Gadag | ದಲಿತರಿಗೆ ಕ್ಷೌರ ನಿರಾಕರಿಸಿದ್ದಕ್ಕೆ ಸರಕಾರದಿಂದಲೇ ಕಟಿಂಗ್ ಶಾಪ್ ಆರಂಭ
ಗದಗ : ದಲಿತರಿಗೆ ಕ್ಷೌರ ಮಾಡಲು ಸವರ್ಣೀಯರು ನಿರಾಕರಿಸಿದ್ದಕ್ಕೆ ಸರಕಾರವೇ ಕ್ಷೌರದಂಗಡಿ(ಕಟಿಂಗ್ ಶಾಪ್) ಆರಂಭ ಮಾಡಿಸಿರುವ ಘಟನೆ ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಶಿಂಗಟಾಲೂರ ಗ್ರಾಮದಲ್ಲಿ ನಡೆದಿದೆ. ಗ್ರಾಮದಲ್ಲಿ ಅನೇಕ ವರ್ಷಗಳಿಂದ ದಲಿತರಿಗೆ ಕ್ಷೌರ ಮಾಡುತ್ತಿರಲಿಲ್ಲ ಎಂಬ ಆರೋಪವಿತ್ತು. ಈಗ ಸಮಾಜ ಕಲ್ಯಾಣ ಇಲಾಖೆ, ತಾಲೂಕು ಆಡಳಿತ, ತಾಲೂಕು ಪಂಚಾಯತ್, ದಲಿತ ಸಂಘಟನೆಗಳ ಒಕ್ಕೂಟ ಹಾಗೂ ಶಿವಶರಣ ಹಡಪದ ಅಪ್ಪಣ್ಣ ಸಮಾಜ ವತಿಯಿಂದ ಕ್ಷೌರದಂಗಡಿ ಆರಂಭಿಸಲಾಗಿದೆ. ಅಸ್ಪೃಶ್ಯತೆ ನಿರ್ಮೂಲನೆ ಜಾಗೃತಿ ಮೂಲಕ ʼಸಾಮರಸ್ಯ ಬದುಕು ಗ್ರಾಮದ ಬೆಳಕುʼ ಕಾರ್ಯಕ್ರಮ ಮೂಲಕ ಕ್ಷೌರದಂಗಡಿ ತೆರೆಯಲಾಗಿದೆ. ಪಕ್ಕದ ತಿಪ್ಪಾಪೂರ ಗ್ರಾಮದ ಬಸವರಾಜ್ ಹಡಪದ ಎಂಬ ವ್ಯಕ್ತಿಗೆ ಸಮಾಜ ಕಲ್ಯಾಣ ಇಲಾಖೆಯಿಂದ ಅಂಗಡಿ ನೀಡಿ ಕ್ಷೌರ ಮಾಡಲು ಅನುವು ಮಾಡಿಕೊಡಲಾಗಿದೆ. ಇದರಿಂದ ಗ್ರಾಮಸ್ಥರು ಸಂತೋಷ ವ್ಯಕ್ತಪಡಿಸಿದ್ದಾರೆ. ಕ್ಷೌರ ಮಾಡದಿರಲು ಕಾರಣ, ಗ್ರಾಮದ ಹಡಪದವರ ಮನೆಗೆ ವೀರಭದ್ರೇಶ್ವರ ದೇವರ ಪಲ್ಲಕ್ಕಿ ಬರುತ್ತಿರುವುದರಿಂದ ಕ್ಷೌರ ಮಾಡುವುದನ್ನು ನಿಲ್ಲಿಸಿದ್ದರು. ಮೊದಲು ಸವರ್ಣೀಯರ ಕೆಲವರ ಮನೆ ಮನೆಗೆ ಹೋಗಿ ಕ್ಷೌರ ಮಾಡಿ ಬರುತ್ತಿದ್ದರು. ಈಗ ಅದು ನಿಂತು ಹೋಗಿತ್ತು. ಗ್ರಾಮದ ಜನರು ಅಕ್ಕ ಪಕ್ಕದ ಊರುಗಳಿಗೆ ತೆರಳಿ ಕ್ಷೌರ ಮಾಡಿಕೊಳ್ಳುವ ಅನಿವಾರ್ಯತೆ ಎದುರಾಗಿತ್ತು. ಸ್ಥಳೀಯ ದಲಿತ ಸಮುದಾಯದವರು ಅಧಿಕಾರಿಗಳಿಗೆ ಮನವಿ ಸಲ್ಲಿಸಿದ ಹಿನ್ನಲೆಯಲ್ಲಿ ಸದ್ಯ ಅಧಿಕಾರಿಗಳ ನೇತೃತ್ವದಲ್ಲಿ ಕ್ಷೌರದಂಗಡಿ ಆರಂಭಿಸಲಾಗಿದೆ. ಈ ವೇಳೆ ಅನೇಕ ಅಧಿಕಾರಿಗಳು ಗ್ರಾಮಸ್ಥರು ಪಾಲ್ಗೊಂಡಿದ್ದರು.
ಜಂಟಿ ಕಾರ್ಯಾಚರಣೆಯಲ್ಲಿ ಇಸ್ರೇಲ್ - ಅಮೆರಿಕದಿಂದ ಇರಾನ್ ಮೇಲೆ ದಾಳಿ
ಟೆಹ್ರಾನ್: ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ತೀವ್ರಗೊಂಡಿದ್ದು, ಇರಾನ್ ವಿರುದ್ಧ ದಾಳಿ ಇಸ್ರೇಲ್ ನಡೆಸಿದೆ. ಈ ಕಾರ್ಯಾಚರಣೆಯಲ್ಲಿ ಅಮರಿಕವೂ ಭಾಗಿಯಾಗಿದೆ ಎಂದು ಅಮೆರಿಕದ ಅಧಿಕಾರಿಯೊಬ್ಬರು Al Jazeeraಗೆ ತಿಳಿಸಿದ್ದಾರೆ. ಇರಾನ್ ಮೇಲಿನ ದಾಳಿಯನ್ನು ಅಮೆರಿಕ ಮತ್ತು ಇಸ್ರೇಲ್ ಜಂಟಿ ಮಿಲಿಟರಿ ಕಾರ್ಯಾಚರಣೆಯಾಗಿ ನಡೆಸಲಾಗಿದೆ ಎಂದು ಅವರು ಹೇಳಿದ್ದಾರೆ. ಇಸ್ರೇಲ್ ಶನಿವಾರ ದಾಳಿ ಆರಂಭಿಸಿದ ಬಳಿಕ, ಖತರ್ ನಲ್ಲಿರುವ ಅಮೆರಿಕದ ರಾಯಭಾರ ಕಚೇರಿ ತನ್ನ ಎಲ್ಲಾ ಸಿಬ್ಬಂದಿಗೆ ತಕ್ಷಣ ಆಶ್ರಯ ತಾಣಗಳಿಗೆ ತೆರಳುವಂತೆ ಸೂಚಿಸಿದೆ. ಮುಂದಿನ ಸೂಚನೆ ಬರುವವರೆಗೆ ಅಲ್ಲಿರುವ ಅಮೆರಿಕ ನಾಗರಿಕರೂ ಸುರಕ್ಷಿತ ಸ್ಥಳಗಳಲ್ಲಿ ಉಳಿಯಬೇಕೆಂದು ಸೂಚನೆ ನೀಡಿದೆ. #WATCH | Tehran, Iran | Israel has launched a preventative missile attack against Iran, the Israeli defence minister said; visuals of the aftermath of the strike in Iran as a plume of smoke billows into the sky The U.S. participated in the (Iran) attack and was also carrying out… pic.twitter.com/tzfR1WnDhO — ANI (@ANI) February 28, 2026
ದಿಢೀರ್ ಏರಿದ ಚಿನ್ನ-ಬೆಳ್ಳಿ; ಇಂದಿನ ದರವೆಷ್ಟು?
ಗುರುವಾರ ಅಲ್ಪ ಕುಸಿತ ಕಂಡ ಚಿನ್ನದ ಬೆಲೆ ಮತ್ತೆ ಶುಕ್ರವಾರ ಏರಿಕೆ ಕಂಡಿದ್ದು, ಶನಿವಾರ ದಿಢೀರ್ ಗ್ರಾಂಗೆ 300 ರೂ. ಮೀರಿ ಏರಿಕೆ ಕಂಡಿದೆ. ಜನವರಿಯಲ್ಲಿ ಗರಿಷ್ಠ ಮಟ್ಟಕ್ಕೆ ಏರಿದ್ದ ಚಿನ್ನ ಮತ್ತೆ ಏರು ಹಾದಿಯಲ್ಲಿದೆ. ಫೆಬ್ರವರಿ ತಿಂಗಳ ಆರಂಭದಲ್ಲಿ ಕುಸಿತ ಕಂಡಿದ್ದ ಚಿನ್ನದ ಬೆಲೆ ಫೆಬ್ರವರಿ 23 ಸೋಮವಾರದಿಂದ ತುಸು ಏರು ಹಾದಿಯಲ್ಲಿತ್ತು. ಸೋಮವಾರ, ಮಂಗಳವಾರ ಮತ್ತು ಬುಧವಾರ ಚಿನ್ನದಲ್ಲಿ ಅಲ್ಪ ಏರಿಕೆ ಕಂಡುಬಂದು 16 ಸಾವಿರದ ಗಡಿಯನ್ನು ದಾಟಿತ್ತು. ಗುರುವಾರ ಅಲ್ಪ ಕುಸಿತ ಕಂಡ ಬೆಲೆ ಮತ್ತೆ ಶುಕ್ರವಾರ ಏರಿಕೆ ಕಂಡಿದ್ದು, ಶನಿವಾರ ದಿಢೀರ್ ಗ್ರಾಂಗೆ 300 ರೂ. ಮೀರಿ ಏರಿಕೆ ಕಂಡಿದೆ. ಬೆಳ್ಳಿಯ ಬೆಲೆ ಬುಧವಾರ, ಗುರುವಾರ ಮತ್ತು ಶುಕ್ರವಾರ ಸ್ಥಿರವಾಗಿತ್ತು. ಆದರೆ, ಶನಿವಾರ ಗ್ರಾಂಗೆ ರೂ 10 ಏರಿಕೆಯಾಗಿ 2,95,000 ರೂ. ಗೆ ಬಂದು ನಿಂತಿದೆ. ಫೆಬ್ರವರಿ 28ರಂದು ಶನಿವಾರ ಬೆಂಗಳೂರಿನ ಮಾರುಕಟ್ಟೆಗಳಲ್ಲಿ 24 ಕ್ಯಾರೆಟ್ ಶುದ್ಧ ಚಿನ್ನದ ಬೆಲೆ ಗ್ರಾಂಗೆ 316 ರೂ. ಏರಿಕೆಯಾಗಿ ಹತ್ತು ಗ್ರಾಂ ಬೆಲೆ 1,64,730 ರೂ.ಗೆ ಬಂದು ನಿಂತಿದೆ. ಆಭರಣ ಚಿನ್ನವಾದ 22 ಕ್ಯಾರೆಟ್ ಬೆಲೆಯು ಗ್ರಾಂಗೆ 290 ರೂ. ಏರಿಕೆಯಾಗಿ ಹತ್ತು ಗ್ರಾಂಗೆ 1,51,000 ರೂ.ಗೆ ತಲುಪಿದೆ. 18 ಕ್ಯಾರೆಟ್ ಚಿನ್ನವು ಪ್ರತಿ ಗ್ರಾಂಗೆ 237 ರೂ. ಏರಿಕೆಯಾಗಿ ಹತ್ತು ಗ್ರಾಂಗೆ 1,23,550 ರೂ. ಗೆ ತಲುಪಿದೆ. ಮಂಗಳೂರಿನಲ್ಲಿ ಚಿನ್ನದ ದರವೆಷ್ಟಿದೆ? ಫೆಬ್ರವರಿ 28ರಂದು ಶನಿವಾರ ಬೆಳಗಿನ 11 ಗಂಟೆಯ ವಹಿವಾಟಿನಲ್ಲಿ ಮಂಗಳೂರಿನಲ್ಲಿ ಚಿನ್ನದ ಬೆಲೆ ಮತ್ತೆ ಅಲ್ಪ ಏರಿಕೆ ಕಂಡಿದೆ. ಒಂದು ಗ್ರಾಂ 24 ಕ್ಯಾರೆಟ್ ಚಿನ್ನದ ದರ 16,473 (+316) ರೂ. ನಷ್ಟಿದೆ. ಒಂದು ಗ್ರಾಂ 22 ಕ್ಯಾರೆಟ್ ಚಿನ್ನದ ದರ 15,100 (+290) ರೂ. ಮತ್ತು ಒಂದು ಗ್ರಾಂ 18 ಕ್ಯಾರೆಟ್ ಚಿನ್ನದ ದರ 12,355 (+237) ರೂ. ಬೆಲೆಗೆ ತಲುಪಿದೆ. ಸ್ಥಿರವಾದ ಬೆಳ್ಳಿದರ ಫೆಬ್ರವರಿ ಆರಂಭದಿಂದಲೇ ಸತತ ಕುಸಿತ ಕಂಡಿದ್ದ ಬೆಳ್ಳಿ ಫೆಬ್ರವರಿ 19ರ ಗುರುವಾರದಿಂದ ಏರುಹಾದಿಯಲ್ಲಿತ್ತು. ಗುರುವಾರ ಮತ್ತು ಶುಕ್ರವಾರ ಕೆಜಿಗೆ 2,70,000 ರೂ. ಗೆ ಸ್ಥಿರವಾಗಿ ನಿಂತಿದ್ದ ಬೆಳ್ಳಿ ಬೆಲೆ, ಶನಿವಾರ 5 ರೂ. ಏರಿಕೆಯಾಗಿ 2,75,000ಗೆ ಬಂದು ತಲುಪಿತ್ತು. ನಂತರ ಸೋಮವಾರ ಬರೋಬ್ಬರಿ ಪ್ರತಿ ಗ್ರಾಂಗೆ 25 ರೂ. ಏರಿಕೆ ಕಂಡ ಚಿನ್ನ ಅಂತಿಮವಾಗಿ ಕೆಜಿಗೆ 3,00,000ಕ್ಕೆ ತಲುಪಿತ್ತು. ಆದರೆ ಮಂಗಳವಾರ ಪ್ರತಿ ಗ್ರಾಂಗೆ 15 ರೂ. ಕುಸಿದು ಕೆಜಿಗೆ 2,85,000 ರೂ.ಗೆ ತಲುಪಿದೆ. ಬುಧವಾರ, ಗುರುವಾರ ಮತ್ತು ಶುಕ್ರವಾರ ಸ್ಥಿರವಾಗಿದ್ದ ಬೆಳ್ಳಿಯ ಬೆಲೆ, ಶನಿವಾರ ಗ್ರಾಂಗೆ ರೂ 10 ಏರಿಕೆಯಾಗಿ 2,95,000 ರೂ. ಗೆ ಬಂದು ನಿಂತಿದೆ. ವಿವಿಧ ನಗರಗಳಲ್ಲಿ 1 ಗ್ರಾಮ್ ಚಿನ್ನದ ದರ (ಬೆಳಗಿನ ವಹಿವಾಟು) ಹೇಗಿದೆ? ದಿಲ್ಲಿ: 24 ಕ್ಯಾರೆಟ್ ಚಿನ್ನದ ದರ 16,488 (+316) ರೂ., 22 ಕ್ಯಾರೆಟ್ ಚಿನ್ನದ ದರ 15,115 (+290) ರೂ. ಮುಂಬೈ: 24 ಕ್ಯಾರೆಟ್ ಚಿನ್ನದ ದರ 16,473 (+316) ರೂ., 22 ಕ್ಯಾರೆಟ್ ಚಿನ್ನದ ದರ 15,100 (+290) ರೂ. ಅಹಮದಾಬಾದ್: 24 ಕ್ಯಾರೆಟ್ ಚಿನ್ನದ ದರ 16,478 (+316) ರೂ., 22 ಕ್ಯಾರೆಟ್ ಚಿನ್ನದ ದರ 15,105 (+290) ಚೆನ್ನೈ: 24 ಕ್ಯಾರೆಟ್ ಚಿನ್ನದ ದರ 16,582 (+327) ರೂ., 22 ಕ್ಯಾರೆಟ್ ಚಿನ್ನದ ದರ 15,200 (+300) ರೂ. ಕೋಲ್ಕತ್ತಾ: 24 ಕ್ಯಾರೆಟ್ ಚಿನ್ನದ ದರ 16,473 (+316) ರೂ., 22 ಕ್ಯಾರೆಟ್ ಚಿನ್ನದ ದರ 15,100 (+290) ರೂ. ಹೈದರಾಬಾದ್: 24 ಕ್ಯಾರೆಟ್ ಚಿನ್ನದ ದರ 16,473 (+316) ರೂ., 22 ಕ್ಯಾರೆಟ್ ಚಿನ್ನದ ದರ 15,100 (+290) ರೂ. ಜೈಪುರ: 24 ಕ್ಯಾರೆಟ್ ಚಿನ್ನದ ದರ 16,488 (+316) ರೂ., 22 ಕ್ಯಾರೆಟ್ ಚಿನ್ನದ ದರ 15,115 (+290) ರೂ. ಚಂಡೀಗಢ: 24 ಕ್ಯಾರೆಟ್ ಚಿನ್ನದ ದರ 16,488 (+316) ರೂ., 22 ಕ್ಯಾರೆಟ್ ಚಿನ್ನದ ದರ 15,115 (+290) ರೂ. ಲಕ್ನೋ: 24 ಕ್ಯಾರೆಟ್ ಚಿನ್ನದ ದರ 16,488 (+316) ರೂ., 22 ಕ್ಯಾರೆಟ್ ಚಿನ್ನದ ದರ 15,115 (+290) ರೂ.
ಇರಾನ್ ವಿರುದ್ಧ ಭೀಕರ ದಾಳಿ ಆರಂಭಿಸಿದ ಇಸ್ರೇಲ್, ಮಧ್ಯಪ್ರಾಚ್ಯದಲ್ಲಿ ಯುದ್ಧ ಶುರು | Israel Military
ಇಸ್ರೇಲ್ ದಿಢೀರ್ ಇರಾನ್ ವಿರುದ್ಧ ಸೇನಾ ಕಾರ್ಯಾಚರಣೆ ಶುರು ಮಾಡಿದ್ದು, ಅಮೆರಿಕ ಜೊತೆಗಿನ ಇರಾನ್ ಸಂಧಾನ ವಿಫಲವಾದ ಬೆನ್ನಲ್ಲೇ ಯುದ್ಧ ಶುರುವಾಗಿದೆ. ಇರಾನ್ ನಾಯಕರಿಗೆ ಪದೇ ಪದೇ ಈ ವಿಚಾರವಾಗಿ ಅಮೆರಿಕ ಮತ್ತು ಇಸ್ರೇಲ್ ನಾಯಕರು ಎಚ್ಚರಿಕೆ ನೀಡಿದ್ದರು. ಇಷ್ಟಾದರೂ ದಾರಿಗೆ ಬಾರದೆ, ಸೂಕ್ತ ಸಂಧಾನಕ್ಕೂ ಒಪ್ಪದೆ ಕಿರಿಕ್ ಮಾಡಿತ್ತು ಇರಾನ್. ಈಗಾಗಲೇ ಅಮೆರಿಕದ ಬೃಹತ್ ಸೇನೆ
ಇರಾನ್ ವಿರುದ್ಧ ಇಸ್ರೇಲ್ ದಾಳಿ: ದೇಶಾದ್ಯಂತ ತುರ್ತು ಪರಿಸ್ಥಿತಿ ಘೋಷಣೆ
ಶನಿವಾರ ಇಸ್ರೇಲ್ ಇರಾನ್ ವಿರುದ್ಧ ಮುನ್ನೆಚ್ಚರಿಕಾ ದಾಳಿ ನಡೆಸಿರುವುದಾಗಿ ರಕ್ಷಣಾ ಸಚಿವ ಇಸ್ರೇಲ್ ಕಾಟ್ಜ್ ತಿಳಿಸಿದ್ದಾರೆ. ಇಸ್ರೇಲ್ ರಾಜ್ಯದ ಮೇಲೆ ಇರುವ ಭೀತಿಗಳನ್ನು ನಿವಾರಿಸುವ ಉದ್ದೇಶದಿಂದ ಇರಾನ್ ವಿರುದ್ಧ ಮುನ್ನೆಚ್ಚರಿಕಾ ದಾಳಿ ಆರಂಭಿಸಲಾಗಿದೆ. ಈ ಹಿನ್ನೆಲೆ ದೇಶಾದ್ಯಂತ ತಕ್ಷಣದಿಂದಲೇ ತುರ್ತು ಪರಿಸ್ಥಿತಿಯನ್ನು ಘೋಷಿಸಲಾಗಿದೆ ಎಂದು ತಿಳಿಸಿದ್ದಾರೆ.
ಇರಾನ್ ಮೇಲೆ ಇಸ್ರೇಲ್ ಭೀಕರ ಕ್ಷಿಪಣಿ ದಾಳಿ: ದೇಶಾದ್ಯಂತ ತುರ್ತು ಪರಿಸ್ಥಿತಿ ಘೋಷಣೆ
ಜೆರುಸಲೇಂ: ಇಸ್ರೇಲ್ ಮತ್ತು ಇರಾನ್ ನಡುವಿನ ಉದ್ವಿಗ್ನತೆ ಮತ್ತೊಂದು ಹಂತಕ್ಕೆ ತಲುಪಿದ್ದು, ಶನಿವಾರ ಮುಂಜಾನೆ ಇಸ್ರೇಲ್ ಮಹತ್ವದ ಸೇನಾ ಕಾರ್ಯಾಚರಣೆ ನಡೆಸಿದೆ. ಇದರಿಂದಾಗಿ ಪಶ್ಚಿಮ ಏಷ್ಯಾದಲ್ಲಿ ಯುದ್ಧದ ಭೀತಿ ದಟ್ಟವಾಗಿದ್ದು, ಶನಿವಾರ ಮುಂಜಾನೆ ಇಸ್ರೇಲ್ ರಕ್ಷಣಾ ಪಡೆಗಳು ಇರಾನ್ ವಿರುದ್ಧ ಮುನ್ನೆಚ್ಚರಿಕಾ ದಾಳಿ ನಡೆಸಿವೆ ಎಂದು ಇಸ್ರೇಲ್ ರಕ್ಷಣಾ ಸಚಿವ ಇಸ್ರೇಲ್ ಕಾಟ್ಜ್ ಅಧಿಕೃತವಾಗಿ ಘೋಷಿಸಿದ್ದಾರೆ. ಇರಾನ್
ಇರಾನ್ ಮೇಲೆ ಇಸ್ರೇಲ್ನಿಂದ ದಾಳಿ, ಟೆಹ್ರಾನ್ನಲ್ಲಿ ಕೇಳಿ ಬಂದ ಸ್ಫೋಟದ ಶಬ್ಧ : ವರದಿ
ಟೆಹ್ರಾನ್ : ಇಸ್ರೇಲ್ ಇರಾನ್ ಮೇಲೆ ದಾಳಿ ನಡೆಸಿದ್ದು, ಟೆಹ್ರಾನ್ನಲ್ಲಿ ಸ್ಫೋಟದ ಶಬ್ಧಗಳು ಕೇಳಿಸಿದೆ ಎಂದು Aljazeera ವರದಿ ಮಾಡಿದೆ. ಇಸ್ರೇಲ್ ಇರಾನ್ ವಿರುದ್ಧ ಕ್ಷಿಪಣಿ ದಾಳಿ ನಡೆಸಿದೆ. ಪ್ರತೀಕಾರವಾಗಿ ಇಸ್ರೇಲ್ ಕಡೆಗೆ ಕ್ಷಿಪಣಿಗಳನ್ನು ಹಾರಿಸುವ ಸಾಧ್ಯತೆ ಹಿನ್ನೆಲೆ ಸಾರ್ವಜನಿಕರನ್ನು ಸಿದ್ಧಪಡಿಸಲು ದೇಶಾದ್ಯಂತ ಪ್ರಮುಖ ಪ್ರದೇಶಗಳಲ್ಲಿ ವಾಯುದಾಳಿ ಕುರಿತ ಸೈರನ್ ಗಳ ಮೂಲಕ ಎಚ್ಚರಿಕೆ ನೀಡಲಾಗುತ್ತಿದೆ ಎಂದು ಇಸ್ರೇಲ್ ಹೇಳಿದೆ.
PUC: ಪಿಯು ಬೋರ್ಡ್ ಹಾಗೂ ಕಾಲೇಜು ಆಡಳಿತ ಮಂಡಳಿ ಎಡವಟ್ಟು: ಪರೀಕ್ಷಾ ಕೇಂದ್ರ ಹುಡುಕಲು ಪರದಾಡಿದ ವಿದ್ಯಾರ್ಥಿಗಳು
ಯಾದಗಿರಿ: ರಾಜ್ಯಾದ್ಯಂತ ಇಂದಿನಿಂದ (ಫೆಬ್ರವರಿ 28) ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಗಳು ಬಿಗಿ ಭದ್ರತೆಯ ನಡುವೆ ಆರಂಭವಾಗಿವೆ. ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ (KSEAB) ನೇತೃತ್ವದಲ್ಲಿ 1,217 ಕೇಂದ್ರಗಳಲ್ಲಿ ಒಟ್ಟು 7.10 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದಾರೆ. ಪರೀಕ್ಷಾ ಅಕ್ರಮಗಳನ್ನು ತಡೆಯಲು ಸಿಸಿಟಿವಿ ಕಣ್ಗಾವಲು ಹಾಗೂ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಆದರೆ,
ಗೆದ್ದರಷ್ಟೇ ಸಾಲದು, ಪವಾಡವೇ ನಡೆಯಬೇಕು : ಪಾಕಿಸ್ತಾನದ ಸೆಮಿಫೈನಲ್ ಹಾದಿಗೆ ’ಖುದ್ರತ್ ಕಾ ನಿಜಾಮ್’ಸಾಥ್
Pak Semi Final entry calculation : ನ್ಯೂಜಿಲ್ಯಾಂಡ್ ವಿರುದ್ದ ಇಂಗ್ಲೆಂಡ್ ಗೆದ್ದ ನಂತರ, ಪಾಕಿಸ್ತಾನದ ಸೆಮಿಫೈನಲ್ ಆಸೆ ಇನ್ನೂ ಜೀವಂತವಾಗಿದೆ. ಶನಿವಾರ ನಡೆಯುವ ಶ್ರೀಲಂಕಾ ವಿರುದ್ದದ ಪಂದ್ಯ ಪಾಕಿಸ್ತಾನಕ್ಕೆ ನಿರ್ಣಾಯಕವಾಗಲಿದೆ. ಶ್ರೀಲಂಕಾ ವಿರುದ್ದ ಸೋತರೆ, ಪಾಕ್ ಆಸೆ ಮಣ್ಣುಪಾಲಾಗುತ್ತದೆ. ಉಪಾಂತ್ಯಕ್ಕೆ ತಲುಪಲು ಇರುವ ಲೆಕ್ಕಾಚಾರವೇನು ಎನ್ನುವುದನ್ನು ವಿವರಿಸಲಾಗಿದೆ.
ಒಳಮೀಸಲಾತಿಯಿಲ್ಲದೆ ಉದ್ಯೋಗ ಭರ್ತಿ ಮಾಡುವುದು ಅನ್ಯಾಯ, ಖಂಡನೀಯ
ಒಳಮೀಸಲಾತಿಯನ್ನು ವಿರೋಧಿಸುವುದು ಅಥವಾ ಪರೋಕ್ಷವಾಗಿ ಅದು ಜಾರಿಯಾಗದಂತೆ ನೋಡಿಕೊಳ್ಳುವುದು ಮೀಸಲಾತಿಯನ್ನೇ ವಿರೋಧಿಸುವ ಹಿಂದುತ್ವವಾದಿ ರಾಜಕಾರಣವನ್ನೇ ಗಟ್ಟಿಗೊಳಿಸುತ್ತದೆ. ಕರ್ನಾಟಕದ ಕಾಂಗ್ರೆಸ್ ಸರ್ಕಾರವು ಹೊಸ ಉದ್ಯೋಗ ನೇಮಕಾತಿಯನ್ನು 2022 ರ ಮೀಸಲಾತಿ ಮತ್ತು ರೋಸ್ಟರ್ ನಂತೆ ಮಾಡುವುದಾಗಿ ಘೋಷಿಸಿ ಕರ್ನಾಟಕವನ್ನು ಒಳಮೀಸಲಾತಿ ಪೂರ್ವ ಕಾಲಕ್ಕೆ ಹಿಂದಕ್ಕೇಕೆ ತಳ್ಳಿದೆ. ಇದು ಸಾಮಾಜಿಕ ನ್ಯಾಯಕ್ಕೆ ಮಹಾ ಹಿನ್ನೆಡೆಯುಂಟು ಮಾಡಿ ದಮನಿತರಲ್ಲೇ ಅತ್ಯಂತ ದಮನಿತ ಸಮುದಾಯಗಳಿಗೆ ದ್ರೋಹ ಬಗೆದಿದೆ. ಈ ಅನ್ಯಾಯಕ್ಕೆ ಪ್ರಮುಖವಾಗಿ ಕಾಂಗ್ರೆಸ್ ಸರ್ಕಾರದ ಅವಕಾಶವಾದಿ ಮತ್ತು ಪಟ್ಟಭದ್ರ ಹಿತಾಸಕ್ತಿಗಳೇ ಕಾರಣ. ಕಾಂಗ್ರೆಸ್ಸಿನ ಪಟ್ಟಭದ್ರ ಅವಕಾಶವಾದ ಒಂದೇ ದಿನ ಒಳಮೀಸಲಾತಿ ಕಾನೂನು ಜಾರಿ ಮಾಡಿ ಮತ್ತೊಂದೆಡೆ ನ್ಯಾಯಾಲಯದ ಕಡೆ ಬೊಟ್ಟು ತೋರಿಸಿ ಸದ್ಯದ ನೇಮಕಾತಿಯಲ್ಲಿ ಒಳಮೀಸಲಾತಿಯ ಬಗ್ಗೆ ಮೌನ ವಹಿಸಿರುವುದು ಸಾಮಾಜಿಕ ನ್ಯಾಯಕ್ಕೆ ಮಾಡಿರುವ ಮಹಾದ್ರೋಹ. ಈ ಮೂಲಕ ಕಾಂಗ್ರೆಸ್ ಸರ್ಕಾರ ಮೀಸಲಾತಿ ವಿರೋಧಿ ಬ್ರಾಹ್ಮಣವಾದಿ ಸಂಘಿಗಳ ರಾಜಕೀಯವನ್ನೇ ಗಟ್ಟಿಗೊಳಿಸುತ್ತಿದೆ. ಹಾಗೆ ನೋಡಿದರೆ ಪ್ರಾರಂಭದಿಂದಲೂ ಕಾಂಗ್ರೆಸ್ ಸರ್ಕಾರ ಒಳಮೀಸಲಾತಿಯ ಬಗ್ಗೆ ಬದ್ಧತೆಯನ್ನೇ ತೋರಿಸಿಲ್ಲ. ನಾಗಮೋಹನ್ ದಾಸ್ ವರದಿಯಲ್ಲಿ ಇದ್ದಿರಬಹುದಾದ ಕೆಲವು ಗೊಂದಲಗಳನ್ನು ಸರಿಪಡಿಸಿ ಸಾರದಲ್ಲೇ ಜಾರಿ ಮಾಡುವ ಬದಲು, ನಾಗಮೋಹನ್ ದಾಸ್ ವರದಿಯ ಸಾರವನ್ನೇ ತಿರಸ್ಕರಿಸಿ 6:6:5 ಸೂತ್ರದ ಕಾನೂನು ಮಾಡಿತು. ಆ ಮೂಲಕ ಅತ್ಯಂತ ಹಿಂದುಳಿದ ದಲಿತ ಅಲೆಮಾರಿ ಸಮುದಾಯಗಳಿಗೆ ಇನ್ನಿಲ್ಲದ ಅನ್ಯಾಯವನ್ನು ಮಾಡಿತು. ಕೋರ್ಟಿನಲ್ಲಿ ದಲಿತ ಅಲೆಮಾರಿಗಳು ಗ್ರೂಪ್ ಸಿ ಯಲ್ಲಿರುವ ಸೃಶ್ಯ ಪರಿಶಿಷ್ಟ ಜಾತಿಗಳಷ್ಟೇ ಮುಂದುವರೆದಿದ್ದಾರೆಂದು ವಾದಿಸಿತು. ಈ ಅನ್ಯಾಯದ ಕಾರಣಕ್ಕಾಗಿಯೇ ಇಡೀ ದೇಶದಲ್ಲಿ ಕರ್ನಾಟಕದಲ್ಲಿ ಮಾತ್ರ ಒಳಮೀಸಲಾತಿ ವಿಷಯ ಕೋರ್ಟಿನ ಮೆಟ್ಟಿಲೇರುವಂತಾಯಿತು. ಈಗ ಕೋರ್ಟನ್ನು ನೆಪವಾಗಿ ತೋರಿಸಿ ಕಾಂಗ್ರೆಸ್ ಸರ್ಕಾರ ಒಳಮೀಸಲಾತಿಯಿಲ್ಲದ ನೇಮಕಾತಿಯನ್ನು ಮಾಡಹೊರಟಿದೆ. ಕಾಂಗ್ರೆಸ್ ಸರ್ಕಾರದ ಈ ಅನ್ಯಾಯವನ್ನು ಸಾಮಾಜಿಕ ನ್ಯಾಯಕ್ಕೆ ಬದ್ಧರಾದ ಎಲ್ಲರೂ ಒಕ್ಕೊರಲಿಂದ ತಡೆಗಟ್ಟಬೇಕಿದೆ. ಬಿಜೆಪಿಯ ಮನುವಾದಿ ಕುತಂತ್ರ ಮತ್ತೊಂದೆಡೆ ವಿರೋಧಿ ಬಿಜೆಪಿ ಪಕ್ಷ ಅಲೆಮಾರಿಗಳಿಗೆ ಆಗಿರುವ ಅನ್ಯಾಯದ ಬಗ್ಗೆ ಹುಸಿ ಕಣ್ಣೀರು ಹಾಕುತ್ತಾ ಬಂದರೂ, ವಿಧಾನಸಭೆಯಲ್ಲಿ ಮಾತ್ರ ಈ ಅನ್ಯಾಯದ ಕಾನೂನು ಜಾರಿಯಾಗಲು ಕಾಂಗ್ರೆಸ್ ಸರ್ಕಾರಕ್ಕೆ ಸಹಕರಿಸಿತು. ಅಷ್ಟು ಮಾತ್ರವಲ್ಲದೆ ರೋಸ್ಟರ್ ಸೂತ್ರದಲ್ಲಿ ಇರಬಹುದಾದ ತಪ್ಪು ಗ್ರಹಿಕೆ/ಗೊಂದಲಗಳಿಗೆ ನ್ಯಾಯಸಮ್ಮತ ಪರಿಹಾರ ಹುಡುಕದೆ ಅಸ್ಪರ್ಶ್ಯ ಸಮುದಾಯದ ನಡುವೆ ಶಾಶ್ವತ ಒಡಕುಂಟು ಮಾಡುವ ಹುನ್ನಾರಗಳಿಗೆ ಮುಂದಾಗಿದೆ. ಈ ಒಡಕನ್ನೇ ಹಿಗ್ಗಿಸುತ್ತಾ ತನ್ನ ತತ್ ಕ್ಷಣದ ರಾಜಕೀಯ ಲಾಭಕ್ಕೂ, ಮತ್ತು ದೀರ್ಘಕಾಲೀನ ಬ್ರಾಹ್ಮಣವಾದಿ ಹಿಂದುತ್ವ ರಾಜಕೀಯಕ್ಕೂ ಬಳಸಿಕೊಳ್ಳುತ್ತಿದೆ. ಹಾಗೆ ನೋಡಿದರೆ 2022 ರಲ್ಲಿ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ಪರಿಶಿಷ್ಟ ಮೀಸಲಾತಿಯನ್ನು ಶೇ. 50ರಿಂದ ಶೇ.56 ಕ್ಕೆ ಏರಿಸುವ ಕಾನೂನು ಮಾಡಿದರೂ ಅದಕ್ಕೆ ಸಾಂವಿಧಾನಿಕ ಸಿಂಧುತ್ವ ಕೊಡಿಸುವ ಯಾವ ಮಾರ್ಗಗಳನ್ನೂ ಅನುಸರಿಸಲಿಲ್ಲ. ಕೇಂದ್ರದಲ್ಲಿ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರವೇ ಇದ್ದರೂ, ಶೇ. 56 ಮೀಸಲಾತಿಯನ್ನು ಒಂಭತ್ತನೇ ಷೆಡ್ಯೂಲಿಗೆ ಸೇರಿಸಿ ಶೇ. 56 ರ ಮೀಸಲಾತಿಗೆ ಸಾಂವಿಧಾನಿಕ ಸಿಂಧುತ್ವ ದೊರಕಿಸುವ ಆ ಮೂಲಕ ನ್ಯಾಯಂಗ ವಿಚಕ್ಷಣೆಯಿಂದ ಈ ಕಾನೂನನ್ನು ಹೊರಗಿಡಲು ಬೇಕಾದ ಸಂಸದರ ಸಂಖ್ಯಾ ಬಲವಿದ್ದರೂ ಕೇಂದ್ರದ ಬಿಜೆಪಿ ಸರ್ಕಾರವಾಗಲೀ, ರಾಜ್ಯದ ಬಿಜೆಪಿಯಾಗಲೀ ಅದರ ಬಗ್ಗೆ ಮುತುವರ್ಜಿ ವಹಿಸಲಿಲ್ಲ. ಅದರ ಬದಲಿಗೆ ಮೇಲ್ಜಾತಿ ಮಧ್ಯಮ ವರ್ಗಕ್ಕೆ ಶೇ. 10 ರಷ್ಟು EWS ಮೀಸಲಾತಿ ಕೊಡಿಸಲು ಮಾತ್ರ ಬ್ರಾಹ್ಮಣವಾದಿ ಬಿಜೆಪಿ ಇನ್ನಿಲ್ಲದ ಮುತುವರ್ಜಿ ವಹಿಸಿತು. ಹೀಗಾಗಿ ಇಂದು ಹೈಕೋರ್ಟು ಶೇ. 56 ಮೀಸಲಾತಿಗೆ ತಡೆಯೊಡ್ಡುವುದಕ್ಕೆ ಪ್ರಧಾನ ಹೊಣೆಗಾರಿಕೆ ಹೊರಬೇಕಾಗಿರುವುದು ಬಿಜೆಪಿಯೇ. ಈಗ ಅದನ್ನು ಬಳಸಿಕೊಂಡು ಕಾಂಗ್ರೆಸ್ ಸರ್ಕಾರ ಕೂಡ ಒಳಮೀಸಲಾತಿಯನ್ನು ನೆನೆಗುದಿಗೆ ತಳ್ಳುವ ಅನ್ಯಾಯ ಮಾಡುತ್ತಿದೆ. ಸಾಮಾಜಿಕ ನ್ಯಾಯವೆಂದರೆ ಅತ್ಯಂತ ವಂಚಿತರಿಗೆ ಮೊದಲ ಆದ್ಯತೆಯೇ ಅಲ್ಲವೇ? ಹಂಚುಣ್ಣುವುದು, ಅತ್ಯಂತ ವಂಚಿತರಿಗೆ ಮೊದಲ ಆದ್ಯತೆಯ ಮೇರೆಗೆ ಅವಕಾಶ ಹಾಗೂ ಸಂಪನ್ಮೂಲಗಳನ್ನು ಒದಗಿಸುವುದೇ ಸಾಮಾಜಿಕ ನ್ಯಾಯ . ಈ ಪ್ರಕ್ರಿಯೆಯಲ್ಲಿ ಈಗಾಗಲೇ ಹೆಚ್ಚು ಪಡೆಯುತ್ತಿರುವವರು ಮೊದಲಿಗಿಂತ ಕಡಿಮೆ ಪಡೆಯುವುದು , ಈವರೆಗೆ ಕಡಿಮೆ ಪಡೆಯುತ್ತಿದ್ದವರು ಹೆಚ್ಚು ಪಡೆಯುವುದು ಸಹಜ ಸಾಮಾಜಿಕ ನ್ಯಾಯ ಪ್ರಕ್ರಿಯೆ. ಅದರ ಬದಲಿಗೆ ಯಥಾಸ್ಥಿತಿಯನ್ನು ಉಳಿಸಿಕೊಳ್ಳುವುದೆಂದರೆ ಈವರೆಗೆ ನಡೆಯುತ್ತಾ ಬಂದ ಸಾಮಾಜಿಕ ಅನ್ಯಾಯದ ಮುಂದುವರಿಕೆಯ ಸಮರ್ಥನೆಯಾಗುತ್ತದೆ. ಅರ್ಥಾತ್ ಬ್ರಾಹ್ಮಣವಾದ ಸಮರ್ಥನೆಯೇ ಆಗಿಬಿಡುತ್ತದೆ. ಇದ್ದಕ್ಕಿರುವ ಏಕೈಕ ಪರಿಹಾರ ನ್ಯಾಯದ ಪಾಲನ್ನು ನಿರಾಕರಿಸುವುದಲ್ಲ.ಪಾಲಿನ ಪ್ರಮಾಣವನ್ನು ಹೆಚ್ಚಿಸಲು ಒಟ್ಟಾಗಿ ಹೋರಾಡುವುದು. ಅರ್ಥಾತ್ -ಶೇ. 50 ರ ಅವೈಜ್ಞಾನಿಕ ಮೇಲ್ಮಿತಿಯನ್ನು ಕಿತ್ತುಹಾಕಲು, -ಸರ್ಕಾರಿ ಉದ್ಯೋಗದ ಪ್ರಮಾಣವನ್ನು ಹೆಚ್ಚಿಸಲು -ಸರ್ಕಾರಿ ಉದ್ಯೋಗಗಳ ಖಾಸಗೀಕರಣ, ಗುತ್ತಿಗೆಕರಣವನ್ನು ತಡೆಯಲು, -ಸರ್ಕಾರದ ವೆಚ್ಚವನ್ನು ಕಡಿಮೆ ಮಾಡಲು ನಿರ್ಬಂಧಿಸುವ FRBM ಕಾಯಿದೆ ರದ್ದು ಪಡಿಸಲು ಹಾಗೂ -ದೇಶದ ಸಂಪನ್ಮೂಲಗಳನ್ನು ಸಾಮಾಜಿಕ ನ್ಯಾಯದ ಹಂಚಿಕೆ ಮಾಡಲು. ಎಲ್ಲಾ ಎಸ್ಸಿ , ಎಸ್ಟಿ, ಒಬಿಸಿ ಮತ್ತು ಬಡವರು ಒಟ್ಟಾಗಿ ಹೋರಾಡುವ ಅಗತ್ಯವಿದೆ. ಆದರೆ ಆಳುವ ಸರ್ಕಾರಗಳು ಬಿಜೆಪಿ ಮತ್ತು ಕಾಂಗ್ರೆಸ್ ಗಳೆರದೂ , ನಿರುದ್ಯೋಗಿಗಳಲ್ಲಿ ಮೀಸಲಾತಿ ವಿರೋಧಿ ಆಕ್ರೋಶ ತುಂಬಲು, ಅಥವಾ ದಮನಿತರನ್ನೇ ಒಡೆದಾಳಲು, ಹಿಂದುತ್ವವಾದಿ ಬಿಜೆಪಿಯಾದರೆ ಕೋಮುವಾದಿ ವಿಷ ತುಂಬಿ ಮನುವಾದಿ ಸಾಮಾಜಿಕ ವ್ಯವಸ್ಥೆಯನ್ನು ಮರೆಮಾಚಲು ಪ್ರಯತ್ನಿಸುತ್ತದೆ. ಆದ್ದರಿಂದ ದಮನಿತರೆಲ್ಲರೂ ಒಗ್ಗಟ್ಟಾಗಿ: ಒಳಮೀಸಲಾತಿಯಿಲ್ಲದೆ ನೇಮಕಾತಿ ಕೂಡದೆಂದು ಕಾಂಗ್ರೆಸ್ಪ ಸರ್ಕಾರದ ವಿರುದ್ಧ ಪಕ್ಷಾತೀತವಾಗಿ ಹೋರಾಡಬೇಕಿದೆ.. ವೈಜ್ಞಾನಿಕ ಒಳಮೀಸಲನ್ನು ಜಾರಿ ಮಾಡಲು ಆಗ್ರಹಿಸಬೇಕಿದೆ. ಶೇ. 56 ರ ಮೀಸಲಾತಿಯನ್ನು ಶೆಡ್ಯೂಲ್ ಒಂಭತ್ತಕ್ಕೆ ಕೂಡಲೇ ಸೇರಿಸಲು ಕರ್ನಾಟಕದ ಸಂಸದರು ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳಬೇಕಿದೆ. ಈ ನಿಟ್ಟಿನಲ್ಲಿ ಸಂಸತ್ತಿನಲ್ಲಿ ಹೆಚ್ಚು ಸಂಖ್ಯಾ ಬಲ ಹೊಂದಿರುವ ಆಡಳಿತ ರೂಢ ಬಿಜೆಪಿಯ ಬೇಜವಾಬ್ದಾರಿಯನ್ನು ವಿರೋಧಿಸಬೇಕಿದೆ. ಹಾಗೆಯೇ ಒಳಮೀಸಲಲ್ಲಿ ಹಾಗೂ SCSP ಯಲ್ಲಿ ದಲಿತ ಅಲೆಮಾರಿಗಳಿಗೆ ಪ್ರತ್ಯೇಕ ಶೇ. 1 ಮೀಸಲು ನಿಗದಿ ಮಾಡಲು ಎಲ್ಲಾ ದಮನಿತರು ಹೋರಾಡಬೇಕಿದೆ. -ಶಿವಸುಂದರ್
ವಿದ್ಯಾರ್ಥಿಯ 'ಪುಷ್ಪ' ಪೋಸ್ ಕಾಪಿ ಮಾಡಿದ ಪ್ರಿನ್ಸಿಪಾಲ್: Viral Video ನೋಡಿ ನೆಟ್ಟಿಗರು ಫಿದಾ
ಚೆನ್ನೈ: ಶಾಲಾ ದಿನಗಳು ಅಂದರೆ ಪ್ರತಿಯೊಬ್ಬರಿಗೂ ನೆನಪಾಗುವುದು ಶಿಸ್ತಿನ ಶಿಕ್ಷಕರು, ಅದಕ್ಕಿಂತ ಹೆಚ್ಚಾಗಿ ಕಟ್ಟುನಿಟ್ಟಿನ ನಿಯಮಗಳನ್ನು ಪಾಲಿಸುವ ಪ್ರಿನ್ಸಿಪಾಲ್. ಸಾಮಾನ್ಯವಾಗಿ ಪ್ರಿನ್ಸಿಪಾಲ್ ಎಂದರೆ ವಿದ್ಯಾರ್ಥಿಗಳಲ್ಲಿ ಒಂದು ರೀತಿಯ ಭಯ, ಭಕ್ತಿ ಇರುತ್ತದೆ. ಆದರೆ, ಇಲ್ಲೊಬ್ಬರು ಪ್ರಿನ್ಸಿಪಾಲ್ ತಮ್ಮ ಶಾಲೆಯ ಪುಟ್ಟ ವಿದ್ಯಾರ್ಥಿಯ ಸ್ಟೈಲ್ನ ಪೋಸ್ ಅನ್ನು ತಾವೂ ಕಾಪಿ ಮಾಡುವ ಮೂಲಕ ನೆಟ್ಟಿಗರ ಮನಗೆದ್ದಿದ್ದಾರೆ. ತಮಿಳುನಾಡಿನ ಶಾಲೆಯೊಂದರಲ್ಲಿ
ಮಂಗಳೂರು: ಯು.ಕೆ. ಬಾವಾ ಉಳ್ಳಾಲ ಅವರು ಶನಿವಾರ ನಿಧನರಾದರು. ಮೃತರು ಕುಟುಂಬಸ್ಥರು ಹಾಗೂ ಅಪಾರ ಬಂಧುಗಳನ್ನು ಅಗಲಿದ್ದಾರೆ.
Napoklu | ಹಿಂದುತ್ವ ಸಂಘಟನೆಯ ಕಾರ್ಯಕರ್ತನ ಮೇಲೆ ಹಲ್ಲೆ ಆರೋಪ ; ನಾಲ್ವರ ಬಂಧನ
ಮಡಿಕೇರಿ : ಹಿಂದುತ್ವ ಸಂಘಟನೆಯ ಕಾರ್ಯಕರ್ತನೊಬ್ಬನ ಮೇಲೆ ಹಲ್ಲೆ ನಡೆಸಲಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಬಿಂದು ಮಣಿ ಹೇಳಿದ್ದಾರೆ. ಸಿದ್ದಿಕ್, ಸುಹೈಲ್, ಶಾಫಿ, ರಶೀದ್ ಬಂಧಿತರು. ದೊಡ್ಡಪುಲಿಕೋಟು ಗ್ರಾಮದ ಕರವಂಡ ಪಿ.ಲವ ನಾಣಯ್ಯ ಅವರು ನಾಪೋಕ್ಲು ಪೊಲೀಸ್ ಠಾಣೆಯಲ್ಲಿ ಈ ನಾಲ್ವರ ವಿರುದ್ಧ ಹಲ್ಲೆ ಆರೋಪದ ದೂರು ದಾಖಲಿಸಿದ್ದರು ಬಲ್ಲಮಾವಟಿಯಲ್ಲಿ ಫೆ.28 ರಂದು ನಡೆಯಲಿದ್ದ ಹಿಂದೂ ಸಂಗಮ ಕಾರ್ಯಕ್ರಮದ ಹಿನ್ನೆಲೆ ಪ್ರಚಾರ ಕಾರ್ಯದಲ್ಲಿ ತೊಡಗಿದ್ದ ಅಪ್ಪಚ್ಚಿರ ಗೌತಮ್ ಎಂಬುವವರ ಮೇಲೆ ಕೆಲವರು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
ಫೆಬ್ರವರಿ 28ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ
Petrol, Diesel Price: ಪೆಟ್ರೋಲ್, ಡೀಸೆಲ್ ದರದಲ್ಲಿ ಜಾಸ್ತಿ ಅಲ್ಲದಿದ್ದರೂ, ಸ್ವಲ್ಪ ಪ್ರಮಾಣದಲ್ಲಾದರೂ, ಏರಿಳಿತ ಆಗುತ್ತಿರುತ್ತದೆ. ಹಾಗಾದರೆ, ಇಂದು (ಫೆಬ್ರವರಿ 28) ಬೆಂಗಳೂರು ಸೇರಿದಂತೆ ರಾಜ್ಯದ ಉಳಿದ ಜಿಲ್ಲೆಗಳಲ್ಲಿ ಲೀಟರ್ ಪೆಟ್ರೋಲ್, ಡೀಸೆಲ್ ಬೆಲೆ ಎಷ್ಟಿದೆ ಎನ್ನುವ ಅಂಕಿಅಂಶಗಳನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ. ಶಕ್ತಿಯ ಮೂಲಗಳು ಎನಿಸಿಕೊಂಡಿರುವ ಪೆಟ್ರೋಲ್ ಮತ್ತು ಡೀಸೆಲ್ ಇಂಧನ ಅತ್ಯವಶ್ಯಕವಾಗಿ ಬೇಕಾಗುವ ಸಂಪನ್ಮೂಲಗಳಾಗಿವೆ.
ವಾಷಿಂಗ್ಟನ್: ಪಾಕಿಸ್ತಾನ ಮತ್ತು ಅಪ್ಘಾನಿಸ್ತಾನದ ನಡುವಿನ ಉದ್ವಿಗ್ನತೆ ಮಧ್ಯೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪಾಕಿಸ್ತಾನದ ಪ್ರಧಾನಿಯನ್ನು ಶ್ಲಾಘಿಸಿದ್ದಾರೆ. ಪರಿಸ್ಥಿತಿಯನ್ನು ನಾವು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ ಎಂದು ಅಮೆರಿಕದ ರಾಜಕೀಯ ವ್ಯವಹಾರಗಳ ಅಧೀನ ಕಾರ್ಯದರ್ಶಿ ಆಲಿಸನ್ ಎಂ ಹೂಕರ್ ಹೇಳಿದ್ದಾರೆ. ಪಾಕಿಸ್ತಾನ ಮತ್ತು ಅಪ್ಘಾನಿಸ್ತಾನದ ನಡುವಿನ ಸಂಘರ್ಷದಲ್ಲಿ ಮಧ್ಯಪ್ರವೇಶಿಸುತ್ತೀರಾ ಎಂಬ ವರದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಟ್ರಂಪ್, ನಾನು ಮಧ್ಯಪ್ರವೇಶಿಸುತ್ತೇನೆ. ಆದರೆ, ಪಾಕಿಸ್ತಾನದ ಜೊತೆ ನನ್ನ ಸಂಬಂಧ ಉತ್ತಮವಾಗಿದೆ. ಪಾಕಿಸ್ತಾನದಲ್ಲಿ ಒಬ್ಬ ಮಹಾನ್ ಪ್ರಧಾನಿ, ಒಬ್ಬ ಶ್ರೇಷ್ಠ ಜನರಲ್ ಇದ್ದಾರೆ. ಅವರು ಉತ್ತಮ ನಾಯಕರು. ನಾನು ತುಂಬ ಗೌರವಿಸುವ ಇಬ್ಬರು ವ್ಯಕ್ತಿಗಳು. ಪಾಕಿಸ್ತಾನ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಿದ್ದಾರೆ. ಅಮೆರಿಕದ ವಿದೇಶಾಂಗ ಇಲಾಖೆಯೂ ಪಾಕಿಸ್ತಾನಕ್ಕೆ ಬೆಂಬಲದ ಸುಳಿವು ನೀಡಿದೆ. ಅಮೆರಿಕದ ರಾಜಕೀಯ ವ್ಯವಹಾರಗಳ ಅಧೀನ ಕಾರ್ಯದರ್ಶಿ ಆಲಿಸನ್ ಎಂ ಹೂಕರ್ ಅವರು, ಘರ್ಷಣೆಯಲ್ಲಿ ಪ್ರಾಣ ಕಳೆದುಕೊಂಡವರ ಕುರಿತು ಸಂತಾಪ ಸೂಚಿಸಲು ಪಾಕಿಸ್ತಾನದ ವಿದೇಶಾಂಗ ಕಾರ್ಯದರ್ಶಿ ಬಲೋಚ್ ಅವರೊಂದಿಗೆ ಮಾತನಾಡಿದ್ದಾಗಿ ತಿಳಿಸಿದ್ದಾರೆ. ಪರಿಸ್ಥಿತಿಯನ್ನು ನಾವು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ. ತಾಲಿಬಾನ್ ದಾಳಿ ವಿರುದ್ಧ ತನ್ನನ್ನು ತಾನು ರಕ್ಷಿಸಿಕೊಳ್ಳುವ ಪಾಕಿಸ್ತಾನದ ಹಕ್ಕಿಗೆ ನಾವು ಬೆಂಬಲ ವ್ಯಕ್ತಪಡಿಸಿದ್ದೇವೆ ಎಂದು ಹೂಕರ್ ಹೇಳಿದ್ದಾರೆ. ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಆಸಿಫ್ ಅವರು ಅಪ್ಘಾನಿಸ್ತಾನದ ವಿರುದ್ಧ ಶುಕ್ರವಾರ ಮುಕ್ತ ಯುದ್ಧವನ್ನು ಘೋಷಿಸಿದ್ದರು. ಶುಕ್ರವಾರ ಕಂದಹಾರ್ ಮತ್ತು ಕಾಬೂಲ್ ಸೇರಿದಂತೆ ಅಪ್ಘಾನಿಸ್ತಾನದ 29 ಸ್ಥಳಗಳನ್ನು ಗುರಿಯಾಗಿಸಿಕೊಂಡಿರುವುದಾಗಿ ಪಾಕಿಸ್ತಾನ ಹೇಳಿಕೊಂಡಿತ್ತು.
ಪಾಕಿಸ್ತಾನ - ಅಘ್ಫಾನಿಸ್ತಾನ ಯುದ್ಧದ ನಡುವೆ ಪಾಕ್ ನಾಯಕತ್ವ ಹೊಗಳಿದ ಟ್ರಂಪ್! ಮಧ್ಯಪ್ರವೇಶದ ಬಗ್ಗೆ ಏನಂದ್ರು
ಪಾಕಿಸ್ತಾನ ಹಾಗೂ ಅಘ್ಫಾನಿಸ್ತಾನದ ನಡುವಿನ ಯುದ್ಧದ ಸಂದರ್ಭದಲ್ಲೇ ಪಾಕಿಸ್ತಾನದ ನಾಯಕತ್ವವನ್ನು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೊಗಳಿದ್ದಾರೆ. ಈ ಮೂಲಕ ಪರೋಕ್ಷವಾಗಿ ಅಮೆರಿಕಾ ಪಾಕಿಸ್ತಾನದ ಜೊತೆಗೆ ನಿಲ್ಲಲಿದೆ ಎಂದ ಸಂದೇಶವನ್ನು ನೀಡಿದ್ದಾರೆ. ಇದೇ ಸಂದರ್ಭದಲ್ಲಿ ಯದ್ಧ ನಡೆಯುತ್ತಿರುವ ಹಿನ್ನೆಲೆಯಲ್ಲಿ ಮಧ್ಯಪ್ರವೇಶ ಮಾಡುತ್ತೀರಾ ಎಂಬ ಮಾಧ್ಯಮಗಳ ಪ್ರಶ್ನೆಗೂ ಅವರು ಉತ್ತರ ನೀಡಿದ್ದಾರೆ. ಹಾಗಾದರೆ ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದ ನಡುವಿನ ಯುದ್ಧದ ವಿಚಾರವಾಗಿ ಅಮೆರಿಕಾ ಯಾವ ನಡೆಯನ್ನು ಅನುಸರಿಸಲಿದೆ? ಅಧ್ಯಕ್ಷ ಟ್ರಂಪ್ ಅವರ ನಡೆ ಏನು?
Who Is Next CM In BJP - JDS Alliance : ನನ್ನ ಮಗ ಮುಖ್ಯಮಂತ್ರಿ ಆಗಲು ಸಂಖ್ಯಾಬಲ ಬೇಕಲ್ಲವೇ? ಅದೇನಿದ್ದರೂ, ಎಲ್ಲವೂ ಮೈತ್ರಿಕೂಟದ ತೀರ್ಮಾನ ಎಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ್ರು, ಕುಮಾರಸ್ವಾಮಿ ಮುಂದಿನ ಮುಖ್ಯಮಂತ್ರಿ ಆಯ್ಕೆಯ ವಿಚಾರದಲ್ಲಿ ಪರೋಕ್ಷವಾಗಿ ಹೇಳಿಕೆಯನ್ನು ನೀಡಿದ್ದಾರೆ. ಕುಮಾರಸ್ವಾಮಿಯನ್ನು ಸಿಎಂ ಮಾಡುವುದು ನನ್ನ ಕೈಯಲ್ಲಿ ಇಲ್ಲ, ಅದೇನಿದ್ದರೂ ಅಮಿತ್ ಶಾ ಎಂದು ಗೌಡ್ರು ಹೇಳುವ ಮೂಲಕ, ರಾಜ್ಯ ಬಿಜೆಪಿ ನಾಯಕರಿಗೆ ಸಂದೇಶವನ್ನು ರವಾನಿಸಿದ್ದಾರೆ.
ಸಂಪಾದಕೀಯ | ಈಸ್ಟರ್ ಸರಣಿ ಸ್ಫೋಟ : ಶಿಲುಬೆಗೇರಿದ ಅಮಾಯಕರಿಗೆ ಸಿಗಬೇಡವೇ ನ್ಯಾಯ?
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಶೃಂಗೇರಿಯಲ್ಲಿ ತಾಳಿ ಕಟ್ಟುವ ಮುನ್ನ ವರನ ಬಗ್ಗೆ ಅನಾಮಧೇಯ ಪತ್ರ, ಮದುವೆ ಬೇಡ ಎಂದು ಹೊರಬಂದ ವಧು
ಇತ್ತೀಚೆಗೆ ಮಂಟಪಗಳಲ್ಲಿ ಕೊನೆ ಕ್ಷಣದಲ್ಲಿ ಮದುವೆಗಳು ಮುರಿದುಬೀಳುವ ಪ್ರಸಂಗಗಳು ಹೆಚ್ಚಾಗುತ್ತಿವೆ. ಅದೇ ರೀತಿ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿಯಲ್ಲಿ ನಡೆದ ಮದುವೆ ಪ್ರಕರಣವು ರಾಜ್ಯಾದ್ಯಂತ ಭಾರಿ ಚರ್ಚೆಗೆ ಕಾರಣವಾಗಿದೆ. ನಂಬಿಕೆಯ ಮೇಲೆ ನಿಲ್ಲಬೇಕಾದ ಮದುವೆಯು ವಂಚನೆಯ ಆರೋಪದಿಂದಾಗಿ ಮಂಟಪದಲ್ಲೇ ಮುರಿದುಬಿದ್ದಿದೆ. ನೂರು ಸುಳ್ಳು ಹೇಳಿ ಒಂದು ಮದುವೆ ಮಾಡು ಎನ್ನುವುದು ಹಳೆಯ ಗಾದೆಯ ಮಾತು. ಆದರೆ ಮದುವೆ ಮುರಿದು
ತಿರುವನಂತಪುರಂ: ಅಬಕಾರಿ ನೀತಿ ಹಗರಣ ಪ್ರಕರಣದಲ್ಲಿ ದಿಲ್ಲಿ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರನ್ನು ಆರೋಪಮುಕ್ತಗೊಳಿಸಿರುವುದು ಬಿಜೆಪಿ ಮತ್ತು ಕಾಂಗ್ರೆಸ್ಗೆ ಹಿನ್ನಡೆಯಾಗಿದೆ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ. ಕೇಂದ್ರ ಸರಕಾರ ಬಿಜೆಪಿಯೇತರ ಆಡಳಿತದ ರಾಜ್ಯಗಳ ವಿರುದ್ಧ ಕೇಂದ್ರೀಯ ತನಿಖಾ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ. ಅದೇ ವೇಳೆ, ಕೇಜ್ರಿವಾಲ್ ವಿರುದ್ಧ ಆಧಾರರಹಿತ ಆರೋಪಗಳನ್ನು ಮಾಡುವ ಮೂಲಕ ಕಾಂಗ್ರೆಸ್ ಬಿಜೆಪಿಗೆ ಸಹಾಯ ಮಾಡುತ್ತಿದೆ ಎಂದು ಪಿಣರಾಯ್ ವಿಜಯನ್ ಆರೋಪಿಸಿದ್ದಾರೆ. 2022ರಲ್ಲಿ ದಿಲ್ಲಿಯ ಕಾಂಗ್ರೆಸ್ ನಾಯಕರು ಮೊದಲು ಕೇಜ್ರಿವಾಲ್ ವಿರುದ್ಧ ಅಬಕಾರಿ ನೀತಿಗೆ ಸಂಬಂಧಿಸಿದ ಆರೋಪಗಳನ್ನು ಮಾಡಿದರು. ಸಿಸೋಡಿಯಾ ಅವರನ್ನು ಬಂಧಿಸಿದಾಗ ಕಾಂಗ್ರೆಸ್ ಅದನ್ನು ಬೆಂಬಲಿಸಿತು. ಕೇಜ್ರಿವಾಲ್ ಅವರನ್ನೂ ಬಂಧಿಸುವಂತೆ ಆಗ್ರಹಿಸಿತ್ತು. ಆದ್ದರಿಂದ ಕೇಜ್ರಿವಾಲ್ ಮತ್ತು ಸಿಸೋಡಿಯಾ ಅವರನ್ನು ಪ್ರಕರಣದಲ್ಲಿ ಆರೋಪಮುಕ್ತಗೊಳಿಸಿರುವುದು ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ಪಕ್ಷಕ್ಕೂ ಹಿನ್ನಡೆಯಾಗಿದೆ ಎಂದು ಪಿಣರಾಯ್ ವಿಜಯನ್ ಹೇಳಿದರು. ಪ್ರಕರಣದಲ್ಲಿ ಖುಲಾಸೆಗೊಂಡ ಬಳಿಕ ಪಿಣರಾಯ್ ವಿಜಯನ್ ಕೇಜ್ರಿವಾಲ್ ಅವರೊಂದಿಗೆ ದೂರವಾಣಿಯಲ್ಲಿ ಮಾತುಕತೆ ನಡೆಸಿದರು.
ತಿಂಗಳಾಂತ್ಯದಲ್ಲಿ ಚಿನ್ನದ ಬೆಲೆ ಭಾರಿ ಏರಿಕೆ ಆಗುವ ಮೂಲಕ ಚಿನ್ನಾಭರಣ ಪ್ರಿಯರಿಗೆ ನಿರಾಸೆ ಮೂಡಿಸಿದೆ. ಅಮೆರಿಕ-ಿರಾನ್ ಮಾತುಕತೆಗಳು, ಜಾಗತಿಕ ಮಾರುಕಟ್ಟೆಗಳ ಏರಿಳಿತದ ಪ್ರಭಾವದಿಂದ ಚಿನ್ನದ ಬೆಲೆ ಏರಿಕೆಯಾಗಿದೆ.
PUC: ಇಂದಿನಿಂದ ದ್ವಿತೀಯ ಪಿಯುಸಿ ಪರೀಕ್ಷೆ ಆರಂಭ: 1,217 ಕೇಂದ್ರಗಳಲ್ಲಿ 7.10 ಲಕ್ಷ ವಿದ್ಯಾರ್ಥಿಗಳ ಭವಿಷ್ಯ ನಿರ್ಧಾರ
ಬೆಂಗಳೂರು: ರಾಜ್ಯದ ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯದ ಪ್ರಮುಖ ಘಟ್ಟವಾದ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಗಳು ಇಂದಿನಿಂದ (ಫೆಬ್ರವರಿ 28) ರಾಜ್ಯಾದ್ಯಂತ ಆರಂಭವಾಗಿವೆ. ಮಾರ್ಚ್ 17ರವರೆಗೆ ನಡೆಯಲಿರುವ ಈ ಮಹತ್ವದ ಪರೀಕ್ಷೆಗೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ (KSEAB) ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದ್ದು, ಪರೀಕ್ಷಾ ಅಕ್ರಮಗಳನ್ನು ತಡೆಯಲು ಬಿಗಿ ಭದ್ರತೆ ಒದಗಿಸಲಾಗಿದೆ. ಈ ಬಾರಿ ರಾಜ್ಯಾದ್ಯಂತ
ರಾಜ್ಯದಲ್ಲಿ 56,000 ಸರ್ಕಾರಿ ಹುದ್ದೆಗಳ ಭರ್ತಿಗೆ ಗ್ರೀನ್ ಸಿಗ್ನಲ್: ಒಳಮೀಸಲಾತಿ ವಿಧೇಯಕಕ್ಕೆ ರಾಜ್ಯಪಾಲರ ಅಂಕಿತ
ಬೆಂಗಳೂರು: ರಾಜ್ಯದ ಯುವಕ-ಯುವತಿಯರಿಗೆ ಹಾಗೂ ಸರ್ಕಾರಿ ಉದ್ಯೋಗದ ಆಕಾಂಕ್ಷಿಗಳಿಗೆ ಕರ್ನಾಟಕ ಸರ್ಕಾರವು ಭರವಸೆಯ ಸುದ್ದಿಯೊಂದನ್ನು ನೀಡಿದೆ. ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಬರೋಬ್ಬರಿ 56,000ಕ್ಕೂ ಹೆಚ್ಚು ಹುದ್ದೆಗಳನ್ನು ಭರ್ತಿ ಮಾಡುವ ಹಾದಿ ಅಧಿಕೃತವಾಗಿ ಸುಗಮವಾಗಿದೆ. ಪರಿಶಿಷ್ಟ ಜಾತಿಗಳ (SC) ಒಳಮೀಸಲಾತಿಗೆ ಸಂಬಂಧಿಸಿದ ಮಹತ್ವದ ವಿಧೇಯಕಕ್ಕೆ ಕರ್ನಾಟಕದ ರಾಜ್ಯಪಾಲರಾದ ಥಾವರ್ಚಂದ್ ಗೆಹ್ಲೋಟ್ ಅವರು ಅಂಕಿತ ಹಾಕಿದ್ದಾರೆ
ರಾಯಚೂರು : ಬೈಕ್ ಗೆ ಮಿನಿ ಲಾರಿ ಢಿಕ್ಕಿ; ಮೂವರು ಮೃತ್ಯು
ರಾಯಚೂರು: ನಗರದ ಬಸವೇಶ್ವರ ರಸ್ತೆಯಲ್ಲಿ ಶನಿವಾರ ಬೆಳಗಿನ ಜಾವ 1 ಗಂಟೆ ಸುಮಾರಿಗೆ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು ಒಂದೇ ಬಡಾವಣೆಯ ಮೂವರು ಯುವಕರು ಮೃತಪಟ್ಟ ಘಟನೆ ನಡೆದಿದೆ. ಮೃತರನ್ನು ನಗರದ ಬಂದರ ಗಲ್ಲಿ ಬಡಾವಣೆಯ ರಿಹಾನ್ (20), ಮಹಮ್ಮದ್ ಅಲಿ( 19) ಹಾಗೂ ಫಯಾಝ್ (20) ಎಂದು ಗುರುತಿಸಲಾಗಿದೆ. ಮೂವರು ಒಂದೇ ಬೈಕ್ ನಲ್ಲಿ ಯರಗೇರಾ ರಸ್ತೆಯಲ್ಲಿ ನಡೆಯುತ್ತಿರುವ ಕ್ರಿಕೆಟ್ ಟೂರ್ನಮೆಂಟ್ ನೋಡಿ ಮನೆಗೆ ಹಿಂತಿರುಗುವಾಗ ಹಿಂಬದಿಯಿಂದ ವೇಗವಾಗಿ ಬಂದ ಈಚರ್( ಮಿನಿ ಲಾರಿ) ಗುದ್ದಿದ ಪರಿಣಾಮ ಮೂವರು ಸ್ಥಳದಲ್ಲಿ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆ ಗಾಗಿ ಸ್ಥಳೀಯ ರಿಮ್ಸ್ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಘಟನೆ ಬಳಿಕ ಪೊಲೀಸರು ಭೇಟಿ ನೀಡಿ ಪರಿಶೀಲಿಸಿ ತನಿಖೆ ಕೈಗೊಂಡಿದ್ದಾರೆ.
ಇಂದಿನಿಂದ ದ್ವಿತೀಯ ಪಿಯುಸಿ ಪರೀಕ್ಷೆ; ವಿದ್ಯಾರ್ಥಿಗಳು ಯಾವುದೇ ಆತಂಕವಿಲ್ಲದೆ ಪರೀಕ್ಷೆ ಬರೆಯಿರಿ: ಸಿಎಂ ಸಿದ್ದರಾಮಯ್ಯ
ಬೆಂಗಳೂರು: ರಾಜ್ಯದ ಶೈಕ್ಷಣಿಕ ಜೀವನದ ಅತ್ಯಂತ ನಿರ್ಣಾಯಕ ಘಟ್ಟ ಎಂದೇ ಪರಿಗಣಿಸಲಾಗುವ ದ್ವಿತೀಯ ಪಿಯುಸಿ ಪರೀಕ್ಷೆಗಳು ಇಂದಿನಿಂದ ರಾಜ್ಯಾದ್ಯಂತ ಆರಂಭವಾಗಿವೆ. ಲಕ್ಷಾಂತರ ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಗಳತ್ತ ಹೆಜ್ಜೆ ಹಾಕುತ್ತಿದ್ದು, ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ವಿದ್ಯಾರ್ಥಿಗಳಿಗೆ ಆತ್ಮವಿಶ್ವಾಸದ ಮಾತುಗಳ ಮೂಲಕ ಶುಭ ಹಾರೈಸಿದ್ದಾರೆ. ಆತ್ಮವಿಶ್ವಾಸದಿಂದ ಪರೀಕ್ಷೆ ಬರೆಯಿರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು
ಹೊಸ ಕರೆನ್ಸಿ ನೋಟುಗಳನ್ನು ಹೊತ್ತ ಬೊಲಿವಿಯನ್ ವಾಯುಪಡೆಯ ವಿಮಾನ ಪತನ: ಕನಿಷ್ಠ 15 ಮೃತ್ಯು, 30 ಮಂದಿಗೆ ಗಾಯ
ಎಲ್ ಆಲ್ಟೊ (ಬೊಲಿವಿಯಾ), ಫೆ. 28: ದೇಶದ ಕೇಂದ್ರ ಬ್ಯಾಂಕ್ನಿಂದ ಹೊಸದಾಗಿ ಮುದ್ರಿತ ನೋಟುಗಳನ್ನು ಸಾಗಿಸುತ್ತಿದ್ದ ಬೊಲಿವಿಯನ್ ವಾಯುಪಡೆಯ ‘ಹರ್ಕ್ಯುಲಸ್’ ವಿಮಾನವು ಶುಕ್ರವಾರ ಸಂಜೆ ಎಲ್ ಆಲ್ಟೊ ನಗರದ ಜನನಿಬಿಡ ರಸ್ತೆಯಲ್ಲಿ ಪತನಗೊಂಡ ಪರಿಣಾಮ ಕನಿಷ್ಠ 15 ಮಂದಿ ಮೃತಪಟ್ಟಿದ್ದು, 30 ಮಂದಿ ಗಾಯಗೊಂಡಿದ್ದಾರೆ. ಎಲ್ ಆಲ್ಟೊ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಪಕ್ಕದಲ್ಲಿರುವ ಜನನಿಬಿಡ ವಸತಿ ಪ್ರದೇಶದಲ್ಲಿ ಟೇಕ್ಆಫ್ ಆದ ಕೆಲವೇ ಕ್ಷಣಗಳಲ್ಲಿ ವಾಯುಪಡೆಯ ವಿಮಾನ ನಿಯಂತ್ರಣ ತಪ್ಪಿ ನೆಲಕ್ಕುರುಳಿತು. ವಿಮಾನ ಪತನವಾದ ತೀವ್ರತೆಗೆ ಅವಶೇಷಗಳು ರಸ್ತೆಯಾದ್ಯಂತ ಚದರಿಕೊಂಡಿದ್ದು, ಹಲವಾರು ವಾಹನಗಳು ಹಾನಿಗೊಳಗಾಗಿವೆ ಎಂದು ರಾಯಿಟರ್ಸ್ ಸುದ್ದಿ ಸಂಸ್ಥೆ ವರದಿ ಮಾಡಿದೆ. ಸ್ಥಳೀಯ ಆಡಳಿತದ ಪ್ರಕಾರ, ಘಟನೆ ನಡೆದ ಪ್ರದೇಶದಲ್ಲಿದ್ದ ನಾಗರಿಕರು ಹಾಗೂ ವಿಮಾನದಲ್ಲಿದ್ದ ಸಿಬ್ಬಂದಿ ಇಬ್ಬರೂ ಸಾವನ್ನಪ್ಪಿದ್ದಾರೆ. ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗಳಿಗೆ ಸಾಗಿಸಲಾಗಿದ್ದು, ಕೆಲವರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ. ಅಪಘಾತದ ನಿಖರ ಕಾರಣ ತಿಳಿದು ಬಂದಿಲ್ಲ. ಹವಾಮಾನ ಪರಿಸ್ಥಿತಿ ಹಾಗೂ ತಾಂತ್ರಿಕ ಅಂಶಗಳ ಪರಿಶೀಲನೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಘಟನೆಯ ಕುರಿತು ಸಮಗ್ರ ತನಿಖೆ ಆರಂಭಿಸಲಾಗಿದ್ದು, ವಿಮಾನದ ಬ್ಲ್ಯಾಕ್ ಬಾಕ್ಸ್ ಮತ್ತು ಸಂಬಂಧಿತ ತಾಂತ್ರಿಕ ಮಾಹಿತಿಯನ್ನು ವಿಶ್ಲೇಷಿಸುವ ಪ್ರಕ್ರಿಯೆ ಮುಂದುವರಿದಿದೆ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ದೃಶ್ಯಗಳು ಅಪಘಾತದ ಭೀಕರತೆಯನ್ನು ಪ್ರತಿಬಿಂಬಿಸಿವೆ. ಅವಶೇಷಗಳ ಸುತ್ತ ದೊಡ್ಡ ಸಂಖ್ಯೆಯಲ್ಲಿ ಜನರು ಜಮಾಯಿಸಿರುವುದು ಕಂಡುಬಂದಿದ್ದು, ನೆಲದ ಮೇಲೆ ಚದರಿದ ಕರೆನ್ಸಿ ನೋಟುಗಳನ್ನು ಕೆಲವರು ಎತ್ತಿಕೊಳ್ಳುತ್ತಿರುವ ದೃಶ್ಯಗಳೂ ವೈರಲ್ ಆಗಿವೆ. ಪರಿಸ್ಥಿತಿ ನಿಯಂತ್ರಣಕ್ಕೆ ತರಲು ಜನರನ್ನು ಸ್ಥಳದಿಂದ ದೂರ ಸರಿಸಲು ಅಧಿಕಾರಿಗಳು ಜಲ ಫಿರಂಗಿಗಳನ್ನು ಬಳಸಿದ್ದಾರೆ. ಘಟನೆಯ ನಂತರ ಎಲ್ ಆಲ್ಟೊ ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಮುನ್ನೆಚ್ಚರಿಕಾ ಕ್ರಮವಾಗಿ ತಾತ್ಕಾಲಿಕವಾಗಿ ಮುಚ್ಚಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ರಾಷ್ಟ್ರೀಯ ವಿಮಾನಯಾನ ಸಂಸ್ಥೆ ಬೊಲಿವಿಯಾನಾ ಡಿ ಅವಿಯಾಸಿಯನ್ ಪ್ರಕಟಣೆಯಲ್ಲಿ, ಪತನಗೊಂಡ ವಿಮಾನವು ತನ್ನ ದಳಕ್ಕೆ ಸೇರಿಲ್ಲ ಎಂದು ಸ್ಪಷ್ಟಪಡಿಸಿದೆ. ದೇಶದ ರಾಜಧಾನಿ ಲಾ ಪಾಜ್ ಸಮೀಪದಲ್ಲಿರುವ ಎಲ್ ಆಲ್ಟೊ ನಗರವು ಸಮುದ್ರಮಟ್ಟದಿಂದ ಸುಮಾರು 4,000 ಮೀಟರ್ಗಳಿಗಿಂತ ಹೆಚ್ಚಿನ ಎತ್ತರದಲ್ಲಿದೆ. ಬೊಲಿವಿಯಾದ ಪ್ರಮುಖ ನಗರ ಕೇಂದ್ರಗಳಲ್ಲಿ ಒಂದಾದ ಇದು, ಎಲ್ ಆಲ್ಟೊ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ದೇಶೀಯ ಹಾಗೂ ಅಂತರರಾಷ್ಟ್ರೀಯ ಹಾರಾಟಗಳಿಗೆ ಪ್ರಮುಖ ಕೇಂದ್ರವಾಗಿಯೂ ಕಾರ್ಯನಿರ್ವಹಿಸುತ್ತದೆ.
ಬೆಂಗಳೂರಿಗೆ ಅಪಾಯಕಾರಿಯಾದ ಹೊಗೆ ಸೂಸುವ ವಾಹನಗಳು: 3 ವರ್ಷಗಳಲ್ಲಿ ₹27.13 ಕೋಟಿ ದಂಡ ವಸೂಲಿ
ಬೆಂಗಳೂರಿಲ್ಲಿ ಹೊಗೆ ಸೂಸುವ ವಾಹನಗಳಿಂದ ವಾಯು ಮಾಲಿನ್ಯ ತೀವ್ರಗೊಂಡಿದೆ. ನಗರಕ್ಕೆ ಹೊಗೆ ಸೂಸುವ ವಾಹನಗಳು ಅಪಾಯಕಾರಿಯಾಗಿ ಪರಿಣಮಿಸಿದೆ. ಹಳೆಯ ಮತ್ತು ಹೆಚ್ಚು ಮಾಲಿನ್ಯ ಉಂಟು ಮಾಡುವ ವಾಹನಗಳ ನಿಯಂತ್ರಣಕ್ಕೆ ಸಾರಿಗೆ ಇಲಾಖೆಯಿಂದ ನಿರಂತರವಾಗಿ ತಪಾಸಣಾ ಕಾರ್ಯ ಕೈಗೊಳ್ಳಲಾಗುತ್ತಿದೆ. ಅಲ್ಲದೆ ವಾಯು ಮಾಲಿನ್ಯ ಉಂಟು ಮಾಡುತ್ತಿರುವ ವಾಹನಗಳ ವಿರುದ್ಧ ನಿಯಮಾನುಸಾರ ಕ್ರಮ ಕೈಗೊಳ್ಳಲಾಗುತ್ತಿದೆ. ದ್ವಿಚಕ್ರ ಮತ್ತು ತ್ರಿಚಕ್ರ ವಾಹನಗಳಿಗೆ 1,500 ರೂಪಾಯಿ ಮತ್ತು ಲಘು ಮತ್ತು ಭಾರೀ ಗಾತ್ರದ ವಾಹನಗಳಿಗೆ 3000 ರೂಪಾಯಿ ದಂಡವನ್ನು ವಿಧಿಸಲಾಗುತ್ತಿದೆ.
ಈಸ್ಟರ್ ಸರಣಿ ಸ್ಫೋಟ : ಶಿಲುಬೆಗೇರಿದ ಅಮಾಯಕರಿಗೆ ಸಿಗಬೇಡವೇ ನ್ಯಾಯ?
ಶ್ರೀಲಂಕಾ ಮಾತ್ರವಲ್ಲ ಭಾರತ ಉಪಖಂಡವನ್ನೇ ತಲ್ಲಣಿಸುವಂತೆ ಮಾಡಿದ್ದ 2019ರ ಈಸ್ಟರ್ ಸರಣಿ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ ಶ್ರೀಲಂಕಾದ ಮಾಜಿ ಗುಪ್ತಚರ ಮುಖ್ಯಸ್ಥ , ನಿವೃತ್ತ ಮೇಜರ್ ಜನರಲ್ ಸುರೇಶ್ ಸಲ್ಲೇ ಅವರನ್ನು ಬಂಧಿಸಲಾಗಿದೆ. 2019ರ ಎಪ್ರಿಲ್ನಲ್ಲಿ ಈಸ್ಟರ್ ದಿನ ಬೆಳಗ್ಗೆ ಮೂರು ಚರ್ಚ್ ಗಳಲ್ಲಿ ಹಾಗೂ ಮೂರು ಐಷಾರಾಮಿ ಹೋಟೆಲ್ಗಳಲ್ಲಿ ಏಕಕಾಲದಲ್ಲಿ ಆರು ಆತ್ಮಹತ್ಯಾ ಬಾಂಬ್ ಸ್ಫೋಟಗಳು ಸಂಭವಿಸಿದ್ದವು. ಈ ಸ್ಫೋಟಗಳಲ್ಲಿ 279 ಮಂದಿ ಮೃತಪಟ್ಟಿದ್ದು 500ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದರು. ಮೃತರಲ್ಲಿ 45 ವಿದೇಶಿ ಪ್ರಜೆಗಳೂ ಸೇರಿದ್ದು ಈ ದುರಂತವು ಶ್ರೀಲಂಕಾದ ಪ್ರವಾಸೋದ್ಯಮದ ಮೇಲೆ ಭಾರೀ ದುಷ್ಪರಿಣಾಮವನ್ನು ಬೀರಿತ್ತು. 2023ರ ಹೊತ್ತಿಗೇ ಈ ಸ್ಫೋಟದ ಹಿಂದಿರುವ ರಾಜಕೀಯ ಮುಖಗಳನ್ನು ಬಯಲಿಗೆಳೆಯಲಾಗಿತ್ತು. ಶ್ರೀಲಂಕಾದ ಸುಪ್ರೀಂಕೋರ್ಟ್, ಈ ಸ್ಫೋಟದ ಹಿಂದಿರುವ ಆಡಳಿತ ವೈಫಲ್ಯವನ್ನು ಗುರುತಿಸಿತ್ತು. ಮಾಜಿ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ಸೇರಿದಂತೆ ಇತರ ನಾಲ್ವರು ಹಿರಿಯ ಅಧಿಕಾರಿಗಳು ಬಾಂಬ್ ಸ್ಫೋಟಗಳಿಗೆ ಪರೋಕ್ಷ ಕಾರಣವಾಗಿದ್ದಾರೆ ಎಂದು ಆರೋಪಿಸಿದ್ದಲ್ಲದೆ, ಸಂತ್ರಸ್ತರ ಸಂಬಂಧಿಕರಿಗೆ ಸಿರಿಸೇನಾ ವೈಯಕ್ತಿಕವಾಗಿ 100 ಮಿಲಿಯನ್ ರೂಪಾಯಿಗಳನ್ನು ಪರಿಹಾರವಾಗಿ ಪಾವತಿಸಲು ಆದೇಶಿಸಿತ್ತು. ಬ್ರಿಟಿಷ್ ಮಾಧ್ಯಮವೊಂದು ಮೂರು ವರ್ಷದ ಹಿಂದೆಯೇ ಮಾಜಿ ಗುಪ್ತಚರ ಮುಖ್ಯಸ್ಥ ಸಲ್ಲೆ ಪಾತ್ರವನ್ನು ಉಲ್ಲೇಖಿಸಿ ವರದಿಯೊಂದನ್ನು ಪ್ರಕಟಿಸಿತ್ತು. ಇದೀಗ ದಾಳಿಗೆ ಪಿತೂರಿ ರೂಪಿಸಿದ ಮತ್ತು ಸಹಕಾರ ನೀಡಿದ ಆರೋಪದ ಮೇರೆಗೆ ಸಲ್ಲೆಯನ್ನು ತನಿಖಾಧಿಕಾರಿಗಳು ಬಂಧಿಸಿದ್ದಾರೆ. ಈ ಸ್ಫೋಟದ ಹಿಂದಿರುವ ರಾಜಕೀಯ ಕಾರಣಗಳು ಇನ್ನಷ್ಟೇ ಸವಿವರವಾಗಿ ಬೆಳಕಿಗೆ ಬರಬೇಕಾಗಿದೆ. ವಿಪರ್ಯಾಸವೆಂದರೆ, ಸಂಭವಿಸಿದ ಸಾವು ನೋವುಗಳ ಹೊರತಾಗಿಯೂ ಈ ಸ್ಫೋಟದೊಂದಿಗೆ ಯಾವ ಸಂಬಂಧವೂ ಇಲ್ಲದ ಸಾವಿರಾರು ಜನರು ನಾಶನಷ್ಟಕ್ಕೀಡಾಗಿದ್ದಾರೆ. ಈ ಸ್ಫೋಟವನ್ನು ಒಂದು ನಿರ್ದಿಷ್ಟ ಸಮುದಾಯದ ತಲೆಗೆ ಕಟ್ಟಲು ಅಲ್ಲಿನ ಸರಕಾರ ನಡೆಸಿದ ಪ್ರಯತ್ನ ಮತ್ತು ಅದರ ಪರಿಣಾಮ ಅತ್ಯಂತ ಭೀಕರವಾಗಿತ್ತು. ಮೊದಲು ಈ ಸ್ಫೋಟವನ್ನು ಉಗ್ರಗಾಮಿ ಗುಂಪಾಗಿರುವ ನ್ಯಾಶನಲ್ ತೌಹೀದ್ ಜಮಾಅತ್ ನಡೆಸಿದೆ ಎಂದು ಹೇಳಲಾಯಿತು. ಈ ಸಂಘಟನೆ ಐಸಿಸ್ನ ಜೊತೆಗೆ ಸಂಪರ್ಕವನ್ನು ಹೊಂದಿದೆ ಎಂದೂ ಮಾಧ್ಯಮಗಳು ಬರೆದವು. ಅಂದಿನ ಶ್ರೀಲಂಕಾ ಸರಕಾರ ಕೂಡ ಇದನ್ನು ಸ್ಪಷ್ಟಪಡಿಸಿತ್ತು. ಈ ಸ್ಫೋಟಗಳನ್ನು ಮುಂದಿಟ್ಟುಕೊಂಡು ಶ್ರೀಲಂಕಾದಲ್ಲಿರುವ ಮುಸ್ಲಿಮರ ಮೇಲೆ ನಿರಂತರ ದಾಳಿಗಳು ನಡೆದವು. ಸಿಂಹಳದ ಬೌದ್ಧ ರಾಷ್ಟ್ರೀಯವಾದಿ ಗುಂಪುಗಳು ಈ ಸ್ಫೋಟವನ್ನು ಮುಸ್ಲಿಮರ ಮೇಲೆ ದಾಳಿ ನಡೆಸಲು ತನಗಿರುವ ಪರವಾನಿಗೆಯೆಂದು ಬಗೆದವು. ಜುಲೈ ತಿಂಗಳಲ್ಲಿ ಶ್ರೀಲಂಕಾದ ಚಿಲಾವ್ನಲ್ಲಿ ಆರಂಭವಾದ ಗಲಭೆ ವಾಯವ್ಯ ಪ್ರಾಂತ್ಯದ ಇತರ ಭಾಗಗಳಿಗೂ ಹರಡಿತು. 500ಕ್ಕೂ ಹೆಚ್ಚಿನ ಮುಸ್ಲಿಮ್ ಒಡೆತನದ ಮನೆ, ಆಸ್ತಿಗಳು ಈ ಗಲಭೆಗಳಲ್ಲಿ ನಾಶವಾಗಿವೆ. 100ಕ್ಕೂ ಅಧಿಕ ವಾಹನಗಳು ಧ್ವಂಸಗೊಂಡಿವೆ. ಸರಕಾರವೂ ಕೂಡ ಈ ಮುಸ್ಲಿಮ್ ದ್ವೇಷದ ಅಭಿಯಾನದಲ್ಲಿ ಸೇರಿಕೊಂಡಿತು. ಮುಸ್ಲಿಮ್ ಮಹಿಳೆಯರು ಸಾರ್ವಜನಿಕವಾಗಿ ನಕಾಬ್ ಧರಿಸುವುದಕ್ಕೆ ಸರಕಾರ ನಿಷೇಧ ಹೇರಿತು. ಸರಕಾರದ ಈ ನಿರ್ಧಾರ ಭಾರತದಲ್ಲೂ ಸಾಕಷ್ಟು ಚರ್ಚೆಗೊಳಗಾಯಿತು. ಅದನ್ನೇ ಮುಂದಿಟ್ಟಕೊಂಡು ಸಂಘಪರಿವಾರ ಸಂಘಟನೆಗಳು ಭಾರತದಲ್ಲೂ ಬುರ್ಖಾ ನಿಷೇಧವಾಗಬೇಕು ಎಂದು ಒತ್ತಾಯಿಸಿದವು. ಭಾರತದಲ್ಲೂ ಕೆಲವು ಕ್ರೈಸ್ತ ಸಂಘಟನೆಗಳು ಮುಸ್ಲಿಮ್ ಉಗ್ರವಾದದ ವಿರುದ್ಧ ಬೀದಿಗಿಳಿದವು. ಕೇರಳದಲ್ಲಿ ಕೆಲವು ಸಂಘಟನೆಗಳು ಮುಸ್ಲಿಮ್ ಸಮುದಾಯದ ವಿರುದ್ಧ ಯಾವುದೇ ಸಂಘಪರಿವಾರ ಸಂಘಟನೆಗಳಿಗೆ ಕಡಿಮೆಯಿಲ್ಲ ಎಂಬಂತೆ ಹೇಳಿಕೆ ನೀಡತೊಡಗಿದವು. ಈಸ್ಟರ್ ದಾಳಿಯಲ್ಲಿ ಹಲವು ಮುಸ್ಲಿಮರೂ ಮೃತಪಟ್ಟಿದ್ದಾರಾದರೂ ಅದನ್ನು ಮಾಧ್ಯಮಗಳು ಮರೆ ಮಾಚಿದವು. ಇದಕ್ಕೊಂದು ರಾಜಕೀಯ ಮುಖವಿರಬಹುದು ಎನ್ನುವುದನ್ನು ಯಾರೂ ಯೋಚಿಸುವುದಕ್ಕೂ ಮುಂದಾಗಲಿಲ್ಲ. ಇದೀಗ ಈ ಸ್ಫೋಟದಲ್ಲಿ ಶ್ರೀಲಂಕಾದ ಮಾಜಿ ಗುಪ್ತಚರನೊಬ್ಬನ ಕೈವಾಡವಿದೆ ಎನ್ನುವುದು ಬಯಲಾಗಿದೆ. ಆದರೆ ಈ ಸ್ಫೋಟ ಶ್ರೀಲಂಕಾದ ಮುಸ್ಲಿಮರ ಮೇಲೆ ಬೀರಿದ ಪರಿಣಾಮ, ಅವರು ಅನುಭವಿಸಿದ ನಾಶ, ನಷ್ಟಗಳ ಬಗ್ಗೆ ಯಾರೂ ಚರ್ಚಿಸುವುದಕ್ಕೆ ಮುಂದಾಗುತ್ತಿಲ್ಲ. ಈ ಹಿಂದೆ ಮಾಧ್ಯಮಗಳು ಈ ಸ್ಫೋಟಗಳ ಕುರಿತಂತೆ ಬರೆದ ಪುಂಖಾನುಪುಂಖ ‘ಐಸಿಸ್ ಕತೆಗಳ’ ಬಗ್ಗೆ ಯಾರೂ ಪಶ್ಚಾತ್ತಾಪ ಪಡುತ್ತಿಲ್ಲ. ಇದು ಶ್ರೀಲಂಕಾಕ್ಕೆ ಸೀಮಿತವಾಗಿರುವ ವಿಷಯವಲ್ಲ. ಈಸ್ಟರ್ ಸ್ಫೋಟಕ್ಕೆ ಸಂಬಂಧಿಸಿ ಭಾರತದ ಗುಪ್ತಚರರು ನೀಡಿದ ಮುನ್ನೆಚ್ಚರಿಕೆಯನ್ನು ಶ್ರೀಲಂಕಾದ ಅಂದಿನ ಸರಕಾರ ನಿರ್ಲಕ್ಷಿಸಿತು ಎನ್ನುವ ಆರೋಪವಿದೆ. ಇದೇ ಸಂದರ್ಭದಲ್ಲಿ ಭಾರತದಲ್ಲಿ ಪುಲ್ವಾಮಾ ಸ್ಫೋಟಗಳು ಸಂಭವಿಸುವಾಗ ಭಾರತದ ಈ ಗುಪ್ತಚರರು ಎಲ್ಲಿದ್ದರು ಎನ್ನುವ ಪ್ರಶ್ನೆಯನ್ನು ಭಾರತದ ಜನತೆ ಕೇಳುತ್ತಿದ್ದಾರೆ. ಶ್ರೀಲಂಕಾದಲ್ಲಿ ನಡೆದಿರುವ ಸ್ಫೋಟಗಳಲ್ಲಿ ಅಲ್ಲಿನ ಸರಕಾರದ ಕೈವಾಡವಿರುವಂತೆಯೇ ಭಾರತದಲ್ಲಿ ಸಂಭವಿಸಿದ ಹಲವು ಸ್ಫೋಟಗಳ ಹಿಂದೆ ಸರಕಾರದ ವೈಫಲ್ಯಗಳು ಕೆಲಸ ಮಾಡಿವೆ ಎಂದು ಹಲವರು ಈಗಾಗಲೇ ಶಂಕಿಸಿದ್ದಾರೆ. ಶ್ರೀಲಂಕಾದ ಸ್ಫೋಟಗಳನ್ನು ತನಿಖೆಗೆ ಮುನ್ನವೇ ಮುಸ್ಲಿಮ್ ಸಂಘಟನೆಗಳ ತಲೆಗೆ ಕಟ್ಟಿದ ರೀತಿಯಲ್ಲೇ ಭಾರತದಲ್ಲಿ ನಡೆದ ಹಲವು ಸ್ಫೋಟಗಳನ್ನು ಅಮಾಯಕರ ತಲೆಗೆ ಕಟ್ಟಲಾಗಿವೆ. 2006ರಲ್ಲಿ ನಡೆದ ಮುಂಬೈ ರೈಲು ಸ್ಫೋಟದಲ್ಲಿ 150ಕ್ಕೂ ಅಧಿಕ ಜನರು ಮೃತಪಟ್ಟಿದ್ದರು. ಈ ಸ್ಫೋಟವನ್ನು ಮುಸ್ಲಿಮರ ತಲೆಗೆ ಕಟ್ಟಲಾಗಿತ್ತು ಮಾತ್ರವಲ್ಲ ಇದರ ಹಿಂದಿರುವ ಉಗ್ರಗಾಮಿ ಸಂಘಟನೆಗಳ ಬಗ್ಗೆ ಮಾಧ್ಯಮಗಳು ಬಗೆ ಬಗೆಯ ವಿವರಗಳನ್ನು ಪ್ರಕಟಿಸಿದ್ದವು. ಕೆಳ ನ್ಯಾಯಾಲಯ ಬಂಧಿತ 12 ಆರೋಪಿಗಳಿಗೆ ಮರಣದಂಡನೆಯನ್ನು ವಿಧಿಸಿತ್ತು. ಆದರೆ ಕಳೆದ ವರ್ಷ ಎಲ್ಲ ಆರೋಪಿಗಳೂ ಖುಲಾಸೆಗೊಂಡರು ಮಾತ್ರವಲ್ಲ, ಪೊಲೀಸರ ತನಿಖೆಯ ರೀತಿಯನ್ನೇ ನ್ಯಾಯಾಲಯ ಪ್ರಶ್ನಿಸಿತ್ತು. ಅಮಾಯಕರಿಗೆ ಚಿತ್ರ ಹಿಂಸೆ ನೀಡಿರುವುದರ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿತ್ತು. ಸಂಜೋತಾ ರೈಲು ಸ್ಫೋಟ, ಮಕ್ಕಾ, ಅಜ್ಮೀರ್ ಸ್ಫೋಟಗಳಿಗೂ ಆರಂಭದಲ್ಲಿ ಮುಸ್ಲಿಮರನ್ನೇ ಹೊಣೆ ಮಾಡುವ ಪ್ರಯತ್ನ ನಡೆದಿತ್ತು. ಆದರೆ ಬಳಿಕ ಇದರ ಹಿಂದಿರುವ ಕೇಸರಿ ಉಗ್ರರ ಜಾಲವನ್ನು ಹೇಮಂತ್ ಕರ್ಕರೆ ತಂಡ ಬಯಲು ಮಾಡಿತು. ಅಸೀಮಾನಂದ, ಪ್ರಜ್ಞಾಠಾಕೂರ್, ಪುರೋಹಿತ್ ಮೊದಲಾದವರ ಹೆಸರುಗಳು ಒಂದೊಂದಾಗಿ ಹೊರ ಬರ ತೊಡಗಿದವು. ಈ ತನಿಖೆಯ ಮೂಲಕವೇ ಮೊದಲ ಬಾರಿಗೆ ಸ್ವದೇಶಿ ಕೇಸರಿ ಸಂಘಟನೆಗಳು ದೇಶದ ವಿಚ್ಛಿದ್ರಕಾರಿ ಕೃತ್ಯಗಳಲ್ಲಿ ತೊಡಗಿಕೊಂಡಿರುವುದು ಬೆಳಕಿಗೆ ಬಂತು. ಆದರೆ ಈ ಭಯೋತ್ಪಾದಕ ಸಂಘಟನೆಗಳ ಹೆಸರುಗಳನ್ನು ಬಯಲು ಮಾಡಿದ ಇಡೀ ತನಿಖಾ ತಂಡವೇ ಬಳಿಕ ಶಂಕಿತ ಉಗ್ರರಿಂದ ಹತ್ಯೆಗೀಡಾಯಿತು. ಮುಂಬೈ ರೈಲು ಸ್ಫೋಟದಲ್ಲಿ ಪೊಲೀಸರು ಬಂಧಿಸಿದ ಆರೋಪಿಗಳು ಅಮಾಯಕರು ಎಂದ ಮೇಲೆ ಆ ದಾಳಿಯನ್ನು ಸಂಘಟಿಸಿದವರು ಯಾರು? ಎನ್ನುವ ಪ್ರಶ್ನೆ ಇಂದಿಗೂ ಉತ್ತರವಿಲ್ಲದೆ ಬಿದ್ದುಕೊಂಡಿದೆ. ಮಾಲೆಗಾಂವ್, ಮಕ್ಕಾ ಸ್ಫೋಟಗಳ ಹಿಂದಿರುವ ಶಕ್ತಿಗಳು ಯಾವುವು ಎನ್ನುವುದು ಈವರೆಗೆ ಸ್ಪಷ್ಟವಾಗಿಲ್ಲ. ಶ್ರೀಲಂಕಾದಲ್ಲಿ ಈಸ್ಟರ್ ಸ್ಫೋಟಗಳಿಗೆ ಸಂಬಂಧಿಸಿದ ಪ್ರಾಮಾಣಿಕ ತನಿಖೆ ಭಾರತದಲ್ಲೂ ನಡೆದರೆ, ಪುಲ್ವಾಮಾ ಸೇರಿದಂತೆ ಹಲವು ಸ್ಫೋಟಗಳು ರಾಜಕೀಯ ಆಯಾಮಗಳನ್ನು ಪಡೆದುಕೊಳ್ಳುವ ಸಾಧ್ಯತೆಗಳನ್ನು ಅಲ್ಲಗಳೆಯಲಾಗದು.
ಉಡುಪಿ : ಕಂಬಳಕರೆಗೆ ಶಂಕುಸ್ಥಾಪನೆ ವಿವಾದ, ಗೊಂದಲ; 80 ಬಡಗಬೆಟ್ಟು ಗ್ರಾಮ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ
ಉಡುಪಿ: ಇಲ್ಲಿನ 80 ಬಡಗುಬೆಟ್ಟುವಿನಲ್ಲಿ ಶನಿವಾರ ಬೆಳಗ್ಗೆ ಕಂಬಳಕರೆಗೆ ಶಂಕುಸ್ಥಾಪನೆ ನೆರವೇರಿಸುವ ಕುರಿತಂತೆ ಉಂಟಾಗಿರುವ ಗೊಂದಲದ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲಾಧಿಕಾರಿಗಳು ಇಂದು ನಿಷೇಧಾಜ್ಞೆ ಹೊರಡಿಸಿದ್ದಾರೆ. ಇಂದು ಬೆಳಗ್ಗೆ 6 ಗಂಟೆಯಿಂದ ರಾತ್ರಿ 10ಗಂಟೆ ವರೆಗೆ ಮಣಿಪಾಲ ಠಾಣಾ ವ್ಯಾಪ್ತಿಯ 80ಬಡಗುಬೆಟ್ಟು ಗ್ರಾಮದ ಸ.ನ 11/1ರ ಯುವಜನ ಮತ್ತು ಕ್ರೀಡಾ ಇಲಾಖೆ ಹಾಗು ಜಿಲ್ಲಾಡಳಿತಕ್ಕೆ ಕಾಯ್ದಿರಿಸಿದ 6.30 ಎಕರೆ ಜಾಗದ ವ್ಯಾಪ್ತಿಯಲ್ಲಿ ಈ ನಿಷೇಧಾಜ್ಞೆ ಜಾರಿಯಲ್ಲಿರುತ್ತದೆ. ಬಡಗುಬೆಟ್ಟುವಿನಲ್ಲಿ ಇಂದು(ಫೆ.28) ಬಿಜೆಪಿ ಮುಖಂಡ ಶುಭಕರ ಶೆಟ್ಟಿ ನೇತೃತ್ವದಲ್ಲಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಉಪಸ್ಥಿತಿಯಲ್ಲಿ ಕಂಬಳ ಕರೆಗೆ ಶಂಕುಸ್ಥಾಪನೆ ನೆರವೇರಿಸಲು ನಿರ್ಧರಿಸಲಾಗಿದೆ. ಆದರೆ ಜಿಲ್ಲಾಡಳಿತ ಕಾರ್ಯಕ್ರಮವನ್ನು ಮಾರ್ಚ್ 4ರಂದು ಆಯೋಜಿಸಿದ್ದರಿಂದ ಗೊಂದಲ ಏರ್ಪಟ್ಟಿತ್ತು. ಹೀಗಾಗಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಮಣಿಪಾಲ ಪೊಲೀಸ್ ಠಾಣಾ ವ್ಯಾಪ್ತಿಯ, 80 ಬಡಗಬೆಟ್ಟು ಗ್ರಾಮದ ಸ.ನಂ 11/1 ರಲ್ಲಿ 6.30 ಎಕ್ರೆ ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಜಮೀನಿನಲ್ಲಿ ಫೆಬ್ರವರಿ 28 ರಂದು ಬೆಳಿಗ್ಗೆ 10:00 ಗಂಟೆಗೆ ನೂತನವಾಗಿ ಕಂಬಳ ಕ್ರೀಡಾಂಗಣಕ್ಕೆ ಗುದ್ದಲಿ ಪೂಜೆ ನಡೆಯಲಿದ್ದು ಜಿಲ್ಲೆಯ ಶಾಸಕರು ಹಾಗೂ ಸಂಸದರ ಸಹಿತ ಸುಮಾರು 200 ಜನ ಭಾಗವಹಿಸುವ ನಿರೀಕ್ಷೆಯಿದೆ. ಸದರಿ ಕಂಬಳಕ್ಕೆ ಜಮೀನು ಕಾಯ್ದಿರಿಸಿರುವ ಬಗ್ಗೆ ಸ್ಥಳೀಯರಲ್ಲಿ ಅಸಮಾಧಾನವಿದ್ದು, ಅಧಿಕೃತವಾಗಿ ಮಾರ್ಚ್ 4 ರಂದು ಕಾರ್ಯಕ್ರಮ ಆಯೋಜಿಸುವ ಕುರಿತು ಈಗಾಗಲೇ ಜಿಲ್ಲಾಡಳಿತ ನಿರ್ಧರಿಸಿದೆ. ಆದರೆ ಇದಕ್ಕೆ ಮೊದಲೇ ಶನಿವಾರ ಸುಮಾರು 200 ಜನ ಸೇರಿ ಅನಧಿಕೃತವಾಗಿ ಕಾರ್ಯಕ್ರಮ ಆಯೋಜಿಸಿರುವುದರಿಂದ ಗಲಾಟೆಗಳಾಗುವ ಸಂಭವ ಇರುವುದರಿಂದ ಮಣಿಪಾಲ ಪೊಲೀಸ್ ಠಾಣಾ ಸರಹದ್ದು, 80 ಬಡಗಬೆಟ್ಟು ಗ್ರಾಮದ ಸ.ನಂ 11/1 ರಲ್ಲಿ 6.30 ಎಕ್ರೆ ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆಗೆ ಕಾದಿರಿಸಿದ ಜಮೀನು ವ್ಯಾಪ್ತಿಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಫೆಬ್ರವರಿ 28 ರಂದು ಬೆಳಿಗ್ಗೆ 06.00 ಗಂಟೆಯಿಂದ ರಾತ್ರಿ 10.00 ಗಂಟೆವರೆಗೆ ಜಿಲ್ಲಾದಂಡಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಟಿ.ಕೆ ಸ್ವರೂಪ ನಿಷೇಧಾಜ್ಞೆ ಹೊರಡಿಸಿದ್ದಾರೆ. ಯಾವುದೇ ವ್ಯಕ್ತಿ ಈ ಆದೇಶವನ್ನು ಉಲ್ಲಂಘಿಸಿದ್ದಲ್ಲಿ ಅಂತವರ ವಿರುದ್ಧ ನಿಯಮಾನುಸಾರ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು ಎಂದು ಜಿಲ್ಲಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವೆಸ್ಟ್ಇಂಡೀಸ್ ವಿರುದ್ಧ ಗೆಲ್ಲಲೇಬೇಕಾದ ಪಂದ್ಯಕ್ಕೆ ರಿಂಕು ಸಿಂಗ್ ಲಭ್ಯತೆ ಬಗ್ಗೆ ಮೌನ ಮುರಿದ ಬಿಸಿಸಿಐ
ಹೊಸದಿಲ್ಲಿ: ಲಿವರ್ ಕ್ಯಾನ್ಸರ್ ನಿಂದ ಮೃತಪಟ್ಟ ತಂದೆಯ ಅಂತಿಮ ದರ್ಶನಕ್ಕಾಗಿ ಧಾವಿಸಿದ್ದ ಭಾರತ ಟಿ20 ಕ್ರಿಕೆಟ್ ತಂಡದ ಸದಸ್ಯ ರಿಂಕು ಸಿಂಗ್, ವೆಸ್ಟ್ಇಂಡೀಸ್ ವಿರುದ್ಧದ ಮಹತ್ವದ ಪಂದ್ಯಕ್ಕೆ ತಂಡವನ್ನು ಸೇರಿಕೊಳ್ಳಲಿದ್ದಾರೆ ಎಂದು ಬಿಸಿಸಿಐ ಪ್ರಕಟಿಸಿದೆ. ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯ ಕಾರ್ಯದರ್ಶಿ ದೇವಜೀತ್ ಸೈಕಿಯಾ ಈ ವಿಚಾರವನ್ನು ದೃಢಪಡಿಸಿದ್ದು, ಶನಿವಾರ ರಿಂಕು ಸಿಂಗ್ ಕೊಲ್ಕತ್ತಾದಲಲಿ ಭಾರತ ತಂಡ ಸೇರಿಕೊಳ್ಳಲಿದ್ದಾರೆ ಎಂದು ಹೇಳಿದ್ದಾರೆ. ಭಾನುವಾರ ಭಾರತ ತಂಡ ಟಿ20 ವಿಶ್ವಕಪ್ ಟೂರ್ನಿಯ ಸೂಪರ್8 ಹಂತದ ಕೊನೆಯ ಪಂದ್ಯದಲ್ಲಿ ವೆಸ್ಟ್ಇಂಡೀಸ್ ಸವಾಲನ್ನು ಎದುರಿಸಲಿದೆ. ತಂದೆಗೆ ಅಂತಿಮ ಗೌರವ ಸಲ್ಲಿಸಿದ ರಿಂಕುಸಿಂಗ್ ಮುಂಜಾನೆ 5 ಗಂಟೆಗೆ ಚೆನ್ನೈನಿಂದ ಹೊರಟಿದ್ದು, ಹೊಸದಿಲ್ಲಿಗೆ ಧಾವಿಸಿದ್ದಾರೆ ಎಂದು ಸೈಕಿಯಾ ಐಎಎನ್ಎಸ್ಗೆ ತಿಳಿಸಿದರು. ಗ್ರೇಟರ್ ನೋಯ್ಡಾದ ಯಥಾರ್ತ್ ಆಸ್ಪತ್ರೆಗೆ ಸಿಂಗ್ ತಂದೆಯನ್ನು ಫೆಬ್ರುವರಿ 21ರಂದು ದಾಖಲಿಸಲಾಗಿತ್ತು. ಕೃತಕ ಉಸಿರಾಟ ವ್ಯವಸ್ಥೆಯಲ್ಲಿದ್ದ ಅವರು ಶುಕ್ರವಾರ ಮುಂಜಾನೆ ಕೊನೆಯುಸಿರೆಳೆದಿದ್ದರು. ತಂದೆಯ ಆರೋಗ್ಯ ಹದಗೆಟ್ಟಾಗ ತಂದೆಯ ಜತೆಗಿದ್ದ ರಿಂಕು ಸಿಂಗ್, ಗುರುವಾರ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಜಿಂಬಾಬ್ವೆ ವಿರುದ್ಧದ ಪಂದ್ಯಕ್ಕೆ ಮುನ್ನ ತಂಡವನ್ನು ಸೇರಿಕೊಂಡಿದ್ದರು. ಆದರೆ ಆಡುವ 11ರ ಬಳಗದಲ್ಲಿ ಸಿಂಗ್ ಅವಕಾಶ ಪಡೆದಿರಲಿಲ್ಲ. ಅವರ ಬದಲು ತಂಡದಲ್ಲಿ ಜಾಗ ಪಡೆದ ಸಂಜು ಸ್ಯಾಮ್ಸನ್ ಅವರು ಅಭಿಷೇಕ್ ಶರ್ಮಾ ಜತೆ ಇನಿಂಗ್ಸ್ ಆರಂಭಿಸಿದರು.
Karnataka weather: ಕರ್ನಾಟಕದಲ್ಲಿ ತಗ್ಗಿದ ಚಳಿ, ಈ ಜಿಲ್ಲೆಗಳಲ್ಲಿ ಹೆಚ್ಚಾಗಲಿದೆ ಬಿಸಿಲು
ಬೆಂಗಳೂರು: ರಾಜ್ಯದಲ್ಲಿ ಚಳಿಯ ಪ್ರಭಾವ ಸ್ವಲ್ಪ ಕಡಿಮೆಯಾಗುತ್ತಿದ್ದು, ಮುಂದಿನ ದಿನಗಳಲ್ಲಿ ಮಧ್ಯಾಹ್ನದ ಹೊತ್ತು ಬಿಸಿಲು ಏರಿಕೆಯಾಗುವ ಸಾಧ್ಯತೆ ಇದೆ. ದಕ್ಷಿಣ ಒಳನಾಡಿನಲ್ಲಿ ಆಗಾಗ ಮೋಡ ಮುಸುಕಿದ ವಾತಾವರಣವಿರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಕಳೆದ 24 ಗಂಟೆಗಳಲ್ಲಿ ದಕ್ಷಿಣ ಒಳನಾಡು ಕರ್ನಾಟಕದ ಕೆಲವೆಡೆ ಚದುರಿದ ಮಳೆಯಾಗಿದೆ. ಕರಾವಳಿ ಕರ್ನಾಟಕ ಹಾಗೂ ಉತ್ತರ ಒಳನಾಡು ಪ್ರದೇಶಗಳಲ್ಲಿ ಒಣ ಹವಾಮಾನ
ಗದಗದ ತಿಮ್ಮಾಪುರದಲ್ಲಿ ದೇವಿ ಯಲ್ಲಮ್ಮನಿಗೂ ಗೃಹಲಕ್ಷ್ಮೀ ಹಣ ! ಗ್ರಾಮದ 850 ಮಹಿಳೆಯರಿಂದ ದೇಣಿಗೆ
ಮಹಿಳೆಯರ ಸಬಲೀಕರಣಕ್ಕಾಗಿ ಸರಕಾರ ಆರಂಭಿಸಿರುವ ಯೋಜನೆ ಗೃಹಲಕ್ಷ್ಮೀ, ಮನೆಮನೆಯನ್ನು ಬೆಳಗುತ್ತಿರುವ, ಮಹಿಳೆಯರಿಗೆ ಉದ್ಯಮಿಗಳಾಗಲು ಸಹಕರಿಸುತ್ತಿರುವ ಈ ಯೋಜನೆ ಈಗ ಊರಿನ ದೇವಸ್ಥಾನ ನಿರ್ಮಾಣಕ್ಕೂ ಸಹಕಾರಿಯಾಗುತ್ತಿದೆ.
ಪ್ರವೀಣ್ ನೆಟ್ಟಾರ್ ಹತ್ಯೆ ಪ್ರಕರಣ ಪರಿಣಾಮ: ಪುತ್ತೂರಲ್ಲಿ ಸೆಂಟ್ರಲ್ ಇಂಟಲಿಜೆನ್ಸ್ ಕಚೇರಿ
ಪುತ್ತೂರು: ಬಿಜೆಪಿ ಯುವ ನಾಯಕ ಪ್ರವೀಣ್ ನೆಟ್ಟಾರ್ ಕೊಲೆ ಪ್ರಕರಣವೂ ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತೀಯ ಸಂಘಟನೆಗಳ ಚಟುವಟಿಕೆ ಬೇರೂರುತ್ತಿರುವ ಹಿನ್ನೆಲೆಯಲ್ಲಿ ದೀರ್ಘಕಾಲಿಕ ಕ್ರಮಗಳತ್ತ ಚಿತ್ತ ಹರಿಸಿರುವ ಕೇಂದ್ರ ಸರಕಾರ, ಪುತ್ತೂರಿನಲ್ಲಿ ಸೆಂಟ್ರಲ್ ಇಂಟಲಿಜೆನ್ಸಿ ಕೇಂದ್ರ ಸ್ಥಾಪಿಸಿ ಗುಪ್ತಚರ ಇಲಾಖೆಯ ಕಾರ್ಯಕ್ಷಮತೆ ಬಲಪಡಿಸಲು ಮುಂದಾಗಿದೆ.2022ರ ಜುಲೈ 26ರಂದು ಪ್ರವೀಣ್ ನೆಟ್ಟಾರ್ ಕೊಲೆ ನಡೆದ ಬಳಿಕ ಕೇಂದ್ರ ಸರಕಾರದ ಅಧೀನದಲ್ಲಿರುವ ಎನ್ಐಎ (ರಾಷ್ಟ್ರೀಯ ತನಿಖಾ ದಳ) ದಕ್ಷಿಣ ಕನ್ನಡ ಮತ್ತು ಪಕ್ಕದ ಕೇರಳದಲ್ಲಿ ಬಿರುಸಿನ ತನಿಖೆ ಕೈಗೊಂಡಿತ್ತು. ಈ ಸಂದರ್ಭ ಕೇಂದ್ರ ಗುಪ್ತಚರ ಇಲಾಖೆ ದಕ್ಷಿಣ ಕನ್ನಡದತ್ತ ಗಮನ ಕೇಂದ್ರೀಕರಿಸಿತ್ತು. ಪ್ರವೀಣ್ ನೆಟ್ಟಾರ್ ಕೊಲೆ ಪ್ರಕರಣದ ಬಳಿಕ ಪಿಎಫ್ಐ ಸಂಘಟನೆ ನಿಷೇಧಿಸುವ ನಿರ್ಧಾರವನ್ನು ಕೇಂದ್ರ ಸರಕಾರ ಕೈಗೊಂಡಿತ್ತು. ಇಂಟಲಿಜೆನ್ಸಿ ಶಕ್ತಿವರ್ಧನೆ: ಮತೀಯವಾದಿ ಸಂಘಟನೆಗಳು ಬಲಗೊಳ್ಳುವ ಸೂಕ್ಷ್ಮತೆ ಅರ್ಥ ಮಾಡಿಕೊಂಡು ಪುತ್ತೂರಿನಲ್ಲಿ ಸೆಂಟ್ರಲ್ ಇಂಟಲಿಜೆನ್ಸಿ ಕಚೇರಿ ಸ್ಥಾಪನೆಗೆ ನಿರ್ಧರಿಸಲಾಗಿದೆ ಎಂದು ಇಲಾಖೆಯ ಮೂಲಗಳು ತಿಳಿಸಿವೆ.ಪುತ್ತೂರು ಹೊರವಲಯದ ಪಡ್ನೂರಿನಲ್ಲಿ 0.44 ಎಕರೆ ಜಮೀನನ್ನು ಸೆಂಟ್ರಲ್ ಇಂಟೆಲಿಜೆನ್ಸಿ ಕಚೇರಿ ಸ್ಥಾಪನೆಗೆಂದೇ ಶಾಸಕ ಅಶೋಕ್ ರೈ ನೇತೃತ್ವದಲ್ಲಿ ತಾಲೂಕು ಕಂದಾಯ ಇಲಾಖೆ ಮಂಜೂರು ಮಾಡಿದೆ. ಮುಂದಿನ ದಿನಗಳಲ್ಲಿ ಇಲ್ಲಿ ಸೆಂಟ್ರಲ್ ಇಂಟೆಲಿಜೆನ್ಸಿ ಇನ್ಸ್ಪೆಕ್ಟರ್ ಕಚೇರಿ ನಿರ್ಮಾಣವಾಗಲಿದ್ದು, ಅಗತ್ಯ ಸಿಬ್ಬಂದಿ ನೇಮಕವಾಗಲಿದೆ. ಭಟ್ಕಳದ ಬಳಿಕ ಪುತ್ತೂರು ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಮತ್ತು ಚಿಕ್ಕಮಗಳೂರು ಜಿಲ್ಲೆಗಳ ವ್ಯಾಪ್ತಿ ಹೊಂದಿರುವ ವ್ಯಾಪ್ತಿಗೆ ಸೆಂಟ್ರಲ್ ಇಂಟೆಲಿಜೆನ್ಸಿಯಲ್ಲಿ ಪಶ್ಚಿಮ ವಲಯವಿದೆ. ಇದರಡಿಯಲ್ಲಿ ಪ್ರತೀ ಜಿಲ್ಲಾ ಕೇಂದ್ರಗಳಲ್ಲಿ ಒಂದೊಂದು ಡಿವಿಶನ್ ಕಚೇರಿಗಳಿವೆ. ಇವುಗಳನ್ನು ಹೊರತುಪಡಿಸಿ ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿಇನ್ಸ್ಪೆಕ್ಟರ್ ಕಚೇರಿ ಇರುವುದು ಬಿಟ್ಟರೆ ಬೇರಾವುದೇ ತಾಲೂಕು ಕೇಂದ್ರಗಳಲ್ಲಿ ಕಚೇರಿಯಿಲ್ಲ.ಇದೇ ಮೊದಲ ಬಾರಿ ಪುತ್ತೂರನ್ನು ಆರಿಸಿಕೊಂಡು ಇನ್ಸ್ಪೆಕ್ಟರ್ ಮಟ್ಟದ ಕಚೇರಿ ಸ್ಥಾಪಿಸಲು ನಿರ್ಧರಿಸಲಾಗಿದೆ. ಕೋಮುಸೂಕ್ಷ್ಮ ಎಂಬ ಕಾರಣಕ್ಕೆ ಭಟ್ಕಳವನ್ನು ಆರಿಸಿಕೊಂಡಿದ್ದರೆ, ಇದೇ ಕಾರಣಕ್ಕೆ ದಕ್ಷಿಣ ಕನ್ನಡ ಗ್ರಾಮಾಂತರ ಭಾಗವನ್ನು ಗಮನದಲ್ಲಿಟ್ಟುಕೊಂಡು ಪುತ್ತೂರನ್ನು ಆರಿಸಲಾಗಿದೆ. ಪ್ರವೀಣ್ ನೆಟ್ಟಾರ್ ಕೊಲೆಯ ನಂತರ ದಕ್ಷಿಣ ಕನ್ನಡಕ್ಕೆ ನೆರೆಯ ಕೇರಳದಿಂದ ಮತೀಯವಾದಿ ಶಕ್ತಿಗಳು ಪ್ರವೇಶಿಸುತ್ತಿರುವುದನ್ನು ಮನಗಂಡು ಈ ಕ್ರಮ ಕೈಗೊಳ್ಳಲಾಗಿದೆ. ಹೀಗಿರಲಿದೆ ಕಚೇರಿ.. ಮೂಲಗಳ ಪ್ರಕಾರ ಸೆಂಟ್ರಲ್ ಇಂಟೆಲಿಜೆನ್ಸಿಯ ಮಂಗಳೂರು ಡಿವಿಶನ್ನ ಎಸ್ಪಿ ಕಚೇರಿ ಮಂಗಳೂರಿನಲ್ಲಿಯೇ ಇರಲಿದ್ದು, ಜಿಲ್ಲೆಮತ್ತು ಕಮಿಷನರೇಟ್ ವ್ಯಾಪ್ತಿಯ ಅಧಿಕಾರ ಯಥಾಪ್ರಕಾರ ಇರಲಿದೆ. ಕಮಿಷನರೇಟ್ ಹೊರತುಪಡಿಸಿದ ದ.ಕ. ಜಿಲ್ಲಾವ್ಯಾಪ್ತಿಗೆ ಪುತ್ತೂರಿನಲ್ಲಿಇನ್ಸ್ಪೆಕ್ಟರ್ ಕಚೇರಿ ರಚನೆಯಾಗಿ, ಇಲ್ಲಿಅಗತ್ಯ ಸಿಬ್ಬಂದಿ ನೇಮಕವಾಗಲಿದೆ.ಪುತ್ತೂರಿನಲ್ಲಿ ಸೆಂಟ್ರಲ್ ಇಂಟೆಲಿಜೆನ್ಸಿ ಕಚೇರಿ ಸ್ಥಾಪನೆಗೆ ಅಗತ್ಯ ಜಮೀನು ಮಂಜೂರು ಮಾಡುವಂತೆ ಇಲಾಖೆಯ ಎಸ್ಪಿ ಕಚೇರಿಯಿಂದ 2 ತಿಂಗಳ ಹಿಂದೆ ಮನವಿ ಮಾಡಲಾಗಿತ್ತು. ಇದರಂತೆ ಪಡ್ನೂರಿನಲ್ಲಿ0.44 ಎಕರೆ ಜಮೀನು ಮಂಜೂರು ಮಾಡಿ ಪಹಣಿ ಮಾಡಲಾಗಿದೆ. ಅದನ್ನು ಇಲಾಖೆಗೆ ಹಸ್ತಾಂತರಿಸಿದ್ದೇವೆ. ಒಂದು ವರ್ಷದೊಳಗೆ ಕಟ್ಟಡ ನಿರ್ಮಾಣವಾಗಿ ಕಚೇರಿ ಕಾರ್ಯಾರಂಭ ಮಾಡಲಿದೆ. ಕಾನೂನು ಮತ್ತು ಸುವ್ಯವಸ್ಥೆ ಪಾಲನೆ ದೃಷ್ಟಿಯಲ್ಲಿ ಇದು ಮಹತ್ವದ ಬೆಳವಣಿಗೆ ಎಂದಿದ್ದಾರೆ ಅಶೋಕ್ ರೈ, ಶಾಸಕ, ಪುತ್ತೂರು.
ಉಡುಪಿ ಜಿಲ್ಲೆಯು ಪಿಯುಸಿ ಫಲಿತಾಂಶದಲ್ಲಿ ಗರಿಷ್ಠ ಉತ್ತೀರ್ಣರಾದವರ ಜಿಲ್ಲೆಗಳಲ್ಲಿ ಪ್ರಥಮ ಸ್ಥಾನದಲ್ಲಿದ್ದು, ಈ ಬಾರಿಯೂ ಇದೇ ಸ್ಥಾನ ಉಳಿಸಿಕೊಳ್ಳಲು ಹರಸಾಹಸ ಪಡುತ್ತಿದೆ.
ಬೆಳಗಾವಿಯಲ್ಲಿ 593 ಕೋಟಿ ರೂ. ಮೌಲ್ಯದ ನಕಲಿ ಇನ್ವಾಯ್ಸ್ ಹಗರಣ ಪತ್ತೆ
ಜಿಎಸ್ಟಿ ಪ್ರಾಕ್ಟಿಷನರ್ ಬಂಧನ : 235 ಕೋಟಿ ರೂ. ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್ ವಂಚನೆ ಆರೋಪ
Napoklu | ಕಾರ್ಯಕರ್ತನ ಮೇಲೆ ಹಲ್ಲೆ ಆರೋಪ; ಸಂಘ ಪರಿವಾರದಿಂದ ರಸ್ತೆ ತಡೆ ಪ್ರತಿಭಟನೆ
ಮಡಿಕೇರಿ : ಹಿಂದುತ್ವ ಸಂಘಟನೆಯ ಕಾರ್ಯಕರ್ತನೊಬ್ಬನ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಆರೋಪಿಸಿ ಮತ್ತು ಹಲ್ಲೆ ಮಾಡಿದವರನ್ನು ತಕ್ಷಣ ಬಂಧಿಸಬೇಕೆಂದು ಆಗ್ರಹಿಸಿ ಸಂಘ ಪರಿವಾರ ಕಾರ್ಯಕರ್ತರು ಇಂದು ನಾಪೋಕ್ಲುವಿನಲ್ಲಿ ರಸ್ತೆ ತಡೆ ಪ್ರತಿಭಟನೆ ನಡೆಸಿದರು. ಬಲ್ಲಮಾವಟಿಯಲ್ಲಿ ಫೆ.28 ರಂದು ನಡೆಯಲಿದ್ದ ಹಿಂದೂ ಸಂಗಮ ಕಾರ್ಯಕ್ರಮದ ಹಿನ್ನೆಲೆ ಪ್ರಚಾರ ಕಾರ್ಯದಲ್ಲಿ ತೊಡಗಿದ್ದ ಅಪ್ಪಚ್ಚಿರ ಗೌತಮ್ ಎಂಬುವವರ ಮೇಲೆ ಕೆಲವರು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದ್ದು, ಗೌತಮ್ ರನ್ನು ಮಡಿಕೇರಿಯ ಜಿಲ್ಲಾಸ್ಪತ್ರೆಗೆ ದಾಖಲಿಸಲಾಯಿತು ಎಂದು ಹೇಳಲಾಗಿದೆ. ಹಲ್ಲೆ ನಡೆಸಿದವರನ್ನು ತಕ್ಷಣ ಬಂಧಿಸಬೇಕೆಂದು ಒತ್ತಾಯಿಸಿ ಸಂಘ ಪರಿವಾರ ಸಂಘಟನೆಗಳ ಕಾರ್ಯಕರ್ತರು ರಸ್ತೆ ತಡೆ ಪ್ರತಿಭಟನೆ ನಡೆಸಿದರು. ದೊಡ್ಡಪುಲಿಕೋಟು ಗ್ರಾಮದ ಕರವಂಡ ಪಿ.ಲವ ನಾಣಯ್ಯ ಅವರು ನಾಪೋಕ್ಲು ಪೊಲೀಸ್ ಠಾಣೆಯಲ್ಲಿ ಸುಹೇಲ್, ಸಿದ್ದಿಕ್, ಶಾಫಿ ಹಾಗೂ ರಾಶಿದ್ ಪಿ.ಎ ಎಂಬುವವರ ವಿರುದ್ಧ ಹಲ್ಲೆ ಆರೋಪದ ದೂರು ದಾಖಲಿಸಿದ್ದಾರೆ. ಓರ್ವ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಮಾಜಿ ಶಾಸಕ ಕೆ.ಜಿ.ಬೋಪಯ್ಯ, ಬಿಜೆಪಿ ಪ್ರಮುಖ ಮನು ಮುತ್ತಪ್ಪ, ವಿಶ್ವ ಹಿಂದೂ ಪರಿಷತ್ ಕಾರ್ಯದರ್ಶಿ ಪಿ.ರಮೇಶ್ ಹಾಗೂ ವಿವಿಧ ಸಂಘಪರಿವಾರ ಸಂಘಟನೆಗಳ ಪ್ರಮುಖರು, ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಧರ್ಮಜ ಉತ್ತಪ್ಪ ಅವರು ಘಟನೆಯನ್ನು ಖಂಡಿಸಿದ್ದು, ಶಾಂತಿ ಕಾಪಾಡುವಂತೆ ಜನರಲ್ಲಿ ಮನವಿ ಮಾಡಿದ್ದಾರೆ. ಹಲ್ಲೆ ನಡೆಸಿದವರನ್ನು ಪೊಲೀಸರು ಶೀಘ್ರ ಬಂಧಿಸಲಿದ್ದಾರೆ ಎಂದು ತಿಳಿಸಿದ್ದಾರೆ.
ಹರಪನಹಳ್ಳಿ | ವಚನ ಸಾಹಿತ್ಯ ಸರ್ವಕಾಲಿಕ: ಭರಮಪ್ಪ
ಹರಪನಹಳ್ಳಿ : ಪ್ರಸಕ್ತ ಯುಗದಲ್ಲಿ ಜ್ಞಾನ ಹೆಚ್ಚಾದಂತೆ ನೈತಿಕ ಮೌಲ್ಯಗಳು ಕುಸಿಯುತ್ತಿರುವುದು ವಿಷಾದಕರ. ವಚನ ಸಾಹಿತ್ಯವು ಸರ್ವಕಾಲಕ್ಕೂ ಶ್ರೇಷ್ಠತೆಯನ್ನು ಪಡೆದುಕೊಂಡಿದೆ ಎಂದು ಮೈಸೂರು ನಿವೃತ್ತ ಶಿಕ್ಷಣಾಧಿಕಾರಿ ಭರಮಪ್ಪ ಅಭಿಪ್ರಾಯಪಟ್ಟರು. ನಗರದ ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಹಾಗೂ ಕದಳಿ ವೇದಿಕೆ ಸಹಯೋಗದಲ್ಲಿ ಗುರುವಾರ ನಡೆದ ಲಿಂ. ಮೈಸೂರು ಚಂದ್ರಮ್ಮ ಹಾಗೂ ಬಸವಲಿಂಗಪ್ಪ ದತ್ತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಸಾಹಿತ್ಯ ಪ್ರಕಾರಗಳ ನಿರಂತರ ಅಧ್ಯಯನ ಮತ್ತು ಅನುಕರಣೆಯಿಂದ ಸಾರ್ಥಕ ಬದುಕು ರೂಪಿಸಬಹುದು. 12ನೇ ಶತಮಾನದಲ್ಲಿ ದಲಿತ, ದಮನಿತ ವರ್ಗಗಳ ದನಿಯಾಗಿದ್ದದ್ದು ವಚನ ಸಾಹಿತ್ಯವೇ ಆಗಿದೆ. ಇಂದಿನ ವಿಜ್ಞಾನದ ಭರಾಟೆಯಲ್ಲಿ ನಮ್ಮತನವನ್ನು ಮರೆತು ಬದುಕುತ್ತಿರುವುದು ನೋವಿನ ಸಂಗತಿ ಎಂದರು. ವಚನಗಳು ಮಾತು, ಪ್ರಮಾಣ ಮತ್ತು ಆಣೆಗಳ ಸಮನ್ವಯವಾಗಿದ್ದು, ನುಡಿದಂತೆ ನಡೆಯಬೇಕು. ನಮ್ಮ ಮಾತುಗಳಿಂದ ಇತರರಿಗೆ ನೋವಾಗದಂತೆ ನಡೆದುಕೊಳ್ಳಬೇಕು. ಶ್ರಮ ಸಂಸ್ಕೃತಿಯಿಂದಲೇ ಸುಖೀ ಜೀವನ ಸಾಧ್ಯ; ಭೌತಿಕ ವಸ್ತುಗಳಿಂದ ನೆಮ್ಮದಿ ನಿರೀಕ್ಷಿಸಲಾಗದು ಎಂದು ತಿಳಿಸಿದರು. ಜಾತಿ-ಮತ-ಪಂಥಗಳ ಎಲ್ಲೆಗಳನ್ನು ಮೀರಿ ಬದುಕಿದವರು ಶರಣರು. ಯುವಜನತೆ ಶರಣರ ವಚನಗಳನ್ನು ನಿತ್ಯ ಜೀವನದಲ್ಲಿ ಅಳವಡಿಸಿಕೊಂಡರೆ ನೆಮ್ಮದಿಯ ಬದುಕು ಸಾಧ್ಯವೆಂದು ಹೇಳಿದರು. ಪ್ರಾಚಾರ್ಯ ಕೆ. ಸತೀಶ್ ಮಾತನಾಡಿ, ವಚನ ಸಾಹಿತ್ಯವು ವಿಶ್ವ ಶ್ರೇಷ್ಠತೆಯ ಮನ್ನಣೆಯನ್ನು ಪಡೆದಿದೆ. ಶರಣರು ನಿಷ್ಠೆ, ಪ್ರಾಮಾಣಿಕತೆ ಹಾಗೂ ನಡೆ-ನುಡಿಯ ಸಂಸ್ಕಾರಯುತ ಆದರ್ಶ ಜೀವನ ನಡೆಸಿದರು ಎಂದರು. ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ನ ರಾಜಶೇಖರ ಬಣಕಾರ್, ನಿವೃತ್ತ ಸಿಡಿಪಿಓ ಸಿದ್ದೇಶಪ್ಪ ಹಾಗೂ ಕದಳಿ ವೇದಿಕೆಯ ಅಧ್ಯಕ್ಷೆ ಜಯಶ್ರೀ ಬಿ.ಜಿ. ಸಹ ಮಾತನಾಡಿದರು. ಈ ಸಂದರ್ಭದಲ್ಲಿ ಕೆ.ಎಸ್. ವೀರಭದ್ರಪ್ಪ, ಕೆ. ಉಮಾಪತಿ (ನಿವೃತ್ತ ಮುಖ್ಯೋಪಾಧ್ಯಾಯ), ಗುತ್ತಿಗೆದಾರ ಎ. ಕರಿಬಸವರಾಜ, ಹೇಮಪ್ಪ ಮೋರಿಗೆರೆ, ಸಿ. ಸಿದ್ದಪ್ಪ, ನೀಲಮ್ಮ, ಡಾ. ನಾಗರಾಜ, ಕವಿತಾ ಸೇರಿದಂತೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಬೆಂಗಳೂರಿನಿಂದ ನೇಪಾಳಕ್ಕೆ ಹೊರಟವರು 2 ದಿನದಿಂದ ವಿಮಾನದಲ್ಲೇ ಒಡಾಟ! ಊಟ ಇಲ್ಲ, ನಿದ್ದೆ ಇಲ್ಲ, ಸುಸ್ತೋ ಸುಸ್ತು
ಕೋಲಾರ: ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ನೇಪಾಳದ ರಾಜಧಾನಿ ಕಾಠ್ಮಾಂಡುವಿಗೆ ಪ್ರಯಾಣ ಬೆಳೆಸಿದ್ದ ಪ್ರಯಾಣಿಕರು ಎರಡು ದಿನಗಳಿಂದ ಕಾಠ್ಮಾಂಡುವಿನಲ್ಲಿ ಲ್ಯಾಂಡ್ ಆಗಲು ಸಾಧ್ಯವಾಗದೆ ವಿಮಾನದಲ್ಲೇ ಒಡಾಡುತ್ತಾ ಪರದಾಡುತ್ತಿರುವ ವಿಚಿತ್ರ ಘಟನೆ ವರದಿಯಾಗಿದೆ. ಇದರಲ್ಲಿ ಕೋಲಾರದ ಸುಮಾರು 29 ಪ್ರಯಾಣಿಕರು ಇದ್ದಾರೆಂದು ತಿಳಿದು ಬಂದಿದೆ. ಗುರುವಾರ ಬೆಳಿಗ್ಗೆ ಬೆಂಗಳೂರು ವಿಮಾನ ನಿಲ್ದಾಣದಿಂದ 10.30 ಕ್ಕೆ 188 ಪ್ರಯಾಣಿಕರನ್ನ ಹೊತ್ತು ಸಾಗಿದ್ದ ಏರ್ ಇಂಡಿಯಾ ಎಕ್ಸ್ಪ್ರೆಸ್ ವಿಮಾನ ಮಧ್ಯಾಹ್ನ 1.30 ಕ್ಕೆ ನೇಪಾಳದ ಕಾಟ್ಮಾಂಡುವಿನಲ್ಲಿ ಲ್ಯಾಂಡ್ ಆಗಬೇಕಿತ್ತು. ಆದರೆ ಹವಾಮಾನ ವೈಪರೀತ್ಯದಿಂದ ಲ್ಯಾಂಡಿಂಗ್ ಗೆ ಅನುಮತಿ ಸಿಕ್ಕಿಲ್ಲವಂತೆ. ಈ ಕಾರಣಕ್ಕೆ ವಾರಾಣಸಿಯಲ್ಲಿ ತುರ್ತು ಲ್ಯಾಂಡಿಂಗ್ ಮಾಡಲಾಗಿದೆ. ಹೀಗಾಗಿ ವಿಮಾನ ವಾರಾಣಸಿಯಿಂದ ಕಳೆದ ರಾತ್ರಿ 9.30 ಕ್ಕೆ ಬೆಂಗಳೂರಿಗೆ ವಾಪಸ್ ಆಗಿದೆ. ಕಳೆದ ರಾತ್ರಿ ಪ್ರಯಾಣಿಕರಿಗೆ ಹೋಟೆಲ್ ವ್ಯವಸ್ಥೆ ಮಾಡಿಕೊಡಲಾಗಿದೆ.. ಯಾಕೆ ಪ್ರಯಾಣಿಕರ ಆಕ್ರೋಶ? ಬಳಿಕ ಶುಕ್ರವಾರ ಮಧ್ಯಾಹ್ನ 12 ಗಂಟೆಗೆ ಮತ್ತೆ ಕಾಟ್ಮಾಂಡುವಿಗೆ ವಿಮಾನ ಟೇಕಾಫ್ ಆಗಿದ್ದು ಹವಾಮಾನ ವೈಪರೀತ್ಯದಿಂದಾಗಿ ಕಾಠ್ಮಾಂಡುವಿನಲ್ಲಿ ಮತ್ತೆ ಲ್ಯಾಂಡಿಂಗ್ ಗೆ ಅವಕಾಶ ಸಿಕ್ಕಿಲ್ಲ. ಹೀಗಾಗಿ ಉತ್ತರ ಪ್ರದೇಶದ ಲಖನೌನಲ್ಲಿ ತುರ್ತು ಲ್ಯಾಂಡಿಂಗ್ ಮಾಡಿ, ಮರಳಿ ಅಲ್ಲಿಂದ ಬೆಂಗಳೂರಿಗೆ ವಾಪಸ್ ಬರಲಾಗಿದೆ. ಇದರಿಂದ ಸಿಟ್ಟಿಗೆದ್ದ ಪ್ರಯಾಣಿಕರು ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನಯಾನ ಸಂಸ್ಥೆ ವಿರುದ್ದ ಭಾರೀ ಆಕ್ರೋಶ ಹೊರಹಾಕಿದ್ದಾರೆ. ಏರ್ ಪೋರ್ಟ್ ಟರ್ಮಿನಲ್ 2 ಎಮಿಗ್ರೇಷನ್ ಚೆಕ್ ಇನ್ ಕೌಂಟರ್ ಬಳಿ ಇಂದೇ ಮರಳಿ ವಿಮಾನದ ವ್ಯವಸ್ಥೆ ಮಾಡಿಕೊಡುವಂತೆ ಪಟ್ಟು ಹಿಡಿದಿದ್ದಾರೆ. ಅನೇಕ ಹೆಂಗಸರು ಸಹ ತಮಗೆ ನ್ಯಾಯ ಒದಗಿಸುವಂತೆ ಒತ್ತಾಯಿಸುತ್ತಿದ್ದಾರೆ. ಏರ್ ಪೋರ್ಟ್ ಸಿಬ್ಬಂದಿ ಧರಣಿನಿರತರನ್ನು ಸಮಾಧಾನ ಪಡಿಸಲು ಯತ್ನಿಸುತ್ತಿರುವ ಇದರ ವಿಡಿಯೋ ಇದೀಗ ವೈರಲ್ ಆಗುತ್ತಿದೆ. ಇಷ್ಟೆಲ್ಲಾ ಆದರೂ ಏರ್ ಇಂಡಿಯಾ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಯಾವುದೇ ರೀತಿಯ ಪರಿಹಾರ ಸೂಚಿಸಿಲ್ಲ ಎಂಬ ಆರೋಪ ಕೇಳಿ ಬಂದಿದೆ. ಗುರುವಾರದಂದು ಸತತ 11 ಗಂಟೆ ಪ್ರಯಾಣ ಮಾಡಿ ಪ್ರಯಾಣಿಕರು ಸುಸ್ತಾಗಿದ್ದರು. ಶುಕ್ರವಾರ ಮತ್ತೆ ಪ್ರಯಾಣ ಮಾಡಿರುವುದರಿಂದ ವಿಪರೀತ ಆಯಾಸಗೊಂಡು ದಿಕ್ಕು ತೋಚದಾಗಿದ್ದಾರೆ. ಎರಡು ದಿನಗಳಿಂದ ಸರಿಯಾಗಿ ಊಟ ಸಿಗದೆ ಪ್ರಯಾಣಿಕರು ತೊಂದರೆಗೊಳಗಾಗಿದ್ದು ಸೂಕ್ತ ವ್ಯವಸ್ಥೆ ಮಾಡಿಕೊಡುವಂತೆ ವಿನಂತಿಸಿದ್ದಾರೆ. ಈ ವಿಚಾರವಾಗಿ ಸಂಬಂಧಪಟ್ಟ ಅಧಿಕಾರಿಗಳಿಂದ ಇನ್ನೂ ಪ್ರತಿಕ್ರಿಯೆ ಬಂದಿಲ್ಲ.
ಸಿರವಾರ | ದ್ವಿತೀಯ ಪಿಯುಸಿ ಪರೀಕ್ಷೆ ಆರಂಭ: ಎರಡು ಕೇಂದ್ರಗಳಲ್ಲಿ 695 ವಿದ್ಯಾರ್ಥಿಗಳು
ಸಿರವಾರ : ರಾಜ್ಯಾದ್ಯಂತ ಇಂದಿನಿಂದ ದ್ವಿತೀಯ ಪಿಯುಸಿ ಪರೀಕ್ಷೆಗಳು ಆರಂಭಗೊಂಡಿದ್ದು, ಸಿರವಾರ ಪಟ್ಟಣದಲ್ಲಿ ಎರಡು ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಫೆ.28ರಂದು ನಡೆಯುವ ಕನ್ನಡ ವಿಷಯ ಪರೀಕ್ಷೆಗೆ ಒಟ್ಟು 695 ವಿದ್ಯಾರ್ಥಿಗಳು ಹಾಜರಾಗಲಿದ್ದಾರೆ. ಸರ್ಕಾರಿ ಪದವಿ ಪೂರ್ವ ಕಾಲೇಜು ಪರೀಕ್ಷಾ ಕೇಂದ್ರದಲ್ಲಿ 375 ವಿದ್ಯಾರ್ಥಿಗಳು ಹಾಗೂ ಶ್ರೀ ಅಮರೇಗೌಡ ಪಾಟೀಲ್ ಬಯ್ಯಾಪುರ ಪದವಿ ಪೂರ್ವ ಕಾಲೇಜು ಕೇಂದ್ರದಲ್ಲಿ 320 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಕಟ್ಟುನಿಟ್ಟಿನ ಭದ್ರತಾ ಕ್ರಮ : ಪರೀಕ್ಷಾ ಕೇಂದ್ರಗಳ ಪ್ರತಿಯೊಂದು ಕೊಠಡಿಗಳಲ್ಲೂ ವೆಬ್ಕಾಸ್ಟಿಂಗ್ (ಸಿ.ಸಿ. ಕ್ಯಾಮೆರಾ) ವ್ಯವಸ್ಥೆ ಅಳವಡಿಸಲಾಗಿದ್ದು, ನಕಲು ತಡೆಗೆ ಸೂಕ್ತ ಕಟ್ಟೆಚ್ಚರ ವಹಿಸಲಾಗಿದೆ. ಪರೀಕ್ಷಾ ಕೇಂದ್ರಗಳ ಸುತ್ತಮುತ್ತ 100 ಮೀಟರ್ ವ್ಯಾಪ್ತಿಯಲ್ಲಿ 144ನೇ ವಿಧಿಯ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.
ಯಾದಗಿರಿ | ಮಲ್ಲಿಕಾರ್ಜುನ ಮುತ್ಯಾ ಪ್ರಕರಣ ಹಿಂಪಡೆಯಲು ಗಡುವು
ಯಾದಗಿರಿ : ಸ್ವಯಂಘೋಷಿತ ದೇವಮಾನವ ಶಹಾಪೂರ ತಾಲೂಕಿನ ಮಹಲ್ ರೋಜಾ ಮಠದ ಮಲ್ಲಿಕಾರ್ಜುನ ಮುತ್ಯಾ, ಯಾದಗಿರಿ ಪೊಲೀಸರು ನೀಡಿದ ನೋಟಿಸ್ಗೆ ಉತ್ತರಿಸಲು ಶುಕ್ರವಾರ ಹಾಜರಾಗಿಲ್ಲ ಎಂದು ಮೂಲಗಳು ತಿಳಿಸಿವೆ. ಅದಕ್ಕೂ ಮುನ್ನವೇ ಮಲ್ಲಿಕಾರ್ಜುನ್ ಮುತ್ಯಾ ಪ್ರಕರಣದ ರದ್ದತಿ ಕೋರಿ ಕಲಬುರಗಿ ಪೀಠದ ಹೈಕೋರ್ಟಿಗೆ ಮನವಿ ಸಲ್ಲಿಸಿದ್ದಾರೆ. ಸೋಮವಾರ ವಿಚಾರಣೆ ನಡೆಯಲಿದೆ ಎಂದು ವರದಿಯಾಗಿ ಎನ್ನಲಾಗಿದೆ. ಮತ್ತೊಂದೆಡೆ ಭಕ್ತರು ಮಠದಲ್ಲಿ ಸಭೆ ನಡೆಸಿ ಕೇಸ್ ರದ್ದು ಮಾಡಲು ಜಿಲ್ಲಾಡಳಿತಕ್ಕೆ 2 ದಿನಗಳ ಗಡುವು ನೀಡಿದ್ದಾರೆ. ಪೋಷಕರೇ ದೂರು ನೀಡಿಲ್ಲ. ಆದ್ರೂ ಎಫ್ಐಆರ್ ದಾಖಲಿಸಲಾಗಿದೆ ಭಕ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಭೆಯ ನಂತರ ಭಕ್ತರು, ಮುತ್ಯಾ ವಿರುದ್ಧ ಸುಳ್ಳು ಆರೋಪ ಹೊರಿಸಲಾಗಿದೆ. ಅವರ ಹೆಸರನ್ನು ಹಾಳು ಮಾಡಲು ವಿಡಿಯೋವನ್ನು ತಿರುಚಲಾಗಿದೆ ಎಂದು ಆರೋಪಿಸಿದರು. ಇದೇ ವೇಳೆ ಕೇಸ್ ವಾಪಸ್ ತೆಗೆದುಕೊಳ್ಳಲು ಯಾದಗಿರಿ ಜಿಲ್ಲಾಡಳಿತಕ್ಕೆ ಎರಡು ದಿನಗಳ ಗಡುವು ನೀಡಿದ್ದಾರೆ ಎನ್ನಲಾಗಿದೆ. ಬಿಜೆಪಿ ನಾಯಕಿ ಲಲಿತಾ ಅನಪುರ ಸಭೆಯ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡ್ದಿ ಅಪ್ರಾಪ್ತೆ ಮತ್ತು ಪೋಷಕರು ದೂರು ನೀಡದೇ ಇದ್ದರೂ ಎಫ್ಐಆರ್ ದಾಖಲಿಸಿದ್ದಾರೆ. ಹೀಗಾಗಿ ಪ್ರಕರಣ ರದ್ದು ಮಾಡಬೇಕು. ಕೇಸ್ ರದ್ದು ಮಾಡಲು ಜಿಲ್ಲಾಡಳಿತಕ್ಕೆ ಎರಡು ದಿನ ಗಡುವು ನೀಡುತ್ತೇವೆ. ಆ ಬಳಿಕವೂ ಪ್ರಕರಣ ರದ್ದು ಮಾಡದಿದ್ದಲ್ಲಿ ಹೋರಾಟ ಮಾಡುವುದಾಗಿ ತಿಳಿಸಿದ್ದಾರೆ.
ಹೋಳಿ ಹಬ್ಬ, ಬೇಸಿಗೆ ರಜೆಗಳಲ್ಲಿ ದೌಂಡ್-ಕಲಬುರಗಿ ವಿಶೇಷ ರೈಲುಗಳ ಸೇವೆ ಮುಂದುವರಿಕೆ
ಕಲಬುರಗಿ: ಹೋಳಿ ಹಬ್ಬ ಮತ್ತು ಬೇಸಿಗೆ ರಜೆಗಳಲ್ಲಿ ಪ್ರಯಾಣಿಕರ ದಟ್ಟಣೆಯನ್ನು ಪರಿಗಣಿಸಿ ದೌಂಡ್-ಕಲಬುರಗಿ ವಿಶೇಷ ರೈಲುಗಳ ಸೇವೆಯನ್ನು ಕೇಂದ್ರ ರೈಲ್ವೆ ಮುಂದುವರಿಸಲಿದೆ ಎಂದು ಕೇಂದ್ರ ರೈಲ್ವೆಯ ಸೋಲಾಪುರ ವಿಭಾಗದ ಸಾರ್ವಜನಿಕ ಸಂಪರ್ಕ ಇಲಾಖೆಯ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ದೌಂಡ್-ಕಲಬುರಗಿ ವಿಶೇಷ ರೈಲುಗಳ ಸಂಚಾರ ವಿವರ ಇಂತಿದೆ : ದೌಂಡ್ - ಕಲಬುರಗಿ ವಾರಕ್ಕೆ 5 ದಿನಗಳು ಕಾಯ್ದಿರಿಸದ ವಿಶೇಷ ರೈಲುಗಳು (196 ಟ್ರಿಪ್ಗಳು)- ರೈಲು ಸಂಖ್ಯೆ 01421/01422 ದೌಂಡ್-ಕಲಬುರಗಿ ವಾರಕ್ಕೆ 5 ದಿನಗಳು (ಗುರುವಾರ ಮತ್ತು ಭಾನುವಾರ ಹೊರತುಪಡಿಸಿ) ಈಗ ದಿನಾಂಕ 15.07.2026 ರವರೆಗೆ ಸಂಚರಿಸಲಿದೆ. ದೌಂಡ್- ಕಲಬುರಗಿ ದ್ವಿ-ವಾರಕ್ಕೊಮ್ಮೆ ಕಾಯ್ದಿರಿಸದ ವಿಶೇಷ ರೈಲುಗಳು (78 ಟ್ರಿಪ್ಗಳು) : ರೈಲು ಸಂಖ್ಯೆ 01425/01426 ದೌಂಡ್-ಕಲಬುರಗಿ ಕಾಯ್ದಿರಿಸದ ದೈನಂದಿನ ವಿಶೇಷ ರೈಲುಗಳು ಪ್ರತಿ ಗುರುವಾರ ಮತ್ತು ಭಾನುವಾರ 15.07.2026 ರವರೆಗೆ ಸಂಚಾರ ಮುಂದುವರಿಸಲಾಗಿದೆ. ಮೇಲೆ ತಿಳಿಸಲಾದ ರೈಲುಗಳ ಸಮಯ, ಸಂಯೋಜನೆ ಮತ್ತು ನಿಲುಗಡೆಗಳಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಅನಾನುಕೂಲತೆಯನ್ನು ತಪ್ಪಿಸಲು ಪ್ರಯಾಣಿಕರು ಮಾನ್ಯ ಟಿಕೆಟ್ಗಳೊಂದಿಗೆ ಪ್ರಯಾಣಿಸಲು ವಿನಂತಿಸಲಾಗಿದೆ. ಕಾಯ್ದಿರಿಸದ ಬೋಗಿಗಳಿಗೆ ಬುಕಿಂಗ್ ಅನ್ನು ನಿಲ್ದಾಣಗಳಲ್ಲಿನ ಬುಕಿಂಗ್ ಕೌಂಟರ್ಗಳ ಮೂಲಕ ಮತ್ತು ರೈಲ್ಒನ್ ಅಪ್ಲಿಕೇಶನ್ ಮೂಲಕವೂ ಮಾಡಬಹುದು.
ಕುಕನೂರು | ಪ್ರೇಮ ವಿವಾಹವಾದ ದಂಪತಿಗೆ ಜೀವ ಬೆದರಿಕೆ : ಆರೋಪ
ಕುಕನೂರು : ತಾಲೂಕಿನ ತಳಕಲ ಗ್ರಾಮದ ಬಸವರಾಜ್ ಮೇಟಿ ಅವರನ್ನು ಪ್ರೀತಿಸಿ ಮದುವೆಯಾಗಿದ್ದು, ನನ್ನ ತಂದೆ ಹಾಗೂ ಕೆಲವರಿಂದ ಜೀವ ಬೆದರಿಕೆ ಇದೆ ಎಂದು ಇಂಜಿನಿಯರಿಂಗ್ ವಿದ್ಯಾರ್ಥಿ ಚಿನ್ಮಯಿ ವೈದ್ಯ ಎಂಬವರು ಕೊಪ್ಪಳ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ. ಪೊಲೀಸರಿಗೆ ನೀಡಿದ ಮನವಿಯಲ್ಲಿ, ಇದೇ ಜ.14ರಂದು ಹುಬ್ಬಳ್ಳಿಯ ಒಂಟಿ ಆಂಜನೇಯ ದೇವಸ್ಥಾನದಲ್ಲಿ ಸ್ವ ಇಚ್ಛೆಯಿಂದ ವಿವಾಹವಾಗಿದ್ದೇವೆ. ಬಳಿಕ ಫೆ.23ರಂದು ಯಲಬುರ್ಗಾ ಪಟ್ಟಣದ ವಿವಾಹ ನೋಂದಣಿ ಕಚೇರಿಯಲ್ಲಿ ಕಾನೂನುಬದ್ಧವಾಗಿ ನೋಂದಾಯಿಸಿಕೊಂಡಿದ್ದೇವೆ. ರೆಡ್ಡಿ ಸಮುದಾಯದ ಬಸವರಾಜನನ್ನು ಪ್ರೀತಿ ಮಾಡುತ್ತಿರುವ ವಿಚಾರ ಮನೆಯವರಿಗೆ ಗೊತ್ತಿತ್ತು. ಈ ಮದುವೆಯಾದ ವಿಚಾರ ಗೊತ್ತಾದರೆ ಬ್ರಾಹ್ಮಣ ಸಮುದಾಯದ ನನ್ನ ತಂದೆಯಿಂದ ಹಲ್ಲೆ ಅಥವಾ ಜೀವ ಬೆದರಿಕೆ ಭಯವಿದೆ ಎಂದು ಚಿನ್ಮಯಿ ಆರೋಪಿಸಿದ್ದಾರೆ. ಈ ಕುರಿತು ವಕೀಲ ಸುರೇಶ್ ಗುಡದೂರು ಮಾಹಿತಿ ನೀಡಿ, ದಂಪತಿಗಳ ಭದ್ರತೆ ದೃಷ್ಟಿಯಿಂದ ಪೊಲೀಸ್ ಇಲಾಖೆ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.
AI ಒಪ್ಪಂದದಿಂದ ಮಕ್ಕಳ ಗೌಪ್ಯತೆಗೆ ಅಪಾಯ; ರಾಜ್ಯಗಳಿಗೆ NHRC ನೋಟಿಸ್
ಹೊಸದಿಲ್ಲಿ, ಫೆ. 27: ಅಮೆರಿಕ ಮೂಲದ ಕೃತಕ ಬುದ್ಧಿಮತ್ತೆ ಕಂಪೆನಿ ಹಾಗೂ ಭಾರತೀಯ ಸರಕಾರೇತರ ಸಂಸ್ಥೆ ನಡುವಿನ ಸಹಯೋಗದಿಂದ ಮಕ್ಕಳ ಗೌಪ್ಯತೆಗೆ ಉಂಟಾಗುವ ಅಪಾಯಗಳ ಕುರಿತು ಎಲ್ಲಾ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳು ಹಾಗೂ ಕೇಂದ್ರ ಸರ್ಕಾರದ ಸಂಬಂಧಿತ ಇಲಾಖೆಗಳಿಗೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (NHRC) ನೋಟಿಸ್ ಜಾರಿ ಮಾಡಿದೆ. ಅಮೆರಿಕ ಮೂಲದ ಅಂಥ್ರೋಪಿಕ್ ಹಾಗೂ ಭಾರತದಲ್ಲಿ ಮಕ್ಕಳಿಗಾಗಿ ಕಾರ್ಯನಿರ್ವಹಿಸುತ್ತಿರುವ ಸರಕಾರೇತರ ಸಂಸ್ಥೆ (NGO) ಪ್ರಥಮ್ ನಡುವಿನ ಸಹಯೋಗದ ಬಗ್ಗೆ ಕಳವಳ ವ್ಯಕ್ತಪಡಿಸಿ ನಮೋ ಪ್ರತಿಷ್ಠಾನ ಸಲ್ಲಿಸಿದ ದೂರಿನ ಹಿನ್ನೆಲೆಯಲ್ಲಿ NHRC ಈ ನೋಟಿಸ್ ನೀಡಿದೆ. ಎನಿಟೈಮ್ ಟೆಸ್ಟಿಂಗ್ ಮೆಷಿನ್ (ATM) ಮೂಲಕ ಮಕ್ಕಳ ಕೈಬರಹದ ಪ್ರತಿಕ್ರಿಯೆಗಳು ಹಾಗೂ ಶೈಕ್ಷಣಿಕ ದತ್ತಾಂಶವನ್ನು ಸಂಸ್ಕರಿಸಲು ಕೃತಕ ಬುದ್ಧಿಮತ್ತೆ (AI) ವ್ಯವಸ್ಥೆಯನ್ನು ಬಳಸುವ ಉದ್ದೇಶವನ್ನು ಈ ಎರಡು ಸಂಸ್ಥೆಗಳ ಒಪ್ಪಂದ ಹೊಂದಿದೆ. ಅಪ್ರಾಪ್ತ ವಯಸ್ಕರ ವೈಯಕ್ತಿಕ ದತ್ತಾಂಶದ ಸಂಗ್ರಹಣೆ, ಸಂಸ್ಕರಣೆ, ದಾಸ್ತಾನು ಹಾಗೂ ಸಂಭಾವ್ಯ ಗಡಿಯಾಚೆ ವರ್ಗಾವಣೆಗೆ ಸಂಬಂಧಿಸಿದ ಲೋಪದೋಷಗಳು ದತ್ತಾಂಶ ಸೋರಿಕೆ ಹಾಗೂ ರಕ್ಷಣಾ ವೈಫಲ್ಯಕ್ಕೆ ಕಾರಣವಾಗುವ ಸಾಧ್ಯತೆ ಇದೆ ಎಂದು ದೂರಿನಲ್ಲಿ ಕಳವಳ ವ್ಯಕ್ತಪಡಿಸಲಾಗಿದೆ. ಮಕ್ಕಳ ಹಿತದೃಷ್ಟಿಯಿಂದ ದತ್ತಾಂಶ ರಕ್ಷಣೆಗಾಗಿ ಈ ವಿಷಯದಲ್ಲಿ ಆಯೋಗ ಮಧ್ಯಪ್ರವೇಶಿಸಬೇಕು ಎಂದು ನಮೋ ಪ್ರತಿಷ್ಠಾನ ದೂರಿನಲ್ಲಿ ಕೋರಿದೆ.
T20 ವಿಶ್ವಕಪ್ | ವಿಲ್ ಜಾಕ್ಸ್ ಆಲ್ ರೌಂಡ್ ಆಟ, ಕೊನೆಯಲ್ಲಿ ಮುಗ್ಗರಿಸಿದ ಕಿವೀಸ್
ಇಂಗ್ಲೆಂಡ್ ಗೆ ಹ್ಯಾಟ್ರಿಕ್ ಗೆಲುವು, ಪಾಕ್ ತಂಡಕ್ಕೆ ಜೀವದಾನ
ಕಂಪ್ಲಿ | ಕ್ರಿಸ್ಟಿಯನ್ ಪಾಸ್ಟರ್ಸ್ ವೆಲ್ಫೇರ್ ಅಸೋಸಿಯೇಶನ್ಗೆ ನೂತನ ಪದಾಧಿಕಾರಿಗಳ ಆಯ್ಕೆ
ಕಂಪ್ಲಿ : ಪಟ್ಟಣದ ಹೊಸ ಜೀವನ ಕ್ರೈಸ್ಟ್ ಚರ್ಚ್ ನಲ್ಲಿ ತಾಲೂಕು ಕ್ರಿಸ್ಟಿಯನ್ಸ್ ಪಾಸ್ಟರ್ಸ್ ವೆಲ್ಫೇರ್ ಅಸೋಸಿಯೇಶನ್ ಸಂಘಕ್ಕೆ ಚುನಾವಣೆ ನಡೆಯಿತು. ಚುನಾವಣೆಯಲ್ಲಿ ನೂತನ ಅಧ್ಯಕ್ಷರಾಗಿ ಎಲ್. ಷಡ್ಡಾಯ ಚರ್ಚ್ ಪಾಸ್ಟರ್ ಪಾಲ್ ಪಂಪಾಪತಿ ಆಯ್ಕೆಯಾಗಿದ್ದು, ಉಪಾಧ್ಯಕ್ಷರಾಗಿ ಪಾಸ್ಟರ್ ಇಸ್ರಾಯಲ್, ಕಾರ್ಯದರ್ಶಿಯಾಗಿ ಡ್ಯಾನಿಯಲ್, ಖಜಾಂಚಿಯಾಗಿ ರಾಜು ಮೈತ್ರಿ, ಸಹ ಖಜಾಂಚಿಯಾಗಿ ರವಿಕುಮಾರ್ ಆಯ್ಕೆಯಾದರು. ಸಲಹಾ ಸಮಿತಿ ಸದಸ್ಯರಾಗಿ ಪಾಸ್ಟರ್ ಪ್ರಸಾದ್ರಾವ್, ಮತ್ತಾಯ, ಸಾಂಬಯ್ ರೆಡ್ಡಿ ಹಾಗೂ ಕಾರ್ಯಕಾರಿ ಮಂಡಳಿ ಸದಸ್ಯರಾಗಿ ಬಿ. ರಾಜು, ತಿಮೋತಿ ಯನ್ನಪ್ಪ, ಶ್ಯಾಲೋಂ, ಶ್ರೀನಿವಾಸ ಆಯ್ಕೆಯಾದರು. ಚುನಾವಣಾಧಿಕಾರಿಯಾಗಿ ಪಾಸ್ಟರ್ ಬಿ. ರಾಜು ಕಾರ್ಯನಿರ್ವಹಿಸಿದರು. ನಂತರ ನೂತನ ಪದಾಧಿಕಾರಿಗಳಿಗೆ ಮಾಲಾರ್ಪಣೆ ಮಾಡಿ ಗೌರವಿಸಲಾಯಿತು.
ಕಂಪ್ಲಿ | ಮಿಷನ್ ಪ್ರಕೃತಿ ಅಭಿಯಾನ: ಎಮ್ಮಿಗನೂರು ಶತಮಾನ ಶಾಲೆಗೆ ರಾಜ್ಯ ಮಟ್ಟದ ಪ್ರಶಸ್ತಿ
ಕಂಪ್ಲಿ : ತಾಲೂಕಿನ ಎಮ್ಮಿಗನೂರು ಗ್ರಾಮದ ಸರ್ಕಾರಿ ಶತಮಾನ ಶಾಲೆಗೆ ರಾಜ್ಯ ಸರ್ಕಾರದ ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆಯ “ಮಿಷನ್ ಪ್ರಕೃತಿ” ಅಭಿಯಾನದಲ್ಲಿ ಕೈಗೊಂಡ ಚಟುವಟಿಕೆಗಳನ್ನು ಪರಿಗಣಿಸಿ ಪ್ರಶಸ್ತಿ ಲಭಿಸಿದೆ. ಬೆಂಗಳೂರಿನ ವಿಕಾಸ ಸೌಧದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಪ್ರಶಸ್ತಿ ಫಲಕ ನೀಡಿ ಶಾಲೆಯನ್ನು ಗೌರವಿಸಿದರು. ಶಾಲೆಯ ಮುಖ್ಯಶಿಕ್ಷಕ ಬಿ.ಎಸ್. ಸದ್ಯೋಜಾತಪ್ಪ ಮಾತನಾಡಿ, ಎರಡು ತಿಂಗಳುಗಳ ಕಾಲ ನಡೆದ ಮಿಷನ್ ಪ್ರಕೃತಿ ಅಭಿಯಾನದಲ್ಲಿ ಇಕೋ ಕ್ಲಬ್ ಮೂಲಕ ಪರಿಸರ ಸಂರಕ್ಷಣೆಗೆ ಸಂಬಂಧಿಸಿದ ಹಲವಾರು ಚಟುವಟಿಕೆಗಳನ್ನು ಹಮ್ಮಿಕೊಂಡು ಯಶಸ್ವಿಗೊಳಿಸಲಾಗಿದೆ ಎಂದರು. ವಿದ್ಯಾರ್ಥಿಗಳಿಗೆ ಸಮರ್ಪಕ ಮಾರ್ಗದರ್ಶನ ನೀಡಿದ ಶಿಕ್ಷಕಿ ಶ್ರುತಿ, ಸಿಬ್ಬಂದಿ ಹಾಗೂ ಎಸ್ಡಿಎಂಸಿ ಸದಸ್ಯರಿಗೆ ಅವರು ಧನ್ಯವಾದ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಬಳ್ಳಾರಿ ಡಯಟ್ನ ರಂಗಾರೆಡ್ಡಿ, ವಿಜ್ಞಾನ ಶಿಕ್ಷಕಿ ಶ್ರುತಿ, ಶಿಕ್ಷಕ ವೆಂಕಟೇಶ್, ವಿದ್ಯಾರ್ಥಿಗಳಾದ ರೆಹಮಾನ್ ಬಿ., ಮೇಘನಾ, ಅನೀಫ್, ಕೆಂಚಮಾಳಪ್ಪ ಸೇರಿದಂತೆ ಶಾಲೆಯ ಶಿಕ್ಷಕರು ಮತ್ತು ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.
ಕೇರಳದಲ್ಲಿ ಯಾರು ಯಾವ ಧರ್ಮಕ್ಕೆ ಮತಾಂತರಗೊಳ್ಳುತ್ತಿದ್ದಾರೆ? 2024ರ ಗೆಜೆಟ್ ಡೇಟಾ ಹೇಳ್ತಿದೆ ನಿಜವಾದ Kerala Story
2024ರಲ್ಲಿ 365 ಕೇರಳಿಗರು ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದಾರೆ
ಬೆಳ್ತಂಗಡಿ| ಮನೆ ಕೆಡವಿ, ಸೊತ್ತುಗಳನ್ನು ನಾಶ ಮಾಡಿದ ಆರೋಪ; ಪ್ರಕರಣ ದಾಖಲು
ಬೆಳ್ತಂಗಡಿ; ತಾಲೂಕಿನ ಉಜಿರೆ ಗ್ರಾಮದ ಸ.ನಂಬ್ರ 406/1 ರ ಸರಕಾರಿ ಸ್ಥಳದಲ್ಲಿ ಮನೆ ನಿರ್ಮಿಸಿಕೊಂಡು ವಾಸವಿದ್ದ ಉಜಿರೆ ಗ್ರಾಮದ ಕಕ್ಕರೆಬೆಟ್ಟು ನಿವಾಸಿ ರಾಜೀವಿ ಎಂಬವರ ಮನೆಯನ್ನು ಸ್ಥಳೀಯ ಓಡಲ ನಿವಾಸಿ ರಫೀಕ್ ಎಂಬಾತ ಕೆಡವಿ ಮನೆಯ ಸೊತ್ತುಗಳನ್ನು ಬೀದಿಗೆಸೆದ ಘಟನೆ ನಡೆದಿದ್ದು ಇದರ ವಿಡಿಯೋ ಮಾಡಿದ ಬಾಲಕಿಗೆ ಈತ ಬೆದರಿಕೆ ಹಾಕಿರುವ ಬಗ್ಗೆ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ರಾಜೀವಿಯವರು ಸದ್ರಿ ಮನೆಯಲ್ಲಿ ಪತಿ ಹಾಗೂ ಮಗಳೊಂದಿಗೆ ವಾಸವಾಗಿದ್ದರು. ಫೆ.27ರಂದು ಬೆಳಗ್ಗೆ ರಾಜೀವಿ ಮತ್ತು ಪತಿ ಕೆಲಸಕ್ಕೆ ಹೋಗಿದ್ದ ಸಂದರ್ಭ ರಫೀಕ್ ಎಂಬಾತ ಮನೆಯಲ್ಲಿ ಯಾರು ಇಲ್ಲದಿರುವುದನ್ನು ಮನಗಂಡು ಮನೆಯೊಳಗೆ ಅಕ್ರಮವಾಗಿ ಪ್ರವೇಶ ಮಾಡಿ ಮನೆಯನ್ನು ನಾಶಪಡಿಸಿ ಅಲ್ಲದೇ ಮನೆಯಲ್ಲಿದ್ದ ಟಿ.ವಿ., ಫ್ರಿಡ್ಜ್, ಗ್ಯಾಸ್ ಸಿಲಿಂಡರ್, ಪೀಠೋಪಕರಣಗಳು, ಬಟ್ಟೆ ಬರೆ, ದಿನಸಿ ಸಾಮಾನುಗಳನ್ನು ಮನೆಯಿಂದ ತೆಗೆದು ಬೀದಿಗೆ ಎಸೆದಿದ್ದಾನೆ ಎಂದು ದೂರಲಾಗಿದ್ದು, ಈ ಕೃತ್ಯವನ್ನು ಅವರ ಮಗಳು ವಿಡಿಯೋ ರೆಕಾರ್ಡಿಂಗ್ ಮಾಡಲು ಹೋದಾಗ ಬೆದರಿಕೆ ಒಡ್ಡಿದ್ದಾನೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಭಯಗೊಂಡ ಬಾಲಕಿ ಜೋರಾಗಿ ಅಳುತ್ತಿದ್ದ ಸಂದರ್ಭ ನೆರೆಕರೆಯವರಾದ ತ್ಯಾಗರಾಜ್ ಮತ್ತು ಜಯ ಎಂಬವರು ಸ್ಥಳಕ್ಕೆ ಧಾವಿಸಿ ಕೃತ್ಯವನ್ನು ಪ್ರಶ್ನಿಸಿದಾಗ ಆತ ಅವರಿಗೂ ಅವಾಚ್ಯ ಶಬ್ದಗಳಿಂದ ನಿಂದಿಸಿ ಬೆದರಿಕೆ ಹಾಕಿರುವುದಾಗಿ ಬೆಳ್ತಂಗಡಿ ಪೊಲೀಸರಿಗೆ ದೂರು ನೀಡಲಾಗಿದೆ. ಸ್ಥಳಕ್ಕೆ ಬೆಳ್ತಂಗಡಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಪೋಖ್ರಣ್ ನಲ್ಲಿ ‘ವಾಯುಶಕ್ತಿ’ ಕವಾಯತು | ತನ್ನ ಯುದ್ಧ ಸಾಮರ್ಥ್ಯವನ್ನು ಪ್ರದರ್ಶಿಸಿದ ಐಎಎಫ್
ಜೈಸಲ್ಮೇರ್ (ರಾಜಸ್ಥಾನ), ಫೆ.27: ಭಾರತೀಯ ವಾಯುಪಡೆಯು ಶುಕ್ರವಾರ ಪೋಖ್ರಣ್ ಫೀಲ್ಡ್ ಫೈರಿಂಗ್ ರೇಂಜ್ ನಲ್ಲಿ ನಡೆದ ‘ವಾಯುಶಕ್ತಿ’ ಕವಾಯತಿನಲ್ಲಿ ತನ್ನ ಯುದ್ಧ ಸಾಮರ್ಥ್ಯ ಮತ್ತು ಶಸ್ತ್ರಬಲವನ್ನು ಪ್ರದರ್ಶಿಸಿತು. ಈ ಸಂದರ್ಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಉಪಸ್ಥಿತಿಯಲ್ಲಿ ಅನುಕರಿತ ದಾಳಿಗಳ ಮೂಲಕ ‘ಆಪರೇಷನ್ ಸಿಂಧೂರ’ದಲ್ಲಿನ ತನ್ನ ಕಾರ್ಯಾಚರಣೆಗಳ ಝಲಕ್ಗಳನ್ನೂ ವಾಯುಪಡೆಯು ಪ್ರದರ್ಶಿಸಿತು. ರಾಜಸ್ಥಾನದಲ್ಲಿ ಭಾರತ–ಪಾಕಿಸ್ತಾನ ಗಡಿ ಸಮೀಪದ ಥಾರ್ ಮರುಭೂಮಿಯಲ್ಲಿ ದಿನವಿಡೀ ನಡೆದ ಸಾಮರ್ಥ್ಯ ಪ್ರದರ್ಶನದಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್, ರಾಜಸ್ಥಾನದ ರಾಜ್ಯಪಾಲ ಹರಿಭಾವು ಬಾಗಡೆ, ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು. ವಾಯುಪಡೆಯ ಯುದ್ಧವಿಮಾನಗಳು ಮತ್ತು ಹೆಲಿಕಾಪ್ಟರ್ ಗಳು ಸಂಯೋಜಿತ ಕಾರ್ಯಾಚರಣೆ ನಡೆಸಿ ಮೂರು ಕಿ.ಮೀ. ಪ್ರದೇಶದಲ್ಲಿ ಹರಡಿಕೊಂಡಿದ್ದ ಗುರಿಗಳನ್ನು ಹೊಡೆದುರುಳಿಸಿದವು. ವೈಮಾನಿಕ ದಾಳಿ, ನಿಖರ ಬಾಂಬ್ ದಾಳಿ ಹಾಗೂ ಭೂಗುರಿಗಳ ಮೇಲಿನ ಸಂಯೋಜಿತ ದಾಳಿ ಸಾಮರ್ಥ್ಯವನ್ನು ಪ್ರದರ್ಶಿಸಲಾಯಿತು. ಕೃತಕವಾಗಿ ರೂಪಿಸಲಾಗಿದ್ದ ಗುರಿಗಳಲ್ಲಿ ಶತ್ರುದೇಶದ ರನ್ವೇ, ಪೆಟ್ರೋಲಿಯಂ ದಾಸ್ತಾನು ಸೌಲಭ್ಯ, ಬಂಕರ್ಗಳು, ರಾಡಾರ್ ತಾಣಗಳು, ಟ್ಯಾಂಕ್ಗಳು ಹಾಗೂ ಶಸ್ತ್ರಸಜ್ಜಿತ ಬೆಂಗಾವಲು ವಾಹನಗಳು, ಸಂವಹನ ಕೇಂದ್ರ, ಭಯೋತ್ಪಾದಕ ಶಿಬಿರ, ಮದ್ದುಗುಂಡುಗಳ ಸಂಗ್ರಹಾಗಾರ, ವಾಯುನೆಲೆಯ ಹ್ಯಾಂಗರ್ ಹಾಗೂ ಕಮಾಂಡ್-ಆ್ಯಂಡ್-ಕಂಟ್ರೋಲ್ ಕೇಂದ್ರ ಸೇರಿದ್ದವು. ಜಾಗ್ವಾರ್, ಮಿರಾಜ್ ಮತ್ತು ಸುಖೋಯ್ ಯುದ್ಧವಿಮಾನಗಳು ತಮ್ಮ ಅತ್ಯುತ್ತಮ ಸಾಮರ್ಥ್ಯವನ್ನು ಪ್ರದರ್ಶಿಸಿದವು. ಸ್ವದೇಶಿ ನಿರ್ಮಿತ ಎಚ್ಎಎಲ್ ನ ‘ಪ್ರಚಂಡ’ ಹೆಲಿಕಾಪ್ಟರ್ ಕೃತಕ ಮರುಇಂಧನ ಕೇಂದ್ರದ ಮೇಲೆ ದಾಳಿ ನಡೆಸಿ ತನ್ನ ಸಾಮರ್ಥ್ಯವನ್ನು ಮೆರೆಯಿತು. ಅಪಾಚೆ ದಾಳಿ ಹೆಲಿಕಾಪ್ಟರ್ಗಳು ಮತ್ತು ಎಂಐ-17 ವಿ5 ಹೆಲಿಕಾಪ್ಟರ್ಗಳೂ ಕವಾಯತಿನಲ್ಲಿ ಪಾಲ್ಗೊಂಡಿದ್ದವು. ಬೆಳಿಗ್ಗೆ ಆಲಿವ್ ಹಸಿರು ಬಣ್ಣದ ಸಮವಸ್ತ್ರ ಮತ್ತು ಹೆಲ್ಮೆಟ್ ಧರಿಸಿದ್ದ ರಾಷ್ಟ್ರಪತಿಗಳು ಜೈಸಲ್ಮೇರ್ ವಾಯುಪಡೆ ನಿಲ್ದಾಣದಿಂದ ‘ಪ್ರಚಂಡ’ ಹೆಲಿಕಾಪ್ಟರ್ ನಲ್ಲಿ ಸಹಪೈಲಟ್ ಆಗಿ 25 ನಿಮಿಷಗಳ ಹಾರಾಟ ನಡೆಸಿದರು. ‘ವಾಯುಶಕ್ತಿ’ ಕವಾಯತು ಭಾರತೀಯ ವಾಯುಪಡೆಯ ಯುದ್ಧ ಸನ್ನದ್ಧತೆಯನ್ನು ಪ್ರದರ್ಶಿಸುವ ಪ್ರಮುಖ ಕಾರ್ಯಕ್ರಮವಾಗಿದ್ದು, ಇದರಲ್ಲಿ ಆಧುನಿಕ ಯುದ್ಧವಿಮಾನಗಳು, ಕ್ಷಿಪಣಿಗಳು ಹಾಗೂ ನಿಖರ ಮಾರ್ಗದರ್ಶಿತ ಶಸ್ತ್ರಾಸ್ತ್ರಗಳನ್ನು ಬಳಸಲಾಗುತ್ತದೆ. LIVE TELECAST - EXERCISE VAYUSHAKTI 2026 https://t.co/OIDflqY4Hm — Indian Air Force (@IAF_MCC) February 27, 2026
ಹೊಸಪೇಟೆ | ಸಂತೋಷ್ ಲಾಡ್ ಅವರ ಹುಟ್ಟುಹಬ್ಬ ಆಚರಣೆ
ವಿಜಯನಗರ : ಜಿಲ್ಲೆಯ ಹೊಸಪೇಟೆ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಸಂತೋಷ್ ಲಾಡ್ ಅವರ ಹುಟ್ಟುಹಬ್ಬದ ಪ್ರಯುಕ್ತ ಬೃಹತ್ ಆಕಾರದ ಭಾವಚಿತ್ರವನ್ನು ರಂಗೋಲಿಯಲ್ಲಿ ವಿಶೇಷವಾಗಿ ನಿರ್ಮಿಸಲಾಯಿತು. ಒಂದು ಕ್ವಿಂಟಲ್ಗಿಂತ ಹೆಚ್ಚು ರಂಗೋಲಿ ಬಳಸಿ, 7 ಜನ ಕಲಾವಿದರು 14 ಗಂಟೆಗಳ ಕಾಲ ಶ್ರಮಿಸಿ 100 ಅಡಿ ಉದ್ದ ಮತ್ತು 100 ಅಡಿ ಅಗಲದ ಭಾವಚಿತ್ರವನ್ನು ರೂಪಿಸಿದರು. ಈ ಭವ್ಯ ರಂಗೋಲಿ ಚಿತ್ರಣ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿತ್ತು. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸಾಮಾಜಿಕ ಜಾಲತಾಣದ ರಾಜ್ಯಾಧ್ಯಕ್ಷ ಸಿದ್ದು ಹಳ್ಳೇಗೌಡ್ರ ಅವರ ನೇತೃತ್ವದಲ್ಲಿ, ಯುವ ಕಾಂಗ್ರೆಸ್ ಮುಖಂಡ ಭರತ್ ಕುಮಾರ್ ಸಿಆರ್ ಅವರಿಂದ ರಂಗೋಲಿ ನಿರ್ಮಾಣ ಕಾರ್ಯ ನೆರವೇರಿಸಲಾಯಿತು. ಸಂತೋಷ್ ಲಾಡ್ ಅವರಿಗೆ ವಿಭಿನ್ನ ರೀತಿಯಲ್ಲಿ ಹುಟ್ಟುಹಬ್ಬದ ಶುಭಾಶಯ ಕೋರಲಾಯಿತು. ಕಾಂಗ್ರೆಸ್ ಸಾಮಾಜಿಕ ಜಾಲತಾಣ ವಿಭಾಗದ ಕಾರ್ಯಕರ್ತರು ಕೇಕ್ ಕತ್ತರಿಸಿ ಸಂಭ್ರಮಿಸಿದರು. ಹುಟ್ಟುಹಬ್ಬದ ನಿಮಿತ್ತ ಅನ್ನಸಂತರ್ಪಣೆ ಕಾರ್ಯಕ್ರಮವೂ ನಡೆಯಿತು. ಈ ಸಂದರ್ಭದಲ್ಲಿ ಯುವ ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷ ತಾಜುದ್ದೀನ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಹಮ್ಮದ್ ಅಲ್ತಾಫ್ ಸೇರಿದಂತೆ ಅರ್ಬಾಜ್ ಖಾನ್, ಶಿವಕುಮಾರ್, ಇಮ್ತೀಯಾಜ್, ಪ್ರದೀಪ್, ಸುಹೇಲ್, ಹಾರೂನ್, ರಿಯಾಜ್, ನವೀನ್ ಕುಮಾರ್ ಸಿಆರ್ ಮತ್ತು ಇತರರು ಉಪಸ್ಥಿತರಿದ್ದರು.
ಬ್ಯಾಂಕ್ ಖಾತೆಯಲ್ಲಿ 2.6 ಕೋಟಿ ರೂ. ವಹಿವಾಟು!
ರಿಕ್ಷಾ ಚಾಲಕನ ಪುತ್ರಿಯಿಂದ ಪೊಲೀಸರಿಗೆ ದೂರು
ಮಂಗಳೂರಿನಲ್ಲಿ ಚಿರತೆ ಹಾವಳಿ: ಅಧಿಕಾರಿಗಳ ಜೊತೆ ಶಾಸಕ ಕಾಮತ್ ಚರ್ಚೆ
ಮಂಗಳೂರು, ಫೆ,27: ನಗರದ ಕದ್ರಿ, ಶಕ್ತಿನಗರ ಪರಿಸರದಲ್ಲಿ ರಾತ್ರಿ ವೇಳೆ ಚಿರತೆ ಕಾಣಿಸಿಕೊಂಡಿರುವ ಹಿನ್ನಲೆಯಲ್ಲಿ ಶಾಸಕ ವೇದವ್ಯಾಸ ಕಾಮತ್ ಶುಕ್ರವಾರ ಅರಣ್ಯಾಧಿಕಾರಿಗಳೊಂದಿಗೆ ಸಭೆ ನಡೆಸಿ ಸಾರ್ವಜನಿಕರ ಹಿತದೃಷ್ಟಿ ಯಿಂದ ಕೈಗೊಂಡಿರುವ ಕ್ರಮಗಳ ಬಗ್ಗೆ ಮಾಹಿತಿ ಪಡೆದುಕೊಂಡರು. ಕದ್ರಿ ಕೈಬಟ್ಟಲ್, ಶಕ್ತಿನಗರದ ಕೋರ್ಡೆಲ್ ಪ್ರದೇಶಗಳಲ್ಲಿ ಚಿರತೆ ಓಡಾಡುತ್ತಿದ್ದ ದೃಶ್ಯಗಳು ಸಿಸಿಟಿವಿ ಕ್ಯಾಮೆರಾಗಳಲ್ಲಿ ದಾಖಲಾಗಿತ್ತು. ಚಿರತೆಯನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆಯಿಂದ ಬೋನುಗಳನ್ನು ಇಡಲಾಗಿದೆ. ಈ ಎರಡೂ ಭಾಗಗಳಲ್ಲಿ ಕಾಣಿಸಿಕೊಂಡ ಚಿರತೆ ಒಂದೇ ಆಗಿರುವ ಸಾಧ್ಯತೆಯೂ ಇದೆ. ಚಿರತೆ ಸಂಚಾರ ಮಾಡಿರುವ ಪ್ರದೇಶ ದಲ್ಲಿ ಹಗಲು ರಾತ್ರಿ ಗಸ್ತು ತಿರುಗಲು ಅರಣ್ಯ ಇಲಾಖೆ ಸಿಬ್ಬಂದಿಯ ತಂಡವನ್ನು ನಿಯೋಜಿಸಿದ್ದೇವೆ. ಸದ್ಯ ಚಿರತೆ ಇಲ್ಲೇ ಉಳಿದಿರದೆ, ಕಾಡಿಗೆ ಮರಳಿರುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಶಾಸಕರಿಗೆ ಮಾಹಿತಿ ನೀಡಿದರು. ಸಾರ್ವಜನಿಕರು ಚಿರತೆ ಸಹಿತ ಯಾವುದೇ ಅಪಾಯಕಾರಿ ಕಾಡುಪ್ರಾಣಿಗಳು ಕಂಡು ಬಂದಲ್ಲಿ ಕೂಡಲೇ ಅರಣ್ಯ ಇಲಾಖೆಯ ಟೋಲ್ ಫ್ರೀ ಸಂಖ್ಯೆ 1926ಕ್ಕೆ ತಿಳಿಸಿದರೆ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು ಸಹಾಯ ವಾಗುತ್ತದೆ ಎಂದು ವಲಯ ಅರಣ್ಯಾಧಿಕಾರಿ ರಾಜೇಶ್ ಬಳಿಗಾರ ತಿಳಿಸಿದ್ದಾರೆ.
ಬ್ರಿಟನ್ ಉಪಚುನಾವಣೆ | ಭದ್ರಕೋಟೆ ಕಳೆದುಕೊಂಡ ಲೇಬರ್ ಪಕ್ಷ
ಲಂಡನ್, ಫೆ.27: ಬ್ರಿಟನ್ನ ಸಂಸತ್ತಿಗೆ ನಡೆದ ಉಪಚುನಾವಣೆಯಲ್ಲಿ ಗ್ರೀನ್ ಪಾರ್ಟಿ ಆಫ್ ಇಂಗ್ಲೆಂಡ್ ಎದುರು ಆಡಳಿತಾರೂಢ ಪಕ್ಷ ಲೇಬರ್ ಪಾರ್ಟಿಗೆ ಸೋಲಾಗಿದ್ದು ಪ್ರಧಾನಿ ಕೀರ್ ಸ್ಟಾರ್ಮರ್ಗೆ ತೀವ್ರ ಹಿನ್ನಡೆಯಾಗಿದೆ. ಸುಮಾರು 1 ಶತಮಾನಗಳಿಂದ ಲೇಬರ್ ಪಕ್ಷದ ಭದ್ರಕೋಟೆ ಎನಿಸಿದ್ದ ಗ್ರೇಟರ್ ಮ್ಯಾಂಚೆಸ್ಟರ್ನ `ಗಾರ್ಟನ್ ಆ್ಯಂಡ್ ಡೆಂಟನ್' ಕ್ಷೇತ್ರದಲ್ಲಿ ಗ್ರೀನ್ ಪಾರ್ಟಿಯ ಅಭ್ಯರ್ಥಿ ಹನಾ ಸ್ಪೆನ್ಸರ್ 40.7% ಮತ ಪಡೆದು ಗೆಲುವು ಸಾಧಿಸಿದ್ದರೆ, ರಿಫಾರ್ಮ್ ಯುನೈಟೆಡ್ ಕಿಂಗ್ಡಮ್ ಪಕ್ಷ 28.7% ಮತಗಳೊಂದಿಗೆ ಎರಡನೇ ಸ್ಥಾನ ಪಡೆದರೆ, ಪ್ರಧಾನಿ ಸ್ಟಾರ್ಮರ್ ಅವರ ಲೇಬರ್ ಪಕ್ಷ 25.4% ಮತ ಪಡೆದು ಮೂರನೇ ಸ್ಥಾನಕ್ಕೆ ಕುಸಿದಿದೆ.
ವಿಟ್ಲ| ಅಕ್ರಮ ಗೋ ಸಾಗಾಟ ಆರೋಪ: ವಾಹನ ವಶಕ್ಕೆ; ಪ್ರಕರಣ ದಾಖಲು
ವಿಟ್ಲ: ಅಕ್ರಮವಾಗಿ ಗೋ ಸಾಗಾಟ ಮಾಡುತ್ತಿದ್ದ ಆರೋಪದಲ್ಲಿ ಪೊಲೀಸರು ವಾಹನವನ್ನು ಪತ್ತೆ ಹಚ್ಚಿ ವಶಕ್ಕೆ ಪಡೆದುಕೊಂಡ ಘಟನೆ ಕೊಳ್ನಾಡು ಗ್ರಾಮದಲ್ಲಿ ನಡೆದಿದೆ. ಬಂಟ್ವಾಳ ತಾಲೂಕಿನ ಕೊಳ್ನಾಡು ಗ್ರಾಮದ ಕರೈ ಎಂಬಲ್ಲಿ ವಿಟ್ಲ ಎಸೈ ರಾಮಕೃಷ್ಣ ಮತ್ತು ಸಿಬ್ಬಂದಿಗಳು ಪತ್ತೆ ಹಚ್ಚಿದ್ದು, ಮಂಡ್ಯ ನಿವಾಸಿಗಳಾದ ಚಾಲಕ ನವೀನ ಹಾಗೂ ಚೇತನ್ ಎಂಬವರನ್ನು ವಿಚಾರಿಸಿದ್ದಾರೆ. ವಾಹನವೊಂದು ರಸ್ತೆ ಬದಿಯಲ್ಲಿ ನಿಂತಿದ್ದು, ಅದರಲ್ಲಿ ಎರಡೂ ದನಗಳನ್ನು ಹಿಂಸಾತ್ಮಕವಾಗಿ ತುಂಬಿಸಿ ಸಾಗಾಟ ಮಾಡಿಕೊಂಡು ಬಂದಿರುವುದು ಕಂಡುಬಂದಿರುತ್ತದೆ. ಈ ಬಗ್ಗೆ ವಾಹನದಲ್ಲಿದ್ದ ಮಂಡ್ಯ ನಿವಾಸಿಗಳಾದ ಚಾಲಕ ನವೀನ ಹಾಗೂ ಮತ್ತೋರ್ವ ಚೇತನ್ ಎಂಬವರಲ್ಲಿ ವಿಚಾರಿಸಲಾಗಿ, ಚನ್ನರಾಯಪಟ್ಟಣದಿಂದ ಶಂಕರ ಎಂಬವರು ಸಾಲೆತ್ತೂರಿನ ಶಾಫಿ ಎಂಬವರಿಗೆ ಜಾನುವಾರುಗಳನ್ನು ವಧೆ ಮಾಡಿ ಮಾಂಸ ಮಾಡಿ ಮಾರಾಟ ಮಾಡುವ ಉದ್ದೇಶದಿಂದ ತುಂಬಿಸಿ ಕಳುಹಿಸಿದ್ದು, ಜಾನುವಾರುಗಳನ್ನು ಸಾಗಿಸಲು ಬೇರೆಯವರ ಹೆಸರಿನಲ್ಲಿ ದಾಖಲಾತಿಯನ್ನು ಪಡೆದು ಸಾಗಿಸುತ್ತಿರುವುದು ತಿಳಿದುಬಂದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಉತ್ತರ ಕರ್ನಾಟಕದಲ್ಲಿ ಜನಪದ ಮಹಿಳಾ ಉತ್ಸವ ನಡೆಸಿದರೆ ಅನುದಾನ: ಶಿವರಾಜ್ ತಂಗಡಗಿ
ಬೆಂಗಳೂರು, ಫೆ.27: ಉತ್ತರ ಕರ್ನಾಟಕದ ಯಾವುದೇ ಜಿಲ್ಲೆಯಲ್ಲಿ ಜನಪದ ಮಹಿಳಾ ಉತ್ಸವ ನಡೆಸಿದರೆ ಅಗತ್ಯ ಅನುದಾನವನ್ನು ನೀಡಲಾಗುವುದು ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ತಂಗಡಗಿ ಭರವಸೆ ನೀಡಿದ್ದಾರೆ. ಶುಕ್ರವಾರ ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಕರ್ನಾಟಕ ಜಾನಪದ ಅಕಾಡೆಮಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ 2025ನೇ ಸಾಲಿನ ಗೌರವ ಪ್ರಶಸ್ತಿ ಮತ್ತು ತಜ್ಞ ಪ್ರಶಸ್ತಿ ಹಾಗೂ 2024ನೇ ಸಾಲಿನ ಪುಸ್ತಕ ಬಹುಮಾನ ಪ್ರದಾನ ಮಾಡಿ ಅವರು ಮಾತನಾಡಿದರು. ಈ ಬಾರಿಯ ಬಜೆಟ್ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಲಾಖೆಗೆ ಹೆಚ್ಚಿನ ಅನುದಾನ ಕೊಡುವ ನಿರೀಕ್ಷೆಯಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವ್ಯಾಪ್ತಿಯ ಅಕಾಡಮಿಗಳನ್ನು ಇನ್ನಷ್ಟು ಬಲಪಡಿಸುವ ಪ್ರಯತ್ನಗಳು ನಡೆಯುತ್ತಿವೆ. ಜಾನಪದ ಅಕಾಡಮಿಯಿಂದ ಮೊದಲ ಬಾರಿಗೆ ಉತ್ತರ ಕರ್ನಾಟಕದಲ್ಲಿ ಜನಪದ ಮಹಿಳಾ ಉತ್ಸವ ನಡೆಸುವುದಾದರೆ ಸಮರ್ಪಕ ಅನುದಾನ ಕೊಡುತ್ತೇನೆ ಎಂದು ಶಿವರಾಜ್ ತಂಗಡಗಿ ತಿಳಿಸಿದರು. ಪ್ರಶಸ್ತಿಗಳೆಂದರೆ ಬೆಂಗಳೂರು ಮತ್ತು ಬೆಂಗಳೂರಿನ ಸುತ್ತಮುತ್ತಲಿಗೆ ಸೀಮಿತ ಎನ್ನುವಂತಾಗಿದೆ. ಆದರೆ, ಕರ್ನಾಟಕ ಜಾನಪದ ಅಕಾಡಮಿ ಅಧ್ಯಕ್ಷ ಗೊಲ್ಲಹಳ್ಳಿ ಶಿವಪ್ರಸಾದ್ ಅವರು, ರಾಜ್ಯದ ಎಲ್ಲ ಜಿಲ್ಲೆಗಳ ಸಾಧಕರನ್ನು ಗುರುತಿಸಿ ಪ್ರಶಸ್ತಿಗೆ ಆಯ್ಕೆ ಮಾಡಿರುವುದು ಅಭಿನಂದನಾರ್ಹ. ಸಂವಿಧಾನದ ಹಾದಿಯಲ್ಲಿ ಗೊಲ್ಲಹಳ್ಳಿ ಶಿವಪ್ರಸಾದ್ ಸಾಗುತ್ತಿದ್ದಾರೆ ಎಂದು ಶಿವರಾಜ್ ತಂಗಡಗಿ ಹೇಳಿದರು. ಜನಪದ ಸಂಗೀತ, ನೃತ್ಯ ಪ್ರಕಾರಗಳು ಇದೇ ತಲೆ ಮಾರಿಗೆ ಕೊನೆಯಾಗಬಾರದು. ಮುಂದಿನ ಪೀಳಿಗೆಗೂ ಕಲಿಸಬೇಕು. ಉತ್ತರ ಕರ್ನಾಟಕದೊಳಗೆ ಜನಪದದ ದೊಡ್ಡ ಸಾಹಿತಿಗಳು, ವಿದ್ವಾಂಸರು ಇದ್ದಾರೆ. ಅವರಿಗೆ ಅವಕಾಶಗಳು ಸಿಗದೆ, ಸಮಾಜದ ಮುಖ್ಯವಾಹಿನಿಗೆ ಬರಲೇ ಇಲ್ಲ. ಅಂತಹವರಿಗೆ ಅವಕಾಶ ಸಿಗುವಂತಾಗಬೇಕು ಎಂದು ಶಿವರಾಜ್ ತಂಗಡಗಿ ಹೇಳಿದರು. ಕಾರ್ಯಕ್ರಮದಲ್ಲಿ ಕರ್ನಾಟಕ ಜನಪದ ಅಕಾಡಮಿ ಅಧ್ಯಕ್ಷ ಡಾ.ಗೊಲ್ಲಹಳ್ಳಿ ಶಿವಪ್ರಸಾದ್, ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ ಡಾ.ಆರ್.ಸುನಂದಮ್ಮ, ಬಿಬಿಎಂಪಿ ಪಾಲಿಕೆ ಮಾಜಿ ಸದಸ್ಯ ಎಂ.ಶಿವರಾಜು, ಇಲಾಖೆ ನಿರ್ದೇಶಕ ಬಿ.ಎಸ್.ಮಂಜುನಾಥ್, ರಿಜಿಸ್ಟ್ರಾರ್ ನಮ್ರತ ಸೇರಿದಂತೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಮಾ.1: ʼಭಾರತ ಮುಸ್ಲಿಂ ರಾಷ್ಟ್ರವಾಗುವುದೇ?ʼ ಪುಸ್ತಕ ಬಿಡುಗಡೆ
ಮಂಗಳೂರು, ಫೆ.27: ಲೇಖಕ, ರಾಜ್ಯ ಕಾಂಗ್ರೆಸ್ ವಕ್ತಾರ ಎಂ.ಜಿ. ಹೆಗಡೆ ಬರೆದ ʼಭಾರತ ಮುಸ್ಲಿಂ ರಾಷ್ಟ್ರವಾಗುವುದೇ?ʼ ಪುಸ್ತಕ ಬಿಡುಗಡೆ ಮತ್ತು ʼಗಾಂಧಿಮನೆಯ ಅವಲಕ್ಕಿ ಸರʼ ಕಾದಂಬರಿಯ ಪರಿಚಯ ಕಾರ್ಯಕ್ರಮವು ಮಾ.1ರ ಬೆಳಗ್ಗೆ 10:30ಕ್ಕೆ ಬಲ್ಮಠ ಸಹೋದಯ ಹಾಲ್ನಲ್ಲಿ ಜರುಗಲಿದೆ. ಮಾಜಿ ಸಚಿವ ಬಿ ರಮಾನಾಥ ರೈ ಪುಸ್ತಕ ಬಿಡುಗಡೆ ಮಾಡಲಿದ್ದು, ಮುಖ್ಯ ಅತಿಥಿಯಾಗಿ ಮಾಜಿ ಸಚಿವ ಜಯ ಪ್ರಕಾಶ್ ಹೆಗಡೆ ಭಾಗವಹಿಸಲಿರುವರು. ಲೇಖಕ ಎ. ಕೆ. ಕುಕ್ಕಿಲ ಭಾರತ ಮುಸ್ಲಿಂ ರಾಷ್ಟ್ರವಾಗುವುದೇ? ಪುಸ್ತಕವನ್ನು ಹಾಗೂ ಕಾದಂಬರಿಕಾರ ಡಾ. ಪ್ರಭಾಕರ ನೀರ್ಮಾರ್ಗ ಗಾಂಧಿಮನೆಯ ಅವಲಕ್ಕಿ ಸರ ಕುರಿತು ಮಾತನಾಡಲಿದ್ದಾರೆ. ಅತಿಥಿಯಾಗಿ ಸಮಾನ ಮನಸ್ಕ ಸಂಘಟನೆಯ ಸಂಚಾಲಕ ಮುನೀರ್ ಕಾಟಿಪಳ್ಳ ಭಾಗವಹಿಸಲಿದ್ದಾರೆ ಎಂದು ಎಂಜಿ ಹೆಗಡೆ ಗೆಳೆಯರ ಬಳಗ ಮತ್ತು ಸಮಾನ ಮನಸ್ಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
‘ಒಳಮೀಸಲಾತಿ’ ಅನಾವಶ್ಯಕ ಹೇಳಿಕೆ ನೀಡಬೇಡಿ : ಕೆ.ಎಚ್.ಮುನಿಯಪ್ಪ, ಆರ್.ಬಿ.ತಿಮ್ಮಾಪುರ ಮನವಿ
ಬೆಂಗಳೂರು, ಫೆ. 27: ಒಳಮೀಸಲಾತಿ ಕುರಿತು ಯಾವುದೇ ಸಮುದಾಯದವರು ಗೊಂದಲಕ್ಕೆ ಒಳಗಾಗಬಾರದು ಮತ್ತು ಅನಾವಶ್ಯಕ ಹೇಳಿಕೆಗಳನ್ನು ನೀಡಬಾರದು. ಎಲ್ಲರಿಗೂ ನ್ಯಾಯ ಸಿಗುವಂತೆ ಸರಕಾರ ಕ್ರಮ ಕೈಗೊಳ್ಳಲಿದೆ ಎಂದು ಆಹಾರ ನಾಗರಿಕ ಸರಬರಾಜು ಸಚಿವ ಕೆ.ಎಚ್.ಮುನಿಯಪ್ಪ ಹಾಗೂ ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ ಜಂಟಿ ಪತ್ರಿಕಾ ಹೇಳಿಕೆಯಲ್ಲಿ ಮನವಿ ಮಾಡಿದ್ದಾರೆ. ಶುಕ್ರವಾರ ಈ ಕುರಿತು ಜಂಟಿ ಪ್ರಕಟನೆ ನೀಡಿರುವ ಅವರು, ಫೆ.26ರಂದು ನಡೆದ ಸಂಪುಟ ಸಭೆಯಲ್ಲಿ, ಮೂರು-ನಾಲ್ಕು, ತಿಂಗಳಿನಿಂದ ನಿಂತಿದ್ದ ಸರಕಾರಿ ಉದ್ಯೋಗಗಳ ನೇಮಕಾತಿ ಪ್ರಕ್ರಿಯೆಯನ್ನು ಮತ್ತೆ ಆರಂಭಿಸುವ ಮಹತ್ವದ ತೀರ್ಮಾನ, ಕೈಗೊಳ್ಳಲಾಗಿದೆ. ಒಟ್ಟು 56,432 ಹುದ್ದೆಗಳನ್ನು ಭರ್ತಿ ಮಾಡಲು ತಕ್ಷಣ ಅಧಿಸೂಚನೆ ಹೊರಡಿಸಿ ಪ್ರಕ್ರಿಯೆ ಆರಂಭಿಸಲು ನಿರ್ಧರಿಸಲಾಗಿದೆ. ಎಲ್ಲ ವರ್ಗಗಳಿಗೂ ಸಮಾನ ಅವಕಾಶ ದೊರಕುವಂತೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ. ನ್ಯಾಯಾಲಯದ ನಿರ್ದೇಶನದಂತೆ ಶೇ.50ರಷ್ಟು ಒಟ್ಟು ಮೀಸಲಾತಿ ಮೀರಬಾರದು ಎಂಬ ನಿಯಮವನ್ನು ಸರಕಾರ ಕಟ್ಟುನಿಟ್ಟಾಗಿ ಪಾಲಿಸುತ್ತದೆ. ಅದರಂತೆ ಎಸ್ಸಿಗೆ ಶೇ.15 ಮತ್ತು ಎಸ್ಟಿಗೆ ಶೇ.3ರಷ್ಟು ಮೀಸಲಾತಿ ಜಾರಿಗೊಳಿಸಲಾಗುತ್ತದೆ. ಮೊದಲು ಶೇ.17ರ ಬಗ್ಗೆ ತೆಗೆದುಕೊಂಡ ತೀರ್ಮಾನದಲ್ಲಿ ಉಳಿದಿದ್ದ ಶೇ.6 ಅನ್ನು ತಾತ್ಕಾಲಿಕವಾಗಿ ಕಾಯ್ದಿರಿಸಲಾಗಿದೆ. ನ್ಯಾಯಾಲಯದ ಅಂತಿಮ ತೀರ್ಪಿನ ಆಧಾರದ ಮೇಲೆ ಶೇ6 ಅನ್ನು ಜನರಲ್ ವರ್ಗಕ್ಕೂ ಅಥವಾ ಎಸ್ಸಿ, ಎಸ್ಟಿ ವರ್ಗಕ್ಕೋ ಹಂಚಿಕೆ ಮಾಡಲಾಗುತ್ತದೆ. ಅದರಲ್ಲೂ ಎಸ್.ಸಿಗೆ ಶೇ.2ರಷ್ಟು ಮತ್ತು ಎಸ್ಟಿಗೆ ಶೇ.4 ಪರಿಗಣನೆಯಲ್ಲಿದೆ ಎಂದು ತಿಳಿಸಿದ್ದಾರೆ. ಶೇ.15ರಷ್ಟು ಮಿತಿಯೊಳಗೆ ಒಳ ಮೀಸಲಾತಿಯನ್ನು ಹೇಗೆ ಜಾರಿಗೊಳಿಸಬೇಕು ಎಂಬ ಬಗ್ಗೆ ಸಂಬಂಧಪಟ್ಟ ಸಚಿವರು ಮತ್ತು ಮುಖಂಡರೊಂದಿಗೆ ಚರ್ಚೆಗಳು ನಡೆಯುತ್ತಿವೆ. ಈ ಕುರಿತು ಡಾ. ಜಿ.ಪರಮೇಶ್ವರ್, ಡಾ.ಎಚ್.ಸಿ.ಮಹದೇವಪ್ಪ, ಸತೀಶ್ ಜಾರಕಿಹೊಳಿ, ಪ್ರಿಯಾಂಕ ಖರ್ಗೆ, ಶಿವರಾಜ ತಂಗಡಗಿ ಹಾಗೂ ರುದ್ರಪ್ಪ ಲಮಾಣಿ ಅವರೊಂದಿಗೆ ಚರ್ಚೆ ನಡೆಸಲಾಗಿದೆ. ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿಗಳಿಗೆ ವಿಷಯ ತಿಳಿಸಲಾಗಿದ್ದು, ಅಧಿಸೂಚನೆ ನಂತರ ಅಂತಿಮ ತೀರ್ಮಾನ ಕೈಗೊಳ್ಳುವಂತೆ ಅವರು ಸೂಚಿಸಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ. ಆಯ್ಕೆ ಪ್ರಕ್ರಿಯೆ ಮುಕ್ತಾಯಗೊಳ್ಳುವ ಮೊದಲು ಒಳ ಮೀಸಲಾತಿ ಜಾರಿಗೊಳಿಸಲು ಸರಕಾರ ಬದ್ಧವಾಗಿದೆ. ಯಾವುದೇ ಸಮುದಾಯದವರು ಗೊಂದಲಕ್ಕೀಡಾಗಬಾರದು ಮತ್ತು ಅನಾವಶ್ಯಕ ಹೇಳಿಕೆಗಳನ್ನು ನೀಡಬಾರದು ಎಂದು ತಿಳಿಸಿದ್ದಾರೆ.
ಗುಂಪು ಹಲ್ಲೆ ಪ್ರಕರಣ: ಆರೋಪಿಗಳಿಗೆ ಸುಳ್ಯ ನ್ಯಾಯಾಲಯದಲ್ಲಿ ಶಿಕ್ಷೆ ಪ್ರಕಟ
ಸುಳ್ಯ: ಗುಂಪು ಹಲ್ಲೆ ನಡೆಸಿ ಕುಟುಂಬ ಒಂದರ ಸದಸ್ಯರಿಗೆ ಗಾಯಪಡಿಸಿರುವ ಹಿನ್ನೆಲೆಯಲ್ಲಿ ಆರೋಪಿಗಳಿಗೆ ಸುಳ್ಯ ನ್ಯಾಯಾಲಯ ತಲಾ 25 ಸಾವಿರ ರೂ. ಗಳ ಒಂದು ವರ್ಷದ ಬಾಂಡ್ ಪಡೆಯುವಂತೆ ಆದೇಶ ನೀಡಿದೆ. 2018 ಮಾರ್ಚ್ 15 ರಂದು ಮುರುಳ್ಯ ಗ್ರಾಮದ ಕುಕ್ಕೆಟ್ಟಿ ಎಂಬಲ್ಲಿ ಗುಂಪು ಹಲ್ಲೆ ನಡೆಸಿದ ಪ್ರಕರಣದ ಆರೋಪಿ ಗಳಾದ ಅರುಣ್ ರೈ, ವಸಂತ ಕುಮಾರ್, ಅನಿಲ್ ರೈ ಮತ್ತು ವಿನೋದ್ ಎಂಬುವರಿಗೆ ನ್ಯಾಯಾಧೀಶರು ಆದೇಶ ನೀಡಿದ್ದಾರೆ. 2018ರ ಮಾರ್ಚ್ 15 ರಂದು ರಂದು ಸಂಜೆ ಮೋಟಾರ್ ಸೈಕಲ್ನಲ್ಲಿ ನಿಂತಿಕಲ್ಲು ಕಡೆಯಿಂದ ಕುಕ್ಕಟ್ಟೆ ಎಂಬಲ್ಲಿನ ಮನೆಗೆ ಬರುತ್ತಿದ್ದ ಶಮೀರ್ ಮತ್ತು ಆತನ ಕುಟುಂಬದ ಸದಸ್ಯರ ಮೇಲೆಯೂ ಹಲ್ಲೆ ನಡೆಸಿ ಗಾಯಗೊಳಿಸಿರುವ ಬಗ್ಗೆ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದ ವಿಚಾರಣೆ ಪ್ರಿನ್ಸಿಪಲ್ ಸಿವಿಲ್ ಜಡ್ಜ್ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯ ದಲ್ಲಿ ನ್ಯಾಯಾಧೀಶರಾದ ಶಿವಣ್ಣ ಹೆಚ್. ಆರ್. ಅವರ ಎದುರು ವಿಚಾರಣೆ ನಡೆದು ಆರೋಪಿತರ ಅಪರಾಧ ಸಾಬೀತಾಗಿ ಅವರುಗಳನ್ನು ದೋಷಿ ಎಂದು ತೀರ್ಪು ನೀಡಿ ಶಿಕ್ಷೆಯನ್ನು ಪ್ರಕಟಿಸಿದ್ದಾರೆ. ನಾಲ್ಕು ಜನ ಆರೋಪಿಗಳಿಗೆ ತಲಾ 25,000 ರೂ ನ ಬಾಂಡನ್ನು ಕಾರ್ಯಗತಗೊಳಿಸಿ, ಆರೋಪಿ 1 ರಿಂದ 4 ರವೆರಗೆ ನ್ಯಾಯ ವ್ಯಾಪ್ತಿ ಪರಿಕ್ಷಾಧಿಕಾರಿಯ ಮೇಲ್ವಿಚಾರಣೆಯಲ್ಲಿ ಇರಬೇಕು. ಹಾಗೂ ಅವರು ನಾಲ್ಕು ತಿಂಗಳಿಗೊಮ್ಮೆ ತಮ್ಮ ನಡವಳಿಕೆಯ ಬಗ್ಗೆ ವರದಿ ಸಲ್ಲಿಸಬೇಕು ಎಂದು ತೀರ್ಪು ನೀಡಿ ಆದೇಶ ಹೊರಡಿಸಿರುತ್ತಾರೆ. ಸರ್ಕಾರದ ಪರವಾಗಿ ಸಹಾಯಕ ಸರಕಾರಿ ಅಭಿಯೋಜಕಿ ಪ್ರೀತಿ ಎಂ.ಸಿ ರವರು ವಾದ ಮಂಡಿಸಿದ್ದು, ಬೆಳ್ಳಾರೆ ಪೊಲೀಸ್ ಠಾಣೆಯ ಅಂದಿನ ಪಿಎಸ್ಐ ಎಂ. ವಿ ಚೆಲುವಯ್ಯ ಅವರು ತನಿಖಾಧಿಕಾರಿ ಆಗಿ ಹಾಗೂ ಬೆಳ್ಳಾರೆ ಪೊಲೀಸ್ ಠಾಣೆ ಪಿ ಎಸ್ ಐ ಈರಯ್ಯ ಅವರು ಹಾಗೂ ಬೆಳ್ಳಾರೆ ಪೊಲೀಸ್ ಕಾನ್ಸ್ಟೇಬಲ್ ಮನು ವಿ ಎಂ ಅವರು ಕೋರ್ಟ್ ಮಾನಿಟರಿಂಗ್ ಕರ್ತವ್ಯ ನಿರ್ವಹಿಸಿದರು.
ರಾಯಚೂರು | ನಾಳೆಯಿಂದ(ಫೆ.28) ದ್ವಿತೀಯ ಪಿಯುಸಿ ಪರೀಕ್ಷೆ : 22,442 ವಿದ್ಯಾರ್ಥಿಗಳು ಹಾಜರು
ರಾಯಚೂರು : ರಾಜ್ಯದಲ್ಲಿ ಶನಿವಾರದಿಂದ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಗಳು ಆರಂಭವಾಗಲಿದ್ದು, ಜಿಲ್ಲೆಯಲ್ಲಿ ಪದವಿ ಪೂರ್ವ ಇಲಾಖೆಯಿಂದ ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ. ಮೊದಲ ದಿನವೇ 22,442 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಈ ಬಾರಿ ಜಿಲ್ಲೆಯಲ್ಲಿ ಒಟ್ಟು 22,442 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದಾರೆ. ಇದರಲ್ಲಿ 18,419 ಮಂದಿ ಹೊಸ ವಿದ್ಯಾರ್ಥಿಗಳು, 560 ಮಂದಿ ಖಾಸಗಿ ಅಭ್ಯರ್ಥಿಗಳು ಹಾಗೂ 3,450 ಮಂದಿ ಪುನರಾವರ್ತಿತ ವಿದ್ಯಾರ್ಥಿಗಳು ಸೇರಿದ್ದಾರೆ. ಜಿಲ್ಲೆಯಾದ್ಯಂತ 43 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆಗಳು ನಡೆಯಲಿವೆ. ಪರೀಕ್ಷೆ ಕೇಂದ್ರಗಳು : ರಾಯಚೂರು ತಾಲೂಕಿನಲ್ಲಿ 13, ಲಿಂಗಸುಗೂರು 7, ದೇವದುರ್ಗ 5, ಸಿಂಧನೂರು 9, ಮಾನವಿ 05, ಮಸ್ಕಿ 2, ಸಿರವಾರ 2 ಸೇರಿದಂತೆ ಒಟ್ಟು 43 ಪರೀಕ್ಷೆ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ. ಪರೀಕ್ಷಾರ್ಥಿಗಳಿಗೆ ಉಚಿತ ಬಸ್ ವ್ಯವಸ್ಥೆ : ಗ್ರಾಮೀಣ ಭಾಗದ ವಿದ್ಯಾರ್ಥಿಗಳು ತಮ್ಮ ಊರಿನಿಂದ ಸ್ಥಳೀಯ ಬಸ್ ನಿಲ್ದಾಣ, ತಾಲೂಕು ಹಾಗೂ ಜಿಲ್ಲಾ ಕೇಂದ್ರಗಳಿಗೆ ಪರೀಕ್ಷೆ ಬರೆಯಲು ಹೋಗುವ ವೇಳೆ ಸರ್ಕಾರಿ ಬಸ್ಗಳಲ್ಲಿ ಟಿಕೆಟ್ ರಹಿತ ಪ್ರಯಾಣಕ್ಕೆ ಅವಕಾಶ ನೀಡಲಾಗಿದೆ. ಜಿಲ್ಲಾ ಕೇಂದ್ರದಿಂದ ಎಲ್ಲಾ ತಾಲೂಕುಗಳಿಗೆ ಪ್ರಶ್ನೆಪತ್ರಿಕೆ ಮತ್ತು ಉತ್ತರಪತ್ರಿಕೆಗಳನ್ನು ಕಳುಹಿಸುವ ವ್ಯವಸ್ಥೆ ಮಾಡಲಾಗಿದೆ. ಬೆಳಿಗ್ಗೆ 5.30ರಿಂದ ಸಿಂಧನೂರು, ಲಿಂಗಸುಗೂರು ಮತ್ತು ಮಸ್ಕಿಗೆ, ಬೆಳಿಗ್ಗೆ 7 ಗಂಟೆಯಿಂದ ರಾಯಚೂರು, ದೇವದುರ್ಗ ಮತ್ತು ಸಿರವಾರ ತಾಲೂಕುಗಳಿಗೆ ಕಳುಹಿಸಲಾಗುತ್ತದೆ. ಪರೀಕ್ಷಾ ಕೇಂದ್ರಗಳ ಸುತ್ತ ನಿಷೇಧಾಜ್ಞೆ ಜಾರಿಗೊಳಿಸಲಾಗಿದ್ದು, ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗದಂತೆ ಕ್ರಮ ಕೈಗೊಳ್ಳಲಾಗಿದೆ. ಆರೋಗ್ಯ ಇಲಾಖೆಯಿಂದ ಶುಶ್ರೂಷಕರನ್ನು ನೇಮಕ ಮಾಡಲಾಗಿದೆ ಎಂದು ಪದವಿ ಪೂರ್ವ ಇಲಾಖೆಯ ಉಪನಿರ್ದೇಶಕ ಸೋಮಶೇಖರಪ್ಪ ಹೊಕ್ರಾಣಿ ತಿಳಿಸಿದ್ದಾರೆ.
ಬಾಡಿಗೆಗೆ ಇರುವ ವಿದೇಶಿಗರ ಬಗ್ಗೆ ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ನೀಡಿ: ಸೀಮಂತ್ಕುಮಾರ್ ಸಿಂಗ್
ಬೆಂಗಳೂರು, ಫೆ.26: ಬಾಡಿಗೆಗೆ ವಾಸವಿರುವ ವಿದೇಶೀಯರ ಬಗ್ಗೆ ಯಾವುದೇ ಅನುಮಾನ ಇದ್ದಲ್ಲಿ ಮನೆ ಮಾಲಕರು ಕೂಡಲೇ ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಮನವಿ ಮಾಡಿದ್ದಾರೆ. ಶುಕ್ರವಾರ ಈ ಬಗ್ಗೆ ಮಾಧ್ಯಮ ಪ್ರತಿನಿಧಿಗಳೊಂಡಿಗೆ ಮಾತನಾಡಿದ ಅವರು, ನಗರದ ಎಲ್ಲಾ ಪ್ರದೇಶಗಳಲ್ಲಿ ವಾಸವಿರುವ ವಿದೇಶಿ ಪ್ರಜೆಗಳ ವೀಸಾ, ಫಾರಂ-ಸಿ ಮತ್ತು ಇತರೆ ದಾಖಲಾತಿಗಳ ಪರಿಶೀಲನೆಯನ್ನು ಸಿಸಿಬಿ ಒಳಗೊಂಡಂತೆ ಎಲ್ಲಾ ವಿಭಾಗದ ಉಪ ಪೊಲೀಸ್ ಆಯುಕ್ತರು ನಡೆಸುತ್ತಿದ್ದಾರೆ ಎಂದರು. ಸಾರ್ವಜನಿಕರಿಗೆ ಯಾವುದೇ ಸಮಸ್ಯೆಯಾಗದಂತೆ, ಲೈವ್ ಕ್ಯಾಮೆರಾಗಳನ್ನು ಬಳಸಿಕೊಂಡು ಪ್ರದೇಶವಾರು ಪರಿಶೀಲನೆ ನಡೆಸಲಾಗುತ್ತಿದೆ ಎಂದು ಸೀಮಂತ್ಕುಮಾರ್ ತಿಳಿಸಿದರು. ಮನೆಯ ಮಾಲಕರು ತಮ್ಮ ಮನೆಗಳಲ್ಲಿ ವಾಸಿಸುತ್ತಿರುವ ವಿದೇಶಿ ಪ್ರಜೆಗಳ ಫಾರಂ-ಸಿ ಮಾಹಿತಿ ಯನ್ನು ಸ್ಥಳೀಯ ಪೊಲೀಸ್ ಠಾಣೆಗೆ ನೀಡುವುದು ಕಡ್ಡಾಯವಾಗಿದೆ. ವೀಸಾ ಅವಧಿ ಮೀರಿರುವ ಹಾಗೂ ದಾಖಲಾತಿ ಇಲ್ಲದ ವಿದೇಶಿ ಪ್ರಜೆಗಳನ್ನು ಪತ್ತೆ ಮಾಡಿ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸೀಮಂತ್ಕುಮಾರ್ ಹೇಳಿದರು. ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾಗಿರುವ ವಿದೇಶಿ ಪ್ರಜೆಗಳ ಬಗ್ಗೆಯೂ ಪರಿಶೀಲನೆ ನಡೆಸಲಾಗುತ್ತಿದೆ. ನಗರದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಸಾರ್ವಜನಿಕರ ಸಹಕಾರ ಅವಶ್ಯಕವಾಗಿದೆ ಎಂದು ಸೀಮಂತ್ಕುಮಾರ್ ತಿಳಿಸಿದರು.
ನೌಕರರಿಗೆ ನೇಮಕಾತಿ ಆದೇಶ ವಿತರಣೆ
Govt Jobs: ಬಿಜೆಪಿ ಅವಧಿಯಲ್ಲಿ ಆಗಿರುವ ಸರ್ಕಾರಿ ನೇಮಕಾತಿ ವಿವರ ಕೊಟ್ಟ ವಿರೋಧ ಪಕ್ಷದ ನಾಯಕ ಆರ್. ಅಶೋಕ್
Govt Jobs: ಕರ್ನಾಟಕದಲ್ಲಿ ಸರ್ಕಾರಿ ನೇಮಕಾತಿ ಹಾಗೂ ವಿವಿಧ ಹುದ್ದೆಗಳ ಭರ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಆಡಳಿತರೂಢ ಕಾಂಗ್ರೆಸ್ ಹಾಗೂ ವಿರೋಧ ಪಕ್ಷವಾಗಿರುವ ಬಿಜೆಪಿ ನಡುವೆ ವಾಕ್ಸಮರ ಮುಂದುವರಿದಿದೆ. ಈ ಸಂಬಂಧ ಸೋಷಿಯಲ್ ಮೀಡಿಯಾ ಎಕ್ಸ್ನಲ್ಲಿ ಟ್ವೀಟ್ ಮಾಡಿರುವ ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಅವರು, ಬಿಜೆಪಿ ಅವಧಿಯಲ್ಲಿ ಆಗಿರುವ ನೇಮಕಾತಿ ವಿವರ ಕೊಟ್ಟಿದ್ದಾರೆ. ಕುಣಿಯಲಾರದವನಿಗೆ ನೆಲ
ನಬಾರ್ಡ್ ಆರೋಗ್ಯ ಜಾಗೃತಿ ಅಭಿಯಾನ ನಡೆಸಲಿ : ದಿನೇಶ್ ಗುಂಡೂರಾವ್
ಬೆಂಗಳೂರು, ಫೆ.27 : ಆರೋಗ್ಯ ಇಲಾಖೆಗೂ ನಬಾರ್ಡ್ ಸಾಕಷ್ಟು ಅನುದಾನ ನೀಡುತ್ತಿದ್ದು, ಪ್ರಾಥಮಿಕ ಆರೋಗ್ಯ ಕೇಂದ್ರಗಳ ನಿರ್ಮಾಣ ಮಾಡುವುದಕ್ಕೆ ಸಹಕಾರ ನೀಡುತ್ತಿದೆ. ಮುಂದಿನ ದಿನಗಳಲ್ಲಿ ಆರೋಗ್ಯದ ಕುರಿತು ಜಾಗೃತಿ ಮೂಡಿಸುವ ಅಭಿಯಾನದತ್ತಲೂ ನಬಾರ್ಡ್ ಕಾರ್ಯ ನಿರ್ವಹಿಸಲಿ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ. ಶುಕ್ರವಾರ ಇಲ್ಲಿನ ನಬಾರ್ಡ್ ಪ್ರಾದೇಶಿಕ ಕಚೇರಿಯಲ್ಲಿ ‘ಕೃಷಿ ಸಂಸ್ಕರಣೆಯಲ್ಲಿ ಮಹಿಳಾ ರೈತರು ಮತ್ತು ಎಂಎಸ್ಎಂಇಗಳ ಬಲವರ್ಧನೆಗೆ ಸಮಗ್ರ ಸಾಲ ವ್ಯವಸ್ಥೆ’ ಕುರಿತು ನಡೆದ 'ರಾಜ್ಯ ಸಾಲ ವಿಚಾರ ಸಂಕಿರಣ -2026 ಅನ್ನು ಉದ್ಘಾಟಿಸಿ ಮಾತನಾಡಿದ ಅವರು, ಗ್ರಾಮೀಣ ಭಾಗದ ಅಭಿವೃದ್ಧಿಗೆ ನಬಾರ್ಡ್ ಕೊಡುಗೆ ಅನನ್ಯ. 1982ರಿಂದ ಕೆಲಸ ಮಾಡುತ್ತಿರುವ ನಬಾರ್ಡ್ ಶೇ.99ರಷ್ಟು ಗುರಿ ಸಾಧಿಸುತ್ತಿದೆ. ಗ್ರಾಮೀಣ ಭಾಗದಲ್ಲಿ ಆರೋಗ್ಯ, ರಸ್ತೆಗಳ ಅಭಿವೃದ್ಧಿಗೆ ಹಣಕಾಸಿನ ನೆರವು ನೀಡುವಲ್ಲಿ ನಬಾರ್ಡ್ ಬದ್ಧತೆಯಿಂದ ಕೆಲಸ ನಿರ್ವಹಿಸುತ್ತದೆ ಎಂದರು. ನಬಾರ್ಡ್ ಇ-ಕೆಸಿಸಿ ಅನ್ನು ಬಳಕೆ ಮಾಡುವ ಮೂಲಕ ಪಾರದರ್ಶಕವಾಗಿ ಕಾರ್ಯ ನಿರ್ವಹಿಸಲು ಸಹಕಾರಿಯಾಗಿದೆ. ಇದು ರೈತರಿಗೆ ತ್ವರಿತವಾಗಿ ಸಾಲ ಸೌಲಭ್ಯ ಪಡೆಯಲು ಅನುಕೂಲವಾಗಿದೆ. ರಾಜ್ಯದ ಕಟ್ಟಕಡೆಯ ರೈತನಿಗೂ ಈ ಸೌಲಭ್ಯ ಸಿಗಬೇಕು ಎನ್ನುವುದು ನಮ್ಮ ಆಶಯ ಅಂದು ಅವರು ಹೇಳಿದರು. ಕರ್ನಾಟಕ ರಾಜ್ಯದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಆರ್ಬಿಐ ಜನರಲ್ ಮ್ಯಾನೇಜರ್ ಕಾರ್ತಿಕೇಯನ್, ಕೆನರಾ ಬ್ಯಾಂಕ್ನ ಭವೇಂದ್ರ ಕುಮಾರ್, ನಬಾರ್ಡ್ ಚೀಪ್ ಜನರಲ್ ಮ್ಯಾನೇಜರ್ ಸುರೇಂದ್ರ ಬಾಬು ಸೇರಿದಂತೆ ಇನ್ನಿತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ರಾಯಚೂರು | ತಿಪ್ಪೆಗೆ ಬಿಸಾಕಿದ ಔಷಧಿಗಳು ಆರೋಗ್ಯ ಇಲಾಖೆಗೆ ಸಂಬಂಧಿಸಿಲ್ಲ: ಡಿಎಚ್ಒ ಡಾ.ಸುರೇಂದ್ರ ಬಾಬು
ರಾಯಚೂರು : ನಗರದ ಚಂದ್ರಬಂಡಾ ರಸ್ತೆಯ ಜಲಾಲ್ನಗರ ಬಡಾವಣೆ ಸಮೀಪ ತಿಪ್ಪೆಯಲ್ಲಿ ಪತ್ತೆಯಾದ ಔಷಧಿಗಳ ಕುರಿತು ಮಾಧ್ಯಮಗಳಲ್ಲಿ ಪ್ರಕಟವಾದ ಸುದ್ದಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಸಂಬಂಧಿಸಿರುವುದಿಲ್ಲ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸುರೇಂದ್ರ ಬಾಬು ಸ್ಪಷ್ಟಪಡಿಸಿದ್ದಾರೆ. ಫೆ.22ರಂದು ಲಕ್ಷಾಂತರ ರೂಪಾಯಿ ಮೌಲ್ಯದ ಅವಧಿ ಇರುವ ಔಷಧಿಗಳನ್ನು ಸರ್ಕಾರಿ ಆಸ್ಪತ್ರೆ ಸಿಬ್ಬಂದಿ ತಿಪ್ಪೆಗೆ ಬಿಸಾಕಿದ್ದಾರೆ ಎಂಬ ವಿಷಯ ಪ್ರಕಟವಾಗಿತ್ತು. ಪ್ರಕರಣದ ಗಂಭೀರತೆಯನ್ನು ಗಮನಿಸಿ ತಕ್ಷಣ ತನಿಖಾ ತಂಡವನ್ನು ರಚಿಸಲಾಯಿತು. ತನಿಖಾ ತಂಡವು ಔಷಧಿಗಳು ಪತ್ತೆಯಾದ ಸ್ಥಳವನ್ನು ಹಾಗೂ ಸಿಕ್ಕಿರುವ ವಸ್ತುಗಳನ್ನು ಪರಿಶೀಲಿಸಿ ಅಂತಿಮ ವರದಿ ಸಲ್ಲಿಸಿದೆ. ವರದಿ ಪ್ರಕಾರ, ಜಲಾಲ್ನಗರ ಬಡಾವಣೆ ಬಳಿ ಪತ್ತೆಯಾದ ಸಿರಿಂಜ್ಗಳು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಸಂಬಂಧಪಟ್ಟಿಲ್ಲ. ಇದಲ್ಲದೆ, ಕೆಲ ಸಿರಪ್ ಹಾಗೂ ಟಾನಿಕ್ ಬಾಟಲ್ಗಳು ಪತ್ತೆಯಾಗಿದ್ದು, ಅವು “ಫಿಜಿಷಿಯನ್ ಸ್ಯಾಂಪಲ್” ಆಗಿರುವುದು ಕಂಡುಬಂದಿದೆ. ಈ ಔಷಧಿಗಳು ಆರೋಗ್ಯ ಇಲಾಖೆಯ ವಸ್ತುಗಳಲ್ಲ ಎಂಬುದು ಪ್ರಾಥಮಿಕ ವರದಿಯಲ್ಲಿ ಸ್ಪಷ್ಟವಾಗಿದೆ. ಈ ಪ್ರಕರಣ ಕುರಿತು ಸಹಾಯಕ ಔಷಧ ನಿಯಂತ್ರಕ ಅಧಿಕಾರಿಗಳ ಕಚೇರಿ ಹಾಗೂ ಪರಿಸರ ಮಾಲಿನ್ಯ ನಿಯಂತ್ರಣ ಇಲಾಖೆ ಮುಂದಿನ ಕ್ರಮ ಕೈಗೊಳ್ಳಲಿವೆ ಎಂದು ತಿಳಿಸಲಾಗಿದೆ. ಮಾಧ್ಯಮಗಳಲ್ಲಿ ಪ್ರಕಟವಾದ ಸುದ್ದಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಸಂಬಂಧಪಟ್ಟದ್ದಲ್ಲ ಎಂದು ಡಾ. ಸುರೇಂದ್ರ ಬಾಬು ಪ್ರಕಟಣೆಯಲ್ಲಿ ಸ್ಪಷ್ಟೀಕರಣ ನೀಡಿದ್ದಾರೆ.
ರಾಯಚೂರು | ಐ.ಜಿ ಪೆಟ್ರೋಕೆಮಿಕಲ್ ಸಂಸ್ಥೆ ಸ್ಥಾಪನೆಗೆ ಅನುಮತಿ ನೀಡಬೇಡಿ: ಜಾವಿದ್ ಖಾನ್
ರಾಯಚೂರು : ತಾಲೂಕಿನ ಹೆಗ್ಗಸನಹಳ್ಳಿ ಗ್ರಾಮದ ವ್ಯಾಪ್ತಿಯಲ್ಲಿರುವ ಸುಮಾರು 108 ಎಕರೆ ಸರ್ಕಾರಿ ಜಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮೈಸೂರು ಪೆಟ್ರೋ ಕೆಮಿಕಲ್ಸ್ ಲಿಮಿಟೆಡ್ ಸಂಸ್ಥೆ 16-07-2013ರಂದು ಏಕಾಏಕಿ ಕಾರ್ಯಚಟುವಟಿಕೆಗಳನ್ನು ಸ್ಥಗಿತಗೊಳಿಸಿತ್ತು. ಇದರಿಂದ ಅನೇಕ ಕಾರ್ಮಿಕರು ಉದ್ಯೋಗ ಕಳೆದುಕೊಂಡು ಕುಟುಂಬಗಳು ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದವು. ಇದೀಗ ಕಂಪನಿಯು ತನ್ನ ಹೆಸರನ್ನು ಐಜಿ ಪೆಟ್ರೋಕೆಮಿಕಲ್ಸ್ ಲಿಮಿಟೆಡ್ ಎಂದು ಬದಲಾಯಿಸಿ ಮರುಾರಂಭಕ್ಕೆ ಮುಂದಾಗಿದೆ. ಇದನ್ನು ತಡೆಯದಿದ್ದರೆ ಮಾರ್ಚ್ 16ರಂದು ಕಂಪನಿ ಮುಂದೆ ಅಹೋರಾತ್ರಿ ಧರಣಿ ನಡೆಸಲಾಗುವುದು ಎಂದು ದಲಿತ ಸೇನೆಯ ರಾಜ್ಯ ಸಂಘಟನಾ ಕಾರ್ಯದರ್ಶಿ ಜಾವೀದ್ ಖಾನ್ ಎಚ್ಚರಿಸಿದರು. ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಲಾಭದಲ್ಲಿದ್ದ ಸಂಸ್ಥೆಯನ್ನು ನಷ್ಟದ ನೆಪದಲ್ಲಿ ಮುಚ್ಚಿ ಕಾರ್ಮಿಕರನ್ನು ಸಂಕಷ್ಟಕ್ಕೆ ತಳ್ಳಲಾಗಿದೆ. ಈ ಕುರಿತು ನ್ಯಾಯಾಲಯದಲ್ಲಿ ಪ್ರಕರಣ ಅಂತಿಮ ಹಂತದಲ್ಲಿದೆ. ಕಾರ್ಮಿಕರಿಗೆ ಬಾಕಿ ವೇತನ ಪಾವತಿಸದೇ, ಸ್ಥಳೀಯ ರೈತರಿಂದ ಸುಮಾರು 500 ಎಕರೆ ಜಮೀನನ್ನು ಲೀಸ್ ಪಡೆದು ಹುಲ್ಲು ಬೆಳೆಸಿ ಬಯೋಕೆಮಿಕಲ್ ಉತ್ಪಾದನೆ ನಡೆಸಲಾಗುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ ಎಂದು ಆರೋಪಿಸಿದರು. ವಿವಿಧ ಇಲಾಖೆಗಳ ಅಂತಿಮ ಅನುಮತಿ ಪಡೆಯದೇ ಚಟುವಟಿಕೆಗಳು ನಡೆಯುತ್ತಿವೆ. ಸರ್ಕಾರದ ಆದೇಶ, ಮಾಪನ ಹಾಗೂ ಲ್ಯಾಬ್ ಪರೀಕ್ಷೆಗಳಿಲ್ಲದೇ ರಾಸಾಯನಿಕ ಬಳಕೆ ನಡೆಯುತ್ತಿರುವುದರಿಂದ ಕೃಷಿ ಭೂಸಾರ ಹಾನಿಯಾಗುವ ಸಾಧ್ಯತೆ ಇದೆ. ಆದ್ದರಿಂದ ಸಂಸ್ಥೆ ಮರುಾರಂಭಕ್ಕೆ ಅವಕಾಶ ನೀಡಬಾರದು ಎಂದು ಆಗ್ರಹಿಸಿದರು. ಪ್ರತಿಭಟನೆಯಲ್ಲಿ ಪಾಲ್ಗೊಂಡವರು ಈ ಸಂದರ್ಭದಲ್ಲಿ ದಲಿತ ಸೇನೆ ಜಿಲ್ಲಾಧ್ಯಕ್ಷ ಮಾರುತಿ ಚಿಕ್ಕಸೂಗೂರು ಸೇರಿದಂತೆ ಜಯಶ್ರೀ, ಬಾಬುರಾವ್, ಸುರೇಶ್, ಕೃಷ್ಣ, ಮಧುಕಾಂತ್ ಹಾಗೂ ಇತರರು ಉಪಸ್ಥಿತರಿದ್ದರು.
ರಾಯಚೂರು | ಟ್ಯಾಗೋರ ಕಾಲೇಜಿನಲ್ಲಿ ಚಂದ್ರಶೇಖರ ಆಝಾದ್ ಹುತಾತ್ಮ ದಿನಾಚರಣೆ
ರಾಯಚೂರು : ಮಹಾನ್ ಕ್ರಾಂತಿಕಾರಿ ಚಂದ್ರಶೇಖರ್ ಆಜಾದ್ ಅವರ 95ನೇ ಹುತಾತ್ಮ ದಿನದ ಅಂಗವಾಗಿ ಶುಕ್ರವಾರ ಟ್ಯಾಗೋರ್ ಶಿಕ್ಷಣ ಸಂಸ್ಥೆ ಸಂಚಾಲಿತ ಎಸ್ಆರ್ಕೆ ಶಿಕ್ಷಣ ಮಹಾವಿದ್ಯಾಲಯದಲ್ಲಿ ಅಖಿಲ ಭಾರತ ಪ್ರಜಾಸತ್ತಾತ್ಮಕ ಯುವ ಸಂಘಟನೆ (ಎಐಡಿವೈಓ) ವತಿಯಿಂದ ಕಾರ್ಯಕ್ರಮ ನಡೆಯಿತು. ಎಐಡಿವೈಓ ಜಿಲ್ಲಾ ಅಧ್ಯಕ್ಷ ಚನ್ನಬಸವ ಜಾನೇಕಲ್ ಮಾತನಾಡಿ, ಪಂಡಿತ್ ಜಿ ಎಂದೇ ಖ್ಯಾತರಾದ ಚಂದ್ರಶೇಖರ್ ಆಜಾದ್ ಅತ್ಯಂತ ಅಪಾಯಕಾರಿ ಸಂದರ್ಭಗಳಲ್ಲೂ ಬ್ರಿಟಿಷರ ವಿರುದ್ಧ ಸಿಂಹಸ್ವಪ್ನವಾಗಿ ಹೋರಾಟ ನಡೆಸಿದರು. ಹಲವು ಸಂಗಾತಿಗಳನ್ನು ಕಳೆದುಕೊಂಡರೂ ಎದೆಗುಂದದೆ ಹೋರಾಟ ಮುಂದುವರಿಸಿದರು ಎಂದು ಹೇಳಿದರು. ಅವರು ಬಾಲ್ಯದಲ್ಲೇ ಸಂಕಷ್ಟಗಳನ್ನು ಎದುರಿಸಿ ಶಿಕ್ಷಣವನ್ನು ಅರ್ಧದಲ್ಲೇ ನಿಲ್ಲಿಸಿದರು. ಅಸಹಕಾರ ಚಳುವಳಿಯಲ್ಲಿ ಸಕ್ರಿಯವಾಗಿ ಪಾಲ್ಗೊಂಡು ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದರು. ನಂತರ ಹಿಂದೂಸ್ತಾನ್ ರಿಪಬ್ಲಿಕನ್ ಅಸೋಸಿಯೇಷನ್ (ಎಚ್ಆರ್ಎ) ಸಂಘಟನೆಯೊಂದಿಗೆ ಕೈಜೋಡಿಸಿ ರಾಮ್ ಪ್ರಸಾದ್ ಬಿಸ್ಮಿಲ್, ಅಶ್ಫಾಕುಲ್ಲಾ ಖಾನ್, ಭಗತ್ ಸಿಂಗ್, ಸುಖದೇವ್ ಥಾಪರ್ ಅವರೊಂದಿಗೆ ಹೋರಾಟವನ್ನು ತೀವ್ರಗೊಳಿಸಿದರು. ದೇಶಕ್ಕೆ ಸ್ವಾತಂತ್ರ್ಯ ತಂದುಕೊಡುವುದಷ್ಟೇ ಅಲ್ಲ, ಶೋಷಣೆರಹಿತ ಸಮಾಜ ನಿರ್ಮಾಣ ಹಾಗೂ ಸಮಾಜವಾದಿ ವ್ಯವಸ್ಥೆ ಸ್ಥಾಪನೆ ಅವರ ಕನಸಾಗಿತ್ತು. ಯುವಜನತೆ ಅವರ ಕನಸಿನ ಭಾರತ ನಿರ್ಮಾಣಕ್ಕೆ ಮುಂದಾಗಬೇಕು ಎಂದು ಕರೆ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ವಿರುಪಾಕ್ಷಿ ಬಿ.ಎಂ. ಅವರು, ಹುತಾತ್ಮ ಆಜಾದ್ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಮಾತನಾಡಿ, ಮಹಾನ್ ವ್ಯಕ್ತಿಗಳ ತ್ಯಾಗ ಬಲಿದಾನದಿಂದಲೇ ದೇಶಕ್ಕೆ ಸ್ವಾತಂತ್ರ್ಯ ದೊರಕಿದೆ. ಅದನ್ನು ಕಾಪಾಡಿಕೊಳ್ಳಲು ಯುವಕರು ವೈಚಾರಿಕ ಜಾಗೃತಿ ಹೊಂದಬೇಕು ಎಂದರು. ಉಪನ್ಯಾಸಕಿ ಡಾ. ಸವಿತಾ ಮಾತನಾಡಿ, ಹಿಂದೆ ಬ್ರಿಟಿಷರೇ ಶತ್ರುಗಳಾಗಿದ್ದರೆ, ಇಂದು ಅನೇಕ ರೂಪಗಳಲ್ಲಿ ಶತ್ರುಗಳಿದ್ದಾರೆ. ಮೊಬೈಲ್ ಕೂಡ ನಮ್ಮನ್ನು ನಿಯಂತ್ರಿಸುವ ಒಂದು ಸಾಧನವಾಗುತ್ತಿದೆ. ಅದರ ಬಗ್ಗೆ ಜಾಗೃತರಾಗಿರಬೇಕು ಎಂದು ಹೇಳಿದರು. ದ್ವಿತೀಯ ವರ್ಷದ ಪ್ರಶಿಕ್ಷಣಾರ್ಥಿ ಋತು ಸ್ವಾಗತಿಸಿ ನಿರೂಪಿಸಿದರು. ಪ್ರಥಮ ವರ್ಷದ ಪ್ರಶಿಕ್ಷಣಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಉಡುಪಿಯ ಜನ ವಿದ್ಯಾವಂತರು; ಆದರೆ ಭಾರೀ ಮೋಸಗಾರರು: ನ್ಯಾ.ವೀರಪ್ಪ ಅಭಿಪ್ರಾಯ
ವಿವಿಧ ಸರಕಾರಿ ಕಚೇರಿಗಳಿಗೆ ಹಠಾತ್ ಭೇಟಿ ನೀಡಿ ಪರಿಶೀಲಿಸಿದ ಉಪ ಲೋಕಾಯುಕ್ತ
ಅಫ್ಘಾನಿಸ್ತಾನದ ಕಾಬೂಲ್ ಸೇರಿದಂತೆ ಹಲವು ನಗರಗಳ ಮೇಲೆ ಪಾಕಿಸ್ತಾನ ದಾಳಿ
ಹೊಸದಿಲ್ಲಿ, ಫೆ. 27: ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ಗಡಿಯಲ್ಲಿ ಘರ್ಷಣೆ ಸ್ಫೋಟಗೊಂಡಿದ್ದು, ಪಾಕಿಸ್ತಾನವು ಅಪ್ಘಾನಿಸ್ತಾನದ ರಾಜಧಾನಿ ಕಾಬೂಲ್ ಮತ್ತು ಇತರ ನಗರಗಳ ಮೇಲೆ ವಾಯು ದಾಳಿಗಳನ್ನು ನಡೆಸಿದೆ. ಅಫ್ಘಾನಿಸ್ತಾನದ ತಾಲಿಬಾನ್ ಆಡಳಿತದೊಂದಿಗಿನ ನಮ್ಮ ಸಹನೆಯ ಕಟ್ಟೆಯೊಡೆದಿದೆ ಎಂದು ಶುಕ್ರವಾರ ಪಾಕಿಸ್ತಾನದ ರಕ್ಷಣಾ ಸಚಿವ ಖವಾಜ ಆಸಿಫ್ ಹೇಳಿದರು ಹಾಗೂ ಈಗ ಎರಡು ದೇಶಗಳು ‘‘ಬಹಿರಂಗ ಯುದ್ಧದಲ್ಲಿ ತೊಡಗಿವೆ’’ ಎಂದು ಘೋಷಿಸಿದರು. ಎರಡು ದೇಶಗಳನ್ನು ಪ್ರತ್ಯೇಕಿಸುವ ‘ಡುರಾಂಡ್ ರೇಖೆ’ಯಲ್ಲಿ ಪಾಕಿಸ್ತಾನದ ಸೇನೆಯ ವಿರುದ್ಧ ಅಫ್ಘಾನಿಸ್ತಾನವು ‘‘ಬೃಹತ್ ಪ್ರಮಾಣದಲ್ಲಿ ಯುದ್ಧ ಕಾರ್ಯಾಚರಣೆಗಳನ್ನು ನಡೆಸುತ್ತಿದೆ’’ ಎಂಬುದಾಗಿ ತಾಲಿಬಾನ್ ವಕ್ತಾರ ಝಬುಉಲ್ಲಾ ಮುಜಾಹಿದ್ ಹೇಳಿದ ಗಂಟೆಗಳ ಬಳಿಕ ಪಾಕಿಸ್ತಾನ ಯುದ್ಧ ಘೋಷಣೆ ಮಾಡಿದೆ. ಗಡಿಯಲ್ಲಿ ವಾರಗಳ ಕಾಲ ಘರ್ಷಣೆ ನಡೆದ ಬಳಿಕ ಈ ಬೆಳವಣಿಗೆ ಸಂಭವಿಸಿದೆ. ಘರ್ಷಣೆಯಲ್ಲಿ ಹತ್ತಾರು ಮಂದಿ ಮೃತಪಟ್ಟಿದ್ದಾರೆ ಎಂದು ಉಭಯ ದೇಶಗಳು ಹೇಳಿವೆ. ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದ ತಾಲಿಬಾನ್ ಸರಕಾರದ ನಡುವಿನ ಉದ್ವಿಗ್ನತೆ ತಾರಕ್ಕೇರಿದ ಬಳಿಕ ಸೇನಾ ಸಂಘರ್ಷ ನಡೆದಿವೆ. ಅಫ್ಘಾನಿಸ್ತಾನದ ಸೈನಿಕರು ಗಡಿಗೆ ಸಮೀಪದಲ್ಲಿರುವ ತಮ್ಮ ಸೇನಾ ನೆಲೆಗಳ ಮೇಲೆ ದಾಳಿ ಮಾಡಿದ್ದಾರೆ ಎಂದು ಪಾಕಿಸ್ತಾನಿ ಅಧಿಕಾರಿಗಳು ಶುಕ್ರವಾರ ಹೇಳಿದರು. ಆಗ ಪಾಕಿಸ್ತಾನವೂ ಅಫ್ಘಾನಿಸ್ತಾನದ ರಾಜಧಾನಿ ಕಾಬುಲ್ ಮತ್ತು ಇತರ ನಗರಗಳು ಸೇರಿದಂತೆ ಆ ದೇಶದ ಒಳಗಿನ ಗುರಿಗಳ ಮೇಲೆ ವಾಯು ದಾಳಿಗಳನ್ನು ನಡೆಸಿತು ಎಂದು ಅವರು ತಿಳಿಸಿದರು. ಪಾಕಿಸ್ತಾನದ ಮೊದಲ ದಾಳಿಯು ಶುಕ್ರವಾರ ಸ್ಥಳೀಯ ಸಮಯ ಮುಂಜಾನೆ 1:50ಕ್ಕೆ ನಡೆಯಿತು ಎಂದು ‘ಅಲ್ ಜಝೀರ’ ವರದಿಗಾರ ವರದಿ ಮಾಡಿದ್ದಾರೆ. ಕಾಬುಲ್, ಪಕ್ತಿಯ ರಾಜ್ಯ ಮತ್ತು ದಕ್ಷಿಣ ಕಂದಹಾರ್ನಲ್ಲಿರುವ ಅಫ್ಘಾನ್ನ ತಾಲಿಬಾನ್ ಸರಕಾರದ ರಕ್ಷಣಾ ನೆಲೆಗಳ ಮೇಲೆ ದಾಳಿ ನಡೆಸಲಾಗಿದೆ ಎಂದು ಪಾಕಿಸ್ತಾನದ ವಾರ್ತಾ ಸಚಿವ ಅತಾವುಲ್ಲಾ ತರಾರ್ ಸಾಮಾಜಿಕ ಮಾಧ್ಯಮ ‘ಎಕ್ಸ್’ನಲ್ಲಿ ಬರೆದಿದ್ದಾರೆ. ಪಾಕಿಸ್ತಾನದ ವೈಮಾನಿಕ ದಾಳಿಗಳಿಂದ ಅಫ್ಘಾನಿಸ್ತಾನದಲ್ಲಿರುವ ಎರಡು ಬ್ರಿಗೇಡ್ ನೆಲೆಗಳು ಧ್ವಂಸಗೊಂಡಿವೆ ಎಂದು ಅಸೋಸಿಯೇಟಡ್ ಪ್ರೆಸ್ ವರದಿ ಮಾಡಿದೆ. ಪಾಕಿಸ್ತಾನಿ ಸೇನೆಯು ಕೆಲವೇ ಗಂಟೆಗಳಲ್ಲಿ ಹಲವಾರು ತಾಲಿಬಾನ್ ನೆಲೆಗಳನ್ನು ಧ್ವಂಸಗೊಳಿಸಿವೆ ಎಂದು ಪಾಕಿಸ್ತಾನದ ಸರಕಾರಿ ಟೆಲಿವಿಶನ್ ಪಾಕಿಸ್ತಾನ್ ಟಿವಿ ಹೇಳಿಕೊಂಡಿದೆ. ಕಂದಹಾರ್ನಲ್ಲಿರುವ ತಾಲಿಬಾನ್ ಬ್ರಿಗೇಡ್ ಪ್ರಧಾನ ಕಚೇರಿ ಮತ್ತು ಸ್ಫೋಟಕ ಸಂಗ್ರಹಾಲಯ ಹಾಗೂ ಶವಲ್ ಸೆಕ್ಟರ್ ಸಮೀಪದ ವಲಿ ಖಾನ್ ಸೆಕ್ಟರ್ ಹಾಗೂ ಅಂಗೂರ್ ಅಡ್ಡದ ಸಮೀಪದಲ್ಲಿರುವ ತಾಲಿಬಾನ್ ನೆಲೆಗಳ ಮೇಲೆ ಪಾಕಿಸ್ತಾನಿ ಪಡೆಯು ದಾಳಿ ನಡೆಸಿದೆ ಎಂದು ಅದು ಹೇಳಿದೆ. ಗಡಿ ವಿಚಾರದಲ್ಲಿ ಉಭಯ ದೇಶಗಳ ನಡುವೆ ಹಲವಾರು ತಿಂಗಳುಗಳಿಂದ ಉದ್ವಿಗ್ನತೆ ನೆಲೆಸಿದ್ದು, ಅದು ಈಗ ಪರಸ್ಪರ ಸೇನಾ ದಾಳಿಯಲ್ಲಿ ಸಮಾಪ್ತಿಗೊಂಡಿದೆ. ಅಕ್ಟೋಬರ್ನಲ್ಲಿ ಇದೇ ವಿಷಯದಲ್ಲಿ, ಉಭಯ ದೇಶಗಳು ಒಂದು ವಾರ ಭೀಕರ ಸಂಘರ್ಷದಲ್ಲಿ ತೊಡಗಿದ್ದವು. ಬಳಿಕ, ಖತರ್ ಮತ್ತು ತುರ್ಕಿಯ ದೇಶಗಳ ಮಧ್ಯಸ್ಥಿಕೆಯಲ್ಲಿ ಯುದ್ಧವಿರಾಮಕ್ಕೆ ಒಪ್ಪಿಕೊಂಡವು. 133 ತಾಲಿಬಾನ್ ಸೈನಿಕರು ಮೃತ್ಯು: ಪಾಕಿಸ್ತಾನ 55 ಪಾಕ್ ಸೈನಿಕರು ಮೃತ್ಯು: ಅಫ್ಘಾನ್ ಶುಕ್ರವಾರ ಮುಂಜಾನೆ ಪಾಕಿಸ್ತಾನ ನಡೆಸಿದ ದಾಳಿಯಲ್ಲಿ, ಅಫ್ಘಾನಿಸ್ತಾನದ ತಾಲಿಬಾನ್ ಪಡೆಯ 133 ಸೈನಿಕರು ಮೃತಪಟ್ಟಿದ್ದಾರೆ ಹಾಗೂ 200ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ ಎಂಬುದಾಗಿ ಪಾಕಿಸ್ತಾನಿ ಪ್ರಧಾನಿಯ ವಕ್ತಾರ ಮುಷರ್ರಫ್ ಝೈದಿ ಶುಕ್ರವಾರ ‘ಎಕ್ಸ್’ನಲ್ಲಿ ಬರೆದಿದ್ದಾರೆ. ಅದೇ ವೇಳೆ, 27 ಅಫ್ಘಾನ್ ತಾಲಿಬಾನ್ ಠಾಣೆಗಳನ್ನು ಧ್ವಂಸಗೊಳಿಸಲಾಗಿದೆ ಮತ್ತು ಒಂಭತ್ತು ಠಾಣೆಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ. ‘‘80ಕ್ಕೂ ಅಧಿಕ ಟ್ಯಾಂಕ್ಗಳು, ಫಿರಂಗಿಗಳು ಮತ್ತು ಸಶಸ್ತ್ರ ಸಿಬ್ಬಂದಿಯ ವಾಹನಗಳನ್ನು ಧ್ವಂಸಗೊಳಿಸಲಾಗಿದೆ’’ ಎಂದು ಅವರು ಬರೆದಿದ್ದಾರೆ. ಈ ಘರ್ಷಣೆಯಲ್ಲಿ ಪಾಕಿಸ್ತಾನಿ ಸೇನೆಯ ಇಬ್ಬರು ಸೈನಿಕರು ಮೃತರಾಗಿದ್ದಾರೆ ಎಂದು ಪಾಕಿಸ್ತಾನದ ಪತ್ರಿಕೆ ‘ಡಾನ್’ ವರದಿ ಮಾಡಿದೆ. ಆದರೆ, ಕೇವಲ ಎಂಟು ತಾಲಿಬಾನ್ ಸೈನಿಕರು ಮೃತಪಟ್ಟಿದ್ದಾರೆ ಮತ್ತು 11 ಮಂದಿ ಗಾಯಗೊಂಡಿದ್ದಾರೆ ಎಂದು ತಾಲಿಬಾನ್ ಸರಕಾರ ಹೇಳಿದೆ. ಪಾಕಿಸ್ತಾನಿ ಪಡೆಗಳು ರವಿವಾರ ನಡೆಸಿದ ದಾಳಿಗಳಿಗೆ ಪ್ರತಿಯಾಗಿ, ಶುಕ್ರವಾರ ತನ್ನ ಸೇನೆಯು ಗಡಿಯಲ್ಲಿರುವ ಪಾಕಿಸ್ತಾನಿ ಸೇನಾ ನೆಲೆಗಳು ಮತ್ತು ಹೊರಠಾಣೆಗಳ ಮೇಲೆ ದಾಳಿ ನಡೆಸಿತು ಎಂದು ಅಫ್ಘಾನಿಸ್ತಾನ ಹೇಳಿದೆ. ತನ್ನ ಪಡೆಗಳು 55 ಪಾಕಿಸ್ತಾನಿ ಸೈನಿಕರನ್ನು ಕೊಂದಿವೆ ಹಾಗೂ ಅದರ ಎರಡು ಸೇನಾ ನೆಲೆಗಳು ಮತ್ತು 19 ಸೇನಾ ಠಾಣೆಗಳನ್ನು ವಶಪಡಿಸಿಕೊಂಡಿವೆ ಎಂಬುದಾಗಿಯೂ ಅದು ಹೇಳಿಕೊಂಡಿದೆ. ಈ ಹೇಳಿಕೆಯನ್ನು ಪಾಕಿಸ್ತಾನ ತಳ್ಳಿಹಾಕಿದೆ.
ಮದುವೆ ಭರವಸೆ ನೀಡಿ ವಂಚಿಸಿದ ಕೇಸ್ಗಳಲ್ಲಿ ಬಂಧನ ಕಡ್ಡಾಯವಲ್ಲ: ಕರ್ನಾಟಕ ಹೈಕೋರ್ಟ್ ಆದೇಶ
ಮದುವೆ ಭರವಸೆ ನೀಡಿ ವಂಚನೆ ಎಸಗಿದ ಕೇಸ್ಗಳಲ್ಲಿ ಬಂಧನ ಕಡ್ಡಾಯವಲ್ಲ ಎಂದು ಕರ್ನಾಟಕ ಹೈಕೋರ್ಟ್ ಆದೇಶ ನೀಡಿದೆ. ಜತೆಗೆ ಎಫ್ಐಆರ್ ರದ್ದುಗೊಳಿಸಲು ಸೂಚನೆ ನೀಡಿದೆ. ಪ್ರಕರಣ ಹೆಚ್ಚಳ ಬಗ್ಗೆ ಹೈಕೋರ್ಟ್ ಕಳವಳ ವ್ಯಕ್ತಪಡಿಸಿದ್ದು, ಇದನ್ನು ತಡೆಯುಂತೆ ಸರ್ಕಾರಕ್ಕೆ ಸೂಚನೆ ನೀಡಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.
Kalaburagi | ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಆಶಾ ಕಾರ್ಯಕರ್ತೆಯರ ಪ್ರತಿಭಟನೆ
ಕಲಬುರಗಿ: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ, ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘ (ಎಐಯುಟಿಯುಸಿ)ದ ವತಿಯಿಂದ ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ನೀಡಲಾಯಿತು. ಕೇಂದ್ರ ಸರ್ಕಾರದ ಪ್ರೋತ್ಸಾಹಧನ ಹಾಗೂ ರಾಜ್ಯ ಸರ್ಕಾರದ ಗೌರವಧನ ಒಟ್ಟಿಗೆ ಸೇರಿಸಿ ಮಾಸಿಕ 15,000 ರೂ. ಗೌರವಧನ ನೀಡಬೇಕು, ಕಾಂಗ್ರೆಸ್ ಪಕ್ಷದ ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಿರುವಂತೆ ಆಶಾ ಕಾರ್ಯಕರ್ತೆಯರ ಗೌರವಧನವನ್ನು 5,000 ರೂ. ನಿಂದ 8,000 ರೂ. ಹೆಚ್ಚಿಸಬೇಕು, ನಿವೃತ್ತ ಆಶಾಗಳಿಗೆ ಪಶ್ಚಿಮ ಬಂಗಾಳ ಮಾದರಿಯಲ್ಲಿ ಇಡಿಗಂಟು ನೀಡಬೇಕು, ಚಿಕಿತ್ಸಾ ವೆಚ್ಚ ಮರುಪಾವತಿಗೆ ವ್ಯವಸ್ಥೆ ಮಾಡುವುದು, ಸೇರಿದಂತೆ ಇತರೆ ಬೇಡಿಕೆಗಳನ್ನು ಈಡೇರಿಸಬೇಕೆಂದು ಆಗ್ರಹಿಸಿದರು. ಪ್ರತಿಭಟನೆಯಲ್ಲಿ ಆಶಾ ಕಾರ್ಯಕರ್ತೆಯರ ಸಂಘದ ಜಿಲ್ಲಾ ಗೌರವಾಧ್ಯಕ್ಷ ವಿಜಿ.ದೇಸಾಯಿ, ಜಿಲ್ಲಾ ಅಧ್ಯಕ್ಷೆ ಶಿವಲಿಂಗಮ್ಮ ನಂದೂರು, ಕಾರ್ಯದರ್ಶಿ ಗೀತಾ ಬಡಗೇರ, ಎ.ಐ.ಯು.ಟಿ.ಯು.ಸಿ ಜಿಲ್ಲಾ ಉಪಾಧ್ಯಕ್ಷರಾದ ರಾಘವೇಂದ್ರ, ಮುಖಂಡರಾದ ಶರಣು ದೇವಕರ್, ನಾಗಮಣಿ ಚಿಂಚೋಳ್ಳಿ, ತಾಯಮ್ಮ ನರಬೋಳ, ಸುಗಂಧ ಚಿತ್ತಾಪೂರ. ನಾಗಮ್ಮ ಸೇಡಂ, ಭಾರತಿ ಅಫಜಲಪುರ, ದೇವಮ್ಮ ಆಳಂದ, ಸಂಗೀತ ಸಾವಳಗಿ, ವಿಜಯಲಕ್ಷ್ಮೀ ಕಲಬುರಗಿ ಹಲವರು ಪಾಲ್ಗೊಂಡಿದ್ದರು.
ಭಾರತ ಕ್ರಿಕೆಟ್ ತಂಡಕ್ಕೆ ಆಕಿಬ್ ನಬಿಗೆ ಅವಕಾಶ ನೀಡಬೇಕು: ಸೌರವ್ ಗಂಗುಲಿ
ಹೊಸದಿಲ್ಲಿ, ಫೆ.27: ಕರ್ನಾಟಕ ತಂಡದ ವಿರುದ್ಧ ರಣಜಿ ಟ್ರೋಫಿ ಟೂರ್ನಿಯ ಫೈನಲ್ ಪಂದ್ಯದಲ್ಲಿ ಐದು ವಿಕೆಟ್ ಗೊಂಚಲು ಪಡೆದಿರುವ ಜಮ್ಮು-ಕಾಶ್ಮೀರ ತಂಡದ ವೇಗದ ಬೌಲರ್ ಆಕಿಬ್ ನಬಿ ಬೆಂಬಲಕ್ಕೆ ನಿಂತಿರುವ ಭಾರತದ ಮಾಜಿ ನಾಯಕ ಸೌರವ್ ಗಂಗುಲಿ, ನಬಿ ಅವರನ್ನು ರಾಷ್ಟ್ರೀಯ ಕ್ರಿಕೆಟ್ ತಂಡಕ್ಕೆ ಪರಿಗಣಿಸುವಂತೆ ಆಗ್ರಹಿಸಿದ್ದಾರೆ. ನಬಿ 23 ಓವರ್ಗಳಲ್ಲಿ 54 ರನ್ಗೆ 5 ವಿಟ್ಗಳನ್ನು ಕಬಳಿಸಿ ಕರ್ನಾಟಕ ತಂಡವನ್ನು 293 ರನ್ಗೆ ಆಲೌಟ್ ಮಾಡುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಇದೀಗ ಈ ವರ್ಷ ಆಡಿರುವ 10 ರಣಜಿ ಪಂದ್ಯಗಳಲ್ಲಿ ಒಟ್ಟು 60 ವಿಕೆಟ್ಗಳನ್ನು ಕಬಳಿಸಿದ್ದು, 2025-26ರ ಸಾಲಿನ ರಣಜಿಯಲ್ಲಿ ಗರಿಷ್ಠ ವಿಕೆಟ್ ಪಡೆದ ಬೌಲರ್ಗಳ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದ್ದಾರೆ. ‘‘2026ರ ಜುಲೈಗೆ ಇಂಗ್ಲೆಂಡ್ ಕ್ರಿಕೆಟ್ ಪ್ರವಾಸ ಕೈಗೊಳ್ಳಲಿರುವ ಭಾರತದ ಸೀಮಿತ ಓವರ್ ಕ್ರಿಕೆಟ್ ತಂಡಕ್ಕೆ ನಬಿ ಅವರನ್ನು ಆಯ್ಕೆಗೆ ಪರಿಗಣಿಸಬೇಕು. ಪ್ರಯತ್ನ ಹಾಗೂ ಉದ್ದೇಶದಿಂದ ಏನೂ ಕೂಡ ಮಾಡಬಹುದು ಎಂಬುದನ್ನು ಇಡೀ ಜಗತ್ತಿಗೆ ಜಮ್ಮು-ಕಾಶ್ಮೀರ ತಂಡ ತೋರಿಸಿಕೊಟ್ಟಿದೆ. ಕ್ರಿಕೆಟಿಗರು ಕಾಶ್ಮೀರ ಪ್ರದೇಶದ ಬಗ್ಗೆ ಹೆಮ್ಮೆಪಡುವಂತೆ ಮಾಡಿದ್ದಾರೆ. ಕಠಿಣ ವಾತಾವರಣವು ಜನರನ್ನು ಕಠಿಣಗೊಳಿಸುತ್ತದೆ. ಆಕಿಬ್ ನಬಿ ರಾಷ್ಟ್ರೀಯ ತಂಡದ ಜೆರ್ಸಿ ಧರಿಸುವ ಹಾದಿಯಲ್ಲಿದ್ದಾರೆ’’ ಎಂದು ಎಕ್ಸ್ನಲ್ಲಿ ಗಂಗುಲಿ ಬರೆದಿದ್ದಾರೆ. ಭಾರತ ತಂಡವು ಇಂಗ್ಲೆಂಡ್ ಕ್ರಿಕೆಟ್ ಪ್ರವಾಸದ ವೇಳೆ ಐದು ಟಿ-20 ಹಾಗೂ ಮೂರು ಏಕದಿನ ಪಂದ್ಯಗಳನ್ನು ಆಡಲಿದೆ. ಈ ಸರಣಿಯು 2027ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ ಟೂರ್ನಿಯ ಪೂರ್ವ ತಯಾರಿಯ ಭಾಗವಾಗಿದೆ. ಕರ್ನಾಟಕ ಹಾಗೂ ಜಮ್ಮು-ಕಾಶ್ಮೀರ ನಡುವಿನ ರಣಜಿ ಟೂರ್ನಿಯ ಫೈನಲ್ ಪಂದ್ಯದಲ್ಲಿ ಕೇವಲ ಒಂದು ದಿನದಾಟ ಬಾಕಿ ಇದ್ದು, ಮೊದಲ ಇನಿಂಗ್ಸ್ ನಲ್ಲಿ 291 ರನ್ ಮುನ್ನಡೆಯ ಆಧಾರದಲ್ಲಿ ಜಮ್ಮು-ಕಾಶ್ಮೀರ ತನ್ನ ಚೊಚ್ಚಲ ಪ್ರಶಸ್ತಿ ಗೆಲ್ಲುವ ಸಾಧ್ಯತೆ ಇದೆ.
ಉಡುಪಿ ಜಿಲ್ಲಾಸ್ಪತ್ರೆ, ನಗರಸಭೆ, ವಿವಿಧ ಕಚೇರಿಗಳಿಗೆ ನ್ಯಾ.ವೀರಪ್ಪ ತಂಡ ಭೇಟಿ
ಉಡುಪಿ, ಫೆ.27: ಉಪ ಲೋಕಾಯುಕ್ತ ನ್ಯಾಯಮೂರ್ತಿಗಳು ಇಂದು ಅಜ್ಜರಕಾಡಿನಲ್ಲಿರುವ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿದ ವೇಳೆ ಆಸ್ಪತ್ರೆಯ ಔಷಧಿ ವಿತರಣಾ ಕೇಂದ್ರ, ನೋಂದಣಿ ಕೇಂದ್ರ, ಮಹಿಳಾ ವಾರ್ಡ್, ಪ್ರಯೋಗಾಲಯ, ರಕ್ತನಿಧಿ ಕೇಂದ್ರ, ಆಸ್ಪತ್ರೆಯ ಆಡಳಿತ ವಿಭಾಗಕ್ಕೆ ಭೇಟಿ ನೀಡಿ ಅಲ್ಲಿನ ವ್ಯವಸ್ಥೆಗಳನ್ನು ಹಾಗೂ ದಾಖಲೆಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿದರು. ರಕ್ತನಿಧಿ ಕೇಂದ್ರದ ರಿಜಿಸ್ಟರ್, ಡೇಕೇರ್ ಸೆಂಟರ್ಗಳನ್ನು ಪರಿಶೀಲಿಸಿದ ಅವರು, ಜನನ ಹಾಗೂ ಮರಣ ಪ್ರಮಾಣ ಪತ್ರಗಳು ಸಾಕಷ್ಟು ಸಂಖ್ಯೆಯಲ್ಲಿ ಅಲ್ಲಿರುವುದನ್ನು ಪರಿಶೀಲಿಸಿ ಅವುಗಳನ್ನು ತಕ್ಷಣವೇ ಸಂಬಂಧಪಟ್ಟವರಿಗೆ ಪೋಸ್ಟ್ ಮೂಲಕ ರವಾನೆ ಮಾಡಬೇಕೆಂದು ಸ್ಪಷ್ಟ ಸೂಚನೆ ನೀಡಿದರು. ಅಲ್ಲದೇ ಸಹಾಯಕ ಕಮಿಷನರ್ ರಶ್ಮಿ ಅವರಿಗೆ ಆಗಾಗ ಆಸ್ಪತ್ರೆಗೆ ಭೇಟಿ ನೀಡಿ ವ್ಯವಸ್ಥೆಗಳನ್ನು ಪರಿಶೀಲಿಸುತ್ತಿರುವಂತೆ ಸೂಚನೆ ನೀಡಿದರು. ಬಳಿಕ ಆಸ್ಪತ್ರೆಯ ಕ್ಯಾಂಟೀನ್ಗೆ ಭೇಟಿ ನೀಡಿ ಅಲ್ಲಿನ ಸ್ವಚ್ಛತೆ, ಸೇವೆ, ಅಡುಗೆ ಕೋಣೆಯ ನಿರ್ವಹಣೆ ಕುರಿತಂತೆ ತೀವ್ರ ಅಸಮಧಾನ ಸೂಚಿಸಿ ಕ್ಯಾಂಟೀನ್ ನಿರ್ವಹಣೆಯನ್ನು ಸಮರ್ಪಕವಾಗಿ ಮಾಡದೇ ಇರುವುದರಿಂದ ಕ್ಯಾಂಟಿನ್ ಬಂದ್ ಮಾಡಲು ಕ್ರಮಕೈಗೊಳ್ಳುವಂತೆ ಜಿಲ್ಲಾ ಸರ್ಜನ್ಗೆ ಸೂಚಿಸಿದರು. ಬಳಿಕ ನಗರಸಭೆಗೆ ಕಚೇರಿಗೆ ಹಠಾತ್ ಭೇಟಿ ಮಾಡಿದ ಅವರು, ಅಲ್ಲಿನ ಬಯೋಮೆಟ್ರಿಕ್ ವ್ಯವಸ್ಥೆ, ಕಳೆದ ಮೂರು ವರ್ಷಗಳಲ್ಲಿ ಕೈಗೊಂಡ ಕಾಮಗಾರಿಗಳ ವಿವರ, ವಾಹನಗಳ ನಿರ್ವಹಣೆ, ಆಸ್ತಿ ತೆರಿಗೆ ಸಂಗ್ರಹ, ಇ-ಆಸ್ತಿ ಮಾಡಲು ಬಾಕಿ ಇರುವ ಅರ್ಜಿಗಳ ವಿವರ, ಉದ್ದಿಮೆ ಪರವಾನಿಗೆ, ಪಾರ್ಕ್ಗಳ ನಿರ್ವಹಣೆ, ನಗರಸಭೆಯ ಭೂಮಿಯ ಅತಿಕ್ರಮ ಸೇರಿದಂತೆ ಹಲವು ವಿಷಯಗಳ ಮಾಹಿತಿ, ವಿವರಗಳನ್ನು ಕೇಳಿ ಪಡೆದರು. ನಗರಸಭೆಯ ಆದಾಯ, ಖರ್ಚಿನ ವಿವರ, ಮಾಡಿರುವ ವಿವಿಧ ಕಾಮಗಾರಿಗಳ ವಿವರ, ನಗರಸಭೆಗೆ ಬಂದಿರುವ ಅನುದಾನಗಳ ಮಾಹಿತಿ ನೀಡುವಂತೆ ಕೇಳಿ ಪಡೆದರಲ್ಲದೇ, ದಾಖಲೆಗಳ ಕುರಿತಂತೆ ಎತ್ತಿದ ಹಲವು ಪ್ರಶ್ನೆಗಳಿಗೆ ಸಮರ್ಪಕ ಉತ್ತರ ನೀಡದ ಸಿಬ್ಬಂದಿಗಳಿಗೆ ಎಚ್ಚರಿಕೆಯನ್ನು ನೀಡಿದರು. ಇಲ್ಲೂ ಹಲವರ ಮೇಲೆ ನ್ಯೂನ್ಯತೆಗಳ ಹಿನ್ನೆಲೆಯಲ್ಲಿ ದೂರು ಗಳನ್ನು ದಾಖಲಿಸಿಕೊಂಡರು. ಆರ್ಟಿಓ ಕಚೇರಿಗೆ ಭೇಟಿ: ಅಪರಾಹ್ನದ ಬಳಿಕ ಮಣಿಪಾಲದಲ್ಲಿರುವ ಆರ್ಟಿಓ ಕಚೇರಿಗೆ ಭೇಟಿ ನೀಡಿದ ಉಪ ಲೋಕಾಯುಕ್ತ ತಂಡ ಅಲ್ಲಿನ ನಿರ್ವಹಣೆಯಲ್ಲಿ ಪರಿಶೀಲಿಸಿತು. ಜಿಲ್ಲೆಯಲ್ಲಿ 6,16,478 ವಾಹನಗಳು ನೋಂದಾಣಿ ಯಾಗಿದ್ದು ಇವುಗಳಲ್ಲಿ 1165 ಶಾಲಾ ವಾಹನಗಳಿವೆ. ಶಾಲೆಯ 165 ವಾಹನಗಳಿಗೆ ಹರತ ಪತ್ರ (ಫಿಟ್ನೆಸ್ ಸರ್ಟಿಫಿಕೇಟ್) ಇಲ್ಲದೆ ಇರುವುದು ಕಂಡು ಬಂತು. ಇದರ ಜೊತೆಯಲ್ಲಿ 32488 ಇತರೆ ವಾಹನಗಳಿಗೂ ಫಿಟ್ನೆಸ್ ಸರ್ಟಿಫಿಕೇಟ್ ಇರಲಿಲ್ಲ. ಮುಂದಿನ ಹದಿನಾಲ್ಕು ದಿನಗಳ ಒಳಗೆ ಈ ಎಲ್ಲಾ ವಾಹನಗಳನ್ನು ಸೀಝ್ ಮಾಡಬೇಕೆಂದು ಅರ್ಟಿಓ ಇನ್ಸ್ಪೆಕ್ಟರ್ಗೆ ಉಪಲೋಕಾಯುಕ್ತರು ಪರಿಶೀಲನೆ ಸಂದರ್ಭದಲ್ಲಿ ಸೂಚನೆ ನೀಡಿದರು. ಮಣಿಪಾಲ ಪೊಲೀಸ್ ಠಾಣೆಗೆ: ಉಪಲೋಕಾಯುಕ್ತರು ತಂಡದೊಂದಿಗೆ ಮಣಿಪಾಲ ಪೊಲೀಸ್ ಠಾಣೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಅವರು ಠಾಣಾ ವ್ಯಾಪ್ತಿಯಲ್ಲಿ ಮಾದಕ ವಸ್ತುಗಳ ಸೇವನೆ ಮಾಡುತ್ತಿರು ವವರ ಮೇಲೆ, ಪೆಡ್ಲಿಂಗ್ ಮಾಡುತ್ತಿರುವವರ ಮೇಲೆ ಹಾಗೂ ಅದನ್ನು ಪ್ರೋತ್ಸಾಹಿಸುತ್ತಿರುವವರ ಮೇಲೂ ಪ್ರಕರಣ ದಾಖಲಿಸಬೇಕು. ತಪ್ಪಿದಲ್ಲಿ ನಿಮ್ಮ ಮೇಲೆ ಕ್ರಮ ತೆಗೆದುಕೊಳ್ಳಲಾಗುವುದು ಠಾಣಾಧಿಕಾರಿಗಳಿಗೆ ಎಚ್ಚರಿಕೆ ನೀಡಿದರು. ಮಣಿಪಾಲದಲ್ಲಿ ಉನ್ನತ ಶಿಕ್ಷಣಕ್ಕಾಗಿ ಹೊರರಾಜ್ಯಗಳಿಂದ ವಿದ್ಯಾರ್ಥಿಗಳು ಬರುತ್ತಾರೆ. ಇವರಲ್ಲಿ ಶ್ರೀಮಂತ ಹಾಗೂ ಬಡ ವಿದ್ಯಾರ್ಥಿ ಗಳು ಇರುತ್ತಾರೆ. ಅಮಾಯಕ ಬಡಹೆಣ್ಣು ಮಕ್ಕಳಿಗೆ ತೊಂದರೆಯಾಗದಂತೆ ಎಚ್ಚರಿಕೆ ವಹಿಸಬೇಕು ಎಂದರು. ಇದರೊಂದಿಗೆ ಮಣಿಪಾಲದಲ್ಲಿರುವ ಸಮಾಜ ಕಲ್ಯಾಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಪ್ರವಾಸೋದ್ಯಮ ಇಲಾಖೆ ಹಾಗೂ ಡಿಡಿಪಿಐ ಕಚೇರಿಗಳಿಗೂ ಉಪಲೋಕಾಯುಕ್ತ ಮತ್ತವರ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿತು.
Bidar | ರಾಶಿ ಯಂತ್ರಕ್ಕೆ ಸಿಲುಕಿ ಮಹಿಳೆ ಮೃತ್ಯು
ಬೀದರ್ : ಕಡಲೆ ರಾಶಿ ಮಾಡುವ ಯಂತ್ರಕ್ಕೆ ಸಿಲುಕಿ ಮಹಿಳೆಯೊಬ್ಬಳು ಮೃತಪಟ್ಟ ಘಟನೆ ಭಾಲ್ಕಿ ತಾಲೂಕಿನ ಹಲಬರ್ಗಾ ಗ್ರಾಮದಲ್ಲಿ ಶುಕ್ರವಾರ ಸಾಯಂಕಾಲ ನಡೆದಿದೆ. ಮೃತರನ್ನು ಹಲಬರ್ಗಾ ಗ್ರಾಮದ ನಿವಾಸಿ ಕಮಲಬಾಯಿ (62) ಎಂದು. ಕಮಲಬಾಯಿಯು ಹೊಲದಲ್ಲಿ ಕಡಲೆ ರಾಶಿ ಮಾಡುತ್ತಿದ್ದರು. ರಾಶಿ ಮಾಡುವ ಸಮಯದಲ್ಲಿ ಅಚಾನಕ್ಕಾಗಿ ರಾಶಿ ಮಾಡುವ ಯಂತ್ರಕ್ಕೆ ಸಿಲುಕಿದ್ದಾರೆ. ಪರಿಣಾಮವಾಗಿ ಅವರ ಕುತ್ತಿಗೆ ಭಾಗವು ಸಂಪೂರ್ಣವಾಗಿ ಯಂತ್ರಕ್ಕೆ ಸಿಲುಕಿ ಅವರ ದೇಹದಿಂದ ಬೆರ್ಪಟ್ಟಿದ್ದು, ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಈ ಘಟನೆಯು ಧನ್ನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ಕಾಂಗ್ರೆಸ್ ನಲ್ಲಿ ಮತ್ತೆ ಡಿನ್ನರ್ ಪಾಲಿಟಿಕ್ಸ್: ಶಾಸಕ ಬಾಲಕೃಷ್ಣ ಬರ್ತ್ ಡೇ ಪಾರ್ಟಿಯಲ್ಲಿ 32 ಶಾಸಕರು ಭಾಗಿ!
HC Balakrishna Birthday Party- ಕಾಂಗ್ರೆಸ್ ಪಕ್ಷದಲ್ಲಿ ನಾಯಕತ್ವ ವಿಚಾರದ ಬಗ್ಗೆ ಹೈಕಮಾಂಡ್ ಮೌನವಾಗಿರುವುದರಿಂದ ಇದೀಗ ಬಣ ರಾಜಕೀಯ ಚುರುಕುಗೊಂಡಿದೆ. ಒಂದು ಬಣದ ಶಾಸಕರ ಗುಂಪು ವಿದೇಶ ಪ್ರವಾಸ ಹೋದದ್ದಕ್ಕೆ ತಿರುಗೇಟು ನೀಡಲು ಡಿಕೆ ಶಿವಕುಮಾರ್ ಅವರ ಜೊತೆ ಗುರ್ತಿಸಿಕೊಂಡಿರುವ ಮತ್ತೊಂದು ಶಾಸಕರ ಬಣ ಗುರುವಾರ ರಾತ್ರಿ ಔತಣಕೂಟ ನಡೆಸಿದೆ. ಶಾಸಕ ಎಚ್ ಸಿ ಬಾಲಕೃಷ್ಣ ಅವರ ಬರ್ತ್ ಡೇ ಪಾರ್ಟಿಯಲ್ಲಿ 32ಕ್ಕೂ ಹೆಚ್ಚು ಮಂದಿ ಪಾಲ್ಗೊಂಡಿದ್ದರು ಎಂದು ತಿಳಿದು ಬಂದಿದೆ.
Kalaburagi | ಕುರಿಗಾರರಿಗೆ ಉಣ್ಣೆ ಸಂಸ್ಕರಣೆ, ಆಧುನಿಕ ತಂತ್ರಜ್ಞಾನದ ತರಬೇತಿ: ಪ್ರಮಾಣ ಪತ್ರ ವಿತರಣೆ
ಕಲಬುರಗಿ : ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ ಹಾಗೂ ಕೇಂದ್ರ ಉಣ್ಣೆ ಅಭಿವೃದ್ಧಿ ಮಂಡಳಿ ಇವರ ಸಂಯುಕ್ತ ಆಶ್ರಯದಲ್ಲಿ ಐದು ದಿನಗಳ ಉಣ್ಣೆ ಸಂಸ್ಕರಣೆ, ಮೌಲ್ಯವರ್ಧನೆ ಮತ್ತು ಯಾಂತ್ರಿಕೃತ ಉಣ್ಣೆ ಕಟಾವು ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಜಿಲ್ಲೆಯ ವಿವಿಧ ತಾಲ್ಲೂಕುಗಳಿಂದ ಸುಮಾರು 50 ಮಂದಿ ಕುರಿ ಸಾಕಾಣಿಕೆದಾರರು ಶಿಬಿರದಲ್ಲಿ ಭಾಗವಹಿಸಿ ತಾಂತ್ರಿಕ ಜ್ಞಾನ ಪಡೆದರು. ಪ್ರಮಾಣಪತ್ರ ವಿತರಣೆ : ನಿಗಮದ ಅಧ್ಯಕ್ಷ ದೇವಿಂದ್ರಪ್ಪ ಮರ್ತೂರ ಅವರು ತರಬೇತಿದಾರರಿಗೆ ಪ್ರಮಾಣಪತ್ರ ಹಾಗೂ ವಲಸೆ ಕುರಿಗಾರರಿಗೆ ಗುರುತಿನ ಚೀಟಿಗಳನ್ನು ವಿತರಿಸಿದರು. ಶೀಘ್ರದಲ್ಲೇ ಕುರಿಗಾರರಿಗೆ ಅಗತ್ಯವಿರುವ ಜಂತು ನಾಶಕ ಔಷಧಿ ಮತ್ತು ಪರಿಕರ ಕಿಟ್ಗಳನ್ನು ವಿತರಿಸಲಾಗುವುದು ಎಂದು ಭರವಸೆ ನೀಡಿದರು. ಕುರಿ/ಮೇಕೆ ಸಾಕಾಣಿಕೆಗಾಗಿ ಸಹಾಯಧನ ನೀಡುವ ಬಗ್ಗೆ ಮುಖ್ಯಮಂತ್ರಿಗಳ ಗಮನಕ್ಕೆ ತರುವುದಾಗಿ ತಿಳಿಸಿದರು. ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ ಉಪ ನಿರ್ದೇಶಕ ಡಾ. ಸಂಜಯ್ ರೆಡ್ಡಿ ಅವರು ಕುರಿ ಮತ್ತು ಮೇಕೆಗಳಿಗೆ ಕಾಲಕಾಲಕ್ಕೆ ಲಸಿಕೆ ಹಾಗೂ ಚಿಕಿತ್ಸೆಯ ಮಹತ್ವವನ್ನು ವಿವರಿಸಿದರು. ನಿಗಮದ ಉಪ ನಿರ್ದೇಶಕ ಡಾ. ರವೀಂದ್ರನಾಥ ಅವರು ತರಬೇತಿಯ ಉದ್ದೇಶ ಮತ್ತು ಕಾರ್ಯವಿಧಾನಗಳ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು. ಪಶುವೈದ್ಯಕೀಯ ಪರಿಕ್ಷಕರ ತರಬೇತಿ ಕೇಂದ್ರ ಉಪ ನಿರ್ದೇಶಕ ಡಾ. ದಯಾನಂದ ಹಕ್ಕಾಪಕ್ಕಿ ಅವರು ಹೊಸದಾಗಿ ಕುರಿ/ಮೇಕೆ ಸಾಕಾಣಿಕೆ ಆರಂಭಿಸಲು ಆಸಕ್ತಿ ಇರುವ ರೈತರು ಕಚೇರಿಗೆ ಭೇಟಿ ನೀಡಿ ಅರ್ಜಿ ಸಲ್ಲಿಸಲು ಕೋರಿದರು. ಡಾ. ಶಂಕರ ಕಣ್ಣಿ ಕಾರ್ಯಕ್ರಮದ ಸ್ವಾಗತ ಮತ್ತು ನಿರೂಪಣೆ ಮಾಡಿದರು.
ಕೇರಳ | ನಟಿಗೆ ಲೈಂಗಿಕ ಕಿರುಕುಳ ಪ್ರಕರಣ : ನಟ ದಿಲೀಪ್ ಖುಲಾಸೆ ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿದ ಕೇರಳ ಸರಕಾರ
ಕೊಚ್ಚಿ, ಫೆ. 27: 2017ರ ನಟಿಯ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಮಲೆಯಾಳಂ ಸಿನೆಮಾ ನಟ ದಿಲೀಪ್ ಹಾಗೂ ಇತರರ ಖುಲಾಸೆ ಪ್ರಶ್ನಿಸಿ ಕೇರಳ ಸರಕಾರ ಶುಕ್ರವಾರ ಉಚ್ಚ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿದೆ. ಈ ಪ್ರಕರಣದಲ್ಲಿ 20 ವರ್ಷಗಳ ಕಠಿಣ ಜೈಲು ಶಿಕ್ಷೆಗೆ ಗುರಿಯಾದ ಆರು ಜನರಿಗೆ ಶಿಕ್ಷೆಯನ್ನು ಹೆಚ್ಚಿಸುವಂತೆ ಕೂಡ ರಾಜ್ಯ ಸರಕಾರ ತನ್ನ ಮೇಲ್ಮನವಿಯಲ್ಲಿ ಕೋರಿದೆ. ಪ್ರಕರಣದ 8ನೇ ಆರೋಪಿ ದಿಲೀಪ್ ಅಲ್ಲದೆ, ಚಾರ್ಲಿ ತೋಮಸ್(ಎ7), ಸನಿಲ್ ಕುಮಾರ್ ಆಲಿಯಾಸ್ ಮೇಸ್ತ್ರಿ ಸನಿಲ್ (ಎ9) ಹಾಗೂ ಶರತ್ (ಎ15)- ಈ ಮೂವರನ್ನು ವಿಚಾರಣಾ ನ್ಯಾಯಾಲಯ ಖುಲಾಸೆಗೊಳಿಸಿದೆ. ಪ್ರಕರಣದ ಮೊದಲ ಆರು ಆರೋಪಿಗಳಾದ ಸುನಿ (ಪಲ್ಸರ್ ಸುನಿ), ಮಾರ್ಟಿನ್ ಆ್ಯಂಟನಿ, ಮಣಿಕಂಠನ್ ಬಿ., ವಿಜೇಶ್ ವಿ.ಪಿ, ಸಲೀಮ್ ಎಚ್. ಹಾಗೂ ಪ್ರದೀಪ್ನನ್ನು ವಿಚಾರಣಾ ನ್ಯಾಯಾಲಯ ದೋಷಿಗಳೆಂದು ಘೋಷಿಸಿತ್ತು. ಈ ಮೇಲ್ಮನವಿ ಮುಂದಿನ ವಾರ ವಿಚಾರಣೆಗೆ ಬರುವ ಸಾಧ್ಯತೆ ಇದೆ ಎಂದು ರಾಜ್ಯ ಸರಕಾರದ ಪರ ವಕೀಲರು ತಿಳಿಸಿದ್ದಾರೆ.
ಒಡಿಶಾ ಗ್ರಾಮವನ್ನು ತಪ್ಪಾಗಿ ಪ್ರವೇಶಿಸಿದ ಪಶ್ಚಿಮ ಬಂಗಾಳದ ಅಧಿಕಾರಿಗಳ ಮೇಲೆ ಹಲ್ಲೆ : 72 ಜನರ ಬಂಧನ
ಬಾಲಾಸೋರ್,ಫೆ.27: ಪ.ಬಂಗಾಳದಲ್ಲಿ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆಗಾಗಿ (ಎಸ್ಐಆರ್) ನಿಯೋಜಿತ ಇಬ್ಬರು ಅಧಿಕಾರಿಗಳು ತಪ್ಪಾಗಿ ನೆರೆಯ ಒಡಿಶಾದ ಗ್ರಾಮವನ್ನು ಪ್ರವೇಶಿಸಿದ್ದು, ಸ್ಥಳೀಯರು ಮಕ್ಕಳ ಕಳ್ಳತನದ ಗುಂಪಿನ ಸದಸ್ಯರೆಂದು ಶಂಕಿಸಿ ಅವರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಪೋಲಿಸರು ಶುಕ್ರವಾರ ತಿಳಿಸಿದರು. ಘಟನೆ ಬುಧವಾರ ನಡೆದಿದ್ದು,ಅಧಿಕಾರಿಗಳು ಪ.ಬಂಗಾಳದೊಂದಿಗೆ ಗಡಿಯನ್ನು ಹಂಚಿಕೊಂಡಿರುವ ರಾಯ್ಬನಿಯಾ ಗ್ರಾಮವನ್ನು ಪ್ರವೇಶಿಸಿದ್ದರು. ಎಸ್ಐಆರ್ ಕೆಲಸಕ್ಕಾಗಿ ಅವರು ಪ.ಬಂಗಾಳದ ನಯಾಗ್ರಾಮ್ ಬ್ಲಾಕ್ನ ಗ್ರಾಮವೊಂದಕ್ಕೆ ಭೇಟಿ ನೀಡಬೇಕಿತ್ತು,ಆದರೆ ಅವರು ಬಾಡಿಗೆಗೆ ಪಡೆದಿದ್ದ ಆಟೋರಿಕ್ಷಾದ ಚಾಲಕನಿಗೆ ಆ ಗ್ರಾಮವನ್ನು ಪತ್ತೆ ಹಚ್ಚಲು ಸಾಧ್ಯವಾಗದೆ ‘ತಪ್ಪಾಗಿ’ ನೆರೆಯ ಒಡಿಶಾದ ಗ್ರಾಮವನ್ನು ಪ್ರವೇಶಿಸಿದ್ದರು. ಸ್ಥಳೀಯರು ಅವರನ್ನು ಮಕ್ಕಳ ಕಳ್ಳತನ ತಂಡದ ಸದಸ್ಯರೆಂದು ಶಂಕಿಸಿ ಅವರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಪೊಲೀಸರು ತಿಳಿಸಿದರು. ಮಾಹಿತಿ ತಿಳಿದು ಸ್ಥಳಕ್ಕೆ ಧಾವಿಸಿದ ಸ್ಥಳೀಯ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದ ಗುಂಪು ಅವರ ಮೇಲೂ ಹಲ್ಲೆ ನಡೆಸಿತ್ತು. ಅಂತೂ ಕೊನೆಗೂ ಅಧಿಕಾರಿಗಳನ್ನು ಗುಂಪಿನಿಂದ ರಕ್ಷಿಸುವಲ್ಲಿ ಪೊಲೀಸರು ಸಫಲರಾಗಿದ್ದರು. ಕಾನೂನು ಉಲ್ಲಂಘನೆಗಾಗಿ ಎರಡು ಪ್ರಕರಣಗಳು ದಾಖಲಾಗಿದ್ದು,ಈವರೆಗೆ 72 ಜನರನ್ನು ಬಂಧಿಸಲಾಗಿದೆ. ಉಳಿದವರಿಗಾಗಿ ಶೋಧ ಕಾರ್ಯಾಚರಣೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದರು. ಗಾಯಗೊಂಡಿದ್ದ ಅಧಿಕಾರಿಗಳನ್ನು ರಾಯ್ಬನಿಯಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆಯ ಬಳಿಕ ಅದೇ ದಿನ ಬಿಡುಗಡೆಗೊಳಿಸಲಾಗಿದೆ.
ಮಾ.1ರಿಂದ ಮಂಗಳೂರು-ಮಸ್ಕತ್ ಮಧ್ಯೆ ನೇರ ವಿಮಾನಯಾನ ಸೇವೆ ಆರಂಭ: ಸಂಸದ ಬ್ರಿಜೇಶ್ ಚೌಟ
ಮಂಗಳೂರು, ಫೆ.27: ದ.ಕ., ಉಡುಪಿ ಹಾಗೂ ಕೇರಳ ರಾಜ್ಯದ ಪ್ರಯಾಣಿಕರು ಮತ್ತು ಅನಿವಾಸಿ ಭಾರತೀಯರ ಬಹುಕಾಲದ ಬೇಡಿಕೆಯಂತೆ ಮಂಗಳೂರು ಮತ್ತು ಮಸ್ಕತ್ ಮಧ್ಯೆ ನೇರ ವಿಮಾನಯಾನ ಸೇವೆಯು ಮಾ.1ರಿಂದ ಪುನರಾರಂಭಗೊಳ್ಳಲಿದೆ ಎಂದು ಸಂಸದ ಬ್ರಿಜೇಶ್ ಚೌಟ ತಿಳಿಸಿದ್ದಾರೆ. ಈ ಬಗ್ಗೆ ಪ್ರಕಟನೆ ನೀಡಿರುವ ಅವರು ಕರಾವಳಿ ಭಾಗದಿಂದ ಹೆಚ್ಚಿನ ಸಂಖ್ಯೆಯ ಜನರು ಉದ್ಯೋಗ ಮತ್ತು ವ್ಯಾಪಾರ ನಿಮಿತ್ತ ಮಸ್ಕತ್ಗೆ ಪ್ರಯಾಣಿಸುತ್ತಿರುವ ಹಿನ್ನೆಲೆಯಲ್ಲಿ ಈ ಸೇವೆಗೆ ಹೆಚ್ಚಿನ ಒತ್ತಾಯ ಕೇಳಿಬಂದಿತ್ತು. ಈ ಹಿನ್ನಲೆಯಲ್ಲಿ ತಾನು ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯಕ್ಕೆ ಪತ್ರ ವ್ಯವಹಾರ ನಡೆಸಿ, ವಿಮಾನಯಾನ ಪುನಾರಂಭಿಸುವಂತೆ ಮನವಿ ಮಾಡಿದ್ದೆ. ಅದರಂತೆ ಏರ್ ಇಂಡಿಯಾ ಎಕ್ಸ್ಪ್ರೆಸ್ ವತಿಯಿಂದ ಈ ವಿಮಾನ ಹಾರಾಟ ನಡೆಯಲಿದೆ ಎಂದಿದ್ದಾರೆ. ಸದ್ಯದ ವೇಳಾಪಟ್ಟಿಯ ಪ್ರಕಾರ ವಾರದಲ್ಲಿ ಎರಡು ದಿನ ಅಂದರೆ ಪ್ರತಿ ರವಿವಾರ ಮತ್ತು ಮಂಗಳವಾರ ಏರ್ ಇಂಡಿಯಾ ಎಕ್ಸ್ಪ್ರೆಸ್ ವಿಮಾನ ಹಾರಾಟ ನಡೆಸಲಿದೆ. ಈ ನೇರ ಸೇವೆಯಿಂದಾಗಿ ಪ್ರಯಾಣದ ಸಮಯ ಉಳಿತಾಯವಾಗುವುದಲ್ಲದೆ ಅನಿವಾಸಿ ಭಾರತೀಯರಿಗೆ ತಮ್ಮ ಊರುಗಳಿಗೆ ನೇರವಾಗಿ ಪ್ರಯಾಣಿಸಲು ಬಹಳಷ್ಟು ಅನುಕೂಲವಾಗಲಿದೆ ಎಂದು ತಿಳಿಸಿದ್ದಾರೆ. ಮಂಗಳೂರು-ಮಸ್ಕತ್ ನೇರ ವಿಮಾನಯಾನ ಸೇವೆಯು ಹಠಾತ್ ಸ್ಥಗಿತಗೊಂಡ ಕಾರಣ ಮಸ್ಕತ್ನಲ್ಲಿ ನೆಲೆಸಿರುವ ಕರಾವಳಿ ಭಾಗದ ಸಾವಿರಾರು ಪ್ರಯಾಣಿಕರಿಗೆ ತೀವ್ರ ಸಂಕಷ್ಟ ಎದುರಾಗಿತ್ತು. ಮಸ್ಕತ್ನಿಂದ ಮಂಗಳೂರಿಗೆ ಬರಬೇಕಾದವರು ದೆಹಲಿ, ಮುಂಬೈ ಅಥವಾ ಕಣ್ಣೂರು ಮೂಲಕ ಸುತ್ತಿ ಬಳಸಿ ಪ್ರಯಾಣಿಸಬೇಕಾದ ಅನಿವಾರ್ಯತೆ ಇತ್ತು. ಈ ಸಮಸ್ಯೆಯನ್ನು ಮನಗಂಡು ನಾವು ನಡೆಸಿದ ನಿರಂತರ ಪ್ರಯತ್ನ ಹಾಗೂ ಮನವಿಗೆ ಸ್ಪಂದಿಸಿ, ಮಾ.1ರಿಂದ ಈ ಸೇವೆಯನ್ನು ಪುನರಾರಂಭಿಸಲು ಕ್ರಮ ಕೈಗೊಂಡ ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರಕ್ಕೆ ಹಾಗೂ ಕೇಂದ್ರ ನಾಗರಿಕ ವಿಮಾನಯಾನ ಸಚಿವ ರಾಮ್ ಮೋಹನ್ ನಾಯ್ಡು ಕಿಂಜರಾಪುಗೆ ಅಭಾರಿಯಾಗಿದ್ದೇನೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಇರಾನ್ನಿಂದ ತಕ್ಷಣ ನಿರ್ಗಮಿಸಲು ಚೀನಾದ ನಾಗರಿಕರಿಗೆ ಸೂಚನೆ
ಬೀಜಿಂಗ್, ಫೆ.27: ಇರಾನ್ ಮತ್ತು ಅಮೆರಿಕ ನಡುವಿನ ಉದ್ವಿಗ್ನತೆ ಹೆಚ್ಚುತ್ತಿರುವಂತೆಯೇ ಇರಾನ್ಗೆ ಪ್ರಯಾಣಿಸುವುದನ್ನು ತಪ್ಪಿಸುವಂತೆ ಚೀನಾ ತನ್ನ ಪ್ರಜೆಗಳಿಗೆ ಸಲಹೆ ನೀಡಿದ್ದು ಇರಾನ್ನಲ್ಲಿ ಇರುವ ಚೀನೀ ಪ್ರಜೆಗಳು ಭದ್ರತಾ ಪರಿಸ್ಥಿತಿಯ ಹಿನ್ನೆಲೆಯಲ್ಲಿ ತಕ್ಷಣ ನಿರ್ಗಮಿಸುವಂತೆ ಸೂಚಿಸಿರುವುದಾಗಿ ಸರಕಾರಿ ಸ್ವಾಮ್ಯದ ಕ್ಸಿನ್ಹುವ ಸುದ್ದಿಸಂಸ್ಥೆ ಶುಕ್ರವಾರ ವರದಿ ಮಾಡಿದೆ. ವಾಣಿಜ್ಯ ವಿಮಾನಗಳು ಈಗ ಲಭ್ಯವಿರುವ ಕಾರಣ ಆದಷ್ಟು ಬೇಗ ದೇಶದಿಂದ ನಿರ್ಗಮಿಸುವಂತೆ ಇರಾನ್ನಲ್ಲಿರುವ ಚೀನಾದ ನಾಗರಿಕರಿಗೆ ಇರಾನ್ನಲ್ಲಿನ ಚೀನಾದ ರಾಯಭಾರಿ ಕಚೇರಿ ಶುಕ್ರವಾರ ಸೂಚಿಸಿರುವುದಾಗಿ ವರದಿ ಹೇಳಿದೆ.
ಪರಮಾಣು ಮಾತುಕತೆಯಲ್ಲಿ ಒಪ್ಪಂದಕ್ಕೆ ಬರಬೇಕಾದರೆ ಅಮೆರಿಕ ತನ್ನ ಅತಿಯಾದ ಬೇಡಿಕೆಗಳನ್ನು ಕೈಬಿಡಬೇಕು : ಇರಾನ್
ಟೆಹ್ರಾನ್, ಫೆ.27: ಪರಮಾಣು ಮಾತುಕತೆಯಲ್ಲಿ ಒಪ್ಪಂದಕ್ಕೆ ಬರಬೇಕಾದರೆ ಅಮೆರಿಕ ತನ್ನ ಅತಿಯಾದ ಬೇಡಿಕೆಗಳನ್ನು ಕೈಬಿಡಬೇಕು ಎಂದು ಇರಾನ್ನ ವಿದೇಶಾಂಗ ಸಚಿವ ಅಬ್ಬಾಸ್ ಅರಾಘ್ಚಿ ಶುಕ್ರವಾರ ಹೇಳಿದ್ದಾರೆ. ಪರಮಾಣು ಒಪ್ಪಂದದ ಬಗ್ಗೆ ಅಮೆರಿಕ ಮತ್ತು ಇರಾನ್ ನಿಯೋಗಗಳ ನಡುವೆ ಜಿನೆವಾದಲ್ಲಿ ಮಾತುಕತೆ ನಡೆದ ಬಳಿಕ ಮಾಧ್ಯಮದವರ ಜೊತೆ ಮಾತನಾಡಿದ ಅಬ್ಬಾಸ್ ಅರಾಘ್ಚಿ ` ಈ ಹಾದಿಯಲ್ಲಿನ ಯಶಸ್ಸಿಗೆ ಇನ್ನೊಂದು ಕಡೆಯಿಂದ ಗಂಭೀರತೆ ಮತ್ತು ವಾಸ್ತವಿಕತೆಯ ಅಗತ್ಯವಿದೆ ಹಾಗೂ ಯಾವುದೇ ತಪ್ಪು ಲೆಕ್ಕಾಚಾರ ಮತ್ತು ಅತಿಯಾದ ಬೇಡಿಕೆಗಳನ್ನು ಕೈಬಿಡಬೇಕು' ಎಂದು ಹೇಳಿದರು. ಯಾವ ಬೇಡಿಕೆ ಎಂಬುದನ್ನು ಇರಾನ್ ಸ್ಪಷ್ಟಪಡಿಸಿಲ್ಲ, ಆದರೆ ಇರಾನ್ನ ಬ್ಯಾಲಿಸ್ಟಿಕ್ ಕ್ಷಿಪಣಿ ಯೋಜನೆ ಮತ್ತು ಯುರೇನಿಯಂ ಸಂವರ್ಧನೆ ಸಾಮರ್ಥ್ಯದ ಬಗ್ಗೆ ಅಮೆರಿಕ ನಿರಂತರ ಪ್ರಸ್ತಾಪಿಸುತ್ತಿದೆ. ಅಮೆರಿಕದ ಸಾಗರೋತ್ತರ ನೆಲೆಗಳು ಹಾಗೂ ಯುರೋಪ್ಗೆ ಬೆದರಿಕೆ ಒಡ್ಡಬಲ್ಲ ಕ್ಷಿಪಣಿಗಳನ್ನು ಇರಾನ್ ಈಗಾಗಲೇ ಅಭಿವೃದ್ಧಿಪಡಿಸಿದೆ. ಮತ್ತು ಅವರು ಶೀಘ್ರದಲ್ಲೇ ಅಮೆರಿಕವನ್ನು ತಲುಪಬಲ್ಲ ಕ್ಷಿಪಣಿಗಳನ್ನು ನಿರ್ಮಿಸಲು ಕೆಲಸ ಮಾಡುತ್ತಿದ್ದಾರೆ ಎಂದು ಟ್ರಂಪ್ ಇತ್ತೀಚೆಗೆ ಹೇಳಿದ್ದರು.
ಇಸ್ರೇಲ್ನಿಂದ ತಕ್ಷಣ ನಿರ್ಗಮಿಸಲು ರಾಯಭಾರಿ ಕಚೇರಿ ಸಿಬ್ಬಂದಿಗೆ ಅಮೆರಿಕ ಸೂಚನೆ
ವಾಷಿಂಗ್ಟನ್, ಫೆ.27: ಭದ್ರತಾ ಕಾಳಜಿಯ ಹಿನ್ನೆಲೆಯಲ್ಲಿ ದೇಶವನ್ನು ತಕ್ಷಣ ತೊರೆಯುವಂತೆ ಇಸ್ರೇಲ್ ರಾಯಭಾರಿ ಕಚೇರಿಯ ಸಿಬ್ಬಂದಿಗೆ ಅಮೆರಿಕದ ರಾಯಭಾರಿ ಮೈಕ್ ಹಕಾಬಿ ಗುರುವಾರ ಸೂಚಿಸಿರುವುದಾಗಿ ವರದಿಯಾಗಿದೆ. ಇಸ್ರೇಲನ್ನು ತೊರೆಯಲು ಇಚ್ಚಿಸುವವರು ತಕ್ಷಣ ನಿರ್ಗಮಿಸಬೇಕು. ತಕ್ಷಣ ಬೆನ್-ಗ್ಯುರಿಯೊನ್ ವಿಮಾನ ನಿಲ್ದಾಣದಿಂದ ತೆರಳುವ ವಿಮಾನಗಳಲ್ಲಿ ಟಿಕೆಟನ್ನು ಖಾತರಿಪಡಿಸಿಕೊಳ್ಳಬೇಕು ಎಂದು ಇಸ್ರೇಲ್ನಲ್ಲಿರುವ ಅಮೆರಿಕ ರಾಯಭಾರಿ ಕಚೇರಿಯ ಸಿಬ್ಬಂದಿಗಳಿಗೆ ಗುರುವಾರ ತಡರಾತ್ರಿ ಇ-ಮೇಲ್ ಮೂಲಕ ಸೂಚನೆ ರವಾನಿಸಿರುವುದಾಗಿ ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ. `ರಾಯಭಾರಿ ಕಚೇರಿಯು `ಅಧಿಕೃತ ನಿರ್ಗಮನ' ದರ್ಜೆಗೆ ಬದಲಾಗಿದ್ದು ತುರ್ತು ಅಗತ್ಯವಿಲ್ಲದ ಸಿಬ್ಬಂದಿ ಮತ್ತವರ ಕುಟುಂಬ ಸದಸ್ಯರನ್ನು ಸರಕಾರದ ವೆಚ್ಚದಲ್ಲಿ ನಿರ್ಗಮಿಸಲು ಅವಕಾಶವಿದೆ. ವಿದೇಶಾಂಗ ಇಲಾಖೆಯೊಂದಿಗೆ ಸಮಾಲೋಚಿಸಿದ ಬಳಿಕ ಈ ಮುನ್ನೆಚ್ಚರಿಕೆ ಕ್ರಮವನ್ನು ಕೈಗೊಳ್ಳಲಾಗಿದೆ. ಆದರೆ ಗಾಭರಿಗೊಳ್ಳುವ ಅಗತ್ಯವಿಲ್ಲ ಎಂದು ಮೈಕ್ ಹಕಾಬಿ ಹೇಳಿದ್ದಾರೆ. ಅಮೆರಿಕವು ಇರಾನ್ ಮೇಲೆ ನಡೆಸಬಹುದಾದ ದಾಳಿಗೆ ಇಸ್ರೇಲ್ ಕೂಡಾ ಕೈಜೋಡಿಸಬಹುದು. ಆಗ ಇಸ್ರೇಲ್ ವಿರುದ್ದವೂ ಇರಾನ್ ಪ್ರತೀಕಾರದ ಕ್ರಮ ಕೈಗೊಳ್ಳಬಹುದು.
Kalaburagi | ಮಕ್ಕಳ ಜೊತೆ ಪಾಲಕರು ಬೆರೆತು ಸಾಗಬೇಕು: ಜಯಶ್ರೀ ಮತ್ತಿಮಡು
ಕಲಬುರಗಿ : ಈ ಶತಮಾನದ ಮಕ್ಕಳು ಅತ್ಯಂತ ಕ್ರಿಯಾಶೀಲರಾಗಿದ್ದು, ಅವರ ಆಸಕ್ತಿಗೆ ಅನುಗುಣವಾಗಿ ಪಾಲಕರು ಮಕ್ಕಳ ಜೊತೆ ಬೆರೆಯಬೇಕು ಎಂದು ಸಮಾಜಸೇವಕಿ ಜಯಶ್ರೀ ಮತ್ತಿಮಡು ಅಭಿಪ್ರಾಯಪಟ್ಟರು. ನಗರದ ಗುಬ್ಬಿ ಕಾಲೋನಿಯಲ್ಲಿರುವ ಮಾತೋಶ್ರೀ ಸರೋಜಾ ಸುಭಾಷ್ ಗುತ್ತೇದಾರ ಪಬ್ಲಿಕ್ ಶಾಲೆಯ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪಾಲಕರು ಮಕ್ಕಳ ಮುಂದೆ ಗಂಟೆಗಟ್ಟಲೆ ಮೊಬೈಲ್ ಬಳಕೆ ಮಾಡುತ್ತಿರುವುದು ಮಕ್ಕಳ ಮೇಲೂ ಪರಿಣಾಮ ಬೀರುತ್ತಿದೆ. ಮೊದಲು ಪಾಲಕರು ಅತಿಯಾದ ಮೊಬೈಲ್ ಬಳಕೆಯಿಂದ ದೂರವಿರಬೇಕು ಎಂದು ಸಲಹೆ ನೀಡಿದರು. ಮಕ್ಕಳಿಗೆ ಪಠ್ಯಕ್ರಮ ಎಷ್ಟು ಮುಖ್ಯವೋ, ಪಠ್ಯೇತರ ಚಟುವಟಿಕೆಗಳೂ ಅಷ್ಟೇ ಮುಖ್ಯ. ಪ್ರತಿಯೊಬ್ಬ ವಿದ್ಯಾರ್ಥಿಯೂ ಶಿಕ್ಷಣದ ಜೊತೆಗೆ ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸಬೇಕು. ಉತ್ತಮ ಶಿಕ್ಷಣದೊಂದಿಗೆ ಉತ್ತಮ ದೇಹದಾರ್ಢ್ಯ ಹಾಗೂ ಆರೋಗ್ಯವೂ ಅಗತ್ಯವೆಂದು ಹೇಳಿದರು. ಸಂಸ್ಥೆಯ ಅಧ್ಯಕ್ಷ ಹಾಗೂ ಮಾಜಿ ಶಾಸಕ ಸುಭಾಷ್ ಗುತ್ತೇದಾರ ಮಾತನಾಡಿ, ನಾಗರಿಕ ಸಮಾಜದಲ್ಲಿ ಹಬ್ಬ ಹರಿದಿನಗಳನ್ನು ಆಚರಿಸುವಂತೆ ಶಾಲಾ-ಕಾಲೇಜುಗಳಲ್ಲಿ ನಡೆಯುವ ವಾರ್ಷಿಕೋತ್ಸವಗಳು ಮಕ್ಕಳಿಗೆ ಹಬ್ಬದ ಸನ್ನಿವೇಶವನ್ನು ಸೃಷ್ಟಿಸುತ್ತವೆ. ಇಲ್ಲಿ ಎಲ್ಲಾ ಧರ್ಮಗಳ ಸಮನ್ವಯತೆಯನ್ನು ಕಾಣಬಹುದಾಗಿದ್ದು, ಮಕ್ಕಳ ಪ್ರತಿಭಾ ಪ್ರದರ್ಶನ ಪೋಷಕರಿಗೆ ಸ್ಪಷ್ಟವಾಗುತ್ತದೆ ಎಂದರು. ಸಂಸ್ಥೆಯ ಆಡಳಿತಾಧಿಕಾರಿ ಹಣಮಂತ ಶೇರಿ ಮಾತನಾಡಿ, ಗುಣಾತ್ಮಕ ಶಿಕ್ಷಣಕ್ಕೆ ಒತ್ತು ನೀಡುವ ಶಾಲೆಗಳ ಪೈಕಿ ನಮ್ಮ ಶಾಲೆ ಪ್ರಥಮ ಸ್ಥಾನದಲ್ಲಿದೆ. ಪಠ್ಯ ಶಿಕ್ಷಣದ ಜೊತೆಗೆ ಮಾನವೀಯ ಮೌಲ್ಯಗಳನ್ನು ಕಲಿಸಲಾಗುತ್ತಿದೆ. ಇದೇ ಕಾರಣದಿಂದ ಶಾಲೆಯಲ್ಲಿ ದಾಖಲಾತಿಗೆ ಕೊರತೆಯಿಲ್ಲ ಎಂದು ಹೇಳಿದರು. ಹಿರಿಯ ಸಮಾಜಸೇವಕಿ ಜ್ಯೋತಿ ಗುತ್ತೇದಾರ ಕೂಡ ಕಾರ್ಯಕ್ರಮದಲ್ಲಿ ಮಾತನಾಡಿದರು. ಶಿಕ್ಷಕಿಯರಾದ ಪೂಜಾ, ಶಿವಲೀಲಾ ನಿರೂಪಿಸಿದರು. ಪ್ರಿಯಾಂಕಾ ಸ್ವಾಗತಿಸಿದರೆ, ಅರ್ಚನಾ ವಂದಿಸಿದರು. ಪ್ರಾಚಾರ್ಯೆ ಐಶ್ವರ್ಯಾ ದುರ್ಗೆ ಅಧ್ಯಕ್ಷತೆ ವಹಿಸಿದ್ದರು.
ಗೆಳೆಯನೊಂದಿಗೆ ತೆರಳಿದ್ದ ಯುವಕ ನಾಪತ್ತೆ
ಕಾಪು: ಗೆಳೆಯನೊಂದಿಗೆ ಮಂಗಳೂರಿಗೆ ಕಾರಿನಲ್ಲಿ ಹೋಗಿದ್ದ ವ್ಯಕ್ತಿಯೊಬ್ಬರು ನಾಪತ್ತೆಯಾಗಿರುವ ಬಗ್ಗೆ ವರದಿಯಾಗಿದೆ. ಮಲ್ಲಾರು ಗ್ರಾಮದ ನಿವಾಸಿ ಮಣಿಕಂಠ(36) ಎಂಬವರು ಜಾಕೀರ್ ಎಂಬಾತನೊಂದಿಗೆ ಬಾಡಿಗೆ ವಿಚಾರವಾಗಿ ಮಂಗಳೂರಿಗೆ ಫೆ.24ರಂದು ರಾತ್ರಿ ವೇಳೆ ಕಾರಿನಲ್ಲಿ ಹೋಗಿದ್ದರು. ಮರುದಿನ ಮಣಿಕಂಠ ಅವರಿಗೆ ಕರೆ ಮಾಡಿದಾಗ ಪೋನ್ ಸ್ವಿಚ್ ಆಫ್ ಆಗಿತ್ತು. ಬಳಿಕ ಮಣಿಕಂಠ ಪತ್ನಿ ಜಾಕೀರ್ ಸಂಬಂಧಿಕರಿಗೆ ಕರೆ ಮಾಡಿ ವಿಚಾರಿಸಿದಾಗ ಜಾಕೀರ್ ಮನೆಗೆ ಬಂದಿಲ್ಲ ಎಂದು ತಿಳಿಸಿದ್ದಾರೆ. ನಂತರ ಉಚ್ಚಿಲ, ಪಡುಬಿದ್ರಿ ಕಡೆಗಳಲ್ಲಿ ಮಣಿಕಂಠ ಹಾಗೂ ಕಾರನ್ನು ಹುಡುಕಾಡಿದರೂ ಪತ್ತೆಯಾಗಿರುವುದಿಲ್ಲ ಎಂದು ದೂರಿನಲ್ಲಿ ತಿಳಿಸಲಾಗಿದೆ. ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇರಾನ್ ಸುತ್ತಲೂ ಪ್ರಾದೇಶಿಕ ಸಂಘರ್ಷ ಉಲ್ಬಣದ ಅಪಾಯ: ವಿಶ್ವಸಂಸ್ಥೆ ಮಾನವ ಹಕ್ಕುಗಳ ಸಮಿತಿ ಎಚ್ಚರಿಕೆ
ವಿಶ್ವಸಂಸ್ಥೆ, ಫೆ.27: ಅಮೆರಿಕದ ದಾಳಿಗಳ ಪುನರಾವರ್ತಿತ ಬೆದರಿಕೆಗಳ ಮಧ್ಯೆ ಇರಾನ್ನ ಸುತ್ತಲಿನ ಪ್ರಾದೇಶಿಕ ಉಲ್ಬಣಗೊಳ್ಳುವ ಅಪಾಯದ ಬಗ್ಗೆ ದಿಗ್ಬ್ರಮೆಗೊಂಡಿರುವುದಾಗಿ ವಿಶ್ವಸಂಸ್ಥೆ ಮಾನವ ಹಕ್ಕುಗಳ ಮುಖ್ಯಸ್ಥ ವೋಕರ್ ಟರ್ಕ್ ಶುಕ್ರವಾರ ಹೇಳಿದ್ದಾರೆ. ಪ್ರಾದೇಶಿಕ ಮಿಲಿಟರಿ ಉಲ್ಬಣದ (ಸಂಘರ್ಷದ ತೀವ್ರತೆ, ವ್ಯಾಪ್ತಿ ಅಥವಾ ಹಿಂಸಾಚಾರದಲ್ಲಿ ಹೆಚ್ಚಳ, ಹೆಚ್ಚುವರಿ ಪಡೆ ಅಥವಾ ಶಸ್ತ್ರಾಸ್ತ್ರಗಳ ಜಮಾವಣೆ) ಸಂಭವನೀಯತೆ ಮತ್ತು ನಾಗರಿಕರ ಮೇಲೆ ಅದರ ಪ್ರಭಾವದ ಕಳವಳಗೊಂಡಿದ್ದು ಸಂಬಂಧಿಸಿದ ಎಲ್ಲಾ ಪಕ್ಷದವರು ಸಂಯಮ ಮತ್ತು ಸಮಂಜಸವಾಗಿ ವರ್ತಿಸುವರೆಂಬ ವಿಶ್ವಾಸವಿದೆ ಎಂದು ಟರ್ಕ್ ವಿಶ್ವಸಂಸ್ಥೆ ಮಾನವ ಹಕ್ಕುಗಳ ಸಮಿತಿಯ ಸಭೆಯಲ್ಲಿ ಹೇಳಿದ್ದಾರೆ. ವಿವಾದಗಳನ್ನು ಪರಿಹರಿಸಲು ಬಲದ ಬಳಕೆಯ ಸಾಮಾನ್ಯೀಕರಣದ ಬಗ್ಗೆ ಎಚ್ಚರಿಕೆ ನೀಡಿದ ಅವರು, ಘರ್ಷಣೆಗಳು ಮಾನವ ಹಕ್ಕುಗಳ ಪಾಳುಭೂಮಿಯನ್ನು ಸೃಷ್ಟಿಸುತ್ತದೆ. ಅಂತಾರಾಷ್ಟ್ರೀಯ ಮಾನವೀಯ ಮತ್ತು ಮಾನವ ಹಕ್ಕುಗಳ ಕಾನೂನಿನ ಸೌಧವು ನಮ್ಮ ಕಣ್ಣಮುಂದೆಯೇ ಕುಸಿದು ಬೀಳುವುದನ್ನು ಜಗತ್ತು ಮೂಕಪ್ರೇಕ್ಷಕನಂತೆ ನಿಲ್ಲಲು ಸಾಧ್ಯವಿಲ್ಲ. 2010ರ ಬಳಿಕ ಸಶಸ್ತ್ರ ಸಂಷರ್ಘದ ಸಂಖ್ಯೆ ಬಹುತೇಕ ದುಪ್ಪಟ್ಟಾಗಿದೆ. ಜಗತ್ತು ನಿಜವಾಗಿಯೂ ಅತ್ಯಂತ ಅಪಾಯದ ಸ್ಥಳವಾಗುತ್ತಿದೆ. ಅಧಿಕಾರಕ್ಕಾಗಿ ನಿರಂತರ ಪೈಪೋಟಿ ನಡೆಯುತ್ತಿದ್ದು ಎಲ್ಲೆಡೆ ಹಕ್ಕುಗಳಿಗೆ ಹಾನಿಯಾಗುತ್ತಿದೆ. ಭೂಮಿ, ಇಂಧನ, ಜಾಗತಿಕ ಆರ್ಥಿಕತೆಯಲ್ಲಿ ಪ್ರಾಬಲ್ಯ ಸಾಧಿಸಲು, ಇನ್ನಷ್ಟು ಅಧಿಕಾರ ಸಂಗ್ರಹಿಸಲು ಎಲ್ಲೆಡೆ ಸ್ಪರ್ಧೆ, ಪೈಪೋಟಿ ಮುಂದುವರಿದಿದೆ. ಆದರೆ ಅಧಿಕಾರ, ಬಲವನ್ನು ಖಂಡಿತವಾಗಿಯೂ ಇತರ ಉದ್ದೇಶಗಳಿಗೆ ಬಳಸಬೇಕಿದೆ ಎಂದು ಆಗ್ರಹಿಸಿದ್ದಾರೆ.
ಕಾರ್ಮಿಕರ ಕಲ್ಯಾಣಕ್ಕಾಗಿ ಇನ್ನೂ ನಾಲ್ಕು ಮಸೂದೆಗಳ ಜಾರಿ : ಸಂತೋಷ್ ಲಾಡ್
ಬೆಂಗಳೂರು, ಫೆ.27 : ಕಾರ್ಮಿಕರ ಕಲ್ಯಾಣಕ್ಕಾಗಿ ಕಾರ್ಮಿಕ ಇಲಾಖೆಯು ನಾಲ್ಕು ಮಸೂದೆಗಳನ್ನು ಈಗಾಗಲೇ ಜಾರಿ ಮಾಡಿದೆ. ಇದರೊಂದಿಗೆ ಇನ್ನೂ ನಾಲ್ಕು ಮಸೂದೆಗಳನ್ನು ಜಾರಿ ಮಾಡಲು ಉದ್ದೇಶಿಸಲಾಗಿದೆ ಎಂದು ಕಾರ್ಮಿಕ ಸಚಿವ ಸಂತೋಷ್ ಎಸ್. ಲಾಡ್ ಹೇಳಿದ್ದಾರೆ. ಶುಕ್ರವಾರ ಇಲ್ಲಿನ ಅರಮನೆ ಮೈದಾನದಲ್ಲಿ ರಾಜ್ಯದ ವಿವಿಧ ಕೈಗಾರಿಕೆಗಳು, ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ‘ವಿಶೇಷಚೇತನರಿಗೆ ಮೋಟಾರು ಚಾಲಿತ ತ್ರಿಚಕ್ರ ವಾಹನಗಳ ವಿತರಣಾ ಸಮಾರಂಭ’ದಲ್ಲಿ ಮಾತನಾಡಿದ ಅವರು, ಗಿಗ್ ಕಾರ್ಮಿಕರ ವಿಮಾ ಮಸೂದೆ, ಋತುಚಕ್ರ ರಜೆ, ಸಾರಿಗೆ ಕಾರ್ಮಿಕರಿಗೆ ಅಪಘಾತ ಮತ್ತು ವಿಮಾ ಯೋಜನೆ ಮತ್ತು ಸಿನಿಮಾ ಕಾರ್ಮಿಕರಿಗೆ ಮಸೂದೆ ಜಾರಿ ಮಾಡಲಾಗಿದೆ ಎಂದರು. ಮನೆಗೆಲಸದ ಕಾರ್ಮಿಕರು, ವಿಧವೆಯರು, ಅಂಗವಿಕಲರಿಗೆ ಸಂಬಂಧಿಸಿದ ಮಸೂದೆಗಳನ್ನು ಜಾರಿ ಮಾಡಲು ಉದ್ದೇಶಿಸಲಾಗಿದೆ. ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ಸ್ವಲ್ಪಮಟ್ಟಿನ ಸುಂಕ ವಿಧಿಸಿ ಅಸಂಘಟಿತ ಕಾರ್ಮಿಕ ಕಲ್ಯಾಣಕ್ಕೆ ಬಳಸುವ ಉದ್ದೇಶವಿದೆ. ಕೋಟ್ಯಾಂತರ ಸಂಖ್ಯೆಯಲ್ಲಿರುವ ಅಸಂಘಟಿತ ಕಾರ್ಮಿಕರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಹೊಸ ಮಸೂದೆಗಳನ್ನು ಸಿದ್ಧಪಡಿಸಲಾಗುತ್ತಿದೆ ಎಂದು ಅವರು ಹೇಳಿದರು. ಕಳೆದ ಎರಡೂವರೆ ವರ್ಷಗಳಲ್ಲಿ ನಮ್ಮ ಕಾರ್ಮಿಕ ಇಲಾಖೆ ಹಲವಾರು ಯೋಜನೆ ಮತ್ತು ಕಾರ್ಯಕ್ರಮಗಳನ್ನು ಜಾರಿ ಮಾಡಿದೆ. ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಕಾರ್ಮಿಕರ ಕಲ್ಯಾಣಕ್ಕಾಗಿ ಇಲಾಖೆ ಹೊಸ ಹೊಸ ಸೌಲಭ್ಯಗಳನ್ನು ಅನುಷ್ಠಾನ ಮಾಡಿದೆ. ವಿಶೇಷ ಚೇತನರಿಗೆ ತ್ರಿಚಕ್ರ ವಿತರಿಸುವ ನಮ್ಮ ಆಲೋಚನೆಯನ್ನು ವಿವಿಧ ಕಂಪನಿ ಹಾಗೂ ಸಂಸ್ಥೆಗಳ ಜೊತೆಗೆ ತಿಳಿಸಿದಾಗ ಮುಖ್ಯಮಂತ್ರಿಗಳು ನಮ್ಮ ಮನವಿಗೆ ಸ್ಪಂದಿಸಿದರು. ಇದಕ್ಕಾಗಿ ವಿವಿಧ ಕಂಪೆನಿಗಳು ವಿಶಾಲ ಮನೋಭಾವದಿಂದ ಕೊಡುಗೆ ನೀಡಿವೆ. ರಾಜ್ಯದಾದ್ಯಂತ 1,608 ತ್ರಿಚಕ್ರ ವಾಹನಗಳನ್ನು ವಿತರಣೆ ಮಾಡಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದರು. ನಮ್ಮ ಸರಕಾರವು ಗ್ಯಾರಂಟಿಗಳ ಮೂಲಕ ನಾಡಿನ ಕೋಟ್ಯಾಂತರ ಜನರಿಗೆ ನೆರವಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿರುವ ಅಸಂಘಟಿತ ಕಾರ್ಮಿಕರಿಗೆ ಗ್ಯಾರಂಟಿಗಳು ಸಹಾಯ ಮಾಡಿವೆ. ಈ ಬಾರಿಯ ಬಜೆಟ್ನಲ್ಲೂ ಅಸಂಘಟಿತ ಕಾರ್ಮಿಕರಿಗೆ ಇನ್ನಷ್ಟು ಅನುಕೂಲವಾಗುವ ಕಾರ್ಯಕ್ರಮಗಳಿಗೆ ಮನವಿ ಮಾಡಿದ್ದೇವೆ ಎಂದು ಅವರು ಹೇಳಿದರು. ಸಮಾರಂಭದಲ್ಲಿ ಶಿವಮೊಗ್ಗ ನಿಟ್ಟೂರಿನ ನಾರಾಯಣ ಗುರು ಮಹಾಸಂಸ್ಥಾನದ ರೇಣುಕಾನಂದ ಸ್ವಾಮೀಜಿ, ಹರಿಹರ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ, ಬೋವಿಮಠದ ಸಿದ್ದರಾಮೇಶ್ವರ ಸ್ವಾಮೀಜಿ, ರೇಣುಕಾನಂದ ಸ್ವಾಮೀಜಿ, ಮಾದಾರ ಚೆನ್ನಯ್ಯ ಸ್ವಾಮೀಜಿ, ಶಾಂತವೀರ ಸ್ವಾಮೀಜಿ ಮತ್ತಿತರರ ಸ್ವಾಮೀಜಿಗಳು ಸಾನಿಧ್ಯ ವಹಿಸಿದ್ದರು. ಇದೇ ವೇಳೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸಂಸದ ತುಕಾರಾಂ, ಕಾರ್ಮಿಕ ಆಯುಕ್ತ ಡಾ. ಎಚ್ ಎನ್ ಗೋಪಾಲಕೃಷ್ಣ, ಕಾರ್ಮಿಕ ಇಲಾಖೆಯ ಸರಕಾರದ ಕಾರ್ಯದರ್ಶಿಗಳಾದ ಸಲ್ಮಾ ಕೆ ಫಾಹೀಂ, ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರವಿ ಡಿ ಚೆನ್ನಣ್ಣವರ್, ಕಾರ್ಮಿಕ ರಾಜ್ಯ ವಿಮಾ ಯೋಜನೆ ವೈದ್ಯಕೀಯ ಸೇವೆಗಳ ಇಲಾಖೆಯ ಆಯುಕ್ತ ಡಾ. ದಿನೇಶ್ ಕುಮಾರ್ ಜೈನ್, ಉಪ ಕಾರ್ಮಿಕ ಆಯುಕ್ತ ಡಾ. ರವಿ ಕುಮಾರ್, ಕಾರ್ಖಾನೆಗಳು ಮತ್ತು ಬಾಯ್ಲರುಗಳು, ಕೈಗಾರಿಕೆ ಸುರಕ್ಷತೆ ಮತ್ತು ಸ್ವಾಸ್ಥ್ಯ ಇಲಾಖೆ ನಿರ್ದೇಶಕ ಕೆ. ಶ್ರೀನಿವಾಸ್ ಮತ್ತಿತರರು ಇದ್ದರು. ‘ಕಾರ್ಮಿಕ ಇಲಾಖೆಯು ವಿಶೇಷ ಚೇತನರಿಗೆ ವಿವಿಧ ಸಂಸ್ಥೆಗಳ ಮೂಲಕ ತ್ರಿಚಕ್ರ ವಾಹನಗಳನ್ನು ನೀಡುವ ಕೆಲಸ ಮಾಡಿದೆ. ಸಂತೋಷ್ ಲಾಡ್ ಅವರಿಗೆ ಕಾರ್ಮಿಕರ ಸಮಸ್ಯೆಗಳ ಬಗ್ಗೆ ಅಪಾರವಾದ ಅರಿವು ಇದೆ. ಇನ್ನೂ ಜಗತ್ತಿನಾದ್ಯಂತ 130 ಕೋಟಿ, ಭಾರತದಲ್ಲಿ 2.6 ಕೋಟಿ ಹಾಗೂ ಕರ್ನಾಟಕದಲ್ಲಿ 13.2 ಲಕ್ಷ ವಿಶೇಷಚೇತನರು ಇದ್ದಾರೆ. ವಿಶೇಷಚೇತನರು ಯಾರೂ ಮಾನಸಿಕವಾಗಿ ಧೃತಿಗೆಡಬಾರದು. ರಾಜ್ಯ ಸರಕಾರದಿಂದ ನಿಮಗೆ ಎಂದಿಗೂ ಬೆಂಬಲ ಇದೆ. ನಿಮ್ಮ ವಿಶ್ವಾಸ ಎಂದಿಗೂ ಕಡಿಮೆಯಾಗಬಾರದು’ -ಡಿ.ಕೆ. ಶಿವಕುಮಾರ್, ಉಪಮುಖ್ಯಮಂತ್ರಿ
Kalaburagi | ವಿಶೇಷ ಅಂಚೆ ಜೀವ ವಿಮಾ ಮೇಳ: 1.53 ಕೋಟಿ ರೂ. ಪ್ರೀಮಿಯಂ ಸಂಗ್ರಹ
ಕಲಬುರಗಿ : ಕಲಬುರಗಿ ಅಂಚೆ ವಿಭಾಗದ ವತಿಯಿಂದ ಗುರುವಾರ ವಿಶೇಷ ಅಂಚೆ ಜೀವ ವಿಮಾ ಮೇಳವನ್ನು ಆಯೋಜಿಸಲಾಗಿತ್ತು. ಈ ಮೇಳದಲ್ಲಿ ಜಿಲ್ಲೆಯಾದ್ಯಂತ ರಾಜ್ಯ ಸರ್ಕಾರಿ ನೌಕರರು, ಗ್ರಾಮೀಣ ಭಾಗದ ಅರೆ ಸರ್ಕಾರಿ ನೌಕರರು, ಆಟೋ ಚಾಲಕರು, ಸಣ್ಣ ಉದ್ಯಮಿಗಳು ಹಾಗೂ ವ್ಯಾಪಾರಸ್ಥರು ಸೇರಿದಂತೆ 356 ಮಂದಿ ಭಾಗವಹಿಸಿ ಒಟ್ಟು 1.53 ಕೋಟಿ ರೂ. ಪ್ರೀಮಿಯಂ ಸಂಗ್ರಹಿಸುವ ಮೂಲಕ ಕೇಂದ್ರ ಸರ್ಕಾರದ ಯೋಜನೆಯ ಲಾಭ ಪಡೆದಿದ್ದಾರೆ. ಭಾರತ ಅಂಚೆ ವತಿಯಿಂದ ನೀಡಲಾಗುವ ಅಂಚೆ ಜೀವ ವಿಮೆ ಯೋಜನೆ ಕಡಿಮೆ ಪ್ರೀಮಿಯಂನಲ್ಲಿ ಹೆಚ್ಚಿನ ಬೋನಸ್ ನೀಡುವ ಸರಳ ಹಾಗೂ ವಿಶ್ವಾಸಾರ್ಹ ಯೋಜನೆಯಾಗಿದೆ. ಜನರ ಆರ್ಥಿಕ ಭದ್ರತೆಯನ್ನು ಗಮನದಲ್ಲಿಟ್ಟುಕೊಂಡು ಈ ಯೋಜನೆ ರೂಪಿಸಲಾಗಿದೆ. ಕಲಬುರಗಿ ಜಿಲ್ಲೆಯ ಇನ್ನಷ್ಟು ಜನರಿಗೆ ಯೋಜನೆಯ ಲಾಭ ತಲುಪಿಸುವ ಉದ್ದೇಶದಿಂದ, ಅಂಚೆ ಅಧೀಕ್ಷಕರಾದ ರವೀಂದ್ರ ಬಿ.ಎಲ್. ಅವರ ಮಾರ್ಗದರ್ಶನದಲ್ಲಿ ಮಾರ್ಚ್ 11ರಂದು ಮತ್ತೊಮ್ಮೆ ಅಂಚೆ ಜೀವ ವಿಮಾ ಮೇಳ ಆಯೋಜಿಸಲಾಗಿದೆ. ಸಾರ್ವಜನಿಕರು ಕೇಂದ್ರ ಸರ್ಕಾರದಿಂದ ಅನುಮೋದಿತ ಈ ಯೋಜನೆಯ ಸದುಪಯೋಗ ಪಡೆದುಕೊಳ್ಳುವಂತೆ ಪ್ರಕಟಣೆಯಲ್ಲಿ ಮನವಿ ಮಾಡಲಾಗಿದೆ.
1.60 ಲಕ್ಷ ರೂ. ಆನ್ಲೈನ್ ವಂಚನೆ: ಪ್ರಕರಣ ದಾಖಲು
ಉಡುಪಿ, ಫೆ.27: ಬ್ಯಾಂಕ್ ಖಾತೆಯಿಂದ ಲಕ್ಷಾಂತರ ರೂ. ವರ್ಗಾವಣೆ ಮಾಡಿ ಆನ್ಲೈನ್ ವಂಚನೆ ಎಸಗಿರುವ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಭಾಸ್ಕರ (63) ಎಂಬವರು ಫೆ.24ರಂದು ಫೇಸ್ಬುಕ್ನಲ್ಲಿ ಲಿಂಕ್ ಮೇಲೆ ಕ್ಲಿಕ್ ಮಾಡಿ ಅಪ್ಲಿಕೇಶನ್ನ್ನು ಡೌನ್ಲೋಡ್ ಮಾಡಿಕೊಂಡಿದ್ದು, ಫೆ.26 ರಂದು ಅವರು ತನ್ನ ಮೊಬೈಲ್ನಲ್ಲಿ ಬ್ಯಾಂಕ್ ಅಪ್ಲಿಕೇಶನ್ನಲ್ಲಿ ಅವರ ಬ್ಯಾಂಕ್ ಖಾತೆಯ ವಿವರಗಳನ್ನು ವೀಕ್ಷಿಸುತ್ತಿದ್ದಾಗ ಅವರ ಬ್ಯಾಂಕ್ ಖಾತೆ ಯಿಂದ ಹಂತಹಂತವಾಗಿ ಒಟ್ಟು 1,60,000ರೂ. ಕಡಿತಗೊಂಡಿರುವುದು ಕಂಡುಬಂದಿದೆ. ಅಪರಿಚಿತ ವ್ಯಕ್ತಿಗಳು ಭಾಸ್ಕರ ಅವರ ಮೊಬೈಲ್ನ ರಿಮೋಟ್ ಅಸ್ಸೆಸ್ ಕಂಟ್ರೋಲ್ ಪಡೆದು ಆನ್ಲೈನ್ ಮೂಲಕ ಹಣವನ್ನು ತಮ್ಮ ಖಾತೆಗೆ ವರ್ಗಾಯಿಸಿ ಮೋಸ ಮಾಡಿರುವುದಾಗಿ ದೂರಲಾಗಿದೆ.
ಭಾರತ Vs ವಿಂಡೀಸ್ ಪಂದ್ಯಕ್ಕೆ ಕ್ವಾರ್ಟರ್ ಫೈನಲ್ ಕಳೆ! ಕೋಲ್ಕತಾ ಪಿಚ್ ನಲ್ಲಿ ಹೀಗಿದೆ ಭಾರತ ಸಂಭಾವ್ಯ ಇಲೆವೆನ್
ಚೆನ್ನೈನಲ್ಲಿ ಜಿಂಬಾಬ್ನೆಯನ್ನು ಭರ್ಜರಿಯಾಗಿ 72 ರನ್ ಗಳಿಂದ ಪರಾಭವಗೊಳಿಸಿ ಆತ್ಮವಿಶ್ವಾಸ ಹೆಚ್ಚಿಸಿಕೊಂಡಿರುವ ಭಾರತ ತಂಡ ಇದೀಗ ಕೋಲ್ಕತಾದ ಈಡನ್ ಗಾರ್ಡನ್ಸ್ ಪಿಚ್ ನಲ್ಲಿ ವೆಸ್ಟ್ ಇಂಡೀಸ್ ಸವಾಲನ್ನು ಎದುರಿಸಲು ಸಿದ್ಧವಾಗಿದೆ. ಇತ್ತಂಡಗಳಿಗೂ ಇದು ಮಾಡು ಇಲ್ಲವೇ ಮಡಿ ಪಂದ್ಯವಾಗಿದೆ. ಗೆದ್ದ ತಂಡ ಸೆಮಿಫೈನಲ್ ಪ್ರವೇಶಿಸಲಿದ್ದು, ಸೋತ ತಂಡ ಟೂರ್ನಿಯಿಂದ ಹೊರಬೀಳಲಿದೆ. ಹೀಗಾಗಿ ಭಾನುವಾರ ಈಡನ್ ಗಾರ್ಡನ್ ನಲ್ಲಿ ನಡೆಯಲಿರುವ ಪಂದ್ಯಕ್ಕೆ ಅಕ್ಷರಶಃ ಕ್ವಾರ್ಟರ್ ಫೈನಲ್ ನ ಕಳೆ ಬಂದಿದೆ. ಇಬ್ಬನಿಯ ಪ್ರಭಾವ ಬೆಚ್ಚಿರುವ ಸಾಧ್ಯತೆ ಇರವುದರಿಂದ ಟಾಸ್ ಗೆದ್ದ ತಂಡ ಇಲ್ಲಿ ಫೀಲ್ಡಿಂಗ್ ಆಯ್ದುಕೊಳ್ಳುವ ಸಾಧ್ಯತೆಯೇ ಹೆಚ್ಚು. ಇತ್ತಂಡಗಳ ಬಲಾಬಲವನ್ನು ಗಮನಿಸಿದಾಗ ಆತಿಥೇಯ ಭಾರತ ತಂಡವೇ ಬಲಶಾಲಿಯಾಗಿ ಗೋಚರಿಸುತ್ತಿದೆ. ಆದರೆ ವಿಂಡೀಸ್ ಸಾಮರ್ಥ್ಯವನ್ನು ಅಲ್ಲಗೆಳೆಯುವಂತೆ ಇಲ್ಲ. ಕಳೆದ ಪಂದ್ಯದಲ್ಲಿ ಚುಟುಕು ಕ್ರಿಕೆಟ್ ಗೆ ಹೇಳಿ ಮಾಡಿಸಿದ ಆಟಗಾರರಿಂದಲೇ ಕೂಡಿರುವ ಕೆರಿಬಿಯನ್ ತಂಡ ಪಂದ್ಯವನ್ನು ಯಾರೂ ಊಹಿಸದ ಮಟ್ಟಕ್ಕೆ ಕೊಂಡೊಯ್ಯಬಲ್ಲರು. ಶಿಮ್ರಾನ್ ಹೆಟ್ಮೇಯರ್, ಜೇಸನ್ ಹೋಲ್ಡರ್, ಶಾಯ್ ಹೋಪ್ ಅವರ ಬಗ್ಗೆ ತಿಳಿದವವರು ಯಾರೇ ಆಗಲಿ ಇದು ಒಪ್ಪತಕ್ಕ ಮಾತು. ಹೀಗಾಗಿ ಭಾರತ ತಂಡ ಸೂಕ್ತ ರಣತಂತ್ರದೊಂದಿಗೆ ಕಣಕ್ಕಿಳಿಯಬೇಕಾದ ಅಗತ್ಯವಿದೆ. ಇನ್ನು ಭಾರತ ತಂಡದ ಬ್ಯಾಟಿಂಗ್ ಕ್ರಮಾಂಕದಲ್ಲಿ ಪದೇ ಪದೇ ಬದಲಾವಣೆ ನಡೆದರೂ ಅದನ್ನು ತಡೆದುಕೊಂಡು ಹೊಂದಿಕೊಳ್ಳುತ್ತಿದೆ ಎಂಬುದು ಸಂತಸದ ಸಂಗತಿ. ಫಾರ್ಮ್ ನಲ್ಲಿಲ್ಲದ ಹೊಡೆದು ಫಾರ್ಮ್ ಗೆ ಮರಳಿರುವುದು ಟೀಂ ಇಂಡಿಯಾ ಪಾಲಗೆ ಶುಭಸಂಗತಿಯಾಗಿದೆ. ಇನ್ನು ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ ಅವರಂತೂ ಪರಿಸ್ಥಿತಿಗೆ ಹೊಂದಿಕೊಂಡು ವೇಗವಾಗಿ ರನ್ ಗಳಿಸುವುದರಲ್ಲೂ ನಿಸ್ಸೀಮರಾಗಿ ಗೋಚರಿಸುತ್ತಿದ್ದಾರೆ. ಅವರು ಮತ್ತೆ ತಂಡವನ್ನು ಸೇರಿಕೊಂಡು ಪ್ಲೇಯಿಂಗ್ ಇಲೆವೆನ್ ನಲ್ಲಿ ಕಾಣಿಸಿಕೊಳ್ಳುತ್ತಾರಾ ಎಂಬ ಬಗ್ಗೆ ಯಾವುದೇ ಖಚಿತತೆ ಇಲ್ಲ. ಆವರು ಆಡಲು ಸಾಧ್ಯವಿದ್ದಲ್ಲಿ ಸಂಜು ಸ್ಯಾಮ್ಸನ್ ಅವರು ಬೆಂಚು ಕಾಯಿಸಬೇಕಾದ ಅನಿವಾರ್ಯತೆ ಎದುರಾಗುತ್ತದೆ. ಇಲ್ಲವಾದಲ್ಲಿ ಜಿಂಬಾಬ್ವೆ ವಿರುದ್ಧ ಆಡಿದ್ದ ಪಂದ್ಯವನ್ನೇ ಉಳಿಸಿಕೊಳ್ಳುವ ಸಾಧ್ಯತೆ ಹೆಚ್ಚಿದೆ. ಹೇಗಿದೆ ಈಡನ್ ಗಾರ್ಡನ್ ಪಿಚ್? ಕೋಲ್ಕತಾದ ಈಡನ್ ಗಾರ್ಡನ್ ಪಿಚ್ ಬ್ಯಾಟಿಂಗ್ ಗೆ ಅನುಕೂಲಕಾರಿಯಾಗಿದೆ. ಟಿ20 ಪಂದ್ಯಗಳಲ್ಲಿ ಇಲ್ಲಿ ಸರಾಸರಿ 180 ರಂತೆ ರನ್ ಬಂದಿರುವುದರಿಂದ ಭಾನುವಾರ ಪಂದ್ಯ ಸಹ ತೀವ್ರ ಪೈಪೋಟಿಯಿಂದ ಕೂಡಿರುವ ಸಾಧ್ಯತೆ ಇದೆ. ಇನ್ನು ರಾತ್ರಿ ವೇಳೆ ಇಬ್ಬನಿ ಪ್ರಭಾವ ಹೆಚ್ಚಿರುವುದರಿಂದ ಇಲ್ಲಿ ಬೌಲಿಂಗ್ ಮಾಡುವುದು ಸವಾಲಿನ ಸಂಗತಿಯಾಗಿದೆ. ಆದರೂ ಮಧ್ಯಮ ಓವರ್ ಗಳಲ್ಲಿ ಸ್ಪಿನ್ನರ್ ಗಳು ಪಿಚ್ ನ ಲಾಭ ಪಡೆಯಬಹುದು. ವೇಗಿಗಳಿಗೆ ಉತ್ತಮ ಬೌನ್ಸ್ ಸಿಗಲಿದೆ ಎಂದು ವರದಿ ತಿಳಿಸಿದೆ. ಇತಿಹಾಸವನ್ನು ಕೆದಕಿದರೆ ಇಲ್ಲಿ ಮೊದಲು ಬ್ಯಾಟಿಂಗ್ ತೆಗೆದುಕೊಂಡ ತಂಡವೇ ಗೆದ್ದಿದ್ದು ಹೆಚ್ಚು. ಆದರೆ ಭಾನುವಾರ ಇಬ್ಬನಿಯ ಪ್ರಭಾವ ಹೆಚ್ಚಿರುವ ಸಾಧ್ಯತೆ ಇರುವುದರಿಂದ ಟಾಸ್ ಗೆದ್ದ ತಂಡ ಮೊದಲು ಫೀಲ್ಡಿಂಗ್ ಆಯ್ದುಕೊಳ್ಳುವ ಸಾಧ್ಯತೆ ಹೆಚ್ಚು. ಕೋಲ್ಕತಾದಲ್ಲಿ ಮಳೆ ಬರುತ್ತಾ? ಪಂದ್ಯದ ವೇಳೆ ಯಾವುದೇ ಕಾರಣಕ್ಕೂ ಮಳೆ ಬರಬಾರದು ಎಂದು ಇದೀಗ ಕ್ರಿಕಟ್ ಅಭಿಮಾನಿಗಳು ಪ್ರಾರ್ಥಿಸಿಸುತ್ತಿದ್ದಾರೆ. ಒಂದು ವೇಳೆ ಮಳೆ ಬಂದು ಪಂದ್ಯ ರದ್ದುಗೊಂಡಲ್ಲಿ ಇತ್ತಂಡಗಳಿಗೂ ತಲಾ ಒಂದು ಅಂಕವನ್ನು ಹಂಚಲಾಗುತ್ತದೆ. ಆಗ ವೆಸ್ಟ್ ಇಂಡೀಸ್ ಮತ್ತು ಭಾರತ ತಂಡಗಳೆರಡೂ 3 ಅಂಕಗಳನ್ನು ಗಳಿಸಿದಂತಾಗುತ್ತದೆ. ಅಂಕಗಳು ಸಮನಾಗಿರುವುದರಿಂದ ರನ್ ರೇಟ್ ಗಣನೆಗೆ ಬರುತ್ತದೆ. ಈ ವಿಚಾರದಲ್ಲಿ ವೆಸ್ಚ್ ಇಂಡೀಸ್(+1.79) ತಂಡ ಭಾರತ(0.100) ತಂಡಕ್ಕಿಂತ ಬಹಳ ಮುಂದಿದೆ. ಆದರೆ ಭಾನುವಾರ ಮಳೆಯ ಸಾಧ್ಯತೆ ಇಲ್ಲ ಎಂದು ಹವಾಮಾನ ವರದಿ ತಿಳಿಸಿರುವುದರಿಂದ ಭಾರತೀಯ ಕ್ರಿಕೆಟ್ ಪ್ರೇಮಿಗಳು ಸಂತಸದಿಂದಿದ್ದಾರೆ. ಕೋಲ್ಕತ್ತಾ ನಗರದಲ್ಲಿ ಭಾನುವಾರದಂದು ಬಿಸಿಲಿನ ವಾತಾವರಣವಿರುತ್ತದೆ. ಹಗಲಿನ ತಾಪಮಾನವು ಗರಿಷ್ಠ 34 ಡಿಗ್ರಿ ತಲುಪುವ ಸಾಧ್ಯತೆಯಿದೆ. ಪಂದ್ಯದ ವೇಳೆಗೆ ಸುಮಾರು 25-26 ಡಿಗ್ರಿ ಸೆಲ್ಸಿಯಸ್ ಗೆ ಇಳಿಯುವ ಸಾಧ್ಯತೆಯಿದೆ. ಮಳೆ ಬರುವ ಸಾಧ್ಯತೆ ಇಲ್ಲ. ಭಾರತ ಪ್ಲೇಯಿಂಗ್ ಸಂಭಾವ್ಯ ಇಲೆವೆನ್ ಸೂರ್ಯಕುಮಾರ್ ಯಾದವ್(ನಾಯಕ), ಸಂಜು ಸ್ಯಾಮ್ಸನ್, ಅಭಿಷೇಕ್ ಶರ್ಮಾ, ಇಶಾನ್ ಕಿಶನ್, ಶಿವಂ ದುಬೆ, ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ಅರ್ಷದೀಪ್ ಸಿಂಗ್, ವರುಣ್ ಚಕ್ರವರ್ತಿ, ಜಸ್ಪ್ರೀತ್ ಬುಮ್ರಾ ವೆಸ್ಟ್ ಇಂಡೀಸ್ ಸಂಭಾವ್ಯ ಇಲೆವೆನ್ ಶಾಯ್ ಹೋಪ್(ನಾಯಕ), ಬ್ರೆಂಡನ್ ಕಿಂಗ್, ಶಿಮ್ರಾನ್ ಹೆಟ್ಮೆಯರ್, ರೋವ್ಮನ್ ಪೊವೆಲ್, ಶೆರ್ಫೇನ್ ರುದರ್ಫೋರ್ಡ್, ರೊಮಾರಿಯೋ ಶೆಫರ್ಡ್, ಜೇಸನ್ ಹೋಲ್ಡರ್, ಮ್ಯಾಥ್ಯೂ ಫೋರ್ಡ್, ಅಕೇಲ್ ಹುಸೈನ್, ಗುದಕೇಶ್ ಮೋತಿ, ಶೆಮರ್ ಜೋಸೆಫ್.
ಕಲಾಭಿಮಾನಿಗಳ ಪ್ರೋತ್ಸಾಹವಿಲ್ಲದೇ ಕಲೆಯಿಲ್ಲ: ದಿವಾಕರ ಸನಿಲ್
ಉಡುಪಿ: ಕಲಾಸಹೃದಯರ, ಕಲಾಭಿಮಾನಿಗಳ ಪ್ರೋತ್ಸಾಹ ಇಲ್ಲದೇ ಕಲಾ ಚಟುವಟಿಕೆ ಮುಂದುವರಿಯಲು ಸಾಧ್ಯವಿಲ್ಲ ಎಂದು ಉದ್ಯಮಿ ದಿವಾಕರ ಸನಿಲ್ ಹೇಳಿದ್ದಾರೆ. ಸುಮನಸಾ ಕೊಡವೂರು ಸಾಂಸ್ಕೃತಿಕ ಸಂಘಟನೆಯ ನಾಟಕೋತ್ಸವ ರಂಗಹಬ್ಬ-14ರ ಆರನೇ ದಿನದ ಕಾರ್ಯ ಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು. ನಾಟಕಗಳಲ್ಲಿ ಅಭಿನಯಿಸುವವರು ಕಣ್ಣ ಮುಂದೆ ಕಾಣುತ್ತಾರೆ. ಅದರ ಹಿಂದೆ ನಿಂತು ಕೆಲಸ ಮಾಡುವವರು ಕಾಣುವುದಿಲ್ಲ. ಈ ನಿಟ್ಟಿನಲ್ಲಿ ಸುಮನಸಾವು ನಟರನ್ನಷ್ಟೇ ಅಲ್ಲ, ಹಿನ್ನೆಲೆಯಲ್ಲಿ ಕೆಲಸ ಮಾಡುವವರನ್ನೂ ಗುರುತಿಸಿ ಗೌರವಿಸುತ್ತಾ ಬಂದಿದೆ ಎಂದು ಅವರು ತಿಳಿಸಿದರು. ಉಡುಪಿ ಜಿಲ್ಲಾ ಕಾಂಗ್ರೆಸ್ ಸಮಿತಿ ಕಾರ್ಯಾಧ್ಯಕ್ಷ ಕಿಶನ್ ಹೆಗ್ಡೆ ಕೊಳ್ಕೆಬೈಲು, ಉದ್ಯಮಿ ಸಚಿನ್ ಕೊಡವೂರು, ನವೀನ್ ಅಮಿನ್ ಶಂಕರಪುರ ಮಾತನಾಡಿದರು. ಮುಖವರ್ಣಿಕೆ ಕಲಾವಿದ ರಮೇಶ್ ಕೆ.ಪಣಿಯಾಡಿ ಅವರಿಗೆ ರಂಗಸಾಧಕ ಪುರಸ್ಕಾರ ನೀಡಿ ಗೌರವಿಸಲಾಯಿತು. ಉದ್ಯಮಿ ರಂಜನ್ ಕಲ್ಕೂರ, ರೋಟರಿ ಮಾಜಿ ಸಹಾಯಕ ಗವರ್ನರ್ ಆನಂದ ಉದ್ಯಾವರ, ಶಶಿ ಎಂಟರ್ಪ್ರೈಸಸ್ ಪ್ರವರ್ತಕ ಜಗದೀಶ್ ಕುಮಾರ್, ಉದ್ಯಮಿಗಳಾದ ಸೂರಜ್ ಮಲ್ಪೆ, ರಂಜಿತ್ ಕೊಡವೂರು, ಸುಮನಸಾ ಕೊಡವೂರು ಸಾಂಸ್ಕೃತಿಕ ಸಂಘಟನೆಯ ಅಧ್ಯಕ್ಷ ಪ್ರಕಾಶ್ ಜಿ. ಕೊಡವೂರು ಉಪಸ್ಥಿತರಿದ್ದರು. ಉಪಾಧ್ಯಕ್ಷ ಯೊಗೀಶ್ ಕೊಳಲಗಿರಿ ಸ್ವಾಗತಿಸಿದರು. ಮನೋಹರ್ ಜತ್ತನ್ ವಂದಿಸಿದರು. ರಾಧಿಕಾ ದಿವಾಕರ ಕಾರ್ಯಕ್ರಮ ನಿರೂಪಿಸಿದರು.
Bengaluru | 5.24 ಕೋಟಿ ರೂ. ಮೌಲ್ಯದ ಡ್ರಗ್ಸ್ ಜಪ್ತಿ; ಇಬ್ಬರು ಮಹಿಳೆಯರ ಸಹಿತ 16 ಮಂದಿಯ ಬಂಧನ
ಬೆಂಗಳೂರು, ಫೆ.27 : ನಗರಾದ್ಯಂತ ವಿವಿಧ ಮಾದಕ ವಸ್ತು ಪ್ರಕರಣಗಳಲ್ಲಿ ಇಬ್ಬರು ಮಹಿಳೆಯರ ಸಹಿತ ಒಟ್ಟು 16 ಪೆಡ್ಲರ್ ಗಳನ್ನು ಬೆಂಗಳೂರು ಪೊಲೀಸರು ಬಂಧಿಸಿರುವುದಾಗಿ ವರದಿಯಾಗಿದೆ. ಸಿಸಿಬಿ ಹಾಗೂ ನಗರದ ವಿವಿಧ ಠಾಣೆಗಳ ಪೊಲೀಸರು ಕಾರ್ಯಾಚರಣೆ ನಡೆಸಿ ವಿದೇಶಿ ಪ್ರಜೆಗಳು ಸೇರಿದಂತೆ ಹೊರ ರಾಜ್ಯದ 8 ಆರೋಪಿಗಳನ್ನು ಬಂಧಿಸಿದ್ದು, ಆರೋಪಿಗಳಿಂದ ಸುಮಾರು 5.24 ಕೋಟಿ ರೂ. ಮೌಲ್ಯದ ಡ್ರಗ್ಸ್, ಮೂರು ಸಾವಿರ ಎಂಡಿಎಂ ಮಾತ್ರೆಗಳು ಮತ್ತು ಗಾಂಜಾವನ್ನು ಜಪ್ತಿ ಮಾಡಿರುವುದಾಗಿ ಮೂಲಗಳಿಂದ ತಿಳಿದುಬಂದಿದೆ. ಇನ್ನು, ನೈಜೀರಿಯಾ ಪ್ರಜೆಯೊಬ್ಬನ ಡ್ರಗ್ಸ್ ವಹಿವಾಟಿಗೆ ಸಾಥ್ ಕೊಡುತ್ತಿದ್ದ ಮಹಿಳೆಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದು, ಆಕೆಯನ್ನು 30 ವರ್ಷದ ಸುಭಾಷಿಣಿ ಎಂದು ಗುರುತಿಸಲಾಗಿದೆ. ಈಕೆ ಬಾಗಲೂರು ಠಾಣಾ ವ್ಯಾಪ್ತಿಯ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದಳು. ಬಂಧಿತ ಸುಭಾಷಿಣಿ, ನೈಜೀರಿಯನ್ ಪ್ರಜೆಯೊಬ್ಬನ ಜೊತೆ ಸೇರಿಕೊಂಡು ಡ್ರಗ್ಸ್ ವ್ಯವಹಾರ ಮಾಡುತ್ತಿದ್ದಳು. ವಿದೇಶಿ ಪ್ರಜೆ ನೈಜೀರಿಯಾದಿಂದ ಡ್ರಗ್ಸ್ ತರಿಸಿಕೊಂಡು ಸುಭಾಷಿಣಿ ಮನೆಯಲ್ಲಿ ಶೇಖರಿಸಿಟ್ಟಿದ್ದ. ಆತ ಸೂಚಿಸಿದ್ದ ವಿಳಾಸ, ಗ್ರಾಹಕರಿಗೆ ಸುಭಾಷಿಣಿ ತಲುಪಿಸುತ್ತಿದ್ದಳು ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಇನ್ನು, ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ್ದ ಸಿಸಿಬಿ ಮಾದಕ ದ್ರವ್ಯ ನಿಗ್ರಹ ದಳ, ಬಂಧಿತಳಿಂದ 2 ಕೋಟಿ ರೂ. ಮಾದಕ ವಸ್ತುಗಳನ್ನು ವಶಕ್ಕೆ ಪಡೆದುಕೊಂಡಿದೆ.

29 C