ಇರಾನ್-ಅಮೆರಿಕ ಯುದ್ಧದಲ್ಲಿ ಶರಣಾಗಿದ್ದು ಪಾಕಿಸ್ತಾನ: ಕೃಷ್ಣಭಟ್ ಬರಹ
ಅಮೆರಿಕ ಮತ್ತು ಇರಾನ್ ನಡುವೆ ನಡೆಯುತ್ತಿರುವ ಉದ್ವಿಗ್ನತೆ ಹಾಗೂ ಯುದ್ಧದ ಭೀತಿಯ ನಡುವೆ, ಜಾಗತಿಕ ಮಟ್ಟದಲ್ಲಿ ಪಾಕಿಸ್ತಾನದ ಸ್ಥಿತಿ ತೀರಾ ಹಾಸ್ಯಾಸ್ಪದವಾಗಿದೆ. ಒಂದು ಕಾಲದಲ್ಲಿ ಅಮೆರಿಕದ ಮಿತ್ರರಾಷ್ಟ್ರ ಎಂದು ಹೇಳಿಕೊಳ್ಳುತ್ತಿದ್ದ ಪಾಕಿಸ್ತಾನ, ಇದೀಗ ಸಂಪೂರ್ಣವಾಗಿ ಅಮೆರಿಕದ ಕೈಗೊಂಬೆಯಾಗಿದೆ ಎಂಬುದು ಸ್ಪಷ್ಟವಾಗಿದೆ. ಕೃಷ್ಣಭಟ್ ಅವರು ತಮ್ಮ ಬರಹದಲ್ಲಿ ಪಾಕಿಸ್ತಾನದ ಈ ದಯನೀಯ ಶರಣಾಗತಿಯನ್ನು ಅತ್ಯಂತ ಮಾರ್ಮಿಕವಾಗಿ ವಿಶ್ಲೇಷಿಸಿದ್ದಾರೆ. ಒಂದು
ಶಾಸಕರಿಗೆ IPL ಫ್ರೀ ಟಿಕೆಟ್: ಪ್ರಗತಿಪರರು ಕೇಳಲು ಮರೆತ ಇನ್ನೆರಡು ಪ್ರಶ್ನೆಗಳು!
ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ನ ಎಲ್ಲಾ ಜನಪ್ರತಿನಿಧಿ ಶಾಸಕರು KSCA ಸಂಸ್ಥೆ ಬಿಡಿಗಾಸಿನ ಶುಲ್ಕ ಕಟ್ಟುತ್ತಿರುವುದರಿಂದ ಶಾಸಕರಿಗೆ ಉಚಿತ ಟಿಕೆಟ್ ಬೇಕೆಂದು ಕೇಳಿದರೇ ವಿನಾ, ಉಳಿದೆಲ್ಲಾ ಜನರ ಆಸ್ತಿಗಳ ಮೇಲೆ ವರ್ಷದಿಂದ ವರ್ಷಕ್ಕೆ ತೆರಿಗೆ ಮತ್ತಿತರ ಶುಲ್ಕಗಳು ಹೆಚ್ಚಿಸುತ್ತಿರುವಾಗ ನೂರಾರು ಕೋಟಿ ರೂ. ವಾರ್ಷಿಕ ಲಾಭವಿರುವ KSCA ಸಂಸ್ಥೆ 57 ವರ್ಷಗಳಷ್ಟು ಹಿಂದೆ ನಿಗದಿಯಾದ ಶುಲ್ಕವನ್ನು ಕಟ್ಟುತ್ತಿರುವುದೇಕೆ ಎಂಬ ಪ್ರಶ್ನೆಯನ್ನು ಕೇಳಲಿಲ್ಲ! ಕರ್ನಾಟಕದ ಶಾಸನ ಸಭೆಯ ಈ ಬಾರಿಯ ಅಧಿವೇಶನವು ಒಂದು ವಿಷಯದಲ್ಲಿ ಮಾತ್ರ ಆಡಳಿತ ಪಕ್ಷ ಮತ್ತು ವಿರೋಧ ಪಕ್ಷಗಳ ಅತ್ಯಪರೂಪದ ಮೈತ್ರಿಗೆ ಸಾಕ್ಷಿಯಾಯಿತು. ಬೆಂಗಳೂರಿನ KSCAಯ ಚಿನ್ನಸ್ವಾಮಿ ಸ್ಟೇಡಿಯಂ ನಲ್ಲಿ ನಡೆಯುವ ಈ ಸಾಲಿನ IPL ಕ್ರಿಕೆಟ್ ಮ್ಯಾಚ್ಗಳಿಗೆ ಶಾಸಕರಿಗೆ ಮತ್ತು ಅವರ ಮನೆಯವರಿಗೆ ಉಚಿತ ಟಿಕೆಟ್ ಕೊಡಬೇಕೆನ್ನುವ ಆಗ್ರಹವನ್ನು ಪಕ್ಷಾತೀತವಾಗಿ ಮತ್ತು ಒಕ್ಕೊರಲಿನಿಂದ ಮಾಡಲಾಯಿತು. ಕಾಂಗ್ರೆಸ್ನ ವಿಜಯ್ ಕಾಶಪ್ಪನವರ್ ಪ್ರಾರಂಭಿಸಿದ ಈ ‘ಚರ್ಚೆಯಲ್ಲಿ’ ಶಾಸಕರಿಗೆ ಸಾಮಾನ್ಯ ಜನರಿಂದ ಪ್ರತ್ಯೇಕವಾದ ವಿಶೇಷ ಆವರಣವನ್ನು ಸ್ಟೇಡಿಯಂನಲ್ಲಿ ಕಲ್ಪಿಸಬೇಕೆಂದು ಆಗ್ರಹಿಸಲಾಯಿತು! ಸದನದಲ್ಲಿ ವಿರೋಧಪಕ್ಷದ ನಾಯಕ ಅಶೋಕ್ ಅವರು ಕೂಡಲೇ ಕಾಂಗ್ರೆಸ್ ಶಾಸಕರ ಜೊತೆಗೂಡಿದರು. ಸರಕಾರಕ್ಕೆ ಕೇವಲ ಎಕರೆಗೆ 1,600 ರೂ. ಶುಲ್ಕ ಪಾವತಿಸುವ KSCAಗೆ ಶಾಸಕರಿಗೆ ಉಚಿತ ಟಿಕೆಟ್ ಕೊಡುವ ಕರ್ತವ್ಯವಿದೆ ಎಂಬಂತೆ ಆಗ್ರಹಿಸಿದರು. ಕೂಡಲೇ ಶಾಸಕರೆಲ್ಲರೂ ಅನುಭವಿಸುತ್ತಿರುವ ಈ ಅನ್ಯಾಯಕ್ಕೆ ಕೂಡಲೇ ಸ್ಪಂದಿಸಿದ ಸ್ಪೀಕರ್ ಖಾದರ್ ಅವರು ಸರಕಾರದ ಜೊತೆ ಮಾತನಾಡಿ ಈ ಅನ್ಯಾಯವನ್ನು ಪರಿಹರಿಸುವುದಾಗಿ ಹೇಳಿದರು. ಸರಕಾರದ ಪರವಾಗಿ ಉಪಮುಖ್ಯಮಂತ್ರಿಗಳು ಈ ಬೇಡಿಕೆಯನ್ನು ಈಡೇರಿಸುವುದಾಗಿ ಭರವಸೆ ನೀಡಿದರು. ನಂತರ KSCAಯ ಹೊಸ ಅಧ್ಯಕ್ಷ ಕ್ರಿಕೆಟಿಯರ್ ವೆಂಕಟೇಶ್ ಪ್ರಸಾದ್ ನೇತೃತ್ವದಲ್ಲಿ KSCA ಆಡಳಿತ ಮಂಡಳಿ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗಳನ್ನು ಈ ಸೀಸನ್ನ ಚೊಚ್ಚಲ ಪಂದ್ಯವನ್ನು ವೀಕ್ಷಿಸಲು ಆಹ್ವಾನ ಕೊಟ್ಟರು. ಹಾಗೆಯೇ ಉಪಮುಖ್ಯಮಂತ್ರಿ ಡಿಕೆಶಿ ಅವರ ಮಧ್ಯಸ್ಥಿಕೆಯಲ್ಲಿ ಮೊದಲ ಪಂದ್ಯಕ್ಕೆ ಎಲ್ಲಾ ಶಾಸಕರಿಗೆ ತಲಾ ಎರಡು ಉಚಿತ ಟಿಕೆಟ್ಗಳನ್ನು, ಆ ನಂತರದ ಪಂದ್ಯಗಳಿಗೆ ತಲಾ ಮೂರು ಟಿಕೆಟ್ಗಳನ್ನು ಕೊಡಲು ಒಪ್ಪಿಕೊಂಡು ಎಲ್ಲವೂ ಸುಖ್ಯಾಂತ್ಯವಾಗಿ RCB ತನ್ನ ಮೊದಲ ಮ್ಯಾಚನ್ನೂ ಕೂಡ ಭರ್ಜರಿಯಾಗಿ ಗೆದ್ದುಬಿಟ್ಟಿತು. ಆದರೆ ಈ ಇಡೀ ವಿದ್ಯಮಾನದಲ್ಲಿ ವಿರೋಧ ಪಕ್ಷವಾಗಲೀ, ಮಾಧ್ಯಮಗಳಾಗಲೀ ಕೇಳಬೇಕಾದ ಎರಡು ಪ್ರಮುಖ ಪ್ರಶ್ನೆಗಳನ್ನು ಕೇಳಲೇ ಇಲ್ಲ. ಪ್ರಗತಿಪರರು ಈ ಪ್ರಕ್ರಿಯೆಯಲ್ಲಿ ಬಿಜೆಪಿ ಸಂಸದ ತೇಜಸ್ವಿ ಮತ್ತು ಕೆಲವು ಮಾಧ್ಯಮಗಳು ಅನಗತ್ಯವಾಗಿ ಎಬ್ಬಿಸಿದ ಎಲೈಟ್ ಸಂಸ್ಕೃತಿಯ ಚರ್ಚೆಯ ಹಿಂದಿನ ಬ್ರಾಹ್ಮಣ್ಯವನ್ನು ಸಕಾರಣವಾಗಿ ಪ್ರಶ್ನಿಸಿದರು. ಆದರೆ ಅದರೊಂದಿಗೆ ಈ ವಿದ್ಯಮಾನದಲ್ಲಿ ಕೇಳಬೇಕಿದ್ದ ಇನ್ನೂ ಎರಡು ಪ್ರಶ್ನೆಗಳನ್ನು ಕೇಳಲು ಮರೆತರು. ಅಥವಾ ಅದಕ್ಕೆ ಕೊಡಬೇಕಿದ್ದಷ್ಟು ಮಹತ್ವವನ್ನು ಕೊಡಲಿಲ್ಲ. ಕುಲೀನರ ಒಕ್ಕಣ್ಣ ಸೆಲೆಕ್ಟಿವ್ ವಿಮರ್ಶೆ KSCA ಅಧ್ಯಕ್ಷ ವೆಂಕಟೇಶ್ ಪ್ರಸಾದ್ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಆಹ್ವಾನಿಸಲು ಬಂದಾಗ ಹಲವಾರು ಫೋಟೊಗಳನ್ನು ತೆಗೆದುಕೊಳ್ಳುವುದು ಸಹಜ. ಅದರಲ್ಲಿ ಕೆಲವು KSCAಯ ಎಲ್ಲ ಪ್ರತಿನಿಧಿಗಳು ಮತ್ತು ಮುಖ್ಯಮಂತ್ರಿಗಳು ಹಾಗೂ ಇತರರು ಕೂತು ಚರ್ಚಿಸುತ್ತಿರುವ ಫೋಟೊಗಳು ಇದ್ದವು ಹಾಗೂ ಮುಖ್ಯಮಂತ್ರಿ ಕೂತಿರುವಾಗ ವೆಂಕಟೇಶ್ ಪ್ರಸಾದ್ ಕೈಮುಗಿದು ಪ್ರವೇಶಿಸುತ್ತಿರುವ ಫೋಟೊ ಕೂಡ ಇತ್ತು. ಆದರೆ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ‘‘ಪ್ರಖ್ಯಾತ ಆಟಗಾರ ಬಂದಾಗ ಮುಖ್ಯಮಂತ್ರಿ ಎದ್ದು ಗೌರವ ತೋರದೆ ತಮ್ಮ ಪಕ್ಷಕ್ಕೆ ಸಹಜವಾದ ಅಹಂಕಾರ ತೋರಿದ್ದಾರೆ’’ ಎಂದು ಟ್ವೀಟಿಸಿದರು. ಅದನ್ನೇ ಹಲವಾರು ಪತ್ರಿಕೆಗಳು ದೊಡ್ಡ ಮಟ್ಟದಲ್ಲಿ ಬೇಜವಾಬ್ದಾರಿಯಿಂದ ಚರ್ಚಿಸಿದವು. ಪತ್ರಿಕೆಗಳ ಮತ್ತು ಬಿಜೆಪಿ ಸಂಸದರ ಇಂಥಾ ಅಸಂಬದ್ಧ ಮತ್ತು ಅರ್ಧಸತ್ಯದ ಪ್ರಚಾರದ ವಿರುದ್ಧ ಹಲವಾರು ಪ್ರಗತಿಪರರು ಸಹಜವಾಗಿಯೇ ಸಕಾರಣ ಪ್ರತಿವಿಮರ್ಶೆ ಮಾಡಿದರು ಮತ್ತು ರಾಷ್ಟ್ರದ ಅಧ್ಯಕ್ಷೆ ಮುರ್ಮು ಅವರನ್ನೇ ನಿಲ್ಲಿಸಿ ಮಾತಾಡುವ, ತನಗಿಂತ ಹಿರಿಯರಾದ ಅಡ್ವಾಣಿಯವರನ್ನೇ ಅಗೌರವಿಸುವ ಪ್ರಧಾನಿ ಮೋದಿಯವರ ಫೋಟೊಗಳನ್ನು ಹಾಕಿ ಈ ಬಗ್ಗೆ ಮೌನವೇಕೆ ಮತ್ತು ಸೆಲೆಕ್ಟಿವ್ ವಿಮರ್ಶೆ ಏಕೆ ಎಂದು ಸಕಾರಣವಾಗಿ ಪ್ರಶ್ನಿಸಿದರು. ಅದು ಸರಿಯಾಗಿಯೇ ಇತ್ತು. ಆದರೆ ಅಲ್ಲಿಂದಾಚೆಗೆ ಈ ಪ್ರಕರಣ ಎತ್ತುವ ಇನ್ನೆರಡು ಗಂಭೀರ ಮೂಲಭೂತ ಪ್ರಜಾತಾಂತ್ರಿಕ ಪ್ರಶ್ನೆಗಳನ್ನು ಪ್ರಗತಿಪರರು ಮುಖ್ಯವೆಂದು ಪರಿಗಣಿಸಲಿಲ್ಲ. ಮತ್ತೊಂದು ಕಡೆ ಮತ್ತೊಬ್ಬ ಬಿಜೆಪಿ ಶಾಸಕ ಸ್ವಘೋಷಿತ ಸಜ್ಜನ ರಾಜಕಾರಣಿ ಸುರೇಶ್ ಕುಮಾರ್ ಅವರು ತನಗೆ ಉಚಿತ ಟಿಕೆಟ್ಗಳು ಬೇಡವೆಂದೂ, ಶಾಸಕರಿಗೆ ಉಚಿತ ಟಿಕೆಟ್ ಕೊಡುವುದು ವಿಲಾಸಿ ಸಂಸ್ಕೃತಿಯ ಭಾಗವೆಂದೂ, ತಾನದಕ್ಕೆ ವಿರುದ್ಧವೆಂದು ಘೋಷಿಸಿ ಪತ್ರಿಕೆಗಳಲ್ಲಿ ಬಹಳಷ್ಟು ಮೈಲೇಜ್ ಕೂಡ ಗಿಟ್ಟಿಸಿದರು ಮತ್ತು ಇಡೀ ವಿಷಯವನ್ನು ಒಂದು ಸಂಸ್ಕೃತಿಯ ವಿಷಯವ್ನಾಗಿಸಿ ಇದರ ಹಿಂದಿನ ಡೆಮಾಕ್ರಸಿ ಮತ್ತು ಕಾರ್ಪೊರೇಟೋಕ್ರಸಿಗಳ ದುಷ್ಟ ಮೈತ್ರಿಯ ರಾಜಕೀಯ-ಆರ್ಥಿಕ ವಿಷಯವನ್ನು ಗೌಣಗೊಳಿಸಿದರು ಮತ್ತು ಈ ಮಹಾಶಯರು ತಮ್ಮ ನಾಯಕರು ವಿಧಾನಸಭೆಯಲ್ಲಿ ಉಚಿತ ಟಿಕೆಟಿಗಾಗಿ ಆಗ್ರಹಿಸುತ್ತಿದ್ದಾಗ ಸುಮ್ಮನಿದ್ದರು! ವಾಸ್ತವದಲ್ಲಿ ಈ ಪ್ರಕರಣವು: 1) ಕ್ರಿಮಿನಲ್ ಆರೋಪದ ವಿಚಾರಣೆಯಿನ್ನೂ ನಡೆಯುತ್ತಿರುವ ಪ್ರಕರಣದ ಆರೋಪಿಯಿಂದ ಸಾರ್ವಜನಿಕ ಪ್ರತಿನಿಧಿಗಳು ಪಕ್ಷಾತೀತವಾಗಿ ರುಷುವತ್ತನ್ನು ಬಹಿರಂಗವಾಗಿ ಪಡೆದುಕೊಂಡು ನಿಷ್ಪಕ್ಷ ನ್ಯಾಯದಾನಕ್ಕೆ ಅಡ್ಡಿಯಾಗುತ್ತಿರುವ ಗಂಭೀರ ಅಪರಾಧವಾಗಿದೆ ಹಾಗೂ ಆ ಅಪರಾಧವನ್ನು ನಾರ್ಮಲೈಸ್ ಮಾಡುವ ಪ್ರಜಾತಂತ್ರ ವಿರೋಧಿ ಕಾರ್ಪೊರೇಟ್ ರಾಜಕಾರಣವೂ ಆಗಿದೆ. 2) ಅದಕ್ಕಿಂತ ಮುಖ್ಯವಾಗಿ ಬಡಜನರಿಗೆ ಉಚಿತ ಅಕ್ಕಿ ಕೊಟ್ಟರೆ ಫ್ರೀಬೀ ಎಂದು ಹಂಗಿಸುವ ಪ್ರಜಾಪ್ರತಿನಿಧಿಗಳು ವರ್ಷಕ್ಕೆ ಸಾವಿರಾರು ಕೋಟಿ ಲಾಭವಿರುವ KSCA ಸಂಸ್ಥೆ ಕೇವಲ ಎಕರೆಗೆ 1,600 ರೂ. ಮಾತ್ರ ಶುಲ್ಕ ಪಾವತಿಸಿ ಬೊಕ್ಕಸಕ್ಕೆ ಅನ್ಯಾಯ ಮಾಡುತ್ತಿರುವುದನ್ನು ಪ್ರಶ್ನಿಸದಷ್ಟು ಮಟ್ಟಿಗೆ ಕಾರ್ಪೊರೇಟ್ ಫ್ರೀಬಿಗಳು ಕಾನೂನು ಬದ್ಧವಾಗಿ ಬಿಟ್ಟಿರುವ ಪಕ್ಷಾತೀತ ದುರಂತವನ್ನು ಸೂಚಿಸುತ್ತದೆ. ಫ್ರೀ ಟಿಕೆಟ್ಟೊ? ಕಾರ್ಪೊರೇಟ್ ಕ್ರಿಮಿನಲ್ಗಳು ಕೊಟ್ಟ ಲಂಚವೋ? ಕಳೆದ ವರ್ಷ ನಡೆದ IPLನಲ್ಲಿ RCB ಟ್ರೊಫಿ ಪಡೆದ ಸಮಾರಂಭವನ್ನು KSCA ಸ್ಟೇಡಿಯಂನಲ್ಲಿ ನಡೆಸುವಾಗ ಸರಕಾರ, KSCA ಮತ್ತು RCB ತೋರಿದ ಕ್ರಿಮಿನಲ್ ಬೇಜವಾಬ್ದಾರಿಯಿಂದಾಗಿ 11 ಯುವ ಕ್ರೀಡೋತ್ಸಾಹಿಗಳು ತುಳಿತಕ್ಕೊಳಗಾಗಿ ಸತ್ತರು. ಅವಘಡದಲ್ಲಿ IPL ನಡೆಯಲಿರುವ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನ ನಿರ್ವಾಹಕ-ಮಾಲಕರಾಗಿರುವ KSCA (ಕರ್ನಾಟಕ ಸ್ಟೇಟ್ ಕ್ರಿಕೆಟ್ ಅಸೋಸಿಯೇಷನ್) ಮುಖ್ಯಸ್ಥರುಗಳು ಆರೋಪಿಗಳಾಗಿದ್ದಾರೆ. ಅವರ ಮೇಲಿನ ಆರೋಪದ ಬಗ್ಗೆ ನಿಷ್ಪಕ್ಷ ತನಿಖೆ ನಡೆಸಿ ಕೋರ್ಟಿನಲ್ಲಿ ಸಂತ್ರಸ್ತರ ಪರವಾಗಿ ವಾದಿಸಬೇಕಿರುವ ಸರಕಾರಕ್ಕೂ ಈ ಅವಘಡದಲ್ಲಿ ಪಾಲಿದೆ. ಆದರೆ ಸರಕಾರವೇ ಆರೋಪಿಯಿಂದ ಬಹಿರಂಗವಾಗಿ ಇಡೀ ಶಾಸಕಾಂಗಕ್ಕೆ ಫ್ರೀ ಟಿಕೆಟ್ ಎಂಬ ಕಾಣಿಕೆಯನ್ನು ಕೊಡಿಸುತ್ತಿದೆ. ಇದನ್ನು ಪ್ರಶ್ನಿಸಬೇಕಾದ ವಿರೋಧ ಪಕ್ಷಗಳು ಸಂಪೂರ್ಣವಾಗಿ ಈ ಇದು ಕ್ರಿಮಿನಲ್ ಅಪರಾಧವೇ ಅಲ್ಲವೆಂಬಂತೆ ಅದನ್ನು ಸಹಜೀಕರಿಸುತ್ತಿದೆ. ಹೀಗಾಗಿ ಇದು ಮಾಧ್ಯಮಗಳಿಗೂ ವಿಷಯವಲ್ಲ. ಹೀಗಾಗಿ ಸರಕಾರ ಮತ್ತು ಕಾರ್ಪೊರೇಟ್ಗಳ ಕ್ರಿಮಿನಲ್ ಬೇಜವಾಬ್ದಾರಿಯನ್ನು ಇಡೀ ವ್ಯವಸ್ಥೆಯೇ ಅಪರಾಧವೇ ಅಲ್ಲವೆಂಬಂತೆ ಮುಚ್ಚಿಹಾಕುತ್ತಿದೆ. ಈ ಹಿಂದೆಯೂ ಇದೇ ಬಗೆಯ ವ್ಯವಸ್ಥಿತ ಯೋಜನೆಗಳೇ ಭೋಪಾಲ್, ವಿಶಾಖಪಟ್ಟಣ ಅಥವಾ ಇನ್ನಿತರ ಕಡೆಗಳಲ್ಲಿ ಕ್ರಿಮಿನಲ್ ಬೇಜವಾಬ್ದಾರಿಯಿಂದಾಗಿ ಸಂಭವಿಸಿದ ಅಪರಾಧಗಳನ್ನು ಉದ್ದೇಶಪೂರಿತ ಅಪರಾಧವಲ್ಲವೆಂಬ ಮುಸುಕಿನಲ್ಲಿ ಅಪರಾಧದ ಪ್ರಮಾಣವನ್ನೇ ಕುಬ್ಜಗೊಳಿಸಿದರು. ಆದರೆ ಈ ಎಲ್ಲಾ ಕ್ರಿಮಿನಲ್ ಬೇಜವಾಬ್ದಾರಿಗಳ ಹಿಂದೆ ಇದ್ದದ್ದು ಕಾರ್ಪೊರೇಟ್ಗಳ ಲಾಭದ ದುರಾಸೆ. ಮುನ್ನೆಚ್ಚರಿಕೆಗೆ ಮಾಡಲೇಬೇಕಾದ ಹಣವನ್ನು ಉಳಿತಾಯ ಮಾಡಿ ಲಾಭದ ಪ್ರಮಾಣ ಹೆಚ್ಚಿಸಿಕೊಳ್ಳುವ ಲಾಲಸೆ. ಆದ್ದರಿಂದಲೇ ಇವು ಕಾರ್ಪೊರೇಟ್ಗಳು ಸರಕಾರದ ಕುಮ್ಮಕ್ಕಿನೊಂದಿಗೆ ಅಥವಾ ಪರೋಕ್ಷ ಸಹಕಾರದೊಂದಿಗೆ ಲಾಭದ ದುರಾಸೆಗಾಗಿ ನಡೆದ ವ್ಯವಸ್ಥಿತ ಕೊಲೆಗಳೇ. ಹೀಗಾಗಿ ಇದು ಕೇವಲ ವಿಲಾಸಿ ಸಂಸ್ಕೃತಿಯ ವಿಷಯವಲ್ಲ. ಬದಲಿಗೆ ಕ್ರಿಮಿನಲ್ ಅಪರಾಧ. ಇದನ್ನು ಆಗದಂತೆ ತಡೆಯುವ ಜವಾಬ್ದಾರಿ ಆಡಳಿತ ಮತ್ತು ವಿರೋಧ ಪಕ್ಷಗಳ ಎಲ್ಲಾ ಚುನಾಯಿತ ಪ್ರತಿನಿಧಿಗಳೆಲ್ಲರ ಮೇಲೂ ಇದೆ. ಆದ್ದರಿಂದ ಸಂವಿಧಾನದ ಮೇಲೆ ಪ್ರಮಾಣ ಮಾಡಿ ಪಡೆದುಕೊಂಡಿರುವ ಸ್ಥಾನಗಳ ಕರ್ತವ್ಯವನ್ನು ನಿಭಾಯಿಸದೆ ತಮ್ಮ ಅಧಿಕಾರಸ್ಥಾನ ಬಳಸಿ ಅಧಿಕೃತವಾಗಿ ಉಚಿತ ಟಿಕೆಟ್ ಪಡೆದುಕೊಳ್ಳುವವರೆಲ್ಲಾ ಅಪರಾಧಿಗಳೇ ಅಲ್ಲವೇ? ಬಹಿರಂಗ ಭ್ರಷ್ಟಾಚಾರವಲ್ಲವೇ? ಅದರಲ್ಲೂ ಆಡಳಿತಾರೂಢ ಕಾಂಗ್ರೆಸ್ ಪಕ್ಷದ ಮತ್ತು ಸರಕಾರದ ಅಪರಾಧ ಹೆಚ್ಚಿನದು. ಆದರೆ ಕಳೆದ ವರ್ಷ ಬಿಜೆಪಿ ಪಕ್ಷ ಸಹ ಇಂತಹ ಅವಘಡ ನಡೆಯದಂತೆ ಸೂಕ್ತ ಎಚ್ಚರಿಕೆಯನ್ನು ತೆಗೆದುಕೊಳ್ಳುವ ಬಗ್ಗೆ ಸರಕಾರವನ್ನು ಎಚ್ಚರಿಸದೆ ರಾಜಕೀಯ ಲಾಭಕ್ಕಾಗಿ ಐಪಿಎಲ್ ಸಮಾರಂಭ ನಡೆಯಲೇ ಬೇಕೆಂದು ಅವಘಡ ನಡೆಯುವ ತನಕ ಒತ್ತಾಯಿಸುತ್ತಲೇ ಇತ್ತು. ಅವಘಡ ನಡೆದ ಮೇಲೆ ಮಾತು ಬದಲಾಯಿಸಿತು. ಈಗ ಆರೋಪಿಗಳ ಬಳಿ ಫ್ರೀ ಟಿಕೆಟ್ ಪಡೆಯಬಾರದೆಂದು ಒತ್ತಾಯಿಸದೆ ಅದನ್ನು ಪಡೆಯುವುದು ತಮ್ಮ ಹಕ್ಕು ಎಂಬಂತೆ ಪ್ರತಿಪಾದಿಸುತ್ತಿದೆ. ಆರೋಪಿ ಸಂಸ್ಥೆಯೊಂದಿಗೆ ಗ್ರೂಪ್ ಫೋಟೊ ತೆಗೆಸಿಕೊಂಡು ಅಪರಾಧವನ್ನು ಗೌಣಗೊಳಿಸುತ್ತಿದೆ. ಆರೋಪದ ಸಂಬಂಧಿಗಳಿಗೆ ಗೌರವ ಡಾಕ್ಟರೇಟ್! KSCA ಮತ್ತು RCB ಮತ್ತು ಸರಕಾರದ ಈ ಜಂಟಿ ಕಾರ್ಪೊರೇಟ್ ಅಪರಾಧವನ್ನು ಗೌಣಗೊಳಿಸುವತ್ತ ಕಾಂಗ್ರೆಸ್ ಸರಕಾರ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದೆ. ಆರೋಪಕ್ಕೆ ಶಿಕ್ಷೆ ವಿಧಿಸುವತ್ತ ಸಹಕರಿಸದೆ ಆರೋಪ ಸಂಭವಿಸಲು ಪ್ರತ್ಯಕ್ಷ ಅಥವಾ ಪರೋಕ್ಷ ಕಾರಣವಾದ ಸಂಸ್ಥೆ ಮತ್ತು ವ್ಯಕ್ತಿಗಳನ್ನು ಗೌರವಿಸುತ್ತಿದೆ. ಬೆಂಳೂರಿನ ನಗರ ವಿಶ್ವವಿದ್ಯಾನಿಲಯವು ಅದರ ಸಿಂಡಿಕೇಟ್ ಒಪ್ಪಿಗೆ ಮತ್ತು ಒತ್ತಡಗಳೊಂದಿಗೆ ಈ ಬಾರಿ ಹಲವು ಗೌರವ ಡಾಕ್ಟರೆಟ್ಗಳನ್ನು ಘೋಷಿಸಿದೆ. ಅದರಲ್ಲಿ ಕಳೆದ ವರ್ಷದ ಅವಘಡದ ಬಗ್ಗೆ ಮುಖ್ಯಮಂತ್ರಿಗಳಿಗೆ ಸರಿಯಾದ ಪೂರ್ವ ಸಲಹೆಗಳನ್ನು ಕೊಡಲಿಲ್ಲ ಎಂಬ ಕಾರಣಕ್ಕೆ ರಾಜಕೀಯ ಕಾರ್ಯದರ್ಶಿ ಸ್ಥಾನವನ್ನು ಕಳೆದುಕೊಂಡ ಶಾಸಕ ಗೋವಿಂದರಾಜ್ ಕೂಡ ಒಬ್ಬರು. ಹಾಗೆಯೇ ಈ ಅವಘಡ ಸಂಭವಿಸಿದಾಗ ಪದಾಧಿಕಾರಿಯಾಗಿರದಿದ್ದರೂ ಈಗ ಆರೋಪಿ KSCA ಸಂಸ್ಥೆಯ ಅಧ್ಯಕ್ಷರಾಗಿರುವ ವೆಂಕಟೇಶ್ ಪ್ರಸಾದ್ ಅವರಿಗೂ ಬೆಂಗಳೂರು ನಗರ ವಿಶ್ವವಿದ್ಯಾನಿಲಯ ಗೌರವ ಡಾಕ್ಟರೇಟ್ ಕೊಟ್ಟು ಪುರಸ್ಕರಿಸಿದೆ. ಇವೆಲ್ಲವೂ ಕಾರ್ಪೊರೇಟ್ ಅಪರಾಧಗಳನ್ನು ಸಮಾಜದ ಕಣ್ಣಿನಲ್ಲಿ ಅಪರಾಧವೇ ಅಲ್ಲವೆಂದು ಬಿಂಬಿಸುವ ರಾಜಕೀಯವಲ್ಲವೇ? ಕಾಂಗ್ರೆಸ್ನ ಇಂತಹ ಕ್ರಮಗಳ ಬಗ್ಗೆ ಬಿಜೆಪಿಯ ಸಂಪೂರ್ಣ ಸಹಕಾರವೂ ಕೂಡ ಕಾರ್ಪೊರೇಟ್ ಹಿತಾಸಕ್ತಿಯನ್ನು ಕಾಯುವುದೇ ಹಿಂದುತ್ವದ ಮತ್ತು ಪಕ್ಷಾತೀತ ರಾಜಕೀಯ ಸಂಸ್ಕೃತಿ ಎಂಬುದನ್ನು ಸಾರಿ ಹೇಳುತ್ತಿಲ್ಲವೇ? ಈ ಕಾರಣದಿಂದಲೇ ಬಿಜೆಪಿಯನ್ನೂ ಒಳಗೊಂಡಂತೆ ಯಾವುದೇ ಪಕ್ಷದ ಯಾರೊಬ್ಬರೂ ಸಹ ಸದನದಲ್ಲಿ ಈ ಸಾಲಿನಲ್ಲಿ ಐಪಿಎಲ್ ಅವಘಡವಿಲ್ಲದೆ ನಡೆಯಲು ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ಚರ್ಚೆಗೆ ಒತ್ತಾಯಿಸಲಿಲ್ಲ! ಏಕೆಂದರೆ ಕಾರ್ಪೊರೇಟ್ ಅಪರಾಧಗಳು ಜನಮಾನಸದಿಂದ ಮರೆಯಾಗಬೇಕು ಮತ್ತು ಅವುಗಳ ಲಾಭ ಲಾಲಸೆಗಳೇ ಅಭಿವೃದ್ಧಿಯೆಂಬ ಗೌರವವನ್ನು ಪಡೆಯಬೇಕಲ್ಲವೇ? ಸಾವಿರ ಕೋಟಿ ಲಾಭವಿರುವ ಸಂಸ್ಥೆಗೆ 1,600 ರೂ. ಮಾತ್ರ ಬಾಡಿಗೆ ಏಕೆ? ಸದನದಲ್ಲಿ IPLಗೆ ಫ್ರೀ ಟಿಕೆಟ್ ಬೇಕೆಂದು ವಿರೋಧ ಪಕ್ಷದ ನಾಯಕ ಅಶೋಕ್ ಅವರು ವೀರಾವೇಶದಿಂದ ಆಗ್ರಹಿಸುವಾಗ ಕರ್ನಾಟಕದ ಜನತೆಗೆ ಒಂದು ಮಾಹಿತಿಯನ್ನು ನೀಡಿಬಿಟ್ಟರು. ಅದೇನೆಂದರೆ ಕರ್ನಾಟಕದಲ್ಲಿ ಕ್ರಿಕೆಟ್ ಅನ್ನು ಜನಪ್ರಿಯಗೊಳಿಸಲೋಸುಗ ಸರಕಾರವು KSCA (Karnataka State Cricket Association) ಸಂಸ್ಥೆಗೆ 1969ರಲ್ಲಿ ಬೆಂಗಳೂರಿನ ಕೇಂದ್ರ ಭಾಗದಲ್ಲಿರುವ 16 ಎಕರೆ ವಿಸ್ತೀರ್ಣದ ಜಮೀನನ್ನು ವರ್ಷಕ್ಕೆ ಎಕರೆಗೆ ಕೇವಲ 1,600 ರೂ. ದರದಲ್ಲಿ ವಹಿಸಿಕೊಡಲಾಯಿತು. ಅದೇ ಇಂದಿನ ಚಿನ್ನಸ್ವಾಮಿ ಸ್ಟೇಡಿಯಂ. ಆದರೆ 57 ವರ್ಷಗಳ ನಂತರ ಈಗಲೂ ಈ ಸಂಸ್ಥೆ ಸರಕಾರಕ್ಕೆ ಕಟ್ಟುತ್ತಿರುವುದು ಎಕರೆಗೆ ಕೇವಲ 1,600 ರೂ.ನಂತೆ ಕೇವಲ ವಾರ್ಷಿಕ 19,000 ರೂ. ಬಾಡಿಗೆ ಮಾತ್ರ. ಎಲ್ಲಕ್ಕಿಂತ ಮುಖ್ಯವಾಗಿ IPL ನಡೆಯುವ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂ ನಿರ್ವಹಿಸುವ KSCA ಸಂಸ್ಥೆಗೆ ವಾರ್ಷಿಕ 100 ಕೋಟಿಗೂ ಹೆಚ್ಚು ಆದಾಯವಿದೆ. 2023-24ರ ಆಡಿಟ್ ವರದಿಯ ಪ್ರಕಾರ ಆ ಸಾಲಿನಲ್ಲಿ 34 ಕೋಟಿಗೂ ಹೆಚ್ಚು ನಿವ್ವಳ ಲಾಭವಾಗಿದೆ. ( https://www.ksca.cricket/wp.../uploads/2024/12/AGM-Book.pdf ) ಆದರೂ, ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ನ ಎಲ್ಲಾ ಜನಪ್ರತಿನಿಧಿ ಶಾಸಕರು KSCA ಸಂಸ್ಥೆ ಬಿಡಿಗಾಸಿನ ಶುಲ್ಕ ಕಟ್ಟುತ್ತಿರುವುದರಿಂದ ಶಾಸಕರಿಗೆ ಉಚಿತ ಟಿಕೆಟ್ ಬೇಕೆಂದು ಕೇಳಿದರೇ ವಿನಾ, ಉಳಿದೆಲ್ಲಾ ಜನರ ಆಸ್ತಿಗಳ ಮೇಲೆ ವರ್ಷದಿಂದ ವರ್ಷಕ್ಕೆ ತೆರಿಗೆ ಮತ್ತಿತರ ಶುಲ್ಕಗಳು ಹೆಚ್ಚಿಸುತ್ತಿರುವಾಗ ನೂರಾರು ಕೋಟಿ ರೂ. ವಾರ್ಷಿಕ ಲಾಭವಿರುವ KSCA ಸಂಸ್ಥೆ 57 ವರ್ಷಗಳಷ್ಟು ಹಿಂದೆ ನಿಗದಿಯಾದ ಶುಲ್ಕವನ್ನು ಕಟ್ಟುತ್ತಿರುವುದೇಕೆ ಎಂಬ ಪ್ರಶ್ನೆಯನ್ನು ಕೇಳಲಿಲ್ಲ! ವಾರ್ಷಿಕ ನೂರು ಕೋಟಿ ಆದಾಯವಿರುವ ಸಂಸ್ಥೆ ಕೇವಲ 19,000 ರೂ. ಶುಲ್ಕ ಕಟ್ಟಿ ಬೊಕ್ಕಸಕ್ಕೆ ನಷ್ಟ ಮಾಡುತ್ತಿರುವ ಬಗ್ಗೆ ಪಕ್ಷಾತೀತ ಮೌನ ವಹಿಸಿದ್ದೂ ಕೂಡ ಕಾರ್ಪೊರೇಟ್ ಪರ ಆರ್ಥಿಕತೆಯ ಸಂಸ್ಕೃತಿಯ ಕಾರಣಕ್ಕೆ ಅಲ್ಲವೇ? ಬಡವರಿಗೆ ಸಾಲ ಮನ್ನಾ ಮಾಡಿದರೆ, ರಿಯಾಯಿತಿ ದರದಲ್ಲಿ ಸೇವೆಗಳನ್ನು ನೀಡಿದರೆ ಅವನ್ನು ಫ್ರೀಬಿ ಎಂದು ಹಂಗಿಸುವ ಕೋರ್ಟ್ಗಳು, ಬಿಜೆಪಿಗಳು ಕಾರ್ಪೊರೇಟುಗಳಿಗೆ ಕೊಡುತ್ತಿರುವ ಈ ಪುಕ್ಕಟೆ ದಾನವನ್ನು ಫ್ರೀಬಿ ಎಂದೇಕೆ ವಿರೋಧಿಸುವುದಿಲ್ಲ? KSCAಗೆ ನೂರಾರು ಕೋಟಿ ರೂ. ಲಾಭ ಬರುತ್ತಿರುವುದಕ್ಕೆ ಕಾರಣ ಈಗ ಕ್ರಿಕೆಟ್ ಕೇವಲ ಒಂದು ಆಟವಾಗಿ ಉಳಿದಿಲ್ಲ. ಅದೊಂದು ಕ್ರೀಡಾ ಉದ್ಯಮವಾಗಿದೆ. ಅದರಲ್ಲೂ ಅದರ IPL ಸ್ವರೂಪ ಸಂಪೂರ್ಣ ವಾಣಿಜ್ಯ ಉದ್ದೇಶದಿಂದಲೇ ಕೂಡಿದೆ. ಅದಕ್ಕೆ ತಕ್ಕಂತೆ ಆಟದ ಚಹರೆಗಳನ್ನು ಬದಲಿಸಲಾಗಿದೆ ಮತ್ತು ದೊಡ್ಡ ದೊಡ್ಡ ಕಾರ್ಪೊರೇಟ್ ಉದ್ಯಮಗಳು ಈಗ ನೇರವಾಗಿ ಅವನ್ನು ಪ್ರಾಯೋಜಿಸಿ ನೂರಾರು ಕೋಟಿ ಹಣ ಲಾಭ ಸೂರೆ ಹೊಡೆಯುತ್ತಿವೆ. ಹಾಗೆ ಲಾಭ ಸೂರೆ ಹೊಡೆಯಲು ಅತ್ಯಗತ್ಯವಾಗಿ ಬೇಕಿರುವುದು ಉನ್ಮಾದ ಸೃಷ್ಟಿ. ಉನ್ಮಾದ ಹೆಚ್ಚಾದಷ್ಟೂ ಜನ ಎಲ್ಲವನ್ನು ಮರೆತು ಐಪಿಎಲ್ ಸುತ್ತ ನೆರೆಯುತ್ತಾರೆ. ಅದು ಪ್ರದರ್ಶನ ಉದ್ಯಮಗಳಲ್ಲಿರುವ ಸಂಸ್ಥೆಗಳಿಗೆ ಕೋಟಿ ಕೋಟಿ ಲಾಭವನ್ನು ತಂದುಕೊಡುತ್ತವೆ. ಆದರೆ ಅಂಥ ಉನ್ಮಾದಗಳೇ ಹೋದವರ್ಷ ನಡೆದಂತ ಅವಘಡಗಳಿಗೂ ಕಾರಣವಾಗುತ್ತವೆ. ಒಂದು ಜನಪರ ಸರಕಾರ ಇಂತಹ ಉದ್ಯಮಗಳಿಗೆ ಮತ್ತು ಅದರ ಲಾಭಗಳಿಗೆ ಕಡಿವಾಣ ಹಾಕಬೇಕು. ಆದರೆ ನಮ್ಮ ದೇಶದ ದುರಂತವೇನೆಂದರೆ ವರ್ಷಕ್ಕೆ ನೂರಾರು ಕೋಟಿ ರೂ. ಲಾಭ ಮಾಡುವ KSCA ಮತ್ತು ವರ್ಷಕ್ಕೆ 16,000-20,000 ಕೋಟಿ ರೂ. ಆದಾಯ ಗಳಿಸುವ ಇದರ ಮಾತೃ ಸಂಸ್ಥೆ BCCI ಎರಡೂ ಕೂಡ ತಮ್ಮನ್ನು ತಾವು ಚಾರಿಟೇಬಲ್ ಸಂಸ್ಥೆ ಎಂದು ಘೋಷಿಸಿಕೊಂಡು ಆದಾಯ ತೆರಿಗೆ ಕಾಯ್ದೆ 12ರ ಅನ್ವಯ ಆದಾಯ ತೆರಿಗೆ ವಿನಾಯಿತಿ ಪಡೆಯುತ್ತಿವೆ. ಇದರ ಬಗ್ಗೆ ವಿಐಪಿ ಸಂಸ್ಕೃತಿಯ ವಿರೋಧಿಯೆಂದು ಹೇಳಿಕೊಳ್ಳುವ ಬಿಜೆಪಿಗಳಾಗಲೀ, ಕಾಂಗ್ರೆಸ್ನ ಸಮಾಜವಾದಿ ನಾಯಕಗಣವಾಗಲಿ ಮೌನವೇಕೆ? ವರ್ಷಕ್ಕೆ 20,000 ಕೋಟಿ ರೂ. ಆದಾಯ ಮತ್ತು 2024ರ ಸಾಲಿನಲ್ಲಿ 4,000 ಕೋಟಿಗೂ ಹೆಚ್ಚು ನಿವ್ವಳ ಲಾಭ ಮಾಡಿರುವ BCCI ಸಂಸ್ಥೆಗೆ ಬಿಜೆಪಿಯ ನಂ. 2 ನಾಯಕ ಅಮಿತ್ ಶಾ ಮಗನೇ ನಿಯಂತ್ರಕ. ಹಾಗಿದ್ದರೂ ವಿಲಾಸಿ ಸಂಸ್ಕೃತಿ ವಿರೋಧಿ ಬಿಜೆಪಿ ಪಕ್ಷ BCCI ಗೆ ತೆರಿಗೆ ರಿಯಾಯಿತಿ ಮುಂದುವರಿಸಿರುವುದೇಕೆ? ವಿರೋಧ ಪಕ್ಷಗಳು ಮೌನವಾಗಿರುವುದೇಕೆ? ಇತ್ತೀಚೆಗೆ ಮೋದಿ ಸರಕಾರ ಇಂಥ ಕಾರ್ಪೊರೇಟಿಗರಿಗೆ ಅನುಕೂಲ ಮಾಡಿಕೊಡಲೆಂದೇ ‘ವಿವಾದ್ ಸೆ ವಿಶ್ವಾಸ್’ ನೀತಿಯನ್ನು ಜಾರಿಗೆ ತಂದಿದೆ. ಅದನ್ನು ಬಳಸಿಕೊಂಡು ಅಲ್ಲಿ BCCI ಮತ್ತು ಇಲ್ಲಿ KSCA ಮಾಡಿದ ಎಲ್ಲಾ ನೇರ ತೆರಿಗೆ ವಂಚನೆಗಳನ್ನು ಮನ್ನಾ ಮಾಡಿಬಿಡಲಾಯಿತು. ಇದು IPL ಫ್ರೀ ಟಿಕೆಟ್ಗಿಂತ ಘೋರ ಕಾರ್ಪೊರೇಟ್ ಪರ ಸಂಸ್ಕೃತಿಯಲ್ಲವೇ? ಮೇಲಾಗಿ ಕಾರ್ಪೊರೇಟ್ ಪರವಾಗಿ ಜನರಿಗೆ ಮಾಡುತ್ತಿರುವ ದ್ರೋಹವಲ್ಲವೇ? ಹೀಗಾಗಿ ಅದು ದೇಶದ್ರೋಹವೇ ಅಲ್ಲವೇ? ಬಿಜೆಪಿಯ ಸೋಗಲಾಡಿ ಸಜ್ಜನಿಕೆ ಮತ್ತು ವಿಐಪಿ ಸಂಸ್ಕೃತಿಯ ಸೋಗಲಾಡಿ ವಿರೋಧಗಳಷ್ಟೆ ಅಥವಾ ಅದಕ್ಕಿಂತ ಆಳದ ಈ ದ್ರೋಹಗಳು ಅಪಾಯಕಾರಿಯಲ್ಲವೇ? ಈ ಬಗ್ಗೆ ಕಾಂಗ್ರೆಸ್ ಮತ್ತು ಬಿಜೆಪಿಗಳ ಪಕ್ಷಾತೀತ ಸಮ್ಮತಿ ದೇಶದ ಪ್ರಜಾತಂತ್ರಕ್ಕೆ ಮುಳುವಾಗುವುದಿಲ್ಲವೇ? ಜಸ್ಟ್ ಆಸ್ಕಿಂಗ್.
ಚಿನ್ನ ಬೆಳ್ಳಿ ದರ ಇಂದು ದಿಢೀರನೆ ಭಾರಿ ಏರಿಕೆಯಾಗಿದೆ. 2 ವಾರಗಳ ಕಾಲ ಕದನ ವಿರಾಮ ಘೋಷಿಸಿ, ಇರಾನ್ - ಅಮೆರಿಕ ಒಪ್ಪಂದ ಮಾಡಿಕೊಂಡ ಹಿನ್ನೆಲೆ ಮಾರುಕಟ್ಟೆಯಲ್ಲಿ ಸಂಚಲನ ಮೂಡಿದೆ,
Gold Rate April 8: ಯುದ್ಧ ನಿಂತ ಬೆನ್ನಲ್ಲೇ ಚಿನ್ನ - ಬೆಳ್ಳಿ ಬೆಲೆ ಭಾರೀ ಹೆಚ್ಚಳ, ಎಷ್ಟಿದೆ ಇಂದಿನ ಚಿನ್ನದ ಬೆಲೆ
Gold Rate April 8: ಸತತ ಮೂರು ವಾರಗಳ ನಂತರ ಚಿನ್ನ ಮತ್ತು ಬೆಳ್ಳಿ ಬೆಲೆಯು ದೊಡ್ಡ ಮಟ್ಟದಲ್ಲಿ ಹೆಚ್ಚಳವಾಗಿದೆ. ಇರಾನ್ - ಅಮೆರಿಕ, ಇಸ್ರೇಲ್ ನಡುವಿನ ಯುದ್ಧವು ತಾರ್ಕಿಕ ಅಂತ್ಯ ಕಾಣುವ ಲಕ್ಷಣ ಕಾಣಿಸುತ್ತಿದೆ. ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇರಾನ್ ಮೇಲಿನ ಯುದ್ಧಕ್ಕೆ 2 ಕದನ ವಿರಾಮ ಘೋಷಣೆ ಮಾಡುತ್ತಿದ್ದಂತೆಯೇ ಕಚ್ಚಾ ತೈಲದ
ಮಂಗಳೂರು: ನದಿ ಜಾಗವೇ ಒತ್ತುವರಿ, ಒಡಲು ಸೇರುತ್ತಿದೆ ಬಿಲ್ಡಿಂಗ್ ತ್ಯಾಜ್ಯ
ಮಂಗಳೂರು ನಗರದ ಸುಲ್ತಾನ್ ಬತ್ತೇರಿ ಸಮೀಪದ ಮೊಗವೀರ ಮಹಾಸಭಾ ಕಟ್ಟಡ ಸಮೀಪ ನದಿಗಳಿಗೆ ಬೃಹತ್ ಪ್ರಮಾಣದಲ್ಲಿ ತ್ಯಾಜ್ಯಗಳನ್ನು ಸುರಿದು ಒತ್ತುವರಿ ಮಾಡಲಾಗುತ್ತಿದೆ. ಬೋಳೂರು ಪಾರ್ಕ್ಗೆ ತಾಗಿಕೊಂಡೇ ನದಿಯುದ್ದಕ್ಕೂ ಮಣ್ಣು, ತ್ಯಾಜ್ಯಗಳನ್ನು ಟಿಪ್ಪರ್ಗಳಲ್ಲಿ ತಂದು ಸುರಿಯಲಾಗುತ್ತಿದೆ. ಸುಲ್ತಾನ್ ಬತ್ತೇರಿ-ಬೆಂಗರೆ ಸೇತುವೆ ನಿರ್ಮಾಣವಾಗುತ್ತಿರುವ ಪರಪ್ಪು ಪ್ರದೇಶದಲ್ಲೂ ಭಾರಿ ಪ್ರಮಾಣದಲ್ಲಿ ತ್ಯಾಜ್ಯಗಳನ್ನು ಸುರಿದು ನದಿ ಒತ್ತುವರಿ ಮಾಡಲಾಗಿದೆ.
ಮಧ್ಯಪ್ರಾಚ್ಯದಲ್ಲಿನ ಸಂಘರ್ಷಕ್ಕೆ ಇರಾನ್ ಹಾಗೂ ಅಮೆರಿಕಾ 2ವಾರಗಳ ಕಾಲ ಬ್ರೇಕ್ ನೀಡಿದ್ದು, ಪರಸ್ಪರ ಕದನವಿರಾಮಕ್ಕೆ ಒಪ್ಪಿಗೆ ಸೂಚಿಸಿವೆ. ಆದಾಗ್ಯೂ, ಇರಾನ್ ಇದನ್ನು ತನ್ನ ಜಯವೆಂದು ಬಣ್ಣಿಸುತ್ತಿದ್ದು, ಯುದ್ಧ ಅಂತ್ಯವಾಗಿಲ್ಲ, ತಾತ್ಕಾಲಿಕ ಬ್ರೇಕ್ ಅಷ್ಟೇ ಎಂಬ ಸಂದೇಶವನ್ನು ನೀಡಿದೆ. ಇನ್ನು, ಈ ಬೆನ್ನಲ್ಲೇ, ಅಮೆರಿಕಾಗೆ 10ಅಂಶಗಳ ಕದನವಿರಾಮ ಒಪ್ಪಂದದ ಪ್ರಸ್ತಾವನೆ ರವಾನೆ ಮಾಡಿದೆ. ಈ ಕುರಿತು ಮಾಹಿತಿ ಇಲ್ಲಿದೆ..
ದಾವಣಗೆರೆ ಪ್ರಚಾರ ಅಂತ್ಯ : ಕಾಂಗ್ರೆಸ್ ಆಂತರಿಕ ಸಮೀಕ್ಷೆ ಬಹಿರಂಗ ಪಡಿಸಿದ ಡಿಕೆಶಿ - ಏನಿದೆ ವರದಿಯಲ್ಲಿ?
Davanagere Congress Internal Report : ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಬಹಿರಂಗ ಪ್ರಚಾರ ನಿನ್ನೆ (ಏಪ್ರಿಲ್ 7) ಮುಕ್ತಾಯಗೊಂಡಿದೆ. ಏಪ್ರಿಲ್ ಒಂಬತ್ತರಂದು ಚುನಾವಣೆ ನಡೆಯಲಿದ್ದು, ಮೇ ನಾಲ್ಕರಂದು ಫಲಿತಾಂಶ ಹೊರಬೀಳಲಿದೆ. ಬಹಿರಂಗ ಪ್ರಚಾರ ಮುಕ್ತಾಯದ ನಂತರ ಕಾಂಗ್ರೆಸ್ ಆಂತರಿಕ ಸಮೀಕ್ಷೆಯ ವರದಿಯನ್ನು ಡಿಸಿಎಂ ಡಿಕೆ ಶಿವಕುಮಾರ್ ಬಹಿರಂಗ ಪಡಿಸಿದ್ದಾರೆ.
IIT Baba Love Story: ಬೆಂಗಳೂರು ಮೂಲದ ಪ್ರತೀಕಾ ಕೈಹಿಡಿದ ಐಐಟಿ ಬಾಬಾ ಅಲಿಯಾಸ್ ಅಭಯ್ ಸಿಂಗ್
IIT Baba Love Story: ದೇಶದಲ್ಲಿ ಇತ್ತೀಚಿನ ದಿನಗಳಲ್ಲಿ ನಡೆದ ದೊಡ್ಡ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಸುದ್ದಿಯಾಗಿದ್ದ ಐಐಟಿ ಬಾಬಾ ಅಲಿಯಾಸ್ ಅಭಯ್ ಸಿಂಗ್ ಇದೀಗ ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದಾರೆ. ಕುಂಭಮೇಳದಲ್ಲಿ ಸುದ್ದಿಯಾಗಿದ್ದ ಮೊನಾಲಿಸಾ ಭೋಂಸ್ಲೆ ಈಚೆಗೆ ಉತ್ತರ ಪ್ರದೇಶ ಮೂಲದ ಫರ್ಮಾನ್ ಖಾನ್ ಎಂಬ ಯುವಕನನ್ನು ಪ್ರೀತಿಸಿ ಮದುವೆಯಾಗಿದ್ದರು. ಮೊನಾಲಿಸಾ ಭೋಸ್ಲೆ ಕಳೆದ ವರ್ಷ ನಡೆದ ಮಹಾ
ಅಗ್ಗದ ಅತ್ತರು ಮಾರುವ ಗೋಸಂಗಿ ಸಮುದಾಯ
ಮೂಲತಃ ಅಗ್ಗವಾದ ಅತ್ತರು ಅಥವಾ ಸೆಂಟ್ ಅನ್ನು ಬೀದಿಬೀದಿ ಸುತ್ತಿ ಮಾರುವ ಕಾಯಕದ ಗೋಸಂಗಿ ಸಮುದಾಯದವರು ಈಗ ಇತರ ಸೌಂದರ್ಯವರ್ಧಕಗಳನ್ನು ಮಾರುವುದರಿಂದ ಹಿಡಿದು, ಒಳನಾಡ ಮೀನುಗಾರಿಕೆ, ಚಿಂದಿ ಆಯುವುದು ಮುಂತಾದ ಕೆಲಸಗಳನ್ನು ಮಾಡಿ ಜೀವನ ಮಾಡುತ್ತಾರೆ. ‘‘ನಮ್ಮ ಹಿರಿಯರು ಹೊಟ್ಟೆಪಾಡಿಗಾಗಿ ಮಹಾರಾಷ್ಟ್ರದಿಂದ ಈ ಕಡೆಗೆ ವಲಸೆ ಬಂದವರು. ಆರಂಭದಲ್ಲಿ ಸಣ್ಣಪುಟ್ಟ ಕೆಲಸಗಳನ್ನು ಮಾಡುತ್ತಿದ್ದರು. ನಾವು ದಿನನಿತ್ಯ ದುಡಿಯದಿದ್ದರೆ ಪ್ರಪಂಚಾನೇ ನಡೆಯಲ್ಲ. ಉಪವಾಸ ಬೀಳಬೇಕಾಗುತ್ತದೆ, ಬೆಳಗಿನ ಜಾವ ಐದಾರು ಗಂಟೆಗೆ ಎದ್ದು ಒಂದೊಂದು ಟೋಳಿಯಲ್ಲಿ ಏಳೆಂಟು ಹೆಣ್ಣುಮಕ್ಕಳು ಕೂಡಿಕೊಂಡು ಬಗಲಾಗ ಜೋಳಿಗೆ ಹಾಕಿಕೊಂಡು ಕೈಯಾಗ ಒಂದು ಕೋಲು ಹಿಡಕೊಂಡು ಚಿಂದಿ, ಪ್ಲಾಸ್ಟಿಕ್ ಚೀಲ ಆಯ್ದು ಜೋಳಿಗೆ ತುಂಬಿಸಿತ್ತೇವು. ಜೋಳಿಗೆ ತುಂಬಿದ ಮ್ಯಾಲ ಎಲ್ಲರೂ ಕೂಡಿಕೊಂಡು, ಪ್ಲಾಸ್ಟಿಕ್ ಕೊಳ್ಳುವ ಅಂಗಡಿಗೆ ಹೋಗ್ತೀವಿ, ಅವರು ಕಾಟ ಮಾಡಿ ಮಾಲ ತಗೊಂಡು ರೊಕ್ಕಾ ಕೊಡ್ತಾರ. ಕನಿಷ್ಠ ಒಬ್ಬೊಬರಿಗೆ ಎರಡರಿಂದ ಮೂರು ನೂರು ರೂಪಾಯಿಗಳು ಸಿಗುತ್ತವೆ. ಇದರಿಂದ ನಮ್ಮ ಜೀವನ ನಡೆಯುತ್ತೆ’’ ಎಂದು ಗೋಸಂಗಿ ಸಮುದಾಯದ ಕುರಿತು ಸಂಶೋಧನಾತ್ಮಕ ಪುಸ್ತಕ ಬರೆದಿರುವ ಡಾ. ಹರಿಲಾಲ ಪವಾರರಿಗೆ ಧಾರವಾಡದ ಲಕ್ಷ್ಮೀಸಿಂಗನಕೇರಿಯ ಬಳಿಯಿರುವ ಜೋಪಡಪಟ್ಟಿ ಆಶ್ರಯ ಮನೆಗಳಲ್ಲಿರುವ ಗೋಸಂಗಿ ಸಮುದಾಯದ ವ್ಯಕ್ತಿಯೊಬ್ಬರು ತಮ್ಮ ಗೋಸಂಗಿ ಸಮುದಾಯದ ಇಂದಿನ ಪರಿಸ್ಥಿತಿ ಕುರಿತು ಹೀಗೆ ಹೇಳುತ್ತಾರೆ. ಮೂಲತಃ ಅಗ್ಗವಾದ ಅತ್ತರು ಅಥವಾ ಸೆಂಟ್ ಅನ್ನು ಬೀದಿಬೀದಿ ಸುತ್ತಿ ಮಾರುವ ಕಾಯಕದ ಗೋಸಂಗಿ ಸಮುದಾಯದವರು ಈಗ ಇತರ ಸೌಂದರ್ಯವರ್ಧಕಗಳನ್ನು ಮಾರುವುದರಿಂದ ಹಿಡಿದು, ಒಳನಾಡ ಮೀನುಗಾರಿಕೆ, ಚಿಂದಿ ಆಯುವುದು ಮುಂತಾದ ಕೆಲಸಗಳನ್ನು ಮಾಡಿ ಜೀವನ ಮಾಡುತ್ತಾರೆ. ಹಿಂದೊಮ್ಮೆ ಬಳ್ಳಾರಿಯ ಕಂಪ್ಲಿ ಕಡೆಯಿಂದ ಬರುವಾಗ ಗೋಸಂಗಿ ಕಾಲನಿ ಒಂದರಲ್ಲಿ ನಮ್ಮನ್ನು ಅನೇಕ ಮನೆಗಳಿಗೆ ಚಾವಡೆ ಲೋಕೇಶ್ ಕರೆದೊಯ್ದಿದ್ದರು. ಪ್ರತೀಮನೆಯಲ್ಲೂ ನಾವು ಪೆಟ್ಟಿಗೆಗಳಲ್ಲಿ ತುಂಬಿದ್ದ ಅತ್ತರು ಅಥವಾ ಸೆಂಟ್ ಬಾಟಲಿಗಳನ್ನು ನೋಡಿದ್ದೆವು. ಗಮಗಮ ಅತ್ತರು ಮಾರುವ ಇವರ ಬದುಕುಗಳು ಮಾತ್ರ ಗಮಗೊಡುತ್ತಿರಲಿಲ್ಲ. ಇವರ ಬಡತನ ಕಣ್ಣಿಗೆ ರಾಚುತಿತ್ತು. ಗೋಸಂಗಿಗಳನ್ನು ಗ್ಯಾಸರು, ಗೇಸರು, ಗೋಸಾವಿ, ಗೋಸಾಯಿ, ಗೋಸ್ ಅಥವಾ ಯಾಸ, ಗೋಸ್ಯಾ, ಗೋಸ್ಕಾ, ಗೋಸಿಕಾ, ಕೋಸಂಗಿ, ಕೋಸಿಕೋಲು, ಗೋಹಿಂಸಕ, ಗೋಸಂಗುಲು, ಗೋಸರ, ಗೋಸಿಕೊಳ್ಳು, ಪೇಗಲೊಳ್ಳು, ಪಂಥಗೊಳ್ಳು, ಕೈಂಕ, ಗೋಸಂಗೊಳ್ಳು, ಗೋಸಂಗಾಳ್ಳು, ಗೋಸ್ಟಿಕ, ಗೋವಳೀಗ ಮುಂತಾಗಿ ಅನೇಕ ಹೆಸರುಗಳಿಂದ ಅನೇಕ ಭಾಗಗಳಲ್ಲಿ ಕರೆಯುತ್ತಾರೆ. ಚರ್ಮಕಾರ ಕುಶಲ ಕರ್ಮಿಗಳಾದ ಗೋಸಂಗಿಗಳು ಉತ್ತರ ಭಾರತದಲ್ಲಿದ್ದಷ್ಟು ಕಾಲ ಗೋವುಗಳ ಸಾಕಣೆಯೊಂದಿಗೆ ಚರ್ಮದ ಪರಿಕರಗಳನ್ನು ತಯಾರಿಸುವ ಚಮ್ಮಾರಿಕೆಯ ಕಸುಬನ್ನು ತಮ್ಮ ವೃತ್ತಿಯನ್ನಾಗಿ ಅವಲಂಬಿಸಿದ್ದರು. ಚರ್ಮಕಾರಿಕೆಯು ಪಶುಪಾಲಕ ವೃತ್ತಿಯ ಭಾಗವಾಗಿ ಗೋಸಂಗಿಗಳಿಗೆ ಒಲಿದ ಕುಶಲ ಕಲೆ. ಇವರು ಚರ್ಮಕಾರರಾದ್ದರಿಂದ ಚಮ್ಮಾರಿಕೆಗೆ ಬೇಕಾದ ಚರ್ಮವನ್ನು ಪಡೆಯಲು ಹರಿತವಾದ ಆಯುಧದಿಂದ ದನಗಳನ್ನು ಕಡಿದು ಚರ್ಮವನ್ನು ಸುಲಿಯುತ್ತಿದ್ದರೆಂದು ವಡ್ಡಗೆರೆ ನಾಗರಾಜಯ್ಯ ಅವರು ‘ಗೋಸಂಗಿ ಗುಡಿಗರ್ಭದಲ್ಲಿ ಉರಿಯುವ ರಾಗದೀಪ’ ಎಂಬ ಬರಹದಲ್ಲಿ ನಮೂದಿಸಿದ್ದಾರೆ. ಗೋಸಂಗಿಗಳದು ಬಹು ಸಂಸ್ಕೃತಿಗಳ ಸಮಾಜವಾಗಿದ್ದು ಇವರಲ್ಲಿನ ಕೆಲ ಹೆಸರುಗಳು ಪರಿಗಣನೆಗೆ ಬಾರದೆ ತಪ್ಪು ತಪ್ಪಾಗಿ ನಮೂದಾಗಿರುವ ಅನೇಕ ಹೆಸರುಗಳಿವೆ. ಇವರು ಅಪ್ಪಟ ಅಲೆಮಾರಿಗಳಾದ್ದರಿಂದ ಇವರ ಗಣತಿಯೂ ಸ್ಪಷ್ಟವಾಗಿ ನಡೆದಿಲ್ಲ. ಈ ಕಾರಣಕ್ಕೆ ಇವರ ಅಸ್ಮಿತೆಯೇ ಇಲ್ಲದಂತಾಗುತ್ತಿದೆ. ಈ ಸಮುದಾಯ ಕೂಡ ಇತರ ಕೆಲ ಅಲೆಮಾರಿ ಸಮುದಾಯಗಳಂತೆ ‘ಐಡೆಂಟಿಟಿ ಕ್ರೈಸಿಸ್’ನಿಂದ ನರಳುತ್ತಿದೆ. ಹೀಗೆ ನಿರ್ದಿಷ್ಟ ಗುರುತಿಗೆ ಸಿಗದೆ ಬಹು ನಾಮಗಳಿಗೆ ಒಳಗಾಗುವುದರಿಂದ ಆಗುವ ಅಪಾಯಗಳ ಅರಿವಿಲ್ಲದೆಯೇ ಈ ಸಮುದಾಯ ಬದುಕುತ್ತಿದೆ. ಈ ಕಾರಣಕ್ಕೆ ನಿರ್ದಿಷ್ಟವಾಗಿ ಅತ್ತರ್ವಾಲ ಸಮುದಾಯದವರೂ ಕೂಡ ತಮ್ಮನ್ನು ಗೋಸಂಗಿ ಎಂತಲೇ ಕರೆದುಕೊಳ್ಳುತ್ತಾರೆ. ಮತ್ತೇ ಕೆಲವರು ಗೋಸಾವಿ, ಹಿಂದೂ ಮರಾಠ, ರಜಪೂತ, ಮರಾಠ, ಗಂಧದೆಣ್ಣೆಯವರು, ಗೋಸಾಯಿ, ಡುಂಗ್ರಿ ಗರಾಸಿಯಾ ಅವರೂ ಕೂಡ ಕೆಲವೊಮ್ಮೆ ತಮ್ಮನ್ನು ಗೋಸಂಗಿಗಳು ಎಂದೇ ಗುರುತಿಸಿಕೊಳ್ಳುತ್ತಾರೆ. ಇದರಿಂದಾಗಿ ಗೋಸಂಗಿಗಳಿಗೆ ಸಿಗಬೇಕಾದ ಸರಕಾರದ ಅನುದಾನ, ಸವಲತ್ತು ಮತ್ತು ಮೀಸಲಾತಿಗಳನ್ನು ಈ ಇತರ ಸಮುದಾಯದವರು ಪಡೆಯುತ್ತಿದ್ದಾರೆ. ಮೊದಲು ಭಾರತ ಸರಕಾರ 1936ರಲ್ಲಿ ಬಳ್ಳಾರಿ, ಮೈಸೂರು ಮತ್ತು ಕೆನರಾ ಜಿಲ್ಲೆಗಳಲ್ಲಿ ಮಾತ್ರ ಈ ಸಮುದಾಯವನ್ನು ಪರಿಶಿಷ್ಟ ಜಾತಿಗೆ ಸೇರಿಸಿದ್ದರು. ನಂತರ 1976ರಲ್ಲಿ ಕರ್ನಾಟಕ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಗೋಸಂಗಿ ಸಮುದಾಯವನ್ನು ಪರಿಶಿಷ್ಟ ಜಾತಿಯ ಪಟ್ಟಿಯಲ್ಲಿ ಸೇರಿಸಲಾಯಿತು. ಗೋಸಂಗಿ ಸಮುದಾಯದವರು ಆಚರಿಸುವ ಹಿಂದೂ ಹಬ್ಬಗಳಲ್ಲಿ ದಸರಾ ಹಬ್ಬ ಬಹಳ ಪ್ರಮುಖವಾದುದು. ತಮ್ಮ ಅಲೆಮಾರಿ ಬದುಕಿನಿಂದಾಗಿ ದೇಶಾಂತರ ಹೋಗಿದ್ದವರು ದಸರಾ ಹಬ್ಬಕ್ಕೆ ಹತ್ತು ದಿನ ಮುಂಚಿತವಾಗಿ ಬಂದು ತಮ್ಮ ಮೂಲ ಸ್ಥಳವನ್ನು ಸೇರಿಕೊಳ್ಳುತ್ತಾರೆ. ಅತ್ಯಂತ ಸಂಭ್ರಮದಿಂದ ಹಬ್ಬ ಆಚರಿಸುವ ಇವರು ತಮ್ಮ ಬೀದಿ, ಗಲ್ಲಿಗಳನ್ನು ಗುಡಿಸಿ ಸಾರಿಸಿ ತಮ್ಮ ಟೆಂಟು, ಗುಡಾರ, ಮನೆಮಠಗಳನ್ನು ಸ್ವಚ್ಛಗೊಳಿಸಿ ಒಂಭತ್ತು ದಿನಗಳ ಕಾಲ ಕಾಳಿಕಾದೇವಿಯ ಮೂರ್ತಿಯನ್ನು ತಮ್ಮ ತಮ್ಮ ಜಗಲಿಗಳ ಮೇಲಿಟ್ಟು ಹೂಹಣ್ಣುಗಳಿಂದ ಸಿಂಗರಿಸಿ, ಕಳಸ ಇಟ್ಟು, ಸಿಹಿ ಅಡುಗೆಯ ಎಡೆ ಹಾಕಿ ಅತ್ಯಂತ ಭಕ್ತಿಭಾವದಿಂದ ಪೂಜಿಸುತ್ತಾರೆ. ದೀಪಾವಳಿ, ಹೋಳಿ ಮುಂತಾದ ಹಬ್ಬಗಳನ್ನೂ ಕೂಡ ಇದೇ ರೀತಿ ಆಚರಿಸುತ್ತಾರೆ. ಗೋಸಂಗಿ ಸಮುದಾಯದ ಕೆಲವರು ಗಿಡಮೂಲಿಕೆಗಳಿಂದ ಔಷಧಿಗಳನ್ನು ತಯಾರಿಸಿ ನಾಟಿ ವೈದ್ಯಕೀಯವನ್ನೂ ಮಾಡುತ್ತಾರೆ. ಮತ್ತೆ ಕೆಲವರು ಮಾಟಮಂತ್ರಗಳನ್ನೂ ಮಾಡುತ್ತಾರೆ. ಗೋಸಂಗಿ ಸಮುದಾಯದವರಿಗೆ ತಮ್ಮದೇ ಆದ ಮರಗು ಭಾಷೆಯೊಂದಿದೆ. ಈ ಬಾಷೆಯ ಮೇಲೆ ಸಂಸ್ಕೃತ, ಮರಾಠಿ, ಹಿಂದಿ, ಬಂಜಾರ, ರಾಜಸ್ಥಾನಿ, ಗುಜರಾತಿ, ಉರ್ದು ಭಾಷೆಗಳ ಪ್ರಭಾವ ಇದೆ. ಗೋಸಂಗಿಗಳು ತಮ್ಮ ಗೋಸಂಗಿ ಭಾಷೆಯಲ್ಲೇ ಹಾಡು, ಕವನ ಮುಂತಾದ ಸಾಹಿತ್ಯಿಕ ರಚನೆಗಗಳನ್ನು ಮಾಡಿದ್ದಾರೆ. ತುಳಜಾಪುರದ ಅಂಬಾಭವಾನಿ, ಸೌದತ್ತಿ ಎಲ್ಲಮ್ಮ, ಸಿರ್ಸಿಯ ಮಾರಿಕಾಂಬೆ, ದುರ್ಗಾಂಬ, ಆದಿಶಕ್ತಿ ಮುಂತಾದ ಸ್ತ್ರೀ ದೇವತೆಗಳ ಕುರಿತು ತಾವೇ ಹಾಡುಗಳನ್ನು ಕಟ್ಟಿ ಸುಶ್ರಾವ್ಯವಾಗಿ ಹಾಡುತ್ತಾರೆ. ಗೋಸಂಗಿಗಳ ಮೂಲ ಪುರಾಣವನ್ನು ಹುಡುಕುತ್ತಾ ಹೋದರೆ ಆದಿಜಾಂಬವ ಮುನಿಗೆ ಸಂಬಂಧ ಬರುತ್ತದೆ. ಆದಿಜಾಂಬವ ಮುನಿಯ ಮಗ ‘ಹಾಲಮುನಿ’ಯಿಂದ ತಮ್ಮ ವಂಶ ಬಂದಿದೆ ಎಂದು ಹೇಳುತ್ತಾರೆ. ಈ ಎಲ್ಲದರ ಹಿನ್ನೆಲೆಯಲ್ಲಿ ಗೋಸಂಗಿ ಸಮುದಾಯದ ಕುಲಶಾಸ್ತ್ರೀಯ ಅಧ್ಯಯನ ಆಗಬೇಕಿದೆ, ಇವರ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ, ಸಾಂಸ್ಕೃತಿಕ, ಐತಿಹಾಸಿಕ ಮತ್ತು ಪೌರಾಣಿಕ ಸ್ಥಿತಿಗತಿಗಳನ್ನು ಅಧ್ಯಯನ ಮಾಡಿ ಈ ಸಮುದಾಯಕ್ಕೆ ನ್ಯಾಯಬದ್ಧವಾಗಿ ಕೊಡಬೇಕಾದ ಸವಲತ್ತು, ಅನುದಾನ, ಮೀಸಲಾತಿ ನೀಡುವುದರ ಮೂಲಕ ಸಾಮಾಜಿಕ ನ್ಯಾಯವನ್ನು ಕಲ್ಪಿಸಬೇಕಿದೆ.
ಮಧ್ಯಪ್ರಾಚ್ಯ ಸಂಘರ್ಷ | ಕದನ ವಿರಾಮ ಘೋಷಣೆಗೆ ವಿಶ್ವಸಂಸ್ಥೆ ಸ್ವಾಗತ: ಶಾಶ್ವತ ಶಾಂತಿಗೆ ಗುಟೆರೆಸ್ ಕರೆ
ವಾಷಿಂಗ್ಟನ್/ನ್ಯೂಯಾರ್ಕ್: ಅಮೆರಿಕ ಮತ್ತು ಇರಾನ್ ನಡುವೆ ಘೋಷಿಸಲಾದ ಎರಡು ವಾರಗಳ ಕದನ ವಿರಾಮವನ್ನು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ ಸ್ವಾಗತಿಸಿದ್ದಾರೆ ಎಂದು ಅವರ ವಕ್ತಾರ ಸ್ಟೀಫನ್ ಡುಜಾರಿಕ್ ತಿಳಿಸಿದ್ದಾರೆ. “ಈ ಪ್ರದೇಶದಲ್ಲಿ ಶಾಶ್ವತ ಮತ್ತು ಸಮಗ್ರ ಶಾಂತಿಗೆ ದಾರಿ ಮಾಡಿಕೊಡಲು, ಅಂತರರಾಷ್ಟ್ರೀಯ ಕಾನೂನಿನಡಿ ತಮ್ಮ ಬಾಧ್ಯತೆಗಳನ್ನು ಪಾಲಿಸುವುದರ ಜೊತೆಗೆ ಕದನ ವಿರಾಮದ ನಿಯಮಗಳನ್ನು ಕಟ್ಟುನಿಟ್ಟಾಗಿ ಅನುಸರಿಸಬೇಕು” ಎಂದು ಗುಟೆರೆಸ್ ಮೂರು ದೇಶಗಳಿಗೆ ಕರೆ ನೀಡಿದ್ದಾರೆ. “ನಾಗರಿಕರ ಜೀವ ರಕ್ಷಣೆ ಹಾಗೂ ಮಾನವೀಯ ಸಂಕಷ್ಟವನ್ನು ಕಡಿಮೆಗೊಳಿಸುವ ದೃಷ್ಟಿಯಿಂದ ಯುದ್ಧಗಳನ್ನು ಅಂತ್ಯಗೊಳಿಸುವುದು ತುರ್ತು ಅಗತ್ಯವಾಗಿದೆ” ಎಂದು ಅವರು ಹೇಳಿದ್ದಾರೆ. ಇದೇ ವೇಳೆ, ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿಯ ವೈಯಕ್ತಿಕ ರಾಯಭಾರಿ ಜೀನ್ ಅರ್ನಾಲ್ಟ್ ಶಾಶ್ವತ ಶಾಂತಿ ಸಾಧನೆಗೆ ಸಂಬಂಧಿಸಿದ ಪ್ರಯತ್ನಗಳಿಗೆ ಬೆಂಬಲ ನೀಡಲು ಈ ಪ್ರದೇಶದಲ್ಲೇ ಇರುವುದಾಗಿ ಡುಜಾರಿಕ್ ಸ್ಪಷ್ಟಪಡಿಸಿದ್ದಾರೆ.
ಇರಾನ್ Vs ಅಮೆರಿಕ, ಇಸ್ರೇಲ್ ನಡುವೆ ಎರಡು ವಾರಗಳ ಕಾಲಕ್ಕೆ ಕದನ ವಿರಾಮ ಘೋಷಣೆಯಾದ ಬೆನ್ನಲ್ಲೇ ಮೂರು ವಾರಗಳ ನಂತರ ಚಿನ್ನದ ಬೆಲೆಯು ಭರ್ಜರಿ ಹೆಚ್ಚಳವಾಗಿದೆ. ಇರಾನ್ ಮೇಲಿನ ದಾಳಿಯನ್ನು ಟ್ರಂಪ್ ನಿಲ್ಲಿಸುತ್ತಿದ್ದಂತೆ ಚಿನ್ನ ಮೂರು ವಾರಗಳ ಗರಿಷ್ಠ ಮಟ್ಟಕ್ಕೆ ಏರಿಕೆ ಕಂಡಿದೆ. ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಎರಡು ವಾರಗಳ ಕಾಲ ಇರಾನ್ ಮೇಲಿನ
Ambani: ಕೇರಳದ ದೇವಾಲಯಗಳು, ಆನೆಗಳ ಕಲ್ಯಾಣಕ್ಕಾಗಿ ₹18 ಕೋಟಿ ದೇಣಿಗೆ ನೀಡಿದ ಅನಂತ್ ಅಂಬಾನಿ
ಮುಂಬೈ: ದೇಶದ ಪ್ರತಿಷ್ಠಿತ ರಿಲಯನ್ಸ್ ಇಂಡಸ್ಟ್ರೀಸ್ ಕಾರ್ಯನಿರ್ವಾಹಕ ನಿರ್ದೇಶಕ ಅನಂತ್ ಅಂಬಾನಿ ಅವರು ಕೇರಳದ ಎರಡು ಪ್ರಮುಖ ಧಾರ್ಮಿಕ ತಾಣಗಳಾದ ರಾಜರಾಜೇಶ್ವರಂ ದೇವಾಲಯ ಮತ್ತು ಗುರುವಾಯೂರ್ ದೇವಾಲಯಕ್ಕೆ ಭೇಟಿ ನೀಡಿದರು. ವಿಶೇಷ ಪೂಜೆ, ಪುನಸ್ಕಾರ ನೆರವೇರಿಸಿದರು. ಈ ಸಂದರ್ಭದಲ್ಲಿ ದೇವಾಲಯ ಸಂರಕ್ಷಣೆ ಮತ್ತು ಪ್ರಾಣಿ ಕಲ್ಯಾಣಕ್ಕೆ ಸಂಬಂಧಿಸಿದಂತೆ ವಿವಿಧ ಉಪಕ್ರಮಗಳನ್ನು ಘೋಷಿಸಿದರು. ಎರಡೂ ದೇವಾಲಯಗಳಿಗೆ ಒಟ್ಟು 6
ಸಿಲಿಂಡರ್, ಇಂಧನ ಸಂಗ್ರಹ ಮಾಹಿತಿ ಪಡೆಯಲು ಅಧಿಕಾರಿಗಳ ಪರದಾಟ ; ಜನಪ್ರತಿನಿಧಿಗಳಿಂದ ಪ್ರಭಾವ
ಇರಾನ್-ಇಸ್ರೇಲ್ ಯುದ್ಧದ ಹಿನ್ನೆಲೆಯಲ್ಲಿ ಇಂಧನ ಮತ್ತು ಸಿಲಿಂಡರ್ ಕೊರತೆಯಾಗದಂತೆ ಹಾಗೂ ಕಾಳಸಂತೆ ಮಾರಾಟ ತಡೆಯಲು ಜಿಲ್ಲಾಡಳಿತ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದೆ. ಈ ನಿಟ್ಟಿನಲ್ಲಿ ಪ್ರತಿದಿನದ ದಾಸ್ತಾನು ಮಾಹಿತಿ ಸಂಗ್ರಹಿಸುವಂತೆ ಜಿಲ್ಲಾಧಿಕಾರಿಗಳು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ, ಆದರೆ ನಿಖರ ಮಾಹಿತಿ ಕಲೆ ಹಾಕಲು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಅಧಿಕಾರಿಗಳು ಪ್ರಸ್ತುತ ಸಾಕಷ್ಟು ಸವಾಲುಗಳನ್ನು ಎದುರಿಸುತ್ತಿದ್ದಾರೆ.
ಅಮೆರಿಕ ಕೋರ್ಟ್ ಮೆಟ್ಟಿಲೇರಿದ ಅದಾನಿ: ಎಸ್ಇಸಿ ವಂಚನೆ ಪ್ರಕರಣ ವಜಾಗೊಳಿಸುವಂತೆ ಮನವಿ
ನ್ಯೂಯಾರ್ಕ್: ಅಮೆರಿಕದ ಸೆಕ್ಯುರಿಟೀಸ್ ಅಂಡ್ ಎಕ್ಸ್ಚೇಂಜ್ ಕಮಿಷನ್ (SEC) ದಾಖಲಿಸಿರುವ ಸೆಕ್ಯುರಿಟೀಸ್ ವಂಚನೆ ಮೊಕದ್ದಮೆಯನ್ನು ವಜಾಗೊಳಿಸುವಂತೆ ಕೋರಿ ಉದ್ಯಮಿ, ಬಿಲಿಯನೇರ್ ಗೌತಮ್ ಅದಾನಿ ಹಾಗೂ ಅವರ ಸೋದರಳಿಯ ಸಾಗರ್ ಅದಾನಿ ಅಮೆರಿಕದ ನ್ಯಾಯಾಲಯದ ಮೊರೆ ಹೋಗಿದ್ದಾರೆ. ಈ ಪ್ರಕರಣವು ಅಮೆರಿಕದ ನ್ಯಾಯಾಲಯದ ವ್ಯಾಪ್ತಿಗೆ ಬರುವುದಿಲ್ಲ ಹಾಗೂ ಇದರಲ್ಲಿ ಯಾವುದೇ ಹುರುಳಿಲ್ಲ ಎಂದು ಅವರು ತಮ್ಮ ಮೇಲ್ಮನವಿಯಲ್ಲಿ ಬಲವಾಗಿ
ಕದನ ವಿರಾಮ | ಟ್ರಂಪ್ ನಿರ್ಧಾರಕ್ಕೆ ಇಸ್ರೇಲ್ ಬೆಂಬಲ; ಲೆಬನಾನ್ ಗೆ ಅನ್ವಯಿಸುವುದಿಲ್ಲ ಎಂದ ನೆತನ್ಯಾಹು!
ವಾಷಿಂಗ್ಟನ್/ಜೆರುಸಲೇಮ್: ಇರಾನ್ ವಿರುದ್ಧ ನಡೆಯುತ್ತಿರುವ ಮಿಲಿಟರಿ ದಾಳಿಗಳನ್ನು ಎರಡು ವಾರಗಳ ಕಾಲ ಸ್ಥಗಿತಗೊಳಿಸುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ನಿರ್ಧಾರಕ್ಕೆ ಇಸ್ರೇಲ್ ಬೆಂಬಲ ಸೂಚಿಸಿದೆ. ಆದರೆ ಈ ಕದನ ವಿರಾಮ ಒಪ್ಪಂದವು ಲೆಬನಾನ್ ಗೆ ಅನ್ವಯಿಸುವುದಿಲ್ಲ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಕಚೇರಿ ಸ್ಪಷ್ಟಪಡಿಸಿದೆ ಎಂದು Aljazeera ವರದಿ ಮಾಡಿದೆ. ಇಸ್ರೇಲ್ ಪ್ರಧಾನಿ ಕಚೇರಿ ಪ್ರಕಟಿಸಿದ ಹೇಳಿಕೆಯಲ್ಲಿ, “ಇರಾನ್ ತಕ್ಷಣವೇ ಜಲಸಂಧಿಗಳನ್ನು ತೆರೆಯಬೇಕು ಹಾಗೂ ಅಮೆರಿಕ, ಇಸ್ರೇಲ್ ಮತ್ತು ಪ್ರದೇಶದ ಇತರ ದೇಶಗಳ ಮೇಲಿನ ಎಲ್ಲಾ ದಾಳಿಗಳನ್ನು ನಿಲ್ಲಿಸಬೇಕು” ಎಂಬ ಷರತ್ತಿನಡಿ ಟ್ರಂಪ್ ಅವರ ನಿರ್ಧಾರವನ್ನು ಬೆಂಬಲಿಸಲಾಗುತ್ತಿದೆ ಎಂದು ತಿಳಿಸಲಾಗಿದೆ. ಇದಲ್ಲದೆ, ಇರಾನ್ ಮುಂದಿನ ದಿನಗಳಲ್ಲಿ ಪರಮಾಣು, ಕ್ಷಿಪಣಿ ಹಾಗೂ ಬೆದರಿಕೆಗಳನ್ನು ಉಂಟುಮಾಡದಂತೆ ಖಚಿತಪಡಿಸಿಕೊಳ್ಳಲು ಅಮೆರಿಕ ಕೈಗೊಳ್ಳುತ್ತಿರುವ ಪ್ರಯತ್ನಗಳಿಗೆ ಇಸ್ರೇಲ್ ಬೆಂಬಲ ವ್ಯಕ್ತಪಡಿಸಿದೆ. ಈ ಗುರಿಗಳನ್ನು ಮುಂಬರುವ ಮಾತುಕತೆಗಳಲ್ಲಿ ಸಾಧಿಸಲು ಅಮೆರಿಕ ಇಸ್ರೇಲ್ ಗೆ ತಿಳಿಸಿದೆ ಎಂದು ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ. ಆದರೂ, ಎರಡು ವಾರಗಳ ಕದನ ವಿರಾಮವು ಲೆಬನಾನ್ ಗೆ ಅನ್ವಯಿಸುವುದಿಲ್ಲ ಎಂಬುದನ್ನು ಹೇಳಿಕೆಯಲ್ಲಿ ಸ್ಪಷ್ಟಪಡಿಸಲಾಗಿದೆ. ಇದೇ ವೇಳೆ, ಪಾಕಿಸ್ತಾನದ ಪ್ರಧಾನಮಂತ್ರಿ ಈ ಕದನ ವಿರಾಮವು ಲೆಬನಾನ್ ಗೂ ಅನ್ವಯಿಸುತ್ತದೆ ಎಂದು ಹೇಳಿದ್ದರೂ, ಇಸ್ರೇಲ್ ಈ ಬಗ್ಗೆ ಭಿನ್ನ ನಿಲುವು ವ್ಯಕ್ತಪಡಿಸಿದೆ.
ಸಂವಿಧಾನ ‘ಲಾಕಪ್ಡೆತ್’ಗೆ ಬಲಿಯಾಗದಿರಲಿ
ಆರು ವರ್ಷಗಳ ಹಿಂದೆ ದೇಶಾದ್ಯಂತ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದ್ದ ತಮಿಳುನಾಡಿನ ತೂತ್ತುಕ್ಕುಡಿ ಜಿಲ್ಲೆಯ ವ್ಯಾಪಾರಿ ಪಿ. ಜಯರಾಜ್ ಹಾಗೂ ಅವರ ಪುತ್ರ ಜೆ. ಬೆನಿಕ್ಸ್ ಅವರ ಸಾತ್ತಾನ್ಕ್ಕುಳಂ ಪೊಲೀಸ್ ಕಸ್ಟಡಿ ಸಾವು ಮತ್ತೆ ಮುನ್ನೆಲೆಗೆ ಬಂದಿದೆ. ಈ ಪ್ರಕಣದಲ್ಲಿ ಆರೋಪಿಗಳೆಂದು ಗುರುತಿಸಿಕೊಂಡಿದ್ದ ಒಂಭತ್ತು ಪೊಲೀಸರಿಗೆ ನ್ಯಾಯಾಲಯ ಮರಣದಂಡನೆ ಶಿಕ್ಷೆ ವಿಧಿಸಿದೆ. ಈ ತೀರ್ಪು ಹಲವು ಕಾರಣಗಳಿಗೆ ಮಹತ್ವಪೂರ್ಣವಾದುದಾಗಿದೆ. ಇದು ದೇಶದೊಳಗಿರುವ ಪೊಲೀಸ್ ವೇಷದಲ್ಲಿರುವ ಕ್ರಿಮಿನಲ್ಗಳಿಗೆ ಎಚ್ಚರಿಕೆಯನ್ನು ನೀಡಿದೆ. ಕೈಯಲ್ಲಿರುವ ಕಾನೂನನ್ನು ದುರುಪಯೋಗಗೊಳಿಸಿ ಅದನ್ನು ಅಮಾಯಕರ ಮೇಲೆ ಬಳಸುವ ಪೊಲೀಸರ ಪ್ರವೃತ್ತಿಗೆ ಸಣ್ಣದೊಂದು ಕಡಿವಾಣ ಬಿದ್ದರೂ ಈ ತೀರ್ಪು ಸಾರ್ಥಕವಾಗುತ್ತದೆ. ಸಂತ್ರಸ್ತರಿಗೆ ನ್ಯಾಯ ದೊರಕಿದಂತಾಗುತ್ತದೆ. ಆರೋಪಿಗಳ ಆರೋಪ ಸಾಬೀತಾಗುವ ಮೊದಲೇ ಅವರಿಗೆ ಶಿಕ್ಷೆಯನ್ನು ಘೋಷಿಸುವ ಪೊಲೀಸರೂ ಈ ತೀರ್ಪಿನಿಂದ ಕಲಿಯಬೇಕಾದುದು ಬಹಳಷ್ಟಿದೆ. ತೂತ್ತುಕ್ಕುಡಿ ಪ್ರಕರಣದಲ್ಲಿ ಪೊಲೀಸರ ದೌರ್ಜನ್ಯಕ್ಕೆ ಬಲಿಯಾದ ತಂದೆ-ಮಗ ಯಾವುದೇ ಮಹದಾಪರಾಧವನ್ನು ಮಾಡಿರಲಿಲ್ಲ. 2020ರಲ್ಲಿ ಕೊರೋನ ಸಾಂಕ್ರಾಮಿಕ ಹಿನ್ನೆಲೆಯಲ್ಲಿ ವಿಧಿಸಲಾದ ಲಾಕ್ಡೌನ್ನ್ನು ಉಲ್ಲಂಘಿಸಿದ್ದೇ ಇವರು ಎಸಗಿದ ಅಪರಾಧವಾಗಿತ್ತು. ಸಾತ್ತಾನ್ಕ್ಕುಳಂನಲ್ಲಿ ತಮ್ಮ ಅಂಗಡಿಯನ್ನು ನಿಗದಿತ ಅವಧಿಯನ್ನು ಮೀರಿ ತೆರೆದಿಡುವ ಮೂಲಕ ಪಿ. ಜಯರಾಜ್ ಹಾಗೂ ಅವರ ಪುತ್ರ ಬೆನಿಕ್ಸ್ ಕೋವಿಡ್ ಲಾಕ್ಡೌನ್ನ್ನು ಉಲ್ಲಂಘಿಸಿದ್ದರು ಎನ್ನುವುದು ಪೊಲೀಸರ ಆರೋಪವಾಗಿತ್ತು. ಈ ಕಾರಣಕ್ಕಾಗಿ 2020 ಜೂನ್ 19ರಂದು ಪೊಲೀಸರು ಇವರನ್ನು ಬಂಧಿಸಿ ಲಾಕಪ್ನಲ್ಲಿ ಹಿಗ್ಗಾಮುಗ್ಗಾ ಥಳಿಸಿದ್ದರು. ಗಂಭೀರ ಗಾಯಗೊಂಡಿದ್ದ ಇಬ್ಬರೂ ಜೂ.22ರಂದು ಆಸ್ಪತ್ರೆಗೆ ದಾಖಲಾದ ಬೆನ್ನಿಗೇ ಕೊನೆಯುಸಿರೆಳೆದಿದ್ದರು. ಈ ಪ್ರಕರಣ ತಮಿಳುನಾಡಿನಲ್ಲಿ ಮಾತ್ರವಲ್ಲ, ಇಡೀ ದೇಶದಲ್ಲೇ ಚರ್ಚೆಯ ವಿಷಯವಾಯಿತು. ಈ ಪ್ರಕರಣದ ಜೊತೆಗೇ ಕೊರೋನವನ್ನು ನಿರ್ವಹಿಸುವ ಅಧಿಕಾರವನ್ನು ಕೇಂದ್ರ ಸರಕಾರ ಪೊಲೀಸರಿಗೆ ನೀಡಿರುವುದನ್ನು ಜನರು ಪ್ರಶ್ನಿಸತೊಡಗಿದರು. ಇಡೀ ಪ್ರಕರಣದಲ್ಲಿ ಒಂದು ಸಮಾಧಾನಕರ ಅಂಶವೆಂದರೆ, ಒಬ್ಬ ಮಹಿಳಾ ಪೊಲೀಸ್ ಸಿಬ್ಬಂದಿಯ ಸಾಕ್ಷ್ಯವೇ ಆರೋಪಿಗಳಿಗೆ ಶಿಕ್ಷೆಯಾಗುವುದಕ್ಕೆ ಕಾರಣವಾಯಿತು ಎನ್ನುವುದು. ಕೊರೋನಾ ಕಾಲದ ‘ಲಾಕ್ಡೌನ್’ ಇಡೀ ದೇಶದಲ್ಲಿ ಅಘೋಷಿತ ತುರ್ತುಪರಿಸ್ಥಿತಿಯ ವಾತಾವರಣ ನಿರ್ಮಾಣ ಮಾಡಿತ್ತು. ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಪೊಲೀಸರಿಂದ ಸಂಭವಿಸಿದ ಕಾನೂನಿನ ದುರ್ಬಳಕೆ ಲಾಕ್ಡೌನ್ ಸಂದರ್ಭದಲ್ಲೂ ನಡೆಯಿತು. ಒಂದೆಡೆ ಕೊರೋನ ಸಾಂಕ್ರಾಮಿಕ ರೋಗ. ಅವಶ್ಯ ವಸ್ತುಗಳನ್ನು ಕೊಂಡುಕೊಳ್ಳುವುದಕ್ಕೂ ಬೀದಿಗಿಳಿಯಲು ಜನಸಾಮಾನ್ಯರು ಹೆದರುವಂತಹ ಸನ್ನಿವೇಶ. ನಗರದಲ್ಲಿ ವಲಸೆ ಕಾರ್ಮಿಕರಂತೂ ನಿರುದ್ಯೋಗದಿಂದ ತತ್ತರಿಸಿ, ಹಸಿವಿನಿಂದ ಕಂಗೆಟ್ಟ ಕಾಲ. ತಮ್ಮ ಊರುಗಳಿಗೆ ಮರಳುವುದೂ ಅವರಿಗೆ ಕಷ್ಟವಾಯಿತು. ಇಂತಹ ಸಂದರ್ಭದಲ್ಲಿ ಬೀದಿಯಲ್ಲಿ ಮನುಷ್ಯರನ್ನು ಕಂಡರೆ ಪೊಲೀಸರು ಕ್ರಿಮಿನಲ್ಗಳನ್ನು ಕಂಡಂತಾಡುತ್ತಿದ್ದರು. ಪೊಲೀಸರ ಲಾಠಿಗಳಿಗೆ ಹೆದರುತ್ತಲೇ ಕಾಲ ಕಳೆಯುವ ಸನ್ನಿವೇಶ ನಿರ್ಮಾಣವಾಗಿತ್ತು. ಪೊಲೀಸ್ ಲಾಠಿಗಳಿಂದ ಕೊರೋನ ವೈರಸನ್ನು ಎದುರಿಸಿದ್ದ ಏಕೈಕ ದೇಶ ನಮ್ಮದು. ರಾಜಕಾರಣಿಗಳ ರಾಜಕೀಯ ರ್ಯಾಲಿಗಳು, ಧಾರ್ಮಿಕ ಕಾರ್ಯಕ್ರಮಗಳ ಸಂದರ್ಭದಲ್ಲಿ ಶಕ್ತಿಹೀನವಾಗುತ್ತಿದ್ದ ಈ ಲಾಠಿಗಳಿಗೆ ಬಡ ಕಾರ್ಮಿಕರು, ಸಣ್ಣ ಪುಟ್ಟ ದಿನಸಿ ಅಂಗಡಿಗಳ ಮಾಲಕರನ್ನು ಕಂಡ ಕೂಡಲೇ ಶಕ್ತಿ ಬಂದು ಬಿಡುತ್ತಿತ್ತು. ತೂತ್ತುಕ್ಕುಡಿ ದುರಂತ, ಲಾಕ್ಡೌನಲ್ಲಿ ದೇಶಾದ್ಯಂತ ಕೆಲವು ಪೊಲೀಸರು ಪ್ರದರ್ಶಿಸಿದ ಕ್ರೌರ್ಯಗಳ ಸ್ಯಾಂಪಲ್ ಆಗಿತ್ತು. ರಾತ್ರಿಯಿಡೀ ಈ ಇಬ್ಬರು ಅಮಾಯಕರ ಮೇಲೆ ಬರ್ಬರವಾಗಿ ದೌರ್ಜನ್ಯವೆಸಗಿದ ಪೊಲೀಸ್ ಸಿಬ್ಬಂದಿ ಯಾವುದೇ ಸೈಕೋಪಾತ್ಗಳಿಗಿಂತ ಕಡಿಮೆಯಿರಲಿಲ್ಲ. ಕಾನೂನನ್ನು ಕೈಗೆತ್ತಿಕೊಳ್ಳುವ ಕಾರಣಕ್ಕಾಗಿ ಭಾರತದ ಪೊಲೀಸ್ ವ್ಯವಸ್ಥೆ ಜಗತ್ತಿನಲ್ಲೇ ಕುಖ್ಯಾತಿಯನ್ನು ಪಡೆದಿದೆ. ಲಾಕಪ್ ಡೆತ್ ಭಾರತಕ್ಕೆ ಹೊಸತೇನೂ ಅಲ್ಲ. ಶಂಕಿತ ಭಯೋತ್ಪಾದಕರೆಂದು ಒಂದು ನಿರ್ದಿಷ್ಟ ಸಮುದಾಯದ ಜನರನ್ನು ವಿಚಾರಣೆಗೆಂದು ಠಾಣೆಗೆ ಕರೆಸಿ, ಬಳಿಕ ಅವರು ಅಸ್ವಸ್ಥರಾಗಿ ಆಸ್ಪತ್ರೆಗಳಲ್ಲಿ ಸಾವನ್ನಪ್ಪುವ ಪ್ರಕರಣಗಳು ಮಾಧ್ಯಮಗಳಲ್ಲಿ ಪದೇ ಪದೇ ವರದಿಯಾಗುತ್ತಿರುತ್ತವೆ. 2025-26ರ ಒಂದು ವರ್ಷದಲ್ಲಿ ಭಾರತದಲ್ಲಿ ಒಟ್ಟು 170 ಪೊಲೀಸ್ ಕಸ್ಟಡಿ ಸಾವುಗಳು ವರದಿಯಾಗಿವೆ. ಆದರೆ ಸಾವುಗಳ ಬಗ್ಗೆ ಬಹುತೇಕ ಪ್ರಕರಣಗಳನ್ನು ಪೊಲೀಸ್ ಇಲಾಖೆ ತನಿಖೆಯಾಗದಂತೆ ನೋಡಿಕೊಂಡಿದೆ. 2025ರ ಅಂಕಿಅಂಶಗಳನ್ನು ನೋಡಿದರೆ, ಬಿಹಾರದಲ್ಲಿ ಅತಿ ಹೆಚ್ಚು ಲಾಕಪ್ಡೆತ್ಗಳು ಸಂಭವಿಸಿವೆ. ಇದರ ಬಳಿಕ ರಾಜಸ್ಥಾನ, ಮೂರನೇ ಸ್ಥಾನವನ್ನು ಉತ್ತರ ಪ್ರದೇಶ, ಗುಜರಾತ್, ಮಹಾರಾಷ್ಟ್ರ ಮತ್ತು ಪಂಜಾಬ್ ಹಂಚಿಕೊಂಡಿವೆ. 2020ರಿಂದ 2022ರ ಅವಧಿಯಲ್ಲಿ ಭಾರತದಲ್ಲಿ ಒಟ್ಟು 4,484 ಕಸ್ಟಡಿ ಸಾವುಗಳು ದಾಖಲಾಗಿವೆ. 2016ರಿಂದ 2022ರ ಅವಧಿಯಲ್ಲಿ ಈ ಸಂಖ್ಯೆ 11,656 ಆಗಿತ್ತು. ಈ ಕಸ್ಟಡಿ ಸಾವುಗಳಿಗೆ ಸಂಬಂಧಿಸಿ ಪೊಲೀಸರಿಗೆ ಶಿಕ್ಷೆಯಾದದ್ದು ತೀರಾ ಕಡಿಮೆ. ಕಳೆದ ಐದು ವರ್ಷಗಳಲ್ಲಿ ಕೇವಲ ಒಂದು ಪ್ರಕರಣದಲ್ಲಿ ಮಾತ್ರ ಶಿಸ್ತು ಕ್ರಮ ಜರುಗಿಸಲಾಗಿದೆ ಎಂದು ವರದಿ ಹೇಳುತ್ತದೆ. ಪೊಲೀಸ್ ಅಧಿಕಾರಿಗಳ ಕೈಯಲ್ಲಿ ಎಡವಟ್ಟುಗಳು ಸಂಭವಿಸಿದಾಗ ಅವರನ್ನು ರಕ್ಷಿಸಲು ಇಡೀ ಪೊಲೀಸ್ ಇಲಾಖೆಯೇ ಒಂದಾಗುವುದರಿಂದ ಆರೋಪಿಗಳ ಮೇಲೆ ಕ್ರಮ ತೆಗೆದುಕೊಳ್ಳುವುದು ಕಷ್ಟವಾಗುತ್ತದೆ. ಪೊಲೀಸರು ನೀಡಿದ ಸಾಕ್ಷ್ಯಗಳ ಆಧಾರದಲ್ಲಿ ನ್ಯಾಯಾಲಯ ತೀರ್ಪು ನೀಡಬೇಕಾದುದರಿಂದ ಆರೋಪಿಗಳು ನುಣುಚಿಕೊಳ್ಳುವುದು ಸುಲಭವಾಗುತ್ತದೆ. ಸಿಬಿಐಯಂತಹ ಸಂಸ್ಥೆಗಳು ತನಿಖೆ ನಡೆಸಿದಾಗ ಮಾತ್ರ ಕೆಲವೊಮ್ಮೆ ಸಂತ್ರಸ್ತರಿಗೆ ನ್ಯಾಯ ಸಿಗುತ್ತದೆ. ವಿಪರ್ಯಾಸವೆಂದರೆ ಅತಿ ಹೆಚ್ಚು ಲಾಕಪ್ಡೆತ್ಗಳು ನಡೆಯುತ್ತಿರುವ ರಾಜ್ಯಗಳಾಗಿ ಗುರುತಿಸಲ್ಪಟ್ಟಿರುವ ಬಿಹಾರ, ರಾಜಸ್ಥಾನ, ಉತ್ತರ ಪ್ರದೇಶಗಳಲ್ಲಿ ಅತಿ ಹೆಚ್ಚು ಕ್ರಿಮಿನಲ್ಗಳಿಗಾಗಿ ಗುರುತಿಸಲ್ಪಡುತ್ತಿವೆ. ಇತ್ತೀಚಿನ ದಿನಗಳಲ್ಲಿ, ಈ ಲಾಕಪ್ ಡೆತ್ಗಳು ಬೇರೆ ಬೇರೆ ರೂಪಗಳನ್ನು ಪಡೆಯುತ್ತಿವೆ. ನ್ಯಾಯಾಲಯ ಆರೋಪಿಗಳನ್ನು ಅಪರಾಧಿಗಳೆಂದು ಘೋಷಿಸುವ ಮುನ್ನವೇ ಪೊಲೀಸರು ಸ್ಥಳೀಯ ಜಿಲ್ಲಾಡಳಿತದ ಸಹಕಾರದಿಂದ ಆರೋಪಿಗಳ ನಿವಾಸಗಳ ಮೇಲೆ ಬುಲ್ಡೋಜರ್ ಹರಿಸುವುದು ಸಂವಿಧಾನದ ಲಾಕಪ್ ಡೆತ್ ಎಂದೇ ಕರೆಯಬೇಕಾಗುತ್ತದೆ. ನಾಳೆ ಆರೋಪಿ ನಿರಪರಾಧಿಯೆಂದು ನ್ಯಾಯಾಲಯ ಘೋಷಿಸಿದರೆ ಈ ಬುಲ್ಡೋಜರ್ ಕಾರ್ಯಾಚರಣೆ ಎಸಗಿದ ಪೊಲೀಸರನ್ನು ಶಿಕ್ಷಿಸುವ ವ್ಯವಸ್ಥೆಯೇ ನಮ್ಮಲ್ಲಿಲ್ಲ. ಉತ್ತರ ಭಾರತದಲ್ಲಿ ಇತ್ತೀಚೆಗೆ ಹೆಚ್ಚುತ್ತಿರುವ ಪೊಲೀಸ್ ಎನ್ಕೌಂಟರ್ಗಳು ಲಾಕಪ್ ಡೆತ್ನ ಇನ್ನೊಂದು ಮುಖವೇ ಆಗಿದೆ. ಉತ್ತರ ಪ್ರದೇಶ ಇಂತಹ ಎನ್ಕೌಂಟರ್ಗಳಿಗೆ ಕುಖ್ಯಾತವಾಗಿದೆ. ಅಷ್ಟೇ ಅಲ್ಲ, ನ್ಯಾಯಾಲಯ ಕೆಲವೊಂದು ನಿರ್ದಿಷ್ಟ ಪ್ರಕರಣಗಳಲ್ಲಿ ಆರೋಪಿಗಳಿಗೆ ಜಾಮೀನು ನೀಡಲು ಸತಾಯಿಸುತ್ತಿರುವುದು ಅನೇಕ ಸಂದರ್ಭದಲ್ಲಿ ವಿಚಾರಣಾಧೀನ ಕೈದಿಗಳ ಮೇಲೆ ದುಷ್ಪರಿಣಾಮವನ್ನು ಬೀರುತ್ತದೆ. ಆದಿವಾಸಿಗಳ ಹಕ್ಕುಗಳಿಗಾಗಿ ಹೋರಾಡಿದ್ದ ಫಾದರ್ ಸ್ಟಾನ್ಸ್ ಸ್ವಾಮಿಯನ್ನು ದೇಶದ್ರೋಹದ ಆರೋಪದಲ್ಲಿ ಬಂಧಿಸಿ, ಅವರು ಜೈಲಿನಲ್ಲಿ ತೀವ್ರ ಅನಾರೋಗ್ಯಕ್ಕೀಡಾದಾಗಲೂ ಜಾಮೀನು ಒದಗಿಸದ, ಪಾರ್ಕಿನ್ಸನ್ ಕಾಯಿಲೆಯಿಂದ ನರಳುತ್ತಿದ್ದರೂ ಅವರಿಗೆ ಸೂಕ್ತ ಆರೋಗ್ಯ ಸೌಲಭ್ಯವನ್ನು ಒದಗಿಸದ ನಮ್ಮ ಪೊಲೀಸ್ ಸಿಬ್ಬಂದಿ ಮತ್ತು ನ್ಯಾಯ ವ್ಯವಸ್ಥೆ ಯೇ ಅಂತಿಮವಾಗಿ ಅವರ ಸಾವಿಗೆ ಕಾರಣವಾಯಿತು. ಇನ್ನೂ ವಿಚಾರಣಾಧೀನ ಕೈದಿಯಾಗಿದ್ದ ಅವರ ಸಾವಿನ ನೈತಿಕ ಹೊಣೆಯನ್ನು ಈವರೆಗೆ ಯಾರೂ ಹೊತ್ತಿಲ್ಲ. ಸಂವಿಧಾನದ ಈ ಬರ್ಬರ ಕಗ್ಗೊಲೆಯಲ್ಲಿ ನ್ಯಾಯಾಲಯವೂ ಪರೋಕ್ಷವಾಗಿ ಶಾಮೀಲಾಗಿರುವಾಗ ಯಾರ ಬಳಿ ನ್ಯಾಯವನ್ನು ಅಪೇಕ್ಷಿಸಬೇಕು ಎನ್ನುವುದು ತಿಳಿಯದೆ ನ್ಯಾಯ ದೇವತೆ ಕಂಗಾಳಾಗಿದ್ದಾಳೆ. ದೇಶದಲ್ಲಿ ಸಂವಿಧಾನವೇ ಲಾಕಪ್ಡೆತ್ಗೆ ಬಲಿಯಾಗುತ್ತಿರುವಾಗ ತೂತ್ತುಕ್ಕುಡಿ ತೀರ್ಪು ಪೊಲೀಸರ ವರ್ತನೆಯಲ್ಲಿ ಬದಲಾವಣೆಯನ್ನು ತರಬಹುದು ಎಂದು ನಿರೀಕ್ಷಿಸುವುದು ಸಾಧ್ಯವೆ?
US-Iran ceasefire: ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ ಶೇ. 20ರಷ್ಟು ದಾಖಲೆಯ ಕುಸಿತ
ನವದೆಹಲಿ / ವಾಷಿಂಗ್ಟನ್: ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಅನಿರೀಕ್ಷಿತ ಹಾಗೂ ಐತಿಹಾಸಿಕ ಬೆಳವಣಿಗೆಯೊಂದು ನಡೆದಿದೆ. ಅಮೆರಿಕ ಹಾಗೂ ಇರಾನ್ ನಡುವೆ ದಿಢೀರ್ ಕದನ ವಿರಾಮ ಘೋಷಣೆಯಾದ ಹಿನ್ನೆಲೆಯಲ್ಲಿ, ಕಚ್ಚಾ ತೈಲ ಬೆಲೆಯಲ್ಲಿ ಬರೋಬ್ಬರಿ ಶೇಕಡಾ 20ರಷ್ಟು ಭಾರೀ ಕುಸಿತ ಉಂಟಾಗಿದೆ. ಮಂಗಳವಾರದ ವಹಿವಾಟಿನ ಆರಂಭದಲ್ಲಿ ಪ್ರತಿ ಬ್ಯಾರೆಲ್ಗೆ 117.63 ಡಾಲರ್ನಷ್ಟಿದ್ದ ತೈಲ ಬೆಲೆ, ಕದನ ವಿರಾಮದ ಘೋಷಣೆಯಾಗುತ್ತಿದ್ದಂತೆ
Iran 10 Demands: ಕದನ ವಿರಾಮಕ್ಕೆ ಇರಾನ್ ವಿಧಿಸಿರುವ 10 ಷರತ್ತುಗಳ ವಿವರ ಇಲ್ಲಿದೆ, ನ್ಯೂಕ್ಲಿಯರ್ ಬೇಡ ಎಂದಿದ್ಯಾಕೆ
Iran 10 Demands: ಅಮೆರಿಕ, ಇಸ್ರೇಲ್ Vs ಇರಾನ್ಗಳ ನಡುವೆ ನಡೆಯುತ್ತಿದ್ದ ಯುದ್ಧಕ್ಕೆ ಸಂಬಂಧಿಸಿದಂತೆ ಇದೀಗ ತಾತ್ಕಾಲಿಕ ಕದನ ವಿರಾಮ ಘೋಷಣೆ ಮಾಡಲಾಗಿದೆ. ಪಾಕಿಸ್ತಾನದ ಮಧ್ಯಪ್ರವೇಶದಿಂದಾಗಿ ಈ ಕದನ ವಿರಾಮ ಘೋಷಣೆ ಆಗಿರುವುದಾಗಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಇರಾನ್ನ ಸಹ ದೃಢಪಡಿಸಿದೆ. ಇದೀಗ ಇರಾನ್ 10 ಷರತ್ತುಗಳನ್ನು ವಿಧಿಸಿದೆ. ಆ ಷರುತ್ತುಗಳೇನು ಇದಕ್ಕೆ ಅಮೆರಿಕದ
ವಿಜಯಪುರ: ಸರಕಾರಿ ಕಚೇರಿಗಳ ವೇಳೆ ಬದಲಾದರೂ ಅಧಿಕಾರಿಗಳಿಗೆ ತಪ್ಪದ ಬಿಸಿಲ ಬೇಗೆ!
ತೀವ್ರವಾದ ಬಿಸಿಲಿನ ಬೇಗೆಯಿಂದಾಗಿ ವಿಜಯಪುರ ಜಿಲ್ಲೆಯಲ್ಲಿ ಸರ್ಕಾರಿ ಕಚೇರಿಗಳ ಕೆಲಸದ ಅವಧಿಯನ್ನು ಬದಲಾಯಿಸಲಾಗಿದ್ದು, ಇದು ದೂರದ ಊರುಗಳಿಂದ ಪ್ರಯಾಣಿಸುವ ಅಧಿಕಾರಿಗಳಿಗೆ ಸಂಕಷ್ಟ ತಂದೊಡ್ಡಿದೆ. ಬಸವನಬಾಗೇವಾಡಿಯಂತಹ ತಾಲೂಕು ಕೇಂದ್ರಗಳಲ್ಲಿ ಕಾರ್ಯನಿರ್ವಹಿಸುತ್ತಾ, ವಿಜಯಪುರದಂತಹ ಜಿಲ್ಲಾ ಕೇಂದ್ರಗಳಲ್ಲಿ ವಾಸವಿರುವ ಸಿಬ್ಬಂದಿಗಳು ಮಧ್ಯಾಹ್ನ 1:30ಕ್ಕೆ ಕೆಲಸ ಮುಗಿಸಿ ಸುಡುವ ಬಿಸಿಲಿನಲ್ಲಿಯೇ ಮನೆಗೆ ಮರಳಬೇಕಾದ ಅನಿವಾರ್ಯತೆ ಎದುರಾಗಿದೆ.
ಗಲ್ಫ್ ಬಿಟ್ಟು ಅಮೆರಿಕ ತೊಲಗಲೇಬೇಕು; ಪಟ್ಟು ಬಿಡದ ಇರಾನ್
ಎ. 10ರಿಂದ ಪಾಕಿಸ್ತಾನದಲ್ಲಿ ಕದನ ವಿರಾಮ ಮಾತುಕತೆ; ಇರಾನ್ ಹೇಳಿದ 10 ಅಂಶಗಳ ಯೋಜನೆಯಲ್ಲೇನಿದೆ?
ಮೈಸೂರು : ನಿಮ್ಹಾನ್ಸ್ ಕಾಮಗಾರಿಗೆ ತಡೆ, ರೈತರ ಆಕ್ರೋಶ
ಮೈಸೂರು ತಾಲೂಕಿನ ಗುಡುಮಾದನಹಳ್ಳಿಯ ಸುಮಾರು 20 ಎಕರೆ ಫಲವತ್ತಾದ ಜಮೀನಿನಲ್ಲಿ ನಿಮ್ಹಾನ್ಸ್ ಘಟಕ ಸ್ಥಾಪಿಸಲು ಜಿಲ್ಲಾಡಳಿತ ಮುಂದಾಗಿರುವುದಕ್ಕೆ ಸ್ಥಳೀಯ ರೈತರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಮಂಗಳವಾರ ಮುಂಜಾನೆ ಕಾಮಗಾರಿ ಆರಂಭಿಸಲು ಬಂದಿದ್ದ ಜೆಸಿಬಿ ಯಂತ್ರಗಳನ್ನು ಕರ್ನಾಟಕ ರಾಜ್ಯ ರೈತ ಸಂಘದ ಮುಖಂಡರು ಹಾಗೂ ರೈತರು ತಡೆದು ವಾಪಸ್ ಕಳುಹಿಸುವ ಮೂಲಕ ಪ್ರತಿಭಟನೆ ನಡೆಸಿದರು.
ಪ್ರಚಾರದಲ್ಲಿ ರಾಹುಲ್ ಅನುಪಸ್ಥಿತಿ: ತಮಿಳುನಾಡು ಡಿಎಂಕೆ- ಕಾಂಗ್ರೆಸ್ ಮೈತ್ರಿಯಲ್ಲಿ ಒಡಕು?
ಚೆನ್ನೈ: ಪ್ರಧಾನಿ ನರೇಂದ್ರ ಮೋದಿಯವರು ಕಳೆದ ಎರಡು ತಿಂಗಳಲ್ಲಿ ತಮಿಳುನಾಡಿಗೆ ಭೇಟಿ ನೀಡಿ ಬಿಜೆಪಿ ಹಾಗೂ ಮಿತ್ರಪಕ್ಷಗಳ ಪರ ಪ್ರಚಾರ ನಡೆಸಿದ್ದಾರೆ; ಈ ತಿಂಗಳ 15ರಂದು ಮತ್ತೆ ಭೇಟಿ ನೀಡಲಿದ್ದು, ನಾಗರಕೋಯಿಲ್ ಕ್ಷೇತ್ರದ ಎನ್ಡಿಎ ಅಭ್ಯರ್ಥಿ ಪರ ಮತ ಯಾಚನೆಗೆ ವೇದಿಕೆ ಸಜ್ಜಾಗಿದೆ. ಇದಕ್ಕೆ ವಿರುದ್ಧವಾಗಿ ರಾಹುಲ್ ಗಾಂಧಿ ಒಂದು ಬಾರಿ ಕೂಡಾ ರಾಜ್ಯಕ್ಕೆ ಭೇಟಿ ನೀಡದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ರಾಹುಲ್ ಗಾಂಧಿ ಅನುಪಸ್ಥಿತಿಯಿಂದಾಗಿ ಕಾಂಗ್ರೆಸ್-ಡಿಎಂಕೆ ಮೈತ್ರಿಕೂಟದಲ್ಲಿ ಎಲ್ಲವೂ ಸರಿ ಇಲ್ಲ ಎನ್ನುವ ಅನುಮಾನ ದಟ್ಟವಾಗಿ ಮೂಡಿದೆ. 2021ರ ಜನವರಿಯಲ್ಲಿ ರಾಹುಲ್ ಗಾಂಧಿಯವರು ಮೂರು ದಿನಗಳ ಪ್ರವಾಸದೊಂದಿಗೆ ಮೈತ್ರಿಕೂಟದ ಪ್ರಚಾರ ಕಾರ್ಯಕ್ಕೆ ಚಾಲನೆ ನೀಡಿದ್ದನ್ನು ರಾಜಕೀಯ ವಿಶ್ಲೇಷಕರು ಉಲ್ಲೇಖಿಸುತ್ತಾರೆ. ರಾಹುಲ್ ಅವರ ಪ್ರಚಾರ ವೇಳಾಪಟ್ಟಿ ಇನ್ನಷ್ಟೇ ಸಿದ್ಧವಾಗಬೇಕಿದೆ ಎಂದು ಕಾಂಗ್ರೆಸ್ ಪಕ್ಷದ ರಾಜ್ಯ ಮುಖಂಡರು ಹೇಳುತ್ತಾರೆ. ಆದರೆ ತಾತ್ಕಾಲಿಕ ವೇಳಾಪಟ್ಟಿಯ ಪ್ರಕಾರ, ಅಸ್ಸಾಂ, ಕೇರಳ ಹಾಗೂ ಪುದುಚೇರಿಯಲ್ಲಿ ಮೊದಲ ಹಂತದ ಚುನಾವಣೆ ನಡೆದ ಬಳಿಕ ತಮಿಳುನಾಡಿಗೆ ಭೇಟಿ ನೀಡಲಿದ್ದಾರೆ. ಚುನಾವಣಾ ಪ್ರಚಾರ ಮುಕ್ತಾಯಕ್ಕೆ ಒಂದು ದಿನ ಮೊದಲು ಅಂದರೆ ಸೋಮವಾರ ಪುದುಚೇರಿಗೆ ರಾಹುಲ್ ಭೇಟಿ ನೀಡಿದ್ದಾರೆ. ಕಾಂಗ್ರೆಸ್ ಹಾಗೂ ಮಿತ್ರಪಕ್ಷಗಳ ಅಭ್ಯರ್ಥಿಗಳ ಪರ ಮತ ಯಾಚಿಸಿದ್ದಾರೆ. ಆದರೆ ಜಾಣ್ಮೆಯಿಂದ ಮಿತ್ರಪಕ್ಷವಾದ ಡಿಎಂಕೆ ಅಥವಾ ಮುಖ್ಯಸ್ಥ ಎಂ.ಕೆ.ಸ್ವಾಲಿನ್ ಅವರ ಹೆಸರನ್ನು ಎಲ್ಲೂ ಉಲ್ಲೇಖಿಸಿಲ್ಲ. ಸ್ಟಾಲಿನ್ ಕೂಡಾ ಅದೇ ದಿನ ಪುದುಚೇರಿಗೆ ಭೇಟಿ ನೀಡಿದ್ದರೂ, ಉಭಯ ಮುಖಂಡರು ಒಂದೆಡೆ ಪ್ರಚಾರಸಭೆಯಲ್ಲಿ ಪಾಲ್ಗೊಳ್ಳದ ರೀತಿಯಲ್ಲಿ ಚುನಾವಣಾ ಪ್ರಚಾರ ವ್ಯವಸ್ಥೆಯಾಗಿತ್ತು. ಬೆಳಿಗ್ಗೆ ರಾಹುಲ್ ಭೇಟಿ ನೀಡಿದರೆ, ಮಧ್ಯಾಹ್ನದ ಬಳಿಕ ಸ್ಟಾಲಿನ್ ಪ್ರಚಾರ ಕೈಗೊಂಡಿದ್ದರು. ರಾಹುಲ್ ಎಂದೂ ಸ್ಟಾಲಿನ್ ಹೆಸರು ಉಲ್ಲೇಖಿಸಿಲ್ಲ ಎಂದು ಡಿಎಂಕೆ ಮುಖಂಡರು ಹೇಳಿದ್ದಾರೆ. ಅದೇ ವೇಳೆ ಸ್ಟಾಲಿನ್ ಕೂಡಾ ಕಾಂಗ್ರೆಸ್ ಮುಖಂಡರ ಹೆಸರು ಪ್ರಸ್ತಾಪಿಸಿಲ್ಲ ಎಂದು ರಾಜಕೀಯ ವಿಶ್ಲೇಷಕರು ಸ್ಪಷ್ಟಪಡಿಸಿದ್ದಾರೆ. ಸ್ಥಾನ ಹೊಂದಾಣಿಕೆ ಮಾತುಕತೆ ವೇಳೆ ಉಭಯ ಪಕ್ಷಗಳ ಮುಖಂಡರ ನಡುವೆ ನಡೆದ ಸಂಘರ್ಷ ಇದಕ್ಕೆ ಕಾರಣ ಎಂದು ಹೇಳಲಾಗಿದೆ.
Iran-US-Israel War: ಸುದ್ದಿ ವಾಹಿನಿಗಳ TRP ಸ್ಥಗಿತ ಆದೇಶವನ್ನು ಮತ್ತೆ 4 ವಾರ ವಿಸ್ತರಿಸಿದ ಕೇಂದ್ರ
ನವದೆಹಲಿ: ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಯುದ್ಧದ ಕುರಿತು ಸುದ್ದಿ ವಾಹಿನಿಗಳು ಅತಿಯಾದ ರೋಚಕತೆ ಹಾಗೂ ಊಹಾಪೋಹಗಳಿಂದ ಕೂಡಿದ ವರದಿಗಳನ್ನು ಪ್ರಸಾರ ಮಾಡುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯವು, ಸುದ್ದಿ ವಾಹಿನಿಗಳ ಟೆಲಿವಿಷನ್ ರೇಟಿಂಗ್ ಪಾಯಿಂಟ್ಸ್ (TRP) ಪ್ರಕಟಣೆಯನ್ನು ಸ್ಥಗಿತಗೊಳಿಸುವ ಆದೇಶವನ್ನು ಇನ್ನೂ ನಾಲ್ಕು ವಾರಗಳ ಕಾಲ ವಿಸ್ತರಿಸಿದೆ. ಸಾರ್ವಜನಿಕ ಹಿತಾಸಕ್ತಿಯ ದೃಷ್ಟಿಯಿಂದ ಮಾರ್ಚ್
ಮುಂಬೈ ಇಂಡಿಯನ್ಸ್ ವಿರುದ್ಧ ಭರ್ಜರಿ ಜಯದೊಂದಿಗೆ ಅಗ್ರಸ್ಥಾನಕ್ಕೇರಿದ ಆರ್ಆರ್
ಗುವಾಹತಿ: ಮಳೆಬಾಧಿತ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡದ ವಿರುದ್ಧ 27 ರನ್ ಗಳಿಂದ ಗೆದ್ದ ರಾಜಸ್ಥಾನ ರಾಯಲ್ಸ್ ತಂಡ ಪ್ರಸಕ್ತ ಐಪಿಎಲ್ ಟೂರ್ನಿಯ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ಮಂಗಳವಾರ ನಡೆದ 11 ಓವರ್ ಗಳ ಪಂದ್ಯದಲ್ಲಿ ಆರ್ಆರ್ 27 ರನ್ ಅಂತರದ ಜಯ ಸಾಧಿಸಿತು. ಕೇವಲ 32 ಎಸೆತಗಳಲ್ಲಿ 10 ಬೌಂಡರಿ ಹಾಗೂ ನಾಲ್ಕು ಸಿಕ್ಸರ್ ಸಹಿತ 77 ರನ್ ಸಿಡಿಸಿದ ಯಶಸ್ವಿ ಜೈಸ್ವಾಲ್ ವಿಜಯದ ರೂವಾರಿ ಎನಿಸಿದರು. ಕೇವಲ 14 ಎಸೆತಗಳಲ್ಲಿ 39 ರನ್ ಸಿಡಿಸಿದ ಹದಿಹರೆಯದ ತಾರೆ ವೈಭವ್ ಸೂರ್ಯವಂಶಿ ಜತೆಗೆ ಜೈಸ್ವಾಲ್ ಮೊದಲ ವಿಕೆಟ್ ಗೆ ಮಿಂಚಿನ 80 ರನ್ ಸೇರಿಸಿದರು. ಈ ಭದ್ರಬುನಾದಿಯೊಂದಿಗೆ ಆರ್ಆರ್ ತಂಡ ನಿಗದಿತ 11 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 150 ರನ್ ಗಳ ಬೃಹತ್ ಮೊತ್ತ ಕಲೆಹಾಕಿತು. ಮಳೆಯಿಂದಾಗಿ ಪಂದ್ಯ ಎರಡೂವರೆ ಗಂಟೆಯಷ್ಟು ತಡವಾಗಿ ಆರಂಭವಾಯಿತು. ಬೃಹತ್ ಮೊತ್ತವನ್ನು ಬೆನ್ನಟ್ಟಿದ ಮುಂಬೈ ಇಂಡಿಯನ್ಸ್ ಮೊದಲ ಐದು ಓವರ್ ಗಳಲ್ಲೇ ಪತನ ಕಂಡು ಕೇವಲ 5 ವಿಕೆಟ್ ನಷ್ಟಕ್ಕೆ 48 ರನ್ ಗಳಿಸಲು ಸಾಧ್ಯವಾಯಿತು. ರಿಯಾನ್ ರಿಕೆಲ್ಟನ್, ರೋಹಿತ್ ಶರ್ಮಾ, ಸೂರ್ಯಕುಮಾರ್ ಯಾದವ್ ಮತ್ತು ಹಾರ್ದಿಕ್ ಪಾಂಡ್ಯ ಒಂದಂಕಿ ದಾಟಲು ವಿಫಲರಾದರು. ದ್ವಿತೀಯಾರ್ಧದಲ್ಲಿ ಸ್ವಲ್ಪ ಪ್ರತಿರೋಧ ಕಂಡುಬಂದರೂ ನಿಗದಿತ ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 123 ರನ್ ಗಳಿಸಲಷ್ಟೇ ಸಾಧ್ಯವಾಯಿತು. ಸತತ ಮೂರು ಗೆಲುವಿನೊಂದಿಗೆ ಆರ್ಆರ್ ತಂಡ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿತು. ಸೋಮವಾರ ಪಂಜಾಬ್ ಮತ್ತು ಕೊಲ್ಕತ್ತಾ ನಡುವಿನ ಪಂದ್ಯ ಮಳೆಗೆ ಆಹುತಿಯಾಗಿದ್ದರಿಂದ ಮತ್ತೊಂದು ಅಜೇಯ ತಂಡವಾದ ಪಂಜಾಬ್ 5 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದೆ. ನಿವ್ವಳ ರನ್ರೇಟ್ ನಲ್ಲೂ ರಾಜಸ್ಥಾನ (+2.403) ಇತರ ತಂಡಗಳಿಂದ ಮುಂದಿದೆ. ಆಡಿದ ಎರಡೂ ಪಂದ್ಯಗಳನ್ನು ಗೆದ್ದು ತಲಾ ನಾಲ್ಕು ಅಂಕಗಳನ್ನು ಗಳಿಸಿದ ಆರ್ಸಿಬಿ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ಕ್ರಮವಾಗಿ ಮೂರು ಹಾಗೂ ನಾಲ್ಕನೇ ಸ್ಥಾನಗಳಲ್ಲಿವೆ.
ಅನಿವಾರ್ಯವಾಗಿ ಕದನ ವಿರಾಮ ಒಪ್ಪಿಕೊಂಡ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್: ವರದಿ
ವಾಷಿಂಗ್ಟನ್: ಇರಾನ್ ಜೊತೆಗಿನ ಕದನ ವಿರಾಮ ಒಪ್ಪಂದವನ್ನು ಒಪ್ಪಿಕೊಳ್ಳಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಬೇರೆ ಉತ್ತಮ ಆಯ್ಕೆಗಳು ಇರಲಿಲ್ಲ ಎಂದು ವಿದೇಶಾಂಗ ನೀತಿ ತಜ್ಞರು ವಿಶ್ಲೇಷಿಸಿದ್ದಾರೆ ಎಂದು Aljazeera ವರದಿ ಮಾಡಿದೆ. Aljazeeraಗೆ ನೀಡಿದ ಸಂದರ್ಶನದಲ್ಲಿ ಕ್ವಿನ್ಸಿ ಇನ್ಸ್ಟಿಟ್ಯೂಟ್ ನ ಟ್ರಿಟಾ ಪಾರ್ಸಿ ಅವರು, ಇರಾನ್ ವಿರುದ್ಧ ಅಮೆರಿಕ–ಇಸ್ರೇಲ್ ವಿಸ್ತೃತ ಯುದ್ಧಕ್ಕೆ ಮುಂದಾದರೆ ಅದು “ಟ್ರಂಪ್ ಕುರ್ಚಿ ಅಲುಗಾಡುವುದರಲ್ಲಿತ್ತು. ಅವರ ಅಧ್ಯಕ್ಷ ಸ್ಥಾನಕ್ಕೆ ಕುತ್ತು ಬರುತ್ತಿತ್ತು” ಎಂದು ಅವರು ಉಲ್ಲೇಖಿಸಿದರು. ಇರಾನ್ ನ ಇಂಧನ ಸಂಪನ್ಮೂಲಗಳು ಹಾಗೂ ವಿದ್ಯುತ್ ಸ್ಥಾವರಗಳನ್ನು ಗುರಿಯಾಗಿಸಿದರೆ, ಇರಾನ್ GCC ರಾಷ್ಟ್ರಗಳ ಮೇಲೆ ಪ್ರತೀಕಾರ ದಾಳಿ ನಡೆಸುವ ಸಾಧ್ಯತೆ ಇತ್ತು. ಇದರಿಂದ ಇನ್ನಷ್ಟು ಗಂಭೀರ ಇಂಧನ ಬಿಕ್ಕಟ್ಟು ಉಂಟಾಗುತ್ತಿತ್ತು ಎಂದು ಅವರು ಎಚ್ಚರಿಸಿದರು. ಈ ಪರಿಸ್ಥಿತಿಯಲ್ಲಿ ಟ್ರಂಪ್ ಕದನ ವಿರಾಮ ಒಪ್ಪಿಕೊಳ್ಳುವುದು ಅನಿವಾರ್ಯವಾಯಿತು ಎಂದು ಪಾರ್ಸಿ ಅಭಿಪ್ರಾಯಪಟ್ಟರು. “ಒಪ್ಪಂದವು ತಮ್ಮ ಷರತ್ತುಗಳ ಮೇಲೆ ಆಗಿದೆ ಎಂಬ ಭಾವನೆ ಮೂಡಿಸಲು ಟ್ರಂಪ್ ಮುಂಚಿತವಾಗಿ ತೀವ್ರ ಹೇಳಿಕೆಗಳನ್ನು ನೀಡಿದ್ದಾರೆ. ಆದರೆ ವಾಸ್ತವದಲ್ಲಿ ಮಾತುಕತೆಗಳು ಇರಾನ್ ಸೂಚಿಸಿದ 10 ಅಂಶಗಳ ಯೋಜನೆ ಆಧಾರಿತವಾಗಿವೆ. ಆ ಯೋಜನೆ ಹೆಚ್ಚು ಸಮಂಜಸವಾಗಿದೆ,” ಎಂದು ಅವರು ಉಲ್ಲೇಖಿಸಿದರು.
Iran-US War: ಇರಾನ್ - ಅಮೆರಿಕ ಕದನ ವಿರಾಮ, ಏಪ್ರಿಲ್ 10ಕ್ಕೆ ಪಾಕ್ನಲ್ಲಿ ಮಾತುಕತೆ: ಪಾಕ್ ಪ್ರಧಾನಿ ಶೆಹಬಾಜ್ ಷರೀಫ್
Iran-US War: ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧವು ಪಾಕಿಸ್ತಾನದ ಮಧ್ಯಸ್ಥಿಕೆಯಿಂದ ತಾತ್ಕಾಲಿಕವಾಗಿ ನಿಂತಿದೆ. ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಮತ್ತು ಸೇನಾ ಮುಖ್ಯಸ್ಥರ ಮನವಿಯ ಮೇರೆಗೆ ಎರಡು ವಾರಗಳ ಕಾಲ ಕದನ ವಿರಾಮ ಘೋಷಣೆ ಮಾಡಿರುವುದಾಗಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಹೇಳಿದ್ದಾರೆ. ಇದೇ ಸಂದರ್ಭದಲ್ಲಿ ಕದನ ವಿರಾಮ ಒಪ್ಪಂದವನ್ನು ಒಪ್ಪಿಕೊಂಡಿರುವುದಾಗಿ ಇರಾನ್ ಸಹ ಘೋಷಣೆ ಮಾಡಿದೆ.
ಹಾರ್ಮುಝ್ ಜಲಸಂಧಿ ಮುಕ್ತಗೊಳಿಸುವ ನಿರ್ಣಯದ ವಿರುದ್ಧ ಭದ್ರತಾ ಮಂಡಳಿ ಸಭೆಯಲ್ಲಿ ವಿಟೊ ಚಲಾಯಿಸಿದ ರಷ್ಯಾ, ಚೀನಾ
ವಿಶ್ವಸಂಸ್ಥೆ: ಹಾರ್ಮುಝ್ ಜಲಸಂಧಿಯನ್ನು ಮುಕ್ತಗೊಳಿಸುವ ಸಂಬಂಧ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಅಮೆರಿಕ ಮಂಡಿಸಿದ ನಿರ್ಣಯದ ವಿರುದ್ಧ ರಷ್ಯಾ ಹಾಗೂ ಚೀನಾ ವಿಟೊ ಅಧಿಕಾರ ಚಲಾಯಿಸಿವೆ. ಈ ಪ್ರಮುಖ ಶಿಪ್ಪಿಂಗ್ ಲೇನ್ ಸುರಕ್ಷತೆ ದೃಷ್ಟಿಯಿಂದ ಗಲ್ಫ್ ದೇಶದ ಅಪೇಕ್ಷಿತ ಹಸಿರು ದೀಪ ಬಳಕೆಗೆ ಸಂಬಂಧಿಸಿದಂತೆ ನಿರ್ಣಯದ ಕರಡನ್ನು ಈ ಮೊದಲೇ ದುರ್ಬಲಗೊಳಿಸಿದ ಹೊರತಾಗಿಯೂ ನಿರ್ಣಯದ ಮೇಲೆ ಉಭಯ ದೇಶಗಳು ವಿಟೊ ಅಧಿಕಾರ ಚಲಾಯಿಸಿದವು. ಬಹರೈನ್ ಈ ನಿರ್ಣಯದ ಕರಡು ಸಿದ್ಧಪಡಿಸಿದ್ದು, ಅಮೆರಿಕ ಇದನ್ನು ಬೆಂಬಲಿಸಿತ್ತು. ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ನಿರ್ಣಯದ ಪರ 11 ಮತಗಳು ಚಲಾಯಿಸಲ್ಪಟ್ಟವು. ಎರಡು ಮತಗಳು ವಿರುದ್ಧವಾಗಿ ಚಲಾವಣೆಯಾದರೆ, ಎರಡು ದೇಶಗಳು ಮತದಾನದಿಂದ ಹೊರಗುಳಿದವು. ಈ ಫಲಿತಾಂಶದ ಬಗ್ಗೆ ಗಲ್ಫ್ ದೇಶಗಳಿಗೆ ತೀವ್ರ ವಿಷಾದವಿದೆ ಎಂದು ಬಹರೈನ್ ನ ವಿದೇಶಾಂಗ ಸಚಿವ ಅಬ್ದುಲ್ಲತೀಫ್ ಬಿನ್ ರಶೀದ್ ಅಲ್ ಝಯಾನಿ ಹೇಳಿದ್ದಾರೆ. ಅಮೆರಿಕ ಹಾಗೂ ಇಸ್ರೇಲ್ ಕಳೆದ ಫೆಬ್ರವರಿ 28ರಂದು ಇರಾನ್ ಮೇಲೆ ದಾಳಿ ಆರಂಭಿಸಿದ ಬೆನ್ನಲ್ಲೇ ಪ್ರಮುಖ ಹಾರ್ಮುಝ್ ಜಲಸಂಧಿಯನ್ನು ಇರಾನ್ ಮುಚ್ಚಿತ್ತು. ಇದು ಜಾಗತಿಕ ಆರ್ಥಿಕತೆಯ ಮೇಲೆ ಗಂಭೀರ ಪರಿಣಾಮ ಬೀರಿತ್ತು. ಜಲಸಂಧಿಯನ್ನು ಇರಾನ್ ಮುಕ್ತಗೊಳಿಸದಿದ್ದರೆ ಇಡೀ ಮನುಕುಲವೇ ನಾಶವಾಗುತ್ತದೆ ಎಂದು ಎಚ್ಚರಿಕೆ ನೀಡಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿಧಿಸಿದ್ದ ಗಡುವು ಮುಕ್ತಾಯಕ್ಕೆ ಕೆಲವೇ ಗಂಟೆಗಳ ಮೊದಲು ಈ ಮತದಾನ ನಡೆಯಿತು.
ಇರಾನ್ ವಿದೇಶಾಂಗ ಸಚಿವ ಅರಾಘ್ಚಿ ಹೇಳಿಕೆಯನ್ನು ರಿಪೋಸ್ಟ್ ಮಾಡಿದ ಅಮೆರಿಕ ಅಧ್ಯಕ್ಷ ಟ್ರಂಪ್
ವಾಷಿಂಗ್ಟನ್/ಟೆಹ್ರಾನ್: ಅಮೆರಿಕದೊಂದಿಗೆ ಕದನ ವಿರಾಮ ಒಪ್ಪಂದದ ಕುರಿತು ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಾಘ್ಚಿ ನೀಡಿದ ಹೇಳಿಕೆಯನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ‘ಟ್ರುತ್ ಸೋಷಿಯಲ್’ ಖಾತೆಯಲ್ಲಿ ಮರು ಹಂಚಿಕೊಂಡಿದ್ದಾರೆ. ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧಕ್ಕೆ ತೆರೆ ಎಳೆಯುವ ಉದ್ದೇಶದಿಂದ ಪಾಕಿಸ್ತಾನದ “ಅವಿಶ್ರಾಂತ ಪ್ರಯತ್ನಗಳಿಗೆ” ಟೆಹ್ರಾನ್ ಪರವಾಗಿ ಅರಾಘ್ಚಿ “ಕೃತಜ್ಞತೆ ಮತ್ತು ಮೆಚ್ಚುಗೆ” ವ್ಯಕ್ತಪಡಿಸಿ ಪೋಸ್ಟ್ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದರು. “ಇರಾನ್ ವಿರುದ್ಧದ ದಾಳಿಗಳನ್ನು ನಿಲ್ಲಿಸಿದರೆ, ನಮ್ಮ ಪ್ರಬಲ ಸಶಸ್ತ್ರ ಪಡೆಗಳು ತಮ್ಮ ರಕ್ಷಣಾತ್ಮಕ ಕಾರ್ಯಾಚರಣೆಗಳನ್ನು ನಿಲ್ಲಿಸುತ್ತವೆ,” ಎಂದು ಅರಾಘ್ಚಿ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಮುಂದಿನ ಎರಡು ವಾರಗಳ ಅವಧಿಯಲ್ಲಿ ಇರಾನ್ ಸೈನ್ಯದ ಸಮನ್ವಯದೊಂದಿಗೆ ಹಾರ್ಮುಝ್ ಜಲಸಂಧಿಯ ಮೂಲಕ ಹಾದುಹೋಗುವುದು ಸಾಧ್ಯವಾಗುತ್ತದೆ ಎಂದು ಅವರು ತಿಳಿಸಿದ್ದರು.
ದಾವಣಗೆರೆ ಉಪಚುನಾವಣೆ: ಬಹಿರಂಗ ಪ್ರಚಾರ ಅಂತ್ಯ: ಕಡೇ ದಿನ ಬಿಜೆಪಿ, ಕಾಂಗ್ರೆಸ್ ರ್ಯಾಲಿ, ಇನ್ನು ಮನೆ, ಮನೆ ಪ್ರಚಾರ
ದಾವಣಗೆರೆಯ ಅಬ್ಬರದ ಬಹಿರಂಗ ಪ್ರಚಾರಕ್ಕೆ ತೆರೆ ಬಿದ್ದಿದೆ. ಇಂದಿನಿಂದ ಮನೆಮನೆ ಪ್ರಚಾರ ನಡೆಯಲಿದೆ. ವೋಟರ್ಸ್ ಅಲ್ಲದ ಪರಊರಿನ ನಾಯಕರು ಕ್ಷೇತ್ರ ತೊರೆದಿದ್ದಾರೆ. ಕೇಂದ್ರ ಸಚಿವರೂ ಕೂಡಾ ದಾವಣಗೆರೆಯಲ್ಲೇ 10 ದಿನ ಬೀಡು ಬಿಟ್ಟು ಪ್ರಚಾರ ನಡೆಸಿದ್ದಾರೆ.
Iran Ceasefire: 2 ವಾರಗಳ ಕದನ ವಿರಾಮಕ್ಕೆ ಒಪ್ಪಿಗೆ ಸೂಚಿಸಿದ ಇರಾನ್; ಶಾಶ್ವತ ಕದನ ವಿರಾಮದ ಬಗ್ಗೆ ಹೇಳಿದ್ದೇನು
Iran Ceasefire: ಮಧ್ಯಪ್ರಾಚ್ಯದ ಇರಾನ್ನ ಮೇಲೆ ಅಮೆರಿಕ ವಿಷಕಾರಿ ಬಾಂಬ್ ದಾಳಿ (ನ್ಯೂಕ್ಲಿಯರ್ ಮಾದರಿ) ಮಾಡುವುದಾಗಿ ಎಚ್ಚರಿಕೆ ನೀಡಿತ್ತು. ಈ ಬಾಂಬ್ ದಾಳಿಯನ್ನು ಮಂಗಳವಾರ ರಾತ್ರಿ 8ಕ್ಕೆ (ಭಾರತೀಯ ಕಾಲಮಾನ ಬುಧವಾರ ಬೆಳಿಗ್ಗೆ 5.30)ಕ್ಕೆ ನಡೆಸುವುದಾಗಿ ಗಡುವು ನಿಗದಿ ಮಾಡಲಾಗಿತ್ತು. ಇದೀಗ ಪಾಕಿಸ್ತಾನದ ಮಧ್ಯಸ್ಥಿಕೆಯಿಂದ ಭಾರೀ ಬಾಂಬ್ ದಾಳಿ ಮಾಡುವ ಪ್ರಸ್ತಾವನೆಯನ್ನು ಹಿಂಪಡೆದಿದ್ದೇವೆ ಎಂದು ಅಮೆರಿಕ ಅಧ್ಯಕ್ಷ
ಹಾರ್ಮುಝ್ ಜಲಸಂಧಿಯ ಮೂಲಕ ಎರಡು ವಾರಗಳ ಸುರಕ್ಷಿತ ಸಂಚಾರಕ್ಕೆ ಅವಕಾಶ: ಇರಾನ್ ಭರವಸೆ
ಟೆಹ್ರಾನ್: ಹಾರ್ಮುಝ್ ಜಲಸಂಧಿಯ ಮೂಲಕ ಎರಡು ವಾರಗಳ ಕಾಲ ಸುರಕ್ಷಿತ ಸಂಚಾರಕ್ಕೆ ಅವಕಾಶ ನೀಡಲಾಗುತ್ತದೆ ಎಂದು ಇರಾನ್ ತಿಳಿಸಿದೆ. ಈ ಕುರಿತು ಪ್ರತಿಕ್ರಿಯಿಸಿದ ಇರಾನ್ನ ವಿದೇಶಾಂಗ ಸಚಿವ ಅಬ್ಬಾಸ್ ಅರಾಘ್ಚಿ ಅವರು, “ಇರಾನ್ ನ ಸಶಸ್ತ್ರ ಪಡೆಗಳೊಂದಿಗೆ ಸಮನ್ವಯ ಸಾಧಿಸಿ ಹಾಗೂ ತಾಂತ್ರಿಕ ಮಿತಿಗಳನ್ನು ಪರಿಗಣಿಸಿದರೆ ಹಾರ್ಮುಝ್ ಮೂಲಕ ಸುರಕ್ಷಿತ ಮಾರ್ಗ ಒದಗಿಸಲಾಗುತ್ತದೆ” ಎಂದು ಹೇಳಿದ್ದಾರೆ. ಇದೇ ವೇಳೆ, ಇರಾನ್ ವಿರುದ್ಧ ನಡೆಯುತ್ತಿರುವ ದಾಳಿಗಳನ್ನು ನಿಲ್ಲಿಸಿದಲ್ಲಿ ದೇಶದ ಸಶಸ್ತ್ರ ಪಡೆಗಳು ತಮ್ಮ ರಕ್ಷಣಾತ್ಮಕ ಕಾರ್ಯಾಚರಣೆಗಳನ್ನು ಸ್ಥಗಿತಗೊಳಿಸಲಿವೆ ಎಂದು ಇರಾನ್ ನ ಸುಪ್ರೀಂ ರಾಷ್ಟ್ರೀಯ ಭದ್ರತಾ ಮಂಡಳಿ ಸ್ಪಷ್ಟಪಡಿಸಿದೆ ಎಂದು ಅರಾಘ್ಚಿ ಅವರು ತಿಳಿಸಿದ್ದಾರೆ. ಪ್ರಾದೇಶಿಕ ಉದ್ವಿಗ್ನತೆ ನಡುವೆಯೇ ಹಾರ್ಮುಝ್ ಜಲಸಂಧಿಯ ಕುರಿತ ಈ ಹೇಳಿಕೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿದೆ.
Iran-US-Israel War: ಇರಾನ್ ದೇಶದ ಮೇಲೆ ಇನ್ನೇನು ಬಾಂಬ್ ದಾಳಿಗಳನ್ನು ಅಮೆರಿಕ ಮಾಡಿಯೇ ಬಿಡಲಿದೆ ಎನ್ನುವಾಗಲೇ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇರಾನ್ಗೆ ಇನ್ನೂ ಎರಡು ವಾರಗಳ ಕಾಲಾವಕಾಶ ನೀಡಿದ್ದಾರೆ. ಆ ದೇವರು ಇರಾನ್ ಜನರನ್ನು ಆಶೀರ್ವದಿಸಲಿ; ಈ ರಾತ್ರಿಯೇ ಸಮಸ್ತ ಇರಾನ್ ನಾಗರಿಕತೆ ಸರ್ವನಾಶವಾಗಲಿದೆ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದರು. ಕದನ
ಕಳೆದ ವರ್ಷದಿಂದ ಎಳನೀರು, ತೆಂಗಿನಕಾಯಿ, ಕೊಬ್ಬರಿ ಎಲ್ಲದರ ಬೆಲೆಯೂ ಗಗನಮುಖಿಯಾಗಿದೆ. ರೈತರಿಗೆ ಉತ್ತಮ ಬೆಒಎ ಸಿಗುತ್ತಿರುವುದು ಸಮಾಧಾನದ ವಿಷಯವಾಗಿದೆ. ಈ ಮಧ್ಯೆ ಮತ್ತೊಮ್ಮೆ ತಿಪಟೂರು ಕೊಬ್ಬರಿ ಬೆಲೆ ದಾಖಲೆ ಬರೆದಿದೆ.
ಎರಡು ವಾರಗಳ ಕದನ ವಿರಾಮ ಒಪ್ಪಂದಕ್ಕೆ ಇರಾನಿನ ಸುಪ್ರೀಂ ರಾಷ್ಟ್ರೀಯ ಭದ್ರತಾ ಮಂಡಳಿ ಅನುಮೋದನೆ
ಟೆಹ್ರಾನ್: ಪಾಕಿಸ್ತಾನದ ಮಧ್ಯಸ್ಥಿಕೆಯಲ್ಲಿ ನಡೆದ ಮಾತುಕತೆಗಳ ಬಳಿಕ ಫಲಪ್ರದವಾದ ಎರಡು ವಾರಗಳ ಕದನ ವಿರಾಮ ಒಪ್ಪಂದಕ್ಕೆ ಇರಾನ್ ನ ಸುಪ್ರೀಂ ರಾಷ್ಟ್ರೀಯ ಭದ್ರತಾ ಮಂಡಳಿ ಅನುಮೋದನೆ ನೀಡಿದೆ ಎಂದು Aljazeera ವರದಿ ಮಾಡಿದೆ. ಮೆಹರ್ ಸುದ್ದಿ ಸಂಸ್ಥೆ ಪ್ರಕಟಿಸಿದ ಹೇಳಿಕೆಯ ಪ್ರಕಾರ, ಇರಾನ್ ನ ನೂತನ ಸುಪ್ರೀಂ ನಾಯಕ ಆಯತೊಲ್ಲಾ ಮೊಜ್ತಬಾ ಖಾಮಿನೈ ಅವರ ಅನುಮೋದನೆಯೊಂದಿಗೆ ಈ ಒಪ್ಪಂದ ಅಂತಿಮಗೊಂಡಿದೆ. ಈ ಕದನ ವಿರಾಮವನ್ನು “ಇರಾನ್ ಗೆ ದೊರೆತ ಗೆಲುವು” ಎಂದು ಹೇಳಿಕೆಯಲ್ಲಿ ವಿವರಿಸಲಾಗಿದೆ. ಪ್ರಸ್ತುತ ಉದ್ವಿಗ್ನ ಪರಿಸ್ಥಿತಿಯಲ್ಲಿ ಇದು ಮಹತ್ವದ ಬೆಳವಣಿಗೆ ಎಂದು ಮಂಡಳಿ ತಿಳಿಸಿದೆ. ಮುಂದಿನ ದಿನಗಳಲ್ಲಿ ಶಾಶ್ವತ ಕದನ ವಿರಾಮ ಒಪ್ಪಂದ ಸಾಧಿಸಲು ಮಾತುಕತೆಗಳನ್ನು ಮುಂದುವರಿಸಲಾಗುವುದು ಎಂದು ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ.
ಇರಾನ್ ಮೇಲೆ ದಾಳಿ ಸ್ಥಗಿತ: ಎರಡು ವಾರಗಳ ಕದನ ವಿರಾಮಕ್ಕೆ ಟ್ರಂಪ್ ಘೋಷಣೆ
ವಾಷಿಂಗ್ಟನ್: ಇರಾನ್ ಮೇಲೆ ನಡೆಯುತ್ತಿರುವ ಬಾಂಬ್ ದಾಳಿ ಹಾಗೂ ಮಿಲಿಟರಿ ಕಾರ್ಯಾಚರಣೆಯನ್ನು ಎರಡು ವಾರಗಳ ಕಾಲ ಸ್ಥಗಿತಗೊಳಿಸುವ ಕದನ ವಿರಾಮಕ್ಕೆ ಒಪ್ಪಿಕೊಂಡಿರುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಇಸ್ರೇಲ್ ಕೂಡ ಕದನ ವಿರಾಮಕ್ಕೆ ಒಪ್ಪಿಕೊಂಡಿದೆ ಎಂಬ ಮಾಹಿತಿ ಅಮೆರಿಕ ಹಾಗೂ ಇಸ್ರೇಲ್ ಮಾಧ್ಯಮ ವರದಿಗಳಲ್ಲಿ ಪ್ರಕಟವಾಗಿದೆ. ಶ್ವೇತಭವನದ ಅಧಿಕಾರಿಯೊಬ್ಬರನ್ನು ಉಲ್ಲೇಖಿಸಿ ಈ ಬಗ್ಗೆ CNN ವರದಿ ಮಾಡಿದೆ. ಇಸ್ರೇಲ್ ನ ಸರಕಾರಿ ಮಾಧ್ಯಮ ‘ಕಾನ್’ ಕೂಡ ಇಸ್ರೇಲ್ ಕದನ ವಿರಾಮಕ್ಕೆ ಸಮ್ಮತಿಸಿದೆ ಎಂದು ತಿಳಿಸಿದೆ.
ರಿಯಾದ್: ಪ್ರಸ್ತುತ ಮಧ್ಯಪ್ರಾಚ್ಯದಲ್ಲಿನ ಸಂಘರ್ಷದ ಹಿನ್ನೆಲೆಯಲ್ಲಿ, ಸೌದಿ ಅರೇಬಿಯಾದಲ್ಲಿರುವ ಅಮೆರಿಕ ರಾಯಭಾರ ಕಚೇರಿಯು ತನ್ನ ನಾಗರಿಕರಿಗೆ ಪ್ರಯಾಣದ ಕುರಿತು ಎಚ್ಚರಿಕೆ ನೀಡಿದೆ. ಹಜ್ ಯಾತ್ರೆಗೆ ತೆರಳುವುದು ಸೇರಿದಂತೆ ಸೌದಿ ಅರೇಬಿಯಾಗೆ ಹೋಗುವ ಯೋಜನೆಗಳನ್ನು ಮರುಪರಿಶೀಲಿಸಲು ಸೂಚಿಸಿದೆ. ರಾಯಭಾರ ಕಚೇರಿಯ ಹೇಳಿಕೆಯಲ್ಲಿ, ಪ್ರಸ್ತುತ ಭದ್ರತಾ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಅಮೆರಿಕ ಪ್ರಜೆಗಳು ಎಚ್ಚರಿಕೆಯಿಂದಿರಬೇಕು ಎಂದು ತಿಳಿಸಲಾಗಿದೆ. ತಮ್ಮ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಪ್ರಯಾಣ ಯೋಜನೆಗಳ ಬಗ್ಗೆ ಸೂಕ್ತ ನಿರ್ಧಾರ ತೆಗೆದುಕೊಳ್ಳುವಂತೆ ಮನವಿ ಮಾಡಲಾಗಿದೆ. ಪವಿತ್ರ ನಗರ ಮಕ್ಕಾಗೆ ತೆರಳಿ “ಈ ವರ್ಷದ ಹಜ್ ಯಾತ್ರೆಯಲ್ಲಿ ಭಾಗವಹಿಸುವುದನ್ನು” ಮರುಪರಿಶೀಲಿಸುವಂತೆ ವಿಶೇಷವಾಗಿ ಸಲಹೆ ನೀಡಲಾಗಿದೆ. ಪ್ರಾದೇಶಿಕ ಉದ್ವಿಗ್ನತೆಯ ಕಾರಣದಿಂದ ಭದ್ರತಾ ಪರಿಸ್ಥಿತಿ ಹದಗೆಡುವ ಸಾಧ್ಯತೆಯಿರುವುದರಿಂದ ಈ ಸೂಚನೆ ನೀಡಲಾಗಿದೆ ಎಂದು ರಾಯಭಾರ ಕಚೇರಿ ಸ್ಪಷ್ಟಪಡಿಸಿದೆ.
ಡಾ.ಎಚ್.ಸಿ.ಸತ್ಯನ್ಗೆ ನಾಡೋಜ ಪ್ರಶ್ನಿಸಿದ್ದ ಪಿಐಎಲ್ ವಜಾಗೊಳಿಸಿದ ಹೈಕೋರ್ಟ್
ಬೆಂಗಳೂರು: ಕರ್ನಾಟಕ ರಾಜ್ಯ ಮಾಹಿತಿ ಆಯೋಗದ ಪ್ರಭಾರ ಮುಖ್ಯ ಮಾಹಿತಿ ಆಯುಕ್ತರಾಗಿದ್ದು ಸದ್ಯ ನಿವೃತ್ತಿ ಹೊಂದಿರುವ ಡಾ. ಎಚ್.ಸಿ. ಸತ್ಯನ್ ಅವರಿಗೆ ಹಂಪಿ ಕನ್ನಡ ವಿಶ್ವವಿದ್ಯಾಲಯ 'ನಾಡೋಜ' ಪದವಿ ಪ್ರದಾನ ಮಾಡಿರುವುದನ್ನು ಪ್ರಶ್ನಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ. ಕಮಿಟಿ ಫಾರ್ ಪಬ್ಲಿಕ್ ಅಕೌಂಟೆಬಿಲಿಟಿ ಸಂಸ್ಥೆಯ ಅಧ್ಯಕ್ಷ ಎಸ್. ಶಿವಕುಮಾರ್ ಸಲ್ಲಿಸಿದ್ದ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಹಾಗೂ ನ್ಯಾಯಮೂರ್ತಿ ಸಿ.ಎಂ. ಪೂಣಚ್ಚ ಅವರಿದ್ದ ವಿಭಾಗೀಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು. ವಿಚಾರಣೆ ವೇಳೆ, ಸತ್ಯನ್ ಅವರ ಮೇಲೆ ಭ್ರಷ್ಟಾಚಾರದ ಆರೋಪವಿದೆ ಎಂಬ ಅರ್ಜಿದಾರರ ಪರ ವಕೀಲರ ಹೇಳಿಕೆಗೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಭ್ರಷ್ಟಾಚಾರ ಸಾಬೀತಾಗಿದೆಯಾ? ಇಲ್ಲವೆಂದಾದರೆ ಸುಮ್ಮನೆ ಆರೋಪ ಮಾಡಬೇಡಿ. ಇಲ್ಲದಿದ್ದರೆ ದೊಡ್ಡ ಮೊತ್ತದ ದಂಡ ವಿಧಿಸಬೇಕಾಗುತ್ತದೆ. ನೀವು (ಅರ್ಜಿದಾರ) ಸಂಕಷ್ಟ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿತು. ಮುಂದುವರಿದು, ಯಾರಿಗೆ ಯಾವ ಪದವಿ ಕೊಡಬೇಕು ಎಂಬ ಬಗ್ಗೆ ನಿರ್ಧರಿಸಲು ವಿಶ್ವವಿದ್ಯಾಲಯ ಸ್ವತಂತ್ರವಾಗಿದೆ. ಇಂತಹ ವಿಷಯದಲ್ಲಿ ನ್ಯಾಯಾಲಯ ಮಧ್ಯಪ್ರವೇಶಿಸಲು ಬಯಸುವುದಿಲ್ಲ. ಮೇಲಾಗಿ ಈ ಪ್ರಕರಣದಲ್ಲಿ ಅರ್ಜಿದಾರರ ಮೂಲಭೂತ ಹಕ್ಕುಗಳು, ಸಾಂವಿಧಾನಿಕ ಹಕ್ಕುಗಳ ಉಲ್ಲಂಘನೆ ಆಗುತ್ತಿಲ್ಲ. ಇಂತಹ ಅರ್ಜಿಗಳ ಸಲ್ಲಿಕೆಯು ನ್ಯಾಯಾಲಯದ ಅತ್ಯಮೂಲ್ಯ ಸಮಯ ವ್ಯರ್ಥ ಮಾಡುವುದು ಬಿಟ್ಟರೆ ಮತ್ತೇನೂ ಇಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿ, ಅರ್ಜಿ ವಜಾಗೊಳಿಸಿತು. ರಾಜ್ಯಪಾಲರು 2026ರ ಫೆಬ್ರವರಿ 24ರಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ 34ನೇ ಘಟಿಕೋತ್ಸವದಲ್ಲಿ ಡಾ. ಎಚ್.ಸಿ. ಸತ್ಯನ್ ಅವರಿಗೆ 'ನಾಡೋಜ' ಪದವಿ ಪ್ರದಾನ ಮಾಡಿದ್ದರು.
ಅತ್ಯಾಚಾರ ಆರೋಪ; ಇನ್ಸ್ಪೆಕ್ಟರ್ ಸಂದೇಶ್ ವಿರುದ್ಧದ ಪ್ರಕರಣ ರದ್ದತಿಗೆ ಹೈಕೋರ್ಟ್ ನಕಾರ
ಬೆಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಶಾಲೆಯೊಂದರ ಮುಖ್ಯ ಶಿಕ್ಷಕಿ ಮೇಲೆ ಅತ್ಯಾಚಾರವೆಸಗಿದ ಆರೋಪದಲ್ಲಿ ಮೂಡಬಿದಿರೆ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ (ಸದ್ಯ ಅಮಾನತುಗೊಂಡಿರುವ) ಪಿ.ಜಿ. ಸಂದೇಶ್ ಸೇರಿ ಮೂವರ ವಿರುದ್ಧ ದಾಖಲಾಗಿರುವ ಪ್ರಕರಣ ರದ್ದುಪಡಿಸಲು ಹೈಕೋರ್ಟ್ ನಿರಾಕರಿಸಿದೆ. ವೇಣೂರು ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ದೂರು ಹಾಗೂ ಎಫ್ಐಆರ್ ರದ್ದು ಕೋರಿ ಪಿ.ಜಿ. ಸಂದೇಶ್, ಉಡುಪಿಯ ಸ್ಮಿತಾ ಪೂರ್ಣಿಮಾ ಆರ್. ಮಲ್ಯ ಹಾಗೂ ಮಂಗಳೂರಿನ ಸುನೀತಾ ಲೋಬೋ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು. ಕೆಲ ಕಾಲ ಅರ್ಜಿ ಆಲಿಸಿದ ಬಳಿಕ ಪ್ರಕರಣಕ್ಕೆ ತಡೆ ನೀಡಲು ಅಥವಾ ಎಫ್ಐಆರ್ ರದ್ದುಪಡಿಸಲು ನ್ಯಾಯಪೀಠ ಸ್ಪಷ್ಟವಾಗಿ ನಿರಾಕರಿಸಿದಾಗ ಸಂದೇಶ್ ಪರ ವಕೀಲ ಎಂ.ಆರ್. ಬಾಲಕೃಷ್ಣ ಅವರು ಅರ್ಜಿ ಹಿಂಪಡೆಯುವುದಾಗಿ ತಿಳಿಸಿದರು. ಇದನ್ನು ಪರಿಗಣಿಸಿದ ನ್ಯಾಯಪೀಠ, ಅರ್ಜಿದಾರರ ವಿರುದ್ಧ ಆರೋಪ ಪಟ್ಟಿ ಸಲ್ಲಿಕೆಯಾದರೆ ಅದನ್ನು ಪ್ರಶ್ನಿಸಿ ಇದೇ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸುವ ಸ್ವಾತಂತ್ರ್ಯ ಹೊಂದಿದ್ದಾರೆ ಎಂದು ತಿಳಿಸಿತಲ್ಲದೆ, ಅರ್ಜಿ ಹಿಂಪಡೆಯಲು ಅರ್ಜಿದಾರರು ಒಪ್ಪಿರುವುದರಿಂದ ಅದನ್ನು ವಜಾಗೊಳಿಸಲಾಗಿದೆ ಎಂದು ಆದೇಶಿಸಿತು. ಇದೇ ವೇಳೆ, ಅರ್ಜಿದಾರರಿಗೆ ತನಿಖೆಯ ನೆಪದಲ್ಲಿ ಕಿರುಕುಳ ನೀಡದಂತೆ ಆದೇಶಿಸಬೇಕು ಎಂದು ಸಂದೇಶ್ ಪರ ವಕೀಲರು ಮಾಡಿದ ಮನವಿಯನ್ನು ನ್ಯಾಯಾಲಯ ಸ್ಪಷ್ಟವಾಗಿ ನಿರಾಕರಿಸಿತು. ಸಂದೇಶ್ ವಾದವೇನು? ಇದಕ್ಕೂ ಮುನ್ನ ಅರ್ಜಿದಾರರ ಪರ ವಕೀಲ ಬಾಲಕೃಷ್ಣ ವಾದ ಮಂಡಿಸಿ, ಕೃತ್ಯ ನಡೆದು 3 ವರ್ಷಗಳ ಬಳಿಕ ಮುಖ್ಯ ಶಿಕ್ಷಕಿ ಪ್ರಕರಣ ದಾಖಲಿಸಿದ್ದಾರೆ. 2022ರ ನವೆಂಬರ್ನಿಂದ 2023ರ ಜೂನ್ ನಡುವೆ ಅತ್ಯಾಚಾರ ನಡೆದಿದೆ ಎಂದು ಆರೋಪಿಸಲಾಗಿದ್ದು, 2026ರ ಮಾರ್ಚ್ 21ರಂದು ಪ್ರಕರಣ ದಾಖಲಿಸಲಾಗಿದೆ. ಇದೊಂದು ಪಿತೂರಿಯಾಗಿದೆ. ಪೊಲೀಸ್ ಅಧಿಕಾರಿ ಸಂದೇಶ್ ಅವರನ್ನು ಸಿಲುಕಿಸಲು ಈ ರೀತಿ ಮಾಡಲಾಗಿದೆ. ಮೇಲ್ನೋಟಕ್ಕೆ ಯಾವುದೇ ಪ್ರಕರಣವಿಲ್ಲ ಎಂದು ನ್ಯಾಯಪೀಠಕ್ಕೆ ತಿಳಿಸಿದರು. ರಾಜ್ಯ ಸರ್ಕಾರದ ಪರ ವಾದ ಮಂಡಿಸಿದ ಹೆಚ್ಚುವರಿ ಸರ್ಕಾರಿ ಅಭಿಯೋಜಕ ಬಿ.ಎನ್. ಜಗದೀಶ್, ಮೊದಲನೇ ಅರ್ಜಿದಾರ ಪೊಲೀಸ್ ಅಧಿಕಾರಿ. ಸಿಆರ್ಪಿಸಿ ಸೆಕ್ಷನ್ 183ರ ಅಡಿ ಸಂತ್ರಸ್ತೆಯ ಹೇಳಿಕೆ ಇದೆ. ಅದೇ ಸಾಕಲ್ಲವೇ? ಪ್ರಕರಣದ ತನಿಖೆ ನಡೆಯಬೇಕು ಎಂದರು. ಸಂತ್ರಸ್ತೆಯ ಪರ ವಕೀಲರು ವಾದ ಮಂಡಿಸಿ, 2 ಮತ್ತು 3ನೇ ಆರೋಪಿಗಳು ಮೊದಲ ಅರ್ಜಿದಾರರ ಪರವಾಗಿ ಸಂತ್ರಸ್ತೆಗೆ ಬೆದರಿಕೆ ಹಾಕಿ, ದೂರು ಮುಂದುವರಿಸದಂತೆ ಒತ್ತಾಯಿಸಿದ್ದಾರೆ. ಪ್ರಕರಣವನ್ನು ಸಿಐಡಿಗೆ ನೀಡಲಾಗಿದ್ದು, ಸಂತ್ರಸ್ತೆ ಹೇಳಿಕೆ ನೀಡಿದ್ದಾರೆ. ಪೊಲೀಸ್ ಅಧಿಕಾರಿ ಸಂದೇಶ್ ವಿರುದ್ಧ 2-3 ಪ್ರಕರಣ ದಾಖಲಾಗಿವೆ. 13 ಲಕ್ಷ ನಗದನ್ನು ಸಂತ್ರಸ್ತೆಯು ಪೊಲೀಸ್ ಅಧಿಕಾರಿಗೆ ನೀಡಿದ್ದಾರೆ. ಅರ್ಜಿದಾರರು ಸಂತ್ರಸ್ತೆ ಜತೆ ಮಾತನಾಡಿರುವ 800ಕ್ಕೂ ಹೆಚ್ಚು ಆಡಿಯೊ ರೆಕಾರ್ಡಿಂಗ್ ಇದೆ ಎಂದರು. ವಿಚಾರಣೆಯ ಒಂದು ಹಂತದಲ್ಲಿ ನ್ಯಾಯಪೀಠ, ಪೊಲೀಸ್ ಅಧಿಕಾರಿಯಾಗಿ ನೀವು ಹೀಗೆಲ್ಲ ಮಾಡುವಂತಿಲ್ಲ. ಆರೋಪ ಪಟ್ಟಿ ಸಲ್ಲಿಕೆಯಾದ ನಂತರ ಬನ್ನಿ ನೋಡೋಣ ಎಂದು ಹೇಳಿತು. ಇದರಿಂದ, ಅರ್ಜಿ ಹಿಂಪಡೆಯುವುದಾಗಿ ಅರ್ಜಿದಾರರ ಪರ ವಕೀಲರು ನ್ಯಾಯಾಲಯಕ್ಕೆ ತಿಳಿಸಿದರು. ಪ್ರಕರಣವೇನು? ಸಂತ್ರಸ್ತ ಶಿಕ್ಷಕಿ ನೀಡಿದ ದೂರಿನ ಮೇರೆಗೆ ಮೂಡಬಿದಿರೆ ಇನ್ಸ್ಪೆಕ್ಟರ್ ಆಗಿದ್ದ ಸಂದೇಶ್ ವಿರುದ್ದ ಬೆಳ್ತಂಗಡಿ ತಾಲೂಕಿನ ವೇಣೂರು ಪೊಲೀಸ್ ಠಾಣೆಯಲ್ಲಿ ಬಿಎನ್ಎಸ್ 376(2)(ಎ)(1), 376(2)(ಎನ್), 384, 506 ಅಡಿ ಎಫ್ಐಆರ್ ದಾಖಲಾಗಿದೆ. ಈಗಾಗಲೇ ಮಹಿಳೆಯರನ್ನು ಲೈಂಗಿಕವಾಗಿ ಪೀಡಿಸಿದ ಆರೋಪ ಸಂದೇಶ್ ಮೇಲಿದೆ. ಇತ್ತೀಚೆಗೆ ಇಬ್ಬರು ಮಹಿಳೆಯರು ಮಾಡಿದ್ದ ಆರೋಪ ಬಾರಿ ಚರ್ಚೆಯಾಗಿತ್ತು. ಆದರೆ, ಪೊಲೀಸ್ ಪ್ರಾಥಮಿಕ ತನಿಖೆಯಲ್ಲಿ ಇದು ಪ್ರಚೋದಿತ ಹಾಗೂ ಸುಳ್ಳು ಆರೋಪ ಎಂದು ಕೇಳಿಬಂದಿತ್ತು. ಅದರ ಬೆನ್ನಲ್ಲೇ ಶಿಕ್ಷಕಿಯೊಬ್ಬರು ದೂರು ನೀಡಿದ್ದು ಪ್ರಕರಣ ಗಂಭೀರ ಸ್ವರೂಪ ಪಡೆದುಕೊಂಡಿದೆ.
ವಿಶ್ವಶ್ರೇಷ್ಠ ವೇಗಿ ಜಸ್ಪ್ರೀತ್ ಬುಮ್ರಾನನ್ನೂ ಬಿಡದ ವೈಭವ್ ಸೂರ್ಯವಂಶಿ!: ರಾಜಸ್ಥಾನ ರಾಯಲ್ಸ್ ಗೆ ಹ್ಯಾಟ್ರಿಕ್ ಜಯಭೇರಿ
Rajasthan Royals Vs Mumbai Indians Match Highlights- ಮಳೆಯಿಂದ ಅಡಚಣೆಗೊಳಗಾದ ಪಂದ್ಯದಲ್ಲಿ ವೈಭವ್ ಸೂುರ್ಯವಂಶಿ ಮತ್ತು ಯಶಸ್ವಿ ಜೈಸ್ವಾಲ್ ಅವರ ಬ್ಯಾಟಿಂಗ್ ಆರ್ಭಟಕ್ಕೆ ನಲುಗಿದ ಮುಂಬೈ ಇಂಡಿಯನ್ಸ್ ತಂಡ ರಾಜಸ್ಥಾನ ರಾಯಲ್ಸ್ ವಿರುದ್ಧ 27 ರನ್ ಗಳಿಂದ ಪರಾಭವ ಅನುಭವಿಸಿತು. ಇಡೀ ಪಂದ್ಯದಲ್ಲಿ ಹೈಲೈಟ್ ಆಗಿದ್ದು ವೈಭವ್ ಸೂರ್ಯವಂಶಿ ಅವರ ಬ್ಯಾಟಿಂಗ್. ಅದರಲ್ಲೂ ಅವರು ವಿಶ್ವಶ್ರೇಷ್ಠ ವೇಗಿ ಜಸ್ಪ್ರೀತ್ ಬುಮ್ರಾ ಅವರ ಒಂದೇ ಓವರ್ ನಲ್ಲಿ ಹೊಡೆದ 2 ಸಿಕ್ಸರ್ ಗಳು!
ಸಂಸ್ಕೃತವು ಕೇವಲ ಒಂದು ಭಾಷೆಯಲ್ಲ, ಅದು ಭಾರತದ ಆತ್ಮ: ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್
ಬೆಂಗಳೂರು : ಸಂಸ್ಕೃತವು ಕೇವಲ ಒಂದು ಭಾಷೆಯಲ್ಲ, ಅದು ಭಾರತದ ಆತ್ಮವಾಗಿದೆ. ನಮ್ಮ ನಾಗರಿಕತೆ, ಸಂಸ್ಕೃತಿ ಮತ್ತು ತತ್ವಶಾಸ್ತ್ರದ ಮೂಲಾಧಾರವಾಗಿದೆ ಎಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ತಿಳಿಸಿದ್ದಾರೆ. ಮಂಗಳವಾರ ನಗರದ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ 12ನೇ ಮತ್ತು 13ನೇ ಘಟಿಕೋತ್ಸವದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ವೇದಗಳು, ಉಪನಿಷತ್ತುಗಳು ಮತ್ತು ಮಹಾಕಾವ್ಯಗಳು ಸಂಸ್ಕೃತದಲ್ಲೇ ಹುಟ್ಟಿಕೊಂಡಿವೆ. ಕೃತಕ ಬುದ್ಧಿಮತ್ತೆ ಮತ್ತು ದತ್ತಾಂಶ ವಿಜ್ಞಾನದ ಕ್ಷೇತ್ರದಲ್ಲಿ ಸಂಸ್ಕೃತದ ರಚನಾತ್ಮಕ ಸ್ಪಷ್ಟತೆ ಅದನ್ನು ಅತ್ಯಂತ ಉಪಯುಕ್ತವಾಗಿಸುತ್ತದೆ ಎಂದು ಅಭಿಪ್ರಾಯಪಟ್ಟರು. ವಿದ್ಯಾರ್ಥಿಗಳು ತಮ್ಮ ಜ್ಞಾನವನ್ನು ಸಮಾಜ ಮತ್ತು ರಾಷ್ಟ್ರದ ಕಲ್ಯಾಣಕ್ಕಾಗಿ ಬಳಸಬೇಕು. ಈ ದಿನ ಪದವಿ ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ ಇದು ಮಹತ್ವದ ದಿನ. ನೀವು ಸಂಪಾದಿಸಿರುವ ಜ್ಞಾನವು ವೈಯಕ್ತಿಕ ಪ್ರಗತಿಗೆ ಮಾತ್ರ ಸೀಮಿತವಾಗದೇ, ಸಮಾಜ ಸೇವೆಗೂ ದಾರಿಯಾಗಬೇಕು ಎಂದು ರಾಜ್ಯಪಾಲರು ಹೇಳಿದರು. ಜ್ಞಾನವು ಜನರ ಹಿತಕ್ಕಾಗಿ ಬಳಸಿದಾಗ ಮಾತ್ರ ಅದರ ನಿಜವಾದ ಮೌಲ್ಯ ಹೊರಹೊಮ್ಮುತ್ತದೆ. ಜ್ಞಾನವು ವಿನಮ್ರತೆಯನ್ನು ತರುತ್ತದೆ, ವಿನಮ್ರತೆ ಯೋಗ್ಯತೆಯನ್ನು, ಯೋಗ್ಯತೆ ಸಮೃದ್ಧಿಯನ್ನು ಮತ್ತು ಸಮೃದ್ಧಿ ಸದಾಚಾರವನ್ನು ತರುತ್ತದೆ ಎಂದು ರಾಜ್ಯಪಾಲರು ತಿಳಿಸಿದರು. ಸ್ವಾವಲಂಬಿ ಭಾರತ ಮತ್ತು ಅಭಿವೃದ್ಧಿ ಹೊಂದಿದ ಭಾರತ ನಿರ್ಮಾಣದಲ್ಲಿ ಯುವಕರ ಪಾತ್ರ ಅತ್ಯಂತ ಮುಖ್ಯವಾಗಿದೆ. ಪ್ರಾಚೀನ ಜ್ಞಾನ ಮತ್ತು ಆಧುನಿಕ ವಿಜ್ಞಾನವನ್ನು ಸಂಯೋಜಿಸಿ, ನವೀನತೆ ಮತ್ತು ಸಂಶೋಧನೆಯಲ್ಲಿ ತೊಡಗಿಕೊಳ್ಳಬೇಕು. ಇಡೀ ಜಗತ್ತು ಮಾನಸಿಕ ಒತ್ತಡ, ಪರಿಸರ ಬಿಕ್ಕಟ್ಟು, ಸಾಮಾಜಿಕ ಅಸಮತೋಲನ ಮತ್ತು ಮೌಲ್ಯಹೀನತೆಯಂತಹ ಸವಾಲುಗಳನ್ನು ಎದುರಿಸುತ್ತಿರುವಾಗ, ಭಾರತೀಯ ಜ್ಞಾನ ಪರಂಪರೆ, ಸಂಸ್ಕೃತ ಸಾಹಿತ್ಯ ಮತ್ತು ಸಂಸ್ಕೃತದ ‘ವಸುಧೈವ ಕುಟುಂಬಕಂ’ ಮತ್ತು ‘ಸರ್ವೇ ಜನೋ ಸುಖಿನೋ ಭವಂತು’ ಎಂಬ ಶಾಶ್ವತ ತತ್ವಗಳು ಮಾನವೀಯತೆಗೆ ಹೊಸ ದಿಕ್ಕನ್ನು ನೀಡುತ್ತಿವೆ ಎಂದು ರಾಜ್ಯಪಾಲರು ತಿಳಿಸಿದರು. ಮುಂಬರುವ ವರ್ಷಗಳಲ್ಲಿ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯವು ಸಂಸ್ಕೃತ ಅಧ್ಯಯನ, ಸಂಶೋಧನೆ, ಹಸ್ತಪ್ರತಿ ಸಂರಕ್ಷಣೆ, ಭಾರತೀಯ ಜ್ಞಾನ ಸಂಪ್ರದಾಯ ಮತ್ತು ಅಂತಾರಾಷ್ಟ್ರೀಯ ಶೈಕ್ಷಣಿಕ ಸಹಯೋಗದಲ್ಲಿ ಹೊಸ ಎತ್ತರವನ್ನು ಸಾಧಿಸುತ್ತದೆ ಮತ್ತು ಪ್ರಾಚೀನ ಜ್ಞಾನ ಮತ್ತು ಆಧುನಿಕ ವಿಜ್ಞಾನದ ನಡುವೆ ಸೇತುವೆಯನ್ನು ನಿರ್ಮಿಸಲು ಶ್ರಮಿಸುತ್ತದೆ ಎಂದು ನನಗೆ ವಿಶ್ವಾಸವಿದೆ ಎಂದು ರಾಜ್ಯಪಾಲರು ಹೇಳಿದರು. ಇದೇ ಸಂದರ್ಭದಲ್ಲಿ ಭಿಕ್ಷು ಆನಂದ ಥೇರ, ಡಾ.ಪುಷ್ಪಾ ದೀಕ್ಷಿತ್, ಡಾ.ವ್ಯಾಸನ್ ಕೆರೆ ಪ್ರಭಂಜನಾಚಾರ್ಯ, ಡಾ.ನಿರ್ಮಲಾನಂದನಾಥ ಸ್ವಾಮೀಜಿ, ಪ್ರೊ.ಶಿಂಗಪ್ಪ ಎಚ್.ಎಂ. ಮತ್ತು ಪ್ರೊ. ಸುಕಾಂತ ಕುಮಾರ್ ಸೇನಾಪತಿ ಅವರಿಗೆ ಧರ್ಮ ಮತ್ತು ಸಂಸ್ಕೃತಿಯ ಪ್ರಚಾರ ಹಾಗೂ ಸಮಾಜ ಸೇವೆಯಲ್ಲಿ ನೀಡಿದ ಕೊಡುಗೆಗಾಗಿ ಗೌರವ ಪದವಿಗಳನ್ನು ಪ್ರದಾನ ಮಾಡಲಾಯಿತು. ಸಮಾರಂಭದಲ್ಲಿ ಸಂಸದ ಡಾ.ಸಿ.ಎನ್.ಮಂಜುನಾಥ್, ಕುಲಪತಿ ಅಹಲ್ಯಾ ಮತ್ತು ಇತರರು ಉಪಸ್ಥಿತರಿದ್ದರು.
ಕೇಂದ್ರದ ವಿಫಲ ವಿದೇಶಾಂಗ ನೀತಿ, ಅಸಮರ್ಥ ನಿರ್ವಹಣೆಯಿಂದಲೇ ಇಂಧನ ಅಹಾಕಾರ : ಕೆ.ಎಚ್.ಮುನಿಯಪ್ಪ
ಬೆಂಗಳೂರು : ಕೇಂದ್ರ ಸರಕಾರದ ವಿಫಲ ವಿದೇಶಾಂಗ ನೀತಿ ಹಾಗೂ ಅಸಮರ್ಥ ನಿರ್ವಹಣೆ ಪರಿಣಾಮದಿಂದಲೇ ದೇಶದಲ್ಲಿ ಇಂಧನ ಅಹಾಕಾರ ಎದುರಾಗಿದೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ.ಎಚ್.ಮುನಿಯಪ್ಪ ಹೇಳಿದ್ದಾರೆ. ಮಂಗಳವಾರ ಈ ಕುರಿತು ತಮ್ಮ ಎಕ್ಸ್ ಖಾತೆಯಲ್ಲಿ ಪ್ರತಿಕ್ರಿಯಿಸಿರುವ ಸಚಿವರು,ಇಂಧನ ಪೂರೈಕೆಯಲ್ಲಿ ರಾಜ್ಯಗಳ ನಡುವೆ ಸಮಾನತೆ ಕಾಣುತ್ತಿಲ್ಲ ಎಂಬ ಅಂಶವೂ ಗಮನಕ್ಕೆ ಬಂದಿದೆ.ಅದರಲ್ಲೂ, ಕರ್ನಾಟಕ ರಾಜ್ಯದೊಂದಿಗೆ ತಾರತಮ್ಯ ಧೋರಣೆ ಅನುಸರಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ. ದೇಶದಲ್ಲಿ ಎಲ್ಪಿಜಿ ಗ್ಯಾಸ್, ವಾಣಿಜ್ಯ ಗ್ಯಾಸ್ ಸಿಲಿಂಡರ್, ಸಿಎನ್ಜಿ, ಪೆಟ್ರೋಲ್ ಹಾಗೂ ಡೀಸೆಲ್ ಪೂರೈಕೆ ಮಾಡುವ ಜವಾಬ್ದಾರಿ ಸಂಪೂರ್ಣವಾಗಿ ಕೇಂದ್ರ ಸರಕಾರದ ಅಧೀನದಲ್ಲಿದೆ. ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಮೂಲಕ ಈ ವ್ಯವಸ್ಥೆ ನಡೆಯುತ್ತದೆ. ರಾಜ್ಯ ಸರಕಾರಕ್ಕೆ ಈ ಪೂರೈಕೆಯನ್ನು ನೇರವಾಗಿ ನಿಯಂತ್ರಿಸುವ ಅಧಿಕಾರವಿಲ್ಲ ಎಂಬುದು ಸಾರ್ವಜನಿಕರು ಗಮನಿಸಬೇಕಾದ ವಿಷಯವಾಗಿದೆ ಎಂದು ಅವರು ತಿಳಿಸಿದ್ದಾರೆ. ಕೊಲ್ಲಿ ರಾಷ್ಟ್ರಗಳ ಪ್ರದೇಶದಲ್ಲಿ ಉಂಟಾಗಿರುವ ಯುದ್ಧದ ಪರಿಣಾಮವಾಗಿ ಜಾಗತಿಕ ಮಟ್ಟದಲ್ಲಿ ಇಂಧನ ಸರಬರಾಜು ವ್ಯತ್ಯಯಗೊಂಡಿದೆ. ಅದರ ಪರಿಣಾಮ ದೇಶದೊಳಗೂ ತೀವ್ರವಾಗಿ ಕಾಣಿಸುತ್ತಿದ್ದು, ಕರ್ನಾಟಕದಲ್ಲಿಯೂ ಎಲ್ಪಿಜಿ ಗ್ಯಾಸ್ ಹಾಗೂ ಇಂಧನ ಕೊರತೆ ಉಂಟಾಗಿದೆ. ಇದರಿಂದ ಜನರ ದೈನಂದಿನ ಬದುಕು ಸಂಕಷ್ಟಕ್ಕೆ ಸಿಲುಕಿದೆ ಎಂದೂ ಅವರು ಉಲ್ಲೇಖಿಸಿದ್ದಾರೆ. ಸಿಎನ್ಜಿ ಕೊರತೆಯಿಂದ ಸಂಕಷ್ಟದಲ್ಲಿರುವ ಆಟೊ ಚಾಲಕರು, ವಾಣಿಜ್ಯ ಗ್ಯಾಸ್ ಕೊರತೆಯಿಂದ ತೊಂದರೆ ಅನುಭವಿಸುತ್ತಿರುವ ಹೊಟೇಲ್ ಮತ್ತು ಆಹಾರ ಉದ್ಯಮಗಳು, ಅಡುಗೆಗೆ ಗ್ಯಾಸ್ ಸಿಗದೇ ಪರದಾಡುತ್ತಿರುವ ಗೃಹಿಣಿಯರು. ಈ ಎಲ್ಲವನ್ನು ಗಮನಿಸಿದಾಗ, ಕೇಂದ್ರ ಸರಕಾರವು ಸಮಯೋಚಿತ ಕ್ರಮಗಳನ್ನು ಕೈಗೊಳ್ಳುವಲ್ಲಿ ವಿಫಲವಾಗಿದೆ ಎಂಬುದು ಸ್ಪಷ್ಟವಾಗುತ್ತದೆ. ವಿದೇಶಾಂಗ ನೀತಿ ಮತ್ತು ಇಂಧನ ನಿರ್ವಹಣೆಯ ನಡುವೆ ಸಮನ್ವಯದ ಕೊರತೆ ಕಾಣಿಸಿಕೊಂಡಿದ್ದು, ಅದರ ಹೊರೆ ಜನರ ಮೇಲೆ ಬಿದ್ದಿದೆ ಎಂದು ಟೀಕಿಸಿದ್ದಾರೆ. ಇದಲ್ಲದೇ, ಇಂಧನ ಪೂರೈಕೆಯಲ್ಲಿ ರಾಜ್ಯಗಳ ನಡುವೆ ಸಮಾನತೆ ಕಾಣುತ್ತಿಲ್ಲ ಎಂಬ ಅಂಶವೂ ಗಮನಕ್ಕೆ ಬಂದಿದೆ. ಕೆಲವು ರಾಜ್ಯಗಳಿಗೆ ಹೆಚ್ಚು ಆದ್ಯತೆ ನೀಡಲಾಗುತ್ತಿರುವಂತಿದೆ. ಕರ್ನಾಟಕ ರಾಜ್ಯದೊಂದಿಗೆ ತಾರತಮ್ಯ ಧೋರಣೆ ಅನುಸರಿಸಲಾಗುತ್ತಿದೆ ಎಂಬ ಆತಂಕವೂ ವ್ಯಕ್ತವಾಗಿದೆ. ಇದರಿಂದ ರಾಜ್ಯದ ಲಕ್ಷಾಂತರ ಜನರು ಅನಗತ್ಯ ಸಂಕಷ್ಟ ಅನುಭವಿಸುವಂತಾಗಿದೆ ಎಂದು ಸಚಿವರು ಹೇಳಿದ್ದಾರೆ.
Mysuru | ಗುಂಡೇಟಿನಿಂದ ಚಿರತೆ ಸಾವು: ತನಿಖೆಗೆ ಸಚಿವ ಈಶ್ವರ್ ಖಂಡ್ರೆ ಆದೇಶ
ಮೈಸೂರು : ಮೈಸೂರು ಜಿಲ್ಲೆಯ ಹುಣಸೂರು ವಿಭಾಗದ ಪಿರಿಯಾಪಟ್ಟಣ ವ್ಯಾಪ್ತಿಯ ಗುಳೇದಹಳ್ಳ ರಾಜ್ಯ ಅರಣ್ಯದಿಂದ 2 ಕೀ.ಮೀ. ದೂರದಲ್ಲಿರುವ ಕೊಪ್ಪ ವಿಭಾಗದಲ್ಲಿ ಗುಂಡೇಟಿನಿಂದ ಚಿರತೆ ಸಾವಿಗೀಡಾಗಿರುವುದು ವರದಿಯಾಗಿದೆ. ಈ ಬಗ್ಗೆ ಸಮಗ್ರ ತನಿಖೆ ನಡೆಸಬೇಕು ಎಂದು ಸೂಚಿಸಿರುವ ಅರಣ್ಯ ಸಚಿವ ಈಶ್ವರ್ ಬಿ.ಖಂಡ್ರೆ ಅವರು, ಹೆಣ್ಣು ಚಿರತೆ ಗುಂಡೇಟಿನಿಂದ ಮೃತಪಟ್ಟಿರುವುದು ಅತ್ಯಂತ ನೋವಿನ ಸಂಗತಿ. ವನ್ಯಜೀವಿ ಅಂಗಾಂಗಕ್ಕಾಗಿ ಕಳ್ಳಬೇಟೆ ಇನ್ನೂ ನಡೆಯುತ್ತಿದೆ ಎಂಬುದಕ್ಕೆ ಇದು ಪುಷ್ಟಿ ನೀಡುತ್ತಿದೆ. ಈ ನಿಟ್ಟಿನಲ್ಲಿ ತನಿಖೆ ನಡೆಸಬೇಕು ಎಂದು ಸೂಚಿಸಿದ್ದಾರೆ.
ಮೈಸೂರು ಪೊಲೀಸರ ಕಾರ್ಯಾಚರಣೆ : ಡ್ರಗ್ ಪೆಡ್ಲರ್ನ ಬಂಧನ; 25 ಕೆಜಿ ಗಾಂಜಾ ವಶ
30 ಪೆಡ್ಲರ್ಗಳ ಗಡಿಪಾರು
ವಾಷಿಂಗ್ಟನ್: “ಇಂದು ರಾತ್ರಿ ಇಡೀ ನಾಗರಿಕತೆ ಸಾಯಲಿದೆ” ಎಂದು ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೀಡಿದ ಎಚ್ಚರಿಕೆಯ ಬೆನ್ನಲ್ಲೇ, ಇರಾನ್ ವಿರುದ್ಧ ಪರಮಾಣು ಶಸ್ತ್ರಾಸ್ತ್ರಗಳ ಬಳಕೆಯ ಯಾವುದೇ ಸಾಧ್ಯತೆಯನ್ನು ಶ್ವೇತಭವನ ಸ್ಪಷ್ಟವಾಗಿ ತಳ್ಳಿಹಾಕಿದೆ. ಶಾಂತಿ ಮಾತುಕತೆಗಳಲ್ಲಿ ಪ್ರಗತಿ ಸಾಧಿಸಲು ಮಂಗಳವಾರ ರಾತ್ರಿ 8 ಗಂಟೆ (EST) ಗಡುವು ನಿಗದಿಯಾಗಿದ್ದರೂ, ಅದನ್ನು ಇರಾನ್ ಪೂರೈಸದಿದ್ದರೆ ಗಂಭೀರ ಪರಿಣಾಮಗಳು ಎದುರಾಗಲಿವೆ ಎಂದು ಟ್ರಂಪ್ ಎಚ್ಚರಿಸಿದ್ದರು. ಈ ಹೇಳಿಕೆಗಳು ಜಾಗತಿಕ ಮಟ್ಟದಲ್ಲಿ ಆತಂಕ ಹುಟ್ಟುಹಾಕಿದ್ದು, ಅಮೆರಿಕದ ಮುಂದಿನ ಕ್ರಮಗಳ ಬಗ್ಗೆ ಅನಿಶ್ಚಿತತೆಯನ್ನು ಹೆಚ್ಚಿಸಿವೆ. ಇದರ ಮಧ್ಯೆ, ಇರಾನ್ “ಆರ್ಥಿಕ ಭಯೋತ್ಪಾದನೆ” ಕ್ರಮಗಳನ್ನು ಮುಂದುವರಿಸಿದರೆ, ಅಮೆರಿಕದ ಬಳಿ “ಇಲ್ಲಿಯವರೆಗೆ ಬಳಸಿಲ್ಲದ ಸಾಧನಗಳು” ಇವೆ ಎಂದು ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ಹೇಳಿದ್ದಾರೆ. ಇರಾನ್ ತನ್ನ ನಿಲುವು ಬದಲಾಯಿಸದಿದ್ದರೆ ಆ ಸಾಧನಗಳನ್ನು ಬಳಸುವ ಅಧಿಕಾರ ಅಧ್ಯಕ್ಷರಿಗೆ ಇದೆ ಎಂದು ಅವರು ತಿಳಿಸಿದ್ದಾರೆ. ಈ ಹೇಳಿಕೆಗಳಿಂದ ಪರಮಾಣು ಉಲ್ಬಣದ ಬಗ್ಗೆ ಕಳವಳ ಹೆಚ್ಚಿದ ಹಿನ್ನೆಲೆಯಲ್ಲಿ, ಶ್ವೇತಭವನ ತಕ್ಷಣ ಸ್ಪಷ್ಟನೆ ನೀಡಿದೆ. ವ್ಯಾನ್ಸ್ ಹೇಳಿಕೆಯನ್ನು ಪರಮಾಣು ಆಯ್ಕೆಯೊಂದಿಗೆ ಸಂಪರ್ಕಿಸುವ ವ್ಯಾಖ್ಯಾನಗಳನ್ನು ತಿರಸ್ಕರಿಸಿ, ಅಂತಹ ಯಾವುದೇ ಸೂಚನೆ ನೀಡಲಾಗಿಲ್ಲ ಎಂದು ತಿಳಿಸಿದೆ. ಗಡುವು ಸಮೀಪಿಸುತ್ತಿರುವ ಸಂದರ್ಭದಲ್ಲೇ, ವಾಷಿಂಗ್ಟನ್ ಮತ್ತು ಟೆಹ್ರಾನ್ ನಡುವೆ ಒಪ್ಪಂದ ಸಾಧ್ಯವೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಶಾಂತಿ ಮಾತುಕತೆಗಳ ಭವಿಷ್ಯ ಅನಿಶ್ಚಿತವಾಗಿಯೇ ಉಳಿದಿದೆ. ವಾಲ್ ಸ್ಟ್ರೀಟ್ ಜರ್ನಲ್ ವರದಿ ಪ್ರಕಾರ, ಗಡುವಿನೊಳಗೆ ಇರಾನ್ ಹಾರ್ಮುಜ್ ಜಲಸಂಧಿಯನ್ನು ಮತ್ತೆ ತೆರೆಯುವ ಸಾಧ್ಯತೆ ಬಗ್ಗೆ ಸಂಧಾನಕಾರರು ಅನುಮಾನ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ, ಪಾಕಿಸ್ತಾನದಲ್ಲಿ ಶಾಂತಿ ಪ್ರಸ್ತಾಪಕ್ಕೆ ಮಧ್ಯಸ್ಥಿಕೆ ವಹಿಸಲು ಕೊನೆಯ ಹಂತದ ರಾಜತಾಂತ್ರಿಕ ಪ್ರಯತ್ನಗಳು ನಡೆಯುತ್ತಿವೆ ಎನ್ನಲಾಗಿದೆ. ಆದರೆ, ಸೌದಿ ಅರೇಬಿಯಾ ಮಿಲಿಟರಿ ಪ್ರತಿಕ್ರಿಯೆ ನೀಡಿದರೆ, ರಿಯಾದ್ನೊಂದಿಗೆ ಇರುವ ರಕ್ಷಣಾ ಬದ್ಧತೆಗಳಿಂದ ಪಾಕಿಸ್ತಾನವೂ ಸಂಘರ್ಷಕ್ಕೆ ಸೆಳೆಯಲ್ಪಡುವ ಸಾಧ್ಯತೆ ಇದೆ ಎಂದು ರಾಯಿಟರ್ಸ್ ವರದಿ ಉಲ್ಲೇಖಿಸಿದೆ. ಇನ್ನೊಂದೆಡೆ, ಇರಾನ್ ನ ಸರ್ಕಾರಿ ಸ್ವಾಮ್ಯದ ‘ಟೆಹ್ರಾನ್ ಟೈಮ್ಸ್’ ಪತ್ರಿಕೆ, ಅಮೆರಿಕದೊಂದಿಗೆ ರಾಜತಾಂತ್ರಿಕ ಮತ್ತು ಪರೋಕ್ಷ ಮಾರ್ಗಗಳು ಮುಚ್ಚಲ್ಪಟ್ಟಿವೆ ಎಂದು ಹೇಳಿಕೊಂಡಿದ್ದು, ಸಂವಾದಕ್ಕೆ ಅವಕಾಶಗಳಿಲ್ಲ ಎಂದು ಹೇಳಿದೆ.
America Attacks Iran: ಮಧ್ಯಪ್ರಾಚ್ಯದಲ್ಲಿ ಯುದ್ಧದ ಕಿಚ್ಚು: ಇರಾನ್ನಲ್ಲಿರುವ ಭಾರತೀಯರಿಗೆ ಮಹತ್ವದ ಸಲಹೆ
America Attacks Iran: ಪಶ್ಚಿಮ ಏಷ್ಯಾದಲ್ಲಿ ಯುದ್ಧದ ಭೀತಿ ಈಗ ಉತ್ತುಂಗಕ್ಕೇರಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇರಾನ್ಗೆ ನೀಡಿದ್ದ ಗಡುವು ಮುಗಿಯುವ ಮೊದಲೇ, ಇರಾನ್ನ ಪ್ರಮುಖ ನೆಲೆಗಳ ಮೇಲೆ ಅಮೆರಿಕ ಮತ್ತು ಇಸ್ರೇಲ್ ಪಡೆಗಳು ಜಂಟಿ ದಾಳಿ ನಡೆಸಿವೆ. ಇದರ ಬೆನ್ನಲ್ಲೇ ಭಾರತೀಯ ಪ್ರಜೆಗಳಿಗೆ ಅಭಯದ ಸೂಚನೆಯನ್ನು ನೀಡಲಾಗಿದೆ. ತಮ್ಮ 'ಟ್ರೂತ್ ಸೋಶಿಯಲ್'ನಲ್ಲಿ ಅಧ್ಯಕ್ಷ
ಬೆಳಗಾವಿ ಜಿಲ್ಲೆಯ ಹೂಲಿ ಗ್ರಾ.ಪಂಯಿಂದ ‘ಕುಮಾರಿ ಸಮೃದ್ಧಿ’ ಯೋಜನೆ: ಪ್ರಿಯಾಂಕ್ ಖರ್ಗೆ ಶ್ಲಾಘನೆ
ಬೆಂಗಳೂರು : ಹೆಣ್ಣು ಮಕ್ಕಳನ್ನು ಪ್ರೋತ್ಸಾಹಿಸಲು ಹಾಗೂ ಅವರ ಭವಿಷ್ಯಕ್ಕೆ ನೇರವಾಗಲು ‘ಕುಮಾರಿ ಸಮೃದಿ’ ಹೆಸರಲ್ಲಿ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಹೂಲಿ ಗ್ರಾಮ ಪಂಚಾಯತಿ ಇತರ ಆಡಳಿತಗಳಿಗೆ ಮಾದರಿಯಾದ ಹಾಗೂ ಅನುಕರಣೀಯವಾಗಿರುವ ವಿಶೇಷ ಕಾರ್ಯಕ್ರಮವೊಂದನ್ನು ರೂಪಿಸಿರುವ ಕ್ರಮವನ್ನು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಶ್ಲಾಘಿಸಿದ್ದಾರೆ. ಹೂಲಿ ಗ್ರಾಮದಲ್ಲಿ ಜನಿಸುವ ಪ್ರತಿ ಹೆಣ್ಣು ಮಕ್ಕಳ ಹೆಸರಲ್ಲಿ ಪಂಚಾಯತಿ ಕಡೆಯಿಂದ 5,500 ರೂ.ಠೇವಣಿ ಇರಿಸುವ ಮೂಲಕ, ಹೆಣ್ಣು ಮಕ್ಕಳ ಭವಿಷ್ಯಕ್ಕೆ ಆರ್ಥಿಕ ಭದ್ರತೆ ಒದಗಿಸುವ ಯೋಜನೆಯನ್ನು ರೂಪಿಸಿದ್ದು ಕರ್ನಾಟಕದಲ್ಲಿ ಇದೊಂದು ವಿನೂತನ ಕಾರ್ಯಕ್ರಮವಾಗಿದೆ ಎಂದು ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ. ಸ್ವಯಂ ಸರಕಾರಗಳಾದ ಗ್ರಾಮ ಪಂಚಾಯತಿಗಳು ರಾಜ್ಯದಲ್ಲಿ ಕ್ರಿಯಾಶೀಲವಾಗಿ ತಮ್ಮದೇ ಆದ ವಿಶಿಷ್ಠ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಪ್ರೇರಣಾತ್ಮಕವಾಗಿ ಕೆಲಸ ಮಾಡುತ್ತಿವೆ, ಸಮಾಜದಲ್ಲಿ ಹೆಣ್ಣು ಮಕ್ಕಳ ಬಗ್ಗೆ ಇರುವ ಪೂರ್ವಗ್ರಹವನ್ನು ನಿವಾರಿಸಲು ಹಾಗೂ ಹೆಣ್ಣುಮಕ್ಕಳ ಪೋಷಕರಲ್ಲಿ ಆತ್ಮಸ್ಥೈರ್ಯ ತುಂಬಲು ಹೂಲಿ ಗ್ರಾಮ ಪಂಚಾಯತಿ ತೆಗೆದುಕೊಂಡಿರುವ ಈ ಐತಿಹಾಸಿಕ ನಿರ್ಧಾರ ರಾಜ್ಯದ ಇತರ ಗ್ರಾಮ ಪಂಚಾಯತಿಗಳಿಗೆ ಸ್ಫೂರ್ತಿಯಾಗಲಿ ಎಂದು ಪ್ರಿಯಾಂಕ್ ಖರ್ಗೆ ಪ್ರಕಟಣೆಯಲ್ಲಿ ಆಶಿಸಿದ್ದಾರೆ.
Bengaluru | ಮೊಬೈಲ್ ಕಳವು ಪ್ರಕರಣಗಳ ಪತ್ತೆ: 22.3 ಲಕ್ಷ ಮೌಲ್ಯದ 110 ಮೊಬೈಲ್ಗಳು ಜಪ್ತಿ
ಬೆಂಗಳೂರು : ಬೆಂಗಳೂರು ನಗರ ಉತ್ತರ ವಿಭಾಗದ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿ ಸಿಇಐಆರ್ ತಂತ್ರಾಂಶದ ಮೂಲಕ ಹಲವು ಮೊಬೈಲ್ ಕಳ್ಳತನ ಪ್ರಕರಣಗಳನ್ನು ಪತ್ತೆಹಚ್ಚಿದ್ದು, ಕಳುವಾಗಿದ್ದ 22.3 ಲಕ್ಷ ರೂ. ಮೌಲ್ಯದ ವಿವಿಧ ಕಂಪೆನಿಯ 110 ಮೊಬೈಲ್ಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತ ಸೀಮಂತ್ಕುಮಾರ್ ಸಿಂಗ್ ತಿಳಿಸಿದ್ದಾರೆ. ಬೆಂಗಳೂರು ನಗರ ಉತ್ತರ ವಿಭಾಗದ 13 ಪೊಲೀಸ್ ಠಾಣೆ ವ್ಯಾಪ್ತಿಗಳಲ್ಲಿ ಸಾರ್ವಜನಿಕರು ಕಳೆದುಕೊಂಡಿದ್ದ ಹಾಗೂ ಕಳುವಾಗಿದ್ದ ಮೊಬೈಲ್ಗಳ ವಿವರವನ್ನು ಸಿಇಐಆರ್ ಪೊರ್ಟಲ್ನಲ್ಲಿ ದೂರು ದಾಖಲಿಸಿದ್ದರು. ಈ ಬಗ್ಗೆ ತನಿಖೆ ಕೈಗೊಂಡ ಪೊಲೀಸರು ಹಿಂದಿನ ಮಾರ್ಚ್ ತಿಂಗಳಲ್ಲಿ ಸಿಇಐಆರ್ ತಂತ್ರಾಂಶದ ಸಹಾಯದಿಂದ ಮೊಬೈಲ್ಗಳ ಪತ್ತೆಕಾರ್ಯದಲ್ಲಿ ತೊಡಗಿಕೊಂಡು 110 ಮೊಬೈಲ್ಗಳನ್ನು ವಶಪಡಿಸಿಕೊಂಡಿರುವುದಾಗಿ ಸೀಮಂತ್ಕುಮಾರ್ ಸಿಂಗ್ ಮಾಹಿತಿ ನೀಡಿದ್ದಾರೆ. ಆರ್ಟಿನಗರ ವ್ಯಾಪ್ತಿಯಲ್ಲಿ 12, ಜಾಲಹಳ್ಳಿ 8, ಜೆಸಿನಗರ 9, ಮಹಾಲಕ್ಷ್ಮೀ ಲೇಔಟ್ 12, ಸಂಜಯನಗರ 6, ರಾಜಾಜಿನಗರ 10, ಸುಬ್ರಹಣ್ಯನಗರ 11, ನಂದಿನಿ ಲೇಔಟ್ 12, ಮಲ್ಲೇಶ್ವರಂ 8, ಹಬ್ಬಾಳ 3, ಯಶವಂತಪುರ 10, ಆರ್ಎಮ್ಸಿಯಾರ್ಡ್ 4, ಶ್ರೀರಾಮಪುರ ಠಾಣಾ ವ್ಯಾಪ್ತಿಯಲ್ಲಿ ಕಳುವಾಗಿದ್ದ ಐದು ಮೊಬೈಲ್ಗಳನ್ನು ಪತ್ತೆಹಚ್ಚಲಾಗಿದೆ ಎಂದು ಸೀಮಂತ್ಕುಮಾರ್ ಸಿಂಗ್ ವಿವರಿಸಿದ್ದಾರೆ. ಸಾರ್ವಜನಿಕರು ಕಳೆದುಕೊಂಡ ಮೊಬೈಲ್ಗಳ ವಿವರಗಳನ್ನು ಸಿಇಐಆರ್ ತಂತ್ರಾಂಶದಲ್ಲಿ ದಾಖಲಿಸುವುದರಿಂದ ಅಥವಾ ಪೊಲೀಸ್ ಠಾಣೆಗಳಿಗೆ ದೂರು ನೀಡುವುದರಿಂದ ಮೊಬೈಲ್ಗಳನ್ನು ಪತ್ತೆ ಮಾಡಲು ಅನುಕೂಲವಾಗುತ್ತದೆ ಎಂದು ಸೀಮಂತ್ಕುಮಾರ್ ಸಿಂಗ್ ತಿಳಿಸಿದ್ದಾರೆ.
Middle East Conflict- ಮಧ್ಯಪ್ರಾಚ್ಯದಲ್ಲಿ ಯುದ್ಧದ ಭೀತಿ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಇರಾನ್ನಲ್ಲಿರುವ ಭಾರತೀಯರಿಗೆ ಭಾರತದ ರಾಯಭಾರ ಕಚೇರಿಯು 48 ಗಂಟೆಗಳ ಕಾಲ ಜಾಗರೂಕರಾಗಿರಲು ಮತ್ತು ಮನೆಯಿಂದ ಹೊರಬರದಂತೆ ತುರ್ತು ಸೂಚನೆ ನೀಡಿದೆ. ಜೊತೆಗೆ ಭಾರತದ ರಾಯಭಾರ ಕಚೇರಿ ಜೊತೆ ಸಂಪರ್ಕದಲ್ಲಿ ಇರುವಂತೆ ತಿಳಿಸಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇರಾನ್ ಮೇಲೆ ಹಿಂದೆಂದೂ ಕಂಡರಿಯದ ದಾಳಿ ನಡೆಸುವುದಾಗಿ ಎಚ್ಚರಿಸಿದ ಬೆನ್ನಲ್ಲೇ ಈ ಮುನ್ನೆಚ್ಚರಿಕೆ ಸೂಚನೆಯನ್ನು ಅನಿವಾಸಿ ಭಾರತೀಯರಿಗೆ ನೀಡಲಾಗಿದೆ.
ಹೊಸಪೇಟೆ | ದಾಸಿಮಯ್ಯರ ವಚನಗಳು ಕಾಲಾತೀತ : ಡಾ.ಮೃತ್ಯುಂಜಯ ರುಮಾಲೆ
ಹೊಸಪೇಟೆ/ವಿಜಯನಗರ: ಸಂಪತ್ತನ್ನು ತಳ್ಳಿಹಾಕಿ ಮೌಲ್ಯಾಧಾರಿತ ಜೀವನವನ್ನು ಬೋಧಿಸಿದ ಮಹಾಶರಣ ದೇವರ ದಾಸಿಮಯ್ಯರ ಚಿಂತನೆ ಇಂದಿಗೂ ಸಮಾಜಕ್ಕೆ ದಾರಿದೀಪವಾಗಿದ್ದು, ಅವರ ವಚನಗಳು ಕಾಲಾತೀತ ಮಹತ್ವ ಹೊಂದಿವೆ ಎಂದು ನಿವೃತ್ತ ಪ್ರಾಧ್ಯಾಪಕರಾದ ಡಾ. ಮೃತ್ಯುಂಜಯ ರುಮಾಲೆ ಹೇಳಿದರು. ಕನ್ನಡ ವಿಶ್ವವಿದ್ಯಾಲಯದ ಪಂಪ ಸಭಾಂಗಣದಲ್ಲಿ ದೇವರ ದಾಸಿಮಯ್ಯ ಅಧ್ಯಯನ ಪೀಠ ಆಯೋಜಿಸಿದ್ದ “ದಾಸಿಮಯ್ಯ ವಚನಗಳಲ್ಲಿ ವಸ್ತು ಮತ್ತು ಆತ್ಮ” ವಿಷಯದ ಉಪನ್ಯಾಸದಲ್ಲಿ ಅವರು ಮಾತನಾಡಿದರು. ಬಟ್ಟೆ ನೇಯ್ದು ಜೀವನ ಸಾಗಿಸಿದ್ದ ದಾಸಿಮಯ್ಯರು “ನನಗೆ ಸಂಪತ್ತು ಬೇಡ” ಎಂದು ಹೇಳುವ ಮೂಲಕ ಆ ಕಾಲದ ಸಾಮಾಜಿಕ ವ್ಯವಸ್ಥೆಗೆ ಸೂಕ್ಷ್ಮ ಸಂದೇಶ ನೀಡಿದ್ದರು. ವಚನಕಾರ, ತತ್ವಜ್ಞಾನಿ ಮತ್ತು ಚಿಂತಕರಾಗಿ ಅವರು ವಿಶಿಷ್ಟ ಸ್ಥಾನ ಪಡೆದಿದ್ದಾರೆ ಎಂದು ಹೇಳಿದರು. ದಾಸಿಮಯ್ಯ ಹಾಗೂ ಬಸವಣ್ಣನವರು ನೇರವಾಗಿ ಭೇಟಿಯಾಗದಿದ್ದರೂ, ದಾಸಿಮಯ್ಯರ ಜೀವನ ಮತ್ತು ಚಿಂತನೆಗಳು ಬಸವಣ್ಣನವರ ಮೇಲೆ ಪರಿಣಾಮ ಬೀರಿವೆ ಎಂದು ಉಲ್ಲೇಖಿಸಿದರು. ವಚನ ಸಾಹಿತ್ಯವನ್ನು ಸಮಗ್ರವಾಗಿ ಅರ್ಥೈಸಿದಾಗ ಮಾತ್ರ ಇಂದಿನ ಗೊಂದಲಗಳಿಗೆ ಪರಿಹಾರ ದೊರೆಯುತ್ತದೆ ಎಂದು ಅಭಿಪ್ರಾಯಪಟ್ಟರು. ಮರದಲ್ಲಿನ ಬೆಂಕಿ, ಹಾಲಿನಲ್ಲಿರುವ ತುಪ್ಪ, ದೇಹದಲ್ಲಿರುವ ಆತ್ಮದಂತೆ ಕಾಣದ ಸತ್ಯಗಳನ್ನು ದಾಸಿಮಯ್ಯರು ತಮ್ಮ ವಚನಗಳಲ್ಲಿ ಸ್ಪಷ್ಟಪಡಿಸಿದ್ದಾರೆ. “ಬೇಕು” ಎನ್ನುವ ಮನೋಭಾವದಿಂದ “ಬೇಡ” ಎನ್ನುವ ತತ್ವದತ್ತ ಸಮಾಜವನ್ನು ಕೊಂಡೊಯ್ಯುವ ಚಿಂತಕರಾಗಿ ಅವರು ಕಾಣಿಸುತ್ತಾರೆ ಎಂದು ವಿವರಿಸಿದರು. 12ನೇ ಶತಮಾನದ ಪ್ರಮುಖ ತತ್ವಜ್ಞಾನಿಗಳಲ್ಲಿ ದೇವರ ದಾಸಿಮಯ್ಯ ಒಬ್ಬರಾಗಿದ್ದು, ಹಸಿವಿನ ಕುರಿತು ಮಾತನಾಡಿದ ಮೊದಲ ವಚನಕಾರರಲ್ಲಿ ಒಬ್ಬರಾಗಿದ್ದಾರೆ ಎಂದು ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಡಾ. ಡಿ.ವಿ. ಪರಮಶಿದಮೂರ್ತಿ ಮಾತನಾಡಿ, ದಾಸಿಮಯ್ಯರ ಕುರಿತು ಹೆಚ್ಚಿನ ಮೂಲಭೂತ ಸಂಶೋಧನೆ ಅಗತ್ಯವಿದೆ ಎಂದರು. ಅವರ ವಚನಗಳಲ್ಲಿ ಸಂಸಾರಿಕ ಮತ್ತು ಆಧ್ಯಾತ್ಮಿಕ ಅಂಶಗಳ ಸಮನ್ವಯವಿದೆ ಎಂದು ವಿಶ್ಲೇಷಿಸಿದರು. ಬಟ್ಟೆ ನೇಯುವ ಸಮುದಾಯವು ಮಾನವನ ನಾಗರಿಕತೆಯ ಅಭಿವೃದ್ಧಿಯಲ್ಲಿ ಮಹತ್ವದ ಪಾತ್ರ ವಹಿಸಿದೆ. ಆದರೆ ಜೈನಾ ಸಿಲ್ಕ್ ಆಮದು ಹಾಗೂ ಆಧುನಿಕ ಯಂತ್ರಗಳ ಬಳಕೆಯಿಂದ ಈ ವೃತ್ತಿಗೆ ಹಿನ್ನಡೆ ಉಂಟಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು. ಧಾರ್ಮಿಕರು, ಶೈಕ್ಷಣಿಕ ವಲಯದವರು ಮತ್ತು ಸಮಾಜ ಸುಧಾರಕರು ವಚನಗಳನ್ನು ವಿಭಿನ್ನ ರೀತಿಯಲ್ಲಿ ಅರ್ಥೈಸುತ್ತಿರುವ ಈ ಸಂದರ್ಭದಲ್ಲಿ, ವಚನಕಾರರ ಮೂಲ ಆಶಯ ಮರೆಯಾಗುತ್ತಿರುವುದು ಆತಂಕಕಾರಿ ಬೆಳವಣಿಗೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ವಿವಿಧ ವಿಭಾಗಗಳ ಡೀನ್ಗಳು, ಮುಖ್ಯಸ್ಥರು, ಪ್ರಾಧ್ಯಾಪಕರು, ಆಡಳಿತಾಧಿಕಾರಿಗಳು, ಸಂಶೋಧಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ವಿಜಯನಗರ | ಕನ್ನಡಪರ ಸಂಘಟನೆಗಳಿಂದ ತುಂಗಭದ್ರಾ ಡ್ಯಾಮ್ ಕ್ರಸ್ಟ್ ಗೇಟ್ ಕಾಮಗಾರಿ ಪರಿಶೀಲನೆ
ವಿಜಯನಗರ/ಹೊಸಪೇಟೆ : ಜಿಲ್ಲೆಯ ಹೊರವಲಯದಲ್ಲಿರುವ ತುಂಗಭದ್ರಾ ಜಲಾಶಯದಲ್ಲಿ ನಡೆಯುತ್ತಿರುವ ಕ್ರಸ್ಟ್ ಗೇಟ್ ಅಳವಡಿಕೆ ಕಾಮಗಾರಿಯನ್ನು ಕನ್ನಡಪರ ಸಂಘಟನೆಗಳ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು. ಮಳೆಗಾಲ ಸಮೀಪಿಸುತ್ತಿರುವ ಹಿನ್ನೆಲೆ ಕಾಮಗಾರಿಯ ಗುಣಮಟ್ಟ ಪರಿಶೀಲಿಸುವ ಉದ್ದೇಶದಿಂದ ಸಂಘಟನೆಗಳ ಪ್ರತಿನಿಧಿಗಳು ಟಿಬಿ ಡ್ಯಾಮ್ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು. ಈ ವೇಳೆ ಈಗಾಗಲೇ ಮಾಧ್ಯಮಗಳಲ್ಲಿ ಪ್ರಕಟಗೊಂಡಿರುವ ವರದಿಗಳನ್ನೂ ಪರಿಗಣಿಸಿದರು. ಪರಿಶೀಲನೆ ಸಂದರ್ಭದಲ್ಲಿ ಕ್ರಸ್ಟ್ ಗೇಟ್ಗಳಿಗೆ ಸಂಬಂಧಿಸಿದ ಚೈನ್ ಲಿಂಕ್ ಅಳವಡಿಕೆಯಲ್ಲಿ ಕೆಲವು ಲೋಪದೋಷಗಳಿರುವ ಬಗ್ಗೆ ಸಂಘಟನೆಗಳು ಆತಂಕ ವ್ಯಕ್ತಪಡಿಸಿದವು. ವಿಶೇಷವಾಗಿ 19ನೇ ಗೇಟಿಗೆ ಮಾತ್ರ ಹೊಸ ಚೈನ್ ಅಳವಡಿಸಿರುವುದು ಗಮನಕ್ಕೆ ಬಂದಿದ್ದು, ಉಳಿದ ಗೇಟ್ಗಳ ಸ್ಥಿತಿ ಕುರಿತು ಪ್ರಶ್ನೆಗಳು ಉದ್ಭವಿಸಿವೆ. ಈ ಕುರಿತು ಅಧಿಕಾರಿಗಳನ್ನು ಪ್ರಶ್ನಿಸಿದಾಗ, ಹೊಸ ಚೈನ್ಗಳು ಬಂದ ನಂತರ ಹಳೆಯ ಚೈನ್ಗಳನ್ನು ತೆರವುಗೊಳಿಸಿ ಎಲ್ಲಾ ಗೇಟ್ಗಳಿಗೆ ಹೊಸ ಚೈನ್ ಅಳವಡಿಸಲಾಗುವುದು ಎಂದು ಸ್ಪಷ್ಟಪಡಿಸಿದರು. ಮೂರು ರಾಜ್ಯಗಳಿಗೆ ಸಂಬಂಧಿಸಿದ ಮಹತ್ವದ ಜಲಾಶಯವಾಗಿರುವ ತುಂಗಭದ್ರಾ ಡ್ಯಾಮ್ನಲ್ಲಿ ಕಾಮಗಾರಿಯನ್ನು ಶೀಘ್ರ ಹಾಗೂ ಗುಣಮಟ್ಟದೊಂದಿಗೆ ಪೂರ್ಣಗೊಳಿಸಬೇಕು ಎಂದು ಸಂಘಟನೆಗಳ ಪದಾಧಿಕಾರಿಗಳು ಒತ್ತಾಯಿಸಿದರು. ಕರ್ನಾಟಕ, ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳ ಅಧಿಕಾರಿಗಳು ಸಮನ್ವಯದಿಂದ ಕಾರ್ಯನಿರ್ವಹಿಸಿ ರೈತರಿಗೆ ಶೀಘ್ರ ಪ್ರಯೋಜನವಾಗುವಂತೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು. ಈ ಸಂದರ್ಭದಲ್ಲಿ ವಿಜಯನಗರ ಜಿಲ್ಲೆಯ ವಿವಿಧ ಕನ್ನಡಪರ ಸಂಘಟನೆಗಳ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಸಂಬಂಧಿತ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು. ವಿಜಯನಗರ ಜಿಲ್ಲಾ ಕನ್ನಡ ಪರ ಸಂಘಟನೆಗಳ ಅಧ್ಯಾಕ್ಷರಾದ ಪಿ ವೆಂಕಟೇಶ್, ಉಪಾಧ್ಯಕ್ಷರಾದ ಗುಜ್ಜಲ್ ಗಣೇಶ್, ವಿನೋದ್, ಬಸವರಾಜ್, ಮತ್ತು ಕನ್ನಡ ಪರ ಹೋರಾಟಗಾರರು ಉಪಸ್ಥಿತರಿದ್ದರು.
ವಿಜಯನಗರ | ವಾರ್ತಾಭಾರತಿ ವರದಿ ಫಲಶ್ರುತಿ : ಗ್ರಾಮಸ್ಥರಿಗೆ ಕಾಟ ನೀಡುತ್ತಿದ್ದ ಕೋತಿ ಸೆರೆ
ಹರಪನಹಳ್ಳಿ: ತಾಲೂಕಿನ ಯರಬಾಳು ಗ್ರಾಮದಲ್ಲಿ ರೈತರ ಮೇಲೆ ದಾಳಿ ಮಾಡಿ ಗಾಯಗೊಳಿಸುತ್ತಿದ್ದ ಕೋತಿಯನ್ನು ಕೊನೆಗೂ ಸೆರೆ ಹಿಡಿಯಲಾಗಿದೆ. “ಕೋತಿ ದಾಳಿಗೆ 12ಕ್ಕೂ ಹೆಚ್ಚು ಮಂದಿ ಗಾಯ” ಎಂಬ ಶೀರ್ಷಿಕೆಯಡಿ ವಾರ್ತಾಭಾರತಿ ಪತ್ರಿಕೆಯಲ್ಲಿ ಎ.1ರಂದು ವರದಿ ಪ್ರಕಟಿಸಿತ್ತು. ಈ ವರದಿಯ ಪರಿಣಾಮವಾಗಿ ಎಚ್ಚೆತ್ತ ಗ್ರಾಮ ಪಂಚಾಯಿತಿ ಮತ್ತು ಅರಣ್ಯ ಇಲಾಖೆ ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ. ಯರಬಾಳು ಗ್ರಾಮದಲ್ಲಿ ಭಾನುವಾರ ಗಂಗಾವತಿಯ ಕೋತಿ ಸೆರೆ ತಂಡ ಆಗಮಿಸಿ ಕಾರ್ಯಾಚರಣೆ ನಡೆಸಿ, ಕೋತಿಯನ್ನು ಸೆರೆ ಹಿಡಿದು ಬೋನಿಗೆ ಹಾಕಿದ್ದಾರೆ. ಗ್ರಾಮದಲ್ಲಿ ಕೋತಿಯ ಹಾವಳಿ ಹೆಚ್ಚಾದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಗ್ರಾಮ ಪಂಚಾಯಿತಿಗೆ ದೂರು ನೀಡಿದ್ದರು. ಈ ದೂರಿನ ಮೇರೆಗೆ ಅರಣ್ಯ ಇಲಾಖೆ ಹಾಗೂ ಗ್ರಾಮ ಪಂಚಾಯಿತಿ ಸಹಯೋಗದಲ್ಲಿ ಗಂಗಾವತಿ ಮೂಲದ ಅಭಿ ಅವರ ತಂಡ ಸ್ಥಳಕ್ಕೆ ಬಂದು ಕೋತಿಯನ್ನು ಸೆರೆ ಹಿಡಿದಿದೆ ಎಂದು ನಿಟ್ಟೂರು ಗ್ರಾಮ ಪಂಚಾಯಿತಿ ಪಿಡಿಓ ರೇವಣಸಿದ್ಧಪ್ಪ ತಿಳಿಸಿದ್ದಾರೆ.
ಇರಾನ್ನಲ್ಲಿ ನೆಲೆಸಿರುವ ಭಾರತೀಯರಿಗೆ ರಾಯಭಾರ ಕಚೇರಿಯಿಂದ ತುರ್ತು ಸೂಚನೆ
ಮಂಗಳೂರು, ಎ.7: ಇರಾನ್ನಲ್ಲಿ ನೆಲೆಸಿರುವ ಭಾರತದ ಪ್ರಜೆಗಳಿಗೆ ಟೆಹ್ರಾನ್ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಮಂಗಳವಾರ ಹೊಸ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಮುಂದಿನ 48 ಗಂಟೆಗಳ ಕಾಲ ಅತ್ಯಂತ ಎಚ್ಚರಿಕೆಯಿಂದ ಇರಲು ಸೂಚಿಸಲಾಗಿದೆ. ರಾಯಭಾರ ಕಚೇರಿ ನೀಡಿರುವ ಪ್ರಮುಖ ಸೂಚನೆಗಳು ಇಂತಿವೆ:- *ಸ್ಥಳ ಬಿಟ್ಟು ಕದಲಬೇಡಿ: ಇದೀಗ ಇರಾನ್ನಲ್ಲಿರುವ ಭಾರತೀಯರು ತಾವು ಇರುವ ಸ್ಥಳದಲ್ಲೇ ಮುಂದಿನ 48 ಗಂಟೆಗಳ ಕಾಲ ಉಳಿಯಬೇಕು. ಅನಗತ್ಯ ಓಡಾಟವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. *ಸುರಕ್ಷಿತ ತಾಣಗಳ ಆಯ್ಕೆ: ವಿದ್ಯುತ್, ಮಿಲಿಟರಿ ನೆಲೆಗಳಿಂದ ದೂರವಿರಬೇಕು. ಬಹುಮಹಡಿ ಕಟ್ಟಡಗಳ ಮೇಲಿನ ಅಂತಸ್ತಿನಲ್ಲಿ ವಾಸಿಸುವವರು ಕೆಳಗಿನ ಮಹಡಿಗಳಿಗೆ ಸ್ಥಳಾಂತರಗೊಳ್ಳಲು ಮತ್ತು ಮನೆಯ ಒಳಗಡೆಯೇ ಇರಲು ಸೂಚಿಸಲಾಗಿದೆ. *ರಸ್ತೆಗಳಲ್ಲಿ ಸಂಚರಿಸಲು ಅನುಮತಿ: ರಸ್ತೆಗಳಲ್ಲಿ ಅನಿವಾರ್ಯವಾಗಿ ಸಂಚರಿಸಬೇಕಾದ ಸಂದರ್ಭ ಎದುರಾದಲ್ಲಿ, ಕಡ್ಡಾಯವಾಗಿ ರಾಯಭಾರ ಕಚೇರಿಯ ಅನುಮತಿ ಪಡೆಯಬೇಕು ಮತ್ತು ರಾಯಭಾರ ಕಚೇರಿಯ ನಿರಂತರ ಸಂಪರ್ಕದಲ್ಲಿರಬೇಕು. *ಹೋಟೆಲ್ಗಳಲ್ಲಿರುವವರಿಗೆ ಸೂಚನೆ: ರಾಯಭಾರ ಕಚೇರಿಯ ವತಿಯಿಂದ ವ್ಯವಸ್ಥೆ ಮಾಡಲಾಗಿರುವ ಹೋಟೆಲ್ಗಳಲ್ಲಿ ತಂಗಿರುವ ಭಾರತೀಯರು ಹೊರಗೆ ಬರಬಾರದು ಹಾಗೂ ಅಲ್ಲಿ ನಿಯೋಜನೆಗೊಂಡಿರುವ ರಾಯಭಾರ ಕಚೇರಿಯ ತಂಡದೊಂದಿಗೆ ನಿರಂತರ ಸಂಪರ್ಕದಲ್ಲಿರಬೇಕು. *ತುರ್ತು ಸಂಪರ್ಕ ಸಂಖ್ಯೆಗಳು: ಯಾವುದೇ ತುರ್ತು ಸಂದರ್ಭಗಳಲ್ಲಿ ಸಹಾಯಕ್ಕಾಗಿ ಭಾರತೀಯ ರಾಯಭಾರ ಕಚೇರಿಯ ನ್ನು ಸಂಪರ್ಕಿಸಿಸುವಂತೆ ಸೂಚನೆ ನೀಡಲಾಗಿದ್ದು, ಸಂಪರ್ಕಿಸಲು ಮೊಬೈಲ್ ಸಂಖ್ಯೆಗಳು ಹಾಗೂ ಇಮೇಲ್ ವಿಳಾಸ ಇಂತಿವೆ. *ಮೊಬೈಲ್ ಸಂಖ್ಯೆಗಳು: +989128109115, +989128109102, +989128109109, +989932179359 ಇಮೇಲ್: cons.tehran@mea.gov.in ಭಾರತೀಯರು ಅಧಿಕೃತ ಮಾಹಿತಿಗಾಗಿ ರಾಯಭಾರ ಕಚೇರಿಯ ಜಾಲತಾಣಗಳನ್ನು ಗಮನಿಸುತ್ತಿರಬೇಕೆಂದು ಭಾರತದ ರಾಯಭಾರ ಕಚೇರಿ ಪ್ರಕಟನೆಯಲ್ಲಿ ತಿಳಿಸಿದೆ.
ಅಮೆರಿಕದ ಜೊತೆಗಿನ ಎಲ್ಲಾ ಸಂವಹನಗಳನ್ನು ಸ್ಥಗಿತಗೊಳಿಸಿದ ಇರಾನ್: ವರದಿ
ಟೆಹ್ರಾನ್, ಎ.7: ಅಮೆರಿಕದೊಂದಿಗಿನ ಎಲ್ಲಾ ರಾಜತಾಂತ್ರಿಕ ಮತ್ತು ಪರೋಕ್ಷ ಸಂವಹನ ಮಾರ್ಗಗಳನ್ನು ಇರಾನ್ ಸ್ಥಗಿತಗೊಳಿಸಿದೆ ಎಂದು ಇರಾನ್ನ ಮಾಧ್ಯಮ ಸಂಸ್ಥೆ `ಟೆಹ್ರಾನ್ ಟೈಮ್ಸ್' ಮಂಗಳವಾರ ವರದಿ ಮಾಡಿದೆ. ಅಮೆರಿಕಾದೊಂದಿಗಿನ ಎಲ್ಲಾ ರಾಜತಾಂತ್ರಿಕ ಮತ್ತು ಪರೋಕ್ಷ ಸಂವಹನ ವ್ಯವಸ್ಥೆಯನ್ನು ಇರಾನ್ ಮುಚ್ಚಿದೆ. ಯಾವುದೇ ಮತ್ತು ಎಲ್ಲಾ ಸಂದೇಶ ವಿನಿಮಯಗಳನ್ನೂ ಸ್ಥಗಿತಗೊಳಿಸಲಾಗಿದೆ ಎಂದು ವರದಿ ತಿಳಿಸಿದೆ. ಹಾರ್ಮುಝ್ ಜಲಸಂಧಿಯನ್ನು ಮತ್ತೆ ತೆರೆಯಲು ಇರಾನ್ಗೆ ಟ್ರಂಪ್ ಗಡುವು ನೀಡುವುದಕ್ಕೆ ಸ್ವಲ್ಪ ಮೊದಲು ಇರಾನ್ ಈ ಕ್ರಮ ಕೈಗೊಂಡಿದೆ ಎಂದು ವರದಿಯಾಗಿದೆ. ಇದಕ್ಕೂ ಮುನ್ನ ವಾಶಿಂಗ್ಟನ್ನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ್ದ ಅಮೆರಿಕದ ಉಪಾಧ್ಯಕ್ಷ ಜೆ.ಡಿ.ವ್ಯಾನ್ಸ್ `ಮಾತುಕತೆ ಈಗಲೂ ನಡೆಯುತ್ತಿದೆ. ಉತ್ತಮ ಫಲಿತಾಂಶ ಬರಬಹುದು ಎಂಬ ವಿಶ್ವಾಸವಿದೆ ಎಂದು ಹೇಳಿದ್ದರು. ಈ ಮಧ್ಯೆ, ಇರಾನ್ನ ಜನರು ಸ್ವಾತಂತ್ರ್ಯಕ್ಕಾಗಿ ಎಷ್ಟೇ ಕಷ್ಟ ಅನುಭವಿಸಲೂ ಸಿದ್ಧರಿದ್ದಾರೆ ಎಂದು ಅಮೆರಿಕ ಅಧ್ಯಕ್ಷ ಟ್ರಂಪ್ ಪ್ರತಿಪಾದಿಸಿದ್ದಾರೆ. ಇರಾನ್ನ ಮೇಲೆ ಬಾಂಬ್ ಅಭಿಯಾನವನ್ನು ಮುಂದುವರಿಸಬೇಕು ಎಂದು ಅಲ್ಲಿನ ಜನರೇ ಬಯಸುತ್ತಿದ್ದಾರೆ. ಯಾಕೆಂದರೆ ಸ್ವಾತಂತ್ರ್ಯ ಪಡೆಯಬೇಕಿದ್ದರೆ ಕೆಲವು ಕಷ್ಟನಷ್ಟಗಳನ್ನು ಅನುಭವಿಸಬೇಕು ಎಂಬುದು ಅವರಿಗೆ ತಿಳಿದಿದೆ ಎಂದು ಟ್ರಂಪ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ. ಇರಾನ್ ಯುದ್ಧಕ್ಕೆ ಸಂಬಂಧಿಸಿದ ಕೆಲವು ಮಹತ್ವದ ಬೆಳವಣಿಗೆಗಳು: ಮಂಗಳವಾರ ಬೆಳಿಗ್ಗೆ ಸೌದಿ ಅರೆಬಿಯಾದತ್ತ ಡ್ರೋನ್ಗಳು ಹಾಗೂ ಕ್ಷಿಪಣಿಗಳನ್ನು ಇರಾನ್ ಪ್ರಯೋಗಿಸಿದ್ದು ದೇಶದ ಅತೀ ದೊಡ್ಡ ಕೈಗಾರಿಕಾ ಕೇಂದ್ರ ಅಲ್ ಜುಬೈಲ್ನಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡಿದ್ದು ಸ್ಫೋಟವೂ ಸಂಭವಿಸಿದೆ ಎಂದು ವರದಿಯಾಗಿದೆ. ಸೋಮವಾರ ತಡರಾತ್ರಿ ಕುವೈತ್ನಲ್ಲಿ ಅಲಿ ಅಲ್ಸಲೆಮ್ ವಾಯುನೆಲೆಯ ಮೇಲೆ ನಡೆದ ಡ್ರೋನ್ ದಾಳಿಯಲ್ಲಿ ಕನಿಷ್ಠ 15 ಅಮೆರಿಕನ್ ಸೈನಿಕರು ಗಾಯಗೊಂಡಿರುವುದಾಗಿ ಅಮೆರಿಕದ ಮೂಲಗಳು ಹೇಳಿವೆ. ಮಂಗಳವಾರ ಬೆಳಿಗ್ಗೆ ಟೆಹ್ರಾನ್ ಮೇಲೆ ಅಮೆರಿಕ-ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ಯಹೂದಿಗಳ ಪ್ರಾರ್ಥನಾ ಮಂದಿರ ಸಂಪೂರ್ಣ ನೆಲಸಮಗೊಂಡಿರುವುದಾಗಿ ವರದಿಯಾಗಿದೆ. ಯಹೂದಿ ಧರ್ಮವು ಇರಾನ್ನಲ್ಲಿ ಕಾನೂನುಬದ್ಧವಾಗಿ ಗುರುತಿಸಲ್ಪಟ್ಟ ಅಲ್ಪಸಂಖ್ಯಾತ ಧರ್ಮಗಳಲ್ಲಿ ಒಂದಾಗಿದೆ ಮತ್ತು ಇರಾನ್ ಸಣ್ಣ ಯಹೂದಿ ಸಮುದಾಯವನ್ನು ಹೊಂದಿದೆ.
Kalaburagi | ಬಿಜೆಪಿ ಜಿಲ್ಲಾ ಎಸ್ಸಿ ಮೋರ್ಚಾಕ್ಕೆ ಪದಾಧಿಕಾರಿಗಳ ನೇಮಕ
ಕಲಬುರಗಿ: ಭಾರತೀಯ ಜನತಾ ಪಕ್ಷದ ಕಲಬುರಗಿ ಗ್ರಾಮಾಂತರ ಜಿಲ್ಲಾಧ್ಯಕ್ಷರ ಆದೇಶದ ಮೇರೆಗೆ ಕಲಬುರಗಿ ಗ್ರಾಮಾಂತರ ಜಿಲ್ಲೆಯ ಸಂಘಟನಾತ್ಮಕ ಜಿಲ್ಲಾ ಎಸ್.ಸಿ.ಮೋರ್ಚಾ ಪದಾಧಿಕಾರಿಗಳನ್ನು ನೇಮಕ ಮಾಡಲಾಗಿದೆ ಎಂದು ಎಸ್ ಸಿ ಮೋರ್ಚಾದ ಜಿಲ್ಲಾಧ್ಯಕ್ಷರಾದ ಮಹೇಂದ್ರ ಪೂಜಾರಿ ತಿಳಿಸಿದ್ದಾರೆ. ಉಪಾಧ್ಯಕ್ಷರಾಗಿ ಶಿವಕುಮಾರ ತೊಟನಳ್ಳಿ, ರಾಜು ಮುಕ್ಕಣ್ಣಾ, ವಿನೋದ ರಾಠೋಡ, ಶರಣು ಹಾಗರಗುಂಡಗಿ, , ಪ್ರಕಾಶ ತೊಳೆ, ಪ್ರಧಾನ ಕಾರ್ಯದರ್ಶಿಗಳಾಗಿ ಗುಂಡಪ್ಪ ಶಿರಾಡೋಣ, ತಿಪ್ಪಣ್ಣ ರಾಠೋಡ, ಕಾರ್ಯದರ್ಶಿಗಳಾಗಿ ವೆಂಕಟೇಶ ಮೇಸ್ತ್ರಿ, ರವಿ ಪವಾರ, ಆಕಾಶ ಪಾತ್ರೆ, ನಾಗೇಶ ಕೊಳ್ಳಿ, ರಾಯಪ್ಪ ಕೊಳಕೂರ, ಕೋಶಾಧ್ಯಕ್ಷರಾಗಿ ದುರ್ಗಪ್ಪಾ ಪವಾರ, ಕಾರ್ಯಲಯ ಕಾರ್ಯದರ್ಶಿಯಾಗಿ ರವಿ ಸಿಂಗೆ, ಮಾಧ್ಯಮ ಸಂಚಾಲಕರಾಗಿ ಮಲ್ಲಿಕಾರ್ಜುನ ಸಜ್ಜನ ಹಾಗೂ ಸ್ವಚ್ಛ ಭಾರತ ಅಭಿಯಾನ ಸಂಚಾಲಕರಾಗಿ ಪರಷುರಾಮ ರಾವೂರ ಅವರನ್ನು ನೇಮಕ ಮಾಡಲಾಗಿದೆ. ಪಕ್ಷ ವಹಿಸಿದ ಜವಾಬ್ದಾರಿಯನ್ನು ನಿಷ್ಠೆಯಿಂದ ಕಾರ್ಯನಿರ್ವಹಿಸಬೇಕೆಂದು ಪಕ್ಷದ ಎಸ್ ಸಿ ಮೋರ್ಚಾದ ಜಿಲ್ಲಾಧ್ಯಕ್ಷರಾದ ಮಹೇಂದ್ರ ಪೂಜಾರಿ ಅವರು ಆದೇಶದಲ್ಲಿ ತಿಳಿಸಿದ್ದಾರೆ.
ಮಂಗಳೂರು : ವಿವಿಧ ರೈಲುಗಳಿಗೆ ಹೆಚ್ಚುವರಿ ಬೋಗಿ
ಮಂಗಳೂರು, ಎ.7: ತಿಂಗಳ ರಜೆ ಹಾಗೂ ಹಬ್ಬಗಳ ಹಿನ್ನೆಲೆಯಲ್ಲಿ ರೈಲುಗಳಲ್ಲಿ ಉಂಟಾಗುವ ಪ್ರಯಾಣಿಕರ ವಿಪರೀತ ದಟ್ಟಣೆಯನ್ನು ಕಡಿಮೆ ಮಾಡಲು ರೈಲ್ವೆ ಇಲಾಖೆಯು ಮಂಗಳೂರು ಮಾರ್ಗವಾಗಿ ಸಂಚರಿಸುವ ಪ್ರಮುಖ ರೈಲುಗಳಿಗೆ ಹೆಚ್ಚುವರಿ ಸ್ಲೀಪರ್ ಕ್ಲಾಸ್ ಬೋಗಿಗಳನ್ನು ಅಳವಡಿಸಲು ನಿರ್ಧರಿಸಿದೆ. ಹೆಚ್ಚುವರಿ ಬೋಗಿ ಅಳವಡಿಸಲಾದ ರೈಲುಗಳ ವಿವರ ಇಂತಿವೆ. ಎ.10 ಮತ್ತು 11 ರಂದು ಚೆನ್ನೈನಿಂದ ಹೊರಡುವ ಚೆನ್ನೈ ಎಗ್ಮೋರ್ - ಮಂಗಳೂರು ಸೆಂಟ್ರಲ್ ಎಕ್ಸ್ಪ್ರೆಸ್ (ರೈಲು ಸಂಖ್ಯೆ 16159 ) ರೈಲಿಗೆ ಒಂದು ಹೆಚ್ಚುವರಿ ಸ್ಲೀಪರ್ ಬೋಗಿ ಇರಲಿದೆ. ಎ. 12 ಮತ್ತು 13 ರಂದು ಮಂಗಳೂರು ಸೆಂಟ್ರಲ್ನಿಂದ ಹೊರಡುವ ಮಂಗಳೂರು ಸೆಂಟ್ರಲ್ - ಚೆನ್ನೈ ಎಗ್ಮೋರ್ ಎಕ್ಸ್ಪ್ರೆಸ್ (ರೈಲು ಸಂಖ್ಯೆ 16160 ) ರೈಲಿಗೆ ಒಂದು ಹೆಚ್ಚುವರಿ ಸ್ಲೀಪರ್ ಬೋಗಿ ಅಳವಡಿಸಲಾಗುವುದು. ಎ. 10, 11, 12, 14 ಮತ್ತು 15 ರಂದು ಮಂಗಳೂರು ಸೆಂಟ್ರಲ್ನಿಂದ ಹೊರಡುವ ಮಾವೇಲಿ ಎಕ್ಸ್ಪ್ರೆಸ್ ಮಂಗಳೂರು ಸೆಂಟ್ರಲ್ - ತಿರುವನಂತಪುರಂ ಸೆಂಟ್ರಲ್ ರೈಲು (ರೈಲು ಸಂಖ್ಯೆ 16603 )ಒಂದು ಹೆಚ್ಚುವರಿ ಸ್ಲೀಪರ್ ಬೋಗಿ ಸೇರಿಸಲಾಗುವುದು. ಎ. 11, 12, 13, 15 ಮತ್ತು 16 ರಂದು ತಿರುವನಂತಪುರಂ ಸೆಂಟ್ರಲ್ ಹೊರಡುವ ತಿರುವನಂತಪುರ ಸೆಂಟ್ರಲ್ - ಮಂಗಳೂರು ಸೆಂಟ್ರಲ್ ( ರೈಲು ಸಂಖ್ಯೆ 16604 ) ಮಾವೇಲಿ ಎಕ್ಸ್ಪ್ರೆಸ್ ರೈಲಿಗೆ ಒಂದು ಹೆಚ್ಚುವರಿ ಸ್ಲೀಪರ್ ಬೋಗಿ ಇರಲಿದೆ. ಎ.8ರಿಂದ 15 ರವರೆಗೆ ಮಂಗಳೂರು ಸೆಂಟ್ರಲ್ನಿಂದ ಹೊರಡುವ (ರೈಲು ಸಂಖ್ಯೆ 16630 )ಮಂಗಳೂರು ಸೆಂಟ್ರಲ್ - ತಿರುವನಂತಪುರಂ ಸೆಂಟ್ರಲ್ ಮಲಬಾರ್ ಎಕ್ಸ್ಪ್ರೆಸ್ ರೈಲಿಗೆ ಒಂದು ಹೆಚ್ಚುವರಿ ಸ್ಲೀಪರ್ ಬೋಗಿ ಅಳವಡಿಸಲಾಗುವುದು. ಎ.9 ರಿಂದ 16 ರವರೆಗೆ ತಿರುವನಂತಪುರಂನಿಂದ ಹೊರಡುವ ತಿರುವನಂತಪುರಂ - ಮಂಗಳೂರು ಸೆಂಟ್ರಲ್ (ಸಂಖ್ಯೆ 16629 ) ಮಲಬಾರ್ ಎಕ್ಸ್ಪ್ರೆಸ್ ರೈಲಿಗೆ ಒಂದು ಹೆಚ್ಚುವರಿ ಸ್ಲೀಪರ್ ಬೋಗಿ ಅಳವಡಿಸಲು ನಿರ್ಧರಿಸ ಲಾಗಿದೆ ಎಂದು ರೈಲ್ವೆ ಇಲಾಖೆಯ ಪ್ರಕಟನೆ ತಿಳಿಸಿದೆ.
Kalaburagi | ಹಝರತ್ ಖ್ವಾಜಾ ಬಂದಾ ನವಾಝ್ ದರ್ಗಾದಲ್ಲಿ ಝೆಲಾ ಮುಬಾರಕ್
ಕಲಬುರಗಿ: ಜಿಲ್ಲೆಯ ಪ್ರಮುಖ ಧಾರ್ಮಿಕ ಕೇಂದ್ರವಾದ ಹಝರತ್ ಖ್ವಾಜಾ ಬಂದಾ ನವಾಝ್ ದರ್ಗಾದ ಝೆಲಾ ಪ್ರಯುಕ್ತ ನಮಾಝ್-ಎ-ಅಸರ್ ಮಹೆಬೂಬ್ ಗುಲ್ಶನ್ ಸಮರ್ ಹೌಸ್ನಲ್ಲಿ ಸೋಮವಾರ ನೆರವೇರಿಸಲಾಯಿತು. ಬಳಿಕ ಮಹ್ಫಿಲ್-ಎ-ಸಮಾ ಕಾರ್ಯಕ್ರಮ ಜರುಗಿದ್ದು, ವಿವಿಧ ನಗರಗಳಿಂದ ಆಗಮಿಸಿದ ಖ್ಯಾತ ಕವ್ವಾಲಿಗಳು ತಮ್ಮ ಮನಮೋಹಕ ಕಲಾಮ್ಗಳ ಮೂಲಕ ಭಕ್ತರನ್ನು ಮಂತ್ರಮುಗ್ಧರನ್ನಾಗಿಸಿದರು. ಕಾರ್ಯಕ್ರಮದ ಅಂತ್ಯದಲ್ಲಿ ಫಾತೀಹಾ ಖ್ವಾನಿ ನೆರವೇರಿಸಲಾಯಿತು. ಇದಾದ ನಂತರ ಜುಲೂಸ್-ಎ-ಜ್ಹೇಳಾ ಮುಬಾರಕ್ ಅನ್ನು ವೈಭವವಾಗಿ ಆರಂಭಿಸಲಾಯಿತು. ಜುಲೂಸ್ ಜಗತ್ ಸರ್ಕಲ್ ಮೂಲಕ ಸಾಗುತ್ತಾ ಸೂಪರ್ ಮಾರ್ಕೆಟ್ ಪ್ರದೇಶಕ್ಕೆ ತಲುಪಿದ್ದು, ಅಲ್ಲಿ ಮಾರ್ಕೆಟ್ ಮಸೀದಿಯಲ್ಲಿ ನಮಾಝ್-ಎ-ಮಘ್ರಿಬ್ ಸಲ್ಲಿಸಲಾಯಿತು. ಬಳಿಕ ಜುಲೂಸ್ ಸರಾಫ್ ಬಜಾರ್, ಬಹಮನಿ ಚೌಕ್ ಹಾಗೂ ಹಫ್ತ್ ಗುಂಬಜ್ ಮಾರ್ಗವಾಗಿ ರಾತ್ರಿ ತಡವರೆಗೆ ಮುಂದುವರಿಯಿತು. ರಾತ್ರಿ ಸುಮಾರು 10:30ರ ವೇಳೆಗೆ ಜ್ಹೇಳಾ ಮುಬಾರಕ್ ಗಯಾರಾ ಸೀಡಿಗೆ ತಲುಪಿತು. ಈ ಸಂದರ್ಭದಲ್ಲಿ ಹಝರತ್ ಡಾ. ಸೈಯದ್ ಮುಹಮ್ಮದ್ ಅಲಿ ಅಲ್ ಹುಸೈನಿ ಸಾಹೇಬ್ (ಸಜ್ಜಾದಾ ನಶೀನ್) ಅವರು ಜ್ಹೇಳಾ ಮುಬಾರಕ್ನ ಪ್ರತಿಕಾತ್ಮಕ ಕಷ್ಟಿಯನ್ನು ತಮ್ಮ ತಲೆಯ ಮೇಲೆ ಹೊತ್ತು ಬರಾದರಿ ಒಳಗೆ ಕೊಂಡೊಯ್ದರು. ಅಲ್ಲಿ ಸಂಪ್ರದಾಯಬದ್ಧ ವಿಧಿವಿಧಾನಗಳನ್ನು ನೆರವೇರಿಸಿ, ಬಳಿಕ ಜ್ಹೇಳಾ ಮುಬಾರಕ್ ಅನ್ನು ಗುಂಬದ್-ಎ-ಮುಬಾರಕ್ಗೆ ಕಟ್ಟಲು ಕಳುಹಿಸಲಾಯಿತು. ಗುಂಬದ್ ಮೇಲೆ ಜ್ಹೇಳಾ ಕಟ್ಟಿದ ನಂತರ ಮತ್ತೆ ಕೆಳಗೆ ಬಂದು ಫಾತೀಹಾ ಖ್ವಾನಿ ನೆರವೇರಿಸಿದರು. ನಂತರ ಮತ್ತೊಂದು ಮಹ್ಫಿಲ್-ಎ-ಸಮಾ ಕಾರ್ಯಕ್ರಮ ನಡೆದಿದ್ದು, 10ಕ್ಕೂ ಹೆಚ್ಚು ಕವ್ವಾಲಿಗಳು ತಮ್ಮ ಭಕ್ತಿಪರ ಕಲಾಮ್ಗಳನ್ನು ಪ್ರಸ್ತುತಪಡಿಸಿದರು. ಈ ಪವಿತ್ರ ಹಾಗೂ ಆಧ್ಯಾತ್ಮಿಕ ಕಾರ್ಯಕ್ರಮದಲ್ಲಿ ಅನೇಕ ಗಣ್ಯರು ಮತ್ತು ಗೌರವಾನ್ವಿತ ವ್ಯಕ್ತಿಗಳು ಉಪಸ್ಥಿತರಿದ್ದರು. ಇವರಲ್ಲಿ ಸೈಯದ್ ಶಾ ಯೂಸುಫ್ ಹುಸೈನ್ ಸಾಹೇಬ, ಸಯ್ಯದ್ ಶಾ ಹಸನ್ ಶಬ್ಬೀರ್ ಹುಸೈನಿ ಸಾಹೇಬ್ (ಸಜ್ಜಾದಾ ನಶೀನ್ ರೋಜಾ-ಎ-ಖುರ್ಡ್), ಜನಾಬ್ ಅಕ್ಬರ್ ನಿಜಾಮುದ್ದೀನ್ ಸಾಹೇಬ್ (ಸಜ್ಜಾದಾ ನಶೀನ್ ದರ್ಗಾ ಶಾ ಖಾಮೋಶ್, ಹೈದರಾಬಾದ್), ಡಾ.ಸೈಯದ್ ಮುಸ್ತಫಾ ಅಲ್ ಹುಸೈನಿ ಸಾಹೇಬ್, ಸೈಯದ್ ಮುಹಮ್ಮದ್ ಸೈಯದ್ ಹುಸೈನಿ ಸಾಹೇಬ್, ಸೈಯದ್ ಅಲೀಮ್ ಹುಸೈನಿ ಸಾಹೇಬ್, ಸೈಯದ್ ಶಾ ಸಫಿಯುಲ್ಲಾ ಮುಂತಾದ ಗಣ್ಯರು ಉಪಸ್ಥಿತರಿದ್ದರು.
Ballari | ದೇವಲಾಪುರಕ್ಕೆ ಪಿಯು ಕಾಲೇಜು ತರಲು ಪ್ರಯತ್ನ: ಶಾಸಕ ಗಣೇಶ ಭರವಸೆ
ಬಳ್ಳಾರಿ/ಕಂಪ್ಲಿ: ಗ್ರಾಮೀಣ ಭಾಗದ ವಿದ್ಯಾರ್ಥಿನಿಯರಿಗೆ ಉನ್ನತ ಶಿಕ್ಷಣ ಸಿಗುವಂತೆ ಮುಂದಿನ ದಿನಗಳಲ್ಲಿ ದೇವಲಾಪುರಕ್ಕೆ ಪಿಯು ಕಾಲೇಜು ತರಲು ಶಕ್ತಿ ಮೀರಿ ಪ್ರಯತ್ನ ಮಾಡಲಾಗುವುದು ಎಂದು ಶಾಸಕ ಜೆ.ಎನ್. ಗಣೇಶ ಭರವಸೆ ನೀಡಿದರು. ತಾಲೂಕಿನ ದೇವಲಾಪುರ ಗ್ರಾಮದ ಕಣವಿಮಾರೆಮ್ಮ ದೇವಸ್ಥಾನದ ರಸ್ತೆಯ ಬಳಿಯ ಸರ್ಕಾರಿ ಪ್ರೌಢಶಾಲೆಯ ನೂತನ ಕಟ್ಟಡವನ್ನು ಮಂಗಳವಾರ ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಪರಿಸರ ಮತ್ತು ಆರೋಗ್ಯದ ದೃಷ್ಟಿಯಿಂದ ಕಟ್ಟಡ ನಿರ್ಮಿಸಲಾಗಿದೆ ಎಂದು ತಿಳಿಸಿದರು. ಗ್ರಾಮೀಣ ಭಾಗದ ಮಕ್ಕಳು ಬಡತನದಲ್ಲಿದ್ದರೂ ಶಿಕ್ಷಣದ ಮೂಲಕ ಉತ್ತಮ ಹುದ್ದೆಗಳನ್ನು ಪಡೆಯಬೇಕು. ಪೋಷಕರ ಕಷ್ಟಗಳನ್ನು ಅರಿತು ಶ್ರಮಪಟ್ಟು ವಿದ್ಯಾಭ್ಯಾಸ ಮಾಡಬೇಕು ಎಂದು ಸಲಹೆ ನೀಡಿದರು. ಸರ್ಕಾರಿ ಪ್ರೌಢಶಾಲೆಯ ಎಸ್ಡಿಎಂಸಿ ಅಧ್ಯಕ್ಷ ದೇವರಮನೆ ಪಂಪಾಪತಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಶಾಸಕರ ನೇತೃತ್ವದಲ್ಲಿ ಶಾಲೆಗೆ ಹೊಸ ಕಟ್ಟಡ ನಿರ್ಮಾಣವಾಗಿರುವುದು ವಿದ್ಯಾರ್ಥಿಗಳ ಶಿಕ್ಷಣಕ್ಕೆ ಅನುಕೂಲವಾಗಿದೆ ಎಂದು ಹೇಳಿದರು. ಮುಖ್ಯಗುರು ಎಚ್.ಪಿ.ಸೋಮಶೇಖರ ಪ್ರಾಸ್ತಾವಿಕವಾಗಿ ಮಾತನಾಡಿ, ನೂತನ ಕಟ್ಟಡದಿಂದ ವಿದ್ಯಾರ್ಥಿಗಳಿಗೆ ಉತ್ತಮ ಸೌಲಭ್ಯ ದೊರೆಯುತ್ತಿದೆ. ಆದರೆ ಹತ್ತನೇ ತರಗತಿ ಬಳಿಕ ವಿದ್ಯಾರ್ಥಿನಿಯರು ದೂರದ ಕಾಲೇಜುಗಳಿಗೆ ತೆರಳಲು ಹಿಂಜರಿಯುತ್ತಿರುವುದರಿಂದ ಹೆಣ್ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಆದ್ದರಿಂದ ಶಾಲೆಯನ್ನು ಪಿಯು ಕಾಲೇಜ್ ಆಗಿ ಮೇಲ್ದರ್ಜೆಗೆ ಏರಿಸಿ, ಕಾಂಪೌಂಡ್ ಗೋಡೆ ಮತ್ತು ಹೈಮಾಸ್ ಲೈಟ್ ವ್ಯವಸ್ಥೆ ಕಲ್ಪಿಸಬೇಕು ಎಂದು ಮನವಿ ಮಾಡಿದರು. ಕಾರ್ಯಕ್ರಮದಲ್ಲಿ ಬೂದಾಳ್ ರವಿ ನೇತೃತ್ವದಲ್ಲಿ ವಿದ್ಯಾರ್ಥಿಗಳಿಗೆ ಉಚಿತ ನೋಟು ಪುಸ್ತಕಗಳನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ಗ್ರಾಪಂ ಮಾಜಿ ಅಧ್ಯಕ್ಷೆ ಪೂಜಾರಿ ಈರಮ್ಮ, ಮಾಜಿ ಉಪಾಧ್ಯಕ್ಷ ನಾಗರಾಜ, ಸೊಸೈಟಿ ಅಧ್ಯಕ್ಷ ಹನುಮಂತ, ಬಿಆರ್ಸಿ ಮನೋಹರ, ಬಿಸಿ ಊಟ ಸಹಾಯಕ ನಿರ್ದೇಶಕ ಶಿವನಾಯ್ಕ, ವಿಎಸ್ಕೆ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ಕೆ. ಶಿವಕುಮಾರ ಸೇರಿದಂತೆ ಅನೇಕರು, ಪೋಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಅಸ್ಸಾಂನಲ್ಲಿ ವಿಧಾನಸಭಾ ಕ್ಷೇತ್ರ ಮರುವಿಂಗಡಣೆ | ಬದಲಾಗಲಿದೆ ಅಲ್ಪಸಂಖ್ಯಾತರ ರಾಜಕೀಯ ಸಮೀಕರಣ
ಸಾಂದರ್ಭಿಕ ಚಿತ್ರ | Photo Credit : PTI ಏಪ್ರಿಲ್ 9ರ ವಿಧಾನಸಭಾ ಚುನಾವಣೆಯಲ್ಲಿ ಅಸ್ಸಾಂನ ಹೈಲಕಂಡಿಯಲ್ಲಿ ಹೊಸದಾಗಿ ರೂಪುಗೊಂಡ ಅಲ್ಗಾಪುರ-ಕಟ್ಲಿಚೆರಾ ಕ್ಷೇತ್ರವು ಅತಿ ಹೆಚ್ಚು ಅಭ್ಯರ್ಥಿಗಳನ್ನು ಹೊಂದಿದೆ. ಇಲ್ಲಿ 15 ಅಭ್ಯರ್ಥಿಗಳು ಕಣದಲ್ಲಿದ್ದು, ಇದರಲ್ಲಿ ಮೂವರು ಹಾಲಿ ಶಾಸಕರು. ಶಾಸಕರಲ್ಲಿ ಅಲ್ಗಾಪುರ ಶಾಸಕ ನಿಜಾಂ ಉದ್ದೀನ್ ಚೌಧರಿ ಮತ್ತು ಕಟ್ಲಿಚೆರಾ ಶಾಸಕ ಸುಜಮ್ ಉದ್ದೀನ್ ಲಸ್ಕರ್ ಸ್ವತಂತ್ರ ಅಭ್ಯರ್ಥಿಗಳಾಗಿ ಸ್ಪರ್ಧಿಸುತ್ತಿದ್ದಾರೆ. ಹೈಲಕಂಡಿ ಶಾಸಕ ಜಾಕಿರ್ ಹುಸೇನ್ ಬಿಜೆಪಿ ಮಿತ್ರಪಕ್ಷವಾದ ಅಸೋಮ್ ಗಣ ಪರಿಷತ್ (AGP) ಟಿಕೆಟ್ನಲ್ಲಿ ಸ್ಪರ್ಧಿಸುತ್ತಿದ್ದಾರೆ. 2021ರ ಚುನಾವಣೆಯಲ್ಲಿ, ಅವರೆಲ್ಲರೂ ಎಐಯುಡಿಎಫ್ ಶಾಸಕರಾಗಿ ಆಯ್ಕೆಯಾಗಿದ್ದರು. ಆದರೆ 2023ರ ಕ್ಷೇತ್ರ ಮರುವಿಂಗಡಣೆಯ ವೇಳೆ ಅವರು ತಮ್ಮ ಕ್ಷೇತ್ರಗಳನ್ನು ಕಳೆದುಕೊಂಡರು. ಕ್ಷೇತ್ರ ಮರುವಿಂಗಡಣೆಯ ನಂತರ, ಬಂಗಾಳಿ ಮಾತನಾಡುವ ಬರಾಕ್ ಕಣಿವೆಯಲ್ಲಿ ಹೈಲಕಂಡಿ ಜಿಲ್ಲೆಯ ಸ್ಥಾನಗಳ ಸಂಖ್ಯೆಯನ್ನು ಮೂರರಿಂದ ಎರಡಕ್ಕೆ ಇಳಿಸಲಾಯಿತು. ಅಲಗಾಪುರ ಮತ್ತು ಕಟ್ಲಿಚೆರಾ ಕ್ಷೇತ್ರಗಳನ್ನು ವಿಲೀನಗೊಳಿಸಿ 2.7 ಲಕ್ಷಕ್ಕೂ ಹೆಚ್ಚು ಮತದಾರರೊಂದಿಗೆ ಹೊಸ ಸ್ಥಾನವನ್ನು ರಚಿಸಲಾಯಿತು. ಇದೇ ವೇಳೆ ಹೈಲಕಂಡಿ ಸ್ಥಾನದ ಪರಿಸ್ಥಿತಿಯೂ ಬದಲಾಗಿದೆ. ಮುಸ್ಲಿಂ ಶಾಸಕರು ಪ್ರತಿನಿಧಿಸುವ ಮೂರೂ ಕ್ಷೇತ್ರಗಳು ಮುಸ್ಲಿಂ-ಹಿಂದೂ ಜನಸಂಖ್ಯೆಯನ್ನು ಹೊಂದಿದ್ದವು. ಆದರೆ ಮರುವಿಂಗಡಣೆಯ ನಂತರ ಅಲಗಾಪುರ-ಕಟ್ಲಿಚೆರಾ ಸುಮಾರು 80% ಮುಸ್ಲಿಂ ಮತದಾರರನ್ನು ಹೊಂದಿರುವ ದೊಡ್ಡ ಕ್ಷೇತ್ರವಾಗಿದೆ. ಹೈಲಕಂಡಿಯಲ್ಲಿ ಬಹುಪಾಲು ಮತದಾರರು ಹಿಂದೂಗಳಾಗಿದ್ದಾರೆ. ಆದ್ದರಿಂದ ಹಾಲಿ ಹೈಲಕಂಡಿ ಶಾಸಕರು ಅಲ್ಲಿಂದ ಗೆಲ್ಲಲು ಸಾಧ್ಯವಾಗುವುದಿಲ್ಲ. ಅದಕ್ಕಾಗಿಯೇ ಅವರು ಕಟ್ಲಿಚೆರಾ-ಅಲಗಾಪುರದಿಂದ ಸ್ಪರ್ಧಿಸುತ್ತಿದ್ದಾರೆ, ಎಂದು ಬರಾಕ್ ಕಣಿವೆಯ ಹಿರಿಯ ಪತ್ರಕರ್ತರೊಬ್ಬರು ಹೇಳಿರುವುದಾಗಿ ದಿ ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ. 2023ರ ಕ್ಷೇತ್ರ ಮರುವಿಂಗಡಣೆಯ ನಂತರ ಅಸ್ಸಾಂನಲ್ಲಿ ನಡೆಯುತ್ತಿರುವ ಮೊದಲ ವಿಧಾನಸಭಾ ಚುನಾವಣೆ ಇದಾಗಿದ್ದು, ಇದರ ಪರಿಣಾಮವಾಗಿ ಅದರ ರಾಜಕೀಯ ನಕ್ಷೆಯಲ್ಲಿ ಗಮನಾರ್ಹ ಬದಲಾವಣೆಗಳಾಗಿವೆ. ಕ್ಷೇತ್ರ ಮರುವಿಂಗಡಣೆಯು ಬೋಡೋಲ್ಯಾಂಡ್ ಪ್ರಾದೇಶಿಕ ಪ್ರದೇಶದ ಸ್ಥಾನಗಳ ಸಂಖ್ಯೆಯನ್ನು 11ರಿಂದ 15ಕ್ಕೆ ಹೆಚ್ಚಿಸಲು ಕಾರಣವಾಗಿದ್ದು, ಅನೇಕ ಸ್ಥಾನಗಳ ಬಾಹ್ಯರೇಖೆಗಳನ್ನು ಬದಲಾಯಿಸಿದೆ. ಹೀಗೆ ಹಲವಾರು ಹಾಲಿ ಶಾಸಕರು ಕ್ಷೇತ್ರಗಳನ್ನು ಕಳೆದುಕೊಂಡಿದ್ದು, ಇದರಲ್ಲಿ ಶಿವಸಾಗರ್ ಜಿಲ್ಲೆಯ ಅಮ್ಗುರಿ ಮತ್ತು ದಿಬ್ರುಗಢ ಜಿಲ್ಲೆಯ ಚಬುವಾ ಕೂಡ ಸೇರಿವೆ. ಕ್ಷೇತ್ರ ಮರುವಿಂಗಡಣೆಯ ಅತಿದೊಡ್ಡ ಪರಿಣಾಮವು ಹೊಸ ಅಸ್ಸಾಂ ಸದನದಲ್ಲಿ ಅಲ್ಪಸಂಖ್ಯಾತರ ಪ್ರಾತಿನಿಧ್ಯದ ಮೇಲೆ ಇರುತ್ತದೆ. ಅಲ್ಪಸಂಖ್ಯಾತ ಮತದಾರರು ನಿರ್ಣಾಯಕ ಪಾತ್ರ ವಹಿಸುವ ಕ್ಷೇತ್ರಗಳು ರಾಜ್ಯದ 126 ಸ್ಥಾನಗಳಲ್ಲಿ ಸುಮಾರು 35ರಿಂದ ಸುಮಾರು 23ಕ್ಕೆ ಇಳಿದಿವೆ ಎಂದು ಹಲವಾರು ಪಕ್ಷಗಳು ಮತ್ತು ವೀಕ್ಷಕರು ಅಂದಾಜಿಸಿದ್ದಾರೆ. ಈಗ ಅಲ್ಪಸಂಖ್ಯಾತರಿರುವ ಅನೇಕ ಕ್ಷೇತ್ರಗಳಲ್ಲಿ ನಡೆಯುತ್ತಿರುವ ಸ್ಪರ್ಧೆಗಳಲ್ಲಿ ಇದು ಗೋಚರಿಸುತ್ತದೆ. ಆದರೆ, ಈ ಪ್ರಕ್ರಿಯೆಯು ಅಸ್ಸಾಂ ಮತ್ತು ಅದರ ಸ್ಥಳೀಯ ಜನರ ಹಿತಾಸಕ್ತಿಗಳು ಮತ್ತು ಆಕಾಂಕ್ಷೆಗಳನ್ನು ರಕ್ಷಿಸಿದೆ ಎಂದು ಬಿಜೆಪಿ ಸಮರ್ಥಿಸಿಕೊಂಡಿದೆ. ಅಲ್ಗಾಪುರ-ಕಟ್ಲಿಚೆರಾದಂತೆ, ಬಾರ್ಪೇಟಾ ಜಿಲ್ಲೆಯ ಹೊಸ ಮಂಡಿಯಾ ಕ್ಷೇತ್ರದಲ್ಲಿ ಒಟ್ಟು 2.8 ಲಕ್ಷ ಮತದಾರರು ಇದ್ದಾರೆ. ಬಾಗ್ಬೋರ್ ಮತ್ತು ಜಾನಿಯಾ ಸ್ಥಾನಗಳನ್ನು ವಿಲೀನಗೊಳಿಸುವ ಮೂಲಕ ಈ ಕ್ಷೇತ್ರವನ್ನು ಮಾಡಲಾಗಿದೆ. ಬಾಗ್ಬೋರ್ ಮತ್ತು ಜಾನಿಯಾ ಎರಡೂ ಕ್ಷೇತ್ರಗಳ ಹಾಲಿ ಶಾಸಕರು ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ. ಮಾಜಿ ಕಾಂಗ್ರೆಸ್ ನಾಯಕ ಶೆರ್ಮನ್ ಅಲಿ ಅಹ್ಮದ್ ಬಾಗ್ಬೋರ್ನಲ್ಲಿ ಟಿಎಂಸಿ ಟಿಕೆಟ್ ನಲ್ಲಿ ಸ್ಪರ್ಧಿಸುತ್ತಿದ್ದು, ಎಐಯುಡಿಎಫ್ ನಾಯಕ ಹಫೀಝ್ ರಫೀಕುಲ್ ಇಸ್ಲಾಂ ಜಾನಿಯಾದಲ್ಲಿ ಕಣಕ್ಕಿಳಿದಿದ್ದಾರೆ. ಮಂಡಿಯಾ ಚುನಾವಣೆಯ ರೇಸ್ನಲ್ಲಿ ಕಾಂಗ್ರೆಸ್ನ ಅಬ್ದುಲ್ ಖಲೀಕ್ ಕೂಡ ಇದ್ದಾರೆ. ಅವರು ಈ ಹಿಂದೆ ಬಾರ್ಪೇಟಾದ ಸಂಸದರಾಗಿ ಸೇವೆ ಸಲ್ಲಿಸಿದ್ದರೂ, ಕ್ಷೇತ್ರ ಮರುವಿಂಗಡಣೆಯಿಂದ ತಮ್ಮ ಕ್ಷೇತ್ರ ಮರುವಿಂಗಡಣೆ ಆದ ನಂತರ 2024ರ ಲೋಕಸಭಾ ಚುನಾವಣೆಯಿಂದ ಹೊರಗುಳಿದಿದ್ದರು. ಈ ಕ್ರಮವು ಅಲ್ಲಿನ ಅಲ್ಪಸಂಖ್ಯಾತ ಮತದಾರರ ನಿರ್ಣಾಯಕ ಪ್ರಭಾವವನ್ನು ತಟಸ್ಥಗೊಳಿಸುತ್ತದೆ ಎಂದು ವ್ಯಾಪಕವಾಗಿ ಪರಿಗಣಿಸಲಾಗಿದೆ. ಕಳೆದ ಕೆಲವು ದಿನಗಳಲ್ಲಿ ಮಂಡಿಯಾದಲ್ಲಿ ತೀವ್ರ ಪೈಪೋಟಿ ನಡೆಯುತ್ತಿರುವುದರಿಂದ, ಎಐಯುಡಿಎಫ್ ನಿಂದ ಎಐಎಂಐಎಂ ಮುಖ್ಯಸ್ಥ ಅಸದುದ್ದೀನ್ ಉವೈಸಿ, ಟಿಎಂಸಿಯಿಂದ ಸಯಾನಿ ಘೋಷ್ ಮತ್ತು ಕಾಂಗ್ರೆಸ್ ನಿಂದ ಇಮ್ರಾನ್ ಪ್ರತಾಪ್ಗಢಿ ಸೇರಿದಂತೆ ಹಲವು ಪ್ರಮುಖರು ಇಲ್ಲಿ ಪ್ರಚಾರ ನಡೆಸಿದ್ದಾರೆ. ನೆರೆಯ ಪ್ರದೇಶಗಳಲ್ಲಿ ಹಾಲಿ ಶಾಸಕರು ಬೇರೆ ಕ್ಷೇತ್ರಗಳಲ್ಲಿ ಕಣಕ್ಕಿಳಿದಿದ್ದಾರೆ. ಉದಾಹರಣೆಗೆ, ಬಾರ್ಪೇಟಾದ ಕಾಂಗ್ರೆಸ್ ಶಾಸಕ ಅಬ್ದುರ್ ರಹೀಮ್ ಅಹ್ಮದ್ ಅವರು ತಮ್ಮ ಪಕ್ಷದ ಟಿಕೆಟ್ ನಲ್ಲಿ ಚೆಂಗಾದಲ್ಲಿ ಸ್ಪರ್ಧಿಸುತ್ತಿದ್ದಾರೆ. ಏಕೆಂದರೆ ಅವರ ಸ್ಥಾನವನ್ನು ಪರಿಶಿಷ್ಟ ಜಾತಿ (SC) ಅಭ್ಯರ್ಥಿಗಳಿಗೆ ಕಾಯ್ದಿರಿಸಲಾಗಿದೆ. ಅದೇ ರೀತಿ, ಗೋಲ್ ಪಾರ ಪಶ್ಚಿಮವನ್ನು ಪರಿಶಿಷ್ಟ ಪಂಗಡ (ST) ನಾಮನಿರ್ದೇಶಿತರಿಗೆ ಕಾಯ್ದಿರಿಸಲಾಗಿದೆ. ಆದ್ದರಿಂದ ಹಾಲಿ ಕಾಂಗ್ರೆಸ್ ಶಾಸಕ ಅಬ್ದುರ್ ರಶೀದ್ ಮಂಡಲ್ ಅವರು ಈಗ ಗೋಲ್ಪಾರ ಪೂರ್ವದಿಂದ ರೈಜೋರ್ ದಳ ಅಭ್ಯರ್ಥಿಯಾಗಿ ಹಾಲಿ ಕಾಂಗ್ರೆಸ್ ಶಾಸಕ ಅಬುಲ್ ಕಲಾಂ ರಶೀದ್ ಆಲಂ ವಿರುದ್ಧ ಸ್ಪರ್ಧಿಸುತ್ತಿದ್ದಾರೆ. ಕೆಲವು ಸ್ಥಾನಗಳಲ್ಲಿ ವಿರೋಧ ಪಕ್ಷದ ಬೆಂಬಲಿಗರಲ್ಲಿ ಅಭ್ಯರ್ಥಿಗಳ ಬದಲಾವಣೆಯು ಅಸಮಾಧಾನವನ್ನು ಉಂಟುಮಾಡಿದೆ. ಏಕೆಂದರೆ ಅವರು ಹೊಸ ಅಭ್ಯರ್ಥಿಗಳನ್ನು ಸ್ಥಳೀಯರು ಎಂದು ಪರಿಗಣಿಸುತ್ತಿಲ್ಲ. ಕಾಂಗ್ರೆಸ್ ಪಕ್ಷವು ತಮಗೆ ಸ್ಪಷ್ಟ ಆಯ್ಕೆಯಾಗಿರುತ್ತಿತ್ತು. ಆದರೆ ಪ್ರಸ್ತುತ ಪಕ್ಷದ ಅಭ್ಯರ್ಥಿ ಸ್ಥಳೀಯರಲ್ಲ, ಅವರು ಬಾರ್ಪೇಟಾದವರು. ಅವರು ಸ್ಥಳೀಯ ಕಾಳಜಿಗಳನ್ನು ಎಷ್ಟು ಸುಲಭವಾಗಿ ಪ್ರತಿನಿಧಿಸುತ್ತಾರೆ ಅಥವಾ ಪ್ರತಿನಿಧಿಸಲು ಸಾಧ್ಯವಾಗುತ್ತದೆ ಎಂಬುದರ ಬಗ್ಗೆ ನಮ್ಮಲ್ಲಿ ಹಲವರಿಗೆ ಕಳವಳವಿದೆ. ಇದು ಸ್ಪರ್ಧೆಯನ್ನು ತೀವ್ರಗೊಳಿಸುತ್ತದೆ, ಎಂದು ಚೆಂಗಾ ನಿವಾಸಿ ಜಹರುಲ್ ಇಸ್ಲಾಂ ಹೇಳಿದ್ದಾರೆ. ಪ್ರಾತಿನಿಧ್ಯದ ಬಿಕ್ಕಟ್ಟನ್ನು ಮೀರಿ, ಎನ್ಡಿಎ ಅಲ್ಪಸಂಖ್ಯಾತ ಮತದಾರರಲ್ಲಿ ಹೆಚ್ಚಿನ ಜಾಗವನ್ನು ಕಂಡುಕೊಳ್ಳುತ್ತಿದೆ ಎಂದು ದಿಬ್ರುಗಢ ವಿಶ್ವವಿದ್ಯಾಲಯದ ರಾಜಕೀಯ ವಿಜ್ಞಾನ ಸಂಶೋಧಕ ಅಹ್ಮದ್ ತೋಹಿದಸ್ ಜಮಾನ್ ಹೇಳಿದ್ದಾರೆ. ಗುರುತಿನ ರಾಜಕೀಯ, ಪೌರತ್ವ ಸಮಸ್ಯೆಗಳು, ಬಾಂಗ್ಲಾದೇಶಕ್ಕೆ ತಳ್ಳುವಿಕೆ ಮತ್ತು ಕ್ಷೇತ್ರ ಮರುವಿಂಗಡಣೆಯಂಥ ಅಂಶಗಳು ಬೆದರಿಕೆಯ ಗ್ರಹಿಕೆಯ ಬಲವಾದ ಅರ್ಥವನ್ನು ಸೃಷ್ಟಿಸಿವೆ. ಪರಿಣಾಮವಾಗಿ, ಅಲ್ಪಸಂಖ್ಯಾತ ಸಮುದಾಯದ ಕೆಲವು ವಿಭಾಗಗಳು ಎನ್ಡಿಎಯನ್ನು ಬೆಂಬಲಿಸುತ್ತಿವೆ. ಈ ಕ್ಷೇತ್ರಗಳಲ್ಲಿ ಎಜಿಪಿ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಮೂಲಕ, ಮೈತ್ರಿಕೂಟವು ಮಧ್ಯಮ ನೆಲೆಯನ್ನು ಸೃಷ್ಟಿಸುತ್ತದೆ. ಮತದಾರರು ಬಿಜೆಪಿಗೆ ನೇರವಾಗಿ ಮತ ಚಲಾಯಿಸದೆ ಸರ್ಕಾರದೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಲು ಅನುವು ಮಾಡಿಕೊಡುತ್ತದೆ ಎಂದು ಜಮಾನ್ ತಿಳಿಸಿದ್ದಾರೆ. ಎಜಿಪಿ ತನ್ನ 26 ಅಭ್ಯರ್ಥಿಗಳಲ್ಲಿ 13 ಮುಸ್ಲಿಂ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ, ಆದರೆ 89 ಅಭ್ಯರ್ಥಿಗಳನ್ನು ಹೊಂದಿರುವ ಬಿಜೆಪಿ ಪಟ್ಟಿಯಲ್ಲಿ ಒಬ್ಬನೇ ಒಬ್ಬ ಮುಸ್ಲಿಂ ಕೂಡ ಇಲ್ಲ. ಬರ್ಖೇತ್ರಿಯಲ್ಲಿ ಈ ಪರಿಗಣನೆಗಳು ಸ್ಪಷ್ಟವಾಗಿ ಕಂಡುಬರುತ್ತವೆ, ಅಲ್ಲಿ ಅನೇಕ ನಿವಾಸಿಗಳು ಬಿಜೆಪಿಯನ್ನು ಆಯ್ಕೆಯಾಗಿ ಪರಿಗಣಿಸುತ್ತಿರುವುದಾಗಿ ಹೇಳಿದ್ದಾರೆ. ಚುನಾವಣಾ ಆಯೋಗದ ಇತ್ತೀಚಿನ ವಿಶೇಷ ಪರಿಷ್ಕರಣೆ ಪ್ರಕ್ರಿಯೆಯಲ್ಲಿ ಮುಸ್ಲಿಂ ಮತದಾರರನ್ನು ಮತದಾರರ ಪಟ್ಟಿಯಲ್ಲಿ ಸೇರಿಸುವುದರ ವಿರುದ್ಧ ಸಾಮೂಹಿಕ ಆಕ್ಷೇಪಣೆಗಳು ಬಂದ ಕ್ಷೇತ್ರಗಳಲ್ಲಿ ಇದೂ ಒಂದು. ಈ ವಿವಾದದ ಬಗ್ಗೆ ಮಾತನಾಡಿದ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ, ಮಿಯಾಸ್ (ಬಂಗಾಳಿ ಮಾತನಾಡುವ ಮುಸ್ಲಿಮರಿಗೆ ಅವಹೇಳನಕಾರಿ ಪದ) ಗೆ ತೊಂದರೆ ಉಂಟುಮಾಡಲು ಬಿಜೆಪಿ ಕಾರ್ಯಕರ್ತರು ಆಕ್ಷೇಪಣೆಗಳನ್ನು ಸಲ್ಲಿಸುವಂತೆ ಪ್ರೋತ್ಸಾಹಿಸಿದ್ದಾಗಿ ಹೇಳಿದ್ದಾರೆ. ಬಿಜೆಪಿಗೆ ಮತ ಹಾಕುವ ಮೂಲಕ, ಮುಖ್ಯಮಂತ್ರಿಗೆ ನಮ್ಮ ಬೆಂಬಲವಿದೆ ಎಂದು ತೋರಿಸಬಹುದು. ಬಹುಶಃ ಅದು ನಮಗೆ ಉತ್ತಮವಾಗಬಹುದು, ಅಂತಾರೆ ಬರ್ಖೇತ್ರದ ಲಾರ್ಕುಚಿ ಗ್ರಾಮದ 45 ವರ್ಷದ ಫರ್ಮಾನ್ ಅಲಿ. ಸಮುದಾಯದ ವಿರುದ್ಧ ಮಾಡಿದ ಎಲ್ಲಾ ಭಾಷಣಗಳು ಮತ್ತು ಹೇಳಿಕೆಗಳ ಹೊರತಾಗಿಯೂ ಕೆಲವರು ಸರ್ಕಾರದ ಸವಲತ್ತುಗಳನ್ನು ಪಡೆಯುತ್ತಿದ್ದಾರೆ ಎಂಬುದು ಸತ್ಯ. ಮತ್ತೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುವ ಸಾಧ್ಯತೆ ಹೆಚ್ಚಿರುವುದರಿಂದ, ಸರ್ಕಾರದೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವುದು ಉತ್ತಮ ಎಂದು ಕೆಲವರು ಭಾವಿಸುತ್ತಿದ್ದಾರೆ, ಎಂದು ಬರ್ಖೇತ್ರಿಯ ರಾಂಪುರ ಪಟ್ಟಣದಲ್ಲಿ ಖಾಸಗಿ ಶಾಲೆಯನ್ನು ನಡೆಸುತ್ತಿರುವ ಅಕ್ಕಶ್ ಅಹ್ಮದ್ ಹೇಳಿದರು. ಇದಕ್ಕೆ ಅವರು 2025ರ ಪಂಚಾಯತ್ ಚುನಾವಣೆಗಳನ್ನು ಸಾಕ್ಷಿಯಾಗಿ ಉಲ್ಲೇಖಿಸಿದರು. ಬಿಜೆಪಿ 90% ಮುಸ್ಲಿಂ ಜನಸಂಖ್ಯೆಯನ್ನು ಹೊಂದಿದ್ದರೂ ಬರ್ಖೇತ್ರಿ ಚಾರ್ ಜಿಲ್ಲಾ ಪರಿಷತ್ ಸ್ಥಾನವನ್ನು ಗೆದ್ದಿದೆ. ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ಈ ವಿಜಯವನ್ನು ಬಾರ್ಪೇಟಾ ಮತ್ತು ಧುಬ್ರಿಯಲ್ಲಿ ಇದೇ ರೀತಿಯ ಗೆಲುವುಗಳೊಂದಿಗೆ ಆಗಾಗ್ಗೆ ಎತ್ತಿ ತೋರಿಸಿದ್ದಾರೆ. ಇದು ವಿಧಾನಸಭಾ ಚುನಾವಣೆಯಲ್ಲಿಯೂ ಪ್ರತಿಫಲಿಸುತ್ತದೆ ಎಂದು ಅಕ್ಕಶ್ ಅಹ್ಮದ್ ಹೇಳಿದ್ದಾರೆ.
Ballari | ಮಕ್ಕಳಿಗೆ ಮೌಲ್ಯಯುತ ಶಿಕ್ಷಣ ಅಗತ್ಯ : ಶಾಸಕ ಜೆ.ಎನ್.ಗಣೇಶ
ಬಳ್ಳಾರಿ/ಕಂಪ್ಲಿ: ಮಕ್ಕಳಿಗೆ ಗುಣಮಟ್ಟದ ಹಾಗೂ ಮೌಲ್ಯಯುತ ಶಿಕ್ಷಣ ಅತ್ಯಂತ ಅಗತ್ಯ ಎಂದು ಶಾಸಕ ಜೆ.ಎನ್. ಗಣೇಶ ಹೇಳಿದರು. ಪಟ್ಟಣದ ವಾಲ್ಮೀಕಿ ವೃತ್ತದ ಬಳಿಯ ಹೊಸಪೇಟೆ ಬೈಪಾಸ್ ರಸ್ತೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಎದುರುಗಡೆಯಲ್ಲಿರುವ ಶ್ರೀನಿಧಿ ಎಜ್ಯುಕೇಶನ್ ಟ್ರಸ್ಟ್ನ ಹಲೋ ಕಿಡ್ಸ್ ಶೌರ್ಯ ವಿದ್ಯಾಲಯವನ್ನು ಉದ್ಘಾಟಿಸಿ ಮಾತನಾಡಿದ ಅವರು, ಇಂಗ್ಲಿಷ್ ಶಿಕ್ಷಣವೊಂದೇ ಮುಖ್ಯವಲ್ಲ. ಅಂಕಪಟ್ಟಿಗೆ ಸೀಮಿತಗೊಳಿಸದೇ ಎಲ್ಲಾ ಆಯಾಮಗಳಲ್ಲಿ ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಪೂರಕವಾದ ವಾತಾವರಣ ಕಲ್ಪಿಸಬೇಕು ಎಂದು ತಿಳಿಸಿದರು. ಪೋಷಕರು ಮಕ್ಕಳ ಅಭಿರುಚಿಯನ್ನು ಗಮನಿಸಿ ಪ್ರೋತ್ಸಾಹ ನೀಡಬೇಕು. ಇತ್ತೀಚೆಗೆ ಮಕ್ಕಳು ಮೊಬೈಲ್ಗೆ ಅಂಟಿಕೊಳ್ಳುತ್ತಿರುವುದು ಆತಂಕಕಾರಿ ಬೆಳವಣಿಗೆ. ಆದ್ದರಿಂದ ಮೌಲ್ಯಾಧಾರಿತ ಶಿಕ್ಷಣ ನೀಡುವುದು ಅಗತ್ಯವಾಗಿದೆ. ಶಿಕ್ಷಣದ ಜೊತೆಗೆ ಸಂಸ್ಕೃತಿ ಹಾಗೂ ಸಂಸ್ಕಾರಗಳನ್ನೂ ಮಕ್ಕಳಲ್ಲಿ ಬೆಳೆಸಬೇಕು ಎಂದು ಹೇಳಿದರು. ನೂತನ ಶಾಲೆಯ ಮುಖ್ಯಶಿಕ್ಷಕಿ ಬಿ. ದುರ್ಗಾಲಕ್ಷಿ ಮಾತನಾಡಿ, ಚಿಕ್ಕಮಕ್ಕಳಿಗೆ ಸುಲಭ ಮತ್ತು ಪರಿಣಾಮಕಾರಿ ರೀತಿಯಲ್ಲಿ ಶಿಕ್ಷಣ ನೀಡಲಾಗುತ್ತದೆ. ನುರಿತ ಶಿಕ್ಷಕರಿಂದ ಗುಣಮಟ್ಟದ ಶಿಕ್ಷಣ ಒದಗಿಸುವ ಉದ್ದೇಶದಿಂದ ಶಾಲೆಯನ್ನು ಪ್ರಾರಂಭಿಸಲಾಗಿದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಮುಖ್ಯಾಧಿಕಾರಿ ಬಿ. ಮಲ್ಲಿಕಾರ್ಜುನ, ಗ್ಯಾರಂಟಿ ಯೋಜನೆಯ ತಾಲೂಕು ಸಮಿತಿ ಅಧ್ಯಕ್ಷ ಕೆ. ಶ್ರೀನಿವಾಸರಾವ್, ಎಪಿಎಂಸಿ ಅಧ್ಯಕ್ಷ ಹಬೀಬ್ ರೆಹಮಾನ್, ಮುಖಂಡರಾದ ಕೆ.ಎಸ್. ಚಾಂದ್ ಬಾಷಾ ಸೇರಿದಂತೆ ಹಲವರು, ಪೋಷಕರು ಉಪಸ್ಥಿತರಿದ್ದರು.
ಕಸ್ಟಡಿಯಲ್ಲಿದ್ದ ತಂದೆ-ಮಗನಿಗೆ ಚಿತ್ರಹಿಂಸೆ ನೀಡಿ ಕೊಲೆ: ತಮಿಳುನಾಡಿನ 9 ಪೊಲೀಸರಿಗೆ ಮರಣದಂಡನೆ: ಏನಿದು ಪ್ರಕರಣ?
ಏಪ್ರಿಲ್ 6, 2026ರಂದು ಮಧುರೈ ನ್ಯಾಯಾಲಯವು ಸಾತಂಕುಲಂ ಕಸ್ಟಡಿ ಸಾವು ಪ್ರಕರಣದಲ್ಲಿ ಶಿಕ್ಷೆಗೊಳಗಾದ ಒಂಬತ್ತು ಪೊಲೀಸ್ ಸಿಬ್ಬಂದಿಗೆ ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಿ, ಎಲ್ಲಾ ಒಂಬತ್ತು ಆರೋಪಿಗಳಿಗೆ ಮರಣದಂಡನೆ ವಿಧಿಸಿತು. ಮಧುರೈನ ಮೊದಲ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು ಜೂನ್ 2020ರಲ್ಲಿ ಪಿ. ಜಯರಾಜ್ ಮತ್ತು ಅವರ ಮಗ ಜೆ. ಬೆನಿಕ್ಸ್ ಅವರ ಕಸ್ಟಡಿ ಚಿತ್ರಹಿಂಸೆ ಮತ್ತು ಸಾವು ಪ್ರಕರಣದಲ್ಲಿ ಒಂಬತ್ತು ಆರೋಪಿಗಳು ತಪ್ಪಿತಸ್ಥರೆಂದು ಘೋಷಿಸಿದ ಒಂದು ವಾರದ ನಂತರ ಈ ಶಿಕ್ಷೆ ವಿಧಿಸಲಾಗಿದೆ. ಸಾಮಾನ್ಯ ನಾಗರಿಕರು ಇದೇ ಅಪರಾಧವನ್ನು ಮಾಡಿದ್ದರೆ, ಸಾಮಾನ್ಯ ಶಿಕ್ಷೆಯನ್ನು ನೀಡಬಹುದಿತ್ತು. ಆದರೆ ಪೊಲೀಸರೇ ಅಪರಾಧ ಮಾಡಿದ್ದಾರೆ ಎಂದು ಆದೇಶ ಹೊರಡಿಸಿದ ನ್ಯಾಯಾಧೀಶ ಮುತ್ತುಕುಮಾರನ್ ಹೇಳಿದ್ದಾರೆ. ಈ ಪ್ರಕರಣವು ಕಸ್ಟಡಿ ಹಿಂಸಾಚಾರದ ಸ್ಪಷ್ಟ ನಿದರ್ಶನವಾಗಿದೆ ಎಂದು ನ್ಯಾಯಾಲಯವು ಅಭಿಪ್ರಾಯಪಟ್ಟಿದ್ದು, ತಂದೆ ಮತ್ತು ಮಗನ ಮೇಲೆ ಪೊಲೀಸ್ ಕಸ್ಟಡಿಯಲ್ಲಿದ್ದಾಗ ಕ್ರೂರವಾಗಿ ಹಲ್ಲೆ ನಡೆಸಲಾಗಿದೆ ಎಂಬುದಕ್ಕೆ ಪುರಾವೆಗಳಿವೆ. ಇನ್ಸ್ಪೆಕ್ಟರ್ ಎಸ್. ಶ್ರೀಧರ್ ಹಲ್ಲೆಗೆ ಪ್ರಚೋದನೆ ನೀಡಿದ್ದಾರೆ. ಇತರ ಸಿಬ್ಬಂದಿಯೂ ಇದರಲ್ಲಿ ಭಾಗಿಯಾಗಿದ್ದು, ಪ್ರಕರಣವನ್ನು ಮುಚ್ಚಿಹಾಕಿದ್ದಾರೆ ಎಂದಿದೆ. ಶಿಕ್ಷೆಗೊಳಗಾದವರಲ್ಲಿ ಇನ್ಸ್ಪೆಕ್ಟರ್ ಶ್ರೀಧರ್, ಸಬ್-ಇನ್ಸ್ಪೆಕ್ಟರ್ಗಳಾದ ಬಾಲಕೃಷ್ಣನ್ ಮತ್ತು ರಘು ಗಣೇಶ್ ಹಾಗೂ ಪೊಲೀಸ್ ಸಿಬ್ಬಂದಿ ಮುರುಗನ್, ಸಮದುರೈ, ಮುತ್ತುರಾಜ, ಚೆಲ್ಲಾದುರೈ, ಥಾಮಸ್ ಫ್ರಾನ್ಸಿಸ್ ಮತ್ತು ವೇಲುಮುತ್ತು ಸೇರಿದ್ದಾರೆ. ಶಿಕ್ಷೆಯನ್ನು ಘೋಷಿಸುವಾಗ ನ್ಯಾಯಾಲಯವು ಇದನ್ನು ಅಧಿಕಾರದ ದುರುಪಯೋಗ ಎಂದು ಕರೆದಿದೆ. ರಾಜ್ಯದ ಅನೇಕ ಪೊಲೀಸ್ ಅಧಿಕಾರಿಗಳು ಸಮಗ್ರತೆಯಿಂದ ಸೇವೆ ಸಲ್ಲಿಸುತ್ತಾರೆ. ಈ ತೀರ್ಪು ಇತರರಲ್ಲಿ ಭಯವನ್ನು ಹುಟ್ಟುಹಾಕುವ ಉದ್ದೇಶವನ್ನು ಹೊಂದಿದೆ ಎಂದು ಹೇಳಿದೆ. ಜಯರಾಜ್ (58) ಮತ್ತು ಬೆನಿಕ್ಸ್ (31) ಅವರನ್ನು ಜೂನ್ 19, 2020ರಂದು ಕೋವಿಡ್-19 ಲಾಕ್ಡೌನ್ ಮಾನದಂಡಗಳನ್ನು ಉಲ್ಲಂಘಿಸಿದ ಆರೋಪದ ಮೇಲೆ ಪೊಲೀಸರು ಬಂಧಿಸಿದ್ದರು. ಕೆಲವು ದಿನಗಳ ನಂತರ ಅವರು ಕೋವಿಲ್ಪಟ್ಟಿ ಸರ್ಕಾರಿ ಆಸ್ಪತ್ರೆಯಲ್ಲಿ ನಿಧನರಾದರು. ಆ ನಂತರ ನಡೆದ ತನಿಖೆಯಿಂದ ಅವರಿಗೆ ಕಸ್ಟಡಿಯಲ್ಲಿ ಚಿತ್ರಹಿಂಸೆ ನೀಡಲಾಗಿತ್ತು ಎಂಬುದು ಸಾಬೀತಾಗಿತ್ತು. ತಂದೆ ಮತ್ತು ಮಗನ ಬಟ್ಟೆ ಬಿಚ್ಚಿ, ನಿರ್ದಯವಾಗಿ ಹಲ್ಲೆ ಮಾಡಲಾಯಿತು. ಇದನ್ನು ಓದಿದಾಗ ಹೃದಯ ಕಂಪಿಸುತ್ತದೆ ಎಂದು ನ್ಯಾಯಾಲಯ ಹೇಳಿದೆ. 2020 ಜೂನ್ 19ರಂದು ರಾತ್ರಿ ಏನೇನಾಯ್ತು? 31 ವರ್ಷದ ಜೆ. ಬೆನಿಕ್ಸ್ ತೂತುಕುಡಿ ಜಿಲ್ಲೆಯ ಸಾತಂಕುಲಂನಲ್ಲಿರುವ ಕಾಮರಾಜರ್ ಪ್ರತಿಮೆಯ ಬಳಿ ಮೊಬೈಲ್ ಫೋನ್ ಅಂಗಡಿಯನ್ನು ನಡೆಸುತ್ತಿದ್ದರು. ಸಾತಂಕುಲಂ, ಚೆನ್ನೈನಿಂದ ಸುಮಾರು 600 ಕಿ.ಮೀ ದೂರದಲ್ಲಿದೆ. ರಾತ್ರಿ 8 ಗಂಟೆ ಸುಮಾರಿಗೆ, ಬೆನಿಕ್ಸ್ ಅವರಿಗೆ ಅವರ ತಂದೆ ಪಿ. ಜಯರಾಜ್ ಅವರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿಸಲಾಯಿತು. ಹಿಂದಿನ ದಿನ ಅವರ ಮರಗೆಲಸದ ಅಂಗಡಿಯ ಬಳಿ ನಡೆದ ವಾಗ್ವಾದಕ್ಕೆ ಸಂಬಂಧಿಸಿದಂತೆ ಜಯರಾಜ್ ಅವರನ್ನು ಸಾತಂಕುಲಂ ಪೊಲೀಸ್ ಠಾಣೆಗೆ ಕರೆದೊಯ್ಯಲಾಗಿತ್ತು. ಆತಂಕಗೊಂಡ ಬೆನಿಕ್ಸ್ ಪೊಲೀಸ್ ಠಾಣೆಗೆ ಹೋದರು. ಹಲವಾರು ಪ್ರತ್ಯಕ್ಷದರ್ಶಿಗಳ ಪ್ರಕಾರ, ಮೊದಲು ಅವರನ್ನು ಹೊರಗೆ ಕಾಯುವಂತೆ ಪೊಲೀಸರು ಹೇಳಿದರು. ನಂತರ ಅವರನ್ನು ಪೊಲೀಸರು ಒಳಗೆ ಕರೆದರು. ತನ್ನ ತಂದೆಯ ಮೇಲೆ ಹಲ್ಲೆ ಮಾಡಿದ್ದೇಕೆ ಎಂದು ಬೆನಿಕ್ಸ್ ಪೊಲೀಸರನ್ನು ಪ್ರಶ್ನಿಸಿದರು. ಹಾಗೆ ಕೇಳಿದ್ದೇ ತಪ್ಪಾಯಿತು. ಪೊಲೀಸರು ಬೆನಿಕ್ಸ್ ಜೊತೆಗಿದ್ದ ಸ್ನೇಹಿತರನ್ನು ಒಳಗೆ ಬಿಡಲಿಲ್ಲ. ಅವರು ರಾತ್ರಿಯಿಡೀ ಪೊಲೀಸ್ ಠಾಣೆಯ ಹೊರಗೆ ಕೂತರು. ಠಾಣೆಯ ಒಳಗೆ ಹೋದವರನ್ನು ಅವರಿಗೆ ನೋಡಲು ಸಾಧ್ಯವಾಗಲಿಲ್ಲ. ಎಫ್ಐಆರ್ ಪ್ರಕಾರ, ಜಯರಾಜ್ ಮತ್ತು ಬೆನಿಕ್ಸ್ ತಮ್ಮ ಅಂಗಡಿಯನ್ನು ಅನುಮತಿಸಲಾದ ಸಮಯಗಳನ್ನು ಮೀರಿ ತೆರೆದಿಡುವ ಮೂಲಕ ಕೋವಿಡ್-19 ಲಾಕ್ಡೌನ್ ನಿರ್ಬಂಧಗಳನ್ನು ಉಲ್ಲಂಘಿಸಿದ್ದಾರೆ ಎಂದು ಕಂಡುಬಂದಿದೆ. ಪೊಲೀಸರು ಚದುರಿಸಲು ಕೇಳಿದಾಗ, ಇಬ್ಬರು ಅಧಿಕಾರಿಗಳನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದರು, ನೆಲದ ಮೇಲೆ ಕುಳಿತು ಹೊರಳಾಡಿದರು. ಈ ವೇಳೆ ಅವರು ಗಾಯಗೊಂಡರು ಎಂದು ಪೊಲೀಸರು ಹೇಳಿದ್ದಾರೆ. ಇದಲ್ಲದೆ, ಇಬ್ಬರು ಪೊಲೀಸರನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಎಫ್ಐಆರ್ ನಲ್ಲಿ ಆರೋಪಿಸಲಾಗಿದೆ. ಆದರೆ ಈ ಹೇಳಿಕೆಯನ್ನು ಪ್ರಶ್ನಿಸಲಾಯಿತು. ತಂದೆ ಮತ್ತು ಮಗನನ್ನು ಒಟ್ಟಿಗೆ ಠಾಣೆಗೆ ಕರೆತರಲಾಗಿಲ್ಲ; ರಾತ್ರಿಯಾಗುತ್ತಿದ್ದಂತೆ ಠಾಣೆಯೊಳಗೆ ಅವರಿಗೆ ಚಿತ್ರಹಿಂಸೆ ನೀಡಲಾಗುತ್ತಿತ್ತು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ರಾತ್ರಿ 11.30ರ ಸುಮಾರಿಗೆ ಸಬ್-ಇನ್ಸ್ಪೆಕ್ಟರ್ ರಘು ಗಣೇಶ್ ಅಲ್ಲಿಗೆ ಬಂದಿದ್ದಾರೆ; ನಂತರ ಹಲ್ಲೆಯ ತೀವ್ರತೆ ಹೆಚ್ಚಾಯಿತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಒಳಗಿನಿಂದ ಕಿರುಚಾಟ ಕೇಳಿಬಂದಿದೆ ಎಂದು ಠಾಣೆ ಹೊರಗೆ ಕಾಯುತ್ತಿದ್ದವರು ಹೇಳಿದ್ದಾರೆ. ಚಿತ್ರಹಿಂಸೆ ಆರೋಪ ತನ್ನ ತಂದೆಯನ್ನು ನೆಲಕ್ಕೆ ಕೆಡವಿ ಥಳಿಸಲಾಗಿತ್ತು. ಬೆನಿಕ್ಸ್ ಮಧ್ಯಪ್ರವೇಶಿಸಿದಾಗ, ಅವರ ಮೇಲೂ ಹಲ್ಲೆ ನಡೆಸಲಾಯಿತು. ಆಮೇಲೆ ಇಬ್ಬರನ್ನೂ ಬಂಧಿಸಿ ಠಾಣೆಯೊಳಗೆ ಸುಮಾರು ಎರಡು ಗಂಟೆಗಳ ಕಾಲ ಥಳಿಸಲಾಯಿತು ಎಂದು ಜಯರಾಜ್ ಅವರ ಮಗಳು ಪರ್ಸಿ ತಿಳಿಸಿದ್ದಾರೆ. ಅವರಿಬ್ಬರಿಗೆ ತೀವ್ರ ಗಾಯಗಳಾಗಿತ್ತು. ರಕ್ತಸ್ರಾವದಿಂದಾಗಿ ಅವರು ಹಲವಾರು ಬಾರಿ ಬಟ್ಟೆ ಬದಲಿಸಬೇಕಾಯಿತು ಎಂದು ಜಯರಾಜ್-ಬೆನಿಕ್ಸ್ ಕುಟುಂಬವನ್ನು ಪ್ರತಿನಿಧಿಸಿದ ವಕೀಲರು ಹೇಳಿದ್ದಾರೆ. ಈ ಹೇಳಿಕೆಗಳನ್ನು ನಂತರ ಮಹಿಳಾ ಕಾನ್ಸ್ಟೆಬಲ್ ಒಬ್ಬರ ಸಾಕ್ಷ್ಯದಿಂದ ಬಲಪಡಿಸಲಾಯಿತು. ರಾತ್ರಿಯಿಡೀ ಹಲ್ಲೆ ನಡೆಸಲಾಗಿತ್ತು ಎಂದು ಆಕೆ ತನಿಖಾಧಿಕಾರಿಗಳಿಗೆ ತಿಳಿಸಿದ್ದು, ಠಾಣೆಯೊಳಗಿನ ಟೇಬಲ್ಗಳು ಮತ್ತು ಲಾಠಿಗಳಲ್ಲಿ ರಕ್ತದ ಕಲೆಗಳಿದ್ದವು ಎಂದಿದ್ದಾರೆ. ಮದ್ರಾಸ್ ಹೈಕೋರ್ಟ್ನ ನಿರ್ದೇಶನಗಳನ್ನು ಅನುಸರಿಸಿ ರಾಜ್ಯದ ಸಿಬಿ-ಸಿಐಡಿಯಿಂದ ತನಿಖೆಯನ್ನು ವಹಿಸಿಕೊಂಡ ಸಿಬಿಐ, ಜಯರಾಜ್-ಬೆನಿಕ್ಸ್ ಅವರಿಗೆ ಚಿತ್ರಹಿಂಸೆ ನೀಡಿ ನಿರ್ದಯವಾಗಿ ಥಳಿಸಲಾಯಿತು ಎಂದು ವಾದಿಸಿತು. ಲೈಂಗಿಕ ಹಿಂಸೆಗೆ ಸಂಬಂಧಿಸಿದ ಆರೋಪಗಳು ಅತ್ಯಂತ ಗಂಭೀರ ಆರೋಪಗಳಲ್ಲಿ ಸೇರಿವೆ. ಬೆನಿಕ್ಸ್ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ ಎಂದು ಕುಟುಂಬ ಸದಸ್ಯರು ಆರೋಪಿಸಿದ್ದಾರೆ. ವೈದ್ಯಕೀಯ ವರದಿಗಳು ಬರುವವರೆಗೂ ಎಚ್ಚರಿಕೆಯಿಂದ ಇರಬೇಕೆಂದು ತನಿಖಾಧಿಕಾರಿಗಳು ಒತ್ತಾಯಿಸಿದರೂ, ಆರೋಪದ ಬಗ್ಗೆ ಸಾರ್ವಜನಿಕ ಆಕ್ರೋಶ ತೀವ್ರವಾಗಿತ್ತು. ಬಂಧನ ಜೂನ್ 20ರಂದು ಪೊಲೀಸರು ಇಬ್ಬರನ್ನೂ ವೈದ್ಯಕೀಯ ಫಿಟ್ನೆಸ್ ಪರೀಕ್ಷೆಗೆ ಕರೆದೊಯ್ದು ನಂತರ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಲಾಗಿದೆ ಎಂದು ಹೇಳಿದರು. ಕಾನೂನಿನ ಪ್ರಕಾರ, ಇಬ್ಬರ ದೈಹಿಕ ಸ್ಥಿತಿಯನ್ನು ಸಮರ್ಪಕವಾಗಿ ಪರೀಕ್ಷಿಸದೆ ಮ್ಯಾಜಿಸ್ಟ್ರೇಟ್ ರಿಮಾಂಡ್ ಆದೇಶಗಳನ್ನು ಹೊರಡಿಸಿದ್ದಾರೆ ಎಂಬ ಆರೋಪ ಇದೆ. ಪೆರುರಾನಿಯಲ್ಲಿ ಹತ್ತಿರದ ಜಿಲ್ಲಾ ಜೈಲು ಲಭ್ಯವಿದ್ದರೂ ಸಹ, ಸಾತಂಕುಲಂನಿಂದ ತಂದೆ ಮತ್ತು ಮಗನನ್ನು ಸುಮಾರು 100 ಕಿಲೋಮೀಟರ್ ದೂರದಲ್ಲಿರುವ ಕೋವಿಲ್ ಪಟ್ಟಿ ಸಬ್ಜೈಲಿಗೆ ಸಾಗಿಸಲಾಯಿತು. ಜೂನ್ 22ರ ರಾತ್ರಿ ಕಸ್ಟಡಿಯಲ್ಲಿದ್ದಾಗ ಬೆನಿಕ್ಸ್ ಅವರಿಗೆ ಎದೆನೋವು ಕಾಣಿಸಿಕೊಂಡಿತು. ಅವರನ್ನು ಕೋವಿಲ್ಪಟ್ಟಿ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತು; ಅಲ್ಲಿ ಅವರು ನಿಧನರಾದರು. ಜೂನ್ 23ರ ಮುಂಜಾನೆ ಜಯರಾಜ್ ಕೂಡ ಅದೇ ಆಸ್ಪತ್ರೆಯಲ್ಲಿ ನಿಧನರಾದರು. ಸಾರ್ವಜನಿಕ ಆಕ್ರೋಶ ಮತ್ತು ರಾಜಕೀಯ ಒತ್ತಡ ಜಯರಾಜ್-ಬೆನಿಕ್ಸ್ ಸಾವಿನ ಬಳಿಕ ಸಾತಂಕುಲಂನಲ್ಲಿ ಅಂಗಡಿಯವರು ತಮ್ಮ ವ್ಯವಹಾರಗಳನ್ನು ಮುಚ್ಚಿ ಪ್ರತಿಭಟನೆ ನಡೆಸಿದರು. ತಮಿಳುನಾಡಿನಾದ್ಯಂತ ವಾಣಿಜ್ಯ ಸಂಸ್ಥೆಗಳು ಒಗ್ಗಟ್ಟಿನಿಂದ ಅಂಗಡಿ ಮುಚ್ಚಿ ಪ್ರತಿಭಟನೆ ವ್ಯಕ್ತಪಡಿಸಿದರು. ಸಾಮಾಜಿಕ ಮಾಧ್ಯಮಗಳಿಂದಾಗಿ ಪ್ರಕರಣವು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಗಮನ ಸೆಳೆಯಿತು. ಇದನ್ನು ಅಮೆರಿಕದಲ್ಲಿ ಜಾರ್ಜ್ ಫ್ಲಾಯ್ಡ್ ಸಾವಿನೊಂದಿಗೆ ಹೋಲಿಸಲಾಯಿತು. ಕೆಲವರು ಭಾರತದಲ್ಲಿ ಕಸ್ಟಡಿ ಹಿಂಸಾಚಾರವನ್ನು ಬಹಳ ಹಿಂದಿನಿಂದಲೂ ಕಡಿಮೆ ವರದಿ ಮಾಡಲಾಗಿದೆ ಎಂದು ವಾದಿಸಿದರು. ಇಬ್ಬರು ಸಬ್-ಇನ್ಸ್ಪೆಕ್ಟರ್ಗಳನ್ನು ಅಮಾನತುಗೊಳಿಸಲಾಯಿತು. ಇನ್ಸ್ ಪೆಕ್ಟರ್ ಶ್ರೀಧರ್ ಅವರನ್ನು ವರ್ಗಾಯಿಸಲಾಯಿತು. ಕೆಲವು ಕಾನ್ ಸ್ಟೆಬಲ್ಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂದು ತೂತುಕುಡಿ ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ. ನ್ಯಾಯಾಂಗ ಹಸ್ತಕ್ಷೇಪ ಮದ್ರಾಸ್ ಹೈಕೋರ್ಟ್ನ ಮಧುರೈ ಪೀಠವು ಪ್ರಕರಣವನ್ನು ಸ್ವತಃ ಕೈಗೆತ್ತಿಕೊಂಡು ತನಿಖೆಯನ್ನು ಮೇಲ್ವಿಚಾರಣೆ ಮಾಡಲು ಮುಂದಾಯಿತು. ನ್ಯಾಯಮೂರ್ತಿಗಳಾದ ಪಿ.ಎಂ. ಪ್ರಕಾಶ್ ಮತ್ತು ಬಿ. ಪುಗಲೇಂಧಿ ಅವರನ್ನೊಳಗೊಂಡ ಪೀಠವು ವಿವರವಾದ ತನಿಖೆ ಮತ್ತು ಮರಣೋತ್ತರ ಪರೀಕ್ಷೆಯನ್ನು ಮೂವರು ವೈದ್ಯರ ತಂಡದಿಂದ ನಡೆಸಬೇಕೆಂದು ಆದೇಶಿಸಿತು. ನ್ಯಾಯಾಲಯವು ಮರಣೋತ್ತರ ಪರೀಕ್ಷೆಯನ್ನು ವಿಡಿಯೊ ಮಾಡಬೇಕೆಂದು ಸೂಚಿಸಿತು. ಪೊಲೀಸ್ ಠಾಣೆ ಮತ್ತು ಜೈಲು ದಾಖಲೆಗಳ ಸಿಸಿಟಿವಿ ದೃಶ್ಯಾವಳಿಗಳು ಸೇರಿದಂತೆ ಪ್ರಮುಖ ಸಾಕ್ಷ್ಯಗಳನ್ನು ಸಂರಕ್ಷಿಸಲು ಅದು ಆದೇಶಿಸಿತ್ತು. ಪ್ರಕರಣವನ್ನು ಅಂತಿಮವಾಗಿ ಸಿಬಿಐಗೆ ಹಸ್ತಾಂತರಿಸಲಾಯಿತು. ಅಲ್ಲಿ ಒಬ್ಬ ಇನ್ಸ್ಪೆಕ್ಟರ್, ಇಬ್ಬರು ಸಬ್-ಇನ್ ಸ್ಪೆಕ್ಟರ್ಗಳು ಮತ್ತು ಹಲವಾರು ಕಾನ್ಸ್ಟೆಬಲ್ಗಳು ಸೇರಿದಂತೆ 10 ಪೊಲೀಸರನ್ನು ಬಂಧಿಸಲಾಯಿತು. ಪ್ರಕರಣದಲ್ಲಿ ಬಂಧಿಸಲ್ಪಟ್ಟಿದ್ದ 10ನೇ ಆರೋಪಿ, ಆಗಿನ ವಿಶೇಷ ಸಬ್-ಇನ್ಸ್ಪೆಕ್ಟರ್ ಪಾಲ್ ದುರೈ, 2020 ಆಗಸ್ಟ್ನಲ್ಲಿ ಕೋವಿಡ್-19ರಿಂದ ನಿಧನರಾದರು. ಐದು ವರ್ಷಗಳಿಗೂ ಹೆಚ್ಚು ಕಾಲ ನಡೆದ ವಿಚಾರಣೆಯ ನಂತರ ಈ ಪ್ರಕರಣವನ್ನು ಅಪರೂಪದಲ್ಲಿ ಅಪರೂಪ ಎಂದು ಕರೆದ ನ್ಯಾಯಾಲಯವು 9 ಪೊಲೀಸರಿಗೆ ಮರಣದಂಡನೆ ವಿಧಿಸಿತು.
ಜೈಪುರ| 400ಕೋಟಿ.ರೂ.ಸೈಬರ್ ವಂಚನೆ ಜಾಲ ಭೇದಿಸಿದ ಪೊಲೀಸರು
ಜೈಪುರ,ಎ. 7: ವಿದೇಶ ವ್ಯಾಪಾರದ ಮಹಾ ನಿರ್ದೇಶನಾಲಯ (ಡಿಜಿಎಫ್ಟಿ)ದ ಪೋರ್ಟಲ್ನಲ್ಲಿರುವ ದೇಶದಾದ್ಯಂತದ 400ಕ್ಕೂ ಅಧಿಕ ಕಂಪೆನಿಗಳ ನಿರ್ದೇಶಕರ ವ್ಯಕ್ತಿ ವಿವರಗಳನ್ನು ಹ್ಯಾಕ್ ಮಾಡುವಲ್ಲಿ ಭಾಗಿಯಾದ ಪ್ರಮುಖ ಸೈಬರ್ ವಂಚನೆ ಜಾಲವೊಂದನ್ನು ಜೈಪುರ ಪೊಲೀಸರು ಭೇದಿಸಿದ್ದಾರೆ. ಇದು ದುಬೈಯೊಂದಿಗೆ ನಂಟು ಹೊಂದಿರುವ ಡಿಜಿಎಫ್ಟಿ-ಐಸಿಇಜಿಎಟಿಇ ಪ್ರಮಾಣ ಪತ್ರ ಹಗರಣ. ಇದರ ಪರಿಣಾಮ ಕೋಟ್ಯಂತರ ರೂಪಾಯಿ ನಷ್ಟ ಉಂಟಾಗಿದೆ ಎಂದು ಜೈಪುರ ಪೊಲೀಸ್ ಕಮಿಷನರೇಟ್ ತಿಳಿಸಿದೆ. ಪೊಲೀಸರು ಬಹಿರಂಗಪಡಿಸಿದ ಮಾಹಿತಿಯ ಪ್ರಕಾರ, ಈ ಜಾಲ 400ಕ್ಕೂ ಅಧಿಕ ಕಂಪೆನಿಗಳ ನಿರ್ದೇಶಕರ ವ್ಯಕ್ತಿ ವಿವರವನ್ನು ಬದಲಾಯಿಸಿದೆ ಹಾಗೂ ಕೋಟ್ಯಂತರ ರೂಪಾಯಿ ನಷ್ಟ ಉಂಟು ಮಾಡಿದೆ. ಈ ಪ್ರಕರಣಕ್ಕೆ ಸಂಬಂಧಿಸಿ ಇದುವರೆಗೆ ಐವರು ಆರೋಪಿಗಳನ್ನು ಬಂಧಿಸಲಾಗಿದೆ. ಇವರೆಲ್ಲರೂ ದುಬೈಯಿಂದ ಕಾರ್ಯಾಚರಿಸುತ್ತಿರುವ ಜಾಲದ ಭಾಗವಾಗಿದ್ದಾರೆ ಎಂದು ಹೇಳಲಾಗಿದೆ. ಆರೋಪಿಗಳು ನಕಲಿ ಆಧಾರ್ ಹಾಗೂ ಪಾನ್ ಕಾರ್ಡ್ಗಳನ್ನು ಬಳಸಿಕೊಂಡು ಡಿಜಿಟಲ್ ಸಹಿ ಪ್ರಮಾಣಪತ್ರ (ಡಿಎಸ್ಸಿ) ಪಡೆದುಕೊಂಡಿದದ್ದಾರೆ ಎಂದು ತನಿಖೆ ಬಹಿರಂಗಪಡಿಸಿದೆ. ಈ ಪ್ರಮಾಣ ಪತ್ರಗಳನ್ನು ಸಾಮಾನ್ಯವಾಗಿ ಕಂಪೆನಿಯ ನಿರ್ದೇಶಕರು ಅಥವಾ ರಫ್ತುದಾರರ ಡಿಜಿಟಲ್ ಗುರುತನ್ನು ಪರಿಶೀಲಿಸಲು ಬಳಸಲಾಗುತ್ತದೆ. ಆದರೆ, ಆರೋಪಿಗಳು ಈ ಪ್ರಮಾಣ ಪತ್ರವನ್ನು ಬಳಸಿಕೊಂಡು ಐಸಿಇಜಿಎಟಿಇ ಪೋರ್ಟಲ್ಗೆ ಅನಧಿಕೃತ ಪ್ರವೇಶ ಪಡೆದಿದ್ದಾರೆ. ಅನಂತರ ಹ್ಯಾಕರ್ಗಳು ರಫ್ತುದಾರರ ಖಾತೆಗಳನ್ನು ಭೇದಿಸಿದ್ದಾರೆ. ಡ್ಯೂಟಿ ಕ್ರೆಡಿಟ್ ಸ್ಕ್ರಿಪ್ಸ್ (ಆಮದು/ರಫ್ತು ಸುಂಕವನ್ನು ಕಡಿಮೆ ಮಾಡಲು ನೀಡುವ ಪ್ರಮಾಣ ಪತ್ರಗಳು)ಅನ್ನು ನಕಲಿ ಖಾತೆಗೆ ವರ್ಗಾಯಿಸಿದ್ದಾರೆ. ಬಳಿಕ ನಗದೀಕರಿಸಿಕೊಂಡಿದ್ದಾರೆ ಎಂದು ಹೇಳಲಾಗಿದೆ.
Ballari | 6.20 ಕೋಟಿ ರೂ. ವೆಚ್ಚದ ಸಿಸಿ ರಸ್ತೆ ಕಾಮಗಾರಿಗೆ ಶಾಸಕ ಗಣೇಶ ಭೂಮಿ ಪೂಜೆ
ಬಳ್ಳಾರಿ/ಕಂಪ್ಲಿ: ತಾಲೂಕಿನ ಗ್ರಾಮೀಣ ಭಾಗದಲ್ಲಿ ಸುಮಾರು 6.20 ಕೋಟಿ ರೂ. ವೆಚ್ಚದಲ್ಲಿ ಸಿಸಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಜೆ.ಎನ್. ಗಣೇಶ ಮಂಗಳವಾರ ಭೂಮಿ ಪೂಜೆ ನೆರವೇರಿಸಿದರು. ನಂತರ ಮಾತನಾಡಿದ ಅವರು, ಪ್ರದೇಶದಲ್ಲಿ ವಿವಿಧ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡು ಜನತೆಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗುತ್ತಿದೆ ಎಂದು ತಿಳಿಸಿದರು. ಇಂದಿನ ಕಾಲದಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಿದರೆ ಮಕ್ಕಳ ಭವಿಷ್ಯ ಉಜ್ವಲವಾಗಲಿದೆ ಎಂದು ಅಭಿಪ್ರಾಯಪಟ್ಟರು. ತಾಲೂಕಿನ ದೇವಲಾಪುರ ಗ್ರಾಮದ ಸೋಮಲಾಪುರದಲ್ಲಿ 2025-26ನೇ ಸಾಲಿನ 4059 ಸಿಎಂಡಿಕ್ಯೂ ಯೋಜನೆಯಡಿ ಸುಮಾರು 300 ಲಕ್ಷ ರೂ. ಹಾಗೂ ಸುಗ್ಗೇನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಾವಿನಹಳ್ಳಿ ಗ್ರಾಮದಲ್ಲಿ ಸುಮಾರು 320 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಿರುವ ಸಿಸಿ ರಸ್ತೆ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದರು. ಈ ಸಂದರ್ಭದಲ್ಲಿ ಗ್ಯಾರಂಟಿ ಯೋಜನೆಯ ತಾಲೂಕು ಸಮಿತಿ ಅಧ್ಯಕ್ಷ ಕೆ. ಶ್ರೀನಿವಾಸರಾವ್, ಮುಖಂಡರಾದ ವಿ. ಮಾರೇಶ, ಚಂದುಸಾಬ್, ಆರ್. ಬಸವರಾಜ, ರಾಮರಾಜು, ವಡ್ಡಿನ ಮರಿಸ್ವಾಮಿ, ನಾಯಕರ ಪಂಪಣ್ಣ, ಬಾಬುಸಾಬ್, ಬಸಯ್ಯಸ್ವಾಮಿ, ಪಂಪಣ್ಣ, ಎನ್. ರಮೇಶ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಅಬುಧಾಬಿಯಲ್ಲಿರುವ ಅಮೆರಿಕ ಸಂಯೋಜಿತ AI ಕೇಂದ್ರದ ಮೇಲೆ ದಾಳಿ: ಇರಾನ್ ಎಚ್ಚರಿಕೆ
ಟೆಹ್ರಾನ್, ಎ.7: ಟೆಹ್ರಾನ್ನಲ್ಲಿ ಎಐ (ಕೃತಕ ಬುದ್ಧಿಮತ್ತೆ)ಗೆ ಸಂಬಂಧಿಸಿದ ಕೇಂದ್ರದ ಮೇಲೆ ವೈಮಾನಿಕ ದಾಳಿ ನಡೆದಿರುವುದಕ್ಕೆ ಪ್ರತಿಯಾಗಿ ಅಬುಧಾಬಿಯಲ್ಲಿನ ಪ್ರಮುಖ ಅಮೆರಿಕ ಎಐ ಡೇಟಾ ಕೇಂದ್ರವನ್ನು ಗುರಿಯಾಗಿಸಿ ದಾಳಿ ನಡೆಯುವ ಸಾಧ್ಯತೆಯಿದೆ ಎಂದು ತಸ್ನಿಮ್ ಸುದ್ದಿಸಂಸ್ಥೆ ವರದಿ ಮಾಡಿದೆ. ಟೆಹ್ರಾನ್ನ ಷರೀಫ್ ತಾಂತ್ರಿಕ ವಿಶ್ವವಿದ್ಯಾಲಯದ ಮೇಲೆ ನಡೆದ ದಾಳಿಯಲ್ಲಿ ಕಂಪ್ಯೂಟಿಂಗ್ ಕೇಂದ್ರ ಮತ್ತು ಜಿಪಿಯು ಸೌಲಭ್ಯಕ್ಕೆ ಹಾನಿಯಾಗಿದೆ. ಈ ವಿವಿಯು ದೇಶದ ಕೃತಕ ಬುದ್ಧಿಮತ್ತೆ ಪರಿಸರ ವ್ಯವಸ್ಥೆಗೆ ಮೂಲ ಸೌಕರ್ಯವನ್ನು ಒದಗಿಸುತ್ತದೆ. `ಈ ದಾಳಿಗೆ ಪ್ರತೀಕಾರವಾಗಿ ಅಬುಧಾಬಿಯಲ್ಲಿರುವ ಅಮೆರಿಕದ ಸ್ಟಾರ್ಗೆಟ್ ಎಐ ಕೇಂದ್ರವನ್ನು ಗುರಿಯಾಗಿಸಿ ದಾಳಿ ನಡೆಯುವ ಸಾಧ್ಯತೆಯಿದೆ ಎಂದು ಇರಾನ್ನ ಇಸ್ಲಾಮಿಕ್ ರೆವೊಲ್ಯುಷನರಿ ಗಾರ್ಡ್ ಕಾಪ್ರ್ಸ್(ಐಆರ್ಜಿಸಿ) ಎಚ್ಚರಿಕೆ ನೀಡಿರುವುದಾಗಿ ವರದಿಯಾಗಿದೆ.
ಇರಾನ್ ಮೇಲೆ ಅಮೆರಿಕ-ಇಸ್ರೇಲ್ ಜಂಟಿ ದಾಳಿ: ಡೆಡ್ಲೈನ್ ಮುಗಿಯುವ ಮುನ್ನ ತೈಲ ಕೇಂದ್ರಗಳು ಧ್ವಂಸ
America Attacks Iran: ಇರಾನ್ ಮತ್ತು ಇಸ್ರೇಲ್ ನಡುವಿನ ಸಂಘರ್ಷ ಈಗ ಬೇರೊಂದು ಸ್ವರೂಪ ಪಡೆದುಕೊಂಡಿದೆ. ಇರಾನ್ ಯಾವುದೇ ನಿರ್ಧಾರಕ್ಕೆ ಬರುವ ಮುನ್ನವೇ ಅಮೆರಿಕ ಮತ್ತು ಇಸ್ರೇಲ್ ಪಡೆಗಳು ಇರಾನ್ನ ಪ್ರಮುಖ ನೆಲೆಗಳ ಮೇಲೆ ಮುಗಿಬಿದ್ದಿವೆ. ಇರಾನ್ನ ಆರ್ಥಿಕ ಬೆನ್ನೆಲುಬಾಗಿರುವ ಖಾರ್ಗ್ ದ್ವೀಪದ ತೈಲ ರಫ್ತು ಕೇಂದ್ರದ ಮೇಲೆ ಸರಣಿ ದಾಳಿ ನಡೆಸಲಾಗಿದ್ದು, ತೈಲ ಪೂರೈಕೆಗೆ ಭಾರಿ
ವಿಜಯನಗರ | ವಾರ್ತಾಭಾರತಿ ವರದಿ ಫಲಶ್ರುತಿ : ಬೇಸಿಗೆ ನೀರಿನ ಸಂಕಷ್ಟಕ್ಕೆ ಮುನ್ನೆಚ್ಚರಿಕೆ ; 24/7 ಸಹಾಯವಾಣಿ ಆರಂಭ
ವಿಜಯನಗರ (ಹೊಸಪೇಟೆ) : ಬೇಸಿಗೆ ಆರಂಭವಾಗಿರುವುದರಿಂದ ಜಿಲ್ಲೆಯಾದ್ಯಂತ ಸಾರ್ವಜನಿಕರಿಗೆ, ವಿಶೇಷವಾಗಿ ಗ್ರಾಮೀಣ ಭಾಗದ ಜನರು ಹಾಗೂ ಜಾನುವಾರುಗಳಿಗೆ ಕುಡಿಯುವ ನೀರಿನ ಅಭಾವ ಉಂಟಾಗದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ನೋಂಗ್ಜಾಯ್ ಮಹ್ಮದ್ ಅಲಿ ಅಕ್ರಮ್ ಷಾ ಸೂಚಿಸಿದರು. ಅಂತರ್ಜಲ ಮಟ್ಟ ಕುಸಿದಿರುವ ಹಳ್ಳಿಗಳನ್ನು ಗುರುತಿಸಿ, ಅಲ್ಲಿ ಖಾಸಗಿ ಕೊಳವೆ ಬಾವಿಗಳನ್ನು ಬಾಡಿಗೆಗೆ ಪಡೆದು ಅಥವಾ ಟ್ಯಾಂಕರ್ ಮೂಲಕ ನೀರು ಪೂರೈಸುವಂತೆ ಹಾಗೂ ದುರಸ್ತಿಗೆ ಬಂದ ಕೈಪಂಪುಗಳನ್ನು ತಕ್ಷಣ ಸರಿಪಡಿಸುವಂತೆ ಅಧಿಕಾರಿಗಳಿಗೆ ನಿರ್ದೇಶಿಸಿದರು. ಇದೇ ವೇಳೆ, ಮಾ.24ರಂದು “ತೀವ್ರಗೊಳ್ಳುತ್ತಿರುವ ನೀರಿನ ಸಂಕಷ್ಟ: 183 ಹಳ್ಳಿಗಳಲ್ಲಿ ಜೀವಜಲಕ್ಕಾಗಿ ಹಾಹಾಕಾರ” ಎಂಬ ವಾರ್ತಾಭಾರತಿ ಬೈಲೈನ್ ವರದಿ ಪ್ರಕಟವಾಗಿರುವುದನ್ನೂ ಅವರು ಉಲ್ಲೇಖಿಸಿದರು. ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಸ್ಥಾಪಿಸಲಾದ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸುಸ್ಥಿತಿಯಲ್ಲಿ ಇರಿಸಬೇಕು. ತಾಂತ್ರಿಕ ದೋಷದಿಂದ ಸ್ಥಗಿತಗೊಂಡ ಘಟಕಗಳ ಸ್ಥಿತಿಗತಿ ಪರಿಶೀಲಿಸಿ ವರದಿ ನೀಡಬೇಕು. ದುರಸ್ತಿ ಅಗತ್ಯವಿರುವ ಘಟಕಗಳನ್ನು ತಕ್ಷಣ ಸರಿಪಡಿಸಿ ಜನರಿಗೆ ಶುದ್ಧ ನೀರು ಒದಗಿಸಬೇಕು ಎಂದು ಸೂಚಿಸಿದರು. ಮಳೆಗಾಲ ಸಮೀಪಿಸುತ್ತಿರುವುದರಿಂದ ಸಾಂಕ್ರಾಮಿಕ ರೋಗಗಳ ಹರಡುವಿಕೆ ಸಾಧ್ಯತೆ ಹೆಚ್ಚಿರುವ ಹಿನ್ನೆಲೆ, ನೀರಿನ ಮೂಲಗಳ ಸ್ವಚ್ಛತೆ ಮತ್ತು ಶುಚಿತ್ವ ಕಾಪಾಡಿಕೊಳ್ಳಬೇಕು. ಗ್ರಾಮ ಮಟ್ಟದಲ್ಲಿ ನೀರಿನ ಗುಣಮಟ್ಟ ಪರೀಕ್ಷೆಗೆ ನೀಡಿರುವ ಫೀಲ್ಡ್ ಟೆಸ್ಟ್ ಕಿಟ್ ಬಳಸಿ ನಿಯಮಿತವಾಗಿ ಪರೀಕ್ಷೆ ನಡೆಸಿ ದಾಖಲೆ ನಿರ್ವಹಣೆ ಮಾಡಬೇಕು. ಕರ್ತವ್ಯ ಲೋಪ ಎಸಗುವ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು. ಸಹಾಯವಾಣಿ ಆರಂಭ : ಜಿಲ್ಲೆಯ 6 ತಾಲ್ಲೂಕುಗಳಲ್ಲಿ ನೀರಿನ ಸಮಸ್ಯೆ ಎದುರಾದಲ್ಲಿ ತಕ್ಷಣ ಪರಿಹಾರ ಕಲ್ಪಿಸಲು ಜಿಲ್ಲಾ ಪಂಚಾಯಿತಿಯಲ್ಲಿ 24/7 ಕಂಟ್ರೋಲ್ ರೂಮ್ ತೆರೆಯಲಾಗಿದೆ. ಸಾರ್ವಜನಿಕರು ನೀರಿನ ಸಮಸ್ಯೆ ಕುರಿತು ದೂರು ಸಲ್ಲಿಸಲು ದೂರವಾಣಿ ಸಂಖ್ಯೆ 9480837823ಕ್ಕೆ ಕರೆ ಮಾಡಬಹುದು ಎಂದು ತಿಳಿಸಿದರು. ಸಭೆಯಲ್ಲಿ ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಕೆ. ತಿಮ್ಮಪ್ಪ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಕಾರ್ಯಪಾಲಕ ಇಂಜಿನಿಯರ್ ಎಸ್. ದೀಪಾ, ಡಿಡಿಪಿಐ ವೆಂಕಟೇಶ್ ರಾಮಚಂದ್ರಪ್ಪ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
`ಟಿ20ಯೇ ಭವಿಷ್ಯ, ಏಕದಿನ ಮಾದರಿ ಪೂರ್ತಿ ಬಿಟ್ಹಾಕಿ': ಬಿಸಿಸಿಐಗೆ ಲಲಿತ್ ಮೋದಿ ಹೀಗೊಂದು ಸಲಹೆ ನೀಡಿರುವುದೇಕೆ?
ಚುಟುಕು ಕ್ರಿಕೆಟ್ ನ ಭರಾಟೆಯಲ್ಲಿ ಏಕದಿನ ಸರಣಿಗಳು ನಡೆಯುವುದೇ ಅಪರೂಪ ಎಂಬಂತಾಗಿದೆ. ಅಂಥದ್ದರಲ್ಲಿ ಇದೀಗ ಲಲಿತ್ ಮೋದಿ ಅವರು ಏಕದಿನ ಕ್ರಿಕೆಟ್ ಅನ್ನು ಸಂಪೂರ್ಣವಾಗಿ ರದ್ದುಗೊಳಿಸುವಂತೆ ಬಿಸಿಸಿಐಗೆ ಸಲಹೆ ನೀಡಿದ್ದಾರೆ. ಟಿ20 ಲೀಗ್ಗಳಿಂದ ರೂಪುಗೊಂಡ ಆಧುನಿಕ ಆಟಕ್ಕೆ ಈ ಸ್ವರೂಪ ಇನ್ನು ಮುಂದೆ ಹೊಂದಿಕೆಯಾಗುವುದಿಲ್ಲ. ಕ್ರೀಡಾಭಿಮಾನಿಗಳ ಆಸಕ್ತಿ ಬದಲಾಗುತ್ತಿರುವುದರಿಂದ ಭವಿಷ್ಯದ ಕ್ರಿಕೆಟ್ ಮಾದರಿಯಾಗಿ ಒಂಡೇ ಉಳಿಯುವುದಿಲ್ಲ ಎಂದಿದ್ದಾರೆ. 2027 ರ ಏಕದಿನ ವಿಶ್ವಕಪ್ ಕಡೆಗೆ ಎಲ್ಲರೂ ಚಿತ್ತ ಹರಿಸುತ್ತಿರುವ ಈ ಸಂದರ್ಭದಲ್ಲಿ ಅವರ ಈ ಹೇಳಿಕೆಗಳು ಬಹಳ ಪ್ರಾಮುಖ್ಯತೆ ಪಡೆದಿವೆ.
ಬೆಂಗಳೂರು ಉದ್ಯಮಿ ಪತ್ನಿಗೆ ಆನ್ಲೈನ್ಸ್ ಗೆಳೆಯರು ಅರ್ಧ ಕೆಜಿ ಚಿನ್ನ, ನಗದು ವಂಚನೆ ಮಾಡಿದ್ದಾರೆ. ಮಹಿಳೆಯ ಸುಲಿಗೆ ಖಾಸಗಿ ಫೋಟೋ ಮುಂದಿಟ್ಟು ಹಂತ ಹಂತವಾಗಿ ಹಣ, ಚಿನ್ನವನ್ನು ಪಡೆದುಕೊಂಡಿದ್ದಾರೆ. ಸದ್ಯ ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದು ಚಿನ್ನ ಜಪ್ತಿ ಮಾಡಿದ್ದಾರೆ. ಕೆಆರ್ ಪುರ ಠಾಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅನಾಥ ಆಶ್ರಮದಿಂದ ಯುವಕ ಪರಾರಿ: ಪ್ರಕರಣ ದಾಖಲು
ಕಾಪು, ಎ.7: ಸುಳ್ಯದ ಆರಂಬೂರಿನಲ್ಲಿ ಫೆ.6ರಂದು ಪತ್ತೆಯಾಗಿ ಇನ್ನಂಜೆ ಗ್ರಾಮದ ಶಂಕರಪುರದಲ್ಲಿರುವ ವಿಶ್ವಾಸದ ಮನೆ ಅನಾಥ ಆಶ್ರಮದಲ್ಲಿ ದಾಖಲಾಗಿದ್ದ ಅನಾಥ ಬುದ್ಧಿಮಾಂದ್ಯ ಯುವಕನೊಬ್ಬ ಮಾ.30ರಂದು ರಾತ್ರಿ ಆಶ್ರಮ ದಿಂದ ತಪ್ಪಿಸಿಕೊಂಡು ಹೋಗಿರುವುದಾಗಿ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗಾಝಾ| ಇಸ್ರೇಲ್ ದಾಳಿಯಲ್ಲಿ ಕನಿಷ್ಠ 10 ಮಂದಿ ಮೃತ್ಯು
ಗಾಝಾನಗರ, ಎ.7: ಗಾಝಾದ ಅಲ್-ಮಘಾಜಿ ನಗರದ ಪೂರ್ವದಲ್ಲಿ ಸ್ಥಳಾಂತರಗೊಂಡವರು ಆಶ್ರಯ ಪಡೆದಿದ್ದ ಶಾಲೆಯ ಮೇಲೆ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ಕನಿಷ್ಠ 10 ಮಂದಿ ಮೃತಪಟ್ಟಿದ್ದು, 13 ಮಂದಿ ಗಾಯಗೊಂಡಿರುವುದಾಗಿ ಸ್ಥಳೀಯ ಆಸ್ಪತ್ರೆಯ ಮೂಲಗಳು ಸೋಮವಾರ ಹೇಳಿವೆ. 6 ಗಾಯಾಳುಗಳ ಸ್ಥಿತಿ ಗಂಭೀರವಾಗಿದೆ. ಇಸ್ರೇಲ್ ಬೆಂಬಲಿತ, ಹಮಾಸ್ ವಿರೋಧಿ ಸಶಸ್ತ್ರ ಹೋರಾಟಗಾರರ ಗುಂಪು ಹಾಗೂ ಶಾಲೆಯಲ್ಲಿ ಆಶ್ರಯ ಪಡೆದಿದ್ದವರ ನಡುವೆ ಆರಂಭಗೊಂಡ ವಾಗ್ಯುದ್ಧ ಘರ್ಷಣೆಯ ರೂಪಕ್ಕೆ ತಿರುಗಿದೆ. ಹಮಾಸ್ ವಿರೋಧಿ ಗುಂಪಿನವರು ಕೆಲವರನ್ನು ಬಂಧಿಸುವ ಉದ್ದೇಶದಿಂದ ಬಂದಿದ್ದರು. ಘರ್ಷಣೆಯಲ್ಲಿ ಸ್ಥಳೀಯರನ್ನು ಹಮಾಸ್ ಸದಸ್ಯರು ಬೆಂಬಲಿಸಿದರು. ಸ್ವಲ್ಪ ಹೊತ್ತಿನಲ್ಲೇ ಆ ಪ್ರದೇಶದ ಮೇಲೆ ಇಸ್ರೇಲ್ ಪಡೆ ಬಾಂಬ್ ದಾಳಿ ಹಾಗೂ ಗುಂಡಿನ ದಾಳಿ ನಡೆಸಿದೆ ಎಂದು ಸ್ಥಳೀಯರನ್ನು ಉಲ್ಲೇಖಿಸಿ ಎಎಫ್ಪಿ ಸುದ್ದಿಸಂಸ್ಥೆ ವರದಿ ಮಾಡಿದೆ.
ಪ್ರಕತ್ಯೇಕ ಪ್ರಕರಣ: ಇಬ್ಬರ ಆತ್ಮಹತ್ಯೆ
ಗಂಗೊಳ್ಳಿ, ಎ.7: ವಿಪರೀತ ಮದ್ಯ ಸೇವನೆಯಿಂದ ಅನಾರೋಗ್ಯಕ್ಕೆ ತುತ್ತಾಗಿದ್ದ ಗುಜ್ಜಾಡಿ ಗ್ರಾಮದ ನಾಯಕ ವಾಡಿಯ ಉಮೇಶ ಖಾರ್ವಿ(59) ಎಂಬವರು ಜೀವನದಲ್ಲಿ ಜಿಗುಪ್ಸೆಗೊಂಡು ಎ.6ರಂದು ರಾತ್ರಿ ಮನೆಯ ಜಗುಲಿಯ ಬಳಿಯ ಕಿಟಕಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಣಿಪಾಲ: ವಿಪರೀತ ಮದ್ಯಪಾನದ ಚಟ ಹೊಂದಿದ್ದ ಕರಂಬಳ್ಳಿ ದೇವಸ್ಥಾನದ ಬಳಿ ನಿವಾಸಿ ರಾಘವೇಂದ್ರ(45) ಎಂಬವರು ಜೀವನದಲ್ಲಿ ಜಿಗುಪ್ಸೆಗೊಂಡು ಎ.3ರಂದು ರಾತ್ರಿ ಮನೆಯ ಒಳಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕನ್ನಡ ಸಾಹಿತ್ಯದಲ್ಲಿ ‘ಮಾನವೀಯತೆ’ ಸಹಜ ಪ್ರವೃತ್ತಿಯಾಗಿ ಬೆಳೆದುಬಂದಿದೆ: ಡಾ.ಚಿನ್ನಪ್ಪ ಗೌಡ
‘ಕನ್ನಡ ಸಾಹಿತ್ಯದಲ್ಲಿ ಮಾನವೀಯ ಮೌಲ್ಯಗಳು’ ವಿಚಾರಸಂಕಿರಣ
ಮಂಗಳೂರು: ಸಹಾಯಕ ಔಷಧ ನಿಯಂತ್ರಕ ಬಾಬು ಬಿ.ಎನ್. ಮನೆ, ಕಚೇರಿಗೆ ಲೋಕಾಯುಕ್ತ ದಾಳಿ
ಚಿಕ್ಕಬಳ್ಳಾಪುರ, ಬೆಂಗಳೂರು, ಮಂಗಳೂರಿನ ಮನೆ, ಕಚೇರಿಯಲ್ಲಿ ನಗದು, ಚಿನ್ನ-ಬೆಳ್ಳಿ ಪತ್ತೆ
ನಾಳೆಯಿಂದ(ಎ.8) ಕಾಳಗಿಯಲ್ಲಿ ಕ್ರೀಡಾ ಉತ್ಸವ
ಕಾಳಗಿ : ಪಟ್ಟಣದ ಶ್ರೀ ನೀಲಕಂಠ ಕಾಳೇಶ್ವರ ದೇವಸ್ಥಾನ ಆವರಣದಲ್ಲಿ ಬುಧವಾರದಿಂದ ಜಾತ್ರಾ ಮಹೋತ್ಸವದ ಅಂಗವಾಗಿ ಕ್ರೀಡಾ ಉತ್ಸವವನ್ನು ಹಮ್ಮಿಕೊಳ್ಳಲಾಗಿದ್ದು, ಎಲ್ಲಾ ಪೂರ್ವಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ರಾಜೇಶ್ ಗುತ್ತೇದಾರ್ ತಿಳಿಸಿದ್ದಾರೆ. ಗ್ರಾಮೀಣಾ ಭಾಗದ ಯುವಕರಲ್ಲಿ ಕ್ರೀಡಾಭಿಮಾನ ಬೆಳೆಯುವ ಉದ್ದೇಶದಿಂದ ನೀಲಕಂಠ ಕಾಳೇಶ್ವರ ಜಾತ್ರಾ ಮಹೋತ್ಸವ ನಿಮಿತ್ತವಾಗಿ ಬುಧವಾರದಿಂದ ಕಾಳಗಿ ಕ್ರೀಡಾ ಉತ್ಸವ ಹಮ್ಮಿಕೊಳ್ಳಲಾಗಿದೆ. ಕ್ರೀಡಾ ಉತ್ಸವದಲ್ಲಿ ಮಹಿಳೆ ಹಾಗೂ ಪುರುಷರ ಕಬಡ್ಡಿ ಪಂದ್ಯಗಳು, ಪುರುಷರ ವಾಲಿಬಾಲ್, ಒಂದೇ ಕೈಯಲ್ಲಿ ಭಾರ ಎತ್ತುವ ಸ್ಪರ್ಧೆ, ಕುಸ್ತಿ ಪಂದ್ಯಗಳು ಜರಗಲಿವೆ. ಎ.9ರ ಗುರುವಾರ ಸಾಯಂಕಾಲ 4:00 ಗಂಟೆಗೆ ವಾಲಿಬಾಲ್ ಪಂದ್ಯಗಳು ಜರುಗಲಿದ್ದು, ಎ.10ರ ಶುಕ್ರವಾರ ಸಂಜೆ 4:00 ಗಂಟೆಗೆ ಪುರುಷರ ಕಬಡ್ಡಿ ಪಂದ್ಯಗಳು ಜರಗಲಿವೆ. ಎ.11&12 ರಂದು ಶನಿವಾರ ಮತ್ತು ರವಿವಾರ ಎರಡು ದಿನಗಳ ಕಾಲ ಮಹಿಳೆಯರ ಕಬಡ್ಡಿ ಪಂದ್ಯಗಳು ಸಾಯಂಕಾಲ 4:00 ಗಂಟೆಗೆ ಜರುಗಲಿವೆ. ಹಾಗೂ ಎ.16ರ ಗುರುವಾರ ಸಾಯಂಕಾಲ 5:00 ಗಂಟೆಗೆ ಕುಸ್ತಿ ಪಂದ್ಯಗಳು ಮತ್ತು ಒಂದೇ ಕೈಯಲ್ಲಿ ಭಾರ ಎತ್ತುವ ಸ್ಪರ್ಧೆ ಜರುಗಲಿವೆ ಎಂದು ತಿಳಿಸಿದ್ದಾರೆ. ಈ ಎಲ್ಲಾ ಪಂದ್ಯಗಳಿಗೆ ವಿಶೇಷ ಆಹ್ವಾನಿತರಾಗಿ ರಾಜ್ಯ ಮಟ್ಟದ ಕಬ್ಬಡ್ಡಿ ಕ್ರೀಡಾಪಟುಗಳು ಆಗಮಿಸಲಿದ್ದಾರೆ. ಆಸಕ್ತಿಗಳ ಕಾಳಗಿ ತಾಲೂಕಿನ ಕ್ರೀಡಾಪಟುಗಳು ಕ್ರೀಡಾಕೂಟದಲ್ಲಿ ಭಾಗವಹಿಸುವಂತೆ ತಿಳಿಸಿದ್ದಾರೆ. ಕ್ರೀಡಾಕೂಟದಲ್ಲಿ ವಿಜೇತರಾದ ತಂಡಗಳಿಗೆ ಟ್ರೋಫಿಯೊಂದಿಗೆ ನಗದು ಬಹುಮಾನ ನೀಡಲಾಗುತ್ತದೆ. ಹೆಚ್ಚಿನ ಸಂಖ್ಯೆಯಲ್ಲಿ ಕ್ರೀಡಾ ಅಭಿಮಾನಿಗಳು ಆಗಮಿಸಿ ಕಾಳಗಿ ಕ್ರೀಡಾ ಉತ್ಸವ ಯಶಸ್ವಿಗೊಳಿಸುವಂತೆ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಕಾಳಗಿ ಪಟ್ಟಣ ಪಂಚಾಯತ್ ಸದಸ್ಯ ಶರಣಪ್ಪ ಬೇಲೂರು, ಗುರುರಾಜ್ ಮದ್ದೂರ್, ಸಂತೋಷ್ ಪತಂಗೆ, ದತ್ತು ಗುತ್ತೇದಾರ್, ಪ್ರಸಾದ ರಟಕಲ್, ಇದ್ದರು.
Kalaburagi | 371(ಜೆ) ಸಂಪುಟದ ಉಪಸಮಿತಿಗೆ ಸಚಿವ ಪ್ರಿಯಾಂಕ್ ಖರ್ಗೆ ಬದಲು ಶರಣಪ್ರಕಾಶ್ ಅವರನ್ನು ನೇಮಿಸುವಂತೆ ಆಗ್ರಹ
ಕಲಬುರಗಿ: ಕಲ್ಯಾಣ ಕರ್ನಾಟಕದ 371(ಜೆ) ಉಪ ಸಮಿತಿಯ ಅಧ್ಯಕ್ಷ ಸ್ಥಾನದಿಂದ ಸಚಿವ ಪ್ರಿಯಾಂಕ್ ಖರ್ಗೆಯವರನ್ನು ತೆಗೆದು ಆ ಸ್ಥಾನಕ್ಕೆ ರಾಜ್ಯದ ವೈದ್ಯಕೀಯ ಶಿಕ್ಷಣ ಸಚಿವ ಡಾ ಶರಣಪ್ರಕಾಶ್ ಪಾಟೀಲ್ ಅವರನ್ನು ನಿಯೋಜಿಸಬೇಕು ಎಂದು ಹೈದರಾಬಾದ್ ಕರ್ನಾಟಕ ಯುವ ಹೋರಾಟ ಸಮಿತಿಯ ಅಧ್ಯಕ್ಷ ಸಂಚಾಲಕ ಡಾ.ರಾಜು ಕುಳಗೇರಿ ಆಗ್ರಹಿಸಿದ್ದಾರೆ. ಮಂಗಳವಾರ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಸ್ತುತ ಉಪ ಸಮಿತಿಯ ಅಧ್ಯಕ್ಷರಾದ ಸಚಿವ ಪ್ರಿಯಾಂಕ್ ಖರ್ಗೆ ಅವರು ಈ ಭಾಗದ ಸಮಗ್ರ ಅಭಿವೃದ್ಧಿಯ ಕಡೆ ಗಮನ ಹರಿಸುತ್ತಿಲ್ಲ, ಅವರು ಕೇವಲ ರಾಷ್ಟ್ರೀಯ, ಅಂತರರಾಷ್ಟ್ರೀಯ ಹೇಳಿಕೆಗಳನ್ನು ನೀಡುತ್ತಾ ಸಮಯ ವ್ಯರ್ಥ ಮಾಡುತ್ತಿದ್ದಾರೆ ವಿನಃ ಕಲ್ಯಾಣ ಕರ್ನಾಟಕದ ಅಭಿವೃದ್ಧಿ ಬಗ್ಗೆ ಗಮನ ಹರಿಸುತ್ತಿಲ್ಲ ಎಂದು ಆರೋಪಿಸಿದರು. ಈ ಭಾಗದ ಯುವಜನರ ಉದ್ಯೋಗ, ಶಿಕ್ಷಣಕ್ಕಾಗಿ ಯಾವುದೇ ಕ್ರಮ ಕೈಗೊಳ್ಳದ ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ಈ ಸ್ಥಾನದಿಂದ ತೆಗೆದು ನಮ್ಮದೇ ಜಿಲ್ಲೆಯ ವೈದ್ಯಕೀಯ ಶಿಕ್ಷಣ ಸಚಿವರಾದ ಡಾ.ಶರಣಪ್ರಕಾಶ್ ಪಾಟೀಲ್ ಅವರು ಆರೋಗ್ಯ ಕ್ಷೇತ್ರದಲ್ಲಿ ಗಣನೀಯ ಕೊಡುಗೆ ನೀಡುತ್ತಿದ್ದಾರೆ. ಅಂತಹ ಅಭಿವೃದ್ಧಿಪರ ಚಿಂತಕ ಸಚಿವರಿಗೆ ಈ ಸ್ಥಾನ ನೀಡಿದರೆ ಭವಿಷ್ಯದಲ್ಲಿ ಬದಲಾವಣೆ ತರಬಹುದು ಎಂದು ವಿಶ್ವಾಸ ವ್ಯಕ್ತಪಡಿಸಿದರು. 371 ಜೆ ಉಪ ಸಮಿತಿಯ ಅಧ್ಯಕ್ಷರಾಗಿ ಭಾಗದ ಅಭಿವೃದ್ಧಿಗೆ ಒತ್ತು ಕೊಡುವ ಬದಲು ಸಚಿವರು ಅವರಿಗೆ ಸಂಬಂಧಪಡದ ಆರೆಸ್ಸೆಸ್ ಹಾಗೂ ಅಂತರರಾಷ್ಟ್ರೀಯ ವಿಚಾರಗಳಿಗೆ ಹೆಚ್ಚಿನ ಒತ್ತು ನೀಡುತ್ತಿದ್ದಾರೆ. ಹೀಗಾಗಿ ಅವರಿಗೆ ರಾಷ್ಟ್ರ ರಾಜಕಾರಣದಲ್ಲಿ ಹೆಚ್ಚಿನ ಜವಾಬ್ದಾರಿ ಕೊಡಬೇಕು. ಕಲಬುರಗಿಯನ್ನು ಹೆಲ್ತ್ ಹಬ್ ಮಾಡುವಲ್ಲಿ ಶ್ರಮಿಸುತ್ತಿರುವ ಸಚಿವ ಡಾ. ಶರಣಪ್ರಕಾಶ್ ಪಾಟೀಲ್ ಅವರಿಗೆ ಸಮಿತಿಯ ಅಧ್ಯಕ್ಷರನ್ನಾಗಿ ನೇಮಿಸಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸಿದರು. ಸುದ್ದಿಗೋಷ್ಠಿಯಲ್ಲಿ ಹೋರಾಟಗಾರರಾದ ನಾಗರಾಜ್ ಸ್ವಾದಿ, ಹಣಮಂತ ಶೇರಿ ಉಪಸ್ಥಿತರಿದ್ದರು.
ಪ್ರಿಯಕರನ ಪ್ರಚೋದನೆ ಆರೋಪ: ಯುವತಿ ಆತ್ಮಹತ್ಯೆ
ಕುಂದಾಪುರ, ಎ.7: ಪ್ರಿಯಕರನ ಪ್ರಚೋದನೆಯಿಂದ ಯುವತಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತರನ್ನು ಶಂಕರನಾರಾಯಣ ಗ್ರಾಮದ ಬೆದ್ರಕಟ್ಟೆ ಕಾಲೋನಿ ನಿವಾಸಿ, ಕುಂದಾಪುರ ಸಾಯಿ ಆಸ್ಪತ್ರೆಯಲ್ಲಿ ಕ್ಲಿನಿಂಗ್ ಕೆಲಸ ಮಾಡಿಕೊಂಡಿದ್ದ ರಮ್ಯಾ (28) ಎಂದು ಗುರುತಿಸಲಾಗಿದೆ. ಈಕೆ ಮಂಜುನಾಥ್(19) ಎಂಬಾತನನ್ನು ಪ್ರೀತಿಸುತ್ತಿದ್ದು, ಆತನು ಆಕೆಯಲ್ಲಿ ಹಣ ಹೊಂದಿಸಿ ಕೊಡುವಂತೆ ಪೀಡಿಸುತಿದ್ದನು ಎಂದು ದೂರಲಾಗಿದೆ. ಅದಕ್ಕೆ ಆಕೆ ನನ್ನಲ್ಲಿ ಹಣ ಇಲ್ಲ ಎಂದು ಹೇಳಿದಕ್ಕೆ ಮಂಜುನಾಥ್, ನೀನು ನನಗೆ ಬೇಡ ನೀನು ಎಲ್ಲಿಯಾದರೂ ಬಿದ್ದು ಸತ್ತು ಹೋಗು ಎಂದು ಹೇಳಿ ಆಕೆಗೆ ಸಾಯುವಂತೆ ಪ್ರಚೋದನೆ ನೀಡಿದ್ದಾನೆಂದು ದೂರಲಾಗಿದೆ. ಅದೇ ಕಾರಣಕ್ಕೆ ಆಕೆ ಎ.3ರಂದು ರಾತ್ರಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ದೂರಲಾಗಿದೆ.
Afzalpur | ಪಕ್ಷದೊಳಗಿನ ಭಿನ್ನಾಭಿಪ್ರಾಯ ಬಹಿರಂಗ ಬೇಡ: ಕಾಂಗ್ರೆಸ್ ಮುಖಂಡರಿಂದ ಎಚ್ಚರಿಕೆ
ಅಫಜಲಪುರ: ಮಾಜಿ ಸಚಿವ ಮಾಲಿಕಯ್ಯ ಗುತ್ತೇದಾರ್ ಹಾಗೂ ಮುಸ್ಲಿಂ ಸಮುದಾಯದ ಹಿರಿಯ ಮುಖಂಡ ಮಕ್ಬೂಲ್ ಪಟೇಲ್ ಅವರಿಗೆ ಏನಾದರೂ ಗೊಂದಲಗಳು ಇದ್ದರೆ ಪಕ್ಷದ ಚೌಕಟ್ಟಿನಲ್ಲೇ ಚರ್ಚಿಸಬೇಕು, ಬಹಿರಂಗ ಹೇಳಿಕೆಗಳಿಂದ ಪಕ್ಷಕ್ಕೆ ಹಾನಿಯಾಗುತ್ತದೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಪೂಜಾರಿ ಹೇಳಿದರು. ಪಟ್ಟಣದ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇತ್ತೀಚೆಗೆ ರೇವೂರ(ಬಿ) ಗ್ರಾಮದ ಕಾರ್ಯಕ್ರಮದಲ್ಲಿ ಮಾಲಿಕಯ್ಯ ಗುತ್ತೇದಾರ್ ಅವರು ಶಾಸಕ ಎಂ.ವೈ. ಪಾಟೀಲ್ ಬಗ್ಗೆ ಒಳ್ಳೆಯ ಅಭಿಪ್ರಾಯ ವ್ಯಕ್ತಪಡಿಸಿ, ಅವರ ಪುತ್ರ ಅರುಣಕುಮಾರ ಪಾಟೀಲ್ ವಿರುದ್ಧ ಬಹಿರಂಗವಾಗಿ ಹೇಳಿಕೆ ನೀಡಿರುವುದು ಸರಿಯಲ್ಲ ಎಂದು ತಿಳಿಸಿದರು. ಮುಸ್ಲಿಂ ಸಮುದಾಯದ ಹಿರಿಯ ಮುಖಂಡ ಮಕ್ಬೂಲ್ ಪಟೇಲ್ ಅವರು ಅಹಿಂದ ವರ್ಗಗಳಿಗೆ ನಾಮ ನಿರ್ದೇಶನದಲ್ಲಿ ಅವಕಾಶ ನೀಡಬೇಕೆಂದು ಹೇಳಿರುವುದನ್ನು ಸ್ವಾಗತಿಸುತ್ತೇವೆ. ಆದರೆ 2023ರ ವಿಧಾನಸಭೆ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಗೆ ಬೆಂಬಲ ನೀಡಿದ ಬಳಿಕ ಈಗ ಕಾಂಗ್ರೆಸ್ಗೆ ಸಲಹೆ ನೀಡುವುದು ಸೂಕ್ತವಲ್ಲ ಎಂದು ಅಭಿಪ್ರಾಯಪಟ್ಟರು. ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಪ್ರಕಾಶ್ ಜಮಾದಾರ ಮಾತನಾಡಿ, ಪಕ್ಷದ ಕೆಲವು ಮುಖಂಡರು ಅರುಣಕುಮಾರ ಪಾಟೀಲ್ ಕುರಿತು ಈಗಲೇ ನಕಾರಾತ್ಮಕ ಹೇಳಿಕೆ ನೀಡುವುದು ಸಮಂಜಸವಲ್ಲ. ಇನ್ನೂ ಎರಡು ವರ್ಷಗಳ ಬಳಿಕ ನಡೆಯುವ ವಿಧಾನಸಭೆ ಚುನಾವಣೆಯವರೆಗೆ ಎಲ್ಲರೂ ಒಗ್ಗಟ್ಟಿನಿಂದ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಬೇಕು ಎಂದರು. ವೀರಶೈವ ಲಿಂಗಾಯತ ಸಮಾಜದ ತಾಲೂಕು ಅಧ್ಯಕ್ಷ ಚಂದ್ರಶೇಖರ ಕರಜಗಿ ಮಾತನಾಡಿ, ಶಾಸಕ ಎಂ.ವೈ. ಪಾಟೀಲ್ ಕೇವಲ ಒಂದು ಸಮುದಾಯಕ್ಕೆ ಮಾತ್ರ ಅವಕಾಶ ನೀಡುತ್ತಿದ್ದಾರೆ ಎಂಬ ಆರೋಪ ಸರಿಯಲ್ಲ. ಅವರು ಹಿಂದುಳಿದ ವರ್ಗಗಳಿಗೂ ಸಮಾನ ನ್ಯಾಯ ಒದಗಿಸಿದ್ದಾರೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಜಿಪಂ ಮಾಜಿ ಸದಸ್ಯ ಸಿದ್ದಾರ್ಥ್ ಬಸರಗಿಡ, ಸಿದ್ದು ಸಿರಸಗಿ, ಶರಣು ಕುಂಬಾರ, ಶಿವಾನಂದ ಗಾಡಿ ಸಾಹುಕಾರ, ಅಸ್ಪಕ್ ಬಂದರವಾಡ, ಶ್ರೀಶೈಲಗೌಡ ಪಾಟೀಲ್, ಸೈಯದ್ ಪಟೇಲ್, ಮಹಾಲಿಂಗ ಅಂಗಡಿ, ಪ್ರವೀಣ್ ಕಲ್ಲೂರ, ಗೌತಮ್ ಸಕ್ಕರಗಿ, ಸೈಫನಸಾಬ ಚಿಕ್ಕಳಗಿ, ಸಿದ್ದು ಕೇರಕನಳ್ಳಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. “ಎಂ.ವೈ. ಪಾಟೀಲ್ ಎಲ್ಲರನ್ನು ಒಗ್ಗೂಡಿಸಿಕೊಂಡು ಸಾಗುತ್ತಿದ್ದಾರೆ. ಅವರ ವಿರುದ್ಧ ಆಧಾರರಹಿತ ಆರೋಪ ಮಾಡುವುದು ಸರಿಯಲ್ಲ. ಯಾವುದೇ ಸಮಸ್ಯೆಗಳಿದ್ದರೂ ಪಕ್ಷದ ವೇದಿಕೆಯಲ್ಲಿ ಚರ್ಚಿಸಬೇಕು” ಎಂದು ಕಾಂಗ್ರೆಸ್ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ರೇಣುಕಾ ಸಿಂಗೆ ಹೇಳಿದರು.
Devadurga | ಜನಸ್ಪಂದನೆಯಲ್ಲಿ ಗದ್ದಲ : ಸಮಸ್ಯೆ ಪರಿಹಾರಕ್ಕೆ ಅಧಿಕಾರಿಗಳಿಗೆ ಶಾಸಕಿ ಸೂಚನೆ
ದೇವದುರ್ಗ : ಪಟ್ಟಣದ ಎಲ್ಲಾ ವಾರ್ಡಗಳ ಮೂಲಸೌಕರ್ಯ ಸಮಸ್ಯೆಗಳ ಪರಿಹಾರಕ್ಕಾಗಿ ಸೋಮವಾರ ಪುರಸಭೆ ಕಾರ್ಯಾಲಯದಲ್ಲಿ ಆಯೋಜಿಸಿದ್ದ ಜನಸ್ಪಂದನೆ ಕಾರ್ಯಕ್ರಮ ಸಾರ್ವಜನಿಕರಿಗೆ ಅನುಕೂಲಕರವಾಗಬೇಕು ಎಂದು ಶಾಸಕಿ ಕರೆಮ್ಮ.ಜಿ. ನಾಯಕ್ ಹೇಳಿದರು. ಕಾರ್ಯಕ್ರಮದಲ್ಲಿ ಸಾರ್ವಜನಿಕರು ರಸ್ತೆ, ಕುಡಿಯುವ ನೀರು, ವಿದ್ಯುತ್ ಕಂಬಗಳು ಸೇರಿದಂತೆ ಹಲವು ಸಮಸ್ಯೆಗಳ ಬಗ್ಗೆ ಅಳಲು ತೋಡಿಕೊಂಡರು. ಈ ವೇಳೆ ಪುರಸಭೆ ಅಧಿಕಾರಿಗಳು ಸಮರ್ಪಕವಾಗಿ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿದ ಸಾರ್ವಜನಿಕರು ಶಾಸಕಿ ಎದುರು ಆಕ್ರೋಶ ವ್ಯಕ್ತಪಡಿಸಿದ್ದು, ಕೆಲಕಾಲ ಗದ್ದಲದ ವಾತಾವರಣ ನಿರ್ಮಾಣವಾಯಿತು. ಪಟ್ಟಣದಲ್ಲಿ ಮಟ್ಕಾ, ಬೆಟ್ಟಿಂಗ್ ಹಾಗೂ ಅಕ್ರಮ ಮದ್ಯದ ಚಟುವಟಿಕೆಗಳು ಹೆಚ್ಚಾಗಿದ್ದು, ಯುವಕರು ದುಷ್ಚಟಗಳಿಗೆ ಒಳಗಾಗುತ್ತಿದ್ದಾರೆ. ಇದರಿಂದ ಕುಟುಂಬಗಳು ಸಂಕಷ್ಟಕ್ಕೆ ಸಿಲುಕುತ್ತಿವೆ ಎಂದು ಶಾಸಕಿ ತಿಳಿಸಿ, ಇಂತಹ ಅಕ್ರಮ ಚಟುವಟಿಕೆಗಳಿಗೆ ತಕ್ಷಣ ಕಡಿವಾಣ ಹಾಕುವಂತೆ ಪೊಲೀಸ್ ಹಾಗೂ ಅಬಕಾರಿ ಅಧಿಕಾರಿಗಳಿಗೆ ತಾಕೀತು ಮಾಡಿದರು. ಜನಸ್ಪಂದನೆ ಕಾರ್ಯಕ್ರಮ ಕೇವಲ ಒಂದು ದಿನಕ್ಕೆ ಸೀಮಿತವಾಗಬಾರದು. ಸಾರ್ವಜನಿಕರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಿ ಪರಿಹಾರ ಒದಗಿಸಬೇಕು. ಇಲ್ಲವಾದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು. ಪ್ರತಿ ವಾರ್ಡದಲ್ಲೂ ಕುಡಿಯುವ ನೀರು, ರಸ್ತೆ, ವಿದ್ಯುತ್ ದೀಪ, ಶೌಚಾಲಯ ಸೇರಿದಂತೆ ಮೂಲಸೌಕರ್ಯಗಳ ಕೊರತೆ ಕುರಿತು ಹಲವಾರು ಬಾರಿ ಮನವಿ ಸಲ್ಲಿಸಿದರೂ ಅಧಿಕಾರಿಗಳು ಸ್ಪಂದಿಸದಿರುವುದರಿಂದ ಜನರು ತೊಂದರೆ ಅನುಭವಿಸುತ್ತಿದ್ದಾರೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ತಹಶೀಲ್ದಾರ್ ನಾಗಮ್ಮ ಕಟ್ಟಿಮನಿ, ಅಲಮುದ್ದೀನ್, ಶಿವರಾಜ್ ಪೂಜಾರಿ, ಡಾ. ಬನೇಶ್, ದೇವೇಂದ್ರ ಕಡೇಕರ್, ಪುರಸಭೆ ಮುಖ್ಯಾಧಿಕಾರಿ ಹಂಪಯ್ಯ, ಪಿ.ಐ ಮಂಜುನಾಥ ಸೇರಿದಂತೆ ಇತರರು ಉಪಸ್ಥಿತರಿದ್ದರು. ಪಟ್ಟಣದಲ್ಲಿ ಬಿಡಾಡಿ ದನ ಗಳಿಂದ ಅಪಘಾತಗಳು ಹೆಚ್ಚಾಗುತ್ತಿವೆ. ಖಾತಾ, ಮುಟೇಷನ್ ಹಾಗೂ ಕಟ್ಟಡ ಅನುಮತಿಗೆ ಹೆಚ್ಚು ಹಣ ವಸೂಲಿ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದ್ದು, ವಿವಿಧ ಸೇವೆಗಳ ದರಪಟ್ಟಿಯನ್ನು ಸಾರ್ವಜನಿಕರಿಗೆ ಗೋಚರವಾಗುವಂತೆ ಪ್ರದರ್ಶಿಸಬೇಕು ಎಂದು ಗಂಗನಗೌಡ ಗೌರಂಪೇಟ ಒತ್ತಾಯಿಸಿದರು. ಪಟ್ಟಣದ ಎಲ್ಲ ವಾರ್ಡ್ಗಳಲ್ಲಿ ಚರಂಡಿ ಹಾಗೂ ರಸ್ತೆ ಸಮಸ್ಯೆಗಳು ಗಂಭೀರವಾಗಿವೆ. ಪುರಸಭೆ ಮುಖ್ಯಾಧಿಕಾರಿ ಸಮಸ್ಯೆಗಳನ್ನು ಆಲಿಸದೇ ನಿರ್ಲಕ್ಷ್ಯ ತೋರಿದ್ದಾರೆ. ಹೈಟೆಕ್ ಶೌಚಾಲಯ ಕಾಮಗಾರಿಗಳಲ್ಲಿ ಕಳಪೆ ಗುಣಮಟ್ಟದ ಆರೋಪಗಳಿದ್ದರೂ ಸ್ಪಷ್ಟನೆ ನೀಡಲಾಗಿಲ್ಲ ಎಂದು ರೈತ ಸಂಘದ ಮುಖಂಡ ತಿಮ್ಮನಗೌಡ ಆರೋಪಿಸಿದರು.
ಪಿಐಟಿ ಎನ್.ಡಿ.ಪಿ.ಎಸ್. ಕಾಯ್ದೆಯಡಿ ಆರೋಪಿ ಸೆರೆ
ಉಡುಪಿ, ಎ.7: ಮಾದಕ ದ್ರವ್ಯ ಸಾಗಾಟ ಮತ್ತು ಮಾರಾಟ ಪ್ರಕರಣಗಳಲ್ಲಿ ನಿರಂತರವಾಗಿ ಭಾಗಿಯಾಗಿ ಸಮಾಜದ ಸ್ವಾಸ್ಥ್ಯವನ್ನು ಹಾಳು ಮಾಡುತ್ತಿದ್ದ ಕಾರ್ಕಳ ನಗರ ಠಾಣಾ ವ್ಯಾಪ್ತಿಯ ಆರೋಪಿ ಬಂಗ್ಲೆಗುಡ್ಡೆಯ ಫೈಝಲ್ (22) ಎಂಬಾತನನ್ನು ಪಿ.ಐ.ಟಿ. ಎನ್.ಡಿ.ಪಿ.ಎಸ್. ಕಾಯ್ದೆಯಡಿ ಬಂಧನ ಕ್ರಮ ಜರಗಿಸಲು ಆದೇಶ ಹೊರಡಿಸಲಾಗಿದೆ. ಈತನ ವಿರುದ್ಧ ಕಾರ್ಕಳ ನಗರ ಠಾಣೆಯ ಪೊಲೀಸ್ ನಿರೀಕ್ಷಕರ ಮೂಲಕ ಬಂದ ವರದಿಯನ್ನು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರು, ಬಂಧನ ಆದೇಶಕ್ಕಾಗಿ ಮಂಗಳೂರು ಪಶ್ಚಿಮ ವಲಯ ಪೊಲೀಸ್ ಮಹಾನಿರೀಕ್ಷಕರಿಗೆ ಸಲ್ಲಿಸಿದ್ದು, ಆತನ ವಿರುದ್ಧ ದಾಖಲಾದ ಪ್ರಕರಣಗಳನ್ನು ಪರಿಶೀಲಿಸಿ, ಎ.7/ರಂದು ಬಂಧನ ಆದೇಶ ಹೊರಡಿಸಲಾ ಗಿದೆ. ಅದರಂತೆ ಕಾರ್ಕಳ ನಗರ ಪೊಲೀಸ್ ನಿರೀಕ್ಷಕರು, ಎ.7ರಂದು ಆರೋಪಿಗೆ ಬಂಧನ ಆದೇಶ ಜಾರಿಗೊಳಿಸಿ, ಬಂಧಿತನನ್ನು ಧಾರವಾಡದಲ್ಲಿರುವ ಕೇಂದ್ರ ಕಾರಾಗೃಹಕ್ಕೆ ಒಪ್ಪಿಸಿದ್ದಾರೆ ಬಂಧಿತ ಆರೋಪಿಯ ವಿರುದ್ಧ ಒಟ್ಟು 5 ಮಾದಕ ದ್ರವ್ಯ ಸಾಗಾಟ ಮತ್ತು ಮಾರಾಟ ಪ್ರಕರಣಗಳು ದಾಖಲಾಗಿದ್ದು, ಅವುಗಳಲ್ಲಿ 2 ಪ್ರಕರಣಗಳಲ್ಲಿ ಸಜೆಯಾಗಿದ್ದು, 2 ಪ್ರಕರಣಗಳು ನ್ಯಾಯಾಲಯದ ವಿಚಾರಣೆಯಲ್ಲಿದ್ದು, 1 ಪರಕರಣ ತನಿಖೆಯಲ್ಲಿರುತ್ತದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಮುಖ್ಯ ಚುನಾವಣಾ ಆಯುಕ್ತರ ವಜಾ ಕೋರಿದ ಪ್ರತಿಪಕ್ಷದ ನೋಟಿಸ್ ತಿರಸ್ಕರಿಸಿದ ರಾಜ್ಯಸಭೆ ಸಭಾಪತಿ, ಲೋಕಸಭೆ ಸ್ಪೀಕರ್
ಹೊಸದಿಲ್ಲಿ, ಎ.7: ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರನ್ನು ಹುದ್ದೆಯಿಂದ ವಜಾಗೊಳಿಸುವಂತೆ ಕೋರಿ ಪ್ರತಿಪಕ್ಷದ ಸದಸ್ಯರು ಸಲ್ಲಿಸಿದ ನೋಟಿಸುಗಳನ್ನು ರಾಜ್ಯಸಭೆಯ ಸಭಾಪತಿ ಸಿ.ಪಿ. ರಾಧಾಕೃಷ್ಣನ್ ಹಾಗೂ ಲೋಕಸಭೆಯ ಸ್ಪೀಕರ್ ಓಮ್ ಬಿರ್ಲಾ ಅವರು ಸೋಮವಾರ ತಿರಸ್ಕರಿಸಿದ್ದಾರೆ. ತಮ್ಮ ನಿರ್ಧಾರಕ್ಕೆ ಅವರು ಯಾವುದೇ ನಿರ್ದಿಷ್ಟ ಕಾರಣಗಳನ್ನು ನೀಡಿಲ್ಲ. ಈ ನೋಟಿಸ್ಗಳನ್ನು ಮಾರ್ಚ್ 12ರಂದು ಸಲ್ಲಿಸಲಾಗಿತ್ತು. ರಾಜ್ಯಸಭೆಯ 63 ಸದಸ್ಯರು ಹಾಗೂ ಲೋಕಸಭೆಯ 130 ಸದಸ್ಯರು ಇವುಗಳಿಗೆ ಸಹಿ ಹಾಕಿದ್ದರು. ಇದು ಅಂತಹ ಪ್ರಸ್ತಾವನೆಗೆ ಕನಿಷ್ಠ ಅವಶ್ಯಕತೆಯನ್ನು ಪೂರೈಸಿತ್ತು. ಜ್ಞಾನೇಶ್ ಕುಮಾರ್ ಅವರ ನಡವಳಿಕೆ ಪಕ್ಷಪಾತ ಹಾಗೂ ತಾರತಮ್ಯದಿಂದ ಕೂಡಿದ್ದು, ಸಾಂವಿಧಾನಿಕ ಸಂಸ್ಥೆಯನ್ನು ದುರುಪಯೋಗ ಮಾಡಿಕೊಂಡಿದ್ದಾರೆ ಎಂದು ತೃಣಮೂಲಕ ಕಾಂಗ್ರೆಸ್ ನೇತೃತ್ವದ ವಿರೋಧ ಪಕ್ಷ ಆರೋಪಿಸಿತ್ತು. ಹಲವು ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಚುನಾವಣಾ ವಂಚನೆ ಹಾಗೂ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆಯ ತನಿಖೆಗೆ ಮುಖ್ಯ ಚುನಾವಣಾ ಆಯುಕ್ತರು ಅಡ್ಡಿಪಡಿಸಿದ್ದಾರೆ ಎಂದು ಕೂಡ ಅದು ಹೇಳಿತ್ತು. ನೋಟಿಸ್ಗಳನ್ನು ತಿರಸ್ಕರಿಸಿದ ನಿರ್ಧಾರವನ್ನು ಸೋಮವಾರ ಹೊರಡಿಸಲಾದ ಸಂಸತ್ತಿನ ಬುಲೆಟಿನ್ನಲ್ಲಿ ತಿಳಿಸಲಾಗಿದೆ.
ಹಿರಿಯ ಕಾಂಗ್ರೆಸ್ ಮುಖಂಡ ಶಂಭು ಶೆಟ್ಟಿ ನಿಧನ
ಉಡುಪಿ, ಎ.7: ಪರ್ಕಳ ಶೆಟ್ಟಿಬೆಟ್ಟು ವಾರ್ಡಿನ ನಿವಾಸಿ ಹಿರಿಯ ಕಾಂಗ್ರೆಸ್ ಮುಖಂಡ ಶಂಭು ಶೆಟ್ಟಿ(75) ಅಲ್ಪಕಾಲದ ಅಸೌಖ್ಯದಿಂದ ಮಣಿಪಾಲದ ಆಸ್ಪತ್ರೆಯಲ್ಲಿ ಎ.7ರಂದು ನಿಧನರಾದರು. ಮೃತರು ಪತ್ನಿ, ಹಾಗೂ ಮೂವರು ಪುತ್ರರು, ಓರ್ವ ಪುತ್ರಿ ಹಾಗೂ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ. ವ್ಯವ ಹಾರ ನಡೆಸುತ್ತಿದ್ದ ಅವರು ಕೃಷಿಕರಾಗಿದ್ದರು. ಉಡುಪಿಯಲ್ಲಿ ಕಾಂಗ್ರೆಸ್ ಪಕ್ಷದಲ್ಲಿದ್ದಾಗ ಮಲ್ಪೆ ಮನೋರ ಮಧ್ವರಾಜ್ ಸ್ಪರ್ಧಿಸಿದ ಚುನಾವಣೆಯಲ್ಲಿ ಹೆಗಲುಕೊಟ್ಟು. ಗೆಲುವು ಸಾಧಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಇವರ ನಿಧನಕ್ಕೆ ಉಡುಪಿ ಜಿಲ್ಲಾ ಪ್ರಚಾರ ಸಮಿತಿಯ ಅಧ್ಯಕ್ಷ ಹರೀಶ್ ಕಿಣಿ ಮತ್ತು ಕಾಂಗ್ರೆಸ್ ಮುಖಂಡ ಪ್ರಸಾದ್ರಾಜ್ ಕಾಂಚನ್ ಹಾಗೂ ಪರ್ಕಳ ಕಾಂಗ್ರೆಸ್ ಸಂತಾಪ ಸೂಚಿಸಿದ್ದಾರೆ.
ರಾಜ್ಯದಲ್ಲಿ ಭಾಷಾ ನೀತಿ ಜಾರಿಗೊಳಿಸಬೇಕು: ಡಾ.ಪುರುಷೋತ್ತಮ ಬಿಳಿಮಲೆ
ಕುಂದಾಪುರ, ಎ.7: ರಾಜ್ಯದಲ್ಲಿ ಹಿಂದಿ ಭಾಷೆ ಕಡ್ಡಾಯವಲ್ಲ ಎಂಬ ಸರಕಾರದ ತೀರ್ಮಾನ ಸರಿಯಾಗಿದ್ದು, ಇದನ್ನು ಸ್ಪಷ್ಟವಾಗಿ ಪರಿಷ್ಕರಿಸಬೇಕು. ಅದೇ ರೀತಿ ಮುಂದೆ ಹಿಂದಿ ಓದುವವರಿಗೂ ಅವಕಾಶ ಮಾಡಬೇಕು. ರಾಜ್ಯದಲ್ಲಿ ಒಟ್ಟು 290 ಭಾಷೆಗಳಿದ್ದು, ಈ ಪೈಕಿ 10 ಸಾವಿರಕ್ಕಿಂತ ಹೆಚ್ಚು ಜನ ಮಾತನಾಡುವ 25 ಭಾಷೆಗಳಿವೆ. ಈ ಭಾಷೆ ಗಳನ್ನು ಮೂರನೇ ಭಾಷೆಯಾಗಿ ಹಿಂದಿಯ ಜತೆಗೆ ಕಲಿಯಲು ಅವಕಾಶ ನೀಡಬೇಕು. ದ.ಕ. ಜಿಲ್ಲೆಯಲ್ಲಿ ತುಳುವಿಗೆ ಅವಕಾಶ ಕೊಡಬಹುದು. ಎಲ್ಲರಿಗೂ ಮಾತೃ ಭಾಷೆಯಲ್ಲಿ ಓದಲು ಅವಕಾಶವಿದ್ದು, ಹಾಗಾಗಿ ರಾಜ್ಯದಲ್ಲಿ ಭಾಷಾ ನೀತಿ ಜಾರಿಗೊಳಿಸಬೇಕು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ ಅಭಿಪ್ರಾಯಪಟ್ಟರು. ಮಂಗಳವಾರ ಹಟ್ಟಿಯಂಗಡಿಯ ನಮ್ಮಭೂಮಿಯಲ್ಲಿ ಪತ್ರಕರ್ತರೊಂದಿಗೆ ಮಾತನಾಡಿ, 67-68 ರಲ್ಲಿ ಹಿಂದಿ ಕಡ್ಡಾಯ ಇರಲಿಲ್ಲ. 70ರ ದಶಕದಲ್ಲಿ 50ಕ್ಕೆ 16 ಅಂಕ ಬಂದರೆ ಸಾಕಿತ್ತು. ಈಗ 100 ರಲ್ಲಿ 35 ಅಂಕ ಬರಬೇಕಿದೆ. ಕಳೆದ ವರ್ಷದ ಎಸೆಸೆಲ್ಸಿಯಲ್ಲಿ ಹಿಂದಿಯಲ್ಲಿ 84 ಸಾವಿರ ಮಕ್ಕಳು ಅನುತ್ತೀರ್ಣರಾಗಿದ್ದರು. ಇದರಿಂದ ಒಟ್ಟಾರೆ ಸರಾಸರಿ ಕಡಿಮೆ ಆಗಿದ್ದರಿಂದ ಗ್ರಾಮೀಣ ಭಾಗದ ಮಕ್ಕಳಿಗೆ ಮೆಡಿಕಲ್, ಎಂಜಿನಿಯರಿಂಗ್ ಸೇರಲು ಆಗಲಿಲ್ಲ ಎಂದರು. ಅನುದಾನಿತ ಕನ್ನಡ ಶಾಲೆಗಳಿಗೆ 93ರಿಂದ ಅನುದಾನ ನಿಲ್ಲಿಸಿದ್ದು, ಶಿಕ್ಷಕರ ನೇಮಕ, ಕಟ್ಟಡ ದುರಸ್ತಿಗೆ ಕನಿಷ್ಠ 300 ಕೋ.ರೂ. ಅಗತ್ಯವಿದೆ. ಈ ಬಗ್ಗೆ ಸಿಎಂ, ಶಿಕ್ಷಣ ಸಚಿವರ ಗಮನಕ್ಕೆ ತರಲಾಗಿದೆ. ಈ ಬಿಕ್ಕಟ್ಟು ಪರಿಹಾರಕ್ಕೆ ಮುಂದಿನ ದಿನಗಳಲ್ಲಿ ಸರಕಾರ ಚಿಂತನೆ ನಡೆಸಬಹುದು. ಅತಿಥಿ ಶಿಕ್ಷಕರ ಬದಲಿಗೆ ಪೂರ್ಣಕಾಲಿಕ ಶಿಕ್ಷಕರ ನೇಮಕವಾದರೆ ಮಾತ್ರ ಕನ್ನಡ ಶಾಲೆಗಳು ಉಳಿಯಲಿದೆ. ಕನ್ನಡವೂ ಉಳಿಯಲು ಸಾಧ್ಯ ಎಂದು ಅವರು ಹೇಳಿದರು. ಕನ್ನಡ ಶಾಲೆಗಳ ಸುಧಾರಣೆ ಬಗ್ಗೆ ಪ್ರಾಧಿಕಾರದಿಂದ 4 ವರದಿ ತಯಾರಿಸಿದ್ದು, ಒಂದು ವರದಿ ಸಲ್ಲಿಸಲಾಗಿದೆ. ನಲಿಕಲಿ ಉದ್ದೇಶ ಒಳ್ಳೆಯದಿದ್ದರೂ, ಅನುಷ್ಠಾನದಲ್ಲಿ ಸಮಸ್ಯೆಗಳಾಗಿದೆ, ಯಾದಗಿರಿಯಂತಹ ಜಿಲ್ಲೆಯಲ್ಲಿ 10 ನೇ ತರಗತಿ ಮಗುವಿಗೆ ಕನ್ನಡದಲ್ಲಿ ಹೆಸರು ಬರೆಯಲು ಬರದ ಸ್ಥಿತಿಯಿದೆ. ನಲಿಕಲಿ ಸುಧಾರಣೆಗೆ ವರದಿ ಸಲ್ಲಿಸಲಾಗಿದೆ. ಇನ್ನು ಕಳೆದ ವರ್ಷ 7.50 ಲಕ್ಷ ಎಸೆಸೆಲ್ಸಿ ಮಕ್ಕಳ ಪೈಕಿ 1.62 ಲಕ್ಷ ಮಕ್ಕಳು ಕನ್ನಡದಲ್ಲಿ ಅನುತ್ತೀರ್ಣರಾಗಿದ್ದಾರೆ. ಇದನ್ನು ಪ್ರಾಧಿಕಾರ ಗಂಭೀರವಾಗಿ ಪರಿಗಣಿಸಿದ್ದು, ಇದಕ್ಕೆ ಏನು ಕಾರಣ ? ಎಲ್ಲಿ ತಪ್ಪಾಗುತ್ತಿರುವುದು ಅನ್ನುವ ಬಗ್ಗೆ ಅಧ್ಯಯನ ನಡೆಸಿ, ಸಮಗ್ರ ವರದಿ ತಯಾರಿಸಿದ್ದು, ಶೀಘ್ರ ಸಲ್ಲಿಕೆಯಾಗಲಿದೆ ಎಂದರು. ಇನ್ನು ರಾಜ್ಯದಲ್ಲಿ 3,200 ಶತಮಾನ ಕಂಡ ಶಾಲೆಗಳಿವೆ. ಸಹಕಾರಿ ಚಳುವಳಿ ಕಾಲದಲ್ಲಿ ಅನೇಕ ಶಾಲೆಗಳು ಆರಂಭಗೊಂಡಿವೆ. ಆದರೆ ಈಗ 19 ಸಾವಿರ ಶಾಲೆಗಳಿಗೆ ಹಕ್ಕುಪತ್ರವೇ ಇಲ್ಲ. ಶಿವರಾಮ ಕಾರಂತರು, ಕುವೆಂಪು ಓದಿದಂತಹ ಪರಂಪರೆಯುಳ್ಳ ಶಾಲೆಗಳ ಅಧ್ಯಯನ ನಡೆಸಿ, 31 ಜಿಲ್ಲೆಗಳಲ್ಲಿ 31 ಶಾಲೆಗಳನ್ನು ಗುರುತಿಸಿ, ಪಾರಂಪರಿಕಾ ಶಾಲೆಗಳಾಗಿ, ಅಭಿವೃದ್ಧಿಪಡಿಸುವ ಬಗ್ಗೆ ವರದಿ ತಯಾರಿಸಿದ್ದು, ಸಿಎಂ ಗಮನಕ್ಕೂ ತರಲಾಗಿದೆ. ಮುಂದಿನ ಬಜೆಟ್ ನಲ್ಲಿ ಅನುದಾನ ನೀಡುವ ಬಗ್ಗೆ ತಿಳಿಸಿದ್ದಾರೆ ಎಂದ ಅವರು, ಕೆಪಿಎಸ್ ಶಾಲೆಗಳಲ್ಲಿ ಗುಣಮಟ್ಟದ ಇಂಗ್ಲಿಷ್ ಕಲಿಕೆಗೆ ಆದ್ಯತೆ ನೀಡುವ ಬಗ್ಗೆಯೂ ವರದಿ ತಯಾರಿಸಲಾಗಿದೆ ಎಂದು ಅವರು ಹೇಳಿದರು. ‘ಕಲಾವಿದನಿಗೆ ಶಿಳ್ಳೆ ಪ್ರೋತ್ಸಾಹ ಕೊಡುತ್ತದೆ’ ನಾನು 1965ರಿಂದ ಯಕ್ಷಗಾನ ನೋಡಿಕೊಂಡು ಬಂದವನು. ಶಿಳ್ಳೆ ಕಲಾವಿದರಿಗೆ ತೊಂದರೆ ಕೊಟ್ಟದನ್ನು ಈವರೆಗೆ ಗಮನಿಸಿಲ್ಲ. ಚೆಂಡೆ, ಮದ್ದಳೆ ಜೊತೆಗೆ ಕಲಾವಿದನಿಗೆ ಶಿಳ್ಳೆಯು ಪ್ರೋತ್ಸಾಹ ಕೊಡುತ್ತದೆ. ಹಾಗಾಗಿ ಅತಿರೇಕವಾಗಿ ಶಿಳ್ಳೆ ಸಂಸ್ಕೃತಿ ಬೆಳೆದಿದೆ ಎಂದು ಉಜಿರೆ ಅಶೋಕ ಭಟ್ಟರಿಗೆ ಅನ್ನಿಸಿದರೆ ಅದನ್ನು ಪೂರ್ಣ ತಪ್ಪು ಅಂತ ಹೇಳಲು ಆಗಲ್ಲ ಎಂದು ಡಾ.ಪುರುಷೋತ್ತಮ ಬಿಳಿಮಲೆ ಹೇಳಿದರು. ಅವರು ರಂಗದಲ್ಲಿ ಹಾಗೇ ಮಾಡಿದ್ದು ನನ್ನ ಪ್ರಕಾರ ತಪ್ಪು. ಹೇಳುವುದಾದರೂ ಅದನ್ನು ಮತ್ತೆ ಸಂಘಟಕರಿಗೆ ಹೇಳಬಹುದಿತ್ತು. ಅವರು ಅದನ್ನು ಪ್ರೇಕ್ಷಕರಿಗೆ ತಿಳಿಸಬಹುದಾಗಿತ್ತು. ಕೃಷ್ಣನ ವೇಷ ಹಾಕಿಕೊಂಡು ಪ್ರೇಕ್ಷಕರನ್ನು ದ್ದೇಶಿಸಿ ಬನ್ಸ್ ತಿನ್ನುವ ವಿಚಾರ, ಕಂಬಳದ ವಿಚಾರ ಹೇಳಿದ್ದು ಸರಿಯಲ್ಲ. ಕಲೆಗೆ ಕಲಾವಿದನೇ ದ್ರೋಹ ಬಗೆಯಬಾರದು ಎಂದರು.
ಕೆಂಪು ಗೆರೆ ದಾಟಿದರೆ ಮಧ್ಯಪ್ರಾಚ್ಯ ಮೀರಿ ಪ್ರತೀಕಾರ: ಅಮೆರಿಕಕ್ಕೆ ಐಆರ್ಜಿಸಿ ಎಚ್ಚರಿಕೆ
ಟೆಹ್ರಾನ್, ಎ.7: ಅಮೆರಿಕವು ಕೆಂಪು ಗೆರೆಯನ್ನು ದಾಟಿದರೆ ಮಧ್ಯಪ್ರಾಚ್ಯವನ್ನು ಮೀರಿ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಮತ್ತು ಅಮೆರಿಕ ಹಾಗೂ ಅದರ ಮಿತ್ರರಾಷ್ಟ್ರಗಳ ತೈಲವನ್ನು ನಾಶಗೊಳಿಸುವುದಾಗಿ ಇರಾನ್ನ ಇಸ್ಲಾಮಿಕ್ ರೆವೊಲ್ಯುಷನರಿ ಗಾರ್ಡ್ ಕಾಪ್ರ್ಸ್(ಐಆರ್ಜಿಸಿ) ಮಂಗಳವಾರ ಎಚ್ಚರಿಕೆ ನೀಡಿದೆ. ಇಂದಿನವರೆಗೂ ನಾವು ಉತ್ತಮ ನೆರೆಹೊರೆಗಾಗಿ ಗರಿಷ್ಠ ಸಂಯಮವನ್ನು ಹೊಂದಿದ್ದೇವೆ ಮತ್ತು ಪ್ರತೀಕಾರಕ್ಕಾಗಿ ಗುರಿಗಳನ್ನು ಆಯ್ಕೆ ಮಾಡುವಾಗ ಕೆಲವು ವಿನಾಯಿತಿ ನೀಡಿದ್ದೆವು. ಆದರೆ ಈ ವಿನಾಯಿತಿಗಳನ್ನು ತೆಗೆದುಹಾಕಲಾಗಿದೆ' ಎಂದು ಐಆರ್ಜಿಸಿ ಹೇಳಿದೆ. ಈ ಮಧ್ಯೆ, ಮಧ್ಯಪ್ರಾಚ್ಯದಲ್ಲಿನ ಯುದ್ಧವು ನಿಯಂತ್ರಣ ಮೀರುವ ಸ್ಥಿತಿಗೆ ಅತೀ ಹತ್ತಿರದಲ್ಲಿದೆ ಎಂದು ಖತರ್ ಕಳವಳ ವ್ಯಕ್ತಪಡಿಸಿದೆ. ಉಲ್ಬಣವನ್ನು ಶಮನಗೊಳಿಸುವ ಕ್ರಮ ಕೈಗೊಳ್ಳದಿದ್ದರೆ ನಿಯಂತ್ರಿಸಲಾಗದ ಪರಿಸ್ಥಿತಿಗೆ ನಮ್ಮನ್ನು ತಲುಪಿಸುತ್ತದೆ ಎಂದು ನಾವು 2023ರಿಂದಲೂ ಎಚ್ಚರಿಸುತ್ತಾ ಬಂದಿದ್ದೆವು. ಈಗ ಈ ಹಂತಕ್ಕೆ ನಾವು ಅತೀ ಹತ್ತಿರದಲ್ಲಿರುವುದರಿಂದ ಕಾಲ ಮೀರುವ ಮುನ್ನ ಈ ಯುದ್ಧವನ್ನು ಕೊನೆಗೊಳಿಸುವ ಮಾರ್ಗವನ್ನು ಕಂಡುಕೊಳ್ಳುವಂತೆ ಎಲ್ಲಾ ಪಕ್ಷಗಳನ್ನೂ ಒತ್ತಾಯಿಸುತ್ತೇವೆ' ಎಂದು ಖತರ್ನ ವಿದೇಶಾಂಗ ಇಲಾಖೆಯ ವಕ್ತಾರರು `ಎಕ್ಸ್'ನಲ್ಲಿ ಪೋಸ್ಟ್ ಮಾಡಿದ್ದಾರೆ.
Kalaburagi | ಬೈಕ್ಗೆ ಸಿಮೆಂಟ್ ಟ್ಯಾಂಕರ್ ಢಿಕ್ಕಿ: ತಂದೆ-ಮಗಳು ಸ್ಥಳದಲ್ಲೇ ಮೃತ್ಯು
ಕಲಬುರಗಿ : ಬೈಕ್ಗೆ ಸಿಮೆಂಟ್ ಮಿಕ್ಸರ್ ಟ್ಯಾಂಕರ್ ಢಿಕ್ಕಿಯಾದ ಪರಿಣಾಮ ತಂದೆ-ಮಗಳು ಸ್ಥಳದಲ್ಲೇ ಮೃತಪಟ್ಟ ಘಟನೆ ನಗರದ ರಿಂಗ್ ರಸ್ತೆಯ ಸೈಯದ್ ಚಿಂಚೋಳಿ ಕ್ರಾಸ್ ಬಳಿ ನಡೆದಿದೆ. ಮೃತರನ್ನು ರಾಣೇಶಪೀರ ದರ್ಗಾ ಪ್ರದೇಶದ ನಿವಾಸಿಗಳಾದ ರಾಜುಕುಮಾರ್ ಮಾನಿಂಗಗೋಳ (45) ಹಾಗೂ ಅವರ ಪುತ್ರಿ ಸುಮಾ (14) ಎಂದು ಗುರುತಿಸಲಾಗಿದೆ. ತಂದೆ-ಮಗಳು ಬೈಕ್ನಲ್ಲಿ ಮನೆಗೆ ತೆರಳುತ್ತಿದ್ದಾಗ ವೇಗವಾಗಿ ಬಂದ ಸಿಮೆಂಟ್ ಮಿಕ್ಸರ್ ಟ್ಯಾಂಕರ್ ಅವರ ವಾಹನಕ್ಕೆ ಢಿಕ್ಕಿ ಹೊಡೆದಿದೆ. ಢಿಕ್ಕಿಯ ತೀವ್ರತೆಗೆ ಇಬ್ಬರೂ ಟ್ಯಾಂಕರ್ ಚಕ್ರದ ಕೆಳಗೆ ಸಿಲುಕಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಘಟನೆ ಕುರಿತು ಮಾಹಿತಿ ತಿಳಿದ ತಕ್ಷಣ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಟ್ಯಾಂಕರ್ ಚಾಲಕ ಆಂಧ್ರ ಪ್ರದೇಶದ ಸುರೇಶ್ ಅವರನ್ನು ವಶಕ್ಕೆ ಪಡೆದಿದ್ದಾರೆ. ಈ ಕುರಿತು ಸಂಚಾರಿ ಪೊಲೀಸ್ ಠಾಣೆ-2ರಲ್ಲಿ ಪ್ರಕರಣ ದಾಖಲಾಗಿದೆ.
Bengaluru | ನಕಲಿ ದಾಖಲೆ ಸೃಷ್ಟಿಸಿ ಪೊಲೀಸ್ ವಸತಿಗೃಹದ ಜಾಗ ಕಬಳಿಸಲು ಯತ್ನ: ಬಿಜೆಪಿ ಮುಖಂಡ ಸಹಿತ ಮೂವರ ಬಂಧನ
ಬೆಂಗಳೂರು : ನಕಲಿ ದಾಖಲಾತಿಗಳನ್ನು ಸೃಷ್ಟಿಸಿ ಮಲ್ಲೇಶ್ವರದ ಪೊಲೀಸ್ ವಸತಿಗೃಹದ ಜಾಗವನ್ನು ಕಬಳಿಸಲು ಯತ್ನಿಸಿದ್ದ ಪ್ರಕರಣ ಸಂಬಂಧ ಬಿಜೆಪಿ ಮುಖಂಡ ಸೇರಿದಂತೆ ಮೂವರನ್ನು ಇಲ್ಲಿನ ಮಲ್ಲೇಶ್ವರ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಶಿವಮೊಗ್ಗದ ಬಿಜೆಪಿ ಮುಖಂಡ ಶ್ರೀನಾಥ್ ನಗರಗದ್ದೆ, ತುಮಕೂರಿನ ಕೃಷ್ಣಮೂರ್ತಿ ಹಾಗೂ ಮೈಸೂರಿನ ಕಿಶನ್ ಎಂಬುವರು ಬಂಧಿತ ಆರೋಪಿಗಳು ಗುರುತಿಸಲಾಗಿದೆ. ಬೆಂಗಳೂರು ದಕ್ಷಿಣ ಜಿಲ್ಲೆಯ ಲೋಕಾಯುಕ್ತ ಇನ್ಸ್ಪೆಕ್ಟರ್ ಎಂ.ಕುಮಾರ್ ಅವರು ನೀಡಿದ ದೂರಿನನ್ವಯ ಎಫ್ಐಆರ್ ದಾಖಲಿಸಿಕೊಳ್ಳಲಾಗಿತ್ತು. ಸದ್ಯ, ವಿವಿಧೆಡೆ ಕಾರ್ಯಾಚರಣೆ ನಡೆಸಿ, ಈ ಮೂವರು ಆರೋಪಿಗಳನ್ನು ಬಂಧಿಸಲಾಗಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಿ ಹೆಚ್ಚಿನ ವಿಚಾರಣೆಗಾಗಿ ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಸುಮಾರು 80 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಕಬಳಿಸಲು ಸಂಚು ರೂಪಿಸಲಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಪೊಲೀಸ್ ವಸತಿಗೃಹ ತೆರವು ಮಾಡಿ ಹೊಸ ಕಟ್ಟಡ ನಿರ್ಮಾಣಕ್ಕೆ ಉತ್ತರ ವಿಭಾಗದ ಡಿಸಿಪಿ ಅವರು ಪ್ರಸ್ತಾವ ಸಲ್ಲಿಸಿದ್ದರು ಅದೇ ಜಾಗವನ್ನು ಕಬಳಿಸಲು ಈ ತಂಡವು ಮುಂದಾಗಿತ್ತು ಎಂದು ಮೂಲಗಳು ತಿಳಿಸಿವೆ. ಆರೋಪಿ ಶ್ರೀನಾಥ್ ನಗರಗದ್ದೆಯೇ ಈ ಪ್ರಕರಣದ ಸೂತ್ರಧಾರ ಎನ್ನಲಾಗಿದ್ದು, ಮಾಜಿ ಸಚಿವರೊಬ್ಬರ ಶಿವಮೊಗ್ಗದ ಕಚೇರಿಯಲ್ಲೂ ಶ್ರೀನಾಥ್ ಕೆಲಸ ಮಾಡಿದ್ದರು ಎಂದು ತಿಳಿದುಬಂದಿದೆ.
ಬಹರೈನ್ ಸಂಪರ್ಕಿಸುವ ಸೇತುವೆ ಮತ್ತೆ ತೆರೆದ ಸೌದಿ ಅರೇಬಿಯ
ದಬೈ, ಎ.7: ಇರಾನ್ನ ದಾಳಿಯ ಬೆದರಿಕೆಯ ಕಾರಣ ಕೆಲ ಹೊತ್ತು ಮುಚ್ಚಲಾಗಿದ್ದ, ಸೌದಿ ಅರೆಬಿಯಾವನ್ನು ಬಹರೈನ್ಗೆ ಸಂಪರ್ಕಿಸುವ ಪ್ರಮುಖ ಸೇತುವೆ `ದಿ ಕಿಂಗ್ ಫಹದ್ ಕಾಸ್ವೇ' ಯನ್ನು ಮತ್ತೆ ತೆರೆದಿರುವುದಾಗಿ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಸೌದಿ ಅರೆಬಿಯಾದ ಪೂರ್ವ ಪ್ರಾಂತಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುವ ಇರಾನ್ನ ಬೆದರಿಕೆಯ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ವಾಹನ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ ಎಂದು ಮಂಗಳವಾರ ಬೆಳಿಗ್ಗೆ ಅಧಿಕಾರಿಗಳು ಘೋಷಿಸಿದ್ದರು. 25 ಕಿ.ಮೀ ಉದ್ದದ ಸೇತುವೆಯು ಅಮೆರಿಕ ನೌಕಾಪಡೆಯ 5ನೇ ಬಟಾಲಿಯನ್ ಇರುವ ಬಹರೈನ್ಗೆ ಯುಇಎಯಿಂದ ಏಕೈಕ ರಸ್ತೆ ಸಂಪರ್ಕವಾಗಿದೆ. ಈ ಮಧ್ಯೆ, ಮಂಗಳವಾರ ಬೆಳಿಗ್ಗೆ ಪೂರ್ವ ಪ್ರಾಂತಗಳನ್ನು ಗುರಿಯಾಗಿಸಿದ್ದ ಹಲವು ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ನಿರ್ಬಂಧಿಸಿರುವುದಾಗಿ ಸೌದಿಯ ರಕ್ಷಣಾ ಇಲಾಖೆ ಹೇಳಿದೆ.
1.4 ಕೋಟಿ ಜನತೆ ಪ್ರಾಣತ್ಯಾಗಕ್ಕೆ ಸಿದ್ಧ: ಇರಾನ್ ಅಧ್ಯಕ್ಷ ಮಸೂದ್ ಪೆಝೆಶ್ಕಿಯಾನ್
ಟೆಹ್ರಾನ್: ಹಾರ್ಮುಝ್ ಜಲಸಂಧಿಯನ್ನು ತೆರೆಯಲು ಅಮೆರಿಕ ನೀಡಿದ್ದ ಗಡುವಿಗೂ ಮುನ್ನ ಉದ್ವಿಗ್ನತೆ ಹೆಚ್ಚಿರುವಂತೆಯೇ `ದೇಶವನ್ನು ರಕ್ಷಿಸಲು 1.4 ಕೋಟಿಗೂ ಹೆಚ್ಚು ಇರಾನ್ ಜನತೆ ತಮ್ಮ ಪ್ರಾಣಗಳನ್ನು ತ್ಯಾಗ ಮಾಡಲು ಸಿದ್ಧವಿರುವುದಾಗಿ ಘೋಷಿಸಿದ್ದಾರೆ. ನಾನೂ ಕೂಡಾ ಇರಾನ್ಗಾಗಿ ನನ್ನ ಪ್ರಾಣವನ್ನು ತ್ಯಜಿಸಲು ಸಿದ್ಧವಾಗಿದ್ದೇನೆ' ಎಂದು ಇರಾನ್ ಅಧ್ಯಕ್ಷ ಮಸೂದ್ ಪೆಝೆಶ್ಕಿಯಾನ್ ಹೇಳಿದ್ದಾರೆ. 1.4 ಕೋಟಿಗೂ ಹೆಚ್ಚು ಇರಾನ್ ಜನತೆ ಆತ್ಮಾರ್ಪಣೆ ಮಾಡುವ ಅಭಿಯಾನಕ್ಕೆ ಕೈಜೋಡಿಸಿ ದೇಶಕ್ಕಾಗಿ ತಮ್ಮ ಪ್ರಾಣವನ್ನು ತ್ಯಾಗ ಮಾಡಲು ಸಿದ್ಧವಿರುವುದಾಗಿ ಘೋಷಿಸಿದ್ದಾರೆ. ಇದರಲ್ಲಿ ನಾನು ಕೂಡಾ ಸೇರಿದ್ದೇನೆ' ಎಂದು ಪೆಝೆಶ್ಕಿಯಾನ್ `ಎಕ್ಸ್'ನಲ್ಲಿ ಪೋಸ್ಟ್ ಮಾಡಿದ್ದಾರೆ.
ಎ.9ರಿಂದ ಉಳ್ಳಾಲದಲ್ಲಿ ಬೇಸಿಗೆ ಫುಟ್ಬಾಲ್ ಶಿಬಿರ
ಮಂಗಳೂರು: ಅಲ್ಫಾ ಸ್ಪೋರ್ಟ್ಸ್ ಕ್ಲಬ್ ಹಾಗೂ ಉಳ್ಳಾಲ ಫುಟ್ಬಾಲ್ ಅಕಾಡೆಮಿ ವತಿಯಿಂದ ಬೇಸಿಗೆ ಫುಟ್ಬಾಲ್ ಶಿಬಿರವು ಎ.9ರಿಂದ ಮೇ 15ರವರೆಗೆ ಆಯೋಜಿಸಲಾಗಿದೆ. ಉಳ್ಳಾಲದ ಗ್ರೀನ್ಸ್ ಫೀಲ್ಡ್ ಮೈದಾನದಲ್ಲಿ ಸಂಜೆ 6.30ರಿಂದ ರಾತ್ರಿ 10.30ರ ವರೆಗೆ ಶಿಬಿರ ನಡೆಯಲಿದೆ. 6ರಿಂದ 15 ವರ್ಷದೊಳಗಿನ ಮಕ್ಕಳು ಶಿಬಿರದಲ್ಲಿ ಪಾಲ್ಗೊಳ್ಳಲು ನೋಂದಣಿ ಮಾಡಿಕೊಳ್ಳಬಹುದು ಎಂದು ಉಳ್ಳಾಲ ಫುಟ್ಬಾಲ್ ಆಕಾಡೆಮಿಯ ಹೆಡ್ ಕೋಚ್ ತಮೀಮ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ 9972724345(ತಮೀಮ್) ಸಂಪರ್ಕಿಸಬಹುದು.
ಎಸ್ಐಆರ್| ಅಲ್ಪಸಂಖ್ಯಾತರು, ಪರಿಶಿಷ್ಟರ ಹೆಸರುಗಳನ್ನು ಉದ್ದೇಶಪೂರ್ವಕವಾಗಿ ಕೈಬಿಡಲಾಗಿದೆ: ಮಮತಾ ಕಿಡಿ
ಕೋಲ್ಕತಾಎ.7: ವಿವಾದಾತ್ಮಕ ಎಸ್ಐಆರ್ ಪ್ರಕ್ರಿಯೆಯಲ್ಲಿ ಪರಿಶಿಷ್ಟ ಮಟುವಾ ಹಾಗೂ ಅಲ್ಪಸಂಖ್ಯಾತ ಸಮುದಾಯಗಳ ಮತದಾರರನ್ನು ಉದ್ದೇಶಪೂರ್ವಕವಾಗಿ ಮತದಾರಪಟ್ಟಿಯಿಂದ ಕೈಬಿಡಲಾಗಿದೆಯೆಂದು ಪಶ್ಚಿಮಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮಂಗಳವಾರ ಆಪಾದಿಸಿದ್ದಾರೆ. ನಾಡಿಯಾ ಜಿಲ್ಲೆಯ ಚಾಕ್ದಹಾದಲ್ಲಿ ಮಂಗಳವಾರ ಚುನಾವಣಾ ಪ್ರಚಾರ ರ್ಯಾಲಿಯಲ್ಲಿ ಮಾತನಾಡಿದ ಅವರು, ಮತದಾರಪಟ್ಟಿಯಿಂದ ಹೊರಗಿರಿಸಲಾದವರನ್ನು ತನ್ನ ಟಿಎಂಸಿ ಪಕ್ಷವು ಬೆಂಬಲಿಸಲಿದೆಯೆಂದು ಹೇಳಿದ್ದಾರೆ. ಕೇಂದ್ರ ಸರಕಾರವು ತಾರತಮ್ಯದ ನೀತಿಯನ್ನು ಅನುಸರಿಸುತ್ತಿದೆ. ನಿರ್ದಿಷ್ಟ ಸಮುದಾಯಗಳನ್ನು ಗುರಿಯಿರಿಸಿಕೊಂಡು ಮತದಾರಪಟ್ಟಿಯಿಂದ ಮತದಾರರ ಹೆಸರುಗಳನ್ನು ಕೈಬಿಡಲಾಗಿದೆ ಎಂದು ಆರೋಪಿಸಿದೆ. ‘‘ ಯಾಕೆ ಈ ತಾರತಮ್ಯ?. ನೀವು ಮಟುವಾಗಳನ್ನು, ರಾಜಬನ್ಶಿಗಳನ್ನು ಹಾಗೂ ಅಲ್ಪಸಂಖ್ಯಾತರನ್ನು ಮತದಾರಪಟ್ಟಿಯಿಂದ ಹೊರಗಿಡುತ್ತಿದ್ದೀರಿ. ಜನರಿಗೆ ಇದು ತಿಳಿದಿಲ್ಲವೆಂದು ನೀವು ಅಂದುಕೊಂಡಿದ್ದಿರಾ’’ ಎಂದು ಮಮತಾ ಅವರು ಕೇಂದ್ರ ಸರಕಾರದ ವಿರುದ್ಧ ಕಿಡಿಕಾರಿದ್ದಾರೆ. ಅಲ್ಪಸಂಖ್ಯಾತ ಸಮುದಾಯಗಳು ಗಣನೀಯ ಸಂಖ್ಯೆಯಲ್ಲಿರುವ ಮುರ್ಷಿದಾಬಾದ್, ಮಾಲ್ಡಾ ಹಾಗೂ ಉತ್ತರ ದಿನಾಜ್ಪುರ ಪ್ರದೇಶಗಳಲ್ಲಿ ಮತದಾರ ಪಟ್ಟಿಯಿಂದ ಮತದಾರರ ಹೆಸರುಗಳನ್ನು ‘ಹೇನುಗಳಂತೆ ’ಹುಡುಕಿ ತೆಗೆಯಲಾಗಿದೆ ಎಂದವರು ಆಪಾದಿಸಿದ್ದಾರೆ. ಸುಪ್ರೀಂಕೋರ್ಟ್ನಲ್ಲಿ ತಾನು ಮಧ್ಯಪ್ರವೇಶಿಸಿದ ಬಳಿಕ ಪರಿಶೀಲನೆಯಲ್ಲಿದ್ದ 60 ಲಕ್ಷ ಪ್ರಕರಣಗಳಲ್ಲಿ ಸುಮಾರು 32 ಲಕ್ಷ ಮಂದಿಯ ಹೆಸರುಗಳನ್ನು ಮತದಾರಪಟ್ಟಿಗೆ ಮರುಸೇರ್ಪಡೆಗಳಿಸಲಾಗಿದೆ ಎಂದು ಮಮತಾ ಹೇಳಿದರು. ಮುಂಬರುವ ವಿಧಾನಸಭಾ ಚುನಾವಣೆಯು ಜನತೆಯ ಗುರುತನ್ನು ಹಾಗೂ ಪ್ರಜಾತಾಂತ್ರಿಕ ಹಕ್ಕುಗಳ ರಕ್ಷಣೆಗೆ ನಡೆಸುವ ಸಮರವಾಗಿದೆ ಎಂದು ಹೇಳಿದ ಮಮತಾ ಅವರು ಮತದಾನದ ಮೂಲಕ ಈ ಯುದ್ಧಕ್ಕೆ ಉತ್ತರಿಸುವಂತೆ ಮತದಾರರಿಗೆ ಕರೆ ನೀಡಿದ್ದಾರೆ.
ಹೊಸಪೇಟೆ | ರಾಜ್ಯಪಾಲರನ್ನು ವಾಪಸ್ ಕರೆಸಿಕೊಳ್ಳಲು ಕರವೇ ಆಗ್ರಹ : ಹಿಂದಿ ಹೇರಿಕೆ ವಿರುದ್ಧ ಮನವಿ
ಹೊಸಪೇಟೆ/ವಿಜಯನಗರ : ಕರ್ನಾಟಕದಲ್ಲಿ ಹಿಂದಿ ಹೇರಿಕೆ ನಡೆಯುತ್ತಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ರಾಜ್ಯಪಾಲ ತಾವರ್ ಚಂದ್ ಗೆಹ್ಲೋಟ್ ಅವರನ್ನು ಕೇಂದ್ರ ಸರ್ಕಾರ ಕೂಡಲೇ ವಾಪಸ್ ಕರೆಸಿಕೊಳ್ಳಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ (ಕನ್ನಡಪರ ಸಂಘಟನೆಗಳ ಒಕ್ಕೂಟ) ಹೊಸಪೇಟೆ ತಾಲೂಕು ಘಟಕ ಒತ್ತಾಯಿಸಿದೆ. ಈ ಕುರಿತು ರಾಷ್ಟ್ರಪತಿಗಳಿಗೆ ಜಿಲ್ಲಾಧಿಕಾರಿಗಳ ಮುಖಾಂತರ ಮನವಿ ಸಲ್ಲಿಸಿರುವ ಸಂಘಟನೆ, ಎಸೆಸೆಲ್ಸಿ ಪರೀಕ್ಷೆಗಳಲ್ಲಿ ತೃತೀಯ ಭಾಷೆಗೆ ಗ್ರೇಡಿಂಗ್ ವ್ಯವಸ್ಥೆ ಕುರಿತು ರಾಜ್ಯ ಸರ್ಕಾರ ತೆಗೆದುಕೊಂಡ ನಿರ್ಧಾರವನ್ನು ಮರುಪರಿಶೀಲಿಸಲು ರಾಜ್ಯಪಾಲರು ಪತ್ರ ಬರೆದಿರುವುದನ್ನು ತೀವ್ರವಾಗಿ ಖಂಡಿಸಿದೆ. ರಾಜ್ಯದ ಜನರಿಂದ ಆಯ್ಕೆಯಾದ ಸರ್ಕಾರದ ನಿರ್ಧಾರಗಳಲ್ಲಿ ರಾಜ್ಯಪಾಲರು ಹಸ್ತಕ್ಷೇಪ ಮಾಡುವುದು ಸರಿಯಲ್ಲ ಎಂದು ಸಂಘಟನೆ ಅಭಿಪ್ರಾಯಪಟ್ಟಿದೆ. ಕನ್ನಡಿಗರ ಹಿತಾಸಕ್ತಿಗೆ ವಿರುದ್ಧವಾದ ಯಾವುದೇ ಕ್ರಮಗಳನ್ನು ಪರಿಗಣಿಸಬಾರದು ಎಂದು ತಿಳಿಸಿದೆ. ಹಿಂದಿ ಹೇರಿಕೆಗೆ ಅವಕಾಶ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿರುವ ಸಂಘಟನೆ, ಹಿಂದಿ ಭಾಷೆ ಪ್ರಾಬಲ್ಯ ಹೊಂದಿರುವ ರಾಜ್ಯಗಳಲ್ಲಿಯೂ ಕನ್ನಡವನ್ನು ತೃತೀಯ ಭಾಷೆಯಾಗಿ ಕಡ್ಡಾಯಗೊಳಿಸಲು ರಾಜ್ಯಪಾಲರು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದೆ. ರಾಜ್ಯಪಾಲರ ನಡೆ ಕರ್ನಾಟಕದ ಹಿತಾಸಕ್ತಿಗೆ ವಿರುದ್ಧವಾಗಿದೆ ಎಂದು ಆರೋಪಿಸಿರುವ ಸಂಘಟನೆ, ಇಂತಹ ಧೋರಣೆ ಹೊಂದಿರುವವರು ಆ ಹುದ್ದೆಯಲ್ಲಿ ಮುಂದುವರಿಯಲು ಯೋಗ್ಯರಲ್ಲ ಎಂದು ತಿಳಿಸಿದೆ. ಈ ಹಿನ್ನೆಲೆಯಲ್ಲಿ ರಾಜ್ಯಪಾಲರನ್ನು ತಕ್ಷಣ ವಜಾಗೊಳಿಸಿ, ಕರ್ನಾಟಕದ ಹಿತಾಸಕ್ತಿಯನ್ನು ಕಾಪಾಡುವ ಕ್ರಮ ಕೈಗೊಳ್ಳಬೇಕೆಂದು ಕೇಂದ್ರ ಸರ್ಕಾರವನ್ನು ಆಗ್ರಹಿಸಲಾಗಿದೆ.

29 C