SENSEX
NIFTY
GOLD
USD/INR

Weather

29    C
...

ಕೇರಳದಲ್ಲಿ ಎಲ್‌ಡಿಎಫ್ ಹ್ಯಾಟ್ರಿಕ್ ಬಾರಿಸುವುದೇ?

ಕೇರಳದಲ್ಲಿ ಸರಳ ಬಹುಮತಕ್ಕೆ 71 ಕ್ಷೇತ್ರಗಳಲ್ಲಿ ಗೆಲ್ಲಬೇಕು. ಎಲ್‌ಡಿಎಫ್‌ಗೆ ಈಗ ಇರುವುದಕ್ಕಿಂತ 20ರಿಂದ 25 ಸೀಟುಗಳು ಕಡಿಮೆಯಾದರೂ ಅಧಿಕಾರದಲ್ಲಿ ಮುಂದುವರಿಯಬಹುದು. ಕಾಂಗ್ರೆಸ್‌ಗೆ ಈಗಿನ ಸಂಖ್ಯೆಗೆ ಇನ್ನು 30 ಸ್ಥಾನಗಳು ಬೇಕು. ಅದೇನು ಅಷ್ಟು ಸುಲಭದ ವಿಷಯವಲ್ಲ. ಪಿಣರಾಯಿ ಸರಕಾರದ ಆಡಳಿತ ವಿರೋಧಿ ಅಲೆಯನ್ನು ಪರಿಣಾಮಕಾರಿಯಾಗಿ ಬಳಸಿಕೊಂಡರೆ ಅಧಿಕಾರ ಹಿಡಿಯಬಹುದು. ಅದಕ್ಕೆ ಸ್ವಪ್ರತಿಷ್ಠೆ, ಗುಂಪುಗಾರಿಕೆ ಬಿಟ್ಟು ಒಗ್ಗಟ್ಟು ಪ್ರದರ್ಶಿಸಬೇಕು. ಅದು ಸಾಧ್ಯವೇ? ‘ಬಹುತ್ವ ಪರಂಪರೆ’ಯ ‘ದೇವರ ನಾಡ’ಲ್ಲಿ ಈಗ ಚುನಾವಣೆಯ ಜಿದ್ದಾಜಿದ್ದಿ. ಒಂದು ಬಣಕ್ಕೆ ಹೇಗಾದರೂ ಅಧಿಕಾರ ಉಳಿಸಿಕೊಳ್ಳುವ ತವಕ. ಮತ್ತೊಂದು ಬಣಕ್ಕೆ ಅಧಿಕಾರ ಹಿಡಿಯುವ ಧಾವಂತ. ಇವೆರಡರ ಮಧ್ಯೆ ನುಸುಳಲು ಬಿಜೆಪಿ ನೇತೃತ್ವದ ‘ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿಕೂಟ’ದ (ಎನ್‌ಡಿಎ) ಹವಣಿಕೆ. ಕೇರಳದ ಸಾಮಾಜಿಕ ಸಂರಚನೆ ಬಲ್ಲವರಿಗೆ ಸದ್ಯಕ್ಕೆ ಅಲ್ಲಿ ‘ಬಲಪಂಥೀಯ ವಿಚಾರಧಾರೆಗೆ ಅವಕಾಶವಿಲ್ಲ’ ಎನ್ನುವುದು ಗೊತ್ತಿದೆ. ಈಚಿನ ಚುನಾವಣೆಗಳಲ್ಲಿದು ಸಾಬೀತಾಗಿದೆ. ಸಾಕ್ಷರತೆ, ಪ್ರಜ್ಞಾವಂತರು ಹೆಚ್ಚಿರುವುದರಿಂದ ‘ಹಿಂದುತ್ವ’ ರಾಜಕಾರಣ ತಳವೂರಲು ಆಗಿಲ್ಲ. ಹಲವು ಜಾತಿ, ಧರ್ಮಗಳಿದ್ದರೂ ಮತೀಯವಾದ ತಲೆ ಎತ್ತಿಲ್ಲ. ಹಾಗಂತ ಸಂಘ- ಪರಿವಾರದವರು ಕೈಕಟ್ಟಿ ಕುಳಿತಿಲ್ಲ. ಒಳಗೊಳಗೆ, ತೆರೆಮರೆಯಲ್ಲಿ ಹಿಂದೂಗಳನ್ನು ಸಂಘಟಿಸುತ್ತಿದ್ದಾರೆ. ಅದು ನಿರೀಕ್ಷಿಸಿದಷ್ಟು ಫಲ ನೀಡಿಲ್ಲ. ಐದು ಸಾವಿರಕ್ಕೂ ಅಧಿಕ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಶಾಖೆಗಳಿದ್ದರೂ ಕಾಂಗ್ರೆಸ್ ಮತ್ತು ಎಡ ಪಕ್ಷಗಳ ‘ಮೃದು ಹಿಂದುತ್ವ’ ಕೇಸರಿ ಪಡೆ ಚಿಗುರಲು ಬಿಟ್ಟಿಲ್ಲ. ಇಡೀ ದೇಶ ಕಾಂಗ್ರೆಸ್, ನೆಹರೂ ‘ಹ್ಯಾಂಗೊವರ್’ನಲ್ಲಿದ್ದಾಗ ಕೇರಳ ಬೇರೆಯದೇ ದಿಕ್ಕಿನಲ್ಲಿ ಮುನ್ನಡೆದಿತ್ತು. ಇ.ಎಂ.ಎಸ್. ನಂಬೂದರಿಪಾಡ್ ನೇತೃತ್ವದಲ್ಲಿ ಮೊದಲ ಸಿಪಿಐ ಸರಕಾರ ರಚನೆಯಾಗಿತ್ತು. 1959ರಲ್ಲಿ ಕೇರಳ ಸರಕಾರ ವಜಾ ಮಾಡಿದ್ದರು ನೆಹರೂ. ಅಲ್ಲಿಂದಲೇ ಎಡ ಪಕ್ಷಗಳ ಬೇರುಗಳು ನಿಚ್ಚಳವಾಗಿದ್ದು. ಈ ಬೇರುಗಳನ್ನು ಉಳಿಸಲು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೋರಾಡುತ್ತಿದ್ದಾರೆ. ಇದು ಸಾಮಾನ್ಯ ಹಣಾಹಣಿಯಲ್ಲ. ಅಳಿವು-ಉಳಿವಿನ ಭವಿಷ್ಯ. ಪಶ್ಚಿಮ ಬಂಗಾಳ, ತ್ರಿಪುರಾದಲ್ಲಿ ಎಡಪಕ್ಷಗಳು ನಾಮಾವಶೇಷವಾಗಿವೆ. ಈಗ ಉಳಿದಿರುವುದು ಕೇರಳದಲ್ಲಿ. ಇಲ್ಲೂ ಅದೇ ಸ್ಥಿತಿ ಬಂದರೆ, ಎಡ ಪಕ್ಷಗಳ ಸರಕಾರವಿತ್ತು ಎಂದು ಇತಿಹಾಸದಲ್ಲಿ ಓದಬೇಕು. ಕೇರಳದ ಮತದಾರರು ಯಾವುದೇ ಪಕ್ಷ, ಮೈತ್ರಿ ರಂಗವನ್ನು ಸತತವಾಗಿ ಚುನಾಯಿಸಿಲ್ಲ. ಆಗಾಗ ಸರಕಾರ ಬದಲಾಯಿಸಿದ್ದಾರೆ. 1977ರ ಬಳಿಕ ಒಮ್ಮೆ ಎಲ್‌ಡಿಎಫ್, ಇನ್ನೊಮ್ಮೆ ಯುಡಿಎಫ್ ಆಯ್ಕೆ ಮಾಡಿದ್ದಾರೆ. 10 ವರ್ಷದ ಹಿಂದೆ ಎಲ್‌ಡಿಎಫ್ ಬೆಂಬಲಿಸಿದರು. 2021ರಲ್ಲಿ ಎರಡನೇ ಸಲ ಪುನರಾಯ್ಕೆ ಮಾಡಿ ಸಂಪ್ರದಾಯ ಮುರಿದರು. 2018ರ ಪ್ರವಾಹ ಮತ್ತು 2020ರ ‘ಕೋವಿಡ್ ಮಾರಿ’ಯನ್ನು ಸಮರ್ಥವಾಗಿ ನಿಭಾಯಿಸಿದ್ದರಿಂದ ಪಿಣರಾಯಿ ಅವರಿಗೆ ಜನ ಬೆಂಬಲ ದೊರೆಯಿತು. ಅವರಿಗೀಗ 80 ವರ್ಷ. ದೇಶದ ಅತ್ಯಂತ ಹಿರಿಯ ಮುಖ್ಯಮಂತ್ರಿ. ಅವರಿಗಿದು ಮೂರನೇ ಚುನಾವಣೆ. ಗೆದ್ದರೆ ‘ಹ್ಯಾಟ್ರಿಕ್ ಹೀರೊ’. ಕೇರಳ ವಿಧಾನಸಭೆ ಸದಸ್ಯರ ಸಂಖ್ಯೆ 140. 2021ರಲ್ಲಿ ಎಲ್‌ಡಿಎಫ್ 99 ಕ್ಷೇತ್ರಗಳಲ್ಲಿ ಗೆದ್ದಿದೆ. ಉಳಿದ 41 ಸ್ಥಾನ ಯುಡಿಎಫ್ ಪಾಲಾಗಿದೆ. ಚುನಾವಣೆ ವೇಳೆ ಸರಕಾರದ ವಿರುದ್ಧ ಬಂದಿದ್ದ ಭ್ರಷ್ಟಾಚಾರ ಆರೋಪ; ಶಬರಿಮಲೆಗೆ ಮಹಿಳೆಯರ ಪ್ರವೇಶದ ವಿಷಯದಲ್ಲಿ ಸರಕಾರ ತಳೆದ ನಿಲುವು ವಿವಾದವಾಗಿತ್ತು. ಅದು ಮತದಾರರ ಮೇಲೆ ಸಾಸಿವೆಯಷ್ಟು ಪರಿಣಾಮ ಬೀರಲಿಲ್ಲ. 2016ರಲ್ಲಿ ಎಲ್‌ಡಿಎಫ್‌ಗೆ ಸಿಕ್ಕಿದ್ದು 91 ಸ್ಥಾನ. ಆಮೇಲೆ ಇನ್ನೂ 8 ಸ್ಥಾನ ಹೆಚ್ಚು ಪಡೆಯಿತು. ಕೇರಳದ ಪ್ರಬುದ್ಧ ಮತದಾರರು ಯಾವ ರೀತಿ ಆಲೋಚಿಸುತ್ತಾರೆ ಎಂಬುದಕ್ಕೆ ಇದು ಸಾಕ್ಷಿ. ಪಿಣರಾಯಿ ಚಾಣಾಕ್ಷ. ಘಟಾನುಘಟಿಗಳ ಗರಡಿಯಲ್ಲಿ ಪಳಗಿದವರು. ಪಕ್ಷದೊಳಗಾಗಲೀ ಅಥವಾ ಹೊರಗಾಗಲೀ ಅವರಿಗೆ ಸರಿಸಮ ನಾಯಕರಿಲ್ಲ. ಪ್ರಬಲ ಈಳವ ಸಮುದಾಯಕ್ಕೆ ಸೇರಿದವರು. ಸಿಪಿಎಂನಲ್ಲಿ ಅವರದೊಂದೇ ದನಿ. ಬೇರೆ ದನಿಗಳಿಲ್ಲ. ಹೀಗಾಗಿ, ಸರ್ವಾಧಿಕಾರಿ. ಕಳೆದ ಚುನಾವಣೆಯಲ್ಲಿ ಅನೇಕ ಹಳಬರನ್ನು ಬದಿಗೊತ್ತಿ, ಹೊಸಬರನ್ನು ‘ಅಖಾಡ’ಕ್ಕೆ ಎಳೆತಂದು ಗೆಲ್ಲಿಸಿದರು. ಇದು ಸಣ್ಣ ವಿಷಯವಲ್ಲ. ದೇಶದಲ್ಲಿ ಎಡ ಪಕ್ಷಗಳು ನೇಪಥ್ಯಕ್ಕೆ ಸರಿಯುತ್ತಿರುವ ಹೊತ್ತಿನಲ್ಲೂ ದಿಟ್ಟ ನಿಲುವು ಕೈಗೊಂಡರು. ಲೋಕಸಭೆ ಚುನಾವಣೆ ಮುಖ್ಯಮಂತ್ರಿ ಪರವಾಗಿರಲಿಲ್ಲ. 20 ಕ್ಷೇತ್ರಗಳ ಪೈಕಿ ಗೆದ್ದಿದ್ದು ಒಂದರಲ್ಲಿ. ಯುಡಿಎಫ್ 18, ಒಂದು ಎನ್‌ಡಿಎ ಪಾಲು. ವಿಧಾನಸಭೆ ಐದು ಕ್ಷೇತ್ರಗಳಿಗೆ ನಡೆದ ಉಪ ಚುನಾವಣೆಯಲ್ಲಿ ನಾಲ್ಕು ಯುಡಿಎಫ್‌ಗೆ. ಒಂದು ಮಾತ್ರ ಎಲ್‌ಡಿಎಫ್‌ಗೆ. ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಎಲ್‌ಡಿಎಫ್ ಸಿಂಹಪಾಲು ಪಡೆದಿದ್ದರೂ, ಯುಡಿಎಫ್ ತೀವ್ರ ಸ್ಪರ್ಧೆಯೊಡ್ಡಿತ್ತು. ಎಲ್‌ಡಿಎಫ್‌ಗೆ ಸುಖಾಸುಮ್ಮನೆ ಮತದಾರರು ಎರಡೆರಡು ಸಲ ಬೆಂಬಲ ನೀಡಿಲ್ಲ. ಅಭಿವೃದ್ಧಿ ನೋಡಿದ್ದಾರೆ. ಜನಪರ ಕೆಲಸ ಗಮನಿಸಿದ್ದಾರೆ. ಮೂಲಸೌಕರ್ಯ; ಶಿಕ್ಷಣ, ಆರೋಗ್ಯ, ಆರ್ಥಿಕ ಪ್ರಗತಿ ವಿಶ್ಲೇಷಿಸಿದ್ದಾರೆ. ಕರ್ನಾಟಕ ಅಥವಾ ಬೇರೆಡೆಯಂತೆ ಚುನಾವಣೆಗಳಲ್ಲಿ ಹಣ ಪ್ರಭಾವ ಬೀರುವುದಿಲ್ಲ. ಜನ ದುಡ್ಡಿಗೆ ಆತ್ಮಸಾಕ್ಷಿ ಮಾರಿಕೊಳ್ಳುವವರಲ್ಲ. ಕೆಲವು ಮಾಧ್ಯಮಗಳು ಎಲ್‌ಡಿಎಫ್ ಸರಕಾರವನ್ನು ಕಟುವಾಗಿ ಟೀಕಿಸುತ್ತಿವೆ. ಜನಪರವಾದ ಕಾರ್ಯಕ್ರಮಗಳ ಹೊರೆಯಿಂದ ಆರ್ಥಿಕವಾಗಿ ದಿವಾಳಿಯಾಗುತ್ತಿದೆ. ಸಾಲದ ಸುಳಿಗೆ ಸಿಕ್ಕಿದೆ ಎಂದು ಆರೋಪಿಸುತ್ತಿವೆ. ಟೀಕೆಗಳಲ್ಲೂ ನಿಜವಿದೆ. ಆದರೆ, ಇಡೀ ದೇಶದಲ್ಲಿ ಕೇರಳ ಮಾತ್ರ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿದೆಯೇ? ಬೇರೆ ರಾಜ್ಯಗಳು ಸುಭಿಕ್ಷವಾಗಿವೆಯೇ? ಯಾವುದೇ ಸರಕಾರಕ್ಕೆ ಕಲ್ಯಾಣ ಕಾರ್ಯಕ್ರಮಗಳಿಗೆ ಸಂಪನ್ಮೂಲ ಹೊಂದಿಸುವುದು ಕಷ್ಟದ ಕೆಲಸ. ಐದು ಗ್ಯಾರಂಟಿ ಕೊಟ್ಟಿರುವ ಕರ್ನಾಟಕವೂ ಸಮಸ್ಯೆಯಲ್ಲಿದೆ. ಬಿಜೆಪಿ ರಾಜ್ಯಗಳಲ್ಲಿ ಹಾಲು-ಜೇನು ಹೊಳೆ ಹರಿಯುತ್ತಿಲ್ಲ. ಪಿಣರಾಯಿ ವಿಜಯನ್ ಅವರಿಗಿರುವುದು ಒಂದೇ ಸಮಸ್ಯೆ. ಅದು ಆಡಳಿತ ವಿರೋಧಿ ಅಲೆ. ಜನ ಎಲ್‌ಡಿಎಫ್ ಸರಕಾರವನ್ನು ಎರಡನೇ ಸಲ ಬೆಂಬಲಿಸಿದ್ದಾರೆ. ಇದು ಮೂರನೇ ಪರೀಕ್ಷೆ. ಇದರಿಂದಾಗಿ ಕೇರಳ ಚುನಾವಣೆ ಕುತೂಹಲ ಕೆರಳಿಸಿದೆ. ಮುಖ್ಯಮಂತ್ರಿ ಒಳಗೊಂಡಂತೆ 56 ಅಭ್ಯರ್ಥಿಗಳು ಮರು ಆಯ್ಕೆ ಬಯಸಿದ್ದಾರೆ. ಅವರನ್ನು ಮತದಾರರು ಒಪ್ಪಿಕೊಳ್ಳುವರೇ ಎಂಬುದು ಮಿಲಿಯನ್ ಡಾಲರ್ ಪ್ರಶ್ನೆ. ಎಲ್‌ಡಿಎಫ್ ಕೆಲವೆಡೆ ಬಂಡಾಯ ಎದುರಿಸುತ್ತಿದೆ. ಹಿರಿಯ ನಾಯಕ, ಮಾಜಿ ಸಚಿವ ಜಿ. ಸುಧಾಕರನ್ ಪಕ್ಷ ಬಿಟ್ಟಿದ್ದಾರೆ. ಆದರೆ, ಬಂಡಾಯವನ್ನು ಸಮರ್ಥವಾಗಿ ಎದುರಿಸುವ ವಿಶ್ವಾಸದಲ್ಲಿ ಮುಖ್ಯಮಂತ್ರಿ ಇದ್ದಾರೆ. ಲೋಕಸಭೆ ಚುನಾವಣೆ, ವಿಧಾನಸಭೆ ಉಪ ಚುನಾವಣೆ ಮತ್ತು ಸ್ಥಳೀಯ ಸಂಸ್ಥೆ ಚುನಾವಣೆ ಫಲಿತಾಂಶ ಯುಡಿಎಫ್ ಪಾಳೆಯದ ಉತ್ಸಾಹ ಹೆಚ್ಚಿಸಿದೆ. ಇದರ ಪರಿಣಾಮ ವಿಧಾನಸಭೆ ಚುನಾವಣೆಯ ಮೇಲೆ ಆಗಬಹುದು ಎಂಬ ಲೆಕ್ಕಾಚಾರ ಯುಡಿಎಫ್ ನಾಯಕರದ್ದು. ಕಾಂಗ್ರೆಸ್ ಪಕ್ಷದೊಳಗೆ ಗುಂಪುಗಾರಿಕೆ ಇದೆ. ಅಧಿಕಾರಕ್ಕೆ ಬಂದರೆ ಮುಖ್ಯಮಂತ್ರಿ ಕುರ್ಚಿಗೆ ಮುಗಿಬೀಳುವ ದೊಡ್ಡ ದಂಡೇ ಇದೆ. ವಿ.ಡಿ. ಸತೀಶನ್, ರಮೇಶ್ ಚೆನ್ನಿತಲ, ಕೆ.ಸಿ. ವೇಣುಗೋಪಾಲ್ ಹಾಗೂ ಕೆ. ಸುಧಾಕರನ್ ಮುಖ್ಯಮಂತ್ರಿ ಕುರ್ಚಿಗೆ ಟವೆಲ್ ಹಾಕಲು ಕಾಯುತ್ತಿದ್ದಾರೆ. ವಿಧಾನಸಭೆ ಚುನಾವಣೆಗೆ ಟಿಕೆಟ್ ಕೊಡಲಿಲ್ಲವೆಂದು ಸುಧಾಕರನ್ ಮುನಿಸಿಕೊಂಡು ಪಕ್ಷ ಬಿಡಲು ಹೊರಟಿದ್ದರು. ಹಿರಿಯ ನಾಯಕ, ಮಾಜಿ ಮುಖ್ಯಮಂತ್ರಿ ಎ.ಕೆ. ಆಂಟನಿ ಹಾಗೂ ರಮೇಶ್ ಚೆನ್ನಿತಲ ಮಧ್ಯಪ್ರವೇಶಿಸಿ ಮನವೊಲಿಸಿದರು. ರಾಜ್ಯ ಕಾಂಗ್ರೆಸ್‌ನ ಮುಂಚೂಣಿ ನಾಯಕರಲ್ಲಿ ಬಹುತೇಕರು ನಾಯರ್ ಸಮುದಾಯದವರು. ಕೆ. ಸುಧಾಕರನ್ ಮಾತ್ರ ಈಳವ ಜಾತಿಯವರು. ಈಳವರನ್ನು ಕಾಂಗ್ರೆಸ್ ಕಡೆಗಣಿಸಿದೆ ಎಂದು ಅಸಮಾಧಾನವಿದೆ. ಈಳವ ಸಮಾಜದ ಮುಖಂಡ ವೆಲ್ಲಪಳ್ಳಿ ನಟೇಶನ್ ಬಹಿರಂಗವಾಗಿಯೇ ಅತೃಪ್ತಿ ಹೊರಹಾಕಿದ್ದಾರೆ. ಟಿಕೆಟ್ ಹಂಚಿಕೆಯಲ್ಲಿ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರಿಗೆ ಸಮೀಪದಲ್ಲಿರುವ ಕೆ.ಸಿ. ವೇಣುಗೋಪಾಲ್ ನಿಷ್ಠರಿಗೆ ಹೆಚ್ಚಿನ ಅವಕಾಶ ಸಿಕ್ಕಿದೆ. ವಿ.ಡಿ. ಸತೀಶನ್, ರಮೇಶ್ ಚೆನ್ನಿತಲ ಬೆಂಬಲಿಗರಿಗೂ ಮಣೆ ಹಾಕಲಾಗಿದೆ. ರಾಜ್ಯದ ಒಟ್ಟು ಜನಸಂಖ್ಯೆಯಲ್ಲಿ ಶೇ. 25ಕ್ಕಿಂತ ಹೆಚ್ಚಿರುವ ಈಳವರಿಗೆ 20 ಕ್ಷೇತ್ರಗಳಲ್ಲಿ ಟಿಕೆಟ್ ಕೊಡಲಾಗಿದೆ. ಇದು ಒಬಿಸಿ ವರ್ಗದ ಅತೀ ದೊಡ್ಡ ಜಾತಿ. ಅವರ ಒಟ್ಟು ಸಂಖ್ಯೆಗೆ ಅನುಗುಣವಾಗಿ ಟಿಕೆಟ್ ಹಂಚಿಕೆ ಮಾಡಿಲ್ಲ. ಶೇ. 15ರಷ್ಟಿರುವ ನಾಯರ್ ಸಮುದಾಯದ 22 ಅಭ್ಯರ್ಥಿಗಳಿಗೆ ಹಾಗೂ ಶೇ. 23ರಷ್ಟಿರುವ ಕ್ರೈಸ್ತ ಧರ್ಮದ 22 ಅಭ್ಯರ್ಥಿಗಳಿಗೆ ಟಿಕೆಟ್ ಹಂಚಿಕೆ ಮಾಡಲಾಗಿದೆ. ಟಿಕೆಟ್ ಹಂಚಿಕೆಯಲ್ಲೂ ಈಳವರಿಗೆ ಅನ್ಯಾಯ ಮಾಡಲಾಗಿದೆ. ಕನಿಷ್ಠ 30 ಟಿಕೆಟ್‌ಗಳನ್ನಾದರೂ ಕೊಡಬೇಕು ಎಂದು ಕಾಂಗ್ರೆಸ್ ಪಕ್ಷದ ಆಂತರಿಕ ಸಮೀಕ್ಷೆ ಹೇಳಿತ್ತು. ಅನ್ಯಾಯವಾಗಿರುವುದು ಈಳವರಿಗೆ ಮಾತ್ರವಲ್ಲ. ಹೆಚ್ಚು ಕಡಿಮೆ ಜನಸಂಖ್ಯೆಯಲ್ಲಿ ಈಳವರಷ್ಟೇ ಇರುವ ಮುಸ್ಲಿಮರನ್ನೂ ಕಡೆಗಣಿಸಲಾಗಿದೆ. ಶೇ. 25ರಷ್ಟಿರುವ ಮುಸ್ಲಿಮರಿಗೆ ಕಾಂಗ್ರೆಸ್ ಕೊಟ್ಟಿರುವುದು 12 ಟಿಕೆಟ್ ಮಾತ್ರ. ‘ಐಯುಎಂಎಲ್’ ಜತೆ ಮೈತ್ರಿ ಮಾಡಿಕೊಂಡಿದೆ. ಮಿತ್ರ ಪಕ್ಷ ಬಹುತೇಕ ಮುಸ್ಲಿಮರನ್ನು ಕಣಕ್ಕೆ ಇಳಿಸಲಿದೆ. ಆ ಮಾತು ಬೇರೆ. ಕಾಂಗ್ರೆಸ್‌ನಲ್ಲಿ ಎಷ್ಟು ಪಾಲು ಸಿಕ್ಕಿದೆ ಎಂಬುದು ಮುಖ್ಯ. ಕೇರಳದಲ್ಲಿ ಬಿಜೆಪಿಗೆ ಅದರದೇ ಆದ ವೋಟ್ ಬ್ಯಾಂಕ್ ಇದೆ. 2016ರಲ್ಲಿ ತಿರುವನಂತಪುರ ವಿಧಾನಸಭಾ ಕ್ಷೇತ್ರದಲ್ಲಿ ಒ. ರಾಜಗೋಪಾಲ್ ಗೆದ್ದಿದ್ದರು. ಮುಂದಿನ ಚುನಾವಣೆಯಲ್ಲಿ ಆ ಸೀಟೂ ಉಳಿಯಲಿಲ್ಲ. ಅದಕ್ಕೆ 12.41ರಷ್ಟು ಮತಗಳು ಬಿದ್ದರೂ ಸೀಟುಗಳಾಗಿ ಪರಿವರ್ತನೆ ಆಗಿಲ್ಲ. 2024ರ ಲೋಕಸಭೆ ಚುನಾವಣೆಯಲ್ಲಿ ತ್ರಿಶೂರ್‌ನಿಂದ ಸುರೇಶ್ ಗೋಪಿ ಗೆದ್ದಿದ್ದಾರೆ. ‘ವಿಕಸಿತ್ ಕೇರಳಂ’ ಟ್ರಂಪ್ ಕಾರ್ಡ್ ಬಳಸಲು ಬಿಜೆಪಿ ಮುಂದಾಗಿದೆ. ಯಶಸ್ಸು ಕಾಣುವುದು ಕಷ್ಟ. ಬೇರೆ ರಾಜ್ಯಗಳಂತೆ ಕೇರಳದಲ್ಲಿ ಬಲಿಷ್ಠವಾದ ಪ್ರಾದೇಶಿಕ ಪಕ್ಷದ ಆಶ್ರಯ ಬಿಜೆಪಿಗೆ ಸಿಕ್ಕಿಲ್ಲ. ಕರ್ನಾಟಕದ ಜೆಡಿಎಸ್, ಮಹಾರಾಷ್ಟ್ರದ ಶಿವಸೇನೆ (ಶಿಂದೆ) ಹಾಗೂ ಬಿಹಾರದಲ್ಲಿ ಜೆಡಿಯು ಬಲದಲ್ಲಿ ರಾಜಕಾರಣ ಮಾಡುತ್ತಿದೆ. ಕೇರಳದಲ್ಲಿ ಕೇಸರಿ ಪಡೆಗೆ ಯಾರ ಆಶ್ರಯ ಇಲ್ಲ. ಹೀಗಾಗಿ ಗೆಲ್ಲುವುದು ಕಷ್ಟ. ಎಪ್ರಿಲ್ 9ರ ವಿಧಾನಸಭೆ ಚುನಾವಣೆಯಲ್ಲಿ ಕೇರಳದ ಮತದಾರ ಯಾವ ಪಕ್ಷದ ಕೈ ಹಿಡಿಯುತ್ತಾರೆ ಎಂದು ಅಂದಾಜಿಸುವುದು ಕಷ್ಟ. ಕಾಂಗ್ರೆಸ್ ಮೇಲೆ ಮುನಿಸಿಕೊಂಡಿರುವ ಈಳವರು ಬಹುತೇಕ ಎಲ್‌ಡಿಎಫ್, ಬಿಜೆಪಿ ಬೆಂಬಲಿಸಬಹುದು. ಕಾಂಗ್ರೆಸ್‌ಗೂ ಒಂದಷ್ಟು ಮತಗಳು ಬರಬಹುದು. ನಾಯರ್, ನಂಬೂದರಿಗಳು ಬಿಜೆಪಿ ಕಡೆ ವಾಲಬಹುದು. ಎಲ್ಲರೂ ಅಲ್ಲ. ಬಿಜೆಪಿ ಅಧಿಕಾರಕ್ಕೆ ಬರುವ ಸಾಧ್ಯತೆಗಳು ಕ್ಷೀಣವಾಗಿರುವುದರಿಂದ ಅದಕ್ಕೆ ಮತ ಹಾಕಿ ವ್ಯರ್ಥ ಮಾಡಿಕೊಳ್ಳುವುದು ಬೇಡ ಎಂದು ಆಲೋಚನೆ ಮಾಡುವವರ ಸಂಖ್ಯೆ ದೊಡ್ಡದಿದೆ. ಕೇರಳದಲ್ಲಿ ಸರಳ ಬಹುಮತಕ್ಕೆ 71 ಕ್ಷೇತ್ರಗಳಲ್ಲಿ ಗೆಲ್ಲಬೇಕು. ಎಲ್‌ಡಿಎಫ್‌ಗೆ ಈಗ ಇರುವುದಕ್ಕಿಂತ 20ರಿಂದ 25 ಸೀಟುಗಳು ಕಡಿಮೆಯಾದರೂ ಅಧಿಕಾರದಲ್ಲಿ ಮುಂದುವರಿಯಬಹುದು. ಕಾಂಗ್ರೆಸ್‌ಗೆ ಈಗಿನ ಸಂಖ್ಯೆಗೆ ಇನ್ನು 30 ಸ್ಥಾನಗಳು ಬೇಕು. ಅದೇನು ಅಷ್ಟು ಸುಲಭದ ವಿಷಯವಲ್ಲ. ಪಿಣರಾಯಿ ಸರಕಾರದ ಆಡಳಿತ ವಿರೋಧಿ ಅಲೆಯನ್ನು ಪರಿಣಾಮಕಾರಿಯಾಗಿ ಬಳಸಿಕೊಂಡರೆ ಅಧಿಕಾರ ಹಿಡಿಯಬಹುದು. ಅದಕ್ಕೆ ಸ್ವಪ್ರತಿಷ್ಠೆ, ಗುಂಪುಗಾರಿಕೆ ಬಿಟ್ಟು ಒಗ್ಗಟ್ಟು ಪ್ರದರ್ಶಿಸಬೇಕು. ಅದು ಸಾಧ್ಯವೇ? ಎಲ್‌ಡಿಎಫ್, ಯುಡಿಎಫ್‌ಗೆ ಈ ವಿಧಾನಸಭೆ ಚುನಾವಣೆ ಬಿಸಿ ತುಪ್ಪ. ಬಾಯಿಗೆ ಹಾಕಿಕೊಂಡರೆ ಉಗಿಯುವುದೂ ಕಷ್ಟ. ನುಂಗುವುದೂ ಕಷ್ಟ. ಒಂದು ರಂಗ ಗೆಲ್ಲಬಹುದು. ಮತ್ತೊಂದು ರಂಗ ಸೋಲಬಹುದು. ಸೋತರೆ ಮತ್ತೆ ಚೇತರಿಸಿಕೊಂಡು ಮೇಲೇಳುವುದು ಸುಲಭವಲ್ಲ.

ವಾರ್ತಾ ಭಾರತಿ 26 Mar 2026 10:02 am

Bangladesh Bus Tragedy: ನದಿಗೆ ಉರಳಿದ 50 ಪ್ರಯಾಣಿಕರಿದ್ದ ಬಸ್, ಹಲವರು ಸಾವು; ಎದೆ ನಡುಗಿಸೋ ವಿಡಿಯೋ

Bangladesh Bus Tragedy Video: ಬಾಂಗ್ಲಾದೇಶದ ದೌಲತ್ದಿಯಾ ಘಾಟ್‌ನಲ್ಲಿ ಹಡಗಿಗೆ ಹತ್ತಲು ಸಜ್ಜಾಗಿದ್ದ ಪ್ರಯಾಣಿಕರು ತುಂಬಿದ್ದ ಖಾಸಗಿ ಬಸ್ ನಿಯಂತ್ರಣ ಕಳೆದುಕೊಂಡು ಪದ್ಮಾ ನದಿಗೆ ಉರುಳಿ ಬಿದ್ದ ಘಟನೆ ಘಾಟ್ ಸಂಖ್ಯೆ 3ರಲ್ಲಿ ಬುಧವಾರ ಸಂಜೆ ಜರುಗಿದೆ. ಬಸ್‌ನಲ್ಲಿ ಸುಮಾರು 40-50 ಮಂದಿ ಇದ್ದರು, ಅವಘಡದಲ್ಲಿ ಸುಮಾರು 20ಕ್ಕು ಅಧಿಕ ಮಂದಿ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಪ್ರಯಾಣಿಕರ ರಕ್ಷಣಾ

ಒನ್ ಇ೦ಡಿಯ 26 Mar 2026 9:54 am

ಹೆಚ್ಚಿದೆ ನಿರೀಕ್ಷೆಗಳ ಮಹಾಪೂರ; ಅಭಿವೃದ್ಧಿ ಗೆ ಬಲ ತುಂಬುವುದೇ ಜಿಬಿಎ ಪಂಚ ಪಾಲಿಕೆಗಳ ಬಜೆಟ್?

ಗ್ರೇಟರ್ ಬೆಂಗಳೂರು ಪ್ರಾಧಿಕಾರ ರಚನೆಯಾದ ನಂತರ ಮೊದಲ ಬಾರಿಗೆ ಅಸ್ತಿತ್ವಕ್ಕೆ ಬಂದಿರುವ ಐದು ಪಾಲಿಕೆಗಳು ಮಂಡಿಸಲಿರುವ 2026-27ನೇ ಸಾಲಿನ ಬಜೆಟ್ ಈಗ ಸಾರ್ವಜನಿಕರಲ್ಲಿ ಭಾರೀ ಕುತೂಹಲ ಮೂಡಿಸಿದೆ. ನಗರದ ಸರ್ವತೋಮುಖ ಅಭಿವೃದ್ಧಿಗೆ ಪೂರಕವಾದ ಮೂಲಸೌಕರ್ಯಗಳಿಗೆ ಈ ಬಜೆಟ್‌ನಲ್ಲಿ ಹೆಚ್ಚಿನ ಆದ್ಯತೆ ಸಿಗಲಿದೆ ಎಂಬ ನಿರೀಕ್ಷೆಯಿದ್ದು, ವಿಶೇಷವಾಗಿ ವರ್ಷಗಳಿಂದ ಕಾಡುತ್ತಿರುವ ಸಂಚಾರ ದಟ್ಟಣೆಗೆ ವೈಜ್ಞಾನಿಕ ಪರಿಹಾರ ಕಂಡುಕೊಳ್ಳುವತ್ತ ಹೊಸ ಪಾಲಿಕೆಗಳು ದಿಟ್ಟ ಹೆಜ್ಜೆ ಇಡಬೇಕೆಂಬುದು ನಾಗರಿಕರ ಪ್ರಬಲ ಆಶಯವಾಗಿದೆ.

ವಿಜಯ ಕರ್ನಾಟಕ 26 Mar 2026 9:16 am

ಬ್ರೋಕರ್‌ ಕೆಲಸ ಮಾಡಲು ನಾವು ಪಾಕಿಸ್ತಾನ ಅಲ್ಲ; ಅಮೆರಿಕ-ಇರಾನ್‌ 'ಮಿಡಲ್‌ಮ್ಯಾನ್‌' ಆತ್ಮಕ್ಕೆ ಪೆಟ್ಟು ಕೊಟ್ಟ ಜೈಶಂಕರ್‌!

ಅವರಿವರ ಜಗಳ ಬಿಡಿಸಲು ನಾವು ಪಾಕಿಸ್ತಾನಿಗಳಂತೆ ದಲ್ಲಾಳಿಗಳಲ್ಲ. ನಾವು ಯಾರಿಗಾಗಿಯತೂ ಬ್ರೋಕರ್‌ ಕೆಲಸ ಮಾಡಲ್ಲ.. ಇದು ಅಮೆರಿಕ ಮತ್ತು ಇರಾನ್‌ ನಡವೆ ಸಂಧಾನ ನಡೆಸುವ ಜವಾಬ್ದಾರಿಯನ್ನು ಪಾಕಿಸ್ತಾನಕ್ಕೆ ನೀಡಲಾಗಿದೆ ಎಂಬ ವರದಿಗಳಿಗೆ, ಭಾರತದ ವಿದೇಶಾಂಗ ಸಚಿವ ಡಾ.ಎಸ್.‌ ಜೈಶಂಕರ್‌ ನೀಡಿರುವ ತಿರುಗೇಟು. ಹೌದು, ಅಮೆರಿಕವು ಮಧ್ಯಸ್ಥಿಕೆಗಾಗಿ ಪಾಕಿಸ್ತಾನವನ್ನು ನೆಚ್ಚಿಕೊಂಡಿದೆ ಎಂಬ ಸುದ್ದಿಗೆ ಭಾರತ ಅದೆಷ್ಟು ಮಹತ್ವ ಕೊಡುತ್ತದೆ ಎಂಬುದಕ್ಕೆ ಜೈಶಂಕರ್‌ ಅವರ ಈ ಹೇಳಿಕೆ ಸಾಕ್ಷಿಯಾಗಿದೆ. ಇಲ್ಲಿದೆ ಹೆಚ್ಚಿನ ಮಾಹಿತಿ.

ವಿಜಯ ಕರ್ನಾಟಕ 26 Mar 2026 9:08 am

ಲಕ್ಷಾಂತರ ರೂಪಾಯಿ ಸಂಬಳದ ಕೆಲಸಕ್ಕೆ ಗುಡ್‌ಬೈ: ಸಿಂಗಾಪುರದಿಂದ ಮುಂಬೈಗೆ ಬಂದು ಕವಿಯಾದ ಭಾರತೀಯ ಮೂಲದ ಯುವತಿ

ಮುಂಬೈ: ಜೀವನದಲ್ಲಿ ನಮಗೆ ಯಾವುದರಲ್ಲಿ ನಿಜವಾದ ಆಸಕ್ತಿ ಇದೆಯೋ, ಅದನ್ನು ಸಾಧಿಸಲು ಎಷ್ಟೇ ಕಷ್ಟವಾದರೂ ಹಿಂದೇಟು ಹಾಕಬಾರದು ಎಂಬುದಕ್ಕೆ 28 ವರ್ಷದ ನಮ್ರತಾ ಯಾದವ್ ಅವರೇ ಅತ್ಯುತ್ತಮ ಉದಾಹರಣೆ. ಸಿಂಗಾಪುರದಂತಹ ದುಬಾರಿ ನಗರದಲ್ಲಿ, ಪ್ರತಿಷ್ಠಿತ ಕೆಪಿಎಂಜಿ (KPMG) ಕಂಪನಿಯಲ್ಲಿ ಕೈತುಂಬಾ ಸಂಬಳ ತರುವ ಕಾರ್ಪೊರೇಟ್ ಕೆಲಸವಿದ್ದರೂ, ಕೇವಲ ಕವಿತೆ ಬರೆಯುವ ಮತ್ತು ಸಾಹಿತ್ಯದ ಮೇಲಿನ ಒಲವಿನಿಂದ ಆ

ಒನ್ ಇ೦ಡಿಯ 26 Mar 2026 8:51 am

ಕಾನೂನುಬಾಹಿರ ಬಂಧನಗಳಿಗೆ ಕೊನೆ ಯಾವಾಗ?

ಸರಕಾರದ ಜನ ವಿರೋಧಿ ನೀತಿಗಳನ್ನು ವಿರೋಧಿಸುವವರನ್ನು ಬಂಧಿಸಿ ಬಾಯಿ ಮುಚ್ಚಿಸುವುದು ಈಗ ಸುಲಭದ ಸಂಗತಿಯಾಗಿದೆ. ಯಾವುದೇ ಪುರಾವೆಯಿಲ್ಲದೆ ದೇಶ ವಿರೋಧಿ ಪ್ರತಿಭಟನೆಯ ಆರೋಪವನ್ನು ಹೊರಿಸಿ ಸೆರೆಮನೆಗೆ ತಳ್ಳಲಾಗುತ್ತದೆ. ಆ ಮೂಲಕ ಹೋರಾಟಗಾರರ ಧ್ವನಿಯನ್ನು ಹತ್ತಿಕ್ಕಲಾಗುತ್ತಿದೆ. ಜಾಗತಿಕ ಖ್ಯಾತಿಯ ಚಿಂತಕ ಆನಂದ ತೇಲ್ತುಂಬ್ಡೆ, ಕವಿ ವರವರರಾವ್ ಸೇರಿದಂತೆ ಹಲವಾರು ಲೇಖಕರನ್ನು, ಪತ್ರಕರ್ತರನ್ನು ಬಂಧಿಸಲಾಗಿದ್ದ ಸಂಗತಿ ಎಲ್ಲರಿಗೂ ಗೊತ್ತಿದೆ. ಅದೇ ರೀತಿ ಹೆಸರಾಂತ ಪರಿಸರ ಹೋರಾಟಗಾರ ಸೋನಮ್ ವಾಂಗ್ಚುಕ್ ಅವರನ್ನು ಇಂಥದೇ ತಳಬುಡವಿಲ್ಲದ ಆರೋಪವನ್ನು ಹೊರಿಸಿ ಆರು ತಿಂಗಳ ಹಿಂದೆ ಬಂಧಿಸಲಾಗಿತ್ತು. ಈಗ ಅವರನ್ನು ದಿಢೀರನೇ ಬೇಷರತ್ತಾಗಿ ಬಿಡುಗಡೆ ಮಾಡಲಾಗಿದೆ. ಹಾಗಿದ್ದರೆ ಅವರನ್ನು ಬಂಧಿಸಿದ್ದೇಕೆ? ಅವರ ಮೇಲೆ ಹೊರಿಸಿದ್ದ ಆರೋಪಗಳು ಇದರಿಂದಾಗಿ ಸುಳ್ಳೆಂದು ಸಾಬೀತಾಗಲಿಲ್ಲವೇ? ಸೋನಮ್ ವಾಂಗ್ಚುಕ್ ಅವರು ಮಾಡಿದ ಅಪರಾಧವಾದರೂ ಏನು? ಲಡಾಖ್‌ಗೆ ರಾಜ್ಯದ ಸ್ಥಾನಮಾನ ನೀಡಬೇಕು, ಲಡಾಖ್‌ನ ಸೂಕ್ಷ್ಮ ಪರಿಸರ ವ್ಯವಸ್ಥೆಗೆ ಸಂವಿಧಾನಿಕ ರಕ್ಷಣೆಯನ್ನು ನೀಡಬೇಕು ಎಂದು ಆಗ್ರಹಿಸಿ ಶಾಂತಿಯುತವಾಗಿ ನಡೆದ ಚಳವಳಿಯಲ್ಲಿ ಭಾಗವಹಿಸಿದ ತಪ್ಪಿಗಾಗಿ ವಾಂಗ್ಚುಕ್ ಅವರನ್ನು 2025ರ ಸೆಪ್ಟಂಬರ್ 26ರಂದು ಬಂಧಿಸಲಾಗಿತ್ತು. ಲೇಹ್‌ನಲ್ಲಿ ಸಿಡಿದೆದ್ದ ಚಳವಳಿಯಲ್ಲಿ ನಾಲ್ಕು ಮಂದಿ ಸಾವಿಗೀಡಾಗಿದ್ದನ್ನೇ ನೆಪ ಮಾಡಿಕೊಂಡು ವಾಂಗ್ಚುಕ್ ಅವರನ್ನು ಬಂಧಿಸಿ ಜೋಧಪುರದ ಜೈಲಿಗೆ ಸ್ಥಳಾಂತರಿಸಲಾಗಿತ್ತು. ಲಡಾಖ್‌ನಲ್ಲಿ ಶಾಂತಿಯನ್ನು ಕಾಪಾಡುವ ಉದ್ದೇಶದಿಂದ ಈಗ ಅವರನ್ನು ಬೇಷರತ್ ಬಿಡುಗಡೆ ಮಾಡಲಾಗಿದೆ ಎಂದು ಕೇಂದ್ರ ಸರಕಾರ ತಿಳಿಸಿದೆ. ಈಗ ಅವರನ್ನು ಬಿಡುಗಡೆ ಮಾಡಿದಾಗ ಅವರ ಮೇಲೆ ಸರಕಾರ ಹೊರಿಸಿದ ಗಂಭೀರ ಆರೋಪಗಳೆಲ್ಲ ಏನಾದವು ಎಂಬ ಪ್ರಶ್ನೆಗೆ ಉತ್ತರ ಬೇಕಾಗಿದೆ. ದೇಶದ ನಾಗರಿಕನೊಬ್ಬನ ವಿರುದ್ಧ ದೇಶ ದ್ರೋಹದ ಹಾಗೂ ಪಾಕಿಸ್ತಾನದ ಜೊತೆಗೆ ಸಂಪರ್ಕ ಹೊಂದಿದ ಗುರುತರ ಆರೋಪ ಹೊರಿಸಿ ರಾಷ್ಟ್ರೀಯ ಭದ್ರತಾ ಕಾಯ್ದೆಯನ್ವಯ ಬಂಧನಕ್ಕೆ ಗುರಿಪಡಿಸಿ ಈಗ ಯಾವುದೇ ವಿವರಣೆ ಇಲ್ಲದೆ ಬಿಡುಗಡೆ ಮಾಡಿರುವುದು ಸರಕಾರದ ನಡೆಯ ಬಗ್ಗೆ ಸಂದೇಹಕ್ಕೆ ಕಾರಣವಾಗುತ್ತದೆ. ಈ ಹಿಂದೆ ಬಂಧಿಸಲಾದ ಪತ್ರಕರ್ತ ಗೌರವ್ ನವ್ಲಾಖಾ, ತೇಲ್ತುಂಬ್ಡೆ ಮೊದಲಾದವರ ಬಂಧನ ಕೂಡ ಇಂಥದೇ ಗಾಳಿಗೆ ಹಾರಿ ಹೋಗುವ ಆರೋಪಗಳನ್ನು ಹೊರಿಸಿ ಬಂಧಿಸಲಾಗಿತ್ತೇ ಎಂಬ ಪ್ರಶ್ನೆಗೆ ಉತ್ತರ ಬೇಕಾಗಿದೆ. ವಾಂಗ್ಚುಕ್ ಅವರ ಬಂಧನವನ್ನು ಪ್ರಶ್ನಿಸಿ ಅವರ ಪತ್ನಿ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಹಾಕಿದ್ದರು. ಅದು ವಿಚಾರಣೆಗೆ ಬರುವ ಮೂರು ದಿನಗಳ ಮೊದಲೇ ಅವರ ಬಿಡುಗಡೆ ಆಗಿದೆ. ಒಂದು ವೇಳೆ ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ ನಡೆದು ಬಿಡುಗಡೆಗೆ ಕೋರ್ಟ್ ಆದೇಶ ಮಾಡಿದರೆ ಮುಜುಗರವಾಗಬಾರದೆಂದು ಈ ಕ್ರಮ ಕೈಗೊಳ್ಳಲಾಗಿದೆಯೇ ಎಂಬ ಸಂದೇಹ ಸಹಜವಾಗಿ ಮೂಡುತ್ತದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಕೂಡ ಪ್ರಭುತ್ವದ ಕಾರ್ಯ ವೈಖರಿಯ ಬಗ್ಗೆ ಭಿನ್ನಾಭಿಪ್ರಾಯಗಳಿರುವುದು ಸಹಜ. ಇದು ಜನತಂತ್ರದ ಸೌಂದರ್ಯ. ಇಂಥ ವಿಭಿನ್ನ ಅಭಿಪ್ರಾಯಗಳಿಗೆ ಸರಕಾರ ಸಹಾನುಭೂತಿಯಿಂದ ಸ್ಪಂದಿಸಬೇಕು.ಅದರ ಬದಲಾಗಿ ಸರಕಾರದ ನಿಲುವಿಗೆ ಭಿನ್ನಾಭಿಪ್ರಾಯ ವ್ಯಕ್ತಪಡಿಸಿದವರನ್ನೆಲ್ಲ ರಾಷ್ಟ್ರೀಯ ಭದ್ರತಾ ಕಾಯ್ದೆಯನ್ವಯ ಬಂಧಿಸುವುದು ಸರಿಯಲ್ಲ. ವಾಂಗ್ಚುಕ್ ಪ್ರಚೋದನಕಾರಿ ಭಾಷಣ ಮಾಡಿದ್ದಾರೆ ಅನ್ನುವ ಆರೋಪದ ಬಗ್ಗೆ ಸುಪ್ರೀಂ ಕೋರ್ಟ್ ಪರಿಶೀಲನೆ ಮಾಡಿತು. ಸರಕಾರದ ಆರೋಪವನ್ನು ತಳ್ಳಿ ಹಾಕಿದ ನ್ಯಾಯಾಲಯ ಬಂಧಿತ ವಾಂಗ್ಚುಕ್ ಭಾಷಣಗಳನ್ನು ಸರಕಾರ ಅತಿಯಾಗಿ ಅರ್ಥೈಸಿಕೊಂಡಿದೆ ಎಂದು ಹೇಳಿತು. ವಾಂಗ್ಚುಕ್ ಅವರನ್ನು ದಿಢೀರನೆ ಬಂಧಿಸಿದ ಹಾಗೂ ತರಾತುರಿಯಲ್ಲಿ ಬಿಡುಗಡೆ ಮಾಡಿದ ವಿದ್ಯಮಾನಗಳನ್ನು ಗಮನಿಸಿದರೆ ಇಡೀ ಪ್ರಕರಣವನ್ನು ದುರ್ಬಲ ತಳಹದಿಯ ಮೇಲೆ ಕಟ್ಟಿರುವುದು ಸ್ಪಷ್ಟವಾಗುತ್ತದೆ. ಯಾವುದೇ ಪುರಾವೆಗಳಿಲ್ಲದೆ ಬೇಕಾದಾಗ ಬಂಧಿಸಿ ಕೆಲ ದಿನಗಳ ನಂತರ ಬಿಡುಗಡೆ ಮಾಡುವ ಪ್ರವೃತ್ತಿ ಸರಕಾರಕ್ಕೆ ಒಳ್ಳೆಯ ಹೆಸರನ್ನು ತರುವುದಿಲ್ಲ. ಸೋನಮ್ ವಾಂಗ್ಚುಕ್ ಅವರನ್ನು ಬಿಡುಗಡೆ ಮಾಡಿದ ಮಾತ್ರಕ್ಕೆ ಈ ಪ್ರಕರಣ ಮುಗಿದು ಹೋಗುವುದಿಲ್ಲ. ನ್ಯಾಯಾಲಯದ ಮುಂದಿರುವ ಅರ್ಜಿ ತಾಂತ್ರಿಕವಾಗಿ ನಿಷ್ಪ್ರಯೋಜಕವಾಗಿರಬಹುದು, ಆದರೆ ಇದು ಪ್ರಕರಣ ಇತ್ಯರ್ಥವಾಗಿದೆಯೆಂದಲ್ಲ. ವಾಂಗ್ಚುಕ್ ಬಂಧನದ ಪ್ರಕರಣದ ಬಗ್ಗೆ ನ್ಯಾಯಾಲಯ ತನ್ನದೇ ಆದ ನ್ಯಾಯಾಂಗದ ಪರಿಭಾಷೆಯಲ್ಲಿ ವ್ಯಾಖ್ಯಾನಿಸಬೇಕಾಗಿದೆ. ಇಂಥ ಕಾನೂನು ಬಾಹಿರ ಬಂಧನಗಳು ಇನ್ನು ಮುಂದೆ ನಡೆಯಬಾರದು. ಲಡಾಖ್‌ಗೆ ಪ್ರತ್ಯೇಕ ರಾಜ್ಯದ ಸ್ಥಾನಮಾನ ಕೇಳುವುದು ತಪ್ಪಲ್ಲ. ಸಂವಿಧಾನದ 6ನೇ ಶೆಡ್ಯೂಲ್‌ಗೆ ಲಡಾಖ್‌ನ್ನು ಸೇರಿಸಲು ಒತ್ತಾಯಿಸಬಾರದೇ? ಯಾವುದೇ ಆರೋಪವನ್ನು ಸಾಬೀತು ಪಡಿಸಲಾಗದೆ 6 ತಿಂಗಳ ಕಾಲ ಬಂಧನದಲ್ಲಿ ಇಟ್ಟಿದ್ದು ಅನ್ಯಾಯವಲ್ಲವೇ? ಲಡಾಖ್‌ನ ಸಮಸ್ಯೆಗಳನ್ನು ಪರಸ್ಪರ ಮಾತುಕತೆಯ ಮೂಲಕ ಪರಿಹರಿಸುವುದು ಸೂಕ್ತ ಮಾರ್ಗವಲ್ಲವೇ? ಸರಕಾರ ತನ್ನ ಅನುಕೂಲಕ್ಕೆ ತಕ್ಕಂತೆ ಪ್ರಜೆಗಳ ಮೂಲಭೂತ ಸ್ವಾತಂತ್ರ್ಯವನ್ನು ದಮನ ನೀತಿಯನ್ನು ಕೈ ಬಿಡಬೇಕು. ಸರಕಾರ ಮನ ಬಂದಂತೆ ಚಳವಳಿಗಳನ್ನು ಹತ್ತಿಕ್ಕುತ್ತ, ಹೋರಾಟಗಾರರನ್ನು ಬಂಧಿಸುತ್ತ ಹೋದರೆ ಅದು ಸಂವಿಧಾನಕ್ಕೆ ದ್ರೋಹ ಬಗೆದಂತೆ ಎಂದು ಹೇಳಿದರೆ ಅತಿಶಯೋಕ್ತಿಯಲ್ಲ.

ವಾರ್ತಾ ಭಾರತಿ 26 Mar 2026 8:38 am

ಹುಬ್ಬಳ್ಳಿ - ಧಾರವಾಡ: ಪೆಟ್ರೋಲ್, ಡಿಸೇಲ್ ವ್ಯತ್ಯಯ ವದಂತಿ, ಬಂಕ್‌ಗಳಿಗೆ ಮುಗಿಬಿದ್ದ ಜನ!

ಪೆಟ್ರೋಲ್‌, ಡೀಸೆಲ್‌ ದರ ಹೆಚ್ಚಳ ಹಾಗೂ ಅಲಭ್ಯ ಎಂಬ ವದಂತಿ ಹಿನ್ನೆಲೆ ಇಲ್ಲಿನ ನಾನಾ ಪೆಟ್ರೋಲ್‌ ಬಂಕ್‌ಗಳ ಬಳಿ ಬೈಕ್‌ ಸವಾರರು ಪೆಟ್ರೋಲ್‌ಗಾಗಿ ಮುಗಿಬಿದ್ದ ದೃಶ್ಯ ಕಂಡುಬಂತು. ಇರಾನ್‌, ಇಸ್ರೇಲ್‌ ಮತ್ತು ಅಮೆರಿಕ ನಡುವಿನ ಯುದ್ಧದ ಕಾರ್ಮೋಡದಿಂದ ತೈಲ ಬೆಲೆಯ ಮೇಲೆ ಭಾರಿ ಹೊಡೆತ ಬೀಳಲಿದೆ ಎಂಬ ವದಂತಿ ಸಂಚಲನ ಮೂಡಿಸಿದೆ. ಸುಳ್ಳು ಸುದ್ದಿ ನಂಬಿದ ಜನರು ಆತಂಕಗೊಂಡು ಪೆಟ್ರೋಲ್‌ ಬಂಕ್‌ಗಳಿಗೆ ಮುಗಿಬೀಳುತ್ತಿದ್ದಾರೆ.

ವಿಜಯ ಕರ್ನಾಟಕ 26 Mar 2026 8:00 am

ಅಮೆರಿಕದ F-18 ಯುದ್ಧವಿಮಾನವನ್ನು ಹೊಡೆದುರುಳಿಸಿದ್ದೇವೆ: ಇರಾನ್ ಹೇಳಿಕೆ; ವಿಡಿಯೋ ಬಿಡುಗಡೆ

ಅಮೆರಿಕದ ಕದನ ವಿರಾಮ ಪ್ರಸ್ತಾಪ ತಿರಸ್ಕರಿಸಿದ ಇರಾನ್

ವಾರ್ತಾ ಭಾರತಿ 26 Mar 2026 8:00 am

Gold Rate: ಇಂದು ನಿಮ್ಮ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ ಎಷ್ಟಿದೆ? ಇಲ್ಲಿದೆ ಸಂಪೂರ್ಣ ಮಾಹಿತಿ

ಬೆಂಗಳೂರು: ದೇಶಾದ್ಯಂತ ಚಿನ್ನ ಮತ್ತು ಬೆಳ್ಳಿಯ ಬೆಲೆಗಳಲ್ಲಿ ನಿರಂತರ ಬದಲಾವಣೆಗಳು ಕಂಡುಬರುತ್ತಿದ್ದು, ಗ್ರಾಹಕರು ಹಾಗೂ ಹೂಡಿಕೆದಾರರು ಪ್ರತಿದಿನ ಮಾರುಕಟ್ಟೆಯತ್ತ ಕಣ್ಣಿಟ್ಟಿರುತ್ತಾರೆ. ಮಾರ್ಚ್ 26, 2026 ರ ಇಂದಿನ ಮಾರುಕಟ್ಟೆ ವರದಿಯ ಪ್ರಕಾರ, ಚಿನ್ನದ ಬೆಲೆಯಲ್ಲಿ ನಿನ್ನೆಗಿಂತ ಅಲ್ಪ ಏರಿಕೆ ಕಂಡುಬಂದಿದೆ. ಜಾಗತಿಕ ಮಾರುಕಟ್ಟೆಯ ವಿದ್ಯಮಾನಗಳು ಹಾಗೂ ಎಂಸಿಎಕ್ಸ್‌ (ಮಲ್ಟಿ ಕಮಾಡಿಟಿ ಎಕ್ಸ್‌ಚೇಂಜ್) ನಲ್ಲಿನ ವಹಿವಾಟುಗಳು ದೇಶೀಯ ಮಾರುಕಟ್ಟೆಯ

ಒನ್ ಇ೦ಡಿಯ 26 Mar 2026 7:55 am

ಕೊಲ್ಕತ್ತಾ | ಅತ್ಯಾಚಾರ-ಕೊಲೆ ಪ್ರಕರಣ: ಸಂತ್ರಸ್ತೆಯ ತಾಯಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕೆ!

ಕೊಲ್ಕತ್ತಾ: ಪಶ್ಚಿಮ ಬಂಗಾಳ ವಿಧಾನಸಭೆಗೆ ಪಕ್ಷದ ವತಿಯಿಂದ ಸ್ಪರ್ಧಿಸುವ 19 ಅಭ್ಯರ್ಥಿಗಳ ಮೂರನೇ ಪಟ್ಟಿಯನ್ನು ಭಾರತೀಯ ಜನತಾ ಪಕ್ಷ ಬಿಡುಗಡೆ ಮಾಡಿದ್ದು, ಇಡೀ ದೇಶವನ್ನು ಬೆಚ್ಚಿ ಬೀಳಿಸಿದ್ದ ಆರ್.ಜಿ.ಕರ್ ಆಸ್ಪತ್ರೆಯ ಅತ್ಯಾಚಾರ ಘಟನೆ ಸಂತ್ರಸ್ತೆಯ ತಾಯಿಗೆ ಟಿಕೆಟ್ ನೀಡಿದೆ. ಪಾನಿಹಾಥಿ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಅವರು ಕಣಕ್ಕಿಳಿಯಲಿದ್ದಾರೆ. ತಾನು ಹಾಗೂ ಪತಿ ಬಿಜೆಪಿ ಸೇರಿದ್ದಾಗಿ ಅಭ್ಯರ್ಥಿ ಇತ್ತೀಚೆಗೆ ಹೇಳಿಕೆ ನೀಡಿದ್ದರು. ನಾನು ಗೆದ್ದರೆ ಪಾನಿಹಾಥಿ ಜನ ಗೆದ್ದಂತೆ. ಪ್ರತಿಭಟಿಸುವುದನ್ನು ಮರೆತಿರುವ ಜನತೆಯ ಪರವಾಗಿ ನಾನು ಧ್ವನಿ ಎತ್ತುತ್ತೇನೆ ಎಂದು ಬಿಜೆಪಿ ಅಭ್ಯರ್ಥಿಯಾಗಿ ಘೋಷಣೆಯಾದ ಬಳಿಕ ಟಿವಿ ಚಾನಲ್ ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ. ಚುನಾವಣೆಯಲ್ಲಿ ಸ್ಪರ್ಧಿಸುವುದು ಹೆಮ್ಮೆಯ ವಿಷಯವಲ್ಲ; ಬದಲಾಗಿ ನೋವು ತುಂಬಿದ ಹೊಣೆಗಾರಿಕೆ. ಪಾನಿಹಾಥಿ ಕ್ಷೇತ್ರದ ಜನತೆಗಾಗಿ ಶ್ರಮಿಸುತ್ತೇನೆ ಎಂದು ಹೇಳಿದರು. ನಾನು ಜನಸೇವೆ ಮಾಡಿದರೆ ನನ್ನ ಮಗಳಿಗೆ ಸಂತೋಷವಾಗುತ್ತದೆ. ಪಶ್ಚಿಮ ಬಂಗಾಳದ ಎಲ್ಲೆಡೆ ಕಮಲ ಅರಳಬೇಕು ಎನ್ನುವುದು ನನ್ನ ಬಯಕೆ. ತೃಣಮೂಲ ಕಾಂಗ್ರೆಸ್ ಧೂಳೀಪಟವಾಗಬೇಕು ಎಂದು ಹೇಳಿದರು. ಆಕೆಯ ಅಹವಾಲುಗಳನ್ನು ಕೇಳಿಸಿಕೊಳ್ಳಲು ಬಿಜೆಪಿ ನಾಯಕರಿಗೆ ಸಮಯ ಇಲ್ಲದಿದ್ದರೂ, ಆಕೆಗೆ ಏಕೆ ಟಿಕೆಟ್ ನೀಡಲಾಗಿದೆ ಎಂಬ ಪ್ರಶ್ನೆಗೆ ಆಕೆ ಉತ್ತರ ನೀಡಬೇಕು ಎಂದು ತೃಣಮೂಲ ಕಾಂಗ್ರೆಸ್ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದೆ. ಅಭಯಾ ತಾಯಿಗೆ ಪ್ರಜಾಸತ್ತಾತ್ಮಕ ಹಕ್ಕು ಇದೆ. ಆದರೆ ತನ್ನ ಮಗಳ ಸಾವಿನ ಪ್ರಕರಣವನ್ನು ಸಿಬಿಐ ಸೂಕ್ತವಾಗಿ ತನಿಖೆ ನಡೆಸಿಲ್ಲ ಎಂದು ಆಪಾದಿಸಿರುವ ಅವರು ಇದೀಗ ಬಿಜೆಪಿಯನ್ನು ಆಯ್ಕೆ ಮಾಡಿಕೊಂಡಿದ್ದು ಏಕೆ ಎಂದು ಜನತೆಗೆ ಉತ್ತರಿಸಬೇಕು. ಗೃಹಸಚಿವರು, ಪ್ರಧಾನಿ ಅಥವಾ ರಾಷ್ಟ್ರಪತಿಗಳನ್ನು ಭೇಟಿಯಾಗಲು ಸಮಯ ಸಿಗದಿದ್ದರೂ ಇದೀಗ ಬಿಜೆಪಿಯನ್ನು ಏಕೆ ಆಯ್ಕೆ ಮಾಡಿಕೊಂಡರು? ಇದರ ಹಿಂದೆ ಏನಿದೆ ಎಂದು ಹಿರಿಯ ಟಿಎಂಸಿ ಮುಖಂಡ ಕುನಾಲ್ ಘೋಷ್ ಪ್ರಶ್ನಿಸಿದ್ದಾರೆ.

ವಾರ್ತಾ ಭಾರತಿ 26 Mar 2026 7:22 am

ಕಾಫಿ ಉದ್ಯಮಕ್ಕೆ ಮಧ್ಯಪ್ರಾಚ್ಯ ಯುದ್ದ ಹೊಡೆತ, ಹೆಚ್ಚಾಯ್ತು ರಫ್ತು ವೆಚ್ಚ

ಮಧ್ಯಪ್ರಾಚ್ಯದ ಯುದ್ಧದಿಂದಾಗಿ ಜಾಗತಿಕ ಸರಕು ಸರಬರಾಜು ವ್ಯವಸ್ಥೆ ಏರುಪೇರಾಗಿದ್ದು, ಇದರ ನೇರ ಪರಿಣಾಮ ಕಾಫಿ ಉದ್ಯಮದ ಮೇಲೆ ಉಂಟಾಗಿದೆ. ಶಿಪ್‌ಮೆಂಟ್‌ ವಿಳಂಬ, ಕಂಟೇನರ್‌ ಹಾಗೂ ಹಡಗುಗಳ ತೀವ್ರ ಕೊರತೆ ಮತ್ತು ಇಂಧನ ಬೆಲೆಯ ಅನಿಶ್ಚಿತತೆಯಂತಹ ಸವಾಲುಗಳು ಒಟ್ಟಾಗಿ ಕಾಫಿ ವಲಯದಲ್ಲಿ ಪ್ರಸ್ತುತ ಗೊಂದಲಮಯ ವಾತಾವರಣವನ್ನು ಸೃಷ್ಟಿಸಿವೆ.

ವಿಜಯ ಕರ್ನಾಟಕ 26 Mar 2026 7:16 am

Karnataka Weather: ಇಂದು ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಗುಡುಗು ಸಹಿತ ಮಳೆ ಸಾಧ್ಯತೆ

ಬೆಂಗಳೂರು: ರಾಜ್ಯದಲ್ಲಿ ಬೇಸಿಗೆಯ ಬಿಸಿಲಿನ ಝಳ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ನಡುವೆಯೇ, ಹವಾಮಾನದಲ್ಲಿ ಕೊಂಚ ಬದಲಾವಣೆಯಾಗುವ ಲಕ್ಷಣಗಳು ಕಾಣ ಸಿಗುತ್ತಿವೆ. ಭಾರತೀಯ ಹವಾಮಾನ ಇಲಾಖೆ ಬಿಡುಗಡೆ ಮಾಡಿರುವ ಇತ್ತೀಚಿನ ಹವಮಾನ ವರದಿಯ ಪ್ರಕಾರ, ಇಂದು ಅಂದರೆ ಮಾರ್ಚ್ 26, 2026 ರಂದು ಕರ್ನಾಟಕದ ವಿವಿಧ ಭಾಗಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಜೊತೆಗೆ ಗುಡುಗು ಮತ್ತು ಬಿರುಗಾಳಿ ಬೀಸುವ

ಒನ್ ಇ೦ಡಿಯ 26 Mar 2026 7:08 am

ಉಲ್ಲಾಳ ತಾಲೂಕಲ್ಲಿ ತ್ರಿವಳಿ ಹೆಣ್ಮಕ್ಕಳಿಗೆ ಒಲಿಯಿತು ಭಾಗ್ಯಲಕ್ಷ್ಮೀ ಯೋಜನೆ: 18 ವರ್ಷದ ನಂತರ ಕೈಗೆ ಸಿಗಲಿದೆ ಯೋಜನೆ ಹಣ

ಬಿಜೆಪಿ ಸರಕಾರ ಆರಂಭಿಸಿದ್ದ ಭಾಗ್ಯಲಕ್ಷ್ಮೀ ಯೋಜನೆ ಈಗ ಸುಕನ್ಯಾ ಸಮೃದ್ಧಿ ಯೋಜನೆಯೊಂದಿಗೆ ಜೋಡಣೆಯಾಗಿದ್ದು, ತೊಕ್ಕೊಟ್ಟುವಿನ ತ್ರಿವಳಿ ಹೆಣ್ಮಕ್ಕಳಿಗೆ ಈ ಯೋಜನೆ ಜಾರಿಯಾಗಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿ ಇದಕ್ಕಾಗಿ ಶ್ರಮಿಸಿದ್ದಾರೆ.

ವಿಜಯ ಕರ್ನಾಟಕ 26 Mar 2026 6:12 am

ಕುವೈತ್‌ ಮೇಲೆ ಇರಾನ್‌ ದಾಳಿ : ಜನರಿಗೆ ಅನಗತ್ಯ ಓಡಾಡಬೇಡಿ, ಮನೆ ಕಿಟಕಿ, ಬಾಗಿಲು ಮುಚ್ಚಿಡಿ ಸಂದೇಶ, ಅನಿವಾಸಿ ಭಾರತೀಯರಿಗೆ ಹೆಚ್ಚಿದ ಆತಂಕ

ಭಾರತೀಯರು ಹೆಚ್ಚಿನ ಸಂಖ್ಯೆಯಲ್ಲಿರುವ ಕುವೈತ್ ಮೇಲೆ ಇರಾನ್ ದಾಳಿ ಮುಂದುವರಿಸಿದ್ದು, ದಾಳಿಯ ಭೀಕರತೆ, ಸೈರನ್ , ಅಲರ್ಟ್ ಸಂದೇಶಗಳಿಗೆ ಅನಿವಾಸಿ ಭಾರತೀಯರು ಭೀತಿಗೊಂಡಿದ್ದಾರೆ. ವಿಮಾನಗಳು ರದ್ದಾಗಿರುವುದು ಕೂಡಾ ಇನ್ನಷ್ಟು ಆತಂಕಕ್ಕೆ ದೂಡುವಂತೆ ಮಾಡಿದೆ.

ವಿಜಯ ಕರ್ನಾಟಕ 26 Mar 2026 6:09 am

ಭದ್ರಾ ಅಭಯಾರಣ್ಯ ಪರಿಸರ ಸೂಕ್ಷ್ಮ ಪ್ರದೇಶ ಗುರುತಿಸಲು ಕ್ರಮ: ಈಶ್ವರ್ ಖಂಡ್ರೆ

‘ಆನೆ, ಕಾಡೆಮ್ಮೆ ಹಾವಳಿ ನಿಯಂತ್ರಣಕ್ಕೆ ಖಾಂಡ್ಯಾ ಗ್ರಾಮಸ್ಥರ ಮನವಿ ಸ್ವೀಕಾರ’

ವಾರ್ತಾ ಭಾರತಿ 26 Mar 2026 12:30 am

ಮಹಿಳಾ ರೌಡಿಶೀಟರ್‌ಗೆ ಲೈಂಗಿಕ ಕಿರುಕುಳ ಆರೋಪ: ಕೋಣನಕುಂಟೆ ಇನ್ಸ್‌ಪೆಕ್ಟರ್ ವಿರುದ್ಧ ದೂರು ದಾಖಲು

ಬೆಂಗಳೂರು : ಕೋಣನಕುಂಟೆ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ವಿರುದ್ಧ ಮಹಿಳಾ ರೌಡಿಶೀಟರ್‌ಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಕೇಳಿಬಂದಿದೆ. ಕೋಣನಕುಂಟೆ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಪಾಪಣ್ಣ ಲೈಂಗಿಕ ಕಿರುಕುಳ ನೀಡಿದ್ದಾರೆಂದು ಆರೋಪಿಸಿ ರೌಡಿಶೀಟರ್ ಮಹಿಳೆಯೊಬ್ಬರು ಆಡಿಯೋ ಸಂಭಾಷಣೆ ಹಾಗೂ ಅಶ್ಲೀಲ ವಾಟ್ಸಪ್ ಮೆಸೇಜ್‍ಗಳ ಸ್ಕ್ರೀನ್‍ಶಾಟ್ ಸಮೇತ ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ಬುಧವಾರ ದೂರು ನೀಡಿದ್ದಾರೆ. ನೊಂದವರಿಗೆ ನ್ಯಾಯ ಕೊಡಿಸಬೇಕಾದ ಪೊಲೀಸರೇ ಈ ರೀತಿ ಕಿರುಕುಳ ನೀಡಿದರೆ, ಮತ್ಯಾರಲ್ಲಿ ಹೋಗಿ ರಕ್ಷಣೆ, ನ್ಯಾಯ ಕೇಳಬೇಕು. ತನಗೆ ನೀಡಿರುವ ಹಿಂಸೆ, ಕಿರುಕುಳಕ್ಕೆ ಇನ್ಸ್‌ಪೆಕ್ಟರ್ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಮಹಿಳೆ ಒತ್ತಾಯಿಸಿದ್ದಾರೆ.

ವಾರ್ತಾ ಭಾರತಿ 26 Mar 2026 12:22 am

Hassan | ಮುಸ್ಲಿಮ್ ಮಹಿಳೆಯರಿಗೆ ಅವಹೇಳನ ಆರೋಪ; ಕ್ಯಾಶಿಯರ್ ವಿರುದ್ಧ ಪ್ರಕರಣ ದಾಖಲು

ಹಾಸನ : ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವೀಡಿಯೊ ಹಿನ್ನೆಲೆಯಲ್ಲಿ ಹೋಟೆಲ್ ಸಿಬ್ಬಂದಿಯೊಬ್ಬರು ಮುಸ್ಲಿಮ್ ಮಹಿಳೆಯರಿಗೆ ಅವಹೇಳನಕಾರಿ ಮಾತುಗಳನ್ನು ಆಡಿದ ಆರೋಪ ಕೇಳಿಬಂದಿದ್ದು, ಈ ಸಂಬಂಧ ದೂರು ದಾಖಲಾಗಿದೆ. ಸೈಯದ್ ಫರೀದ್ ಎಂಬವರು ನೀಡಿದ ದೂರಿನಡಿ ನಗರದ ಕೆ.ಆರ್. ಪುರಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹೋಟೆಲ್ ಕ್ಯಾಶಿಯರ್ ವಾಸು ವಿರುದ್ಧ ಪ್ರಕರಣ ದಾಖಲಾಗಿದೆ. ದೂರುದಾರರ ಪ್ರಕಾರ, ಮಾ.25ರಂದು ಯೂಟ್ಯೂಬ್ ಚಾನಲ್‌ನ ವೀಡಿಯೊ ವಾಟ್ಸ್‌ಆ್ಯಪ್ ಗ್ರೂಪ್‌ನಲ್ಲಿ ಹರಿದಾಡಿದ್ದು, ಅದನ್ನು ಪರಿಶೀಲಿಸಿದಾಗ ಗೊಮ್ಮಟಾದ್ರಿ ಟಿಫನ್ ಸೆಂಟರ್‌ನಲ್ಲಿ ಘಟನೆ ನಡೆದಿರುವುದು ಕಂಡುಬಂದಿದೆ. ವೀಡಿಯೊದಲ್ಲಿ ಹೋಟೆಲ್ ಕ್ಯಾಶಿಯರ್ ವಾಸು ಎಂಬಾತ, ಮುಸ್ಲಿಮ್ ಮಹಿಳೆ ಹಾಗೂ ಪುರುಷ ಗ್ರಾಹಕರೊಂದಿಗೆ ಮಾತಿನ ಚಕಮಕಿ ನಡೆಸುತ್ತಿರುವ ದೃಶ್ಯಗಳು ಕಾಣಿಸಿಕೊಂಡಿವೆ. ಮಾ.23ರಂದು ಅನಾರೋಗ್ಯದಿಂದ ಬಳಲುತ್ತಿದ್ದ ವ್ಯಕ್ತಿಯನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದ ಮುಸ್ಲಿಮ್ ಮಹಿಳೆಯರು, ಬೆಳಗ್ಗೆ ಸುಮಾರು 10ಗಂಟೆ ವೇಳೆಗೆ ತಿಂಡಿ ತಿನ್ನಲು ಗೊಮ್ಮಟಾದ್ರಿ ಹೋಟೆಲ್‌ಗೆ ತೆರಳಿದ್ದರು. ಈ ವೇಳೆ ಕ್ಯಾಶಿಯರ್ ವಾಸು, ಅವಹೇಳನಕಾರಿ ಹೇಳಿಕೆ ನೀಡಿ ಅವರನ್ನು ಹೋಟೆಲ್‌ನಿಂದ ಹಿಂದಿರುಗಿಸಿದರೆಂದು ಆರೋಪಿಸಲಾಗಿದೆ. ಕ್ಷಮೆಯಾಚಿಸುತ್ತೇವೆ : ಪ್ರಕರಣಕ್ಕೆ ಸಂಬಂಧಿಸಿದಂತೆ ಪತ್ರಿಕೆಯೊಂದಿಗೆ ಮಾತನಾಡಿದ ಹೋಟೆಲ್ ಮಾಲಕ, 20 ವರ್ಷಗಳಿಂದ ಹೋಟೆಲ್ ನಡೆಸುತ್ತಿದ್ದು, ಇಲ್ಲಿಯವರೆಗೆ ಯಾವುದೇ ಇಂತಹ ಘಟನೆ ನಡೆದಿಲ್ಲ. ನಮ್ಮ ಕ್ಯಾಶಿಯರ್ ಅಸಭ್ಯವಾಗಿ ಮಾತನಾಡಿದ್ದರೆ ಇದರಿಂದ ಯಾರಿಗಾದರೂ ನೋವಾಗಿದ್ದರೆ ನಾವು ಕ್ಷಮೆಯಾಚಿಸುತ್ತೇವೆ ಎಂದರು.

ವಾರ್ತಾ ಭಾರತಿ 26 Mar 2026 12:11 am

ಕೆಎಸ್‌ಒಯುನಲ್ಲಿ ಭ್ರಷ್ಟಾಚಾರ ಆರೋಪ: ಎಲ್ಲಾ ಬ್ಯಾಂಕ್ ಖಾತೆ ಸ್ಥಗಿತಗೊಳಿಸಲು ರಾಜ್ಯ ಸರಕಾರ ಸೂಚನೆ

ಮೈಸೂರು : ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಲ್ಲಿ ಲಂಚ ಹಾಗೂ ಭ್ರಷ್ಟಾಚಾರ ನಡೆದಿದೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಹಣಕಾಸಿನ ದುರುಪಯೋಗ ತಡೆಯಲು ಕೆಎಸ್‌ಒಯುನ ಎಲ್ಲ ಬ್ಯಾಂಕ್ ಖಾತೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ಸೂಚಿಸಿದೆ. ಕರ್ನಾಟಕ ಮುಕ್ತ ವಿಶ್ವವಿದ್ಯಾನಿಲಯದಲ್ಲಿ ನಡೆದಿರುವ ಭ್ರಷ್ಟಾಚಾರದ ವಿರುದ್ಧ ಕಠಿಣ ಕ್ರಮ ಕೈಗೊಂಡಿದೆ. ಪ್ರಕರಣದ ತನಿಖೆಗೆ ನಿವೃತ್ತ ನ್ಯಾಯಮೂರ್ತಿ ಆರ್.ಆರ್. ಪಾಟೀಲ ಅವರನ್ನು ನೇಮಕ ಮಾಡಲಾಗಿದ್ದು, ತನಿಖೆ ಪ್ರಗತಿಯಲ್ಲಿ ಇದೆ.ತನಿಖೆ ನಡೆಯುತ್ತಿರುವ ಹಿನ್ನೆಲೆ ಹಣಕಾಸಿನ ದುರುಪಯೋಗವನ್ನು ತಡೆಯಲು ವಿಶ್ವವಿದ್ಯಾನಿಲಯದ ಎಲ್ಲಾ ಬ್ಯಾಂಕ್ ಖಾತೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ಉನ್ನತ ಶಿಕ್ಷಣ ಇಲಾಖೆ ಸಂಬಂಧಪಟ್ಟ ಬ್ಯಾಂಕುಗಳಿಗೆ ಸೂಚನೆ ನೀಡಿದೆ. ಈ ಕ್ರಮದಿಂದ ಪ್ರಕರಣಕ್ಕೆ ಸಂಬಂಧಿಸಿದ ಹಣಕಾಸು ವ್ಯವಹಾರಗಳ ಮೇಲೆ ಕಟ್ಟುನಿಟ್ಟಿನ ನಿಯಂತ್ರಣ ಹೇರಲು ಸರಕಾರ ಮುಂದಾಗಿದೆ.  

ವಾರ್ತಾ ಭಾರತಿ 26 Mar 2026 12:01 am

ಪೆಟ್ರೋಲ್-ಡೀಸೆಲ್ ಕೊರತೆ; ವದಂತಿಗಳಿಗೆ ಕಿವಿಗೊಡಬೇಡಿ : ಆಹಾರ-ನಾಗರಿಕ ಪೂರೈಕೆ ಇಲಾಖೆ ಸ್ಪಷ್ಟನೆ

ಬೆಂಗಳೂರು : ‘ರಾಜ್ಯದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಕೊರತೆಯಾಗಿದೆ ಎಂಬ ವದಂತಿಗಳಿಗೆ ಸಾರ್ವಜನಿಕರು ಕಿವಿಗೂಡಬಾರದು. ಕೇಂದ್ರ ಸರಕಾರದಿಂದ ಚಿಲ್ಲರೆ ಮಾರಾಟ ಮಳಿಗೆಗಳಿಗೆ ಪೆಟ್ರೋಲ್ ಮತ್ತು ಡೀಸೆಲ್ ಪೂರೈಕೆ ಸುಗಮವಾಗಿ ನಡೆಯುತ್ತಿದೆ. ಹೀಗಾಗಿ ಯಾವುದೇ ರೀತಿಯ ಕೊರತೆ ಉಂಟಾಗಿಲ್ಲ’ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಸ್ಪಷ್ಟನೆ ನೀಡಿದೆ. ಬುಧವಾರ ಈ ಸಂಬಂಧ ಪ್ರಕಟಣೆ ನೀಡಿರುವ ಆಹಾರ ಇಲಾಖೆ, ಪೆಟ್ರೋಲ್ ಮತ್ತು ಡೀಸೆಲ್ ಕೊರತೆ ಬಗ್ಗೆ ಸಾಮಾಜಿಕ ಜಾಲತಾಣಗಳು ಹಾಗೂ ಮಾಧ್ಯಮಗಳಲ್ಲಿ ವದಂತಿಗಳು ಹರಿದಾಡುತ್ತಿವೆ. ಹೀಗಾಗಿ ಸಾರ್ವಜನಿಕರು ಆತಂಕಕ್ಕೊಳಗಾಗಿ ಪೆಟ್ರೋಲ್ ಬಂಕ್‍ಗಳಲ್ಲಿ ಬಾಟಲಿ ಹಾಗೂ ಕ್ಯಾನ್‍ಗಳೊಂದಿಗೆ ಸರತಿ ಸಾಲಿನಲ್ಲಿ ನಿಂತು ಇಂಧನ ಸಂಗ್ರಹಿಸುತ್ತಿರುವುದು ಸರಕಾರದ ಗಮನಕ್ಕೆ ಬಂದಿದೆ. ಇಂಧನ ಕೊರತೆಯ ಬಗ್ಗೆ ಹರಡುತ್ತಿರುವ ಸುದ್ದಿಗಳು ಕೇವಲ ವದಂತಿಗಳಾಗಿದ್ದು, ಸಾರ್ವಜನಿಕರು ಆತಂಕ ಪಡುವ ಅಗತ್ಯವಿಲ್ಲ. ಚಿಲ್ಲರೆ ಮಾರಾಟ ಮಳಿಗೆಗಳು ವಾಹನಗಳ ಟ್ಯಾಂಕ್‍ಗಳಿಗೆ ಮಾತ್ರ ನೇರವಾಗಿ ಇಂಧನವನ್ನು ಪೂರೈಸುತ್ತವೆ. ಯಾವುದೇ ರೀತಿಯ ಕ್ಯಾನ್-ಬಾಟಲಿಯಲ್ಲಿ ಇಂಧನ ಪೂರೈಸಲು ಅವಕಾಶವಿಲ್ಲ. ಪ್ರತ್ಯೇಕ ಕಂಟೈನರ್‍ಗಳಲ್ಲಿ ಇಂಧನ ಸಂಗ್ರಹಿಸುವುದು ಅಪಾಯಕಾರಿ, ಅನಾಹುತಗಳಿಗೆ ಕಾರಣವಾಗಬಹುದು ಎಂದು ಎಚ್ಚರಿಸಿದೆ. ಕಟ್ಟುನಿಟ್ಟಿನ ಸೂಚನೆ: ಇಂಧನವನ್ನು ಕೇವಲ ವಾಹನಗಳ ಟ್ಯಾಂಕ್‍ಗಳಿಗೆ ಮಾತ್ರ ಭರ್ತಿ ಮಾಡಬೇಕು. ಬಾಟಲಿ ಅಥವಾ ಪ್ರತ್ಯೇಕ ಕಂಟೈನರ್‍ಗಳಲ್ಲಿ ಇಂಧನ ನೀಡದಂತೆ ಪೆಟ್ರೋಲ್ ಬಂಕ್‍ಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಸಾರ್ವಜನಿಕರು ಸಹಕರಿಸಿ, ಅಗತ್ಯಕ್ಕಿಂತ ಹೆಚ್ಚಿನ ಇಂಧನವನ್ನು ಸಂಗ್ರಹಿಸಿ ಆತಂಕ ಸೃಷ್ಟಿಸಬಾರದೆಂದು ಈ ಮೂಲಕ ವಿನಂತಿಸಲಾಗಿದೆ ಎಂದು ಆಹಾರ ಇಲಾಖೆಯ ಸರಕಾರದ ಅಧೀನ ಕಾರ್ಯದರ್ಶಿ ನಾಗರಾಜ್ ಬಿ.ಇ. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.  

ವಾರ್ತಾ ಭಾರತಿ 25 Mar 2026 11:54 pm

ಬಳ್ಳಾರಿ | ಮಹಿಳೆಯ ಕೊಲೆ ಪ್ರಕರಣ : ಆರೋಪಿಯ ಬಂಧನ

ಬಳ್ಳಾರಿ : ಪಿ.ಡಿ. ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಕರೇಕಲ್ಲು ಗ್ರಾಮದಲ್ಲಿ ಮಹಿಳೆಯ ಅನುಮಾನಾಸ್ಪದ ಸಾವು ಎಂದು ದಾಖಲಾಗಿದ್ದ ಪ್ರಕರಣವನ್ನು ಬೇಧಿಸಿದ ಪೋಲೀಸರು ಇದೀಗ ಕೊಲೆ ಆರೋಪಿಯನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಮೃತಳ ಮೊಮ್ಮಗ ಎಂ.ವಿರೇಂದ್ರ (21) ಎಂದು ಗುರುತಿಸಲಾಗಿದೆ.  ಘಟನೆಯ ವಿವರ : ಮಾ.21ರಂದು ವೀರಮ್ಮ (60) ತಮ್ಮ ಮನೆಯಲ್ಲಿ ಅನುಮಾನಾಸ್ಪದವಾಗಿ ಮೃತಪಟ್ಟಿದ್ದರು. ಈ ಸಂಬಂಧ ಪಿ.ಡಿ. ಹಳ್ಳಿ ಪೊಲೀಸ್ ಠಾಣೆಯಲ್ಲಿ ಯುಡಿಆರ್ ನಂ. 02/2026 ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ಬಳಿಕ ಮಾರ್ಚ್ 24ರಂದು ಮರಣೋತ್ತರ ಪರೀಕ್ಷಾ ವರದಿ ಲಭ್ಯವಾಗಿದ್ದು, ಹರಿತವಾದ ಆಯುಧದಿಂದ ಹತ್ಯೆ ಮಾಡಿರುವುದು ಬೆಳಕಿಗೆ ಬಂದಿದೆ. ಇದರಿಂದ ಯುಡಿಆರ್ ಪ್ರಕರಣವನ್ನು ಕೊಲೆ ಪ್ರಕರಣವಾಗಿ ಪರಿವರ್ತಿಸಿ, ಗುನ್ನೆ ನಂ. 029/2026 ಕಲಂ 103(1), 239 ಬಿ.ಎನ್.ಎಸ್. ಅಡಿಯಲ್ಲಿ ತನಿಖೆ ಕೈಗೊಳ್ಳಲಾಯಿತು. ತನಿಖೆ ವೇಳೆ ಮೃತಳ ಮೊಮ್ಮಗ ಎಂ. ವಿರೇಂದ್ರ (21) ಈ ಕೃತ್ಯ ಎಸಗಿರುವುದಾಗಿ ತಿಳಿದು ಬಂದಿದೆ . ಅಜ್ಜಿಯ ಬಳಿ ಇದ್ದ ಹಣ ಹಾಗೂ ಆಭರಣಗಳನ್ನು ದೋಚುವ ಉದ್ದೇಶದಿಂದ ಮಾ.20ರಂದು ರಾತ್ರಿ ಮನೆಯಲ್ಲಿ ಉಳಿದುಕೊಂಡು, ನಿದ್ರೆಯಲ್ಲಿದ್ದಾಗ ಚಾಕುವಿನಿಂದ ಕತ್ತು ಕೊಯ್ದು ಕೊಲೆ ಮಾಡಿದ್ದಾನೆ ಎಂದು ತನಿಖೆಯಲ್ಲಿ ತಿಳಿದು ಬಂದಿದೆ. ಬಳಿಕ ಮನೆಯಲ್ಲಿದ್ದ ಸುಮಾರು 80 ಗ್ರಾಂ ನಕಲಿ ಬಂಗಾರದ ಆಭರಣಗಳು (ರೋಲ್ಡ್ ಗೋಲ್ಡ್) ಮತ್ತು 23,000 ರೂ. ನಗದು ಹಣವನ್ನು ತೆಗೆದುಕೊಂಡು ಪರಾರಿಯಾಗಿದ್ದಾನೆ. ಕೃತ್ಯವನ್ನು ಮರೆಮಾಚಲು ಮೃತದೇಹದ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ನಂತರ ಆರೋಪಿ ಸಿರುಗುಪ್ಪ ತಾಲೂಕಿನ ಹಾಗಲೂರು ಗ್ರಾಮಕ್ಕೆ ತೆರಳಿ, ಬಳಸಿದ ಚಾಕು, ರಕ್ತದ ಮಚ್ಚೆಯ ಬಟ್ಟೆಗಳು ಹಾಗೂ ದೋಚಿದ ವಸ್ತುಗಳನ್ನು ಅಡಗಿಸಿದ್ದನು. ಪೊಲೀಸರು ಪಂಚರ ಸಮ್ಮುಖದಲ್ಲಿ ಅವುಗಳನ್ನು ವಶಪಡಿಸಿಕೊಂಡು ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ವಾರ್ತಾ ಭಾರತಿ 25 Mar 2026 11:39 pm

ಕಳೆದ ಐದು ವರ್ಷಗಳಲ್ಲಿ ಭಾರತದಲ್ಲಿ ಮಾಂಸ ರಫ್ತು ಏರಿಕೆ: ಸರ್ಕಾರಿ ದತ್ತಾಂಶದಿಂದ ಬಹಿರಂಗ

ಹೊಸದಿಲ್ಲಿ: ಭಾರತದಲ್ಲಿ ಮಾಂಸ ರಫ್ತು ಹೆಚ್ಚಾಗಿದೆ ಎಂದು ಸರ್ಕಾರ ಸಂಸತ್ತಿನಲ್ಲಿ ಹೇಳಿದೆ. ಕಳೆದ ಐದು ವರ್ಷಗಳಲ್ಲಿ ಭಾರತದ ಮಾಂಸ ರಫ್ತು 3.22 ಬಿಲಿಯನ್‌ ಡಾಲರ್ ನಿಂದ 4.16 ಬಿಲಿಯನ್‌ ಡಾಲರ್ ಗೆ ಏರಿದೆ ಎಂದು ಸರ್ಕಾರದ ದತ್ತಾಂಶವು ತೋರಿಸುತ್ತದೆ ಎಂದು thewire.in ವರದಿ ಮಾಡಿದೆ. ಕಮ್ಯುನಿಸ್ಟ್ ಪಕ್ಷದ ಸಂಸದ ಜಾನ್ ಬ್ರಿಟ್ಟಾಸ್ ವಾಣಿಜ್ಯ ಮತ್ತು ಕೈಗಾರಿಕಾ ಸಚಿವರಲ್ಲಿ ಕೇಳಿದ ಪ್ರಶ್ನೆಗಳಿಗೆ ಉತ್ತರವಾಗಿ ಸರ್ಕಾರ ಈ ದತ್ತಾಂಶವನ್ನು ನೀಡಿದೆ. ಬ್ರಿಟ್ಟಾಸ್ ಈ ಕೆಳಗಿನ ಪ್ರಶ್ನೆಗಳನ್ನು ಕೇಳಿದ್ದರು. (a) ಕಳೆದ ಐದು ವರ್ಷಗಳಲ್ಲಿ ಭಾರತದಿಂದ ಮಾಂಸ ರಫ್ತಿನ ಪ್ರಮಾಣ ಮತ್ತು ವಿವರಗಳು ರಾಜ್ಯವಾರು ಮತ್ತು ವರ್ಗವಾರು ವಿವರಗಳು. (b) ಕಳೆದ ಐದು ವರ್ಷಗಳಲ್ಲಿ ಭಾರತದಿಂದ ರಫ್ತು ಮಾಡಲಾದ ಬೀಫ್, ಎಮ್ಮೆ ಮತ್ತು ಇತರ ವರ್ಗಗಳ ಮಾಂಸದ ಪ್ರಮಾಣ, ಅದರ ವಿವರಗಳು, ವರ್ಷವಾರು, ರಾಜ್ಯವಾರು ಮತ್ತು ವರ್ಗವಾರು (c) ಕಳೆದ ಐದು ವರ್ಷಗಳಲ್ಲಿ ಮಾಂಸ ರಫ್ತಿನಿಂದ ಗಳಿಸಿದ ಆದಾಯದ ವಿವರಗಳು, ವರ್ಷವಾರು, ರಾಜ್ಯವಾರು ಮತ್ತು ವರ್ಗವಾರು ವಿವರಗಳು. ಇದಕ್ಕೆ ಪ್ರತಿಕ್ರಿಯಿಸಿದ ವಾಣಿಜ್ಯ ಸಚಿವ ಜಿತಿನ್ ಪ್ರಸಾದ, ಸರ್ಕಾರವು ಭಾರತದಿಂದ ಒಟ್ಟು ಮಾಂಸ ರಫ್ತಿನ ದಾಖಲೆಗಳನ್ನು ಮಾತ್ರ ನಿರ್ವಹಿಸುತ್ತದೆ, ರಾಜ್ಯವಾರು ವಿವರಗಳನ್ನು ಹೊಂದಿಲ್ಲ ಎಂದು ಹೇಳಿದ್ದಾರೆ. ಮೌಲ್ಯಮಾಪನದ ಅನುಪಸ್ಥಿತಿಯಲ್ಲಿ ಮಾಂಸದ ರಾಜ್ಯವಾರು ರಫ್ತಿನ ಡೇಟಾವನ್ನು ನಿರ್ವಹಿಸಲಾಗುವುದಿಲ್ಲ, ಏಕೆಂದರೆ ಇವು ರಫ್ತುದಾರರು ಸಾಗಣೆ ಬಿಲ್‌ಗಳಲ್ಲಿ ವರದಿ ಮಾಡಿದ ಮೂಲ ರಾಜ್ಯದ ಸಂಕೇತವನ್ನು ಆಧರಿಸಿವೆ ಎಂದು ಹೇಳಿದ್ದಾರೆ. ಡೈರೆಕ್ಟರೇಟ್ ಜನರಲ್ ಆಫ್ ಫಾರಿನ್ ಟ್ರೇಡ್ (DGFT) ಯ ವಿದೇಶಿ ವ್ಯಾಪಾರ ನೀತಿ (FTP) ಪ್ರಕಾರ, ಬೀಫ್‌ (ಹಸು, ಎತ್ತು, ಕರುವಿನ ಮಾಂಸ) ರಫ್ತು ನಿಷೇಧಿಸಲಾಗಿದೆ. ಅದನ್ನು ರಫ್ತು ಮಾಡಲು ಅನುಮತಿಸಲಾಗುವುದಿಲ್ಲ ಎಂದು ಜಿತಿನ್ ಪ್ರಸಾದ ಹೇಳಿದ್ದಾರೆ. ಹೀಗಾಗಿ ಸರ್ಕಾರವು ತನ್ನ ಉತ್ತರದಲ್ಲಿ ಕಳೆದ ಐದು ವರ್ಷಗಳಲ್ಲಿ ಭಾರತದಿಂದ ರಫ್ತು ಮಾಡಲಾದ ಎಮ್ಮೆ ಮತ್ತು ಇತರ ವರ್ಗದ ಮಾಂಸದ ಪ್ರಮಾಣ ಮತ್ತು ಕಳೆದ ಐದು ವರ್ಷಗಳಲ್ಲಿ ಮಾಂಸ ರಫ್ತಿನಿಂದ ಗಳಿಸಿದ ಆದಾಯದ ವರ್ಷವಾರು ವಿವರಗಳನ್ನು ನೀಡಿದೆ.   2020-21ರಲ್ಲಿ, ಸುಮಾರು 3.22 ಬಿಲಿಯನ್ ಅಮೆರಿಕನ್ ಡಾಲರ್ ಮೌಲ್ಯದ 10.98 ಲಕ್ಷ ಮೆಟ್ರಿಕ್ ಟನ್‌ಗಳ ಮಾಂಸ ರಫ್ತು ಆಗಿತ್ತು. 2021–22ರಲ್ಲಿ ಇದು ಸುಮಾರು 11.90 ಲಕ್ಷ ಟನ್‌ಗಳಿಗೆ ಏರಿಕೆ ಆಯಿತು. ಇದರ ಮೌಲ್ಯ 3.38 ಬಿಲಿಯನ್ ಅಮೆರಿಕನ್ ಡಾಲರ್. 2022-23ರಲ್ಲಿ, ಪ್ರಮಾಣವು ಸುಮಾರು 11.91 ಲಕ್ಷ ಟನ್‌ಗಳಲ್ಲಿ ಬಹುತೇಕ ಒಂದೇ ಆಗಿದ್ದರೂ, ರಫ್ತು ಮೌಲ್ಯವು 3.27 ಬಿಲಿಯನ್‌ ಅಮೆರಿಕನ್ ಡಾಲರ್ ಆಗಿ ಕುಸಿಯಿತು. 2023-24ರಲ್ಲಿ ರಫ್ತು 13.13 ಲಕ್ಷ ಟನ್‌ಗಳಿಗೆ ಏರಿದಾಗ ಅದರ ಮೌಲ್ಯ 3.83 ಶತಕೋಟಿ ಅಮೆರಿಕನ್ ಡಾಲರ್ ಆಗಿ ತೀವ್ರ ಏರಿಕೆ ಕಂಡುಬಂದಿದ್ದು, ಇದು ಈ ಅವಧಿಯಲ್ಲಿನ ಅತಿ ಹೆಚ್ಚು ರಫ್ತು ಪ್ರಮಾಣವಾಗಿದೆ. 2024-25ರಲ್ಲಿ ರಫ್ತು ಮೌಲ್ಯವು ಸುಮಾರು 4.16 ಶತಕೋಟಿ ಅಮೆರಿಕನ್ ಡಾಲರ್‌ಗೆ ತಲುಪಿತು. ಆದರೂ ಪ್ರಮಾಣವು ಸುಮಾರು 12.74 ಲಕ್ಷ ಟನ್‌ಗಳಿಗೆ ಸ್ವಲ್ಪ ಕಡಿಮೆಯಾಯಿತು.   ಮೇಲಿನ ಎರಡು ಚಾರ್ಟ್‌ಗಳಿಂದ, ಭಾರತದ ಮಾಂಸ ರಫ್ತಿನಲ್ಲಿ ಎಮ್ಮೆ/ಕೋಣದ ಮಾಂಸವು ಪ್ರಾಬಲ್ಯ ಹೊಂದಿದೆ ಎಂಬುದು ಸ್ಪಷ್ಟವಾಗಿದೆ. ಇದು ಐದು ವರ್ಷಗಳಲ್ಲಿ ಭಾರತದ ಗಳಿಕೆಯ ಬಹುಪಾಲು ಕೊಡುಗೆ ನೀಡುತ್ತದೆ. ಎಮ್ಮೆ/ಕೋಣ ಮಾಂಸ ರಫ್ತು 2020-21 ರಿಂದ ಏರಿದ್ದು , 2022-23 ರಲ್ಲಿ ಸ್ವಲ್ಪ ಕಡಿಮೆಯಾಯಿತು. ನಂತರ 2023-24 ರಲ್ಲಿ ಗರಿಷ್ಠ ಮಟ್ಟಕ್ಕೆ ಏರಿತು. ಪ್ರಮಾಣದಲ್ಲಿ ಕುಸಿತದ ಹೊರತಾಗಿಯೂ ರಫ್ತು ಆದಾಯವು 2024-25 ರಲ್ಲಿ ಅತ್ಯುನ್ನತ ಮಟ್ಟವನ್ನು ತಲುಪಿತು. ಎಮ್ಮೆ ಮಾಂಸ ಭಾರತದ ಮಾಂಸ ರಫ್ತು ಗಳಿಕೆಯಲ್ಲಿ ಅಗಾಧ ಪಾಲನ್ನು ಹೊಂದಿದೆ, ಐದು ವರ್ಷಗಳಲ್ಲಿ ಸ್ಥಿರವಾಗಿ ಸುಮಾರು 97 ರಿಂದ 98% ರಷ್ಟಿದೆ. ಕುರಿ/ಮೇಕೆ ಮತ್ತು ಕೋಳಿ ಮಾಂಸ ರಫ್ತುಗಳು ಪ್ರಮಾಣ ಮತ್ತು ಮೌಲ್ಯ ಎರಡರಲ್ಲೂ ಬೆಳವಣಿಗೆಯನ್ನು ತೋರಿಸುತ್ತವೆ. ಆದರೂ ಅವು ಸಣ್ಣ ಪಾಲು ಮಾತ್ರ. ಸಂಸ್ಕರಿಸಿದ ಮತ್ತು ಇತರ ಮಾಂಸ ವರ್ಗಗಳು ಕಾಲಾನಂತರದಲ್ಲಿ ಏರಿಳಿತಗೊಳ್ಳುತ್ತವೆ ಮತ್ತು ಕಡಿಮೆಯಾಗುತ್ತವೆ, 2024–25ರ ವೇಳೆಗೆ ತೀರಾ ಕಮ್ಮಿಯಾಗಿವೆ. ಭಾರತದ ಪ್ರಮುಖ ಎಮ್ಮೆ/ಕೋಣ ಮಾಂಸ ರಫ್ತುದಾರ ಸಂಸ್ಥೆಯಾದ 160 ವರ್ಷ ಹಳೆಯ ಅಲ್ಲಾನಾ ಗ್ರೂಪ್ ಬಿಜೆಪಿಗೆ 30 ಕೋಟಿ ರೂ.ಗಳನ್ನು ದೇಣಿಗೆ ನೀಡಿದೆ ಎಂಬ scroll.in ವರದಿಯ ಬೆನ್ನಲ್ಲೇ ಈ ಮಾಹಿತಿ ಬಂದಿದೆ. ಕೃಪೆ: thewire.in

ವಾರ್ತಾ ಭಾರತಿ 25 Mar 2026 11:35 pm

`ಸಿಎಂ ಆಗುವ ಅರ್ಹತೆ ಹಲವರಿಗಿದೆ'; ಎಂಬಿಪಿ, ಪರಂ, ಕೆಎಚ್ಎಂ ಹೆಸರು ಹೇಳಿ ಡಿಕೆಶಿಯನ್ನು ಮರೆತ ಸಿದ್ದರಾಮಯ್ಯ!

Siddaramaiah On CM Seat- ವಿಧಾನಸಭೆಯಲ್ಲಿ 2026-27ನೇ ಸಾಲಿನ ಬಜೆಟ್ ಚರ್ಚೆಯ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಪ್ರತಿಪಕ್ಷಗಳ ನಡುವೆ ನಾಯಕತ್ವ ಬದಲಾವಣೆ ಕುರಿತು ಸ್ವಾರಸ್ಯಕರ ಚರ್ಚೆ ನಡೆದಿದೆ. ಹೈಕಮಾಂಡ್ ಸೂಚಿಸುವವರೆಗೆ ನಾನೇ ಸಿಎಂ ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ. ಉಪ ಮುಖ್ಯಮಂತ್ರಿ ಆಗಿರುವ ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿಯಾಗುವ ಬಗ್ಗೆ ಪ್ರತಿಪಕ್ಷಗಳು ಕಾಲೆಳೆದಾಗ, ಪಕ್ಷದಲ್ಲಿ ಹಲವರಿಗೆ ಸಿಎಂ ಆಗುವ ಅರ್ಹತೆಯಿದೆ, ಆದರೆ ಎಲ್ಲರಿಗೂ ಅವಕಾಶ ಸಿಗುವುದು ಕಷ್ಟ ಎಂದು ಮಾರ್ಮಿಕವಾಗಿ ಉತ್ತರಿಸಿದರು.

ವಿಜಯ ಕರ್ನಾಟಕ 25 Mar 2026 11:32 pm

ವಾಡಿ | ಅಪರಿಚಿತ ವಾಹನ ಢಿಕ್ಕಿ: ಬೈಕ್ ಸವಾರ ಮೃತ್ಯು

ವಾಡಿ : ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಬುಧವಾರ ಸಂಜೆ ಲಾಡ್ಲಾಪುರ ಗ್ರಾಮ ಸಮೀಪದ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ. ಮೃತರನ್ನು ಲಾಡ್ಲಾಪುರ ಗ್ರಾಮದ ಶಿವರಾಜ್ ಸಾಬಣ್ಣ ಹಳ್ಳಿ (45) ಎಂದು ಗುರುತಿಸಲಾಗಿದೆ. ನಾಲವಾರದಿಂದ ಸ್ವಗ್ರಾಮ ಲಾಡ್ಲಾಪುರಕ್ಕೆ ಬೈಕ್‌ನಲ್ಲಿ ಒಬ್ಬರೇ ಬರುತ್ತಿದ್ದ ವೇಳೆ ಎದುರುಗಡೆಯಿಂದ ಬಂದ ಅಪರಿಚಿತ ವಾಹನ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಡಿಕ್ಕಿಯ ತೀವ್ರತೆಗೆ ಅವರು ಕಾಂಕ್ರೀಟ್ ರಸ್ತೆಗೆ ಬಿದ್ದು ತಲೆಗೆ ಭಾರಿ ಪೆಟ್ಟಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅಪಘಾತಕ್ಕೆ ಕಾರಣವಾದ ವಾಹನ ಯಾವುದು ಎಂಬುದು ಇನ್ನೂ ಪತ್ತೆಯಾಗಿಲ್ಲ. ಘಟನಾ ಸ್ಥಳದಲ್ಲಿ ಕೆಲವು ವಾಹನದ ಅವಶೇಷಗಳು ಪತ್ತೆಯಾಗಿದ್ದು, ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ವಾಸವಾಗಿದ್ದ ಶಿವರಾಜ್ ಅವರು ಲಾಡ್ಲಾಪುರ ಹಾಜಿ ಸರ್ವರ್ ಜಾತ್ರೆಗೆಂದು ಊರಿಗೆ ಬಂದಿದ್ದರು ಎನ್ನಲಾಗಿದೆ. ಮೃತರಿಗೆ ಪತ್ನಿ ಹಾಗೂ ಮೂವರು ಪುತ್ರರು ಇದ್ದಾರೆ. ಘಟನಾ ಸ್ಥಳಕ್ಕೆ ವಾಡಿ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ವಾರ್ತಾ ಭಾರತಿ 25 Mar 2026 11:25 pm

Kalaburagi | ಆಳಂದದಲ್ಲಿ ಎಲ್‌ಪಿಜಿ ಸಿಲಿಂಡರ್ ಕೊರತೆ : 2 ಕಿಮೀ ಉದ್ದ ಸಾಲುನಿಂತ ಗ್ರಾಹಕರು

ಕಲಬುರಗಿ: ಎಲ್‌ಪಿಜಿ ಸಿಲಿಂಡರ್ ಕೊರತೆ ತೀವ್ರಗೊಂಡ ಹಿನ್ನೆಲೆ ನೂರಾರು ಗ್ರಾಹಕರು ಸಿಲಿಂಡರ್ ಖರೀದಿಗೆ ಮುಗಿಬೀಳುತ್ತಿರುವ ದೃಶ್ಯಗಳು ಆಳಂದ ಪಟ್ಟಣದಲ್ಲಿ ಕಂಡುಬಂದವು. ಪಟ್ಟಣದ ಸೋನಾ ಗ್ಯಾಸ್ ಏಜೆನ್ಸಿಯ ಗೋದಾಮಿನಿಂದ ಸುಮಾರು 2 ಕಿಮೀ ದೂರವರೆಗೆ ನೂರಾರು ಗ್ರಾಹಕರು ಮಂಗಳವಾರ ಸಂಜೆ 6 ಗಂಟೆಯಿಂದಲೇ ಸಾಲುಗಟ್ಟಿ ನಿಂತು ಸಿಲಿಂಡರ್ ಖರೀದಿಸಿದರು. ಆಳಂದ ಪಟ್ಟಣದ ಸುತ್ತಮುತ್ತಲಿನ ಹಲವು ಗ್ರಾಮಗಳಿಂದ ಬಂದ ಗ್ರಾಹಕರು ಸಿಲಿಂಡರ್ ಪಡೆಯಲು ಹರಸಾಹಸ ಪಟ್ಟಿರುವ ಘಟನೆ ನಡೆದಿದೆ. ನೆಟ್‌ವರ್ಕ್ ಸಮಸ್ಯೆಯಿಂದ ತಕ್ಷಣ ಬುಕ್ಕಿಂಗ್ ಸಾಧ್ಯವಾಗದೇ ಇರುವುದರಿಂದ ಗ್ರಾಹಕರಲ್ಲಿ ಆತಂಕ ಹೆಚ್ಚಾಗಿದೆ. ಗೃಹಬಳಕೆಯ ಸಿಲಿಂಡರ್‌ಗಳ ಮೇಲಿನ ಅವಲಂಬನೆ ಹೆಚ್ಚಿದ ಹಿನ್ನೆಲೆ ಬೇಡಿಕೆ ಹೆಚ್ಚಳವಾಗಿದೆ. ಹಾಗಾಗಿ ಸಿಲಿಂಡರ್ ಸಿಗದಿರುವ ಆತಂಕದಲ್ಲಿ ಜನರು ನೇರವಾಗಿ ಗ್ಯಾಸ್ ಏಜೆನ್ಸಿ ಕಚೇರಿಯ ಮುಂಭಾಗದಲ್ಲಿ ಸಾಲುಗಟ್ಟಿ ನಿಂತಿದ್ದಾರೆ. ಇನ್ನು, ತಾಲೂಕು ಆಡಳಿತ ಈ ಸಮಸ್ಯೆ ಕುರಿತು ಮೌನ ವಹಿಸಿರುವುದು ಸಾರ್ವಜನಿಕರಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ. ಆಹಾರ ಇಲಾಖೆಯ ಅಧಿಕಾರಿಗಳನ್ನು ಸಂಪರ್ಕಿಸಿದಾಗ, ಪಟ್ಟಣದಲ್ಲಿ ಮಾತ್ರ ಗ್ಯಾಸ್ ಸಮಸ್ಯೆ ಇದೆ. ಗ್ರಾಮೀಣ ಭಾಗದಲ್ಲಿ ಯಾವುದೇ ತೊಂದರೆ ಇಲ್ಲ. ಸೋನಾ ಗ್ಯಾಸ್ ಏಜೆನ್ಸಿಯ ತಾಂತ್ರಿಕ ಸಮಸ್ಯೆಯಿಂದ ಈ ಪರಿಸ್ಥಿತಿ ಉಂಟಾಗಿದೆ ಎಂದು ತಿಳಿಸಿದ್ದಾರೆ. 500 ಕ್ಕೂ ಹೆಚ್ಚು ಗ್ರಾಹಕರು ಸಾಲಿನಲ್ಲಿ ನಿಂತುಕೊಂಡು ಆಕ್ರೋಶ ವ್ಯಕ್ತಪಡಿಸಿದ ಬಳಿಕ ಮಂಗಳವಾರ ಮಧ್ಯಾಹ್ನದ ವೇಳೆಯಲ್ಲಿ ಎಲ್ಲ ಗ್ರಾಹಕರಿಗೂ ಸಿಲಿಂಡರ್ ಸಿಕ್ಕಿದೆ ಎಂದು ಮೂಲಗಳು ತಿಳಿಸಿವೆ.

ವಾರ್ತಾ ಭಾರತಿ 25 Mar 2026 11:21 pm

ಕುಕನೂರಿನಲ್ಲಿ ಶಾಶ್ವತ ನ್ಯಾಯಾಲಯ ಘೋಷಣೆ: ವಕೀಲರಿಂದ ಸಂಭ್ರಮಾಚರಣೆ

ಕುಕನೂರು : ತಾಲೂಕಿನಲ್ಲಿ ಸಂಚಾರಿ ನ್ಯಾಯಾಲಯವನ್ನು ಶಾಶ್ವತ ನ್ಯಾಯಾಲಯವಾಗಿ ಘೋಷಿಸಿದ ಹಿನ್ನೆಲೆ ವಕೀಲರು ಪಟ್ಟಣದಲ್ಲಿ ಸಂಭ್ರಮಾಚರಣೆ ನಡೆಸಿದರು. ಪಟ್ಟಣದ ವೀರಭದ್ರಪ್ಪ ವೃತ್ತದಲ್ಲಿ ಪಟಾಕಿ ಸಿಡಿಸಿ ಹಾಗೂ ಸಿಹಿ ಹಂಚುವ ಮೂಲಕ ನ್ಯಾಯವಾದಿಗಳ ಸಮಿತಿಯ ಸದಸ್ಯರು ಸಂತಸ ವ್ಯಕ್ತಪಡಿಸಿದರು. ನಂತರ ಮಾತನಾಡಿದ ತಾಲೂಕು ನ್ಯಾಯವಾದಿಗಳ ಸಮಿತಿಯ ಕಾರ್ಯದರ್ಶಿ ಬಸವರಾಜ್ ಜಂಗಲಿ, ತಾಲೂಕಿನ ಜನರು ಹಾಗೂ ವಕೀಲರ ಬಹುಕಾಲದ ಬೇಡಿಕೆಯಾದ ಶಾಶ್ವತ ನ್ಯಾಯಾಲಯ ಸ್ಥಾಪನೆಗೆ ಕರ್ನಾಟಕ ಸರ್ಕಾರ ಅನುಮೋದನೆ ನೀಡಿರುವುದು ಸಂತಸದ ಸಂಗತಿ ಎಂದು ಹೇಳಿದರು. ಶಾಶ್ವತ ನ್ಯಾಯಾಲಯ ಸ್ಥಾಪನೆಗೆ ಸಹಕಾರ ನೀಡಿದ ರಾಜ್ಯ ಸರ್ಕಾರ, ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳು, ಕೊಪ್ಪಳ ಜಿಲ್ಲಾ ಆಡಳಿತಾತ್ಮಕ ನ್ಯಾಯಾಧೀಶರು ಹಾಗೂ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಚಂದ್ರಶೇಖರ ಸಿ., ಯಲಬುರ್ಗಾ ನ್ಯಾಯಾಲಯದ ನ್ಯಾಯಾಧೀಶರು ಸೇರಿದಂತೆ ಎಲ್ಲರಿಗೂ ಅಭಿನಂದನೆ ಸಲ್ಲಿಸಿದರು. ಈ ಸಂದರ್ಭದಲ್ಲಿ ವಕೀಲರಾದ ಎಸ್.ಸಿ. ಗದಗ್, ಈರಣ್ಣ ಕೋಳೂರ, ಸಂತೋಷ್ ಮಾದಿನೂರ, ರಮೇಶ್ ಕುಮಾರ, ಅಡಿವಪ್ಪ ಬೋರಣ್ಣವರ, ಶಿವಯೋಗಿ ಹಿರೇಮಠ, ಮಹಮ್ಮದ್ ರಫಿ ಬಳಗೇರಿ, ವಿನಾಯಕ ಬಳಗೇರಿ, ರವಿ ಕುಮಾರ್ ಹುಣಸಿಮರ, ಬಸವರಾಜ ಯಡೆಯಾಪುರ, ಎಸ್.ಎಸ್. ಶ್ಯಾಗೋಟಿ, ಎಚ್.ಎಂ. ನದಾಫ್, ಹನುಮಂತಪ್ಪ ಬಂಗಾಳಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

ವಾರ್ತಾ ಭಾರತಿ 25 Mar 2026 11:19 pm

ಗಂಗಾವತಿಯಲ್ಲಿ ಶಬ್ದ ಮಾಲಿನ್ಯಕ್ಕೆ ಕಡಿವಾಣ: ಗದ್ದಲ ಸೈಲೆನ್ಸರ್ ಹೊಂದಿದ ಬೈಕ್ ವಶ

ಗಂಗಾವತಿ: ನಗರದಲ್ಲಿ ಅತಿಯಾದ ಶಬ್ದ ಮಾಲಿನ್ಯ ಉಂಟುಮಾಡಿ ಸಾರ್ವಜನಿಕರಿಗೆ ತೊಂದರೆ ನೀಡುತ್ತಿದ್ದ ದ್ವಿಚಕ್ರ ವಾಹನದ ವಿರುದ್ಧ ಸಂಚಾರಿ ಪೊಲೀಸರು ಕ್ರಮ ಕೈಗೊಂಡಿದ್ದಾರೆ.  ನಗರ ಸಂಚಾರಿ ಠಾಣೆಯ ಪಿಎಸ್‌ಐ ಶಾರದಮ್ಮ ಅವರು ಯುಪಿ 76 ಬಿ 6206 ಸಂಖ್ಯೆಯ ಯಮಹ ದ್ವಿಚಕ್ರ ವಾಹನವನ್ನು ವಶಕ್ಕೆ ಪಡೆದು, ಅದರಲ್ಲಿದ್ದ ಅನಧಿಕೃತ ಗದ್ದಲ ಸೈಲೆನ್ಸರ್ ಅನ್ನು ತೆರವುಗೊಳಿಸಿ ನಾಶಪಡಿಸಿದರು. ವಾಹನದಿಂದ ಅತಿಯಾದ ಶಬ್ದ ಹೊರಬರುತ್ತಿದ್ದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ. ಈ ಸಂಬಂಧ ವಾಹನದ ಮಾಲೀಕರಿಗೆ 500 ರೂ. ದಂಡ ವಿಧಿಸಲಾಗಿದೆ. ಇದೇ ರೀತಿಯ ಉಲ್ಲಂಘನೆ ಮರುಕಳಿಸಿದಲ್ಲಿ ವಾಹನವನ್ನು ಸೀಝ್‌ ಮಾಡುವುದಾಗಿ ಪೊಲೀಸರು ಎಚ್ಚರಿಕೆ ನೀಡಿದ್ದಾರೆ. ನಗರದಲ್ಲಿ ಶಾಂತಿ ಮತ್ತು ಸಾರ್ವಜನಿಕರ ಸುಖಶಾಂತಿಯನ್ನು ಕಾಪಾಡುವ ಉದ್ದೇಶದಿಂದ ಇಂತಹ ಕಾರ್ಯಾಚರಣೆಗಳನ್ನು ಮುಂದುವರಿಸಲಾಗುವುದು ಎಂದು ಸಂಚಾರಿ ಪೊಲೀಸರು ತಿಳಿಸಿದ್ದಾರೆ.

ವಾರ್ತಾ ಭಾರತಿ 25 Mar 2026 11:17 pm

ಗಂಗಾವತಿ | ಹಿರೇಬೆಣಕಲ್‌ನಲ್ಲಿ 3 ಸಾವಿರ ವರ್ಷದ ಮೊರೇರ್ ಜನಾಂಗದ ಕಬ್ಬಿಣದ ಅದಿರು ಪತ್ತೆ !

ಗಂಗಾವತಿ: ತಾಲೂಕಿನ ಪ್ರಸಿದ್ಧ ಪ್ರಾಗೈತಿಹಾಸಿಕ ಸಮಾಧಿನೆಲೆ ಹಿರೇಬೆಣಕಲ್ ಗ್ರಾಮದ ಗುಡ್ಡ ಪ್ರದೇಶದಲ್ಲಿ, ಮೊರೇರ್ ಜನಾಂಗ ಸಂಗ್ರಹಿಸಿದ್ದ ಕಬ್ಬಿಣದ ಅದಿರು ಪತ್ತೆಯಾಗಿದೆ ಎಂದು ಸಂಶೋಧಕ ಡಾ.ಶರಣಬಸಪ್ಪ ಕೋಲ್ಕಾರ್ ತಿಳಿಸಿದ್ದಾರೆ. ಸುಮಾರು 2000ರಿಂದ 3000 ವರ್ಷಗಳ ಹಿಂದೆ ದಕ್ಷಿಣ ಭಾರತದಲ್ಲಿ ಬದುಕಿದ್ದ ಮೊರೇರ್ ಬುಡಕಟ್ಟು ಜನಾಂಗವು ಕಬ್ಬಿಣದ ಅದಿರನ್ನು ಸಂಸ್ಕರಿಸಿ ಕಬ್ಬಿಣ ಲೋಹ ಉತ್ಪಾದಿಸುವ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದ್ದರೆಂದು ಸಂಶೋಧನೆಗಳು ತಿಳಿಸಿವೆ. ಈ ಕಬ್ಬಿಣವನ್ನು ಬಳಸಿ ಅವರು ಸಮಾಧಿಗಳ ನಿರ್ಮಾಣಕ್ಕೆ ಬೇಕಾದ ಕಲ್ಲು ಚಪ್ಪಡಿಗಳನ್ನು ಸಿದ್ಧಪಡಿಸುವ ಉಪಕರಣಗಳ ಜೊತೆಗೆ ದಿನನಿತ್ಯ ಬಳಕೆಯ ಕೃಷಿ ಮತ್ತು ಯುದ್ಧೋಪಕರಣಗಳನ್ನು ತಯಾರಿಸುತ್ತಿದ್ದರು. ಕಬ್ಬಿಣದ ಬಳಕೆಯ ಹಿನ್ನೆಲೆ ಇವರ ಕಾಲವನ್ನು ಕಬ್ಬಿಣ ಯುಗವೆಂದು ಕರೆಯಲಾಗಿದ್ದು, ಬೃಹತ್ ಬಂಡೆಗಳಿಂದ ಸಮಾಧಿ ನಿರ್ಮಾಣ ಮಾಡಿದ ಕಾರಣ ಇದನ್ನು ಬೃಹತ್ ಶಿಲಾಯುಗ ಎಂದು ಸಹ ಗುರುತಿಸಲಾಗಿದೆ. ಒಂದು ಕೆಜಿ ಅದಿರಿನಿಂದ ಸುಮಾರು 350 ಗ್ರಾಂ ಪರಿಶುದ್ಧ ಕಬ್ಬಿಣ ಪಡೆಯುವ ತಂತ್ರಜ್ಞಾನ ಇವರಿಗಿದ್ದುದಾಗಿ ಹೇಳಲಾಗಿದೆ. ಹಿರೇಬೆಣಕಲ್ ಪ್ರದೇಶದಲ್ಲಿ ಮೊರೇರ್ ಜನಾಂಗವು ಕಬ್ಬಿಣ ಬಳಸಿದ್ದ ಬಗ್ಗೆ ಈವರೆಗೆ ಯಾವುದೇ ಸ್ಪಷ್ಟ ಸಾಕ್ಷ್ಯ ದೊರೆತಿರಲಿಲ್ಲ. ಇದೀಗ ಗುಡ್ಡದ ‘ದುರ್ಗದದಡಿ’ ಭಾಗದಲ್ಲಿ ಸುಮಾರು 200 ಮೀಟರ್ ವ್ಯಾಪ್ತಿಯಲ್ಲಿ ಸಂಸ್ಕರಿತ ಕಬ್ಬಿಣದ ಅದಿರು ಚೆದುರಿದಂತೆ ಪತ್ತೆಯಾಗಿದೆ. ಈ ಅದಿರನ್ನು ಸಮೀಪದ ಸಂಡೂರು ಪ್ರದೇಶದಿಂದ ತರಿಸಿ ಇಲ್ಲಿ ಸಂಸ್ಕರಿಸಿದ್ದಿರಬಹುದೆಂದು ಅಂದಾಜಿಸಲಾಗಿದೆ. ಕಾಯಿಸಿದ ಕಬ್ಬಿಣದ ದ್ರವರೂಪದ ಘನೀಕೃತ ತುಂಡುಗಳು ಹೆಚ್ಚಿನ ಪ್ರಮಾಣದಲ್ಲಿ ಇಲ್ಲಿ ದೊರೆತಿವೆ. ಈ ಪತ್ತೆ ಕುರಿತು ಇನ್ನಷ್ಟು ಅಧ್ಯಯನ ಕೈಗೊಳ್ಳಲಾಗುವುದಾಗಿ ತಿಳಿಸಿದರು. ಸಂಶೋಧನಾ ತಂಡದಲ್ಲಿ ಚಂದ್ರಶೇಖರ್ ಕುಂಬಾರ್, ಮಂಜುನಾಥ್ ದೊಡ್ಮನಿ, ಹರನಾಯಕ ಮತ್ತು ಹುಸೇನ್ ಬಾಷಾ ಇದ್ದರು.

ವಾರ್ತಾ ಭಾರತಿ 25 Mar 2026 11:14 pm

ಮಹಿಳೆಗೆ ಸಾಮಾಜಿಕ, ಆರ್ಥಿಕ ಸ್ವಾತಂತ್ರ್ಯ ದೊರೆತರೆ ಮಾತ್ರ ಆಕೆಯ ಸ್ಥಿತಿ ಸುಧಾರಿಸುತ್ತದೆ: ಜ್ಯೋತಿ ಗುರುಪ್ರಸಾದ್

ಕಾರ್ಕಳ : ಮಹಿಳೆಗೆ ಸಾಮಾಜಿಕ ಸ್ವಾತಂತ್ರ್ಯ, ನೈತಿಕ ಸ್ವಾತಂತ್ರ್ಯದ ಜೊತೆಗೆ ಆರ್ಥಿಕ ಸ್ವಾತಂತ್ರ್ಯವೂ ದೊರೆತರೆ ಮಾತ್ರ ಅವಳ ಸ್ಥಿತಿ ಸುಧಾರಿಸಿ ಅವಳ ಆತ್ಮಗೌರವಕ್ಕೆ ಕುಂದಣವಿಟ್ಟಂತಾಗುತ್ತದೆ. ಮಹಿಳೆ ಎಂದರೆ ಮಹಾ ಇಳೆ. ಇಳೆ ಎಂದರೆ ಭೂಮಿ. ಭೂಮಿ ತೂಕದ ಹೆಣ್ಣು ಮಗಳನ್ನು ಪುರುಷ ಪ್ರಧಾನ ಸಮಾಜ ಶೋಷಿಸಿಕೊಂಡು ಬಂದ ಪರಂಪರೆಯಿಂದಾಗಿ ಮಹಿಳೆ ವ್ಯಕ್ತಿಯಾಗಿ ಸಮಾನತೆ ಕಂಡುಕೊಳ್ಳುವುದು ತುಂಬಾ ಕಷ್ಟವಾಯಿತು ಹಿರಿಯ ಸಾಹಿತಿ, ಅಂಕಣಕಾರ್ತಿ ಜ್ಯೋತಿ ಗುರುಪ್ರಸಾದ್ ಅಭಿಪ್ರಾಯಪಟ್ಟರು. ಅವರು ಕಾರ್ಕಳದ ಸುಮೇಧಾ ಫ್ಯಾಷನ್ ಇನ್ಸ್ಟಿಟ್ಯೂಟ್ ವತಿಯಿಂದ ಪಿ ಯು ಸಿ ನಂತರದ ವಿದ್ಯಾರ್ಥಿನಿಯರಿಗಾಗಿ ಉಚಿತ ಫ್ಯಾಷನ್ ಡಿಸೈನಿಂಗ್ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು. ಶಿಕ್ಷಣದ ಸವಲತ್ತೂ ಕೂಡ ಮಹಿಳೆಯರಿಗೆ ಇಲ್ಲದ ಸಂಕಷ್ಟದ ಕಾಲದಲ್ಲಿ ಮಹಿಳೆಗೆ ಸಿಗಬೇಕಾದ ಶಿಕ್ಷಣದ ಹಕ್ಕಿಗೆ ಹೋರಾಡಿದ ಸಾವಿತ್ರಿ ಭಾಪುಲೆ, ಅರಮನೆಯಲ್ಲಿ ಊಳಿಗದವಳಾಗಿದ್ದ ಸಂಚಿ ಹೊನ್ನಮ್ಮ, ನಮ್ಮನೆಲ್ಲ ಪೊರೆದ ತಾಯಿ ಹೆಣ್ಣಲ್ಲವೆ ಎಂದು ಪ್ರಶ್ನಿಸುವುದರ ಮೂಲಕ ಹೆಣ್ಣಿನ ತಾಯ್ತನದ ಪ್ರಕೃತಿದತ್ತ ಶಕ್ತಿಯ ಮೂಲಕ ಅವಳ ವ್ಯಕ್ತಿತ್ವದ ಪ್ರಭೆಯನ್ನು ಎತ್ತಿ ಹಿಡಿದವರು . ಇಂಥ ಆತ್ಮಗೌರವವನ್ನು ಒದಗಿಸಲು ಹೊರಟಿರುವ ಸುಮೇಧ ಫ್ಯಾಶನ್ ಡಿಸೈನಿಂಗ್ ಸಂಸ್ಥೆಯ ಸಂಸ್ಥಾಪಕಿ ಸಾಧನಾ ಅಶ್ರೀತ್ ಅವರ ದುಡಿಮೆ ಸ್ತುತ್ಯಾರ್ಹ ಎಂದರು. ಫ್ಯಾಶನ್ ಎಂದರೆ ಆಯಾ ಕಾಲದಲ್ಲಿ ಅನುಸರಿಸುವ ಮಾದರಿ ಶೈಲಿ. ಉಡುಗೆ ತೊಡುಗೆಯ ಫ್ಯಾಶನ್ ಉಡುವರ ತೊಡುವರ ಆತ್ಮವಿಶ್ವಾಸವನ್ನು ಹೆಚ್ಚಿಸುವಂತಿರಬೇಕು. ಅಂಥ ಕೌಶಲವನ್ನು ಶ್ರದ್ಧೆ ಮತ್ತು ಪ್ರೀತಿಯಿಂದ ಕಲಿತು ಹೊಸತನದ ಫ್ಯಾಶನ್ ಮಾದರಿಗಳನ್ನು ಮಾರುಕಟ್ಟೆಗೆ ಒದಗಿಸುವುದರ ಮೂಲಕ ಪ್ರಸಿದ್ಧಿ ಮತ್ತು ಆರ್ಥಿಕ ಸ್ವಾತಂತ್ರ್ಯ ಎರಡನ್ನೂ ಇಲ್ಲಿ ತರಬೇತಿ ಪಡೆವ ಹೆಣ್ಣು ಮಕ್ಕಳು ಪಡೆಯಬೇಕು.‌ ಅಂತರಂಗದ ಸೌಂದರ್ಯದ ಮೂಲಕ ಬಹಿರಂಗದ ಸೌಂದರ್ಯ ಹೊಳೆಯುವಂಥ ಫ್ಯಾಶನ್ ವಿನ್ಯಾಸವನ್ನು ಕಲಿಯಬೇಕು ಎಂಬ ಇಂಗಿತವನ್ನು ವ್ಯಕ್ತಪಡಿಸುವುದರ ಮೂಲಕ ತಮ್ಮ ' ನೆರಿಗೆಗಳು' ಕವಿತೆಯನ್ನು ಪ್ರಸ್ತುತಪಡಿಸಿದರು. ಅದರಲ್ಲಿ ನನ್ನಿಂದಲೇ ಸೀರೆಗೊಂದು ಆಕಾರ ಎಂಬ ಸಾಲು ಬರುತ್ತದೆ.‌ಇದು ಫ್ಯಾಶನ್ ನ ಅಸ್ಮಿತೆ ಮತ್ತು ಆತ್ಮವಿಶ್ವಾಸ ಎಂದು ಅರ್ಥ ಮಾಡಿಸುತ್ತ ಇಲ್ಲಿಯ ವಿದ್ಯಾರ್ಥಿಗಳು ಅತ್ಯುನ್ನತ ಮಾದರಿ ಫ್ಯಾಶನ್ ಡಿಸೈನ್ ಕಲಿಕೆಯನ್ನು ಯಶಸ್ವಿಯಾಗಿ ಕಲಿತು ಕಲಿತ ತಾಯಿ ಬೇರಿಗೆ ನ್ಯಾಯ ಒದಗಿಸಿ ಹೆಮ್ಮರದ ರೆಂಬೆ ಕೊಂಬೆ ಎಲೆ ಹೂವು ಹಣ್ಣುಗಳಾಗಿ ಕಂಗೊಳಿಸಿ ಆಕಾಶ ಮುಟ್ಟುವ ಸಾರ್ಥಕ ಜೀವನವನ್ನು ನಡೆಸಬೇಕು ಎಂದು ಹರಸಿದರು.' ವಿಶೇಷ ಸಾಮರ್ಥ್ಯದ ವಿದ್ಯಾರ್ಥಿನಿ ಸೌಜನ್ಯ ವಸ್ತ್ರ ವಿನ್ಯಾಸಗೊಳಿಸಿದ ಫ್ಯಾಷನ್ ಬಟ್ಟೆಗಳು ಹಾಗೂ ಜ್ಯುವೆಲರಿಗಳ ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿದ ಕಾರ್ಕಳದ ಕೊಡುಗೈ ದಾನಿ ಲೆಕ್ಕ ಪರಿಶೋದಕ ಕಾರ್ಕಳ ಕಮಲಾಕ್ಷ ಕಾಮತ್ ವಿದ್ಯಾರ್ಥಿನಿಯರು ಕಲಿಕೆಯಲ್ಲಿ ಪ್ರೀತಿ, ಆತ್ಮವಿಶ್ವಾಸ, ಸಕರಾತ್ಮಕ ಗುಣಗಳನ್ನು ಬೆಳೆಸಿ ಕೊಳ್ಳುವ ಮೂಲಕ ಜೀವನದಲ್ಲಿ ಪರಿವರ್ತನೆಯನ್ನು ಕಂಡುಕೊಳ್ಳಬೇಕಾಗಿದೆ. ಈ ಕಾರ್ಯಾಗಾರದ ಪ್ರಯೋಜನ ಪಡೆದುಕೊಂಡು ಯುವತಿಯರು ಸ್ವಂತ ಉದ್ಯೋಗ ನಡೆಸಿ ಸ್ವಾವಲಂಬಿ ಬದುಕು ನಡೆಸಲು ಸಹಾಯವಾಗಲಿದೆ, ನಾವು ಕಲಿತ ವಿದ್ಯೆಯನ್ನು ಬೇರೆಯವರಿಗೆ ದಾರೆ ಏರೆಯುವ ಮೂಲಕ ಜೀವನ ಸಾರ್ಥಕವಾಗುತ್ತದೆ ಜೀವನದಲ್ಲಿ ದಾನ ಧರ್ಮಗಳ ಮೂಲಕ ಸಮಾಜ ಸೇವೆಗಳನ್ನು ಮಾಡಿ ಪಾವನರಾಗಬೇಕು ಎಂದರು ಸುಮೇಧಾ ಫ್ಯಾಷನ್ ಇನ್ಸ್ಟಿಟ್ಯೂಟ್ ಸಂಸ್ಥಾಪಕಿ ಸಾಧನ ಅಶ್ರೀತ್ ಪ್ರಾಸ್ತವಿಕವಾಗಿ ಮಾತನಾಡಿ ಯುವತಿಯರಿ ಗಾಗಿ ಉಚಿತವಾಗಿ ಹೂಪ್ ಆರ್ಟ್, ಜ್ಯುವೆಲರಿ ತಯಾರಿಕೆ, ಮೆಹಂದಿ, ಕ್ಲೇ ಆರ್ಟ್, ಸೇರಿದಂತೆ ವಿವಿಧ ಫ್ಯಾಶನ್ ಸಂಬಂದಿಸಿದ ವಿಷಯಗಳನ್ನು ಕಲಿಸಿಕೊಡಲಾಗುವುದು ಎಂದರು. ವೇದಿಕೆಯಲ್ಲಿ ವಿಶೇಷ ಶಿಕ್ಷಕಿ ಸೌಜನ್ಯ ಉಪಸ್ಥಿತರಿದ್ದರು. ಸಂಜನಾ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿ ಕಾವ್ಯ ವಂದಿಸಿದರು.    

ವಾರ್ತಾ ಭಾರತಿ 25 Mar 2026 11:14 pm

ಕುಕನೂರಿನಲ್ಲಿ 20 ಜೋಡಿಗಳ ಸಾಮೂಹಿಕ ವಿವಾಹ: ಸರಳ ವಿವಾಹಕ್ಕೆ ಜನಮೆಚ್ಚುಗೆ

ಕುಕನೂರು : ಪಟ್ಟಣದ ನೀಲಗುಂದ ಗುದ್ನೇಶ್ವರ ಸ್ವಾಮಿ ಸೇವಾ ಸಮಿತಿ ಹಾಗೂ ಗುದ್ನೇಶ್ವರ ಮಠದ ವತಿಯಿಂದ 20 ಜೋಡಿಗಳ ಸಾಮೂಹಿಕ ವಿವಾಹ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಬುಧವಾರ ಗುದ್ನೇನಪ್ಪ ಮಠ ಜಾತ್ರಾ ಆವರಣದಲ್ಲಿ ಸಡಗರದಿಂದ ನೆರವೇರಿದವು. ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ ಪೂಜಾ ವಿಧಿವಿಧಾನಗಳು ಹಾಗೂ ಮಂಗಳಸೂತ್ರ ಧಾರಣೆ ನೆರವೇರಿತು. ಬಳಿಕ ನವ ದಂಪತಿಗಳಿಗೆ ಹಿರಿಯರು ಆಶೀರ್ವಚನ ನೀಡಿ ಶುಭ ಹಾರೈಸಿದರು. ಸರಳ ಹಾಗೂ ಸಾರ್ಥಕ ವಿವಾಹ ವ್ಯವಸ್ಥೆಯನ್ನು ಉತ್ತೇಜಿಸುವ ಉದ್ದೇಶದಿಂದ ಈ ಸಾಮೂಹಿಕ ವಿವಾಹ ಆಯೋಜಿಸಲಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ. ವೇದಿಕೆ ಕಾರ್ಯಕ್ರಮದಲ್ಲಿ ನೀಲಗುಂದ ಮಠದ ಪ್ರಭುಲಿಂಗ ದೇವರು, ಕುದ್ರಿಮೋತಿ ಮೈಸೂರು ಸಂಸ್ಥಾನದ ವಿಜಯ ಮಹಾಂತೇಶ್ವರ ಮಹಾಸ್ವಾಮಿಜೀ, ಸುರೇಶ್ ಬಳೂಟಗಿ ಹಾಗೂ ಮಾಜಿ ಜಿ.ಪಂ. ಸದಸ್ಯ ಈರಪ್ಪ ಕುಡಗುಂಟಿ ಮಾತನಾಡಿ, ಮದುವೆ ಜೀವನದ ಮಹತ್ವದ ಘಟ್ಟವಾಗಿದ್ದು ಅನಗತ್ಯ ಖರ್ಚು ಬೇಡ. ಸಾಮೂಹಿಕ ವಿವಾಹಗಳು ಸಮಾಜದಲ್ಲಿ ಸಮಾನತೆ, ಸರಳತೆ ಹಾಗೂ ಉತ್ತಮ ಮೌಲ್ಯಗಳನ್ನು ಬಿತ್ತುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಎಂದರು. ಇದೇ ವೇಳೆ ಮಿತ ಸಂತಾನ ಹಾಗೂ ಮಕ್ಕಳ ಶಿಕ್ಷಣಕ್ಕೆ ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದ ಅವರು, ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ಇಂತಹ ಕಾರ್ಯಕ್ರಮಗಳು ಬಹಳ ಸಹಾಯಕವಾಗಿವೆ ಎಂದು ಅಭಿಪ್ರಾಯಪಟ್ಟರು. ಸಮಾಜ ಸೇವಕ ಕಳಕಪ್ಪ ಕಂಬಳಿ ಮಾತನಾಡಿ, ಸಾಮೂಹಿಕ ವಿವಾಹವು ಕೇವಲ ಬಡವರ ಮದುವೆ ಎಂಬ ಕಲ್ಪನೆ ತಪ್ಪು. ಧಾರ್ಮಿಕ ವಾತಾವರಣದಲ್ಲಿ, ಹಿರಿಯರ ಆಶೀರ್ವಾದದೊಂದಿಗೆ ನಡೆಯುವ ಈ ವಿವಾಹ ಜೀವನದ ಸಾರ್ಥಕ ಕ್ಷಣ ಎಂದು ಹೇಳಿದರು. ಈ ವೇಳೆ ಯಲಬುರ್ಗಾ ಶ್ರೀಧರ ಮಠದ ಬಸವಲಿಂಗ ಶಿವಚಾರ್ಯರು, ಕುಕನೂರಿನ ಅನ್ನದಾನೇಶ್ವರ ಶಾಖಾ ಮಠದ ಮಹಾದೇವ ದೇವರು, ಸಮಾಜ ಸೇವಕ ಕಳಕಪ್ಪ ಕಂಬಳಿ ಹಾಗೂ ಮಲ್ಲಣಕೇರಿಯ ಸ್ವಾಮೀಜಿ ಕಾರ್ಯಕ್ರಮದಲ್ಲಿ ಭಾಗವಹಿಸಿ ವೇದಿಕೆ ಮೇಲೆ ಉಪಸ್ಥಿತರಿದ್ದರು. ನವ ಜೋಡಿಗಳ ಬಂಧು-ಬಾಂಧವರು, ಸ್ನೇಹಿತರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ನವ ದಂಪತಿಗಳಿಗೆ ಶುಭಾಶಯ ಕೋರಿದರು.  

ವಾರ್ತಾ ಭಾರತಿ 25 Mar 2026 11:11 pm

ಉಪ್ಪಿನಂಗಡಿ| ಯುವತಿಯ ಖಾಸಗಿ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರ; ಯುವಕ, ಆತನ ಸಹೋದರಿಯ ವಿರುದ್ಧ ಎಫ್‌ಐಆರ್‌

ಉಪ್ಪಿನಂಗಡಿ: ಪ್ರೀತಿಸುವುದಾಗಿ ಯುವತಿಯನ್ನು ನಂಬಿಸಿ ಆಕೆಯ ಖಾಸಗಿ ವಿಡಿಯೋವನ್ನು ರೆಕಾರ್ಡ್ ಮಾಡಿ ವಾಟ್ಸ್‌ಅಪ್‌ ನಲ್ಲಿ ಹಂಚಿದ ಆರೋಪದ ಮೇಲೆ ಸುಶಾಂತ್ ಪೂಜಾರಿ ಹಾಗೂ ಆತನ ಸಹೋದರಿಯ ವಿರುದ್ಧ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಬಗ್ಗೆ ಬೆಳ್ತಂಗಡಿ ತಾಲೂಕಿನ ಕಣಿಯೂರು ಗ್ರಾಮದ ಯುವತಿಯೋರ್ವಳು ಪೊಲೀಸರಿಗೆ ದೂರು ನೀಡಿದ್ದು, ಪರಿಶಿಷ್ಟ ಪಂಗಡದ ಈಕೆಗೆ Instagramನಲ್ಲಿ ಸುಮಾರು ಆರು ತಿಂಗಳ ಹಿಂದೆ ಸುಶಾಂತ್ ಪೂಜಾರಿಯ ಪರಿಚಯ ವಾಗಿದ್ದು, ಈತ ತಾನು ಬೆಂಗಳೂರಿನಲ್ಲಿ ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡಿಕೊಂಡಿರುವುದಾಗಿ ಹೇಳಿಕೊಂಡು ಪ್ರಸ್ತುತ ಊರಿನಲ್ಲಿರುವುದಾಗಿ ತಿಳಿಸಿದ್ದ. ಇವರಿಬ್ಬರೊಳಗೆ ಪರಸ್ಪರ ಪ್ರೀತಿ ಉಂಟಾಗಿದ್ದು, ಅವರು ಮದುವೆಯಾಗುವುದಾಗಿ ನಿರ್ಧರಿಸಿದ್ದರು. ಈ ಮಧ್ಯೆ ಸುಶಾಂತ್ ಪೂಜಾರಿಯು ಯುವತಿಯಲ್ಲಿ ಆಕೆಯ ಖಾಸಗಿ ವಿಡಿಯೋವನ್ನು ಕಳುಹಿಸಲು, ನಗ್ನವಾಗಿ ವಿಡಿಯೋ ಕಾಲ್ ಮಾಡಲು ಒತ್ತಾಯಿಸಿದ್ದು, ಮದುವೆಯಾಗುವ ಭರವಸೆ ನೀಡಿದ್ದರಿಂದ ಈಕೆ ತಾನು ಸ್ನಾನ ಮಾಡುವ ಸಂದರ್ಭದಲ್ಲಿ ಈತನೊಂದಿಗೆ ವಿಡಿಯೋ ಕಾಲ್‍ನಲ್ಲಿ ಮಾತನಾಡಿದ್ದಳು ಎನ್ನಲಾಗಿದೆ. ಆದರೆ ಇದನ್ನು ರೆಕಾರ್ಡ್ ಮಾಡಿಕೊಂಡಿದ್ದ ಆರೋಪಿಯು ಇದನ್ನು ವಾಟ್ಸಪ್‌ ಮೂಲಕ ಇತರರಿಗೆ ಹಂಚಿದ್ದು, ಇದಕ್ಕೆ ಆರೋಪಿಯ ಸಹೋದರಿಯೂ ಸಹಕಾರ ನೀಡಿದ್ದಾಳೆ ಎಂದು ಆರೋಪಿಸಲಾಗಿದೆ. ಈ ಬಗ್ಗೆ ಯುವತಿ ನೀಡಿದ ದೂರಿನಂತೆ ಉಪ್ಪಿನಂಗಡಿ ಪೊಲೀಸರು ಸುಶಾಂತ್ ಪೂಜಾರಿ ಹಾಗೂ ಆತನ ತಂಗಿಯ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವಾರ್ತಾ ಭಾರತಿ 25 Mar 2026 11:10 pm

ಭೀಮರಾವ್ ಪಾಟೀಲ್‌ಗೆ ನಾಲ್ಕೂವರೆ ವರ್ಷದಿಂದ ಕಚೇರಿ ನೀಡದ ಆರೋಪ : ಸಭಾಪತಿ ಕಚೇರಿಗೆ ಹಾಜರಾಗಲು ಬೀದರ್ ಡಿಸಿಗೆ ಹೊರಟ್ಟಿ ಆದೇಶ

ಬೆಂಗಳೂರು, ಮಾ.25: ವಿಧಾನ ಪರಿಷತ್ ಸದಸ್ಯರಾಗಿ ನಾಲ್ಕೂವರೆ ವರ್ಷ ಕಳೆದರೂ ಕಾಂಗ್ರೆಸ್ ಸದಸ್ಯ ಭೀಮರಾವ್ ಪಾಟೀಲ್ ಅವರಿಗೆ ಬೀದರ್ ಜಿಲ್ಲಾಧಿಕಾರಿ ಕಚೇರಿ ನೀಡಿಲ್ಲ ಎಂದು ಕಾಂಗ್ರೆಸ್ ಸದಸ್ಯ ಪುಟ್ಟಣ್ಣ ಸದನದಲ್ಲಿ ಆಕ್ಷೇಪಿಸಿದ್ದಾರೆ. ಬುಧವಾರ ವಿಧಾನಪರಿಷತ್‌ನ ಕಲಾಪ ಆರಂಭವಾಗುತ್ತಿದ್ದಂತೆ ಪ್ರಸ್ತಾಪಿಸಿದ ಪುಟ್ಟಣ್ಣ, ಭೀಮರಾವ್ ಅವರು ಪರಿಷತ್ ಸದಸ್ಯರಾಗಿ ನಾಲ್ಕೂವರೆ ವರ್ಷವಾದರೂ ಬೀದರ್ ಜಿಲ್ಲಾಧಿಕಾರಿಗಳು ಕಚೇರಿ ನೀಡಿಲ್ಲ. ಹಕ್ಕು ಭಾದ್ಯತಾ ಸಮಿತಿಯಿಂದ ಶಿಫಾರಸು ಮಾಡಿದರೂ ಈ ಬಗ್ಗೆ ಜಿಲ್ಲಾಧಿಕಾರಿ ನಿರ್ಲಕ್ಷ್ಯ ತೋರಿದ್ದಾರೆ ಎಂದು ಆರೋಪಿಸಿದರು. 2023ರಲ್ಲಿ ಸಭಾಪತಿ ಕಚೇರಿಯಿಂದ ಪತ್ರ ಬರೆದು ಭೀಮರಾವ್ ಪಾಟೀಲ್ ಅವರಿಗೆ ಕಚೇರಿ ನೀಡುವಂತೆ ತಿಳಿಸಲಾಗಿದೆ. ಅಲ್ಲದೇ, ಬೀದರ್‌ನಲ್ಲಿಯೇ ನಡೆದ ಹಕ್ಕು ಭಾದ್ಯತಾ ಸಮಿತಿ ಸಭೆ ಸೇರಿ ಪಾಟೀಲ್ ಅವರಿಗೆ ಕಚೇರಿ ನೀಡುವಂತೆ ಸೂಚನೆ ನೀಡಿತ್ತು. ಆದರೂ ಭೀಮರಾವ್ ಪಾಟೀಲ್ ಅವರಿಗೆ ಈವರೆಗೆ ಕಚೇರಿ ಒದಗಿಸಿಲ್ಲ. ಕೂಡಲೇ ಜಿಲ್ಲಾಧಿಕಾರಿಗೆ ಸಮನ್ಸ್ ನೀಡಿ ಸದನಕ್ಕೆ ಕರೆಸಿ ಕಟಕಟೆಗೆ ನಿಲ್ಲಿಸಿ ಛೀಮಾರಿ ಹಾಕಿ ಶಿಕ್ಷೆ ನೀಡಬೇಕು ಎಂದು ಪುಟ್ಟಣ್ಣ ಒತ್ತಾಯಿಸಿದರು. ಬಿಜೆಪಿ ಸದಸ್ಯ ಸುನೀಲ್ ವಲ್ಯಾಪುರ ಮಾತನಾಡಿ, ಭೀಮರಾವ್ ಪಾಟೀಲ್ ಅವರಿಗೆ ಕಚೇರಿ ನೀಡದಿರುವುದು ನಾಚಿಕೆಗೇಡಿನ ಸಂಗತಿ. ಕೂಡಲೇ ಸಂಬಂಧಪಟ್ಟವರನ್ನು ಕರೆಯಿಸಿ ಛೀಮಾರಿ ಹಾಕಿ ಎಂದು ಒತ್ತಾಯಿಸಿದರು. ಆಡಳಿತ ಪಕ್ಷದ ಮುಖ್ಯ ಸಚೇತಕ ಸಲೀಂ ಅಹ್ಮದ್ ಅವರು, ಭೀಮರಾವ್ ಪಾಟೀಲ್ ಅವರಿಗೆ ನಾಲ್ಕು ವರ್ಷ ಕಳೆದರೂ ಕಚೇರಿ ನೀಡದಿರುವುದು ಸದನದ ಸದಸ್ಯರಿಗೆ ಮಾಡಿರುವ ಅಪಮಾನ, ಕೂಡಲೇ ಕ್ರಮ ತೆಗೆದುಕೊಳ್ಳಿ ಎಂದು ಆಗ್ರಹಿಸಿದರು. ಸದಸ್ಯ ಭೀಮರಾವ್ ಪಾಟೀಲ್ ಮಾತನಾಡಿ, ನಾಲ್ಕೂವರೆ ವರ್ಷದಿಂದ ಜನರ ಕೆಲಸ ಮಾಡಲು ಅನುಕೂಲವಾಗುವಂತೆ ಬೀದರ್‌ನ ಔರಾದ್ ತಾಲೂಕಿನಲ್ಲಿ ಕಚೇರಿ ನೀಡುವಂತೆ ಜಿಲ್ಲಾಧಿಕಾರಿಗೆ ಮೂರು ಬಾರಿ ಪತ್ರ ಬರೆದರೂ ಪ್ರಯೋಜನವಾಗಿಲ್ಲ. ಇದು ನನಗೆ ಹಾಗೂ ಸದನಕ್ಕೆ ಮಾಡಿದ ಅಪಮಾನ ಎಂದು ನೋವು ಹೊರಹಾಕಿದರು. ಸಭಾನಾಯಕ ಎನ್.ಎಸ್.ಭೋಸರಾಜ್ ಮಾತನಾಡಿ, ಮುಖ್ಯ ಕಾರ್ಯದರ್ಶಿಗಳ ಮುಖಾಂತರ ಜಿಲ್ಲಾಧಿಕಾರಿಯ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲು ಸೂಚಿಸಲಾಗುವುದು ಎಂದರು. ಈ ವೇಳೆ ಸಭಾಪತಿ ಬಸವರಾಜ್ ಹೊರಟ್ಟಿ ಮಾತನಾಡಿ, ಬೀದರ್ ಜಿಲ್ಲಾಧಿಕಾರಿ ಗುರುವಾರ(ಮಾ.26) ತಮ್ಮ ಕಚೇರಿಯಲ್ಲಿ ಖುದ್ದು ಹಾಜರಿರಬೇಕು ಎಂದು ಆದೇಶಿಸಿದರು.

ವಾರ್ತಾ ಭಾರತಿ 25 Mar 2026 11:00 pm

ಯಾದಗಿರಿ | ಸಾವಿರಾರು ಕಾರ್ಯಕರ್ತರು ಕಾಂಗ್ರೆಸ್ ಸೇರಲಿದ್ದಾರೆ : ಶರಣಪ್ಪ ಮಾನೇಗಾರ

ಯಾದಗಿರಿ : ನಾವು ಕಾರ್ಯಕರ್ತರ ಸಂಕಷ್ಟಗಳಿಗೆ ಸದಾ ಸ್ಪಂದಿಸುವ ಮೂಲಕ ಗಟ್ಟಿಯಾಗಿ ಪಕ್ಷವನ್ನು ಕಟ್ಟುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಕ್ಷೇತ್ರದ ನಾನಾ ಭಾಗಗಳಿಂದ 20 ಸಾವಿರಕ್ಕೂ ಅನ್ಯ ಪಕ್ಷದ ಕಾರ್ಯಕರ್ತರು ಕಾಂಗ್ರೆಸ್ ಪಕ್ಷ ಸೇರ್ಪಡೆಗೊಳ್ಳಲಿದ್ದಾರೆ ಎಂದು ಹಿಂದುಳಿದ ವರ್ಗಗಳ ಆಯೋಗದ ಮಾಜಿ ಸದಸ್ಯ ಶರಣಪ್ಪ ಮಾನೇಗಾರ ಯರಗೋಳ ಅವರು ಹೇಳಿದ್ದಾರೆ. ಗುರುಮಿಠಕಲ್ ಮತಕ್ಷೇತ್ರದ ಅಲ್ಲಿಪೂರ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಗುರುಮಿಠಕಲ್ ಕ್ಷೇತ್ರದಲ್ಲಿ ಶಾಸಕರು ನಮ್ಮ ಕೆಲ ಕಾರ್ಯಕರ್ತರಿಗೆ ಆಮಿಷಗಳನ್ನು ಒಡ್ಡುವ ಮೂಲಕ ಪಕ್ಷಕ್ಕೆ ಸೇರಿಸಿಕೊಳ್ಳುತ್ತಿದ್ದಾರೆ. ಅದಕ್ಕಾಗಿ ಕೈ ನಾಯಕರೆಲ್ಲರೂ ಒಗ್ಗಟ್ಟಾಗಿ ಕಾಂಗ್ರೆಸ್ ಸರಕಾರದ ಸಾಧನೆಗಳನ್ನು ಜನರಿಗೆ ತಿಳಿಸುವ ಮೂಲಕ ಜಾಗೃತಿ ಮೂಡಿಸಿ ಜೆಡಿಎಸ್-ಬಿಜೆಪಿ ಕಾರ್ಯಕರ್ತರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುವ ಮೂಲಕ ತಿರುಗೇಟು ನೀಡುತ್ತಿದ್ದೇವೆ. ನೀವು ಯಾವುದೇ ಕಾರಣಕ್ಕೂ ಬೆದರಿಕೆಗಳಿಗೆ ಹೆದರದೇ ಪಕ್ಷ ಸಂಘಟನೆಗೆ ನಿಮ್ಮ ಕೊಡುಗೆ ನೀಡಿ ಎಂದು ಮನವಿ ಮಾಡಿದರು. ಜೆಡಿಎಸ್ ಶಾಸಕರು ಕೇವಲ ಕಾಮಗಾರಿಗಳಲ್ಲಿ ಹೆಚ್ಚಿನ ಪರ್ಸಂಟೇಜ್ ಲಂಚ ಪಡೆಯುವಲ್ಲಿ ನಿರತರಾಗಿದ್ದಾರೆ. ಹಣ ನೀಡದ ಕೆಲ ಅಧಿಕಾರಿಗಳನ್ನು ಬೆದರಿಸುತ್ತಿದ್ದಾರೆ ಎಂದು ಟೀಕಿಸಿದರು. ನಾನಾ ಕಾರಣಗಳಿಂದ ಎರಡು ವಿಧಾನಸಭಾ ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿ ಪರಾಜಯಗೊಂಡರು. ಆದರೂ ಕ್ಷೇತ್ರದಲ್ಲಿರುವ ಎಲ್ಲಾ ನಾಯಕರು, ಕಾರ್ಯಕರ್ತರು ಒಗ್ಗಟ್ಟಾಗಿ ಕೂಡಿ ಮುಂದಿನ ಚುನಾವಣೆಯಲ್ಲಿ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸುವುದೇ ನಮ್ಮ ಮುಂದಿನ ಗುರಿ ಎಂದು ಜಿಲ್ಲಾ ಅಧ್ಯಕ್ಷ ಬಸರೆಡ್ಡಿ ಎಂ ಪಾಟೀಲ ಅನಪುರ ಅವರು ಹೇಳಿದರು. ಮಾಜಿ ಸಚಿವ ಬಾಬುರಾವ್ ಚಿಂಚನಸೂರ ಮಾತನಾಡಿ, ನಾನು ಹುಟ್ಟಿರುವುದೇ ಜನರ ಸೇವೆಗಾಗಿ. 10 ವರ್ಷಗಳ ಕಾಲ ಅಭಿವೃದ್ಧಿ ಕಾರ್ಯ ಮಾಡಿದರೂ, ವಿರೋಧ ಪಕ್ಷದ ನಾಯಕರ ಸುಳ್ಳು ಆರೋಪಗಳನ್ನು ನಂಬಿ, ನಾನಾ ಕಾರಣಗಳಿಂದ ನನ್ನನ್ನು ಸೋಲಿಸಿದರು. ನಾನು ಎಂದೂ ಎದೆಗುಂದುವುದಿಲ್ಲ. ಕಾರ್ಯಕರ್ತರ ಹಾಗೂ ಮತದಾರರ ಸಮಸ್ಯೆಗಳಿಗೆ ಸದಾ ದ್ವನಿಯಾಗಿ ಸ್ಪಂದಿಸುವೆ ಎಂದು ಹೇಳಿದರು. ರಾಜಗೋಪಾಲರೆಡ್ಡಿ ಮುದಿರಾಜ್, ಸಾಯಿಬಣ್ಣ ಬೋರಬಂಡ ಹಾಗೂ ನ್ಯಾಯವಾದಿ ಚಂದ್ರಶೇಖರ ಅಲ್ಲಿಪೂರ ಮಾತನಾಡಿದರು. ಇದೇ ಸಂದರ್ಭದಲ್ಲಿ 30 ಕ್ಕೂ ಹೆಚ್ಚು ಜೆಡಿಎಸ್-ಬಿಜೆಪಿ ಪಕ್ಷಗಳ ಕಾರ್ಯಕರ್ತರು ಕಾಂಗ್ರೆಸ್ ಸೇರ್ಪಡೆಗೊಂಡರು. ವೇದಿಕೆ ಮೇಲೆ ಕೆಪಿಸಿಸಿ ಸದಸ್ಯ ಚಂದ್ರಶೇಖರ ವಾರದ, ಜಿಲ್ಲಾ ಪಂಚ ಗ್ಯಾರಂಟಿಗಳ ಯೋಜನೆ ಅಧ್ಯಕ್ಷ ಶರಣಿಕ್ ಕುಮಾರ ದೋಕಾ, ಬಸವರಾಜಪ್ಪ ಬಾಗ್ಲಿ, ಆಶಪ್ಪ ಗಾಜರಕೋಟ್, ಅನಿಲಕುಮರ ಹೆಡಗಿಮದ್ರಿ, ರಾಜುಗೌಡ ಅರಕೇರಾ ಬಿ., ಬಾಷು ರಾಠೋಡ, ಸುಭಾಶ್ ಗುತ್ತೇದಾರ, ಚನ್ನಬಸ್ಸಪ್ಪ ಪೂಜಾರಿ, ಬಸವರಾಜ ಬಾಚವಾರ, ಪರಶುರಾಮ್ ಚವ್ಹಾಣ, ಹಣಮಂತ ಖಾನಳ್ಳಿ, ವಿಜಯ ಕಂದಳ್ಳಿ, ಸುರೇಶ ಅಲ್ಲಿಪೂರ, ಹಣಮಂತ ಅಚ್ಚೋಲಾ, ಆಂಜನೇಯ ರಾಂಪೂರ, ಸೇರಿದಂತೆ ಹಲವರು ಉಪಸ್ಥಿತರಿದ್ದರು. ಕೃಷ್ಣಾ ಚಪೇಟ್ಲಾ ಸ್ವಾಗತಿಸಿದರು.

ವಾರ್ತಾ ಭಾರತಿ 25 Mar 2026 10:56 pm

ʼಜಾತಿ ಗೋಡೆʼ ವಿರೋಧಿಸಿ ಚುನಾವಣೆ ಬಹಿಷ್ಕರಿಸಿದ ತಮಿಳುನಾಡಿನ ಶಂಕರಲಿಂಗಪುರಂನ ದಲಿತರು

ತೂತುಕುಡಿ: ತಮ್ಮ ಚರ್ಚ್‌ಗೆ ಪ್ರವೇಶ ನಿರ್ಬಂಧಿಸುವ ವಿವಾದಿತ ಭೂಮಿಯಲ್ಲಿ ನಿರ್ಮಾಣ ಮಾಡಲಾದ ಗೋಡೆ ಕೆಡವಲು ಜಿಲ್ಲಾಡಳಿತ ವಿಫಲವಾಗಿದೆ. ಆದುದರಿಂದ ವಿಧಾನ ಸಭೆ ಚುನಾವಣೆಯನ್ನು ಬಹಿಷ್ಕರಿಸಲಾಗುವುದು ಎಂದು ಶಂಕರಲಿಂಗಪುರಂನಲ್ಲಿ ವಾಸಿಸುವ ದಲಿತರು ಹೇಳಿದ್ದಾರೆ. ಈ ಗ್ರಾಮ ತಮಿಳುನಾಡಿನ ವಿಲಾತಿಕುಲಂ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುತ್ತದೆ. ಇಲ್ಲಿ ಸುಮಾರು 900 ಮತದಾರರು ಇದ್ದಾರೆ. ಅವರಲ್ಲಿ 500 ಮತದಾರರು ಪರಿಶಿಷ್ಟ ಜಾತಿಗೆ ಸೇರಿದವರು. ಕಂದಾಯ ಅಧಿಕಾರಿಗಳು ಖಾಸಗಿ ವ್ಯಕ್ತಿಯೊಂದಿಗೆ ಶಾಮೀಲಾಗಿ ಗ್ರಾಮಸ್ಥರು ಬಳಸುತ್ತಿದ್ದ ಒಂದು ಎಕರೆ ಪೊರಂಬೋಕ್ ಭೂಮಿಗೆ ಪಟ್ಟಾ ನೀಡಿದ್ದಾರೆ ಎಂದು ದಲಿತರು ಆರೋಪಿಸಿದ್ದಾರೆ. ಈ ಭೂಮಿಗೆ ನೀಡಲಾದ ಪಟ್ಟಾ ಕಾನೂನು ಬಾಹಿರ. ಈ ಪಟ್ಟಾ ಅಕ್ರಮ ಗೋಡೆ ನಿರ್ಮಾಣಕ್ಕೆ ಕಾರಣವಾಗಿದೆ ಎಂದು ಅವರು ಹೇಳಿದ್ದಾರೆ. ಗೋಡೆಯನ್ನು ಕೆಡವುವಂತೆ ಹಾಗೂ ಪಟ್ಟಾ ರದ್ದುಗೊಳಿಸುವಂತೆ ಒತ್ತಾಯಿಸಿ ದಲಿತರು 2024ರಿಂದ ಹಲವು ಪ್ರತಿಭಟನೆಗಳನ್ನು ನಡೆಸುತ್ತಿದ್ದಾರೆ. ಇದಕ್ಕೆ ಸಂಬಂಧಿಸಿ ಎರಡು ಪ್ರಕರಣಗಳು ವಿಲಾತಿಕುಲಂ ಉಪ ನ್ಯಾಯಾಲಯ ಹಾಗೂ ಮದ್ರಾಸ್ ಉಚ್ಚ ನ್ಯಾಯಾಲಯದ ಮಧುರೈ ಪೀಠದಲ್ಲಿ ಬಾಕಿ ಉಳಿದಿದೆ. 2025ರಲ್ಲಿ ಜಿಲ್ಲಾಧಿಕಾರಿ ಕೆ. ಎಳಂಬಹಾವತ್ ಗ್ರಾಮಸ್ಥರನ್ನು ಭೇಟಿ ಮಾಡಿದರು. ಅವರ ಭೇಟಿಯ ಅನಂತರ 27.5 ಸೆಂಟ್ಸ್ ಪೊರಂಬೋಕ್ ಭೂಮಿಗೆ ಬೇಲಿ ಹಾಕಲು ಹೈಕೋರ್ಟ್ 2012ರಲ್ಲಿ ಅನುಮತಿ ನೀಡಿತ್ತು. ಈ ಆದೇಶವನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಲಾಗಿತ್ತು. ಆದರೆ, ಮೇಲ್ಮನವಿ ಸಲ್ಲಿಸುವ ಕಾಲ ಮಿತಿ ಮುಗಿದಿರುವುದರಿಂದ ನ್ಯಾಯಾಲಯ ಅರ್ಜಿಯನ್ನು ತಿರಸ್ಕರಿಸಿತ್ತು. ‘‘ಗ್ರಾಮದಲ್ಲಿ ಲಭ್ಯವಿರುವ 30 ಎಕರೆ ಪೊರಂಬೋಕ್ ಭೂಮಿಯಲ್ಲಿ ದಲಿತರು ಕೇವಲ ಒಂದು ಎಕರೆ ಭೂಮಿಯನ್ನು ಮಾತ್ರ ಬಳಸುತ್ತಿದ್ದರು. ಆದರೆ, ಪ್ರಬಲ ಜಾತಿಯ ಜನರು ಅದನ್ನು ವಶಪಡಿಸಿಕೊಂಡರು. ಕಂದಾಯ ಅಧಿಕಾರಿಗಳು ಅವರಿಗೆ ಬೆಂಬಲ ನೀಡಿದರು’’ ಎಂದು ವಿಸಿಕೆಯ ಮುರಸು ತಮಿಳಪ್ಪನ್ ಆರೋಪಿಸಿದ್ದಾರೆ. ‘‘ಭೂಮಿ ಮರಳಿ ಪಡೆಯಲು ಹಾಗೂ ಗೋಡೆಯನ್ನು ಕೆಡವಲು ನಾವು 2024ರಿಂದ ಪ್ರತಿಭಟನೆ ನಡೆಸುತ್ತಿದ್ದೇವೆ. ಆದರೆ, ಜಿಲ್ಲಾಡಳಿತ ಇದುವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ’’ ಎಂದು ಆದಿ ದ್ರಾವಿಡರ್ ನಿಲಾ ಮೀಟುಪು ಹಾಗೂ ತೀಂದಮೈ ಸುವರ್ ಎತಿರ್ಪು ಪೋರಾಟ್ಟಕುಲು ಸಂಘಟನೆಯ ಸಂಯೋಜಕರಾದ ಎಂ. ನಾಗರಾಜ್ ಹೇಳಿದ್ದಾರೆ.

ವಾರ್ತಾ ಭಾರತಿ 25 Mar 2026 10:55 pm

‘ಎಲ್‌ಪಿಜಿ ಶುಲ್ಕ’, ‘ಇಂಧನ ವೆಚ್ಚ ವಸೂಲಿ’ ಮಾಡುವಂತಿಲ್ಲ: ಹೊಟೇಲ್‌ಗಳಿಗೆ ಕೇಂದ್ರೀಯ ಗ್ರಾಹಕ ರಕ್ಷಣಾ ಪ್ರಾಧಿಕಾರ ಎಚ್ಚರಿಕೆ

ಹೊಸದಿಲ್ಲಿ: ಹೊಟೇಲ್‌ಗಳು ಮತ್ತು ರೆಸ್ಟೋರೆಂಟ್‌ಗಳಿಗೆ ಬುಧವಾರ ಕಠಿಣ ಎಚ್ಚರಿಕೆಯನ್ನು ನೀಡಿರುವ ಕೇಂದ್ರೀಯ ಗ್ರಾಹಕ ರಕ್ಷಣಾ ಪ್ರಾಧಿಕಾರ (ಸಿಸಿಪಿಎ), ‘ಎಲ್‌ಪಿಜಿ ಶುಲ್ಕ’ ಅಥವಾ ‘ಇಂಧನ ವೆಚ್ಚ ವಸೂಲಿ’ ಮುಂತಾದ ಹೆಚ್ಚುವರಿ ಶುಲ್ಕಗಳನ್ನು ಗ್ರಾಹಕರ ಮೇಲೆ ವಿಧಿಸುವಂತಿಲ್ಲ ಎಂದು ಹೇಳಿದೆ. ಹೀಗೆ ಮಾಡುವುದು ಅನುಚಿತ ವ್ಯಾಪಾರ ನೀತಿಯಾಗುತ್ತದೆ ಹಾಗೂ ಈ ಆದೇಶವನ್ನು ಉಲ್ಲಂಘಿಸಿದವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಅದು ಹೇಳಿದೆ. ಇಂಥ ಶುಲ್ಕಗಳನ್ನು ಹೇರಲಾಗುತ್ತಿದೆ ಎಂಬ ಬಗ್ಗೆ ಹೊಟೇಲ್‌ಗಳು ಮತ್ತು ರೆಸ್ಟೋರೆಂಟ್‌ಗಳ ವಿರುದ್ಧ ಹಲವು ದೂರುಗಳು ಬಂದಿವೆ ಎಂದು ಹೇಳಿರುವ ಸಿಸಿಪಿಎ, ಇದು 2019ರ ಗ್ರಾಹಕ ರಕ್ಷಣಾ ಕಾಯ್ದೆಯನ್ನು ಉಲ್ಲಂಘಿಸುತ್ತದೆ ಎಂದು ಹೇಳಿದೆ. ದರಪಟ್ಟಿಯಲ್ಲಿ ಸೂಚಿಸಲಾಗಿರುವ ದರಕ್ಕೆ ಅನ್ವಯವಾಗುವ ತೆರಿಗೆಗಳನ್ನು ಮಾತ್ರ ವಿಧಿಸಬಹುದಾಗಿದೆ ಎಂದು ಅದು ಹೇಳಿದೆ.

ವಾರ್ತಾ ಭಾರತಿ 25 Mar 2026 10:53 pm

ʼಭದ್ರಾ ಮೇಲ್ದಂಡೆ ಯೋಜನೆʼ ಮೊದಲ ಹಂತದ ಕಾಮಗಾರಿ ಪೂರ್ಣ: ಟಿ.ಬಿ.ಜಯಚಂದ್ರ

ಬೆಂಗಳೂರು : ಭದ್ರಾ ಮೇಲ್ದಂಡೆ ಯೋಜನೆಯ ಮೊದಲ ಹಂತದ ಕಾಮಗಾರಿ ಪೂರ್ಣಗೊಂಡಿದ್ದು, ಮುಂದಿನ ತಿಂಗಳು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪ್ರಾಯೋಗಿಕವಾಗಿ ಇದಕ್ಕೆ ಚಾಲನೆ ನೀಡಲಿದ್ದಾರೆ ಎಂದು ರಾಜ್ಯ ಸರಕಾರದ ದಿಲ್ಲಿಯ ವಿಶೇಷ ಪ್ರತಿನಿಧಿ ಟಿ.ಬಿ.ಜಯಚಂದ್ರ ಹೇಳಿದ್ದಾರೆ. ಬುಧವಾರ ವಿಕಾಸಸೌಧದಲ್ಲಿ ತಮ್ಮ ನೇತೃತ್ವದಲ್ಲಿ ನಡೆದ ಭದ್ರಾ ಮೇಲ್ದಂಡೆ ಯೋಜನೆಯ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಮೊದಲ ಹಂತದಲ್ಲಿ ತುಂಗಾ ನದಿಯಿಂದ ಭದ್ರಾ ಜಲಾಶಯಕ್ಕೆ 17.40 ಟಿಎಂಸಿ ನೀರನ್ನು ಹರಿಸುವುದು ಹಾಗೂ ಚಿತ್ರದುರ್ಗ ಶಾಖಾ ಕಾಲುವೆ 134 ಕಿ.ಮೀ.ವರೆಗೆ ಕಾಮಗಾರಿ ಪೂರ್ಣಗೊಂಡಿದ್ದು ಮಾರ್ಚ್ ಅಂತ್ಯಕ್ಕೆ ಪ್ರಾಯೋಗಿಕವಾಗಿ ನೀರು ಹರಿಸಲಾಗುವುದು ಎಂದು ತಿಳಿಸಿದರು. ಅತಿ ಶೀಘ್ರದಲ್ಲಿ ಭದ್ರಾ ಮೇಲ್ದಂಡೆ ಯೋಜನೆ ವ್ಯಾಪ್ತಿಯಲ್ಲಿ ಬರುವ ಶಾಸಕರ ನೇತೃತ್ವದಲ್ಲಿ ಕಾಮಗಾರಿ ಸ್ಥಳಕ್ಕೆ ತೆರಳಿ ಪರಿಶೀಲಿಸಲಾಗುವುದು. ಮಧ್ಯ ಕರ್ನಾಟಕದ ಬರಪೀಡಿತ ಚಿಕ್ಕಮಗಳೂರು, ಚಿತ್ರದುರ್ಗ, ತುಮಕೂರು ಹಾಗೂ ದಾವಣಗೆರೆ ಜಿಲ್ಲೆಗಳಿಗೆ ನೀರು ಹರಿಸುವ ಈ ಮಹತ್ವಾಕಾಂಕ್ಷೆಯ ಭದ್ರಾ ಮೇಲ್ದಂಡೆ ಯೋಜನೆಯ ಕಾಮಗಾರಿಗಳಿಗೆ ವೇಗ ನೀಡಲಾಗುವುದು ಎಂದು ಅವರು ಹೇಳಿದರು. 5,300 ಕೋಟಿ ರೂ. ವೆಚ್ಚದ ಭದ್ರಾ ಮೇಲ್ದಂಡೆ ಯೋಜನೆಯಲ್ಲಿ 30 ಟಿಎಂಸಿ ನೀರನ್ನು 5,57,022 ಎಕರೆ ಸೂಕ್ಷ್ಮ ನೀರಾವರಿ ಪದ್ಧತಿಯಲ್ಲಿ ನೀರಾವರಿ ಸೌಲಭ್ಯ ಕಲ್ಪಿಸಲು ಹಾಗೂ 347 ಕೆರೆಗಳಿಗೆ ನೀರನ್ನು ತುಂಬಿಸಲು ಯೋಜನೆ ರೂಪಿಸಲಾಗಿದೆ ಎಂದು ಜಯಚಂದ್ರ ತಿಳಿಸಿದರು. ತುಮಕೂರು ಶಾಖಾ ಕಾಲುವೆ ಕಾಮಗಾರಿಗಳನ್ನು 2028ರ ಮಾರ್ಚ್ ವೇಳೆಗೆ ಪೂರ್ಣಗೊಳಿಸಬೇಕು. ಇದಕ್ಕೆ ಅಗತ್ಯವಿರುವ ಹಣವನ್ನು ಒದಗಿಸುವಂತೆ ಮನವಿ ಸಲ್ಲಿಸಲು ಮುಖ್ಯಮಂತ್ರಿಯನ್ನು ಶಾಸಕರ ನಿಯೋಗದೊಂದಿಗೆ ಭೇಟಿ ಮಾಡಲಾಗುವುದು ಎಂದು ಅವರು ಹೇಳಿದರು. ಸಭೆಯಲ್ಲಿ ಶಾಸಕರಾದ ಸಿ.ಬಿ.ಸುರೇಶ್ ಬಾಬು, ಕೆ.ಎಸ್. ಆನಂದ್, ವಿಜೆಎನ್‍ಎಲ್ ವ್ಯವಸ್ಥಾಪಕ ನಿರ್ದೇಶಕ ಸಣ್ಣ ಚಿತ್ತಯ್ಯ, ಭದ್ರಾ ಮೇಲ್ದಂಡೆ ಯೋಜನೆಯ ಅಧಿಕಾರಿಗಳಾದ ರವೀಂದ್ರ ಕೊಂಡ, ಎಂ.ಪ್ರಕಾಶ್, ಕೆ.ಟಿ.ಹರೀಶ್, ಎಂ.ಎಸ್.ಸಂದೇಶ್, ಹರ್ಷ, ಪ್ರಸನ್ನ ಕುಮಾರ್, ಎಸ್.ಚೇತನ್ ಸೇರಿದಂತೆ ವಿವಿಧ ಅಧಿಕಾರಿಗಳು ಭಾಗವಹಿಸಿದ್ದರು.

ವಾರ್ತಾ ಭಾರತಿ 25 Mar 2026 10:52 pm

ಸಿಲಿಂಡರ್ ರೀಫಿಲ್ ಬುಕಿಂಗ್ ಅವಧಿ ಹೆಚ್ಚಳವಾಗಿಲ್ಲ: ಪೆಟ್ರೋಲಿಯಮ್ ಮತ್ತು ನೈಸರ್ಗಿಕ ಅನಿಲ ಸಚಿವಾಲಯ

ಹೊಸದಿಲ್ಲಿ: ಗೃಹ ಬಳಕೆಯ 14.2 ಕೆಜಿ ಸಿಲಿಂಡರ್‌ಗಳ ಮರುಭರ್ತಿ ನೋಂದಣಿಗಳ ನಡುವಿನ ಅವಧಿಯನ್ನು 25 ದಿನಗಳಿಂದ 35 ದಿನಗಳಿಗೆ ಹೆಚ್ಚಿಸಲಾಗಿದೆ ಎಂಬ ವರದಿಗಳನ್ನು ಪೆಟ್ರೋಲಿಯಮ್ ಮತ್ತು ನೈಸರ್ಗಿಕ ಅನಿಲ ಸಚಿವಾಲಯ ತಳ್ಳಿಹಾಕಿದೆ. ಎಲ್‌ಪಿಜಿ ಮರುಭರ್ತಿ ನೋಂದಣಿ ನಿಯಮಾವಳಿಗಳಲ್ಲಿ ಬದಲಾವಣೆಯಾಗಿದೆ ಎಂಬುದಾಗಿ ಮಾಧ್ಯಮಗಳ ಒಂದು ವರ್ಗದಲ್ಲಿ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿರುವ ವರದಿಯು ಸತ್ಯವಲ್ಲ ಎಂದು ಅಧಿಕೃತ ಸ್ಪಷ್ಟೀಕರಣವೊಂದರಲ್ಲಿ ಸಚಿವಾಲಯ ತಿಳಿಸಿದೆ. ಹಾಲಿ ನಿಯಮಾವಳಿಗಳಲ್ಲಿ ಯಾವುದೇ ಬದಲಾವಣೆ ಆಗಿಲ್ಲ ಎಂದು ಅದು ಹೇಳಿದೆ. ಅಡುಗೆ ಅನಿಲ ಸಿಲಿಂಡರ್‌ಗಳ ಎರಡು ಮರುಭರ್ತಿ ನೋಂದಣಿಗಳ ನಡುವಿನ ಕನಿಷ್ಠ ಅವಧಿಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ ಎಂದು ಅದು ಹೇಳಿದೆ. ಎರಡು ಮರುಭರ್ತಿ ನೋಂದಣಿಗಳ ನಡುವಿನ ಅವಧಿಯು ನಗರ ಪ್ರದೇಶಗಳಿಗೆ 25 ದಿನಗಳು ಮತ್ತು ಗ್ರಾಮೀಣ ಪ್ರದೇಶಗಳಿಗೆ 45 ದಿನಗಳು ಎಂಬ ನಿಯಮವು ಮುಂದುವರಿಯುತ್ತದೆ ಎಂದು ಸಚಿವಾಲಯ ತಿಳಿಸಿದೆ.

ವಾರ್ತಾ ಭಾರತಿ 25 Mar 2026 10:50 pm

14,768 ಕೋಟಿ ರೂ.ಗಳ ಧನ ವಿನಿಯೋಗ ವಿಧೇಯಕಕ್ಕೆ ಒಪ್ಪಿಗೆ

ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದ 14,768 ಕೋಟಿ ರೂ.ಗಳ 2026ನೆ ಸಾಲಿನ ಕರ್ನಾಟಕ ಧನ ವಿನಿಯೋಗ(ಸಂಖ್ಯೆ-2) ವಿಧೇಯಕಕ್ಕೆ ಬುಧವಾರ ವಿಧಾನಸಭೆಯಲ್ಲಿ ಒಪ್ಪಿಗೆ ಸಿಕ್ಕಿತು. ಅದೇ ರೀತಿ, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಪರವಾಗಿ ಕಾನೂನು ಸಚಿವ ಎಚ್.ಕೆ.ಪಾಟೀಲ್ ಮಂಡಿಸಿದ 2026ನೆ ಸಾಲಿನ ಕರ್ನಾಟಕ ಮೋಟಾರು ವಾಹನಗಳ ತೆರಿಗೆ ನಿರ್ಧರಣೆ(ತಿದ್ದುಪಡಿ) ವಿಧೇಯಕಕ್ಕೆ ಅನುಮೋದನೆ ಲಭಿಸಿತು.  

ವಾರ್ತಾ ಭಾರತಿ 25 Mar 2026 10:49 pm

ಭಾರತದ ಇಂಧನ ಭದ್ರತೆ ಸ್ಥಿರವಾಗಿದೆ: ಸರ್ವ ಪಕ್ಷಗಳ ಸಭೆಯಲ್ಲಿ ಕೇಂದ್ರ ಸರಕಾರ

ಸರ್ವ ಪಕ್ಷಗಳ ಸಭೆಗೆ ಪ್ರಧಾನಿ ಮೋದಿ ಗೈರು

ವಾರ್ತಾ ಭಾರತಿ 25 Mar 2026 10:45 pm

ಕಲಬುರಗಿ | ರಾಮನವಮಿ ಆಚರಣೆ ಹಿನ್ನೆಲೆ :ಮದ್ಯ ಮಾರಾಟ ನಿಷೇಧಿಸಿ ಡಿಸಿ ಫೌಝಿಯಾ ತರನ್ನುಮ್ ಆದೇಶ

ಕಲಬುರಗಿ: ರಾಮ ನವಮಿ ಆಚರಣೆ ಹಿನ್ನೆಲೆಯಲ್ಲಿ ಕಲಬುರಗಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾದಂಡಾಧಿಕಾರಿಗಳಾದ ಬಿ.ಫೌಝಿಯಾ ತರನ್ನುಮ್ ಅವರು ಕಲಬುರಗಿ ತಾಲೂಕು ಸೇರಿದಂತೆ ಜಿಲ್ಲೆಯಾದ್ಯಂತ ಇದೇ ಮಾ.26ರ ಬೆಳಗಿನ 6 ಗಂಟೆಯಿಂದ ರಾತ್ರಿ 11 ಗಂಟೆಯವರೆಗೆ ಎಲ್ಲಾ ತರಹದ ಮದ್ಯಪಾನ ಮಾರಾಟ ಮಾಡುವುದನ್ನು ನಿಷೇಧಿಸಿ, ಬಾರ್ ಹಾಗೂ ರೆಸ್ಟೋರೆಂಟ್‍ಗಳನ್ನು ಮುಚ್ಚುವಂತೆ ಅವರು ಆದೇಶ ಹೊರಡಿಸಿದ್ದಾರೆ. ಈ ರಾಮನವಮಿ ಆಚರಣೆ ಸಂದರ್ಭದಲ್ಲಿ ಶಾಂತಿ, ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಕರ್ನಾಟಕ ಅಬಕಾರಿ ಕಾಯ್ದೆ 1965ರ ಕಲಂ 21ರ ಅನ್ವಯ ಈ ಆದೇಶ ಹೊರಡಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ವಾರ್ತಾ ಭಾರತಿ 25 Mar 2026 10:44 pm

ಅಕ್ರಮ ಮರಳು ಸಾಗಾಟದ ಆರೋಪ|ಪ್ರಶ್ನಿಸಿದ ಎಎಸ್‍ಐ ಮೇಲೆ ಕರ್ತವ್ಯಕ್ಕೆ ಅಡ್ಡಿ: ಐವರ ವಿರುದ್ಧ ಪ್ರಕರಣ ದಾಖಲು

ಸುಳ್ಯ: ಅಕ್ರಮ ಮರಳು ಸಾಗಾಣಿಕೆ ಮಾಡುತ್ತಿದ್ದ ವೇಳೆ ಕಲ್ಲುಗುಂಡಿ ಹೊರಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಎಎಸ್‍ಐ ಚಂದ್ರಶೇಖರ್ ಅವರ ಮೇಲೆ ಕರ್ತವ್ಯಕ್ಕೆ ಅಡ್ಡಿ ಮಾಡಿರುವ ಆರೋಪದಡಿ ಸುಳ್ಯ ಪೊಲೀಸ್ ಠಾಣೆಯಲ್ಲಿ ಐವರ ವಿರುದ್ಧ ಪ್ರಕರಣ ದಾಖಲಾಗಿದೆ. ಮಂಗಳವಾರ ರಾತ್ರಿ ಸುಮಾರು 12 ಗಂಟೆಗೆ ಸಂಪಾಜೆ ಗ್ರಾಮದ ಕಡೆಪಾಲದ ಹನೀಫ್ ಎಂಬುವರ ಹೊಸ ಮನೆಯ ಕಟ್ಟಡ ನಿರ್ಮಾಣದ ಬಗ್ಗೆ ಅಕ್ರಮವಾಗಿ ಮರಳು ಸಂಗ್ರಹಿಸಿರುವ ಮಾಹಿತಿ ತಿಳಿದು ಎಎಸ್‍ಐ ಚಂದ್ರ ಶೇಖರ್ ಅವರು ಸ್ಥಳಕ್ಕೆ ಹೋಗಿ ಪರಿಶೀಲನೆ ನಡೆಸಿ ಮರಳು ಸಾಗಾಣಿಕೆಯ ಅನುಮತಿ ಪತ್ರವನ್ನು ತೋರಿಸುವಂತೆ ಕೇಳಿಕೊಂಡಿದ್ದಾರೆ. ಈ ವೇಳೆ ಲಾರಿಯಲ್ಲ್ಲಿ ಮರಳು ತಂದಿದ್ದ ಅದರ ಚಾಲಕ ವಿಜಯೇಂದ್ರ ಎಂಬಾತ ಪರವಾನಿಗೆ ಇಲ್ಲ ಎಂದು ಹೇಳಿದ್ದು, ಈ ಸಂದರ್ಭದಲ್ಲಿ ಸ್ಥಳಕ್ಕೆ ಬಂದ ಹನೀಫ್, ಮುನೀರ್, ಸಲೀಂ ಮಲಿಕ್ ಅವರು ಮರಳನ್ನು ಡಂಪ್ ಮಾಡುವಂತೆ ವಿಜಯೇಂದ್ರನಿಗೆ ಸೂಚಿಸಿದರು, ಎಎಸ್‍ಐಯವರ ಸೂಚನೆಯನ್ನು ಉಲ್ಲಂಘಿಸಿ ಮರಳನ್ನು ಡಂಪ್ ಮಾಡಿ ಲಾರಿಯನ್ನು ಅಲ್ಲಿಂದ ತೆಗೆದುಕೊಂಡು ಹೋಗಿದ್ದಾರೆ ಎನ್ನಲಾಗಿದ್ದು,  ಈ ಕುರಿತು ಎಎಸ್‍ಐ ಅವರು ಸುಳ್ಯ ಠಾಣೆಯಲ್ಲಿ ಐವರು ಆರೋಪಿಗಳ ಮೇಲೆ ಕರ್ತವ್ಯಕ್ಕೆ ಅಡ್ಡಿಪಡಿಸಿರುವ ದೂರನ್ನು ನೀಡಿದ್ದು, ಆರೋಪಿಗಳಾದ ವಿಜಯೇಂದ್ರ, ಚರಣರಾಜ್ ಅಡ್ಕಬಳೆ, ಹನೀಫ್, ಮುನೀರ್, ಸಲೀಂ ಮಾಲಿಕ್ ವಿರುದ್ಧ ಸುಳ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಾರ್ತಾ ಭಾರತಿ 25 Mar 2026 10:28 pm

ತಲೆಮರೆಸಿಕೊಂಡಿದ್ದ ಆರೋಪಿಗೆ 2 ವರ್ಷ ಕಾರಾಗೃಹ ಶಿಕ್ಷೆ

ಕುಂದಾಪುರ, ಮಾ.25: ಕುಂದಾಪುರ ಠಾಣಾ ಪ್ರಕರಣವೊಂಗದರಲ್ಲಿ ಆರೋಪಿಯಾಗಿದ್ದ ಸಿದ್ಧಾಪುರ ಗ್ರಾಮದ ಅಕ್ಕುಂಜೆ ಶಶಿಕಾಂತ ಶೆಟ್ಟಿ ಎಂಬಾತನು ಪ್ರಕರಣದಲ್ಲಿ ದಸ್ತಗಿರಿಯಾಗದೇ 2015ರಿಂದ ತಲೆಮರೆಸಿಕೊಂಡಿದ್ದು, 2024ರಲ್ಲಿ ಹೊರಡಿಸಿದ ವಾರಂಟ್‌ನಂತೆ ಆರೋಪಿ ಯನ್ನು ಪಶ್ವಿಮ ಬಂಗಾಳದ ಮುರ್ಷಿದಾಬಾದ್‌ನಲ್ಲಿ ದಸ್ತಗಿರಿ ಮಾಡಿ ಕಳೆದ ಮಾ.1ರಂದು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದು ನ್ಯಾಯಾಂಗ ಬಂಧನ ವಿಧಿಸಲಾಗಿತ್ತು. ಇದೀಗ ನ್ಯಾಯಾಲಯವು ಪ್ರಕರಣದ ವಿಚಾರಣೆ ನಡೆಸಿ ಮಾ.24ರಂದು ಶಶಿಕಾಂತ ಶೆಟ್ಟಿಗೆ 2 ವರ್ಷಗಳ ಕಾಲ ಕಾರಾಗೃಹ ಶಿಕ್ಷೆ ವಿಧಿಸಿ ಅಂತಿಮ ಆದೇಶವನ್ನು ಹೊರಡಿಸಿದೆ ಎಂದು ಕುಂದಾಪುರ ಪೊಲೀಸರು ತಿಳಿಸಿದ್ದಾರೆ.

ವಾರ್ತಾ ಭಾರತಿ 25 Mar 2026 10:25 pm

ಆನ್‌ಲೈನ್ ಹೂಡಿಕೆ ನೆಪದಲ್ಲಿ ವ್ಯಕ್ತಿಗೆ 57 ಲಕ್ಷ ರೂ.ವಂಚನೆ: ಪ್ರಕರಣ ದಾಖಲು

ಉಡುಪಿ, ಮಾ.25: ಆನ್‌ಲೈನ್ ಹೂಡಿಕೆ ಹೆಸರಿನಲ್ಲಿ ವ್ಯಕ್ತಿಯೊಬ್ಬರಿಗೆ 57 ಲಕ್ಷ ರೂ.ಗಳಿಗೂ ಅಧಿಕ ವಂಚನೆ ನಡೆಸಿರುವ ಬಗ್ಗೆ ಪ್ರಕರಣ ದಾಖಲಾಗಿದೆ. ದೂರುದಾರ ಅನಿಲ್ ಎಂಬವರು ಫೇಸ್‌ಬುಕ್‌ನಲ್ಲಿ ಕಂಡ ವಿಡಿಯೋ ಜಾಹಿರಾತಿನ ಆಧಾರದ ಮೇಲೆ ಅದರಲ್ಲಿ ನೀಡಿದ್ದ ಮೊಬೈಲ್ ಸಂಖ್ಯೆಗೆ ಕರೆ ಮಾಡಿದ್ದು, ಈ ವೇಳೆ ಅಪರಿಚಿತರು ಇಂಟರ್‌ನೇಶನಲ್ ರಿಪೋರ್ಟಿಂಗ್ ಎಐ ಟ್ರೇಡಿಂಗ್’ ನಲ್ಲಿ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭಾಂಶ ಸಿಗುತ್ತದೆ ಎಂದು ವಿಶ್ವಾಸ ಮೂಡಿಸಿದ್ದರು. ಬಳಿಕ ಅವರನ್ನು ಮಾನವ್ ವರ್ಮ ಎಂಬ ವಾಟ್ಸಅಪ್ ಗುಂಪಿಗೆ ಸೇರಿಸಿ, ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವಂತೆ ಪ್ರೇರೇಪಿಸಿದರು. ಹೆಚ್ಚಿನ ಹಣ ಗಳಿಸುವ ಉದ್ದೇಶದಿಂದ ಅನಿಲ್, ಅಪರಿಚಿತರು ವಾಟ್ಸಅಪ್ ಗ್ರೂಪ್‌ನಲ್ಲಿ ನೀಡಿದ ವಿವಿಧ ಖಾತೆಗಳಿಗೆ 2025ರ ಡಿ.2ರಿಂದ 2026ರ ಫೆ.9ರ ಅವಧಿಯಲ್ಲಿ ಒಟ್ಟು 57,70,945.60 ರೂ. ಹಣ ವರ್ಗಾವಣೆ ಮಾಡಿದ್ದರು. ಆದರೆ ಹೂಡಿಕೆ ಮಾಡಿದ ಹಣವನ್ನಾಗಲಿ, ಲಾಭಾಂಶವನ್ನಾಗಲಿ ಮರಳಿ ನೀಡದೇ ಆರೋಪಿತರು ಮೋಸ ಮಾಡಿರು ವುದು ನಂತರ ಗೊತ್ತಾಯಿತು. ಈ ಕುರಿತು ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಐಟಿ ಕಾಯ್ದೆ ಅಡಿಯಲ್ಲಿ ತನಿಖೆ ನಡೆಸಲಾಗುತ್ತಿದೆ.

ವಾರ್ತಾ ಭಾರತಿ 25 Mar 2026 10:24 pm

‘ಉಪಚುನಾವಣೆ’ ಎರಡೂ ಕ್ಷೇತ್ರಗಳಲ್ಲಿ ಎಚ್‍ಡಿಕೆ ಪ್ರಚಾರ : ನಿಖಿಲ್ ಕುಮಾರಸ್ವಾಮಿ

ಬೆಂಗಳೂರು : ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ಕ್ಷೇತ್ರಗಳ ಉಪಚುನಾವಣೆಯಲ್ಲಿ ಮೈತ್ರಿಧರ್ಮ ಕಾಪಾಡಿಕೊಳ್ಳಬೇಕಿದ್ದು, ಎರಡೂ ಕ್ಷೇತ್ರಗಳಲ್ಲಿಯೂ ಕೇಂದ್ರದ ಮಾಜಿ ಸಚಿವ ಎಚ್.ಡಿ. ಕುಮಾರಸ್ವಾಮಿ ಪ್ರಚಾರ ನಡೆಸಲಿದ್ದಾರೆ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ತಿಳಿಸಿದ್ದಾರೆ. ಬುಧವಾರ ರಾಮನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಎರಡು ಕ್ಷೇತ್ರದ ನಾಮಪತ್ರ ಸಲ್ಲಿಕೆ ವೇಳೆ ಜೆಡಿಎಸ್ ನಾಯಕರು ಭಾಗಿಯಾಗಿದ್ದರು. ಲೋಕಸಭೆ ಅಧಿವೇಶನದ ಹಿನ್ನೆಲೆಯಲ್ಲಿ ಕುಮಾರಸ್ವಾಮಿ ನಾಮಪತ್ರ ಸಲ್ಲಿಕೆ ವೇಳೆ ಪಾಲ್ಗೊಳ್ಳಲು ಸಾಧ್ಯವಾಗಿಲ್ಲ. ನಿಶ್ಚಿತವಾಗಿ ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ನಡೆಸಲಿದ್ದಾರೆ ಎಂದರು. ಅನುಮತಿ ಕೊಡಿಸಲು ಬದ್ಧ: ಮೇಕೆದಾಟು ಅಣೆಕಟ್ಟು ಯೋಜನೆಗೆ ಕೇಂದ್ರದ ಅನುಮತಿ ಕೊಡಿಸಲು ದೇವೇಗೌಡ, ಕುಮಾರಸ್ವಾಮಿ ಬದ್ಧರಾಗಿದ್ದಾರೆ. ಆದರೆ, ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರಿಂದ ಮೊದಲು ಒಪ್ಪಿಗೆ ಪಡೆದುಕೊಳ್ಳಬೇಕಿದೆ. ಯೋಜನೆಗೆ ಅನುಮತಿ ಕೊಡಿಸಲು ಜೆಡಿಎಸ್ ಹೋರಾಟ ಮಾಡಲಿದೆ ಎಂದರು.  

ವಾರ್ತಾ ಭಾರತಿ 25 Mar 2026 10:22 pm

ವಿಜಯನಗರ | ಜಿಲ್ಲೆಯಲ್ಲಿ ಇಂಧನ ಕೊರತೆ ಇಲ್ಲ, ವದಂತಿಗೆ ಕಿವಿಗೊಡಬೇಡಿ : ಡಿಸಿ ಕವಿತಾ ಮನ್ನಿಕೇರಿ

ವಿಜಯನಗರ (ಹೊಸಪೇಟೆ) : ಜಿಲ್ಲೆಯಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಸಮರ್ಪಕವಾಗಿ ಲಭ್ಯವಿದ್ದು ಯಾವುದೇ ಕೊರತೆ ಇಲ್ಲ. ಇಂಧನ ಕೊರತೆ ಕುರಿತ ವದಂತಿಗಳಿಗೆ ಸಾರ್ವಜನಿಕರು ಕಿವಿಗೊಡಬಾರದು ಎಂದು ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ ತಿಳಿಸಿದ್ದಾರೆ. ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಬುಧವಾರ ಇಂಧನ ಪೂರೈಕೆ ಕಂಪನಿಗಳ ಮಾಲಕರು ಹಾಗೂ ವಿತರಕರ ತುರ್ತು ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಇಂಧನದ ದಾಸ್ತಾನು ಸಾಕಷ್ಟು ಇದ್ದು ಎಂದಿನಂತೆ ನಿರಂತರವಾಗಿ ಪೂರೈಕೆ ನಡೆಯುತ್ತಿದೆ. ಸಾರ್ವಜನಿಕರು ಆತಂಕದಿಂದ ಪೆಟ್ರೋಲ್ ಬಂಕ್‌ಗಳ ಮುಂದೆ ಸಾಲಿನಲ್ಲಿ ನಿಲ್ಲುವ ಅಗತ್ಯವಿಲ್ಲ ಎಂದು ಹೇಳಿದರು. ಮುಂದಿನ ಹಲವು ದಿನಗಳಿಗೆ ಸಾಕಾಗುವಷ್ಟು ಇಂಧನ ಲಭ್ಯವಿದ್ದು, ಸಾರಿಗೆ ಹಾಗೂ ಸರಬರಾಜಿನಲ್ಲಿ ಯಾವುದೇ ವ್ಯತ್ಯಯ ಉಂಟಾಗಿಲ್ಲ. ಜನರು ಗೊಂದಲಕ್ಕೆ ಒಳಗಾಗಬಾರದು ಎಂದು ಅವರು ತಿಳಿಸಿದರು. ಜಿಲ್ಲೆಯ ಎಲ್ಲಾ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನದ ಲಭ್ಯತೆ ಕುರಿತು ಸ್ಪಷ್ಟ ಮಾಹಿತಿ ಪ್ರದರ್ಶಿಸುವಂತೆ ಸೂಚಿಸಿದ ಅವರು, ಯಾವುದೇ ಕಾರಣಕ್ಕೂ ಕೃತಕ ಅಭಾವ ಸೃಷ್ಟಿಸಬಾರದು ಎಂದು ಎಚ್ಚರಿಸಿದರು. ಒಂದು ವೇಳೆ ಇಂಧನ ಕೊರತೆ ಬಗ್ಗೆ ಸುಳ್ಳು ವದಂತಿ ಹಬ್ಬಿಸುವುದು, ನಿಗದಿತ ದರಕ್ಕಿಂತ ಹೆಚ್ಚು ಹಣ ವಸೂಲಿ ಮಾಡುವುದಾದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು. ಇಂತಹ ಪ್ರಕರಣಗಳು ಕಂಡುಬಂದಲ್ಲಿ ಸಾರ್ವಜನಿಕರು ಪೊಲೀಸ್ ಸಹಾಯವಾಣಿ ಸಂಖ್ಯೆ 112 ಅಥವಾ ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ನೀಡಬಹುದು ಎಂದು ಹೇಳಿದರು. ಸಭೆಯಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶಕ ರಿಯಾಜ್, ತೈಲ ಕಂಪನಿಗಳ ಪ್ರತಿನಿಧಿಗಳು ಹಾಗೂ ಜಿಲ್ಲಾ ಪೆಟ್ರೋಲಿಯಂ ವಿತರಕರ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.

ವಾರ್ತಾ ಭಾರತಿ 25 Mar 2026 10:22 pm

ವಿಜಯನಗರ | ಕೊಟ್ಟೂರೇಶ್ವರ ಕಾಲೇಜಿನಲ್ಲಿ ಸಂಶೋಧನಾ ವಿಧಾನ ಕಾರ್ಯಾಗಾರ

ವಿಜಯನಗರ / ಕೊಟ್ಟೂರು: ಪಟ್ಟಣದ ಕೊಟ್ಟೂರೇಶ್ವರ ಕಾಲೇಜಿನಲ್ಲಿ ಸ್ನಾತಕೋತ್ತರ ಹಾಗೂ ಪದವಿ ವಾಣಿಜ್ಯ ವಿಭಾಗದ ವತಿಯಿಂದ ಬಿ.ಕಾಂ ಮತ್ತು ಎಂ.ಕಾಂ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ “ಒಂದು ದಿನದ ಸಂಶೋಧನಾ ವಿಧಾನ ಕಾರ್ಯಾಗಾರ” ಆಯೋಜಿಸಲಾಯಿತು. ಕಾರ್ಯಕ್ರಮವನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ.ಎಂ.ರವಿಕುಮಾರ್ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಸಂಶೋಧನಾ ಮನೋಭಾವ ಬೆಳೆಸುವುದು ಅತ್ಯಂತ ಅಗತ್ಯವಾಗಿದೆ. ಉತ್ತಮ ಸಂಶೋಧನೆಗಾಗಿ ಸರಿಯಾದ ವಿಧಾನಶಾಸ್ತ್ರದ ಜ್ಞಾನ ಅವಶ್ಯಕವಾಗಿದ್ದು, ಅದು ಗುಣಮಟ್ಟದ ಅಧ್ಯಯನ ಹಾಗೂ ಉನ್ನತ ವ್ಯಾಸಂಗಕ್ಕೆ ದಾರಿ ಮಾಡಿಕೊಡುತ್ತದೆ ಎಂದು ಹೇಳಿದರು. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಸಂಶೋಧನೆ ವಿದ್ಯಾರ್ಥಿಗಳ ವೃತ್ತಿಜೀವನಕ್ಕೆ ಮಾರ್ಗದರ್ಶಕವಾಗುತ್ತದೆ ಎಂದು ಅವರು ತಿಳಿಸಿದರು. ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಡಾ.ರವಿ ಕಿರಣ್ ಡಿ., ಸಹಾಯಕ ಪ್ರಾಧ್ಯಾಪಕರು, ವಿಜಯನಗರ ಕಾಲೇಜು, ಸಂಶೋಧನಾ ವಿಧಾನಶಾಸ್ತ್ರದ ಮೂಲಭೂತ ಅಂಶಗಳು, ಸಂಶೋಧನಾ ಸಮಸ್ಯೆಯ ಆಯ್ಕೆ, ಡೇಟಾ ಸಂಗ್ರಹಣೆ ಹಾಗೂ ವಿಶ್ಲೇಷಣೆಯ ವಿಧಾನಗಳ ಕುರಿತು ವಿವರಿಸಿದರು. ಪ್ರಾಯೋಗಿಕ ಉದಾಹರಣೆಗಳ ಮೂಲಕ ವಿದ್ಯಾರ್ಥಿಗಳಿಗೆ ಸ್ಪಷ್ಟವಾದ ಅರಿವು ಮೂಡಿಸಿದರು. ಕಾರ್ಯಾಗಾರದಲ್ಲಿ ವಿದ್ಯಾರ್ಥಿಗಳು ಸಕ್ರಿಯವಾಗಿ ಭಾಗವಹಿಸಿ ತಮ್ಮ ಸಂದೇಹಗಳನ್ನು ನಿವಾರಿಸಿಕೊಂಡರು. ಪ್ರಶ್ನೋತ್ತರ ಅಧಿವೇಶನ ಕಾರ್ಯಕ್ರಮಕ್ಕೆ ಚೈತನ್ಯ ತುಂಬಿತು. ಕಾರ್ಯಕ್ರಮವನ್ನು ವಾಣಿಜ್ಯ ವಿಭಾಗದ ಉಪನ್ಯಾಸಕಿ ಭವಾನಿ ವಿ. ನಿರೂಪಿಸಿದರು. ಉಪನ್ಯಾಸಕರಾದ ರಾಧಾ ಸ್ವಾಮಿ ಕೆ.ಪಿ., ವಿಭಾಗದ ಮುಖ್ಯಸ್ಥರಾದ ಶ್ರೀನಿವಾಸ್, ರಹೀಮ್ ಬೀ, ಸತ್ಯಣ್ಣ, ವಿನಯ್ ಕುಮಾರ್, ಸ್ನಾತಕೋತ್ತರ ವಿಭಾಗದ ಮುಖ್ಯಸ್ಥ ಸುರೇಶ, ಉಪನ್ಯಾಸಕರಾದ ಶರಣೇಶ್ ಕೆ, ಚೈತ್ರಾ ಜಿ.ಪಿ., ಮಲ್ಲಿಕಾರ್ಜುನ್ ಸೇರಿದಂತೆ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದರು.

ವಾರ್ತಾ ಭಾರತಿ 25 Mar 2026 10:19 pm

ಬಳ್ಳಾರಿ | ಮೌಲಾನಾ ಆಝಾದ್ ಶಾಲೆ ವಿಚಾರದಲ್ಲಿ ಕೆಲವರು ಜನರಲ್ಲಿ ವಿಷಬೀಜ ಬಿತ್ತಿದ್ದಾರೆ : ಸಿ.ಆರ್.ಹನುಮಂತ ಆರೋಪ

ಬಳ್ಳಾರಿ / ಕಂಪ್ಲಿ: ಬಡ ಮಕ್ಕಳಿಗೆ ಉತ್ತಮ ಶಿಕ್ಷಣ ಒದಗಿಸುವ ಉದ್ದೇಶದಿಂದ ಪಟ್ಟಣದ ಸಕ್ಕರೆ ಕಾರ್ಖಾನೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಬಳಿಯಲ್ಲಿ ಸುಮಾರು 4.50 ಕೋಟಿ ರೂ. ವೆಚ್ಚದಲ್ಲಿ ಮೌಲಾನಾ ಆಝಾದ್ ಆಂಗ್ಲ ಮಾಧ್ಯಮ ಶಾಲೆ ಮಂಜೂರಾಗಿದ್ದರೂ, ಅದರ ನಿರ್ಮಾಣಕ್ಕೆ ಕೆಲವರು ಷಡ್ಯಂತ್ರ ರೂಪಿಸಿ ಅಡ್ಡಿ ಪಡಿಸುತ್ತಿದ್ದಾರೆ ಎಂದು ಪುರಸಭೆ ಮಾಜಿ ಸದಸ್ಯ ಸಿ.ಆರ್.ಹನುಮಂತ ಆರೋಪಿಸಿದರು. ಶುಗರ್ ಫ್ಯಾಕ್ಟರಿ ಬಳಿಯ ಸರ್ಕಾರಿ ಶಾಲಾ ಆವರಣದಲ್ಲಿ ನಿರ್ಮಾಣಗೊಳ್ಳಲಿರುವ ಶಾಲೆಯ ಸ್ಥಳಕ್ಕೆ ಬುಧವಾರ ಭೇಟಿ ನೀಡಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಕೆಲವು ರಾಜಕೀಯ ಪ್ರೇರಿತ ವ್ಯಕ್ತಿಗಳು ಅಮಾಯಕ ಜನರನ್ನು ತಪ್ಪುದಾರಿಗೆಳೆದು ಹೋರಾಟಕ್ಕೆ ಇಳಿಸಿದ್ದಾರೆ. ಸ್ಥಳೀಯರಿಗೆ ತಪ್ಪು ಮಾಹಿತಿ ನೀಡಿ ಗೊಂದಲ ಸೃಷ್ಟಿಸಲಾಗುತ್ತಿದೆ ಎಂದು ಹೇಳಿದರು. ಇಲ್ಲಿನ ಮನೆಗಳನ್ನು ತೆರವುಗೊಳಿಸಲಾಗುತ್ತದೆ ಎಂಬ ಭೀತಿ ಮೂಡಿಸಿರುವುದರಿಂದ ಜನರಲ್ಲಿ ಆತಂಕ ಉಂಟಾಗಿದೆ. ಆದರೆ, ಈ ವಿಚಾರದಲ್ಲಿ ಯಾವುದೇ ರಾಜಕೀಯ ಉದ್ದೇಶವಿಲ್ಲದೆ ವಾಸ್ತವ ಸ್ಥಿತಿಯನ್ನು ಶಾಸಕರ ಗಮನಕ್ಕೆ ತರಲಾಗುವುದು. ಮುಂದಿನ ದಿನಗಳಲ್ಲಿ ಶಾಸಕರು ಸಭೆ ನಡೆಸಿ ಸೂಕ್ತ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಎಪಿಎಂಸಿ ಅಧ್ಯಕ್ಷ ಎನ್. ಹಬೀಬ್ ರೆಹಮಾನ್ ಮಾತನಾಡಿ, ಮೌಲಾನಾ ಆಝಾದ್ ಶಾಲೆ ನಿರ್ಮಾಣವಾದರೆ ಮುಸ್ಲಿಂ, ಬೌದ್ಧ, ಸಿಖ್, ಜೈನ್ ಸಮುದಾಯದ ಶೇ.75ರಷ್ಟು ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ದೊರೆಯಲಿದೆ. ಜೊತೆಗೆ ಎಸ್‌ಸಿ, ಎಸ್‌ಟಿ, ಒಬಿಸಿ ಸಮುದಾಯದ ಮಕ್ಕಳಿಗೂ ಶೇ.25ರಷ್ಟು ಅವಕಾಶ ಲಭ್ಯವಾಗಲಿದೆ ಎಂದು ಹೇಳಿದರು. ಆದರೆ ಕೆಲವರು ಶಾಲೆಯ ವಿರೋಧಕ್ಕೆ ಜನರಲ್ಲಿ ತಪ್ಪು ಕಲ್ಪನೆ ಮೂಡಿಸುತ್ತಿದ್ದಾರೆ. ಮಕ್ಕಳ ಶಿಕ್ಷಣದ ವಿಷಯದಲ್ಲೂ ರಾಜಕೀಯ ಮಾಡುವುದು ಸರಿಯಲ್ಲ. ಪರೀಕ್ಷೆಯ ಸಮಯದಲ್ಲೇ ಮಕ್ಕಳನ್ನು ಹೋರಾಟಕ್ಕೆ ಕರೆತಂದಿರುವ ಶಿಕ್ಷಕರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು. ಈ ವೇಳೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ. ಶ್ರೀನಿವಾಸರಾವ್, ಮುಖಂಡರಾದ ಬಿ. ಸಿದ್ದಪ್ಪ, ಎಂ. ಉಸ್ಮಾನ್, ಲೊಡ್ಡು ಹೊನ್ನೂರವಲಿ, ಪೇಂಟರ್ ಮಸ್ತಾನ್, ಜಾಫರ್, ಆರ್.ಪಿ. ಶಶಿಕುಮಾರ, ಅಕ್ಕಿ ಜಿಲಾನ್, ಹೊನ್ನೂರಸಾಬ್, ನಬೀ, ಹೊನ್ನಳ್ಳಿ ಶ್ರೀದೇವಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ವಾರ್ತಾ ಭಾರತಿ 25 Mar 2026 10:14 pm

ಒಳಮೀಸಲಾತಿ ಜಾರಿಗೆ ಆಗ್ರಹಿಸಿ ಕಂಪ್ಲಿಯಲ್ಲಿ ಬೃಹತ್ ಪ್ರತಿಭಟನೆ

ಬಳ್ಳಾರಿ / ಕಂಪ್ಲಿ: ಒಳಮೀಸಲಾತಿ ಜಾರಿಗೊಳಿಸಬೇಕೆಂದು ಆಗ್ರಹಿಸಿ ಮಾದಿಗ ಒಳಮೀಸಲಾತಿ ಹೋರಾಟ ಸಮಿತಿ ಕಂಪ್ಲಿ ತಾಲೂಕು ಘಟಕದಿಂದ ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಬುಧವಾರ ಬೃಹತ್ ಪ್ರತಿಭಟನೆ ನಡೆಸಲಾಯಿತು. ಉದ್ಭವ ಗಣೇಶ ದೇವಸ್ಥಾನದಿಂದ ಪ್ರತಿಭಟನಾ ಮೆರವಣಿಗೆ ಆರಂಭಗೊಂಡು, ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ನಡುವೆ ಮಸೀದಿ, ಡಾ.ರಾಜಕುಮಾರ ರಸ್ತೆ, ಮಾರೆಮ್ಮ ಗುಡಿ ಮಾರ್ಗವಾಗಿ ಅಂಬೇಡ್ಕರ್ ವೃತ್ತಕ್ಕೆ ತಲುಪಿತು. ಬಳಿಕ ಕಂದಾಯ ನಿರೀಕ್ಷಕ ಜಗದೀಶ ಅವರಿಗೆ ಮನವಿ ಪತ್ರ ಸಲ್ಲಿಸಿ ಸರ್ಕಾರಕ್ಕೆ ಹಕ್ಕೊತ್ತಾಯ ಮಾಡಲಾಯಿತು. ಯುವ ಮುಖಂಡ ಡಿಸ್ ಪ್ರಸಾದ್ ಮಾತನಾಡಿ, ಪರಿಶಿಷ್ಟ ಜಾತಿಯಲ್ಲಿನ ಹಲವು ಸಮುದಾಯಗಳು ಮೀಸಲಾತಿಯಲ್ಲಿ ಅನ್ಯಾಯ ಅನುಭವಿಸುತ್ತಿದ್ದು, ಕಳೆದ 35 ವರ್ಷಗಳಿಂದ ಒಳಮೀಸಲಾತಿಗಾಗಿ ಹೋರಾಟ ನಡೆಯುತ್ತಿದೆ ಎಂದು ಹೇಳಿದರು. ಹಲವು ಆಯೋಗಗಳು ತಾರತಮ್ಯವನ್ನು ಗುರುತಿಸಿ ಶಿಫಾರಸ್ಸುಗಳನ್ನು ನೀಡಿದ್ದರೂ, ಸರ್ಕಾರಗಳು ಜಾರಿಗೆ ತರುವಲ್ಲಿ ವಿಫಲವಾಗಿವೆ ಎಂದು ಆರೋಪಿಸಿದರು. 2025ರಲ್ಲಿ ಸುಪ್ರೀಂ ಕೋರ್ಟ್ ಒಳಮೀಸಲಾತಿ ಜಾರಿಗೆ ರಾಜ್ಯಗಳಿಗೆ ಅಧಿಕಾರ ನೀಡಿದ ಬಳಿಕ, ಹಲವು ರಾಜ್ಯಗಳು ಕ್ರಮ ಕೈಗೊಂಡಿವೆ. ಕರ್ನಾಟಕ ಸರ್ಕಾರವೂ ನ್ಯಾಯಮೂರ್ತಿ ನಾಗಮೋಹನ್ ದಾಸ್ ನೇತೃತ್ವದಲ್ಲಿ ಆಯೋಗ ರಚಿಸಿ ವರದಿ ಪಡೆದುಕೊಂಡಿದೆ. ಆ ವರದಿಯನ್ನು ಅಂಗೀಕರಿಸಿ, ಪರಿಶಿಷ್ಟ ಜಾತಿಯ 25% ಮೀಸಲಾತಿಯಲ್ಲಿ 6% ಅನ್ನು ಮಾದಿಗ ಹಾಗೂ ಸಂಬಂಧಿತ ಸಮುದಾಯಗಳಿಗೆ ಮೀಸಲಿಡಬೇಕು ಎಂದು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಎಚ್.ಜಡೆಪ್ಪ ಎಮ್ಮಿಗನೂರು, ಬೆಳಗೋಡ್ ಬಸವರಾಜ, ಹನುಮಂತಪ್ಪ ಸಣಾಪುರ, ಆರ್.ಎಂ.ರಾಮಯ್ಯ, ಮರಿಸ್ವಾಮಿ ಸಣಾಪುರ, ಎನ್.ಗಂಗಣ್ಣ, ವೀರಾಂಜಿನೀಯಲು, ಹೆಚ್.ಶ್ರೀನಿವಾಸ, ಯಲ್ಲಪ್ಪ, ಹೆಚ್.ಕುಮಾರ, ಬುಜ್ಜಿಕುಮಾರ, ಗೋಪಿ, ದೇವಲಾಪುರ ರಾಮ, ಹೆಚ್.ಪಂಪಾಪತಿ, ಹೆಚ್.ಜಗದೀಶ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ವಾರ್ತಾ ಭಾರತಿ 25 Mar 2026 10:06 pm

ಜೆಸಿಐ ಕಂಪ್ಲಿ ಸೋನಾ ವತಿಯಿಂದ ಮಹಿಳಾ ದಿನಾಚರಣೆ

ಬಳ್ಳಾರಿ / ಕಂಪ್ಲಿ : ಪಟ್ಟಣದ ಸಣಾಪುರ ರಸ್ತೆಯ ಶಾದಿ ಮಹಲ್‌ನಲ್ಲಿ ಜೆಸಿಐ ಕಂಪ್ಲಿ ಸೋನಾ ವತಿಯಿಂದ ಆಯೋಜಿಸಲಾದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮವು ವಿಜೃಂಭಣೆಯಿಂದ ನಡೆಯಿತು. ಕಾರ್ಯಕ್ರಮವನ್ನು ಪದ್ಮಶ್ರೀ ಪುರಸ್ಕೃತ ಮಂಜಮ್ಮ ಜೋಗತಿ ಉದ್ಘಾಟಿಸಿ ಮಾತನಾಡಿ, ಜೆಸಿಐ ಯುವಕರಲ್ಲಿ ನಾಯಕತ್ವ ಗುಣಗಳನ್ನು ಬೆಳೆಸುವ ಮಹತ್ವದ ಅಂತರರಾಷ್ಟ್ರೀಯ ಸೇವಾ ಸಂಘಟನೆಯಾಗಿದ್ದು, 164 ರಾಷ್ಟ್ರಗಳಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದರು. ಪಕ್ಷ, ಲಿಂಗ, ಜಾತಿ ಭೇದವಿಲ್ಲದೆ ಎಲ್ಲರನ್ನು ಒಗ್ಗೂಡಿಸುವ ವೇದಿಕೆಯಾಗಿದ್ದು, “ಕಾಯಕವೇ ನಿಜವಾದ ದೇವರು” ಎಂದು ಪ್ರತಿಯೊಬ್ಬರೂ ತಮ್ಮ ಕೆಲಸವನ್ನು ಗೌರವದಿಂದ ನಿರ್ವಹಿಸಬೇಕು ಎಂದು ತಿಳಿಸಿದರು.  ಈ ಸಂದರ್ಭದಲ್ಲಿ ಮಾತನಾಡಿದ ವೈದ್ಯರಾದ ಡಾ. ಹರಿಕಾ, ಹದಿಹರೆಯದ ಹುಡುಗಿಯರಲ್ಲಿ ಆರೋಗ್ಯ ಜಾಗೃತಿ ಅತ್ಯಂತ ಅಗತ್ಯವಾಗಿದ್ದು, ಕಬ್ಬಿಣದ ಅಂಶದ ಕೊರತೆ (ಅನೀಮಿಯಾ) ಸಮಸ್ಯೆ ಸಾಮಾನ್ಯವಾಗಿದೆ. ಅದರ ಪರಿಣಾಮಗಳು ಹಾಗೂ ತಡೆಗಟ್ಟುವ ಕ್ರಮಗಳ ಕುರಿತು ವಿವರಿಸಿದರು.  ವಕೀಲರಾದ ವಿಜಯಲಕ್ಷ್ಮಿ ಅವರು ಪೋಕ್ಸೋ ಕಾಯ್ದೆಯ ಕುರಿತು ಜಾಗೃತಿ ಮೂಡಿಸಿದರು. ಕಾರ್ಯಕ್ರಮದಲ್ಲಿ ಜೆಸಿಐ ಕಂಪ್ಲಿ ಸೋನಾದ ಅಧ್ಯಕ್ಷ ಭರತ್ ಪದ್ಮಶಾಲಿ, ಜೆಸಿಐ ವಲಯ 24ರ ವಲಯ ಅಧಿಕಾರಿ ಸಂತೋಷ್ ಕೊಟ್ರಪ್ಪ ಸೋಗಿ, ಡಾ. ಶ್ರದ್ಧಾ ಭರತ್, ಭರತ್ ಡಿ, ಪೂಜಾ ಭರತ್, ಅಮೃತಾ ಸಂತೋಷ್, ಜಯಲಕ್ಷ್ಮಿ (ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ), ಸ್ವಾತಿ (ಆರೋಗ್ಯ ಇಲಾಖೆ), ಮದ್ದಾನಪ್ಪ (ಪ್ರಿನ್ಸಿಪಾಲ್, ವಿನೂತನ ಮಹಿಳಾ ಪದವಿ ಕಾಲೇಜು), ಮನೋಜ್ ದಾನಪ್ಪ, ವೆಂಕಟಸಪ್ತಗಿರಿ, ಸಿದ್ದರಾಮೇಶ್, ಮಾನಸ, ಸೋಹಲ್, ಚಿನ್ನ, ವಿಷ್ಣು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ವಾರ್ತಾ ಭಾರತಿ 25 Mar 2026 10:02 pm

ʼವಂದೇ ಮಾತರಂʼನ 6 ಚರಣಗಳನ್ನು ಹಾಡುವುದು ಕಡ್ಡಾಯಗೊಳಿಸಿದ್ದ ಸರಕಾರದ ಆದೇಶ ಪ್ರಶ್ನಿಸಿದ್ದ ಅರ್ಜಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್

ಹೊಸದಿಲ್ಲಿ: ಸರಕಾರ ಮತ್ತು ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ವಂದೇ ಮಾತರಂನ ಎಲ್ಲಾ ಆರು ಚರಣಗಳನ್ನು ನುಡಿಸುವುದು ಅಥವಾ ಹಾಡುವುದು ಕಡ್ಡಾಯಗೊಳಿಸಿ ಕೇಂದ್ರ ಸರಕಾರ ನೀಡಿರುವ ಆದೇಶವನ್ನು ಪ್ರಶ್ನಿಸಿ ಸಲ್ಲಿಸಿದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಬುಧವಾರ ತಿರಸ್ಕರಿಸಿದೆ ಎಂದು Bar and Bench ವರದಿ ಮಾಡಿದೆ. ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್, ನ್ಯಾಯಮೂರ್ತಿಗಳಾದ ಜೋಯ್ಮಲ್ಯ ಬಾಗ್ಚಿ ಮತ್ತು ವಿಪುಲ್ ಪಂಚೋಲಿ ಅವರನ್ನೊಳಗೊಂಡ ಪೀಠವು ಅರ್ಜಿಯನ್ನು ತಿರಸ್ಕರಿಸಿದೆ. ಶೈಕ್ಷಣಿಕ ಸಂಸ್ಥೆಯನ್ನು ನಡೆಸುತ್ತಿರುವ ಮುಹಮ್ಮದ್ ಸಯೀದ್ ನೂರಿ ಅವರು ಈ ಕುರಿತು ರಿಟ್ ಅರ್ಜಿಯನ್ನು ಸಲ್ಲಿಸಿದ್ದರು. ಜನವರಿ 28ರ ಗೃಹ ಸಚಿವಾಲಯದ ಸುತ್ತೋಲೆಯನ್ನು ನೂರಿ ಪ್ರಶ್ನಿಸಿದ್ದರು. ಸುತ್ತೋಲೆಯಲ್ಲಿ ವಂದೇ ಮಾತರಂನ ಎಲ್ಲಾ 6 ಚರಣಗಳನ್ನು ರಾಷ್ಟ್ರಗೀತೆ ಜನ ಗಣಮನಕ್ಕೂ ಮೊದಲು ಹಾಡಬೇಕೆಂದು ನಿರ್ದೇಶಿಸಿತ್ತು. ಹಾಡಿನ ಮೊದಲ ಎರಡು ಚರಣಗಳನ್ನು ಮಾತ್ರ ಈ ಹಿಂದೆ ಅಧಿಕೃತ ಕಾರ್ಯಕ್ರಮಗಳಲ್ಲಿ ನುಡಿಸಲಾಗುತ್ತಿತ್ತು. ಹಿಂದೂ ದೇವತೆಗಳಾದ ದುರ್ಗಾ, ಲಕ್ಷ್ಮಿ ಮತ್ತು ಸರಸ್ವತಿಯನ್ನು ಪ್ರಾರ್ಥಿಸುವ ಉಳಿದ ಚರಣಗಳನ್ನು ಕೈಬಿಡಲಾಗಿತ್ತು. ಅಧಿಕೃತ ದಂಡಗಳು ಇಲ್ಲದಿದ್ದರೂ, ಈ ಆದೇಶ ಸಾಮಾಜಿಕ ಒತ್ತಡಕ್ಕೆ ಕಾರಣವಾಗಬಹುದು. ಇದನ್ನು ಅನುಸರಿಸದ ವ್ಯಕ್ತಿಗಳನ್ನು ಪ್ರತ್ಯೇಕಿಸಿ ತಾರತಮ್ಯ ಮಾಡುವ ಸಾಧ್ಯತೆ ಇದೆ ಎಂದು ಅರ್ಜಿದಾರರ ಪರ ವಕೀಲರು ವಾದಿಸಿದ್ದರು. ಸುಪ್ರೀಂ ಕೋರ್ಟ್ ಈ ಅರ್ಜಿಯನ್ನು ಆತುರದ ಮತ್ತು “ಅಸ್ಪಷ್ಟ ಆತಂಕಗಳ” ಆಧಾರಿತವಾಗಿದೆ ಎಂದು ಹೇಳಿದೆ ಎಂದು Live Law ವರದಿ ಮಾಡಿದೆ.

ವಾರ್ತಾ ಭಾರತಿ 25 Mar 2026 10:02 pm

ವಿಜಯನಗರ | ಮೋದಿಯವರ ವಿರುದ್ಧ ಯುವ ಕಾಂಗ್ರೆಸ್‌ನಿಂದ ಪ್ರತಿಭಟನೆ : ಮೆರವಣಿಗೆ

ವಿಜಯನಗರ : ವಿಜಯನಗರ ಜಿಲ್ಲೆಯ ಹೊಸಪೇಟೆ ನಗರದಲ್ಲಿ ಜಿಲ್ಲಾ ಯುವ ಕಾಂಗ್ರೆಸ್ ವತಿಯಿಂದ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ವಿರುದ್ಧ ತೀವ್ರ ಪ್ರತಿಭಟನೆ ನಡೆಯಿತು. ನಗರದ ವಿಜಯನಗರ ಕಾಲೇಜು ಮುಂಭಾಗದಿಂದ ಡಾ.ಬಿ.ಆರ್.ಅಂಬೇಡ್ಕರ್ ಸರ್ಕಲ್ ವರೆಗೆ ನೂರಾರು ಕಾರ್ಯಕರ್ತರು ಮೆರವಣಿಗೆ ನಡೆಸಿ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಪ್ರತಿಭಟನೆಯಲ್ಲಿ ಸುಮಾರು 100 ಅಡಿ ಉದ್ದ ಮತ್ತು 40 ಅಡಿ ಅಗಲದ ಭಾರಿ ಬ್ಯಾನರ್ ಹಿಡಿದು ಕಾರ್ಯಕರ್ತರು ಗಮನ ಸೆಳೆದರು. ಈ ವೇಳೆ ಮಾತನಾಡಿದ ಯುವ ಮುಖಂಡರು, ಅಮೆರಿಕಾ–ಇಸ್ರೇಲ್ ಹಾಗೂ ಇರಾನ್ ನಡುವಿನ ಯುದ್ಧ ಪರಿಸ್ಥಿತಿಯ ಹಿನ್ನೆಲೆಯಲ್ಲಿ ತೈಲ ಖರೀದಿಯಲ್ಲಿ ಭಾರತ ಅಮೆರಿಕಾದ ಒತ್ತಡಕ್ಕೆ ಒಳಗಾಗಿದೆ ಎಂದು ಆರೋಪಿಸಿದರು. “ಅಮೆರಿಕಾ ಹೇಳಿದಂತೆ ಪ್ರಧಾನಿ ಮೋದಿ ನಡೆದುಕೊಳ್ಳುತ್ತಿದ್ದಾರೆ. ವಿದೇಶದಿಂದ ಖರೀದಿಸುವ ತೈಲವನ್ನು ಉದ್ಯಮಿಗಳಾದ ಅಂಬಾನಿ ಮತ್ತು ಅದಾನಿ ಕಂಪನಿಗಳಿಗೆ ಅನುಕೂಲವಾಗುವಂತೆ ಬಳಸಲಾಗುತ್ತಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು. ಬೇರೆ ದೇಶದ ಅಧ್ಯಕ್ಷರು ಹೇಳಿದಂತೆ ಭಾರತದ ಪ್ರಧಾನಮಂತ್ರಿ ನಡೆದುಕೊಳ್ಳುವುದು ಸರಿಯಲ್ಲ. ಇದು ದೇಶದ ಸ್ವಾಯತ್ತತೆಗೆ ಧಕ್ಕೆಯಾಗಿದೆ ಎಂದು ಟೀಕಿಸಿದ ಅವರು, ಇಂತಹ ನಿರ್ಧಾರಗಳಿಂದ ಹಿಂದೆ ಸರಿಯಬೇಕು ಎಂದು ಒತ್ತಾಯಿಸಿದರು. ಈ ಸಂದರ್ಭದಲ್ಲಿ ರಾಜ್ಯ ಕಾರ್ಯದರ್ಶಿ ಅಬ್ಬು ತಾಹಿರ್, ರಾಜ್ಯ ಸಾಮಾಜಿಕ ಜಾಲತಾಣ ಸಂಯೋಜಕ ಗಣೇಶ್ ಪಾಟೀಲ್, ಜಿಲ್ಲಾ ಉಪಾಧ್ಯಕ್ಷ ಜೀಶನ್ ಹ್ಯಾರಿಸ್, ಲೀಗಲ್ ಸೆಲ್ ಅಧ್ಯಕ್ಷ ಅಬ್ದುಲ್ ಕಲಾಂ, ಸಾಮಾಜಿಕ ಜಾಲತಾಣ ಜಿಲ್ಲಾಧ್ಯಕ್ಷ ಯಾರಿಸ್ವಾಮಿ, ಜಿಲ್ಲಾ ಉಪಾಧ್ಯಕ್ಷ ಆಯಿಷಾ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಲ್ತಾಫ್, ಅರಬಝ್‌, ರೋಷನ್, ಭರತ್ ಕುಮಾರ್ ಸಿ.ಆರ್., ಹೊಸಪೇಟೆ ಅಧ್ಯಕ್ಷ ಹಾರೋನ್, ಬ್ಲಾಕ್ ಅಧ್ಯಕ್ಷರಾದ ಪ್ರದೀಪ್, ಗೌಸ್, ಪ್ರೇಮ್ ಕುಮಾರ್, ಶರತ್, ಕೊಟ್ರೇಶ್, ಉಪಾಧ್ಯಕ್ಷ ಸುಹಾಯಿಲ್ ಸೇರಿದಂತೆ ಅನೇಕ ಯುವ ಕಾಂಗ್ರೆಸ್ ಕಾರ್ಯಕರ್ತರು ಭಾಗವಹಿಸಿದ್ದರು.  

ವಾರ್ತಾ ಭಾರತಿ 25 Mar 2026 9:59 pm

ಪೆಟ್ರೋಲ್ ಕೊರತೆ ಆತಂಕ: ರಾಯಚೂರಿನಲ್ಲಿ ಬಂಕ್‌ಗಳ ಮುಂದೆ ವಾಹನಗಳ ಸಾಲು

ರಾಯಚೂರು: ಪಶ್ಚಿಮ ಏಷ್ಯಾ ಭಾಗದಲ್ಲಿ ಯುದ್ಧ ವಾತಾವರಣ ತೀವ್ರಗೊಂಡಿರುವ ಹಿನ್ನೆಲೆಯಲ್ಲಿ ಪೆಟ್ರೋಲ್ ಕೊರತೆ ಉಂಟಾಗಬಹುದು ಎಂಬ ಮಾತು ಹರಿದಾಡುತ್ತಿದ್ದು, ರಾಯಚೂರು ನಗರ, ದೇವದುರ್ಗ, ಮಸ್ಕಿ, ದೇವದುರ್ಗ ಹಾಗೂ ಲಿಂಗಸುಗೂರು ತಾಲೂಕಿನ ಹಲವೆಡೆ ವಾಹನಗಳಿಗೆ ಪೆಟ್ರೋಲ್, ಡಿಸೇಲ್ ಹಾಕಿಕೊಳ್ಳಲು ಗ್ರಾಹಕರು ಮುಗಿಬಿದ್ದರು. ರಾಯಚೂರು ನಗರದ ಸ್ಟೇಷನ್ ರಸ್ತೆ, ಗೋಶಾಲ ರಸ್ತೆ ಸೇರಿದಂತೆ ರಾಯಚೂರು ತಾಲೂಕಿನ ಹಲವು ಪೆಟ್ರೋಲ್ ಬಂಕ್ ಗಳಲ್ಲಿ ದ್ವಿಚಕ್ರ ವಾಹನ ಸವಾರರು, ಆಟೋ, ಕಾರು ಚಾಲಕರು ದೊಡ್ಡದಾದ ಸರತಿ ಸಾಲಿನಲ್ಲಿ ನಿಂತು ಇಂಧನ ಹಾಕಿಕೊಂಡರು, ಸ್ಟೇಷನ್ ರಸ್ತೆಯ ರಾಮ ಮಂದಿರದ ಪಕ್ಕದ ಪೆಟ್ರೋಲ್ ಬಂಕ್ ಮುಂದೆ ಸಾಲುಗಟ್ಟಿದವು.  ಕೆಲವರು ಮಧ್ಯ ಪ್ರಾಚ್ಯ ದೇಶಗಳ ಕದನದಿಂದ ಮತ್ತೆ ಲಾಕ್ ಡೌನ್ ಹೇರಬಹುದು ಎಂಬ ವದಂತಿಗೆ ಕಿವಿಗೊಟ್ಟು ವಾಹನಗಳಿಗೆ ಫುಲ್ ಟ್ಯಾಂಕ್ ಮಾಡಿಕೊಂಡರೆ ಕೆಲವರು ಕ್ಯಾನ್, ದೊಡ್ಡ ಡಬ್ಬಗಳಲ್ಲಿ ಸಂಗ್ರಹ ಮಾಡಿಕೊಳ್ಳಲು ಮುಂದಾದರು. ಆದರೆ ವದಂತಿಗಳ ಕುರಿತು ಸ್ಪಷ್ಟನೆ ನೀಡಬೇಕಾದ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಮೌನ ವಹಿಸಿದ್ದು, ಜನರ ಗೊಂದಲಕ್ಕೆ ಕಾರಣವಾಯಿತು.

ವಾರ್ತಾ ಭಾರತಿ 25 Mar 2026 9:53 pm

ಅಮೆರಿಕದ ಯುದ್ಧನೌಕೆ ಅಬ್ರಹಾಂ ಲಿಂಕನ್‍ನತ್ತ ಇರಾನ್ ಕ್ಷಿಪಣಿ ದಾಳಿ

ಟೆಹ್ರಾನ್: ಅಮೆರಿಕದ ವಿಮಾನವಾಹಕ ಯುದ್ಧನೌಕೆ ಅಬ್ರಹಾಂ ಲಿಂಕನ್‍ನತ್ತ ಕ್ರೂಸ್ ಕ್ಷಿಪಣಿಯನ್ನು ಪ್ರಯೋಗಿಸಿ ನೌಕೆಯು ತನ್ನ ಸ್ಥಾನವನ್ನು ಬದಲಾಯಿಸುವಂತೆ ಒತ್ತಡ ಹೇರಿರುವುದಾಗಿ ಇರಾನ್ ಬುಧವಾರ ಹೇಳಿದೆ. ಯುದ್ಧನೌಕೆಗಳು ತನ್ನ ಕ್ಷಿಪಣಿ ವ್ಯವಸ್ಥೆಯ ವ್ಯಾಪ್ತಿಯೊಳಗೆ ಬಂದರೆ ಇನ್ನಷ್ಟು ದಾಳಿಗಳು ನಡೆಯಬಹುದು ಎಂದು ಇರಾನ್ ಎಚ್ಚರಿಕೆ ನೀಡಿದೆ. ಮಧ್ಯಪ್ರಾಚ್ಯ ಸಂಘರ್ಷಕ್ಕೆ ಸಂಬಂಧಿಸಿದ ಕೆಲವು ಪ್ರಮುಖ ಬೆಳವಣಿಗೆಗಳು: ►ಅಮೆರಿಕ ಮುಂದಿರಿಸಿದ 15 ಅಂಶಗಳ ಯೋಜನೆಯನ್ನು ಇರಾನ್ ತಳ್ಳಿಹಾಕಿದ್ದು ಹಾರ್ಮುಝ್ ಜಲಸಂಧಿಯ ಮೇಲಿನ ಸಾರ್ವಭೌಮತ್ವವನ್ನು ಒಳಗೊಂಡಿರುವ ಹೊಸ ಷರತ್ತುಗಳ ಪಟ್ಟಿಯನ್ನು ಬಿಡುಗಡೆಗೊಳಿಸಿದೆ. ►ಯುದ್ಧ ಯಾವಾಗ ಕೊನೆಗೊಳ್ಳಬೇಕೆಂದು ನಾವು ನಿರ್ಧರಿಸುತ್ತೇವೆ, ಡೊನಾಲ್ಡ್ ಟ್ರಂಪ್ ಅಲ್ಲ ಎಂದು ಇರಾನ್ ಹೇಳಿದೆ. ►ಇರಾನ್‍ನ ಇಷ್ಫಹಾನ್ ಪ್ರಾಂತದಲ್ಲಿ ಜಲಾಂತರ್ಗಾಮಿ ಅಭಿವೃದ್ಧಿ ಕೇಂದ್ರವನ್ನು ಗುರಿಯಾಗಿಸಿ ದಾಳಿ ನಡೆಸಿರುವುದಾಗಿ ಇಸ್ರೇಲ್ ಹೇಳಿದೆ. ►ಮಂಗಳವಾರ ತಡರಾತ್ರಿಯಿಂದ ಸೌದಿ ಅರೆಬಿಯಾದ ಪೂರ್ವ ಪ್ರಾಂತವನ್ನು ಗುರಿಯಾಗಿಸಿ ಸುಮಾರು 30 ಡ್ರೋನ್‍ಗಳು ಹಾಗೂ ಒಂದು ಬ್ಯಾಲಿಸ್ಟಿಕ್ ಕ್ಷಿಪಣಿಯನ್ನು ಪ್ರಯೋಗಿಸಿರುವುದಾಗಿ ವರದಿಯಾಗಿದೆ.‌

ವಾರ್ತಾ ಭಾರತಿ 25 Mar 2026 9:49 pm

ಚಿಂಚೋಳಿಯಲ್ಲಿ ಆಲಿಕಲ್ಲು ಮಳೆ : ಕಾಶ್ಮೀರವಾದ ಚನ್ನೂರ ಗ್ರಾಮ!

ಚಿಂಚೋಳಿ : ತಾಲೂಕಿನ ಚನ್ನೂರ ಗ್ರಾಮದಲ್ಲಿ ಬುಧವಾರ ಸಂಜೆ ಭಾರಿ ಮಳೆಯೊಂದಿಗೆ ಆಲಿಕಲ್ಲು ಸುರಿಮಳೆಯಾಗಿದ್ದು, ಗ್ರಾಮವೆಲ್ಲ ಬಿಳಿಮಯ ದೃಶ್ಯಕ್ಕೆ ಸಾಕ್ಷಿಯಾಯಿತು. ಸಂಜೆ 5:30ರಿಂದ 6:30ರವರೆಗೆ ಸುಮಾರು ಒಂದು ಗಂಟೆ ಕಾಲ ನಿರಂತರವಾಗಿ ಸುರಿದ ಮಳೆಗೆ ಗ್ರಾಮಸ್ಥರು ಆಶ್ಚರ್ಯಚಕಿತರಾದರು. ಅತಿಯಾದ ಆಲಿಕಲ್ಲು ಸುರಿತದಿಂದಾಗಿ ಗ್ರಾಮದ ರಸ್ತೆಗಳು, ಮನೆಗಳ ಮೇಲ್ಛಾವಣಿಗಳು ಹಾಗೂ ಹೊಲಗದ್ದೆಗಳು ಸಂಪೂರ್ಣವಾಗಿ ಬಿಳಿ ಬಣ್ಣಕ್ಕೆ ತಿರುಗಿದವು. ಈ ದೃಶ್ಯವು ಕಾಶ್ಮೀರದ ಹಿಮಪಾತವನ್ನು ನೆನಪಿಸುವಂತಿತ್ತು. ಮಳೆಯ ತೀವ್ರತೆಗೆ ಕೆಲಕಾಲ ಜನಜೀವನ ಅಸ್ತವ್ಯಸ್ತಗೊಂಡಿತು. ಒಂದು ಕಡೆ ಹಿಮದಂತಿರುವ ಆಲಿಕಲ್ಲುಗಳನ್ನು ನೋಡಿ ಮಕ್ಕಳು ಮತ್ತು ಯುವಕರು ಸಂಭ್ರಮಿಸಿದರೆ, ಇನ್ನೊಂದೆಡೆ ಅಕಾಲಿಕ ಮಳೆಯಿಂದ ಬೆಳೆಗಳಿಗೆ ಹಾನಿಯಾಗುವ ಭೀತಿಯಲ್ಲಿ ರೈತರು ಆತಂಕಗೊಂಡಿದ್ದಾರೆ. ಈ ಆಲಿಕಲ್ಲು ಮಳೆಯಿಂದ ಬೆಳೆ ನಷ್ಟ ಸಂಭವಿಸುವ ಸಾಧ್ಯತೆ ಇರುವುದರಿಂದ ರೈತರು ಚಿಂತೆಯಲ್ಲಿ ಮುಳುಗಿದ್ದಾರೆ. ಗ್ರಾಮದ ರಸ್ತೆಗಳೆಲ್ಲಾ ಬಿಳಿ ಆಲಿಕಲ್ಲುಗಳಿಂದ ತುಂಬಿಹೋಗಿದ್ದವು. ನೋಡುಗರ ಕಣ್ಣಿಗೆ ಇದು ಉತ್ತರ ಭಾರತದ ಹಿಮಪಾತದಂತೆ ಕಾಣುತ್ತಿತ್ತು. - ಮೋಹನ್ ಐನಾಪುರ, ಸ್ಥಳೀಯ.

ವಾರ್ತಾ ಭಾರತಿ 25 Mar 2026 9:45 pm

ದರೆಗುಡ್ಡೆ : ಗ್ರಾಮಾಭಿವೃದ್ಧಿ ಯೋಜನೆಯಿಂದ ವಾತ್ಸಲ್ಯ ಮನೆ ಹಸ್ತಾಂತರ

ಮೂಡುಬಿದಿರೆ: ಶ್ರೀ ಕ್ಷೇತ್ರ ಧಮ೯ಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ವಾತ್ಸಲ್ಯ ಕಾಯ೯ಕ್ರಮದಡಿ ನಿಮಾ೯ಣಗೊಂಡಿರುವ ವಾತ್ಸಲ್ಯ ಮನೆಯನ್ನು ಮೂಡುಬಿದಿರೆ ತಾಲೂಕಿನ ದರೆಗುಡ್ಡೆ ಗ್ರಾಮದ ಗುರುಬೆಟ್ಟು ಮನೆಯ ಚಂದ್ರಾವತಿ ಅವರಿಗೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಬುಧವಾರ ಹಸ್ತಾಂತರಿಸಿದರು. ನಂತರ ಮಾತನಾಡಿದ ಆಳ್ವರು ಈ ದೇಶದಲ್ಲಿ ಜೀವನ ಮಾಡುವ ಅತೀ ದೊಡ್ಡ ಐಶ್ವಯ೯ವಂತರಿದ್ದಾರೆ ಅದೇ ರೀತಿ ಕಡು ಬಡವರು ಕೂಡಾ ಇದ್ದಾರೆ. ಅಕ್ಷರಸ್ಥರು ಇದ್ದಾರೆ ಅನಕ್ಷರಸ್ಥರೂ ಇದ್ದು ಬಹಳಷ್ಟು ಅಂತರ ಸ್ವಾತಂತ್ರ್ಯ ಪೂವ೯ದಿಂದಲೂ ಇದ್ದು ಇದನ್ನು ಕಡಿಮೆಗೊಳಿಸಿದವರು ಧಮ೯ಸ್ಥಳದ ಹೆಗ್ಗಡೆಯವರು. ಹೇಮಾವತಿ ಹೆಗ್ಗಡೆ ಅವರು ಕೊರೋನಾ ಸಂದಭ೯ದಲ್ಲಿ ವಾತ್ಸಲ್ಯ ಕಾಯ೯ಕ್ರಮವನ್ನು ಆರಂಭಿಸಿ ವಾಸಿಸಲು ಮನೆಯೇ ಇಲ್ಲದ ನಿಗ೯ತಿಕ ಕುಟುಂಬಗಳು ದಿನನಿತ್ಯದ ಆಹಾರ ಸೇವನೆಗೆ ಸಮಸ್ಯೆ ಇರುವ ಕುಟುಂಬಗಳು ದಿನನಿತ್ಯದ ಆಹಾರ ತಯಾರಿ ಮಾಡಲು ಪಾತ್ರೆ, ಬಟ್ಟೆ ಬರೆಯ ಸಮಸ್ಯೆ, ಶೌಚಾಲಯ, ಸ್ನಾನಗೃಹ ಸಮಸ್ಯೆಯಿರುವ ಕುಟುಂಬಗಳು ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಮನೆ ಇಲ್ಲದ ನಿಗ೯ತಿಕ ಕುಟುಂಬಗಳಿಗೆ ಮನೆ ರಚನೆ, ವಾತ್ಸಲ್ಯ ಕಿಟ್ ವಿತರಣೆ, ವಾತ್ಸಲ್ಯ ಮಿಕ್ಸ್ ವಿತರಣೆ, ಶೌಚಾಲಯ ಸ್ನಾನಗೃಹ ರಿಪೇರಿಯನ್ನು ಮಾಡುವ ಕಾಯ೯ಕ್ರಮವನ್ನು ಅನುಷ್ಠಾನಕ್ಕೆ ತರಲಾಗಿದ್ದು ಇದರ ಪ್ರಯೋಜನವನ್ನು ಜನರು ಪಡೆದುಕೊಳ್ಳುತ್ತಿದ್ದಾರೆ ಎಂದ ಅವರು ರೂ. ಹತ್ತು ಸಾವಿರವನ್ನು ಚಂದ್ರಾವತಿ ಅವರ ಕುಟುಂಬಕ್ಕೆ ನೀಡಿದರು. ಮೂಡುಬಿದಿರೆ ಚೌಟರ ಅರಮನೆಯ ಕುಲದೀಪ್ ಎಂ., ದರೆಗುಡ್ಡೆ ಗ್ರಾ. ಪಂ. ನ ಮಾಜಿ ಅಧ್ಯಕ್ಷ ಅಶೋಕ್ ಶೆಟ್ಟಿ ಬೇಲೊಟ್ಟು, ಮಾಜಿ ಸದಸ್ಯ ಪ್ರಸಾದ್, ಜನಜಾಗೃತಿ ವೇದಿಕೆಯ ತಾಲೂಕು ಅಧ್ಯಕ್ಷ ಸುಭಾಶ್ಚಂದ್ರ ಚೌಟ, ವಲಯ ಸದಸ್ಯ ಜಗತ್ಪಾಲ ಹೆಗ್ಡೆ ಭಾಗವಹಿಸಿದ್ದರು. ಜಯಾನಂದ ಕೋಟ್ಯಾನ್, ದಿಲೀಪ್ ಮೇಲ್ವಿ ಚಾರಕಿ ಯಶೋದಾ, ವಾಲ್ಪಾಡಿ ಒಕ್ಕೂಟದ ಅಧ್ಯಕ್ಷೆ ವಿದ್ಯಾ, ಬೆಳುವಾಯಿ ವಲಯದ ಸೇವಾಪ್ರತಿನಿಧಿಗಳು ಉಪಸ್ಥಿತರಿದ್ದರು. ಗ್ರಾಮಾಭಿವೃದ್ಧಿ ಯೋಜನೆಯ ತಾಲೂಕು ಯೋಜನಾಧಿಕಾರಿ ಧನಂಜಯ ಅವರು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ ತಾಲೂಕಿನ 117 ಕುಟುಂಬಗಳಿಗೆ ಮಾಶಾಸನ ನೀಡಲಾಗುತ್ತಿದೆ. 88 ಕುಟುಂಬಗಳಿಗೆ ವಾತ್ಸಲ್ಯ ಕಿಟ್ ಗಳನ್ನು ನೀಡಲಾಗಿದೆ. 12 ಕುಟುಂಬಗಳಿಗೆ ವಾತ್ಸಲ್ಯ ಮಿಕ್ಸ್, 6 ಮಂದಿಗೆ ವಾತ್ಸಲ್ಯ ವಿದ್ಯಾನಿಧಿ, 3 ವಾತ್ಸಲ್ಯ ಹಳೆ ಮನೆ ರಿಪೇರಿ, ಒಂದು ಸೋಲಾರ್, ನಳ್ಳಿ ನೀರಿನ ಅಳವಡಿಕೆ, ಹಾಗೂ ಈಗಾಗಲೇ 6 ವಾತ್ಸಲ್ಯ ಮನೆಗಳನ್ನು ರಚಿಸಲಾಗಿದೆ ಎಂದರು. ಜ್ಞಾನ ವಿಕಾಸ ಸಮನ್ವಯಾಧಿಕಾರಿ ವಿದ್ಯಾ ವಂದಿಸಿದರು.

ವಾರ್ತಾ ಭಾರತಿ 25 Mar 2026 9:42 pm

ಮಂಗಳೂರು| ಸಾಮಾಜಿಕ ಜಾಲತಾಣದಲ್ಲಿ ಕೋಮು ಪ್ರಚೋದನೆಯ ಸಂದೇಶ ಹರಡಿದ ಆರೋಪಿ ಸೆರೆ

ಮಂಗಳೂರು, ಮಾ.25: ಕೋಮು ಪ್ರಚೋದನೆಯ ಸಂದೇಶಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಆರೋಪಿ ಕಾಪು ತಾಲೂಕಿನ ಮೂಡುಬೆಳ್ಳೆ ಗ್ರಾಮದ ಪವನ್ ಆಚಾರ್ಯ (22) ಎಂಬಾತನನ್ನು ಕಂಕನಾಡಿ ನಗರ ಠಾಣೆಯ ಪೊಲೀಸರು ಬಂಧಿಸಿದ್ದಾರೆ. 2025ರಲ್ಲಿ ಬಜ್ಪೆಯಲ್ಲಿ ನಡೆದ ಸುಹಾಸ್ ಶೆಟ್ಟಿ ಕೊಲೆಯ ಬಳಿಕ ಆರೋಪಿಯು ಸಾಮಾಜಿಕ ಜಾಲತಾಣದಲ್ಲಿ ಕೋಮು ಪ್ರಚೋದನೆಯ ಸಂದೇಶಗಳನ್ನು ಹಂಚಿಕೊಂಡ ಬಗ್ಗೆ ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ಬಿಎನ್‌ಎಸ್ ಕಲಂ 353 (1), 353 (2), 61 (2), 55ರಂತೆ ಪ್ರಕರಣ ದಾಖಲಾಗಿತ್ತು. ತನಿಖೆ ನಡೆಸಿದಾಗ ಕೋಮುಪ್ರಚೋದಕ ಪೋಸ್ಟ್‌ಗಳನ್ನು ಹಾಕಿದ ವ್ಯಕ್ತಿ ಪವನ್ ಆಚಾರ್ಯ ಎಂಬುದು ಗೊತ್ತಾಗಿತ್ತು. ಅದರಂತೆ ಪೊಲೀಸರು ಆರೋಪಿಯನ್ನು ಬುಧವಾರ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ನ್ಯಾಯಾಲಯ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ. ಆರೋಪಿಯು ಸಾಮಾಜಿಕ ಜಾಲತಾಣದಲ್ಲಿ ಕೋಮು ಪ್ರಚೋದನೆಯ ಪೋಸ್ಟ್ ಮಾಡಿದ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲೂ ಪ್ರಕರಣ ದಾಖಲಾಗಿ ತನಿಖೆಯಲ್ಲಿದೆ ಎಂದು ಮಂಗಳೂರು ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ.

ವಾರ್ತಾ ಭಾರತಿ 25 Mar 2026 9:39 pm

ಭಾರತ ಪಾಕ್‌ನಂತೆ ʼದಲ್ಲಾಳಿʼ ದೇಶವಲ್ಲ: ಎಸ್. ಜೈಶಂಕರ್

ಅಮೆರಿಕ - ಇರಾನ್ ನಡುವೆ ಮಾತುಕತೆಗೆ ಪಾಕ್ ಮಧ್ಯಸ್ಥಿಕೆ‌ ವರದಿಗೆ ವಿದೇಶಾಂಗ ಸಚಿವರ ಪ್ರತಿಕ್ರಿಯೆ

ವಾರ್ತಾ ಭಾರತಿ 25 Mar 2026 9:38 pm

ಶರಾವತಿ, ವಾರಾಹಿ ಪಂಪ್ಡ್ ಸ್ಟೋರೇಜ್ ಯೋಜನೆ ಅಪಾಯದ ತೂಗುಗತ್ತಿಗಳು: ಪರಿಸರ ವಿಜ್ಞಾನಿ ನಿರ್ಮಲಾ ಗೌಡ

ಉಡುಪಿ, ಮಾ.25: ಪಶ್ಚಿಮ ಘಟ್ಟ ಪ್ರದೇಶಗಳ ವ್ಯಾಪ್ತಿಯಲ್ಲಿ ಸರಕಾರ ನಿರ್ಮಿಸಲುದ್ದೇಶಿಸಿರುವ ಶರಾವತಿ ಮತ್ತು ವಾರಾಹಿ ಪಂಪ್ಡ್ ಸ್ಟೋರೇಜ್ ವಿದ್ಯುತ್ ಯೋಜನೆಗಳು ನಿಜವಾಗಿಯೂ ಅಪಾಯದ ತೂಗುಗತ್ತಿಗಳಾಗಿದ್ದು, ಇವುಗಳ ಬಗ್ಗೆ ಸರಕಾರ ಬಹಿರಂಗ ಪಡಿಸಿದ್ದಕ್ಕಿಂತ ಮುಚ್ಚಿರುವುದೇ ಅಧಿಕ. ಈ ಯೋಜನೆಗಳು ಪರಿಸರ ಸೂಕ್ಷ್ಮ ಪಶ್ಚಿಮ ಘಟ್ಟದ ಪಾಲಿಗಂತೂ ಅತ್ಯಂತ ಅಪಾಯಕಾರಿಯಾದುದು ಎಂದು ಖ್ಯಾತ ಪರಿಸರ ವಿಜ್ಞಾನಿ, ಪರಿಸರಕ್ಕೆ ಸಂಬಂಧಿಸಿದ ‘ಮ್ಯಾಪಿಂಗ್ ಮಲೆನಾಡು’ನ ಸಂಪಾದಕಿ ನಿರ್ಮಲಾ ಗೌಡ ಹೇಳಿದ್ದಾರೆ. ಉಡುಪಿಯ ಮಾನವ ಹಕ್ಕುಗಳ ಸಂರಕ್ಷಣಾ ಪ್ರತಿಷ್ಠಾನ ಹಾಗೂ ವೈಕುಂಠ ಬಾಳಿಗಾ ಕಾನೂನು ಮಹಾವಿದ್ಯಾಲಯ ಉಡುಪಿ ಇವುಗಳ ಜಂಟಿ ಆಶ್ರಯದಲ್ಲಿ ಕಾಲೇಜಿನ ಸಭಾಂಗಣದಲ್ಲಿ ಇಂದು ನಡೆದ ಪರಿಸರ ಸಂರಕ್ಷಣೆ ಕುರಿತ ಕಾರ್ಯಾಗಾರದಲ್ಲಿ ‘ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ’ ಹಾಗೂ ಪರಿಸರ ವ್ಯಾಜ್ಯಗಳ ಕುರಿತು ಮಾತನಾಡಿದರು. ಪರಿಸರ ಸೂಕ್ಷ್ಮ ಪ್ರದೇಶವಾದ ಪಶ್ಚಿಮ ಘಟ್ಟಗಳು ಕೇವಲ ಕರ್ನಾಟಕ ಅಥವಾ ಭಾರತಕ್ಕೆ ಸೀಮಿತವಾದ ಪ್ರದೇಶ ವಲ್ಲ. ಅದು ಪ್ರಾಕೃತಿಕವಾಗಿ ಇಡೀ ವಿಶ್ವಕ್ಕೆ ಸಂಬಂಧಿಸಿದ ಅಮೂಲ್ಯ ಸಂಪತ್ತು. ಅದರ ಸಂರಕ್ಷಣೆ ನಮ್ಮೆಲ್ಲಾ ಆದ್ಯ ಕರ್ತವ್ಯವಾಗಿದೆ ಎಂದು ಅವರು ಕಾಲೇಜು ವಿದ್ಯಾರ್ಥಿಗಳನ್ನುದ್ದೇಶಿಸಿ ಹೇಳಿದರು. ಉತ್ತರದ ಗುಜರಾತಿನ ತಾಪಿಯಿಂದ ದಕ್ಷಿಣದ ಕನ್ಯಾಕುಮಾರಿಯವರೆಗೆ ಹರಡಿರುವ ಪಶ್ಚಿಮ ಘಟ್ಟಗಳಲ್ಲಿ ಈಗಾಗಲೇ 59ಕ್ಕೂ ಅಧಿಕ ಅಪರೂಪದ ಪ್ರಾಣಿ ಹಾಗೂ ಸಸ್ಯಪ್ರಬೇಧಗಳು ವಿನಾಶದ ಅಂಚಿನಲ್ಲಿವೆ ಎಂದು ಘೋಷಿಸಲಾಗಿದೆ. ಅವುಗಳಲ್ಲಿ ಕಾಳಿಂಗ, ಪೆಂಗೋಲಿನ್, ಹುಲಿ ಮುಂತಾದವು ಪ್ರಮುಖವಾದವು. ಇಡೀ ಜಗತ್ತಿನಲ್ಲಿ ಸಿಂಗಳೀಕ (ಸಿಂಹ ಬಾಲದ ಮಂಗ)ಗಳು ಇನ್ನೂ ಉಳಿದಿರುವುದು ಉತ್ತರ ಕನ್ನಡದ ಶರಾವತಿ ನದಿ ಪಾತ್ರದಲ್ಲಿ ಮಾತ್ರ. ಇವುಗಳೆಲ್ಲವೂ ಪ್ರಪಂಚದಿಂದಲೇ ಅಳಿದುಹೋಗ ದಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಹೊಣೆಗಾರಿಕೆಯಾಗಿದೆ ಎಂದರು. ತನ್ನದೇ ಕಾನೂನು ಉಲ್ಲಂಘಿಸುತ್ತಿರುವ ಸರಕಾರ: 1972ರಲ್ಲಿ ಜಾರಿಗೆ ಬಂದಿರುವ ವನ್ಯಜೀವಿ ಸಂರಕ್ಷಣಾ ಕಾಯ್ದೆಯ 29ನೇ ಕಲಂನಂತೆ ಈ ಪ್ರದೇಶದಲ್ಲಿ ಯಾವುದೇ ಅಭಿವೃದ್ಧಿ, ನಿರ್ಮಾಣ ಕಾಮಗಾರಿ ನಡೆಸುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಯಾವುದೇ ನವ್ಯಜೀವಿ ಧಾಮಗಳಲ್ಲಿ ಯಾವುದೇ ಮಾನವ ನಿರ್ಮಿತ ಕಟ್ಟಡದ ನಿರ್ಮಾಣ ಮಾಡುವಂತಿಲ್ಲ. ಕೇವಲ ಪ್ರಕೃತಿ, ವನ್ಯಜೀವಿಗಳ ರಕ್ಷಣೆಗೆ ಅಗತ್ಯವಿರುವ ಯೋಜನೆಗಳನ್ನು ಮಾತ್ರ ಇಲ್ಲಿ ಅನುಷ್ಠಾನಗೊಳಿಸಲು ಅವಕಾಶವಿದೆ ಎಂದು ಶರಾವತಿ ಯೋಜನೆ ವಿರುದ್ಧ ನ್ಯಾಯಾಲಯದಲ್ಲಿ ಹೋರಾಟ ನಡೆಸುತ್ತಿರುವ ನಿರ್ಮಲಾ ಗೌಡ ತಿಳಿಸಿದರು. ಆದರೆ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಯನ್ನು ಅನುಷ್ಠಾನ ಗೊಳಿಸಲು ಮುಂದಾಗುವ ಮೂಲಕ ಸರಕಾರ ತಾನೇ ರೂಪಿಸಿದ ಕಾನೂನನ್ನು ಉಲ್ಲಂಘಿಸಲು, ಅಥವಾ ಅದರ ಕಣ್ಣಿಗೆ ಮಣ್ಣೆರಚಲು ಮುಂದಾಗಿದೆ. ಕೆಪಿಸಿಎಲ್ ಮೂಲಕ ಹಮ್ಮಿಕೊಳ್ಳಲಾಗುವ ಈ ಯೋಜನೆಯಲ್ಲಿ ತಲಕಳಲೆ ಹಾಗೂ ಗೇರುಸೊಪ್ಪ ಜಲಾಶಯಗಳ ನಡುವೆ ಸುಮಾರು 10,500 ಕೋಟಿ ರೂ. ವೆಚ್ಚದಲ್ಲಿ ಇದು ನಿರ್ಮಾಣಗೊಳ್ಳಲಿದೆ. ಇದಕ್ಕಾಗಿ 54 ಹೆಕ್ಟೇರ್ ಭೂಪ್ರದೇಶ ಮಾತ್ರ ಬಳಸಿಕೊಳ್ಳಲಾಗುತ್ತದೆ ಎಂದು ಸರಕಾರ ಹೇಳುತ್ತಿದೆ. ಆದರೆ ಯೋಜನೆಯ ವಾಸ್ತವ ಚಿತ್ರಣ ಬೇರೆಯೇ ಇದೆ ಎಂದವರು ವಿವರಿಸಿದರು. ಯೋಜನೆ ಅನುಷ್ಠಾನಗೊಳ್ಳುವುದು ಉತ್ತರ ಕನ್ನಡದ ಹೊನ್ನಾವರ, ಶಿವಮೊಗ್ಗದ ಸಾಗರ ತಾಲೂಕುಗಳ ವ್ಯಾಪ್ತಿ ಯಲ್ಲಿ ಶರಾವತಿ ನದಿ ಪಾತ್ರದಲ್ಲಿ. 2000 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸಲು ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಯನ್ನು ಶತಾಯಗತಾಯ ಜಾರಿಗೊಳಿಸಲು ಸರಕಾರ ಮುಂದಾಗಿದೆ. ಆದರೆ ಯೋಜನೆ ನಿರ್ಮಾಣ ಗೊಳ್ಳುವುದು ಭೂಗರ್ಭದಲ್ಲಿ ಸ್ಥಾಪಿಸುವ ವಿದ್ಯುತ್ ಘಟಕದಿಂದ ಎಂದವರು ವಿವರಿಸಿದರು. ಭೂಮಿಯ ಒಳಗೆ ಯೋಜನೆಯ ಕಾಂಕ್ರೀಟ್ ಸ್ಥಾವರ ಮೂರು ಫುಟ್‌ಬಾಲ್ ಮೈದಾನದಷ್ಟು ಉದ್ದವಾಗಿ, 18 ಮಾಳಿಗೆ ಕಟ್ಟಡದಷ್ಚು ಎತ್ತರವಾಗಿದೆ ಎಂದು ಸರಕಾರಕ್ಕೆ ಸಲ್ಲಿಸಿರುವ ಯೋಜನಾ ವರದಿಯಲ್ಲಿ ತಿಳಿಸಲಾಗಿದೆ. ಸರಕಾರ ಇದರ ವಿವರಗಳನ್ನೆಲ್ಲಾ ಜನರಿಂದ ಮುಚ್ಚಿಟ್ಟಿದೆ. ಇದರ ನಿರ್ಮಾಣಕ್ಕೆ ಸ್ಫೋಟಕಗಳನ್ನು ಬಳಸಲಾಗು ತಿದ್ದು, ಇದರಿಂದ ಪಶ್ಚಿಮ ಘಟ್ಟದ ಮೇಲಾಗುವ ಪರಿಣಾಮಗಳನ್ನು ಊಹಿಸಿಕೊಂಡರೆ ನಮ್ಮ ಭವಿಷ್ಯದ ಬಗ್ಗೆ ನಡುಕ ಹುಟ್ಟುತ್ತದೆ ಎಂದು ನಿರ್ಮಲಾ ಗೌಡ ನುಡಿದರು. ಇನ್ನು ಈ ಯೋಜನೆಗೆ ಬೇಕಾಗಿರುವ ಟ್ರಾನ್ಸ್‌ಫಾರ್ಮರ್ 20 ಮಾಳಿಗೆ ಕಟ್ಟಡದಷ್ಟು ಎತ್ತರ ಎಂದು ಹೇಳಲಾಗಿದೆ. ಜಗತ್ತಿನ 22 ಪರಿಸರ ಸೂಕ್ಷ್ಮ ಪ್ರದೇಶಗಳಲ್ಲಿ ಒಂದಾಗಿರುವ ಪಶ್ಚಿಮ ಘಟ್ಟದಲ್ಲಿ ಇಂಥ ಯೋಜನೆಯ ಅಗತ್ಯವಿದೆಯೇ ಎಂದವರು ಪ್ರಶ್ನಿಸಿದರು. ನೆಲೆ ಕಳೆದುಕೊಳ್ಳುವ ಜನರು: ಕಲ್ಲಿದ್ದಲು ಗಣಿ ಪ್ರದೇಶಗಳಲ್ಲಿ ಬಳಸುವ ಭಾರೀ ಸ್ಪೋಟಕಗಳನ್ನು ಇಲ್ಲಿ ಬಳಸಲು ಯೋಜನೆಗಳನ್ನು ರೂಪಿಸಲಾಗಿದೆ. ಇದರಿಂದ ಮುಂದೆ ಇಡೀ ಪಶ್ಚಿಮಘಟ್ಟದ ಸಮತೋಲನವೇ ತಪ್ಪಿ ಉದ್ದಕ್ಕೂ ಭೂಕುಸಿತದಂಥ (ಕೇರಳ ವಯನಾಡಿನಲ್ಲಿ ಆದಂತೆ) ಅನಾಹುತಗಳಾಗುವುದು ಖಂಡಿತ ಎಂದರು. ಇದರೊಂದಿಗೆ ನದಿ ಉಗಮಗಳಲ್ಲಿರುವ ನೀರಿನೊಸರೆಗಳು ಮಾಯವಾಗಿ ನದಿಗಳೇ ಬತ್ತಿಹೋಗಲಿವೆ. ಇಂಗಾಲದ ಡೈಆಕ್ಸೈಡ್‌ನ್ನು ಹಿಡಿದಿಟ್ಟುಕೊಳ್ಳುವ ಮರಗಳ ಸಾಮರ್ಥ್ಯ ಇಲ್ಲವಾಗಿ ಹವಾಮಾನ ವೈಪರಿತ್ಯಕ್ಕೆ ಕಾರಣವಾಗುತ್ತದೆ. ನದಿಗಳನ್ನೇ ಅವಲಂಬಿಸಿರುವ ಜನರು ತಮ್ಮ ನೆಲೆಗಳನ್ನು ಕಳೆದುಕೊಳ್ಳುವ ಸ್ಥಿತಿಗೆ ಬರಬಹುದು ಎಂದರು. ತಡೆಯಾಜ್ಞೆ: ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಯ ವಿರುದ್ಧ ಈಗಾಗಲೇ ಹೂಡಿರುವ ದಾವೆಯಲ್ಲಿ ಕರ್ನಾಟಕ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ಕೇಂದ್ರ ವನ್ಯಜೀವಿ ಮಂಡಳಿ ಯೋಜನೆಗೆ ಇನ್ನೂ ಅನುಮೋದನೆ ನೀಡಿಲ್ಲ, ಪರಿಶೀಲನೆಯಲ್ಲಿದೆ ಎಂದು ಕೇಂದ್ರ ಸರಕಾರದ ಹೆಚ್ಚುವರಿ ಸಾಲಿಸಿಟರ್ ಜನರಲ್ ಹೈಕೋರ್ಟ್‌ಗೆ ತಿಳಿಸಿದ್ದಾರೆ. ಇದೇ ರೀತಿಯ ಅಥವಾ ಇದಕ್ಕಿಂತಲೂ ಅಧಿಕ ಅಪಾಯ ಪ್ರಸ್ತಾವಿತ ವಾರಾಹಿ ಪಂಪ್ಡ್ ಸ್ಟೋರೇಜ್ ಯೋಜನೆ ಯಲ್ಲಿದೆ. ಇದು ಸಹ ಮೂಕಾಂಬಿಕಾ ಅಭಯಾರಣ್ಯದಲ್ಲಿ ಬರುತ್ತದೆ. ವಿಚಿತ್ರವೆಂದರೆ ಈ ಯೋಜನೆಯಲ್ಲಿ 75 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸಲು 100 ಮೆಗಾವ್ಯಾಟ್‌ನ್ನು ಬಳಸಬೇಕಾಗುತ್ತದೆ ಎಂದು ನಿರ್ಮಲಾ ಗೌಡ ಹೇಳಿದರು. ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ವಿರುದ್ಧ ನ್ಯಾಯಾಲಯದಲ್ಲಿ ದಾವೆ ಹೂಡಿದವರಲ್ಲಿ ಒಬ್ಬರಾದ ಫೌಂಡೇಷನ್‌ನ ಅಧ್ಯಕ್ಷ ಡಾ.ರವೀಂದ್ರನಾಥ ಶ್ಯಾನುಭಾಗ್ ಪ್ರಾಸ್ತಾವಿಕವಾಗಿ ಮಾತನಾಡಿ, ತಾವೇ ರೂಪಿಸಿದ ಪರಿಸರ ರಕ್ಷಣಾ ಕಾಯಿದೆಗಳನ್ನು ಅವೈಜ್ಞಾನಿಕ ಯೋಜನೆಗಳ ಮೂಲಕ ಸರಕಾರಿ ಸಂಸ್ಥೆಗಳೇ ಉಲ್ಲಂಘಿಸುತ್ತಿರುವುದು ವಿಪರ್ಯಾಸ ಎಂದರು. ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಸುರೇಖಾ ಅಧ್ಯಕ್ಷತೆ ವಹಿಸಿದ್ದರು. ವಿದ್ಯಾರ್ಥಿನಿ ಕವಿತಾ ಅತಿಥಿಗಳನ್ನು ಪರಿಚಯಿಸಿದರು.

ವಾರ್ತಾ ಭಾರತಿ 25 Mar 2026 9:34 pm

ಸರ್ಕಾರ ಸಾಲದ ಮೇಲೆ ನಡೆಯುತ್ತಿದೆ ಎಂಬುದು ಸುಳ್ಳು: ವಿರೋಧ ಪಕ್ಷಗಳಿಗೆ ಸಿಎಂ ಸಿದ್ದರಾಮಯ್ಯ ತಿರುಗೇಟು

ಬೆಂಗಳೂರು: ರಾಜ್ಯ ಸರ್ಕಾರದ ಆರ್ಥಿಕ ಶಿಸ್ತು ಮತ್ತು ಗ್ಯಾರಂಟಿ ಯೋಜನೆಗಳ ಕುರಿತಾದ ಟೀಕೆಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಧಾನಸಭೆಯಲ್ಲಿ ಅಂಕಿ-ಅಂಶಗಳ ಸಮೇತ ಉತ್ತರ ನೀಡಿದ್ದಾರೆ. ಸಾಲದ ಮೇಲೆ ಸರ್ಕಾರ ನಡೆಯುತ್ತಿದೆ ಎಂಬ ಮಾತು ಸತ್ಯಕ್ಕೆ ದೂರವಾಗಿದ್ದು, ಅಭಿವೃದ್ಧಿ ಮತ್ತು ಸಮಾಜ ಕಲ್ಯಾಣಕ್ಕಾಗಿ ನಿಯಮದ ಮಿತಿಯಲ್ಲೇ ಸಾಲ ಮಾಡಲಾಗುತ್ತಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಸಾಲ ಮಾಡುವುದು ಅನಿವಾರ್ಯ ಯಾವುದೇ

ಒನ್ ಇ೦ಡಿಯ 25 Mar 2026 9:22 pm

ಪಾಕಿಸ್ತಾನಕ್ಕೆ ಹೋಗುತ್ತಿದ್ದ ಹಡಗನ್ನು ಹಾರ್ಮುಝ್ ನಲ್ಲಿ ತಡೆಹಿಡಿದ ಇರಾನ್;‌ ವರದಿ

ಟೆಹ್ರಾನ್: ಅನುಮತಿ ಪಡೆದಿಲ್ಲ ಎಂಬ ಕಾರಣಕ್ಕೆ ಪಾಕಿಸ್ತಾನಕ್ಕೆ ಪ್ರಯಾಣಿಸುತ್ತಿದ್ದ ಕಂಟೈನರ್ ಹಡಗನ್ನು ಹಾರ್ಮುಝ್ ಜಲಸಂಧಿಯಲ್ಲಿ ಇರಾನ್ ತಡೆಹಿಡಿದಿರುವುದಾಗಿ ವರದಿಯಾಗಿದೆ. ಯುಎಇಯ ಶಾರ್ಜಾದಿಂದ ಕರಾಚಿಗೆ ಸಾಗುತ್ತಿದ್ದ ʼಸೆಲೆನ್' ಎಂಬ ಹಡಗನ್ನು ಸಾರಿಗೆ ಅನುಮತಿ ಇಲ್ಲದ ಕಾರಣ ಹಾರ್ಮುಝ ಜಲಸಂಧಿಯ ಪ್ರವೇಶ ಮಾರ್ಗದಲ್ಲಿ ತಡೆದು ನಿಲ್ಲಿಸಿ ಹಿಂದಕ್ಕೆ ಕಳುಹಿಸಲಾಗಿದೆ. ಕಾನೂನು ಶಿಷ್ಟಾಚಾರವನ್ನು ಅನುಸರಿಸಲು ವಿಫಲವಾಗಿರುವುದು ಮತ್ತು ಜಲಸಂಧಿಯ ಮೂಲಕ ಹಾದು ಹೋಗಲು ಅನುಮತಿಯ ಕೊರತೆಯಿಂದ ಈ ಕ್ರಮ ಕೈಗೊಳ್ಳಲಾಗಿದೆ. ಈ ಜಲಮಾರ್ಗದ ಮೂಲಕ ಯಾವುದೇ ಹಡಗು ಹಾದುಹೋಗಲು ಇರಾನ್‍ನ ಕಡಲ ಪ್ರಾಧಿಕಾರದೊಂದಿಗೆ ಸಂಪೂರ್ಣ ಸಮನ್ವಯತೆ ಮತ್ತು ಇರಾನ್‍ನ ಉದಾತ್ತ ಜನರ ಬೆಂಬಲದ ಅಗತ್ಯವಿರುತ್ತದೆ ಎಂದು ಇಸ್ಲಾಮಿಕ್ ರೆವೊಲ್ಯುಷನರಿ ಗಾರ್ಡ್ ಕಾಪ್ರ್ಸ್(IRGC)ನ ನೌಕಾದಳದ ಕಮಾಂಡರ್ ʼಎಕ್ಸ್'ನಲ್ಲಿ ಪೋಸ್ಟ್ ಮಾಡಿದ್ದಾರೆ. ಇರಾನ್‍ನಲ್ಲಿನ ಯುದ್ಧವನ್ನು ಕೊನೆಗೊಳಿಸುವ ನಿಟ್ಟಿನಲ್ಲಿ ಇರಾನ್-ಅಮೆರಿಕ ನಡುವಿನ ಮಾತುಕತೆಗೆ ಮಧ್ಯಸ್ಥಿಕೆ ವಹಿಸುವುದಾಗಿ ಪಾಕಿಸ್ತಾನ ಘೋಷಿಸಿದ ಬಳಿಕ ಈ ಬೆಳವಣಿಗೆ ನಡೆದಿದೆ.

ವಾರ್ತಾ ಭಾರತಿ 25 Mar 2026 9:14 pm

ಎರಡು ಹೆಸರು, ಎರಡು ಆಧಾರ್ ಕಾರ್ಡ್! ನಾನಾ ವೇಷ ಹಾಕಿ 100 ಕೋಟಿ ರೂ ವಂಚಿಸಿದ್ದ ಐಶ್ವರ್ಯಾಗೌಡ ಬಗ್ಗೆ ಸಿಐಡಿ ಹೇಳುತ್ತಿರುವುದೇನು?

Aishwarya Gowda And KN Harish- 'ಗೋಲ್ಡ್‌' ವಂಚನೆ ಆರೋಪ ಎದುರಿಸುತ್ತಿರುವ ಐಶ್ವರ್ಯಾ ಗೌಡ ಮತ್ತು ಅವರ ಪತಿ ಹರೀಶ್ ಅವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಸೆಷನ್ಸ್ ನ್ಯಾಯಾಲಯ ವಜಾಗೊಳಿಸಿದೆ. ಹೀಗಾಗಿ ರಾಜಕಾರಣಿಗಳ ಹೆಸರನ್ನು ದುರ್ಬಳಕೆ ಮಾಡಿಕೊಂಡು, ನಕಲಿ ದಾಖಲೆ ಹಾಗೂ ಐಷಾರಾಮಿ ಜೀವನದ ಮೂಲಕ ಜನರನ್ನು ನಂಬಿಸಿ ವಂಚಿಸುತ್ತಿದ್ದ ಈ ದಂಪತಿಗೆ ಈಗ ಬಂಧನದ ಭೀತಿ ಎದುರಾಗಿದೆ. ತನಿಖೆಗೆ ಸಹಕರಿಸದ ಮತ್ತು ಹೈಕೋರ್ಟ್ ಆದೇಶ ದುರ್ಬಳಕೆ ಮಾಡಿಕೊಂಡ ಆರೋಪದ ಹಿನ್ನೆಲೆಯಲ್ಲಿ ಸಿಐಡಿ ಇವರನ್ನು ಕಸ್ಟಡಿಗೆ ಪಡೆದು ವಿಚಾರಣೆ ನಡೆಸಲು ಸಜ್ಜಾಗಿದೆ.

ವಿಜಯ ಕರ್ನಾಟಕ 25 Mar 2026 9:14 pm

Bengaluru | ಹಳೆಯ ಮೀಸಲಾತಿಯನ್ನೇ ಜಾರಿಗೊಳಿಸಲು ಒತ್ತಾಯಿಸಿ ರಾಜ್ಯ ಬಲಗೈ ಸಮುದಾಯಗಳ ಒಕ್ಕೂಟದಿಂದ ಬೃಹತ್ ಧರಣಿ ಸತ್ಯಾಗ್ರಹ

ಬೆಂಗಳೂರು : ಪರಿಶಿಷ್ಟ ಜಾತಿಗಳ ಒಳಮೀಸಲಾತಿ ರಹಿತವಾಗಿ ಹಳೆಯ ಮೀಸಲಾತಿಯನ್ನೇ ಜಾರಿಗೊಳಿಸಬೇಕು ಎಂದು ಆಗ್ರಹಿಸಿ ‘ಕರ್ನಾಟಕ ರಾಜ್ಯ ಬಲಗೈ ಸಮುದಾಯಗಳ ಒಕ್ಕೂಟ’ದ ವತಿಯಿಂದ ಬುಧವಾರ ನಗರದ ಸ್ವಾತಂತ್ರ್ಯ ಉದ್ಯಾನವನದಲ್ಲಿ ಬೃಹತ್ ಧರಣಿ ಸತ್ಯಾಗ್ರಹ ನಡೆಸಲಾಯಿತು. ನ್ಯಾ.ನಾಗಮೋಹನ್‍ದಾಸ್ ಆಯೋಗದ ವರದಿ ಅವೈಜ್ಞಾನಿಕ, ಅಪೂರ್ಣ ಮತ್ತು ಪಕ್ಷಪಾತದದ್ದು. ಆದ್ದರಿಂದ ನ್ಯಾ.ನಾಗಮೋಹನ್‍ದಾಸ್ ವರದಿಯನ್ನು ರಾಜ್ಯ ಸರಕಾರ ತಿರಸ್ಕರಿಸಬೇಕು. ಹಿಂದುಳಿದ ವರ್ಗಗಳ ಆಯೋಗದ ಕುಟುಂಬ ಸಮೀಕ್ಷೆ ಅಂಕಿಅಂಶಗಳೊಂದಿಗೆ ವರದಿ ಹೋಲಿಕೆ ಮಾಡಬೇಕು. ವ್ಯತ್ಯಾಸ ಕಂಡುಬಂದರೆ ಪರಿಶಿಷ್ಟ ಜಾತಿ ಕುಟುಂಬಗಳ ಮರು ಸಮೀಕ್ಷೆ ನಡೆಸಬೇಕು ಎಂದು ಹೋರಾಟನಿರತರು ಆಗ್ರಹಿಸಿದರು. 2025ರ ಸೆ.3ರಂದು ಹೊರಡಿಸಿದ ಮೀಸಲಾತಿ ಆದೇಶವನ್ನು ಹಿಂಪಡೆಯಬೇಕು. ಜಾತಿ ಪ್ರಮಾಣ ಪತ್ರಗಳನ್ನು ಎ ಬಿ ಸಿ ಪ್ರವರ್ಗವಾಗಿ ವರ್ಗೀಕರಣ ಮಾಡಿರುವ ಕ್ರಮ ಹಿಂಪಡೆಯಬೇಕು. ಮೂಲ ಜಾತಿ ಹೆಸರುಗಳೊಂದಿಗೆ ಜಾತಿ ಪ್ರಮಾಣ ಪತ್ರ ನೀಡಬೇಕು. ಈಗಾಗಲೇ ನೀಡಿರುವ ಖಾಯಂ ಜಾತಿ ಪ್ರಮಾಣ ಪತ್ರಗಳನ್ನು ಮಾನ್ಯಗೊಳಿಸಲು ಸೂಚನೆ ನೀಡಬೇಕು. ಬಲಗೈ ಸಮುದಾಯಕ್ಕೆ ಸೇರಿದ 63 ಜಾತಿಗಳಿಗೆ ಉದ್ಯೋಗ, ಶಿಕ್ಷಣ ಸೌಲಭ್ಯಕ್ಕಾಗಿ ಅಧಿಸೂಚನೆ ಹೊರಡಿಸಬೇಕು ಎಂದು ಒತ್ತಾಯಿಸಿದರು. ಈ ವೇಳೆ ಮಾತನಾಡಿದ ಒಕ್ಕೂಟದ ಅಧ್ಯಕ್ಷ, ಮೈಸೂರಿನ ಉರಿಲಿಂಗಪೆದ್ದಿ ಮಠದ ಶ್ರೀಜ್ಞಾನಪ್ರಕಾಶ್ ಸ್ವಾಮೀಜಿ ಮಾತನಾಡಿ, ‘ಅವೈಜ್ಞಾನಿಕ, ಅಪೂರ್ಣ, ದೋಷಪೂರಿತ, ಪಕ್ಷಪಾತದಿಂದ ಕೂಡಿರುವ ನ್ಯಾ.ನಾಗಮೋಹನ ದಾಸ್ ಆಯೋಗದ ವರದಿ ತಿರಸ್ಕಾರ ಮಾಡಬೇಕು. ಸರಕಾರ ಕೂಡಲೇ ನಮ್ಮ ಬೇಡಿಕೆಗಳನ್ನ ಈಡೇರಸಬೇಕು. ಸ್ಥಳಕ್ಕೆ ಸಿಎಂ ಸಿದ್ದರಾಮಯ್ಯ ಅವರೇ ಬರಬೇಕು ಎಂದು ಒತ್ತಾಯಿಸಿದರು. ರಾಜ್ಯ ಸಂಚಾಲಕ ಸಿದ್ದಯ್ಯ ಮಾತನಾಡಿ, ‘ಬಲಗೈ ಸಮುದಾಯಕ್ಕೆ ನಾಗಮೋಹನ್‍ದಾಸ್ ಆಯೋಗ ಹಲವಾರು ರೀತಿ ಅನ್ಯಾಯ ಮಾಡಿದೆ. ನಮ್ಮ ಹಕ್ಕು-ಅನ್ಯಾಯವನ್ನು ನಾವೂ ಪ್ರತಿಪಾದಿಸಬೇಕಾಗಿದೆ. ಆಯೋಗ ಸಂಪೂರ್ಣವಾಗಿ ದತ್ತಾಂಶವನ್ನು ಕ್ರೋಡಿಕರಿಸಿ, ವೈಜ್ಞಾನಿಕವಾಗಿ ಸಮೀಕ್ಷೆ ಮಾಡಿದ್ದರೆ ನಾವು ಪ್ರತಿಭಟನೆ ಮಾಡಬೇಕಾಗಿರಲಿಲ್ಲ. ಸುಪ್ರೀಂ ಕೋರ್ಟ್ ಎಲ್ಲ ಜಾತಿಗಳಿಗೆ ಸೂಕ್ತ ಪ್ರಾತಿನಿಧ್ಯ ಸಿಗಬೇಕೆಂದು ಹೇಳಿದೆ, ಸಮೀಕ್ಷೆ ಅಗತ್ಯವಾಗಿ ವೈಜ್ಞಾನಿಕವಾಗಿ, ಸಮರ್ಪಕವಾಗಿ ಮಾಡಬೇಕೆಂದು ಹೇಳಿದೆ. ಈ ಆದೇಶದ ಪ್ರಕಾರ ನಮ್ಮ ಸರಕಾರ ಆಯೋಗ ರಚನೆ ಮಾಡಿತ್ತು. ವೈಜ್ಞಾನಿಕವಾಗಿ ಸಮಾನ ಜಾತಿಗಳನ್ನ ಒಗ್ಗೂಡಿಸಿ ವರ್ಗಿಕರಣ ಮಾಡಬೇಕಿತ್ತು ಎಂದು ಹೇಳಿದರು. ರಾಜ್ಯದ ವಿವಿಧ ಭಾಗಗಳಿಂದ ಬಂದಿದ್ದ ಸಾವಿರಾರು ಬಲಗೈ ಸಮುದಾಯದವರು ಭಾಗವಹಿಸಿದ್ದರು.   ಸಂಪುಟ ಸಭೆಯಲ್ಲಿ ವಿಸ್ತೃತ ಚರ್ಚೆ: ‘ಪರಿಶಿಷ್ಟ ಜಾತಿಗಳ ಒಳಮೀಸಲಾತಿಗೆ ಸಂಬಂಧಿಸಿದಂತೆ ರಾಜ್ಯ ಸರಕಾರವು ಎಲ್ಲ ಒಳಪಂಗಡಗಳ ಹಿತಾಸಕ್ತಿಯನ್ನೂ ಪರಿಗಣನೆಗೆ ತೆಗೆದುಕೊಳ್ಳಲಿದೆ. ಮಾ.27ರ ಶುಕ್ರವಾರ ಮುಖ್ಯಮಂತ್ರಿ ಸಿದ್ದರಾಮಯ್ಯರ ಅಧ್ಯಕ್ಷತೆಯಲ್ಲಿ ನಡೆಯುವ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ಈ ವಿಚಾರವಾಗಿ ಪ್ರತಿಯೊಂದು ಸಾಧಕ-ಬಾಧಕಗಳನ್ನು ವಿಸ್ತೃತ ವಾಗಿ ಚರ್ಚಿಸಲಾಗುವುದು. ನಂತರ ಎಲ್ಲರಿಗೂ ನ್ಯಾಯ ಸಿಗುವಂತಹ ಸೂತ್ರವನ್ನು ರೂಪಿಸಲಾಗುವುದು’ ಎಂದು ಬೃಹತ್ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ತಿಳಿಸಿದ್ದಾರೆ. ಬಲಗೈ ಸಮುದಾಯಗಳ ಒಕ್ಕೂಟ ನಗರದ ಫ್ರೀಡಂ ಪಾರ್ಕ್‍ನಲ್ಲಿ ನಡೆಸುತ್ತಿದ್ದ ಧರಣಿ ಸ್ಥಳಕ್ಕೆ ಭೇಟಿ ನೀಡಿ ಮನವಿ ಸ್ವೀಕರಿಸಿ ಮಾತನಾಡಿದ ಪಾಟೀಲ್, ರಾಜ್ಯದ ಕಾಂಗ್ರೆಸ್ ಸರಕಾರವು ಬುದ್ಧ, ಬಸವ ಮತ್ತು ಅಂಬೇಡ್ಕರ್ ತತ್ವಗಳಲ್ಲಿ ನಂಬಿಕೆ ಇಟ್ಟುಕೊಂಡಿದೆ. ಹೀಗಾಗಿ ನಾವು ಯಾವುದೇ ಸಮುದಾಯಕ್ಕೂ ಅನ್ಯಾಯವಾಗಲು ಬಿಡುವುದಿಲ್ಲ. ಆದರೆ ಯಾವುದೇ ಉಪಕ್ರಮವನ್ನು ಜಾರಿಗೆ ತರುವ ಮೊದಲು ಎಲ್ಲ ಬಗೆಯಿಂದಲೂ ಚರ್ಚಿಸಬೇಕಾಗುತ್ತದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್, ಜ್ಞಾನಪ್ರಕಾಶ ಸ್ವಾಮೀಜಿ, ಬಿಬಿಎಂಪಿ ಮಾಜಿ ಮೇಯರ್ ಸಂಪತ್ ರಾಜ್ ಮತ್ತಿತರರು ಹಾಜರಿದ್ದರು.

ವಾರ್ತಾ ಭಾರತಿ 25 Mar 2026 9:07 pm

ಇರಾನ್ ಮೇಲಿನ ದಾಳಿಗೆ 59% ಅಮೆರಿಕನ್ನರ ವಿರೋಧ: ಸಮೀಕ್ಷೆಯ ವರದಿ

ವಾಶಿಂಗ್ಟನ್: ಅಸೋಸಿಯೇಟೆಡ್ ಪ್ರೆಸ್- ಎನ್‍ಒಆರ್‍ಸಿ ಸೆಂಟರ್ ಫಾರ್ ಪಬ್ಲಿಕ್ ಅಫೇರ್ಸ್ ರಿಸರ್ಚ್ ಸಂಸ್ಥೆ ಇತ್ತೀಚೆಗೆ ನಡೆಸಿದ ಸಮೀಕ್ಷೆಯ ಪ್ರಕಾರ ಇರಾನ್ ವಿರುದ್ಧದ ಅಮೆರಿಕದ ಮಿಲಿಟರಿ ಕ್ರಮಗಳು ʼಅತಿಯಾಗಿವೆ' ಎಂದು ಬಹುತೇಕ ಅಮೆರಿಕನ್ನರು ಅಭಿಪ್ರಾಯಪಟ್ಟಿದ್ದಾರೆ. ಅಮೆರಿಕದ ಹೊರಗೆ ಮಿಲಿಟರಿ ಬಲದ ಬಳಕೆಯ ಬಗ್ಗೆ ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳುವ ಟ್ರಂಪ್ ಅವರ ಸಾಮರ್ಥ್ಯದ ಬಗ್ಗೆ ಅಮೆರಿಕನ್ನರು ವ್ಯಾಪಕವಾಗಿ ಭಯಪಡುತ್ತಾರೆ ಮತ್ತು ನೆಲದ ಪಡೆಗಳನ್ನು(ಗ್ರೌಂಡ್ ಫೋರ್ಸ್) ನಿಯೋಜಿಸುವಂತಹ ಆಕ್ರಮಣಕಾರಿ ಕ್ರಮಗಳನ್ನು ಅವರು ಹೆಚ್ಚಾಗಿ ವಿರೋಧಿಸುತ್ತಾರೆ ಎಂದು ಸಮೀಕ್ಷೆ ತಿಳಿಸಿದೆ. ಅಮೆರಿಕ ಮತ್ತು ಇಸ್ರೇಲ್ ಪ್ರಾರಂಭಿಸಿದ ಯುದ್ಧವು ನಾಲ್ಕನೇ ವಾರಕ್ಕೆ ಮುಂದುವರಿದಿರುವ ಸಂದರ್ಭದಲ್ಲಿ ನಡೆಸಿದ ಸಮೀಕ್ಷೆಯು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಅನುಮೋದನೆಯ ರೇಟಿಂಗ್ ಸ್ಥಿರವಾಗಿದ್ದರೂ, ಸಂಘರ್ಷವು ಅವರ ರಿಪಬ್ಲಿಕನ್ ಆಡಳಿತಕ್ಕೆ ಪ್ರಮುಖ ರಾಜಕೀಯ ಹೊಣೆಗಾರಿಕೆಯಾಗಿ ಬದಲಾಗಬಹುದು ಎಂದು ಸೂಚಿಸಿದೆ. ಟ್ರಂಪ್ ಮಧ್ಯಪ್ರಾಚ್ಯಕ್ಕೆ ಮತ್ತಷ್ಟು ಸಮರ ನೌಕೆಗಳು ಮತ್ತು ತುಕಡಿಗಳನ್ನು ನಿಯೋಜಿಸುತ್ತಿರುವಂತೆಯೇ, ಇರಾನ್‍ನಲ್ಲಿ ಅಮೆರಿಕದ ಮಿಲಿಟರಿ ಕ್ರಮಗಳು ʼಅತಿಯಾಗಿವೆ' ಎಂದು 59% ಅಮೆರಿಕನ್ನರು ಅಭಿಪ್ರಾಯಪಟ್ಟಿದ್ದಾರೆ. 45% ಜನರು ಮುಂದಿನ ಕೆಲವು ತಿಂಗಳುಗಳಲ್ಲಿ ಗ್ಯಾಸ್ ಪಡೆಯಲು ಸಾಧ್ಯವಾಗುವ ಬಗ್ಗೆ ಅತ್ಯಂತ ಕಾಳಜಿ ಹೊಂದಿದ್ದಾರೆ. ಆದರೆ ಟ್ರಂಪ್ ಅವರ ಒಂದು ಉದ್ದೇಶಕ್ಕೆ (ಇರಾನ್ ಪರಮಾಣು ಅಸ್ತ್ರವನ್ನು ಹೊಂದದಂತೆ ತಡೆಯುವುದು) ಹೆಚ್ಚಿನ ಅಮೆರಿಕನ್ನರ ಬೆಂಬಲವಿದೆ. ಇದು ಅತ್ಯಂತ ಪ್ರಮುಖ ವಿದೇಶಾಂಗ ನೀತಿಯ ಗುರಿಯಾಗಿರಬೇಕು. ಇದೇ ವೇಳೆ, ಅನಿಲ ಮತ್ತು ತೈಲ ಬೆಲೆಗಳು ಏರದಂತೆ ಗಮನ ವಹಿಸುವುದೂ ಅತ್ಯಗತ್ಯ ಎಂದು ಮೂರನೇ ಎರಡರಷ್ಟು ಅಮೆರಿಕನ್ನರು ಅಭಿಪ್ರಾಯಪಟ್ಟಿದ್ದಾರೆ. ಅಮೆರಿಕಾದ 40% ವಯಸ್ಕರು ಅಧ್ಯಕ್ಷರಾಗಿ ಟ್ರಂಪ್ ಅವರ ಕಾರ್ಯಕ್ಷಮತೆಯನ್ನು ಅನುಮೋದಿಸಿದ್ದಾರೆ. ಇರಾನ್ ಯುದ್ಧವು ಶೀಘ್ರದಲ್ಲೇ ಕೊನೆಗೊಳ್ಳುತ್ತದೆಯೇ ಎಂಬ ಕುರಿತು ಟ್ರಂಪ್ ಮಿಶ್ರ ಸಂದೇಶಗಳನ್ನು ನೀಡುತ್ತಿರುವಂತೆಯೇ, ಡೆಮಾಕ್ರಟಿಕ್ ಪಕ್ಷದ 10 ಸದಸ್ಯರಲ್ಲಿ 9 ಮತ್ತು ಸ್ವತಂತ್ರ 10 ಸದಸ್ಯರಲ್ಲಿ 6 ಮಂದಿ ಇರಾನ್ ದಾಳಿಗಳು ʼಮಿತಿ ಮೀರಿವೆ' ಎಂದು ಅಭಿಪ್ರಾಯಪಟ್ಟಿರುವುದಾಗಿ ಸಮೀಕ್ಷೆಯ ವರದಿ ತಿಳಿಸಿದೆ.

ವಾರ್ತಾ ಭಾರತಿ 25 Mar 2026 9:06 pm

ಇಸ್ರೇಲ್‌ ಗಾಝಾದಲ್ಲಿ ನಡೆಸುತ್ತಿರುವ ನರಮೇಧದಲ್ಲಿ ಭಾರತೀಯ ಕಂಪೆನಿಗಳು ಭಾಗಿಯಾಗಿವೆಯೇ?

ಹಾಜಿರಾ ಪುತ್ತಿಗೆ ಅವರೊಂದಿಗೆ thewire.in ಸಂದರ್ಶನದ ಆಯ್ದ ಭಾಗ ಇಲ್ಲಿದೆ...

ವಾರ್ತಾ ಭಾರತಿ 25 Mar 2026 9:02 pm

Budget Session 2026 | ಸ್ಥಳೀಯ ಚುನಾವಣೆಗಳಲ್ಲಿ ಮತಪತ್ರ ಬಳಕೆ ಮಾಡುವ ವಿಧೇಯಕ ಮೇಲ್ಮನೆಯಲ್ಲಿ ಅಂಗೀಕಾರ

ಬೆಂಗಳೂರು : ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಇಲೆಕ್ಟ್ರಾನಿಕ್ ಮತಯಂತ್ರದ (ಇವಿಎಂ) ಬದಲಾಗಿ ಮತಪತ್ರ (ಬ್ಯಾಲೆಟ್ ಪೇಪರ್) ಬಳಕೆಗೆ ಅವಕಾಶ ಕಲ್ಪಿಸುವ ‘2026ನೇ ಸಾಲಿನ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ (ತಿದ್ದುಪಡಿ) ವಿಧೇಯಕ’ವನ್ನು ಪ್ರತಿಪಕ್ಷಗಳ ಸದಸ್ಯರ ಸಭಾತ್ಯಾಗದ ನಡುವೆಯೂ ಮೇಲ್ಮನೆಯಲ್ಲಿ ಅಂಗೀಕಾರ ಮಾಡಲಾಯಿತು. ಬುಧವಾರ ವಿಧಾನ ಪರಿಷತ್ತಿನ ಕಲಾಪದ ವೇಳೆ ವಿಧೇಯಕವನ್ನು ಮಂಡಿಸಿ ಮಾತನಾಡಿದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ, ‘ನಾವು ತಂತ್ರಜ್ಞಾನ ವಿರೋಧಿಗಳಲ್ಲ, ಆದರೆ ಚುನಾವಣಾ ಪ್ರಕ್ರಿಯೆಯಲ್ಲಿ ಯಾವುದೇ ಅನುಮಾನಕ್ಕೆ ಅವಕಾಶವಿರಬಾರದು. ವಿಜ್ಞಾನದ ವಿದ್ಯಾರ್ಥಿಯಾಗಿ ನಾವು ಪ್ರತಿಯೊಂದನ್ನೂ ಪ್ರಶ್ನಿಸಬೇಕು ಮತ್ತು ಉತ್ತರದಾಯಿತ್ವವನ್ನು ಖಚಿತಪಡಿಸಿಕೊಳ್ಳಬೇಕು. ಈ ವಿಧೇಯಕವು ರಾಜ್ಯದ ಸ್ಥಳೀಯ ಸಂಸ್ಥೆಗಳ ಚುನಾವಣಾ ಇತಿಹಾಸದಲ್ಲಿ ಹೊಸ ಮೈಲಿಗಲ್ಲಾಗಲಿದೆ ಎಂದರು. ಪರಿಷತ್ತಿನ ವಿರೋಧ ಪಕ್ಷದ ನಾಯಕ ಛಲವಾದಿ ಟಿ ನಾರಾಯಣ ಸ್ವಾಮಿ ಮಾತನಾಡಿ, ಇ.ವಿ.ಎಂ.ನಲ್ಲಿ ಲೋಪಗಳಿದ್ದರೆ ಸರಿಪಡಿಸಿ ಮುನ್ನೆಡೆಯಿರಿ ಅದು ಬಿಟ್ಟು ಹಿಂದಿನ ದಿನಗಳ ಮತಪತ್ರಗಳಿಗೆ ಮಾರುಹೋಗುವುದು ಸರಿಯಲ್ಲ. ಆದ್ದರಿಂದ ಈ ವಿಧೇಯಕವನ್ನು ನಾವು ವಿರೋಧಿಸಿ, ಸಭಾತ್ಯಾಗ ಮಾಡುತ್ತೇವೆ ಎಂದರು. ವಿರೋಧ ಪಕ್ಷದ ವಿರೋಧ ಮತ್ತು ಸಭಾತ್ಯಾಗದ ನಡುವೆ ಸಭಾಪತಿ ಬಸವರಾಜ ಹೊರಟ್ಟಿ ಧ್ವನಿ ಮತದ ಮೂಲಕ ವಿಧೇಯಕವನ್ನು ಅಂಗೀಕರಿಸಿದರು.  

ವಾರ್ತಾ ಭಾರತಿ 25 Mar 2026 8:57 pm

ಬಿಜೆಪಿ ನಾಯಕನೊಂದಿಗೆ ನಿಕಟ ಸಂಪರ್ಕ ಆರೋಪ: ಭಬಾನಿಪುರದ ಚುನಾವಣಾ ಅಧಿಕಾರಿಯನ್ನು ವಜಾಗೊಳಿಸುವಂತೆ ಇಸಿಗೆ ಟಿಎಂಸಿ ಆಗ್ರಹ

ಕೋಲ್ಕತಾ: ಭವಾನಿಪುರ ವಿಧಾನ ಸಭಾ ಕ್ಷೇತ್ರದ ಚುನಾವಣಾ ಅಧಿಕಾರಿ ಸುರಜಿತ್ ರಾಯ್ ಅವರನ್ನು ವಜಾಗೊಳಿಸುವಂತೆ ಟಿಎಂಸಿ ಚುನಾವಣಾ ಆಯೋಗವನ್ನು ಆಗ್ರಹಿಸಿದೆ. ಸುರಜಿತ್ ರಾಯ್ ಅವರು ಬಿಜೆಪಿ ನಾಯಕ ಸುವೇಂದು ಅಧಿಕಾರಿ ಅವರೊಂದಿಗೆ ನಿಕಟ ಸಂಪರ್ಕ ಹೊಂದಿದ್ದಾರೆ ಎಂದು ಟಿಎಂಸಿ ಆರೋಪಿಸಿದೆ. ಮಾರ್ಚ್ 24ರಂದು ಮುಖ್ಯ ಚುನಾವಣಾ ಆಯುಕ್ತರು ಹಾಗೂ ಪಶ್ಚಿಮಬಂಗಾಳ ಮುಖ್ಯ ಚುನಾವಣಾ ಅಧಿಕಾರಿ ಅವರಿಗೆ ಬರೆದ ಪತ್ರದಲ್ಲಿ ಟಿಎಂಸಿ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸದಸ್ಯ ಡೆರಿಕ್ ಒಬ್ರಿಯಾನ್ ಈ ಆರೋಪ ಮಾಡಿದ್ದಾರೆ. 2011ರ ಬ್ಯಾಚ್‌ನ ಡಬ್ಲ್ಯುಬಿಸಿಎಸ್ ಅಧಿಕಾರಿಯಾದ ಸುರಜಿತ್ ರಾಯ್ ಅವರನ್ನು ಈ ಹಿಂದೆ ನಂದಿಗ್ರಾಮ-2 ಬ್ಲಾಕ್‌ನ ಅಭಿವೃದ್ಧಿ ಅಧಿಕಾರಿಯಾಗಿ ನೇಮಿಸಲಾಗಿತ್ತು. ಅವರು ಸುವೇಂದು ಅಧಿಕಾರಿ ಅವರೊಂದಿಗೆ ನಿಕಟ ಸಂಬಂಧ ಹೊಂದಿದ್ದಾರೆ ಎಂಬುದು ಎಲ್ಲರಿಗೂ ತಿಳಿದಿದೆ ಎಂದು ಅವರು ಹೇಳಿದ್ದಾರೆ. ಸುರಜಿತ್ ರಾಯ್ ಅವರು ಚುನಾವಣಾ ಅಧಿಕಾರಿಯಾಗಿ ಸ್ವತಂತ್ರ್ಯವಾಗಿ ಕೆಲಸ ಮಾಡುವ ಬಗ್ಗೆ ಗಂಭೀರ ಸಂದೇಹಗಳಿವೆ ಎಂದು ಒಬ್ರಿಯಾನ್ ಪತ್ರದಲ್ಲಿ ತಿಳಿಸಿದ್ದಾರೆ.

ವಾರ್ತಾ ಭಾರತಿ 25 Mar 2026 8:56 pm

ಮಂಗಳೂರು: ತಲೆಮರೆಸಿದ್ದ ಆರೋಪಿಯ ಬಂಧನ

ಉಳ್ಳಾಲ: ಮನೆಗೆ ನುಗ್ಗಿ ವ್ಯಕ್ತಿಯೋರ್ವನಿಗೆ ಹಲ್ಲೆ ನಡೆಸಿ ಆತನ ಮೊಬೈಲ್ ಸುಳಿಗೆ ಮಾಡಿದ್ದ ಪ್ರಕರಣದಲ್ಲಿ ತಲೆ ಮರೆಸಿಕೊಂಡಿದ್ದ ಆರೋಪಿಯನ್ನು ಉಳ್ಳಾಲ ಪೊಲೀಸರು ದಸ್ತಗಿರಿ ನಡೆಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ. ಉಳ್ಳಾಲ ಖಿಲ್ರಿಯಾ ನಗರ ನಿವಾಸಿ ನಿಫಾನ್ ಅಹ್ಮದ್ ಪಾಷ (33) ಬಂಧಿತ ಆರೋಪಿ. ಬಂಧಿತ ನಿಫಾನ್ ಫೆಬ್ರವರಿ 5 ರಂದು ಮಧ್ಯರಾತ್ರಿ ತನ್ನ ಸಹವರ್ತಿಗಳಾದ ನಿಝಪತ್ ಅಲಿ ಮತ್ತು ಅಮೀರ್ ಸುಹೈಲ್ ಜೊತೆ ಸೇರಿ ಕೋಟೆಪುರದ ಮಹಮ್ಮದ್ ತಸ್ವೀರ್ ಎಂಬವರ ಮನೆಗೆ ನುಗ್ಗಿದ್ದಲ್ಲದೆ, ತಸ್ವೀರ್ ಗೆ ಹಲ್ಲೆಗೈದು ಅವರ ಮೊಬೈಲ್ ಫೋನನ್ನು ದೋಚಿದ್ದ .ಈ ಕುರಿತಂತೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. 2024 ರ ಡಿಸೆಂಬರ್ ತಿಂಗಳಲ್ಲಿ ತನ್ನ ಕಾರನ್ನು ತಡೆದು ನಿಲ್ಲಿಸಿದ ನೆಪದಲ್ಲಿ ಸಹಚರರೊಂದಿಗೆ ಸೇರಿ ತಲಪಾಡಿ ಟೋಲ್‌ಗೇಟ್ ನ ಸಿಬ್ಬಂದಿಗಳಿಗೂ ಹಲ್ಲೆ ನಡೆಸಿದ ಘಟನೆ ಸಂಬಂಧಿಸಿ ಬಂಧಿತ ಆರೋಪಿ ನಿಫಾನ್ ಅಹ್ಮದ್ ವಿರುದ್ಧ ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ವಾರ್ತಾ ಭಾರತಿ 25 Mar 2026 8:52 pm

‘ಸಾಲದ ಮೇಲೆ ಸರಕಾರ ನಡೆಯುತ್ತಿದೆ’ ಎಂಬುದು ಸತ್ಯಕ್ಕೆ ದೂರ : ಸಿಎಂ ಸಿದ್ದರಾಮಯ್ಯ

ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ 2026-27ನೆ ಸಾಲಿನ ಬಜೆಟ್ ಮೇಲೆ ನಡೆದ ಚರ್ಚೆಗೆ ಸಂಬಂಧಿಸಿದಂತೆ ಬುಧವಾರ ವಿಧಾನಸಭೆಯಲ್ಲಿ ನೀಡಿದ ಉತ್ತರವನ್ನು ವಿರೋಧಿಸಿ ಪ್ರತಿಪಕ್ಷಗಳಾದ ಬಿಜೆಪಿ ಹಾಗೂ ಜೆಡಿಎಸ್ ಸದಸ್ಯರು ವಿಪಕ್ಷ ನಾಯಕ ಆರ್.ಅಶೋಕ್ ನೇತೃತ್ವದಲ್ಲಿ ಸಭಾತ್ಯಾಗ ಮಾಡಿದರು. ಇದಕ್ಕೂ ಮುನ್ನ ಉತ್ತರ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಾಲದ ಮೇಲೆ ಸರಕಾರ ನಡೆಯುತ್ತಿದೆ ಎಂದು ವಿಪಕ್ಷಗಳು ಟೀಕೆ ಮಾಡುತ್ತಿವೆ. ಆದರೆ, ಬಜೆಟ್ ಗಾತ್ರ 4,48,0004 ಕೋಟಿ ರೂ.ಇದ್ದಾಗ, 1.32 ಲಕ್ಷ ಕೋಟಿ ರೂ. ಸಾಲ ಮಾಡಿದ್ದೇವೆ. ಹೀಗಿರುವಾಗ ಇದು ಸಾಲದ ಬಜೆಟ್ ಹೇಗೆ ಆಗಲು ಸಾಧ್ಯ? ಎಂದು ಪ್ರಶ್ನಿಸಿದರು. ಯಾವುದೇ ರಾಜ್ಯ ಅಥವಾ ದೇಶವಾಗಲಿ ಸಾಲ ಮಾಡದಿರಲು ಸಾಧ್ಯವಿಲ್ಲ, ಸಮಾಜ ಕಲ್ಯಾಣ ಹಾಗೂ ಅಭಿವೃದ್ಧಿಗಾಗಿ ಸಾಲ ಮಾಡಬೇಕು. ನಮ್ಮ ಸರಕಾರ ವಿತ್ತೀಯ ನಿರ್ವಹಣೆಯ ನಿಯಮದ ಮಿತಿಯೊಳಗೆ ಸಾಲ ಮಾಡಿದೆ. ಪ್ರಸಕ್ತ ರಾಜ್ಯದ ಮೇಲಿನ ಸಾಲದ ಮೊತ್ತ 8.24 ಲಕ್ಷ ಕೋಟಿ ರೂ.ಗಳಷ್ಟಿದೆ ಎಂದು ಸಿದ್ದರಾಮಯ್ಯ ಹೇಳಿದರು. 2008 ರಿಂದ 2013 ರವರೆಗೆ ಅಧಿಕಾರದಲ್ಲಿದ್ದ ಬಿಜೆಪಿ ಸರಕಾರವು ಸಾಲ ಮಾಡಿದೆ. ಐದು ವರ್ಷಕ್ಕೊಮ್ಮೆ ಸಾಲ ದುಪ್ಪಟ್ಟು ಆಗುತ್ತದೆ. ನರೇಂದ್ರ ಮೋದಿ ಪ್ರಧಾನಿಯಾದ ನಂತರ 165 ಲಕ್ಷ ಕೋಟಿ ರೂ. ಸಾಲ ಮಾಡಿದ್ದಾರೆ. ನಮ್ಮನ್ನು ಪ್ರಶ್ನಿಸುವವರು, ಕೇಂದ್ರ ಸರಕಾರವನ್ನು ಯಾಕೆ ಪ್ರಶ್ನಿಸುವುದಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು. ಗ್ಯಾರಂಟಿಗಳಿಂದ ಸಾಲ ಹೆಚ್ಚಿದೆ ಎಂದು ಟೀಕಿಸಲಾಗಿದೆ. ಇದುವರೆಗೆ 1.31 ಲಕ್ಷ ಕೋಟಿ ರೂ.ಗಳನ್ನು ಗ್ಯಾರಂಟಿಗಳಿಗೆ ವೆಚ್ಚ ಮಾಡಲಾಗಿದೆ. ಮುಂದಿನ ವರ್ಷ 51 ಸಾವಿರ ಕೋಟಿ ರೂ.ಗಳನ್ನು ಖರ್ಚು ಮಾಡುತ್ತೇವೆ. ಮಹಾರಾಷ್ಟ್ರ ಸರಕಾರ, ಜನಕಲ್ಯಾಣ ಯೋಜನೆಗಳಿಗೆ ವರ್ಷದಿಂದ ವರ್ಷಕ್ಕೆ ಅನುದಾನ ಕಡಿಮೆ ಮಾಡಿದೆ. ಆದರೆ, ನಮ್ಮ ಸರಕಾರ ಗ್ಯಾರಂಟಿಗಳಿಗೆ ಪ್ರತಿ ವರ್ಷ ಒಂದೇ ರೀತಿಯಲ್ಲಿ ಅನುದಾನ ನೀಡುತ್ತಿದೆ. ಜೊತೆಗೆ ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತಿದೆ ಎಂದು ಅವರು ತಿಳಿಸಿದರು. ಮೇಕೆದಾಟು ಯೋಜನೆ ಯಾರಿಂದಾಗಿ ನಿಂತಿದೆ?. ಕೇಂದ್ರ ಜಲಶಕ್ತಿ ಸಚಿವರು, ಪ್ರಧಾನಿಯನ್ನು ಭೇಟಿ ಮಾಡಿ ಹಲವು ಬಾರಿ ಮನವಿ ಮಾಡಿದರೂ ಯಾವುದೆ ಸ್ಪಂದನೆ ನೀಡುತ್ತಿಲ್ಲ. ಮಹಾದಾಯಿ ಯೋಜನೆಯಡಿ ನ್ಯಾಯಾಧೀಕರಣ ನಮಗೆ ಹಂಚಿಕೆ ಮಾಡಿರುವ 13.42 ಟಿಎಂಸಿ ನೀರು ಬಳಸಿಕೊಳ್ಳಲು ಕೇಂದ್ರ ಪರಿಸರ ಇಲಾಖೆಯ ತೀರುವಳಿಯನ್ನು ನೀಡುತ್ತಿಲ್ಲ. ಅಧಿಕಾರಕ್ಕೆ ಬಂದ 24 ಗಂಟೆಯೊಳಗೆ ಮಹಾದಾಯಿ ಯೋಜನೆ ಜಾರಿ ಮಾಡುವುದಾಗಿ ರಕ್ತದಲ್ಲಿ ಬರೆದುಕೊಡುತ್ತೇನೆ ಎಂದು ಮಾಜಿ ಸಿಎಂ ಯಡಿಯೂರಪ್ಪ ಹೇಳಿದ್ದರು ಎಂದು ಸಿದ್ದರಾಮಯ್ಯ ಸ್ಮರಿಸಿದರು. ನಮ್ಮದು ವಿತ್ತೀಯ ಕೊರತೆ ಬಜೆಟ್ ಆಗಿದೆ. 2026-27ರ ಬಜೆಟ್ ಅನ್ನು ವಿತ್ತೀಯ ಹೆಚ್ಚಳ ಮಾಡಬೇಕೆಂಬ ಇಚ್ಛೆಯಿದ್ದರೂ, ಕೇಂದ್ರ ಸರಕಾರದ ಅಸಹಕಾರದಿಂದ ಅದು ಸಾಧ್ಯವಾಗಲಿಲ್ಲ. ರಾಜ್ಯದ ಜಿಎಸ್‍ಟಿ ಯಲ್ಲಿ ಶೇ.10ರಷ್ಟು ಬೆಳವಣಿಗೆಯಿತ್ತು, ಆದರೆ ಕೇಂದ್ರ ಸರಕಾರ, ಜಿಎಸ್ಟಿ ದರವನ್ನು ಕಡಿತಗೊಳಿಸಿದ್ದರಿಂದ, ಜಿಎಸ್‍ಟಿ ಬೆಳವಣಿಗೆ ಶೇ.4ಕ್ಕೆ ಕುಸಿಯಿತು. ದೇಶದ ಏಳು ರಾಜ್ಯಗಳು ಕೇಂದ್ರದ ಈ ನೀತಿಯನ್ನು ವಿರೋಧಿಸಿ, ಪರಿಹಾರ ಕೇಳಿವೆ ಎಂದು ಸಿದ್ದರಾಮಯ್ಯ ತಿಳಿಸಿದರು. ಜಿಎಸ್‍ಟಿ ಜಾರಿಯಾದ ನಂತರದಿಂದ 2023-24ರವೆಗೆ ಕೇಂದ್ರ, ಪರಿಹಾರವನ್ನು ನೀಡಿದ್ದು, ನಂತರ ಕಾಂಗ್ರೆಸ್ ಸರಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಾಗ, ಈ ಪರಿಹಾರವನ್ನು ನಿಲ್ಲಿಸಿದೆ. ಇದರಿಂದ ರಾಜ್ಯದ ಬೊಕ್ಕಸಕ್ಕೆ 10 ಸಾವಿರ ಕೋಟಿ ರೂ. ಕಡಿಮೆಯಾಗಿದೆ. 2026-27 ರಲ್ಲಿ ಇದು 15 ಸಾವಿರ ಕೋಟಿ ರೂ.ಗಳಿಗೆ ತಲುಪಬಹುದು ಎಂದು ಮುಖ್ಯಮಂತ್ರಿ ಹೇಳಿದರು. ಬಿಜೆಪಿಯವರ ಅಧಿಕಾರಾವಧಿಯಲ್ಲಿ ಬಿಬಿಎಂಪಿಗೆ ನಾಲ್ಕು ವರ್ಷದಲ್ಲಿ 10,435 ಕೋಟಿ ರೂ. ಅನುದಾನ ನೀಡಲಾಗಿತ್ತು. ನಮ್ಮ ಸರಕಾರ ನಾಲ್ಕು ವರ್ಷದಲ್ಲಿ ಒಟ್ಟು 20,200 ಕೋಟಿ ರೂ.ನೀಡಿದೆ. ಶಿಕ್ಷಣಕ್ಕೆ 65 ಸಾವಿರ ಕೋಟಿ ರೂ.ಖರ್ಚು ಮಾಡಲಾಗಿದ್ದು, 2026-27ರಲ್ಲಿ 72,386 ಕೋಟಿ ರೂ. ಮೀಸಲಿಡಲಾಗಿದೆ. ಸಾಮಾಜಿಕ ಭದ್ರತೆಯ ಯೋಜನೆಗಳಿಗೆ 10,600 ಕೋಟಿ ರೂ. ಮೀಸಲಿಟ್ಟಿದ್ದೇವೆ ಎಂದು ಸಿದ್ದರಾಮಯ್ಯ ತಿಳಿಸಿದರು. ಸಮಾಜದ ಎಲ್ಲ ಅಶಕ್ತರಿಗೆ ಶಕ್ತಿ ತುಂಬಲಾಗುತ್ತಿದೆ. ಬಿಜೆಪಿಯು ‘ಟಿಕಲ್ ಡೌನ್ ಎಕಾನಮಿ’ನಲ್ಲಿ ನಂಬಿಕೆಯಿರಿಸಿದೆ, ನಮ್ಮದು ‘ಯೂನಿವರ್ಸಲ್ ಬೇಸಿಕ್ ಇನ್ಕಂ’ ಹಾಗೂ ಬೇಡಿಕೆಯ ಆರ್ಥಿಕ ತತ್ವವನ್ನು ಆಧರಿಸಿದೆ. ಬುದ್ಧನ ಕರುಣೆ, ಅಂಬೇಡ್ಕರ್ ಸಾಮಾಜಿಕ ನ್ಯಾಯವನ್ನು ನಮ್ಮ ಬಜೆಟ್ ಆಧರಿಸಿದೆ. ಆದುದರಿಂದ, ಈ ಬಾರಿಯ ಬಜೆಟ್ ಅಭಿವೃದ್ಧಿಪರ ಹಾಗೂ ಜನಪರವಾಗಿದೆ. ವಿರೋಧ ಪಕ್ಷದವರು ಕೇವಲ ರಾಜಕೀಯಕ್ಕಾಗಿ ವಿರೋಧ ಮಾಡಬಾರದು ಎಂದು ಮುಖ್ಯಮಂತ್ರಿ ಹೇಳಿದರು.  

ವಾರ್ತಾ ಭಾರತಿ 25 Mar 2026 8:52 pm

74 ದಿನಗಳಲ್ಲಿ 170 ಕಸ್ಟಡಿ ಸಾವು: ಕೇಂದ್ರ ಸರಕಾರ

ಹೊಸದಿಲ್ಲಿ: ದೇಶದಾದ್ಯಂತ 2026 ಜನವರಿ 1ರಿಂದ ಮಾರ್ಚ್ 15ರ ವರೆಗಿನ ಕೇವಲ 74 ದಿನಗಳಲ್ಲಿ ಒಟ್ಟು 170 ಕಸ್ಟಡಿ ಸಾವು ಸಂಭವಿಸಿದೆ ಎಂದು ಗೃಹ ಸಚಿವಾಲಯ ಸಂಸತ್‌ಗೆ ಮಾಹಿತಿ ನೀಡಿದೆ. ಗೃಹ ಸಚಿವಾಲಯ ಹಂಚಿಕೊಂಡಿರುವ ಅಂಕಿ-ಅಂಶಗಳು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ)ದಿಂದ ಸ್ವೀಕರಿಸಲಾದ ರಾಜ್ಯವಾರು ಮಾಹಿತಿಯ ಭಾಗವಾಗಿದೆ. ಕಳೆದ ನಾಲ್ಕು ವರ್ಷಗಳಲ್ಲಿ ಕಸ್ಟಡಿ ಸಾವುಗಳ ಸಂಖ್ಯೆ ಇಳಿಕೆಯಾಗಿದ್ದರೂ ಈ ವರ್ಷ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದೆ ಎಂಬುದನ್ನು ದತ್ತಾಂಶ ವಿವರಿಸಿದೆ. 2024-25ರಲ್ಲಿ ಕಸ್ಟಡಿ ಸಾವುಗಳಿಗೆ ಸಂಬಂಧಿಸಿದಂತೆ ದಾಖಲಾದ ಒಟ್ಟು ಪ್ರಕರಣಗಳ ಸಂಖ್ಯೆ 140 ಆಗಿದೆ. 2023-24ರಲ್ಲಿ 157, 2022-23ರಲ್ಲಿ 163 ಹಾಗೂ 2021-22ರಲ್ಲಿ 176 ಪ್ರಕರಣಗಳು ದಾಖಲಾಗಿವೆ. ರಾಜ್ಯಗಳ ಪೈಕಿ ಈ ವರ್ಷ ಬಿಹಾರದಲ್ಲಿ ಇದುವರೆಗೆ ಅತಿ ಹೆಚ್ಚು ಕಸ್ಟಡಿ ಸಾವುಗಳು ವರದಿಯಾಗಿದ್ದು, 19 ಪ್ರಕರಣಗಳು ದಾಖಲಾಗಿವೆ. ಬಳಿಕ ರಾಜಸ್ಥಾನದಲ್ಲಿ 18 ಹಾಗೂ ಉತ್ತರಪ್ರದೇಶದಲ್ಲಿ 15 ಪ್ರಕರಣಗಳು ದಾಖಲಾಗಿವೆ. ಪಂಜಾಬ್, ಗುಜರಾತ್ ಹಾಗೂ ಮಹಾರಾಷ್ಟ್ರದಲ್ಲಿ ತಲಾ 14 ಕಸ್ಟಡಿ ಸಾವು ಪ್ರಕರಣಗಳು ದಾಖಲಾಗಿವೆ. ದಕ್ಷಿಣ ರಾಜ್ಯಗಳ ಪೈಕಿ ತಮಿಳುನಾಡಿನಲ್ಲಿ 7 ಪ್ರಕರಣಗಳು, ತೆಲಂಗಾಣದಲ್ಲಿ 5 ಹಾಗೂ ಕರ್ನಾಟಕದಲ್ಲಿ 3 ಪ್ರಕರಣಗಳು ದಾಖಲಾಗಿವೆ. ಇದೇ ಅವಧಿಯಲ್ಲಿ ಕೇರಳದಲ್ಲಿ ಕೂಡಾ ಮೂರು ಪ್ರಕರಣಗಳು ವರದಿಯಾಗಿವೆ. ಪೂರ್ವ ಭಾರತದ ಪಶ್ಚಿಮಬಂಗಾಳದಲ್ಲಿ 7 ಪ್ರಕರಣಗಳು ದಾಖಲಾಗಿದ್ದರೆ, ಒಡಿಶಾದಲ್ಲಿ 9 ಪ್ರಕರಣಗಳು ದಾಖಲಾಗಿವೆ. ಈಶಾನ್ಯ ವಲಯದ ಅಸ್ಸಾಂನಲ್ಲಿ 5 ಪ್ರಕರಣಗಳು ವರದಿಯಾಗಿದ್ದರೆ, ಅರುಣಾಚಲ ಪ್ರದೇಶದಲ್ಲಿ 3 ಪ್ರಕರಣಗಳು ವರದಿಯಾಗಿವೆ. ಮಿಜೋರಾಂ, ಸಿಕ್ಕಿಂ ಹಾಗೂ ಲಡಾಖ್ ಸೇರಿದಂತೆ ಹಲವು ಸಣ್ಣ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಈ ಅವಧಿಯಲ್ಲಿ ಯಾವುದೇ ಕಸ್ಟಡಿ ಸಾವುಗಳು ವರದಿಯಾಗಿಲ್ಲ. ಕೇಂದ್ರಾಡಳಿತ ಪ್ರದೇಶಗಳ ಪೈಕಿ ದಿಲ್ಲಿಯಲ್ಲಿ 4 ಪ್ರಕರಣಗಳು ದಾಖಲಾಗಿದ್ದರೆ, ಜಮ್ಮು ಹಾಗೂ ಕಾಶ್ಮೀರದಲ್ಲಿ 2026ರಲ್ಲಿ ಇದುವರೆಗೆ ಯಾವುದೇ ಪ್ರಕರಣಗಳು ವರದಿಯಾಗಿಲ್ಲ. ಅಂಡಮಾನ್ ಹಾಗೂ ನಿಕೋಬಾರ್ ದ್ವೀಪಗಳು ಮತ್ತು ಪುದುಚೇರಿಯಲ್ಲಿ ತಲಾ 1 ಪ್ರಕರಣ ವರದಿಯಾಗಿದೆ. ಈ ದತ್ತಾಂಶ ರಾಜ್ಯಗಳ ನಡುವಿನ ವ್ಯತ್ಯಾಸವನ್ನು ಪ್ರತಿಬಿಂಬಿಸುತ್ತದೆ. ಆದರೆ, ಹಿಂದಿನ ಹಣಕಾಸು ವರ್ಷಕ್ಕೆ ಹೋಲಿಸಿದರೆ ಪ್ರಸಕ್ತ ವರ್ಷದಲ್ಲಿ ಕಸ್ಟಡಿ ಸಾವುಗಳಲ್ಲಿ ಒಟ್ಟಾರೆ ಏರಿಕೆಯನ್ನು ಸೂಚಿಸುತ್ತದೆ. ಮಾನವ ಹಕ್ಕುಗಳ ವರದಿಗಳ ಪ್ರಕಾರ ಕಸ್ಟಡಿ ಹಿಂಸೆ ಮತ್ತು ಸಾವುಗಳಿಗೆ ಬಲಿಯಾಗುವವರಲ್ಲಿ ದಲಿತರು, ಆದಿವಾಸಿಗಳು, ಮುಸ್ಲಿಮರು ಹಾಗೂ ಹಿಂದುಳಿದವರ ಸಂಖ್ಯೆಯೇ ಹೆಚ್ಚಿದೆ.

ವಾರ್ತಾ ಭಾರತಿ 25 Mar 2026 8:50 pm

ಯಕ್ಷ ಶಿಕ್ಷಣಕ್ಕೆ ಪೂರ್ವರಂಗವೇ ಆಧಾರ : ಧನಂಜಯ ಕುಂಬ್ಳೆ

ಮಂಗಳೂರು: ಹಿಂದೆ ಯಕ್ಷಗಾನವನ್ನು ಕಲಿಸುವ ಕಲಿಕಾ ಕೇಂದ್ರಗಳಿರುತ್ತಿರಲಿಲ್ಲ. ಮೇಳಕ್ಕೆ ಕೆಲಸಕ್ಕೆ ಸೇರುತ್ತಿದ್ದ ಹುಡುಗರು ಕೋಡಂಗಿ, ಬಾಲಗೋಪಾಲ, ಸ್ತ್ರೀವೇಷ, ಅರ್ಧನಾರೀಶ್ವರ ಮೊದಲಾದ ಪೂರ್ವರಂಗದ ವೇಷಗಳನ್ನು ಹಾಕಿ ಹಂತ ಹಂತವಾಗಿ ಕಲಿಯುತ್ತಿದ್ದರು. ಯಕ್ಷಗಾನದ ಭಾಗವತಿಕೆ ಬಣ್ಣಗಾರಿಕೆ, ಕುಣಿತ ವೈವಿಧ್ಯಗಳಿಗೆ ಪೂರ್ವ ರಂಗವೇ ಆಧಾರ. ಇಂದು ಯಕ್ಷಶಿಕ್ಷಣ ಕಲಿಸುವ ಕೇಂದ್ರಗಳು ಇದನ್ನು ಗಮನಿಸಬೇಕು ಎಂದು ಮಂಗಳೂರು ವಿವಿಯ ಡಾ.ದಯಾನಂದ ಪೈ ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರದ ನಿರ್ದೇಶಕ ಡಾ.ಧನಂಜಯ ಕುಂಬ್ಳೆ ಹೇಳಿದರು. ಅವರು ಮಂಗಳವಾರ ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನ ಶಿವರಾಮ ಕಾರಂತ ವೇದಿಕೆಯಲ್ಲಿ ಮಂಗಳೂರು ವಿವಿ ಯಕ್ಷಗಾನ ಅಧ್ಯಯನ ಕೇಂದ್ರ ಮತ್ತು ಮಂಗಳೂರು ವಿಶ್ವವಿದ್ಯಾನಿಲಯದ ಲಲಿತ ಕಲಾ ಸಂಘದ‌ ವತಿಯಿಂದ ನಡೆದ ಎರಡು ದಿನದ ಯಕ್ಷಗಾನ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು. ಇಂದು ಯಕ್ಷಗಾನ ಕಲಿಕಾ ಕೇಂದ್ರಗಳು ಹಲವು ಇರುವುದು ಯಕ್ಷಶಿಕ್ಷಣ ಅಭಿಯಾನ ರೂಪದಲ್ಲಿ ನಡೆಯುತ್ತಿರುವುದು ಸಂತೋಷದ ಸಂಗತಿ.ಯಕ್ಷಗಾನ ಅಧ್ಯಯನ ಕೇಂದ್ರವು ಯಕ್ಷಗಾನ ಕಲಿಕೆಗೆ‌ ಶೈಕ್ಷಣಿಕ ಮನ್ನಣೆಯನ್ನು ಒದಗಿಸುವುದಕ್ಕೆ‌ ಯೋಜನೆ ರೂಪಿಸುತ್ತಿದೆ ಎಂದರು. ಅಧ್ಯಕ್ಷತೆಯನ್ನು ವಹಿಸಿದ್ದ ವಿಶ್ವವಿದ್ಯಾನಿಲಯ ಕಾಲೇಜಿನ ಪ್ರಾಂಶುಪಾಲ ಪ್ರೊ.ಗಣಪತಿ ಗೌಡ ಮಾತನಾಡಿ ಯಕ್ಷಗಾನ ಕರಾವಳಿಯ ಅಪೂರ್ವ ಕಲೆ. ಇದನ್ನು ಕಲಿಯುವಾಗ ಶಿಸ್ತು, ಸಂಯಮ ಅಗತ್ಯ. ಕಲೆಯ ಜೊತೆಗಿನ ಬದುಕು ನಮಗೆ ಆನಂದವನ್ನೂ ನೆಮ್ಮದಿಯನ್ನೂ ನೀಡುತ್ತದೆ ಎಂದರು. ಯಕ್ಷಗುರುಗಳಾದ ಅಶ್ವತ್ಥ್ ಮಂಜನಾಡಿ, ಕಲಾವಿದೆ ಸಾಯಿಸುಮ ನಾವಡ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದರು.  ಲಲಿತ ಕಲಾ ಸಂಘದ ಉಪನಿರ್ದೇಶಕಿ ಡಾ. ನಾಗರತ್ನ ಕೆ.ಎ, ಪ್ರಾಧ್ಯಾಪಕ ಡಾ. ಸೀತಾರಾಮ ಕಡಮಣ್ಣಾಯ, ಡಾ. ಮಾಧವ ಎಂ.ಕೆ , ಪ್ರೊ. ಜಯವಂತ ನಾಯಕ್, ಡಾ. ರಾಮಕೃಷ್ಣ ಬಿ.ಎಂ, ಡಾ. ಗಾಯತ್ರಿ, ವಿದ್ಯಾರ್ಥಿ ಸಂಘ ಅಧ್ಯಕ್ಷ ಕಾರ್ತಿಕ್ ಆಚಾರ್ಯ ಲಲಿತಾ ಕಲಾ ಸಂಘದ ಸಹ ಕಾರ್ಯದರ್ಶಿ ವಿದ್ಯಾರ್ಥಿನಿ ಶಿವಾನಿ ಮತ್ತಿತರರು ಉಪಸ್ಥಿತರಿದ್ದರು. ಡಾ. ನಾಗರತ್ನ ಕೆ.ಎ ಸ್ವಾಗತಿಸಿದರು. ವಂದನಾರ್ಪಣೆ ಗ್ರಂಥ ಪಾಲಕಿ ಡಾ.ವನಜ ವಂದಿಸಿದರು ವಿದ್ಯಾರ್ಥಿನಿ ಸುಮನಾ ನಿರೂಪಿಸಿದರು.

ವಾರ್ತಾ ಭಾರತಿ 25 Mar 2026 8:50 pm

100 ಹೊಸ ವಿಮಾನ ನಿಲ್ದಾಣ, 200 ಹೆಲಿಪ್ಯಾಡ್‌ ನಿರ್ಮಾಣ!: ಉಡಾನ್ 2026 ಯೋಜನೆಯಿಂದ ಪ್ರಯಾಣಿಕರಿಗೆ ಏನು ಪ್ರಯೋಜನ?

UDAN 2.0- ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಉಡಾನ್ ಯೋಜನೆಯಿಂದಾಗಿ ದೇಶದ ಹಲವೆಜೆ ವಿಮಾನ ನಿಲ್ದಾಣಗಳು ನಿರ್ಮಾಣವಾಗಿ ಜನಸಾಮಾನ್ಯರಿಗೂ ವಿಮಾನ ಯಾನವು ಎಟಕುವಂತಾಯಿತು. ಇದೀಗ ಈ ಪ್ರಯೋಜನದ ವ್ಯಾಪ್ತಿಯ ವಿಸ್ತಾರವನ್ನು ಮತ್ತಷ್ಟು ಹೆಚ್ಚಿಸಲು ಉಡಾನ್ ಯೋಜನೆ 2026 ಅನ್ನು ಅನುಮೋದಿಸಿದೆ. ಎರಡನೇ ಹಂತದ ಈ ಯೋದನೆಲ್ಲಿ ಸುಮಾರು 100 ಹೊಸ ವಿಮಾನ ನಿಲ್ದಾಣಗಳನ್ನು ಅಭಿವೃದ್ಧಿಪಡಿಸಲು, ಪ್ರಾದೇಶಿಕ ಸಂಪರ್ಕವನ್ನು ಹೆಚ್ಚಿಸಲು ಮತ್ತು ಮುಂದಿನ ದಶಕದಲ್ಲಿ ವಿಮಾನ ಪ್ರಯಾಣವನ್ನು ಹೆಚ್ಚು ಕೈಗೆಟುಕುವಂತೆ ಮಾಡುವ ದೂರದೃಷ್ಟಿಯನ್ನು ಇಟ್ಟುಕೊಳ್ಳಲಾಗಿದೆ.

ವಿಜಯ ಕರ್ನಾಟಕ 25 Mar 2026 8:48 pm

ನೂತನ ಕೊಂಕಣಿ ರೋಮನ್ ಪೂಜಾಗ್ರಂಥ ಅನಾವರಣ

ಮಂಗಳೂರು, ಮಾ.25: ಹೊಸದಾಗಿ ಭಾಷಾಂತರಿಸಲ್ಪಟ್ಟ ‘ಕೊಂಕಣಿ ರೋಮನ್ ಮಿಸ್ಸಾಲ್ (ಪೂಜಾ ಗ್ರಂಥ) ಅನ್ನು ಬುಧವಾರ ಮಂಗಳೂರು ಕ್ರೈಸ್ತ ಧರ್ಮ ಪ್ರಾಂತ್ಯ ಮಟ್ಟದಲ್ಲಿ ಅನಾವರಣಗೊಳಿಸಲಾಯಿತು. ಜೆಪ್ಪುವಿನ ಸಂತ ಅಂತೋನಿ ಆಶ್ರಮದಲ್ಲಿ ನಡೆಯುತ್ತಿರುವ ಮಂಗಳೂರು ಧರ್ಮ ಪ್ರಾಂತ್ಯದ ಎರಡು ದಿನಗಳ ವಾರ್ಷಿಕ ಪಾಲನಾ ಸಮಾಲೋಚನಾ ಸಭೆಯಲ್ಲಿ ಈ ಕಾರ್ಯಕ್ರಮ ನಡೆಯಿತು. ಫೆಬ್ರವರಿ 3ರಂದು ಬೆಂಗಳೂರಿನಲ್ಲಿ ನಡೆದ ಸಿಸಿಬಿಐ ಸಭೆಯಲ್ಲಿ ಅಪೊಸ್ತೊಲಿಕ್ ನುನ್ಸಿಯೊ ಅವರು ಈ ಮಿಸ್ಸಾಲ್ ಅನ್ನು ರಾಷ್ಟ್ರೀಯ ಮಟ್ಟದಲ್ಲಿ ಬಿಡುಗಡೆ ಮಾಡಿದ್ದರು. ಇದೀಗ ಮಂಗಳೂರಿನಲ್ಲಿ ನಡೆದ ಈ ಬಿಡುಗಡೆ ಸಮಾರಂಭದ ಅಧ್ಯಕ್ಷತೆಯನ್ನು ಮಂಗಳೂರು ಧರ್ಮಾಧ್ಯಕ್ಷರು ಹಾಗೂ ಕೊಂಕಣಿ ಧಾರ್ಮಿಕ ವಿಧಿಗಳ ಆಯೋಗದ ಅಧ್ಯಕ್ಷರಾದ ಅ.ವಂ. ಡಾ. ಪೀಟರ್ ಪಾವ್ಲ್ ಸಲ್ಡಾನ್ಹಾ ವಹಿಸಿದ್ದರು. ಬಿಡುಗಡೆ ಸಮಾರಂಭದಲ್ಲಿ ಧರ್ಮಕ್ಷೇತ್ರದ ಶ್ರೇಷ್ಠಗುರುಗಳಾದ ಅ.ವಂ. ಮೊನ್ಸಿಂಜರ್ ಮ್ಯಾಕ್ಸಿಮ್ ಎಲ್. ನೊರೊನ್ಹಾ, ಕುಲಪತಿ ಅ.ವಂ. ಡಾ. ವಿಕ್ಟರ್ ಜಾರ್ಜ್ ಡಿಸೋಜಾ, ಸಿಸಿಬಿಐ ಕೊಂಕಣಿ ಲಿಟರ್ಜಿ ಆಯೋಗದ ಕಾರ್ಯದರ್ಶಿ ವಂ. ವಿಜಯ್ ಮಚಾದೊ, ಗುರು ಮಠದ ನಿಕಟಪೂರ್ವ ರೆಕ್ಟರಾದ ವಂ. ಡಾ. ರೊನಾಲ್ಡ್ ಸೆರಾವೊ, ಯಾಜಕ ಮಂಡಳಿಯ ಕಾರ್ಯದರ್ಶಿ ಅ.ವಂ. ಜೋಸೆಫ್ ಮಾರ್ಟಿಸ್, ಬೈಬಲ್ ಆಯೋಗದ ಕಾರ್ಯದರ್ಶಿ ವಂ. ಡಾ. ವಿನ್ಸೆಂಟ್ ಸಿಕ್ವೇರಾ, ಮಂಗಳ ಜ್ಯೋತಿಯ ನಿರ್ದೇಶಕ ವಂ. ರೋಹಿತ್ ಡಿಕೋಸ್ತಾ, ರಾಕ್ಣೊ ವಾರ ಪತ್ರಿಕೆಯ ನಿಕಟಪೂರ್ವ ಸಂಪದಕಾರಾದ ವಂ. ವಲೇರಿಯನ್ ಫೆರ್ನಾಂಡಿಸ್ ಮತ್ತು ಜೆಪ್ಪು ಸಂತ ಅಂತೋನಿ ಆಶ್ರಮದ ನಿರ್ದೇಶಕ ವಂ. ಜೆ.ಬಿ. ಕ್ರಾಸ್ತಾ ಅವರು ಉಪಸ್ಥಿತರಿದ್ದರು. ಪ್ರಧಾನ ಮಿಸ್ಸಲ್ ನೊಂದಿಗೆ ಇತರ ಮೂರು ಮಹತ್ವದ ಕೃತಿಗಳನ್ನು ಸಹ ಈ ಸಂದರ್ಭದಲ್ಲಿ ಲೋಕಾರ್ಪಣೆ ಮಾಡಲಾಯಿತು. ‘ಮಿಸಾಚ್ಯೆ ಸಂಭ್ರಮ್ಣೆಚಿ ಮಾಂಡಾವಳ್ -ಭಾವಾಡ್ತ್ಯಾಂಚ್ಯ ವಾಪರಾ ಪಾಸತ್’ ( ಭಕ್ತಾದಿಗಳ ಪ್ರತಿಕ್ರಿಯೆಗಳಿಗಾಗಿ ಮಿಸ್ಸಾಲ್‌ನ ಆಯ್ದ ಭಾಗಗಳನ್ನು ಒಳಗೊಂಡಿರುವ ಕಿರುಹೊತ್ತಿಗೆ), ‘ಆಮ್ಚೆಂ ಮೀಸ್ ತಾಚ್ಯಾ ಉಗ್ಡಾಸಾಕ್: ಮೀಸ್ ಆನಿ ಮಿಸಾಚ್ಯಾ ಭಾಗಾಂಚೊ ಅರ್ಥ್’ (ನಮ್ಮ ಬಲಿಪೂಜೆ ಆತನ ನೆನಪಿಗಾಗಿ ಹಾಗೂ ‘ಟುಗೆದರ್ ಫಾರೆವರ್ ಇನ್ ಕ್ರೈಸ್ಟ್’ ಎಂಬ ಮೂರು ಕೃತಿಗಳನ್ನು ಬಿಡುಗಡೆಗೊಳಿಸಲಾಗಿದ್ದು, ಸಿಸಿಬಿಐ ಕೊಂಕಣಿ ಲಿಟರ್ಜಿ ಆಯೋಗದ ಕಾರ್ಯ ದರ್ಶಿ ವಂ. ವಿಜಯ್ ಮಚಾದೊ ಅವರು ಈ ಬೃಹತ್ ಯೋಜನೆಯ ಪೂರ್ಣಗೊಳ್ಳುವಿಕೆಯ ಕುರಿತು ಸಭೆಗೆ ವಿವರಿಸಿದರು. ವಂ.ಡಾ. ರೊನಾಲ್ಡ್ ಸೆರಾವೊ ಅವರು ನೂತನ ಮಿಸ್ಸಾಲ್‌ನಲ್ಲಿರುವ ದೇವಶಾಸ್ತ್ರೀಯ ಮತ್ತು ರಚನಾತ್ಮಕ ಬದಲಾವಣೆಗಳ ಕುರಿತು ಮಾಹಿತಿ ನೀಡಿದರು. ನೂತನ ಮಿಸ್ಸಾಲ್ ರೂಪುಗೊಳ್ಳಲು ತೆರೆಮರೆಯಲ್ಲಿ ಶ್ರಮಿಸಿದ ವಂ. ಡಾ. ರೊನಾಲ್ಡ್ ಸೆರಾವೊ, ವಂ. ವಲೇರಿಯನ್ ಫೆರ್ನಾಂಡಿಸ್ ಮತ್ತು ವಂ. ವಿಜಯ್ ಮಚಾದೊ ಅವರನ್ನು ಈ ಸಂದರ್ಭದಲ್ಲಿ ವಿಶೇಷವಾಗಿ ಸನ್ಮಾನಿಸಲಾಯಿತು. ಭಾರತ ಮತ್ತು ವಿಶ್ವಾದ್ಯಂತ ಇರುವ ಧರ್ಮಕ್ಷೇತ್ರಗಳಿಗೆ ಈ ಪವಿತ್ರ ಗ್ರಂಥಗಳನ್ನು ವಿತರಿಸುವ ಜವಾಬ್ದಾರಿಯನ್ನು ಮಂಗಳ ಜ್ಯೋತಿಯ ನಿರ್ದೇಶಕ ವಂ.ರೋಹಿತ್ ಡಿಕೋಸ್ತಾ ಮತ್ತು ಸಹ-ನಿರ್ದೇಶಕ ವಂ.ವಿನ್ಸೆಂಟ್ ಸಿಕ್ವೇರಾ ಅವರ ನೇತೃತ್ವದಲ್ಲಿ ನಿರ್ವಹಿಸಲಾಗುವುದು. ಮಿಸ್ಸಾಲ್‌ನ ಕರಡು ತಿದ್ದುವಿಕೆ ಕಾರ್ಯವನು ನಿರ್ವಹಿಸಿದ ಯಾಜಕರಾದ ಮೊ. ಮ್ಯಾಕ್ಸಿಮ್ ನೊರೊನ್ಹಾ, ವಂ. ವಿನ್ಸೆಂಟ್ ಸಿಕ್ವೇರಾ, ವಂ. ಪ್ರಕಾಶ್ ಲೋಬೊ ಒಎಫ್‌ಎಂ, ವಂ. ವಿಲಿಯಂ ಬಾರ್ಬೋಜಾ, ವಂ. ಜೇಸನ್ ಎಸ್‌ಡಿಬಿ, ಮತ್ತು ವಂ. ಡುಮಿಂಗ್ ಗೊನ್ಸಾಲ್ವಿಸ್ ಅವರಿಗೆ ವಿಶೇಷ ಕೃತಜ್ಞತೆ ಸಲ್ಲಿಸಲಾಯಿತು. ಮಂಗಳೂರು ಕಚೇರಿಯ ಜ್ಯೋತಿ ಪಿಂಟೊ ಮತ್ತು ಗೋವಾ ಲಿಟರ್ಜಿ ಕಚೇರಿಯ ಕುಮಾರಿ ಲೂರ್ಡಾ ಪಿರೇರಾ ಅವರ ಸೇವೆಯನ್ನು ಸ್ಮರಿಸಲಾಯಿತು. ವಂ. ವಿಜಯ್ ಮಚಾದೊ ವಂದಿಸಿದರು.

ವಾರ್ತಾ ಭಾರತಿ 25 Mar 2026 8:47 pm

Budget Session 2026 | ಹಸ್ತಪ್ರತಿಗಳು ಮತ್ತು ಡಿಜಿಟೀಕರಣ ವಿಧೇಯಕ ಮೇಲ್ಮನೆಯಲ್ಲಿ ಅಂಗೀಕಾರ

ಬೆಂಗಳೂರು : ಕಾನೂನು, ನ್ಯಾಯ, ಮಾನವ ಹಕ್ಕುಗಳು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ್ ಅವರು ವಿಧಾನಪರಿಷತ್ತಿನಲ್ಲಿ ಮಂಗಳವಾರ ಮಂಡಿಸಿದ ವಿಧಾನಸಭೆಯಿಂದ ಅಂಗೀಕೃತ ರೂಪದಲ್ಲಿರುವ 2026ನೇ ಸಾಲಿನ “ಕರ್ನಾಟಕ ಜ್ಞಾನಭಂಡಾರ ಹಸ್ತಪ್ರತಿಗಳು ಮತ್ತು ಡಿಜಿಟೀಕರಣ ವಿಧೇಯಕ”ವು ಸದಸ್ಯರುಗಳ ವಿಸ್ತೃತ ಚರ್ಚೆಯ ನಂತರ ಸರ್ವಾನುಮತದಿಂದ ಅಂಗೀಕಾರವಾಯಿತು. ಈ ವಿಧೇಯಕ ಕುರಿತು ಮಾತನಾಡಿದ ಸಚಿವ ಎಚ್.ಕೆ.ಪಾಟೀಲ್, ಈ ವಿಧೇಯಕವು ಅತ್ಯಂತ ಮಹತ್ವದ ಹಾಗೂ ಸರಳವಾದ ವಿಧೇಯಕವಾಗಿದ್ದು, ನಮ್ಮ ರಾಜ್ಯದಲ್ಲಿ ಇರುವ ಹಸ್ತಪ್ರತಿಗಳನ್ನು ಸಮೀಕ್ಷೆ ಮಾಡುವುದು. ದಾಖಲೆಗಳನ್ನು ಸಂರಕ್ಷಣೆ ಮಾಡುವುದು, ಡಿಜಿಟೀಕರಣ, ಸಂಶೋಧನೆ, ಪ್ರಕಟಣೆ ಮತ್ತು ಸಾರ್ವಜನಿಕರಿಗೆ ಲಭ್ಯಗೊಳಿಸುವ ಉದ್ದೇಶದಿಂದ “ಹಸ್ತಪ್ರತಿ ಪ್ರಾಧಿಕಾರ ಸ್ಥಾಪಿಸಲು” ಈ ವಿಧೇಯಕದ ಮೂಲಕ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು. ಹಸ್ತಪ್ರತಿ ಎಂದರೆ ತಾಳೆಗರಿಯ ಮೇಲಿನ ಕಿರುರೂಪದ ವರ್ಣಚಿತ್ರಗಳು ಮತ್ತು ಪುರಾತನ ಜ್ಞಾನವನ್ನು ಸಂರಕ್ಷಿಸುವ ಮೌಖಿಕ ಸಂಪ್ರದಾಯಗಳ ದೃಶ್ಯ-ಶ್ರವಣ ದಾಖಲೆಗಳನ್ನು ಒಳಗೊಂಡ ಹಾಗೂ ಮುದ್ರಣ ಅಥವಾ ಶಿಲಾಮುದ್ರಣ ಮಾಡದಿರುವ, ಸಂಸ್ಕೃ ತ, ಕನ್ನಡ, ಪ್ರಾಕೃತ, ಪಾಲಿ, ತಮಿಳು, ತೆಲುಗು, ಅರಬ್ಬೀ, ಪಾರ್ಸಿ, ಮೋಡಿ, ಶಾರದ ಅಥವಾ ಯಾವುದೇ ಇತರ ಭಾರತೀಯ ಅಥವಾ ವಿದೇಶಿ ಲಿಪಿಯುಳ್ಳ ಯಾವುದೇ ಕೈಬರಹ ಅಥವಾ ತಾಳೆಗರಿ ದಾಖಲೆ. ಭೋಜ-ತೊಗಟೆ, ಹಾಳೆ, ಬಟ್ಟೆ, ತಾಮ್ರ ಪತ್ರ, ಶಿಲಾ ಶಾಸನ ಅಥವಾ ಯಾವುದೇ ಇತರ ಪದಾರ್ಥದಿಂದ ಮಾಡಿರುವ ಲಿಪಿಪತ್ರ ಎಂದು ಸಚಿವರು ವಿವರಿಸಿದರು. ಹಸ್ತಪ್ರತಿಗಳ ದಾಖಲೆಗಳ ಮಾಲಕತ್ವವನ್ನು ಬದಲಾಯಿಸಲಾಗುವುದಿಲ್ಲ. ಡಿಜಿಟೀಕರಣ ಮಾಡಿ ವಾಪಸ್ಸು ಮಾಲಕರಿಗೆ ನೀಡಲಾಗುವುದು. ಜ್ಞಾನಭಂಡಾರ ಹಸ್ತಪ್ರತಿಗಳು ಮತ್ತು ಡಿಜಿಟೀಕರಣವನ್ನು ಸರಿಯಾಗಿ ಮಾಡಿದಾಗ ಜ್ಞಾನಭಂಡಾರವನ್ನು ಸಂರಕ್ಷಣೆ ಮಾಡಿದಂತಾಗುತ್ತದೆ. ಮುಂದಿನ ಪೀಳಿಗೆಗೂ ನೀಡಿದಂತಾಗುತ್ತದೆ. ಜಗತ್ತಿನಲ್ಲಿ ಕನ್ನಡ ಜ್ಞಾನಸಂಪನ್ನವಾಗುತ್ತದೆ ಎಂದು ಎಚ್.ಕೆ.ಪಾಟೀಲ್ ತಿಳಿಸಿದರು. ಈ ವೇಳೆ ಸುದೀರ್ಘ ಚರ್ಚೆಯ ನಂತರ ಮೇಲ್ಮನೆಯಲ್ಲಿ ಈ ವಿಧೇಯಕಕ್ಕೆ ಅಂಗೀಕಾರ ದೊರಕಿತು.  

ವಾರ್ತಾ ಭಾರತಿ 25 Mar 2026 8:46 pm

ಕನ್ನಡದಲ್ಲಿ ಶಿಕ್ಷಣ ಪಡೆದವರಿಗೆ ಉದ್ಯೋಗಾವಕಾಶ ದೊರೆಯಲಿ: ಚಿದಂಬರ ಬೈಕಂಪಾಡಿ

ಮಂಗಳೂರು, ಮಾ.25: ಕನ್ನಡದಲ್ಲಿ ಶಿಕ್ಷಣ ಪಡೆದರೆ ಉದ್ಯೋಗ ಸಿಗುವುದಿಲ್ಲ ಎನ್ನುವ ಸ್ಥಿತಿಯಿಂದಾಗಿ ಆಂಗ್ಲ ಮಾಧ್ಯಮದಲ್ಲಿ ಶಿಕ್ಷಣ ಪಡೆಯುವ ಅನಿವಾರ್ಯತೆ ಬೆಳೆದಿದೆ. ನಮ್ಮಲ್ಲಿರುವ ಇಂತಹ ತಾತ್ಸಾರ ಭಾವನೆಯನ್ನು ಹೋಗಲಾಡಿಸಿ , ಕನ್ನಡದಲ್ಲಿ ಶಿಕ್ಷಣ ಪಡೆದರೂ ಧಾರಾಳ ಉದ್ಯೋಗಾವಕಾಶ ಇದೆ ಎಂಬ ಭಾವನೆಯನ್ನು ಮೂಡಿಸಿ ದಾಗ ಕನ್ನಡದ ಭಾಷೆಯ ಬಗ್ಗೆ ಒಲವು ಅಭಿಮಾನ ಬೆಳೆಯಲು ಸಾಧ್ಯ ಎಂದು ಹಿರಿಯ ಪತ್ರಕರ್ತ, ಸಾಹಿತಿ ಚಿದಂಬರ ಬೈಕಂಪಾಡಿ ಅಭಿಪ್ರಾಯಪಟ್ಟಿದ್ದಾರೆ. ದಕ್ಷಿಣ ಕನ್ನಡ ಜಿಲ್ಲಾ 28ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿರುವ ಹಿನ್ನೆಲೆಯಲ್ಲಿ ಮಂಗಳೂರು ಪ್ರೆಸ್ ಕ್ಲಬ್ ವತಿಯಿಂದ ನಗರದ ಪತ್ರಿಕಾ ಭವನದಲ್ಲಿ ಬುಧವಾರ ಆಯೋಜಿಸಲಾದ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು. ‘‘ನನಗೆ ಇದು ಅನಿರೀಕ್ಷಿತ ವಾಗಿ ಒಲಿದು ಬಂದ ಜವಾಬ್ದಾರಿ. ಪತ್ರಕರ್ತನಾಗಿರುವ ನನ್ನನ್ನು ಗುರುತಿಸಿದ್ದು ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನ ದೊಡ್ಡತನ, ಸಮಗ್ರ ಸಾಹಿತ್ಯದ ನೆಲೆಯಲ್ಲಿ ನನ್ನನ್ನು ಆಯ್ಕೆ ಮಾಡಿದ್ದಾರೆ. ಪತ್ರಕರ್ತ ನಾಗಿ, ಕವಿಯಾಗಿ,ಕತೆಗಾರನಾಗಿ ಸಾಕಷ್ಟು ಕೆಲಸ ಮಾಡಿರುವೆ. ನಾನು ಮೊದಲು ಆಗಿದ್ದು ಸಾಹಿತಿ. ಅನಂತರ ಪತ್ರಿಕಾರಂಗಕ್ಕೆ ಕಾಲಿರಿಸಿದೆ. ಆಗ ಆಕಾಶವಾಣಿ ಯಲ್ಲಿದ್ದ ಶಿವಾನಂದ ಬೇಕಲ್ ಅವರು ನನಗೆ ಪತ್ರಿಕಾರಂಗದ ಬಗ್ಗೆ ಆಸಕ್ತಿ ಮೂಡಿಸಿದ್ದರು. ನಾನೇನು ಡಿಗ್ರಿ ಕಲಿತಿಲ್ಲ. ಎಸ್‌ಎಸ್‌ಎಲ್‌ಸಿ ಮಾಡಿ ಡಿಪ್ಲೊಮಾ ಮುಗಿಸಿದ ಬಳಿಕ ರಾಜಸ್ಥಾನದಲ್ಲಿ ಉದ್ಯೋಗ ಸಿಕ್ಕಿತ್ತು. ಹೀಗಿದ್ದರೂ ಬರೆಯುವ ಹವ್ಯಾಸ ಮುಂದುವರಿಯಿತು. ಮುಂದೆ ಅಮೃತ ಪತ್ರಿಕೆ ಮೂಲಕ ಪತ್ರಿಕಾ ವೃತ್ತಿ ಬದುಕಿಗೆ ಕಾಲಿರಿಸಿ, ಬಳಿಕ ದಿವ್ಯವಾಣಿ , ಮುಂಗಾರು , ಕನ್ನಡ ಪ್ರಭ ಪತ್ರಿಕಾ ಸಂಸ್ಥೆಯಲ್ಲಿ ಸೇವೆಸಲ್ಲಿಸಿದ್ದೆ. ಪತ್ರಿಕಾ ರಂಗಕ್ಕೆ ಕಾಲಿರಿಸಿದ ಬಳಿಕ ದೈನಂದಿನ ವೃತ್ತಿಯ ಒತ್ತಡದಿಂದಾಗಿ ಕಥೆ , ಕವನ, ಸಾಹಿತ್ಯದ ಕಡೆಗೆ ಒಲವು ಸ್ವಲ್ಪ ಕಡಿಮೆಯಾಗಿತ್ತು ಎಂದು ತಮ್ಮ ವೃತ್ತಿ ಬದುಕಿನ ಸಿಹಿಕಹಿ ಅನುಭವಗಳನ್ನು ಹಂಚಿಕೊಂಡರು. *ಪತ್ರಕರ್ತರಲ್ಲಿ ನಿಮ್ಮತನ ಅಗತ್ಯ: ಪತ್ರಕರ್ತರಲ್ಲಿ ನಿಮ್ಮತನ ಅಗತ್ಯ. ಯುವ ಪತ್ರಕರ್ತರಲ್ಲಿ ಇವತ್ತು ನಿಮ್ಮತನ ಕಡಿಮೆಯಾಗಿದೆ ಎಂದು ನುಡಿದರು. ತಾನು ಮುಂಗಾರು ಪ್ರವೇಶದ ಆರಂಭದ ವರ್ಷಗಳಲ್ಲಿ ಮಂಗಳೂರಿನಲ್ಲಿ ಒಟ್ಟು ಆರು ಮಂದಿ ವರದಿಗಾರರಿದ್ದರು. ನಾವು ಸುದ್ದಿ ಸಂಗ್ರಹಕ್ಕಾಗಿ ಅವಿಭಜಿತ ಜಿಲ್ಲೆಯಲ್ಲಿ ಓಡಾಡಬೇಕಾದ ಪರಿಸ್ಥಿತಿ ಇತ್ತು. ಸಭೆ ಸಮಾರಂಭಗಳಿಗೆ ಹೋಗುವಾಗ ನಮ್ಮ್ಮೊಳಗೆ ಹೊಂದಾಣಿಕೆ ಇದ್ದರೂ, ನಾವು ಬರವಣಿಗೆಯಲ್ಲಿ ಸ್ವತಂತ್ರರು. ಯಾವ ಸುದ್ದಿಯನ್ನು ಯಾವ ರೀತಿ ಬರೆಯಬೇಕು. ಸುದ್ದಿಯಲ್ಲಿ ಯಾವುದನ್ನು ಲೀಡ್ ಮಾಡಬೇಕು ಎಂಬ ವಿಷಯ ಬಗ್ಗೆ ನಮ್ಮಲ್ಲಿ ಚರ್ಚೆ ನಡೆಯುತ್ತಿರಲಿಲ್ಲ. ಹೀಗಾಗಿ ನಮ್ಮ ಪತ್ರಿಕಾ ವರದಿ, ಹೆಡ್ ಲೈನ್ ಗಳು ಭಿನ್ನವಾಗಿರುತ್ತಿತ್ತು ಎಂದು ಹೇಳಿದರು. ಇವತ್ತು ಕತೆ ಬರೆದರೆ ಓದುವವರಲ್ಲಿ ಹೀಗಾಗಿ ಕತೆ ಬರೆಯುವವರ ಸಂಖ್ಯೆಯೂ ಕಡಿಮೆಯಾಗಿದೆ. ಪತ್ರಿಕೆಗಳಲ್ಲೂ ಪ್ರಾಮುಖ್ಯತೆ ಕಡಿಮೆಯಾಗಿದೆ. ಯಾರಿಗಾಗಿ ಕತೆ ಬರೆಯಬೇಕು ಎನ್ನುವಂತಾಗಿದೆ. ಯುವ ಪತ್ರಕರ್ತರಲ್ಲಿ ಕೇಳುವ ವ್ಯವದಾನ ಕಡಿಮೆಯಾಗಿದೆ. ನಾವು ಕಲಿತವರು ಎಂಬ ಭ್ರಮಾಲೋಕದಿಂದ ಹೊರ ಬರಬೇಕು ಎಂದರು. *ಕಲರ್ ಫೋಟೊ ಕಳುಹಿಸಲು ಒದ್ದಾಟ : ಸಾಹಿತಿ ಶಿವರಾಮ ಕಾರಂತರು ನಿಧನರಾದಾಗ ಕಾರಂತರ ಕಲರ್ ಫೋಟೋ ಬೇಕು ಎಂದು ತಾನು ವರದಿಗಾರನಾಗಿದ್ದ ಕನ್ನಡ ಪ್ರಭ ಪತ್ರಿಕೆಯ ಸಂಪಾದಕರು ನನಗೆ ಕಡಕ್ಕಾಗಿ ಹೇಳಿದರು. ಉಡುಪಿಯಲ್ಲಿದ್ದ ನಾನು ಅದಕ್ಕಾಗಿ ಒದ್ದಾಡಿದ್ದೆ. ಕೊನೆಗೆ ಉದಯವಾಣಿಯ ಮುಖ್ಯಸ್ಥರಾದ ಗೌತಮ್ ಪೈ ಅವರನ್ನು ಸಂಪರ್ಕಿಸಿದಾಗ ಅವರು ನನಗೆ ನೆರವಾಗಿ ಕಲರ್ ಫೋಟೊವನ್ನು ಬೆಂಗಳೂರಿನ ಕನ್ನಡ ಪ್ರಭದ ಕಚೇರಿಗೆ ಕಳುಹಿಸುವ ವ್ಯವಸ್ಥೆ ಮಾಡಿದ್ದರು ಎಂದು ನೆನಪಿಸಿಕೊಂಡರು. *ಇಂದು ಸೌಲಭ್ಯಗಳಿದ್ದರೂ ಸೋಲುತ್ತಿದ್ದಾರೆ: ಹಿಂದೆ ಪತ್ರಕರ್ತರು ಸರಿಯಾದ ಸಂಪರ್ಕ ಸೌಲಭ್ಯ ಗಳಿಲ್ಲದೆ ಸೋತಿದ್ದರು.ಈಗ ಸುದ್ದಿ ಸಂಗ್ರಹಕ್ಕೆ, ಸುದ್ದಿಯನ್ನು ಪತ್ರಿಕಾ ಕಚೇರಿಗಳಿಗೆ ಕಳುಹಿಸಲು ಅತ್ಯಾಧುನಿಕ ವ್ಯವಸ್ಥೆ, ಸೌಲಭ್ಯ ಗಳಿದ್ದರೂ ಪತ್ರಕರ್ತರು ಸುದ್ದಿ ಸಂಗ್ರಹ ವಿಚಾರದಲ್ಲಿ ಸವಾಲು ಎದುರಿಸುವಂತಾಗಿದೆ ಎಂದು ಬಣ್ಣಿಸಿದರು. ಹಿರಿಯ ಪತ್ರಕರ್ತ ಕೆ.ಆನಂದ ಶೆಟ್ಟಿ ಸನ್ಮಾನ ನೆರವೇರಿಸಿ ಮಾತನಾಡಿ ಚಿದಂಬರ ಅವರು ಪತ್ರಕರ್ತರಾದರೂ ಅವರೊಬ್ಬ ಸಾಹಿತಿ. ಅವರಿಗೆ ದ.ಕ. ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಸ್ಥಾನ ಸಿಕ್ಕಿರುವುದು ಪತ್ರಕರ್ತರಿಗೆ ಗೌರವದ ವಿಚಾರವಾಗಿದೆ ಎಂದರು. ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ.ಹರೀಶ್ ರೈ ಅಧ್ಯಕ್ಷತೆ ವಹಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಪುಷ್ಪರಾಜ್.ಬಿ.ಎನ್, ಪತ್ರಿಕಾ ಭವನ ಟ್ರಸ್ಟ್ ಅಧ್ಯಕ್ಷ ಅನ್ನು ಮಂಗಳೂರು , ಕೆಯುಡಬ್ಲ್ಯುಜೆ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಶ್ರೀನಿವಾಸ್ ನಾಯಕ್ ಇಂದಾಜೆ ಉಪಸ್ಥಿತರಿದ್ದರು. ಮಂಗಳೂರು ಪ್ರೆಸ್ ಕ್ಲಬ್ ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಅಡ್ಕಸ್ಥಳ ವಂದಿಸಿದರು. ಉಪಾಧ್ಯಕ್ಷ ಮುಹಮ್ಮದ್‌ಆರಿಫ್ ಕಾರ್ಯಕ್ರಮ ನಿರೂಪಿಸಿದರು. 

ವಾರ್ತಾ ಭಾರತಿ 25 Mar 2026 8:44 pm

ಗಂಗಾ ನದಿಯಲ್ಲಿ ಇಫ್ತಾರ್ ಕೂಟ ಆಯೋಜನೆ | ಬಂಧಿತ 14 ಮಂದಿಗೆ ಜಾಮೀನು ನಿರಾಕರಿಸಿದ ವಾರಣಾಸಿ ನ್ಯಾಯಾಲಯ

ವಾರಣಾಸಿ: ಗಂಗಾ ನದಿಯಲ್ಲಿ ದೋಣಿಯಲ್ಲಿ ಇಫ್ತಾರ್ ಕೂಟ ಆಯೋಜಿಸಿ ಚಿಕನ್ ಬಿರಿಯಾನಿ ತಿಂದ ಆರೋಪದ ಮೇಲೆ ಬಂಧಿತ 14 ಮಂದಿಗೆ ವಾರಣಾಸಿ ನ್ಯಾಯಾಲಯ ಜಾಮೀನು ನಿರಾಕರಿಸಿದೆ ಎಂದು Bar and Bench ವರದಿ ಮಾಡಿದೆ. ಈ ಅಪರಾಧ ಗಂಭೀರ ಸ್ವರೂಪದ್ದಾಗಿದ್ದು, ಜಾಮೀನು ರಹಿತವಾಗಿವೆ ಎಂದು ಹೆಚ್ಚುವರಿ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಅಮಿತ್ ಕುಮಾರ್ ಯಾದವ್ ಹೇಳಿದ್ದಾರೆ. ಪ್ರಕರಣದ ವಾಸ್ತವಾಂಶಗಳು ಮತ್ತು ಸಂದರ್ಭಗಳನ್ನು ಗಮನಿಸಿದಾಗ ಆರೋಪಿಗಳಿಗೆ ಜಾಮೀನು ನೀಡಲು ಸಮರ್ಪಕ ಕಾರಣಗಳಿಲ್ಲ ಎಂದು ನ್ಯಾಯಾಧೀಶರು ಹೇಳಿದ್ದಾರೆ. ಆಝಾದ್ ಅಲಿ, ಅಮೀರ್ ಕೈಕಿ, ದಾನಿಶ್ ಸೈಫಿ, ಮುಹಮ್ಮದ್ ಅಹ್ಮದ್, ನೆಹಾಲ್ ಅಫ್ರಿದಿ, ಮಹ್ಫೂಝ್ ಆಲಂ, ಮುಹಮ್ಮದ್ ಅನಸ್, ಮುಹಮ್ಮದ್ ಅವ್ವಲ್, ,ಮುಹಮ್ಮದ್ ತಹಸೀಮ್, ಮುಹಮ್ಮದ್ ಅಹ್ಮದ್ ಅಲಿಯಾಸ್ ರಾಜಾ, ಮುಹಮ್ಮದ್ ನೂರ್ ಇಸ್ಮಾಯಿಲ್, ಮುಹಮ್ಮದ್ ತೌಸಿಫ್ ಅಹ್ಮದ್, ಮುಹಮ್ಮದ್ ಫೈಝಾನ್ ಮತ್ತು ಮುಹಮ್ಮದ್ ಸಮೀರ್ ಅವರಿಗೆ ನ್ಯಾಯಾಲಯ ಜಾಮೀನು ನಿರಾಕರಿಸಿದೆ. ಮಾರ್ಚ್ 16ರಂದು ದೋಣಿಯಲ್ಲಿ ಇಫ್ತಾರ್ ಕೂಟ ಆಯೋಜನೆ ನಡೆಸುತ್ತಿರುವ ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಬೆನ್ನಲ್ಲೆ ಅವರನ್ನು ಬಂಧಿಸಲಾಗಿತ್ತು. ಒಂದು ಧರ್ಮವನ್ನು ಅವಮಾನಿಸುವ ಉದ್ದೇಶದಿಂದ ಪೂಜಾ ಸ್ಥಳವನ್ನು ಅಪವಿತ್ರಗೊಳಿಸುವುದು ಸೇರಿದಂತೆ ಭಾರತೀಯ ನ್ಯಾಯ ಸಂಹಿತೆಯ ವಿವಿಧ ಸೆಕ್ಷನ್‌ಗಳಡಿಯಲ್ಲಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು.

ವಾರ್ತಾ ಭಾರತಿ 25 Mar 2026 8:43 pm

Budget Session 2026 | ಶೈಕ್ಷಣಿಕ ಸಂಸ್ಥೆಯ ಭೂಮಿಗಳ(ರಕ್ಷಣೆ-ಸಕ್ರಮಾತಿ) ವಿಧೇಯಕ ಮೇಲ್ಮನೆಯಲ್ಲಿ ಅಂಗೀಕಾರ

ಬೆಂಗಳೂರು : ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ಮಂಗಳವಾರ ಪರಿಷತ್ತಿನ ಕಲಾಪದಲ್ಲಿ ಮಂಡಿಸಿದ ವಿಧಾನಸಭೆಯಿಂದ ಅಂಗೀಕೃತ ರೂಪದಲ್ಲಿರುವ 2026ನೇ ಸಾಲಿನ ಕರ್ನಾಟಕ ಸರಕಾರಿ ಶೈಕ್ಷಣಿಕ ಸಂಸ್ಥೆಯ ಭೂಮಿಗಳ (ರಕ್ಷಣೆ ಮತ್ತು ಸಕ್ರಮಾತಿ) ವಿಧೇಯಕವು ವಿಸ್ತೃತ ಚರ್ಚೆಯ ನಂತರ ಸರ್ವಾನುಮತದಿಂದ ಅಂಗೀಕಾರವಾಯಿತು. ಈ ವಿಧೇಯಕ ಕುರಿತು ಮಾತನಾಡಿದ ಸಚಿವ ಮಧು ಬಂಗಾರಪ್ಪ, ಶೈಕ್ಷಣಿಕ ಹಿತದೃಷ್ಟಿಯಿಂದ ಶಿಕ್ಷಣ ಇಲಾಖೆಗೆ ದಾನಿಗಳು ಸಾಕಷ್ಟು ಭೂಮಿಗಳನ್ನು ಕೊಟ್ಟಿರುತ್ತಾರೆ. ಆದರೆ, ಕಾರಣಾಂತರದಿಂದ ಶಿಕ್ಷಣ ಇಲಾಖೆಗೆ ವರ್ಗಾವಣೆ, ನೋಂದಣಿಯಾಗದ ಸಂದರ್ಭದಲ್ಲಿ, ದಾನ ನೀಡಿದವರ ಉತ್ತರಾಧಿಕಾರಿಗಳು ಅಥವಾ ಕಾನೂನು ಬದ್ಧ ವಾರಸುದಾರರು ಇತ್ತೀಚೆಗೆ ನ್ಯಾಯಾಲಯದಲ್ಲಿ ವ್ಯಾಜ್ಯ ಹೂಡುತ್ತಿದ್ದಾರೆ ಎಂದರು. ಇಂತಹ ಸಂದರ್ಭದಲ್ಲಿ ಯಾವುದೇ ಖಾಸಗಿ ಜಾಗದಲ್ಲಿ ಕನಿಷ್ಠ 12 ವರ್ಷಗಳಿಂದ ಸತತವಾಗಿ ಸರಕಾರಿ ಶಾಲೆ ಅಥವಾ ಕಾಲೇಜು ನಡೆಯುತ್ತಿದ್ದರೆ, ಆ ಭೂಮಿ ಇನ್ನು ಮುಂದೆ ಅಧಿಕೃತವಾಗಿ ಸರಕಾರದ ಸ್ವತ್ತಾಗಲಿದೆ. ಈ ಭೂಮಿಯ ಮೇಲೆ ಈ ಹಿಂದೆ ಇದ್ದ ಸಾಲ, ಉತ್ತರಾಧಿಕಾರ ಸೇರಿದಂತೆ ವಿವಾದಗಳನ್ನು ಸಂಪೂರ್ಣವಾಗಿ ಮುಕ್ತಗೊಳಿಸಿ ಸರಕಾರದ ಹೆಸರಿಗೆ ನೋಂದಾಯಿಸಲಾಗುತ್ತದೆ ಎಂದು ಮಧು ಬಂಗಾರಪ್ಪ ಹೇಳಿದರು. ದಾನ ನೀಡಿದ ಕುಟುಂಬ ಸದಸ್ಯರನ್ನು ಆಯಾ ಶಾಲೆಯ ಎಸ್‍ಡಿಎಂಸಿ ಮಂಡಳಿಯಲ್ಲಿ ಕಡ್ಡಾಯವಾಗಿ ಸದಸ್ಯರನ್ನಾಗಿ ಮಾಡಿ ಎಂಬ ಬಿಜೆಪಿ ಸದಸ್ಯ ಹನುಮಂತ ನಿರಾಣಿ ಸಲಹೆ ಸೇರಿದಂತೆ ಅನೇಕ ಸಲಹೆಗಳನ್ನು ಪರಿಗಣಸಿ ನಿಯಮಾವಳಿ ರೂಪಿಸುವ ಸಂದರ್ಭದಲ್ಲಿ ಅಂತಿಮಗೊಳಿಸಲಾಗುವುದು ಎಂದು ಮಧು ಬಂಗಾರಪ್ಪ ತಿಳಿಸಿದರು. ಸುದೀರ್ಘ ಚರ್ಚೆಯ ನಂತರ ಮೇಲ್ಮನೆಯಲ್ಲಿ ಈ ವಿಧೇಯಕಕ್ಕೆ ಅಂಗೀಕಾರ ದೊರಕಿತು. ಅನೈತಿಕ ಚಟುವಟಿಕೆಗೆ ಕಟ್ಟುನಿಟ್ಟಿನ ಕ್ರಮ: ಶಿಥಿಲಾವಸ್ಥೆಯಲ್ಲಿರುವ ಶಾಲಾ ಕಟ್ಟಡಗಳಲ್ಲಿ ಅನೈತಿಕ ಚಟುವಟಿಕೆಗಳಿಗೆ ಶಿಕ್ಷಣ ಇಲಾಖೆ ಸಹಿಸುವುದಿಲ್ಲ, ಇನ್ನು ಮುಂದೆ ಇಂತಹ ಚಟುವಟಿಕೆಗಳನ್ನು ನಿಯಂತ್ರಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದರು. ಕರ್ನಾಟಕ ಸರಕಾರಿ ಶೈಕ್ಷಣಿಕ ಸಂಸ್ಥೆಯ ಭೂಮಿಗಳ (ರಕ್ಷಣೆ ಮತ್ತು ಸಕ್ರಮಾತಿ) ವಿಧೇಯಕ-2026 ಅನ್ನು ವಿಧೇಯಕದ ಮೇಲೆ ನಡೆದ ಚರ್ಚೆಯ ವೇಳೆ ಬಿಜೆಪಿ ಸದಸ್ಯ ಪಿ.ಎಚ್.ಪೂಜಾರ್ ಅವರು, ನಮ್ಮ ಕುಟುಂಬ ದಾನವಾಗಿ ನೀಡಿದ ಶಾಲೆಯ ಕಟ್ಟಡ ಈಗ ಶಿಥಿಲಾವಸ್ಥೆಗೆ ತಲುಪಿದ್ದು, ಅಲ್ಲಿ ಜೂಜಾಡುವುದು, ಮದ್ಯ ಸೇವಿಸುವುದು ಸೇರಿದಂತೆ ಆ ಸ್ಥಳ ಅನೈತಿಕ ಚಟುವಟಿಕೆಗಳ ತಾಣವಾಗಿದೆ ಎಂದು ದೂರಿದರು. ಇದಕ್ಕೆ ಉತ್ತರಿಸಿದ ಸಚಿವ ಮಧು ಬಂಗಾರಪ್ಪ, ಶಿಥಿಲಾವಸ್ಥೆಯಲ್ಲಿರುವ ಕಟ್ಟಡಗಳಲ್ಲಿ ಈ ರೀತಿಯ ಅನೈತಿಕ ಚಟುವಟಿಕೆಗಳು ನಡೆದರೆ, ಇನ್ನು ಮುಂದೆ ಶಿಕ್ಷಣ ಇಲಾಖೆ ಸಹಿಸುವ ಪ್ರಶ್ನೆಯೇ ಇಲ್ಲ. ಇಂತಹ ಚಟುವಟಿಕೆಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಅಗತ್ಯ ಕ್ರಮ ಜರುಗಿಸಲಾಗುವುದು ಎಂದರು.    

ವಾರ್ತಾ ಭಾರತಿ 25 Mar 2026 8:43 pm

Gas Bill: ಹೋಟೆಲ್ ಬಿಲ್‌ನಲ್ಲಿ ಗ್ರಾಹಕರಿಗೆ 'ಗ್ಯಾಸ್ ಶುಲ್ಕ' ವಿಧಿಸುವಂತಿಲ್ಲ: ಕೇಂದ್ರದಿಂದ ಖಡಕ್‌ ಎಚ್ಚರಿಕೆ

ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ ಕೊರತೆ ಹಿನ್ನೆಲೆ ಹೋಟೆಲ್‌ ಮತ್ತು ರೆಸ್ಟೋರೆಂಟ್‌ಗಳಲ್ಲಿ ಆಹಾರದ ಬೆಲೆಯ ಹೊರತಾಗಿ ಯಾವುದೇ ಎಲ್‌ಪಿಜಿ ಶುಲ್ಕ, ಗ್ಯಾಸ್ ಸರ್‌ಚಾರ್ಜ್ ಅಥವಾ ಇಂಧನ ವೆಚ್ಚ ಎಂಬ ಹೆಸರಿನಲ್ಲಿ ಹೆಚ್ಚುವರಿ ಹಣ ವಸೂಲಿ ಮಾಡುವುದಕ್ಕೆ ಕೇಂದ್ರ ಸರ್ಕಾರ ಬ್ರೇಕ್ ಹಾಕಿದೆ. ಈ ಕುರಿತು ಕೇಂದ್ರ ಗ್ರಾಹಕ ಸಂರಕ್ಷಣಾ ಪ್ರಾಧಿಕಾರ (CCPA) ಕಟ್ಟುನಿಟ್ಟಿನ ಮಾರ್ಗಸೂಚಿಯನ್ನು ಹೊರಡಿಸಿದೆ. ಇತ್ತೀಚಿನ ದಿನಗಳಲ್ಲಿ

ಒನ್ ಇ೦ಡಿಯ 25 Mar 2026 8:42 pm

IPL 2026 ಉದ್ಘಾಟನಾ ಪಂದ್ಯಕ್ಕೆ ನಮ್ಮ ಮೆಟ್ರೋ ಸೇವೆ ಮಧ್ಯರಾತ್ರಿವರೆಗೂ ವಿಸ್ತರಣೆ; 44 ನಿಲ್ದಾಣದಲ್ಲಿ ಪಾರ್ಕಿಂಗ್ ಲಭ್ಯ

ನಮ್ಮ ಮೆಟ್ರೋ ಉದ್ಘಾಟನಾ ಪಂದ್ಯದ ಹಿನ್ನೆಲೆ ನಮ್ಮ ಮೆಟ್ರೋ ವೇಳಾಪಟ್ಟಿಯನ್ನು ಪರಿಷ್ಕರಣೆ ಮಾಡಲಾಗಿದೆ. ಆ ದಿನ ತಡ ರಾತ್ರಿವರೆಗೂ ರೈಲು ಸಂಚಾರ ನಡೆಸಲಿದೆ. ಇನ್ನು ಪ್ರಯಾಣಿಕರ ಅನುಕೂಲಕ್ಕಾಗಿ 44 ನಿಲ್ದಾಣಗಳಲ್ಲಿ ಹೆಚ್ಚುವರಿ ಪಾರ್ಕಿಂಗ್ ಸೌಲಭ್ಯವನ್ನು ಕಲ್ಪಿಸಲಾಗಿದೆ. ಪಂದ್ಯ ವೀಕ್ಷಣೆಗೆ ಬರುವವರು ರೈಲಿನ ಮೂಲಕ ಬಂದು ರಸ್ತೆ ಸಂಚಾರ ದಟ್ಟಣೆಯಾದಂತೆ ಕ್ರಮವಹಿಸಬೇಕು ಎಂದು ಮನವಿ ಮಾಡಲಾಗಿದೆ.

ವಿಜಯ ಕರ್ನಾಟಕ 25 Mar 2026 8:31 pm

ವಿಜಯನಗರ | ಬಾಣಂತಿಯರ ಜೊತೆ ಹುಟ್ಟುಹಬ್ಬ ಆಚರಿಸಿದ ಗಾಯಕಿ ಕಮಲ ಕುಲಕರ್ಣಿ

ವಿಜಯನಗರ/ಹೊಸಪೇಟೆ : ನಗರದ ತಾಯಿ ಮತ್ತು ಮಕ್ಕಳ 60 ಹಾಸಿಗೆ ಆಸ್ಪತ್ರೆಯಲ್ಲಿ ಖ್ಯಾತ ಗಾಯಕಿ ಕಮಲ ಕುಲಕರ್ಣಿ ಅವರು ತಮ್ಮ 37ನೇ ಹುಟ್ಟುಹಬ್ಬವನ್ನು ಸಮಾಜಮುಖಿ ಕಾರ್ಯದ ಮೂಲಕ ವಿಶಿಷ್ಟವಾಗಿ ಆಚರಿಸಿಕೊಂಡರು. ಸಾಮಾನ್ಯವಾಗಿ ವೈಭವದಿಂದ ಆಚರಿಸುವ ಹುಟ್ಟುಹಬ್ಬಕ್ಕೆ ಬದಲಾಗಿ, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ 300ಕ್ಕೂ ಹೆಚ್ಚು ಬಾಣಂತಿಯರಿಗೆ ಹಣ್ಣು ಮತ್ತು ಬ್ರೆಡ್ ವಿತರಿಸಿದರು. ಈ ಸಂದರ್ಭದಲ್ಲಿ ವಿಜಯನಗರ ಜಿಲ್ಲೆಯ ಕನ್ನಡ ಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಪಿ.ವಿ. ವೆಂಕಟೇಶ್ ಮಾತನಾಡಿ, “ಬಾಣಂತಿಯರಿಗೆ ಹಣ್ಣು ಮತ್ತು ಬ್ರೆಡ್ ವಿತರಿಸುವ ಮೂಲಕ ಕಮಲ ಕುಲಕರ್ಣಿ ಅವರು ತಮ್ಮ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಿರುವುದು ಶ್ಲಾಘನೀಯ. ಇಂತಹ ಸೇವಾ ಮನೋಭಾವ ಇತರರಿಗೆ ಪ್ರೇರಣೆಯಾಗಬೇಕು,” ಎಂದು ಹೇಳಿದರು. ಇನ್ನೂ ಮುಂದೆ ಅವರು, “ಕಮಲ ಕುಲಕರ್ಣಿ ಅವರಂತಹ ಪ್ರತಿಭಾವಂತ ಕಲಾವಿದರನ್ನು ಬೆಂಬಲಿಸುವುದು ನಮ್ಮ ಕರ್ತವ್ಯ. ಜಿಲ್ಲೆಯ ಮಟ್ಟದಿಂದ ರಾಜ್ಯ ಹಾಗೂ ರಾಷ್ಟ್ರ ಮಟ್ಟದವರೆಗೆ ಇವರ ಪ್ರತಿಭೆಯನ್ನು ಪರಿಚಯಿಸಲು ನಾವು ಬದ್ಧರಾಗಿದ್ದೇವೆ,” ಎಂದು ಅಭಿಪ್ರಾಯಪಟ್ಟರು. ಕಾರ್ಯಕ್ರಮದಲ್ಲಿ ಶ್ರೀ ಕೀರ್ತಿ ಜಾನಪದ ಮತ್ತು ಸುಗಮ ಸಂಗೀತ ಕಲಾ ಟ್ರಸ್ಟ್ (ರಿ) ಸದಸ್ಯರು ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದು

ವಾರ್ತಾ ಭಾರತಿ 25 Mar 2026 8:27 pm

ರಾಯಚೂರು | ಪಿ.ಎಂ ವಿಶ್ವಕರ್ಮ ಯೋಜನೆ ಹೆಸರಿನಲ್ಲಿ ಅವ್ಯವಹಾರ ಆರೋಪ : ಮಹಿಳೆಯರಿಂದ ಪ್ರತಿಭಟನೆ

ರಾಯಚೂರು : ಕೇಂದ್ರ ಸರ್ಕಾರದ ಪಿಎಂ ವಿಶ್ವಕರ್ಮ ಯೋಜನೆ ಹೆಸರಿನಲ್ಲಿ ಅವ್ಯವಹಾರ ನಡೆದಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ನೂರಾರು ಮಹಿಳೆಯರು ಜಿಲ್ಲಾ ಪಂಚಾಯತಿ ಕಚೇರಿ ಎದುರು ಬುಧವಾರ ಧಿಡೀರ್ ಪ್ರತಿಭಟನೆ ನಡೆಸಿದರು. ಜಿಲ್ಲೆಯ ವಿವಿಧ ಗ್ರಾಮಗಳ ಮಹಿಳೆಯರಿಗೆ ಹೊಲಿಗೆ ಯಂತ್ರ ನೀಡುವುದಾಗಿ ಭರವಸೆ ನೀಡಿ ತಲಾ 400 ರೂ. ನೋಂದಣಿ ಶುಲ್ಕ ಸಂಗ್ರಹಿಸಿರುವುದಾಗಿ ಆರೋಪಿಸಲಾಗಿದೆ. ಖಾಸಗಿ ಸಂಸ್ಥೆಯಾದ ಏರೋ ಗ್ಲೋಬಲ್ ಟೆಕ್ನಾಲಜಿ ಪ್ರೈವೇಟ್ ಲಿಮಿಟೆಡ್ ಮಹಿಳೆಯರಿಗೆ ಕರೆ ಮಾಡಿ “ನಿಮಗೆ ಹೊಲಿಗೆ ಯಂತ್ರ ಬಂದಿದೆ, ಬ್ಯಾಂಕ್ ಖಾತೆ ತೆರೆಯಿರಿ” ಎಂದು ತಿಳಿಸಿ, ಹಲವು ತಿಂಗಳಿನಿಂದ ಕಚೇರಿಗೆ ಕರೆಸಿ ನೋಂದಣಿ ಮಾಡಿಸಿಕೊಂಡಿತ್ತು ಎನ್ನಲಾಗಿದೆ. ಆದರೆ ಮಂಗಳವಾರ ಕಚೇರಿಗೆ ಹೋದ ಮಹಿಳೆಯರಿಗೆ “ಯಾರೂ ನಿಮ್ಮನ್ನು ಕರೆಯಿಲ್ಲ, ಹೊರಗೆ ಹೋಗಿ” ಎಂದು ಹೇಳಿದ ಘಟನೆ ಆಕ್ರೋಶಕ್ಕೆ ಕಾರಣವಾಯಿತು. ಇದರಿಂದ ಕೋಪಗೊಂಡ ಮಹಿಳೆಯರು ಜಿಲ್ಲಾ ಪಂಚಾಯತಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ನ್ಯಾಯಕ್ಕಾಗಿ ಆಗ್ರಹಿಸಿದರು. ಮಹಿಳೆಯರ ಆರೋಪದಂತೆ, ಯಾವುದೇ ಅಧಿಕೃತ ಅನುಮತಿ ಇಲ್ಲದೇ ಖಾಸಗಿ ಸಂಸ್ಥೆಯೊಂದು ನೂರಾರು ಮಹಿಳೆಯರಿಂದ ಹಣ ಸಂಗ್ರಹಿಸಿದೆ. ಬ್ಯಾಂಕ್ ಖಾತೆ ಹಾಗೂ ಆಧಾರ್ ವಿವರಗಳನ್ನು ನೀಡಿದರೆ ಮಾತ್ರ ಹೊಲಿಗೆ ಯಂತ್ರ ನೀಡಲಾಗುತ್ತದೆ ಎಂದು ನಂಬಿಸಲಾಗಿದೆ ಎನ್ನಲಾಗಿದೆ. ಇದೇ ವೇಳೆ, ಯೋಜನೆ ಜಾರಿಗೆ ಯಾವುದೇ ಖಾಸಗಿ ಸಂಸ್ಥೆಯನ್ನು ನೇಮಿಸಿಲ್ಲವೆಂಬ ಮಾಹಿತಿ ಲಭ್ಯವಾಗಿದ್ದು, ₹400 ಸಂಗ್ರಹಕ್ಕೆ ಯಾರು ಅನುಮತಿ ನೀಡಿದರು ಎಂಬುದು ಸ್ಪಷ್ಟವಾಗಿಲ್ಲ. ಅನೇಕರು ಮೌಖಿಕ ದೂರು ನೀಡಿದರೂ ಜಿಲ್ಲಾ ಕೈಗಾರಿಕಾ ಇಲಾಖೆ ಮೌನ ವಹಿಸಿರುವುದು ಅನುಮಾನಕ್ಕೆ ಕಾರಣವಾಗಿದೆ. ಡಿಸಿ ಕ್ರಮ : ಪ್ರಕರಣ ಜಿಲ್ಲಾಧಿಕಾರಿ ನಿತೀಶ್‌ ಅವರ ಗಮನಕ್ಕೆ ಬಂದ ಬಳಿಕ ತಕ್ಷಣ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ. ಸಹಾಯಕ ಆಯುಕ್ತ ಡಾ. ಹಂಪಣ್ಣ ಸಜ್ಜನ ನೇತೃತ್ವದಲ್ಲಿ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಕಚೇರಿ ತಪಾಸಣೆ ನಡೆಸಿ, ಸಂಬಂಧಿತ ಸಂಸ್ಥೆಯ ಕಚೇರಿಗೆ ಬೀಗ ಹಾಕಿ ವರದಿ ಸಲ್ಲಿಸಲು ಸೂಚಿಸಿದ್ದಾರೆ. ಈ ಪ್ರಕರಣದ ಕುರಿತು ಸಂಪೂರ್ಣ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಮಹಿಳೆಯರು ಆಗ್ರಹಿಸಿದ್ದಾರೆ.

ವಾರ್ತಾ ಭಾರತಿ 25 Mar 2026 8:23 pm

ರಾಯಚೂರು ಜಿಲ್ಲೆಯಲ್ಲಿ ಮಾನವ ಹಕ್ಕುಗಳ ಆಯೋಗದ ಪ್ರವಾಸ : ಹಾಸ್ಟೆಲ್, ಬಸ್ ನಿಲ್ದಾಣ, ಜೈಲು, ಪೊಲೀಸ್ ಠಾಣೆಗಳ ಪರಿಶೀಲನೆ

ರಾಯಚೂರು : ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಡಾ.ಟಿ.ಶ್ಯಾಮ್ ಭಟ್ ಹಾಗೂ ಸದಸ್ಯ ಎಸ್.ಕೆ.ವಂಟಿಗೋಡಿ ಅವರು ಮಾ.25ರಂದು ರಾಯಚೂರಿನಲ್ಲಿ ವಿವಿಧೆಡೆ ಭೇಟಿ ನಡೆಸಿ ಸಾರ್ವಜನಿಕ ಸೇವೆಗಳ ಸ್ಥಿತಿಗತಿ ಪರಿಶೀಲಿಸಿದರು. ಬೆಂಗಳೂರಿನಿಂದ ಬೆಳಗ್ಗೆ ಹೊರಟ ಆಯೋಗದ ತಂಡ ಮಧ್ಯಾಹ್ನ ರಾಯಚೂರಿಗೆ ಆಗಮಿಸಿ, ಊಟದ ವಿರಾಮದ ಬಳಿಕ ಪರಿಶೀಲನಾ ಕಾರ್ಯ ಆರಂಭಿಸಿತು. ಮೊದಲಿಗೆ ರಂಗಮಂದಿರದ ಬಳಿಯ ಡಾ.ಬಿ.ಆರ್. ಅಂಬೇಡ್ಕರ್ ಮೆಟ್ರಿಕ್ ಪೂರ್ವ ಬಾಲಕಿಯರ ವಸತಿ ನಿಲಯಕ್ಕೆ ಭೇಟಿ ನೀಡಿ ವಿದ್ಯಾರ್ಥಿನಿಯರೊಂದಿಗೆ ಸಂವಾದ ನಡೆಸಿದರು. ಸ್ನಾನಕ್ಕೆ ಬಿಸಿ ನೀರು, ಸೋಪು ಕಿಟ್, ವೈದ್ಯರ ನಿಯಮಿತ ಭೇಟಿ, ಬಸ್ ಸೌಲಭ್ಯ, ಊಟದ ಗುಣಮಟ್ಟ, ಸಿಸಿಟಿವಿ ವ್ಯವಸ್ಥೆ ಇತ್ಯಾದಿ ಕುರಿತು ಪ್ರಶ್ನಿಸಿ ಮಾಹಿತಿ ಪಡೆದುಕೊಂಡರು. ವಸತಿ ನಿಲಯದಲ್ಲಿ ಒಂದೇ ಕೊಠಡಿಯಲ್ಲಿ ಐದರಿಂದ ಏಳು ವಿದ್ಯಾರ್ಥಿನಿಯರು ವಾಸಿಸುವುದರಿಂದ ಇಕ್ಕಟ್ಟು ಉಂಟಾಗಿದೆ ಎಂದು ವಾರ್ಡನ್ ಮಾಹಿತಿ ನೀಡಿದರು. ಇದಕ್ಕೆ ಸ್ಪಂದಿಸಿದ ಆಯೋಗ, ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಕೊಠಡಿಗಳ ವ್ಯವಸ್ಥೆ ಮಾಡಬೇಕು ಎಂದು ಸೂಚಿಸಿತು. ಜೊತೆಗೆ ರೇಷನ್ ಸ್ವಚ್ಛತೆ ಕಾಪಾಡುವುದು, ಅಡುಗೆಗೆ ಶುದ್ಧ ನೀರು ಬಳಕೆ ಮಾಡುವಂತೆ ಸಲಹೆ ನೀಡಿದರು. ಆಹಾರ ಧಾನ್ಯಗಳ ಗುಣಮಟ್ಟವನ್ನು ಕೂಡ ಪರಿಶೀಲಿಸಿ, ವಿದ್ಯಾರ್ಥಿಗಳಿಗೆ ನಿಯಮಿತ ಆರೋಗ್ಯ ತಪಾಸಣೆ ಹಾಗೂ ಜ್ಞಾನವರ್ಧಕ ಶಿಬಿರಗಳನ್ನು ಹಮ್ಮಿಕೊಳ್ಳಲು ಸೂಚಿಸಿದರು. ನಂತರ ಕೇಂದ್ರ ಬಸ್ ನಿಲ್ದಾಣಕ್ಕೆ ಭೇಟಿ ನೀಡಿ ಪ್ರಯಾಣಿಕರ ಸಮಸ್ಯೆಗಳನ್ನು ಆಲಿಸಿದರು. ರಾಯಚೂರು-ಲಿಂಗಸೂರು ಹಾಗೂ ರಾಯಚೂರು-ಮಾನ್ವಿ ಮಾರ್ಗಗಳಲ್ಲಿ ಬಸ್ ಸೌಲಭ್ಯ ಕೊರತೆ, ತಡೆರಹಿತ ಬಸ್‌ಗಳ ಸಮಸ್ಯೆ, ಪಾಸ್ ಸೌಲಭ್ಯಗಳ ಅಡಚಣೆ ಕುರಿತು ಪ್ರಯಾಣಿಕರು ಅಸಮಾಧಾನ ವ್ಯಕ್ತಪಡಿಸಿದರು. ಈ ಬಗ್ಗೆ ಜಿಲ್ಲಾಧಿಕಾರಿಗಳ ಸಭೆಯಲ್ಲಿ ಚರ್ಚಿಸುವುದಾಗಿ ಆಯೋಗ ತಿಳಿಸಿತು. ಬಸ್ ನಿಲ್ದಾಣದಲ್ಲಿನ ಅಂಗಡಿಗಳಲ್ಲಿ ಆಹಾರ ಪದಾರ್ಥಗಳ ಅವಧಿ ಪರಿಶೀಲನೆ ಕೂಡ ನಡೆಸಲಾಯಿತು. ಬಳಿಕ ಜಿಲ್ಲಾ ಕಾರಾಗೃಹಕ್ಕೆ ಭೇಟಿ ನೀಡಿ ಕೈದಿಗಳೊಂದಿಗೆ ಸಂವಾದ ನಡೆಸಿದರು. ಪ್ರಕರಣಗಳ ಪ್ರಗತಿ, ವಕೀಲರ ಲಭ್ಯತೆ, ಆರೋಗ್ಯ ತಪಾಸಣೆ, ಹಾಸಿಗೆ ವ್ಯವಸ್ಥೆ ಕುರಿತು ಮಾಹಿತಿ ಪಡೆದುಕೊಂಡರು. ಮಹಿಳಾ ಕೈದಿಗಳ ಸೆಲ್‌ಗೂ ಭೇಟಿ ನೀಡಿ ಅಹವಾಲು ಆಲಿಸಿದರು. ಜೈಲು ನಿರ್ವಹಣೆ ಕುರಿತು ಸಹಾಯಕ ಅಧೀಕ್ಷಕಿ ಅನಿತಾ ಎಸ್. ಹಿರೇಮನಿ ಮಾಹಿತಿ ನೀಡಿದರು. ಇದಾದ ನಂತರ ಸದರ ಬಜಾರ್ ಪೊಲೀಸ್ ಠಾಣೆಗೆ ಭೇಟಿ ನೀಡಿ ಕ್ರೈಮ್ ರಿಜಿಸ್ಟರ್ ಹಾಗೂ ಪಿಎಸ್‌ಆರ್ ಪರಿಶೀಲಿಸಿದರು. ಮಹಿಳಾ ಪೊಲೀಸ್ ಠಾಣೆಗೆ ಭೇಟಿ ನೀಡಿ ಮಕ್ಕಳ ಸ್ನೇಹಿ ಕೊಠಡಿಯನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ನಗರಸಭೆ ಸಮಿತಿ ಕಾರ್ಯದರ್ಶಿ ಕೃಷ್ಣ ಶಾವಂತಗೇರಾ, ತಹಸೀಲ್ದಾರ ಸುರೇಶ್ ವರ್ಮಾ, ತಾಪಂ ಇಒ ಚಂದ್ರಶೇಖರ, ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಪ್ರವೀಣಕುಮಾರ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ವಾರ್ತಾ ಭಾರತಿ 25 Mar 2026 8:19 pm

ಡಾ.ಎಂ.ಪ್ರಭಾಕರ ಜೋಶಿಗೆ ‘ಬಳ್ಕೂರು ಯಕ್ಷ ಕುಸುಮ’ ಪ್ರಶಸ್ತಿ

ಮಂಗಳೂರು, ಮಾ.25: ಕಲೆ ಇದ್ದ ಹಾಗೆ ಇದ್ರೆ ಅದು ಭಜನೆ ಆಗುತ್ತದೆ, ಪ್ರತಿಭೆ ಇಟ್ಟುಕೊಂಡು ಹೇಗೆ ಕೆಲಸ ಮಾಡಬೇಕು ಎಂಬುದಕ್ಕೆ ಈ ಕಲೆ ಸಾಕ್ಷಿ. ಕಳೆದ ಹಲವು ವರ್ಷಗಳಿಂದ ಸಾವಿರಾರು ಕಲಾವಿದರು ಯಕ್ಷರಂಗಭೂಮಿ ಯಲ್ಲಿ ದುಡಿಯುತ್ತಿದ್ದಾರೆ. ಜಗತ್ತಿನ ಯಾವುದೇ ಕಲೆಗೂ ಕೂಡ ಯಕ್ಷಗಾನಕ್ಕೆ ಇರುವ ಶಕ್ತಿ ಇನ್ನೂ ಯಾವ ಕಲೆಯಲ್ಲಿಯೂ ಇಲ್ಲ ಎಂದು ಅರ್ಥಧಾರಿ ಡಾ.ಎಂ.ಪ್ರಭಾಕರ ಜೋಶಿ ಹೇಳಿದ್ದಾರೆ ನಗರದ ಕೊಡಿಯಾಲ್ ಬೈಲ್ ಕುದ್ರೋಳಿ ಶ್ರೀ ಭಗವತೀ ದೇವಸ್ಥಾನದ ಕೂಟಕ್ಕಳ ಸಭಾಂಗಣದಲ್ಲಿ ಯಕ್ಷ ಕುಸುಮ ಚಾರಿಟೇಬಲ್ ಟ್ರಸ್ಟ್ (ರಿ) ಮತ್ತು ರಂಗಸ್ಥಳ ಮಂಗಳೂರು (ರಿ) ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ದಕ್ಷಿಣ ಕನ್ನಡ ಜಿಲ್ಲೆ ಇವರ ಆಶ್ರಯದಲ್ಲಿ ನಡೆದ ‘ಬಳ್ಕೂರು ಯಕ್ಷ ಕುಸುಮ’ ಪ್ರಶಸ್ತಿಯನ್ನು ಸ್ವೀಕರಿಸಿ ಮಾತನಾಡಿದರು. ‘ ಕಳೆದ 60 ವರ್ಷಗಳಿಂದ ಯಕ್ಷಗಾನ ಕಲೆಗಾಗಿ ನನ್ನ ಬದುಕನ್ನು ಸಮರ್ಪಿಸುತ್ತಿದ್ದೇನೆ. 10ನೇ ವರ್ಷದಲ್ಲಿ ನನ್ನ ಅಜ್ಜನಿಂದ ಕಲಿತ ಅರ್ಥಗಾರಿಕೆ ಬದುಕಿಗೆ ಪೂರಕವಾಗಿದೆ ಎಂದರು. ಮಂಗಳೂರು ನಗರದ ದಕ್ಷಿಣ ವಿಧಾನ ಸಭಾಕ್ಷೇತ್ರ ಶಾಸಕರಾದ ವೇದವ್ಯಾಸ ಕಾಮತ್ ಶುಭ ಹಾರೈಸಿದರು. ಹಿರಿಯ ಸಾಹಿತಿ ಜನಾರ್ದನ ಹಂದೆ ಯಕ್ಷ ಕುಸುಮ ಕವಿತೆಯನ್ನು ವಾಚಿಸಿದರು. ಕಲ್ಕೂರ ಪ್ರತಿಷ್ಠಾನ ಅಧ್ಯಕ್ಷ ಎಸ್ ಪ್ರದೀಪ ಕುಮಾರ್ ಕಲ್ಕೂರ ಡಾ ಎಂ ಪ್ರಭಾಕರ ಜೋಶಿಯವರ ಯಕ್ಷಗಾನಕ್ಕೆ ನೀಡಿರುವ ಕೊಡುಗೆಯನ್ನು ಸ್ಮರಿಸಿದರು. ವೇದಿಕೆಯಲ್ಲಿ ಮಂಗಳೂರಿನ ಹಿರಿಯ ಲೆಕ್ಕ ಪರಿಶೋಧಕ ಎಸ್ ಎಸ್ ನಾಯಕ್, ಮಂಗಳೂರು ರಂಗಸ್ಥಳ ಸಂಸ್ಥೆಯ ಶ್ರೀ ಎಸ್ ಎಲ್ ನಾಯಕ್ ಮತ್ತು ದಿನೇಶ್ ಪೈ ಮಂಗಳೂರು, ಪುಟ್ಟಣ್ಣ ಕುಲಾಲ್ ಪ್ರತಿಷ್ಠಾನದ ಅಧ್ಯಕ್ಷ ಡಾ.ಅಣ್ಣಯ್ಯ ಕುಲಾಲ್, ಮೇಳದ ಯಜಮಾನ ರಂಜಿತ್ ಕುಮಾರ್ ವಕ್ವಾಡಿ, ಬಳ್ಕೂರು ಯಕ್ಷ ಕುಸುಮ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷರಾದ ಕರುಣಾಕರ ಬಳ್ಕೂರು ಇವರು ಉಪಸ್ಥಿತರಿದ್ಧರು. ಸಭಾ ಕಾರ್ಯಕ್ರಮದ ಬಳಿಕ ಬಡಗು ತಿಟ್ಟಿನ ಪ್ರಸಿದ್ಧ ಯಕ್ಷಗಾನ ಮೇಳವಾಗಿರುವ ಶ್ರೀ ನಂದಿಕೇಶ್ವರ ಪ್ರಸಾದಿತ ಯಕ್ಷಗಾನ ಮಂಡಳಿ ಶ್ರೀಕ್ಷೇತ್ರ ಮೆಕ್ಕೆಕಟ್ಟು ಮೇಳದವರಿಂದ ಯಕ್ಷಗಾನ ಪ್ರದರ್ಶನವಾಗಿ ‘ದ್ರೌಪದಿ ಪ್ರತಾಪ ಮತ್ತು ವಿದ್ಯುಜ್ಜಿಹ್ವ ’ ಎಂಬ ಪೌರಾಣಿಕ ಕಥಾನಕ ಪ್ರದರ್ಶನಗೊಂಡಿತು. ದ್ರೌಪದಿ ಪ್ರತಾಪ ಪ್ರಸಂಗದಲ್ಲಿ ಅತಿಥಿ ಕಲಾವಿದರಾಗಿ ಅಶ್ವಿನಿ ಕೊಂಡದಕುಳಿ ಅವರು ದ್ರೌಪದಿ ಪಾತ್ರವನ್ನು ನಿರ್ವಹಿಸಿದರು. ಅಂತೆಯೇ ಮೆಕ್ಕೆಕಟ್ಟು ಮೇಳದ ಸುಪ್ರಸಿದ್ಧ ಕಲಾವಿದರಾದ ನಾಗರಾಜ್ ಭಂಡಾರಿ, ರಾಜೇಶ್ ಭಂಡಾರಿ, ಹಳ್ಳಾಡಿ ಜಯರಾಮ್ ಶೆಟ್ಟಿ, ಗಾಂವಕ್ಕರ್ ಸೇರಿದಂತೆ ಭಾಗವತರಾದ ಸುಧೀರ್ ಭಟ್ ಪೆರ್ಡೂರು, ಸುರೇಶ್ ಭದ್ರಾಪುರ ಇವರಿಂದ ಯಕ್ಷಗಾನ ಪ್ರದರ್ಶನ ನಡೆಯಿತು. ಕನ್ನಡ ಉಪನ್ಯಾಸಕರಾದ ಕೃಷ್ಣಭಟ್ ಸುಣ್ಣಂಗುಳಿ ಕಾರ್ಯಕ್ರಮ ನಿರೂಪಿಸಿದರು. 

ವಾರ್ತಾ ಭಾರತಿ 25 Mar 2026 8:17 pm

ವೆನ್ಲಾಕ್ ಮಾಸ್ಟರ್ ಪ್ಲಾನ್ ತಯಾರಿಸಲು ದಕ ಜಿಲ್ಲಾಧಿಕಾರಿ ಸೂಚನೆ

ಮಂಗಳೂರು, ಮಾ.25: ದ.ಕ. ಜಿಲ್ಲಾ ವೆನ್ಲಾಕ್ ಆಸ್ಪತ್ರೆಯ ಸಮಗ್ರ ಅಭಿವೃದ್ಧಿಗೆ ಮಾಸ್ಟರ್ ಪ್ಲಾನ್ ತಯಾರಿಸಿ ಕಾರ್ಯರೂಪಕ್ಕೆ ತರುವಂತೆ ದ.ಕ.ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ಸೂಚಿಸಿದ್ದಾರೆ. ವೆನ್ಲಾಕ್ ಆಸ್ಪತ್ರೆಯಲ್ಲಿ ಬುಧವಾರ ನಡೆದ ಆರೋಗ್ಯ ರಕ್ಷಾ ಸಮಿತಿ ಕಾರ್ಯಕಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಆಸ್ಪತ್ರೆಯಲ್ಲಿ ವಿವಿಧ ವಿಭಾಗಗಳನ್ನು ರೋಗಿಗಳಿಗೆ ಸ್ನೇಹಿಯಾಗಿ ಕಾರ್ಯರೂಪಕ್ಕೆ ತರಲು ಮಾಸ್ಟರ್ ಪ್ಲಾನ್ ಅಗತ್ಯವಾಗಿದ್ದು, ಈ ನಿಟ್ಟಿನಲ್ಲಿ ಶೀಘ್ರವಾಗಿ ಕಾರ್ಯಪ್ರವೃತ್ತರಾಗಬೇಕು. ರೋಗಿಗಳಿಗೆ ನೆರವಾಗಲು ಒಪಿಡಿ, ಎಕ್ಸ್‌ರೇ, ರೇಡಿಯೋಲಜಿ ಮತ್ತಿತರ ಘಟಕಗಳನ್ನು ಒಂದೇ ಕಡೆ ನಿರ್ಮಿಸಲು ಎಂದು ಡಿಸಿ ಸೂಚಿಸಿದರು. ವೆನ್ಲಾಕ್ ಆಸ್ಪತ್ರೆಯ ಪ್ರಸಕ್ತ ಇರುವ ಹೊರರೋಗಿ ವಿಭಾಗಗಳ ಕಟ್ಟಡವನ್ನು ತೆರವುಗೊಳಿಸಿ ನೂತನ ಅತ್ಯಾಧುನಿಕ ಮಾದರಿಯ ಒಪಿಡಿ ಕಟ್ಟಡವನ್ನು ನಿರ್ಮಿಸಲು ರಾಜ್ಯ ಸರಕಾರದಿಂದ 70 ಕೋ.ರೂ. ಅನುದಾನ ಮಂಜೂರಾಗಿದೆ. ಪ್ರಸಕ್ತ ಅಲ್ಲಿರುವ ಎಲ್ಲಾ ವಿಭಾಗಗಳನ್ನು ಟ್ರಾಮಾ ಬ್ಲಾಕ್‌ಗೆ ಸ್ಥಳಾಂತರಿಸಿ ಹಳೆ ಒಪಿಡಿ ಕಟ್ಟಡವನ್ನು ಕೆಡವಲಾಗು ವುದು. ಕಾಮಗಾರಿಗೆ ಟೆಂಡರ್ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದು ವೆನ್ಲಾಕ್ ಅಧೀಕ್ಷಕ ಡಾ. ಶಿವಪ್ರಕಾಶ್ ತಿಳಿಸಿದರು. ಲೇಡಿಗೋಶನ್ ಆಸ್ಪತ್ರೆಗೆ ಪ್ರತ್ಯೇಕ ಆರೋಗ್ಯ ರಕ್ಷಾ ಸಮಿತಿ ರಚಿಸಲು ಈಗಾಗಲೇ ಸರಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗಿದೆ. ವೆನ್ಲಾಕ್‌ನಲ್ಲಿ ಪಿಎಂ ಅಭಿಮ್ ಯೋಜನೆಯಡಿ 50 ಬೆಡ್‌ಗಳ ಕ್ರಿಟಿಕಲ್ ಕೇರ್ ಕಟ್ಟಡದ ಕಾಮಗಾರಿ ಕೊನೆಯ ಹಂತದಲ್ಲಿದೆ. ಅತ್ತಾವರ ರಸ್ತೆಯಲ್ಲಿರುವ ವೆನ್‌ಲಾಕ್‌ನ 2.71 ಎಕರೆ ಖಾಲಿ ಜಾಗದಲ್ಲಿ ಪಾರ್ಕಿಂಗ್ ಮಾಡಲು ಪೇ ಆಂಡ್ ಪಾರ್ಕಿಂಗ್ ಕಾಮಗಾರಿಗೆ ಮಹಾನಗರಪಾಲಿಕೆಗೆ ಪತ್ರ ಬರೆಯಲಾಗಿದೆ ಎಂದು ಸಭೆಗೆ ಅಧಿಕಾರಿಗಳು ಮಾಹಿತಿ ನೀಡಿದರು. ವೆನ್ಲಾಕ್ ಹೊಸ ಸರ್ಜಿಕಲ್ ಬ್ಲಾಕ್ ಕಟ್ಟಡದ ನೆಲಮಹಡಿಯ ಮಳಿಗೆಗಳನ್ನು ವಾಣಿಜ್ಯ ಉಪಯೋಗಕ್ಕೆ ಹರಾಜು ಮೂಲಕ ನೀಡಲು ಒಪ್ಪಿಗೆ ನೀಡಲಾಯಿತು. ಸಭೆಯಲ್ಲಿ ದ.ಕ.ಜಿಪಂ ಸಿಇಒ ನರ್ವಾಡೆ ನಾಯಕ್ ಕಾರ್ಬಾರಿ, ಲೇಡಿಗೋಶನ್ ಆಸ್ಪತ್ರೆಯ ಅಧೀಕ್ಷಕ ಡಾ. ದುರ್ಗಾಪ್ರಸಾದ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ತಿಮ್ಮಯ್ಯ ಮತ್ತಿತರರು ಉಪಸ್ಥಿತರಿದ್ದರು.

ವಾರ್ತಾ ಭಾರತಿ 25 Mar 2026 8:13 pm

ರಾಯಚೂರು ಒಪೆಕ್ ಆಸ್ಪತ್ರೆಗೆ ಮಾನವ ಹಕ್ಕುಗಳ ಆಯೋಗ ಭೇಟಿ; : ಪರಿಶೀಲನೆ

ರಾಯಚೂರು : ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರು ಹಾಗೂ ಸದಸ್ಯರು ಮಾರ್ಚ್ 25ರಂದು ರಾಯಚೂರು ಪ್ರವಾಸದ ಅಂಗವಾಗಿ ನಗರದ ರಾಜೀವ್ ಗಾಂಧಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಭೇಟಿ ನೀಡಿ, ಆಸ್ಪತ್ರೆಯ ಸೌಲಭ್ಯಗಳ ಬಗ್ಗೆ ಪರಿಶೀಲನೆ ನಡೆಸಿದರು. ಸಂಜೆ ಸುಮಾರು 6 ಗಂಟೆ ವೇಳೆಗೆ ಆಸ್ಪತ್ರೆಗೆ ಆಗಮಿಸಿದ ಆಯೋಗದ ತಂಡ, ಪ್ರವೇಶದ ವೇಳೆ ರೋಗಿಯೊಬ್ಬರು ಟ್ರಾಲಿಯ ಮೇಲೆ ಮತ್ತು ಮತ್ತೊಬ್ಬರು ನೆಲದ ಮೇಲೆ ಮಲಗಿರುವ ದೃಶ್ಯ ಗಮನಿಸಿ ಅಚ್ಚರಿ ವ್ಯಕ್ತಪಡಿಸಿತು. ಬಳಿಕ ರೋಗಿಗಳ ಅಹವಾಲುಗಳನ್ನು ಆಲಿಸಿದ ವೇಳೆ, “ನಾವು ನಿನ್ನೆ ಬಂದಿದ್ದೇವೆ, ಇದುವರೆಗೆ ಬೆಡ್ ನೀಡಿಲ್ಲ ಎಂದು ರೋಗಿಯೊಬ್ಬರು ಅಳಲು ತೋಡಿಕೊಂಡರು. ಇದಕ್ಕೆ ಪ್ರತಿಕ್ರಿಯಿಸಿದ ಆಯೋಗದ ಅಧ್ಯಕ್ಷರು, “ಇದುವರೆಗೆ ಯಾಕೆ ಬೆಡ್ ನೀಡಿಲ್ಲ? ಈ ರೀತಿಯ ನಿರ್ಲಕ್ಷ್ಯ ಅನುಮತಿಸಲಾಗುವುದಿಲ್ಲ” ಎಂದು ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ತಕ್ಷಣವೇ ರಿಮ್ಸ್ ನಿರ್ದೇಶಕರಾದ ಡಾ. ರಮೇಶ್ ಹಾಗೂ ಒಪೆಕ್ ಆಸ್ಪತ್ರೆಯ ವಿಶೇಷಾಧಿಕಾರಿ ಡಾ. ರಮೇಶ್ ಸಾಗರ್ ಸ್ಥಳಕ್ಕೆ ಆಗಮಿಸಿ ಆಯೋಗಕ್ಕೆ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ವೈದ್ಯರಾದ ಡಾ. ಮುರಳೀರಾವ್, ಡಾ. ಗೋಪಿನಾಥ, ಡಾ. ಮಂಜುನಾಥ ಹಟ್ಟಿ, ಡಾ. ವೀರೇಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

ವಾರ್ತಾ ಭಾರತಿ 25 Mar 2026 8:12 pm

ಎ.25ರಿಂದ ಈಶಾನ್ಯ ಭಾರತಕ್ಕೆ ಬೇಸಿಗೆ ವಿಶೇಷ ಪ್ರವಾಸಿ ರೈಲು

ಮಂಗಳೂರು, ಮಾ.23: ಭಾರತೀಯ ರೈಲ್ವೆ, ಸೌತ್ ಸ್ಟಾರ್ ರೈಲ್ ಇಂಡಿಯಾ ಮತ್ತು ಟೂರ್ ಟೈಮ್ಸ್ ಸಹಯೋಗ ದಲ್ಲಿ ಭಾರತ್ ಗೌರವ್ ರೈಲು ಯೋಜನೆಯಡಿ ಈಶಾನ್ಯ ಭಾರತಕ್ಕೆ ಬೇಸಿಗೆ ವಿಶೇಷ ಪ್ರವಾಸಿ ರೈಲನ್ನು ಘೋಷಿ ಸಿದೆ. ಈ ಪ್ರಯಾಣವು ಎಪ್ರಿಲ್ 25 ರಂದು ಪ್ರಾರಂಭವಾಗಲಿದ್ದು, ವಿಶಾಖಪಟ್ಟಣಂ ಮತ್ತು ಕೋಲ್ಕತ್ತಾ ಸೇರಿ 14 ದಿನಗಳ ಕಾಲ ಒಂದೇ ರೈಲು ಪ್ರಯಾಣದೊಳಗೆ ಮೂರು ವಿಭಿನ್ನ ಪ್ರವಾಸ ಪ್ಯಾಕೇಜ್‌ಗಳನ್ನು ನೀಡಲಿದೆ . ವಿಶೇಷವಾಗಿ ವಿನ್ಯಾಸಗೊಳಿಸಲಾದ ಈ ಪ್ರವಾಸಿ ರೈಲು ದೇಶದ ಕೆಲವು ಅತ್ಯಂತ ಸುಂದರವಾದ ಮತ್ತು ಸಾಂಸ್ಕೃತಿಕವಾಗಿ ಮಹತ್ವದ ತಾಣಗಳನ್ನು ಒಳಗೊಂಡಿದೆ. ಮೊದಲ ಪ್ಯಾಕೇಜ್‌ನಲ್ಲಿ ಗ್ಯಾಂಗ್ಟಾಕ್, ಡಾರ್ಜಿಲಿಂಗ್‌ಗೆ ಭೇಟಿ ನೀಡಬಹುದು. ಎರಡನೇ ಪ್ಯಾಕೇಜ್ ಈಶಾನ್ಯದ ಸುಂದರ ತಾಣಗಳಾದ ಗುವಾಹಟಿ, ಶಿಲ್ಲಾಂಗ್, ಚಿರಾ ಪುಂಜಿ, ಮಾವ್ಲಿನ್ನಾಂಗ್ ಮತ್ತು ದಾವ್ಕಿಗಳನ್ನು ಒಳಗೊಂಡಿದೆ. ಮೂರನೇ ಪ್ಯಾಕೇಜ್ ಭೂತಾನ್ ಗೆ ಅಂತರ್‌ ರಾಷ್ಟ್ರೀಯ ಪ್ರವಾಸವಾಗಿದ್ದು, ಇದು ಥಿಂಪು, ಪುನಾಖಾ, ಪಾರೋ ಮತ್ತು ಚೆಲೆ ಲಾ ಪಾಸ್‌ಗಳನ್ನು ಒಳಗೊಂಡಿದೆ ಎಂದು ಭಾರತೀಯ ರೈಲ್ವೆ ಭಾರತ್ ಗೌರವ್ ರೈಲು ಸೌತ್‌ಸ್ಟಾರ್ ರೈಲು ಟೂರ್ ಟೈಮ್ ನಿರ್ದೇಶಕ ವಿಘ್ನೇಶ್ ತಿಳಿಸಿದ್ದಾರೆ. ಸಾಮಾನ್ಯ ರೈಲುಗಳಿಗಿಂತ ಭಿನ್ನವಾಗಿ, ಈ ವಿಶೇಷ ಪ್ರವಾಸಿ ರೈಲು ಐಆರ್ಸಿಟಿಸಿ ವೆಬ್‌ಸೈಟ್ ನಲ್ಲಿ ಬುಕಿಂಗ್ ಮಾಡಲು ಲಭ್ಯವಿಲ್ಲ. ಟೂರ್ ಟೈಮ್ಸ್ ಅನ್ನು ನೇರವಾಗಿ 7305858585 ಕ್ಕೆ ಸಂಪರ್ಕಿಸುವ ಮೂಲಕ ಅಥವಾ ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ಮಾತ್ರ ಕಾಯ್ದಿರಿಸಬಹುದಾಗಿದೆ. ಸೌತ್ ಸ್ಟಾರ್ ರೈಲ್ ಮತ್ತು ಟೂರ್ ಟೈಮ್ಸ್ ಈಗಾಗಲೇ 53 ನಿರ್ಗಮನಗಳನ್ನು ಯಶಸ್ವಿಯಾಗಿ ನಿರ್ವಹಿಸುತ್ತಿದ್ದು, 2,90,229 ಕಿಲೋಮೀಟರ್ ಗಳನ್ನು ರೈಲು ಕ್ರಮಿಸಿವೆ ಮತ್ತು 24,402 ಯಾತ್ರಿಕರು ಮತ್ತು ಪ್ರವಾಸಿಗರಿಗೆ ಪ್ರಯಾಣ ಸೌಲಭ್ಯಗಳನ್ನು ಒದಗಿಸಿವೆ. ಕೇರಳದಲ್ಲಿ ಅನುಕೂಲಕರ ಬೋರ್ಡಿಂಗ್ ಪಾಯಿಂಟ್‌ಗಳೊಂದಿಗೆ ಈ ರೈಲು ಮಧುರೈನಿಂದ ಹೊರಡಲಿದೆ. ಮಂಗಳೂರಿನಿಂದ ಪ್ರಯಾಣಿಸುವ ಪ್ರಯಾಣಿಕರಿಗೆ ಅವರ ಆದ್ಯತೆಯ ಆಧಾರದ ಮೇಲೆ ಪಾಲಕ್ಕಾಡ್, ಒತ್ತಪಾಲಂ ಅಥವಾ ತ್ರಿಶೂರ್‌ಗೆ ಪೂರಕ ವರ್ಗಾವಣೆ ನೀಡಲಿದೆ. ಸಾರ್ವಜನಿಕ ಪ್ರಕಟನೆಮನರಂಜನಾ ವ್ಯವಸ್ಥೆಗಳು, ಪ್ರವಾಸ ವ್ಯವಸ್ಥಾಪಕರು, ವಿಶೇಷ ಕೋಚ್ ಭದ್ರತೆ, ರೈಲಿನ ಒಳಗೆ ಹಾಗೂ ಹೊರಗೆ ಅನಿಯಮಿತ ದಕ್ಷಿಣ ಭಾರತೀಯ ಊಟ ಮತ್ತಿತರ ಸೌಲಭ್ಯಗಳನ್ನು ಹೊಂದಿದೆ. ಒಂದು ಫಸ್ಟ್ ಎಸಿ, ಮೂರು 2ಎಸಿ, ಐದು 3ಎಸಿ, ಎರಡು ಸ್ಲೀಪರ್ ಕ್ಲಾಸ್ ಮತ್ತು ಪ್ಯಾಂಟ್ರಿ ಕಾರ್ ಹೊಂದಿದ್ದು, 650 ಪ್ರಯಾಣಿಕರಿಗೆ ಅವಕಾಶವಿದೆ. ಹೋಟೆಲ್ ತಂಗುವಿಕೆ, ದೃಶ್ಯವೀಕ್ಷಣೆ ಮತ್ತು ಸಂಚಾರ, ಪ್ರಯಾಣ ವಿಮೆಯನ್ನು ಈ ಪ್ಯಾಕೇಜ್ ಒಳಗೊಂಡಿದೆ. ಇದಲ್ಲದೆ, ಪ್ರವಾಸಿಗರು ಎಲ್‌ಟಿಸಿ/ಎಲ್‌ಎಫ್‌ಸಿ ಪ್ರಯೋಜನಗಳಿಗೆ ಅರ್ಹರಾಗಿದ್ದಾರೆ ಎಂದು ವಿಘ್ನೇಶ್ ಮಾಹಿತಿ ನೀಡಿದ್ದಾರೆ.

ವಾರ್ತಾ ಭಾರತಿ 25 Mar 2026 8:11 pm

ಎಲ್ಲವೂ ಒಂದೇ ದಿನ, ಶಿವರಾತ್ರಿ-ಯುಗಾದಿ ಹಬ್ಬದ ದಿನದಂದು ಮಾಂಸ ತಿನ್ನುತ್ತೇನೆ : ಸಿದ್ದರಾಮಯ್ಯ

ಬೆಂಗಳೂರು : ‘ನಾನು ಎಂದೂ ರಾಹುಕಾಲ, ಗುಳಿಕ ಕಾಲ, ಯಮಗಂಡ ಕಾಲ ನೋಡಿ ಬಜೆಟ್ ಮಂಡನೆ ಮಾಡುವುದಿಲ್ಲ. ಎಲ್ಲವೂ ಒಂದೇ ದಿನ. ಹೀಗಾಗಿ, ಯುಗಾದಿ, ಶಿವರಾತ್ರಿ ದಿನದಂದು ಮಾಂಸವನ್ನು ತಿನ್ನುತ್ತೇನೆ. ಇದರಲ್ಲಿ ತಪ್ಪೇನು?’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ಬುಧವಾರ ವಿಧಾನಸಭಾ ಕಲಾಪದಲ್ಲಿ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಮಾ.6ರಂದು ಸಿಎಂ ಸಿದ್ದರಾಮಯ್ಯ ರಾಹುಕಾಲ, ಗುಳಿಕ ಕಾಲ ನೋಡಿ ಆಯವ್ಯಯ ಮಂಡನೆ ಮಾಡಿದ್ದಾರೆ ಎಂದು ಉಲ್ಲೇಖಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ‘ನನಗೆ ರಾಹುಕಾಲ, ಗುಳಿಕಕಾಲ, ಯಮಗಂಡಕಾಲ ಎಲ್ಲವೂ ಒಂದೇ. ನೀವು ಹಬ್ಬ ಹರಿದಿನ ಎಂದು ನೋಡುತ್ತೀರಿ. ಆದರೆ ನಾನು ಯುಗಾದಿ, ಶಿವರಾತ್ರಿಯಲ್ಲೂ ಮಾಂಸ ತಿನ್ನುತ್ತೇನೆ. ಇದು ನನ್ನ ಆಯ್ಕೆ ಹೊರತು, ಯಾವುದೇ ತಪ್ಪಲ್ಲ’ ಎಂದರು. ‘ದೇವರಿದ್ದಾನೆ ಎಂದು ನಾನು ನಂಬುತ್ತೇನೆ. ಆದರೆ, ದೇವಸ್ಥಾನದಲ್ಲೇ ದೇವರಿದ್ದಾನೆ ಎಂದರೆ ನಾನು ನಂಬುವುದಿಲ್ಲ. ಎಲ್ಲ ಕಡೆ ದೇವರಿದ್ದಾನೆ ಎನ್ನುವುದೇ ನನ್ನ ನಂಬಿಕೆ. ಇದನ್ನು ಬಸವಣ್ಣನ ತತ್ವವೂ ಆಗಿದ್ದು, ‘ಎನ್ನ ಕಾಲೇ ಕಂಬ, ದೇಹವೇ ದೇಗುಲ, ಶಿರವೇ ಹೊನ್ನ ಕಳಸವಯ್ಯ. ನಾನೇನು ಮಾಡಲಿ ಬಡವನಯ್ಯ’ ಎಂದು ಬಸವಣ್ಣನ ವಚನವನ್ನು ಸಿದ್ದರಾಮಯ್ಯ ಪಠಿಸಿ ಗಮನ ಸೆಳೆದರು. ಸಿಎಂ ಒಂದು ಶಾಲು ಬೆಲೆ 13,500 ರೂ.: ಚರ್ಚೆಯ ಸಂದರ್ಭದಲ್ಲಿ ಸಿದ್ದರಾಮಯ್ಯ ಧರಿಸಿರುವ ಶಾಲಿನ ಬಗ್ಗೆ ಉಲ್ಲೇಖ ಮಾಡಿ ವಿಪಕ್ಷದ ಸದಸ್ಯರು ಕಾಲೆಳೆದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ ನಾನು ಈಗ ಹಾಕಿರುವುದು ಗುಣಮಟ್ಟದ ರೇಷ್ಮೇ ಶಾಲು ಎಂದರು. ಈ ವೇಳೆ ಅದರ ಬೆಲೆ 13,500 ರೂ., ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಉಲ್ಲೇಖಿಸಿದರು. ಇದಕ್ಕೆ ಸಿದ್ದರಾಮಯ್ಯ ಹೌದು ಎಂದು ದರವನ್ನು ಒಪ್ಪಿದರು.

ವಾರ್ತಾ ಭಾರತಿ 25 Mar 2026 8:08 pm

ಬೀದರ್ ನಲ್ಲಿ ಪೆಟ್ರೋಲ್, ಡಿಸೇಲ್ ಕೊರತೆ ಇಲ್ಲ : ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ

ಬೀದರ್ : ಜಿಲ್ಲೆಯಲ್ಲಿ ಪೆಟ್ರೋಲ್, ಡಿಸೇಲ್ ಮತ್ತು ಎಲ್ ಪಿ ಜಿ ಸಿಲಿಂಡರ್‌ಗಳ ಅಭಾವ ಉಂಟಾಗಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವದಂತಿಗಳಿಗೆ ಸಾರ್ವಜನಿಕರು ಕಿವಿಗೊಡಬಾರದು. ಜಿಲ್ಲೆಯಲ್ಲಿ ಪೆಟ್ರೋಲ್ ಮತ್ತು ಡಿಸೇಲ್‌ಗಳ ಯಾವುದೇ ಕೊರತೆಯಿಲ್ಲ. ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ ಎಂದು ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅವರು ಪ್ರಕಟಣೆ ಮೂಲಕ ತಿಳಿಸಿದ್ದಾರೆ. ಜಿಲ್ಲಾದ್ಯಂತ ಎಲ್ಲಾ ತೈಲ ಕಂಪನಿ ಬಳಿ ಮತ್ತು ಪೆಟ್ರೋಲ್ ಬಂಕ್‌ಗಳಲ್ಲಿ ಸಾಕಷ್ಟು ಪ್ರಮಾಣದ ಇಂಧನ ದಾಸ್ತಾನು ಲಭ್ಯವಿದೆ. ಎಲ್ಲಾ ಪೆಟ್ರೋಲ್ ಬಂಕ್‌ಗಳಿಗೆ ನಿರಂತರವಾಗಿ ಇಂಧನ ಪೂರೈಕೆ ಮಾಡಲಾಗುತ್ತಿದೆ. ಪೂರೈಕೆಯಲ್ಲಿ ಯಾವುದೇ ರೀತಿಯ ವ್ಯತ್ಯಯ ಉಂಟಾಗಿಲ್ಲ. ಜನರು ಗಾಬರಿಯಿಂದ ಅಗತ್ಯಕ್ಕಿಂತ ಹೆಚ್ಚಿನ ಇಂಧನವನ್ನು ಸಂಗ್ರಹಿಸಿಟ್ಟುಕೊಳ್ಳಬಾರದು ಎಂದು ಸೂಚಿಸಿದ್ದಾರೆ. ಇಂಧನ ಅಭಾವದ ಬಗ್ಗೆ ಸುಳ್ಳು ಸುದ್ಧಿ ಅಥವಾ ವದಂತಿ ಹಬ್ಬಿಸುವವರ ವಿರುದ್ಧ ಕಾನೂನು ರೀತಿಯಲ್ಲಿ ಕಠಿಣ ಕ್ರಮ ಜರುಗಿಸಲಾಗುವುದು. ಗೃಹ ಬಳಕೆಯ ಸಿಲಿಂಡರ್‌ಗಳಿಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ಗೃಹಬಳಕೆ ಸಿಲಿಂಡರ್‌ಗಳ ಸರಬರಾಜು ಸಮರ್ಪಕವಾಗಿ ನಡೆಯುತ್ತಿದೆ. ಗೃಹ ಬಳಕೆ ಸಿಲಿಂಡರ್‌ನ್ನು 25 ದಿನಗಳ ಬಳಿಕವೇ ಬುಕ್ ಮಾಡಲು ಅವಕಾಶ ಕಲ್ಪಿಸಲಾಗಿರುತ್ತದೆ. ಸಾರ್ವಜನಿಕರು ಆತಂಕಗೊಳಗಾಗಿ ಗ್ಯಾಸ್ ಏಜೆನ್ಸಿಗಳ ಮುಂದೆ ಜನಸಂದಣಿ ಆಗುತ್ತಿರುವುದು ಕಂಡು ಬಂದಿರುತ್ತದೆ. ಪ್ರಯುಕ್ತ ಜಿಲ್ಲೆಯಲ್ಲಿ ಎಲ್‌ಪಿಜಿ ಸಿಲಿಂಡರ್‌ಗಳ ಕೊರತೆ ಇರುವುದಿಲ್ಲ. ಹಾಗೆಯೇ ಎಚ್‌ಪಿಸಿ, ಐಓಸಿ ಮತ್ತು ಬಿಪಿಸಿ ತೈಲ ಕಂಪನಿಗಳ ಜೊತೆ ಜಿಲ್ಲಾಡಳಿತ ಸಂಪರ್ಕದಲ್ಲಿದ್ದು, ಯಾವುದೇ ತೊಂದರೆ ಉಂಟಾಗದಂತೆ ಬೇಡಿಕೆಗೆ ಅನುಗುಣವಾಗಿ ಸಿಲಿಂಡರ್ ಸರಬರಾಜಿಗೆ ಕ್ರಮಕೈಗೊಳ್ಳಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ. ಆದ್ದರಿಂದ ಸಾರ್ವಜನಿಕರು ಭಯಪಡುವ ಅಗತ್ಯವಿಲ್ಲ. ಯಾರು ಕೂಡ ಪೆಟ್ರೋಲ್, ಡಿಸೇಲ್ ಹಾಗೂ ಗ್ಯಾಸ್ ಹೆಚ್ಚುವರಿಯಾಗಿ ದಾಸ್ತಾನು ಮಾಡಿಟ್ಟುಕೊಳ್ಳಬಾರದು. ಸಾರ್ವಜನಿಕರು ಯಾವುದೇ ವದಂತಿಗಳಿಗೆ ಕಿವಿಗೊಡದೆ ಜಿಲ್ಲಾಡಳಿತದೊಂದಿಗೆ ಸಹಕರಿಸುವಂತೆ ಅವರು ಮನವಿ ಮಾಡಿದ್ದಾರೆ.

ವಾರ್ತಾ ಭಾರತಿ 25 Mar 2026 8:07 pm

Income Tax Act 2026: ಹೊಸ ಆದಾಯ ತೆರಿಗೆ ನಿಯಮಗಳಲ್ಲಿ ಏನೇನು ಬದಲಾವಣೆ ಆಗಿದೆ?

ಹೊಸ ಆದಾಯ ತೆರಿಗೆ ಕಾಯ್ದೆ 2025 ಎಪ್ರಿಲ್ 1 ರಿಂದ ಜಾರಿಗೆ ಬರಲಿದ್ದು, ಕೇಂದ್ರ ನೇರ ತೆರಿಗೆಗಳ ಮಂಡಳಿ (CBDT) ಅದಕ್ಕೆ ಅನುಗುಣವಾಗಿ ಹೊಸ ನಿಯಮಗಳಾದ ಆದಾಯ ತೆರಿಗೆ ನಿಯಮಗಳು 2026 ಅನ್ನು ಪ್ರಕಟಿಸಿದೆ. ಸಂಬಳ ಪಡೆಯುವ ಉದ್ಯೋಗಿಗಳಿಗೆ ಫಾರ್ಮ್‌ಗಳು, ವಿವರಗಳು ಮತ್ತು ಕಡಿತಗಳಲ್ಲಿ ಹಲವಾರು ಬದಲಾವಣೆಗಳನ್ನು ಪರಿಚಯಿಸಲಾಗಿದೆ. ಕೆಲವು ತಜ್ಞರು ಹಳೆಯ ತೆರಿಗೆ ಪದ್ಧತಿಯು ಮಧ್ಯಮ-ಆದಾಯದ ಸಂಬಳ ಪಡೆಯುವವರಿಗೆ ಐಟಿ ಕಾಯ್ದೆ, 2025ರ ಸೆಕ್ಷನ್ 202 ರ ಅಡಿಯಲ್ಲಿ ಹೊಸ ಪದ್ಧತಿಗೆ ಹೋಲಿಸಿದರೆ ಹೆಚ್ಚಿನ ಪ್ರೋತ್ಸಾಹವನ್ನು ನೀಡಬಹುದು ಎಂದು ಸೂಚಿಸಿದ್ದಾರೆ. ಪರಿಶೀಲನೆಯನ್ನು ಸುಲಭಗೊಳಿಸುವ ಸಲುವಾಗಿ ಫಾರ್ಮ್‌ಗಳ ಸಂಖ್ಯೆಯನ್ನು 399 ರಿಂದ 190 ಕ್ಕೆ ಇಳಿಸಲಾಗಿದೆ. ಪ್ರಮುಖ ಬದಲಾವಣೆಗಳು ಈ ರೀತಿ ಇವೆ. ►ಪಾನ್ ಕಾರ್ಡ್ ಉಲ್ಲೇಖಿಸಿ ನಡೆಸಬಹುದಾದ ವಹಿವಾಟು ಮಿತಿ ಹಿಂಪಡೆಯುವಿಕೆ, ಠೇವಣಿ, ಮೋಟಾರು ವಾಹನ ಖರೀದಿ ಮತ್ತು ಆಸ್ತಿ ವಹಿವಾಟುಗಳಿಗೆ ಪಾನ್ ಉಲ್ಲೇಖಿಸಿ ನಡೆಸಬಹುದಾದ ವಹಿವಾಟು ಮಿತಿಯನ್ನು ಹೊಸ ಕಾಯ್ದೆಯು ಹೆಚ್ಚಿಸಿದೆ. ಹೊಸ ನಿಯಮಗಳು ಒಂದು ಹಣಕಾಸು ವರ್ಷದೊಳಗೆ ಒಬ್ಬ ವ್ಯಕ್ತಿಯ ಎಲ್ಲಾ ಖಾತೆಗಳಲ್ಲಿ ಒಟ್ಟು 10 ಲಕ್ಷ ರೂಪಾಯಿ ಅಥವಾ ಅದಕ್ಕಿಂತ ಹೆಚ್ಚಿನ ನಗದು ಠೇವಣಿ ಅಥವಾ ಹಿಂಪಡೆಯುವಿಕೆಗಳನ್ನು ವರದಿ ಮಾಡುವುದನ್ನು ಕಡ್ಡಾಯಗೊಳಿಸುತ್ತವೆ. ಯಾವುದೇ ಬ್ಯಾಂಕಿಂಗ್ ಕಂಪನಿ ಅಥವಾ ಸಹಕಾರಿ ಬ್ಯಾಂಕಿನಲ್ಲಿ ಒಂದೇ ದಿನದಲ್ಲಿ 50,000 ರೂಪಾಯಿಗಳನ್ನು ಮೀರಿದ ವೈಯಕ್ತಿಕ ನಗದು ಠೇವಣಿಗಳ ಮೇಲೆ ಕೇಂದ್ರೀಕರಿಸಿದ ಹಿಂದಿನ ನಿಯಮದಿಂದ ಇದು ಬದಲಾವಣೆಯನ್ನು ಸೂಚಿಸುತ್ತದೆ. ಮೋಟಾರು ವಾಹನಗಳ ಖರೀದಿಗೆ (ಮೋಟಾರ್ ಸೈಕಲ್‌ಗಳು ಸೇರಿದಂತೆ), ಪಾನ್ ಉಲ್ಲೇಖಕ್ಕಾಗಿ ಮಿತಿಯನ್ನು 5 ಲಕ್ಷ ರೂ.ಗೆ ನಿಗದಿಪಡಿಸಲಾಗಿದೆ. ಪ್ರಸ್ತುತ, ದ್ವಿಚಕ್ರ ವಾಹನಗಳನ್ನು ಹೊರತುಪಡಿಸಿ, ಮೋಟಾರ್ ವಾಹನ ಅಥವಾ ವಾಹನದ ಮಾರಾಟ ಅಥವಾ ಖರೀದಿಗೆ ಪಾನ್ ಅಗತ್ಯವಿತ್ತು. ಹೋಟೆಲ್ ಅಥವಾ ರೆಸ್ಟೋರೆಂಟ್ ಬಿಲ್‌ಗಳು, ಸಮಾವೇಶ ಕೇಂದ್ರಗಳು ಅಥವಾ ಔತಣಕೂಟ ಸಭಾಂಗಣಗಳು ಅಥವಾ ಈವೆಂಟ್ ನಿರ್ವಹಣೆಗಾಗಿ ಪ್ಯಾನ್ ಸಂಖ್ಯೆಯನ್ನು ಒದಗಿಸುವ ಅವಶ್ಯಕತೆಯು ಈಗ 1 ಲಕ್ಷ ರೂಪಾಯಿಗಳಿಗಿಂತ ಹೆಚ್ಚಿನ ಮೊತ್ತದ ಪಾವತಿಗಳಿಗೆ ಹೆಚ್ಚಾಗಿದೆ. ಪ್ರಸ್ತುತ, 50,000 ರೂಪಾಯಿಗಳನ್ನು ಮೀರಿದ ಹೋಟೆಲ್ ಅಥವಾ ರೆಸ್ಟೋರೆಂಟ್ ಪಾವತಿಗಳಿಗೆ ಪಾನ್ ಒದಗಿಸುವುದು ಕಡ್ಡಾಯವಾಗಿದ್ದ ಹಿಂದಿನ ಮಿತಿಯನ್ನು ಇದು ಬದಲಾಯಿಸುತ್ತದೆ. ಯಾವುದೇ ಸ್ಥಿರ ಆಸ್ತಿಯ ಖರೀದಿ ಅಥವಾ ಮಾರಾಟ ಅಥವಾ ಉಡುಗೊರೆ ಅಥವಾ ಯಾವುದೇ ಸ್ಥಿರ ಆಸ್ತಿಯ ಜಂಟಿ ಅಭಿವೃದ್ಧಿ ಒಪ್ಪಂದ, ವಹಿವಾಟಿನ ವೆಚ್ಚವು 20 ಲಕ್ಷ ರೂ.ಗಳಿಗಿಂತ ಹೆಚ್ಚಿದ್ದರೆ, ಅಸ್ತಿತ್ವದಲ್ಲಿರುವ ಮಿತಿ 10 ಲಕ್ಷ ರೂ.ಗಿಂತ ಸುಮಾರು ದ್ವಿಗುಣಗೊಳ್ಳುತ್ತದೆ. ► ವ್ಯಕ್ತಿಗಳು, ಹಿರಿಯ ನಾಗರಿಕರಿಗೆ ಆಸ್ತಿ, ಬಾಡಿಗೆ, ಗುತ್ತಿಗೆದಾರರು ಮತ್ತು ಕ್ರಿಪ್ಟೋ ಸ್ವತ್ತುಗಳ ಮೇಲೆ ಮೂಲದಲ್ಲಿ ತೆರಿಗೆ ಕಡಿತಗೊಳಿಸುವಿಕೆಗೆ ಈ ಹಿಂದೆ ಅಗತ್ಯವಿದ್ದ ಪ್ರತ್ಯೇಕ ಫಾರ್ಮ್‌ಗಳನ್ನು ಈಗ ಒಂದೇ ಏಕೀಕೃತ ಚಲನ್ ಕಮ್ ಸ್ಟೇಟ್‌ಮೆಂಟ್ ಬದಲಾಯಿಸುತ್ತದೆ. ಈ ಹೊಸ ವ್ಯವಸ್ಥೆಯ ಅಡಿಯಲ್ಲಿ, ಫೈಲಿಂಗ್ ಅನ್ನು ಪೂರ್ಣಗೊಳಿಸಲು ಕಡಿತಗೊಳಿಸುವವರು TAN ಸಂಖ್ಯೆಯ ಬದಲಿಗೆ ತಮ್ಮ ಪಾನ್ ಸಂಖ್ಯೆಯನ್ನು ಬಳಸಬೇಕು. ತಿಂಗಳಿಗೆ 50,000 ರೂ. ಬಾಡಿಗೆ ಪಾವತಿ, 50 ಲಕ್ಷ ಅಥವಾ ಅದಕ್ಕಿಂತ ಹೆಚ್ಚಿನ ಸ್ಥಿರ ಆಸ್ತಿಯ ವರ್ಗಾವಣೆ, 50 ಲಕ್ಷ ರೂ. ವೃತ್ತಿಪರ ಅಥವಾ ಒಪ್ಪಂದ ಅಥವಾ ಕಮಿಷನ್ ಬ್ರೋಕರೇಜ್ ಪಾವತಿಗಳು ಮತ್ತು ವರ್ಚುವಲ್ ಡಿಜಿಟಲ್ ಸ್ವತ್ತುಗಳ ವರ್ಗಾವಣೆ (ಹಣಕಾಸಿನ ಮಿತಿಯಿಲ್ಲ) ಮೇಲೆ TDS ಅನ್ನು ಕಡಿತಗೊಳಿಸಬೇಕಾಗುತ್ತದೆ. ಏಕೀಕೃತ ಬಡ್ಡಿ ಘೋಷಣೆಗಳನ್ನು ಈಗ ಫಾರ್ಮ್ 121 ಮೂಲಕ ಸುವ್ಯವಸ್ಥಿತಗೊಳಿಸಲಾಗಿದೆ, ಇದು ವ್ಯಕ್ತಿಗಳಿಗೆ ಹಿಂದಿನ ಫಾರ್ಮ್ 15G ಮತ್ತು ಹಿರಿಯ ನಾಗರಿಕರಿಗೆ ಫಾರ್ಮ್ 15H ಅನ್ನು ವಿಲೀನಗೊಳಿಸುತ್ತದೆ. ವ್ಯವಸ್ಥೆಯು ಸ್ವಯಂಚಾಲಿತವಾಗಿ ಫೈಲ್ ಮಾಡುವವರ ವಯಸ್ಸನ್ನು ಪತ್ತೆ ಮಾಡುತ್ತದೆ ಮತ್ತು ಅದಕ್ಕೆ ಅನುಗುಣವಾಗಿ ಸೂಕ್ತ ನಿಯಮಗಳನ್ನು ಅನ್ವಯಿಸುತ್ತದೆ. ►ಸಂಬಳ ಪಡೆಯುವ ಉದ್ಯೋಗಿಗಳಿಗೆ ಉದ್ಯೋಗ ಬದಲಾವಣೆಯ ಸಂದರ್ಭದಲ್ಲಿ, ಉದ್ಯೋಗಿಗಳು ಹಿಂದಿನ ಉದ್ಯೋಗದಾತರೊಂದಿಗೆ ಆಯ್ಕೆ ಮಾಡಿಕೊಂಡ ತೆರಿಗೆ ವಿಧಾನವನ್ನು ನಮೂದಿಸಬೇಕು ಮತ್ತು ಅದಕ್ಕೆ ಅನುಗುಣವಾಗಿ ತೆರಿಗೆ ಹೊಣೆಗಾರಿಕೆಯನ್ನು ನಿರ್ಣಯಿಸಬೇಕು. ಫಾರ್ಮ್ 130 ಫಾರ್ಮ್ 16 ಅನ್ನು ಬದಲಾಯಿಸುತ್ತದೆ, ಇದು ಉದ್ಯೋಗಿ ಅಥವಾ ಪಿಂಚಣಿದಾರರಿಗೆ ಗಳಿಸಿದ ಸಂಬಳ, ತೆರಿಗೆ ಕಡಿತಗೊಳಿಸಲಾದ ಮತ್ತು ಠೇವಣಿ ಮಾಡಲಾದ ಮತ್ತು ಅನ್ವಯವಾಗುವ ಕಡಿತಗಳ ಬಗ್ಗೆ ವಿವರವಾದ ಸಾರಾಂಶವನ್ನು ಒದಗಿಸುತ್ತದೆ. ಫಾರ್ಮ್ 123 ರ ಭಾಗವಾಗಲು ಉದ್ಯೋಗದಾತರು ಉದ್ಯೋಗಿಗಳಿಗೆ ಒದಗಿಸುವ ಸಂಬಳದ ಬದಲಾಗಿ ಸವಲತ್ತುಗಳು, ಹೆಚ್ಚುವರಿ ಪ್ರಯೋಜನಗಳು ಅಥವಾ ಸೌಲಭ್ಯಗಳು ಅಥವಾ ಲಾಭಗಳನ್ನು ಫಾರ್ಮ್ 130 ಗೆ ಡಿಜಿಟಲ್ ಆಗಿ ಲಿಂಕ್ ಮಾಡಲಾಗುತ್ತದೆ. ಉದ್ಯೋಗದಾತರು ಒದಗಿಸುವ ಸವಲತ್ತುಗಳಲ್ಲಿ ವಸತಿ, ಕಾರುಗಳು, ಬಡ್ಡಿರಹಿತ ಅಥವಾ ರಿಯಾಯಿತಿ ಸಾಲಗಳು, ರಜಾ ವೆಚ್ಚಗಳು, ಉಚಿತ ಅಥವಾ ರಿಯಾಯಿತಿ ಪ್ರಯಾಣ, ಉಚಿತ ಊಟ, ಉಚಿತ ಶಿಕ್ಷಣ, ಉಡುಗೊರೆಗಳು, ವೋಚರ್‌ಗಳು, ಕ್ರೆಡಿಟ್ ಕಾರ್ಡ್ ವೆಚ್ಚಗಳು ಸೇರಿವೆ. ಭತ್ಯೆಗಳ ಮೌಲ್ಯಮಾಪನವು ಉದ್ಯೋಗದಾತರು ಒದಗಿಸಿದ ಮೋಟಾರು ಕಾರುಗಳಿಗೆ ರಿಯಾಯಿತಿ ಮೌಲ್ಯಮಾಪನ ಸ್ಲ್ಯಾಬ್‌ನಲ್ಲಿರುವ ವಿದ್ಯುತ್ ವಾಹನಗಳನ್ನು ಒಳಗೊಂಡಿದೆ. ಎಕೆಎಂ ಗ್ಲೋಬಲ್‌ನ ವ್ಯವಸ್ಥಾಪಕ ಪಾಲುದಾರ ಅಮಿತ್ ಮಹೇಶ್ವರಿ ಅವರ ಪ್ರಕಾರ, ಕೆಲಸ ಮತ್ತು ವೈಯಕ್ತಿಕ ಕಾರಣಗಳಿಗಾಗಿ ಬಳಸುವ ಇವಿಗಳನ್ನು ಈಗ 1.6 ಲೀಟರ್‌ಗಿಂತ ಕಡಿಮೆ ಎಂಜಿನ್ ಹೊಂದಿರುವ ಕಾರುಗಳಂತೆಯೇ ಮೌಲ್ಯೀಕರಿಸಲಾಗುತ್ತದೆ. ಉದ್ಯೋಗದಾತರು ಕಾರಿನ ಚಾಲನಾ ವೆಚ್ಚ ಮತ್ತು ನಿರ್ವಹಣೆಗೆ ಪಾವತಿಸಿದರೆ, ತೆರಿಗೆ ವಿಧಿಸಬಹುದಾದ ಮೌಲ್ಯವು ತಿಂಗಳಿಗೆ 5,000 ರೂಪಾಯಿಗಳು. ಉದ್ಯೋಗಿ ತಮ್ಮ ಸ್ವಂತ ವೈಯಕ್ತಿಕ ಬಳಕೆಯ ವೆಚ್ಚಗಳಿಗೆ ಪಾವತಿಸಿದರೆ, ಮೌಲ್ಯವು ತಿಂಗಳಿಗೆ 2,000 ರೂಪಾಯಿಗಳು. ಎರಡೂ ಸಂದರ್ಭಗಳಲ್ಲಿ, ಚಾಲಕನನ್ನು ಸೇರಿಸುವುದರಿಂದ ಮಾಸಿಕ ಮೌಲ್ಯವು 3,000 ರೂಪಾಯಿಗಳಷ್ಟು ಹೆಚ್ಚಾಗುತ್ತದೆ. ► ಭತ್ಯೆಗಳು ಹಳೆಯ ತೆರಿಗೆ ಪದ್ಧತಿಯನ್ನು ಆಯ್ಕೆ ಮಾಡಿಕೊಳ್ಳುವವರನ್ನು ಹೊರತುಪಡಿಸಿ, ಹೊಸ ತೆರಿಗೆ ಪದ್ಧತಿಯಡಿಯಲ್ಲಿ ಉದ್ಯೋಗಿಗಳಿಗೆ ಊಟದ ವೋಚರ್‌ಗಳ ಪ್ರಯೋಜನಗಳು, ಈ ಹಿಂದೆ ಅನುಮತಿಸಲಾಗಿರಲಿಲ್ಲ. ಕಚೇರಿ ಅಥವಾ ವ್ಯವಹಾರ ಆವರಣದಲ್ಲಿ ಕೆಲಸದ ಸಮಯದಲ್ಲಿ ಉದ್ಯೋಗದಾತರು ಒದಗಿಸುವ ಉಚಿತ ಆಹಾರ ಮತ್ತು ಮದ್ಯವಿಲ್ಲದ ಪಾನೀಯಗಳು ಅಥವಾ ಫುಡ್ ಜಾಯಿಂಟ್‌ಗಳಲ್ಲಿ ಮಾತ್ರ ಬಳಸಬಹುದಾದ ಪಾವತಿಸಿದ ವೋಚರ್‌ಗಳ ಮೂಲಕ ಪ್ರತಿ ಊಟಕ್ಕೆ 200 ರೂ. ಮೀರದ ಮೌಲ್ಯಕ್ಕೆ ವಿನಾಯಿತಿ ನೀಡಲಾಗಿದೆ. ಇದು ದಿನಕ್ಕೆ ಒಂದು ಊಟಕ್ಕೆ 4,400 ರೂ. ಅಥವಾ ತಿಂಗಳಿಗೆ 22 ಕೆಲಸದ ದಿನಗಳಲ್ಲಿ ದಿನಕ್ಕೆ ಎರಡು ಊಟಕ್ಕೆ 8,800 ರೂ.ಗಳಿಗೆ ಸಮನಾಗಿರುತ್ತದೆ ಎಂದು ಡೆಲಾಯ್ಟ್ ಇಂಡಿಯಾದ ಪಾಲುದಾರ ಸುರೇಶ್ ಕುಮಾರ್ ಎಸ್ ಹೇಳಿದರು. ಮಕ್ಕಳ ಶಿಕ್ಷಣ ಭತ್ಯೆಯನ್ನು ಪ್ರತಿ ಮಗುವಿಗೆ ತಿಂಗಳಿಗೆ 100 ರೂ.ಗಳಿಂದ 3,000 ರೂ.ಗಳಿಗೆ (ಎರಡು ಮಕ್ಕಳವರೆಗೆ) ಮತ್ತು ಹಾಸ್ಟೆಲ್ ವೆಚ್ಚ ಭತ್ಯೆಯನ್ನು ಪ್ರತಿ ಮಗುವಿಗೆ ತಿಂಗಳಿಗೆ 300 ರೂ.ಗಳಿಂದ 9,000 ರೂ.ಗಳಿಗೆ (ಎರಡು ಮಕ್ಕಳವರೆಗೆ) ಹೆಚ್ಚಿಸಲಾಗಿದೆ. ಬೆಂಗಳೂರು, ಹೈದರಾಬಾದ್, ಪುಣೆ ಮತ್ತು ಅಹಮದಾಬಾದ್ ಈ ನಾಲ್ಕು ಪ್ರಮುಖ ನಗರಗಳಿಗೆ ಹೆಚ್ಚಿನ 50% ಮನೆ ಬಾಡಿಗೆ ಭತ್ಯೆ (HRA) ಪ್ರಯೋಜನಕ್ಕಾಗಿ ಅರ್ಹ ನಗರಗಳ ಪಟ್ಟಿಯನ್ನು ವಿಸ್ತರಿಸಲಾಗಿದೆ, ಇದು ಅವುಗಳನ್ನು ಮುಂಬೈ, ಕೋಲ್ಕತ್ತಾ, ದಿಲ್ಲಿ, ಚೆನ್ನೈ ಮಹಾನಗರಗಳಿಗೆ ಸಮಾನವಾಗಿ ತರುತ್ತದೆ. ಹೆಚ್ಚಿನ ಬಾಡಿಗೆ, ಹೆಚ್ಚಿನ ಸಾಂದ್ರತೆಯ ಉದ್ಯೋಗ ಕೇಂದ್ರಗಳಾದ ನೋಯ್ಡಾ, ಗುರುಗ್ರಾಮ್ ಮತ್ತು ನವಿ ಮುಂಬೈ ಇತರ ನಗರಗಳಂತೆ 40% HRA ವರ್ಗದ ಅಡಿಯಲ್ಲಿ ಬರುತ್ತವೆ. ►ಕಟ್ಟುನಿಟ್ಟಾದ ಪರಿಶೀಲನೆ ಉದ್ಯೋಗದಾತರು ಆದಾಯ ಮತ್ತು ಟಿಡಿಎಸ್ ಲೆಕ್ಕಾಚಾರದ ಸಮಯದಲ್ಲಿ ಪ್ರತ್ಯೇಕ ರೂಪದಲ್ಲಿ (ಫಾರ್ಮ್ 124) ಸಂಬಳ ಪಡೆಯುವ ನೌಕರರು ಸಲ್ಲಿಸುವ HRA ಪ್ರಯೋಜನಗಳು ಮತ್ತು ಇತರ ಹಕ್ಕುಗಳಿಗೆ ಪುರಾವೆಗಳನ್ನು ಒದಗಿಸಬೇಕಾಗಿರುವುದರಿಂದ ಹೆಚ್ಚಿನ ಪರಿಶೀಲನೆಯನ್ನು ಎದುರಿಸಬೇಕಾಗುತ್ತದೆ. ಇದರರ್ಥ ಉದ್ಯೋಗಿಗಳು HRA ಪ್ರಯೋಜನವನ್ನು ಪಡೆದರೆ ಭೂಮಾಲೀಕರ ವಿವರಗಳನ್ನು ನೀಡುವುದು ಈಗ ಕಡ್ಡಾಯವಾಗಿರುತ್ತದೆ. ಆದಾಗ್ಯೂ, ತೆರಿಗೆ ವರ್ಷದಲ್ಲಿ ಪಾವತಿಸಿದ ಒಟ್ಟು ಬಾಡಿಗೆ ರೂ. 1 ಲಕ್ಷ ಮೀರಿದರೆ ಮಾತ್ರ ಭೂಮಾಲೀಕರ ಪಾನ್ ಅನ್ನು ಒದಗಿಸಬೇಕಾಗುತ್ತದೆ. ಹೊಸ ಐಟಿ ಕಾಯ್ದೆ, 2025 ಎಪ್ರಿಲ್ 1 ರಿಂದ ಪ್ರಾರಂಭವಾಗುವ 12 ತಿಂಗಳ ಅವಧಿಯಾಗಿ 'ತೆರಿಗೆ ವರ್ಷ' ಎಂಬ ಪರಿಕಲ್ಪನೆಯನ್ನು ಪರಿಚಯಿಸಿದೆ, ಇದು ಅಸ್ತಿತ್ವದಲ್ಲಿರುವ 'ಮೌಲ್ಯಮಾಪನ ವರ್ಷ' ಎಂಬ ಪದವನ್ನು ತೆಗೆದುಹಾಕುತ್ತದೆ. ನಿಯಮ 237 ರ ಅಡಿಯಲ್ಲಿ, ವಿಮಾ ಪ್ರೀಮಿಯಂ ಪಾವತಿಗಳನ್ನು ಸ್ವೀಕರಿಸಲು ಬ್ಯಾಂಕ್‌ಗಳು, ಕಂಪನಿಗಳು ಮತ್ತು ರಿಜಿಸ್ಟ್ರಾರ್‌ಗಳಂತಹ ನಿರ್ದಿಷ್ಟ ಸಂಸ್ಥೆಗಳಿಗೆ ವ್ಯಕ್ತಿಗಳ ಹೆಚ್ಚಿನ ಮೌಲ್ಯದ ಹಣಕಾಸು ವಹಿವಾಟುಗಳನ್ನು ವರದಿ ಮಾಡಲು ಐಟಿ ಕಾಯ್ದೆಯಿಂದ ಕಡ್ಡಾಯಗೊಳಿಸಲಾದ ವಾರ್ಷಿಕ ವರದಿಯಾದ ಎಸ್‌ಎಫ್‌ಟಿ (Statement of Financial Transactions) ಗಾಗಿ ವರದಿ ಮಾಡುವ ಮಿತಿಯನ್ನು ಪ್ಯಾನ್ ಲಭ್ಯವಿರುವಲ್ಲಿ ರೂ 10 ಲಕ್ಷದಿಂದ ರೂ 5 ಲಕ್ಷಕ್ಕೆ ಮತ್ತು ಪ್ಯಾನ್ ಲಭ್ಯವಿಲ್ಲದಲ್ಲಿ ರೂ 5 ಲಕ್ಷದಿಂದ ರೂ 2.5 ಲಕ್ಷಕ್ಕೆ ಇಳಿಸಲಾಗಿದೆ. ಇದು ವಿಮಾದಾರರಿಗೆ ವರದಿ ಮಾಡುವ ನಿವ್ವಳವನ್ನು ಗಮನಾರ್ಹವಾಗಿ ವಿಸ್ತರಿಸುತ್ತದೆ. ಗ್ರಾಹಕರು ತಮ್ಮ ಎಐಎಸ್ (ವಾರ್ಷಿಕ ಮಾಹಿತಿ ಹೇಳಿಕೆ) ನಲ್ಲಿ ಹೆಚ್ಚಿನ ಪಾಲಿಸಿಗಳು ಕಾಣಿಸಿಕೊಳ್ಳುತ್ತವೆ ಎಂದು ನಿರೀಕ್ಷಿಸಬಹುದು. ತೆರಿಗೆ ಟ್ರಯಲ್ ಪಾರದರ್ಶಕತೆಯನ್ನು ಬಲಪಡಿಸುತ್ತದೆ ಮತ್ತು ಪರಿಶೀಲನೆಯನ್ನು ಕಟ್ಟು ನಿಟ್ಟಾಗಿಸುತ್ತದೆ ಎಂದು ಮಹೇಶ್ವರಿ ಹೇಳಿದ್ದಾರೆ. ಫಾರ್ಮ್ 146, ಹೆಚ್ಚಿನ ಬಹಿರಂಗಪಡಿಸುವಿಕೆ ಮತ್ತು ನಿಯಂತ್ರಕ ಮತ್ತು DTAA (ಡಬಲ್ ತೆರಿಗೆ ತಪ್ಪಿಸುವ ಒಪ್ಪಂದಗಳು) ನಿಬಂಧನೆಗಳೊಂದಿಗೆ ಹೊಂದಾಣಿಕೆಯೊಂದಿಗೆ ಅನಿವಾಸಿಗಳಿಗೆ ಹಣ ರವಾನೆಗಾಗಿ ವರದಿ ಮಾಡುವ ಚೌಕಟ್ಟನ್ನು ವಿಸ್ತರಿಸುತ್ತದೆ. ತೆರಿಗೆದಾರರು ಈಗ ಸ್ವಾಧೀನ ದಿನಾಂಕ ಮತ್ತು ಮಾರಾಟದ ದಿನಾಂಕ, ಪರಿಗಣನೆಯ ಪೂರ್ಣ ಮೌಲ್ಯ, ಸ್ವಾಧೀನದ ವೆಚ್ಚ ಮತ್ತು ದೀರ್ಘಾವಧಿಯ ಮತ್ತು ಅಲ್ಪಾವಧಿಯ ಬಂಡವಾಳ ಲಾಭಗಳ ಲೆಕ್ಕಾಚಾರದಂತಹ ವಹಿವಾಟು ಮಟ್ಟದ ವಿವರಗಳನ್ನು ಪ್ರತ್ಯೇಕವಾಗಿ ಒದಗಿಸಬೇಕಾಗುತ್ತದೆ. ಲಭ್ಯವಿದ್ದರೆ, PAN, ವಾಸಿಸುವ ದೇಶದಲ್ಲಿ ತೆರಿಗೆ ಗುರುತಿನ ಸಂಖ್ಯೆ (TIN), ತೆರಿಗೆ ನಿವಾಸ ಪ್ರಮಾಣಪತ್ರ ಸಂಖ್ಯೆ ಮತ್ತು ವಿಳಾಸ, ಸಂಪರ್ಕ ವಿವರಗಳನ್ನು ಒಳಗೊಂಡಂತೆ ನಿರ್ದಿಷ್ಟ ಗುರುತಿನ ವಿವರಗಳನ್ನು ಒದಗಿಸಬೇಕಾಗಿದೆ. ಇದು ಒಪ್ಪಂದ ಆಧಾರಿತ ಪರಿಶೀಲನೆ ಮತ್ತು ಪಾರದರ್ಶಕತೆಯನ್ನು ಬಲಪಡಿಸುವ ಕ್ರಮವಾಗಿದೆ ಎಂದು ತಜ್ಞರು ಹೇಳಿದ್ದಾರೆ. ►ಹಳೆಯ ಆದಾಯ ತೆರಿಗೆ ಪದ್ಧತಿ vs ಹೊಸ ಪದ್ಧತಿ ಹೆಚ್ಚಿನ ಭತ್ಯೆ ಮಿತಿಗಳು ಮತ್ತು ಸುವ್ಯವಸ್ಥಿತ ಕಡಿತಗಳೊಂದಿಗೆ, ಹೊಸ ತೆರಿಗೆ ಪದ್ಧತಿಗಿಂತ ಹಳೆಯ ತೆರಿಗೆ ಪದ್ಧತಿಯಲ್ಲಿ ಆದಾಯ ಗಳಿಸುವವರಿಗೆ, ವಿಶೇಷವಾಗಿ ಮಧ್ಯಮ-ಆದಾಯ ಗಳಿಸುವವರಿಗೆ ಸಂಭಾವ್ಯ ಪ್ರಯೋಜನವಿರಬಹುದು ಎಂದು ತೆರಿಗೆ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಕಡಿಮೆ ಮತ್ತು ಕಡಿಮೆ ಮಧ್ಯಮ ಆದಾಯ ಗಳಿಸುವವರಿಗೆ ಹೊಸ ವ್ಯವಸ್ಥೆಯ ಸರಳೀಕೃತ ರಚನೆಯು ತೆರಿಗೆ ಹೊಣೆಗಾರಿಕೆಯನ್ನು ಕಡಿಮೆ ಮಾಡುವುದರ ಜೊತೆಗೆ ಅನುಸರಣೆಯ ಹೊರೆಯನ್ನು ಕಡಿಮೆ ಮಾಡಬಹುದು. ಆದರೆ ತಮ್ಮ ಹಣಕಾಸನ್ನು ಸಕ್ರಿಯವಾಗಿ ಯೋಜಿಸುವ ಹೆಚ್ಚಿನ ಮಧ್ಯಮ ಮತ್ತು ಹೆಚ್ಚಿನ ಆದಾಯದ ತೆರಿಗೆದಾರರಿಗೆ, ಹಳೆಯ ವ್ಯವಸ್ಥೆಯು ಕಡಿತಗಳು ಮತ್ತು ವಿನಾಯಿತಿಗಳೊಂದಿಗೆ ತೆರಿಗೆಗಳನ್ನು ಅತ್ಯುತ್ತಮವಾಗಿಸಲು ಅವಕಾಶಗಳನ್ನು ಒದಗಿಸಬಹುದು ಅಂತಾರೆ ತಜ್ಞರು. 15 ಲಕ್ಷ ರೂಪಾಯಿಗಳವರೆಗೆ ವಾರ್ಷಿಕ ಆದಾಯ ಹೊಂದಿರುವ ತೆರಿಗೆದಾರರು ಸಾಮಾನ್ಯವಾಗಿ ಹೊಸ ತೆರಿಗೆ ಪದ್ಧತಿಯನ್ನು ಅದರ ಕಡಿಮೆ ತೆರಿಗೆ ದರಗಳು ಮತ್ತು ಹೆಚ್ಚಿನ ಪ್ರಮಾಣಿತ ಕಡಿತದಿಂದಾಗಿ ಹೆಚ್ಚು ಪ್ರಯೋಜನಕಾರಿ ಎಂದು ಕಂಡುಕೊಳ್ಳುತ್ತಾರೆ. ಆರ್ಥಿಕ ಕಾನೂನು ಅಭ್ಯಾಸದ ಪಾಲುದಾರ ರಾಹುಲ್ ಚರಖಾ ಅವರ ಪ್ರಕಾರ, ಸರಳೀಕೃತ ರಚನೆಯು ಕಡಿಮೆ ಕಡಿತಗಳು ಮತ್ತು ನೇರ ಆದಾಯದ ಮೂಲಗಳನ್ನು ಹೊಂದಿರುವ ಸಂಬಳ ಪಡೆಯುವ ವ್ಯಕ್ತಿಗಳಿಗೆ ಉತ್ತಮವಾಗಿದೆ. 15-25 ಲಕ್ಷ ರೂ.ಗಳ ಶ್ರೇಣಿಯ ಮಧ್ಯಮ-ಆದಾಯ ತೆರಿಗೆದಾರರಿಗೆ, ಆಯ್ಕೆಯು ಹೆಚ್ಚು ಸೂಕ್ಷ್ಮವಾಗಿರುತ್ತದೆ. ಸಾಧಾರಣ ಕಡಿತಗಳನ್ನು ಹೊಂದಿರುವವರು ಹೊಸ ವ್ಯವಸ್ಥೆಯನ್ನು ಹೆಚ್ಚು ಪರಿಣಾಮಕಾರಿಯಾಗಿ ಕಂಡುಕೊಳ್ಳುತ್ತಾರೆ, ಆದರೆ ಗಣನೀಯ HRA ಪಡೆಯುವವರು, ಗೃಹ ಸಾಲಗಳನ್ನು ಹೊಂದಿರುವವರು ಮತ್ತು ಸೆಕ್ಷನ್ 80C, 80CCD(1B), ಮತ್ತು ಇತರ ಕಡಿತಗಳನ್ನು ಸಂಪೂರ್ಣವಾಗಿ ಬಳಸಿಕೊಳ್ಳುವವರು ಹಳೆಯ ವ್ಯವಸ್ಥೆಯನ್ನು ಸಮಾನವಾಗಿ ಅಥವಾ ಹೆಚ್ಚು ಪ್ರಯೋಜನಕಾರಿಯಾಗಿ ಕಂಡುಕೊಳ್ಳಬಹುದು. 25-50 ಲಕ್ಷ ರೂ.ಗಳ ಶ್ರೇಣಿಯಲ್ಲಿರುವ ತೆರಿಗೆದಾರರಿಗೆ, ತೆರಿಗೆ ಪದ್ಧತಿಯ ಆಯ್ಕೆಯು ಕಡಿತಗಳು ಮತ್ತು ವಿನಾಯಿತಿಗಳ ಪ್ರಮಾಣವನ್ನು ಅವಲಂಬಿಸಿರುತ್ತದೆ.ಹಲವು ಕಡಿತಗಳನ್ನು ಹೊಂದಿರುವ ತೆರಿಗೆದಾರರು ಹಳೆಯ ತೆರಿಗೆ ವ್ಯವಸ್ಥೆಯನ್ನು ಇನ್ನೂ ಹೆಚ್ಚು ಪ್ರಯೋಜನಕಾರಿ ಎಂದು ಕಂಡುಕೊಳ್ಳಬಹುದು. 50 ಲಕ್ಷ ರೂಪಾಯಿ ಅಥವಾ ಅದಕ್ಕಿಂತ ಹೆಚ್ಚು ಆದಾಯ ಗಳಿಸುವವರಿಗೆ, ಬಾಡಿಗೆ, ದೊಡ್ಡ ಗೃಹ ಸಾಲಗಳು ಅಥವಾ ಹಳೆಯ ವ್ಯವಸ್ಥೆಯ ಅಡಿಯಲ್ಲಿ ತೆರಿಗೆ ವಿನಾಯಿತಿಗಳನ್ನು ನೀಡುವ ಗಣನೀಯ ವಿಮೆ ಮತ್ತು ಹೂಡಿಕೆ ಯೋಜನೆಗಳಂತಹ ಹೆಚ್ಚಿನ ವೆಚ್ಚಗಳನ್ನು ಅವರು ಹೊಂದಿಲ್ಲದಿದ್ದರೆ ಹೊಸ ವ್ಯವಸ್ಥೆಯ ಕೆಳ ತೆರಿಗೆ ಶ್ರೇಣಿಗಳು ಹೆಚ್ಚಾಗಿ ಉತ್ತಮವಾಗಿರುತ್ತವೆ ಎಂದು ಚರಖಾ ಹೇಳಿದ್ದಾರೆ ಹೊಸ ಐಟಿ ನಿಯಮಗಳನ್ನು ಪಾಲಿಸಲು ತರಾತುರಿಯಲ್ಲಿ ಸಮಯ ನಿಗದಿಪಡಿಸಲಾಗಿದೆ ಅಂತಾರೆ ತಜ್ಞರು. 2026-27 ರಲ್ಲಿ ಗಳಿಸಿದ ಆದಾಯದ ಫೈಲಿಂಗ್‌ಗಳನ್ನು 2027-28 ರಲ್ಲಿ ಸಲ್ಲಿಸಬೇಕಾಗಿದ್ದರೂ, ಟಿಡಿಎಸ್, ಮುಂಗಡ ತೆರಿಗೆಯಂತಹ ಕೆಲವು ನಿಬಂಧನೆಗಳು ಈ ಹೊಸ ನಿಯಮಗಳ ಆಧಾರದ ಮೇಲೆ ಪ್ರಾರಂಭವಾಗುತ್ತವೆ. ಕೃಪೆ: indianexpress.com

ವಾರ್ತಾ ಭಾರತಿ 25 Mar 2026 8:07 pm

Bidar | 41.83 ಲಕ್ಷ ರೂ. ಮೌಲ್ಯದ ಗಾಂಜಾ ವಶ : ಆರೋಪಿಯ ಬಂಧನ

ಬೀದರ್ : ಸುಮಾರು 41,83,500 ರೂ. ಮೌಲ್ಯದ 83 ಕೆಜಿ 670 ಗ್ರಾಂ ಗಾಂಜಾ ವಶಕ್ಕೆ ಪಡೆದು ಓರ್ವ ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ ತಿಳಿಸಿದ್ದಾರೆ. ನಗರದ ಎಸ್ಪಿ ಕಚೇರಿಯಲ್ಲಿ ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮನ್ನಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಭಂಗೂರ ಗ್ರಾಮದ ಹೈದರಾಬಾದ್-ಮುಂಬೈ ಹೆದ್ದಾರಿಯ ಓವರ್‌ಬ್ರಿಡ್ಜ್ ಕೆಳಭಾಗದಲ್ಲಿ ಇಬ್ಬರು ವ್ಯಕ್ತಿಗಳು ಗಾಂಜಾ ತುಂಬಿದ ನಾಲ್ಕು ಚೀಲಗಳೊಂದಿಗೆ ವಾಹನಕ್ಕಾಗಿ ಕಾಯುತ್ತಿರುವ ಮಾಹಿತಿ ಪೊಲೀಸರಿಗೆ ಲಭಿಸಿತು. ಈ ಆಧಾರದ ಮೇಲೆ ದಾಳಿ ನಡೆಸಿದ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದರು. ದಾಳಿಯ ವೇಳೆ ನಾಲ್ಕು ಚೀಲಗಳಲ್ಲಿ ಪ್ಲಾಸ್ಟಿಕ್ ಟೇಪ್‌ನಿಂದ ಪ್ಯಾಕ್ ಮಾಡಲಾದ ಒಟ್ಟು 42 ಪ್ಯಾಕೆಟ್‌ಗಳಲ್ಲಿ ಗಾಂಜಾ ಪತ್ತೆಯಾಯಿತು. ಅವುಗಳನ್ನು ತೂಕ ಮಾಡಿದಾಗ ಸುಮಾರು 83 ಕೆಜಿ 670 ಗ್ರಾಂ ಗಾಂಜಾ ಪತ್ತೆಯಾಗಿದ್ದು,  41.83 ಲಕ್ಷ ರೂ.  ಎಂದು ಅಂದಾಜಿಸಲಾಗಿದೆ. ಘಟನೆಯಲ್ಲಿ ಒಬ್ಬ ಆರೋಪಿಯನ್ನು ಬಂಧಿಸಲಾಗಿದ್ದು, ಮತ್ತೊಬ್ಬ ಆರೋಪಿ ಕತ್ತಲಿನಲ್ಲಿ ಪರಾರಿಯಾಗಿದ್ದಾನೆ. ಪರಾರಿಯಾದ ಆರೋಪಿಯನ್ನು ಶೀಘ್ರದಲ್ಲೇ ಬಂಧಿಸುವುದಾಗಿ ಪೊಲೀಸರು ತಿಳಿಸಿದ್ದಾರೆ. ಬಂಧಿತ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.. ಈ ಘಟನೆಗೆ ಸಂಬಂಧಿಸಿದಂತೆ ಮನ್ನಳ್ಳಿ ಪೊಲೀಸ್ ಠಾಣೆಯಲ್ಲಿ ಎನ್ ಡಿ ಪಿ ಎಸ್ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಅವರು ತಿಳಿಸಿದರು.

ವಾರ್ತಾ ಭಾರತಿ 25 Mar 2026 8:05 pm

ಉಡುಪಿ: ಮೀನುಗಾರಿಕಾ ದೋಣಿಗಳಿಗೆ ಅಗತ್ಯ ಡಿಸೇಲ್ ಪೂರೈಕೆಗೆ ಕೇಂದ್ರ ಪೆಟ್ರೋಲಿಯಂ ಮತ್ತು ಮೀನುಗಾರಿಕೆ ಸಚಿವರಿಗೆ ಮನವಿ

ಉಡುಪಿ, ಮಾ.25: ಕರಾವಳಿಯ ಮೀನುಗಾರಿಕಾ ದೋಣಿಗಳಿಗೆ ಅಗತ್ಯ ಪ್ರಮಾಣದ ಡಿಸೇಲ್ ಪೂರೈಕೆಗೆ ವಿಶೇಷ ಕ್ರಮ ವಹಿಸುವಂತೆ ಸಂಸದರಾದ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಕ್ಯಾಪ್ಟನ್ ಬ್ರಿಜೇಶ್ ಚೌಟ ನೇತೃತ್ವದಲ್ಲಿ ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ ಕೇಂದ್ರ ಪೆಟ್ರೋಲಿಯಂ ಸಚಿವ ಹರ್ದೀಪ್ ಸಿಂಗ್ ಪುರಿ ಹಾಗೂ ಮೀನುಗಾರಿಕೆ ಸಚಿವರಾದ ರಾಜೀವ್ ರಂಜನ್‌ಸಿಂಗ್‌ರನ್ನು ಹೊಸದಿಲ್ಲಿಯಲ್ಲಿ ಭೇಟಿಯಾಗಿ ಮನವಿ ಸಲ್ಲಿಸಿದರು. ಕರಾವಳಿ ಜಿಲ್ಲೆಯ ಆರ್ಥಿಕತೆಗೆ ಬಹುದೊಡ್ಡ ಕೊಡುಗೆ ನೀಡುತ್ತಿರುವ ಮೀನುಗಾರಿಕೆಗೆ, ಮಧ್ಯ ಪ್ರಾಚ್ಯ ದೇಶಗಳ ಯುದ್ಧದ ಪರಿಣಾಮದಿಂದ ಕಳೆದ ಕೆಲವು ದಿನಗಳಿಂದ ಡೀಸೆಲ್ ಪೂರೈಕೆಯಲ್ಲಿ ವ್ಯತ್ಯಯವಾಗಿ ಮೀನುಗಾರಿಕಾ ಬೋಟ್‌ಗಳಿಗೆ ಡೀಸೆಲ್ ಕೊರತೆ ಉಂಟಾಗಿದೆ. ಇದರಿಂದ ಕರಾವಳಿಯ ಮೀನುಗಾರಿಕಾ ಚಟುವಟಿಕೆ ಬಹುತೇಕ ಸ್ತಬ್ಧಗೊಂಡಿದೆ ಎಂದು ಅವರು ಸಚಿವರಿಗೆ ವಿವರಿಸಿದರು. ಡಿಸೇಲ್ ಕೊರತೆಯಿಂದ ಮೀನುಗಾರಿಕೆ ಚಟುವಟಿಕೆ ಸ್ತಬ್ಧಗೊಂಡಲ್ಲಿ ಮೀನುಗಾರರ ಸಹಿತ ಮೀನುಗಾರಿಕೆಯನ್ನೇ ಪರೋಕ್ಷವಾಗಿ ಅವಲಂಬಿಸಿರುವ ಲಕ್ಷಾಂತರ ಮಂದಿಯ ಜನಜೀವನಕ್ಕೆ ಸಮಸ್ಯೆಯಾಗಲಿದೆ ಎಂದು ಸಚಿವರಿಗೆ ಮನದಟ್ಟು ಮಾಡಿದ್ದು, ಮನವಿಗೆ ಪೂರಕವಾಗಿ ಸ್ಪಂದಿಸಿದ ಸಚಿವರು ದೇಶದ ಡೀಸೆಲ್ ದಾಸ್ತಾನು ಪ್ರಮಾಣಕ್ಕೆ ಅನುಗುಣವಾಗಿ ಮೀನುಗಾರಿಕಾ ವಲಯಕ್ಕೆ ಅಗತ್ಯ ಪ್ರಮಾಣದ ನಿರಂತರ ಡಿಸೇಲ್ ಪೂರೈಕೆಗೆ ವಿಶೇಷ ಆದ್ಯತೆ ನೀಡಲು ಪ್ರಯತ್ನಿಸುವುದಾಗಿ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಮಲ್ಪೆ ಯಾರ್ಡ್ ಸಹಕಾರಿ ಸಂಘದ ಉಪಾಧ್ಯಕ್ಷರಾದ ಶಿವಪ್ರಸಾದ್ ಕೋಟ್ಯಾನ್ ಉಪಸ್ಥಿತರಿದ್ದರು.

ವಾರ್ತಾ ಭಾರತಿ 25 Mar 2026 8:04 pm

ಕುಂದಾಪುರದ ಪೌಷ್ಠಿಕ ಪುನಶ್ಚೇತನ ಕೇಂದ್ರ ಉಡುಪಿಗೆ ಸ್ಥಳಾಂತರ ವಿರೋಧಿಸಿ ಪೋಷಕರು, ಸಾರ್ವಜನಿಕರಿಂದ ಪ್ರತಿಭಟನೆ

ಕುಂದಾಪುರ, ಮಾ.25: ಇಲ್ಲಿನ ತಾಲೂಕು ಸಾರ್ವಜನಿಕ ಆಸ್ಪತ್ರೆ ಯಲ್ಲಿರುವ ಕುಂದಾಪುರ, ಬೈಂದೂರು ಭಾಗದ ಅಪೌಷ್ಠಿಕ ಮಕ್ಕಳ ಪೌಷ್ಠಿಕ ಪುನಶ್ಚೇತನಕ್ಕಾಗಿ ಇರುವಂತಹ ಪೌಷ್ಠಿಕ ಪುನಶ್ಚೇತನ ಕೇಂದ್ರ (ಎನ್‌ಆರ್‌ಸಿ) ವನ್ನು ಉಡುಪಿ ಜಿಲ್ಲಾಸ್ಪತ್ರೆಗೆ ಸ್ಥಳಾಂತರಿಸುವ ಹುನ್ನಾರ ನಡೆಯುತ್ತಿದ್ದು, ಇದನ್ನು ವಿರೋಧಿಸಿ ಹಾಗೂ ಕೇಂದ್ರವನ್ನು ಉಳಿಸುವಂತೆ ಆಗ್ರಹಿಸಿ ಬುಧವಾರ ಆಸ್ಪತ್ರೆ ಮುಂಭಾಗದಲ್ಲಿ ಮಕ್ಕಳ ಪೋಷಕರು ಹಾಗೂ ಸಾರ್ವಜನಿಕರಿಂದ ಪ್ರತಿಭಟನೆ ನಡೆಯಿತು. ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಮುಖಂಡರಾದ ಶಂಕರ ಅಂಕದಕಟ್ಟೆ, ಇಲ್ಲಿರುವ ಎನ್‌ಆರ್‌ಸಿ ಘಟಕ ಹಿಂದಿನಿಂದಲೂ ವ್ಯವಸ್ಥಿತ ರೀತಿಯಲ್ಲಿ ನಡೆಯುತ್ತಿದೆ. ಈಗ ಜಿಲ್ಲೆಗೆ ಸ್ಥಳಾಂತರಿಸಲು ಹೊರಟಿದ್ದು ಸರಿಯಲ್ಲ. ಇಲ್ಲಿ ಮಕ್ಕಳನ್ನು ದೂರದ ಉಡುಪಿಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಲು ಬಡವರ್ಗದ ಜನರಿಗೆ ಬಾರಿ ಕಷ್ಟವಾಗಲಿದೆ ಎಂದು ಹೇಳಿದರು. ಈ ಘಟಕವನ್ನು ಕುಂದಾಪುರದಲ್ಲೇ ಉಳಿಸಿಕೊಳ್ಳಬೇಕು. ವಾರದೊಳಗೆ ಈಗ ಹೊರಡಿಸಿರುವ ಆದೇಶ ಹಿಂಪಡೆಯ ಬೇಕು. ಇಲ್ಲದಿದ್ದರೆ ದೊಡ್ಡ ಮಟ್ಟದಲ್ಲಿ ನಾಗರಿಕರನ್ನು ಸಂಘಟಿಸಿ, ಹೋರಾಟ ನಡೆಸಲಾಗುವುದು ಎಂದವರು ಎಚ್ಚರಿಸಿದರು. ಸಾಮಾಜಿಕ ಕಾರ್ಯಕರ್ತ ಲೋಕೇಶ್ ಅಂಕದಕಟ್ಟೆ ಮಾತನಾಡಿ, ವ್ಯವಸ್ಥೆ ಹೇಗಿರಬೇಕು ಅಂದರೆ ನಗರದಿಂದ ಹಳ್ಳಿಗೆ ಹತ್ತಿರವಾಗಬೇಕು. ಆದರೆ ಇಲ್ಲಿ ತಾಲೂಕಿನಿಂದ ಚಿಕಿತ್ಸೆಗೆ ಈಗ ಜಿಲ್ಲೆಗೆ ಹೋಗಬೇಕಾಗಿದೆ. 60ಕ್ಕೂ ಮಿಕ್ಕಿ ಮಕ್ಕಳು ಇಲ್ಲೀಗ ಚಿಕಿತ್ಸೆ ಪಡೆಯುತ್ತಿದ್ದಾರೆ. ವೈದ್ಯರ ಸಹಿತ 12 ಮಂದಿ ಸಿಬಂದಿಗಳನ್ನು ಈಗಾಗಲೇ ವರ್ಗಾವಣೆ ಸಹ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಯಡಮೊಗೆ, ಹಳ್ಳಿಹೊಳೆ, ಕಾಲ್ತೋಡು ಮುಂತಾದ ತೀರಾ ಗ್ರಾಮೀಣ ಭಾಗದಿಂದ 100 ಕಿ.ಮೀ. ದೂರದ ಉಡುಪಿಗೆ ಅಪೌಷ್ಠಿಕ ಮಕ್ಕಳನ್ನು ಕರೆದು ಕೊಂಡು ಹೋಗಿ, ಚಿಕಿತ್ಸೆ ಕೊಡಿಸಲು ಬಡವರಿಗೆ ಕಷ್ಟಸಾಧ್ಯ. ಅಲ್ಲಿ ಘಟಕ ಮಾಡುವುದಕ್ಕೆ ವಿರೋಧವಿಲ್ಲ. ಇದನ್ನು ಇಲ್ಲಿಯೇ ಉಳಿಸಿಕೊಂಡು, ಉಡುಪಿಯಲ್ಲಿ ಹೊಸ ಘಟಕ ಮಾಡಲಿ. ಇಲ್ಲಿಂದ ಸ್ಥಳಾಂತರ ಆಗಲು ನಾವು ಬಿಡುವುದಿಲ್ಲ ಎಂದು ಹೇಳಿದರು. ಮುಖಂಡರಾದ ಕಿಶೋರ್ ಬಲ್ಲಾಳ್ ಮಾತನಾಡಿ, ಇಲ್ಲಿನ ಎನ್‌ಆರ್‌ಸಿ ಘಟಕಕ್ಕೆ ಹಳ್ಳಿಗಳಿಂದ ಚಿಕಿತ್ಸೆಗೆ ಮಕ್ಕಳನ್ನು ಕರೆದುಕೊಂಡು ಬರುತ್ತಾರೆ. ಈಗ ಯಾರ ಗಮನಕ್ಕೂ ತಾರದೇ ಏಕಾಏಕಿ ಸ್ಥಳಾಂತರ ಮಾಡುವುದು ಸರಿಯಲ್ಲ. ಇದನ್ನು ಇಲ್ಲಿಯೇ ಉಳಿಸಿಕೊಳ್ಳುವ ಕ್ರಮ ಆಗಬೇಕೆಂದು ಆಗ್ರಹಿಸಿದರು. ಈ ಸಂದರ್ಭದಲ್ಲಿ ಪ್ರಮುಖರಾದ ರಾಧಾಕೃಷ್ಣ, ಹೆಲ್ಪಿಂಗ್ ಹ್ಯಾಂಡ್ ಪ್ರದೀಪ್, ಮಕ್ಕಳ ಪೋಷಕರು, ಸಾರ್ವಜನಿಕರು, ವಿವಿಧ ಸಂಘಟನೆಗಳ ಪ್ರಮುಖರು ಉಪಸ್ಥಿತರಿದ್ದರು. ‘ನನ್ನ ಇಬ್ಬರು ಮಕ್ಕಳು ಇಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದಾರೆ. ತುಂಬಾ ಒಳ್ಳೆಯ ಚಿಕಿತ್ಸೆ ಸಿಗುತ್ತಿದೆ. ನಾವು ದುಡಿದು ತಿನ್ನುವ ಬಡವರು. ಈಗ ಮಕ್ಕಳನ್ನು ಚಿಕಿತ್ಸೆಗಾಗಿ ದೂರದ ಉಡುಪಿಗೆ ಕರೆದುಕೊಂಡು ಹೋಗುವುದು ಕಷ್ಟ. ಈ ಘಟಕ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಎಲ್ಲರೂ ಹೋರಾಟಕ್ಕೆ ಕೈ ಜೋಡಿಸಬೇಕು’. -ಜ್ಯೋತಿ ತಲ್ಲೂರು, ಮಕ್ಕಳ ಪೋಷಕರು.

ವಾರ್ತಾ ಭಾರತಿ 25 Mar 2026 8:03 pm