ಉತ್ತರ ಅಮೆರಿಕದ ಅಲಾಸ್ಕಾದಿಂದ ದಕ್ಷಿಣ ಅಮೆರಿಕದ ಅರ್ಜೆಂಟೀನಾವರೆಗೆ ಸುಮಾರು 30,600 ಕಿ.ಮೀ. ಉದ್ದದ ಪ್ಯಾನ್ ಅಮೆರಿಕನ್ ಹೆದ್ದಾರಿಯು 14 ದೇಶಗಳ ಮೂಲಕ ಹಾದುಹೋಗುತ್ತದೆ. 1925ರಲ್ಲಿ ನಿರ್ಮಾಣ ಆರಂಭಗೊಂಡು 1963ರಲ್ಲಿ ಪೂರ್ಣಗೊಂಡ ಈ ಹೆದ್ದಾರಿಯು ವಿಶ್ವದ ಅತಿ ದೊಡ್ಡ ಹೆದ್ದಾರಿಯಾಗಿದ್ದು, ನಾನ್-ಸ್ಟಾಪ್ ವಾಹನ ಚಲಾವಣೆಗೆ ಹೆಸರುವಾಸಿಯಾಗಿದೆ. ವೈವಿಧ್ಯಮಯ ಭೂಪ್ರದೇಶಗಳ ಮೂಲಕ ಸಾಗುವ ಈ ಹೆದ್ದಾರಿಯು 60 ದಿನಗಳಲ್ಲಿ ಸಂಪೂರ್ಣವಾಗಿ ಕ್ರಮಿಸಬಹುದು.
ಮಾನವ-ವನ್ಯಜೀವಿ ಸಂಘರ್ಷ ನಿಯಂತ್ರಣಕ್ಕೆ ಕಮಾಂಡ್ ಆ್ಯಂಡ್ ಕಂಟ್ರೋಲ್ ಸೆಂಟರ್ ಸ್ಥಾಪನೆ
ಶೀಘ್ರದಲ್ಲೇ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ಕಾರ್ಯಾಚರಣೆ
ಸೌಕೂರು ಏತ ನೀರಾವರಿ ಯೋಜನೆ | 4ಮೆಸ್ಕಾಂ ಬಿಲ್ ಬಾಕಿಯಿಂದ ಪವರ್ ಕಟ್; ರೈತರಿಗೆ ಊಟಕ್ಕಿಲ್ಲದ ಉಪ್ಪಿನಕಾಯಿ!
ನೀರು ಹರಿಸದ ಕಾರಣ ರೈತರು ಕಂಗಾಲು ►ಹಿಂಗಾರು ಕೃಷಿಗೆ ಸಜ್ಜಾದವರಿಗೆ ಆತಂಕ
ನಮ್ಮ ಮೆಟ್ರೋ ಹಳದಿ ಮಾರ್ಗಕ್ಕೆ 6 ನೇ ರೈಲು ಬಂತು! 12 ನಿಮಿಷಕ್ಕೆ ತಗ್ಗಲಿದೆ ಕಾಯುವ ಸಮಯ; ಯಾವಾಗ ಸಂಚಾರ ಆರಂಭ?
ನಮ್ಮ ಮೆಟ್ರೋ ಹಳದಿ ಮಾರ್ಗದ ಪ್ರಯಾಣಿಕರಿಗೆ ಸಂತಸದ ಸುದ್ದಿ. ಹೊಸ ರೈಲು ಆಗಮಿಸಿದ್ದು, ಡಿಸೆಂಬರ್ 22 ರಿಂದ ಸಂಚಾರ ಆರಂಭಿಸುವ ಸಾಧ್ಯತೆ ಇದೆ. ಇದರಿಂದ ರೈಲುಗಳ ಸಂಖ್ಯೆ ಐದಕ್ಕೆ ಏರಿಕೆಯಾಗಲಿದ್ದು, ಪ್ರತಿ 12 ನಿಮಿಷಕ್ಕೊಂದು ರೈಲು ಲಭ್ಯವಾಗಲಿದೆ. ಪ್ರಯಾಣಿಕರ ಕಾಯುವ ಸಮಯ ಕಡಿಮೆಯಾಗಲಿದೆ. ಇದು ಪ್ರಯಾಣಿಕರ ಅನುಕೂಲಕ್ಕೆ ಸಹಕಾರಿಯಾಗಲಿದೆ.
ಮೈಸೂರು ಅರಮನೆಯ ಮುಖ್ಯದ್ವಾರದ ಛಾವಣಿ ಕುಸಿತ: ಬೈಕ್ ಜಖಂ, ಕೂದಲೆಳೆ ಅಂತರದಲ್ಲಿ ತಪ್ಪಿದ ಅನಾಹುತ!
ವಿಶ್ವವಿಖ್ಯಾತ ಮೈಸೂರು ಅರಮನೆಯ ವರಾಹ ಗೇಟ್ ಮುಖ್ಯದ್ವಾರದ ಮೇಲ್ಚಾವಣಿಯ ಒಂದು ಭಾಗ ದಿಢೀರ್ ಕುಸಿದು ಬಿದ್ದಿದೆ. ಈ ವೇಳೆ ಸ್ಥಳದಲ್ಲಿ ಯಾರೂ ಇಲ್ಲದ ಕಾರಣ ಭಾರಿ ಅನಾಹುತವೊಂದು ಅದೃಷ್ಟವಶಾತ್ ತಪ್ಪಿದೆ. ಮೇಲ್ಚಾವಣಿ ಕುಸಿದು ಸ್ಥಳದಲ್ಲೇ ಇದ್ದ ಬೈಕ್ ಮೇಲೆ ಅವಶೇಷಗಳು ಬಿದ್ದು ಜಖಂಗೊಂಡಿದೆ.
ಚಿಕ್ಕಮಗಳೂರು :ಅಡಿಕೆ ಮರದಿಂದ ಬಿದ್ದು ವ್ಯಕ್ತಿ ಮೃತ್ಯು
ಚಿಕ್ಕಮಗಳೂರು : ಅಡಿಕೆ ಮರದಿಂದ ಬಿದ್ದು ವ್ಯಕ್ತಿ ಒಬ್ಬರು ಮೃತಪಟ್ಟ ಘಟನೆ ಕಳಸ ತಾಲೂಕಿನ ಬೂದಿಗುಂಡಿ ಗ್ರಾಮದಲ್ಲಿ ನಡೆದಿದೆ. ಮಂಜು (35) ಮೃತ ವ್ಯಕ್ತಿ. ಹಳುವಳ್ಳಿ ಗ್ರಾಮದ ಅಡಿಕೆ ತೋಟಕ್ಕೆ ಕೆಲಸಕ್ಕೆ ಹೋಗಿದ್ದ ಮಂಜು ಮರ ಹತ್ತಿ ಗೊನೆ ಕೊಯ್ಯುವಾಗ ಆಯಾ ತಪ್ಪಿ ಬಿದ್ದು ಸಾವನ್ನಪ್ಪಿದ್ದಾರೆ. ಕಳಸ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾಜಕೀಯ ಪಿತೂರಿಯಿಂದಾಗಿ ದೇಶದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ : ಶಾಹಿದ ತಸ್ನೀಮ್
WIM ವತಿಯಿಂದ ಮಾನವ ಹಕ್ಕುಗಳ ದಿನಾಚರಣೆ
ತಂಬ್ರಹಳ್ಳಿ 2ನೇ ಹಂತದ ಏತ ನೀರಾವರಿ ಯೋಜನೆ ಜಾರಿಗೆ ವೈ.ಎಂ. ಸತೀಶ್ ಆಗ್ರಹ
ಬೆಳಗಾವಿ/ಬಳ್ಳಾರಿ, ಡಿ. 11: ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ತಂಬ್ರಹಳ್ಳಿ 2ನೇ ಹಂತದ ಏತ ನೀರಾವರಿ ಯೋಜನೆಯ 1400 ಎಕರೆ ಭೂಮಿಗೆ ನೀರುಣಿಸಲು ಪುನರ್ ಸರ್ವೇ ಆಗಿದ್ದು ತ್ವರಿತವಾಗಿ ಕಾಮಗಾರಿ ಕೈಗೆತ್ತಿಕೊಳ್ಳಬೇಕು ಎಂದು ವಿಜಯನಗರ - ಬಳ್ಳಾರಿ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿ, ವಿಧಾನಪರಿಷತ್ ಸದಸ್ಯರಾದ ವೈ.ಎಂ. ಸತೀಶ್ ಅವರು ಆಗ್ರಹಿಸಿದ್ದಾರೆ. ಬೆಳಗಾವಿಯ `ಸುವರ್ಣ ಸೌಧ’ದಲ್ಲಿ ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಎನ್.ಎಸ್. ಬೋಸರಾಜು ಅವರಿಗೆ ಪ್ರಶ್ನೆ ಕೇಳಿರುವ ಶಾಸಕ ವೈ.ಎಂ. ಸತೀಶ್ ಅವರು, 1976ರಲ್ಲಿ ಪ್ರಾರಂಭವಾಗಿರುವ ತಂಬ್ರಹಳ್ಳಿ ಏತ ನೀರಾವರಿ ಯೋಜನೆ 3000 ಎಕರೆ ಭೂಮಿಗೆ ನೀರುಣಿಸುವ ಯೋಜನೆ ಆಗಿತ್ತು. ಆದರೆ, ಈವರೆಗೆ 1400 ಎಕರೆ ಭೂಮಿಗೆ ಈ ವರೆಗೆ ನೀರುಣಿಸುವ ಕೆಲಸ ಆಗಿಲ್ಲ. ಸರ್ಕಾರ ತಕ್ಷಣವೇ ಈ ಕುರಿತು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಆಗ, ಸಚಿವ ಎನ್.ಎಸ್. ಬೋಸರಾಜು ಅವರು, ತಂಬ್ರಹಳ್ಳಿ 2ನೇ ಹಂತದ ಏತ ನೀರಾವರಿ ಯೋಜನೆಯನ್ನು ಪುನರುಜ್ಜೀವನಗೊಳಿಸಲು ವಿಶೇಷ ಘಟಕ ಯೋಜನೆ ಅಡಿಯಲ್ಲಿ ರೂ. 2.5 ಕೋಟಿ ಹಾಗೂ ಏತ ನೀರಾವರಿ ಯೋಜನೆ ಅಡಿಯಲ್ಲಿ ರೂ. 1.75 ಅನುದಾನವನ್ನು ನೀಡಲಾಗಿದೆ. ಪ್ರಸ್ತುತ ಈ ಯೋಜನೆ ವ್ಯಾಪ್ತಿಯ 1400 ಎಕರೆ ಭೂಮಿಯಲ್ಲಿ ಮನೆಗಳು, ಎಪಿಎಂಸಿ ಇನ್ನಿತರೆ ಕಟ್ಟಡಗಳು ನಿರ್ಮಾಣ ಆಗಿರುವ ಕಾರಣ ನೀರಾವರಿ ಪ್ರದೇಶವು ಕಡಿಮೆಯಾಗಿದೆ. ಬಾಕಿ ನೀರುಣಿಸುವ ಪ್ರದೇಶದ ತಾಂತ್ರಿಕ ಹಾಗೂ ಇನ್ನಿತರೆ ವಿಷಯಗಳನ್ನು ಆಧರಿಸಿದ ಯೋಜನೆ ಪುನರ್ ರೂಪಿಸಲಾಗುತ್ತದೆ ಎಂದರು. ಅಲ್ಲದೇ, ಈ ಯೋಜನೆಯ ವ್ಯಾಪ್ತಿಯಲ್ಲಿ ಶಿಗೇನಹಳ್ಳಿ 1, 2, ಮತ್ತು 3, ತಂಬ್ರಹಳ್ಳಿ, ತಂಬ್ರಹಳ್ಳಿ ಎಕ್ಸ್ಟೆನ್ಶನ್ ಪ್ರದೇಶ, ಕೃಷ್ಣಾಪುರ, ಚಿಲಗೋಡು ಇನ್ನಿತರೆ ಪ್ರದೇಶಗಳು ಸೇರಿವೆ. ಈ ಕಾಮಗಾರಿಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಲು ಪ್ರಯತ್ನಿಸಲಾಗುತ್ತದೆ ಎಂಧು ಉತ್ತರಿಸಿದರು. ಆಗ, ವೈ.ಎಂ. ಸತೀಶ್ ಅವರು, ಮೂರುವರೆ ವರ್ಷಗಳ ಹಿಂದೆ ಇದೇ ಪ್ರಶ್ನೆಗಳನ್ನು ಸದನದಲ್ಲಿ ಕೇಳಿದ್ದೆ. ಆಗ, ಸಚಿವರಾಗಿದ್ದ ಮಾಧುಸ್ವಾಮಿ ಅವರು, ಯೋಜನೆಯ ಪುನರ್ ಸರ್ವೇಗೆ ಆದೇಶ ನೀಡಿದ್ದರು. ಈ ಯೋಜನೆಯ ಪುನರ್ ಸರ್ವೇ ಪೂರ್ಣಗೊಂಡಿದೆ. ಕಾರಣ ತ್ವರಿತವಾಗಿ ಕಾಮಗಾರಿಯನ್ನು ಕೈಗೆತ್ತಿಕೊಂಡು ರೈತರಿಗೆ ನೆರವಾಗಿ. ಕೃಷಿ ಭೂಮಿಗೆ ನೀರುಣಿಸುವ ಕೆಲಸವಾಗಲಿ ಎಂದು ಅವರು ಕೋರಿದರು. ಸಚಿವ ಎನ್.ಎಸ್. ಬೋಸರಾಜ್ ಅವರು, ಹಣದ ಖರ್ಚಿನ ಲೆಕ್ಕಾಚಾರ ಹಾಕಿ ಹೆಚ್ಚಿನ ಹಣದ ಅಗತ್ಯವಿದ್ದಲ್ಲಿ ಬಜೆಟ್ನಲ್ಲಿ ಈ ವಿಷಯವನ್ನು ಸೇರ್ಪಡೆ ಮಾಡಿ, ಅನುದಾನ ನೀಡಲಾಗುತ್ತದೆ ಎಂದು ಉತ್ತರಿಸಿದರು.
ಡಿ.14ರಂದು ‘ಲತಾ ಕೆ ಆವಾಜ್ ಶೋಭಾ ಕೆ ಸಾಥ್’ ಸಂಗೀತ ಕಾರ್ಯಕ್ರಮ
ಮಂಗಳೂರು, ಡಿ.11: ಸಿಂಚನಾ ಮೆಲೊಡಿಸ್ ತಂಡದ ವತಿಯಿಂದ ಡಿ.14ರಂದು ಸಂಜೆ 5 ಗಂಟೆಗೆ ನಗರದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ‘ಲತಾಕಿ ಆವಾಜ್ ಶೋಭಾ ಕೆ ಸಾಥ್’ ಎಂಬ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿದೆ. ಗುರುವಾರ ನಗರದ ಪತ್ರಿಕಾಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ತಂಡದ ಮುಖ್ಯಸ್ಥೆ ಶೋಭಾ ಭಾಸ್ಕರನ್, ಖ್ಯಾತ ಗಾಯಕಿ ಲತಾ ಮಂಗೇಶ್ಕರ್ ಅವರು ಹಾಡಿರುವ ಆಯ್ದ 24 ಸೋಲೋ ಮತ್ತು ಡುಯೆಟ್ ಹಿಂದಿ ಹಾಡುಗಳನ್ನು ತಂಡದ ಒಟ್ಟು 10 ಗಾಯಕರು ಕಾರ್ಯಕ್ರಮದಲ್ಲಿ ಹಾಡಲಿದ್ದಾರೆ. ಹಾಡುಗಳ ಮಧ್ಯೆ ಒಂದೆರಡು ನೃತ್ಯ ಕಾರ್ಯಕ್ರಮಗಳು ಇರಲಿವೆ. ಸಂಗೀತತಜ್ಞ, ಗುರು ರೋಶನ್ ಫ್ರಾನ್ಸಿಸ್ ಮಾರ್ಟಿಸ್ ಉದ್ಘಾಟಿಸಲಿದ್ದು, ಹಿರಿಯ ಸಾಹಿತಿ ಹುಸೈನ್ ಕಾಟಿಪಳ್ಳ ಅಧ್ಯಕ್ಷತೆ ವಹಿಸಲಿದ್ದಾರೆ. ಲಯನ್ಸ್ ಜಿಲ್ಲಾ ಗವರ್ನರ್ ಕುಡುಪಿ ಅರವಿಂದ್ ಶೆಣೈ, ದ.ಕ ಜಿಲ್ಲಾ ಕೇರಳ ಸಮಾಜಂ ಅಧ್ಯಕ್ಷ ಟಿ.ಕೆ ರಾಜನ್, ದ.ಕ, ಜಿಲ್ಲಾ ಸಂಗೀತಗಾರರ ಒಕ್ಕೂಟದ ಅಧ್ಯಕ್ಷ ಧನ್ರಾಜ್, ಉದ್ಯಮಿ ಜಯಶ್ ಅವರು ಭಾಗವಹಿಸಲಿದ್ದಾರೆ ಎಂದರು. ದೀಪಕ್ -ಕೀಬೋರ್ಡ್, ಜಯನ್ -ಕೊಳಲು, ಪ್ರತಾಪ್ ಆಚಾರ್ಯ - ರಿದಂ ಪ್ಯಾಡ್, ಪ್ರಜ್ವಲ್ -ತಬಲ, ರಾಜ್ಗೋಪಾಲ್ -ಗಿಟಾರ್ ನಲ್ಲಿ ಸಹಕರಿಸಲಿದ್ದಾರೆ. ಕಾರ್ಯಕ್ರಮಕ್ಕೆ ಸಾರ್ವಜನಿಕರಿಗೆ ಉಚಿತ ಪ್ರವೇಶವಿದೆ ಎಂದರು. ಗಾಯಕರಾದ ಮನೋಜ್ ಕುಮಾರ್, ನೌಷಾದ್, ಆಸೀಫ್, ಸುರೇಶ್ ಬಂಗೇರ, ಸಲಾವುದ್ದೀನ್ ಸಲಾಂ ಉಪಸ್ಥಿತರಿದ್ದರು.
ಕಾರ್ಕಳ: ಮಹಿಳೆಯರು, ಮಕ್ಕಳಿಗೆ ನ್ಯಾಯ ಒದಗಿಸಿ ಸಮಾಜದ ಸ್ವಸ್ಥ ಕಾಪಾಡಲು ಪ್ರಮುಖ ವಾಗಿ ಕೆಲಸ ಮಾಡಬೇಕಾಗಿದ್ದ ಮಹಿಳಾ ಸಾಂತ್ವನ ಕೇಂದ್ರ ಏಕ ಪಕ್ಷಿಯವಾಗಿ ಕೆಲಸ ಮಾಡುತ್ತಿದ್ದು ಸಮಾಜದ ನೊಂದವರ ಧ್ವನಿ ಆಗಿರುವ ಸಮಾಜ ಸೇವಕರ ಧ್ವನಿ ಅಡಗಿಸುವ ಪ್ರಯತ್ನವನ್ನು ಕಾರ್ಕಳ ಮಹಿಳಾ ಸಾಂತ್ವನ ಕೇಂದ್ರ ಮಾಡುತ್ತಿದೆ ಎಂದು ರಮಿತಾ ಸೂರ್ಯವಂಶಿ ಆರೋಪಿಸಿದ್ದಾರೆ. ಈ ಸಂಬಂಧ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ದೂರು ನೀಡಿರುವ ಅವರು, ದೂರುದಾರರು ದೂರು ನೀಡಲು ಬಂದಾಗ ಯಾವುದೇ ನೋಟಿಸ್ ಕೊಡದೇ ಏಕಾಏಕಿಯಾಗಿ ತಮ್ಮ ಕಚೇರಿಗೆ ಬರಲು ಹೇಳುವುದು. ಬರದೇ ಇದ್ದಲ್ಲಿ ದೂರುದಾರರಿಗೆ ಸ್ವತಃ ಇವರೇ ದೂರನ್ನು ಬರೆದು ಕೊಟ್ಟು ಸುಳ್ಳು ಕಂಪ್ಲೇಂಟ್ ಗಳನ್ನು ಸೃಷ್ಟಿಸುವಂತಹ ಕೆಲಸವನ್ನು ಕಾರ್ಕಳ ಸಾಂತ್ವಾನ ಕೇಂದ್ರದ ಮಹಿಳಾ ಒಕ್ಕೂಟದ ಅಧ್ಯಕ್ಷೆ ಮಾಡುತ್ತಿದ್ದಾರೆ. ಈ ಮಹಿಳಾ ಒಕ್ಕೂಟದ ಅಧ್ಯಕ್ಷರು ಎಲ್ಲ ವಿಚಾರದಲ್ಲೂ ಏಕಪಕ್ಷೀಯವಾಗಿ ತೀರ್ಮಾನ ಕೈಗೊಳ್ಳುತ್ತಿದ್ದು, ನಿಜವಾಗಿಯೂ ನೊಂದವರಿಗೆ ನ್ಯಾಯ ಇವರಿಂದ ಸಿಗುತಿಲ್ಲ. ಮಹಿಳಾ ಅಧ್ಯಕ್ಷೆಯ ಬಗ್ಗೆ ಸಾರ್ವಜನಿಕವಾಗಿಯೂ ಹಲವು ದೂರುಗಳು ಕೇಳಿ ಬರುತಿದ್ದು, ಈ ಎಲ್ಲ ವಿಚಾರಗಳು ಗಮನಕ್ಕೆ ಬಂದ ಹಿನ್ನಲೆಯಲ್ಲಿ ಕಾರ್ಕಳ ಸಾಂತ್ವನ ಕೇಂದ್ರದ ಮಹಿಳಾ ಒಕ್ಕೂಟದ ಅಧ್ಯಕ್ಷರ ಬದಲಾವಣೆ ಅಗತ್ಯ ಎಂದು ಈಗಾಗಲೇ ಮಹಿಳಾ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ. ದೂರಿನ ಮೇಲೆಯೂ ಮುಂದೆ ಅವರನ್ನೇ ಮುಂದುವರಿಸಿದಲ್ಲಿ ಮಹಿಳೆಯರು ಒಟ್ಟು ಗೂಡಿ ಪ್ರತಿಭಟನೆ ನಡೆಸಲಿದ್ದೇವೆ ಮತ್ತು ಕಾನೂನು ರೀತಿಯಲ್ಲಿ ಅವರ ವಿರುದ್ಧ ಕ್ರಮಕ್ಕೆ ಆಗ್ರಹಿಸಲಿದ್ದೇವೆ ಎಂದು ಸಾಮಾಜಿಕ ಕಾರ್ಯಕರ್ತೆ ರಮಿತಾ ಸೂರ್ಯವಂಶಿ ಯವರು ಪ್ರತಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಸದನ ಸ್ವಾರಸ್ಯ: ಕಾಣದ ಕುರ್ಚಿಗೆ ಹಂಬಲಿಸಿದೆ ಮನ, ಕೂಡಬಲ್ಲನೇ ಒಂದು ದಿನ! ಡಿಕೆಶಿ ಕಾಲೆಳೆದ ಸುನೀಲ್ ಕುಮಾರ್
ವಿಧಾನಸಭೆಯಲ್ಲಿ ಉತ್ತರ ಕರ್ನಾಟಕದ ಸಮಸ್ಯೆಗಳ ಚರ್ಚೆ ವೇಳೆ, ಬಿಜೆಪಿ ಸದಸ್ಯ ಸುನೀಲ್ ಕುಮಾರ್ ಅವರು ಡಿಸಿಎಂ ಡಿಕೆ ಶಿವಕುಮಾರ್ ಅವರ ನಾಯಕತ್ವದ ಬಗ್ಗೆ ಪರೋಕ್ಷವಾಗಿ ಪ್ರಶ್ನಿಸಿದರು. ಮೇಕೆದಾಟು ಯೋಜನೆ ಬಗ್ಗೆ ಡಿಕೆಶಿ ನೀಡಿದ ವಿವರಣೆಗಳಿಗೆ ಸುನೀಲ್ ಕುಮಾರ್ ವ್ಯಂಗ್ಯವಾಡಿದರು. ಕಾಣದ ಕುರ್ಚಿಗೆ ಹಂಬಲಿಸುತ್ತಿರುವ ಡಿಕೆಶಿ ಬಗ್ಗೆ ಹಾಡಿನ ಸಾಲುಗಳನ್ನು ಉಲ್ಲೇಖಿಸಿ ಟೀಕಿಸಿದರು. ಇದು ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಹಣ ನೀಡಿದೆ.
ಮತ್ತೆ ಸ್ವಲ್ಪ ಇಳಿಕೆ ಕಂಡ ಚಿನ್ನ; ಬೆಳ್ಳಿ ದಾಖಲೆ ಏರಿಕೆ
ಅಮೆರಿಕದ ಫೆಡರಲ್ ರಿಸರ್ವ್ ನಿರೀಕ್ಷೆಯ ಪ್ರಕಾರ ಸತತ ಮೂರನೇ ಬಾರಿ ಪ್ರಮುಖ ಬಡ್ಡಿದರ ಕಡಿತಗೊಳಿಸಿದೆ. ಸಾಮಾನ್ಯವಾಗಿ ಫೆಡ್ ಬಡ್ಡಿದರ ಇಳಿಸಿದರೆ ಚಿನ್ನದ ಬೆಲೆ ಏರುತ್ತದೆ. ಆದರೆ ಮುಂದಿನ ವರ್ಷದ ಬಡ್ಡಿದರ ಕಡಿತದ ಅನಿಶ್ಚಿತತೆಯಿಂದಾಗಿ ಬುಧವಾರ ಏರಿಕೆಯಾದ ಚಿನ್ನ ಗುರುವಾರ ಸ್ವಲ್ಪ ಇಳಿದಿದೆ. ಹಾಗಿದ್ದರೆ, ಪ್ರಸ್ತುತ ಚಿನ್ನ ಮತ್ತು ಬೆಳ್ಳಿ ಬೆಲೆ ಎಷ್ಟಿದೆ ಎಂಬ ಮಾಹಿತಿ ಇಲ್ಲಿದೆ. ಅಮೆರಿಕದ ಹಣದುಬ್ಬರ ನಿಯಂತ್ರಣಕ್ಕೆ ಬರುತ್ತಿರುವ ಹಿನ್ನೆಲೆಯಲ್ಲಿ ಬಡ್ಡಿದರವನ್ನು ಮತ್ತೊಮ್ಮೆ ಇಳಿಸಲಾಗಿದೆ. ಫೆಡರಲ್ ಓಪನ್ ಮಾರ್ಕೆಟ್ ಕಮಿಟಿ (ಎಫ್ಒಎಂಸಿ) ಸಭೆಯ ನಿರ್ಧಾರಗಳನ್ನು ಫೆಡ್ ಅಧ್ಯಕ್ಷ ಜೆರೋಮ್ ಪಾವೆಲ್ ಅವರು ಬುಧವಾರ ಪ್ರಕಟಿಸಿದ್ದಾರೆ. ಭಾರತೀಯ ಕಾಲಮಾನದ ಪ್ರಕಾರ ಡಿಸೆಂಬರ್ 10ರ ಮಧ್ಯರಾತ್ರಿ 11.30ರ ನಂತರ ಈ ಘೋಷಣೆ ಹೊರಬಿದ್ದಿದೆ. 25 ಮೂಲಾಂಶಳಷ್ಟು ಬಡ್ಡಿದರ ಕಡಿತಗೊಳಿಸಲಾಗಿದ್ದು, ಈಗ ಅಲ್ಲಿನ ಬಡ್ಡಿದರದ ಶ್ರೇಣಿ ಶೇ 3.5 - ಶೇ3.75 ಕ್ಕೆ ಇಳಿದಿದೆ. ಅಮೆರಿಕದ ಆರ್ಥಿಕತೆಗೆ ಬೆಂಬಲ ನೀಡಲು ಮತ್ತು ಉದ್ಯೋಗ ಸೃಷ್ಟಿ ಸುಧಾರಿಸಲು ಈ ನಿರ್ಧಾರ ಅನಿವಾರ್ಯವಾಗಿತ್ತು ಎಂದು ಪಾವೆಲ್ ತಿಳಿಸಿದ್ದಾರೆ. ಈ ವರ್ಷದಲ್ಲಿ ಫೆಡ್ ಸತತ ಮೂರನೇ ಬಾರಿಗೆ ದರ ಕಡಿತಗೊಳಿಸಿದೆ (ಸೆಪ್ಟೆಂಬರ್, ಅಕ್ಟೋಬರ್ ಮತ್ತು ಈಗ ಡಿಸೆಂಬರ್ನಲ್ಲಿ). ಇದರಿಂದಾಗಿ ಅಮೆರಿಕದಲ್ಲಿ ಗೃಹ ಸಾಲ ಮತ್ತು ಕಾರು ಸಾಲಗಳ ಬಡ್ಡಿ ದರಗಳು ಕಡಿಮೆಯಾಗಲಿವೆ. ಬಡ್ಡಿದರ ಇಳಿಕೆಯ ಸಂಕೇತಗಳಿಂದಾಗಿ ಕಳೆದ ಕೆಲವು ದಿನಗಳಿಂದ ಏರುತ್ತಿದ್ದ ಚಿನ್ನದ ಬೆಲೆ, ಅಧಿಕೃತ ಘೋಷಣೆಯ ನಂತರ ಮತ್ತೆ ಏರಿಳಿತ ಕಂಡಿದೆ. ಫೆಡರಲ್ ರಿಸರ್ವ್ ಬಡ್ಡಿದರ ಕಡಿತ ಮಾಡಿದ ನಂತರ ಮುಂದಿನ ವರ್ಷ ಸಡಿಲಗೊಳಿಸುವ ಸಾಧ್ಯತೆಯಿಲ್ಲ ಎಂದು ಹೇಳಿದ ಕಾರಣ ಅನಿಶ್ಚಿತತೆ ಉಂಟಾಗಿ ಗುರುವಾರ ಚಿನ್ನದ ಬೆಲೆ ಒಂದು ವಾರದ ಗರಿಷ್ಠ ಮಟ್ಟದಿಂದ ಕುಸಿದಿದೆ. ಆದರೆ ಬೆಳ್ಳಿ ದಾಖಲೆಯ ಗರಿಷ್ಠ ಪಟ್ಟ ತಲುಪಿದೆ. ಮಂಗಳೂರಿನಲ್ಲಿ ಚಿನ್ನದ ದರವೆಷ್ಟು? ಗುರುವಾರ ಡಿಸೆಂಬರ್ 11ರಂದು ಮಂಗಳೂರಿನಲ್ಲಿ ಬಂಗಾರದ ಬೆಲೆ ಮತ್ತೆ ಸ್ವಲ್ಪ ಇಳಿಕೆ ಕಂಡಿದೆ. ಬೆಳಗಿನ ವಹಿವಾಟಿನಲ್ಲಿ ಒಂದು ಗ್ರಾಂ 24 ಕ್ಯಾರೆಟ್ ಚಿನ್ನಕ್ಕೆ ರೂ. 13,020 (-11), 22 ಕ್ಯಾರೆಟ್ ಚಿನ್ನಕ್ಕೆ ರೂ. 11,935 (-10) ಮತ್ತು 18 ಕ್ಯಾರೆಟ್ ಚಿನ್ನಕ್ಕೆ ರೂ. 9,765 (-8) ಬೆಲೆಗೆ ಕುಸಿದಿದೆ. ಕರ್ನಾಟಕದಲ್ಲಿ ಚಿನ್ನದ ಬೆಲೆ ಎಷ್ಟಿದೆ? ಒಂದು ಗ್ರಾಂ ಚಿನ್ನ 18 ಕ್ಯಾರೆಟ್ ಆಭರಣ ಚಿನ್ನದ ಬೆಲೆ – ರೂ. 9,774 22 ಕ್ಯಾರೆಟ್ ಆಭರಣ ಚಿನ್ನದ ಬೆಲೆ – ರೂ. 11,946 24 ಕ್ಯಾರೆಟ್ ಬಂಗಾರದ ಬೆಲೆ (ಅಪರಂಜಿ) – ರೂ. 13,032 ಎಂಟು ಗ್ರಾಂ ಚಿನ್ನ 18 ಕ್ಯಾರೆಟ್ ಆಭರಣ ಚಿನ್ನದ ಬೆಲೆ – ರೂ. 78,192 22 ಕ್ಯಾರೆಟ್ ಆಭರಣ ಚಿನ್ನದ ಬೆಲೆ – ರೂ. 95,568 24 ಕ್ಯಾರೆಟ್ ಬಂಗಾರದ ಬೆಲೆ (ಅಪರಂಜಿ) – ರೂ. 1,04,256 ಬೆಳ್ಳಿ ದರದಲ್ಲಿ ಭಾರೀ ಏರಿಕೆ ಚಿನ್ನಕ್ಕಿಂತಲೂ ಬೆಳ್ಳಿ ದರ ಅತಿ ವೇಗವಾಗಿ ಏರಿಕೆಯಾಗಿದೆ. ನಿನ್ನೆ ಬುಧವಾರ ಒಂದೇ ದಿನದಲ್ಲಿ ಬೆಳ್ಳಿಯ ಬೆಲೆ 8,000 ರೂಪಾಯಿ ಏರಿಕೆಯಾಗಿತ್ತು. ಇಂದು ಗುರುವಾರ ಬೆಳ್ಳಿ ಬೆಲೆ ಮತ್ತೆ ರೂ. 2000 ಏರಿಕೆಯಾಗಿದ್ದು, ರೂ. 2.01 ಲಕ್ಷ ರೂಪಾಯಿ ತಲುಪಿದೆ. ಈ ಹಿಂದೆ ಅಕ್ಟೋಬರ್ 15ರಂದು ದಾಖಲಿಸಿದ್ದ ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ಮೀರಿಸಿದೆ. ಕೈಗಾರಿಕಾ ಕ್ಷೇತ್ರದಲ್ಲಿ ಬೆಳ್ಳಿಗೆ ಇರುವ ಭಾರೀ ಬೇಡಿಕೆಯಿಂದಾಗಿ ಬೆಳ್ಳಿ ಬೆಲೆ ಏರಿಕೆಯಾಗುತ್ತಿದೆ.
ಕಾರ್ಕಳ | ಪಳ್ಳಿ ಬೆಳ್ಳೆ ಬಸ್ ಸೇವೆ ಪುನರಾರಂಭ: ಶುಭದ ರಾವ್ ಅಭಿನಂದನೆ
ಕಾರ್ಕಳ : ರಾಜ್ಯ ಕಾಂಗ್ರೆಸ್ ಸರ್ಕಾರದ ಜನಪ್ರಿಯ ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಶಕ್ತಿ ಯೋಜನೆಯ ಮೂಲಕ ಆರಂಭಗೊಂಡಿದ್ದ ಪಳ್ಳಿ ಬೆಳ್ಳೆ ಸರ್ಕಾರಿ ಬಸ್ ಸಂಚಾರವು ಕಾರಣಾಂತರಗಳಿಂದ ಸ್ಥಗಿತಗೊಂಡಿದ್ದು, ಇದೀಗ ಕಾರ್ಕಳ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷರಾದ ಅಜಿತ್ ಹೆಗ್ಡೆ ಮಾಳ ಅವರ ಸತತ ಪ್ರಯತ್ನದ ಫಲವಾಗಿ ಮತ್ತೆ ಈ ಭಾಗದಲ್ಲಿ ಬಸ್ ಸಂಚಾರ ಆರಂಭಗೊಂಡಿದೆ. ಬಸ್ ಸಂಚಾರದ ಸ್ಥಗಿತದಿಂದ ವಿದ್ಯಾರ್ಥಿಗಳಿಗೆ, ದೈನಂದಿನ ಉದ್ಯೋಗಕ್ಕೆ ತೆರಳುವವರಿಗೆ ತೀವ್ರ ತೊಂದರೆಯಾಗಿದ್ದು ಸಾರ್ವಜನಿಕರು ಈ ಬಗ್ಗೆ ಹಲವಾರು ಬಾರಿ ಮನವಿಯನ್ನು ಮಾಡಿದ್ದರು, ಸಾರ್ವಜನಿಕರ ಸಮಸ್ಯೆಯನ್ನು ಮನಗಂಡು ಗ್ಯಾರಂಟಿ ಸಮಿತಿಯ ಅಧ್ಯಕ್ಷರಾದ ಅಜಿತ್ ಹೆಗ್ಡೆ ಮಾಳ ಅವರು ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಸಭೆಯಲ್ಲಿ ಪಳ್ಳಿ ಬೆಳ್ಳೆ ಮಾರ್ಗವಾಗಿ ಪುನರ್ ಬಸ್ ಸಂಚಾರಕ್ಕೆ ಅಧಿಕಾರಿಗಳ ಗಮನ ಸೆಳೆದಿದ್ದರು. ಬಸ್ ಸಂಚಾರ ಆರಂಭ ಮಾಡದಿದ್ದರೆ ಅಧಿಕಾರಿಗಳ ಸಮ್ಮುಖದಲ್ಲಿ ಧರಣಿ ಕುಳಿತುಕೊಳ್ಳುವ ಎಚ್ಚರಿಕೆಯನ್ನು ಕೂಡ ನೀಡಿದ್ದರು. ಅಜಿತ್ ಹೆಗ್ಡೆಯವರು ಅಂದಿನ ಸಭೆಯಲ್ಲಿ ಆಡಿದ ಮಾತು ರಾಜ್ಯ ಗ್ಯಾರಂಟಿ ಸಮಿತಿಯ ಅಧ್ಯಕ್ಷರಾದ ಶಾಸಕ ಹೆಚ್.ಎಮ್. ರೇವಣ್ಣ ಅವರಿಗೆ ತಲುಪಿದ್ದು ತಕ್ಷಣ ರೇವಣ್ಣ ಹಾಗೂ ರಾಜ್ಯ ಉಪಾದ್ಯಕ್ಷರಾದ ಪುಷ್ಪಾ ಅಮರನಾಥ್ ಅವರು ಜಿಲ್ಲಾಡಳಿತಕ್ಕೆ ಸೂಚನೆಯನ್ನು ನೀಡಿ ಪಳ್ಳಿ ಬೆಳ್ಳೆ ಮಾರ್ಗವಾಗಿ ಬಸ್ ಸಂಚಾರವನ್ನು ಪುನರಾರಂಭಿಸುವಂತೆ ಮಾಡಿದ್ದಾರೆ. ಪಳ್ಳಿ ಬೆಳ್ಳೆ ಭಾಗದ ಸಾರ್ವಜನಿಕರ ಮನವಿಯ ಮೇರೆಗೆ ತಾಲೂಕು ಗ್ಯಾರಂಟಿ ಸಮಿತಿಯ ಅಧ್ಯಕ್ಷರಾದ ಅಜಿತ್ ಹೆಗ್ಡೆಯವರ ವಿನಂತಿಗೆ ಪೂರಕವಾಗಿ ಸ್ಪಂದಿಸಿ ಬಸ್ ಸಂಚಾರವನ್ನು ಪುನರ್ ಆರಂಭಿಸುವಲ್ಲಿ ಸಹಕಾರ ನೀಡಿದ ಸಾರಿಗೆ ಸಂಸ್ಥೆಯ ಅಧಿಕಾರಿಗಳಿಗೆ ಗ್ಯಾರಂಟಿ ಸಮಿತಿಯ ರಾಜ್ಯಾಧ್ಯಕ್ಷರಾದ ರೇವಣ್ಣ, ಉಪಾದ್ಯಕ್ಷ ಪುಷ್ಪಾ ಅಮರನಾಥ್ ಅವರಿಗೆ, ಬಸ್ ಸಂಚಾರಕ್ಕೆ ಭಗೀರಥ ಪ್ರಯತ್ನ ನಡೆಸಿದ ಅಜಿತ್ ಹೆಗ್ಡೆ ಮಾಳ ಅವರಿಗೆ ಸಾರ್ವಜನಿಕರ ಪರವಾಗಿ ಕಾರ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶುಭದ ರಾವ್ ಅಭಿನಂದನೆ ಸಲ್ಲಿಸಿದ್ದಾರೆ.
ಲೋಕಸಭೆ ಮತ್ತು ರಾಜ್ಯಸಭೆಗಳು ಇಡೀ ದೇಶಕ್ಕೆಅನ್ವಯವಾಗುವಂತಹ ಶಾಸನಗಳನ್ನು ಜಾರಿ ಮಾಡುತ್ತವೆ. ಆದರೆ ಈ ಶಾಸನಸಭೆಗಳಲ್ಲೇ ಕಾನೂನುಗಳು ಉಲ್ಲಂಘನೆಯಾದರೆ? ಇಂತದ್ದೊಂದು ಗಂಭೀರ ಆರೋಪ ಟಿಎಂಸಿ ಸಂಸದನೋರ್ವನ ವಿರುದ್ಧ ಕೇಳಿಬಂದಿದೆ. ಲೋಕಸಭೆ ಕಲಾಪ ನಡೆಯುವ ವೇಳೆಯೇ ಟಿಎಂಸಿ ಸಂಸದರೊಬ್ಬರು ನಿಷೇಧಕ್ಕೆ ಒಳಗಾಗಿರುವ ಇ-ಸಿಗರೇಟ್ ಸೇದುತ್ತಾರೆ ಎಂದು ಬಿಜೆಪಿ ಸಂಸದ ಅನುರಾಗ್ ಠಾಕೂರ್ ಆರೋಪಿಸಿದ್ದಾರೆ. ಈ ಬಗ್ಗೆ ತನಿಖೆ ನಡೆಸಿ ತಪ್ಪು ಕಂಡುಬಂದರೆ ಕ್ರಮ ಕೈಗೊಳ್ಳುವುದಾಗಿ ಸ್ಪೀಕರ್ ಓಂ ಬಿರ್ಲಾ ಭರವಸೆ ನೀಡಿದ್ದಾರೆ. ಇಲ್ಲಿದೆ ಮಾಹಿತಿ.
RCB Phil Salt: ಐಪಿಎಲ್ 2026 ಮಿನಿ ಹರಾಜಿಗೂ ಮುನ್ನ ಆರ್ಸಿಬಿ ಸ್ಟಾರ್ ಫಿಲ್ ಸಾಲ್ಟ್ ಹೇಳಿಕೆಯೊಂದು ಭಾರೀ ವೈರಲ್
RCB Phil Salt: ಐಪಿಎಲ್ 2025 ಫೈನಲ್ ಪಂದ್ಯದಲ್ಲಿ ಆರ್ಸಿಬಿಯು ಬಲಿಷ್ಠ ಪಂಜಾಬ್ ಕಿಂಗ್ಸ್ ವಿರುದ್ಧ ಗೆಲ್ಲುವ ಮೂಲಕ ಚೊಚ್ಚಲ ಟ್ರೋಫಿ ಎತ್ತಿಡಿದಿತು. ಇದೀಗ ಎಲ್ಲರ ಚಿತ್ತ 2026ರ ಸೀಸನ್ನತ್ತ ನೆಟ್ಟಿದೆ. ಈಗ ಆರ್ಸಿಬಿ ಸ್ಟಾರ್ ಫಿಲ್ ಸಾಲ್ಟ್ ಮಹತ್ವದ ಹೇಳಿಕೆಯೊಂದನ್ನು ನೀಡಿದ್ದು, ಇದು ಭಾರೀ ವೈರಲ್ ಆಗಿದೆ. ಹಾಗಾದ್ರೆ ಅದೇನು ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ
ಮಂಗಳೂರು | ಡಿ.14ರಂದು ‘ಮಣೇಲ್ ದ ಪೆರ್ಮೆ ರಾಣಿ ಅಬ್ಬಕ್ಕ’ ವಿಚಾರ ಸಂಕಿರಣ
ಮಂಗಳೂರು, ಡಿ.11: ತುಳು ಸಾಹಿತ್ಯ ಅಕಾಡೆಮಿ ವತಿಯಿಂದ ಮಂಗಳೂರು ತಾಲೂಕಿನ ಗಂಜಿಮಠ ಗ್ರಾ.ಪಂ. ವ್ಯಾಪ್ತಿಯ ಮಳಲಿಯ ದ.ಕ. ಜಿ.ಪಂ.ಹಿ.ಪ್ರಾ.ಶಾಲೆಯಲ್ಲಿ ರಾಣಿ ಅಬ್ಬಕ್ಕನ ಕುರಿತಾಗಿ ‘ಮಣೇಲ್ ದ ಪೆರ್ಮೆ ರಾಣಿ ಅಬ್ಬಕ್ಕ’ ಎಂಬ ವಿಚಾರ ಸಂಕಿರಣವನ್ನು ಸ್ಥಳೀಯ ರಾಣಿ ಅಬ್ಬಕ್ಕ ಚಾವಡಿಯ ಸಹಭಾಗಿತ್ವದಲ್ಲಿ ಡಿ.14ರಂದು ಬೆಳಗ್ಗೆ 10 ಗಂಟೆಗೆ ಆಯೋಜಿಸಲಾಗಿದೆ. ಗುರುವಾರ ನಗರದ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್, ವಿಚಾರಗೋಷ್ಠಿ ಉದ್ಘಾಟನೆಗೆ ಮೊದಲು ಬೆಳಗ್ಗೆ 9.30ಕ್ಕೆ ಶ್ರೀ ಅನಂತ ಸ್ವಾಮಿ ಬಸದಿಯಿಂದ ವಿಚಾರಗೋಷ್ಠಿ ನಡೆಯುವ ಮಳಲಿ ಸರಕಾರಿ ಪ್ರಾಥಮಿಕ ಶಾಲೆಯ ಆವರಣ ತನಕ ಸಾಂಸ್ಕೃತಿಕ ನಡಿಗೆ ನಡೆಯಲಿದೆ. ಕಾರ್ಯಕ್ರಮವನ್ನು ಕರ್ನಾಟಕ ಜಾನಪದ ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ ಡಾ.ಕೆ.ಚಿನ್ನಪ್ಪಗೌಡ ಉದ್ಘಾಟಿಸುವರು ಎಂದರು. ಅಬ್ಬಕ್ಕನ ಕುರಿತಾಗಿ ನಡೆಯುವ ಗೋಷ್ಠಿಯಲ್ಲಿ ಬಂಟ್ವಾಳದ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ಅಧ್ಯಕ್ಷ ಡಾ.ತುಕಾರಾಮ ಪೂಜಾರಿ ‘ಅಬ್ಬಕ್ಕ ಚಾರಿತ್ರಿಕ ಅವಲೋಕನ’ ವಿಷಯದ ಬಗ್ಗೆ ಹಾಗೂ ಇತಿಹಾಸ ತಜ್ಞ ಡಾ.ಪುಂಡಿಕಾಯಿ ಗಣಪಯ್ಯ ಭಟ್ ‘ಮಣೇಲಿನಲ್ಲಿ ಪ್ರವಾಸಿ ಪಿಯಾತ್ರೋ ದಲ್ಲಾವೆಲ್ಲೆ ಕಂಡ ಅಬ್ಬಕ್ಕ’ ವಿಷಯದ ಬಗ್ಗೆ ಉಪನ್ಯಾಸ ನೀಡುವರು. ವಿಚಾರಗೋಷ್ಠಿಯಲ್ಲಿ ಮಂಡಿಸಲ್ಪಡುವ ಚಾರಿತ್ರಿಕ ವಿಷಯಗಳ ಆಶಯದಂತೆ ಮುಂದಿನ ದಿನಗಳಲ್ಲಿ ಅಬ್ಬಕ್ಕರಾಣಿಯ ಚಿತ್ರವನ್ನು ಸ್ಥಳೀಯ ಶಾಲೆಯ ಹಾಗೂ ಕಟ್ಟೆಮಾರು ಮನೆಯ ಆವರಣಗೋಡೆಯಲ್ಲಿ ಜಿಲ್ಲೆಯ ಹಿರಿಯ ಕಲಾವಿದರು ಚಿತ್ರಿಸುವ ಯೋಜನೆಯನ್ನು ಹೊಂದಲಾಗಿದೆ. ವಿವಿಧ ಗಣ್ಯರು ಹಾಗೂ ಸ್ಥಳೀಯರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದರು. ಅಕಾಡೆಮಿ ರಿಜಿಸ್ಟ್ರಾರ್ ಪೂರ್ಣಿಮಾ, ಸದಸ್ಯರಾದ ಬೂಬ ಪೂಜಾರಿ ಮಳಲಿ, ಅಕ್ಷಯ ಆರ್. ಶೆಟ್ಟಿ, ನಿವೃತ್ತ ಪ್ರಾಂಶುಪಾಲ, ಮಣೇಲ್ ಗ್ರಾಮಸ್ಥ ಪ್ರೊ. ಅಕ್ಷಯ ಕುಮಾರ್ ಮಳಲಿ, ಮಣೇಲ್ ಗ್ರಾಮಸ್ಥ ಪುರಂದರ ಕುಲಾಲ್ ಉಪಸ್ಥಿತರಿದ್ದರು.
ಕಡೂರು | ಗ್ರಾಪಂ ಸದಸ್ಯನ ಹತ್ಯೆ ಪ್ರಕರಣ : ತಮಿಳುನಾಡಿನಲ್ಲಿ ತಲೆಮರೆಸಿಕೊಂಡಿದ್ದ 6 ಆರೋಪಿಗಳ ಬಂಧನ
ಚಿಕ್ಕಮಗಳೂರು : ಸಖರಾಯಪಟ್ಟಣದಲ್ಲಿ ಡಿ.5ರ ರಾತ್ರಿ ನಡೆದ ಕಾಂಗ್ರೆಸ್ ಗ್ರಾ.ಪಂ. ಸದಸ್ಯ ಗಣೇಶ್ ಹತ್ಯೆ ಪ್ರಕರಣದಲ್ಲಿ ಪ್ರಮುಖ ಆರೋಪಿ ಸೇರಿದಂತೆ ಆರು ಜನರನ್ನು ಪೊಲೀಸರು ಬಂಧಿಸಿದ್ದಾರೆ. ತಮಿಳುನಾಡಿನ ಮಧುರೈ ಪ್ರದೇಶದಲ್ಲಿ ತಲೆಮರೆಸಿಕೊಂಡಿದ್ದ ಎ2 ಆರೋಪಿ ನಿತಿನ್, ಎ4 ಆರೋಪಿ ದರ್ಶನ್, ಎ5 ಆರೋಪಿ ಅಜಯ್, ದರ್ಶನ್ ನಾಯ್ಕ್, ಯೋಗೇಶ್ ಮತ್ತು ಫೈಸಲ್ ನನ್ನು ವಿಶೇಷ ತಂಡ ಡಿ.11 ಬಂಧಿಸಿದೆ. ಪ್ರಕರಣದ ತನಿಖೆಗೆ ಸಖರಾಯಪಟ್ಟಣ ಪೊಲೀಸರು ನಾಲ್ಕು ಸದಸ್ಯರ ವಿಶೇಷ ತಂಡವನ್ನು ರಚಿಸಿದ್ದರು. ಈವರೆಗೆ ಗಣೇಶ್ ಕೊಲೆ ಪ್ರಕರಣದಲ್ಲಿ ಒಟ್ಟು 12 ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಂಧಿತರಾದ 6 ಆರೋಪಿಗಳನ್ನು ಇಂದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
5 ವರ್ಷ ತಂದೆಯೇ ಸಿಎಂ ಎಂದಿದ್ದ ಯತೀಂದ್ರ ಸಿದ್ದರಾಮಯ್ಯ : ಡಿಕೆ ಶಿವಕುಮಾರ್ ಅಚ್ಚರಿಯ ಪ್ರತಿಕ್ರಿಯೆ!
Karnataka Power Tussle : ಕಳೆದ ಕೆಲವು ದಿನಗಳಿಂದ ನಡೆಯುತ್ತಿರುವ ಕುರ್ಚಿ ಸಂಘರ್ಷಕ್ಕೆ ತೆರೆಬೀಳುವ ರೀತಿಯಲ್ಲಿ ಕಾಣುತ್ತಿಲ್ಲ. ಮತ್ತೆಮಗುದೊಮ್ಮೆ ನಮ್ಮ ತಂದೆಯೇ ಪೂರ್ಣವಧಿಗೆ ಸಿಎಂ ಎಂದ ಡಾ.ಯತೀಂದ್ರ ಹೇಳಿದ್ದಾರೆ. ಬೆಳಗಾವಿಯ ಅಧಿವೇಶನದ ವೇಳೆ, ಇದಕ್ಕೆ ಡಿಸಿಎಂ ಡಿಕೆ ಶಿವಕುಮಾರ್ ಅಚ್ಚರಿಯ ಪ್ರತಿಕ್ರಿಯೆಯನ್ನು ನೀಡಿದ್ದಾರೆ.
CM vs DCM: 5 ವರ್ಷ ಸಿದ್ದರಾಮಯ್ಯನವರೇ ಸಿಎಂ ಎಂದ ಯತೀಂದ್ರ: ಮಾರ್ಮಿಕವಾಗಿ ಉತ್ತರ ಕೊಟ್ಟ ಡಿ.ಕೆ. ಶಿವಕುಮಾರ್
ಬೆಳಗಾವಿ, ಡಿಸೆಂಬರ್ 11: ಸಿದ್ದರಾಮಯ್ಯ ಅವರು ಪೂರ್ಣ ಐದು ವರ್ಷಗಳ ಕಾಲ ಮುಖ್ಯಮಂತ್ರಿಯಾಗಿರುತ್ತಾರೆ ಎಂಬ ವಿಧಾನ ಪರಿಷತ್ ಸದಸ್ಯ ಯತೀಂದ್ರ ಅವರ ಹೇಳಿಕೆಗೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮಾರ್ಮಿಕವಾಗಿ ಪ್ರತಿಕ್ರಿಯಿಸಿದ್ದಾರೆ. ನಾಯಕತ್ವ ವಿಚಾರವಾಗಿ ವಿಧಾನ ಪರಿಷತ್ ಸದಸ್ಯ ಯತೀಂದ್ರ ಸಿದ್ದರಾಮಯ್ಯ ಅವರ ಹೇಳಿಕೆ ಬಗ್ಗೆ ಮುಖ್ಯಮಂತ್ರಿಗಳು ಉತ್ತರ ನೀಡುತ್ತಾರೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್
ಕರ್ನಾಟಕದಲ್ಲಿ ದ್ವೇಷ ಮತ್ತು ಹಿಂಸೆಯನ್ನು ತಡೆಯುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಇಡಲಾಗಿದೆ. ಗೃಹ ಸಚಿವ ಡಾ. ಜಿ. ಪರಮೇಶ್ವರ ಅವರು ಮಂಡಿಸಿರುವ ಹೊಸ ಮಸೂದೆಯು, ಅಪರಾಧಿಗಳಿಗೆ ಕಠಿಣ ಶಿಕ್ಷೆ ವಿಧಿಸುವ ಮೂಲಕ ಸಮಾಜದಲ್ಲಿ ಸಾಮರಸ್ಯ ಮೂಡಿಸುವ ಗುರಿ ಹೊಂದಿದೆ. ಈ ವಿಧೇಯಕವು 10 ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು 1 ಲಕ್ಷ ರೂ. ವರೆಗೆ ದಂಡವನ್ನು ಪ್ರಸ್ತಾಪಿಸಿದೆ. ಈ ಮಸೂದೆ ರಾಜ್ಯದಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದ್ದು, ಮಸೂದೆಯ ಕುರಿತ ಸಮಗ್ರ ವಿವರಗಳನ್ನು ತಿಳಿಯೋಣ.
IMD Weather Forecast: ಈ ಭಾಗಗಳಲ್ಲಿ ಮಳೆ-ಹಿಮಪಾತ, ಉಳಿದೆಲ್ಲೆಡೆ ಶೀತದ ಅಲೆ ಮುನ್ಸೂಚನೆ
India Cold Waver Alert: ದೇಶಾದ್ಯಂತ ಶೀತಭರಿತ ಗಾಳಿ ಅಬ್ಬರ ಜೋರಾಗಿದೆ. ಕರಾವಳಿ ಪ್ರದೇಶ, ಭೂಮೇಲ್ಮೈ ಸೇರಿದಂತೆ ಎಲ್ಲ ಭಾಗಗಳಲ್ಲಿ ಚಳಿ ಆವರಿಸಿದೆ. ಬೆಳಗ್ಗೆ ದಟ್ಟ ಮಂಜು ಬೀಳುತ್ತಿದೆ. ಇದೀಗ ಹವಾಮಾನ ಇಲಾಖೆ ವಿವಿಧೆಡೆ ಲಘು ಮಳೆ ಜೊತೆಗೆ ಹಿಮಪಾತದ ಮುನ್ನೆಚ್ಚರಿಕೆ ನೀಡಿದೆ. ಇದರೊಂದಿಗೆ ಹಗಲು ಹೊತ್ತು ತಾಪಮಾನ ಏರಿಕೆ ಅಗಿದ್ದು, ಒಂದೆರಡು ಭಾಗಗಳಲ್ಲಿ ಮಳೆ ಬರುವ
ಹೈದರಾಬಾದ್ನಲ್ಲಿ ‘ನಾಯಿ ಕಳೆದಿದೆ’!
ಕನ್ನಡ ನಾಟ್ಯ ರಂಗ, ಹೈದರಾಬಾದ್ ಆಶ್ರಯದಲ್ಲಿ ನಾಯಿ ಕಳೆದಿದೆ ನಾಟಕ (ರಚನೆ, ನಿರ್ದೇಶನ: ರಾಜೇಂದ್ರ ಕಾರಂತ) ತಾ 30-11-2025 ರಂದು ಇಲ್ಲಿನ ಸುಂದರಯ್ಯ ಕಲಾ ನಿಲಯದಲ್ಲಿ ಪ್ರದರ್ಶಿಸಲ್ಪಟ್ಟಿತು. ಬೈಂದೂರಿನ ಲಾವಣ್ಯ ತಂಡದವರ ಈ ಅದ್ಭುತ ಪ್ರಯೋಗ ಹಲವುಕಾಲ ಇಲ್ಲಿಯ ಕನ್ನಡಿಗರ ಮನಗಳಲ್ಲಿ ಸ್ಥಾಯಿಯಾಗಿ ಉಳಿಯುವಂತಹದ್ದು. ಮಕ್ಕಳು ವಿದೇಶವಾಸದ ಬಿಸಿಲುಗುದುರೆಯನ್ನೇರಿ ಹೋದಾಗ ಇಳಿ ವಯಸ್ಸಿನ ತಂದೆತಾಯಿಗಳು ಅನುಭವಿಸುವ ಒಂಟಿತನ, ಪಡುವ ಕಳವಳ, ನಿರಾಸೆ-ಇಂದಿನ ಜ್ವಲಂತ ಸಮಸ್ಯೆಯ ಸುತ್ತ ಹೆಣೆದ ಕತೆ. ಸಾಕು ನಾಯಿಯನ್ನು ಅವರ ಸುಪರ್ದಿಗೆ ಬಿಟ್ಟು ಹೋಗುವ ಮಕ್ಕಳಿಗೆ ಹೆತ್ತವರ ಮೇಲಿನ ಕಾಳಜಿಗಿಂತ ನಾಯಿಯ ಆರೈಕೆಯೇ ಮುಖ್ಯವಾಗುತ್ತದೆ. ಪ್ರತೀ ಫೋನ್ನಲ್ಲೂ ಅವರಿಗೆ ತಮ್ಮ ತಂದೆ ಕೆಮ್ಮುವುದು ಕೇಳದು. ಬದಲಿಗೆ ನಾಯಿಯ ಬಗ್ಗೆ ಕಳಕಳಿಯ ಪ್ರಶ್ನೆಗಳು. ಜೊತೆಗೆ ನಾಯಿಸಾಕಣೆಯಿಂದಾಗಿ ಬರುವ ಮುನಿಸಿಪಾಲಿಟಿಯವರ ಉಪಟಳ ಬೇರೆ. ಯಾವಾಗಲೂ ಈ ದಂಪತಿಯ ಕಷ್ಟ ಸುಖಕ್ಕೆ ಒದಗುವ ಹೊರಗಿನವನಾದ ಅಶೋಕ (ಮೂರ್ತಿ, ಬೈಂದೂರು) ನಾಯಿಯನ್ನು ದೂರ ಕೊಂಡೊಯ್ಯುತ್ತಾನೆ. ನಾಯಿ ಕಾಣೆಯಾದ ಸುದ್ದಿ ಸಿಕ್ಕಿದೊಡನೇ ಅಮೆರಿಕದಿಂದ ಧಾವಿಸಿ ಬಂದ ಮಗ ಸೊಸೆ ಅಶೋಕನನ್ನು ವಿಚಾರಣೆಗೆ ಒಳಪಡಿಸಿ ನಾಯಿಯನ್ನು ಮಾರಿದುದಲ್ಲದೆ ತಮ್ಮ ತಂದೆತಾಯಿಯನ್ನು ನಂಬಿಸಿ ಆಸ್ತಿ-ಮನೆಯನ್ನು ಲಪಟಾಯಿಸುವ ಹುನ್ನಾರವೂ ಅವನಿಗೆ ಇದೆಯೆಂದು ಆಪಾದಿಸುತ್ತಾರೆ. ಅನಿರೀಕ್ಷಿತ ತಿರುವಿನೊಂದಿಗೆ ಕೊನೆಗೊಳ್ಳುವ ಈ ನಾಟಕದ ಆರಂಭದಲ್ಲೇ ಜಿ.ಎಸ್.ಎಸ್.ರ ಭಾವಗೀತೆ- ‘‘ಎಲ್ಲೋ ಹುಡುಕಿದೆ ಇಲ್ಲದ ದೇವರ...’’ - ನಾಟಕದ ಆಶಯದ ಸುಳಿವನ್ನು ನೀಡುತ್ತದೆ. ‘‘ಅಮ್ಮಾ ನಿನ್ನ ಎದೆಯಾಳದಲ್ಲಿ’’ ಮತ್ತಿತರ ಜನಜನಿತ ಗೀತೆಗಳು ಸನ್ನಿವೇಶಗಳಿಗೆ ಭಾವ ಪುಷ್ಟಿಯನ್ನು ಒದಗಿಸುತ್ತವೆ. ರಂಗದ ಮೇಲೆ ಒಮ್ಮೆಯೂ ಕಾಣಿಸದ ನಾಯಿಯ ಪಾತ್ರ - ಕಳೆದುಹೋದವೆಂದುಕೊಂಡ ಮಾನವ ಸಂಬಂಧಗಳಿಗೆ, ನಾವು ನಿರೀಕ್ಷಿಸಿದ ಕಡೆಯಲ್ಲಲ್ಲದೆ ಮತ್ತೆಲ್ಲೋ ಸಿಗುವ ಪ್ರೀತಿ ವಿಶ್ವಾಸಗಳಿಗೆ ಸಂಕೇತವಾಗಿ ನೋಡುಗರ ಹೃದಯವನ್ನು ತಟ್ಟುತ್ತದೆ. ಉದಯ ಆಚಾರ್ಯರ ಬೆಳಕು ಸಂಯೋಜನೆಯಲ್ಲಿ (ಉದಾ-ದುಃಸ್ವಪ್ನದ ದೃಶ್ಯ)ಈ ವಾಸ್ತವ ಕತೆ ಅತ್ಯಂತ ಪರಿಣಾಮಕಾರಿಯಾಗಿ ಮೂಡಿ ಬಂದಿತು. ಒಂದೂವರೆ ಗಂಟೆ ಯಾವೊಬ್ಬ ಪ್ರೇಕ್ಷಕರೂ ಮೊಬೈಲ್ ಕಡೆ ನೋಡದೇ ಇದ್ದುದು, ತುಂಬಿದ ಸಭೆಯಲ್ಲಿ ಒಬ್ಬರೂ ಏಳದೆ ಕುಳಿತೆಡೆಯಲ್ಲೇ ಮಂತ್ರಮುಗ್ಧರಾಗಿದ್ದುದು ಈ ಮನೆಮನೆಯ ಕತೆ ಸಾಧಿಸಿದ ವಿಕ್ರಮವೆಂದೇ ಹೇಳಬೇಕು. ಪ್ರತೀ ಪಾತ್ರದಲ್ಲೂ ಜೀವ ತುಂಬಿದ ಪಾತ್ರವರ್ಗದಲ್ಲಿ ತಂದೆ ತಾಯಿಯ ಪಾತ್ರದಲ್ಲಿ ಸುಬ್ರಹ್ಮಣ್ಯ ಜಿ.ಉಪ್ಪುಂದ ಮತ್ತು ನಿಧಿ ನಾಯಕ್, ಕಂಬದ ಕೋಣೆ ಉಲ್ಲೇಖನೀಯರು- ಕೊನೆಯ ದೃಶ್ಯದಲ್ಲಿ ಅವರ ಅಭಿನಯದಿಂದಾಗಿ ಹನಿಗಣ್ಣಾಗದ ಸಭಿಕರೇ ಇರಲಿಲ್ಲವೆನ್ನಬೇಕು. ಸಾಕು ಮಗನಾಗಿ ಅಶೋಕ್ ನಾಯಿಯಂತೆ ಶಬ್ದ ಹೊರಡಿಸಿದ್ದು, ಬಿಗ್ಬಾಸ್ ವಿಜೇತೆ ಮುನಿವೆಂಕಟಮ್ಮನ(ಜ್ಯೋತ್ಸ್ನಾ) ತೆಲುಗು ಮಿಶ್ರಿತ ಕನ್ನಡ ಲಘು ಹಾಸ್ಯಗಳು- ಸಭಿಕರ ಮನರಂಜಿಸಿದವು. ಕೇಮಿಯೋಗಳಲ್ಲಿ ಪಿಎ ಪಾತ್ರದ ಪಾಂಡು, ಸಾಬಿಯಾಗಿ ಗಣೇಶ್ ಪರಮಾನಂದ, ಪತ್ರಕರ್ತನಾಗಿ ರಾಜೇಶ್ ನಾಯಕ್ ಮನ ಸೆಳೆದರು. ಹಾಗೆಯೇ ಬಾಯಿ ಬಿಟ್ಟು ಹೇಳಲಾಗದ ಸಂದೇಶಗಳನ್ನೂ ಮುಟ್ಟಿಸುವುದರಲ್ಲಿ ಯಶಸ್ವಿಯಾದರು. ಪಾತ್ರವರ್ಗದ ಎಲ್ಲರೂ ತಮ್ಮ ಸಹಜ ನಟನೆಯಿಂದ ತಮ್ಮದೇ ಕತೆಯನ್ನು ರಂಗದ ಮೇಲೆ ನೋಡುವ ತಾದಾತ್ಮ್ಯಭಾವವನ್ನು ಪ್ರೇಕ್ಷಕರಲ್ಲಿ ಮೂಡಿಸಿದರು. ಹಿತಮಿತವಾದ ವೇಷಭೂಷಣ ಮತ್ತು ಪ್ರಸಾದನ-ತ್ರಿವಿಕ್ರಮ್ ರಾವ್ ಉಪ್ಪುಂದ ಅವರಿಂದ. ಮಾನವ ಸ್ವಭಾವವನ್ನು ಸಣ್ಣ ಸಣ್ಣ ಸಹಜ ವಿವರಗಳಲ್ಲಿ ಚಿತ್ರಿಸಿದ ನಾಟಕಕಾರ, ನಿರ್ದೇಶಕ, ರಾಜೇಂದ್ರ ಕಾರಂತರು ಅಭಿನಂದನೀಯರು. ಎಲ್ಲೂ ಅತಿ ನಾಟಕೀಯತೆ ಇರದೆ ಸರಳ ಸುಂದರವಾಗಿ ಮೂಡಿ ಬಂದ ಅಪರೂಪದ ಪ್ರದರ್ಶನ.
ಆರೆಸ್ಸೆಸ್ ಕೋಮುವಾದ ಬಿತ್ತುವ ಸಂಘಟನೆಯಲ್ಲ: ಪ್ರಹ್ಲಾದ್ ಜೋಶಿ
ಹೊಸದಿಲ್ಲಿ, ಡಿ. 11: ಕಾಂಗ್ರೆಸ್ಸಿಗರು ಇನ್ನಾದರೂ ಪಾಠ ಕಲಿಯಲಿ. ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರೆಸ್ಸೆಸ್) ಯಾವತ್ತೂ ರಾಷ್ಟ್ರೀಯ ಹಿತಕ್ಕಾಗಿ ಇರುವಂತಹ ಒಂದು ಜಾಗೃತ ಸಂಘಟನೆಯೇ ಹೊರತು ಕೋಮುವಾದ ಬಿತ್ತುವುದು ಅದರ ಕೆಲಸವಲ್ಲ. ದೇಶವನ್ನು ಜಾಗೃತಗೊಳಿಸುವುದೇ ಅದರ ಧ್ಯೇಯ ಮತ್ತು ಶಕ್ತಿ ಎಂಬುದನ್ನು ಅರಿತುಕೊಳ್ಳಲಿ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಕಾಂಗ್ರೆಸ್ ನಾಯಕರಿಗೆ ತಿರುಗೇಟು ನೀಡಿದ್ದಾರೆ. ಗುರುವಾರ ದಿಲ್ಲಿಯಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಆರೆಸ್ಸೆಸ್ ಶಬ್ದ ಕೇಳಿದರೆ ಸಾಕು ಉರಿದುಬಿಡುತ್ತಿದ್ದ ಕಾಂಗ್ರೆಸ್ಸಿಗರಿಗೆ ಇದೀಗ ಅವರ ಸರಕಾರದಿಂದಲೇ ತಕ್ಕ ಉತ್ತರ ಸಿಕ್ಕಿದೆ. ಕರ್ನಾಟಕ ರಾಜ್ಯದಲ್ಲಿ 518 ಆರೆಸ್ಸೆಸ್ ಪಥಸಂಚಲನ ಕಾರ್ಯಕ್ರಮಗಳು ಅತ್ಯಂತ ಶಿಸ್ತುಬದ್ಧವಾಗಿ ಯಶಸ್ವಿಗೊಂಡಿವೆ. ಕಾಂಗ್ರೆಸ್ಸಿಗರು ಮಾಡಿದ ಅಪಪ್ರಚಾರಕ್ಕೆ ಇದು ತಕ್ಕ ಉತ್ತರವಾಗಿದೆ ಎಂದು ಹೇಳಿದರು. ರಾಷ್ಟ್ರೀಯ ಸ್ವಯಂ ಸೇವಕರ ಸಂಘದ ಪಥಸಂಚಲನಕ್ಕೆ ಅವಕಾಶ ಕೊಟ್ಟರೆ ಗದ್ದಲ, ಗಲಾಟೆ, ಕೋಮು ಗಲಭೆಗೆ ಕಾರಣವಾಗುತ್ತದೆ ಎಂದು ಕಾಂಗ್ರೆಸ್ ಅಪಪ್ರಚಾರ ಮಾಡುತ್ತಲೇ ಇತ್ತು. ಆದರೆ, ರಾಜ್ಯದಲ್ಲಿ ಇಷ್ಟೊಂದು ಪ್ರಮಾಣದಲ್ಲಿ ಪಥಸಂಚಲನ ನಡೆಸಿದ್ದರೂ ಅಂತಹ ಯಾವುದೇ ಅಹಿತಕರ ವಾತಾವರಣ ಉಂಟಾಗಿಲ್ಲ. ಸಂಘದ ಹೆಸರು ಕೇಳಿದರೆ ಸಾಕು ಕಾಂಗ್ರೆಸ್ ನಾಯಕರಿಗೆ ಮೈ ಉರಿಯುತ್ತದೆ. ಇಂತಹವರಿಗೆ ಇದೀಗ ಕಾಂಗ್ರೆಸ್ ಸರಕಾರವೇ ತಕ್ಕ ಉತ್ತರ ನೀಡಿದೆ ಎಂದರು. ಆರೆಸ್ಸೆಸ್ ಪಥಸಂಚಲನಕ್ಕೆ ಅನುಮತಿ ನೀಡಿದರೆ ಗಲಾಟೆ, ದೊಂಬಿ ಹಾಗೂ ಕೋಮು ಗಲಭೆಗಳಿಗೆ ದಾರಿಯಾಗುತ್ತದೆ ಎಂಬ ಕಾಂಗ್ರೆಸ್ ನಾಯಕರ ಅಪಪ್ರಚಾರದ ನಡುವೆಯೂ ಧೃತಿಗೆಡದೆ ರಾಜ್ಯದಲ್ಲಿ ಬರೋಬ್ಬರಿ 518 ರಾಷ್ಟ್ರೀಯ ಪಥಸಂಚಲನ ಕಾರ್ಯಕ್ರಮಗಳನ್ನು ನಡೆಸಿದೆ. ಸಂಘವು ಶಿಸ್ತಿಗೆ ಪ್ರತೀಕವಾಗಿದೆ ಮತ್ತು ‘ದೇಶ ಮೊದಲು, ದೇಶ ಸೇವೆಯೇ ಪರಮೋಚ್ಚ' ಎಂಬ ಆರೆಸ್ಸೆಸ್ ಸಿದ್ಧಾಂತವನ್ನು ಮತ್ತಷ್ಟು ಬಲವಾಗಿ ಪ್ರತಿಪಾದಿಸಿದೆ ಎಂದು ಜೋಶಿ ಪ್ರತಿಕ್ರಿಯೆ ನೀಡಿದರು.
ಪಡುಬಿದ್ರಿ | ಟೆಂಪೋ ಮಗುಚಿ ಬಿದ್ದು ಮಹಿಳೆ ಮೃತ್ಯು
ಪಡುಬಿದ್ರಿ: ಕಾಂಕ್ರೀಟ್ ಕೆಲಸಕ್ಕೆ ಸಾಗುತ್ತಿದ್ದ ಟೆಂಪೋವೊಂದು ಟಯರ್ ಸ್ಫೋಟಗೊಂಡು ಮಗುಚಿ ಬಿದ್ದು ಮಹಿಳಾ ಕಾರ್ಮಿಕರೊಬ್ಬರು ಮೃತಪಟ್ಟಿದ್ದು, ಹಲವರು ಗಾಯಗೊಂಡ ಘಟನೆ ಹೆಜಮಾಡಿ ಕನ್ನಂಗಾರು ಬ್ರಹ್ಮಬೈದರ್ಕಳ ಗರಡಿ ಎದುರು ರಾ.ಹೆ.66ರಲ್ಲಿ ಗುರುವಾರ ಬೆಳಗ್ಗೆ ನಡೆದಿದೆ. ಮೃತಪಟ್ಟ ಮಹಿಳೆಯನ್ನು ಪಾರ್ವತಿ (30) ಎಂದು ಗುರುತಿಸಲಾಗಿದೆ. ಸಾವಿತ್ರಮ್ಮ, ಮಹಂತೇಶ್ ಸಹಿತ 7ಜನರು ಗಾಯಗೊಂಡಿದ್ದಾರೆ. ಮುಲ್ಕಿಯಿಂದ ಉಡುಪಿ ಕಡೆಗೆ ಸಾಗುತ್ತಿದ್ದ ಟೆಂಪೋದಲ್ಲಿ ಕಾಂಕ್ರೀಟ್ ಮಿಕ್ಸಿಂಗ್ ಯಂತ್ರ ಮತ್ತು ಪರಿಕರಗಳ ಸಹಿತ ಪುರುಷರು ಮತ್ತು ಮಹಿಳೆಯರಿದ್ದರು. ವೇಗವಾಗಿ ಸಾಗುತ್ತಿದ್ದ ವಾಹನದ ಟಯರ್ ಏಕಾಏಕಿ ಸ್ಫೋಟಗೊಂಡು ಚಾಲಕನ ನಿಯಂತ್ರಣ ಕಳೆದುಕೊಂಡ ಪರಿಣಾಮ ಮುಗುಚಿ ಬಿದ್ದಿದೆ. ಮುಗುಚಿಬಿದ್ದ ಟೆಂಪೋದ ಅಡಿಯಲ್ಲಿ ಹಲವಾರು ಮಂದಿ ಸಿಲುಕಿದ್ದು, ಅವರನ್ನು ಸ್ಥಳೀಯರ ಸಹಾಯದಿಂದ ಹೊರ ತೆಗೆಯಲಾಗಿದೆ. ಮಹಿಳೆಯೋರ್ವರು ಯಂತ್ರ ಅಡಿಗೆ ಸಿಲುಕಿ ಅವರನ್ನು ಹೊರತೆಗೆಯಲು ಸಾರ್ವಜನಿಕರು ಮತ್ತು ಟೋಲ್ ಸಿಬ್ಬಂದಿ ಹರಸಾಹಸಪಟ್ಟರು. ಹೆಜಮಾಡಿ ಟೋಲ್ ಅಂಬುಲೆನ್ಸ್ ಮತ್ತು ಕ್ರೇನ್ ತಕ್ಷಣ ಆಗಮಿಸಿ ಮಹಿಳೆಯನ್ನು ರಕ್ಷಿಸಲಾಯಿತು. ತೀವ್ರ ಗಾಯಗೊಂಡಿದ್ದ ಅವರನ್ನು ಟೋಲ್ ಅಂಬುಲೆನ್ಸ್ ಮೂಲಕ ಮುಕ್ಕದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಪಡುಬಿದ್ರಿ ಪೋಲಿಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.
ಥೈಲ್ಯಾಂಡ್ನಲ್ಲಿ ಸೆರೆಸಿಕ್ಕ ಬೆಂಕಿಗೆ ಆಹಗುತಿಯಾಗಿದ್ದ ಗೋವಾ ನೈಟ್ಕ್ಲಬ್ ಮಾಲೀಕರು; ಲುತ್ರಾ ಬ್ರದರ್ಸ್ ಕೈಗೆ ಕೋಳ!
ಗೋವಾ ನೈಟ್ಕ್ಲಬ್ ಅಗ್ನಿ ದುರಂತ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ನೈಟ್ಕ್ಲಬ್ ಮಾಲೀಕರಾದ ಸೌರಭ್ ಮತ್ತು ಗೌರವ್ ಲುತ್ರಾ ಸಹೋದರರನ್ನು ಥೈಲ್ಯಾಂಡ್ನಲ್ಲಿ ಬಂಧಿಸಲಾಗಿದೆ. ಈ ಮೂಲಕ ನೈಟ್ಕ್ಲಬ್ ಬೆಂಕಿ ಅವಘಢ ಪ್ರಕರಣದ ತನಿಖೆ ಇದೀಗ ಮಹತ್ವದ ತಿರುವು ಒಡೆದುಕೊಂಡಿದ್ದು, ಲುತ್ರಾ ಸಹೋದರರನ್ನು ಥೈಲ್ಯಾಂಡ್ ಅಧಿಕಾರಿಗಳು ಭಾರತಕ್ಕೆ ಗಡಿಪಾರು ಮಾಡಲಿದ್ದಾರೆ. ಥೈಲ್ಯಾಂಡ್ ಪೊಲೀಸ್ ಅಧಿಕಾರಿಗಳು ಬಿಡುಗಡೆ ಮಾಡಿರುವ ಫೋಟೋಗಳಲ್ಲಿ ಲುತ್ರಾ ಸಹೋದದರ ಕೈಗೆ ಕೋಳ ಹಾಕಿರುವುದನ್ನು ಗುರುತಿಸಬಹುದು. ಈ ಕುರಿತು ಇಲ್ಲಿದೆ ಸಂಪೂರ್ಣ ಮಾಹಿತಿ.
ಕಾಂತಾರ, KGF ಎರಡೂ ನಮ್ಮ ಸಿನಿಮಾ : ಯಶ್ ಜೊತೆಗಿನ ಬಾಂಡಿಂಗ್ - ರಿಷಬ್ ಶೆಟ್ಟಿ ಅಚ್ಚರಿಕೆಯ ಹೇಳಿಕೆ
Yash and Rishab Shetty : ನಾಲ್ಕು ಸಿನಿಮಾಗಳ ಮೂಲಕ ರಾಷ್ಟ್ರ ಮಟ್ಟದಲ್ಲಿ ಯಶಸ್ಸನ್ನು ಪಡೆದಿರುವ ಇಬ್ಬರು ಸ್ಯಾಂಡಲ್’ವುಡ್ ನಟರ ನಡುವೆ ಹೇಗೆ ಬಾಂಡಿಂಗ್ ಇದೆ. ಹೇಗೆ, ಚಿತ್ರ ಜೀವನದ ಆರಂಭದಲ್ಲಿ ಒಬ್ಬರಿಗೊಬ್ಬರು ಸಹಾಯವನ್ನು ಮಾಡಿದ್ದಾರೆ? ಈ ಬಗ್ಗೆ ರಿಷಬ್ ಶೆಟ್ಟಿ, ತಮಿಳು ಕಾರ್ಯಕ್ರಮವೊಂದರಲ್ಲಿ ವಿವರಿಸಿದ್ದಾರೆ.
ಪ್ರಧಾನಿ ಮೋದಿ ಉತ್ತರಾಧಿಕಾರಿ ಕುರಿತ ಪ್ರಶ್ನೆಗೆ RSS ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದೇನು?
ಚೆನ್ನೈ: ಪ್ರಧಾನಿ ನರೇಂದ್ರ ಮೋದಿ ಅವರ ಉತ್ತರಾಧಿಕಾರಿ ಕುರಿತು ದೇಶದ ರಾಜಕೀಯ ವಲಯದಲ್ಲಿ ಚರ್ಚೆ ಮತ್ತೆ ಜೋರಾಗಿರುವ ಸಂದರ್ಭದಲ್ಲಿ, RSS ಮುಖ್ಯಸ್ಥ ಮೋಹನ್ ಭಾಗವತ್ ಈ ವಿವಾದಕ್ಕೆ ಸ್ಪಷ್ಟನೆ ನೀಡಿದ್ದಾರೆ. ಚೆನ್ನೈನಲ್ಲಿ ಬುಧವಾರ ನಡೆದ ‘‘RSS 100 Years: Saga of RSS Envisioning the Way Forward’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ಮೋದಿಯವರ ನಂತರ ಯಾರು ಎಂಬ ಪ್ರಶ್ನೆ ನನ್ನ ವ್ಯಾಪ್ತಿಗೆ ಬರುವುದಿಲ್ಲ. ಅದನ್ನು ಮೋದಿ ಮತ್ತು ಬಿಜೆಪಿ ತೀರ್ಮಾನಿಸಬೇಕು,” ಎಂದರು. ಕಾರ್ಯಕ್ರಮದಲ್ಲಿ ಪ್ರೇಕ್ಷಕರೊಬ್ಬರು ಮುಂದಿನ ಪ್ರಧಾನಿ ಅಭ್ಯರ್ಥಿ ಕುರಿತು ಕೇಳಿದ ಪ್ರಶ್ನೆಗೆ ಭಾಗವತ್ ಪ್ರತಿಕ್ರಿಯಿಸಿದ್ದು, ತಮ್ಮ ಪಾತ್ರವೂ ಅಲ್ಲ, ಅದು RSSನ ಅಧಿಕಾರ ಕ್ಷೇತ್ರವೂ ಅಲ್ಲ ಎಂದು ಹೇಳಿದರು. “ನಾನು ಕೇವಲ ಶುಭ ಹಾರೈಸಬಹುದು, ಅದಕ್ಕಿಂತ ಹೆಚ್ಚಿನದಿಲ್ಲ,” ಎಂದೂ ಅವರು ತಿಳಿಸಿದ್ದಾರೆ. ಭಾಗವತ್ ಅವರ ಈ ಹೇಳಿಕೆ, ಬಿಜೆಪಿಯಲ್ಲಿ 75 ವರ್ಷ ತುಂಬಿದ ನಂತರ ನಾಯಕರ ನಿವೃತ್ತಿಯ ಕುರಿತು ಇರುವ ‘ಅಲಿಖಿತ ನಿಯಮ’ದ ಚರ್ಚೆಯ ಮಧ್ಯೆ ಮಹತ್ವ ಪಡೆದುಕೊಂಡಿದೆ. ಆಗಸ್ಟ್ ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಅವರು, ತಾನು ಅಥವಾ ಆರೆಸ್ಸೆಸ್ ಯಾವತ್ತೂ 75 ನೇ ವಯಸ್ಸಿನಲ್ಲಿ ನಿವೃತ್ತಿಯಾಗಬೇಕು ಎಂದು ಹೇಳಿಲ್ಲ ಎಂದು ಸ್ಪಷ್ಟಪಡಿಸಿದ್ದರು. ಸೆಪ್ಟೆಂಬರ್ನಲ್ಲಿ ಮೋದಿ 75 ವರ್ಷ ಪೂರೈಸಿದ ನಂತರ ರಾಜಕೀಯದಲ್ಲಿ ಮುಂದುವರಿಯುತ್ತಾರೆಯೇ ಎಂಬ ವಿಚಾರ ಮತ್ತಷ್ಟು ಚರ್ಚೆಗೆ ಗ್ರಾಸವಾಗಿತ್ತು. ಬಳಿಕ, ಯಾವುದೇ ವಯೋಮಿತಿಯ ನಿಯಮವಿಲ್ಲ ಎಂದು ಬಿಜೆಪಿ ಸ್ಪಷ್ಟಪಡಿಸಿತ್ತು.
ಗುಣಾತ್ಮಕ ಶಿಕ್ಷಣಕ್ಕೆ ಕೆಪಿಎಸ್ ಎನ್ನುತ್ತಿರುವ ಹಿನ್ನೆಲೆಯಲ್ಲಿ, ಶಾಲಾ ಶಿಕ್ಷಣದ ಪುನರ್ರಚನೆ ಹೇಗೆ?
ಒಂದು ಅವಲೋಕನ
ಹೆದ್ದಾರಿ ಸಂಚಾರ ಅಪಾಯ! ರಾಜ್ಯ, ರಾಷ್ಟ್ರೀಯ ಹೈವೇನಲ್ಲಿ 3 ವರ್ಷಗಳಲ್ಲಿ 403 ದರೋಡೆ, ಸುಲಿಗೆ
ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿಗಳಲ್ಲಿ ದರೋಡೆ ಮತ್ತು ಸುಲಿಗೆ ಪ್ರಕರಣಗಳು ಹೆಚ್ಚಾಗುತ್ತಿದ್ದು, ಕಳೆದ ಮೂರು ವರ್ಷಗಳಲ್ಲಿ 403 ಪ್ರಕರಣಗಳು ವರದಿಯಾಗಿವೆ. ಪೊಲೀಸರು ಚೆಕ್ಪೋಸ್ಟ್ಗಳು, ರಾತ್ರಿ ಗಸ್ತು, 112 ಗಸ್ತು ವಾಹನಗಳು, ಮತ್ತು ಹಳೆಯ ಆರೋಪಿಗಳ ಮೇಲೆ ನಿಗಾ ಇರಿಸುವ ಮೂಲಕ ನಿಯಂತ್ರಣಕ್ಕೆ ಕ್ರಮ ಕೈಗೊಂಡಿದ್ದಾರೆ. ಟೋಲ್ಗಳಲ್ಲಿನ ಸಿಸಿಟಿವಿ ಪರಿಶೀಲನೆ ಮತ್ತು ಸಮುದಾಯ ಪೊಲೀಸ್ ವ್ಯವಸ್ಥೆಯನ್ನು ಬಲಪಡಿಸಲಾಗುತ್ತಿದೆ.
BCF ಅಧ್ಯಕ್ಷ ಡಾ.ಬಿ.ಕೆ.ಯೂಸುಫ್ ಅವರಿಗೆ ತುಂಬೆ ಸಮೂಹ ಸಂಸ್ಥೆಯಿಂದ ʼLIFE TIME ACHIEVEMENT AWARDʼ
ಅಜ್ಮಾನ್: ತುಂಬೆ ಸಂಸ್ಥೆಯ 28ನೇ ವಾರ್ಷಿಕ ಅನಿವಾಸಿ ಕನ್ನಡಿಗರ ಸ್ನೇಹ ಸಮ್ಮಿಳನ ಕೂಟದಲ್ಲಿ BCF ಅಧ್ಯಕ್ಷ ಡಾ. BK ಯೂಸುಫ್ ಅವರಿಗೆ ತುಂಬೆ ಸಮೂಹ ಸಂಸ್ಥೆಯಿಂದ ʼLIFE TIME ACHIEVEMENT AWARDʼ ನೀಡಿ ಸನ್ಮಾನಿಸಲಾಯಿತು. ತುಂಬೆ ಗ್ರೂಪ್ನ ಸ್ಥಾಪಕ ಅಧ್ಯಕ್ಷ ಡಾ.ತುಂಬೆ ಮೊಯ್ದಿನ್ ಅವರು ತುಂಬೆ ಸಂಸ್ಥೆಯ 28ನೇ ವಾರ್ಷಿಕದ ಅನಿವಾಸಿ ಕನ್ನಡಿಗರ ಸ್ನೇಹ ಸಮ್ಮಿಳನ ಕೂಟ ಏರ್ಪಡಿಸಿದ್ದರು. ಮುಖ್ಯ ಅತಿಥಿಯಾಗಿ ಕರ್ನಾಟಕ ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಭಾಗಿಯಾಗಿದ್ದರು. ಯುಎಇಯ ಬ್ಯಾರಿ ಮುಖಂಡರು, ಕನ್ನಡಿಗ ಬಂದುಗಳು, ಉದ್ಯಮಿಗಳು ವಿವಿಧ ಸಮಾಜ ಸೇವಾ ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು. ಸನ್ಮಾನ ಸ್ವೀಕರಿಸಿ ಮಾತನಾಡಿದ ಡಾ.ಬಿ.ಕೆ.ಯೂಸುಫ್, BCF ದಶಕಗಳಿಂದ ಮಾಡುತ್ತಿರುವ ಸಾಮಾಜಿಕ ಸೇವೆ ಮತ್ತು ಮಾನವೀಯ ಸಹಕಾರದ ಹಿಂದೆ ಡಾ.ತುಂಬೆ ಮೊಯ್ದಿನ್ ರವರ ಅಮೂಲ್ಯ ಸಹಕಾರದ ಪ್ರಾಮುಖ್ಯತೆಯನ್ನು ಒತ್ತಿ ಹೇಳಿದರು. ಡಾ. ತುಂಬೆ ಮೊಯ್ದಿನ್ ರವರು ಪ್ರತೀ ವರ್ಷ ಆರ್ಥಿಕವಾಗಿ ಹಿಂದುಳಿದ ಇಬ್ಬರು ಪ್ರತಿಭಾವಂತ ವಿದ್ಯಾರ್ಥಿಗಳಿಗೆ MBBS ಕೋರ್ಸ್ ಕಲಿಯಲು ಸಂಪೂರ್ಣ ಖರ್ಚನ್ನು ಸ್ಕಾಲರ್ಷಿಪ್ ಅನ್ನು BCF ಮೂಲಕ ನೀಡುವ ಯೋಜನೆಯನ್ನು ಅವರು ಶ್ಲಾಘಿಸಿದರು. ಈ ಸಂದರ್ಭ ಸಮಾಜ ಸೇವಾಸೇವಕ ಮುಹಮ್ಮದ್ ಮೀರಾನ್ ಅವರನ್ನೂ ಸನ್ಮಾನಿಸಲಾಯಿತು. ಬ್ಯಾರೀಸ್ ಕಲ್ಚರಲ್ ಫೋರಮ್ ವತಿಯಿಂದ ಡಾ. ತುಂಬೆ ಮೊಯ್ದಿನ್ ಅವರನ್ನೂ ಸನ್ಮಾನಿಸಲಾಯಿತು. BCF ಸಲಹೆಗಾರ ಗಡಿಯಾರ ಗ್ರೂಪ್ ನ ಮ್ಯಾನೇಜಿಂಗ್ ಡೈರೆಕ್ಟರ್ ಬೂಸಾಲಿಹ್, BCF ಉಪಾಧ್ಯಕ್ಷ ಎಂಇ ಮೂಳೂರು, ಅಬ್ದುಲ್ ಲತೀಫ್ ಮುಲ್ಕಿ, ಅಫಿಕ್ ಹುಸೈನ್, ಅಮೀರುದ್ದೀನ್, ಅಸ್ಲಾಂ ಕಾರಾಜೆ,ಯಾಕುಬ್ ದೀವ, ಉಸ್ಮಾನ್ ಮೂಳೂರು, ಅಬ್ದುಲ್ ಲತೀಫ್ ಪುತ್ತೂರು, ನಿಯಾಝ್, ಅಶ್ರಫ್ ಸಟ್ಟಿಕಲ್, BCF Ladies Wing ಹಾಗೂ ಇತರ ಎಲ್ಲ ಪದಾಧಿಕಾರಿಗಳು ಉಪಸ್ಥಿತರಿದ್ದರು. KNRI ಅಧ್ಯಕ್ಷರಾದ ಪ್ರವೀಣ್ ಕುಮಾರ್ ಶೆಟ್ಟಿ, ಫರ್ ಹಾದ್, ವಿಘ್ನಶ್, ಡಾ. ಬಂಗೇರ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಬೆಂಗಳೂರಿನ ಅಸ್ತವ್ಯಸ್ತ ಪರಿಸ್ಥಿತಿಗೆ ಬೇಸತ್ತು ಮತ್ತೆ ವಿದೇಶದತ್ತ ಮುಖ ಮಾಡಿದ ಎನ್.ಆರ್.ಐ!
ಅಮೆರಿಕಾದಲ್ಲಿ ಹತ್ತು ವರ್ಷಗಳಿಗೂ ಹೆಚ್ಚು ಕಾಲ ನೆಲೆಸಿದ್ದ ಭಾರತೀಯ ಮೂಲದ ಸಾಫ್ಟ್ವೇರ್ ಇಂಜಿನಿಯರ್, ಬೆಂಗಳೂರಿನ ಜೀವನ 'ಅಸಹನೀಯ' ಮತ್ತು 'ಮಾನವೀಯತೆ ಇಲ್ಲದಂತಾಗಿದೆ' ಎಂದು ಟೀಕಿಸಿ, ಪುನಃ ಅಮೆರಿಕಕ್ಕೆ ತೆರಳಲು ನಿರ್ಧರಿಸಿದ್ದಾರೆ. ವಾಯು, ಶಬ್ದ ಮಾಲಿನ್ಯ, ಸಂಚಾರ ದಟ್ಟಣೆ, ಅಸುರಕ್ಷಿತ ರಸ್ತೆಗಳು, ನಾಗರಿಕ ಪ್ರಜ್ಞೆಯ ಕೊರತೆ ಮುಂತಾದ ಸಮಸ್ಯೆಗಳಿಂದ ಬೇಸತ್ತು, ಜರ್ಮನಿಯ ಮ್ಯೂನಿಚ್ಗೆ ಸ್ಥಳಾಂತರಗೊಳ್ಳಲು ಸಿದ್ಧರಾಗಿದ್ದಾರೆ.
ಸಂಪಾದಕೀಯ | ದೇವನಹಳ್ಳಿ ಭೂಸ್ವಾಧೀನ : ತಿಳಿಯಾಗದ ರೈತರ ಆತಂಕ
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
Gold Silver Price: ಬೆಳ್ಳಿ ದರ ₹12,000 ರೂಪಾಯಿ ಹೆಚ್ಚಳ, ಹೊಸ ದಾಖಲೆ! ಚಿನ್ನದ ಬೆಲೆ ಮತ್ತೆ ಇಳಿಕೆ
ಬೆಂಗಳೂರು, ಡಿಸೆಂಬರ್ 11: ಚಿನ್ನ ಮತ್ತು ಬೆಳ್ಳಿ ಲೋಹಗಳ ದರದಲ್ಲಿ ಹಾವು ಏಣಿ ಆಟ ಮುಂದುವರಿದಿದೆ. ನಿರಂತರವಾಗಿ ಏರಿಕೆ ಆಗುತ್ತಲೇ ಬಂದಿದ್ದ ಚಿನ್ನದ ಬೆಲೆಯು ಇಂದು ಒಂದೇ ದಿನಕ್ಕೆ ಕೊಂಚ ಇಳಿಕೆ ಆಗಿದೆ. ಇಂದಿನ ಗ್ರಾಹಕರಿಗೆ ಕೊಂಚ ನೆಮ್ಮದಿ ತಂದಿದೆ. ಆದರೆ ಬಂಗಾರದ ದರ ಇಳಿಕೆಯು ಏರಿಕೆಗೆ ಹೋಲಿಸಿದರೆ ತೀರಾ ಕಡಿಮೆ. ಇತ್ತ ಬೆಳ್ಳಿ ಸಹ ತೀವ್ರ
ಸುರತ್ಕಲ್ | ಡಿ.21ರಂದು ಉರುಮಾಲ್ ಮಾಸಪತ್ರಿಕೆಯ 21ನೇ ವಾರ್ಷಿಕೋತ್ಸವ, ಸಾಮೂಹಿಕ ವಿವಾಹ ಕಾರ್ಯಕ್ರಮ
ಸುರತ್ಕಲ್ : ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಕಳೆದ ಇಪ್ಪತ್ತು ವರ್ಷಗಳಿಂದ ಕಾರ್ಯನಿರ್ವಹಿಸುತ್ತಾ ಬರುತ್ತಿರುವ ಉರುಮಾಲ್ ಮಾಸ ಪತ್ರಿಕೆಯ ಇಪ್ಪತ್ತನೇಯ ವಾರ್ಷಿಕೋತ್ಸವ ಹಾಗೂ ಸಾಮೂಹಿಕ ವಿವಾಹ ಕಾರ್ಯಕ್ರಮವು ಡಿ.21ರಂದು ಕಾಟಿಪಳ್ಳದ ಮಂಗಳಪೇಟೆ ಜಂಕ್ಷನ್ನಲ್ಲಿ ನಡೆಯಲಿದೆ. ಪ್ರಸ್ತುತ ಕಾರ್ಯಕ್ರಮದಲ್ಲಿ ವಿವಾಹವಾಗುವ ವಧು-ವರರಿಗೆ ಚಿನ್ನಾಭರಣ ಹಾಗೂ ಬಟ್ಟೆಗಳನ್ನು ನೀಡಲಾಗುವುದು. ಸಮಾಜ ಸೇವಾ ಕಾರ್ಯಕ್ರಮದ ಅಂಗವಾಗಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ, ವಿಧವಾ ಮಹಿಳೆಯರಿಗೆ ಹೊಲಿಗೆ ಯಂತ್ರಗಳನ್ನು ವಿತರಿಸುವ ಕಾರ್ಯಕ್ರಮ ಹಾಗೂ ದಿವ್ಯಾಂಗರಿಗೆ ಅಗತ್ಯ ಉಪಕರಣಗಳನ್ನು ವಿತರಿಸಲಿದೆ. ಇದೇ ಸಂದರ್ಭ ರಾಜ್ಯ ಮಟ್ಟದ ಉರುಮಾಲ್ ಕ್ವಿಝ್ ಸ್ಪರ್ಧೆ ನಡೆಯಲಿದೆ. ವಿಜೇತರಿಗೆ ಚಿನ್ನದ ಉಂಗುರ ಹಾಗೂ ಉರುಮಾಲ್ ಪ್ರಶಸ್ತಿ ನೀಡಲಾಗುವುದು. ರಾಜ್ಯಮಟ್ಟದಲ್ಲಿ ಭಾಗವಹಿಸುವ ಎಲ್ಲಾ ವಿದ್ಯಾರ್ಥಿಗಳಿಗೆ ಉರುಮಾಲ್ ಕಿಟ್ ನೀಡಿ ಗೌರವಿಸಲಾಗುವುದು. ರಾಜ್ಯಾದ್ಯಂತ 80 ರೇಂಜ್ಗಳಿಂದ ತಲಾ ಒಬ್ಬರಂತೆ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ. ಪ್ರಸ್ತುತ ಕಾರ್ಯಕ್ರಮದಲ್ಲಿ ಧಾರ್ಮಿಕ, ರಾಜಕೀಯ ಹಾಗೂ ಸಾಮಾಜಿಕ ಮುಖಂಡರು ಭಾಗವಹಿಸಲಿದ್ದಾರೆ ಎಂದು ಉರುಮಾಲ್ ಸಂಸ್ಥಾಪಕ ಸರ್ಫಾಝ್ ನವಾಝ್ ಮಂಗಳಪೇಟೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Gruhalakshmi Scheme: ರಾಜ್ಯದಲ್ಲಿ ಗೃಹಲಕ್ಷ್ಮಿ ₹2,000 ಹಣ ಜಮಾ ಬಗ್ಗೆ ಮಹತ್ವದ ಮಾಹಿತಿ
Gruhalakshmi Scheme: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಪಂಚ ಗ್ಯಾರಂಟಿಗಳನ್ನು ಜಾರಿಗೊಳಿಸಿದ್ದು, ಇದರಲ್ಲಿ ಗೃಹಲಕ್ಷಿ ಯೋಜನೆಯೂ ಒಂದಾಗಿದೆ. ಇದರಡಿಯಲ್ಲಿ ಪ್ರತಿ ಮನೆಯ ಯಜಮಾನಿ ಖಾತೆಗೆ ಪ್ರತಿ ತಿಂಗಳು 2,000 ರೂಪಾಯಿ ಹಣವನ್ನು ಜಮೆ ಮಾಡಲಾಗುತ್ತದೆ. ಇದೀಗ ಹಣ ಬಾಕಿ ಉಳಿಸಿಕೊಳ್ಳಲಾಗಿದೆ ಎನ್ನುವ ಆರೋಪಗಳ ಬಗ್ಗೆ ಮಹತ್ವದ ಮಾಹಿತಿಯೊಂದನ್ನು ಸಿಎಂ ಆರ್ಥಿಕ ಸಲಹೆಗಾರ ನೀಡಿದ್ದಾರೆ. ಹಾಗಾದ್ರೆ ಏನೆಲ್ಲಾ ಹೇಳಿದ್ದಾರೆ ಎನ್ನುವ
Goa ನೈಟ್ಕ್ಲಬ್ ದುರಂತ | ಥೈಲ್ಯಾಂಡ್ನಲ್ಲಿ ಲುತ್ರಾ ಸಹೋದರರು ವಶಕ್ಕೆ: ಗಡೀಪಾರು ಪ್ರಕ್ರಿಯೆ ಪ್ರಾರಂಭ
ಹೊಸದಿಲ್ಲಿ/ಗೋವಾ: ಗೋವಾದ ಅರ್ಪೋರಾ ನೈಟ್ಕ್ಲಬ್ ನಲ್ಲಿ ಸಂಭವಿಸಿದ ಭೀಕರ ಬೆಂಕಿ ಅವಘಡದಲ್ಲಿ 25 ಜನರು ಸಾವನ್ನಪ್ಪಿದ ಬಳಿಕ ಭಾರತದಿಂದ ಪರಾರಿಯಾಗಿದ್ದ ದಿಲ್ಲಿಯ ಉದ್ಯಮಿ ಸಹೋದರರು ಸೌರಭ್ ಮತ್ತು ಗೌರವ್ ಲುತ್ರಾ ಅವರನ್ನು ಥೈಲ್ಯಾಂಡ್ ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ವರದಿಯಾಗಿದೆ. ಕೈ ಕಟ್ಟಿ, ಪಾಸ್ಪೋರ್ಟ್ಗಳನ್ನು ಹಿಡಿದಿರುವ ಸ್ಥಿತಿಯಲ್ಲಿ ಸ್ಥಳೀಯ ಪೊಲೀಸ್ ಅಧಿಕಾರಿಗಳ ನಡುವೆ ನಿಂತಿರುವ ಅವರ ಚಿತ್ರಗಳು ವೈರಲ್ ಆಗಿದೆ. ರೋಮಿಯೋ ಲೇನ್ ಎಂಬ ಪ್ರಸಿದ್ಧ ರೆಸ್ಟೋರೆಂಟ್–ನೈಟ್ಕ್ಲಬ್ ಅನ್ನು ಭಾರತ ಹಾಗೂ ವಿದೇಶದ 22 ನಗರಗಳಲ್ಲಿ ನಡೆಸುತ್ತಿರುವ ಲುತ್ರಾ ಸಹೋದರರು, ಶನಿವಾರ ತಡರಾತ್ರಿ ಅವರ ‘ಬಿರ್ಚ್ ಬೈ ರೋಮಿಯೋ ಲೇನ್’ ನೈಟ್ಕ್ಲಬ್ನಲ್ಲಿ ಬೆಂಕಿ ಅವಘಡ ಕಾಣಿಸಿಕೊಂಡ ಕೆಲವೇ ಗಂಟೆಗಳಲ್ಲಿ ಫುಕೆಟ್ಗೆ ಪಲಾಯನ ಮಾಡಿದ್ದರು. ಈಗ ಇವರ ವಿರುದ್ಧ ಕೊಲೆಯಲ್ಲದ ನರಹತ್ಯೆ ಅಪರಾಧ ಮತ್ತು ಗಂಭೀರ ನಿರ್ಲಕ್ಷ್ಯದ ಆರೋಪಗಳು ದಾಖಲಾಗಿದ್ದು, ಪೊಲೀಸರು ಭಾರತಕ್ಕೆ ಗಡೀಪಾರು ಮಾಡಲು ಮುಂದಾಗಿದ್ದಾರೆ ಎಂದು ವರದಿಯಾಗಿದೆ. ಬೆಂಕಿ ಅವಘಡದ ವೇಳೆ ನೈಟ್ಕ್ಲಬ್ನಲ್ಲಿ ಸುಮಾರು 100ಕ್ಕೂ ಹೆಚ್ಚು ಜನರು,ಅವರಲ್ಲಿ ಹೆಚ್ಚಿನವರು ಪ್ರವಾಸಿಗರು ಡಿಜೆ ಆನಂದಿಸುತ್ತಿದ್ದರು. ಬಾಲಿವುಡ್ ಗೀತೆಗಳ ಮಧ್ಯೆ ನರ್ತಕರ ಪ್ರದರ್ಶನ ನಡೆಯುತ್ತಿದ್ದಾಗ ವಿದ್ಯುತ್ ಪಟಾಕಿಗಳನ್ನೂ ಬಳಸಲಾಗುತ್ತಿತ್ತು. ಪ್ರಾಥಮಿಕ ಮಾಹಿತಿಯ ಪ್ರಕಾರ ಇದೇ ಪಟಾಕಿಗಳಿಂದ ಬೆಂಕಿ ಕಾಣಿಸಿಕೊಂಡಿದೆ ಎಂದು ತಿಳಿದು ಬಂದಿದೆ. ಅಲಂಕಾರದಲ್ಲಿ ಬಳಸಲಾಗಿದ್ದ ಸುಡುವ ವಸ್ತುಗಳ ಅತಿಯಾದ ಹಚ್ಚುವಿಕೆ ಮತ್ತು ಅಗ್ನಿ ಸುರಕ್ಷತಾ ಮಾನದಂಡಗಳ ಗಂಭೀರ ಉಲ್ಲಂಘನೆಯು ಅವಘಡವನ್ನು ಭೀಕರ ದುರಂತವನ್ನಾಗಿ ಪರಿವರ್ತಿಸಿತು ಎನ್ನಲಾಗಿದೆ. ಅದರೆ ನೈಟ್ ಕ್ಲಬ್ ಆವರಣದಲ್ಲಿ ಯಾವುದೇ ಕ್ರಿಯಾಶೀಲ ಅಗ್ನಿಶಾಮಕ ಸಾಧನಗಳು ಲಭ್ಯವಿರಲಿಲ್ಲ. ಜೊತೆಗೆ, ನೈಟ್ಕ್ಲಬ್ಗೆ ಹೋಗುವ ರಸ್ತೆ ತುಂಬಾ ಕಿರಿದಾಗಿದ್ದ ಕಾರಣ ಅಗ್ನಿಶಾಮಕ ವಾಹನಗಳು ಪ್ರವೇಶಿಸಲು ಸಾಧ್ಯವಾಗದೆ 400 ಮೀಟರ್ ದೂರದಲ್ಲೇ ನಿಲ್ಲಿಸಬೇಕಾದ ಪರಿಸ್ಥಿತಿ ಉಂಟಾಯಿತು. ಇದರಿಂದ ರಕ್ಷಣಾ ಕಾರ್ಯಾಚರಣೆಗೆ ವಿಳಂಬವಾಗಿ, ಬೆಂಕಿಯಿಂದ ಪಾರಾಗುವ ಸಾಧ್ಯತೆಗಳು ಕಡಿಮೆಯಾಯಿತು ಎಂದು ಅಂದಾಜಿಸಲಾಗಿದೆ. ಅವಘಡದಲ್ಲಿ 25 ಜನರು ಮೃತಪಟ್ಟಿದ್ದು, ಆರು ಮಂದಿಗೆ ಗಾಯಗಳಾಗಿವೆ. ದುರಂತಕ್ಕೆ ಕಾರಣವಾದ ನಿರ್ಲಕ್ಷ್ಯಕ್ಕೆ ಹೊಣೆಗಾರರಾಗಿರುವ ಲುತ್ರಾ ಸಹೋದರರು ವಿದೇಶಕ್ಕೆ ಪರಾರಿಯಾಗಿರುವುದು ದೊಡ್ಡ ವಿವಾದಕ್ಕೆ ಕಾರಣವಾಗಿದೆ. ಗೋವಾ ಹಾಗೂ ಕೇಂದ್ರ ತನಿಖಾ ಸಂಸ್ಥೆಗಳು ಇವರ ಗಡೀಪಾರು ಪ್ರಕ್ರಿಯೆಯನ್ನು ವೇಗಗೊಳಿಸಲು ಥೈಲ್ಯಾಂಡ್ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದು, ಶೀಘ್ರದಲ್ಲೇ ಅವರನ್ನು ವಿಚಾರಣೆಗೆ ಹಾಜರುಪಡಿಸುವ ನಿರೀಕ್ಷೆಯಿದೆ.
ಪ್ರಧಾನಿ ಕಚೇರಿಯಲ್ಲಿ 88 ನಿಮಿಷಗಳ ಸಭೆ; ನರೇಂದ್ರ ಮೋದಿ-ರಾಹುಲ್ ಗಾಂಧಿ ಮತ್ತು ಅಮಿತ್ ಶಾ ಮಾತಾಡಿದ್ದೇನು?
ಭಾರತದ ಮುಖ್ಯ ಮಾಹಿತಿ ಆಯುಕ್ತ (ಸಿಐಸಿ) ನೇಮಕ ವಿಚಾರವಾಗಿ ಚರ್ಚಿಸಲು, ಪ್ರಧಾನಮಂತ್ರಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ನಿನ್ನೆ (ಡಿ.10-ಬುಧವಾರ) 88 ನಿಮಿಷಗಳ ಸುದೀರ್ಘ ಮಾತುಕತೆ ನಡೆಸಿದ್ದಾರೆ. ಆದರೆ ಪ್ರಧಾನಿ ಮೋದಿ ಅವರು ಸೂಚಿಸಿದ ಮುಖ್ಯ ಮಾಹಿತಿ ಆಯುಕ್ತರು ಮತ್ತು 8 ಮಾಹಿತಿ ಆಯುಕ್ತರ ಅಭ್ಯರ್ಥಿ ಪಟ್ಟಿಗೆ ರಾಹುಲ್ ಗಾಂಧಿ ವಿರೋಧ ವ್ಯಕ್ತಪಡಿಸಿದ್ದಾರೆ. ಈ ಸಭೆಯ ಸಂಪೂರ್ಣ ಮಾಹಿತಿ ಇಲ್ಲಿದೆ.
ಸುಳ್ಯ | ದೇವಸ್ಥಾನದ ಮುಂಭಾಗ ಆಯೋಜನೆಯಾಗಿದ್ದ ದಫ್ ಪ್ರದರ್ಶನ ರದ್ದು
ಹಿಂದುತ್ವ ಸಂಘಟನೆಗಳ ಒತ್ತಡಕ್ಕೆ ಮಣಿದ ಆಯೋಜಕರು
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ರಿಕೆಟ್ ಪಂದ್ಯಗಳಿಗೆ ಮತ್ತೆ ಅವಕಾಶ ನೀಡಬೇಕೆಂಬ ಕೂಗು ಕೇಳಿಬರುತ್ತಿದೆ. ಈ ಬಗ್ಗೆ ಬೆಳಗಾವಿಯಲ್ಲಿ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ನಡೆಯುವ ಸಾಧ್ಯತೆ ಇದೆ. ಕರ್ನಾಟಕ ಕ್ರಿಕೆಟ್ ಅಸೋಸಿಯೇಷನ್ ಅಧ್ಯಕ್ಷರು ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದಾರೆ. ಸರ್ಕಾರದ ನಿರ್ಧಾರ ಕುತೂಹಲ ಮೂಡಿಸಿದೆ.
ಬಳ್ಳಾರಿಯ ಹಿಮಾಬಿಂದು ಎಂಬ ವಿದ್ಯಾರ್ಥಿನಿ ಗಾಂಧಾರಿ ಕಲೆ ಕರಗತ ಮಾಡಿಕೊಂಡಿದ್ದಾಳೆ. ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಸ್ಪರ್ಶ, ವಾಸನೆ, ಶಬ್ದದಿಂದ ವಸ್ತುಗಳನ್ನು ಗುರುತಿಸುವ ಈ ಕಲೆ ಆನ್ಲೈನ್ ಮೂಲಕ ಕಲಿತಿದ್ದಾಳೆ. 8ನೇ ತರಗತಿಯ ಎಫ್ಎ4 ಪರೀಕ್ಷೆಯನ್ನು ಇದೇ ರೀತಿ ಬರೆದು ಎಲ್ಲರನ್ನೂ ಅಚ್ಚರಿಗೊಳಿಸಿದ್ದಾಳೆ. ಈ ಕಲೆ ಜ್ಞಾಪಕ ಶಕ್ತಿ ಹೆಚ್ಚಿಸುತ್ತದೆ ಎಂದು ಪೋಷಕರು ತಿಳಿಸಿದ್ದಾರೆ.
ಭಗತ್ ಸಂಗಾತಿ ಗಯಾಪ್ರಸಾದ್ ಕಾಟಿಯಾರ್: ಇವರಾರೂ ಕ್ಷಮೆ ಯಾಚಿಸಲಿಲ್ಲ!
ಕರಿನೀರಿನ ಕಠಿಣ ಶಿಕ್ಷೆ ಅನುಭವಿಸಿದ ಕ್ರಾಂತಿಕಾರಿಗಳು!
ಊಬರ್ನಿಂದ ಬೆಂಗಳೂರಿನಲ್ಲಿ ಮೆಟ್ರೋ ಟಿಕೆಟ್ ಬುಕಿಂಗ್ ಹಾಗೂ ಸರಕು ಸಾಗಣೆ ಸೇವೆ ಆರಂಭ; ಸೇವೆ ಪಡೆಯುವುದು ಹೇಗೆ?
ಊಬರ್ ಸಂಸ್ಥೆ ಬೆಂಗಳೂರಿನಲ್ಲಿ ಎರಡು ಮಹತ್ವದ ಹೊಸ ಸೇವೆಗಳನ್ನು ಆರಂಭಿಸಿದೆ. 'ಊಬರ್ ಡೈರೆಕ್ಟ್' ಎಂಬುದು ಉದ್ಯಮಗಳಿಗಾಗಿ ಲಾಜಿಸ್ಟಿಕ್ಸ್ ಸೇವೆಯಾಗಿದೆ. ಇದರೊಂದಿಗೆ, ಊಬರ್ ಆ್ಯಪ್ ಮೂಲಕ ಬೆಂಗಳೂರು ಮೆಟ್ರೋ ಟಿಕೆಟ್ಗಳನ್ನು ಕ್ಯೂಆರ್ ಆಧಾರಿತವಾಗಿ ಖರೀದಿಸಬಹುದು. ಈ ಸೇವೆಗಳು 2026ರ ವೇಳೆಗೆ ದೇಶದ ಹೆಚ್ಚಿನ ನಗರಗಳಿಗೆ ವಿಸ್ತರಿಸಲಿವೆ. ಇದು ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯವನ್ನು ಬಳಸಿಕೊಳ್ಳುವ ಊಬರ್ನ ಬದ್ಧತೆಯನ್ನು ತೋರಿಸುತ್ತದೆ.
ತೀರ್ಥಹಳ್ಳಿ | ಬೈಕ್ -ಬಸ್ ನಡುವೆ ಢಿಕ್ಕಿ : ಯುವಕ ಮೃತ್ಯು
ತೀರ್ಥಹಳ್ಳಿ: ಬೈಕ್ ಮತ್ತು ರಾಜಹಂಸ ಬಸ್ ನಡುವೆ ಸಂಭವಿಸಿದ ಅಪಘಾತದಲ್ಲಿ ಯುವಕನೊರ್ವ ಮೃತಪಟ್ಟ ಘಟನೆ ರಂಜದಕಟ್ಟೆ ಸಮೀಪದ ಶಿವರಾಜಪುರ ಬಳಿ ಬುಧವಾರ ತಡರಾತ್ರಿ ನಡೆದಿದೆ. ಮೃತಪಟ್ಟ ಯುವಕನನ್ನು ರಂಜದಕಟ್ಟೆ ಸಮೀಪದ ಮೀನುಗುಂದ ಗ್ರಾಮದ ಪುನೀತ್ (26 ) ಎಂದು ಗುರುತಿಸಲಾಗಿದೆ. ಅಪಘಾತದಲ್ಲಿ ತಲೆಗೆ ಗಂಭೀರವಾಗಿ ಗಾಯಗೊಂಡ ಹಿನ್ನೆಲೆಯಲ್ಲಿ ಯುವಕ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ತೀರ್ಥಹಳ್ಳಿ ಪೊಲೀಸ್ ಠಾಣಾ ಸಿಬ್ಬಂದಿ ಪರಿಶೀಲನೆ ನಡೆಸಿದ್ದು, ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾರ್ಮಿಕರು, ಬಾಡಿಗೆದಾರರು, ಮನೆ ಮಾಲಿಕರ ಕೆಲ ನಿಯಮಗಳು ಬದಲಾಗಿವೆ, ಏನದು?
ಔಷಧ ಕಲಬೆರಕೆಗೆ ಜೀವಾವಧಿ ಶಿಕ್ಷೆ, ಬಾಡಿಗೆ ವಿವಾದಗಳಿಗೆ ದಂಡ ಹೆಚ್ಚಳ, ಕಾರ್ಮಿಕ ಕಲ್ಯಾಣ ನಿಧಿಗೆ ಇ-ಬ್ಯಾಂಕಿಂಗ್ ಪರಿಚಯ ಸೇರಿದಂತೆ 12 ವಿಧೇಯಕಗಳು ವಿಧಾನಸಭೆಯಲ್ಲಿ ಮಂಡನೆಯಾದವು. ಚಂದ್ರಗುತ್ತಿ, ಮಲೈಮಹದೇಶ್ವರ, ಚಾಮುಂಡೇಶ್ವರಿ ಕ್ಷೇತ್ರಗಳ ಅಭಿವೃದ್ಧಿಗೆ ಸಂಬಂಧಿಸಿದ ತಿದ್ದುಪಡಿಗಳೂ ಸೇರಿವೆ.
ರೈತರಿಗೆ ಭೂಸ್ವಾಧೀನಕ್ಕಾಗಿ 8.38 ಕೋಟಿ ಬಿಡುಗಡೆ: ಮಾಹಿತಿ ಕೊಟ್ಟ ಹೆಚ್.ಕೆ. ಪಾಟೀಲ್
ಬೆಳಗಾವಿ, ಡಿಸೆಂಬರ್ 11: ವಿವಿಧ ಜಿಲ್ಲೆಗಳ ರೈತರ ಕೃಷಿ ಭೂಮಿಗೆ ನೀರುಣಿಸುವ ಸಿಂಗಟಾಲೂರು ಏತ ನೀರಾವರಿ ಯೋಜನೆಗಾಗಿ ಭೂಮಿ ನೀಡಿರುವ ವಿಜಯನಗರ ಜಿಲ್ಲೆ ಹೂವಿನಹಡಗಲಿ ತಾಲ್ಲೂಕಿನ ರೈತರಿಗೆ ಭೂಸ್ವಾಧೀನದ ಹಣ ಪಾವತಿಸಲು ಅಗತ್ಯವಿರುವ 8.38 ಕೋಟಿ ರೂ. ಗಳನ್ನು ಶೀಘ್ರ ಬಿಡುಗಡೆ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಕಾನೂನು, ಸಂಸದೀಯ ವ್ಯವಹಾರ ಹಾಗೂ ಪ್ರವಾಸೋದ್ಯಮ ಸಚಿವರಾದ ಹೆಚ್.ಕೆ.
Explained: ಯುಎಸ್ ಗೋಲ್ಡ್ ಕಾರ್ಡ್ ಅನಾವರಣ; ಡೊನಾಲ್ಡ್ ಟ್ರಂಪ್ ಉದ್ದೇಶ ಶ್ರೀಮಂತರ ಸಮಾಜ ನಿರ್ಮಾಣ
ಅಮೆರಿಕನ್ ಸಮಾಜವನ್ನು ಅಮೂಲಾಗ್ರವಾಗಿ ಬದಲಾವಣೆ ಮಾಡಲು ಬಯಸಿರುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಶ್ರೀಮಂತಿಕೆಗೆ ಹೆಚ್ಚಿನ ಒತ್ತು ನೀಡುತ್ತಿದ್ದಾರೆ. H-1B ವೀಸಾ ಕಾರ್ಯಕ್ರಮದಡಿ ಬರುವ ಸಾಮಾಮನ್ಯ ವಿದೇಶಿ ವಲಸಿಗರೆಂದರೆ ಮೂಗು ಮುರಿಯುವ ಟ್ರಂಪ್, ವಿದೇಶಗಳಲ್ಲಿರುವ ಶ್ರೀಮಂತರಿಗೆ ಅಮೆರಿಕನ್ ವ್ಯವಸ್ಥೆಯೊಳಗೆ ಪ್ರವೇಶ ನೀಡಲು ಸಜ್ಜಾಗಿದ್ದಾರೆ. ಇದಕ್ಕೆ ಪೂರಕವಾಗಿ ಯುಎಸ್ ಗೋಲ್ಡ್ ಕಾರ್ಡ್ ಯೋಜನೆಯನ್ನು ಅಧಿಕೃತವಾಗಿ ಜಾರಿಗೊಳಿಸಿರುವ ಟ್ರಂಪ್, ವಿದೇಶಿ ಶ್ರೀಮಂತ ವಲಸಿಗರನ್ನು ಅಮೆರಿಕ ಬಾಚಿ ತಬ್ಬಿಕೊಳ್ಳುತ್ತದೆ ಎಂದು ಹೇಳಿದ್ದಾರೆ. ಇಲ್ಲಿದೆ ಸಂಪೂರ್ಣ ಮಾಹಿತಿ.
ಬೆಂಗಳೂರು | ಭೀಕರ ರಸ್ತೆ ಅಪಘಾತ: ಸ್ಥಳದಲ್ಲೇ ಮೂವರು ಮೃತ್ಯು
ಬೆಂಗಳೂರು: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಹೊರವಲಯದ ಲಾಲಗೊಂಡನಹಳ್ಳಿ ಗೇಟ್ ಬಳಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮೂವರು ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ. ಮೃತರನ್ನು ದೇವನಹಳ್ಳಿ ತಾಲೂಕಿನ ಸಾದಹಳ್ಳಿ ನಿವಾಸಿಗಳಾದ ಮೋಹನ್ ಕುಮಾರ್ (33), ಸುಮನ್ (28), ಸಾಗರ್ (23) ಎಂದು ಗುರುತಿಸಲಾಗಿದೆ. ದೇವನಹಳ್ಳಿ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ದುರ್ಘಟನೆ ನಡೆದಿದ್ದು, ಚಿಕ್ಕಬಳ್ಳಾಪುರ ಕಡೆಯಿಂದ ದೇವನಹಳ್ಳಿ ಕಡೆಗೆ ಬರುತ್ತಿದ್ದ KA 50 MA 0789 ಸಂಖ್ಯೆಯ ಕಾರು, ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ ಹಾರಿ ಕೆಎಸ್ಆರ್ಟಿಸಿ ಬಸ್ಗೆ ಢಿಕ್ಕಿ ಹೊಡೆದಿದೆ ಎನ್ನಲಾಗಿದೆ. ಢಿಕ್ಕಿಯ ರಭಸಕ್ಕೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದು, ಕಾರಿನಲ್ಲಿದ್ದ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕೆಎಸ್ಆರ್ಟಿಸಿ ಬಸ್ನಲ್ಲಿ ಪ್ರಯಾಣಿಸುತ್ತಿದ್ದ ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ತಿಳಿದು ಬಂದಿದೆ. ಅಪಘಾತ ಸ್ಥಳದಿಂದ ಕಾರನ್ನು ಹೊರತೆಗೆಯುವ ಕಾರ್ಯ ಪೂರ್ಣಗೊಂಡಿದ್ದು, ಸಂಚಾರ ದಟ್ಟಣೆ ನಿಧಾನವಾಗಿ ಕಡಿಮೆಯಾಗುತ್ತಿದೆ.
ಬೆಂಗಳೂರಿನ ಸ್ವರ್ಶ್ ಆಸ್ಪತ್ರೆಯ ವೈದ್ಯರು, ಮಹಿಳೆಯೊಬ್ಬರ ಅಪರೂಪದ ಕಾಯಿಲೆಯನ್ನು ಗುಣಪಡಿಸಿದ್ದಾರೆ. ಸಾಮಾನ್ಯ ನಿಮೋನಿಯಾ ಎಂದು ತಪ್ಪು ತಿಳಿಯಲಾದ ಅಪರೂಪದ ಶ್ವಾಸಕೋಶದ ಕಾಯಿಲೆ 'ಪಲ್ಮನರಿ ಅಲ್ವಿಯೋಲಾರ್ ಪ್ರೊಟಿನೋಸಿಸ್' (ಪಿಎಪಿ) ನಿಂದ ಬಳಲುತ್ತಿದ್ದ 39 ವರ್ಷದ ಮಹಿಳೆಯನ್ನು ಯಶಸ್ವಿಯಾಗಿ ಗುಣಪಡಿಸಿದ್ದಾರೆ. ಸುಮಾರು 17 ಲೀಟರ್ ಉಪ್ಪಿನ ದ್ರಾವಣ ಬಳಸಿ ಶ್ವಾಸಕೋಶವನ್ನು ಸಂಪೂರ್ಣವಾಗಿ ತೊಳೆದು, ರೋಗಿಯನ್ನು ಗುಣಮುಖರಾಗಿಸಿದ್ದಾರೆ.
ಮಟ್ಟೂರು ತಾಂಡದಲ್ಲಿ ಪೊಲೀಸರ ಮೇಲೆ ಹಲ್ಲೆ ಪ್ರಕರಣ | ಪ್ರತಿದೂರಿಗೆ ಸ್ಪಂದನೆ ಇಲ್ಲ: ಆರೋಪ
ರಾಯಚೂರು: ಮುದುಗಲ್ ಪೊಲೀಸ್ ಠಾಣಾ ವ್ಯಾಪ್ತಿ ಮಟ್ಟೂರು ತಾಂಡದಲ್ಲಿ ರಾಮಪ್ಪ ಮತ್ತು ಸಕ್ಕುಬಾಯಿ ಇವರ ಮೇಲೆ ನಡೆದ ಹಲ್ಲೆ ಘಟನೆ ಸಂಬಂಧಿಸಿದಂತೆ ಪ್ರತಿದೂರು ದಾಖಲಾದರೂ ಆರೋಪಿಗಳನ್ನು ಬಂಧಿಸದೇ ಪಿಎಸ್ಐ ಆರೋಪಿಗಳ ರಕ್ಷಣೆಗೆ ನಿಂತಿದ್ದಾರೆ ಎಂದು ಈಶ್ವರ ಜಾಧವ ಆರೋಪಿಸಿದರು. ಅವರಿಂದು ಮಾಧ್ಯಮಗೋಷ್ಟಿ ಉದ್ದೇಶಿಸಿ ಮಾತನಾಡಿ ಪ್ರಕರಣದಲ್ಲಿ ಹಳೆ ದ್ವೇಷಕ್ಕೆ ಸಂಬಂದಿಸಿದಂತೆ ರೈಲ್ವೆ ಪೊಲೀಸ್ ಪೇದೆ ರಾಘವೇಂದ್ರ ಇವರು ಪೊಲೀಸ್ರೊಂದಿಗೆ ಹೊಂದಿರುವ ಸ್ನೇಹದಿಂದ ಸುಳ್ಳು ಆರೋಪಮಾಡಿ ಪೊಲೀಸರ ಮೇಲೆ ಹಲ್ಲೆ ನಡೆಸಿರುವುದಾಗಿ ದೂರು ದಾಖಲಿಸಲಾಗಿತ್ತು. ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆಯಿಂದ ಪ್ರತಿ ದೂರು ದಾಖಲಿಸಲಾಗಿದೆ. ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳು ಹಾಗೂ ಡಿವೈಎಸ್ಪಿ ಇವರಿಗೆ ದೂರು ನೀಡಲಾಗಿದೆ. ಆದರೆ, ಯಾವುದೇ ಕ್ರಮಕೈಗೊಂಡಿಲ್ಲ ಎಂದು ದೂರಿದ್ದಾರೆ. ಪೊಲೀಸ್ ಇಲಾಖೆಯಿಂದ ನ್ಯಾಯಸಮತ ನಡೆಯನ್ನು ನಿರೀಕ್ಷಿಸುತ್ತಿದ್ದೇವೆ. ಆದರೆ ಮುದುಗಲ್ ಪಿಎಸ್ಐ ತನ್ನ ಸ್ನೇಹಿತ ರಾಘವೇಂದ್ರ ಇವರನ್ನು ರಕ್ಷಿಸಲು ಆರೋಪಿಗಳನ್ನು ಬಂಧಿಸದೇ ಸಹಕರಿಸುತ್ತಿದ್ದಾರೆ. ಈಗಾಗಲೇ ರಾಮಪ್ಪ ಮತ್ತು ಸಕ್ಕುಬಾಯಿ ಇವರನ್ನು ಬಂಧಿಸಿರುವ ಪೊಲೀಸರು ಇನ್ನೊಂದು ಗುಂಪಿನವರನ್ನು ಬಂಧಿಸದೇ ತಾರತಮ್ಯ ಮಾಡುತ್ತಿದ್ದಾರೆ. ಕೂಡಲೇ ಆರೋಪಿಗಳನ್ನು ಬಂಧಿಸದೇ ಹೋದಲ್ಲಿ ನ್ಯಾಯಾಂಗಮೊರೆ ಹೋಗುವುದಾಗಿ ಹೇಳಿದ್ದಾರೆ. ಈ ಸಂದರ್ಭದಲ್ಲಿ ಲಾಲಮ್ಮ, ಶಿಲ್ಪಾ ಇದ್ದರು.
ಕೇವಲ ಒಂದೂವರೆ ಗಂಟೆಯಲ್ಲಿ ದೇಶ ಬಿಟ್ಟು ಪರಾರಿ ಯೋಜನೆ ರೂಪಿಸಿದ್ದ ಲುಥ್ರಾ ಸಹೋದರರು
ಮೋದಿಗೆ ಉತ್ತರಾಧಿಕಾರಿ ಯಾರು ? RSS ಮುಖ್ಯಸ್ಥ ಮೋಹನ್ ಭಾಗವತ್ ಮಹತ್ವದ ಸ್ಪಷ್ಟನೆ
Who After Narendra Modi : ಪ್ರಧಾನಮಂತ್ರಿ ನರೇಂದ್ರ ಮೋದಿಗೆ ಉತ್ತರಾಧಿಕಾರಿ ಯಾರು ಎನ್ನುವ ಪ್ರಶ್ನೆಗೆ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಉತ್ತರವನ್ನು ನೀಡಿದ್ದಾರೆ. 75 ವರ್ಷ ತುಂಬಿದವರು, ಚುನಾವಣಾ ರಾಜಕೀಯದಿಂದ ಹಿಂದಕ್ಕೆ ಸರಿಯಬೇಕು ಎನ್ನುವ ಬಿಜೆಪಿಯ ನಿಯಮದಿಂದಾಗಿ, ಭಾಗವತ್ ಅವರ ಹೇಳಿಕೆ ಮಹತ್ವವನ್ನು ಪಡೆದುಕೊಂಡಿದೆ.
ಅಮೆರಿಕನ್ ಸಮಾಜದಲ್ಲಿ ವಲಸಿಗ ಭಾರತೀಯರ ಸಂಘರ್ಷಗಳು; ನನಸಾಗಲಿ ಭಯ ಮುಕ್ತ ಜೀವನದ ಕನಸುಗಳು
ಅದೊಂದು ಕಾಲವಿತ್ತು. ಭಾರತೀಯ ಕೌಶಲ್ಯಪೂರ್ಣ ಕಾರ್ಮಿಕರನ್ನು ಅಮೆರಿಕ ಬಿಗಿದಪ್ಪಿಕೊಳ್ಳುತ್ತಿತ್ತು. ಭಾರತದ ವಿದ್ವತ್ತಿನ ಮಹತ್ವವನ್ನು ಚೆನ್ನಾಗಿ ಅರಿತಿದ್ದ ಅಮೆರಿಕ, H-1B ವೀಸಾ ಕಾರ್ಯಕ್ರಮದಡಿಯಲ್ಲಿ ಯುಎಸ್ಗೆ ಬರುವ ಭಾರತೀಯರನ್ನು ತೆರೆದ ಹೃದಯದಿಂದ ಸ್ವಾಗತ ನೀಡುತ್ತಿತ್ತು. ಆದರೀಗ ಕಾಲ ಬದಲಾಗಿದೆ. ಅಮೆರಿಕದ ಆಡಳಿತದ ಚುಕ್ಕಾಣಿ ಹಿಡಿದಿರುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಅಮೆರಿಕಕ್ಕೆ ವಿದೇಶುಯರ ವಲಸೆಯನ್ನು ಅತ್ಯುಗ್ರವಾಗಿ ವಿರೋಧಿಸುತ್ತಾರೆ. ಟ್ರಂಪ್ ಆಡಳಿತದ ಕಠಿಣ ವಲಸೆ ನೀತಿ, ಅಮೆರಿಕನ್ ಸಮಾಜದಲ್ಲಿ ವಲಸಿಗರ ವಿರುದ್ಧ ದ್ವೇಷ ಭಾವನೆ ಕೆರಳಿಸುವಲ್ಲಿ ನಿಧಾನವಾಗಿ ಯಶಸ್ವಿಯಾಗುತ್ತಿದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಅಮೆರಿಕದಲ್ಲಿ ವಲಸಿಗ ಭಾರತೀಯರ ಹೋರಾಟಗಳ ರೋಚಕ ಕಥೆ ಇಲ್ಲಿದೆ.
ಇಂಡಿಗೋ ಬಿಕ್ಕಟ್ಟು: ಸ್ಪಷ್ಟನೆ ನೀಡಿ, ತೊಂದರೆಗೆ ಕ್ಷಮೆಯಾಚಿಸಿದ ಅಧ್ಯಕ್ಷ ವಿಕ್ರಮ್ ಸಿಂಗ್ ಮೆಹ್ತಾ
ಇಂಡಿಗೋ ವಿಮಾನಯಾನ ಸಂಸ್ಥೆಯ ಅಧ್ಯಕ್ಷ ವಿಕ್ರಮ್ ಸಿಂಗ್ ಮೆಹ್ತಾ ಅವರು ಇತ್ತೀಚೆಗೆ ಸಾವಿರಾರು ಪ್ರಯಾಣಿಕರಿಗೆ ತೊಂದರೆ ನೀಡಿದ ವಿಮಾನ ರದ್ದತಿಗಳ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಸಂಸ್ಥೆಯು ಉದ್ದೇಶಪೂರ್ವಕವಾಗಿ ಈ ಸಮಸ್ಯೆಯನ್ನು ಸೃಷ್ಟಿಸಿಲ್ಲ ಎಂದು ಅವರು ಹೇಳಿದ್ದಾರೆ. ವಿಮಾನಯಾನ ಸಂಸ್ಥೆಯು ಕಾರ್ಯಾಚರಣೆಗಳನ್ನು ಸಾಮಾನ್ಯ ಸ್ಥಿತಿಗೆ ತರಲು ಪ್ರಯತ್ನಿಸುತ್ತಿದೆ. ಕೇಂದ್ರ ಸರ್ಕಾರ ಮತ್ತು ನ್ಯಾಯಾಲಯಗಳು ಹೊಣೆಗಾರಿಕೆ ಮತ್ತು ಪ್ರಯಾಣಿಕರ ಪರಿಹಾರಕ್ಕಾಗಿ ಒತ್ತಾಯಿಸುತ್ತಿವೆ.
ಸಿರವಾರ | ಭತ್ತದ ಬೆಳೆ ಕಳ್ಳತನದ ಆರೋಪ; ಆರೋಪಿಗಳ ವಿರುದ್ಧ ಕ್ರಮಕ್ಕೆ ಆಗ್ರಹ
ರಾಯಚೂರು: ಸಿರವಾರ ತಾಲೂಕಿನ ಜಾಗಟಕಲ್ ಸೀಮಾಂತರದಲ್ಲಿ ರಾಜಗೋಪಾಲ ಎಂಬುವವರಿಗೆ ಸೇರಿದ ಜಮೀನಲ್ಲಿ ಬೆಳೆದಿದ್ದ ಭತ್ತವನ್ನು ಅತಿಕ್ರಮಣ ಮಾಡಿ ಭತ್ತ ಕೊಯ್ದುಕೊಂಡು ಕಳ್ಳತನ ಮಾಡಿರುವರ ವಿರುದ್ದ ಕಾನೂನು ಕ್ರಮ ಕೈಗೊಂಡು ಬಂಧಿಸಬೇಕೆಂದು ಪ್ರಗತಿಪರ ಸಂಘಟನೆಗಳ ಒಕ್ಕೂಟದ ಸಂಚಾಲಕಿ ವಿಜಯರಾಣಿ ಸಿರವಾರ ಆಗ್ರಹಿಸಿದರು. ಅವರಿಂದು ಮಾಧ್ಯಮಗೋಷ್ಟಿ ಉದ್ದೇಶಿಸಿ ಮಾತನಾಡಿ, ಸರ್ವೆ 84/2, 84/3 ಹಾಗೂ 84/2 ರಲ್ಲಿರುವ ಏಳು ಎಕರೆ ಭೂಮಿಯನ್ನು ಬಸ್ಸಮ್ಮ ಇವರಿಂದ ರಾಜಗೋಪಾಲರಾವ್ ಮತ್ತು ಶೇಷಾದ್ರಿ ಇವರು ಕಾನೂನು ಬದ್ದವಾಗಿ ಖರೀದಿ ಮಾಡಿದ್ದಾರೆ. ರಾಚಪ್ಪ ಎಂಬುವವರು ಮ್ಯುಟೇಷನ್ ಮಾಡಲು ಆರಕೇರಾ ನಾಡಕಚೇರಿಗೆ ಆಕ್ಷೇಪಣೆ ಸಲ್ಲಿಸಿದ್ದರಿಂದ ನೊಂದಣಿ ಬಾಕಿಯಿದೆ. ಆದರೆ ನ.30 ರಂದು ರಾತ್ರಿ ರಾಚಪ್ಪ, ಕಾಸಲಯ್ಯ, ಶಿವಪ್ಪ, ಸಣ್ಣ ಶಿವಪ್ಪ, ಮೂಕಪ್ಪ ಮತ್ತು ಮಲ್ಲಪ್ಪ ಸೇರಿ ಭತ್ತ ಕೊಯ್ಯುವ ಯಂತ್ರದೊಂದಿಗೆ ಬಂದು ಬೆಳೆದು ನಿಂತಿದ್ದ ಭತ್ತವನ್ನುಕೊಯ್ದುಕೊಂಡು ಕಳ್ಳತನ ಮಾಡಿದ್ದಾರೆ. ಜಮೀನು ಲೀಜುದಾರರಾದ ಶ್ರೀನಿವಾಸ, ಮೌನೇಶ ಇವರನ್ನು ಬೆದರಿಸಿದ್ದಾರೆ. ಈ ಕುರಿತು ಗಬ್ಬೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಭತ್ತ ಕಳ್ಳತನ ಮಾಡಿರುವರನ್ನು ಬಂಧಿಸಿಲ್ಲ.ಕೂಡಲೇ ಆರೋಪಿಗಳನ್ನು ಬಂಧಿಸಿ ಕಳವು ಮಾಡಿರುವ ಭತ್ತವನ್ನು ಮರಳಿಸಬೇಕೆಂದು ಒತ್ತಾಯಿಸಿದರು. ದಲಿತ ಸೇನೆ ರಾಜ್ಯ ಸಂಘಟನಾ ಕಾರ್ಯದರ್ಶಿ ಜಾವೀದ್ ಖಾನ್ ಮಾತನಾಡಿ, ರಾಜಗೋಪಾಲ ಎಂಬುವವರ ಖರೀದಿ ಭೂಮಿಯಲ್ಲಿ ಅತಿಕ್ರಮಣ ಮಾಡಿ ರಾಚಪ್ಪ ಹಾಗೂ ಇತರರು ದೌರ್ಜನ್ಯ ಎಸಗಿದ್ದಾರೆ. ಕೂಡಲೇ ಆರೋಪಿಗಳನ್ನು ಬಂಧಿಸಿ ನ್ಯಾಯ ಒದಗಿಸಬೇಕು. ಇಲ್ಲದೇ ಹೋದಲ್ಲಿ ಹೋರಾಟ ನಡೆಸುವುದಾಗಿ ಹೇಳಿದರು. ಈ ಸಂದರ್ಭದಲ್ಲಿ ಬಸ್ಮಮ್ಮ, ಲಕ್ಷ್ಮೀ, ರಾಜಗೋಪಾಲ, ಸಾಜೀದ್, ಮಾರತಿ ಚಿಕ್ಕಸೂಗೂರು, ಕೃಷ್ಣ ಮಚರ್ಲಾ ಜೀವನ ಸಹಿತ ಹಲವರಿದ್ದರು.
ಡಿಸೆಂಬರ್ 11ರಂದು ರಾಜ್ಯದಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ?: ಜಿಲ್ಲಾವರು ಅಂಕಿಅಂಶಗಳ ವಿವರ
Petrol, Diesel Price: ಪೆಟ್ರೋಲ್, ಡೀಸೆಲ್ ದರಲ್ಲಿ ಜಾಸ್ತಿ ಅಲ್ಲದಿದ್ದರೂ, ಸ್ವಲ್ಪ ಪ್ರಮಾಣದಲ್ಲಾದ್ರೂ ಏರಿಳಿತ ಆಗುತ್ತಿರುತ್ತದೆ. ಹಾಗಾದರೆ, ಇಂದು (ಡಿಸೆಂಬರ್ 11) ಬೆಂಗಳೂರು ಸೇರಿದಂತೆ ರಾಜ್ಯದ ಉಳಿದ ಜಿಲ್ಲೆಗಳಲ್ಲಿ ಲೀಟರ್ ಪೆಟ್ರೋಲ್, ಡೀಸೆಲ್ ಬೆಲೆ ಎಷ್ಟಿದೆ ಎನ್ನುವ ಅಂಕಿಅಂಶಗಳನ್ನು ಇಲ್ಲಿ ನೀಡಲಾಗಿದೆ ಕಣ್ಣಾಡಿಸಿ. ಶಕ್ತಿಯ ಮೂಲ ಎನಿಸಿಕೊಂಡಿರುವ ಪೆಟ್ರೋಲ್ ಮತ್ತು ಡೀಸೆಲ್ ಇಂಧನ ಅತ್ಯವಶ್ಯಕವಾಗಿ ಬೇಕಾಗುವ ಸಂಪನ್ಮೂಲಗಳಲ್ಲಿ
IPS, IAS Officers Transfer: ರಾಜ್ಯದಲ್ಲಿ ಐಪಿಎಸ್, ಐಎಎಸ್ ಅಧಿಕಾರಿಗಳ ದಿಢೀರ್ ವರ್ಗಾವಣೆ: ಇಲ್ಲಿದೆ ಮಾಹಿತಿ
IPS, IAS Officers Transfer: ರಾಜ್ಯ ಸರ್ಕಾರವು ಆಗಾಗ ಆಡಳಿತ ಯಂತ್ರಕ್ಕೆ ಮೇಜರ್ ಸರ್ಜರಿ ಮಾಡುತ್ತಲಿರುತ್ತದೆ. ಹಾಗೆಯೇ ಇದೀಗ ರಾಜ್ಯ ಹಿರಿಯ ಐಪಿಎಸ್ ಅಧಿಕಾರಿ ಅಲೋಕ್ ಕುಮಾರ್, ಎಡಿಜಿಪಿ ಬಿ. ದಯಾನಂದ್ ಅವರನ್ನು ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಜೊತೆಗೆ ಮೂರು ಮಂದಿ ಐಎಎಸ್ ಅಧಿಕಾರಿಗನ್ನು ಸಹ ವರ್ಗಾವಣೆ ಮಾಡಿದೆ. ಹಾಗಾದ್ರೆ ಯಾರು ಎಲ್ಲಿಗೆ ಎನ್ನುವ
ಇದು ಯಾರ ದುಡ್ಡು? ಪಾಕಿಸ್ತಾನ ರಾಷ್ಟ್ರೀಯ ಅಸೆಂಬ್ಲಿ ಸ್ಪೀಕರ್ ಹಣ ತೋರಿಸಿದ್ದೇ ತಡ ಓಡೊಡಿ ಬಂದ 12 ಸಂಸದರು!
ಇದು ಪಾಕಿಸ್ತಾನ ಆರ್ಥಿಕವಾಗಿ ದಿವಾಳಿಯಾಗಿರುವುದಕ್ಕೆ ಸಾಕ್ಷಿ ಎಂದಾದರೂ ಅನ್ನಿ ಅಥವಾ ಪಾಕಿಸ್ತಾನದ ಸಂಸದರ ಹಾಸ್ಯಪ್ರಜ್ಞೆ ಎಂದಾದರೂ ಅನ್ನಿ. ರಾಷ್ಟ್ರೀಯ ಅಸೆಂಬ್ಲಿಯಲ್ಲಿ ದೊರೆತ ನೋಟಿನ ಕಂತೆಗಾಗಿ 12 ಸಂಸದರು ಹಕ್ಕು ಪ್ರತಿಪಾದಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ. ಸ್ಪೀಕರ್ ಅಯಾಜ್ ಸಾದಿಕ್ ಅವರು ಅಸೆಂಬ್ಲಿಯಲ್ಲಿ ದೊರೆತ ಹಣ ಯಾರದ್ದೆಂದು ಕೇಳಿದಾಗ, 12 ಸಂಸದರು ಆ ಹಣದ ಮೇಲೆ ಹಕ್ಕು ಪ್ರತಿಪಾದನೆ ಮಾಡಿದ್ದಾರೆ. ಈ ಕುರಿತು ಇಲ್ಲಿದೆ ಸಂಪೂರ್ಣ ಮಾಹಿತಿ.
Indian Railways: ಭಾರತೀಯ ರೈಲ್ವೆ ಟಿಕೆಟ್ ದರ ತೀರಾ ಅಗ್ಗ: ದೈನಂದಿನ ರೈಲು ಸೇವೆ 11,740 ಕ್ಕೆ ಹೆಚ್ಚಳ..
ನವದೆಹಲಿ, ಡಿಸೆಂಬರ್ 11: ಭಾರತೀಯ ರೈಲ್ವೆಯ ದೈನಂದಿನ ಸೇವೆಗಳಲ್ಲಿ ಗಣನೀಯವಾಗಿ ಹೆಚ್ಚಾಗಿದೆ. ಜೊತೆಗೆ 2020ರ ಮೊದಲಿನ ವರ್ಷಗಳಿಗೆ ಹೋಲಿಸಿದರೆ ಸೇವೆಯನ್ನು ಇಲಾಖೆ ಹೆಚ್ಚಿಸಿದೆ. ಇತರ ದೇಶಗಳಿಗೆ ಹೋಲಿಸಿದರೆ ಭಾರದಲ್ಲಿ ರೈಲ್ವೆ ಟಿಕೆಟ್ ದರ ಅಗ್ಗವಾಗಿದೆ ಎಂದು ಕೇಂದ್ರ ರೈಲ್ವೆ ಖಾತೆ ಸಚಿವ ಅಶ್ವಿನಿ ವೈಷ್ಣವ್ ಅವರು ಮಾಹಿತಿ ನೀಡಿದರು. ಸಂಸತ್ ಚಳಿಗಾಲ ಅಧಿವೇಶನದಲ್ಲಿ ವಿಪಕ್ಷ ನಾಯಕರ ಪ್ರಶ್ನೆಗಳಿಗೆ
ಪೌರತ್ವಕ್ಕೆ ನೇರ ರಹದಾರಿ; ಗೋಲ್ಡ್ ಕಾರ್ಡ್ ಘೋಷಿಸಿದ ಟ್ರಂಪ್
ವಾಷಿಂಗ್ಟನ್: ಅಮೆರಿಕದ ಪೌರತ್ವ ಪಡೆಯಲು ಬುಧವಾರದಿಂದಲೇ ಜಾರಿಯಾಗುವಂತೆ ವಿಶೇಷ ಟ್ರಂಪ್ ಗೋಲ್ಡ್ ಕಾರ್ಡ್ ಯೋಜನೆಯನ್ನು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ. ಟ್ರುಥ್ ಸೋಶಿಯಲ್ ಪೋಸ್ಟ್ ನಲ್ಲಿ ಟ್ರಂಪ್ ಈ ವಿಶೇಷ ಯೋಜನೆಯನ್ನು ಘೋಷಿಸಿದ್ದು, ಅಮೆರಿಕ ಸರ್ಕಾರದ ಟ್ರಂಪ್ ಗೋಲ್ಡ್ ಕಾರ್ಡ್ ಇಂದು ಘೋಷಣೆಯಾಗಿದೆ! ಇದು ಅರ್ಹತೆ ಹೊಂದಿದ ಎಲ್ಲ ಜನರಿಗೆ ಪೌರತ್ವಕ್ಕೆ ನೇರ ಮಾರ್ಗ. ಅಷ್ಟೊಂದು ರೋಮಾಂಚಕ! ನಮ್ಮ ಶ್ರೇಷ್ಠ ಅಮೆರಿಕನ್ ಕಂಪನಿಗಳು ತಮ್ಮ ಅಮೂಲ್ಯ ಪ್ರತಿಭೆಗಳನ್ನು ಅಂತಿಮವಾಗಿ ಉಳಿಸಿಕೊಳ್ಳಬಹುದು. ಲೈವ್ ಸೈಟ್ 30 ನಿಮಿಷಗಳಲ್ಲಿ ಮುಕ್ತವಾಗಲಿದೆ! ಎಂದಿದ್ದಾರೆ. ಈ ಬಗ್ಗೆ ಮತ್ತಷ್ಟು ವಿವರ ನೀಡಿರುವ ಟ್ರಂಪ್, ಗೋಲ್ಡ್ ಕಾರ್ಡ್ ಆರಂಭ ನನಗೆ ಹಾಗೂ ದೇಶಕ್ಕೆ ಅತ್ಯಂತ ರೋಮಾಂಚಕ ಕ್ಷಣ. ಈ ಸೈಟ್ 30 ನಿಮಿಷಗಳಲ್ಲಿ ಆರಂಭವಾಗಲಿದೆ. ಎಲ್ಲ ಹಣ ಅಮೆರಿಕ ಸರ್ಕಾರಕ್ಕೆ ಹೋಗಲಿದೆ.. ಇದು ಬಹುತೇಕ ಗ್ರೀನ್ ಕಾರ್ಡ್ ನಂತಿದೆ. ಆದರೆ ಗ್ರೀನ್ ಕಾರ್ಡ್ ಗಿಂತ ಹೆಚ್ಚಿನ ಪ್ರಯೋಜನಗಳನ್ನು ಹೊಂದಿದೆ. ಕಂಪನಿಗಳು ಯಾವುದೇ ಶಿಕ್ಷಣ ಸಂಸ್ಥೆಗಳಿಗೆ ತೆರಳಿ ಕಾರ್ಡ್ ಖರೀದಿಸಿ, ಆ ವ್ಯಕ್ತಿಯನ್ನು ಅಮೆರಿಕದಲ್ಲಿ ಉಳಿಸಿಕೊಳ್ಳಬಹುದು. ಶ್ರೇಷ್ಠರನ್ನು ನಮ್ಮ ದೇಶಕ್ಕೆ ಕರೆತರಲು ಇದು ದೊಡ್ಡ ಉಡುಗೊರೆ. ಏಕೆಂದರೆ ಈಗ ಕೆಲ ಅದ್ಭುತ ವ್ಯಕ್ತಿಗಳಿದ್ದರೂ, ಅವರಿಗೆ ಇಲ್ಲಿ ನೆಲೆಸಲು ಅವಕಾಶ ನೀಡುವಂತಿಲ್ಲ ಎಂದು ಹೇಳಿದ್ದಾರೆ. ನಮ್ಮ ಕಾಲೇಜುಗಳಲ್ಲಿ ಪದವಿ ಪಡೆದು ಅವರು ಭಾರತ, ಚೀನಾ ಅಥವಾ ಫ್ರಾನ್ಸ್ಗೆ ಮರಳುತ್ತಾರೆ.. ಕಂಪನಿಗಳಿಗೆ ಸಂತಸದ ವಿಚಾರ. ಆ್ಯಪಲ್ಗೆ ಅತೀವ ಸಂತಸವಾಗುತ್ತದೆ ಎಂದು ನನಗೆ ಗೊತ್ತು. ಟಿಮ್ ಕುಕ್ ಅವರಿಗಿಂತ ಹೆಚ್ಚು ಈ ಬಗ್ಗೆ ಯಾರೂ ಮಾತನಾಡಿಲ್ಲ. ಇದು ದೊಡ್ಡ ಸಮಸ್ಯೆ ಎಂದು ಅವರು ಹೇಳಿದ್ದರು. ಇನ್ನು ಮೇಲೆ ಇದು ಸಮಸ್ಯೆಯಾಗುವುದಿಲ್ಲ.. ಇನ್ನೊಂದು ಅಂಶವೆಂದರೆ ಕೋಟ್ಯಂತರ ಡಾಲರ್ ಹಣ ಅಮೆರಿಕದ ಬೊಕ್ಕಸಕ್ಕೆ ಹರಿಯುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಈ ಯೋಜನೆಯ ಪೂರ್ಣ ವಿವರಗಳು ಇನ್ನೂ ಅಸ್ಪಷ್ಟಾಗಿದ್ದರೂ, ವೈಯಕ್ತಿಕ ಅರ್ಜಿದಾರರು 10 ಲಕ್ಷ ಡಾಲರ್ ಗಳನ್ನು ಅಮೆರಿಕದ ಖಜಾನೆಗೆ ದೇಣಿಗೆ ನೀಡಬೇಕಾಗುತ್ತದೆ. ಮರುಪಾವತಿ ಇಲ್ಲದ 15 ಸಾವಿರ ಡಾಲರ್ ಸಂಸ್ಕರಣಾ ಶುಲ್ಕದ ಜತೆಗೆ ಕಾರ್ಪೊರೇಟ್ ಪ್ರಾಯೋಜಿತ ಅಜಿದಾರರು 20 ಲಕ್ಷ ಡಾಲರ್ ದೇಣಿಗೆ ನೀಡಬೇಕಾಗುತ್ತದೆ ಎಂದು ತಿಳಿದು ಬಂದಿದೆ.
ಬೆಂಗಳೂರು, ಡಿಸೆಂಬರ್ 11: ಕರ್ನಾಟಕ ಸರಕಾರಿ ನೌಕರರ ಕೊನೆಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸರ್ಕಾರ ಗುಡ್ ನ್ಯೂಸ್ ನೀಡಿದೆ. 2023 ರ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಸರ್ಕಾರಿ ನೌಕರರಿಗೆ ನೀಡದ ಭರವಸೆಯಂತೆ ಹೊಸ ಪಿಂಚಣಿ ಯೋಜನೆಯನ್ನ ರದ್ದುಗೊಳಿಸಿ, ಹಳೆ ಪಿಂಚಣಿ ಯೋಜನೆಯನ್ನ ಜಾರಿಗೊಳಿಸಲು ಸರ್ಕಾರ ಮುಂದಾಗಿದೆ. 2006ರ ಎಪ್ರಿಲ್ 1ರ ಪೂರ್ವದಲ್ಲಿನ ನೇಮಕಾತಿ ಅಧಿಸೂಚನೆಗಳ ಮೂಲಕ ಆಯ್ಕೆ
ಕಾಂಗ್ರೆಸ್ ನಾಯಕತ್ವವೇ ಪಕ್ಷದ ಸೋಲಿಗೆ ಕಾರಣ: ಅಮಿತ್ ಶಾ ತಿರುಗೇಟು
ಹೊಸದಿಲ್ಲಿ: ಕಾಂಗ್ರೆಸ್ ಪಕ್ಷದ ಸೋಲಿಗೆ ಮತದಾನ ಅಕ್ರಮಗಳು ಕಾರಣವಲ್ಲ; ಬದಲಾಗಿ ನಾಯಕತ್ವದ ವೈಫಲ್ಯ ಮುಖ್ಯ ಕಾರಣ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಮಾತಿನ ಚಾಟಿ ಬೀಸಿದ್ದಾರೆ. ವಿರೋಧ ಪಕ್ಷಗಳ ವೋಟ್ ಚೋರಿ ಆರೋಪಗಳನ್ನು ಬಲವಾಗಿ ನಿರಾಕರಿಸಿದ ಅವರು, ಸೋಲಿನ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳುವ ಬದಲು ಮತಗಳ್ಳತನದ ಸುಳ್ಳು ಆರೋಪವನ್ನು ಹರಡುತ್ತಿದೆ ಎಂದು ಹೇಳಿದರು. ಮುಂದೊಂದು ದಿನ ಕಾಂಗ್ರೆಸ್ ಕಾರ್ಯಕರ್ತರೇ ತಮ್ಮ ನಾಯಕತ್ವವನ್ನು ಪ್ರಶ್ನಿಸಲಿದ್ದಾರೆ ಎಂದು ಚುನಾವಣಾ ಸುಧಾರಣೆಗಳ ಬಗೆಗಿನ ಲೋಕಸಭಾ ಚರ್ಚೆಯ ವೇಳೆ ಅಭಿಪ್ರಾಯಪಟ್ಟರು. ಆರೆಸ್ಸೆಸ್ ಸರ್ಕಾರಿ ಸಂಸ್ಥೆಗಳನ್ನು ವಶಪಡಿಸಿಕೊಂಡಿದೆ ಎಂದು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮಾಡಿರುವ ಆರೋಪದ ಬಗ್ಗೆ ಪ್ರತಿಕ್ರಿಯಿಸಿ, ಆರೆಸ್ಸೆಸ್ ಸಿದ್ಧಾಂತದ ವ್ಯಕ್ತಿಗಳು ಸಂವಿಧಾನಾತ್ಮಕ ಹುದ್ದೆಗಳನ್ನು ಹೊಂದುವುದನ್ನುನಿಷೇಧಿಸುವ ಕಾನೂನು ದೇಶದಲ್ಲಿದೆಯೇ? ಎಂದು ಖಾರವಾಗಿ ಪ್ರಶ್ನಿಸಿದರು. ಪ್ರಧಾನಿ ಆರೆಸ್ಸೆಸ್ ನವರು ಅಂತೆಯೇ ಗೃಹಸಚಿವರು ಕೂಡಾ ಎಂದು ಸಮರ್ಥಿಸಿಕೊಂಡರು. ರಾಷ್ಟ್ರಕ್ಕಾಗಿ ಬದುಕುವುದು ಮತ್ತು ರಾಷ್ಟ್ರಕ್ಕಾಗಿ ಸಾಯುವುದೇ ಆರೆಸ್ಸೆಸ್ ಸಿದ್ಧಾಂತ. ಭಾರತವನ್ನು ಮತ್ತಷ್ಟು ಸದೃಢ ಮತ್ತು ಸಮೃದ್ಧಗೊಳಿಸುವುದೇ ಅದರ ಉದ್ದೇಶ ಎಂದ ಅವರು, ನಾನು 10 ವರ್ಷದವನಿದ್ದಾಗಲೇ ಅಸ್ಸಾಂ ಕಿ ಗಲಿಯಾನ್ ಸುನಿ ಹೇ, ಇಂದಿರಾ ಗಾಂಧಿ ಖೂನಿ ಹೇ ಎಂಬ ಘೋಷಣೆ ಕೂಗಿದ್ದೆ ಎಂದು ಬಾಲ್ಯವನ್ನು ನೆನಪಿಸಿಕೊಂಡರು. ವಿರೋಧ ಪಕ್ಷಗಳು ಹಿನ್ನಡೆ ಅನುಭವಿಸಿದಾಗಲೆಲ್ಲ ಬೇರೆಯವರನ್ನು ದೂಷಿಸುತ್ತವೆ ಎಂದು ತಿರುಗೇಟು ನೀಡಿದರು.
ಸೋಷಿಯಲ್ ಮೀಡಿಯಾದಲ್ಲಿ ಬರುವ ವೈದ್ಯಕೀಯ ತಪ್ಪು ಮಾಹಿತಿಯ ಬಗ್ಗೆ ಬೆಂಗಳೂರು ವೈದ್ಯರ ಎಚ್ಚರಿಕೆ
ಇತ್ತೀಚೆಗೆ, ಬೆಂಗಳೂರಿನಲ್ಲಿ 36 ವರ್ಷದ ವ್ಯಕ್ತಿಯೊಬ್ಬರು ಮೂತ್ರಪಿಂಡದ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಅವರ ಕ್ರಿಯೇಟಿನೈನ್ ಮಟ್ಟ 4.5ರಷ್ಟಿತ್ತು, ಇದು ಸಾಮಾನ್ಯ ಮಟ್ಟಕ್ಕಿಂತ ಸುಮಾರು 4 ಪಟ್ಟು ಹೆಚ್ಚಾಗಿತ್ತು. ತನಿಖೆ ನಡೆಸಿದಾಗ, ಅವರು ಸಾಮಾಜಿಕ ಜಾಲತಾಣದ ಪ್ರಭಾವಿ ಹೇಳಿದ ಡಿಟಾಕ್ಸ್ ಥೆರಪಿಯನ್ನು ಅನುಸರಿಸುತ್ತಿದ್ದರು ಎಂಬುದು ತಿಳಿದುಬಂದಿದೆ.
ಕರ್ನಾಟಕದ ರೈತರ ಬೇಡಿಕೆಗೆ ಕೇಂದ್ರದ ಸ್ಪಂದನೆ : MSP ಯೋಜನೆಯಡಿ 9.67 ಲಕ್ಷ ಮೆಟ್ರಿಕ್ ಟನ್ ಖರೀದಿಗೆ ಅಸ್ತು
Tur Purchase : ಕರ್ನಾಟಕದ ರೈತರ ಬೇಡಿಕೆಗೆ ಕೇಂದ್ರ ಸರ್ಕಾರ ಸ್ಪಂದಿಸಿದೆ. ಈ ಸಂಬಂಧ, ಕೇಂದ್ರ ಸಚಿವರಾದ ಶಿವರಾಜ್ ಸಿಂಗ್ ಚೌಹಾಣ್ ಮತ್ತು ಪ್ರಲ್ಹಾದ ಜೋಶಿ ಮಾತುಕತೆ ಯಶಸ್ವಿಯಾಗಿದೆ. ತೊಗರಿ ಖರೀದಿಗೆ ಕೇಂದ್ರ ಅಸ್ತು ಎಂದಿದೆ. ನಾಡಿನ ಅನ್ನದಾತರ ಸಂಕಷ್ಟ ಅರಿತು ತಡ ಮಾಡದೆ ಸ್ಪಂದಿಸಿದ ಮೋದಿ ಸರ್ಕಾರದ ರೈತ ಪರ ಕಾಳಜಿ, ಬದ್ಧತೆ ಇದರಿಂದ ಮತ್ತೊಮ್ಮೆ ಸಾಬೀತಾಗಿದೆ ಎಂದು ಆರ್. ಅಶೋಕ ಹೇಳಿದ್ದಾರೆ.
ದೇವನಹಳ್ಳಿ ಬಳಿ ಭೀಕರ ರಸ್ತೆ ಅಪಘಾತ; ಕೆಎಸ್ಆರ್ಟಿಸಿ ಬಸ್ಗೆ ಗುದ್ದಿದ ಕಾರಿನಲ್ಲಿದ್ದ ಮೂವರ ದುರ್ಮರಣ
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಹೊರವಲಯದಲ್ಲಿರುವ ಲಾಲಗೊಂಡನಹಳ್ಳಿ ಗೇಟ್ ಬಳಿ, ಕೆಎಸ್ಆರ್ಟಿಸಿ ಬಸ್ ಮತ್ತು ಕಿಯಾ ಕಾರು ನಡುವೆ ಭೀಕರ ಅಪಘಾತ ಸಂಭವಿಸಿದೆ. ಚಾಲಕನ ನಿಯಂತ್ರಣ ತಪ್ಪಿದ್ದರಿಂದ ಕಾರು ಮೊದಲು ಡಿವೈಡರ್ಗೆ ಡಿಕ್ಕಿ ಹೊಡೆದ, ಆ ಬಳಿಕ ಕೆಎಸ್ಆರ್ಟಿಸಿ ಬಸ್ಗೆ ಗುದ್ದಿದೆ. ಪರಿಣಾಮಗಾಗಿ ಕಾರಿನಲ್ಲಿದ್ದ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೃತಪಟ್ಟವರನ್ನು ದೇವನಹಳ್ಳಿ ತಾಲೂಕಿನ ಸಾದಹಳ್ಳಿ ಗ್ರಾಮದವರು ಎಂದು ಗುರುತಿಸಲಾಗಿದೆ. ಅಪಘಾತದಿಂದಾಗಿ ದೇವನಹಳ್ಳಿ ಹೈವೇ ಬಳಿ ಕೆಲಕಾಲ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಇಲ್ಲಿದೆ ಮಾಹಿತಿ.
10 ವರ್ಷದ ಬಳಿಕ ಆರ್ ಟಿ ಐ ಅರ್ಜಿಯ ಮೇಲ್ಮನವಿ ವಿಚಾರಣೆ; ದೂರುದಾರನ ಅಸಮಾಧಾನ
ರಾಯಚೂರು: ಕಳೆದ ಹತ್ತು ವರ್ಷಗಳ ಹಿಂದೆ ಸಲ್ಲಿಸಲಾಗಿದ್ದ ಮಾಹಿತಿ ಹಕ್ಕು ಆಯೋಗದ ಮೇಲ್ಮನವಿಯನ್ನು ಈಗ ವಿಚಾರಣೆ ಕೈಗೆತ್ತಿಕೊಂಡಿದ್ದಾರೆ ಎಂದು ಆರ್ಟಿಐ ಕಾರ್ಯಕರ್ತ ಅಳ್ಳಪ್ಪ ಅಮರಾಪುರು ದೂರಿದ್ದಾರೆ. ಅವರಿಂದು ಮಾಧ್ಯಮಗೋಷ್ಟಿ ಉದ್ದೇಶಿಸಿ ಮಾತನಾಡಿ, 2015 ಜನವರಿ 23 ರಂದು ದೇವದುರ್ಗ ಪುರಸಭೆ ವ್ಯಾಪ್ತಿಯಲ್ಲಿ ಬರು ಸರ್ಕಾರಿ ಜಮೀನಿಗಳ ಮಾಹಿತಿ ಕೇಳಿ ಅರ್ಜಿ ಸಲ್ಲಿಸಲಾಗಿತ್ತು. ಮಾಹಿತಿ ನೀಡದೇ ಇರುವುದರಿಂದ ರಾಯಚೂರು ಸಹಾಯಕ ಆಯುಕ್ತರಿಗೆ ಮೊದಲ ಮೇಲ್ಮನವಿ ಸಲ್ಲಿಸಿದ್ದರೂ ಉತ್ತರ ಬಾರದೇ ಇರುವುದರಿಂದ ಬೆಂಗಳೂರು ಮಾಹಿತಿ ಹಕ್ಕು ಆಯೋಗಕ್ಕೆ ಅರ್ಜಿ ಸಲ್ಲಿಸಿದ್ದೆ. ಆರ್ ಟಿಐ ಅಡಿ ಅರ್ಜಿ ಸಲ್ಲಿಸಿದವರಿಗೆ 30 ದಿನಗಳಲ್ಲಿ ಉತ್ತರಿಸಬೇಕೆನ್ನುವ ನಿಯಮವಿದ್ದರೂ ಯಾವೊಬ್ಬ ಅಧಿಕಾರಿಗಳು ಇದನ್ನು ಪಾಲಿಸುತ್ತಿಲ್ಲ ಎಂದು ಆರೋಪಿಸಿದರು. 10 ವರ್ಷಗಳಿಂದ ಬಾಕಿಯಿದ್ದ ಮೇಲ್ಮನವಿಯ ವಿಚಾರಣೆಯನ್ನು ಕಲ್ಬುರ್ಗಿ ಮಾಹಿತಿ ಹಕ್ಕು ಆಯೋಗ ಡಿ.11 ರಂದು ನಿಗದಿಪಡಿಸಿದೆ. ಆಯೋಗ ಕಾರ್ಯವೈಖರಿಗೆ ಇದೊಂದು ನಿದರ್ಶನವಾಗಿದೆ. ಆಯೋಗವೇ ಸಕಾಲದಲ್ಲಿ ವಿಚಾರಣೆ ನಡೆಸದೇ ಇರುವದರಿಂದ ಆರ್ ಟಿಐ ಅರ್ಥಕಳೆದುಕೊಂಡಂತಾಗಿದೆ ಎಂದರು.
ವೈದ್ಯೆಯರೊಂದಿಗೆ ಅಶ್ಲೀಲ ವರ್ತನೆ ಆರೋಪ: ಭಾರತ ಮೂಲದ ವ್ಯಕ್ತಿ ಕೆನಡಾದಲ್ಲಿ ಬಂಧನ
ಒಟ್ಟಾವ: ಕೆನಡಾದ ಮಿಸ್ಸಿಸೌಗಾ ಆಸ್ಪತ್ರೆಗಳಲ್ಲಿ ವೈದ್ಯೆಯರು ಸೇರಿದಂತೆ ಮಹಿಳಾ ಉದ್ಯೋಗಿಗಳ ಜತೆ ದೈಹಿಕ ಸಂಪರ್ಕಕ್ಕೆ ಪ್ರಯತ್ನಿಸಿದ ಆರೋಪದಲ್ಲಿ 25 ವರ್ಷದ ಭಾರತ ಮೂಲದ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ವ್ಯಕ್ತಿಯನ್ನು ವೈಭವ್ ಎಂದು ಗುರುತಿಸಲಾಗಿದ್ದು, ವೈದ್ಯಕೀಯ ಸಮಸ್ಯೆಗಳಿವೆ ಎಂಬ ನೆಪದಲ್ಲಿ ಪದೇ ಪದೇ ಕ್ಲಿನಿಕ್ ಗಳಿಗೆ ಭೇಟಿ ನೀಡಿ, ಮಹಿಳಾ ವೈದ್ಯರಿಂದ ಅಸಭ್ಯ ದೈಹಿಕ ಸಂಪರ್ಕಕ್ಕೆ ಪ್ರಯತ್ನಿಸುತ್ತಿದ್ದ ಎಂದು ತನಿಖಾಧಿಕಾರಿಗಳು ಹೇಳಿದ್ದಾರೆ. 2025ರ ಹಲವು ತಿಂಗಳಲ್ಲಿ ಹಲವು ಕಡೆಗಳಲ್ಲಿ ಇಂಥ ಘಟನೆಗಳು ವರದಿಯಾಗಿವೆ ಎಂದು ಪೊಲೀಸರು ವಿವರಿಸಿದ್ದಾರೆ. ಅಸಭ್ಯ ವರ್ತನೆಗಾಗಿ ಬ್ರಾಂಪ್ಟನ್ ನ ವ್ಯಕ್ತಿಯನ್ನು 12 ಡಿವಿಷನ್ ಕ್ರಿಮಿನಲ್ ಇನ್ವೆಸ್ಟಿಗೇಶನ್ ಬ್ಯೂರೊ ಬಂಧಿಸಿದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ. ಕೆಲ ಪ್ರಕರಣಗಳಲ್ಲಿ ಮಹಿಳಾ ಕ್ಲಿನಿಕ್ ಸಿಬ್ಬಂದಿಯ ಬಳಿಗೂ ತೆರಳಿದ್ದ ಎಂದು ಪೊಲೀಸರು ಹೇಳಿದ್ದು, ವೈದ್ಯರ ಬಳಿ ಮಾತನಾಡುವಾಗ ಸುಳ್ಳು ಗುರುತು ಹೇಳುತ್ತಿದ್ದ. ಅಸ್ವಸ್ಥತೆಯ ಬಗ್ಗೆ ಸುಳ್ಳು ಮಾಹಿತಿ ನೀಡಿ, ವೈದ್ಯೆಯರು ತನ್ನನ್ನು ಅಸಭ್ಯವಾಗಿ ಸ್ಪರ್ಶಿಸಬೇಕು ಎಂದು ಬಯಸುತ್ತಿದ್ದ. ಕೆಲ ಪ್ರಕರಣಗಳಲ್ಲಿ ಆಕಾಶ್ದೀಪ್ ಸಿಂಗ್ ಎಂದು ಹೇಳಿಕೊಂಡಿದ್ದಾಗಿ ಪ್ರಕಟಣೆ ವಿರಿಸಿದೆ. ಡಿಸೆಂಬರ್ 4ರಂದು ಈತನನ್ನು ಬಂಧಿಸಲಾಗಿದ್ದು, ಈತನ ಜಾಮೀನು ಅರ್ಜಿಯ ವಿಚಾರಣೆ ನಡೆಯುತ್ತಿದೆ. ಈತನ ಮೇಲೆ ಸಾರ್ವಜನಿಕ ಸ್ಥಳಗಳಲ್ಲಿ ಅಸಭ್ಯ ವರ್ತನೆ, ಪ್ರಯೋಜನ ಪಡೆಯುವ ಸಲುವಾಗಿ ವಂಚನೆ, ಐಡೆಂಟಿಟಿ ಕಳ್ಳತನದ ಆರೋಪವಿದೆ.
ದೇವನಹಳ್ಳಿ ಭೂಸ್ವಾಧೀನ : ತಿಳಿಯಾಗದ ರೈತರ ಆತಂಕ
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಚನ್ನರಾಯ ಪಟ್ಟಣ ಹೋಬಳಿಯ 1,777 ಎಕರೆ ಭೂ ಸ್ವಾಧೀನದಿಂದ ಹಿಂದೆ ಸರಿದಿದ್ದೇವೆೆ ಎಂದು ಸರಕಾರ ಘೋಷಿಸಿದೆಯಾದರೂ, ಸ್ಥಳೀಯ ರೈತರ ಆತಂಕ, ಭಯ ಇನ್ನೂ ತಿಳಿಯಾಗಿಲ್ಲ. ‘ರೈತರ ಹೋರಾಟಕ್ಕೆ ಮಣಿದಿದ್ದು, ಭೂಸ್ವಾಧೀನ ಪ್ರಕ್ರಿಯೆಯನ್ನು ಕೈ ಬಿಟ್ಟಿದ್ದೇವೆ’ ಎಂದು ಘೋಷಿಸಿರುವ ಸರಕಾರ ಇದೇ ಸಂದರ್ಭದಲ್ಲಿ ‘ಅಷ್ಟೂ ಜಮೀನನ್ನೂ ಶಾಶ್ವತ ವಿಶೇಷ ಕೃಷಿ ವಲಯ’ವನ್ನಾಗಿ ಘೋಷಿಸಿ ಕೃಷಿಗೆ ಪ್ರೋತ್ಸಾಹ ನೀಡಲಿದ್ದೇವೆ ಎಂದು ಹೇಳಿದೆ. ಮೇಲ್ನೋಟಕ್ಕೆ ಸರಕಾರದ ಈ ನಿರ್ಧಾರ ಕೃಷಿಕರ ಪರವಾಗಿದೆಯೆಂದು ಭಾಸವಾಗುತ್ತದೆಯಾದರೂ, ತನಗೆ ಜಮೀನು ನೀಡಲು ಹಿಂಜರಿದ ರೈತರ ವಿರುದ್ಧ ಸರಕಾರ ಈ ಮೂಲಕ ಸೇಡು ತೀರಿಸಲು ಹೊರಟಿದೆಯೋ ಎನ್ನುವ ಅನುಮಾನವನ್ನು ಸ್ಥಳೀಯರು ವ್ಯಕ್ತಪಡಿಸುತ್ತಿದ್ದಾರೆ. ಈ ಹೋಬಳಿಯಲ್ಲಿರುವ ಅಷ್ಟೂ ಭೂಮಿಯನ್ನು ವಾಣಿಜ್ಯ ಉದ್ದೇಶದಿಂದ ಕೆಐಎಡಿಬಿ ಸ್ವಾಧೀನ ಪಡಿಸಿಕೊಳ್ಳಲು ಪ್ರಯತ್ನಿಸಿತ್ತು. ಸುಮಾರು ಮೂರು ವರ್ಷಗಳಿಗೂ ಅಧಿಕ ಕಾಲ ರೈತರು ಇದರ ವಿರುದ್ಧ ಹೋರಾಡುತ್ತಾ ಬಂದಿದ್ದಾರೆ. ಕೆಐಎಡಿಬಿಗೆ ಭೂಮಿಯನ್ನು ನೀಡುವುದಿಲ್ಲ ಎನ್ನುವುದಕ್ಕೆ ರೈತರಲ್ಲೂ ಸಕಾರಣಗಳಿದ್ದವು. ಮುಖ್ಯವಾಗಿ ಅವರು ತಲೆ ತಲಾಂತರಗಳಿಂದ ಕೃಷಿ ಮಾಡುತ್ತಾ ಬಂದ ಜಮೀನು ಅದಾಗಿತ್ತು. ಈ ಭೂಮಿಯಲ್ಲಿ ಅವರು ಸುಮಾರು 900ರಿಂದ 1,000 ಟನ್ ರಾಗಿ ಮತ್ತಿತರ ಆಹಾರ ಧಾನ್ಯಗಳು, 2,000 ಟನ್ ದ್ರಾಕ್ಷಿ, 100ರಿಂದ 150 ಟನ್ ಮಾವು ಮುಂತಾದ ಬೆಳೆಗಳು, ಹೂವು, ತರಕಾರಿಗಳನ್ನು ಬೆಳೆಯುತ್ತಾ ಬರುತ್ತಿದ್ದಾರೆ. ಈ ಹಳ್ಳಿಗಳಲ್ಲಿ ಪ್ರತಿ ದಿನ 6,000ದಿಂದ 8,000 ಲೀಟರ್ ಹಾಲಿನ ಉತ್ಪಾದನೆಯಾಗುತ್ತಿದೆ. ಉತ್ತಮ ಗುಣಮಟ್ಟದ ರೇಷ್ಮೆ ಗೂಡು ಮತ್ತು ಬೆಂಗಳೂರು ಬ್ಲೂ ದ್ರಾಕ್ಷಿ ಉತ್ಪಾದನೆ ಕೂಡ ಇಲ್ಲಿನ ವಿಶೇಷವಾಗಿದೆ. ಕೃಷಿ ಕೌಶಲ್ಯಗಳು ಸುಮಾರು 6,000 ಜನರಿಗೆ ನೇರವಾಗಿ ಉದ್ಯೋಗವನ್ನು ಒದಗಿಸಿವೆ ಎನ್ನುವುದು ರೈತ ಹೋರಾಟಗಾರರು ಭೂಮಿಯನ್ನು ನೀಡದೆ ಇರುವುದಕ್ಕೆ ಕೊಟ್ಟ ಪ್ರಮುಖ ಕಾರಣಗಳಾಗಿದ್ದವು. ಇದೀಗ ಅದೇ ಕಾರಣವನ್ನು ಮುಂದಿಟ್ಟುಕೊಂಡು ಕೃಷಿ ಹಿತವನ್ನು ಕಾಪಾಡುವುದಕ್ಕಾಗಿ ಸರಕಾರ ಭೂಸ್ವಾಧೀನದಿಂದ ಹಿಂದೆ ಸರಿದು, ಆ ಭಾಗವನ್ನು ‘ಶಾಶ್ವತ ವಿಶೇಷ ಕೃಷಿ ವಲಯ’ವನ್ನಾಗಿಸುತ್ತೇವೆೆ ಎನ್ನುತ್ತಿದೆ. 1,777 ಎಕರೆ ಭೂಮಿಯನ್ನು ಸರಕಾರವೇನಾದರೂ ಶಾಶ್ವತ ಕೃಷಿ ವಲಯವನ್ನಾಗಿ ಘೋಷಿಸಿದರೆ, ಭವಿಷ್ಯದಲ್ಲಿ ಅದನ್ನು ವಾಣಿಜ್ಯ ಉದ್ದೇಶಕ್ಕೆ ಮಾರಾಟ ಮಾಡುವ ಹಕ್ಕನ್ನು ರೈತರು ಕಳೆದುಕೊಳ್ಳಬೇಕಾಗುತ್ತದೆ ಎನ್ನುವ ಭೀತಿಯನ್ನು ಕೆಲವರು ವ್ಯಕ್ತಪಡಿಸುತ್ತಿದ್ದಾರೆ. ಭೂಸ್ವಾಧೀನವನ್ನು ವಿರೋಧಿಸಿರುವುದೇ ಕೃಷಿಯ ಮೇಲಿನ ಕಾಳಜಿಯಿಂದಾಗಿರುವಾಗ, ‘ಶಾಶ್ವತ ವಿಶೇಷ ಕೃಷಿ ವಲಯ’ಕ್ಕೆ ಆಕ್ಷೇಪವೇಕೆ ಎಂದು ಸರಕಾರ ಕೇಳುತ್ತಿದೆ. ಇದು ಸರಕಾರ ರೈತರಿಗೆ ಹಾಕುತ್ತಿರುವ ತಿರುಮಂತ್ರ ಎನ್ನುವುದು ಮೇಲ್ನೋಟಕ್ಕೆ ಸ್ಪಷ್ಟವಾಗುತ್ತದೆ. ಕಳೆದ ಮೂರು ವರ್ಷಗಳಿಂದ ರೈತರು ತಮ್ಮ ಜಮೀನನ್ನು ಕೆಐಎಡಿಬಿ ಯೋಜನೆಗೆ ನೀಡುವುದಿಲ್ಲ ಎಂದು ಆಗ್ರಹಿಸುತ್ತಾ ಬಂದಿದ್ದಾರೆಯೇ ಹೊರತು, ಈ ಭೂಮಿಯನ್ನು ‘ವಿಶೇಷ ಕೃಷಿ ವಲಯವನ್ನಾಗಿಸಿ’ ಎಂದು ಯಾವತ್ತೂ ಸರಕಾರವನ್ನು ಕೇಳಿಕೊಂಡಿಲ್ಲ. ಒಂದು ರೀತಿಯಲ್ಲಿ ‘ನಮ್ಮ ಜಮೀನು ನಮ್ಮ ಹಕ್ಕು’ ಎಂಬ ಘೋಷಣೆಯ ಜೊತೆಗೆ ಸರಕಾರದ ಭೂಸ್ವಾಧೀನವನ್ನು ತಿರಸ್ಕರಿಸುತ್ತಾ ಬಂದಿದ್ದಾರೆ. ಯಾವತ್ತೋ ಒಂದು ದಿನ ಅಗತ್ಯ ಬಿದ್ದಾಗ ಒಬ್ಬ ರೈತನಿಗೆ ತನ್ನ ಜಮೀನಿನ ಒಂದು ಭಾಗವನ್ನು ವಾಣಿಜ್ಯ ಉದ್ದೇಶಕ್ಕೆ ಮಾರಾಟ ಮಾಡಬೇಕು ಎಂದೆನಿಸಿದರೆ ಅದನ್ನು ತಡೆಯುವ ಹಕ್ಕು ಸರಕಾರಕ್ಕಿಲ್ಲ. ‘ಯಾವತ್ತಾದರೂ ನಿಮಗೆ ಅಗತ್ಯವಿದ್ದಾಗ ಮಾರುವ ಉದ್ದೇಶವಿದೆಯಾದರೆ ಇಂದೇ ನಮಗೆ ಮಾರಿ ಬಿಡಿ’ ಎನ್ನುವ ಪರೋಕ್ಷ ಒತ್ತಡವನ್ನು ರೈತರ ಮೇಲೆ ಸರಕಾರ ಹಾಕುತ್ತಿದೆಯೇ ಎನ್ನುವ ಅನುಮಾನವನ್ನು ಸ್ಥಳೀಯರು ವ್ಯಕ್ತಪಡಿಸುತ್ತಿದ್ದಾರೆ. ವಿಶೇಷವೆಂದರೆ, ಒಂದೆಡೆ ವಿಶೇಷ ಕೃಷಿ ವಲಯವಾಗಿ ಘೋಷಣೆ ಮಾಡುವುದಾಗಿ ಹೇಳಿಕೆ ನೀಡುತ್ತಲೇ, ಕೆಐಎಡಿಬಿಗೆ ಭೂಮಿ ನೀಡಲು ಇಚ್ಛೆ ಇರುವ ರೈತರಿಗೆ ಇನ್ನೂ ಮೂರು ತಿಂಗಳ ಅವಕಾಶವನ್ನು ನೀಡಿದೆ. ‘ವಿಶೇಷ ಕೃಷಿ ವಲಯ’ವಾಗಿ ಘೋಷಣೆಯಾಗಿ ರೈತರು ವಾಣಿಜ್ಯ ಉದ್ದೇಶಕ್ಕೆ ಭೂಮಿಯನ್ನು ಮಾರಾಟ ಮಾಡುವ ಹಕ್ಕನ್ನು ಕಳೆದುಕೊಳ್ಳುವ ಭಯದಿಂದ ಈ ಮೂರು ತಿಂಗಳ ಅವಧಿಯಲ್ಲಿ ಕೆಲವರಾದರೂ ತಮ್ಮ ಭೂಸ್ವಾಧೀನಕ್ಕೆ ತಲೆಬಾಗುತ್ತಾರೆ ಎನ್ನುವ ದುರುದ್ದೇಶವನ್ನು ಸರಕಾರ ಹೊಂದಿದೆ. ರೈತರನ್ನು ಸರಕಾರ ಪರೋಕ್ಷವಾಗಿ ಬ್ಲ್ಯಾಕ್ಮೇಲ್ ಮಾಡುತ್ತಿದೆ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ. ಸರಕಾರದ ನಿರ್ಧಾರದಿಂದ ಒಂದು ಸ್ಜಷ್ಟವಾಗಿ ಬಿಡುತ್ತದೆ. ಕಳೆದ ಮೂರು ವರ್ಷಗಳಿಂದ ರೈತರು ಮಾಡುತ್ತಿರುವ ಹೋರಾಟದ ಹಿಂದಿರುವ ಪ್ರಾಮಾಣಿಕತೆಯ ಬಗ್ಗೆ ಅದು ಇನ್ನೂ ಅನುಮಾನವನ್ನು ಇಟ್ಟುಕೊಂಡಿದೆ. ಭೂಸ್ವಾಧೀನ ನಡೆಯದಂತೆ ಕೆಲವು ಹಿತಾಸಕ್ತಿಗಳು ರೈತರ ಜೊತೆಗೆ ಸೇರಿ ಸಂಚು ನಡೆಸುತ್ತಿದ್ದಾರೆ ಎಂದು ಈ ಹಿಂದೆಯೂ ಸಚಿವರೊಬ್ಬರು ಆರೋಪ ಮಾಡಿದ್ದರು. ರಿಯಲ್ ಎಸ್ಟೇಟ್ಗೆ ಸಂಬಂಧ ಪಟ್ಟ ಶಕ್ತಿಗಳೂ ಇದರ ಹಿಂದಿವೆ ಎಂದು ಅವರು ಅನುಮಾನಿಸುತ್ತಿದ್ದಾರೆ. ನಿಜಕ್ಕೂ ಕೃಷಿ ಹಿತಾಸಕ್ತಿಯೇ ಭೂಸ್ವಾಧೀನವನ್ನು ವಿರೋಧಿಸಲು ಕಾರಣವಾಗಿದ್ದರೆ ‘ಶಾಶ್ವತ ಕೃಷಿ ವಲಯ’ವನ್ನು ವಿರೋಧಿಸುವುದೇಕೆ? ಎನ್ನುವ ಪ್ರಶ್ನೆಯನ್ನು ಸರಕಾರ ಇದೀಗ ರೈತರ ಬಳಿ ಪರೋಕ್ಷವಾಗಿ ಇಟ್ಟಿದೆ. ಈ ಮೂಲಕ ರೈತ ಹೋರಾಟಗಾರರನ್ನು ಇಕ್ಕಟ್ಟಿಗೆ ಸಿಲುಕಿಸಲು ಯತ್ನಿಸುತ್ತಿದೆ. ತಲೆತಲಾಂತರಗಳಿಂದ ಕೃಷಿ ಮಾಡುತ್ತಾ ಬಂದಿರುವ ಭೂಮಿಯನ್ನು ಯಾರಿಗೆ ನೀಡಬೇಕು, ಯಾರಿಗೆ ನೀಡಬಾರದು ಎನ್ನುವ ಹಕ್ಕು ರೈತರದು ಎನ್ನುವುದನ್ನು ಸರಕಾರ ಮರೆಯಬಾರದು. ಅವರು ಮೂರು ವರ್ಷಗಳಿಂದ ಹೋರಾಟ ಮಾಡುತ್ತಾ ಬಂದಿರುವುದು ಕೆಐಎಡಿಬಿಗೆ ಭೂಮಿ ನೀಡುವುದಿಲ್ಲ ಎಂದು. ದೇವನಹಳ್ಳಿಯಲ್ಲಿ ಭೂಮಿ ಅತ್ಯಂತ ಬೆಲೆ ಬಾಳುತ್ತದೆ. ನಾಳೆ ಯಾವುದೇ ಸಂಕಟ ಬಂದಾಗ ತನ್ನ ಭೂಮಿಯನ್ನು ಯಾರಿಗಾದರೂ ಮಾರಬೇಕೆಂದು ರೈತ ಬಯಸಿದರೆ ಅದಕ್ಕೆ ಸರಕಾರದ ಅನುಮತಿಯನ್ನು ಯಾಕೆ ಕೇಳಬೇಕು? ಕೃಷಿ ಕ್ಷೇತ್ರಕ್ಕೂ ಬಂಡವಾಳ ಹರಿದು ಬರುವ ಬಗ್ಗೆ ಸರಕಾರ ಮಾತನಾಡುತ್ತಿದೆ. ಅಂದರೆ, ಭವಿಷ್ಯದಲ್ಲಿ ಕಾರ್ಪೊರೇಟ್ ದೊರೆಗಳು ಈ ಕೃಷಿಯ ನೇತೃತ್ವವನ್ನು ವಹಿಸಿಕೊಳ್ಳುವುದಿದ್ದರೆ ಈ ರೈತರು ಅವರಿಗೆ ತಮ್ಮ ಜಮೀನನ್ನು ನೀಡುವ ಸಂದರ್ಭವೂ ಒದಗಿ ಬರಬಹುದು. ದೇವನಹಳ್ಳಿಯ ಭೂಸ್ವಾಧೀನದ ಕುರಿತಂತೆ ಸರಕಾರದ ನಿರ್ಧಾರ, ಒಂದು ಕೈಯಲ್ಲಿ ಕೊಟ್ಟು ಇನ್ನೊಂದು ಕೈಯಲ್ಲಿ ಕಿತ್ತುಕೊಳ್ಳುವ ತಂತ್ರವಾಗಿದೆ. ಸರಕಾರ ಭೂಮಿಯನ್ನು ವಶಪಡಿಸಿಕೊಳ್ಳುವ ತನ್ನ ಉದ್ದೇಶದಿಂದ ಪೂರ್ಣ ಪ್ರಮಾಣದಲ್ಲಿ ಹಿಂದೆ ಸರಿದಿಲ್ಲ ಎನ್ನುವುದು ಇದರಿಂದ ಸ್ಪಷ್ಟವಾಗುತ್ತದೆ.
Karnataka Cold Wave: ರಾಜ್ಯಾದ್ಯಂತ ಭಾರೀ ಥಂಡೀ..! 08 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್: ತಾಪಮಾನ 9 ಡಿ.ಸೆ.ಗೆ ಕುಸಿತ
Karnataka Temperature Drop: ಕರ್ನಾಟಕದಾದ್ಯಂತ ಚಳಿ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದ್ದು, ಕನಿಷ್ಠ ತಾಪಮಾನ ಕುಸಿಯುತ್ತಿದೆ. ಅಲ್ಲದೇ ಬೆಳಗ್ಗೆ ಮತ್ತು ರಾತ್ರಿ ದಟ್ಟ ಮಂಜು ಆವರಿಸುತ್ತಿದೆ. ಈ ವಾತಾವರಣ ಮತ್ತಷ್ಟು ಪರಿಣಾಮಕಾರಿಯಾಗಿ ರಾಜ್ಯದಲ್ಲಿ ಮುಂದುವರಿಯಲಿದೆ ಎಂದು ಮುನ್ಸೂಚನೆ ನೀಡಿರುವ ಭಾರತೀಯ ಹವಾಮಾನ ಇಲಾಖೆಯು (IMD) ಬರೋಬ್ಬರಿ 08 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ನೀಡಿದೆ. ಬೀದರ್ನಲ್ಲಿ ರಾಜ್ಯದ ಅತೀ
ವಿಜಯನಗರ ಕ್ರಸ್ವ್ಗೇಟ್ ಅಳವಡಿಕೆ ಸವಾಲು; ಬೇಸಿಗೆಗೂ ಮೊದಲೇ ಪ್ರಕ್ರಿಯೆ ಪೂರ್ಣ ಕಷ್ಟಸಾಧ್ಯ
ತುಂಗಭದ್ರಾ ಜಲಾಶಯಕ್ಕೆ ಹೊಸ ಕ್ರಸ್ಟ್ಗೇಟ್ ಅಳವಡಿಕೆ ಪ್ರಕ್ರಿಯಯೆಗೆ ಚಾಲನೆ ನೀಡಲಾಗಿದ್ದು, ಟಿಬಿ ಮಂಡಳಿಯ ನೇತೃತ್ವದಲ್ಲಿ ಹೊಸ ಗೇಟ್ಗಳನ್ನು ಅಳವಡಿಸುವ ಕಾರ್ಯ ಆರಂಭವಾಗಿದೆ. ಅಂದಾಜು 52 ಕೋಟಿ ರೂ. ವೆಚ್ಚದಲ್ಲಿ33 ಕ್ರಸ್ವ್ ಗೇಟ್ಗಳನ್ನು ತೆರವುಗೊಳಿಸಿ, ಹೊಸ ಗೇಟ್ಗಳನ್ನು ಅಳವಡಿಸುವ ಕಾರ್ಯ ಆದಷ್ಟು ಶೀಘ್ರದಲ್ಲೇ ಪೂರ್ಣಗೊಳ್ಳುವ ನಿರೀಕ್ಷೆ ಇದೆ. ಈ ಬೆಳವಣಿಗೆಗಳು ಈ ಭಾಗದ ಅನ್ನದಾತನ ನಿರೀಕ್ಷೆಗಳನ್ನು ಹೆಚ್ಚಿಸಿವೆ. ಗುಜರಾತ್ನ ಅಹಮದಾಬಾದ್ ಮೂಲದ ಕಂಪನಿಗೆ ಕ್ರಸ್ಟ್ಗೇಟ್ ಅಳವಡಿಸುವ ಗುತ್ತಿಗೆ ನೀಡಲಾಗಿದೆ. ಇಲ್ಲಿದೆ ಮಾಹಿತಿ.
ಹೆರಿಟೇಜ್ ಟೂರಿಸಂಗೆ ಹೊಸ ಶಕೆ; ಮೈಸೂರಿನ ಟಾಂಗಾ ಸವಾರಿಯ ಗತವೈಭವ ಮರಳಿಸಲು ಕೇಂದ್ರದ ಯೋಜನೆ
ರಾಜ್ಯದ ಸಾಂಸ್ಕೃತಿಕ ರಾಜಧಾನಿ ಮೈಸೂರು ಪ್ರವಾಸೋದ್ಯಮ ಅಭಿವೃದ್ಧಿ ವಿಚಾರದಲ್ಲಿ ತುಸು ಹಿಂದುಳಿದಿದೆ. ಆದರೆ ಈ ಕೊರತೆಯನ್ನು ದೂರ ಮಾಡಲು ಮುಂದಡಿ ಇಟ್ಟಿರುವ ಕೇಂದ್ರ ಸರ್ಕಾರ, ಜಿಲ್ಲೆಗೆ ಹೆರಿಟೇಜ್ ಟೂರಿಸಂನ ಕೊಡುಗೆ ನೀಡಿದೆ. ಕೇಂದ್ರ ಪ್ರವಾಸೋದ್ಯಮ ಸಚಿವಾಲಯದ ಸ್ವದೇಶ ದರ್ಶನ 2.0 ಯೋಜನೆಯಡಿ, ಮೈಸೂರಿನ ಪಾರಂಪರಿಕ ಟಾಂಗಾ ಸವಾರಿ ಮರುಚಾಲನೆ, ಇಕಾಲಾಜಿಕಲ್ ಎಕ್ಸ್ಪೀರಿಯನ್ಸ್ ಜೋನ್ ನಿರ್ಮಾಣಕ್ಕೆ ಹಸಿರು ನಿಶಾನೆ ತೋರಲಾಗಿದೆ. ಮೈಸೂರಿಗೆ ಭೇಟಿ ನೀಡುವವರು ಇನ್ಮುಂದೆ ಟಾಂಗಾ ಸವಾರಿಯ ಗತವೈಭವದ ದಿನಗಳಿಗೆ ಮರಳಬಹುದಾಗಿದೆ.
ಹೊಸದಿಲ್ಲಿ, ಡಿ.10: ಲೋಕಸಭೆಯಲ್ಲಿ ಮುಸ್ಲಿಂ ಸಂಸದರ ಅತಿ ಕಡಿಮೆ ಪ್ರತಿನಿಧಿತ್ವದ ವಿಚಾರ ಗಂಭೀರವಾಗಿದೆ ಎಂದು ಎಐಎಂಐಎಂ ಸಂಸದ ಅಸದುದ್ದೀನ್ ಉವೈಸಿ ಬುಧವಾರ ಕಳವಳ ವ್ಯಕ್ತಪಡಿಸಿದರು. ಮುಸ್ಲಿಂ ಬಹುಸಂಖ್ಯಾತರಿರುವ ವಯನಾಡು ಕ್ಷೇತ್ರವೇ ಮುಸ್ಲಿಮೇತರ ಪ್ರತಿನಿಧಿಯನ್ನು ಆಯ್ಕೆ ಮಾಡುವಾಗ, ರಾಯ್ಬರೇಲಿ, ಅಮೇಥಿ ಮತ್ತು ಇಟಾವಾದಂತಹ ದೀರ್ಘಕಾಲದ ರಾಜಕೀಯ ಭದ್ರ ಕೋಟೆಗಳಲ್ಲಿ ಮುಸ್ಲಿಂ ಅಭ್ಯರ್ಥಿಗಳಿಗೆ ಏಕೆ ಅವಕಾಶ ನಿರಾಕರಣೆ ಮಾಡಲಾಗುತ್ತಿದೆ ಎಂದು ಅವರು ಪ್ರಶ್ನಿಸಿದರು. ಸಂಸತ್ತಿನಲ್ಲಿ ಚುನಾವಣಾ ಸುಧಾರಣೆಗಳ ಕುರಿತ ಚರ್ಚೆಯಲ್ಲಿ ಅಂಬೇಡ್ಕರ್ ಅವರ ರಾಜಕೀಯ ತತ್ವಗಳನ್ನು ಉಲ್ಲೇಖಿಸಿದ ಉವೈಸಿ, “ಅಂಚಿನಲ್ಲಿರುವ ಸಮುದಾಯಗಳಿಗೆ ರಾಜಕೀಯ ಶಕ್ತಿ ದೊರಕದೆ ದೇಶ ನಿಜವಾದ ಪ್ರಜಾಪ್ರಭುತ್ವವಾಗಲು ಸಾಧ್ಯವಿಲ್ಲ. ಅಂಬೇಡ್ಕರ್ ಅವರು ಇದನ್ನು ಪದೇಪದೇ ಒತ್ತಿ ಹೇಳಿದ್ದಾರೆ,” ಎಂದು ಸ್ಮರಿಸಿದರು. ಲೋಕಸಭೆಯಲ್ಲಿ ಕೇವಲ ನಾಲ್ಕು ಪ್ರತಿಶತ ಮುಸ್ಲಿಂ ಸಂಸದರು ಮಾತ್ರ ಇರುವುದನ್ನು ಅವರು ಆಕ್ಷೇಪಿಸಿ, “ಆಡಳಿತ ಪಕ್ಷದಲ್ಲಿ ಒಬ್ಬರೂ ಮುಸ್ಲಿಂ ಸದಸ್ಯರಿಲ್ಲ. ಜಾತ್ಯತೀತ ಎಂದೇ ಹೇಳಿಸಿಕೊಳ್ಳುವ ಪಕ್ಷಗಳಲ್ಲಿಯೂ ಪ್ರತಿನಿಧಿತ್ವ ಕುಗ್ಗುತ್ತಿದೆ. ಇದು ಗಂಭೀರ ಸೂಚನೆ,” ಎಂದು ಎಚ್ಚರಿಕೆ ನೀಡಿದರು. ವಯನಾಡಿನಂತಹ ಮುಸ್ಲಿಂ ಬಹುಸಂಖ್ಯಾತ ಕ್ಷೇತ್ರವು ಮುಸ್ಲಿಮೇತರರನ್ನು ಆಯ್ಕೆ ಮಾಡಿದ ಉದಾಹರಣೆಯನ್ನು ಉಲ್ಲೇಖಿಸಿದ ಅವರು, “ಇದು ಮತದಾರರ ವಿಸ್ತೃತ ಮನೋಭಾವವನ್ನು ತೋರಿಸುತ್ತದೆ. ಹೀಗಿರುವಾಗ, ರಾಯ್ಬರೇಲಿ, ಅಮೇಥಿ ಮತ್ತು ಇಟಾವಾ ಮುಸ್ಲಿಂ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಬಯಸಬಾರದೆ ಎಂಬ ಪ್ರಶ್ನೆ ಉದ್ಭವಿಸುತ್ತದೆ,” ಎಂದು ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷಗಳತ್ತ ನೇರವಾಗಿ ಆಕ್ರೋಶ ವ್ಯಕ್ತಪಡಿಸಿದರು. ಪ್ರಿಯಾಂಕಾ ಗಾಂಧಿ ವಾದ್ರಾ (ವಯನಾಡು) ಮತ್ತು ರಾಹುಲ್ ಗಾಂಧಿ (ರಾಯ್ಬರೇಲಿ) ಪ್ರಸ್ತುತ ಕಾಂಗ್ರೆಸ್ ಪಕ್ಷದ ಪರವಾಗಿ ಈ ಕ್ಷೇತ್ರಗಳನ್ನು ಪ್ರತಿನಿಧಿಸುತ್ತಿದ್ದಾರೆ. ಅಮೇಥಿ–ರಾಯ್ಬರೇಲಿ ದೀರ್ಘಕಾಲದಿಂದ ಕಾಂಗ್ರೆಸ್ ನ ಭದ್ರಕೋಟೆಯಾಗಿದ್ದು ಇಟಾವಾ ಸಮಾಜವಾದಿ ಪಕ್ಷದ ಪರಂಪರೆಯ ನೆಲೆಯಾಗಿದೆ.
ಬಳ್ಳಾರಿಯಲ್ಲಿ ಟೇಕ್ ಆಫ್ ಆಗದ ವಿಮಾನ ನಿಲ್ದಾಣ: ಕಾಮಗಾರಿ ಪೂರ್ಣವಾಗದೇ ವಿಮಾನ ನಾಮಕಾರಣ
ಬಳ್ಳಾರಿಯಲ್ಲಿ ವಿಮಾನ ನಿಲ್ದಾಣ ನಿರ್ಮಾಣದ ಕನಸು ಒಂದೂವರೆ ದಶಕದಿಂದ ನನಸಾಗಿಲ್ಲ. 2009ರಲ್ಲಿ 900 ಎಕರೆ ಭೂಸ್ವಾಧೀನಗೊಂಡಿದ್ದರೂ, ರೈತರ ಪ್ರತಿಭಟನೆ ಮತ್ತು ನ್ಯಾಯಾಲಯದ ಪ್ರಕರಣಗಳಿಂದ ಕಾಮಗಾರಿ ಸ್ಥಗಿತಗೊಂಡಿದೆ. 2024ರಲ್ಲಿ ಟೆಂಡರ್ ಪ್ರಕ್ರಿಯೆ ಆರಂಭಗೊಂಡರೂ, ಅದು ನೆನಪಿನ ಕೂಗಾಗಿದೆ. ಪ್ರಸ್ತುತ ಖಾಸಗಿ ವಿಮಾನ ನಿಲ್ದಾಣವನ್ನೇ ಅವಲಂಬಿಸಬೇಕಾಗಿದೆ.
ಕಲ್ಯಾಣ ಕರ್ನಾಟಕಕ್ಕೆ ಬರಲಿ ಉದ್ಯಮ; ನಾಲ್ವರು ಸಚಿವರಿಗೆ ಇದೆ ಇತಿಹಾಸ ನಿರ್ಮಿಸುವ ಅಪೂರ್ವ ಅವಕಾಶ
ರಾಜಕಾರಣದಲ್ಲಿ ಅಪರೂಪಕ್ಕೊಮ್ಮೆ ಅಪರೂಪದ ಸಾಧನೆ ಮಾಡುವ ಅವಕಾಶಗಳು ಸಿಗುತ್ತವೆ. ಇಂತದ್ದೇ ಒಂದು ಅವಕಾಶ ಉತ್ತರ ಕರ್ನಾಟಕದ ನಾಲ್ವರು ಸಚಿವರಿಗೆ ದೊರೆತಿದೆ. ಕೈಗಾರಿಕೆ, ಐಟಿಬಿಟಿ ಮತ್ತು ಕೌಶಲ್ಯ ಅಭಿವೃದ್ಧಿಯಂತಹ ಪ್ರಮುಖ ಖಾತೆಗಳು ಈ ಭಾಗದ ಸಚಿವರಿಗೆ ಲಭಿಸಿದ್ದು, ಪ್ರಮುಖವಾಗಿ ಕಲ್ಯಾಣ ಕರ್ನಾಟಕ ಭಾಗದಲ್ಲಿ ಉದ್ಯಮಗಳ ಸ್ಥಾಪನೆಯ ನಿರೀಕ್ಷೆಗಳು ಹುಟ್ಟಿಕೊಂಡಿವೆ. ಇಲ್ಲಿರುವ ಕೈಗಾರಿಕೆಗಳ ಸಂಖ್ಯೆ ವೃದ್ಧಿಗೆ ಸಚಿವರುಗಳು ಮನಸ್ಸು ಮಾಡುವರೇ ಎಂಬುದು ಈಗ ಎಲ್ಲರ ಪ್ರಶ್ನೆ. ಈ ಕುರಿತು ಇಲ್ಲಿದೆ ಹೆಚ್ಚಿನ ಮಾಹಿತಿ.
ತೊಗರಿಗೆ ದರ ಇಳಿಕೆ ಬಿಸಿ : ಅತಿವೃಷ್ಟಿಯಿಂದ ಅಳಿದುಳಿದ ಬೆಳೆ ಕಟಾವು, ಗ್ರಾಹಕರಿಗೆ ಲಾಭ
ಅತಿವೃಷ್ಟಿಯಿಂದ ಹಾನಿಗೊಳಗಾದ ತೊಗರಿ ಬೆಳೆ ಕಟಾವಿಗೆ ಬಂದಿದ್ದು, ಮಾರುಕಟ್ಟೆಯಲ್ಲಿ ಬೆಲೆ ಕುಸಿದಿದೆ. ರೈತರ ನೆರವಿಗಾಗಿ ಸರ್ಕಾರ ತಕ್ಷಣ ಬೆಂಬಲ ಬೆಲೆ ಯೋಜನೆಯಡಿ ಖರೀದಿ ಆರಂಭಿಸಬೇಕೆಂದು ಒತ್ತಾಯ ಕೇಳಿಬರುತ್ತಿದೆ. ಖರೀದಿ ಕೇಂದ್ರಗಳು ಆರಂಭವಾಗದಿದ್ದರೆ ರೈತರು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಲಿದ್ದಾರೆ.
ಚಳಿಗಾಲದಲ್ಲೂ ಎಳನೀರು ದರ ಏರಿಕೆ! ರೈತನಿಗೆ ಖುಷಿ, ಗ್ರಾಹಕರಿಗೆ ಹೊರೆ
ಚಳಿಗಾಲದಲ್ಲೂ ಎಳನೀರಿನ ಬೆಲೆ 40-45 ರೂ. ತಲುಪಿದೆ, ಎಳನೀರು ತೆಂಗಿನಕಾಯಿ ಬೆಲೆ ಯಾವಾಗ ಇಳಿಯುತ್ತೋ ಎಂಬ ನಿರೀಕ್ಷೆಯಲ್ಲಿ ಜನರಿದ್ದಾರೆ. ಎಳನೀರಿಗೆ ದಾವಣಗೆರೆಯಲ್ಲಿರುವ ಡಿಮ್ಯಾಂಡ್ ಹಾಗೂ ತೆಂಗಿನ ಬೆಲೆ ಏರಿಕೆಗೆ ಕಾರಣಗಳನ್ನು ಇಲ್ಲಿ ವಿವರಿಸಲಾಗಿದೆ.
Bengaluru | ಲೈಂಗಿಕ ಸಮಸ್ಯೆಗೆ ಪರಿಹಾರ ನೀಡುವ ನೆಪದಲ್ಲಿ ಟೆಕ್ಕಿಗೆ ವಂಚನೆ ಪ್ರಕರಣ: ನಕಲಿ ಗುರೂಜಿಯ ಸಹಚರರ ಬಂಧನ
ಬೆಂಗಳೂರು: ಇತ್ತೀಚೆಗೆ ಲೈಂಗಿಕ ಸಮಸ್ಯೆಗೆ ಪರಿಹಾರ ನೀಡುವ ನೆಪದಲ್ಲಿ ಐಟಿ ಉದ್ಯೋಗಿ ತೇಜಸ್ ಅವರಿಗೆ 48 ಲಕ್ಷ ರೂ. ವಂಚಿಸಿದ ನಕಲಿ ಗುರೂಜಿ ವಿಜಯ್ ಎಂಬಾತನನ್ನು ಬಂಧಿಸಿದ್ದ ಜ್ಞಾನಭಾರತಿ ಪೊಲೀಸರು, ಇದೀಗ ಆತನ ಇಬ್ಬರು ಸಹಚರನನ್ನೂ ಬಂಧಿಸಿದ್ದಾರೆ. ವಿಜಯ್ ಮತ್ತು ಆತನ ಸಹಚರರಿಂದ ಮೋಸ ಹೋದ ಟೆಕ್ಕಿ ತೇಜಸ್, ತೀವ್ರ ಅನಾರೋಗ್ಯ ಸಮಸ್ಯೆ ಎದುರಾದಾಗ ಪೊಲೀಸರಲ್ಲಿ ದೂರು ನೀಡಿದ್ದರು. ಅವರ ದೂರಿನ ಮೇರೆಗೆ ತೆಲಂಗಾಣ ಮೊಹಬೂಬ್ ನಗರದಲ್ಲಿ ವಿಜಯ್ ನನ್ನು ಬಂಧಿಸಲಾಗಿತ್ತು. ಇದೀಗ ಆತನ ಸಹಚರರನ್ನು ತೆಲಂಗಾಣದ ಸೈಬರಬಾದ್ನಲ್ಲಿ ಸೆರೆಹಿಡಿಯಲಾಗಿದೆ. ಪೊಲೀಸರು ಬಂಧಿತರಿಂದ 19.50 ಲಕ್ಷ ರೂ. ಹಣ ಮತ್ತು ಒಂದು ಟಿ.ಟಿ ವಾಹನವನ್ನು ವಶಕ್ಕೆ ಪಡೆದಿದ್ದಾರೆ. ಬೆಂಗಳೂರು, ತುಮಕೂರು ಸೇರಿ ಒಟ್ಟು ಎಂಟು ಟೆಂಟ್ಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಆರೋಪಿಗಳು ತಿಳಿಸಿದ್ದಾರೆ. ಇಬ್ಬರು ಆರೋಪಿಗಳನ್ನೂ ಪರಪ್ಪನ ಅಗ್ರಹಾರಕ್ಕೆ ಕಳಿಸಲಾಗಿದೆ ಎಂದು ವರದಿಯಾಗಿದೆ.
ಉಪ್ಪಿನಂಗಡಿ | ಆನ್ಲೈನ್ನಲ್ಲಿ ಪಾವತಿಸಿದ ಹಣ ಕಣ್ತಪ್ಪಿನಿಂದ ಇನ್ನೊಬ್ಬರ ಖಾತೆಗೆ : ಹಣ ಹಿಂದಿರುಗಿಸದವನ ಮೇಲೆ ದೂರು
ಉಪ್ಪಿನಂಗಡಿ, ಡಿ.10: ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿರುವ ತನ್ನ ಸಂಬಂಧಿಕರಿಗೆ ತುರ್ತು ಅಗತ್ಯದ ನೆಲೆಯಲ್ಲಿ ಪೋನ್ ಪೇ ಮೂಲಕ ಕಳುಹಿಸಲಾದ ಹಣ ಕಣ್ತಪ್ಪಿನಿಂದಾಗಿ ಇನ್ನೊಬ್ಬರ ಖಾತೆಗೆ ಹೋದ ಪ್ರಕರಣದಲ್ಲಿ ಹಣ ಮರುಪಾವತಿಸಲು ನಿರಾಕರಿಸಿದ ಉಜಿರೆಯ ಉದ್ಯಮಿ ವಿರುದ್ಧ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಉಪ್ಪಿನಂಗಡಿಯ ಮಠ ಎಂಬಲ್ಲಿ ಗ್ರಾನೈಟ್ ಉದ್ಯಮ ನಡೆಸಿಕೊಂಡಿರುವ ಹರಿರಾವ್ ಎಂಬವರು ದೂರು ನೀಡಿದ್ದು, ತನ್ನ ರಾಜಸ್ಥಾನದಲ್ಲಿನ ಸಂಬಂಧಿಕ ಲಕ್ಷ್ಮೀಚಂದ್ ಎಂಬವರಿಗೆ ಕಳುಹಿಸಬೇಕಾದ 19,000 ರೂ. ಕಣ್ತಪ್ಪಿನಿಂದಾಗಿ ಉಜಿರೆಯ ಉದ್ಯಮಿಯೋರ್ವರ ಖಾತೆಗೆ ವರ್ಗಾವಣೆಗೊಂಡಿದ್ದು, ಈ ಮೊತ್ತದಲ್ಲಿ 10,000 ರೂ. ವನ್ನು ಹಿಂದಿರುಗಿಸಿ ಉಳಿದ ಮೊತ್ತವನ್ನು ಹಿಂದಿರುಗಿಸದೆ ಸತಾಯಿಸುತ್ತಿದ್ದಾರೆಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ. ಉಪ್ಪಿನಂಗಡಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.
ಕೋಟ | ಇಂಜಿನಿಯರ್ಗೆ ಆನ್ಲೈನ್ ವಂಚನೆ
ಕೋಟ, ಡಿ.10: ಆನ್ಲೈನ್ ಮೂಲಕ ಸಾಲ ಪಡೆದಿದ್ದ ಇಂಜಿನಿಯರೊಬ್ಬರಿಗೆ ಲಕ್ಷಾಂತರ ರೂ. ವಂಚಿಸಿರುವ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಾಸ್ತಾನದ ರಂಜನ್ ಶೆಟ್ಟಿಗಾರ್(33) ಎಂಬವರು ಬೆಂಗಳೂರಿನಲ್ಲಿ ಆಟೊ ಮೊಬೈಲ್ ಇಂಜಿನಿಯರ್ ಕೆಲಸ ಮಾಡಿಕೊಂಡಿದ್ದು, ಸುಮಾರು ಒಂದು ತಿಂಗಳ ಹಿಂದೆ ಹಣದ ಅವಶ್ಯ ಇರುವುದರಿಂದ ಮೊಬೈಲ್ನಲ್ಲಿ ಆನ್ಲೈನ್ ಲೋನ್ಗೆ ಅಪ್ಲೇ ಮಾಡಿದ್ದರು. ಆಧಾರ್ ಕಾರ್ಡ್, ಪಾನ್ ಕಾರ್ಡ್, ಸೆಲ್ಫಿ ಫೋಟೊ, ಮೊಬೈಲ್ ಲೋಕೇಶನ್, ಮೊಬೈಲ್ ಕಾಂಟಕ್ಟ್ ಡಿಟೈಲ್ಸ್ನ್ನು ಹಾಕಿ 12,000 ರೂ. ಸಾಲ ಪಡೆದಿದ್ದರು ಎನ್ನಲಾಗಿದೆ. 6 ದಿನದ ಒಳಗೆ ಸಾಲವಾಗಿ ಪಡೆದ 12,000 ರೂ.ವನ್ನು ವಾಪಸ್ಸು ಪಾವತಿಸಿದ್ದರು. ಬಳಿಕ ಅವರ ಹೆಸರಲ್ಲಿ ಇನ್ನಷ್ಟು ಲೋನ್ ಪಡೆದು, ವಾಟ್ಸ್ ಆ್ಯಪ್ ಮತ್ತು ಟೆಲಿಗ್ರಾಮ್ ಆ್ಯಪ್ ಮೂಲಕ ಅಪರಿಚಿತರು ಕರೆ ಮಾಡಿ ಹಣ ಹಾಕದಿದ್ದರೆ ಮೊಬೈಲ್ ಡಾಟಾವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕುವುದಾಗಿ ಬೆದರಿಸಿದ್ದರು. ಅದರಂತೆ ರಂಜನ್ ಹಂತಹಂತವಾಗಿ ಆ್ಯಪ್ ಮೂಲಕ 4,37,253 ರೂ.ವನ್ನು ಹಾಕಿರುವುದಾಗಿ ದೂರಲಾಗಿದೆ.
ಕಟೀಲು | ಮರವೇರಿದ ವ್ಯಕ್ತಿ ಹೃದಯಾಘಾತದಿಂದ ಮೃತ್ಯು
ಕಟೀಲು, ಡಿ.10: ತೆಂಗಿನಕಾಯಿ ಕೀಳಲು ಏರಿದ ವ್ಯಕ್ತಿಯೊಬ್ಬರು ಮರದಲ್ಲೇ ಮೃತಪಟ್ಟ ಘಟನೆ ಕಟೀಲು ಜಲಕದ ಕಟ್ಟೆ ಸಮೀಪ ನಡೆದಿದೆ. ಮೃತಪಟ್ಟ ವ್ಯಕ್ತಿಯನ್ನು ಜಯರಾಮ ಶೆಟ್ಟಿ(75) ಎಂದು ಗುರುತಿಸಲಾಗಿದೆ. ಸುರತ್ಕಲ್ನ ಮುಕ್ಕದಲ್ಲಿ ವಾಸವಾಗಿರುವ ಜಯರಾಮ ಶೆಟ್ಟಿಯವರು ಬುಧವಾರ ಕಟೀಲು ಸಮೀಪದ ತಮ್ಮ ಜಮೀನಿನಲ್ಲಿರುವ ತೆಂಗಿನಮರಕ್ಕೆ ಯಂತ್ರದ ಸಹಾಯದಿಂದ ಏರಿದ್ದಾರೆ. ಈ ಸಂದರ್ಭ ತೆಂಗಿನ ಮರದಲ್ಲಿ ಹೃದಯಾಘಾತಕ್ಕೀಡಾಗಿದ್ದಾರೆ. ಆದರೆ ಈ ಸಂದರ್ಭ ಯಾರೂ ಇಲ್ಲದ ಕಾರಣ ಗಮನಕ್ಕೆ ಬಂದಿಲ್ಲ, ಸಂಜೆ ತೆಂಗಿನ ಮರದಲ್ಲಿ ವ್ಯಕ್ತಿ ನೇತಾಡುತ್ತಿರುವುದನ್ನು ಗಮನಿಸಿದ ಸ್ಥಳೀಯರು ಅಗ್ನಿಶಾಮಕದಳ ಮತ್ತು ಬಜ್ಪೆ ಪೋಲಿಸರಿಗೆ ಮಾಹಿತಿ ನೀಡಿದ್ದಾರೆ. ಅಗ್ನಿಶಾಮಕ ದಳದವರ ಸಹಾಯದಿಂದ ಜಯರಾಮ ಶೆಟ್ಟಿಯವರ ಮೃತ ದೇಹವನ್ನು ಕೆಳಗೆ ಇಳಿಸಲಾಗಿದೆ. ಜಯರಾಮ ಶೆಟ್ಟಿಯವರ ಪತ್ನಿ ಮತ್ತು ಮಕ್ಕಳು ಬೆಂಗಳೂರಿನಲ್ಲಿ ವಾಸವಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಬಜ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೂಡುಬಿದಿರೆ | ಚಾಲಕನ ನಿಯಂತ್ರಣ ತಪ್ಪಿ ಗೋಡೆಗೆ ಢಿಕ್ಕಿ ಹೊಡೆದ ಲಾರಿ
ಮೂಡುಬಿದಿರೆ, ಡಿ.10: ಚಾಲಕನ ನಿಯಂತ್ರಣ ತಪ್ಪಿದಲಾರಿಯೊಂದು ಢಿಕ್ಕಿ ಹೊಡೆದ ಘಟನೆ ಪಾಲಡ್ಕ ಗ್ರಾಪಂ ವ್ಯಾಪ್ತಿಯ ಕಡಂದಲೆ ಇಳಿಜಾರು ತಿರುವಿನಲ್ಲಿ ಬುಧವಾರ ಮುಂಜಾನೆ ನಡೆದಿದೆ. ಗೂಗಲ್ ಮ್ಯಾಪ್ ಹೇಳಿಕೊಟ್ಟ ದಾರಿಯಲ್ಲಿ ಸರಕು ತುಂಬಿಸಿಕೊಂಡು ಹೋದ ಚಾಲಕ ರಾತ್ರಿ ಎರಡು ಗಂಟೆ ವೇಳೆ ಕಡಂದಲೆ ಇಳಿಜಾರು ಪ್ರದೇಶದ ತಿರುವಿನಲ್ಲಿ ಸಂಚರಿಸುತ್ತಿದ್ದ ವೇಳೆ ಘಟನೆ ಸಂಭವಿಸಿದೆ. ಹೊಸ ರಸ್ತೆಯಾಗಿರುವುದರಿಂದ ಗೊಂದಲ ಉಂಟಾಗಿದ್ದಲ್ಲದೆ, ಚಾಲಕನ ನಿಯಂತ್ರಣ ಕಳೆದುಕೊಂಡ ಲಾರಿ ಗೋಡೆಗೆ ಢಿಕ್ಕಿಯಾಗಿದೆ. ಈ ಕುರಿತು ಚಾಲಕ ಮಾಹಿತಿ ನೀಡಿದ್ದು, ನಾನು ಮೂಡುಬಿದಿರೆ ಪುರಸಭೆ ವ್ಯಾಪ್ತಿಯ ಪೇಪರ್ ಮಿಲ್ಗೆ ಹೋಗಬೇಕಿದ್ದು, ಗೂಗಲ್ ಮ್ಯಾಪ್ ಅನುಸರಿಸಿ, ಇಲ್ಲಿ ಬಂದು ಸಿಕ್ಕಿ ಹಾಕಿಕೊಂಡಿದ್ದೇನೆ ಎಂದು ತಿಳಿಸಿದ್ದಾರೆ. ಈ ಬಗ್ಗೆ ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಉತ್ತರ ಕರ್ನಾಟಕ ಭಾಗದ ಜ್ವಲಂತ ಸಮಸ್ಯೆಗಳ ಮೇಲೆ ಮೇಲ್ಮನೆಯಲ್ಲಿ ವಿಶೇಷ ಚರ್ಚೆ
ಬೆಳಗಾವಿ(ಸುವರ್ಣವಿಧಾನಸೌಧ): ಚಳಿಗಾಲದ ಅಧಿವೇಶನ ಆರಂಭಗೊಂಡ ಮೂರನೇ ದಿನವಾದ ಬುಧವಾರ (ಡಿ.10) ಮೇಲ್ಮನೆಯಲ್ಲಿ ಉತ್ತರ ಕರ್ನಾಟಕ ಭಾಗದ ಜ್ವಲಂತ ಸಮಸ್ಯೆಗಳ ಬಗ್ಗೆ ಸುಧೀರ್ಘ ಚರ್ಚೆ ನಡೆಯಿತು. ಊಟದ ವಿರಾಮದ ನಂತರ ಮಧ್ಯಾಹ್ನ 3.15ಕ್ಕೆ ಪುನಾರಂಭಗೊಂಡ ಕಲಾಪದಲ್ಲಿ ಸಭಾಪತಿಗಳು, ಉತ್ತರ ಕರ್ನಾಟಕ ಭಾಗದ ಜ್ವಲಂತ ಸಮಸ್ಯೆಗಳಾದ ಕೃಷ್ಣಾ ಮೇಲ್ದಂಡೆ ಯೋಜನೆ, ಮಹದಾಯಿ, ಕಳಸಾ ಬಂಡೂರಿ ಯೋಜನೆಗಳ ಅನುಷ್ಠಾನದ ಬಗ್ಗೆ, ಅರಣ್ಯ ಭೂಮಿ ಅತಿಕ್ರಮಣ, ಸಂತ್ರಸ್ತರ ಸಮಸ್ಯೆ ಹಾಗೂ ಪರಿಹಾರೋಪಾಯಗಳು, ರೈತರು ಎದುರಿಸುತ್ತಿರುವ ಸಮಸ್ಯೆಗಳು ಮತ್ತು ಪರಿಹಾರಗಳು, ಉದ್ಯೋಗ ಸೃಷ್ಟಿಗೆ ಕೈಗೊಳ್ಳಬೇಕಾಗಿರುವ ಕ್ರಿಯಾ ಯೋಜನೆಗಳು, ಮೂಲಭೂತ ಸೌಕರ್ಯಗಳನ್ನು ಒದಗಿಸುವ ಬಗ್ಗೆ, ಕೈಗಾರಿಕೆಗಳ ಸ್ಥಾಪನೆ ಕುರಿತು, ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ಬಗ್ಗೆ ಹಾಗೂ ಕನ್ನಡ ಶಾಲೆಗಳ ಪುನರ್ ನಿರ್ಮಾಣ ಸೇರಿದಂತೆ ನಾನಾ ವಿಷಯಗಳ ಚರ್ಚೆಗೆ ಅವಕಾಶ ಕಲ್ಪಿಸಿದರು. ಪರಿಷತ್ ಸದಸ್ಯ ನಿರಾಣಿ ಹನುಮಂತಪ್ಪ ರುದ್ರಪ್ಪ ಮಾತನಾಡಿ, ಉತ್ತರ ಕರ್ನಾಟಕ ಭಾಗದ ಬೇರೆ ಬೇರೆ ವಿಷಯಗಳಿಗೆ ಹೆಚ್ಚಿನ ಸಮಯ ಚರ್ಚಿಸಲು ಅವಕಾಶ ಸಿಗಬೇಕು ಎನ್ನುವ ಉದ್ದೇಶದೊಂದಿಗೆ ಬೆಳಗಾವಿಯಲ್ಲಿ ಕಟ್ಟಿದ ಸುವರ್ಣ ವಿಧಾನಸೌಧದ ಹಿನ್ನೆಲೆಯನ್ನು ನಾವು ಅರ್ಥೈಸಿಕೊಳ್ಳಬೇಕು. ಈ ಭಾಗದ ಬಗ್ಗೆ ಅಧ್ಯಯನ ಮಾಡಿ ಡಾ.ನಂಜುಂಡಪ್ಪ ಅವರು ವರದಿ ನೀಡಿ 20 ವರ್ಷಗಳಾದರೂ ಉ.ಕ. ಭಾಗ ಸಂಪೂರ್ಣ ಅಭಿವೃದ್ಧಿಯಾಗದೇ ಇರುವುದು ವಿಷಾದದ ಸಂಗತಿ ಎಂದರು. ಡಾ.ನಂಜುಂಡಪ್ಪ ಅವರು 2002-03ರಲ್ಲಿ ಈ ಭಾಗದಲ್ಲಿನ ಅಸಮತೋಲನ ತೊಲಗಿಸಲು 18,000 ಕೋಟಿ ರೂ.ಖರ್ಚು ಮಾಡಬೇಕು ಎಂದು ತಿಳಿಸಿದ್ದರು. ಆದರೆ, ಇದುವರೆಗೆ ಖರ್ಚು ಮಾಡಿದ್ದು ಕೇವಲ 12,000 ಕೋಟಿ ರೂ. ಮಾತ್ರ. 2002-03ರ ಅವಧಿಯಲ್ಲಿಯೇ ಖರ್ಚಿನ ವಿವರವನ್ನು 18 ಸಾವಿರಕ್ಕೆ ನಿಗದಿಪಡಿಸಿದರೆ ಪ್ರಸ್ತುತ 2025ರ ಈ ಹೊತ್ತಿನಲ್ಲಿ ಆಗುವ ಖರ್ಚಿಗೆ ಮೀಸಡಲಿಡಬೇಕಾದ ಅನುದಾನದ ಗಾತ್ರ ಬಹುದೊಡ್ಡದಾಗಲಿದೆ. ಹಾಗಾಗಿ ಪ್ರತಿ ಬಜೆಟ್ ನಲ್ಲಿ ಈ ಭಾಗಕ್ಕೆ ಕನಿಷ್ಟ 25,000 ಕೋಟಿ ರೂ. ಮೀಸಲಿಡುವ ಬಗ್ಗೆ ನಿರ್ಣಯವಾಗಬೇಕು ಎಂದು ನಿರಾಣಿ ಹನುಮಂತಪ್ಪ ಹೇಳಿದರು. ಉತ್ತರ ಕರ್ನಾಟಕ ಭಾಗದ 15 ಜಿಲ್ಲೆಗಳ ಭಾಗದ ಸಾಮಾನ್ಯ ಜನರ ಭಾವನೆಗಳು ಕೆರಳುವ ಮೊದಲು ಈ ಭಾಗದ ಅಭಿವೃದ್ದಿಗೆ ಕ್ರಮವಹಿಸಿ ಪ್ರಾದೇಶಿಕ ಅಸಮತೋಲನ ಸರಿಪಡಿಸುವ ಕಾರ್ಯವಾಗಬೇಕು. ಅಪೂರ್ಣಗೊಂಡ ಈ ಭಾಗದ ಎಲ್ಲ ನೀರಾವರಿ ಯೋಜನೆಗಳನ್ನು ಪುನಾರಂಭಿಸಬೇಕು. 9 ಇಲಾಖೆಗಳನ್ನು ಈ ಭಾಗಕ್ಕೆ ಸ್ಥಳಾಂತರಿಸುವ ಕಾರ್ಯವಾಗಬೇಕು. ಅಭಿವೃದ್ಧಿ ಕೆಲಸಗಳಿಗೆ ಸದನ ನಿರ್ಣಯ ಮಾಡಬೇಕು. ಕೃಷಿಗೆ ಉತ್ತೇಜನ ನೀಡಬೇಕು. ಉ.ಕ. ಭಾಗದ ಎಲ್ಲ ಭೂಮಿಯನ್ನು ನೀರಾವರಿಗೊಳಪಡಿಸಬೇಕು. ಕೃಷ್ಣ ಮೇಲ್ದಂಡೆ ಯೋಜನೆಯಡಿ 173 ಪುನರ್ವಸತಿ ಕೇಂದ್ರಗಳಲ್ಲಿನ ಸಂತ್ರಸ್ಥರಿಗೆ ಸ್ಪಂದಿಸಬೇಕು. ಈ ಭಾಗದಲ್ಲಿ ವೈದ್ಯಕೀಯ ಕಾಲೇಜುಗಳನ್ನು ತೆರೆಯಬೇಕು. ಕಾಳಿ ನದಿ ನೀರನ್ನು ಎತ್ತಿನ ಹೊಳೆ ಯೋಜನೆಯ ಮಾದರಿಯಲ್ಲಿ ನೀರೆತ್ತುವ ಕಾರ್ಯವಾಗಬೇಕು. ಬೆಳಗಾವಿ, ಹುಬ್ಬಳ್ಳಿ, ಧಾರವಾಡ ರಾಷ್ಟ್ರೀಯ ಹೆದ್ದಾರಿ ಬಳಿಯಲ್ಲಿ ಇಂಡಸ್ಟ್ರೀಯಲ್ ಕಾರಿಡಾರ್ ಆಗಬೇಕು. ವಿಜಯಪುರ ಮಹಿಳಾ ವಿವಿಗೆ ಹೆಚ್ಚಿನ ಅನುದಾನ ನೀಡಬೇಕು ಎಂದು ನಿರಾಣಿ ಹನುಮಂತಪ್ಪ ಸಲಹೆ ಮಾಡಿದರು. ಬಿಜೆಪಿ ಸದಸ್ಯ ಎಚ್.ವಿಶ್ವನಾಥ್ ಮಾತನಾಡಿ, ಅಕ್ಷರ, ಆರೋಗ್ಯ ಮತ್ತು ನೀರು ಇಲ್ಲದೇ ಇದ್ದರೆ ಅದನ್ನು ನಾಡು ಅನ್ನಲಾಗದು. ಈ ನಿಟ್ಟಿನಲ್ಲಿ ಯೋಚಿಸಿ, ಯೋಜಿಸಿ ಉತ್ತರ ಕರ್ನಾಟಕ ಭಾಗದಲ್ಲಿ ಶೈಕ್ಷಣಿಕ ಹಾಗೂ ಆರೋಗ್ಯ ಕ್ಷೇತ್ರಗಳ ಸುಧಾರಣೆಗೆ ಮತ್ತು ಪ್ರಗತಿಗೆ ಒತ್ತು ಕೊಡಬೇಕು. ಮುಖ್ಯವಾಗಿ ದುಡಿಯುವವರ ಕೈಗೆ ಉದ್ಯೋಗ ನೀಡುವ ಕಾರ್ಯವಾಗಬೇಕು. ಯಾವುದೇ ಯೋಜನೆಗಳನ್ನು ವಿವೇಚನೆ, ವಿವೇಕದಿಂದ ರೂಪಿಸಿ ಅನುಷ್ಠಾನಗೊಳಿಸುವುದು ಇಂದಿನ ಅಗತ್ಯವಾಗಿದೆ ಎಂದು ತಿಳಿಸಿದರು. ಮೇಲ್ಮನೆಯ ನೂತನ ಸದಸ್ಯ ಶಿವಕುಮಾರ ಮಾತನಾಡಿ, ಉತ್ತರ ಕರ್ನಾಟಕ ಸೇರಿದಂತೆ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿನ ಸ್ಥಳೀಯ ಹಾಗೂ ಪ್ರಾದೇಶಿಕ ಪತ್ರಿಕೆಗಳಿಗೆ ಹೆಚ್ಚುವರಿ ಜಾಹೀರಾತು ನಿಗದಿಪಡಿಸಿ ಪತ್ರಿಕೋದ್ಯಮಕ್ಕೆ ಬಲ ತುಂಬಬೇಕು ಎಂದು ಸಲಹೆ ಮಾಡಿದರು. ಸದಸ್ಯ ಶಶಿಲ್ ಜಿ. ನಮೋಶಿ ಮಾತನಾಡಿ, ಈ ಭಾಗದಲ್ಲಿನ ಖಾಲಿ ಇರುವ ಎಲ್ಲ ಸರಕಾರಿ ಹುದ್ದೆಗಳನ್ನು ಭರ್ತಿ ಮಾಡಬೇಕು. ವಿಶೇಷವಾಗಿ ಆರೋಗ್ಯ ಕ್ಷೇತ್ರದ ಸುಧಾರಣೆಗೆ ಒತ್ತು ಕೊಡಬೇಕು ಎಂದು ಸಲಹೆ ಮಾಡಿದರು. ಪರಿಷತ್ತಿನ ಸಭಾ ನಾಯಕರಾದ ಎನ್.ಎಸ್.ಬೋಸರಾಜು, ಪರಿಷತ್ತಿನ, ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಹಾಗೂ ಇನ್ನಿತರರು ಚರ್ಚೆಯಲ್ಲಿ ಭಾಗಿಯಾದರು.
Rice: ಭಾರತಕ್ಕೆ \ಅಕ್ಕಿ\ ವಿಚಾರದಲ್ಲಿ ಶಾಕ್ ನೀಡಲು ಮುಂದಾದ ಟ್ರಂಪ್: ಅಕ್ಕಿ ಬೆಲೆ ಏರಿಕೆ ಸಾಧ್ಯತೆ!
ಅಮೇರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹುಚ್ಚಾಟ ಮುಂದುವರಿದಿದ್ದು, ಇದೀಗ ಟ್ರಂಪ್ ಅವರ ಕಣ್ಣು ಭಾರತದ ಅಕ್ಕಿಯ ಮೇಲೆ ಬಿದ್ದಿದೆ. ಇದರಿಂದ ಮುಂದಿನ ದಿನಗಳಲ್ಲಿ ಭಾರತದಲ್ಲಿ ಅಕ್ಕಿ ಬೆಲೆ ಹೆಚ್ಚಾಗಬಹುದೇ ಎನ್ನುವ ಆತಂಕವೂ ಸಹ ಶುರುವಾಗಿದೆ. ಅಮೇರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಾರತದ ವಿವಿಧ ವಸ್ತುಗಳ ಮೇಲೆ ಈಗಾಗಲೇ ಭಾರೀ ಸುಂಕ ವಿಧಿಸಿ ಆಗಿದೆ. ಇದೀಗ ಅಕ್ಕಿಯನ್ನು
ತೆಂಗು ಬೆಳೆಗಾರರಿಗೆ ಭರ್ಜರಿ ಸುದ್ದಿ ಕೊಟ್ಟ ಸಿಎಂ ಸಿದ್ದರಾಮಯ್ಯ ಸರ್ಕಾರ... Coconut Crop
ತೆಂಗು ಕಲ್ಪವೃಕ್ಷ ಎಂಬ ಸ್ಥಾನಮಾನ ಪಡೆದಿದ್ದು, ತೆಂಗು ಬೆಳೆಯನ್ನು ಸ್ವರ್ಗಲೋಕದಿಂದ ಬಂದ ಕೊಡುಗೆ ಅಂತಾ ಹಿಂದೂಗಳು ಪೂಜಿಸುತ್ತಾರೆ. ಅದರಲ್ಲೂ ಕನ್ನಡ ನಾಡು ಕಲ್ಪವೃಕ್ಷದ ತವರು ಅನ್ನೋ ಬಿರುದು ಕೂಡ ಪಡೆದಿದೆ. ತೆಂಗಿನ ಬೆಳೆಯಲ್ಲಿ ಇಡೀ ಜಗತ್ತಿನಲ್ಲೇ ಕರ್ನಾಟಕ ಹೆಸರು &ಕೀರ್ತಿ ಪಡೆದಿದೆ. ಇತ್ತೀಚಿನ ದಿನಗಳಲ್ಲಿ ತೆಂಗು ಅದರಲ್ಲೂ ಎಳನೀರು ಬೆಲೆ 70 ರೂಪಾಯಿ ದಾಟಿ ಹೋಗಿದ್ದು
ಮಂಡ್ಯ: ಹತಾಶ ಅವಿವಾಹಿತ ಯುವಕರಿಂದ ಮಠಕ್ಕಾಗಿ ಗ್ರಾ.ಪಂ.ಗೆ ಬೇಡಿಕೆ!
ಮಂಡ್ಯ: ಮುದುವೆಗೆ ಹೆಣ್ಣು ಸಿಗದೆ ಹತಾಶರಾದ ಯುವಕರ ತಂಡವೊಂದು ಮಠ ಕಟ್ಟಿಕೊಂಡು ಜೀವನ ಕಳೆಯಲು ತೀರ್ಮಾನಿಸಿದ್ದು, ಮಠ ನಿರ್ಮಾಣಕ್ಕೆ ಗ್ರಾಮ ಪಂಚಾಯತ್ಗೆ ಬೇಡಿಕೆ ಇಟ್ಟಿರುವ ಪ್ರಕರಣವೊಂದು ಬೆಳಕಿಗೆ ಬಂದಿದೆ. ಇತ್ತೀಚೆಗೆ ನಡೆದ ಮದ್ದೂರು ತಾಲೂಕಿನ ಮರಳಿಗ ಗ್ರಾಮ ಪಂಚಾಯತ್ನ ಗ್ರಾಮಸಭೆಯಲ್ಲಿ 30 ಯುವಕರ ತಂಡ, ಪಂಚಾಯತ್ ವತಿಯಿಂದ ತಮಗೆ ಮಠ ನಿರ್ಮಾಣ ಮಾಡಿಕೊಡಬೇಕೆಂದು ಮನವಿ ಸಲ್ಲಿಸುವ ಮೂಲಕ ಆಶ್ಚರ್ಯ ಮೂಡಿಸಿದರು. ಸಾರ್ವಜನಿಕರು ಗ್ರಾಮಸಭೆಯಲ್ಲಿ ಸಮಸ್ಯೆಗಳನ್ನು ಮಂಡಿಸುತ್ತಿರುವಾಗ ಪ್ರತ್ಯಕ್ಷರಾದ ಯುವಕರು, ಎಷ್ಟೇ ಪ್ರಯತ್ನಪಟ್ಟರೂ ತಮಗೆ ಮದುವೆಯಾಗಲು ಹೆಣ್ಣು ಸಿಗುತ್ತಿಲ್ಲ. ಜೀವನ ಬೇಸರ ತಂದಿದೆ. ಮಠವೊಂದನ್ನು ಕಟ್ಟಿಸಿಕೊಡಿ ದೇವರ ಭಜನೆ ಮಾಡಿಕೊಂಡು ಜೀವನ ಕಳೆಯುತ್ತೇವೆಂದು ಸಹಿ ಮಾಡಿದ ಮನವಿ ಪತ್ರವನ್ನು ಅಧಿಕಾರಿಗಳಿಗೆ ಸಲ್ಲಿಸಿದರು. ಯುವಕರ ವಿಚಿತ್ರ ಬೇಡಿಕೆಗೆ ದಂಗಾದ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು, ಯುವಕರ ಹತಾಷೆಗೆ ಮರುಕಪಟ್ಟರು ಎಂದು ವರದಿಯಾಗಿದೆ. ಮುದುವೆಗೆ ಹೆಣ್ಣು ಸಿಗದೆ ಹತಾಶರಾದ ಜಿಲ್ಲೆಯ ಯುವಕರ ತಂಡವು ತಮಗೆ ವಧು ದೊರಕಿಸಿಕೊಡುವಂತೆ ವರ್ಷದ ಹಿಂದೆ ಕೆ.ಎಂ.ದೊಡ್ಡಿಯಿಂದ ಮಲೆ ಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆ ಕೈಗೊಂಡು ಗಮನ ಸೆಳೆದಿದ್ದರು.
ಕೈದಿಗಳಿಗೆ ರಾಜಾತಿಥ್ಯದ ವಿಡಿಯೋ ವೈರಲ್ ಕೇಸ್: ಪೊಲೀಸರಿಗೇ ಯಾಮಾರಿಸಿದ್ರಾ ಧನ್ವೀರ್? ಯಾಕೆ ಈ ಅನುಮಾನ?
ಪರಪ್ಪನ ಅಗ್ರಹಾರ ಜೈಲಿನ ಕೈದಿಗಳ ರಾಜಾತಿಥ್ಯ ವಿಡಿಯೋ ಪ್ರಕರಣದಲ್ಲಿ ನಟ ಧನ್ವೀರ್ ಪೊಲೀಸರಿಗೆ ಯಾಮಾರಿಸಿರುವ ಅನುಮಾನ ಮೂಡಿದೆ. ಪೊಲೀಸರು ವಶಪಡಿಸಿಕೊಂಡಿದ್ದ ಧನ್ವೀರ್ ಮೊಬೈಲ್ನಲ್ಲಿ ಯಾವುದೇ ದತ್ತಾಂಶ ಸಿಕ್ಕಿಲ್ಲ. ಹೊಸ ಮೊಬೈಲ್ ನೀಡಿ ತನಿಖೆಯ ದಿಕ್ಕು ತಪ್ಪಿಸಿದ್ದಾರೆ ಎಂದು ಶಂಕಿಸಲಾಗಿದೆ. ಎಫ್ಎಸ್ಎಲ್ ವರದಿಗೆ ಪೊಲೀಸರು ಕಾಯುತ್ತಿದ್ದು, ಇದಾದ ಬಳಿಕ ಸಾಕ್ಷ್ಯ ನಾಶದಡಿ ಪ್ರಕರಣ ದಾಖಲಿಸಲು ಪೊಲೀಸರು ನಿರ್ಧರಿಸಿದ್ದಾರೆ.
ವಿರಾಜಪೇಟೆ | ನಾಲ್ವರನ್ನು ಹತ್ಯೆಗೈದ ಪ್ರಕರಣ: ಆರೋಪಿಗೆ ಗಲ್ಲು ಶಿಕ್ಷೆ
ಮಡಿಕೇರಿ: ಪತ್ನಿ, ಮಲ ಮಗಳು, ಪತ್ನಿಯ ಅಜ್ಜ ಹಾಗೂ ಅಜ್ಜಿಯನ್ನು ಕತ್ತಿಯಿಂದ ಕಡಿದು ಹತ್ಯೆಗೈದ ವ್ಯಕ್ತಿಗೆ ವಿರಾಜಪೇಟೆ 2ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಗಲ್ಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ಪೊನ್ನಂಪೇಟೆ ತಾಲೂಕಿನ ಬೇಗೂರು ಗ್ರಾಮದಲ್ಲಿ ಮಾ.27ರ ರಾತ್ರಿ ನಾಲ್ವರ ಹತ್ಯೆ ನಡೆದಿತ್ತು. ಕೊಲೆ ಮಾಡಿದ ಆರೋಪ ಸಾಬೀತಾದ ಹಿನ್ನೆಲೆ ಕೇರಳ ಮೂಲದ ಗಿರೀಶ್ (35) ಎಂಬಾತ ಗಲ್ಲು ಶಿಕ್ಷೆಗೆ ಗುರಿಯಾಗಿದ್ದಾನೆ. ಗಿರೀಶ್ನ ಭೀಕರ ಕೃತ್ಯಕ್ಕೆ ಪತ್ನಿ ನಾಗಿ(30), ಮಲ ಮಗಳು ಕಾವೇರಿ(5) ಪತ್ನಿಯ ಅಜ್ಜ ಜೇನು ಕುರುಬರ ಕರಿಯ(75) ಹಾಗೂ ಅಜ್ಜಿ ಗೌರಿ(70) ಹತ್ಯೆಗೀಡಾಗಿದ್ದರು. ನಾಗಿ ಎಂಬಾಕೆ ಮೊದಲ ಪತಿಯನ್ನು ತೊರೆದು 2024ರಲ್ಲಿ ಕೇರಳ ಮೂಲದ ಗಿರೀಶ್ ಎಂಬಾತನ ಜೊತೆ ವಿವಾಹವಾಗಿದ್ದಳು. ಗಿರೀಶ್ ಕೂಡ ವಿವಾಹಿತನಾಗಿದ್ದು, ಪತ್ನಿಯನ್ನು ತೊರೆದು ನಾಗಿಯನ್ನು ವಿವಾಹವಾಗಿದ್ದ ಎನ್ನಲಾಗಿದೆ. ನಾಗಿ ಮೊದಲ ಪತಿಗೆ ಜನಿಸಿದ್ದ ಕಾವೇರಿಯೊಂದಿಗೆ ಬೇಗೂರಿನಲ್ಲಿದ್ದ ಅಜ್ಜ ಮತ್ತು ಅಜ್ಜಿಯೊಂದಿಗೆ ವಾಸಿಸುತ್ತಿದ್ದಳು. 2ನೇ ಪತಿ ಗಿರೀಶ್ ನಾಗಿ ಇದ್ದ ಮನೆಗೆ ಬಂದು ಹೋಗುತ್ತಿದ್ದ ಎನ್ನಲಾಗಿದೆ. 2025ರ ಮಾರ್ಚ್ 27ರಂದು ರಾತ್ರಿ ಬಂದ ಗಿರೀಶ್ ಪತ್ನಿ ನಾಗಿಯ ಶೀಲ ಶಂಕಿಸಿ ಜಗಳವಾಡಿದ್ದಾನೆ. ಅಲ್ಲದೆ ಕತ್ತಿಯಿಂದ ಕಡಿದು ಮೊದಲು ನಾಗಿಯನ್ನು ಹತ್ಯೆ ಮಾಡಿದ್ದಾನೆ. ಈ ವೇಳೆ ನಾಗಿಯ ಕಂಕುಳಲ್ಲಿದ್ದ ಮಗು ಕಾವೇರಿಯ ತಲೆಯ ಭಾಗಕ್ಕೆ ಕತ್ತಿ ಏಟು ತಗಲಿ ಆಕೆಯೂ ಸ್ಥಳದಲ್ಲೇ ಮೃತಪಟ್ಟಳು ಎಂದು ಹೇಳಲಾಗಿದೆ. ಜಗಳವನ್ನು ಬಿಡಿಸಲು ಬಂದ ಅಜ್ಜ ಕರಿಯ ಹಾಗೂ ಅಜ್ಜಿ ಗೌರಿ ಕೂಡ ಕತ್ತಿಯಿಂದ ಹಲ್ಲೆಗೊಳಗಾಗಿ ಮೃತಪಟ್ಟರು ಎಂದು ದೂರು ದಾಖಲಾಗಿತ್ತು. ಘಟನಾ ಸ್ಥಳಕ್ಕೆ ದಕ್ಷಿಣ ವಲಯ ಪೊಲೀಸ್ ಮಹಾ ನಿರೀಕ್ಷಕ ಡಾ.ಬೋರಲಿಂಗಯ್ಯ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್, ಅಂದಿನ ಅಡಿಷನಲ್ ಎಸ್ಪಿ ಸುಂದರ್ ರಾಜ್, ಪೊನ್ನಂಪೇಟೆ ಠಾಣಾಧಿಕಾರಿ ಮತ್ತು ಸಿಬ್ಬಂದಿ, ವಿಧಿ ವಿಜ್ಞಾನ ಪ್ರಯೋಗಾಲಯದ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ನಾಲ್ವರನ್ನು ಭೀಕರವಾಗಿ ಹತ್ಯೆಗೈದು ಕೇರಳದಲ್ಲ್ ತಲೆಮರೆಸಿಕೊಂಡಿದ್ದ. ಗಿರೀಶ್ನನ್ನು ಕೊಡಗು ಮತ್ತು ಕೇರಳ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಈ ಕೊಲೆ ಪ್ರಕರಣದ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದ ಪೊನ್ನಂಪೇಟೆ ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪ ವರದಿ ಸಲ್ಲಿಸಿದ್ದರು. ಪ್ರಕರಣದ ತ್ವರಿತ ವಿಚಾರಣೆ ನಡೆಸಿದ ವಿರಾಜಪೇಟೆ 2ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಎಸ್.ನಟರಾಜ ಅವರು ಕಲಂ 103(1), 238 ಬಿಎನ್ಎಸ್ ಅಡಿಯಲ್ಲಿ ಆರೋಪಿ ಗಿರೀಶ್ ಅಪರಾಧ ಎಸಗಿರುವುದು ಸಾಬೀತಾದ ಹಿನ್ನೆಲೆಯಲ್ಲಿ ಅಪರಾಧಿಗೆ ಗಲ್ಲು ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ. ಪ್ರಕರಣದ ಕುರಿತು ಸರಕಾರಿ ಅಭಿಯೋಜಕ ಯಾಸೀನ್ ಅಹ್ಮದ್ ಅವರು ಸರಕಾರದ ಪರವಾಗಿ ವಾದ ಮಂಡಿಸಿದರು.
ಥಾಯ್ಲೆಂಡ್-ಕಾಂಬೊಡಿಯಾ ಗಡಿಯಲ್ಲಿ ಘರ್ಷಣೆ; ಕರೆ ಮಾಡಿ ಯುದ್ಧ ನಿಲ್ಲಿಸುವೆ ಎಂದ ಟ್ರಂಪ್
ಡಿಸೆಂಬರ್ 8ರಿಂದ ಥೈಲ್ಯಾಂಡ್ ಮತ್ತು ಕಾಂಬೋಡಿಯಾ ಗಡಿಯಲ್ಲಿ ಸಂಘರ್ಷ ಉಂಟಾಗಿದೆ. ಈ ಹಿನ್ನೆಲೆ ಎರಡು ರಾಷ್ಟ್ರಗಳ 5 ಲಕ್ಷಕ್ಕೂ ಹೆಚ್ಚು ಮಂದಿ ತಮ್ಮ ವಾಸ ಸ್ಥಾನ ತೊರೆದು ಸುರಕ್ಷಿತ ಜಾಗಗಳತ್ತ ಪ್ರಯಾಣ ಬೆಳೆಸಿದ್ದಾರೆ. ಜುಲೈನಲ್ಲಿ ನಡೆದಿದ್ದ ಸಂಘರ್ಷದ ನಂತರ ಟ್ರಂಪ್ ಅವರು ಕದನ ವಿರಾಮಕ್ಕೆ ಒತ್ತಾಯಿಸಿದ್ದರುಆದರೆ, ಸೋಮವಾರ ಮತ್ತೆ ಸಂಘರ್ಷ ಉಂಟಾಗಿದೆ. ಶಾಂತಿ ಒಪ್ಪಂದ ಮುರಿದುಬಿದ್ದಿದೆ.
'ಧರ್ಮಸ್ಥಳದಲ್ಲಿ ಮಹಿಳೆಯರನ್ನು ಕೊಂದವರು ಯಾರು?' ಪುಸ್ತಕ ಬಿಡುಗಡೆ, ಸರಕಾರಕ್ಕೆ ಮಹತ್ವದ ಆಗ್ರಹ
ಧರ್ಮಸ್ಥಳದಲ್ಲಿ ನಡೆದ ಅಪರಾಧ ಪ್ರಕರಣಗಳ ತನಿಖೆಗೆ ಎಸ್ಐಟಿ ಸ್ವತಂತ್ರವಾಗಿ ಕಾರ್ಯನಿರ್ವಹಿಸಲು ರಾಜ್ಯ ಸರಕಾರ ಅವಕಾಶ ನೀಡಬೇಕು ಎಂದು 'ಕೊಂದವರು ಯಾರು?' ತಂಡ ಒತ್ತಾಯಿಸಿದೆ. 20 ಸಾವಿರ ಸಹಿ ಸಂಗ್ರಹಿಸಿ ಮನವಿ ಸಲ್ಲಿಸಲಾಗಿದ್ದು, ಕರ್ತವ್ಯ ಲೋಪ ಎಸಗಿದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಲಾಗಿದೆ.
`ಕ್ರಿಕೆಟ್ ಬಿಟ್ರೆ ಬೇರೇನೂ ಇಷ್ಟವಿಲ್ಲ': ವಿವಾಹ ರದ್ದಾದ ಬಳಿಕ ಮೊದಲ ಬಾರಿ ಸ್ಮೃತಿ ಮಂದಾನ ಮುಕ್ತಮಾತು!
Smriti Mandhana Statement- ಭಾರತ ಮಹಿಳಾ ಕ್ರಿಕೆಟ್ ತಂಡ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳ ಸ್ಟಾರ್ ಆಟಗಾರ್ತಿ ಸ್ಮೃತಿ ಮಂದಾನ ಅವರು ಕ್ರಿಕೆಟ್ ಮೇಲಿನ ತಮ್ಮ ಅಪಾರ ಪ್ರೀತಿ ಮತ್ತು ಬದ್ಧತೆಯನ್ನು ವ್ಯಕ್ತಪಡಿಸಿದ್ದಾರೆ. ಸಂಗೀತ ನಿರ್ದೇಶಕ ಪಲಾಶ್ ಮುಚ್ಚಲ್ ಅವರೊಂದಿಗಿನ ಮದುವೆ ರದ್ದಾದ ನಂತರ ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡ ಅವರು ಕ್ರಿಕೆಟ್ ಮತ್ತಿತರ ವಿಚಾರಗಳ ಬಗ್ಗೆ ಮುಕ್ತವಾಗಿ ಮಾತನಾಡಿದರು. ವಿಶ್ವಕಪ್ ಗೆಲುವಿನ ಸಂಭ್ರಮದ ಕ್ಷಣಗಳವನ್ನು ಮೆಲುಕು ಹಾಕಿದರು.
ರೆಂಜಾಳ ರಾಮಕೃಷ್ಣರಾವ್ ಸೇರಿ ಐದು ಮಂದಿಗೆ ಯಕ್ಷಗಾನ ಅಕಾಡಮಿಯ ಗೌರವ ಪ್ರಶಸ್ತಿ: ಡಾ.ತಲ್ಲೂರು ಶಿವರಾಮಶೆಟ್ಟಿ
ಯಕ್ಷಗಾನ ಅಕಾಡಮಿಯ ವಿವಿಧ ಪ್ರಶಸ್ತಿ ಪ್ರಕಟ

26 C