. ಧಾರ್ಮಿಕ ನೆಪದ ಸಂವಿಧಾನ ವಿರೋಧಿ ಕೃತ್ಯಗಳ ತಡೆಗೆ ಈ ಮಸೂದೆ ಜಾರಿಗೊಳಿಸುವುದರ ಮೂಲಕ ಕರ್ನಾಟಕ ಸರಕಾರ ಒಂದು ಐತಿಹಾಸಿಕ ಹೆಜ್ಜೆ ಇಟ್ಟಿದೆ. ಇದೇ ಡಿಸೆಂಬರ್ ೪ ರಂದು ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆಗೊಂಡು ಬೆಳಗಾವಿ ಅಧಿವೇಶನದ ವಿಧಾನ ಮಂಡಲದಲ್ಲಿ ಮಂಡಿಸಲಾದ ಈ ಕಾಯ್ದೆಯ ಜಾರಿಗಿರುವ ಅಡೆ ತಡೆಗಳನ್ನು ಮೀರಿ ಇದರ ಸದುದ್ದೇಶ ಸಂಪೂರ್ಣ ಈಡೇರಬಹುದೇ? ಕಾದು ನೋಡಬೇಕಿದೆ. ಸಾಮಾಜಿಕ ದ್ವೇಷ ಹರಡುವ ಮಾತುಗಳು, ದ್ವೇಷ ಭಾಷಣಗಳು, ಇತರ ಧರ್ಮ, ಸಮುದಾಯಗಳನ್ನು ಅವಮಾನಿಸುವ, ಉದ್ರೇಕಿಸುವ ಹೇಳಿಕೆಗಳನ್ನು ಯಾವುದೇ ಧರ್ಮ, ಸಮುದಾಯ, ಪಕ್ಷ, ಗುಂಪುಗಳ ಮುಖಂಡರು ನೀಡಿದರೂ ಅವರ ಮೇಲೆ ಈ ಕಾಯ್ದೆಯನ್ನು ನಿರ್ಭೀತಿಯಾಗಿ ಜಾರಿಗೊಳಿಸುವ ಬದ್ಧತೆ, ಧೈರ್ಯ ಸರಕಾರದ ಸಂಬಂಧ ಪಟ್ಟ ಇಲಾಖಾಧಿಕಾರಿಗಳಿಗೆ ಇರಬೇಕು. ವಿಶೇಷವಾಗಿ, ರಾಜ್ಯದಲ್ಲಿ ಈಗಾಗಲೇ ದ್ವೇಷ ಭಾಷಣಗಳ ಸರಣಿ ಪ್ರಕರಣಗಳು ದಾಖಲಾಗಿರುವ ವ್ಯಕ್ತಿಗಳ ವಿರುದ್ಧ ಈ ನೂತನ ಕಾಯ್ದೆಯ ಅಡಿಯಲ್ಲಿ ಕಠಿಣ ಕ್ರಮ ಕೈಗೊಳ್ಳುವ ಎದೆಗಾರಿಕೆಯನ್ನು ಸರಕಾರ ತೋರಬೇಕು. ಆಗ ಮಾತ್ರ ಈ ಕಾಯ್ದೆಯ ನೈಜ ಜನಪರ ಕಾಳಜಿ ಸಾಬೀತಾಗಬಹುದು. ಈ ಕಾನೂನು ದುರ್ಬಲರ ಮೇಲೆ ಮಾತ್ರ ಜಾರಿಯಾಗಿ, ಪ್ರಬಲ ಶಕ್ತಿಶಾಲಿಗಳು ತಪ್ಪಿಸಿಕೊಳ್ಳುವಂತಾಗಬಾರದು. ನಿಜಾರ್ಥದಲ್ಲಿ ಈ ಕಾಯ್ದೆ ಪರಿಣಾಮಕಾರಿಯಾಗಬೇಕಾದರೆ, ದ್ವೇಷ ಭಾಷಣ ಮಾಡುವವರ ರಾಜಕೀಯ ಹುದ್ದೆ ನೋಡದೆ ಇವರ ವಿರುದ್ಧ ಕಠಿಣಕ್ರಮ ಜರುಗಿಸಬೇಕು. ಜೊತೆಗೆ ಬಾಧಿತರ ಪುನರ್ವಸತಿ ಮತ್ತು ಪರಿಹಾರಕ್ಕೆ ಸ್ಪಷ್ಟ ವ್ಯವಸ್ಥೆಯನ್ನು ರೂಪಿಸುವ ಅಗತ್ಯವಿದೆ. ಈ ಮಸೂದೆಯ ಕೆಲ ಅಂಶಗಳು ಸಂವಿಧಾನಬಾಹಿರವಾಗಿ ದುರ್ಬಳಕೆಗೆ ಅವಕಾಶವಾಗುವ ಸಾಧ್ಯತೆಗಳಿವೆ. ಧರ್ಮ, ಸಮುದಾಯಗಳ ಮೇಲೆ ನಡೆಯುವ ವಿಮರ್ಶೆ-ಟೀಕೆಗಳು ಮತ್ತು ದ್ವೇಷದ ನಡುವಿನ ವ್ಯತ್ಯಾಸಗಳನ್ನು ಗುರುತಿಸಲು ಈ ಮಸೂದೆಗೆ ಸಾಧ್ಯವಾಗದಿರಬಹುದು. ಈ ವ್ಯತ್ಯಾಸಗಳನ್ನು ಬಲಾಢ್ಯರು ತಮ್ಮ ಪರವಾದ ಅನುಕೂಲಾಸ್ತ್ರವಾಗಿ ಬಳಸುವ ಸಾಧ್ಯತೆಗಳು ಸಹ ಇವೆ. ಈ ಮಸೂದೆಯ ಜಾರಿಯನ್ನು ಬಿಜೆಪಿ ಮತ್ತು ಹಿಂದುತ್ವವಾದಿ ಗುಂಪುಗಳ ಜೊತೆ ಜೆಡಿಎಸ್ ಕೂಡ ಖಂಡಿಸಿದೆ. ವಿಶೇಷವೆಂದರೆ ಕ.ರ.ವೇ. ನಾರಾಯಣ ಗೌಡರು ಸಹ ಈ ಮಸೂದೆ ವಿರುದ್ಧದ ನಿಲುವು ತಾಳಿದ್ದಾರೆ. ಇವರ ಗುಮಾನಿಗಳಿಗೆ ಸರಕಾರ ಸ್ಪಷ್ಟನೆ ನೀಡಬೇಕಿದೆ. ಬಿಜೆಪಿ ಮತ್ತು ಸಂಘಪರಿವಾರಕ್ಕೆ ದ್ವೇಷಭಾಷಣಗಳೇ ಅಧಿಕಾರ ರಾಜಕೀಯದ ಕೇಂದ್ರಬಿಂದು. ಇಲ್ಲಿ ಉತ್ಪಾದನೆಯಾದ ಕೋಮುಗಲಭೆಗಳ ಮೂಲಕವೇ ಅಧಿಕಾರ ಹಿಡಿದಿದ್ದು ಕೂಡ. ಇದನ್ನು ಕಾನೂನಾತ್ಮಕವಾಗಿ ತಡೆಯುವುದೆಂದರೆ ಇವರ ಕೋಮುವಾದಿ ಬತ್ತಳಿಕೆಗಳು ಬರಿದಾಗಿ ದ್ವೇಷರಾಜಕಾರಣದ ಬುಡಕ್ಕೆ ಬೆಂಕಿ ಬಿದ್ದಂತೆಯೇ ಸರಿ. ರಾಜ್ಯದಲ್ಲಿ ಈಗಾಗಲೇ ಇಂತಹ ದ್ವೇಷ ಭಾಷಣ ಮಾಂತ್ರಿಕರ ವಿರುದ್ಧ ಹಲವಾರು ಪ್ರಕರಣಗಳು ದಾಖಲಾಗಿದ್ದರೂ ಈ ಸಮಾಜ ಘಾತಕ ವ್ಯಕ್ತಿಗಳಿಗೆ ‘ಹಿಂದುತ್ವದ (ಹಿಂದೂ ಧರ್ಮ ಅಲ್ಲ) ಪಾಲಕರು’ ಎಂಬ ನೆಪದಲ್ಲಿ ಅಧಿಕಾರಸ್ಥರಿಂದ ಪಕ್ಷಾತೀತವಾಗಿ ಸಹಕಾರ, ರಕ್ಷಣೆ ಸಿಗುತ್ತಿದೆ. ಇದುವರೆಗಿನ ದ್ವೇಷ ಭಾಷಣ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸದಿರಲು ಈಗ ಜಾರಿಯಿರುವ ಕಾನೂನುಗಳ ಪೇಲವ ಪ್ರದರ್ಶನವೇ ಕಾರಣ. ಹೀಗಾಗಿ ಅದಕ್ಕೊಂದು ಪ್ರತ್ಯೇಕ ಕಾನೂನು ತರುವ ರಾಜ್ಯ ಸರಕಾರದ ಉದ್ದೇಶ ಸಮರ್ಥನೀಯ. ಇದುವರೆಗಿನ ಲಾಗಳಲ್ಲಿದ್ದ ನ್ಯೂನತೆಗಳನ್ನು ಕಿತ್ತು ಇವುಗಳನ್ನು ಮತ್ತಷ್ಟು ಸದೃಢಗೊಳಿಸಿ ಧರ್ಮ, ಜನಾಂಗ, ಭಾಷೆ, ಜನ್ಮಸ್ಥಳ, ಜಾತಿ, ಲಿಂಗ (ಬರೀ ಮುಸ್ಲಿಮರಲ್ಲದೆ ಕರ್ನಾಟಕದ ನಿವಾಸಿ ಎಲ್ಲಾ ಧರ್ಮ ಸಮುದಾಯ) ಆಧಾರದ ಮೇಲೆ ದ್ವೇಷದ ಮಾತುಗಳನ್ನು ಆಡುವುದು ಅಥವಾ ದ್ವೇಷ ಕೃತ್ಯಕ್ಕೆ ಪ್ರಚೋದನೆ ನೀಡುವುದು, ಕೋಮುಗಲಭೆಗಳನ್ನು ಸೃಷ್ಟಿಸುವುದು ಗಂಭೀರ ಶಿಕ್ಷೆಯಡಿ ತರಲಾಗಿದೆ. ಅಂತಹ ವ್ಯಕ್ತಿಗೆ ಮೊದಲನೇ ಬಾರಿಯ ಅಪರಾಧಕ್ಕೆ ಒಂದು ವರ್ಷದಿಂದ ಏಳು ವರ್ಷಗಳವರೆಗೆ ಜೈಲು ಶಿಕ್ಷೆ ಹಾಗೂ ಐವತ್ತು ಸಾವಿರ ರೂಪಾಯಿ ದಂಡ. ಈ ಕೃತ್ಯ ಮರುಕಳಿಸಿದರೆ ಹತ್ತು ವರ್ಷಗಳವರೆಗೆ ಶಿಕ್ಷೆ ಇದೆ. ದ್ವೇಷ ಭಾಷಣ ಮೈಕಾಸುರರಿಗೆ ಇದು ನಡುಕದ ಕಾನೂನು. ಈ ದ್ವೇಷಕಾರರು ಯಾವುದೇ ಧರ್ಮದವರಾದರೂ ಸರಿ, ಎಲ್ಲರಿಗೂ ಅನ್ವಯ. ಹೊಸ ಮಸೂದೆಯ ಪ್ರಕಾರ ದ್ವೇಷ ಭಾಷಣದ ಪ್ರಕರಣಗಳು ಜೆಎಂಎಫ್ಸಿ ನ್ಯಾಯಾಲಯಗಳಲ್ಲಿ ವಿಚಾರಣೆಗಳು ನಡೆಯಲಿವೆ. ಎಸ್ಪಿ ಯವರಿಗೆ ತನಿಖೆಯ ಜವಾಬ್ದಾರಿ ಇರಲಿದೆ. ಯಾವುದೇ ಸಮುದಾಯ ಅಥವಾ ಧರ್ಮವನ್ನು ಗುರಿಯಾಗಿಸಿದ ದ್ವೇಷಭಾಷಣ ಸಾರ್ವಜನಿಕ ಹೇಳಿಕೆ, ಬರೆಹ, ದೃಶ್ಯ-ಶ್ರವಣ ಹಾಗೂ ಇಲೆಕ್ಟ್ರಾನಿಕ್ಸ್ ಮಾಧ್ಯಮ ಮುಖಾಂತರ ಧರ್ಮ, ಜಾತಿ, ಜನಾಂಗ, ವರ್ಣ, ಭಾಷೆ, ಲಿಂಗ, ಜನ್ಮಸ್ಥಳ ಹಾಗೂ ವಸತಿಯ ಸ್ಥಳಗಳ ಕುರಿತು ವ್ಯಕ್ತಿಗಳ ನಡುವೆ ಅಥವಾ ಗುಂಪುಗಳ ನಡುವೆ ಹಾನಿ, ವಿರಸ, ಹಿಂಸೆಗಳನ್ನು ಪ್ರಚೋದಿಸುವ, ದ್ವೇಷವನ್ನು ಹುಟ್ಟಿ ಹಾಕುವ ಕೃತ್ಯಗಳಿಗೆ ಈ ಕಾಯ್ದೆ ತಡೆನೀಡಲಿದೆ ಎಂಬುದು ಇದರ ವಿಶೇಷ. ಧರ್ಮದ ಹೆಸರಿನಲ್ಲಿ ಸಮಾಜವನ್ನು ಒಡೆಯುವ ಸರ್ವ ಜನಾಂಗದ ಶಾಂತಿಯ ತೋಟವನ್ನು ಮುರಿಯುವ, ಕರುನಾಡನ್ನು ಧರ್ಮದ ನೆಪದಲ್ಲಿ ವಿಚ್ಛಿದ್ರಗೊಳಿಸುವ ಉದ್ದೇಶವುಳ್ಳರಿಗೆ ಈ ಕಾಯ್ದೆಯನ್ನು ಜೀರ್ಣಿಸಿ ಕೊಳ್ಳಲು ಸಾಧ್ಯವಾಗುವುದಿಲ್ಲ. ಈ ಪ್ರಯತ್ನ ಕರ್ನಾಟಕದಲ್ಲೇ ಹೀಗಿದ್ದರೆ, ಇನ್ನು ಇಂತಹ ಪ್ರಯೋಗಗಳು ಗುಜರಾತ್, ಉತ್ತರ ಪ್ರದೇಶ, ದಿಲ್ಲಿ, ಬಿಹಾರದಂತಹ ರಾಜ್ಯಗಳಲ್ಲಿ ನಡೆದರೆ.! ಧರ್ಮ, ಸಮುದಾಯ, ವರ್ಣ, ವರ್ಗ, ವೃತ್ತಿ, ಭಾಷೆಗಳ ನಡುವೆ ಬಿರುಕುಗಳ ಸೃಷ್ಟಿಕರ್ತರ ರಾಜಕೀಯ ಯೋಜನೆಗಳಿಗೆ ಈ ಮೂಲಕವಾದರೂ ಕಡಿವಾಣವಾಗಲಿ. ಜಾತ್ಯತೀತ, ಸರ್ವಜನ ಕಲ್ಯಾಣ, ಸೌಹಾರ್ದ ಈ ನಾಡಿನಲ್ಲಿ ಶಾಶ್ವತಗೊಳ್ಳಲಿ. ಈ ಕಾಯ್ದೆಯ ಸಮಗ್ರ ಜಾರಿಗೆ ಕಾಂಗ್ರೆಸ್ ಸರಕಾರ ಬದ್ಧತೆ ಪ್ರದರ್ಶಿಸಲಿ.
ಡಿ.26-28: ಮಾಳ ಶ್ರೀ ಗುರುಕುಲ ವಿದ್ಯಾವರ್ಧಕ ಶಾಲೆಯ ಅಮೃತ ಮಹೋತ್ಸವ
ಕಾರ್ಕಳ: ಶ್ರೀ ಗುರುಕುಲ ವಿದ್ಯಾವರ್ಧಕ ಸಂಘ(ರಿ.) ಶ್ರೀ ಗುರುಕುಲ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಮಾಳ ಇದರ ಅಮೃತ ಮಹೋತ್ಸವ ಕಾರ್ಯಕ್ರಮ ಡಿ.26ರಿಂದ 28ರವರೆಗೆ ನಡೆಯಲಿದೆ ಎಂದು ಅಮೃತ ಮಹೋತ್ಸವ ಸಮಿತಿಯ ಅಧ್ಯಕ್ಷ ಡಾ.ಎಂ ಪ್ರಭಾಕರ್ ಜೋಶಿ ಹೇಳಿದ್ದಾರೆ. ಅವರು ಕಾರ್ಕಳ ಪತ್ರಿಕಾ ಭವನದ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಡಿ.26ರಂದು ಬೆಳಗ್ಗೆ 8 ಗಂಟೆಗೆ ಗಣ ಹೋಮ, ನೂತನ ತರಗತಿ ಕೊಠಡಿಗಳ ಸಭಾಭವನ ಮತ್ತು ಪ್ರವೇಶದ್ವಾರದ ಉದ್ಘಾಟನೆ, ಪೂರ್ವಾಹ್ನ 11ಕ್ಕೆ ಧ್ವಜಾರೋಹಣ ಮತ್ತು ದೀಪ ಪ್ರಜ್ವಲನೆ ನಡೆಯಲಿದೆ. ಗೋಪಾಲ್ ಶೇರಿಗಾರ್ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಮುಖ್ಯಮಂತ್ರಿ ಡಾ.ಎಂ.ವೀರಪ್ಪ ಮೊಯ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸುವರು. ಸಂಜೆ 5ಕ್ಕೆ ಸಾಂಸ್ಕೃತ ನೃತ್ಯ ವೈಭವ ಕಾರ್ಯಕ್ರಮ 'ಜೋಡು ಜೀಟಿಗೆ' ಜನಪದ ತುಳು ನಾಟಕ ನಡೆಯಲಿದೆ . ಡಿ.27ರಂದು ಸಭಾ ಕಾರ್ಯಕ್ರಮ ಮತ್ತು ಸಂವಾದ ಕಾರ್ಯಕ್ರಮ ನಡೆಯಲಿದೆ. ಸಂಜೆ 5ಕ್ಕೆ ಸಾಂಸ್ಕೃತಿಕ ವೈವಿಧ್ಯ, ಶಾಲಾ ಮಕ್ಕಳಿಂದ 'ಭಕ್ತ ಪ್ರಹ್ಲಾದ' ಪೌರಾಣಿಕ ನಾಟಕ ನಡೆಯಲಿದೆ. ರಾತ್ರಿ 7ಕ್ಕೆ ನಡೆಯುವ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಸಕ ವಿ.ಸುನೀಲ್ ಕುಮಾರ್ ವಹಿಸುವರು. ಮುಖ್ಯ ಅತಿಥಿಯಾಗಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಇತರ ಗಣ್ಯರು ಭಾಗವಹಿಸಲಿದ್ದಾರೆ. ರಾತ್ರಿ 9ಕ್ಕೆ ಸದ್ಭಾವನ ಮಹಿಳಾ ಯಕ್ಷಗಾನ ಮಂಡಳಿ, ಬೆಂಗಳೂರು ಅವರಿಂದ 'ಮಹಿಷ ಮರ್ದಿನಿ' ಯಕ್ಷಗಾನ ಪ್ರದರ್ಶನ ನಡೆಯಲಿದೆ .ಡಿ.28ರಂದು ಹಳೆ ವಿದ್ಯಾರ್ಥಿಗಳ ಸ್ನೇಹ ಸಮ್ಮೇಳನ ಕಾರ್ಯಕ್ರಮ ನಡೆಯಲಿದೆ. ರಾಮಕೃಷ್ಣ ಮಠದ ಅಧ್ಯಕ್ಷ ಸ್ವಾಮಿ ಜಿತಕಾನಂದಾಜೀ ಸಭಾಧ್ಯಕ್ಷತೆ ವಹಿಸಲಿದ್ದಾರೆ. ಬಳಿಕ ಶಾಲಾ ಹಳೆ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ರಾತ್ರಿ 7ಕ್ಕೆ ಸಭಾ ಕಾರ್ಯಕ್ರಮ ನಡೆಯಲಿದ್ದು, ಸಭಾಧ್ಯಕ್ಷತೆಯನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ .ವೀರೇಂದ್ರ ಹೆಗ್ಡೆ ಮುಖ್ಯ ಅತಿಥಿಯಾಗಿ ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ.ಮೋಹನ್ ಅಳ್ವ ಹಾಗೂ ಇತರ ಗಣ್ಯರು ಭಾಗವಹಿಸಲಿದ್ದಾರೆ. ರಾತ್ರಿ ಒಂಭತ್ತರಿಂದ ಸಂಗೀತ ರಸಮಂಜರಿ ರಾತ್ರಿ 10:30ರಿಂದ ಗುರುಕುಲ ಶಾಲೆಯ ಹಳೆ ವಿದ್ಯಾರ್ಥಿಗಳಿಂದ 'ಬಾಕಿಲ್ ದೆಪ್ಪುಲೆ' ತುಳು ನಾಟಕ ಪ್ರದರ್ಶನಗೊಳ್ಳಲಿದೆ ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಗುರುಕುಲ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಗಜಾನನ ಮರಾಠೆ, ಅಮೃತ ಮಹೋತ್ಸವ ಸಮಿತಿಯ ಗೌರವಾಧ್ಯಕ್ಷ ನಾಗಭೂಷಣ ಜೋಶಿ, ಗುರುಕುಲ ಶಾಲೆಯ ಸಂಚಾಲಕ ಸುಧಾಕರ ಡೊಂಗ್ರೆ, ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ನಾಗಭೂಷಣ್ ಮರಾಠೆ, ಮುಖ್ಯ ಶಿಕ್ಷಕಿ ಪೂರ್ಣಿಮಾ ಶೆಣೈ ಉಪಸ್ಥಿತರಿದ್ದರು.
ಸದನದಲ್ಲಿ ಪ್ರತಿಧ್ವನಿಸಿದ ಕೃಷ್ಣ ಬೈರೇಗೌಡ ವಿರುದ್ಧದ ಭೂಕಬಳಿಕೆ ಆರೋಪ: ಸಚಿವರ ಸ್ಪಷ್ಟನೆಗೆ ಬಿಜೆಪಿ ಬಿಗಿಪಟ್ಟು
ಬೆಳಗಾವಿ: ಸಚಿವ ಕೃಷ್ಣ ಬೈರೇಗೌಡ ವಿರುದ್ಧ ಕೇಳಿಬಂದಿರುವ ಸ್ಮಶಾನ ಮತ್ತು ಕೆರೆ ಭೂಮಿ ಕಬಳಿಕೆ ಆರೋಪ ವಿಧಾನಸಭೆಯಲ್ಲಿ ಪ್ರತಿಧ್ವನಿಸಿತು. ವಿಪಕ್ಷ ನಾಯಕ ಆರ್. ಅಶೋಕ್ ಅವರು ಸದನದಲ್ಲಿ ಸ್ಪಷ್ಟನೆ ನೀಡುವಂತೆ ಆಗ್ರಹಿಸಿದರು. ಸಚಿವರು ಆರೋಪ ನಿರಾಕರಿಸಿ, ತನಿಖೆಗೆ ಸಿದ್ಧ ಎಂದರು. ಆದರೆ, ಸ್ಪೀಕರ್ ಶೂನ್ಯ ವೇಳೆಯಲ್ಲಿ ಚರ್ಚೆಗೆ ಅವಕಾಶ ನಿರಾಕರಿಸಿದರು.
ಮೊಟ್ಟೆಯಲ್ಲಿ ಕ್ಯಾನ್ಸರ್ ಅಂಶ ಆತಂಕ: ವಿಧಾನಸಭೆಯಲ್ಲಿ ಪ್ರಸ್ತಾಪ, ಸರ್ಕಾರದ ಸ್ಪಷ್ಟನೆ ಏನು?
ಮೊಟ್ಟೆಯಲ್ಲಿ ಕ್ಯಾನ್ಸರ್ ಕಾರಕ ಅಂಶಗಳಿವೆ ಎಂಬ ವದಂತಿ ರಾಜ್ಯದಲ್ಲಿ ಆತಂಕ ಮೂಡಿಸಿತ್ತು. ಈ ಬಗ್ಗೆ ವಿಧಾನಸಭೆಯಲ್ಲಿ ಆರೋಗ್ಯ ಸಚಿವರು ಸ್ಪಷ್ಟನೆ ನೀಡಿದ್ದು, ಯಾವುದೇ ಆತಂಕ ಪಡುವ ಅಗತ್ಯವಿಲ್ಲ ಎಂದು ತಿಳಿಸಿದ್ದಾರೆ. ಕಳೆದ ವರ್ಷ ಪರೀಕ್ಷಿಸಿದ ಮಾದರಿಗಳಲ್ಲಿ ಕೇವಲ ಒಂದು ಫೇಲ್ ಆಗಿದ್ದು, ಉಳಿದವು ಉತ್ತಮವಾಗಿದ್ದವು. ಮೊಟ್ಟೆ ಆರೋಗ್ಯಕ್ಕೆ ಒಳ್ಳೆಯದು, ಸೇವಿಸಬಹುದು ಎಂದು ಸಚಿವರು ಭರವಸೆ ನೀಡಿದ್ದಾರೆ.
Government Employees: ಸರ್ಕಾರಿ ನೌಕರರ ಸಂಬಳ ಪ್ಯಾಕೇಜ್ನಲ್ಲಿ ನೋಂದಣಿ ಅವಧಿ ವಿಸ್ತರಣೆ: ಸರ್ಕಾರ ಮಹತ್ವದ ಆದೇಶ
ಬೆಂಗಳೂರು: ಸರ್ಕಾರದಿಂದ ನೇರವಾಗಿ ಹಾಗೂ ಪರೋಕ್ಷವಾಗಿ ನೇಮಕಗೊಂಡಿರುವ ಎಲ್ಲಾ `ಎ', ‘ಬಿ' ಮತ್ತು ‘ಸಿ' ಗುಂಪಿನ ಅರ್ಹ ಅಧಿಕಾರಿಗಳು/ನೌಕರರು ಕಡ್ಡಾಯವಾಗಿ ಸಂಬಳ ಪ್ಯಾಕೇಜಿನಲ್ಲಿ ನೋಂದಾಯಿಸಿಕೊಳ್ಳುವುದನ್ನು ಖಚಿತಪಡಿಸಿಕೊಳ್ಳುವಲ್ಲಿ ಕಾಲಾವಧಿಯನ್ನು ವಿಸ್ತರಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ರಾಜ್ಯ ಸರ್ಕಾರ ಆದೇಶ ಪತ್ರದಲ್ಲಿ ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ಉಲ್ಲೇಖಿತ ಪತ್ರದಲ್ಲಿ ಎಲ್ಲಾ ಅರ್ಹ ಎ, ಬಿ ಮತ್ತು ಸಿ ಗುಂಪಿನ
HEBRI | ಕೂಡ್ಲು ಫಾಲ್ಸ್ ನ ಬಂಡೆಯಿಂದ ಬಿದ್ದು ಯುವಕ ಮೃತ್ಯು
ಹೆಬ್ರಿ: ಇಲ್ಲಿಗೆ ಸಮೀಪದ ಪ್ರವಾಸಿ ತಾಣ ಕೂಡ್ಲು ಫಾಲ್ಸ್ ನಲ್ಲಿನ ಬಂಡೆಯ ಮೇಲಿನಿಂದ ಬಿದ್ದು ಯುವಕನೋರ್ವ ಮೃತಪಟ್ಟ ಘಟನೆ ವರದಿಯಾಗಿದೆ. ಮೃತರನ್ನು ಉಡುಪಿಯ ಕೊಂಜಾಡಿ ಮೂಲದ ಬೆಂಗಳೂರು ನಿವಾಸಿ ಸವಿತಾ ಪಿ. ಶೆಟ್ಟಿ ಎಂಬವರ ಮಗ ಮನ್ವಿತ್ (25) ಎಂದು ಗುರುತಿಸಲಾಗಿದೆ. ಮನ್ವಿತ್ ಡಿ.12ರಂದು ತಮ್ಮ ಸ್ವಂತ ಮನೆಯಾದ ಕೊಂಜಾಡಿಗೆ ಬಂದಿದ್ದು, ಡಿ.14ರಂದು ತನ್ನ ಸ್ನೇಹಿತರೊಂದಿಗೆ ಹೆಬ್ರಿಯ ಕೂಡ್ಲು ಫಾಲ್ಸ್ ಗೆ ಹೋಗಿದ್ದರು. ಅಲ್ಲಿ ಸ್ನೇಹಿತರು ಸ್ನಾನ ಮಾಡುತ್ತಿರುವಾಗ ಮನ್ವಿತ್ ಎತ್ತರದ ಬಂಡೆಯ ಮೇಲೆ ಕುಳಿತುಕೊಂಡಿದ್ದರು. ಈ ವೇಳೆ ಅವರು ಆಕಸ್ಮಿಕವಾಗಿ ತಲೆ ತಿರುಗಿ ಕೆಳಗೆ ನೀರಿಗೆ ಬಿದ್ದರೆನ್ನಲಾಗಿದೆ. ಇದರಿಂದ ಗಂಭೀರವಾಗಿ ಗಾಯಗೊಂಡಿದ್ದ ಅವರು ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಡಿ.17ರಂದು ಬೆಳಗ್ಗೆ ಮೃತಪಟ್ಟರೆಂದು ತಿಳಿದುಬಂದಿದೆ. ಮನ್ವಿತ್ ರಿಗ ಮೂರ್ಛೆ ರೋಗವಿದ್ದು, ಈ ಬಗ್ಗೆ ಚಿಕಿತ್ಸೆ ಪಡೆಯುತ್ತಿದ್ದರು ಎಂದು ತಿಳಿದುಬಂದಿದೆ. ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾರವಾರ ಕರಾವಳಿಯಲ್ಲಿ ಚೀನಾ ನಿರ್ಮಿತ ಜಿಪಿಎಸ್ ಟ್ರ್ಯಾಕರ್ ಅಳವಡಿಸಿದ್ದ ಸೀಗಲ್ ಹಕ್ಕಿ ಪತ್ತೆಯಾಗಿದೆ. ಇದು ಭಾರತೀಯ ನೌಕಾಪಡೆಯ ಪ್ರಮುಖ ನೆಲೆಯಾದ INS ಕದಂಬ ಬಳಿ ಕಂಡುಬಂದಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಈ ಸಾಧನವನ್ನು ಪರಿಶೀಲಿಸುತ್ತಿದ್ದಾರೆ.ಪ್ರಾಥಮಿಕವಾಗಿ ಇದು ಸಂಶೋಧನಾ ಟ್ರ್ಯಾಕರ್ ಮಾತ್ರ ಎಂದು ತಿಳಿದು ಬಂದಿದ್ದು, ಪ್ರದೇಶ ಸೂಕ್ಷ್ಮತೆ ಹಾಗೂ ಈ ಹಿಂದೆ ನಡೆದಿದ್ದ ಇಂತದ್ದೇ ಘಟನೆ ಬಾರಿ ಅನುಮಾನಕ್ಕೆ ಕಾರಣವಾಗಿದ್ದು, ಇದು ಸಂಶೋಧನಾ ಉದ್ದೇಶಕ್ಕಾಗಿ ಬಳಸಲಾಗಿದೆಯೇ ಅಥವಾ ಬೇರೆ ಉದ್ದೇಶಗಳಿವೆಯೇ ಎಂಬುದು ತನಿಖೆಯ ನಂತರವಷ್ಟೇ ತಿಳಿಯಲಿದೆ.
CHAMARAJANAGARA | ಕಾಡಾನೆ ದಾಳಿಗೆ ಬೈಕ್ ಸವಾರ ಬಲಿ
ಚಾಮರಾಜನಗರ | ಬೈಕ್ ಸವಾರನೋರ್ವನ ಮೇಲೆ ಕಾಡಾನೆ ದಾಳಿ ಮಾಡಿ ಕೊಂದು ಹಾಕಿದ ಘಟನೆ ಚಾಮರಾಜನಗರ ಜಿಲ್ಲೆಯ ಮಲೆಮಹದೇಶ್ವರ ವಜ್ಯಜೀವಿ ಧಾಮದ ವ್ಯಾಪ್ತಿಯ ಜಲ್ಲಿಪಾಳ್ಯದ ಬಳಿ ಬುಧವಾರ ರಾತ್ರಿ ಸಂಭವಿಸಿದೆ. ಮೃತರನ್ನು ತಮಿಳುನಾಡಿನ ಮಾಕನಪಾಳ್ಯ ನಿವಾಸಿ ಶಿವಮೂರ್ತಿ ಎಂದು ಗುರುತಿಸಲಾಗಿದೆ. ಕೂಲಿ ಕಾರ್ಮಿಕರಾಗಿದ್ದ ಶಿವಮೂರ್ತಿ ಹೂಗ್ಯದಲ್ಲಿ ಕೂಲಿ ಕೆಲಸ ಮುಗಿಸಿ ಬುಧರಾತ್ರಿ ರಾತ್ರಿ ವೇಳೆ ಬೈಕಿನಲ್ಲಿ ಹನೂರು ತಾಲೂಕಿನ ಜಲ್ಲಿಪಾಳ್ಯದ ಮೂಲಕ ತಮಿಳುನಾಡಿನ ಮಾಕನಪಾಳ್ಯಕ್ಕೆ ತರಳುತ್ತಿದ್ದ ದುರ್ಘಟನೆ ನಡೆಸಿದೆ. ದಾಳಿ ಬಳಿಕ ಇಡೀ ರಾತ್ರಿ ಕಾಡಾನೆ ಹಿಂಡು ಅಲ್ಲೇ ಬೀಡುಬಿಟ್ಟಿತ್ತು ಇಂದು ಬೆಳಗ್ಗೆ ಅರಣ್ಯ ಸಿಬ್ಬಂದಿ ಗಸ್ತಿನಲ್ಲಿರುವಾಗ ಪ್ರಕರಣ ಬೆಳಕಿಗೆ ಬಂದಿದ್ದು, ಜಲ್ಲಿಪಾಳ್ಯ ಕಳ್ಳಬೇಟೆ ಶಿಬಿರದಿಂದ ಎರಡು ಕಿಲೋ ಮೀಟರ್ ಹಾಗೂ ತಮಿಳುನಾಡು ಗಡಿಯಿಂದ 200 ಮೀಟರ್ ಅಂತರದಲ್ಲಿ ಘಟನೆ ನಡೆದಿದೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.
2 ವರ್ಷವಾದರೂ ಉದ್ಘಾಟನೆ ಕಾಣದ ಅರ್ಜುನನ ಸ್ಮಾರಕ
ಸಕಲೇಶಪುರದಲ್ಲಿ ವೀರ ಮರಣ ಹೊಂದಿದ ಅಂಬಾರಿ ಆನೆ ಅರ್ಜುನನ ಸ್ಮಾರಕ ಹಾಗೂ ಪ್ರತಿಮೆ ನಿರ್ಮಾಣ ಕಾಮಗಾರಿ ಎರಡು ವರ್ಷ ಕಳೆದರೂ ಪೂರ್ಣಗೊಂಡಿಲ್ಲ. ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಉದ್ಘಾಟನೆ ವಿಳಂಬವಾಗಿದೆ. ಅರ್ಜುನನ ಹೋರಾಟದ ಗುಣ ರಾಜ್ಯಾದ್ಯಂತ ಸಂಚಲನ ಮೂಡಿಸಿತ್ತು. ಸ್ಮಾರಕ ಸ್ಥಳಕ್ಕೆ ಹೋಗುವ ರಸ್ತೆ ಸರಿಯಿಲ್ಲ. ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ, ಸಿಸಿ ಕ್ಯಾಮೆರಾ ಅಳವಡಿಕೆ ಕಾಮಗಾರಿಗಳು ಪೂರ್ಣಗೊಂಡಿಲ್ಲ. ಈ ಅವ್ಯವಸ್ಥೆಯಿಂದ ಸಾರ್ವಜನಿಕರು ಅಸಮಾಧಾನಗೊಂಡಿದ್ದಾರೆ.
ಸಾಗರ | ಕೆಎಸ್ಸಾರ್ಟಸಿ ಬಸ್ -ಶಾಲಾ ವಾಹನ ಮುಖಾಮುಖಿ ಢಿಕ್ಕಿ: ಹಲವರಿಗೆ ಗಾಯ
ಸಾಗರ: ಕೆಎಸ್ಸಾರ್ಟಸಿ ಬಸ್ ಮತ್ತು ಶಾಲಾ ಬಸ್ ಮುಖಾಮುಖ ಢಿಕ್ಕಿಯಾಗಿ ಹಲವು ಮಂದಿ ಗಾಯಗೊಂಡ ಘಟನೆ ತಾಲೂಕಿನ ಇಡುವಾಣಿ ಬಳಿ ಗುರುವಾರ ಬೆಳಗ್ಗೆ ಸಂಭವಿಸಿದೆ. ಓರ್ವ ವಿದ್ಯಾರ್ಥಿ, ಎರಡು ವಾಹನಗಳ ಚಾಲಕ ಸಹಿತ ಹಲವು ಪ್ರಯಾಣಿಕರು ಗಾಯಗೊಂಡಿದ್ದಾರೆ. ಸಾಗರದಿಂದ ಕಾರ್ಗಲ್ ಮಾರ್ಗವಾಗಿ ಸಿಗಂದೂರಿಗೆ ತೆರಳುತ್ತಿದ್ದ ಕೆಎಸ್ಸಾರ್ಟಸಿ ಬಸ್ ಮತ್ತು ಖಾಸಗಿ ಶಾಲೆ ಬಸ್ ಮಧ್ಯೆ ಸಂಭವಿಸಿದೆ. ಗಾಯಾಳುಗಳನ್ನು ಸಾಗರದ ಉಪವಿಭಾಗೀಯ ಆಸ್ಪತ್ರೆಗೆ ದಾಖಲು ಮಾಡಿ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗಕ್ಕೆ ರವಾನಿಸಲಾಗಿದೆ. ಘಟನೆಯಲ್ಲಿ ಎರಡು ಬಸ್ ಗಳ ಮುಂಭಾಗ ಜಖಂಗೊಂಡಿದ್ದು, ಗಾಜುಗಳು ಒಡೆದಿವೆ.
ಮೆಲ್ಕಾರ್ ಮಹಿಳಾ ಕಾಲೇಜಿನ 17ನೇ ವಾರ್ಷಿಕೋತ್ಸವ, ಪದವಿ ಪ್ರದಾನ ಕಾರ್ಯಕ್ರಮ
ಬಂಟ್ವಾಳ: ಪದವಿ ಎನ್ನುವ ಮೈಲುಗಲ್ಲು ಅಂತ್ಯವಲ್ಲ ಇದು ಒಂದು ಉಡಾವಣೆ ವೇದಿಕೆ. ಜೀವನವು ಹೊಸ ಪಾಠಗಳು, ಹೊಸ ಸವಾಲುಗಳು ಮತ್ತು ಹೊಸ ಸಂತೋಷಗಳನ್ನು ನೀಡುತ್ತದೆ. ನೀವು ಯಾವಾಗಲೂ ಕುತೂಹಲದಿಂದಿರಿ, ಧೈರ್ಯಶಾಲಿಯಾಗಿರಿ ಮತ್ತು ದಯೆಯಿಂದಿರಿ ಎಂದು ಎ.ಎಂ. ಸ್ಟುಡಿಯೋ ಸಂಸ್ಥೆಯ ಆರ್ಕಿಟೆಕ್ಟ್ ಆಸಿಫ್ ಮುಹಮ್ಮದ್ ವಿದ್ಯಾರ್ಥಿಗಳಿಗೆ ಸಲಹೆ ನೀಡಿದ್ದಾರೆ. ಅವರು ಮೆಲ್ಕಾರ್ ಮಹಿಳಾ ಕಾಲೇಜಿನ ವಾರ್ಷಿಕೋತ್ಸವ ಮತ್ತು ಪದವಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಪದವಿ ಪೂರ್ವ ತರಗತಿಗಳಲ್ಲಿ 90 ಶೇಕಡಕ್ಕಿಂತ ಅಧಿಕ ಅಂಕಗಳನ್ನು ಗಳಿಸಿ ಮೆಲ್ಕಾರ್ ಮಹಿಳಾ ಕಾಲೇಜಿನಲ್ಲಿ ದಾಖಲಾತಿ ಪಡೆದರೆ ಶೇಕಡ 50ರಷ್ಟು ಶುಲ್ಕವನ್ನು ತಾವು ಪಾವತಿಸುವುದಾಗಿ ಗಡಿಯಾರ ಗ್ರೂಪ್ ಆಫ್ ಕಂಪೆನೀಸ್ ಮಾಲಕ ಇಬ್ರಾಹೀಂ ಗಡಿಯಾರ ಈ ಸಂದರ್ಭದಲ್ಲಿ ಘೋಷಿಸಿದರು. ಸಮಾರಂಭದ ಅಧ್ಯಕ್ಷತೆ ವಹಿಸಿ, ಪದವಿ ಪ್ರದಾನ ಮಾಡಿದ ಕಾಲೇಜು ಸಂಸ್ಥಾಪಕ ಎಸ್.ಎಂ.ರಶೀದ್ ಹಾಜಿ ಮಾತನಾಡಿ, ಜಗತ್ತಿಗೆ ನಿಮ್ಮ ವಿಶಿಷ್ಟ ಪ್ರತಿಭೆಗಳು, ನಿಮ್ಮ ಹೊಸ ದೃಷ್ಟಿಕೋನಗಳು ಮತ್ತು ನಿಮ್ಮ ಸಹಾನುಭೂತಿಯ ಹೃದಯಗಳು ಬೇಕಾಗಿವೆ. ಮತ್ತು ಯಾವುದೇ ಕಾರಣಕ್ಕೂ ವಿದ್ಯಾಭ್ಯಾಸವನ್ನು ಮೊಟಕುಗೊಳಿಸದಿರಿ, ನಮ್ಮ ಸಂಸ್ಥೆಯಲ್ಲಿ ಗ್ರಾಮೀಣ ಪ್ರದೇಶದ ಹೆಣ್ಣು ಮಕ್ಕಳಿಗೆ ಉನ್ನತ ಶಿಕ್ಷಣ ಪಡೆಯಲು ಅತ್ಯಂತ ಕಡಿಮೆ ಶುಲ್ಕದಲ್ಲಿ ವಿದ್ಯಾಭ್ಯಾಸವನ್ನು ಮುಂದುವರಿಸಲು ಅವಕಾಶ ಮಾಡಿಕೊಡುತ್ತಿದ್ದೇವೆ ಎಂದು ಹೇಳಿದರು. ಕೆನರಾ ಚೇಂಬರ್ ಆಫ್ ಕಾಮರ್ಸ್ ಆಂಡ್ ಇಂಡಸ್ಟ್ರಿ ಅಧ್ಯಕ್ಷ ಪಿ.ಬಿ.ಅಹ್ಮದ್ ಮುದಸ್ಸಿರ್, ನಿರ್ದೇಶಕ ನಿಸಾರ್ ಫಕೀರ್ ಮುಹಮ್ಮದ್, ಅಲ್ ಬದ್ರಿಯಾ ಎಜುಕೇಶನಲ್ ಅಸೋಸಿಯೇಶನ್ ಸಂಚಾಲಕ ಬಿ.ಎ.ನಝೀರ್ ಮಾತನಾಡಿ ಶುಭ ಹಾರೈಸಿದರು. ಬಂಟ್ವಾಳ ಸಂಚಾರ ಪೊಲೀಸ್ ಠಾಣಾಧಿಕಾರಿ ಸುತೇಶ್ ಕೆ.ಪಿ., ದಾರುಲ್ ಇಸ್ಲಾಮ್ ಅನುದಾನಿತ ಶಾಲೆಯ ಮುಖ್ಯ ಶಿಕ್ಷಕ ಹಮೀದ್ ಕೆ. ಮಾಣಿ ಉಪಸ್ಥಿತರಿದ್ದರು. ಕಾಲೇಜು ಪ್ರಾಂಶುಪಾಲ ಅಬ್ದುಲ್ ಮಜೀದ್ . ವಾರ್ಷಿಕ ವರದಿ ವಾಚಿಸಿದರು. ವಿದ್ಯಾರ್ಥಿನಿಯರಾದ ಪಾತಿಮಾ ನಿದಾ ಸ್ವಾಗತಿಸಿದರು, ಕೆ.ಪಿ.ಆಯಿಶತ್ ಸುಹಾನ ವಂದಿಸಿದರು . ಉಪ ಪ್ರಾಂಶುಪಾಲೆ ಅಂಜಲಿನಾ ಸುನೀತಾ ಪಿರೇರ ಹಾಗೂ ಮಶ್ಮೂಮ್ ಫಾತಿಮಾ ಕಾರ್ಯಕ್ರಮ ನಿರೂಪಿಸಿದರು.
ಕರ್ನಾಟಕದಲ್ಲಿ 3 ವರ್ಷಗಳಲ್ಲಿ 6157 ಬಾಲ್ಯ ವಿವಾಹ ತಡೆ! ಕಾನೂನು ಮೀರಿ ನಡೆದಿದೆ 2198 ಮದುವೆ
ರಾಜ್ಯದಲ್ಲಿ 3 ವರ್ಷಗಳಲ್ಲಿ 8355 ಬಾಲ್ಯವಿರುದ್ದ ದೂರುಗಳು ಸ್ವೀಕೃತವಾಗಿದ್ದು,ಇದರಲ್ಲಿ ಸುಮಾರು 2198 ವಿವಾಹಗಳು ಕಾನೂನು ಉಲ್ಲಂಘಿಸಿ ನಡೆದಿವೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಪೊಲೀಸ್ ಇಲಾಖೆ ಜಂಟಿಯಾಗಿ ಈ ಕಾರ್ಯ ನಿರ್ವಹಿಸಿ, ಈವರೆಗೂ ಸುಮಾರು 6157 ಬಾಲ್ಯ ವಿವಾಹಗಳನ್ನು ತಡೆದಿದ್ದಾರೆ. ರಾಜ್ಯ ಅಭಿವೃದ್ದಿ ಹೊಂದಿ ಮುಂದೆ ಸಾಗುತ್ತಿದ್ದರೂ ಸಹ ಬಾಲ್ಯವಿವಾಹ ಎಂಬ ಸಾಮಾಜಿಕ ಪಿಡುಗು ಇನ್ನು, ಸಮಾಜದಲ್ಲಿ ಹಾಗೇ ಉಳಿದಿದ್ದು, ಸರ್ಕಾರ ಇದನ್ನು ತಡೆಗಟ್ಟಲು ನಾನಾ ಕ್ರಮಗಳನ್ನು ಅನುಷ್ಠಾನಕ್ಕೆ ತರುವ ಮೂಲಕ ಇದನ್ನು ತಡೆಗಟ್ಟಲು ಪ್ರಯತ್ನಿಸುತ್ತಿದೆ.
ಮತ್ತೆ ಚೇತರಿಸಿಕೊಳ್ಳುವುದೇ ಜೆಡಿಎಸ್?
ದೇವೇಗೌಡರು ತಮ್ಮನ್ನು ‘ಮಣ್ಣಿನ ಮಗ’ ಎಂದು ಕರೆದುಕೊಂಡರು. ಆದರೆ, ಅದು ರೈತರ ಪಕ್ಷವೂ ಆಗಲಿಲ್ಲ, ಕಾರ್ಮಿಕರ ಪಕ್ಷವೂ ಆಗಲಿಲ್ಲ, ಮಧ್ಯಮ ವರ್ಗದವರ ಪಕ್ಷವೂ ಆಗಲಿಲ್ಲ. ಕೊನೆಗೆ ಒಕ್ಕಲಿಗರೂ ಪೂರ್ಣವಾಗಿ ಅದರ ಕೈ ಹಿಡಿಯಲಿಲ್ಲ. ‘ಏಕೆ ಹೀಗಾಯ್ತು?’ ಜೆಡಿಎಸ್ ನಾಯಕರು ಆತ್ಮಾವಲೋಕನ ಮಾಡಿಕೊಳ್ಳಬೇಕು. ಜಾತ್ಯತೀತ ಟ್ಯಾಗ್ ಬಗ್ಗೆಯೂ ಮರು ಚಿಂತಿಸಬೇಕಿದೆ. ► ಪ್ರತಿ ವರ್ಷ ಆಗಸ್ಟ್ 15 ಮತ್ತು ಜನವರಿ 26 ಬಂತೆಂದರೆ ಹುಬ್ಬಳ್ಳಿ ಜನರಿಗೆ ಆತಂಕ ಶುರುವಾಗುತ್ತಿತ್ತು. ಈದ್ಗಾ ಮೈದಾನದ ಬಳಿ ಹಿಂದೂ-ಮುಸ್ಲಿಮ್ ಘರ್ಷಣೆ ನಡೆಯುತಿತ್ತು. ರಾಷ್ಟ್ರಧ್ವಜ ಹಾರಿಸಲು ಸಂಘ ಪರಿವಾರ ಪ್ರಯತ್ನಿಸುತ್ತಿತ್ತು. ಅಂಜುಮನ್ ಇಸ್ಲಾಮ್ ಸಂಸ್ಥೆ ಪ್ರತಿರೋಧ ತೋರುತ್ತಿತ್ತು. 1992ರಲ್ಲಿ ವಿವಾದ ಉತ್ಕಟ ಸ್ಥಿತಿ ತಲುಪಿತ್ತು. 94ರ ಆಗಸ್ಟ್ 15ರಂದು ನಡೆದ ಹಿಂಸಾಚಾರಕ್ಕೆ ನಾಲ್ವರು ಬಲಿಯಾದರು. ಎಚ್.ಡಿ. ದೇವೇಗೌಡರ ಜನತಾ ದಳ ಸರಕಾರ 95ರ ಆಗಸ್ಟ್ 15ರಂದು ಅಂಜುಮನ್ ಸಂಸ್ಥೆ ಪದಾಧಿಕಾರಿಗಳ ಮನವೊಲಿಸಿ ಮೈದಾನದಲ್ಲಿ ರಾಷ್ಟ್ರಧ್ವಜ ಹಾರಾಡುವಂತೆ ಮಾಡಿತು. ಸಮಸ್ಯೆ ಪರಿಹಾರವಾಯಿತು. ಈ ವಿವಾದವೇ ರಾಜ್ಯದಲ್ಲಿ ಬಿಜೆಪಿ ಬೆಳವಣಿಗೆಗೆ ನಾಂದಿಯಾಯಿತು. ► ಒಮ್ಮೆ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಜತೆ ಮಾತನಾಡುತ್ತಿದ್ದಾಗ, ‘ಕೃಷ್ಣಾ ಮೇಲ್ದಂಡೆ ಯೋಜನೆ’ ವಿಷಯ ಪ್ರಸ್ತಾಪವಾಯಿತು. ‘‘ಯುಕೆಪಿ ತುಂಡು ಗುತ್ತಿಗೆಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪವಿದೆ ನಿಜವೇ?’’ ಎಂದು ಕೇಳಿದೆ. ತುಂಡು ಗುತ್ತಿಗೆ ಕಾಮಗಾರಿ ನಡೆದಿದ್ದು ದೇವೇಗೌಡರು ಮುಖ್ಯಮಂತ್ರಿ ಆಗಿದ್ದಾಗ. ‘‘ಅಕ್ರಮ ಆರೋಪ ಸುಳ್ಳು. ಹೆಚ್ಚೆಂದರೆ ಅಲ್ಪಸ್ವಲ್ಪ ಪಾರ್ಟಿ ಫಂಡ್ ಬಂದಿರಬಹುದು. ತುಂಡು ಗುತ್ತಿಗೆ ಕೊಡದಿದ್ದರೆ ಯೋಜನೆಯೇ ಪೂರ್ಣಗೊಳ್ಳುತ್ತಿರಲಿಲ್ಲ’’ ಎಂದರು ಬೊಮ್ಮಾಯಿ. ಈ ಚರ್ಚೆ ನಡೆದಾಗ ಅವರು ಬಿಜೆಪಿ ಸರಕಾರದಲ್ಲಿ ನೀರಾವರಿ ಸಚಿವರಾಗಿದ್ದರು. ► 2000ನೇ ಇಸವಿ. ಧಾರವಾಡ ಜಿಲ್ಲೆಯ ನವಲೂರು ಗ್ರಾಮದ ರೈತನೊಬ್ಬ ಸಾಲದ ಶೂಲಕ್ಕೆ ಸಿಕ್ಕಿ ಆತ್ಮಹತ್ಯೆ ಮಾಡಿಕೊಂಡರು. ಹೊಲದಲ್ಲಿ ಬೆಳೆದ ಆಲೂಗೆಡ್ಡೆ ಕೈ ಕೊಟ್ಟಿತ್ತು. ಸಾಲ ತೀರಿಸಲು ಎತ್ತು ಮಾರಿ ಬೇಸತ್ತಿದ್ದರು. ಈ ಸುದ್ದಿ ಹೊರ ದೇಶಗಳಲ್ಲೂ ಸದ್ದು ಮಾಡಿತ್ತು. ಬಿಬಿಸಿ ಪತ್ರಕರ್ತರೂ ಧಾರವಾಡಕ್ಕೆ ಬಂದಿದ್ದರು. ದೇವೇಗೌಡರೂ ರೈತನ ಮನೆಗೆ ಭೇಟಿ ಕೊಟ್ಟಿದ್ದರು. ತಮ್ಮ ಜೇಬಿನಿಂದ 25 ಸಾವಿರ ರೂಪಾಯಿ ತೆಗೆದು ಮೃತನ ಕುಟುಂಬಕ್ಕೆ ಕೊಟ್ಟರು. ಆಗವರು ಅಧಿಕಾರದಲ್ಲಿ ಇರಲಿಲ್ಲ. ದೇವೇಗೌಡರ ವ್ಯಕ್ತಿತ್ವ, ಬದ್ಧತೆ, ಅಂತಃಕರಣ ಮತ್ತು ನಾಯಕತ್ವದ ಗುಣ ಅರಿಯಲು ಈ ಮೂರು ಪ್ರಸಂಗಗಳೇ ಸಾಕು. ಕೃಷಿ, ನೀರಾವರಿ ಮತ್ತು ಲೋಕೋಪಯೋಗಿ ಕ್ಷೇತ್ರಗಳಲ್ಲಿ ಅವರು ಚಾಂಪಿಯನ್. ಅವರನ್ನು ಸರಿಗಟ್ಟುವ ಇನ್ನೊಬ್ಬ ನಾಯಕನಿಲ್ಲ. ರಾಜ್ಯದ ಹಿತಾಸಕ್ತಿ ಪ್ರಶ್ನೆ ಬಂದಾಗ ರಾಜಿ ಇಲ್ಲ. ರಾಜಕೀಯ ಲಾಭ-ನಷ್ಟದ ವಿಚಾರದಲ್ಲಿ ಅವರ ದಾರಿಯೇ ಬೇರೆ. ಸ್ವಾರ್ಥಿ ಮತ್ತು ಅವಕಾಶವಾದಿ. ಮಕ್ಕಳ ವಿಷಯದಲ್ಲಂತೂ ‘ಧೃತರಾಷ್ಟ್ರ’. ದೇವೇಗೌಡರು ಮುಖ್ಯಮಂತ್ರಿ ಆಗಿದ್ದು ಬರೀ 16 ತಿಂಗಳು. ಮುಖ್ಯಮಂತ್ರಿ ಆಗುವುದಕ್ಕೆ ಭಾರೀ ಹೋರಾಟ ಮಾಡಿದ್ದರು. ಪ್ರಧಾನಿ ಹುದ್ದೆ ಅನಾಯಾಸವಾಗಿ ಬಂದಿತ್ತು. ಅದೂ ಹೆಚ್ಚು ಕಾಲ ಉಳಿಯಲಿಲ್ಲ. 10 ತಿಂಗಳಲ್ಲಿ ಅಧಿಕಾರ ಹೋಯಿತು. ಆಗಿನ ಎಐಸಿಸಿ ಅಧ್ಯಕ್ಷ ಸೀತಾರಾಂ ಕೇಸರಿ ಜತೆ ಸ್ವಲ್ಪ ಹೊಂದಾಣಿಕೆಯಿಂದ ಹೋಗಿದ್ದರೂ ಸರಕಾರ ಉಳಿಯುತ್ತಿತ್ತು. ಹಾಸನದ ಹೊಳೆನರಸೀಪುರದಲ್ಲಿ ತಳಮಟ್ಟದಿಂದ ರಾಜಕೀಯ ಪ್ರವೇಶಿಸಿದ ದೇವೇಗೌಡರು ಪ್ರಧಾನಿ ಆಗಿದ್ದು ಆಕಸ್ಮಿಕ, ಅದೃಷ್ಟ. ಕನಸು-ಮನಸ್ಸಿನಲ್ಲೂ ಇಂಥ ಅವಕಾಶ ಬರಬಹುದು ಎಂದು ಅವರು ಎಣಿಸಿರಲಿಲ್ಲ. ಈಗದು ಇತಿಹಾಸ. ರಾಜೀನಾಮೆಗೆ ಮೊದಲು ಸಂಸತ್ತಿನಲ್ಲಿ ಮಾಡಿದ ಭಾಷಣದಲ್ಲಿ, ‘‘ಫೀನಿಕ್ಸ್ನಂತೆ ಧೂಳಿನಿಂದ ಎದ್ದು ಬರುವೆ’’ ಎಂದು ಹೇಳಿದ್ದು ನಿಜವಾಗಲಿಲ್ಲ. ಆದರೂ ಛಲ ಬಿಟ್ಟಿಲ್ಲ. ರಾಜಕಾರಣದಿಂದ ದೂರ ಸರಿದಿಲ್ಲ. ಈಗಲೂ ಜೆಡಿಎಸ್ನ ‘ಬ್ರ್ಯಾಂಡ್ ಅಂಬಾಸಿಡರ್’. ಇಳಿ ವಯಸ್ಸಲ್ಲೂ ರಾಜಕೀಯ ಸಮಾವೇಶಗಳಲ್ಲಿ ಭಾಗಿ. ಅವರದು ದೈತ್ಯ ಶಕ್ತಿ. ಈ ವಿವರಗಳು ಪ್ರಾಸಂಗಿಕ ಅಷ್ಟೇ. ವಾಸ್ತವವಾಗಿ ಜನತಾದಳ (ಜಾತ್ಯತೀತ) ಪಕ್ಷ ಕುರಿತಾದ ವಿಶ್ಲೇಷಣೆ ಇದು. ಜೆಡಿಎಸ್ಗೀಗ 25ರ ಪ್ರಾಯ. ಸ್ಥಾಪನೆ ಆಗಿದ್ದು 99ರಲ್ಲಾದರೂ, ನೋಂದಣಿ ಆಗಿದ್ದು 2000ದ ನವೆಂಬರ್ನಲ್ಲಿ. ಅನೇಕ ಏಳುಬೀಳು ಕಂಡಿದೆ. ಅಧಿಕಾರಕ್ಕಾಗಿ ಆಗಾಗ ಮಗ್ಗಲು ಬದಲಿಸಿದೆ. ಎರಡು ಸಲ ಕಾಂಗ್ರೆಸ್, ಒಂದು ಸಲ ಬಿಜೆಪಿ ಬೆಂಬಲದಲ್ಲಿ ರಾಜ್ಯದಲ್ಲಿ ಸರಕಾರ ಮಾಡಿದೆ. ಈಗ ಎನ್ಡಿಎ ಪಾಲುದಾರ ಪಕ್ಷ. ಜಾರ್ಜ್ ಫೆರ್ನಾಂಡಿಸ್, ಶರದ್ ಯಾದವ್ ಮತ್ತು ಜೆ.ಎಚ್. ಪಟೇಲರು ಎನ್ಡಿಎ ಬೆಂಬಲಿಸಿದ್ದನ್ನು ಪ್ರತಿಭಟಿಸಿ ದೇವೇಗೌಡರು ಜನತಾ ದಳ ತೊರೆದು ಜೆಡಿಎಸ್ ಕಟ್ಟಿದ್ದರು. ಯಾವ ಪಕ್ಷ ಸಿದ್ಧಾಂತ ವಿರೋಧಿಸಿದ್ದರೋ ಅದರ ಜತೆ ದೇವೇಗೌಡರು ಸಖ್ಯ ಬೆಳೆಸಿದ್ದಾರೆ. ಇದು ವಿಪರ್ಯಾಸ. ಪಕ್ಷದ ಹೆಸರಿನ ಮುಂದೆ ‘ಜಾತ್ಯತೀತ’ ಟ್ಯಾಗ್ ಇದ್ದರೂ ರಾಜಕೀಯ ಲಾಭಕ್ಕಾಗಿ ‘ಹಿಂದುತ್ವ’ ರಾಜಕಾರಣ ಬೆಂಬಲಿಸಿದ್ದಾರೆ. ಮೋದಿ ಅವರನ್ನು ಫ್ಯಾಶಿಸ್ಟ್, ಕೋಮುವಾದಿ, ‘ಬಂಡವಾಳಶಾಹಿ ದುಷ್ಟಕೂಟ’ದ (ಕ್ರೋನಿ ಕ್ಯಾಪಿಟಲಿಸಂ) ಎಂದು ಟೀಕೆ ಮಾಡುತ್ತಿದ್ದ ಗೌಡರೀಗ ಅವರನ್ನು ಹೊಗಳುತ್ತಿದ್ದಾರೆ. ರಾಜ್ಯಸಭೆಯಲ್ಲಿ ಮೊನ್ನೆ ಪ್ರಧಾನಿ ಪರ ಬ್ಯಾಟ್ ಮಾಡಿದ್ದಾರೆ. ಕೃಷಿ ಉತ್ಪನ್ನಗಳ ಬೆಂಬಲ ಬೆಲೆ, ಹಣದುಬ್ಬರ, ರೂಪಾಯಿ ಬೆಲೆ ಕುಸಿತ ಮತ್ತಿತರ ವಿಷಯ ಕುರಿತು ಮಾಜಿ ಪ್ರಧಾನಿ ಚಕಾರ ಎತ್ತಿಲ್ಲ. ಜನರ ಸಮಸ್ಯೆಗಳ ಬಗ್ಗೆ ದನಿ ಎತ್ತದ ನಾಯಕರನ್ನು ಇತಿಹಾಸ ಕ್ಷಮಿಸುವುದಿಲ್ಲ. ಜೆಡಿಎಸ್ ನಾಯಕರಿಟ್ಟ ತಪ್ಪು ಹೆಜ್ಜೆ, ಕೈಗೊಂಡ ತಪ್ಪು ನಿರ್ಧಾರಗಳಿಂದ ಚುನಾವಣೆಯಿಂದ ಚುನಾವಣೆಗೆ ಜೆಡಿಎಸ್ ಗ್ರಾಫ್ ಇಳಿಮುಖವಾಗುತ್ತಿದೆ. ಯಡಿಯೂರಪ್ಪ ಅವರಿಗೆ 2008ರಲ್ಲಿ ಆಡಳಿತ ನಡೆಸಲು ಬಿಡಲಿಲ್ಲ. ‘ಆಡಿದ ಮಾತಿನಂತೆ ನಡೆಯಲಿಲ್ಲ’ ಎಂಬ ಕಳಂಕವೇ ಜೆಡಿಎಸ್ ನೆಲ ಕಚ್ಚಲು ಕಾರಣವಾಯಿತು. ಹಿಂದಿನ ಚುನಾವಣೆಯ ಸೋಲು ಹೀನಾಯ. ಅದರ ಪಾಲು ಬರೀ 19 ಸ್ಥಾನ. ಜೆಡಿಎಸ್ ಹಳೇ ಮೈಸೂರು ಭಾಗ ಅದರಲ್ಲೂ ಒಕ್ಕಲಿಗರ ಪ್ರಾಬಲ್ಯದ ಜಿಲ್ಲೆಗಳಿಗೇ ಸೀಮಿತ ಎನ್ನುವ ಹಣೆಪಟ್ಟಿ ಕಳಚಿಕೊಂಡು ಹೊರಬರಲು ಸಾಧ್ಯವಾಗಿಲ್ಲ. ಲಿಂಗಾಯತರು ಹೆಚ್ಚಿನ ಸಂಖ್ಯೆಯಲ್ಲಿರುವ ಉತ್ತರ ಕರ್ನಾಟಕದಲ್ಲಿ ನೆಲೆ ವಿಸ್ತರಿಸಲು ಸೋತಿದೆ. ಆ ಕಡೆ ನಾಯಕತ್ವ ಬೆಳೆಸಲಿಲ್ಲ. ಕಡೇ ಪಕ್ಷ ಯುಕೆಪಿ ಕುರಿತು ಮಾತನಾಡಿದ್ದರೂ ಸಾಕಿತ್ತು. ಪಕ್ಷ ಕಟ್ಟಬಹುದಿತ್ತು. ಯಾವುದೇ ಪಕ್ಷ ಒಂದು ಜಾತಿ-ಧರ್ಮ ಅವಲಂಬಿಸಿ ರಾಜಕಾರಣ ಮಾಡಲಾಗದು. ಎಲ್ಲ ಜಾತಿ-ಧರ್ಮ ಒಳಗೊಳ್ಳಬೇಕು. ಮೊದಲು ಗೌಡರನ್ನು ಮುಸ್ಲಿಮರು ನಂಬಿದ್ದರು. ಬಿಜೆಪಿ ಜತೆ ಸೇರಿದ್ದರಿಂದ ಮುಸ್ಲಿಮರು ದೂರ ಸರಿದರು. ಜೆಡಿಎಸ್ ವರಿಷ್ಠ ಮನಸ್ಸು ಮಾಡಿದ್ದರೆ ಹಿಂದುಳಿದ, ಅತೀ ಹಿಂದುಳಿದ ವರ್ಗ, ದಲಿತ ಸಮಾಜಗಳನ್ನು ಒಗ್ಗೂಡಿಸಬಹುದಿತ್ತು. ಈ ಪ್ರಯತ್ನಕ್ಕೆ ಕೈ ಹಾಕಲಿಲ್ಲ. ಅಂಥ ಚಿಂತನೆಯೂ ಅವರಿಗಿದ್ದಂತೆ ಕಾಣಲಿಲ್ಲ. ‘ದೇವೇಗೌಡರು ಒಬಿಸಿ ನಾಯಕ’ ಎಂದೇ ಲಾಲು ಪ್ರಸಾದ್, ಮುಲಾಯಂ ಸಿಂಗ್ ಪ್ರಧಾನಿ ಹುದ್ದೆಗೆ ಅವರನ್ನು ಬೆಂಬಲಿಸಿದ್ದು. ಅವರ ಹೆಸರನ್ನು ಜ್ಯೋತಿ ಬಸು ಸೂಚಿಸಿದ್ದು. ಈ ಪ್ರಭಾವ ಬಳಸಿ ಬಲಿಷ್ಠವಾಗಿ ಪಕ್ಷ ಕಟ್ಟಬಹುದಿತ್ತು. ಅದ್ಯಾಕೊ ಹಾಗೆ ಮಾಡಲಿಲ್ಲ. ಹಳೇ ಮೈಸೂರು ಜಿಲ್ಲೆಗಳಲ್ಲೂ ಅದರ ಶಕ್ತಿ ಕ್ಷೀಣಿಸಿದೆ. ಒಕ್ಕಲಿಗರ ಕೋಟೆಗೂ ಕಾಂಗ್ರೆಸ್ ಮತ್ತು ಬಿಜೆಪಿ ಲಗ್ಗೆ ಹಾಕಿವೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿದು ರುಜುವಾತಾಗಿದೆ. ಜೆಡಿಎಸ್ ‘ಕುಟುಂಬ ಕೇಂದ್ರಿತ’ವಾಗಿದೆ. ‘ಬೇರೆ ಜಾತಿಗಳ ನಾಯಕರು ಹೋಗಲಿ, ಅವರದೇ ಜಾತಿ ನಾಯಕರನ್ನು ಬೆಳೆಸಲಿಲ್ಲ’ ಎಂಬ ಅಪವಾದ ಗೌಡರ ಮೇಲಿದೆ. ಈ ಕಾರಣಕ್ಕೆ ಬಹಳಷ್ಟು ನಾಯಕರು ಜೆಡಿಎಸ್ ತೊರೆದಿದ್ದಾರೆ. ಇಷ್ಟೇ ಹೇಳಿದರೆ ಪೂರ್ಣ ಸತ್ಯವಾಗುವುದಿಲ್ಲ. ಅರ್ಧ ಸತ್ಯವಾಗುತ್ತದೆ. ಅವರು ಬೆಳೆಸಿದ ಅನೇಕ ನಾಯಕರೂ ಗೌಡರಿಗೆ ಕೈಕೊಟ್ಟು ಹೋಗಿದ್ದಾರೆ. ದೇವೇಗೌಡರು 1994ರಲ್ಲಿ ಮುಖ್ಯಮಂತ್ರಿ ಆದಾಗ ಜನತಾದಳ 115 ಸ್ಥಾನ ಗೆದ್ದಿತ್ತು. 1999ರಲ್ಲಿ ಮೊದಲ ಬಾರಿಗೆ ಜೆಡಿಎಸ್ ಚುನಾವಣೆ ಎದುರಿಸಿದಾಗ ಗೆಲುವು ಸಾಧ್ಯವಾಗಿದ್ದು ಬರೀ 10 ಕ್ಷೇತ್ರಗಳಲ್ಲಿ. ಅದಕ್ಕೆ ಬಿದ್ದ ಶೇಕಡಾವಾರು ಮತಗಳು 10.42. ಜೆಡಿಯುಗೆ ಸಿಕ್ಕಿದ್ದ ಸ್ಥಾನ 18. ಜನತಾದಳ ಹೋಳಾಗದಿದ್ದರೆ ರಾಜ್ಯದ ರಾಜಕೀಯ ಚಿತ್ರಣ ಬೇರೆಯಾಗಿರುತ್ತಿತ್ತೇನೋ 2004ರ ಚುನಾವಣೆಯಲ್ಲಿ ಜೆಡಿಎಸ್ ಕೊಂಚ ಚೇತರಿಸಿಕೊಂಡರೂ ಸರಕಾರ ರಚಿಸುವಷ್ಟು ಸೀಟುಗಳು ಬರಲಿಲ್ಲ. ಆಗ ದೇವೇಗೌಡರು ನೋಡಿದ್ದು ಕಾಂಗ್ರೆಸ್ ಕಡೆ. 58 ಕ್ಷೇತ್ರಗಳಲ್ಲಿ ಜೆಡಿಎಸ್ ಗೆದ್ದಿತ್ತು. 65 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಆಯ್ಕೆಯಾಗಿದ್ದರು. 224 ಸದಸ್ಯ ಬಲದ ವಿಧಾನಸಭೆಯಲ್ಲಿ ಅಲ್ಪ ಬಹುಮತಕ್ಕೆ 113 ಸ್ಥಾನ ಬೇಕು. ಎರಡು ಪಕ್ಷಗಳು ಸೇರಿ ಸರಕಾರ ಮಾಡಿದವು. ಧರಂಸಿಂಗ್ ಮುಖ್ಯಮಂತ್ರಿ ಆದರು. ಸಿಂಗ್ ವಿರುದ್ಧ ಎಚ್.ಡಿ. ಕುಮಾರಸ್ವಾಮಿ ಬಂಡಾಯವೆದ್ದು, ಸರಕಾರ ಕೆಡವಿದರು. ಬಿಜೆಪಿಯ ಯಡಿಯೂರಪ್ಪನವರ ಜತೆಗೂಡಿ ಜೆಡಿಎಸ್-ಬಿಜೆಪಿ ಮೈತ್ರಿ ಸರಕಾರ ರಚಿಸಿ, ಅವರೇ ಮುಖ್ಯಮಂತ್ರಿಯಾದರು. ಯಡಿಯೂರಪ್ಪನವರ ಜತೆ ಸೇರುವ ತಪ್ಪನ್ನು ಕುಮಾರಸ್ವಾಮಿ ಅವರು ಮಾಡದಿದ್ದರೆ ಬಿಜೆಪಿ ಇಷ್ಟು ಪ್ರಬಲವಾಗುತ್ತಿರಲಿಲ್ಲ. ಜೆಡಿಎಸ್ ದುರ್ಬಲವಾಗುತ್ತಿರಲಿಲ್ಲ. ತಮಿಳುನಾಡಿನ ಡಿಎಂಕೆ, ಪಶ್ಚಿಮ ಬಂಗಾಳದ ಟಿಎಂಸಿ, ಉತ್ತರ ಪ್ರದೇಶದ ಸಮಾಜವಾದಿ ಪಕ್ಷದಂತೆ ಬಲಿಷ್ಠ ಪ್ರಾದೇಶಿಕ ಪಕ್ಷ ಆಗಬಹುದಿತ್ತು. ಅಂಥದೊಂದು ಅವಕಾಶ ಕಳೆದು ಹೋಯಿತು. 2028ಕ್ಕೆ ಜೆಡಿಎಸ್ ತನ್ನ ನೆಲೆಯನ್ನು ಮರಳಿ ಸ್ಥಾಪಿಸದಿದ್ದರೆ ಕಥೆ ಮುಗಿದಂತೆ. 2028ರಲ್ಲಿ ಜೆಡಿಎಸ್-ಬಿಜೆಪಿ ಮೈತ್ರಿ ಸರಕಾರವನ್ನು ಅಧಿಕಾರಕ್ಕೆ ತರುವುದಾಗಿ ದೇವೇಗೌಡರು ರಾಜ್ಯಸಭೆಯಲ್ಲಿ ಶಪಥ ಮಾಡಿದ್ದಾರೆ. ಈ ನಿಟ್ಟಿನಲ್ಲಿ, ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಅವರ ನಡುವಿನ ಕಿತ್ತಾಟದ ಲಾಭ ಪಡೆಯಲು ತಂತ್ರ ರೂಪಿಸಬೇಕು. ಬಿಜೆಪಿ ಮೇಲೂ ನಿಗಾ ಇಡಬೇಕಿದೆ. ಏಕೆಂದರೆ, ಪ್ರಾದೇಶಿಕ ಪಕ್ಷಗಳ ‘ಬಂಡವಾಳ’ದಲ್ಲಿ ಅದು ಬೆಳೆಯುತ್ತಿದೆ. ಬಂಡವಾಳ ನಷ್ಟವಾದರೆ ಕಷ್ಟ. ಈ ವಾಸ್ತವ ದೇವೇಗೌಡರಿಗೂ ಗೊತ್ತಿದೆ. 2018ರಲ್ಲೂ ಕುಮಾರಸ್ವಾಮಿ ನೇತೃತ್ವದಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರಕಾರ ರಚನೆಯಾಗಿತ್ತು. ಬಿಜೆಪಿ ಅಧಿಕಾರಕ್ಕೆ ಬರದಂತೆ ತಡೆಯಲು ಜೆಡಿಎಸ್ ಬೆಂಬಲಿಸುವುದು ಕಾಂಗ್ರೆಸ್ ನಾಯಕರಿಗೆ ಅನಿವಾರ್ಯವಾಗಿತ್ತು. ಆದರೆ, ಸರಕಾರ ದೀರ್ಘ ಕಾಲ ಬಾಳಲಿಲ್ಲ. ದೇವೇಗೌಡರು ಪ್ರಧಾನಿಯಾಗಿದ್ದಾಗ ಮಿತ್ರ ಪಕ್ಷಗಳ ಜತೆ ನಡೆದುಕೊಂಡ ರೀತಿಯಲ್ಲೇ ಅವರೂ ವರ್ತಿಸಿದರು. ಕಾಂಗ್ರೆಸ್ ನಾಯಕರ ಸಲಹೆ, ಸೂಚನೆ-ಬೇಡಿಕೆಗಳಿಗೆ ಕಿವಿಗೊಡಲಿಲ್ಲ. ಸರಕಾರ ಬೀಳಿಸಲು ಕೈ ನಾಯಕರು ತೆರೆಮರೆಯಲ್ಲಿ ಪಿತೂರಿ ಮಾಡಿದರು. ಜೆಡಿಎಸ್ ಮತ್ತು ಕಾಂಗ್ರೆಸ್ನ 17 ಶಾಸಕರು ಬಿಜೆಪಿಗೆ ಪಕ್ಷಾಂತರ ಮಾಡಿದರು. ದೇವೇಗೌಡರ ಮನೆ ಬಾಗಿಲಿಗೇ ಹೋಗಿ ದುಂಬಾಲು ಬಿದ್ದು ಬೆಂಬಲಿಸಿದವರೇ ಕುಮಾರಸ್ವಾಮಿ ಕಾಲೆಳೆದರು. ನಿತ್ಯ ಕಿರುಕುಳ ಕೊಟ್ಟರು. ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರು ಹೊರ ಜಗತ್ತಿನ ದೃಷ್ಟಿಯಲ್ಲಿ ಒಂದಾಗಿದ್ದರೇ ವಿನಾ, ಒಳಗೊಳಗೇ ಕುದಿಯುತ್ತಿದ್ದರು. ಪರಸ್ಪರ ನಂಬಿಕೆ-ವಿಶ್ವಾಸವಿರಲಿಲ್ಲ. ಎಲ್ಲರೂ ಲಾಭ ಮತ್ತು ನಷ್ಟವನ್ನೇ ಲೆಕ್ಕ ಹಾಕಿದರು. ಪಕ್ಷ ಮತ್ತು ಸರಕಾರದಿಂದ ತಮಗೇನು ಲಾಭ ಎಂದು ಯೋಚನೆ ಮಾಡಿದರೇ ಹೊರತು ತಮ್ಮಿಂದ ಪಕ್ಷಕ್ಕೆ ಎಷ್ಟು ಲಾಭ ಎಂದು ನೋಡಲಿಲ್ಲ. ಈ ಪ್ರವೃತ್ತಿ ಕಾಂಗ್ರೆಸ್ ನಾಯಕರಲ್ಲಿ ಹೆಚ್ಚು. ಇದು ಆ ಪಕ್ಷದ ಬೆಳವಣಿಗೆಗೂ ಅಡ್ಡಿಯಾಗಿದೆ. ಒಂದು ಮಾತನ್ನು ಇಲ್ಲಿ ಹೇಳಲೇಬೇಕು. ದೇವೇಗೌಡರು ಮಾಡಲಾಗದ್ದನ್ನು ಕುಮಾರಸ್ವಾಮಿ ಮಾಡಿದ್ದಾರೆ. ಮುಖ್ಯಮಂತ್ರಿ ಆಗಿದ್ದಾಗ ‘ಗ್ರಾಮ ವಾಸ್ತವ್ಯ’ದ ಮೂಲಕ ಸರಕಾರವನ್ನು ಜನರ ಮನೆ ಬಾಗಿಲಿಗೇ ಕೊಂಡೊಯ್ದಿದ್ದಾರೆ. ದುಃಖ-ದುಮ್ಮಾನ ಕೇಳಿದ್ದಾರೆ. ಅದರಿಂದಾಗಿ ಎಷ್ಟು ಪ್ರಯೋಜನವಾಯಿತು ಎನ್ನುವುದು ಬೇರೆ ಮಾತು. ಮುಖ್ಯಮಂತ್ರಿ ಸಾಮಾನ್ಯರ ಮನೆಯಲ್ಲಿ ವಾಸ್ತವ್ಯ ಹೂಡಿದ್ದೇ ಸಕಾರಾತ್ಮಕ ನಿಲುವು. ಜನರಲ್ಲಿ ಆತ್ಮವಿಶ್ವಾಸ ಮೂಡಿಸುವ ಪ್ರಕ್ರಿಯೆ. ಕೆಲವರು ಇದನ್ನು ‘ಢೋಂಗಿ ರಾಜಕಾರಣ’ ಎಂದು ಕರೆಯಬಹುದು. ಎಲ್ಲವೂ ಅವರವರ ಭಾವಕ್ಕೆ ಸಂಬಂಧಪಟ್ಟಿದ್ದು. ದೇವೇಗೌಡರು ತಮ್ಮನ್ನು ‘ಮಣ್ಣಿನ ಮಗ’ ಎಂದು ಕರೆದುಕೊಂಡರು. ಆದರೆ, ಅದು ರೈತರ ಪಕ್ಷವೂ ಆಗಲಿಲ್ಲ, ಕಾರ್ಮಿಕರ ಪಕ್ಷವೂ ಆಗಲಿಲ್ಲ, ಮಧ್ಯಮ ವರ್ಗದವರ ಪಕ್ಷವೂ ಆಗಲಿಲ್ಲ. ಕೊನೆಗೆ ಒಕ್ಕಲಿಗರೂ ಪೂರ್ಣವಾಗಿ ಅದರ ಕೈ ಹಿಡಿಯಲಿಲ್ಲ. ‘ಏಕೆ ಹೀಗಾಯ್ತು?’ ಜೆಡಿಎಸ್ ನಾಯಕರು ಆತ್ಮಾವಲೋಕನ ಮಾಡಿಕೊಳ್ಳಬೇಕು. ಜಾತ್ಯತೀತ ಟ್ಯಾಗ್ ಬಗ್ಗೆಯೂ ಮರು ಚಿಂತಿಸಬೇಕಿದೆ.
Year Ender 2025: ಭಾರತದ ಸೇನಾ ಸಾಮರ್ಥ್ಯದ ಪರಿಚಯ, ಬಿಜೆಪಿಯ ಚುನಾವಣಾ ದಿಗ್ವಿಜಯ; ಏನೆಲ್ಲಾ ಆಯ್ತು?
ಇನ್ನೇನು ವರ್ಷ 2025 ಮುಗಿಯುತ್ತಾ ಬಂತು.ಕಣ್ಣು ಮುಚ್ಚಿ ಕಣ್ಣು ತೆರೆಯುವಷ್ಟರಲ್ಲಿ ಒಂದು ವರ್ಷ ಕಳೆದು ಹೋಗಿದೆ. ದಿನಗಳು ಉರುಳಿದ್ದೇ ಗೊತ್ತಾಗಲ್ಲ ಅನ್ನೋರಿಗೆ ನಿಮ್ಮ ನೆಚ್ಚಿನ ವಿಜಯ ಕರ್ನಾಟಕ ವೆಬ್ ವಿವಿಧ ಕ್ಷೇತ್ರಗಳಲ್ಲಿ ಭಾರತದಲ್ಲಾದ ಬೆಳವಣಿಗೆಗಳ ಸಮಗ್ರ ಮಾಹಿತಿಯನ್ನು Year Ender 2025 ಸರಣಿ ಲೇಖನದಲ್ಲಿ ಒದಗಿಸಲಿದೆ. ಅದರಂತೆ ಈ ಲೇಖನದಲ್ಲಿ ಭಾರತದ ರಾಷ್ಟ್ರ ರಾಜಕಾರಣದಲ್ಲಾದ ಪ್ರಮುಖ ಬೆಳವಣಿಗೆಗಳು ಮತ್ತು ಅದರ ಪರಿಣಾಮಗಳ ಬಗ್ಗೆ ಚರ್ಚಿಸೋಣ. ಜೊತೆಗೆ ಭಾರತದ ಸೇನಾ ಕಾರ್ಯಾಚರಣೆಯ ಕಿರು-ಪರಿಚಯ ಮಾಡಿಕೊಳ್ಳೋಣ.
ಹೊಸದಿಲ್ಲಿ: ದಿಲ್ಲಿಯಲ್ಲಿ ವಾಯು ಮಾಲಿನ್ಯ ಹೆಚ್ಚಳದ ಹಿನ್ನೆಲೆ ಸರಕಾರ ಕಠಿಣ ನಿಯಮಗಳನ್ನು ಅಳವಡಿಸಿಕೊಂಡಿದೆ. ಬಿಎಸ್-4 ಎಂಜಿನ್ ಹೊಂದಿರದ ವಾಹನಗಳ ಪ್ರವೇಶವನ್ನು ನಿರ್ಬಂಧಿಸಲಾಗಿದ್ದು, ಮಾಲಿನ್ಯ ಪ್ರಮಾಣಪತ್ರವಿಲ್ಲದ ವಾಹನಗಳಿಗೆ ಪೆಟ್ರೋಲ್, ಡಿಸೇಲ್ ಸೇರಿದಂತೆ ಇಂಧನವನ್ನು ನಿಷೇಧಿಸಲಾಗಿದೆ. ದಿಲ್ಲಿಯಾದ್ಯಂತ ಪೆಟ್ರೋಲ್ ಬಂಕ್ಗಳು ಸೇರಿದಂತೆ ಇಂಧನ ಕೇಂದ್ರಗಳಲ್ಲಿ ಮಾಲಿನ್ಯ ನಿಯಂತ್ರಣ (ಪಿಯುಸಿ) ಪ್ರಮಾಣಪತ್ರಗಳನ್ನು ಹೊಂದಿರದ ವಾಹನಗಳಿಗೆ ಇಂಧನ ನೀಡುವುದನ್ನು ನಿಲ್ಲಿಸಲಾಗಿದೆ. ಪೆಟ್ರೋಲ್ ಪಂಪ್ಗಳಲ್ಲಿ ಧ್ವನಿ ವ್ಯವಸ್ಥೆ ಮೂಲಕ ಈ ಕುರಿತು ಮಾಹಿತಿ ನೀಡಲಾಗುತ್ತಿದೆ. ಹೊಸ ನಿರ್ಬಂಧಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡುವ ದೃಷ್ಠಿಯಿಂದ ಪ್ರಮುಖ ಗಡಿ ಪ್ರದೇಶಗಳು ಸೇರಿದಂತೆ 126 ಚೆಕ್ಪೋಸ್ಟ್ಗಳಲ್ಲಿ 580 ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದಲ್ಲದೆ, ನಿಯಮ ಉಲ್ಲಂಘನೆ ಬಗ್ಗೆ ಮೇಲ್ವಿಚಾರಣೆ ಮಾಡಲು ಮತ್ತು ನಿಯಮ ಪಾಲಿಸದ ವಾಹನಗಳ ವಿರುದ್ಧ ಕ್ರಮವನ್ನು ಕೈಗೊಳ್ಳಲು ಸಾರಿಗೆ ಇಲಾಖೆಯ ತಂಡಗಳನ್ನು ಪೆಟ್ರೋಲ್ ಪಂಪ್ಗಳು ಮತ್ತು ಗಡಿ ಸ್ಥಳಗಳಲ್ಲಿ ನಿಯೋಜಿಸಲಾಗಿದೆ.
ಏಕೈಕ ಕಾರಣಕ್ಕೆ ರಾಷ್ಟ್ರಪತಿ ಹುದ್ದೆ ನಿರಾಕರಿಸಿದ್ದ ಅಜಾತಶತ್ರು ವಾಜಪೇಯಿ : 24 ವರ್ಷದ ಹಿಂದಿನ ಸತ್ಯ ಬಹಿರಂಗ
Vajpatee Name for President Post : ರಾಷ್ಟ್ರಪತಿ ಹುದ್ದೆಗೆ ಮಾಜಿ ಪ್ರಧಾನಿ ದಿವಂಗತ ಅಟಲ್ ಬಿಹಾರಿ ವಾಜಪೇಯಿ ಹೆಸರು ಮುನ್ನಲೆಗೆ ಬಂದಿತ್ತು. ಆದರೆ, ದೇಶದ ಟಾಪ್ ಮೋಸ್ಟ್ ಹುದ್ದೆಗೆ ಏರಲು, ಅಟಲ್’ಜೀ ಮನಸ್ಸು ಮಾಡಲಿಲ್ಲ ಎಂದು ಬಿಡುಗಡೆಯಾದ ಪುಸ್ತಕವೊಂದರಲ್ಲಿ ಉಲ್ಲೇಖವಾಗಿದೆ. ಯಾವ ಕಾರಣಕ್ಕಾಗಿ, ವಾಜಪೇಯಿ ಆ ಹುದ್ದೆಯನ್ನು ನಿರಾಕರಿಸಿದರು?
ಢಾಕಾದಲ್ಲಿರುವ ಭಾರತೀಯ ವೀಸಾ ಕಚೇರಿಯನ್ನು ಮುಚ್ಚಿದ ಮೋದಿ ಸರ್ಕಾರ
ಭಾರತದ ವಿರುದ್ಧ ಬಾಂಗ್ಲಾದೇಶದ ರಾಜಕೀಯ ನಾಯಕರು ನೀಡಿದ ಹೇಳಿಕೆಗಳಿಗೆ ಪ್ರತಿಕ್ರಿಯೆಯಾಗಿ, ಭಾರತ ಸರ್ಕಾರ ಢಾಕಾದಲ್ಲಿರುವ ಭಾರತೀಯ ವೀಸಾ ಅರ್ಜಿ ವಿಲೇವಾರಿ ಕೇಂದ್ರವನ್ನು ತಾತ್ಕಾಲಿಕವಾಗಿ ಮುಚ್ಚಿದೆ. ವೀಸಾ ಸಂದರ್ಶನಗಳನ್ನು ರದ್ದುಪಡಿಸಲಾಗಿದೆ. ಭಾರತವು ಬಾಂಗ್ಲಾದೇಶದ ಹೈಕಮಿಷನರ್ ಅವರನ್ನು ಕರೆಸಿ, ಅಲ್ಲಿನ ರಾಜಕೀಯ ಅಸ್ಥಿರತೆಯ ಬಗ್ಗೆ ಕಳವಳ ವ್ಯಕ್ತಪಡಿಸಿದೆ. ಸುರಕ್ಷತೆಯ ಕಾರಣ ನೀಡಿ ಕೇಂದ್ರ ಮುಚ್ಚಲಾಗಿದೆ ಎಂದು ತಿಳಿಸಿದೆ.
ಡಿ.20 ರಂದು ವಾರ್ತಾ ಭಾರತಿಯ ಕಲ್ಯಾಣ ಕರ್ನಾಟಕ ಆವೃತ್ತಿ ಲೋಕಾರ್ಪಣೆ
ಕಲಬುರಗಿಗೆ ನಟ ಪ್ರಕಾಶ್ ರಾಜ್, ಸಿದ್ಧಾರ್ಥ್ ವರದರಾಜನ್, ಸ್ಪೀಕರ್ ಯು.ಟಿ. ಖಾದರ್, ಪ್ರಿಯಾಂಕ್ ಖರ್ಗೆ
ರೈತರಿಗೆ ಗುಡ್ ನ್ಯೂಸ್: \7 ಲಕ್ಷ ಮೆಟ್ರಿಕ್ ಟನ್ ಮೆಕ್ಕೆಜೋಳ ಖರೀದಿ ಗುರಿ ನಿಗದಿ\
ಬೆಳಗಾವಿ: ರಾಜ್ಯದ ಎಥೆನಾಲ್ ಹಾಗೂ ಡಿಸ್ಟಲರಿ ಕಾರ್ಖಾನೆಗಳಿಂದ ಬೆಂಬಲ ಬೆಲೆಯಡಿ 7 ಲಕ್ಷ ಮೆಟ್ರಿಕ್ ಟನ್ ಮೆಕ್ಕೆಜೋಳ ಖರೀದಿಸಲು ಗುರಿ ನಿಗಿದ ಮಾಡಲಾಗಿದೆ ಎಂದು ಜವಳಿ, ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ್ ಹೇಳಿದರು. ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲದ ಅಧಿವೇಶನದಲ್ಲಿ ಶಾಸಕರುಗಳಾದ ಎನ್.ಹೆಚ್.ಕೋನರೆಡ್ಡಿ ಹಾಗೂ ಬಸವರಾಜ
ಕುತ್ತಾರ್ | ಕಾರು- ಬೈಕ್ ಮಧ್ಯೆ ಢಿಕ್ಕಿ: ಇಬ್ಬರಿಗೆ ತೀವ್ರ ಗಾಯ
ಉಳ್ಳಾಲ: ಕಾರು ಮತ್ತು ಬೈಕ್ ಮಧ್ಯೆ ಸಂಭವಿಸಿದ ಢಿಕ್ಕಿಯಲ್ಲಿ ಬೈಕ್ ಸವಾರರಿಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ಉಳ್ಳಾಲ ಠಾಣಾ ವ್ಯಾಪ್ತಿಯ ಕುತ್ತಾರ್ ಬಳಿ ಬುಧವಾರ ತಡರಾತ್ರಿ ನಡೆದಿದೆ. ಗಾಯಗೊಂಡವರನ್ನು ನಿಖಿಲ್, ಗಗನ್ ಜೀತ್ ಎಂದು ಗುರುತಿಸಲಾಗಿದೆ. ಇವರು ವಾಮಂಜೂರು ಮತ್ತು ದೇರಳಕಟ್ಟೆ ಮೂಲದವರು ಎಂದು ತಿಳಿದು ಬಂದಿದೆ ಇವರಿಬ್ಬರು ಸಂಚರಿಸುತ್ತಿದ್ದ ಬೈಕ್ ನಿಯಂತ್ರಣ ತಪ್ಪಿ ಎದುರಿನಿಂದ ಚಲಿಸುತ್ತಿದ್ದ ಕಾರಿನ ಹಿಂಭಾಗಕ್ಕೆ ಢಿಕ್ಕಿ ಹೊಡೆದಿದೆ ಎನ್ನಲಾಗಿದೆ. ಢಿಕ್ಕಿ ಹೊಡೆದ ರಭಸಕ್ಕೆ ಬೈಕ್ ಸವಾರರಿಬ್ಬರು ರಸ್ತೆಗೆ ಎಸೆಯಲ್ಪಟ್ಟು ತೀವ್ರವಾಗಿ ಗಾಯಗೊಂಡಿದ್ದರು. ಅವರನ್ನು ದೇರಳಕಟ್ಟೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ಮಂಗಳೂರು ಗ್ರಾಮಾಂತರ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಧರ್ಮಸ್ಥಳ ಪ್ರಕರಣ | ಜಾಮೀನು ಮಂಜೂರಾಗಿ 24 ದಿನಗಳ ಬಳಿಕ ಜೈಲಿನಿಂದ ಚಿನ್ನಯ್ಯ ಬಿಡುಗಡೆ
ಶಿವಮೊಗ್ಗ: ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿ ಜೈಲು ಸೇರಿದ್ದ ಚಿನ್ನಯ್ಯ ಜಾಮೀನ ಮಂಜೂರಾಗಿ 24 ದಿನಗಳ ಬಳಿಕ ಶಿವಮೊಗ್ಗ ಕೇಂದ್ರ ಕಾರಾಗೃಹದಿಂದ ಗುರುವಾರ ಬಿಡುಗಡೆಗೊಂಡಿದ್ದಾನೆ. ಗುರುವಾರ ಬೆಳಗ್ಗೆ ಆತನ ಪತ್ನಿ, ಸಹೋದರಿ ಮತ್ತು ವಕೀಲರು ಚಿನ್ನಯ್ಯನನ್ನು ಜೈಲಿನಿಂದ ಕರೆದೊಯ್ದರು. ಧರ್ಮಸ್ಥಳ ಪ್ರಕರಣದಲ್ಲಿ ಸಾಕ್ಷಿ ದೂರುದಾರನಾಗಿ ಬಂದು ಬಳಿಕ ಆರೋಪಿಯಾಗಿ ಜೈಲು ಸೇರಿದ್ದ ಚಿನ್ನಯ್ಯ ನಾಲ್ಕು ತಿಂಗಳಿನಿಂದ ಜೈಲಿನಲ್ಲಿದ್ದ. ಚಿನ್ನಯ್ಯನಿಗೆ ದಕ್ಷಿಣ ಕನ್ನಡ ಜಿಲ್ಲಾ ನ್ಯಾಯಾಲಯವು ನ.24ರಂದು 12 ಷರತ್ತುಗಳೊಂದಿಗೆ ಜಾಮೀನು ಮಂಜೂರು ಮಾಡಿತ್ತು. ಆದರೆ ಬಾಂಡ್ ಮತ್ತು ಶೂರಿಟಿ ನೀಡಲು ಯಾರೂ ಮುಂದೆ ಬಾರದ ಕಾರಣ ಬಿಡುಗಡೆ ಸಾಧ್ಯವಾಗಿರಲಿಲ್ಲ. ಬುಧವಾರ ಆತನ ಪತ್ನಿ ಮಲ್ಲಿಕಾ ಒಂದು ಲಕ್ಷ ರೂ. ಬಾಂಡ್ ಮತ್ತು ಇಬ್ಬರು ಜಾಮೀನುದಾರರೊಂದಿಗೆ ಬೆಳ್ತಂಗಡಿ ಪ್ರಧಾನ ಹಿರಿಯ ವ್ಯವಹಾರಿಕ ನ್ಯಾಯಾಲಯಕ್ಕೆ ಶೂರಿಟಿ ಕೊಡಿಸಿ ಕಾನೂನು ಪ್ರಕ್ರಿಯೆ ಪೂರೈಸಿದ್ದಾರೆ.
ಅಮೆರಿಕಾ ಅಧ್ಯಕ್ಷ ಟ್ರಂಪ್ ರಾಷ್ಟ್ರವನ್ನುದ್ದೇಶಿಸಿ ನಡೆಸಿದ ಭಾಷಣದಲ್ಲಿ ತಮ್ಮ 2 ನೇ ಆಡಳಿತವಧಿಯಲ್ಲಿ ತಾವು ಮಾಡಿದ ಸಾಧನೆಗಳನ್ನು ಹೊಗಳಿಕೊಳ್ಳುತ್ತಾ, ಗಡಿ ಭದ್ರತೆಯನ್ನು ಬಲಪಡಿಸಿ, ಜಾಗತಿಕ ಸಂಘರ್ಷಗಳನ್ನು ಬಗೆಹರಿಸಿ, ಅಮೆರಿಕಾದ ಆರ್ಥಿಕತೆಯನ್ನು ದಾಖಲೆಯ ಮಟ್ಟಕ್ಕೆ ಏರಿಸಿದ್ದಾಗಿ ಹೇಳಿಕೊಂಡರು.ಅಲ್ಲದೆ, ನಾನು 10 ತಿಂಗಳಲ್ಲಿ 8 ಯುದ್ದ ಬಗೆಹರಿಸಿದ್ದೇನೆ ಎಂದು ಮತ್ತೊಮ್ಮೆ ಕ್ರೆಡಿಟ್ ಪಡೆದುಕೊಂಡ ಟ್ರಂಪ್ ಇದೇ ವೇಳೆ ಸದಾ ಶಿವನಿಗೆ ಅದೇ ಧ್ಯಾನ ಎಂಬತೇ ಈ ವೇಳೆಯೂ ಮಾಜಿ ಅಧ್ಯಕ್ಷ ಬೈಡನ್ ಆಡಳಿತವನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ಬೈಡನ್ ಕಾಲದಲ್ಲಿ ದೇಶ ಅತ್ಯಂತ ಹೀನಾಯ ಪರಿಸ್ಥಿತಿಯ ಗಡಿ ವ್ಯವಸ್ಥೆ ಹೊಂದಿತ್ತು ಆದರೆ ನಾನು ಅನದನು ಸರಿಪಡಿಸಿದ್ದೇನೆ ಎಂದು ವಾಗ್ದಾಳಿ ನಡೆಸಿದರು. ಇದೇ ವೇಳೆ ಸುಂಕ ಎಂಬುದು ನನ್ನ ನೆಚ್ಚಿನ ಪದ, ಸುಂಕದಿಂದಲೇ ದೇಶ ಅಭಿವೃದ್ದಿಯಾಗಿದೆ ಎಂದು ಪುನರುಚ್ಚರಿಸಿದರು.
ರಾಯಚೂರು | ದೇವಸ್ಥಾನದ ಹುಂಡಿ ಹಣ ಕಳವು: ಪ್ರಕರಣ ದಾಖಲು
ರಾಯಚೂರು: ಮಸ್ಕಿ ತಾಲೂಕಿನ ಪಾಮನಕಲ್ಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಚಿಲ್ಕರಾಗಿ ಗ್ರಾಮದ ಉಟಕನೂರು ಮರಿ ಬಸವಲಿಂಗ ಸ್ವಾಮಿಗಳ ದೇವಸ್ಥಾನದಲ್ಲಿ ಕಳ್ಳರು ಹುಂಡಿ ಹಣ ಕದ್ದೊಯ್ದ ಘಟನೆ ಬುಧವಾರ ಜರುಗಿದೆ. ಕಾಣಿಕೆ ಪೆಟ್ಟಿಗೆಯನ್ನು ಹೊತ್ತೊಯ್ದ ಕಳ್ಳರು, ಬೀಗ ಮುರಿದು 20,000ಕ್ಕೂ ಅಧಿಕ ಹಣ ಕದ್ದು ಪೆಟ್ಟಿಗೆಯನ್ನು ಸ್ಮಶಾನದಲ್ಲಿ ಬಿಸಾಡಿ ಹೋಗಿದ್ದಾರೆ. ಗ್ರಾಮಸ್ಥರು ಬೆಳಗ್ಗೆ ದೇವಸ್ಥಾನಕ್ಕೆ ಬಂದಾಗ ಪ್ರಕರಣ ಬೆಳಕಿಗೆ ಬಂದಿದೆ. ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದು. ಸ್ಥಳಕ್ಕೆ ಕವಿತಾಳ ಪಿಎಸ್ಐ ಗುರುಚಂದ್ರ ಯಾದವ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಆರು ತಿಂಗಳ ಹಿಂದೆ ಹುಂಡಿ ಇಟ್ಟಿದ್ದು, ಹಣ ಎಣಿಕೆ ಮಾಡಿರಲಿಲ್ಲ ಚಳಿಯ ವಾತಾವರಣ ಇರುವ ಹಿನ್ನೆಲೆ ಜನರು ಸ್ವಲ್ಪ ತಡವಾಗಿ ಓಡಾಡುವುದರಿಂದ ನಸುಕಿನ ಜಾವದಲ್ಲಿ ಕಳ್ಳರು ಈ ಕೆಲಸವನ್ನು ಮಾಡಿದ್ದಾರೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಕವಿತಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಸ್ಕಿ: ತಾಯಿ ಬುದ್ದಿವಾದ ಹೇಳಿದ್ದಕ್ಕೆ ಯುವತಿ ಆತ್ಮಹತ್ಯೆ
ಮಸ್ಕಿ: ತಾಲೂಕಿನ ದಿನ್ನಿಭಾವಿ ಗ್ರಾಮದ ನಿವಾಸಿಯಾದ ಬಸಲಿಂಗಮ್ಮ (24) ಯುವತಿಯು ತನ್ನ ತಾಯಿ ದುರಗಮ್ಮ ಬುದ್ದಿ ಮಾತಿಗಾಗಿ ಬೈದಿದ್ದು, ಇದರಿಂದ ನೊಂದ ಯುವತಿ ಪಟ್ಟಣದ ಹತ್ತಿರ ಹಾದು ಹೋಗಿರುವ ತುಂಗಭದ್ರಾ ಎಡದಂಡೆ ಕಾಲುವೆಯ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಸೋಮವಾರದಂದು ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಈ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆತ್ಮಹತ್ಯೆಯ ಯೋಚನೆ ಬಂದಾಗ ಅದನ್ನು ನಿಗ್ರಹಿಸಲು ರಾಜ್ಯ ಸರಕಾರದ ಅರೋಗ್ಯ ಇಲಾಖೆಯ ಹೆಲ್ಪ್ ಲೈನ್ 104 ಸಹಾಯ ಮಾಡುತ್ತದೆ. ಅದರ ಜೊತೆಗೆ Tele-MANAS ನ 14416 ಅನ್ನೂ ಸಂಪರ್ಕಿಸಬಹುದು.
India Weather Forecast: ಶೀತಗಾಳಿ ನಡುವೆಯೂ ಈ ಭಾಗಗಳಲ್ಲಿ ಗುಡುಗು, ಮಿಂಚು ಸಹಿತ ರಣಭೀಕರ ಮಳೆ ಮುನ್ಸೂಚನೆ
India Weather Forecast: ದೇಶದ ಬಹುತೇಕ ರಾಜ್ಯಗಳಲ್ಲಿ ತಾಪಮಾನ ಪ್ರಮಾಣ ಕಡಿಯಾಗುತ್ತಿದ್ದು, ಚಳಿ ಹೆಚ್ಚಾಗಿದೆ. ಈ ನಡುವೆಯೆ ಹಲವೆಡೆ ಮಳೆ ಆಗುತ್ತಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಹಾಗಾದ್ರೆ, ಎಲ್ಲೆಲ್ಲಿ ಶೀತಗಾಳಿ ಹೆಚ್ಚಿದೆ ಹಾಗೂ ವರುಣನ ಆರ್ಭಟ ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ. ಗುರುವಾರ (ಡಿಸೆಂಬರ್ 18) ಬೆಳಗ್ಗೆ ರಾಷ್ಟ್ರ ರಾಜಧಾನಿ
ಮಂಗಳೂರು: ಶಿಕ್ಷಕರ ಸೇವಾ ಪ್ರತಿಷ್ಠಾನದಿಂದ ವಿದ್ಯಾರ್ಥಿ ವೇತನ ವಿತರಣೆ
ಮಂಗಳೂರು: ಶಿಕ್ಷಕರ ಸಹಕಾರಿ ಪತ್ತಿನ ಸಂಘದ ಅಧೀನ ಸಂಸ್ಥೆಯಾದ ಶಿಕ್ಷಕರ ಸೇವಾ ಪ್ರತಿಷ್ಠಾನದಿಂದ ಐದರಿಂದ ಪಿಯುಸಿವರೆಗೆ ಕಲಿಯುತ್ತಿರುವ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ಶಿಕ್ಷಕರ ಸಹಕಾರಿ ಸಂಘದ ಸಭಾಂಗಣದಲ್ಲಿ ವಿತರಿಸಲಾಯಿತು. ವಿದ್ಯಾರ್ಥಿ ವೇತನವನ್ನು ವಿತರಿಸಿ ಮಾತನಾಡಿದ ಮಂಗಳೂರು ಶಿಕ್ಷಕರ ಸಹಕಾರಿ ಪತ್ತಿನ ಸಂಘದ ಅಧ್ಯಕ್ಷ ಕೆಎಂ ಕೆ ಮಂಜನಾಡಿ, ಸಾಂಕೇತಿಕವಾಗಿ ಇವತ್ತು ವಿದ್ಯಾರ್ಥಿ ವೇತನವನ್ನು ವಿತರಿಸಲಾಗಿದ್ದು, ಅರ್ಜಿ ಸಲ್ಲಿಸಿದ ಎಲ್ಲರಿಗೂ ಮುಂದಿನ ದಿನಗಳಲ್ಲಿ ಅವರವರ ಖಾತೆಗೆ ವಿದ್ಯಾರ್ಥಿ ವೇತನವನ್ನು ಜಮಾ ಮಾಡಲಾಗುವುದು. ವಿದ್ಯಾರ್ಥಿಗಳು ಪಡೆದುಕೊಂಡ ಈ ವಿದ್ಯಾರ್ಥಿ ವೇತನವನ್ನು ತಮ್ಮ ಶೈಕ್ಷಣಿಕ ಕಾರ್ಯಗಳಿಗೆ ಮಾತ್ರ ಬಳಸಿಕೊಂಡು ಮುಂದೆ ಸಮಾಜದಲ್ಲಿ ಉತ್ತಮ ನಾಗರಿಕರಾಗಿ ಬಾಳಬೇಕು. ಸಮುದಾಯದ ಪ್ರತಿ ಒಬ್ಬ ರಿಗೆ ಪರಸ್ಪರ ಸಹಕಾರ ನೀಡಬೇಕು ಎಂದರು. ಪ್ರತಿಷ್ಠಾನದ ಉಪಾಧ್ಯಕ್ಷರಾದ ರವಿಕಲಾ ಶೆಟ್ಟಿ ಅವರು ಅಧ್ಯಕ್ಷ ಸ್ಥಾನವನ್ನು ವಹಿಸಿದ್ದು, ಶಿಕ್ಷಕರ ಸಹಕಾರಿ ಪತ್ತಿನ ಸಂಘದ ನಿರ್ದೇಶಕರುಗಳಾದ ಹಿಲ್ದಾ ಕ್ಲೈಮಾನ್ಸಿಯ ಪಿಂಟೋ, ನಿವೃತ್ತ ಪ್ರಾಂಶುಪಾಲರಾದ ಡಾ. ಎನ್ ಇಸ್ಮಾಯಿಲ್, ಚಂದ್ರಶೇಖರ್, ರಘುನಾಥ್ ಭಟ್, ಸೊಸೈಟಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶರ್ಮಿಳ, ಮಹಾದೇವಿ, ಪ್ರತಿಷ್ಠಾನದ ನಿರ್ದೇಶಕರುಗಳು ಭಾಗವಹಿಸಿದ್ದರು. ಕಾರ್ಯದರ್ಶಿ ಉದಯ ನಾಯಕ ರವರು ಕಾರ್ಯಕ್ರಮ ನಿರೂಪಿಸಿದರು.
ಹೊಸದಿಲ್ಲಿ: ಸಾರ್ವಜನಿಕ ಸಮಾರಂಭದಲ್ಲಿ ವೈದ್ಯೆಯ ಹಿಜಾಬ್ ಎಳೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ವಿರುದ್ಧ ದೇಶಾದ್ಯಂತ ವ್ಯಾಪಕ ಟೀಕೆ- ಆಕ್ರೋಶಗಳು ವ್ಯಕ್ತವಾದ ಬೆನ್ನಲ್ಲೇ, ನಿತೀಶ್ ಕ್ರಮವನ್ನು ಸಮರ್ಥಿಸಿಕೊಳ್ಳುವ ಮೂಲಕ ಬಿಜೆಪಿ ನಾಯಕ, ಕೇಂದ್ರ ಸಚಿವ ಗಿರಿರಾಜ್ ಸಿಂಗ್, ವಿವಾದಕ್ಕೆ ತುಪ್ಪ ಸುರಿದಿದ್ದಾರೆ. ಘಟನೆಯ ಬಗ್ಗೆ ಪ್ರತಿಕ್ರಿಯಿಸುವಂತೆ ಮಾಧ್ಯಮ ಪ್ರತಿನಿಧಿಗಳು ಕೇಳಿಕೊಂಡಾಗ, ಅವರು ಮಾಡಿರುವುದರಲ್ಲಿ ತಪ್ಪೇನಿದೆ? ಎಂದು ಮರು ಪ್ರಶ್ನೆ ಎಸೆದರು. ನೇಮಕಾತಿ ಪತ್ರ ಪಡೆಯಲು ಬರುವಾಗ ಮುಖ ತೋರಿಸಲು ಆಕೆ ಏಕೆ ಭಯ ಪಡಬೇಕು? ನೀವು ಮತ ಚಲಾಯಿಸಲು ನಿಮ್ಮ ಮುಖ ತೋರಿಸಬೇಡವೇ? ಎಂದು ಸಿಂಗ್ ಸಮರ್ಥಿಸಿಕೊಂಡರು. ಮಂಗಳವಾರ 1200ಕ್ಕೂ ಹೆಚ್ಚು ಆಯುಷ್ ವೈದ್ಯರಿಗೆ ನೇಮಕಾತಿ ಪತ್ರ ವಿತರಿಸುವ ವೇಳೆ ಕುಮಾರ್ ಆರಂಭದಲ್ಲಿ ಹಿಜಾಬ್ ಧರಿಸಿದ್ದ ವೈದ್ಯೆ ಜತೆ ಮಾತನಾಡುತ್ತಿರುವುದು ದಾಖಲಾಗಿದೆ. ಬಳಿಕ ಸಿಎಂ ವೈದ್ಯೆಯ ಹಿಜಾಬ್ ಎಳೆಯುತ್ತಿದ್ದಾಗ ಉಪಮುಖ್ಯಮಂತ್ರಿ ಸಮರ್ಥ್ ಚೌಧರಿ ತಡೆಯುವ ಪ್ರಯತ್ನ ಮಾಡಿದ್ದಾರೆ. ಸಿಎಂ ಕ್ರಮದ ವಿರುದ್ಧ ರಾಷ್ಟ್ರೀಯ ಜನತಾದಳ ಮತ್ತು ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದ್ದು, ಸಿಎಂ ಕ್ರಮವನ್ನು ಸಮರ್ಥಿಸಿಕೊಳ್ಳಲು ಜೆಡಿಯು ಹೆಣಗಾಡುತ್ತಿದೆ. ನಿತೀಶ್ ಸಹೋದ್ಯೋಗಿ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಖಾತೆ ಸಚಿವ ಝಮಾ ಖಾನ್ ಹೇಳಿಕೆ ನೀಡಿ, ನಿತೀಶ್ ಅವರು ಮುಸ್ಲಿಂ ಹೆಣ್ಣುಮಗಳ ಬಗ್ಗೆ ಪ್ರೀತಿ ತೋರಿದ್ದಾರೆ. ಜೀವನದಲ್ಲಿ ಯಶಸ್ವಿಯಾದ ಮುಸ್ಲಿಂ ಹುಡುಗಿಯ ಮುಖವನ್ನು ಸಮಾಜಕ್ಕೆ ಪ್ರದರ್ಶಿಸಲು ಸಿಎಂ ಬಯಸಿದ್ದರು ಎಂದು ಸಮರ್ಥಿಸಿಕೊಳ್ಳುವ ಪ್ರಯತ್ನ ಮಾಡಿದ್ದಾರೆ.
ಪ್ರತಿಪಕ್ಷಗಳ ವಿದೇಶ ಪ್ರೀತಿ; ಪಾಕಿಸ್ತಾನ, ಅಮೆರಿಕ, ಚೀನಾ ಸಾಕಾ? ನರೇಂದ್ರ ಮೋದಿ ಸರ್ಕಾರ ಬೀಳಿಸಲು ಮತ್ಯಾರಾದರೂ ಬೇಕಾ?
ಕೌಟುಂಬಿಕ ಕಲಹಗಳು, ಅಣ್ಣ-ತಮ್ಮಂದಿರ ಹೊಡೆದಾಟಗಳು, ಅತ್ತೆ-ಸೊಸೆಯಂದಿರ ಜಗಳಗಳು ನಾಲ್ಕು ಗೋಡೆಗಳ ಮಧ್ಯೆ ಇದ್ದರೆ ಚೆಂದ. ಈ ವಿಷಯಗಳು ಮನೆಯನ್ನು ದಾಟಿ ಹೊರಗೆ ಬಂದರೆ, ಇಡೀ ಕುಟುಂಬದ ಅವಮಾನ ಕಟ್ಟಿಟ್ಟಬುತ್ತಿ. ಇದು ರಾಜಕಾರಣಕ್ಕೂ ಅನ್ವಯಿಸುತ್ತದೆ. ದೇಶದ ಆಂತರಿಕ ರಾಜಕಾರಣವನ್ನು ದೇಶಕ್ಕೆ ಮಾತ್ರ ಸೀಮಿತಗೊಳಿಸಬೇಕು. ಇದರಲ್ಲಿ ಅಂತಾರಾಷ್ಟ್ರೀಯ ಹಸ್ತಕ್ಷೇಪದ ಬಗ್ಗೆ ಅನುಮಾನ ಮೂಡಿದರೆ, ಅದು ರಾಷ್ಟ್ರೀಯ ಭದ್ರತೆಗೆ ಅಪಾಯಕಾರಿಯೇ ಹೌದು. ಕಳೆದ ಕೆಲವು ದಿನಗಳಿಂದ ವಿಪಕ್ಷ ನಾಯಕರು ನೀಡುತ್ತಿರುವ ಹೇಳಿಕೆಗಳು, ಇಂತದ್ದೊಂದು ಆತಂಕವನ್ನು ಸೃಷ್ಟಿಸಿದೆ.
ಮೂಡಾ ಪ್ರಕರಣ: ಸಿಎಂ ಸಿದ್ದರಾಮಯ್ಯಗೆ ಮಹತ್ವದ ದಿನ; 'ಬಿ ರಿಪೋರ್ಟ್' ಬಗ್ಗೆ ಇಂದು ಕೋರ್ಟ್ ತೀರ್ಪು ಪ್ರಕಟ
ಮುಡಾ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಇಂದು ಮಹತ್ವದ ದಿನವಾಗಿದ್ದು, ಲೋಕಾಯುಕ್ತರು ಸಲ್ಲಿಸಿದ್ದ 'ಬಿ ರಿಪೋರ್ಟ್' ಬಗ್ಗೆ ನ್ಯಾಯಾಲಯ ಇಂದು ತೀರ್ಪು ಪ್ರಕಟಿಸಲಿದೆ. ದೂರುದಾರ ಸ್ನೇಹಮಯಿ ಕೃಷ್ಣ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಬಳಿಕ ಆದೇಶ ಕಾಯ್ದಿರಿಸಲಾಗಿತ್ತು. 'ಬಿ ರಿಪೋರ್ಟ್' ಅಂಗೀಕರಿಸಿದರೆ ಮುಖ್ಯಮಂತ್ರಿ ಕುಟುಂಬಕ್ಕೆ ನಿರಾಳತೆ ಸಿಗಲಿದೆ.
ತಮ್ಮದೇ ಕೇಂದ್ರ ಸರ್ಕಾರಕ್ಕೆ ಎರಡು ಮನವಿಯನ್ನು ಮಾಡಿದ ಕುಮಾರಸ್ವಾಮಿ : ಏನದು ಒತ್ತಾಯ?
Kumaraswamy request to Central Government : ದೆಹಲಿಯಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮವೊಂದರಲ್ಲಿ, ಕೇಂದ್ರ ಸಚಿವ ಕುಮಾರಸ್ವಾಮಿ, ಕೇಂದ್ರ ಸರ್ಕಾರಕ್ಕೆ ಎರಡು ಮನವಿಯನ್ನು ಮಾಡಿದ್ದಾರೆ. ಈ ಕಾರ್ಯಕ್ರಮದಲ್ಲಿ ರಾಜ್ಯದ ದೆಹಲಿ ವಿಶೇಷ ಪ್ರತಿನಿಧಿ ಟಿಬಿ ಜಯಚಂದ್ರ, ಸಂಸದರಾದ ಡಾ. ಸಿ.ಎನ್. ಮಂಜುನಾಥ್ ಮುಂತಾದವರು ಉಪಸ್ಥಿತರಿದ್ದರು.
ರೂಪಾಯಿ ಪತನಕ್ಕೆ ತಟ್ಟೆ ಬಡಿದರೆ ಸಾಕೆ?
ಡಾಲರ್ ಮುಂದೆ ರೂಪಾಯಿಯ ಬೆಲೆ ದಯನೀಯವಾಗಿ ಕೆಳಗಿಳಿಯುತ್ತಿದೆ. ಈ ವೇಗವು ಭಾರತದ ಆರ್ಥಿಕತೆಯ ಭವಿಷ್ಯವನ್ನು ಜಗತ್ತಿನ ಮುಂದೆ ಬಿಡಿಸಿಡುತ್ತಿದೆ. ಡಾಲರ್ನ ಮುಂದೆ ಭಾರತದ ರೂಪಾಯಿ ಕೆಳಗಿಳಿಯುತ್ತಿರುವುದು ಇದೇ ಮೊದಲೇನೂ ಅಲ್ಲ. ಯುಪಿಎ ಅಧಿಕಾರಾವಧಿಯಲ್ಲೂ ರೂಪಾಯಿಗೆ ಡಾಲರ್ ಮುಂದೆ ವಿಶೇಷ ಮರ್ಯಾದೆಯೇನೂ ಸಿಗುತ್ತಿರಲಿಲ್ಲ. ಆದರೆ, ಡಾಲರ್ನ ಎದುರು ರೂಪಾಯಿ ಪತನವಾದಂತೆಲ್ಲ ಅದನ್ನು ದೇಶ ಗಂಭೀರವಾಗಿ ತೆಗೆದುಕೊಳ್ಳುತ್ತಿತ್ತು. ಆರ್ಥಿಕ ತಜ್ಞರು ಅವುಗಳನ್ನು ಗಂಭೀರ ವಿಶ್ಲೇಷಣೆಗಳಿಗೆ ಒಳಪಡಿಸುತ್ತಿದ್ದರು. ಸಂಸತ್ನಲ್ಲಿ ಅದು ಚರ್ಚೆಯ ವಿಷಯವಾಗುತ್ತಿತ್ತು. ಈ ಹಿಂದೆ ವಿರೋಧ ಪಕ್ಷವಾಗಿದ್ದ ಕಾಲದಲ್ಲಿ ರೂಪಾಯಿಯ ದೈನೇಸಿ ಸ್ಥಿತಿಯನ್ನು ಮುಂದಿಟ್ಟುಕೊಂಡು ಬಿಜೆಪಿಯು ಯುಪಿಎ ಸರಕಾರದ ಮೇಲೆ ತೀವ್ರ ದಾಳಿಗಳನ್ನು ಮಾಡಿತ್ತು.ರೂಪಾಯಿ ಬೆಲೆ ಇಳಿಕೆಗೆ ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ನರೇಂದ್ರ ಮೋದಿಯವರು ಹೊಣೆ ಮಾಡಿದ್ದರು. ಮಾತ್ರವಲ್ಲ, ಮೋದಿ ನೇತೃತ್ವದ ಸರಕಾರ ಅಧಿಕಾರಕ್ಕೆ ಬಂದರೆ, ಡಾಲರ್ನ ಮುಂದೆ ರೂಪಾಯಿ ಬೆಲೆ ಪಡೆದುಕೊಳ್ಳುತ್ತದೆ ಎಂದು ದೇಶವನ್ನು ನಂಬಿಸಲಾಗಿತ್ತು. ಆದರೆ ಆ ನಂಬಿಕೆ ಹುಸಿಯಾಗಿದೆ. ಮಾತ್ರವಲ್ಲ, ಸಂಸತ್ ಅಧಿವೇಶನದಲ್ಲಿ ರೂಪಾಯಿ ಸ್ಥಿತಿ ಚರ್ಚೆಗೆ ಅರ್ಹವೇ ಅಲ್ಲದ ವಿಷಯವಾಗಿದೆ. ಬಿಜೆಪಿಯು ‘ವಂದೇಮಾತರಂ’ ಹಾಡಿನ ಕುರಿತಂತೆ ಚರ್ಚಿಸಿ ಇಡೀ ಕಲಾಪದ ಉದ್ದೇಶವನ್ನು ವ್ಯರ್ಥಗೊಳಿಸಿದೆ. ಕೇಂದ್ರ ಸರಕಾರದ ಆರ್ಥಿಕ ನೀತಿಗಳು ರೂಪಾಯಿಯ ಇಂದಿನ ಸ್ಥಿತಿಗೆ ನೇರ ಕಾರಣವಾಗಿದೆ. ಈ ಹಿಂದೆ, ನೋಟು ನಿಷೇಧವನ್ನು ಮಾಡಿದಾಗ, ದೇಶದೊಳಗಿರುವ ಕಪ್ಪು ಹಣವೆಲ್ಲ ಪತ್ತೆಯಾಗಿ ರೂಪಾಯಿಯ ಬೆಲೆ ಏಕಾಏಕಿ ಡಾಲರ್ ಮುಂದೆ ಏರಿಕೆಯಾಗುತ್ತದೆ ಎಂದು ದೇಶದ ಜನರನ್ನು ಮೋದಿ ನೇತೃತ್ವದ ಸರಕಾರ ನಂಬಿಸಿತ್ತು. ರಾಜಕೀಯ ನಾಯಕರ ಈ ಮಾತುಗಳನ್ನು ನಂಬಿ ಈ ದೇಶದ ಲಕ್ಷಾಂತರ ಮಂದಿ ಬ್ಯಾಂಕುಗಳ ಮುಂದೆ ಕ್ಯೂ ನಿಂತಿದ್ದರು. ದೈನಂದಿನ ವ್ಯವಹಾರಗಳಲ್ಲಿ ನಾಶ, ನಷ್ಟವಾದರೂ ಅದನ್ನು ‘ದೇಶಕ್ಕಾಗಿ’ ಸಹಿಸಿಕೊಂಡರು. ನೋಟು ನಿಷೇಧದಿಂದ ಕಪ್ಪು ಹಣ ಬರಲಿಲ್ಲ. ಇದೇ ಸಂದರ್ಭದಲ್ಲಿ ರೂಪಾಯಿಯ ಬೆಲೆ ಮಾತ್ರ ಇಳಿಯುತ್ತಲೇ ಬಂತು. ಇದಾದ ಬಳಿಕ ಲಾಕ್ಡೌನ್ ಭಾರತದ ಅಳಿದುಳಿದ ಭರವಸೆಯನ್ನೂ ಇಲ್ಲವಾಗಿಸಿತು. ಮೇಕ್ ಇನ್ ಇಂಡಿಯಾ, ಸ್ಟಾರ್ಟ್ ಅಪ್ ಇಂಡಿಯಾ ಮೂಲಕ ಸ್ವದೇಶಿ ಆರ್ಥಿಕತೆಯ ಬಗ್ಗೆ ಮೋದಿ ಭರವಸೆಯ ಮಾತುಗಳನ್ನಾಡಿದ್ದರು. ವಿದೇಶದಿಂದ ಬಂಡವಾಳವನ್ನು ತರುತ್ತೇನೆ ಎಂದು ವಿಮಾನ ಏರಿ ಹಲವು ದೇಶಗಳನ್ನು ಸುತ್ತಿದರು. ಸ್ವದೇಶಿ ಆರ್ಥಿಕತೆಗೆ ಒತ್ತು ನೀಡುತ್ತಿದ್ದೇನೆ ಎಂದರು. ದೇಶದ ಸಾರ್ವಜನಿಕ ಸೊತ್ತುಗಳನ್ನೆಲ್ಲ ಒಂದೊಂದಾಗಿ ಖಾಸಗಿಯವರಿಗೆ ಮಾರಿದರು. ಭಾರತದ ಆರ್ಥಿಕತೆಯನ್ನು ಅದಾನಿ, ಅಂಬಾನಿ ಕೇಂದ್ರವಾಗಿಟ್ಟುಕೊಂಡು ರೂಪಿಸಿದರು. ಅತ್ತ ಸಾವಿರಾರು ಕೋಟಿ ರೂಪಾಯಿಗಳನ್ನು ನಮ್ಮ ಬ್ಯಾಂಕುಗಳಿಗೆ ವಂಚಿಸಿ ಬೃಹತ್ ಉದ್ಯಮಿಗಳು ವಿದೇಶ ಸೇರಿದರು. ಸ್ವಿಸ್ ಬ್ಯಾಂಕ್ನಿಂದ ಕಪ್ಪು ಹಣ ಬರುವುದು ದೂರದ ಮಾತಾಯಿತು. ಈಗ ನೋಡಿದರೆ, ರೂಪಾಯಿ ದರ ದಯನೀಯವಾಗಿ ಕೆಳಗಿಳಿಯುತ್ತಿದೆ. ಮೋದಿಯವರು ಸಂಸತ್ನಲ್ಲಿ ‘ವಂದೇ ಮಾತರಂ’ ಭಜಿಸುತ್ತಿದ್ದಾರೆ. ಇದೊಂದು ರೀತಿಯಲ್ಲಿ ಕೊರೋನ ವೈರಸ್ನ್ನು ಓಡಿಸಲು ತಟ್ಟೆಗಳನ್ನು ಬಡಿಯಲು ಕರೆ ನೀಡಿದಂತೆ. ಆತಂಕಕಾರಿ ಸಂಗತಿಯೆಂದರೆ, ರೂಪಾಯಿ ಬೆಲೆ ಇಳಿಕೆಯಾಗುತ್ತಿರುವ ಈ ದಿನಗಳಲ್ಲಿ ಬಿಕ್ಕಟ್ಟಿಗೆ ಮುಖಾಮುಖಿಯಾಗುವ ಬದಲು ಸರಕಾರ ಪಲಾಯನ ದಾರಿಗಳನ್ನು ಹುಡುಕುತಿದೆ. ಈ ಹಿಂದೆ ವಿತ್ತ ಸಚಿವರು ‘ರೂಪಾಯಿ ಬೆಲೆ ಇಳಿಕೆಯಾಗುತ್ತಿಲ್ಲ. ಬದಲಿಗೆ ಡಾಲರ್ ಬೆಲೆ ಏರಿಕೆಯಾಗುತ್ತಿದೆ’ ಎನ್ನುವ ಹೇಳಿಕೆಯನ್ನು ನೀಡಿ ಸರಕಾರದ ಮಾನ ಉಳಿಸಲು ಯತ್ನಿಸಿದ್ದರು. ಇದು ತೀವ್ರ ವ್ಯಂಗ್ಯ ತಮಾಷೆಗೀಡಾಗುತ್ತಿದ್ದಂತೆಯೇ, ‘ಹಿಂದೆಯೂ ಬೆಲೆ ಇಳಿಕೆಯಾಗಿತ್ತು. ಭಾರತದ ಪಾಲಿಗೆ ಇದು ಹೊಸತಲ್ಲ’ ಎನ್ನುವ ರೀತಿಯಲ್ಲಿ ಸರಕಾರವನ್ನು ಸಮರ್ಥಿಸತೊಡಗಿದರು. ಯುಪಿಎ ಸರಕಾರದ ಅವಧಿಯಲ್ಲಿ ರೂಪಾಯಿ ಪತನವನ್ನು ತೋರಿಸಿಯೇ ಎನ್ಡಿಎ ಅಧಿಕಾರದೆಡೆಗೆ ದಾಪುಗಾಲು ಇಟ್ಟಿತು. ಸರಕಾರದಿಂದ ರೂಪಾಯಿ ಪತನವನ್ನು ತಡೆಯುವುದು ಸಾಧ್ಯವಿಲ್ಲವಾದರೂ, ಪತನದ ವೇಗವನ್ನು ನಿಯಂತ್ರಿಸೀತು ಎಂದು ಭಾವಿಸಲಾಗಿತ್ತು. ಆದರೆ ಸರಕಾರ ತೆಗೆದುಕೊಂಡ ಬೇಜವಾಬ್ದಾರಿ ಆರ್ಥಿಕ ನೀತಿಗಳು ರೂಪಾಯಿ ಬೆಲೆ ಇನ್ನಷ್ಟು ಕುಸಿಯುವುದಕ್ಕೆ ಕಾರಣವಾಯಿತು. ಈ ವಾಸ್ತವವನ್ನು ಒಪ್ಪಿಕೊಂಡು ದೇಶದ ಆರ್ಥಿಕತೆಯನ್ನು ಸದೃಢಗೊಳಿಸುವ ಕಡೆಗೆ ಸರಕಾರ ಹೆಜ್ಜೆಯಿಡಬೇಕು. ಆದರೆ ಈಗ ‘ಡಾಲರ್ ಮುಂದೆ ಬೆಲೆ ಇಳಿಕೆಯಾಗುವುದರಲ್ಲೇ ಭಾರತೀಯರಿಗೆ ಲಾಭವಿದೆ’ ಎಂದು ನಂಬಿಸಲು ಹೊರಟಿದೆ. ಡಾಲರ್ ಏರಿಕೆಯಾದರೆ ರಫ್ತುದಾರರಿಗೆ ಲಾಭವಿದೆ. ಹಾಗೆಯೇ ಅನಿವಾಸಿ ಭಾರತೀಯರೂ ಇದರ ಲಾಭವನ್ನು ತನ್ನದಾಗಿಸಿಕೊಳ್ಳಬಹುದು ಎಂದು ತಲೆಬುಡವಿಲ್ಲದ ಸಮರ್ಥನೆಗೆ ಇಳಿಯುವುದಕ್ಕೂ ಸರಕಾರ ಹಿಂದು ಮುಂದು ನೋಡಿಲ್ಲ. ಮುಖ್ಯವಾಗಿ ಸರಕಾರಕ್ಕೆ ಸಲಹೆ ಸೂಚನೆಗಳನ್ನು ನೀಡುವ ನುರಿತ ಆರ್ಥಿಕ ತಜ್ಞರ ಕೊರತೆ ಅದರ ಸ್ಪಷ್ಟೀಕರಣದಲ್ಲಿ ಮತ್ತು ಪಲಾಯನದಲ್ಲಿ ಎದ್ದು ಕಾಣುತ್ತದೆ. ಇತ್ತೀಚೆಗೆ ಅಮೆರಿಕವು ಭಾರತದ ಮೇಲೆ ಹೇರುತ್ತಿರುವ ಸುಂಕದ ಕಾರಣದಿಂದಾಗಿ ರಫ್ತಿನ ಪ್ರಮಾಣದಲ್ಲಿ ಗಣನೀಯ ಇಳಿಕೆಯಾಗುತ್ತಿದೆ. ಇದು ಭಾರತದ ಗಾಯಗಳ ಮೇಲೆ ಎಳೆದ ಬರೆಯೇ ಸರಿ. ಇತ್ತೀಚೆಗೆ ರಫ್ತಿನ ಪ್ರಮಾಣದಲ್ಲಿ ತೀವ್ರ ಇಳಿಕೆಯಾಗಿದೆ. ಅಷ್ಟೇ ಅಲ್ಲ, ಅಮೆರಿಕದಲ್ಲಿರುವ ಅನಿವಾಸಿಗಳನ್ನು ಹಂತಹಂತವಾಗಿ ಗಡಿಪಾರು ಮಾಡಲು ಆ ದೇಶ ಬೇರೆ ಬೇರೆ ನೆಪಗಳನ್ನು ಹುಡುಕುತ್ತಿದೆ. ದೇಶದಲ್ಲಿ ಬಂಡವಾಳ ಹೂಡಿಕೆಯೂ ಕಡಿಮೆಯಾಗುತ್ತಿದೆ. ಶೇರು ಮಾರುಕಟ್ಟೆಯ ಏಳು ಬೀಳುಗಳಿಂದಾಗಿ ಕಳೆದ ಜನವರಿಯಿಂದ 1.48 ಲಕ್ಷ ಕೋಟಿ ರೂ. ಬಂಡವಾಳವನ್ನು ಹೂಡಿಕೆ ಸಂಸ್ಥೆಗಳು ಹಿಂಪಡೆದಿವೆ. ಇವೆಲ್ಲವೂ ರೂಪಾಯಿಯ ಮೇಲೆ ದುಷ್ಪರಿಣಾಮ ಉಂಟು ಮಾಡಿವೆ. ವಿಪರ್ಯಾಸವೆಂದರೆ, ಡಾಲರ್ ಮುಂದೆ ಮಲೇಶ್ಯ, ಫಿಲಿಪ್ಪೀನ್ಸ್, ಥಾಯ್ಲೆಂಡ್ ರಾಷ್ಟ್ರಗಳು ಸ್ಥಿರವಾಗಿ ನಿಂತಿವೆ. ಏಶ್ಯದಲ್ಲಿ ಭಾರತದ ರೂಪಾಯಿಗಷ್ಟೇ ಈ ದಯನೀಯ ಸ್ಥಿತಿಯಿದೆ. ಇವೆಲ್ಲಕ್ಕೂ ಪ್ರಧಾನಿ ಮೋದಿಯವರು ಉತ್ತರಿಸಬೇಕು. ಸಂಸತ್ ಅಧಿವೇಶನದಲ್ಲಿ ಇದು ಚರ್ಚೆಯಾಗಬೇಕು. ಆದರೆ, ಸಂಸತ್ನಲ್ಲಿ ವಂದೇ ಮಾತರಂ ಹೆಸರಿನಲ್ಲಿ ತಟ್ಟೆ ಬಾರಿಸಿ ‘ರೂಪಾಯಿ ಸಮಸ್ಯೆ’ಯನ್ನು ನಿವಾರಿಸಲಾಯಿತು. ಅನಗತ್ಯ ಆಮದುಗಳನ್ನು ಕಡಿಮೆಗೊಳಿಸಿ, ಡಾಲರ್ನ ಮೇಲಿನ ಅವಲಂಬನೆಯಿಂದ ಭಾರತವು ನಿಧಾನಕ್ಕಾದರೂ ಸ್ವತಂತ್ರವಾಗಬೇಕು. ಈ ನಿಟ್ಟಿನಲ್ಲಿ ಸ್ವದೇಶಿ ಆರ್ಥಿಕತೆಯನ್ನು ಸದೃಢಗೊಳಿಸಲು ಸರಕಾರ ಕ್ರಮ ತೆಗೆದುಕೊಳ್ಳಬೇಕು. ಭಾರತವು ತನ್ನ ಆರ್ಥಿಕ ನೀತಿಗಳನ್ನು ಮರು ಪರಿಶೀಲಿಸಬೇಕು. ನೆರೆಹೊರೆಯ ಜೊತೆಗೆ ಅನಗತ್ಯ ದ್ವೇಷ ರಾಜಕಾರಣಕ್ಕೆ ಆದ್ಯತೆ ನೀಡದೆ ವ್ಯಾಪಾರ ವಿನಿಮಯ ಸಂಬಂಧಗಳನ್ನು ಸುಧಾರಿಸುವ ಬಗ್ಗೆ ಯೋಚನೆ ಮಾಡಬೇಕು. ಡಾಲರ್ ಕೇಂದ್ರಿತವಾದ ಆಮದುಗಳನ್ನು ಕಡಿತಗೊಳಿಸಿ ಇರಾನ್ನಂತಹ ದೇಶಗಳ ಜೊತೆಗೆ ವ್ಯವಹಾರಗಳನ್ನು ವಿಸ್ತರಿಸುವ ದಾರಿಗಳನ್ನು ಕಂಡುಕೊಳ್ಳಬೇಕು. ಅಮೆರಿಕದ ಒತ್ತಡಕ್ಕೆ ಮಣಿದು ರಶ್ಯದ ಜೊತೆಗೆ ಭಾರತ ಎಂದಿಗೂ ಸಂಬಂಧವನ್ನು ಕಡಿದುಕೊಳ್ಳಬಾರದು. ಇದೇ ಸಂದರ್ಭದಲ್ಲಿ, ನೆರೆಯ ಚೀನಾದ ಜೊತೆಗೆ ಗಡಿ ವಿಷಯಗಳನ್ನು ಮಾತುಕತೆಯಲ್ಲಿ ಪರಿಹರಿಸಿಕೊಳ್ಳುತ್ತಾ ಇತರ ಆರ್ಥಿಕ ಸಂಬಂಧಗಳಿಗೆ ಒತ್ತು ನೀಡಬೇಕು. ದೇಶದೊಳಗೆ ಸರಕಾರದ ನೇತೃತ್ವದಲ್ಲೇ ಜಾರಿಯಲ್ಲಿರುವ ದ್ವೇಷ ರಾಜಕಾರಣ ಆರ್ಥಿಕತೆಯ ಮೇಲೆಯೂ ಪರಿಣಾಮ ಬೀರಿದೆ. ಮೊತ್ತ ಮೊದಲು ದೇಶದಲ್ಲಿ ವ್ಯಾಪಾರ, ಉದ್ದಿಮೆಗಳನ್ನೂ ಕಾಡುತ್ತಿರುವ ಕೋಮು ರಾಜಕೀಯಗಳಿಗೆ ಔಷಧಿ ಹುಡುಕಬೇಕು. ಸೌಹಾರ್ದ-ಅಭಿವೃದ್ಧಿ ಒಂದೇ ನಾಣ್ಯದ ಎರಡು ಮುಖಗಳು. ರೂಪಾಯಿಯು ತನ್ನ ಬೆಲೆಯನ್ನು ಮತ್ತೆ ಪಡೆದುಕೊಳ್ಳಬೇಕಾದರೆ, ಮೊದಲು ಭಾರತದಲ್ಲಿ ರಾಜಕೀಯವು ಮೌಲ್ಯ ಪಡೆದುಕೊಳ್ಳಬೇಕು. ರಾಜಕಾರಣಿಗಳು ಪ್ರಬುದ್ಧರಾಗಿ, ವಿವೇಕಿಗಳಾಗಿ ಕ್ಷುಲ್ಲಕ ರಾಜಕೀಯ ಬದಿಗಿಟ್ಟು ದೇಶದ ಹಿತಾಸಕ್ತಿಯ ಬಗ್ಗೆ ಚಿಂತನೆ ಮಾಡಿದಾಗ ಮಾತ್ರ ಇದು ಸಾಧ್ಯ.
9 ಟೋಲ್ಗಳನ್ನು ವಾರದೊಳಗೆ ತಾತ್ಕಾಲಿಕವಾಗಿ ಮುಚ್ಚುವ ಬಗ್ಗೆ ದಿಲ್ಲಿ ಪಾಲಿಕೆಗೆ ಸುಪ್ರೀಂ ಸೂಚನೆ
ದೆಹಲಿ ಮಾಲಿನ್ಯ ಪ್ರಕರಣದಲ್ಲಿ ಹೆಚ್ಚುವರಿ ಸಾಲಿಸಿಟರ್ ಜನರಲ್ ಐಶ್ವರ್ಯಾ ಭಾಟಿ ಅವರು ಆಗಸ್ಟ್ 12 ರ ಆದೇಶವನ್ನು ಮಾರ್ಪಡಿಸುವಂತೆ ಕೋರಿದ್ದರು. ಅದರಂತೆ, ಸುಪ್ರೀಂ ಕೋರ್ಟ್ ಈ ಹೊಸ ಆದೇಶವನ್ನು ಹೊರಡಿಸಿದೆ. ಇದರರ್ಥ, ಈಗ ಹಳೆಯ ಮತ್ತು ಹೆಚ್ಚು ಮಾಲಿನ್ಯಕಾರಕ ವಾಹನಗಳ ಮೇಲೆ ಕಠಿಣ ಕ್ರಮ ಕೈಗೊಳ್ಳಲು ಅವಕಾಶವಿದೆ. ಇದು ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಮತ್ತೊಂದು ಮಹತ್ವದ ಹೆಜ್ಜೆಯಾಗಿದೆ.
School Holiday: ಈ ಭಾಗದಲ್ಲಿ 5ನೇ ತರತಗತಿವರೆಗೆ ಎಲ್ಲಾ ಸರ್ಕಾರಿ, ಖಾಸಗಿ ಶಾಲೆಗಳಿಗೆ ರಜೆ ಘೋಷಣೆ
School Holiday: ಈಗಾಗಲೇ ದೇಶದ ಬಹುತೇಕ ಭಾಗಗಳಲ್ಲಿ ಭಾರೀ ಶೀತಗಾಳಿ ಜೊತೆ ವಾಯುಮಾಲಿನ್ಯ ಪ್ರಮಾಣ ಹೆಚ್ಚಾಗುತ್ತಲಿದೆ. ಪರಿಣಾಮ ಜನರು ತತ್ತರಿಸಿದ್ದಾರೆ. ಇನ್ನೂ ಈ ಭಾಗಗಳಲ್ಲಿ ಮುಂಜಾಗ್ರತಾ ಕ್ರಮವಾಗಿ ಮಕ್ಕಳ ಹಿತದೃಷ್ಟಿಯಿಂದ ಎಲ್ಲಾ ಸರ್ಕಾರಿ ಹಾಗೂ ಖಾಸಗಿ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಮತ್ತೊಂದೆಡೆ ಉದ್ಯೋಗಿಗಳಿಗೆ ವರ್ಕ್ ಫ್ರಮ್ ಹೋಮ್ ನೀಡಲಾಗಿದೆ. ಹಾಗಾದ್ರೆ, ಎಲ್ಲೆಲ್ಲಿ ಎನ್ನುವ ಸಂಪೂರ್ಣ ಮಾಹಿತಿಯನ್ನು
ಕೆಐಎಸ್ಎಸ್ ವಿದ್ಯಾರ್ಥಿ ನಿಗೂಢ ಸಾವಿನ ಪ್ರಕರಣಕ್ಕೆ ತಿರುವು; ಸಹಪಾಠಿಗಳಿಂದಲೇ ಹತ್ಯೆ!
ಭುವನೇಶ್ವರ: ಇಲ್ಲಿನ ಕಳಿಂಗ ಇನ್ಸ್ಟಿಟ್ಯೂಟ್ ಆಫ್ ಸೋಶಿಯಲ್ ಸೈನ್ಸಸ್ (ಕೆಐಎಸ್ಎಸ್)ನಲ್ಲಿ ಕಳೆದ ವಾರ ಸಂಭವಿಸಿದ 9ನೇ ತರಗತಿ ವಿದ್ಯಾರ್ಥಿಯ ನಿಗೂಢ ಸಾವಿನ ಪ್ರಕರಣ ಇದೀಗ ಹೊಸ ತಿರುವು ಪಡೆದುಕೊಂಡಿದೆ. ವಿದ್ಯಾರ್ಥಿ ಸ್ನಾನಗೃಹದಲ್ಲಿ ಜಾರಿಬಿದ್ದು ಮೃತಪಟ್ಟಿದ್ದಾನೆ ಎಂದು ಸಂಸ್ಥೆಯ ಅಧಿಕಾರಿಗಳು ನೀಡಿದ ಹೇಳಿಕೆಗೆ ವಿರುದ್ಧವಾಗಿ, ಆತ ಸಹಪಾಠಿಗಳಿಂದಲೇ ಹತ್ಯೆಗೀಡಾಗಿರುವ ಅಂಶ ಪೊಲೀಸ್ ತನಿಖೆಯಿಂದ ದೃಢಪಟ್ಟಿದೆ. ಕೆಐಎಸ್ಎಸ್ನಲ್ಲಿ ಓದುತ್ತಿದ್ದ ಕೊಯೆಂಜಾರ್ ಜಿಲ್ಲೆಯ ತಿಕರ್ಗುಮುರಾ ಗ್ರಾಮದ 14 ವರ್ಷದ ಸಿಬಾ ಮುಂಡಾ ಡಿಸೆಂಬರ್ 12ರಂದು ಭುವನೇಶ್ವರದ ಕೆಐಎಂಎಸ್ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದ. ವಿದ್ಯಾರ್ಥಿಯ ಕುಟುಂಬದವರು ಜಿಲ್ಲಾಧಿಕಾರಿ ಕಚೇರಿ ಮುಂದೆ ಮೃತದೇಹದೊಂದಿಗೆ ಪ್ರತಿಭಟನೆ ನಡೆಸಿ, ವಸತಿಶಾಲೆಯ ಅಧಿಕಾರಿಗಳು ಸತ್ಯಾಂಶವನ್ನು ಮುಚ್ಚಿಟ್ಟಿದ್ದಾರೆ ಹಾಗೂ ವೈದ್ಯಕೀಯ ವರದಿಗಳನ್ನು ಒದಗಿಸಲು ವಿಫಲರಾಗಿದ್ದಾರೆ ಎಂದು ಆಪಾದಿಸಿದ್ದರು. ಶುಕ್ರವಾರ ಬಾಲಕನ ಕುಟುಂಬವನ್ನು ಸಂಪರ್ಕಿಸಿದ ಕೆಐಎಸ್ಎಸ್ ಅಧಿಕಾರಿಗಳು, ಅಸ್ವಸ್ಥಗೊಂಡಿರುವ ಬಾಲಕನನ್ನು ಆಸ್ಪತ್ರೆಗೆ ದಾಖಲಿಸಿರುವುದಾಗಿ ಮಾಹಿತಿ ನೀಡಿದ್ದರು ಎಂದು ಹುಡುಗನ ತಂದೆ ರಘುನಾಥ್ ಮುಂಡಾ ದೂರು ನೀಡಿದ್ದರು. ಪ್ರಕರಣದ ಬಗ್ಗೆ ತನಿಖೆ ನಡೆಸಿದ ಇನ್ಫೋಸಿಟಿ ಠಾಣೆಯ ಅಧಿಕಾರಿಗಳು, ಬೇಳೆಕಾಳು ವಿಚಾರದಲ್ಲಿ ಜಗಳವಾಡಿ ಬಾಲಕನನ್ನು ಸ್ನಾನಗೃಹದ ಒಳಗೆ ಹೊಡೆದು ಉಸಿರುಗಟ್ಟಿಸಿ ಮೂವರು ಸಹಪಾಠಿಗಳು ಹತ್ಯೆ ಮಾಡಿದ್ದಾರೆ ಎಂದು ಹೇಳಿದ್ದಾರೆ. ಕೆಐಎಸ್ಎಸ್ ಅಧಿಕಾರಿಗಳು ಹೇಳಿದಂತೆ ಆಕಸ್ಮಿಕವಾಗಿ ಬಿದ್ದು ವಿದ್ಯಾರ್ಥಿ ಮೃತಪಟ್ಟಿಲ್ಲ ಎನ್ನುವುದನ್ನು ಮರಣೋತ್ತರ ಪರೀಕ್ಷೆ ದೃಢಪಡಿಸುತ್ತದೆ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ತನಿಖಾಧಿಕಾರಿ ಹೇಳಿದ್ದಾರೆ. ಪ್ರಕರಣದಲ್ಲಿ ಎಲ್ಲ ಮೂವರು ಆರೋಪಿ ವಿದ್ಯಾರ್ಥಿಗಳನ್ನು ವಶಕ್ಕೆ ಪಡೆದು ಖುರ್ದಾ ಜಿಲ್ಲೆಯ ಬಾಲನ್ಯಾಯ ಮಂಡಳಿ ಮುಂದೆ ಹಾಜರುಪಡಿಸಲಾಗಿದ್ದು, ಸುಧಾರಣಾಗೃಹಕ್ಕೆ ಕಳುಹಿಸಲಾಗಿದೆ ಎಂದು ವಿವರಿಸಿದ್ದಾರೆ. ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಲು ಕೆಐಎಸ್ಎಸ್ ಅಧಿಕಾರಿಗಳು ನಿರಾಕರಿಸಿದ್ದಾರೆ. ಸಂಸ್ಥೆಯ ಹೆಚ್ಚುವರಿ ಸಿಇಓ ಪ್ರಮೋದ್ ಪಾತ್ರಾ ಹಾಗೂ ಹಲವು ಮಂದಿ ಶಿಕ್ಷಕರು ಸೇರಿದಂತೆ ಎಂಟು ಮಂದಿ ಅಧಿಕಾರಿಗಳನ್ನು ಬಂಧಿಸಲಾಗಿದೆ ಎಂದು ಭುವನೇಶ್ವರ ಪೊಲೀಸ್ ಆಯುಕ್ತ ಸುರೇಶ್ ದೇವದತ್ ಸಿಂಗ್ ಹೇಳಿದ್ದಾರೆ. ಅಪ್ರಾಪ್ತ ವಯಸ್ಸಿನ ಸಾಕ್ಷಿಗಳಿಗೆ ಬೆದರಿಕೆ ಹಾಕಿ ಪ್ರಕರಣವನ್ನು ಮುಚ್ಚಿಹಾಕಲು ಮತ್ತು ಪುರಾವೆಗಳನ್ನು ನಾಶಪಡಿಸಲು ಪ್ರಯತ್ನಿಸಿದ ಆರೋಪ ಇವರ ಮೇಲಿದೆ.
ಹನುಮಂತನ ಬಾಲದಂತೆ ಬೆಳೆಯುತ್ತಿದೆ ಯುಎಸ್ ಟ್ರಾವೆಲ್ ಬ್ಯಾನ್ ಪಟ್ಟಿ; ನಿಶ್ಚಿತಾರ್ಥ ವೀಸಾ ಅರ್ಜಿದಾರರೂ ಗೆಟೌಟ್?
ತನ್ನ ವಲಸೆ ವಿರೋಧಿ ನೀತಿಯನ್ನು ಮತ್ತಷ್ಟು ಆಕ್ರಮಣಕಾರಿಯಾಗಿ ಜಾರಿಗೆ ತರುತ್ತಿರುವ ಅಮೆರಿಕ, ತನ್ನ ಪ್ರಯಾಣ ನಿಷೇಧ ಪಟ್ಟಿಯನ್ನು ಹನುಮಂತನ ಬಾಲದಂತೆ ಬೆಳೆಸುತ್ತಲೇ ಇದೆ. ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತವು ಒಟ್ಟು 39 ದೇಶಗಳ ಮೇಲೆ ಸಂಪೂರ್ಣ ಮತ್ತು ಭಾಗಶಃ ಪ್ರಯಾಣ ನಿಷೇಧವನ್ನು ಹೇರಿದೆ. ಟ್ರಂಪ್ ಆಡಳಿತ ಟ್ರಾವೆಲ್ ಬ್ಯಾನ್ ಪಟ್ಟಿಯಲ್ಲಿ ಯಾವೆಲ್ಲಾ ದೇಶಗಳಿವೆ? ಯಾವ ದೇಶಗಳಿಗೆ ಏನು ವಿನಾಯಿತಿ ನೀಡಲಾಗಿದೆ? ಟ್ರಾವೆಲ್ ಬ್ಯಾನ್ ಪರಿಣಾಗಗಳೇನು? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.
ಚಡಚಣ | ಚಿರತೆ ಕಾಟ: ಸೆರೆ ಹಿಡಿಯಲು ಒತ್ತಾಯ
ಚಡಚಣ: ಚಡಚಣ ತಾಲೂಕಿನ ತದ್ದೇವಾಡಿ, ಮಣಕಂಲಗಿ, ಪ್ರದೇಶದ ವ್ಯಾಪ್ತಿಯಲ್ಲಿ ಕಳೆದ ಕೆಲ ದಿನಗಳಿಂದ ಚಿರತೆ ದಾಳಿಗೆ ಸಾಕು ಪ್ರಾಣಿಗಳು ಬಲಿಯಾಗುತ್ತಿದ್ದು, ಒಂದಾದ ಮೇಲೊಂದರಂತೆ ದನ, ಕರು, ಆಡು, ಕುರಿಗಳನ್ನು ಚಿರತೆ, ಕೊಂದು ಹಾಕುತ್ತಿರುವುದರಿಂದ ಈ ಭಾಗದ ಗ್ರಾಮಸ್ಥಗಳು ಆತಂಕಕ್ಕೊಳಗಾಗಿದ್ದಾರೆ. ವರ್ಷಗಳ ಹಿಂದೆ ವ್ಯಕ್ತಿಯೊಬ್ಬರು ಕೂದಲೆಳೆಯ ಅಂತರದಿಂದ ಚಿರತೆ ದಾಳಿಯಿಂದ ಪಾರಾಗಿದ್ದಾರೆ. ಕೂಡಲೇ ಅರಣ್ಯ ಇಲಾಖೆ ಅಧಿಕಾರಿಗಳು ಚಿರತೆ ಸೆರೆ ಹಿಡಿಯಲು ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ಹಸಿರು ಸೇನೆ ರಾಜ್ಯ ಉಪಾಧ್ಯಕ್ಷ ಹಾಗೂ ಜಿಲ್ಲಾಧ್ಯಕ್ಷ ನಾಗೇಂದ್ರ ಬಿರಾದಾರ ಒತ್ತಾಯಿಸಿದ್ದಾರೆ. ಅರಣ್ಯ ಇಲಾಖಾ ಅಧಿಕಾರಿಗಳು ಕೂಡಲೇ ಇತ್ತ ಗಮನ ಹರಿಸಿ ಸ್ಥಳ ಪರಿಶೀಲನೆ ನಡೆಸಿ ಚಿರತೆ ಹಿಡಿಯುವ ಬೋನನ್ನು ಇಟ್ಟು ಚಿರತೆ ಸೆರೆ ಹಿಡಿಯಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಸಂಘದ ವತಿಯಿಂದ ಅರಣ್ಯ ಇಲಾಖೆ ಕಚೇರಿಯ ಮುಂದೆ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ. ಈ ಭಾಗದ ಜನರಿಗೆ ಉಪಟಳ ನೀಡುತ್ತಿರುವ ಚಿರತೆಯನ್ನು ಹಿಡಿದು ಬೇರೆಡೆಗೆ ಸ್ಥಳಾಂತರ ಮಾಡುವ ಮೂಲಕ ಈ ಭಾಗದ ಸಾಕು ಪ್ರಾಣೀಗಳ ಜೀವಕ್ಕೆ ಹಾನಿಯಾಗುವುದನ್ನು ತಪ್ಪಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ವಿಮಾನ ನಿಲ್ದಾಣದ ಚೆಕ್ಇನ್ ಸರದಿಯಲ್ಲಿ ನಿಂತಿದ್ದ ಬೂಮ್ರಾ ತಾಳ್ಮೆ ಕಳೆದುಕೊಂಡಿದ್ದೇಕೆ?; ವಿಡಿಯೊ ವೈರಲ್
ಹೊಸದಿಲ್ಲಿ: ವಿಮಾನ ನಿಲ್ದಾಣದಲ್ಲಿ ಚೆಕ್ಇನ್ ಸರದಿಯಲ್ಲಿ ನಿಂತಿದ್ದ ಭಾರತದ ಸ್ಟಾರ್ ಕ್ರಿಕೆಟಿಗ ಜಸ್ಪ್ರೀತ್ ಬೂಮ್ರಾ ಅಭಿಮಾನಿಯ ಕಿರಿಕಿರಿ ತಾಳಲಾರದೇ ತಾಳ್ಮೆ ಕಳೆದುಕೊಂಡು ಅಭಿಮಾನಿಯ ಮೊಬೈಲ್ ಕಿತ್ತುಕೊಂಡ ಘಟನೆಯ ವಿಡಿಯೊ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅಭಿಮಾನಿಯೊಬ್ಬ ಭಾರತದ ವೇಗಿಯ ಅನುಮತಿ ಪಡೆಯದೇ ಸೆಲ್ಫಿ ಚಿತ್ರೀಕರಿಸಿಕೊಳ್ಳುತ್ತಿದ್ದ. ಗಮನಕ್ಕೆ ಬಂದ ತಕ್ಷಣ ಬೂಮ್ರಾ ಚಿತ್ರೀಕರಣ ನಿಲ್ಲಿಸುವಂತೆ ಎಚ್ಚರಿಕೆ ನೀಡಿದರು. ಆದರೆ ಅಭಿಮಾನಿ ಅದನ್ನು ನಿರ್ಲಕ್ಷಿಸಿದಾಗ ಆಕ್ರೋಶಗೊಂಡ ಬೂಮ್ರಾ ಫೋನ್ ಕಸಿದುಕೊಂಡರು ಎಂದು ವರದಿಯಾಗಿದೆ. ಅವರ ನಡುವಿನ ಸಂಭಾಷಣೆಯ ತುಣುಕುಗಳು ಹೀಗಿವೆ: ಅಭಿಮಾನಿ - ಆಪ್ಕೇ ಸಾಥ್ ಹಿ ಜಾವೂಂಗಾ ಸರ್ ಮೀ (ಸರ್, ನಾನು ನಿಮ್ಮೊಂದಿಗೆಯೇ ಬರುತ್ತೇನೆ) ಬೂಮ್ರಾ: ಫೋನ್ ಗಿರ್ ಗಯಾ ಆಪ್ಕಾ ತೋ ಮೇರೆಕೊ ಬ್ಲೇಮ್ ನಹಿ (ನಿಮ್ಮ ಫೋನ್ ಬಿದ್ದರೆ ನನ್ನನ್ನು ದೂಷಿಸಬೇಡ) ಅಭಿಮಾನಿ: ಕೋಯಿ ಬಾತ್ ನಹಿ ಸರ್ (ಅಡ್ಡಿಯಲ್ಲ ಸರ್) ಬೂಮ್ರಾ: ಕೂಲ್ ಈ ಎಚ್ಚರಿಕೆ ನೀಡಿದ ಬಳಿಕ ಬೂಮ್ರಾ ಫೋನ್ ಕಿತ್ತುಕೊಂಡಲ್ಲಿಗೆ ಘಟನೆ ಮುಕ್ತಾಯವಾಯಿತು. ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಯ ಮೊದಲ ಪಂದ್ಯದಲ್ಲಿ 17 ರನ್ಗಳಿಗೆ 2 ವಿಕೆಟ್ ಕಿತ್ತು ಮಿಂಚಿದ್ದ ಬೂಮ್ರಾ ಎರಡನೇ ಪಂದ್ಯದಲ್ಲಿ 45 ರನ್ ನೀಡಿದರೂ ಯಾವುದೇ ವಿಕೆಟ್ ಪಡೆದಿರಲಿಲ್ಲ. ಧರ್ಮಶಾಲೆಯಲ್ಲಿ ನಡೆದ ಮೂರನೇ ಪಂದ್ಯಕ್ಕೆ ಬೂಮ್ರಾ ಅಲಭ್ಯರಾಗಿದ್ದರು. What an arrogant behavior by Jasprit Bumrah. First he threatened his fan that he would throw his phone, and later he snatched the fan's phone. pic.twitter.com/O2e4jSLw7s — (@Goatlified) December 17, 2025
ಲಾಲ್ಬಾಗ್ ಫ್ಲವರ್ ಶೋನಲ್ಲಿ'ತೇಜಸ್ವಿ ವಿಸ್ಮಯ': ಜ.15 ರಿಂದ 26 ರವರೆಗೆ ನಡೆಯಲಿದೆ ಫಲಪುಷ್ಪ ಪ್ರದರ್ಶನ
ಬೆಂಗಳೂರಿನ ಲಾಲ್ಬಾಗ್ನಲ್ಲಿ ಜನವರಿ 15 ರಿಂದ 26 ರವರೆಗೆ 'ತೇಜಸ್ವಿ ವಿಸ್ಮಯ' ಫಲಪುಷ್ಪ ಪ್ರದರ್ಶನ ಆಯೋಜಿಸಲಾಗಿದೆ. ಹಿರಿಯ ಸಾಹಿತಿ ಪೂರ್ಣಚಂದ್ರ ತೇಜಸ್ವಿ ಅವರ ಸಾಹಿತ್ಯ ಮತ್ತು ಪರಿಸರ ಪ್ರೇಮವನ್ನು ಈ ಪ್ರದರ್ಶನದಲ್ಲಿ ಅನಾವರಣಗೊಳಿಸಲು ಯೋಜಿಸಲಾಗಿದೆ. ತೇಜಸ್ವಿ ಅವರ ಕ್ಯಾರಿಕೇಚರ್ಗಳ ಸೆಲ್ಫಿ ಪಾಯಿಂಟ್ಗಳು, ಪುಸ್ತಕಗಳ ಪ್ರದರ್ಶನ ಮತ್ತು ಮಾರಾಟ, ನಾಟಕ, ಸಂವಾದಗಳು ನಡೆಯಲಿವೆ.
ಸೂಕ್ತ ತಪಾಸಣೆ ಇಲ್ಲದೇ ಡಿಬಿಟಿ ಖಾತೆಗಳಿಗೆ ಕೋಟ್ಯಂತರ ರೂಪಾಯಿ: ಸಿಎಜಿ ಕಳವಳ
ನಾಗ್ಪುರ: ದೇಶಾದ್ಯಂತ ಜಾರಿಯಲ್ಲಿರುವ ನೇರ ಪ್ರಯೋಜನ ವರ್ಗಾವಣೆ (ಡಿಬಿಟಿ) ಯೋಜನೆ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿರುವ ಭಾರತದ ಆಡಿಟರ್ ಜನರಲ್ ಸಂಜಯ್ಮೂರ್ತಿ, ದುರ್ಬಲ ಡಾಟಾ ಸಮನ್ವಯ ಮತ್ತು ಇಲಾಖೆಗಳ ನಡುವಿನ ಸಂಪರ್ಕದ ಕೊರತೆಯಿಂದಾಗಿ ಕಡ್ಡಾಯ ಪರಿಶೀಲನೆಯಿಲ್ಲದೇ ಕೋಟ್ಯಂತರ ರೂಪಾಯಿ ಮೊತ್ತ ಫಲಾನುಭವಿ ಖಾತೆಗಳಿಗೆ ಹರಿದಿದೆ ಎಂದು ಹೇಳಿದ್ದಾರೆ. ಡೂಪ್ಲಿಕೇಶನ್ ತಡೆಯುವ ಮತ್ತು ಮರು ಪರಿಶೀಲನೆ ನಡೆಸುವ ಮಟ್ಟದಲ್ಲಿ ಭಾರಿ ಅಂತರ ಕಂಡುಬಂದಿದೆ. ಸರ್ಕಾರಿ ಇಲಾಖೆಗಳು ಪರಸ್ಪರ ಸಂಪರ್ಕವಿಲ್ಲದೇ ಕಾರ್ಯನಿರ್ವಹಿಸುವ ಮಟ್ಟ ಎಷ್ಟಿದೆಯೆಂದರೆ ಒಂದೇ ಇಲಾಖೆಗೆ ವಿವಿಧ ಜಂಟಿ ಕಾರ್ಯರ್ಶಿಗಳು ಒಂದೇ ಡಾಟಾಬೇಸ್ ಪರಾಮರ್ಶಿಸುತ್ತಿಲ್ಲ ಎಂದು ನೇರ ತೆರಿಗೆಗಳ ರಾಷ್ಟ್ರೀಯ ಅಕಾಡೆಮಿಯಲ್ಲಿ ಐಆರ್ಎಸ್ ಅಧಿಕಾರಿಗಳ ತರಬೇತಿ ಬ್ಯಾಚ್ ಉದ್ಘಾಟನಾ ಸಮಾರಂಭದಲ್ಲಿ ಕಳವಳ ವ್ಯಕ್ತಪಡಿಸಿದರು. ನಾವು ಜನ ಧನ್, ಆಧಾರ್ ಮತ್ತು ಮೊಬೈಲ್ ಫೋನ್ ಆಧರಿತ ಡಾಟಾಬೇಸ್ ಸಂಪರ್ಕದ ಬಗ್ಗೆ ಮಾತನಾಡಬಹುದು. ಆದಾಗ್ಯೂ ಡಾಟಾಬೇಸ್ ನಿಯೋಜಿಸುವ ಪ್ರೌಢತೆಯ ಮಟ್ಟವನ್ನು ನೋಡಿದರೆ, ಮುಖ್ಯವಾಗಿ ನಾವು ಸೃಷ್ಟಿಸುವ ವರದಿಗಳನ್ನು ನೋಡಿದರೆ ತೀರಾ ಅಂತರ ಇರುವುದು ಕಾಣಿಸುತ್ತದೆ ಎಂದು ಹೇಳಿದರು. ಇವೆಲ್ಲ ಆಧಾರ್ ಆಧರಿತ ಫಲಾನುಭವಿಗಳು ಎಂದು ನಾವು ಹೇಳುತ್ತೇವೆ; ಆದರೆ ಆದರೆ ಡಿಬಿಟಿ ಮಿಷನ್ ಕಡ್ಡಾಯಪಡಿಸಿದಂತೆ ಡೂಪ್ಲಿಕೇಶನ್ ತಡೆಯುವ ನಿಟ್ಟಿನಲ್ಲಿ ಅಥವಾ ಡಾಟಾಬೇಸ್ ಮರುಪರಿಶೀಲನೆ ದೃಢೀಕರಿಸುವ ವ್ಯವಸ್ಥೆ ಇಲ್ಲದಾಗಿದೆ. ಇದರಿಂದಾಗಿ ಸಾವಿರಾರು ಕೋಟಿ ರೂಪಾಯಿಗಳು ಈ ವ್ಯವಸ್ಥೆಗೆ ವಿತ್ತೀಯ ಸೇರ್ಪಡೆ ಯೋಜನೆಯಡಿ ಮೂಲಭೂತ ಪರಿಶೀಲನೆ ಇಲ್ಲದೇ ಹರಿಯುತ್ತಿದೆ ಎಂದು ವಿಶ್ಲೇಷಿಸಿದರು.
Gold Price on December 18: ಬಂಗಾರ ದರ ಎಷ್ಟಿದೆ ಗೊತ್ತಾ? ಇಲ್ಲಿದೆ ಡಿಸೆಂಬರ್ 18ರ ಚಿನ್ನದ ದರಪಟ್ಟಿ
Gold Price on December 18: ಬಂಗಾರ ದರದಲ್ಲಿ ಹಾವು ಏಣಿ ಆಟದಂತೆ ಏರಿಳಿತ ಆಗುತ್ತಲೇ ಇರುತ್ತದೆ. ಹಾಗಾದ್ರೆ, ಇಂದು (ಡಿಸೆಂಬರ್ 18) ಕರ್ನಾಟಕ ರಾಜಧಾನಿ ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಬಂಗಾರ, ಬೆಳ್ಳಿ ದರ ಎಷ್ಟಿದೆ ಎನ್ನುವ ಸಂಪೂರ್ಣ ಅಂಕಿಅಂಶಗಳ ಸಹಿತ ವಿವರವನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ. ಬಂಗಾರ ದರಗಳ ವಿವರ: ನಿನ್ನೆ (ಡಿಸೆಂಬರ್
ದೆಹಲಿ ವಾಯು ಮಾಲಿನ್ಯ ನಿವಾರಣೆಗೆ ಚೀನಾ ಸಾಥ್
ನವದೆಹಲಿ, ಡಿಸೆಂಬರ್ 18: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಾಯು ಮಾಲಿನ್ಯ ಹೆಚ್ಚಾಗಿದೆ. ಇಲ್ಲಿನ ಕಳಪೆ ಗುಣಮಟ್ಟದ ಗಾಳಿ ಜನರಿಗೆ ತೊಂದರೆ ನೀಡುತ್ತಿದೆ. ಚಳಿಗಾಲದಲ್ಲಿ ಅಪಾಯಕಾರಿ ವಾತಾವರಣ ನಿರ್ಮಾಣವಾಗಿದೆ. ಈ ಮಾಲಿನ್ಯ ಸಮಸ್ಯೆ ನಿವಾರಣೆಗೆ ಭಾರತದೊಂದಿಗೆ ಚೀನಾ ದೇಶ ಕೈಜೋಡಿಸುವುದಾಗಿ ತಿಳಿಸಿದೆ. ಚೀನಾದಲ್ಲಿ ತಾನು ಕೈಗೊಂಡ ಯಶಸ್ವಿ ಕ್ರಮಗಳ ಬಗ್ಗೆ ಮಾರ್ಗದರ್ಶನ ಮಾಡಿ ಹಂತ ಹಂತವಾಗಿ ದೆಹಲಿ ಮಾಲಿನ್ಯ
ನೆರೆಯ ಚೀನಾ ಭಾರತವನ್ನು ಒಂದಲ್ಲ ಒಂದು ರೀತಿಯಲ್ಲಿ ಕಾಡುವ ಇರಾದೆ ಹೊಂದಿದೆ. ಅದು ಗಡಿ ಸಂಘರ್ಷ ಆಗಬಹುದು, ಬ್ರಹ್ಮಪುತ್ರ ನದಿ ವಿವಾದ ಆಗಬಹುದು ಅಥವಾ ಗಡಿಯಲ್ಲಿ ಬೃಹತ್ ಅಣೆಕಟ್ಟುಗಳನ್ನು ನಿರ್ಮಿಸುವ ಮೂಲಕ, ಭಾರತದ ಪರಿಸರ ವ್ಯವಸ್ಥೆಯನ್ನು ಹಾಳು ಮಾಡುವುದಾಗಿರಬಹುದು. ಒಟ್ಟಿನಲ್ಲಿ ಭಾರತಕ್ಕೆ ತೊಂದರೆ ಕೊಡುವುದೇ ಡ್ರ್ಯಾಗನ್ ರಾಷ್ಟ್ರದ ಪರಮಧ್ಯೇಯ. ಅದರಂತೆ ಯಾರ್ಲುಂಗ್ ತ್ಸಾಂಗ್ಪೊ ನದಿಗೆ ಚೀನಾ ನಿರ್ಮಿಸುತ್ತಿರುವ ಬೃಹತ್ ಅಣೆಕಟ್ಟು ಭಾರತದ ಮೇಲೆ ಗಂಭೀಋ ಪರಿಣಾಮ ಬೀರುವ ಸಾಧ್ಯತೆ ದಟ್ಟವಾಗಿದೆ. ಇಲ್ಲಿದೆ ವಿಶ್ಲೇಷಣಾತ್ಮಕ ವರದಿ.
IPL 2026 RCB: ಐಪಿಎಲ್ 2026ಕ್ಕೆ ಆರ್ಸಿಬಿ ಹೊಸ ತಂಡ ಇಲ್ಲಿದೆ
IPL 2026 RCB: ಈಗಾಗಲೇ ಆರ್ಸಿಬಿಯು ಐಪಿಎಲ್ 2025ರ ಟ್ರೋಫಿ ಗೆದ್ದುಕೊಂಡಿದೆ. ಇದೀಗ ಎಲ್ಲದರ ಚಿತ್ತ 2026ರ ಸೀಸನ್ನತ್ತ ನೆಟ್ಟಿದೆ. ಇತ್ತೀಚೆಗಷ್ಟೇ ಮಿನಿ ಹರಾಜು ಪ್ರಕ್ರಿಯೆ ಮುಕ್ತಾಯಗೊಂಡಿದ್ದು, ಮುಂದಿನ ಬಾರಿಗೆ ಫ್ರಾಂಚೈಸಿಯು ತಂಡವನ್ನು ಮತ್ತಷ್ಟು ಬಲಿಷ್ಠಗೊಳಿಸಿದೆ. ಹಾಗಾದ್ರೆ, 19ನೇ ಆವೃತ್ತಿಗೆ ಯಾರೆಲ್ಲಾ ಇರಲಿದ್ದಾರೆ ಎನ್ನುವ ಸಂಪೂರ್ಣ ಪಟ್ಟಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ. ಆರ್ಸಿಬಿ ಐಪಿಎಲ್ 2026ರ ಮಿನಿ
ವಿದ್ಯಾರ್ಥಿನಿಯರ ನೆರವಿಗೆ ಬರಲಿದೆ ಬಾಲ್ಯ ರಕ್ಷಣಾ ಪಡೆ: ವಿಟಿಯು ಮೊದಲ ಹೆಜ್ಜೆ
ರಾಜ್ಯದಲ್ಲಿ ಮಕ್ಕಳ ಮೇಲಿನ ದೌರ್ಜನ್ಯ ತಡೆಯಲು 'ಬಾಲ್ಯ ರಕ್ಷಣಾ ಪಡೆ' ರಚನೆಯಾಗುತ್ತಿದೆ. ಎನ್ಸಿಸಿ ಮತ್ತು ಎನ್ಎಸ್ಎಸ್ ವಿದ್ಯಾರ್ಥಿಗಳು ಇದರ ಪ್ರತಿನಿಧಿಗಳಾಗಿರುತ್ತಾರೆ. ಈ ಪಡೆ ಮಕ್ಕಳಿಗೆ ರಕ್ಷಣೆ ನೀಡಲಿದೆ. ವಿಟಿಯು ಈ ನಿಟ್ಟಿನಲ್ಲಿ ಮೊದಲ ಹೆಜ್ಜೆ ಇಟ್ಟಿದೆ. ಶಾಲಾ-ಕಾಲೇಜುಗಳಲ್ಲಿ ವಿದ್ಯಾರ್ಥಿನಿಯರಿಗೆ ಕಿರುಕುಳ ನೀಡಿದರೆ ಈ ಪಡೆ ನೆರವಿಗೆ ಧಾವಿಸಲಿದೆ. ಮಾರ್ಗಸೂಚಿ ನಂತರ ಸ್ಪಷ್ಟತೆ ಸಿಗಲಿದೆ.
ಕೇರಳದಲ್ಲಿ ತಾಪಮಾನ ತೀವ್ರ ಏರಿಕೆ: ಕಣ್ಣೂರಿನಲ್ಲಿ ಗರಿಷ್ಠ , ಹಗಲು ಬಿಸಿ, ರಾತ್ರಿ ಚಳಿ
ಕೇರಳದಲ್ಲಿ ತಾಪಮಾನದಲ್ಲಿ ತೀವ್ರ ಏರಿಕೆಯಾಗಿದ್ದು, ಕಣ್ಣೂರು ಜಿಲ್ಲೆಯಲ್ಲಿ 36.4 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣತೆ ದಾಖಲಾಗಿದೆ. ಹಗಲಿನಲ್ಲಿ ಉರಿಬಿಸಿಲು ಇದ್ದರೆ, ರಾತ್ರಿ ಮತ್ತು ಮುಂಜಾನೆ ಮೈಕೊರೆಯುವ ಚಳಿ ಅನುಭವಕ್ಕೆ ಬರುತ್ತಿದೆ. ಮುನ್ನಾರ್ನಂತಹ ಪ್ರದೇಶಗಳಲ್ಲಿ ತಾಪಮಾನ 10 ಡಿಗ್ರಿ ಸೆಲ್ಸಿಯಸ್ಗಿಂತ ಕೆಳಗೆ ಇಳಿಯುತ್ತಿದೆ.
ಜಾಹೀರಾತಿನಿಂದ ಬಿಎಂಟಿಸಿಗೆ ಬರಲಿದೆ 263 ಕೋಟಿ ರೂ. ಆದಾಯ!
ಆರ್ಥಿಕ ನಷ್ಟದಿಂದ ಹೊರಬರಲು ಬಿಎಂಟಿಸಿ ಬಸ್ಗಳಲ್ಲಿ ಜಾಹೀರಾತು ಪ್ರದರ್ಶಿಸಲು ಮುಂದಾಗಿದೆ. ಮುಂದಿನ 3-4 ವರ್ಷಗಳಲ್ಲಿ 263.41 ಕೋಟಿ ರೂ. ಆದಾಯ ನಿರೀಕ್ಷಿಸಲಾಗಿದೆ. ಸಾಮಾನ್ಯ ಬಸ್ಗಳಿಗೆ ತಿಂಗಳಿಗೆ 12,616 ರೂ. ಹಾಗೂ ವೋಲ್ವೊ ಬಸ್ಗಳಿಗೆ 25,255 ರೂ. ಶುಲ್ಕ ನಿಗದಿಪಡಿಸಲಾಗಿದೆ.
21 ಎಕರೆ ಜಮೀನು ಕಬಳಿಕೆ: ಸಚಿವ ಕೃಷ್ಣಬೈರೇಗೌಡ ವಿರುದ್ಧ ಬಿಜೆಪಿ ಆರೋಪ
ಬೆಳಗಾವಿ : ಕಂದಾಯ ಸಚಿವ ಕೃಷ್ಣಬೈರೇಗೌಡ ಅವರು ಕೋಲಾರ ಜಿಲ್ಲೆಯ ನರಸಪುರ ಹೋಬಳಿ ಗರುಡನಪಾಳ್ಯದಲ್ಲಿ 21 ಎಕರೆ ಜಮೀನು ಕಬಳಿಸಿದ್ದಾರೆ. ನಕಲಿ ದಾಖಲೆ ಸೃಷ್ಟಿ ಮಾಡಿ ಅಧಿಕಾರ ದುರ್ಬಳಕೆ ಮಾಡಿಕೊಂಡಿರುವುದಾಗಿ ಪ್ರತಿಪಕ್ಷ ನಾಯಕರು ಗಂಭೀರ ಆರೋಪ ಮಾಡಿದ್ದಾರೆ. ಬುಧವಾರ ಬೆಳಗಾವಿ ನಗರದಲ್ಲಿ ಬಿಜೆಪಿ ಮುಖಂಡ ತಮ್ಮೇಶ ಗೌಡ, ಸಚಿವ ಕೃಷ್ಣಬೈರೇಗೌಡರು ನಕಲಿ ದಾಖಲೆ ಸೃಷ್ಟಿಸಿ ಭೂ ಕಬಳಿಸಿವುದಕ್ಕೆ ಕೆಲ ದಾಖಲೆಗಳನ್ನು ಬಿಡುಗಡೆ ಮಾಡಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ವೈಟ್ ಕಾಲರ್ ರಾಜಕಾರಣಿ, ಭ್ರಷ್ಟಾಚಾರ ಇಲ್ಲ ಎನ್ನುವ ಮಂತ್ರಿ ಕೃಷ್ಣಬೈರೇಗೌಡ. ಆದರೆ, ನಕಲಿ ದಾಖಲೆ ಸೃಷ್ಟಿಸಿ ಕಂದಾಯ ಸಚಿವರು ಖರಾಬ್ ಜಮೀನನ್ನು ಅವರ ಹೆಸರಿಗೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದರು. ಇದೇ ವೇಳೆ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಪರಿಷತ್ ಸದಸ್ಯ ಎನ್.ರವಿಕುಮಾರ್ ಮಾತನಾಡಿದರು. ಪಿತ್ರಾರ್ಜಿತ ಆಸ್ತಿ: ಕೃಷ್ಣಬೈರೇಗೌಡ ಸ್ಪಷ್ಟನೆ ಆರೋಪಕ್ಕೆ ಪ್ರತಿಕ್ರಿಯಿಸಿರುವ ಕೃಷ್ಣಬೈರೇಗೌಡ, ಅದು ನಮ್ಮ ಪಿತ್ರಾರ್ಜಿತ ಆಸ್ತಿ. ಸ್ವತಂತ್ರ ತನಿಖಾ ಸಂಸ್ಥೆಯಿಂದ ತನಿಖೆಯಾಗಲಿ. ನಾನೇ ತನಿಖೆಗೆ ಸಹಕಾರ ಮಾಡುತ್ತೇನೆ. ಲೋಕಾಯುಕ್ತಕ್ಕೆ ದೂರು ಕೊಡಲಿ. ಸರಕಾರವೇ ತನಿಖೆ ಮಾಡಿದರೆ ನೀವೇ ಮಂತ್ರಿ, ನೀವೇ ತನಿಖೆ ಮಾಡುವುದು ಸರಿಯಾ ಎನ್ನುತ್ತೀರಾ. ಅದು ನಮ್ಮ ತಾತನವರ ಜಾಗ, ಅವರಿಂದ ನಮ್ಮ ತಂದೆಯವರಿಗೆ ಬಂದಿರುವುದು. ಆಗ ನಾನು ಐದು ವರ್ಷದ ಮಗು. ನಮ್ಮ ತಾತನಿಗೆ ಮೂರು ಜನ ಮಕ್ಕಳು. ಅವರಿಗೆ ವಿಭಾಗವಾಗಿ ನಮಗೆ ಬಂದಿದೆ ಎಂದು ಸ್ಪಷ್ಟಪಡಿಸಿದರು. ರಾಜಕೀಯ ಕೆಸರೆರಚಾಟಕ್ಕೆ ವಿಪಕ್ಷದವರು ಆರೋಪ ಮಾಡಿದ್ದಾರೆ. ಸಾರ್ವಜನಿಕ ಜೀವನದಲ್ಲಿ ಅಷ್ಟೋ, ಇಷ್ಟೋ ತಲೆ ಎತ್ತಿಕೊಂಡು ಇದ್ದೇವೆ. ಅದಕ್ಕಾಗಿ ಆರೋಪ ಮಾಡುತ್ತಿದ್ದಾರೆ. ನಮಗೆ ಪಿತ್ರಾರ್ಜಿತ ಆಸ್ತಿಯಾಗಿ ಬಂದಿದ್ದು ನಾನ್ಯಾಕೆ ದೂರು ನೀಡಲಿ. ಕಾನೂನು ಪ್ರಕಾರ ರಾಜಕೀಯದಲ್ಲಿ ಘನತೆ ಗೌರವದಿಂದ ಇದ್ದೇವೆ ಎಂದು ಕೃಷ್ಣಬೈರೇಗೌಡ ತಿರುಗೇಟು ನೀಡಿದರು.
ವಿಧಾನಸಭೆಯಲ್ಲಿ 5 ಪ್ರಮುಖ ವಿಧೇಯಕಗಳ ಅಂಗೀಕಾರ
ಬೆಳಗಾವಿ : 2025ನೇ ಸಾಲಿನ ಔಷಧ ಮತ್ತು ಪ್ರಸಾಧನ ಸಾಮಗ್ರಿ (ಕರ್ನಾಟಕ ತಿದ್ದುಪಡಿ) ವಿಧೇಯಕ ಸೇರಿದಂತೆ ಪ್ರಮುಖ 5 ವಿಧೇಯಕಗಳಿಗೆ ಅಂಗೀಕಾರ ದೊರೆಯಿತು. ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲದ ಅಧಿವೇಶನದಲ್ಲಿ ಬುಧವಾರ ವಿಧಾನಸಭೆ ಕಲಾಪದಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಮಂಡಿಸಿದ 2025ನೇ ಸಾಲಿನ ಬೆಂಗಳೂರು ಮಹಾನಗರ ಭೂ ಸಾರಿಗೆ ಪ್ರಾಧೀಕಾರ (ತಿದ್ದುಪಡಿ) ವಿಧೇಯಕ ಮಂಡಿಸಿದರು. ಬಳಿಕ ಈ ಬಗ್ಗೆ ವಿವರಣೆ ನೀಡಿದ ಅವರು, 2022 ಬೆಂಗಳೂರು ಮಹಾನಗರ ಭೂಸಾರಿಗೆ ಪ್ರಾಧಿಕಾರ ಅಧಿನಿಯಮದಲ್ಲಿರುವ ಬೆಂಗಳೂರು ಮಹಾನಗರ ಭೂಸಾರಿಗೆ ಪ್ರಾಧಿಕಾರ ಮತ್ತು ಕಾರ್ಯಕಾರಿ ಸಮಿತಿಯನ್ನು ಪರಿಷ್ಕರಿಸಿ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮಹಾಪೌರರು ಮತ್ತು ಆಯುಕ್ತರನ್ನು ಮತ್ತು 2024ರ ಗ್ರೇಟರ್ ಬೆಂಗಳೂರು ಆಡಳಿತ ಅಧಿನಿಯಮದ ಅನುಷ್ಠಾನದ ತತ್ಪರಿಣಾಮವಾಗಿ ಗ್ರೇಟರ್ ಬೆಂಗಳೂರು ಪ್ರದೇಶದ ನಗರ ಪಾಲಿಕೆಗಳನ್ನು ಸೇರಿಸಲು ತಿದ್ದುಪಡಿ ತರಲಾಗಿದೆ ಎಂದು ತಿಳಿಸಿದರು. ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ ಪರವಾಗಿ ಕಾನೂನು, ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ್ ಅವರು 2025ನೇ ಸಾಲಿನ ಬಾಂಬೆ ಸಾರ್ವಜನಿಕ ನ್ಯಾಸ(ಕರ್ನಾಟಕ ತಿದ್ದುಪಡಿ) ವಿಧೇಯಕ ಮತ್ತು 2025ನೇ ಕರ್ನಾಟಕ ರಾಜ್ಯ ರಸ್ತೆ ಸುರಕ್ಷತಾ ಪ್ರಾಧಿಕಾರ ತಿದ್ದುಪಡಿ ವಿಧೇಯಕಗಳು ಹಾಗೂ ಕಂದಾಯ ಸಚಿವ ಕೃಷ್ಣ ಭೈರೇಗೌಡ ಅವರ ಪರವಾಗಿ 2025ನೇ ಸಾಲಿನ ನಾಡಪ್ರಭು ಕೆಂಪೇಗೌಡ ಪಾರಂಪರಿಕ ತಾಣದ ಅಭಿವೃದ್ಧಿ ಪ್ರಾಧಿಕಾರ ಎರಡನೇ ತಿದ್ದುಪಡಿ ವಿಧೇಯಕ ಮಂಡಿಸಿದರು. ಬಳಿಕ ಈ ಬಗ್ಗೆ ವಿವರಣೆ ನೀಡಿದ ಅವರು, 1950ರ ಬಾಂಬೆ ಸಾರ್ವಜನಿಕ ನ್ಯಾಸ ಅಧಿನಿಯಮಕ್ಕೆ ತಿದ್ದುಪಡಿ ತಂದು ಬೆಳಗಾವಿ ಪ್ರಾದೇಶಿಕ ಆಯುಕ್ತರನ್ನು ಧರ್ಮಾದಾಯ ಆಯುಕ್ತರನ್ನಾಗಿ, ಜಿಲ್ಲಾಧಿಕಾರಿಯನ್ನು ಜಂಟಿ ಧರ್ಮಾದಾಯ ಆಯುಕ್ತರನ್ನಾಗಿ ಹಾಗೂ ಸಂಬಂಧಪಟ್ಟ ಉಪವಿಭಾಗದ ಉಪವಿಭಾಗಾಧಿಕಾರಿಯನ್ನು ಉಪ ಧರ್ಮಾದಾಯ ಆಯುಕ್ತರನ್ನಾಗಿ ಹಾಗೂ ಸಂಬಂಧಪಟ್ಟ ತಹಶೀಲ್ದಾರನ್ನು ಸಹಾಯಕ ಧರ್ಮಾದಾಯ ಆಯುಕ್ತರನ್ನಾಗಿ ಪದನಾಮಿಸಲು ತಿದ್ದುಪಡಿ ತರಲಾಗಿದೆ ಎಂದರು. 2025ನೇ ಕರ್ನಾಟಕ ರಾಜ್ಯ ರಸ್ತೆ ಸುರಕ್ಷತಾ ಪ್ರಾಧಿಕಾರಕ್ಕೆ ವಾಹನಗಳ ನೋಂದಣಿ ಮಾಡುವ ಸಮಯದಲ್ಲಿ ಒಂದು ಬಾರಿಯ ಸೆಸ್ ಅನ್ನು ಹೆಚ್ಚಿನ ಮಿತಿಯಲ್ಲಿ ವಿಧಿಸುವುದನ್ನು ಮತ್ತು ಸಂಗ್ರಹಿಸುವುದನ್ನು ಬಿಟ್ಟುಬಿಡುವುದಕ್ಕಾಗಿ ತಿದ್ದುಪಡಿ ತರಲಾಗಿದೆ. 2025ನೇ ಸಾಲಿನ ನಾಡಪ್ರಭು ಕೆಂಪೇಗೌಡ ಪಾರಂಪರಿಕ ತಾಣದ ಅಭಿವೃದ್ಧಿ ಪ್ರಾಧಿಕಾರಕ್ಕೆ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ನಿರ್ದೇಶಕರು, ಪಟ್ಟಣ ಮತ್ತು ಗ್ರಾಮಾಂತರ ಯೋಜನೆ ಇಲಾಖೆ ಮತ್ತು ಮುಖ್ಯ ನಗರ ಯೋಜಕರನ್ನು ಸದಸ್ಯರನ್ನಾಗಿ ನೇಮಿಸಲು ತಿದ್ದುಪಡಿ ತರಲಾಗಿದೆ ಎಂದು ತಿಳಿಸಿದರು. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಅವರು, 2025ನೇ ಸಾಲಿನ ಔಷಧ ಮತ್ತು ಪ್ರಸಾಧನ ಸಾಮಗ್ರಿ ಕರ್ನಾಟಕ ತಿದ್ದುಪಡಿ ವಿಧೇಯಕವನ್ನು ಮಂಡಿಸಿದರು. ಬಳಿಕ ಈ ಬಗ್ಗೆ ವಿವರಣೆ ನೀಡಿದ ಅವರು, 1940ರ ಔಷಧ ಮತ್ತು ಪ್ರಸಾಧನ ಸಾಮಗ್ರಿ ಕೇಂದ್ರ ಅಧಿನಿಯಮಕ್ಕೆ ಕರ್ನಾಟಕ ರಾಜ್ಯಕ್ಕೆ ಅನ್ವಯವಾಗುವಂತೆ, ಕೇಂದ್ರ ಸರಕಾರದ ಪೂರ್ವಾನುಮೋದನೆಯೊಂದಿಗೆ ರಾಜ್ಯದಲ್ಲಿ ಕೇಂದ್ರ ಔಷಧಗಳ ಪ್ರಯೋಗಾಲಯ ಸ್ಥಾಪಿಸಿ, ಅದರ ನಿರ್ದೇಶಕರ ಪ್ರಕಾರ್ಯಗಳನ್ನು ಅನುಕ್ರಮವಾಗಿ ರಾಜ್ಯ ಸರಕಾರ ನಿರ್ಧಿಷ್ಟ ಪಡಿಸಬಹುದಾದ ಪ್ರಾಧಿಕಾರ ಮತ್ತು ಅಧಿಕಾರಿ ನಿರ್ವಹಿಸಲು ಅಧಿಕಾರ ನೀಡಲು ತಿದ್ದುಪಡಿ ತರಲಾಗಿದೆ. ಇದರೊಂದಿಗೆ ಕಲಬೆರೆಕೆ ಔಷಧಗಳ ಪ್ರಕರಣಗಳಲ್ಲಿ ಕಲಬೆರೆಕೆ ಔಷಧಗಳನ್ನು ಯಾರಿಂದ ವಶಪಡಿಸಿಕೊಳ್ಳಲಾಗಿದೆಯೋ, ಅವರೇ ಕಲಬೆರಕೆ ವಸ್ತುಗಳ ತಯಾರಕರು ಯಾರೆಂದು ಹಾಗೂ ತಾವು ತಯಾರಿಸಿಲ್ಲ ಎನ್ನುವ ರುಜುವಾತುಪಡಿಸುವ ಭಾರವನ್ನು ತಿದ್ದುಪಡಿ ವಿಧೇಯಕದಲ್ಲಿ ತರಲಾಗಿದೆ. ಪ್ರಕರಣ 30ರ ಅಡಿ ದಂಡನೆಗಳನ್ನು ಜೀವಾವಧಿ ಕಾರಾವಾಸಕ್ಕೆ ಹೆಚ್ಚಿಸಲು ಮತ್ತು ಕಲಬೆರಕೆ ಅಪರಾಧಗಳನ್ನು ಜಾಮೀನು ರಹಿತ ಪ್ರಕರಣಗಳೆಂದು ಪರಿಗಣಿಸಲು ಹಾಗೂ ಇತರ ನಿಯಮಗಳನ್ನು ರಚಿಸಲು ತಿದ್ದುಪಡಿಯನ್ನು ವಿಧೇಯಕದಲ್ಲಿ ತರಲಾಗಿದೆ ಎಂದು ಸಚಿವರು ಹೇಳಿದರು. ಆನಂತರ, ಚರ್ಚೆಯ ಬಳಿಕ ವಿಧಾನಸಭೆಯಲ್ಲಿ 5 ತಿದ್ದುಪಡಿ ವಿಧೇಯಕಗಳಿಗೆ ಅನುಮೋದಿಸಿ ಅಂಗೀಕಾರ ನೀಡಲಾಯಿತು.
ಆರೋಗ್ಯದಲ್ಲಿ ಏರುಪೇರು; ಕಲಾಪಗಳಿಂದ ದೂರ ಉಳಿದ ಸಿಎಂ
ಬೆಳಗಾವಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆರೋಗ್ಯದಲ್ಲಿ ತುಸು ಏರುಪೇರಾದ ಕಾರಣ, ಬುಧವಾರ ಅವರು ಸದನ ಕಲಾಪಗಳಿಂದ ದೂರ ಉಳಿದರು. ನಗರದ ಪ್ರವಾಸಿ ಮಂದಿರದಲ್ಲೇ ಇಡೀ ದಿನ ವಿಶ್ರಾಂತಿ ಪಡೆದರು. ಮುಖ್ಯಮಂತ್ರಿಗಳ ಆರೋಗ್ಯ ವಿಚಾರಿಸಲು ಹಲವು ನಾಯಕರು ದೌಡಾಯಿಸಿದ್ದರು. ಕೇಂದ್ರ ಸರಕಾರವು ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರ ವಿರುದ್ಧ ಮಾಡುತ್ತಿರುವ ದ್ವೇಷ ರಾಜಕಾರಣ ಖಂಡಿಸಿ, ಇಲ್ಲಿನ ಸುವರ್ಣ ವಿಧಾನಸೌಧ ಬಳಿಯ ಗಾಂಧಿ ಪ್ರತಿಮೆ ಇಂದು ಬೆಳಗ್ಗೆ ನಡೆದ ಪ್ರತಿಭಟನೆಯಲ್ಲಿ ಸಿದ್ದರಾಮಯ್ಯ ಪಾಲ್ಗೊಂಡಿದ್ದರು. ಅದಾದ ಬಳಿಕ ಸದನದೊಳಗೆ ಹೋದರು. ಅನಾರೋಗ್ಯ ಕಾಣಿಸಿಕೊಂಡ ಹಿನ್ನೆಲೆಯಲ್ಲಿ, ವಿಶ್ರಾಂತಿ ಪಡೆಯಲು ಪ್ರವಾಸಿ ಮಂದಿರಕ್ಕೆ ಆಗಮಿಸಿದರು. ಈ ಹಿನ್ನೆಲೆಯಲ್ಲಿ ಪುತ್ರ, ವಿಧಾನಪರಿಷತ್ ಸದಸ್ಯ ಯತೀಂದ್ರ ಸಿದ್ದರಾಮಯ್ಯ, ಸಚಿವ ಬೈರತಿ ಸುರೇಶ್, ಮಾಜಿ ಸಚಿವರಾದ ರಮೇಶ ಜಾರಕಿಹೊಳಿ, ಜಿ.ಟಿ.ದೇವೇಗೌಡ ಸೇರಿ ಹಲವು ನಾಯಕರು ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಿದರು. ಸಿದ್ದರಾಮಯ್ಯ ಅವರಿಗೆ ಹೊಟ್ಟೆನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಸಂಜೆಯವರೆಗೆ ಯಾವುದೇ ಕಾರ್ಯಕ್ರಮದಲ್ಲಿ ಭಾಗಿಯಾಗಿಲ್ಲ. ಸಿಎಂ ಆರೋಗ್ಯ ವಿಚಾರಿಸಿ ವಾಪಸ್ ಆದ ಬಳಿಕ ಮಾಧ್ಯಮದವರ ಜೊತೆಗೆ ಮಾತನಾಡಿದ ಯತೀಂದ್ರ ಸಿದ್ದರಾಮಯ್ಯ, ''ತಂದೆಯವರ ಆರೋಗ್ಯ ಚೆನ್ನಾಗಿದೆ, ಗ್ಯಾಸ್ಟ್ರೋಕೇಷನ್ ಇನ್ಫೆಕ್ಷನ್ ಆಗಿದೆ. ಡೈರಿಯಾ ಸಮಸ್ಯೆ ತರಹ ಇದೆ. ವೈದ್ಯರು ತಪಾಸಣೆ ನಡೆಸಿ ಮಾತ್ರೆಗಳನ್ನು ಕೊಟ್ಟಿದ್ದಾರೆ. ತಂದೆಯವರು ವಿಶ್ರಾಂತಿ ಪಡೆಯುತ್ತಿದ್ದು, ನಾಳೆ ಅಧಿವೇಶನಕ್ಕೆ ಬರುತ್ತಾರೆ'' ಎಂದು ಹೇಳಿದರು.
ಕೊಪ್ಪಳ| ಬೈಕ್ಗೆ ಬೊಲೆರೋ ಢಿಕ್ಕಿ: ಮೂವರು ಯುವಕರು ಮೃತ್ಯು
ಕೊಪ್ಪಳ: ಬೈಕ್ಗೆ ಬೊಲೆರೋ ವಾಹನ ಢಿಕ್ಕಿಯಾಗಿ ಮೂವರು ಯುವಕರು ಸ್ಥಳದಲ್ಲೇ ಮೃತಪಟ್ಟ ಘಟನೆ ಮುನಿರಾಬಾದ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ರಾಜಾಹುಸೇನ್(18), ಆಸೀಫ್(16) ಮತ್ತು ವಾಜಿದ್(19) ಮೃತರು. ಈ ಮೂವರು ಶ್ರೀರಾಮನಗರದಿಂದ ಹೊಸಹಳ್ಳಿಗೆ ಬೈಕ್ನಲ್ಲಿ ಹೋಗುವಾಗ ಇಂದರಗಿ ಗ್ರಾಮದ ಸಮೀಪ ಬೊಲೆರೋ ವಾಹನ ಢಿಕ್ಕಿಯಾಗಿದೆ. ಅಪಘಾತದ ಬಳಿಕ ಬೊಲೆರೋ ಬಿಟ್ಟು ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ಅಪಘಾತದ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ವೈದ್ಯೆಯ ಹಿಜಾಬ್ ಎಳೆದ ಪ್ರಕರಣ | CM ನಿತೀಶ್ ಕುಮಾರ್, ಹೇಳಿಕೆ ನೀಡಿದ UP ಸಚಿವ ಸಂಜಯ್ ನಿಶದ್ ವಿರುದ್ಧ ದೂರು
ಪಾಟ್ನಾ: ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಹಾಗೂ ಉತ್ತರ ಪ್ರದೇಶದ ಕ್ಯಾಬಿನೆಟ್ ಸಚಿವ ಸಂಜಯ್ ನಿಶದ್ ವಿರುದ್ಧ ಸಮಾಜವಾದಿ ಪಕ್ಷದ ನಾಯಕಿ ಸುಮಯ್ಯಾ ರಾಣಾ ಅವರು ಲಕ್ನೋದ ಕೈಸರ್ಬಾಗ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ವೈದ್ಯೆಯ ಹಿಜಾಬ್ ಎಳೆದ ಪ್ರಕರಣಕ್ಕೆ ಸಂಬಂಧಿಸಿ ಎಫ್ಐಆರ್ ದಾಖಲಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಅವರು ಮನವಿ ಮಾಡಿದ್ದಾರೆ. ಪಾಟ್ನಾ ದ ಮುಖ್ಯಮಂತ್ರಿಗಳ ಕಚೇರಿಯಲ್ಲಿ ನೂತನವಾಗಿ ನೇಮಕಗೊಂಡ ಆಯುಷ್ ವೈದ್ಯರಿಗೆ ನೇಮಕಾತಿ ಪತ್ರ ವಿತರಿಸುವ ಕಾರ್ಯಕ್ರಮದ ವೇಳೆ, ಮುಖ್ಯಮಂತ್ರಿ ನಿತೀಶ್ ಕುಮಾರ್ ಮುಸ್ಲಿಂ ಮಹಿಳೆಯ ಹಿಜಾಬ್ ಅನ್ನು ಹಿಡಿದು ಎಳೆಯುತ್ತಿರುವಂತೆ ಕಾಣಿಸುವ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗಿದೆ. ಈ ಘಟನೆ ಸಾರ್ವಜನಿಕ ಹಾಗೂ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದ್ದು, ಆಕ್ರೋಶ ವ್ಯಕ್ತವಾಗಿದೆ. ಈ ವಿವಾದದ ನಡುವೆ ಉತ್ತರ ಪ್ರದೇಶದ ಸಚಿವ ಸಂಜಯ್ ನಿಶದ್ ನೀಡಿದ ಹೇಳಿಕೆಗಳೂ ಟೀಕೆಗೆ ಗುರಿಯಾಗಿವೆ. ಹಿಜಾಬ್ ವಿಚಾರವಾಗಿ ಅವರು ಮಾಡಿದ ಟಿಪ್ಪಣಿಗಳು ಮಹಿಳೆಯ ಗೌರವ ಮತ್ತು ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟುಮಾಡುತ್ತವೆ ಎಂಬ ಆರೋಪ ಕೇಳಿಬಂದಿದೆ. ಈ ಸಂಬಂಧ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ ಬಳಿಕ ಪ್ರತಿಕ್ರಿಯಿಸಿದ ಸುಮಯ್ಯಾ ರಾಣಾ, ಸಾಂವಿಧಾನಿಕ ಹುದ್ದೆಯಲ್ಲಿರುವ ವ್ಯಕ್ತಿಯಿಂದ ಇಂತಹ ವರ್ತನೆ ನಡೆಯುವುದು ಆತಂಕಕಾರಿ ಎಂದು ಅಭಿಪ್ರಾಯಪಟ್ಟಿದ್ದಾರೆ. ಈ ರೀತಿಯ ಕೃತ್ಯಗಳು ಸಮಾಜದಲ್ಲಿ ತಪ್ಪಾದ ಸಂದೇಶವನ್ನು ನೀಡುವ ಅಪಾಯವಿದೆ ಎಂದು ಅವರು ಹೇಳಿದ್ದಾರೆ. ರಾಣಾ ಅವರ ಪರ ವಕೀಲ ಮಿಶಮ್ ಝೈದಿ, ಮಹಿಳೆಯ ಗೌರವಕ್ಕೆ ಧಕ್ಕೆ ತರುವಂತಹ ನಡೆಗೆ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 354 ಅನ್ವಯವಾಗುತ್ತದೆ ಎಂದು ತಿಳಿಸಿದ್ದಾರೆ. ಅಲ್ಲದೆ, ಸಚಿವ ಸಂಜಯ್ ನಿಶದ್ ನೀಡಿರುವ ಹೇಳಿಕೆಗಳು ಧಾರ್ಮಿಕ ಭಾವನೆಗಳನ್ನು ಕೆರಳಿಸುವ ಸ್ವಭಾವದ್ದಾಗಿದ್ದು, ಸೆಕ್ಷನ್ 153ಎ ಅಡಿಯಲ್ಲಿ ಪ್ರಕರಣ ದಾಖಲಾಗುವ ಸಾಧ್ಯತೆ ಇದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಧಾರವಾಡ : ವಿದ್ಯಾರ್ಥಿನಿ ಆತ್ಮಹತ್ಯೆ
ಧಾರವಾಡ : ವಿದ್ಯಾರ್ಥಿನಿಯೋರ್ವಳು ರೈಲ್ವೆ ಹಳಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬುಧವಾರ ಧಾರವಾಡ ಕ್ಯಾರಕೊಪ್ಪ ರೈಲ್ವೆ ಗೇಟ್ ಬಳಿ ನಡೆದಿದೆ. ಬಳ್ಳಾರಿ ಮೂಲದ ಕಗ್ಗಲ್ ಗ್ರಾಮದ ಪಲ್ಲವಿ (24) ಆತ್ಮಹತ್ಯೆಗೈದ ವಿದ್ಯಾರ್ಥಿನಿ. ಆಕೆ ನೇಮಕಾತಿ ಪರೀಕ್ಷೆ ತಯಾರಿಗಾಗಿ ಧಾರವಾಡಕ್ಕೆ ಆಗಮಿಸಿದ್ದಳು ಎಂದು ತಿಳಿದು ಬಂದಿದೆ. ಆರೋಗ್ಯ ಸಮಸ್ಯೆ, ಕೌಟುಂಬಿಕ ಸಮಸ್ಯೆ ಕಾರಣದಿಂದ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಪಲ್ಲವಿ ಡೆತ್ ನೋಟ್ ಬರೆದಿಟ್ಟಿದ್ದಾಳೆ ಎನ್ನಲಾಗಿದೆ. ಮತ್ತೊಂದೆಡೆ ಪೊಲೀಸ್ ಇಲಾಖೆ ನೇಮಕಾತಿ ವಿಳಂಬ ಕಾರಣಕ್ಕೆ ಪಲ್ಲವಿ ಸಾವನ್ನಪ್ಪಿರುವುದಾಗಿ ತಿಳಿದು ಬಂದಿದೆ. ʼಕೆಲವರು ವಿನಾಕಾರಣ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದು, ವಿದ್ಯಾರ್ಥಿಗಳ ಮನೋಸ್ಥೆರ್ಯ ಕುಗ್ಗಿಸುವ ಕೆಲಸ ಯಾರೂ ಮಾಡಬಾರದು. ಅಪಪ್ರಚಾರ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದುʼ ಎಂದು ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಎಚ್ಚರಿಕೆ ನೀಡಿದ್ದಾರೆ. ಕುಟುಂಬಸ್ಥರ ಸ್ಪಷ್ಟನೆ : ಪಲ್ಲವಿಗೆ ಆರೋಗ್ಯ ಸಮಸ್ಯೆ ಇತ್ತು. ಅಲ್ಲದೆ, ಆಕೆ ಪೊಲೀಸ್ ಇಲಾಖೆ ನೇಮಕಾತಿಯ ದೈಹಿಕ ಪರೀಕ್ಷೆಯಲ್ಲಿ ಉತ್ತೀರ್ಣಳಾಗಿದ್ದಳು. ಆದರೆ, ಅಂತಿಮ ಸುತ್ತಿಗೆ ಆಯ್ಕೆಯಾಗಿರಲಿಲ್ಲ. ಹೀಗಾಗಿ ಮತ್ತೆ ಸ್ಪರ್ಧಾ ಪರೀಕ್ಷೆ ಎದುರಿಸಲು ಧಾರವಾಡಕ್ಕೆ ಬಂದಿದ್ದಳು. ಮಗಳು ಓದುತ್ತಾಳೆ ಅನ್ನುವ ನಂಬಿಕೆ ಇತ್ತು. ಆದರೆ, ಈ ರೀತಿ ಮಾಡಿಕೊಂಡಿದ್ದಾಳೆ ಎಂದು ಪಲ್ಲವಿ ತಂದೆ ಉತ್ತೆಪ್ಪ ಹೇಳಿದ್ದಾರೆ.
ಧರ್ಮಸ್ಥಳ ಕೇಸ್ನಲ್ಲಿ ಮಾಸ್ಕ್ ಮ್ಯಾನ್ ಚಿನ್ನಯ್ಯಗೆ ಕೊನೆಗೂ ಜೈಲಿನಿಂದ ಮುಕ್ತಿ; ಪತ್ನಿಯಿಂದ ಬಾಂಡ್ ಸಲ್ಲಿಕೆ
ಧರ್ಮಸ್ಥಳ ಪ್ರಕರಣದ ಆರೋಪಿ 'ಬುರುಡೆ' ಪಾತ್ರಧಾರಿ ಚಿನ್ನಯ್ಯ, ಜಾಮೀನು ಸಿಕ್ಕ 23 ದಿನಗಳ ನಂತರ ಶಿವಮೊಗ್ಗ ಕೇಂದ್ರ ಕಾರಾಗೃಹದಿಂದ ಬಿಡುಗಡೆಯಾಗಲಿದ್ದಾರೆ. ಪತ್ನಿ ಮಲ್ಲಿಕಾ ಅವರು ಒಂದು ಲಕ್ಷ ರೂಪಾಯಿ ಬಾಂಡ್ ಮತ್ತು ಇಬ್ಬರು ಜಾಮೀನುದಾರರ ಶ್ಯೂರಿಟಿ ಒದಗಿಸಿದ ಹಿನ್ನೆಲೆಯಲ್ಲಿ ನ್ಯಾಯಾಲಯ ಬಿಡುಗಡೆಗೆ ಆದೇಶಿಸಿದೆ. ಸುಮಾರು 4 ತಿಂಗಳ ಜೈಲುವಾಸದ ಬಳಿಕ ಚಿನ್ನಯ್ಯ ಹೊರಬಂದಿದ್ದಾರೆ.
ಆನೆಧಾಮಕ್ಕೆ ಕೇಂದ್ರದ ಸಮ್ಮತಿ ಸಿಗದಿದ್ದರೆ ಪರ್ಯಾಯ ಕ್ರಮ : ಈಶ್ವರ್ ಖಂಡ್ರೆ
ಬೆಳಗಾವಿ : ಮಾನವ-ಆನೆ ಸಂಘರ್ಷವನ್ನು ನಿಯಂತ್ರಿಸಲು ರಾಜ್ಯ ಸರಕಾರ ಭದ್ರಾ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ಆನೆಧಾಮಕ್ಕೆ ಕೇಂದ್ರ ಸರಕಾರ ಇನ್ನೂ ತನ್ನ ಸಮ್ಮತಿ ನೀಡಿಲ್ಲ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ವಿಧಾನಸಭೆಗಿಂದು ತಿಳಿಸಿದ್ದಾರೆ. ನಿಯಮ 73ರಡಿಯಲ್ಲಿ ಶಾಸಕ ಎಚ್.ಕೆ. ಸುರೇಶ್ ಅವರ ಗಮನ ಸೆಳೆಯುವ ಸೂಚನೆಗೆ ಉತ್ತರಿಸಿದ ಅವರು, ಭದ್ರಾ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಆನೆಗಳ ಮೃದು ಧಾಮ ಮಾಡಲು ರಾಷ್ಟ್ರೀಯ ಹುಲಿ ಪ್ರಾಧಿಕಾರದ ಮತ್ತು ಕೇಂದ್ರದ ಅನುಮತಿ ಬೇಕು, ಒಂದೊಮ್ಮೆ ಕೇಂದ್ರ ಅನುಮತಿಸದಿದ್ದರೆ ಪರ್ಯಾಯ ಮಾರ್ಗದ ಚಿಂತನೆಯೂ ಸರಕಾರಕ್ಕಿದೆ ಎಂದರು. ಪ್ರತಿ ವರ್ಷ ರಾಜ್ಯದಲ್ಲಿ 45 ರಿಂದ 50 ಜನರು ಮಾನವ ವನ್ಯಜೀವಿ ಸಂಘರ್ಷದಲ್ಲಿ ಸಾವಿಗೀಡಾಗುತ್ತಿದ್ದಾರೆ. ಇದು ನೋವಿನ ಸಂಗತಿ. ಈ ಪೈಕಿ ಆನೆ ದಾಳಿಯಿಂದ ಹೆಚ್ಚಿನ ಸಾವು ಸಂಭವಿಸುತ್ತಿದ್ದು, ಅದಕ್ಕಾಗಿಯೇ ಆನೆ ಧಾಮ ಮಾಡಲು ಸಂಪುಟದ ಅನುಮತಿ ಪಡೆದು ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು. ಆನೆ-ಮಾನವ ಸಂಘರ್ಷ ತಗ್ಗಿಸಲು ರಾಜ್ಯ ಸರಕಾರ 428 ಕಿ.ಮೀ. ರೈಲ್ವೆ ಬ್ಯಾರಿಕೇಡ್ ಮಾಡಿದೆ.1775 ಕಿ.ಮೀ ಆನೆ ಕಂದಕ ನಿರ್ಮಿಸಿದ್ದೇವೆ. 1361 ಕಿ.ಮೀ. ಸೌರ ಬೇಲಿ ಹಾಕಿದ್ದೇವೆ. ಆದರೆ ಹಾಸನದಲ್ಲಿ ಮತ್ತು ಕೊಡಗಿನಲ್ಲಿ ಹಲವು ವರ್ಷದಿಂದ ತಲಾ 100ಕ್ಕೂ ಹೆಚ್ಚು ಆನೆಗಳು ಕಾಡಿನಿಂದ ಹೊರಗಿವೆ. ಅಲ್ಲಿ ತೋಟ ಮತ್ತು ಕಾಡು ಒಂದೇ ರೀತಿ ಇದೆ ಎಂದರು. ತಾವು ಸಚಿವರಾದ ತರುವಾಯ 8 ಬಾರಿ ಹಾಸನಕ್ಕೆ ಭೇಟಿ ನೀಡಿದ್ದು, ಆನೆ-ಮಾನವ ಸಂಘರ್ಷ ನಿಯಂತ್ರಿಸಲು ಸಾಕಷ್ಟು ಕ್ರಮ ಕೈಗೊಂಡಿದ್ದಾಗಿ ತಿಳಿಸಿದ ಅವರು, ಆನೆಗಳ ಕಾರಿಡಾರ್ ವಿಭಜನೆ ಆಗಿರುವುದು ಇದಕ್ಕೆ ಕಾರಣವಾಗಿದೆ. ಆದಾಗ್ಯೂ ರಾಜ್ಯ ಸರಕಾರ ರೈತರ ಬೆಳೆ ಹಾನಿ ಆಗದಂತೆ ಕ್ರಮ ಕೈಗೊಳ್ಳುತ್ತಿದೆ. ವನ್ಯಜೀವಿಗಳಿಂದ ಆಗಿರುವ ಬೆಳೆ ಹಾನಿಯ ಸಂಪೂರ್ಣ ಪರಿಹಾರ ನೀಡಲಾಗಿದೆ. ಯಾವುದೇ ಬಾಕಿ ಇರುವುದಿಲ್ಲ ಎಂದು ತಿಳಿಸಿದರು. ಎಲ್ಲರೂ ಸೇರಿ ಮಾನವ- ವನ್ಯಜೀವಿ ಸಂಘರ್ಷಕ್ಕೆ ಒಂದು ಶಾಶ್ವತ ಪರಿಹಾರ ಕಂಡುಕೊಳ್ಳಬೇಕಿದೆ ಎಂದು ಈಶ್ವರ ಖಂಡ್ರೆ ತಿಳಿಸಿದರು.
ಕ್ಷೇತ್ರದ ಅಭಿವೃದ್ಧಿಗಾಗಿ ರಾಜಕೀಯಕ್ಕೆ ಬನ್ನಿ: ಮಾಜಿ ಸಚಿವ ಅಮರೇಗೌಡ ಪಾಟೀಲ್
ಲಿಂಗಸಗೂರು.ನ.17- ಕೇವಲ ಹಣ ಮಾಡುವುದಕ್ಕಾಗಿ ರಾಜಕೀಯಕ್ಕೆ ಬರಬೇಡಿ ಕ್ಷೇತ್ರದ ಅಭಿವೃದ್ಧಿಗಾಗಿ ರಾಜಕೀಯಕ್ಕೆ ಬನ್ನಿ ಎಂದು ಮಾಜಿ ಸಚಿವ ಅಮರೇಗೌಡ ಪಾಟೀಲ್ ಬಯ್ಯಾಪುರ ಹೇಳಿದರು. ಲಿಂಗಸುಗೂರು ಪಟ್ಟಣದ ತಮ್ಮ ನಿವಾಸದಲ್ಲಿ ಅಭಿಮಾನಿಗಳು ಆಯೋಜಿಸಿದ 72ನೇ ವರ್ಷದ ಹುಟ್ಟುಹಬ್ಬದ ಸಂಭ್ರಮವನ್ನು ಉದ್ದೇಶಿಸಿ ಮಾತನಾಡಿದ ಅಮರೇಗೌಡ ಪಾಟೀಲ್ ಬಯ್ಯಾಪುರ, ನಾನು ನಾಗರಾಳ ಮಂಡಲ ಪಂಚಾಯತಿ ಪ್ರಧಾನರಾಗಿದ್ದಾಗ ನಮ್ಮ ಪಂಚಾಯತಿ ಜಿಲ್ಲೆಯಲ್ಲಿಯೇ ಪ್ರಥಮ ಸ್ಥಾನದಲ್ಲಿತ್ತು. ನನ್ನ ಹಿರಿಯ ಸಹೋದರ ಅನ್ನಾದಾನಿಗೌಡ ಬಯ್ಯಾಪುರ ಬೆಂಬಲ ಹಾಗೂ ಆಶೀರ್ವಾದ ನನನ್ನು ಈ ಮಟ್ಟಕ್ಕೆ ಬೆಳೆಸಿದೆ. ನಾನು ಜನತಾ ಪಕ್ಷದಿಂದ ರಾಜಕೀಯಕ್ಕೆ ಪಾದಾರ್ಪಣೆ ಮಾಡಿದ್ದು, ಲಿಂಗಸುಗೂರ ಕ್ಷೇತ್ರದಿಂದ ಮೂರು ಭಾರಿ ಶಾಸಕನಾಗಿದ್ದ ನಾನು ಶೈಕ್ಷಣಿಕ, ನೀರಾವರಿ ಮೂಲಸೌಕರ್ಯಗಳಿಗಾಗಿ ಶ್ರಮಿಸಿದೇನೆ. ಅಲ್ಲದೇ ಕುಷ್ಟಗಿ ಕ್ಷೇತ್ರದಿಂದ ಎರಡು ಬಾರಿ ಶಾಸಕನಾಗಿದ್ದು ಕಾರಣ ಕ್ಷೇತ್ರದ ಜನರು ನನ್ನ ಮೇಲೆಟ್ಟಿರುವ ವಿಶ್ವಾಸವೇ ಕಾರಣವಾಗಿದೆ ಎಂದು ಹೇಳಿದರು. ಸಂದರ್ಭದಲ್ಲಿ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಪಾಮಯ್ಯ ಮುರಾರಿ, ನಗರಾ ಯೋಜನಾ ಪ್ರಾಧಿಕಾರ ಅಧ್ಯಕ್ಷ ಭೂಪನಗೌಡ ಕರಡಕಲ್, ಡಿ.ಜಿ.ಗುರಿಕಾರ, ಡಾ.ನಾಗನಗೌಡ ಪಾಟೀಲ್ ಬಯ್ಯಾಪೂರ, ಡಾ.ದಿವಟರ್, ಬಸವರಾಜಗೌಡ ಗಣೇಕಲ್, ಗುಂಡಪ್ಪ ನಾಯಕ, ಹನುಮಂತಪ್ಪ ಕಂದಗಲ್, ಸಿದ್ರಾಮಪ್ಪ ಸಾಹುಕಾರ, ಪ್ರಮೋದ ಕುಲಕರ್ಣಿ, ಅನಿಷಾ ಪಾಷಾ, ಶಶಿಧರ ಪಾಟೀಲ್, ಡಾ.ಡಿ.ಹೆಚ್.ಕಡದಳ್ಳಿ, ವಕೀಲರ ಸಂಘದ ಅಧ್ಯಕ್ಷ ಭೂಪನ ಗೌಡ ಪಾಟೀಲ್, ಸೋಮಶೇಖರ ಐದನಾಳ, ಬಸವರಾಜ ಅಂಗಡಿ, ಜಗದೀಶಗೌಡ, ಚೆನ್ನರೆಡ್ಡಿ ಬಿರಾದರ ಸೇರಿ ಹಲವರು ಉಪಸ್ಥಿತರಿದ್ದರು.
ಕಾಸರಗೋಡು: ಹಾಡಹಗಲೇ ತಂಡವೊಂದು ಯುವಕನನ್ನು ಅಪಹರಿಸಿದ ಘಟನೆ ಕಾಸರಗೋಡು ನಗರದಲ್ಲಿ ನಡೆದಿದ್ದು, ತಂಡವನ್ನು ಪತ್ತೆ ಹಚ್ಚುವಲ್ಲಿ ಕಾಸರಗೋಡು ಪೊಲೀಸರು ಯಶಸ್ವಿ ಯಾಗಿದ್ದಾರೆ. ಹಾಸನದಿಂದ ತಂಡವನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ನಗರದ ಕರಂದಕ್ಕಾಡ್ ನ ಹೋಟೆಲ್ ಪರಿಸರದಿಂದ ಆಂಧ್ರಪ್ರದೇಶ ನೋಂದಾವಣೆಯ ಕಾರಿನಲ್ಲಿ ತಂಡವೊಂದು ಮೇಲ್ಪರಂಬದ ಹನೀಫ್ ಎಂಬವರನ್ನು ಬುಧವಾರ ಮಧ್ಯಾಹ್ನ ಅಪಹರಿಸಿದ್ದು, ಇದನ್ನು ಗಮನಿಸಿದ ಹೊಟೇಲ್ ಕಾವಲುಗಾರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಕಾರ್ಯ ಪ್ರವೃತ್ತ ರಾದ ಪೊಲೀಸರು ಕಾರ್ಯಾಚರಣೆ ನಡೆಸಿದ್ದು, ತಂಡವನ್ನು ಬಲೆಗೆ ಬೀಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹಣಕಾಸು ವಿಚಾರ ಅಪಹರಣಕ್ಕೆ ಕಾರಣ ಎಂದು ಪೊಲೀಸರಿಗೆ ಪ್ರಾಥಮಿಕ ಮಾಹಿತಿ ಲಭಿಸಿದೆ.
ಸಾಮಾಜಿಕ ಜಾಲತಾಣ ಬಳಕೆ ಮುನ್ನ ಎಚ್ಚರಿಕೆ ಅಗತ್ಯ: ವೆಂಕಟೇಶ್ ಹೊಗೆಬಂಡಿ
ಲಿಂಗಸುಗೂರು: ಮೊಬೈಲ್, ಆನ್ ಲೈನ್ ಶಾಪಿಂಗ್ ಹಾಗೂ ಸಾಮಾಜಿಕ ಜಾಲತಾಣ ಬಳಕೆ ಮಾಡುವಾಗ ಎಚ್ಚರಿಕೆ ವಹಿಸಬೇಕೆಂದು ರಾಯಚೂರಿನ ಸೈಬರ್ ಕ್ರೈಂ ಉಪ ಅಧೀಕ್ಷಕ ವೆಂಕಟೇಶ್ ಹೊಗೆಬಂಡಿ ತಿಳಿಸಿದರು. ಲಿಂಗಸುಗೂರು ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಸೈಬರ್ ಅಪರಾಧ ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದ ವೆಂಕಟೇಶ ಹೊಗೆಬಂಡಿ, ಸಾಮಾಜಿಕ ಜಾಲತಾಣ ನಮ್ಮ ದಿನನಿತ್ಯದ ಆಗ ಹೋಗುಗಳ ತಿಳುವಳಿಕೆಗೆ ಬಳಕೆ ಮಾಡುವಾಗ ನಮಗೆ ಅರಿವಿರದೇ ಮೋಸಕ್ಕೆ ಒಳಗಾಗುತ್ತೇವೆ. ಇದನ್ನು ಎಚ್ಚರಿಕೆಯಿಂದ ಬಳಕೆ ಮಾಡಿದರೆ ವಂಚನೆಯಿಂದ ತಪ್ಪಿಸಿಕೊಳ್ಳಬಹುದು. ವಿದ್ಯಾರ್ಥಿಗಳು ಸಾಮಾಜಿಕ ಜಾಲತಾಣದಲ್ಲಿ ಮೋಹದ ಜಾಲದೊಳಗೆ ಸಿಲುಕಿ ವಂಚನೆಗೆ ಒಳಗಾಗದೇ, ಸೈಬರ್ ಕೃತ್ಯಗಳಿಗೆ ಸಿಲುಕದೇ ಎಚ್ಚರಿಕೆಯಿಂದ ಇರಬೇಕು. ಈ ದೃಷ್ಟಿಯಿಂದ ಸೈಬರ್ ಅಪರಾಧಗಳ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಹೇಳಿದರು. ಈ ವೇಳೆ ತಹಶೀಲ್ದಾರ್ ಸತ್ಯಮ, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಉಮೇಶ ಸೇರಿ ಹಲವರು ಉಪಸ್ಥಿತರಿದ್ದರು.
ಒಳ ಮೀಸಲಾತಿ ಜಾರಿಗಾಗಿ ಬೆಳಗಾವಿ ಚಲೋ: ಹೋರಾಟಗಾರರನ್ನು ವಶಕ್ಕೆ ಪಡೆದ ಪೊಲೀಸರು
ರಾಯಚೂರು: ಪರಿಶಿಷ್ಟ ಜಾತಿಗಳ ಸಂಪೂರ್ಣ ಒಳ ಮೀಸಲಾತಿ ಕಾನೂನಾತ್ಮಕವಾಗಿ ಜಾರಿಗೊಳಿಸುವಂತೆ ಆಗ್ರಹಿಸಿ ರಾಯಚೂರು ನಗರದಿಂದ ಬೆಳಗಾವಿಗೆ ತೆರಳುತ್ತಿದ್ದ ಮಾದಿಗ ದಂಡೋರ ಸಂಘಟನೆಯ ಕಾರ್ಯಕರ್ತರನ್ನು ಲಿಂಗಸುಗೂರು ತಾಲೂಕಿನ ಬೆಳಗಾವಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸಂಘಟನೆಯ ರಾಜ್ಯಾಧ್ಯಕ್ಷ ಬಿ.ನರಸಪ್ಪ ದಂಡೋರ ಅವರ ನೇತೃತ್ವದಲ್ಲಿ ನಡೆದ ಬೆಳಗಾವಿ ಚಲೋ ಹೋರಾಟದ ವೇಳೆ, ಕಾರ್ಯಕರ್ತರು ಹೆದ್ದಾರಿಯಲ್ಲೇ ಪ್ರತಿಭಟನೆ ನಡೆಸಿದರು, ಪರಿಶಿಷ್ಟ ಜಾತಿಗಳ ಒಳ ಮೀಸಲಾತಿ ಕಾನೂನು ರೂಪದಲ್ಲಿ ಜಾರಿಯಾಗುವವರೆಗೂ ಹೋರಾಟ ನಿಲ್ಲಿಸುವುದಿಲ್ಲ ಎಂದು ಘೋಷಿಸಿದರು. ಚಳಿಗಾಲ ಅಧಿವೇಶನದಲ್ಲೇ ಸಂಪೂರ್ಣ ಒಳ ಮೀಸಲಾತಿಯನ್ನು ಜಾರಿಗೊಳಿಸಬೇಕು ಹಾಗೂ ಮುಂದಿನ ರಾಜಕೀಯ ಹಾಗೂ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಸೂಕ್ತ ಮೀಸಲಾತಿ ಕಲ್ಪಿಸಬೇಕು ಎಂಬುದು ಬಹುದಿನಗಳ ಬೇಡಿಕೆಯಾಗಿದೆ ಎಂದು ಸಂಘದ ಮುಖಂಡರು ಸ್ಪಷ್ಟಪಡಿಸಿದರು. ಈ ಹೋರಾಟದಲ್ಲಿ ರಂಜಿತ್ ದಂಡೋರ, ಕಾಶಪ್ಪ ಹೆಗ್ಗಣ್ಗೆರ, ಗಂಗಣ್ಣ ಸಿದ್ದಾಪುರ, ದುಳ್ಳಯ್ಯ ಗುಂಜಹಳ್ಳಿ, ಜಕ್ರಪ್ಪ ಹಂಚಿನಾಳ, ಭೀಮೇಶ್ ತುಂಟಾಪುರ, ಯಲಪ್ಪ ಸೇರಿದಂತೆ ಹಲವರು ಉಪಸ್ಥಿತರಿದ್ದರು.
Robin Uthappa On Dhoni Retirement- ಮಹೇಂದ್ರ ಸಿಂಗ್ ಧೋನಿ ಅವರು 2026ರ ಐಪಿಎಲ್ ನಂತರ ಕ್ರಿಕೆಟ್ನಿಂದ ಸಂಪೂರ್ಣವಾಗಿ ನಿವೃತ್ತಿ ಪಡೆಯುವುದು ಪಕ್ಕಾ ಎಂದು ಸಿಎಸ್ ಕೆಯ ಅವರ ಹಳೇ ಸಹೋದ್ಯೋಗಿ ರಾಬಿನ್ ಉತ್ತಪ್ಪ ಖಚಿತಪಡಿಸಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ತಂಡವು ಇದೀಗ ಯುವ ಪ್ರತಿಭೆಗಳ ಮೇಲೆ ಹೆಚ್ಚು ಗಮನ ಹರಿಸುತ್ತಿದ್ದು, 2026ರ ಸೀಸನ್ ಬಳಿಕ ಧೋನಿ ಅವರು ಮೆಂಟರ್ ಆಗಿ ಮುಂದುವರಿಯುವ ಸಾಧ್ಯತೆ ಇದೆ ಎಂದೂ ಅವರು ಭವಿಷ್ಯ ನುಡಿದಿದ್ದಾರೆ.
ದೇವದುರ್ಗ| ಕೋಣಚಪ್ಪಳಿ ಗ್ರಾಮದಲ್ಲಿ ರಸ್ತೆ ಮೇಲೆ ಹರಿಯುತ್ತಿರುವ ಚರಂಡಿ ನೀರು; ಕ್ರಮಕ್ಕೆ ಒತ್ತಾಯ
ದೇವದುರ್ಗ: ದೊಂಡಂಬಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೋಣಚಪ್ಪಳಿ ಗ್ರಾಮದಲ್ಲಿ ಚರಂಡಿ ಇಲ್ಲದೇ ಕೊಳಚೆ ನೀರು ರಸ್ತೆಗೆ ಹರಿಯುತ್ತಿರುವ ಕಾರಣ ಗ್ರಾಮಸ್ಥರಿಗೆ ಸಾಂಕ್ರಾಮಿಕ ರೋಗದ ಭೀತಿ ಎದುರಾಗಿದೆ. ಆದ್ದರಿಂದ ಕೂಡಲೇ ಗ್ರಾಮ ಪಂಚಾಯಿತಿ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸಾಮಾಜಿಕ ಕಾರ್ಯಕರ್ತ ಸಂಗನಗೌಡ ಜಿಲ್ಲಾ ಪಂಚಾಯತಿ ಸಿಇಒಗೆ ಮನವಿ ಸಲ್ಲಿಸಿದರು. ದೇವದುರ್ಗ ತಾಲೂಕಿನ ದೊಂಡಂಬಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನೈರ್ಮಲ್ಯ ಸಮಿತಿ ಸರಕಾರದ ಆದೇಶದಂತೆ ಕಾರ್ಯ ನಿರ್ವಹಿಸುತಿಲ್ಲ. ಕೋಣಚಪ್ಪಳಿ ಗ್ರಾಮದಲ್ಲಿ ಚರಂಡಿ ನೀರಿನಿಂದ ಅನೇಕ ರೋಗಗಳು ಬರುತ್ತಿದೆ. ಮುಖ್ಯ ರಸ್ತೆಯಲ್ಲಿ ಇರುವ ಚರಂಡಿಯ ಹೂಳು ತೆಗೆಯುವ ಕೆಲಸ ಕೂಡಲೇ ಆರಂಭಿಸಬೇಕು. ಅಕ್ಕ ಪಕ್ಕದ ಹೊಲದ ಮಾಲಕರು ಹಾಗೂ ತಕರಾರು ಮಾಡುವವರು ವಿರುದ್ದ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು. ನೈರ್ಮಲ್ಯ ಸಮಿತಿ ಸದಸ್ಯರು ಕಾಟಾಚಾರಕ್ಕೆ ಸಮಿತಿ ಮಾಡಿ ಜನ ಸಾಮಾನ್ಯರ ಜೊತೆ ಚೆಲ್ಲಾಟವಾಡುತಿದ್ದಾರೆ. ಕೂಡಲೇ ಸಂಬಂಧಪಟ್ಟ ಸಮಿತಿಯ ಸದಸ್ಯರನ್ನು ಅಮಾನತು ಮಾಡಬೇಕು ಎಂದು ಸಂಗನಗೌಡ ಅವರು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದ್ದಾರೆ.
ಬೀದಿ ನಾಯಿಗಳ ಹಾವಳಿ ತಪ್ಪಿಸಲು ಅಗತ್ಯ ಕ್ರಮ ಕೈಗೊಳ್ಳಿ: ಜಿಲ್ಲಾಧಿಕಾರಿ ನಿತೀಶ್ ಕೆ ಸೂಚನೆ
ರಾಯಚೂರು: ಜಿಲ್ಲೆಯಲ್ಲಿ ಬೀದಿ ನಾಯಿಗಳ ಹಾವಳಿ ತಪ್ಪಿಸಲು ನಗರ ಸ್ಥಳೀಯ ಸಂಸ್ಥೆಗಳು ಅಗತ್ಯ ಕ್ರಮಕೈಗೊಳ್ಳಬೇಕು. ಸಾರ್ವಜನಿಕರಿಗೂ ಜಾಗೃತಿ ಮೂಡಿಸುವ ಕೆಲಸ ಮಾಡಬೇಕೆಂದು ಎಂದು ಜಿಲ್ಲಾಧಿಕಾರಿಗಳಾದ ನಿತೀಶ್ ಕೆ. ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು. ನಗರದ ನೂತನ ಜಿಲ್ಲಾಧಿಕಾರಿಗಳ ಕಚೇರಿಯ ವಿಡಿಯೋ ಕಾನ್ಫರೆನ್ಸ್ ಸಭಾಂಗಣದಲ್ಲಿ ಜಿಲ್ಲಾ ಪ್ರಾಣಿದಯಾ ಸಂಘದ ವತಿಯಿಂದ ಬೀದಿ ನಾಯಿಗಳ ಹಾವಳಿ ನಿಯಂತ್ರಣ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ನಿತೀಶ್ ಕೆ, ಬೀದಿ ನಾಯಿಗಳ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ, ರೇಬಿಸ್ ಲಸಿಕೆ ತಿಳುವಳಿಕೆ ಮೂಡಿಸುವ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಜಿಲ್ಲೆಯಲ್ಲಿ ಹಮ್ಮಿಕೊಳ್ಳಬೇಕು. ಅಲ್ಲದೆ ಸಂಬಂಧಪಟ್ಟ ಎಲ್ಲಾ ಇಲಾಖೆಗಳು ಸರ್ವೋಚ್ಛ ನ್ಯಾಯಾಲಯವು ನೀಡಿರುವ ಆದೇಶದಲ್ಲಿನ ಅಂಶಗಳನ್ನು ಪಾಲಿಸಬೇಕು ಎಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ಸೂಚಿಸಿದರು. ನಾಯಿ ಹಿಡಿಯುವ ತಂಡವು ಸಂಬಂಧಪಟ್ಟ ಸಾರ್ವಜನಿಕ ಸಂಸ್ಥೆಗಳಿಗೆ ಭೇಟಿ ನೀಡುವ ದಿನಾಂಕ ಮತ್ತು ಸಮಯವನ್ನು ಮುಂಚಿತವಾಗಿ ತಿಳಿಸಬೇಕು. ಸಾರ್ವಜನಿಕ ಸ್ಥಳಗಳಿಂದ ಬೀದಿ ನಾಯಿಗಳನ್ನು ಹಿಡಿದ ನಂತರ ಅವುಗಳಿಗೆ ಆಶ್ರಯ ನೀಡಲು ನಿಗದಿತ ಕಟ್ಟಡ ಸ್ಥಳಗಳಿಗೆ ಸ್ಥಳಾಂತರಿಸಬೇಕು. ಅಲ್ಲದೆ ರೇಬೀಸ್ ಪೀಡಿತ ನಾಯಿಗಳನ್ನು ಪ್ರತ್ಯೇಕ ಕಟ್ಟಡದಲ್ಲಿ ನಿರ್ವಹಣೆ ಮಾಡಬೇಕು ಎಂದು ಹೇಳಿದರು. ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಹಾಲಸಿದ್ದಪ್ಪ ಪೂಜಾರಿ, ಪಶುಪಾಲನಾ ಮತ್ತು ಪಶುವೈದ್ಯಸೇವಾ ಇಲಾಖೆಯ ಉಪ ನಿರ್ದೇಶಕರಾದ ಪೋಮ್ಸಿಂಗ್, ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಜಿಲ್ಲಾ ವ್ಯವಸ್ಥಾಪಕರಾದ ಚಂದ್ರಶೇಖರ, ರಾಯಚೂರು ತಹಶೀಲ್ದಾರ್ ಸುರೇಶ್ ವರ್ಮ, ರಾಯಚೂರು ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರಾದ ತಿಮ್ಮಪ್ಪ, ಯುವ ಸಬಲೀಕರಣ ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ವಿರೇಶ್ ನಾಯಕ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿ ಡಾ.ಸುರೇಂದ್ರ ಬಾಬು ಸೇರಿದಂತೆ ಹಲವರು ಉಪಸ್ಥಿತರಿದ್ದರು.
MGNREG ಹೆಸರು ಬದಲಾವಣೆ ಖಂಡಿಸಿ ಕಾಂಗ್ರೆಸ್ ಪ್ರತಿಭಟನೆ
ರಾಯಚೂರು: ಯುಪಿಎ ಸರಕಾರ ಜಾರಿಗೊಳಿಸಿದ್ದ ಮಹಾತ್ಮಾ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯನ್ನು ಬಿಜೆಪಿ ನೇತೃತ್ವದ ಎನ್ ಡಿಎ ಸರಕಾರ ಬದಲಾಯಿಸಿ ಗಾಂಧೀಜಿ ಅವರ ಹೆಸರು ತೆಗೆದು ಹಾಕಿ ದ್ವೇಷದ ರಾಜಕಾರಣ ಮಾಡುತ್ತಿದೆ ಎಂದು ಆರೋಪಿಸಿ ಕಾಂಗ್ರೆಸ್ ಜಿಲ್ಲಾ ಮಹಿಳಾ ಘಟಕದ ವತಿಯಿಂದ ನಗರದ ಡಾ.ಬಿ.ಆರ್ ಅಂಬೇಡ್ಕರ್ ವೃತ್ತದಲ್ಲಿ ಪ್ರತಿಭಟನೆ ನಡೆಯಿತು. ಪ್ರತಿಭಟನಾನಿರತರು ಮಹಾತ್ಮ ಗಾಂಧೀಜಿ ಅವರ ಪೋಸ್ಟರ್ಗಳನ್ನು ಹಿಡಿದು ಕೇಂದ್ರ ಸರಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ನಂತರ ಕಾಂಗ್ರೆಸ್ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ನಿರ್ಮಲಾ ಬೇಣ್ಣೆ ಮಾತನಾಡಿ, ಬಡವರ ಬದುಕಿಗೆ ಆಸರೆಯಾಗಿರುವ ನರೇಗಾ ಯೋಜನೆಯ ಹೆಸರನ್ನು ಬದಲಿಸಿ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್ಗಾರ್ ಮತ್ತು ಅಜೀವಿಕಾ ಮಿಷನ್ (ಗ್ರಾಮೀಣ) (VB-G RAM G) ಎಂದು ಮಾಡಿರುವುದು ಖಂಡನೀಯ. ಭಾರತ ಮಾತ್ರವಲ್ಲದೇ ಇಡೀ ವಿಶ್ವಕ್ಕೆ ಮಹಾತ್ಮಾ ಗಾಂಧಿ ಅವರು ಏನು ಎನ್ನುವುದು ಗೊತ್ತಿದೆ. ಬಿಜೆಪಿ ಸರಕಾರ ಆರ್ ಎಸ್ಎಸ್ ನಾಯಕರನ್ನು ಮೆಚ್ಚಿಸಲು ಮಹಾತ್ಮಾ ಗಾಂಧಿ ಅವರ ಹೆಸರು ತೆಗೆದುಹಾಕಿದೆ ಎಂದು ದೂರಿದರು. ಮಹಾತ್ಮ ಗಾಂಧೀಜಿ ಅವರ ಹೆಸರನ್ನು ಮುಂದುವರಿಸದಿದ್ದರೆ ದೊಡ್ಡ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು. ನರೇಗಾ ಯೋಜನೆ ಬಡವರ ಪರವಾದ ಉದ್ಯೋಗ ಖಾತ್ರಿ ಯೋಜನೆ. ಅದರ ಹೆಸರನ್ನು ಬದಲಿಸುವ ಅಗತ್ಯವೇನು? ಗಾಂಧೀಜಿ ಅವರ ಹೆಸರನ್ನು ತೆಗೆದುಹಾಕುವ ಮೂಲಕ ಬಿಜೆಪಿ ಸರಕಾರ ದೇಶದ ಮಹಾನ್ ನಾಯಕನಿಗೆ ಅಪಮಾನ ಮಾಡುತ್ತಿದೆ ಎಂದು ಹೇಳಿದರು. ಪ್ರತಿಭಟನೆಯಲ್ಲಿ ಆರತಿ ಚಂದ್ರಶೇಖರ, ಸುರೇಖಾ, ಕವಿತಾ, ಪ್ರತಿಭಾ ರೆಡ್ಡಿ ವಂದಾನ, ರೇಹಾನ ಬೇಗಂ, ಹರಿವಿನ್ ಬೇಗಂ, ಪಿ ಮಾದೇವಿ, ಲಕ್ಷ್ಮಿ ನರಸಿಂಹಲು, ಬಿ.ಉಮಾ ಜ್ಯೋತಿ, ಅಮಿತಾ ಬೇಗಂ, ನಿರ್ಮಲಾ ಭಂಡಾರಿ, ಸುರೇಖಾ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಬೆಂಗಳೂರು | ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿದ್ದ 190 ಟನ್ ಯೂರಿಯಾ ವಶ
ಬೆಂಗಳೂರು : ರೈತರಿಗೆ ಸಬ್ಸಿಡಿ ದರದಲ್ಲಿ ನೀಡಲಾಗುತ್ತಿದ್ದ ಯೂರಿಯಾವನ್ನು ಕಾಳಸಂತೆಯಲ್ಲಿ ಮಾರಾಟ ಮಾಡಲಾಗುತ್ತಿದ್ದ ಸುಮಾರು 190 ಟನ್ ಯೂರಿಯಾವನ್ನು ಕಂದಾಯ ಗುಪ್ತಚರ ನಿರ್ದೇಶನಾಲಯ ವಶಕ್ಕೆ ಪಡೆದಿದೆ. ನಗರದ ಹೊರವಲಯದಲ್ಲಿರುವ ನೆಲಮಂಗಲ ಬಳಿಯ ಅಡಕಮಾರನಹಳ್ಳಿಯ ಗೋದಾಮಿನಲ್ಲಿ ಅಕ್ರಮವಾಗಿ ಸಂಗ್ರಹಿಸಿದ್ದ ಯೂರಿಯಾ ದಾಸ್ತಾನು ಮೇಲೆ ಕಂದಾಯ ಗುಪ್ತಚರ ನಿರ್ದೇಶನಾಲಯದ ಅಧಿಕಾರಿಗಳ ತಂಡ ದಾಳಿ ಮಾಡಿದೆ. ಕಾಳಸಂತೆಯಲ್ಲಿ 200 ರೂ. ಯೂರಿಯಾವನ್ನು 1,500 ರೂ.ಗೆ ಮಾರಾಟ ಮಾಡಲಾಗುತ್ತಿತ್ತು.
ಮಂಗಳೂರು| ಜಿಎಸ್ಟಿ ಸುಧಾರಣೆಗಳು 2.0: ವಿಚಾರ ಸಂಕಿರಣ
ಮಂಗಳೂರು, ಡಿ.17: ‘ಜಿಎಸ್ಟಿ ಸುಧಾರಣೆಗಳು 2.0, ಜಿಎಸ್ಟಿಆರ್-9 ಫೈಲಿಂಗ್ ಮತ್ತು ಜಿಎಸ್ಟಿಯಲ್ಲಿನ ಇತರ ಇತ್ತೀಚಿನ ಬದಲಾವಣೆಗಳು’ ಕುರಿತು ವಿಚಾರಸಂಕಿರಣವನ್ನು ಮಂಗಳೂರಿನ ಕೆನರಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ (ಕೆಸಿಸಿಐ) ಆಶ್ರಯದಲ್ಲಿ ನಗರದ ಬಂದರ್ನ ಕೆಸಿಸಿಐ ಸಭಾಂಗಣದಲ್ಲಿ ಬುಧವಾರ ನಡೆಯಿತು. ಕೆಸಿಸಿಐ ಪರೋಕ್ಷ ತೆರಿಗೆ ಸಮಿತಿಯ ಅಧ್ಯಕ್ಷರಾದ ಸಿಎ ಕೇಶವ ಎನ್. ಬಳ್ಳಕುರಾಯ ಅವರು ‘ಜಿಎಸ್ಟಿ 2.0 ಹೆಚ್ಚು ನಾಗರಿಕ-ಕೇಂದ್ರಿತ, ವ್ಯವಹಾರ-ಸ್ನೇಹಿ ಮತ್ತು ಸರಳೀಕೃತ ತೆರಿಗೆ ಆಡಳಿತದತ್ತ ಬದಲಾವಣೆಯನ್ನು ಸೂಚಿಸುತ್ತದೆ’ ಎಂದು ವಿವರಿಸಿದರು ಸಿಎ ಸಬಾನಾ ಅವರು 56ನೇ ಜಿಎಸ್ಟಿ ಕೌನ್ಸಿಲ್ ಸಭೆಯ ಪ್ರಮುಖ ಶಿಫಾರಸುಗಳನ್ನು ಮತ್ತು ಜಿಎಸ್ಟಿ ಸುಧಾರಣೆಗಳು , ಜಿಎಸ್ಟಿ ದರಗಳ ಪ್ರಸ್ತಾವಿತ ಸರಳೀಕರಣ ಮತ್ತು ಅನುಷ್ಠಾನದ ಸಮಯದ ಬಗ್ಗೆ ತಿಳಿಸಿದರು. ಸಿಎ ಶ್ರದ್ಧಾ ಸಾಂಘ್ವಿ ಅವರು ಜಿಎಸ್ಟಿ ಮೇಲ್ಮನವಿ ನ್ಯಾಯಮಂಡಳಿಯ ಕಾರ್ಯಾಚರಣೆಯನ್ನು ಅವರು ವಿವರಿಸಿದರು. ಕೆಸಿಸಿಐ ಖಜಾಂಚಿ ಸಿಎ ಅಬ್ದುರ್ರಹಿಮಾನ್ ಮುಸ್ಬಾ ವೇದಿಕೆಯಲ್ಲಿ ಉಪಸ್ಥಿತರಿದ್ದರು ಕೆಸಿಸಿಐ ಅಧ್ಯಕ್ಷ ಪಿ.ಬಿ. ಅಹ್ಮದ್ ಮುದಸ್ಸರ್ ಸ್ವಾಗತಿಸಿ ಲೆಕ್ಕಪತ್ರ ವೃತ್ತಿಪರರ ಜ್ಞಾನವನ್ನು ನವೀಕರಿಸುವಲ್ಲಿ ಇಂತಹ ವಿಚಾರ ಸಂಕಿರಣಗಳ ಅಗತ್ಯತೆಯ ಬಗ್ಗೆ ತಿಳಿಸಿದರು. ಕಾರ್ಯದರ್ಶಿ ಅಶ್ವಿನ್ ಪೈ ಮಾರೂರ್ ವಂದಿಸಿದರು.

26 C