SENSEX
NIFTY
GOLD
USD/INR

Weather

32    C
...

`Sorry ರೋಹಿತ್ ಶರ್ಮಾ, ಕಾರಣವಿತ್ತು': 2011ರ ವಿಶ್ವಕಪ್ ತಂಡದಿಂದ ಕೈಬಿಟ್ಟಿದ್ದಕ್ಕೆ ಕ್ಷಮೆ ಕೇಳಿದ ಕೆ ಶ್ರೀಕಾಂತ್!

ಭಾರತ ತಂಡದ ಮಾಜಿ ನಾಯಕ, ಪ್ರಸ್ತುತ ವೈಟ್ ಬಾಲ್ ಕ್ರಿಕೆಟ್ ನ ಅಪ್ರತಿಮ ಬ್ಯಾಟರ್ ರೋಹಿತ್ ಶರ್ಮಾ ಅವರು 2011ರ ವಿಶ್ವಕಪ್ ಆಡಿದ್ದ ಭಾರತ ತಂಡದಲ್ಲಿ ಏಕಿರಲಿಲ್ಲ ಎಂಬುದು ಇಂದಿಗೂ ಕಾಡುವ ದೊಡ್ಡ ಪ್ರಶ್ನೆ. ಈ ಬಗ್ಗೆ ಇದೀಗ ಅಂದು ಬಿಸಿಸಿಐ ಮುಖ್ಯ ಆಯ್ಕೆದಾರರಾಗಿದ್ದ ಕೃಷ್ಣಮಾಚಾರಿ ಶ್ರೀಕಾಂತ್ ಅವರು ಮಾತನಾಡಿದ್ದಾದೆ. 2011ರ ಏಕದಿನ ವಿಶ್ವಕಪ್ ತಂಡದಿಂದ ರೋಹಿತ್ ಶರ್ಮಾ ಅವರನ್ನು ಕೈಬಿಟ್ಟಿದ್ದಕ್ಕಾಗಿ ಬಹಿರಂಗವಾಗಿ ಕ್ಷಮೆಯಾಚಿಸಿದ್ದಾರೆ. ಜೊತೆಗೆ ರೋಹಿತ್ ಅಂದು ತಂಡದಲ್ಲಿ ಸ್ಥಾನ ಪಡೆಯಲು ಸಂಪೂರ್ಣ ಅರ್ಹರಾಗಿದ್ದರು ಎಂದು ಅವರು ಒಪ್ಪಿಕೊಂಡಿದ್ದಾರೆ.ಇತ್ತೀಚಿನ ಸಂದರ್ಶನವೊಂದರಲ್ಲಿ ಮಾತನಾಡಿದ ಶ್ರೀಕಾಂತ್ ಅವರು, ರೋಹಿತ್ ಶರ್ಮಾ ಅವರನ್ನು ತಂಡದಿಂದ ಹೊರಗಿಟ್ಟಿದ್ದು ಯಾವುದೇ ವೈಯಕ್ತಿಕ ಕಾರಣಕ್ಕಲ್ಲ, ಬದಲಾಗಿ ತಂಡದ ಸಮತೋಲನದ ದೃಷ್ಟಿಯಿಂದ ತೆಗೆದುಕೊಂಡ ನಿರ್ಧಾರವಾಗಿತ್ತು, ತಂಡದಲ್ಲಿ ಆಲ್ರೌಂಡರ್ ಗಳಿಗೆ ಸ್ಥಾನ ನೀಡಲು ನಿರ್ಧರಿಸಿದ್ದರಿಂದ ರೋಹಿತ್ ಗೆ ಸ್ಥಾನ ಕಲ್ಪಿಸಲು ಸಾಧ್ಯ ಆಗಲಿಲ್ಲ ಎಂದು ಸ್ಪಷ್ಟಪಡಿಸಿದರು. ರೋಹಿತ್ ಅವರನ್ನು ಕೈಬಿಟ್ಟಿದ್ದು ಉದ್ದೇಶಪೂರ್ವಕವಾಗಿರಲಿಲ್ಲ. ಆದರೆ ತಂಡಕ್ಕೆ ಒಬ್ಬ ಹೆಚ್ಚುವರಿ ಬೌಲಿಂಗ್ ಆಯ್ಕೆಯ ಅಗತ್ಯವಿದ್ದಿದ್ದರಿಂದ ಅನಿವಾರ್ಯವಾಗಿ ಆ ನಿರ್ಧಾರ ತೆಗೆದುಕೊಳ್ಳಬೇಕಾಯಿತು ಎಂದು ಅವರು ವಿವರಿಸಿದರು. 1983ರ ವಿಶ್ವಕಪ್ ಮಾದರಿಯನ್ನೇ ಅನುಸರಿಸಿದ್ದ ಆಯ್ಕೆ ಸಮಿತಿಯು, ಬ್ಯಾಟಿಂಗ್ ಜೊತೆಗೆ ಬೌಲಿಂಗ್ ಕೂಡ ಮಾಡಬಲ್ಲ 'ಹಾಫ್ ಆಲ್-ರೌಂಡರ್'ಗಳಿಗೆ ಹೆಚ್ಚು ಪ್ರಾಮುಖ್ಯತೆ ನೀಡಿತ್ತು. ಯುವರಾಜ್ ಸಿಂಗ್, ಸುರೇಶ್ ರೈನಾ ಮತ್ತು ಯೂಸುಫ್ ಪಠಾಣ್ ಅವರಂತಹ ಬ್ಯಾಟರ್ ಗಳು ಬೌಲಿಂಗ್ ಆಯ್ಕೆಯನ್ನು ಒದಗಿಸುತ್ತಿದ್ದ ಕಾರಣ ರೋಹಿತ್ ಅವರನ್ನು ಕೈಬಿಡಲಾಗಿತ್ತು ಎಂದು ಶ್ರೀಕಾಂತ್ ತಿಳಿಸಿದರು. ನೇರ ಕ್ಷಮೆಯಾಚನೆ ನಾನು ರೋಹಿತ್ ಅವರನ್ನು 2020ರಲ್ಲಿ ಎದುರುಗೊಂಡಾಗ ಈ ವಿಚಾರವಾಗ ನೇರವಾಗಿಯೇ ಕ್ಷಮೆ ಕೇಳಿದ್ದೇನೆ. 'ಸಾರಿ ಬಾಸ್, ನಾನು ನಿನ್ನನ್ನು ತಂಡಕ್ಕೆ ಆಯ್ಕೆ ಮಾಡಬೇಕಿತ್ತು' ಎಂದು ಹೇಳಿದ್ದೇನೆ. ರೋಹಿತ್ ಈಗಲೂ ಪ್ರತಿ ಸಂದರ್ಶನದಲ್ಲಿ 2011ರ ವಿಶ್ವಕಪ್ ಮಿಸ್ ಮಾಡಿಕೊಂಡ ಬಗ್ಗೆ ಬೇಸರ ವ್ಯಕ್ತಪಡಿಸುವುದನ್ನು ನೋಡಿದಾಗ ನನಗೆ ನೋವಾಗುತ್ತದೆ, ಎಂದು ಶ್ರೀಕಾಂತ್ ತಿಳಿಸಿದ್ದಾರೆ.38 ವರ್ಷದ ರೋಹಿತ್ ಶರ್ಮಾ ಅವರು ಪ್ರಸ್ತುತ ಟೆಸ್ಟ್ ಮತ್ತು ಅಂತಾರಾಷ್ಚ್ರೀಯ ಟಿ20 ಕ್ರಿಕೆಟ್ ನಿಂದ ನಿವೃತ್ತಿ ಪಡೆದಿದ್ದು ಏಕದಿನ ಕ್ರಿಕೆಟ್ ನಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಿದ್ದಾರೆ. 282 ಏಕದಿನ ಪಂದ್ಯಗಳನ್ನು ಆಡಿರುವ ಅವರು 11577 ರನ್ ಕಲೆ ಹಾಕಿದ್ದಾರೆ. ಇನ್ನು 67 ಟೆಸ್ಟ್ ಪಂದ್ಯಗಳಲ್ಲಿ 4301 ರನ್, 159 ಟಿ20 ಪಂದ್ಯಗಳಲ್ಲಿ 4231 ರನ್ ಕಲಂ ಹಾಕಿದ್ದಾರೆ. ನಿರಾಸೆಗೊಂಡಿದ್ದ ಹಿಟ್ ಮ್ಯಾನ್ 2007ರಲ್ಲಿ ಚೊಚ್ಚಲ ಟಿ20 ವಿಶ್ವಕಪ್ ಗೆದ್ದ ತಂಡದ ಭಾಗವಾಗಿದ್ದ ರೋಹಿತ್ ಶರ್ಮಾ ಅವರು 2011ರ ಏಕದಿನ ವಿಶ್ವಕಪ್ ತಂಡಕ್ಕೆ ಆಯ್ಕೆಯಾಗುತ್ತಾರೆ ಎಂಬ ದೊಡ್ಡ ನಿರೀಕ್ಷೆ ಇತ್ತು. ಆದರೆ ತಂಡ ಪ್ರಕಟವಾದಾಗ ಅವರ ಹೆಸರಿರಲಿಲ್ಲ. ಇದು ಅವರ ವೃತ್ತಿಜೀವನದ ಅತ್ಯಂತ ಕಠಿಣ ಘಟ್ಟವಾಗಿತ್ತು ಎಂದು ರೋಹಿತ್ ಈ ಹಿಂದೆ ಹಲವು ಬಾರಿ ಹೇಳಿಕೊಂಡಿದ್ದಾರೆ. ಆದರೆ ಬಳಿಕ ರಾಷ್ಟ್ರೀಯ ತಂಡಕ್ಕೆ ಮರಳಿದ ಅವರು ಏಕದಿನ ಕ್ರಿಕೆಟ್ ನಲ್ಲಿ ಡಬಲ್ ಸೆಂಚುರಿಗಳ ರಾಜಾ ಎಂದು ಅನ್ನಿಸಿಕೊಂಡರು. ಏಕದಿನ ಕ್ರಿಕೆಟ್ ನಲ್ಲಿ ವಿಶ್ದಾದಾಖಲೆಯ ವೈಯಕ್ತಿಕ ಮೊತ್ತ ಗಳಿಸಿದರು. 2015ರ ಏಕದಿನ ವಿಶ್ವಕಪ್ ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಅವರು 2019ರ ಏಕದಿನ ವಿಶ್ವಕಪ್ ನಲ್ಲಿ ಅತಿ ಹೆಚ್ಚು ರನ್ ಗಳಿದ್ದರು. ಭಾರತ ತಂಡದ ನಾಯಕನಾಗಿಯೂ ಮಿಂಚಿದರು. 2023ರ ಏಕದಿನ ವಿಶ್ವಕಪ್ ನಲ್ಲಿ ತಂಡವನ್ನು ಫೈನಲ್ ವರೆಗೂ ಕೊಂಡೊಯ್ದ ಅವರು 2024ರ ಟಿ20 ವಿಶ್ವಕಪ್ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದರು.

ವಿಜಯ ಕರ್ನಾಟಕ 22 Apr 2026 8:39 pm

’ನನ್ನ ವಿರುದ್ದ ದೆಹಲಿ ತಂಡವೇ ನಿಂತಿದೆ, ನಾನಿಲ್ಲಿ ಏಕಾಂಗಿ’ : ಚುನಾವಣೆಗೆ 1 ದಿನ ಮುನ್ನ ಮಮತಾ ದೀದಿ ಸೆಂಟಿಮೆಂಟ್ ಕಾರ್ಡ್

Mamata Banerjee Sentiment Card : ಸತತವಾಗಿ ಮೂರು ಟರ್ಮ್’ನಲ್ಲಿ ಪಶ್ಚಿಮ ಬಂಗಾಳದಲ್ಲಿ ಅಧಿಕಾರದಲ್ಲಿರುವ ಮಮತಾ ಬ್ಯಾನರ್ಜಿ, ಈ ಬಾರಿಯ ಚುನಾವಣೆಯಲ್ಲಿ ಮತ್ತೆ ಗೆಲುವು ಸಾಧಿಸುತ್ತಾರಾ ಎನ್ನುವುದು ಕುತೂಹಲಕ್ಕೆ ಕಾರಣವಾಗಿದೆ. ಚುನಾವಣೆಗೆ 24 ಗಂಟೆ ಮುನ್ನ, ನಾನಿಲ್ಲಿ ಏಕಾಂಗಿಯಾಗಿ ಹೋರಾಡುತ್ತಿದ್ದೇನೆ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸೆಂಟಿಮೆಂಟ್ ಕಾರ್ಡ್ ಪ್ಲೇ ಮಾಡಿದ್ದಾರೆ.

ವಿಜಯ ಕರ್ನಾಟಕ 22 Apr 2026 8:33 pm

West Bengal S I R | 27 ಲಕ್ಷ ಮೇಲ್ಮನವಿಗಳಲ್ಲಿ ನ್ಯಾಯಮಂಡಳಿಯಲ್ಲಿ ತೆರವುಗೊಳಿಸಲ್ಪಟ್ಟ 136 ಮಂದಿ ಮತ್ತೆ ಮತದಾರರ ಪಟ್ಟಿಗೆ ಸೇರ್ಪಡೆ

ಹೊಸದಿಲ್ಲಿ: ಬುಧವಾರ ಪ್ರಕಟವಾದ ಪೂರಕ ಪಟ್ಟಿಯಲ್ಲಿ ಚುನಾವಣಾ ಆಯೋಗವು ಮೇಲ್ಮನವಿ ನ್ಯಾಯಮಂಡಳಿಯಲ್ಲಿ ತೆರವುಗೊಳಿಸಲ್ಪಟ್ಟ 136 ಮತದಾರರನ್ನು ಸೇರಿಸಿದೆ ಎಂದು ABP Ananda ವರದಿ ಮಾಡಿದೆ. ಮೊದಲ ಹಂತದ ವಿಧಾನಸಭಾ ಚುನಾವಣೆಗೆ ಮೊದಲು ಮೇಲ್ಮನವಿ ನ್ಯಾಯಮಂಡಳಿ ಮುಂದೆ ಬಾಕಿ ಇರುವ 27 ಲಕ್ಷ ಮತದಾರರಲ್ಲಿ 136 ಮತದಾರರ ಮೇಲ್ಮನವಿಗಳನ್ನು ಸ್ವೀಕರಿಸಲಾಗಿದೆ ಎಂದು ವರದಿಯು ಉಲ್ಲೇಖಿಸಿದೆ. ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ಪ್ರಕ್ರಿಯೆಯ ಭಾಗವಾಗಿ, ಮೊದಲ ಹಂತದ ಮತದಾನದ ಮೊದಲು ನ್ಯಾಯಮಂಡಳಿಗಳು ಕೇವಲ 138 ಪ್ರಕರಣಗಳನ್ನು ಮಾತ್ರ ನಿರ್ಧರಿಸಿದ್ದರಿಂದ ಮೇಲ್ಮನವಿಗಳಿಗೆ ಅನುಮೋದನೆ ದರವು 98.5% ಆಗಿತ್ತು. ಉಳಿದ ಎರಡು ಮೇಲ್ಮನವಿಗಳನ್ನು ತಿರಸ್ಕರಿಸಲಾಗಿದೆ ಎಂದು Aaj Tak Bangla ವರದಿ ಮಾಡಿದೆ. ನ್ಯಾಯಮಂಡಳಿಗಳ ಮುಂದೆ ಸುಮಾರು 34 ಲಕ್ಷ ಅರ್ಜಿಗಳು ಬಾಕಿ ಇವೆ ಎಂದು ತಿಳಿದು ಬಂದಿದೆ. ಇವುಗಳಲ್ಲಿ, ಸುಮಾರು 7 ಲಕ್ಷ ಅರ್ಜಿಗಳು ಮತದಾರರ ಪಟ್ಟಿಯಲ್ಲಿ ಹೆಸರುಗಳನ್ನು ಸೇರಿಸಿರುವುದಕ್ಕೆ ವಿರೋಧವಾಗಿ ಸಲ್ಲಿಸಲ್ಪಟ್ಟಿದ್ದರೆ, 27 ಲಕ್ಷ ಅರ್ಜಿಗಳನ್ನು ಪಟ್ಟಿಯಿಂದ ಹೊರಗಿಡಲ್ಪಟ್ಟವರು ಸಲ್ಲಿಸಿದ್ದಾರೆ ಎಂದು News9 ವರದಿ ತಿಳಿಸಿದೆ. ಎಪ್ರಿಲ್ 16ರಂದು ಸುಪ್ರೀಂ ಕೋರ್ಟ್ ಚುನಾವಣಾ ಆಯೋಗಕ್ಕೆ ಪಶ್ಚಿಮ ಬಂಗಾಳದಲ್ಲಿ ಪೂರಕ ಮತದಾರರ ಪಟ್ಟಿಯನ್ನು ಪ್ರಕಟಿಸುವಂತೆ ನಿರ್ದೇಶಿಸಿತ್ತು. ಎಪ್ರಿಲ್ 21ರ ಮೊದಲು ನ್ಯಾಯಮಂಡಳಿ ಮೇಲ್ಮನವಿಗಳನ್ನು ತೆರವುಗೊಳಿಸಿದರೆ ಮೊದಲ ಹಂತದ ವಿಧಾನಸಭಾ ಚುನಾವಣೆಯಲ್ಲಿ ಮತದಾನಕ್ಕೆ ಸೇರಿಸಿಕೊಳ್ಳಬೇಕು. ಎಪ್ರಿಲ್ 27 ರೊಳಗೆ ತೆರವುಗೊಳಿಸಿದವರನ್ನು ಎರಡನೇ ಹಂತದ ಚುನಾವಣೆಗೆ ಅಂತಿಮ ಮತದಾರರ ಪಟ್ಟಿಯಲ್ಲಿ ಸೇರಿಸಬೇಕು ಎಂದು ನ್ಯಾಯಾಲಯ ಹೇಳಿತ್ತು. ಪಶ್ಚಿಮ ಬಂಗಾಳದಲ್ಲಿ ಮೊದಲ ಹಂತದ ಮತದಾನ ಎಪ್ರಿಲ್ 23ರಂದು ಮತ್ತು ಎರಡನೇ ಹಂತದ ಮತದಾನ ಎಪ್ರಿಲ್ 29ರಂದು ನಡೆಯಲಿದೆ. ಮತಗಳ ಎಣಿಕೆ ಮೇ 4ರಂದು ನಡೆಯಲಿದೆ. ಫೆಬ್ರವರಿ 28ರಂದು ಚುನಾವಣಾ ಆಯೋಗವು ಪಶ್ಚಿಮ ಬಂಗಾಳದ ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಿತ್ತು. ಇದರಲ್ಲಿ 61 ಲಕ್ಷಕ್ಕೂ ಹೆಚ್ಚು ಮತದಾರರು ಹೊರಗಿಡಲ್ಪಟ್ಟಿದ್ದಾರೆ ಎಂದು ತೋರಿಸಿದೆ.

ವಾರ್ತಾ ಭಾರತಿ 22 Apr 2026 8:26 pm

Madhya Pradesh | ಮದುವೆಯ ಮೆರವಣಿಗೆಯ ವೇಳೆ ದಲಿತ ವರನನ್ನು ಕುದುರೆಯಿಂದ ಕೆಳಗಿಳಿಸಿ ಹಲ್ಲೆ

ಭೋಪಾಲ್: ವಿವಾಹ ಪೂರ್ವ ಮೆರವಣಿಗೆಯ ವೇಳೆ ಪರಿಶಿಷ್ಟ ಜಾತಿಗೆ ಸೇರಿದ 23 ವರ್ಷದ ಅಂಗವಿಕಲ ವರ ಗೋಲು ಅಹಿರ್ವರ್ ಅವರನ್ನು ಹಿಂದುಳಿದ ವರ್ಗಗಳಿಗೆ ಸೇರಿದ ಲೋಧಿ ಸಮುದಾಯದ ಕೆಲ ದುಷ್ಕರ್ಮಿಗಳು ಕುದುರೆಯಿಂದ ಕೆಳಗಿಳಿಸಿ ಹಲ್ಲೆ ನಡೆಸಿದ ಘಟನೆ ಮಧ್ಯಪ್ರದೇಶದ ಬುಂದೇಲ್ ಖಂಡ್ ಪ್ರಾಂತ್ಯದ ದಾಮೋಹ್ ಜಿಲ್ಲೆಯಲ್ಲಿ ನಡೆದಿದೆ ಎಂದು ವರದಿ ತಿಳಿಸಿದೆ. ಮಂಗಳವಾರ ಸಂಜೆ, ವರನ ಸಾಂಪ್ರದಾಯಿಕ ವಿವಾಹ ಪೂರ್ವ ಮೆರವಣಿಗೆ ನಡೆಯುವಾಗ ಹಟ್ಟಾ ಪೊಲೀಸ್ ಠಾಣೆ ವ್ಯಾಪ್ತಿಯ ಬಿಜೋರಿ ಪಾಠಕ್ ಗ್ರಾಮದಲ್ಲಿ ಈ ಘಟನೆ ನಡೆದಿದೆ. ದಲಿತ ವರನ ಮೆರವಣಿಗೆ ಗ್ರಾಮದಲ್ಲಿ ಸಾಗುವ ವೇಳೆ, ಅದನ್ನು ತಡೆಹಿಡಿದ ಲೋಧಿ ಸಮುದಾಯದ ಕೆಲ ವ್ಯಕ್ತಿಗಳು ಮೆರವಣಿಗೆ ಮುಂದುವರಿಯದಂತೆ ಅಡ್ಡಲಾಗಿ ತಮ್ಮ ವಾಹನಗಳನ್ನು ನಿಲ್ಲಿಸಿದ್ದಾರೆ ಎಂದು ತಿಳಿದು ಬಂದಿದೆ. ಬಳಿಕ, ವಿಶ್ವನಾಥ್ ಲೋಧಿ, ಬಿಚ್ಚು, ಚಿನ್ನು ಹಾಗೂ ಪಲ್ಟು ಲೋಧಿ ಎಂದು ಗುರುತಿಸಲಾದ ನಾಲ್ವರು ದುಷ್ಕರ್ಮಿಗಳು ವರನನ್ನು ಕುದುರೆಯಿಂದ ಕೆಳಗೆಳೆದಿದ್ದು, ಆತನ ಮೇಲೆ ದೊಣ್ಣೆಗಳಿಂದ ಹಲ್ಲೆ ನಡೆಸಿದ್ದಾರೆ. ಈ ಘಟನೆಯ ವಿಡಿಯೊವನ್ನು ವರನ ಕುಟುಂಬದ ಸದಸ್ಯರು ಚಿತ್ರೀಕರಿಸಿಕೊಂಡಿದ್ದಾರೆ. “ನನ್ನ ಪುತ್ರ ಅಂಗವಿಕಲನಾಗಿದ್ದರೂ, ಹಲ್ಲೆಕೋರರು ಆತನಿಗೆ ಯಾವುದೇ ಕರುಣೆ ತೋರಲಿಲ್ಲ. ಅವರು ಆತನನ್ನು ನಿರ್ದಯವಾಗಿ ಥಳಿಸಿದರು. ನನ್ನ ಪುತ್ರಿ ಮನಿಶಾಳನ್ನೂ ಬಿಡಲಿಲ್ಲ. ತನ್ನ ಸಹೋದರನ ಮೇಲಿನ ಹಲ್ಲೆಗೆ ಪ್ರತಿರೋಧ ತೋರಲು ಯತ್ನಿಸಿದಾಗ, ಆಕೆಯನ್ನೂ ಥಳಿಸಲಾಯಿತು” ಎಂದು ವರನ ತಾಯಿ ವಿದ್ಯಾ ಅಹಿರ್ವರ್ ಆರೋಪಿಸಿದ್ದಾರೆ. ಈ ಘಟನೆಯ ಬಳಿಕ ಹಟ್ಟಾ ಪೊಲೀಸ್ ಠಾಣೆಗೆ ಧಾವಿಸಿದ ದಲಿತ ಕುಟುಂಬ, ಇಡೀ ಘಟನೆ ಕುರಿತು ಪೊಲೀಸರಿಗೆ ದೂರು ನೀಡಿದೆ. ಈ ಘಟನೆ ದೃಢಪಡಿಸಿರುವ ಹಟ್ಟಾ ಪೊಲೀಸ್ ಠಾಣೆಯ ಠಾಣಾಧಿಕಾರಿ ಸುಧೀರ್ ಕುಮಾರ್, ಭಾರತೀಯ ನ್ಯಾಯ ಸಂಹಿತೆಯ ವಿವಿಧ ಕಲಂಗಳು ಹಾಗೂ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ದೌರ್ಜನ್ಯ ತಡೆ ಕಾಯ್ದೆಯನ್ವಯ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ. ಘಟನಾ ಸ್ಥಳದಲ್ಲಿ ಉದ್ವಿಗ್ನತೆ ತಡೆಯಲು ಹಾಗೂ ವಿವಾಹ ಸಂಪ್ರದಾಯಗಳು ಅಡೆತಡೆ ಇಲ್ಲದೆ ಮುಂದುವರಿಯಲು ಗ್ರಾಮದಲ್ಲಿ ಪೊಲೀಸ್ ಪಡೆಯನ್ನು ನಿಯೋಜಿಸಲಾಗಿದೆ. ವೈದ್ಯಕೀಯ ಪರೀಕ್ಷೆಗಳ ಬಳಿಕ, ವಿವಾಹದ ಸಂಪ್ರದಾಯಗಳನ್ನು ಪೂರ್ಣಗೊಳಿಸಲು ವರ ಹಾಗೂ ಕುಟುಂಬದ ಸದಸ್ಯರು ಛತರ್‌ಪುರ್ ಜಿಲ್ಲೆಗೆ ಹೊಂದಿಕೊಂಡಿರುವ ಬುಧಿ ಸೆಮ್ರಾ ಗ್ರಾಮಕ್ಕೆ ತೆರಳಿದ್ದಾರೆ ಎಂದು ತಿಳಿದುಬಂದಿದೆ.

ವಾರ್ತಾ ಭಾರತಿ 22 Apr 2026 8:25 pm

Kalaburagi | ಕಾಂಗ್ರೆಸ್ ವಿರುದ್ಧ ಜೆಡಿಎಸ್‌ನಿಂದ ಬೃಹತ್ ಪ್ರತಿಭಟನೆ

ಕಲಬುರಗಿ: ಮಹಿಳಾ ಮೀಸಲಾತಿ ವಿಧೇಯಕ ವಿಚಾರದಲ್ಲಿ ಕಾಂಗ್ರೆಸ್ ಪಕ್ಷದ ನಡೆ ಖಂಡಿಸಿ ಜಾತ್ಯತೀತ ಜನತಾದಳ (ಜೆಡಿಎಸ್) ಜಿಲ್ಲಾ ಮಹಿಳಾ ಘಟಕದ ವತಿಯಿಂದ ನಗರದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಯಿತು. ಸರ್ಧಾರ್ ವಲ್ಲಭಭಾಯಿ ಪಟೇಲ್ ವೃತ್ತದಿಂದ ಜಿಲ್ಲಾಧಿಕಾರಿಗಳ ಕಚೇರಿವರೆಗೆ ನಡೆದ ಪ್ರತಿಭಟನೆಯಲ್ಲಿ ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರು ಭಾಗವಹಿಸಿ, ಕಾಂಗ್ರೆಸ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಜಿಲ್ಲಾ ಜೆಡಿಎಸ್ ಅಧ್ಯಕ್ಷ ಬಾಲರಾಜ್ ಗುತ್ತೇದಾರ ಅವರು, “1996ರಿಂದ 2026ರವರೆಗೆ ಕಾಂಗ್ರೆಸ್ ಪಕ್ಷದ ಮಹಿಳಾ ವಿರೋಧಿ ಮನೋಭಾವದಲ್ಲಿ ಯಾವುದೇ ಬದಲಾವಣೆ ಕಂಡುಬಂದಿಲ್ಲ. ಮಹಿಳಾ ಮೀಸಲಾತಿ ಮಸೂದೆ ವಿಷಯದಲ್ಲಿ ಮತ್ತೊಮ್ಮೆ ಕಾಂಗ್ರೆಸ್ ತನ್ನ ನಿಲುವು ಸ್ಪಷ್ಟಪಡಿಸಿದೆ” ಎಂದು ಟೀಕಿಸಿದರು. ಎಚ್.ಡಿ.ದೇವೇಗೌಡರ ನೇತೃತ್ವದ ಸರ್ಕಾರದ ಅವಧಿಯಲ್ಲಿ ಮಹಿಳೆಯರಿಗೆ 33% ಮೀಸಲಾತಿ ನೀಡುವ ಮಸೂದೆ ಮಂಡಿಸಲಾಗಿದ್ದರೂ, ಕಾಂಗ್ರೆಸ್ ಅದನ್ನು ವಿಫಲಗೊಳಿಸಿತ್ತು. ಈಗ ಪ್ರಧಾನಿ ನರೇಂದ್ರ ಮೋದಿ ಅವರು ಮಹಿಳಾ ಸಬಲೀಕರಣಕ್ಕಾಗಿ ತೆಗೆದುಕೊಂಡಿರುವ ಹೆಜ್ಜೆಗೆ ಕಾಂಗ್ರೆಸ್ ಹಾಗೂ ಅದರ ಮಿತ್ರಪಕ್ಷಗಳು ಮತ್ತೆ ಅಡ್ಡಿಯಾಗಿವೆ ಎಂದು ಆರೋಪಿಸಿದರು. ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಮಹೇಶ್ವರಿ ವಾಲಿ ಮಾತನಾಡಿ, “ಮಹಿಳಾ ಮೀಸಲಾತಿ ಜಾರಿಯಾಗಲಿದೆ ಎಂಬ ನಿರೀಕ್ಷೆಯಲ್ಲಿ ಸಂಭ್ರಮಾಚರಣೆಗೆ ಸಿದ್ಧರಾಗಿದ್ದೇವೆ. ಆದರೆ ಇದೀಗ ಅದು ಆಕ್ರೋಶಕ್ಕೆ ತಿರುಗಿದೆ. ಕಾಂಗ್ರೆಸ್ ಮಹಿಳೆಯರ ಹಕ್ಕನ್ನು ನಿರ್ಲಕ್ಷ್ಯ ಮಾಡಿದೆ” ಎಂದು ಹೇಳಿದರು. ಈ ಸಂದರ್ಭದಲ್ಲಿ ಬಸವರಾಜ್ ಬೀರಬಿಟ್ಟೆ, ಶಂಕರ ಗೌಡ ಪಾಟೀಲ್, ಮಲ್ಲಿಕಾರ್ಜುನ್ ಸಂಗಣಿ, ಮಹಾಂತಪ್ಪ ಮದರಿ, ವಿಠ್ಠಲ್ ಜಾಧವ, ರವಿಶಂಕರ್ ರೆಡ್ಡಿ, ಮಂಜುಗೌಡ ಪಾಟೀಲ್, ರಿಜವಾನ್ ಅಹಮದ್, ಪ್ರವೀಣ್ ಜಾಧವ್, ರಾಜೇ ಪಟೇಲ್, ಕಿರಣ್ ಪಾಟೀಲ್, ಶಿವಲಿಂಗಪ್ಪ ಪಾಟೀಲ್, ಅನ್ವರ್ ಪಟೇಲ್, ಸಾಬೀರ್ ಗನಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.

ವಾರ್ತಾ ಭಾರತಿ 22 Apr 2026 8:22 pm

ಟ್ರಂಪ್ ಕದನ ವಿರಾಮವನ್ನು ಅನಿರ್ದಿಷ್ಟಾವಧಿಗೆ ವಿಸ್ತರಿಸಿದ ಬೆನ್ನಿಗೇ ಮೂರನೇ ಕಂಟೈನರ್ ಹಡಗು ವಶಪಡಿಸಿಕೊಂಡ ಇರಾನ್

ಟೆಹರಾನ್: ಅಮೆರಿಕ ಮತ್ತು ಇರಾನ್ ನಡುವಿನ ಕದನ ವಿರಾಮವನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಅನಿರ್ದಿಷ್ಟಾವಧಿಗೆ ವಿಸ್ತರಿಸಿದ ಬೆನ್ನಿಗೇ, ಬುಧವಾರ ಹಾರ್ಮುಝ್ ಜಲಸಂಧಿಯನ್ನು ದಾಟಲು ಪ್ರಯತ್ನಿಸುತ್ತಿದ್ದ ಮೂರು ಕಂಟೈನರ್ ಹಡಗುಗಳನ್ನು ಇರಾನ್‌ನ ರೆವಲ್ಯೂಷನರಿ ಗಾರ್ಡ್ಸ್ ವಶಪಡಿಸಿಕೊಂಡಿದೆ. ಇದಕ್ಕೂ ಮುನ್ನ, ಬುಧವಾರ ಬೆಳಗ್ಗೆ ಪ್ರಕಟಣೆ ಬಿಡುಗಡೆ ಮಾಡಿದ್ದ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್(IRGC), ಎರಡು ಹಡಗುಗಳನ್ನು ವಶಪಡಿಸಿಕೊಂಡಿರುವುದನ್ನು ದೃಢಪಡಿಸಿತ್ತು. “ಇಂದು ಬೆಳಗ್ಗೆ ಹಾರ್ಮುಝ್ ಜಲಸಂಧಿಯನ್ನು ಉಲ್ಲಂಘಿಸಲು ಪ್ರಯತ್ನಿಸುತ್ತಿದ್ದ ಎರಡು ಹಡಗುಗಳನ್ನು ಗುರುತಿಸಿ, ಅವನ್ನು ತಡೆಹಿಡಿಯಲಾಗಿದೆ,” ಎಂದು ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್‌ ನ ನೌಕಾಪಡೆ ಪ್ರಕಟಣೆಯಲ್ಲಿ ತಿಳಿಸಿದೆ. “ಉಲ್ಲಂಘನೆ ಮಾಡಿದ ಎರಡು ಹಡಗುಗಳನ್ನು ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್‌ನ ನೌಕಾಪಡೆ ವಶಪಡಿಸಿಕೊಂಡಿದ್ದು, ಅವನ್ನು ಇರಾನ್ ಕರಾವಳಿಯತ್ತ ಕಳುಹಿಸಲಾಗಿದೆ,” ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ. “ವಶಪಡಿಸಿಕೊಂಡ ಎರಡು ಹಡಗುಗಳ ಪೈಕಿ ಒಂದು ‘MSC-FRANCESCA’ ಆಗಿದ್ದು, ಇದು ಇಸ್ರೇಲ್‌ಗೆ ಸೇರಿದ ಹಡಗು. ‘EPAMINONDAS’ ಮತ್ತೊಂದು ಹಡಗಾಗಿದೆ. ಈ ಎರಡು ಹಡಗುಗಳು ನೌಕಾಯಾನ ವ್ಯವಸ್ಥೆಗೆ ಧಕ್ಕೆ ತಂದು, ಸಾಗರ ಭದ್ರತೆಗೆ ಅಪಾಯ ಉಂಟುಮಾಡಿದ್ದವು,” ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಈ ಪ್ರಕಟಣೆಯ ಬೆನ್ನಿಗೇ, ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್‌ನ ನೌಕಾಪಡೆಯು ‘ಯುಫೋರಿಯಾ’ ಎಂಬ ಮತ್ತೊಂದು ಹಡಗಿನ ಮೇಲೆ ದಾಳಿ ನಡೆಸಿದೆ ಎಂದು Nour News, Fars ಮತ್ತು Mehr ಸುದ್ದಿ ಸಂಸ್ಥೆಗಳು ಸೇರಿದಂತೆ ಇರಾನ್‌ ನ ಮಾಧ್ಯಮಗಳು ವರದಿ ಮಾಡಿವೆ. ಆ ಹಡಗನ್ನು ಇರಾನ್ ಕರಾವಳಿಯಲ್ಲಿ ನಿಲುಗಡೆ ಮಾಡಲಾಗಿದೆ ಎಂದು ಅವು ತಿಳಿಸಿವೆ. ಆದರೆ, ಈ ಕುರಿತು ಹೆಚ್ಚಿನ ವಿವರಗಳನ್ನು ನೀಡಿಲ್ಲ.

ವಾರ್ತಾ ಭಾರತಿ 22 Apr 2026 8:22 pm

ನಾಳೆ(ಎ.23) ಎಸೆಸೆಲ್ಸಿ ಪರೀಕ್ಷೆ ಫಲಿತಾಂಶ ಪ್ರಕಟ

ಬೆಂಗಳೂರು : ಪ್ರಸ್ತುತ ಸಾಲಿನ ಎಸೆಸೆಲ್ಸಿ ಪರೀಕ್ಷೆ-1ರ ಫಲಿತಾಂಶ ನಾಳೆ (ಎ.23) ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಗೊಳ್ಳಲಿದೆ. ಬುಧವಾರ ಮಧ್ಯಾಹ್ನ 12 ಗಂಟೆಗೆ ಎಸೆಸೆಲ್ಸಿ ಪರೀಕ್ಷೆ-1ರ ಫಲಿತಾಂಶವನ್ನು ಪ್ರಕಟಿಸಲಾಗುತ್ತಿದ್ದು, ಸದರಿ ಫಲಿತಾಂಶವನ್ನು https://karresults.nic.in   ಲಿಂಕ್‌ ಮೂಲಕ ಹಾಗೂ KarnatakaOne Mobile App ಮೂಲಕವೂ ಪಡೆಯಬಹುದಾಗಿದೆ. ಅಲ್ಲದೆ, ವಿದ್ಯಾರ್ಥಿಗಳ ನೊಂದಾಯಿತ ಮೊಬೈಲ್ ಸಂಖ್ಯೆಗೆ ವಾಟ್ಸಾಪ್/ಎಸ್‌ಎಂಎಸ್ (SMS) ಮೂಲಕವೂ ಫಲಿತಾಂಶದ ಮಾಹಿತಿಯನ್ನು ಮಂಡಳಿಯಿಂದ ರವಾನಿಸಲಾಗುವುದು.

ವಾರ್ತಾ ಭಾರತಿ 22 Apr 2026 8:18 pm

West Bengal S I R | ಜ್ಞಾನೇಶ್‌ ಕುಮಾರ್‌ ಅವರು ರಾಷ್ಟ್ರೀಯ ಅವಮಾನ: ಕಪಿಲ್ ಸಿಬಲ್ ವಾಗ್ದಾಳಿ

ಮುಖ್ಯ ಚುನಾವಣಾ ಆಯುಕ್ತರು ಅಧಿಕಾರ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದ ರಾಜ್ಯಸಭಾ ಸಂಸದ

ವಾರ್ತಾ ಭಾರತಿ 22 Apr 2026 8:16 pm

ಕನಕಗಿರಿ ಉತ್ಸವದ ಪೂರ್ವಭಾವಿ ಸಭೆಯಲ್ಲಿ ನನ್ನ ಮಗ ವೇದಿಕೆ ಹಂಚಿಕೊಂಡದ್ದು ತಪ್ಪು, ಬುದ್ದಿಹೇಳುವೆ : ಸಚಿವ ಶಿವರಾಜ ತಂಗಡಗಿ

ಕನಕಗಿರಿ: ಕನಕಗಿರಿ ಉತ್ಸವದ ಪೂರ್ವಭಾವಿ ಸಭೆಯಲ್ಲಿ ತಮ್ಮ ಪುತ್ರ ವೇದಿಕೆ ಹಂಚಿಕೊಂಡಿರುವುದು ತಪ್ಪು. ಈ ಬಗ್ಗೆ ಮಗನನ್ನು ಕರೆದು ಬುದ್ಧಿ ಹೇಳುತ್ತೇನೆ. ಇಂತಹ ಘಟನೆಗಳಿಗೆ ಮುಂದಿನ ದಿನಗಳಲ್ಲಿ ಅವಕಾಶ ನೀಡುವುದಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ತಿಳಿಸಿದ್ದಾರೆ. ಬೆನಕನಾಳ ಗ್ರಾಮದಲ್ಲಿ ಬುಧವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಮಗ ವೇದಿಕೆಯ ಮೂಲೆಯಲ್ಲಿ ಕುಳಿತಿರುವುದು ನನ್ನ ಗಮನಕ್ಕೆ ಬಂದಿರಲಿಲ್ಲ ಎಂದು ಸ್ಪಷ್ಟಪಡಿಸಿದರು. ಇದೇ ವೇಳೆ ಸಂಕನಾಳ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಕುರಿತು ಪ್ರತಿಕ್ರಿಯಿಸಿದ ಅವರು, ಗ್ರಾಮದಲ್ಲಿ ನೀರಿನ ಕೊರತೆ ಇಲ್ಲ ಎಂದು ಹೇಳಿದರು. ಕಾರಟಗಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಡಿ ಶುದ್ಧ ನೀರು ಪೂರೈಕೆ ಮಾಡಲಾಗುತ್ತಿದೆ. ಜೊತೆಗೆ ಅಗತ್ಯವಿರುವ ಕಡೆಗಳಲ್ಲಿ ಖಾಸಗಿ ಬೋರ್‌ವೆಲ್‌ಗಳನ್ನು ಬಾಡಿಗೆ ಆಧಾರದಲ್ಲಿ ಬಳಸಲಾಗುತ್ತಿದೆ ಎಂದು ವಿವರಿಸಿದರು. ಮಹಿಳೆಯರು ಕೊಡಗಳನ್ನು ಹಿಡಿದು ಹೊಸ ಬೋರ್‌ವೆಲ್ ಕೊರೆಸುವಂತೆ ಮನವಿ ಸಲ್ಲಿಸಿರುವುದಾಗಿ ತಿಳಿಸಿದ ತಾಲೂಕು ಪಂಚಾಯತ್‌ ಪ್ರಭಾರ ಇಒ ರಾಜಶೇಖರ್ ಅವರು, ಗ್ರಾಮದಲ್ಲಿ ನೀರಿನ ಪೂರೈಕೆ ವ್ಯವಸ್ಥೆ ಸಮರ್ಪಕವಾಗಿರುವುದಾಗಿ ಸ್ಪಷ್ಟಪಡಿಸಿದರು.

ವಾರ್ತಾ ಭಾರತಿ 22 Apr 2026 8:15 pm

ಕುಕನೂರಿನಲ್ಲಿ ಬಸವೇಶ್ವರ ಜಯಂತಿ ಆಚರಣೆ : ವಿದ್ಯಾರ್ಥಿಗಳಿಗೆ ಸನ್ಮಾನ

ಕುಕನೂರು: ಪಟ್ಟಣದ ಮುಂಡರಗಿ ಅನ್ನದಾನೀಶ್ವರ ಶಾಖಾಮಠದಲ್ಲಿ ಸಾಮಾಜಿಕ ಕ್ರಾಂತಿ ಯೋಗಿ ಬಸವೇಶ್ವರ ಜಯಂತೋತ್ಸವವನ್ನು ಅದ್ಧೂರಿಯಾಗಿ ಆಚರಿಸಲಾಯಿತು. ಜಯಂತಿ ಅಂಗವಾಗಿ ಮಹಾದೇವ ಮಹಾಸ್ವಾಮಿಗಳ ಸಾನಿಧ್ಯದಲ್ಲಿ ವಿವಿಧ ಕ್ಷೇತ್ರಗಳ ಸಾಧಕರಿಗೆ ಹಾಗೂ ದ್ವಿತೀಯ ಪಿಯುಸಿಯಲ್ಲಿ 80% ಕ್ಕಿಂತ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಸನ್ಮಾನ ಕಾರ್ಯಕ್ರಮ ನೆರವೇರಿತು. ಈ ಸಂದರ್ಭದಲ್ಲಿ ಮಾತನಾಡಿದ ಅನ್ನದಾನೀಶ್ವರ ಶಾಖಾಮಠದ ಮಹಾದೇವ ಸ್ವಾಮೀಜಿ, “ನಮ್ಮ ಭಾಗದ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆದು ದೊಡ್ಡ ಸಾಧನೆ ಮಾಡಬೇಕು. ಹುಟ್ಟಿನಿಂದ ಯಾರೂ ಶ್ರೇಷ್ಠರಲ್ಲ, ನಡೆತೆಯಿಂದ ಶ್ರೇಷ್ಠರಾಗುತ್ತಾರೆ. ಅಸ್ಪೃಶ್ಯತೆ ವಿರುದ್ಧ ಹೋರಾಡಿ ಕೆಳವರ್ಗದವರನ್ನು ಮುಖ್ಯವಾಹಿನಿಗೆ ತರುವಲ್ಲಿ ಬಸವಣ್ಣನವರ ಪಾತ್ರ ಅನನ್ಯವಾಗಿದೆ” ಎಂದು ಹೇಳಿದರು. ಪ್ರತಿಯೊಬ್ಬರೂ ಪ್ರಾಮಾಣಿಕವಾಗಿ ದುಡಿದು, ತಮ್ಮ ಆದಾಯದಲ್ಲಿ ಒಂದು ಭಾಗವನ್ನು ಸಮಾಜದ ಒಳಿತಿಗೆ ಮೀಸಲಿಡಬೇಕು ಎಂದು ಸಲಹೆ ನೀಡಿದರು. ಮುಖ್ಯ ಅತಿಥಿಯಾಗಿ ಮಾತನಾಡಿದ ಸಮಾಜ ಸೇವಕ ಕಳಕಪ್ಪ ಕಂಬಳಿ, “ಬಸವಣ್ಣನವರ ಜಯಂತಿ ಕೇವಲ ಆಚರಣೆಗೆ ಸೀಮಿತವಾಗಬಾರದು. ‘ತನ್ನಂತೆ ಪರರ ಬಗೆ’ ಎಂಬ ಅವರ ತತ್ವವನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು” ಎಂದು ತಿಳಿಸಿದರು. ಜೊತೆಗೆ, ಮಠವನ್ನು ಅಭಿವೃದ್ಧಿಪಡಿಸಿ ಜನಸೇವೆ ಮಾಡುತ್ತಿರುವ ಮಹಾದೇವ ಮಹಾಸ್ವಾಮಿಗಳಿಗೆ ಅಭಿನಂದನೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಮಠದ ಸೇವಾ ಸಮಿತಿ ಅಧ್ಯಕ್ಷ ಸಂಗಮೇಶ ಕಲ್ಮಠ, ಅರವಿಂದಗೌಡ ಪೊಲೀಸ್ ಪಾಟೀಲ್, ಬಸನಗೌಡ ಪಾಟೀಲ್, ಅಶೋಕ ತೋಟಾದ, ವೀರಯ್ಯ ತೋಂಟದಾರ್ಯಮಠ, ಅಂದಲ್ಲ ಜವಳಿ, ಈರಣ್ಣ ಅಣ್ಣಿಗೇರಿ, ಖಾಸಿಂ ಸಾಬ ಸಂಗಟಿ ಸೇರಿದಂತೆ ಪಟ್ಟಣ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಭಕ್ತರು ಭಾಗವಹಿಸಿದ್ದರು.

ವಾರ್ತಾ ಭಾರತಿ 22 Apr 2026 8:08 pm

SSLC ಫಲಿತಾಂಶ ಏಪ್ರಿಲ್‌ 23 ಕ್ಕೆ ಪ್ರಕಟ: KSEEB ಅಧಿಕೃತ ಮಾಹಿತಿ; ಸಮಯ, ವೆಬ್‌ಸೈಟ್‌ ಲಿಂಕ್ ಬಿಡುಗಡೆ

ಕರ್ನಾಟಕ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ ಗುರುವಾರ ಪ್ರಕಟವಾಗಲಿದೆ. ಈ ಬಗ್ಗೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಅಧಿಕೃತ ಮಾಹಿತಿ ನೀಡಿದೆ. ಮಧ್ಯಾಹ್ನ 12 ಕ್ಕೆ ಫಲಿತಾಂಶ ಲಭ್ಯವಾಗಲಿದೆ. ವಿದ್ಯಾರ್ಥಿಗಳು ನೋಂದಾಯಿಸಿದ ವ್ಯಾಟ್ಸಪ್‌, ಮೊಬೈಲ್‌ ಸಂಖ್ಯೆಗೆ ಫಲಿತಾಂಶ ಸಂದೇಶ ಬರಲಿದೆ. ಇನ್ನು ಡಿಜಿಲಾಕರ್‌ನಲ್ಲಿ ಮಾರ್ಕ್ಸ್‌ ಕಾರ್ಡ್‌ ಸಿಗಲಿದೆ.

ವಿಜಯ ಕರ್ನಾಟಕ 22 Apr 2026 8:05 pm

ಮಹಿಳಾ ಮೀಸಲು ಮಸೂದೆ; ಬಿಜೆಪಿಯ ರಾಜಕೀಯ ಪ್ರಸಹನ ನಾಚಿಕೆಗೇಡಿನ ಸಂಗತಿ : ಕವಿತಾ

ಬೆಂಗಳೂರು : ‘ಕೇಂದ್ರದ ಬಿಜೆಪಿ ಸರಕಾರ, ತಮಿಳುನಾಡು ಮತ್ತು ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ತನ್ನ ಮತಬ್ಯಾಂಕ್ ಸೃಷ್ಟಿಸಿಕೊಳ್ಳಲು ಮಹಿಳಾ ಮೀಸಲು ಮಸೂದೆ ಮಂಡನೆ ಮಾಡುವ ಮೂಲಕ ರಾಜಕೀಯ ಪ್ರಹಸನಕ್ಕೆ ಮುಂದಾಗಿರುವುದು ನಾಚಿಕೆಗೇಡಿನ ಸಂಗತಿ’ ಎಂದು ಕೆಪಿಸಿಸಿ ಮಹಿಳಾ ಘಟಕದ ಕಾರ್ಯದರ್ಶಿ ಕವಿತಾ ಜೋಡಿದಾರ್ ಟೀಕಿಸಿದ್ದಾರೆ. ಬುಧವಾರ ಈ ಸಂಬಂಧ ಪ್ರಕಟಣೆ ನೀಡಿರುವ ಅವರು, ‘ಈಗಾಗಲೇ ಲೋಕಸಭೆ, ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಮಸೂದೆಯನ್ನು ಮನಮೋಹನ್ ಸಿಂಗ್ ಅವಧಿಯಲ್ಲೇ ಮಂಡನೆ ಮಾಡಲಾಗಿತ್ತು. ರಾಜ್ಯಸಭೆಯಲ್ಲಿ ಅನುಮೋದನೆಯೂ ದೊರಕಿದ್ದು, ಲೋಕಸಭೆಯಲ್ಲಿ ಒಮ್ಮತದ ಕೊರತೆ ಹಿನ್ನೆಲೆಯಲ್ಲಿ ಅಂಗೀಕಾರ ಆಗಿರಲಿಲ್ಲ ಎಂದು ಉಲ್ಲೇಖಿಸಿದ್ದಾರೆ. ಕನಿಷ್ಟ ರಾಜಕೀಯ ಸಾಮಾನ್ಯ ಜ್ಞಾನ ಇರುವ ಎಲ್ಲರಿಗೂ ಮೇಲ್ಕಂಡ ವಿಚಾರ ಗೊತ್ತಿದೆ. ಆದರೆ, ಬಿಜೆಪಿ, ಆರೆಸ್ಸೆಸ್‌ ನ ವಾಟ್ಸ್‌ ಅಪ್ ಯೂನಿವರ್ಸಿಟಿ ಬಾಲ ‘ಪ್ರತಿಭೆ’ಗಳು, ಗೋಬೆಲ್ಸ್ ಥಿಯರಿಯನ್ನೆ ಹೊತ್ತು ಮೆರೆಸುವ ಆ ಪಕ್ಷದ ಐಟಿ ಸೆಲ್‍ನವರು ‘ಕಾಂಗ್ರೆಸ್ ಪಕ್ಷದಿಂದ ಮಹಿಳಾ ಮೀಸಲಾತಿ ಮಸೂದೆ ಬಿದ್ದು ಹೋಯಿತು, ಕಾಂಗ್ರೆಸ್ ಮಹಿಳಾ ವಿರೋಧಿ’ ಎಂದು ಬಿಂಬಿಸುವ ಸುಳ್ಳು ಪ್ರಚಾರ ಮಾಡುತ್ತಿದ್ದಾರೆ ಎಂದು ಅವರು ಟೀಕಿಸಿದ್ದಾರೆ. ಬಿಜೆಪಿಯವರಿಗೆ ನಿಜಕ್ಕೂ ಮಹಿಳಾ ಸಬಲೀಕರಣದ ಬಗ್ಗೆ ಕನಿಷ್ಟ ಬದ್ದತೆ ಇದ್ದರೇ, ಕಾನೂನು ರೂಪಿಸಲು ಹೋಗದೆ ನೇರವಾಗಿ ಲೋಕಸಭೆ ಮತ್ತು ವಿಧಾನಸಭಾ ಚುನಾವಣೆಗಳಲ್ಲಿ ಮಹಿಳೆಯರಿಗೆ ಶೇ.33ರಷ್ಟು ಟಿಕೆಟ್‍ಗಳನ್ನು ಕೊಡಬಹುದಲ್ಲವೇ?. ಕಾಂಗ್ರೆಸ್ ಸೇರಿದಂತೆ ಇತರೆ ಪಕ್ಷಗಳಂತೆ ಬಿಜೆಪಿಯು ಮಹಿಳೆಯರಿಗೆ ಶೇ.12ರಿಂದ ಶೇ.15ಕ್ಕಿಂತ ಹೆಚ್ಚಿನ ಟಿಕೆಟ್‍ಗಳನ್ನು ನೀಡುತ್ತಿಲ್ಲವೇಕೇ? ಎಂದು ಅವರು ಪ್ರಶ್ನಿಸಿದ್ದಾರೆ.

ವಾರ್ತಾ ಭಾರತಿ 22 Apr 2026 8:01 pm

ದ್ವಿತೀಯ ಪಿಯುಸಿ ಫಲಿತಾಂಶ: ಸರಕಾರಿ ಕಾಲೇಜುಗಳ ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ

ಮಂಗಳೂರು: ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಗಳಿಸಿ ಸಾಧನೆಗೈದ ಜಿಲ್ಲೆಯ ಸರಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗೆ ಬುಧವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸನ್ಮಾನಿಸಲಾಯಿತು. ಜಿಲ್ಲಾಧಿಕಾರಿ ದರ್ಶನ್ ಎಚ್.ವಿ ಮಾತನಾಡಿ ಸರಕಾರಿ ಕಾಲೇಜುಗಳಲ್ಲಿ ಕಲಿತ ವಿದ್ಯಾರ್ಥಿಗಳು ಉತ್ತಮ ಸಾಧನೆಗೈಯುವ ಮೂಲಕ ಹೆತ್ತವರು, ಪೋಷಕರು ಮತ್ತು ಕಾಲೇಜಿಗೆ ಕೀರ್ತಿ ತಂದಿದ್ದಾರೆ. ಮಕ್ಕಳ ಸಾಧನೆಗಳ ಹಿಂದೆ ಮನೆಯವರ ಕೊಡುಗೆಯೂ ಇದೆ. ವಿದ್ಯಾರ್ಥಿಗಳು ವಿದ್ಯೆಯ ಹಿಂದೆ ಹೋಗಬೇಕು, ಹಣದ ಹಿಂದೆ ಹೋಗಬಾರದು. ವಿದ್ಯೆಯ ಹಿಂದೆ ಹೋದರೆ ಹಣ ತಾನಾಗಿಯೇ ಬರುತ್ತದೆ. ಸರಕಾರಿ ಕಾಲೇಜುಗಳ ಸೀಮಿತ ಸವಲತ್ತುಗಳ ಮಧ್ಯೆ ವಿದ್ಯಾರ್ಥಿಗಳು ಸಾಧನೆ ಗೈದಿರುವುದು ಶ್ಲಾಘನೀಯ ಎಂದರು. *ಸನ್ಮಾನಿತ ವಿದ್ಯಾರ್ಥಿಗಳ ವಿವರ :ಕಲಾ ವಿಬಾಗದಲ್ಲಿ ಪುತ್ತೂರು ಸರಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಸುಶ್ಮಿತಾ - 582 ಅಂಕ. ವಾಣಿಜ್ಯ ವಿಭಾಗದಲ್ಲಿ ಪುತ್ತೂರು ಸರಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ನೇಹಾ ಎಂ.ಡಿ -591, ವಾಮದಪದವು ಸರಕಾರಿ ಪದವಿ ಪೂರ್ವ ಕಾಲೇಜಿನ ದಕ್ಷಾ - 591, ಬಲ್ಮಠ ಸರಕಾರಿ ಪದವಿ ಪೂರ್ವ ಕಾಲೇಜಿನ ಮಾನ್ವಿಕಾ -589 ಅಂಕ. ವಿಜ್ಞಾನ ವಿಬಾಗದಲ್ಲಿ ಪುತ್ತೂರು ಸರಕಾರಿ ಪದವಿ ಪೂರ್ವ ಕಾಲೇಜಿನ ಪವಿತ್ರ ಎಸ್.ಪಿ -586, ಪುಂಜಾಲಕಟ್ಟೆ ಸರಕಾರಿ ಪದವಿ ಪೂರ್ವ ಕಾಲೇಜಿನ ಸಾತ್ವಿ ಬಾಳಿಗ- 583 ಅಂಕ ಗಳಿಸಿದ್ದರು. *ಪ್ರಾಂಶುಪಾಲರಿಗೆ ಸನ್ಮಾನ: ಈ ಸಂದರ್ಭ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ.100 ಫಲಿತಾಂಶ ಪಡೆದ ಬೆಳ್ಳಾರೆ, ಗುತ್ತಿಗಾರು, ಕೊಯ್ಯೂರು, ಐವರ್ನಾಡು ನಾಲ್ಯಪದವು ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರನ್ನು ಸನ್ಮಾನಿಸಲಾಯಿತು. ಈ ಸಂದರ್ಭ ಅಪರ ಜಿಲ್ಲಾಧಿಕಾರಿ ರಾಜು ಕೆ, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕಿ ರಾಜೇಶ್ವರಿ ಮತ್ತಿತ್ತರರು ಉಪಸ್ಥಿತರಿದ್ದರು.

ವಾರ್ತಾ ಭಾರತಿ 22 Apr 2026 8:00 pm

Kalaburagi | ವಿದ್ಯುತ್ ಗುತ್ತಿಗೆದಾರರ ಸಂಘದ ಕ್ರೀಡಾ ಸಮಿತಿಯ ರಾಜ್ಯ ಉಪಾಧ್ಯಕ್ಷರಾಗಿ ಒಡೆಯರ್ ನೇಮಕ

ಕಲಬುರಗಿ: ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘದ ರಾಜ್ಯಾಧ್ಯಕ್ಷ ಸಿ.ರಮೇಶ್ ಅವರ ಆದೇಶದ ಮೇರೆಗೆ ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘದ ಕ್ರೀಡಾ ಸಮಿತಿಯ ರಾಜ್ಯ ಉಪಾಧ್ಯಕ್ಷರಾಗಿ ಬಸವರಾಜ ಒಡೆಯರ್ ಅವರನ್ನು ಎರಡನೇ ಬಾರಿಗೆ ನೇಮಕ ಮಾಡಲಾಗಿದೆ ಎಂದು ರಾಜ್ಯ ಪ್ರಧಾನ ಕಾರ್ಯದರ್ಶಿ ಎಚ್.ವಿ.ಚಂದ್ರಬಾಬ್ ತಿಳಿಸಿದ್ದಾರೆ. ಬಸವರಾಜ ಒಡೆಯರ್ ಅವರ ನೇಮಕಾತಿಗೆ ಅನುಮೋದನೆ ನೀಡಲಾಗಿದೆ. ಇವರು ಬಸವ ಎಲೆಕ್ಟಿಕಲ್ಸ್ ಸಂಸ್ಥೆಯ ಮಾಲಕರಾಗಿದ್ದು, ಸಮಾಜದಲ್ಲಿ ಸಕ್ರಿಯವಾಗಿ ಗುರುತಿಸಿಕೊಂಡಿದ್ದಾರೆ. ಹೊಸ ಜವಾಬ್ದಾರಿಯಂತೆ, ರಾಜ್ಯದ ಎಲ್ಲಾ ಜಿಲ್ಲಾ, ತಾಲ್ಲೂಕು ಮತ್ತು ಉಪಸಮಿತಿಗಳೊಂದಿಗೆ ಸಂಪರ್ಕ ಸಾಧಿಸಿ ಕ್ರೀಡಾ ಸಮಿತಿಗಳನ್ನು ರಚಿಸುವುದು ಹಾಗೂ ಆಡಳಿತ ಮಂಡಳಿಯೊಂದಿಗೆ ಚರ್ಚಿಸಿ ಸೂಕ್ತ ನಿರ್ಧಾರಗಳನ್ನು ಕೈಗೊಳ್ಳುವ ಹೊಣೆಗಾರಿಕೆ ಇವರ ಮೇಲಿದೆ. ಸಂಘ ಹಾಗೂ ಸದಸ್ಯರ ಹಿತದೃಷ್ಟಿಯಿಂದ ಕಾರ್ಯನಿರ್ವಹಿಸಬೇಕೆಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಾರ್ತಾ ಭಾರತಿ 22 Apr 2026 7:58 pm

Kalaburagi | ಶಿಷ್ಟಾಚಾರ ಪಾಲಿಸದವರು ಇತರರ ಬಗ್ಗೆ ಮಾತನಾಡುವುದು ಹಾಸ್ಯಾಸ್ಪದ: ಹರ್ಷಾ ಗುತ್ತೇದಾರ್‌ ಟೀಕೆ

ಕಲಬುರಗಿ: ಸ್ವತಃ ಶಿಷ್ಟಾಚಾರ ಪಾಲಿಸದ ಆಳಂದ ಶಾಸಕ ಬಿ.ಆರ್.ಪಾಟೀಲ್‌ ಅವರು ಇತರರ ಶಿಷ್ಟಾಚಾರದ ಬಗ್ಗೆ ಮಾತನಾಡುವುದು ಹಾಸ್ಯಾಸ್ಪದವಾಗಿದೆ ಎಂದು ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷ ಹರ್ಷಾ ಗುತ್ತೇದಾರ್‌ ಟೀಕಿಸಿದ್ದಾರೆ. ಪತ್ರಿಕಾ ಹೇಳಿಕೆ ನೀಡಿದ ಅವರು, ಕಳೆದ ಮೂರು ವರ್ಷಗಳಲ್ಲಿ ಆಳಂದ ತಾಲೂಕಿನಲ್ಲಿ ಶಿಷ್ಟಾಚಾರದ ಪದ್ಧತಿ ಸಂಪೂರ್ಣ ಕುಸಿದಿದೆ ಎಂದು ಆರೋಪಿಸಿದರು. ತಾಲೂಕಿನ ಹಲವು ಸರ್ಕಾರಿ ಕಾಮಗಾರಿಗಳಿಗೆ ಜನರಿಂದ ನೇರವಾಗಿ ಆಯ್ಕೆಯಾಗದ ಕೆಎಂಎಫ್ ಅಧ್ಯಕ್ಷ ಆರ್.ಕೆ. ಪಾಟೀಲ ಗುದ್ದಲಿ ಪೂಜೆ ನೆರವೇರಿಸುತ್ತಿರುವುದು ಶಿಷ್ಟಾಚಾರದ ಉಲ್ಲಂಘನೆಯಾಗಿದೆ ಎಂದರು. ಶಾಸಕ ಬಿ.ಆರ್. ಪಾಟೀಲರ ಸಂಬಂಧಿಯಾದ ಆರ್.ಕೆ. ಪಾಟೀಲ ಅವರು ಶಾಸಕರಲ್ಲದಿದ್ದರೂ ಕ್ಷೇತ್ರದ ವಿವಿಧ ಸರ್ಕಾರಿ ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿದ್ದು, ಅಧಿಕಾರಿಗಳು ಇದರಲ್ಲಿ ಶಿಷ್ಟಾಚಾರ ಪಾಲಿಸುತ್ತಿಲ್ಲ ಎಂದು ದೂರಿದರು. ಕೃಷಿ ಇಲಾಖೆಯ ರೈತ ಸಂಪರ್ಕ ಕೇಂದ್ರಗಳ ಮೂಲಕ ವಿತರಣೆ ಮಾಡಬೇಕಾದ ಬೀಜಗಳು ಮತ್ತು ಸ್ಪ್ರಿಂಕ್ಲರ್ ಪೈಪುಗಳ ವಿತರಣೆಯಲ್ಲಿಯೂ ನಿಯಮ ಉಲ್ಲಂಘನೆ ನಡೆದಿದೆ ಎಂದು ಆರೋಪಿಸಿದರು. ಈ ಕುರಿತು ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಈ ಹಿಂದೆಯೇ ಪತ್ರ ಬರೆಯಲಾಗಿದೆ ಎಂದು ತಿಳಿಸಿದರು. ಗುಮುಲ್‌ನಲ್ಲಿ ಕೋಟ್ಯಾಂತರ ರೂಪಾಯಿ ನೇಮಕಾತಿ ಹಗರಣ ನಡೆದಿದೆ. ಆದರೆ ಅದರ ಬಗ್ಗೆ ಮಾತನಾಡಲು ಶಾಸಕರಿಗೆ ಸಮಯವಿಲ್ಲ. ಕೇವಲ ಬಿಜೆಪಿ ಮತ್ತು ಕೇಂದ್ರ ಸರ್ಕಾರವನ್ನು ಟೀಕಿಸುವುದರಲ್ಲಿ ತೊಡಗಿದ್ದಾರೆ ಎಂದು ಹೇಳಿದರು. ಕಳೆದ ಮೂರು ವರ್ಷಗಳಲ್ಲಿ ಶಾಸಕ ಬಿ.ಆರ್. ಪಾಟೀಲ ಕ್ಷೇತ್ರದಲ್ಲಿ ಹೆಚ್ಚು ಸಮಯ ಕಳೆಯದೇ ಇರುವುದಕ್ಕೆ ಅವರ ಸಾಮಾಜಿಕ ಜಾಲತಾಣಗಳೇ ಸಾಕ್ಷಿಯಾಗಿದೆ. ವಿವಿಧ ಕಾಮಗಾರಿಗಳ ಸಂದರ್ಭದಲ್ಲಿ ಆರ್.ಕೆ. ಪಾಟೀಲ ಸ್ವತಃ ಹಾಜರಿದ್ದು ಪೂಜೆ ನೆರವೇರಿಸಿರುವುದು ಮಾಧ್ಯಮಗಳಲ್ಲೂ ವರದಿಯಾಗಿದೆ. ಹೀಗಾಗಿ ಶಿಷ್ಟಾಚಾರದ ಬಗ್ಗೆ ಮಾತನಾಡುವ ನೈತಿಕತೆ ಅವರಿಗೆ ಇಲ್ಲ ಎಂದು ಹರ್ಷಾ ಗುತ್ತೇದಾರ ಹೇಳಿದರು.

ವಾರ್ತಾ ಭಾರತಿ 22 Apr 2026 7:56 pm

ಶಹಾಬಾದ್‌ನಲ್ಲಿ ಮೂಲಭೂತ ಸೌಲಭ್ಯಗಳಿಗಾಗಿ ಎಸ್‌ಯುಸಿಐ(ಸಿ)ನಿಂದ ಮನವಿ

ಶಹಾಬಾದ್‌: ನಗರದ ಮುಖ್ಯ ರಸ್ತೆಗಳ ನಿರ್ಮಾಣ ಸೇರಿದಂತೆ ವಿವಿಧ ಮೂಲಭೂತ ಸೌಲಭ್ಯಗಳನ್ನು ಒದಗಿಸುವಂತೆ ಆಗ್ರಹಿಸಿ ಎಸ್‌ಯುಸಿಐ(C) ಮುಖಂಡರು ನಗರಸಭೆ ಪೌರಾಯುಕ್ತರಿಗೆ ಮನವಿಪತ್ರ ಸಲ್ಲಿಸಿದರು. ಮುಖಂಡ ಗಣಪತರಾವ ಮಾನೆ ಮಾತನಾಡಿ, ಬಸವೇಶ್ವರ ವೃತ್ತದಿಂದ ನೆಹರು ಚೌಕವರೆಗೆ ಹಾಗೂ ರೈಲ್ವೇ ಸ್ಟೇಷನ್‌ನಿಂದ ವಿ.ಪಿ. ಚೌಕ್‌ವರೆಗೆ ತುರ್ತಾಗಿ ರಸ್ತೆ ನಿರ್ಮಾಣ ಮಾಡಬೇಕು ಎಂದು ಒತ್ತಾಯಿಸಿದರು. ಅಲ್ಲದೆ, ಈ ಮುಖ್ಯರಸ್ತೆಗಳ ಎರಡೂ ಬದಿಗಳಲ್ಲಿ ಸಮರ್ಪಕ ಚರಂಡಿ ವ್ಯವಸ್ಥೆ ಕಲ್ಪಿಸುವಂತೆ ಮನವಿ ಮಾಡಿದರು. ನಗರದ ಎಲ್ಲಾ ಬಡಾವಣೆಗಳಲ್ಲಿ ವ್ಯವಸ್ಥಿತ ರಸ್ತೆ ಮತ್ತು ಒಳಚರಂಡಿ ವ್ಯವಸ್ಥೆ ತಕ್ಷಣ ನಿರ್ಮಿಸಬೇಕು. ಜನರಿಗೆ ನಿರಂತರವಾಗಿ ಶುದ್ಧ ಕುಡಿಯುವ ನೀರನ್ನು ಉಚಿತವಾಗಿ ಒದಗಿಸುವುದರ ಜೊತೆಗೆ, ಪ್ರಮುಖ ರಸ್ತೆ ಹಾಗೂ ಬಡಾವಣೆಗಳಲ್ಲಿ ಸಮರ್ಪಕ ಬೀದಿದೀಪಗಳನ್ನು ಅಳವಡಿಸಬೇಕು ಎಂದು ಹೇಳಿದರು. ಸಾರ್ವಜನಿಕರಿಗೆ ಅನುಕೂಲವಾಗುವಂತೆ ಪ್ರಮುಖ ಸ್ಥಳಗಳಲ್ಲಿ ಶೌಚಾಲಯ ಹಾಗೂ ಮೂತ್ರಾಲಯಗಳ ನಿರ್ಮಾಣ, ಉದ್ಯಾನವನಗಳಿಗೆ ಸ್ಥಳ ಗುರುತಿಸಿ ಅಭಿವೃದ್ಧಿ, ಪಾದಚಾರಿ ಮಾರ್ಗಗಳ ನಿರ್ಮಾಣ ಮಾಡಬೇಕು ಎಂದು ಒತ್ತಾಯಿಸಿದರು. ಇನ್ನೂ, ಬೀದಿನಾಯಿಗಳ ಹಾವಳಿಗೆ ಶಾಶ್ವತ ಪರಿಹಾರ ಕಂಡುಹಿಡಿಯುವುದು, ಗಿಡಗಂಟೆ ಹಾಗೂ ಮುಳ್ಳುಕಂಟಿಗಳನ್ನು ತೆರವುಗೊಳಿಸುವುದು, ಆಧುನಿಕ ಡಿಜಿಟಲ್ ಗ್ರಂಥಾಲಯ ಸ್ಥಾಪನೆ, ಬಸ್ ನಿಲ್ದಾಣಗಳಲ್ಲಿ ತಂಗುದಾಣ ನಿರ್ಮಾಣ ಹಾಗೂ ನಗರಾದ್ಯಂತ ಸಿಸಿ ಕ್ಯಾಮೆರಾಗಳನ್ನು ಅಳವಡಿಸುವಂತೆ ಮನವಿಯಲ್ಲಿ ಆಗ್ರಹಿಸಲಾಗಿದೆ. ಈ ಸಂದರ್ಭದಲ್ಲಿ ಪಕ್ಷದ ಸದಸ್ಯರಾದ ರಾಘವೇಂದ್ರ ಎಂ.ಜಿ., ಜಗನ್ನಾಥ ಎಸ್.ಎಚ್., ನೀಲಕಂಠ ಹುಲಿ, ತಿಮ್ಮಯ್ಯ ಮಾನೆ, ರಮೇಶ್ ದೇವಕರ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ವಾರ್ತಾ ಭಾರತಿ 22 Apr 2026 7:53 pm

Kalaburagi | ಮಹಿಳಾ ಮೀಸಲಾತಿ ಮಸೂದೆ ವಿರೋಧಕ್ಕೆ ಕಾಂಗ್ರೆಸ್ ವಿರುದ್ಧ ಉಮೇಶ್ ಜಾಧವ್ ಆಕ್ರೋಶ

ಕಲಬುರಗಿ: ಲೋಕಸಭೆ ಹಾಗೂ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ನೀಡುವ ‘ನಾರಿ ಶಕ್ತಿ ವಂದನ್’ ಮಸೂದೆಗೆ ವಿರೋಧ ವ್ಯಕ್ತಪಡಿಸಿರುವ ಕಾಂಗ್ರೆಸ್ ವಿರುದ್ಧ ಮಾಜಿ ಲೋಕಸಭಾ ಸದಸ್ಯ ಉಮೇಶ್ ಜಾಧವ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪತ್ರಿಕಾ ಪ್ರಕಟಣೆಯಲ್ಲಿ ಅವರು, ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಮಂಡಿಸಲಾದ ಮಹಿಳಾ ಮೀಸಲಾತಿ ಪ್ರಸ್ತಾಪವನ್ನು ವಿರೋಧಿಸುವ ಮೂಲಕ ಕಾಂಗ್ರೆಸ್ ದೇಶದ ಮಹಿಳಾ ಶಕ್ತಿಗೆ ಅವಮಾನ ಮಾಡಿದೆ ಎಂದು ಆರೋಪಿಸಿದರು. ಮಹಿಳೆಯರಿಗೆ ರಾಜಕೀಯ ಕ್ಷೇತ್ರದಲ್ಲಿ ಹೆಚ್ಚಿನ ಅವಕಾಶ ಕಲ್ಪಿಸುವ ಉದ್ದೇಶದಿಂದ ಈ ಮಸೂದೆ ಮಂಡಿಸಲಾಗಿದ್ದು, ಅದನ್ನು ಕಾಂಗ್ರೆಸ್ ಹಾಗೂ ಅದರ ಮಿತ್ರಪಕ್ಷಗಳು ವಿರೋಧಿಸಿರುವುದು ವಿಷಾದನೀಯ ಸಂಗತಿ ಎಂದು ಹೇಳಿದರು. ಮುಂದಿನ ದಿನಗಳಲ್ಲಿ ದೇಶದ ಮಹಿಳೆಯರು ಇದಕ್ಕೆ ತಕ್ಕ ಪ್ರತಿಕ್ರಿಯೆ ನೀಡಲಿದ್ದಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. ಇದಲ್ಲದೆ, ಕ್ಷೇತ್ರ ಪುನರ್ವಿಂಗಡಣೆ ಪ್ರಸ್ತಾಪಕ್ಕೂ ಕಾಂಗ್ರೆಸ್ ವಿರೋಧ ವ್ಯಕ್ತಪಡಿಸಿರುವುದನ್ನು ಅವರು ಟೀಕಿಸಿದರು. ಇಂತಹ ನಿಲುವುಗಳು ದೇಶದ ಅಭಿವೃದ್ಧಿಗೆ ಅಡ್ಡಿಯಾಗುತ್ತವೆ ಎಂದು ಅಭಿಪ್ರಾಯಪಟ್ಟರು. ಹಿಂದಿನ ಸಂದರ್ಭಗಳಲ್ಲಿಯೂ ಕಾಂಗ್ರೆಸ್ ಹಲವು ಮಹತ್ವದ ನಿರ್ಧಾರಗಳಿಗೆ ವಿರೋಧ ವ್ಯಕ್ತಪಡಿಸಿರುವುದನ್ನು ಉಲ್ಲೇಖಿಸಿದ ಅವರು, ಮಹಿಳಾ ಸಬಲೀಕರಣದ ದಾರಿಯಲ್ಲಿ ಈ ಮಸೂದೆ ಪ್ರಮುಖ ಹೆಜ್ಜೆಯಾಗಿದೆ ಎಂದು ಹೇಳಿದರು. ಮಹಿಳಾ ಮೀಸಲಾತಿ ಮತ್ತು ಅಭಿವೃದ್ಧಿ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಸಂಕಲ್ಪವನ್ನು ದೇಶದ ಜನತೆ ಬೆಂಬಲಿಸಲಿದ್ದಾರೆ ಎಂದು ಜಾಧವ್ ವಿಶ್ವಾಸ ವ್ಯಕ್ತಪಡಿಸಿದರು.

ವಾರ್ತಾ ಭಾರತಿ 22 Apr 2026 7:48 pm

5ನೇ ತರಗತಿ ಮದ್ರಸ ಪಬ್ಲಿಕ್ ಪರೀಕ್ಷೆ : ದ.ಕ.ಜಿಲ್ಲೆಗೆ ಶಹೀಮಾ ಫಾತಿಮಾ ಪ್ರಥಮ

ಉಳ್ಳಾಲ : ಸಮಸ್ತ ಕೇರಳ ಇಸ್ಲಾಮ್ ಮತ ವಿದ್ಯಾಭ್ಯಾಸ ಬೋರ್ಡ್ ಕಳೆದ ಜನವರಿ ತಿಂಗಳಲ್ಲಿ ನಡೆಸಿದ ಐದನೇ ತರಗತಿ ಪಬ್ಲಿಕ್ ಪರೀಕ್ಷೆಯಲ್ಲಿ ಉಳ್ಳಾಲ ತಾಲೂಕಿನ ಪಜೀರು ಹಿದಾಯತುಲ್ ಇಸ್ಲಾಂ ಮದ್ರಸದ ವಿದ್ಯಾರ್ಥಿನಿ ಶಹೀಮಾ ಫಾತಿಮಾ 99% ಅಂಕಗಳೊಂದಿಗೆ ದಕ್ಷಿಣ ಕನ್ನಡ ಜಿಲ್ಲೆಗೆ ಪ್ರಥಮ ಸ್ಥಾನಿಯಾಗಿದ್ದಾರೆ. ಇಸಾಮೀ ಕರ್ಮ ಶಾಸ್ತ್ರ, ಅರೆಬಿಕ್ ಭಾಷಾ ಅಧ್ಯಯನ ಮತ್ತು ವ್ಯಾಕರಣದಲ್ಲಿ ತಲಾ 100 ಅಂಕಗಳು, ಆಧ್ಯಾತ್ಮ ಶಾಸ್ತ್ರ ಮತ್ತು ಖುರ್‌ಆನ್ ಕಂಠಪಾಟದಲ್ಲಿ ತಲಾ 99 ಅಂಕಗಳು ಮತ್ತು ಇಸ್ಲಾಮೀ ಇತಿಹಾಸ ಅಧ್ಯಯನದಲ್ಲಿ 97 ಅಂಕಗಳನ್ನು ಗಳಿಸಿರುತ್ತಾರೆ. ಈಕೆ ಲೇಖಕ ಇಸ್ಮತ್ ಪಜೀರ್ ಮತ್ತು ಕವಯತ್ರಿ ಮಿಸ್ರಿಯಾ ಐ. ಪಜೀರ್ ದಂಪತಿಯ ಪುತ್ರಿ. ದಕ್ಷಿಣ ಕನ್ನಡ ಜಿಲ್ಲೆಯಿಂದ ಸಮಸ್ತ ಬೋರ್ಡ್ 5ನೇ ತರಗತಿ ಪಬ್ಲಿಕ್ ಪರೀಕ್ಷೆಗೆ ಒಟ್ಟು 5486 ವಿದ್ಯಾರ್ಥಿಗಳು ಹಾಜರಾಗಿದ್ದರು ಎಂದು ಪ್ರಕಟನೆ ತಿಳಿಸಿದೆ.

ವಾರ್ತಾ ಭಾರತಿ 22 Apr 2026 7:44 pm

Kalaburagi | ಅದ್ವೈತ ತತ್ವದಿಂದ ವಿಶ್ವಕ್ಕೆ ದಾರಿ ತೋರಿದ ಮಹಾನ್ ದಾರ್ಶನಿಕ ಶಂಕರಾಚಾರ್ಯರು : ಪ್ರಭಾಕರ ಜೋಶಿ

ಕಲಬುರಗಿ: ವೇದಗಳ ಸಾರವನ್ನೇ ‘ಅದ್ವೈತ’ ಸಿದ್ಧಾಂತದ ಮೂಲಕ ಜಗತ್ತಿಗೆ ಪರಿಚಯಿಸಿದ ಆದಿ ಶಂಕರಾಚಾರ್ಯರು ವಿಶ್ವದ ಮಹಾನ್ ದಾರ್ಶನಿಕರಾಗಿದ್ದು, ಅವರ ದರ್ಶನ ಶಾಸ್ತ್ರವು ಸಮಸ್ತ ಮಾನವಕುಲದ ಕಲ್ಯಾಣಕ್ಕೆ ಪೂರಕವಾಗಿದೆ ಎಂದು ರಂಗಾಯಣದ ಮಾಜಿ ನಿರ್ದೇಶಕ ಪ್ರಭಾಕರ ಜೋಶಿ ಹೇಳಿದರು. ನಗರದ ಎಸ್.ಎಂ ಪಂಡಿತ್ ರಂಗಮಂದಿರದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮಹಾನಗರ ಪಾಲಿಕೆ ಹಾಗೂ ಜಿಲ್ಲಾ ಪಂಚಾಯತ್ ಸಂಯುಕ್ತಾಶ್ರಯದಲ್ಲಿ ನಡೆದ ಶಂಕರ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಶಂಕರಾಚಾರ್ಯರು ವೇದಗಳಿಗೆ ಹೊಸ ವ್ಯಾಖ್ಯಾನ ನೀಡುವ ಮೂಲಕ ಸಮಾಜಕ್ಕೆ ಸರಿಯಾದ ದಾರಿಯನ್ನು ತೋರಿಸಿದರು. ಅವರು ಯಾವುದೇ ಹೊಸ ಸಿದ್ಧಾಂತವನ್ನು ಹುಟ್ಟುಹಾಕದೆ, ಈಗಾಗಲೇ ಅಸ್ತಿತ್ವದಲ್ಲಿದ್ದ ವೇದಜ್ಞಾನವನ್ನೇ ದರ್ಶನ ರೂಪದಲ್ಲಿ ಪ್ರಚಾರಗೊಳಿಸಿದರು ಎಂದು ಹೇಳಿದರು. ಧರ್ಮವು ಸರಿಯಾದ ದಾರಿಯಲ್ಲಿ ಸಾಗಿದರೆ ಅದು ಬದುಕಿಗೆ ಬೆಳಕಾಗುತ್ತದೆ. ಆದರೆ ಧರ್ಮದ ದಾರಿತಪ್ಪಿದ ಬಳಕೆ ಸಮಾಜಕ್ಕೆ ಅಪಾಯಕಾರಿಯಾಗುತ್ತದೆ. ಆದ್ದರಿಂದ ಮನುಷ್ಯರು ಸರಿ-ತಪ್ಪುಗಳ ವಿವೇಚನೆಯೊಂದಿಗೆ ಶಂಕರಾಚಾರ್ಯರ ಜ್ಞಾನಯುಕ್ತ, ಅಹಿಂಸಾತ್ಮಕ ಹಾದಿಯನ್ನು ಅನುಸರಿಸಬೇಕು ಎಂದು ಅವರು ಅಭಿಪ್ರಾಯಪಟ್ಟರು. ಶೃಂಗೇರಿ ಶಾರದಾ ಪೀಠದ ವಿಶೇಷ ಪ್ರತಿನಿಧಿ ಪ್ರಕಾಶ ಎಚ್. ಕುಲಕರ್ಣಿ ಮಾತನಾಡಿ, ರಾಜ್ಯದ ಸರ್ಕಾರಿ ಕಚೇರಿಗಳಲ್ಲಿ ಶಂಕರ ಜಯಂತಿಯನ್ನು ಆಚರಿಸುತ್ತಿರುವುದು ಶ್ಲಾಘನೀಯ ಬೆಳವಣಿಗೆ ಎಂದು ಹೇಳಿದರು. ಆದಿ ಶಂಕರಾಚಾರ್ಯರು 8ನೇ ಶತಮಾನದಲ್ಲೇ ಸಮಾನತೆ ಹಾಗೂ ಸ್ತ್ರೀ ಸ್ವಾತಂತ್ರ್ಯದ ತತ್ವಗಳನ್ನು ಸಾರಿದ್ದರು. ಅವರ ಅದ್ವೈತ ಸಿದ್ಧಾಂತವನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು. ಇನ್ನೊಬ್ಬ ವಕ್ತಾರರಾದ ಶಿವಪ್ರಭು ಹಿರೇಮಠ ಅವರು ಮಾತನಾಡಿ, ಶಂಕರಾಚಾರ್ಯರು ಹಾಗೂ ಬಸವಣ್ಣನವರಂತಹ ಮಹನೀಯರ ವಿಚಾರಗಳನ್ನು ನಾವು ಕೇವಲ ಭಾಷಣಕ್ಕೆ ಸೀಮಿತಗೊಳಿಸುತ್ತಿದ್ದು, ಅವುಗಳನ್ನು ಜೀವನದಲ್ಲಿ ಅನುಸರಿಸುವುದು ಅಗತ್ಯ ಎಂದರು. ಪಶುವೈದ್ಯಕೀಯ ತಜ್ಞೆ ಅನುರಾಧ ನಾಯಕ್ ಉಪನ್ಯಾಸ ನೀಡಿ, ಶಂಕರಾಚಾರ್ಯರು ಅಧ್ಯಾತ್ಮದ ಮೂಲಕ ಭಾರತವನ್ನು ಭಾವನಾತ್ಮಕವಾಗಿ ಒಂದುಗೂಡಿಸಿದ ಮಹಾನ್ ಸಂಘಟಕರಾಗಿದ್ದರು. ‘ಬ್ರಹ್ಮ ಸತ್ಯ, ಜಗತ್ತು ಮಿಥ್ಯ’ ಎಂಬ ತತ್ವದಡಿ ನಾಲ್ಕು ದಿಕ್ಕುಗಳಲ್ಲಿ ಮಠಗಳನ್ನು ಸ್ಥಾಪಿಸಿ ಸಾಂಸ್ಕೃತಿಕ ಏಕತೆ ಮೂಡಿಸಿದರು ಎಂದು ವಿವರಿಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪನಿರ್ದೇಶಕೆ ಜಗದೀಶ್ವರಿ ಅ. ನಾಸಿ ಸ್ವಾಗತಿಸಿದರು. ಸಂತೋಷ್ ಕುಲಕರ್ಣಿ ವಂದಿಸಿದರು. ಶಂಕರಾಚಾರ್ಯರ ಜಯಂತ್ಯುತ್ಸವ ಸಮಿತಿ ಅಧ್ಯಕ್ಷ ಋಷಿಕೇಶ್ ಚೌಡಾಪುರಕರ್, ಸಮಾಜದ ಮುಖಂಡರು ಉಪಸ್ಥಿತರಿದ್ದರು.

ವಾರ್ತಾ ಭಾರತಿ 22 Apr 2026 7:41 pm

ಪಹಲ್ಗಾಮ್‌ ದಾಳಿಗೆ ಒಂದು ವರ್ಷ; ಭಾರತೀಯರ ಜೊತೆ ಅಮೆರಿಕ ಸದಾ ನಿಂತಿದೆ ಎಂದ ರಾಯಭಾರಿ ಸೆರ್ಗಿಯೊ ಗೋರ್‌

ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭೀಕರ ಭಯೋತ್ಪಾದಕ ದಾಳಿಗೆ ಇಂದು (ಏ.22-ಬುಧವಾರ) ಭರ್ತಿ ಒಂದು ವರ್ಷವಾಗಿದ್ದು, ಸಮಸ್ತ ಭಾರತೀಯರು ಈ ದಾಳಿಯಲ್ಲಿ ಮೃತಪಟ್ಟ 26 ಜನರಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ಭಾರತದ ದು:ಖದಲ್ಲಿ ಜಗತ್ತಿನ ಅನೇಕ ದೇಶಗಳು ಭಾಗಿಯಾಗಿದ್ದು, ಈ ದಾಳಿಯನ್ನು ಮತ್ತೊಮ್ಮೆ ತೀವ್ರವಾಗಿ ಖಂಡಿಸಿವೆ. ಅದೇ ರೀತಿ ಭಾರತಕ್ಕೆ ಅಮೆರಿಕದ ರಾಯಭಾರಿ ಸೆರ್ಗಿಯೋ ಗೋರ್‌ ಕೂಡ, ಪಹಲ್ಗಾಮ್‌ ಸಂತ್ರಸ್ತರಿಗೆ ಕಂಬನಿ ಮಿಡಿದಿದ್ದು, ಭಯೋತ್ಪಾದನೆ ವಿರುದ್ಧದ ಭಾರತದ ಹೋರಾಟದಲ್ಲಿ ಅಮೆರಿಕ ಪಾಲುದಾರ ರಾಷ್ಟ್ರ ಎಂದು ಭರವಸೆ ನೀಡಿದ್ದಾರೆ.

ವಿಜಯ ಕರ್ನಾಟಕ 22 Apr 2026 7:40 pm

ಮುಸ್ಲಿಮ್ ಸಮುದಾಯವು ಕಾಂಗ್ರೆಸ್ ಪಕ್ಷಕ್ಕೆ ಬೆನ್ನೆಲುಬಾಗಿ ನಿಂತಿದೆ ಎಂಬುದರಲ್ಲಿ ಸಂಶಯವಿಲ್ಲ : ಎಚ್.ಸಿ.ಬಾಲಕೃಷ್ಣ

ಬೆಂಗಳೂರು : ಕಾಂಗ್ರೆಸ್ ಪಕ್ಷದ ಮುಸ್ಲಿಮ್ ನಾಯಕರು ತಪ್ಪು ಮಾಡಿದ್ದರೆ ನಿಯಮದಡಿ ಕ್ರಮ ಕೈಗೊಳ್ಳಲಾಗುತ್ತದೆ. ಆದರೆ, ಕಾಂಗ್ರೆಸ್ ಪಕ್ಷ ಎಂದೂ ಯಾವುದೇ ನಿರ್ಧಾರವನ್ನು ಜಾತಿಯ ಆಧಾರದ ಮೇಲೆ ತೆಗೆದುಕೊಳ್ಳುವುದಿಲ್ಲ ಎಂದು ಕಾಂಗ್ರೆಸ್ ಶಾಸಕ ಎಚ್.ಸಿ.ಬಾಲಕೃಷ್ಣ ಹೇಳಿದ್ದಾರೆ. ಬುಧವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಸ್ಲಿಮ್ ಸಮುದಾಯವು ಕಾಂಗ್ರೆಸ್ ಪಕ್ಷಕ್ಕೆ ಬೆನ್ನೆಲುಬಾಗಿ ನಿಂತಿದೆ ಮತ್ತು ಪಕ್ಷಕ್ಕೆ ದೊಡ್ಡ ಶಕ್ತಿಯನ್ನು ತುಂಬಿದೆ ಎಂಬುದರಲ್ಲಿ ಸಂಶಯವಿಲ್ಲ. ಆದರೆ ನಾವು ಬೆನ್ನೆಲುಬಾಗಿದ್ದೇವೆ ಎಂಬ ಕಾರಣಕ್ಕೆ ಪಕ್ಷದ ಚೌಕಟ್ಟು ಮೀರಿ ಏನು ಬೇಕಾದರೂ ಮಾಡುತ್ತೇವೆ ಎನ್ನುವುದು ಸರಿಯಲ್ಲ. ಪ್ರತಿಯೊಬ್ಬರೂ ಎಚ್ಚರಿಕೆಯಿಂದ ನಡೆದುಕೊಳ್ಳಬೇಕು ಎಂದು ಹೇಳಿದರು. ಪ್ರಸ್ತುತ ಮುಸ್ಲಿಮ್ ನಾಯಕರ ವಿಚಾರದಲ್ಲಿ ಪರಿಶೀಲನೆ ನಡೆಯುತ್ತಿದೆ. ಒಂದು ವೇಳೆ ಅವರು ಯಾವುದೇ ತಪ್ಪು ಮಾಡದಿದ್ದರೆ. ಅವರಿಗೆ ಸಿಗಬೇಕಾದ ಗೌರವ ಮತ್ತು ಸ್ಥಾನಮಾನಗಳು ಖಂಡಿತವಾಗಿಯೂ ಮರಳಿ ಸಿಗಲಿವೆ ಎಂದ ಅವರು, ಪಕ್ಷದ ಅಧ್ಯಕ್ಷರ ತೀರ್ಮಾನಗಳನ್ನು ಪ್ರಶ್ನಿಸುವ ಹಕ್ಕು ಮತ್ತು ವಾಕ್ ಸ್ವಾತಂತ್ರ್ಯ ಎಲ್ಲರಿಗೂ ಇದೆ. ಯಾರು ಬೇಕಾದರೂ ಪ್ರಶ್ನೆಗಳನ್ನು ಕೇಳಬಹುದು, ಅದಕ್ಕೆ ಪಕ್ಷದ ಅಧ್ಯಕ್ಷರು ಸೂಕ್ತ ಉತ್ತರ ನೀಡಲಿದ್ದಾರೆ ಎಂದು ಅವರು ತಿಳಿಸಿದರು.  

ವಾರ್ತಾ ಭಾರತಿ 22 Apr 2026 7:40 pm

ಪ್ಯಾಟ್ ಕಮಿನ್ಸ್ ವಾಪಸಾತಿ ವೇಳೆ ಏನಾಗುತ್ತೆ ಇಶಾನ್ ಕಿಶನ್ ನಾಯಕತ್ವದ ಕತೆ?: ಇನ್ನಿಲ್ಲದ ಗೊಂದಲದಲ್ಲಿ ಸನ್ ರೈಸರ್ಸ್!

Pat Cummins And Ishan Kishan- ಗಾಯದಿಂದ ಚೇತರಿಸಿಕೊಂಡಿರುವ ಪ್ಯಾಟ್ ಕಮಿನ್ಸ್ ಮತ್ತು ಹಂಗಾಮಿ ನಾಯಕನಾಗಿ ಯಶಸ್ಸು ಕಂಡಿರುವ ಇಶಾನ್ ಕಿಶನ್ ನಡುವೆ ಸನ್‌ರೈಸರ್ಸ್ ಹೈದರಾಬಾದ್ ತಂಡದ ನಾಯಕತ್ವ ಯಾರಿಗೆ ಎಂಬ ಗೊಂದಲ ಸೃಷ್ಟಿಯಾಗಿದೆ. ಇಶಾನ್ ಕಿಶನ್ ನೇತೃತ್ವದಲ್ಲಿ ತಂಡವು ಅರಂಭದ ಪಂದ್ಯಗಳಲ್ಲಿ ಸೋಲಿನ ಕಹಿಯುಂಡರೂ ಇದೀಗ ಹ್ಯಾಟ್ರಿಕ್ ಗೆಲುವಿನೊಂದಿಗೆ ಲಯ ಕಂಡುಕೊಂಡಿದ್ದಾರೆ. ಹೀಗಾಗಿ ಅವರನ್ನೇ ನಾಯಕನನ್ನಾಗಿ ಮುಂದುವರಿಸಲು ಹರ್ಭಜನ್ ಸಿಂಗ್ ಮತ್ತು ಸಂಜಯ್ ಬಂಗಾರ್ ಬೆಂಬಲಿಸಿದ್ದಾರೆ. ಸಂದಿಗ್ಧತೆಯಲ್ಲಿದೆ ಎಸ್‌ಆರ್‌ಎಚ್ ತಂಡದ ಮ್ಯಾನೇಜ್‌ಮೆಂಟ್.

ವಿಜಯ ಕರ್ನಾಟಕ 22 Apr 2026 7:39 pm

ಇಂದಿರಾಗಾಂಧಿ ಮಕ್ಕಳ ಆರೋಗ್ಯ ಸಂಸ್ಥೆ ನೇಮಕಾತಿ; ಅರ್ಜಿ ಆಹ್ವಾನ

ನೇಮಕಾತಿಯು ಸಂಪೂರ್ಣವಾಗಿ ಗುತ್ತಿಗೆ ಆಧಾರದ ಮೇಲಿದ್ದು, ಆಯ್ಕೆಯಾದ ಅಭ್ಯರ್ಥಿಗಳನ್ನು 11 ತಿಂಗಳ ಅವಧಿಗೆ ಅಥವಾ ಖಾಯಂ ನೇಮಕಾತಿ ಆಗುವವರೆಗೆ ನೇಮಿಸಿಕೊಳ್ಳಲಾಗುತ್ತದೆ. ಬೆಂಗಳೂರಿನ ಪ್ರತಿಷ್ಠಿತ ‘ಇಂದಿರಾಗಾಂಧಿ ಮಕ್ಕಳ ಆರೋಗ್ಯ ಸಂಸ್ಥೆ’ (IGICH)ಯು ಖಾಲಿ ಇರುವ ವಿವಿಧ ವಿಭಾಗಗಳ ಒಟ್ಟು 75 ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಆಸಕ್ತ ಅಭ್ಯರ್ಥಿಗಳು ಸಂಸ್ಥೆಯ ಅಧಿಕೃತ ವೆಬ್‌ಸೈಟ್‌ ನಿಂದ ಅರ್ಜಿಯನ್ನು ಡೌನ್‌ಲೋಡ್ ಮಾಡಿಕೊಂಡು, ಭರ್ತಿ ಮಾಡಿದ ಅರ್ಜಿಯನ್ನು ಮೇ 08, 2026 ರೊಳಗೆ ಸಲ್ಲಿಸಬೇಕಿದೆ. ಗ್ರೂಪ್ ‘ಎ’ ವೃಂದದ ವೈದ್ಯಾಧಿಕಾರಿಗಳು (ಸಹ ಪ್ರಾಧ್ಯಾಪಕರು, ಸಹಾಯಕ ಪ್ರಾಧ್ಯಾಪಕರು, ಸಮಾಲೋಚಕರು ಇತ್ಯಾದಿ) ಹಾಗೂ ಗ್ರೂಪ್ ‘ಸಿ’ ವೃಂದದ ಶುಶ್ರೂಷಕಾಧಿಕಾರಿ ಹುದ್ದೆಗಳು ಇದರಲ್ಲಿ ಸೇರಿವೆ. ವೈದ್ಯಕೀಯ ಹುದ್ದೆಗಳಿಗೆ ರೂ. 75,000 ರಿಂದ ಗರಿಷ್ಠ ರೂ. 2.5 ಲಕ್ಷ ವರೆಗೆ ಆಕರ್ಷಕ ವೇತನ ನಿಗದಿಪಡಿಸಲಾಗಿದೆ. ಈ ನೇಮಕಾತಿಯು ಸಂಪೂರ್ಣವಾಗಿ ಗುತ್ತಿಗೆ ಆಧಾರದ ಮೇಲಿದ್ದು, ಆಯ್ಕೆಯಾದ ಅಭ್ಯರ್ಥಿಗಳನ್ನು 11 ತಿಂಗಳ ಅವಧಿಗೆ ಅಥವಾ ಖಾಯಂ ನೇಮಕಾತಿ ಆಗುವವರೆಗೆ ನೇಮಿಸಿಕೊಳ್ಳಲಾಗುತ್ತದೆ. ಆಸಕ್ತ ಅಭ್ಯರ್ಥಿಗಳು ಸಂಪೂರ್ಣವಾಗಿ ಭರ್ತಿ ಮಾಡಿದ ಅರ್ಜಿಯ ಜೊತೆಗೆ ನಿಗದಿತ ಅರ್ಜಿ ಶುಲ್ಕ ಹಾಗೂ ಅಗತ್ಯ ವಿದ್ಯಾರ್ಹತೆ, ವಯೋಮಿತಿ ಮತ್ತು ಅನುಭವದ ದೃಢೀಕೃತ ದಾಖಲೆಗಳನ್ನು ಲಗತ್ತಿಸಿ, 2026 ಮೇ 08 ರ ಸಂಜೆ 5.30 ರೊಳಗೆ ಸಂಸ್ಥೆಯ ಕಚೇರಿಗೆ ಖುದ್ದಾಗಿ ಅಥವಾ ಅಂಚೆ ಮೂಲಕ ತಲುಪುವಂತೆ ಸಲ್ಲಿಸಬೇಕು. ಪ್ರಮುಖ ದಿನಾಂಕಗಳು: * ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 18 ಏಪ್ರಿಲ್ 2026 * ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: 08 ಮೇ 2026 ರ ಸಂಜೆ 5.30 ರೊಳಗೆ ಸಂಕ್ಷಿಪ್ತ ವಿವರ * ನೇಮಕಾತಿ ಸಂಸ್ಥೆ: ಇಂದಿರಾಗಾಂಧಿ ಮಕ್ಕಳ ಆರೋಗ್ಯ ಸಂಸ್ಥೆ, ಬೆಂಗಳೂರು (IGICH) * ವೇತನ ಶ್ರೇಣಿ: ರೂ. 33,350 – ರೂ. 2,50,000 * ಹುದ್ದೆಗಳ ಸಂಖ್ಯೆ: 75 (ಗ್ರೂಪ್ ಎ – 25 ಹಾಗೂ ಗ್ರೂಪ್ ಸಿ – 50) * ಉದ್ಯೋಗ ಸ್ಥಳ: ಬೆಂಗಳೂರು ಹುದ್ದೆಯ ವಿವರ ಗ್ರೂಪ್-ಎ ಹುದ್ದೆಗಳು (ಒಟ್ಟು 25): * ಸಹ ಪ್ರಾಧ್ಯಾಪಕರು (01) * ವಿವಿಧ ವಿಭಾಗಗಳಲ್ಲಿ ಸಹಾಯಕ ಪ್ರಾಧ್ಯಾಪಕರು (17) * ಬ್ಲಡ್ ಸೆಂಟರ್ ಆಫೀಸರ್ (01) * ಸಮಾಲೋಚಕರು (02) * ಸ್ಪೆಷಲಿಸ್ಟ್ (01) * ಸೀನಿಯರ್ ರೆಸಿಡೆಂಟ್ (03) ಅರ್ಜಿ ಶುಲ್ಕ * ಸಾಮಾನ್ಯ ವರ್ಗದ (GM) ಅಭ್ಯರ್ಥಿಗಳಿಗೆ: ರೂ. 2,000/- * ಒಬಿಸಿ (OBC) ವರ್ಗದ ಅಭ್ಯರ್ಥಿಗಳಿಗೆ: ರೂ. 1,500/- * ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ ಹಾಗೂ ಪ್ರವರ್ಗ-1 ಅಭ್ಯರ್ಥಿಗಳಿಗೆ: ರೂ. 500/- ಗ್ರೂಪ್-ಸಿ ಹುದ್ದೆಗಳು (ಒಟ್ಟು 50): ಶುಶ್ರೂಷಕಾಧಿಕಾರಿಗಳು (Nursing Officers) ಶೈಕ್ಷಣಿಕ ಅರ್ಹತೆ * ಗ್ರೂಪ್-ಎ (ವೈದ್ಯಕೀಯ ಹುದ್ದೆಗಳು): ಆಯಾ ವಿಷಯಗಳಿಗೆ ಅನುಗುಣವಾಗಿ ಎನ್‌ಎಂಸಿ (NMC) ನಿಯಮಾವಳಿಗಳ ಪ್ರಕಾರ ನಿಗದಿತ ವೈದ್ಯಕೀಯ ಅರ್ಹತೆ ಹೊಂದಿರಬೇಕು. * ಗ್ರೂಪ್-ಸಿ (ನರ್ಸಿಂಗ್ ಹುದ್ದೆಗಳು): ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಬಿ.ಎಸ್ಸಿ ನರ್ಸಿಂಗ್ (B.Sc. Nursing) ಪದವಿ ಪಡೆದಿರಬೇಕು ಹಾಗೂ ನರ್ಸಿಂಗ್ ಕೌನ್ಸಿಲ್‌ನಲ್ಲಿ ನೋಂದಣಿ ಮಾಡಿಸಿರಬೇಕು. ಮಕ್ಕಳ ನರ್ಸಿಂಗ್‌ (Paediatric Nursing) ನಲ್ಲಿ ತರಬೇತಿ ಪಡೆದವರಿಗೆ ಮೊದಲ ಆದ್ಯತೆ ನೀಡಲಾಗುತ್ತದೆ. ವೇತನ ಶ್ರೇಣಿ * ಗ್ರೂಪ್-ಎ ವೈದ್ಯಕೀಯ ಹುದ್ದೆಗಳಿಗೆ: ಮಾಸಿಕ ರೂ. 75,000 ರಿಂದ ಗರಿಷ್ಠ ರೂ. 2,50,000 (ಹುದ್ದೆಗನುಸಾರವಾಗಿ) * ಗ್ರೂಪ್-ಸಿ ಶುಶ್ರೂಷಕಾಧಿಕಾರಿ ಹುದ್ದೆಗಳಿಗೆ: ಮಾಸಿಕ ರೂ. 33,350/- ವಯೋಮಿತಿ: * ಗ್ರೂಪ್-ಎ: ಸಹ ಪ್ರಾಧ್ಯಾಪಕರಿಗೆ 46 ರಿಂದ 53 ವರ್ಷ ಗರಿಷ್ಠ ವಯೋಮಿತಿ. ಸಹಾಯಕ ಪ್ರಾಧ್ಯಾಪಕರು ಹಾಗೂ ಸೀನಿಯರ್ ರೆಸಿಡೆಂಟ್ ಹುದ್ದೆಗಳಿಗೆ 43 ರಿಂದ 48 ವರ್ಷ. ಸಮಾಲೋಚಕ (Consultant) ಹುದ್ದೆಗಳಿಗೆ ಗರಿಷ್ಠ 60 ವರ್ಷ. * ಗ್ರೂಪ್-ಸಿ: ಸಾಮಾನ್ಯ ವರ್ಗಕ್ಕೆ 40 ವರ್ಷ, ಒಬಿಸಿ ಅಭ್ಯರ್ಥಿಗಳಿಗೆ 43 ವರ್ಷ ಹಾಗೂ ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ 45 ವರ್ಷ ಗರಿಷ್ಠ ವಯೋಮಿತಿ. ಅರ್ಜಿ ಸಲ್ಲಿಸುವ ವಿಧಾನ: * ಅರ್ಜಿ ಡೌನ್‌ಲೋಡ್: ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಸಂಸ್ಥೆಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ, ನಿಗದಿತ ಅರ್ಜಿ ನಮೂನೆಯನ್ನು ಡೌನ್‌ಲೋಡ್ ಮಾಡಿಕೊಳ್ಳಬೇಕು. * ಅರ್ಜಿ ಭರ್ತಿ: ಡೌನ್‌ಲೋಡ್ ಮಾಡಿದ ಅರ್ಜಿಯ ಪ್ರಿಂಟ್ ತೆಗೆದುಕೊಂಡು, ಕೇಳಲಾಗಿರುವ ಎಲ್ಲಾ ಅಗತ್ಯ ಮಾಹಿತಿಯನ್ನು ಯಾವುದೇ ತಪ್ಪುಗಳಿಲ್ಲದೆ ಭರ್ತಿ ಮಾಡಬೇಕು. * ಅರ್ಜಿ ಸಲ್ಲಿಕೆ: ಸಂಪೂರ್ಣವಾಗಿ ಭರ್ತಿ ಮಾಡಿದ ಅರ್ಜಿಯ ಜೊತೆಗೆ ನಿಗದಿತ ಶುಲ್ಕ ಹಾಗೂ ಅಗತ್ಯ ದಾಖಲೆಗಳನ್ನು ಲಗತ್ತಿಸಿ, ಮೇ 08, 2026 ರ ಸಂಜೆ 5.30 ರೊಳಗೆ ಕಚೇರಿಗೆ ಖುದ್ದಾಗಿ ಅಥವಾ ಅಂಚೆ ಮೂಲಕ ತಲುಪುವಂತೆ ಸಲ್ಲಿಸಬೇಕು. * ಹೆಚ್ಚಿನ ಮಾಹಿತಿಗಾಗಿ ಕಚೇರಿ ಸಮಯ (ಪೂರ್ವಾಹ್ನ 10.30 ರಿಂದ ಅಪರಾಹ್ನ 5.30 ರವರೆಗೆ) ಸಂಪರ್ಕಿಸಬಹುದು ಅಥವಾ ಇ-ಮೇಲ್: ihealthchild@yahoo.in

ವಾರ್ತಾ ಭಾರತಿ 22 Apr 2026 7:35 pm

ಎ.23, 24ರಂದು ಸಿಇಟಿ ಪರೀಕ್ಷೆ: 745 ಕೇಂದ್ರಗಳಲ್ಲಿ ಪರೀಕ್ಷೆ ಬರೆಯಲಿರುವ 3.30 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು

ಬೆಂಗಳೂರು : ಕರ್ನಾಟಕ ಪರೀಕ್ಷಾ ಪ್ರಾಧಿಕಾರವು(ಕೆಇಎ) ಎ.23 ಮತ್ತು ಎ.24ರಂದು ರಾಜ್ಯದ 745 ಪರೀಕ್ಷಾ ಕೇಂದ್ರಗಳಲ್ಲಿ ಸಾಮಾನ್ಯ ಪ್ರವೇಶ ಪರೀಕ್ಷೆಯನ್ನು(ಸಿಇಟಿ) ನಡೆಸುತ್ತಿದ್ದು, ರಾಜ್ಯಾದ್ಯಂತ ಒಟ್ಟು 3,30,479 ಅಭ್ಯರ್ಥಿಗಳು ಪರೀಕ್ಷೆಯನ್ನು ಬರೆಯಲಿದ್ದಾರೆ. ಈ ಬಾರಿ 1,44,380 ಹುಡುಗರು, 1,86,099 ಹುಡುಗಿಯರು ಮತ್ತು 970 ವಿಶೇಷಚೇತನರು ಪರೀಕ್ಷೆಗೆ ನೊಂದಣಿಯಾಗಿದ್ದಾರೆ. ಪ್ರಾಧಿಕಾರವು ಪ್ರತಿ ವರ್ಷ ಎಂಜಿನಿಯರಿಂಗ್, ಕೃಷಿ ವಿಜ್ಞಾನ, ಪಶು ವೈದ್ಯಕೀಯ ಸೇರಿದಂತೆ ವಿವಿಧ ವೃತ್ತಿಪರ ಪದವಿ ಕೋರ್ಸ್‍ಗಳ ಪ್ರವೇಶಕ್ಕೆ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ನಡೆಸಲಿದ್ದು, ಈ ಬಾರಿ ಎ.23ರಂದು ಭೌತಶಾಸ್ತ್ರ ಮತ್ತು ರಸಾಯನಶಾಸ್ತ್ರ ಹಾಗೂ ಎ.24ರಂದು ಗಣಿತ ಮತ್ತು ಜೀವಶಾಸ್ತ್ರ ವಿಷಯಗಳ ಪರೀಕ್ಷೆಗಳು ನಡೆಯಲಿದೆ. ಪರೀಕ್ಷಾ ಅಕ್ರಮಗಳನ್ನು ತಡೆಯುವ ಉದ್ದೇಶದಿಂದ ನೇಮಕಾತಿ ಪರೀಕ್ಷೆಗಳಿಗೆ ಮಾಡುವಂತೆ ಈ ಪರೀಕ್ಷೆಗೂ ಕ್ಯಾಮರಾ ಕಣ್ಗಾವಲು ಇರುತ್ತದೆ. ವೆಬ್ ಕಾಸ್ಟಿಂಗ್ ಮೂಲಕ ಎಲ್ಲ 745 ಪರೀಕ್ಷಾ ಕೇಂದ್ರಗಳ ಮೇಲೆ ನಿಗಾ ಇಡುವ ವ್ಯವಸ್ಥೆ ಮಾಡಿದ್ದು, ಕಟ್ಟೆಚ್ಚರವಹಿಸಲಾಗಿದೆ. ಜಿಲ್ಲಾಮಟ್ಟದಲ್ಲಿ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಮೇಲುಸ್ತುವಾರಿ ನಡೆಸಲಿದ್ದಾರೆ. ಬೆಂಗಳೂರಿನ 163 ಕೇಂದ್ರಗಳಲ್ಲಿ ಅತಿ ಹೆಚ್ಚು ಅಂದರೆ ಒಟ್ಟು 77,604 ಅಭ್ಯರ್ಥಿಗಳು ಪರೀಕ್ಷೆ ಬರೆಯುತ್ತಿದ್ದು, ಇದರ ಕಮಾಂಡ್ ಸೆಂಟರ್ ಕೆಇಎ ಕಚೇರಿಯಲ್ಲಿ ಸ್ಥಾಪಿಸಲಾಗಿದೆ. ಒಟ್ಟು 970 ವಿಶೇಷಚೇತನ ಮಕ್ಕಳು ಸಿಇಟಿ ಬರೆಯುತ್ತಿದ್ದು, ಅವರಿಗೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಶ್ರವಣ ಸಾಧನ ಬಳಸಿಕೊಂಡು ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳನ್ನು ಪ್ರತ್ಯೇಕವಾಗಿ ಪರಿಶೀಲಿಸಬೇಕಾಗಿರುವ ಕಾರಣ ಅಂತಹವರು ಎರಡು ಗಂಟೆ ಮುಂಚಿತವಾಗಿ ಕೇಂದ್ರಕ್ಕೆ ಬರಬೇಕಾಗುತ್ತದೆ. ವಸ್ತ್ರ ಸಂಹಿತೆ: ಅನಗತ್ಯ ಗೊಂದಲ ತಪ್ಪಿಸಲು ಇದೇ ಮೊದಲ ಬಾರಿಗೆ ಪ್ರತಿ ಕೇಂದ್ರಕ್ಕೆ ಒಬ್ಬ ವಸ್ತ್ರ ಸಂಹಿತೆ ಅಧಿಕಾರಿಯನ್ನು ನೇಮಿಸಲಾಗಿದೆ. ಪರೀಕ್ಷಾ ಕೇಂದ್ರಕ್ಕೆ ಬರುವ ಪುರುಷ/ಮಹಿಳಾ ಅಭ್ಯರ್ಥಿಗಳು ಅರ್ಧ ತೋಳಿನ ಬಟ್ಟೆ ಧರಿಸಬೇಕು. ಸಾಧ್ಯವಾದಷ್ಟು ಕಾಲರ್ ಇಲ್ಲದಿರುವುದನ್ನು ಹಾಕಿಕೊಂಡು ಬಂದರೆ ಉತ್ತಮ. ಪುರುಷರು, ಜೇಬು ಇಲ್ಲದ/ಕಡಿಮೆ ಜೇಬುಗಳಿರುವ ಸರಳ ಪ್ಯಾಂಟ್ ಧರಿಸಬೇಕು. ಕುರ್ತಾ ಪೈಜಾಮ/ಜೀನ್ಸ್ ಪ್ಯಾಂಟ್‍ಗೆ ಅವಕಾಶ ಇರುವುದಿಲ್ಲ. ಶೂ ನಿಷೇಧಿಸಲಾಗಿದೆ. ಮೊಬೈಲ್, ಬ್ಲೂಟೂತ್, ಇಯರ್ ಫೋನ್, ಮೈಕ್ರೋ ಫೋನ್ ಇತ್ಯಾದಿ ಎಲೆಕ್ಟ್ರಾನಿಕ್ ವಸ್ತುಗಳನ್ನು ಸಂಪೂರ್ಣ ನಿಷೇಧಿಸಲಾಗಿದೆ. ಅಭ್ಯರ್ಥಿಯ ಹೆಸರು, ಸಿಇಟಿ ಸಂಖ್ಯೆ, ಪ್ರಶ್ನೆ ಪತ್ರಿಕೆಯ ವರ್ಷನ್ ಕೋಡ್ ಮತ್ತು ಪ್ರಶ್ನೆ ಪತ್ರಿಕೆಯ ಕ್ರಮ ಸಂಖ್ಯೆಯನ್ನು ಸರಿಯಾಗಿ ನಮೂದಿಸಿ, ಸಂಬಂಧಿಸಿದ ವೃತ್ತಗಳನ್ನು ತುಂಬಬೇಕು. ಈ ಹಿಂದೆ ಈ ಮಾಹಿತಿ ಸರಿಯಾಗಿ ಭರ್ತಿ ಮಾಡದಿರುವ ಕಾರಣ ಫಲಿತಾಂಶ ಪ್ರಕಟಣೆಗೂ ಸಮಸ್ಯೆ ಆಗಿತ್ತು. ಹೀಗಾಗಿ ಅಭ್ಯರ್ಥಿಗಳು ಎಚ್ಚರವಹಿಸಬೇಕು. ಅಭ್ಯಾಸ ಮಾಡಲಿ ಎನ್ನುವ ಕಾರಣಕ್ಕೆ ಕರಡು ಓಎಂಆರ್ ಸೀಟ್ ಪ್ರವೇಶ ಪತ್ರದ ಜತೆ ಡೌನ್‍ಲೋಡ್ ಮಾಡಿಕೊಳ್ಳಲು ಅವಕಾಶ ನೀಡಿದ್ದು, ಅದನ್ನು ಅಭ್ಯಾಸ ಮಾಡುವುದರ ಮೂಲಕ ಅನಗತ್ಯ ತಪ್ಪುಗಳನ್ನು ತಡೆಯಬೇಕು ಎಂದು ಪ್ರಾಧಿಕಾರ ಸಲಹೆ ನೀಡಿದೆ.   ‘ದ್ವಿತೀಯ ಪಿಯುಸಿ ಮೊದಲ ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂದಿರುವ ಅಥವಾ ಅನುತ್ತೀರ್ಣರಾಗಿರುವವರಿಗೆ ಇನ್ನೂ ಫಲಿತಾಂಶವನ್ನು ಉತ್ತಮ ಮಾಡಿಕೊಳ್ಳಲು ಅವಕಾಶ ಇರುವ ಕಾರಣ ಯಾರೂ ಸಿಇಟಿ ಬರೆಯುವುದನ್ನು ತಪ್ಪಿಸಿಕೊಳ್ಳಬಾರದು. ಯಾರೆಲ್ಲ ಶುಲ್ಕ ಪಾವತಿಸಿದ್ದೀರೊ ಅವರೆಲ್ಲರೂ ಪ್ರವೇಶ ಪತ್ರ ಡೌನ್ ಲೋಡ್ ಮಾಡಿಕೊಂಡು ಸಿಇಟಿ ಪರೀಕ್ಷೆ ಬರೆಯಬೇಕು. ಎರಡನೇ ಪರೀಕ್ಷೆಯ ಅಂಕಗಳನ್ನೂ ಸಿಇಟಿ ಫಲಿತಾಂಶಕ್ಕೆ ಪರಿಗಣಿಸಲಾಗುವುದು’ -ಎಸ್. ಮಧು ಬಂಗಾರಪ್ಪ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ   ‘ಅಭ್ಯರ್ಥಿಗಳನ್ನು ತೀವ್ರ ತಪಾಸಣೆ ಮಾಡಿಯೇ ಪರೀಕ್ಷಾ ಕೇಂದ್ರದೊಳಗೆ ಬಿಡುವ ಕಾರಣಕ್ಕೆ ಕನಿಷ್ಠ ಎರಡು ಗಂಟೆ ಮುಂಚಿತವಾಗಿ ಅವರು ಪರೀಕ್ಷಾ ಕೇಂದ್ರಕ್ಕೆ ಹೋಗಬೇಕು. ಅಭ್ಯರ್ಥಿಯ ಮುಖ ಚಹರೆ ಮತ್ತು ಕ್ಯೂಆರ್ ಕೋಡ್ ವ್ಯವಸ್ಥೆ ಮೂಲಕ ಅಭ್ಯರ್ಥಿಯ ನೈಜತೆ ಪರಿಶೀಲನೆ ಮಾಡಲಾಗುತ್ತದೆ. ಯಾರದ್ದೊ ಪರೀಕ್ಷೆಯನ್ನು ಇನ್ಯಾರೊ ಬರೆಯುವುದನ್ನು ತಡೆಯುವ ಉದ್ದೇಶದಿಂದ ಈ ವ್ಯವಸ್ಥೆ ಜಾರಿ ಮಾಡಿದ್ದು, ಸೀಟು ಹಂಚಿಕೆಯಾಗಿ ಕಾಲೇಜುಗಳಿಗೆ ಪ್ರವೇಶ ಆಗುವ ಸಂದರ್ಭದಲ್ಲಿಯೂ ಅಭ್ಯರ್ಥಿಯ ಭಾವಚಿತ್ರವನ್ನು ಹೋಲಿಕೆ ಮಾಡಿಯೇ ಪ್ರವೇಶ ನೀಡುವ ವ್ಯವಸ್ಥೆ ಮಾಡಿದ್ದು, ನಕಲಿ ಅಭ್ಯರ್ಥಿಗಳಿಗೆ ಸಂಪೂರ್ಣ ಕಡಿವಾಣ ಹಾಕಲಾಗಿದೆ. ಒಮ್ಮೆ ಕೆಇಎ ವೆಬ್‍ಸೈಟ್‍ನಲ್ಲಿ ಇರುವ ವಸ್ತ್ರ ಸಂಹಿತೆಯ ವಿವರಗಳನ್ನು ಓದಿಕೊಂಡು, ಆ ಪ್ರಕಾರ ಪರೀಕ್ಷೆಗೆ ಬರಬೇಕು’ - ಎಚ್.ಪ್ರಸನ್ನ, ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ  

ವಾರ್ತಾ ಭಾರತಿ 22 Apr 2026 7:34 pm

Raichur | ಮಹಿಳಾ ಮೀಸಲಾತಿ ವಿಫಲಕ್ಕೆ ವಿಪಕ್ಷಗಳೇ ಕಾರಣ: ಎಂ.ವಿರುಪಾಕ್ಷಿ ಆರೋಪ

ರಾಯಚೂರು: ಕೇಂದ್ರ ಸರ್ಕಾರ ಜಾರಿಗೆ ತರಲು ಉದ್ದೇಶಿಸಿದ್ದ ಮಹಿಳಾ ಮೀಸಲಾತಿ ಮಸೂದೆ ವಿಫಲವಾಗಲು ಕ್ಷೇತ್ರ ಪುನರ್ವಿಂಗಡಣೆ ಸಂಬಂಧಿತ ಕಾಯ್ದೆಗಳಿಗೆ ವಿರೋಧ ಪಕ್ಷಗಳು ಬೆಂಬಲಿಸದಿರುವುದೇ ಕಾರಣ ಎಂದು ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಎಂ.ವಿರುಪಾಕ್ಷಿ ಆರೋಪಿಸಿದರು. ಬುಧವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ 77 ವರ್ಷಗಳಿಂದ ಮಹಿಳಾ ಮೀಸಲಾತಿ ಕಾಯ್ದೆಯನ್ನು ಜಾರಿಗೆ ತರಲು ನಡೆದ ಪ್ರಯತ್ನಗಳು ಪುರುಷ ಪ್ರಧಾನ ಮನೋಭಾವದಿಂದ ವಿಫಲವಾಗುತ್ತಲೇ ಬಂದಿವೆ ಎಂದು ಹೇಳಿದರು. ದೇಶದ ಮೊದಲ ಪ್ರಧಾನಮಂತ್ರಿ ಜವಾಹರಲಾಲ್ ನೆಹರು ಅವರ ಸಚಿವ ಸಂಪುಟದಲ್ಲಿ ಕಾನೂನು ಸಚಿವರಾಗಿದ್ದ ಬಿ.ಆರ್.ಅಂಬೇಡ್ಕರ್ ಮಹಿಳೆಯರಿಗೆ ಸಮಾನ ಅವಕಾಶ ನೀಡುವ ಕನಸು ಹೊಂದಿದ್ದರು ಎಂದು ಸ್ಮರಿಸಿದರು. 2023ರಲ್ಲಿ ಮಹಿಳಾ ಮೀಸಲು ಮಸೂದೆ ಮಂಡನೆಯಾಗಿದ್ದರೂ ಅದು ಜಾರಿಗೆ ಬಂದಿಲ್ಲ. ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಎಲ್ಲಾ ರಾಜಕೀಯ ಪಕ್ಷಗಳೊಂದಿಗೆ ಪೂರ್ವಭಾವಿ ಚರ್ಚೆ ನಡೆಸಿ ಬೆಂಬಲ ಕೋರಿದರೂ, ಅನೇಕ ಪಕ್ಷಗಳು ಬೆಂಬಲ ನೀಡಲಿಲ್ಲ ಎಂದು ದೂರಿದರು. 2011ರ ಜನಗಣತಿ ಆಧಾರದ ಮೇಲೆ ಕ್ಷೇತ್ರ ಪುನರ್ವಿಂಗಡಣೆ ದೇಶದ ರಾಜಕೀಯ ಚಿತ್ರಣವನ್ನು ಬದಲಿಸುವ ಸಾಮರ್ಥ್ಯ ಹೊಂದಿದೆ. ಆದರೆ ಅದಕ್ಕೆ ವಿರೋಧ ವ್ಯಕ್ತಪಡಿಸಿರುವುದು ಮಹಿಳಾ ಮೀಸಲಾತಿ ಜಾರಿಗೆ ಅಡ್ಡಿಯಾಗಿದೆ ಎಂದು ಅವರು ಹೇಳಿದರು. ಈ ಸಂದರ್ಭದಲ್ಲಿ ಪಕ್ಷ ರಾಜ್ಯ ಉಪಾಧ್ಯಕ್ಷ ಮಹಾಂತೇಶ ಪಾಟೀಲ್ ಅತ್ತನೂರು , ನಗರ ಅಧ್ಯಕ್ಷ ಬಿ.ತಿಮ್ಮಾರೆಡ್ಡಿ, ರಮಾಬಾಯಿ, ಸಣ್ಣ ನರಸಿಂಹನಾಯಕ, ಎನ್.ಶಿವಶಂಕರ, ಅಮರೇಶ ಪಾಟೀಲ್ ಆಶಾಪುರು, ಹಂಪಣ್ಣ ಸೇರಿ ಅನೇಕರಿದ್ದರು.

ವಾರ್ತಾ ಭಾರತಿ 22 Apr 2026 7:33 pm

SSLC Result: ಏಪ್ರಿಲ್‌ 23ಕ್ಕೆ ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ; ಮಧು ಬಂಗಾರಪ್ಪ

ಬೆಂಗಳೂರು: ರಾಜ್ಯದ ಲಕ್ಷಾಂತರ ವಿದ್ಯಾರ್ಥಿಗಳು ಮತ್ತು ಪೋಷಕರು ಕಾತರದಿಂದ ಕಾಯುತ್ತಿದ್ದ ಕ್ಷಣ ಕೊನೆಗೂ ಬಂದಿದೆ. 2026ರ ಸಾಲಿನ ಕರ್ನಾಟಕ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಫಲಿತಾಂಶ ನಾಳೆ, ಅಂದರೆ ಏಪ್ರಿಲ್ 23 ರಂದು ಮಧ್ಯಾಹ್ನ ಪ್ರಕಟವಾಗಲಿದೆ ಎಂದು ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಇಂದು ಅಧಿಕೃತವಾಗಿ ಘೋಷಿಸಿದ್ದಾರೆ. ವಿಶೇಷವೆಂದರೆ, ಈ ಹಿಂದೆ ನಿಗದಿಪಡಿಸಿದ್ದ ದಿನಾಂಕಕ್ಕಿಂತ ಒಂದು ದಿನ

ಒನ್ ಇ೦ಡಿಯ 22 Apr 2026 7:33 pm

Raichur | ಎ.24ರಂದು ಜಿಲ್ಲಾ ಮಟ್ಟದ ಗುತ್ತಿಗೆ ಕಾರ್ಮಿಕರ ಸಮಾವೇಶ

ರಾಯಚೂರು: ಗುತ್ತಿಗೆ ಕಾರ್ಮಿಕರನ್ನು ಖಾಯಂಗೊಳಿಸುವುದು, ಸಮಾನ ಕೆಲಸಕ್ಕೆ ಸಮಾನ ವೇತನ ನೀಡುವುದು ಸೇರಿದಂತೆ ವಿವಿಧ ಸಮಸ್ಯೆಗಳ ಕುರಿತು ಚರ್ಚಿಸಲು ಎ.24ರಂದು ಜಿಲ್ಲಾ ಮಟ್ಟದ ಕಾರ್ಮಿಕರ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ ಎಂದು ಟ್ರೇಡ್ ಯೂನಿಯನ್ ಸೆಂಟರ್ ಆಫ್ ಇಂಡಿಯಾದ ರಾಜ್ಯ ಕಾರ್ಯದರ್ಶಿ ಎಂ. ಗಂಗಾಧರ ಹೇಳಿದರು. ಬುಧವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಗುತ್ತಿಗೆ ಪದ್ಧತಿ ಕಾರ್ಮಿಕರ ಪರವಲ್ಲ, ಅದು ರಾಜಕೀಯ ಹಾಗೂ ಏಜೆನ್ಸಿಗಳ ಲಾಭಕ್ಕಾಗಿ ಬಳಸಿಕೊಳ್ಳಲಾಗುತ್ತಿದೆ ಎಂದು ಆರೋಪಿಸಿದರು. ಸರ್ಕಾರಿ ಮತ್ತು ಖಾಸಗಿ ಕ್ಷೇತ್ರಗಳಲ್ಲಿ ಸಿ ಮತ್ತು ಡಿ ಗ್ರೂಪ್ ಹುದ್ದೆಗಳಲ್ಲಿ ದಶಕಗಳಿಂದ ಗುತ್ತಿಗೆ ಕಾರ್ಮಿಕರು ಕೆಲಸ ಮಾಡುತ್ತಿದ್ದರೂ, ಅವರಿಗೆ ಸೂಕ್ತ ಭದ್ರತೆ ಹಾಗೂ ಹಕ್ಕುಗಳು ದೊರೆಯುತ್ತಿಲ್ಲ ಎಂದು ಹೇಳಿದರು. ಖಾಯಂ ಹುದ್ದೆಗಳಲ್ಲಿಯೇ ಗುತ್ತಿಗೆ ಆಧಾರದ ಮೇಲೆ ಕಾರ್ಮಿಕರನ್ನು ಬಳಸಿಕೊಳ್ಳುತ್ತಿರುವುದು ದುರ್ಬಳಕೆ ಎಂದು ಆರೋಪಿಸಿದ ಅವರು, ರಾಜ್ಯ ಸರ್ಕಾರ ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಒತ್ತಾಯಿಸಿದರು. ಎ.24ರಂದು ಬೆಳಗ್ಗೆ 9 ಗಂಟೆಗೆ ನಗರದ ಪಂಡಿತ ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಸಮಾವೇಶ ನಡೆಯಲಿದ್ದು, ಸುಮಾರು 1500ಕ್ಕೂ ಹೆಚ್ಚು ಕಾರ್ಮಿಕರು ಭಾಗವಹಿಸುವ ನಿರೀಕ್ಷೆ ಇದೆ ಎಂದು ತಿಳಿಸಿದರು. ಸಮಾವೇಶದಲ್ಲಿ ಕಾರ್ಮಿಕ ಸಚಿವ ಸಂತೋಷ ಲಾಡ್, ಜಿಲ್ಲಾ ಉಸ್ತುವಾರಿ ಸಚಿವ ಡಾ. ಶರಣಪ್ರಕಾಶ್ ಪಾಟೀಲ್, ಜಿಲ್ಲಾಧಿಕಾರಿ ಕೆ. ನಿತೀಶ್ ಸೇರಿದಂತೆ ಸಂಘದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಆರ್. ಮಾನಸಯ್ಯ, ರಾಜ್ಯಾಧ್ಯಕ್ಷ ಎಂ.ಡಿ. ಅಮಿರ್ ಅಲಿ ಹಾಗೂ ಇತರ ಮುಖಂಡರು ಭಾಗವಹಿಸಲಿದ್ದಾರೆ. ಜಿಲ್ಲೆಯ ವಿವಿಧ ಇಲಾಖೆಗಳಾದ ಕೃಷಿ, ವಸತಿ ಶಾಲೆ, ಕಂದಾಯ, ಗಣಿ, ನೀರಾವರಿ, ಆರೋಗ್ಯ, ಇಂಧನ ಮತ್ತು ಜಿಲ್ಲಾ ಪಂಚಾಯತ್ ಇಲಾಖೆಯ ಗುತ್ತಿಗೆ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಮಾವೇಶವನ್ನು ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು. ಈ ಸಂದರ್ಭದಲ್ಲಿ ಜಿ.ಅಡವಿರಾವ್, ಮುಹಮ್ಮದ್‌ ಶಫಿ, ನಾಗರಾಜ, ಎಂ.ನಿರಂಜನ ಸೇರಿ ಇತರಿದ್ದರು.

ವಾರ್ತಾ ಭಾರತಿ 22 Apr 2026 7:30 pm

ಎ.24: ವರನಟ ಡಾ. ರಾಜ್‌ಕುಮಾರ್ ಜಯಂತಿ

ಉಡುಪಿ, ಎ.22: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಉಡುಪಿ ಹಾಗೂ ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಉಡುಪಿ ಜಿಲ್ಲಾ ಘಟಕ ಇವರ ಸಂಯುಕ್ತ ಆಶ್ರಯದಲ್ಲಿ ವರನಟ ಡಾ.ರಾಜ್‌ಕುಮಾರ್ ಅವರ ಜಯಂತಿ ಕಾರ್ಯಕ್ರಮ ಎ.24ರ ಶುಕ್ರವಾರ ಬೆಳಗ್ಗೆ 10:30ಕ್ಕೆ ನಗರದ ಬ್ರಹ್ಮಗಿರಿಯ ರೆಡ್‌ಕ್ರಾಸ್ ಸಭಾಂಗಣ ದಲ್ಲಿ ನಡೆಯಲಿದೆ. ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಆರ್. ಹೆಬ್ಬಾಳ್ಕರ್ ಉದ್ಘಾಟಿಸಲಿದ್ದು, ಶಾಸಕ ಯಶ್‌ಪಾಲ್ ಸುವರ್ಣ ಅಧ್ಯಕ್ಷತೆ ವಹಿಸಲಿದ್ದಾರೆ. ಇದರಲ್ಲಿ ಸಂಸದ ಕೋಟ ಶ್ರೀನಿವಾಸ ಪೂಜಾರಿ, ಜಿಲ್ಲೆಯ ಜನಪ್ರತಿನಿಧಿಗಳು, ವಿವಿಧ ಸಂಘಸಂಸ್ಥೆಗಳ ಪದಾಧಿಕಾರಿಗಳು, ಮಂಗಳೂರು ಕರಾವಳಿ ಅಭಿವೃದ್ದಿ ಮಂಡಳಿಯ ಅಧ್ಯಕ್ಷ ಎಂ.ಎ.ಗಫೂರ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನಕರ ಹೇರೂರು, ಭಾರತೀಯ ರೆಡ್‌ಕ್ರಾಸ್ ರಾಜ್ಯ ಸಭಾಪತಿ ಬಸರೂರು ರಾಜೀವ್ ಶೆಟ್ಟಿ, ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ, ಜಿಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್, ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಂ ಶಂಕರ್ ಹಾಗೂ ಇತರರು ಭಾಗವಹಿಸಲಿದ್ದಾರೆ. ಖ್ಯಾತ ಚಲನಚಿತ್ರ ನಟಿ ಪ್ರತಿಮಾ ನಾಯಕ್ ಡಾ.ರಾಜ್‌ಕುಮಾರ್ ಕುರಿತಂತೆ ಉಪನ್ಯಾಸ ನೀಡಲಿದ್ದಾರೆ ಎಂದು ಕನ್ನಡ ಮತ್ತು ಸಂಸ್ತೃತಿ ಇಲಾಖೆಯ ಪ್ರಕಟಣೆ ತಿಳಿಸಿದೆ.

ವಾರ್ತಾ ಭಾರತಿ 22 Apr 2026 7:28 pm

ಆ್ಯಪಲ್ ಸಿಇಒ ಯಾರು? ಜಾನ್ ಟೆರ್ನಸ್ ಆಯ್ಕೆಯ ನಂತರ ಟಿಮ್ ಕುಕ್ ಭವಿಷ್ಯವೇನು?

ನಾಯಕತ್ವ ಪರಿವರ್ತನೆಗೆ ನೆರವಾಗಲು ಟಿಮ್ ಅವರು ಸೆಪ್ಟೆಂಬರ್ ವರೆಗೆ ಆ್ಯಪಲ್ ಸಿಇಒ ಆಗಿ ಉಳಿಯಲಿದ್ದಾರೆ. ದೀರ್ಘಕಾಲದಿಂದ ಆ್ಯಪಲ್ ಕಂಪೆನಿಯಲ್ಲಿ ಕೆಲಸ ಮಾಡುತ್ತಿರುವ ಅನುಭವಿ ಜಾನ್ ಟೆರ್ನಸ್ ಅವರನ್ನು ಆ್ಯಪಲ್ ಕಂಪೆನಿ ತನ್ನ ಮುಂದಿನ ಸಿಇಒ ಆಗಿ ಘೋಷಿಸಿದೆ. ಪ್ರಸ್ತುತ ಸಿಇಒ ಟಿಮ್ ಕುಕ್ ಅವರು ಈ ವರ್ಷದ ಕೊನೆಯಲ್ಲಿ ಆ್ಯಪಲ್‌ ನ ನಿರ್ದೇಶಕರ ಮಂಡಳಿಯ ಕಾರ್ಯನಿರ್ವಾಹಕ ಅಧ್ಯಕ್ಷ ಸ್ಥಾನಕ್ಕೆ ವರ್ಗಾವಣೆಯಾಗಲಿದ್ದಾರೆ. ಆ್ಯಪಲ್‌ ಗೆ ಹೊಸ ನಾಯಕತ್ವ ಜಾನ್ ಟೆರ್ನಸ್ ಅವರು ಸೆಪ್ಟೆಂಬರ್ 1 ರಂದು ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಹಾರ್ಡ್ವೇರ್ ಎಂಜಿನಿಯರಿಂಗ್ ಕಾರ್ಯನಿರ್ವಾಹಕರಾಗಿದ್ದ ಜಾನ್ ಟೆರ್ನಸ್ ಆ್ಯಪಲ್ ಕಂಪೆನಿಯಲ್ಲಿ ಬಹಳ ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಟಿಮ್ ಕುಕ್ ಅವರ ನಾಯಕತ್ವದಲ್ಲಿ ಕಂಪೆನಿ ದಾಖಲೆಯ ಲಾಭದಲ್ಲಿ ಮುಂದುವರಿದಿತ್ತು. ಇದೀಗ ಹೊಸ ನಾಯಕತ್ವದಲ್ಲೂ ಅದೇ ಹಾದಿಯಲ್ಲಿ ಮುಂದುವರಿಯಬೇಕು ಎಂಬ ಉದ್ದೇಶದಿಂದ ಜಾನ್ ಟೆರ್ನಸ್ ಅವರನ್ನು ಸಿಇಒ ಹುದ್ದೆಗೆ ಆಯ್ಕೆ ಮಾಡಲಾಗಿದೆ. ಆ್ಯಪಲ್ ಕಂಪೆನಿಯ ವಾರ್ಷಿಕ ಲಾಭವು ಈಗ 100 ಶತಕೋಟಿ ಡಾಲರ್ ಮೀರಿದೆ. ಚೀನಾದಲ್ಲಿ ಹೆಚ್ಚಾಗಿರುವ ಬೇಡಿಕೆಯಿಂದಾಗಿ ಲಾಭದಲ್ಲಿ ಏರಿಕೆಯಾಗಿದೆ ಎಂದು ಕಂಪೆನಿ ಜನವರಿಯಲ್ಲಿ ತಿಳಿಸಿತ್ತು. “ಆ್ಯಪಲ್‌ ನ ಕಾರ್ಯಸೂಚಿಯನ್ನು ಮುಂದಕ್ಕೆ ಕೊಂಡೊಯ್ಯುವ ಅವಕಾಶಕ್ಕಾಗಿ ನಾನು ತುಂಬಾ ಕೃತಜ್ಞನಾಗಿದ್ದೇನೆ. ನನ್ನ ಸಂಪೂರ್ಣ ವೃತ್ತಿಜೀವನವನ್ನು ಆ್ಯಪಲ್‌ ನಲ್ಲಿ ಕಳೆದಿದ್ದೇನೆ. ಸ್ಟೀವ್ ಜಾಬ್ಸ್ ಅವರ ಅಡಿಯಲ್ಲಿ ಮತ್ತು ಟಿಮ್ ಕುಕ್ ಅವರನ್ನು ಮಾರ್ಗದರ್ಶಕರಾಗಿ ಹೊಂದಲು ಅವಕಾಶ ದೊರೆತಿದೆ. ನಾವು ಜಾಗತಿಕವಾಗಿ ಮತ್ತು ಪರಸ್ಪರ ಹೇಗೆ ಸಂವಹನ ನಡೆಸುತ್ತೇವೆ ಎಂಬುದನ್ನು ಬದಲಿಸಿದ ಉತ್ಪನ್ನಗಳು ಮತ್ತು ಅನುಭವಗಳನ್ನು ರೂಪಿಸಲು ನೆರವಾಗಿರುವುದು ನನಗೆ ಹೆಮ್ಮೆಯ ವಿಷಯ” ಎಂದು ಅವರು ಹೇಳಿದ್ದಾರೆ. ನಾಯಕತ್ವ ಪರಿವರ್ತನೆಗೆ ನೆರವಾಗಲು ಟಿಮ್ ಅವರು ಸೆಪ್ಟೆಂಬರ್ ವರೆಗೆ ಸಿಇಒ ಆಗಿ ಉಳಿಯಲಿದ್ದಾರೆ. ತಮ್ಮ ಉತ್ತರಾಧಿಕಾರಿಯನ್ನು ಅವರು “ಒಬ್ಬ ಎಂಜಿನಿಯರ್ ಮನಸ್ಸು, ನವೀನತೆ ತರುವ ಆತ್ಮ ಮತ್ತು ಸಮಗ್ರತೆ ಹಾಗೂ ಗೌರವದಿಂದ ಮುನ್ನಡೆಸುವ ಹೃದಯ ಹೊಂದಿರುವವರು” ಎಂದು ಹೊಗಳಿದ್ದಾರೆ. ಆ್ಯಪಲ್ ಕಂಪೆನಿಯ ಹಳೆಯ ತಲೆ ಜಾನ್ ಟೆರ್ನಸ್ ಅವರು 2001ರಲ್ಲಿ ಆ್ಯಪಲ್ ಕಂಪೆನಿಯಲ್ಲಿ ಕೆಲಸ ಪ್ರಾರಂಭಿಸಿದರು. 2013ರಲ್ಲಿ ಹಾರ್ಡ್ವೇರ್ ಎಂಜಿನಿಯರಿಂಗ್ ಉಪಾಧ್ಯಕ್ಷರಾಗಿ ಮತ್ತು 2021ರಲ್ಲಿ ವಿಭಾಗ ಮುಖ್ಯಸ್ಥರಾಗಿ ಪದೋನ್ನತಿ ಹೊಂದಿದರು. ಅವರು ಆ್ಯಪಲ್ ಉತ್ಪನ್ನಗಳ ಭೌತಿಕ ಘಟಕಗಳ ಅಭಿವೃದ್ಧಿಗೆ ಹೊಣೆ ಹೊತ್ತಿದ್ದರು. ಅವರ ಗಮನಾರ್ಹ ಸಾಧನೆಗಳಲ್ಲಿ ಮ್ಯಾಕ್ ಕಂಪ್ಯೂಟರ್‌ ಗಳಿಗೆ ಆ್ಯಪಲ್ ಸ್ವಾಮ್ಯದ ಸಿಲಿಕಾನ್ ಚಿಪ್‌ಗಳ ಅಭಿವೃದ್ಧಿ ಮತ್ತು ಬಿಡುಗಡೆ ಸೇರಿವೆ. ವಾಲ್ ಸ್ಟ್ರೀಟ್ ಜರ್ನಲ್ ಪ್ರಕಾರ, 2020ರಲ್ಲಿ ಇಂಟೆಲ್ ಚಿಪ್‌ ಗಳನ್ನು ಬದಲಿಸಿದ ನಂತರ ಮಾರಾಟವು ಗಣನೀಯವಾಗಿ ಏರಿಕೆಯಾಯಿತು. ಹಾರ್ಡ್ವೇರ್ ವಿಭಾಗದ ಅವರ ನಾಯಕತ್ವದಲ್ಲಿ ಪ್ರಾರಂಭವಾದ ಉತ್ಪನ್ನಗಳಲ್ಲಿ ಆ್ಯಪಲ್ ವಾಚ್ ಮತ್ತು ಏರ್‌ ಪಾಡ್ಸ್ ಶೈಲಿಯ ಹೆಡ್‌ಫೋನ್‌ಗಳು ಸೇರಿವೆ. ಇವೆರಡೂ ಆ್ಯಪಲ್‌ ನ ಪ್ರಮುಖ ಲಾಭದಾಯಕ ವ್ಯವಹಾರ ಮಾರ್ಗಗಳಾಗಿ ಬೆಳೆದಿವೆ, ಆದರೆ ವಿಷನ್ ಪ್ರೊ ಹೆಡ್‌ಸೆಟ್ ನಿರೀಕ್ಷಿತ ಮಟ್ಟದಲ್ಲಿ ಬೆಳೆಯಲಿಲ್ಲ. ►ಪ್ರಶಂಸಿಸಿದ ಆ್ಯಪಲ್ ಮುಖ್ಯಸ್ಥ ಟೆರ್ನಸ್ ಅವರನ್ನು “ಒಬ್ಬ ಸ್ನೇಹಪರ ಮೆಕ್ಯಾನಿಕಲ್ ಎಂಜಿನಿಯರ್” ಎಂದು ವರ್ಣಿಸಲಾಗಿದೆ. ಅವರು ಸ್ಫೂರ್ತಿದಾಯಕ ಆದರೆ ಚಂಚಲರಾಗಿದ್ದ ಸ್ಟೀವ್ ಜಾಬ್ಸ್ ಅವರಿಗಿಂತ ಹೆಚ್ಚು ಶಾಂತ ಹಾಗೂ ಸಮತೋಲನಯುತ ನಿರ್ವಹಣಾ ಶೈಲಿಯನ್ನು ಹೊಂದಿದ್ದಾರೆ, ಇದು ಟಿಮ್ ಕುಕ್ ಅವರ ಶೈಲಿಗೆ ಹತ್ತಿರವಾಗಿದೆ. ಟೆರ್ನಸ್ ಸಿಇಒ ಸ್ಥಾನ ಅಲಂಕರಿಸಿದ ಬಳಿಕ ಜಾನಿ ಸ್ರೌಜಿ ಅವರ ಪಾತ್ರದಲ್ಲಿ ಬದಲಾವಣೆ ಸಾಧ್ಯವಿದೆ. ಅವರು ಈ ಹಿಂದೆ ಆ್ಯಪಲ್‌ ನ ಹಾರ್ಡ್ವೇರ್ ವಿಭಾಗದ ಹಿರಿಯ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದರು. 1998ರಲ್ಲಿ ಆ್ಯಪಲ್‌ ಗೆ ಸೇರಿ, 2011ರಲ್ಲಿ ಜಾಬ್ಸ್ ನಂತರ ಸಿಇಒ ಆಗಿ ನೇಮಕಗೊಂಡ ಟಿಮ್ ಕುಕ್ ಅವರು ತಮ್ಮ ಉತ್ತರಾಧಿಕಾರಿಯನ್ನು ಆಯ್ಕೆ ಮಾಡುವ ಪ್ರಕ್ರಿಯೆಗೆ ಸುಮಾರು ಒಂದು ವರ್ಷ ಸಮಯ ಮೀಸಲಿಟ್ಟಿದ್ದರು ಎಂದು ವರದಿಯಾಗಿದೆ. ಕಳೆದ ವರ್ಷ ಅವರು ಕಡಿಮೆ ಕೆಲಸ ಮಾಡಲು ಬಯಸುವುದಾಗಿ ಮಂಡಳಿ ಮತ್ತು ಹಿರಿಯ ನಾಯಕರಿಗೆ ತಿಳಿಸಿದ್ದರು. ಕುಕ್ ಅವರ ಬದಲಿಗೆ ಆಯ್ಕೆಯಾದ ಟೆರ್ನಸ್ ಎಲ್ಲರ ಅಚ್ಚುಮೆಚ್ಚಿನವರಾಗಿದ್ದರು. ►ಯಾರು ಈ ಜಾನ್ ಟೆರ್ನಸ್? ಕ್ಯಾಲಿಫೋರ್ನಿಯಾ ಮೂಲದ ಟೆರ್ನಸ್ ಅವರು ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯದಿಂದ ಮೆಕ್ಯಾನಿಕಲ್ ಎಂಜಿನಿಯರಿಂಗ್‌ನಲ್ಲಿ ಪದವಿ ಪಡೆದಿದ್ದಾರೆ. ಕಾಲೇಜು ಅವಧಿಯಲ್ಲಿ ವಾರ್ಸಿಟಿ ಈಜು ತಂಡದ ಸದಸ್ಯರಾಗಿದ್ದು, ಹಲವು ಸ್ಪರ್ಧೆಗಳಲ್ಲಿ ಜಯಗಳಿಸಿದ್ದರು. 1997ರಲ್ಲಿ ಪದವಿ ಪಡೆದ ನಂತರ ಅವರು ವರ್ಚುವಲ್ ರಿಯಾಲಿಟಿ ಸ್ಟಾರ್ಟ್‌ಅಪ್ ‘ವರ್ಚುವಲ್ ರಿಸರ್ಚ್ ಸಿಸ್ಟಮ್ಸ್’ನಲ್ಲಿ ಸ್ವಲ್ಪಕಾಲ ಕೆಲಸ ಮಾಡಿದರು. ಟೆರ್ನಸ್ ಅವರು ಲಾಭದ ಹಾದಿಯಲ್ಲಿ ಟಿಮ್ ಕುಕ್ ಅವರ ಮಾರ್ಗದಲ್ಲೇ ಮುಂದುವರಿಯುವ ಸಾಧ್ಯತೆ ಇದ್ದರೂ, ಕೃತಕ ಬುದ್ಧಿಮತ್ತೆ ಕ್ಷೇತ್ರದಲ್ಲಿ ಸ್ಪರ್ಧಿಸಲು ಅವರಿಗೆ ಸವಾಲು ಎದುರಾಗಲಿದೆ. ವಿಶೇಷವಾಗಿ ಸಿರಿ ವರ್ಚುವಲ್ ಅಸಿಸ್ಟೆಂಟ್ ಅನ್ನು ನವೀಕರಿಸುವ ಹೊಣೆಗಾರಿಕೆ ಅವರ ಮೇಲಿದೆ. AI ಕ್ಷೇತ್ರದಲ್ಲಿ ಆ್ಯಪಲ್‌ ಗೆ ಸ್ಪಷ್ಟವಾದ ಗುರುತು ಇಲ್ಲದಿರುವುದನ್ನು ಅವರು ಹೇಗೆ ನಿಭಾಯಿಸುತ್ತಾರೆ ಎಂಬುದು ಗಮನಾರ್ಹವಾಗಿದೆ. ►ಜಾನ್ ಟೆರ್ನಸ್ ವೇತನ ಎಷ್ಟು? ಜಾನ್ ಟೆರ್ನಸ್ ಅವರ ವೇತನದ ಬಗ್ಗೆ ಅಂತರ್ಜಾಲದಲ್ಲಿ ಚರ್ಚೆಗಳು ನಡೆಯುತ್ತಿದ್ದರೂ, ಕಂಪೆನಿ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ. ►ಆ್ಯಪಲ್ ಸಂಸ್ಥೆ ಏನು ನಿರೀಕ್ಷಿಸಬಹುದು? ದೀರ್ಘಕಾಲದ ಹಾರ್ಡ್ವೇರ್ ಮುಖ್ಯಸ್ಥರಾದ ಜಾನ್ ಟೆರ್ನಸ್ ಆಯ್ಕೆಯ ಮೂಲಕ ಆ್ಯಪಲ್ ತಾಂತ್ರಿಕ ಸಾಮರ್ಥ್ಯವನ್ನು ಮತ್ತಷ್ಟು ಬಲಪಡಿಸಲು ಪ್ರಯತ್ನಿಸುತ್ತಿದೆ. ಮ್ಯಾಕ್ ಮತ್ತು ಐಫೋನ್‌ನಂತಹ ಉತ್ಪನ್ನಗಳ ಹೊಸ ಮಾದರಿಗಳ ಮಾರಾಟವನ್ನು ಹೆಚ್ಚಿಸುವತ್ತ ಕಂಪೆನಿ ಗಮನ ಹರಿಸಬಹುದು.

ವಾರ್ತಾ ಭಾರತಿ 22 Apr 2026 7:27 pm

Raichur | ಎ.24ರಂದು ‘ನಿನ್ನ ಮರೆಯಲಾರೆ’ ಸಂಗೀತ ರಸಮಂಜರಿ

ರಾಯಚೂರು: ನಟ ಡಾ.ರಾಜ್‌ಕುಮಾರ್ ಅವರ ಜನ್ಮದಿನದ ಅಂಗವಾಗಿ ‘ನಿನ್ನ ಮರೆಯಲಾರೆ’ ಎಂಬ ಮಧುರ ಗೀತೆಗಳ ರಸಮಂಜರಿ ಕಾರ್ಯಕ್ರಮವನ್ನು ಎ.24ರಂದು ಸಂಜೆ ನಗರದಲ್ಲಿ ಆಯೋಜಿಸಲಾಗಿದೆ ಎಂದು ಕಾರ್ಯಕ್ರಮದ ಕಾರ್ಯದರ್ಶಿ ಡಿ. ವೀರೇಶ ತಿಳಿಸಿದ್ದಾರೆ. ಬುಧವಾರ ನಡೆದ ಮಾಧ್ಯಮಗೋಷ್ಠಿಯಲ್ಲಿ ಅವರು ಮಾತನಾಡಿ, ರಾಗ ತರಂಗಿಣಿ ಮೆಲೋಡಿಯಸ್ ಹಾಗೂ ಸೌಜನ್ಯ ಶ್ರೀ ಸ್ಟಾರ್ ಗೋಲ್ಡ್ ಕಂಪನಿಯ ಸಹಯೋಗದಲ್ಲಿ ಕಾರ್ಯಕ್ರಮವನ್ನು ಸಂಜೆ 5 ಗಂಟೆಗೆ ನಗರದ ಪಂಡಿತ ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ನಡೆಸಲಾಗುವುದು ಎಂದು ತಿಳಿಸಿದರು. ಕಾರ್ಯಕ್ರಮವನ್ನು ಡಾ. ರಾಜ್‌ಕುಮಾರ್ ಅಭಿಮಾನಿಗಳ ಸಂಘದ ಗೌರವಾಧ್ಯಕ್ಷ ಬಸವರಾಜ ಕಳಸ ಉದ್ಘಾಟಿಸಲಿದ್ದು, ಕೃಷ್ಣಮೂರ್ತಿ ವಕೀಲ ಅಧ್ಯಕ್ಷತೆ ವಹಿಸಲಿದ್ದಾರೆ. ವಿವಿಧ ಜನಪ್ರತಿನಿಧಿಗಳು ಹಾಗೂ ಗಣ್ಯರು ಭಾಗವಹಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಜಿಲ್ಲೆಯ ಪ್ರತಿಭಾವಂತ ಗಾಯಕರು ಡಾ. ರಾಜ್‌ಕುಮಾರ್ ಅವರ ಜನಪ್ರಿಯ ಗೀತೆಗಳನ್ನು ಪ್ರಸ್ತುತಪಡಿಸಲಿದ್ದಾರೆ. ಈ ಸಂದರ್ಭದಲ್ಲಿ ಮುಖಂಡರಾದ ಕೃಷ್ಣಮೂರ್ತಿ, ನರೇಂದ್ರ, ಶ್ರೀನಿವಾಸರಾವ್, ಕೃಷ್ಣ, ರಮೇಶ, ಗುರುರಾಜ ಸೇರಿದಂತೆ ಅನೇಕರಿದ್ದರು.

ವಾರ್ತಾ ಭಾರತಿ 22 Apr 2026 7:26 pm

'ಸೂಕ್ತ ಕಾರಣವಿದೆ, ಪಕ್ಷ ವಿರೋಧಿಗಳಿಗೆ ಶಿಕ್ಷೆ' ಕಾಂಗ್ರೆಸ್‌ ಮುಸ್ಲಿಂ ನಾಯಕರ ಮೇಲಿನ ಕ್ರಮ ಸರಿ ಎಂದ ಪ್ರಭಾ ಮಲ್ಲಿಕಾರ್ಜುನ

ಕಾಂಗ್ರೆಸ್‌ನಲ್ಲಿ ಮುಸ್ಲಿಂ ಮುಖಂಡರ ವಿರುದ್ಧದ ಕ್ರಮದ ಬಗ್ಗೆ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಪ್ರತಿಕ್ರಿಯೆ ನೀಡಿದ್ದಾರೆ. ಉಪಚುನಾವಣೆಯಲ್ಲಿ ಪಕ್ಷದ ವಿರುದ್ಧ ಕೆಲಸ ಮಾಡಿದವರಿಗೆ ಹೈಕಮಾಂಡ್ ಸೂಕ್ತ ಶಿಕ್ಷೆ ನೀಡಿದ್ದು, ಕಾಂಗ್ರೆಸ್ ಶಿಸ್ತಿನ ಪಕ್ಷ ಎಂದಿದ್ದಾರೆ. ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಮರ್ಥ್ ಅವರು ಭಾರಿ ಅಂತರದಿಂದ ಗೆಲ್ಲುವುದು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ವಿಜಯ ಕರ್ನಾಟಕ 22 Apr 2026 7:24 pm

Ballari | ಸಿಡಿಲು ಬಡಿದು ಯುವತಿ ಮೃತ್ಯು

ಸಂಡೂರು/ಬಳ್ಳಾರಿ: ಸಿಡಿಲು ಬಡಿದು ಯುವತಿ ಮೃತಪಟ್ಟ ಘಟನೆ ತಾಲೂಕಿನ ಬಂಡ್ರಿಯ ಹಳೆ ಜೋಗಿಕಲ್ಲು ಗ್ರಾಮದಲ್ಲಿ ಮಂಗಳವಾರ ಮಧ್ಯಾಹ್ನ ನಡೆದಿದೆ. ಮೃತರನ್ನು ಅಕ್ಷತಾ (19) ಎಂದು ಗುರುತಿಸಲಾಗಿದೆ. ಮಧ್ಯಾಹ್ನ ಸುಮಾರು 2.45 ಗಂಟೆ ವೇಳೆಗೆ ಬಿರುಬಿಸಿಲಿನ ನಡುವೆ ಏಕಾಏಕಿ ಮೋಡ ಕವಿದು ಬಿರುಗಾಳಿ, ಗುಡುಗು ಮತ್ತು ಸಿಡಿಲಿನೊಂದಿಗೆ ಮಳೆ ಆರಂಭವಾಗಿತ್ತು. ಇದೇ ವೇಳೆ ಕುರಿ ಹಾಗೂ ದನಗಳನ್ನು ಮೇಯಿಸಲು ಹೊಲಕ್ಕೆ ತೆರಳಿದ್ದ ಅಕ್ಷತಾ  ಮಳೆ ಹಾಗೂ ಸಿಡಿಲಿನಿಂದ ರಕ್ಷಿಸಿಕೊಳ್ಳಲು ಸಮೀಪದ ಮರದ ಕೆಳಗೆ ಆಶ್ರಯ ಪಡೆದಿದ್ದರು. ಆದರೆ ಸಿಡಿಲು ನೇರವಾಗಿ ಮರದ ಬಳಿ ಬಡಿದ ಪರಿಣಾಮ ಅಕ್ಷತಾ ಅವರಿಗೆ ತಗುಲಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.  ಘಟನೆಯ ಮಾಹಿತಿ ತಿಳಿದ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಂದಾಯ ಇಲಾಖೆ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ, ಅಗತ್ಯ ದಾಖಲೆಗಳೊಂದಿಗೆ ವರದಿ ಸಲ್ಲಿಸುವುದಾಗಿ ತಿಳಿಸಿದ್ದಾರೆ.

ವಾರ್ತಾ ಭಾರತಿ 22 Apr 2026 7:23 pm

Madhya Pradesh | ಬಡ ಕ್ರಿಶ್ಚಿಯನ್ನರ ಮೇಲೆ ಹಿಂದೂ ಬಲಪಂಥೀಯರ ದಾಳಿ; ʼthe quintʼ ಸಾಕ್ಷ್ಯಚಿತ್ರದಲ್ಲಿ ಕಂಡ ಸಂತ್ರಸ್ತರ ನೋವಿನ ಕತೆಗಳು

ಹೊಸದಿಲ್ಲಿ: ನಾನು ತುಂಬಾ ಖಿನ್ನತೆಗೆ ಒಳಗಾಗಿದ್ದೆ. ಕ್ರಿಸ್‌ಮಸ್ ಸಮಯದಲ್ಲಿ ನನ್ನ ಮೇಲೆ ಹೇಗೆ ಹಲ್ಲೆ ನಡೆಸಲಾಯಿತು ಎಂಬುದರ ಬಗ್ಗೆ ದಿನಗಟ್ಟಲೆ ಯೋಚಿಸಿದೆ ಅಂತಾರೆ ಸಫಲ್ತಾ ಕಾರ್ತಿಕ್. ಸಫಲ್ತಾಗೆ ಬಾಲ್ಯದಿಂದಲೂ ಕಣ್ಣು ಕಾಣುತ್ತಿಲ್ಲ. ಆಕೆಗೆ ಕಾಣಲು ಸಾಧ್ಯವಾಗದಿದ್ದರೂ, ದಾಳಿಯ ದಿನ ನಡೆದದ್ದು ಇನ್ನೂ ಅವಳ ಮನಸ್ಸಿನಿಂದ ಮಾಸಿಲ್ಲ. ನನ್ನ ಮೇಲೆ ನಡೆದ ಹಲ್ಲೆಯ ವೀಡಿಯೋ ವೈರಲ್ ಆಯಿತು, ಇದನ್ನು ಹೇಗೆ ಎದುರಿಸಬಹುದು ಎಂದು ನಾನು ಯೋಚಿಸುತ್ತಲೇ ಇದ್ದೆ. 2025 ಡಿಸೆಂಬರ್ 20, ಕ್ರಿಸ್‌ ಮಸ್‌ ಗೆ ಮುನ್ನ ಮಧ್ಯಾಹ್ನದ ಊಟದ ಸಮಯದಲ್ಲಿ, ಆಗಿನ ಜಬಲ್‌ ಪುರ ಜಿಲ್ಲಾ ಬಿಜೆಪಿ ಅಧ್ಯಕ್ಷೆ ಅಂಜು ಭಾರ್ಗವ ತಮ್ಮ ಮೇಲೆ ನಡೆಸಿದ ವಾಗ್ದಾಳಿ ಮತ್ತು ದೈಹಿಕ ಹಲ್ಲೆಯನ್ನು ಸಫಲ್ತಾ ವಿವರಿಸಿದ್ದಾರೆ. ಅಂಜು, ಸಫಲ್ತಾಳ ಮೇಲೆ ಆರೋಪ ಹೊರಿಸಿ ದೂಷಿಸುತ್ತಿರುವ ಕೃತ್ಯವನ್ನು ಕ್ಯಾಮೆರಾದಲ್ಲಿ ಸೆರೆಹಿಡಿಯಲಾಗಿದೆ. ಇದಕ್ಕೆ ಎಲ್ಲಡೆ ಆಕ್ರೋಶ ವ್ಯಕ್ತವಾಗಿದೆ. ಸಫಲ್ತಾ ಅವರ ಪ್ರಕರಣವು ಪ್ರತ್ಯೇಕವಾದದ್ದಲ್ಲ. ಇದು ಮಧ್ಯಪ್ರದೇಶದಲ್ಲಿ ಕ್ರಿಶ್ಚಿಯನ್ನರ ವಿರುದ್ಧ ಹೆಚ್ಚುತ್ತಿರುವ ದ್ವೇಷ ಅಪರಾಧಗಳ ಕಥೆಯನ್ನು ಹೇಳುತ್ತದೆ. ಇಲ್ಲಿ ಅವರು ರಾಜ್ಯದ ಒಟ್ಟು ಜನಸಂಖ್ಯೆಯ 1% ಕ್ಕಿಂತ ಕಡಿಮೆ ಇದ್ದಾರೆ (2011ರ ಜನಗಣತಿ). ಸಫಲ್ತಾ ಕಾರ್ತಿಕ್ ಕ್ರಿಶ್ಚಿಯನ್ ಅಲ್ಲ, ಆಕೆ ಕಟಿಯಾ ಸಮುದಾಯಕ್ಕೆ (SC) ಸೇರಿದವರು. ಪ್ರತಿ ವರ್ಷ, ಪಾದ್ರಿ ಧರ್ಮೇಂದ್ರ ಜೆನಾ ಆಯೋಜಿಸಿದ ಕ್ರಿಸ್‌ಮಸ್ ಊಟಕ್ಕೆ ಆಕೆ ಹಾಜರಾಗುತ್ತಿದ್ದರು. ನೀವು ಮುಂದಿನ ಜನ್ಮದಲ್ಲಿಯೂ ಕುರುಡರಾಗಿ ಹುಟ್ಟುತ್ತೀರಿ ಎಂದು ಅಂಜು ಹೇಳಿದ್ದು ಆಕೆಯ ಮನಸ್ಸಿನಲ್ಲಿ ಪ್ರತಿಧ್ವನಿಸುತ್ತಲೇ ಇದೆ. The quint ಜಬಲ್‌ ಪುರ ಮತ್ತು ಭೋಪಾಲ್‌ನಂತಹ ಹಲವಾರು ಜಿಲ್ಲೆಗಳಲ್ಲಿ ಪ್ರಯಾಣಿಸಿ, ವರ್ಷದಿಂದ ವರ್ಷಕ್ಕೆ ಕ್ರಿಶ್ಚಿಯನ್ನರ ಮೇಲಿನ ದಾಳಿಗಳು ಏಕೆ ಹೆಚ್ಚುತ್ತಿವೆ ಮತ್ತು ಈ ದಾಳಿಗಳು ಬೀರುತ್ತಿರುವ ಸಾಮಾಜಿಕ-ಆರ್ಥಿಕ ಪರಿಣಾಮವನ್ನು ಪರಿಶೀಲಿಸಿದೆ. ಸಫಲ್ತಾ ಅವರು ಬಿ.ಎಡ್‌ ನ ಅಂತಿಮ ವರ್ಷದಲ್ಲಿದ್ದು, ವಿಶೇಷ ಚೇತನ ಮಕ್ಕಳಿಗೆ ಶಿಕ್ಷಕಿಯಾಗುವ ಆಕಾಂಕ್ಷೆಯನ್ನು ಹೊಂದಿದ್ದಾರೆ. ಕಳೆದ ವರ್ಷದ ಕ್ರಿಸ್‌ ಮಸ್ ಕಾರ್ಯಕ್ರಮವನ್ನು ನೆನಪಿಸಿಕೊಂಡ ಸಫಲ್ತಾ, “ಅಂಜು ಭಾರ್ಗವ ನನ್ನ ಮೇಲೆ ಕೂಗಾಡಿದ್ದು, 'ನೀವು ನಿಮ್ಮೊಂದಿಗೆ ಅನೇಕ ಜನರನ್ನು ಮತಾಂತರಿಸಲು ಕರೆತಂದಿದ್ದೀರಿ. ನೀವು ನಿಮ್ಮೊಂದಿಗೆ ಒಂದು ಮಗುವನ್ನು ಸಹ ಕರೆತಂದಿದ್ದೀರಿ' ಎಂದು ಹೇಳಿದರು. ಆಕೆ ನನ್ನ ಮುಖವನ್ನು ಬಿಗಿಯಾಗಿ ಹಿಡಿದಿದ್ದಳು, ಆದ್ದರಿಂದ ನಾನು ಅವಳ ಕೈಯನ್ನು ಹಿಂಡಿದೆ. ನಂತರ ಆಕೆ ಮುಖದಿಂದ ಕೈ ತೆಗೆದಳು,” ಎಂದಿದ್ದಾರೆ. ಸಫಲ್ತಾ ಎಫ್‌ಐಆರ್ ದಾಖಲಿಸುವಲ್ಲಿ ಯಶಸ್ವಿಯಾದಳು, ಆದರೆ ಪ್ರಕರಣದಲ್ಲಿ ಇಲ್ಲಿಯವರೆಗೆ ಏನೂ ಆಗಿಲ್ಲ. ಘಟನೆಯ ನಂತರ, ಅಂಜು ಭಾರ್ಗವ ತಮ್ಮ ರಾಜೀನಾಮೆ ಪತ್ರವನ್ನು ಬಿಜೆಪಿಗೆ ಕಳುಹಿಸಿದ್ದಾರೆ. ಸಫಲ್ತಾ ಕಾರ್ತಿಕ್ ಮತ್ತು ಜೆನಾ ಅವರಿಗೆ ಇನ್ನೂ ನ್ಯಾಯ ಸಿಕ್ಕಿಲ್ಲ. ವಾಸ್ತವವಾಗಿ, ಹಿಂದುತ್ವ ಜಾಗೃತ ದಳಗಳು ಪ್ರಾರಂಭಿಸಿದ ಪ್ರಕರಣಗಳಿಂದಾಗಿ ಕ್ರಿಶ್ಚಿಯನ್ನರು ಹೆಚ್ಚಾಗಿ ಕಾನೂನಿನ ಹೊರೆಯನ್ನು ಹೊರುತ್ತಾರೆ ಎಂದು ʼಕ್ವಿಂಟ್ ʼತಂಡ ಕಂಡುಕೊಂಡಿದೆ. ಜಬಲ್‌ ಪುರದ ರಂಜಿಯಲ್ಲಿರುವ ಒಂದು ಉಪರಸ್ತೆಯಲ್ಲಿ ಪಾದ್ರಿ ಮನೋಜ್ ಪಿಳ್ಳೆ ಅವರ ಮನೆ ಇದೆ. ಪಾದ್ರಿ ಮನೋಜ್ 2025 ಅಕ್ಟೋಬರ್‌ನಿಂದ ನೇತಾಜಿ ಸುಭಾಷ್ ಚಂದ್ರ ಬೋಸ್ ಜೈಲಿನಲ್ಲಿದ್ದಾರೆ. ದಿ ಕ್ವಿಂಟ್ ಜೊತೆ ಅವರ ಪತ್ನಿ ಕಾದಂಬರಿ ಪಿಳ್ಳೆ ತಮ್ಮ ಪತಿಯ ಜೈಲು ಶಿಕ್ಷೆಯ ಬಗ್ಗೆ ಮಾತನಾಡಿದ್ದಾರೆ. ಪಾದ್ರಿ ಮನೋಜ್ ಈ ಹಿಂದೆ ಶಿವಸೇನೆಯೊಂದಿಗೆ ಸಂಬಂಧ ಹೊಂದಿದ್ದರು. ಆದರೆ ಬಹಳ ಹಿಂದೆಯೇ ಆ ಪಕ್ಷದೊಂದಿಗಿನ ಸಂಬಂಧವನ್ನು ಕಡಿದುಕೊಂಡಿದ್ದರು. ಕ್ರಿಶ್ಚಿಯನ್ ಧರ್ಮವನ್ನು ಸ್ವೀಕರಿಸಿದ ನಂತರ, ಅವರು ಸರಳ ಜೀವನವನ್ನು ನಡೆಸಿದರು. ಬದುಕು ಸಾಗಿಸಲು ಆಟೋರಿಕ್ಷಾ ಚಲಾಯಿಸಿದರು. ಆ ಆಟೋವನ್ನು ಯಾರೂ ಚಲಾಯಿಸುತ್ತಿಲ್ಲ, ಅದಕ್ಕೀಗ ಧೂಳು ಹಿಡಿದಿದೆ ಎಂದು ಪತ್ನಿ ಕಾದಂಬರಿ ಹೇಳಿದ್ದಾರೆ. ಇದೆಲ್ಲವೂ ಸ್ಥಳೀಯ ಹಿಂದುತ್ವ ವಕೀಲೆ ಪ್ರೀತಿ ಧಂಧಾರಿಯೊಂದಿಗಿನ ವಾಗ್ವಾದದಿಂದ ಆರಂಭವಾಯಿತು. ಮೇ 18, 2025 ರಂದು ಪ್ರೀತಿ ರಂಜಿಯಲ್ಲಿರುವ ಫುಲ್ ಗಾಸ್ಪೆಲ್ ಚರ್ಚ್‌ಗೆ ನುಗ್ಗಿ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡಿದ್ದಕ್ಕಾಗಿ ಅಲ್ಲಿದ್ದ ಜನರನ್ನು ನಿಂದಿಸುತ್ತಿದ್ದರು. ದಿ ಕ್ವಿಂಟ್‌ಗೆ ಲಭಿಸಿದ ವೀಡಿಯೋದಲ್ಲಿ ಪ್ರೀತಿ ಧಂಧಾರಿ, “ನೀವು ವಂಚಕರು. ಹಿಂದೂ ಅಥವಾ ಕ್ರಿಶ್ಚಿಯನ್ ಅಲ್ಲ, ನಾವು ನಿಮ್ಮನ್ನು ಏನೆಂದು ಕರೆಯಬೇಕು?” ಎಂದು ಕೂಗುತ್ತಿರುವುದು ಕಂಡುಬಂದಿದೆ. ಈ ಸಭೆಯಲ್ಲಿ, ಪಾದ್ರಿ ಮನೋಜ್ ಧಂಧಾರಿಯ ಮತ್ತು ಅವರ ತಂಡದೊಂದಿಗೆ ವಾಗ್ವಾದ ನಡೆಸಿದರು. ಒಂದು ತಿಂಗಳ ನಂತರ, ಹಿಂದೂಗಳನ್ನು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಿಸಲು ಪ್ರಯತ್ನಿಸಿದ್ದಕ್ಕಾಗಿ ಪಾದ್ರಿಯ ವಿರುದ್ಧ ಎಫ್‌ಐಆರ್ ದಾಖಲಿಸಲಾಯಿತು. ಆದರೆ ಅವರ ಪ್ರಕರಣದಲ್ಲಿ ದೂರು ನೀಡಿದವರು ಮತ್ತೊಬ್ಬ ಸ್ಥಳೀಯರಾದ ನೀತು ರೈಕ್ವಾರ್. ಆಕೆ ತಮ್ಮ ಅನಾರೋಗ್ಯವನ್ನು ಗುಣಪಡಿಸುವ ಭರವಸೆಯ ಮೇರೆಗೆ ತಮ್ಮನ್ನು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಿಸಲು ಆಮಿಷವೊಡ್ಡಲಾಗಿದೆ ಎಂದು ಆರೋಪಿಸಿದರು. ಪಾದ್ರಿಯಾಗಲಿ ಅಥವಾ ಕಾದಂಬರಿಯಾಗಲಿ ಈ ಹಿಂದೆ ನೀತು ಅವರನ್ನು ಭೇಟಿಯಾಗಿರಲಿಲ್ಲ ಅಥವಾ ಅವರ ಬಗ್ಗೆ ಕೇಳಿರಲಿಲ್ಲ. ಧಂಧಾರಿಯ ಆದೇಶದ ಮೇರೆಗೆ ರೈಕ್ವಾರ್ ದೂರು ದಾಖಲಿಸಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಆದರೆ ನಾವು ಹಿಂದುತ್ವ ಪರ ವಕೀಲರೊಂದಿಗೆ ಮಾತನಾಡಿದಾಗ, ದೂರು ದಾಖಲಿಸಿದ ನಂತರ ರೈಕ್ವಾರ್ ತಮ್ಮ ಬಳಿಗೆ ಬಂದಿದ್ದರು ಎಂದು ಅವರು ತಿಳಿಸಿದ್ದಾರೆ. ►ಆರಾಧಕರ ಮೇಲೆ ಕುರ್ಚಿಗಳನ್ನು ಎಸೆದು ಹಲ್ಲೆ ಜಬಲ್‌ ಪುರದ ಮಾಧೋಟಲ್ ಪ್ರದೇಶದಲ್ಲಿ, ಪಾದ್ರಿ ರಾಜೇಶ್ ಚೌಧರಿ ಅವರು ನಡೆಸುತ್ತಿದ್ದ ಪ್ರಾರ್ಥನಾ ಸಭೆಯಲ್ಲಿ ಬಲಪಂಥೀಯ ಗುಂಪೊಂದು ಭಕ್ತರ ಮೇಲೆ ಕುರ್ಚಿಗಳನ್ನು ಎಸೆದು ದೈಹಿಕವಾಗಿ ಹಲ್ಲೆ ನಡೆಸಿದ ದಿನವನ್ನು ಅವರು ಭಯದಿಂದ ನೆನಪಿಸಿಕೊಂಡರು. ದಿ ಕ್ವಿಂಟ್ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದು, ಇದು ಗುಂಪಿನ ದಾಳಿಯನ್ನು ತೋರಿಸುತ್ತದೆ. ಅವರು (ಗುಂಪು) ನಾಳೆ ಮತ್ತೆ ಬರುತ್ತಾರೆ ಎಂಬ ಭಯದಲ್ಲಿ ನಾವು ನಿರಂತರವಾಗಿ ಬದುಕುತ್ತಿದ್ದೇವೆ. ಬೆದರಿಕೆ ಅಲ್ಲಿಗೆ ಮುಗಿಯಲಿಲ್ಲ. ಕೆಲವು ದಿನಗಳ ನಂತರ, ಬಲಪಂಥೀಯ ಗುಂಪಿನ ಕೆಲವು ಸದಸ್ಯರು ಮಧ್ಯರಾತ್ರಿಯಲ್ಲಿ ಚರ್ಚ್‌ನ ಗೇಟ್‌ನ ಬೀಗವನ್ನು ಮುರಿದರು, ಎಂದು ಪಾದ್ರಿ ರಾಜೇಶ್ ಹೇಳಿದ್ದಾರೆ. “ಡಿಸೆಂಬರ್ 22 ರಂದು ಗಟ್ಟಿಮುಟ್ಟಾದ ಐದು ಜನರು ನನ್ನ ಮನೆಗೆ ಬಂದರು. ನನ್ನ ಹೆಂಡತಿಯನ್ನು ಹೊರತುಪಡಿಸಿ ಯಾರೂ ಅಲ್ಲಿ ಇರಲಿಲ್ಲ. ಆ ಗುಂಪು ನನ್ನ ಬಗ್ಗೆ ಮತ್ತು ನನ್ನ ಮಕ್ಕಳ ಬಗ್ಗೆ ಕೇಳಿದರು. ‘ನಿಮ್ಮ ಕುಟುಂಬವನ್ನು ಕೊಲ್ಲುತ್ತೇವೆ, ಅವರನ್ನು ಹೊರಗೆ ಕರೆತನ್ನಿ’ ಎಂದು ಅವಳನ್ನು ಬೆದರಿಸಿದರು. ನನ್ನ ಹೆಂಡತಿ ‘ಮನೆಯಲ್ಲಿ ಯಾರೂ ಇಲ್ಲ, ನಾನು ಒಬ್ಬಳೇ ಇದ್ದೇನೆ. ನೀವು ನಿಜವಾಗಿಯೂ ಯಾರನ್ನಾದರೂ ಕೊಲ್ಲಲು ಬಯಸಿದರೆ ನನ್ನನ್ನು ಕೊಲ್ಲಿರಿ, ನನ್ನ ಗಂಡ ಮತ್ತು ಮಕ್ಕಳು ಮನೆಯಲ್ಲಿಲ್ಲ’ ಎಂದು ಅವರಿಗೆ ಹೇಳಿದಳು.” ►ಸುಳ್ಳು ದೂರುದಾರರು ಮಧ್ಯಪ್ರದೇಶದಲ್ಲಿ ಕ್ರಿಶ್ಚಿಯನ್ ಸಮುದಾಯ ಎದುರಿಸುತ್ತಿರುವ ಕಿರುಕುಳವು ವೈಯಕ್ತಿಕ ಮಾತ್ರವಲ್ಲ, ಸಾಮೂಹಿಕವೂ ಆಗಿದೆ. ಜಬಲ್‌ ಪುರದಿಂದ ಸುಮಾರು 300 ಕಿ.ಮೀ ದೂರದಲ್ಲಿರುವ ಭೋಪಾಲ್‌ ನಲ್ಲಿ ಕ್ವಿಂಟ್ ತಂಡ ದಲಿತ ಕ್ರಿಶ್ಚಿಯನ್ ಪಾದ್ರಿ ಬಾಳಾಸಾಹೇಬ್ ವಾವ್ಲೆ ಅವರನ್ನು ಭೇಟಿಯಾಗಿದೆ. ಇಡೀ ಸಮುದಾಯವಾಗಿ ಕ್ರಿಶ್ಚಿಯನ್ನರು ಹಿಂದುತ್ವ ಗುಂಪುಗಳ ಕೋಪವನ್ನು ಎದುರಿಸುತ್ತಿದ್ದರೆ, ದಲಿತ ಕ್ರಿಶ್ಚಿಯನ್ನರ ಮೇಲೆ ಬಲವಂತದ ಮತಾಂತರದ ಆರೋಪ ಹೆಚ್ಚಾಗಿ ಕೇಳಿಬರುತ್ತಿದೆ. ಇವರು ತಮ್ಮ ಮನೆಗಳಲ್ಲಿ ಅಥವಾ ಸ್ಥಳೀಯ ಚರ್ಚ್‌ಗಳಲ್ಲಿ ಸಣ್ಣ ಸಭೆಗಳನ್ನು ಆಯೋಜಿಸುವ ಪಾದ್ರಿಗಳು, ತಮ್ಮ ಸ್ವಂತ ಜೇಬಿನಿಂದ ಖರ್ಚುಗಳನ್ನು ಭರಿಸುತ್ತಾರೆ. ದಲಿತ ಕ್ರಿಶ್ಚಿಯನ್ನರು ಸುಲಭ ಗುರಿಗಳು ಅಂತಾರೆ ಯುನೈಟೆಡ್ ಕ್ರಿಶ್ಚಿಯನ್ ಫೋರಮ್ (UCF) ಅಧ್ಯಕ್ಷ ಮೈಕೆಲ್ ವಿಲಿಯಮ್ಸ್. ಅನಿಯಂತ್ರಿತ, ಬ್ರೈನ್ ವಾಶ್ ಮಾಡಲ್ಪಟ್ಟ ಹಿಂದೂ ಯುವಕರ ಗುಂಪುಗಳು ಅತೀ ಬಡವರ ಮೇಲೆ ದಾಳಿ ಮಾಡುತ್ತವೆ. ಯಾಕೆಂದರೆ ಯಾರೂ ಹೇಳಲು ಕೇಳಲು ಇಲ್ಲ ಎನ್ನುವುದು ಅವರಿಗೆ ಗೊತ್ತಿದೆ. ಈ ಬಗ್ಗೆ ಯಾರೂ ಪೊಲೀಸರಿಗೆ ದೂರು ನೀಡುವುದಿಲ್ಲ ಎಂದು ಅವರು ಹೇಳಿದ್ದಾರೆ. ಭೋಪಾಲ್‌ ನಲ್ಲಿ ಮತಾಂತರ ವಿರೋಧಿ ಕಾನೂನಿನಡಿಯಲ್ಲಿ ದಾಖಲಾಗಿದ್ದ ಮೊದಲ ಪ್ರಕರಣದಲ್ಲಿ 75 ದಿನ ಜೈಲಿನಲ್ಲಿ ಕಳೆದವರಲ್ಲಿ ಪಾದ್ರಿ ಬಾಳಾಸಾಹೇಬ್ ಕೂಡ ಒಬ್ಬರು. ಅವರ ಪತ್ನಿ ಕೂಡ ಅವರೊಂದಿಗೆ 22 ದಿನಗಳನ್ನು ಜೈಲಿನಲ್ಲಿ ಕಳೆದರು. ಪಾದ್ರಿ ಬಾಳಾಸಾಹೇಬ್ ಪ್ರಕರಣವು ‘ನಕಲಿ’ ದೂರುದಾರ ದೂರು ಹೇಗೆ ಕಾರ್ಯ ನಿರ್ವಹಿಸುತ್ತದೆ ಎಂಬುದಕ್ಕೆ ಉದಾಹರಣೆ. ಒಬ್ಬ ಅಪರಿಚಿತ ವ್ಯಕ್ತಿ ಪ್ರಾರ್ಥನಾ ಸಭೆಗೆ ಪ್ರವೇಶಿಸಿ, ತಾನು ಆರಾಧಕ ಎಂಬಂತೆ ವರ್ತಿಸಿ ನಂತರ ತನ್ನ ಮೊಬೈಲ್ ಫೋನ್‌ನಲ್ಲಿ ಪ್ರಾರ್ಥನೆಯನ್ನು ರೆಕಾರ್ಡ್ ಮಾಡಲು ಪ್ರಾರಂಭಿಸಿದನು. ಸ್ವಲ್ಪ ಸಮಯದ ನಂತರ, ಒಂದು ಗುಂಪು ಅವನೊಂದಿಗೆ ಸೇರಿಕೊಂಡಿತು. “ದೂರು ನೀಡಿದವರು ಇನ್ನೂ ಭೋಪಾಲ್‌ ನಲ್ಲಿದ್ದಾರೆ, ಎಲ್ಲಾ ಆರೋಪಿಗಳು ಕೂಡಾ. ಚಂದ್ರಶೇಖರ್ ತಿವಾರಿ ಎಂಬ ಒಬ್ಬ ವ್ಯಕ್ತಿ ಇದ್ದರು. ಈ ಪ್ರಕರಣದಿಂದಾಗಿ ಅವರು ಹೆಚ್ಚು ಗಮನ ಸೆಳೆದರು. ನಂತರ ಅವರು ಸ್ಥಳೀಯ ಚುನಾವಣೆಯಲ್ಲಿ ಸ್ಪರ್ಧಿಸಿದರು. ಈಗ ಅವರು ಹಿಂದೂ ಸಮಿತಿಯ ಅಧ್ಯಕ್ಷರಾಗಿದ್ದಾರೆ. ಅವರು ನನ್ನ ಪ್ರಕರಣದಿಂದ ಪ್ರಯೋಜನ ಪಡೆದರು,” ಅಂತಾರೆ ಬಾಳಾಸಾಹೇಬ್ ಅವರ ವಕೀಲ ವಿನಯ್ ಡೇವಿಸ್ ಜೇಮ್ಸ್. 2023 ಏಪ್ರಿಲ್‌ ನಲ್ಲಿ ಜೇಮ್ಸ್, ಬಾಳಾಸಾಹೇಬ್ ಅವರನ್ನು ಖುಲಾಸೆಗೊಳಿಸುವಲ್ಲಿ ಯಶಸ್ವಿಯಾದರು. ದಿ ಕ್ವಿಂಟ್ ತಿವಾರಿ ಅವರನ್ನು ಸಂಪರ್ಕಿಸಿತು. “ನಾನು 1992ರಲ್ಲಿ ಅಯೋಧ್ಯಾ ಚಳವಳಿಯ ಸಮಯದಲ್ಲಿ ಕರಸೇವಕನಾಗಿದ್ದಾಗಿನಿಂದ ಕೆಲಸ ಮಾಡುತ್ತಿದ್ದೇನೆ. ಬಾಳಾ (ಪಾದ್ರಿ ಬಾಳಾಸಾಹೇಬ್) ಗಿಂತ ಮೊದಲೇ ನಾನು ಅನೇಕ ‘ಲವ್ ಜಿಹಾದ್’ ಮತ್ತು ಮತಾಂತರ ಪ್ರಕರಣಗಳನ್ನು ಹಿಡಿದಿದ್ದೇನೆ,” ಎಂದು ಹೇಳಿದರು. ದೂರುದಾರ ಆಕಾಶ್ ಪ್ರಜಾಪತಿ ಅವರನ್ನು ಪ್ರಶ್ನಿಸಿದಾಗ, ಬಜರಂಗದಳದಿಂದ ಮಾಹಿತಿಯನ್ನು ಪಡೆದು ಅವರ ಆಜ್ಞೆಯ ಮೇರೆಗೆ ದೂರು ದಾಖಲಿಸಿದ್ದಾಗಿ ಅವರು ಒಪ್ಪಿಕೊಂಡಿದ್ದಾರೆ ಎಂದು ಡೇವಿಸ್ ದಿ ಕ್ವಿಂಟ್‌ ಗೆ ತಿಳಿಸಿದರು. ಮತಾಂತರ ವಿರೋಧಿ ಕಾನೂನಿನ ಸೆಕ್ಷನ್ 4 (ಕುಟುಂಬ ಸದಸ್ಯರು, ಪೋಷಕರು ಮಾತ್ರ ದೂರು ದಾಖಲಿಸಬಹುದು ಎಂದು ಹೇಳುವುದು) ಹೊರತುಪಡಿಸಿ, ಕಾನೂನಿನ ಸೆಕ್ಷನ್ 3/5 ಅನ್ನು ಆಗಾಗ್ಗೆ ಉಲ್ಲಂಘಿಸಲಾಗುತ್ತಿದೆ ಎಂದು ವಕೀಲರು ತಿಳಿಸಿದ್ದಾರೆ. ಕ್ರಿಶ್ಚಿಯನ್ನರ ವಿರುದ್ಧ ಹಿಂದುತ್ವ ‘ಕಾರ್ಯಕರ್ತರ’ ದ್ವೇಷ ಅಭಿಯಾನದ ಹಿಂದಿನ ಮನಸ್ಥಿತಿಯನ್ನು ಇನ್ನಷ್ಟು ಅರ್ಥಮಾಡಿಕೊಳ್ಳಲು ಕ್ವಿಂಟ್ ತಂಡ ಜಬಲ್‌ ಪುರದಲ್ಲಿ ಬಜರಂಗದಳ ಸದಸ್ಯರಾದ ಸಂಜಯ್ ತಿವಾರಿ (ಗೋರಕ್ಷಾ ದಳ–ಬಜರಂಗದಳ) ಮತ್ತು ಅಜಯ್ ಚೌರಾಸಿಯಾ (ಬಜರಂಗದಳ, ವಕ್ತಾರ) ಅವರನ್ನು ಭೇಟಿಯಾಗಿದೆ. ಅವರಿಗೆ ಎರಡು ವಿಷಯಗಳಲ್ಲಿ ಅಚಲ ನಂಬಿಕೆ ಇದೆ: a) ಕ್ರಿಶ್ಚಿಯನ್ನರು ಬಡವರನ್ನು ಗುರಿಯಾಗಿಸಿಕೊಂಡು ಹಣ, ಉದ್ಯೋಗ, ಭೂಮಿ ಮತ್ತು ವಿವಾಹದ ನಿರೀಕ್ಷೆಯೊಂದಿಗೆ ಅವರ ಬ್ರೈನ್ ವಾಶ್ ಮಾಡುತ್ತಾರೆ ಮತ್ತು b) ಅವರು ತಮ್ಮ ‘ಹಿಂದುತ್ವ’ ಸಿದ್ಧಾಂತದ ಪರವಾಗಿ ನಿಲ್ಲುತ್ತಾರೆ. ನೀವು ಕಾನೂನಿಗೆ ಹೆದರುತ್ತೀರಾ ಎಂದು ಕೇಳಿದಾಗ, ಚೌರಾಸಿಯಾ “ನಮಗೆ ಭಯ ಇದೆ. ಆದರೆ ನಾವು ಅದನ್ನು ಸಮಾಜಕ್ಕಾಗಿ ಮಾಡುತ್ತಿದ್ದೇವೆ. ನಮ್ಮ ವಿರುದ್ಧ ಪ್ರಕರಣಗಳಿವೆ. ಆದರೆ ನಂತರ ಪೊಲೀಸರು ತನಿಖೆ ನಡೆಸಿ ಸತ್ಯವನ್ನು ಕಂಡುಕೊಳ್ಳುತ್ತಾರೆ. ನಮ್ಮ ಕಾರ್ಯಕರ್ತರನ್ನು ಬಿಡುಗಡೆ ಮಾಡಲಾಗುತ್ತದೆ,” ಎಂದಿದ್ದಾರೆ. ಈ ಬಗ್ಗೆ ಸಂಜಯ್ ತಿವಾರಿ, “ನಾವು ಹಿಂದುತ್ವ, ಹಸುಗಳು ಮತ್ತು ನಮ್ಮ ಮಹಿಳೆಯರಿಗಾಗಿ ಕೆಲಸ ಮಾಡುತ್ತಿದ್ದೇವೆ. ಆಡಳಿತವು ನಮ್ಮನ್ನು ಬೆಂಬಲಿಸುತ್ತದೆ. ಅವರು ‘ಲವ್ ಜಿಹಾದ್’ ಅಥವಾ ಬಲವಂತದ ಮತಾಂತರದ ಬಗ್ಗೆ ಗಂಭೀರವಾಗಿರುತ್ತಾರೆ,” ಎಂದಿದ್ದಾರೆ. ಇಂತಹ ಗುಂಪುಗಳ ಕೃತ್ಯಗಳಿಂದಾಗಿ, ಪಾದ್ರಿ ಶಿವ ಕುಮಾರ್ ಜಾರ್ಬಡೆ ಮತ್ತು ಪಾದ್ರಿ ಹರಿ ಓಂ ಅವರಂತಹ ಹಲವಾರು ಪಾದ್ರಿಗಳು ನೈಜ-ಸಮಯದ ಪರಿಣಾಮಗಳನ್ನು ಎದುರಿಸಿದ್ದಾರೆ. ಮಧ್ಯಪ್ರದೇಶದಲ್ಲಿ ಬದಲಾಗಿರುವುದೇನೆಂದರೆ, ಈಗ ಪಾದ್ರಿಗಳ ವಿರುದ್ಧ ಮಾತ್ರವಲ್ಲದೆ ಯಾವುದೇ ಸ್ಥಳೀಯ ಕ್ರಿಶ್ಚಿಯನ್ನರ ವಿರುದ್ಧವೂ ‘ಬಲವಂತದ ಮತಾಂತರ’ದ ಬೆದರಿಕೆಯನ್ನು ಬಳಸುವುದು ಸುಲಭವಾಗಿದೆ. ಪತ್ರಕರ್ತ ಮತ್ತು ಸರ್ವ ಇಸಾಯಿ ಮಹಾಸಭಾ (ಆಲ್ ಕ್ರಿಶ್ಚಿಯನ್ ಫೆಡರೇಶನ್) ಜಿಲ್ಲಾ ಅಧ್ಯಕ್ಷ ಲೂಯಿಸ್ ಮಾರಿಸ್ ಅವರಿಗೆ ಅಪರಿಚಿತರಿಂದಲ್ಲ, ಬದಲಾಗಿ ಪತ್ರಕರ್ತರಿಂದಲೇ ಬೆದರಿಕೆ ಬಂದಿದೆ. “ನನ್ನ ಹೆಸರು ಲೂಯಿಸ್ ಆಗಿರುವುದರಿಂದ, ನಾನು ಕ್ರಿಶ್ಚಿಯನ್ ಆದ್ದರಿಂದ ನಾನೇ ಸಾಫ್ಟ್ ಟಾರ್ಗೆಟ್. ನಾನು ಕೂಡ ಒಬ್ಬ ಪತ್ರಕರ್ತ. ಇತ್ತೀಚೆಗೆ ನಾನು ಒಂದು ಕಚೇರಿಯಲ್ಲಿದ್ದೆ. ಒಬ್ಬ ವ್ಯಕ್ತಿ ಬಂದು, ‘ನಾನು ನಿಮ್ಮನ್ನು ಮತಾಂತರ ಪ್ರಕರಣದಲ್ಲಿ ಸಿಲುಕಿಸುತ್ತೇನೆ. ನಂತರ ನಿಮಗೆ ಅರ್ಥವಾಗುತ್ತದೆ’ ಎಂದು ಹೇಳಿದನು. ನನಗೆ ಅವನು ಯಾರು ಎಂಬುದು ಗೊತ್ತು. ನನ್ನ ಸ್ನೇಹಿತ ಅವನನ್ನು ‘ಇದನ್ನೆಲ್ಲ ನಿನಗೆ ಯಾರು ಕಲಿಸುತ್ತಿದ್ದಾರೆ?’ ಎಂದು ಕೇಳಿದನು. ಅವನು ನನ್ನೊಂದಿಗೆ ಅನುಚಿತವಾಗಿ ವರ್ತಿಸಿ ‘ನಿನಗೆ ಗೊತ್ತಿಲ್ಲ, ಈ ಜನರು ಬಹಳಷ್ಟು ಮತಾಂತರಗಳನ್ನು ಮಾಡುತ್ತಾರೆ’ ಎಂದು ಆರೋಪ ಮಾಡಿದನು,” ಅಂತಾರೆ ಲೂಯಿಸ್. ಭಯಾನಕ ಘಟನೆಗಳನ್ನು ಎದುರಿಸಿದ್ದರೂ, ಈ ವರ್ಷ ಕ್ರಿಸ್‌ಮಸ್ ಬಂದಾಗ ಯಾವುದೇ ಜನರ ಗುಂಪಿಗೆ ಹೆದರುವುದಿಲ್ಲ ಎನ್ನುತ್ತಾರೆ ಸಫಲ್ತಾ. ನೀವು ಮತ್ತೆ ಕ್ರಿಸ್‌ಮಸ್ ಊಟಕ್ಕೆ ಹಾಜರಾಗುತ್ತೀರಾ ಎಂದು ಕೇಳಿದಾಗ, “ಅವರು (ಗುಂಪು) ಮಾಡಿದ್ದಾಯ್ತು. ಪಾದ್ರಿ ಜೆನಾ ಮತ್ತೆ ಅಂತಹ ಕಾರ್ಯಕ್ರಮವನ್ನು ಆಯೋಜಿಸಿದರೆ, ನಾನು ಮತ್ತೆ ಹಾಜರಾಗುತ್ತೇನೆ,” ಎಂದು ಹೇಳಿದ್ದಾರೆ.

ವಾರ್ತಾ ಭಾರತಿ 22 Apr 2026 7:22 pm

Kalaburagi | ಮಹಿಳಾ ಮೀಸಲಾತಿ ಜಾರಿಗೆ ಒತ್ತಾಯಿಸಿ ಕಾಂಗ್ರೆಸ್ ಮಹಿಳಾ ಘಟಕದಿಂದ ಪ್ರತಿಭಟನೆ

ಕಲಬುರಗಿ : ಕೇಂದ್ರದ ಬಿಜೆಪಿ ಸರ್ಕಾರ ಮಹಿಳಾ ಮೀಸಲಾತಿ ಕಾಯ್ದೆ ಜಾರಿಗೆ ರಾಜಕೀಯ ಕುತಂತ್ರ ಮಾಡುತ್ತಿದೆ ಎಂದು ಆರೋಪಿಸಿ ಜಿಲ್ಲಾ ಕಾಂಗ್ರೆಸ್ ಮಹಿಳಾ ಘಟಕದ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಬುಧವಾರ ಪ್ರತಿಭಟನೆ ನಡೆಸಲಾಯಿತು. ಪ್ರತಿಭಟನಾಕಾರರು ಬಿಜೆಪಿ ನಾಯಕರಾದ ಬ್ರಿಜ್ ಭೂಷಣ್ ಸಿಂಗ್, ಪ್ರಜ್ವಲ್ ರೇವಣ್ಣ, ಕುಲದೀಪ್ ಸಿಂಗ್ ಸೆಂಗಾರ್ ಸೇರಿದಂತೆ ಹಲವು ನಾಯಕರ ಭಾವಚಿತ್ರಗಳಿಗೆ ಕಪ್ಪು ಮಸಿ ಬಳಿದು ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು. ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರ ಪತ್ನಿಯ ಭಾವಚಿತ್ರವನ್ನೂ ಪ್ರದರ್ಶಿಸಿ ವಿರೋಧ ವ್ಯಕ್ತಪಡಿಸಿದರು. ಕೇಂದ್ರ ಸರ್ಕಾರ ತಕ್ಷಣವೇ ವಿಶೇಷ ಅಧಿವೇಶನ ಕರೆದು ಯಾವುದೇ ಷರತ್ತುಗಳಿಲ್ಲದೆ ಮಹಿಳಾ ಮೀಸಲಾತಿಯನ್ನು ಈ ಸಾಲಿನಿಂದಲೇ ಜಾರಿಗೆ ತರಬೇಕು. ಮಹಿಳೆಯರ ಹಿತಾಸಕ್ತಿಯೊಂದಿಗೆ ರಾಜಕೀಯ ಮಾಡಬಾರದು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು. 2023ರಲ್ಲೇ ಮಹಿಳಾ ಮೀಸಲಾತಿ ಮಸೂದೆಗೆ ಸರ್ವಪಕ್ಷಗಳ ಒಪ್ಪಿಗೆ ಸಿಕ್ಕಿದ್ದರೂ, 2026ರ ಜನಗಣತಿ ಹಾಗೂ ಕ್ಷೇತ್ರ ಪುನರ್ವಿಂಗಡಣೆಯ ಷರತ್ತುಗಳನ್ನು ವಿಧಿಸಿರುವುದು ಮಹಿಳೆಯರ ಮೇಲಿನ ಅನ್ಯಾಯ ಎಂದು ಆರೋಪಿಸಿದರು. ಈ ವೇಳೆ ಮಾತನಾಡಿದ ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ರೇಣುಕಾ ಸಿಂಗೆ, “ಕಾಯ್ದೆ ಮಾಡಿದ ಬಳಿಕವೂ 2034ರವರೆಗೆ ಜಾರಿಗೆ ತಡಮಾಡುವುದು ಮಹಿಳೆಯರನ್ನು ವಂಚಿಸುವ ಪ್ರಯತ್ನ. ಈಗಿರುವ 543 ಲೋಕಸಭಾ ಸ್ಥಾನಗಳಲ್ಲೇ 33% ಮೀಸಲಾತಿ ನೀಡಲು ಸರ್ಕಾರಕ್ಕೆ ಏನು ಅಡ್ಡಿ?” ಎಂದು ಪ್ರಶ್ನಿಸಿದರು. “ಬಿಜೆಪಿ ನಿಜವಾಗಿಯೂ ಮಹಿಳಾ ಸಬಲೀಕರಣದ ಬಗ್ಗೆ ಕಾಳಜಿ ಹೊಂದಿದ್ದರೆ, ತನ್ನ ಟಿಕೆಟ್ ಹಂಚಿಕೆಯಲ್ಲಿ 33% ಮಹಿಳೆಯರಿಗೆ ಅವಕಾಶ ನೀಡಬೇಕು” ಎಂದು ಹೇಳಿದರು. ಪ್ರತಿಭಟನಾಕಾರರು, ದಕ್ಷಿಣ ಭಾರತದ ರಾಜ್ಯಗಳಲ್ಲಿ ಮಹಿಳಾ ಅಭಿವೃದ್ಧಿ ಸೂಚ್ಯಂಕ ಉತ್ತಮವಾಗಿದ್ದರೂ, ಬಿಜೆಪಿ ಕೇವಲ ಭಾಷಣ ಮಟ್ಟಕ್ಕೆ ಸೀಮಿತವಾಗಿದೆ ಎಂದು ಟೀಕಿಸಿದರು. ಪ್ರತಿಭಟನೆಯಲ್ಲಿ ವಾಣಿಶ್ರೀ ಸಗರಕರ, ಸಂಗೀತಾ ಪಾಟೀಲ್, ಗೀತಾ ಮುದಗಲ್, ಮಂಜುಳಾ ಪಾಟೀಲ್, ಲಕ್ಷ್ಮಿ ಸರಸಂಬಕರ್, ಸೈರಾ ಬಾನು, ಜಯಶ್ರೀ ಚಿಂತಪಳ್ಳಿ, ಶ್ವೇತಾ ಗಾಜರೆ, ಸೇರಿದಂತೆ ಹಲವರು ಭಾಗವಹಿಸಿದ್ದರು. ಮಣಿಪುರ ಹಿಂಸಾಚಾರ, ಮಹಿಳಾ ಕುಸ್ತಿಪಟುಗಳ ಮೇಲೆ ಲೈಂಗಿಕ ಕಿರುಕುಳ ಮತ್ತು ಬಿಲ್ಕಿಸ್ ಬಾನು ಪ್ರಕರಣದ ಆರೋಪಿಗಳಿಗೆ ಗೌರವ ಸಲ್ಲಿಸಿದ ಘಟನೆಗಳಲ್ಲಿ ಪ್ರಧಾನಿ ಮೋದಿಯವರು ಮೌನ ವಹಿಸಿರುವುದು ಅವರ ʼನಾರಿ ರಕ್ಷಕʼ ಎಂಬ ಬಿರುದಿಗೆ ವಿರುದ್ಧವಾಗಿದೆ. -ರೇಣುಕಾ ಸಿಂಗೆ, ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ

ವಾರ್ತಾ ಭಾರತಿ 22 Apr 2026 7:18 pm

ಮುಸ್ಲಿಮ್ ನಾಯಕರ ವಿರುದ್ಧದ ಕ್ರಮ ಹಿಂಪಡೆಯದಿದ್ದರೆ ಹೋರಾಟ: ಉಲಮಾ ಮಂಡಳಿಯಿಂದ ಕಾಂಗ್ರೆಸ್‍ಗೆ ಎಚ್ಚರಿಕೆ

ಬೆಂಗಳೂರು : ಮುಸ್ಲಿಮ್ ಸಮುದಾಯದ ಮುಖಂಡರನ್ನು ಕಾಂಗ್ರೆಸ್ ಪಕ್ಷ ಗುರಿಯಾಗಿಸಿಕೊಂಡು ಅವರ ವಿರುದ್ಧ ಕ್ರಮ ಕೈಗೊಳ್ಳುವುದು ಸರಿಯಲ್ಲ, ವಿಧಾನ ಪರಿಷತ್ ಸದಸ್ಯರಾದ ಅಬ್ದುಲ್ ಜಬ್ಬಾರ್ ಮತ್ತು ನಸೀರ್ ಅಹ್ಮದ್ ವಿರುದ್ಧ ಕೈಗೊಂಡಿರುವ ಕ್ರಮವನ್ನು ಹಿಂಪಡೆಯದಿದ್ದರೆ ಇಡೀ ಮುಸ್ಲಿಮ್ ಸಮುದಾಯ ದೊಡ್ಡ ಮಟ್ಟದ ಹೋರಾಟ ನಡೆಸಲಿದೆ ಎಂದು ರಾಜ್ಯ ಉಲಮಾ ಮಂಡಳಿ ಎಚ್ಚರಿಕೆ ನೀಡಿದೆ. ಬುಧವಾರ ನಗರದ ಪ್ರೆಸ್‍ಕ್ಲಬ್‍ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಉಲಮಾ ಮಂಡಳಿ ಸಂಯೋಜಕ ಅಬ್ದುಲ್ ರಝಾಕ್, ಮುಸ್ಲಿಮ್ ನಾಯಕರ ವಿರುದ್ಧ ಕೈಗೊಂಡ ಕ್ರಮಗಳು ಒಂದು ದೊಡ್ಡ ಷಡ್ಯಂತ್ರದ ಮಾದರಿಯನ್ನು ತೋರಿಸುತ್ತದೆ ಎಂದು ತಿಳಿಸಿದರು. ರಾಜ್ಯದ ಅನೇಕ ಚುನಾವಣೆಗಳ ಫಲಿತಾಂಶದಲ್ಲಿ ಮುಸ್ಲಿಮ್ ಸಮುದಾಯದ ಪಾತ್ರ ಪ್ರಮುಖವಾಗಿದೆ. ಕಾಂಗ್ರೆಸ್ ಪಕ್ಷದಿಂದ ವಜಾಗೊಳಿಸಿರುವ ನಾಯಕರನ್ನು ತಕ್ಷಣ ಮರಳಿ ಪಕ್ಷಕ್ಕೆ ಕರೆಸಿಕೊಳ್ಳಬೇಕು. ಅಲ್ಲದೆ, ಈ ಹಿಂದೆ ಕೊಟ್ಟ ಭರವಸೆಗಳ ಬಗ್ಗೆ ಹೊಣೆಗಾರಿಕೆ ತೆಗೆದುಕೊಳ್ಳಬೇಕು. ಸುಮಾರು 3 ವರ್ಷಗಳಾದರೂ ಹಿಜಾಬ್ ಸಮಸ್ಯೆ ಇನ್ನೂ ಪರಿಹಾರವಾಗಿಲ್ಲ, ಶೇ.4ರಷ್ಟು ಮೀಸಲಾತಿ ವಿಚಾರ ಇನ್ನೂ ಬಾಕಿ ಇದೆ. ಗೋಹತ್ಯೆ ಮತ್ತು ಮತಾಂತರ ಕುರಿತ ಕಾನೂನುಗಳನ್ನು ತಕ್ಷಣ ಪರಿಶೀಲಿಸಿ ಸರಿಪಡಿಸಬೇಕು ಎಂದು ಅವರು ಒತ್ತಾಯಿಸಿದರು. ಸುದ್ದಿಗೋಷ್ಠಿಯಲ್ಲಿ ಮೌಲಾನಾ ಶಾಕೀರ್ ಉಲ್ಲಾ, ಮೌಲಾನಾ ಸಲಾಹುದ್ದೀನ್ ಸೇರಿದಂತೆ ಇನ್ನಿತರರು ಉಪಸ್ಥಿತಿದ್ದರು.

ವಾರ್ತಾ ಭಾರತಿ 22 Apr 2026 7:17 pm

Kalaburagi | ವಿವಿಧ ತರಬೇತಿ ಕಾರ್ಯಕ್ರಮಕ್ಕೆ ಅರ್ಜಿ ಆಹ್ವಾನ

ಕಲಬುರಗಿ: ಕಲಬುರಗಿ ಎಸ್.ಬಿ.ಐ. ಗ್ರಾಮೀಣ ಸ್ವಯಂ ಉದ್ಯೋಗ ತರಬೇತಿ ಸಂಸ್ಥೆಯಲ್ಲಿ ಜಿಲ್ಲೆಯ ಗ್ರಾಮೀಣ ಪ್ರದೇಶದ ಅಭ್ಯರ್ಥಿಗಳಿಗೆ ಉಚಿತವಾಗಿ ಕೆಳಕಂಡ ದಿನಾಂಕಗಳಂದು ವಿವಿಧ ತರಬೇತಿ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಇದಕ್ಕಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಸಂಸ್ಥೆಯ ಎಸ್.ಬಿ.ಐ. ಆರ್‍ಸೆಟ್ ನಿರ್ದೇಶಕರು ತಿಳಿಸಿದ್ದಾರೆ. ಎ.27 ರಿಂದ ಮೇ 10 ರವರೆಗೆ ಕೃಷಿ ಉದ್ಯಮಿ (ಕುರಿ ಮತ್ತು ಆಡು ಸಾಕಾಣಿಕೆ, ಹೈನುಗಾರಿಕೆ ಮತ್ತು ಎರೆಹುಳು ಗೊಬ್ಬರ ತಯಾರಿಕೆ) ತರಬೇತಿ ನೀಡಲಾಗುತ್ತಿದ್ದು, ಅರ್ಜಿ ಸಲ್ಲಿಕೆಗೆ ಎ.6 ರಂದು ಕೊನೆಯ ದಿನವಾಗಿದೆ. ಮೇ 15 ರಿಂದ ಜೂ.14 ರವರೆಗೆ ಹೊಲಿಗೆ ತರಬೇತಿ (ಮಹಿಳೆಯರಿಗಾಗಿ) ನೀಡಲಾಗುತ್ತಿದ್ದು, ಅರ್ಜಿ ಸಲ್ಲಿಕೆಗೆ ಮೇ 14 ರಂದು ಕೊನೆಯ ದಿನವಾಗಿದೆ. ಮೇ 7 ರಿಂದ ಜೂ.10 ರವರೆಗೆ ಬ್ಯೂಟಿ ಪಾರ್ಲರ್ ಮತ್ತು ಮ್ಯಾನೇಜ್‍ಮೆಂಟ್ ತರಬೇತಿ ನೀಡಲಾಗುತ್ತಿದ್ದು, ಅರ್ಜಿ ಸಲ್ಲಿಕೆಗೆ ಮೇ 6 ರಂದು ಕೊನೆಯ ದಿನವಾಗಿದೆ. ಮೇ 10 ರಿಂದ ಜೂ.10 ರವರೆಗೆ ಎಲೆಕ್ಟ್ರಿಕಲ್ ಮೋಟಾರ ರಿವೈಂಡಿಂಗ್ ಮತ್ತು ರಿಪೇರ್ ಸರ್ವಿಸ್ ತರಬೇತಿ ನೀಡಲಾಗುತ್ತಿದ್ದು, ಅರ್ಜಿ ಸಲ್ಲಿಕೆಗೆ ಮೇ 9 ರಂದು ಕೊನೆಯ ದಿನವಾಗಿದೆ. ಈ ತರಬೇತಿ ಸಂದರ್ಭದಲ್ಲಿ ಉಚಿತ ಊಟ ಹಾಗೂ ವಸತಿ ಸೌಲಭ್ಯ ನೀಡಲಾಗುತ್ತದೆ. ವಯೋಮಿತಿ 18 ರಿಂದ 45 ವರ್ಷದೊಳಗಿನ ಬಿ.ಪಿ.ಎಲ್., ಅಂತ್ಯೋದಯ ರೇಷನ್, ಎಮ್‍ಜಿಎನ್‍ಆರ್‌ಇಜಿಎ ಕಾರ್ಡ್ ಹೊಂದಿದ ಕುಟುಂಬದ ನಿರುದ್ಯೋಗಿ ಅಭ್ಯರ್ಥಿಗಳು ಸಂಸ್ಥೆಯಿಂದ ನಿಗದಿತ ಅರ್ಜಿ ನಮೂನೆಯನ್ನು ಪಡೆದು ಭರ್ತಿ ಮಾಡಿ ಅವಶ್ಯಕ ದಾಖಲಾತಿಗಳೊಂದಿಗೆ ಮೇಲ್ಕಂಡ ಕೊನೆಯ ದಿನಾಂಕದೊಳದಾಗಿ ಅರ್ಜಿ ಸಲ್ಲಿಸಬೇಕು. ಮತ್ತಿತರ ಹೆಚ್ಚಿನ ಮಾಹಿತಿಗಾಗಿ ತರಬೇತಿ ಸಂಸ್ಥೆಯನ್ನು ಬೆಳಿಗ್ಗೆ 9.30 ರಿಂದ ಸಂಜೆ 5.30 ಗಂಟೆಯವರೆಗೆ ಹಾಗೂ ಮೊಬೈಲ್ ಸಂಖ್ಯೆ 9901694389, 9900135705, 7019939996, 9901098123 ಗಳಿಗೆ ಸಂಪರ್ಕಿಸಲು ಕೋರಲಾಗಿದೆ.

ವಾರ್ತಾ ಭಾರತಿ 22 Apr 2026 7:13 pm

Sedam | ಕ್ರೀಡೆಯಿಂದ ಆರೋಗ್ಯ ಸದೃಢ: ಬಸವರಾಜ ಪಾಟೀಲ್ ಊಡಗಿ

ಸೇಡಂ: ಕ್ರೀಡೆಯಿಂದ ದೈಹಿಕ ಮತ್ತು ಮಾನಸಿಕ ಆರೋಗ್ಯ ಸದೃಢವಾಗುತ್ತದೆ. ಆರೋಗ್ಯಕರ ಜೀವನಕ್ಕೆ ಕ್ರೀಡೆ, ವಿಶೇಷವಾಗಿ ಕ್ರಿಕೆಟ್ ಅಗತ್ಯವಾಗಿದೆ ಎಂದು ಹಾಪ್ ಕಾಮ್ಸ್ ಮಾಜಿ ಅಧ್ಯಕ್ಷರಾದ ಬಸವರಾಜ ಆರ್.ಪಾಟೀಲ್ ಊಡಗಿ ಹೇಳಿದರು. ತಾಲೂಕಿನ ಮಳಖೇಡ ಗ್ರಾಮದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಕ್ರಿಕೆಟ್ ಕ್ಲಬ್ ವತಿಯಿಂದ ಆಯೋಜಿಸಿದ್ದ ಟೆನಿಸ್ ಬಾಲ್ ಕ್ರಿಕೆಟ್ ಟೂರ್ನಮೆಂಟ್‌ಗೆ ಚಾಲನೆ ನೀಡಿ ಅವರು ಮಾತನಾಡಿದರು. ಕ್ರೀಡೆಯಲ್ಲಿ ಸೋಲು-ಗೆಲುವು ಸಹಜ. ಯಾವುದೇ ಮನಸ್ತಾಪಕ್ಕೆ ಅವಕಾಶ ನೀಡದೇ ಕ್ರೀಡಾ ಮನೋಭಾವದಿಂದ ಭಾಗವಹಿಸಬೇಕು. ಬಿಸಿಲಿನ ತಾಪಮಾನ ಹೆಚ್ಚುತ್ತಿರುವ ಹಿನ್ನೆಲೆ ತಂಪಾದ ಸಮಯದಲ್ಲಿ ಕ್ರೀಡೆಯಲ್ಲಿ ಭಾಗವಹಿಸುವುದು ಉತ್ತಮ ಎಂದು ಸಲಹೆ ನೀಡಿದರು. ಕಾರ್ಯಕ್ರಮದಲ್ಲಿ ಅಭಿನವ ಕಾರ್ತಿಕೇಶ್ವರ ಶಿವಾಚಾರ್ಯರು ಸಾನ್ನಿಧ್ಯ ವಹಿಸಿದ್ದರು. ಮಹಾಂತಪ್ಪ ಸಂಗಾವಿ, ರಾಜಶೇಖರ ಪುರಾಣಿಕ, ಬಸವರಾಜ ಮಾಲಿಪಾಟೀಲ, ಮಂಜುನಾಥ ಭಂಡಾರಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. ಕ್ರಿಕೆಟ್ ಆಯೋಜಕರಾದ ಭಗವಾನ್ ಬೋಚಿನ್, ಶಚನ್ನಬಸಪ್ಪ ಹಾಗರಗಿ, ಝಾಕೀರ್ ಹುಸೇನ್, ರಮೇಶ್ ನಂದೂರ, ತೌಸೀಪ್ ಖಾನ್, ರಾಜಶೇಖರ ಮಠಪತಿ, ತುರಾಭ್ ಉಲ್ ಹಬ್, ಕಪೀಲ್ ವಾಲಿ, ಕೀರ್ತಿಕುಮಾರ ಮಾಳಗಿ, ಕುಮಾರ್ ದೋಡಮನಿ, ಅಬ್ರಾರ್ ಖಾನ್, ಅನೀಲಕುಮಾರ, ಪ್ರಶಾಂತ್ ದೋಡಮನಿ, ಇಮ್ತಾಯಾಜ ಇನಾಮದಾರ, ಪಾರೂಭ್ ಅಲಂಪುರಿ, ಮಿನಾಜ ಕಾಳಗಿ, ಸಾಧಿಕ್ ಲಂಗರಿ ಸೇರಿದಂತೆ ಹಲವರು ಭಾಗವಹಿಸಿದ್ದರು. ಶಿವಕುಮಾರ್ ದಳಪತಿ ಕಾರ್ಯಕ್ರಮ ನಿರೂಪಣೆ ಮಾಡಿದರು. ವಿಶ್ವನಾಥ್ ಸಂಗಾವಿ ವಂದಿಸಿದರು.

ವಾರ್ತಾ ಭಾರತಿ 22 Apr 2026 7:11 pm

Kalaburagi | ಎಫ್‌ಪಿಓ, ನವೋದ್ಯಮಗಳ ಸಮಾವೇಶ ಮುಂದೂಡಿಕೆ

ಕಲಬುರಗಿ: ಬೆಂಗಳೂರು ಬಯೋ ಇನ್ನೋವೇಷನ್ ಕೇಂದ್ರವು ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಇಲಾಖೆ, ಕೃಷಿ ಇಲಾಖೆ, ನಬಾರ್ಡ್ ಹಾಗೂ ಕೆ-ಟೆಕ್ ಸಹಯೋಗದೊಂದಿಗೆ ಎ.24 ರಂದು ಬೆಳಿಗ್ಗೆ 10 ಗಂಟೆಗೆ ಕಲಬುರಗಿ ನಗರದ ಜೆಸ್ಟ್ ಕ್ಲಬ್ ನಲ್ಲಿ ಆಯೋಜಿಸಿದ ರೈತ ಉತ್ಪಾದಕ ಸಂಸ್ಥೆಗಳು (FPOಗಳು) ಮತ್ತು ನವೋದ್ಯಮಗಳ ಸಮಾವೇಶ - 2026 ಕಾರ್ಯಕ್ರಮ ಮುಂದೂಡಲಾಗಿದೆ. ಅದೇ‌ ದಿನದಂದು ವಿಶೇಷ‌ ಸಂಪುಟ ಸಭೆ ನಿಗದಿಯಾಗಿರುವ ಕಾರಣ ಸಮಾವೇಶ ಮುಂದೂಡಲಾಗಿದೆ. ಮುಂದಿನ ದಿನಾಂಕ ನಂತರ ತಿಳಿಸಲಾಗುವುದೆಂದು ಬೆಂಗಳೂರು ಬಯೋ ಇನ್ನೊವೇಷನ್ಸ್ ಸೆಂಟರ್ ವ್ಯವಸ್ಥಾಪಕ ನಿರ್ದೇಶಕ ಡಾ.ಮುಹಮ್ಮದ್‌ ಆದಿಲ್ ಎ.ಎ. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಾರ್ತಾ ಭಾರತಿ 22 Apr 2026 7:09 pm

Kanakagiri | 40 ಲಕ್ಷ ರೂ. ಮೌಲ್ಯದ ಟ್ರಾನ್ಸ್‌ಫಾರ್ಮರ್ ವೈಂಡಿಂಗ್ ಕಳವು : ಪ್ರಕರಣ ದಾಖಲು

ಕನಕಗಿರಿ: ತಾಲೂಕಿನ ನವಲಿ ಗ್ರಾಮದ ಹೊರವಲಯದಲ್ಲಿರುವ 110/11 ಕೆವಿ ವಿದ್ಯುತ್ ಉಪಕೇಂದ್ರದಲ್ಲಿ ದಾಸ್ತಾನು ಮಾಡಿದ್ದ 5 MVA ಸಾಮರ್ಥ್ಯದ ಪವರ್ ಟ್ರಾನ್ಸ್‌ಫಾರ್ಮರ್‌ನ ತಾಮ್ರದ ವೈಂಡಿಂಗ್ ಕಳ್ಳತನವಾಗಿದ್ದು, ಈ ಕುರಿತು ಕನಕಗಿರಿ ಪೊಲೀಸ್ ಠಾಣೆಯಲ್ಲಿ ಮಂಗಳವಾರ ಪ್ರಕರಣ ದಾಖಲಾಗಿದೆ. ಸುಮಾರು 40.53 ಲಕ್ಷ ರೂ. ಮೌಲ್ಯದ ತಾಮ್ರ ವೈಂಡಿಂಗ್ ಕಳುವಾಗಿರುವುದರಿಂದ ಜೆಸ್ಕಾಂ ಇಲಾಖೆಗೆ ಭಾರೀ ನಷ್ಟ ಉಂಟಾಗಿದೆ. ಜೆಸ್ಕಾಂ ಅಧಿಕಾರಿಗಳ ಪ್ರಕಾರ, ಈ ಟ್ರಾನ್ಸ್‌ಫಾರ್ಮರ್ ಸಂಪೂರ್ಣ ದುರಸ್ತಿಗೆ ಕೋಟಿಗಟ್ಟಲೆ ವೆಚ್ಚವಾಗುವ ಸಾಧ್ಯತೆ ಇದೆ. ತಾಮ್ರದ ಬೆಲೆ ಏರಿಕೆಯಿಂದ ಇಂತಹ ಕಳ್ಳತನಗಳು ಹೆಚ್ಚುತ್ತಿದ್ದು, ಉಪಕೇಂದ್ರಗಳ ಭದ್ರತೆ ಬಲಪಡಿಸುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ. ಜೆಸ್ಕಾಂನ ಸಣ್ಣ ನೀರಾವರಿ ಹಾಗೂ ನಿರ್ವಹಣೆ ಉಪವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ನಿಸರ್ಗ ಸಿ.ಕೆ. ಭೀಮಪ್ಪ ಅವರು ಈ ಕುರಿತು ದೂರು ನೀಡಿದ್ದಾರೆ. ದೂರುದಾರರ ಮಾಹಿತಿಯಂತೆ, ಮಾರ್ಚ್ ತಿಂಗಳಿಂದ ಏಪ್ರಿಲ್ 18ರವರೆಗೆ ಯಾವುದೋ ಅವಧಿಯಲ್ಲಿ ಕಿಡಿಗೇಡಿಗಳು ಉಪಕೇಂದ್ರದ ಆವರಣಕ್ಕೆ ಅಕ್ರಮವಾಗಿ ಪ್ರವೇಶಿಸಿ, ಟ್ರಾನ್ಸ್‌ಫಾರ್ಮರ್‌ನ ತಾಮ್ರ ವೈಂಡಿಂಗ್ ಬಿಚ್ಚಿ ಕಳವು ಮಾಡಿಕೊಂಡು ಹೋಗಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.

ವಾರ್ತಾ ಭಾರತಿ 22 Apr 2026 7:07 pm

ತುಮಕೂರಲ್ಲಿ 'ರಾಷ್ಟ್ರೀಯ ಜೂನಿಯರ್ ಅಥ್ಲೆಟಿಕ್ ಕ್ರೀಡಾಕೂಟ': 40 ಸ್ಪರ್ಧೆ, 28 ರಾಜ್ಯಗಳ ಕ್ರೀಡಾಪಟುಗಳು ಭಾಗಿ

ತುಮಕೂರು: ರಾಜ್ಯದ ಕಲ್ಪತರು ನಾಡು ತುಮಕೂರು ಇದೇ ಮೊದಲ ಭಾರಿಗೆ ರಾಷ್ಟ್ರೀಯ ಕ್ರೀಡಾಕೂಟಕ್ಕೆ ಸಾಕ್ಷಿಯಾಗಲಿದೆ. ಕರ್ನಾಟಕ ಅಥ್ಲೆಟಿಕ್ಸ್ ಅಸೋಸಿಯೇಷನ್ ಹಾಗೂ ತುಮಕೂರು ಜಿಲ್ಲಾಡಳಿತದ ಸಹಯೋಗದಲ್ಲಿ 24ನೇ ರಾಷ್ಟ್ರೀಯ ಕಿರಿಯರ 20 ವರ್ಷದೊಳಗಿನವರ ಅಥ್ಲೆಟಿಕ್ಸ್ ಫೆಡರೇಷನ್ ಕ್ರೀಡಾಕೂಟ ನಡೆಯಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರು ಆಗಿರುವ ಗೃಹ ಸಚಿವರಾದ ಜಿ.ಪರಮೇಶ್ವರ್ ಮಾಹಿತಿ ನೀಡಿದರು. ತುಮಕೂರಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ

ಒನ್ ಇ೦ಡಿಯ 22 Apr 2026 7:06 pm

Shahapur | ಪರಿಹಾರ ಧನ ಪಾವತಿಸದ ಹಿನ್ನೆಲೆ ಕೆಎಸ್ಸಾರ್ಟಿಸಿ ಬಸ್ ಜಪ್ತಿ

ಶಹಾಪುರ: ಅಪಘಾತ ಪ್ರಕರಣದಲ್ಲಿ ನ್ಯಾಯಾಲಯ ಆದೇಶಿಸಿದ ಪರಿಹಾರ ಧನವನ್ನು ಪಾವತಿಸದ ಹಿನ್ನೆಲೆಯಲ್ಲಿ ದಾವಣಗೆರೆ ವಿಭಾಗಕ್ಕೆ ಸೇರಿದ ಕೆಎಸ್ಸಾರ್ಟಿಸಿ ಬಸ್ಸನ್ನು ಶಹಾಪುರ ನ್ಯಾಯಾಲಯದ ಸಿಬ್ಬಂದಿ ಮಂಗಳವಾರ ಜಪ್ತಿ ಮಾಡಿದ್ದಾರೆ. 2019ರ ಅ.29ರಂದು ಕಲಬುರಗಿಯಿಂದ ದಾವಣಗೆರೆಗೆ ತೆರಳುತ್ತಿದ್ದ ಬಸ್, ಶಹಾಪುರ ನಗರದ ಹಳೆಯ ಬಸ್ ನಿಲ್ದಾಣದ ಸಮೀಪ ರಸ್ತೆ ದಾಟುತ್ತಿದ್ದ ಅಜ್ಜಿ ನೂರಜಾಬೇಗಂ ಮತ್ತು 5 ವರ್ಷದ ಮೊಮ್ಮಗ ಮುಜಾಮಿಲ್ ಅವರಿಗೆ ಢಿಕ್ಕಿ ಹೊಡೆದಿತ್ತು. ಈ ಭೀಕರ ಅಪಘಾತದಲ್ಲಿ ಬಾಲಕ ಸ್ಥಳದಲ್ಲೇ ಮೃತಪಟ್ಟಿದ್ದು, ಅಜ್ಜಿ ಗಂಭೀರವಾಗಿ ಗಾಯಗೊಂಡಿದ್ದರು. ಈ ಸಂಬಂಧ ಮೃತ ಬಾಲಕನ ಕುಟುಂಬವು ಮೋಟಾರು ವಾಹನ ಅಪಘಾತ ಪರಿಹಾರ ಕೋರಿ ನ್ಯಾಯಾಲಯದ ಮೊರೆ ಹೋಗಿತ್ತು. ವಿಚಾರಣೆ ನಡೆಸಿದ ನ್ಯಾಯಾಲಯವು ಸಂತ್ರಸ್ತ ಕುಟುಂಬಕ್ಕೆ 13 ಲಕ್ಷ ರೂ. ಪರಿಹಾರ ನೀಡುವಂತೆ ಸಾರಿಗೆ ಸಂಸ್ಥೆಗೆ ಆದೇಶಿಸಿತ್ತು. ಆದರೆ, ಮೂರು ವರ್ಷ ಕಳೆದರೂ ಪರಿಹಾರ ಧನ ಪಾವತಿಸದ ಹಿನ್ನೆಲೆ ಅರ್ಜಿದಾರರು ಬಸ್ ಜಪ್ತಿಗೆ ಮನವಿ ಮಾಡಿದ್ದರು. ನ್ಯಾಯಾಲಯದ ಆದೇಶದಂತೆ ಮಂಗಳವಾರ ಕಲಬುರಗಿಯಿಂದ ದಾವಣಗೆರೆಗೆ ತೆರಳುತ್ತಿದ್ದ ಬಸ್‌ (KA-17 F-2089) ಶಹಾಪುರ ಹೊಸ ಬಸ್ ನಿಲ್ದಾಣಕ್ಕೆ ಆಗಮಿಸಿದ ವೇಳೆ, ಹಿರಿಯ ಶ್ರೇಣಿ ನ್ಯಾಯಾಧೀಶೆ ಹೇಮಾ ಪಸ್ತಾಪುರ ಅವರ ಮಾರ್ಗದರ್ಶನದಲ್ಲಿ ಪ್ರೊಸೆಸ್ ಸರ್ವರ್ ಮಲ್ಲಪ್ಪ ಹಾಗೂ ಸಿಬ್ಬಂದಿ ಬಸ್ಸನ್ನು ಜಪ್ತಿ ಮಾಡಿದರು. ಪ್ರಯಾಣಿಕರಿಗೆ ಯಾವುದೇ ತೊಂದರೆ ಆಗದಂತೆ ಪರ್ಯಾಯ ಬಸ್ ವ್ಯವಸ್ಥೆ ಮಾಡಲಾಯಿತು. ನಂತರ ಸಾರಿಗೆ ಸಂಸ್ಥೆಯ ಕಾನೂನು ಸಲಹೆಗಾರರು ಶೀಘ್ರದಲ್ಲೇ ಪರಿಹಾರ ಧನ ಪಾವತಿಸುವುದಾಗಿ ಲಿಖಿತ ಭರವಸೆ ನೀಡಿದ ಹಿನ್ನೆಲೆಯಲ್ಲಿ ನ್ಯಾಯಾಲಯವು ಬಸ್ಸನ್ನು ಬಿಡುಗಡೆ ಮಾಡಿದೆ ಎಂದು ಅರ್ಜಿದಾರರ ಪರ ವಕೀಲ ಸೈಯದ್ ಇಬ್ರಾಹಿಂ ಸಾಬ್ ಜಮಾದಾರ್ ತಿಳಿಸಿದ್ದಾರೆ.

ವಾರ್ತಾ ಭಾರತಿ 22 Apr 2026 7:03 pm

Yadgiri | ರಾಷ್ಟ್ರೀಯ ಜಾನುವಾರು ಕಾಲುಬಾಯಿ ಲಸಿಕಾ ಕಾರ್ಯಕ್ರಮ

ಜಿಲ್ಲೆಯ ಶೇ.100 ರಷ್ಟು ಜಾನುವಾರುಗಳಿಗೆ ಲಸಿಕೆ ಹಾಕಿಸಿ : ಜಿಲ್ಲಾಧಿಕಾರಿ ಹರ್ಷಲ್ ಭೋಯರ್

ವಾರ್ತಾ ಭಾರತಿ 22 Apr 2026 6:58 pm

ಕೊಡಗಿನಲ್ಲಿ ವಿದೇಶಿ ಮಹಿಳೆ ಮೇಲೆ ಅತ್ಯಾಚಾರ ಪ್ರಕರಣ: ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ : ಡಾ.ಜಿ.ಪರಮೇಶ್ವರ್

ಬೆಂಗಳೂರು, : ಕೊಡಗಿನ ಹೋಮ್‍ಸ್ಟೇನಲ್ಲಿ ವಿದೇಶಿ ಮಹಿಳೆ ಮೇಲೆ ಅತ್ಯಾಚಾರ ಆರೋಪ ಪ್ರಕರಣ ಸಂಬಂಧ ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ. ಬುಧವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿದೇಶಿ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ ಬೆಳಕಿಗೆ ಬಂದ ಬೆನ್ನಲ್ಲೇ ಸ್ಥಳೀಯ ಪೊಲೀಸರು ತಕ್ಷಣ ಕ್ರಮ ತೆಗೆದುಕೊಂಡಿದ್ದಾರೆ. ಈಗಾಗಲೇ ಹೋಮ್‍ಸ್ಟೇಮ್‍ಗಳಿಗೆ ಸುತ್ತೋಲೆ ಹೊರಡಿಸಲಾಗಿದೆ. ಅದರ ಪ್ರಕಾರ ಹೋಮ್‍ಸ್ಟೇ ಮಾಲಕರು ನಡೆದುಕೊಳ್ಳಬೇಕು. ಅದನ್ನು ಮೀರಿ ಘಟನೆಗಳಾದಾಗ ಕಾನೂನು ಪ್ರಕಾರ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ ಎಂದರು. ಇಂತಹ ಘಟನೆಗಳಿಂದ ರಾಜ್ಯಕ್ಕಾಗಲಿ ಅಥವಾ ಸಮಾಜಕ್ಕಾಗಲಿ ಒಳ್ಳೆಯ ಸಂದೇಶ ಕೊಡುವುದಿಲ್ಲ. ಹೊರಗಿನಿಂದ ಬಂದವರ ಮೇಲೆ ಇತರ ಆದಾಗ ಏನು ಸಂದೇಶ ಹೋಗುತ್ತೆ. ನಮ್ಮ ಸಮಾಜ, ದೇಶದ ಬಗ್ಗೆ ಹೊರಗಡೆ ಯಾವ ರೀತಿಯ ಸಂದೇಶ ಹೋಗುತ್ತದೆ. ಈ ವಿಚಾರದಲ್ಲಿ ಕಠಿಣವಾದ ಕ್ರಮ ತೆಗೆದುಕೊಳ್ಳಲಾಗುವುದು ಎಂದೂ ಅವರು ಉಲ್ಲೇಖಿಸಿದರು. ಘಟನೆ ಆದ ಬಳಿಕ ಮುಚ್ಚಿಹಾಕಲು ಪ್ರಯತ್ನಿಸಿದ್ದಾರೆ ಅನ್ನಿಸುತ್ತದೆ. ಪೊಲೀಸರಿಗೆ ಗೊತ್ತಾದ ತಕ್ಷಣ ವಶಕ್ಕೆ ಪಡೆದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಆರೋಪಿ ಹೊರ ರಾಜ್ಯದ ಮೂಲದವನು ಎಂದು ಹೇಳಲಾಗುತ್ತಿದೆ. ಪರಿಶೀಲನೆ ಮಾಡುತ್ತಾರೆ ಎಂದು ಸಚಿವರು ಮಾಹಿತಿ ನೀಡಿದರು.  

ವಾರ್ತಾ ಭಾರತಿ 22 Apr 2026 6:58 pm

Bengaluru | ಗಂಡನ ಆನ್‍ಲೈನ್ ಬೆಟ್ಟಿಂಗ್, ಮದ್ಯಪಾನ ಚಟದಿಂದ ಬೇಸತ್ತು ಹೆಂಡತಿ ಆತ್ಮಹತ್ಯೆ

ಬೆಂಗಳೂರು : ಗಂಡನ ಆನ್‍ಲೈನ್ ಬೆಟ್ಟಿಂಗ್ ಹಾಗೂ ಮದ್ಯಪಾನ ಚಟದಿಂದ ಬೇಸತ್ತು ಹೆಂಡತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಹದೇವಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವರದಿಯಾಗಿದೆ. ಕನಗಾ(28) ಆತ್ಮಹತ್ಯೆ ಮಾಡಿಕೊಂಡ ಗೃಹಿಣಿ ಎಂದು ಗುರುತಿಸಲಾಗಿದೆ. ಮೃತಳ ಸಹೋದರಿ ನೀಡಿದ ದೂರು ಆಧರಿಸಿ ಗಂಡ ಶಂಕರ್ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಪ್ರಕರಣ ದಾಖಲಿಸಿಕೊಂಡು ಆತನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಎ.ನಾರಾಯಣಪುರದ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದ ಕನಗಾ, ಗಂಡನ ಜೊತೆ ಹಣ್ಣಿನ ವ್ಯಾಪಾರ ಮಾಡುತ್ತಿದ್ದರು. ಎ.19ರಂದು ದಂಪತಿ ನಡುವೆ ಜಗಳವಾಗಿತ್ತು. ಇದರಿಂದ ಬೇಸತ್ತ ಕನಗಾ, ನೇಣು ಬಿಗಿದುಕೊಂಡು ಆತ್ಮಹತ್ಯೆ ಶರಣಾಗಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. 2023ರಲ್ಲಿ ತಮಿಳುನಾಡಿನ ಶಂಕರ್ ಜೊತೆ ಕನಗಾ ಮದುವೆಯಾಗಿತ್ತು. ದಂಪತಿಗೆ ಎರಡು ವರ್ಷದ ಗಂಡು ಮಗ ಇದ್ದಾನೆ. ಮೊದಲ ಎರಡು ವರ್ಷ ತಮಿಳುನಾಡಿನ ಗಂಡನ ಮನೆಯಲ್ಲಿ ವಾಸವಾಗಿದ್ದರು. ಗಂಡ ಆನ್‍ಲೈನ್ ಬೆಟ್ಟಿಂಗ್ ಹಾಗೂ ಮದ್ಯಪಾನದ ಚಟದಿಂದಾಗಿ ವಿಪರೀತ ಸಾಲ ಮಾಡಿಕೊಂಡಿದ್ದ. ಕುಡಿದ ಮತ್ತಿನಲ್ಲಿ ಹೆಂಡತಿಯೊಂದಿಗೆ ಜಗಳವಾಡುತ್ತಿದ್ದ. ಮಧ್ಯಪ್ರವೇಶಿಸಿ ದಂಪತಿಯನ್ನು ಬೆಂಗಳೂರಿಗೆ ಕನಗಾ ಮನೆಯವರು ಕರೆಸಿಕೊಂಡಿದ್ದರು. ಎ.ನಾರಾಯಣಪುರದಲ್ಲಿ ಬಾಡಿಗೆ ಮನೆ ಮಾಡಿಕೊಟ್ಟಿದ್ದರು. ಜೀವನಕ್ಕಾಗಿ ದಂಪತಿ ಹಣ್ಣಿನ ವ್ಯಾಪಾರ ಮಾಡುತ್ತಿದ್ದರು. ಇತ್ತೀಚೆಗೆ ಹಣ್ಣಿನ ವ್ಯಾಪಾರದಲ್ಲಿ ಸಂಪಾದಿಸಿದ್ದ ಹಣದ ಪೈಕಿ ಕೊಂಚ ಹಣವನ್ನು ಹೆಂಡತಿಗೆ ತಿಳಿಯದೆ ಶಂಕರ್ ತನ್ನ ಬಳಿ ಇಟ್ಟುಕೊಂಡಿದ್ದ. ಹಣದ ಬಗ್ಗೆ ಪ್ರಶ್ನಿಸಿದ್ದ ಕನಗಾ, ಆನ್‍ಲೈನ್ ಬೆಟ್ಟಿಂಗ್ ಆಡುತ್ತಿರುವುದನ್ನು ಆಕ್ಷೇಪಿಸಿ ಗಲಾಟೆ ಮಾಡಿದ್ದಳು. ಇದರಿಂದ ನೊಂದಿದ್ದ ಕನಗಾ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.  

ವಾರ್ತಾ ಭಾರತಿ 22 Apr 2026 6:56 pm

ರಾಯಚೂರು ಗೂಡ್ಸ್ ಶೆಡ್ ಸ್ಥಳಾಂತರ ಪ್ರಸ್ತಾವ ಕೈಬಿಟ್ಟ ರೈಲ್ವೆ ಇಲಾಖೆ

ರಾಯಚೂರು: ಇಲ್ಲಿನ ರಾಯಚೂರು ರೈಲು ನಿಲ್ದಾಣದಲ್ಲಿ ಇರುವ ಗೂಡ್ಸ್ ಶೆಡ್ ಅನ್ನು ಯರಮರಸ್ ರೈಲು ನಿಲ್ದಾಣಕ್ಕೆ ಸ್ಥಳಾಂತರಿಸುವ ಪ್ರಸ್ತಾವವನ್ನು ದಕ್ಷಿಣ ಮಧ್ಯ ರೈಲ್ವೆ ಇಲಾಖೆ ಕೈಬಿಟ್ಟಿದೆ. ಈ ಕುರಿತು ಗುಂತಕಲ್ ವಿಭಾಗದ ಹಿರಿಯ ವಿಭಾಗೀಯ ಎಂಜಿನಿಯರ್ (ಸಮನ್ವಯ) ಅಧಿಕೃತ ಮಾಹಿತಿ ನೀಡಿದ್ದಾರೆ. 2021ರ ಸೆ.21ರಂದು ದಕ್ಷಿಣ ಮಧ್ಯ ರೈಲ್ವೆಯ ಜನರಲ್ ಮ್ಯಾನೇಜರ್ ಗಜಾನನ ಮಲ್ಯ ಯರಮರಸ್ ನಿಲ್ದಾಣಕ್ಕೆ ಭೇಟಿ ನೀಡಿ ಸ್ಥಳಾಂತರ ಕುರಿತು ಪರಿಶೀಲನೆ ನಡೆಸಿ ವರದಿ ಸಲ್ಲಿಸಿದ್ದರು. ನಂತರ ಯೋಜನೆಯ ಪ್ರಗತಿ ಕುರಿತು ರಾಯಚೂರು ಜಿಲ್ಲಾ ವಾಣಿಜ್ಯ ಮಂಡಳಿ ಮಾಹಿತಿ ಕೋರಿತ್ತು. ಯರಮರಸ್ ರೈಲು ನಿಲ್ದಾಣದಲ್ಲಿ ಸುಮಾರು 9.5 ಏಕರೆ ರೈಲ್ವೆ ಭೂಮಿ ಲಭ್ಯವಿದ್ದು, ರೈಲು ಹಳಿಯುದ್ದಕ್ಕೂ 10ರಿಂದ 15 ಮೀಟರ್ ಅಗಲದ ಜಾಗವಿರುವುದಾಗಿ ಇಲಾಖೆ ತಿಳಿಸಿದೆ. ಆದರೆ ಪ್ರಸ್ತುತ ನಿಯಮಗಳು ಹಾಗೂ ಆಡಳಿತಾತ್ಮಕ ಕಾರಣಗಳಿಂದ ಗೂಡ್ಸ್ ಶೆಡ್ ಸ್ಥಳಾಂತರ ಪ್ರಸ್ತಾವವನ್ನು ಕೈಬಿಡಲಾಗಿದೆ. ಗತಿ ಶಕ್ತಿ ಯೋಜನೆಯಡಿಯಲ್ಲಿ ಕೂಡ ಈ ಯೋಜನೆಗೆ ಸಂಬಂಧಿಸಿದ ಯಾವುದೇ ಚಟುವಟಿಕೆಗಳು ನಡೆಯುತ್ತಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ರಾಯಚೂರುದಿಂದ ಯರಮರಸ್‌ಗೆ ಗೂಡ್ಸ್ ಶೆಡ್ ಸ್ಥಳಾಂತರ ಕುರಿತಂತೆ ಹಲವು ಸಂಸದರು ನಿರಂತರವಾಗಿ ಬೇಡಿಕೆ ಇಟ್ಟಿದ್ದರು. 2020-21 ಮತ್ತು 2021-22 ಸಾಲಿನಲ್ಲಿ ಸುಮಾರು 22.15 ಕೋಟಿ ರೂ. ಅಂದಾಜು ವೆಚ್ಚದ ಯೋಜನೆ ಪ್ರಸ್ತಾಪಿಸಲಾಗಿತ್ತು. ಆದರೆ ಹಣದ ಕೊರತೆಯಿಂದಾಗಿ ಯೋಜನೆ ಮುಂದೂಡಲ್ಪಟ್ಟಿತ್ತು. ನಗರದಲ್ಲಿ ರಸಗೊಬ್ಬರ ಸೇರಿದಂತೆ ಸರಕು ಸಾಗಣೆಗೆ ಈ ಸ್ಥಳಾಂತರ ಅಗತ್ಯವೆಂದು ಪರಿಗಣಿಸಲಾಗಿತ್ತು. ಲಾರಿಗಳ ಹೆಚ್ಚುವರಿ ಸಂಚಾರದಿಂದ ಉಂಟಾಗುತ್ತಿದ್ದ ಅಪಘಾತಗಳನ್ನು ತಡೆಯಲು ಈ ಯೋಜನೆ ಸಹಾಯಕವಾಗುತ್ತಿತ್ತು ಎಂಬ ಅಭಿಪ್ರಾಯವೂ ವ್ಯಕ್ತವಾಗಿತ್ತು. ಆದರೂ ರೈಲ್ವೆ ಮಂತ್ರಾಲಯ ಪ್ರಸ್ತಾವವನ್ನು ಕೈಬಿಟ್ಟಿರುವುದು ಇದೀಗ ಚರ್ಚೆಗೆ ಕಾರಣವಾಗಿದೆ.

ವಾರ್ತಾ ಭಾರತಿ 22 Apr 2026 6:55 pm

ಐ-ಪ್ಯಾಕ್‌ ವಿರುದ್ಧದ ತನಿಖೆಯಲ್ಲಿ ಮಮತಾ ಬ್ಯಾನರ್ಜಿ ಹಸ್ತಕ್ಷೇಪ ಆರೋಪ; ದೀದಿ ಬೆವರಿಳಿಸಿದ ಸುಪ್ರೀಂಕೋರ್ಟ್‌!

ಪಶ್ಚಿಮ ಬಂಗಾಳದಲ್ಲಿ ನಾಳೆ (ಏ.23-ಗುರುವಾರ)ಯಿಂದ ವಿಧಾನಸಭೇ ಚುನಾವಣೆಗೆ ಮತದಾನ ಆರಂಭವಾಗಲಿದೆ. ಮತದಾನಕ್ಕೂ ಮುನ್ನಾದಿನ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಸುಪ್ರೀಂಕೋರ್ಟ್‌ ಶಾಕ್‌ ನೀಡಿದೆ. ಐ-ಪ್ಯಾಕ್‌ ವಿರುದ್ಧದ ಇಡಿ ತನಿಖೆಯಲ್ಲಿ ಮಮತಾ ಬ್ಯಾನರ್ಜಿ ಹಸ್ತಕ್ಷೇಪ ಆರೋಪಗಳಿಗೆ ಕೆರಳಿ ಕೆಂಡವಾಗಿರುವ ಸುಪ್ರೀಂಕೋರ್ಟ್‌, ಪ್ರಜಾಪ್ರಭುತ್ವವನ್ನು ಅಪಾಯಕ್ಕೆ ಸಿಲುಕಿಸುವ ಅಧಿಕಾರ ಯಾರಿಗೂ ಇಲ್ಲ ಎಂದು ಖಡಕ್‌ ಆಗಿ ಹೇಳಿದೆ. ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮೇಲೆ ಸುಪ್ರೀಂಕೋರ್ಟ್‌ ಗರಂ ಆಗಿರುವುದು ದೇಶದ ಗಮನ ಸೆಳೆದಿದೆ. ಇಲ್ಲಿದೆ ಮಾಹಿತಿ.

ವಿಜಯ ಕರ್ನಾಟಕ 22 Apr 2026 6:53 pm

ಫಲ್ಗುಣಿ ನದಿಯಿಂದ ಅಕ್ರಮ ಮರಳು ಸಾಗಾಟ ತಡೆಗೆ ಒತ್ತಾಯಿಸಿ ಜಿಲ್ಲಾಧಿಕಾರಿಗೆ ಮನವಿ

ಮೂಡುಬಿದಿರೆ: ಪುರಸಭಾ ವ್ಯಾಪ್ತಿಯ ಮಾರೂರು ಗ್ರಾಮದ ನೆತ್ತೋಡಿ ಬಳಿ ಹರಿಯುವ ಫಲ್ಗುಣಿ ನದಿಯಿಂದ ಅಕ್ರಮವಾಗಿ ಮರಳು ತೆಗೆಯಲು ಅನುಮತಿ ನೀಡಬಾರದು ಎಂದು ಆಗ್ರಹಿಸಿ ಮಾರೂರು ಮತ್ತು ಪುಚ್ಚೆಮೊಗರು ಗ್ರಾಮಸ್ಥರು ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗೆ ಬುಧವಾರ ಮನವಿ ಸಲ್ಲಿಸಿ ಆಗ್ರಹಿಸಿದರು. ಮಾರೂರು ಮತ್ತು ಪುಚ್ಚೆಮೊಗರು ಪರಿಸರದ ಸುಮಾರು 250ಕ್ಕೂ ಹೆಚ್ಚು ರೈತ ಕುಟುಂಬಗಳು ಕುಡಿಯುವ ನೀರು ಹಾಗೂ ಕೃಷಿಗಾಗಿ ಫಲ್ಗುಣಿ ನದಿಯನ್ನು ಅವಲಂಬಿಸಿವೆ. ಕಳೆದ ಕೆಲವು ವರ್ಷಗಳಿಂದ ಮರಳು ಮಾಫಿಯಾದವರು ಜೆಸಿಬಿ ಹಾಗೂ ಹಿಟಾಚಿ ಯಂತ್ರಗಳನ್ನು ಬಳಸಿ ಕಾನೂನು ಬಾಹಿರವಾಗಿ ಮರಳು ತೆಗೆಯುತ್ತಿದ್ದಾರೆ. ಈ ಬಗ್ಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ದೂರು ನೀಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ರೈತರು ಆರೋಪಿಸಿದರು. ಗಣಿ ಇಲಾಖೆಯು ಈ ಭಾಗದಲ್ಲಿ ಮರಳು ತೆಗೆಯಲು ಯಾವುದೇ ಅಧಿಸೂಚನೆ ಹೊರಡಿಸಿಲ್ಲ. ಆದರೂ ಕೆಲವು ವ್ಯಕ್ತಿಗಳು ಸರ್ಕಾರಿ ಯೋಜನೆಗಳಿಗೆ ಮರಳು ಪೂರೈಕೆ ಮಾಡುವ ನೆಪವೊಡ್ಡಿ ರಾತ್ರಿ ಸಮಯದಲ್ಲಿ ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿದ್ದಾರೆ. ಇದರಿಂದ ನದಿಯ ನೀರಿನ ಸೆಲೆ ಕಡಿಮೆಯಾಗಿ ರೈತರ ಕೃಷಿ ಚಟುವಟಿಕೆಗಳಿಗೆ ನೀರಿನ ಅಭಾವ ಉಂಟಾಗಿದೆ. ನದಿ ತೀರದಲ್ಲಿ ಯಂತ್ರ ಬಳಸಿ ಆಳವಾಗಿ ಅಗೆಯುವುದರಿಂದ ಪರಿಸರಕ್ಕೂ ಹಾನಿಯಾಗುತ್ತಿದೆ. ಮೂಡುಬಿದಿರೆ ಪುರಸಭಾ ವ್ಯಾಪ್ತಿಗೆ ಇದೇ ನದಿಯಿಂದ ನೀರು ಪೂರೈಕೆಯಾಗುತ್ತಿದ್ದು, ಮರಳುಗಾರಿಕೆಯಿಂದ ಕುಡಿಯುವ ನೀರು ಕಲುಷಿತಗೊಳ್ಳುವ ಭೀತಿ ಎದುರಾಗಿದೆ. ಮರಳುಗಾರಿಕೆಗೆ ಅನುಮತಿ ನೀಡುವ ಮೊದಲು ಪುರಸಭೆ ಹಾಗೂ ಪಂಚಾಯತ್ ವ್ಯಾಪ್ತಿಯಲ್ಲಿ ಗ್ರಾಮ ಸಭೆ ನಡೆಸಿ ಸಾರ್ವಜನಿಕರ ಅಭಿಪ್ರಾಯ ಪಡೆಯಬೇಕು ಎಂದು ಒತ್ತಾಯಿಸಿದರು. ಅಕ್ರಮ ಮರಳುಗಾರಿಕೆ ನಡೆಸುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಮಾರೂರು ಮತ್ತು ಪುಚ್ಚೆಮೊಗರು ಗ್ರಾಮಸ್ಥರು ಜಿಲ್ಲಾಧಿಕಾರಿಗೆ ಆಗ್ರಹಿಸಿದರು. ಈ ಸಂದರ್ಭ ಎಡ್ವಿನ್ ಡಿಸೋಜಾ, ರೋಹನ್ ಕಾರ್ಡೋಜಾ, ಪ್ರಮುಖರಾದ ಜಾಯ್ಲಸ್ ತಾಕೋಡೆ ಮೊದಲಾದವರು ಇದ್ದರು.

ವಾರ್ತಾ ಭಾರತಿ 22 Apr 2026 6:50 pm

ಫರ್ಮಾನ್ ಖಾನ್ ಜೊತೆ ಮದುವೆಯಾದ ಒಂದೇ ತಿಂಗಳಲ್ಲಿ ಮೊನಾಲಿಸಾ ಭೋಸ್ಲೆ ಗರ್ಭಿಣಿ!

ಕೇರಳ: ಮದುವೆಯಾಗಿ ಒಂದೇ ತಿಂಗಳು ಆಗಿಲ್ಲ. ಅದಾಗಲೇ ಆಕೆ ಗರ್ಭಿಣಿ! ಹೌದು, ಕುಂಭಮೇಳ ಖ್ಯಾತಿಯ ಅರಳು ಗಣ್ಣಿನ ಬೆಡಗಿ ಮೋನಲಿಸಾ ಭೋಸ್ಲೆ ಫರ್ಹಾನ್‌ ಖಾನ್‌ ಎಂಬಾತನನ್ನು ವರಿಸಿದ್ದರು. ಆಕೆ ಗರ್ಭಿಣಿ ಅನ್ನೋ ವಿಷಯವನ್ನು ಆಕೆಯ ಪತಿ ಇದೀಗ ಬಹಿರಂಗಪಡಿಸಿದ್ದಾರೆ.ಕಳೆದ ಮಾ.11 ರಂದು ಮೊನಲಿಸಾ, ಫರ್ಮಾರನ್ನು ಕೇರಳದಲ್ಲಿ ಮದುವೆಯಾಗಿದ್ದರು. ಇವರ ವಿವಾಹಕ್ಕೆ ಕೇರಳದ ಹಲವು ರಾಜಕೀಯ ಮುಖಂಡರು ಬೆಂಬಲಿಸಿ ನೇತೃತ್ವ ವಹಿಸಿದ್ದರು.ಅಂತರ ಧರ್ಮಿಯ ಈ ಮದುವೆ, ಮೋನಾಲಿಸಾ ಭೋಸ್ಲೆ ಕುಟುಂಬದವರಿಗೆ ಇಷ್ಟ ಇರಲಿಲ್ಲ. ಇದನ್ನು ಲವ್ ಜಿಹಾದ್ ಎಂದು […] The post ಫರ್ಮಾನ್ ಖಾನ್ ಜೊತೆ ಮದುವೆಯಾದ ಒಂದೇ ತಿಂಗಳಲ್ಲಿ ಮೊನಾಲಿಸಾ ಭೋಸ್ಲೆ ಗರ್ಭಿಣಿ! first appeared on Vistara News .

ವಿಸ್ತಾರ ನ್ಯೂಸ್ 22 Apr 2026 6:50 pm

Yadgiri | ಕಾಂಗ್ರೆಸ್ ವಿರುದ್ಧ ಜೆಡಿಎಸ್ ಮಹಿಳಾ ಜಿಲ್ಲಾ ಘಟಕದಿಂದ ಪ್ರತಿಭಟನೆ

ಮಹಿಳಾ ವಿರೋಧಿ ಪಕ್ಷಗಳಿಗೆ ತಕ್ಕ ಪಾಠ : ಅಧ್ಯಕ್ಷೆ ನಾಗರತ್ನಮೂರ್ತಿ

ವಾರ್ತಾ ಭಾರತಿ 22 Apr 2026 6:49 pm

ಮೂಡುಬಿದಿರೆ| ಕಾಲು ಸಂಕ ಮುರಿದು ಬಿದ್ದು ಎಂಟು ಮಂದಿ ಗಾಯ

ಮೂಡುಬಿದಿರೆ: ತಾಕೋಡೆ ಬರ್ಕೆ ಧರ್ಮನೇಮಕ್ಕೆ ಬಾವದಗುತ್ತುವಿನಿಂದ ಭಂಡಾರವನ್ನು ಪಲ್ಲಕ್ಕಿಯಲ್ಲಿ ಹೊತ್ತು ಮೆರವಣಿಗೆ ಸಾಗಿಸುತ್ತಿದ್ದ ವೇಳೆ ಕಾಲು ಸಂಕ ಮುರಿದು ಬಿದ್ದು ಎಂಟು ಮಂದಿ ಗಾಯಗೊಂಡ ಘಟನೆ ಬುಧವಾರ ನಡೆದಿದೆ. ಸುನಿಲ್ ಶೆಟ್ಟಿ ಮುಕಾಲ್ದಿ, ಮಾರೂರು, ಲೋಕೇಶ್ ಭಂಡಾರಿ ಸೇರಿದಂತೆ ಇತರರು ಗಾಯಗೊಂಡವರು. ಘಟನೆ ತಿಳಿದ ಕೂಡಲೇ ಸ್ಥಳೀಯರು ತಕ್ಷಣ ಧಾವಿಸಿ ಗಾಯಾಳುಗಳನ್ನು ರಕ್ಷಿಸಿ, ಮೂಡುಬಿದಿರೆಯ ಖಾಸಗಿ ಆಸ್ಪತ್ರೆಗೆ ದಾಖಲಿಸುವಲ್ಲಿ ಸಹಾಯ ಮಾಡಿದ್ದಾರೆ. ಗಾಯಾಳುಗಳು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದುಬಂದಿದೆ.

ವಾರ್ತಾ ಭಾರತಿ 22 Apr 2026 6:46 pm

ಬೆಂಗಳೂರಿನ ಮೊದಲ ಡಬಲ್ ಡೆಕ್ಕರ್ ಫ್ಲೈಓವರ್ ಪೂರ್ಣ ಪ್ರಮಾಣದಲ್ಲಿ ಆರಂಭ; ಎಲ್ಲಿಂದ ಎಲ್ಲಿಗೆ? Silk Board ಟ್ರಾಫಿಕ್‌ಗೆ ಮುಕ್ತಿ

ಬೆಂಗಳೂರಿನ ಬಹು ನಿರೀಕ್ಷಿತ ಮೊದಲ ಡಬಲ್ ಡೆಕ್ಕರ್ ಫ್ಲೈಓವರ್ ವಾಹನ ಸಂಚಾರಕ್ಕೆ ಸಂಪೂರ್ಣ ಮುಕ್ತವಾಗಿದೆ. ಸಿಲ್ಕ್ ಬೋರ್ಡ್ ಟ್ರಾಫಿಕ್‌ಗೆ ಮುಕ್ತಿ ನೀಡಲಿದೆ ಎನ್ನಲಾಗಿದೆ. ಈ ಫ್ಲೈಓವರ್ ಎಚ್‌ಎಸ್‌ಆರ್ 5ನೇ ಮುಖ್ಯರಸ್ತೆಯಿಂದ ಜಯನಗರದ ರಾಗಿಗುಡ್ಡ ಕಡೆಗೆ ಸಂಪರ್ಕ ಕಲ್ಪಿಸಲಿದೆ. ಬಿಎಂಆರ್‌ಸಿಎಲ್‌ 449 ಕೋಟಿ ರೂ. ವೆಚ್ಚದಲ್ಲಿ ಈ ಫ್ಲೈಓವರ್ ನಿರ್ಮಿಸಿದ್ದು, 2024 ರಲ್ಲಿಯೇ ಒಂದು ಬದಿ ವಾಹನ ಸಂಚಾರ ಆರಂಭವಾಗಿತ್ತು. ಆದರೆ, ಇನ್ನೊಂದು ಬದಿ ಕಾಮಗಾರಿ ಬಾಕಿ ಹಿನ್ನೆಲೆ ಸದ್ಯ ವಾಹನ ಸಂಚಾರ ಆರಂಭವಾಗಿದೆ.

ವಿಜಯ ಕರ್ನಾಟಕ 22 Apr 2026 6:45 pm

Yadgiri | ಮಹಿಳಾ ಮೀಸಲಾತಿಗೆ ವಿಪಕ್ಷ ಅಡ್ಡಿ; ಮಹಿಳೆಯರಿಗೆ ಅಪಮಾನ : ಲಲಿತಾ ಅನಪುರ ಆರೋಪ

ಯಾದಗಿರಿ: ಮಹಿಳೆಯರಿಗೆ ರಾಜಕೀಯ ಪ್ರಾತಿನಿಧ್ಯ ಕಲ್ಪಿಸಲು ಪ್ರಧಾನಿ ನರೇಂದ್ರ ಮೋದಿ ಕೈಗೊಂಡ ಪ್ರಯತ್ನಕ್ಕೆ ವಿಪಕ್ಷಗಳು ಅಡ್ಡಿಯಾಗಿರುವುದು ಮಹಿಳೆಯರಿಗೆ ಮಾಡಿದ ಅಪಮಾನ ಎಂದು ಬಿಜೆಪಿ ರಾಜ್ಯ ಕಾರ್ಯದರ್ಶಿ ಕು. ಲಲಿತಾ ಅನಪುರ ಕಿಡಿಕಾರಿದರು. ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಿಳಾ ಮೀಸಲಾತಿ ಮಸೂದೆ ಅಂಗೀಕಾರವಾಗಿದ್ದರೆ ಅದು ಇತಿಹಾಸದ ಮಹತ್ವದ ಸಾಧನೆಯಾಗುತ್ತಿತ್ತು. ಆದರೆ ಕಾಂಗ್ರೆಸ್ ಹಾಗೂ ಮಿತ್ರಪಕ್ಷಗಳ ವಿರೋಧದಿಂದ ಅವರ ಮಹಿಳಾ ವಿರೋಧಿ ನಿಲುವು ಬಯಲಾಗಿದೆ ಎಂದು ಆರೋಪಿಸಿದರು. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೇರಿದಂತೆ ವಿಪಕ್ಷಗಳು ಮಹಿಳಾ ವಿಚಾರದಲ್ಲಿ ತೋರಿಕೆಯ ಕಾಳಜಿ ಮಾತ್ರ ತೋರಿಸುತ್ತಿವೆ. ಮಹಿಳಾ ಪಾಲ್ಗೊಳ್ಳುವಿಕೆಯನ್ನು ಹೆಚ್ಚಿಸುವ ಪ್ರಯತ್ನಕ್ಕೆ ಧಕ್ಕೆ ತಂದಿದ್ದಾರೆ ಎಂದು ಅವರು ಟೀಕಿಸಿದರು. ಒಬ್ಬ ಸಂಸದರು ಲಕ್ಷಾಂತರ ಜನರನ್ನು ಪ್ರತಿನಿಧಿಸುವ ಸಂದರ್ಭದಲ್ಲಿ ಮಹಿಳೆಯರಿಗೆ ಅವಕಾಶ ಕಲ್ಪಿಸುವುದು ಪ್ರಜಾಪ್ರಭುತ್ವವನ್ನು ಬಲಪಡಿಸುವ ಪ್ರಮುಖ ಹೆಜ್ಜೆ. ಆದರೆ ಈ ವಿಷಯದಲ್ಲೂ ವಿಪಕ್ಷಗಳು ಸಕಾರಾತ್ಮಕ ನಿಲುವು ತಾಳಿಲ್ಲ ಎಂದರು. ಮಹಿಳಾ ಸಬಲೀಕರಣದ ದಿಸೆಯಲ್ಲಿ ಕೇಂದ್ರ ಸರ್ಕಾರ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಜಲ ಜೀವನ ಮಿಷನ್, ಉಜ್ವಲ ಯೋಜನೆ, ಶೌಚಾಲಯ ನಿರ್ಮಾಣ ಹಾಗೂ ಮಹಿಳೆಯರ ಹೆಸರಿನಲ್ಲಿ ಮನೆ ಹಕ್ಕು ವಿತರಣೆ ಸೇರಿದಂತೆ ಕೋಟ್ಯಾಂತರ ಮಹಿಳೆಯರಿಗೆ ನೇರ ಪ್ರಯೋಜನ ತಲುಪಿಸಲಾಗಿದೆ ಎಂದು ವಿವರಿಸಿದರು. ಪ್ರಧಾನಿ ಮೋದಿ ಅವರು ವಂಶಪಾರಂಪರ್ಯದಿಂದ ಅಧಿಕಾರಕ್ಕೆ ಬಂದವರಲ್ಲ, ಜನರ ವಿಶ್ವಾಸದಿಂದ ಮೂರನೇ ಬಾರಿ ಅಧಿಕಾರಕ್ಕೆ ಬಂದಿದ್ದಾರೆ. ಒಬಿಸಿ ಆಯೋಗಕ್ಕೆ ಸಂವಿಧಾನಿಕ ಮಾನ್ಯತೆ ನೀಡಿರುವುದು ಹಿಂದುಳಿದ ವರ್ಗಗಳ ಸಬಲೀಕರಣಕ್ಕೆ ಮಹತ್ವದ ಹೆಜ್ಜೆ ಎಂದು ಹೇಳಿದರು. ಕಾಂಗ್ರೆಸ್ ಪಕ್ಷ ದೀರ್ಘಕಾಲ ಆಡಳಿತ ನಡೆಸಿದರೂ ಹಿಂದುಳಿದ ವರ್ಗಗಳಿಗೆ ನ್ಯಾಯ ಒದಗಿಸಲಿಲ್ಲ. ಮಂಡಲ್ ವರದಿ ಜಾರಿಗೆ ಹಿಂದೇಟು ಹಾಕಿರುವುದು ಅವರ ನಿಲುವನ್ನು ಸ್ಪಷ್ಟಪಡಿಸುತ್ತದೆ ಎಂದು ಆರೋಪಿಸಿದರು. ಬಿಜೆಪಿ ಮಹಿಳಾ ನಾಯಕತ್ವಕ್ಕೆ ಉತ್ತೇಜನ ನೀಡಿರುವುದನ್ನು ಉಲ್ಲೇಖಿಸಿ, ಸುಷ್ಮಾ ಸ್ವರಾಜ್, ಉಮಾಭಾರತಿ, ವಸುಂಧರಾ ರಾಜೇ, ಆನಂದಿಬೆನ್ ಪಟೇಲ್ ಅವರಿಗೆ ಮುಖ್ಯಮಂತ್ರಿಗಳಾಗಿ ಅವಕಾಶ ನೀಡಿರುವುದನ್ನು ಸ್ಮರಿಸಿದರು. ಜೊತೆಗೆ ದ್ರೌಪದಿ ಮುರ್ಮು ಅವರನ್ನು ರಾಷ್ಟ್ರಪತಿಗಳನ್ನಾಗಿ ಮಾಡಿರುವುದೂ ಮಹಿಳಾ ಸಬಲೀಕರಣದ ನಿದರ್ಶನ ಎಂದರು. ಕಾಂಗ್ರೆಸ್ ಪಕ್ಷ ರಾಷ್ಟ್ರೀಯ ವಿಚಾರಗಳಲ್ಲಿ ನಿರಂತರ ವಿರೋಧದ ರಾಜಕಾರಣ ಮಾಡುತ್ತಿದೆ. 370ನೇ ವಿಧಿ ರದ್ದು, ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ, ಸಿಎಎ, ಜಿಎಸ್‌ಟಿ, ಆಯುಷ್ಮಾನ್ ಭಾರತ್ ಸೇರಿದಂತೆ ಹಲವು ವಿಷಯಗಳಲ್ಲೂ ವಿರೋಧ ವ್ಯಕ್ತಪಡಿಸಿದೆ ಎಂದು ಆರೋಪಿಸಿದರು. ಜನಸಂಖ್ಯೆ ಆಧಾರದಲ್ಲಿ ಜನಪ್ರತಿನಿಧಿಗಳ ಸಂಖ್ಯೆಯನ್ನು ಹೆಚ್ಚಿಸುವ ಪ್ರಸ್ತಾವನೆಯಿಂದ ದಕ್ಷಿಣ ರಾಜ್ಯಗಳಿಗೆ ಅನ್ಯಾಯವಾಗುವುದಿಲ್ಲ. ಆದರೆ ಇದಕ್ಕೂ ವಿಪಕ್ಷಗಳು ಅಡ್ಡಿಯಾಗಿವೆ ಎಂದು ಹೇಳಿದರು. ಕೊನೆಗೆ, ಕಾಂಗ್ರೆಸ್ ಮತ್ತು ಮಿತ್ರಪಕ್ಷಗಳಿಗೆ ಚುನಾವಣಾ ಗೆಲುವೇ ಗುರಿ. ಆದರೆ ಬಿಜೆಪಿಗೆ ರಾಷ್ಟ್ರ ನಿರ್ಮಾಣವೇ ಮುಖ್ಯ ಉದ್ದೇಶ ಎಂದು ಅವರು ಅಭಿಪ್ರಾಯಪಟ್ಟರು. ಸುದ್ದಿಗೋಷ್ಠಿಯಲ್ಲಿ ಜಿಲ್ಲಾಧಕ್ಷ ಬಸವರಾಜ ವಿಭೂತಹಳ್ಳಿ, ರಾಜ್ಯ ಕಾರ್ಯಕಾರಿಣಿ ಸದಸ್ಯ ಮಹೇಶರಡ್ಡಿ ಮುದ್ನಾಳ, ಮಾಜಿ ಜಿಲ್ಲಾಧ್ಯಕ್ಷ ಡಾ.ಶರಣಭೂಪಾಲರಡ್ಡಿ ನಾಯ್ಕಲ್, ಬಿಜೆಪಿ ಹಿರಿಯ ಮುಖಂಡ ರಾಚನಗೌಡ ಮುದ್ನಾಳ, ದೇವಿಂದ್ರನಾಥ ನಾದ, ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷ ಸುನಿತಾ ಚೌವ್ಹಾಣ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪರುಶುರಾಮ ಕುರುಕುಂದಿ, ಜಿಲ್ಲಾ ವಕ್ತಾರ ಹಣಮಂತ ಇಟಗಿ, ಬಿಜೆಪಿ ಜಿಲ್ಲಾ ಮಾಧ್ಯಮ ಸಂಚಾಲಕ ವಿರುಪಾಕ್ಷಯ್ಯ ಸ್ವಾಮಿ ಹೆಡಗಿಮದ್ರಾ, ಸಹ ಸಂಚಾಲಕರಾದ ಚಂದ್ರಶೇಖರ್ ಕಡೆಸೂರ ಉಪಸ್ಥಿತರಿದ್ದರು.

ವಾರ್ತಾ ಭಾರತಿ 22 Apr 2026 6:44 pm

ದೆಹಲಿಯಲ್ಲಿ ಐಆರ್‌ಎಸ್ ಅಧಿಕಾರಿ ಪುತ್ರಿಯ ಭೀಕರ ಕೊಲೆ : ಮನೆ ಕೆಲಸಗಾರನಿಂದ ಕೃತ್ಯ ಶಂಕೆ

ರಾಷ್ಟ್ರ ರಾಜಧಾನಿಯಲ್ಲಿ ಬೆಚ್ಚಿ ಬೀಳಿಸುವ ಘಟನೆ ನಡೆದಿದೆ. ದೆಹಲಿಯ ಅಮರ್ ಕಾಲೋನಿಯಲ್ಲಿ ಹಿರಿಯ ಐಆರ್‌ಎಸ್ ಅಧಿಕಾರಿಯ ಪುತ್ರಿಯನ್ನು ಭೀಕರವಾಗಿ ಕೊಲೆ ಮಾಡಲಾಗಿದೆ. ಮನೆಗೆ ನುಗ್ಗಿ ಆರೋಪಿ ಈ ಕೃತ್ಯ ಎಸಗಿದ್ದಾನೆ. ಪೊಲೀಸರ ಪ್ರಾಥಮಿಕ ತನಿಖೆಯ ಮಾಹಿತಿಯ ಪ್ರಕಾರ ದುಷ್ಕರ್ಮಿ ಯುವತಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಹತ್ಯೆ ಮಾಡಿದ್ದಾನೆ. ಮೊಬೈಲ್ ಫೋನ್ ಚಾರ್ಜರ್ ಕೇಬಲ್ ಬಳಸಿ ಕುತ್ತಿಗೆ ಬಿಗಿದು ಹತ್ಯೆ ಮಾಡಿದ್ದಾನೆ ಎಂಬ ಮಾಹಿತಿ ಇದೆ. ಘಟನೆಯ ಹಿನ್ನೆಲೆಯಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ವಿಜಯ ಕರ್ನಾಟಕ 22 Apr 2026 6:41 pm

ಸಂಚಾರಿ ಪೀಠ ಸ್ಥಾಪನೆ ಪರಿಶೀಲನೆಗೆ ಸಮಿತಿ ರಚನೆ: ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ವಿಭು ಬಕ್ರು

ಮಂಗಳೂರು, ಎ.22: ಮಂಗಳೂರಿನಲ್ಲಿ ರಾಜ್ಯ ಹೈಕೋರ್ಟ್‌ನ ಸಂಚಾರಿ ಪೀಠ ಸ್ಥಾಪನೆಗೆ ಪರಿಶೀಲಿಸಲು ಸಮಿತಿ ರಚಿಸಲಾಗುವುದು ಎಂದು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ವಿಭು ಬಕ್ರು ಹೇಳಿದ್ದಾರೆ. ಮಂಗಳೂರಿನಲ್ಲಿ ಹೈಕೊರ್ಟ್ ಪೀಠ ಸ್ಥಾಪನೆಗಾಗಿ ಹೋರಾಟ ಸಮಿತಿ ರಚಿಸಲಾಗಿದ್ದು, ಶಾಸಕ ಐವನ್ ಡಿಸೋಜ ಸಂಚಾಲಕತ್ವದಲ್ಲಿ ಹಲವು ಸಭೆಗಳು ನಡೆದಿತ್ತು. ವಿವಿಧ ಸಂಘಸಂಸ್ಥೆಗಳ ಮುಖ್ಯಸ್ಥರನ್ನು ಹಾಗೂ ಸಮಾಜದ ವಿವಿಧ ವರ್ಗದ ಜನರ ಸಂಪರ್ಕ ಸಭೆಗಳನ್ನು ನಡೆಸಿ ಹೈಕೋರ್ಟ್ ಶಾಶ್ವತ ಪೀಠ ಸ್ಥಾಪನೆಗಾಗಿ ವಿವಿಧ ಪ್ರಾಧಿಕಾರಗಳಿಗೆ ಮನವಿ ಸಲ್ಲಿಸಲಾಗಿತ್ತು. ಇತ್ತೀಚೆಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ ದಕ್ಷಿಣ ಭಾರತದಲ್ಲಿ ಸುಪ್ರೀಂ ಕೋರ್ಟ್ ಪೀಠ ಸ್ಥಾಪನೆಗೆ ಕರೆ ನೀಡಿದ್ದರು. ಈ ಹೇಳಿಕೆಯಿಂದ ಪ್ರೇರಿತರಾಗಿ ಮಂಗಳೂರಿನಲ್ಲಿ ಹೈಕೋರ್ಟ್ ಸಕ್ಯೂರ್ಟ್ ಪೀಠ ಚಳುವಳಿ ವತಿಯಿಂದ ಹೋರಾಟ ಸಮಿತಿಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಹಾಗೂ ಜಿಲ್ಲಾ ಪ್ರಧಾನ ಸರಕಾರಿ ವಕೀಲ ಎಂ.ಪಿ. ನೊರೊನ್ಹಾ, ಮಂಗಳೂರು ವಕೀಲರ ಸಂಘದ ಅಧ್ಯಕ್ಷ ಹಾಗೂ ಹೈಕೋರ್ಟ್ ಪೀಠ ಹೋರಾಟ ಸಮಿತಿಯ ಅಧ್ಯಕ್ಷ ಎಚ್.ವಿ. ರಾಘವೇಂದ್ರ ರಾವ್, ಬಂಟ್ವಾಳ ವಕೀಲರ ಸಂಘದ ಅಧ್ಯಕ್ಷ ರಿಚರ್ಡ್ ಡಿಕೋಸ್ತ ಎಂ. ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಾಮೂರ್ತಿ ಹಾಗೂ ಆಂಧ್ರಪ್ರದೇಶದ ರಾಜ್ಯಪಾಲ ಅಬ್ದುಲ್ ನಜೀರ್ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದರು. ಬಳಿಕ ಸಮಿತಿಯು ಸ್ಪೀಕರ್ ಯು.ಟಿ ಖಾದರ್ ಫರೀದ್‌ರನ್ನು ಭೇಟಿ ಮಾಡಿದ್ದು, ಅವರು ಕರ್ನಾಟಕದ ಮುಖ್ಯ ನ್ಯಾಯಮೂರ್ತಿಗೆ ಮಂಗಳೂರಿನಲ್ಲಿ ಶೀಘ್ರವಾಗಿ ಹೈಕೋರ್ಟ್ ಸಂಚಾರಿ ಪೀಠ ಸ್ಥಾಪನೆಗೆ ಪತ್ರ ಬರೆದಿದ್ದರು. ನಂತರ ಎಂ.ಪಿ. ನೊರೊನ್ಹಾ, ಎಚ್.ವಿ., ರಾಘವೇಂದ್ರ ರಾವ್ ಹಾಗೂ ರಿಚರ್ಡ್ ಡಿಕೋಸ್ತ ಅವರನ್ನು ಒಳಗೊಂಡ ನಿಯೋಗವು ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಭು ಭಖ್ರು ಅವರನ್ನು ಭೇಟಿ ಮಾಡಿ ಮಂಗಳೂರಿ ನಲ್ಲಿ ಹೈಕೋರ್ಟ್ ಸಂಚಾರಿ ಪೀಠ ಕೂಡಲೇ ಸ್ಥಾಪಿಸಲು ಮನವಿ ಸಲ್ಲಿಸಿತ್ತು. ಪ್ರಾರಂಭಿಕ ಹಂತದಲ್ಲಿ ಒಂದು ವಿಭಾಗೀಯ ಪೀಠ ಮತ್ತು ಎರಡು ಏಕಸದಸ್ಯ ಪೀಠಗಳನ್ನು ಒಳಗೊಂಡ ಸಂಚಾರಿ ಪೀಠ ಸ್ಥಾಪಿಸುವಂತೆ ಮನವಿ ಮಾಡಿದರು. ತದನಂತರ ಜಿಲ್ಲೆಯ ಆಡಳಿತಾತ್ಮಕ ನ್ಯಾಯಧೀಶ ಎಚ್.ಟಿ. ನರೇಂದ್ರ ಪ್ರಸಾದ್, ನ್ಯಾಯಧೀಶ ರಾಜೇಶ್ ರೈ ಕಲ್ಲಂಗಣ ಅವರನ್ನು ಭೇಟಿ ಮಾಡಿದರು. ಹೈಕೋರ್ಟ್ ವಕೀಲ ಅಜೆಯ್ ಮೆಲ್ರಿಕ್ ನೊರೊನ್ಹಾ ಜೊತೆಗಿದ್ದರು.

ವಾರ್ತಾ ಭಾರತಿ 22 Apr 2026 6:39 pm

ಮನುಷ್ಯ ಮಾನವೀಯ ವ್ಯಕ್ತಿತ್ವ ರೂಪಿಸಿಸುವುದು ಮೂಕಜ್ಜಿಯ ಸಂದೇಶ: ಪ್ರೊ.ಸ್ವೀವನ್ ಕ್ವಾಡ್ರಸ್

ಉಡುಪಿ, ಎ.22: ಮನುಷ್ಯ ತನ್ನ ಎಲ್ಲಾ ಸಣ್ಣತನಗಳನ್ನು ಕಳೆದುಕೊಂಡು ಮಾನವೀಯ ವ್ಯಕ್ತಿತ್ವವನ್ನು ರೂಪಿಸಿಕೊ ಳ್ಳುವುದು ಮೂಕಜ್ಜಿಯ ಕನಸು ಕಾದಂಬರಿಯ ಮುಖ್ಯ ಸಂದೇಶವಾಗಿದೆ. ಮೂಕಿಯಾಗಿದ್ದ ಮೂಕಜ್ಜಿ ಪ್ರತಿ ಯೊಂದನ್ನು ಪ್ರಶ್ನೆ ಮಾಡುತ್ತಾ ಮಾನವೀಯ ಗುಣಗಳನ್ನು ಸಮರ್ಥಿ ಸುವುದು ಮಹತ್ವದ್ದಾಗಿದೆ ಎಂದು ಲೇಖಕ ಪ್ರೊ.ಸ್ವೀವನ್ ಕ್ವಾಡ್ರಸ್ ಹೇಳಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಡಾ.ಶಿವರಾಮ ಕಾರಂತ ಟ್ರಸ್ಟ್ ವತಿಯಿಂದ ಹಳೆಯಂಗಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಂಗಳವಾರ ನಡೆದ ಅರಿನ ಬೆಳಕು ಉಪನ್ಯಾಸ ಮಾಲೆ-13 ಕಾರ್ಯಕ್ರಮ ದಲ್ಲಿ ಸಂಪ ನ್ಮೂಲ ವ್ಯಕ್ತಿಯಾಗಿ ಮೂಕಜ್ಜಿಯ ಕನಸು ಒಂದು ಚಿಂತನೆ ಎಂಬ ವಿಷಯದ ಕುರಿತು ಅವರು ಉಪನ್ಯಾಸ ನೀಡಿದರು. ಕಾರ್ಯಕ್ರಮವನ್ನು ಉದ್ಘಾಟಿಸಿದ ಕಾಲೇಜಿನ ಪ್ರಾಂಶುಪಾಲ ಡಾ.ಕಿರಣ್ ಎಂ. ಮಾತನಾಡಿ, ಸಮಾಜದಲ್ಲಿರುವ ಅನೇಕ ಮೌಢ್ಯ ಅಸಮಾನತೆ ಪದ್ಧತಿಗಳನ್ನು ಪ್ರಶ್ನಿಸುವ ಒಂದು ಕ್ರಾಂತಿಕಾರಿ ಮನೋಭಾವವನ್ನು ಮೂಕಜ್ಜಿಯ ಕನಸು ಪುಸ್ತಕವು ಮೂಡಿಸುತ್ತದೆ. ವಿದ್ಯಾರ್ಥಿಗಳಲ್ಲಿ ವೈಚಾರಿಕ ಅಲೋಚನೆ ಮತ್ತು ವೈಜ್ಞಾನಿಕ ಚಿಂತನೆ ಅತ್ಯಂತ ಮುಖ್ಯವಾದದ್ದು ಎಂದರು. ಅಧ್ಯಕ್ಷತೆ ವಹಿಸಿದ್ದ ಡಾ.ಶಿವರಾಮ ಕಾರಂತ ಟ್ರಸ್ಟಿನ ಅಧ್ಯಕ್ಷ ಡಾ.ಗಣನಾಥ ಶೆಟ್ಟಿ ಎಕ್ಕಾರು ಮಾತನಾಡಿ, ಇಂದಿನ ವಿದ್ಯಾರ್ಥಿಗಳಲ್ಲಿ ವೈಚಾರಿಕ ಮತ್ತು ವೈಜ್ಞಾನಿಕ ಪ್ರಜ್ಞೆಯನ್ನು ಡಾ.ಶಿವರಾಮ ಕಾರಂತರ ಬರಹಗಳು ಮೂಡಿ ಸುತ್ತದೆ. ವಿದ್ಯಾರ್ಥಿಗಳು ಅನಗತ್ಯ ವಿಚಾರಗಳಲ್ಲಿ ತಮ್ಮ ಸಮಯವನ್ನು ವ್ಯರ್ಥ ಮಾಡದೇ ಪುಸ್ತಕವನ್ನು ಓದುವ ಹವ್ಯಾಸವನ್ನು ರೂಢಿಸಿಕೊಳ್ಳಬೇಕು ಎಂದು ತಿಳಿಸಿದರು. ಕಾಲೇಜಿನ ಉಪನ್ಯಾಸ ಲೋಕೇಶ್ ಉಪಸ್ಥಿತರಿದ್ದರು. ಡಾ.ಶಿವರಾಮ ಕಾರಂತ ಟ್ರಸ್ಟಿನ ಸದಸ್ಯ ಸತೀಶ್ ಕೊಡ ವೂರು ಸ್ವಾಗತಿಸಿದರು. ಕಾಲೇಜಿನ ವಿದ್ಯಾರ್ಥಿನಿ ಪ್ರಜ್ಞಾ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

ವಾರ್ತಾ ಭಾರತಿ 22 Apr 2026 6:27 pm

ಬಸವಣ್ಣ ಸಾಮಾಜಿಕ ಭೇದಭಾವ ವಿರೋಧಿಸಿ ಸಮ ಸಮಾಜ ನಿರ್ಮಾಣಕ್ಕಾಗಿ ದುಡಿದರು : ಉಪರಾಷ್ಟ್ರಪತಿ ಸಿ.ಪಿ.ರಾಧಾಕೃಷ್ಣನ್

ಬೀದರ್ : ಶರಣರು, ಸಂತರು ಹಾಗೂ ಬಸವೇಶ್ವರರು ಸಮಾನತೆಯ ಸಂದೇಶ ಸಾರಿದ ಪವಿತ್ರ ನಾಡು ಬೀದರ್ ಜಿಲ್ಲೆಯಾಗಿದೆ ಎಂದು ಉಪರಾಷ್ಟ್ರಪತಿ ಸಿ.ಪಿ.ರಾಧಾಕೃಷ್ಣನ್ ಹೇಳಿದರು. ಭಾಲ್ಕಿ ಪಟ್ಟಣದ ಚನ್ನಬಸವಾಶ್ರಮದಲ್ಲಿ ಬುಧವಾರ ಹಿರೇಮಠ ಸಂಸ್ಥಾನದ ಸ್ವಾಮೀಜಿ ಡಾ. ಬಸವಲಿಂಗ ಪಟ್ಟದೇವರ ಅಮೃತ ಮಹೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ವಿಶ್ವಗುರು ಬಸವಣ್ಣ ಅವರ ನಾಡಿನಲ್ಲಿ ಬಸವಾದಿ ಶರಣರ ಆಶಯಗಳಂತೆ ಭಾಲ್ಕಿ ಹಿರೇಮಠ ಸೇವೆ ಸಲ್ಲಿಸುತ್ತಿದೆ ಎಂದರು. ಡಾ. ಬಸವಲಿಂಗ ಪಟ್ಟದೇವರು ಅನಾಥ ಮಕ್ಕಳಿಗೆ ಆಶ್ರಯ, ಗೌರವ ಮತ್ತು ಶಿಕ್ಷಣ ಒದಗಿಸುವ ಮೂಲಕ ಮಹತ್ತರ ಸೇವೆ ಸಲ್ಲಿಸಿದ್ದಾರೆ. 500ಕ್ಕೂ ಹೆಚ್ಚು ಮಕ್ಕಳಿಗೆ ಆಶ್ರಯ ನೀಡಿರುವುದರ ಜೊತೆಗೆ, 60ಕ್ಕೂ ಹೆಚ್ಚು ಸಂಸ್ಥೆಗಳು ಸ್ಥಾಪನೆಗೊಂಡು 20 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುತ್ತಿರುವುದು ಶ್ಲಾಘನೀಯ ಎಂದು ಹೇಳಿದರು. ಮಲ್ಲಿಕಾರ್ಜುನ್ ಖರ್ಗೆಯವರು ಬಿಳಿ ಹಾಗೂ ಕಪ್ಪಾಗಿರುವವರ ಮಧ್ಯೆ ವ್ಯತ್ಯಾಸವಿಲ್ಲ ಎಂದು ಹೇಳುತ್ತಾರೆ. ಅದೇ ರೀತಿ ಅವರು ಭಯೋತ್ಪಾದಕರು ಹಾಗೂ ಭಯೋತ್ಪಾದಕರಿಗೆ ಭಯ ಹುಟ್ಟಿಸುವವರ ಮಧ್ಯೆ ವ್ಯತ್ಯಾಸ ಮಾಡುವುದಿಲ್ಲ ಎಂದು ಖರ್ಗೆ ಅವರು ಚುನಾವಣಾ ಪ್ರಚಾರ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭಯೋತ್ಪಾದಕ ಎಂದು ಟೀಕಿಸಿರುವುದನ್ನು ಪರೋಕ್ಷವಾಗಿ ಪ್ರಸ್ತಾಪಿಸಿ ಅವರು ತಿರುಗೇಟು ನೀಡಿದರು. ಕಾರ್ಯಕ್ರಮದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಮಾತನಾಡಿ, ಬಸವ ತತ್ವಗಳನ್ನು ಅನುಸರಿಸಿ ಸಮಾಜ ಸೇವೆ ಮಾಡುತ್ತಿರುವ ಡಾ. ಚನ್ನಬಸವ ಪಟ್ಟದೇವರು ತ್ಯಾಗ ಮತ್ತು ಕರುಣೆಯ ಪ್ರತಿರೂಪ ಎಂದು ಪ್ರಶಂಸಿಸಿದರು. ಇದೇ ವೇಳೆ ಮಲ್ಲಿಕಾರ್ಜುನ್ ಖರ್ಗೆ ಅವರು ಮಾತನಾಡಿ, ಬಸವಣ್ಣನವರ ವಿಚಾರಗಳನ್ನು ಪ್ರಚಾರದೊಂದಿಗೆ ಅನುಷ್ಠಾನದಲ್ಲೂ ತರಬೇಕು. ಇಲ್ಲವಾದರೆ ಸಮಾನತೆ ಸಾಧಿಸಲು ಸಾಧ್ಯವಿಲ್ಲ ಎಂದು ಹೇಳಿದರು. ವಿಚಾರ, ಆಚಾರ ಮತ್ತು ಪ್ರಚಾರ ಈ ಮೂರು ಅಂಶಗಳು ಯಾವುದೇ ತತ್ವದ ಬೆಳವಣಿಗೆಗೆ ಮುಖ್ಯ. ಬಸವಣ್ಣನವರು ಮನುವಾದ ಮತ್ತು ಚಾತುರ್ವರ್ಣ ವ್ಯವಸ್ಥೆಯನ್ನು ತಿರಸ್ಕರಿಸಿ, ಎಲ್ಲರನ್ನು ಒಂದೇ ವೇದಿಕೆಗೆ ತರಲು ಅನುಭವ ಮಂಟಪವನ್ನು ಸ್ಥಾಪಿಸಿದರು. ಆದರೆ ಇಂದಿನ ಸಮಾಜದಲ್ಲಿ ಏಕತೆ ಕೊರತೆಯಿರುವುದನ್ನು ಖರ್ಗೆ ವಿಷಾದಿಸಿದರು. ಡಾ. ಬಸವಲಿಂಗ ಪಟ್ಟದೇವರು ಮಾತನಾಡಿ, ಬಸವಣ್ಣನವರ ತತ್ವ ಸೇವೆಯಾಗಿದೆ. ಕೇವಲ ಪೂಜೆಗಿಂತ ದುಃಖದಲ್ಲಿರುವವರ ನೆರವಿಗೆ ಧಾವಿಸುವುದೇ ನಿಜವಾದ ಧರ್ಮ ಎಂದು ಹೇಳಿದರು. ಡಾ. ಚನ್ನಬಸವ ಪಟ್ಟದೇವರು ಭಾಲ್ಕಿಯಲ್ಲಿ ದೀನದಲಿತರಿಗೆ ಸಮಾನ ಅವಕಾಶ ಕಲ್ಪಿಸುವ ಕೆಲಸ ಮಾಡಿದ್ದಾರೆ. ಬಸವಣ್ಣನವರ ತತ್ವಗಳು ಕೇವಲ ಕರ್ನಾಟಕಕ್ಕೆ ಸೀಮಿತವಾಗಿಲ್ಲ, ವಿಶ್ವದಾದ್ಯಂತ ಪ್ರಸಾರವಾಗಿವೆ ಎಂದು ತಿಳಿಸಿದರು. ಉಪರಾಷ್ಟ್ರಪತಿಗಳು 75 ಲಕ್ಷ ರೂ. ದೇಣಿಗೆ ನೀಡಿರುವುದಾಗಿ ಅವರು ಹೇಳಿದರು. ಈ ಸಂದರ್ಭದಲ್ಲಿ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ, ಪೌರಾಡಳಿತ ಹಾಗೂ ಹಜ್ ಸಚಿವ ರಹೀಂ ಖಾನ್, ಸಂಸದ ಸಾಗರ್ ಖಂಡ್ರೆ, ಭಾಲ್ಕಿ ಹಿರೇಮಠದ ಡಾ. ಬಸವಲಿಂಗ್ ಪಟ್ಟದ್ದೇವರು, ಗುರುಬಸವ ಪಟ್ಟದೇವರು, ಗದಗ ಡಂಬಳದ ಸಿದ್ಧರಾಮ ಸ್ವಾಮೀಜಿ, ಮಾಜಿ ಕೇಂದ್ರ ಸಚಿವ ಭಗವಂತ್ ಖೂಬಾ, ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ, ಮಾಜಿ ಶಾಸಕ ಪ್ರಕಾಶ್ ಖಂಡ್ರೆ, ಬೀದರ್ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಬಾಬು ವಾಲಿ ಸೇರಿದಂತೆ ಶರಣ ಸಾಹಿತ್ಯ ಆಸಕ್ತರು, ಮಠದ ಭಕ್ತಾಧಿಗಳು, ಶಾಲಾ ಕಾಲೇಜು ವಿದ್ಯಾರ್ಥಿಗಳು ಹಾಗೂ ಜಿಲ್ಲೆಯ ವಿವಿಧ ಭಾಗಗಳ ಸಾಹಿತ್ಯಾಭಿಮಾನಿಗಳು ಉಪಸ್ಥಿತರಿದ್ದರು. ಬುದ್ಧ, ಮಹಾವೀರ್ ಜಯಂತಿಗೆ ರಾಷ್ಟ್ರ ಮಟ್ಟದಲ್ಲಿ ರಜೆ ನೀಡಲಾಗುತ್ತದೆ. ಅದೇ ರೀತಿಯಲ್ಲಿ ಬಸವಣ್ಣನವರ ಜಯಂತಿ ದಿನದಂದು ರಾಷ್ಟ್ರೀಯ ಮಟ್ಟದಲ್ಲಿ ರಜೆ ಘೋಷಣೆ ಮಾಡಬೇಕು. - ಡಾ. ಬಸವಲಿಂಗ ಪಟ್ಟದೇವರು.          

ವಾರ್ತಾ ಭಾರತಿ 22 Apr 2026 6:15 pm

Bidar | ವಿದ್ಯುತ್‌ ತಗುಲಿ ಲೈನ್‌ ಮ್ಯಾನ್ ಮೃತ್ಯು

ಬೀದರ್ : ವಿದ್ಯುತ್ ತಗುಲಿ ಲೈನ್‌ಮ್ಯಾನ್ ಒಬ್ಬರು ಮೃತಪಟ್ಟ ಘಟನೆ ಭಾಲ್ಕಿ ತಾಲೂಕಿನ ಖಟಕ್ ಚಿಂಚೋಳಿ ಗ್ರಾಮದಲ್ಲಿ ಬುಧವಾರ ನಡೆದಿದೆ. ಮೃತರನ್ನು ಬಿರೇಶ್ (31) ಎಂದು ಗುರುತಿಸಲಾಗಿದೆ. ಬುಧವಾರ ಮಧ್ಯಾಹ್ನ ಸುಮಾರು 12 ಗಂಟೆಗೆ ಆಪರೇಟರ್ ಪವನ್ ಅವರಿಗೆ ಕರೆ ಮಾಡಿ ಎಲ್‌ಸಿ (ಲೈನ್ ಕ್ಲಿಯರೆನ್ಸ್) ಪಡೆಯಲಾಗಿತ್ತು. ಬಳಿಕ ಬಿರೇಶ್ ಮತ್ತು ಸಚಿನ್ ಎಂಬ ಇಬ್ಬರು ಲೈನ್‌ಮ್ಯಾನ್‌ಗಳು ಕೆಲಸ ನಿರ್ವಹಿಸುತ್ತಿದ್ದರು. ಈ ವೇಳೆ ಬಿರೇಶ್ ಅವರು ಡಿಪಿ ಮೇಲೆ ಏರಿ ಒಂದು ಜಂಪ್ ನೀಡಿದ್ದಾರೆ. ಎರಡನೇ ಜಂಪ್ ನೀಡುವಾಗ ವಿದ್ಯುತ್ ಶಾಕ್ ತಗುಲಿ ಸ್ಥಳದಲ್ಲೇ ಕೆಳಗೆ ಬಿದ್ದಿದ್ದಾರೆ. ತಕ್ಷಣ ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿದೆಯಾದರೂ, ಮಾರ್ಗಮಧ್ಯದಲ್ಲೇ ಅವರು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಖಟಕ್ ಚಿಂಚೋಳಿ ಪೊಲೀಸ್ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ವಾರ್ತಾ ಭಾರತಿ 22 Apr 2026 6:05 pm

MI Vs CSK- ವಾಂಖೆಡೆ ಅಖಾಡದಲ್ಲಿ ಹೈವೋಲ್ಟೇಜ್ ಜಟಾಪಟಿ; ಧೋನಿ- ರೋಹಿತ್ ಶರ್ಮಾ ಪುನರಾಗಮನದಲ್ಲಿ ಯಾರ ಮೇಲುಗೈ?

MS Dhoni- Rohit Sharma Comeback Match- ಐಪಿಎಲ್ 2026ರ ಅತ್ಯಂತ ಹೈವೋಲ್ಟೇಜ್ ಪಂದ್ಯದಲ್ಲಿ ಐದು ಬಾರಿ ಚಾಂಪಿಯನ್ ಗಳಾಗಿರುವ ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಮುಖಾಮುಖಿಯಾಗಲಿವೆ. ಗಾಯದಿಂದ ಚೇತರಿಸಿಕೊಂಡಿರುವ ದಿಗ್ಗಜರಾದ ಎಂ.ಎಸ್. ಧೋನಿ ಮತ್ತು ರೋಹಿತ್ ಶರ್ಮಾ ಕಣಕ್ಕಿಳಿಯುತ್ತಿರುವುದು ಅಭಿಮಾನಿಗಳಲ್ಲಿ ಸಂಚಲನ ಮೂಡಿಸಿದೆ. ಉಭಯ ತಂಡಗಳು ತಲಾ ನಾಲ್ಕು ಅಂಕಗಳೊಂದಿಗೆ ಐಪಿಎಲ್ ಅಂಕಪಟ್ಟಿಯಲ್ಲಿ 7 ಮತ್ತು 8ನೇ ಸ್ಥಾನಗಳಲ್ಲಿವೆ. ಹಾಗಾಗಿ ಪ್ಲೇ-ಆಫ್ ಆಸೆ ಜೀವಂತವಾಗಿರಿಸಲು ಈ ಗೆಲುವು ಅನಿವಾರ್ಯವಾಗಿದೆ.

ವಿಜಯ ಕರ್ನಾಟಕ 22 Apr 2026 5:50 pm

ಮಗಳ ಮದುವೆಗಾಗಿ ಕೂಡಿಟ್ಟ ಉಳಿತಾಯದ ಹಣವನ್ನು ಪೋಲು ಮಾಡುವ ಶಂಕೆ: ಪತಿಯನ್ನೇ ಹತ್ಯೆಗೈದ ಪತ್ನಿ, ಮಕ್ಕಳು

ಮಹೋಬಾ: ಗ್ರಾಮವೊಂದರ ಚರಂಡಿಯಲ್ಲಿ ದೊರೆತಿದ್ದ ಮೃತದೇಹ ಪ್ರಕರಣ ಹೊಸ ತಿರುವು ಪಡೆದುಕೊಂಡಿದ್ದು, ಮಗಳ ಮದುವೆಗೆ ಕೂಡಿಟ್ಟ ಉಳಿತಾಯದ ಹಣವನ್ನು ತನ್ನ ಪತಿ ಪೋಲು ಮಾಡಿಬಿಡಬಹುದು ಎಂಬ ಶಂಕೆಯಲ್ಲಿ ಆತನನ್ನು ಆತನ ಪತ್ನಿ, ಪುತ್ರಿಯರು ಹಾಗೂ ಅಪ್ರಾಪ್ತ ಪುತ್ರನೇ ಹತ್ಯೆಗೈದಿರುವ ಸಂಗತಿ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಹರ್ ನಾರಾಯಣ್ ‍ಪ್ರಜಾಪತಿ (36) ಎಂಬ ವ್ಯಕ್ತಿಯ ಮೃತದೇಹವು ಎಪ್ರಿಲ್ 14ರಂದು ಉತ್ತರ ಪ್ರದೇಶದ ಮಹೋಬಾ ಜಿಲ್ಲೆಯ ಪನ್ವಾರಿ ಪೊಲೀಸ್ ಠಾಣೆ ವ್ಯಾಪ್ತಿಯ ಹರಿವಂತ್ ಪುರ ಬ್ರಾಹ್ಮಣನ್ ಗ್ರಾಮದ ಬಳಿಯ ಚರಂಡಿಯಲ್ಲಿ ಪತ್ತೆಯಾಗಿತ್ತು . ಬಳಿಕ, ತಮ್ಮ ಮೇಲೆ ಸಂಶಯ ಬಾರದಿರಲೆಂದು ಆರಂಭದಲ್ಲಿ ಪೊಲೀಸರನ್ನು ಸಂಪರ್ಕಿಸಿ ದೂರು ದಾಖಲಿಸಿದ್ದ ಮೃತ ವ್ಯಕ್ತಿಯ ಕುಟುಂಬದ ಸದಸ್ಯರು, ನನ್ನ ಪತಿ ನೆರೆಮನೆಯಾತನೊಂದಿಗೆ ಪದೇ ಪದೇ ಜಗಳವಾಡುತ್ತಿದ್ದುದರಿಂದ, ನಮಗೆ ಆತನ ಬಗ್ಗೆ ಅನುಮಾನವಿದೆ ಎಂದು ಆರೋಪಿಸಿದ್ದರು ಎಂದು ಮಂಗಳವಾರ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. “ಹೈಬತ್ ಪುರ ಗ್ರಾಮದ ಚರಂಡಿಯಲ್ಲಿ ಮೃತದೇಹ ಬಿದ್ದಿದೆ ಎಂಬ ಮಾಹಿತಿ ದೊರೆಯುತ್ತಿದ್ದಂತೆಯೇ ಪೊಲೀಸರ ತಂಡಗಳು ಸ್ಥಳಕ್ಕೆ ಧಾವಿಸಿ, ತಪಾಸಣೆ ನಡೆಸಿದವು. ಮೃತ ವ್ಯಕ್ತಿಯನ್ನು ಹರ್ ನಾರಾಯಣ್ ಪ್ರಜಾಪತಿ ಎಂದು ಗುರುತಿಸಲಾಯಿತು. ಆತನ ದೇಹದ ಮೇಲಿದ್ದ ಗಾಯದ ಗುರುತುಗಳನ್ನು ಪರಿಗಣಿಸಿ, ಹತ್ಯೆಗೈದಿರುವ ಪ್ರಕರಣ ಎಂಬ ಮೇಲ್ನೋಟದ ಸಂಶಯ ವ್ಯಕ್ತವಾಯಿತು. ಬಳಿಕ, ಕುಟುಂಬದ ಸದಸ್ಯರು ನೀಡಿದ ದೂರನ್ನು ಆಧರಿಸಿ ಪ್ರಕರಣ ದಾಖಲಿಸಿಕೊಳ್ಳಲಾಯಿತು” ಎಂದು ಪೊಲೀಸ್ ವರಿಷ್ಠಾಧಿಕಾರಿ ಶಶಾಂಕ್ ಸಿಂಗ್ ಸುದ್ದಿಗಾರರಿಗೆ ತಿಳಿಸಿದರು. ಈ ಪ್ರಕರಣದ ತನಿಖೆ ನಡೆಸಲು ವಿಶೇಷ ಕಾರ್ಯಾಚರಣೆ ತಂಡ ಹಾಗೂ ನಿಗಾವಣೆ ಘಟಕ ಸೇರಿದಂತೆ ಹಲವು ತಂಡಗಳನ್ನು ನಿಯೋಜಿಸಲಾಯಿತು ಎಂದು ಅವರು ಹೇಳಿದರು. “ನಾವು ಮೃತ ವ್ಯಕ್ತಿಯ ಕೊನೆಯ ಚಲನವಲನಗಳು, ಫೋನ್ ಕರೆ ದಾಖಲೆಗಳು ಹಾಗೂ ಇನ್ನಿತರ ಆಯಾಮಗಳನ್ನು ಪರಿಶೀಲಿಸಿದೆವು. ಆದರೆ, ಯಾವುದೇ ಖಚಿತ ಸುಳಿವುಗಳು ದೊರೆಯಲಿಲ್ಲ. ತನಿಖೆಗೆ ಕುಟುಂಬದ ಸದಸ್ಯರು ಅಸಹಕಾರ ತೋರುತ್ತಿದ್ದುದರಿಂದ ಅವರ ಮೇಲೆಯೇ ಅನುಮಾನ ತಿರುಗಿತು” ಎಂದು ಅವರು ತಿಳಿಸಿದರು. ತನಿಖಾಧಿಕಾರಿಗಳು ಪ್ರಕರಣದ ಕುರಿತು ಆಳವಾಗಿ ಪ್ರಶ್ನಿಸಲು ಪ್ರಾರಂಭಿಸಿದಾಗ, ಕುಟುಂಬದ ಸದಸ್ಯರ ಹೇಳಿಕೆಯಲ್ಲಿ ಅಸ್ಥಿರತೆ ಕಂಡು ಬಂದಿತು. ಅವರನ್ನು ಸತತವಾಗಿ ವಿಚಾರಣೆಗೊಳಪಡಿಸಿದಾಗ, ಪ್ರಕರಣ ಬೆಳಕಿಗೆ ಬಂದಿತು. ಈ ಹತ್ಯೆ ಪ್ರಕರಣದಲ್ಲಿ ಮೃತ ವ್ಯಕ್ತಿಯ ಪತ್ನಿ ರಾಮ್ ಪ್ಯಾರಿ, ಪುತ್ರಿಯರಾದ ಜ್ಯೋತಿ, ಸೊನಾಲಿ, ಅಪ್ರಾಪ್ತ ಪುತ್ರ ಹಾಗೂ ಪುತ್ರಿಯೊಬ್ಬಳ ಸ್ನೇಹಿತ ಭಾಗಿಯಾಗಿರುವುದು ಬಯಲಾಗಿದೆ. ಈ ಎಲ್ಲರನ್ನೂ ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. “ವಿಚಾರಣೆಯ ವೇಳೆ, ಮೃತ ವ್ಯಕ್ತಿಯು ಮದ್ಯ ಹಾಗೂ ಜೂಜಾಟ ವ್ಯಸನಕ್ಕೀಡಾಗಿದ್ದ ಎಂದು ಕುಟುಂಬದ ಸದಸ್ಯರು ಹೇಳಿದ್ದಾರೆ. ಇತ್ತೀಚೆಗೆ ತನ್ನ ಪುತ್ರಿಯ ಮದುವೆಗೆಂದು ಜಾನುವಾರುಗಳನ್ನು ಮಾರಾಟ ಮಾಡಿದ್ದ ಮೃತ ವ್ಯಕ್ತಿ, ಅದರಿಂದ ಸುಮಾರು 82,500 ಅನ್ನು ಸಂಗ್ರಹಿಸಿದ್ದ. ಆ ಹಣವನ್ನು ಆತ ಪೋಲು ಮಾಡಬಹುದು ಎಂಬ ಶಂಕೆಯಿಂದ ಈ ಕೃತ್ಯ ನಡೆದಿದೆ” ಎಂದು ಶಶಾಂಕ್ ಸಿಂಗ್ ಹೇಳಿದ್ದಾರೆ. ಆರೋಪಿಗಳು ಸಾಕ್ಷ್ಯಾಧಾರಗಳನ್ನು ಅಳಿಸಿ ಹಾಕಲು ಹಾಗೂ ತನಿಖೆಯ ದಿಕ್ಕು ತಪ್ಪಿಸಲು ಪ್ರಯತ್ನಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. “ತನಿಖೆಯ ದಿಕ್ಕು ತಪ್ಪಿಸಲು ಆರೋಪಿಗಳು ಮೃತ ವ್ಯಕ್ತಿಯ ಮೊಬೈಲ್ ಫೋನ್ ಅನ್ನು ಎಸೆದು, ನಗದನ್ನು ಬಚ್ಚಿಟ್ಟಿದ್ದರು. ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ ಹಗ್ಗ, ಬಚ್ಚಿಟ್ಟಿದ್ದ 82,500 ರೂ. ನಗದು ಹಾಗೂ ಹಾನಿಗೀಡಾಗಿದ್ದ ಮೊಬೈಲ್ ಫೋನ್ ಅನ್ನು ವಶಪಡಿಸಿಕೊಳ್ಳಲಾಗಿದೆ” ಎಂದು ಅವರು ಹೇಳಿದ್ದಾರೆ. ಮತ್ತಷ್ಟು ತನಿಖೆ ಪ್ರಗತಿಯಲ್ಲಿದ್ದು, ಈ ಪ್ರಕರಣವನ್ನು ಭೇದಿಸಿದ ಪೊಲೀಸ್ ತಂಡಗಳಿಗೆ 10,000 ರೂ. ನಗದು ಬಹುಮಾನವನ್ನು ಘೋಷಿಸಲಾಗಿದೆ.

ವಾರ್ತಾ ಭಾರತಿ 22 Apr 2026 5:49 pm

ಕೊಡಗಿನಲ್ಲಿ ವಿದೇಶಿ ಮಹಿಳೆ ಮೇಲೆ ಅತ್ಯಾಚಾರ: ಜಾರ್ಖಂಡ್ ಮೂಲದ ಆರೋಪಿಗಳು ಅರೆಸ್ಟ್; ಘಟನೆ ಬಗ್ಗೆ ಗೃಹ ಸಚಿವರ ಸ್ಪಷ್ಟನೆ ಏನು

ಕೊಡಗಿನಲ್ಲಿ ವಿದೇಶಿ ಮಹಿಳೆ ಮೇಲೆ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರ್ಖಂಡ್ ಮೂಲದ ಆರೋಪಿಗಳು ಅರೆಸ್ಟ್ ಮಾಡಲಾಗಿದೆ ಎಂದು ಗೃಹ ಸಚಿವ ಡಾ. ಜಿ ಪರಮೇಶ್ವರ್ ಅವರು ಮಾಹಿತಿ ನೀಡಿದ್ದಾರೆ. ಇಂತಹ ಘಟನೆಗಳಿಂದ ರಾಜ್ಯಕ್ಕೆ ಅಥವಾ ಸಮಾಜಕ್ಕೆ ಕೆಟ್ಟ ಸಂದೇಶ ರವಾನೆ ಆಗುತ್ತದೆ. ವಿದೇಶಿಗರ ಮೇಲೆ ಇಂತಹ ಕೃತ್ಯಗಳು ಎಸಗಿದಾಗ ಏನು ಸಂದೇಶ ಹೋಗುತ್ತೆ. ಈ ನಿಟ್ಟಿನಲ್ಲಿ ಕೆಲವೊಂದು ಕಠಿಣ ಕ್ರಮಗಳನ್ನು ಕೈಗೊಳ್ಳಲಾಗಿದೆ. ಅಲ್ಲದೆ, ಹೋಂ ಸ್ಟೇ ಮಾಲೀಕರಿಗೆ ಸುತ್ತೋಲೆ ಹೊರಡಿಸಲಾಗಿದೆ. ಏನೆಲ್ಲಾ ಕ್ರಮಗಳನ್ನು ಕೈಗೊಳ್ಳಬೇಕು ಎಂಬ ಬಗ್ಗೆ ಎಸ್ ಒ ಪಿ ಹೊರಡಿಸಲಾಗಿದೆ ಎಂದು ತಿಳಿಸಿದರು.

ವಿಜಯ ಕರ್ನಾಟಕ 22 Apr 2026 5:49 pm

ತೃತೀಯ ಭಾಷೆಗೆ ಗ್ರೇಡ್ ಬದಲು ಅಂಕ ನೀಡುವಂತೆ ಹೈಕೋರ್ಟ್ ತೀರ್ಪು | ಸಿಎಂ ಜೊತೆ ಚರ್ಚಿಸಿ ತೀರ್ಮಾನ : ಸಚಿವ ಮಧು ಬಂಗಾರಪ್ಪ

ಶಿವಮೊಗ್ಗ : ತೃತೀಯ ಭಾಷೆಗೆ ಗ್ರೇಡ್ ಬದಲು ಅಂಕ ನೀಡುವಂತೆ ರಾಜ್ಯ ಹೈಕೋರ್ಟ್ ತೀರ್ಪು ನೀಡಿದ್ದು, ಮುಖ್ಯಮಂತ್ರಿಗಳ ಜೊತೆ ಚರ್ಚೆ ನಡೆಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸರಕಾರದ ನಿರ್ಧಾರ ಪ್ರಶ್ನಿಸಿ ಸಾರ್ವಜನಿಕರೊಬ್ಬರು ಈ ಮೊದಲು ಪಿಐಎಲ್ ಹಾಕಿದಾಗ ಕೋರ್ಟ್ ರದ್ದು ಮಾಡಿತ್ತು. ಬಹಳ ಸಂತೋಷ ಆಗಿತ್ತು. ಈಗ ಮತ್ತೊಂದು ಪ್ರಕರಣದಲ್ಲಿ ಹೈಕೋರ್ಟ್ ತೀರ್ಪು ನೀಡಿದೆ. ಈ ಬಾರಿ ಗ್ರೇಡ್ ಬದಲು ಅಂಕ ನೀಡಿ, ಮುಂದಿನ ಬಾರಿಗೆ ನಿರ್ಧಾರ ಪರಿಶೀಲಿಸಿ ಎಂದು ಆದೇಶಿಸಿದೆ. ಈ ವಿಚಾರದ ಬಗ್ಗೆ ಸಿಎಂ ಜೊತೆ ಚರ್ಚೆ ಮಾಡುತ್ತೇನೆ. ಯಾವುದೇ ವಿದ್ಯಾರ್ಥಿಗೆ ಸಮಸ್ಯೆ ಆಗದಂತೆ ನಿರ್ಧಾರ ಮಾಡುತ್ತೇವೆ ಎಂದರು. ಪಿಯುಸಿ ಫಲಿತಾಂಶದಂತೆ ಎಸೆಸೆಲ್ಸಿ ಫಲಿತಾಂಶವೂ ಕೂಡ ಈ ಬಾರಿ ಉತ್ತಮ ಫಲಿತಾಂಶ ಬರಲಿದ್ದು, ಸಾಕಷ್ಟು ಸುಧಾರಣೆಯಾಗಿದೆ. ಶೀಘ್ರದಲ್ಲೇ ಎಸೆಸೆಲ್ಸಿ ಫಲಿತಾಂಶ ಪ್ರಕಟಿಸಲಾಗುವುದು ಎಂದರು. ಸಮಸ್ಯತ್ಮಾಕ ಗ್ರಾಮಗಳ ಪಟ್ಟಿ ಸಿದ್ದ: ಬೇಸಿಗೆ ಅವಧಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಆಗದಂತೆ ಕ್ರಮ ಕೈಗೊಳ್ಳಲಾಗಿದೆ. ಸಿಎಂ ಈಗಾಗಲೇ ಡಿಸಿ, ಸಿಇಒ ಹಾಗೂ ಉಸ್ತುವಾರಿ ಸಚಿವರ ಜೊತೆ ಸಭೆ ನಡೆಸಿದ್ದಾರೆ. ಸಮಸ್ಯಾತ್ಮಕ ಗ್ರಾಮಗಳ ಬಗ್ಗೆ ಚರ್ಚಿಸಿದ್ದಾರೆ. ಟ್ಯಾಂಕರ್, ಬೋರ್ ವೆಲ್ ಗಳ ಬಗ್ಗೆ ಕ್ರಮ ವಹಿಸಲು ಸೂಚಿಸಿದ್ದಾರೆ. ನಾನೂ ಕೂಡ ಶಿವಮೊಗ್ಗದ ಜಿಲ್ಲಾಧಿಕಾರಿ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳ ಜೊತೆ ಚರ್ಚೆಮಾಡಿದ್ದೇನೆ. ಶಿವಮೊಗ್ಗ ನಗರದಲ್ಲಿ ಸುಮಾರು 20 ಕಡೆ ನೀರಿನ ಸಮಸ್ಯೆ ತಲೆದೋರಬಹುದು ಎಂದು ಸೂಚಿಸಲಾಗಿದೆ. ಹಾಗೆಯೇ ಸೊರಬ ಸೇರಿದಂತೆ ಇತರೆ ತಾಲ್ಲೂಕುಗಳಲ್ಲಿಯೂ ಕೂಡ ಕುಡಿಯುವ ನೀರಿನ ಬಗ್ಗೆ ತೊಂದರೆಯಾಗುತ್ತದೆ ಎಂದು ನಿರೀಕ್ಷಿಸಲಾಗಿದೆ. ಈ ಹಿನ್ನಲೆಯಲ್ಲಿ ಎಲ್ಲಾ ಕಡೆ ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ. ಟ್ಯಾಂಕ್ ಮೂಲಕ ನೀರು ಸರಬರಾಜು, ಕೆಲವು ಕೊಳವೆಬಾವಿಗಳ ವಶಪಡಿಸಿಕೊಳ್ಳುವುದೂ ಸೇರಿದಂತೆ ಕುಡಿಯುವ ನೀರಿಗೆ ತೊಂದರೆಯಾಗದಂತೆ ನೋಡಿಕೊಳ್ಳಲಾಗುವುದು ಎಂದರು.   ಮಂಗನ ಕಾಯಿಲೆಯಿಂದ ನಾಲ್ಕು ಸಾವು: ಶಿವಮೊಗ್ಗ ಜಿಲ್ಲೆಯಲ್ಲಿ ಕೆಎಫ್‌ಡಿಯಿಂದ (ಮಂಗನ ಖಾಯಿಲೆ) ನಾಲ್ಕು ಜನರು ಬಲಿಯಾಗಿದ್ದಾರೆ. ಅದರಲ್ಲಿ ಹೊಸನಗರ-ಸಾಗರದಲ್ಲಿ ತಲಾ ಒಂದು, ತೀರ್ಥಹಳ್ಳಿಯಲ್ಲಿ ಇಬ್ಬರು ಸಾವು ಕಂಡಿದ್ದಾರೆ. ಈಗಾಗಲೇ ಆರೋಗ್ಯ ಸಚಿವರು, ಜಿಲ್ಲೆಗೆ ಭೇಟಿನೀಡಿ ಕೆಎಫ್‌ಡಿ ಬಗ್ಗೆ ಮುಂಜಾಗ್ರತೆ ಕ್ರಮಗಳ ಬಗ್ಗೆ ಸಭೆ ಮಾಡಿ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಎಲ್ಲಾ ತಾಲ್ಲೂಕು ಗಳಲ್ಲಿಯೂ ತಹಶೀಲ್ದಾರ್ ಅಧ್ಯಕ್ಷತೆಯನ್ನು ಸಮನ್ವಯ ಸಮಿತಿಯನ್ನು ರಚಿಸಲಾಗಿದೆ ಎಂದು ಸಚಿವರು ಹೇಳಿದರು. ಮಂಗನ ಕಾಯಿಲೆ ಕುರಿತು ಜ್ವರ ಸಮೀಕ್ಷೆ ಮಾಡಲಾಗುತ್ತಿದೆ. ಮಂಗಗಳ ಅಸಹಜ ಸಾವಿನ ಬಗ್ಗೆಯೂ ಸಮೀಕ್ಷೆ ನಡೆಸಲಾಗುತ್ತದೆ. ಇದಕ್ಕೆ ಔಷಧಿ ಇಲ್ಲ. ಆದರೂ ಕೂಡ ಕಾಡಿಗೆ ಮತ್ತು ತೋಟಗಳಿಗೆ ತೆರಳುವವರಿಗೆ ಡೇಪಾ ತೈಲ ವಿತರಿಸಲಾಗಿದೆ. ಇದರ ಜೊತೆಗೆ ಜ್ವರ ಪರೀಕ್ಷೆಯನ್ನು ಕೂಡ ಜಿಲ್ಲಾದ್ಯಂತ ಮಾಡಲಾಗಿದೆ ಎಂದರು. ಹೊಸನಗರ ತಾಲ್ಲೂಕಿನಲ್ಲಿ 1488 ರಕ್ತ ಮಾದರಿ, ಸಾಗರ ತಾಲ್ಲೂಕಿನಲ್ಲಿ 2640, ತೀರ್ಥಹಳ್ಳಿಯಲ್ಲಿ 2451, ಶಿಕಾರಿಪುರದಲ್ಲಿ 266, ಭದ್ರಾವತಿಯಲ್ಲಿ 147, ಸೊರಬದಲ್ಲಿ 256, ಶಿವಮೊಗ್ಗ ತಾಲ್ಲೂಕಿನಲ್ಲಿ 110 ಪರೀಕ್ಷೆಯನ್ನು ಮಾಡಲಾಗಿದ್ದು, ಒಟ್ಟು 104 ಜನರಿಗೆ ಪಾಸಿಟಿವ್ ಎಂದು ಗೊತ್ತಾಗಿದೆ. 81 ಜನರು ಗುಣಮುಖರಾಗಿದ್ದಾರೆ. ಇನ್ನೂ 19ಜನರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಶಿವಮೊಗ್ಗ, ಸೊರಬ, ಭದ್ರಾವತಿ ತಾಲ್ಲೂಕುಗಳಲ್ಲಿ ಯಾರಿಗೂ ಪಾಸಿಟಿವ್ ಇಲ್ಲ ಎಂದು ವಿವರ ನೀಡಿದರು. ಮಹಿಳಾ ಮೀಸಲಾತಿಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಈಗಾಗಲೇ 2023ರಲ್ಲಿಯೇ ಮೀಸಲಾತಿಗೆ ಒಪ್ಪಿಗೆ ಸಿಕ್ಕಿತ್ತು. ರಾಷ್ಟ್ರಪತಿಗಳ ಅಂಕಿತವಾಗಿತ್ತು. ಆದರೂ ಕೂಡ ಏಕೆ ಜಾರಿಗೆ ತರಲಿಲ್ಲ ? ಇದರ ಹಿಂದೆ ರಾಜಕೀಯ ಹಿತಾಸಕ್ತಿ ಇದೆ ಅಷ್ಟೇ ಎಂದರು. ಪತ್ರಿಕಾಗೋಷ್ಟಿಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್.ಪ್ರಸನ್ನಕುಮಾರ್, ಜವಳಿ ಅಭಿವೃದ್ಧಿ ನಿಗಮದ ಕೆ.ಚೇತನ್‌ಗೌಡ, ಜಿಲ್ಲಾ ವಕ್ತಾರ ಜಿ.ಡಿ. ಮಂಜುನಾಥ್, ಪ್ರಮುಖರಾದ ಕಲಿಂಪಾಷಾ, ಶಿವಕುಮಾರ್, ಶಿವಣ್ಣ, ಸಿದ್ಧಪ್ಪ, ಗಿತೇಂದ್ರ ಸೇರಿದಂತೆ ಹಲವರಿದ್ದರು.

ವಾರ್ತಾ ಭಾರತಿ 22 Apr 2026 5:48 pm

Delhi | ಪಾಕ್‌ ಮೂಲದ ಗ್ಯಾಂಗ್‌ ಸ್ಟರ್ ಜೊತೆ ಸಂಪರ್ಕ ಆರೋಪ: ರಾಜ್‌ವೀರ್, ವಿವೇಕ್ ಬಂಜಾರಾ ಬಂಧನ

ದಿಲ್ಲಿ –ಎನ್‌ಸಿಆರ್ ಪ್ರದೇಶದಲ್ಲಿ ದಾಳಿಗೆ ಸಂಚು ಹೂಡಿದ್ದ ಆರೋಪಿಗಳು

ವಾರ್ತಾ ಭಾರತಿ 22 Apr 2026 5:47 pm

Ballari | ಅಕ್ರಮ ಕಬ್ಬಿಣ ಅದಿರು ಸಾಗಣೆ ಬಯಲು: ಚೆಕ್‌ಪೋಸ್ಟ್ ವೈಫಲ್ಯಕ್ಕೆ ಸಂಸದ ಇ.ತುಕರಾಂ ಆಕ್ರೋಶ

ಸಂಡೂರು/ಬಳ್ಳಾರಿ : ಬಳ್ಳಾರಿ ಜಿಲ್ಲೆಯಲ್ಲಿ ಅಕ್ರಮ ಕಬ್ಬಿಣ ಅದಿರು ಸಾಗಾಣೆ ಮತ್ತೆ ತಲೆದೋರಿರುವುದು ಬಹಿರಂಗವಾಗಿದ್ದು, ಈ ಬಾರಿ ಸ್ವತಃ ಲೋಕಸಭಾ ಸದಸ್ಯ ಇ.ತುಕರಾಂ ಸ್ಥಳಕ್ಕೆ ಭೇಟಿ ನೀಡಿ ದಂಧೆಯ ಅಸಲಿ ಮುಖವನ್ನೇ ಹೊರತಂದಿದ್ದಾರೆ. ಜಿಲ್ಲೆಯ ಗಣಿ ಪ್ರದೇಶಗಳಿಂದ ಪ್ರತಿದಿನವೂ 1,500ಕ್ಕೂ ಹೆಚ್ಚು ಲಾರಿಗಳಲ್ಲಿ ಕಬ್ಬಿಣ ಅದಿರು ಜಿಂದಾಲ್ ಉಕ್ಕು ಕಾರ್ಖಾನೆ ಸೇರಿದಂತೆ ವಿವಿಧ ಕೈಗಾರಿಕೆಗಳಿಗೆ ಸಾಗಾಟವಾಗುತ್ತಿದೆ. ಒಂದು ಲಾರಿಯಲ್ಲಿ ಸಾಮಾನ್ಯವಾಗಿ 18ರಿಂದ 40 ಟನ್‌ವರೆಗೆ ಅದಿರು ಸಾಗಣೆ ನಡೆಯುತ್ತಿದೆ ಎಂದು ತಿಳಿದು ಬಂದಿದೆ. ನಿಯಮಾನುಸಾರ ಗಣಿ ಪ್ರದೇಶದಲ್ಲೇ ಪರ್ಮಿಟ್ ಸೃಷ್ಟಿಸಿ ಅದರಲ್ಲಿ ಸಾಗಾಣೆಯ ಪ್ರಮಾಣ ಮತ್ತು ಗಮ್ಯಸ್ಥಾನವನ್ನು ದಾಖಲಿಸಲಾಗುತ್ತದೆ. ಬಳಿಕ ಬನ್ನಿಹಟ್ಟಿ ಭಾಗದಲ್ಲಿರುವ ಚೆಕ್‌ಪೋಸ್ಟ್‌ಗಳಲ್ಲಿ ಲಾರಿಗಳ ತೂಕವನ್ನು ವೇಬ್ರಿಡ್ಜ್ ಮೂಲಕ ಪರಿಶೀಲಿಸಿ, ಪರ್ಮಿಟ್‌ಗಳಿಗೆ ಹೊಂದಿಕೆಯಾಗುತ್ತಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ಆದರೆ, ವಾಸ್ತವದಲ್ಲಿ ಪರಿಸ್ಥಿತಿ ಭಿನ್ನವಾಗಿದೆ. ನಾಲ್ಕು ಚೆಕ್‌ಪೋಸ್ಟ್‌ಗಳಲ್ಲಿ ಮೂರು ತಿಂಗಳಿಗೂ ಹೆಚ್ಚು ಕಾಲದಿಂದ ಮೂರು ಕಾರ್ಯನಿರ್ವಹಿಸದೇ ಕೆಟ್ಟು ನಿಂತಿದ್ದು, ಕೇವಲ ಒಂದೇ ಚೆಕ್‌ಪೋಸ್ಟ್ ಮಾತ್ರ ಕಾರ್ಯನಿರ್ವಹಿಸುತ್ತಿದೆ. ಇದರ ಸದುಪಯೋಗ ಪಡೆದುಕೊಂಡ ಕೆಲವರು, ನಿಗದಿತ ಪ್ರಮಾಣಕ್ಕಿಂತ ಹೆಚ್ಚು ಅದಿರು ತುಂಬಿದ ಲಾರಿಗಳನ್ನು ಕೆಟ್ಟು ನಿಂತ ಚೆಕ್‌ಪೋಸ್ಟ್‌ಗಳ ಮೂಲಕ ಸಾಗಿಸಿ ಮುದ್ರೆ ಪಡೆದು ಅಕ್ರಮ ಸಾಗಾಣೆ ನಡೆಸುತ್ತಿರುವುದು ಬೆಳಕಿಗೆ ಬಂದಿದೆ. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಸಂಸದ ತುಕರಾಂ ಅವರು, “ಚೆಕ್‌ಪೋಸ್ಟ್‌ಗಳು ಕೆಟ್ಟಿರುವ ಬಗ್ಗೆ ಸಿಬ್ಬಂದಿ ಮೂರು ತಿಂಗಳ ಹಿಂದೆಯೇ ಮೇಲಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಆದರೂ ದುರಸ್ತಿ ಕಾರ್ಯ ಕೈಗೊಳ್ಳದಿರುವುದು ಸಂಶಯಕ್ಕೆ ಕಾರಣವಾಗಿದೆ” ಎಂದು ಪ್ರಶ್ನಿಸಿದ್ದಾರೆ. ಇದರ ಹಿಂದೆ ಗಣಿ ಇಲಾಖೆ ಅಧಿಕಾರಿಗಳ ಕೈವಾಡವಿರುವ ಸಾಧ್ಯತೆ ಇದೆ ಎಂದು ಗಂಭೀರ ಆರೋಪ ಮಾಡಿರುವ ಅವರು, ಕೋಟ್ಯಾಂತರ ರೂಪಾಯಿ ಮೌಲ್ಯದ ಅದಿರು ಅಕ್ರಮವಾಗಿ ಸಾಗಾಣೆಯಾಗಿರುವ ಶಂಕೆ ವ್ಯಕ್ತಪಡಿಸಿದ್ದಾರೆ. ಈ ಕುರಿತು ಗಣಿ ಇಲಾಖೆಯ ಅಧಿಕಾರಿಗಳನ್ನು ಸಂಪರ್ಕಿಸಲು ಪ್ರಯತ್ನಿಸಿದರೂ ಪ್ರತಿಕ್ರಿಯೆ ಲಭ್ಯವಾಗಿಲ್ಲ. ಸ್ಥಳೀಯ ಜನತೆ ಕೂಡ ಅಕ್ರಮ ಸಾಗಾಣೆ ನಡೆಯುತ್ತಿರುವುದನ್ನು ದೃಢಪಡಿಸುತ್ತಿದ್ದು, ಇದರ ಲಾಭ ಕೆಲ ಖಾಸಗಿ ಸಂಸ್ಥೆಗಳಿಗೆ ಹೋಗುತ್ತಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಜೊತೆಗೆ, ಕೆಲವು ಸಾರ್ವಜನಿಕ ಕ್ಷೇತ್ರದ ಸಂಸ್ಥೆಗಳ ಅಧಿಕಾರಿಗಳ ಪಾತ್ರವೂ ಪರಿಶೀಲನೆಗೆ ಒಳಪಡಬೇಕೆಂಬ ಒತ್ತಾಯವೂ ವ್ಯಕ್ತವಾಗಿದೆ.

ವಾರ್ತಾ ಭಾರತಿ 22 Apr 2026 5:35 pm

Ballari | ಅಕ್ರಮ ಪಡಿತರ ಅಕ್ಕಿ ಸಾಗಣೆ ಪತ್ತೆ : 17.46 ಟನ್ ಅಕ್ಕಿ ವಶ, ಮೂವರ ಬಂಧನ

ಬಳ್ಳಾರಿ/ಕಂಪ್ಲಿ : ತಾಲೂಕಿನ ನೆಲ್ಲುಡಿ-ಕೊಟ್ಟಾಲ್ ಗ್ರಾಮದ ದೊಡ್ಡ ಕಾಲುವೆ ಸಮೀಪ ಮಿನಿ ಗೂಡ್ಸ್ ವಾಹನದಲ್ಲಿ ಅಕ್ರಮವಾಗಿ ಪಡಿತರ ಅಕ್ಕಿ ಸಾಗಾಣೆ ಮಾಡುತ್ತಿದ್ದ ಪ್ರಕರಣವನ್ನು ಪೊಲೀಸರು ಪತ್ತೆಹಚ್ಚಿ 17.460 ಟನ್ ಅಕ್ಕಿಯನ್ನು ವಶಪಡಿಸಿಕೊಂಡಿದ್ದಾರೆ. ಕಂಪ್ಲಿ ತಾಲೂಕು ವ್ಯಾಪ್ತಿಯ ಹಾಗೂ ಕುರುಗೋಡು ಪೊಲೀಸ್ ಠಾಣಾ ಸರಹದ್ದಿನಲ್ಲಿ ಆಂಧ್ರಪ್ರದೇಶದ ಆದೋನಿಯ ಶೇಖಾವಲಿ, ಮಾನ್ವಿ ನಿವಾಸಿ ವಿನೋದ್ ಹಾಗೂ ಹಾಲದಾಳ್ ಗ್ರಾಮದ ವೀರಭದ್ರ ಅವರು ಅಕ್ರಮವಾಗಿ ಪಡಿತರ ಅಕ್ಕಿ ಸಾಗಾಣೆ ಮಾಡುತ್ತಿದ್ದರು ಎನ್ನಲಾಗಿದೆ. ಕುರುಗೋಡು ಪೊಲೀಸ್ ಠಾಣೆಯ ಪಿಎಸ್‌ಐ ಸುಪ್ರೀತ್ ವಿ. ಅವರ ನೇತೃತ್ವದಲ್ಲಿ ಸಿಬ್ಬಂದಿಗಳಾದ ವಿಜಯಕುಮಾರ್, ರಾಜಶೇಖರ್, ಆಂಜಿನಿ ಹಾಗೂ ಆಹಾರ ಇಲಾಖೆ ಇನ್ಸ್‌ಪೆಕ್ಟರ್ ಬಿ. ವಿರೂಪಾಕ್ಷ ಗೌಡ ಅವರ ಸಂಯುಕ್ತ ತಂಡ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದೆ. ಸುಮಾರು 87,300 ರೂ. ಮೌಲ್ಯದ ಅಕ್ಕಿ ಸೇರಿದಂತೆ ಮೂವರು ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದ್ದು, ಈ ಸಂಬಂಧ ಕುರುಗೋಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರೆದಿದೆ.

ವಾರ್ತಾ ಭಾರತಿ 22 Apr 2026 5:29 pm

ಹೋಮ್‌ಸ್ಟೇನಲ್ಲಿ ಅತ್ಯಾಚಾರ: ಸುತ್ತೋಲೆ ಹೊರಡಿಸಲಾಗಿದೆ ಎಂದ ಸಚಿವ ಪರಮೇಶ್ವರ್‌

ಬೆಂಗಳೂರು: ಕೊಡಗು ಜಿಲ್ಲೆಯ ಹೋಮ್‌ಸ್ಟೇ ಒಂದರಲ್ಲಿ ವಿದೇಶಿ ಮಹಿಳೆ‌ ಮೇಲೆ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಕ್ರಮ ತೆಗೆದುಕೊಂಡಿದ್ದಾರೆ ಎಂದು ಗೃಹ ಸಚಿವ ಪರಮೇಶ್ವರ ತಿಳಿಸಿದ್ದಾರೆ.ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ನಿಟ್ಟಿನಲ್ಲಿ ಈಗಾಗಲೇ ಹೋಮ್‌ಸ್ಟೇಗಳಿಗೆ ಸುತ್ತೋಲೆ ಹೊರಡಿಸಲಾಗಿದೆ. ಅದರ ಪ್ರಕಾರ ಹೋಮ್‌ ಮಾಲೀಕರು ನಡೆದುಕೊಳ್ಳಬೇಕು. ಯಾರು ಹೋಮ್‌ಸ್ಟೇ ನಡೆಸುತ್ತಾರೆ, ಪರವಾನಗಿ ಇದೆಯೇ? ಹೋಮ್‌ಸ್ಟೇ ಮಾಡಲು ಏನೆಲ್ಲ ಕ್ರಮ ತೆಗೆದುಕೊಳ್ಳಬೇಕು ಎಂಬುದನ್ನು ತಿಳಿಸಲಾಗಿದೆ ಎಂದರು.ಅದನ್ನು ಮೀರಿ ಘಟನೆಗಳಾದಾಗ ಕಾನೂನು ಪ್ರಕಾರ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ. ಕೊಡಗಿನಲ್ಲಿ ನಡೆದ ಘಟನೆಯ […] The post ಹೋಮ್‌ಸ್ಟೇನಲ್ಲಿ ಅತ್ಯಾಚಾರ: ಸುತ್ತೋಲೆ ಹೊರಡಿಸಲಾಗಿದೆ ಎಂದ ಸಚಿವ ಪರಮೇಶ್ವರ್‌ first appeared on Vistara News .

ವಿಸ್ತಾರ ನ್ಯೂಸ್ 22 Apr 2026 5:27 pm

ಚಿನ್ನ ಕಳ್ಳಸಾಗಣೆ ಪ್ರಕರಣ: ನಟಿ ರನ್ಯಾರಾವ್‌ ಗೆ ವರ್ಷದ ನಂತರ ಜಾಮೀನು

ಬೆಂಗಳೂರು: ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಸಿಕ್ಕಿಬಿದ್ದು ಪರಪ್ಪನ ಅಗ್ರಹಾರ ಜೈಲು ಸೇರಿದ್ದ ನಟಿ ರನ್ಯಾ ರಾವ್‌ ಗೆ ಆರ್ಥಿಕ ಅಪರಾಧಗಳ ತಡೆ ನ್ಯಾಯಾಲಯ ಒಂದು ವರ್ಷದ ನಂತರ ಜಾಮೀನು ಮಂಜೂರು ಮಾಡಿದೆ.ಕಳೆದ ವರ್ಷ ಮಾರ್ಚ್ 3ರಂದು ನಟಿ ರನ್ಯಾ ರಾವ್ 14.8 ಕೆಜಿ ಚಿನ್ನದ ಕಳ್ಳಸಾಗಣೆ ಮಾಡಿದ ಆರೋಪದ ಮೇಲೆ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಡಿಆರ್​ಐ ಕೈಯಲ್ಲಿ ಸಿಕ್ಕಿಬಿದ್ದಿದ್ದರು. ಪ್ರಕರಣ ಸಂಬಂಧ ಹೈಕೋರ್ಟ್ ಏಕಸದಸ್ಯ ಪೀಠ ಜಾಮೀನು ಅರ್ಜಿ ವಜಾ ಮಾಡಿತ್ತು. ಹೀಗಾಗಿ ರನ್ಯಾ ರಾವ್​ಗೆ […] The post ಚಿನ್ನ ಕಳ್ಳಸಾಗಣೆ ಪ್ರಕರಣ: ನಟಿ ರನ್ಯಾರಾವ್‌ ಗೆ ವರ್ಷದ ನಂತರ ಜಾಮೀನು first appeared on Vistara News .

ವಿಸ್ತಾರ ನ್ಯೂಸ್ 22 Apr 2026 5:27 pm

Kotturu | ಬಿರುಗಾಳಿ-ಆಲಿಕಲ್ಲು ಮಳೆಗೆ ಎಲೆಬಳ್ಳಿ ತೋಟ ನಾಶ : ರೈತನಿಗೆ ಭಾರೀ ನಷ್ಟ

ಕೊಟ್ಟೂರು (ವಿಜಯನಗರ) : ತಾಲೂಕಿನ ಹರಾಳು ಗ್ರಾಮದ ವಡ್ಡಿನಹಳ್ಳಿ ಕರಿಯಪ್ಪ ಅವರ ರೈತ ಕುಟುಂಬದ ಜೀವನಾಧಾರವಾಗಿದ್ದ ಒಂದು ಎಕರೆ ಎಲೆಬಳ್ಳಿ ತೋಟವು ಇತ್ತೀಚೆಗೆ ಸುರಿದ ಬಿರುಗಾಳಿ ಮತ್ತು ಆಲಿಕಲ್ಲು ಮಳೆಗೆ ಸಂಪೂರ್ಣವಾಗಿ ನೆಲಕ್ಕುರುಳಿದ್ದು, ರೈತನಿಗೆ ತೀವ್ರ ಆರ್ಥಿಕ ಸಂಕಷ್ಟ ಎದುರಾಗಿದೆ. ಮೂರು ವರ್ಷಗಳಿಂದ ಜತನ ಮಾಡಿಕೊಂಡು ಬೆಳೆಸಿದ್ದ ತೋಟವು ಇನ್ನೂ ಕೆಲವೇ ದಿನಗಳಲ್ಲಿ ಕಟಾವಿಗೆ ಸಿದ್ಧವಾಗಿದ್ದ ಸಂದರ್ಭದಲ್ಲಿ ಸಂಭವಿಸಿದ ಈ ಅನಾಹುತ, ರೈತನಿಗೆ ನುಂಗಲಾರದ ನಷ್ಟವಾಗಿದ್ದು, ಕುಟುಂಬದ ಬದುಕಿನ ಮೇಲೆ ದೊಡ್ಡ ಪರಿಣಾಮ ಬೀರಿದೆ. ಕೆ. ಅಯ್ಯಹಳ್ಳಿ ಗ್ರಾಮ ಪಂಚಾಯತಿಯ ಗ್ರಾಮ ಆಡಳಿತಾಧಿಕಾರಿ ಶಾರದಾ ಹಾಗೂ ಕಂದಾಯ ಮತ್ತು ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ರಾಜ್ಯ ಸರ್ಕಾರದಿಂದ ದೊರೆಯುವ ಬೆಳೆಹಾನಿ ಪರಿಹಾರ ನಿಗದಿತ ಅವಧಿಯಲ್ಲಿ ಸಿಗುವಂತಾದರೆ ಸ್ವಲ್ಪವಾದರೂ ನೆರವಾಗಲಿದೆ ಎಂದು ರೈತ ಕರಿಯಪ್ಪ ನಿರೀಕ್ಷೆ ವ್ಯಕ್ತಪಡಿಸಿದ್ದಾರೆ.

ವಾರ್ತಾ ಭಾರತಿ 22 Apr 2026 5:20 pm

Vijayanagara | ಸರಣಿ ಮನೆ ಕಳ್ಳತನ ಪ್ರಕರಣ : ಆರೋಪಿಯ ಬಂಧನ, 5.24 ಲಕ್ಷ ರೂ. ಮೌಲ್ಯದ ವಸ್ತುಗಳು ವಶ

ಹರಪನಹಳ್ಳಿ/ವಿಜಯನಗರ : ಜಿಲ್ಲೆಯ ಹರಪನಹಳ್ಳಿ ತಾಲೂಕಿನ ನೀಲಗುಂದ ಗ್ರಾಮದಲ್ಲಿ ನಡೆದ ಸರಣಿ ಮನೆ ಕಳ್ಳತನ ಪ್ರಕರಣಗಳನ್ನು ಪೊಲೀಸರು ಭೇದಿಸಿ ಒಬ್ಬ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತನಿಂದ ಒಟ್ಟು 5,24,900 ರೂ. ಮೌಲ್ಯದ ಚಿನ್ನಾಭರಣ, ಬೆಳ್ಳಿ ಸಾಮಾನುಗಳು, ನಗದು ಹಣ ಹಾಗೂ ಕಳ್ಳತನಕ್ಕೆ ಬಳಸಿದ ಬೈಕ್ ಅನ್ನು ವಶಪಡಿಸಿಕೊಳ್ಳಲಾಗಿದೆ. ಬಂಧಿತ ಆರೋಪಿಯನ್ನು ಜಿಲ್ಲೆಯ ಅರಸೀಕೆರೆ ಗ್ರಾಮದ ನಿವಾಸಿ ಇಲಿಯಾಝ್‌ ಎಂದು ಗುರುತಿಸಲಾಗಿದೆ. 2025ರ ನ.24ರಂದು ರಾತ್ರಿ ನೀಲಗುಂದ ಗ್ರಾಮದಲ್ಲಿ ಎರಡು ಮನೆಗಳಲ್ಲಿ ಹಾಗೂ ಡಿ.15ರಂದು ಮತ್ತೊಂದು ಮನೆಯಲ್ಲಿ ಬಂಗಾರ, ಬೆಳ್ಳಿ ಮತ್ತು ನಗದು ಹಣ ಕಳ್ಳತನವಾಗಿತ್ತು. ಈ ಕುರಿತು ಮನೆ ಮಾಲೀಕರು ಹರಪನಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ ಹಿನ್ನೆಲೆಯಲ್ಲಿ ಪ್ರತ್ಯೇಕ ಪ್ರಕರಣಗಳು ದಾಖಲಾಗಿದ್ದವು. ಪ್ರಕರಣಗಳ ತನಿಖೆಗೆ ವಿಜಯನಗರ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಎಸ್. ಜಾಹ್ನವಿ ಐಪಿಎಸ್, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಮಂಜುನಾಥಜಿ ಹಾಗೂ ಹರಪನಹಳ್ಳಿ ಉಪವಿಭಾಗದ ಡಿವೈಎಸ್‌ಪಿ ಸಂತೋಷ ಚವ್ಹಾಣ ಅವರ ಮಾರ್ಗದರ್ಶನದಲ್ಲಿ, ಸಿಪಿಐ ಮಹಾಂತೇಶ ಸಜ್ಜನ್ ಅವರ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿತ್ತು. ಪಿಎಸ್‌ಐ ಶಂಭುಲಿಂಗ ಹಿರೇಮಠ ಹಾಗೂ ಸಿಬ್ಬಂದಿಗಳಾದ ಆನಂದ ಕೆ.ಎಂ., ನಾಗರಾಜ ಯು., ಗುರುರಾಜ ಕೆ., ವಸಂತಕುಮಾರ ಹೆಚ್.ಎಂ., ಸಿದ್ದಿ ಮುಬಾರಕ್, ವೀರಯ್ಯ, ಎ.ಎಂ., ಮಾಬು ಸಾಹೇಬ್, ಗುರುಪ್ರಸಾದ್ ಹಾಗೂ ಚಾಲಕರಾದ ಇಮಾಮ್ ಸಾಹೇಬ್, ನಾಗರಾಜ ಎಲ್. ಮತ್ತು ಸಿಡಿಆರ್ ವಿಭಾಗದ ಕುಮಾರನಾಯ್ಕ ಅವರನ್ನೊಳಗೊಂಡ ತಂಡವು ಕಾರ್ಯಾಚರಣೆ ನಡೆಸಿ ಎ.19ರಂದು ಆರೋಪಿಯನ್ನು ಬಂಧಿಸಿದೆ. ಬಂಧಿತನಿಂದ ಹರಪನಹಳ್ಳಿ ಪೊಲೀಸ್ ಠಾಣೆಯ ಗುನ್ನೆ ನಂ. 256/2025, 257/2025, 268/2025 ಹಾಗೂ ಚಿಗಟೇರಿ ಪೊಲೀಸ್ ಠಾಣೆಯ ಗುನ್ನೆ ನಂ. 69/2025 ಪ್ರಕರಣಗಳಿಗೆ ಸಂಬಂಧಿಸಿದಂತೆ 3,14,900 ರೂ. ಮೌಲ್ಯದ ಚಿನ್ನಾಭರಣ ಮತ್ತು ಬೆಳ್ಳಿ ವಸ್ತುಗಳು, 1,10,000 ರೂ. ನಗದು ಹಾಗೂ 1,00,000 ರೂ. ಮೌಲ್ಯದ ಬೈಕ್ ಸೇರಿ ಒಟ್ಟು 5,24,900 ರೂ. ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. ಈ ಯಶಸ್ವಿ ಕಾರ್ಯಾಚರಣೆಗೆ ವಿಜಯನಗರ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಎಸ್.ಜಾಹ್ನವಿ ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಮಂಜುನಾಥಜಿ ತಂಡದ ಕಾರ್ಯವನ್ನು ಪ್ರಶಂಸಿಸಿದ್ದಾರೆ.

ವಾರ್ತಾ ಭಾರತಿ 22 Apr 2026 5:17 pm

Belagavi | ಮಗನನ್ನು ರಕ್ಷಿಸಲು ಹೋದ ತಾಯಿ ನದಿಯಲ್ಲಿ ಮುಳುಗಿ ಮೃತ್ಯು; ಪುತ್ರನಿಗಾಗಿ ಶೋಧ ಮುಂದುವರಿಕೆ

ಬೆಳಗಾವಿ : ನದಿಯಲ್ಲಿ ಮುಳುಗುತ್ತಿದ್ದ ಮಗನನ್ನು ರಕ್ಷಿಸಲು ಹೋಗಿದ್ದ ತಾಯಿ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಸಂಕೇಶ್ವರ ಪಟ್ಟಣದ ಹೊರವಲಯದಲ್ಲಿ ನಡೆದಿದೆ. ಸಂಕೇಶ್ವರ ನಿವಾಸಿ ಲಕ್ಷ್ಮೀ ಸುಧಾಕರ ಕುಟೋಳಿ (27) ಮೃತಪಟ್ಟವರು. ಅವರ 9 ವರ್ಷದ ಪುತ್ರ ಸುಪ್ರೀತ್ ನೀರಿನಲ್ಲಿ ಕಾಣೆಯಾಗಿದ್ದು, ಅಗ್ನಿಶಾಮಕ ದಳದ ಸಿಬ್ಬಂದಿ ಶೋಧ ಕಾರ್ಯಾಚರಣೆಯನ್ನು ಮುಂದುವರೆಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆಯ ವಿವರ: ಮಂಗಳವಾರ ಸಾಯಂಕಾಲ ತಾಯಿ ಮತ್ತು ಮಗ ಇಬ್ಬರೂ ಸಂಕೇಶ್ವರ ಪಟ್ಟಣದಲ್ಲಿರುವ ಶಂಕರಲಿಂಗ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ದೇವರ ದರ್ಶನದ ಬಳಿಕ ದೇವಸ್ಥಾನದ ಪಕ್ಕದಲ್ಲಿ ಹರಿಯುವ ಹಿರಣ್ಯಕೇಶಿ ನದಿಯ ತೀರಕ್ಕೆ ತೆರಳಿದ್ದಾರೆ. ಈ ವೇಳೆ ಬಾಲಕ ಸುಪ್ರೀತ್ ನದಿಯಲ್ಲಿ ಇಳಿದು ಈಜಲು ಯತ್ನಿಸಿದ್ದಾನೆ. ನದಿಯ ಆಳದ ಅರಿವಿಲ್ಲದೆ ಆತನು ಮುಳುಗಲು ಆರಂಭಿಸಿದ್ದಾನೆ ಎನ್ನಲಾಗಿದೆ. ಮಗನು ನೀರುಪಾಲಾಗುತ್ತಿರುವುದನ್ನು ಕಂಡ ತಾಯಿ ಲಕ್ಷ್ಮೀ ಆತಂಕಗೊಂಡು ತಕ್ಷಣವೇ ಆತನನ್ನು ರಕ್ಷಿಸಲು ನದಿಗೆ ಹಾರಿದ್ದಾರೆ. ಆದರೆ ಅವರಿಗೆ ಈಜು ಬಾರದ ಕಾರಣ ಇಬ್ಬರೂ ನೀರಿನಲ್ಲಿ ಮುಳುಗಿದ್ದಾರೆ. ಘಟನೆಯ ಮಾಹಿತಿ ತಿಳಿದ ಕೂಡಲೇ ಅಗ್ನಿಶಾಮಕ ದಳ ಹಾಗೂ ಸಂಕೇಶ್ವರ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿ ಶೋಧ ಕಾರ್ಯಾಚರಣೆ ಆರಂಭಿಸಿದರು. ಕಾರ್ಯಾಚರಣೆಯಲ್ಲಿ ಲಕ್ಷ್ಮೀ ಅವರ ಮೃತದೇಹ ಪತ್ತೆಯಾಗಿದೆ. ನದಿ ತೀರದಲ್ಲಿ ಬಾಲಕನ ಬಟ್ಟೆಗಳು ಪತ್ತೆಯಾಗಿರುವುದರಿಂದ, ಆತನು ನೀರಿನಲ್ಲಿ ಮುಳುಗಿರುವುದು ದೃಢಪಟ್ಟಿದೆ. ಪ್ರಸ್ತುತ ಬಾಲಕನಿಗಾಗಿ ನದಿಯಲ್ಲಿ ತೀವ್ರ ಶೋಧ ಕಾರ್ಯ ಮುಂದುವರಿದಿದ್ದು, ಸಂಕೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಾರ್ತಾ ಭಾರತಿ 22 Apr 2026 5:15 pm

Vijayanagara | ವಿದ್ಯುತ್ ತಂತಿ ಕಳ್ಳತನ ಪ್ರಕರಣ : 6 ಆರೋಪಿಗಳ ಬಂಧನ, 4.5 ಲಕ್ಷ ರೂ. ನಗದು ವಶ

ಹೂವಿನಹಡಗಲಿ/ವಿಜಯನಗರ :ಜಿಲ್ಲೆಯ ಹಡಗಲಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ವಿದ್ಯುತ್ ತಂತಿ ಕಳ್ಳತನ ಪ್ರಕರಣವನ್ನು ಪೊಲೀಸರು ಯಶಸ್ವಿಯಾಗಿ ಬಯಲುಗೊಳಿಸಿ 6 ಜನ ಆರೋಪಿಗಳನ್ನು ಬಂಧಿಸಿದ್ದು, ಸುಮಾರು 4,50,000 ರೂ. ನಗದು, 25 ಕೆ.ಜಿ. ವಿದ್ಯುತ್ ತಂತಿ ಹಾಗೂ ಸಾಗಣಿಕೆಗೆ ಬಳಸಿದ ವಾಹನವನ್ನು ವಶಪಡಿಸಿಕೊಂಡಿದ್ದಾರೆ. 2025ರ ನವೆಂಬರ್ 21ರಿಂದ 2026ರ ಫೆಬ್ರವರಿ 2ರವರೆಗೆ ಹಡಗಲಿ ತಾಲೂಕಿನ ಹೊಳಗುಂದಿ, ಹಂಪಸಾಗರ ರಸ್ತೆ ಸಮೀಪದ ಕ್ರಷರ್ ಪ್ರದೇಶ, ಕೊಯಿಲಾರ ಗಟ್ಟಿ ಹಾಗೂ ಕಾಗನೂರು-ಹೊನ್ನನಾಯಕನಹಳ್ಳಿ ರಸ್ತೆಯ ಭಾಗಗಳಲ್ಲಿ ವಿದ್ಯುತ್ ಕಂಬಗಳಲ್ಲಿ ಅಳವಡಿಸಿದ್ದ 11 ಕೆ.ವಿ. ಅಲ್ಯೂಮಿನಿಯಂ ತಂತಿಗಳನ್ನು ಕಳವು ಮಾಡಲಾಗಿತ್ತು. ಈ ಕುರಿತು ಜೆಸ್ಕಾಂ ಹೂವಿನಹಡಗಲಿ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಗದುಗಿನ ಕೇದಾರನಾಥ ಅವರು ಫೆ.18ರ, 2026ರಂದು ಹಡಗಲಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದ್ದರು. ವಿಜಯನಗರ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಎಸ್.ಜಾಹ್ನವಿ ಐಪಿಎಸ್ ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಮಂಜುನಾಥ ಅವರ ಮಾರ್ಗದರ್ಶನದಲ್ಲಿ, ಹರಪನಹಳ್ಳಿ ಉಪವಿಭಾಗದ ಡಿವೈಎಸ್‌ಪಿ ಡಾ. ಸಂತೋಷ ಚವ್ಹಾಣ ಮತ್ತು ಹಡಗಲಿ ವೃತ್ತ ನಿರೀಕ್ಷಕರಾದ ಎಂ.ಎಸ್. ಹೂಗಾರ ಅವರ ನೇತೃತ್ವದಲ್ಲಿ ವಿಶೇಷ ತಂಡವನ್ನು ರಚಿಸಲಾಗಿತ್ತು. ಪೊಲೀಸ್ ಉಪನಿರೀಕ್ಷಕರಾದ ಮಣಿಕಂಠ ಕೆ.ಹೆಚ್. ಅವರ ನೇತೃತ್ವದಲ್ಲಿ ಕಾರ್ಯನಿರ್ವಹಿಸಿದ ತಂಡದಲ್ಲಿ ನಾಗರಾಜ ಹಣ್ಣಿ, ಲಕ್ಷ್ಮಣ, ಖಲಂದರ, ಮಲ್ಲೇಶ, ಹಾಲೇಶ, ಅಶೋಕ ಕಂಠಿ, ಮರುಳಸಿದ್ದಪ್ಪ ಹಾಗೂ ರಾಜುನಾಯ್ಕ ಸೇರಿದ್ದರು. ತಂಡವು ಕಾರ್ಯಾಚರಣೆ ನಡೆಸಿ 6 ಆರೋಪಿಗಳನ್ನು ಬಂಧಿಸಿ ಕಳ್ಳತನಕ್ಕೆ ಸಂಬಂಧಿಸಿದ ವಸ್ತುಗಳನ್ನು ವಶಪಡಿಸಿಕೊಂಡಿದೆ. ಬಂಧಿತರಾದ ದುರುಗಪ್ಪ, ಗೋಣೆಪ್ಪ, ರವಿ ಸೊನ್ನದ, ಪ್ರವೀಣ, ಯಮನಪ್ಪ ಮತ್ತು ರವಿಕುಮಾರ್ ವಿವಿಧ ಗ್ರಾಮಗಳ ನಿವಾಸಿಗಳಾಗಿದ್ದು, ಕೂಲಿ ಕೆಲಸ, ಚಾಲಕ ಹಾಗೂ ಗುಜರಿ ವ್ಯಾಪಾರದಲ್ಲಿ ತೊಡಗಿಸಿಕೊಂಡಿದ್ದರು. ಈ ಯಶಸ್ವಿ ಕಾರ್ಯಾಚರಣೆಗೆ ವಿಜಯನಗರ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಎಸ್.ಜಾಹ್ನವಿ ಅವರು ಪೊಲೀಸ್ ತಂಡವನ್ನು ಪ್ರಶಂಸಿಸಿದ್ದಾರೆ.

ವಾರ್ತಾ ಭಾರತಿ 22 Apr 2026 5:12 pm

ಹಣಕಾಸು ವ್ಯವಹಾರಗಳ ವಿವಾದ | ನೇಪಾಳ ಗೃಹ ಸಚಿವ ಸುಧನ್ ಗುರುಂಗ್ ರಾಜೀನಾಮೆ

ಇತ್ತೀಚೆಗಷ್ಟೇ ಅಧಿಕಾರ ಸ್ವೀಕರಿಸಿದ್ದ ಸುಧನ್

ವಾರ್ತಾ ಭಾರತಿ 22 Apr 2026 5:09 pm

ತ್ರಿಶೂರ್ ಸ್ಫೋಟ: ‘ರಾಜ್ಯ ನಿರ್ದಿಷ್ಟ ವಿಪತ್ತು’ ಎಂದು ಘೋಷಿಸಿದ ಕೇರಳ ಸರಕಾರ

ತ್ರಿಶೂರ್ (ಕೇರಳ): ಕೇರಳದ ತ್ರಿಶೂರ್ ಜಿಲ್ಲೆಯ ಮುಂಡತಿಕೋಡ್ ನಲ್ಲಿರುವ ಪಟಾಕಿ ಉತ್ಪಾದನಾ ಘಟಕದಲ್ಲಿ ಮಂಗಳವಾರ ಸಂಭವಿಸಿದ ಸ್ಫೋಟದಲ್ಲಿ ಕನಿಷ್ಠ 12 ಜನರು ಮೃತಪಟ್ಟಿದ್ದು, ಈ ಘಟನೆಯನ್ನು ರಾಜ್ಯ-ನಿರ್ದಿಷ್ಟ ವಿಪತ್ತು ಎಂದು ಘೋಷಿಸಿರುವುದಾಗಿ ಬುಧವಾರ ಕಂದಾಯ ಸಚಿವ ಕೆ.ರಾಜನ್ ತಿಳಿಸಿದರು. ಇಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಕೆ.ರಾಜನ್, “ಸ್ಫೋಟ ಸಂಭವಿಸಿದ ಬಳಿಕ ಬೆಳಗ್ಗೆ ಮು‍ಖ್ಯಮಂತ್ರಿ ಪಿಣರಾಯಿ ವಿಜಯನ್ ಅಧ್ಯಕ್ಷತೆಯಲ್ಲಿ ನಡೆದ ವಿಶೇಷ ಆನ್ ಲೈನ್ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ” ಎಂದು ತಿಳಿಸಿದರು. ಸ್ಫೋಟದಲ್ಲಿ ಮೃತಪಟ್ಟವರ ಕುಟುಂಬಗಳಿಗೆ 14 ಲಕ್ಷ ರೂ. ಆರ್ಥಿಕ ನೆರವು ನೀಡಲೂ ಸಹ ನಿರ್ಧರಿಸಲಾಗಿದೆ ಎಂದು ಅವರು ಹೇಳಿದರು. ಈ ಸ್ಫೋಟವನ್ನು ರಾಜ್ಯ ನಿರ್ದಿಷ್ಟ ವಿಪತ್ತು ಎಂದು ಘೋಷಿಸಲು ಕೇರಳ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ರಾಜ್ಯ ಕಾರ್ಯಕಾರಿ ಸಮಿತಿಗೆ ಸೂಚನೆಗಳನ್ನು ನೀಡಲಾಗಿದೆ ಎಂದು ಅವರು ವಿವರಿಸಿದರು. ಇದರೊಂದಿಗೆ, ಘಟನೆ ಕುರಿತು ನ್ಯಾಯಾಂಗ ತನಿಖೆಗೂ ಸರಕಾರ ಆದೇಶಿಸಿದೆ. ನ್ಯಾ. ಸಿ.ಎನ್.ರಾಮಚಂದ್ರನ್ ನಾಯರ್ ನೇತೃತ್ವದ ಏಕಸದಸ್ಯ ಸಮಿತಿ ಈ ಕುರಿತು ತನಿಖೆ ನಡೆಸಲಿದೆ ಎಂದೂ ಅವರು ತಿಳಿಸಿದರು.

ವಾರ್ತಾ ಭಾರತಿ 22 Apr 2026 5:08 pm

Kalaburagi | ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ವೈಜ್ಞಾನಿಕ ಕ್ರಿಯಾ ಯೋಜನೆ ರೂಪಿಸಲು ಆಗ್ರಹ

ಕಲಬುರಗಿ: ಗೋವಿಂದರಾವ್‌ ನೇತೃತ್ವದ ನೂತನ ಪ್ರಾದೇಶಿಕ ಅಸಮತೋಲನಾ ನಿವಾರಣಾ ಆಯೋಗದ ವರದಿಯನ್ನು ಆಧರಿಸಿ ಕಲ್ಯಾಣ ಕರ್ನಾಟಕ ಪ್ರದೇಶದ ಸರ್ವಾಂಗೀಣ ಅಭಿವೃದ್ಧಿಗೆ ವೈಜ್ಞಾನಿಕ ಕ್ರಿಯಾ ಯೋಜನೆ ರೂಪಿಸಬೇಕು ಎಂದು ಕಲ್ಯಾಣ ಕರ್ನಾಟಕ ಹೋರಾಟ ಸಮಿತಿ ಸರ್ಕಾರವನ್ನು ಒತ್ತಾಯಿಸಿದೆ. ಸಮಿತಿಯ ಗೌರವಾಧ್ಯಕ್ಷ ಬಸವರಾಜ ದೇಶಮುಖ ಹಾಗೂ ಸಂಸ್ಥಾಪಕ ಅಧ್ಯಕ್ಷ ಡಾ.ಲಕ್ಷ್ಮಣ ದಸ್ತಿ ಅವರು ಪತ್ರಿಕಾ ಪ್ರಕಟಣೆ ನೀಡಿ, ಈ ಹಿಂದೆ ಎಸ್.ಎಂ. ಕೃಷ್ಣ ಅವರ ಸರ್ಕಾರದ ಅವಧಿಯಲ್ಲಿ ಪ್ರಾದೇಶಿಕ ಅಸಮತೋಲನಾ ನಿವಾರಣೆಗೆ ನಂಜುಂಡಪ್ಪ ನೇತೃತ್ವದಲ್ಲಿ ಸಮಿತಿ ರಚಿಸಲಾಗಿತ್ತು. 2002ರಲ್ಲಿ ಸಲ್ಲಿಸಲಾದ ನಂಜುಂಡಪ್ಪ ವರದಿಯ ಆಧಾರದಲ್ಲಿ ಹಿಂದುಳಿದ ಪ್ರದೇಶಗಳ ಅಭಿವೃದ್ಧಿಗೆ ಹಲವು ಯೋಜನೆಗಳು ಜಾರಿಗೆ ಬಂದಿದ್ದರೂ, ನಿರೀಕ್ಷಿತ ಮಟ್ಟದಲ್ಲಿ ಅಭಿವೃದ್ಧಿ ಸಾಧಿಸಲಾಗಿಲ್ಲ. ಕಲ್ಯಾಣ ಕರ್ನಾಟಕ ಪ್ರದೇಶದ ಮಾನವ ಅಭಿವೃದ್ಧಿ ಸೂಚ್ಯಂಕ ಇನ್ನೂ ಹಿಂದುಳಿದ ಸ್ಥಿತಿಯಲ್ಲಿರುವುದು ಆತಂಕಕಾರಿ ವಿಷಯವಾಗಿದೆ ಎಂದು ಅವರು ತಿಳಿಸಿದ್ದಾರೆ. ಪ್ರಸ್ತುತ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರ ಪ್ರಾದೇಶಿಕ ಅಸಮತೋಲನಾ ನಿವಾರಣೆಗೆ ಪ್ರೊ.ಗೋವಿಂದರಾವ ಅವರ ನೇತೃತ್ವದಲ್ಲಿ ಹೊಸ ಸಮಿತಿ ರಚಿಸಿ, ಬಜೆಟ್ ಅಧಿವೇಶನಕ್ಕೂ ಮುನ್ನವೇ ವರದಿ ಸಲ್ಲಿಸಲು ಸೂಚಿಸಿತ್ತು. ಅದರಂತೆ ಸಮಿತಿ ಸರ್ಕಾರಕ್ಕೆ ವರದಿ ಸಲ್ಲಿಸಿದೆ. ಈ ವರದಿಯನ್ನು ಗಂಭೀರವಾಗಿ ಪರಿಗಣಿಸಿ ತಕ್ಷಣ ನೀಲಿ ನಕ್ಷೆ ಸಿದ್ಧಪಡಿಸಿ, ಪ್ರಾದೇಶಿಕ ಅಸಮತೋಲನೆ ನಿವಾರಣೆಗೆ ವೈಜ್ಞಾನಿಕ ಆಧಾರದ ಮೇಲೆ ಕ್ರಿಯಾ ಯೋಜನೆ ರೂಪಿಸಿ, ಕಾಲಮಿತಿಯಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಜಾರಿಗೊಳಿಸಬೇಕು ಎಂದು ಸಮಿತಿಯ ಮುಖಂಡರು ಒತ್ತಾಯಿಸಿದ್ದಾರೆ.

ವಾರ್ತಾ ಭಾರತಿ 22 Apr 2026 5:05 pm

ಅಶ್ವಗಂಧ ಬಳಸುತ್ತಿದ್ದೀರಾ?; ಬಳಕೆಯನ್ನು ನಿಷೇಧಿಸಿದ FSSAI

ಭಾರತೀಯ ಆಹಾರ ಸುರಕ್ಷತೆ ಮತ್ತು ಮಾನದಂಡಗಳ ಪ್ರಾಧಿಕಾರವು ಅಶ್ವಗಂಧ ಎಲೆಗಳು ಮತ್ತು ಅವುಗಳ ಸಾರಗಳನ್ನು ಪೂರಕ ಆಹಾರವಾಗಿ ಬಳಸುವುದನ್ನು ನಿಷೇಧಿಸಿದೆ. ಕೇಂದ್ರ ಆಯುಷ್ ಸಚಿವಾಲಯವು ಸುರಕ್ಷತೆಯ ಕುರಿತು ಕಳವಳ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ ಭಾರತೀಯ ಆಹಾರ ಸುರಕ್ಷತೆ ಮತ್ತು ಮಾನದಂಡಗಳ ಪ್ರಾಧಿಕಾರವು (FSSAI) ಅಶ್ವಗಂಧ ಎಲೆಗಳು ಮತ್ತು ಅವುಗಳ ಸಾರಗಳನ್ನು ಪೂರಕ ಆಹಾರವಾಗಿ ಬಳಸುವುದನ್ನು ನಿಷೇಧಿಸಿದೆ. ಆಹಾರ ಸುರಕ್ಷತೆಯನ್ನು ನಿಯಂತ್ರಿಸುವ ಶೆಡ್ಯೂಲ್ IVರ ಇತ್ತೀಚೆಗಿನ ಸಲಹೆಯ ಪ್ರಕಾರ ಆರೋಗ್ಯ ಪೂರಕಗಳು, ಪೌಷ್ಠಿಕ ಔಷಧಿಗಳು ಮತ್ತು ವಿಶೇಷ ಆಹಾರ ಬಳಕೆಗಾಗಿ ಅಶ್ವಗಂಧದ ಬದಲಾಗಿ ಬಳಕೆಯಲ್ಲಿರುವ ಇತರ ಬೇರುಗಳು ಮತ್ತು ಅವುಗಳ ಸಾರಗಳನ್ನು ಮಾತ್ರ ಬಳಸಲು ಅನುಮತಿಸಲಾಗಿದೆ. “ಪೂರಕ ಉತ್ಪನ್ನಗಳ ಕೆಲವು ತಯಾರಕರು ಅಶ್ವಗಂಧ ಎಲೆಗಳು ಮತ್ತು ಅವುಗಳ ಸಾರವನ್ನು ತಮ್ಮ ಉತ್ಪನ್ನಗಳಲ್ಲಿ ಬಳಸುತ್ತಿದ್ದಾರೆ ಎಂದು FSSAI ಗಮನಕ್ಕೆ ತರಲಾಗಿದೆ. ಅಶ್ವಗಂಧ ಎಲೆಗಳನ್ನು ಹಸಿಯಾಗಿ ಅಥವಾ ಸಾರವನ್ನು ಅಥವಾ ಇತರ ಯಾವುದೇ ರೂಪದಲ್ಲಿ ಬಳಸುವುದನ್ನು ನಿಯಮಗಳ ಅಡಿ ಅನುಮತಿಸಲಾಗುವುದಿಲ್ಲ ಎಂದು ಸ್ಪಷ್ಟಪಡಿಸಿದೆ” ಎಂದು FSSAI ಹೇಳಿದೆ. ಅದಾಫ್ಟೋಜೆನ್ ಆಗಿ ಜಾಗತಿಕವಾಗಿ ಜನಪ್ರಿವಾಗಿರುವ ಅಶ್ವಗಂಧವನ್ನು ಸಾಮಾನ್ಯವಾಗಿ ಶಕ್ತಿ ಮತ್ತು ಲೈಂಗಿಕ ಸ್ವಾಸ್ಥ್ಯವನ್ನು ಹೆಚ್ಚಿಸಲು ನೈಸರ್ಗಿಕ ಪೂರಕವಾಗಿ ಮಾರಾಟ ಮಾಡಲಾಗುತ್ತದೆ. ವಿಶೇಷವಾಗಿ ಪುರುಷರ ಬಳಕೆಗೆ ವಿವಿಧ ರೂಪಗಳಲ್ಲಿ ಲಭ್ಯವಿದೆ. “ಅಡಾಪ್ಟೋಜೆನ್ ಆಗಿ ಅಶ್ವಗಂಧವು ದೇಹದ ಒತ್ತಡ ನಿಭಾಯಿಸಲು ಮತ್ತು ಸಮತೋಲನ ಸ್ಥಾಪಿಸಲು ನೆರವಾಗುತ್ತದೆ” ಎಂದು ಆಹಾರ ತಜ್ಞೆ ಮತ್ತು ಮಧುಮೇಹ ತಜ್ಞೆಯಾಗಿರುವ ಕನಿಕಾ ಮಲ್ಹೋತ್ರ ಅಭಿಪ್ರಾಯಪಟ್ಟಿದ್ದಾರೆ. “ಶತಮಾನಗಳಿಂದ ನಿದ್ರೆಯನ್ನು ಬೆಂಬಲಿಸಲು, ಆತಂಕವನ್ನು ಕಡಿಮೆ ಮಾಡಲು, ಶಕ್ತಿಯ ಮಟ್ಟವನ್ನು ಸುಧಾರಿಸಲು ಮತ್ತು ಒಟ್ಟು ಚೈತನ್ಯ ಹೆಚ್ಚಿಸಲು ಅಶ್ವಗಂಧ ಬಳಕೆಯಾಗುತ್ತಿದೆ. ಸಸ್ಯದ ಬೇರನ್ನು ಚಿಕಿತ್ಸಕವಾಗಿ ಬಳಸಲಾಗುತ್ತದೆ. ಸಾಮಾನ್ಯವಾಗಿ ಅದರ ಪುಡಿ, ಕಷಾಯ ಅಥವಾ ಕ್ಯಾಪ್ಸೂಲ್ಗಳನ್ನು ಪ್ರಮಾಣೀಕೃತ ಸಾರವಾಗಿ ಸೇವಿಸಲಾಗುತ್ತದೆ. ಆಧುನಿಕ ಪೂರಕಗಳು ಸಹ ಹೆಚ್ಚಾಗಿ ಬೇರಿನ ಸಾರಗಳನ್ನು ಅವಲಂಬಿಸಿವೆ. ಏಕೆಂದರೆ ಅವುಗಳನ್ನು ಉತ್ತಮವಾಗಿ ಅಧ್ಯಯನ ಮಾಡಲಾಗುತ್ತದೆ ಮತ್ತು ಸೂಕ್ತ ಪ್ರಮಾಣದಲ್ಲಿ ಬಳಸಿದಾಗ ಮಾತ್ರ ಸುರಕ್ಷಿತವೆಂದು ಪರಿಗಣಿಸಲಾಗುತ್ತದೆ” ಎಂದು ಕನ್ನಿಕಾ ತಿಳಿಸಿದ್ದಾರೆ. ಅಶ್ವಗಂಧದ ಎಲೆಗಳಲ್ಲಿ ಹೆಚ್ಚಿನ ಮಟ್ಟದ ರಿಯಾಕ್ಟಿವ್ ವಿಥನೊಲೈಡ್ಗಳಿರುತ್ತವೆ. ವಿಶೇಷವಾಗಿ ವಿಥಫರಿನ್-ಎ ಲಿವರ್ ಟಾಕ್ಸಿಸಿಟಿ, ಗ್ಯಾಸ್ಟ್ರೋಇನ್ಟೆಸ್ಟಿನಲ್ ರೋಗ ಅಥವಾ ಸಂಭಾವ್ಯ ನ್ಯೂರೋಟಾಕ್ಸಿಕ್ ಪರಿಣಾಮಗಳನ್ನು ತರುತ್ತದೆ ಎಂದು FSSAI ಹೇಳಿದೆ. “ಅನುಮತಿಸಲಾದ ಸಸ್ಯದ ಭಾಗಗಳನ್ನು ಬಳಸುತ್ತಿರುವ ಆಹಾರ ವ್ಯಾಪಾರ ನಿರ್ವಾಹಕರ ವಿರುದ್ಧ ಕಟ್ಟುನಿಟ್ಟಿನ ಜಾಗರೂಕತೆ ಕಾಯ್ದುಕೊಳ್ಳಲು ಮತ್ತು ಕಾನೂನು ಕ್ರಮ ಕೈಗೊಳ್ಳಲು” FSSAI ಅಧಿಕಾರಿಗಳಿಗೆ ಸೂಚನೆ ನೀಡಿದೆ. ಹೆಚ್ಚಿನ ಪಾರದರ್ಶಕತೆಗಾಗಿ ಉತ್ಪನ್ನದ ಲೇಬಲ್ಗಳನ್ನು ಬಳಸಲಾದ ಸಸ್ಯದ ಭಾಗವನ್ನು ಸ್ಪಷ್ಟವಾಗಿ ನಿರ್ದಿಷ್ಟಪಡಿಸಲು ಕಂಪನಿಗಳಿಗೆ ನಿರ್ದೇಶನ ನೀಡಲಾಗಿದೆ. ಕೃಪೆ: indianexpress.com

ವಾರ್ತಾ ಭಾರತಿ 22 Apr 2026 5:04 pm

Kalaburagi | ಮನೆಗೊಂದು ಗ್ರಂಥಾಲಯದಿಂದ ಪುಸ್ತಕ ಪ್ರೀತಿ ವೃದ್ಧಿ: ಡಾ.ಶೈಲಜಾ ಬಾಗೇವಾಡಿ

ಕಲಬುರಗಿ: ಮನೆಗೊಂದು ಗ್ರಂಥಾಲಯ ಯೋಜನೆಯ ಮೂಲಕ ಸಾರ್ವಜನಿಕರಲ್ಲಿ ಪುಸ್ತಕ ಓದುವ ಅಭ್ಯಾಸವನ್ನು ಹೆಚ್ಚಿಸುವುದು ಅತ್ಯಂತ ಅಗತ್ಯವಾಗಿದೆ ಎಂದು ಸಾಹಿತಿ ಡಾ. ಶೈಲಜಾ ಬಾಗೇವಾಡಿ ಅಭಿಪ್ರಾಯಪಟ್ಟರು. ನಗರದ ಕೊಟನೂರ (ಡಿ) ಬಡಾವಣೆಯಲ್ಲಿ ಪುಸ್ತಕ ಪ್ರೇಮಿ ಶಿಕ್ಷಕರಾದ ಚಂದ್ರಶೇಖರ್ ಕಟ್ಟಿಮನಿ ಅವರ ಮನೆಯಲ್ಲಿ ಆಯೋಜಿಸಿದ್ದ ಮನೆಗೊಂದು ಗ್ರಂಥಾಲಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕನ್ನಡ ಪುಸ್ತಕ ಪ್ರಾಧಿಕಾರವು ಪ್ರತಿಯೊಬ್ಬರ ಮನೆಯಲ್ಲಿ ಗ್ರಂಥಾಲಯ ಸ್ಥಾಪಿಸಲು ಕೈಗೊಂಡಿರುವ ಈ ಯೋಜನೆ ಶ್ಲಾಘನೀಯ ಎಂದು ಹೇಳಿದರು. ಇಂದಿನ ವಿದ್ಯಾರ್ಥಿಗಳು ಮೊಬೈಲ್‌ಗಳತ್ತ ಹೆಚ್ಚು ಆಕರ್ಷಿತರಾಗುತ್ತಿರುವ ಹಿನ್ನೆಲೆಯಲ್ಲಿ, ಪುಸ್ತಕ ಓದುವ ಅಭ್ಯಾಸವನ್ನು ಬೆಳೆಸುವುದು ಅತ್ಯವಶ್ಯಕವಾಗಿದೆ ಎಂದು ಅವರು ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪುಸ್ತಕ ಪ್ರಾಧಿಕಾರದ ಸದಸ್ಯರಾದ ಬಿ.ಎಚ್. ನಿರಗುಡಿ ಮಾತನಾಡಿ, ಪ್ರಾಧಿಕಾರವು ವಿವಿಧ ಸಾಹಿತ್ಯಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರ ಜೊತೆಗೆ ಶಾಲಾ-ಕಾಲೇಜುಗಳಲ್ಲಿ ಪ್ರಬಂಧ ಸ್ಪರ್ಧೆ, ರಸಪ್ರಶ್ನೆ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಣೆ ಮಾಡುವುದು ಹಾಗೂ ಮನೆಗಳಲ್ಲಿ ಗ್ರಂಥಾಲಯ ನಿರ್ಮಾಣಕ್ಕೆ ಉತ್ತೇಜನ ನೀಡುವುದು ಶ್ಲಾಘನೀಯ ಕಾರ್ಯವಾಗಿದೆ ಎಂದು ಹೇಳಿದರು. ಗ್ರಂಥಾಲಯವನ್ನು ಸ್ಥಾಪಿಸಿರುವ ಶಿಕ್ಷಕರಾದ ಚಂದ್ರಶೇಖರ್ ಕಟ್ಟಿಮನಿ ಮಾತನಾಡಿ, ಸ್ಪರ್ಧಾತ್ಮಕ ಪರೀಕ್ಷೆಗಳ ಸಾವಿರಾರು ಪುಸ್ತಕಗಳನ್ನು ಸಂಗ್ರಹಿಸಿ ವಿದ್ಯಾರ್ಥಿಗಳಿಗೆ ಓದಲು ನೀಡುತ್ತಿದ್ದೇನೆ. ಮುಂದಿನ ದಿನಗಳಲ್ಲಿ ಇನ್ನಷ್ಟು ದೊಡ್ಡ ಗ್ರಂಥಾಲಯ ನಿರ್ಮಿಸುವ ಯೋಜನೆ ಹೊಂದಿದ್ದೇನೆ ಎಂದು ತಿಳಿಸಿದರು. ಜಿಲ್ಲಾ ಜಾಗೃತಿ ಸಮಿತಿಯ ಸಂಚಾಲಕರಾದ ಡಾ. ಶೋಭಾದೇವಿ ಚೆಕ್ಕಿ ಕಾರ್ಯಕ್ರಮ ನಿರ್ವಹಿಸಿ, ಕಲಬುರಗಿ ನಗರದಲ್ಲಿ ಸಾವಿರ ಮನೆಗಳಲ್ಲಿ ಮನೆಗೊಂದು ಗ್ರಂಥಾಲಯ ಯೋಜನೆ ಜಾರಿಗೆ ತರಲು ಉದ್ದೇಶಿಸಿದ್ದೇವೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಯುವ ಸಾಹಿತಿ ಚಾಮರಾಜ ದೊಡ್ಡಮನಿ, ಡಾ. ಪರ್ವೀನ್ ಸುಲ್ತಾನಾ ಸೇರಿದಂತೆ ಅನೇಕರು ಭಾಗವಹಿಸಿದ್ದರು.

ವಾರ್ತಾ ಭಾರತಿ 22 Apr 2026 5:01 pm

JEE Advanced 2026: ನಾಳೆಯಿಂದಲೇ ರಿಜಿಸ್ಟ್ರೇಷನ್ ಶುರು, ಯಾರು ಅರ್ಹರು? ಅರ್ಜಿ ಸಲ್ಲಿಕೆ ಹೇಗೆ? ಇಲ್ಲಿದೆ ಮಾಹಿತಿ

ದೇಶದ ಪ್ರತಿಷ್ಠಿತ ಎಂಜಿನಿಯರಿಂಗ್ ಸಂಸ್ಥೆಗಳಾದ ಐಐಟಿಗಳಲ್ಲಿ (IIT) ಪ್ರವೇಶ ಪಡೆಯುವುದು ವಿಜ್ಞಾನ ವಿಭಾಗದ ಲಕ್ಷಾಂತರ ವಿದ್ಯಾರ್ಥಿಗಳ ಬಹುದೊಡ್ಡ ಕನಸಾಗಿರುತ್ತದೆ. ಇದೀಗ ಈ ಕನಸನ್ನು ನನಸು ಮಾಡುವ ನಿಟ್ಟಿನಲ್ಲಿ ಪ್ರಮುಖ ಹೆಜ್ಜೆಯಾಗಿ, ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (IIT), ರೂರ್ಕಿ ನಾಳೆ ಅಂದರೆ ಏಪ್ರಿಲ್ 23, 2026 ರಂದು ಜಂಟಿ ಪ್ರವೇಶ ಪರೀಕ್ಷೆ (JEE Advanced 2026) ನೋಂದಣಿ

ಒನ್ ಇ೦ಡಿಯ 22 Apr 2026 4:58 pm

Kalaburagi | ಹಿಂದಿ ಭಾಷೆಯು ರಾಷ್ಟ್ರವನ್ನು ಒಗ್ಗೂಡಿಸುವ ಭಾಷೆ: ಡಾ. ಅಂಜು ಸಿಂಗ್

ಕಲಬುರಗಿ: ಇಂದಿನ ಆಧುನಿಕ ಯುಗದಲ್ಲಿ ಭಾಷೆಗಳ ಮಹತ್ವ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಹೆಚ್ಚು ಹೆಚ್ಚು ಭಾಷೆಗಳನ್ನು ಕಲಿಯುವುದು ಅಗತ್ಯವಾಗಿದೆ. ಭಾರತವನ್ನು ಒಗ್ಗೂಡಿಸುವ ಭಾಷೆಯಾಗಿ ಹಿಂದಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಕೇಂದ್ರೀಯ ಹಿಂದಿ ನಿರ್ದೇಶಾಲಯದ ಉಪ ನಿರ್ದೇಶಕರಾದ ಡಾ. ಅಂಜು ಸಿಂಗ್ ಅಭಿಪ್ರಾಯಪಟ್ಟರು. ನಗರದ ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಶ್ರೀಮತಿ ವೀರಮ್ಮ ಗಂಗಸಿರಿ ಮಹಿಳಾ ಮಹಾವಿದ್ಯಾಲಯದಲ್ಲಿ ಹಿಂದಿ ವಿಭಾಗ ಆಯೋಜಿಸಿದ್ದ ಹಿಂದಿ ಸರ್ಟಿಫಿಕೇಟ್ ಕೋರ್ಸ್ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು. ಹಿಂದಿ ಭಾಷೆ ವಿಶ್ವದ ಮೂಲೆಮೂಲೆಗೂ ವ್ಯಾಪಿಸುತ್ತಿದ್ದು, ಅದನ್ನು ಉತ್ತೇಜಿಸುವಲ್ಲಿ ಕೇಂದ್ರೀಯ ಹಿಂದಿ ನಿರ್ದೇಶಾಲಯ ಮಹತ್ವದ ಪಾತ್ರ ವಹಿಸುತ್ತಿದೆ. ಮುಂದಿನ ದಿನಗಳಲ್ಲಿ ಹಿಂದಿ ವಿಶ್ವದ ಎರಡನೇ ಅತಿ ಹೆಚ್ಚು ಮಾತನಾಡುವ ಭಾಷೆಯಾಗುವ ಸಾಧ್ಯತೆ ಇದೆ ಎಂದು ಅವರು ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ. ರಾಜೇಂದ್ರ ಕೊಂಡಾ ಅವರು, ಕೇಂದ್ರ ಸರ್ಕಾರದ ಉನ್ನತ ಶಿಕ್ಷಣ ಇಲಾಖೆಯ ಅಧೀನದಲ್ಲಿರುವ ಕೇಂದ್ರೀಯ ಹಿಂದಿ ನಿರ್ದೇಶಾಲಯದ ಸಹಯೋಗದಲ್ಲಿ ಇಂತಹ ಕಾರ್ಯಕ್ರಮ ಆಯೋಜಿಸಿರುವುದು ಶ್ಲಾಘನೀಯ ಎಂದರು. ಹಿಂದಿ ವಿಭಾಗದ ಮುಖ್ಯಸ್ಥರಾದ ಡಾ. ಪ್ರೇಮಚಂದ ಚವ್ಹಾಣ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಹಿಂದಿ ಭಾಷೆ ವಿಶ್ವದ ಅನೇಕ ವಿಶ್ವವಿದ್ಯಾಲಯಗಳಲ್ಲಿ ಅಧ್ಯಯನ ವಿಷಯವಾಗಿ ಬೆಳೆಯುತ್ತಿರುವುದನ್ನು ಉಲ್ಲೇಖಿಸಿದರು. ಕಾರ್ಯಕ್ರಮದಲ್ಲಿ ಕವಿತಾ ಠಾಕೂರ್ ಸ್ವಾಗತಿಸಿದರು. ಸುಷ್ಮಾ ಕುಲಕರ್ಣಿ ನಿರೂಪಣೆ ಮಾಡಿದರು. ವೈಷ್ಣವಿ ಬಿರಾದಾರ ವಂದಿಸಿದರು. ಶೆರಿಯಲ್ ಮತ್ತು ತಸ್ಮಿಯ ರುಬಾ ಪ್ರಾರ್ಥನಾ ಗೀತೆ ಹಾಡಿದರು. ಇದೇ ವೇಳೆ ನೂತನ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ. ದಯಾನಂದ ಶಾಸ್ತ್ರಿ, ಕೆಬಿಎನ್ ವಿಶ್ವವಿದ್ಯಾಲಯದ ಹಿಂದಿ ವಿಭಾಗದ ಮುಖ್ಯಸ್ಥರಾದ ಡಾ. ದೇಶಮುಖ ಆಫ್ಶಾ ಬೇಗಂ, ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ಮಹೇಶ್ ಗಂವ್ಹಾರ ಸೇರಿದಂತೆ ಡಾ. ಶ್ರೀದೇವಿ ಸರಡಗಿ, ಶಿವಲೀಲಾ ಧೋತ್ರ, ಡಾ. ಮೋಹಸಿನ್ ಫಾತಿಮಾ, ಕವಿತಾ ಅಶೋಕ್, ಗೀತಾ ಪಾಟೀಲ್ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ವಾರ್ತಾ ಭಾರತಿ 22 Apr 2026 4:57 pm

Afzalpur | ಅಕ್ರಮ ಮರಳು ಸಾಗಣೆ ವಿರುದ್ಧ ಪೊಲೀಸ್ ದಾಳಿ: ಟ್ರ್ಯಾಕ್ಟರ್ ಜಪ್ತಿ

ಅಫಜಲಪುರ: ತಾಲೂಕಿನ ನಂದರಗಾ ಗ್ರಾಮದ ಬೋರಿ ಹಳ್ಳದ ಬಳಿ ಅಕ್ರಮವಾಗಿ ಮರಳು ಸಾಗಾಣಿಕೆ ನಡೆಸುತ್ತಿದ್ದ ಟ್ರ್ಯಾಕ್ಟರ್ ಅನ್ನು ಅಫಜಲಪುರ ಪೊಲೀಸರು ಜಪ್ತಿ ಮಾಡಿ ಪ್ರಕರಣ ದಾಖಲಿಸಿದ್ದಾರೆ. ಇತ್ತೀಚೆಗೆ ಮಾಜಿ ಸಚಿವ ಮಾಲಿಕಯ್ಯ ಗುತ್ತೇದಾರ್ ಅವರು ತಾಲೂಕಿನಲ್ಲಿ ಅಕ್ರಮ ಮರಳುಗಾರಿಕೆ ನಡೆಯುತ್ತಿದೆ ಎಂದು ಆರೋಪ ಮಾಡಿದ್ದ ಹಿನ್ನೆಲೆಯಲ್ಲಿ ಪೊಲೀಸರು ಎಚ್ಚೆತ್ತುಕೊಂಡು ಕ್ರಮ ಕೈಗೊಂಡಿದ್ದಾರೆ. ಖಚಿತ ಮಾಹಿತಿಯ ಮೇರೆಗೆ ಸಿಪಿಐ ಲಖನ್ ಮಸಗುಪ್ಪಿ ಅವರ ಆದೇಶದಂತೆ ಪೊಲೀಸ್ ಸಿಬ್ಬಂದಿಗಳಾದ ಯಲ್ಲಪ್ಪ ಭಜಂತ್ರಿ, ಆನಂದ್ ಸ್ವಾಮಿ ಹಾಗೂ ಇಮಾಮ್ ಬಾಗವಾನ ತಂಡ ಸೋಮವಾರ ರಾತ್ರಿ ದಾಳಿ ನಡೆಸಿತು. ಈ ವೇಳೆ ಮಹೀಂದ್ರಾ ಕಂಪನಿಯ KA-28 TA-7494 ಸಂಖ್ಯೆಯ ಟ್ರ್ಯಾಕ್ಟರ್ ಹಾಗೂ ನೋಂದಣಿ ಸಂಖ್ಯೆ ಇಲ್ಲದ ಟ್ರಾಲಿಯನ್ನು ವಶಕ್ಕೆ ಪಡೆಯಲಾಗಿದೆ. ಟ್ರ್ಯಾಕ್ಟರ್ ಮೌಲ್ಯ ಸುಮಾರು 4 ಲಕ್ಷ ರೂ. ಹಾಗೂ ಟ್ರಾಲಿಯ ಮೌಲ್ಯ ಸುಮಾರು 1 ಲಕ್ಷ ರೂ. ಎಂದು ಅಂದಾಜಿಸಲಾಗಿದೆ. ಸರ್ಕಾರಕ್ಕೆ ರಾಜಸ್ವ ಪಾವತಿಸದೇ ಅಕ್ರಮವಾಗಿ ಮರಳು ಸಾಗಾಣಿಕೆ ನಡೆಸುತ್ತಿರುವುದು ಬೆಳಕಿಗೆ ಬಂದಿದೆ. ದಾಳಿ ವೇಳೆ ಟ್ರ್ಯಾಕ್ಟರ್ ಚಾಲಕ ಸ್ಥಳದಿಂದ ಪರಾರಿಯಾಗಿದ್ದು, ಆತನ ಪತ್ತೆಗೆ ಪೊಲೀಸರು ಶೋಧ ಕಾರ್ಯ ಮುಂದುವರೆಸಿದ್ದಾರೆ. ಈ ಸಂಬಂಧ ಅಫಜಲಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ನಡೆಯುತ್ತಿದೆ.

ವಾರ್ತಾ ಭಾರತಿ 22 Apr 2026 4:55 pm

ಜೈಲಿನಲ್ಲಿದ್ದುಕೊಂಡೆ ವಿಧ್ವಂಸ ಕೃತ್ಯಕ್ಕೆ ಸಂಚು: 7 ಆರೋಪಿಗಳಿಗೆ ಕಠಿಣ ಶಿಕ್ಷೆ ಪ್ರಕಟಿಸಿದ ಎನ್‌ ಐ ಎ ಕೋರ್ಟ್

ಬೆಂಗಳೂರು: ನಗರದ ಜೈಲಿನಲ್ಲಿದ್ದುಕೊಂಡೇ ದೇಶದ ವಿವಿಧೆಡೆ ವಿಧ್ವಂಸಕ ಕೃತ್ಯಗಳ ಎಸೆಗಲು ಸಂಚು ರೂಪಿಸಿದ್ದ ಲಷ್ಕರ್‌ ಎ ತೊಬ್ಯಾ ಸಂಪರ್ಕಿತ ಏಳು ಆರೋಪಿಗಳಿಗೆ ಎನ್‌ ಐ ಎ ನ್ಯಾಯಾಲಯ 7 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಪ್ರಕಟಿಸಿದೆ.ಅಪರಾಧಿಗಳಾದ ಲಷ್ಕರ್‌ – ಎ-ತೊಯ್ಬಾ ಸಂಪರ್ಕಿತ ಉಗ್ರ ಟಿ.ನಾಸಿರ್‌ ನೇತೃತ್ವದಲ್ಲಿ ಸಯ್ಯದ್ ಸುಹೈಲ್ ಖಾನ್, ಮೊಹಮ್ಮದ್ ಉಮರ್, ಜಾಹಿದ್ ತಬ್ರೇಜ್, ಸಯ್ಯದ್ ಮುದಸ್ಸಿರ್ ಪಾಶಾ, ಮೊಹಮ್ಮದ್ ಫೈಸಲ್ ರಬ್ಬಾನಿ ಮತ್ತು ಸಲ್ಮಾನ್ ಖಾನ್ ಶಿಕ್ಷೆಗೆ ಗುರಿಯಾದವರು. ಪ್ರಕರಣದಲ್ಲಿ ಆರೋಪಿಗಳು ತಪ್ಪೊಪ್ಪಿಕೊಂಡಿದ್ದರು.ಇವರು ಬೆಂಗಳೂರಿನ […] The post ಜೈಲಿನಲ್ಲಿದ್ದುಕೊಂಡೆ ವಿಧ್ವಂಸ ಕೃತ್ಯಕ್ಕೆ ಸಂಚು: 7 ಆರೋಪಿಗಳಿಗೆ ಕಠಿಣ ಶಿಕ್ಷೆ ಪ್ರಕಟಿಸಿದ ಎನ್‌ ಐ ಎ ಕೋರ್ಟ್ first appeared on Vistara News .

ವಿಸ್ತಾರ ನ್ಯೂಸ್ 22 Apr 2026 4:52 pm

Kalaburagi | ವಸತಿ ಸಹಾಯಧನಕ್ಕೆ ಲಂಚದ ಬೇಡಿಕೆ : ಗ್ರಾಮ ಪಂಚಾಯತ್‌ ಕಂಪ್ಯೂಟರ್ ಆಪರೇಟರ್ ಲೋಕಾಯುಕ್ತ ಬಲೆಗೆ

ಕಲಬುರಗಿ: ಬಸವ ವಸತಿ ಯೋಜನೆಯಡಿ ಮಂಜೂರಾದ ಮನೆ ಸಹಾಯಧನ ಬಿಡುಗಡೆ ಮಾಡಲು ಲಂಚ ಬೇಡಿಕೆ ಇಟ್ಟಿದ್ದ ಗ್ರಾಮ ಪಂಚಾಯತಿ ಕಂಪ್ಯೂಟರ್ ಆಪರೇಟರ್ ಅನ್ನು ಕರ್ನಾಟಕ ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ. ಯಡ್ರಾಮಿ ತಾಲ್ಲೂಕಿನ ಮಳ್ಳಿ ಗ್ರಾಮ ಪಂಚಾಯತಿಯಲ್ಲಿ ಕಂಪ್ಯೂಟರ್ ಆಪರೇಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಬಂದೇನವಾಜ್ ಬಂಧಿತ ಸಿಬ್ಬಂದಿ ಎಂದು ತಿಳಿದುಬಂದಿದೆ. ಮಳ್ಳಿ ಗ್ರಾಮದ ಮಲ್ಲಿಕಾರ್ಜುನ್ ನೀಡಿದ ದೂರಿನ ಪ್ರಕಾರ, ತನ್ನ ಅಣ್ಣನಿಗೆ ಮಂಜೂರಾದ ಬಸವ ವಸತಿ ಯೋಜನೆಯ ಸಹಾಯಧನ ಬಿಡುಗಡೆ ಮಾಡಲು ಆರೋಪಿ 20,000 ರೂ. ಲಂಚ ಬೇಡಿಕೆ ಇಟ್ಟಿದ್ದನು. ನಂತರ 10,000 ರೂ. ಕ್ಕೆ ಒಪ್ಪಂದ ಮಾಡಿಕೊಂಡು, ಅದರಲ್ಲಿ 5,000 ರೂ. ನಗದು ಹಾಗೂ 3,000 ರೂ. ಫೋನ್‌ಪೇ ಮೂಲಕ ಸ್ವೀಕರಿಸಿದ್ದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ. ದೂರಿನ ಆಧಾರದ ಮೇಲೆ ಕಾರ್ಯಾಚರಣೆ ನಡೆಸಿದ ಲೋಕಾಯುಕ್ತ ಅಧಿಕಾರಿಗಳು ಆರೋಪಿಯನ್ನು ರೆಡ್‌ಹ್ಯಾಂಡ್ ಆಗಿ ಬಂಧಿಸಿದ್ದಾರೆ. ಈ ಕಾರ್ಯಾಚರಣೆ ಕರ್ನಾಟಕ ಲೋಕಾಯುಕ್ತ ಕಲಬುರಗಿ ಪೊಲೀಸ್ ಅಧೀಕ್ಷಕ ಸಿದ್ಧರಾಜು ಸಿ. ಅವರ ಮಾರ್ಗದರ್ಶನದಲ್ಲಿ ಹಾಗೂ ಪೊಲೀಸ್ ಇನ್ಸ್‌ಪೆಕ್ಟರ್ ಅರುಣ್ ಕುಮಾರ್ ಮುರುಗುಂಡಿ ಅವರ ನೇತೃತ್ವದಲ್ಲಿ ನಡೆದಿದೆ. ಬಂಧಿತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಾರ್ತಾ ಭಾರತಿ 22 Apr 2026 4:47 pm

Kalaburagi | ಲಂಚ ಪ್ರಕರಣ: ಜೇವರ್ಗಿ ಪುರಸಭೆ ಕಿರಿಯ ಅಭಿಯಂತರಿಗೆ 4 ವರ್ಷ ಜೈಲು ಶಿಕ್ಷೆ, 20,000 ರೂ. ದಂಡ

ಕಲಬುರಗಿ: ಲಂಚ ಸ್ವೀಕರಿಸಿದ ಪ್ರಕರಣದಲ್ಲಿ ಜೇವರ್ಗಿ ಪುರಸಭೆಯ ಕಿರಿಯ ಅಭಿಯಂತರ ನಾನಾಸಾಬ ಅಮೃತಪ್ಪ ಮಡಿವಾಳ ಅವರಿಗೆ ಪ್ರಧಾನ ಜಿಲ್ಲಾ ಮತ್ತು ವಿಶೇಷ ನ್ಯಾಯಾಲಯವು 4 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಹಾಗೂ 20,000 ರೂ. ದಂಡ ವಿಧಿಸಿದೆ. ಪ್ರಕರಣವು 2016-17ನೇ ಸಾಲಿನ ಜೇವರ್ಗಿ ಪುರಸಭೆ ವ್ಯಾಪ್ತಿಯ ಅಂಬೇಡ್ಕರ್ ಮೂರ್ತಿ ಶಿಫ್ಟಿಂಗ್ ಹಾಗೂ ನಾಲೆಯ ಮೇಲೆ ವೇದಿಕೆ ನಿರ್ಮಾಣ ಕಾಮಗಾರಿಗೆ ಸಂಬಂಧಿಸಿದೆ. 35 ಲಕ್ಷ ರೂ. ಮೊತ್ತದ ಈ ಕಾಮಗಾರಿಯನ್ನು ಗುತ್ತಿಗೆದಾರ ಗೋಪಾಲ ಬಿಜಾನ್ನೂರ ಪಡೆದಿದ್ದರು. ಮೇಲ್ವಿಚಾರಣೆಯನ್ನು ಪರಶುರಾಮ ಶಂಕರ ದೊಡ್ಡಮನಿ ನಿರ್ವಹಿಸುತ್ತಿದ್ದರು. ಕಾಮಗಾರಿಯ ಎರಡನೇ ಹಂತದ ಬಿಲ್ ಬಿಡುಗಡೆ ಮಾಡುವ ಸಂಬಂಧ ಆರೋಪಿ ನಾನಾಸಾಬ ಅವರು 26,000 ರೂ. ಲಂಚ ಬೇಡಿಕೆ ಇಟ್ಟಿದ್ದರು. 2019ರ ನ.28ರಂದು ಲಂಚ ಸ್ವೀಕರಿಸುವ ವೇಳೆ ಅವರು ಲೋಕಾಯುಕ್ತ ಅಧಿಕಾರಿಗಳಿಂದ ರೆಡ್‌ಹ್ಯಾಂಡ್ ಆಗಿ ಬಂಧಿತರಾಗಿದ್ದರು. ಈ ಸಂಬಂಧ ಡಿವೈಎಸ್ಪಿ ಸುಧಾ ಆದಿ ನೇತೃತ್ವದಲ್ಲಿ ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆಯನ್ನು ಇನ್ಸ್‌ಪೆಕ್ಟರ್ ರಾಘವೇಂದ್ರ ಪೂರ್ಣಗೊಳಿಸಿ ಪಿ.ಸಿ. ಕಾಯ್ದೆಯ ಕಲಂ 7(ಎ) ಅಡಿಯಲ್ಲಿ ದೋಷಾರೋಪಣಾ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಪ್ರಧಾನ ಜಿಲ್ಲಾ ಮತ್ತು ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಜಿ.ಎಲ್. ಲಕ್ಷ್ಮೀನಾರಾಯಣ ಅವರು, ಸಾಕ್ಷ್ಯಾಧಾರಗಳನ್ನು ಪರಿಗಣಿಸಿ ಆರೋಪ ಸಾಬೀತಾಗಿದೆ ಎಂದು ತೀರ್ಪು ನೀಡಿದರು. ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕ ಅಶೋಕ ಎಸ್. ಚಾಂದಕವಠ ವಾದ ಮಂಡಿಸಿದರು. ಲೋಕಾಯುಕ್ತ ಸಿಬ್ಬಂದಿಗಳಾದ ಹಣಮಂತರಾಯ ಹಾಗೂ ಗುಂಡುರಾವ್ ಸಾಕ್ಷಿದಾರರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದರು.

ವಾರ್ತಾ ಭಾರತಿ 22 Apr 2026 4:43 pm

Humnabad | ಶಾರ್ಟ್ ಸರ್ಕ್ಯೂಟ್ ನಿಂದ ಕಿರಾಣಿ ಅಂಗಡಿಗೆ ಬೆಂಕಿ : ಲಕ್ಷಾಂತರ ರೂ. ಮೌಲ್ಯದ ವಸ್ತುಗಳು ಭಸ್ಮ

ಹುಮನಾಬಾದ್ : ತಾಲೂಕಿನ ಕಟ್ಟಳ್ಳಿ ಗ್ರಾಮದ ವೀರಶೆಟ್ಟಿ ಬಿರಾದಾರ್ ಅವರಿಗೆ ಸೇರಿದ ಕಿರಾಣಿ ಅಂಗಡಿಗೆ ಮಂಗಳವಾರ ಮಧ್ಯರಾತ್ರಿ ಸುಮಾರು 2 ಗಂಟೆ ವೇಳೆಗೆ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ತಗುಲಿ ಸಂಪೂರ್ಣವಾಗಿ ಭಸ್ಮವಾಗಿದೆ. ಅಂಗಡಿಯಲ್ಲಿ ಇದ್ದ ಲಕ್ಷಾಂತರ ಮೌಲ್ಯದ ಕಿರಾಣಿ ವಸ್ತುಗಳು ಹಾಗೂ ಸುಮಾರು 30 ಸಾವಿರ ರೂ. ನಗದು ಹಣ ಕೂಡ ಬೆಂಕಿಗೆ ಆಹುತಿಯಾಗಿದೆ ಎಂದು ತಿಳಿದುಬಂದಿದೆ. ಅಂಗಡಿ ಮಾಲಕ ವೀರಶೆಟ್ಟಿ ಬಿರಾದಾರ್ ಅವರು ಇದೇ ಅಂಗಡಿಯನ್ನು ಆಧಾರವಾಗಿಟ್ಟುಕೊಂಡು ತಮ್ಮ ಕುಟುಂಬದ ಜೀವನ ಸಾಗಿಸುತ್ತಿದ್ದರು. ಅಂಗಡಿ ಸುಟ್ಟ ಪರಿಣಾಮ ಅವರು ತೀವ್ರ ಆಘಾತಕ್ಕೊಳಗಾಗಿ ಕಣ್ಣೀರು ಹಾಕುತ್ತಿದ್ದಾರೆ. ಮಂಗಳವಾರ ರಾತ್ರಿ ಭಾರಿ ಗಾಳಿ, ಗುಡುಗು ಮತ್ತು ಮಿಂಚು ಇದ್ದುದರಿಂದ ಈ ಘಟನೆ ಸಂಭವಿಸಿರಬಹುದು ಎಂದು ಗ್ರಾಮಸ್ಥರು ಶಂಕೆ ವ್ಯಕ್ತಪಡಿಸಿದ್ದಾರೆ. “ನಮ್ಮ ಜೀವನವೇ ಈ ಅಂಗಡಿಯಾಗಿತ್ತು. ಈಗ ಎಲ್ಲವೂ ನಾಶವಾಗಿದೆ. ನಮ್ಮ ಬಳಿ ಬೇರೆ ಆಸರೆ ಇಲ್ಲ” ಎಂದು ಅಂಗಡಿ ಮಾಲೀಕ ತಮ್ಮ ಅಳಲು ತೋಡಿಕೊಂಡಿದ್ದಾರೆ. ಘಟನೆಯ ಕುರಿತು ಸ್ಥಳೀಯರು ಸಹಾಯಕ್ಕಾಗಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ತಕ್ಷಣ ನೆರವಿಗೆ ಬರಬೇಕು ಎಂದು ಗ್ರಾಮಸ್ಥ ಅನಿಲ್ ದೊಡ್ಡಿ ಸೇರಿದಂತೆ ಹಲವರು ಆಗ್ರಹಿಸಿದ್ದಾರೆ.

ವಾರ್ತಾ ಭಾರತಿ 22 Apr 2026 4:39 pm

ಸಚಿವ ಪ್ರಲ್ಹಾದ ಜೋಶಿ ಮನವಿಗೆ ಸ್ಪಂದನೆ; “ಧಾರವಾಡ ಆಕಾಶವಾಣಿ ಕೇಂದ್ರ”ಸ್ಥಳಾಂತರಿಸದಿರಲು ನಿರ್ಧಾರ

ನವದೆಹಲಿ: ಧಾರವಾಡ ಆಕಾಶವಾಣಿ ಪ್ರಾದೇಶಿಕ ಕೇಂದ್ರ ಸ್ಥಳಾಂತರ ನಿರ್ಧಾರವನ್ನು ಪ್ರಸಾರ ಭಾರತಿ ಹಿಂತೆಗೆದುಕೊಂಡಿದ್ದು, ಉತ್ತರ ಕರ್ನಾಟಕ ಜನರ ಒತ್ತಾಸೆ, ಅಭಿಲಾಷೆಯಂತೆ ಧಾರವಾಡದಲ್ಲಿಯೇ ಮುಂದುವರಿಸಲು ನಿರ್ಧರಿಸಿದೆ.ಧಾರವಾಡ ಸಂಸದರೂ ಆಗಿರುವ ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ ಜೋಶಿ ಅವರ ಮನವಿ ಮೇರೆಗೆ ಪ್ರಸಾರ ಭಾರತಿ ಈ ಕ್ರಮಕ್ಕೆ ಮುಂದಾಗಿದೆ. ಉತ್ತರ ಕರ್ನಾಟಕ ಭಾಗದಲ್ಲಿ ಮನೆಮಾತಾಗಿರುವ ಜನಪ್ರಿಯ ಆಕಾಶವಾಣಿ ಪ್ರಾದೇಶಿಕ ಕೇಂದ್ರವನ್ನು ಧಾರವಾಡದಲ್ಲಿಯೇ ಮುಂದುವರಿಸುವಂತೆ ಸಚಿವರು ಕೇಂದ್ರದ ಗಮನ ಸೆಳೆದಿದ್ದರು.ಧಾರವಾಡ ಆಕಾಶವಾಣಿ ಪ್ರಾದೇಶಿಕ ಕೇಂದ್ರವನ್ನು ಬೆಂಗಳೂರಿಗೆ ಸ್ಥಳಾಂತರಿಸಲು […] The post ಸಚಿವ ಪ್ರಲ್ಹಾದ ಜೋಶಿ ಮನವಿಗೆ ಸ್ಪಂದನೆ; “ಧಾರವಾಡ ಆಕಾಶವಾಣಿ ಕೇಂದ್ರ” ಸ್ಥಳಾಂತರಿಸದಿರಲು ನಿರ್ಧಾರ first appeared on Vistara News .

ವಿಸ್ತಾರ ನ್ಯೂಸ್ 22 Apr 2026 4:38 pm

ದ್ವೇಷಾಪರಾಧ ಪ್ರಕರಣ | ನಿಮ್ಮ ತನಿಖಾಧಿಕಾರಿ ಈ ಕೋರ್ಟ್ ಜೊತೆ ಏಕೆ ಕಣ್ಣಾಮುಚ್ಚಾಲೆ ಆಡುತ್ತಿದ್ದಾರೆ?: ಉತ್ತರ ಪ್ರದೇಶ ಸರಕಾರಕ್ಕೆ ಸುಪ್ರೀಂ ಕೋರ್ಟ್ ತರಾಟೆ

ಹೊಸದಿಲ್ಲಿ: ದ್ವೇಷಾಪರಾಧಕ್ಕೆ ಸಂಬಂಧಿಸಿದ ಪ್ರಕರಣದ ವಿಚಾರಣೆ ಸಂದರ್ಭ ಸರ್ವೋಚ್ಚ ನ್ಯಾಯಾಲಯವು,ನಿಮ್ಮ ತನಿಖಾಧಿಕಾರಿಯೇಕೆ ಈ ಕೋರ್ಟ್ ಜೊತೆ ಕಣ್ಣಾಮುಚ್ಚಾಲೆಯಾಡುತ್ತಿದ್ದಾರೆ ಎಂದು ಉತ್ತರ ಪ್ರದೇಶ ಸರಕಾರವನ್ನು ಕಟುವಾಗಿ ಪ್ರಶ್ನಿಸಿದೆ. ಹಿರಿಯ ನಾಗರಿಕರೋರ್ವರ ದೂರಿನ ನ್ಯಾಯಯುತ ತನಿಖೆ ಮತ್ತು ವಿಚಾರಣೆಯನ್ನು ಕೋರಿ ಸಲ್ಲಿಸಲಾಗಿರುವ ಅರ್ಜಿಯ ವಿಚಾರಣೆಯನ್ನು ಮಂಗಳವಾರ ಕೈಗೆತ್ತಿಕೊಂಡಿದ್ದ ನ್ಯಾಯಮೂರ್ತಿಗಳಾದ ವಿಕ್ರಮನಾಥ ಮತ್ತು ಸಂದೀಪ ಮೆಹ್ತಾ ಅವರ ಪೀಠವು ಉ.ಪ್ರ.ಸರಕಾರವನ್ನು ತರಾಟೆಗೆತ್ತಿಕೊಂಡಿತು. ಜು.2021ರಲ್ಲಿ ನೋಯ್ಡಾದಲ್ಲಿ ಗುಂಪೊಂದು ತನ್ನನ್ನು ನಿಂದಿಸಿತ್ತು ಮತ್ತು ಚಿತ್ರಹಿಂಸೆ ನೀಡಿತ್ತು ಎಂದು ಹಿರಿಯ ನಾಗರಿಕರು ಅರ್ಜಿಯಲ್ಲಿ ಪ್ರತಿಪಾದಿಸಿದ್ದಾರೆ. ಐಪಿಸಿಯ ಕಲಂ 153-ಬಿ ಅನ್ನು ಪ್ರಕರಣದಲ್ಲಿ ಏಕೆ ಸೇರಿಸಿಲ್ಲ ಎಂದು ಉತ್ತರ ಪ್ರದೇಶ ಸರಕಾರವನ್ನು ಪ್ರತಿನಿಧಿಸಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್ ಕೆ.ಎಂ.ನಟರಾಜ ಅವರನ್ನು ಪ್ರಶ್ನಿಸಿದ ನ್ಯಾಯಾಲಯವು,ನಿಮ್ಮ ತನಿಖಾಧಿಕಾರಿ ಈ ಕೋರ್ಟ್‌ನೊಂದಿಗೆ ಕಣ್ಣಾಮುಚ್ಚಾಲೆ ಆಡುತ್ತಿದ್ದಾರೆಯೇ ಎಂದು ಖಾರವಾಗಿ ಪ್ರಶ್ನಿಸಿತು. ಪ್ರಕರಣದಲ್ಲಿಯ ಅರ್ಜಿದಾರರು, ತನ್ನ ಗಡ್ಡ ಮತ್ತು ಸ್ಪಷ್ಟ ಮುಸ್ಲಿಮ್ ಗುರುತಿನಿಂದಾಗಿ ತನ್ನ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಪ್ರತಿಪಾದಿಸಿದ್ದಾರೆ. ವಿಚಾರಣಾ ನ್ಯಾಯಾಲಯವು ಪ್ರಕರಣದಲ್ಲಿ ಮುಂದಿನ ತನಿಖೆಯನ್ನು ನಡೆಸಲು ಪೋಲಿಸರಿಗೆ ಅನುಮತಿ ನೀಡಿದೆ ಮತ್ತು ಪೋಲಿಸರು ಅಗತ್ಯ ನಿಬಂಧನೆಗಳನ್ನು ಸೇರಿಸುತ್ತಾರೆ ಎಂದು ನಟರಾಜ ನ್ಯಾಯಾಲಯಕ್ಕೆ ತಿಳಿಸಿದರು. ಪ್ರತಿವಾದಿ ಸಲ್ಲಿಸಿರುವ ಅಫಿಡವಿಟ್ ನಮಗೆ ತೃಪ್ತಿ ನೀಡಿಲ್ಲ. ನಿಮ್ಮ ಅಧಿಕಾರಿಗಳಿಗೆ ತಿಳಿಹೇಳಿ. ಇಲ್ಲದಿದ್ದರೆ ಅವರು ತೊಂದರೆಗೊಳಗಾಗುತ್ತಾರೆ ಎಂದು ಪೀಠವು ತಿಳಿಸಿತು. ತಾನು ತನಿಖಾಧಿಕಾರಿಗೆ ಸಮನ್ಸ್ ಹೊರಡಿಸಲು ಉದ್ದೇಶಿಸಿದ್ದೆ,ಆದರೆ ನಟರಾಜ್ ಮನವಿಯ ಮೇರೆಗೆ ಸಮಗ್ರ ವರದಿಯನ್ನು ಸಲ್ಲಿಸಲು ಎರಡು ವಾರಗಳ ಕಾಲಾವಕಾಶ ನೀಡುತ್ತೇನೆ ಎಂದು ಹೇಳಿದ ಪೀಠವು ಮುಂದಿನ ವಿಚಾರಣೆಯನ್ನು ಮೇ 19ಕ್ಕೆ ನಿಗದಿಗೊಳಿಸಿತು.

ವಾರ್ತಾ ಭಾರತಿ 22 Apr 2026 4:38 pm

ಧಾರವಾಡದ ಆಕಾಶವಾಣಿ ಕಚೇರಿ ಬೆಂಗಳೂರಿಗೆ ಸ್ಥಳಾಂತರ ಇಲ್ಲ; ಆದೇಶ ಹಿಂಪಡೆದ ಪ್ರಸಾರ ಭಾರತಿ!

ಧಾರವಾಡ ಆಕಾಶವಾಣಿ ಪ್ರಾದೇಶಿಕ ಕಚೇರಿ ಬೆಂಗಳೂರಿಗೆ ಸ್ಥಳಾಂತರಿಸುವ ನಿರ್ಧಾರದಿಂದ ಕೇಂದ್ರ ಸರ್ಕಾರ ಹಿಂದೆ ಸರಿದಿದೆ. ಉತ್ತರ ಕರ್ನಾಟಕ ಜನರ ಹಾಗೂ ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಅವರು ಈ ಬಗ್ಗೆ ಕೇಂದ್ರ ಸಚಿವರ ಜತೆ ಮಾತುಕತೆ ನಡೆಸಿ ಧಾರವಾಡ ಕಚೇರಿ ಉಳಿಸುವಂತೆ ಮನವಿ ಮಾಡಿದ್ದರು. ಸದ್ಯ ಸ್ಥಳಾಂತರ ಆದೇಶವನ್ನು ಹಿಂಪಡೆಯಲಾಗಿದೆ.

ವಿಜಯ ಕರ್ನಾಟಕ 22 Apr 2026 4:35 pm

ಚಿನ್ನ ಕಳ್ಳ ಸಾಗಣೆ: ನಟಿ ರನ್ಯಾರಾವ್‌ ಗೆ ಸಿಕ್ತು ಜಾಮೀನು

ಬೆಂಗಳೂರು: ಕಳೆದ ವರ್ಷ 102 ಕೋಟಿ ರೂ.ಗೂ ಹೆಚ್ಚು ಮೌಲ್ಯದ ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಕಳೆದ ಒಂದು ವರ್ಷದಿಂದ ಪರಪ್ಪನ ಅಗ್ರಹಾರ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದ ನಟಿ ರನ್ಯಾ ರಾವ್​​​ಗೆ ಕೊನೆಗೂ ಜಾಮೀನು ದೊರೆತಿದೆ. ಇಂದು ಆರ್ಥಿಕ ಅಪರಾಧಗಳ ತಡೆ ನ್ಯಾಯಾಲಯ ಜಾಮೀನು ನೀಡಿದೆ.2025 ಮಾರ್ಚ್ 3ರಂದು ರನ್ಯಾ ರಾವ್ ಅಲಿಯಾಸ್ ಹರ್ಷವರ್ಧಿನಿ ರನ್ಯಾ(34), ಅವರನ್ನು ಚಿನ್ನ ಕಳ್ಳಸಾಗಣೆ ಮಾಡಿದ ಆರೋಪದ ಮೇಲೆ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿತ್ತು. ಇದೀಗ ಜಾಮೀನು ದೊರೆತಿದ್ದು, ಒಂದು ವರ್ಷದ […] The post ಚಿನ್ನ ಕಳ್ಳ ಸಾಗಣೆ: ನಟಿ ರನ್ಯಾರಾವ್‌ ಗೆ ಸಿಕ್ತು ಜಾಮೀನು first appeared on Vistara News .

ವಿಸ್ತಾರ ನ್ಯೂಸ್ 22 Apr 2026 4:31 pm

ನರೇಂದ್ರ ಮೋದಿ ಬಯಸಿದರೆ ನಾನೇ ಮೀನೂಟ ಬಡಿಸುವೆ; ಜಾಲ್‌ಮುರಿ ತಿಂದ ಪ್ರಧಾನಿಯತ್ತ ಮಮತಾ ಬ್ಯಾನರ್ಜಿ ತೀಕ್ಷ್ಣ ನೋಟ!

ವಿಧಾನಸಭೆ ಚುನವಾಣೆಯ ಹೊಸ್ತಿಲಲ್ಲಿರುವ ಪಶ್ಚಿಮ ಬಂಗಾಳದಲ್ಲಿ ಈಗ ಆಹಾರ ಸಂಸ್ಕೃತಿ ಬಗ್ಗೆ ಚರ್ಚೆಯಾಗುತ್ತಿದೆ. ಬಿಜೆಪಿ ಅಧಿಕಾರಕ್ಕೆ ಬಂದರೆ ರಾಜ್ಯದ ಆಹಾರ ಪದ್ದತಿಯನ್ನು ಅಮೂಲಾಗ್ರವಾಗಿ ಬದಲಾಯಿಸಲಿದೆ ಎಂಬ ಟಿಎಂಸಿ ಆರೋಪ ಮತ್ತು ಕೇಂದ್ರ ಸಚಿವ ಅನುರಾಗ್‌ ಠಾಕೂರ್‌ ಅವರು ಮೀನು ಊಟ ತಿನ್ನುವ ಮೂಲಕ ಇದಕ್ಕೆ ತಿರುಗೇಟು ಎರಡೂ ಸದ್ದು ಮಾಡುತ್ತಿದೆ. ಈ ಮಧ್ಯೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು, ಪ್ರಧಾನಮಂತ್ರಿ ನರೇಂದ್ರ ಮೋದಿ ಮೀನು ಊಟ ಮಾಡುವುದಾದರೆ ತಾವೇ ಅಡುಗೆ ಮಾಡಿ ಬಡಿಸುವುದಾಗಿ ಹೇಳಿದ್ದಾರೆ.

ವಿಜಯ ಕರ್ನಾಟಕ 22 Apr 2026 4:31 pm

ಸಂಘರ್ಷ ಪುನರಾರಂಭವಾದರೆ, ಶತ್ರುಗಳಿಗೆ ಬಲವಾದ ಹೊಡೆತ ನೀಡುತ್ತೇವೆ: IRGC ಎಚ್ಚರಿಕೆ

ಟೆಹ್ರಾನ್: ಅಮೆರಿಕ- ಇರಾನ್ ನಡುವಿನ ಕದನ ವಿರಾಮ ಮಾತುಕತೆ ಬಗ್ಗೆ ಅನಿಶ್ಚಿತತೆ ಉಂಟಾಗಿರುವ ಮಧ್ಯೆ ಸಂಘರ್ಷ ಪುನರಾರಂಭವಾದರೆ, ಶತ್ರುಗಳಿಗೆ ಬಲವಾದ ಹೊಡೆತವನ್ನು ನೀಡುವುದಾಗಿ ಇರಾನ್‌ನ IRGC ಎಚ್ಚರಿಸಿದೆ. ಶತ್ರುಗಳ ಯಾವುದೇ ಹೊಸ ಆಕ್ರಮಣವನ್ನು ಎದುರಿಸಲು ಸಿದ್ಧವಿರುವುದಾಗಿ IRGC ಹೇಳಿದೆ. ಯುದ್ಧ ಮತ್ತೆ ಮುಂದುವರಿದರೆ ಶತ್ರು ಸ್ವತ್ತುಗಳಮೇಲೆ ತೀವ್ರ ದಾಳಿ ನಡೆಸಲಾಗುವುದು ಎಂದು IRGC ತಿಳಿಸಿರುವ ಬಗ್ಗೆ ಇರಾನ್‌ನ Mehr news agency ವರದಿ ಮಾಡಿದೆ ಯುದ್ಧಭೂಮಿ ನಿಶ್ಯಬ್ಧʼವಾಗಿರುವ ಸಮಯದಲ್ಲಿ ಮತ್ತು ಕದನ ವಿರಾಮದ ವೇಳೆ ಶತ್ರುಗಳ ಕ್ರಮಗಳನ್ನು ಮೇಲ್ವಿಚಾರಣೆ ಮಾಡುವ ಅಗತ್ಯವನ್ನು IRGC ಒತ್ತಿ ಹೇಳಿದೆ.

ವಾರ್ತಾ ಭಾರತಿ 22 Apr 2026 4:28 pm

ನೇಪಾಳ | ಅಧಿಕಾರ ವಹಿಸಿಕೊಂಡ ಒಂದೇ ತಿಂಗಳಲ್ಲಿ ಬಾಲೆನ್ ಶಾ ಸರಕಾರದ ವಿರುದ್ಧ ಭುಗಿಲೆದ್ದ ಪ್ರತಿಭಟನೆ

ಕಠ್ಮಂಡು: ನೇಪಾಳದಲ್ಲಿ ಬಾಲೆನ್ ಶಾ ನೇತೃತ್ವದ ಸರಕಾರ ಅಧಿಕಾರ ವಹಿಸಿಕೊಂಡ ಒಂದೇ ತಿಂಗಳಲ್ಲಿ ಸಾರ್ವಜನಿಕ ಆಕ್ರೋಶ ಭುಗಿಲೆದ್ದಿದೆ ಎಂದು ವರದಿಯಾಗಿದೆ. ಪ್ರತಿಭಟನೆಗಳು ಬೀದಿಗಳಿಂದ ದೇಶದ ಆಡಳಿತ ಕೇಂದ್ರವಾದ ಸಿಂಘಾ ದರ್ಬಾರ್‌ವರೆಗೂ ತಲುಪಿದೆ. ವಿದ್ಯಾರ್ಥಿಗಳು, ರಾಜಕೀಯ ಗುಂಪುಗಳು ಮತ್ತು ಸಾಮಾನ್ಯ ನಾಗರಿಕರು ಸೇರಿದಂತೆ ಪ್ರತಿಭಟನಾಕಾರರು ಕಠ್ಮಂಡು ಮತ್ತು ಇತರ ನಗರಗಳಲ್ಲಿ ಬೀದಿಗಿಳಿದಿದ್ದಾರೆ. ಭಾರತದಿಂದ ತರುವ 10ರೂ.ಗಿಂತ ಹೆಚ್ಚಿನ ಮೌಲ್ಯದ ಸರಕುಗಳ ಮೇಲೆ ಕಡ್ಡಾಯ ಕಸ್ಟಮ್ಸ್ ಸುಂಕವನ್ನು ವಿಧಿಸಲು ನೇಪಾಳ ಸರಕಾರ ನಿರ್ಧರಿಸಿರುವುದು ಪ್ರತಿಭಟನೆಗೆ ಪ್ರಮುಖ ಕಾರಣವೆಂದು ಹೇಳಲಾಗುತ್ತಿದೆ. ಗಡಿ ಪ್ರದೇಶಗಳ ನಿವಾಸಿಗಳು ಈ ಕ್ರಮವು ತಮ್ಮ ದೈನಂದಿನ ಜೀವನದ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ ಎಂದು ಹೇಳಿದ್ದಾರೆ. ಏಕೆಂದರೆ ಅವರು ಅಗತ್ಯ ವಸ್ತುಗಳಿಗಾಗಿ ಗಡಿಯಾಚೆಗಿನ ಖರೀದಿ ಮೇಲೆ ಹೆಚ್ಚು ಅವಲಂಬಿತರಾಗಿದ್ದಾರೆ. ಈ ನೀತಿಯು ಸಾಮಾನ್ಯ ನಾಗರಿಕರ ಮೇಲೆ ಅನಗತ್ಯ ಆರ್ಥಿಕ ಹೊರೆಯನ್ನು ಹೇರುತ್ತದೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ.

ವಾರ್ತಾ ಭಾರತಿ 22 Apr 2026 4:25 pm

ಐಪಿಎಲ್ ನಲ್ಲಿ ಲೋನ್ ನಿಯಮ ಎಂದರೇನು? ಆರ್‌ಸಿಬಿ ಆಟಗಾರನೊಬ್ಬ ಟೂರ್ನಿ ಮಧ್ಯೆಯೇ ಸಿಎಸ್‌ಕೆ ಪರ ಆಡಲು ಸಾಧ್ಯವೇ?

IPL Loan Rule- ಐಪಿಎಲ್‌ನಲ್ಲಿ ಈವರೆಗೂ ಬಳಕೆಯಾಗದ 'ಪ್ಲೇಯರ್ ಲೋನ್' ನಿಯಮದ ಬಗ್ಗೆ ಆರ್. ಅಶ್ವಿನ್ ಹೊಸ ಚರ್ಚೆ ಆರಂಭಿಸಿದ್ದಾರೆ. ಗಾಯದಿಂದ ಹೊರಬಿದ್ದಿರುವ ಸಿಎಸ್‌ಕೆ ಆರಂಭಿಕ ಆಟಗಾರ ಆಯುಷ್ ಮ್ಹಾತ್ರೆ ಬದಲಿಗೆ, ಆರ್‌ಸಿಬಿ ತಂಡದಲ್ಲಿರುವ ಪ್ರತಿಭಾವಂತ ಬ್ಯಾಟರ್ ವಿಹಾನ್ ಮಲ್ಹೋತ್ರಾ ಅವರನ್ನು ಲೋನ್ ಮೂಲಕ ಪಡೆಯಲು ಅವರು ಸಲಹೆ ನೀಡಿದ್ದಾರೆ. ನಿಯಮದ ಪ್ರಕಾರ, ಎರಡು ಪಂದ್ಯಕ್ಕಿಂತ ಕಡಿಮೆ ಆಡಿರುವ ಆಟಗಾರನನ್ನು ತಂಡಗಳು ಪರಸ್ಪರ ಹಂಚಿಕೊಳ್ಳಬಹುದು. ಪ್ರಸ್ತುತ ಅಂಕಪಟ್ಟಿಯ ಲೆಕ್ಕಾಚಾರದ ಮೇಲೆ ಆರ್‌ಸಿಬಿ ಈ ಆರ್ಥಿಕ ಲಾಭದ ಅವಕಾಶ ಬಳಸಿಕೊಳ್ಳಲಿದೆಯೇ ಮತ್ತು ಸಿಎಸ್‌ಕೆ ಈ ಅಪರೂಪದ ಹಾದಿ ಹಿಡಿಯಲಿದೆಯೇ ಎಂಬುದು ಕುತೂಹಲ ಮೂಡಿಸಿದೆ.

ವಿಜಯ ಕರ್ನಾಟಕ 22 Apr 2026 4:24 pm