SENSEX
NIFTY
GOLD
USD/INR

Weather

26    C
... ...View News by News Source

MANGALURU | ಮುಳಿಹಿತ್ಲು: ‘ಅಂಬರ್ ರೆಸಿಡೆನ್ಸಿ’ ಮಾಹಿತಿ ಕೈಪಿಡಿ ಬಿಡುಗಡೆ

ಮಂಗಳೂರು, ಡಿ.14: ನಗರದ ಖ್ಯಾತ ಕಟ್ಟಡ ನಿರ್ಮಾಣ ಸಂಸ್ಥೆ ಅರ್ಫಾ ಬಿಲ್ಡರ್ಸ್ ಸಂಸ್ಥೆಯಿಂದ ಮುಳಿಹಿತ್ಲುವಿನಲ್ಲಿ ನಿರ್ಮಾಣಗೊಳ್ಳಲಿರುವ ವಸತಿ ಸಮುಚ್ಚಯ ‘ಅಂಬರ್ ರೆಸಿಡೆನ್ಸಿ’ ಇದರ ಮಾಹಿತಿ ಕೈಪಿಡಿಯನ್ನು ಮಂಗಳೂರು ಮಹಾನಗರ ಪಾಲಿಕೆಯ ಮಾಜಿ ಮೇಯರ್ ಪ್ರೇಮಾನಂದ ಶೆಟ್ಟಿ ರವಿವಾರ ಬಿಡುಗಡೆಗೊಳಿಸಿದರು.   ಈ ಸಂದರ್ಭದಲ್ಲಿ ಮಾತನಾಡಿದ ಅವರು ‘ಮಂಗಳೂರು ವೇಗವಾಗಿ ಬೆಳೆಯುತ್ತಿರುವ ನಗರವಾಗಿದೆ. ಶಿಕ್ಷಣ, ಆರೋಗ್ಯ, ಕೈಗಾರಿಕೆ, ಉದ್ಯಮ ಕ್ಷೇತ್ರದಲ್ಲಿ ಅಭಿವೃದ್ಧಿ ಹೊಂದಿರುವ ಮಂಗಳೂರು ಇದೀಗ ಬಹುಮಹಡಿಗಳ ಕಟ್ಟಡಗಳ ನಿರ್ಮಾಣ ಕ್ಷೇತ್ರದಲ್ಲಿ ಇದೀಗ ತನ್ನದೇ ಆಗಿರುವ ಛಾಪನ್ನು ಮೂಡಿಸಿದೆ ಎಂದರು.   ಕಟ್ಟಡದ ಗುಣಮಟ್ಟ ಮತ್ತು ವಿನ್ಯಾಸ ಉತ್ತಮವಾಗಿರುವುದರಿಂದ ದೂರದ ಊರಿನವರು ಕೂಡಾ ಮಂಗಳೂರಿನ ಫ್ಲ್ಲಾಟ್ ಗಳನ್ನು ಹೆಚ್ಚು ಇಷ್ಟಪಡುತ್ತಾರೆ. ಅರ್ಫಾ ಬಿಲ್ಡರ್ಸ್ ಐದು ವರ್ಷಗಳಲ್ಲಿ ‘ಅರ್ಫಾ ಮೀರಾಜ್ ಟವರ್’ ಮತ್ತು ಅರ್ಫಾ ಮೆಡೋಸ್ ’ ಎರಡು ಯೋಜನೆಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಸಂಸ್ಥೆಯು ಕಾಲಮಿತಿಯೊಳಗೆ ಎರಡೂ ಯೋಜನೆಗಳ ಕಾಮಗಾರಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸುವ ಮೂಲಕ ಜನರ ವಿಶ್ವಾಸ ಗಳಿಸಿರುವುದರಿಂದ ಮೂರನೇ ಪ್ರಾಜೆಕ್ಟ್ ಅಂಬರ್ ರೆಸಿಡೆನ್ಸಿಗೆ ಉತ್ತಮ ಬೇಡಿಕೆ ವ್ಯಕ್ತವಾಗಿದೆ. ಈಗಾಗಲೇ ಶೇ.50ಕ್ಕೂ ಅಧಿಕ ಫ್ಲ್ಯಾಟ್ ಗಳು ಬುಕ್ಕಿಂಗ್ ಆಗಿರುವುದು ಸಂಸ್ಥೆಯ ಮೇಲೆ ಜನರಿಗಿರುವ ವಿಶ್ವಾಸಕ್ಕೆ ಸಾಕ್ಷಿಯಾಗಿದೆ ಎಂದರು.   ಮನಪಾ ಮಾಜಿ ಸದಸ್ಯೆ ರೇವತಿ ಶಾಮ ಸುಂದರ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಮನಪಾ ಮಾಜಿ ಉಪ ಮೇಯರ್ ಭಾನುಮತಿ ಪಿ.ಎಸ್., ಮಾಜಿ ಸದಸ್ಯ ಅಬ್ದುಲ್ ರವೂಫ್ , ಚಾರ್ಟರ್ಡ್ ಅಕೌಂಟೆಂಟ್ ಕೆ.ದೇವದಾಸ್ ನಾಯಕ್ ಮುಖ್ಯ ಅತಿಥಿಗಳಾಗಿ ಶುಭ ಹಾರೈಸಿದರು.   ಅಬ್ದುಲ್ ರಹ್ಮಾನ್ ಶಾಬಾನ್ ಕಂಕನಾಡಿ, ಅರ್ಫಾ ಬಿಲ್ಡರ್ಸ್ ನ ಆಡಳಿತ ನಿರ್ದೇಶಕ ನೌಶಾದ್ ಪಡೀಲ್ ಮತ್ತು ನಿರ್ದೇಶಕ ಮೊಹಿದೀನ್ ಎ.ಕೆ., ಅಂಬರ್ ರೆಸಿಡೆನ್ಸಿಯ ಪ್ರಾಜೆಕ್ಟ್ ಮ್ಯಾನೇಜ್ ಮೆಂಟ್ ಆಂಡ್ ಕನ್ಸಲ್ಟೆಂಟ್ ಆಗಿರುವ ನ್ಯೂ ಡಿಸೈನ್ ಹೋಮ್ ನ ಪಾಲುದಾರ ಸಾದಿಕ್ ಎ.ಆರ್. ವೇದಿಕೆಯಲ್ಲಿ ಉಪಸ್ಥಿತರಿದ್ದರು. ನ್ಯೂ ಡಿಸೈನ್ ಹೋಮ್ ನ ಪಾಲುದಾರ ಇಂಜಿನಿಯರ್ ಮುಹಮ್ಮದ್ ಇಕ್ಬಾಲ್ ವಂದಿಸಿದರು. ವಿಜೆ. ಶಿಶಾನ್ ಕಾರ್ಯಕ್ರಮ ನಿರೂಪಿಸಿದರು.

ವಾರ್ತಾ ಭಾರತಿ 14 Dec 2025 3:21 pm

Year Ender 2025: ದೇಶದ ಶಿಕ್ಷಣ ಕ್ಷೇತ್ರ ಕಂಡ ಸಿಹಿ- ಕಹಿ ಕ್ಷಣಗಳು

Indian Education 2025: ಪ್ರಸಕ್ತ 2025ನೇ ವರ್ಷ ಪೂರ್ಣಗೊಳ್ಳಲು 15 ದಿನ ಮಾತ್ರ ಇದೇ. ಈ ಹೊಸ ವರ್ಷದಲ್ಲಿ ದೇಶದ ಶಿಕ್ಷಣ ಕ್ಷೇತ್ರದಲ್ಲಿನ ಒಂದಷ್ಟು ಬೆಳವಣಿಗೆ ಆಗಿವೆ. ಈ ಬದಲಾವಣೆಗೆ ಸರ್ಕಾರಗಳು ಕಾರಣವಾಗಿವೆ. ಈ ವರ್ಷ ಭಾರತಾದ್ಯಂತ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಶಿಕ್ಷಣ ಸಂಸ್ಥೆಗಳಿಗೆ ಅತ್ಯಾಕರ್ಷಕ ಪ್ರಗತಿ ಮತ್ತು ಗಮನಾರ್ಹ ಸವಾಲುಗಳನ್ನು ತಂದೊಡ್ಡಿದೆ. 2026ನೇ ಹೊಸ ವರ್ಷದ

ಒನ್ ಇ೦ಡಿಯ 14 Dec 2025 3:14 pm

ಚಳಿಗೆ ನಡುಗಿದ ಬಿಸಿಲುನಾಡು: ರಾಯಚೂರಿನಲ್ಲಿ ದಾಖಲೆಯ ಕನಿಷ್ಠ ತಾಪಮಾನ, ಜನಜೀವನ ತತ್ತರ

ರಾಯಚೂರು: ಬಿಸಿಲುನಾಡು ರಾಯಚೂರು ಜಿಲ್ಲೆಯಲ್ಲಿ ಕಳೆದ ಮೂರ್ನಾಲ್ಕು ದಿನಗಳಿಂದ ಕನಿಷ್ಠ ತಾಪಮಾನ ದಾಖಲಾಗುತ್ತಿದ್ದು ಚಳಿಗೆ ನಡುಗುತ್ತಿರುವ ಜನರು ಬೆಳಗಿನ ಜಾವ ಹಾಗೂ ಸಂಜೆಯ ನಂತರ ಹೊರಗೆ ಬಾರಲು ಭಯ ಪಡುವಂತಾಗಿದೆ. ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾನಿಲಯದ ಆವರಣದಲ್ಲಿ ಶುಕ್ರವಾರ ಕನಿಷ್ಠ ತಾಪಮಾನ 10 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಒಂದು ವಾರದಿಂದ ಜಿಲ್ಲೆಯಲ್ಲಿ ಶೀತಗಾಳಿ ಬೀಸುತ್ತಿದೆ. ರಾತ್ರಿ ಕನಿಷ್ಠ ತಾಪಮಾನ 14ರಿಂದ 11ರ ವರೆಗೂ ಕುಸಿಯುತ್ತಿದೆ. ಡಿಸೆಂಬರ್ 10ರಂದು ಸಹ ಕನಿಷ್ಠ ಉಷ್ಣಾಂಶ 10 ಡಿಗ್ರಿ ಸೆಲ್ಸಿಯಸ್ ದಾಖಲಾಗಿತ್ತು. ಈಗಲೂ ಸಂಜೆ 5.30ರ ವೇಳೆಗೆ ಚಳಿ ಆವರಿಸತೊಡಗಿದೆ. ರಾತ್ರಿ ಹಾಗೂ ಬೆಳಗಿನ ಜಾವ ಆವರಿಸಿಕೊಳ್ಳುತ್ತಿರುವ ಚಳಿಗೆ ಜನ, ಜಾನುವಾರು ಹಾಗೂ ಬೆಳೆಗಳಿಗೂ ಸಂಕಷ್ಟ ತಂದೊಡ್ಡಿದೆ. ಜಾನುವಾರುಗಳು ಮೇಯಲು ಹಾಗೂ ರೈತರು ಹೊಲಗಳಿಗೆ ಹೋಗುವುದು ಕಷ್ಟವಾಗುತ್ತಿದೆ. ಅಲ್ಲದೇ ಕೂಲಿ ಕಾರ್ಮಿಕರು, ಹಾಲು,ಪೇಪರ್ ಹಾಕುವ ಹುಡುಗರು, ಬೀದಿ ವ್ಯಾಪಾ ರಿಗಳು ತತ್ತರಿಸಿದ್ದಾರೆ. ಚಳಿಗೆ ಹೆದರಿ ಅನೇಕರು ಬೆಳಗಿನ ಜಾವ ವಾಯು ವಿಹಾರಕ್ಕೆ ಹೋಗುವುದನ್ನು ಕೈಬಿಟ್ಟಿದ್ದಾರೆ. ಚಳಿಗೆ ಅನೇಕರು ನೆಗಡಿ,ಕೆಮ್ಮಿನಿಂದ ಬಳಲುತ್ತಿದ್ದಾರೆ. ಚಿಕ್ಕ ಮಕ್ಕಳು,ವಯೋವೃದ್ಧರು ಹೆಚ್ಚು ಹೊರಗೆ ತಿರುಗಾಡದಂತೆ ವೈದ್ಯರು ಸಲಹೆ ನೀಡುತ್ತಿದ್ದಾರೆ. ಚಳಿಗೆ ತತ್ತರಿಸಿದ ರಾಯಚೂರಿನ ಜನ ಕಸ,ಚಿಕ್ಕ ಗಾತ್ರದ ಕಟ್ಟಿಗೆಗಳಿಗೆ ಬೆಂಕಿ ಹಚ್ಚಿ ಮೈ ಬೆಚ್ಚಗೆ ಮಾಡಿಕೊಳ್ಳುವ ದೃಶ್ಯಗಳು ಅಲ್ಲಲ್ಲಿಕಾಣಿಸುತ್ತಿದೆ. ಕೃಷಿ ವಿಜ್ಞಾನಗಳ ವಿಶ್ವವಿದ್ಯಾನಿಲಯ ಗ್ರಾಮೀಣ ಹವಾಮಾನ ಸೇವಾ ಘಟಕದ ಅಧಿಕಾರಿಗಳ ಪ್ರಕಾರ ಮುಂದಿನ ಐದು ದಿನಗಳವರೆಗೆ ರಾತ್ರಿಯ ತಾವಾನದಲ್ಲಿ ಸಾಮಾನ್ಯ ತಾಪಮಾನಕ್ಕಿಂತ 3-4 ಡಿಗ್ರಿ ಸೆಲ್ಸಿಯಸ್ನಷ್ಟು ಇಳಿಕೆಯಾಗುವ ಸಾಧ್ಯತೆ ಇದೆ. ಆದ್ದರಿಂದ ಶೀತದಿಂದ ಬೆಳೆಗಳನ್ನು ರಕ್ಷಿಸಲು ಸಂಜೆಯ ಸಮಯದಲ್ಲಿ ಲಘುವಾಗಿ ಆಗಾಗ ನೀರು ಹಾಯಿಸಬೇಕು. ಎಳೆಯ ಹಣ್ಣಿನ ಗಿಡಗಳನ್ನು ಒಣ ಹುಲ್ಲಿನ ಅಥವಾ ಪಾಲಿಥಿನ್ ಹಾಳೆಗಳು ಅಥವಾ ಗೋಣಿ ಚೀಲಗಳಿಂದ ರಕ್ಷಿಸಬೆಕು. ಹೂವು ಮತ್ತು ಕಾಯಿ ಉದುರುವುದನ್ನು ತಡೆಯಲು 0.25 ಮಿ.ಲೀ ನ್ಯಾಪ್ತಲಿನ್ ಎಸಿಟಿಕ್ ಎಸಿಡ್ (ಪ್ಲಾನೊಫಿಕ್ಸ್) ಮತ್ತು ಶೇಕಡ 1% ರಷ್ಟು 19:19:19 (10 ಗ್ರಾಂ. ಪ್ರತಿ ಲೀಟರ್ ನೀರಿಗೆ) ಬೆರಸಿ ಸಿಂಪಡಿಸಬೆಕು ಎಂದು ಸಲಹೆ ನೀಡಿದ್ದಾರೆ. ರಾತ್ರಿ ತಾಪಮಾನ ಇಳಿಕೆಯಾಗುತ್ತಿರುವ ಕಾರಣ ಜಾನುವಾರುಗಳನ್ನು ಬೆಚ್ಚಗಿನ ಕೊಟ್ಟಿಗೆಯಲ್ಲಿ ಕಟ್ಟಬೇಕು. ದನಗಳಿಗೆ ಕಾಲು, ಬಾಯಿ ರೋಗ ಬರುವ ಸಾಧ್ಯತೆ ಇರುವುದರಿಂದ ಚುಚ್ಚುಮದ್ದು ಹಾಕಿಸಬೇಕು. ಒಣಮೇವನ್ನು ಬಿಸಿಲಲ್ಲಿ ಚೆನ್ನಾಗಿ ಒಣಗಿಸಿ ಚೀಲದಲ್ಲಿ ತುಂಬಿಡಬೇಕು. ಬೆಳಗಿನ ವೇಳೆಯಲ್ಲಿ ದನಗಳನ್ನು ಮೇಯಲು ಬಿಡಬಾರದು ಎಂದು ಪಶು ವೈದ್ಯರು ಸಲಹೆ ನೀಡಿದ್ದಾರೆ. ಬೆಳಗಿನ ಸಮಯದಲ್ಲಿ ಮಂಜು ಬೀಳುವುದರಿಂದ ಬೆಳೆಯಲ್ಲಿ ರೋಗಗಳ ಬಾಧೆ ಹೆಚ್ಚಾಗಿ ಕಂಡು ಬರುವ ಸಾಧ್ಯತೆ ಇದೆ. ರೈತರು ಮುಂಜಾಗೃತ ಕ್ರಮಗಳನ್ನು ಕೈಗೊಳ್ಳ ಬೇಕು. ಶೀತ ವಾತಾವರಣದಲ್ಲಿ ಕಳಪೆ ಬೇರಿನ ಚಟುವಟಿಕೆಯಿಂದಾಗಿ ಸಸ್ಯವು ಪೋಷ ಕಾಂಶಗಳನ್ನು ಹೀರಿಕೊಳ್ಳುವುದಿಲ್ಲ. ಆದ್ದರಿಂದ ಪೋಷಕಾಂಶಗಳನ್ನು ಸಿಂಪಡಣೆಯ ಮೂಲಕ ಕೊಡಬೇಕು. - ತಿಮ್ಮಣ್ಣ ನಾಯಕ, ಮುಖ್ಯಸ್ಥರು, ಕೃಷಿ ವಿಜ್ಞಾನ ಕೇಂದ್ರ. ಚಳಿಗೆ ಹೊರಗೆ ಬಾರಲು ಆಗುತ್ತಿಲ್ಲ, ಬೆಳಗ್ಗೆ 6 ಗಂಟೆಗೆ ಏಳುತ್ತಿದ್ದೆ. ಈಗ 8 ಗಂಟೆಗೆ ಏಳುವಂತಾಗಿದೆ, ಮಧ್ಯಾಹ್ನ ಬಿಸಿಲು ಇದ್ದರೂ ಗಾಳಿ ಬೀಸುತ್ತಿದ್ದು ಶೀತವಾಗುತ್ತಿದೆ. -ಮಲ್ಲಪ್ಪ, ರಾಯಚೂರು ನಿವಾಸಿ

ವಾರ್ತಾ ಭಾರತಿ 14 Dec 2025 3:12 pm

ದೀಪಾ ಭಾಸ್ತಿ ಉಪನ್ಯಾಸ ರದ್ದುಪಡಿಸಿದ ಕೇಂದ್ರೀಯ ವಿವಿ ನಡೆ ಖಂಡನೀಯ: ಮೀನಾಕ್ಷಿ ಬಾಳಿ

ಕಲಬುರಗಿ: ಆಳಂದ ತಾಲೂಕಿನ ಕಡಗಂಚಿಯಲ್ಲಿರುವ ಕರ್ನಾಟಕದ ಕೇಂದ್ರೀಯ ವಿಶ್ವವಿದ್ಯಾನಿಲಯದಲ್ಲಿ ವಿಶೇಷ ಉಪನ್ಯಾಸಕ್ಕಾಗಿ ಬೂಕರ್ ಪ್ರಶಸ್ತಿ ವಿಜೇತೆ ದೀಪಾ ಭಾಸ್ತಿಯವರನ್ನು ಆಹ್ವಾನಿಸಿ ತಾಂತ್ರಿಕ ಕಾರಣಗಳ ನೆಪವೊಡ್ಡಿ ಇದ್ದಕ್ಕಿದ್ದಂತೆ ರದ್ದುಪಡಿಸಿರುವುದು ಖಂಡನೀಯ ಎಂದು ಲೇಖಕಿ, ಸಾಮಾಜಿಕ ಹೋರಾಟಗಾರ್ತಿ ಮೀನಾಕ್ಷಿ ಬಾಳಿ ಹೇಳಿದ್ದಾರೆ. ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ದೀಪಾ ಬಾಸ್ತಿ ಅಂತಾರಾಷ್ಟ್ರೀಯ ಲೇಖಕಿ. ಯಶಸ್ವಿ ಅನುವಾದಕಿಯೂ ಆಗಿದ್ದಾರೆ. ಅವರ ಸಮರ್ಥ ಅನುವಾದದಿಂದಾಗಿ ಕನ್ನಡದ ಖ್ಯಾತ ಕತೆಗಾರ್ತಿ ಬಾನು ಮುಷ್ತಾಕ್ ಅವರ ಕಥಾ ಸಂಕಲನಕ್ಕೆ ಅತ್ಯುನ್ನತ ಬೂಕರ್ ಪ್ರಶಸ್ತಿ ಲಭಿಸಿದ್ದು ದೇಶಕ್ಕೆ ಸಂದ ಗೌರವ. ಅವರನ್ನು ಜಗದುದ್ದಗಲಕ್ಕೂ ಅನೇಕ ದೇಶಗಳು ಕರೆದು ಗೌರವಿಸುತ್ತಿವೆ. ಕಿರಿಯ ಲೇಖಕರೊಂದಿಗೆ ಸಂವಾದ, ತರಬೇತಿ ನಡೆಸುತ್ತಿವೆ. ಅಂಥ ಒಬ್ಬ ಅನುವಾದಕಿಯನ್ನು ಕಲಬುರಗಿಯ ಕೇಂದ್ರೀಯ ವಿಶ್ವವಿದ್ಯಾನಿಲಯ ಆಮಂತ್ರಿಸಿ ಎಲ್ಲ ತಯಾರಿ ಮುಗಿದ ನಂತರ ದೀಪಾ ಬಾಸ್ತಿ ಮುಸ್ಲಿಂ ಮಹಿಳೆಯ ಕೃತಿಯನ್ನು ಅನುವಾದಿಸಿದ್ದಾರೆ ಎಂಬ ಹಿಡನ್ ಕಾರಣಕ್ಕೆ ಧಿಡೀರ್ ತಾಂತ್ರಿಕ ನೆಪವೊಡ್ಡಿ ಕಾರ್ಯಕ್ರಮ ಮುಂದೂಡಲಾಗಿದೆ ಎಂದು ಆರೋಪಿಸಿದ್ದಾರೆ. ದೀಪಾ ಭಾಸ್ತಿ ಬರುತ್ತಿರುವ ವಿಷಯ ತಿಳಿದ ಮಾನವಿಕ ವಿಭಾಗದ ವಿದ್ಯಾರ್ಥಿಗಳು ಅವರ 'ಹಾರ್ಟ್ ಲೈಟ್' ಕೃತಿಯನ್ನು ಓದಿಕೊಂಡು ಸಂವಾದ ನಡೆಸಲು ತಯಾರಿ ಮಾಡಿಕೊಂಡು ಕುಳಿತಿದ್ದರಲ್ಲದೆ ಬೂಕರ್ ವಿಜೇತ ಅನುವಾದಕಿಯೊಂದಿಗೆ ಮಾತುಕತೆ ನಡೆಸುವ ಉತ್ಸಾಹದಲ್ಲಿದಲ್ಲಿದ್ದರು. ಆದರೆ ವಿಶ್ವವಿದ್ಯಾಲಯವೊಂದು ತನ್ನ ಕೋಮುವಾದಿ ಕುಟೀಲ ಕಾರಸ್ಥಾನದಿಂದ ಮಕ್ಕಳ ಉತ್ಸಾಹದ ಮೇಲೆ ತಣ್ಣೀರು ಎರೆಚಿದೆ ಎಂದರು. ತನ್ನ ವಿರೋಧಿ ನೆಲೆಯ ತಾತ್ವಿಕ ಸಿದ್ಧಾಂತಗಳೊಂದಿಗೂ ವಾಗ್ವಾದ ನಡೆಸಿರುವ ಪರಂಪರೆ ಹೊಂದಿರುವ ಭಾರತೀಯ ದಾರ್ಶನಿಕತೆಯನ್ನೂ ಗೌರವಿಸದ ಅಜ್ಞಾನಿಗಳೇ ಕೇಂದ್ರೀಯ ವಿಶ್ವವಿದ್ಯಾನಿಲಯದಲ್ಲಿ ತುಂಬಿಕೊಂಡಿದ್ದಕ್ಕೆ ಇದಕ್ಕಿಂತ ಜ್ವಲಂತ ನಿದರ್ಶನ ಬೇಕಾಗಿಲ್ಲ ಎಂದು ಹೇಳಿದರು. ಇಂಥದ್ದೊಂದು ಅಪರೂಪದ ಹಾಗೂ ವಿದ್ಯಾರ್ಥಿಗಳಲ್ಲಿ ಅಂತಾರಾಷ್ಟ್ರೀಯ ಸ್ಪರ್ಧಾತ್ಮಕ ಕೌಶಲ್ಯ ಬೆಳೆಸಬಹುದಾಗಿದ್ದ ಕಾರ್ಯಕ್ರಮವನ್ನು ನಿಲ್ಲಿಸಿದ ಅಧಿಕಾರಿಗಳ ಧೂರ್ತತನವನ್ನು ಖಂಡಿಸುತ್ತೇವೆ. ವಿವಿಯ ಘನತೆ ಗೌರವವನ್ನು ಮಣ್ಣು ಮುಕ್ಕಿಸುತ್ತಿರುವ ಇಂಥ ಕೋಮುಕ್ರಿಮಿಗಳನ್ನು ಹೊರದೂಡಬೇಕೆಂದು ಪ್ರೊ.ಆರ್.ಕೆ ಹುಡಗಿ, ಡಾ.ಕಾಶಿನಾಥ ಅಂಬಲಗಿ, ಡಾ ದತ್ತಾ ಇಕ್ಕಳಕಿ, ಡಾ.ಪ್ರಭು ಖಾನಾಪೂರೆ, ಮಾರುತಿ ಗೋಖಲೆ, ಕೋದಂಡರಾಮ, ಮೆಹರಾಜ್ ಪಟೇಲ, ಶ್ರೀಶೈಲ ಘೂಳಿ, ಖೇಮಣ್ಣ ಅಲ್ದಿ, ಭೀಮಾಶಂಕರ ಬಿರಾದಾರ ಸೇರಿದಂತೆ ಹಲವರು ವಿಚಾರವಾದಿಗಳು ಆಗ್ರಹಿಸಿದ್ದಾರೆ.

ವಾರ್ತಾ ಭಾರತಿ 14 Dec 2025 2:58 pm

ದೀಪಾ ಬಾಸ್ತಿ ಉಪನ್ಯಾಸ ರದ್ದುಪಡಿಸಿದ ಕೇಂದ್ರೀಯ ವಿವಿ ನಡೆ ಖಂಡನೀಯ: ಮೀನಾಕ್ಷಿ ಬಾಳಿ

ಕಲಬುರಗಿ: ಆಳಂದ ತಾಲೂಕಿನ ಕಡಗಂಚಿಯಲ್ಲಿರುವ ಕರ್ನಾಟಕದ ಕೇಂದ್ರೀಯ ವಿಶ್ವವಿದ್ಯಾನಿಲಯದಲ್ಲಿ ವಿಶೇಷ ಉಪನ್ಯಾಸಕ್ಕಾಗಿ ಬೂಕರ್ ಪ್ರಶಸ್ತಿ ವಿಜೇತೆ ದೀಪಾ ಬಾಸ್ತಿಯವರನ್ನು ಆಹ್ವಾನಿಸಿ ತಾಂತ್ರಿಕ ಕಾರಣಗಳ ನೆಪವೊಡ್ಡಿ ಇದ್ದಕ್ಕಿದ್ದಂತೆ ರದ್ದುಪಡಿಸಿರುವುದು ಖಂಡನೀಯ ಎಂದು ಲೇಖಕಿ, ಸಾಮಾಜಿಕ ಹೋರಾಟಗಾರ್ತಿ ಮೀನಾಕ್ಷಿ ಬಾಳಿ ಹೇಳಿದ್ದಾರೆ. ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ದೀಪಾ ಬಾಸ್ತಿ ಅಂತಾರಾಷ್ಟ್ರೀಯ ಲೇಖಕಿ. ಯಶಸ್ವಿ ಅನುವಾದಕಿಯೂ ಆಗಿದ್ದಾರೆ. ಅವರ ಸಮರ್ಥ ಅನುವಾದದಿಂದಾಗಿ ಕನ್ನಡದ ಖ್ಯಾತ ಕತೆಗಾರ್ತಿ ಬಾನು ಮುಷ್ತಾಕ್ ಅವರ ಕಥಾ ಸಂಕಲನಕ್ಕೆ ಅತ್ಯುನ್ನತ ಬೂಕರ್ ಪ್ರಶಸ್ತಿ ಲಭಿಸಿದ್ದು ದೇಶಕ್ಕೆ ಸಂದ ಗೌರವ. ಅವರನ್ನು ಜಗದುದ್ದಗಲಕ್ಕೂ ಅನೇಕ ದೇಶಗಳು ಕರೆದು ಗೌರವಿಸುತ್ತಿವೆ. ಕಿರಿಯ ಲೇಖಕರೊಂದಿಗೆ ಸಂವಾದ, ತರಬೇತಿ ನಡೆಸುತ್ತಿವೆ. ಅಂಥ ಒಬ್ಬ ಅನುವಾದಕಿಯನ್ನು ಕಲಬುರಗಿಯ ಕೇಂದ್ರೀಯ ವಿಶ್ವವಿದ್ಯಾನಿಲಯ ಆಮಂತ್ರಿಸಿ ಎಲ್ಲ ತಯಾರಿ ಮುಗಿದ ನಂತರ ದೀಪಾ ಬಾಸ್ತಿ ಮುಸ್ಲಿಂ ಮಹಿಳೆಯ ಕೃತಿಯನ್ನು ಅನುವಾದಿಸಿದ್ದಾರೆ ಎಂಬ ಹಿಡನ್ ಕಾರಣಕ್ಕೆ ಧಿಡೀರ್ ತಾಂತ್ರಿಕ ನೆಪವೊಡ್ಡಿ ಕಾರ್ಯಕ್ರಮ ಮುಂದೂಡಲಾಗಿದೆ ಎಂದು ಆರೋಪಿಸಿದ್ದಾರೆ. ದೀಪಾ ಭಾಸ್ತಿ ಬರುತ್ತಿರುವ ವಿಷಯ ತಿಳಿದ ಮಾನವಿಕ ವಿಭಾಗದ ವಿದ್ಯಾರ್ಥಿಗಳು ಅವರ 'ಹಾರ್ಟ್ ಲೈಟ್' ಕೃತಿಯನ್ನು ಓದಿಕೊಂಡು ಸಂವಾದ ನಡೆಸಲು ತಯಾರಿ ಮಾಡಿಕೊಂಡು ಕುಳಿತಿದ್ದರಲ್ಲದೆ ಬೂಕರ್ ವಿಜೇತ ಅನುವಾದಕಿಯೊಂದಿಗೆ ಮಾತುಕತೆ ನಡೆಸುವ ಉತ್ಸಾಹದಲ್ಲಿದಲ್ಲಿದ್ದರು. ಆದರೆ ವಿಶ್ವವಿದ್ಯಾಲಯವೊಂದು ತನ್ನ ಕೋಮುವಾದಿ ಕುಟೀಲ ಕಾರಸ್ಥಾನದಿಂದ ಮಕ್ಕಳ ಉತ್ಸಾಹದ ಮೇಲೆ ತಣ್ಣೀರು ಎರೆಚಿದೆ ಎಂದರು. ತನ್ನ ವಿರೋಧಿ ನೆಲೆಯ ತಾತ್ವಿಕ ಸಿದ್ಧಾಂತಗಳೊಂದಿಗೂ ವಾಗ್ವಾದ ನಡೆಸಿರುವ ಪರಂಪರೆ ಹೊಂದಿರುವ ಭಾರತೀಯ ದಾರ್ಶನಿಕತೆಯನ್ನೂ ಗೌರವಿಸದ ಅಜ್ಞಾನಿಗಳೇ ಕೇಂದ್ರೀಯ ವಿಶ್ವವಿದ್ಯಾನಿಲಯದಲ್ಲಿ ತುಂಬಿಕೊಂಡಿದ್ದಕ್ಕೆ ಇದಕ್ಕಿಂತ ಜ್ವಲಂತ ನಿದರ್ಶನ ಬೇಕಾಗಿಲ್ಲ ಎಂದು ಹೇಳಿದರು. ಇಂಥದ್ದೊಂದು ಅಪರೂಪದ ಹಾಗೂ ವಿದ್ಯಾರ್ಥಿಗಳಲ್ಲಿ ಅಂತಾರಾಷ್ಟ್ರೀಯ ಸ್ಪರ್ಧಾತ್ಮಕ ಕೌಶಲ್ಯ ಬೆಳೆಸಬಹುದಾಗಿದ್ದ ಕಾರ್ಯಕ್ರಮವನ್ನು ನಿಲ್ಲಿಸಿದ ಅಧಿಕಾರಿಗಳ ಧೂರ್ತತನವನ್ನು ಖಂಡಿಸುತ್ತೇವೆ. ವಿವಿಯ ಘನತೆ ಗೌರವವನ್ನು ಮಣ್ಣು ಮುಕ್ಕಿಸುತ್ತಿರುವ ಇಂಥ ಕೋಮುಕ್ರಿಮಿಗಳನ್ನು ಹೊರದೂಡಬೇಕೆಂದು ಪ್ರೊ.ಆರ್.ಕೆ ಹುಡಗಿ, ಡಾ.ಕಾಶಿನಾಥ ಅಂಬಲಗಿ, ಡಾ ದತ್ತಾ ಇಕ್ಕಳಕಿ, ಡಾ.ಪ್ರಭು ಖಾನಾಪೂರೆ, ಮಾರುತಿ ಗೋಖಲೆ, ಕೋದಂಡರಾಮ, ಮೆಹರಾಜ್ ಪಟೇಲ, ಶ್ರೀಶೈಲ ಘೂಳಿ, ಖೇಮಣ್ಣ ಅಲ್ದಿ, ಭೀಮಾಶಂಕರ ಬಿರಾದಾರ ಸೇರಿದಂತೆ ಹಲವರು ವಿಚಾರವಾದಿಗಳು ಆಗ್ರಹಿಸಿದ್ದಾರೆ.

ವಾರ್ತಾ ಭಾರತಿ 14 Dec 2025 2:58 pm

ಪತ್ನಿ ಕೊಂದ ಆರೋಪದಡಿ ಭಾರತೀಯ ಮೂಲದ ವ್ಯಕ್ತಿಗೆ ಕುವೈತ್‌ನಲ್ಲಿ ಗಲ್ಲು ಶಿಕ್ಷೆ ಪ್ರಕಟ

ಕುವೈತ್‌ನಲ್ಲಿ ವೈವಾಹಿಕ ಕಲಹದಲ್ಲಿ ಪತ್ನಿಯನ್ನು ಕೊಂದ ಭಾರತೀಯ ಮೂಲದ ವ್ಯಕ್ತಿಗೆ ಮರಣದಂಡನೆ ಶಿಕ್ಷೆ ವಿಧಿಸಲಾಗಿದೆ. ಸಲ್ಮಿ ಪ್ರದೇಶದಲ್ಲಿ ನಡೆದ ಈ ಘಟನೆಯಲ್ಲಿ, ಆರೋಪಿ ಪತ್ನಿಯ ತಲೆಗೆ ಮಾರಕಾಯುಧದಿಂದ ಹೊಡೆದು ಕೊಲೆ ಮಾಡಿದ್ದಾನೆ. ಹೀಗಾಗಿ ಗಲ್ಲು ಶಿಕ್ಷೆ ಪ್ರಕಡ ಮಾಡಿದೆ. ಈ ಹಿಂದೆಯೂ ಯುಎಇನಲ್ಲಿ ಮಗು ಕೊಲೆಗೈದ ಭಾರತೀಯ ಮಹಿಳೆಗೂ ಗಲ್ಲುಶಿಕ್ಷೆಯಾಗಿತ್ತು. ಇದು ವಿದೇಶಗಳಲ್ಲಿ ಕಾನೂನು ಪಾಲನೆ ಅತ್ಯಗತ್ಯ ಎಂಬುದನ್ನು ತಿಳಿಸುವಂತೆ ಮಾಡುತ್ತವೆ.

ವಿಜಯ ಕರ್ನಾಟಕ 14 Dec 2025 2:56 pm

VITTAL | ಬಸ್-ಕಾರು ಮುಖಾಮುಖಿ ಢಿಕ್ಕಿ: ಓರ್ವ ಮೃತ್ಯು, ಇಬ್ಬರು ಗಂಭೀರ

ವಿಟ್ಲ: ಕೆಎಸ್ಸಾರ್ಟಿಸಿ ಬಸ್ ಮತ್ತು ಓಮ್ನಿ ಕಾರೊಂದರ ಮಧ್ಯೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಓರ್ವ ಮೃತಪಟ್ಟು ಇಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯ ಪೆರುವಾಯಿ ಸಮೀಪ ಮುಳಿಯ ಎಂಬಲ್ಲಿ ರವಿವಾರ ಸಂಭವಿಸಿದೆ. ಮೃತರನ್ನು ಓಮ್ನಿ ಕಾರು ಚಾಲಕ, ಮೈರ ನಿವಾಸಿ ಮೋನಪ್ಪ ಕುಲಾಲ್ ಎಂದು ಗುರುತಿಸಲಾಗಿದೆ. ಮೋನಪ್ಪರ ಪತ್ನಿ ಲಲಿತಾ ಮತ್ತು ಜೊತೆಗಿದ್ದ ರಮಣಿ ಎಂಬವರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಸ್ಥಳೀಯರು ಆಂಬ್ಯುಲೆನ್ಸ್ ಮೂಲಕ ಮಂಗಳೂರಿನ ಆಸ್ಪತ್ರೆಗೆ ರವಾನಿಸಿದ್ದಾರೆ. ವಿಟ್ಲದಿಂದ ಪೆರುವಾಯಿ ಕಡೆಗೆ ಹೋಗುತ್ತಿದ್ದ ಓಮ್ನಿ ಕಾರು ಮತ್ತು ಪಕಳಕುಂಜದಿಂದ ವಿಟ್ಲ ಕಡೆಗೆ ಬರುತ್ತಿದ್ದ ಕೆಎಸ್ಸಾರ್ಟಿಸಿ ಬಸ್ ಮುಳಿಯ ಎಂಬಲ್ಲಿ ಮುಖಾಮುಖಿ ಢಿಕ್ಕಿ ಹೊಡೆದಿದೆ. ಅಪಘಾತದ ಪರಿಣಾಮ ಓಮ್ನಿಯಲ್ಲಿದ್ದ ಮೂವರು ಗಂಭೀರ ಗಾಯಗೊಂಡಿದ್ದರು. ಈ ಪೈಕಿ ಮೋನಪ್ಪ ಕುಲಾಲ್ ಮೃತಪಟ್ಟಿದ್ದಾರೆ. ವಿಟ್ಲ ಪೊಲೀಸರು ಘಟನಾ ಸ್ಥಳಕ್ಕೆ ಆಗಮಿಸಿ ತನಿಖೆ ನಡೆಸುತಿದ್ದಾರೆ. ಅಪಘಾತದ ರಭಸಕ್ಕೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ.

ವಾರ್ತಾ ಭಾರತಿ 14 Dec 2025 2:48 pm

IPL 2026: ಐಪಿಎಲ್‌ 2026 ಮಿನಿ ಹರಾಜಿಗೂ ಮುನ್ನ ಹೊಸ ತಂಡಗಳಿಗೆ ಹೋದ ಸ್ಟಾರ್ ಆಟಗಾರರು

IPL 2026: ಐಪಿಎಲ್ 2025 ಫೈನಲ್‌ ಪಂದ್ಯದಲ್ಲಿ ಆರ್‌ಸಿಬಿ ಚೊಚ್ಚಲ ಟ್ರೋಫಿಗೆ ಮುತ್ತಿಡುವ ಮೂಲಕ ಚಾಂಪಿಯನ್‌ ಪಟ್ಟ ಅಲಂಕರಿಸಿತು. ಇದೀಗ ಎಲ್ಲರ ಚಿತ್ತ 19ನೇ ಆವೃತ್ತಿಯತ್ತ ನೆಟ್ಟಿದೆ. ಡಿಸೆಂಬರ್ 16 ರಂದು ಮಿನಿ ಹರಾಜು ನಡೆಯಲಿದ್ದು, ಇದಕ್ಕೂ ಮುನ್ನ 10 ಆಟಗಾರರನ್ನು ಈ ಫ್ರಾಂಚಿಗಳು ಬರಮಾಡಿಕೊಂಡಿವೆ. ಹಾಗಾದ್ರೆ, ಯಾರು ಯಾವ ತಂಡಕ್ಕೆ ಹೋಗಿದ್ದಾರೆ ಎನ್ನುವ ಸಂಪೂರ್ಣ ಮಾಹಿತಿಯನ್ನು

ಒನ್ ಇ೦ಡಿಯ 14 Dec 2025 2:36 pm

ಪ್ರತಿಯೊಬ್ಬರಿಗೂ ನ್ಯಾಯ ಕಲ್ಪಿಸುವುದೇ ಕುರ್ ಆನ್ ಆಶಯ: ಮುಹಮ್ಮದ್ ಕುಂಞಿ

ಬಸವ ಕಲ್ಯಾಣದಲ್ಲಿ ಕುರ್ ಆನ್ ಪ್ರವಚನದ ದಶಮಾನೋತ್ಸವಕ್ಕೆ ಚಾಲನೆ

ವಾರ್ತಾ ಭಾರತಿ 14 Dec 2025 2:32 pm

ರೆಸ್ಲಿಂಗ್ ಗೆ ವಿದಾಯ ಹೇಳಿದ 17 ಬಾರಿಯ WWE ಚಾಂಪಿಯನ್ ಜಾನ್ ಸೀನಾ

ಹೊಸದಿಲ್ಲಿ: ಸುಮಾರು 20 ವರ್ಷಗಳಿಗೂ ಸುದೀರ್ಘ WWE ರೆಸ್ಲಿಂಗ್ ಚಾಂಪಿಯನ್ ಶಿಪ್ ನಲ್ಲಿ ಭಾಗವಹಿಸಿ ಕ್ರೀಡಾ ಪ್ರೇಮಿಗಳನ್ನು ರಂಜಿಸಿದ್ದ ಜಾನ್ ಸೀನಾ ತಮ್ಮ ವೃತ್ತಿಜೀವನಕ್ಕೆ ನಿವೃತ್ತಿ ಘೋಷಿಸಿದ್ದಾರೆ. ಜಾನ್ ಸೀನಾ 17 ಬಾರಿ ರೆಸ್ಲಿಂಗ್ ಚಾಂಪಿಯನ್ ಶಿಪ್ ಗೆದ್ದುಕೊಂಡವರು. ‘ದಿ ರಾಕ್’, ಟ್ರಿಪಲ್ ಎಚ್’, ರಾಂಡಿ ಓರ್ಟನ್ನಂತಹ ಖ್ಯಾತ ರೆಸ್ಲರ್ ಗಳ ವಿರುದ್ಧ ಗೆಲುವು ಸಾಧಿಸಿದ ಖ್ಯಾತಿ ಹೊಂದಿದ್ದಾರೆ. ಶನಿವಾರ ರಾತ್ರಿ ಗುಂಥರ್ ವಿರುದ್ಧ ನಡೆದ ವಿದಾಯ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡುವ ಮೂಲಕ ತಮ್ಮ 23 ವರ್ಷಗಳ ಅದ್ಭುತ ಕುಸ್ತಿ ಜೀವನಕ್ಕೆ ವಿದಾಯ ಹೇಳಿದ್ದಾರೆ. ವಿದಾಯ ಪಂದ್ಯದಲ್ಲಿ ಗೆದ್ದು ನಿವೃತ್ತಿಯಾಗುತ್ತಾರೆಂದು ನಿರೀಕ್ಷಿಸಿದ್ದ ಅಭಿಮಾನಿಗಳಿಗೆ ನಿರಾಶೆಯಾಗಿದೆ. ಅವರು ವಿದಾಯ ಪಂದ್ಯವನ್ನು ಗುಂಥರ್ ವಿರುದ್ಧ ಸೋತಿದ್ದಾರೆ. WWE ಪಂದ್ಯಾವಳಿಗಳಲ್ಲಿ ಅತಿ ಹೆಚ್ಚು ಪ್ರಶಸ್ತಿಗಳನ್ನು ಗೆಲ್ಲುವ ಮೂಲಕ ದಂತಕತೆಯಾಗಿರುವವರು ಜಾನ್ ಸೀನಾ. ಪ್ರಸ್ತುತ ಅವರಿಗೆ 47 ವರ್ಷ ವಯಸ್ಸಾಗಿದೆ. ಹಾಲಿವುಡ್ ಸಿನಿಮಾಗಳಲ್ಲೂ ಅವರು ನಟಿಸಿದ್ದಾರೆ. ಇದೀಗ ಸಿನಿಮಾ ಕಡೆಗೆ ಸಂಪೂರ್ಣ ಗಮನಹರಿಸಲು ಪಂದ್ಯಾವಳಿಗಳಿಂದ ನಿವೃತ್ತರಾಗುತ್ತಿದ್ದಾರೆ. ಟೊರಾಂಟೊದಲ್ಲಿ ನಡೆದ ‘ಮನಿ ಇನ್ ಬ್ಯಾಂಕ್’ ಪ್ರೀಮಿಯಂ ಕಾರ್ಯಕ್ರಮದಲ್ಲಿ ಭಾಗವಹಿಸಿದ ಜಾನ್ ಸೀನಾ ಈ ಘೋಷಣೆ ಮಾಡಿದ್ದು, 'ದಿ ಲಾಸ್ಟ್ ಟೈಮ್ ಈಸ್ ನೌ' ಎಂದು ಬರೆದ ಟೀ ಶರ್ಟ್ ಧರಿಸಿ ಬಂದಿದ್ದರು. ಇದರೊಂದಿಗೆ ರೆಸ್ಲಿಂಗ್ ನಲ್ಲಿ 2025 ಅವರ ಕೊನೆಯ ವರ್ಷ ಎಂದು ಬಹಿರಂಗಪಡಿಸಿದ್ದರು. ಜಾನ್ ಸೀನಾ ‘ರಾ’ ಮೊದಲ ಸಂಚಿಕೆಯಲ್ಲಿ ನಟಿಸುತ್ತಿದ್ದು, ಇದು ನೆಟ್‌ಫ್ಲಿಕ್ಸ್‌ನಲ್ಲಿ ಪ್ರಸಾರವಾಗಲಿದೆ. 2024ರಲ್ಲಿ ನಡೆದ ಲಾಸ್ ಏಂಜಲೀಸ್ ನ 96ನೇ ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ‘ಬೆಸ್ಟ್ ಕಾಸ್ಟ್ಯೂಮ್ ಡಿಸೈನರ್’ ಪ್ರಶಸ್ತಿ ವೇಳೆಗೆ ಜಾನ್ ಸೀನಾ ಬೆತ್ತಲೆಯಾಗಿ ವೇದಿಕೆಗೆ ಬಂದಿದ್ದರು. ಸಾಮಾಜಿಕ ಮಾಧ್ಯಮದಲ್ಲೂ ಜಾನ್ ಸೀನಾ ತಮ್ಮ ವಿಲಕ್ಷಣ ಪೋಸ್ಟ್ ಗಳಿಗೆ ಖ್ಯಾತನಾಮರು.

ವಾರ್ತಾ ಭಾರತಿ 14 Dec 2025 2:13 pm

ರಾಜ್ಯದ 3 ಜಿಲ್ಲೆಗೆ ವಂದೇ ಭಾರತ್‌ ರೈಲು; ಹಿಂದಿನ ಭರವಸೆ ನೆನಪಿಸಿ ಸಚಿವರ ಬಳಿ ಪ್ರಸ್ತಾವನೆ ಇಟ್ಟು ಸಂಸದ ಕೋಟಾ! ಎಲ್ಲೆಲ್ಲಿ?

ಬೆಂಗಳೂರಿನಿಂದ ಮಂಗಳೂರು, ಉಡುಪಿ, ಕಾರವಾರಕ್ಕೆ ವಂದೇ ಭಾರತ್ ರೈಲು ಓಡಿಸಲು ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರು ಕೇಂದ್ರ ರೈಲ್ವೆ ಸಚಿವರಿಗೆ ಮನವಿ ಮಾಡಿದ್ದಾರೆ. ಸಕಲೇಶಪುರ-ಸುಬ್ರಹ್ಮಣ್ಯ ರಸ್ತೆ ರೈಲ್ವೆ ವಿದ್ಯುತ್‌ ಮಾರ್ಗ ಬಹುತೇಕ ಪೂರ್ಣಗೊಂಡಿದೆ. ಈ ಹೊಸ ರೈಲು ಬೆಂಗಳೂರು ಮತ್ತು ಕರಾವಳಿ ಜಿಲ್ಲೆಗಳ ನಡುವಿನ ಪ್ರಯಾಣದ ಸಮಯವನ್ನು ಗಣನೀಯವಾಗಿ ಕಡಿಮೆ ಮಾಡಲಿದೆ. ಇದು ಕರಾವಳಿ ಭಾಗದ ಪ್ರಯಾಣಿಕರಿಗೆ ಅನುಕೂಲವಾಗಲಿದೆ.

ವಿಜಯ ಕರ್ನಾಟಕ 14 Dec 2025 2:13 pm

ಬಿಲ್ ವಿಚಾರಕ್ಕೆ ಶಿಲ್ಪಾ ಶೆಟ್ಟಿ ಒಡೆತನದ ಪಬ್‌ನಲ್ಲಿ ತಡರಾತ್ರಿ ಗಲಾಟೆ: ಉದ್ಯಮಿ ಸತ್ಯ ನಾಯ್ಡು ಭಾಗಿ, ವಿಡಿಯೋ ವೈರಲ್

ಬೆಂಗಳೂರಿನ ಶಿಲ್ಪಾ ಶೆಟ್ಟಿ ಒಡೆತನದ ಬ್ಯಾಸ್ಟಿಯನ್ ಪಬ್‌ನಲ್ಲಿ ತಡರಾತ್ರಿ ಗಲಾಟೆ ನಡೆದಿದೆ. ಬಿಲ್ ಪಾವತಿಸುವ ವಿಚಾರದಲ್ಲಿ ಉದ್ಯಮಿ ಸತ್ಯ ನಾಯ್ಡು ಮತ್ತು ಸಿಬ್ಬಂದಿ ನಡುವೆ ವಾಗ್ವಾದ ನಡೆದಿದೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಪೊಲೀಸರು ಸ್ವಯಂಪ್ರೇರಿತ ದೂರು ದಾಖಲಿಸಿ ವಿಚಾರಣೆ ನಡೆಸುತ್ತಿದ್ದಾರೆ.ಈ ಘಟನೆ ಕುರಿತು ಸತ್ಯ ನಾಯ್ಡು ಯಾವುದೇ ದೈಹಿಕ ಗಲಾಟೆ ನಡೆದಿಲ್ಲ ಎಂದು ತಮ್ಮ ವಿರುದ್ದದ ಆರೋಪಗಳನ್ನು ತಳ್ಳಿ ಹಾಕಿದ್ದಾರೆ.

ವಿಜಯ ಕರ್ನಾಟಕ 14 Dec 2025 2:03 pm

ದೆಹಲಿ-ಎನ್‌ಸಿಆರ್‌ನಲ್ಲಿ ವಿಷಕಾರಿ ಹೊಗೆ, ತೀವ್ರ ಮಟ್ಟಕ್ಕೆ ಇಳಿದ ವಾಯು ಗುಣಮಟ್ಟ ಸೂಚ್ಯಂಕ

ದೆಹಲಿ ಮತ್ತು ರಾಷ್ಟ್ರೀಯ ರಾಜಧಾನಿ ಪ್ರದೇಶಗಳಲ್ಲಿ ವಾಯು ಮಾಲಿನ್ಯವು ಭಾನುವಾರ ಅಪಾಯಕಾರಿ ಮಟ್ಟಕ್ಕೆ ತಲುಪಿದೆ. ವಿಷಕಾರಿ ಹೊಗೆಯ ದಟ್ಟ ಪದರವು ನಗರವನ್ನು ಆವರಿಸಿದ್ದು, ಗೋಚರತೆ ತೀವ್ರವಾಗಿ ಕುಗ್ಗಿದೆ. GRAP ಹಂತ-IV ರ ಕ್ರಮಗಳನ್ನು ಜಾರಿಗೊಳಿಸಲಾಗಿದೆ, ನಿರ್ಮಾಣ ಮತ್ತು ಗಣಿಗಾರಿಕೆ ಚಟುವಟಿಕೆಗಳನ್ನು ಸ್ಥಗಿತಗೊಳಿಸಲಾಗಿದೆ.

ವಿಜಯ ಕರ್ನಾಟಕ 14 Dec 2025 2:00 pm

ಸಾರಿಗೆ ನೌಕರರ ಉಗ್ರ ಹೋರಾಟ, ದಿಢೀರ್ ಪ್ರಯಾಣಿಕರಿಗೆ ಬಂದ್ ಆಘಾತ ಸಾಧ್ಯತೆ... BMTC Bus

ಕರ್ನಾಟಕ ರಾಜ್ಯದಲ್ಲಿ ಸಾಲು ಸಾಲು ಹೋರಾಟ &ಪ್ರತಿಭಟನೆಗಳು ನಡೆಯುತ್ತಿರುವ ಕಾರಣಕ್ಕೆ ಜನರಿಗೆ ಕೂಡ ಸವಾಲು ಎದುರಾಗುತ್ತಿದೆ. ಅದರಲ್ಲೂ 2025 ವರ್ಷ ಪೂರ್ತಿ ಸಾಲು ಸಾಲು ಬಂದ್ ಹಾಗೂ ಹೋರಾಟ ನಡೆದ ಕಾರಣಕ್ಕೆ ರಜೆಗಳು ಕೂಡ ಸಾಕಷ್ಟು ಸಿಕ್ಕಿದ್ದವು. ಈಗ ಮತ್ತೊಮ್ಮೆ ಈ ರೀತಿ ಇಡೀ ಕರ್ನಾಟಕದಲ್ಲೇ ಬೃಹತ್ ಹೋರಾಟಕ್ಕೆ ಈಗ ತಯಾರಿ ನಡೆದಿದೆ. ಅಂದಹಾಗೆ ಈ

ಒನ್ ಇ೦ಡಿಯ 14 Dec 2025 1:55 pm

ಬೆಂಗಳೂರಿಗೆ ಸಂಚಾರ ದಟ್ಟಣೆಯಲ್ಲಷ್ಟೇ ಅಲ್ಲ; ಇಂಗಾಲ ಹೊರಸೂಸುವಿಕೆಯಲ್ಲಿ ದೇಶದಲ್ಲೇ ಅಗ್ರ ಸ್ಥಾನ; ಅಧ್ಯಯನದಲ್ಲಿ ಆಘಾತಕಾರಿ ಅಂಶ ಬಯಲು

ಭಾರತದ ಪ್ರಮುಖ ನಗರಗಳಲ್ಲಿ ರಸ್ತೆ ಸಂಚಾರದಿಂದ ಇಂಗಾಲ ಹೊರಸೂಸುವಿಕೆ ಹೆಚ್ಚುತ್ತಿದೆ. ಮುಂಬೈ, ದೆಹಲಿ, ಬೆಂಗಳೂರು, ಚೆನ್ನೈ, ಹೈದರಾಬಾದ್ ಮತ್ತು ಪುಣೆಯಲ್ಲಿ ನೈಟ್ರೋಜನ್ ಆಕ್ಸೈಡ್‌ಗಳು ಮತ್ತು ಇಂಗಾಲದ ಮಾನಾಕ್ಸೈಡ್ ಪ್ರಮಾಣ ಹೆಚ್ಚಿದೆ. ಈ ಮಾಲಿನ್ಯವು ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಚಂಡೀಗಢ, ಚೆನ್ನೈ, ಪುಣೆ ಮತ್ತು ಬೆಂಗಳೂರು ಸಹ ಅಧಿಕ ವಾಹನ ಸಾಂದ್ರತೆ ಮತ್ತು ಹೊರಸೂಸುವಿಕೆಯ ವರ್ಗದಲ್ಲಿವೆ. ಈ ಸಮಸ್ಯೆ ಜಾಗತಿಕ ತಾಪಮಾನ ಏರಿಕೆಗೆ ಕಾರಣವಾಗುತ್ತಿದೆ.

ವಿಜಯ ಕರ್ನಾಟಕ 14 Dec 2025 1:42 pm

MANGALURU | ಪಿ.ಎ. ಶಿಕ್ಷಣ ಸಂಸ್ಥೆಯಿಂದ 'ಪೇಸ್ ಸಿಲ್ವಥಾನ್' ಮಾದಕ ವಸ್ತು ವಿರೋಧಿ ಜಾಗೃತಿ ಮ್ಯಾರಥಾನ್

ಮಂಗಳೂರು: ನಡುಪದವಿನಲ್ಲಿರುವ ಪಿ. ಎ. ಕಾಲೇಜ್ ಆಫ್ ಫಾರ್ಮಸಿ ಹಾಗೂ ಪಿ. ಎ. ಇನ್ ಸ್ಟಿಟ್ಯೂಟ್ ಆಫ್ ಫಿಸಿಯೋಥೆರಪಿ ಸಂಸ್ಥೆಗಳ ವತಿಯಿಂದ ಪೇಸ್ ಶಿಕ್ಷಣ ಸಂಸ್ಥೆಯ ಬೆಳ್ಳಿಹಬ್ಬ 'ಪೇಸ್ ಸಿಲ್ವಿಯೋರಾ 25'ರ ಅಂಗವಾಗಿ ಮಾದಕ ವಸ್ತು ದುರುಪಯೋಗ ತಡೆಗಟ್ಟುವ ಉದ್ದೇಶದಿಂದ ರವಿವಾರ 'ಪೇಸ್ ಸಿಲ್ವಥಾನ್ 2025 – ಡ್ರಗ್ಸ್ ವಿರೋಧಿ ಜಾಗೃತಿ ಮ್ಯಾರಥಾನ್' ಹಮ್ಮಿಕೊಳ್ಳಲಾಗಿತ್ತು.   ಇಂದು ಬೆಳಗ್ಗೆ 7:30ಕ್ಕೆ ಮಂಗಳೂರು ಪುರಭವನದಿಂದ ಉರ್ವಾ ಮೈದಾನದವರೆಗೆ ಮ್ಯಾರಥಾನ್ ನಡೆಯಿತು. ವೆನ್ಲಾಕ್ ಆಸ್ಪತ್ರೆಯ ಜಿಲ್ಲಾ ಶಸ್ತ್ರಚಿಕಿತ್ಸಕ ಹಾಗೂ ಸೂಪರಿಂಟೆಂಡೆಂಟ್ ಡಾ.ಡಿ.ಎಸ್. ಶಿವಪ್ರಕಾಶ್ ಮ್ಯಾರಥಾನ್ ಗೆ ಚಾಲನೆ ನೀಡಿದರು. ಈ ಸಂದರ್ಭ ಮಾತನಾಡಿದ ಅವರು, ಮಾದಕ ವಸ್ತು ಸೇವನೆಯಿಂದ ಉಂಟಾಗುವ ದೈಹಿಕ, ಮಾನಸಿಕ ಹಾಗೂ ಸಾಮಾಜಿಕ ದುಷ್ಪರಿಣಾಮಗಳ ಬಗ್ಗೆ ಎಚ್ಚರ ವಹಿಸಬೇಕು, ಪ್ರತಿಯೊಬ್ಬರೂ ಅಮಲು ಮುಕ್ತ ಸಮಾಜ ನಿರ್ಮಾಣಕ್ಕೆ ಕೈಜೋಡಿಸಬೇಕೆಂದು ಕರೆ ನೀಡಿದರು. ಪಿ. ಎ. ಇಂಜಿನಿಯರಿಂಗ್ ಕಾಲೇಜು ಪ್ರಾಂಶುಪಾಲ ಡಾ.ರಮೀಝ್ ಎಂ.ಕೆ., ಪಿ. ಎ. ಕಾಲೇಜ್ ಆಫ್ ಫಾರ್ಮಸಿಯ ಪ್ರಾಂಶುಪಾಲ ಡಾ.ಸಲೀಮುಲ್ಲಾ ಖಾನ್, ಪಿ. ಎ. ಇನ್ ಸ್ಟಿಟ್ಯೂಟ್ ಆಫ್ ಫಿಸಿಯೋಥೆರಪಿ ಪ್ರಾಂಶುಪಾಲೆ ಡಾ. ಅಫೀಫ ಸಲೀಮ್, ಪಿಎಇಟಿ ಕ್ಯಾಂಪಸ್ ಅಸಿಸ್ಟಂಟ್ ಜನರಲ್ ಮ್ಯಾನೇಜರ್ ಶರ್ಫುದ್ದೀನ್ ಪಿ. ಕೆ., ಪಿ. ಎ. ಕಾಲೇಜ್ ಆಫ್ ಫಾರ್ಮಸಿಯ ಉಪ ಪ್ರಾಂಶುಪಾಲ ಡಾ. ಮುಹಮ್ಮದ್ ಮುಬೀನ್, ಪಿಎಇಟಿ ಪರ್ಚೇಸ್ ಮ್ಯಾನೇಜರ್ ಹಾರಿಸ್ ಟಿ. ಡಿ. ಉಪಸ್ಥಿತರಿದ್ದರು. ಮ್ಯಾರಥಾನ್ನಲ್ಲಿ ವಿದ್ಯಾರ್ಥಿಗಳು, ಬೋಧಕರು ಹಾಗೂ ಬೋಧಕೇತರ ಸಿಬ್ಬಂದಿ ಉತ್ಸಾಹದಿಂದ ಭಾಗವಹಿಸಿದರು. ಗುರಿ ಮುಟ್ಟಿದ ಪ್ರಥಮ 25 ಪುರುಷರು ಹಾಗೂ 25 ಮಹಿಳೆಯರಿಗೆ ಪದಕಗಳನ್ನು ನೀಡಿ ಪುರಸ್ಕರಿಸಲಾಯಿತು. ಭಾಗವಹಿಸಿದ ಎಲ್ಲರಿಗೂ ಪ್ರಮಾಣಪತ್ರಗಳನ್ನು ವಿತರಿಸಲಾಯಿತು. ಶ್ರಾವ್ಯಾ ಕಾರ್ಯಕ್ರಮ ನಿರೂಪಿಸಿದರು.

ವಾರ್ತಾ ಭಾರತಿ 14 Dec 2025 1:21 pm

ತಾಪಮಾನ ಕುಸಿತ–ಗೋಚರತೆ ಶೂನ್ಯ: ಹರಿಯಾಣ ಹೆದ್ದಾರಿಯಲ್ಲಿ ಒಂದೇ ದಿನ 3 ಕಡೆ ಸರಣಿ ಅಪಘಾತ

ಉತ್ತರ ಭಾರತದಲ್ಲಿ ಚಳಿ ಹೆಚ್ಚಾಗಿದೆ. ಇದರಿಂದಾಗಿ ವಾಯುಗುಣಮಟ್ಟ ಕುಸಿದಿದೆ. ದಟ್ಟ ಮಂಜು ಕವಿದಿದೆ. ಗೋಚರತೆ ಕಡಿಮೆಯಾಗಿದೆ. ಹೆದ್ದಾರಿಗಳಲ್ಲಿ ಅಪಘಾತಗಳು ಹೆಚ್ಚಾಗುತ್ತಿವೆ. ದೆಹಲಿ, ಹರಿಯಾಣ, ಉತ್ತರ ಪ್ರದೇಶದಲ್ಲಿ ಪರಿಸ್ಥಿತಿ ಗಂಭೀರವಾಗಿದೆ. ವಾಹನಗಳು ಒಂದಕ್ಕೊಂದು ಡಿಕ್ಕಿ ಹೊಡೆಯುತ್ತಿವೆ. ಹರಿಯಾಣದ ಹೆದ್ದಾರಿ ರಸ್ತೆಗಳಲ್ಲಿ ಒಂದೇ ದಿನ ಹಲವು ಕಡೆ ಬರೊಬ್ಬರಿ 3 ಸರಣಿ ಅಪಘಾತಗಳು ನಡೆದಿವೆ.ಇದರಿಂದ ಕಂಗಾಲಾಗಿರುವ ಅಲ್ಲಿನ ಸವಾರರು ಜೀವ ಕೈಯಲ್ಲಿ ಹಿಡಿದು ಪ್ರಯಾಣಿಸುತವಂತಹ ಪರಿಸ್ಥಿತಿ ಎದುರಾಗಿದೆ.

ವಿಜಯ ಕರ್ನಾಟಕ 14 Dec 2025 1:14 pm

ರಾಷ್ಟ್ರೀಯ ಲೋಕ ಅದಾಲತ್ | ಕಲಬುರಗಿಯಲ್ಲಿ 105 ಪ್ರಕರಣ ಇತ್ಯರ್ಥ: 2.50 ಕೋಟಿ ರೂ. ಪರಿಹಾರ ವಿತರಣೆ

ಕಲಬುರಗಿ: ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದಂತೆ ಶನಿವಾರ ಕರ್ನಾಟಕ ರಾಜ್ಯ ಹೈಕೋರ್ಟ್ ಕಲಬುರಗಿ ಪೀಠದಲ್ಲಿ ಜರುಗಿದ ರಾಷ್ಟ್ರೀಯ ಲೋಕ ಅದಾಲತ್ ನಲ್ಲಿ ರಾಜಿ ಸಂಧಾನದ ಮೂಲಕ ಸುಮಾರು 105 ಪ್ರಕರಣಗಳನ್ನು ಇತ್ಯರ್ಥ ಮಾಡಿ ಸಂತ್ರಸ್ತರಿಗೆ ಒಟ್ಟು 2,50,42,000 ರೂ. ಪರಿಹಾರ ವಿತರಿಸುವಂತೆ ಸಂಬಂಧಿಸಿದ ಸಂಸ್ಥೆಗಳಿಗೆ ಹೈಕೋರ್ಟ್ ಆದೇಶಿಸಿದೆ. ಉಚ್ಚ ನ್ಯಾಯಾಲಯ ಕಾನೂನು ಸೇವಾ ಸಮಿತಿಯಿಂದ ಅಯೋಜಿಸಿದ ಜನತಾ ಅದಾಲತ್ ನಲ್ಲಿ ಉಚ್ಚ ನ್ಯಾಯಾಲಯದ ನ್ಯಾಯಾಧೀಶ ನ್ಯಾಯಮೂರ್ತಿ ಪಿ. ಶ್ರೀ ಸುಧಾ ಅವರು ವಿವಿಧ ಮೋಟರ್ ವಾಹನ, ಸಿವಿಲ್ ಹಾಗೂ ಕೌಟುಂಬಿಕ ಕಲಹ ಪ್ರಕರಣಗಳನ್ನು ಕೈಗೆತ್ತಿಕೊಂಡು ವಾದಿ-ಪ್ರತಿವಾದಿ ಹಾಗೂ ನ್ಯಾಯವಾದಿಗಳ ಸಮಕ್ಷಮ ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಸಿದರು.

ವಾರ್ತಾ ಭಾರತಿ 14 Dec 2025 1:10 pm

ಲಾಲ್ ಸಲಾಂ ಕೂಗುತ್ತಿದ್ದ ಕಡೆ ಭಾರತ್ ಮಾತಾ ಕಿ ಜೈ ಘೋಷಣೆ ಕೇಳಿಬರುತ್ತಿದೆ : ಅಮಿತ್ ಶಾ

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಬಸ್ತಾರ್‌ಗೆ ಭೇಟಿ ನೀಡಿ, ಈ ಪ್ರದೇಶವು ನಕ್ಸಲರು ಮುಕ್ತವಾಗುವ ಅಂಚಿನಲ್ಲಿದೆ ಎಂದು ಘೋಷಿಸಿದರು. 'ಲಾಲ್ ಸಲಾಂ' ಬದಲಿಗೆ 'ಭಾರತ್ ಮಾತಾ ಕಿ ಜೈ' ಘೋಷಣೆಗಳು ಕೇಳಿ ಬರುತ್ತಿವೆ ಎಂದರು. ಮುಂದಿನ ಐದು ವರ್ಷಗಳಲ್ಲಿ ಬಸ್ತಾರ್‌ನ್ನು ದೇಶದ ಅತ್ಯಂತ ಅಭಿವೃದ್ಧಿ ಹೊಂದಿದ ಬುಡಕಟ್ಟು ಪ್ರದೇಶವನ್ನಾಗಿ ಪರಿವರ್ತಿಸುವುದಾಗಿ ಭರವಸೆ ನೀಡಿದರು. ಕ್ರೀಡಾ ಪ್ರತಿಭೆಗಳನ್ನು ಗುರುತಿಸಿ, ಒಲಿಂಪಿಕ್ಸ್‌ಗೆ ಸಿದ್ಧಪಡಿಸಲಾಗುವುದು ಎಂದರು.

ವಿಜಯ ಕರ್ನಾಟಕ 14 Dec 2025 12:44 pm

ದಿಲ್ಲಿಯ ಆಗಸ ರಕ್ಷಣೆಗೆ ಬಂದ ದೇಸಿ ಎಸ್-400

ಪ್ರಾಜೆಕ್ಟ್ ಕುಶವನ್ನು ಸಾಕಷ್ಟು ದೂರದಲ್ಲಿರುವ ಶತ್ರುಗಳನ್ನು ಗುರುತಿಸಿ, ನಾಶಪಡಿಸುವ ಸಲುವಾಗಿ ವಿನ್ಯಾಸಗೊಳಿಸಲಾಗಿದೆ. ಈ ಭಾರತೀಯ ಆಯುಧ ವ್ಯವಸ್ಥೆ 400 ಕಿಲೋಮೀಟರ್‌ಗಳಷ್ಟು ದೂರದಲ್ಲಿರುವ ಗುರಿಗಳ ಮೇಲೂ ದಾಳಿ ನಡೆಸಬಲ್ಲದು. ಈ ಕಾರಣದಿಂದಲೇ ಇದನ್ನು ‘ದೇಸಿ ಎಸ್-400’ ಎಂದು ಕರೆಯಲಾಗಿದೆ. ಭಾರತ ದಿಲ್ಲಿಯ ರಾಷ್ಟ್ರೀಯ ರಾಜಧಾನಿ ಪ್ರದೇಶವನ್ನು (ಎನ್‌ಆರ್‌ಸಿ) ಕ್ಷಿಪಣಿಗಳು, ಡ್ರೋನ್‌ಗಳು ಮತ್ತು ವೇಗವಾಗಿ ಚಲಿಸುವ ವೈಮಾನಿಕ ಆಯುಧಗಳಿಂದ ರಕ್ಷಿಸುವ ಸಲುವಾಗಿ ದೇಶೀಯವಾಗಿ ನಿರ್ಮಿಸಿರುವ ವಾಯು ರಕ್ಷಣಾ ವ್ಯವಸ್ಥೆಯನ್ನು ಅಳವಡಿಸಲು ಸಜ್ಜಾಗುತ್ತಿದೆ. ಇದು ರಾಜಧಾನಿಯ ರಕ್ಷಣೆಯ ದೃಷ್ಟಿಯಿಂದ ಭಾರತದ ಮಹತ್ವದ ಹೆಜ್ಜೆಯಾಗಬಹುದು. ರಕ್ಷಣಾ ವಲಯದ ಹಿರಿಯ ಮೂಲಗಳ ಪ್ರಕಾರ, ನೂತನವಾಗಿ ಅಭಿವೃದ್ಧಿಪಡಿಸಿರುವ ಇಂಟಿಗ್ರೇಟೆಡ್ ಏರ್ ಡಿಫೆನ್ಸ್ ವೆಪನ್ ಸಿಸ್ಟಮ್ (ಐಎಡಿಡಬ್ಲ್ಯುಎಸ್) ಹಲವು ಪದರಗಳ ರಕ್ಷಣೆಯನ್ನು ಒದಗಿಸಲಿದೆ. ಇದು ಭಾರತದ ಸ್ವಂತ ನಿರ್ಮಾಣದ ಕ್ವಿಕ್ ರಿಯಾಕ್ಷನ್ ಭೂಮಿಯಿಂದ ಗಾಳಿಗೆ ದಾಳಿ ನಡೆಸುವ ಕ್ಷಿಪಣಿಗಳು ಮತ್ತು ವೆರಿ ಶಾರ್ಟ್ ರೇಂಜ್ ಏರ್ ಡಿಫೆನ್ಸ್ ಸಿಸ್ಟಮ್‌ಗಳು ಮತ್ತು ಇತರ ಬೆಂಬಲ ನೀಡುವ ವ್ಯವಸ್ಥೆಗಳನ್ನು ಒಳಗೊಳ್ಳಲಿದೆ. ಇವೆಲ್ಲವೂ ಜೊತೆಯಾಗಿ ಕಾರ್ಯಾಚರಿಸಿ, ದಿಲ್ಲಿ ನ್ಯಾಷನಲ್ ಕ್ಯಾಪಿಟಲ್ ರೀಜನ್ (ಡೆಲ್ಲಿ ಎನ್‌ಸಿಆರ್) ಅನ್ನು ಯಾವುದೇ ರೀತಿಯ ವೈಮಾನಿಕ ಅಪಾಯಗಳಿಂದ ರಕ್ಷಿಸಲಿವೆ. ಈ ವರ್ಷದ ಮೇ ತಿಂಗಳಲ್ಲಿ ನಡೆದ ಆಪರೇಷನ್ ಸಿಂಧೂರ ಕಾರ್ಯಾಚರಣೆಯ ಸಂದರ್ಭದಲ್ಲಿ, ಪಾಕಿಸ್ತಾನ ಭಾರತದ ರಾಜಧಾನಿಯನ್ನು ಗುರಿಯಾಗಿಸಿ ದಾಳಿ ನಡೆಸಲು ಸಿದ್ಧತೆ ನಡೆಸಿತ್ತು ಎನ್ನಲಾಗಿದೆ. ಇಂತಹ ಗಂಭೀರ ಸಮಯದಲ್ಲಿ ರಕ್ಷಣಾ ಸಚಿವಾಲಯ ಈ ಮಹತ್ವದ ಯೋಜನೆಯನ್ನು ಮುಂದುವರಿಸುತ್ತಿರುವುದು ಗಮನಾರ್ಹ ವಿಚಾರ. ಭಾರತ ತನ್ನ ರಾಜಧಾನಿಯ ರಕ್ಷಣೆಗೆ ದೇಶೀಯ ನಿರ್ಮಾಣದ ಆಯುಧ ವ್ಯವಸ್ಥೆಯನ್ನು ಅಳವಡಿಸಲು ಯೋಜನೆ ರೂಪಿಸಿರುವುದು ಭಾರತದ ಸ್ವಂತ ರಕ್ಷಣಾ ತಂತ್ರಜ್ಞಾನಕ್ಕೆ ಭಾರೀ ಉತ್ತೇಜನವನ್ನೇ ನೀಡಿದೆ. ಗಮನಾರ್ಹ ವಿಚಾರವೆಂದರೆ, ಇದಕ್ಕೂ ಮುನ್ನ ಭಾರತ ತನ್ನ ರಾಜ ಧಾನಿಯ ರಕ್ಷಣಾ ಉದ್ದೇಶಕ್ಕಾಗಿ ಅಮೆರಿಕ ನಿರ್ಮಿತ ನ್ಯಾಷನಲ್ ಅಡ್ವಾನ್ಸ್ಡ್ ಸರ್ಫೇಸ್ ಟು ಏರ್ ಮಿಸೈಲ್ ಸಿಸ್ಟಮ್-2 (ಎನ್‌ಎಎಸ್‌ಎಎಂಎಸ್-2) ಬಳಸುವ ಉದ್ದೇಶ ಹೊಂದಿತ್ತು. ಉಭಯ ದೇಶಗಳು ಈ ಅಮೆರಿಕನ್ ವ್ಯವಸ್ಥೆಯನ್ನು ಖರೀದಿಸುವ ಕುರಿತು ಮಾತುಕತೆಯನ್ನೂ ಆರಂಭಿಸಿದ್ದವು. ವಾಶಿಂಗ್ಟನ್ ಡಿಸಿ ಮತ್ತು ಶ್ವೇತ ಭವನದ ರಕ್ಷಣೆಗೂ ಇದೇ ಅಮೆರಿಕನ್ ಆಯುಧ ವ್ಯವಸ್ಥೆಯನ್ನು ಬಳಸಲಾಗುತ್ತದೆ. ಮೂಲಗಳ ಪ್ರಕಾರ, ಅಮೆರಿಕನ್ನರು ಈ ಆಯುಧ ವ್ಯವಸ್ಥೆಗೆ ಅತಿಯಾದ ಬೆಲೆ ಕೇಳುತ್ತಿದ್ದುದರಿಂದ ಭಾರತ ಈ ಒಪ್ಪಂದವನ್ನು ಜಾರಿಗೊಳಿಸುವ ಪ್ರಯತ್ನವನ್ನೇ ಕೈ ಬಿಟ್ಟಿತು. ಇನ್ನು ಮುಂದೆ ಇಂಟಿಗ್ರೇಟೆಡ್ ಏರ್ ಡಿಫೆನ್ಸ್ ವೆಪನ್ ಸಿಸ್ಟಮ್ (ಐಎಡಿಡಬ್ಲ್ಯುಎಸ್) ದಿಲ್ಲಿ ಪ್ರದೇಶದ ಪ್ರಮುಖ ಸ್ಥಳಗಳು ಮತ್ತು ಕಟ್ಟಡಗಳನ್ನು ರಕ್ಷಿಸಲಿದೆ. ಈ ಜವಾಬ್ದಾರಿಯನ್ನು ಭಾರತೀಯ ವಾಯು ಸೇನೆ ನಿರ್ವಹಿಸಲಿದೆ. ಈ ಸಂಕೀರ್ಣ ವಾಯು ರಕ್ಷಣಾ ವ್ಯವಸ್ಥೆಯ ನಿರ್ಮಾಣಕ್ಕೆ ಬೇಕಾದ ನೆಟ್‌ವರ್ಕಿಂಗ್ ವ್ಯವಸ್ಥೆ ಮತ್ತು ಕಮಾಂಡ್ ಆಂಡ್ ಕಂಟ್ರೋಲ್ ವ್ಯವಸ್ಥೆಗಳನ್ನು ನಿರ್ಮಿಸುವ ಸಲುವಾಗಿ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಇತರ ಉತ್ಪಾದನಾ ಸಂಸ್ಥೆಗಳೊಡನೆ ಕೈ ಜೋಡಿಸಿ ಕಾರ್ಯ ನಿರ್ವಹಿಸಲಿದೆ ಎಂದು ಮೂಲಗಳು ಹೇಳಿವೆ. ಡಿಆರ್‌ಡಿಒ ಈಗಾಗಲೇ ಕ್ವಿಕ್ ರಿಯಾಕ್ಷನ್ ಸರ್ಫೇಸ್ ಟು ಏರ್ ಮಿಸೈಲ್ (ಕ್ಯುಆರ್ - ಎಸ್‌ಎಎಂ) ಮತ್ತು ಮೀಡಿಯಂ ರೇಂಜ್ ಸರ್ಫೇಸ್ ಟು ಏರ್ ಮಿಸೈಲ್ (ಎಂಆರ್ - ಎಸ್‌ಎಎಂ) ಸೇರಿದಂತೆ ಹಲವಾರು ವಾಯು ರಕ್ಷಣಾ ವ್ಯವಸ್ಥೆಗಳನ್ನು ಅಭಿವೃದ್ಧಿಪಡಿಸಿದೆ. ಡಿಆರ್‌ಡಿಒ ಈಗ ‘ಪ್ರಾಜೆಕ್ಟ್ ಕುಶ’ ಎಂಬ ಯೋಜನೆಯಡಿಯಲ್ಲಿ ಲಾಂಗ್ ರೇಂಜ್ ಸರ್ಫೇಸ್ ಟು ಏರ್ ಮಿಸೈಲ್ (ಎಲ್‌ಆರ್ - ಎಸ್‌ಎಎಂ) ಕ್ಷಿಪಣಿಯನ್ನೂ ಅಭಿವೃದ್ಧಿ ಪಡಿಸುತ್ತಿದೆ. ಭಾರತ ಇನ್ನೂ ಸ್ವೀಕರಿಸಲು ಬಾಕಿಯಾಗಿರುವ ಎಸ್-400 ಸುದರ್ಶನ ವಾಯು ರಕ್ಷಣಾ ವ್ಯವಸ್ಥೆಯ ಎರಡು ಸ್ಕ್ವಾಡ್ರನ್‌ಗಳನ್ನು ಪಡೆದುಕೊಳ್ಳಲು ಪ್ರಯತ್ನ ನಡೆಸುತ್ತಿದೆ. ಇದೇ ವೇಳೆ, ರಶ್ಯ ಇನ್ನಷ್ಟು ಎಸ್-400 ವಾಯು ರಕ್ಷಣಾ ವ್ಯವಸ್ಥೆಯನ್ನು ಭಾರತಕ್ಕೆ ಒದಗಿಸಲು ಮುಂದೆ ಬಂದಿದ್ದು, ಭಾರತ ಈ ಒಪ್ಪಂದದ ಕುರಿತು ಅಧ್ಯಯನ ನಡೆಸುತ್ತಿದೆ. ಇದರೊಡನೆ, ಭಾರತ ನೂತನ ಎಸ್-500 ವ್ಯವಸ್ಥೆಯನ್ನು ಖರೀದಿಸುವ ಕುರಿತೂ ಆಲೋಚಿಸುವ ಸಾಧ್ಯತೆಗಳಿವೆ. ಕುಶದ ಬತ್ತಳಿಕೆಯಲ್ಲೇನಿದೆ? ► ಈ ವ್ಯವಸ್ಥೆ ಬಹು ಹಂತಗಳ ಇಂಟರ್‌ಸೆಪ್ಟರ್ ಕ್ಷಿಪಣಿಗಳನ್ನು ಹೊಂದಿದೆ. ಎಂ1 ಇಂಟರ್‌ಸೆಪ್ಟರ್: 150 ಕಿಲೋಮೀಟರ್‌ಗಳಷ್ಟು ದೂರದಲ್ಲಿರುವ ಅಪಾಯಗಳನ್ನು ನಾಶಪಡಿಸುತ್ತದೆ. ಎಂ2 ಇಂಟರ್‌ಸೆಪ್ಟರ್: 250 ಕಿಲೋಮೀಟರ್ ದೂರದಲ್ಲಿರುವ ಗುರಿಗಳ ಮೇಲೆ ದಾಳಿ ನಡೆಸುತ್ತದೆ. ಎಂ3 ಇಂಟರ್‌ಸೆಪ್ಟರ್: 350ರಿಂದ 400 ಕಿಲೋಮೀಟರ್ ದೂರದಲ್ಲಿರುವ ಗುರಿಗಳನ್ನು ನಾಶಪಡಿಸಬಲ್ಲದು. ► ಇದು ಆಧುನಿಕ ದೀರ್ಘ ವ್ಯಾಪ್ತಿಯ ರೇಡಾರ್‌ಗಳನ್ನು ಹೊಂದಿದ್ದು, ಏಕಕಾಲದಲ್ಲಿ ಬಹಳಷ್ಟು ಗುರಿಗಳನ್ನು ಗುರುತಿಸಿ, ಹಿಂಬಾಲಿಸಬಲ್ಲದು. ► ಪ್ರಾಜೆಕ್ಟ್ ಕುಶ ಭಾರತೀಯ ವಾಯುಪಡೆಯ ಇಂಟಿಗ್ರೇಟೆಡ್ ಏರ್ ಕಮಾಂಡ್ ಆಂಡ್ ಕಂಟ್ರೋಲ್ ಸಿಸ್ಟಮ್‌ನ (ಐಎಸಿಸಿಎಸ್) ಭಾಗವಾಗಿದೆ. ಪ್ರಾಜೆಕ್ಟ್ ಕುಶಕ್ಕೆ 2022ರ ಮೇ ತಿಂಗಳಲ್ಲಿ ನಡೆದ ರಕ್ಷಣಾ ಸಂಸದೀಯ ಸಮಿತಿ ಸಭೆಯಲ್ಲಿ ಅನುಮೋದನೆ ನೀಡಲಾಗಿತ್ತು. ಪ್ರಾಜೆಕ್ಟ್ ಕುಶ ಬರಾಕ್ - 8 ವ್ಯವಸ್ಥೆ (80 ಕಿಲೋಮೀಟರ್‌ವ್ಯಾಪ್ತಿಯ ತನಕ ರಕ್ಷಣೆ ಒದಗಿಸುತ್ತದೆ) ಮತ್ತು ಎಸ್-400ರಂತಹ ದೀರ್ಘ ವ್ಯಾಪ್ತಿಯ ರಕ್ಷಣಾ ವ್ಯವಸ್ಥೆಗಳ ನಡುವಿನ ಅಂತರವನ್ನು ತುಂಬಿ, ಆ ಮೂಲಕ ಭಾರತಕ್ಕೆ ವಿದೇಶೀ ವಾಯು ರಕ್ಷಣಾ ವ್ಯವಸ್ಥೆಗಳ ಮೇಲಿನ ಅವಲಂಬನೆಯನ್ನು ಕಡಿಮೆಗೊಳಿಸಲು ನೆರವಾಗಲಿದೆ.   ಪ್ರಾಜೆಕ್ಟ್ ಕುಶ ಕುಶ ವಾಯು ರಕ್ಷಣಾ ವ್ಯವಸ್ಥೆ ಅಥವಾ ಪ್ರಾಜೆಕ್ಟ್ ಕುಶ ಎನ್ನುವುದು ಸ್ವಂತವಾಗಿ ದೀರ್ಘ ವ್ಯಾಪ್ತಿಯ ಭೂಮಿಯಿಂದ ಗಾಳಿಗೆ ದಾಳಿ ನಡೆಸುವ (ಎಲ್‌ಆರ್-ಎಸ್‌ಎಎಂ) ವ್ಯವಸ್ಥೆಯನ್ನು ನಿರ್ಮಿಸುವ ಡಿಆರ್‌ಡಿಒದ ಯೋಜನೆಯಾಗಿದೆ. ಇದನ್ನು ಸಾಕಷ್ಟು ದೂರದಲ್ಲಿರುವ ಶತ್ರುಗಳನ್ನು ಗುರುತಿಸಿ, ನಾಶಪಡಿಸುವ ಸಲುವಾಗಿ ವಿನ್ಯಾಸಗೊಳಿಸಲಾಗಿದೆ. ಈ ಭಾರತೀಯ ಆಯುಧ ವ್ಯವಸ್ಥೆ 400 ಕಿಲೋಮೀಟರ್‌ಗಳಷ್ಟು ದೂರದಲ್ಲಿರುವ ಗುರಿಗಳ ಮೇಲೂ ದಾಳಿ ನಡೆಸಬಲ್ಲದು. ಈ ಕಾರಣದಿಂದಲೇ ಇದನ್ನು ‘ದೇಸಿ ಎಸ್-400’ ಎಂದು ಕರೆಯಲಾಗಿದೆ. ಎಸ್-400 ಎನ್ನುವುದು ರಶ್ಯನ್ ವಾಯು ರಕ್ಷಣಾ ವ್ಯವಸ್ಥೆಯಾಗಿದ್ದು, ಆಪರೇಷನ್ ಸಿಂಧೂರದ ಸಂದರ್ಭದಲ್ಲಿ ಭಾರತ ಇದನ್ನು ಯಶಸ್ವಿಯಾಗಿ ಬಳಸಿತ್ತು. ಪ್ರಾಜೆಕ್ಟ್ ಕುಶ ಯೋಜನೆಯಲ್ಲಿ ಭಾರತ್ ಇಲೆಕ್ಟ್ರಾನಿಕ್ಸ್ ಲಿಮಿಟೆಡ್ (ಬಿಇಎಲ್) ಡಿಆರ್‌ಡಿಒ ಜೊತೆ ಪ್ರಮುಖ ಅಭಿವೃದ್ಧಿ ಸಹಯೋಗಿಯಾಗಿ ಕಾರ್ಯ ನಿರ್ವಹಿಸುತ್ತಿದೆ. ವರದಿಗಳ ಪ್ರಕಾರ, ಪ್ರಾಜೆಕ್ಟ್ ಕುಶದಲ್ಲಿ ಕಾರ್ಯಾಚರಿಸಲು ಬಿಇಎಲ್‌ಗೆ ಗರಿಷ್ಠ 40,000 ಕೋಟಿ ರೂಪಾಯಿ ಮೌಲ್ಯದ ಆದೇಶ ಲಭಿಸುವ ನಿರೀಕ್ಷೆಗಳಿವೆ. ಬಿಇಎಲ್ ಅಧ್ಯಕ್ಷರು ಮತ್ತು ವ್ಯವಸ್ಥಾಪಕ ನಿರ್ದೇಶಕರೂ ಆಗಿರುವ ಮನೋಜ್ ಜೈನ್ ಅವರು ತಮ್ಮ ಸಂಸ್ಥೆ ಪ್ರಾಜೆಕ್ಟ್ ಕುಶದ ಸಾಕಷ್ಟು ಬಿಡಿಭಾಗಗಳನ್ನು ತಯಾರಿಸಲು, ಅದರಲ್ಲೂ ವಿವಿಧ ರಾಡಾರ್‌ಗಳು ಮತ್ತು ನಿಯಂತ್ರಣ ವ್ಯವಸ್ಥೆಗಳ ನಿರ್ಮಾಣಕ್ಕಾಗಿ ಡಿಆರ್‌ಡಿಒ ಜೊತೆ ಕಾರ್ಯಾಚರಿಸುತ್ತಿದೆ ಎಂದಿದ್ದಾರೆ. ಮನೋಜ್ ಜೈನ್ ಅವರ ಪ್ರಕಾರ, ಬಿಇಎಲ್ ಈಗ ಅವಶ್ಯಕ ಉತ್ಪನ್ನಗಳ ನಿರ್ಮಾಣದತ್ತ ಗಮನ ಹರಿಸಿದ್ದು, ವ್ಯವಸ್ಥೆಯ ಸಿದ್ಧತೆಯನ್ನು ಇನ್ನಷ್ಟು ಕ್ಷಿಪ್ರಗೊಳಿಸುವ ಉದ್ದೇಶ ಹೊಂದಿದೆ. ಇದರ ಮೂಲ ಮಾದರಿ ಮುಂದಿನ 12ರಿಂದ 18 ತಿಂಗಳಲ್ಲಿ ಸಿದ್ಧವಾಗುವ ನಿರೀಕ್ಷೆಗಳಿದ್ದು, ಬಳಕೆದಾರರ ಪರೀಕ್ಷೆಗೆ ಇನ್ನೂ 12ರಿಂದ 36 ತಿಂಗಳುಗಳು ತಗಲಬಹುದು. ವರದಿಗಳ ಪ್ರಕಾರ, ಬಿಇಎಲ್‌ಗೆ ಕ್ವಿಕ್ ರಿಯಾಕ್ಷನ್ ಸರ್ಫೇಸ್ ಟು ಏರ್ ಮಿಸೈಲ್ (ಕ್ಯುಆರ್ - ಎಸ್‌ಎಎಂ) ನಿರ್ಮಾಣಕ್ಕಾಗಿ ಇನ್ನೂ 30,000 ಕೋಟಿ ರೂಪಾಯಿಯ ಇನ್ನೊಂದು ಖರೀದಿ ಆದೇಶ ಲಭಿಸುವ ಸಾಧ್ಯತೆಗಳಿವೆ.

ವಾರ್ತಾ ಭಾರತಿ 14 Dec 2025 12:42 pm

ವಿಮಾನದಲ್ಲಿ ವಿದೇಶಿ ಮಹಿಳೆಗೆ ತುರ್ತು ವೈದ್ಯಕೀಯ ನೆರವು ನೀಡಿದ ಡಾ.ಅಂಜಲಿ ನಿಂಬಾಳ್ಕರ್ ಗೆ ಮುಖ್ಯಮಂತ್ರಿ ಶ್ಲಾಘನೆ

ಬೆಂಗಳೂರು: ಗೋವಾ-ಹೊಸದಿಲ್ಲಿ ನಡುವಿನ ವಿಮಾನ ಪ್ರಯಾಣದ ವೇಳೆ ಅನಾರೋಗ್ಯಕ್ಕೀಡಾದ ಅಮರಿಕದ ಮಹಿಳೆಯೊಬ್ಬರಿಗೆ ತುರ್ತು ವೈದ್ಯಕೀಯ ನೆರವು ನೀಡಿ ಸಮಯಪ್ರಜ್ಞೆ ಮೆರೆದ ಖಾನಾಪುರದ ಮಾಜಿ ಶಾಸಕಿ ಡಾ.ಅಂಜಲಿ ನಿಂಬಾಳ್ಕರ್ ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಶ್ಲಾಘಿಸಿದ್ದಾರೆ. ಗೋವಾ-ಹೊಸದಿಲ್ಲಿ ನಡುವಿನ ವಿಮಾನ ಪ್ರಯಾಣದ ವೇಳೆ ಖಾನಾಪುರದ ಮಾಜಿ ಶಾಸಕಿಯಾದ ಡಾ.ಅಂಜಲಿ ನಿಂಬಾಳ್ಕರ್ ಅವರು ಅಮೇರಿಕಾದ ಮಹಿಳೆಯೊಬ್ಬರಿಗೆ ತುರ್ತು ವೈದ್ಯಕೀಯ ನೆರವಿನ ಅಗತ್ಯತೆಯನ್ನು ಅರಿತು, ತಕ್ಷಣವೇ ಸಿಪಿಆರ್ ನೀಡಿ ಮಹಿಳೆಯ ಪ್ರಾಣ ಉಳಿಸಿದ ವಿಚಾರ ಕೇಳಿ ಹೆಮ್ಮೆಯೆನಿಸಿತು. ವೈದ್ಯ ವೃತ್ತಿ ತೊರೆದು ಸಕ್ರಿಯ ರಾಜಕೀಯದಲ್ಲಿದ್ದರೂ ಸಕಾಲದಲ್ಲಿ… pic.twitter.com/mXicw43NOg — Siddaramaiah (@siddaramaiah) December 14, 2025 Heading Content Area ಗೋವಾ-ಹೊಸದಿಲ್ಲಿ ನಡುವಿನ ವಿಮಾನ ಪ್ರಯಾಣದ ವೇಳೆ ಖಾನಾಪುರದ ಮಾಜಿ ಶಾಸಕಿ ಡಾ.ಅಂಜಲಿ ನಿಂಬಾಳ್ಕರ್ ಅವರು ಅಮರಿಕದ ಮಹಿಳೆಯೊಬ್ಬರಿಗೆ ತುರ್ತು ವೈದ್ಯಕೀಯ ನೆರವಿನ ಅಗತ್ಯವನ್ನು ಅರಿತು, ತಕ್ಷಣವೇ ಸಿಪಿಆರ್ ನೀಡಿ ಮಹಿಳೆಯ ಪ್ರಾಣ ಉಳಿಸಿದ ವಿಚಾರ ಕೇಳಿ ಹೆಮ್ಮೆಯೆನಿಸಿತು. ವೈದ್ಯ ವೃತ್ತಿ ತೊರೆದು ಸಕ್ರಿಯ ರಾಜಕೀಯದಲ್ಲಿದ್ದರೂ ಸಕಾಲದಲ್ಲಿ ರೋಗಿಯೊಬ್ಬರ ನೆರವಿಗೆ ಧಾವಿಸಿದ ಅಂಜಲಿಯವರ ಸೇವಾ ಮನೋಭಾವ ಮತ್ತು ಸಮಯಪ್ರಜ್ಞೆ ಅತ್ಯಂತ ಶ್ಲಾಘನೀಯ ಎಂದು ಸಿಎಂ ಹೇಳಿದ್ದಾರೆ. ಅಧಿಕಾರವಿರಲಿ, ಇಲ್ಲದಿರಲಿ ಜನಸೇವೆ ಎಂದು ಬಂದಾಗ ಪ್ರತಿಫಲಾಪೇಕ್ಷೆ ಇಲ್ಲದೆ ತನ್ನ ಕೈಲಾದ ಸಹಾಯಕ್ಕೆ ನಿಲ್ಲುವ ಅಂಜಲಿಯಂಥವರು ಸಮಾಜಕ್ಕೆ ಮಾದರಿ. ನೂರುಕಾಲ ಅಂಜಲಿಯವರಿಗೆ ಆಯಸ್ಸು ಆರೋಗ್ಯ ನೀಡಿ, ಕಷ್ಟದಲ್ಲಿರುವ ಜೀವಗಳಿಗೆ ಅವರಿಂದ ಇನ್ನಷ್ಟು ನೆರವು ಸಿಗುವಂತಾಗಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ ಎಂದು ಶುಭ ಹಾರೈಸಿದ್ದಾರೆ.

ವಾರ್ತಾ ಭಾರತಿ 14 Dec 2025 12:41 pm

ಎಂಜಿನರೇಗಾ ಯೋಜನೆಯಡಿ ಉದ್ಯೋಗ ಖಾತರಿ 125 ದಿನಗಳಿಗೆ ಏರಿಕೆ; ಹೆಸರು ಬದಲಾವಣೆ ಸೇರಿ; ಹಲವು ಮಹತ್ವದ ಬದಲಾವಣೆಗಳ ಪ್ರಸ್ತಾವನೆ!

ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಲ್ಲಿ (MGNREGA) ಮಹತ್ವದ ಸುಧಾರಣೆಗಳು ಬರಲಿವೆ. ಉದ್ಯೋಗದ ದಿನಗಳನ್ನು 100 ರಿಂದ 125 ಕ್ಕೆ ಏರಿಸುವ ಪ್ರಸ್ತಾವನೆ ಸಿದ್ಧವಾಗಿದೆ. ಅಲ್ಲದೆ, ಯೋಜನೆಯ ಹೆಸರನ್ನು 'ಪೂಜ್ಯ ಬಾಪು ಗ್ರಾಮೀಣ ಉದ್ಯೋಗ ಖಾತ್ರಿ ಕಾಯ್ದೆ' ಎಂದು ಮರುನಾಮಕರಣ ಮಾಡುವ ಸಾಧ್ಯತೆಯೂ ಇದೆ. ಗ್ರಾಮೀಣ ಕುಟುಂಬಗಳಿಗೆ ಇನ್ನಷ್ಟು ಉದ್ಯೋಗ ಭದ್ರತೆ ಒದಗಿಸುವ ಗುರಿಯನ್ನು ಸರ್ಕಾರ ಹೊಂದಿದೆ. ಈ ಬಗ್ಗೆ ಶೀಘ್ರದಲ್ಲೇ ಅಧಿಕೃತ ಘೋಷಣೆ ಹೊರಬೀಳುವ ನಿರೀಕ್ಷೆಯಿದೆ.

ವಿಜಯ ಕರ್ನಾಟಕ 14 Dec 2025 12:40 pm

ರಫ್ತುದಾರರ ಹಿತಾಸಕ್ತಿ ಕಾಪಾಡಲು ಸೂಕ್ತ ಕ್ರಮ ಪಕ್ಕಾ; ಭಾರತದ ಸರಕುಗಳ ಮೇಲೆ 50% ಸುಂಕ ಹೇರಿದ ಮೆಕ್ಸಿಕೋಗೆ ಭಾರತ ಎಚ್ಚರಿಕೆ

ಈಗಾಗಲೇ ಟ್ರಂಪ್‌ ಸುಂಕದಿಂದ ನಲುಗುತ್ತಿರುವ ಭಾರತೀಯ ರಫ್ತುದಾರರ ಮೇಲೆ ಅಮೆರಿಕಾದ ನೆರೆಯ ರಾಷ್ಟ್ರದ ಕಣ್ಣುಬಿದ್ದಿದೆ. ಮೆಕ್ಸಿಕೋ ಭಾರತ ಸೇರಿದಂತೆ ವ್ಯಾಪಾರ ಒಪ್ಪಂದ ಹೊಂದಿರದ ರಾಷ್ಟ್ರಗಳ ಮೇಲೆ ಶೇ. 50ರಷ್ಟು ಸುಂಕ ವಿಧಿಸಿದೆ. ಈ ಏಕಪಕ್ಷೀಯ ನಿರ್ಧಾರಕ್ಕೆ ಭಾರತ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ತನ್ನ ಹಿತಾಸಕ್ತಿ ರಕ್ಷಿಸಲು ಸೂಕ್ತ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದೆ. ಜಾಗತಿಕ ವ್ಯಾಪಾರ ನಿಯಮಗಳಿಗೆ ಅನುಗುಣವಾಗಿ ಪರಿಹಾರ ಕಂಡುಕೊಳ್ಳಲು ಭಾರತ ಮೆಕ್ಸಿಕೋ ಜೊತೆ ಮಾತುಕತೆ ನಡೆಸುತ್ತಿದೆ.

ವಿಜಯ ಕರ್ನಾಟಕ 14 Dec 2025 12:24 pm

Vote Chori: ರಾಮಲೀಲಾ ಮೈದಾನದಲ್ಲಿ ಕಾಂಗ್ರೆಸ್‌ ಪ್ರತಿಭಟನೆ; ಒಂದು 'ಕೈ' ನೋಡಲು ಸಿದ್ಧವಾದ ರಾಹುಲ್‌ ಗಾಂಧಿ!

ಕೇಂದ್ರ ಸರ್ಕಾರ ಮತ್ತು ಚುನಾವಣಾ ಆಯೋಗದ ವಿರುದ್ಧ ಮತಗಳ್ಳತನ ಆರೋಪಗಳನ್ನು ಮಾಡಿರುವ ಪ್ರತಿಪಕ್ಷ ಕಾಂಗ್ರೆಸ್‌, ಸಂಸತ್ತಿನಲ್ಲಿ ಈ ಬಗ್ಗೆ ಸಾಕಷ್ಟು ಚರ್ಚೆ ನಡೆಸಿದೆ. ಇದೀಗ ವೋಟ್‌ ಚೋರಿ ವಿಚಾರವನ್ನು ಜನರ ಬಳಿಗೆ ಕೊಂಡೊಯ್ಯಲು ತೀರ್ಮಾನಿಸಿರುವ ಕಾಂಗ್ರೆಸ್‌ ಪಕ್ಷ, ದೆಹಲಿಯ ರಾಮಲೀಲಾ ಮೈದಾನದಲ್ಲಿ ಇಂದು ಬೃಹತ್‌ ಪ್ರತಿಭಟನಾ ಮೆರವಣಿಗೆಯನ್ನು ಹಮ್ಮಿಕೊಂಡಿದೆ. ರಾಹುಲ್‌ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಪಕ್ಷದ ಉನ್ನತ ನಾಯಕತ್ವ ಈ ಪ್ರತಿಭಟನೆಯಲ್ಲಿ ಭಾಗವಹಿಸಲಿದೆ. ಇಲ್ಲಿದೆ ಹೆಚ್ಚಿನ ಮಾಹಿತಿ.

ವಿಜಯ ಕರ್ನಾಟಕ 14 Dec 2025 12:15 pm

ದಟ್ಟ ಮಂಜು: ಹರಿಯಾಣದಲ್ಲಿ ಸರಣಿ ಅಪಘಾತ; ಬಸ್‌, ಕಾರು, ಟ್ರಕ್‌ ಗಳಿಗೆ ಭಾರೀ ಹಾನಿ

ಹೊಸದಿಲ್ಲಿ: ಹರಿಯಾಣದಲ್ಲಿ ರವಿವಾರ ಮುಂಜಾನೆ ದಟ್ಟ ಮಂಜಿನಿಂದಾಗಿ ಎರಡು ಪ್ರತ್ಯೇಕ ಸ್ಥಳಗಳಲ್ಲಿ ಸರಣಿ ಅಪಘಾತಗಳು ಸಂಭವಿಸಿ ಬಸ್‌ಗಳು, ಟ್ರಕ್ ಗಳು ಹಾಗೂ ಕಾರುಗಳಿಗೆ ಭಾರೀ ಹಾನಿಯಾಗಿದೆ. ರಸ್ತೆಗಳಲ್ಲಿ ಕಡಿಮೆ ಗೋಚರತೆಯಿಂದಾಗಿ ಅಪಘಾತಗಳು ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಹಿಸ್ಸಾರ್ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ–52ರ ಧಿಕ್ತಾನಾ ಮೋಡಾದಲ್ಲಿ ಬೆಳಿಗ್ಗೆ ಸುಮಾರು 8 ಗಂಟೆ ವೇಳೆಗೆ ಕೈತಾಲ್ ಮಾರ್ಗದಲ್ಲಿ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್‌ ಒಂದು ಡಂಪರ್ ಟ್ರಕ್‌ಗೆ ಡಿಕ್ಕಿ ಹೊಡೆದ ಪರಿಣಾಮವಾಗಿ ಹಿಂದಿನಿಂದ ಬರುತ್ತಿದ್ದ ಮತ್ತೊಂದು ಬಸ್‌, ಕಾರು ಮತ್ತು ಮೋಟಾರ್‌ಸೈಕಲ್ ಸೇರಿ ವಾಹನಗಳ ಒಂದಕ್ಕೊಂದು ಸರಣಿ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಮೋಟಾರ್‌ ಸೈಕಲ್ ಸವಾರರೊಬ್ಬರಿಗೆ ಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇತರ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ. ಇನ್ನೊಂದು ಅಪಘಾತ ರೇವಾರಿ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ–352ರಲ್ಲಿ ಸಂಭವಿಸಿದೆ. ಕಡಿಮೆ ಗೋಚರತೆಯಿಂದಾಗಿ ಮೂರರಿಂದ ನಾಲ್ಕು ಬಸ್‌ಗಳು ಪರಸ್ಪರ ಡಿಕ್ಕಿ ಹೊಡೆದಿದ್ದು, ಹಲವರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಸಮೀಪದ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಿಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ರಾಜ್ಯದಲ್ಲಿ ಕಳೆದ ಕೆಲವು ದಿನಗಳಿಂದ ತೀವ್ರ ಶೀತಗಾಳಿ ಬೀಸುತ್ತಿದ್ದು, ಹೆಚ್ಚಿನ ಜಿಲ್ಲೆಗಳಲ್ಲಿ ಕನಿಷ್ಠ ತಾಪಮಾನ 4ರಿಂದ 6 ಡಿಗ್ರಿ ಸೆಲ್ಸಿಯಸ್‌ವರೆಗೆ ಇಳಿದಿದೆ. ಈ ಹಿನ್ನೆಲೆಯಲ್ಲಿ ಭಾರತೀಯ ಹವಾಮಾನ ಇಲಾಖೆ ಶೀತಗಾಳಿ ಎಚ್ಚರಿಕೆ ನೀಡಿದ್ದು, ಮಂಜಿನ ವೇಳೆ ವಾಹನ ಚಲಾಯಿಸುವಾಗ ಎಚ್ಚರಿಕೆ ವಹಿಸುವಂತೆ ಸೂಚಿಸಿದೆ. ಫಾಗ್ ಹೆಡ್‌ಲೈಟ್‌ ಬಳಕೆ, ವೇಗ ನಿಯಂತ್ರಣ ಹಾಗೂ ಸುರಕ್ಷಿತ ಅಂತರ ಕಾಯ್ದುಕೊಳ್ಳುವಂತೆ ಪ್ರಯಾಣಿಕರಿಗೆ ಸಲಹೆ ನೀಡಲಾಗಿದೆ. ಇದಕ್ಕೂ ಮುನ್ನ ದಿಲ್ಲಿ–ಎನ್‌ಸಿಆರ್ ಪ್ರದೇಶದಲ್ಲೂ ದಟ್ಟ ಮಂಜಿನಿಂದಾಗಿ ನೋಯ್ಡಾ ಎಕ್ಸ್‌ಪ್ರೆಸ್‌ವೇಯಲ್ಲಿ ಡಝನ್‌ಗೂ ಹೆಚ್ಚು ವಾಹನಗಳು ಪರಸ್ಪರ ಡಿಕ್ಕಿ ಹೊಡೆದು ಸಂಚಾರ ಅಸ್ತವ್ಯಸ್ತಗೊಂಡಿತ್ತು.

ವಾರ್ತಾ ಭಾರತಿ 14 Dec 2025 12:13 pm

ಸ್ಥಳೀಯಾಡಳಿತ ಚುನಾವಣೆ | ಪುತ್ತಿಗೆ, ಬೇಕಲ ಡಿವಿಜನ್ ಮರು ಮತಎಣಿಕೆಯಲ್ಲಿ ಯುಡಿಎಫ್, ಎಲ್.ಡಿ.ಎಫ್.ಗೆ ಗೆಲುವು

ಕಾಸರಗೋಡು: ಜಿಲ್ಲಾ ಪಂಚಾಯತ್ ನ ಪುತ್ತಿಗೆ ಮತ್ತು ಬೇಕಲ ಡಿವಿಜನ್ ನ ಮರುಮತ ಎಣಿಕೆ ಪೂರ್ಣಗೊಂಡಿದ್ದು, ಪುತ್ತಿಗೆಯಲ್ಲಿ ಯುಡಿಎಫ್ ಅಭ್ಯರ್ಥಿ ಜಯಿಸಿದ್ದರೆ, ಬೇಕಲ ದಿಂದ ಎಲ್ ಡಿ ಎಫ್ ಅಭ್ಯರ್ಥಿ ಗೆಲುವಿನ ನಗೆ ಬೀರಿದ್ದಾರೆ.   ಪುತ್ರಿಗೆಯಿಂದ ಯುಡಿಎಫ್ ನ ಜೆ.ಎಸ್.ಸೋಮಶೇಖರ್ ಹಾಗೂ ಬೇಕಲದಿಂದ ಎಲ್.ಡಿ.ಎಫ್.ನ ಟಿ.ವಿ. ರಾಧಿಕಾ ಗೆಲುವು ಸಾಧಿಸಿದ್ದಾರೆ.   ಶನಿವಾರ ಮತ ಎಣಿಕೆ ಸಂದರ್ಭ ತೀವ್ರ ಪೈಪೋಟಿಗೆ ಈ ಎರಡು ಡಿವಿಜನ್ ಗಳು ಕಾರಣವಾಗಿದ್ದು, ಅಂತಿಮ ಕ್ಷಣದಲ್ಲಿ ಕನಿಷ್ಠ ಮತಗಳ ಅಂತರದಿಂದ ಸೋಮಶೇಖರ್ ಮತ್ತು ರಾಧಿಕಾ ಜಯಿಸಿದ್ದರು.. ಇವರ ಆಯ್ಕೆಯನ್ನು ಪ್ರಶ್ನಿಸಿ ಸೋಮಶೇಖರ್ ರ ಪ್ರತಿಸ್ಪರ್ಧಿ ಬಿಜೆಪಿಯ ಮಣಿಕಂಠ ರೈ ಹಾಗೂ ರಾಧಿಕಾರ ಪ್ರತಿಸ್ಪರ್ಧಿ ಯು ಡಿ ಎಫ್ ನ ಶಾಹಿದಾ ರಶೀದ್ ಮರು ಎಣಿಕೆಗೆ ಚುನಾವಣಾಧಿಕಾರಿ ಗೆ ಮನವಿ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ ಮರು ಮತ ಎಣಿಕೆ ನಡೆಯಿತು. ಇದರೊಂದಿಗೆ ಕಾಸರಗೋಡು ಜಿಲ್ಲಾ ಪಂಚಾಯತ್ ನ 18 ಡಿವಿಜನ್ ನಲ್ಲಿ ಒಂಭತ್ತು ಸ್ಥಾನಗಳನ್ನು ಗಳಿಸಿರುವ ಎಲ್ ಡಿ ಎಫ್ ಅಧಿಕಾರ ಉಳಿಸಿಕೊಂಡಿದೆ. ಯುಡಿಎಫ್ 8 ಮತ್ತು ಬಿಜೆಪಿ ಒಂದು ಸ್ಥಾನ ಗಳಿಸಿದೆ.

ವಾರ್ತಾ ಭಾರತಿ 14 Dec 2025 12:04 pm

ಲಿಬಿಯಾದಲ್ಲಿ ಗುಜರಾತಿ ಕುಟುಂಬ ಅಪಹರಣ: 2 ಕೋಟಿ ರೂ.ಗೆ ಬೇಡಿಕೆ

ಪೋರ್ಚುಗಲ್‌ಗೆ ತೆರಳಲು ಯತ್ನಿಸುತ್ತಿದ್ದ ಗುಜರಾತ್‌ನ ಮೆಹಸಾನಾ ಜಿಲ್ಲೆಯ ದಂಪತಿ ಹಾಗೂ ಅವರ ಮಗಳನ್ನು ಲಿಬಿಯಾದಲ್ಲಿ ಅಪಹರಣ ಮಾಡಲಾಗಿದೆ. ಅಪಹರಣಕಾರರು 2 ಕೋಟಿ ರೂ. ಸುಲಿಗೆಗೆ ಬೇಡಿಕೆ ಇಟ್ಟಿದ್ದು, ಕುಟುಂಬದ ಸುರಕ್ಷತೆಗಾಗಿ ಸರ್ಕಾರ ಕ್ರಮ ಕೈಗೊಳ್ಳುತ್ತಿದೆ. ಈ ಘಟನೆ ವಲಸೆ ಹೋಗುವವರ ಸುರಕ್ಷತೆಯ ಬಗ್ಗೆ ಪ್ರಶ್ನೆಗಳನ್ನು ಎತ್ತಿದೆ.

ವಿಜಯ ಕರ್ನಾಟಕ 14 Dec 2025 11:49 am

ಬಿಹಾರ ರೈಲಿನಲ್ಲಿ ಜನಸಂದಣಿಯಿಂದ ಶೌಚಾಲಯದಲ್ಲಿ ಸಿಲುಕಿದ ಮಹಿಳೆ; RPF ನಿಂದ ರಕ್ಷಣೆ

ಕತಿಹಾರ್ (ಬಿಹಾರ), ಡಿ.14: ಬಿಹಾರ ದ ಕತಿಹಾರ್ ಜಂಕ್ಷನ್‌ನಲ್ಲಿ ನಿಂತಿದ್ದ ರೈಲಿನಲ್ಲಿ ಒಂಟಿಯಾಗಿ ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬರು, ಬೋಗಿಯೊಳಗೆ ಏಕಾಏಕಿ ಉಂಟಾದ ಜನಸಂದಣಿಯಿಂದ ಶೌಚಾಲಯದಲ್ಲೇ ಸಿಲುಕಿಕೊಂಡ ಘಟನೆ ನಡೆದಿದೆ. ರೈಲ್ವೆ ಸಹಾಯವಾಣಿ ಸಂಖ್ಯೆ 139ಕ್ಕೆ ಕರೆ ಮಾಡಿದ ಬಳಿಕ ರೈಲ್ವೆ ರಕ್ಷಣಾ ಪಡೆ (ಆರ್‌ಪಿಎಫ್‌) ಮಹಿಳೆಯನ್ನು ಸುರಕ್ಷಿತವಾಗಿ ರಕ್ಷಿಸಿದೆ. ನಿಲ್ದಾಣದಲ್ಲಿ ರೈಲು ನಿಂತಿದ್ದ ಸಂದರ್ಭದಲ್ಲಿ ಮಹಿಳೆ ಶೌಚಾಲಯ ಬಳಸುತ್ತಿದ್ದಾಗ, 30ರಿಂದ 40 ಮಂದಿ ಯುವಕರು ಕೂಗುತ್ತಾ ಹಾಗೂ ಪರಸ್ಪರ ತಳ್ಳಿಕೊಂಡು ಬೋಗಿಯೊಳಗೆ ನುಗ್ಗಿದ್ದಾರೆ ಎನ್ನಲಾಗಿದೆ. ಬಾಗಿಲಿನ ಬಳಿ ಜನಸಂದಣಿ ತುಂಬಿಕೊಂಡ ಕಾರಣ ಮಹಿಳೆಗೆ ಹೊರಬರಲು ಸಾಧ್ಯವಾಗದೆ ಶೌಚಾಲಯದೊಳಗೇ ಉಳಿಯಬೇಕಾಯಿತು. ಪರಿಸ್ಥಿತಿ ಅಸುರಕ್ಷಿತವಾಗಿದ್ದರಿಂದ ಅವರು ಶೌಚಾಲಯದ ಬಾಗಿಲು ಮುಚ್ಚಿಕೊಂಡು ನೆರವಿಗಾಗಿ ಕಾಯುತ್ತಿದ್ದರು. ಅದಾಗಲೇ ಮಹಿಳೆ ತಮ್ಮ ಮೊಬೈಲ್‌ ಮೂಲಕ ರೈಲ್ವೆ ಸಹಾಯವಾಣಿ 139ಕ್ಕೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ತಕ್ಷಣವೇ ಸ್ಥಳಕ್ಕೆ ಆಗಮಿಸಿದ ಆರ್‌ಪಿಎಫ್‌ ಸಿಬ್ಬಂದಿ, ಬೋಗಿಯೊಳಗಿನ ಜನಸಮೂಹವನ್ನು ಚದುರಿಸಿ, ಮಹಿಳೆಯನ್ನು ಶೌಚಾಲಯದಿಂದ ಹೊರಬರಲು ಅನುವುಮಾಡಿಕೊಟ್ಟು ಸುರಕ್ಷಿತವಾಗಿ ತನ್ನ ಆಸನಕ್ಕೆ ಮರಳಲು ನೆರವಾದರು ಎಂದು ತಿಳಿದು ಬಂದಿದೆ. ಘಟನೆಯ ಕುರಿತು ಮಹಿಳೆ ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ತಮ್ಮ ಅನುಭವವನ್ನು ಹಂಚಿಕೊಂಡಿದ್ದು, ಒಂಟಿಯಾಗಿ ಪ್ರಯಾಣಿಸುವ ಮಹಿಳೆಯರ ಸುರಕ್ಷತೆ ಕುರಿತು ಚರ್ಚೆಗೆ ಕಾರಣವಾಗಿದೆ. ಅನೇಕರು ಅವರ ಸಮಯೋಚಿತ ನಿರ್ಧಾರವನ್ನು ಶ್ಲಾಘಿಸಿದ್ದು, ಆರ್‌ಪಿಎಫ್‌ನ ತ್ವರಿತ ಸ್ಪಂದನೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ವಾರ್ತಾ ಭಾರತಿ 14 Dec 2025 11:46 am

ಆಯ್ಕೆ ಮತ್ತು ಆದ್ಯತೆ

ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯ ಮತ್ತು ಆದ್ಯತೆಗಳನ್ನು ಅಥವಾ ಪ್ರಾಮುಖ್ಯತೆಗಳನ್ನು ಗುರುತಿಸುವುದು; ಈ ಎರಡೂ ನಮ್ಮ ಜೀವನ ರೂಪಿಸುವ ಮಹತ್ವದ ಕೌಶಲ್ಯಗಳು. ಜೀವನದಲ್ಲಿ ನಾವು ತೆಗೆದುಕೊಳ್ಳುವ ಪ್ರತಿಯೊಂದು ನಿರ್ಧಾರವೂ ಒಂದು ದಿಕ್ಕು ತೋರಿಸುವ ಸೂಚಕದಂತೆ ಮತ್ತು ಮಾರ್ಗದರ್ಶಿಯಂತೆ. ಸರಿಯಾದ ನಿರ್ಧಾರ ಸಾಮರ್ಥ್ಯವಿಲ್ಲದೆ ಹೋದರೆ ನಮ್ಮ ಬದುಕಿಗೆ ಅಗತ್ಯವಿರುವ ಅವಕಾಶಗಳು ಕೈ ತಪ್ಪುತ್ತವೆ, ಶಕ್ತಿ ನಷ್ಟವಾಗುತ್ತದೆ ಮತ್ತು ಅನಗತ್ಯ ಒತ್ತಡ ಹುಟ್ಟುತ್ತದೆ. ಉತ್ತಮ ನಿರ್ಧಾರ ಸಾಮರ್ಥ್ಯವಿರುವವರು ಪರಿಸ್ಥಿತಿಯನ್ನು ವಾಸ್ತವವಾಗಿ ನೋಡುವರು, ಉತ್ತಮ ಪ್ರತಿಫಲ ಮತ್ತು ಸಾಧ್ಯತೆ ಬಾಧ್ಯತೆಗಳನ್ನು ತೂಗಿ ನೋಡಿ, ತಮ್ಮ ವೌಲ್ಯಗಳಿಗೆ ಸರಿಹೊಂದುತ್ತಿರುವ ಆಯ್ಕೆಯನ್ನು ಮಾಡುವರು. ಇದು ಆತ್ಮವಿಶ್ವಾಸವನ್ನು ಹೆಚ್ಚಿಸುವುದರ ಜೊತೆಗೆ ಜೀವನದ ಮೇಲೆ ನಿಯಂತ್ರಣದ ಭಾವನೆಯನ್ನೂ ಕೊಡುತ್ತದೆ. ಅದರಂತೆಯೇ ಆದ್ಯತೆ ಮತ್ತು ಪ್ರಾಮುಖ್ಯತೆ ಗುರುತಿಸುವಿಕೆಯೂ ಕೂಡಾ ದಿನನಿತ್ಯದ ಕಾರ್ಯಕ್ಷಮತೆಯ ಹೃದಯ. ಎಲ್ಲ ಕೆಲಸಗಳೂ ಸಮಾನವಾಗಿರುವುದಿಲ್ಲ; ಯಾವುದು ತುರ್ತು, ಯಾವುದು ಮುಖ್ಯ, ಯಾವುದು ಬಿಡಬಹುದಾದುದು ಎಂಬ ಅರಿವು ಇಲ್ಲದಿದ್ದರೆ ಜೀವನ ಗೊಂದಲದಿಂದ ತುಂಬುತ್ತದೆ. ಸ್ಪಷ್ಟ ಆದ್ಯತೆ ಕೊಡುವವರು ಸಮಯವನ್ನು ಉಳಿಸುವರು, ಒತ್ತಡವನ್ನು ಕಡಿಮೆ ಮಾಡಿಕೊಳ್ಳುವರು ಮತ್ತು ತಮ್ಮ ಗುರಿಗಳತ್ತ ವೇಗವಾಗಿ ಮತ್ತು ಸರಾಗವಾಗಿ ಸಾಗುವರು. ಆದರೆ ಬಹಳಷ್ಟು ಜನರಿಗೆ ನಿರ್ಧಾರಗಳಲ್ಲಿ ಗೊಂದಲ ಉಂಟಾಗುವುದು ಮತ್ತು ಪ್ರಾಮುಖ್ಯತೆ ಗುರುತಿಸಲು ಆಗದಿರುವುದು ಏಕೆಂದು ಮನೋವೈಜ್ಞಾನಿಕ ದೃಷ್ಟಿಕೋನದಿಂದ ಗಮನಿಸಬೇಕು. ಯಾವುದೇ ವ್ಯಕ್ತಿಗೆ ನಿರ್ಧಾರ ತೆಗೆದುಕೊಳ್ಳುವುದು, ಕೆಲಸಗಳನ್ನು ಆದ್ಯತೆಯ ಪ್ರಕಾರ ಮಾಡುವುದು, ಜೀವನದಲ್ಲಿ ಯಾವುದು ಮೊದಲು ಮತ್ತು ಯಾವುದು ನಂತರ ಎಂಬುದನ್ನು ಗುರುತಿಸುವುದು ಮತ್ತೊಮ್ಮೆ ಕಷ್ಟವಾಗುತ್ತಿದ್ದರೆ ಅದೇನು ಮಾನಸಿಕ ಸಮಸ್ಯೆ ಎಂದೇನೂ ಪರಿಗಣಿಸಲಾಗದು. ಆದರೆ ನಾನಾ ಕಾರಣಗಳಿಂದ ಉಂಟಾಗುವ ಮನಸ್ಸಿನ ಕಾರ್ಯವೈಕಲ್ಯಗಳೊಂದರ ಸಂಕೇತವಾಗಿರುತ್ತದೆ. ಸಾಮಾನ್ಯವಾಗಿ ಈ ಸಮಸ್ಯೆಯ ಮೂಲದಲ್ಲಿ ಎಕ್ಸಿಕ್ಯೂಟಿವ್ ಫಂಕ್ಷನ್ ಎಂದು ಕರೆಯುವ ಮೆದುಳಿನ ಸಾಮರ್ಥ್ಯ ಕುಂದಿರುವುದು ಕಾಣಬಹುದು. ಯೋಜನೆ, ಕ್ರಮಬದ್ಧತೆ, ಸಮಯ ನಿರ್ವಹಣೆ, ಆಯ್ಕೆ ಪ್ರಕ್ರಿಯೆ - ಇವುಗಳಲ್ಲಿ ವ್ಯತ್ಯಯವಾದಾಗ ವ್ಯಕ್ತಿಗಳು ಗೊಂದಲಕ್ಕೆ ಸಿಲುಕುತ್ತಾರೆ. ಹಲವು ಸಂದರ್ಭಗಳಲ್ಲಿ ಇದು ಸ್ವತಂತ್ರವಾಗಿ ಕಾಣಿಸಬಹುದು, ಮತ್ತೆ ಕೆಲವು ಸಂದರ್ಭಗಳಲ್ಲಿ ಇತರ ಮನೋವೈಜ್ಞಾನಿಕ ಸ್ಥಿತಿಗಳೊಂದಿಗೆ ಕೂಡ ಬರುತ್ತದೆ. ಇದರಲ್ಲೇ ಪ್ರಮುಖವಾದುದು ಎಡಿಎಚ್ಡಿ - ವಿಶೇಷವಾಗಿ ಇನಟೆಂಟಿವ್ ಟೈಪ್. ಈ ಸ್ಥಿತಿಯಲ್ಲಿರುವವರು ಎಲ್ಲಾ ಕೆಲಸಗಳೂ ಒಂದೇ ತರಹ ತುರ್ತು ಅಥವಾ ಆತುರವಿಲ್ಲದಂತೆ ಕಾಣುವುದರಿಂದ ಆದ್ಯತೆ ಗುರುತಿಸಲು ಕಷ್ಟಪಡುವುದು ಸಾಮಾನ್ಯ. ಅವರ ಮೆದುಳಿನ ಡೋಪಮಿನ್ ವ್ಯವಸ್ಥೆಯ ವೈಶಿಷ್ಟ್ಯವೇ ಈ ಗೊಂದಲಕ್ಕೆ ಕಾರಣವಾಗಬಹುದು. ಮತ್ತೊಂದು ಪ್ರಮುಖ ಕಾರಣ ಆತಂಕ (Anxiety Disorders). ಆತಂಕ ಹೆಚ್ಚಾದಾಗ ‘‘ತಪ್ಪಾದ ನಿರ್ಧಾರ ಮಾಡಿದರೆ?’’ ಎಂಬ ಭಯ ಮನಸ್ಸನ್ನು ಹಿಡಿದಿಡುತ್ತದೆ. ಪರಿಣಾಮವಾಗಿ ನಿರ್ಧಾರದಾಳ್ವಿಕೆ ನಿಧಾನವಾಗುತ್ತದೆ, ಕೆಲವೊಮ್ಮೆ ನಿಲ್ಲುತ್ತದೆ. ಇದನ್ನು Decision Paralysis'$ ಎಂದು ಕರೆಯುತ್ತಾರೆ. ಖಿನ್ನತೆ ಕೂಡ ನಿರ್ಧಾರ ಸಾಮರ್ಥ್ಯವನ್ನು ಕಡಿಮೆ ಮಾಡಿ, ಎಲ್ಲ ಕೆಲಸಗಳೂ ಭಾರವಾಗಿರುವಂತೆ ತೋರ್ಪಡಿಸುತ್ತದೆ. ಏನು ಮಾಡಬೇಕು, ಏನು ಬಿಡಬೇಕು ಎಂಬುದನ್ನು ತಿಳಿಯುವುದೇ ಕಷ್ಟವಾಗುತ್ತದೆ. ಕೆಲವರಲ್ಲಿ ಒಸಿಡಿ ಲಕ್ಷಣಗಳು ಇದ್ದರೆ ನಿರಂತರ ಅನುಮಾನಗಳು, ಮರುಪರಿಶೀಲನೆಗಳು ನಿರ್ಧಾರ ಪ್ರಕ್ರಿಯೆಯನ್ನು ಅಸ್ತವ್ಯಸ್ತಗೊಳಿಸುತ್ತವೆ. ಮತ್ತೊಂದು ಗುಂಪಿನವರು ಬಾಲ್ಯದಿಂದ ಬಂದಿರುವ ಅತಿಯಾದ ಅನುಸರಣೆ ಅಥವಾ ತಾಳ್ಮೆಯ ವ್ಯಕ್ತಿತ್ವದಿಂದ ಇತರರ ಅಭಿಪ್ರಾಯಗಳ ಮೇಲೇ ನಿಂತು ನಿರ್ಧಾರ ಮಾಡುವುದಕ್ಕೆ ಅಭ್ಯಾಸವಾಗಿರುತ್ತದೆ. ಇದಕ್ಕೆ ವಿರುದ್ಧವಾಗಿ ಕೆಲವರು ವಿಶ್ಲೇಷಣಾ ಗೊಂದಲ (Analysis Paralysis) ಎಂಬ ಸ್ಥಿತಿಯಲ್ಲಿ ಸಿಲುಕುತ್ತಾರೆ. ಹೆಚ್ಚು ಮಾಹಿತಿಯೂ, ಹೆಚ್ಚು ಆಯ್ಕೆಗಳೂ ಇರುವ ಕಾಲದಲ್ಲಿ ಮೆದುಳು ತಾನೇ ಆಯ್ಕೆ ಮಾಡಲು ತಯಾರಾಗುವುದಿಲ್ಲ. ಒಟ್ಟಾರೆ ನಿರ್ಧಾರ ತೆಗೆದುಕೊಳ್ಳಲು ಆಗದಿರುವುದು ಮನಸ್ಸಿನ ಕಾರ್ಯವಿಧಾನ, ಭಾವಸ್ಥಿತಿ, ಮನೋವೈಜ್ಞಾನಿಕ ಒತ್ತಡಗಳು ಮತ್ತು ವ್ಯಕ್ತಿತ್ವ ಶೈಲಿಗಳ ಸಮೂಹ ಪರಿಣಾಮಗಳ ಮೇಲೆ ಅವಲಂಬಿತವಾಗಿರುತ್ತದೆ. ಸಹಾನುಭೂತಿಯಿಂದ, ಅರಿವಿನಿಂದ ಮತ್ತು ಸೂಕ್ತ ಮಾರ್ಗದರ್ಶನದಿಂದ ಈ ಸವಾಲನ್ನು ಸುಗಮವಾಗಿ ನಿಭಾಯಿಸಬಹುದು. ಸುಧಾರಣೆಗೆ ಕೆಲವು ಪರಿಣಾಮಕಾರಿ ಸಲಹೆಗಳೆಂದರೆ; 1. ಮೂರು ಪ್ರಶ್ನೆಗಳ ವಿಧಾನ: ‘‘ಇದು ನನಗೆ ಏಕೆ ಮುಖ್ಯ?’’, ‘‘ಪರಿಣಾಮವೇನು?’’, ‘‘ಇದನ್ನು ಈಗಲೇ ಮಾಡಬೇಕೆ?’’ ಈ ಮೂರು ಪ್ರಶ್ನೆಗಳು ನಿರ್ಧಾರಕ್ಕೆ ತಕ್ಷಣ ಸ್ಪಷ್ಟತೆ ತರುತ್ತವೆ. 2. ಟಾಪ್-3 ಎಂಬ ದಿನನಿತ್ಯ ನಿಯಮ: ಪ್ರತಿದಿನ ಅತ್ಯಂತ ಮುಖ್ಯವಾದ ಮೂರು ಕೆಲಸಗಳನ್ನು ಗುರುತು ಮಾಡಿ. ಉಳಿದವು ಪೂರಕ. 3. ಸನ್ಹೋವರ್ ಆದ್ಯತೆಗಳ ಚೌಕಟ್ಟು: ಇದರಲ್ಲಿ ಕೆಲಸಗಳನ್ನು ನಾಲ್ಕು ವಿಭಾಗಗಳಿಗೆ ಹಂಚಿಕೊಳ್ಳಬೇಕು: ತುರ್ತು ಮತ್ತು ಮುಖ್ಯ, ಮುಖ್ಯ ಆದರೆ ತುರ್ತು ಅಲ್ಲ, ತುರ್ತು ಆದರೆ ಮುಖ್ಯ ಅಲ್ಲ, ತುರ್ತು ಅಲ್ಲ ಮತ್ತು ಮುಖ್ಯವೂ ಅಲ್ಲ. ಇದರಿಂದ ಕೆಲಸಗಳ ಗೊಂದಲ ಮಾಯವಾಗುತ್ತದೆ. 4. ಎರಡು ನಿಮಿಷ ನಿಯಮ: ಎರಡು ನಿಮಿಷಗಳಲ್ಲಿ ಮಾಡುವ ಕೆಲಸಗಳನ್ನು ತಕ್ಷಣ ಪೂರ್ಣಗೊಳಿಸಿ. ಇದು ನಿರ್ಧಾರ ಭಾರವನ್ನು ಕಡಿಮೆ ಮಾಡುತ್ತದೆ. 5. ಮನಶ್ಶಾಂತಿ ಅಭ್ಯಾಸಗಳು: ಆಳವಾದ ಉಸಿರಾಟ, ಚಿಕ್ಕ ನಡಿಗೆ, 60 ಸೆಕೆಂಡ್ ವೌನ - ಇವು ನಿರ್ಧಾರ ಗುಣಮಟ್ಟವನ್ನು ತಕ್ಷಣ ಸುಧಾರಿಸುತ್ತವೆ. ಸರಿಯಾದ ನಿರ್ಧಾರ ಮತ್ತು ಆದ್ಯತೆಯ ಗುರುತಿಸುವ ಕೌಶಲ್ಯ ಯಶಸ್ಸು, ಸಮಾಧಾನ ಮತ್ತು ಸದೃಢ ಜೀವನಕ್ಕಾಗಿ ಅಗತ್ಯವಾದ ಎರಡು ಶಕ್ತಿಗಳು.

ವಾರ್ತಾ ಭಾರತಿ 14 Dec 2025 11:45 am

ಪೊಲೀಸ್ ಕರ್ತವ್ಯ ಲೋಪ ಕಾರಣ, ಸರಕಾರಕ್ಕೆ 4.56 ಕೋಟಿ ರೂ. ನಷ್ಟ

2024-2025ರಲ್ಲಿ ಗಣೇಶ ಹಬ್ಬ ಸಂದರ್ಭಗಳಲ್ಲಿ ಗಲಭೆ

ವಾರ್ತಾ ಭಾರತಿ 14 Dec 2025 11:37 am

ಅಪಾರ್ಟ್‌ಮೆಂಟ್ ಮಾಲೀಕತ್ವ ಕಾಯಿದೆಗೆ ಹೊಸ ರೂಪ: ಏನಿದು ಅಪಾರ್ಟ್‌ಮೆಂಟ್‌ ಮಸೂದೆ 2025? ಮಾಲೀಕರಿಗೆ ಪ್ರಯೋಜನಗಳೇನು?

ರಾಜ್ಯದ ಅಪಾರ್ಟ್‌ಮೆಂಟ್ ನಿವಾಸಿಗಳಿಗೆ ಭದ್ರತೆ ಮತ್ತು ಸ್ಪಷ್ಟತೆ ನೀಡುವ ಕರ್ನಾಟಕ ಅಪಾರ್ಟ್‌ಮೆಂಟ್ (ಮಾಲೀಕತ್ವ ಮತ್ತು ನಿರ್ವಹಣೆ) ವಿಧೇಯಕ 2025 ಶೀಘ್ರದಲ್ಲೇ ಜಾರಿಗೆ ಬರಲಿದೆ. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಪ್ರಕಾರ, ಈ ಮಸೂದೆಯು ಅಪಾರ್ಟ್‌ಮೆಂಟ್ ಮಾಲೀಕತ್ವ, ನಿರ್ವಹಣೆ ಮತ್ತು ವರ್ಗಾವಣೆಗೆ ಹೊಸ ಕಾನೂನು ಮಾರ್ಗಸೂಚಿಗಳನ್ನು ಒದಗಿಸಲಿದೆ. ನಿವಾಸಿಗಳ ಕಲ್ಯಾಣ ಸಂಘಗಳ ಬಲವರ್ಧನೆ, ಸಾಮಾನ್ಯ ಪ್ರದೇಶಗಳ ಸುಗಮ ನಿರ್ವಹಣೆ ಮತ್ತು ವಿವಾದಗಳ ಪರಿಹಾರಕ್ಕೆ ಇದು ಮಹತ್ವದ ಹೆಜ್ಜೆಯಾಗಲಿದೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಫಲಿತಾಂಶದ ನಂತರ ಈ ಮಸೂದೆಯ ಅಂತಿಮ ಅನುಮೋದನೆ ದೊರೆಯುವ ಸಾಧ್ಯತೆಗಳಿವೆ.

ವಿಜಯ ಕರ್ನಾಟಕ 14 Dec 2025 11:16 am

ಕರ್ನಾಟಕ ದ್ವೇಷ ಭಾಷಣ ವಿಧೇಯಕ: ಇದು ಜನರ ಧ್ವನಿ ಹತ್ತಿಕ್ಕುವ ಕಾಯ್ದೆ: ಕರವೇ ತೀವ್ರ ವಿರೋಧ

Karnataka Hate Speech Bill 2025: ಕರ್ನಾಟಕ ರಾಜ್ಯ ಸರ್ಕಾರ ಉದ್ಯೋಗಾಕಾಂಕ್ಷಿಗಳು, ರೈತರು, ವಿಪಕ್ಷ ನಾಯಕರ ಪ್ರತಿಭಟನೆ ಎದುರಿಸಿತ್ತು. ಇದೀಗ ಕನ್ನಡ ಪರ ಚಳವಳಿಗಾರರ ಪ್ರತಿಭಟನೆ ಎದುರಿಸಬೇಕಾದ ಅನಿವಾರ್ಯತೆ ಎದುರಾಗಿದೆ. ರಾಜ್ಯ ಸರ್ಕಾರ ಇತ್ತೀಚೆಗೆ ಸದನದಲ್ಲಿ ಮಂಡಿಸಿದ ಕರ್ನಾಟಕ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ (ಪ್ರತಿಬಂಧಕ) ವಿಧೇಯಕ 2025 ಈ ಕಾನೂನು ಅನ್ನು ಕರ್ನಾಟಕ ರಕ್ಷಣಾ

ಒನ್ ಇ೦ಡಿಯ 14 Dec 2025 11:10 am

VIJAYAPURA | ರೋಗಿ ಮೃತ್ಯು: ತಾಳಿಕೋಟೆ ಸರಕಾರಿ ಆಸ್ಪತ್ರೆಯ ವೈದ್ಯರ ನಿರ್ಲಕ್ಷ್ಯ ಆರೋಪ

ಮೃತರ ಕುಟುಂಬಸ್ಥರಿಂದ ಆಸ್ಪತ್ರೆ ಎದುರು ಪ್ರತಿಭಟನೆ

ವಾರ್ತಾ ಭಾರತಿ 14 Dec 2025 11:06 am

ಮಮತಾ ಬ್ಯಾನರ್ಜಿ ಬಂಧಿಸಿದರೆ 'ಮೆಸ್ಸಿ ಮೆಸ್‌' ಸತ್ಯ ಹೊರಬರುತ್ತದೆ ಎಂದ ಅಸ್ಸಾಂ ಸಿಎಂ ಹೀಮಂತ ಬಿಸ್ವಾ ಶರ್ಮಾ!

GOAT ಇಂಡಿಯಾ ಟೂರ್‌ ಕಾರ್ಯಕ್ರಮದಡಿ ಜಾಗತಿಕ ಫುಟ್ಬಾಲ್‌ ದಂತಕಥೆ ಲಿಯೋನೆಲ್‌ ಮೆಸ್ಸಿ ಭಾರತ ಪ್ರವಾಸದಲ್ಲಿದ್ದಾರೆ. ಈ ಮಧ್ಯೆ ಪಶ್ಚಿಮ ಬಂಗಾಳ ರಾಜಧಾನಿ ಕೋಲ್ಕತ್ತಾದಲ್ಲಿ ನಡೆದ ಕಾರ್ಯಕ್ರಮ ಗೊಂದಲದ ಗೂಡಾಗಿ ಮಾರ್ಪಟ್ಟಿದ್ದು, ಮೆಸ್ಸಿ ಅಭಿಮಾನಿಗಳ ಪ್ರತಿಭಟನೆ ಇದೀಗ ರಾಜಕೀಯ ಸ್ವರೂಪವನ್ನು ಪಡೆದುಕೊಂಡಿದೆ. ಘಟನೆಗೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನೂ ವಿಚಾರಣೆಗೆ ಗುರಿಡಪಸಬೇಕು ಎಂದು ಅಸ್ಸಾಂ ಮುಖ್ಯಮಂತ್ರಿ ಹೀಮಂತ ಬಿಸ್ವಾ ಶರ್ಮಾ ಒತ್ತಾಯಿಸಿದ್ದಾರೆ. ಇಲ್ಲಿದೆ ನೋಡಿ ಹೆಚ್ಚಿನ ಮಾಹಿತಿ.

ವಿಜಯ ಕರ್ನಾಟಕ 14 Dec 2025 11:03 am

3ನೇ ವಯಸ್ಸಿನಲ್ಲೇ ಎಪಿಜೆ ಅಬ್ದುಲ್ ಕಲಾಂರಿಂದ ಫೌಜಿ ಎಂದು ಕರೆಸಿಕೊಂಡಿದ್ದ ಬಾಲಕ 22ನೇ ವಯಸ್ಸಿನಲ್ಲೇ ಲೆಫ್ಟಿನೆಂಟ್!

3ನೇ ವಯಸ್ಸಿನಲ್ಲೇ ಎಪಿಜೆ ಅಬ್ದುಲ್ ಕಲಾಂರಿಂದ ಫೌಜಿ ಎಂದು ಕರೆಸಿಕೊಂಡಿದ್ದ ಬಾಲಕ 22ನೇ ವಯಸ್ಸಿನಲ್ಲೇ ಲೆಫ್ಟಿನೆಂಟ್! ಡೆಹ್ರಾಡೂನ್: ಸರಿಸುಮಾರು ಹತ್ತೊಂಭತ್ತು ವರ್ಷಗಳ ಹಿಂದೆ ಅಂದಿನ ರಾಷ್ಟ್ರಪತಿಯಾಗಿದ್ದ ಎಪಿಜೆ ಅಬ್ದುಲ್ ಕಲಾಂ ಅವರು ಮಿಲಿಟರಿ ಅಕಾಡಮಿಯ ಪಾಸಿಂಗ್ ಔಟ್ ಪರೇಡ್ನಲ್ಲಿ ತಂದೆಯ ಜತೆ ನಿಂತಿದ್ದ ಮೂರು ವರ್ಷದ, ಹೊಳೆಯುವ ಕಣ್ಣುಗಳ ಬಾಲಕನೊಬ್ಬನ ಕೈಹಿಡಿದು ಯೇ ಫೌಜಿ ಕಾ ಹಾಥ್ ಹೇ (ಇದು ಸೈನಿಕನ ಕೈ) ಎಂದು ಬಣ್ಣಿಸಿದ್ದರು. ಶನಿವಾರ ಇಂಥದ್ದೇ ಪರೇಡ್ನಲ್ಲಿ ಕಲಾಂ ಅವರ ಮಾತುಗಳು ಅಕ್ಷರಶಃ ನಿಜವಾಗಿರುವುದು ಎಲ್ಲರ ಗಮನ ಸೆಳೆಯಿತು. ಆ ಯುವಕ ಭಾರತೀಯ ಸೇನೆಗೆ ನಿಯೋಜನೆಗೊಂಡಿರುವುದಕ್ಕೆ ಇಡೀ ಮೈದಾನ ಸಾಕ್ಷಿಯಾಯಿತು. ಈ ಸ್ಫೂರ್ತಿದಾಯಕ ವಿಚಾರ ಲೆಫ್ಟಿನೆಂಟ್ ಹರ್ಮನ್ ಮೀತ್ ಸಿಂಗ್ ಅವರಿಗೆ ಸಂಬಂಧಿಸಿದ್ದು. ಲೆಫ್ಟಿನೆಂಟ್ ಹರ್ಮನ್ ಮೀತ್ ಸಿಂಗ್ ಅವರ ನಿಯೋಜನೆಯ ಮೂಲಕ ಭಾರತ ಸ್ವಾತಂತ್ರ್ಯ ಗಳಿಸಿದ ಆರಂಭಿಕ ದಿನಗಳಿಂದ ಸೇನೆಗೆ ಕೊಡುಗೆ ನೀಡುವ ಈ ಕುಟುಂಬದ ಸಂಪ್ರದಾಯ ಮುಂದುವರಿದಂತಾಗಿದೆ. ಈ ಕುಟುಂಬದಿಂದ ಹಸಿರು ಸಮವಸ್ತ್ರ ಧರಿಸಿದ ನಾಲ್ಕನೇ ಪೀಳಿಗೆಯ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಹರ್ಮನ್ ಮೀತ್ ಸಿಂಗ್ ಪಾತ್ರರಾದರು. ಹರ್ಮನ್ ಪ್ರೀತ್ ಅವರ ಮುತ್ತಜ್ಜ ದಿವಂಗತ ಸುಬೇದರ್ ಪ್ರತಾಪ್ ಸಿಂಗ್ 1948ರಲ್ಲಿ ಸೇನೆಗೆ ಸೇರಿದ್ದರು. ಬಳಿಕ ಹರ್ಮನ್ ಮೀತ್ ಅಜ್ಜ ದಿವಂಗತ ಸಿಪಾಯಿ ದಲ್ಜೀತ್ ಸಿಂಗ್ ಹಾಗೂ ಅವರ ಸಣ್ಣಜ್ಜ ಮೇಜರ್ ಭಗವಂತ್ ಸಿಂಗ್ ಹಾಗೂ ಕರ್ನಲ್ ಉಜಗರ್ ಸಿಂಗ್ ಈ ಪರಂಪರೆ ಮುಂದುವರಿಸಿದರು. ಕಾನ್ಪುರದಲ್ಲಿ ಜನಿಸಿದ ಹರ್ಮನ್ ಮೀತ್, ಮಿಲಿಟರಿ ಕಾಲೇಜ್ ಆಫ್ ಟೆಲಿಕಮ್ಯುನಿಕೇಶನ್ ಇಂಜಿನಿಯರಿಂಗ್ನ ಕೆಡೆಟ್ ಗಳ ತರಬೇತಿ ವಿಭಾಗದಲ್ಲಿ ಟೆಕ್ನಿಕಲ್ ಎಂಟ್ರಿ ಯೋಜನೆಯಡಿ ಬೆಳ್ಳಿಪದಕ ಗಳಿಸಿದರು. ಇವರು 6 ಮರಾಠಾ ಲೈಟ್ ಇನ್ ಫ್ಯಾಂಟ್ರಿಯಲ್ಲಿ ಸೇವೆ ಸಲ್ಲಿಸಲಿದ್ದು, ಈ ರೆಜಿಮೆಂಟ್ ನ ಕಮಾಂಡಿಂಗ್ ಅಧಿಕಾರಿಯಾಗಿ ಇವರ ತಂದೆ ಕರ್ನಲ್ ಹರ್ಮೀತ್ ಸಿಂಗ್ ಕೂಡಾ ಕಾರ್ಯ ನಿರ್ವಹಿಸಿದ್ದರು! ಕರ್ನಲ್ ಹರ್ಮೀತ್ ಸಿಂಗ್ ಮಿಲಿಟರಿ ಅಕಾಡಮಿಯಿಂದ 2000ನೇ ಇಸವಿಯ ಡಿಸೆಂಬರ್ 9ರಂದು ಅಂದರೆ ಮಗ ನಿಯೋಜನೆಯಾಗುವ ಸರಿಯಾಗಿ 25 ವರ್ಷ ಹಿಂದೆ ಪದವಿ ಪಡೆದಿದ್ದರು. ಸೇನೆಯು ಹರ್ಮನ್ ಮೀತ್ ಅವರ ಜಗತ್ತಿನ ಅವಿಭಾಜ್ಯ ಅಂಗವಾಗಿತ್ತು ಎಂದು ಅವರು ಬಣ್ಣಿಸಿದರು. ತಂದೆಯನ್ನು ಸಮವಸ್ತ್ರದಲ್ಲಿ ನೋಡುತ್ತಿದ್ದ ಹರ್ಮನ್ ಪ್ರೀತ್, ಸೇನೆಯ ಸಮವಸ್ತ್ರ ಹಾಗೂ ಬ್ಯಾಡ್ಜ್ ಗಳನ್ನು ಹೋಲುವ ದಿರಿಸನ್ನೇ ಧರಿಸುತ್ತಿದ್ದ. ಅದು ಆತನ ಫೇವರಿಟ್ ದಿರಿಸು. ಕಿಂಡರ್ ಗಾರ್ಟನ್ ನಲ್ಲಿ ಕಲಿಯುತ್ತಿದ್ದಾಗ ಮೂರನೇ ವಯಸ್ಸಿನಲ್ಲೇ ಶಿಕ್ಷಕರ ಬಳಿ ಜಂಟಲ್ ಮೆನ್ ಕೆಡೆಟ್ ಆಗುವ ಬಯಕೆ ವ್ಯಕ್ತಪಡಿಸಿದ್ದ ಎಂದು ಕರ್ನಲ್ ಹರ್ಮೀತ್ ಹೆಮ್ಮೆಯಿಂದ ಹೇಳಿದ್ದಾರೆ.

ವಾರ್ತಾ ಭಾರತಿ 14 Dec 2025 11:03 am

ಆಸ್ತಿಗಾಗಿ ತಂದೆ-ಮಲತಾಯಿಯನ್ನು ಕೊಲ್ಲಲು ಅಪ್ರಾಪ್ತರಿಗೆ ಸುಪಾರಿ ಕೊಟ್ಟ 18 ವರ್ಷದ ಹುಡುಗ ; ಮಧ್ಯಪ್ರದೇಶದಲ್ಲೊಂದು ಬೆಚ್ಚಿಬೀಳಿಸೋ ಕಥೆ

ಮಧ್ಯಪ್ರದೇಶದ ಅನುಪ್ಪುರದಲ್ಲಿ 18 ವರ್ಷದ ಯುವಕನೊಬ್ಬ ಆಸ್ತಿಗಾಗಿ ತನ್ನ ತಂದೆ ಮತ್ತು ಮಲತಾಯಿಯನ್ನು ಕೊಲ್ಲಲು ಅಪ್ರಾಪ್ತರಿಗೆ ಸುಪಾರಿ ನೀಡಿದ್ದಾನೆ. ಈ ಭೀಕರ ಕೃತ್ಯದಲ್ಲಿ ತಂದೆ ಮತ್ತು ಮನೆಯ ಕೆಲಸದಾಕೆ ಸಾವನ್ನಪ್ಪಿದ್ದು, ಮಲತಾಯಿ ಗಂಭೀರ ಗಾಯಗೊಂಡಿದ್ದಾಳೆ. ಆಸ್ತಿಯಲ್ಲಿ ತನ್ನ ಮಲಸಹೋದರನಿಂದಾಗಿ ತನಗೆ ಅನ್ಯಾಯವಾಗುತ್ತಿದೆ ಎಂಬ ಭಾವನೆಯಿಂದ ಈ ಕೃತ್ಯ ಎಸಗಲಾಗಿದ್ದು, ಹುಡುಗನ ದುಡುಕುತನ ಡಬಲ್‌ ಮರ್ಡರ್‌ ನಲ್ಲಿ ಅಂತ್ಯವಾಗಿದೆ.

ವಿಜಯ ಕರ್ನಾಟಕ 14 Dec 2025 11:00 am

ಶಚೀಂದ್ರನಾಥ್ ಸನ್ಯಾಲ್ : ಇವರಾರೂ ಕ್ಷಮೆ ಯಾಚಿಸಲಿಲ್ಲ!

ಕರಿನೀರಿನ ಕಠಿಣ ಶಿಕ್ಷೆ ಅನುಭವಿಸಿದ ಕ್ರಾಂತಿಕಾರಿಗಳು!

ವಾರ್ತಾ ಭಾರತಿ 14 Dec 2025 10:54 am

ನಾವು ಯುವಜನ ವಿರೋಧಿಯಲ್ಲ; ನೇಪಾಳ GEN-Z ಪ್ರತಿಭಟನೆ ಬಳಿಕ ಅಧಿಕಾರ ಕಳೆದುಕೊಂಡ ಕೆ.ಪಿ ಓಲಿ ಪಕ್ಷದ ಮೊದಲ ಸಮಾವೇಶ

ಭ್ರಷ್ಟಾಚಾರ ವಿರೋಧಿ ಪ್ರತಿಭಟನೆಯಿಂದ ಅಧಿಕಾರ ಕಳೆದುಕೊಂಡ ಮಾಜಿ ಪ್ರಧಾನಿ ಕೆ.ಪಿ. ಶರ್ಮಾ ಓಲಿ, ಮೂರು ತಿಂಗಳ ನಂತರ ಸಾವಿರಾರು ಬೆಂಬಲಿಗರೊಂದಿಗೆ ಬೃಹತ್ ರ‍್ಯಾಲಿ ನಡೆಸಿದ್ದಾರೆ. ಈ ವೇಳೆ ಮಧ್ಯಂರತ ಸರ್ಕಾರ ಕೈಗೊಂಡ ಸಂಸತ್ತಿನ ವಿಸರ್ಜನೆ ಸಂವಿಧಾನಬಾಹಿರ ಎಂದು ಹೇಳಿ, ಪುನಃಸ್ಥಾಪನೆಗೆ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿರುವ ಬಗ್ಗೆ ತಿಳಿಸಿದ್ದಾರೆ. ಇದು ನೇಪಾಳದಲ್ಲೇ ಈವರೆಗೂ ನಡೆದ ಅತಿದೊಡ್ಡ ಸಮಾವೇಶ ಎಂದು ಹೇಳಲಾಗುತ್ತಿದ್ದು, ಇದು ಕೇವಲ ರಾಜಕೀಯ ಪ್ರದರ್ಶನವಾಗಿರದೆ ತಮ್ಮ ಮೇಲೆ ನೇಪಾಳದ ಜನ ಅದರಲ್ಲೂ ಪ್ರಮುಖವಾಗಿ ಯುವಜನತೆಯ ವಿಶ್ವಾಸ ಗಳಿಸಲು ರಣತಂತ್ರವಾಗಿದೆ.

ವಿಜಯ ಕರ್ನಾಟಕ 14 Dec 2025 10:11 am

ವಾರ್ನ್‌ ಮಾಡಿದವರಿಗೆ ಮನವಿ ಮಾಡುವುದು ಹೇಗೆಂದು ತಿಳಿಸಿಕೊಟ್ಟ ಡಿಕೆ ಶಿವಕುಮಾರ್;‌ ಅಪಾರ್ಟ್‌ಮೆಂಟ್‌ ಸಂವಾದ Explained

ನಾನು ದೇಶದ ಪ್ರಧಾನಮಂತ್ರಿ ಮತ್ತು ಗೃಹ ಸಚಿವರಿಗೂ ಹೆದರದೆ ಜೈಲಿಗೆ ಹೋಗಿ ಬಂದವನು. ಯಾರೋ ಒಬ್ಬ ಕಿರಣ್‌ ಹೆಬ್ಬಾರ್‌ ಎಚ್ಚರಿಕೆ ನೀಡಿದ ಮಾತ್ರಕ್ಕೆ ಹೆದರಿಕೊಳ್ಳುವ ವ್ಯಕ್ತಿ ಅಲ್ಲ. ಪ್ರೀತಿ ತೋರಿದರೆ ಪ್ರತಿಯಾಗಿ ಪ್ರೀತಿಯೇ ತೋರಲಾಗುವುದು ಇದು ಬೆಂಗಳೂರು ಅಪರಾಟ್‌ಮೆಂಟ್‌ ಫೆಡರೇಶನ್‌ ಆಯೋಜಿಸಿದ್ದ ಸಂವಾಧ ಕಾರ್ಯಕ್ರಮದಲ್ಲಿ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ಆಡಿದ ನೇರ ಮಾತು. ಡಿಕೆಶಿ ಅವರ ಹೇಳಿಕೆ ಬಗ್ಗೆ ಫಡರೇಶನ್‌ ಸದಸ್ಯರು ಏನು ಹೇಳುತ್ತಾರೆ? ಈ ಲೇಖನದಲ್ಲಿ ತಿಳಿಯೋಣ ಬನ್ನಿ.

ವಿಜಯ ಕರ್ನಾಟಕ 14 Dec 2025 10:06 am

ಬೆಂಗಳೂರು ಸೇರಿ ದಕ್ಷಿಣ ಕರ್ನಾಟಕದ ಜಿಲ್ಲೆಗಳಲ್ಲೂ ಬಾಲ್ಯ ವಿವಾಹಗಳ ಹೆಚ್ಚಳ: ಕಳೆದ 3 ವರ್ಷಗಳಲ್ಲಿ 2 ಸಾವಿರಕ್ಕೂ ಹೆಚ್ಚು ಬಾಲ್ಯವಿವಾಹ

ತಂತ್ರಜ್ಞಾನದ ಬೆಳವಣಿಗೆಯ ನಡುವೆಯೂ ಕರ್ನಾಟಕದಲ್ಲಿ ಬಾಲ್ಯ ವಿವಾಹದ ಪಿಡುಗು ಆತಂಕಕಾರಿಯಾಗಿದೆ. ಕಳೆದ ಮೂರು ವರ್ಷಗಳಲ್ಲಿ 8,355 ವಿವಾಹ ಯತ್ನಗಳು, 2,198 ಯಶಸ್ವಿ ವಿವಾಹಗಳು ನಡೆದಿರುವುದು ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಇದರ ವ್ಯಾಪಕತೆಯನ್ನು ತೋರಿಸುತ್ತದೆ. ಬಡತನ ಮತ್ತು ಸಾಮಾಜಿಕ ಒತ್ತಡಗಳು ಇದಕ್ಕೆ ಪ್ರಮುಖ ಕಾರಣಗಳಾಗಿವೆ. ಈ ಅನಿಷ್ಟ ಪದ್ಧತಿಯನ್ನು ತಡೆಯಲು ಸರ್ಕಾರವು ಗ್ರಾಮ ಪಂಚಾಯತ್‌ಗಳಲ್ಲಿ ಮಕ್ಕಳ ಹಕ್ಕುಗಳ ರಕ್ಷಣಾ ಸಮಿತಿಗಳನ್ನು ರಚಿಸುವಂತಹ ಮಹತ್ವದ ಹೆಜ್ಜೆ ಇಟ್ಟಿದೆ.

ವಿಜಯ ಕರ್ನಾಟಕ 14 Dec 2025 10:03 am

ಬೀದರ್ : ಕಬ್ಬು ಪೂರೈಸಿದ ರೈತರಿಗೆ ಬಿಲ್‌ ಹಣ ಪಾವತಿಗೂ ಹೋರಾಟ ಮಾಡುವ ದುಸ್ಥಿತಿ

ಬೀದರ್ ಜಿಲ್ಲೆಯ ಕಬ್ಬು ಬೆಳೆಗಾರರು ಸಂಕಷ್ಟದಲ್ಲಿದ್ದಾರೆ. ಕಾರ್ಖಾನೆಗಳು ಕಬ್ಬು ನುರಿಸುವ ಹಂಗಾಮು ಆರಂಭಿಸಿ ಒಂದು ತಿಂಗಳಾದರೂ ರೈತರಿಗೆ ಬಿಲ್ ಹಣ ಪಾವತಿಸಿಲ್ಲ. ರಾಜ್ಯ ಸರ್ಕಾರ ಪ್ರತಿ ಟನ್‌ಗೆ 3300 ರೂ. ದರ ನಿಗದಿಪಡಿಸಿದ್ದರೂ, ಬೀದರ್‌ನಲ್ಲಿ 2950 ರೂ. ದರ ನಿಗದಿಯಾಗಿದೆ. ಆದರೂ ಹಣ ಪಾವತಿಯಾಗದೆ ರೈತರು ಕಂಗಾಲಾಗಿದ್ದಾರೆ. ಜಿಲ್ಲಾಡಳಿತ ಮಧ್ಯಪ್ರವೇಶಿಸಿ ರೈತರ ಸಮಸ್ಯೆ ಬಗೆಹರಿಸಬೇಕಿದೆ.

ವಿಜಯ ಕರ್ನಾಟಕ 14 Dec 2025 9:52 am

2018 ರ ಕೊಡಗು ಜಲಪ್ರಳಯ: ಸಂತ್ರಸ್ತರಿಗಿಲ್ಲ ಸೂರು ಗ್ಯಾರಂಟಿ

2018ರ ಭೀಕರ ಪ್ರವಾಹದಲ್ಲಿ ಮನೆ ಕಳೆದುಕೊಂಡ ಕೊಡಗು ಜಿಲ್ಲೆಯ ಸುಮಾರು 250 ಕುಟುಂಬಗಳಿಗೆ 6 ವರ್ಷ ಕಳೆದರೂ ಸೂರಿನ ಭರವಸೆ ಸಿಕ್ಕಿಲ್ಲ. ಬಿಜೆಪಿ ಹಾಗೂ ಕಾಂಗ್ರೆಸ್ ಸರ್ಕಾರಗಳು ಅಧಿಕಾರಕ್ಕೆ ಬಂದರೂ, ನಿರಾಶ್ರಿತರ ಗೋಳು ಕೇಳುವವರಿಲ್ಲ. ಗುರುತಿಸಲಾದ ಜಾಗದಲ್ಲೂ ಮನೆ ನಿರ್ಮಾಣ ಕಾಮಗಾರಿ ವಿಳಂಬವಾಗಿದ್ದು, ಸಂತ್ರಸ್ತರು ಗುಡಿಸಲುಗಳಲ್ಲಿ ಜೀವನ ಸಾಗಿಸುತ್ತಿದ್ದಾರೆ.

ವಿಜಯ ಕರ್ನಾಟಕ 14 Dec 2025 9:39 am

Earthquake: ದಾವಣಗೆರೆ, ವಿಜಯನಗರ ಹಾಗೂ ಚಿತ್ರದುರ್ಗ ಜಿಲ್ಲೆಯಲ್ಲಿ ಭೂಕಂಪದ ಅನುಭವ: ಬೆದರಿದ ಜನ

Earthquake: ರಾಜ್ಯದಲ್ಲಿ ಅತೀ ಹೆಚ್ಚು ಭೂಕಂನಕ್ಕೆ ಒಳಗಾಗಿರುವ ಜಿಲ್ಲೆ ಅಂದ್ರೆ ಅದು ವಿಜಯಪುರ. ಆದರೆ, ಇದೀಗ ಡಿಸೆಂಬರ್ 13ರ ಶನಿವಾರ ಸಂಜೆ ವಿಜಯನಗರ, ದಾವಣಗೆರೆ ಹಾಗೂ ಚಿತ್ರದುರ್ಗ ಜಿಲ್ಲೆಯ ಹಲವೆಡೆ ಭೂಕಂಪನದ ಅನುಭವ ಆಗಿರುವ ಘಟನೆ ನಡೆದಿದೆ. ಹಾಗಾದ್ರೆ, ಯಾವ್ಯಾವ ಭಾಗಗಳಲ್ಲಿ ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ. ದಾವಣಗೆರೆ ಜಿಲ್ಲೆಯ ಜಗಳೂರ ತಾಲ್ಲೂಕಿನ ಕೆಲವು

ಒನ್ ಇ೦ಡಿಯ 14 Dec 2025 9:24 am

Vande Bharat Sleeper Express: ವಂದೇ ಭಾರತ್ ಸ್ಲೀಪರ್ ರೈಲು ಕಾರ್ಯಾಚರಣೆಗೆ ಸಜ್ಜು, ಟಿಕೆಟ್ ದರ, ವೇಳಾಪಟ್ಟಿ

Sleeper Vande Bharat Express: ಭಾರತೀಯ ರೈಲ್ವೆ ಇಲಾಖೆಯು ದೇಶದ ಮೊದಲ ವಂದೇ ಭಾರತ್ ಎಕ್ಸ್‌ಪ್ರೆಸ್ ಸ್ಲೀಪರ್ ರೈಲು (Vande Bharat Express Sleeper Train) ಕಾರ್ಯಾಚರಣೆ ಆರಂಭಕ್ಕೆ ಸಜ್ಜಾಗಿದೆ. ಇದು ವಂದೇ ಭಾರತ್ ರೈಲಿನ ರೂಪಾಂತರದ ರೈಲಾಗಿದೆ. ರಾಷ್ಟ್ರ ರಾಜಧಾನಿ ದೆಹಲಿಯಿಂದ ಪಾಟ್ನಾ ನಗರದವರೆಗೆ ತನ್ನ ಮೊದಲ ಸೇವೆ ನೀಡುವ ಬಗ್ಗೆ ಇಲಾಖೆ ಅಪ್ಡೇಟ್ ನೀಡಿದೆ.

ಒನ್ ಇ೦ಡಿಯ 14 Dec 2025 9:13 am

45ಕ್ಕಿಂತ ಕೆಳ ವಯಸ್ಸಿನವರನ್ನು ಬಲಿ ಪಡೆಯುತ್ತಿರುವ ಹೃದ್ರೋಗ: ಅಧ್ಯಯನ ವರದಿ

ಹೊಸದಿಲ್ಲಿ: ದಿಢೀರ(Sudden death)ನೇ ಸಾವಿಗೀಡಾಗುವ ಪ್ರಕರಣಗಳು ಇದೀಗ ವಯೋವೃದ್ಧರಿಗೆ ಮಾತ್ರ ಸೀಮಿತವಾಗಿಲ್ಲ. ಅಖಿಲ ಭಾರತೀಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಎಐಐಎಂಎಸ್)ಯ ಅಧ್ಯಯನದ ಪ್ರಕಾರ, ಕಳೆದ ಒಂದು ವರ್ಷದಲ್ಲಿ ಸಂಭವಿಸಿದ 45 ವರ್ಷಕ್ಕಿಂತ ಕೆಳ ವಯಸ್ಸಿನವರ ದಿಢೀರ್ ಸಾವಿನ ಪ್ರಕರಣಗಳ ಪೈಕಿ ಅರ್ಧಕ್ಕೂ ಹೆಚ್ಚು ಮಂದಿ ಹೃದ್ರೋಗದಿಂದ ಕೊನೆಯುಸಿರೆಳೆದಿದ್ದಾರೆ. ಮೇಲ್ನೋಟಕ್ಕೆ ಆರೋಗ್ಯವಂತರಂತೆ ಕಂಡುಬರುವ ಇಂಥವರು ಯಾವುದೇ ಪೂರ್ವಸೂಚನೆ ಇಲ್ಲದೇ ಮನೆ ಅಥವಾ ಪ್ರಯಾಣದ ವೇಳೆ ದಿಢೀರ್ ಕುಸಿದು ಬಿದ್ದು ಸಾವನ್ನಪ್ಪುತ್ತಿದ್ದಾರೆ ಎಂದು ಅಧ್ಯಯನ ದೃಢಪಡಿಸಿದೆ. ಇಂಡಿಯನ್ ಜರ್ನಲ್ ಆಫ್ ಮೆಡಿಕಲ್ ರೀಸರ್ಚ್ ನಿಯತಕಾಲಿಕದಲ್ಲಿ ಈ ಅಧ್ಯಯನ ವರದಿ ಪ್ರಕಟವಾಗಿದ್ದು, ಭಾರತೀಯ ವೈದ್ಯಕೀಯ ಸಂಶೋಧನೆಗಳ ಮಂಡಳಿ(ICMR)ಯ ಯೋಜನೆಯಡಿ 2023ರ ಮೇ ತಿಂಗಳಿನಿಂದ 2024ರ ಎಪ್ರಿಲ್ ವರೆಗಿನ ಪ್ರಕರಣಗಳನ್ನು ವಿಶ್ಲೇಷಿಸಲಾಗಿದೆ. ಹೊಸದಿಲ್ಲಿಯ ಏಮ್ಸ್ ರೋಗನಿರ್ಣಯ ಶಾಸ್ತ್ರ ಮತ್ತು ವಿಧಿವಿಜ್ಞಾನ ವೈದ್ಯಕೀಯ ವಿಭಾಗಗಳು ಈ ಅಧ್ಯಯನ ಕೈಗೊಂಡಿವೆ. ವಿಶ್ಲೇಷಣೆಗೆ ಒಳಪಟ್ಟ 2214 ಅಟಾಪ್ಸಿಗಳ ಪೈಕಿ 180 ಪ್ರಕರಣಗಳು ಅಂದರೆ ಶೇಕಡ 8.1ರಷ್ಟು ಪ್ರಕರಣಗಳು ದಿಢೀರ್ ಸಾವಿನ ಪ್ರಕರಣಗಳಾಗಿವೆ. ಇದರಲ್ಲಿ 103 ಮಂದಿ ಅಂದರೆ ಶೇಕಡ 57.2ರಷ್ಟು ಮಂದಿ 18-45 ವಯೋಮಿತಿಯವರು. ಸರಾಸರಿ 33.6ರ ವಯಸ್ಸಿನಲ್ಲಿ ಈ ಸಾವು ಸಂಭವಿಸುತ್ತಿದ್ದು, ಪುರುಷರೇ ಅಧಿಕ. ಹೃದ್ರೋಗ ಸಾವಿಗೆ ಪ್ರಮುಖ ಕಾರಣವಾಗಿದೆ. ಅಧ್ಯಯನ ತಂಡದ ಮುಖ್ಯಸ್ಥ, ಏಮ್ಸ್ ವಿಧಿವಿಜ್ಞಾನ ವೈದ್ಯಕೀಯ ವಿಭಾಗದ ಡಾ.ಸುಧೀರ್ ಗುಪ್ತಾ ಅವರ ಪ್ರಕಾರ, ಯುವಕರ ದಿಢೀರ್ ಸಾವಿನ ಪ್ರಕರಣಗಳಲ್ಲಿ ಶೇಕಡ 42.6ರಷ್ಟು ಹೃದ್ರೋಗಕ್ಕೆ ಸಂಬಂಧಿಸಿವೆ. ಬಹುತೇಕ ಯುವಕರು ಹೃದಯನಾಳ ರೋಗದಿಂದ ಬಳಲುತ್ತಿದ್ದರು. ಸಾಮಾನ್ಯವಾಗಿ ಮೊದಲು ಯಾವುದೇ ರೋಗಲಕ್ಷಣ ಕಾಣಿಸುತ್ತಿಲ್ಲ ಹಾಗೂ ಮಾರಣಾಂತಿಕ ಹೃದ್ರೋಗ ನಿಶ್ಶಬ್ದವಾಗಿಯೇ ಬೆಳೆಯುತ್ತಿದೆ. ನ್ಯುಮೋನಿಯಾ, ಕ್ಷಯದಂಥ ಉಸಿರಾಟದ ತೊಂದರೆಗಳು ಶೇಕಡ 20ರಷ್ಟು ಸಾವಿಗೆ ಕಾರಣವಾಗುತ್ತಿವೆ. ವಿವರವಾದ ಇಮೇಜಿಂಗ್, ಸಂಪೂರ್ಣ ಅಟಾಪ್ಸಿ ಮತ್ತು ಮೈಕ್ರೋಸ್ಕೋಪಿಕ್ ಪರೀಕ್ಷೆಯ ಹೊರತಾಗಿಯೂ ಶೇಕಡ 20ಕ್ಕಿಂತ ಅಧಿಕ ಸಾವಿನ ಪ್ರಕರಣಗಳಿಗೆ ಕಾರಣ ನಿಖರವಾಗಿ ತಿಳಿದುಬಂದಿಲ್ಲ. ಈ ಋಣಾತ್ಮಕ ಅಟಾಪ್ಸಿ ಪ್ರಕರಣಗಳು ಗುಪ್ತ ಇಲೆಕ್ಟ್ರಾನಿಕ್ ಅಥವಾ ವಂಶಪಾರಂಪರ್ಯ ಹೃದಯ ಸಮಸ್ಯೆಗಳಿಂದ ಸಂಭವಿಸಿರಬಹುದು ಎಂದು ಅಂದಾಜಿಸಲಾಗಿದೆ.

ವಾರ್ತಾ ಭಾರತಿ 14 Dec 2025 8:51 am

ಮಕ್ಕಳ ಮೇಲಿನ ದೌರ್ಜನ್ಯ ತಡೆಗೆ ಜನಜಾಗೃತಿ ಹೆಚ್ಚಿದರೂ ನಿಲ್ಲುತ್ತಿಲ್ಲ ಪೋಕ್ಸೋ ಪ್ರಕರಣ

ಚಿಕ್ಕಬಳ್ಳಾಪುರದಲ್ಲಿ ಪೋಕ್ಸೊ ಕಾಯಿದೆ ಬಲವಾಗಿದ್ದರೂ, ಯುವಕರು ಪ್ರೀತಿಗೆ ಬಲಿಯಾಗಿ ಜೈಲು ಸೇರುತ್ತಿದ್ದಾರೆ. ಜಿಲ್ಲಾ ಕಾರಾಗೃಹದಲ್ಲಿ ಪೋಕ್ಸೊ ಪ್ರಕರಣಗಳ ಕೈದಿಗಳ ಸಂಖ್ಯೆ ಹೆಚ್ಚಾಗಿದೆ. 18 ವರ್ಷದೊಳಗಿನ ಬಾಲಕಿಯರೊಂದಿಗೆ ಸಂಬಂಧ ಬೆಳೆಸಿ, ಕಾನೂನಿನ ಅರಿವಿದ್ದರೂ ಯುವಕರು ತಪ್ಪು ಮಾಡುತ್ತಿದ್ದಾರೆ. 2022 ರಿಂದ 635ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಬಡತನ, ನಿರ್ಲಕ್ಷ್ಯ, ಅರಿವಿನ ಕೊರತೆ ಕಾರಣವಾಗಿದೆ. ಇದು ಸಮಾಜಕ್ಕೆ ದೊಡ್ಡ ಸವಾಲಾಗಿದೆ.

ವಿಜಯ ಕರ್ನಾಟಕ 14 Dec 2025 8:36 am

ಡಿಸೆಂಬರ್ 14ರಂದು ರಾಜ್ಯದಲ್ಲಿ ಪೆಟ್ರೋಲ್‌, ಡೀಸೆಲ್‌ ದರ ಎಷ್ಟಿದೆ?: ಜಿಲ್ಲಾವರು ಅಂಕಿಅಂಶಗಳ ವಿವರ

Petrol, Diesel Price: ಪೆಟ್ರೋಲ್, ಡೀಸೆಲ್‌ ದರಲ್ಲಿ ಜಾಸ್ತಿ ಅಲ್ಲದಿದ್ದರೂ, ಸ್ವಲ್ಪ ಪ್ರಮಾಣದಲ್ಲಾದ್ರೂ ಏರಿಳಿತ ಆಗುತ್ತಿರುತ್ತದೆ. ಹಾಗಾದರೆ, ಇಂದು (ಡಿಸೆಂಬರ್ 14) ಬೆಂಗಳೂರು ಸೇರಿದಂತೆ ರಾಜ್ಯದ ಉಳಿದ ಜಿಲ್ಲೆಗಳಲ್ಲಿ ಲೀಟರ್‌ ಪೆಟ್ರೋಲ್‌, ಡೀಸೆಲ್‌ ಬೆಲೆ ಎಷ್ಟಿದೆ ಎನ್ನುವ ಅಂಕಿಅಂಶಗಳನ್ನು ಇಲ್ಲಿ ನೀಡಲಾಗಿದೆ ಕಣ್ಣಾಡಿಸಿ. ಶಕ್ತಿಯ ಮೂಲ ಎನಿಸಿಕೊಂಡಿರುವ ಪೆಟ್ರೋಲ್ ಮತ್ತು ಡೀಸೆಲ್ ಇಂಧನ ಅತ್ಯವಶ್ಯಕವಾಗಿ ಬೇಕಾಗುವ ಸಂಪನ್ಮೂಲಗಳಲ್ಲಿ

ಒನ್ ಇ೦ಡಿಯ 14 Dec 2025 8:35 am

GOAT TOUR | ತೆಲಂಗಾಣ ಸಿಎಂ ಜೊತೆ ಫುಟ್ಬಾಲ್ ಆಡಿದ ಮೆಸ್ಸಿ: ವೀಡಿಯೊ ವೈರಲ್

ಹೈದರಾಬಾದ್: ಮೂರು ದಿನಗಳ ಭಾರತ ಪ್ರವಾಸಕ್ಕೆ ಆಗಮಿಸಿರುವ ಫುಟ್ಬಾಲ್ ಮಾಂತ್ರಿಕ ಲಿಯೊನೆಲ್ ಮೆಸ್ಸಿ, ಕೊಲ್ಕತ್ತಾದಲ್ಲಿ ನಡೆದ ಅಹಿತಕರ ಘಟನೆಯ ಬೆನ್ನಲ್ಲೇ ಹೈದರಾಬಾದ್ ನಲ್ಲಿ GOAT CUP ಪ್ರದರ್ಶನ ಪಂದ್ಯದಲ್ಲಿ ಪಾಲ್ಗೊಂಡಿದ್ದು, ಅಭಿಮಾನಿಗಳಲ್ಲಿ ರೋಮಾಂಚನ ಮೂಡಿಸಿದರು. ಶನಿವಾರ ಸಂಜೆ ನಗರಕ್ಕೆ ಆಗಮಿಸಿದ ಮೆಸ್ಸಿ, 7:55ರ ಸುಮಾರಿಗೆ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಸ್ಟೇಡಿಯಂಗೆ ಬಂದರು. ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಜೊತೆ ಫುಟ್ಬಾಲ್ ಆಡಿದ ಅರ್ಜೆಂಟೀನಾ ಐಕಾನ್, ನಿರಾಯಾಸ ಗೋಲು ಕೂಡಾ ಗಳಿಸಿದರು. ಈ ಆಟದ ವೀಡಿಯೊ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇದಕ್ಕೂ ಮೊದಲು ಕೊಲ್ಕತ್ತಾದ ಸಾಲ್ಟ್ ಲೇಕ್ ಸ್ಟೇಡಿಯಂನಲ್ಲಿ 50 ಸಾವಿರಕ್ಕೂ ಹೆಚ್ಚು ಅಭಿಮಾನಿಗಳು ಜಮಾಯಿಸಿದ್ದರು. ರಾಜಕಾರಣಿಗಳು, ವಿವಿಐಪಿಗಳು, ಭದ್ರತಾ ಸಿಬ್ಬಂದಿ ಸೇರಿದ್ದ ಜನಸಮೂಹ ನಿಯಂತ್ರಿಸುವ ಪ್ರಯತ್ನ ಮಾಡುವ ಬದಲು ಸೆಲ್ಫಿಗೆ ಮುಗಿ ಬಿದ್ದದ್ದು ಅವ್ಯವಸ್ಥೆಗೆ ಕಾರಣವಾಗಿತ್ತು. ಆದರೆ ಹೈದ್ರಾಬಾದ್ ಚಿತ್ರಣ ಸಂಪೂರ್ಣ ಭಿನ್ನವಾಗಿತ್ತು. ಬಿಗಿ ಭದ್ರತೆ ನಡುವೆ ಮೆಸ್ಸಿ ಆಗಮಿಸುತ್ತಿದ್ದಂತೆ ದೊಡ್ಡ ಸಂಖ್ಯೆಯಲ್ಲಿ ಸೇರಿದ್ದ ಅಭಿಮಾನಿಗಳ ಹರ್ಷೋದ್ಗಾರ ಮುಗಿಲು ಮುಟ್ಟಿತು. ಮೆಸ್ಸಿ ಜತೆ ಭಾರತಕ್ಕೆ ಆಗಮಿಸಿದ್ದ ಲೂಯಿಸ್ ಸೌರಝ್ ಮತ್ತು ರೋಡ್ರಿಗೊ ಡೆ ಪಾಲ್ ಆಟಗಾರರ ಜತೆ ಸೇರಿದರು. ತೆಲಂಗಾಣ ಸಿಎಂ ರೆಡ್ಡಿಯವರನ್ನು ಭೇಟಿ ಮಾಡಿದ ಮೆಸ್ಸಿ ಪ್ರದರ್ಶನ ಪಂದ್ಯದಲ್ಲಿ ರೆಡ್ಡಿ ಜತೆ ಕೆಲ ಪಾಸ್ ಗಳನ್ನು ಆಡಿ ಚೆಂಡನ್ನು ನೆಟ್ ಸೇರಿಸಿ ಅಭಿಮಾನಿಗಳಲ್ಲಿ ರೋಮಾಂಚನ ಮೂಡಿಸಿದರು.

ವಾರ್ತಾ ಭಾರತಿ 14 Dec 2025 8:18 am

ಅಮರಿಕ | ಬ್ರೌನ್ ವಿವಿಯಲ್ಲಿ ಗುಂಡಿನ ದಾಳಿ ಇಬ್ಬರು ಮೃತ್ಯು; ಎಂಟು ಮಂದಿ ಗಂಭೀರ

ರೋಡ್ಸ್ ಐಲ್ಯಾಂಡ್, ಅಮೆರಿಕ: ಪ್ರಖ್ಯಾತ ಬ್ರೌನ್ ವಿಶ್ವವಿದ್ಯಾನಿಲಯದ ಆವರಣದಲ್ಲಿ ಶನಿವಾರ ನಡೆದ ಗುಂಡಿನ ದಾಳಿಯಲ್ಲಿ ಇಬ್ಬರು ಮೃತಪಟ್ಟಿದ್ದು, ಕನಿಷ್ಠ ಎಂಟು ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ. ಪೊಲೀಸ್ ಅಧಿಕಾರಿಗಳು ಕ್ಯಾಂಪಸ್ಗೆ ಧಾವಿಸಿದ್ದು, ದಾಳಿಕೋರನ ಬಂಧನಕ್ಕೆ ಬಲೆ ಬೀಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ಶಂಕಿತ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಆರಂಭದಲ್ಲಿ ಅಧಿಕಾರಿಗಳು ಹೇಳಿಕೆ ನೀಡಿದ್ದರು. ಆದರೆ ಯಾವುದೇ ಬಂಧನ ನಡೆದಿಲ್ಲ ಎಂದು ಆ ಬಳಿಕ ಸ್ಪಷ್ಟನೆ ನೀಡಿದ್ದಾರೆ. ಇಂದು ಸಂಜೆ ಸಂಭವಿಸಿದ ಪ್ರಕರಣದಲ್ಲಿ ಇಬ್ಬರು ಮೃತಪಟ್ಟಿದ್ದು, ಇತರ ಎಂಟು ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ ಎಂದು ದೃಢಪಡಿಸುತ್ತಿದ್ದೇನೆ ಎಂದು ರೋಡ್ಸ್ ಐಲ್ಯಾಂಡ್ ಪ್ರಾವಿಡೆನ್ಸ್ ಮೇಯರ್ ಬ್ರೆಟ್ ಸ್ಮೈಲಿ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ. ಘಟನೆಯ ಬೆನ್ನಲ್ಲೇ ವಿಶ್ವವಿದ್ಯಾನಿಲಯದಲ್ಲಿ ಲಾಕ್ ಡೌನ್ ಘೋಷಿಸಲಾಗಿದ್ದು, ಹಂತಕ ಬರೂಸ್ ಮತ್ತು ಹೋಲಿ ಇಂಜಿನಿಯರಿಂಗ್ ಕಟ್ಟಡದ ಬಳಿ ಇರುವ ಸಾಧ್ಯತೆ ಇದೆ ಎಂದು ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಗೆ ಮುನ್ನೆಚ್ಚರಿಕೆ ನೀಡಲಾಗಿದೆ. ಘಟನೆಯಲ್ಲಿ ಹಲವು ಮಂದಿ ಗಾಯಗೊಂಡಿರುವುದನ್ನು ಪ್ರಾವಿಡೆನ್ಸ್ ಪೊಲೀಸರು ದೃಢಪಡಿಸಿದ್ದಾರೆ ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ. ಸಂಜೆ 4:15ರ ಸುಮಾರಿಗೆ ವಿವಿ ಭದ್ರತಾ ಅಧಿಕಾರಿಗಳು ಪ್ರತಿಯೊಬ್ಬರೂ ಬಾಗಿಲುಗಳನ್ನು ಮುಚ್ಚಿಕೊಂಡು ಇರುವಂತೆ ಹಾಗೂ ಫೋನ್ಗಳನ್ನು ನಿಶ್ಶಬ್ದವಾಗಿ ಇರಿಸಿಕೊಳ್ಳುವಂತೆ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ. ಮುಂದಿನ ಮಾಹಿತಿ ಬರುವವರೆಗೂ ಕೊಠಡಿಗಳಲ್ಲೇ ಅವಿತುಕೊಂಡು ಇರುವಂತೆ ಸಲಹೆ ಮಾಡಿದ್ದಾರೆ. ಶಂಕಿತ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಸಂಜೆ 5 ಗಂಟೆಗೆ ಮಾಹಿತಿ ನೀಡಿದರೂ, ಅದಾದ ಸ್ವಲ್ಪ ಹೊತ್ತಿನಲ್ಲೇ ಯಾವುದೇ ಬಂಧನ ನಡೆದಿಲ್ಲ ಎಂದು ಸ್ಪಷ್ಟನೆ ನೀಡಿದೆ. ಕೊನೆಯ ಪ್ರಯತ್ನವಾಗಿ ನಿಮ್ಮನ್ನು ರಕ್ಷಿಸಿಕೊಳ್ಳಲು ಕ್ರಮ ಕೈಗೊಳ್ಳಿ ಎಂದು ಸಂದೇಶ ರವಾನೆಯಾಗಿದೆ. ಬ್ರೌನ್ ಯೂನಿವರ್ಸಿಟಿಯಲ್ಲಿ ಶೂಟಿಂಗ್ ಘಟನೆ ಬಗ್ಗೆ ಮಾಹಿತಿ ಲಭ್ಯವಾಗಿದೆ. ಶಂಕಿತನನ್ನು ವಶಕ್ಕೆ ಪಡೆಯಲಾಗಿದೆ. ಸಂತ್ರಸ್ತರನ್ನು ಮತ್ತು ಅವರ ಕುಟುಂಬದವರನ್ನು ದೇವರು ಆಶೀರ್ವದಿಸಲಿ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಟ್ರುಥ್ ಸೋಶಿಯಲ್ ಸಂತಾಪ ಸಂದೇಶದಲ್ಲಿ ಹೇಳಿದ್ದಾರೆ.

ವಾರ್ತಾ ಭಾರತಿ 14 Dec 2025 7:57 am

Karnataka Weather: ಈ ಭಾಗಗಳಲ್ಲಿ ಮುಂದಿನ 5 ದಿನ ವಿಪರೀತ ಚಳಿ! 17 ಜಿಲ್ಲೆಗಳಿಗೆ ಶೀತಅಲೆ ಎಚ್ಚರಿಕೆ

Karnataka Cold Wave Forecast: ಕರ್ನಾಟಕದಲ್ಲಿ ದಿನದಿಂದ ದಿನಕ್ಕೆ ಮೈಕೊರೆವ ಚಳಿ, ದಟ್ಟ ಮಂಜು ಹೆಚ್ಚಾಗುತ್ತಿದೆ. ಎಲ್ಲ ಜಿಲ್ಲೆಗಳಿಗೂ ಇದೇ ವಾತಾವರಣ ವಿಸ್ತರಣೆ ಆಗುವ ಮುನ್ಸೂಚನೆ ಸಿಕ್ಕಿದೆ. ಉತ್ತರ ಕರ್ನಾಟಕ ಹಲವು ಜಿಲ್ಲೆಗಳ ಜೊತೆಗೆ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಚಳಿ ಆತಂಕ ಶುರುವಾಗಿದ್ದು, ಹವಾಮಾನ ಇಲಾಖೆಯು ವಿವಿಧ ಜಿಲ್ಲೆಗಳಿಗೆ ಶೀತ ಅಲೆಯ ಮುನ್ಸೂಚನೆ ನೀಡಿದೆ. ರಾಜಧಾನಿ ಬೆಂಗಳೂರಿನಲ್ಲಿ

ಒನ್ ಇ೦ಡಿಯ 14 Dec 2025 7:15 am

ಬಸವರಾಜ ಹೊರಟ್ಟಿ ಸನ್ಮಾನ ಸಮಾರಂಭ; ಸೋಲಿಲ್ಲದ ಸರದಾರ ಮುಂದಿನ ಚುನಾವಣೆಗೆ ನಿಲ್ತಾರೆ ಎಂದ ಸಿಎಂ

ನಿನ್ನೆ (ಡಿ. 13-ಶನಿವಾರ) ಹುಬ್ಬಳ್ಳಿಯಲ್ಲಿ ಕರ್ನಾಟಕ ವಿಧಾನ ಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ ಅವರಿಗೆ ಅಭಿನಂದನಾ ಸಮಾರಂಭ ಹಮ್ಮಿಕೊಳ್ಳಲಾಗಿತ್ತು. ಒಂದೇ ಕ್ಷೇತ್ರದಿಂದ ದಾಖಲೆಯ ಎಂಟು ಬಾರಿ ಚುನಾವಣೆಯಲ್ಲಿ ಗೆದ್ದು ಇತಿಹಾಸ ನಿರ್ಮಿಸಿರುವ ಬಸವರಾಜ ಹೊರಟ್ಟಿ ಅವರನ್ನು ಪಕ್ಷಾತೀತವಾಗಿ ಸನ್ಮಾನಿಸಲಾಯೊತು. ಅಪಾರ ಸಂಖ್ಯೆಯ ಅಭಿಮಾನಿಗಳ ಸಮ್ಮುಖದಲ್ಲಿ, ಹೊರಟ್ಟಿ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಮತ್ತು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಸೇರಿದಂತೆ ಹಲವು ಗಣ್ಯರು ಆತ್ಮೀಯವಾಗಿ ಸನ್ಮಾಸಿದರು.

ವಿಜಯ ಕರ್ನಾಟಕ 14 Dec 2025 6:39 am

Plastic Park: ಕರ್ನಾಟಕ 2 ಜಿಲ್ಲೆಗಳಲ್ಲಿ ಪ್ಲಾಸ್ಟಿಕ್ ಪಾರ್ಕ್ ಸ್ಥಾಪನೆ, 15 ಲಕ್ಷ ಉದ್ಯೋಗ ಸೃಷ್ಟಿ

Karnataka Industry: ದೇಶದಲ್ಲಿ ಪ್ಲಾಸ್ಟಿಕ್ ಉದ್ಯಮ ವಲಯವು ಲಕ್ಷಾಂತರ ಉದ್ಯೋಗ ಸೃಷ್ಟಿಸಿದೆ. ಈ ಕ್ಷೇತ್ರದ ಬೆಳವಣಿಗೆ ಉತ್ತೇಜಿಸುವ ಮಹತ್ತರ ಉದ್ದೇಶದಿಂದ ರಾಜ್ಯ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಉದ್ಯಮಿಗಳು ತಮಗೆ ಎಲ್ಲಿ ಬೇಕೋ ಅಲ್ಲಿ ಪ್ಲಾಸ್ಟಿಕ್ ಪಾರ್ಕ್ ಅರ್ಜಿ ಹಾಕಿಕೊಳ್ಳಬಹುದು. ಸರ್ಕಾರ ತಮಗೆ ತ್ವರಿತವಾಗಿ ಭೂಮಿ ಕೊಡುತ್ತದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.

ಒನ್ ಇ೦ಡಿಯ 14 Dec 2025 6:32 am

ಮೈಸೂರಿನಲ್ಲಿ ವಿಜೃಂಭಣೆಯ ಹನುಮೋತ್ಸವ; ಸಾಂಸ್ಕೃತಿಕ ನಗರಿಯಲ್ಲಿ ಮೊಳಗಿತು ಜೈಶ್ರೀರಾಮ ಘೋಷಣೆ

ಪ್ರಭು ಶ್ರೀರಾಮನ ಪರಮ ಭಕ್ತ ಹನುಮಂತನ ಜಯಂತಿ ಅಂಗವಾಗಿ, ಸಾಂಸ್ಕೃತಿಕ ರಾಜಧಾನಿ ಮೈಸೂರಿನಲ್ಲಿ ಅದ್ದೂರಿ ಹನುಮೋತ್ಸವವನ್ನು ಹಮ್ಮಿಕೊಳ್ಳಲಾಗಿತ್ತು. ಆಕರ್ಷಕ ಮೆರವಣಿಗೆಯಲ್ಲಿ ಭಾಗವಹಿಸಿದ್ದ ಸಹಸ್ರಾರು ಭಕ್ತರು, ಹನುಮಂತ ಮತ್ತು ಶ್ರೀರಾಮನ ಘೋಷಣೆಗಳನ್ನು ಮೊಳಗಿಸಿ ಸಂಭ್ರಮಿಸಿದರು. ಮೈಸೂರಿನಲ್ಲಿ ಏಳನೇ ವರ್ಷದ ಹನುಮೋತ್ಸವ ಮೆರಣಿಗೆಯನ್ನು ಹಮ್ಮಿಕೊಳ್ಳಲಾಗಿತ್ತು. ಹಲವು ಕಲಾತಂಡಗಳು ಹನುಮೋತ್ಸವ ಮೆರಣಿಗೆಯ ಸೊಬಗನ್ನು ಹೆಚ್ಚಿಸಿದವು. ಶಾಸಕರಾದ ಜಿ.ಟಿ ದೇವೇಗೌಡ ಮಾಜಿ ಸಂಸದ ಪ್ರತಾಪ್‌ ಸಿಂಹ ಸೇರಿದಂತೆ ಹಲವು ಗಣ್ಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಇಲ್ಲಿದೆ ಮಾಹಿತಿ.

ವಿಜಯ ಕರ್ನಾಟಕ 14 Dec 2025 6:12 am

ಕಂಟೋನ್ಮೆಂಟ್‌ ಮೇಲ್ಸೇತುವೆ ಯೋಜನೆ ಕೈಬಿಟ್ಟ ಬಿಎಂಆರ್‌ಸಿಎಲ್‌; ರೈಲು ನಿಲ್ದಾಣ ಸಂಪರ್ಕಕ್ಕೆ ವಿದ್ಯುತ್‌ಚಾಲಿತ ವಾಹನ

ಬೆಂಗಳೂರು ಮೆಟ್ರೊ ರೈಲು ನಿಗಮ ನಿಯಮಿತ (ಬಿಎಂಆರ್‌ಸಿಎಲ್‌), ಕಂಟೋನ್ಮೆಂಟ್‌ ಮೆಟ್ರೊ ಮತ್ತು ರೈಲು ನಿಲ್ದಾಣಗಳನ್ನು ಸಂಪರ್ಕಿಸುವ ಸುಮಾರು ಒಂದು ಕಿ.ಮೀ. ಪಾದಚಾರಿ ಮೇಲ್ಸೇತುವೆ ಯೋಜನೆಯನ್ನು ರದ್ದಗೊಳಿಸಿದೆ. ಮೇಲ್ಸೇತುವೆ ನಿರ್ಮಾಣದ ಬದಲು, ಎರಡೂ ನಿಲ್ದಾಣಗಳಿಗೆ ವಿದ್ಯುತ್‌ಚಾಲಿತ ವಾಹನ ವ್ಯವಸ್ಥೆ ಕಲ್ಪಿಸುವ ಯೋಜನೆಯನ್ನು ಪ್ರಸ್ತಾಪಿಸಲಾಗಿದೆ. ಈ ಮಧ್ಯೆ ಕಂಟೋನ್ಮೆಂಟ್‌ ಮೆಟ್ರೋ ನಿಲ್ದಾಣ ನಿರ್ಮಾಣಕ್ಕಾಗಿ ಭೂಸ್ವಾಧೀನ ಪ್ರಕ್ರಿಯೆಯೂ ಮುಂದುವರೆದಿದೆ ಎಂದು ಬಿಎಂಆರ್‌ಸಿಎಲ್‌ ಮೂಲಗಳು ಖಚಿತಪಡಿಸಿವೆ. ಗುಲಾಬಿ ಮಾರ್ಗ 2026ರವೇಳೆಗೆ ಕಾರ್ಯಾರಂಭ ಮಾಡಲಿದೆ. ಇಲ್ಲಿದೆ ಮಾಹಿತಿ.

ವಿಜಯ ಕರ್ನಾಟಕ 14 Dec 2025 5:02 am

ಚೇಳಾಯರು | ಬಾಲಕಿಗೆ ಲೈಂಗಿಕ ಕಿರುಕುಳ ಆರೋಪ : ಆರೋಪಿ ವೃದ್ಧನ ಬಂಧನ

ಸುರತ್ಕಲ್, ಡಿ.13: ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿ ಸುರತ್ಕಲ್ ಪೊಲೀಸರು ಪೊಕ್ಸೊ ಕಾಯ್ದೆಯಡಿ ಆರೋಪಿಯನ್ನು ಚೇಳಾಯರು ಎಂಬಲ್ಲಿ ಬಂಧಿಸಿದ್ದಾರೆ. ಸುರತ್ಕಲ್ ಚೇಳಾಯರು ನಿವಾಸಿ ಸುಂದರ ಪೂಜಾರಿ (60) ಬಂಧಿತ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ. ಟ್ಯೂಶನ್ ಮುಗಿಸಿ ಬಸ್‌ನಲ್ಲಿ ಬಂದು ಮುಕ್ಕದಲ್ಲಿ ಇಳಿದು ತನ್ನ ಮನೆಗೆ ಒಳ ರಸ್ತೆಯಾಗಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಆ ರಸ್ತೆಯಾಗಿ ಬಂದ ಆರೋಪಿ ಲೈಂಗಿಕ ಕಿರುಕುಳ ನೀಡಿರುವುದಾಗಿ ಪೊಲೀಸ್ ದೂರಿನಲ್ಲಿ ಸಂತ್ರಸ್ತೆ ತಿಳಿಸಿದ್ದಾಳೆ. ಈ ಘಟನೆ 2025ರ ಅಕ್ಟೋಬರ್‌ನಲ್ಲಿ ನಡೆದಿದ್ದು, ಆ ಬಳಿಕ ಬಾಲಕಿ ಮಾನಸಿಕ ಖಿನ್ನತೆಗೆ ಒಳಗಾಗಿದ್ದಳು. ಹಾಗಾಗಿ ಆಕೆಯ ತಾಯಿ ವೈದ್ಯರ ಬಳಿ ಕರೆದೊಯ್ದು ತಪಾಸಣೆಗೆ ಒಳಪಡಿಸಿದ್ದರು. ಈ ವೇಳೆ ಬಾಲಕಿ ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ವಿಚಾರ ತಿಳಿಸಿದ್ದಾಗಿ ಪೊಲೀಸರು ಪ್ರಾಥಮಿಕ ವರದಿಯಲ್ಲಿ ತಿಳಿಸಿದ್ದಾರೆ. ಈ ಸಂಬಂಧ ಸಂತ್ರಸ್ತೆ ನೀಡಿದ ದೂರಿಂತೆ ಸುರತ್ಕಲ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.

ವಾರ್ತಾ ಭಾರತಿ 13 Dec 2025 11:55 pm

ರೀಲ್ಸ್‌ ರಾಣಿ ಜತೆ ಕಾನ್ಸ್‌ಟೆಬಲ್‌ ಪರಾರಿ, ಸಿಬ್ಬಂದಿಯನ್ನು ಅಮಾನತುಗೊಳಿಸಿದ ಪೊಲೀಸ್‌ ಅಧಿಕಾರಿಗಳು!

ವಿವಾಹಿತ ಮಹಿಳೆಯೊಬ್ಬರ ಜತೆ ಕಾನ್ಸ್‌ಟೆಬಲ್‌ವೊಬ್ಬರು ಪರಾರಿಯಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಮಹಿಳೆಯ ಪತಿ ನೀಡಿದ ದೂರಿನ ಅನ್ವಯ ಚಿನ್ನ, ನಗದು ಕಳ್ಳತನ ಆರೋಪದ ಮೇಲೆ ಎಫ್‌ಐಆರ್‌ ದಾಖಲಾಗಿದ್ದು, ಕಾನ್ಸ್‌ಟೆಬಲ್‌ ರಾಘವೇಂದ್ರನನ್ನು ಅಮಾನತುಗೊಳಿಸಲಾಗಿದೆ. ಇನ್‌ಸ್ಟಾಗ್ರಾಂ ಮೂಲಕ ಪರಿಚಯವಾಗಿದ್ದ ಇಬ್ಬರು ಒಟ್ಟಿಗೆ ಪರಾರಿಯಾಗಿದ್ದಾರೆ.

ವಿಜಯ ಕರ್ನಾಟಕ 13 Dec 2025 11:46 pm

ವೀಸಾ ವಿಚಾರವಾಗಿ ಅಮೆರಿಕದಲ್ಲಿ ಶುರುವಾಗಿದೆ ಹೊಸ ತಿಕ್ಕಾಟ, ಭಾರತೀಯರಿಗೆ ಲಾಭ ಆಗುತ್ತಾ? H-1B Visa

ಅಮೆರಿಕ ಅನ್ನೋದು ಪ್ರತಿಯೊಬ್ಬರ ಕನಸಿನ ಲೋಕ ಆಗಿತ್ತು... ಅದರಲ್ಲೂ ಅಮೆರಿಕ ಎನ್ನುವ ದೊಡ್ಡ ಶ್ರೀಮಂತ ದೇಶದಲ್ಲಿ ಕೆಲಸ ಸಿಕ್ಕರೆ ಜೀವನ ಸೆಟಲ್ ಆಗಿಬಿಡುತ್ತೆ ಅನ್ನೋ ಆಸೆಯು ಕೂಡ ಮೂಡಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಅಮೆರಿಕದಲ್ಲಿ ಕೆಲಸ ಹಿಡಿಯುವುದು ಹಾಗೂ ವೀಸಾ ಪಡೆಯುವುದು ದೊಡ್ಡ ಸವಾಲಿನ ಕೆಲಸವಾಗುತ್ತಿದೆ. ಇದರ ಜೊತೆಗೆ ಅಮೆರಿಕದಲ್ಲಿ ಹೊಸ ಹೊಸ ಕೆಲಸಗಳು ಸಿಗುತ್ತಿಲ್ಲ ಎಂಬ

ಒನ್ ಇ೦ಡಿಯ 13 Dec 2025 11:45 pm

ರಾಂಚಿ | ಲ್ಯಾಂಡಿಂಗ್ ವೇಳೆ IndiGo ವಿಮಾನದ ರೆಕ್ಕೆ ರನ್‌ವೇಗೆ ಢಿಕ್ಕಿ

ರಾಂಚಿ, ಡಿ. 13: ರಾಂಚಿ ವಿಮಾನ ನಿಲ್ದಾಣದಲ್ಲಿ ಇಂಡಿಗೊ ವಿಮಾನ ಇಳಿಯುವ ಸಂದರ್ಭ ಅದರ ಬಾಲ ರನ್‌ ವೇ ಗೆ ಢಿಕ್ಕಿ ಹೊಡೆದ ಘಟನೆ ನಡೆದಿದೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ. ಸುಮಾರು 70 ಪ್ರಯಾಣಿಕರಿದ್ದ ಭುವನೇಶ್ವರ-ರಾಂಚಿ ವಿಮಾನ ಶುಕ್ರವಾರ ರಾತ್ರಿ ಸುಮಾರು 7.30ಕ್ಕೆ ಇಳಿಯುವ ಸಂದರ್ಭ ಈ ಘಟನೆ ನಡೆದಿದೆ ಎಂದು ಅವರು ಹೇಳಿದ್ದಾರೆ. ‘‘ಇಳಿಯುವ ಸಂದರ್ಭ ವಿಮಾನದ ರೆಕ್ಕೆ ರನ್‌ವೇಗೆ ಸ್ಪರ್ಶಿಸಿತು. ಪ್ರಯಾಣಿಕರಿಗೆ ಕಂಪನದ ಅನುಭವವಾಯಿತು. ಆದರೆ, ಪ್ರಯಾಣಿಕರಿಗೆ ಯಾವುದೇ ಹಾನಿ ಉಂಟಾಗಿಲ್ಲ. ಅವರು ಸುರಕ್ಷಿತವಾಗಿ ಇಳಿದಿದ್ದಾರೆ ಎಂದು ರಾಂಚಿ ವಿಮಾನ ನಿಲ್ದಾಣದ ನಿರ್ದೇಶಕ ವಿನೋದ್ ಕುಮಾರ್ ತಿಳಿಸಿದ್ದಾರೆ. ಈ ಘಟನೆಯ ನಂತರ ವಿಮಾನ ತಾಂತ್ರಿಕವಾಗಿ ಟೇಕ್‌ ಆಫ್‌ ಗೆ ಅನರ್ಹವಾಗಿದೆ ಎಂದು ಕಂಡು ಬಂದ ಹಿನ್ನೆಲೆಯಲ್ಲಿ ಅದರ ಹಾರಾಟವನ್ನು ಸ್ಥಗಿತಗೊಳಿಸಲಾಯಿತು ಎಂದು ಅವರು ಹೇಳಿದ್ದಾರೆ. ‘‘ರಾಂಚಿಯಿಂದ ಭುವನೇಶ್ವರಕ್ಕೆ ಅದರ ಮುಂದಿನ ನಿರ್ಗಮನವನ್ನು ರದ್ದುಗೊಳಿಸಲಾಯಿತು. ಕೆಲವು ಪ್ರಯಾಣಿಕರು ತಮ್ಮ ಪ್ರಯಾಣವನ್ನು ರದ್ದುಗೊಳಿಸಿದರು. ಕೆಲವರು ತಮ್ಮ ಪ್ರಯಾಣವನ್ನು ಮರು ನಿಗದಿ ಮಾಡಿದರು. ಕೆಲವು ಪ್ರಯಾಣಿಕರನ್ನು ರಸ್ತೆಯ ಮೂಲಕ ಭುವನೇಶ್ವರಕ್ಕೆ ಕಳುಹಿಸಲಾಯಿತು’’ ಎಂದು ಅವರು ತಿಳಿಸಿದ್ದಾರೆ.

ವಾರ್ತಾ ಭಾರತಿ 13 Dec 2025 11:37 pm

ಗಾಜಾ ಪಟ್ಟಿಯಲ್ಲಿ ಮತ್ತೊಬ್ಬ ಹಮಾಸ್ ಕಮಾಂಡರ್ ಮೇಲೆ ದಾಳಿ ಮಾಡಿದ ಬಗ್ಗೆ ಇಸ್ರೇಲ್ ಮಹತ್ವದ ಹೇಳಿಕೆ

ಮಧ್ಯಪ್ರಾಚ್ಯ ದೇಶಗಳ ನೆಮ್ಮದಿಗೆ ಕಿಚ್ಚು ಹೊತ್ತಿಸಿರುವ ಇಸ್ರೇಲ್ ಮತ್ತು ಗಾಜಾ ಯುದ್ಧ ಇದೀಗ ದಿಢೀರ್ ಇನ್ನಷ್ಟು ಘೋರವಾಗಿದೆ. ಒಂದು ಕಡೆ ಗಾಜಾ ಜನರಿಗೆ ಸೂಕ್ತ ವ್ಯವಸ್ಥೆ ಇಲ್ಲದೆ ಪ್ರತಿನಿತ್ಯ ಪರದಾಡುತ್ತಾ ಇದ್ದಾರೆ ಅನ್ನೋ ಆರೋಪಗಳ ನಡುವೆ, ಇನ್ನೋಂದು ಕಡೆ ಇಸ್ರೇಲ್ ಸೇನೆಯಿಂದ ದಾಳಿ ಕೂಡ ನಿರಾತಂಕವಾಗಿ ನಡೆಯುತ್ತಲೇ ಇದೆ. ಹೀಗೆ ಇಬ್ಬರ ನಡುವೆ ಒಂದಾದ ನಂತರ ಒಂದು

ಒನ್ ಇ೦ಡಿಯ 13 Dec 2025 11:37 pm

ಜ.6ಕ್ಕೆ ಡಿಕೆ ಶಿವಕುಮಾರ್‌ಗೆ ಸಿಎಂ ಪಟ್ಟಾಭಿಷೇಕ: ಕಾಂಗ್ರೆಸ್‌ ಶಾಸಕನ ಸ್ಫೋಟಕ ಹೇಳಿಕೆ; ದಿಲ್ಲಿಗೆ ಸಿಎಂ, ಡಿಸಿಎಂ!

ರಾಮನಗರ ಶಾಸಕ ಇಕ್ಬಾಲ್ ಹುಸೇನ್ ಅವರು ಡಿ.ಕೆ. ಶಿವಕುಮಾರ್‌ಗೆ ಮುಖ್ಯಮಂತ್ರಿ ಸ್ಥಾನ ಸಿಗುವ ಬಗ್ಗೆ ಶೇ. 99ರಷ್ಟು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ನಾಯಕತ್ವ ಗೊಂದಲದ ನಡುವೆ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ವೋಟ್ ಚೋರಿ ಅಭಿಯಾನದಲ್ಲಿ ಪಾಲ್ಗೊಳ್ಳಲು ದಿಲ್ಲಿಗೆ ತೆರಳಿದ್ದಾರೆ. ಇವೆಲ್ಲದರ ನಡುವೆ ಮುಂದಿನ ವಾರ ನಾಯಕತ್ವದ ಬಗ್ಗೆ ಸ್ಪಷ್ಟತೆ ಸಿಗುವ ನಿರೀಕ್ಷೆಯಿದೆ.

ವಿಜಯ ಕರ್ನಾಟಕ 13 Dec 2025 11:35 pm

ಕೊಪ್ಪಳ | ರಾಷ್ಟ್ರೀಯ ಲೋಕ ಅದಾಲತ್ : ಮತ್ತೆ ಒಂದಾದ 10 ಜೋಡಿಗಳು

ಕೊಪ್ಪಳ, ಡಿ.13: ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ಮನಸ್ತಾಪ ಮರೆತು ಜಿಲ್ಲೆಯ 10 ಜೋಡಿಗಳು ಮತ್ತೆ ಒಂದಾಗಿದ್ದಾರೆ. ಜಿಲ್ಲೆಯ ಎಲ್ಲ ತಾಲೂಕು ನ್ಯಾಯಾಲಯಗಳಲ್ಲಿ ನಡೆದ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ 87,918 ಪ್ರಕರಣಗಳ ಪೈಕಿ 79,355 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದ್ದು, ವಿಚ್ಛೇದನಕ್ಕೆ ಅರ್ಜಿಸಲ್ಲಿಸಿ 10 ವರ್ಷ ದೂರವಿದ್ದ ಒಂದು ಜೋಡಿಯನ್ನು ಸಹ ಒಂದು ಮಾಡಲಾಗಿದೆ. ಕೊಪ್ಪಳ, ಗಂಗಾವತಿ, ಕುಷ್ಟಗಿ ಹಾಗೂ ಯಲಬುರ್ಗಾ ನ್ಯಾಯಾಲಯಗಳಲ್ಲಿನ ವಿಮೆ, ನೀರಿನ ಬಿಲ್, ಬ್ಯಾಂಕ್ ಸಾಲ, ಮನೆ ಕರ, ಕೌಟುಂಬಿಕ ದೌರ್ಜನ್ಯ, ಜೀವನಾಂಶ, ಚೆಕ್ ಬೌನ್ಸ್ ಪ್ರಕರಣಗಳು, ಜನನ ಮರಣ, ಸಿವಿಲ್ ಕೇಸ್, ಕ್ರಿಮಿನಲ್ ಕೇಸ್, ಮೋಟಾರ್ ವಾಹನ ಅಪಘಾತ, ಎಂಎಂಆರ್ಡಿ ಪ್ರಕರಣಗಳು ಸೇರಿದಂತೆ 6,764 ಪ್ರಕರಣಗಳು ಇತ್ಯರ್ಥ ಪಡಿಸಲಾಗಿದೆ. ದಾಖಲೆಯ ಮೌಲ್ಯ : ವಿಮೆ, ನೀರಿನ ಕರ, ಮೋಟಾರ್ ವಾಹನ ಅಪಘಾತ ಪ್ರಕರಣಗಳು ಮತ್ತು ಪೂರ್ವ ದಾವೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಒಟ್ಟು 135,261,312 ಕೋಟಿ ಮೌಲ್ಯ 79,305 ಪ್ರಕರಣಗಳ ಪೈಕಿ 72,591 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ. 939,878,456 ಕೋಟಿ ಮೌಲ್ಯದ 87,918 ಪ್ರಕರಣಗಳ ಪೈಕಿ 79,355 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದ್ದು, ಈ ಬಾರಿ ದಾಖಲೆ ಪ್ರಮಾಣದಲ್ಲಿ ಪ್ರಕರಣಗಳನ್ನು ರಾಜಿ ಮೂಲಕ ಇತ್ಯಾರ್ಥ ಪಡಿಸಲಾಗಿದೆ ಎಂದು ಕೊಪ್ಪಳ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಪ್ರಕಟಣೆಯಲ್ಲಿ ತಿಳಿಸಿದೆ.

ವಾರ್ತಾ ಭಾರತಿ 13 Dec 2025 11:30 pm

ವಾಲ್ಮೀಕಿ ಗುರುಕುಲ ಪೀಠದ ಸ್ವಾಮೀಜಿ ಬ್ರಹ್ಮಾನಂದ ಗುರೂಜಿ ವಿರುದ್ಧ ಪ್ರಕರಣ ದಾಖಲು

ಬೆಂಗಳೂರು, ಡಿ.13: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕು ಮೆಳೆಕೋಟೆಯಲ್ಲಿರುವ ಮಹರ್ಷಿ ಶ್ರೀ ವಾಲ್ಮೀಕಿ ಗುರುಕುಲ ಪೀಠದ ಸ್ವಾಮೀಜಿ ಬ್ರಹ್ಮಾನಂದ ಗುರೂಜಿ ಮಹಿಳೆಯೊಬ್ಬರನ್ನು ಮಂಚಕ್ಕೆ ಕರೆದಿದ್ದು, ಈ ಬಗ್ಗೆ ಸಂತ್ರಸ್ತ ಮಹಿಳೆ ಕೊಟ್ಟ ದೂರಿನ ಅನ್ವಯ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದೂರು ನೀಡಿದ ಮಹಿಳೆ ಮತ್ತು ಆಕೆಯ ಪತಿ ಸ್ವಾಮೀಜಿ ನಿವಾಸದ ಬಳಿಯೇ ವಾಸವಿದ್ದು, ಅವರ ಪರಿಚಯವಾಗಿತ್ತು ಎನ್ನಲಾಗಿದೆ. ಸ್ವಾಮೀಜಿ ಬ್ರಹ್ಮಾನಂದ ಗುರೂಜಿ ಅವರು ಮಹಿಳೆಗೆ ತಮ್ಮ ಪರಿಚಯದವರಿಂದ ಕಡಿಮೆ ಬೆಲೆಗೆ ನಿವೇಶನವನ್ನು ಕೊಡಿಸುವ ಭರವಸೆ ನೀಡಿದ್ದರು ಎನ್ನಲಾಗಿದೆ. 13 ಲಕ್ಷ ರೂ. ಮೌಲ್ಯದ ನಿವೇಶನವನ್ನು 12 ಲಕ್ಷ ರೂ.ಗೆ ಕೊಡಿಸುವುದಾಗಿ ಮಾತುಕತೆ ನಡೆಸಿದ್ದರು. ಆದರೆ, ತಮ್ಮ ಬಳಿ 8 ಲಕ್ಷ ರೂ. ಮಾತ್ರ ಇದೆ ಎಂದು ಮಹಿಳೆ ಹೇಳಿದ್ದರು. ಹೀಗಾಗಿ ಉಳಿದ ಹಣಕ್ಕೆ ಸಹಾಯ ಮಾಡುವುದಾಗಿ ಸ್ವಾಮೀಜಿ ಹೇಳಿದ್ದರು ಎಂಬ ಆರೋಪವಿದೆ. ಮಹಿಳೆ ಬಳಿಯಿದ್ದ 8 ಲಕ್ಷ ರೂ.ಗಳಲ್ಲಿ 5 ಲಕ್ಷ ರೂಪಾಯಿಯನ್ನು ಮುಂಗಡವಾಗಿ ಮೂರನೇ ವ್ಯಕ್ತಿಗೆ ಸ್ವಾಮೀಜಿ ಕೊಡಿಸಿದ್ದಾರೆ. ಆದರೆ ಒಂದು ವರ್ಷ ಕಳೆದರೂ ನಿವೇಶನ ನೀಡದೆ, ಮುಂಗಡ ಹಣವನ್ನೂ ವಾಪಸ್ ನೀಡದೇ ನಿರ್ಲಕ್ಷ್ಯವಹಿಸಲಾಗಿದೆ ಎಂದು ಮಹಿಳೆ ದೂರಿನಲ್ಲಿ ಆರೋಪಿಸಿದ್ದಾರೆ. ಒಂದು ವರ್ಷವಾದರೂ ನಿವೇಶನ ಕೊಡದ ಕಾರಣ ಹಣವನ್ನು ಮಹಿಳೆ ವಾಪಸ್ ಕೇಳಿದ್ದಾರೆ. ‘‘ರೂಂಗೆ ಬಾ ಹಣ ಕೊಡಿಸುತ್ತೇನೆ, ನಿನಗೆ ಹಣ ಬೇಕು, ನನಗೆ ಮಜಾ ಬೇಕು’’ ಎಂದು ಸ್ವಾಮೀಜಿ ಹೇಳಿದ್ದಾರೆ ಎಂಬ ಆಡಿಯೊ ವೈರಲ್ ಆಗಿದ್ದು, ಸ್ವಾಮೀಜಿಯ ಈ ಮಾತುಗಳನ್ನು ಮಹಿಳೆ ಮೊಬೈಲ್‌ನಲ್ಲಿ ಆಡಿಯೋ ಹಾಗೂ ವೀಡಿಯೊ ರೂಪದಲ್ಲಿ ಸಂಗ್ರಹಿಸಿ ಕೊಂಡಿದ್ದಾರೆ ಎಂದು ವರದಿಯಾಗಿದೆ. ಸ್ವಾಮೀಜಿ ನಿರಂತರವಾಗಿ ಫೋನ್ ಕರೆ, ಆಡಿಯೋ ಮೆಸೇಜ್ ಹಾಗೂ ವೀಡಿಯೊ ಕಾಲ್ ಮಾಡಿ ಕಿರುಕುಳ ನೀಡಿದ್ದಾರೆ. ಅಲ್ಲದೇ ಒಂಟಿಯಾಗಿದ್ದ ವೇಳೆ ಮನೆಗೆ ಬಂದು ಕಿರುಕುಳ ನೀಡಿದ್ದಾರೆ. ಆಡಿಯೋ-ವೀಡಿಯೊಗಳನ್ನು ಡಿಲೀಟ್ ಮಾಡುವಂತೆ ಒತ್ತಡ ಹೇರಿದ್ದು, ಅದಕ್ಕಾಗಿ 50 ಸಾವಿರ ರೂ. ನೀಡುವ ಆಮಿಷವನ್ನೂ ಒಡ್ಡಿದ್ದಾರೆ ಎಂದು ಮಹಿಳೆ ದೂರಿನಲ್ಲಿ ಆರೋಪಿಸಿದ್ದಾರೆ. ಸ್ವಾಮೀಜಿಯಿಂದ ಪ್ರತಿ ದೂರು : ಮಹಿಳೆ ಮತ್ತು ಆಕೆಯ ಕುಟುಂಬದವರು ಹಣಕ್ಕಾಗಿ ಬೆದರಿಕೆ ಹಾಕುತ್ತಿದ್ದಾರೆ ಎಂದು ಬ್ರಹ್ಮಾನಂದ ಸ್ವಾಮೀಜಿ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರತಿದೂರು ದಾಖಲಿಸಿದ್ದಾರೆ. ಹಣ ಕೊಡಬೇಕು. ಇಲ್ಲದಿದ್ದರೆ ನಿಮ್ಮ ಫೋಟೊ, ಆಡಿಯೊ, ವೀಡಿಯೊಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಮಾಡಿ, ಹೆಸರು ಹಾಳು ಮಾಡುತ್ತೇವೆಂದು ಬೆದರಿಕೆಯೊಡ್ಡಿದ್ದಾರೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ಸ್ವಾಮೀಜಿ ಉಲ್ಲೇಖಿಸಿದ್ದಾರೆ.

ವಾರ್ತಾ ಭಾರತಿ 13 Dec 2025 11:22 pm

ಯತ್ನಾಳ್ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಲು ಚಿಂತನೆ: ವಿಜಯೇಂದ್ರ

ಶಿವಮೊಗ್ಗ, ಡಿ.13: ಬಸನಗೌಡ ಪಾಟೀಲ್ ಯತ್ನಾಳ್ ಅವರು ನನ್ನ ವಿರುದ್ಧ ಪದೇ ಪದೇ ಸುಳ್ಳು ಆರೋಪಗಳನ್ನು ಮಾಡುತ್ತಿದ್ದು, ಅವರಿಗೆ ನನ್ನ ಬಗ್ಗೆ ಮಾತನಾಡದಿದ್ದರೆ ಊಟ ಸೇರಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶನಿವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನನ್ನ ತಾಳ್ಮೆಗೂ ಮೀತಿ ಇದೆ. ಬಸನಗೌಡ ಪಾಟೀಲ್ ಯತ್ನಾಳ್ ಮೇಲೆ ಒಂದು ರೂ. ಅಥವಾ ಒಂದು ಕೋಟಿ ರೂ. ಮಾನನಷ್ಟ ಮೊಕದ್ದಮೆ ಹೂಡಲು ಚಿಂತನೆ ನಡೆಸುತ್ತಿದ್ದೇನೆ ಎಂದು ಹೇಳಿದರು. ಕುರ್ಚಿಯ ಕಿತ್ತಾಟದಿಂದಾಗಿ ರಾಜ್ಯದ ಆಡಳಿತ ಸಂಪೂರ್ಣ ಕುಸಿದಿದೆ. ಇಚ್ಛಾಶಕ್ತಿಯ ಕೊರತೆಯಿಂದಾಗಿ ಅಭಿವೃದ್ಧಿ ಶೂನ್ಯ ಸರಕಾರವಾಗಿದ್ದು, ಸರಕಾರ ಬದುಕಿದೆಯೋ?, ಸತ್ತಿದೆಯೋ? ಎನ್ನುವ ಪರಿಸ್ಥಿತಿಗೆ ಬಂದಿದೆ ಎಂದು ಕಿಡಿಕಾರಿದರು. ರಾಜ್ಯದ ಹಿತದೃಷ್ಟಿಯಿಂದ ಪಕ್ಷ ಬೇಧ ಮರೆತು ಸಮಗ್ರವಾಗಿ ಚರ್ಚೆ ಮಾಡುವುದಾದರೆ ಮಾತ್ರ ಈ ಅಧಿವೇಶನ ಕರೆಯಿರಿ ಎಂದಿದ್ದೆ. ನಾಯಕತ್ವಕ್ಕಾಗಿ ಪೈಪೋಟಿ ಮಾಡುವುದರಿಂದ ಅಭಿವೃದ್ಧಿಗೆ ಹಿನ್ನಡೆಯಾಗಿದ್ದು, ನಿಮ್ಮ ನಾಯಕತ್ವ ಸಮಸ್ಯೆ ಬಗೆಹರಿಯುವ ತನಕ ಅಧಿವೇಶನ ಮುಂದೂಡಬೇಕೆಂದು ಮುಖ್ಯಮಂತ್ರಿಗೆ ವಿನಂತಿ ಮಾಡಿಕೊಳ್ಳುತ್ತೇನೆ ಎಂದರು. ಅಧಿವೇಶನ ಪ್ರಾರಂಭವಾಗಿ ಒಂದು ವಾರ ಆದರೂ ವಿರೋಧ ಪಕ್ಷದ ನಾಯಕರು ಮತ್ತು ಸದಸ್ಯರ ಸಮಸ್ಯೆಗಳಿಗೆ ಸ್ಪಂದಿಸುವ ವ್ಯವದಾನ ಇಲ್ಲದೇ ಇರುವುದು ಈ ಸರಕಾರದ ದುರ್ದೈವವಾಗಿದೆ. ಸಿಎಂ-ಡಿಸಿಎಂ ಕಳೆದೆರೆಡು ವರ್ಷಗಳಿಂದ ಒಗ್ಗಟ್ಟಿನ ಮಂತ್ರ ಜಪಿಸುತ್ತಿದ್ದವರು ಈಗ ಒಬ್ಬರ ಮೇಲೊಬ್ಬರು ಕತ್ತಿ ಮಸೆಯುತ್ತಿದ್ದಾರೆ. ಇದರಿಂದ ರೈತರು, ಕೂಲಿ ಕಾರ್ಮಿಕರು, ಜನಸಾಮಾನ್ಯರ ಮೇಲೆ ಪರಿಣಾಮ ಬೀರಿದೆ. 54 ಲಕ್ಷ ಟನ್ ಮೆಕ್ಕೆಜೋಳ ಬೆಳೆದ ರೈತ ಖರೀದಿ ಕೇಂದ್ರ ಇಲ್ಲದೆ ದಲ್ಲಾಳಿಗಳ ಮೊರೆ ಹೋಗಿ 1,400 ರೂ.ಗೆ ಕಣ್ಣೀರು ಹಾಕುತ್ತಾ ಕೊಡುತ್ತಿದ್ದಾರೆ. ಕೇಂದ್ರ ಸರಕಾರ ಎಂಎಸ್‌ಪಿ 2400 ರೂ.ಯನ್ನು ಮೆಕ್ಕೆಜೋಳಕ್ಕೆ ನಿಗದಿ ಮಾಡಿ 2 ತಿಂಗಳಾಗುತ್ತಾ ಬಂದಿದೆ. ಕಾಂಗ್ರೆಸ್ ಶಾಸಕರೇ ಈ ಗಂಭೀರ ಸಮಸ್ಯೆ ಬಗ್ಗೆ ನಮ್ಮೊಂದಿಗೆ ಧ್ವನಿಗೂಡಿಸಿದ್ದಾರೆ. ಆದರೂ ಯಾವ ಸಚಿವರೂ ಉತ್ತರ ಕರ್ನಾಟಕ ಭಾಗಕ್ಕೆ ಅತಿವೃಷ್ಟಿಯ ಹಾನಿ ಹಾಗೂ ಕಬ್ಬು ಬೆಳೆಗಾರರ ಸಮಸ್ಯೆ ಬಗ್ಗೆ ಸ್ಥಳಕ್ಕೆ ಭೇಟಿ ನೀಡಿ, ಪರಿಹಾರ ನೀಡಿಲ್ಲ ಎಂದು ವಿಜಯೇಂದ್ರ ಟೀಕಿಸಿದರು. ಸುದ್ದಿಗೋಷ್ಠಿಯಲ್ಲಿ ಜಿಲ್ಲಾಧ್ಯಕ್ಷ ಎನ್.ಕೆ.ಜಗದೀಶ್, ಶಾಸಕರಾದ ಎಸ್.ಎನ್.ಚನ್ನಬಸಪ್ಪ, ಡಾ. ಧನಂಜಯ ಸರ್ಜಿ, ಪ್ರಮುಖರಾದ ಕೆ.ಜಿ.ಕುಮಾರಸ್ವಾಮಿ, ಟಿ.ಡಿ. ಮೇಘರಾಜ್, ಜ್ಞಾನೇಶ್ವರ್, ನಾಗರಾಜ್, ಶಿವರಾಜ್, ಮಾಲತೇಶ್, ಎನ್.ಡಿ. ಸತೀಶ್, ಮಂಜುನಾಥ್, ಕೆ.ವಿ. ಇದ್ದರು.

ವಾರ್ತಾ ಭಾರತಿ 13 Dec 2025 11:15 pm

ಶುಬ್ಮನ್‌ ಗಿಲ್‌ಗೆ ಕಮ್‌ಬ್ಯಾಕ್‌ ಒತ್ತಡ, 10 ಡಿಗ್ರಿ ತಾಪಮಾನದಲ್ಲಿ ಬಿಸಿಯೇರಿಸುತ್ತಾ ಧರ್ಮಶಾಲಾ ಪಂದ್ಯ?

ಟಿ20 ವಿಶ್ವಕಪ್‌ ತಂಡದಲ್ಲಿ ಸ್ಥಾನ ಭದ್ರಪಡಿಸಿಕೊಳ್ಳಲು ಶುಭಮನ್ ಗಿಲ್ ದಕ್ಷಿಣ ಆಫ್ರಿಕಾ ವಿರುದ್ಧದ 3ನೇ ಟಿ20 ಪಂದ್ಯದಲ್ಲಿ ತಮ್ಮ ಸಾಮರ್ಥ್ಯ ಸಾಬೀತುಪಡಿಸಬೇಕಿದೆ. ಸರಣಿ 1-1ರಿಂದ ಸಮಬಲಗೊಂಡಿದ್ದು, ಗಿಲ್ ಆಯ್ಕೆಯನ್ನು ಸಮರ್ಥಿಸಿಕೊಳ್ಳಲು ಇದು ಮಹತ್ವದ ಅವಕಾಶವಾಗಿದೆ. ನಾಯಕ ಸೂರ್ಯಕುಮಾರ್ ಯಾದವ್ ಅವರ ಫಾರ್ಮ್ ಕೂಡ ಚರ್ಚೆಯಲ್ಲಿದೆ.

ವಿಜಯ ಕರ್ನಾಟಕ 13 Dec 2025 11:07 pm

ಗೋವಾ-ಹೊಸದಿಲ್ಲಿ ವಿಮಾನದಲ್ಲಿ ಅಮೆರಿಕನ್ ಯುವತಿಯ ಜೀವ ಉಳಿಸಿದ ಡಾ.ಅಂಜಲಿ ನಿಂಬಾಳ್ಕರ್

30 ಸಾವಿರ ಅಡಿ ಎತ್ತರದಲ್ಲಿ ಸಿಪಿಆರ್ ಮೂಲಕ ಪ್ರಾಣ ರಕ್ಷಣೆ

ವಾರ್ತಾ ಭಾರತಿ 13 Dec 2025 10:48 pm

ಜನ ಸಾಮಾನ್ಯರ ಮಕ್ಕಳನ್ನು ದೇಶದ ಸಂಪತ್ತಾಗಿ ರೂಪಿಸಿ : ಅಂಜುಮನ್ 106ನೇ ವರ್ಷಾಚರಣೆಯಲ್ಲಿ ಯು.ಟಿ.ಖಾದರ್ ಕರೆ

ಭಟ್ಕಳ, ಡಿ.13: ಗ್ರಾಮೀಣ ಮಟ್ಟದಲ್ಲಿ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ ಸಾಮಾನ್ಯ ಜನರ ಮಕ್ಕಳನ್ನು ದೇಶದ ಸಂಪತ್ತಾಗಿ ರೂಪಿಸುವುದು ನಿಜವಾದ ದೇಶಪ್ರೇಮ ಎಂದು ಕರ್ನಾಟಕ ವಿಧಾನಸಭಾ ಸ್ಪೀಕರ್ ಯು.ಟಿ.ಖಾದರ್ ಹೇಳಿದ್ದಾರೆ. ಭಟ್ಕಳದ ಅಂಜುಮನ್ ಹಾಮೀಯೇ ಮುಸ್ಲಿಮೀನ್ ಶಿಕ್ಷಣ ಸಂಸ್ಥೆಯ 106ನೇ ವರ್ಷಾಚರಣೆ ಅಂಗವಾಗಿ ಶನಿವಾರ ಆಯೋಜಿಸಲಾದ ‘ಅಂಜುಮನ್ ದಿನ’ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು, ಕ್ಲಾಸ್‌ರೂಂ ಮತ್ತು ಪ್ಲೇ ಗ್ರೌಂಡ್‌ನಲ್ಲಿ ಬೆಳೆಯುವ ವಿದ್ಯಾರ್ಥಿಗಳು ಬಲಿಷ್ಠರಾದಾಗಲೇ ದೇಶ ಬಲಿಷ್ಠವಾಗುತ್ತದೆ ಎಂದು ಹೇಳಿದರು. ಅಂಜುಮನ್ ಸಂಸ್ಥೆಯು ಭಟ್ಕಳ ಮಾತ್ರವಲ್ಲದೆ ಸುತ್ತಮುತ್ತಲಿನ ಜಿಲ್ಲೆ ಮತ್ತು ಗ್ರಾಮಗಳ ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಹಾಗೂ ಆರೋಗ್ಯ ಕ್ಷೇತ್ರಗಳ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡಿದೆ ಎಂದು ಪ್ರಶಂಸಿಸಿದ ಯು.ಟಿ.ಖಾದರ್, ವಿದ್ಯಾರ್ಥಿಗಳು ಕೇವಲ ವ್ಯಾಪಾರಕ್ಕೆ ಸೀಮಿತವಾಗದೆ ಇಂಜಿನಿಯರ್, ವೈದ್ಯ, ವಕೀಲ, ಐಎಎಸ್ ಅಧಿಕಾರಿ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿ ಮುನ್ನಡೆಯಬೇಕೆಂದು ಆಶಯ ವ್ಯಕ್ತಪಡಿಸಿದರು. ಮೀನುಗಾರಿಕೆ, ಬಂದರು ಹಾಗೂ ಒಳನಾಡು ಜಲ ಸಾರಿಗೆ ಮತ್ತು ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಮಾತನಾಡಿ, ಭಟ್ಕಳದಲ್ಲಿ ಬಹು ಸೌಲಭ್ಯ ಆಸ್ಪತ್ರೆ ಹಾಗೂ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಸರಕಾರದಿಂದ ಸಂಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಿದರು. ಈ ಭಾಗದಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗಳ ಕೊರತೆ ಇರುವುದರಿಂದ ಅಂಜುಮನ್ ಸಂಸ್ಥೆಯ ಬಳಿ ಜಾಗ ಮತ್ತು ಮೂಲಸೌಕರ್ಯ ಇರುವ ಹಿನ್ನೆಲೆಯಲ್ಲಿ ಸರಕಾರ ಬೆಂಬಲ ನೀಡಲಿದೆ ಎಂದು ಸಚಿವರು ಹೇಳಿದರು. ಇದೇ ವೇಳೆ ಲಾ ಕಾಲೇಜಿನ ಅಗತ್ಯವನ್ನೂ ಅಂಜುಮನ್ ಪ್ರಸ್ತಾವಿಸಿದ್ದು, ಅದರ ಅವಶ್ಯವನ್ನು ಸಚಿವರು ಒಪ್ಪಿಕೊಂಡರು. ಅಂಜುಮನ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಮುಹಮ್ಮದ್ ಯೂನುಸ್ ಕಾಝಿಯಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಶಾಹೀನ್ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಅಬ್ದುಲ್ ಕದೀರ್ ಹಾಗೂ ಕರ್ನಾಟಕ ವಿಶ್ವವಿದ್ಯಾಇಲಯದ ಉಪಕುಲಪತಿ ಡಾ.ಎ.ಎಂ.ಖಾನ್ ಉಪಸ್ಥಿತರಿದ್ದರು.

ವಾರ್ತಾ ಭಾರತಿ 13 Dec 2025 10:43 pm

ದಾವಣಗೆರೆ | ಜಗಳೂರಿನ ಹಲವು ಗ್ರಾಮಗಳಲ್ಲಿ ಲಘು ಭೂಕಂಪನ

ದಾವಣಗೆರೆ, ಡಿ.13: ಜಗಳೂರು ತಾಲೂಕಿನ ಚಿಕ್ಕ ಮಲ್ಲನಹೊಳೆ, ದಿಬ್ಬದ ಹಳ್ಳಿ ಗ್ರಾಮದಲ್ಲಿ ಭೂಮಿ ಕಂಪಿಸಿದ ಘಟನೆ ಶನಿವಾರ ರಾತ್ರಿ 8ರ ಸುಮಾರಿಗೆ ನಡೆದಿರುವುದಾಗಿ ವರದಿಯಾಗಿದೆ. ಭಾರೀ ಶಬ್ದವಾದ ತಕ್ಷಣ ಭೂಮಿಯು ಕಂಪನವಾಗಿದ್ದು, ಮನೆಯಲ್ಲಿರುವ ಪಾತ್ರೆ, ಸಾಮಗ್ರಿಗಳು ಇದ್ದಕ್ಕಿದ್ದಂತೆ ಬಿದ್ದಿವೆ. ಅಲ್ಲದೆ, ಮನೆಯಲ್ಲಿದ್ದ ಪೀಠೋಪಕರಣಗಳು ಅಲುಗಾಡಿದೆ. ದೊರೆ ಸಾಲು ಭಾಗದ ಗ್ರಾಮಗಳಲ್ಲಿ ಮಾಳಿಗೆ ಮನೆಯ ಮೇಲ್ಚಾವಣಿಯ ಮಣ್ಣು ಕುಸಿದು ಬಿದ್ದಿವೆ. ಘಟನೆಯಿಂದ ಗ್ರಾಮಸ್ಥರು ಭಯ ಭೀತರಾಗಿದ್ದು, ಮನೆಗಳಿಂದ ಹೊರಗೆ ಬಂದು ನಿಂತಿದ್ದಾರೆ. ತಾಲೂಕಿನ ಸಿದ್ದಮ್ಮನಹಳ್ಳಿ ಗ್ರಾಮಕ್ಕೆ ತೆರಳುತ್ತಿದ್ದ ಬಸ್ಸು ಅಲುಗಾಡಿದ್ದು, ಇದರಿಂದ ಬಸ್‌ನಲ್ಲಿದ್ದ ಪ್ರಯಾಣಿಕರು ಗಾಬರಿಗೊಂಡಿದ್ದಾರೆ. ಮೂರು ತಾಲೂಕುಗಳಲ್ಲಿ ಲಘು ಭೂಕಂಪನ : ಚಳ್ಳಕೆರೆ ತಾಲೂಕಿನ ಕೊಲಮ್ಮನಹಳ್ಳಿ, ಕೂಡ್ಲಿಗಿ ತಾಲೂಕಿನ ಕಲ್ಲಳ್ಳಿ ಹಾಗೂ ಜಗಳೂರು ತಾಲೂಕಿನ ಚಿಕ್ಕಮಲ್ಲನ ಹೊಳೆ, ದಿಬ್ಬಜಹಟ್ಟಿ ಸೇರಿದಂತೆ ದೊರೆ ಸಾಲು ಭಾಗದ ಇತರ ಗ್ರಾಮಗಳಲ್ಲಿ ಭೂಮಿ ಕಂಪಿಸಿದೆ ಎಂದು ತಿಳಿದು ಬಂದಿದೆ. ಸ್ಥಳಕ್ಕೆ ಸಿಪಿಐ ಸಿದ್ರಾಮಯ್ಯ ಭೇಟಿ ನೀಡಿ ಗ್ರಾಮಸ್ಥರಿಗೆ ಧೈರ್ಯ ತುಂಬಿದ್ದಾರೆ.

ವಾರ್ತಾ ಭಾರತಿ 13 Dec 2025 10:34 pm

ಕಲಬುರಗಿ | ಗಮನ ಸೆಳೆದ ದಖ್ಹನಿ ಉರ್ದು ನಾಟಕ ʼಕಿವಡೆ ಕಾ ಬನ್ʼ

ಕಲಬುರಗಿ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ರಂಗಾಯಣ ಕಲಬುರಗಿ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಬಹುಭಾಷಾ ನಾಟಕೋತ್ಸವ ನಿಮಿತ್ತ ಶನಿವಾರ ರಾತ್ರಿ ಇಲ್ಲಿನ ಡಾ.ಎಸ್.ಎಂ ಪಂಡಿತ್ ರಂಗ ಮಂದಿರದಲ್ಲಿ ದಖ್ಹನಿ ಉರ್ದು ಭಾಷೆಯ ʼಕಿವಡೆ ಕಾ ಬನ್ʼ ಎಂಬ ನಾಟಕ ಪ್ರೇಕ್ಷಕರ ಗಮನ ಸೆಳೆಯಿತು. ಖ್ಯಾತ ದಖ್ಹನಿ ಉರ್ದು ಸಾಹಿತಿ ಸುಲೇಮಾನ್ ಖತೀಬ್ ರಚನೆಯ ʼಕೆವಡೆ ಕಾ ಬನ್ʼ ನಾಟಕವನ್ನು ಅಲಿ ಅಹ್ಮದ್ ನಿರ್ದೇಶನ ಮಾಡಿದ್ದರು. ನಾಟಕದ ಉದ್ಘಾಟನೆ ವೇಳೆ ಮಾತನಾಡಿದ ರಾಯಚೂರಿನ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ರಂಗಕರ್ಮಿ ಜಫರ್ ಮುಹಿಯುದ್ದೀನ್, ಸುಲೇಮಾನ್ ಖತೀಬ್ ಅವರು ಹಲವು ವರ್ಷಗಳ ಹಿಂದೆ ಮೃತಪಟ್ಟಿದ್ದರೂ ಕೂಡ ಅವರ ಕೊಟ್ಟ ಕೊಡುಗೆ ಅನನ್ಯವಾಗಿದೆ, ದಖ್ಹನಿ ಭಾಷೆಯನ್ನು ದೇಶಾದ್ಯಂತ ಪ್ರಸಿದ್ಧಿಗೊಳಿಸಿದವರಲ್ಲಿ ಹಿಂದಿ ನಟ ಮೆಹಮೂದ್ ಮೊದಲಾದರೆ ಅವರೊಂದಿಗೆ ಸಾಹಿತಿ ಸುಲೇಮಾನ್ ಖತೀಬ್ ಅವರು ಕಾಣುತ್ತಾರೆ ಎಂದರು. ರಂಗಾಯಣ ನಿರ್ದೇಶಕಿ ಸುಜಾತಾ ಜಂಗಮಶೆಟ್ಟಿ ಮಾತನಾಡಿ, ಕಲ್ಯಾಣ ಕರ್ನಾಟಕ ಬಹು ಸಂಸ್ಕೃತಿಯ ನಾಡು, ಕನ್ನಡದಿಂದ ಉರ್ದು, ಮರಾಠಿ, ತೆಲುಗು ಮಾತನಾಡುತ್ತಾರೆ, ಭಾಷೆ, ಸಂಗೀತ, ಸಾಹಿತ್ಯಕ್ಕೆ ಧರ್ಮ, ಜಾತಿ ಇರುವುದಿಲ್ಲ, ಇದು ಎಲ್ಲೆಯೂ ಮೀರುತ್ತದೆ ಎಂದು ಹೇಳಿದರು. ಭಾರತೀಯ ಉರ್ದು ಮಂಚನ ಅಧ್ಯಕ್ಷ ಸೈಯದ್ ರವುಫ್ ಖಾದ್ರಿ ಮಾತನಾಡಿ, 36 ವರ್ಷಗಳಿಂದ ಸುಲೇಮಾನ್ ಖತೀಬ್ ಸ್ಮಾರಕ ಶೈಕ್ಷಣಿಕ ಸಾಂಸ್ಕೃತಿಕ ಹಾಗೂ ಚಾರಿಟೇಬಲ್ ಸಂಸ್ಥೆಯು ಸಾಂಸ್ಕೃತಿಕ ಚಟುವಟಿಕೆಗಳನ್ನು ಹಮ್ಮಿಕೊಳ್ಳುತ್ತಾ ಕಲ್ಯಾಣ ಕರ್ನಾಟಕದ ದಖ್ಹನಿ ಭಾಷೆಯನ್ನು ಪ್ರಚರಿಸುತ್ತಾ ಬರುತ್ತಿರುವುದು ಹೆಮ್ಮೆಯ ವಿಷಯ ಎಂದರು. ಕೆಕೆಆರ್ ಡಿಬಿ ಉಪಕಾರ್ಯದರ್ಶಿ ಪ್ರವೀಣ್ ಪ್ರಿಯಾ, ಮಹಾತ್ಮಾ ಗಾಂಧೀಜಿ ಗ್ರಾಹಕರ ರಕ್ಷಣಾ ವೇದಿಕೆಯ ಪ್ರಧಾನ ಕಾರ್ಯದರ್ಶಿ ವೈಜನಾಥ್ ಝಳಕಿ, ಅಖಿಲ ಭಾರತೀಯ ಉರ್ದು ಮಂಚನ ಅಧ್ಯಕ್ಷ ಸೈಯದ್ ರವೂಫ್ ಖಾದ್ರಿ, ರೋಜಾ ಕುರ್ದ್ ನ ಉತ್ತರಾಧಿಕಾರಿ ಸಯ್ಯದ್ ಶಾ ಯಾದುಲ್ಲಾ ಹುಸೈನಿ, ಸೇರಿದಂತೆ ಹಲವರು ಇದ್ದರು. ಸುಲೇಮಾನ್ ಖತೀಬ್ ಸ್ಮಾರಕ ಶೈಕ್ಷಣಿಕ ಸಾಂಸ್ಕೃತಿಕ ಹಾಗೂ ಚಾರಿಟೇಬಲ್ ಸಂಸ್ಥೆಯ ಶಮೀಮ್ ಸುರೈಯ ಪ್ರಾಸ್ತಾವಿಕ ಮಾತನಾಡಿ ಅತಿಥಿಗಳನ್ನು ಸ್ವಾಗತಿಸಿದರು. ಸಾಧಕರಿಗೆ ವಿಶೇಷ ಸನ್ಮಾನ : 2025ನೇ ಸಾಲಿನಲ್ಲಿ ಎಸ್ಎಸ್ಎಲ್ಸಿ ವಿಭಾಗದಲ್ಲಿ 625ಕ್ಕೆ 621 ಅಂಕ ಪಡೆದು ರಾಜ್ಯಕ್ಕೆ ಕೀರ್ತಿ ತಂದಿರುವ ನಿಮಿತ್ತ ವಿದ್ಯಾರ್ಥಿನಿ ನಝರಿನ್ ಗೌಸ್ ಮೈನುದ್ದೀನ್ ಅವರಿಗೆ 5 ಗ್ರಾಮ ಬಂಗಾರ, 10 ಸಾವಿರ ನಗದು ಹಣ ಸೇರಿದಂತೆ ಪ್ರಶಸ್ತಿ ಫಲಕ ನೀಡಿ ಗೌರವಿಸಲಾಯಿತು. ಅಲ್ಲದೆ, ಎಸೆಸೆಲ್ಸಿಯಲ್ಲಿ 625ಕ್ಕೆ 616 ಅಂಕ ಪಡೆದ ಜುಬೇಯಾ ರುಬೀನ, ಹಾವೇರಿಯ ಶಗುಪ್ತಾ ಹಾಗೂ ಶಿಕ್ಷಕಿ ಅಸ್ಮಾ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.  

ವಾರ್ತಾ ಭಾರತಿ 13 Dec 2025 10:18 pm

Madikeri | ಬೆತ್ತಲೆಗೊಳಿಸಿ ಹಣಕ್ಕಾಗಿ ಬೇಡಿಕೆ ಆರೋಪ; ಇಬ್ಬರು ಪೊಲೀಸ್ ವಶಕ್ಕೆ, ನಾಲ್ವರು ನಾಪತ್ತೆ

ಮಡಿಕೇರಿ : ಫೇಸ್ ಬುಕ್ ಗೆಳತಿಯ ಮನೆಗೆ ಬಂದ ವ್ಯಕ್ತಿಯನ್ನು ಬೆತ್ತಲೆಗೊಳಿಸಿ, ಹಲ್ಲೆ ನಡೆಸಿ ಹಣಕ್ಕಾಗಿ ಪೀಡಿಸಿದ ಆರೋಪದಡಿ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದಿರುವ ಘಟನೆ ಶನಿವಾರ ನಡೆದಿದೆ. ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ವ್ಯಾಪಾರಿಯೊಬ್ಬರು ಆರು ಮಂದಿಯ ವಿರುದ್ಧ ಮಡಿಕೇರಿ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು, ರಚನಾ ಹಾಗೂ ಆಕೆಯ ತಾಯಿ ಮಾಲತಿ ಎಂಬವರನ್ನು ವಶಕ್ಕೆ ಪಡೆದಿದ್ದು, ನಾಲ್ವರು ಆರೋಪಿಗಳು ತಲೆ ಮರೆಸಿಕೊಂಡಿದ್ದಾರೆ. ವ್ಯಾಪಾರಿಗೆ ರಚನಾ ಅವರೊಂದಿಗೆ ಫೇಸ್ ಬುಕ್‌ನಲ್ಲಿ ಪರಿಚಯವಾಗಿದ್ದು, ನಂತರ ಹಣದ ಅವಶ್ಯವಿದೆ ಎಂದು ಹೇಳಿ ನ.20ರಂದು ಮತ್ತು ನ.28ರಂದು ಆನ್‌ಲೈನ್ ಮೂಲಕ ತಲಾ 5 ಸಾವಿರ ರೂ.ಯನ್ನು ಪಡೆದುಕೊಂಡಿದ್ದಾಳೆ. ವ್ಯಾಪಾರಿಯು ಹಣವನ್ನು ವಾಪಸ್ ಕೇಳಿದಾಗ ರಚನಾ ಮೈಸೂರು ಅಥವಾ ಕುಶಾಲನಗರಕ್ಕೆ ಬಾ ಎಂದು ಹೇಳಿದ್ದಾಳೆ. ನಂತರ ಡಿ.12ರಂದು ಮಡಿಕೇರಿಗೆ ಬರಮಾಡಿಕೊಂಡು ರಾತ್ರಿ 10:30 ರ ವೇಳೆಗೆ ಮಂಗಳಾದೇವಿ ನಗರದ ಮನೆಗೆ ಕರೆದುಕೊಂಡು ಹೋಗಿದ್ದಾಳೆ ಎನ್ನಲಾಗಿದೆ. ಮನೆಯಲ್ಲಿ ಇಬ್ಬರೇ ಇರುವಾಗ ರಾತ್ರಿ 11:45 ಗಂಟೆಗೆ ರಚನಾಳ ತಾಯಿ ಮಾಲತಿ ಹಾಗೂ ದಿನೇಶ್ ಎಂಬಾತ ಆಟೊದಲ್ಲಿ ಮನೆಗೆ ಬಂದಿದ್ದಾನೆ. ಹಣದ ಬಗ್ಗೆ ಇವನನ್ನು ನಾನು ವಿಚಾರಿಸಿಕೊಳ್ಳುತ್ತೇನೆ ಎಂದ ದಿನೇಶ್, ನೀವು ಹೋಗಿ ಎಂದು ರಚನಾ ಹಾಗೂ ಅವರ ತಾಯಿಯನ್ನು ಮನೆಯಿಂದ ಕಳುಹಿಸಿದ್ದಾನೆ. ನಂತರ ದಿನೇಶನು ಫೋನ್ ಮಾಡಿ ಸುಜಿತ್ ಹಾಗೂ ದರ್ಶನ್ ಎಂಬವರನ್ನು ಮನೆಗೆ ಕರೆಸಿಕೊಂಡಿದ್ದಾರೆ. ನಂತರ ಮೂವರು ಕೈಗಳಿಂದ, ದೊಣ್ಣೆಯಿಂದ ಮತ್ತು ಕತ್ತಿಯ ಹಿಡಿಯಿಂದ ಮುಖಕ್ಕೆ, ಬಾಯಿಗೆ, ಎಡ ಎದೆಯ ಭಾಗಕ್ಕೆ ಹಾಗೂ ಎಡ ಕಾಲಿನ ಮಂಡಿಗೆ ಹೊಡೆದು ನೋವುಪಡಿಸಿದ್ದಾರೆ. ನನ್ನ ಮೊಬೈಲ್ ಫೋನ್ ಕಿತ್ತುಕೊಂಡು, ನಾನು ಧರಿಸಿದ್ದ ಬಟ್ಟೆಯನ್ನು ಬಲವಂತವಾಗಿ ಬಿಚ್ಚಿಸಿ ಬೆತ್ತಲೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಮೊಬೈಲ್‌ಗಳಿಂದ ಬೆತ್ತಲೆ ವೀಡಿಯೊ ಮಾಡಿಕೊಂಡು, ಒಳ ಉಡುಪನ್ನು ಧರಿಸಲು ನೀಡಿದ್ದಾರೆ. ನಂತರ ಸುಜಿತ್ ಎಂಬಾತ ಏರ್ ಗನ್ ಅನ್ನು ನನ್ನ ತಲೆಗೆ ಇಟ್ಟು ಬೆದರಿಸಿ 50 ಲಕ್ಷ ಹಣ ನೀಡು, ಇಲ್ಲದಿದ್ದರೆ ನಿನ್ನ ವೀಡಿಯೊವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕುವುದಾಗಿ ಹೇಳಿ ಬೆದರಿಕೆ ಹಾಕಿದ್ದಾನೆ. ಮನೆಯಲ್ಲಿ ಬೆಳಗ್ಗಿನವರೆಗೆ ಬಲವಂತವಾಗಿ ಕೂಡಿಹಾಕಿ, ರಕ್ತವಾಗಿದ್ದ ಶರ್ಟ್, ಬನಿಯನ್ ಮತ್ತು ಕರ್ಚೀಪ್ ಅನ್ನು ಮನೆಯೊಳಗೆ ಸುಟ್ಟು ಹಾಕಿದ್ದಾರೆ ಎಂದು ವ್ಯಾಪಾರಿಯು ದೂರಿನಲ್ಲಿ ತಿಳಿಸಿದ್ದಾರೆ.

ವಾರ್ತಾ ಭಾರತಿ 13 Dec 2025 10:04 pm

ರಾಜ್ಯದ ಮುಂದಿನ ಮುಖ್ಯಮಂತ್ರಿ ಬಗ್ಗೆ ಸ್ಫೋಟಕ ಭವಿಷ್ಯ ನುಡಿದ ಕೇಂದ್ರ ಸಚಿವ ವಿ.ಸೋಮಣ್ಣ

V.Somanna: ರಾಜ್ಯದಲ್ಲಿ ಸದ್ಯ ಸಿಎಂ ಬದಲಾವಣೆ ಚರ್ಚೆ ಮತ್ತೆ ಮುನ್ನೆಲೆಗೆ ಬಂದಿದೆ. ಈ ಬಗ್ಗೆ ಕೆಲ ರಾಜಕೀಯ ನಾಯಕರು ಪ್ರತಿಕ್ರಿಯಿಸಿದ್ದು, ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಇದೆಲ್ಲದ ನಡುವೆ ಇದೀಗ ಕೇಂದ್ರ ಸಚಿವ ವಿ.ಸೋಮಣ್ಣ, ಅವರು ಈ ರಾಜ್ಯದ ಮುಖ್ಯಮಂತ್ರಿ ಯಾರಾಗಬೇಕು ಎಂದು ಕೇಂದ್ರ ಸಚಿವ ಸ್ಫೋಟಕ ಭವಿಷ್ಯ ನುಡಿದರು. ತುಮಕೂರಿನ ಹೆಗ್ಗೆರೆಯಲ್ಲಿ ರೇಲ್ವೆ ಮೇಲ್ಸೆತುವೆ ಕಾಮಗಾರಿಗೆ ಗುದ್ದಲಿ

ಒನ್ ಇ೦ಡಿಯ 13 Dec 2025 9:52 pm

ದೆಹಲಿಯಲ್ಲಿ ವಾಯು ಮಾಲಿನ್ಯ ಹೆಚ್ಚಳ: ಸರ್ಕಾರಿ ಮತ್ತು ಖಾಸಗಿ ಕಚೇರಿಗಳಲ್ಲಿ ಶೇ. 50ರಷ್ಟು ಸಿಬ್ಬಂದಿಗೆ 'ಮನೆಯಿಂದ ಕೆಲಸ' ಕಡ್ಡಾಯ; ಹೊಸ ನಿಯಮಗಳೇನು?

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಾಯು ಮಾಲಿನ್ಯ ತೀವ್ರಗೊಂಡಿದೆ. ಜನರು ಮನೆಯಿಂದ ಹೊರಬರುವುದು ಕಷ್ಟಕರವಾಗಿದೆ. ಈ ಪರಿಸ್ಥಿತಿಯನ್ನು ಎದುರಿಸಲು, ದೆಹಲಿ ಸರ್ಕಾರ ತನ್ನ ಶೇ. 50ರಷ್ಟು ನೌಕರರು ಮತ್ತು ಖಾಸಗಿ ಕಚೇರಿಗಳ ಸಿಬ್ಬಂದಿ ಮನೆಯಿಂದಲೇ ಕೆಲಸ ಮಾಡುವಂತೆ ಆದೇಶಿಸಿದೆ. ಕಠಿಣ ನಿರ್ಬಂಧಗಳು ಜಾರಿಗೆ ಬಂದಿರುವುದರಿಂದ ಈ ಕ್ರಮ ತೆಗೆದುಕೊಳ್ಳಲಾಗಿದೆ. ವಾಯು ಗುಣಮಟ್ಟ ನಿರ್ವಹಣಾ ಆಯೋಗವು ನಿರ್ಬಂಧಗಳನ್ನು ಜಾರಿಗೊಳಿಸಿದೆ.

ವಿಜಯ ಕರ್ನಾಟಕ 13 Dec 2025 9:45 pm

ಉತ್ತರ ಪ್ರದೇಶದ ಮೂಲದ ಮಗು ಮೃತ್ಯು

ಮಣಿಪಾಲ, ಡಿ.13: ಅನಾರೋಗ್ಯದಿಂದ ಬಳಲುತ್ತಿದ್ದ ಉತ್ತರ ಪ್ರದೇಶದ ಮೂಲದ ಮಗುವೊಂದು ಇಂದ್ರಾಳಿ ರೈಲ್ವೇ ನಿಲ್ದಾಣದಲ್ಲಿ ಮೃತಪಟ್ಟ ಘಟನೆ ನಡೆದಿದೆ. ಮೃತರನ್ನು ಉತ್ತರ ಪ್ರದೇಶ ಮೂಲದ ಪರ್ಕಳ ದೇವಿನಗರದ ನಿವಾಸಿ ನೀಲಾಂಬರಿ ಎಂಬವರ ಒಂದೂವರೆ ವರ್ಷದ ಮಗು ದೀಪಾಲಿ ಎಂದು ಗುರುತಿಸಲಾಗಿದೆ. ದೀಪಾಲಿ ಹುಟ್ಟಿನಿಂದಲೂ ಲಿವರಿಗೆ ಸಂಬಂಧಿಸಿದ ಸಮಸ್ಯೆಯಿಂದ ಬಳಲುತ್ತಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಸ್ವಂತ ಊರಾದ ಉತ್ತರ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಅಲ್ಲಿ ಚಿಕಿತ್ಸೆ ಪಡೆದು ಡಿ.11ರಂದು ರೈಲಿನಲ್ಲಿ ಹೊರಟಿದ್ದರು. ಡಿ.12ರಂದು ರಾತ್ರಿ ಇಂದ್ರಾಳಿ ರೈಲ್ವೇ ನಿಲ್ದಾಣಕ್ಕೆ ಬರುವಾಗ ದೀಪಾಲಿ ಅಸ್ವಸ್ಥಗೊಂಡಿದ್ದು, ಚಿಕಿತ್ಸೆ ಬಗ್ಗೆ ಉಡುಪಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ಅಲ್ಲಿ ಪರೀಕ್ಷಿಸಿದ ವೈದ್ಯರು ಮಗು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಾರ್ತಾ ಭಾರತಿ 13 Dec 2025 9:40 pm

ಕಾಪು | ಮೆಡಿಕಲ್ ಔಷಧಿ ಸೇವಿಸಿ ಮಲಗಿದ್ದ ವ್ಯಕ್ತಿ ಮೃತ್ಯು

ಕಾಪು, ಡಿ.13: ವಿಪರೀತ ಕೆಮ್ಮು ಮತ್ತು ದಮ್ಮು ಕಾಯಿಲೆಗೆ ಮೆಡಿಕಲ್ ನಿಂದ ತಂದ ಔಷಧಿ ಸೇವಿಸಿ ಮಲಗಿದ್ದ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಡಿ.12ರಂದು ರಾತ್ರಿ ವೇಳೆ ನಡೆದಿದೆ. ಮೃತರನ್ನು ಉದ್ಯಾವರ ಗ್ರಾಮದ ಮಮತ ಆಚಾರ್ಯ ಎಂಬವರ ಮಗ ರಕ್ಷಿತ್ ಕುಮಾರ್(34) ಎಂದು ಗುರುತಿಸಲಾಗಿದೆ. ಇವರಿಗೆ ಸುಮಾರು 20 ದಿನದಿಂದ ವಿಪರೀತ ಕೆಮ್ಮು ಮತ್ತು ದಮ್ಮು ಕಾಯಿಲೆ ಇದ್ದು, ಮೆಡಿಕಲ್ ನಿಂದ ಔಷಧಿಯನ್ನು ತಂದು ಸೇವಿಸುತ್ತಿದ್ದರು. ರಾತ್ರಿ ಊಟ ಮಾಡಿ ಮಲಗಿದ್ದ ಇವರು, ಬೆಳಗ್ಗೆ ಏಳದೇ ಅಲ್ಲೇ ಮೃತಪಟ್ಟಿರುವುದು ತಿಳಿದು ಬಂದಿದೆ. ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಾರ್ತಾ ಭಾರತಿ 13 Dec 2025 9:38 pm

ಉಡುಪಿ | ಎಪಿಎಂಸಿ ಅಧಿಕಾರಿಯ ಕರ್ತವ್ಯಕ್ಕೆ ಅಡ್ಡಿಪಡಿಸಿ ಬೆದರಿಕೆ ಆರೋಪ : ಬಿಜೆಪಿ ಮುಖಂಡ ಸಹಿತ ಹಲವರ ವಿರುದ್ಧ ಪ್ರಕರಣ ದಾಖಲು

ಉಡುಪಿ, ಡಿ.13: ಆದಿಉಡುಪಿಯಲ್ಲಿರುವ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ(ಎಪಿಎಂಸಿ) ಎದುರು ಕಾನೂನು ಬಾಹಿರವಾಗಿ ಪ್ರತಿಭಟನೆ ನಡೆಸಿ ಅಧಿಕಾರಿಯ ಕರ್ತವ್ಯಕ್ಕೆ ಅಡ್ಡಿ ಪಡಿಸಿ ಬೆದರಿಕೆ ಹಾಕಿರುವ ಬಗ್ಗೆ ಬಿಜೆಪಿ ಮುಖಂಡ ಸಹಿತ ಹಲವರ ವಿರುದ್ಧ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಎಪಿಎಂಸಿ ಕಾರ್ಯದರ್ಶಿ ಕೆ.ಪಿ.ಸಂದೇಶ್ ಎಂಬವರು ಡಿ.11ರಂದು ಮಧ್ಯಾಹ್ನ ವೇಳೆ ಸಮಿತಿಯ ಆಡಳಿತ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವಾಗ ಬಿಜೆಪಿ ಮುಖಂಡ, ಮಾಜಿ ನಗರಸಭೆ ಸದಸ್ಯ ವಿಜಯ ಕುಮಾರ್ ಕೊಡವೂರು, ಸುಭಾಷಿತ್ ಕುರ್ಮಾ, ಫಯಾಜ್ ಅಹಮ್ಮದ್, ಸುಶಾಂತ್ ನ್ಯಾರಿ, ಪ್ರಭು ಭೀಮನಗೌಡ, ಲಕ್ಷ್ಮಣ, ಚಂದಪ್ಪ ಎಸ್., ರಾಮನಾಥ ಪೈ, ರಾಘವೇಂದ್ರ, ಸಿದ್ಧನಗೌಡ, ಕೃಷ್ಣಪ್ಪ, ಅಂಬರೀಶ ಮೆಣಸಿನಕಾಯಿ, ಕೆ.ಹರೀಶ್ ಭಟ್, ಜಗಳೂರಯ್ಯ, ಪಾಪರಾಜ ಜೆ. ಮತ್ತು ಇತರರು ಏಕಾಏಕಿ ಸಮಿತಿ ಕಚೇರಿ ಒಳಗೆ ಪ್ರವೇಶಿಸಿದರೆನ್ನಲಾಗಿದೆ. ಈ ವೇಳೆ ಕಚೇರಿಯ ಹೊರಗಡೆ ಬಂದ ಕೆ.ಪಿ.ಸಂದೇಶ್ ಅವರನ್ನು ಆರೋಪಿಗಳು ತಡೆದು ಕಾನೂನು ಬಾಹಿರವಾಗಿ ಕಚೇರಿ ಎದುರುಗಡೆ ಧರಣಿ ಕುಳಿತರು. ನ್ಯಾಯ ಬೇಕು, ಸರಕಾರಿ ಜಾಗ ಉಳಿಸೋಣ, ಕೃಷಿಕರಿಗೆ ನ್ಯಾಯ ಸಿಗಲಿ ಹಾಗೂ ಇತರೆ ಫಲಕಗಳನ್ನು ಹಿಡಿದು ಸಮಿತಿಯ ಆಡಳಿತಾಧಿಕಾರಿಗಳ ವಿರುದ್ಧ ಧಿಕ್ಕಾರ ಕೂಗಿ, ಸರಕಾರಿ ಕೆಲಸಕ್ಕೆ ಅಡಚಣೆ ಪಡಿಸಿದರು. ಅಲ್ಲದೆ ಕೆಲವರು ಕೆ.ಪಿ.ಸಂದೇಶ್ ಅವರನ್ನು ಉದ್ದೇಶಿಸಿ ಬೆದರಿಕೆ ಹಾಕಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.

ವಾರ್ತಾ ಭಾರತಿ 13 Dec 2025 9:34 pm

Assam | ಪಾಕ್‌ ಗುಪ್ತಚರರೊಂದಿಗೆ ಸಂಪರ್ಕ ಆರೋಪ, ನಿವೃತ್ತ ಐಎಎಫ್ ಸಿಬ್ಬಂದಿ ಕುಳೇಂದ್ರ ಶರ್ಮಾ ಬಂಧನ

ತೇಜಪುರ,ಡಿ.13: ಪಾಕಿಸ್ತಾನದ ಗುಪ್ತಚರರೊಂದಿಗೆ ಸಂಪರ್ಕ ಹೊಂದಿದ್ದ ಆರೋಪದಲ್ಲಿ ಭಾರತೀಯ ವಾಯುಪಡೆಯ (ಐಎಎಫ್) ನಿವೃತ್ತ ಸಿಬ್ಬಂದಿ ಕುಳೇಂದ್ರ ಶರ್ಮಾ ನನ್ನು ಅಸ್ಸಾಮಿನ ಸೋನಿತ್‌ಪುರ ಜಿಲ್ಲೆಯಲ್ಲಿ ಬಂಧಿಸಲಾಗಿದೆ ಎಂದು ಪೋಲಿಸರು ಶನಿವಾರ ತಿಳಿಸಿದರು. ಆರೋಪಿಯ ಕುಳೇಂದ್ರ ಶರ್ಮಾ ಸಾಮಾಜಿಕ ಮಾಧ್ಯಮಗಳ ಮೂಲಕ ಪಾಕ್ ಏಜೆಂಟ್‌ ಗಳೊಂದಿಗೆ ಸೂಕ್ಷ್ಮ ದಾಖಲೆಗಳು ಮತ್ತು ಮಾಹಿತಿಗಳನ್ನು ಹಂಚಿಕೊಂಡಿದ್ದು ಪ್ರಾಥಮಿಕ ತನಿಖೆಯಿಂದ ಬಹಿರಂಗಗೊಂಡಿದೆ. ಆತನ ಲ್ಯಾಪ್‌ಟಾಪ್ ಮತ್ತು ಮೊಬೈಲ್ ಫೋನ್ ವಶಪಡಿಸಿಕೊಳ್ಳಲಾಗಿದೆ. ಕೆಲವು ಡೇಟಾವನ್ನು ಅಳಿಸಲಾಗಿದ್ದರೂ ಈ ಸಾಧನಗಳನ್ನು ವಿಧಿವಿಜ್ಞಾನ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಹೆಚ್ಚುವರಿ ಎಸ್‌ಪಿ ಹರಿಚರಣ ಭೂಮಿಜ್ ಅವರು ಸುದ್ದಿಗಾರರಿಗೆ ತಿಳಿಸಿದರು. ಬಿಎನ್‌ಎಸ್‌ನ ಸಂಬಂಧಿತ ಕಲಮ್‌ ಗಳಡಿ ಕುಳೇಂದ್ರ ಶರ್ಮಾ ವಿರುದ್ಧ ಪ್ರಕರಣವನ್ನು ದಾಖಲಿಸಲಾಗಿದೆ ಎಂದರು.

ವಾರ್ತಾ ಭಾರತಿ 13 Dec 2025 9:31 pm

ವೈಜ್ಞಾನಿಕ ಮನೋಭಾವ, ವೈಚಾರಿಕತೆಯನ್ನು ಅಳವಡಿಸಿಕೊಳ್ಳುವುದೇ ಶಿಕ್ಷಣದ ಉದ್ದೇಶ : ಸಿದ್ದರಾಮಯ್ಯ

ಗದಗ : ವೈಜ್ಞಾನಿಕ ಮನೋಭಾವ ಮತ್ತು ವೈಚಾರಿಕತೆಯನ್ನು ಅಳವಡಿಸಿಕೊಳ್ಳುವುದೇ ಶಿಕ್ಷಣದ ಉದ್ದೇಶ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ಶನಿವಾರ ಜಿಲ್ಲೆಯ ಲಕ್ಷ್ಮೇಶ್ವರದ ಚಂದನ ಎಜುಕೇಶನ್ ಸೊಸೈಟಿ ವತಿಯಿಂದ ಆಯೋಜಿಸಲಾಗಿದ್ದ ಭಾರತ ರತ್ನ ಪ್ರೊ. ಸಿ.ಎನ್. ಆರ್. ರಾವ್ 10ನೇ ವರ್ಷದ ವಿಜ್ಞಾನ ವಿಸ್ಕೃತ ಕಾರ್ಯಕ್ರಮ-2025 ಹಾಗೂ ಬಿ.ಎಸ್ ಪಾಟೀಲ್ ಇವರಿಗೆ 2025ನೇ ಸಾಲಿನ ಪ್ರತಿಷ್ಠಿತ ಚಂದನ ಶ್ರೀ ಪ್ರಶಸ್ತಿ ಪ್ರಧಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಮೌಢ್ಯ ಹಾಗೂ ಕಂದಾಚಾರಗಳನ್ನು ಕೊನೆಗಾಣಿಸಬೇಕು : ಮೌಢ್ಯ ವಿರೋಧಿ ಕಾಯ್ದೆಯನ್ನು ಜಾರಿಗೆ ತಂದೆವು. ಬಸವಣ್ಣನವರ ನಾಡಿನಲ್ಲಿ ಹುಟ್ಟಿದ ನಾವು ಇಂದಿಗೂ ಮೌಢ್ಯಗಳನ್ನು ಆಚರಿಸಲಾಗುತ್ತಿರುವುದು ದುರ್ದೈವದ ಸಂಗತಿ. ಮೌಢ್ಯ ಹಾಗೂ ಕಂದಾಚಾರಗಳನ್ನು ಕೊನೆಗಾಣಿಸಬೇಕು. ಭ್ರಾತೃತ್ವ, ಸ್ವಾತಂತ್ರ್ಯ , ಸಮಾನತೆಗಳನ್ನು ಸಂವಿಧಾನ ತಿಳಿಸಿದ್ದು, ಇದು ಅಕ್ಷರಶ: ಜಾರಿಯಾಗದೇ, ಜಾತಿ ವ್ಯವಸ್ಥೆಯಾಗಲಿ, ಅಸಮಾನತೆಯಾಗಲಿ ಹೋಗುವುದಿಲ್ಲ. ಮಾನವರಾಗಿ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಲು ಶಿಕ್ಷಣ ಅಗತ್ಯ ಎಂದು ಅವರು ನುಡಿದರು. ಶಿಕ್ಷಣವೆಂಬುದು ಒಂದು ವರ್ಗಕ್ಕೆ ಸೀಮಿತವಾಗಿಲ್ಲ: ಎಲ್ಲ ಧರ್ಮಗಳೂ ಮಾನವೀಯತೆಯನ್ನು ಬೋಧಿಸುತ್ತವೆ. ಪಟ್ಟಭದ್ರಹಿತಾಸಕ್ತಿಗಳು ಧರ್ಮವನ್ನು ತಪ್ಪಾಗಿ ಅರ್ಥೈಸುತ್ತಿದ್ದಾರೆ. ಕಷ್ಟದಲ್ಲಿದ್ದಾಗ ತನ್ನ ಹಣೆಬರಹವೆಂದು ಸುಮ್ಮನಿರದೇ, ಇಚ್ಛಾಶಕ್ತಿಯಿಂದ ಶ್ರಮಿಸಿದರೆ, ಯಾವುದೇ ವರ್ಗದವರೂ ಸಾಧನೆಗಳನ್ನು ಮಾಡಬಹುದಾಗಿದೆ. ಶಿಕ್ಷಣವೆಂಬುದು ಒಂದು ವರ್ಗಕ್ಕೆ ಸೀಮಿತವಾದುದಲ್ಲ. ಪ್ರಾಮಾಣಿಕ ಪ್ರಯತ್ನ ಮತ್ತು ಅವಕಾಶಗಳನ್ನು ಸದುಪಯೋಗ ಪಡೆದು, ಉನ್ನತ ಸ್ಥಾನಕ್ಕೆ ತಲುಪಬಹುದು. ವೈಜ್ಞಾನಿಕ ಮನೋಭಾವ ಮತ್ತು ವೈಚಾರಿಕತೆಯನ್ನು ಅಳವಡಿಸಿಕೊಳ್ಳುವುದೇ ವಿಜ್ಞಾನದ ಉದ್ದೇಶ ಎಂದರು. ನಾಡಿನ ಅಭಿವೃದ್ಧಿ ಬಗ್ಗೆ ಕಾಳಜಿ ಹೊಂದಿದ್ದ ಪ್ರಾಮಾಣಿಕ ಅಧಿಕಾರಿ : ಪ್ರಧಾನ ಕಾರ್ಯದರ್ಶಿಗಳಾಗಿದ್ದ ಬಿ.ಎಸ್.ಪಾಟೀಲ್ ಅವರೊಂದಿಗೆ ಪ್ರವಾಸ ಹೋಗಿದ್ದ ಸಂದರ್ಭದಲ್ಲಿ ನೆರವು ನೀಡುತ್ತಿದ್ದರು ಎಂದು ಸ್ಮರಿಸಿದ ಮುಖ್ಯಮಂತ್ರಿ, ರೈತ ಕುಟುಂಬದಿಂದ ಬಂದು ವಿದ್ಯಾಭ್ಯಾಸ ಮಾಡಿ ಸೈನ್ಯ ಸೇರಿ ನಂತರ ಐಎಎಸ್ ಅಧಿಕಾರಿಯಾದವರು. ಅವರಲ್ಲಿ ಇಚ್ಚಾಶಕ್ತಿ ಇದ್ದದ್ದರಿಂದ ಅಪಘಾತವಾಗಿದ್ದರೂ ಐಎಎಸ್ ಉತ್ತೀರ್ಣರಾಗಲು ಸಾಧ್ಯವಾಯಿತು. ಮುಖ್ಯ ಕಾರ್ಯದರ್ಶಿಯಾಗಿ ನಿವೃತ್ತಿಯಾಗಿದ್ದಾರೆ. ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದರು. ನಾಡಿನ ಅಭಿವೃದ್ಧಿ ಬಗ್ಗೆ ಕಾಳಜಿ ಹೊಂದಿದ್ದರು ಎಂದರು.  ವೈಜ್ಞಾನಿಕ ಮತ್ತು ವೈಚಾರಿಕ ಚಿಂತನೆಯನ್ನು ಬೆಳೆಸಿಕೊಳ್ಳಬೇಕು : ಸಿ.ಎನ್.ಆರ್ ರಾವ್ ಈ ದೇಶ ಕಂಡ ಅಪರೂಪದ ವಿಜ್ಞಾನಿ. ಎಸ್.ಎಸ್.ಎಲ್.ಸಿ ವರೆಗೆ ಕನ್ನಡ ಮಾಧ್ಯಮದಲ್ಲಿಯೇ ಕಲಿತವರು. ಪಾಟೀಲರು ಆಂಗ್ಲ ಮಾಧ್ಯಮ ಕಲಿತವರು. ಸಿ.ಎನ್.ಆರ್ ವಿಜ್ಞಾನದಲ್ಲಿ ಅತ್ಯಂತ ಎತ್ತರಕ್ಕೆ ಬೆಳೆದವರು.

ವಾರ್ತಾ ಭಾರತಿ 13 Dec 2025 9:29 pm

ಕೋಲ್ಕತಾವನ್ನು ಆವರಿಸಿದ ‘ಮೆಸ್ಸಿ’ ಉನ್ಮಾದ!

ಫುಟ್ಬಾಲ್ ಮಾಂತ್ರಿಕನನ್ನು ಸ್ವಾಗತಿಸಲು ಮುಂಜಾನೆ 2:30ಕ್ಕೆ ನೆರೆದ ಸಾವಿರಾರು ಅಭಿಮಾನಿಗಳು

ವಾರ್ತಾ ಭಾರತಿ 13 Dec 2025 9:25 pm

ಮಂಗಳೂರು | ಸ್ಕೂಟರ್ ಚಲಾಯಿಸಿದ ಅಪ್ರಾಪ್ತ: ಮಾಲಕನಿಗೆ 25,000 ರೂ. ದಂಡ

ಮಂಗಳೂರು, ಡಿ.13 : ಅಪ್ರಾಪ್ತ ಬಾಲಕ ಸ್ಕೂಟರ್ ಚಲಾಯಿಸಿ ಅಪಘಾತಕ್ಕೆ ಕಾರಣವಾದ ಆರೋಪದ ಮೇರೆಗೆ ಸ್ಕೂಟರ್ ಮಾಲಕನಿಗೆ ನ್ಯಾಯಾಲಯದ ದಂಡ ವಿಧಿಸಿದೆ. ರಾ.ಹೆ. 66ರ ನಂತೂರು ಪದವು ಬಳಿ 2025ರ ಮಾ.30ರಂದು ಮುಂಜಾವ 3:50ರ ವೇಳೆಗೆ ಅಪ್ರಾಪ್ತ ಬಾಲಕ ಸ್ಕೂಟರ್‌ನಲ್ಲಿ ತೆರಳುತ್ತಿದ್ದ. ಆ ವೇಳೆ ಅದೇ ದಿಕ್ಕಿನಲ್ಲಿ ಕುಂಟಿಕಾನ ಕಡೆಗೆ ಸಾಗುತ್ತಿದ್ದ ದ್ವಿಚಕ್ರ ವಾಹನಕ್ಕೆ ಬಾಲಕ ಸವಾರಿ ಮಾಡುತ್ತಿದ್ದ ಸ್ಕೂಟರ್ ಢಿಕ್ಕಿ ಹೊಡೆದಿತ್ತು. ಇದರಿಂದ ಎರಡೂ ವಾಹನದಲ್ಲಿದ್ದವರು ಗಾಯಗೊಂಡಿದ್ದರು. ಈ ಬಗ್ಗೆ ಕದ್ರಿ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ನಡೆಸಿದ ಎಸ್ಸೈ ರೋಸಮ್ಮ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಜೆಎಂಎಫ್‌ಸಿ ಎಂಟನೇ ನ್ಯಾಯಾಲಯದ ನ್ಯಾಯಾಧೀಶ ಫವಾಝ್ ಪಿ.ಎ. ಅವರು ಅಪ್ರಾಪ್ತನಿಗೆ ಚಲಾಯಿಸಲು ಸ್ಕೂಟರ್ ನೀಡಿದ ಮಾಲಕ ಅಬ್ದುಲ್ ಹಮೀದ್‌ನಿಗೆ 25,000 ರೂ. ದಂಡ ವಿಧಿಸಿ ಆದೇಶಿಸಿದ್ದಾರೆ.

ವಾರ್ತಾ ಭಾರತಿ 13 Dec 2025 9:20 pm

ಐಸಿಸಿಯ ಮಾಧ್ಯಮ ಹಕ್ಕು ಗುತ್ತಿಗೆಯಿಂದ ಜಿಯೋಸ್ಟಾರ್ ಹಿಂದೆ ಸರಿದಿಲ್ಲ

ಉಭಯ ಸಂಸ್ಥೆಗಳಿಂದ ಜಂಟಿ ಸ್ಪಷ್ಟೀಕರಣ

ವಾರ್ತಾ ಭಾರತಿ 13 Dec 2025 9:19 pm

ಹೊಸ ಬೆಂಗಳೂರು ನಿರ್ಮಾಣ ಮಾಡಿ ವಿಶ್ವದ ಜನರನ್ನು ಆಕರ್ಷಿಸಬೇಕು : ಡಿ.ಕೆ.ಶಿವಕುಮಾರ್

ಬೆಂಗಳೂರು : ಬೆಂಗಳೂರು ದಕ್ಷಿಣ ಹಾಗೂ ಉತ್ತರ ಜಿಲ್ಲೆಗಳಲ್ಲಿ ಹೊಸ ಬೆಂಗಳೂರು ನಿರ್ಮಾಣ ಮಾಡಿ ವಿಶ್ವದ ಜನರನ್ನು ಆಕರ್ಷಿಸಬೇಕು ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ. ದೇವನಹಳ್ಳಿಯ ಅಂಬಿಕಾ ಲೇಔಟ್‍ನಲ್ಲಿ ಬೆಂಗಳೂರು ಅಂತರ್‍ರಾಷ್ಟ್ರೀಯ ವಿಮಾನ ನಿಲ್ದಾಣ ಪ್ರದೇಶ ಯೋಜನಾ ಪ್ರಾಧಿಕಾರದ ನೂತನ ಕಚೇರಿ ಕಟ್ಟಡವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಎತ್ತಿನಹೊಳೆ ಹಾಗೂ ಕಾವೇರಿ ನೀರನ್ನು ಈ ಭಾಗಕ್ಕೆ ನೀಡಬೇಕು ಎಂದು ಸಚಿವ ಕೆ.ಎಚ್.ಮುನಿಯಪ್ಪ ಅವರು ನನ್ನ ಮೇಲೆ ಬಹಳ ಒತ್ತಡ ಹಾಕುತ್ತಿದ್ದಾರೆ. ನಾನು ಮಂತ್ರಿಯಾದ ಬಳಿಕ ಬೆಂಗಳೂರು ನಗರಕ್ಕೆ ಪ್ರತ್ಯೇಕವಾಗಿ 6 ಟಿಎಂಸಿ ನೀರನ್ನು ಮೀಸಲಿಡಲು ಆದೇಶ ಹೊರಡಿಸಿರುವೆ ಎಂದರು. ಎಲ್ಲರೂ ನಮ್ಮ ನೀರು ನಮ್ಮ ಹಕ್ಕು ಎಂದು ಮೇಕೆದಾಟು ಹೋರಾಟದಲ್ಲಿ ಭಾಗವಹಿಸಿ ಹೆಜ್ಜೆ ಹಾಕಿದ್ದೀರಿ, ಇತ್ತೀಚೆಗೆ ಸುಪ್ರೀಂ ಕೋರ್ಟ್ ರಾಜ್ಯದ ಪರವಾಗಿ ತೀರ್ಪು ನೀಡಿದೆ. ಈ ವಿಚಾರದಲ್ಲಿ ನಮ್ಮ ಹಸ್ತಕ್ಷೇಪವಿಲ್ಲ. ತಾಂತ್ರಿಕ ವಿಚಾಗಳೇನೆ ಇದ್ದರು ಕೇಂದ್ರ ಜಲ ಆಯೋಗ ತೀರ್ಮಾನ ಮಾಡಬೇಕು ಎಂದು ತಿಳಿಸಿದೆ. ಎತ್ತಿನಹೊಳೆ ನೀರು ನೀಡುವ ಗುರಿ ಇದೆ. ಕೋಲಾರ, ಚಿಕ್ಕಬಳ್ಳಾಪುರ, ದೇವನಹಳ್ಳಿಗೆ ನೀರು ತರಲು ಪ್ರಯತ್ನಿಸುತ್ತಿದ್ದೇವೆ ಎಂದು ತಿಳಿಸಿದರು. ಇಲ್ಲಿ ಯಾರೇ ಆಗಲಿ ಕೊಳಚೆ ನೀರನ್ನು ಯಾವುದೇ ಕಾರಣಕ್ಕೂ ಕೆರೆಗಳಿಗೆ ಬಿಡಬಾರದು. ಇದಕ್ಕೆ ಪ್ರತ್ಯೇಕ ಚರಂಡಿ ವ್ಯವಸ್ಥೆ ಮಾಡಬೇಕು. ಕೆರೆಗಳ ರಕ್ಷಣೆ ಮಾಡಿ. ಈ ಭಾಗ ಅಂತಾರಾಷ್ಟ್ರೀಯ ನಗರವಾಗಿ ಬೆಳೆಯಲಿದೆ. ಯೋಜನಾ ಪ್ರಾಧಿಕಾರದಿಂದ ಯಾವುದೇ ಬಡಾವಣೆ ರಸ್ತೆಯಾದರೂ 30-40 ಮೀಟರ್ ಅಗಲದ ರಸ್ತೆ ಕಡ್ಡಾಯವಾಗಿ ಇರಲೇಬೇಕು ಎಂದು ಸೂಚಿಸಿದರು. ಕೆಂಪೇಗೌಡರ ಕನಸು ಮೀರಿ ಬೆಂಗಳೂರು ಬೆಳೆಯುತ್ತಿದೆ. ಬೆಂಗಳೂರಿನ ಸುತ್ತಮುತ್ತಲ ಪ್ರದೇಶವನ್ನು ಜಿಬಿಎ ವ್ಯಾಪ್ತಿಯ ಪಾಲಿಕೆಗಳಿಗೆ ಸೇರಿಸಲಾಗುವುದು. ಬಿಡದಿ, ಸೋಲೂರು, ನಂದಗುಡಿಯಲ್ಲಿ ಟೌನ್ ಶಿಪ್ ಮಾಡುತ್ತೇವೆ. ಇದನ್ನು ಡಿನೋಟಿಫಿಕೆಷನ್ ಮಾಡಲು ಸಾಧ್ಯವೇ ಇಲ್ಲ. ನಿನ್ನೆ ಕೂಡ ಹೈಕೋರ್ಟ್ ದ್ವಿಸದಸ್ಯ ಪೀಠ ಬಿಡಿಎ ಪರವಾಗಿ ಆದೇಶ ಬಂದಿದೆ. ರೈತರಿಗೆ ಅನುಕೂಲ ಮಾಡಿಕೊಡಲು ಉತ್ತಮ ಬೆಲೆ ಸಿಗುವಂತೆ ಮಾಡಲಾಗುವುದು ಎಂದು ಭರವಸೆ ನೀಡಿದರು. ಹೊಸಕೋಟೆ, ದೇವನಹಳ್ಳಿ, ದೊಡ್ಡಬಳ್ಳಾಪುರ, ನೆಲಮಂಗಲ, ಬಿಡದಿ, ರಾಮನಗರ ಹೊಸ ಬೆಂಗಳೂರಾಗಲಿದೆ. ನೀವು ನಿಮ್ಮ ಆಸ್ತಿಗಳನ್ನು ಕಾಪಾಡಿಕೊಳ್ಳಿ. ನಿಮ್ಮ ಆಸ್ತಿಗಳಿಗೆ ಹೆಚ್ಚು ಮೌಲ್ಯ ಬರುವಂತೆ ಮಾಡುತ್ತನೆ. ಇಡೀ ವಿಶ್ವ ನೋಡುವಂತೆ ಬೆಂಗಳೂರನ್ನು ಪರಿವರ್ತನೆ ಮಾಡುತ್ತೇವೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯನ್ನು ಬೆಂಗಳೂರು ಉತ್ತರ ಜಿಲ್ಲೆ ಎಂದು ಪರಿಗಣಿಸಲಾಗಿದೆ. ನಮ್ಮ ಸರ್ಕಾರ ಸದಾ ನಿಮ್ಮ ಜೊತೆ ಇರಲಿದೆ ಎಂದು ತಿಳಿಸಿದರು. 2002-2004ರಲ್ಲಿ ನಾನು ನಗರಾಭಿವೃದ್ಧಿ ಸಚಿವನಾಗಿದ್ದಾಗ ಈ ಯೋಜನಾ ಪ್ರಾಧಿಕಾರಕ್ಕೆ ಸಹಿ ಹಾಕಿದ್ದೆ. ವಿಮಾನ ನಿಲ್ದಾಣ ಎಲ್ಲಿ ಮಾಡಬೇಕು, ಬಿಡದಿಯಲ್ಲಾ ಅಥವಾ ದೇವನಹಳ್ಳಿಯಲ್ಲಾ ಎಂದು ದೊಡ್ಡ ಚರ್ಚೆ ನಡೆಯುತ್ತಿತ್ತು. ಅಂದು ರಾಮಯ್ಯ ಅವರು, ಬಚ್ಚೆಗೌಡರು, ಮುನಿನರಸಿಂಹಯ್ಯನವರು ಈ ಭಾಗದ ರೈತರನ್ನು ಒಪ್ಪಿಸಿ ಪ್ರತಿ ಎಕರೆಗೆ ಕೇವಲ 6 ಲಕ್ಷದಂತೆ 2,400 ಎಕರೆ ಭೂಮಿಯನ್ನು ಕೊಡುವಂತೆ ಮಾಡಿದ್ದರು. ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರನ್ನು ಕರೆಸಿ ಇದಕ್ಕೆ ಭೂಮಿ ಪೂಜೆ ಮಾಡಲಾಯಿತು ಎಂದರು.

ವಾರ್ತಾ ಭಾರತಿ 13 Dec 2025 9:18 pm

ಭೂಗಳ್ಳತನ | ಹೆಡ್‍ಕಾನ್‍ಸ್ಟೇಬಲ್ ವಿರುದ್ಧ ಪ್ರಕರಣ ದಾಖಲು

ಬೆಂಗಳೂರು : ನೆಲಮಂಗಲದಲ್ಲಿ 25 ಕೋಟಿ ರೂ. ಮೌಲ್ಯದ ಭೂಗಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ನೆಲಮಂಗಲ ಗ್ರಾಮಾಂತರ ಠಾಣೆ ಹೆಡ್ ಕಾನ್ಸಟೇಬಲ್ ಗಿರಿಜೇಶ್ ಹೆಡ್‍ಕಾನ್‍ಸ್ಟೇಬಲ್ ವಿರುದ್ಧ ದಾಬಸ್‍ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನೆಲಮಂಗಲ ತಾಲೂಕು ಸೋಂಪುರ ಹೋಬಳಿ, ಮಾಚನಹಳ್ಳಿ ಗ್ರಾಮದಲ್ಲಿರುವ ಥ್ಯಾಂಪಿ ಮ್ಯಾಥ್ಯೂ ಅವರಿಗೆ ಸೇರಿದ 8 ಎಕರೆ ಜಮೀನನ್ನು ಅವರಿಗೆ ತಿಳಿಯದೆ ಮೂರ್ನಾಲ್ಕು ಜನರ ಮೂಲಕ ರಿಜಿಸ್ಟರ್ ಮಾಡಲಾಗಿದೆ. ಹೆಡ್‍ಕಾನ್‍ಸ್ಟೇಬಲ್ ಗಿರಿಜೇಶ್ ಸೇರಿದಂತೆ ಪ್ರಕರಣದಲ್ಲಿ ಭಾಗಿಯಾದ ಹಲವರ ವಿರುದ್ದ ಪ್ರಕರಣ ದಾಖಲಾಗಿದೆ. ಈ ಜಮೀನು ಕರ್ನಾಟಕ ಕೈಗಾರಿಕಾ ಪ್ರದೇಶಗಳ ಅಭಿವೃದ್ಧಿ ಮಂಡಳಿ ಸೇರಿದ್ದು, ಅದರ ಪರಿಹಾರ ಹಣ ಕಬಳಿಸಲು ಗಿರಿಜೇಶ್ ಯೋಜನೆ ರೂಪಿಸಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ನೋಂದಣಿ ಆಗದೇ ಇದ್ದರೂ ದಾಖಲೆಗಳಲ್ಲಿ ಗಿರಿಜೇಶ್ ಹಾಗೂ ಇನ್ನಿಬ್ಬರ ಹೆಸರುಗಳಿರುವುದು ಅನುಮಾನಕ್ಕೆ ಕಾರಣವಾಗಿದೆ. ಈ ಸಂಬಂಧ ಥ್ಯಾಂಪಿ ಮ್ಯಾಥ್ಯೂ ನೀಡಿದ ದೂರಿನ ಮೇರೆಗೆ ದಾಬಸ್‍ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಾರ್ತಾ ಭಾರತಿ 13 Dec 2025 9:13 pm

ಎಚ್-1ಬಿ ವೀಸಾ ಶುಲ್ಕ ಹೆಚ್ಚಳ ಪ್ರಶ್ನಿಸಿ ಟ್ರಂಪ್ ವಿರುದ್ಧ ಮೊಕದ್ದಮೆ

ವಾಷಿಂಗ್ಟನ್, ಡಿ.13: ಎಚ್-1ಬಿ ವೀಸಾ ಶುಲ್ಕ ಹೆಚ್ಚಿಸಿರುವುದನ್ನು ಪ್ರಶ್ನಿಸಿ ಟ್ರಂಪ್ ಆಡಳಿತದ ವಿರುದ್ಧ ಅಮೆರಿಕಾದ 20 ರಾಜ್ಯಗಳ ಒಕ್ಕೂಟ ಮೊಕದ್ದಮೆ ದಾಖಲಿಸಿರುವುದಾಗಿ ವರದಿಯಾಗಿದೆ. ಎಚ್-1ಬಿ ವೀಸಾ ಶುಲ್ಕವನ್ನು 1 ಲಕ್ಷ ಡಾಲರ್‍ ಗೆ ಹೆಚ್ಚಿಸಿ ಸೆಪ್ಟಂಬರ್ 19ರಂದು ದೇಶೀಯ ಭದ್ರತೆ ಇಲಾಖೆ ಜಾರಿಗೊಳಿಸಿದ ಆದೇಶವನ್ನು ಪ್ರಶ್ನಿಸಿ ಕ್ಯಾಲಿಫೋರ್ನಿಯಾದ ಅಟಾರ್ನಿ ಜನರಲ್ ರಾಬ್ ಬೋಟ್ನ ನೇತೃತ್ವದಲ್ಲಿ 20 ರಾಜ್ಯಗಳು ಮೊಕದ್ದಮೆ ದಾಖಲಿಸಿವೆ. ಹೊಸ ನೀತಿಯು ವೀಸಾ ಕಾರ್ಯಕ್ರಮವನ್ನು ಸ್ಥಗಿತಗೊಳಿಸಲು ಕಾನೂನುಬಾಹಿರ ಪ್ರಯತ್ನವಾಗಿದ್ದು ಟ್ರಂಪ್ ಆಡಳಿತವು ಸಂಸತ್ತು ನೀಡಿದ ಅಧಿಕಾರವನ್ನು ಮೀರಿದೆ ಮತ್ತು ಆಡಳಿತಾತ್ಮಕ ಕಾರ್ಯವಿಧಾನದ ಕಾಯ್ದೆಯನ್ನು ಉಲ್ಲಂಘಿಸಿದೆ ಎಂದು ದಾವೆಯಲ್ಲಿ ಉಲ್ಲೇಖಿಸಲಾಗಿದೆ.

ವಾರ್ತಾ ಭಾರತಿ 13 Dec 2025 9:12 pm

ಮಂಗಳೂರು | ಲೋಕ ಅದಾಲತ್‌ನಲ್ಲಿ ಒಂದಾದ ದಂಪತಿಗಳು

ಮಂಗಳೂರು, ಡಿ.13: ವಿಚ್ಛೇದನಕ್ಕೆ ನಿರ್ಧರಿಸಿದ್ದ ಎರಡು ಜೋಡಿ ಮತ್ತೆ ಒಂದಾದ ವಿದ್ಯಮಾನಕ್ಕೆ ದ.ಕ. ಜಿಲ್ಲಾ ನ್ಯಾಯಾಲಯದಲ್ಲಿ ಶನಿವಾರ ನಡೆದ ಲೋಕ ಅದಾಲತ್ ಸಾಕ್ಷಿಯಾಯಿತು. ಈ ಎರಡೂ ಜೋಡಿಗಳ ದಾಂಪತ್ಯ ಜೀವನದಲ್ಲಿ ಯಾವುದೋ ಕಾರಣಕ್ಕೆ ಮನಸ್ತಾಪ ಉಂಟಾಗಿತ್ತು. ಹಾಗಾಗಿ ಎರಡೂ ಜೋಡಿಗಳು ವಿಚ್ಛೇದನ ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ವೇಳೆ ಪ್ರಕರಣವನ್ನು ನ್ಯಾಯಾಲಯದ ಮಧ್ಯಸ್ಥಿಕೆ ಕೇಂದ್ರದ ಮೂಲಕ ಸರಿಪಡಿಸಲು ಪ್ರಯತ್ನ ನಡೆಯಿತು. ಪತಿ ಮತ್ತು ಪತ್ನಿಯ ಮಧ್ಯೆ ಸಂಧಾನ ಏರ್ಪಡಿಸಿ ಮತ್ತೆ ಒಗ್ಗೂಡಿ ದಾಂಪತ್ಯ ಜೀವನ ಮುಂದುವರಿಸುವ ಬಗ್ಗೆ ಮನವರಿಕೆ ಮಾಡಿ ಕೊಡಲಾಗಿತ್ತು. ಸಂಧಾನದ ಬಳಿಕ ಈ ದಂಪತಿಗಳು ಮತ್ತೆ ಒಗ್ಗೂಡಿ ಜೀವನ ಮುಂದುವರಿಸಲು ಒಪ್ಪಿಕೊಂಡರು. ಅದರಂತೆ ಶನಿವಾರ ಲೋಕ ಅದಾಲತ್ ಗೆ ಆಗಮಿಸಿದ್ದ ಎರಡೂ ಜೋಡಿಗಳು ಕೌಟುಂಬಿಕ ನ್ಯಾಯಾಲಯದ ಪ್ರಧಾನ ನ್ಯಾಯಾಧೀಶ ಲಕ್ಷ್ಮಿನಾರಾಯಣ ಭಟ್ ಕೆ. ಸಮಕ್ಷಮದಲ್ಲಿ ಪರಸ್ಪರ ಹಾರ ಬದಲಾಯಿಸುವ ಮೂಲಕ ಒಂದಾದರು. ಈ ಸಂದರ್ಭ ಹಿರಿಯ ಸಿವಿಲ್ ನ್ಯಾಯಾಧೀಶೆ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಜೈಬುನ್ನೀಸಾ, ವಿವಿಧ ನ್ಯಾಯಾಲಯಗಳ ನ್ಯಾಯಾಧೀಶರು ಮತ್ತು ವಕೀಲರು ಅಪೂರ್ವ ಕ್ಷಣಕ್ಕೆ ಸಾಕ್ಷಿಯಾದರು. ಲೋಕ ಅದಾಲತ್ ಅಧಿವೇಶನದಲ್ಲಿ ಭಾಗವಹಿಸಿದ್ದ ಎರಡೂ ಜೋಡಿಗಳು ಮತ್ತೆ ಒಂದಾಗುವ ಮೂಲಕ ತಮ್ಮ ವಿಚ್ಛೇದನದ ಹೋರಾಟವನ್ನು ಕೊನೆಗೊಳಿಸಿರುವುದು ಸಮಾಜಕ್ಕೆ ಮಾದರಿಯಾಗಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶೆ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಜೈಬುನ್ನೀಸಾ ತಿಳಿಸಿದ್ದಾರೆ.

ವಾರ್ತಾ ಭಾರತಿ 13 Dec 2025 9:10 pm

ಪಾಕಿಸ್ತಾನ ವಿವಿಯಲ್ಲಿ ಸಂಸ್ಕೃತ ಪಠ್ಯಕ್ರಮ!

ಲಾಹೋರ್, ಡಿ.13: ವಿಭಜನೆಯ ಬಳಿಕ ಮೊದಲ ಬಾರಿಗೆ ಪಾಕಿಸ್ತಾನದ ವಿಶ್ವವಿದ್ಯಾಲಯದಲ್ಲಿ ಸಂಸ್ಕೃತ ಪಠ್ಯಕ್ರಮವನ್ನು ಆರಂಭಿಸಿರುವುದಾಗಿ ವರದಿಯಾಗಿದೆ. ಲಾಹೋರ್ ಇನ್‍ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಸೈಯನ್ಸಸ್(ಎಲ್‍ಯುಎಂಎಸ್) ಸಂಸ್ಕೃತದ ಪಠ್ಯಕ್ರಮವನ್ನು ಪರಿಚಯಿಸಿರುವುದಾಗಿ ವರದಿಯಾಗಿದೆ. ಸಂಸ್ಕೃತ ಅಧ್ಯಯನದ ಕುರಿತು ಮತ್ತೆ ಗಮನ ಹರಿಸಲು ಫಾರ್ಮನ್ ಕ್ರಿಶ್ಚಿಯನ್ ಕಾಲೇಜಿನ ಅಸೋಸಿಯೇಟ್ ಪ್ರೊಫೆಸರ್ ಡಾ. ಶಾಹಿದ್ ರಶೀದ್ ಅವರು ತೀವ್ರ ಪ್ರಯತ್ನ ನಡೆಸಿದ್ದರು. ` ಶಾಸ್ತ್ರೀಯ ಭಾಷೆಗಳು ಮನುಕುಲಕ್ಕೆ ಹೆಚ್ಚಿನ ಜ್ಞಾನವನ್ನು ತಲುಪಿಸುತ್ತವೆ. ಸಂಸ್ಕೃತದ ಬಗ್ಗೆ ಯಾಕೆ ಹೆಚ್ಚಿನ ಆಸಕ್ತಿ ಎಂದು ಹಲವರು ನನ್ನನ್ನು ಪ್ರಶ್ನಿಸಿದ್ದಾರೆ. ಅದಕ್ಕೆ ನಾನು `ಯಾಕೆ ಕಲಿಯಬಾರದು ಎಂದು ಮರುಪ್ರಶ್ನಿಸಿದ್ದೆ. ಇದು ಇಡೀ ಪ್ರದೇಶವನ್ನು ಕಟ್ಟಿಕೊಡುವ ಭಾಷೆಯಾಗಿದೆ. ಸಂಸ್ಕೃತ ವ್ಯಾಕರಣಕಾರ ಪಾಣಿನಿಯ ಗ್ರಾಮವು ಈ ವಲಯದಲ್ಲಿತ್ತು. ಸಿಂಧೂ ಕಣಿವೆ ನಾಗರಿಕತೆಯ ಅವಧಿಯಲ್ಲಿ ಇಲ್ಲಿ ಸಂಸ್ಕೃತದಲ್ಲಿ ಹೆಚ್ಚಿನ ಕೃತಿಗಳನ್ನು ರಚಿಸಲಾಗಿದೆ. ಸಂಸ್ಕೃತವ ಸಾಂಸ್ಕೃತಿಕ ಶಿಖರವಾಗಿದ್ದು ಇದು ನಮ್ಮದೂ ಕೂಡಾ. ಇದು ಯಾವುದೇ ಒಂದು ನಿರ್ದಿಷ್ಟ ಧರ್ಮಕ್ಕೆ ಸಂಬಂಧಿಸಿಲ್ಲ' ಎಂದು ರಶೀದ್ ಹೇಳಿರುವುದಾಗಿ `ದಿ ಟ್ರಿಬ್ಯೂನ್' ವರದಿ ಮಾಡಿದೆ.

ವಾರ್ತಾ ಭಾರತಿ 13 Dec 2025 9:08 pm

ವೆನೆಝುವೆಲಾದಲ್ಲಿ ಭೂ ದಾಳಿಗೆ ಅಮೆರಿಕಾ ಸಿದ್ಧತೆ: ಟ್ರಂಪ್ ಸೂಚನೆ

ವಾಷಿಂಗ್ಟನ್, ಡಿ.13: ವೆನೆಝವೆಲಾದಲ್ಲಿ ಮಾದಕ ವಸ್ತು ಕಳ್ಳಸಾಗಣೆಯ ವಿರುದ್ಧ ಅಮೆರಿಕಾ ನಡೆಸುತ್ತಿರುವ ಅಭಿಯಾನ ತೀವ್ರಗೊಳಿಸುವುದಾಗಿ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದು , ಭೂ ದಾಳಿ ಶೀಘ್ರವೇ ಆರಂಭಗೊಳ್ಳುವ ಸೂಚನೆ ನೀಡಿದ್ದಾರೆ. ಶುಕ್ರವಾರ ಶ್ವೇತಭವನದಲ್ಲಿ ಮಾತನಾಡಿದ ಟ್ರಂಪ್ `ಇಲ್ಲಿಯವರೆಗೆ ಸಮುದ್ರವನ್ನು ಕೇಂದ್ರೀಕರಿಸಿದ ಕಾರ್ಯಾಚರಣೆಗಳು ಈಗ ತೀರಕ್ಕೆ ಚಲಿಸುತ್ತವೆ. ಭೂ ದಾಳಿ ಶೀಘ್ರವೇ ಪ್ರಾರಂಭಗೊಳ್ಳಲಿದೆ' ಎಂದು ಹೇಳಿರುವುದಾಗಿ ವರದಿಯಾಗಿದೆ. ಸೆಪ್ಟಂಬರ್‍ ನಿಂದ ದಕ್ಷಿಣ ಆಫ್ರಿಕಾದ ಸಮುದ್ರ ತೀರದ ಬಳಿ ಅಂತಾರಾಷ್ಟ್ರೀಯ ಸಮುದ್ರ ಪ್ರದೇಶದಲ್ಲಿ ಮಾದಕ ವಸ್ತು ಕಳ್ಳಸಾಗಣೆ ದೋಣಿಗಳನ್ನು ಗುರಿಯಾಗಿಸಿ ಅಮೆರಿಕಾ 21 ನೌಕಾ ದಾಳಿಯನ್ನು ನಡೆಸಿದ್ದು 83 ಮಂದಿ ಸಾವನ್ನಪ್ಪಿದ್ದಾರೆ. ಈ ದಾಳಿಗಳು ಸಮುದ್ರದ ಮೂಲಕ ಮಾದಕ ವಸ್ತುಗಳ ಹರಿವನ್ನು ತೀವ್ರವಾಗಿ ಕಡಿಮೆಗೊಳಿಸಿದೆ. ಸಮುದ್ರದ ಮೂಲಕ ಬರುವ ಮಾದಕ ವಸ್ತುಗಳಲ್ಲಿ 96%ದಷ್ಟನ್ನು ನಿವಾರಿಸಿದ್ದೇವೆ. ನಾವೀಗ ಭೂಮಿಯ ಮೇಲೆ ಆರಂಭಿಸುತ್ತೇವೆ ಮತ್ತು ಇದು ಸುಲಭದ ಕಾರ್ಯಾಚರಣೆಯಾಗಲಿದೆ. ದಾಳಿ ಒಂದು ದೇಶಕ್ಕೆ ಮಾತ್ರ ಸೀಮಿತವಾಗಲಿದೆ ಎಂದು ಹೇಳಲು ಸಾಧ್ಯವಿಲ್ಲ. ನಮ್ಮ ದೇಶಕ್ಕೆ ಮಾದಕ ವಸ್ತುಗಳನ್ನು ತರುವ ಜನರು ದಾಳಿಯ ಗುರಿಯಾಗಿರುತ್ತಾರೆ ಎಂದು ಟ್ರಂಪ್ ಹೇಳಿದ್ದಾರೆ.

ವಾರ್ತಾ ಭಾರತಿ 13 Dec 2025 9:01 pm

ಉನ್ನತ ಶಿಕ್ಷಣ ಸುಧಾರಣೆ: UGC, AICTE ಬದಲಿಗೆ ಏಕ ನಿಯಂತ್ರಕ ಸ್ಥಾಪನೆಗೆ ಕೇಂದ್ರ ಸಚಿವ ಸಂಪುಟದ ಒಪ್ಪಿಗೆ; ಏನಿದು ಮಸೂದೆ?

ದೇಶದ ಉನ್ನತ ಶಿಕ್ಷಣದಲ್ಲಿ ಕ್ರಾಂತಿಕಾರಿ ಬದಲಾವಣೆ ತರಲು ಕೇಂದ್ರ ಸಂಪುಟವು ನಿರ್ಧರಿಸಿದೆ. 'ವಿಕಸಿತ್ ಭಾರತ್ ಶಿಕ್ಷಾ ಅಧೀಕ್ಷಣ್‌ ಮಸೂದೆ'ಗೆ ಒಪ್ಪಿಗೆ ನೀಡಿದ್ದು, ಇದು ಯುಜಿಸಿ ಮತ್ತು ಎಐಸಿಟಿಇಯಂತಹ ಸಂಸ್ಥೆಗಳನ್ನು ಬದಲಿಸಿ, ದೇಶದ ಉನ್ನತ ಶಿಕ್ಷಣಕ್ಕೆ ಏಕೈಕ ನಿಯಂತ್ರಕ ಸಂಸ್ಥೆಯಾಗಿ ಕಾರ್ಯನಿರ್ವಹಿಸಲಿದೆ. ವೈದ್ಯಕೀಯ ಮತ್ತು ಕಾನೂನು ಶಿಕ್ಷಣ ಹೊರತುಪಡಿಸಿ, ಎಲ್ಲಾ ಉನ್ನತ ಶಿಕ್ಷಣ ಸಂಸ್ಥೆಗಳು ಇದರ ಅಡಿಯಲ್ಲಿ ಬರುತ್ತವೆ. ಈ ಮಹತ್ವದ ಮಸೂದೆಯನ್ನು ಮುಂದಿನ ವಾರ ಸಂಸತ್ತಿನಲ್ಲಿ ಮಂಡಿಸಲಾಗುವುದು.

ವಿಜಯ ಕರ್ನಾಟಕ 13 Dec 2025 9:01 pm

ಚಾರ್ಮಾಡಿ | ಅಝ್ರೀನ್ ಸಿದ್ದೀಕ್ ಸ್ಮರಣಾರ್ಥ ರಕ್ತದಾನ ಶಿಬಿರ

ಚಾರ್ಮಾಡಿ : ಇತ್ತೀಚಿಗೆ ರಸ್ತೆ ಅಪಘಾತದಲ್ಲಿ ಮರಣ ಹೊಂದಿದ ಬಾಲಕ ಮರ್ಹೂಮ್ ಅಝ್ರೀನ್ ಸಿದ್ದೀಕ್ ಇವರ ಸ್ಮರಣಾರ್ಥದ ಭಾಗವಾಗಿ ಹಯಾತುಲ್ ಇಸ್ಲಾಂ ಮದರಸ ಬೀಟಿಗೆ ಹಾಗೂ ಮರ್ಹೂಂ ಹೈದರ್ ನಿರ್ಸಾಲ್ ಬ್ಲಡ್ ಡೋನರ್ಸ್ ಫಾರಂ ಹಾಗೂ ಬ್ಲಡ್ ಡೋನರ್ಸ್ ಮಂಗಳೂರು ಇದರ ಸಂಯುಕ್ತಾಶ್ರಯದಲ್ಲಿ ಯೇನಪೋಯ ಆಸ್ಪತ್ರೆ ಇವರ ಸಹಯೋಗದೊಂದಿಗೆ ಬೃಹತ್ ರಕ್ತದಾನ ಶಿಬಿರ ಕಕ್ಕಿಂಜೆಯ ಬೀಟಿಗೆ ಮದರಸ ವಠಾರದಲ್ಲಿ ನಡೆಯಿತು. ಅಹ್ಮದ್ ಕುಂಞ ಮುಸ್ಲಿಯಾರ್ ದುವಾ ಆಶೀರ್ವಾದದೊಂದಿಗೆ ನೆರವೇರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಬ್ದುಲ್ ಖಾದರ್ ವಹಿಸಿದ್ದರು. ಅಹ್ಮದ್ ಕುಂಞ ಮುಸ್ಲಿಯಾರ್ ದುವಾ ಆಶೀರ್ವಾದದೊಂದಿಗೆ ನೆರವೇರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಬ್ದುಲ್ ಖಾದರ್ ವಹಿಸಿದ್ದರು. ರಫೀಕ್ ಫೈಝಿ ಖತೀಬರು ಜಲಾಲಿಯನಗರ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕಾರ್ಯಕ್ರಮವನ್ನು ಉದ್ದೇಶಿಸಿ ತೌಸೀಫ್ ಫೈಝಿ ಖತೀಬರು ಇಸ್ಲಾಂಬಾದ್ ಹಾಗೂ ಅಕ್ಟರ್ ಬೆಳ್ತಂಗಡಿ ಅಧ್ಯಕ್ಷರು ಎಸ್‌ಡಿಪಿಐ ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರ ರಕ್ತದಾನ ಮಹತ್ವದ ಕುರಿತು ಮಾತುಗಳನ್ನಾಡಿದರು. ವೇದಿಕೆಯಲ್ಲಿ ಸ್ವದಕತ್‌ ದಾರಿಮಿ ಕತ್ತರಿಗುಡ್ಡೆ, ಅಬೂಬಕ್ಕರ್ ಮುಸ್ಲಿಯಾರ್, ಉಮರ್ ಮುಸ್ಲಿಯಾರ್, ಹಾರಿಸ್‌ ಹನೀಫಿ, ಮುಸ್ತಫಾ ಜಿ.ಕೆ., ಹಕೀಮ್ ಜಿ.ಕೆ., ಉಸ್ಮಾನ್ ಕಲ್ಲಡ್ಕ, ಇಸ್ಮಾಯಿಲ್, ಇಸ್ಮಾಯಿಲ್ ಕೆ., ಸಿದ್ದೀಕ್ ಯು. ಪಿ., ಹಾಜಿ ಸುಲೈಮಾನ್, ಅಬ್ದುಲ್ ಖಾದರ್ (ಮೋನಾಕ), ಡಾಕ್ಟರ್ಸ್ ಮತ್ತು ಸಿಬ್ಬಂದಿಗಳು ಯೆನೋಪೊಯಾ ಆಸ್ಪತ್ರೆ ಮಂಗಳೂರು, ಅಹಮ್ಮದ್ ಕುಂಞ ಮುಸ್ಲಿಯಾರ್ ಬೀಟಿಗೆ, ಪಕೀರಬ್ಬ ಯು.ಪಿ, ರಫೀಕ್ ಯು. ಪಿ. ಹಾಗೂ ಇನ್ನಿತರರು ಉಪಸ್ಥಿತರಿದ್ದರು. ಅಶ್ರಫ್‌ ಚಾರ್ಮಾಡಿ ಕಾರ್ಯಕ್ರಮವನ್ನು ನಿರೂಪಿಸಿದರು. ರಕ್ತದಾನ ಶಿಬಿರದಲ್ಲಿ ದಾನಿಗಳಿಂದ ಒಟ್ಟು ಎಪ್ಪತ್ತೈದು ಯುನಿಟ್ ರಕ್ತವನ್ನು ಸಂಗ್ರಹಿಸಲಾಯಿತು.    

ವಾರ್ತಾ ಭಾರತಿ 13 Dec 2025 8:56 pm

GOAT Tour 2025 | ಕಾರ್ಯಕ್ರಮದಲ್ಲಿ ಅವ್ಯವಸ್ಥೆ; ಆಯೋಜಕನ ಬಂಧನ

ಕೋಲ್ಕತಾ: ಮೆಸ್ಸಿ ಅವರ ಕಾರ್ಯಕ್ರಮದ ಅವ್ಯವಸ್ಥೆ ಕುರಿತಂತೆ ‘ಭಾರತದ ಗೋಟ್ (ಸಾರ್ವಕಾಲಿಕ ಶ್ರೇಷ್ಠ) ಪ್ರವಾಸ’ದ ಮುಖ್ಯ ಆಯೋಜಕನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಕಾರ್ಯಕ್ರಮ ಅವ್ಯವಸ್ಥೆ ಕುರಿತಂತೆ ಅಭಿಮಾನಿಗಳು ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ವಿಚಾರಣೆ ನಡೆಸಲು ಮುಖ್ಯ ಆಯೋಜಕರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಪಶ್ಚಿಮಬಂಗಳದ ಡಿಜಿಪಿ ರಾಜೀವ್ ಕುಮಾರ್ ತಿಳಿಸಿದ್ದಾರೆ. ಪರಿಸ್ಥಿತಿ ನಿಯಂತ್ರಣದಲ್ಲಿದೆ. ಕಾನೂನು ಸುವ್ಯವಸ್ಥೆಯನ್ನು ಮರು ಸ್ಥಾಪಿಸಲಾಗಿದೆ. ಮೆಸ್ಸಿ ಆಟ ಆಡುವುದನ್ನು ಹಾಗೂ ಮೈದಾನದಲ್ಲಿ ಹೆಚ್ಚು ಸಮಯ ಕಳೆಯುವುದನ್ನು ನಿರೀಕ್ಷಿಸಿದ್ದರಿಂದ ಹೆಚ್ಚಿನ ಅಭಿಮಾನಿಗಳು ಅಸಮಾಧಾನಗೊಂಡರು ಎಂದು ಅವರು ಹೇಳಿದ್ದಾರೆ.

ವಾರ್ತಾ ಭಾರತಿ 13 Dec 2025 8:54 pm