ಮತ್ತೆ ವಿಶ್ವ ದಾಖಲೆಗೆ ಮೈಸೂರಿನ ರಿಫಾ ತಸ್ಕಿನ್ ಯತ್ನ
ತನ್ನ 7ನೇ ವಯಸ್ಸಿಗೆ ಭಾರೀ ವಾಹನಗಳನ್ನು ಚಲಾಯಿಸುವ ಮೂಲಕ ಗೋಲ್ಡನ್ ಆಫ್ ರೆಕಾರ್ಡ್ಸ್ ನಲ್ಲಿ ಅಂತಾರಾಷ್ಟ್ರೀಯ ದಾಖಲೆಗಳನ್ನು ನಿರ್ಮಿಸಿದ್ದ, ಮೈಸೂರಿನ ರಾಜೀವ್ ನಗರದ ನಿವಾಸಿ ರಿಫಾ ತಸ್ಕಿನ್, ಈಗ ಮತ್ತೆ ನಾಲ್ಕು ದಾಖಲೆಗಳನ್ನು ಬರೆಯಲು ಸಿದ್ಧರಾಗಿದ್ದಾರೆ. ಒಂದೇ ದಿನ ಸ್ಟಂಟ್ ಬೈಕ್ ಗಳಿಂದ ಹಿಡಿದು ಹತ್ತು ಚಕ್ರಗಳುಳ್ಳ ವಾಹನಗಳವರೆಗೆ ವಿವಿಧ ವಾಹನಗಳನ್ನು ಚಲಾಯಿಸಿ ಅ. 8ರಂದು ಇದಕ್ಕೆ ವೇದಿಕೆ ಸಿದ್ಧವಾಗಿದೆ.
ಬೆಂಗಳೂರು ಈಗ ಸೆಕೆಂಡ್ ಹ್ಯಾಂಡ್ ಕಾರುಗಳ ದೊಡ್ಡ ಮಾರುಕಟ್ಟೆ! ಈ ವರ್ಷ ಕಾರುಗಳ ಮಾರಾಟ ಶೇ 133ರಷ್ಟು ಹೆಚ್ಚಳ
Second Hand Cars Sale Increase In Bengaluru : ಬೆಂಗಳೂರು ಈಗ ಸೆಕೆಂಡ್ ಹ್ಯಾಂಡ್ ಕಾರುಗಳ ಮಾರುಕಟ್ಟೆಗೆ ರಾಜಧಾನಿಯಾಗುತ್ತಿದೆ. ಈ ವರ್ಷ ಈ ಕಾರುಗಳ ಮಾರಾಟವು ಶೇ.133 ರಷ್ಟು ಹೆಚ್ಚಳವಾಗಿದೆ. ಈ ಬಗ್ಗೆ ಮಾಹಿತಿ ಇಲ್ಲಿದೆ.
Mysuru Dasara 2023 - ಈ ಬಾರಿಯ ದೀಪಾಲಂಕಾರದಲ್ಲಿ ಝಗಮಗಿಸಲಿವೆ ‘ಚಂದ್ರಯಾನ-3’, ‘ಪಂಚ ಗ್ಯಾರಂಟಿ’
Mysuru Dasara 2023 - ಪ್ರತಿ ಬಾರಿಯಂತೆ ಈ ಬಾರಿಯ ದಸರಾ ಹಬ್ಬದ ದಿನಗಳಲ್ಲಿ ಮೈಸೂರು ನಗರಿ, ದೀಪಾಲಂಕಾರಗಳಿಂದ ಝಗಮಗಿಸಲಿದೆ. ನ. 15ರಿಂದ 24ರವರೆಗಿನ ನವರಾತ್ರಿಗಳಂದು ಮೈಸೂರು ನಗರದಲ್ಲಿ ದೀಪಾಲಂಕಾರ ಏರ್ಪಡಿಸಲು ನಿರ್ಧರಿಸಲಾಗಿದೆ. ಒಟ್ಟು 135 ಕಿ.ಮೀ. ರಸ್ತೆಗೆ ದೀಪಾಲಂಕಾರ ಅಳವಡಿಸಲಾಗುತ್ತದೆ. ಈ ಬಾರಿಯ ದೀಪಾಲಂಕಾರದಲ್ಲಿ ಕಾಂಗ್ರೆಸ್ಸಿನ ಪಂಚ ಗ್ಯಾರಂಟಿಗಳು, ಚಂದ್ರಯಾನ - 3 ಮುಂತಾದ ಥೀಮ್ ಗಳನ್ನು ಇಟ್ಟುಕೊಂಡು ದೀಪಾಲಂಕಾರ ಮಾಡಲು ನಿರ್ಧರಿಸಲಾಗಿದೆ.
ತುಂಗಭದ್ರಾ ಜಲಾಶಯಕ್ಕೆ ಒಳಹರಿವು ಇಳಿಕೆ; 2ನೇ ಬೆಳೆಗೆ ನೀರು ಸಿಗೋದು ಡೌಟ್! ಡ್ಯಾಂನಲ್ಲಿ ಎಷ್ಟಿದೆ ನೀರು?
Tungabhadra Dam Inflow Decrease: ತುಂಗಭದ್ರಾ ಜಲಾಶಯಕ್ಕೆ ನೀರಿನ ಒಳಹರಿವು ಇಳಿಕೆಯಾಗಿದೆ. ಎರಡನೇ ಬೆಳೆಗೆ ನೀರು ಸಿಗುವುದು ಅನುಮಾನ ಎನ್ನಲಾಗುತ್ತಿದ್ದು, ನವೆಂಬರ್ ವೇಳೆಗೆ ನೀರಿನ ಪ್ರಯಾಣ ಹೆಚ್ಚಳವಾಗುವ ನಿರೀಕ್ಷೆಯೂ ಇದೆ. ಸದ್ಯ ಜಲಾಶಯದಲ್ಲಿ ನೀರು ಎಷ್ಟಿದೆ? ಈ ಬಗ್ಗೆ ಮಾಹಿತಿ ಇಲ್ಲಿದೆ.
ಚಲ್ಲಘಟ್ಟಕ್ಕೆ ನಮ್ಮ ಮೆಟ್ರೋ ಆಗಮಿಸುತ್ತಿದಂತೆ ಸುತ್ತಮುತ್ತಲ ಭೂಮಿಗೆ ಚಿನ್ನದ ಬೆಲೆ! ಭಾರಿ ಡಿಮ್ಯಾಂಡ್; ದರ ಎಷ್ಟಿದೆ?
Challaghatta Around Land Price Huge Increase : ನಮ್ಮ ಮೆಟ್ರೋ ನೇರಳೆ ಮಾರ್ಗವು ಚಲ್ಲಘಟ್ಟಕ್ಕೆ ಆಗಮಿಸುತ್ತಿದ್ದಂತೆ ಸುತ್ತಮುತ್ತಲ ಭೂಮಿ ಬೆಲೆಗೆ ಚಿನ್ನದ ಬೆಲೆ ಬಂದಿದೆ. ಅಂತೆಯೇ ಡಿಮ್ಯಾಂಡ್ ಕೂಡ ಹೆಚ್ಚಳವಾಗಿದೆ. ಈ ಬಗ್ಗೆ ಮಾಹಿತಿ ಇಲ್ಲಿದೆ.
ಮೇಲೇಳಲೇ ಇಲ್ಲ ರಬ್ಬರ್ ದರ! ಇತ್ತ ಬೇಡಿಕೆಯೂ ಕುಸಿತ ರಫ್ತಿಗೂ ಹೊಡೆತ; ಈಗ ಎಷ್ಟಿದೆ ದರ?
Rubber Price And Demand Decline : ಕೊರೋನಾ ಸಂದರ್ಭದಲ್ಲಿ ಕುಸಿತ ಕಂಡಿದ್ದ ರಬ್ಬರ್ ರದ ಇಂದಿಗೂ ಮೇಲೆ ಬಂದಿಲ್ಲ. ಇತ್ತ ಬೇಡಿಕೆ ಕುಸಿತ ಕಂಡು ರಫ್ತಿಗೂ ಹೊಡೆತ ಬಿದ್ದಿದೆ. ಈ ಬಗ್ಗೆ ಮಾಹಿತಿ ಇಲ್ಲಿದೆ.
ಶೋಕಿ ಜೀವನಕ್ಕಾಗಿ ಸಿನಿಮಾ ಶೈಲಿ ಕಳ್ಳತನ ಮಾಡಿದ ವಿದ್ಯಾರ್ಥಿಗಳು 'ಸಿಗ್ನಲ್ ಜಂಪ್' ಮಾಡಿ ಸಿಕ್ಕಿಬಿದ್ರು !
ಶೋಕಿ ಜೀವನಕ್ಕಾಗಿ ಹಣ ಹೊಂದಿಸಲು ಕಳ್ಳತನಕ್ಕಿಳಿದ ಪ್ರತಿಭಾವಂತ ವಿದ್ಯಾರ್ಥಿಗಳ ಗುಂಪೊಂದು ಕೇವಲ 2 ದಿನಗಳೊಳಗಾಗಿ ಪೊಲೀಸರ ಕೈಗೆ ಸಿಕ್ಕಿಬಿದ್ದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಎಚ್ ಎಸ್ ಆರ್ ಲೇ ಔಟ್ ನ ಮೂವರು ವಿದ್ಯಾರ್ಥಿಗಳು ಇಂತಹ ಸಾಹಸ ಮಾಡಲು ಹೋಗಿ ಈಗ ಕಂಬಿ ಎಣಿಸುತ್ತಿದ್ದಾರೆ. ಪ್ರಭು, ಮೌನೇಶ್, ಅಜಯ್ ಎಂಬ ಮೂವರು ಗೆಳೆಯರು ಸಪ್ಟೆಂಬರ್ 28ರಂದು ರಾತ್ರಿ ಮೊಬೈಲ್ ಅಂಗಡಿಯೊಂದನ್ನು ಲೂಟಿ ಮಾಡಿದ್ದರು. ಪರಾರಿಯಾಗುವ ವೇಳೆ ಸಿಗ್ನಲ್ ಜಂಪ್ ಮಾಡಿದ್ದರಿಂದ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ.
ಕೇಂದ್ರದಿಂದ ಬರ ಪರಿಹಾರಕ್ಕೆ ಕೋರಿಕೆ; ಅ.5 ಕ್ಕೆ ಮನವಿ ಪತ್ರ ಅಂತಿಮಗೊಳಿಸುವ ನಿರೀಕ್ಷೆ
ರಾಜ್ಯಾದ್ಯಂತ ವಾಡಿಕೆಗಿಂತ ಸರಾಸರಿ ಶೇ.25ರಷ್ಟು ಮಳೆ ಕೊರತೆಯಾಗಿದ್ದರೆ, ಕೊಡಗು, ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಶೇ.45 ರಷ್ಟು ಮಳೆ ಕೊರತೆಯಾಗಿದೆ. 27,867.17 ಕೋಟಿ ರೂ. ಕೃಷಿ ಬೆಳೆ ಹಾನಿ ಹಾಗೂ 2,565.70 ಕೋಟಿ ರೂ. ತೋಟಗಾರಿಕೆ ಬೆಳೆ ಹಾನಿ ಸೇರಿ ರಾಜ್ಯದಲ್ಲಿ ಬರಗಾಲ ಪರಿಸ್ತಿತಿಯಿಂದಾಗಿ ಒಟ್ಟು 30,432.87 ಕೋಟಿ ರೂ. ನಷ್ಟವನ್ನು ಅಂದಾಜು ಮಾಡಲಾಗಿದೆ.
ಏಶ್ಯನ್ ಗೇಮ್ಸ್ ನಲ್ಲಿ ಮುಂದುವರಿದ ಅತ್ಲೀಟ್ ಗಳ ಪಾರಮ್ಯ
ಏಶ್ಯನ್ ಗೇಮ್ಸ್ ನಲ್ಲಿ 9ನೇ ದಿನವಾದ ಮಂಗಳವಾರ ಅತ್ಲೀಟ್ ಗಳು ಪಾರಮ್ಯ ಮುಂದುವರಿಸಿದ್ದು, ಫೀಲ್ಡ್ ಹಾಗೂ ಟ್ರ್ಯಾಕ್ ನಲ್ಲಿ ಭಾರತವು ಆರು ಪದಕಗಳನ್ನು ಗೆದ್ದುಕೊಂಡಿದೆ. ಭಾರತೀಯರು ಒಂದೇ ದಿನ 9 ಪದಕಗಳನ್ನು ಜಯಿಸಿ ಪದಕ ಪಟ್ಟಿಯಲ್ಲಿ 4ನೇ ಸ್ಥಾನದಲ್ಲಿದ್ದಾರೆ. ಪಾರುಲ್ ಚೌಧರಿ(5000 ಮೀ ಓಟ) ಹಾಗೂ ಅನ್ನು ರಾಣಿ (ಜಾವೆಲಿನ್ ಎಸೆತ) ಚಿನ್ನದ ಪದಕ ಗೆದ್ದುಕೊಟ್ಟರು. ಪುರುಷರ ಡೆಕಾತ್ಲಾನ್ ನಲ್ಲಿ ತೇಜಸ್ವಿನ್ ಶಂಕರ್, ಪುರುಷರ 800 ಮೀ. ಓಟದಲ್ಲಿ ಮುಹಮ್ಮದ್ ಅಫ್ಸಲ್ ಬೆಳ್ಳಿ ಪದಕ ಗೆದ್ದುಕೊಂಡರು. ಮಹಿಳೆಯರ 400 ಮೀ.ಹರ್ಡಲ್ಸ್ ನಲ್ಲಿ ವಿದ್ಯಾ ರಾಮರಾಜ್, ಪುರುಷರ ಟ್ರಿಪಲ್ ಜಂಪ್ ನಲ್ಲಿ ಪ್ರವೀಣ್ ಚಿತ್ರವೇಲ್ ಕಂಚಿನ ಪದಕ ಜಯಿಸಿದರು. ಸ್ಕ್ವಾಷ್ ಸ್ಪರ್ಧೆಯಲ್ಲಿ ಭಾರತವು ಮೂರು ಪದಕಗಳನ್ನು ದೃಢಪಡಿಸಿದೆ. ಸೌರವ್ ಘೋಷಾಲ್(ಪುರುಷರ ಸಿಂಗಲ್ಸ್), ದೀಪಿಕಾ ಪಲ್ಲಿಕಲ್,ಹರಿಂದರ್ಪಾಲ್ ಸಿಂಗ್(ಮಿಕ್ಸೆಡ್ ಡಬಲ್ಸ್) , ಅಭಯ್ ಸಿಂಗ್ ಹಾಗೂ ಅನಾಹತ್ ಸಿಂಗ್(ಮಿಕ್ಸೆಡ್ ಡಬಲ್ಸ್)ಸ್ಕ್ವಾಷ್ನಲ್ಲಿ ಪದಕಗಳನ್ನು ಖಚಿತಪಡಿಸಿದ್ದಾರೆ. ಮಂಗಳವಾರ ಆರ್ಚರ್ಗಳು ಹಾಗೂ ಬಾಕ್ಸರ್ಗಳು ಉತ್ತಮ ಪ್ರದರ್ಶನ ನೀಡುವ ಮೂಲಕ ಭಾರತ 100 ಪದಕ ಗೆಲ್ಲುವ ವಿಶ್ವಾಸ ಮೂಡಿಸಿದ್ದಾರೆ. ಬಾಕ್ಸಿಂಗ್ ನಲ್ಲಿ ಲವ್ಲೀನಾ ಬೊರ್ಗೊಹೈನ್ ಕನಿಷ್ಠ ಬೆಳ್ಳಿ ಪದಕವನ್ನು ಖಚಿತಪಡಿಸಿದ್ದಾರೆ. ಪ್ರೀತಿ ಕಂಚಿನ ಪದಕ ಜಯಿಸಿದರು. ಭಾರತೀಯ ಆರ್ಚರ್ಗಳು ಕಾಂಪೌಂಡ್ ಸ್ಪರ್ಧೆಗಳಲ್ಲಿ ಕನಿಷ್ಠ 3 ಪದಕಗಳನ್ನು ಖಾತ್ರಿಪಡಿಸಿದ್ದಾರೆ. ಓಜಾಸ್ ಪ್ರವೀಣ್ ಹಾಗೂ ಅಭಿಷೇಕ್ ವರ್ಮಾ ಪುರುಷರ ಕಾಂಪೌಂಡ್ ವೈಯಕ್ತಿಕ ಸ್ಪರ್ಧೆಯಲ್ಲಿ ಫೈನಲ್ಗೆ ತಲುಪಿದ್ದು ಏಶ್ಯನ್ ಗೇಮ್ಸ್ ನಲ್ಲಿ ಆರ್ಚರಿಯಲ್ಲಿ ಭಾರತ ಮೊತ್ತ ಮೊದಲ ಬಾರಿ ವೈಯಕ್ತಿಕ ವಿಭಾಗದಲ್ಲಿ ಚಿನ್ನ ಗೆಲ್ಲುವುದು ಬಹುತೇಕ ಖಚಿತ. ಜ್ಯೋತಿ ಸುರೇಖಾ ಮಹಿಳೆಯರ ಕಾಂಪೌಂಡ್ ವೈಯಕ್ತಿಕ ಆರ್ಚರಿ ಸ್ಪರ್ಧೆಯಲ್ಲಿ ಫೈನಲ್ ತಲುಪಿದ್ದಾರೆ. ಅರ್ಜುನ್ ಸಿಂಗ್ ಹಾಗೂ ಸುನೀಲ್ ಸಿಂಗ್ ಪುರುಷರ ಕಾನೊ ಡಬಲ್ಸ್ 1000 ಸ್ಪರ್ಧೆಯಲ್ಲಿ ಕಂಚಿನ ಪದಕ ಜಯಿಸಿದ್ದಾರೆ. ಬಾಕ್ಸಿಂಗ್: ಪ್ರೀತಿ ಪವಾರ್ ಗೆ ಕಂಚು, ಒಲಿಂಪಿಕ್ಸ್ ಟಿಕೆಟ್ ಪಡೆದ ಲವ್ಲೀನಾ ಬೊರ್ಗೊಹೈನ್ ಹಾಂಗ್ ಝೌ : ಏಶ್ಯನ್ ಗೇಮ್ಸ್ ನಲ್ಲಿ ಮಂಗಳವಾರ ಫೈನಲ್ ಗೆ ಲಗ್ಗೆ ಇಟ್ಟಿರುವ ವಿಶ್ವ ಚಾಂಪಿಯನ್ ಲವ್ಲೀನಾ ಬೊರ್ಗೊಹೈನ್ ಪ್ಯಾರಿಸ್ ಒಲಿಂಪಿಕ್ಸ್ ಗೆ ಅರ್ಹತೆ ಪಡೆದಿದ್ದಾರೆ. ಇದೇ ವೇಳೆ ಭಾರತದ ಯುವ ಬಾಕ್ಸರ್ ಪ್ರೀತಿ ಪವಾರ್(54 ಕೆಜಿ)ಸ್ಪರ್ಧೆಯಲ್ಲಿ ಕಂಚಿನ ಪದಕವನ್ನು ಗೆದ್ದುಕೊಂಡರು. ಟೋಕಿಯೊ ಒಲಿಂಪಿಕ್ಸ್ನಲ್ಲಿ ಕಂಚಿನ ಪದಕವನ್ನು ಜಯಿಸಿರುವ ಬೊರ್ಗೊಹೈನ್ 75 ಕೆಜಿ ವಿಭಾಗದಲ್ಲಿ ಥಾಯ್ಲೆಂಡಿನ ಏಶ್ಯನ್ ಚಾಂಪಿಯನ್ ಶಿಪ್ ನಲ್ಲಿ ಬೆಳ್ಳಿ ವಿಜೇತೆ ಬೈಸನ್ ಮನಿಕಾನ್ರನ್ನು ಸೋಲಿಸಿದರು. ಒಮ್ಮತದ ತೀರ್ಪಿನಲ್ಲಿ ಗೆಲುವು ದಾಖಲಿಸಿದ ಬೊರ್ಗೊಹೈನ್ ಮುಂಬರುವ ಪ್ಯಾರಿಸ್ ಗೇಮ್ಸ್ ನಲ್ಲಿ ತನ್ನ ಸ್ಥಾನ ಗಿಟ್ಟಿಸಿಕೊಂಡರು. ಪ್ರೀತಿ ಪವಾರ್ ಎದುರಾಳಿ ಚೀನಾದ ಹಾಲಿ ಫ್ಲೈವೇಟ್ ಚಾಂಪಿಯನ್ ಚಾಂಗ್ ಯುಯಾನ್ ವಿರುದ್ಧ ಉತ್ತಮ ಪ್ರದರ್ಶನ ನೀಡಿದರೂ ಅಂತಿಮವಾಗಿ 0-5 ಅಂತರದಿಂದ ಸೋಲುಂಡರು. ಪ್ರೀತಿ ಈಗಾಗಲೇ ಒಲಿಂಪಿಕ್ಸ್ ಗೆ ಟಿಕೆಟ್ ಪಡೆದಿದ್ದಾರೆ. ಪುರುಷರ ಕ್ಯಾನೊ ಡಬಲ್ 1000 ಮೀ. ಸ್ಪರ್ಧೆ: ಅರ್ಜುನ್ ಸಿಂಗ್, ಸುನೀಲ್ ಸಿಂಗ್ ಗೆ ಕಂಚು ಹಾಂಗ್ ಝೌ : ಭಾರತದ ಅರ್ಜುನ್ ಸಿಂಗ್ ಹಾಗೂ ಸುನೀಲ್ ಸಿಂಗ್ ಏಶ್ಯನ್ ಗೇಮ್ಸ್ ನಲ್ಲಿ ಪುರುಷರ ಕ್ಯಾನೊ ಡಬಲ್ 1000 ಮೀ.ಸ್ಪರ್ಧೆಯಲ್ಲಿ ಕಂಚಿನ ಪದಕವನ್ನು ಜಯಿಸಿದ್ದಾರೆ. ಭಾರತೀಯ ಜೋಡಿಯು 3:53.329 ಸೆಕೆಂಡಿನಲ್ಲಿ ಗುರಿ ತಲುಪಿ ಮೂರನೇ ಸ್ಥಾನ ಪಡೆಯಿತು. ಏಶ್ಯನ್ ಗೇಮ್ಸ್ ಇತಿಹಾಸದಲ್ಲಿ ಭಾರತವು ಈ ಸ್ಪರ್ಧೆಯಲ್ಲಿ 2ನೇ ಪದಕವನ್ನು ತನ್ನದಾಗಿಸಿಕೊಂಡಿತು. 1994ರ ಹಿರೋಶಿಮಾ ಗೇಮ್ಸ್ ನಲ್ಲಿ ಪುರುಷರ ಕ್ಯಾನೊ ಡಬಲ್ 1000 ಮೀ. ಸ್ಪರ್ಧೆಯಲ್ಲಿ ಸಿಜಿ ಸದಾನಂದನ್ ಹಾಗೂ ಜಾನಿ ರೊಮ್ಮೆಲ್ ಕಂಚಿನ ಪದಕ ಜಯಿಸಿದ್ದರು. ಉಝ್ಬೇಕಿಸ್ತಾನ(3:43.796 ಸೆಕೆಂಡ್)ಅತ್ಲೀಟ್ ಗಳು ಚಿನ್ನದ ಪದಕ ಜಯಿಸಿದರೆ, ಕಝಕಿಸ್ತಾನದ ಸ್ಪರ್ಧಿಗಳು 3:49.991 ಸೆಕೆಂಡಿನಲ್ಲಿ ಗುರಿ ತಲುಪಿ ಬೆಳ್ಳಿ ಪದಕ ಜಯಿಸಿದರು. ಮಹಿಳೆಯರ 5,000 ಮೀ. ಓಟ: ಪಾರುಲ್ ಚೌಧರಿಗೆ ಚಿನ್ನ ಹಾಂಗ್ ಝೌ : ಏಶ್ಯನ್ ಗೇಮ್ಸ್ ನಲ್ಲಿ ಮಹಿಳೆಯರ 5,000 ಮೀ. ಓಟದಲ್ಲಿ ಪಾರುಲ್ ಚೌಧರಿ ಚಿನ್ನದ ಪದಕ ಗೆದ್ದುಕೊಂಡಿದ್ದಾರೆ. ಇದು ಪ್ರಸಕ್ತ ಗೇಮ್ಸ್ ನಲ್ಲಿ ಭಾರತ ಗೆದ್ದಿರುವ 14ನೇ ಚಿನ್ನದ ಪದಕವಾಗಿದೆ. ಮಂಗಳವಾರ ನಡೆದ ಸ್ಪರ್ಧೆಯಲ್ಲಿ 28ರ ರ ಹರೆಯದ ಪಾರುಲ್ ಜಪಾನ್ ಓಟಗಾರ್ತಿ ರಿರಿಕಾ ಹಿರೊನಕಾರನ್ನು ಹಿಂದಿಕ್ಕಿ ಮೊದಲ ಸ್ಥಾನ ಪಡೆದರು. 15:14.75 ಸೆಕೆಂಡಿನಲ್ಲಿ ಗುರಿ ತಲುಪಿದ ಪಾರುಲ್ ಮೊದಲನೇ ಸ್ಥಾನ ಪಡೆದರು. ಪಾರುಲ್ ಸೋಮವಾರ ಮಹಿಳೆಯರ 3, 000 ಮೀಟರ್ ಸ್ಟೀಪಲ್ ಚೇಸ್ ಸ್ಪರ್ಧೆಯಲ್ಲಿ 2ನೇ ಸ್ಥಾನ ಪಡೆದು ಬೆಳ್ಳಿ ಪದಕಕ್ಕೆ ಮುತ್ತಿಟ್ಟಿದ್ದರು. ಇದೀಗ ಎರಡನೇ ಪದಕ ಗೆದ್ದುಕೊಂಡಿದ್ದಾರೆ. ಮಹಿಳೆಯರ 400 ಮೀ.ಹರ್ಡಲ್ಸ್: ವಿದ್ಯಾ ರಾಮರಾಜ್ ಗೆ ಕಂಚು ಹಾಂಗ್ ಝೌ : ಏಶ್ಯನ್ ಗೇಮ್ಸ್ ನಲ್ಲಿ ಮಹಿಳೆಯರ 400 ಮೀ. ಹರ್ಡಲ್ಸ್ ನಲ್ಲಿ ಹಿನ್ನಡೆಯಿಂದ ಚೇತರಿಸಿಕೊಂಡ ಭಾರತದ ಓಟಗಾರ್ತಿ ವಿದ್ಯಾ ರಾಮರಾಜ್ ಕಂಚಿನ ಪದಕ ಜಯಿಸಿದರು. ವಿದ್ಯಾ 55.68 ಸೆಕೆಂಡಿನಲ್ಲಿ ಗುರಿ ತಲುಪಿ ಮೂರನೇ ಸ್ಥಾನ ಪಡೆದರು. ಬಹರೈನ್ನ ಒಲುವಾಕೆಮಿ ಮುಜಿದತ್ 55.09 ಸೆಕೆಂಡಿನಲ್ಲಿ ಗುರಿ ತಲುಪಿ ಕ್ರೀಡಾಕೂಟದ ದಾಖಲೆಯನ್ನು ಮುರಿದು ಚಿನ್ನ ಜಯಿಸಿದರು. ಚೀನಾದ ಮೊ ಜಿಯಾಡಿ ವರ್ಷದ ಶ್ರೇಷ್ಠ ಪ್ರದರ್ಶನ(55.01 ಸೆ.)ದೊಂದಿಗೆ ಬೆಳ್ಳಿ ಪದಕ ಜಯಿಸಿದ್ದಾರೆ. ವಿದ್ಯಾ ಅವರು 400 ಮೀ.ಹರ್ಡಲ್ಸ್ ಹೀಟ್ಸ್ ನಲ್ಲಿ 55.42 ಸೆಕೆಂಡ್ನಲ್ಲಿ ಗುರಿ ತಲುಪಿ ಓಟದ ರಾಣಿ ಪಿ.ಟಿ. ಉಷಾ ಅವರ 39 ವರ್ಷಗಳ ಹಳೆಯ ರಾಷ್ಟ್ರೀಯ ದಾಖಲೆಯನ್ನು ಸರಿಗಟ್ಟಿದರು. ವಿದ್ಯಾ ಪ್ರಸಕ್ತ ಏಶ್ಯನ್ ಗೇಮ್ಸ್ ನಲ್ಲಿ 2ನೇ ಪದಕ ಗಳಿಸಿದರು. 4-400ಮೀ. ರಿಲೇ ಮಿಕ್ಸೆಡ್ ಸ್ಪರ್ಧೆಯಲ್ಲಿ ಸೋಮವಾರ ಮುಹಮ್ಮದ್ ಅಜ್ಮಲ್, ಶುಭಾ ವೆಂಕಟೇಶನ್ ಹಾಗೂ ರಾಜೇಶ್ ರಮೇಶ್ ಅವರೊಂದಿಗೆ ಬೆಳ್ಳಿ ಪದಕವನ್ನು ಜಯಿಸಿದ್ದರು. ಪುರುಷರ ಟ್ರಿಪಲ್ ಜಂಪ್ ಫೈನಲ್: ಪ್ರವೀಣ್ ಚಿತ್ರವೇಲ್ ಗೆ ಕಂಚು ಹಾಂಗ್ ಝೌ : ಏಶ್ಯನ್ ಗೇಮ್ಸ್ ನಲ್ಲಿ ಮಂಗಳವಾರ ನಡೆದ ಪುರುಷರ ಟ್ರಿಪಲ್ ಜಂಪ್ ಫೈನಲಿನಲ್ಲಿ ಮೂರನೇ ಸ್ಥಾನ ಪಡೆದ ಪ್ರವೀಣ್ ಚಿತ್ರವೇಲ್ ಕಂಚಿನ ಪದಕ ಜಯಿಸಿದರು. ಪ್ರವೀಣ್ ತನ್ನ ಮೊದಲ ಪ್ರಯತ್ನದಲ್ಲಿ 16.68 ಮೀ.ದೂರಕ್ಕೆ ಜಿಗಿದಿದ್ದು, ಈ ಪ್ರಯತ್ನವೇ ಅವರಿಗೆ ಕಂಚು ಗೆದ್ದುಕೊಟ್ಟಿದೆ. ಅಬ್ದುಲ್ಲಾ ಅಬೂಬಕರ್ (16.62 ಮೀ. )4ನೇ ಸ್ಥಾನ ಪಡೆದರು. ಡೆಕಾತ್ಲಾನ್: ರಾಷ್ಟ್ರೀಯ ದಾಖಲೆಯೊಂದಿಗೆ ಬೆಳ್ಳಿ ಗೆದ್ದ ತೇಜಸ್ವಿನ್ ಶಂಕರ್ ಹಾಂಗ್ ಝೌ: ಏಶ್ಯನ್ ಗೇಮ್ಸ್ ನಲ್ಲಿ ಡೆಕಾತ್ಲಾನ್ ಸ್ಪರ್ಧೆಯಲ್ಲಿ 10 ಸುತ್ತಿನ ನಂತರ 2ನೇ ಸ್ಥಾನ ಪಡೆದ ಭಾರತದ ತೇಜಸ್ವಿನ್ ಶಂಕರ್ ಬೆಳ್ಳಿ ಪದಕವನ್ನು ಬಾಚಿಕೊಂಡರು. ಮಂಗಳವಾರ ನಡೆದ ತನ್ನ ಕೊನೆಯ 1500 ಮೀ. ಸ್ಪರ್ಧೆಯಲ್ಲಿ ಶಂಕರ್ 4ನೇ ಸ್ಥಾನ ಪಡೆದರು. ಒಟ್ಟು 7666 ಅಂಕ ಗಳಿಸಿದ ಶಂಕರ್ ಅವರು ಭರತೀಂದ್ರ ಸಿಂಗ್ ನಿರ್ಮಿಸಿದ್ದ ರಾಷ್ಟ್ರೀಯ ದಾಖಲೆ ಮುರಿದು ಬೆಳ್ಳಿ ಪದಕಕ್ಕೆ ಭಾಜನರಾದರು. ಚೀನಾದ ಕ್ಷಿಹಾವೊ ಸನ್ ಮೊದಲ ಸ್ಥಾನ ಪಡೆದರು. ಜಪಾನಿನ ಮರುಯಾಮಾ ಮೂರನೇ ಸ್ಥಾನ ಪಡೆದಿದ್ದಾರೆ. ಶಂಕರ್ 1974ರ ನಂತರ ಪುರುಷರ ಡೆಕಾತ್ಲಾನ್ ನಲ್ಲಿ ಭಾರತಕ್ಕೆ ಮೊದಲ ಪದಕ ಗೆದ್ದುಕೊಟ್ಟಿದ್ದಾರೆ. ಶಂಕರ್ ಡೆಕಾತ್ಲಾನ್ ಸ್ಪರ್ಧೆಯ ಮೊದಲ ದಿನವಾದ ಸೋಮವಾರ ಡೆಕಾತ್ಲಾನ್ ಲಾಂಗ್ ಜಂಪ್ ನಲ್ಲಿ ತನ್ನ ಪ್ರಾಬಲ್ಯ ಮೆರೆದರು. 7.37 ಮೀ.ದೂರಕ್ಕೆ ಜಿಗಿದು 903 ಅಂಕ ಗಳಿಸಿದರು. ಎತ್ತರ ಜಿಗಿತದಲ್ಲಿ ಶಂಕರ್ 2.21 ಮೀಟರ್ ದೂರವನ್ನು ಯಶಸ್ವಿಯಾಗಿ ದಾಟಿ 1002 ಅಂಕ ಪಡೆದು ಅಗ್ರ ಸ್ಥಾನ ಕಾಯ್ದುಕೊಂಡಿದ್ದರು. ಸ್ಕ್ವಾಷ್ ಮಿಕ್ಸೆಡ್ ಡಬಲ್ಸ್: ದೀಪಿಕಾ-ಹರಿಂದರ್ ಸೆಮಿ ಫೈನಲ್ ಗೆ ಹಾಂಗ್ ಝೌ : ದೀಪಿಕಾ ಪಲ್ಲಿಕಲ್ ಹಾಗೂ ಹರಿಂದರ್ ಪಾಲ್ ಸಿಂಗ್ ಸಿಧು ಮಿಕ್ಸೆಡ್ ಡಬಲ್ಸ್ ವಿಭಾಗದಲ್ಲಿ ಸೆಮಿ ಫೈನಲ್ ತಲುಪಿ ಪದಕವನ್ನು ಖಚಿಪಡಿಸಿದರು. ಮಂಗಳವಾರ ನಡೆದ ಕ್ವಾರ್ಟರ್ ಫೈನಲ್ನಲ್ಲಿ ದೀಪಿಕಾ ಹಾಗೂ ಹರಿಂದರ್ ಫಿಲಿಪ್ಪೀನ್ಸ್ ನ ಜೆಮಿಕಾ ಅರಿಲ್ಬಾಡೊ ಹಾಗೂ ಆ್ಯಂಡ್ರೂ ಗರಿಕಾ ವಿರುದ್ಧ 7-11, 11-5, 11-4 ಅಂತರದಿಂದ ಜಯ ಸಾಧಿಸಿದರು. 800 ಮೀ. ಓಟ: ಬೆಳ್ಳಿಯ ನಗೆ ಬೀರಿದ ಮುಹಮ್ಮದ್ ಅಫ್ಸಲ್ ಹಾಂಗ್ ಝೌ : ಏಶ್ಯನ್ ಗೇಮ್ಸ್ ನಲ್ಲಿ ಪುರುಷರ 800 ಮೀ. ಓಟದಲ್ಲಿ ಮುಹಮ್ಮದ್ ಅಫ್ಸಲ್ ಬೆಳ್ಳಿ ಪದಕವನ್ನು ಗೆದ್ದುಕೊಂಡಿದ್ದಾರೆ. ಮಂಗಳವಾರ ನಡೆದ 800 ಓಟದ ಫೈನಲ್ನಲ್ಲಿ ಅಫ್ಸಲ್ 1:48.43 ಸೆಕೆಂಡಿಲ್ಲಿ ಗುರಿ ತಲುಪಿ ಎರಡನೇ ಸ್ಥಾನ ಪಡೆದರು. ಬಾಕ್ಸಿಂಗ್: ನರೇಂದರ್ ಗೆ ಕಂಚು ಹಾಂಗ್ ಝೌ : ಭಾರತದ ನರೇಂದರ್ ಏಶ್ಯನ್ ಗೇಮ್ಸ್ ನಲ್ಲಿ ಪುರುಷರ ಬಾಕ್ಸಿಂಗ್ ನ 92 ಕೆಜಿ ಸ್ಪರ್ಧೆಯಲ್ಲಿ ಸೋಲುವ ಮೂಲಕ ಕಂಚಿನ ಪದಕಕ್ಕೆ ತೃಪ್ತಿಟ್ಟರು. ನರೇಂದರ್ ಕಝಕಿಸ್ತಾನದ ಕಾಮ್ಶಿಬೇಕ್ ಕುಂಕಬಾಯೆಬ್ ವಿರುದ್ಧ ಒಮ್ಮತದ ತೀರ್ಪಿನಲ್ಲಿ ಸೋತಿದ್ದಾರೆ. ಹಾಂಗ್ ಝೌ: ಏಶ್ಯನ್ ಗೇಮ್ಸ್ ನಲ್ಲಿ 5,000 ಮೀ. ಓಟದಲ್ಲಿ ಚಿನ್ನ ಜಯಿಸಿದ ಭಾರತದ ಮೊದಲ ಮಹಿಳೆ ಎನಿಸಿಕೊಳ್ಳುವ ಮೂಲಕ ಪಾರುಲ್ ಚೌಧರಿ ಇತಿಹಾಸ ನಿರ್ಮಿಸಿದ್ದಾರೆ. ಪ್ರಸಕ್ತ ಗೇಮ್ಸ್ ನಲ್ಲಿ ಪಾರುಲ್ ಗೆದ್ದಿರುವ 2ನೇ ಪದಕ ಇದಾಗಿದೆ. ಮಂಗಳವಾರ ನಡೆದ ಸ್ಪರ್ಧೆಯಲ್ಲಿ 28ರ ರ ಹರೆಯದ ಪಾರುಲ್ ಜಪಾನ್ ಓಟಗಾರ್ತಿ ರಿರಿಕಾ ಹಿರೊನಕಾರನ್ನು ಕೆಲವೇ ಮೀಟರ್ನಲ್ಲಿ ಹಿಂದಿಕ್ಕಿ ಮೊದಲ ಸ್ಥಾನ ಪಡೆದರು. 15:14.75 ಸೆಕೆಂಡ್ನಲ್ಲಿ ಗುರಿ ತಲುಪಿದ ಪಾರುಲ್ ಚಿನ್ನ ಜಯಿಸಿದರು. ಜಪಾನ್ ಓಟಗಾರ್ತಿ ಬೆಳ್ಳಿ ಜಯಿಸಿದರು. ಪಾರುಲ್ ಸೋಮವಾರ ಮಹಿಳೆಯರ 3,000 ಮೀಟರ್ ಸ್ಟೀಪಲ್ ಚೇಸ್ ಸ್ಪರ್ಧೆಯಲ್ಲಿ 2ನೇ ಸ್ಥಾನ ಪಡೆದು ಬೆಳ್ಳಿ ಪದಕಕ್ಕೆ ಮುತ್ತಿಟ್ಟಿದ್ದರು. ಈ ಹಿಂದೆ ಮಹಿಳೆಯರ 5,000 ಮೀ. ರೇಸ್ ನಲ್ಲಿ ಭಾರತದ ಪರ ಸುನಿತಾ ರಾಣಿ(1998ರಲ್ಲಿ ಬೆಳ್ಳಿ ಹಾಗೂ 2002ರಲ್ಲಿ ಕಂಚು), ಒಪಿ ಜೈಶಾ(2006ರಲ್ಲಿ ಕಂಚು), ಪ್ರೀಜಾ ಶ್ರೀಧರನ್(2010ರಲ್ಲಿ ಬೆಳ್ಳಿ) ಹಾಗೂ ಕವಿತಾ ರಾವುತ್(2010ರಲ್ಲಿ ಕಂಚು) ಪದಕ ಜಯಿಸಿದ್ದರು.
ಸಿದ್ದರಾಮಯ್ಯ ಬಸವ ತತ್ವದ ಅನುಯಾಯಿ; ಲಿಂಗಾಯತ ಅಧಿಕಾರಿಗಳಿಗೆ ಅನ್ಯಾಯ ಆಗಿಲ್ಲ: ಶಾಸಕ ರಾಯರೆಡ್ಡಿ
ಬೆಂಗಳೂರು, ಅ.3: ಮುಖ್ಯಮಂತ್ರಿ ಸಿದ್ದರಾಮಯ್ಯ ಬಸವ ತತ್ವದ ಅನುಯಾಯಿ. ಅವರ ಸರಕಾರದಲ್ಲಿ ಲಿಂಗಾಯತ ಅಧಿಕಾರಿಗಳನ್ನು ಕಡೆಗಣಿಸಲಾಗಿದೆ ಎಂಬ ಹಿರಿಯ ಕಾಂಗ್ರೆಸ್ ಶಾಸಕ ಶಾಮನೂರು ಶಿವಶಂಕರಪ್ಪನವರ ಹೇಳಿಕೆ ತಪ್ಪು ಎಂದು ಕಾಂಗ್ರೆಸ್ ಶಾಸಕ ಬಸವರಾಜ ರಾಯರೆಡ್ಡಿ ಆಕ್ಷೇಪಿಸಿದ್ದಾರೆ. ಮಂಗಳವಾರ ವಿಧಾನಸೌಧದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಕೊಠಡಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಸಿದ್ದರಾಮಯ್ಯ ಅವರ ಸರಕಾರ ಲಿಂಗಾಯತರಿಗೆ ಅನ್ಯಾಯ ಮಾಡಿದೆ ಎಂಬುದನ್ನು ಒಪ್ಪುವುದಿಲ್ಲ. ಸಿದ್ದರಾಮಯ್ಯ ಬಸವ ತತ್ವದ ಅನುಯಾಯಿ. ತಮ್ಮ ಸಂಪುಟದಲ್ಲಿ 7 ಲಿಂಗಾಯತ ಶಾಸಕರಿಗೆ ಸಚಿವ ಸ್ಥಾನ ನೀಡಿದ್ದಾರೆ. ಲಿಂಗಾಯತ ಸಮುದಾಯದ ಮೂರು ಜಿಲ್ಲಾಧಿಕಾರಿಗಳು, 7 ಎಸ್ಪಿಗಳು, 13 ವಿಶ್ವ ವಿದ್ಯಾಲಯದ ಕುಲಪತಿಗಳು, ನಾಲ್ಕು ಮಂದಿ ಸಿಇಒಗಳು ಹಾಗೂ ಮುಖ್ಯ ಇಂಜಿನಿಯರ್ ಗಳು ಇದ್ದಾರೆ ಎಂದು ಅಂಕಿ-ಅಂಶಗಳ ಸಹಿತ ವಿವರಿಸಿದರು. ಜಾತಿ ಆಧಾರದಲ್ಲಿ ಪೋಸ್ಟಿಂಗ್ ಕೊಡಲು ಆಗಲ್ಲ. ಆದರೆ ಮಂತ್ರಿ ಮಾಡುವ ಸಂದರ್ಭದಲ್ಲಿ ಸಾಮಾಜಿಕ ನ್ಯಾಯ ಕೊಡುತ್ತೇವೆ. ಜಾತಿ ಆಧಾರದಲ್ಲಿ ಮಂತ್ರಿ ಮಾಡುವುದು ಸಹಜ. ಪ್ರಧಾನಿ ಯಾರು ಬೇಕಾದರೂ ಆಗಬಹುದು, ಆದರೆ ಗುಮಾಸ್ತ ಆಗಲು ಮಾನದಂಡವಿದೆ ಎಂದ ಅವರು, ಸಿದ್ದರಾಮಯ್ಯ ಅವರು ಬಸವೇಶ್ವರ ಭಾವಚಿತ್ರ ಸರಕಾರಿ ಕಚೇರಿಯಲ್ಲಿ ಹಾಕಿಸಲು ಆದೇಶ ಮಾಡಿದ್ದಾರೆ. ಲಿಂಗಾಯತ ಮುಖ್ಯಮಂತ್ರಿ ಸಾಕಷ್ಟು ಮಂದಿ ಆಗಿದ್ದರೂ ಬಸವೇಶ್ವರ ಫೋಟೋ ಏಕೆ ಹಾಕಿರಲಿಲ್ಲ? ಎಂದು ಪ್ರಶ್ನೆ ಮಾಡಿದರು. ಅಧಿಕಾರಿಗಳ ಬಗ್ಗೆ ಜಾತಿ ಆಧಾರದಲ್ಲಿ ಮಾತನಾಡುವುದೇ ತಪ್ಪು. ಹೀಗೆ ಆದರೆ ನಾಳೆ ಒಕ್ಕಲಿಗರು, ಕುರುಬರು ಮಾತನಾಡುತ್ತಾರೆ. ಹೀಗಾದರೆ ಆಡಳಿತ ನಡೆಸುವುದು ಹೇಗೆ? ಶಾಮನೂರು ಹೇಳಿಕೆ ಪರಿಣಾಮ ಆಡಳಿತದ ಮೇಲೆ ಬೀರುತ್ತದೆ.ಇನ್ನೂ, ಸರಕಾರದ ಬಗ್ಗೆ ಲಿಂಗಾಯತ ಶಾಸಕರಲ್ಲಿ ಯಾವುದೇ ಅಸಮಾಧಾನವಿಲ್ಲ. ವಿರೋಧ ಪಕ್ಷದವರು ಹೇಳಿದಂತೆ ಬಹುಮತವುಳ್ಳ ನಮ್ಮ ಸರಕಾರಕ್ಕೆ ಏನು ಆಗುವುದಿಲ್ಲ. ಪಕ್ಷದಲ್ಲಿ ಯಾವುದೇ ರೀತಿಯ ಸಮಸ್ಯೆ ಗೊಂದಲಗಳಿಲ್ಲ. ಆಂತರಿಕ ಪ್ರಜಾಪ್ರಭುತ್ವ ಪಕ್ಷದಲ್ಲಿ ಹೆಚ್ಚಿರುವುದರಿಂದ ಅಭಿಪ್ರಾಯವನ್ನು ಮುಕ್ತವಾಗಿ ವ್ಯಕ್ತಪಡಿಸುತ್ತಿದ್ದಾರೆ ಎಂದು ನುಡಿದರು. ಶಾಶ್ವತ ಹಿಂದುಳಿದ ವರ್ಗದ ಆಯೋಗದ ಅಧ್ಯಕ್ಷರಾಗಿದ್ದ ಕಾಂತರಾಜು ಅವರ ಅವಧಿಯಲ್ಲಿ ಸಿದ್ಧಪಡಿಸಲಾದ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸಮೀಕ್ಷಾ ವರದಿಯನ್ನು ಸರಕಾರ ಸ್ವೀಕರಿಸಿ ಬಿಡುಗಡೆ ಮಾಡಬೇಕು. ಇದರಿಂದ ದುರ್ಬಲ ಸಮುದಾಯಗಳಿಗೆ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸೌಲಭ್ಯ ಕಲ್ಪಿಸಲು ಅನುಕೂಲವಾಗಲಿದೆ ಎಂದು ಅವರು ಹೇಳಿದರು.
ಹಳೇ ಹುಬ್ಬಳ್ಳಿ ಗಲಭೆ ಪ್ರಕರಣ ಹಿಂಪಡೆದರೆ ಹೋರಾಟ: ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಎಚ್ಚರಿಕೆ
ಹುಬ್ಬಳ್ಳಿ ಗಲಭೆ ಪ್ರಕರಣ ವಾಪಸ್ಗೆ ಡಿ.ಕೆ.ಶಿವಕುಮಾರ್ ಪತ್ರ ಬಂದ ತಕ್ಷಣ ಕೇಸ್ ವಾಪಸ್ ಪಡೆಯುವುದಿಲ್ಲ. ಸಂಪುಟ ಉಪ ಸಮಿತಿಯ ಮುಂದಿಟ್ಟು ಪರಾಮರ್ಶಿಸಲಾಗುವುದು ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ ಹೇಳಿದ್ದಾರೆ. ' ವಾಪಸ್ ಪಡೆಯುವುದಕ್ಕೊಂದು ಪದ್ಧತಿಯಿದೆ. ಸಂಪುಟ ಉಪ ಸಮಿತಿ ಮಾಡಿದ್ದು, ಅದರ ಮುಂದೆ ಇಡುತ್ತೇವೆ. ಅದಕ್ಕೂ ಮೊದಲೇ ಗೃಹ ಇಲಾಖೆಯಲ್ಲಿಪರಿಶೀಲನೆ ಮಾಡಿಕೊಳ್ಳುತ್ತೇವೆ. ಅದನ್ನು ಇಡಬಹುದೋ ಇಡಬಾರದೋ ಅಂತ ಪರಿಶೀಲನೆ ಮಾಡಿ ಆನಂತರ ಸಮಿತಿ ಮುಂದೆ ತರಲಾಗುತ್ತದೆ' ಎಂದಿದ್ದಾರೆ.
2024 ರ ಲೋಕಸಭೆ ಚುನಾವಣೆಯೊಳಗೆ 2ಎ ಮೀಸಲಾತಿ ಸಿಗಬೇಕು; ಸರ್ಕಾರಕ್ಕೆ ಜಯಮೃತ್ಯುಂಜಯ ಶ್ರೀಗಳ ಎಚ್ಚರಿಕೆ
'ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಹೋರಾಟ ನಿರಂತರವಾಗಿ ನಡೆಯುತ್ತಿದೆ. ಈ ಸರ್ಕಾರ ಬರಲು ಪಂಚಮಸಾಲಿಗಳ ಆಶೀರ್ವಾದವಿದೆ. ಇದು ಜಗತ್ತಿಗೆ ಗೊತ್ತಿದೆ. ನಮ್ಮ ಸಮಾಜದ ಋಣವನ್ನ ಸರ್ಕಾರ ತೀರಿಸುವ ಕೆಲಸ ಮಾಡಬೇಕಿದೆ. 2024ರ ಲೋಕಸಭೆ ಚುನಾವಣೆಯೊಳಗೆ ಆ ಕೆಲಸವಾಗಬೇಕು. ನಮಗೆ 2ಎ ಮೀಸಲಾತಿ ಕೊಡಿ' ಎಂದು ಕೂಡಲಸಂಗಮ ಪೀಠದ ಜಯಮೃತ್ಯುಂಜಯ ಶ್ರೀಗಳು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
Namma Metro | ಹಳಿ ತಪ್ಪಿದ್ದ ರಸ್ತೆ-ರೈಲು ವಾಹನ ಶಿಫ್ಟ್
ನಮ್ಮ ಮೆಟ್ರೋ ಹಸಿರು ಮಾರ್ಗದಲ್ಲಿ ರಾಜಾಜಿನಗರ ಮೆಟ್ರೋ ನಿಲ್ದಾಣದ ಬಳಿ ಹಳಿ ತಪ್ಪಿದ್ದ ರಸ್ತೆ ರೈಲು ವಾಹನವನ್ನು ತೆರವುಗೊಳಿಸುವಲ್ಲಿ ಯಶಸ್ವಿಯಾಗಿದ್ದು, ಮೆಟ್ರೋ ಸಂಚಾರ ಆರಂಭವಾಗಿದೆ. ಸತತ 12 ಗಂಟೆ ಕಾರ್ಯಾಚರಣೆ ಬಳಿಕ ಹೈಡ್ರಾಲಿಕ್ ಕ್ರೇನ್ ಬಳಸಿ, ರಸ್ತೆ ರೈಲು ವಾಹನವನ್ನು ಕೆಳಗೆ ಇಳಿಸಲಾಗಿದೆ.
ಕಳೆದ 12 ವಿಶ್ವಕಪ್ ಟೂರ್ನಿಗಳಲ್ಲಿ ಗರಿಷ್ಠ ರನ್ ಗಳಿಸಿದ ಭಾರತದ ಬ್ಯಾಟರ್ ಗಳು
ಹೊಸದಿಲ್ಲಿ, ಅ.3: ಭಾರತವು ಇದೇ ಮೊದಲ ಬಾರಿ ಏಕಾಂಗಿಯಾಗಿ ಏಕದಿನ ವಿಶ್ವಕಪ್ ಆತಿಥ್ಯವನ್ನು ವಹಿಸುತ್ತಿದ್ದು, ಕ್ರಿಕೆಟ್ ಹಬ್ಬ ವಿಶ್ವಕಪ್ ಆರಂಭಕ್ಕೆ ದಿನಗಣನೆ ಆರಂಭವಾಗಿದೆ. ಭಾರತ ಈ ತನಕ 2 ಬಾರಿ ವಿಶ್ವ ಚಾಂಪಿಯನ್ ಆಗಿದ್ದು, ಮೂರನೇ ಬಾರಿ ಪ್ರಶಸ್ತಿ ಎತ್ತಲು ಹವಣಿಸುತ್ತಿದೆ. ಈ ತನಕ ನಡೆದಿರುವ ವಿಶ್ವಕಪ್ ಟೂರ್ನಿಯ 12 ಆವೃತ್ತಿಗಳಲ್ಲಿ ಭಾರತದ ಪರ ಗರಿಷ್ಠ ರನ್ ಗಳಿಸಿದ ಬ್ಯಾಟರ್ ಗಳತ್ತ ಒಂದು ನೋಟ…. 1975: ಸುನೀಲ್ ಗವಾಸ್ಕರ್: 113 ರನ್ ಇಂಗ್ಲೆಂಡ್ ನಲ್ಲಿ 1975ರಲ್ಲಿ ನಡೆದ ಮೊದಲ ಆವೃತ್ತಿಯ ಕ್ರಿಕೆಟ್ ವಿಶ್ವಕಪ್ ಟೂರ್ನಿಯಲ್ಲಿ ಲೆಜೆಂಡರಿ ಸುನೀಲ್ ಗವಾಸ್ಕರ್ ಭಾರತದ ಪರ ಗರಿಷ್ಟ ರನ್ ಗಳಿಸಿದ್ದರು. ಗವಾಸ್ಕರ್ 3 ಪಂದ್ಯಗಳಲ್ಲಿ ಒಟ್ಟು 113 ರನ್ ಗಳಿಸಿದ್ದು, ಔಟಾಗದೆ 65 ಗರಿಷ್ಟ ವೈಯಕ್ತಿಕ ಸ್ಕೋರಾಗಿತ್ತು. 1979: ಗುಂಡಪ್ಪ ವಿಶ್ವನಾಥ್: 106 ರನ್ ಮಾಜಿ ಬಲಿಷ್ಠ ಬ್ಯಾಟರ್ ಗುಂಡಪ್ಪ ವಿಶ್ವನಾಥ್ 1979ರ ವಿಶ್ವಕಪ್ ನಲ್ಲಿ ಗರಿಷ್ಟ ರನ್ ಗಳಿಸಿದ ಭಾರತೀಯ ಬ್ಯಾಟರ್ ಗಳ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದರು. ವಿಶ್ವನಾಥ್ 3 ಪಂದ್ಯಗಳಲ್ಲಿ 106 ರನ್ ಗಳಿಸಿದ್ದು, ಗರಿಷ್ಟ ಸ್ಕೋರ್ 75. 1983: ಕಪಿಲ್ ದೇವ್: 303 ರನ್ ಕಪಿಲ್ ದೇವ್ ನಾಯಕತ್ವದಲ್ಲಿ ಭಾರತವು 1983ರಲ್ಲಿ ಚೊಚ್ವಲ ವಿಶ್ವಕಪ್ ಜಯಿಸಿತ್ತು. ಆಗ ಕಪಿಲ್ ದೇವ್ ಭಾರತದ ಪರ ಅಮೋಘ ಪ್ರದರ್ಶನ ನೀಡಿದ್ದರು. ಝಿಂಬಾಬ್ವೆ ವಿರುದ್ಧ ಗಳಿಸಿರುವ ಅಜೇಯ 175 ರನ್ ಈಗಲೂ ಒಂದು ಶ್ರೇಷ್ಠ ಇನಿಂಗ್ಸ್ ಆಗಿ ಉಳಿದುಕೊಂಡಿದೆ. ಕಪಿಲ್ 8 ಪಂದ್ಯಗಳಲ್ಲಿ 303 ರನ್ ಗಳಿಸಿದ್ದರು. ಕಪಿಲ್ ಏಕದಿನ ಕ್ರಿಕೆಟ್ ನಲ್ಲಿ ಶತಕವನ್ನು ಸಿಡಿಸಿದ್ದ ಭಾರತದ ಮೊದಲ ಬ್ಯಾಟರ್ ಎನಿಸಿಕೊಂಡಿದ್ದಾರೆ. 1987: ಸುನೀಲ್ ಗವಾಸ್ಕರ್: 300 ರನ್ 1987ರ ವಿಶ್ವಕಪ್ ನಲ್ಲಿ ಸುನೀಲ್ ಗವಾಸ್ಕರ್ ಮತ್ತೊಮ್ಮೆ ಭಾರತಕ್ಕೆ ಆಸರೆಯಾಗಿದ್ದರು. ಗವಾಸ್ಕರ್ 7 ಪಂದ್ಯಗಳಲ್ಲಿ 300 ರನ್ ಗಳಿಸಿದ್ದು, ಔಟಾಗದೆ 103 ಗರಿಷ್ಟ ವೈಯಕ್ತಿಕ ಸ್ಕೋರಾಗಿತ್ತು. 1992: ಮುಹಮ್ಮದ್ ಅಝರುದ್ದೀನ್: 332 ರನ್ ಭಾರತದ ಮಾಜಿ ನಾಯಕ ಮುಹಮ್ಮದ್ ಅಝರುದ್ದೀನ್ 1992ರಲ್ಲಿ ಆಸ್ಟ್ರೇಲಿಯ ಹಾಗೂ ನ್ಯೂಝಿಲ್ಯಾಂಡ್ ನ ಜಂಟಿ ಆತಿಥ್ಯದಲ್ಲಿ ನಡೆದಿದ್ದ ವಿಶ್ವಕಪ್ ನಲ್ಲಿ ಭಾರತದ ಪರ ಗರಿಷ್ಠ ರನ್ ಗಳಿಸಿದ್ದರು. ಅಝರ್ 8 ಪಂದ್ಯಗಳಲ್ಲಿ ಒಟ್ಟು 332 ರನ್ ಗಳಿಸಿದ್ದರು. 93 ಗರಿಷ್ಠ ವೈಯಕ್ತಿಕ ಸ್ಕೋರಾಗಿದೆ. 1996: ಸಚಿನ್ ತೆಂಡುಲ್ಕರ್: 523 ರನ್ 1996ರ ವಿಶ್ವಕಪ್ ನಲ್ಲಿ ಸಚಿನ್ ತೆಂಡುಲ್ಕರ್ ಬ್ಯಾಟಿಂಗ್ ಸ್ಟಾರ್ ಆಗಿ ಹೊರಹೊಮ್ಮಿದ್ದರು. ಅವರು 7 ಪಂದ್ಯಗಳಲ್ಲಿ ಒಟ್ಟು 523 ರನ್ ಗಳಿಸಿದ್ದರು. ಟೂರ್ನಮೆಂಟ್ ನಲ್ಲಿ ಗರಿಷ್ಠ ರನ್ ಗಳಿಸಿದ ಬ್ಯಾಟರ್ ಎಂಬ ಹಿರಿಮೆಗೂ ಪಾತ್ರರಾಗಿದ್ದರು. 1999: ರಾಹುಲ್ ದ್ರಾವಿಡ್:461 ರನ್ 1999ರ ವಿಶ್ವಕಪ್ ನಲ್ಲಿ ರಾಹುಲ್ ದ್ರಾವಿಡ್ ಭಾರತದ ಪರ ಹೆಚ್ಚು ರನ್ ಗಳಿಸಿದ್ದರು. ದ್ರಾವಿಡ್ 8 ಪಂದ್ಯಗಳಲ್ಲಿ ಒಟ್ಟು 461 ರನ್ ಗಳಿಸಿದ್ದು, 145 ಗರಿಷ್ಠ ಸ್ಕೋರಾಗಿತ್ತು. 2003: ಸಚಿನ್ ತೆಂಡುಲ್ಕರ್: 673 ರನ್ 2003ರ ಆವೃತ್ತಿಯಲ್ಲೂ ಸಚಿನ್ ತೆಂಡುಲ್ಕರ್ ವಿಶ್ವಕಪ್ ನಲ್ಲಿ ತನ್ನ ಪ್ರಾಬಲ್ಯ ಮುಂದುವರಿಸಿದರು. 11 ಪಂದ್ಯಗಳಲ್ಲಿ ಒಟ್ಟು 673 ರನ್ ಗಳಿಸಿ ದಾಖಲೆ ನಿರ್ಮಿಸಿದ್ದರು. ಮತ್ತೊಮ್ಮೆ ಗರಿಷ್ಠ ಸ್ಕೋರರ್ ಆಗಿದ್ದರು. 673 ಒಂದೇ ಆವೃತ್ತಿಯ ವಿಶ್ವಕಪ್ ನಲ್ಲಿ ಬ್ಯಾಟರ್ ಗಳಿಸಿದ ಗರಿಷ್ಟ ರನ್ ಆಗಿ ಉಳಿದುಕೊಂಡಿದೆ. 2007: ವೀರೇಂದ್ರ ಸೆಹ್ವಾಗ್: 164 ರನ್ 2007ರ ವಿಶ್ವಕಪ್ ನಲ್ಲಿ ಭಾರತವು ಗ್ರೂಪ್ ಹಂತದಲ್ಲೇ ನಿರ್ಗಮಿಸಿ ಕಳಪೆ ಪ್ರದರ್ಶನ ನೀಡಿದ್ದರೂ ಕೂಡ ಆ ಆವೃತ್ತಿಯಲ್ಲಿ ವೀರೇಂದ್ರ ಸೆಹ್ವಾಗ್ ಗರಿಷ್ಠ ರನ್ ಗಳಿಸಿದ್ದರು. ಸೆಹ್ವಾಗ್ 3 ಪಂದ್ಯಗಳಲ್ಲಿ ಒಟ್ಟು 164 ರನ್ ಗಳಿಸಿದ್ದರು. 2011: ಸಚಿನ್ ತೆಂಡುಲ್ಕರ್: 482 ರನ್ 2011ರ ವಿಶ್ವಕಪ್ ನ ಯಶಸ್ವಿ ಅಭಿಯಾನದಲ್ಲಿ ಬ್ಯಾಟಿಂಗ್ ಲೆಜೆಂಡ್ ಸಚಿನ್ ತೆಂಡುಲ್ಕರ್ ಭಾರತದ ಪರ ಮತ್ತೊಮ್ಮೆ ಗರಿಷ್ಠ ರನ್ ಕಲೆ ಹಾಕಿದ್ದರು. ತೆಂಡುಲ್ಕರ್ ಕೆಲವು ಶತಕ ಹಾಗೂ ಅರ್ಧಶತಕಗಳ ಸಹಿತ 9 ಪಂದ್ಯಗಳಲ್ಲಿ ಒಟ್ಟು 482 ರನ್ ಗಳಿಸಿದ್ದರು. 2015: ಶಿಖರ್ ಧವನ್: 412 ರನ್ ಭಾರತದ ಎಡಗೈ ಬ್ಯಾಟರ್ ಶಿಖರ್ ಧವನ್ 2015ರ ಆವೃತ್ತಿಯ ವಿಶ್ವಕಪ್ ನಲ್ಲಿ 8 ಪಂದ್ಯಗಳನ್ನು ಆಡಿ ಒಟ್ಟು 412 ರನ್ ಗಳಿಸಿದ್ದರು. ಈ ಮೂಲಕ ಟೂರ್ನಮೆಂಟ್ ನಲ್ಲಿ ಭಾರತದ ಪರ ಟಾಪ್ ಸ್ಕೋರರ್ ಎನಿಸಿಕೊಂಡರು. 2019: ರೋಹಿತ್ ಶರ್ಮಾ 648 ರನ್ 2019ರ ವಿಶ್ವಕಪ್ ನಲ್ಲಿ ರೋಹಿತ್ ಶರ್ಮಾ ತನ್ನ ಬ್ಯಾಟಿಂಗ್ ಶಕ್ತಿ ಪ್ರದರ್ಶಿಸಿದ್ದರು. ಉತ್ತಮ ಬೌಲರ್ ಗಳ ವಿರುದ್ಧ ಸಿಡಿದು ನಿಂತಿದ್ದ ರೋಹಿತ್ 9 ಪಂದ್ಯಗಳಲ್ಲಿ ದಾಖಲೆಯ 5 ಶತಕಗಳ ಸಹಿತ ಒಟ್ಟು 648 ರನ್ ಗಳಿಸಿದ್ದರು. ರೋಹಿತ್ ಒಂದೇ ಆವೃತ್ತಿಯ ವಿಶ್ವಕಪ್ ನಲ್ಲಿ ಗರಿಷ್ಟ ಶತಕ(5)ಸಿಡಿಸಿದ ಬ್ಯಾಟರ್ ಎಂಬ ಸಾಧನೆಯನ್ನು ಮಾಡಿದ್ದಾರೆ.
ಶಾಲೆಯಲ್ಲಿ ವಿದ್ಯಾರ್ಥಿಗಳಿಂದ ನಮಾಝ್, ಶಿಕ್ಷಕರಿಗೆ ಥಳಿಸಿದ ಗುಂಪು
ಅಹಮದಾಬಾದ್ : ಇಲ್ಲಿನ ಖಾಸಗಿ ಶಾಲೆಯೊಂದು ಜಾಗೃತಿ ಕಾರ್ಯಕ್ರಮದ ಭಾಗವಾಗಿ ಹಿಂದೂ ವಿದ್ಯಾರ್ಥಿಗಳನ್ನು ನಮಾಜ್ ಮಾಡಲು ಹೇಳಿದೆ ಎಂದು ಆರೋಪಿಸಿ, ಮಂಗಳವಾರ ಸಂಘ ಪರಿವಾರದ ಕಾರ್ಯಕರ್ತರ ಪ್ರತಿಭಟನೆ ನಡೆಸಿ, ಶಿಕ್ಷಕರನ್ನು ಥಳಿಸಿದ ಘಟನೆ ನಡೆದಿದೆ ಎಂದು ndtv.com ವರದಿ ಮಾಡಿದೆ. ಪ್ರತಿಭಟನಾಕಾರರು ಶಿಕ್ಷಕರನ್ನು ಥಳಿಸುತ್ತಿರುವುದನ್ನು ವೀಡಿಯೊದಲ್ಲಿ ಸೆರೆಯಾಗಿದೆ. ಸೆಪ್ಟೆಂಬರ್ 29 ರಂದು ಅಹಮದಾಬಾದ್ನ ಘಟ್ಲೋಡಿಯಾ ಪ್ರದೇಶದ ಕಲೋರೆಕ್ಸ್ ಫ್ಯೂಚರ್ ಸ್ಕೂಲ್ನಲ್ಲಿ ನಡೆದ ಕಾರ್ಯಕ್ರಮದ ಕುರಿತು ರಾಜ್ಯ ಸರ್ಕಾರ ತನಿಖೆಗೆ ಆದೇಶಿಸಿದೆ. ಘಟನೆಯ ಕುರಿತು ಕ್ಷಮೆಯಾಚಿಸಿರುವ ಶಾಲೆಯ ಆಡಳಿತ ಮಂಡಳಿ, ಈ ಕಾರ್ಯಕ್ರಮವು ವಿವಿಧ ಧರ್ಮಗಳ ಆಚರಣೆಗಳ ಬಗ್ಗೆ ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವ ಉದ್ದೇಶವನ್ನು ಹೊಂದಿದೆ. ಯಾವುದೇ ವಿದ್ಯಾರ್ಥಿಯನ್ನು ನಮಾಝ್ ಮಾಡಲು ಒತ್ತಾಯಿಸಿಲ್ಲ, ಎಂದು ಸ್ಪಷ್ಟೀಕರಣ ನೀಡಿದೆ.
ಬರ ಅಧ್ಯಯನಕ್ಕೆ ಮುಂದಿನ ವಾರ ಕರ್ನಾಟಕಕ್ಕೆ ಕೇಂದ್ರ ಅಧ್ಯಯನ ತಂಡ ಭೇಟಿ
ಕಲಬುರಗಿ, ಅ.3: ರಾಜ್ಯದಲ್ಲಿನ ಬರ ಅಧ್ಯಯನಕ್ಕೆ ಮುಂದಿನ ವಾರದಲ್ಲಿ ಕೇಂದ್ರದಿಂದ ಮೂರು ತಂಡಗಳು ಅಗಮಿಸುತ್ತಿವೆ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದ್ದಾರೆ. ಮಂಗಳವಾರ ಕಲಬುರಗಿ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ 7 ಜಿಲ್ಲೆಗಳಲ್ಲಿನ ಕೃಷಿ ಹಾಗೂ ಜಲಾನಯನ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ರಾಜ್ಯದಲ್ಲಿ ಒಟ್ಟು 40 ಲಕ್ಷ ಹೆಕ್ಟೇರ್ ಕೃಷಿ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ. ಅಂದಾಜು 28 ಸಾವಿರ ಕೋಟಿ ರೂ. ನಷ್ಟ ಸಂಭವಿಸಿದೆ. 2023ರ ಮುಂಗಾರಿನಲ್ಲಿ 111 ಲಕ್ಷ ಟನ್ ಆಹಾರ ಧಾನ್ಯಗಳಲ್ಲಿ ಉತ್ಪಾದನೆ ಗುರಿ ಹೊಂದಲಾಗಿತ್ತು. ಬರಗಾಲದಿಂದ 58 ಲಕ್ಷ ಟನ್ ಉತ್ಪಾದನಾ ಹಾನಿ ಅಂದಾಜಿಸಲಾಗಿದೆ ಎಂದು ಚಲುವರಾಯಸ್ವಾಮಿ ಮಾಹಿತಿ ನೀಡಿದರು. ರಾಜ್ಯದ 31 ಜಿಲ್ಲೆಗಳ 161 ತಾಲೂಕುಗಳು ತೀವ್ರ ಹಾಗೂ 34 ತಾಲೂಕುಗಳು ಸಾಧಾರಣ ಬರ ಎಂದು ಗುರುತಿಸಲಾಗಿದ್ದು, ಒಟ್ಟಾರೆ 195 ತಾಲೂಕುಗಳನ್ನು ಬರ ಪೀಡಿತ ಎಂದು ಘೋಷಿಸಲಾಗಿದೆ ಎಂದು ಅವರು ತಿಳಿಸಿದರು. ಬರದಿಂದ ಬಿತ್ತನೆಗೆ ಅಡ್ಡಿಯಾದ ರೈತರಿಗೆ 48 ಕೋಟಿ ರೂಪಾಯಿ ಪರಿಹಾರ ವಿತರಿಸಲಾಗುವುದು. ನೆಟೆರೋಗದಿಂದ ಸಂಕಷ್ಟಕ್ಕೆ ಸಿಲಿಕಿದ ರೈತರಿಗೆ ಒಟ್ಟಾರೆ 224 ಕೋಟಿ ರೂ.ಪರಿಹಾರ ಮಂಜೂರು ಮಾಡಿದ್ದು, 2 ಹಂತಗಳಲ್ಲಿ ಈವರೆಗೆ 148 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಕಲಬುರಗಿ ಜಿಲ್ಲೆಯ 1.58 ಲಕ್ಷ ರೈತರಿಗೆ ಒಟ್ಟು 116 ಕೋಟಿ ರೂ. ಪರಿಹಾರ ಒದಗಿಸಲಾಗಿದೆ ಎಂದು ಚಲುವರಾಯಸ್ವಾಮಿ ಹೇಳಿದರು. ರಾಜ್ಯದಲ್ಲಿ ಜುಲೈನಲ್ಲಿ ಶೇ.29 ಅಧಿಕ ಮಳೆಯಾದರೂ, ಆಗಸ್ಟ್ ನಲ್ಲಿ ಶೇ.73 ಕೊರತೆಯಾಗಿದೆ. ಹಾಗಾಗಿ ಬೆಳೆ ನಷ್ಟ ಹೆಚ್ಚಾಗಿದೆ. ಕಲಬುರಗಿ ಜಿಲ್ಲೆಯಲ್ಲಿ ಮಳೆಯ ಕೊರತೆ ಕೇವಲ ಶೇ.5ರಷ್ಟು. ಆದರೆ ಸಕಾಲದಲ್ಲಿ ಮಳೆಯಾಗದ ಕಾರಣ ಬೆಳೆ ಹಾನಿಯಾಗಿದ್ದು ಜಿಲ್ಲೆಯ 11 ತಾಲೂಕುಗಳು ಬರ ಪೀಡಿತ ಎಂದು ಘೋಷಣೆ ಮಾಡಲಾಗಿದೆ ಎಂದು ಚಲುವರಾಯಸ್ವಾಮಿ ತಿಳಿಸಿದರು. ಕೃಷಿ ಭಾಗ್ಯ ಯೋಜನೆ ಈ ವರ್ಷ ಪುನಾರಂಂಭಿಸಿದ್ದು, ಇಲಾಖೆಯಿಂದ 100 ಕೋಟಿ ರೂ. ಅನುದಾನ ದೊರೆಯಲಿದ್ದು, ಮುಂದಿನ ವರ್ಷದಿಂದ ಹೆಚ್ಚಿನ ಅನುದಾನ ಮೀಸಲಿರಿಸಲಾಗುವುದು. ನವೋದ್ಯಮ ಯೋಜನೆಯಡಿ ಹೊಸ ಎಫ್ಪಿಒ ಗಳಿಗೆ 5 ರಿಂದ 20 ಲಕ್ಷ ರೂಪಾಯಿವರೆಗೆ ಇದ್ದ ಸಾಲದ ನೆರವನ್ನು 20-50 ಲಕ್ಷ ರೂ.ಗಳಿಗೆ ಏರಿಕೆ ಮಾಡಲಾಗಿದೆ. ಇದಕ್ಕಾಗಿ 10 ಕೋಟಿ ರೂ. ಮೀಸಲಿರಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು
ಏಕದಿನ ವಿಶ್ವಕಪ್ ಕಣದಲ್ಲಿರುವ ಅಗ್ರಮಾನ್ಯ ಐವರು ಎಡಗೈ ವೇಗಿಗಳು
ಹೊಸದಿಲ್ಲಿ : ಕ್ರಿಕೆಟ್ ಪಂದ್ಯದಲ್ಲಿ ಬ್ಯಾಟರ್ ಗಳಂತೆಯೇ ಬೌಲರ್ ಗಳು ಕೂಡ ಪಂದ್ಯವನ್ನು ಗೆಲ್ಲಿಸಿಕೊಡಬಲ್ಲರು. ವಿಶ್ವಕಪ್ ಗೆಲ್ಲುವಲ್ಲಿ ಬೌಲರ್ ಗಳ ಪಾತ್ರವೂ ಮುಖ್ಯವಾಗಿರುತ್ತದೆ. ಮುಂಬರುವ ವಿಶ್ವಕಪ್ ನಲ್ಲಿ ಎದುರಾಳಿ ಬ್ಯಾಟರ್ ಗಳ ನಿದ್ದೆಗೆಡಿಸಬಲ್ಲ ಅಗ್ರಮಾನ್ಯ ಐವರು ಬೌಲರ್ ಗಳತ್ತ ಕಿರು ನೋಟ.. ಮಿಚೆಲ್ ಸ್ಟಾರ್ಕ್ (ಆಸ್ಟ್ರೇಲಿಯ): ಆಧುನಿಕ ಕ್ರಿಕೆಟ್ ಯುಗದ ಓರ್ವ ಶ್ರೇಷ್ಠ ವೇಗದ ಬೌಲರ್ ಆಗಿರುವ ಸ್ಟಾರ್ಕ್ ವಿಶ್ವಕಪ್ ನಲ್ಲಿ ಆಸ್ಟ್ರೇಲಿಯದ ಪ್ರಮುಖ ಅಸ್ತ್ರವಾಗಿದ್ದಾರೆ. ಸ್ಟಾರ್ಕ್ 2015 ಹಾಗೂ 2019ರ ಆವೃತ್ತಿಯ ವಿಶ್ವಕಪ್ ಟೂರ್ನಿಗಳಲ್ಲಿ ಅತ್ಯಂತ ಹೆಚ್ಚು ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ. ಹಿಂದಿನ 2019ರ ವಿಶ್ವಕಪ್ ನಲ್ಲಿ ಸ್ಟಾರ್ಕ್ 10 ಪಂದ್ಯಗಳಲ್ಲಿ ಒಟ್ಟು 27 ವಿಕೆಟ್ ಗಳನ್ನು ಉರುಳಿಸಿದ್ದರು. ಏಕದಿನ ಕ್ರಿಕೆಟ್ ವಿಶ್ವಕಪ್ ಇತಿಹಾಸದಲ್ಲಿ ಒಂದೇ ಆವೃತ್ತಿಯಲ್ಲಿ ಬೌಲರ್ ವೊಬ್ಬನ ಸರ್ವಶ್ರೇಷ್ಠ ಸಾಧನೆ ಇದಾಗಿತ್ತು. ಬೌಲರ್ ಗಳಿಗೆ ಕಠಿಣವಾಗಿರುವ ಭಾರತ ಪಿಚ್ ನಲ್ಲಿ ಆಸ್ಟ್ರೇಲಿಯದ ಪಾಲಿಗೆ ಸ್ಟಾರ್ಕ್ ನಿರ್ಣಾಯಕ ಬೌಲರ್ ಆಗಿದ್ದಾರೆ. ಟ್ರೆಂಟ್ ಬೌಲ್ಟ್ (ನ್ಯೂಝಿಲ್ಯಾಂಡ್): ಹೊಸ ಚೆಂಡಿನಲ್ಲಿ ಬ್ಯಾಟರ್ ಗಳನ್ನು ಸಿಂಹಸ್ವಪ್ನವಾಗಿ ಕಾಡಬಲ್ಲ ಎಡಗೈ ವೇಗಿ ಟ್ರೆಂಟ್ ಬೌಲ್ಟ್ ಮುಂಬರುವ ವಿಶ್ವಕಪ್ ನಲ್ಲಿ ಎಲ್ಲರ ಗಮನ ಸೆಳೆಯಲು ಸಜ್ಜಾಗಿದ್ದಾರೆ. ತಮ್ಮ ಚುರುಕಾದ ಸ್ವಿಂಗ್ ಎಸೆತಗಳ ಮೂಲಕ ಎಲ್ಲ ಮಾದರಿ ಕ್ರಿಕೆಟ್ ನಲ್ಲಿ ಬ್ಯಾಟರ್ ಗಳನ್ನು ಕಾಡಬಲ್ಲರು. ಅವರು ಭಾರತದ ಪಿಚ್ ನಲ್ಲಿ ಹೊಸ ಚೆಂಡಿನಲ್ಲಿ ಪ್ರಮುಖ ಪಾತ್ರವಹಿಸುವ ಸಾಧ್ಯತೆಯಿದೆ. ಐಪಿಎಲ್ ಟೂರ್ನಿಗಳಲ್ಲಿ ಆಡಿರುವ ಅನುಭವದ ಲಾಭ ಪಡೆದು ಕಿವೀಸ್ ಗೆ ಚೊಚ್ಚಲ ವಿಶ್ವಕಪ್ ಗೆದ್ದುಕೊಡುವ ಗುರಿ ಇಟ್ಟುಕೊಂಡಿದ್ದಾರೆ. 2015ರ ವಿಶ್ವಕಪ್ ನಲ್ಲಿ 9 ಪಂದ್ಯಗಳಲ್ಲಿ ಒಟ್ಟು 22 ವಿಕಟೆ್ ಗಳನ್ನು ಪಡೆದಿದ್ದ ಬೌಲ್ಟ್ ಕಿವೀಸ್ ಪರ ಹೆಚ್ಚು ವಿಕೆಟ್ ಪಡೆದ ಸಾಧನೆ ಮಾಡಿದ್ದರು. ಇದು ಒಂದೇ ಆವೃತ್ತಿಯ ವಿಶ್ವಕಪ್ ನಲ್ಲಿ ಕಿವೀಸ್ ಬೌಲರ್ ವೊಬ್ಬನ ಶ್ರೇಷ್ಠ ಸಾಧನೆಯಾಗಿದೆ ಉಳಿದುಕೊಂಡಿದೆ. ಶಾಹೀನ್ ಶಾ ಅಫ್ರಿದಿ (ಪಾಕಿಸ್ತಾನ): ಪಾಕಿಸ್ತಾನದ ಪರ ಎರಡನೇ ಬಾರಿ ಏಕದಿನ ವಿಶ್ವಕಪ್ ನಲ್ಲಿ ಆಡಲಿರುವ ಶಾಹೀನ್ ಶಾ ಅಫ್ರಿದಿ ಇದೇ ಮೊದಲ ಬಾರಿ ಭಾರತಕ್ಕೆ ಆಗಮಿಸಿದ್ದಾರೆ. ಅಫ್ರಿದಿ ಪಾಕಿಸ್ತಾನದ ಪ್ರಮುಖ ಬೌಲರ್ ಆಗಿದ್ದು, ಮುಂಬರುವ ವಿಶ್ವಕಪ್ ನಲ್ಲಿ ತಂಡದ ಗೆಲುವಿನಲ್ಲಿ ಪ್ರಮುಖ ಭೂಮಿಕೆ ನಿಭಾಯಿಸುವ ನಿರೀಕ್ಷೆಯಿದೆ. ರೀಸ್ ಟೋಪ್ಲಿ (ಇಂಗ್ಲೆಂಡ್): ಇಂಗ್ಲೆಂಡ್ ನ ಟೋಪ್ಲಿ ಸೀಮಿತ ಓವರ್ ಕ್ರಿಕೆಟ್ ನಲ್ಲಿಆಂಗ್ಲರ ತಂಡದಲ್ಲಿರುವ ಅತ್ಯಂತ ನಿಖರ ಬೌಲರ್ ಗಳಲ್ಲಿ ಒಬ್ಬರಾಗಿದ್ದಾರೆ. ಟೋಪ್ಲೆಗೆ ಭಾರತದ ವಾತಾವರಣದಲ್ಲಿ ಆಡಿರುವ ಅನುಭವವಿದೆ. ಕಠಿಣ ಪಿಚ್ ಗಳಲ್ಲಿ ಇದು ಇಂಗ್ಲೆಂಡ್ ಗೆ ನೆರವಾಗಬಹುದು. ಮಾರ್ಕೊ ಜಾನ್ಸನ್ (ದ.ಆಫ್ರಿಕಾ): ನೀಳಕಾಯದ ವೇಗದ ಬೌಲರ್ ಜಾನ್ಸನ್ ಮುಂಬರುವ ವಿಶ್ವಕಪ್ ನಲ್ಲಿ ದಕ್ಷಿಣ ಆಫ್ರಿಕಾ ತಂಡದಲ್ಲಿರುವ ಪ್ರಮುಖ ಬೌಲರ್ ಗಳಲ್ಲಿ ಒಬ್ಬರಾಗಿದ್ದಾರೆ. ಬಿಗಿಯಾದ ಲೆಂಗ್ತ್ ನಲ್ಲಿ ಬೌಲಿಂಗ್ ಮಾಡಬಲ್ಲ ಜಾನ್ಸನ್ ಯಾವುದೇ ವಾತಾವರಣಗಳಿಗೆ ಹೊಂದಿಕೊಳ್ಳುವ ಬೌಲರ್ ಪೈಕಿ ಒಬ್ಬರಾಗಿದ್ದಾರೆ.
ರೂ. 1.5 ಲಕ್ಷ ಮೌಲ್ಯದ ಮಂಗಳ ಸೂತ್ರ ನುಂಗಿದ ಎಮ್ಮೆ!
ವಾಶಿಮ್ (ಮಹಾರಾಷ್ಟ್ರ): ಎಮ್ಮೆಯೊಂದು ಆಕಸ್ಮಿಕವಾಗಿ ದುಬಾರಿ ಬೆಲೆಯ ಮಂಗಳ ಸೂತ್ರವನ್ನು ನುಂಗಿರುವ ವಿಚಿತ್ರ ಘಟನೆ ರವಿವಾರ ನಡೆದಿದೆ. ಈ ಚಿನ್ನದ ಮಂಗಳ ಸೂತ್ರದ ಬೆಲೆಯು ಅಂದಾಜು ರೂ.1.5 ಲಕ್ಷ ಆಗಿದ್ದು, 20 ಗ್ರಾಂ ತೂಕವನ್ನು ಹೊಂದಿದೆ ಎಂದು ndtv.com ವರದಿ ಮಾಡಿದೆ. ಮಹಿಳೆಯೊಬ್ಬರು ಸೋಯಾಬೀನ್ ಹಾಗೂ ಕಡಲೆಕಾಯಿ ಸಿಪ್ಪೆ ತುಂಬಿರುವ ತಟ್ಟೆಯೊಂದರಲ್ಲಿ ಒಡವೆಗಳನ್ನು ಇಟ್ಟು ಸ್ನಾನಕ್ಕೆ ತೆರಳಿದ್ದಾಗ ಈ ಘಟನೆಯು ನಡೆದಿದೆ. ಸ್ನಾನ ಮುಗಿದ ನಂತರ ಆ ಮಹಿಳೆಯು ಕಡಲೆಕಾಯಿ ಸಿಪ್ಪೆ ತುಂಬಿರುವ ತಟ್ಟೆಯನ್ನು ಎಮ್ಮೆಯ ಮುಂದೆ ಇರಿಸಿದ್ದಾರೆ. ಆಗ ಎಮ್ಮೆಯು ಕಡಲೆಕಾಯಿ ಸಿಪ್ಪೆಯನ್ನು ತಿನ್ನಲು ತೊಡಗಿದೆ. ಕೆಲವು ಗಂಟೆಗಳ ನಂತರವಷ್ಟೇ ಆ ಮಹಿಳೆಗೆ ತನ್ನ ಒಡವೆಗಳು ಕಾಣೆಯಾಗಿರುವ ಕುರಿತು ಅರಿವಾಗಿದೆ. ಆಗ ನಡೆದ ಘಟನೆಯನ್ನು ಮೆಲುಕು ಹಾಕಿರುವ ಆ ಮಹಿಳೆಯು, ತಾನು ಮೇವಿನೊಂದಿಗೆ ಮಂಗಳ ಸೂತ್ರವನ್ನೂ ಇರಿಸಿದ್ದನ್ನು ನೆನಪಿಸಿಕೊಂಡಿದ್ದಾರೆ. ಆ ಮಂಗಳ ಸೂತ್ರವನ್ನು ಎಮ್ಮೆಯು ನುಂಗಿದೆ ಎಂಬುದು ಮನದಟ್ಟಾದಾಗ, ಆ ಮಹಿಳೆಯು ಈ ಕುರಿತು ತನ್ನ ಪತಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ದಂಪತಿಗಳು ಪಶುವೈದ್ಯರೊಬ್ಬರನ್ನು ಸಂಪರ್ಕಿಸಿದ್ದು, ಎಮ್ಮೆಯನ್ನು ಲೋಹ ಶೋಧಕದಿಂದ ತಪಾಸಣೆ ಮಾಡಿರುವ ಆ ಪಶುವೈದ್ಯರು, ಎಮ್ಮೆಯ ಹೊಟ್ಟೆಯಲ್ಲಿ ಮಂಗಳ ಸೂತ್ರ ಇರುವುದನ್ನು ದೃಢಪಡಿಸಿದ್ದಾರೆ. ಮರುದಿನ ಎಮ್ಮೆಗೆ ಎರಡು ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ನಡೆಸಲಾಗಿದ್ದು, ಅದಕ್ಕೆ 60-65 ಹೊಲಿಗೆಗಳನ್ನು ಹಾಕಲಾಗಿದೆ. ಶಸ್ತ್ರಚಿಕಿತ್ಸೆ ಯಶಸ್ವಿಯಾದ ನಂತರ, ಎಮ್ಮೆಯ ಹೊಟ್ಟೆಯಿಂದ ಮಂಗಳ ಸೂತ್ರವನ್ನು ಹೊರ ತೆಗೆಯಲಾಗಿದೆ. ಈ ಕುರಿತು ANI ಸುದ್ದಿ ಸಂಸ್ಥೆಗೆ ಪ್ರತಿಕ್ರಿಯಿಸಿರುವ ವಾಶಿಮ್ ನ ಆರೋಗ್ಯಾಧಿಕಾರಿ ಬಾಳಾಸಾಹೇಬ್ ಕೌಂಡನೆ, “ಎಮ್ಮೆಯ ಹೊಟ್ಟೆಯಲ್ಲಿ ಯಾವುದೋ ಲೋಹವಿದೆ ಎಂಬ ಸಂಗತಿಯನ್ನು ಲೋಹ ಶೋಧಕವು ದೃಢಪಡಿಸಿತು. ಎಮ್ಮೆಗೆ ಎರಡು ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ನಡೆಸಲಾಗಿದ್ದು, ಅದಕ್ಕೆ 60-65 ಹೊಲಿಗೆಗಳನ್ನು ಹಾಕಲಾಗಿದೆ” ಎಂದು ತಿಳಿಸಿದ್ದಾರೆ. ಪ್ರಾಣಿಗಳಿಗೆ ಮೇವನ್ನಾಗಲಿ ಅಥವಾ ಇನ್ನೇನನ್ನಾದರಾಗಲಿ ತಿನ್ನಿಸುವ ಜಾನುವಾರುಗಳ ಮಾಲಕರು ಒಂದಿಷ್ಟು ಎಚ್ಚರಿಕೆ ವಹಿಸಬೇಕು ಎಂದು ಕೌಂಡನೆ ಆಗ್ರಹಿಸಿದ್ದಾರೆ. “ಪ್ರಾಣಿಗಳಿಗೆ ಮೇವನ್ನು ತಿನ್ನಿಸುವಾಗ ಜನರು ಎಚ್ಚರಿಕೆಯಿಂದ ಇರಬೇಕು ಹಾಗೂ ಮೇವಿನಲ್ಲಿ ಮತ್ತೇನೂ ಇಲ್ಲ ಎಂಬುದನ್ನು ಖಾತ್ರಿಪಡಿಸಿಕೊಳ್ಳಬೇಕು ಎಂದು ಮನವಿ ಮಾಡುತ್ತೇವೆ” ಎಂದು ಅವರು ಕರೆ ನೀಡಿದ್ದಾರೆ.
ಐಸಿಸಿ ಏಕದಿನ ವಿಶ್ವಕಪ್ 2023ರ ಜಾಗತಿಕ ರಾಯಭಾರಿಯಾಗಿ ಸಚಿನ್ ತೆಂಡೂಲ್ಕರ್ ಆಯ್ಕೆ
ಹೊಸದಿಲ್ಲಿ: ಗುರುವಾರದಿಂದ ಅಹಮದಾಬಾದ್ ನಲ್ಲಿ ಪ್ರಾರಂಭವಾಗಲಿರುವ ಪುರುಷರ ಏಕದಿನ ಕ್ರಿಕೆಟ್ ವಿಶ್ವಕಪ್ ನ ಜಾಗತಿಕ ರಾಯಭಾರಿಯನ್ನಾಗಿ ದಿಗ್ಗಜ ಆಟಗಾರ ಸಚಿನ್ ತೆಂಡೂಲ್ಕರ್ ಅವರನ್ನು ಐಸಿಸಿ ಆಯ್ಕೆ ಮಾಡಿದೆ. ತಮ್ಮ ವೈಭವಯುತ ಕ್ರಿಕೆಟ್ ಜೀವನದಲ್ಲಿ ಆರು ವಿಶ್ವಕಪ್ ಅರ್ಧ ಶತಕಗಳನ್ನು ಗಳಿಸಿರುವ ಸಚಿನ್ ತೆಂಡೂಲ್ಕರ್, ಇಂಗ್ಲೆಂಡ್ ಹಾಗೂ ನ್ಯೂಝಿಲೆಂಡ್ ನಡುವೆ ಪ್ರಾರಂಭವಾಗಲಿರುವ ಆರಂಭಿಕ ಪಂದ್ಯಕ್ಕೂ ಮುನ್ನ ವಿಶ್ವಕಪ್ ಟ್ರೋಫಿಯೊಂದಿಗೆ ಮೈದಾನವನ್ನು ಪ್ರವೇಶಿಸುವ ಮೂಲಕ ವಿಶ್ವಕಪ್ ಕ್ರೀಡಾಕೂಟ ಪ್ರಾರಂಭವಾಗಿದೆ ಎಂದು ಸಾಂಕೇತಿಕವಾಗಿ ಪ್ರಚುರಪಡಿಸಲಿದ್ದಾರೆ ಎಂದು ndtv.com ವರದಿ ಮಾಡಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಸಚಿನ್ ತೆಂಡೂಲ್ಕರ್, “1987ರ ವಿಶ್ವಕಪ್ ನಲ್ಲಿ ಬಾಲ್ ಬಾಯ್ ಆಗಿದ್ದ ನಾನು, ದೇಶವನ್ನು ಆರು ವಿಶ್ವಕಪ್ ಆವೃತ್ತಿಗಳಲ್ಲಿ ಪ್ರತಿನಿಧಿಸಿರುವುದರಿಂದ, ವಿಶ್ವಕಪ್ ಗಳಿಗೆ ನನ್ನ ಹೃದಯದಲ್ಲಿ ಎಂದಿಗೂ ವಿಶೇಷ ಸ್ಥಾನವಿದೆ. 2011ರಲ್ಲಿ ವಿಶ್ವಕಪ್ ಜಯಿಸಿದ್ದು ನನ್ನ ಕ್ರಿಕೆಟ್ ಪಯಣದಲ್ಲಿನ ಅತ್ಯಂತ ಹೆಮ್ಮೆಯ ಕ್ಷಣವಾಗಿದೆ” ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. “ಹಲವಾರು ವಿಶೇಷ ತಂಡಗಳು ಹಾಗೂ ಆಟಗಾರರು ಭಾರತದಲ್ಲಿ ನಡೆಯಲಿರುವ ವಿಶ್ವಕಪ್ ನಲ್ಲಿ ಕಠಿಣವಾಗಿ ಸ್ಪರ್ಧಿಸಲು ಉತ್ಸುಕರಾಗಿದ್ದಾರೆ. ಈ ಅದ್ಭುತ ಕ್ರೀಡಾಕೂಟವನ್ನು ನಾನು ರೋಮಾಂಚನದಿಂದ ಎದುರು ನೋಡುತ್ತಿದ್ದೇನೆ. ವಿಶ್ವಕಪ್ ನಂಥ ಮೈಲಿಗಲ್ಲು ಕ್ರೀಡಾಕೂಟಗಳು ಯುವಕರ ಮನಸ್ಸಿನಲ್ಲಿ ಕನಸುಗಳನ್ನು ಬಿತ್ತುತ್ತವೆ. ಈ ಬಾರಿಯ ವಿಶ್ವಕಪ್ ಆವೃತ್ತಿಯೂ ಯುವತಿಯರು ಹಾಗೂ ಯುವಕರಲ್ಲಿ ಕ್ರೀಡೆಯನ್ನು ಆಯ್ದುಕೊಳ್ಳಲು ಸ್ಫೂರ್ತಿಯಾಗಲಿ ಹಾಗೂ ಉನ್ನತ ಮಟ್ಟದಲ್ಲಿ ದೇಶವನ್ನು ಪ್ರತಿನಿಧಿಸುವಂತಾಗಲಿ” ಎಂದು ಸಚಿನ್ ತೆಂಡೂಲ್ಕರ್ ತಮ್ಮ ಪತ್ರಿಕಾ ಪ್ರಕಟಣೆಯಲ್ಲಿ ಹಾರೈಸಿದ್ದಾರೆ. ಈ ಬಾರಿಯ ವಿಶ್ವಕಪ್ ಕ್ರೀಡಾಕೂಟಕ್ಕೆ ದಿಗ್ಗಜ ಕ್ರಿಕೆಟಿಗರಾದ ವೆಸ್ಟ್ ಇಂಡೀಸ್ ನ ವಿವಿಯನ್ ರಿಚರ್ಡ್ಸ್, ದಕ್ಷಿಣ ಆಫ್ರಿಕಾದ ಎಬಿ ಡಿ ವಿಲಿಯರ್ಸ್, ವಿಶ್ವಕಪ್ ಜಯಿಸಿದ ಇಂಗ್ಲೆಂಡ್ ತಂಡದ ನಾಯಕರಾಗಿದ್ದ ಇಯಾನ್ ಮಾರ್ಗನ್, ಆಸ್ಟ್ರೇಲಿಯಾದ ಆ್ಯರನ್ ಫಿಂಚ್, ಶ್ರೀಲಂಕಾದ ಸ್ಪಿನ್ ಮಾಂತ್ರಿಕ ಮುತ್ತಯ್ಯ ಮುರಳೀಧರನ್, ನ್ಯೂಝಿಲೆಂಡ್ ನ ರಾಸ್ ಟೇಲರ್, ಭಾರತದ ಸುರೇಶ್ ರೈನಾ, ಮಹಿಳಾ ಭಾರತೀಯ ತಂಡದ ಮಾಜಿ ನಾಯಕಿ ಮಿಥಾಲಿ ರಾಜ್ ಹಾಗೂ ಪಾಕಿಸ್ತಾನದ ಆಲ್ ರೌಂಡರ್ ಮುಹಮ್ಮದ್ ಹಫೀಝ್ ಸಾಕ್ಷಿಯಾಗಲಿದ್ದಾರೆ.
ಸರಕಾರದ ಬಿಟ್ಟಿ ಭಾಗ್ಯಗಳಿಂದ ಜನರ ಮೇಲೆ ವ್ಯತಿರಿಕ್ತ ಪರಿಣಾಮ: ಮಾಧುಸ್ವಾಮಿ ಕಿಡಿ
' ಸರಕಾರದ ವಿಫಲತೆಗಳು ಹೆಚ್ಚಾಗುತ್ತಿದ್ದು, ಜನರ ಅರಿವಿಗೆ ಬಂದಿದೆ. ಮುಂದಿನ ದಿನಗಳಲ್ಲಿಸರಕಾರದ ವಿರುದ್ಧದ ಹೋರಾಟ ತೀವ್ರಗೊಳ್ಳಲಿದೆ ಎಂದು ಹೇಳಿದ ಮಾಜಿ ಸಚಿವರು, ಕ್ಷೇತ್ರದಲ್ಲಿ ಮುಂಬರುವ ಚುನಾವಣೆಗಳನ್ನು ಬೂತ್ ಮಟ್ಟದಲ್ಲಿ ಸಂಘಟಿಸಿ ಎದುರಿಸುತ್ತೇವೆ' ಎಂದು ಮಾಜಿ ಸಚಿವ ಜೆ.ಸಿ. ಮಾಧುಸ್ವಾಮಿ ಹೇಳಿದರು.
ರಾಜ್ಯ ಮಟ್ಟದ ಕರಾಟೆ ಸ್ಪರ್ಧೆ: ನೆಫೀಸ ಹಿಬಾತ್ಗೆ ಚಿನ್ನದ ಪದಕ
ಮಂಗಳೂರು: ಹುಬ್ಬಳ್ಳಿಯಲ್ಲಿ ರವಿವಾರ ನಡೆದ ರಾಜ್ಯ ಮಟ್ಟದ ಕರಾಟೆ ಚಾಂಪಿಯನ್ಶಿಪ್ನಲ್ಲಿ ತೊಕ್ಕೊಟ್ಟು ಬಬ್ಬುಕಟ್ಟೆ ಹೀರಾ ವಿದ್ಯಾಸಂಸ್ಥೆಯ ವಿದ್ಯಾರ್ಥಿನಿ ನೆಫೀಸ ಹಿಬಾತ್ ಚಿನ್ನದ ಪದಕ ಪಡೆದು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾಳೆ. ಈಕೆ ಕುತ್ತಾರ್ ಮದನಿ ನಗರದ ಯಾಸೀರ್ ಆರಾಫತ್ ಮತ್ತು ಕೌಸರ್ ಪಕ್ಕಲಡ್ಕ ದಂಪತಿಯ ಪುತ್ರಿ ಹಾಗೂ ಉಳ್ಳಾದ ಮಾಜಿ ಶಾಸಕರಾದ ದಿವಂಗತ ಬಿ. ಎಂ. ಇದಿನಬ್ಬರ ಮರಿ ಮಗಳು.
ತನಿಖಾ ಸಂಸ್ಥೆಗಳು ಕಾನೂನುಪ್ರಕಾರವೇ ಕಾರ್ಯಾಚರಿಸುತ್ತಿವೆ: ಅನುರಾಗ್
ಹೊಸದಿಲ್ಲಿ : ನ್ಯೂಸ್ ಕ್ಲಿಕ್ ಸುದ್ದಿಜಾಲತಾಣಕ್ಕೆ ಸಂಬಂಧಿಸಿದ ಪತ್ರಕರ್ತರ ನಿವಾಸಗಳ ಮೇಲೆ ಮಂಗಳವಾರ ದಿಲ್ಲಿ ಪೊಲೀಸರು ನಡೆಸಿದ ದಾಳಿಗಳ ಬಗ್ಗೆ ಪ್ರತಿಕ್ರಿಯಿಸಿರುವ ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವ ಅನುರಾಗ್ ಠಾಕೂರ್ ಅವರು, ತನಿಖಾ ಏಜೆನ್ಸಿಗಳು ಸ್ವತಂತ್ರವಾಗಿದ್ದು, ಅವು ಕಾನೂನು ಪ್ರಕಾರವಾಗಿಯೇ ಕಾರ್ಯನಿರ್ವಹಿಸುತ್ತವೆ’’ ಎಂದು ಹೇಳಿದ್ದಾರೆ. ‘‘ ದಿಲ್ಲಿ ಪೊಲೀಸರ ದಾಳಿಯನ್ನು ನಾನು ಸಮರ್ಥಿಸಿಕೊಳ್ಳುವ ಅಗತ್ಯವಿಲ್ಲ. ಒಂದು ವೇಳೆ ಯಾರಾದರೂ ತಪ್ಪು ಮಾಡಿದಲ್ಲಿ ತನಿಖಾ ಏಜೆನ್ಸಿಗಳು ಅವರ ವಿರುದ್ಧ ಕಾರ್ಯಪ್ರವೃತ್ತವಾಗುತ್ತವೆ. ಒಂದು ವೇಳೆ ನೀವು ತಪ್ಪು ಮಾರ್ಗದಿಂದ ಸಂಪತ್ತನ್ನು ಗಳಿಸಿದ್ದಲ್ಲಿ ಹಾಗೂ ಅಪರಾಧವನ್ನು ಎಸಗಿದ್ದಲ್ಲಿ ತನಿಖಾ ಏಜೆನ್ಸಿಗಳು ಸೂಕ್ತ ಕ್ರಮ ಕೈಗೊಳ್ಳುತ್ತವೆ’’ ಎಂದು ಠಾಕೂರ್ ತಿಳಿಸಿದ್ದಾರೆ.
ಇನ್ನರ್ವಿಲ್ನ ಜಿಲ್ಲಾ ಸಮಾವೇಶ ‘ಸ್ವರ್ಣ ಪರ್ಭ’
ಮಂಗಳೂರು, ಅ.3: ಇನ್ನರ್ವೀಲ್ ಜಿಲ್ಲೆ 318ರ ಜಿಲ್ಲಾ ರ್ಯಾಲಿ ‘ಸ್ವರ್ಣ ಪರ್ಭ ’ ರವಿವಾರ ನಗರದ ಟಿ. ವಿ. ರಮಣ ಪೈ ಹಾಲ್ನಲ್ಲಿ ಜಿಲ್ಲಾ ಚೇರ್ಮನ್ ಪೂರ್ಣಿಮಾ ರವಿ ನೇತೃತ್ವದಲ್ಲಿ ನಡೆಯಿತು. ಜಿಲ್ಲಾ ಖಜಾಂಚಿ ರಜನಿ.ಆರ್ ಭಟ್ , ಜಿಲ್ಲಾ ಎಡಿಟರ್ ಉಮಾ ಮಹೇಶ್ ಇನ್ನರ್ವೀಲ್ ಮಂಗಳೂರು ಉತ್ತರ ಕ್ಲಬ್ನ ಕಾರ್ಯದರ್ಶಿ ಡಾ. ಭಾರತಿ ಪ್ರಕಾಶ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕ್ಲಬ್ನ ಅಧ್ಯಕ್ಷೆ ಗೀತ. ಬಿ. ರೈ ಸ್ವಾಗತಿಸಿದರು. ರೇಲಿ ಛೇರ್ಮನ್ ಚಿತ್ರ ವಿ. ರಾವ್ ಸ್ವರ್ಣ ಪರ್ಭದ ಬಗ್ಗೆ ಪ್ರಾಸ್ತಾವಿವಾಗಿ ಮಾತನಾಡಿದರು. ಉಪ ಚೇರ್ಮನ್ ವೈಶಾಲಿ ಕುಡ್ವ ವಂದಿಸಿದರು. ಇನ್ನರ್ವೀಲ್ ಮಂಗಳೂರು ಉತ್ತರದ ಚಾರ್ಟರ್ ಸದಸ್ಯೆ ಉಷಾ ಪ್ರಾರ್ಥಿಸಿದರು. ಕಾರ್ಯದರ್ಶಿ ಶಬರಿ ಕಡಿದಾಲ್ ಸಂದೇಶ ವಾಚಿಸಿದರು. ಇನ್ನರ್ ವೀಲ್ ಕ್ಲಬ್ ಮಂಗಳೂರು ಉತ್ತರದ ಸದಸ್ಯೆಯರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಡಾ. ಮಾಲಿನಿ ಹೆಬ್ಬಾರ್ ಕಾರ್ಯಕ್ರಮ ನಿರೂಪಿಸಿದರು.
ಬ್ಯಾಂಕಾಕ್ನಲ್ಲಿ ಶೂಟೌಟ್: ಒಬ್ಬ ಮೃತ್ಯು, 14 ವರ್ಷದ ಆರೋಪಿ ಬಂಧನ
ಬ್ಯಾಂಕಾಕ್ : ಥೈಲ್ಯಾಂಡ್ ರಾಜಧಾನಿ ಬ್ಯಾಂಕಾಕ್ನ ಐಷಾರಾಮಿ ಶಾಪಿಂಗ್ ಮಾಲ್ನಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಒಬ್ಬ ವ್ಯಕ್ತಿ ಮೃತಪಟ್ಟಿದ್ದು ಇತರ 3 ಮಂದಿ ಗಾಯಗೊಂಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ 14 ವರ್ಷದ ಶಂಕಿತ ಆರೋಪಿಯನ್ನು ಬಂಧಿಸಿರುವುದಾಗಿ ಪೊಲೀಸರು ಹೇಳಿದ್ದಾರೆ. ಶೂಟೌಟ್ನಲ್ಲಿ ಮೂರು ಮಂದಿ ಮೃತಪಟ್ಟಿರುವುದಾಗಿ ಪ್ರಾಥಮಿಕ ವರದಿ ತಿಳಿಸಿತ್ತು. ಬಳಿಕ ಸ್ಪಷ್ಟನೆ ನೀಡಿರುವ ತುರ್ತು ಸೇವಾ ಕೇಂದ್ರದ ನಿರ್ದೇಶಕ ಯುಥಾನಾ ಸ್ರೆಟ್ಟಾನನ್, ಒಬ್ಬ ವ್ಯಕ್ತಿ ಮೃತಪಟ್ಟಿರುವುದಾಗಿ ಹೇಳಿದ್ದಾರೆ. ಸಿಯಾಮ್ ಪ್ಯರಗಾನ್ ಮಾಲ್ನಲ್ಲಿ ಗುಂಡಿನ ಸದ್ದು ಕೇಳಿಬಂದ ಬಳಿಕ ಮಾಲ್ನಲ್ಲಿದ್ದ ನೂರಾರು ಮಂದಿ ದಿಕ್ಕೆಟ್ಟು ಓಡುತ್ತಿರುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು ಪ್ರಕರಣದ ಬಗ್ಗೆ ಥೈಲ್ಯಾಂಡ್ ಪ್ರಧಾನಿ ಸ್ರೇಥ ತವಿಸಿನ್ ಆಘಾತ ವ್ಯಕ್ತಪಡಿಸಿದ್ದಾರೆ
ವಂಚನೆ ಪ್ರಕರಣ: ಅಭಿನವ ಹಾಲಶ್ರೀ 2 ದಿನ ಮುಂಡರಗಿ ಪೊಲೀಸರ ಕಸ್ಟಡಿಗೆ
ಮುಂಡರಗಿ (ಗದಗ): ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಹಣ ಪಡೆದು ವಂಚಿಸಿದ ಆರೋಪದಲ್ಲಿ ಬಂಧನಕ್ಕೊಳಗಾಗಿರುವ ಹಿರೇಹಡಗಲಿಯ ಅಭಿನವ ಹಾಲಶ್ರೀ ಸ್ವಾಮೀಜಿಯನ್ನು ಮಂಗಳವಾರ ಪಟ್ಟಣದ ಜೆಎಂಎಫ್ಸಿ ನ್ಯಾಯಾಲಯಕ್ಕೆ ಹಾಜರು ಪಡಿಸಲಾಯಿತು. ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಿಂದ ಅಭಿನವ ಹಾಲಶ್ರೀ ಅವರನ್ನು ಸ್ಥಳೀಯ ಪೊಲೀಸರು ಪಟ್ಟಣಕ್ಕೆ ಕರೆತಂದಿದ್ದರು. ಸಂಜೆ ವಿಚಾರಣೆ ನಡೆಸಿದ ನ್ಯಾಯಾಧೀಶರು ಎರಡು ದಿನ ಸ್ಥಳೀಯ ಪೊಲೀಸರ ವಶಕ್ಕೆ ಒಪ್ಪಿಸಿದರು. ಬಳಿಕ ತಾಲೂಕಾಸ್ಪತ್ರೆಗೆ ಕರೆದೊಯ್ದು ವೈದ್ಯಕೀಯ ತಪಾಸಣೆ ಮಾಡಲಾಯಿತು. ಅಭಿನವ ಹಾಲಶ್ರೀಗಳು ಶಿರಹಟ್ಟಿ ಮೀಸಲು ಮತಕ್ಷೇತ್ರದ ಬಿಜೆಪಿಯ ಟಿಕೆಟ್ ಕೊಡಿಸುವುದಾಗಿ ಒಂದು ಕೋಟಿ ರೂ. ಹಣ ಪಡೆದು ವಂಚಿಸಿದ್ದಾರೆ. ಶ್ರೀಗಳಿಗೆ 10 ಲಕ್ಷ ರೂ., 40 ಲಕ್ಷ ರೂ. ಹಾಗೂ 50 ಲಕ್ಷ ರೂ.ನಂತೆ ಒಟ್ಟು 1 ಕೋಟಿ ರೂಪಾಯಿ ನೀಡಿರುವುದಾಗಿ ಅಮಾನತಿನಲ್ಲಿರುವ ಪಿಡಿಒ ಸಂಜಯ ಚವಡಾಳ ಸೆ.18ರಂದು ಪಟ್ಟಣದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಸೆ.25ರಂದು ಶ್ರೀಗಳ ವಿರುದ್ಧ ಪ್ರಕರಣ ದಾಖಲಾಗಿತ್ತು.
ಚೀನಾ ನೇತೃತ್ವದಲ್ಲಿ ಹಿಮಾಲಯನ್ ವೇದಿಕೆ ಸಮ್ಮೇಳನ, ಅರುಣಾಚಲ ಗಡಿ ಬಳಿ ಸಭೆ
ಬೀಜಿಂಗ್ : ಭಾರತದ ಅರುಣಾಚಲ ಪ್ರದೇಶದ ಗಡಿ ಬಳಿ 3ನೇ ಟ್ರಾನ್ಸ್-ಹಿಮಾಲಯನ್ ಫೋರಂ ಫಾರ್ ಇಂಟರ್ ನ್ಯಾಷನಲ್ ಕೋ-ಆಪರೇಷನ್ನ (ಅಂತರಾಷ್ಟ್ರೀಯ ಸಹಕಾರಕ್ಕಾಗಿ 3ನೇ ಹಿಮಾಲಯನ್ ಪ್ರಾಂತ ವೇದಿಕೆ) ಸಮ್ಮೇಳನವನ್ನು ಅಕ್ಟೋಬರ್ 4 ಮತ್ತು 5ರಂದು ಆಯೋಜಿಸಿರುವುದಾಗಿ ಚೀನಾ ಘೋಷಿಸಿದೆ. ಸಮ್ಮೇಳನದಲ್ಲಿ ತನ್ನ ನಿಕಟ ಮಿತ್ರದೇಶ ಪಾಕಿಸ್ತಾನ, ಮಂಗೋಲಿಯಾ ಮತ್ತು ಅಫ್ಘಾನಿಸ್ತಾನದ ಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ ಎಂದು ಉನ್ನತ ಮೂಲಗಳು ಹೇಳಿವೆ. ಹಿಮಾಲಯನ್ ಬೆಲ್ಟ್ ನಲ್ಲಿರುವ ದೇಶಗಳ ನಡುವೆ ಸಹಕಾರ ವೃದ್ಧಿಸುವ ಉದ್ದೇಶದಿಂದ ಈ ವೇದಿಕೆಯನ್ನು ಚೀನಾ 2018ರಲ್ಲಿ ಸ್ಥಾಪಿಸಿದೆ. ಈ ಬಾರಿಯ ಸಮ್ಮೇಳನಕ್ಕೆ ಟಿಬೆಟ್ನ ನ್ಯಿಂಗ್ಚಿ ನಗರ ವೇದಿಕೆಯಾಗಿದ್ದು ಚೀನಾ ಸರಕಾರ ನಿರ್ವಹಿಸುತ್ತಿರುವ ಈ ನಗರ ಭಾರತದ ಈಶಾನ್ಯದ ಅರುಣಾಚಲ ಪ್ರದೇಶದಿಂದ 160 ಕಿ.ಮೀ ದೂರದಲ್ಲಿದೆ. ಸಮ್ಮೇಳನದಲ್ಲಿ ಭಾಗವಹಿಸುವುದನ್ನು ಪಾಕ್ ದೃಢಪಡಿಸಿದೆ. `ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಅವರ ವಿಶೇಷ ಆಹ್ವಾನದ ಮೇರೆಗೆ, ಟಿಬೆಟ್ ಸ್ವಾಯತ್ತ ಪ್ರಾಂತದ ನ್ಯಿಂಗ್ಚಿಯಲ್ಲಿ ಅಕ್ಟೋಬರ್ 4-5ರಂದು ನಡೆಯಲಿರುವ 3ನೇ ಟ್ರಾನ್ಸ್-ಹಿಮಾಲಯ ಫೋರಂನ ಸಮ್ಮೇಳನದಲ್ಲಿ ವಿದೇಶಾಂಗ ಸಚಿವ ಜಲೀಲ್ ಅಬ್ಬಾಸ್ ಜಿಲಾನಿ ಪಾಲ್ಗೊಳ್ಳಲಿದ್ದಾರೆ' ಎಂದು ಪಾಕ್ ವಿದೇಶಾಂಗ ಇಲಾಖೆಯ ಹೇಳಿಕೆ ತಿಳಿಸಿದೆ. ಸಮ್ಮೇಳನದ ಉದ್ಘಾಟನಾ ಕಾರ್ಯಕ್ರಮದಲ್ಲಿ ಜಿಲಾನಿ ಮಾತನಾಡಲಿದ್ದು ಬಳಿಕ ಸಮ್ಮೇಳನದ ನೇಪಥ್ಯದಲ್ಲಿ ಚೀನಾ ಮತ್ತು ಅಫ್ಘಾನ್ ವಿದೇಶಾಂಗ ಸಚಿವರ ಜತೆ, ಮಂಗೋಲಿಯಾದ ಉಪಪ್ರಧಾನಿ ಜತೆ ಪ್ರತ್ಯೇಕ ಸಭೆ ನಡೆಸಲಿದ್ದಾರೆ ಎಂದು ಹೇಳಿಕೆ ತಿಳಿಸಿದೆ. ಭೌಗೋಳಿಕ ಸಂಪರ್ಕ ಸೇರಿದಂತೆ ಪ್ರಾದೇಶಿಕ ಸಮಸ್ಯೆಗಳ ಶ್ರೇಣಿಯನ್ನು ಪರಿಹರಿಸುವ ಗುರಿಯೊಂದಿಗೆ ವೇದಿಕೆಯನ್ನು ರಚಿಸಲಾಗಿದ್ದು ಈ ವರ್ಷದ ಸಮ್ಮೇಳನದ ವಿಷಯ `ಪರಿಸರ ನಾಗರಿಕತೆ ಮತ್ತು ಪರಿಸರ ಸಂರಕ್ಷಣೆ' ಎಂದಾಗಿದೆ. ಕೋವಿಡ್ ಸಾಂಕ್ರಾಮಿಕದ ಬಳಿಕ ನಡೆಯುತ್ತಿರುವ ಮೊದಲ ಸಮ್ಮೇಳನ ಇದಾಗಿದೆ. ಭಾರತ-ಚೀನಾ ನಡುವಿನ ಉದ್ವಿಗ್ನತೆ ತೀವ್ರಗೊಂಡಿರುವ ಸಂದರ್ಭದಲ್ಲೇ ಅರುಣಾಚಲದ ಗಡಿ ಬಳಿ ಚೀನಾ ಈ ಸಮ್ಮೇಳನವನ್ನು ಆಯೋಜಿಸುತ್ತಿರುವುದು ಗಮನಾರ್ಹವಾಗಿದೆ. ಲಡಾಕ್ನಲ್ಲಿ ವಾಸ್ತವಿಕ ನಿಯಂತ್ರಣ ರೇಖೆಯ ಬಗ್ಗೆ ಉಭಯ ದೇಶಗಳ ನಡುವೆ ವಿವಾದವಿದೆ. 2020ರ ಜೂನ್ನಲ್ಲಿ ಲಡಾಕ್ನ ಗಲ್ವಾನ್ ಕಣಿವೆಯ ಬಳಿ ಭಾರತ-ಚೀನಾ ಯೋಧರ ನಡುವಿನ ಘರ್ಷಣೆಯಿಂದ ಉಭಯ ದೇಶಗಳ ಸಂಬಂಧ ಅಸಹಜವಾಗಿದೆ ಎಂದು ವಿದೇಶಾಂಗ ಸಚಿವ ಜೈಶಂಕರ್ ಕಳೆದ ತಿಂಗಳು ಹೇಳಿಕೆ ನೀಡಿದ್ದರು. ಚೀನಾ ತಗಾದೆ ಅರುಣಾಚಲ ಪ್ರದೇಶವನ್ನು ದಕ್ಷಿಣ ಚೀನಾ ಎಂದು ಕರೆಯುವ ಚೀನಾ ಅದು ತನ್ನ ಭೂಪ್ರದೇಶವೆಂದು ಹೇಳಿಕೊಂಡಿದೆ. ಆಗಸ್ಟ್ ನಲ್ಲಿ ಚೀನಾವು ಅರುಣಾಚಲ ಪ್ರದೇಶ ಮತ್ತು ಪೂರ್ವ ಲಡಾಖ್ನ ಅಕ್ಸಾಯ್ ಚಿನ್ ಪ್ರದೇಶಗಳನ್ನು ಒಳಗೊಂಡಿರುವ ಹೊಸ `ಪ್ರಮಾಣಿತ' ನಕ್ಷೆಯನ್ನು ಬಿಡುಗಡೆ ಮಾಡಿರುವುದಾಗಿ ಹೇಳಿಕೊಂಡಿತ್ತು. ಇದಕ್ಕೆ ಅಂತರಾಷ್ಟ್ರೀಯ ಮಟ್ಟದಲ್ಲಿ ವ್ಯಾಪಕ ಖಂಡನೆ ವ್ಯಕ್ತವಾಗಿತ್ತು. ತನ್ನ ಪ್ರಾದೇಶಿಕ ಹಕ್ಕುಗಳನ್ನು ಮರುಸ್ಥಾಪಿಸುವ ಪ್ರಯತ್ನದ ಭಾಗವಾಗಿ 2021ರಲ್ಲಿ ಚೀನಾವು ಅರುಣಾಚಲ ಪ್ರದೇಶದ 15 ಗ್ರಾಮಗಳಿಗೆ ಮರುನಾಮಕರಣ ಮಾಡಿದ್ದು ಈ ನಡೆಯನ್ನು ಭಾರತ ತಿರಸ್ಕರಿಸಿದೆ. ಕಳೆದ ತಿಂಗಳು ಚೀನಾದಲ್ಲಿ ಆರಂಭಗೊಂಡ ಏಶ್ಯನ್ ಗೇಮ್ಸ್ ನಲ್ಲಿ ಪಾಲ್ಗೊಳ್ಳಲು ಅರುಣಾಚಲ ಪ್ರದೇಶದ ಮೂವರು ಸ್ಪರ್ಧಿಗಳಿಗೆ ಚೀನಾ ವೀಸಾ ನಿರಾಕರಿಸಿತ್ತು. ಇದನ್ನು ಪ್ರತಿಭಟಿಸಿ ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್ ಕ್ರೀಡಾಕೂಟದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸುವುದನ್ನು ರದ್ದುಗೊಳಿಸಿದ್ದರು.
ಮುಲ್ಕಿ: ದರೋಡೆ, ಕಳ್ಳತನ ಪ್ರಕರಣ; ಅಂತರ್ ಜಿಲ್ಲಾ ಐವರು ಆರೋಪಿಗಳ ಬಂಧನ
ಮುಲ್ಕಿ, ಅ.3: ಮಂಗಳೂರು ನಗರದ ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದರೋಡೆ ಮತ್ತು ಕಳವು ಮಾಡಿದ್ದ ಐವರು ಆರೋಪಿಗಳ ಸಹಿತ 7.63 ಲಕ್ಷ ರೂ. ಮೊತ್ತದ ಸೊತ್ತುಗಳನ್ನು ಮುಲ್ಕಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆರೋಪಿಗಳು ದಾವಣಗೆರೆ ಜಿಲ್ಲೆಯವರಾಗಿದ್ದು, ಹೊನ್ನೂರು ಮಲಟ್ಟೆ ಹಳ್ಳಿ ಬಾಪೂಜಿ ಬಡಾವಣೆ ನಿವಾಸಿಗಳಾದ ರಘು ಎಸ್.(30), ಮಂಜುನಾಥ (28), ವಿನೋಬ ನಗರ ನಿವಾಸಿ ಪ್ರಮೋದ್ ವಿ.(23), ಅವರಗೆರೆ ಗೋಶಾಲೆ ಬಳಿಯ ನಿವಾಸಿ ಎಚ್.ರವಿಕಿರಣ್ (23), ಅವರಗೆರೆ ಪಿ.ಬಿ.ಬಡಾವಣೆ ನಿವಾಸಿ ದಾವಲ ಸಾಬ್ ಎಚ್. (25) ಬಂಧಿತರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಆರೋಪಿಗಳಿಂದ ಕಳವು ಮಾಡಿದ್ದ ಒಂದು ಹೋಂಡಾ, 1 ರಾಯಲ್ ಎನ್ ಫೀಲ್ಡ್, 1 ಕಾರು ಮತ್ತು ಕರಿಮಣಿ ಸರ ಸೇರಿ ಒಟ್ಟು 7.63 ಲಕ್ಷ ರೂ. ಮೌಲ್ಯದ ಸೊತ್ತುಗಳನ್ನು ವಶಕ್ಕೆ ಪಡೆದಿದ್ದಾರೆ. ಬಂಧಿತರ ಪೈಕಿ ಮೂವರನ್ನು ನ್ಯಾಯಂಗ ಬಂಧನಕ್ಕೆ ಒಳಪಡಿಸಿದ್ದು, ಇಬ್ಬರನ್ನು ಹೆಚ್ಚಿನ ವಿಚಾರಣೆಗಾಗಿ ಪೊಲೀಸ್ ಕಸ್ಟಡಿಗೆ ಪಡೆಯಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ಬೆಳ್ಳಾಯರು ಗ್ರಾಮದ ಕೊಲ್ನಾಡು ಚಂದ್ರಮೌಳೇಶ್ವರ ದೇವಸ್ಥಾನ ರಸ್ತೆಯ ಶ್ರೀನಿಧಿ ಮನೆಯಲ್ಲಿ ವಾಸವಾಗಿದ್ದ ವಸಂತಿ ಶೆಟ್ಟಿ ಅವರ ಕುತ್ತಿಗೆಯಲ್ಲಿದ್ದ 40 ಗ್ರಾಂ ತೂಕದ ಚಿನ್ನದ ಕರಿಮಣಿ ಸರವನ್ನು ಅಪರಿಚಿತ 4 ಮಂದಿ 2023ರ ಸೆ. 17ರಂದು ದರೋಡೆ ಮಾಡಿರುವ ಕುರಿತು ಮುಲ್ಕಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಅಲ್ಲದೇ ಅದೇ ದಿನ ಚಂದ್ರಮೌಳೇಶ್ವರ ದೇವಸ್ಥಾನದ ರಸ್ತೆಯ ಬಳಿ ನಿಲ್ಲಿಸಿದ್ದ ಬೈಕ್ ಕಳವು ಗೈದಿರುವ ಬಗ್ಗೆ ಸೂರ್ಯ ಪ್ರಕಾಶ್ ಎಂಬವರು ದೂರು ನೀಡಿದ್ದರು. ಕಾರ್ಯಾಚರಣೆಗೆ ಇಳಿದ ಮುಲ್ಕಿ ಪೊಲೀಸ್ ಠಾಣೆಯ ಪಿಎಸ್ಸೈ ಮಾರುತಿ ಅವರ ತಂಡ, ಉಡುಪಿ- ಮೂಡುಬಿದಿರೆ ರಾಜ್ಯ ಹೆದ್ದಾರಿಯಲ್ಲಿನ ಪುನರೂರು ಎಂಬಲ್ಲಿ ಚೆಕ್ ಪೋಸ್ಟ್ ಬಳಿ ಸಿಬ್ಬಂದಿ ಜೊತೆ ವಾಹನ ತಪಾಸಣೆಯಲ್ಲಿ ತೊಡಗಿದ್ದಾಗ ವಸಂತಿ ಶೆಟ್ಟಿಯವರ ಕರಿಮಣಿ ಸರ ದರೋಡೆಗೈಯ್ಯಲು ಬಳಸಿದ್ದ ಬೈಕನ್ನು ವಶಕ್ಕೆ ಪಡೆದು ಆರೋಪಿಯನ್ನು ನ್ಯಾಯಾಲಕ್ಕೆ ಹಾಜರು ಪಡಿಸಿದ್ದರು. ಈ ಪ್ರಕರಣದ ಉಳಿದ ಆರೋಪಿಗಳಿಗಾಗಿ ಕಾರ್ಯಾಚರಣೆ ಮುಂದುವರಿಸಿದಾಗ ಮುಲ್ಕಿ ಪೊಲೀಸ್ ನಿರೀಕ್ಷಕ ವಿದ್ಯಾದರ ಅವರು ಅಕ್ಟೋಬರ್ 3ರಂದು ಪುನರೂರು ಚೆಕ್ ಪೋಸ್ಟ್ ಬಳಿ ವಾಹನ ತಪಾಸನೆ ಯಲ್ಲಿ ತೊಡಗಿದ್ದಾಗ ಸಂಶಯಾಸ್ಪದ ರೀತಿಯಲ್ಲಿ ಬಂದಿದ್ದ ಒಂದು ಬೈಕ್ ಮತ್ತು ಕಾರನ್ನು ವಶಕ್ಕೆ ಪಡೆದು ಅದರಲಿದ್ದ ವರನ್ನು ವಿಚಾರಣೆಗೆ ಒಳಪಡಿಸಿದಾಗ ಎರಡೂ ಪ್ರಕರಣಗಳಲ್ಲಿ ಭಾಗಿಯಾಗಿದ್ದ 4ಮಂದಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಗಳ ಬಂಧನ ಕಾರ್ಯಾಚರಣೆಯಲ್ಲಿ ಮುಲ್ಕಿ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ವಿದ್ಯಾಧರ ಡಿ ಬಾಯ್ಕರಿಕರ್, ಪಿ.ಎಸ್.ಐಗಳಾದ ವಿನಾಯಕ ಬಾವಿಕಟ್ಟಿ, ಮಾರುತಿ ಪಿ., ಎ.ಎಸ್.ಐ.ಗಳಾದ ಸಂಜೀವ, ಉಮೇಶ್, ಸುರೇಶ್ ಕುಂದರ್ ಎಚ್.ಸಿ.ಗಳಾದ ಕಿಶೋರ್ ಕುಮಾರ್, ಶಶಿಧರ, ಮಹೇಶ್, ಪ್ರಮೋದ್, ಚಂದ್ರಶೇಖರ್, ವಿಶ್ವನಾಥ, ಉದಯ್, ಜಯರಾಮ್, ಸತೀಶ್, ಪವನ್ ಮತ್ತು ಪಿ.ಸಿ.ಗಳಾದ ಅರುಣ್ ಕುಮಾರ್, ವಾಸುದೇವ, ವಿನಾಯಕ, ಶಂಕರ, ಚಿತ್ರಾ, ಚೆಲುವರಾಜ್, ಶೇಖರ, ಯಶವಂತ್, ಬಸವರಾಜ್, ಸುರೇಂದ್ರ, ಅಂಜಿನಪ್ಪ, ಇಮಾಮ್, ಶರಣಪ್ಪ ಭಾಗವಹಿಸಿದ್ದರು.
ಫಿಲಡೆಲ್ಫಿಯಾ: ಪತ್ರಕರ್ತನ ಗುಂಡಿಕ್ಕಿ ಹತ್ಯೆ
ನ್ಯೂಯಾರ್ಕ್ : ಅಮೆರಿಕದ ಫಿಲಡೆಲ್ಫಿಯಾದಲ್ಲಿ 39 ವರ್ಷದ ಪತ್ರಕರ್ತ ಜೋಷ್ ಕ್ರೂಗರ್ ನನ್ನು ಬಂದೂಕುಧಾರಿಯೊಬ್ಬ ಗುಂಡಿಕ್ಕಿ ಹತ್ಯೆ ಮಾಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ. ಕ್ರೂಗರ್ ಸೋಮವಾರ ಬೆಳಿಗ್ಗೆ ವಾಟ್ಕಿನ್ಸ್ ಸ್ಟ್ರೀಟ್ನಲ್ಲಿನ ತನ್ನ ಮನೆಯ ಹೊರಗೆ ನಿಂತಿದ್ದಾಗ ಅಲ್ಲಿಗೆ ಬಂದ ದುಷ್ಕರ್ಮಿ 7 ಬಾರಿ ಗುಂಡು ಹಾರಿಸಿದ್ದು, ಎದೆ ಮತ್ತು ಕಿಬ್ಬೊಟ್ಟೆಗೆ ತೀವ್ರ ಗಾಯಗೊಂಡ ಕ್ರೂಗರ್ ನೆರವಿಗಾಗಿ ಕೂಗಿದ್ದಾರೆ. ಆಗ ದಾಳಿಕೋರ ಪರಾರಿಯಾಗಿದ್ದು ತಕ್ಷಣ ಅಕ್ಕಪಕ್ಕದ ನಿವಾಸಿಗಳು ಕ್ರೂಗರ್ ನನ್ನು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ತನಿಖೆ ಪ್ರಗತಿಯಲ್ಲಿದ್ದು ಇದುವರೆಗೆ ಯಾರನ್ನೂ ಬಂಧಿಸಿಲ್ಲ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. `ದಿ ಫಿಲಡೆಲ್ಫಿಯಾ ಸಿಟಿಝನ್', `ದಿ ಫಿಲಡೆಲ್ಫಿಯಾ ಇನ್ಕ್ವಯರ್' ಮುಂತಾದ ಪತ್ರಿಕೆಗಳಿಗೆ ಲೇಖನ ಬರೆಯುತ್ತಿದ್ದ ಕ್ರೂಗರ್, ನಿರಾಶ್ರಿತರ, ಎಚ್ಐವಿ ಸಂತ್ರಸ್ತರ ಪರ ಧ್ವನಿ ಎತ್ತಿದ್ದರು. ಪತ್ರಕರ್ತ ಕ್ರೂಗರ್ ಹತ್ಯೆಯಿಂದ ಆಘಾತವಾಗಿದೆ ಎಂದು ಫಿಲಡೆಲ್ಫಿಯಾ ಮೇಯರ್ ಜಿಮ್ ಕೆನ್ನಿ ಸಂತಾಪ ಸಂದೇಶದಲ್ಲಿ ಹೇಳಿದ್ದಾರೆ.
ODI World Cup: ಏಕದಿನ ವಿಶ್ವಕಪ್ಗೆ ಸಚಿನ್ ತೆಂಡೂಲ್ಕರ್ ಜಾಗತಿಕ ರಾಯಭಾರಿ!
Sachin Tendulkar Global Ambassador for world Cup: ಭಾರತೀಯ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ 1987 ರ ವಿಶ್ವಕಪ್ ಟೂರ್ನಿಯಲ್ಲಿ ಬಾಲ್ ಬಾಯ್ ಪಾತ್ರವನ್ನು ನಿರ್ವಹಿಸಿದ್ದರು. 1992 ರಿಂದ 2011 ರವರೆಗೆ ಸಚಿನ್ ಸತತ 6 ವಿಶ್ವಕಪ್ ಟೂರ್ನಿಗಳಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದಾರೆ. 2011ರ ವಿಶ್ವಕಪ್ ಗೆದ್ದ ಭಾರತ ತಂಡದಲ್ಲಿ ತೆಂಡೂಲ್ಕರ್ ಆಡಿದ್ದರು. ಅಂದ ಹಾಗೆ 2023ರ ವಿಶ್ವಕಪ್ಗೂ ಮುನ್ನ ಐಸಿಸಿ ಸಚಿನ್ ತೆಂಡೂಲ್ಕರ್ ಅವರನ್ನು ಜಾಗತಿಕ ರಾಯಭಾರಿಯನ್ನಾಗಿ ನೇಮಿಸಿದೆ.
ಲಂಡನ್: ಭಾರತೀಯ ಹೈಕಮಿಷನ್ ಎದುರು ಖಾಲಿಸ್ತಾನಿ ಪರ ಪ್ರತಿಭಟನೆ
ಲಂಡನ್ : ಖಾಲಿಸ್ತಾನಿ ಪರ ಗುಂಪೊಂದು ಸೋಮವಾರ ಲಂಡನ್ನಲ್ಲಿರುವ ಭಾರತೀಯ ಹೈಕಮಿಷನ್ ಕಚೇರಿಯೆದುರು ಪ್ರತಿಭಟನೆ ನಡೆಸಿದೆ ಎಂದು ವರದಿಯಾಗಿದೆ. ಹರ್ದೀಪ್ ಸಿಂಗ್ ನಿಜ್ಜಾರ್ ಹತ್ಯೆಯಲ್ಲಿ ಭಾರತದ ಕೈವಾಡವಿದೆ ಎಂಬ ಕೆನಡಾ ಪ್ರಧಾನಿ ಜಸ್ಟಿನ್ ಟ್ರೂಡೊ ಅವರ ಆರೋಪದ ಬಗ್ಗೆ ಗಮನ ಸೆಳೆಯಲು ಈ ಪ್ರತಿಭಟನೆ ಆಯೋಜಿಸಲಾಗಿದೆ. ಸಂಘಟನೆಯ ಕಾರ್ಯಕರ್ತ ಅವ್ತಾರ್ ಸಿಂಗ್ ಖಾಂಡಾನ ಅನುಮಾನಾಸ್ಪದ ಸಾವು ಸೇರಿದಂತೆ ಇತರ ಹಲವು ದೇಶೀಯ ಸಮಸ್ಯೆಗಳ ಬಗ್ಗೆ ಅಧಿಕಾರಿಗಳ ಗಮನ ಸೆಳೆಯಲಾಗುವುದು ಎಂದು `ಬ್ರಿಟಿಷ್ ಸಿಖ್ ಗ್ರೂಪ್ಸ್' ಸಾಮಾಜಿಕ ಮಾಧ್ಯಮದಲ್ಲಿ ಹೇಳಿಕೆ ನೀಡಿತ್ತು. ಮಧ್ಯ ಲಂಡನ್ನ ಅಲ್ಡ್ವಿಚ್ನಲ್ಲಿರುವ ಭಾರತೀಯ ಹೈಕಮಿಷನರ್ ಕಚೇರಿಯೆದುರು ಮೆಟ್ರೊಪಾಲಿಟನ್ ಪೊಲೀಸರು ಬಿಗಿ ಬಂದೋಬಸ್ತ್ ವ್ಯವಸ್ಥೆಗೊಳಿಸಿದ್ದರು. ಸುಮಾರು ಎರಡೂವರೆ ಗಂಟೆ ನಡೆದ ಪ್ರತಿಭಟನೆಯಲ್ಲಿ ಕೆಲವು ಪುರುಷರು ಮತ್ತು ಮಹಿಳೆಯರು ಭಾಗವಹಿಸಿದ್ದು ಪಂಜಾಬಿ ಭಾಷೆಯಲ್ಲಿ ಭಾಷಣ ಮಾಡಿದ ಬಳಿಕ ಖಾಲಿಸ್ತಾನಿ ಪರ ಘೋಷಣೆ ಕೂಗಿದ್ದಾರೆ. ಇದಕ್ಕೂ ಮುನ್ನ ಲಂಡನ್ನಲ್ಲಿ ಸುದ್ಧಿಗೋಷ್ಟಿ ನಡೆಸಿದ್ದ ಬ್ರಿಟನ್ ಸಿಖ್ ಫೆಡರೇಷನ್, ಬರ್ಮಿಂಗ್ಹಾಮ್ನಲ್ಲಿ ಜೂನ್ನಲ್ಲಿ ನಡೆದ ಖಾಲಿಸ್ತಾನಿ ಪರ ಕಾರ್ಯಕರ್ತ ಅವ್ತಾರ್ ಸಿಂಗ್ ಖಾಂಡಾನ ಸಾವಿನ ಪ್ರಕರಣದ ತನಿಖೆ ನಡೆಸುವಂತೆ ಇಂಗ್ಲೆಂಡ್ ಮತ್ತು ವೇಲ್ಸ್ನ ಮುಖ್ಯ ನ್ಯಾಯಾಧಿಕಾರಿಗೆ ಮನವಿ ಮಾಡಿದೆ. `ಖಾಂಡಾಗೆ ಭಾರತದ ರಾಜಕೀಯ ಕ್ಷೇತ್ರದಲ್ಲಿ ಸಂಪರ್ಕ ಇರುವ ವ್ಯಕ್ತಿಗಳಿಂದ ಜೀವಬೆದರಿಕೆ ಇತ್ತು. ಆದ್ದರಿಂದ ಈ ಸಾವಿನ ಪ್ರಕರಣದ ತನಿಖೆ ಅಗತ್ಯವಾಗಿದೆ' ಎಂದು ಖಾಂಡಾ ಕುಟುಂಬದ ವಕೀಲ ಮೈಕಲ್ ಪೊಲಾಕ್ ಆಗ್ರಹಿಸಿದ್ದಾರೆ. ಆದರೆ ಅವ್ತಾರ್ ಸಿಂಗ್ ಖಾಂಡಾ ರಕ್ತದ ಕ್ಯಾನ್ಸರ್ನಿಂದ ಮೃತಪಟ್ಟಿರುವುದಾಗಿ ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ದೃಢಪಟ್ಟಿದೆ ಎಂದು ಸ್ಥಳೀಯ ಪೊಲೀಸರು ಸ್ಪಷ್ಟಪಡಿಸಿದ್ದಾರೆ.
ಅಮೆರಿಕದ ಮೇರಿಲ್ಯಾಂಡ್ನಲ್ಲಿ ಅತೀ ಎತ್ತರದ ಅಂಬೇಡ್ಕರ್ ಪ್ರತಿಮೆ ಅ.14ರಂದು ಅನಾವರಣ
ವಾಷಿಂಗ್ಟನ್ : ಅಮೆರಿಕದ ಮೇರಿಲ್ಯಾಂಡ್ನಲ್ಲಿ ಭಾರತದ ಸಂವಿಧಾನಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಪ್ರತಿಮೆ ಅಕ್ಟೋಬರ್ 14ರಂದು ಅನಾವರಣಗೊಳ್ಳಲಿದೆ ಎಂದು ಕಾರ್ಯಕ್ರಮದ ಸಂಘಟಕರು ತಿಳಿಸಿದ್ದಾರೆ. `ಸಮಾನತೆಯ ಪ್ರತಿಮೆ' ಎಂದು ಹೆಸರಿಸಲಾದ ಈ ಪ್ರತಿಮೆ 10 ಅಡಿ ಎತ್ತರವಿದ್ದು ಭಾರತದ ಹೊರಗೆ ಅಂಬೇಡ್ಕರ್ ಅವರ ಅತೀ ಎತ್ತರದ ಪ್ರತಿಮೆ ಎಂಬ ಹೆಗ್ಗಳಿಕೆ ಹೊಂದಿದೆ. ಮೇರಿಲ್ಯಾಂಡ್ನ ಅಕೊಕೀಕ್ ನಗರದಲ್ಲಿ 13 ಎಕರೆ ಭೂಮಿಯಲ್ಲಿ ನಿರ್ಮಾಣಗೊಳ್ಳಲಿರುವ `ಅಂಬೇಡ್ಕರ್ ಇಂಟರ್ನ್ಯಾಷನಲ್ ಸೆಂಟರ್(ಎಐಸಿ)'ಯ ಭಾಗವಾಗಿ ಈ ಪ್ರತಿಮೆಯನ್ನು ಅನಾವರಣಗೊಳಿಸಲಾಗುವುದು. ಗುಜರಾತ್ನ ನರ್ಮದಾ ನದಿಯ ತೀರದಲ್ಲಿ ವಲ್ಲಭಭಾಯಿ ಪಟೇಲ್ ಅವರ `ಏಕತಾ ಪ್ರತಿಮೆ' ನಿರ್ಮಿಸಿರುವ ಖ್ಯಾತ ಶಿಲ್ಪಿ ರಾಮ್ ಸುತರ್ ಅವರು ಅಂಬೇಡ್ಕರ್ ಪ್ರತಿಮೆಯನ್ನು ನಿರ್ಮಿಸಿದ್ದಾರೆ.
ಕರಾವಳಿ ಬ್ಯಾರಿ ಕಲಾವಿದರ ಒಕ್ಕೂಟದಿಂದ ಭಾಷಾ ದಿನಾಚರಣೆ
ಮಂಗಳೂರು: ಕರಾವಳಿ ಬ್ಯಾರಿ ಕಲಾವಿದರ ಒಕ್ಕೂಟದಿಂದ ನಗರದ ಫಿಝಾ ಬೈ ನೆಕ್ಸಸ್ ಮಾಲ್ನಲ್ಲಿ ಮಂಗಳವಾರ ಬ್ಯಾರಿ ಭಾಷಾ ದಿನಾಚರಣೆ ಕಾರ್ಯಕ್ರಮ ಜರುಗಿತು. ಕಣಚೂರು ಮೆಡಿಕಲ್ ಕಾಲೇಜಿನ ಅಧ್ಯಕ್ಷ ಡಾ.ಯು.ಕೆ. ಮೋನು ಕಣಚೂರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಉದ್ಯಮಿ ಯು.ಬಿ. ಮುಹಮ್ಮದ್ ಒಕ್ಕೂಟದ ಲಾಂಛನ ಅನಾವರಣಗೊಳಿಸಿದರು. ಮುಖ್ಯ ಅತಿಥಿಗಳಾಗಿ ದ.ಕ.ಜಿಲ್ಲಾ ಕಸಾಪ ಅಧ್ಯಕ್ಷ ಡಾ.ಎಂ.ಪಿ. ಶ್ರೀನಾಥ್. ಕೊಂಕಣಿ ಅಕಾಡಮಿಯ ಮಾಜಿ ಅಧ್ಯಕ್ಷ ರಾಯ್ ಕಾಸ್ಟಲಿನೊ, ಅಬ್ದುಲ್ ಸತ್ತಾರ್ ಆರಂಗಳ, ಕಾರ್ಪೊರೇಟರ್ ಅಬ್ದುಲ್ ಲತೀಫ್, ಕರಾವಳಿ ಸಂಗೀತ ಕಲಾವಿದರ ಒಕ್ಕೂಟದ ಅಧ್ಯಕ್ಷ ಮೋಹನ್ ಪ್ರಸಾದ್ ಭಾಗವಸಿದ್ದರು. ವಿವಿಧ ಕ್ಷೇತ್ರದ ಸಾಧಕರಾದ ಸಾಹಿತಿ ಮುಹಮ್ಮದ್ ಬಡ್ಡೂರು, ಪ್ರೊ. ಇಬ್ರಾಹೀಂ ಬ್ಯಾರಿ, ಇಸ್ಮಾಯಿಲ್ ಮೂಡುಶೆಡ್ಡೆ, ಸತೀಶ್ ಸುರತ್ಕಲ್, ರಹೀಮ್ ಬಿ.ಸಿ.ರೋಡ್ ಅವರನ್ನು ಸನ್ಮಾನಿಸಲಾಯಿತು. ಬ್ಯಾರಿ ಸಂಗೀತ ರಸಮಂಜರಿ, ಬ್ಯಾರಿ ಕವ್ವಾಲಿ, ಕಿರು ಹಾಸ್ಯ ಪ್ರಹಸನಗಳು ಪ್ರದರ್ಶನಗೊಂಡಿತು. ಬಹುಭಾಷಾ ಸಂಗೀತ ಸೌಹಾರ್ದ ಸಂಗಮದಲ್ಲಿ ಬ್ಯಾರಿ, ತುಳು, ಕೊಂಕಣಿ, ಕನ್ನಡ, ಮಲಯಾಳಂ, ಹಿಂದಿ, ಗೀತೆಗಳನ್ನು ಪ್ರಸ್ತುತಪಡಿಸಲಾಯಿತು. ಅಧ್ಯಕ್ಷತೆ ವಹಿಸಿದ್ದ ಕರಾವಳಿ ಬ್ಯಾರಿ ಕಲಾವಿದರ ಒಕ್ಕೂಟದ ಅಧ್ಯಕ್ಷ ಹುಸೈನ್ ಕಾಟಿಪಳ್ಳ ಸ್ವಾಗತಿಸಿದರು. ಖಾಲಿದ್ ಉಜಿರೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಒಕ್ಕೂಟದ ಉಪಾಧ್ಯಕ್ಷ ಅಬ್ದುಲ್ ಅಝೀಝ್ ಕಂದಾವರ ವಂದಿಸಿದರು. ಸಮದ್ ಕಾಟಿಪಳ್ಳ ಕಾರ್ಯಕ್ರಮ ನಿರೂಪಿಸಿದರು.
ಮಂಗಳೂರಿನಲ್ಲಿ ಸೇವೆ ಸಲ್ಲಿಸುತ್ತಿದ್ದ ವಿಜಯಪುರ ಹೆಡ್ಕಾನ್ಸ್ಟೇಬಲ್ ಹೃದಯಘಾತಕ್ಕೆ ಬಲಿ
ಇತ್ತೀಚಿನ ದಿನಗಳಲ್ಲಿ ಹೃದಯಾಘಾತ ಪ್ರಕರಣಗಳು ಹೆಚ್ಚಾಗುತ್ತಿದ್ದು, ಜೀವದ ಬಗ್ಗೆ ಖಚಿತತೆಯೇ ಇಲ್ಲದಂತಾಗಿದೆ. ಸಣ್ಣ ಪ್ರಾಯದವರಲ್ಲಿ ಹೃದಯಾಘಾತ ಪ್ರಕರಣ ಹೆಚ್ಚಾಗುತ್ತಿರುವುದು ಆತಂಕ ಹೆಚ್ಚಿಸಿದೆ. ಇಂದು ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ಕಂಟ್ರೋಲ್ ರೂಂ ಇನ್ಸ್ಪೆಕ್ಟರ್ನ ಚಾಲಕ ಸೋಮನಗೌಡ ಚೌಧರಿ (32) ಮಂಗಳವಾರ ಕರ್ತವ್ಯದಲ್ಲಿರುವಾಗಲೇ ಹೃದಯಾಘಾತದಿಂಧ ಮೃತಪಟ್ಟಿದ್ದಾರೆ.
ಶಿವಮೊಗ್ಗ ಗಲಭೆ ಹಿಂದಿರುವವರನ್ನು ತಕ್ಷಣ ಬಂಧಿಸಿ, ಸಾಧ್ಯವಾಗದಿದ್ದರೆ ಎನ್ಐಎಗೆ ಒಪ್ಪಿಸಿ: ಕಟೀಲ್ ಸವಾಲು
ಶಿವಮೊಗ್ಗ ಮತ್ತು ಕೋಲಾರ ಗಳಲ್ಲಿ ನಡೆದ ಅಹಿತಕರ ಘಟನೆಗೆ ಸಂಬಂಧಿಸಿ ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದಿರುವ ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ , ಇದರ ಹಿಂದಿರುವವರನ್ನು ತಕ್ಷಣವೇ ಬಂಧಿಸಿ ಕ್ರಮ ಕೈಗೊಳ್ಳಿ. ಇಲ್ಲವಾದಲ್ಲಿ ಎಐಎ(NIA) ಗೆ ಪ್ರಕರಣವನ್ನು ಒಪ್ಪಿಸಿ ಎಂದು ಒತ್ತಾಯಿಸಿದ್ದಾರೆ. ಭಯೋತ್ಪಾದನಾ ಚಟುವಟಿಕೆಗಳಿಗೆ ಕಾಂಗ್ರೆಸ್ ಬೆಂಬಲ ನೀಡುತ್ತಿರುವುದರಿಂದಲೇ ಈ ರೀತಿಯ ಘಟನೆಗಳು ನಡೆಯುತ್ತಿವೆ. ರಾಜ್ಯದಲ್ಲಿ ಶಾಂತಿ, ಸುವ್ಯವಸ್ಥೆ ಕಾಪಾಡುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲ ಆಗಿದೆ ಎಂದು ಆರೋಪಿಸಿದ್ದಾರೆ.
ನಮ್ಮ ಸರಕಾರ ಪ್ರಚೋದನೆ ಮಾಡುವವರ ಬಾಯಿಗೆ ಹೊಲಿಗೆ ಹಾಕುವುದು ನಿಶ್ಚಿತ: ಕಾಂಗ್ರೆಸ್
ಬೆಂಗಳೂರು, ಅ. 3: ‘ಈ ಹಿಂದೆ ಬಿಜೆಪಿಯ ಸಂಸದರು, ಶಾಸಕರು ತಲ್ವಾರ್, ಬಂದೂಕು ಹಿಡಿದು ಮೆರವಣಿಗೆ ಮಾಡಿದ್ದರು, ಆಗ ಗೃಹ ಸಚಿವರಾಗಿದ್ದ ಆರಗ ಜ್ಞಾನೇಂದ್ರ ಅವರು ಖಡ್ಗ, ಬಂದೂಕು ಹಿಡಿಯುವುದು ಸಂಪ್ರದಾಯ ಎಂದು ಬಂಡತನದಲ್ಲಿ ಸಮರ್ಥಿಸಿದ್ದರು’ ಎಂದು ಕಾಂಗ್ರೆಸ್ ಟೀಕಿಸಿದೆ ಮಂಗಳವಾರ ಎಕ್ಸ್ನಲ್ಲಿ ಪ್ರತಿಕ್ರಿಯಿಸಿರುವ ಕಾಂಗ್ರೆಸ್, ‘ಶಿವಮೊಗ್ಗದಲ್ಲಿ ದೊಡ್ಡ ಮಟ್ಟದ ಗಲಭೆಯಾಗುವುದನ್ನು ಬಿಜೆಪಿ ಬಯಸಿತ್ತು, ಆದರೆ ಪರಿಸ್ಥಿತಿಯನ್ನು ನಿಯಂತ್ರಣದಲ್ಲಿಡಲು ಪೆÇಲೀಸರು ಯಶಸ್ವಿಯಾಗಿದ್ದಾರೆ. ಇಂತಹ ಘಟನೆಗಳು ಬಿಜೆಪಿಗರ ದ್ವೇಷ, ಪ್ರಚೋದನಕಾರಿ ಭಾಷಣದ ಪರಿಣಾಮದಿಂದಲೇ ಸೃಷ್ಟಿಯಾಗಿವೆ. ನಮ್ಮ ಸರಕಾರ ಕಾನೂನಿನ ಮೂಲಕ ಪ್ರಚೋದನೆ ಮಾಡುವವರ ಬಾಯಿಗೆ ಹೊಲಿಗೆ ಹಾಕುವುದು ನಿಶ್ಚಿತ’ ಎಂದು ಎಚ್ಚರಿಕೆ ನೀಡಿದೆ. ‘ಬಿಜೆಪಿ ಆಡಳಿತದಲ್ಲಿ ಬಿಜೆಪಿಯೇ ಪ್ರಾಯೋಜಿಸಿದ ಗಲಭೆಗಳಲ್ಲಿ ರಾಜಕೀಯ ದುರುದ್ದೇಶಕ್ಕೆ ಅಮಾಯಕರ ಮೇಲೆ ಪ್ರಕರಣ ದಾಖಲಿಸಿದೆ. ಬಿಜೆಪಿ ಆಡಳಿತಾವಧಿಯಲ್ಲಿ ತಲ್ವಾರ್, ಬಂದೂಕುಗಳ ಮೆರವಣಿಗೆಗಳನ್ನು ಗೃಹಸಚಿವರೇ ಸಮರ್ಥಿಸಿಕೊಂಡಿದ್ದಾರೆ. ಬಿಜೆಪಿ ಆಡಳಿತದಲ್ಲಿ ಡಿಜಿಐಜಿಪಿ ಅಭಿಪ್ರಾಯವನ್ನು ಬದಿಗೊತ್ತಿ ಕ್ರಿಮಿನಲ್ ಪ್ರಕರಣಗಳನ್ನು ಹಿಂಪಡೆಯಲಾಗಿತ್ತು. ಶಾಂತಿ ಭಂಜಕರಿಗೆ ಬೆಂಬಲಿಸಲಾಗಿತ್ತು. ಶಿವಮೊಗ್ಗದ ಹರ್ಷ ಕೊಲೆಗಡುಕರಿಗೆ ಜೈಲಿನಲ್ಲಿ ಮೋಜಿನ ವ್ಯವಸ್ಥೆ ಕಲ್ಪಿಸಿತ್ತು ಬಯಲಾಗಿತ್ತು. ಕ್ರಿಮಿನಲ್ ಪ್ರಕರಣಗಳನ್ನು ಹಿಂಪಡೆದಿದ್ದು ಏಕೆ ಎನ್ನುವುದನ್ನು ಬಿಜೆಪಿ ಉತ್ತರಿಸಲಿ’ ಎಂದು ಕಾಂಗ್ರೆಸ್ ಸವಾಲು ಹಾಕಿದೆ.
ಮಂಗಳೂರು : ನಗರದ ಅಭಿಮಾನ್ ಮ್ಯಾನ್ಷನ್ ಫ್ಲ್ಯಾಟ್ ನಲ್ಲಿ ವಾಸವಾಗಿದ್ದ ಆಸ್ಟಿಯ ಸಮ್ರೀನ್ (22 ವರ್ಷ) ಅ.1 ರಂದು ಕಾಣೆಯಾಗಿದ್ದಾರೆ. ಈ ಬಗ್ಗೆ ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹಿಂದಿ, ಉರ್ದು, ಕನ್ನಡ ಮತ್ತು ಇಂಗ್ಲಿಷ್ ಭಾಷೆ ಮಾತನಾಡುತ್ತಾರೆ. ಇವರು ಪತ್ತೆಯಾದಲ್ಲಿ ಮಂಗಳೂರು ಪೂರ್ವ ಪೊಲೀಸ್ ಠಾಣೆಯ ದೂರವಾಣಿ ಸಂಖ್ಯೆ:0824-2220520,ಪೊಲೀಸ್ ಕಂಟ್ರೋಲ್ ರೂಂ 0824-2220800ಗೆ ಕರೆ ಮಾಡಿ ಸಂಪರ್ಕಿಸುವಂತೆ ಮಂಗಳೂರು ಪೂರ್ವ ಪೊಲೀಸ್ ಠಾಣಾಧಿಕಾರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ರಾಜ್ಯಮಟ್ಟದ ಸ್ಕೇಟಿಂಗ್ ಚಾಂಪಿಯನ್ ಶಿಪ್: ಮುಹಮ್ಮದ್ ಶಾಮೀಲ್ ಅರ್ಷದ್ಗೆ ಚಿನ್ನದ ಪದಕ
ಮಂಗಳೂರು, ಅ.3: ಕರ್ನಾಟಕ ರೋಲರ್ ಸ್ಕೇಟಿಂಗ್ ಅಸೋಸಿಯೇಶನ್ (ರಿ) ಮೈಸೂರಿನ ರಾವ್ಸ್ ಸ್ಕೇಟಿಂಗ್ ಅಕಾಡೆಮಿಯಲ್ಲಿ ಇತ್ತೀಚೆಗೆ ಆಯೋಜಿಸಿದ 4ನೇ ರಾಜ್ಯಮಟ್ಟದ ರ್ಯಾಂಕಿಂಗ್ ಸ್ಪೀಡ್ ಸ್ಕೇಟಿಂಗ್ ಚಾಂಪಿಯನ್ ಶಿಪ್ನಲ್ಲಿ 14-17 ವರ್ಷದ ಬಾಲಕರ ಇನ್ಲೈನ್ ವಿಭಾಗದಲ್ಲಿ 4 ಚಿನ್ನದ ಪದಕ ಗಳಿಸಿ ವೈಯಕ್ತಿಕ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. 500+ಈ ರಿಂಕ್ ರೇಸ್ನಲ್ಲಿ ಚಿನ್ನದ ಪದಕ, 200 ಮೀಟರ್ ಡ್ಯುಯಲ್ ಟಿಟಿ ನಲ್ಲಿ ಚಿನ್ನದ ಪದಕ, ಒನ್ ಲ್ಯಾಪ್ ರೋಡ್ ರೇಸ್ನಲ್ಲಿ ಚಿನ್ನದ ಪದಕ, 100 ಮೀಟರ್ ರೋಡ್ರೇಸ್ನಲ್ಲಿ ಚಿನ್ನದ ಪದಕವನ್ನು ಗಳಿಸಿದ್ದಾರೆ. ಯೆನೆಪೋಯ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿಯಾಗಿರುವ ಈತ ಹೈ ಫೈರ್ಯಸ್ ಸ್ಕೇಟಿಂಗ್ ಕ್ಲಬ್ನ ಸದಸ್ಯರಾ ಗಿದ್ದು, ಮೋಹನ್ ದಾಸ್ರಿಂದ ತರಬೇತಿ ಪಡೆಯುತ್ತಿದ್ದಾರೆ. ನಗರದ ಅರ್ಷದ್ ಹುಸೇನ್ ಮತ್ತು ರಮ್ಲತ್ ಅರ್ಷದ್ ದಂಪತಿಯ ಪುತ್ರನಾಗಿದ್ದಾರೆ.
ಮಂಗಳೂರು: ಬ್ಯಾಪ್ಟಿಸ್ಟ್ ರೋಡ್ರಿಗಸ್ ನಿಧನ
ಮಂಗಳೂರು, ಅ. 3: ಮಂಗಳೂರು ಸೈಂಟ್ ಜೋಸೆಫ್ ಮೊನೆಸ್ಟರಿಯ ಬ್ರದರ್ ಬ್ಯಾಪ್ಟಿಸ್ಟ್ ರೋಡ್ರಿಗಸ್ (79) ನಗರದ ಖಾಸಗಿ ಆಸ್ಪತ್ರೆಯಲ್ಲಿ ಮಂಗಳವಾರ ಮಧ್ಯಾಹ್ನ ನಿಧನರಾದರು. ಎಲ್ಲರಿಂದಲೂ ಪ್ರೀತಿಯಿಂದ ‘ಬಟ್ಟಿ ಬ್ರದರ್’ ಎಂದೇ ಗುರುತಿಸಿಕೊಂಡಿದ್ದ ರೋಡ್ರಿಗಸ್ ಅವರು ಬೆಳ್ಳೂರಿನ ದಿವಂಗತ ಜಾನ್ ರೋಡ್ರಿಗಸ್ ಮತ್ತು ಕೋಸೆಸ್ ರಾಡ್ರಿಗಸ್ ದಂಪತಿ ಪುತ್ರರಾಗಿ ಜೂನ್ 22, 1944 ರಂದು ಜನಿಸಿದ್ದರು. 1963ರಲ್ಲಿ ಕೇರಳದ ಅಲುವಾದಲ್ಲಿ ಕಾರ್ಮೆಲೈಟ್ ಸಂಸ್ಥೆ ಸೇರಿದ್ದ ಅವರು ಮಾರ್ಚ್ 19, 1969ರಂದು ತಮಿಳುನಾಡಿನ ಪೋದನೂರಿನಲ್ಲಿ ವೃತ್ತಿಬದುಕಿಗೆ ಪಾದಾರ್ಪಣೆ ಮಾಡಿದ್ದರು. 1974ರಲ್ಲಿ ದೀಕ್ಷೆ ಪಡೆದಿದ್ದರು. ಮೈಸೂರಿನ ಪುಷ್ಪಾಶ್ರಮ, ಮಂಗಳೂರು ಸೈಂಟ್ ಜೋಸೆಫ್ ಮೊನೆಸ್ಟರಿ, ಮಡಂತ್ಯಾರ್ ಆಶಾ ದೀಪಾ ಮತ್ತು ಕೋಟೇಶ್ವರದ ಕಾರ್ಮೆಲ್ ಆಶ್ರಮದಲ್ಲಿ ಅವರು ಸೇವೆ ಸಲ್ಲಿಸಿದ್ದಾರೆ ಬ್ರದರ್ ಬ್ಯಾಪ್ಟಿಸ್ಟ್ ರೋಡ್ರಿಗಸ್ ಅಂತ್ಯಕ್ರಿಯೆ ಶುಕ್ರವಾರ(ಅ.6) ಮಧ್ಯಾಹ್ನ 3:30ಕ್ಕೆ ಮಂಗಳೂರಿನ ಕಾರ್ಮೆಲ್ಹಿಲ್ ನಲ್ಲಿರುವ ಇನ್ಫೆಂಟ್ ಜೀಸಸ್ ಶ್ರೈನ್ನಲ್ಲಿ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.
107 ಸಂಸದರು, ಶಾಸಕರ ವಿರುದ್ಧ ದ್ವೇಷ ಭಾಷಣದ ಪ್ರಕರಣ: ಎಡಿಆರ್
ಹೊಸದಿಲ್ಲಿ: ಒಟ್ಟು 107 ಸಂಸದರು ಹಾಗೂ ಶಾಸಕರ ವಿರುದ್ಧ ದ್ವೇಷ ಭಾಷಣದ ಪ್ರಕರಣಗಳು ಇವೆ. ದ್ವೇಷ ಭಾಷಣದ ಪ್ರಕರಣಗಳಿರುವ 480 ಅಭ್ಯರ್ಥಿಗಳು ಕಳೆದ ಐದು ವರ್ಷಗಳಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದಾರೆ ಎಂದು ಅಸೋಸಿಯೇಶನ್ ಫಾರ್ ಡೆಮಾಕ್ರೆಟಿಕ್ ರಿಫಾರ್ಮ್ಸ್ (ಎಡಿಆರ್) ಹೇಳಿದೆ. ದೇಶದಲ್ಲಿ ಈ ಅವಧಿಯಲ್ಲಿ ನಡೆದ ಲೋಕಸಭೆ ಹಾಗೂ ವಿಧಾನ ಸಭೆ ಚುನಾವಣೆಯಲ್ಲಿ ಸೋತ ಅಭ್ಯರ್ಥಿಗಳ ಹೊರತಾಗಿ ಎಲ್ಲಾ ಹಾಲಿ ಸಂಸದರು ಹಾಗೂ ಶಾಸಕರ ಸಲ್ಲಿಸಿದ ಸ್ವಯಂ ಪ್ರಮಾಣಿತ ಪ್ರಮಾಣಪತ್ರ ಗಳನ್ನು ಎಡಿಆರ್ ಹಾಗೂ ನ್ಯಾಷನಲ್ ಇಲೆಕ್ಷನ್ ವಾಚ್ (ಎನ್ಇಡಬ್ಲು) ವಿಶ್ಲೇಷಣೆ ನಡೆಸಿದೆ. ಹಾಲಿ ಸಂಸದರು ಹಾಗೂ ಶಾಸಕರು ತಮ್ಮ ವಿರುದ್ಧದ ದ್ವೇಷ ಭಾಷಣಕ್ಕೆ ಸಂಬಂಧಿಸಿದ ಪ್ರಕರಣಗಳನ್ನು ಘೋಷಿಸಿಕೊಂಡಿದ್ದಾರೆ ಎಂದು ಈ ವಿಶ್ಲೇಷಣೆ ಬಹಿರಂಗಗೊಳಿಸಿದೆ. ಕಳೆದ ಚುನಾವಣೆಯ ಮುನ್ನ ಸಂಸದರು ಹಾಗೂ ಶಾಸಕರು ಸಲ್ಲಿಸಿದ ಪ್ರಮಾಣಪತ್ರವನ್ನು ಆಧಾರವಾಗಿರಿಸಿ ಈ ವಿಶ್ಲೇಷಣೆ ಮಾಡಲಾಗಿದೆ. ಈ ವಿಶ್ಲೇಷಣೆಯ ಪ್ರಕಾರ 33 ಸಂಸದರು ತಮ್ಮ ವಿರುದ್ಧದ ದ್ವೇಷ ಭಾಷಣಕ್ಕೆ ಸಂಬಂಧಿಸಿ ಪ್ರಕರಣಗಳನ್ನು ಘೋಷಿಸಿಕೊಂಡಿದ್ದಾರೆ. ಇವರಲ್ಲಿ ಉತ್ತರಪ್ರದೇಶ 7, ತಮಿಳುನಾಡಿನ 4, ಬಿಹಾರ, ಕರ್ನಾಟಕ, ತೆಲಂಗಾಣದ ತಲಾ 3, ಅಸ್ಸಾಂ, ಗುಜರಾತ್, ಮಹಾರಾಷ್ಟ್ರ, ಪಶ್ಚಿಮಬಂಗಾಳದ ತಲಾ 2, ಜಾರ್ಖಂಡ್, ಮಧ್ಯಪ್ರದೇಶ, ಕೇರಳ, ಒಡಿಶಾ, ಪಂಜಾಬ್ ನ ತಲಾ ಒಬ್ಬರು ಸಂಸದರು ಸೇರಿದ್ದಾರೆ. ಕಳೆದ 5 ವರ್ಷಗಳಲ್ಲಿ ದ್ವೇಷ ಭಾಷಣಕ್ಕೆ ಸಂಬಂಧಿಸಿ ಪ್ರಕರಣವನ್ನು ಘೋಷಿಸಿಕೊಂಡಿರುವ 480 ಅಭ್ಯರ್ಥಿಗಳು ಲೋಕಸಭೆ, ರಾಜ್ಯಸಭೆ ಹಾಗೂ ವಿಧಾನ ಸಭೆ ಚುನಾವಣೆಗಳಲ್ಲಿ ಸ್ಪರ್ಧಿಸಿದ್ದಾರೆ ಎಂದು ಎಡಿಆರ್ ತಿಳಿಸಿದೆ. ದ್ವೇಷ ಭಾಷಣಕ್ಕೆ ಸಂಬಂಧಿಸಿದ ಪ್ರಕರಣಗಳನ್ನು ಹೊಂದಿರುವ ಓರ್ವ ಪಕ್ಷೇತರ ಸಂಸದರಲ್ಲದೆ, ಬಿಜೆಪಿಯ 22, ಕಾಂಗ್ರೆಸಿನ ಇಬ್ಬರು, ಆಮ್ ಆದ್ಮಿ ಪಕ್ಷ (ಎಎಪಿ), ಎಐಎಂಐಎಂ, ಎಐಯುಡಿಎಫ್, ಡಿಎಂಕೆ, ಎಂಡಿಎಂಕೆ, ಪಿಎಂಕೆ, ಶಿವಸೇನೆ (ಉದ್ಧವ್ ಬಾಳಾ ಸಾಹೇಬ್ ಠಾಕ್ರೆ)ಯಿಂದ ತಲಾ ಒಬ್ಬರು ಸಂಸದರು ಇದ್ದಾರೆ. 74 ಶಾಸಕರು ತಮ್ಮ ವಿರುದ ದ್ವೇಷಣ ಭಾಷಣದ ಪ್ರಕರಣ ಇವೆ ಎಂದು ಘೋಷಿಸಿಕೊಂಡಿದ್ದಾರೆ. ಇದರಲ್ಲಿ ಬಿಹಾರ, ಉತ್ತರಪ್ರದೇಶದ ತಲಾ 9, ಆಂಧ್ರಪ್ರದೇಶ, ಮಹಾರಾಷ್ಟ್ರ, ತೆಲಂಗಾಣದ ತಲಾ 6, ಅಸ್ಸಾಂ, ತಮಿಳನಾಡಿನ ತಲಾ 5, ದಿಲ್ಲಿ, ಗುಜರಾತ್, ಪಶ್ಚಿಮಬಂಗಾಳದ ತಲಾ 4, ಜಾರ್ಖಂಡ್, ಉತ್ತರಾಖಂಡದ ತಲಾ 3, ಕರ್ನಾಟಕ, ಪಂಜಾಬ್, ರಾಜಸ್ಥಾನ, ತ್ರಿಪುರದ ತಲಾ 2, ಮಧ್ಯಪ್ರದೇಶ ಹಾಗೂ ಒಡಿಶಾದ ತಲಾ ಒಬ್ಬರು ಶಾಸಕರು ಇದ್ದಾರೆ. ಭಾಷಣದ ಪ್ರಕರಣ ಹೊಂದಿರುವ ಇಬ್ಬರು ಪಕ್ಷೇತರ ಶಾಸಕರಲ್ಲದೆ, ಬಿಜೆಪಿಯ 20, ಕಾಂಗ್ರೆಸ್ ನ 13, ಆಪ್ 6, ಎಸ್ಪಿ ಹಾಗೂ ವೈಎಸ್ಆರ್ಸಿಪಿಯ ತಲಾ 6, ಡಿಎಂಕೆ ಹಾಗೂ ಆರ್ಜೆಡಿಯ ತಲಾ 4, ಎಐಟಿಸಿ ಹಾಗೂ ಎಸ್ಎಚ್ಎಸ್ ನ ತಲಾ 3, ಎಐಯುಡಿಎಫ್ ನ 2, ಎಐಎಂಐಎಂ, ಸಿಪಿಐ (ಎಂ), ಎನ್ಸಿಪಿ, ಸುಹೇಲ್ದೇವ್ ಭಾರತೀಯ ಪಾರ್ಟಿ, ಟಿಡಿಪಿ, ತಿಪ್ರಾ ಮೋತಾ ಪಾರ್ಟಿ ಹಾಗೂ ಟಿಆರ್ ಎಸ್ ನ ತಲಾ ಒಬ್ಬರು ಶಾಸಕರು ಇದ್ದಾರೆ.
ಕಾರಿನ ಮೇಲಿನಿಂದ ನೋಟುಗಳನ್ನು ಎಸೆದ ಯುವಕ
ಜೈಪುರ: ನೆಟ್ ಫ್ಲಿಕ್ಸ್ ಒಟಿಟಿಯ ಜನಪ್ರಿಯ ಸರಣಿಯಾದ ‘ಮನಿ ಹೇಯ್ಸ್ಟ್’ನ ಪಾತ್ರವೊಂದು ಧರಿಸಿರುವ ಕೆಂಪು ಬಣ್ಣದ ದಿರಿಸನ್ನು ಧರಿಸಿಕೊಂಡು, ತನ್ನ ಕಾರಿನ ಮೇಲಿಂದ ನೋಟನ್ನು ಎಸೆಯುತ್ತಿರುವ ಜೈಪುರ ಯುವಕನೊಬ್ಬನ ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ ಎಂದು timesnownews.com ವರದಿ ಮಾಡಿದೆ. ಈ ವಿಚಿತ್ರ ವರ್ತನೆಯು ಸಾರ್ವಜನಿಕರಲ್ಲಿ ಗಾಬರಿ ಹುಟ್ಟಿಸಿದ್ದು, ಸಂಚಾರ ದಟ್ಟಣೆಗೂ ಕಾರಣವಾಗಿದೆ. ಈ ಘಟನೆಯು ಜೈಪುರದ ಮಾಳವಿಯಾ ನಗರದಲ್ಲಿನ ಗೌರವ್ ಟವರ್ ಬಳಿ ನಡೆದಿದೆ ಎಂದು ವರದಿಯಾಗಿದೆ. ಈ ವೀಡಿಯೊ ವೈರಲ್ ಆದ ನಂತರ, ಘಟನೆಯಲ್ಲಿ ಭಾಗಿಯಾಗಿದ್ದ ಯುವಕನನ್ನು ಜೈಪುರ ಪೂರ್ವ ವಿಭಾಗದ ಉಪ ಪೊಲೀಸ್ ಆಯುಕ್ತ ಜ್ಞಾನಚಂದ್ ಯಾದವ್ ಬಂಧಿಸಿದ್ದಾರೆ. ಆ ಯುವಕನ ಎಸೆದಿದ್ದ ನೋಟಿನ ಮುಖಬೆಲೆಯು ರೂ. 10 ಮತ್ತು ರೂ. 20ರದಾಗಿತ್ತು. ಇಂತಹ ಅಸಹಜ ಕೃತ್ಯವನ್ನು ನಡೆಸಲು ಆ ಯುವಕನು ತನ್ನ ತಂದೆಯ ಕಾರನ್ನು ತಂದಿದ್ದ ಎಂದು ಹೇಳಲಾಗಿದೆ. ವಿಚಾರಣೆಯ ಸಂದರ್ಭದಲ್ಲಿ, “ನಾನು ಕೇವಲ ತಮಾಷೆಗಾಗಿ ಈ ಕೃತ್ಯವನ್ನು ಮಾಡಿದೆ” ಎಂದು ಆ ಯುವಕನು ಹೇಳಿಕೆ ನೀಡಿದ್ದಾನೆ. ಈ ಪ್ರಕರಣದ ಕುರಿತು ಪೊಲೀಸರು ತನಿಖೆ ಕೈಗೊಂಡಿದ್ದು, ಯುವಕನನ್ನು ಪೊಲೀಸರು ವಿಚಾರಣೆಗೊಳಪಡಿಸಿದ್ದಾರೆ. ಘಟನೆಯ ಸಂದರ್ಭದಲ್ಲಿ ಆತನ ಪಕ್ಕದಲ್ಲಿ ನಿಂತಿದ್ದ ವ್ಯಕ್ತಿಯೊಬ್ಬರು ಈ ದೃಶ್ಯವನ್ನು ಸೆರೆ ಹಿಡಿದಿದ್ದು, ಇದರಿಂದ ಈ ಘಟನೆಯು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲಾಗಿದೆ. ಪೊಲೀಸರು ಯುವಕನು ಎಸೆದಿರುವ ನೋಟುಗಳ ಸಾಚಾತನವನ್ನೂ ಪರಿಶೀಲಿಸುತ್ತಿದ್ದು, ಆ ನೋಟುಗಳು ಅಸಲಿಯೋ ಅಥವಾ ನಕಲಿಯೋ ಎಂದು ಪರಿಶೀಲಿಸುತ್ತಿದ್ದಾರೆ. ‘ಮನಿ ಹೇಯ್ಸ್ಟ್’ ನೆಟ್ ಫ್ಲಿಕ್ಸ್ ಒಟಿಟಿಯಲ್ಲಿನ ಜನಪ್ರಿಯ ಸರಣಿಯಾಗಿದೆ. ಈ ಸರಣಿಯು ಮೂಲತಃ ಸ್ಪ್ಯಾನಿಶ್ ಭಾಷೆಯಲ್ಲಿ “ಲಾ ಕಾಸಾ ಡಿ ಪಾಪೆಲ್” ಎಂಬ ಶೀರ್ಷಿಕೆ ಹೊಂದಿದೆ. ಈ ಜನಪ್ರಿಯ ಸ್ಪ್ಯಾನಿಶ್ ದೂರದರ್ಶನ ಧಾರಾವಾಹಿಯನ್ನು ಅಲೆಕ್ಸ್ ಪಿನಾ ನಿರ್ದೇಶಿಸಿದ್ದಾರೆ.
ಕುಂದಾಪುರದ ಬನ್ಸ್ ರಾಘು ಹತ್ಯೆ ಪ್ರಕರಣ: ಪೊಲೀಸರಿಂದ ತನಿಖೆ ಚುರುಕು
ಉಡುಪಿ, ಅ.3: ಕುಂದಾಪುರದ ಉದ್ಯಮಿ ರಾಘವೇಂದ್ರ ಶೇರುಗಾರ ಯಾನೆ ಬನ್ಸ್ ರಾಘು(42) ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಕುಂದಾಪುರ ಪೊಲೀಸರು ತನಿಖೆ ಚುರುಕುಗೊಳಿಸಿದ್ದು, ಹಲವು ಮಂದಿಯನ್ನು ವಿಚಾರಣೆಗೆ ಒಳಪಡಿಸಿ ದ್ದಾರೆ. ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ.ಕೆ.ಅರುಣ್, ಹೆಚ್ಚುವರಿ ಎಸ್ಪಿ ಎಸ್.ಟಿ. ಸಿದ್ಧಲಿಂಗಪ್ಪ, ಕುಂದಾಪುರ ಡಿವೈಎಸ್ಪಿ ಬೆಳ್ಳಿಯಪ್ಪ ಮಾರ್ಗದರ್ಶನದಲ್ಲಿ ತನಿಖಾಧಿಕಾರಿ ಕುಂದಾಪುರ ಠಾಣಾ ಪೊಲೀಸ್ ನಿರೀಕ್ಷಕ ನಂದ ಕುಮಾರ್ ನೇತೃತ್ವದಲ್ಲಿ ಕುಂದಾಪುರ ಎಸ್ಸೈಗಳಾದ ಪ್ರಸಾದ್ ಹಾಗೂ ವಿನಯ ಕುಮಾರ್ ಕೊರ್ಳಹಳ್ಳಿ, ಶಂಕರನಾರಾಯಣ ಎಸ್ಸೈ ಮಧು ಅವರನ್ನೊಳಗೊಂಡ ಮೂರು ತಂಡಗಳನ್ನು ತಂಡಗಳನ್ನು ರಚಿಸಲಾಗಿದ್ದು, ಈ ತಂಡಗಳು ವಿವಿಧ ಆಯಾಮ ಗಳಲ್ಲಿ ತನಿಖೆ ನಡೆಸುತ್ತಿದೆ ಎಂದು ತಿಳಿದು ಬಂದಿದೆ. ಈ ಬಗ್ಗೆ ಮಾತನಾಡಿದ ಎಸ್ಪಿ ಡಾ.ಕೆ.ಅರುಣ್, ಪ್ರಕರಣಕ್ಕೆ ಸಂಬಂಧಿಸಿ ಈಗಾಗಲೇ ರಚಿಸಲಾದ ಮೂರು ತಂಡಗಳು ಹಲವು ಕಡೆ ತೆರಳಿ ಮಾಹಿತಿ ಕಲೆ ಹಾಕುತ್ತಿದೆ. ಇಲ್ಲಿರುವ ಸಿಸಿಟಿವಿ ಫುಟೇಜ್ ಮತ್ತು ತಾಂತ್ರಿಕ ಡೇಟಾ ಹಾಗೂ ಇತರ ಮಾಹಿತಿಯನ್ನು ಸಂಗ್ರಹಿಸುತ್ತಿದೆ ಎಂದರು. ಆರೋಪಿಗಳ ಬಗ್ಗೆ ಕೆಲವೊಂದು ಸುಳಿವು ಲಭ್ಯವಾಗಿದ್ದು, ಶೀಘ್ರವೇ ಅವರನ್ನು ಪತ್ತೆ ಹಚ್ಚಿ ಬಂಧಿಸಲಾಗುವುದು. ಕೆಲವು ಮಂದಿ ಶಂಕಿತರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಹತ್ಯೆಗೆ ಕಾರಣ ಏನು ಎಂಬುದನ್ನು ಈ ಹಂತದಲ್ಲಿ ಹೇಳಲು ಆಗುವುದಿಲ್ಲ. ತನಿಖೆ ಮುಗಿದ ಅದರ ಬಗ್ಗೆ ಮಾಹಿತಿ ನೀಡಲಾಗು ವುದು ಎಂದು ಅವರು ತಿಳಿಸಿದರು. ಕುಂದಾಪುರ ಚಿಕನ್ಸಾಲ್ ರಸ್ತೆಯ ಅಂಚೆ ಕಚೇರಿ ಸಮೀಪದ ಡೆಲ್ಲಿ ಬಜಾರ್ ಎದುರುಗಡೆ ಅ.1ರಂದು ರಾತ್ರಿ ಇಬ್ಬರು ದುಷ್ಕರ್ಮಿಗಳಿಂದ ಚೂರಿ ಇರಿತಕ್ಕೊಳಗಾಗಿ ಗಂಭೀರ ಗಾಯಗೊಂಡಿದ್ದ ರಾಘವೇಂದ್ರ ಶೇರುಗಾರ್ ಅ.2ರಂದು ಬೆಳಿಗ್ಗೆ ಚಿಕಿತ್ಸೆ ಫಲಕಾರಿಯಾಗದೆ ಮಣಿಪಾಲ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
246 ವೈದ್ಯಕೀಯ ಕಾಲೇಜುಗಳಲ್ಲಿ ಸಾಕಷ್ಟು ಬೋದಕ ಸಿಬ್ಬಂದಿ ಇಲ್ಲ: ಎನ್ಎಂಸಿ ಪರಿಶೀಲನೆಯಲ್ಲಿ ಬಹಿರಂಗ
ಹೊಸದಿಲ್ಲಿ: ರಾಷ್ಟ್ರೀಯ ವೈದ್ಯಕೀಯ ಆಯೋಗ (ಎನ್ಎಂಸಿ)ದ ಪದವಿ ಶಿಕ್ಷಣ ಮಂಡಳಿ (ಯುಜಿಎಂಇಬಿ) ನಡೆಸಿದ 246 ವೈದ್ಯಕೀಯ ಕಾಲೇಜುಗಳ ವೌಲ್ಯಮಾಪನದಲ್ಲಿ ಯಾವುದೇ ವೈದ್ಯಕೀಯ ಕಾಲೇಜು ಸಾಕಷ್ಟು ಬೋಧಕ ಸಿಬ್ಬಂದಿಯನ್ನು ಹೊಂದಿಲ್ಲ ಹಾಗೂ ಶೇ. 50 ಹಾಜರಾತಿ ಅಗತ್ಯತೆಯನ್ನು ಪೂರೈಸಿಲ್ಲ ಎಂಬುದು ಕಂಡುಬಂದಿದೆ. 2022-23ನೇ ಶೈಕ್ಷಣಿಕ ವರ್ಷದಲ್ಲಿ ಈ ವೌಲ್ಯಮಾಪನ ಮಾಡಲಾಗಿದೆ. ರಾಷ್ಟ್ರೀಯ ವೈದ್ಯಕೀಯ ಆಯೋಗ ನಿಗದಿಪಡಿಸಿದ ನಿಯಮ ಹಾಗೂ ಮಾನದಂಡಗಳನ್ನು ಪೂರೈಸಲು ವಿಫಲವಾದ ವೈದ್ಯಕೀಯ ಕಾಲೇಜುಗಳಿಗೆ 1 ಕೋ.ರೂ. ದಂಡ ವಿಧಿಸುವ ನಿಯಮವನ್ನು ಎನ್ಎಂಸಿ ಇತ್ತೀಚೆಗೆ ಅನುಷ್ಠಾನಕ್ಕೆ ತಂದಿತ್ತು. ಆದರೆ, ಈ ಎಲ್ಲಾ ಕಾಲೇಜುಗಳಿಗೆ ಎನ್ಎಂಸಿ ಅನುಮತಿ ನೀಡಿರುವುದು ಯಾಕೆ? ಎಂದು ಈಗ ವೈದ್ಯಕೀಯ ಶಿಕ್ಷಣ ತಜ್ಞರು ಪ್ರಶ್ನಿಸುತ್ತಿದ್ದಾರೆ. ‘‘ಸಾಮಾನ್ಯ ಜನರ ಆರೋಗ್ಯ ಸುರಕ್ಷೆಯ ದೃಷ್ಟಿಯಿಂದ ವೈದ್ಯಕೀಯ ಶಿಕ್ಷಣದಲ್ಲಿ ಗುಣಮಟ್ಟ ನಿರ್ವಹಣೆ ಮುಖ್ಯವಾಗಿದೆ. ಕೇವಲ ರಾಜಕೀಯ ಉದ್ದೇಶಕ್ಕಾಗಿ ವಿವೇಚನ ಇಲ್ಲದೆ ನೂತನ ಕಾಲೇಜುಗಳನ್ನು ತೆರೆಯುವುದರಿಂದ ಯಾವುದೇ ರೀತಿಯ ಪ್ರಯೋಜನವಾಗದು’’ ಎಂದು ಭಾರತೀಯ ವೈದ್ಯಕೀಯ ಸಂಘಟನೆ (ಐಎಂಎ)ಯ ಮಾಜಿ ಅಧ್ಯಕ್ಷ ರವಿ ವಾಂಖೇಡ್ಕರ್ ತಿಳಿಸಿದ್ದಾರೆ. ಮಾನದಂಡಗಳನ್ನು ಅನುಸರಿಸದೇ ಇರುವುದು ವೈದ್ಯಕೀಯ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ಮಾಡುವ ವಂಚನೆಗೆ ಸಮಾನವಾದುದು ಎಂದು ಹೇಳಿರುವ ಇನೋರ್ವ ತಜ್ಞರು, ಕಾಲೇಜು ಆರಂಭವಾದ ಬಳಿಕ ಅಲ್ಲಿ ಶಿಕ್ಷಕರು ಇಲ್ಲದೇ ಇರುವುದು ಹೇಗೆ ಗಮನಕ್ಕೆ ಬರುತ್ತದೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ಪ್ರಶ್ನಿಸಿದ್ದಾರೆ. ‘‘ಈ ಕಾಲೇಜುಗಳನ್ನು ಆರಂಭಿಸಲು ಅನುಮತಿ ಹೇಗೆ ನೀಡಲಾಯಿತು?’’ ಎಂದು ಕೂಡ ಅವರು ಪ್ರಶ್ನಿಸಿದ್ದಾರೆ. ‘‘ತುರ್ತು ವೈದ್ಯಕೀಯ ವಿಭಾಗಕ್ಕೆ ಯಾವೊಬ್ಬ ವಿದ್ಯಾರ್ಥಿ ಕೂಡ ದಿನನಿತ್ಯ ಹೋಗುತ್ತಿಲ್ಲ ಎಂಬುದನ್ನು ನಾವು ಕಂಡು ಕೊಂಡಿದ್ದೇವೆ. ಯಾಕೆಂದರೆ, ಈ ವಿಭಾಗದಲ್ಲಿ ತುರ್ತು ವೈದ್ಯಕೀಯ ಅಧಿಕಾರಿ ಹೊರತುಪಡಿಸಿದರೆ, ಅವರೊಂದಿಗೆ ಸಂವಹನ ನಡೆಸಲು ಯಾರೊಬ್ಬರು ಕೂಡ ಇಲ್ಲ. ತುರ್ತು ವೈದ್ಯಕೀಯ ವಿಭಾಗಕ್ಕೆ ನಿಯೋಜಿಸುವುದೆಂದರೆ ವಿದ್ಯಾರ್ಥಿಗಳಿಗೆ ಅದು ವಿರಾಮದ ಅವಧಿ ಎಂದರ್ಥ’’ ಎಂದು ಎನ್ಎಂಸಿ ಅಸೋಸಿಯೇಶನ್ ಆಫ್ ಎಮರ್ಜೆನ್ಸಿ ಫಿಶಿಸಿಯನ್ ಆಫ್ ಇಂಡಿಯಾ (ಎಇಪಿಐ)ಗೆ ಸಲ್ಲಿಸಿದ ಪತ್ರದಲ್ಲಿ ಹೇಳಿದೆ. ಇತ್ತೀಚೆಗೆ ಎನ್ಎಂಸಿ 134 ಕಾಲೇಜುಗಳಲ್ಲಿ ತುರ್ತು ವೈದ್ಯಕೀಯ ವಿಭಾಗಗಳು ಕಾಗದದಲ್ಲಿ ಮಾತ್ರ ಇವೆ. ಇದು ವಾಸ್ತವದ ಸ್ಥಿತಿ ಎಂದು ಕೂಡ ಎಇಪಿಐಗೆ ಮಾಹಿತಿ ನೀಡಿತ್ತು.
ಡಾ.ಶಿವರಾಮ ಕಾರಂತ ಜನ್ಮದಿನೋತ್ಸವ ‘ಇಂಪನ-2023’ಕ್ಕೆ ಚಾಲನೆ
ಕೋಟ, ಅ.3: ಡಾ.ಶಿವರಾಮ ಕಾರಂತರ ವ್ಯಕ್ತಿತ್ವ ವಿಶಿಷ್ಟವಾದುದು. ಕಾರಂತರು ಕಾರ್ಯ ಸಾಧನೆಯ ಮೂಲಕ ಜಗತ್ತನ್ನು ಸ್ಪರ್ಶಿಸಿದ್ದಾರೆ. ಕಾರಂತರು ಸಾಹಿತಿ ಎಂಬುದಕ್ಕಿಂತ ಸಾಮಾಜಿಕ ಹೋರಾಟಗಾರ ಎಂಬುದು ಮುಖ್ಯ ಎಂದು ಕುಂದಾಪುರದ ಶಾಸಕ ಕಿರಣ್ ಕಮಾರ್ ಕೊಡ್ಗಿ ಹೇಳಿದ್ದಾರೆ. ಕೋಟತಟ್ಟು ಗ್ರಾಮ ಪಂಚಾಯತ್, ಉಡುಪಿ ಡಾ.ಶಿವರಾಮ ಕಾರಂತ ಟ್ರಸ್ಟ್, ಡಾ.ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ ಪ್ರತಿಷ್ಠಾನದ ಆಶ್ರಯದಲ್ಲಿ ಮಂಗಳವಾರ ಕೋಟದ ಡಾ.ಕಾರಂತ ಥೀಂ ಪಾರ್ಕ್ನಲ್ಲಿ ಆಯೋಜಿಸಲಾದ ಡಾ.ಶಿವರಾಮ ಕಾರಂತ ಜನ್ಮದಿನೋತ್ಸವ ‘ಇಂಪನ -2023’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು. ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಮಾತನಾಡಿ, ಕಾರಂತರೆಂದರೆ ನೇರ ನಿಷ್ಟುರವಾದಿ. ಅವರಂತೆ ಬದುಕು ಕಾಣಲು ಯಾರಿಗೂ ಸಾಧ್ಯವಿಲ್ಲ. ವಿವಿಧ ಕ್ಷೇತ್ರದಲ್ಲಿ ಕೈಯಾಡಿಸಿ ಯಶಸ್ಸು ಕಂಡ ಶ್ರೇಷ್ಠ ವ್ಯಕ್ತಿತ್ವ ಅವರದ್ದು. ಬಹು ಸಂಸ್ಕ್ರತಿಯ ನಮ್ಮ ದೇಶದಲ್ಲಿ ಕಾರಂತರ ಕೊಡುಗೆ ಅನನ್ಯವಾಗಿದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಗಾಂಧಿ ಪುರಸ್ಕಾರ ಪಡೆದ ಬ್ರಹ್ಮಾವರದ ಕೋಡಿ, ಕುಂದಾಪುರ ಶಂಕರನಾರಾಯಣ, ಹೊಸಾಡು, ಕಾರ್ಕಳದ ನೀರೆ, ಬೈಂದೂರಿನ ಕಾಲ್ತೋಡು, ಉಡುಪಿಯ ಅಲೆವೂರು, ಹೆಬ್ರಿ ಮಡಾಮಕ್ಕಿ ಮತ್ತು ಬೆಳ್ಳೆ ಗ್ರಾಪಂ ಗಳನ್ನು ವಿಶೇಷವಾಗಿ ಗೌರವಿಸಲಾಯಿತು. ಅಧ್ಯಕ್ಷತೆಯನ್ನು ಕೋಟತಟ್ಟು ಗ್ರಾಪಂ ಅಧ್ಯಕ್ಷ ಸತೀಶ್ ಕುಂದರ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ, ಉಡುಪಿ ಶಾಸಕ ಯಶ್ಪಾಲ್ ಸುವರ್ಣ, ಕ.ಸಾ.ಪ ಉಡುಪಿ ಜಿಲ್ಲಾಧ್ಯಕ್ಷ ನಿಲಾವರ ಸುರೇಂದ್ರ ಅಡಿಗ, ಬ್ರಹ್ಮಾವರ ತಾಪಂ ಕಾರ್ಯನಿರ್ವಹಣಾಧಿಕಾರಿ ಎಚ್.ವಿ. ಇಬ್ರಾಹಿಂಪುರ ಉಪಸ್ಥಿತರಿದ್ದರು. ಕಾರಂತ ಹುಟ್ಟೂರ ಪ್ರಶಸ್ತಿಯ ರೂವಾರಿ, ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಡುಪಿ ಕನ್ನಡ ಸಂಸ್ಕ್ರತಿ ಇಲಾಖೆಯ ನಿರ್ದೇಶಕಿ ಪೂರ್ಣಿಮಾ ಸ್ವಾಗತಿಸಿದರು. ಕೋಟತಟ್ಟು ಪಂಚಾಯತ್ ಅಭಿವೃದ್ಧಿ ಅಧಿಕಾರಿ ರವೀಂದ್ರ ರಾವ್ ವಂದಿಸಿದರು. ಪ್ರತಿಷ್ಠಾನದ ಕಾರ್ಯದರ್ಶಿ ನರೇಂದ್ರ ಕುಮಾರ್ ಕೋಟ ಕಾರ್ಯಕ್ರಮ ನಿರೂಪಿಸಿದರು.
ದೇಶವ್ಯಾಪಿ ಜಾತಿ ಸಮೀಕ್ಷೆ ನಡೆಸಲು ಪ್ರತಿಪಕ್ಷಗಳ ಕರೆ
ಹೊಸದಿಲ್ಲಿ : ಬಿಹಾರ ಸರಕಾರ ನಡೆಸಿರುವ ಜಾತಿ ಗಣತಿಯನ್ನು ಕಾಂಗ್ರೆಸ್ ಮತ್ತು ಆಮ್ ಆದ್ಮಿ ಪಕ್ಷ (ಆಪ್)ಗಳು ಸೋಮವಾರ ಸ್ವಾಗತಿಸಿವೆ ಹಾಗೂ ಈ ಕಸರತ್ತನ್ನು ಭಾರತದಾದ್ಯಂತ ನಡೆಸಲು ಕರೆ ನೀಡಿವೆ. ಬಿಹಾರ ಸರಕಾರವು ಈ ವರ್ಷದ ಜನವರಿಯಲ್ಲಿ ಜಾತಿ ಗಣತಿಗೆ ಚಾಲನೆ ನೀಡಿತ್ತು. ಸೋಮವಾರ ಅದು ವರದಿಯನ್ನು ಬಿಡುಗಡೆಗೊಳಿಸಿದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳನ್ನು ಹೊರತುಪಡಿಸಿ ಇತರ ಸಮುದಾಯಗಳ ಜಾತಿವಾರು ದತ್ತಾಂಶವನ್ನು ಸಂಗ್ರಹಿಸುವುದಿಲ್ಲ ಎಂಬುದಾಗಿ ಕೇಂದ್ರ ಸರಕಾರ ಹೇಳಿದ ಬಳಿಕ ಬಿಹಾರ ಸರಕಾರ ರಾಜ್ಯದಲ್ಲಿ ಜಾತಿ ಗಣತಿ ನಡೆಸಿತ್ತು. ಬಿಹಾರದ ಒಟ್ಟು ಜನಸಂಖ್ಯೆ 13.07 ಕೋಟಿಯಲ್ಲಿ, ಅತ್ಯಂತ ಹಿಂದುಳಿದ ವರ್ಗಗಳ ಪ್ರಮಾಣ 36% ಮತ್ತು ಇತರ ಹಿಂದುಳಿದ ವರ್ಗಗಳ ಪ್ರಮಾಣ 27.13% ಎಂಬುದಾಗಿ ಸಮೀಕ್ಷೆ ಹೇಳಿದೆ. ಜಾತಿ ಸಮೀಕ್ಷೆಯು ಇತರ ಹಿಂದುಳಿದ ವರ್ಗಗಳು ಮತ್ತು ಇತರ ಜಾತಿಗಳ ನಿಜವಾದ ಜನಸಂಖ್ಯೆಯನ್ನು ಪತ್ತೆಹಚ್ಚಲು ಸಹಾಯ ಮಾಡುತ್ತದೆ ಹಾಗೂ ಆ ಮೂಲಕ ಯೋಜನೆಗಳನ್ನು ಸಮರ್ಥವಾಗಿ ಮತ್ತು ನ್ಯಾಯೋಚಿತವಾಗಿ ರೂಪಿಸಲು ಸಾಧ್ಯವಾಗುತ್ತದೆ ಎಂದು ಬಿಹಾರ ಸರಕಾರ ಅಭಿಪ್ರಾಯಪಟ್ಟಿದೆ. ಬಿಹಾರ ಸರಕಾರವನ್ನು ಸಂಯುಕ್ತ ಜನತಾ ದಳ, ರಾಷ್ಟ್ರೀಯ ಜನತಾ ದಳ ಮತ್ತು ಕಾಂಗ್ರೆಸ್ ಪಕ್ಷಗಳನ್ನು ಒಳಗೊಂಡ ಮೈತ್ರಿಕೂಟವು ನಡೆಸುತ್ತಿದೆ. ಬಿಹಾರ ಸರಕಾರವು ವರದಿಯನ್ನು ಬಿಡುಗಡೆಗೊಳಿಸಿದ ಕೆಲವೇ ಗಂಟೆಗಳಲ್ಲಿ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಂ ರಮೇಶ್, ಕೇಂದ್ರ ಸರಕಾರವು ರಾಷ್ಟ್ರೀಯ ಜಾತಿ ಗಣತಿಯೊಂದನ್ನು ನಡೆಸಬೇಕೆಂಬ ತನ್ನ ಪಕ್ಷದ ಬೇಡಿಕೆಯನ್ನು ಪುನರುಚ್ಚರಿಸಿದರು. “ವಾಸ್ತವವಾಗಿ, ಯುಪಿಎ-2 ಸರಕಾರವು ಜಾತಿ ಗಣತಿಯನ್ನು ನಡೆಸಿದೆ. ಆದರೆ ಅದರ ವರದಿಯನ್ನು ಮೋದಿ ಸರಕಾರವು ಬಿಡುಗಡೆಗೊಳಿಸುತ್ತಿಲ್ಲ’’ ಎಂದು ರಮೇಶ್ ‘x’ನಲ್ಲಿ ಬರೆದಿದ್ದಾರೆ. ‘‘ಸಾಮಾಜಿಕ ಸಬಲೀಕರಣ ಕಾರ್ಯಕ್ರಮಗಳಿಗೆ ಉತ್ತಮ ಅಡಿಪಾಯ ಹಾಕಲು ಮತ್ತು ಸಾಮಾಜಿಕ ನ್ಯಾಯಕ್ಕೆ ಬಲ ನೀಡಲು ಇಂಥ ಗಣತಿಯು ಅಗತ್ಯವಾಗಿದೆ’’ ಎಂದು ಅವರು ಹೇಳಿದ್ದಾರೆ. ಶೋಷಿತ ಜನರ ಕೊರತೆಗಳನ್ನು ನಿಖರವಾಗಿ ಅರಿತುಕೊಂಡು ನೀತಿಗಳನ್ನು ರೂಪಿಸಲು ಜಾತಿ ಗಣತಿಯ ಅಂಕಿಅಂಶಗಳು ಸರಕಾರಕ್ಕೆ ನೆರವಾಗಲಿವೆ ಎಂದು ಭಾರತೀಯ ಕಮ್ಯುನಿಸ್ಟ್ ಪಕ್ಷದ ಪ್ರಧಾನ ಕಾರ್ಯದರ್ಶಿ ಡಿ. ರಾಜಾ ಹೇಳಿದ್ದಾರೆ. ನುಣುಚಿಕೊಳ್ಳುತ್ತಿರುವ ಮೋದಿ: ಆಪ್ ಬಿಹಾರದಲ್ಲಿ ನಡೆದ ಜಾತಿ ಗಣತಿಯನ್ನು ರಾಷ್ಟ್ರ ವ್ಯಾಪಿ ನಡೆಸುವುದರಿಂದ ಪ್ರಧಾನಿ ನರೇಂದ್ರ ಮೋದಿ ನುಣುಚಿಕೊಳ್ಳುತ್ತಿದ್ದಾರೆ ಎಂದು ಆಮ್ ಆದ್ಮಿ ಪಕ್ಷದ ನಾಯಕ ಸಂಜಯ್ ಸಿಂಗ್ ಆರೋಪಿಸಿದ್ದಾರೆ. ‘‘ಅವರು ಯಾವಾಗಲೂ ಒಬಿಸಿ, ದಲಿತ, ಬುಡಕಟ್ಟು ಮತ್ತು ಶೋಷಿತರ ವಿರೋಧಿಯಾಗಿದ್ದಾರೆ’’ ಎಂದು ಬಿಜೆಪಿ ಸರಕಾರವನ್ನು ಉದ್ದೇಶಿಸುತ್ತಾ ಅವರು ಹೇಳಿದರು. ‘‘ಹಾಗಾಗಿಯೇ ಅವರು ಇದರಿಂದ ತಪ್ಪಿಸಿಕೊಳ್ಳುತ್ತಿದ್ದಾರೆ. ದೇಶದಲ್ಲಿರುವ ಹಿಂದುಳಿದ ವರ್ಗಗಳು ಮತ್ತು ಅಲ್ಪಸಂಖ್ಯಾತರಿಗೆ ನ್ಯಾಯ ಒದಗಿಸಲು ನೀವು ಬಯಸಿರುವುದಾದರೆ, ನೀವು ಜಾತಿ ಗಣತಿ ನಡೆಸಲೇಬೇಕು’’ ಎಂದು ಅವರು ನುಡಿದರು. ಕೇಂದ್ರ ಸರಕಾರದಲ್ಲಿ ಒಬಿಸಿ ಕಾರ್ಯದರ್ಶಿಗಳು 3 ಮಾತ್ರ: ರಾಹುಲ್ ಗಾಂಧಿ ಜನಸಂಖ್ಯೆಯಲ್ಲಿ ಇತರ ಹಿಂದುಳಿದ ವರ್ಗ (ಒಬಿಸಿ)ಗಳು, ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳ ಒಟ್ಟು ಪ್ರಮಾಣ 84 ಶೇಕಡ ಆಗಿದ್ದರೂ, ಕೇಂದ್ರ ಸರಕಾರದಲ್ಲಿರುವ ಒಟ್ಟು 90 ಕಾರ್ಯದರ್ಶಿಗಳ ಪೈಕಿ ಒಬಿಸಿಗೆ ಸೇರಿದವರು ಕೇವಲ ಮೂರು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬೆಟ್ಟು ಮಾಡಿದ್ದಾರೆ. ‘‘ಹಾಗಾಗಿ, ಭಾರತದ ಜಾತಿ ಅಂಕಿಸಂಖ್ಯೆಗಳನ್ನು ತಿಳಿಯುವುದು ಅಗತ್ಯವಾಗಿದೆ. ಜನಸಂಖ್ಯೆ ಹೆಚ್ಚಾದಂತೆ ಹಕ್ಕುಗಳೂ ಹೆಚ್ಚಬೇಕು. ಇದು ನಮ್ಮ ಪ್ರತಿಜ್ಞೆ’’ ಎಂದು ಅವರು ಹೇಳಿದರು
ಬ್ರಹ್ಮಾವರ, ಅ.3: ಯಡ್ತಾಡಿ ಎಂಬಲ್ಲಿರುವ ಮನೆಗೆ ನುಗ್ಗಿದ ಕಳ್ಳರು ಸಾವಿರಾರು ರೂ.ಮೌಲ್ಯದ ಸೊತ್ತುಗಳನ್ನು ಕಳವು ಮಾಡಿರುವ ಬಗ್ಗೆ ವರದಿಯಾಗಿದೆ. ಎಚ್.ಕುಶಾಲ ಶೆಟ್ಟಿ(70) ಎಂಬವರು ತಿಂಗಳ ಹಿಂದೆ ಬೆಂಗಳೂರಿನಲ್ಲಿರುವ ಮಗಳ ಮನೆಗೆ ಹೋಗಿದ್ದು ಅ.3ರಂದು ಬೆಳಗ್ಗೆ ಬೆಂಗಳೂರಿನಿಂದ ಮನೆಗೆ ಬಂದು ನೋಡಿದಾಗ ಮನೆಯಲ್ಲಿ ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿದೆ ಎನ್ನಲಾಗಿದೆ. ಮನೆಯ ಎದುರಿನ ಬಾಗಿಲಿನ ಬೀಗವನ್ನು ಮುರಿದು ಒಳನುಗ್ಗಿದ ಕಳ್ಳರು, ಮನೆಯಲ್ಲಿನ ಕಪಾಟಿನಲ್ಲಿದ್ದ 50 ಸಾವಿರ ರೂ. ಮೌಲ್ಯದ 6 ರೇಷ್ಮೆ ಸೀರೆಗಳು, 25 ಸಾವಿರ ರೂ. ಮೌಲ್ಯದ 2 ವಾಚುಗಳು ಮತ್ತು 15 ಸಾವಿರ ರೂ. ಮೌಲ್ಯದ ಕ್ಯಾಮಾರ ವನ್ನು ಕಳವು ಮಾಡಿಕೊಂಡು ಹೋಗಿರುವುದಾಗಿ ದೂರಲಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶಿರ್ವ, ಅ.3: ಮಜೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ವಿವಿಧೆಡೆ ಅಳವಡಿಸಲಾದ ಸೋಲಾರ್ ದಾರಿದೀಪದ ಲಕ್ಷಾಂತರ ರೂ. ಮೌಲ್ಯದ ಬ್ಯಾಟರಿಗಳನ್ನು ಕಳವು ಮಾಡಿರುವ ಬಗ್ಗೆ ವರದಿಯಾಗಿದೆ. ಗ್ರಾಪಂನಿಂದ 92 ಹೇರೂರು ಗ್ರಾಮದ ಹಾಲಿನ ಡೈರಿ ಬಳಿ, ಭವಾನಿ ಪೌಲ್ಟ್ರಿ ಫಾರ್ಮ್ ಬಳಿ, ಬಬ್ಬುಸ್ವಾಮಿ ದೈವಸ್ಥಾನದ ಬಳಿ, ಕಲ್ಲುಗುಡ್ಡೆ ಗರಡಿ ಬಳಿ ಮತ್ತು ಪಾದೂರು ಗ್ರಾಮದ ವಳದೂರು ಶ್ರೀಬಬ್ಬುಸ್ವಾಮಿ ದೈವಸ್ಥಾನದ ಬಳಿ ಅಳವಡಿಸಿದ ಒಟ್ಟು 15 ಸೊಲಾರ್ ದಾರಿದೀಪದ ಬ್ಯಾಟರಿಗಳನ್ನು ಕಳ್ಳರು ಕಳವು ಮಾಡಿಕೊಂಡು ಹೋಗಿರುವುದಾಗಿ ದೂರಲಾಗಿದೆ. ಇವುಗಳ ಒಟ್ಟು ಮೌಲ್ಯ ಸುಮಾರು 1,42,500ರೂ. ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಣಿಪಾಲ: ಮನೆಯಲ್ಲಿ ಅನೈತಿಕ ಚಟುವಟಿಕೆ; ಇಬ್ಬರ ಬಂಧನ
ಮಣಿಪಾಲ, ಅ.3: ಹೆರ್ಗಾ ಗ್ರಾಮದ ಸರಳೇಬೆಟ್ಟುವಿನ ಮನೆಯೊಂದರಲ್ಲಿ ನಡೆಯುತ್ತಿದ್ದ ಅನೈತಿಕ ಚಟುವಟಿಕೆ ಸಂಬಂಧ ಇಬ್ಬರನ್ನು ಮಣಿಪಾಲ ಪೊಲೀಸರು ಅ.2ರಂದು ರಾತ್ರಿ ವೇಳೆ ಬಂಧಿಸಿದ್ದಾರೆ. ಮಂಡ್ಯದ ಶಿವರಾಜ(38) ಮತ್ತು ಬಾಗಲಕೋಟೆಯ ನಿಂಗಪ್ಪ ಅಂಬಿಗೇರಾ (29) ಬಂಧಿತ ಆರೋಪಿಗಳು. ಇನ್ನೋರ್ವ ಆರೋಪಿ ನವೀನ್ ಗೌಡ ಎಂಬಾತ ತಲೆಮರೆಸಿಕೊಂಡಿದ್ದಾನೆ. ಬಂಧಿತರಿಂದ ಎರಡು ಮೊಬೈಲ್ ಫೋನ್ ಹಾಗೂ 15 ಸಾವಿರ ರೂ. ನಗದು ವಶಪಡಿಸಿಕೊಳ್ಳಲಾಗಿದೆ. ಅಕ್ರಮ ಹಣಗಳಿಸುವ ಉದ್ದೇಶದಿಂದ ಹುಡುಗಿಯರನ್ನು ಪುಸಲಾಯಿಸಿ ಕರೆ ತಂದು ಅವರಿಗೆ ಬಲವಂತಾಗಿ ಪುರುಷರನ್ನು ಒದಗಿಸಿ ಅನೈತಿಕ ಚಟುವಟಿಕೆ ನಡೆಸುತ್ತಿರುವುದಾಗಿ ದೂರಲಾಗಿದೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
40 ರಾಜತಾಂತ್ರಿಕ ಸಿಬ್ಬಂದಿಯನ್ನು ವಾಪಸ್ ಕರೆಸಿ ; ಕೆನಡಾಕ್ಕೆ ಭಾರತ ಸೂಚನೆ
ಅಸ್ಸಾಮ್: ಬಾಲ್ಯ ವಿವಾಹ ಆರೋಪದಲ್ಲಿ ಹೊಸದಾಗಿ ಸಾವಿರಕ್ಕೂ ಅಧಿಕ ಮಂದಿ ಬಂಧನ
ಗುವಾಹಟಿ: ಅಸ್ಸಾಮ್ ನಲ್ಲಿ ಬಾಲ್ಯ ವಿವಾಹ ಪ್ರಕರಣಗಳಿಗೆ ಸಂಬಂಧಿಸಿ ಹೊಸದಾಗಿ 1,000ಕ್ಕೂ ಅಧಿಕ ಮಂದಿಯನ್ನು ಬಂಧಿಸಲಾಗಿದೆ ಎಂದು ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮ ಮಂಗಳವಾರ ಹೇಳಿದ್ದಾರೆ. ಬಾರ್ಪೆಟ ಜಿಲ್ಲೆಯೊಂದರಲ್ಲೇ ಸೋಮವಾರ ಸಂಜೆಯಿಂದೀಚಿಗೆ, ಬಾಲ್ಯ ವಿವಾಹದ ಆರೋಪದಲ್ಲಿ 150 ಮಂದಿಯನ್ನು ಬಂಧಿಸಲಾಗಿದೆ ಎಂದು ಜಿಲ್ಲೆಯ ಪೊಲೀಸ್ ಸೂಪರಿಂಟೆಂಡೆಂಟ್ ಅಮಿತಾಭ್ ಸಿನ್ಹಾ ತಿಳಿಸಿದ್ದಾರೆ. ಬಾಲ್ಯ ವಿವಾಹಗಳಿಗೆ ಸಂಬಂಧಿಸಿ ಜನರನ್ನು ಬಂಧಿಸುತ್ತಿರುವುದು ಈ ವರ್ಷದಲ್ಲಿ ಇದೇ ಮೊದಲಲ್ಲ. ಮೊದಲ ಹಂತದ ಕಾರ್ಯಾಚರಣೆಯಲ್ಲಿ ಫೆಬ್ರವರಿಯಿಂದೀಚೆಗೆ 3,907 ಜನರನ್ನು ಬಂಧಿಸಲಾಗಿದೆ ಎಂದು ರಾಜ್ಯ ಸರಕಾರವು ಸೆಪ್ಟಂಬರ್ 11ರಂದು ವಿಧಾನಸಭೆಗೆ ತಿಳಿಸಿತ್ತು. ಈ ಪೈಕಿ, 3,319 ಜನರನ್ನು 2006ರ ಬಾಲ್ಯ ವಿವಾಹ ನಿಷೇಧ ಕಾಯ್ದೆಯಡಿ ಬಂಧಿಸಲಾಗಿತ್ತು. ಅಸ್ಸಾಮ್ ಸರಕಾರವು ಬಾಲ್ಯ ವಿವಾಹಗಳ ವಿರುದ್ಧ ರಾಜ್ಯವ್ಯಾಪಿ ಕಾರ್ಯಾಚರಣೆ ನಡೆಸುವುದು ಹಾಗೂ 14 ವರ್ಷಕ್ಕಿಂತ ಕೆಳಗಿನ ಬಾಲಕಿಯರನ್ನು ಮದುವೆಯಾಗುವ ಪುರುಷರನ್ನು ಲೈಂಗಿಕ ಅಪರಾಧಗಳಿಂದ ಮಕ್ಕಳನ್ನು ರಕ್ಷಿಸುವ ಕಾಯ್ದೆ (ಪೋಕ್ಸೊ)ಯಡಿ ಮತ್ತು 14ರಿಂದ 18 ವರ್ಷಗಳ ನಡುವಿನ ಬಾಲಕಿಯರನ್ನು ಮದುವೆಯಾಗುವವರನ್ನು ಬಾಲ್ಯವಿವಾಹ ನಿಷೇಧ ಕಾಯ್ದೆಯಡಿ ಬಂಧಿಸಲಾಗುವುದು ಎಂದು ಜನವರಿಯಲ್ಲಿ ಶರ್ಮ ಘೋಷಿಸಿದ್ದರು. ಕಾರ್ಯಾಚರಣೆಯು 2026ರವರೆಗೂ ಮುಂದುವರಿಯುವುದು ಎಂದು ಮುಖ್ಯಮಂತ್ರಿ ಸೆಪ್ಟಂಬರ್ ನಲ್ಲಿ ಹೇಳಿದ್ದಾರೆ. 2026ರಲ್ಲಿ ರಾಜ್ಯ ವಿಧಾನಸಭೆಗೆ ಚುನಾವಣೆ ನಡೆಯಲಿದೆ.
ಮಂಗಳೂರು : ಮಾದಕ ವಸ್ತುವಾದ ಗಾಂಜಾವನ್ನು ಸೇವಿಸಿದ ಆರೋಪದ ಮೇರೆಗೆ ಇಬ್ಬರನ್ನು ಬರ್ಕೆ ಮತ್ತು ಕದ್ರಿ ಪೊಲೀಸರು ಸೋಮವಾರ ಪ್ರತ್ಯೇಕ ಘಟನೆಯಲ್ಲಿ ಬಂಧಿಸಿದ್ದಾರೆ. ನಗರದ ಭಾರತಿ ಕಾಂಪೌಂಡ್ನ ರೋಶನ್ (18) ಮತ್ತು ಕುರ್ನಾಡಿನ ಅವಿನಾಶ್ ಎಚ್(26) ಬಂಧಿತ ಆರೋಪಿಗಳಾಗಿ ದ್ದಾರೆ. ಇವರ ವಿರುದ್ಧ ಎನ್ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.
ಜಾತಿಗಣತಿ ವರದಿ ಸಲ್ಲಿಸಲು ಹಿಂ.ವರ್ಗಗಳ ಅಯೋಗಕ್ಕೆ ತಿಳಿಸಲಾಗಿದೆ: ಮುಖ್ಯಮಂತ್ರಿ ಸಿದ್ದರಾಮಯ್ಯ
ಬೆಳಗಾವಿ, ಅ.3: ‘ಜಾತಿಗಣತಿ ವರದಿ ಸಲ್ಲಿಸಲು ಹಿಂದುಳಿದ ವರ್ಗಗಳ ಆಯೋಗಕ್ಕೆ ತಿಳಿಸಲಾಗಿದೆ. ಆಯೋಗ ವರದಿ ಸಲ್ಲಿಕೆ ಮಾಡಿದ ಬಳಿಕ ಅದನ್ನು ಪರಿಶೀಲಿಸಲಾಗುವುದು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ಮಂಗಳವಾರ ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಚ್.ಡಿ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಕಾಂತರಾಜು ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಅಧ್ಯಕ್ಷರಾಗಿ ವರದಿ ತಯಾರು ಮಾಡಿದ್ದರು ಎಂದರು. ವರದಿ ಸಲ್ಲಿಸಲು ಹೋದಾಗ ಕುಮಾರಸ್ವಾಮಿ ಸ್ವೀಕರಿಸಲಿಲ್ಲ. ಆಗಿನ ಕಾರ್ಯದರ್ಶಿಗಳು ವರದಿಗೆ ಸಹಿ ಮಾಡಿಲ್ಲ. ಈಗಿನ ಕಾರ್ಯದರ್ಶಿಗಳ ಬಳಿ ಸಹಿ ಮಾಡಿಸಿ ಅವರು ಸಲ್ಲಿಸಬೇಕು ಎಂದು ಸಿದ್ದರಾಮಯ್ಯ ವಿವರಿಸಿದರು. ಜಾತಿ ಗಣತಿ ಹಾಗೂ ಸಾಮಾಜಿಕ ಆರ್ಥಿಕ ಸಮೀಕ್ಷೆ ಮಾಡಬೇಕೆಂದು ನಾನೇ ಹಿಂದೆ ಆದೇಶ ಮಾಡಿದ್ದು. ಆಗ ಕಾಂತರಾಜು ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿದ್ದರು. ನಮ್ಮ ಸರಕಾರದ ಅವಧಿಯಲ್ಲಿ ವರದಿ ಪೂರ್ಣವಾಗಿರಲಿಲ್ಲ ಎಂದು ಅವರು ತಿಳಿಸಿದರು. ನಂತರ ಸಮ್ಮಿಶ್ರ ಸರಕಾರ ಇರುವಾಗ ಅಂದಿನ ಮುಖ್ಯಮಂತ್ರಿ ಕುಮಾರಸ್ವಾಮಿ, ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಅಧ್ಯಕ್ಷರಾಗಿ ಪುಟ್ಟರಂಗಶೆಟ್ಟಿ ಇದ್ದರು. ಆಗ ವರದಿಯನ್ನು ಪಡೆಯಲಿಲ್ಲ. ನಂತರ ಆಯೋಗಕ್ಕೆ ಜಯಪ್ರಕಾಶ್ ಹೆಗಡೆಯನ್ನು ಬಿಜೆಪಿ ಸರಕಾರ ನೇಮಿಸಿತ್ತು ಎಂದು ಸಿದ್ದರಾಮಯ್ಯ ಹೇಳಿದರು.
ಅ.6ರಂದು ಸುಪ್ರೀಂ ಕೋರ್ಟ್ ನಲ್ಲಿ ಬಿಹಾರ ಜಾತಿಗಣತಿ ಅರ್ಜಿಗಳ ವಿಚಾರಣೆ
ಹೊಸದಿಲ್ಲಿ: ಬಿಹಾರದಲ್ಲಿ ಜಾತಿ ಗಣತಿಗೆ ಹಸಿರು ನಿಶಾನೆಯನ್ನು ತೋರಿಸಿದ್ದ ಪಾಟ್ನಾ ಉಚ್ಚ ನ್ಯಾಯಾಲಯದ ಆ.1ರ ಆದೇಶವನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳ ವಿಚಾರಣೆಯನ್ನು ಸರ್ವೋಚ್ಚ ನ್ಯಾಯಾಲಯವು ಅ.6ರಂದು ನಡೆಸಲಿದೆ. ಸೋಮವಾರ ಬಿಹಾರದ ನಿತೀಶ ಕುಮಾರ ಸರಕಾರವು ತನ್ನ ಬಹುನಿರೀಕ್ಷಿತ ಜಾತಿ ಗಣತಿ ವರದಿಯನ್ನು ಬಿಡುಗಡೆ ಮಾಡಿದ್ದು,ರಾಜ್ಯದ ಜನಸಂಖ್ಯೆಯಲ್ಲಿ ಒಬಿಸಿಗಳು ಮತ್ತು ಅತ್ಯಂತ ಹಿಂದುಳಿದ ವರ್ಗಗಳ ಪಾಲು ಶೇ.63ರಷ್ಟಿದೆ ಎನ್ನುವುದನ್ನು ಜಾತಿ ಗಣತಿಯು ಬೆಳಕಿಗೆ ತಂದಿದೆ. ಸೆ.6ರಂದು ಸರ್ವೋಚ್ಚ ನ್ಯಾಯಾಲಯವು ಪಾಟ್ನಾ ಉಚ್ಚ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿದ್ದ ಅರ್ಜಿಗಳ ವಿಚಾರಣೆಯನ್ನು ಅ.3ಕ್ಕೆ ಮುಂದೂಡಿತ್ತು. ಆ.7ರಂದು ಸರ್ವೋಚ್ಚ ನ್ಯಾಯಾಲಯವು ಉಚ್ಚ ನ್ಯಾಯಾಲಯದ ಆದೇಶಕ್ಕೆ ತಡೆಯಾಜ್ಞೆ ನೀಡಲು ನಿರಾಕರಿಸಿತ್ತು.
ಮಂಗಳೂರು: ಹೃದಯಾಘಾತದಿಂದ ಹೆಡ್ ಕಾನ್ಸ್ಟೇಬಲ್ ಮೃತ್ಯು
ಮಂಗಳೂರು, ಅ.3: ನಗರದ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ಕಂಟ್ರೋಲ್ ರೂಂ ಇನ್ಸ್ಪೆಕ್ಟರ್ರ ಚಾಲಕರಾಗಿದ್ದ ಸೋಮನಗೌಡ ಚೌಧರಿ (32) ಎಂಬವರು ಮಂಗಳವಾರ ಕರ್ತವ್ಯದಲ್ಲಿರುವಾಗಲೇ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. 2016ರ ಬ್ಯಾಚ್ನವರಾದ ಸೋಮನಗೌಡ ಚೌಧರಿ ಮಂಗಳೂರು ಸಿಎಆರ್ ಕಾನ್ಸ್ಟೇಬಲ್ ಆಗಿ ಕೆಲಸಕ್ಕೆ ಸೇರ್ಪಡೆಗೊಂಡಿದ್ದರು. ಬಳಿಕ ಹೆಡ್ಕಾನ್ಸ್ಟೇಬಲ್ ಆಗಿ ಭಡ್ತಿ ಪಡೆದು ಇನ್ಸ್ಪೆಕ್ಟರ್ರ ಚಾಲಕನಾಗಿ ಕರ್ತವ್ಯದಲ್ಲಿದ್ದರು. ಮೂರು ವರ್ಷದ ಹಿಂದೆ ಅವರು ಮದುವೆಯಾಗಿದ್ದರು ಎಂದು ತಿಳಿದು ಬಂದಿದೆ. ಮಂಗಳವಾರ ಬೆಳಗ್ಗೆ ಕರ್ತವ್ಯಕ್ಕೆ ಹಾಜರಾಗಿದ್ದ ಅವರು ನಗರದ ಶಾಪ್ವೊಂದಕ್ಕೆ ತೆರಳಿದ್ದರು. ಈ ವೇಳೆ ಹಠಾತ್ ಕುಸಿದು ಬಿದ್ದ ಅವರನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಅವರು ಆಗಲೇ ನಿಧನರಾಗಿರುವ ಬಗ್ಗೆ ತಪಾಸಣೆ ನಡೆಸಿದ ವೈದ್ಯರು ಘೋಷಿಸಿರುವುದಾಗಿ ಪ್ರಕರಣ ದಾಖಲಿಸಿಕೊಂಡಿರುವ ಪಾಂಡೇಶ್ವರ ಪೊಲೀಸರು ತಿಳಿಸಿದ್ದಾರೆ. ಸೋಮನಗೌಡ ಅವರ ಮೃತದೇಹಕ್ಕೆ ಮಂಗಳೂರು ನಗರ ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್, ಡಿಸಿಪಿಗಳಾದ ಸಿದ್ಧಾರ್ಥ್ ಗೋಯಲ್, ದಿನೇಶ್ ಕುಮಾರ್, ಕೇಂದ್ರ ಉಪವಿಭಾಗದ ಎಸಿಪಿ ಮಹೇಶ್, ಪೊಲೀಸ್ ಅಧಿಕಾರಿಗಳು, ಸಹೋದ್ಯೋಗಿ ಸಿಬ್ಬಂದಿ ವರ್ಗವು ಅಂತಿಮ ಗೌರವ ಸಲ್ಲಿಸಿ, ಕುಟುಂಬದವರಿಗೆ ಮೃತದೇಹ ಬಿಟ್ಟುಕೊಟ್ಟರು. ಬಳಿಕ ಸ್ವಂತ ಊರಾದ ವಿಜಯಪುರಕ್ಕೆ ಮೃತದೇಹವನ್ನು ಕಳುಹಿಸಿಕೊಡಲಾಯಿತು.
ನವಜೀವನ ಲೇ ಕೌನ್ಸಿಲರಗಳ ತರಬೇತಿ ಕಾರ್ಯಾಗಾರ ಉದ್ಘಾಟನೆ
ಉಡುಪಿ, ಅ.3: ಕಮಲ್ ಎ ಬಾಳಿಗ ಚಾರಿಟೇಬಲ್ ಟ್ರಸ್ಟ್ ಮುಂಬೈ ಹಾಗೂ ಡಾ.ಎ.ವಿ. ಬಾಳಿಗ ಸ್ಮಾರಕ ಆಸ್ಪತ್ರೆ ಉಡುಪಿ ಮತ್ತು ಒನ್ ಗುಡ್ ಸ್ಟೆಪ್ ಇವರ ಜಂಟಿ ಆಶ್ರಯದಲ್ಲಿ ನವಜೀವನ ಲೇ ಕೌನ್ಸಿಲರಗಳ ತರಬೇತಿ ಕಾರ್ಯಗಾರ ಕೋರ್ಸಿನ ಮೊದಲ ಬ್ಯಾಚಿನ ತರಗತಿಗಳ ಉದ್ಘಾಟನೆಯನ್ನು ಬೆಂಗಳೂರು ನಿಮಾನ್ಸ್ ಮನೋವೈದ್ಯಕೀಯ ವಿಭಾಗದ ನಿವೃತ್ತ ಹಿರಿಯ ಪ್ರಾಧ್ಯಾಪಕ ಡಾ.ಸಿ.ಆರ್.ಚಂದ್ರಶೇಖರ್ ಸೋಮವಾರ ನೆರವೇರಿಸಿದರು. ಕ್ಷೇಮ ಮಂಗಳೂರು ಇದರ ಮನೋ ವೈದ್ಯಕೀಯ ವಿಭಾಗದ ಪ್ರಾಧ್ಯಾಪಕ ಡಾ.ಶ್ರಿನಿವಾಸ ಭಟ್ ಲೇ ಕೌನ್ಸಿಲರ್ ತರಬೇತಿ ಕೋರ್ಸಿನ ಕ್ಯಾಲೆಂಡರ್ನ ಅನಾವರಣಗೊಳಿಸಿದರು. ವೇದಿಕೆಯಲ್ಲಿ ಒನ್ ಗುಡ್ ಸ್ಟೆಪ್ನ ಸ್ಥಾಪಕ ಅಮಿತಾ ಪೈ ಮತ್ತು ಡಾ.ಎ.ವಿ.ಬಾಳಿಗ ಸ್ಮಾರಕ ಆಸ್ಪತ್ರೆಯ ಮನೋವೈದ್ಯರಾದ ಡಾ. ವಿರೂಪಾಕ್ಷ ದೇವರಮನೆ, ಡಾ.ಮಾನಸ್ ಈ.ಆರ್. ಉಪಸ್ಥಿತರಿದ್ದರು. ಅಧ್ಯಕ್ಷತೆಯನ್ನು ಡಾ.ಎ.ವಿ.ಬಾಳಿಗ ಸಮೂಹ ಸಂಸ್ಥೆಗಳ ವೈದ್ಯಕೀಯ ನಿರ್ದೇಶಕ ಡಾ.ಪಿ.ವಿ.ಭಂಡಾರಿ ವಹಿಸಿದ್ದರು. ಆಸ್ಪತ್ರೆಯ ಆಡಳಿತಾಧಿಕಾರಿ ಸೌಜನ್ಯ ಶೆಟ್ಟಿ ಸ್ವಾಗತಿಸಿದರು. ಮನಶಾಸ್ತ್ರಜ್ಞ ನಾಗರಾಜ್ ಮೂರ್ತಿ ವಂದಿಸಿದರು. ಆಪ್ತ ಸಮಾಲೋಚಕಿ ಪದ್ಮ ರಾಘವೇಂದ್ರ ಕಾರ್ಯಕ್ರಮ ನಿರೂಪಿಸಿದರು. ಈ ತರಬೇತಿ ಕಾರ್ಯಗಾರ ಕೋರ್ಸಿನಲ್ಲಿ 27ಮಂದಿ ಅಭ್ಯರ್ಥಿಗಳು ಭಾಗವಹಿಸಿದ್ದು, ನಂತರ ಮೊದಲ ದಿನದ ತರಬೇತಿ ವಿಷಯಗಳ ಬಗ್ಗೆ ತರಗತಿ ಗಳನ್ನು ನಡೆಸಲಾಯಿತು.
ಭಾರತೀಯ ಪಾಕ ಪದ್ಧತಿಯನ್ನು ಜಗತ್ತಿನಾದ್ಯಂತ ಜನಪ್ರಿಯಗೊಳಿಸುವುದು ಅಗತ್ಯ: ಚೆಫ್ ವಿಕಾಸ್ ಖನ್ನಾ
ಉಡುಪಿ, ಅ.3: ಭಾರತೀಯ ಪಾಕ ಪದ್ಧತಿಯನ್ನು ಜಗತ್ತಿಗೆ ತೋರಿಸಲು ಭಾರತೀಯ ಪಾಕಪದ್ಧತಿಯನ್ನು ಇನ್ನಷ್ಟು ಜನ ಪ್ರಿಯಗೊಳಿಸಬೇಕಾದ ಅಗತ್ಯವಿದೆ ಎಂದು ಅಂತಾರಾಷ್ಟ್ರೀಯ ಬಾಣಸಿಗ ವಿಕಾಸ್ ಖನ್ನಾ ಹೇಳಿದ್ದಾರೆ. ಮಣಿಪಾಲದ ವೆಲ್ಕಮ್ ಗ್ರೂಪ್ ಗ್ರಾಜುಯೇಟ್ ಸ್ಕೂಲ್ ಆಫ್ ಹೊಟೇಲ್ ಆಡ್ಮಿನಿಸ್ಟ್ರೇಷನ್(ವ್ಯಾಗ್ಷ)ದಲ್ಲಿ ಇಂದು ಹಮ್ಮಿ ಕೊಳ್ಳಲಾದ ಭಾರತೀಯ ಪಾಕ ಮತ್ತು ಆಹಾರ ಸಂಸ್ಕೃತಿಯ ಕೇಂದ್ರದ ಉದ್ಘಾಟನೆಯಲ್ಲಿ ಭಾಗವಹಿಸಲು ಆಗಮಿಸಿದ ವೇಳೆ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡುತಿದ್ದರು. ಜಗತ್ತಿನ ಯಾವುದೇ ದೇಶವು ಬದಲಿಸಲಾಗದ ಅನನ್ಯ ಆಹಾರ ಪದಾರ್ಥಗಳ ಅದ್ಭುತ ಪರಂಪರೆಯನ್ನು ಭಾರತ ಹೊಂದಿದೆ. ಆದುದರಿಂದ ವಿದ್ಯಾರ್ಥಿಗಳು ಹೊಟೇಲ್ ಮ್ಯಾನೇಜ್ಮೆಂಟ್ ಕೋರ್ಸ್ಗಳಲ್ಲಿ ಭಾರತೀಯ ಪಾಕಪದ್ಧತಿ ಗಳನ್ನು ಆಯ್ಕೆ ಮಾಡಿಕೊಳ್ಳಬೇಕೆ ಹೊರತು ವಿಶ್ವ ಪಾಕ ಪದ್ಧತಿಯನ್ನಲ್ಲ ಎಂದರು. ಭಾರತೀಯ ಪಾಕಪದ್ಧತಿಯು ಜಗತ್ತಿನ ಆಹಾರ ಉತ್ಸಾಹಿಗಳನ್ನು ಆಕರ್ಷಿ ಸುತ್ತಿದೆ. ಸಾಮಾಜಿಕ ಜಾಲತಾಣಗಳು ಮತ್ತು ಮಾಧ್ಯಮಗಳು ಭಾರತೀಯ ತಿನಿಸುಗಳ ಶ್ರೀಮಂತಿಕೆಯನ್ನು ಇಡೀ ಜಗತ್ತಿಗೆ ಪ್ರಚಾರ ಮಾಡಬೇಕು. ಭಾರತದಲ್ಲಿ ಮೈಕೆಲಿನ್ ಬಾಣಸಿಗ ತಂಡವನ್ನು ರಚಿಸಬೇಕು. ಆ ಮೂಲಕ ಭಾರತೀಯ ಅಡುಗೆಗಳ ಶಕ್ತಿಯನ್ನು ಜಗತ್ತಿಗೆ ತೋರಿಸ ಬೇಕು ಎಂದು ಅವರು ತಿಳಿಸಿದರು. ಹಲಸಿನ ಹಣ್ಣಿನ ಉಪ್ಪಿನಕಾಯಿ ಮತ್ತು ಮಂಗಳೂರು ಬನ್ ಜೊತೆ ತುಪ್ಪದಲ್ಲಿ ಹುರಿದ ಬಾಳೆಹಣ್ಣು ನನ್ನ ಅತ್ಯುತ್ತಮ ರುಚಿಕರ ಪದಾರ್ಥವಾಗಿದೆ. ಪರಿಮಳ ಯುತವಾದ ಭಾರತೀಯ ಆಹಾರದಿಂದ ಪ್ರೇರಿತವಾದ ಭೂತಾನ್ ಆಹಾರ ವನ್ನು ಕೂಡ ನಾನು ಇಷ್ಟಪಡುತ್ತೇನೆ ಎಂದು ಅವರು ಹೇಳಿದರು. ಈ ಸಂದರ್ಭದಲ್ಲಿ ವಾಗ್ಷದ ಪ್ರಾಂಶುಪಾಲ ಚೆಫ್ ಕೆ.ತಿರುಜ್ಞಾನ ಸಂಬಂಧಮ್ ಹಾಜರಿದ್ದರು.
ಅಸ್ಸಾಂ ಸರಕಾರದಿಂದ ಸ್ಥಳೀಯ ಮುಸ್ಲಿಮ್ ಸಮುದಾಯಗಳ ಸಾಮಾಜಿಕ-ಆರ್ಥಿಕ ಸಮೀಕ್ಷೆ
ಗುವಾಹಟಿ : ರಾಜ್ಯದ ಐದು ಸ್ಥಳೀಯ ಮುಸ್ಲಿಮ್ ಸಮುದಾಯಗಳ ಸಾಮಾಜಿಕ-ಆರ್ಥಿಕ ಸಮೀಕ್ಷೆಯನ್ನು ನಡೆಸುವುದಾಗಿ ಅಸ್ಸಾಂ ಸರಕಾರವು ಮಂಗಳವಾರ ಪ್ರಕಟಿಸಿದೆ. ಸಮೀಕ್ಷೆಯು ಈ ಸಮುದಾಯಗಳ ಏಳಿಗೆಗಾಗಿ ಕ್ರಮಗಳನ್ನು ತೆಗೆದುಕೊಳ್ಳಲು ನೆರವಾಗುತ್ತದೆ ಎಂದು ಅದು ಹೇಳಿದೆ. ಈ ಸಂಬಂಧ ರಾಜ್ಯ ಸಚಿವಾಲಯದಲ್ಲಿ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಅವರು, ರಾಜ್ಯದ ಗೋರಿಯಾ,ಮೋರಿಯಾ,ದೇಶಿ,ಸೈಯದ್ ಮತ್ತು ಜೋಲ್ಹಾ ಮುಸ್ಲಿಮ್ ಸಮುದಾಯಗಳ ಸಾಮಾಜಿಕ-ಆರ್ಥಿಕ ಸಮೀಕ್ಷೆಯನ್ನು ನಡೆಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು ಎಂದು ಮುಖ್ಯಮಂತ್ರಿಗಳ ಕಚೇರಿಯು X ಪೋಸ್ಟ್ ನಲ್ಲಿ ತಿಳಿಸಿದೆ. ಸಮೀಕ್ಷೆಯ ಫಲಿತಾಂಶಗಳು ಸ್ಥಳೀಯ ಅಲ್ಪಸಂಖ್ಯಾತರ ಸಮಗ್ರ ಸಾಮಾಜಿಕ-ಆರ್ಥಿಕ ಮತ್ತು ಶೈಕ್ಷಣಿಕ ಏಳಿಗೆಯನ್ನು ಗುರಿಯಾಗಿಟ್ಟುಕೊಂಡು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಲು ರಾಜ್ಯ ಸರಕಾರಕ್ಕೆ ಮಾರ್ಗದರ್ಶನ ನೀಡಲಿವೆ ಎಂದು ಅದು ಹೇಳಿದೆ. ಬಿಹಾರದ ನಿತೀಶ್ ಕುಮಾರ್ ಸರಕಾರವು ತನ್ನ ಬಹು ನಿರೀಕ್ಷಿತ ಜಾತಿ ಗಣತಿ ವರದಿಯನ್ನು ಬಿಡುಗಡೆಗೊಳಿಸಿದ ಬೆನ್ನಿಗೇ ಅಸ್ಸಾಂ ಸರಕಾರದ ಈ ನಿರ್ಧಾರ ಹೊರಬಿದ್ದಿದೆ.
ಚಿಲುಮೆ ಹಗರಣ: ಬಿಬಿಎಂಪಿ ಮುಖ್ಯ ಆಯುಕ್ತರ ವಿರುದ್ಧ ತನಿಖೆಗೆ ರಾಜ್ಯ ಸರಕಾರ ಆದೇಶ
ಬೆಂಗಳೂರು, ಅ.3: ಈ ಹಿಂದೆ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಬೆಳಕಿಗೆ ಬಂದಿದ್ದ ಚಿಲುಮೆ ಸಂಸ್ಥೆ ಪ್ರಕರಣ ಸಂಬಂದ ಮತದಾರರ ಖಾಸಗಿ ಮಾಹಿತಿ ಸಂಗ್ರಹಕ್ಕೆ ಅವಕಾಶ ಮಾಡಿಕೊಡಲಾಗಿತ್ತು ಎಂಬ ಆರೋಪದ ಹಿನ್ನೆಲೆಯಲ್ಲಿ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ವಿರುದ್ಧ ತನಿಖೆ ಮಾಡಿ ವರದಿ ನೀಡಲು ರಾಜ್ಯ ಸರಕಾರ ಸೂಚಿಸಿದೆ. ಬಿಬಿಎಂಪಿ ಆಯುಕ್ತರಾದ ತುಷಾರ್ ಗಿರಿನಾಥ್ ಅವರು ಬೆಂಗಳೂರು ಜಿಲ್ಲಾ ಚುನಾವಣಾಧಿಕಾರಿಯೂ ಆಗಿದ್ದರು. ತುಷಾರ್ ಗಿರಿನಾಥ್ ಅವರು ಚಿಲುಮೆ ಸಂಸ್ಥೆಗೆ ಮತಪಟ್ಟಿ ಪರಿಷ್ಕರಣೆಗೆ ಅವಕಾಶ ಕೊಟ್ಟಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ವಿಧಾನ ಪರಿಷತ್ ಮಾಜಿ ಸದಸ್ಯ ರಮೇಶ್ ಬಾಬು ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಜುಲೈ 3ರಂದು ಪತ್ರ ಬರೆದು ಮತದಾರರ ಖಾಸಗಿ ವಿಷಯ ಸಂಗ್ರಹಿಸಲು ಚಿಲುಮೆ ಸಂಸ್ಥೆಗೆ ಅವಕಾಶ ನೀಡಿ ಕರ್ತವ್ಯಲೋಪ ಎಸಗಿರುವ ಆರೋಪದಲ್ಲಿ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ವಿರುದ್ಧ ಹಾಗೂ ಚಿಲುಮೆ ಸಂಸ್ಥೆಯ ಲೋಪದ ಬಗ್ಗೆ ಪೂರ್ಣ ಪ್ರಮಾಣದ ತನಿಖೆ ನಡೆಸುವಂತೆ ಕೋರಿದ್ದರು. ಈ ದೂರನ್ನು ಗಂಭೀರವಾಗಿ ಪರಿಗಣಿಸಿರುವ ಮುಖ್ಯಮಂತ್ರಿಗಳು ಸೂಕ್ತ ತನಿಖೆ ನಡೆಸುವಂತೆ ಮುಖ್ಯ ಕಾರ್ಯದರ್ಶಿಗಳಿಗೆ ಸೂಚನೆ ನೀಡಿದ್ದರು. ಮುಖ್ಯಮಂತ್ರಿಗಳ ಸೂಚನೆ ಮೇರೆಗೆ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಚುನಾವಣಾ ಆಯೋಗಕ್ಕೆ ಪರಿಶೀಲನೆ ನಡೆಸಿ ವರದಿ ನೀಡುವಂತೆ ಕೋರಿದ್ದಾರೆ. ಅಲ್ಲದೆ, ಮತದಾನದ ಬಗ್ಗೆ ಮತದಾರರಿಗೆ ಜಾಗೃತಿ ಮೂಡಿಸುವ ಹೆಸರಿನಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದ ಚಿಲುಮೆ ಸಂಸ್ಥೆ ಬಿಎಲ್ಓ (ಬೂತ್ ಮಟ್ಟದ ಅಧಿಕಾರಿ) ಹೆಸರಿನಲ್ಲಿ ಗುರುತಿನ ಚೀಟಿಯನ್ನು ಸೃಷ್ಟಿಸಿಕೊಂಡು ಮತದಾರರ ಮನೆಗಳಿಗೆ ಹೋಗಿ ವೈಯಕ್ತಿಕ ಮಾಹಿತಿಗಳನ್ನು ಕಲೆ ಹಾಕಿತ್ತು. ಅಲ್ಲದೆ ಈ ಮಾಹಿತಿಯನ್ನು ದುರ್ಬಳಕೆ ಮಾಡಿಕೊಂಡಿದೆ ಎಂಬ ಆರೋಪ ಇದೆ.
ಉಡುಪಿ ನಗರ ಸಭೆ ವ್ಯಾಪ್ತಿಯ ನಿವೇಶನ ರಹಿತರಿಂದ ಅ.6ಕ್ಕೆ ಪೌರಾಯುಕ್ತರಿಗೆ ಮನವಿ ಸಲ್ಲಿಕೆ
ಉಡುಪಿ, ಅ.3: ಉಡುಪಿ ನಗರಸಭಾ ವ್ಯಾಪ್ತಿಯ ಹೆರ್ಗ ಗ್ರಾಮದ ಸರಕಾರಿ ನಿವೇಶನ ಸ್ಥಳದಲ್ಲಿ ಸರಕಾರದ ಪ್ರಧಾನ ಮಂತ್ರಿ ಆವಾಸ್ ಯೋಜನೆ ಯಡಿ ಸುಮಾರು 240 ಸುಸಜ್ಜಿತ ವಸತಿ ಸಮುಚ್ಛಯ ನಿರ್ಮಾಣ ಕಾಮಗಾರಿ ಅಂತಿಮ ಹಂತ ತಲುಪಿ ವರ್ಷ 4 ಕಳೆದರೂ ಅವುಗಳು ಫಲಾನುಭವಿಗಳಿಗೆ ಹಸ್ತಾಂತರವಾಗದೇ ಅವರನ್ನು ಸಂಕಷ್ಟಕ್ಕೆ ಗುರಿ ಮಾಡಿದೆ ಎಂದು ಹೋರಾಟ ಸಮಿತಿಯ ಸಂಚಾಲಕ ವೆಂಕಟೇಶ ಕೋಣಿ ತಿಳಿಸಿದ್ದಾರೆ. ಫಲಾನುಭವಿಗಳು ತಮ್ಮ ಪಾಲಿನ ಮಾರ್ಜಿನ್ ಹಣ 90,000 ರೂ.ವನ್ನು (ಪರಿಶಿಷ್ಟಜಾತಿ/ಪಂಗಡದವರಿಗೆ 60,000ರೂ) ಪಾಲು ಹಣವಾಗಿ ಸಂಬಂಧಪಟ್ಟ ಇಲಾಖೆಗೆ ಕಟ್ಟಲಾಗಿದೆ. ಬ್ಯಾಂಕ್ನ ಸಹಾಯ ಧನದೊಂದಿಗೆ ಸಾಲ ಸೌಲಭ್ಯ ಪಡೆದು ವಸತಿ ಸಮುಚ್ಚಯ ಕಟ್ಟಡಕ್ಕೆ ಹಕ್ಕುಪತ್ರ ಪಡೆಯಲಾಗಿದ್ದರೂ, ವಸತಿ ಸಮುಚ್ಛಯದ ಪಲಾನುಭವಿ ನಿವಾಸಿಗಳು ವಾಸ ಮಾಡಲು ಮೂಲ ಸೌಕರ್ಯದಿಂದ ವಂಚಿತರಾಗಿದ್ದಾರೆ.ವಸತಿ ಸಮುಚ್ಛಯ ಅವ್ಯವಸ್ಥೆಗಳ ಆಗರವಾಗಿದೆ ಎಂದವರು ದೂರಿದ್ದಾರೆ. ವಸತಿ ಸಮುಚ್ಛಯಕ್ಕೆ ಕುಡಿಯುವ ನಳ್ಳಿ ನೀರಿನ ಸಂಪರ್ಕ, ವಿದ್ಯುತ್ ಸಂಪರ್ಕ, ಕಿಟಿಕಿ, ಬಾಗಿಲು ಅಳವಡಿಸಿಲ್ಲ. ಪೈಂಟಿಂಗ್ ಕೆಲಸ ಬಾಕಿ ನಿಂತಿದೆ. ಬ್ಯಾಂಕ್ನಿಂದ ಸಹಾಯಧನದೊಂದಿಗೆ ಸಾಲ ಮಂಜೂರಾಗದ ಕೆಲವು ನಿವೇಶನ ರಹಿತ ಅರ್ಜಿದಾರರಿಗೆ ಈ ಕೂಡಲೇ ಸಾಲ ಸೌಲಭ್ಯ ಮಂಜೂರು ಮಾಡಬೇಕು. ಇಲ್ಲಿಗೆ ಪಕ್ಕಾ ರಸ್ತೆ ನಿರ್ಮಾಣಗೊಳ್ಳ ಬೇಕು, ಕಾಂಕ್ರೀಟ್ ರಸ್ತೆ ಅಭಿವೃದ್ಧಿ ಕಾಮಗಾರಿ ಕೈಕೊಳ್ಳಬೇಕು ಮುಂತಾದ ಫಲಾನುಭವಿಗಳ ಬೇಡಿಕೆಗಳನ್ನು ಈಡೇರಿಸು ವಂತೆ ಒತ್ತಾಯಿಸಿ ಬೀದಿಗಿಳಿದು ಹೋರಾಟ ನಡೆಸಲು ಉಡುಪಿ ನಗರಸಭಾ ವ್ಯಾಪ್ತಿಯ ನಿವೇಶನ ರಹಿತರ ಹೋರಾಟ ಸಮಿತಿ ಸಿದ್ಧತೆ ನಡೆಸಿದೆ ಎಂದು ಸಮಿತಿಯ ಸಂಚಾಲಕ ವೆಂಕಟೇಶ ಕೋಣಿ ಹೇಳಿಕೆಯಲ್ಲಿ ತಿಳಿಸಿದ್ದಾರೆ. ನಿವೇಶನ ರಹಿತರ ಸಮಸ್ಯೆಗಳ ಪರಿಹಾರಕ್ಕಾಗಿ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಜರುಗಿದ ಜನ ಸಂಪರ್ಕ ಸಭೆಯಲ್ಲಿ ಮನವಿ ಸಲ್ಲಿಸಿದ್ದರೂ ಈ ತನಕ ಯಾವುದೇ ಸ್ಪಂದನೆ ವ್ಯಕ್ತವಾಗಿಲ್ಲ. ಈ ಹಿನ್ನೆಲೆಯಲ್ಲಿ ಇಂದು ಹೆರ್ಗದ ವಸತಿ ಸಮುಚ್ಛಯ ವಠಾರದಲ್ಲಿ ನಿವೇಶನ ರಹಿತ ಫಲಾನುಭವಿಗಳ ಸಭೆ ನಡೆದು ವಿವಿಧ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ಅ.6ರಂದು ಉಡುಪಿ ನಗರಸಭೆ ಪೌರಾಯುಕ್ತರಿಗೆ ಹಕ್ಕೊತ್ತಾಯದ ಸಾಮೂಹಿಕ ಮನವಿ ಸಲ್ಲಿಸಲು ನಿರ್ಧರಿಸಲಾಗಿದೆ ಎಂದು ವೆಂಕಟೇಶ ಕೋಣಿ ತಿಳಿಸಿದ್ದಾರೆ. ಇದೇ ವೇಳೆ ನಿವೇಶನ ರಹಿತರ ಹೋರಾಟ ಸಮಿತಿಗೆ ಚನ್ನಪ್ಪ, ವೆಂಕಟೇಶ ಕೋಣಿ, ಸಂತೋಷ, ಸಂದೇಶ, ರಾಜಶೇಖರ, ಮಹಾವೀರ, ಸರಸ್ವತಿ, ಸೊನಾಲಿ, ನಾಗೇಶ ಪಿ.ಶೇಟ್, ವಿಶ್ವನಾಥ, ರಾಘವೇಂದ್ರ ಪಿ.ಶೇಟ್, ಕುಬೇರ, ಲಲಿತ ಗಂಗಯ್ಯ ಇವರನ್ನೊಳಗೊಂಡ 13 ಸದಸ್ಯರ ಸಮಿತಿಯನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ಶಿವಮೊಗ್ಗದಲ್ಲಿ ಗಲಾಟೆ ಮಾಡಿದ ಪುಂಡರಿಗೆ ರಾಜ್ಯ ಸರ್ಕಾರವೇ ಬೆಂಗಾವಲು : ಚಕ್ರವರ್ತಿ ಸೂಲಿಬೆಲೆ ಆರೋಪ
ಅಂಕೋಲಾ: ಇಡೀ ರಾಜ್ಯ ಸರ್ಕಾರವೇ ಮುಸಲ್ಮಾನರಿಗೆ ಬೆಂಗಾವಲಾಗಿ ನಿಂತು, ಅವರಿಂದಲೇ ನಾವು ಅಧಿಕಾರಕ್ಕೆ ಬಂದಿರುವುದು ಎಂದು ಹೇಳುತ್ತಿರುವಾಗ ಶಿವಮೊಗ್ಗದಲ್ಲಿ ನಡೆದಿರುವಂತಹ ದುರ್ಘಟನೆಗಳು ಅಂಕೋಲಾ ಕಾರವಾರ ಸೇರಿದಂತೆ ನಾಡಿನೆಲ್ಲೆಡೆಯೂ ಜರುಗಬಹುದು ಎಂದು ಚಿಂತಕ ಭವಿಷ್ಯ ನುಡಿದಿದ್ದಾರೆ. ಭಾನುವಾರ ಶಿವಮೊಗ್ಗದ ರಾಗಿಗುಡ್ಡದಲ್ಲಿ ನಡೆದ ಸಂದರ್ಭ ನಡೆದ ಕಲ್ಲುತೂರಾಟ ಘಟನೆ ವಿಚಾರವಾಗಿ ಅಂಕೋಲಾದಲ್ಲಿ ಮಂಗಳವಾರ ಸುದ್ದಿಗಾರರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಅವರು, ಶಿವಮೊಗ್ಗದಲ್ಲಿ ಮುಸಲ್ಮಾನರು ವಿವಿಧ ತಂತ್ರಗಳ ಮೂಲಕ ಹಿಂದೂಗಳಿಗೆ ಆಹಿತಕರ ಘಟನೆಗೆ ಮುಂದಾಗುವ ರೀತಿಯಲ್ಲಿ ಪ್ರಚೋದನೆ ನೀಡಿದ್ದರು. ಆದರೆ ಹಿಂದೂಗಳು ಅದಕ್ಕೆ ಪ್ರತಿಕ್ರಿಯೆ ವ್ಯಕ್ತಪಡಿಸಿಲ್ಲ. ಅದಕ್ಕಾಗಿಯೇ ಪೊಲೀಸರೊಂದಿಗೆ ಕಿತ್ತಾಟ ನಡೆಸಿದ್ದಾರೆ ಎಂದಪ ಆರೋಪಿಸಿದರು. ಗಲಾಟೆ ಮಾಡುವವರಿಗೆ ರಕ್ಷಣೆ ಇದನ್ನೆಲ್ಲ ಗಮನಿಸಿದರೆ ಮುಸಲ್ಮಾನರ ಸಹಜ ಮಾನಸಿಕತೆಯೇ ಗಲಾಟೆ ಮಾಡುವುದು ಎಂದು ತಿಳಿಯುತ್ತದೆ. ಗಲಾಟೆ ಮಾಡಿದವರಿಗೆ ರಕ್ಷಣೆ ನೀಡುವ ಜಮೀರ್ ಅಹ್ಮದ್ ಅಂತಹ ಸಚಿವರು, ಅವರನ್ನು ಬಿಡಿಸಿ ಎಂದು ಪತ್ರ ಬರೆಯುವ ಗ್ರಹ ಸಚಿವರು, ಹತ್ತು ಸಾವಿರ ರೂಪಾಯಿ ಕೋಟಿ ಅವರಿಗೆ ಅನುದಾನ ನೀಡುವ ಮುಖ್ಯಮಂತ್ರಿಗಳಿದ್ದಾರೆ. ಹಾಗಾಗಿಯೇ ಈ ರೀತಿಯ ಘಟನೆಗಳು ನಾಡಿನಲ್ಲೆಡೆ ಸಂಭವಿಸಬಹುದು ಎಂದರು.ಉತ್ತರ ಕನ್ನಡ ಜಿಲ್ಲೆ ಐದು ಬಾರಿ ಬಿಜೆಪಿ ಸಂಸದರನ್ನು ಆಯ್ಕೆ ಮಾಡಿದ್ದರೂ ಅದಕ್ಕೆ ಪೂರಕವಾಗಿ ಅಭಿವೃದ್ಧಿಯಾಗಿಲ್ಲ ಎನ್ನುವ ಚರ್ಚೆಗಳು ಜನರದ್ದಾಗಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಚಕ್ರವರ್ತಿ ಸೂಲಿಬೆಲೆ, ನಾವು ನೀಡಿದ ಎಂಪಿ ಸ್ಥಾನದಿಂದ ರಾಷ್ಟ್ರಕ್ಕೇನು ಪ್ರಯೋಜನವಾಗಿದೆ ಎನ್ನುವುದನ್ನು ತಿಳಿಯುವುದು ಸೂಕ್ತ. ಡಿಜಿಟಲ್ ವ್ಯವಹಾರ, 370 ನೇ ವಿಧಿ ರದ್ದು ಸೇರಿದಂತೆ ನಮ್ಮ ಒಂದು ಸಂಸದ ಸ್ಥಾನ ಹಲವು ಬದಲಾವಣೆಗೆ ಕಾರಣವಾಗಿದೆ ಎಂದರು. ಹಲವು ಬದಲಾವಣೆಗೆ ಕಾರಣವಾದರೂ ಜಿಲ್ಲೆಗೆ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ತರಲು ಎಂಪಿ ಸ್ಥಾನದಿಂದ ಸಾಧ್ಯವಾಗಿಲ್ಲವೇ ಎನ್ನುವ ಪ್ರಶ್ನೆಗೆ ಉತ್ತರಿಸಿ, ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ರಾಜ್ಯ ಸರ್ಕಾರಕ್ಕೆ ಸಂಬಂಧಿಸಿದ್ದು. ಅದಕ್ಕೆ ಸಂಬಂಧಿಸಿದ ಚರ್ಚೆಗಳು ನಡೆಯುತ್ತಿರುವಾಗಲೇ ಸರ್ಕಾರಗಳು ಬದಲಾಗುತ್ತವೆ. ಜಿಲ್ಲೆಗೆ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಬಂದರೂ ರೋಗಿಗಳಿರುವುದು ಕಡಿಮೆ, ಏಕೆಂದರೆ ಇಲ್ಲಿಯ ಜನ ಆರೋಗ್ಯವಂತರು ಎಂದು ವೈದ್ಯರು ಹೇಳುತ್ತಾರೆ. ಮುಂದಿನ ದಿನಗಳಲ್ಲಿ ಜಿಲ್ಲೆಗೆ ಏಮ್ಸ್ ಆಸ್ಪತ್ರೆ ಬಂದರೂ ಅಚ್ಚರಿ ಇಲ್ಲ ಎಂದು ತಿಳಿಸಿದರು. ಎಂಪಿ ಟಿಕೆಟ್ ಆಕಾಂಕ್ಷಿಯಲ್ಲ ಉತ್ತರ ಕನ್ನಡ ಜಿಲ್ಲೆಯ ಸಂಸದ ಸ್ಥಾನಕ್ಕೆ ಈ ಮೊದಲೇ ಎರಡು ಬಾರಿ ತನ್ನ ಹೆಸರು ಕೇಳಿ ಬಂದಿತ್ತಾದರೂ ತಾನು ಆಕಾಂಕ್ಷಿಯಲ್ಲ. ಸಮೃದ್ಧ ರಾಷ್ಟ್ರ ನಿರ್ಮಾಣದ ಕಡೆಗೆ ನನ್ನ ಒಲವು. ದೇಶವನ್ನೇ ಸಮರ್ಥವಾಗಿ ನಿಭಾಯಿಸಬಲ್ಲ ಮೋದಿ ಆಯ್ಕೆಯಾಗಬೇಕು ಎನ್ನುವುದೇ ನಮ್ಮ ಉದ್ದೇಶ ಎಂದರು.ನಮೋ ಬ್ರಿಗೇಡ್ನ ವತಯಿಂದ ನಡೆಯುತ್ತಿರುವ `ಜನ ಗಣ ಮನ ಬೆಸೆಯೋಣ' ಬೈಕ್ ರ್ಯಾಲಿ ದಕ್ಷಿಣ ಕನ್ನಡ ಕಲ್ಲಡ್ಕದಿಂದ ಸೋಮವಾರ ಪ್ರಾರಂಭಿಸಿ ಮಂಗಳೂರು ಮಾರ್ಗವಾಗಿ ಉಡುಪಿ, ಮಲ್ಪೆ, ಕುಂದಾಪುರದ ಮೂಲಕ ಉತ್ತರ ಕನ್ನಡ ಪ್ರವೇಶಿಸಿದೆ.
ಬೈಂದೂರು ತಾಲೂಕು ಯಳಜಿತ್ ಹೊಸೆರಿಯಲ್ಲಿ ಕದಿಕೆ ಟ್ರಸ್ಟ್ನಿಂದ ಕೈ ಮಗ್ಗ ನೇಕಾರಿಕೆ ತರಬೇತಿ ಪ್ರಾರಂಭ
ಉಡುಪಿ, ಅ.3: ಅಳಿವಿನಂಚಿನಲ್ಲಿದ್ದ ಉಡುಪಿ ಸೀರೆ ನೇಯ್ಗೆಯನ್ನು ಪುನಶ್ಚೇತನಗೊಳಿಸಿದ ಕಾರ್ಕಳದ ಕದಿಕೆ ಟ್ರಸ್ಟ್, ಬೈಂದೂರು ತಾಲೂಕಿನ ಯಳಜಿತ್ ಹೊಸರಿಯ ಸರೋಜ ಅಣ್ಣಪ್ಪ ಅವರ ಮಗ್ಗದ ಮನೆಯಲ್ಲಿ ಗಾಂಧಿ ಜಯಂತಿಯ ದಿನ ವಾದ ಮಂಗಳವಾರ ಹೊಸದಾಗಿ ಕೈಮಗ್ಗ ನೇಕಾರಿಕೆ ತರಬೇತಿಯನ್ನು ಪ್ರಾರಂಭಿಸಿದೆ. ಸರಿಯಾದ ಸಂಪರ್ಕ ವ್ಯವಸ್ಥೆಯೂ ಇಲ್ಲದ, ಬೇರೆ ಉದ್ಯೋಗಗಳಿಗೆ ಅವಕಾಶವೂ ಇಲ್ಲದ ತೀರಾ ಗ್ರಾಮೀಣ ಒಳ ಪ್ರದೇಶ ವಾದ ಹೊಸೆರಿಯ ಏಳು ಮಂದಿ ಯುವಜನರು ಈ ಯೋಜನೆಯಲ್ಲಿ ತರಬೇತಿ ಪಡೆಯಲಿದ್ದಾರೆ. ಆರು ತಿಂಗಳ ತರಬೇತಿಯಲ್ಲಿ ಶಿಬಿರಾರ್ಥಿಗಳಿಗೆ ಕದಿಕೆ ಟ್ರಸ್ಟ್ ವತಿಯಿಂದ ಸ್ಟೈಪೆಂಡ್ ಜೊತೆಗೆ ತಿರುವನಂತಪುರದ ಪ್ರಖ್ಯಾತ ತರಬೇತಿದಾರ ಚಂದ್ರನ್ ಅವರಿಂದ ತರಬೇತಿ ಕೊಡಿಸಲಾಗುವುದು. ಶಿಬಿರಾರ್ಥಿಗಳು ಅಡಿಕೆ ಚೊಗರು ಮತ್ತು ಇತರ ಸಹಜ ಬಣ್ಣಗಳ ಉಡುಪಿ ಸೀರೆ ಸೇರಿದಂತೆ ವಿವಿಧ ಕೈಮಗ್ಗ ಉತ್ಪನ್ನಗಳನ್ನು ತಯಾರಿಸಲಿದ್ದಾರೆ. ಕಾರ್ಯಕ್ರಮ ಗಾಂಧೀಜಿಯವರ ಸ್ಮರಣಾರ್ಥವಾಗಿ ಎಲ್ಲರೂ ಸೇರಿ ‘ರಘುಪತಿ ರಾಘವ’ ಪ್ರಾರ್ಥನಾ ಗೀತೆ ಹಾಡುವುದ ರೊಂದಿಗೆ ಆರಂಭ ವಾಯಿತು. ಕಾರ್ಯಕ್ರಮದಲ್ಲಿ ಭಾಗವಹಿಸಿದ ವೇಗಾನ್ ಸೊಸೈಟಿ ಸಂಸ್ಥಾಪಕ ಶಂಕರನಾರಾಯಣ ಅವರು ಗಾಂಧೀಜಿಯವರು ಪ್ರತಿಪಾದಿಸಿದ ಸುಸ್ಥಿರ ಗ್ರಾಮೋದ್ಯೋಗದ ಅವಕಾಶವೊಂದನ್ನು ಈ ಪ್ರದೇಶದಲ್ಲಿ ಆರಂಭಿಸಿ ದ್ದಕ್ಕೆ ಕದಿಕೆ ಟ್ರಸ್ಟ್ನ್ನು ಅಭಿನಂದಿಸಿದರು. ಕದಿಕೆ ಟ್ರಸ್ಟ್ನ ಟ್ರಸ್ಟೀ ಶ್ರೀಕುಮಾರ್ ನಕ್ರೆ ಹವಾಮಾನ ಬದಲಾವಣೆಯ ಪ್ರಸ್ತುತ ಪರಿಸ್ಥಿತಿಯಲ್ಲಿ ಗಾಂಧಿ ಚಿಂತನೆಯ ಮಹತ್ವ ತಿಳಿಸಿದರು. ಟ್ರಸ್ಟ್ ಅಧ್ಯಕ್ಷೆ ಮಮತಾ ರೈ, ಕದಿಕೆ ಟ್ರಸ್ಟ್ನ ಕಾರ್ಯವೈಖರಿ ಮತ್ತು ತರಬೇತಿಯ ಉದ್ದೇಶದ ಕುರಿತು ಮಾಹಿತಿ ನೀಡಿದರು. ಕದಿಕೆ ಟ್ರಸ್ಟ್ ಕಾರ್ಯದರ್ಶಿ ಬಿ.ಸಿ. ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯಕ್ರಮದಲ್ಲಿ ಶಿವಳ್ಳಿ ನೇಕಾರರ ಸಂಘದ ಎಂಡಿ ಶಶಿಕಾಂತ ಕೋಟ್ಯಾನ್, ಉಡುಪಿ ನೇಕಾರರ ಸಂಘದ ಎಂಡಿ ದಿನೇಶ್ ಕುಮಾರ್, ಹಿರಿಯ ಕೃಷಿಕ ರಾದ ಲಿಂಗಯ್ಯ ಮರಾಟಿ, ನಾರಾಯಣ ಗಾಣಿಗ, ಸುಶೀಲ ನಾಯ್ಕ್, ಮಹಾಬಲ ಮರಾಟಿ, ಕದಿಕೆ ಟ್ರಸ್ಟ್ನ ಟ್ರಸ್ಟಿಗಳಾದ ಪುರುಷೋತ್ತಮ ಅಡ್ವೆ, ಸಚಿನ್ಕುಮಾರ್, ಊರಿನ ಹಿರಿಯರು, ಯುವಕರು ಮತ್ತು ಮಕ್ಕಳು ಭಾಗವಹಿಸಿದ್ದರು. ಯಳಜಿತ್ ಪರಿಸರದ ಸರೋಜ, ಭಾರತಿ, ಅಂಬಿಕಾ, ಕಾವ್ಯ, ವಸಂತಿ, ಮೋಹಿನಿ, ಸುಶೀಲ ಅವರು ಚಂದ್ರನ್ ಅವರಿಂದ ಆರು ತಿಂಗಳ ಕಾಲ ಕೈಮಗ್ಗ ತರಬೇತಿಯನ್ನು ಪಡೆಯಲಿದ್ದಾರೆ. ಕಳೆದ ಐದು ವರ್ಷಗಳಲ್ಲಿ ಉಡುಪಿ ಸೀರೆ ಪುನಶ್ಚೇತನ ಯೋಜನೆಯನ್ನು ಕದಿಕೆ ಟ್ರಸ್ಟ್ ಯಶಸ್ವಿಯಾಗಿ ಅನುಷ್ಠಾನ ಗೊಳಿಸಿದೆ. ಕದಿಕೆ ಟ್ರಸ್ಟ್ನ ಪ್ರಯತ್ನಗಳಿಂದ ಉಡುಪಿ ಸೀರೆಗೆ ‘ಭೌಗೋಳಿಕ ಮಾನ್ಯತೆ’ ದೊರಕಿದೆ.
ಬೆಂಗಳೂರು | ನಕಲಿ ಕೀ ಬಳಸಿ ಮದುವೆಗಿಟ್ಟಿದ್ದ ಕೋಟ್ಯಂತರ ರೂ. ಮೌಲ್ಯದ ಚಿನ್ನಾಭರಣ, ನಗದು ಕಳ್ಳತನ: ಆರೋಪಿ ಬಂಧನ
ಬೆಂಗಳೂರು, ಅ.3: ಇಡೀ ಕುಟುಂಬವು ಮದುವೆಗೆ ಹೋಗಿದ್ದ ಮನೆಯೊಂದಕ್ಕೆ ನಕಲಿ ಕೀ ಬಳಸಿ ನುಗ್ಗಿ ನಗದು ಸೇರಿ ಕೋಟ್ಯಂತರ ರೂ. ಮೌಲ್ಯದ ಚಿನ್ನಾಭರಣ ದೋಚಿದ್ದ ಆರೋಪಿಯನ್ನು ಬಂಧಿಸಿರುವ ತಿಲಕ್ ನಗರ ಪೊಲೀಸರು, ಆತನಿಂದ 1.10 ಕೋಟಿ ರೂ. ಮೌಲ್ಯದ ಮಾಲುಗಳನ್ನು ಜಪ್ತಿ ಮಾಡಿದ್ದಾರೆ. ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ನಗರ ಪೊಲೀಸ್ ಆಯುಕ್ತ ಬಿ.ದಯಾನಂದ, ಪ್ರಕರಣದ ಸಂಬಂಧ ಜಯನಗರದ ಒಂದನೇ ಬ್ಲಾಕ್ನ ಭೈರಸಂದ್ರದ ಆರೋಪಿ ಮುಹಮ್ಮದ್ ರಫೀಕ್ ಯಾನೆ ರಫೀಕ್(35) ಎಂಬುವನನ್ನು ಬಂಧಿಸಲಾಗಿದೆ ಎಂದು ತಿಳಿಸಿದರು. ʼʼಸೆ.23 ರಂದು ತಿಲಕ್ ನಗರದ ವ್ಯಕ್ತಿಯು ಮೊಮ್ಮಗಳ ಮದುವೆಗಾಗಿ ಸುಮಾರು ಎರಡೂಕಾಲು ಕೆಜಿ ಚಿನ್ನಾಭರಣ ಖರೀದಿಸಿ ಮದುವೆಯ ಖರ್ಚಿಗಾಗಿ 10 ಲಕ್ಷ ರೂ. ನಗದು ಹಣವನ್ನು ತಂದಿಟ್ಟಿದ್ದರು.ಈ ಮಧ್ಯೆ ಸಂಬಂಧಿಕರ ವಿವಾಹಕ್ಕೆ ವ್ಯಕ್ತಿಯ ಕುಟುಂಬದವರು ಮನೆಗೆ ಬೀಗ ಹಾಕಿಕೊಂಡು ರಾಮನಗರಕ್ಕೆ ಹೋಗಿದ್ದರು. ಮನೆಗೆ ಬೀಗ ಹಾಕಿ ಯಾರೂ ಇಲ್ಲದ್ದು ಗಮನಿಸಿ ಹತ್ತಿರದ ಸಂಬಂಧಿಯೇ ಆಗಿದ್ದ ಆರೋಪಿಯು ನಕಲಿ ಕೀ ಬಳಸಿ ಒಳನುಗ್ಗಿ. ಸುಮಾರು ಎರಡು ಕಾಲು ಕೆಜಿ ಚಿನ್ನಾಭರಣ, 10 ಲಕ್ಷ ರೂ. ನಗದು ಕಳ್ಳತನ ಮಾಡಿ ಪರಾರಿಯಾಗಿದ್ದʼʼ ʼʼಮದುವೆ ಕಾರ್ಯಕ್ರಮ ಮುಗಿಸಿ ವಾಪಸ್ಸಾದ ಕುಟುಂಬಸ್ಥರು ಕಳ್ಳತನವಾಗಿರುವುದನ್ನು ಕಂಡು ತಿಲಕ್ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡು ತಿಲಕ್ನಗರ ಪೊಲೀಸ್ ಇನ್ ಸ್ಪೆಕ್ಟರ್ ವಿಶ್ವನಾಥ್ ಅವರ ನೇತೃತ್ವದ ವಿಶೇಷ ತಂಡ ಕಾರ್ಯಾಚರಣೆ ಕೈಗೊಂಡು ತಂತ್ರಜ್ಞಾನದ ನೆರವು ಇನ್ನಿತರ ಮಾಹಿತಿಯನ್ನು ಆಧರಿಸಿ ಆರೋಪಿಯನ್ನು ಬಂಧಿಸಿ ಆತನಿಂದ ರೂ 1,10,60,000 ರೂ. ಬೆಲೆ ಬಾಳುವ 1 ಕೆಜಿ 800 ಗ್ರಾಂ ಚಿನ್ನಾಭರಣಗಳು, 74 ಸಾವಿರ ರೂ. ನಗದು ಜಪ್ತಿ ಮಾಡಲಾಗಿದೆʼʼ ಎಂದು ತಿಳಿಸಿದರು. ʼʼಆರೋಪಿ ಕದ್ದ ಹಣದಿಂದ ಆನ್ಲೈನ್ ಆ್ಯಪ್ನಿಂದ ಮಾಡಿಕೊಂಡಿದ್ದ ಸಾಲ ತೀರಿಸಿದ್ದು ಆತನನ್ನು ಹೆಚ್ಚಿನ ವಿಚಾರಣೆಗೊಳಪಡಿಸಿ ಬೇರೆಡೆ ಕಳ್ಳತನ ಮಾಡಿರುವ ಪ್ರಕರಣಗಳು ಬಯಲಿಗೆಳೆಯಲು ಮುಂದಾಗಿದ್ದಾರೆʼʼ ಎಂದು ಬಿ.ದಯಾನಂದ ವಿವರಿಸಿದರು. ಸುದ್ದಿಗೋಷ್ಠಿಯಲ್ಲಿ ಹೆಚ್ಚುವರಿ ಪೊಲೀಸ್ ಆಯುಕ್ತ ರಮಣ್ ಗುಪ್ತಾ, ಡಿಸಿಪಿ ಸಿಕೆ ಬಾಬಾ ಇದ್ದರು.
ಬೆಂಗಳೂರು | ನಕಲಿ ಕೀ ಬಳಸಿ ಮದುವೆಗಿಟ್ಟಿದ್ದ ಕೋಟ್ಯಂತರ ರೂ. ಮೌಲ್ಯದ ಚಿನ್ನಾಭರಣ, ನಗದು ಕಳ್ಳತನ: ಆರೋಪಿ ಬಂಧನ
ಬೆಂಗಳೂರು, ಅ.3: ಇಡೀ ಕುಟುಂಬವು ಮದುವೆಗೆ ಹೋಗಿದ್ದ ಮನೆಯೊಂದಕ್ಕೆ ನಕಲಿ ಕೀ ಬಳಸಿ ನುಗ್ಗಿ ನಗದು ಸೇರಿ ಕೋಟ್ಯಂತರ ರೂ. ಮೌಲ್ಯದ ಚಿನ್ನಾಭರಣ ದೋಚಿದ್ದ ಆರೋಪಿಯನ್ನು ಬಂಧಿಸಿರುವ ತಿಲಕ್ ನಗರ ಪೊಲೀಸರು, ಆತನಿಂದ 1.10 ಕೋಟಿ ರೂ. ಮೌಲ್ಯದ ಮಾಲುಗಳನ್ನು ಜಪ್ತಿ ಮಾಡಿದ್ದಾರೆ. ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ನಗರ ಪೊಲೀಸ್ ಆಯುಕ್ತ ಬಿ.ದಯಾನಂದ, ಪ್ರಕರಣದ ಸಂಬಂಧ ಜಯನಗರದ ಒಂದನೇ ಬ್ಲಾಕ್ನ ಭೈರಸಂದ್ರದ ಆರೋಪಿ ಮುಹಮ್ಮದ್ ರಫೀಕ್ ಯಾನೆ ರಫೀಕ್(35) ಎಂಬುವನನ್ನು ಬಂಧಿಸಲಾಗಿದೆ ಎಂದು ತಿಳಿಸಿದರು. ʼʼಸೆ.23 ರಂದು ತಿಲಕ್ ನಗರದ ವ್ಯಕ್ತಿಯು ಮೊಮ್ಮಗಳ ಮದುವೆಗಾಗಿ ಸುಮಾರು ಎರಡೂಕಾಲು ಕೆಜಿ ಚಿನ್ನಾಭರಣ ಖರೀದಿಸಿ ಮದುವೆಯ ಖರ್ಚಿಗಾಗಿ 10 ಲಕ್ಷ ರೂ. ನಗದು ಹಣವನ್ನು ತಂದಿಟ್ಟಿದ್ದರು.ಈ ಮಧ್ಯೆ ಸಂಬಂಧಿಕರ ವಿವಾಹಕ್ಕೆ ವ್ಯಕ್ತಿಯ ಕುಟುಂಬದವರು ಮನೆಗೆ ಬೀಗ ಹಾಕಿಕೊಂಡು ರಾಮನಗರಕ್ಕೆ ಹೋಗಿದ್ದರು. ಮನೆಗೆ ಬೀಗ ಹಾಕಿ ಯಾರೂ ಇಲ್ಲದ್ದು ಗಮನಿಸಿ ಹತ್ತಿರದ ಸಂಬಂಧಿಯೇ ಆಗಿದ್ದ ಆರೋಪಿಯು ನಕಲಿ ಕೀ ಬಳಸಿ ಒಳನುಗ್ಗಿ. ಸುಮಾರು ಎರಡು ಕಾಲು ಕೆಜಿ ಚಿನ್ನಾಭರಣ, 10 ಲಕ್ಷ ರೂ. ನಗದು ಕಳ್ಳತನ ಮಾಡಿ ಪರಾರಿಯಾಗಿದ್ದʼʼ ʼʼಮದುವೆ ಕಾರ್ಯಕ್ರಮ ಮುಗಿಸಿ ವಾಪಸ್ಸಾದ ಕುಟುಂಬಸ್ಥರು ಕಳ್ಳತನವಾಗಿರುವುದನ್ನು ಕಂಡು ತಿಲಕ್ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡು ತಿಲಕ್ನಗರ ಪೊಲೀಸ್ ಇನ್ ಸ್ಪೆಕ್ಟರ್ ವಿಶ್ವನಾಥ್ ಅವರ ನೇತೃತ್ವದ ವಿಶೇಷ ತಂಡ ಕಾರ್ಯಾಚರಣೆ ಕೈಗೊಂಡು ತಂತ್ರಜ್ಞಾನದ ನೆರವು ಇನ್ನಿತರ ಮಾಹಿತಿಯನ್ನು ಆಧರಿಸಿ ಆರೋಪಿಯನ್ನು ಬಂಧಿಸಿ ಆತನಿಂದ ರೂ 1,10,60,000 ರೂ. ಬೆಲೆ ಬಾಳುವ 1 ಕೆಜಿ 800 ಗ್ರಾಂ ಚಿನ್ನಾಭರಣಗಳು, 74 ಸಾವಿರ ರೂ. ನಗದು ಜಪ್ತಿ ಮಾಡಲಾಗಿದೆʼʼ ಎಂದು ತಿಳಿಸಿದರು. ʼʼಆರೋಪಿ ಕದ್ದ ಹಣದಿಂದ ಆನ್ಲೈನ್ ಆ್ಯಪ್ನಿಂದ ಮಾಡಿಕೊಂಡಿದ್ದ ಸಾಲ ತೀರಿಸಿದ್ದು ಆತನನ್ನು ಹೆಚ್ಚಿನ ವಿಚಾರಣೆಗೊಳಪಡಿಸಿ ಬೇರೆಡೆ ಕಳ್ಳತನ ಮಾಡಿರುವ ಪ್ರಕರಣಗಳು ಬಯಲಿಗೆಳೆಯಲು ಮುಂದಾಗಿದ್ದಾರೆʼʼ ಎಂದು ಬಿ.ದಯಾನಂದ ವಿವರಿಸಿದರು. ಸುದ್ದಿಗೋಷ್ಠಿಯಲ್ಲಿ ಹೆಚ್ಚುವರಿ ಪೊಲೀಸ್ ಆಯುಕ್ತ ರಮಣ್ ಗುಪ್ತಾ, ಡಿಸಿಪಿ ಸಿಕೆ ಬಾಬಾ ಇದ್ದರು.
ರಾಜ್ಯ ಆಡಳಿತ ನ್ಯಾಯ ಮಂಡಳಿಯಿಂದ ಟೈಪಿಸ್ಟ್ ಹುದ್ದೆಗೆ ಅರ್ಜಿ ಆಹ್ವಾನ; ಅ.31 ಕೊನೆಯ ದಿನ
ಬೆಂಗಳೂರು, ಅ.3: ಕರ್ನಾಟಕ ರಾಜ್ಯ ಆಡಳಿತ ನ್ಯಾಯ ಮಂಡಳಿಯಿಂದ ಟೈಪಿಸ್ಟ್ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. ಉಳಿಕೆ ಮೂಲ ವೃಂದದ ಹುದ್ದೆಗಳು ಇವಾಗಿದ್ದು, ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಬೆಂಗಳೂರು ಪ್ರಧಾನ ಪೀಠ ಅಥವಾ ಬೆಳಗಾವಿ ಅಥವಾ ಕಲಬುರಗಿ ಪೀಠದಲ್ಲಿ ಕೆಲಸ ಮಾಡಲು ಸಿದ್ಧರಿರುವ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ. ರಾಜ್ಯ ಆಡಳಿತ ನ್ಯಾಯ ಮಂಡಳಿಯಲ್ಲಿ ಖಾಲಿ ಇರುವ ಆರು ಟೈಪಿಸ್ಟ್ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಅಭ್ಯರ್ಥಿಗಳು ಎಸೆಸೆಲ್ಸಿ ಪೂರ್ಣಗೊಳಿಸಿರಬೇಕು. ಜೊತೆಗೆ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನಡೆಸುವ ಕನ್ನಡ ಮತ್ತು ಆಂಗ್ಲ ಭಾಷೆಯ ಬೆರಳಚ್ಚು ಪರೀಕ್ಷೆಯಲ್ಲಿ ಸೀನಿಯರ್ ಗ್ರೇಡ್ ಉತ್ತೀರ್ಣರಾಗಿರಬೇಕು. ಅಭ್ಯರ್ಥಿಗಳು ಕನಿಷ್ಟ 18 ಮತ್ತು ಗರಿಷ್ಠ 35 ವರ್ಷಗಳನ್ನು ಪೂರ್ಣಗೊಳಿಸಿರಬೇಕು. ಪ್ರವರ್ಗ 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳಿಗೆ 3 ಮತ್ತು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಪ್ರವರ್ಗ 1 ಅಭ್ಯರ್ಥಿಗಳಿಗೆ 5 ವರ್ಷ ವಯೋಮಿತಿ ಸಡಿಲಿಕೆ ಮಾಡಲಾಗುವುದು. ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ 21,400 ರೂ.ನಿಂದ 42ಸಾವಿರ ರೂ. ವರೆಗೆ ಮಾಸಿಕ ವೇತನ ನಿಗದಿಸಲಾಗುವುದು. ಅಭ್ಯರ್ಥಿಗಳು ಕೆಸ್ಯಾಟ್ನ ಅಧಿಕೃತ ಜಾಲತಾಣದಲ್ಲಿ ಲಭ್ಯವಿರುವ ನಿಗದಿತ ಅರ್ಜಿಗಳನ್ನು ಭರ್ತಿ ಮಾಡಿ ಅವುಗಳನ್ನು ಆಫ್ಲೈನ್ ಮೂಲಕ ಕೆಳಗಿನ ವಿಳಾಸಕ್ಕೆ ಸಲ್ಲಿಕೆ ಮಾಡಬೇಕಿದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಪ್ರವರ್ಗ 1 ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ. ಇತರೆ ಅಭ್ಯರ್ಥಿಗಳಿಗೆ 150 ರೂ. ಶುಲ್ಕ ನಿಗದಿಸಲಾಗಿದೆ. ಅಭ್ಯರ್ಥಿಗಳು ಪೋಸ್ಟ್ ಆಫೀಸ್ ಅಥವಾ ಡಿಡಿ ಮೂಲಕ ಅರ್ಜಿ ಶುಲ್ಕ ಪಾವತಿ ಮಾಡಬಹುದಾಗಿದೆ. ಅರ್ಜಿ ಸಲ್ಲಿಕೆ ವಿಳಾಸ: ವಿಲೇಖನಾಧಿಕಾರಿಗಳು, ಕರ್ನಾಟಕ ರಾಜ್ಯ ಆಡಳಿತ ನ್ಯಾಯ ಮಂಡಳಿ, ಕಂದಾಯ ಭವನ, 7ನೇ ಮಹಡಿ, ಕೆಜಿ ರಸ್ತೆ, ಬೆಂಗಳೂರು 560009. ಅಭ್ಯರ್ಥಿಗಳು ಮೆರಿಟ್ ಮತ್ತು ಸಂದರ್ಶನದ ಮೂಲಕ ಆಯ್ಕೆ ನಡೆಸಲಾಗುವುದು. ಅರ್ಜಿ ಸಲ್ಲಿಕೆಗೆ ಅ.31 ಕೊನೆಯ ದಿನವಾಗಿದೆ. ಈ ಹುದ್ದೆ ಕುರಿತಾದ ಸಂಪೂರ್ಣ ಮಾಹಿತಿ ಮತ್ತು ನಿಗದಿತ ಅರ್ಜಿ ನಮೂನೆ ಪಡೆಯಲು ಅಭ್ಯರ್ಥಿಗಳು ಞsಚಿಣ.ಞಚಿಡಿಟಿಚಿಣಚಿಞಚಿ.gov.iಟಿ ಇಲ್ಲಿಗೆ ಭೇಟಿ ನೀಡಬಹುದಾಗಿದೆ.
ರಾಜ್ಯದಲ್ಲಿ ಕೌಟುಂಬಿಕ ನ್ಯಾಯಾಲಯಗಳ ಕೊರತೆ: RTI ಮಾಹಿತಿಯಿಂದ ಬಹಿರಂಗ
ಬೆಂಗಳೂರು, ಅ.3: ಕರ್ನಾಟಕದಲ್ಲಿ ಒಟ್ಟು 32 ಜಿಲ್ಲೆಗಳಿದ್ದರೂ ಕೌಟುಂಬಿಕ ಕೋರ್ಟ್ಗಳಿರುವುದು ಕೇವಲ 22 ಜಿಲ್ಲೆಗಳಲ್ಲಿ ಎನ್ನುತ್ತಿದೆ ಮಾಹಿತಿ ಹಕ್ಕು ಕಾಯಿದೆಯಡಿ ಬಹಿರಂಗವಾದ ಒಂದು ವಿವರ. ಅಂದರೆ ರಾಜ್ಯದ ಇನ್ನೂ ಹತ್ತು ಜಿಲ್ಲೆಗಳಲ್ಲಿ ಕೌಟುಂಬಿಕ ನ್ಯಾಯಾಲಯಗಳು ಈಗಲೂ ಅಸ್ತಿತ್ವದಲ್ಲಿಲ್ಲ. ಜಟಿಲವಾಗುತ್ತಿರುವ ಸಾಮಾಜಿಕ ಹಾಗೂ ಕೌಟುಂಬಿಕ ವ್ಯವಸ್ಥೆ, ವಿಚ್ಚೇದನವೊಂದೇ ಪರಿಹಾರ ಎಂಬಂತಹ ಮನಸ್ಥಿತಿಯ ನಡುವೆ ಹಲವು ಜಿಲ್ಲೆಗಳಲ್ಲಿ ಕೌಟುಂಬಿಕ ನ್ಯಾಯಾಲಯಗಳು ಇಲ್ಲ ಎಂಬುದು ಸಾಧ್ಯವಾಗಬೇಕಾದ ನ್ಯಾಯಾಂಗ ಸುಧಾರಣೆಯತ್ತ ಬೆರಳು ಮಾಡುತ್ತದೆ. ಮಾಹಿತಿ ಹಕ್ಕುಗಳ ಕಾರ್ಯಕರ್ತ ಹಾಗೂ ವಕೀಲ ಭೀಮನಗೌಡ ಪರಗೊಂಡ ಅವರು ಮಾಹಿತಿ ಹಕ್ಕು ಕಾಯಿದೆಯಡಿ ರಾಜ್ಯದಲ್ಲಿರುವ ಕೌಟುಂಬಿಕ ನ್ಯಾಯಾಲಯಗಳು, ಅವುಗಳಲ್ಲಿ ಬಾಕಿ ಇರುವ ಪ್ರಕರಣಗಳು, ವಿಲೇವಾರಿಯಾದ ಪ್ರಕರಣಗಳ ವಿವರಗಳನ್ನು ಕೇಳಿದ್ದರು. ರಾಜ್ಯದ ಕೌಟುಂಬಿಕ ನ್ಯಾಯಾಲಯಗಳಲ್ಲಿ 2019ರ ಜುಲೈ 1ರಿಂದ 2023ರ ಮೇ 31ರವರೆಗೆ ವಿಲೇವಾರಿಯಾದ ಇಲ್ಲವೇ ಬಾಕಿ ಉಳಿದಿರುವ ಪ್ರಕರಣಗಳ ಬಗೆಗಿನ ಮಾಹಿತಿಯನ್ನು ಕರ್ನಾಟಕ ಹೈಕೋರ್ಟ್ನ ರಾಜ್ಯ ಸಾರ್ವಜನಿಕ ಮಾಹಿತಿ ಅಧಿಕಾರಿಯಾದ ಜಂಟಿ ರಿಜಿಸ್ಟ್ರಾರ್ ನೀಡಿದ್ದಾರೆ. ಆರ್ಟಿಐ ಮಾಹಿತಿ ನ್ಯಾಯಾಲಯಗಳ ಕೊರತೆಯನ್ನಷ್ಟೇ ಹೇಳುವುದಿಲ್ಲ. ಪ್ರಕರಣಗಳು ಬಾಕಿ ಉಳಿಯುವುದಕ್ಕೆ ಕೌಟುಂಬಿಕ ನ್ಯಾಯಾಲಯಗಳಲ್ಲಿ ನ್ಯಾಯಾಧೀಶರ ಸಂಖ್ಯೆ ಹೆಚ್ಚಿನ ಮಟ್ಟದಲ್ಲಿ ಇಲ್ಲದೇ ಇರುವುದು, ನ್ಯಾಯಾಲಯಗಳ ಮೆಟ್ಟಿಲೇರದೆಯೇ ರಾಜಿ ಸಂಧಾನಕ್ಕೆ ಅನುಕೂಲವಾಗುವಂತೆ ಮನಃಶಾಸ್ತ್ರದಲ್ಲಿ ಪದವಿ ಪಡೆದ ಸಮಾಲೋಚಕರ ನೇಮಕಾತಿ (ಈಗಿರುವುದು ಕೇವಲ ಸಮಾಲೋಚಕರು ಮನಃಶಾಸ್ತ್ರದಲ್ಲಿ ಪದವಿ ಪಡೆದ ಸಮಾಲೋಚಕರಲ್ಲ) ನಡೆಯದಿರುವುದು, ನಿಗದಿತ ಕಾಲಮಿತಿಯೊಳಗೆ ಪ್ರಕರಣಗಳು ಇತ್ಯರ್ಥವಾಗದೇ ಇರುವುದನ್ನು ವಿವರಿಸುತ್ತದೆ. ಸಾಮಾಜಿಕ, ಕೌಟುಂಬಿಕ ಸನ್ನಿವೇಶಗಳು ಬದಲಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯೊಂದಕ್ಕೆ ಎರಡು ಮೂರು ಕೌಟುಂಬಿಕ ನ್ಯಾಯಾಲಯಗಳ ಅಗತ್ಯವಿದೆ. ಆದರೆ ರಾಜ್ಯದಲ್ಲಿ ಇನ್ನೂ ಹತ್ತು ಜಿಲ್ಲೆಗಳಲ್ಲಿ ಕೌಟುಂಬಿಕ ನ್ಯಾಯಾಲಯಗಳ ಕೊರತೆ ಕಂಡುಬರುತ್ತಿದೆ. ಕೋರ್ಟ್ಗಳ ಸಂಖ್ಯೆ ಹೆಚ್ಚಿಸುವ ಜೊತೆಗೆ ಪ್ರಕರಣಗಳ ಇತ್ಯರ್ಥಕ್ಕೆ ವಿವಿಧ ಮಾರ್ಗೋಪಾಯಗಳನ್ನು ಕಂಡುಕೊಳ್ಳಬೇಕಿದೆ ಎಂದು ಭೀಮನಗೌಡ ಪರಗೊಂಡ ಹೇಳಿದ್ದಾರೆ.
ಚೇತೇಶ್ವರ್ ಪೂಜಾರ ವೈಫಲ್ಯ, ಸೌರಾಷ್ಟ್ರವನ್ನು ಸೋಲಿಸಿ ಇರಾನಿ ಕಪ್ ಗೆದ್ದ ರೆಸ್ಟ್ ಆಫ್ ಇಂಡಿಯಾ!
Rest of India won Irani Cup 2023: ಪ್ರಸಕ್ತ ಆವೃತ್ತಿಯ ಇರಾನಿ ಕಪ್ ಕೇವಲ ಮೂರು ದಿನಗಳಲ್ಲಿ ಕೊನೆಗೊಂಡಿತು. ಇಡೀ ಪಂದ್ಯದಲ್ಲಿ ಬೌಲರ್ಗಳದ್ದೇ ಮೇಲುಗೈ. ಅಂತಿಮವಾಗಿ ರೆಸ್ಟ್ ಆಫ್ ಇಂಡಿಯಾ ರಣಜಿ ಟ್ರೋಫಿ ವಿಜೇತ ಸೌರಾಷ್ಟ್ರ ತಂಡವನ್ನು 175 ರನ್ಗಳಿಂದ ಸೋಲಿಸಿತು. ಚೇತೇಶ್ವರ್ ಪೂಜಾರ ಸೇರಿದಂತೆ ಸೌರಾಷ್ಟ್ರದ ಎಲ್ಲಾ ಬ್ಯಾಟ್ಸ್ಮನ್ಗಳು ರೆಸ್ಟ್ ಆಫ್ ಇಂಡಿಯಾ ಬೌಲರ್ಗಳ ಎದುರು ಮಕಾಡೆ ಮಲಗಿದರು. ಪಂದ್ಯದ ದ್ವಿತೀಯ ಇನಿಂಗ್ಸ್ನಲ್ಲಿ ರಣಜಿ ಚಾಂಪಿಯನ್ಸ್ ತಂಡ ಕೇವಲ 79 ರನ್ಗಳಿಗೆ ಆಲ್ಔಟ್ ಮಾಡಿದ್ದು ವಿಶೇಷ.
ಲಿಂಗಾಯತರಿಗೆ ಅನ್ಯಾಯದ ಆರೋಪ - ಶಾಮನೂರು ಹಚ್ಚಿದ ಕಿಡಿ
ಲಿಂಗಾಯತರಿಗೆ ಅನ್ಯಾಯದ ಆರೋಪ ► ಶಾಮನೂರು ಹಚ್ಚಿದ ಕಿಡಿ ►► ವಾರ್ತಾಭಾರತಿ BIG DEBATE LIVE ರಘು ದೊಡ್ಡೇರಿ - ಕಾಂಗ್ರೆಸ್ ವಕ್ತಾರರು ಆನಂದ್ ಗುರುಮೂರ್ತಿ - ಬಿಜೆಪಿ ವಕ್ತಾರರು ಎಚ್.ಎನ್. ದೇವರಾಜ್ - ಜೆಡಿಎಸ್ ವಕ್ತಾರರು ಬಸವರಾಜ್ ಇಟ್ನಾಳ್ - ವಿಶ್ಲೇಷಕರು
ಲೋಕ ಅದಾಲತ್ನಲ್ಲಿ ಪರಿಹಾರವಾಗಿ ನೀಡಿದ್ದ ಚೆಕ್ ಬೌನ್ಸ್: 80 ಲಕ್ಷ ರೂ. ದಂಡ ವಿಧಿಸಿದ ನ್ಯಾಯಾಲಯ
ಬೆಳಗಾವಿ, ಅ.3: ಲೋಕ ಅದಾಲತ್ನಲ್ಲಿ ಪರಿಹಾರವಾಗಿ ನೀಡಿದ್ದ ಚೆಕ್ ಬೌನ್ಸ್ ಆದ ಪ್ರಕರಣದ ವಿಚಾರಣೆ ನಡೆಸಿದ ಬೆಳಗಾವಿಯ 5ನೆ ಜೆಎಂಎಫ್ಸಿ ನ್ಯಾಯಾಲಯ ತಪ್ಪಿತಸ್ಥ ಮಹಿಳೆಗೆ 80 ಲಕ್ಷ ರೂ. ದಂಡ ವಿಧಿಸಿದೆ. ಬೆಳಗಾವಿ ನಗರದ ಶಹಾಪುರದ ನಿವಾಸಿಯಾದ ಮಹಿಳೆ ಹುಕ್ಕೇರಿ ತಾಲೂಕಿನ ಸಂಕೇಶ್ವರದ ಶ್ರೀ ಬಸವೇಶ್ವರ ಅರ್ಬನ್ ಕ್ರೆಡಿಟ್ ಸೌಹಾರ್ದ ಸಹಕಾರಿ ಬ್ಯಾಂಕ್ ನಿಂದ 2012ರಲ್ಲಿ 35 ಲಕ್ಷ ರೂ.ಸಾಲ ಪಡೆದಿದ್ದರು. ಆದರೆ, ಅವರು ಸಾಲ ಮರುಪಾವತಿ ಮಾಡದ ಕಾರಣ ಸಹಕಾರಿ ಬ್ಯಾಂಕ್ ನ್ಯಾಯಾಲಯದ ಮೊರೆ ಹೋಗಿತ್ತು. ಬಳಿಕ ಲೋಕ ಅದಾಲತ್ನಲ್ಲಿ ಸಾಲ ಮರುಪಾವತಿಗೆ ಒಪ್ಪಿದ್ದ ಮಹಿಳೆ 40.15 ಲಕ್ಷ ರೂ. ಮೊತ್ತದ ಚೆಕ್ ನೀಡಿದ್ದರು, ಚೆಕ್ ನಗದಿಗಾಗಿ ಸಂಬಂಧಿತ ಬ್ಯಾಂಕ್ಗೆ ಸಲ್ಲಿಸಿದಾಗ ಹಣ ಇಲ್ಲದ ಕಾರಣ ಚೆಕ್ ತಿರಸ್ಕøತಗೊಂಡಿತ್ತು. ಈ ಬಗ್ಗೆ ಮಹಿಳೆಗೆ ಮಾಹಿತಿ ನೀಡಿದಾಗ ಅವರು ಮತ್ತೊಮ್ಮೆ ಚೆಕ್ ನಗದೀಕರಣಕ್ಕೆ ಕಳಿಸುವಂತೆ ಹೇಳಿದ್ದರು. ಆದರೆ, ಎರಡನೇ ಬಾರಿಯೂ ಚೆಕ್ ಬೌನ್ಸ್ ಆಗಿತ್ತು. ಈ ಬಗ್ಗೆ ಮಹಿಳೆಗೆ ನೋಟಿಸ್ ನೀಡಿದರೂ ಹಣ ಪಾವತಿಸಿರಲಿಲ್ಲ. ಈ ಹಿನ್ನೆಲೆಯಲ್ಲಿ ಸಾಲ ಕೊಟ್ಟಿದ್ದ ಸಹಕಾರಿ ಬ್ಯಾಂಕ್ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿತ್ತು. 2015ರಲ್ಲಿ ಪುನಃ ಲೋಕ ಅದಾಲತ್ನಲ್ಲಿ ರಾಜೀ ಸಂಧಾನಕ್ಕೆ ಒಪ್ಪಿಕೊಂಡಿದ್ದ ಮಹಿಳೆ, 49 ಲಕ್ಷ ರೂ. ಪಾವತಿಸುವುದಾಗಿ ಒಪ್ಪಿದ್ದರು, ಆದರೆ, ಹಣ ಪಾವತಿಸಿರಲಿಲ್ಲ. ಈ ಪ್ರಕರಣದ ವಿಚಾರಣೆ ನಡೆಸಿದ ಕೋರ್ಟ್ ಇದೀಗ 80 ಲಕ್ಷ ದಂಡ ವಿಧಿಸಿದೆ.
ಉಳ್ಳಾಲ ದರ್ಗಾ ಕಚೇರಿಯ ಬೀಗ ತೆರವುಗೊಳಿಸಿ ವಕ್ಫ್ ಅಧಿಕಾರಿಗಳಿಂದ ಪರಿಶೀಲನೆ
ಉಳ್ಳಾಲ: ಉಳ್ಳಾಲ ಜುಮಾ ಮಸೀದಿ (402) ಸಯ್ಯಿದ್ ಮದನಿ ದರ್ಗಾ ಇದರ ನೂತನ ಆಡಳಿತ ಸಮಿತಿಗೆ, ಹಿಂದಿನ ಆಡಳಿತ ಸಮಿತಿ ಮುಖ್ಯ ಕಚೇರಿಯ ಕೀ ಹಸ್ತಾಂತರ ಮಾಡದೇ ಇದ್ದುದರಿಂದ ಸದ್ರಿ ಕಚೇರಿಯನ್ನು ಮಂಗಳವಾರ ಉಳ್ಳಾಲ ತಹಶೀಲ್ದಾರ್ ಹಾಗೂ ವಕ್ಫ್ ಅಧಿಕಾರಿಗಳ ಸಮಕ್ಷಮದಲ್ಲಿ ತೆರೆದು ಪರಿಶೀಲನೆ ನಡೆಸಲಾಯಿತು. ಈ ಸಂದರ್ಭ 38058ರೂ ನಗದು ಹಾಗೂ 2816 ವರೆಗಿನ ನಿರ್ಣಯದ ದಾಖಲೆ ಪತ್ರಗಳು ಲಭಿಸಿದೆ. ಪರಿಶೀಲನೆ ನಡೆಸಿದ ಬಳಿಕ ತಹಶೀಲ್ದಾರ್ ಪುಟ್ಟ ರಾಜು ಮಾತನಾಡಿ, 8-3-2023ರಂದು ನೂತನ ಸಮಿತಿ ಅಧಿಕಾರಕ್ಕೆ ಬಂದಿದೆ. ನೂತನ ಸಮಿತಿ ಅಧಿಕಾರ ಹಿಡಿದು ತಿಂಗಳು ಆರು ಕಳೆದರೂ ಹಿಂದೆ ಆಡಳಿತದಲ್ಲಿದ್ದ ಸಮಿತಿ ಕೊಠಡಿ ಕೀ ನೀಡಿರಲಿಲ್ಲ. ಈ ಕಾರಣದಿಂದ ಎಲ್ಲರ ಸಮಕ್ಷಮದಲ್ಲಿ ಕೊಠಡಿ ತೆರೆದು ಮಹಜರು ನಡೆಸಿದಾಗ 38058 ನಗದು ಹಾಗೂ ದಾಖಲೆ ಪುಸ್ತಕಗಳು ಲಭಿಸಿದ್ದು, ಅದನ್ನು ಸಂಬಂಧಪಟ್ಟವರಿಗೆ ಹಸ್ತಾಂತರಿಸಲಾಗಿದೆ ಎಂದು ಹೇಳಿದರು. ವಕ್ಫ್ ಅಧಿಕಾರಿ ಅಬೂಬಕ್ಕರ್ ಮಾತನಾಡಿ, ಮಂಗಳೂರು ಸಹಾಯಕ ಆಯುಕ್ತರ ಆದೇಶ ಮೇರೆಗೆ ಉಳ್ಳಾಲ ತಹಶೀಲ್ದಾರ್ ಹಾಗೂ ವಕ್ಫ್ ಬೋರ್ಡ್ ಅಧಿಕಾರಿಗಳು ಹೊಸದಾಗಿ ಅಧಿಕಾರಕ್ಕೆ ಬಂದ ಆಡಳಿತ ಸಮಿತಿಗೆ ಹಿಂದಿನ ಆಡಳಿತ ಸಮಿತಿ ಸದಸ್ಯರು ಕಚೇರಿ ಕೀ ಹಸ್ತಾಂತರ ಮಾಡದ ಕಾರಣ ಮುಚ್ಚಿದ್ದ ಕೊಠಡಿಯನ್ನು ಎಲ್ಲರ ಸಮಕ್ಷಮ ದಲ್ಲಿ ತೆರೆದು ಪಂಚನಾಮೆ ನಡೆಸಿ ದಾಖಲೆಗಳನ್ನು ಹೊಸ ಆಡಳಿತ ಸಮಿತಿ ಸದಸ್ಯರಿಗೆ ಹಸ್ತಾಂತರ ಮಾಡಿದ್ದೇವೆ ಎಂದು ಹೇಳಿದರು. ದರ್ಗಾ ಅಧ್ಯಕ್ಷ ಹನೀಫ್ ಹಾಜಿ ಮಾತನಾಡಿ, ಐದು ವರ್ಷಗಳಿಗೊಮ್ಮೆ ಉರೂಸ್ ನಡೆಸಿ ಆರು ತಿಂಗಳಲ್ಲಿ ಚುನಾವಣೆ ನಡೆಸಿ ಅಧಿಕಾರ ಹಸ್ತಾಂತರ ಮಾಡುವ ಸಂಪ್ರದಾಯ ಕೇಂದ್ರ ಜುಮಾ ಮಸೀದಿಯಲ್ಲಿ ಇತ್ತು. 2016ರಲ್ಲಿ ಅಧಿಕಾರ ಪಡೆದ ರಶೀದ್ ಹಾಜಿ ಅವರ ಸಮಿತಿ ನಮಗೆ ಅಧಿಕಾರ ಹಸ್ತಾಂತರ ಮಾಡದೇ ಕಚೇರಿ ಕೀ ನೀಡದೇ ಅನ್ಯಾಯ ಮಾಡಿದೆ. ಈ ಬಗ್ಗೆ ಸಂಬಂಧಪಟ್ಟ ಇಲಾಖೆಯ ಗಮನಹರಿಸಿದ ಬಳಿಕ ಅಧಿಕಾರ ಹಿಡಿದು ಏಳು ತಿಂಗಳ ಬಳಿಕ ಅಧಿಕಾರಿ ಗಳು ಕಚೇರಿ ತೆರೆದು ಪಂಚನಾಮೆ ನಡೆಸಿ ನಗದು ಹಾಗೂ ದಾಖಲೆ ಪುಸ್ತಕ ಗಳನ್ನು ನೀಡಿದ್ದಾರೆ ಎಂದು ಹೇಳಿದರು. ಕಾರ್ಯದರ್ಶಿ ಶಿಹಾಬುದ್ದೀನ್ ಸಖಾಫಿ ಮಾತನಾಡಿ, ಅಧಿಕಾರಿಗಳು ಪಂಚನಾಮೆ ನಡೆಸಿ 2016ವರೆಗಿನ ನಿರ್ಣಯ ಪುಸ್ತಕ ಗಳನ್ನು ನೀಡಿದ್ದಾರೆ. ಇದರ ನಂತರ ಏಳು ವರ್ಷಗಳ ಆಗಿರುವ ಕಾರ್ಯಕ್ರಮ ಗಳ ನಿರ್ಣಯ ಪುಸ್ತಕ ಇಲ್ಲ. ಈ ಬಗ್ಗೆ ಕ್ರಮ ಕೈಗೊಂಡು ಒಂದು ನಿರ್ಧಾರಕ್ಕೆ ಬರಲಾಗುವುದು ಎಂದು ಹೇಳಿದರು. ತಹಶೀಲ್ದಾರ್ ಪುಟ್ಟ ರಾಜು ಬಾಗಿಲಿನ ಕೀ ತೆರೆದು ಪಂಚನಾಮೆ ನೆಡೆಸಲು ಅವಕಾಶ ನೀಡಿದರು. ವಕ್ಫ್ ಅಧಿಕಾರಿಗಳು ಪಂಚನಾಮೆ ನಡೆಸಿ ವರದಿ ಒಪ್ಪಿಸಿದರು. ಅಧ್ಯಕ್ಷರಾದ ಬಿ.ಜಿ ಹನೀಫ್ ಹಾಜಿ, ಉಪಾಧ್ಯಕ್ಷ ಅಶ್ರಫ್ ರೈಟ್ವೇ, ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಶಿಹಾಬುದ್ದೀನ್ ಸಖಾಫಿ, ಕೋಶಾಧಿಕಾರಿ ನಾಝಿಮ್ ಮುಕ್ಕಚೇರಿ, ಜತೆ ಕಾರ್ಯದರ್ಶಿ ಗಳಾದ, ಇಸಾಕ್ ಮೇಲಂಗಡಿ, ಮುಸ್ತಫ ಮದನಿನಗರ, ಅಡಿಟರ್ ಫಾರೂಕ್, ವಕ್ಫ್ ಅಧಿಕಾರಿ ಅಬೂಬಕ್ಕರ್, ಕಂದಾಯ ನಿರೀಕ್ಷಕರು ಮಂಜುನಾಥ ಎರಡನೇ ದರ್ಜೆಯ ಸಿಬ್ಬಂದಿ,ಕೆ.ಎಚ್, ರಫೀಕ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಪರಿಶೀಲನೆ ಸಂದರ್ಭದಲ್ಲಿ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕಾ ಕ್ರಮ ವಾಗಿ ಉಳ್ಳಾಲ ಎಸಿಪಿ ಧನ್ಯ ಹಾಗೂ ಇನ್ಸ್ಪೆಕ್ಟರ್ ಬಾಲಕೃಷ್ಣ ನೇತೃತ್ವದಲ್ಲಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.
2025ರೊಳಗೆ ಮಿಗ್-21 ಜೆಟ್ ವಿಮಾನ ಹಾರಾಟ ಸ್ಥಗಿತ: ವಾಯುಪಡೆ ಮುಖ್ಯಸ್ಥ
ಹೊಸದಿಲ್ಲಿ: ರಷ್ಯಾ ನಿರ್ಮಿತ ಮಿಗ್-21 ಜೆಟ್ ವಿಮಾನದ ಸೇವಾವಧಿ ಮುಗಿಯುತ್ತಿರುವುದರಿಂದ ಅದನ್ನು ಬದಲಿಸುವ ಪ್ರಯತ್ನಗಳು ನಿರಂತರವಾಗಿ ನಡೆಯುತ್ತಿದ್ದು, 2025ರ ವೇಳೆಗೆ ಮಿಗ್-21 ಜೆಟ್ ವಿಮಾನದ ಬದಲಿಗೆ ಎಲ್ಸಿಎ ಮಾರ್ಕ್ ಎ1 ವಿಮಾನಗಳು ವಾಯಪಡೆಯಲ್ಲಿ ಸ್ಥಾನ ಪಡೆಯಲಿವೆ ಎಂದು ಮಂಗಳವಾರ ವಾಯುಪಡೆಯ ಮುಖ್ಯಸ್ಥ ವಿ.ಆರ್.ಚೌಧರಿ ತಿಳಿಸಿದ್ದಾರೆ ಎಂದು ndtv.com ವರದಿ ಮಾಡಿದೆ. ಅಕ್ಟೋಬರ್ 8ರಂದು ಪ್ರಯಾಗ್ ರಾಜ್ ನಲ್ಲಿ ನಡೆಯಲಿರುವ ವಾಯುಪಡೆ ದಿನಾಚರಣೆಗೂ ಮುನ್ನ ಅವರು ದಿಲ್ಲಿಯಲ್ಲಿ ಪತ್ರಿಕಾ ಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು. ಮಿಗ್-21 ಜೆಟ್ ವಿಮಾನದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ವಾಯುಪಡೆ ಮುಖ್ಯಸ್ಥ ಚೌಧರಿ, “ನಾವು 83 ಎಲ್ಸಿಎ ಮಾರ್ಕ್-1ಎ ಖರೀದಿಗಾಗಿ ಗುತ್ತಿಗೆ ಪತ್ರಕ್ಕೆ ಸಹಿ ಹಾಕಿದ್ದೇವೆ. ಈ ಗುತ್ತಿಗೆಯನ್ವಯ 97 ಹೆಚ್ಚುವರಿ ವಿಮಾನಗಳನ್ನು ಪೂರೈಸಬೇಕಿದೆ. ಇದರಿಂದ ಎಲ್ಸಿಎ ಮಾರ್ಕ್ 1ಎ ವಿಮಾನಗಳ ಒಟ್ಟು ಸಂಖ್ಯೆ 180ಕ್ಕೆ ತಲುಪಲಿದೆ” ಎಂದು ತಿಳಿಸಿದ್ದಾರೆ. “ನಾವು 2025ರ ಹೊತ್ತಿಗೆ ಮಿಗ್-21 ಜೆಟ್ ವಿಮಾನಗಳ ಹಾರಾಟವನ್ನು ಸ್ಥಗಿತಗೊಳಿಸಲಿದ್ದೇವೆ ಹಾಗೂ ಮಿಗ್-21 ಜೆಟ್ ವಿಮಾನಗಳ ಬದಲಿಗೆ ಎಲ್ಸಿಎ ಮಾರ್ಕ್-1ಎ ನಿಯೋಜಿಸಲಿದ್ದೇವೆ. ಇದೇ ಪ್ರಸ್ತಾವನೆಯು ಅಸ್ತಿತ್ವದಲ್ಲಿದೆ. ಮುಂದಿನ ತಿಂಗಳು ಅಥವಾ ಅದರೊಳಗೆ ಎರಡನೆ ಸರಣಿಯ ಎಲ್ಸಿಎ ಮಾರ್ಕ್-1ಎ ಜೆಟ್ ವಿಮಾನಗಳಿಗೆ ಸಂಖ್ಯಾಫಲಕಗಳನ್ನು ಅಳವಡಿಸಲಾಗುತ್ತದೆ. ನಂತರ ಮೂರನೆಯ ಸರಣಿಯ ಎಲ್ಸಿಎ ಮಾರ್ಕ್-1ಎ ಜೆಟ್ ವಿಮಾನಗಳು ಬಹುಶಃ ಮುಂದಿನ ವರ್ಷ ವಾಯುಪಡೆಯನ್ನು ಸೇರ್ಪಡೆಯಾಗಲಿವೆ. ಸೇವೆಯಿಂದ ಹಿಂದೆ ಸರಿಯುತ್ತಿರುವ ಮಿಗ್-21 ಜೆಟ್ ವಿಮಾನಗಳ ನಿರ್ವಾತವನ್ನು ಎಲ್ಸಿಎ ಮಾರ್ಕ್-1ಎ ಜೆಟ್ ವಿಮಾನಗಳು ತುಂಬಲಿವೆ” ಎಂದು ಅವರು ಹೇಳಿದ್ದಾರೆ. ಐತಿಹಾಸಿಕ ಮಿಗ್-21 ಜೆಟ್ ವಿಮಾನಗಳು ಜಗತ್ತಿನ ಯಾವುದೇ ಮೂಲೆಯಲ್ಲಿ ನಡೆಯುವ ವಿಮಾನ ಹಾರಾಟದಲ್ಲಿ ಬಹುಶಃ ತಮ್ಮ ಕೊನೆಯ ಹಾರಾಟವನ್ನು ನಡೆಸಲಿವೆ ಎಂದು ಪತ್ರಿಕಾಗೋಷ್ಠಿಯ ಸಂದರ್ಭದಲ್ಲಿ ಪ್ರಕಟಿಸಲಾಗಿದೆ. 60 ವರ್ಷಗಳಿಂದ ಭಾರತೀಯ ವಾಯುಪಡೆಯಲ್ಲಿ ಸೇವೆ ಸಲ್ಲಿಸುತ್ತಿರುವ ಮಿಗ್-21 ಜೆಟ್ ವಿಮಾನಗಳು ಇತ್ತೀಚಿನ ದಿನಗಳಲ್ಲಿ ಹಲವು ಅಪಘಾತಗಳಿಗೆ ಈಡಾಗಿವೆ.
ಕುರುಬ ಸಮುದಾಯವನ್ನು ‘ಎಸ್ಟಿ’ಗೆ ಸೇರಿಸಲು ಕೇಂದ್ರಕ್ಕೆ ಒತ್ತಾಯ: ಸಿಎಂ ಸಿದ್ದರಾಮಯ್ಯ
ಬೆಳಗಾವಿ, ಅ.3: ಗುಲ್ಬರ್ಗ, ಬೀದರ್, ಯಾದಗಿರಿಯಲ್ಲಿ ಗೊಂಡ, ರಾಜಗೊಂಡ ಕುರುಬ ಸಮುದಾಯದವರು ಎಸ್ಟಿಗೆ ಸೇರಿದ್ದರೆ, ಕೊಡಗು ಜಿಲ್ಲೆಯಲ್ಲಿ ಎಲ್ಲ ಕುರುಬರು ಎಸ್ಟಿಗೆ ಸೇರಿದ್ದಾರೆ. ಕುರುಬರು ಮತ್ತು ಗೊಂಡ ಸಮುದಾಯಗಳನ್ನು ಎಸ್ಟಿಗೆ ಸೇರಿಸಬೇಕು ಎಂದು ಕೇಂದ್ರಕ್ಕೆ ಶಿಫಾರಸ್ಸು ಮಾಡಲಾಗಿದೆ. ಈಗ ಈ ವಿಚಾರವು ಕೇಂದ್ರ ಸರಕಾರದ ಅಂಗಳದಲ್ಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ಮಂಗಳವಾರ ಬೆಳಗಾವಿಯ ನೆಹರೂ ನಗರದ ಜಿಲ್ಲಾ ಕ್ರೀಡಾ ಮೈದಾನದಲ್ಲಿ ನಡೆದ ಶೆಫರ್ಡ್ ಇಂಡಿಯಾ ಇಂಟರ್ ನ್ಯಾಷನಲ್ನ 9ನೆ ರಾಷ್ಟ್ರೀಯ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಅನೇಕ ರಾಜ್ಯಗಳಲ್ಲಿ ಕುರುಬ ಸಮುದಾಯದವರು ಎಸ್.ಸಿ, ಎಸ್.ಟಿ., ಹಿಂದುಳಿದ ವರ್ಗ ಹಾಗೂ ಸಾಮಾನ್ಯ ವರ್ಗದಲ್ಲಿಯೂ ಇದ್ದಾರೆ. ಗೊಲ್ಲರು, ಕುರುಬರು, ಕೋಳಿ ಸಮಾಜವು ಸೇರಿದಂತೆ ವಿವಿಧ ಸಮಾಜಗಳನ್ನು ಎಸ್.ಟಿ ಸಮುದಾಯಕ್ಕೆ ಸೇರಿಸುವಂತೆ ಕೇಂದ್ರಕ್ಕೆ ಒತ್ತಾಯಿಸುವುದಾಗಿ ತಿಳಿಸಿದರು. ಸ್ವಾತಂತ್ರ್ಯ ಬಂದು 76 ವರ್ಷಗಳಾದರೂ ಎಲ್ಲರಿಗೂ ಸಾಮಾಜಿಕ ನ್ಯಾಯ ದೊರೆತಿಲ್ಲ. ಇನ್ನೂ ಕೂಡ ಅನೇಕ ಜಾತಿಗಳು ವಿಧಾನಸೌಧದ ಮೆಟ್ಟಿಲು ಹತ್ತಲು ಸಾಧ್ಯವಾಗಿಲ್ಲ. ದೇಶದಲ್ಲಿ ಹಾಗೂ ಕರ್ನಾಟಕದಲ್ಲಿ ಈಗಲೂ ಇಂಥ ಸ್ಥಿತಿ ಇದೆ. ಪ್ರತಿಯೊಂದು ಸಮುದಾಯವು ಮುಖ್ಯವಾಹಿನಿಗೆ ಬರದೆ ಸಮಸಮಾಜದ ನಿರ್ಮಾಣ ಸಾಧ್ಯವಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು.
ಸನ್ನಿ ಡಿಯೋಲ್ ಚಿತ್ರಕ್ಕೆ ಬಂಡವಾಳ ಹಾಕಲಿರುವ ಆಮಿರ್ ಖಾನ್
ʼಗದಾರ್ -2ʼ ಬಳಿಕ ಬಾಲಿವುಡ್ ನಲ್ಲಿ ಮತ್ತೆ ತನ್ನ ಚಾಪು ಮೂಡಿಸಿದ ಸನ್ನಿ ಡಿಯೋಲ್, ಆಮಿರ್ ಖಾನ್ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾವನ್ನು ನಿರ್ದೇಶಕ ರಾಜ್ ಕುಮಾರ್ ಸಂತೋಷಿ ನಿರ್ದೇಶನ ಮಾಡಲಿದ್ದು, ಆಮಿರ್ ಖಾನ್ ಪ್ರೊಡಕ್ಷನ್ಸ್ ಸಿನಿಮಾಕ್ಕೆ ಬಂಡವಾಳ ಹೂಡಲಿದೆ.
Loan: ಸೋಲಾರ್ ವಿದ್ಯುತ್ ತಯಾರಿಸಲು ಲೋನ್ ಕೊಡಲ್ಲ ಎಂದಾಗ ಏನು ಮಾಡಬೇಕು?
ಸೋಲಾರ್ ವಿದ್ಯುತ್ (Solar Power) ಅನ್ನು ಅಳವಡಿಸಲು ಬ್ಯಾಂಕ್ ನಿಂದ ಸಾಲ (Loan) ಸೌಲಭ್ಯ ಕೂಡ ಇದೆ, ಅದ್ರೆ ಕೆಲವು ಬ್ಯಾಂಕ್ ನಲ್ಲಿ ಸಾಲ ನೀಡಲು ನಿರಕರಿಸುತ್ತಾರೆ, ಆ ಸಂದರ್ಭದಲ್ಲಿ ನೀವು ಏನು ಮಾಡಬಹುದು, ಹೌದು ಇದೇ ರೀತಿಯಾಗಿ ಬ್ಯಾಂಕ್ ನಲ್ಲಿ ಸಾಲ ಕೊಡಲು ನಿರಾಕರಿಸಿದಾಗ ದಾವಣಗೆರೆಯ ವ್ಯಕ್ತಿ ಯೊಬ್ಬರು ನರೇಂದ್ರ ಮೋದಿ (Narendra Modi) ಯವರಿಗೆ ಪತ್ರ ಬರೆದಿದ್ದಾರೆ, ಇವರಿಗೆ ನರೆಂದ್ರ ಮೋದಿ ಪ್ರತ್ಯುತ್ತರ ಸಹ ನೀಡಿದ್ದು, ಬ್ಯಾಂಕ್ ನಲ್ಲಿ ಮತ್ತೆ ಸಾಲ ಕೇಳಿದಾಗ ಸಾಲ ನೀಡಿದ್ದಾರೆ ಎಂದು ತಿಳಿಸಿದ್ದಾರೆ. The post Loan: ಸೋಲಾರ್ ವಿದ್ಯುತ್ ತಯಾರಿಸಲು ಲೋನ್ ಕೊಡಲ್ಲ ಎಂದಾಗ ಏನು ಮಾಡಬೇಕು? appeared first on Karnataka Times .
ರಾಜ್ಯ ಸರಕಾರವು ಸಿಆರ್ಪಿಸಿ ಸೆಕ್ಷನ್ 372 ಅಡಿ ಮೇಲ್ಮನವಿ ಸಲ್ಲಿಸಲು ಅವಕಾಶವಿಲ್ಲ: ಹೈಕೋರ್ಟ್
ಬೆಂಗಳೂರು, ಅ.3: ಅಪರಾಧ ದಂಡ ಸಂಹಿತೆಯಲ್ಲಿ ಸೆಕ್ಷನ್ 372 ಅಡಿ ರಾಜ್ಯ ಸರಕಾರವು ತಾನೇ ಸಂತ್ರಸ್ತ ಎಂದು ಪರಿಗಣಿಸಿ ಆರೋಪಿಗಳು ಖುಲಾಸೆಯಾಗಿರುವುದನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲು ಕಾನೂನಿನಲ್ಲಿ ಅವಕಾಶವಿಲ್ಲ ಎಂದು ಹೈಕೋರ್ಟ್ ಆದೇಶಿಸಿದೆ. ಒಂದೊಮ್ಮೆ ಸರಕಾರ ಮೇಲ್ಮನವಿ ಸಲ್ಲಿಸಬೇಕೆಂದಾದರೆ ಸೆಕ್ಷನ್ 378ರಡಿ ಪ್ರತ್ಯೇಕವಾಗಿ ಅರ್ಜಿ ಸಲ್ಲಿಸಬೇಕು ಎಂದು ನ್ಯಾಯಾಲಯ ಹೇಳಿದೆ. ಕಡೂರಿನ ಅಧೀನ ನ್ಯಾಯಾಲಯ ಆರೋಪಿಗಳನ್ನು ಖುಲಾಸೆಗೊಳಿಸಿದ್ದನ್ನು ಪ್ರಶ್ನಿಸಿ ರಾಜ್ಯ ಸರಕಾರವು ಸಲ್ಲಿಸಿದ್ದ ಮೇಲ್ಮನವಿಯನ್ನು ಹೈಕೋರ್ಟ್ ನ್ಯಾಯಪೀಠ ವಿಚಾರಣೆ ನಡೆಸಿತು. ಸಿಆರ್ಪಿಸಿ ಸೆಕ್ಷನ್ 372 ಆರೋಪಿಯನ್ನು ಖುಲಾಸೆಗೊಳಿಸಿರುವುದನ್ನು ಪ್ರಶ್ನಿಸಿ ಅಥವಾ ಆರೋಪಿಗೆ ವಿಧಿಸಿರುವ ಶಿಕ್ಷೆಯ ಪ್ರಮಾಣ ಕಡಿಮೆ ಎಂದು ಆಕ್ಷೇಪಿಸಿ ಸಂತ್ರಸ್ತರು ನ್ಯಾಯಾಲಯಗಳು ನೀಡಿರುವ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸಲು ಇರುವ ಅವಕಾಶವಾಗಿದೆ. ಪ್ರಕರಣವನ್ನು ಆಲಿಸಿದ ನ್ಯಾಯಪೀಠವು ಸಿಆರ್ಪಿಸಿ ಕಾಯಿದೆ ಸೆಕ್ಷನ್ 372 ಅಡಿ ಸಂತ್ರಸ್ತರಿಗೆ ಮಾತ್ರ ಮೇಲ್ಮನವಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಅದೇ ರೀತಿ ಸೆಕ್ಷನ್ 378(1) ಮತ್ತು (3)ರಲ್ಲಿ ರಾಜ್ಯ ಸರಕಾರಕ್ಕೆ ಮೇಲ್ಮನವಿ ಸಲ್ಲಿಸಲು ಪ್ರತ್ಯೇಕ ಅವಕಾಶವಿದೆ. ಎರಡೂ ಬೇರೆ ಬೇರೆ ಸೆಕ್ಷನ್ಗಳಾಗಿವೆ. ಹೀಗಾಗಿ, ಸಂತ್ರಸ್ತರು ಸೆಕ್ಷನ್ 372 ಅಡಿ ಸಲ್ಲಿಸಬೇಕಾದ ಮೇಲ್ಮನವಿಯನ್ನು ಸರಕಾರ ಸಲ್ಲಿಸಲು ಸಾಧ್ಯವಿಲ್ಲ. ಸರಕಾರ ತಾನೇ ಸೆಕ್ಷನ್ 378 ಅಡಿ ಪ್ರತ್ಯೇಕ ಮೇಲ್ಮನವಿ ಸಲ್ಲಿಸಬಹುದಾಗಿದೆ ಎಂದು ಆದೇಶಿಸಿತು. ಅಲ್ಲದೆ, ಅದೇ ಕಾರಣಕ್ಕಾಗಿ ವಿಚಾರಣಾಧೀನ ನ್ಯಾಯಾಲಯ ಆರೋಪಿಗಳನ್ನು ಖುಲಾಸೆಗೊಳಿಸಿ ಮಾಡಿದ್ದ ಆದೇಶವನ್ನು ಪ್ರಶ್ನಿಸಿದ್ದ ಮೇಲ್ಮನವಿಯನ್ನು ವಜಾಗೊಳಿಸಿತು. ಪ್ರಕರಣದಲ್ಲಿ ನ್ಯಾಯಾಲಯಕ್ಕೆ ಸಹಕರಿಸಲು ಅಮಿಕಸ್ ಕ್ಯೂರಿಯಾಗಿದ್ದ ವಕೀಲ ಎಸ್. ಜಾವೇದ್ ಅವರು ರಾಜ್ಯ ಸರಕಾರ ತಾನೇ ಬಾದಿತ ವ್ಯಕ್ತಿ ಎಂದು ಭಾವಿಸಿ ಸಿಆರ್ಪಿಸಿ ಸೆಕ್ಷನ್ 372 ಅಡಿ ಮೇಲ್ಮನವಿ ಸಲ್ಲಿಸಲು ಕಾನೂನಿನಲ್ಲಿ ಅವಕಾಶವಿಲ್ಲ ಎಂದು ಪೀಠಕ್ಕೆ ತಿಳಿಸಿದ್ದರು. ಆ ವಾದ ಒಪ್ಪಿದ ಪೀಠವು ಅಪರಾಧ ಪ್ರಕರಣಗಳಲ್ಲಿ ವಿಚಾರಣಾಧೀನ ನ್ಯಾಯಾಲಯಗಳ ಆದೇಶಗಳನ್ನು ಪ್ರಶ್ನಿಸಲು ಸಂತ್ರಸ್ತರಿಗೆ ಮತ್ತು ಸರಕಾರಕ್ಕೆ ಅಪರಾಧ ದಂಡ ಸಂಹಿತೆಯ ಬೇರೆ ಬೇರೆ ಸೆಕ್ಷನ್ಗಳಲ್ಲಿ ಅವಕಾಶ ನೀಡಲಾಗಿದೆ. ಹೀಗಾಗಿ, ಅವುಗಳು ಅದೇ ಸೆಕ್ಷನ್ನಲ್ಲಿ ಮಾತ್ರ ಮೇಲ್ಮನವಿ ಸಲ್ಲಿಸಬೇಕು. ಸರಕಾರ ಸಂತ್ರಸ್ತರಿಗೆ ಲಭ್ಯವಿರುವ ನಿಯಮದಲ್ಲಿ ಮೇಲ್ಮನವಿ ಸಲ್ಲಿಸಲಾಗದು ಎಂದು ಹೇಳಿದೆ.
ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದ ಯುವಕ ನಾಪತ್ತೆ
ಉಡುಪಿ, ಅ.3: ಕಾರ್ಕಳ ತಾಲೂಕು ದುರ್ಗ ಗ್ರಾಮದ ಮಲೆಹಿತ್ಲು ನಿವಾಸಿ ಸಂದೇಶ ಶೆಟ್ಟಿ (30) ಎಂಬ ಯುವಕ ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದು, ಸೆಪ್ಟಂಬರ್ 30ರಂದು ರಾತ್ರಿ 9 ಗಂಟೆಯ ಸುಮಾರಿಗೆ ಮನೆ ಯಿಂದ ಹೊರಗೆ ಹೋದವರು ವಾಪಾಸು ಬಾರದೇ ನಾಪತ್ತೆಯಾಗಿದ್ದಾರೆ. 5 ಅಡಿ 7 ಇಂಚು ಎತ್ತರ, ಗೋಧಿ ಮೈಬಣ್ಣ, ಕೋಲು ಮುಖ, ಸಪೂರ ಶರೀರ ಹೊಂದಿದ್ದು, ಕನ್ನಡ, ತುಳು ಹಾಗೂ ಹಿಂದಿ ಭಾಷೆ ಮಾತನಾಡುತ್ತಾರೆ. ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಪ್ರಕಟಣೆ ತಿಳಿಸಿದೆ.
ಶೀಘ್ರದಲ್ಲಿಯೇ ಪರಿಶಿಷ್ಟರಿಗೆ ಪ್ರತ್ಯೇಕ ಸಚಿವಾಲಯ: ಸಚಿವ ಬಿ.ನಾಗೇಂದ್ರ
ಬೆಂಗಳೂರು, ಅ.3: ಪರಿಶಿಷ್ಟ ಸಮುದಾಯದ ಏಳಿಗೆಗಾಗಿ ಪ್ರತ್ಯೇಕ ಸಚಿವಾಲಯ ರಚಿಸುವ ಬಗ್ಗೆ ಶೀಘ್ರದಲ್ಲಿಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ನಿರ್ಧಾರ ಮಾಡಲಿದ್ದಾರೆ ಎಂದು ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವ ಬಿ.ನಾಗೇಂದ್ರ ಹೇಳಿದ್ದಾರೆ. ಮಂಗಳವಾರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಪ್ರತ್ಯೇಕ ಸಚಿವಾಲಯ ಬೇಡಿಕೆ ಇದೆ. ಈ ಸಂಬಂಧ ಸಮುದಾಯದ ಹಲವು ಮುಖಂಡರು ಮನವಿಗಳನ್ನು ಮಾಡುತ್ತಾ ಬಂದಿದ್ದು, ಮುಖ್ಯಮಂತ್ರಿಗಳು ಸಹ ಕೆಲವೇ ದಿನಗಳಲ್ಲಿ ಪ್ರತ್ಯೇಕ ಸಚಿವಾಲಯ ರಚಿಸುವ ಭರವಸೆ ಕೊಟ್ಟಿದ್ದಾರೆ ಎಂದರು. ಇನ್ನೂ, ಪ್ರತಿಯೊಂದು ಜಾತಿಯಲ್ಲೂ ಸಮರ್ಥ ಅಧಿಕಾರಿಗಳಿದ್ದಾರೆ. ಜಾತಿ ಆಧಾರದಲ್ಲಿ ಸರ್ಕಾರ ರಚನೆ ಮಾಡಲು ಆಗಲ್ಲ,ಹೀಗಾಗಿ, ಶಾಸಕ ಶಾಮನೂರು ಶಿವಶಂಕರಪ್ಪ ನೀಡಿರುವ ಹೇಳಿಕೆ ವೈಯಕ್ತಿಕವಾಗಿದೆ ಎಂದ ಅವರು, ಕಾಂಗ್ರೆಸ್ ಸರ್ವರಿಗೂ ಸಮಪಾಲು ಸಮಪಾಲು ನೀಡಿದೆ. ಸರಕಾರದಲ್ಲಿ ಜಾತಿ ಬರಲ್ಲ. ಶಾಮನೂರು ಶಿವಶಂಕರಪ್ಪ ಲಿಂಗಾಯತ ಮಹಾಸಭೆಯ ರಾಷ್ಟ್ರಿಯ ಅಧ್ಯಕ್ಷರಾಗಿ ಹೇಳಿಕೆ ಕೊಡುವುದು ತಪ್ಪಲ್ಲ, ಆದರೆ ಶಾಮನೂರು ಆರೋಪಕ್ಕೆ ಮಾನ್ಯತೆ ಕೊಡಬೇಕೋ ಬೇಡವೋ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಿರ್ಧಾರ ಮಾಡುತ್ತಾರೆ ಎಂದು ಹೇಳಿದರು.
ಮುಂಗಾರು ಬೆಳೆ ಸಮೀಕ್ಷೆ: ಬೆಳೆ ದಾಖಲಾತಿಗೆ ರೈತರಿಗೆ ಅವಕಾಶ
ಉಡುಪಿ, ಅ.3: ಕೃಷಿ ಇಲಾಖೆಯ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಮುಂಗಾರು ಹಂಗಾಮಿನಲ್ಲಿ ರೈತರ ಮೊಬೈಲ್ ಆ್ಯಪ್ ಮೂಲಕ ರೈತರಿಂದಲೇ ಬೆಳೆ ಸಮೀಕ್ಷೆ ಕಾರ್ಯಕ್ಕೆ ಈಗಾಗಲೇ ಚಾಲನೆ ನೀಡಲಾಗಿದ್ದು, ಕೃಷಿ ಹಾಗೂ ಸಹ ಇಲಾಖೆಗಳ ಫ್ರೂಟ್ಸ್ ತಂತ್ರಾಂಶದ ಎಫ್.ಐ.ಡಿ ಸಂಖ್ಯೆಯನ್ನು ಹೊಂದಿರುವ ರೈತರು ಗೂಗಲ್ ಪ್ಲೇ ಸ್ಟೋರ್ನಿಂದ ‘ಮುಂಗಾರು ರೈತರ ಬೆಳೆ ಸಮೀಕ್ಷೆ-2023’ ಆ್ಯಪ್ನ್ನು ಡೌನ್ಲೋಡ್ ಮಾಡಿಕೊಂಡು ಸಮೀಕ್ಷೆ ಯನ್ನು ಕೈಗೊಳ್ಳಬಹುದಾಗಿದೆ. ಬೆಳೆ ಸಮೀಕ್ಷೆ ಮಾಹಿತಿಯನ್ನು ಪ್ರಕೃತಿ ವಿಕೋಪಗಳ ಪರಿಹಾರ ವಿತರಣೆ, ಬೆಂಬಲ ಬೆಲೆ ಯೋಜನೆಯ ಅರ್ಹ ಫಲಾನು ಭವಿಗಳ ಗುರುತಿಸುವಿಕೆ, ಬೆಳೆ ವಿಮೆ ಯೋಜನೆ ಅನುಷ್ಠಾನ, ಋತುಮಾನವಾರು ವಿವಿಧ ಬೆಳೆಗಳ ವಿಸ್ತೀರ್ಣ ವರದಿ ಕಾರ್ಯ, ಬೆಳೆ ಕಟಾವು ಪ್ರಯೋಗ ಅನುಷ್ಠಾನ, ಕೃಷಿ, ತೋಟಗಾರಿಕೆ ಹಾಗೂ ರೇಷ್ಮೆ ಇಲಾಖೆಗಳ ಫಲಾನುಭವಿ ಆಧಾರಿ ತಯೋಜನೆಗಳ ಅನುಷ್ಠಾನ ಹಾಗೂ ಪಹಣಿಯಲ್ಲಿ ಬೆಳೆ ವಿವರ ದಾಖಲಿಸಲು ಬಳಸಲಾಗುವುದು. ರೈತರು ತಮ್ಮ ಜಮೀನಿನ ಬೆಳೆ ವಿವರವನ್ನು ಯಾವುದೇ ಲೋಪ ದೋಷಗಳಿಗೆ ಆಸ್ಪದವಿಲ್ಲದಂತೆ ತಾವೇ ದಾಖಲಿಸುವು ದರಿಂದ ಬೆಳೆ ವಿಮೆ ಪರಿಹಾರ, ಬೆಳೆ ಹಾನಿ ಪರಿಹಾರ ಹಾಗೂ ಇತರೆ ಕೃಷಿ/ತೋಟಗಾರಿಕೆ ಇಲಾಖೆಗಳ ಸವಲತ್ತುಗಳ ವಿತರಣೆಯಲ್ಲಿ ಯಾವುದೇ ವ್ಯತ್ಯಾಸಗಳಾಗದೇ ಸಂಪೂರ್ಣ ಪ್ರಯೋಜನ ದೊರೆಯಲಿದೆ. ಜಿಲ್ಲೆಯ ರೈತರು ನಿಗದಿತ ಅವಧಿಯೊಳಗೆ ರೈತರ ಬೆಳೆ ಸಮೀಕ್ಷೆ ಮೊಬೈಲ್ ಆ್ಯಪ್ನಲ್ಲಿ ತಮ್ಮ ಜಮೀನಿನ ಸರ್ವೆ ನಂಬರ್ ವಾರು ಬೆಳೆ ವಿವರವನ್ನು ನಿಖರವಾಗಿ ದಾಖಲಿಸಿ ಮುಂಗಾರು-2023ರ ಬೆಳೆ ಸಮೀಕ್ಷೆ ಕಾರ್ಯವನ್ನು ಸಂಪೂರ್ಣವಾಗಿ ಯಶಸ್ವಿಗೊಳಿಸುವಂತೆ ಜಿಲ್ಲಾಧಿಕಾರಿಡಾ.ಕೆ. ವಿದ್ಯಾಕುಮಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕರ್ನಾಟಕ ನೈರುತ್ಯ ಪದವೀಧರರ, ಶಿಕ್ಷಕರ ಕ್ಷೇತ್ರದ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗೆ ಅವಕಾಶ
ಉಡುಪಿ, ಅ.3: ಭಾರತ ಚುನಾವಣಾ ಆಯೋಗ ಮೈಸೂರು ವಿಭಾಗದ ಪ್ರಾದೇಶಿಕ ಆಯುಕ್ತರನ್ನು ಕರ್ನಾಟಕ ನೈರುತ್ಯ ಪದವೀಧರರ ಕ್ಷೇತ್ರ ಹಾಗೂ ಶಿಕ್ಷಕರ ಕ್ಷೇತ್ರದ ಮತದಾರರ ನೋಂದಣಾಧಿಕಾರಿಯನ್ನಾಗಿ ಹಾಗೂ ಈ ಚುನಾವಣಾ ಕ್ಷೇತ್ರ ವ್ಯಾಪ್ತಿಗೊಳಪಡುವ ಉಡುಪಿ,ದಕ್ಷಿಣ ಕನ್ನಡ, ಶಿವಮೊಗ್ಗ, ದಾವಣಗೆರೆ (ಹೊನ್ನಾಳಿ, ನ್ಯಾಮತಿ ಮತ್ತು ಚನ್ನಗಿರಿ ತಾಲೂಕು ಗಳು), ಚಿಕ್ಕಮಗಳೂರು ಹಾಗೂ ಕೊಡಗು ಜಿಲ್ಲೆಯ ಜಿಲ್ಲಾಧಿಕಾರಿಗಳನ್ನು, ಆಯಾ ಉಪವಿಭಾಗಕ್ಕೆ ಸಂಬಂಧಪಟ್ಟ ಎಲ್ಲಾ ಸಹಾಯಕ ಆಯುಕ್ತರು, ವಿಭಾಗದ ಎಲ್ಲಾ ಸಂಬಂಧಪಟ್ಟ ತಾಲೂಕಿನ ತಹಶೀಲ್ದಾರರನ್ನು ಸಹಾಯಕ ಮತದಾರರ ನೋಂದಣಾಧಿಕಾರಿಯನ್ನಾಗಿ ನೇಮಿಸಿದೆ. ಅರ್ಹತಾ ದಿನಾಂಕವಾಗಿ 2023ರ ನವೆಂಬರ್ 1ಕ್ಕೆ ಕರ್ನಾಟಕ ನೈರುತ್ಯ ಪದವೀಧರರ ಕ್ಷೇತ್ರ ಹಾಗೂ ಶಿಕ್ಷಕರ ಕ್ಷೇತ್ರದ ಮತದಾರರ ಪಟ್ಟಿಯನ್ನು ನೂತನವಾಗಿ ಸಿದ್ಧಪಡಿಸುವ ಕಾರ್ಯ ಈಗಾಗಲೇ ಪ್ರಾರಂಭವಾಗಿದೆ. ಭಾರತ ಚುನಾವಣಾ ಆಯೋಗ, ಕರ್ನಾಟಕ ನೈರುತ್ಯ ಪದವೀಧರರ ಹಾಗೂ ಶಿಕ್ಷಕರ ಮತಕ್ಷೇತ್ರದ ಮತದಾರರ ಪಟ್ಟಿ ಯನ್ನು ನೂತನವಾಗಿ ಸಿದ್ದಪಡಿಸುತ್ತಿದ್ದು, ಈ ಹಿಂದಿನ ನೈರುತ್ಯ ಪದವೀಧರರ ಹಾಗೂ ಶಿಕ್ಷಕರ ಕ್ಷೇತ್ರದ ಮತದಾರರ ಪಟ್ಟಿಯಲ್ಲಿ ಹೆಸರು ಇರುವವರು ಸಹ ನಮೂನೆ 18ರಲ್ಲಿ ಹಾಗೂ ಶಿಕ್ಷಕರ ಕ್ಷೇತ್ರದ ಮತದಾರರು ನಮೂನೆ 19ರಲ್ಲಿ ಹೊಸದಾಗಿ ಅರ್ಜಿ ಸಲ್ಲಿಸಬೇಕು. ನೈರುತ್ಯ ಪದವೀಧರರ ಹಾಗೂ ಶಿಕ್ಷಕರ ಕ್ಷೇತ್ರದ ಮತದಾರರ ಪಟ್ಟಿಯನ್ನು ಸಿದ್ಧಪಡಿಸಲು ಈ ಕೆಳಗಿನಂತೆ ವೇಳಾಪಟ್ಟಿ ಯನ್ನು ನಿಗದಿಪಡಿಸಲಾಗಿದೆ. ಪದವೀಧರರ ಕ್ಷೇತ್ರದ ಮತದಾರರ ಅರ್ಜಿ ನಮೂನೆ 18 ಹಾಗೂ ಶಿಕ್ಷಕರ ಕ್ಷೇತ್ರದ ಮತದಾರರ ಅರ್ಜಿ ನಮೂನೆ 19ರಲ್ಲಿ ಅರ್ಜಿಯನ್ನು ಸ್ವೀಕರಿಸಲು ನವೆಂಬರ್ 6 ಕೊನೆಯ ದಿನ, ಕರಡು ಮತದಾರರ ಪಟ್ಟಿಯನ್ನು ನವೆಂಬರ್ 23ರಂದು ಪ್ರಕಟಿಸಲಿದ್ದು, ಹಕ್ಕು ಮತ್ತು ಆಕ್ಷೇಪಣೆಗಳನ್ನು ನವೆಂಬರ್ 23 ರಿಂದ ಡಿಸೆಂಬರ್ 9ರೊಳಗೆ ಸಲ್ಲಿಸಬಹುದು. ಅಂತಿಮ ಮತದಾರರ ಪಟ್ಟಿಯನ್ನು ಡಿಸೆಂಬರ್ 30ರಂದು ಪ್ರಕಟಿಸಲಾಗುವುದು. ಪದವೀಧರರ ಕ್ಷೇತ್ರದ ಮತದಾರರ ಮಾರ್ಗಸೂಚಿಗಳು: ಅರ್ಹ ಪದವೀಧರರು ಮೂಲ ಪ್ರಮಾಣ ಪತ್ರ ಮತ್ತು ಅದರ ಪ್ರತಿಯನ್ನು ಸ್ವಯಂ ದೃಢೀಕರಿಸಿಕೊಂಡು, ಗೊತ್ತುಪಡಿಸಿದ ಅಧಿಕಾರಿಯ ಮುಂದೆ ಖುದ್ದು ಹಾಜರಾಗಿ ಅವರಿಂದ ದೃಢೀಕ ರಿಸಿಕೊಂಡು ಅವರಲ್ಲಿಯೇ ಅರ್ಜಿಯನ್ನು ಕಡ್ಡಾಯವಾಗಿ ನೀಡಬೇಕು. ಯಾವುದೇ ವ್ಯಕ್ತಿ ಅಂಚೆ ಮೂಲಕ ಮತದಾರರ ನೋಂದಣಾಧಿಕಾರಿಗಳಿಗೆ ಸಲ್ಲಿಸಿದ್ದಲ್ಲಿ ಅಂತಹ ಅರ್ಜಿದಾರರಿಗೆ ಗೊತ್ತು ಪಡಿಸಿದ ಅಧಿಕಾರಿಯು ವಿಚಾರಣೆಗೆ ಹಾಜರಾ ಗಲು ನೋಟೀಸ್ ನೀಡಲಿದ್ದು, ವಿಚಾರಣೆಗೆ ಹಾಜರಾಗದೇ ಅಥವಾ ದಾಖಲೆಗಳನ್ನು ಹಾಜರುಪಡಿಸದಿದ್ದಲ್ಲಿ ಅರ್ಜಿಗಳು ತಿರಸ್ಕೃತಗೊಳ್ಳುತ್ತವೆ. ಕರ್ನಾಟಕ ನೈರುತ್ಯ ಪದವೀಧರರ ಮತದಾರರ ಪಟ್ಟಿಗೆ ಸಂಬಂಧಿಸಿದಂತೆ ಆಕ್ಷೇಪಣೆಗಳು ಇದ್ದಲ್ಲಿ ಮತದಾರರ ನೋಂದಣಾಧಿಕಾರಿಗಳು ಹಾಗೂ ಸಹಾಯಕ ಮತದಾರರ ನೋಂದಣಾಧಿಕಾರಿಗಳ ಕಚೇರಿಯಲ್ಲಿ ಮತ್ತು ಸಂಬಂಧಪಟ್ಟ ವಿಧಾನಸಭಾ ಮತಕ್ಷೇತ್ರದ ಸಹಾಯಕ ಮತದಾರರ ಉಪನೋಂದಣಾಧಿಕಾರಿಗಳ ಕಾರ್ಯಾಲಯದಲ್ಲಿ (ತಹಶೀಲ್ದಾರ್ ಕಚೇರಿ) ನಿಗದಿಪಡಿಸಿದ ಕಾಲಮಿತಿಯೊಳಗೆ ಸಲ್ಲಿಸಬೇಕು. ಕರ್ನಾಟಕ ನೈರುತ್ಯ ಶಿಕ್ಷಕರ ಮತ ಕ್ಷೇತ್ರದ ಮತದಾರರ ಪಟ್ಟಿಯಲ್ಲಿ ಹೆಸರು ನೊಂದಾಯಿಸಲು ಮಾರ್ಗಸೂಚಿಗಳು: ಭಾರತದ ಪ್ರಜೆಯಾಗಿರುವ ಮತ್ತು ಈ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಸಾಮಾನ್ಯ ನಿವಾಸಿಯಾಗಿರುವ ಮತ್ತು 2023ರ ನವೆಂಬರ್ 1ಕ್ಕೆ ಮೊದಲು ಅರು ವರ್ಷಗಳ ಅವಧಿಯಲ್ಲಿ ಕನಿಷ್ಠ ಮೂರು ವಷರ್ ಪ್ರೌಢಶಾಲೆಗಿಂತ ಕಡಿಮೆಯಲ್ಲದ ನಿರ್ದಿಷ್ಟಪಡಿಸಿದಂತಹ ರಾಜ್ಯದೊಳಗಿನ ಯಾವುದೇ ಶೈಕ್ಷಣಿಕ ಸಂಸ್ಥೆಗಳಲ್ಲಿ ಬೋಧನಾ ವೃತ್ತಿಯಲ್ಲಿ ನಿರತವಾಗಿರುವ ಪ್ರತಿಯೊಬ್ಬ ವ್ಯಕ್ತಿಯು ಮತದಾರರ ಪಟ್ಟಿಯಲ್ಲಿ ತನ್ನ ಹೆಸರನ್ನು ಸೇರಿಸಲು ಅರ್ಹನಾಗಿರುತ್ತಾನೆ. ಯಾವುದೇ ವ್ಯಕ್ತಿಯು ನಮೂನೆ-19 ರಲ್ಲಿ ಅರ್ಜಿಯನ್ನು ಸಲ್ಲಿಸಿ, ಶಿಕ್ಷಕರ ಕ್ಷೇತ್ರದಲ್ಲಿ ಮತದಾರನಾಗಿ ನೋಂದಾಯಿಸಿ ಕೊಳ್ಳಲು ತನ್ನ ಶೈಕ್ಷಣಿಕ ಸಂಸ್ಥೆಯ ಮುಖ್ಯಸ್ಥರಿಂದ ತಾನು ಹಿಂದಿನ ಆರು ವಷರ್ಗಳಲ್ಲಿ ಒಟ್ಟು ಮೂರು ವರ್ಷ ಶಿಕ್ಷಕರಾಗಿ ಸೇವೆ ಸಲ್ಲಿಸಿರುವ ಕುರಿತು ಅರ್ಜಿಯೊಂದಿಗೆ ಪ್ರಮಾಣ ಪತ್ರವನ್ನು ಲಗತ್ತಿಸಿ ಸಲ್ಲಿಸಬೇಕು. ಅರ್ಜಿಯನ್ನು ಸಲ್ಲಿಸುವ ದಿನಾಂಕದಂದು ಯಾವುದೇ ವ್ಯಕ್ತಿಯು ಭೋದನಾ ವೃತ್ತಿಯಲ್ಲಿ ನಿರತನಾಗಿರದಿದ್ದಲ್ಲಿ, ಪ್ರಮಾಣ ಪತ್ರವನ್ನು ಅಂತಹ ವ್ಯಕ್ತಿಯು ಕೊನೆಯದಾಗಿ ಸೇವೆ ಸಲ್ಲಿಸಿದ ಸಂಸ್ಥೆಯ ಮುಖ್ಯಸ್ಥರಿಂದ ಸಹಿ ಮಾಡಿಸಿರಬೇಕು. ಖುದ್ದಾಗಿ ಅಥವಾ ಅಂಚೆ ಮುಖಾಂತರ ಒಟ್ಟಾಗಿ ಸಲ್ಲಿಸಿದ ಅರ್ಜಿಗಳನ್ನು ಮತದಾರರ ಪಟ್ಟಿಯಲ್ಲಿ ಸೇರ್ಪಡೆಗಾಗಿ ಪರಿಗಣಿಸುವುದಿಲ್ಲ. ಆದರೆ, ಸಂಸ್ಥೆಯ ಮುಖ್ಯಸ್ಥರು ಅವರ ಸಿಬ್ಬಂದಿಯ ಎಲ್ಲಾ ಅರ್ಜಿಗಳನ್ನು ಒಟ್ಟಾಗಿ ಕಳುಹಿಸಬಹುದು. ಒಂದೇ ಕುಟುಂಬದ ಇತರೆ ಸದಸ್ಯರ ನಮೂನೆ-19 ರ ಅರ್ಜಿಗಳನ್ನು ಕುಟುಂಬದ ಒಬ್ಬ ಸದಸ್ಯರು ಸಲ್ಲಿಸಬಹುದು ಹಾಗೂ ಪ್ರತಿ ಸದಸ್ಯನಿಗೆ ಸಂಬಂಧಿಸಿದಂತೆ ಮೂಲ ಪ್ರಮಾಣ ಪತ್ರಗಳನ್ನು ಒದಗಿಸಬೇಕು. ನಮೂನೆ-19ರಲ್ಲಿ ಅರ್ಜಿಗಳನ್ನು ಸಹಾಯಕ ಮತದಾರರ ನೋಂದಣಾಧಿಕಾರಿ/ ನಿಯೋಜಿತ ಅಧಿಕಾರಿಗಳ ಕಛೇರಿಯಿಂದ ಪಡೆಯಬಹುದಾಗಿದ್ದು, ಕೈಬರಹದ, ಬೆರಳಚ್ಚು ಮಾಡಿದ ಅಥವಾ ಖಾಸಗಿ ಯಾಗಿ ಮುದ್ರಿಸಿದ ನಮೂನೆಗಳನ್ನು ಕೂಡ ಅಂಗೀಕರಿಸಲಾಗುವುದು. ನಮೂನೆ -19ರ ಅರ್ಜಿಗಳನ್ನು ಒಟ್ಟಾಗಿ ಸ್ವೀಕರಿಸಲಾಗುವುದಿಲ್ಲ ಎಂದು ಕರ್ನಾಟಕ ನೈರುತ್ಯ ಪದವೀಧರರ ಕ್ಷೇತ್ರದ ಹಾಗೂ ಶಿಕ್ಷಕರ ಕ್ಷೇತ್ರದ ಮತದಾರರ ನೋಂದಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅ.4ರಂದು ಉಡುಪಿ ಜಿಲ್ಲಾ ಕಾಂಗ್ರೆಸ್ನ ಕಾರ್ಯಕಾರಿ ಸಮಿತಿ ಸಭೆ: ವೀಕ್ಷಕ ಸಚಿವ ಮಾಂಕಾಳ ವೈದ್ಯ ಭಾಗಿ
ಉಡುಪಿ, ಅ.3: ಉಡುಪಿ ಜಿಲ್ಲಾ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯು ಬುಧವಾರ ಅ.4ರಂದು ಬೆಳಗ್ಗೆ 10:00 ಗಂಟೆಗೆ ಕೋಟೇಶ್ವರದ ಸಹನಾ ಕನ್ವೆನ್ಷನ್ ಸೆಂಟರ್ನಲ್ಲಿ ನಡೆಯಲಿದೆ. ಈ ಸಭೆಯಲ್ಲಿ ಉಡುಪಿ - ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ವೀಕ್ಷಕರಾಗಿ ನಿಯುಕ್ತಿಗೊಂಡಿರುವ ರಾಜ್ಯ ಬಂದರು, ಮೀನುಗಾರಿಕೆ ಮತ್ತು ಒಳನಾಡು ಜಲಸಾರಿಗೆ ಸಚಿವ ಮಂಕಾಳ ವೈದ್ಯರು ಭಾಗವಹಿಸಲಿದ್ದಾರೆ. ಸಭೆಯಲ್ಲಿ ಮಾಜಿ ವಿಧಾನ ಪರಿಷತ್ ಸಭಾಪತಿ ಪ್ರತಾಪ್ಚಂದ್ರ ಶೆಟ್ಟಿ, ಮಾಜಿ ಸಚಿವ ವಿನಯ್ಕುಮಾರ ಸೊರಕೆ, ಮಾಜಿ ಶಾಸಕ ಗೋಪಾಲ್ ಪೂಜಾರಿ, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದಿಂದ ಸ್ಪರ್ಧಿಸಿದ ಮುಖಂಡರಾದ ಪ್ರಸಾದ್ ರಾಜ್ ಕಾಂಚನ್, ಉದಯಕುಮಾರ ಶೆಟ್ಟಿ ಮುನಿಯಾಲು, ದಿನೇಶ್ ಹೆಗ್ಡೆ ಮೊಳಹಳ್ಳಿ ಉಪಸ್ಥಿತರಿರುವರು. ಅಲ್ಲದೇ ಜಿಲ್ಲೆಯ 10 ಬ್ಲಾಕ್ಗಳ ಅಧ್ಯಕ್ಷರು, ಮುಂಚೂಣಿ ಘಟಕಗಳ ಅಧ್ಯಕ್ಷರು, ಕೆಪಿಸಿಸಿ ಸದಸ್ಯರು, ಜಿಲ್ಲಾ ಕಾಂಗ್ರೆಸ್ ಪದಾಧಿಕಾರಿಗಳು ಹಾಗೂ ಸಮಿತಿ ಸದಸ್ಯರು ಸಭೆಯಲ್ಲಿ ಭಾಗವಹಿಸುವರು ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Property Rules: ಮಕ್ಕಳ ಸಿಗ್ನೇಚರ್ ಇಲ್ಲದೆ ತಂದೆ ಆಸ್ತಿಯನ್ನು ಮಾರಾಟ ಮಾಡಿದರೆ ಏನಾಗುತ್ತೆ?
ಇಲ್ಲಿ ಇರುವಂತಹರಿಗೆ 2003ರಲ್ಲಿ ಮದುವೆ ಆಗಿದೆ ಎಂಬುದಾಗಿ ತಿಳಿದುಬಂದಿದೆ. ಅವರಿಗೆ ಒಬ್ಬ ಅಣ್ಣ ಕೂಡ ಇದ್ದು 2006ರಲ್ಲಿ ತಂದೆ ಮರಣವನ್ನು ಹೊಂದಿದ್ದಾರೆ ಎಂಬುದಾಗಿ ತಿಳಿದು ಬರುತ್ತದೆ. ಆದರೆ ತಂದೆಯ ಮರಣ ನಂತರ ಆಸ್ತಿಯನ್ನು (Property) ಹೇಳದೆ ಕೇಳದೆ ಅಣ್ಣ ಹಾಗೂ ಅಮ್ಮ ಇಬ್ಬರು ಸೇರಿಕೊಂಡು ಅವರಿಗೆ ತಿಳಿಯದಂತೆ ಅವರ ಸಿಗ್ನೇಚರ್ (Signature) ಅನು ಕೂಡ ಪಡೆದುಕೊಳ್ಳದೆ ಮಾರಾಟ ಮಾಡಿದ್ದಾರೆ ಎನ್ನುವಂತಹ ಮಾಹಿತಿ ಸಿಕ್ಕಿದೆ. The post Property Rules: ಮಕ್ಕಳ ಸಿಗ್ನೇಚರ್ ಇಲ್ಲದೆ ತಂದೆ ಆಸ್ತಿಯನ್ನು ಮಾರಾಟ ಮಾಡಿದರೆ ಏನಾಗುತ್ತೆ? appeared first on Karnataka Times .
ಎನ್ಡಿಎ ಸೇರಲು ಬಯಸಿದ್ದ ತೆಲಂಗಾಣ ಸಿಎಂ ಕೆಸಿ ರಾವ್ರನ್ನು ನಿರಾಕರಿಸಿದ್ದೇಕೆ? ಪ್ರಧಾನಿ ಮೋದಿಯಿಂದ ಕಾರಣ ಬಹಿರಂಗ!
ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಪ್ರಧಾನಿ ಮೋದಿ, ' ತೆಲಂಗಾಣದ ನನ್ನ ಸಹೋದರಿಯರು ದೊಡ್ಡ ಕ್ರಾಂತಿಯ ಭಾಗವಾಗಿದ್ದಾರೆ. ಇತಿಹಾಸವನ್ನು ಸೃಷ್ಟಿಸಿದ್ದಾರೆ. ಕೆಲವು ದಿನಗಳ ಹಿಂದೆ ನಾರಿ ಶಕ್ತಿ ವಂದನ್ ಅಧಿನಿಯಮವನ್ನು ಸಂಸತ್ತಿನಲ್ಲಿ ಅಂಗೀಕರಿಸಲಾಯಿತು. ಕಾಂಗ್ರೆಸ್ ಮತ್ತು ಅದರ ಭಾರತ ಮೈತ್ರಿ ಕಳೆದ 30 ವರ್ಷಗಳಿಂದ ಈ ಮಸೂದೆಯನ್ನು ಸ್ಥಗಿತಗೊಳಿಸಿದೆ. ಮಹಿಳೆಯರ ಸಾಮೂಹಿಕ ಶಕ್ತಿಯಿಂದಾಗಿ, ಈ ಮಸೂದೆಯನ್ನು ಅಂಗೀಕರಿಸಲು ಈ ಒಕ್ಕೂಟವು ಬೆಂಬಲಿಸಬೇಕಾಗಿದೆ' ಎಂದು ಅವರು ಹೇಳಿದರು.
ನೆಲಸಮವಾಗಲಿರುವ ಉಜ್ಜಯಿನಿ ಅತ್ಯಾಚಾರ ಆರೋಪಿಯ ನಿವಾಸ
ಭೋಪಾಲ್: ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿದ್ದ ಆರೋಪಿಯ ನಿವಾಸವು ಅಕ್ರಮವಾಗಿ ನಿರ್ಮಾಣಗೊಂಡಿದೆ ಎಂಬ ಆರೋಪವನ್ನು ಆಧರಿಸಿ ನಾಳೆ ಆತನ ನಿವಾಸವನ್ನು ನೆಲಸಮಗೊಳಿಸಲಾಗುತ್ತದೆ ಎಂದು ndtv.com ವರದಿ ಮಾಡಿದೆ. ಅರೆನಗ್ನಗೊಂಡಿದ್ದ 15 ವರ್ಷ ಬಾಲಕಿಯು ರಕ್ತ ಸುರಿಸುತ್ತಾ, ನೆರವಿಗಾಗಿ ಮನೆ ಮನೆಯ ಬಾಗಿಲು ತಟ್ಟಿರುವ ವೀಡಿಯೊಗಳು ಕಳೆದ ವಾರ ದೇಶಾದ್ಯಂತ ಆಕ್ರೋಶ ಭುಗಿಲೆಬ್ಬಿಸಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಗುರುವಾರ ಆಟೋರಿಕ್ಷಾ ಚಾಲಕನಾದ ಆರೋಪಿ ಭರತ್ ಸೋನಿಯನ್ನು ಬಂಧಿಸಲಾಗಿತ್ತು. ಭರತ್ ಸೋನಿ ಸದ್ಯ ಜೈಲಿನಲ್ಲಿದ್ದಾನೆ. ಆತನ ಕುಟುಂಬವು ಹಲವಾರು ವರ್ಷಗಳಿಂದ ಸರ್ಕಾರಿ ಭೂಮಿಯಲ್ಲಿ ಮನೆ ನಿರ್ಮಿಸಿಕೊಂಡು ವಾಸಿಸುತ್ತಿದೆ ಎಂದು ಉಜ್ಜಯಿನಿ ನಗರಸಭೆಯು ತಿಳಿಸಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಉಜ್ಜಯಿನಿ ನಗರಸಭೆಯ ಆಯುಕ್ತ ರೋಶನ್ ಸಿಂಗ್, ಆರೋಪಿ ಭರತ್ ಸೋನಿ ಕುಟುಂಬವು ವಾಸಿಸುತ್ತಿರುವ ಭೂಮಿಯು ಸರ್ಕಾರಕ್ಕೆ ಸೇರಿದ್ದು, ಹೀಗಾಗಿ ಅವರ ನಿವಾಸವನ್ನು ನೆಲಸಮಗೊಳಿಸಲು ಯಾವುದೇ ನೋಟಿಸ್ ಜಾರಿ ಮಾಡಲಾಗಿಲ್ಲ. ಮಧ್ಯಪ್ರದೇಶ ಪೊಲೀಸರ ಸಹಭಾಗಿತ್ವದೊಂದಿಗೆ ನಗರಸಭೆಯು ನಾಳೆ ನೆಲಸಮ ಕಾರ್ಯಾಚರಣೆಯನ್ನು ನಡೆಸಲಿದೆ” ಎಂದು ತಿಳಿಸಿದ್ದಾರೆ. ಸುಮಾರು 700 ಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿಗಳನ್ನು ಪರಿಶೀಲಿಸಿ, ಸುದೀರ್ಘ ತನಿಖೆ ನಡೆಸಿದ ನಂತರ ಭರತ್ ನನ್ನು ಪೊಲೀಸರು ಬಂಧಿಸಿದ್ದರು. “ತನಿಖೆಯಲ್ಲಿ 30-35 ಪೊಲೀಸರು ಭಾಗಿಯಾಗಿದ್ದರು. ಯಾರೂ ಕೂಡಾ ಮೂರ್ನಾಲ್ಕು ದಿನಗಳಿಂದ ನಿದ್ರಿಸಿಲ್ಲ” ಎಂದು ಹಿರಿಯ ಪೊಲೀಸ್ ಅಧಿಕಾರಿ ಅಜಯ್ ವರ್ಮ ndtv ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ. ಸೆಪ್ಟೆಂಬರ್ 26ರಂದು ಹಗ್ಗ ಕಟ್ಟಿದ, ರಕ್ತ ಸುರಿಸುತ್ತಿದ್ದ ಹಾಗೂ ನೆರವಿಗಾಗಿ ಬೇಡುತ್ತಿದ್ದ ಅಪ್ರಾಪ್ತ ಬಾಲಕಿಯ ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿತ್ತು. ಹರಿದಿರುವ ಬಟ್ಟೆ ತೊಟ್ಟಿರುವ ಬಾಲಕಿಯೊಬ್ಬಳು ಮನೆ ಮನೆಯ ಬಾಗಿಲು ಬಡಿದು ನೆರವು ಬೇಡುತ್ತಿರುವ ದೃಶ್ಯವು ಉಜ್ಜಯಿನಿಯಿಂದ ಸುಮಾರು 15 ಕಿಮೀ ದೂರದಲ್ಲಿರುವ ಬದ್ನಾಗರ್ ರಸ್ತೆಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಈ ಭಯಾನಕ ದೃಶ್ಯ ದೇಶದಲ್ಲಿ ಆಘಾತವುಂಟುಮಾಡಿತ್ತು. ಆ ವೀಡಿಯೊದಲ್ಲಿ ನೆರವಿಗಾಗಿ ಬೇಡುತ್ತಿರುವ ಬಾಲಕಿಯನ್ನು ಜನರು ಅಟ್ಟುತ್ತಿರುವ ದೃಶ್ಯವೂ ಸೆರೆಯಾಗಿತ್ತು.
ಮಂಗಳೂರು: ಇಬ್ಬರು ವೃದ್ಧೆಯರು ಆತ್ಮಹತ್ಯೆ
ಮಂಗಳೂರು, ಅ.3: ನಗರದ ಕದ್ರಿ ಕಂಬಳದ ಚಂದ್ರಿಕಾ ಬಡಾವಣೆಯಲ್ಲಿ ವಾಸವಾಗಿದ್ದ ಲತಾ ಭಂಡಾರಿ (70) ಮತ್ತು ಸುಂದರಿ ಶೆಟ್ಟಿ (80) ಎಂಬ ಸಹೋದರಿಯರು ಮಂಗಳವಾರ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ. 78ರ ಹರೆಯದ ಜಗನ್ನಾಥ್ ಭಂಡಾರಿ ಮತ್ತವರ ಪತ್ನಿ ಲತಾ ಭಂಡಾರಿ ಹಾಗೂ ಲತಾ ಭಂಡಾರಿಯ ಅಕ್ಕ ಸುಂದರಿ ಶೆಟ್ಟಿ ಎಂಬವರು ಈ ಮನೆಯಲ್ಲಿ ವಾಸಿಸುತ್ತಿದ್ದರು. ಎಂದಿನಂತೆ ಜಗನ್ನಾಥ್ ಭಂಡಾರಿ ಕೆಲಸಕ್ಕೆ ಹೋದವರು ಸಂಜೆ 4:30ರ ವೇಳೆಗೆ ಮನೆಗೆ ತೆರಳಿದಾಗ ಇಬ್ಬರು ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಜಗನ್ನಾಥ ಭಂಡಾರಿ ಮನೆಗೆ ತೆರಳಿದಾಗ ಮನೆಯ ಬಾಗಿಲು ಮುಚ್ಚಲ್ಪಟ್ಟಿತ್ತು. ಕಿಟಕಿಯಿಂದ ನೋಡಿದಾಗ ಸಹೋದರಿಯರು ನೇಣು ಬಿಗಿದ ಸ್ಥಿತಿಯಲ್ಲಿ ಕಂಡು ಬಂದಿದ್ದಾರೆ ಎನ್ನಲಾಗಿದೆ. ಕೌಟುಂಬಿಕ ವಿಚಾರದಲ್ಲಿ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಪೊಲೀಸರು ಶಂಕಿಸಿದ್ದು, ತನಿಖೆ ಮುಂದುವರಿದಿದೆ.
Property: ಸಾಕು ಮಗನಿಗೆ ತಂದೆ ಆಸ್ತಿಯಲ್ಲಿ ಪಾಲು ಸಿಗುತ್ತದೆಯಾ? ಕೋರ್ಟ್ ಹೊಸ ಆದೇಶ
ಹಿರಿಯ ವ್ಯಕ್ತಿಗಳಿಗೆ ಹುಟ್ಟಿದ ಮಕ್ಕಳು ಇಲ್ಲದೆ ಹೋದಲ್ಲಿ ಆ ಸಂದರ್ಭದಲ್ಲಿ ಅವರು ಬೇರೆ ಮಕ್ಕಳನ್ನು ದತ್ತು ಪಡೆದು ಸಾಕಿರಬಹುದು ಹಾಗೂ ಕೆಲವೊಮ್ಮೆ ಅವರ ಸಹೋದರ ಅಥವಾ ಸಹೋದರಿಯರ ಮಕ್ಕಳನ್ನು ಕೂಡ ತಮ್ಮ ಸ್ವಂತ ಮಕ್ಕಳಂತೆ ನೋಡಿಕೊಂಡಿರಬಹುದು. ಆ ಸಂದರ್ಭದಲ್ಲಿ ಆಸ್ತಿ (Property) ಯಾರ ಪಾಲಾಗುತ್ತದೆ ಅಥವಾ ಅವರಿಗೆ ಅಧಿಕಾರ ಸಿಗುತ್ತದೆ ಎನ್ನುವಂತಹ ಅನುಮಾನಗಳು ಕೂಡ ಇದ್ದು ಬನ್ನಿ ಇವತ್ತಿನ ಲೇಖನಿಯಲ್ಲಿ ಅದೇ ರೀತಿಯ ಒಂದು ನಿಜ ಘಟನೆಯ ಬಗ್ಗೆ ತಿಳಿದುಕೊಳ್ಳುವ ಪ್ರಯತ್ನವನ್ನು ಮಾಡೋಣ. The post Property: ಸಾಕು ಮಗನಿಗೆ ತಂದೆ ಆಸ್ತಿಯಲ್ಲಿ ಪಾಲು ಸಿಗುತ್ತದೆಯಾ? ಕೋರ್ಟ್ ಹೊಸ ಆದೇಶ appeared first on Karnataka Times .
ಬಿಹಾರ ಜಾತಿಗಣತಿಯಲ್ಲಿನ ಅಂಕಿಅಂಶಗಳು ರಾಷ್ಟ್ರ ರಾಜಕಾರಣವನ್ನು ತಲ್ಲಣಗೊಳಿಸಹುದು!
ಪ್ರತಿಪಕ್ಷಗಳು ಜಾತಿ ಗಣತಿಯ ಪರವಾಗಿ ದೃಢವಾಗಿ ನಿಂತಿದ್ದು, ಬಿಜೆಪಿ ಈಗಾಗಲೇ ಮೂಲೆಗೆ ತಳ್ಳಲ್ಪಟ್ಟಿದೆ. ಬಿಹಾರದಲ್ಲಿ ನಡೆಸಲಾದ ಜಾತಿ ಗಣತಿಯ ಅಂಕಿಅಂಶಗಳು ಈಗ ಪ್ರಕಟಗೊಳ್ಳುವುದರೊಂದಿಗೆ ದೇಶದ ಇತರ ಭಾಗಗಳಲ್ಲಿ ಸ್ಥಿತಿ ಏನಿರಬಹುದು ಎನ್ನುವುದನ್ನು ಅಂದಾಜಿಸಲು ಜನರಿಗೆ ಅನುವು ಮಾಡಿದೆ. ಜಾತಿ ಗಣತಿಯ ಅಂಕಿಅಂಶಗಳು ರಾಷ್ಟ್ರೀಯ ರಾಜಕೀಯದಲ್ಲಿ ತಲ್ಲಣ ಸೃಷ್ಟಿಸಬಹುದು
ಮಂಗಳೂರು: ಸ್ಥಳಾಂತರಿಸಬೇಕಿದ್ದ ಮರಕ್ಕೆ ಕೊಡಲಿ; ಪರಿಸರ ಪ್ರೇಮಿಗಳಿಂದ ತಡೆ
ಮಂಗಳೂರು: ನಗರದ ನಂತೂರು ಮತ್ತು ಕೆಪಿಟಿಯಲ್ಲಿ ವಾಹನ ದಟ್ಟಣೆ ಕಡಿಮೆ ಮಾಡಲು ಹೆದ್ದಾರಿ ಅಭಿವೃದ್ಧಿ ಕಾಮಗಾರಿ ಗಾಗಿ ಎನ್ಎಚ್ಐನಿಂದ ರಸ್ತೆಯ ಇಕ್ಕೆಲಗಳ ಮರಗಳನ್ನು ಕಡಿಯುವುದನ್ನು ವಿರೋಧಿಸಿ ಪರಿಸರ ಪ್ರೇಮಿಗಳಿಂದ ಶವಸಂಸ್ಕಾರದ ಅಣುಕು ಪ್ರದರ್ಶನ ಮಂಗಳವಾರ ನಡೆಯಿತು. ಮೇಲ್ಸೇತುವೆ ನಿರ್ಮಾಣದಿಂದ ತೆರವುಗೊಳಿಸಬೇಕಾದ ಮರಗಳ ಕುರಿತಂತೆ ಸಿಟಿಝನ್ ಫಾರ್ ಸಸ್ಟೈನೇಬಲ್ ಡೆವಲಪ್ಮೆಂಟ್ ಸಂಘಟನೆಯು ಅರಣ್ಯ ಅಧಿಕಾರಿಗಳು ಹಾಗೂ ಎನ್ಎಚ್ಎಐ ಅಧಿಕಾರಿಗಳು ಪರಿಸರ ಪ್ರೇಮಿಗಳ ಸಮಕ್ಷಮದಲ್ಲಿ ಈ ಹಿಂದೆ ಸಭೆ ನಡೆಸಿ 602 ಮರಗಳನ್ನು ಗುರುತಿಸಲಾಗಿತ್ತು. ಇದರಲ್ಲಿ 232 ಮರಗಳನ್ನು ಸ್ಥಳಾಂತರ ಮಾಡಲು 370 ಮರಗಳನ್ನು ಕಡಿಯಲು ಅರಣ್ಯಾಧಿಕಾರಿಗಳು ಗುರುತಿಸಿದ್ದರು. ಮರಗಳನ್ನು ಸ್ಥಳಾಂತರ ಮಾಡಿದ ಬಳಿಕ ಮರಗಳ ಕಡಿಯುವ ಪ್ರಕ್ರಿಯೆ ಮಾಡಬೇಕೆಂದು ಪರಿಸರ ಪ್ರೇಮಿಗಳು ಈ ಹಿಂದೆಯೇ ಒತ್ತಾಯಿಸಿದ್ದರು. ಮರಗಳ ಸ್ಥಳಾಂತರ ಹಾಗೂ ಕಡಿಯುವ ಪ್ರಕ್ರಿಯೆಯನ್ನು ಸಕಲೇಶಪುರದ ಏಜೆನ್ಸಿಯೊಂದಕ್ಕೆ ವಹಿಸಲಾಗಿತ್ತು. ಆದರೆ ಮಂಗಳವಾರ ಬೆಳಗ್ಗೆ ಏಕಾಏಕಿ ಅರಣ್ಯಾಧಿಕಾರಿಗಳ ಅನುಪಸ್ಥಿತಿಯಲ್ಲಿ ಈ ಏಜೆನ್ಸಿಯ ಸಿಬ್ಬಂದಿ ಸ್ಥಳಾಂತರ ಮಾಡಬಹುದಾದ ಮರಗಳಿಗೆ ಕೊಡಲಿ ಏಟು ಹಾಕಿರುವುದು ಪರಿಸರ ಪ್ರೇಮಿಗಳ ಆಕ್ರೋಶಕ್ಕೆ ಕಾರಣವಾಯಿತು. ಮರ ಕಡಿಯುತ್ತಿರುವ ಮಾಹಿತಿ ತಿಳಿದ ತಕ್ಷಣ ಸಿಟಿಝನ್ ಫಾರ್ ಸಸ್ಟೈನೇಬಲ್ ಡೆವಲಪ್ಮೆಂಟ್ ಪರಿಸರ ಪ್ರೇಮಿ ಸಂಘಟನೆಯ ಸದಸ್ಯರು ಸ್ಥಳಕ್ಕೆ ತೆರಳಿ ಮರ ಕಡಿಯುವುದನ್ನು ತಡೆದಿದ್ದಾರೆ. ಅದಾಗಲೇ ನಾಲ್ಕು ಮರಗಳನ್ನು ಮರಗಳನ್ನು ಕಡಿಯಲಾಗಿತ್ತು. ಈ ಸಂದರ್ಭ ಅಲ್ಲಿಗೆ ಆಗಮಿಸಿದ ಅರಣ್ಯಾಧಿಕಾರಿಗಳು, ಮರ ಕಡಿಯುವ ಏಜೆನ್ಸಿ ಹಾಗೂ ಪರಿಸರವಾದಿಗಳ ನಡುವೆ ವಾಗ್ವಾದ ನಡೆಯಿತು. ಮರಗಳ ಕಡಿತವನ್ನು ವಿರೋಧಿಸಿದ ಪರಿಸರ ಪ್ರೇಮಿಗಳು ಕಡಿದು ಬಿದ್ದ ಮರಗಳ ತುಂಡುಗಳಿಗೆ ಬಿಳಿ ಬಟ್ಟೆ ಹೊದಿಸಿ ಅಧಿಕಾರಿಗಳ ಅಣಕು ಶವ ಪ್ರದರ್ಶನ ಮಾಡಿದರು. ಪ್ರತಿಭಟನೆಯಲ್ಲಿ ಪರಿಸರ ಪ್ರೇಮಿಗಳಾದ ದಿನೇಶ್ ಹೊಳ್ಳ, ಜೀತ್ ಮಿಲನ್ ರೋಚ್, ಬೆನೆಡಿಕ್ಟ್, ಭುವನ್ ದೇವಾಡಿಗ, ಅನಿಲ್ ಪಿಂಟೋ, ಸೆಲ್ಮಾ ರೋಸ್ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ‘ಮೇಲ್ಸೇತುವೆ ನಿರ್ಮಾಣಕ್ಕೆ ನಮ್ಮ ಯಾವುದೇ ಅಭ್ಯಂತರ ಇಲ್ಲ. ಆದರೆ ಸ್ಥಳಾಂತರ ಮಾಡಬಹುದಾದ ಮರಗಳನ್ನು ಕಡಿಯಲು ಆರಂಭಿಸಿದ್ದಾರೆ. ಈಗಾಗಲೇ ಮಳೆ ಇಲ್ಲದೆ, ಭೂಮಿ ಬರಡಾಗುತ್ತಿದೆ. ಉಷ್ಣಾಂಶ ಹೆಚ್ಚುತ್ತಿದೆ, ಅಂತರ್ಜಲ ಕುಸಿಯುತ್ತಿದೆ. ಇಂತಹ ಸಮಯದಲ್ಲಿ ನಗರದಲ್ಲಿ ಕೆಲವೇ ಕೆಲವು ಕಡೆ ಇರುವ ಮರಗಳನ್ನು ಈ ರೀತಿಯಾಗಿ ಅವೈಜ್ಞಾನಿಕ ವಾಗಿ ಕಡಿಯುತ್ತಾ ಹೋಗುವುದೆಂದರೆ ಅರ್ಥವಿಲ್ಲ.’ -ದಿನೇಶ್ ಹೊಳ್ಳ, ಪರಿಸರಪ್ರೇಮಿ.
ಏಷ್ಯನ್ ಗೇಮ್ಸ್: ಜಾವೆಲಿನ್ ಎಸೆತದಲ್ಲಿ ಚಿನ್ನ ಗೆದ್ದು ಇತಿಹಾಸ ಬರೆದ ಅನ್ನು ರಾಣಿ
ಹ್ಯಾಂಗ್ ಝೌ : ಜಾವೆಲಿನ್ ಎಸೆತಗಾರ್ತಿ ಅನ್ನು ರಾಣಿ ಮಂಗಳವಾರ ಏಷ್ಯನ್ ಗೇಮ್ಸ್ ಇತಿಹಾಸದಲ್ಲಿ ಜಾವೆಲಿನ್ ಎಸೆತದಲ್ಲಿ ಚಿನ್ನದ ಪದಕ ಜಯಿಸಿದರು. ಆ ಮೂಲಕ ಚಿನ್ನದ ಪದಕ ಗೆದ್ದ ಮೊದಲ ಭಾರತೀಯ ಮಹಿಳೆ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ. 31ರ ಹರೆಯದ ಅವರು 19ನೇ ಏಷ್ಯನ್ ಗೇಮ್ಸ್ನಲ್ಲಿ ಮಹಿಳೆಯರ ಜಾವೆಲಿನ್ ಥ್ರೋ ಸ್ಪರ್ಧೆಯಲ್ಲಿ 62.92 ಮೀಟರ್ಗಳ ಅತ್ಯುತ್ತಮ ಎಸೆತದೊಂದಿಗೆ ಪ್ರಶಸ್ತಿ ಗೆದ್ದುಕೊಂಡಿದ್ದಾರೆ. 2014ರ ಏಷ್ಯನ್ ಗೇಮ್ಸ್ನಲ್ಲಿ ಅನ್ನು ರಾಣಿ ಕಂಚಿನ ಪದಕ ಗೆದ್ದಿದ್ದರು.
ಕೆಂದ್ರ ಸರ್ಕಾರದ ಸಂಸ್ಥೆಯಿಂದ ಬೆಂಗಳೂರಿನ ಸೀಗೆಹಳ್ಳಿ ಸರ್ಕಾರಿ ಶಾಲೆಯಲ್ಲಿ ಸ್ವಚ್ಛತಾ ಅಭಿಯಾನ
ಸ್ವಚ್ಛ ಭಾರತ ಅಭಿಯಾನದ ಭಾಗವಾದ ಸ್ವಚ್ಛತಾ ಹಿ ಸೇವಾ ಅಭಿಯಾನವನ್ನು ಗಾಂಧೀ ಜಯಂತಿಯ ಮುನ್ನಾ ದಿನ ಕ್ಷೇತ್ರೀಯ ಕೇಂದ್ರೀಯ ಸಮಗ್ರ ಸಸ್ಯ ಪೀಡೆ ನಿರ್ವಹಣಾ ಕೇಂದ್ರ ಬೇಂಗಳೂರು ವತಿಯಿಂದ ಸೀಗೆಹಳ್ಳಿ ಪ್ರಾಥಮಿಕ ಹಾಗೂ ಪ್ರೌಢಶಾಲೆಯನ್ನು ಸ್ವಚ್ಛಗೊಳಿಸಲಾಯಿತು.
ಸೇವಾ ಮನೋಭಾವ ರೆಡ್ಕ್ರಾಸ್ನ ಧ್ಯೇಯ: ಬಿ.ರಾಜೀವ್ ಶೆಟ್ಟಿ
ಉಡುಪಿ: ಯುವ ಜನತೆಯಲ್ಲಿ ಸೇವಾ ಮನೋಭಾವವನ್ನು ರೂಪಿಸುವುದು ಯುುವ ರೆಡ್ಕ್ರಾಸಿನ ಉದ್ದೇಶವಾಗಿದ್ದು, ಇದರಿಂದಾಗಿ ಭಾರತೀಯ ರೆಡ್ಕ್ರಾಸ್ ಸಂಸ್ಥೆಯು ಅಂತಾರಾಷ್ಟ್ರೀಯ ಸೇವಾ ಸಂಸ್ಥೆಯಾಗಿ ೪ ಬಾರಿ ನೋಬೆಲ್ ಪ್ರಶಸ್ತಿ ಪಡೆದ ಸಂಸ್ಥೆಯಾಗಿದೆ ಎಂದು ರೆಡ್ಕ್ರಾಸ್ ಸಭಾಪತಿ ಬಸ್ರೂರು ರಾಜೀವ್ ಶೆಟ್ಟಿ ಹೇಳಿದ್ದಾರೆ. ಶಿರ್ವ ಸೈಂಟ್ಮೆರಿಸ್ ಕಾಲೇಜಿನ ರೆಡ್ಕ್ರಾಸ್ ಘಟಕದ ವರ್ಷದ ಕಾರ್ಯಕ್ರಮಗಳನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು. ಉಡುಪಿಯಲ್ಲಿ ಕಳೆದ 20 ವರ್ಷಗಳಿಂದ ರೆಡ್ಕ್ರಾಸ್ ಸಂಸ್ಥೆಯು ಮಾನವೀಯ ನೆಲೆಯಲ್ಲಿ ಸೇವೆ ಸಲ್ಲಿಸುತ್ತಾ ವಿಕಲಚೇತನರ ಪುನರ್ವಸತಿ ಕೇಂದ್ರದ ಮೂಲಕ ವಿಕಲಚೇತನರನ್ನು ಗುರುತಿಸಿ ಅವರಿಗೆ ಬೇಕಾದ ಸಾಧನ ಸಲಕರಣೆ ಗಳು ಮತ್ತು ಸರಕಾರದಿಂದ ಸಿಗುವ ಸೌಲಭ್ಯಗಳ ಬಗ್ಗೆ ಮಾಹಿತಿ ಗಳನ್ನು ನೀಡುತ್ತಾ ಬಂದಿದೆ. ಕಾಲೇಜುಗಳಲ್ಲಿ ಯುವ ರೆಡ್ಕ್ರಾಸ್ ಚಟುವಟಿಕೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಉದ್ದೇಶದಿಂದ ಯುವ ರೆಡ್ಕ್ರಾಸ್ ಘಟಕಗಳನ್ನು ಪ್ರಾರಂಭಿಸಲಾದೆ ಎಂದವರು ನುಡಿದರು. ಭಾರತೀಯ ರೆಡ್ಕ್ರಾಸ್ ಸಂಸ್ಥೆ, ಜಿಲ್ಲಾ ಘಟಕದ ಗೌರವ ಕಾರ್ಯದರ್ಶಿ ಡಾ. ಗಣನಾಥ ಶೆಟ್ಟಿ ಎಕ್ಕಾರು, ಸಮಾಜ ಸೇವೆ ಯಲ್ಲಿ ಯುವಕರ ಪಾತ್ರದ ಬಗ್ಗೆ ಮಾಹಿತಿ ನೀಡಿದರು. ಭಾರತೀಯ ರೆಡ್ಕ್ರಾಸ್ ಸಂಸ್ಥೆಯ ವತಿಯಿಂದ ಕಾಲೇಜಿನ ಯುವ ರೆಡ್ಕ್ರಾಸ್ ಘಟಕಗಳ ವಿದ್ಯಾರ್ಥಿಗಳಿಗೆ ಪ್ರಥಮ ಚಿಕಿತ್ಸಾ ತರಬೇತಿ, ರಕ್ತದಾನ, ವಿಪತ್ತು ನಿರ್ವಹಣೆ, ಕ್ಯಾನ್ಸರ್ ತಪಾಸಣಾ ಮಾಹಿತಿ ಇತ್ಯಾದಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಡಾ. ಹೆರಾಲ್ಡ್ ಐವನ್ ಮೋನಿಸ್ ವಹಿಸಿದ್ದರು. ರೆಡ್ಕ್ರಾಸ್ ಕಾರ್ಯಕ್ರಮ ಅಧಿಕಾರಿ ಸಂಗೀತ ಹೆಚ್ ಪೂಜಾರಿ, ಪ್ರಾಧ್ಯಾಪಕ ವಿಠ್ಠಲ್ ನಾಯಕ್, ಯುವ ರೆಡ್ಕ್ರಾಸ್ ಮುಖಂಡ ಪ್ರಿಲ್ಸನ್ ಸ್ಯಾಮುವಲ್ ನೊರೊನ್ನ ಮತ್ತು ಐಕ್ಯೂಎಸಿ ಕೋ-ಅರ್ಡಿನೇಟರ್ ಜಗದೀಶ್ ಆಚಾರ್ಯ ಉಪಸ್ಥಿತರಿದ್ದರು.
ಅಂಗಡಿ ಮತ್ತು ವಾಣಿಜ್ಯ ಸಂಸ್ಥೆಗಳ ನೋಂದಣಿ ಕುರಿತು ಸಭೆ
ಉಡುಪಿ: ಕರ್ನಾಟಕ ಅಂಗಡಿ ಮತ್ತು ವಾಣಿಜ್ಯ ಸಂಸ್ಥೆಗಳ ಕಾಯ್ದೆ ಮತ್ತು ಕರ್ನಾಟಕ ನಿಯಮಗಳ ಅಡಿಯಲ್ಲಿ ಅಂಗಡಿ ಮತ್ತು ವಾಣಿಜ್ಯ ಸಂಸ್ಥೆಗಳನ್ನು ನೋಂದಣಿ ಮಾಡುವ ಕುರಿತು ಜಿಲ್ಲೆಯ ವ್ಯಾಪಾರ ಸಂಘ ಸಂಸ್ಥೆಗಳ ಅಧ್ಯಕ್ಷರು ಹಾಗೂ ಕಾರ್ಯದರ್ಶಿಗಳೊಂದಿಗೆ ಸಭೆಯು ಇತ್ತೀಚೆಗೆ ಮಣಿಪಾಲದ ಕಾರ್ಮಿಕ ಅಧಿಕಾರಿಗಳ ಕಚೇರಿಯಲ್ಲಿ, ಜಿಲ್ಲಾ ಕಾರ್ಮಿಕ ಅಧಿಕಾರಿ ಕುಮಾರ್ ಬಿ.ಆರ್ ಅಧ್ಯಕ್ಷತೆಯಲ್ಲಿ ನಡೆಯಿತು. ಜಿಲ್ಲಾ ವ್ಯಾಪ್ತಿಯ ಅಂಗಡಿ ಮತ್ತು ವಾಣಿಜ್ಯ ಸಂಸ್ಥೆಗಳ ಮಾಲಕರು ಮತ್ತು ಉದ್ಯಮದಾರರು ಕರ್ನಾಟಕ ಅಂಗಡಿ ಮತ್ತು ವಾಣಿಜ್ಯ ಸಂಸ್ಥೆ ಕಾಯ್ದೆಯಡಿ ಉದ್ದಿಮೆ, ಅಂಗಡಿ ಮತ್ತು ವಾಣಿಜ್ಯ ಸಂಸ್ಥೆಗಳನ್ನು ನಿಯಮಾನುಸಾರ ನೋಂದಣಿ ಮಾಡಿಸು ವುದು ಕಡ್ಡಾಯವಾಗಿದೆ. ಈಗಾಗಲೇ ನೋಂದಾಯಿತ ಸಂಸ್ಥೆಗಳನ್ನು ಹೊರತುಪಡಿಸಿ, ಉಳಿದ ಅಂಗಡಿ ಮತ್ತು ವಾಣಿಜ್ಯ ಸಂಸ್ಥೆಗಳ ಮಾಲಕರು ಹಾಗೂ ಉದ್ದಿಮೆದಾರರು ತಮ್ಮ ಅಂಗಡಿ ಮತ್ತು ವಾಣಿಜ್ಯ ಸಂಸ್ಥೆಗಳನ್ನು ಸಂಬಂಧಿಸಿದ ತಾಲೂಕು ನಿರೀಕ್ಷಕರ ಕಛೇರಿ ವ್ಯಾಪ್ತಿಯಲ್ಲಿ ವೆಬ್ಸೈಟ್ - https://www.ekarmika. karnataka.gov.in/ekarmika/Static/Home.aspx-ನಲ್ಲಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ ನೋಂದಾ ಯಿಸಿಕೊಳ್ಳಬಹುದು. ತಪ್ಪಿದ್ದಲ್ಲಿ ನಿಯಮಾನುಸಾರ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದರು. ಈ ಕುರಿತು ಮಾಹಿತಿಗಾಗಿ ತಮ್ಮ ವ್ಯಾಪ್ತಿಯ ತಾಲೂಕು ನಿರೀಕ್ಷಕರ ಕಛೇರಿ 1 ಮತ್ತು 2ನೇ ವೃತ್ತ ಉಡುಪಿ, ಕುಂದಾಪುರ ವೃತ್ತ ಹಾಗೂ ಕಾರ್ಕಳ ವೃತ್ತ ಕಛೇರಿಗಳನ್ನು ಸಂಪರ್ಕಿಸಬಹುದು ಎಂದರು. ಸಭೆಯಲ್ಲಿ ಚೇಂಬರ್ ಆಫ್ ಕಾಮರ್ಸ್ ಉಡುಪಿ ಅಧ್ಯಕ್ಷ ಅಂಡಾರು ದೇವಿಪ್ರಸಾದ್ ಶೆಟ್ಟಿ, ಕಾರ್ಯದರ್ಶಿ ಬಿ.ಜಿ ಲಕ್ಷ್ಮೀಕಾಂತ ಬೆಸ್ಕೂರು, ಜಿಲ್ಲಾ ಖಾದ್ಯ ತಿನಿಸುಗಳ ತಯಾರಿಕ ಮತ್ತು ಮಾರಾಟಗಾರ ಸಂಘದ ಅಧ್ಯಕ್ಷ ವಿಶ್ವನಾಥ ಕುಲಾಲ್, ವರ್ತಕರ ಸಂಘದ ಅಧ್ಯಕ್ಷ ಸಹನಶೀಲ ಪೈ, ಅಖಿಲ ಭಾರತ ಮಹಿಳಾ ಸೌಂದರ್ಯ ತಜ್ಞೆಯರ ಸಂಘದ ಜಿಲ್ಲಾ ಅಧ್ಯಕ್ಷೆ ಮರಿಯಾ, ಕಾರ್ಯದರ್ಶಿ ವೇದಾ, ಟೈಲರ್ ಅಸೋಸಿಯೇಷನ್ನ ಜಿಲ್ಲೆಯ ಅಧ್ಯಕ್ಷ ಗುರುರಾಜ ಎಮ್ ಶೆಟ್ಟಿ, ಕಾರ್ಯದರ್ಶಿ ದಯಾನಂದ ಕೋಟ್ಯಾನ್, ಜಿಲ್ಲಾ ವರ್ತಕರ ಹಿತರಕ್ಷಣಾ ವೇದಿಕೆಯ ಅಧ್ಯಕ್ಷ ಆನಂದ ಕಾರ್ನಾಡ, ಉಪಾಧ್ಯಕ್ಷ ಮ್ಯಾಕ್ಸಿಮ್ ಸಲ್ದಾನ್, ಕಾರ್ಯದರ್ಶಿ ಡೊನಾಲ್ಡ್ ಸಲ್ದಾನ್ ಮತ್ತು ಉಡುಪಿ ಒಂದನೇ ವೃತ್ತ ಕಾರ್ಮಿಕ ನಿರೀಕ್ಷಕ ಸಂಜಯ್ ಎನ್.ಪಿ.ಎಲ್ ಹಾಗೂ ಇತರರು ಉಪಸ್ಥಿತರಿದ್ದರು.
ಪರಿವರ್ತನೆಯ ಹಾದಿಯಲ್ಲಿ ಭಾರತ: ಆಯುಧ ಆಮದುದಾರನಿಂದ ಜಾಗತಿಕ ಆಯುಧ ರಫ್ತುದಾರನಾಗುವತ್ತ ಚಿತ್ತ
ದೀರ್ಘ ಕಾಲದ ತನಕ, ಭಾರತ ನಿರಂತರವಾಗಿ ಜಾಗತಿಕವಾಗಿ ಅತಿದೊಡ್ಡ ಆಯುಧ ಆಮದುದಾರ ರಾಷ್ಟ್ರ ಎನಿಸಿಕೊಂಡಿತ್ತು. ಭಾರತ ತನ್ನ ಮಿಲಿಟರಿಯ ಆಯುಧಗಳಿಗಾಗಿ ವಿದೇಶಗಳ ಮೇಲೆ ಅವಲಂಬಿತವಾಗಿತ್ತು. ಆದರೆ, ನವದೆಹಲಿ ಈಗ ದೇಶೀಯ ಆಯುಧ ಉತ್ಪಾದನೆಯಲ್ಲಿ ಸಾಕಷ್ಟು ಹೂಡಿಕೆ ಮಾಡಿದ್ದು, ತನ್ನ ಸೇನೆಗೆ ಬೇಕಾದ ಆಯುಧಗಳನ್ನು ಒದಗಿಸಿ, ಅದರೊಡನೆ ಜಾಗತಿಕ ಆಯುಧ ರಫ್ತುದಾರ ರಾಷ್ಟ್ರ ಎನಿಸಲು ಪ್ರಯತ್ನ ನಡೆಸುತ್ತಿದೆ. ಮಧ್ಯ ಪೂರ್ವದಲ್ಲಿ ಇತ್ತೀಚೆಗೆ ನಡೆದ ಮಿಲಿಟರಿ ಅಭ್ಯಾಸಗಳು ಮತ್ತು ಆಯುಧ ವ್ಯಾಪಾರಗಳು ಭಾರತದ ನೂತನ ಆದ್ಯತೆಯೆಡೆಗೆ ಬೆಳಕು ಚೆಲ್ಲುತ್ತವೆ.