ಬೆಂಗಳೂರು | ಸಚಿವ ಬೈರತಿ ಸುರೇಶ್ ಕಚೇರಿಯಲ್ಲಿ ಲಕ್ಷಾಂತರ ರೂ. ಮೌಲ್ಯದ ನಗ-ನಗದು ಕಳವು!
ಬೆಂಗಳೂರು: ರಾಜ್ಯ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಅವರ ಕಚೇರಿಯಲ್ಲಿ 300 ಗ್ರಾಂ ಚಿನ್ನಾಭರಣ ಹಾಗೂ 1.50 ಲಕ್ಷ ರೂ. ನಗದು ಇದ್ದ ಬ್ಯಾಗ್ ಕಳವಾಗಿರುವುದು ವರದಿಯಾಗಿದೆ. ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಯನ್ನು ಪತ್ತೆ ಹಚ್ಚಿರುವ ವಿಧಾನಸೌಧ ಪೊಲೀಸರು ಡಿ ಗ್ರೂಪ್ ನೌಕರನನ್ನು ಬಂಧಿಸಿದ್ದಾರೆ. ನವೀನ್ ಎಂಬವರು ಕೆಲಸದ ನಿಮಿತ್ತ ಸಚಿವ ಭೈರತಿ ಸುರೇಶ್ ಅವರ ಕಚೇರಿಗೆ ಬಂದಿದ್ದ ವೇಳೆ 300 ಗ್ರಾಂ ಚಿನ್ನಾಭರಣ ಹಾಗೂ 1.50 ಲಕ್ಷ ರೂ. ನಗದು ಇದ್ದ ಬ್ಯಾಗನ್ನು ಅಲ್ಲೇ ಮರೆತು ಹೋಗಿದ್ದರು. ಮರು ದಿನ ಕಚೇರಿಗೆ ಬಂದು ಪರಿಶೀಲಿಸಿದಾಗ ಬ್ಯಾಗ್ ನಾಪತ್ತೆಯಾಗಿರುವುದು ಗಮನಕ್ಕೆ ಬಂದಿದೆ. ಈ ಬಗ್ಗೆ ನವೀನ್ ವಿಧಾನಸೌಧ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಅದರಂತೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕಚೇರಿಯ ಸಿಸಿಟಿವಿ ಕ್ಯಾಮರಾದ ದೃಶ್ಯಗಳನ್ನು ಪರಿಶೀಲಿಸಿದರು. ಈ ವೇಳೆ ಡಿಪಿಎಆರ್ ಇಲಾಖೆಯ ಡಿ ಗ್ರೂಪ್ ನೌಕರ ಆಂಟೋನಿ ಎಂಬಾತ ಬ್ಯಾಗ್ ಕೊಂಡೊಯ್ದಿರುವುದು ಪತ್ತೆಯಾಗಿದೆ. ತಕ್ಷಣ ಕಾರ್ಯಾಚರಣೆ ನಡೆಸಿದ ವಿಧಾನಸೌಧ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಕೋಟ | ಕ್ರಿಕೆಟ್ ಆನ್ ಲೈನ್ ಬೆಟ್ಟಿಂಗ್: ಆರೋಪಿಯ ಬಂಧನ
ಕೋಟ: ಪಾಂಡೇಶ್ವರ ಗ್ರಾಮದ ಕೋಸ್ಟಲ್ ಪ್ಯಾರಡೈಸ್ ಹೋಟೆಲ್ ಸಮೀಪದ ಪಾಂಡೇಶ್ವರ ರಸ್ತೆಯ ಸಾರ್ವಜನಿಕ ಸ್ಥಳದಲ್ಲಿ ವಿಶ್ವಕಪ್ ಟಿ-20 ಕ್ರಿಕೆಟ್ ಪಂದ್ಯಾಟಕ್ಕೆ ಸಂಬಂಧಿಸಿ ಅಕ್ರಮವಾಗಿ ಕ್ರಿಕೆಟ್ ಬೆಟ್ಟಿಂಗ್ ನಡೆಸುತ್ತಿದ್ದ ಆರೋಪದಲ್ಲಿ ಓರ್ವ ಯುವಕನನ್ನು ಕೋಟ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಬ್ರಹ್ಮಾವರ ತಾಲೂಕಿನ ಬಾಳ್ಕುದ್ರು ಗ್ರಾಮದ ಹಂಗಾರಕಟ್ಟೆ ನಿವಾಸಿ ಮನಿತ್(26) ಎಂದು ಗುರುತಿಸಲಾಗಿದೆ. ಫೆ.9ರಂದು ಕ್ರಿಕೆಟ್ ಬೆಟ್ಟಿಂಗ್ ನಡೆಯುತ್ತಿರುವ ಬಗ್ಗೆ ಖಚಿತ ಮಾಹಿತಿಯ ಮೇರೆಗೆ ಕೋಟ ಪೊಲೀಸ್ ಉಪ ನಿರೀಕ್ಷಕ ಪ್ರವೀಣ್ ಕುಮಾರ್ ಆರ್. ಸಿಬ್ಬಂದಿ ಜೊತೆಗೆ ಸ್ಥಳಕ್ಕೆ ದಾಳಿ ನಡೆಸಿದರು. ಈ ವೇಳೆ ಬೆಟ್ಟಿಂಗ್ ನಲ್ಲಿ ತೊಡಗಿದ್ದ ಸಾರ್ವಜನಿಕರು ಸ್ಥಳದಿಂದ ಓಡಿ ಹೋಗಿದ್ದು, ಬೆಟ್ಟಿಂಗ್ ನಡೆಸುತ್ತಿದ್ದ ಮನಿತ್ ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಂಧಿತನ ವಶದಲ್ಲಿದ್ದ ಕ್ರಿಕೆಟ್ ಬೆಟ್ಟಿಂಗ್ ಗೆ ಬಳಸುತ್ತಿದ್ದ ಐ ಫೋನ್ ಮೊಬೈಲ್ ಹಾಗೂ ಬೆಟ್ಟಿಂಗ್ ಹಣ 800 ರೂ. ವಶಪಡಿಸಿಕೊಳ್ಳಲಾಗಿದೆ. ಆರೋಪಿತನು ಒಮಾನ್ - ಝಿಂಬಾಬ್ವೆ ನಡುವಿನ ಕ್ರಿಕೆಟ್ ಪಂದ್ಯಕ್ಕೆ ಸಂಬಂಧಿಸಿ ಮೊಬೈಲ್ ನಲ್ಲಿರುವ ಆನ್ ಲೈನ್ ಅಪ್ಲಿಕೇಶನ್ ಮೂಲಕ ಸಂಘಟಿತವಾಗಿ ಇತರರೊಂದಿಗೆ ಸೇರಿಕೊಂಡು ಅಕ್ರಮವಾಗಿ ಬೆಟ್ಟಿಂಗ್ ನಡೆಸುತ್ತಿದ್ದುದಾಗಿ ತನಿಖೆಯಿಂದ ತಿಳಿದುಬಂದಿದೆ. ಈ ಸಂಬಂಧ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಆರೋಪಿಯನ್ನು ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
CHAMARAJANAGARA | ಮಲೆ ಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆ ಹೊರಟಿದ್ದ ಬಾಲಕನ ಮೇಲೆ ಚಿರತೆ ದಾಳಿ
ಚಾಮರಾಜನಗರ: ಜಿಲ್ಲೆಯ ಮಲೆಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆ ಕೈಗೊಂಡಿದ್ದ ಭಕ್ತರ ಮೇಲೆ ಚಿರತೆ ದಾಳಿ ನಡೆಸಿದ ಘಟನೆ ಭಕ್ತರಲ್ಲಿ ಆತಂಕ ಮೂಡಿಸಿದೆ. ಬೆಂಗಳೂರು ದಕ್ಷಿಣ ಚನ್ನಪಟ್ಟಣ ಮೂಲದ ಶ್ರೇಯಸ್ ಎಂಬ ಬಾಲಕ ತನ್ನ ಕುಟುಂಬದೊಂದಿಗೆ ಪಾದಯಾತ್ರೆಗಾಗಿ ಬಂದಿದ್ದ ವೇಳೆ ಈ ಘಟನೆ ಸಂಭವಿಸಿದೆ. ಪಾದಯಾತ್ರಿಗಳು ಗುಂಪುಗುಂಪಾಗಿ ಸಾಗುತ್ತಿದ್ದ ವೇಳೆ ಚಿರತೆ ಬಾಲಕನ ಮೇಲೆ ಎರಗಿದೆ. ದಾಳಿಯ ವೇಳೆ ಬಾಲಕ ಜೋರಾಗಿ ಕಿರುಚಿಕೊಂಡಿದ್ದರಿಂದ ಬೆದರಿದ ಚಿರತೆ ಸ್ಥಳದಿಂದ ಕಾಲ್ಕಿತ್ತಿದೆ. ಈ ಘಟನೆಯಿಂದ ಪಾದಯಾತ್ರಿಗಳಲ್ಲಿ ಮತ್ತೆ ಚಿರತೆ ಭೀತಿ ಉಂಟಾಗಿದೆ. ಘಟನೆ ಬಳಿಕ ಅರಣ್ಯ ಇಲಾಖೆ ಎಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದು, ವನ್ಯಜೀವಿಗಳಿಗೆ ತೊಂದರೆಯಾಗದಂತೆ ನಾಲ್ವರು ಸದಸ್ಯರನ್ನೊಳಗೊಂಡ ವಿಶೇಷ ತಂಡವನ್ನು ನಿಯೋಜಿಸಲಾಗಿದೆ. ಜೊತೆಗೆ ಪೊಲೀಸ್, ಅರಣ್ಯ ಹಾಗೂ ಸಂಬಂಧಿತ ಪ್ರಾಧಿಕಾರದ ಸಿಬ್ಬಂದಿಯನ್ನು ಭದ್ರತೆಗೆ ನೇಮಿಸಲಾಗಿದೆ. ದಾಳಿಯಿಂದ ಗಾಯಗೊಂಡ ಬಾಲಕನಿಗೆ ಮಲೆ ಮಹದೇಶ್ವರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗಿದೆ.
ಭಾರತ ಮತ್ತು ಅಮೆರಿಕ ನಡುವಿನ ದ್ವಿಪಕ್ಷೀಯ ವ್ಯಾಪಾರ ಒಪ್ಪಂದ ಜಾರಿಯಾಗಿರುವ ಖುಷಿಯಲ್ಲೇ ತೇಲಾಡುತ್ತಿರುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಭಾರತದ ಶೂನ್ಯ ಸುಂಕದ ಭರವಸೆಯನ್ನು ಪದೇ ಪದೇ ಪ್ರತಿಪಾದಿಸುತ್ತಿದ್ದಾರೆ. ಆದರೆ ಈ ಕುರಿತು ಶ್ವೇತಭವನವು ಅಧಿಕೃತ ಪ್ರಕಟಣೆ ಹೊರಡಿಸಿದ್ದು, ಉಭಯ ದೇಶಗಳ ನಡುವೆ ಆಗಿರುವ ವ್ಯಾಪಾರ ಒಪ್ಪಂದದ ಸಂಪೂರ್ಣ ಮಾಹಿತಿಯನ್ನು ಒದಗಿಸಿದೆ. ಈ ದ್ವಿಪಕ್ಷೀಯ ವ್ಯಾಪಾರ ಒಪ್ಪಂದ, 1.4 ಶತಕೋಟಿ ಜನಸಂಖ್ಯೆಯ ಭಾರತೀಯ ಮಾರುಕಟ್ಟೆಗೆ ಅಮೆರಿಕನ್ ಸರಕುಗಳಿಗೆ ಪ್ರವೇಶ ನೀಡಲಿದೆ ಎಂದು ವೈಟ್ಹೌಸ್ ಸಂತಸ ವ್ಯಕ್ತಪಡಿಸಿದೆ.
ಬ್ರಿಟನ್ಗೆ ಮೊದಲ ಮುಸ್ಲಿಂ ಪ್ರಧಾನಿ?; ಕೀರ್ ಸ್ಟಾರ್ಮರ್- ಎಪ್ಸ್ಟೀನ್ ಹಗರಣದ ಮಧ್ಯೆ ಮುನ್ನೆಲೆಯಲ್ಲಿ ಶಬಾನಾ ಮಹಮೂದ್
ಬ್ರಿಟನ್: ಅಮೆರಿಕಕ್ಕೆ ಬ್ರಿಟಿಷ್ ರಾಯಭಾರಿಯಾಗಿದ್ದ ಪೀಟರ್ ಮ್ಯಾಂಡೆಲ್ಸನ್ ಅವರನ್ನು ನೇಮಕ ಮಾಡಿ ನಂತರ ತೆಗೆದುಹಾಕುವ ನಿರ್ಧಾರದ ವಿವಾದದ ನಂತರ ಯುಕೆ ಪ್ರಧಾನಿ ಕೀರ್ ಸ್ಟಾರ್ಮರ್ ರಾಜೀನಾಮೆ ನೀಡುವಂತೆ ಹೆಚ್ಚಿನ ಒತ್ತಡ ಎದುರಿಸುತ್ತಿದ್ದಾರೆ. ಈ ಮಧ್ಯೆ ಬರ್ಮಿಂಗ್ಹ್ಯಾಮ್ ಲೇಡಿಯುಡ್ನ ಸಂಸದೆಯಾಗಿರುವ ಶಬಾನಾ ಮಹಮೂದ್ ಅವರ ಹೆಸರು ಬ್ರಿಟನ್ ಪ್ರಧಾನಿ ಹುದ್ದೆಗೆ ಕೇಳಿ ಬಂದಿದೆ. ಪೀಟರ್ ಮ್ಯಾಂಡೆಲ್ಸನ್, ಲೈಂಗಿಕ ಅಪರಾಧಿ ಜೆಫ್ರಿ ಎಪ್ಸ್ಟೀನ್ ಜೊತೆ ಸಂಬಂಧ ಹೊಂದಿದ್ದ ಎಂಬ ಆರೋಪವು ವಿವಾದಕ್ಕೆ ಕಾರಣವಾಗಿತ್ತು. ಸ್ಟಾರ್ಮರ್ ರಾಜೀನಾಮೆ ನೀಡುವಂತೆ ಒತ್ತಡ ಎದುರಿಸುತ್ತಿರುವ ಮಧ್ಯೆ ಅವರ ಆಪ್ತ ಸಹಾಯಕ ಮಾರ್ಗನ್ ಮೆಕ್ಸ್ವೀನಿ ರಾಜೀನಾಮೆ ನೀಡಿದ್ದಾರೆ. ಅವರು ಮ್ಯಾಂಡೆಲ್ಸನ್ ಅವರ ನೇಮಕಾತಿಯಲ್ಲಿ ತಮ್ಮ ಪಾತ್ರಕ್ಕಾಗಿ ರಾಜೀನಾಮೆ ನೀಡಿದ್ದಾರೆ ಎಂದು ಹೇಳಲಾಗಿದೆ. ಬ್ರಿಟನ್ ಪ್ರಧಾನಮಂತ್ರಿಯವರ ಸಂವಹನ ವಿಭಾಗದ ಮುಖ್ಯಸ್ಥ ಟಿಮ್ ಆಲನ್ ಕೂಡ ಹುದ್ದೆ ತೊರೆದಿದ್ದಾರೆ. ಇದರಿಂದ ಬ್ರಿಟನ್ನಲ್ಲಿ ರಾಜಕೀಯ ಬಿಕ್ಕಟ್ಟು ಇನ್ನಷ್ಟು ಹೆಚ್ಚಳವಾಗಿದೆ. ಒಂದು ವೇಳೆ ಪ್ರಧಾನಿ ಕೀರ್ ಸ್ಟಾರ್ಮರ್ ತಮ್ಮ ಹುದ್ದೆಗೆ ರಾಜೀನಾಮೆ ನೀಡಬೇಕಾಗಿ ಬಂದಲ್ಲಿ ಉತ್ತರಾಧಿಕಾರಿ ಯಾರು ಎಂಬ ಪ್ರಶ್ನೆ ಮೂಡಿದೆ. ಯುಕೆ ಪ್ರಧಾನಿ ಹುದ್ದೆಗೆ ಗೃಹ ಕಾರ್ಯದರ್ಶಿ ಶಬಾನಾ ಮಹಮೂದ್ ಅವರ ಹೆಸರು ಕೂಡ ಕೇಳಿ ಬರುತ್ತಿದೆ. ಶಬಾನಾ ಮಹಮೂದ್ ಅವರು ಬ್ರಿಟನ್ ಪ್ರಧಾನಿ ಹುದ್ದೆಗೆ ಏರಿದರೆ ಪಾಕಿಸ್ತಾನ ಮೂಲದ ಯುಕೆಯ ಮೊದಲ ಪ್ರಧಾನಿಯಾಗಿ ಮತ್ತು ಆ ಹುದ್ದೆಯನ್ನು ಅಲಂಕರಿಸಿದ ಮೊದಲ ಮುಸ್ಲಿಂ ಮಹಿಳೆಯಾಗಿ ಇತಿಹಾಸ ನಿರ್ಮಾಣವಾಗಲಿದೆ. ಶಬಾನಾ ಮಹಮೂದ್ ಯಾರು? 2010 ರಿಂದ ಬರ್ಮಿಂಗ್ಹ್ಯಾಮ್ ಲೇಡಿಯುಡ್ನ ಸಂಸದೆಯಾಗಿರುವ ಶಬಾನಾ ಮಹಮೂದ್ ಅವರು ಲೇಬರ್ ಪಕ್ಷದ ಅತ್ಯಂತ ಸಮರ್ಥ ಮತ್ತು ಪ್ರಭಾವಿ ನಾಯಕರಲ್ಲಿ ಓರ್ವರು ಎಂದು ವ್ಯಾಪಕವಾಗಿ ಪರಿಗಣಿಸಲಾಗಿದೆ. ವೃತ್ತಿಯಿಂದ ಬ್ಯಾರಿಸ್ಟರ್ ಆಗಿರುವ ಅವರು, 2010ರಲ್ಲಿ ಸಂಸತ್ತಿಗೆ ಪ್ರವೇಶಿಸಿದ ಲೇಬರ್ ಪಕ್ಷದ ಮೊದಲ ಮುಸ್ಲಿಂ ಮಹಿಳಾ ಸಂಸದರಲ್ಲಿ ಒಬ್ಬರಾಗಿದ್ದರು. ಮೊದಲ ಬಾರಿಯೇ ಶಾಡೋ ಕ್ಯಾಬಿನೆಟ್ನಲ್ಲಿ ಸ್ಥಾನ ಪಡೆದು ಪಕ್ಷದೊಳಗೆ ತಮ್ಮದೇ ಪ್ರಾಬಲ್ಯವನ್ನು ಹೊಂದಿದ್ದಾರೆ. ಲೇಬರ್ ಪಕ್ಷ ಅಧಿಕಾರಕ್ಕೆ ಮರಳಿದ ನಂತರ ಗೃಹ ಕಾರ್ಯದರ್ಶಿಯಾಗಿ ನೇಮಕಗೊಂಡ ಮಹಮೂದ್, ಸರಕಾರದಲ್ಲಿ ಅತ್ಯಂತ ಪ್ರಭಾವಿ ಖಾತೆಯನ್ನು ಹೊಂದಿದ್ದಾರೆ. ಪೊಲೀಸ್, ರಾಷ್ಟ್ರೀಯ ಭದ್ರತೆ, ವಲಸೆ ಮತ್ತು ಸಾರ್ವಜನಿಕ ಸುವ್ಯವಸ್ಥೆಯನ್ನು ಮೇಲ್ವಿಚಾರಣೆ ಮಾಡುತ್ತಿದ್ದಾರೆ. ಶಬಾನಾ ಮಹಮೂದ್ ಅವರು ಬ್ರಿಟಿಷ್ ಮುಸ್ಲಿಂ ಗುರುತು, ಕಾರ್ಮಿಕ ವರ್ಗ ಮತ್ತು ತಮ್ಮ ರಾಜಕೀಯ ಪ್ರಯಾಣವನ್ನು ರೂಪಿಸುವಲ್ಲಿ ಶಿಕ್ಷಣ ವಹಿಸಿದ ಪಾತ್ರದ ಬಗ್ಗೆ ಹೆಚ್ಚಾಗಿ ಮಾತನಾಡುತ್ತಿದ್ದರು.
ಬೆಂಗಳೂರಿನ ವಿಧಾನಸೌಧದ ಬಳಿಯಿರುವ ಪ್ರತಿಷ್ಠಿತ ರಾಡಿಸನ್ ಹೋಟೆಲ್ ನಲ್ಲಿ ಕೆನಡಾ ಮೂಲದ ಮಹಿಳೆಯೊಬ್ಬರಿಗೆ ಹೋಟೆಲ್ ನ ಖಾಸಗಿ ಸ್ಪಾದಲ್ಲಿ ಮಸಾಜ್ ಸೇವೆ ವೇಳೆ ಥೆರಪಿಸ್ಟ್ ಒಬ್ಬರೂ ಆಕೆಯೊಂದಿಗೆ ಅನುಚಿತವಾಗಿ ವರ್ತಿಸಿದ್ದು, ಆಕೆ ಬಟ್ಟೆ ಬದಲಾಯಿಸುವ ಸಮಯದಲ್ಲಿ ಬಾಗಿಲನ್ನು ತೆರೆದಿದ್ದು, ಇದರಿಂದಾಗಿ ಆಕೆ ಮಾನಸಿಕವಾಗಿ ಆಘಾತಕ್ಕೆ ಒಳಾಗಿದ್ದು, ಹೋಟೆಲ್ ಆಡಳಿತ ಮಂಡಳಿಗೆ ವಿಷಯ ತಿಳಿಸಿದಾಗ್ಯೂ, ಗಂಭೀರವಾಗಿ ಪರಿಗಣಿಸಿಲ್ಲ ಎಂದು ದೂರು ನೀಡಿರುವ ಘಟನೆ ನಡೆದಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಹೋಟೆಲ್ ಆಡಳಿತ ಮಂಡಳಿ ಆರೋಪಗಳನ್ನು ನಿರಾಕರಿಸಿದ್ದು, ಇದೊಂದು ಸುಲಿಗೆಯ ಪ್ರಯತ್ನ ಎಂದು ತಿಳಿಸಿದ್ದಾರೆ.
Silver Price: ಬೆಳ್ಳಿ ದರದಲ್ಲಿ ಇಂದು ರೂ.10,000 ಕುಸಿತ, ಚಿನ್ನದ ಬೆಲೆ ಎಷ್ಟಿದೆ?
ಬೆಂಗಳೂರು: ಗ್ರಾಹಕರು ಹಾಗೂ ಹೂಡಿಕೆದಾರರು ನಿರಂತರವಾಗಿ ಕೆಲವು ವಾರಗಳಿಂದ ಚಿನ್ನ-ಬೆಳ್ಳಿ ದರದ ಮೇಲಾಗುತ್ತಿರುವ ಏರಿಕೆ ಹಾಗೂ ಇಳಿಕೆ ಕುರಿತು ಗಂಭೀರ ಚರ್ಚೆ ನಡೆಸಿದ್ದಾರೆ. ಇವುಗಳ ದರದಲ್ಲಿ ಏರಿಳಿತ ಇವತ್ತಿಗೂ ಮುಂದುವರಿದಿದೆ. ಇಂದು ಮಂಗಳವಾರ (ಫೆಬ್ರವರಿ 10) ಬೆಳ್ಳಿ ದರದಲ್ಲಿ ಮತ್ತೆ ಕುಸಿತವಾಗಿದೆ. ಒಂದು ಕೆಜಿ ಬೆಳ್ಳಿಗೆ 10,000 ರೂಪಾಯಿ ಇಳಿಕೆ ಆಗಿದೆ. ಜಾಗತಿಕ ಆರ್ಥಿಕ ಅನಿಶ್ಚಿತೆ, ವಿದೇಶಿ
ಸ್ಥಿರವಾದ ಚಿನ್ನ-ಬೆಳ್ಳಿ ಬೆಲೆ; ಇಂದಿನ ದರವೆಷ್ಟು?
ಜಾಗತಿಕ ಮಾರುಕಟ್ಟೆಯ ಏರಿಳಿತಗಳು, ಡಾಲರ್ ನ ಬಲ, ಆಮದು ವೆಚ್ಚಗಳು, ಬ್ಯಾಂಕ್ ಗಳ ಸ್ಥಿರ ಠೇವಣಿಗಳ ಮೇಲಿನ ಬಡ್ಡಿದರಗಳು, ಆರ್ಥಿಕ ಸ್ಥಿರತೆ, ಹಣದುಬ್ಬರ ಹಾಗೂ ಬೇಡಿಕೆ- ಪೂರೈಕೆ ಸೇರಿದಂತೆ ಭಾರತದಲ್ಲಿ ಚಿನ್ನದ ದರಗಳ ಮೇಲೆ ಹಲವಾರು ಅಂಶಗಳು ಪರಿಣಾಮ ಬೀರುತ್ತವೆ. ಕಳೆದ ವಾರಾಂತ್ಯದಲ್ಲಿ ಕುಸಿತ ಕಂಡಿದ್ದ ಚಿನ್ನ, ಸೋಮವಾರದಿಂದ ಅಲ್ಪ ಏರಿಕೆ ಕಂಡಿತ್ತು. ಮಂಗಳವಾರ ಬೆಲೆ ಸ್ಥಿರವಾಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಜನವರಿ 29ರಂದು ಅತ್ಯಧಿಕ 5,600 ಡಾಲರ್ ಗಳಿಗೆ ಏರಿದ ನಂತರ ಇಳಿಕೆ ಮತ್ತು ಏರಿಕೆಯ ಏರಿಳಿತದ ನಡುವೆ ನಿನ್ನೆ ಸೋಮವಾರ ಮತ್ತೆ 5,000 ಡಾಲರ್ ಗಳಿಗೆ ಬಂದು ನಿಂತಿದೆ. ಮಂಗಳವಾರವೂ ಇದೇ ಬೆಲೆ ಮುಂದುವರಿದಿದೆ. ಫೆಬ್ರವರಿ ಮೊದಲ ವಾರದಲ್ಲಿ ಚಿನ್ನ-ಬೆಳ್ಳಿ ಬೆಲೆಯಲ್ಲಿ ದೇಶ ಮತ್ತು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬಹಳ ಚಂಚಲತೆ ಕಂಡಿತ್ತು. ಕಳೆದ ವಾರದ ಕೊನೆಯ ವಹಿವಾಟಿನ ದಿನವಾದ ಶುಕ್ರವಾರ ಚಿನ್ನದ ದರ ಪ್ರತಿ ಔನ್ಸ್ ಗೆ 4,988.60 ಡಾಲರ್ ಗೆ ಕುಸಿದಿತ್ತು. ಬೆಳ್ಳಿ ಕೂಡ ಪ್ರತಿ ಔನ್ಸ್ ಗೆ 77.525 ಡಾಲರ್ ಗೆ ಕೊನೆಗೊಂಡಿತ್ತು. ಜಾಗತಿಕ ಮಾರುಕಟ್ಟೆಯ ಏರಿಳಿತಗಳು, ಡಾಲರ್ ನ ಬಲ, ಆಮದು ವೆಚ್ಚಗಳು, ಬ್ಯಾಂಕ್ ಗಳ ಸ್ಥಿರ ಠೇವಣಿಗಳ ಮೇಲಿನ ಬಡ್ಡಿದರಗಳು, ಆರ್ಥಿಕ ಸ್ಥಿರತೆ, ಸೀಸನ್ನ ಬೆಲೆಗಳು, ಹಣದುಬ್ಬರ ಮತ್ತು ಬೇಡಿಕೆ- ಪೂರೈಕೆ ಸೇರಿದಂತೆ ಭಾರತದಲ್ಲಿ ಚಿನ್ನದ ದರಗಳ ಮೇಲೆ ಹಲವಾರು ಅಂಶಗಳು ಪರಿಣಾಮ ಬೀರುತ್ತವೆ. ಅಧಿಕ ಹಣದುಬ್ಬರ ದರಗಳು ಚಿನ್ನದ ಬೇಡಿಕೆಯನ್ನು ಏರಿಸುತ್ತವೆ. ಬೇಡಿಕೆ ಏರುತ್ತಿದ್ದಂತೆ ಬೆಲೆಯೂ ಏರುತ್ತದೆ. ಭೌಗೋಳಿಕ-ರಾಜಕೀಯ ಪರಿಸ್ಥಿತಿಗಳ ಹೊರತಾಗಿಯೂ ಚಿನ್ನದ ಅಂತರರಾಷ್ಟ್ರೀಯ ಸ್ಪಾಟ್ ಬೆಲೆಯು ಭಾರತದಲ್ಲಿ ಚಿನ್ನದ ಲೋಹದ ಮೌಲ್ಯದ ಮೇಲೆ ಪರಿಣಾಮ ಬೀರುತ್ತದೆ. ಇಂದು ಫೆಬ್ರವರಿ 10ರಂದು ದೇಸಿ ಮಾರುಕಟ್ಟೆಯಲ್ಲಿ ಬೆಳ್ಳಿ ಕೊಂಚ ಏರಿಕೆಯಾಗಿದೆ. ಬೆಳ್ಳಿಯ ಬೆಲೆ ಪ್ರತಿ ಕೆಜಿಗೆ 3,00100 ರೂ. ನಲ್ಲಿ ವಹಿವಾಟು ನಡೆಸುತ್ತಿದೆ. 24 ಕ್ಯಾರೆಟ್ ಚಿನ್ನದ 10 ಗ್ರಾಂ ಬೆಲೆ 1,57,920 ರೂ. ಮತ್ತು 22 ಕ್ಯಾರೆಟ್ ಚಿನ್ನದ 10 ಗ್ರಾಂ ಬೆಲೆ 1,44,760 ರೂ. ಗೆ ತಲುಪಿದೆ. ದೆಹಲಿಯಲ್ಲಿ 10 ಗ್ರಾಂ 24 ಕ್ಯಾರೆಟ್ನ ಚಿನ್ನದ ಬೆಲೆ 1,58,070 ರೂ. ಗಳಾಗಿದ್ದರೆ, 22 ಕ್ಯಾರೆಟ್ನ 10 ಗ್ರಾಂ ಚಿನ್ನದ ಮೌಲ್ಯ 1,44,910 ರೂ. ಇದೆ. ಮಂಗಳೂರಿನಲ್ಲಿ ಇಂದಿನ ಚಿನ್ನದ ದರವೆಷ್ಟು? ಮಂಗಳವಾರ ಫೆಬ್ರವರಿ 10ರಂದು ಬೆಳಗಿನ 11 ಗಂಟೆಯ ವಹಿವಾಟಿನಲ್ಲಿ ಮಂಗಳೂರಿನಲ್ಲಿ ಚಿನ್ನದ ಬೆಲೆ ಮತ್ತೆ ಸ್ಥಿರವಾಗಿದೆ. ಬೆಳಗಿನ ವಹಿವಾಟಿನಲ್ಲಿ ಒಂದು ಗ್ರಾಂ 24 ಕ್ಯಾರೆಟ್ ಚಿನ್ನದ ದರ 15,791 ರೂ. ನಷ್ಟಿದೆ. ಒಂದು ಗ್ರಾಂ 22 ಕ್ಯಾರೆಟ್ ಚಿನ್ನದ ದರ 14,475 ರೂ. ಮತ್ತು ಒಂದು ಗ್ರಾಂ 18 ಕ್ಯಾರೆಟ್ ಚಿನ್ನದ ದರ 11,844 ರೂ. ಬೆಲೆಗೆ ತಲುಪಿದೆ. ಬೆಳ್ಳಿಯ ಬೆಲೆಯಲ್ಲಿ ಅಲ್ಪ ಏರಿಕೆ ಗುರುವಾರ ಮತ್ತು ಶುಕ್ರವಾರ ಸತತ ಕುಸಿತ ಕಂಡಿದ್ದ ಬೆಳ್ಳಿ ಶನಿವಾರ ಏರಿಕೆಯಾಗಿತ್ತು. ಇದೀಗ ಸೋಮವಾರ ಮತ್ತು ಮಂಗಳವಾರ ಮಾರುಕಟ್ಟೆ ತೆರೆದ ತಕ್ಷಣ ಅಲ್ಪ ಏರಿದ ಬೆಳ್ಳಿ ಕೆಜಿಗೆ 3,00,100 ಲಕ್ಷ ರೂ. ಗೆ ಬಂದು ನಿಂತಿದೆ.
ಪಾರಂಪರಿಕ ಹೆಮ್ಮೆಯ ಮೈಸೂರು ಸ್ಯಾಂಡಲ್ ಸೋಪ್ ಗೆ ಹೊಸ ರೂಪ: ಖ್ಯಾತ ನಟಿ ತಮನ್ನಾ ಪ್ರಚಾರ ರಾಯಭಾರಿ
ಮೈಸೋಪು ಸೇರಿದಂತೆ ಸಂಸ್ಥೆಯ ಶವರ್ ಜೆಲ್, ಟಾಲ್ಕಂ ಪೌಡರ್, ಹ್ಯಾಂಡ್ ವಾಶ್, ಅಗರಬತ್ತಿ, ಸಾಂಬ್ರಾಣಿ, ಧೂಪ, ಮಿಲೆನಿಯಂ ಸೋಪ್ ಮುಂತಾದವುಗಳಿಗೆ ಅಪಾರ ಬೇಡಿಕೆ ಇದೆ. ಪ್ರಚಾರಾರ್ಥವಾಗಿ ಸಿದ್ಧಪಡಿಸಿರುವ ವಿಡಿಯೋ ಇತ್ಯಾದಿಗಳನ್ನು ಕೂಡ ಮಂಗಳವಾರ ಬಿಡುಗಡೆ ಮಾಡಲಾಗುವುದು. ಜತೆಗೆ ವಿಜಯಪುರ ಮತ್ತು ಡಾಬಸಪೇಟೆ ಕೈಗಾರಿಕಾ ಪ್ರದೇಶಗಳಲ್ಲಿ ಸಂಸ್ಥೆಯ ಉತ್ಪಾದನಾ ಘಟಕಗಳನ್ನು ಸದ್ಯದಲ್ಲೇ ಆರಂಭಿಸಲಾಗುವುದು. ಈ ನಿಟ್ಟಿನಲ್ಲಿ ಅಗತ್ಯ ಪ್ರಕ್ರಿಯೆಗಳು ಪ್ರಗತಿಯಲ್ಲಿವೆ. ಜೊತೆಗೆ ಈಗ 25-30 ಕೋಟಿ ರೂ. ಆಸುಪಾಸಿನಲ್ಲಿರುವ ರಫ್ತು ವಹಿವಾಟನ್ನು ಮುಂದಿನ ದಿನಗಳಲ್ಲಿ ದ್ವಿಗುಣಗೊಳಿಸಲು ನಿರ್ಧರಿಸಲಾಗಿದೆ ಎಂದು ಸಚಿವ ಎಂಬಿ ಪಾಟೀಲ ಮಾಹಿತಿ ನೀಡಿದ್ದಾರೆ.
ಬಸವಕಲ್ಯಾಣ ತಾಲೂಕಿನ ನಾರಾಯಣಪುರ ಗ್ರಾಮದಲ್ಲಿ ಶತಮಾನಗಳ ಹಿಂದಿನ ಅವಶೇಷ, ಶಾಸನ ಪತ್ತೆ
ಬೀದರ್ : ಐತಿಹಾಸಿಕ ಹಿನ್ನೆಲೆಯುಳ್ಳ ಬಸವಕಲ್ಯಾಣ ತಾಲೂಕಿನ ನಾರಾಯಣಪುರ ಗ್ರಾಮದಲ್ಲಿ ಶತಮಾನಗಳ ಹಿಂದಿನ ಅವಶೇಷಗಳು ಪತ್ತೆಯಾಗಿದ್ದು, ಚಾಲುಕ್ಯರ ಕಾಲದ ಶಾಸನ ಒಂದು ಸಿಕ್ಕಿದೆ ಎಂದು ಅಂದಾಜಿಸಲಾಗಿದೆ. ನಾರಾಯಣಪುರ ಗ್ರಾಮದಲ್ಲಿ ಭವಾನಿ ದೇವಸ್ಥಾನದ ಹಿಂದುಗಡೆ ಗ್ರಾಮಸ್ಥರು ಕಾರ್ಯಕ್ರಮವೊಂದರ ಹಿನ್ನೆಲೆಯಲ್ಲಿ ಅಡುಗೆ ಮಾಡುವುದಕ್ಕಾಗಿ ಜಾಗ ಸ್ವಚ್ಛಗೊಳಿಸುತ್ತಿದ್ದರು. ಆ ಸಂದರ್ಭದಲ್ಲಿ ಶಿವಲಿಂಗ, ನಾಗ ಸರ್ಪ, ಶಿಲಾಶಾಸನದ ಅವಶೇಷಗಳು ಪತ್ತೆಯಾಗಿದ್ದು, ಗ್ರಾಮಸ್ಥರಲ್ಲಿ ಕುತೂಹಲ ಮೂಡಿದೆ. ಐದು ಹೆಡೆಯ ನಾಗಮೂರ್ತಿ, ಶಿವಲಿಂಗ, ಶಿಲಾ ಶಾಸನ, ಹಾಗೂ ಸರ್ಪ ರೂಪದ ಶಿಲ್ಪ ಪತ್ತೆಯಾಗಿವೆ. ಗ್ರಾಮದಲ್ಲಿ ಇನ್ನಷ್ಟು ಶಿಲಾಶಾಸನಗಳು, ಮೂರ್ತಿಗಳು ಪತ್ತೆಯಾಗುವ ಶಂಕೆ ಇದ್ದು, ಗ್ರಾಮಸ್ಥರು ಸಂಶೋಧನೆಗೆ ಒತ್ತಾಯಿಸಿದ್ದಾರೆ. ಈ ಹಿಂದೆ ಸುಮಾರು 7-8 ವರ್ಷಗಳ ಹಿಂದೆ ಗ್ರಾಮದಲ್ಲಿ ವಿಷ್ಣುವಿನ ವಿಗ್ರಹ, ಕಾಳಿಕಾ ಮಾತಾ ವಿಗ್ರಹಗಳು ಪತ್ತೆಯಾಗಿದ್ದವು. ಗ್ರಾಮದಲ್ಲಿ 108 ದೇವಸ್ಥಾನಗಳು ಇದ್ದು, ನೆಲ ಅಗೆಯುವಾಗ ಅಲ್ಲಲ್ಲಿ ಪುರಾತನ ಶಿಲ್ಪಕಲೆಗಳು, ವಿಗ್ರಹಗಳು ಪತ್ತೆಯಾಗುತ್ತಿವೆ ಎಂದು ಗ್ರಾಮಸ್ಥರು ಹೇಳುತ್ತಾರೆ. ಗ್ರಾಮದ ಮದ್ಯಭಾಗದಲ್ಲಿ ಕಲ್ಯಾಣಿ ಚಾಲುಕ್ಯರು ಕಟ್ಟಿಸಿದ ಐತಿಹಾಸಿಕ ಶಿವನ ದೇವಸ್ಥಾನ ಇದೆ. ಹಾಗಾಗಿ ನೂತನ ಕಟ್ಟಡ, ಮನೆ ನಿರ್ಮಾಣ ಸಮಯದಲ್ಲಿ ವಿಗ್ರಹ, ಶಾಸನಗಳು ಪತ್ತೆಯಾಗುತ್ತಿವೆ. ಹಾಗಾಗಿ ನಾರಾಯಣಪುರದಲ್ಲಿ ಉತ್ಖನನ ಮಾಡಿ ಇತಿಹಾಸ ಬಿಚ್ಚಿಡ ಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಬಾಯಿ ಮುಚ್ಚಿಕೊಂಡು ಇರಬೇಕು ಎಂಬ ಹೈಕಮಾಂಡ್ ಆದೇಶವನ್ನು ಎಲ್ಲರೂ ಪಾಲಿಸಬೇಕು: ಡಿಕೆಶಿ ಖಡಕ್ ವಾರ್ನಿಂಗ್
ಬಾಯಿ ಮುಚ್ಚಿಕೊಂಡು ಇರಬೇಕು ಎಂದು ಹೈಕಮಾಂಡ್ ನಾಯಕರು ಕೊಟ್ಟಿರುವ ಆದೇಶವನ್ನು ಎಲ್ಲರೂ ಪಾಲಿಸಬೇಕು ಎಂದು ಡಿಸಿಎಂ ಡಿಕೆ ಶಿವಕುಮಾರ್ ಅವರು ಖಡಕ್ ವಾರ್ನಿಂಗ್ ನೀಡಿದ್ದಾರೆ. ಬೆಂಗಳೂರಿನಲ್ಲಿ ಮಂಗಳವಾರ ಈ ಕುರಿತಾಗಿ ಮಾತನಾಡಿದ ಅವರು, ಯತೀಂದ್ರ ಸಿದ್ದರಾಮಯ್ಯ ಅವರು ನಾಯಕತ್ವ ಬದಲಾವಣೆ ಕುರಿತಾಗಿ ನೀಡಿರುವ ಹೇಳಿಕೆಗೆ ಈ ರೀತಿಯಲ್ಲಿ ಪ್ರತಿಕ್ರಿಯೆ ನೀಡಿದರು. ಎಲ್ಲರೂ ಬಾಯಿ ಮುಚ್ಚಿಕೊಂಡು ಇದ್ದರೆ ಒಳ್ಳೆಯದು ಎಂದರು. ಈ ಕುರಿತಾಗಿ ಅವರು ಏನು ಮಾತನಾಡಿದ್ದಾರೆ ಎಂಬ ಮತ್ತಷ್ಟು ಮಾಹಿತಿ ಇಲ್ಲಿದೆ.
ಮುಗಿಯದ ಗೋಳು, ಪಡಿತರ ಹಳೆಯ ಕಾರ್ಡಿಗೆ ಅಸ್ತು, ಹೊಸದಕ್ಕೆ ಸುಸ್ತೋ ಸುಸ್ತು!
ಮೂರು ವರ್ಷಗಳ ಹಿಂದೆ ರೇಷನ್ ಕಾರ್ಡ್ ಗಾಗಿ ಅರ್ಜಿ ಸಲ್ಲಿಸಿದವರಿಗೆ ನಿಯಮಾನುಸಾರ ಹಂಚಿಕೆಗೆ ಅವಕಾಶ ಕಲ್ಪಿಸಿದೆ. ಆದರೆ ವರ್ಷಗಳಿಂದ ಎಪಿಎಲ್ ಸೇರಿ ಹೊಸ ಅರ್ಜಿಗೆ ಅವಕಾಶ ನೀಡುತ್ತಿಲ್ಲ. ಇದು ಜನರಲ್ಲಿ ನಿರಾಸೆ ಮೂಡಿಸಿದೆ. ಪಡಿತರ ಕಾರ್ಡಿಗಾಗಿ ಅರ್ಜಿದಾರರು ದಿನ ಬೆಳಗಾದರೆ ಆಹಾರ ಇಲಾಖೆ ಕಚೇರಿಗೆ ಅಲೆಯುತ್ತಿದ್ದಾರೆ.
PUTTUR | ಹಿಂಜಾವೇ ಮುಖಂಡ ಅಜಿತ್ ರೈ ಹೊಸಮನೆ ಗಡಿಪಾರಿಗೆ ಪ್ರಸ್ತಾವ: ವಿಚಾರಣೆಗೆ ಹಾಜರಾಗಲು ನೋಟಿಸ್ ಜಾರಿ
ಪುತ್ತೂರು: ಪುತ್ತೂರಿನ ಹಿಂದೂ ಜಾಗರಣಾ ವೇದಿಕೆಯ ಮುಖಂಡ ಅಜಿತ್ ರೈ ಹೊಸಮನೆ ವಿರುದ್ಧ ಗಡಿಪಾರು ಆದೇಶ ಹೊರಡಿಸುವ ಕುರಿತು ಪ್ರಸ್ತಾವ ಸಲ್ಲಿಸಲಾಗಿದ್ದು, ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿಗೊಳಿಸಲಾಗಿದೆ. ಒಳಮೊಗ್ರು ಗ್ರಾಮದ ಹೊಸಮನೆ ನಿವಾಸಿ ಅಜಿತ್ ರೈ ವಿರುದ್ಧ ಪುತ್ತೂರು ಉಪವಿಭಾಗದ ಪೊಲೀಸ್ ಉಪಾಧೀಕ್ಷಕರು ಕರ್ನಾಟಕ ಪೊಲೀಸ್ ಕಾಯ್ದೆ 1963ರ ಕಲಂ 55ರಂತೆ ದಕ್ಷಿಣ ಕನ್ನಡ ಜಿಲ್ಲೆಯಿಂದ ಗಡಿಪಾರು ಆದೇಶ ಹೊರಡಿಸುವ ಕುರಿತು ಪ್ರಸ್ತಾವ ಸಲ್ಲಿಸಿದ್ದಾರೆ. ಈ ಸಂಬಂಧ ಸಹಾಯಕ ಆಯುಕ್ತರ ನ್ಯಾಯಾಲಯದ ಸಭಾಂಗಣದಲ್ಲಿ ಫೆ.25ರಂದು ವಿಚಾರಣೆ ನಡೆಯಲಿದೆ. ಆದ್ದರಿಂದ ಅಜಿತ್ ರೈ ಸ್ವಯಂ ಅಥವಾ ನ್ಯಾಯವಾದಿಯ ಮೂಲಕ ವಿಚಾರಣೆಗೆ ಹಾಜರಾಗಬೇಕು. ತಪ್ಪಿದಲ್ಲಿ ಲಭ್ಯವಿರುವ ಮಾಹಿತಿಯ ಆಧಾರದಲ್ಲಿ ಏಕಪಕ್ಷಿಯವಾಗಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಪುತ್ತೂರು ಉಪ ವಿಭಾಗೀಯ ದಂಡಾಧಿಕಾರಿಯೂ ಆಗಿರುವ ಸಹಾಯಕ ಆಯುಕ್ತರು ತಿಳಿಸಿದ್ದಾರೆ.
ಅಮೆರಿಕಾ ಇರಾನ್ ನಡುವೆ ಉದ್ವಿಗ್ನತೆ ಹೆಚ್ಚುತ್ತಿದ್ದರೂ ಒಪ್ಪಂದಕ್ಕೆ ಉಭಯ ದೇಶಗಳು ದಾರಿಗಳನ್ನು ಹುಡುಕುತ್ತಿದ್ದೆ, ಆದರೆ ಇರಾನ್ ದೇವಪ್ರಭುತ್ವನ್ನು ಕೊನೆಗೊಳಿಸುವಲ್ಲಿ ಅಮೆರಿಕಾ ಇರಾನ್ ಜನತೆಯ ಬೆಂಬಲಕ್ಕೆ ನಿಲ್ಲುತ್ತಾರೆ ಎಂಬ ನಿರೀಕ್ಷೆಯಲ್ಲಿದ್ದವರಿಗೆ ಇದು ನಿರಾಶೆ ಮೂಡುವಂತೆ ಮಾಡಿದ್ದು, ಈ ಕುರಿತು ಇರಾನ್ ಮೂಲದ ವ್ಯಕ್ತಿಯೊಬ್ಬ ಅಮೆರಿಕಾ ಅಧ್ಯಕ್ಷ ಟ್ರಂಪ್ ಅವರಿಗೆ ಇರಾನ್ ನೊಂದಿಗೆ ಒಪ್ಪಂದ ಮಾಡಿಕೊಳ್ಳದೆ, ಅವರನ್ನು ದಮನಮಾಡಿ ಜನತೆಗೆ ಸಹಾಯಮಾಡಿ ಅವರನ್ನು ಈ ನರಕದಿಂದ ಮುಕ್ತಗೊಳಿಸುವಂತೆ ಮನವಿ ಮಾಡಿಕೊಂಡು ವಿಡಿಯೋ ಬಿಡುಗಡೆ ಮಾಡಿದ್ದಾನೆ. ಈ ವಿಡಿಯೋ ಹಂಚಿಕೊಂಡ ಕೆಲ ಹೊತ್ತಿನಲ್ಲೇ ಆತ ಆತ್ಮಹತ್ಯೆಯನ್ನು ಮಾಡಿಕೊಂಡಿದ್ದು, ಇರಾನ್ ಜನತೆಯನ್ನು ಮುಕ್ತಗೊಳಿಸುವಂತೆ ಕೊನೆ ಕ್ಷಣದಲ್ಲಿ ಆತ ಟ್ರಂಪ್ ಗೆ ಹೇಳಿದ್ದೇನು ನೋಡಿ..
ಬಾಯಿ ಮುಚ್ಚಿಕೊಂಡು ಇರಬೇಕು ಎಂಬ ಆದೇಶವನ್ನು ಎಲ್ಲರೂ ಪಾಲಿಸಬೇಕು: ಡಿ.ಕೆ.ಶಿವಕುಮಾರ್
ಪರ, ವಿರೋಧ ಹೇಳಿಕೆಯಿಂದ ಪಕ್ಷಕ್ಕೇ ಹಾನಿ
Gold Rate Fall : ಡಾಲರ್ ಮೌಲ್ಯ ಹೆಚ್ಚಳ, ಚಿನ್ನದ ಬೆಲೆ ಏರಿಕೆಗೆ ಬ್ರೇಕ್: ಕುಸಿದ ಬೆಳ್ಳಿ ಬೆಲೆ
ಜನಸಾಮಾನ್ಯರಿಗೆ ಇಂದು ಗುಡ್ನ್ಯೂಸ್ ಸಿಕ್ಕಿದ್ದು, ಚಿನ್ನ ಬೆಳ್ಳಿ ದರದಲ್ಲಿ ಅಲ್ಪ ಕುಸಿತ ಕಂಡು ಬಂದಿದ್ದು, ಬೆಲೆ ಏರಿಕೆಗೆ ಬ್ರೇಕ್ ಬಿದ್ದಿದೆ. ಹೂಡಿಕೆದಾರರ ಪ್ರಾಫಿಟ್ ಬುಕ್ಕಿಂಗ್ ಪ್ರಕ್ರಿಯೆಯಿಂದ ಬೆಲೆ ಇಳಿಕೆ ಕಾಣುತ್ತಿದೆ. ಜಾಗತಿಕ ರಾಜಕೀಯ ಉದ್ವಿಗ್ನತೆ ಕಡಿಮೆ ಆದ ಕಾರಣ ಚಿನ್ನದ ಬೆಲೆಯಲ್ಲಿ ಕುಸಿತ ಕಂಡುಬಂದಿದೆ.
ಕೊಲ್ಹಾರ : ಒಡೆದು ಹೋದ ಕಾಲುವೆ; ಬೆಳೆದ ಅಪಾರ ಬೆಳೆ ನಾಶ
ಅಧಿಕಾರಿಗಳ ನಿರ್ಲಕ್ಷ್ಯ ಆರೋಪ
ಫೆ. 25ರಂದು ಕಾರ್ಕಳಕ್ಕೆ ಮುಖ್ಯಮಂತ್ರಿ ಭೇಟಿ: ಕಾರ್ಕಳ ಕಾಂಗ್ರೆಸ್ ಪೂರ್ವಭಾವಿ ಸಭೆ
ಕಾರ್ಕಳ: ಫೆಬ್ರವರಿ 25ರಂದು ಕಾರ್ಕಳದ ಕುಕ್ಕುಂದೂರು ಕಿಸಾನ್ ಸಭಾಂಗಣದ ಉದ್ಘಾಟನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಕಾರ್ಕಳ ಕಾಂಗ್ರೆಸ್ನ ಪೂರ್ವಭಾವಿ ಸಭೆ ನಡೆಯಿತು. ಸಭೆಯಲ್ಲಿ ಮಾತನಾಡಿದ ಕಾರ್ಕಳ ಕಾಂಗ್ರೆಸ್ ನಾಯಕ ಉದಯ ಶೆಟ್ಟಿ ಮುನಿಯಾಲು, ಮಾಜಿ ಮುಖ್ಯಮಂತ್ರಿ ಡಾ. ಎಂ. ವೀರಪ್ಪ ಮೊಯಿಲಿ ಅವರ ನೇತೃತ್ವದಲ್ಲಿ ನಿರ್ಮಾಣಗೊಂಡ ಕಿಸಾನ್ ಸಭಾ ಸಭಾಂಗಣದ ಉದ್ಘಾಟನೆಗೆ ಗ್ಯಾರಂಟಿ ಯೋಜನೆಗಳ ಸರದಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾರ್ಕಳಕ್ಕೆ ಆಗಮಿಸುತ್ತಿರುವುದು ಅತ್ಯಂತ ಹೆಮ್ಮೆಯ ಸಂಗತಿಯಾಗಿದೆ. ಕಾರ್ಯಕ್ರಮವನ್ನು ಅತ್ಯಂತ ಯಶಸ್ವಿಗೊಳಿಸಲು ಎಲ್ಲರೂ ಕೈಜೋಡಿಸಬೇಕೆಂದು ಅವರು ಕರೆ ನೀಡಿದರು. ಶಿಕ್ಷಣದಿಂದ ವಂಚಿತರಾದ ವಿದ್ಯಾರ್ಥಿಗಳಿಗಾಗಿ ಕಿಸಾನ್ ಸಭಾ ಶಾಲೆಯನ್ನು ಅಂದಿನ ದಿನಗಳಲ್ಲಿ ಸ್ಥಾಪಿಸಲಾಗಿತ್ತು. ಜೊತೆಗೆ ರೈತರ ಪರವಾಗಿ ಕಾರ್ಕಳದ ಮೂಲೆಮೂಲೆಗಳಲ್ಲಿ ಹೋರಾಟ ಸೇರಿದಂತೆ ಹಲವು ಚಟುವಟಿಕೆಗಳನ್ನು ನಡೆಸಲಾಗಿತ್ತು. ಆ ಸಂದರ್ಭದಲ್ಲಿ ಸ್ಥಾಪನೆಯಾದ ಕಿಸಾನ್ ಸಭಾ ಸಭಾಂಗಣವು ಇದೀಗ ನಿರ್ಮಾಣಗೊಂಡು ಉದ್ಘಾಟನೆಗೊಳ್ಳುತ್ತಿದ್ದು, ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ಹಿರಿಯ ಕಾಂಗ್ರೆಸ್ ನಾಯಕ ಶೇಖರ ಮಡಿವಾಳ ಹೇಳಿದರು. ಕಾರ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶುಭದ್ ರಾವ್ ಮಾತನಾಡಿ, ಜನಪರ ಯೋಜನೆಗಳ ಮೂಲಕ ಜನಮನ ಗೆದ್ದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾರ್ಕಳಕ್ಕೆ ಆಗಮಿಸುತ್ತಿರುವುದು ಅತ್ಯಂತ ಸಂತಸ ಮತ್ತು ಹೆಮ್ಮೆಯ ವಿಚಾರವಾಗಿದೆ. ಮಾನ್ಯ ಮುಖ್ಯಮಂತ್ರಿಗಳನ್ನು ಸ್ವಾಗತಿಸಲು ನಾವೆಲ್ಲರೂ ಉತ್ಸುಕರಾಗಿದ್ದೇವೆ. ಈ ನಿಟ್ಟಿನಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು. ಈ ಸಂದರ್ಭದಲ್ಲಿ ಹೆಬ್ರಿ ಬ್ಲಾಕ್ ಅಧ್ಯಕ್ಷ ಗೋಪೀನಾಥ್ ಭಟ್, ಜಿಲ್ಲಾ ಉಪಾಧ್ಯಕ್ಷ ಸುಧಾಕರ ಕೋಟ್ಯಾನ್, ಬ್ಲಾಕ್ ಉಪಾಧ್ಯಕ್ಷರಾದ ಜಾರ್ಜ್ ಕ್ಯಾಸ್ತಲಿನೊ, ಅಬ್ದುಲ್ ಸಾಣೂರು, ಅಜಿತ್ ಹೆಗ್ಡೆ ಮಾಳ, ಶ್ರೀಮತಿ ಭಾನು ಭಾಸ್ಕರ್ ಪೂಜಾರಿ, ಮಲಿಕ್ ಅತ್ತೂರು, ಸಿರಿಯಣ್ಣ ಶೆಟ್ಟಿ, ಕೆಎಂಎಫ್ ನಿರ್ದೇಶಕ ಸುಧಾಕರ ಶೆಟ್ಟಿ ಮುಡಾರು, ಅನಿಲ್ ಪೂಜಾರಿ ನೆಲ್ಲಿಗುಡ್ಡೆ ಸೇರಿದಂತೆ ಇತರರು ಉಪಸ್ಥಿತರಿದ್ದರು. ಬ್ಲಾಕ್ ವಕ್ತಾರ ಪ್ರದೀಪ್ ಬೇಲಾಡಿ ಸ್ವಾಗತಿಸಿ, ಶೇಖ್ ಶಬೀರ್ ಮಿಯ್ಯಾರು ಧನ್ಯವಾದ ಸಲ್ಲಿಸಿದರು.
ಬೆಳ್ತಂಗಡಿ ಅಪಹರಣ ಯತ್ನ ಪ್ರಕರಣಕ್ಕೆ ತಿರುವು: ಸ್ವಯಂ ಕೈ ಕುಯ್ದುಕೊಂಡು ಕತೆ ಕಟ್ಟಿದ ಕಾಲೇಜು ವಿದ್ಯಾರ್ಥಿನಿ?
ಬೆಳ್ತಂಗಡಿ : ಬೆಳ್ತಂಗಡಯಲ್ಲಿ ಸೋಮವಾರ ಕಾಲೇಜು ವಿದ್ಯಾರ್ಥಿನಿಯನ್ನು ಕಾರಿನಲ್ಲಿ ಬಂದ ಮೂವರು ಮುಸುಕುಧಾರಿಗಳು ಅಪಹರಿಸಲು ಯತ್ನಿಸಿದ ಪ್ರಕರಣ ತಿರುವು ಪಡೆದಿದ್ದು, ಇಡೀ ಪ್ರಕರಣವೇ ವಿದ್ಯಾರ್ಥಿನಿ ಆಡಿದ ನಾಟಕ ಎಂಬುದು ಪೊಲೀಸ್ ತನಿಖೆಯಿಂದ ಬೆಳಕಿಗೆ ಬಂದಿದೆ. ಬೆಳ್ತಂಗಡಿ ನಗರದ ಸುದೇಮುಗೇರು ಎಂಬಲ್ಲಿ ಫೆ.9ರಂದು ಬೆಳಗ್ಗೆ 8:30ರ ಸುಮಾರಿಗೆ 16 ವರ್ಷದ ಕಾಲೇಜು ವಿದ್ಯಾರ್ಥಿನಿ ಸ್ಕೂಟರ್ ನಲ್ಲಿ ತೆರಳುತ್ತಿದ್ದಾಗ ಕಾರಿನಲ್ಲಿ ಬಂದ ಮೂವರು ಅಪಹರಿಸಲು ಯತ್ನಿಸಿದ್ದಾರೆ ಎಂದು ದೂರಲಾಗಿತ್ತು. ಈ ವೇಳೆ ತಾನು ಬೊಬ್ಬೆ ಹಾಕಿದ್ದರಿಂದ ದುಷ್ಕರ್ಮಿಗಳು ತನ್ನ ಕೈಗೆ ಚೂರಿಯಿಂದ ಚುಚ್ಚಿ ಪರಾರಿಯಾದರು ಎಂದು ವಿದ್ಯಾರ್ಥಿನಿ ಪೊಲೀಸ್ ದೂರಿನಲ್ಲಿ ತಿಳಿಸಿದ್ದಳು. ಕೈಗೆ ಗಾಯವಾಗಿದ್ದರಿಂದ ಬಾಲಕಿಯನ್ನು ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿ ಬೆಳ್ತಂಗಡಿ ಪೊಲೀಸರು ಸೋಮವಾರ ದಿನವಿಡೀ ಕಾರ್ಯಾಚರಣೆ ನಡೆಸಿದರೂ ವಿದ್ಯಾರ್ಥಿನಿ ಹೇಳಿದಂತಹ ಯಾವುದೇ ಓಮ್ನಿ ಕಾರು ಪರಿಸರದಲ್ಲಿ ಓಡಾಡಿರುವುದು ಪತ್ತೆಯಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಪೊಲೀಸರು ಕೂಲಕಂಷ ತನಿಖೆ ನಡೆಸಿದಾಗ ಅಪಹರಣ ಯತ್ನ, ಚೂರಿ ಇರಿತದಂತಹ ಯಾವುದೇ ಘಟನೆ ನಡೆದಿಲ್ಲ. ಅದು ವಿದ್ಯಾರ್ಥಿನಿ ಆಡಿದ ನಾಟಕ ಎಂಬುದು ಬೆಳಕಿಗೆ ಬಂದಿದೆ ಎಂದು ತಿಳಿದಬಂದಿದೆ. ಕಾಲೇಜಿಗೆ ಹೋಗಲು ಇಷ್ಟವಿಲ್ಲದ ಕಾರಣ ತಾನೇ ಬ್ಲೇಡ್ ನಿಂದ ಕೈಗೆ ಇರಿದು ಅಪಹರಣದ ನಾಟಕವಾಡಿದ್ದಾಳೆ ಎಂಬುದು ಪೊಲೀಸ್ ತನಿಖೆಯಲ್ಲಿ ಬೆಳಕಿಗೆ ಬಂದಿರುವುದಾಗಿ ತಿಳಿದು ಬಂದಿದೆ. ಒಟ್ಟು ಪ್ರಕರಣದ ಬಗ್ಗೆ ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದು ಬರಬೇಕಾಗಿದೆ.
ಮಾನವತೆಗೆ ಒತ್ತುಕೊಟ್ಟು ಬೆಳೆದ ಮಕ್ಕಳು ಸಮಾಜಕ್ಕೆ ವರ: ಜ್ಯೋತಿ ಗುರುಪ್ರಸಾದ್
ಕಾರ್ಕಳ: ಚಿತ್ರಕಲೆ ಬೆಳೆಸುವ ಸೃಜನಶೀಲ ಶಕ್ತಿ ನೋವನ್ನು ನಲಿವನ್ನಾಗಿ ಪರಿವರ್ತಿಸಲು ಕಲಿಸುತ್ತದೆ. ಇಂದು ಚಿತ್ರ ಬರೆಯಲು ಕುಳಿತಿರುವ ಮಕ್ಕಳ ಭವಿಷ್ಯ ಮಾನವೀಯ ಗುಣಗಳನ್ನು ಬೆಳೆಸಿಕೊಂಡು ಉಜ್ವಲವಾಗಲಿ. ಪೋಷಕರು ಮಕ್ಕಳಲ್ಲಿ ಸಹಜವಾಗಿ ಅರಳುವ ಪ್ರತಿಭೆಯನ್ನು ಪೋಷಿಸಿ, ಹೃದಯವಂತಿಕೆ ಮತ್ತು ಮಾನವತೆಗೆ ಒತ್ತುಕೊಟ್ಟು ಬೆಳೆಸಿದಾಗ ಮಾತ್ರ ಅವರು ಸಮಾಜಕ್ಕೂ ಮಾನವಕುಲಕ್ಕೂ ವರವಾಗಿ ಪರಿಣಮಿಸುತ್ತಾರೆ ಎಂದು ಕವಯಿತ್ರಿ ಜ್ಯೋತಿ ಗುರುಪ್ರಸಾದ್ ಹೇಳಿದರು. ಅವರು ಕಾರ್ಕಳದ ಸುಂದರ ಪುರಾಣಿಕ ಸ್ಮಾರಕ ಸರ್ಕಾರಿ ಪ್ರೌಢ ಶಾಲೆ ಪೆರ್ವಾಜೆ ಸಭಾಂಗಣದಲ್ಲಿ ಕಾರ್ಕಳ ಟೈಗರ್ಸ್, ಹೊಸಸಂಜೆ ಬಳಗ, ಜೆಸಿಐ ಕಾರ್ಕಳ ಹಾಗೂ ಮಾನಸ ಗ್ರೂಪ್ ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ಪೂರ್ಣಪ್ರಜ್ಞ ಸ್ಮರಣಾರ್ಥ ಮಕ್ಕಳ ಚಿತ್ರಕಲಾ ಸ್ಪರ್ಧೆಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಡಾ. ಕಾರ್ತಿಕ್ ರಾವ್, ರಾಜಾಪುರ ಸಾರಸ್ವತ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಅಧ್ಯಕ್ಷ ಕಡಾರಿ ರವೀಂದ್ರ ಪ್ರಭು, ಜೆಸಿಐ ಅಧ್ಯಕ್ಷ ಅವಿನಾಶ್ ಶೆಟ್ಟಿ, ಉದ್ಯಮಿ ಬೋಳ ಪ್ರಶಾಂತ್ ಕಾಮತ್, ದುರ್ಗದ ಕೃಷಿಕ ದಿನೇಶ್ ಗೋರೆ, ಪೆರ್ವಾಜೆ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಆಸ್ಮಾ ಬಾನು, ಪ್ರೌಢ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕಿ ವೇದಾವತಿ ಎನ್., ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಆನಂದರಾಯ ನಾಯಕ್, ಭುವನೇಂದ್ರ ಪ್ರೌಢ ಶಾಲೆಯ ಶಿಕ್ಷಕಿ ಇಂದಿರಾ ಪಿ. ನಾಯಕ್, ಅತ್ತೂರು ಸೈಂಟ್ ಲಾರೆನ್ಸ್ ಪ್ರೌಢ ಶಾಲೆಯ ಮುಖ್ಯ ಶಿಕ್ಷಕ ಸುಬ್ರಮಣ್ಯ ಉಪಾಧ್ಯ ಹಾಗೂ ಕಾರ್ಯಕ್ರಮ ಸಂಯೋಜಕ ಆರ್. ದೇವರಾಯ ಪ್ರಭು ಉಪಸ್ಥಿತರಿದ್ದರು. ವಿವಿಧ ಶಾಲೆಗಳ ಐವರು ವಿದ್ಯಾರ್ಥಿಗಳು ದೀಪ ಬೆಳಗಿಸಿ ಸ್ಪರ್ಧೆಗೆ ಚಾಲನೆ ನೀಡಿದರು. ಛಾಯಾಗ್ರಾಹಕ ದತ್ತಾತ್ರೇಯ ಹಿರಿಯಂಗಡಿ ಸ್ವಾಗತಿಸಿದರು. ಧಾರಿಣಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿತೇಶ್ ದೇವಾಡಿಗ ಕಾರ್ಯಕ್ರಮ ನಿರ್ವಹಿಸಿದರು. ರಮ್ಯಾ ಪೂಜಾರಿ ವಂದಿಸಿದರು.
ಸಚ್ಚೇರಿಪೇಟೆಯಲ್ಲಿ 22ನೇ ವರ್ಷದ ಸಾರ್ವಜನಿಕ ಶ್ರೀ ಶನೈಶ್ಚರ ಪೂಜಾ ಮಹೋತ್ಸವ
ಕಾರ್ಕಳ: ಹಿಂದೂ ಸಮಾಜದ ಭದ್ರ ಬುನಾದಿ ಎಂದರೆ ಗುರುಕುಲ ಮಾದರಿಯ ಶಿಕ್ಷಣ ವ್ಯವಸ್ಥೆ ಹಾಗೂ ಕೂಡು ಕುಟುಂಬ ವ್ಯವಸ್ಥೆಯೇ ಅತ್ಯಂತ ಪ್ರಾಮುಖ್ಯವಾಗಿವೆ ಎಂದು ಶ್ರೀ ಕ್ಷೇತ್ರ ಕೇಮಾರಿನ ಶ್ರೀ ಶ್ರೀ ಶ್ರೀ ಈಶ ವಿಠಲದಾಸ ಸ್ವಾಮೀಜಿ ಹೇಳಿದರು. ಅವರು ಸಚ್ಚೇರಿಪೇಟೆಯ ಶ್ರೀ ಮಹಮ್ಮಾಯೀ ಅಮ್ಮನವರ ಅಶ್ವತ್ಥ ಕಟ್ಟೆಯಲ್ಲಿ ಸಾರ್ವಜನಿಕ ಶ್ರೀ ಶನೈಶ್ಚರ ಪೂಜಾ ಸೇವಾ ಟ್ರಸ್ಟ್ (ರಿ.) ಸಚ್ಚೇರಿಪೇಟೆ ಹಾಗೂ ಹಿಂದೂ ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ 22ನೇ ವರ್ಷದ ಸಾರ್ವಜನಿಕ ಶ್ರೀ ಶನೈಶ್ಚರ ಪೂಜಾ ಮಹೋತ್ಸವದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿ ಮಾತನಾಡಿದರು. ಇಂದಿನ ಕಾಲದಲ್ಲಿ ಕೂಡು ಕುಟುಂಬ ವ್ಯವಸ್ಥೆ ಹಾಗೂ ಗುರುಕುಲ ಮಾದರಿಯ ಶಿಕ್ಷಣ ಸಂಪೂರ್ಣವಾಗಿ ನಶಿಸಿಹೋಗಿದೆ. ಕೂಡು ಕುಟುಂಬ ಸಮಾಜದ ಬಹುಮುಖ್ಯ ಅಂಗವಾಗಿದ್ದು, ಇದರಿಂದ ಸದಸ್ಯರೆಲ್ಲರೂ ಪರಸ್ಪರ ಬೆರತು ಸಾಮಾಜಿಕವಾಗಿ ಸಮರ್ಥರಾಗುತ್ತಿದ್ದರು. ಆದರೆ ಇಂದು ಅಣ್ಣ-ತಮ್ಮಂದಿರು, ಗಂಡ-ಹೆಂಡತಿಯರೂ ಕೂಡ ಒಟ್ಟಿಗೆ ಇರದ ಪರಿಸ್ಥಿತಿ ಸಮಾಜದಲ್ಲಿ ನಿರ್ಮಾಣವಾಗಿದೆ ಎಂದು ಅವರು ವಿಷಾದ ವ್ಯಕ್ತಪಡಿಸಿದರು. ಕಿನ್ನಿಗೋಳಿ ‘ಯುಗಪುರುಷ’ ಪತ್ರಿಕೆಯ ಸಂಪಾದಕ ಕೊಡೆತ್ತೂರು ಶ್ರೀ ಭುವನಾಭಿರಾಮ ಉಡುಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಉದ್ಯಮಿ ಪ್ರಶಾಂತ್ ಕಾಮತ್ (ಕಾರ್ಕಳ), ಎಂಆರ್ಪಿಎಲ್–ಒಎನ್ಜಿಸಿ ಕಾರ್ಮಿಕ ಸಂಘದ ಅಧ್ಯಕ್ಷ ಪ್ರಸಾದ್ ಎನ್. ಅಂಚನ್, ಉದ್ಯಮಿ ಬೋಜ ಸುವರ್ಣ (ಸೂರತ್), ಟ್ರಸ್ಟಿನ ಅಧ್ಯಕ್ಷ ಹರೀಶ್ ಸಚ್ಚೇರಿಪೇಟೆ, ಉದ್ಯಮಿ ಭಾಸ್ಕರ್ ಶೆಟ್ಟಿ ಸಂಕಲಕರಿ ಹಾಗೂ ಜಿತೇಂದ್ರ ಪೇರೂರು ಉಪಸ್ಥಿತರಿದ್ದರು. ಟ್ರಸ್ಟಿನ ಅಧ್ಯಕ್ಷ ಹರೀಶ್ ಸಚ್ಚೇರಿಪೇಟೆ ಸ್ವಾಗತಿಸಿ ಧನ್ಯವಾದ ಸಲ್ಲಿಸಿದರು. ಶಿಕ್ಷಕ ಸುಧೀರ್ ನಾಯಕ್ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಅಭಿನಯ ಕಲಾವಿದರು, ಉಡುಪಿ ಇವರಿಂದ “ಚಿಟ್ಟೆ” ಎಂಬ ಹಾಸ್ಯಮಯ ನಾಟಕ ಪ್ರದರ್ಶನಗೊಂಡಿತು.
ಎಂಬಿಬಿಎಸ್ ಸೀಟುಗಳ ಹೆಚ್ಚಳದಿಂದ ಮಾತ್ರ ಏನಾದರೂ ಉಪಯೋಗ ಇದೆಯೆ?
ಸರಕಾರ ಕಳೆದ ಆಗಸ್ಟ್ನಲ್ಲಿ ದೇಶಾದ್ಯಂತ 21 ಏಮ್ಸ್ಗಳಲ್ಲಿ 2,500ಕ್ಕೂ ಹೆಚ್ಚು ಬೋಧನಾ ಹುದ್ದೆಗಳು ಖಾಲಿ ಇವೆ ಎಂದು ಹೇಳಿತ್ತು. ಇದು ನಾಲ್ಕು ವರ್ಷಗಳಲ್ಲಿ ಅತಿ ಹೆಚ್ಚು ಖಾಲಿ ಹುದ್ದೆಗಳ ಸಂಖ್ಯೆಯಾಗಿದೆ. ಮಂಜೂರಾದ ಹುದ್ದೆಗಳಲ್ಲಿ ಶೇ.40 ಖಾಲಿ ಇವೆ. 2,561 ಹುದ್ದೆಗಳು ಭರ್ತಿಯಾಗಿಲ್ಲ. ದಿಲ್ಲಿಯ ಏಮ್ಸ್ನಲ್ಲೇ 462 ಹುದ್ದೆಗಳು ಖಾಲಿ ಇವೆ. ಆರೋಗ್ಯ ಖಾತೆ ರಾಜ್ಯ ಸಚಿವ ಪ್ರತಾಪ್ ರಾವ್ ಜಾಧವ್ ಸ್ವತಃ ಈ ಮಾಹಿತಿಯನ್ನು ಸಂಸತ್ತಿನಲ್ಲಿ ನೀಡಿದ್ದಾರೆ. 2,500 ಅಧ್ಯಾಪಕರು ಇಲ್ಲದಿದ್ದರೆ, ಅಲ್ಲಿ ವಿದ್ಯಾರ್ಥಿಗಳಿಗೆ ಏನು ಕಲಿಸುತ್ತಿದ್ದರು? ಶಿಕ್ಷಕರಿಲ್ಲದೆ ಅವರಿಗೆ ಹೇಗೆ ತರಬೇತಿ ನೀಡಲಾಗುತ್ತಿದೆ? ಒಂದು ರೀತಿಯಲ್ಲಿ, ವೈದ್ಯಕೀಯ ಕಾಲೇಜುಗಳು ನಕಲಿ ವಿದ್ಯಾರ್ಥಿಗಳನ್ನು ಸೃಷ್ಟಿಸುತ್ತಿವೆಯೇ? ಸರಕಾರ ಎಂಬಿಬಿಎಸ್ ಸೀಟುಗಳ ಸಂಖ್ಯೆಯನ್ನು 1,37,000ಕ್ಕೆ ಹೆಚ್ಚಿಸಿದೆ ಎಂದು ಜೋರಾಗಿ ಹೇಳುತ್ತದೆ. ಆದರೆ ಸಂಸದೀಯ ಸಮಿತಿ ಖಾಸಗಿ ವೈದ್ಯಕೀಯ ಶಿಕ್ಷಣದ ವೆಚ್ಚ ಒಂದು ಕೋಟಿ ರೂ.ಗೆ ಏರಿದೆ ಎಂದು ಹೇಳುತ್ತದೆ. ಅದಕ್ಕಿಂತ ಹೆಚ್ಚಾಗಿ, ಮಂತ್ರಿಗಳು ತಮ್ಮ ಭಾಷಣಗಳಲ್ಲಿ ಎಷ್ಟು ಸರಕಾರಿ ಸೀಟುಗಳಿವೆ, ಎಷ್ಟು ಖಾಸಗಿ ಸೀಟುಗಳಿವೆ ಮತ್ತು ಆ ಸೀಟುಗಳಿಗೆ ಶುಲ್ಕ ಎಷ್ಟೆಷ್ಟು ಎಂದು ಪ್ರತ್ಯೇಕವಾಗಿ ಏಕೆ ಹೇಳುವುದಿಲ್ಲ? 18,000 ಪಿಜಿ ಸೀಟುಗಳು ಖಾಲಿಯಾಗಿ ಉಳಿದಿರುವುದು ಏಕೆ ಎಂದು ಸರಕಾರ ಹೇಳುವುದಿಲ್ಲ. ಕೋಟಿಗಟ್ಟಲೆ ಫೀಸು ಕೊಟ್ಟರೂ ಶಿಕ್ಷಣ ಕಳಪೆ ಮಟ್ಟದ್ದಾಗಿಯೇ ಉಳಿದಿದೆ. 68,000 ಪಿಜಿ ಸೀಟುಗಳು ಮತ್ತು 2,00,000ಕ್ಕೂ ಹೆಚ್ಚು ಅರ್ಹ ವಿದ್ಯಾರ್ಥಿಗಳು ಇದ್ದಾರೆ. ಇದೆಲ್ಲದರ ನಡುವೆಯೂ ಸೀಟು ಹೆಚ್ಚಳದ ಘೋಷಣೆ ಮಾಡಲಾಗಿದೆ. ವೈದ್ಯಕೀಯ ಕಾಲೇಜುಗಳ ಸಂಖ್ಯೆ 818ಕ್ಕೆ ಏರಿದೆ ಎಂದು ಸರಕಾರ ಜೋರಾಗಿ ಘೋಷಿಸುತ್ತದೆ. ಆದರೆ ವೈದ್ಯಕೀಯ ವೆಚ್ಚಗಳು ವಿಶ್ವದಲ್ಲೇ ಅತಿ ಹೆಚ್ಚು ಎಂಬುದರ ಬಗ್ಗೆ ಅದು ಹೇಳುವುದೇ ಇಲ್ಲ. ಆರೋಗ್ಯಕ್ಕಾಗಿ ಮಾಡುವ ಖರ್ಚು ಪ್ರತೀ ವರ್ಷ ಶೇ.15ರಷ್ಟು ಏರುತ್ತದೆ. ಪ್ರಸ್ತುತ, ಭಾರತ ಸರಕಾರ ಆರೋಗ್ಯದ ಮೇಲೆ ಜಿಡಿಪಿಯ ಶೇ.1ರಷ್ಟನ್ನೂ ಖರ್ಚು ಮಾಡುವುದಿಲ್ಲ. ಆದರೆ ಶೇ.2.5 ಗುರಿ ಮಾತ್ರ ಇದೆ. ಅದು ಸುಮ್ಮನೆ ಹೇಳಿಕೊಳ್ಳಲಿಕ್ಕೆ ಒಂದು ಗುರಿ ಮಾತ್ರ ಎನ್ನುವುದು ಸ್ಪಷ್ಟವಾಗುತ್ತಿದೆ. ವರದಿಗಳ ಪ್ರಕಾರ, ಆಸ್ಪತ್ರೆ ವೆಚ್ಚಗಳಿಂದಾಗಿಯೇ ಭಾರತೀಯರು ಈ ವರ್ಷ ಇನ್ನಷ್ಟು ಬಡವರಾಗುವ ಸಾಧ್ಯತೆ ಇದೆ. ಹೀಗೆಲ್ಲ ಇರುವಾಗ, ಬಜೆಟ್ನಲ್ಲಿ ಸಾರ್ವಜನಿಕ ಆರೋಗ್ಯಕ್ಕಾಗಿ ಮಾಡುವ ವೆಚ್ಚವನ್ನು ಕೋಟಿ ಕೋಟಿ ಲೆಕ್ಕದಲ್ಲಿ ಕಡಿತ ಮಾಡಲಾಗುತ್ತಿದೆ. ಇನ್ನೊಂದೆಡೆ, ವೈದ್ಯಕೀಯ ಕಾಲೇಜುಗಳಲ್ಲಿ ಶಿಕ್ಷಕಕರೇ ಇಲ್ಲ. ಛತ್ತೀಸ್ಗಡದ 10 ಸರಕಾರಿ ವೈದ್ಯಕೀಯ ಕಾಲೇಜುಗಳಲ್ಲಿ 332 ಸಹಾಯಕ ಪ್ರಾಧ್ಯಾಪಕ ಹುದ್ದೆಗಳು ಖಾಲಿ ಇವೆ. ಮಧ್ಯಪ್ರದೇಶದಲ್ಲಿ ವೈದ್ಯಕೀಯ ಕಾಲೇಜು ವ್ಯವಸ್ಥೆ ಕುಸಿದಿದೆ. 19 ಕಾಲೇಜುಗಳ ಪೈಕಿ 7ರಲ್ಲಿ ಮಾತ್ರ ವಿದ್ಯಾರ್ಥಿಗಳಿಗೆ ಕಲಿಸಲು ಸಾಕಷ್ಟು ಶಿಕ್ಷಕರಿದ್ದಾರೆ. ಉಳಿದ 12 ಕಾಲೇಜುಗಳು ಶಿಕ್ಷಕರ ತೀವ್ರ ಕೊರತೆ ಎದುರಿಸುತ್ತಿವೆ. ಶಿವಪುರ ಮತ್ತು ಸಿಂಗೋಲಿಯಲ್ಲಿ ಹೊಸ ವೈದ್ಯಕೀಯ ಕಾಲೇಜುಗಳನ್ನು ಸ್ಥಾಪಿಸಲಾಗಿದೆ. ಆದರೆ ಅಲ್ಲಿನ ಶೇ.90 ಹುದ್ದೆಗಳು ಖಾಲಿ ಇವೆ. ಸಾಗರ್-ಚಿಂದ್ವಾರ ವೈದ್ಯಕೀಯ ಕಾಲೇಜುಗಳಲ್ಲಿ ಶೇ.50 ಹುದ್ದೆಗಳು ಖಾಲಿ ಇವೆ. ಇದು ಈ ದೇಶದಲ್ಲಿನ ವೈದ್ಯಕೀಯ ಕಾಲೇಜುಗಳ ದಾರುಣ ಸ್ಥಿತಿಯಾಗಿದೆ. ಪ್ರಾಧ್ಯಾಪಕರಿಲ್ಲದೆ, ಸಹಾಯಕ ಪ್ರಾಧ್ಯಾಪಕರಿಲ್ಲದೆ, ಬರೀ ಕಾಲೇಜುಗಳನ್ನು ನಿರ್ಮಿಸಲು ಬಯಸಿದರೆ ಏನಾಗುತ್ತದೆ? ಎಂಬಿಬಿಎಸ್ ಸೀಟುಗಳ ಸಂಖ್ಯೆ ಲಕ್ಷಾಂತರಕ್ಕೆ ಹೆಚ್ಚಾಗುತ್ತದೆ. ಇದನ್ನು ತನ್ನ ಸಾಧನೆ ಎಂದು ಮೋದಿ ಸರಕಾರ ಹೇಳಿಕೊಳ್ಳುತ್ತದೆ. ಇದರಿಂದ ಏನಾದರೂ ಉಪಯೋಗ ಇದೆಯೆ? ಅದೇ ಸರಕಾರ ಕಳೆದ ಆಗಸ್ಟ್ನಲ್ಲಿ ದೇಶಾದ್ಯಂತ 21 ಏಮ್ಸ್ಗ ಳಲ್ಲಿ 2,500ಕ್ಕೂ ಹೆಚ್ಚು ಬೋಧನಾ ಹುದ್ದೆಗಳು ಖಾಲಿ ಇವೆ ಎಂದು ಹೇಳಿತ್ತು. ಇದು ನಾಲ್ಕು ವರ್ಷಗಳಲ್ಲಿ ಅತಿ ಹೆಚ್ಚು ಖಾಲಿ ಹುದ್ದೆಗಳ ಸಂಖ್ಯೆಯಾಗಿದೆ. ಮಂಜೂರಾದ ಹುದ್ದೆಗಳಲ್ಲಿ ಶೇ.40 ಖಾಲಿ ಇವೆ. 2,561 ಹುದ್ದೆಗಳು ಭರ್ತಿಯಾಗಿಲ್ಲ. ದಿಲ್ಲಿಯ ಏಮ್ಸ್ನಲ್ಲೇ 462 ಹುದ್ದೆಗಳು ಖಾಲಿ ಇವೆ. ಆರೋಗ್ಯ ಖಾತೆ ರಾಜ್ಯ ಸಚಿವ ಪ್ರತಾಪ್ ರಾವ್ ಜಾಧವ್ ಸ್ವತಃ ಈ ಮಾಹಿತಿಯನ್ನು ಸಂಸತ್ತಿನಲ್ಲಿ ನೀಡಿದ್ದಾರೆ. 2,500 ಅಧ್ಯಾಪಕರು ಇಲ್ಲದಿದ್ದರೆ, ಅಲ್ಲಿ ವಿದ್ಯಾರ್ಥಿಗಳಿಗೆ ಏನು ಕಲಿಸುತ್ತಿದ್ದರು? ಶಿಕ್ಷಕರಿಲ್ಲದೆ ಅವರಿಗೆ ಹೇಗೆ ತರಬೇತಿ ನೀಡಲಾಗುತ್ತಿದೆ? ಒಂದು ರೀತಿಯಲ್ಲಿ, ವೈದ್ಯಕೀಯ ಕಾಲೇಜುಗಳು ನಕಲಿ ವಿದ್ಯಾರ್ಥಿಗಳನ್ನು ಸೃಷ್ಟಿಸುತ್ತಿವೆಯೇ? ಈಗ ಬೋಧನಾ ಅನುಭವವಿಲ್ಲದ ವೈದ್ಯರನ್ನು ಸಹ ಅಸೋಸಿಯೇಟ್ ಪ್ರೊಫೆಸರ್ಗಳನ್ನಾಗಿ ಮಾಡಲು ಅವಕಾಶ ನೀಡಲಾಗಿದೆ. ಯಾರಾದರೂ ಎರಡು ವರ್ಷಗಳಿಂದ ಕೆಲಸ ಮಾಡುತ್ತಿದ್ದರೆ, ಅವರನ್ನು ಹಿರಿಯ ರೆಸಿಡೆನ್ಸಿ ಇಲ್ಲದೆ ಸಹಾಯಕ ಪ್ರಾಧ್ಯಾಪಕರನ್ನಾಗಿ ಮಾಡಬಹುದು. ಪರಿಸ್ಥಿತಿ ಹೀಗಾದರೆ, ಇದು ಎಲ್ಲಿಗೆ ಮುಟ್ಟಬಹುದು ಎಂಬುದು ನಿಜಕ್ಕೂ ಆತಂಕ ಮೂಡಿಸುತ್ತದೆ. ಅಖಿಲ ಭಾರತ ವೈದ್ಯಕೀಯ ಸಂಘಗಳ ಒಕ್ಕೂಟ (ಎಫ್ಎಐಎಂಎ) 28 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಸಮೀಕ್ಷೆ ನಡೆಸಿತು.ಸರಕಾರಿ ಮತ್ತು ಖಾಸಗಿ ವೈದ್ಯಕೀಯ ಕಾಲೇಜುಗಳಲ್ಲಿ ಓದುತ್ತಿರುವ 2,000 ವಿದ್ಯಾರ್ಥಿಗಳನ್ನು ಸಮೀಕ್ಷೆಗೆ ಒಳಪಡಿಸಲಾಗಿತ್ತು. ಈ ವಿದ್ಯಾರ್ಥಿಗಳಲ್ಲಿ ಶೇ.90ಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ಸರಕಾರಿ ಕಾಲೇಜುಗಳಿಂದ ಬಂದವರು. ಕೇವಲ ಶೇ.71 ವಿದ್ಯಾರ್ಥಿಗಳು ಮಾತ್ರ ರೋಗಿಗಳನ್ನು ನೋಡಲು ಸಾಕಷ್ಟು ಅವಕಾಶಗಳಿವೆ ಎಂದಿದ್ದಾರೆ.ಕೇವಲ ಶೇ.54 ವಿದ್ಯಾರ್ಥಿಗಳು ಮಾತ್ರ ತರಗತಿಗಳು ನಿಯಮಿತವಾಗಿ ನಡೆಯುತ್ತಿವೆ ಮತ್ತು ಅಧ್ಯಯನಗಳು ನಡೆಯುತ್ತಿವೆ ಎಂದು ಹೇಳಿದ್ದಾರೆ. ಅರ್ಧದಷ್ಟು ವಿದ್ಯಾರ್ಥಿಗಳು ತಮ್ಮ ಸ್ಟೈಪೆಂಡ್ ಗಳನ್ನು ಸಮಯಕ್ಕೆ ಸರಿಯಾಗಿ ಪಡೆಯಲಿಲ್ಲ. ಶೇ.55 ಜನರು ಸಿಬ್ಬಂದಿ ಕೊರತೆ ಇದೆ ಎಂದು ಹೇಳಿದ್ದಾರೆ. ಶೇ.74 ಜನರು ತಾವು ಹೆಚ್ಚು ಕೆಲಸ ಮಾಡುತ್ತಿದ್ದೇವೆ ಎಂದು ಒಪ್ಪಿಕೊಂಡರು. ಆರೋಗ್ಯ ಸಚಿವರು ಇದನ್ನು ಏಕೆ ಪರಿಹರಿಸುವುದಿಲ್ಲ? ಪ್ರಧಾನಿ ಏಕೆ ಇದನ್ನು ಗಮನಿಸುವುದಿಲ್ಲ? ವೈದ್ಯರಿಗೆ ಅವರ ಸ್ಟೈಪೆಂಡ್ಗಳನ್ನು ಸಮಯಕ್ಕೆ ಸರಿಯಾಗಿ ಪಾವತಿಸಲು ಸಾಧ್ಯವಾಗದಿದ್ದರೆ, ಅವರು ಏನು ಮಾಡುತ್ತಿದ್ದಾರೆ? ಇದು ವೈದ್ಯಕೀಯ ಶಿಕ್ಷಣದ ಸ್ಥಿತಿ. ಪ್ರವೇಶ ನೀಡುವ ಮೂಲಕ ಪೋಷಕರು ಮತ್ತು ಮಕ್ಕಳನ್ನು ಸಮಾಧಾನಪಡಿಸಲು ಶಿಕ್ಷಕರಿಲ್ಲದೆ ಕಾಲೇಜುಗಳನ್ನು ತೆರೆಯಲಾಗುತ್ತಿದೆ. 12 ವರ್ಷಗಳಲ್ಲಿ, ದೇಶದಾದ್ಯಂತ ಬೇರೆ ಬೇರೆ ಜಿಲ್ಲೆಗಳಲ್ಲಿ ಒಟ್ಟು 157 ಜಿಲ್ಲಾಸ್ಪತ್ರೆಗಳನ್ನು ವೈದ್ಯಕೀಯ ಕಾಲೇಜುಗಳಾಗಿ ಪರಿವರ್ತಿಸಲಾಗಿದೆ. ಆದರೆ ಇವುಗಳಲ್ಲಿ ಕೇವಲ 137 ಮಾತ್ರ ಕಾರ್ಯನಿರ್ವಹಿಸುತ್ತಿವೆ. ಸರಕಾರ ವೈದ್ಯಕೀಯ ಕಾಲೇಜುಗಳ ಲೆಕ್ಕ ಕೊಡುವಾಗ 323 ದಂತ ಮತ್ತು 942 ಆಯುಷ್ ಸಂಸ್ಥೆಗಳನ್ನು ಸರಿಸಿ, ಕಾಲೇಜುಗಳ ಸಂಖ್ಯೆ 2,045 ಎಂದು ಹೇಳುತ್ತಿದೆ. ಸಂಖ್ಯೆ ದೊಡ್ಡದಾಗಿ ಕಾಣುವಂತೆ ಮಾಡಲು, ಆಯುಷ್ ಸಂಸ್ಥೆಗಳ ಹೆಸರುಗಳನ್ನು ಸಹ ಸೇರಿಸಲಾಗಿದೆ.ಸರಕಾರಿ ಆಸ್ಪತ್ರೆಗೆ ಕೆಲ ಉಪಕರಣಗಳು, ಕೆಲ ಪೀಠೋಪಕರಣಗಳು ಮತ್ತು ಕೆಲ ಕೊಠಡಿಗಳನ್ನು ಸೇರಿಸಿ, ಅದನ್ನು ವೈದ್ಯಕೀಯ ಕಾಲೇಜು ಎನ್ನಲಾಗುತ್ತಿದೆ. ಎಂಬಿಬಿಎಸ್ ಸೀಟುಗಳನ್ನು ಹೆಚ್ಚಿಸಲು ಈಗಿರುವ ಸರಕಾರಿ ವೈದ್ಯಕೀಯ ಕಾಲೇಜುಗಳನ್ನು ಮೇಲ್ದರ್ಜೆಗೇರಿಸುವ ಬಗ್ಗೆ ಕಳೆದ ಎಪ್ರಿಲ್ನಲ್ಲಿ ಸಂಸತ್ತಿನಲ್ಲಿ ಹೇಳಲಾಯಿತು. ಈ ಯೋಜನೆಯಡಿಯಲ್ಲಿ ಸರಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಎಂಬಿಬಿಎಸ್ ಸೀಟುಗಳನ್ನು ಹೆಚ್ಚಿಸಲು ಪ್ರತೀ ಸೀಟಿಗೆ 1.2 ಕೋಟಿ ವೆಚ್ಚದ ಮಿತಿಯೊಂದಿಗೆ ಸೌಲಭ್ಯ ನೀಡಲಾಗುತ್ತದೆ. ದೊಡ್ಡ ಘೋಷಣೆಗಳನ್ನು ಮಾಡಲಾಗುತ್ತಿದೆ, ಆದರೆ ಯಾವುದೇ ಕೆಲಸ ಆಗುತ್ತಿಲ್ಲ. ದರ್ಭಾಂಗಾ ಏಮ್ಸ್ ಅನ್ನು 10 ವರ್ಷಗಳ ಹಿಂದೆ ಘೋಷಿಸಲಾಯಿತು. ಅದರ ಮುಖ್ಯ ದ್ವಾರವನ್ನು ಮಾತ್ರ ನಿರ್ಮಿಸಲಾಗಿದೆ. ಸರಕಾರ ಆರೋಗ್ಯಕ್ಕಾಗಿ ಜಿಡಿಪಿಯ ಶೇ. 2ನ್ನು ಸಹ ಖರ್ಚು ಮಾಡದಿದ್ದರೆ ಇದಾವುದೂ ಆಗುವುದಿಲ್ಲ. ಎಂಬಿಬಿಎಸ್ ಸೀಟುಗಳ ಸಂಖ್ಯೆ ಹೆಚ್ಚಿಸಲು ಈ ಸರಕಾರಕ್ಕೆ 11 ವರ್ಷಗಳು ಬೇಕಾದವು. 11 ವರ್ಷಗಳಲ್ಲಿ, 66,842 ಸೀಟುಗಳನ್ನು ಸೇರಿಸಲಾಗಿದೆ. ಆದರೆ, ಇವುಗಳಲ್ಲಿ ಎಷ್ಟು ಖಾಸಗಿ ಸೀಟುಗಳು ಎಂಬುದು ತಿಳಿಯುವುದಿಲ್ಲ. ಇವುಗಳಿಗೆ ಕೋಟ್ಯಂತರ ರೂ. ಶುಲ್ಕ ಇರುತ್ತದೆ. ಸಂಸದೀಯ ಸ್ಥಾಯಿ ಸಮಿತಿಯ ಪ್ರಕಾರ, ಭಾರತದಲ್ಲಿ 10 ಲಕ್ಷ ಜನರಿಗೆ ಸರಾಸರಿ 75 ಎಂಬಬಿಎಸ್ ಸೀಟುಗಳಿವೆ. ಕರ್ನಾಟಕ, ತೆಲಂಗಾಣ ಮತ್ತು ತಮಿಳುನಾಡಿನಂತಹ ರಾಜ್ಯಗಳಲ್ಲಿ ಈ ಸಂಖ್ಯೆ 150ಕ್ಕಿಂತ ಹೆಚ್ಚು. ಆದರೆ ಬಿಹಾರಕ್ಕೆ ಬಂದರೆ, 10 ಲಕ್ಷ ಜನರಿಗೆ ಕೇವಲ 21 ಸೀಟುಗಳಿವೆ. ಅದೇ ಬಿಹಾರದಲ್ಲಿ ಒಬ್ಬ ವ್ಯಕ್ತಿ 20 ವರ್ಷಗಳ ಕಾಲ ಮುಖ್ಯಮಂತ್ರಿಯಾಗಿದ್ದಾರೆ. ಸರಕಾರಿ ಆಸ್ಪತ್ರೆಗಳಲ್ಲಿ ಅಧ್ಯಾಪಕರ ವೇತನ ಖಾಸಗಿ ಆಸ್ಪತ್ರೆಗಳಿಗಿಂತ ಶೇ. 30ರಿಂದ 50ರಷ್ಟು ಕಡಿಮೆ ಎಂದು ನೀತಿ ಆಯೋಗ ಅಂದಾಜಿಸಿದೆ. ವೈದ್ಯರು ಕಡಿಮೆ ವೇತನದ ಕಾರಣಕ್ಕೆ ತಮ್ಮ ಕೆಲಸ ಬಿಟ್ಟು ಖಾಸಗಿ ಆಸ್ಪತ್ರೆಗಳಿಗೆ ಹೋಗುತ್ತಾರೆ. ಇದು ವರ್ಷಗಳಿಂದಲೂ ನಡೆಯುತ್ತಿದೆ. ಸಾವಿರಾರು ಕೋಟಿ ರೂ.ಗಳ ಹಗರಣಗಳು ನಡೆಯುತ್ತಲೇ ಇವೆ.ವೈದ್ಯರಿಗೆ ಉತ್ತಮ ಸಂಬಳ ನೀಡುವ ಬಗ್ಗೆ ಮಾತ್ರ ಸರಕಾರ ತಲೆಬಿಸಿ ಮಾಡಿಕೊಳ್ಳುತ್ತಲೇ ಇಲ್ಲ. ಹೀಗಿರುವಾಗ, ಬರೀ ವೈದ್ಯಕೀಯ ಕಾಲೇಜುಗಳ ಸಂಖ್ಯೆ ಹೆಚ್ಚಿಸಲಾಗಿದೆ ಎನ್ನುವುದರಿಂದ ಏನು ಉಪಯೋಗ? ವೈದ್ಯರ ಸಂಖ್ಯೆ ಕಡಿಮೆಯಿದೆ ಎನ್ನುವುದು ಮಾತ್ರವಲ್ಲ, ಶಿಕ್ಷಣದ ಗುಣಮಟ್ಟ ಕೂಡ ಕಳಪೆ. ನೂರಾರು ರೋಗಿಗಳನ್ನು ಆಕರ್ಷಿಸುವ ಅನೇಕ ಖಾಸಗಿ ಆಸ್ಪತ್ರೆಗಳನ್ನು ಉತ್ತಮವಾಗಿ ನಿರ್ವಹಿಸಲಾಗುತ್ತದೆ. ಈ ನಿರ್ವಹಣಾ ವಿಧಾನ ಮತ್ತು ಅನುಭವ ಖಾಸಗಿ ಆಸ್ಪತ್ರೆಗಳಿಗೆ ಮಾತ್ರ ಏಕೆ ಸೀಮಿತವಾಗಿದೆ? ಇದರ ಆಧಾರದ ಮೇಲೆ, ಸರಕಾರಿ ಆಸ್ಪತ್ರೆ ನಿರ್ವಹಣೆ ಏಕೆ ಸಾಧ್ಯವಾಗುತ್ತಿಲ್ಲ? ಇಲ್ಲಿನ ವ್ಯವಸ್ಥೆಯಿಂದ ಬೇಸತ್ತ ಜನರು ಮತ್ತೆ ಖಾಸಗಿ ಆಸ್ಪತ್ರೆಗೆ ಹೋಗುತ್ತಾರೆ. ಅವರ ದುಡಿಮೆಯೆಲ್ಲ ಅಲ್ಲಿಯೇ ಖರ್ಚಾಗುತ್ತದೆ. ಸರಕಾರಿ ಆಸ್ಪತ್ರೆಗಳನ್ನು ಇನ್ನೂ ಉದ್ದೇಶಪೂರ್ವಕವಾಗಿ ಕಳಪೆ ಸ್ಥಿತಿಯಲ್ಲಿ ಇರಿಸಲಾಗಿದೆಯೇ? ಸರಕಾರಿ ಆಸ್ಪತ್ರೆಗಳಲ್ಲಿ ವೈದ್ಯರಾಗಿ ಕೆಲಸ ಮಾಡಲು ಅನುಕೂಲಕರ ವಾತಾವರಣ ಕಡಿಮೆಯಾಗುತ್ತಿರುವುದರಿಂದ ವೈದ್ಯರು ಖಾಸಗಿ ಆಸ್ಪತ್ರೆಗೆ ಹೋಗುತ್ತಾರೆ. ಆದರೂ, ಕಡಿಮೆ ಸಂಬಳಕ್ಕೆ ಕೆಲಸ ಮಾಡುವ ಅನೇಕ ವೈದ್ಯರಿದ್ದಾರೆ. ಅವರು ತಮ್ಮ ಜೀವನದುದ್ದಕ್ಕೂ ಕೋಟ್ಯಂತರ ರೂಪಾಯಿ ಗಳಿಸುವ ಅವಕಾಶ ಬಿಟ್ಟುಕೊಡುತ್ತಾರೆ. ಹಾಳಾಗುತ್ತಿರುವ ಅದೇ ಸರಕಾರಿ ಆಸ್ಪತ್ರೆಗಳಲ್ಲಿ, ಸರಕಾರಕ್ಕಾಗಿ ಅಲ್ಲ, ಜನರಿಗಾಗಿ ಕೆಲಸ ಮಾಡುವ ಅದ್ಭುತ ವೈದ್ಯರೂ ಇದ್ದಾರೆ. ಅವರು ಬಡವರ ಬಗ್ಗೆ ಕಾಳಜಿ ವಹಿಸುತ್ತಾರೆ. ಹಾಗಾದರೆ, ಸರಕಾರ ಅಂಥ ವೈದ್ಯರಿಗೆ ಉತ್ತಮ ವಾತಾವರಣ ಒದಗಿಸಲು ಏಕೆ ಯತ್ನಿಸುತ್ತಿಲ್ಲ? ವೈದ್ಯಕೀಯ ಸಂಶೋಧನೆಯೂ ಕೆಟ್ಟ ಸ್ಥಿತಿಯಲ್ಲಿದೆ. ಅಮೆರಿಕ ತನ್ನ ಜಿಡಿಪಿಯ ಶೇ.0.65 ಅನ್ನು ಆರೋಗ್ಯ ರಕ್ಷಣೆ ಸಂಶೋಧನೆಗೆ ಖರ್ಚು ಮಾಡುತ್ತದೆ. ಬ್ರಿಟನ್ ಶೇ.0.44 ಅನ್ನು ಖರ್ಚು ಮಾಡುತ್ತದೆ. ಆದರೆ ಭಾರತ ತನ್ನ ಜಿಡಿಪಿಯ ಶೇ.0.02ರಷ್ಟನ್ನು ಮಾತ್ರ ವೈದ್ಯಕೀಯ ಸಂಶೋಧನೆಗೆ ಖರ್ಚು ಮಾಡುತ್ತಿದೆ. ವೈದ್ಯಕೀಯ ಕಾಲೇಜುಗಳು ಮತ್ತು ಶಿಕ್ಷಣದ ಮಹತ್ವವನ್ನು ಸರಕಾರ ಅರ್ಥಮಾಡಿಕೊಳ್ಳುತ್ತಿಲ್ಲ. ಕ್ಯಾನ್ಸರ್ ವೆಚ್ಚ ಎಷ್ಟು ಹೆಚ್ಚಾಗಿದೆ? ಲ್ಯಾನ್ಸೆಟ್ ವರದಿ ಪ್ರಕಾರ, ಭಾರತದಲ್ಲಿ ಕ್ಯಾನ್ಸರ್ ಹೊರೆ ಹೆಚ್ಚುತ್ತಿದೆ ಮತ್ತು ರೋಗಿಗಳ ಮೇಲಿನ ಆರ್ಥಿಕ ಹೊರೆಯೂ ಹೆಚ್ಚುತ್ತಿದೆ. ಲ್ಯಾನ್ಸೆಟ್ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ಭಾರತದಲ್ಲಿ ಕ್ಯಾನ್ಸರ್ ರೋಗಿ ಪ್ರತೀ ಖಾಸಗಿ ಆಸ್ಪತ್ರೆಗೆ 39,000ರಿಂದ 93,000 ರೂಪಾಯಿಗಳವರೆಗೆ ಪಾವತಿಸಬೇಕಾಗುತ್ತದೆ. ಭಾರತದಲ್ಲಿ ಪ್ರತೀ ವರ್ಷ 74,000 ಜನರು ಕ್ಯಾನ್ಸರ್ನಿಂದ ಸಾಯುತ್ತಾರೆ. ಭಾರತದಲ್ಲಿ ಸರಾಸರಿ ಮಾಸಿಕ ವೇತನ 12,000 ರೂಪಾಯಿ. ಅಂತಹ ಪರಿಸ್ಥಿತಿಯಲ್ಲಿ, ಕ್ಯಾನ್ಸರ್ ಚಿಕಿತ್ಸೆಗಾಗಿ ಒಂದೇ ಸಲಕ್ಕೆ 40,000 ರೂ. ಪಾವತಿಸಬೇಕಾದರೆ, ಚಿಕಿತ್ಸೆ ಹೇಗೆ ಕೊಡಿಸಬಹುದು? ಲಕ್ಷಾಂತರ ವಿದ್ಯಾರ್ಥಿಗಳು ನೀಟ್ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದಾರೆ.ಆದರೂ, ಈ ದೇಶದಲ್ಲಿ ವೈದ್ಯಕೀಯ ಶಿಕ್ಷಣದ ಬಗ್ಗೆ ಗಂಭೀರ ಚರ್ಚೆ ನಡೆಯುತ್ತಿಲ್ಲ. ಚರ್ಚೆಯೆಲ್ಲವೂ ಹಿಂದೂ ರಾಷ್ಟ್ರದ ಕಲ್ಪನೆಗೆ ಸೀಮಿತವಾಗಿರುವಾಗ, ವೈದ್ಯಕೀಯ ಶಿಕ್ಷಣದ ಗುಣಮಟ್ಟ ಯಾರಿಗೆ ಬೇಕಾಗಿದೆ?
ಡಿಕೆಶಿ ಕೆಪಿಸಿಸಿ ಅಧ್ಯಕ್ಷರಾಗಿ ಮಾರ್ಚ್ 10 ಕ್ಕೆ ತುಂಬಲಿದೆ ಆರು ವರ್ಷ: ಸುದೀರ್ಘ ಅವಧಿಯಲ್ಲಿ ಮಾಡಿರುವ ಸಾಧನೆಗಳೇನು
ಡಿಸಿಎಂ ಡಿಕೆ ಶಿವಕುಮಾರ್ ಅವರು ಕೆಪಿಸಿಸಿ ಅಧ್ಯಕ್ಷರಾಗಿ ಮಾರ್ಚ್ 10 ಕ್ಕೆ ಆರು ವರ್ಷ ತುಂಬಲಿದೆ. ಕಳೆದ ಆರು ವರ್ಷಗಳಲ್ಲಿ ಅವರು ಕಾಂಗ್ರೆಸ್ ಪಕ್ಷವನ್ನು ಸಂಘಟನೆ ಮಾಡುವುದು ಹಾಗೂ ಅಧಿಕಾರಕ್ಕೆ ತರುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ಡಿಕೆ ಶಿವಕುಮಾರ್ ಅವರ ಪರ ಮತ್ತು ವಿರುದ್ಧವಾದ ಅಭಿಪ್ರಾಯಗಳು ಇವೆ. ಈ ಹಿಂದೆ ಅವರ ಕುರಿತಾಗಿ ಕಾಂಗ್ರೆಸ್ ನಾಯಕರಿಬ್ಬರು ಮಾತನಾಡಿದ್ದ ವಿಡಿಯೋ ವೈರಲ್ ಆಗಿತ್ತು. ಆದರೆ ಡಿಕೆ ಶಿವಕುಮಾರ್ ಅವರು ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿ ಏನೆಲ್ಲಾ ಗಮನ ಸೆಳೆಯುವ ಕೆಲಸಗಳನ್ನು ಮಾಡಿದ್ದಾರೆ ಎಂಬ ವಿವರ ಇಲ್ಲಿದೆ.
PANಗೆ ಹೊಸ ನಿಯಮ : ಪ್ರಸ್ತಾವಿತ ಆದಾಯ ತೆರಿಗೆ ನಿಯಮ - 2026ರ ಪ್ರಕಾರ, ಒಬ್ಬ ವ್ಯಕ್ತಿ ದಿನವೊಂದಕ್ಕೆ ಎಷ್ಟು ಹಣವನ್ನು ಬ್ಯಾಂಕ್’ಗೆ ಕಟ್ಟಬಹುದು, ಎಷ್ಟು ವಿದ್’ಡ್ರಾ ಮಾಡಿಕೊಳ್ಳಬಹುದು ಮುಂತಾದ ನಿಯಮಗಳು, ಏಪ್ರಿಲ್ ಒಂದರಿಂದ ಬದಲಾಗುವ ಸಾಧ್ಯತೆಯಿದೆ. ಈ ಸಂಬಂಧ, ಕರಡು ಪ್ರಸ್ತಾವನೆ ಸಲ್ಲಿಕೆಯಾಗಿದೆ. ಸದ್ಯ, ಐವತ್ತು ಸಾವಿರದ ಲಿಮಿಟ್ ಇದಕ್ಕೆ ಇದೆ.
WPL RCB 2026: ಡಬ್ಲ್ಯೂಪಿಎಲ್ 2026 ಫೈನಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಭರ್ಜರಿ ಜಯ ಸಾಧಿಸಿ ಟ್ರೋಫಿಗೆ ಮುತ್ತಿಟ್ಟಿತು. ಈ ಹಿನ್ನೆಲೆ ಆರ್ಸಿಬಿ ತಂಡದ ನಾಯಕಿ ಸ್ಮೃತಿ ಮಂಧಾನಗೆ ಮೆಚ್ಚುಗೆಗಳ ಸುರಿಮಳೆಯೇ ಹರಿದುಬಂದವು. ಇದರ ನಡುವೆಯೇ ಇದೀಗ ಈ ಜಯಕ್ಕೆ ಧಾರ್ಮಿಕ ಅರ್ಥ ನೀಡಿರುವುದು ವಿವಾದ ಸೃಷ್ಟಿಸಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ
ಕರಾವಳಿ ಜಿಲ್ಲೆಗಳಾದ ಮಂಗಳೂರು ಹಾಗೂ ಉಡುಪಿಯಲ್ಲಿ ಪೊಲೀಸರು ಆದೆಷ್ಟೇ ಪ್ರಯತ್ನ ಮಾಡಿದಾಗ್ಯೂ, ಡ್ರಗ್ಸ್ ಜಾಲ ಹನುಮಂತನ ಬಾಲದಂತೆ ಬೆಳೆಯುತ್ತಲೇ ಇದೆ. ಇದನ್ನು ತಡೆಗಟ್ಟಲು ಇತ್ತೀಚೆಗೆ ಕಾಲೇಜುಗಳಲ್ಲಿ ಕ್ಯೂಆರ್ ಅಳವಡಿಕೆ ಎಂಬ ವಿನೂತನ ಪ್ರಯೋಗ ಮಾಡಿದ್ದರು. ಸದ್ಯ ಈ ಪ್ರಯೋಗಕ್ಕೆ ಉತ್ತಮ ಪ್ರತಿಕ್ರಿಯೆ ದೊಕಿದ್ದು, ಇದರ ವ್ಯಾಪ್ತಿಯನ್ನು ಸಾರ್ವಜನಿಕ ಸ್ಥಳಗಳು ಸೇರಿದಂತೆ ಮನೆ ಮನೆಗೂ ತಲುಪಿಸು ಕಾರ್ಯಕ್ಕೆ ಮಂಗಳೂರು ಪೊಲೀಸರು ಮುಂದಾಗಿದ್ದು, ಜಿಲ್ಲೆಯೆಲ್ಲೆಡೆ ಬರೋಬ್ಬರಿ ಸಾವಿರ ಕ್ಯೂಆರ್ ಅಳವಡಿಕೆಗೆ ಸಜ್ಜಾಗಿದ್ದು, ಮಾದಕ ಜಾಲದ ಬೆನ್ನು ಮೂಳೆ ಮುರಿಯಲು ಪಣತೊಟ್ಟಿದೆ. ಏನಿದು ಡ್ರಗ್ಸ್ ತಡೆಗೆ ಕ್ಯೂಆರ್ ಅಳವಡಿಕೆ ಅಭಿಯಾನ? ಇದು ಹೇಗೆ ಕಾರ್ಯ ನಿರ್ವಹಿಸಲಿದೆ ಎಂಬ ಮಾಹಿತಿ ಇಲ್ಲಿದೆ..
ಸಂಪಾದಕೀಯ | ಕುಸಿಯುತ್ತಿರುವ ಅಂತರ್ಜಲ
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಸದನದಲ್ಲಿ ಗದ್ದಲ ಉಂಟು ಮಾಡಿದ ಸಂಸದರ ವಿರುದ್ಧ ಕ್ರಮ ಕೈಗೊಳ್ಳಿ: ಲೋಕಸಭಾ ಸ್ಪೀಕರ್ಗೆ ಬಿಜೆಪಿ ಸಂಸದೆಯರಿಂದ ಪತ್ರ
ಹೊಸದಿಲ್ಲಿ: ಸಂಸತ್ತಿನಲ್ಲಿ ಫೆಬ್ರವರಿ 4ರ ಗದ್ದಲಕ್ಕೆ ಸಂಬಂಧಿಸಿದಂತೆ ವಿರೋಧ ಪಕ್ಷದ ಸಂಸದರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಬಿಜೆಪಿಯ ಮಹಿಳಾ ಸಂಸದರು ಸ್ಪೀಕರ್ ಅವರಿಗೆ ಪತ್ರ ಬರೆದಿದ್ದಾರೆ. ಸ್ಪೀಕರ್ ಅವರ ಮೇಜಿನ ಮೇಲೆ ಹತ್ತುವುದು, ಕಾಗದಪತ್ರಗಳನ್ನು ಹರಿದು ಸ್ಪೀಕರ್ ಕಡೆಗೆ ಎಸೆಯುವುದು, ಪ್ರಧಾನಿಯವರ ಆಸನಕ್ಕೆ ಮುತ್ತಿಗೆ ಹಾಕುವಂತಹ ಹೇಯ ಕೃತ್ಯಗಳನ್ನು ಎಸಗಿರುವ ವಿರೋಧ ಪಕ್ಷದ ಸಂಸದರ ವಿರುದ್ಧ ಸಾಧ್ಯವಾದಷ್ಟು ಕಠಿಣ ಕ್ರಮ ಕೈಗೊಳ್ಳಬೇಕೆಂದು ಬಿಜೆಪಿಯ ಮಹಿಳಾ ಸಂಸದರು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರಿಗೆ ಒತ್ತಾಯಿಸಿದ್ದಾರೆ. ಫೆಬ್ರವರಿ 4ರಂದು ಗೌರವಾನ್ವಿತ ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯದ ಮೇಲಿನ ಚರ್ಚೆಯ ಸಮಯದಲ್ಲಿ ಲೋಕಸಭೆಯ ಘನತೆ ಮತ್ತು ಪಾವಿತ್ರ್ಯವನ್ನು ಎತ್ತಿಹಿಡಿದ ಮತ್ತು ರಕ್ಷಿಸಿದ ನಿಮ್ಮ ಅನುಕರಣೀಯ ವಿಧಾನಕ್ಕೆ ಕೃತಜ್ಞತೆ ಮತ್ತು ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತೇವೆ. ಲೋಕಸಭೆಯಲ್ಲಿ ನಡೆದ ಆತಂಕಕಾರಿ ಘಟನೆಗಳು ಎಲ್ಲರನ್ನೂ ತೀವ್ರವಾಗಿ ಕಳವಳಗೊಳಿಸಿವೆ. ಏಕೆಂದರೆ ಈ ಪರಿಸ್ಥಿತಿ ಗಂಭೀರ ಮತ್ತು ಅಹಿತಕರ ಪರಿಣಾಮಗಳಿಗೆ ಕಾರಣವಾಗುವ ಸಾಧ್ಯತೆ ಇತ್ತು. ಆ ದಿನ, ಇಡೀ ಸದನ ಮತ್ತು ಇಡೀ ರಾಷ್ಟ್ರವು ಲೋಕಸಭೆಯಲ್ಲಿ ಅತ್ಯಂತ ದುರದೃಷ್ಟಕರ ಮತ್ತು ವಿಷಾದನೀಯ ಘಟನೆಗೆ ಸಾಕ್ಷಿಯಾಯಿತು ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಸದನಕ್ಕೆ ಪ್ರಧಾನಿ ಗೈರು ಹಾಜರಾಗಿರುವ ವಿಚಾರವಾಗಿ ಸ್ಪೀಕರ್ ತಮ್ಮ ವಿರುದ್ಧ ಗಂಭೀರ ಆರೋಪ ಮಾಡಿರುವುದನ್ನು ಇದಕ್ಕೂ ಮೊದಲು ಕಾಂಗ್ರೆಸ್ ಸಂಸದೆಯರು ಖಂಡಿಸಿದ್ದರು.
Karnataka Weather: ರಾಜ್ಯದ ಒಳನಾಡಿನೆಲ್ಲಡೆ ಕವಿದ ಇಬ್ಬನಿ, ತಾಪಮಾನ ಹೆಚ್ಚಳದ ಮುನ್ಸೂಚನೆ, ಅಲರ್ಟ್
ಬೆಂಗಳೂರು: ಕರ್ನಾಟಕದಾದ್ಯಂತ ಚಳಿ ಕಡಿಮೆಯಾಗಿದ್ದು, ಬಿಸಿಲಿನ ಪ್ರಮಾಣ ತೀವ್ರ ಸ್ವರೂಪದಲ್ಲಿ ಹೆಚ್ಚಾಗುತ್ತಿದೆ. ಗರಿಷ್ಠ ತಾಪಮಾನದಲ್ಲಿ ನಿರಂತರ ಏರಿಕೆ ಕಂಡು ಬರುತ್ತಿದೆ. ರಾಜ್ಯದ ಉತ್ತರ ಒಳನಾಡಿನೆಲ್ಲಡೆ ಇಂದು ಮಂಗಳವಾರ ಇಬ್ಬನಿ ಕವಿದಿದ್ದು ಕಂಡು ಬಂತು. ಇದು ಗರಿಷ್ಠ ತಾಪಮಾನದಲ್ಲಿ ಮತ್ತಷ್ಟು ಏರಿಕೆಯ ಮುನ್ಸೂಚನೆಯಾಗಿದೆ. ವಾಡಿಕೆಯಂತೆ ಶಿವರಾತ್ರಿ ಸಮೀಪಿಸುತ್ತಿದ್ದಂತೆ ಒಣಹವೆ ಪ್ರಮಾಣ ಏರಿಕೆ ಆಗುತ್ತದೆ. ಇದೇ ತಿಂಗಳಾಂತ್ಯಕ್ಕೆ ಬಿಸಿಲಿನ ಅಬ್ಬರ
ರಾಜ್ಯದಲ್ಲಿ, ಅದರಲ್ಲೂ ಮುಖ್ಯವಾಗಿ ವಾಯುವ್ಯ ಕರ್ನಾಟಕ ಸಾರಿಗೆ ಸಂಸ್ಥೆಯ ವ್ಯಾಪ್ತಿಯಲ್ಲಿ ಬರುವ ಜಿಲ್ಲೆಗಳಲ್ಲಿನ ಅಪಘಾತ ವಲಯಗಳನ್ನು ಪತ್ತೆ ಹಚ್ಚಲು ವಾಕರಸಾ ಸಂಸ್ಥೆ ಮೊದಲ ಬಾರಿಗೆ ಸಮೀಕ್ಷೆ ನಡೆಸಲಾಗಿದೆ. ಈ ಸಮೀಕ್ಷೆಯಲ್ಲಿ ಈ ಭಾಗದ ರಾಷ್ಟ್ರೀಯ ಹಾಗೂ ರಾಜ್ಯ ಹೆದ್ದಾರಿಗಳನ್ನೊಳಗೊಂಡಂತೆ ನಗರ ಪ್ರದೇಶಗಳಲ್ಲಿ ರಸ್ತೆಗಳಲ್ಲಿ ಬರೋಬ್ಬರಿ 150 ಆ್ಯಕ್ಸಿಡೆಂಟ್ ಝೋನ್ ಗಳು ಪತ್ತೆಯಾಗಿದೆ. ಸದ್ಯ ಈ ಕುರಿತ ಜಿಲ್ಲಾವಾರು ಪಟ್ಟಿಯನ್ನು ಪಿಡಬ್ಲ್ಯುಡಿ ಸಚಿವ ಸಚಿವ ಸತೀಶ ಜಾರಕಿಹೊಳಿ ನೀಡಿದ್ದು, ಅಪಘಾತ ವಲಯದಲ್ಲಿ ನ್ಯೂನ್ಯತೆಗಳಿಂದಾಗಿ ಈ ಅಪಘಾತಗಳು ಸಂಭವಿಸುತ್ತಿದ್ದು, ಇದನ್ನು ಸರಿಪಡಿಸುವಂತೆ ಮನವಿಮಾಡಿದ್ದಾರೆ. ಯಾವ ಜಿಲ್ಲೆಯಲ್ಲಿ ಎಷ್ಟು ಅಪಘಾತ ವಲಯಗಳಿವೆ ಎಂಬ ಕುರಿತ ವರದಿ ಇಲ್ಲಿದೆ.
SIR ಪ್ರಕ್ರಿಯೆಗೆ ಅಡ್ಡಿ ಸಲ್ಲದು - ರಾಜ್ಯಗಳಿಗೆ ಸುಪ್ರೀಂಕೋರ್ಟ್ ವಾರ್ನಿಂಗ್ : ದೀದಿಗೆ ಹಿನ್ನಡೆ, EC ಮೇಲುಗೈ?
Supreme Court warning to All States : ದೇಶಾದ್ಯಂತ ಕೇಂದ್ರ ಚುನಾವಣಾ ಆಯೋಗ ನಡೆಸುತ್ತಿರುವ ವಿಶೇಷ ತೀವ್ರ ಪರಿಷ್ಕರಣೆಗೆ ಯಾವುದೇ ಅಡ್ಡಿಯಾಗದಂತೆ ನೋಡಿಕೊಳ್ಳಿ ಎಂದು ಎಲ್ಲಾ ರಾಜ್ಯಗಳಿಗೆ ಸರ್ವೋಚ್ಚ ನ್ಯಾಯಾಲಯ ಸೂಚಿಸಿದೆ. ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರ ಕೇಸ್ ವಿಚಾರಣೆ ಸಂಬಂಧ, ಸುಪ್ರೀಂ, ಇದೇ ಮಾತನ್ನು ಅವರಿಗೂ ಹೇಳಿದೆ.
ಕನ್ನಡತಿ ಶ್ರೇಯಾಂಕಾ ಪಾಟೀಲ್, ಇಶನ್ ಕಿಶನ್, ಮೊಹಮ್ಮದ್ ಶಮಿ ಸೇರಿ ಹಲವರಿಗೆ ಯಾವುದೇ ಗ್ರೇಡ್ ನೀಡದ ಬಿಸಿಸಿಐ
BCCI: ಬಿಸಿಸಿಐ ಕೆಂದ್ರ ಒಪ್ಪಂದದ ಪಟ್ಟಿಯಿಂದ ಮಹಿಳಾ ಕ್ರಿಕೆಟ್ನ ಕನ್ನಡತಿ ಶ್ರೇಯಾಂಕಾ ಪಾಟೀಲ್ ಸೇರಿ ಹಲವರನ್ನು ಹೊರಗಿಟ್ಟಿತ್ತು. ಇದರ ಬೆನ್ನಲ್ಲೇ ಸ್ಟಾರ್ ಆಟಗಾರರಾದ ಇಶಾನ್ ಕಿಶನ್, ಮಹಮದ್ ಶಮಿ ಸೇರಿದಂತೆ ಹಲವರನ್ನು ಎಲ್ಲಾ ಗ್ರೇಡ್ನಿಂದ ಕೈಬಿಡಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ತನ್ನ ಕೇಂದ್ರ ಒಪ್ಪಂದ
Bharat Taxi: ರಾಜ್ಯದಲ್ಲಿ ವಾಹನ್-4 ಮೂಲಕ 'ಭಾರತ್ ಟ್ಯಾಕ್ಸಿ' ಜಾರಿಗೆ ಆಗ್ರಹ: ರಾಮಲಿಂಗಾ ರೆಡ್ಡಿ ಭರವಸೆ
ಬೆಂಗಳೂರು: ಕರ್ನಾಟಕ ರಾಜ್ಯದಲ್ಲಿ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಸಹಕಾರಿ ಆಧಾರಿತ ಟ್ಯಾಕ್ಸಿ ಸೇವೆ 'ಭಾರತ್ ಟ್ಯಾಕ್ಸಿ' ಯೋಜನೆಯನ್ನು (ಬೈಕ್ ಟ್ಯಾಕ್ಸಿ/ದ್ವಿಚಕ್ರ ವಾಹನವನ್ನು ಹೊರತುಪಡಿಸಿ) ಆಟೋ ಮತ್ತು ಟ್ಯಾಕ್ಸಿಗಳಿಗೆ ಕೂಡಲೇ ಜಾರಿಗೆ ತರುವಂತೆ ರಾಜ್ಯ ಸರ್ಕಾರಕ್ಕೆ ಆಗ್ರಹಿಸಲಾಗಿದೆ. ಈ ಸಂಬಂಧ ಕೇಂದ್ರ ಸರ್ಕಾರಕ್ಕೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು ಪತ್ರ ಮುಖೇನ ಮನವಿ ಮಾಡಿದ್ದಾರೆ. ಕರ್ನಾಟಕ
ಬಂಗಾರದ ದರ ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಬಂಗಾರದ ದರ ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಈಗ ದೇಶದ ಎಲ್ಲ ಹೆಂಗಳೆಯರಿಗೂ ಒಂದು ಧೈರ್ಯ. ಧರಿಸಿರುವ ಆಭರಣ ಸಂಪತ್ತಿನಂತೆ, ಲಕ್ಷಾಂತರ ರೂ.ಗಳ ಸಂಗ್ರಹದಂತೆ ಅವರಿಗೆ ತೋರುತ್ತಿದೆ. ಮನೆ ಕಟ್ಟಲು, ಕಾರಿನ ಸಾಲ ತೀರಿಸಲು, ಇನ್ಯಾವುದೇ ಆಪತ್ಕಾಲದಲ್ಲಿಯೂ ಬಂಗಾರ ನೀಡುತ್ತಿರುವ ಧೈರ್ಯ ಅಪಾರ. ನಮ್ಮ ಸ್ತ್ರೀಯರು ಅವರಿಗೆ ಅರಿವಿಲ್ಲದೆ ಈಗ ಲಕ್ಷಾಧಿಪತಿಗಳು! ಭಾರತದ ಮನೆಮನೆಗಳ ಕಪಾಟು ಮತ್ತು ಲಾಕರ್ಗಳಲ್ಲಿ 34,600 ಟನ್ ಬಂಗಾರ ಅಡಗಿದೆಯೆಂದರೆ ಅದೇನು ಕಡಿಮೆಯೇ? ಇದೆಲ್ಲ ಸಾಧ್ಯವಾಗಿದ್ದು ನಮ್ಮ ಅಮ್ಮ, ಮಡದಿ, ಅಕ್ಕತಂಗಿಯರಿಂದ..
ನೆಟ್ಲಮುಡ್ನೂರು : ಉಮ್ರಾ ಯಾತ್ರಿ ಇಬ್ರಾಹಿಂ ನಿಧನ
ಬಂಟ್ವಾಳ : ಪವಿತ್ರ ಉಮ್ರಾ ಯಾತ್ರೆಗೆ ತೆರಳಿದ್ದ ನೆಟ್ಲಮುಡ್ನೂರು ಗ್ರಾಮದ ಪಂತಡ್ಕ ನಿವಾಸಿ ಇಬ್ರಾಹಿಂ (65) ಅವರು ಹೃದಯಾಘಾತದಿಂದ ಸೋಮವಾರ ರಾತ್ರಿ ಮಕ್ಕಾದಲ್ಲಿ ಮೃತಪಟ್ಟರು. ಫೆ.01ರಂದು ಪತ್ನಿ ಹಾಗೂ ಕುಟುಂಬಿಕರೊಂದಿಗೆ ಉಮ್ರಾ ಯಾತ್ರೆಗೆ ತೆರಳಿದ್ದ ಅವರು ತನ್ನ ಕೊಠಡಿಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದ ವೇಳೆ ಎದೆನೋವು ಕಾಣಿಸಿಕೊಂಡಿದ್ದು ತುಸು ಹೊತ್ತಿನಲ್ಲೇ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಮೃತರು ಪತ್ನಿ, ಇಬ್ಬರು ಪುತ್ರರು ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.
ಮುಖ್ಯಮಂತ್ರಿ ಕಾರ್ಯಕ್ರಮಕ್ಕೆ ಹಿಂದುಳಿದ ವರ್ಗಗಳ ಅಭಿವೃದ್ಧಿ ಅನುದಾನ ಬಳಕೆ
ಬೆಂಗಳೂರು, ಫೆ.9: ಮೂರು ತಿಂಗಳ ಹಿಂದೆಯಷ್ಟೇ ಕೊಪ್ಪಳದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭಾಗವಹಿಸಿದ್ದ ಕಾರ್ಯಕ್ರಮಕ್ಕೆ ಬರೋಬ್ಬರಿ 4.95 ಕೋಟಿ ರೂ. ವೆಚ್ಚವಾಗಿದೆ. ಆದರೆ ಈ ಅನುದಾನವನ್ನು ಹಿಂದುಳಿದ ವರ್ಗಗಳ ವಿವಿಧ ಸಮುದಾಯಗಳ ಅಭಿವೃದ್ಧಿ ಕಾರ್ಯಕ್ರಮದಡಿಯಲ್ಲಿ ಹಂಚಿಕೆ ಮಾಡಿದ್ದ ಅನುದಾನವನ್ನು ಬಳಸಿಕೊಂಡಿರುವುದು ಇದೀಗ ಬಹಿರಂಗವಾಗಿದೆ. ಕಲ್ಯಾಣ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಇಂದಿಗೂ ಅಭಿವೃದ್ಧಿ ಮರೀಚಿಕೆಯಾಗಿದೆ. ಹಿಂದುಳಿದ ಜಿಲ್ಲೆಗಳ ಅಭಿವೃದ್ಧಿಗಾಗಿ ಘೋಷಣೆ ಮಾಡಿದ್ದ ಕೋಟ್ಯಂತರ ರೂ. ಅನುದಾನವು ಕಾಗದದಲ್ಲಷ್ಟೇ ಉಳಿದಿದೆ. ಆದರೆ ಮುಖ್ಯಮಂತ್ರಿಯ ಸಮಾವೇಶಕ್ಕೆ ಇದೇ ಕಲ್ಯಾಣ ಕರ್ನಾಟಕ ಭಾಗದಲ್ಲಿ ಕೋಟ್ಯಂತರ ರೂ. ಖರ್ಚಾಗುತ್ತಿದೆ. ಈ ಬಗ್ಗೆ ಪ್ರತಿಪಕ್ಷಗಳೂ ಆಕ್ಷೇಪ ವ್ಯಕ್ತಪಡಿಸಿದ್ದವು. ಇದರ ಬೆನ್ನಲ್ಲೇ ಕೊಪ್ಪಳದಲ್ಲಿ 2025ರ ಅಕ್ಟೋಬರ್ 6ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭಾಗವಹಿಸಿದ್ದ ಕಾರ್ಯಕ್ರಮಕ್ಕೆ 4.95 ಕೋಟಿ ರೂ.ಯಷ್ಟು ವೆಚ್ಚವನ್ನು ಹಿಂದುಳಿದ ವರ್ಗ ಗಳಡಿಯಲ್ಲಿರುವ ವಿವಿಧ ಸಮುದಾಯಗಳ ಅಭಿವೃದ್ಧಿ ಕಾರ್ಯಕ್ರಮಕ್ಕೆ ನಿಗದಿಪಡಿಸಿದ್ದ ಅನುದಾನವನ್ನು ಖರ್ಚು ಮಾಡಿರುವುದು ಚರ್ಚೆಗೆ ಗ್ರಾಸವಾಗಿದೆ. ಅಲ್ಲದೇ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ 11 ನಿಗಮಗಳ ಪೈಕಿ 8 ನಿಗಮಗಳಿಗೆ 2 ವರ್ಷಗಳಾದರೂ ಅಧ್ಯಕ್ಷರೇ ನೇಮಕಗೊಂಡಿರಲಿಲ್ಲ. ಇದರಿಂದಾಗಿ ನಿಗಮಗಳ ವಿವಿಧ ಯೋಜನೆಗಳು ಸರಿಯಾಗಿ ಜಾರಿಯಾಗದೆ, ಕಳೆದ ಆರ್ಥಿಕ ಸಾಲಿನಲ್ಲಿ 72.55 ಕೋಟಿ ರೂ. ಅನುದಾನ ಬಳಕೆಯಾಗದೆ ಉಳಿದಿತ್ತು. ಈ ಬಗ್ಗೆ ಯಾವುದೇ ಕ್ರಮ ವಹಿಸಿರಲಿಲ್ಲ. ಈ ಮಧ್ಯೆ ಕೊಪ್ಪಳದ ಕಾರ್ಯಕ್ರಮಕ್ಕೆ 4.95 ಕೋಟಿ ರೂ.ಯನ್ನು ವಿವಿಧ ನಿಗಮಗಳಿಗೆ ಹಂಚಿಕೆ ಮಾಡಿರುವ ಅನುದಾನದಲ್ಲಿ ಬಿಡುಗಡೆಗೆ ಬಾಕಿ ಇರುವ ಮೊತ್ತದಲ್ಲಿಯೇ ಬಿಡುಗಡೆ ಮಾಡಬೇಕು ಎಂದು ಆರ್ಥಿಕ ಇಲಾಖೆಯು ಇಲಾಖೆಯ ಸರಕಾರದ ಕಾರ್ಯದರ್ಶಿಗೆ ಸೂಚಿಸಿದೆ. 2026ರ ಫೆಬ್ರವರಿ 6ರಂದು ಆರ್ಥಿಕ ಇಲಾಖೆಯು, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸರ್ಕಾರದ ಕಾರ್ಯದರ್ಶಿಗೆ ಸೂಚಿಸಿದೆ. ಇದರ ಪ್ರತಿಯು he-file.inಗೆ ಲಭ್ಯವಾಗಿದೆ. ಬಳಕೆಯಾಗದ ‘ಗಂಗಾ ಕಲ್ಯಾಣ’ ಅನುದಾನ: ಬಹುತೇಕವಾಗಿ ಎಲ್ಲ ನಿಗಮಗಳಲ್ಲಿಯೂ ಗಂಗಾ ಕಲ್ಯಾಣ ನೀರಾವರಿ ಯೋಜನೆಯಡಿ ನಿಗದಿಪಡಿಸಿದ ಅನುದಾನದಲ್ಲಿ ಹೆಚ್ಚು ಹಣ ಉಳಿದಿದೆ. ಕರ್ನಾಟಕ ಮಡಿವಾಳ ಮಾಚಿದೇವ ಅಭಿವೃದ್ಧಿ ನಿಗಮದಲ್ಲಿಯಂತೂ ಕೊಟ್ಟ ಅನುದಾನದಲ್ಲಿ ಒಂದು ರೂ. ಕೂಡ ಖರ್ಚಾಗಿಲ್ಲ. 2024-25ನೇ ಸಾಲಿನಲ್ಲಿ ಈ ಯೋಜನೆಗೆ 5.37 ಕೋಟಿ ರೂ. ನೀಡಲಾಗಿತ್ತು. ಅಷ್ಟೂ ಅನುದಾನ ಉಳಿಕೆಯಾಗಿತ್ತು. ಕರ್ನಾಟಕ ಮರಾಠ ಸಮುದಾಯಗಳ ಅಭಿವೃದ್ಧಿ ನಿಗಮದಲ್ಲಿ ಗಂಗಾ ಕಲ್ಯಾಣ ಯೋಜನೆಯನ್ನು ‘ಜೀಜಾವು ಜಲ ಭಾಗ್ಯ ಯೋಜನೆ’ ಎಂಬ ಹೆಸರಿನಲ್ಲಿ ಜಾರಿಗೆ ತರಲಾಗಿತ್ತು. ಇದಕ್ಕಾಗಿ ಅತ್ಯಂತ ಹೆಚ್ಚು ಅಂದರೆ 28.62 ಕೋಟಿ ರೂ. ಅನುದಾನ ನಿಗದಿಪಡಿಸಲಾಗಿತ್ತು. ಇದರಲ್ಲಿ ಖರ್ಚಾಗಿದ್ದು ಮಾತ್ರ 11.25 ಲಕ್ಷ ರೂ. ಹೀಗಾಗಿ 28.50 ಕೋಟಿ ರೂ. ಅನುದಾನ ಹಾಗೆಯೇ ಉಳಿಕೆಯಾಗಿತ್ತು. ಕರ್ನಾಟಕ ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮದಲ್ಲಿ ಗಂಗಾ ಕಲ್ಯಾಣ ಯೋಜನೆಗೆ 5.15 ಕೋಟಿ ರೂ. ಅನುದಾನ ನಿಗದಿಪಡಿಸಲಾಗಿತ್ತು. ಇದರಲ್ಲಿ 2.59 ಕೋಟಿ ರೂ. ಮಾತ್ರ ಖರ್ಚಾಗಿದೆ. ಹೀಗಾಗಿ 2.55 ಕೋಟಿ ರೂ. ಅನುದಾನ ಉಳಿಕೆಯಾಗಿದೆ. ಕರ್ನಾಟಕ ಉಪ್ಪಾರ ಅಭಿವೃದ್ಧಿ ನಿಗಮದಲ್ಲಿ ಗಂಗಾ ಕಲ್ಯಾಣ ಯೋಜನೆಗೆ 2 ಕೋಟಿ ರೂ. ಅನುದಾನ ನಿಗದಿಪಡಿಸಲಾಗಿತ್ತು. ಇದರಲ್ಲಿ 45 ಲಕ್ಷ ರೂ. ಮಾತ್ರ ಖರ್ಚಾಗಿದ್ದು, 1.55 ಕೋಟಿ ರೂ. ಅನುದಾನ ಉಳಿಕೆಯಾಗಿತ್ತು. ಕರ್ನಾಟಕ ಅಲೆಮಾರಿ ಮತ್ತು ಅರೆ ಅಲೆಮಾರಿ ಅಭಿವೃದ್ಧಿ ನಿಗಮದಲ್ಲಿ ಈ ಯೋಜನೆಗೆ 7.54 ಕೋಟಿ ರೂ. ಅನುದಾನ ನಿಗದಿಪಡಿಸಲಾಗಿತ್ತು. ಇದರಲ್ಲಿ 5.18 ಕೋಟಿ ರೂ. ಖರ್ಚಾಗಿದೆ. 2.36 ಕೋಟಿ ರೂ. ಅನುದಾನ ಉಳಿಕೆಯಾಗಿದೆ. ಕರ್ನಾಟಕ ಸವಿತಾ ಸಮಾಜ ಅಭಿವೃದ್ಧಿ ನಿಗಮದಲ್ಲಿ ಈ ಯೋಜನೆಯನ್ನು 2024-25ನೇ ಸಾಲಿನಲ್ಲಿ ಜಾರಿಗೇ ತಂದಿರಲಿಲ್ಲ. ಹೀಗಾಗಿ ಅನುದಾನವನ್ನು ಕೂಡ ನಿಗದಿಪಡಿಸಿರಲಾಗಿರಲಿಲ್ಲ. ಕರ್ನಾಟಕ ಒಕ್ಕಲಿಗ ಸಮುದಾಯದ ಅಭಿವೃದ್ಧಿ ನಿಗಮ ಮಾತ್ರ ಈ ಯೋಜನೆಯಡಿ ನಿಗದಿಯಾಗಿದ್ದ ಅನುದಾನದಲ್ಲಿ ಹೆಚ್ಚಿನ ಪಾಲು ಬಳಸಿಕೊಂಡಿದೆ. ಒಟ್ಟು 20.52 ಲಕ್ಷ ರೂ. ಅನುದಾನ ನಿಗದಿಪಡಿಸಲಾಗಿತ್ತು. ಇದರಲ್ಲಿ 20.26 ಲಕ್ಷ ರೂ. ಅನುದಾನ ಬಳಕೆಯಾಗಿದೆ. ಕೇವಲ 26 ಸಾವಿರ ರೂ. ಮಾತ್ರ ಉಳಿಕೆಯಾಗಿದೆ. ಕರ್ನಾಟಕ ಕಾಡುಗೊಲ್ಲ ಅಭಿವೃದ್ಧಿ ನಿಗಮದಲ್ಲಿ ಈ ಯೋಜನೆಗೆ 13 ಕೋಟಿ ರೂ. ನಿಗದಿಪಡಿಸಲಾಗಿತ್ತು. ಆದರೆ ಇನ್ನೂ ಹಂಚಿಕೆ ನಡೆಯುತ್ತಿರುವುದರಿಂದ ಉಳಿದ ಹಣದ ಮಾಹಿತಿ ಲಭ್ಯವಾಗಿರಲಿಲ್ಲ. ಹೊಲಿಗೆ ಯಂತ್ರ ವಿತರಣೆ ಯೋಜನೆಗೆ ನಿಗದಿಪಡಿಸಲಾಗಿದ್ದ 8 ಕೋಟಿ ರೂ. ಅನುದಾನದಲ್ಲಿ ಅಷ್ಟೂ ಅನುದಾನ ಉಳಿಕೆಯಾಗಿತ್ತು. ನಿಜಶರಣ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮದ ನೂತನ ಅಧ್ಯಕ್ಷರಾಗಿ ಮಾಜಿ ಸಚಿವ ಬಾಬುರಾವ್ ಚಿಂಚನಸೂರ್ ಅವರನ್ನು 2024ರ ನವೆಂಬರ್ನಲ್ಲಿ ನೇಮಕ ಮಾಡಲಾಗಿದೆ. ಈ ನಿಗಮಕ್ಕೆ 2024-25ನೇ ಸಾಲಿನಲ್ಲಿ ಏಳು ಯೋಜನೆಗಳಿಗಾಗಿ 12.04 ಕೋಟಿ ರೂ. ಅನುದಾನ ನಿಗದಿಪಡಿಸಲಾಗಿತ್ತು. ಇದರಲ್ಲಿ 2 ಕೋಟಿ ರೂ. ಅನುದಾನ ಬಳಕೆಯಾಗದೆ ಉಳಿದಿತ್ತು. ಸ್ವಾವಲಂಬಿ ಸಾರಥಿ ಯೋಜನೆಗೆ ಮತ್ತು ಗಂಗಾ ಕಲ್ಯಾಣ ನೀರಾವರಿ ಯೋಜನೆಗೆ ನಿಗದಿಪಡಿಸಿದ್ದ ಅನುದಾನ ಮಾತ್ರ ಸಂಪೂರ್ಣವಾಗಿ ಬಳಕೆಯಾಗಿತ್ತು. ಕರ್ನಾಟಕ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮಕ್ಕೆ ವಿಜಯಾನಂದ ಎಸ್ ಕಾಶಪ್ಪನವರ್ ಅವರನ್ನು 2024ರ ಫೆಬ್ರವರಿಯಲ್ಲಿಯೇ ನೇಮಕ ಮಾಡಲಾಗಿದೆ. ಈ ನಿಗಮದ ಮೂಲಕ 10 ಯೋಜನೆಗಳು ಜಾರಿಗೆ ಬಂದಿದ್ದು, ಒಟ್ಟು 94.85 ಕೋಟಿ ರೂ. ಅನುದಾನ ನಿಗದಿಪಡಿಸಲಾಗಿತ್ತು. ಇದರಲ್ಲಿ 21.78 ಕೋಟಿ ರೂ. ಅನುದಾನ ಬಳಕೆಯಾಗದೆ ಉಳಿದಿತ್ತು. ಸ್ವಾವಲಂಬಿ ಸಾರಥಿ ಯೋಜನೆಗೆ 29.58 ಕೋಟಿ ರೂ. ಅನುದಾನ ನಿಗದಿಪಡಿಸಲಾಗಿತ್ತು. ಇದರಲ್ಲಿ 21.12 ಕೋಟಿ ರೂ. ಖರ್ಚಾಗಿದೆ. 8.46 ಕೋಟಿ ರೂ. ಅನುದಾನ ಉಳಿದಿತ್ತು. ಜೀವಜಲ ಯೋಜನೆಗೆ 33.01 ಕೋಟಿ ರೂ. ಅನುದಾನ ನಿಗದಿಪಡಿಸಲಾಗಿತ್ತು. ಇದರಲ್ಲಿ 5.93 ಕೋಟಿ ರೂ. ಉಳಿಕೆಯಾಗಿತ್ತು. ವೀರಶೈವ-ಲಿಂಗಾಯತ ಸಮುದಾಯದ ವಿದ್ಯಾರ್ಥಿಗಳಿಗೆ ವೃತ್ತಿಪರ, ತಾಂತ್ರಿಕ, ವೈದ್ಯಕೀಯ ಮತ್ತು ಪ್ಯಾರಾ ಮೆಡಿಕಲ್ ಕೋರ್ಸ್ಗಳಿಗೆ ಶಿಕ್ಷಣ ಸಾಲ ಸೌಲಭ್ಯವನ್ನು ಒದಗಿಸುವ ಯೋಜನೆಯಾದ ‘ಬಸವ ಬೆಳಗು’ ಯೋಜನೆಗೆ 9.92 ಕೋಟಿ ರೂ. ಅನುದಾನ ನಿಗದಿಪಡಿಸಲಾಗಿತ್ತು. ಇದರಲ್ಲಿ 3.93 ಕೋಟಿ ರೂ. ಅನುದಾನ ಉಳಿಕೆಯಾಗಿದೆ. ಇದೇ ನವೀಕರಣ ಯೋಜನೆಗೆ 10 ಕೋಟಿ ರೂ. ಅನುದಾನ ಒದಗಿಸಲಾಗಿತ್ತು. ಅದರಲ್ಲಿಯೂ 94 ಲಕ್ಷ ರೂ. ಅನುದಾನ ಉಳಿಕೆಯಾಗಿತ್ತು.
ಇನ್ನೂ ಬೇಸಿಗೆ ಆರಂಭವಾಗಿಲ್ಲ. ನೀರಿಗಾಗಿ ಈಗಲೇ ಪರದಾಟ ಆರಂಭವಾಗಿದೆ. ರಾಜ್ಯದ ಮಾತ್ರವಲ್ಲ ದೇಶದ ಬಹುತೇಕ ನಗರಗಳು, ಸಣ್ಣಪುಟ್ಟ ಪಟ್ಟಣಗಳು ಹಾಗೂ ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಕಾಣಿಸಿಕೊಂಡಿದೆ. ಕೆಲವು ನಗರಗಳಲ್ಲಿ ಟ್ಯಾಂಕರ್ ಮೂಲಕ ನೀರನ್ನು ಪೂರೈಸಬೇಕಾಗಿದೆ. ಬೋರ್ವೆಲ್ಗಳು ಬತ್ತಿ ಹೋಗುತ್ತಿವೆ. ವರ್ಷದಿಂದ ವರ್ಷಕ್ಕೆ ಅಂತರ್ಜಲದ ಮಟ್ಟ ಕುಸಿಯುತ್ತಿದೆ. ಈ ಜಲಕ್ಷಾಮ ನೈಸರ್ಗಿಕ ವಿಕೋಪ ಎಂದು ನಾವು ಉಪೇಕ್ಷೆ ಮಾಡಬೇಕಿಲ್ಲ. ಎಲ್ಲವನ್ನೂ ನಿಸರ್ಗದ ಮೇಲೆ ಹಾಕಿ ನಾವು ನಮ್ಮ ಹೊಣೆಯನ್ನು ಹಾರಿಸಿಕೊಳ್ಳುವಂತಿಲ್ಲ. ಲಂಗುಲಗಾಮಿಲ್ಲದ ಅವೈಜ್ಞಾನಿಕ ನಗರೀಕರಣ, ನಾಗರಿಕ ಸಮಾಜದ ನಿರ್ಲಕ್ಷ್ಯ, ಅಭಿವೃದ್ಧಿಯ ಹೆಸರಿನಲ್ಲಿ ನಮ್ಮ ಸರಕಾರಗಳು ಕೈಗೊಳ್ಳುತ್ತಿರುವ ವಿನಾಶಕಾರಿ ಯೋಜನೆಗಳು ಇವೆಲ್ಲದರ ಪರಿಣಾಮವಾಗಿ ಭವಿಷ್ಯದಲ್ಲಿ ಉಂಟಾಗಬಹುದಾದ ತೀವ್ರ ಜಲಕ್ಷಾಮದ ಬಗ್ಗೆ ಈಗಾಗಲೇ ಕಳವಳಕಾರಿ ಮುನ್ಸೂಚನೆಗಳು ಬರುತ್ತಿವೆ. ಕುಸಿಯುತ್ತಿರುವ ಈ ಅಂತರ್ಜಲಕ್ಕೆ ಜಾಗತಿಕ ತಾಪಮಾನದ ಏರಿಕೆ ಕೂಡ ಒಂದು ಕಾರಣ ಎಂಬುದನ್ನು ತಳ್ಳಿ ಹಾಕಲು ಆಗುವುದಿಲ್ಲ. ಹಾಗೆಂದು ಎಲ್ಲವನ್ನೂ ತಾಪಮಾನದ ಮೇಲೆ ಹಾಕಿ ನಮ್ಮ ಲೋಪಗಳನ್ನು ಮುಚ್ಚಿಕೊಳ್ಳುವಂತಿಲ್ಲ. ದೇಶದ ಬಹುತೇಕ ದೊಡ್ಡ ನಗರಗಳು ಈಗ ಜನಸಂಖ್ಯೆಯ ಭಾರದಿಂದ ತತ್ತರಿಸಿ ಹೋಗುತ್ತಿವೆ. ನಗರಗಳು ಬೆಳೆದಂತೆ ಹೊಸ, ಹೊಸ ಬಡಾವಣೆಗಳು ತಲೆ ಎತ್ತುತ್ತಿವೆ. ಹೆಚ್ಚಿನ ಬಡಾವಣೆಗಳು ಕೆರೆಗಳ ಸಮಾಧಿಯ ಮೇಲೆ ಎದ್ದು ನಿಲ್ಲುತ್ತಿವೆ. ಒಂದು ಕಾಲದಲ್ಲಿ ಕೆರೆಗಳ ನಗರವೆಂದು ಹೆಸರಾಗಿದ್ದ ನಮ್ಮ ರಾಜಧಾನಿ ಬೆಂಗಳೂರಿನಲ್ಲಿ ನೀರಿಗಾಗಿ ಈಗ ಹಾಹಾಕಾರ ಆರಂಭವಾಗಿದೆ. ಉದ್ಯಾನ ನಗರಿ ಬೆಂಗಳೂರು ಈಗ ಕಾಂಕ್ರಿಟ್ ಕಾಡಾಗಿ ಬದಲಾವಣೆಯಾಗಿದೆ. ಬೆಂಗಳೂರು ಮಾತ್ರವಲ್ಲ, ರಾಜ್ಯದ ಬಹುತೇಕ ಕಡೆ ಅದರಲ್ಲೂ ನಗರ ಪ್ರದೇಶದಲ್ಲಿ ಕೆರೆಗಳು ಒತ್ತುವರಿಯಾಗಿವೆ. ನಮ್ಮ ಹಿರಿಯರು ದೂರ ದೃಷ್ಟಿಯಿಂದ ಒಂದು ಊರಿಗೆ ದೊಡ್ಡ ಕೆರೆ, ಸಣ್ಣ ಕೆರೆ ಎಂದು ಎರಡೆರಡು ಕೆರೆಗಳನ್ನು ಕಟ್ಟಿಸುತ್ತಿದ್ದರು. ಅವುಗಳು ಬೇಸಿಗೆ, ಚಳಿಗಾಲಗಳಲ್ಲೂ ಹಳ್ಳಿಗರ ಬಾಯಾರಿಕೆಯನ್ನು ಇಂಗಿಸುತ್ತಿದ್ದವು. ಒಂದು ಕೆರೆಯ ನೀರು ಬತ್ತಿ ಹೋದರೆ, ಇನ್ನೊಂದು ಕೆರೆಯ ನೀರನ್ನು ಬಳಸಲಾಗುತ್ತಿತ್ತು. ಇವು ಕೇವಲ ಬಾಯಾರಿಕೆ ಇಂಗಿಸುವ ನೀರಿನ ಮೂಲಗಳಾಗಿರಲಿಲ್ಲ. ಅವು ಅಂತರ್ಜಲವನ್ನು ಮರು ಪೂರಣಗೊಳಿಸುವ ಶ್ವಾಸಕೋಶಗಳಾಗಿದ್ದವು. ಈಗ ಆ ಶ್ವಾಸಕೋಶಗಳನ್ನೇ ಒತ್ತುವರಿ ಮಾಡಿಕೊಂಡು ಮುಚ್ಚಿ ಹಾಕಿದ ಮೇಲೆ ಅಂತರ್ಜಲ ಸುರಕ್ಷಿತವಾಗಿ ಇರಲು ಹೇಗೆ ಸಾಧ್ಯ? ಮಳೆ ನೀರು ಕೊಯ್ಲುನಂಥ ಹಲವಾರು ಯೋಜನೆಗಳು ಕೇವಲ ಕಾಗದದಲ್ಲಿವೆ. ಅವುಗಳ ಅನುಷ್ಠಾನದ ಆಸಕ್ತಿ ಸರಕಾರಿ ಅಧಿಕಾರಿಗಳಿಗೂ ಇಲ್ಲ, ಸಾರ್ವಜನಿಕರಿಗೂ ಇಲ್ಲ. ಇದು ಇಂದಿನ ಸ್ಥಿತಿ. ಅತಿಯಾದ ಅಂತರ್ಜಲ ಬಳಕೆ ಹಾಗೂ ಅದನ್ನು ಮರು ಪೂರಣ ಮಾಡುವಲ್ಲಿ ತೋರಿಸುತ್ತಿರುವ ನಿರಾಸಕ್ತಿಯಿಂದಾಗಿ ದೇಶದ ಪ್ರಮುಖ ನಗರಗಳಲ್ಲಿ ಅಂತರ್ಜಲ ಶೂನ್ಯ ಮಟ್ಟಕ್ಕೆ ತಲುಪುವ ಅಪಾಯ ಎದುರಾಗಿದೆ ಎಂದು ನೀತಿ ಆಯೋಗ ತನ್ನ ವರದಿಯಲ್ಲಿ ತಿಳಿಸಿದೆ. ಗ್ರಾಮೀಣ ಪ್ರದೇಶದ ಪರಿಸ್ಥಿತಿಯೇನೂ ಭಿನ್ನವಾಗಿಲ್ಲ. ನಗರ ಮತ್ತು ಗ್ರಾಮವೆನ್ನದೆ ಎಲ್ಲ ಕಡೆ ಕೊಳವೆ ಬಾವಿಗಳ ಸಂಖ್ಯೆ ಹೆಚ್ಚುತ್ತಿರುವ ಪರಿಣಾಮವಾಗಿ ಭೂಮಿಯೊಳಗಿನ ಕೊನೆಯ ಒಂದು ಹನಿಯೂ ಉಳಿಯುವ ಸಾಧ್ಯತೆ ಇಲ್ಲ. ಕೊಳವೆ ಬಾವಿಗಳ ದುಸ್ಥಿತಿ ಇದಾದರೆ, ಕೈಗಾರಿಕೋದ್ಯಮಗಳ ರಾಸಾಯನಿಕ ತ್ಯಾಜ್ಯದಿಂದಾಗಿ ವಿಪರೀತ ಪ್ರಮಾಣದಲ್ಲಿ ಕಲುಷಿತಗೊಳ್ಳುತ್ತಿರುವ ನದಿಗಳ ನೀರು ಬಳಕೆಗೆ ಉಪಯೋಗವಿಲ್ಲದ ಸ್ಥಿತಿ ಉಂಟಾಗಿದೆ. ಇಂಥ ಪರಿಸ್ಥಿತಿಯಲ್ಲಿ ಜಲಮೂಲಗಳನ್ನು ಪುನಶ್ಚೇತನಗೊಳಿಸುವುದು ಹೇಗೆ ಎಂಬ ಪ್ರಶ್ನೆ ನಮ್ಮ ಮುಂದಿದೆ. ಇದು ಪ್ರಶ್ನೆ ಮಾತ್ರವಲ್ಲ, ಇದು ನಮ್ಮ ಸರಕಾರದ ಮುಂದಿರುವ ಅನಿವಾರ್ಯತೆಯೂ ಆಗಿದೆ. ಸರಕಾರ ಕಾಟಾಚಾರಕ್ಕೆ ಯೋಜನೆಯೊಂದನ್ನು ಘೋಷಿಸಿ ಬಿಟ್ಟರೆ ಮುಗಿಯುವುದಿಲ್ಲ. ಈ ಸಮಸ್ಯೆಯಿಂದ ಪಾರಾಗಲು ಸಮರೋಪಾದಿಯಲ್ಲಿ ಕಾರ್ಯೋನ್ಮುಖವಾಗಬೇಕಾಗಿದೆ. ಕೆರೆಗಳ ಹೂಳೆತ್ತುವುದು, ಕಾಲುವೆಗಳನ್ನು ಸ್ವಚ್ಛವಾಗಿಡುವುದು, ಪ್ರತಿಯೊಂದು ಮನೆಯಲ್ಲೂ ಮಳೆ ನೀರು ಕೊಯ್ಲನ್ನು ಕಟ್ಟುನಿಟ್ಟಾಗಿ ಅನುಷ್ಠಾನಕ್ಕೆ ತರುವುದು ನಮ್ಮ ಮೊದಲ ಆದ್ಯತೆಯಾಗಬೇಕಾಗಿದೆ. ಇದರಲ್ಲಿ ಜನಸಾಮಾನ್ಯರ ತಪ್ಪು ಅಷ್ಟಿಲ್ಲ. ಬಂಡವಾಳಶಾಹಿ ವ್ಯವಸ್ಥೆಯ ಲಾಭಕೋರ ಪ್ರವೃತ್ತಿಯಿಂದಾಗಿ ನಮ್ಮ ಬೆಟ್ಟ, ಗುಡ್ಡಗಳು ನಾಶವಾಗುತ್ತಿವೆ. ಕಲ್ಲು ಗಣಿಗಾರಿಕೆ ಹಾಗೂ ಮರಳು ಗಣಿಗಾರಿಕೆಯ ಪರಿಣಾಮವಾಗಿ ಪರಿಸ್ಥಿತಿ ಬಿಗಡಾಯಿಸಿದೆ.ಗಿಡ, ಮರಗಳನ್ನು ಕಡಿದು ನಮ್ಮ ಕಾಡುಗಳನ್ನು ಈಗಾಗಲೇ ವಿನಾಶದ ಅಂಚಿಗೆ ತಂದು ನಿಲ್ಲಿಸಲಾಗಿದೆ. ಜನಸಂಖ್ಯೆ ಹೆಚ್ಚಾಗುತ್ತಿದೆ. ನೀರಿನ ಬಳಕೆ ಮಿತಿ ಮೀರಿದೆ. 2030ರ ವೇಳೆಗೆ ಪರಿಸ್ಥಿತಿ ಇನ್ನೂ ಹದಗೆಡಲಿದೆ. ಬೆಂಗಳೂರು ಸೇರಿದಂತೆ ದೇಶದ 21 ಮಹಾ ನಗರಗಳು ಮುಂಬರುವ ದಿನಗಳಲ್ಲಿ ತೀವ್ರ ಸ್ವರೂಪದ ಕುಡಿಯುವ ನೀರಿನ ಸಮಸ್ಯೆಯನ್ನು ಎದುರಿಸಲಿವೆ. ನಮ್ಮ ಕುಡಿಯುವ ನೀರಿನ ಮೇಲೆಯೂ ವಿದೇಶಿ ಬಹುರಾಷ್ಟ್ರೀಯ ಕಂಪೆನಿಗಳು ಹಿಡಿತ ಸಾಧಿಸಿವೆ. ನಾಗಪುರ ಸೇರಿದಂತೆ ಕೆಲವು ನಗರಗಳ ಕುಡಿಯುವ ನೀರಿನ ಪೂರೈಕೆಯನ್ನು ವಿದೇಶಿ ಕಾರ್ಪೊರೇಟ್ ಕಂಪೆನಿಗಳು ನಿಯಂತ್ರಿಸುತ್ತಿವೆ. ಹೆಸರಾಂತ ಪತ್ರಕರ್ತ ಪಿ.ಸಾಯಿನಾಥ್ ಅವರ ಪ್ರಕಾರ ದೇಶದಲ್ಲಿ ದಿನಕ್ಕೆ 2,500 ಮಂದಿ ಕುಡಿಯುವ ನೀರಿಲ್ಲದೆ ಸಾಯುತ್ತಿದ್ದಾರೆ. ಇದಕ್ಕೆ ಯಾರು ಹೊಣೆ? ವಾಸ್ತವವಾಗಿ ಜನಸಾಮಾನ್ಯರ ಬಾಯಾರಿಕೆಯನ್ನು ಇಂಗಿಸಬೇಕಾದ ನೀರು ಅತ್ಯಂತ ಅಗ್ಗದ ಬೆಲೆಗೆ ಬಂಡವಾಳಶಾಹಿಗಳ ಮಾಲಕತ್ವದ ಕೈಗಾರಿಕೆಗಳ ಪಾಲಾಗುತ್ತಿದೆ. ನಮ್ಮ ರಾಜ್ಯದ ಅನೇಕ ಕೈಗಾರಿಕೆಗಳು ಅತ್ಯಂತ ಅಗ್ಗದ ಬೆಲೆಗೆ ನೀರನ್ನು ಖರೀದಿಸುತ್ತಿವೆ. ಅನೇಕ ಕೈಗಾರಿಕೆಗಳು ಒಂದು ಸಾವಿರ ಲೀಟರ್ ನೀರಿಗೆ ಕೇವಲ 10 ರೂಪಾಯಿಗಳನ್ನು ಪಾವತಿಸುತ್ತಿವೆ. ನೀರು, ಭೂಮಿ ಸೇರಿದಂತೆ ಇಳೆಯ ಸಕಲ ಸಂಪನ್ಮೂಲಗಳು ಕೇವಲ ಕೆಲವು ಜನರಿಗೆ ಮಾತ್ರ ಸೇರಿದವುಗಳಲ್ಲ. ಸಕಲ ಜೀವಿಗಳಿಗೆ ಇದರ ಮೇಲೆ ಹಕ್ಕಿದೆ. ಈ ಸಂಪನ್ಮೂಲಗಳು ಯಾರೊಬ್ಬರ ಖಾಸಗಿ ಸೊತ್ತಾಗಬಾರದು. ಆದರೆ ನಾವು ಈ ಪರಿ ನೈಸರ್ಗಿಕ ಸಂಪನ್ಮೂಲಗಳನ್ನು ಮಿತಿ ಮೀರಿ ಬಳಸುತ್ತಾ ಹೋದರೆ ಮುಂದಿನ ಪೀಳಿಗೆಗೆ ಬಂಜರು ಭೂಮಿಯನ್ನು ಬಿಟ್ಟು ಹೋಗಬೇಕಾಗುತ್ತದೆ.ಹಾಗಾಗಿ ಎಲ್ಲರಿಗೂ ಸೇರಿದ ನೀರನ್ನು ದುರ್ಬಳಕೆ ಮಾಡಿಕೊಳ್ಳುವುದನ್ನು ತಡೆಯಲು ಸಂಕಲ್ಪ ಮಾಡಬೇಕಾಗಿದೆ.
ದಾಳಿಂಬೆ ಉದಾಹರಣೆ ನೀಡಿ ಪಾಕಿಸ್ತಾನ ಸೇನೆ ಟೀಕಿಸಿದ ಮೌಲಾನಾ ಫಜ್ಲುರ್ ರೆಹಮಾನ್; ಇದಕ್ಕಿಂತ ಅವಮಾನ ಬೇಕಾ?
ಪಾಕಿಸ್ತಾನವನ್ನು ಬಹಿರಂಗವಾಗಿ ಟೀಕಿಸುವ ಮತ್ತು ಭಾರತದ ಪರ ಹೇಳಿಕೆಗಳನ್ನು ನೀಡುವ ಜಮಿಯತ್ ಉಲೇಮಾ-ಇ-ಇಸ್ಲಾಂ (ಎಫ್) ಮುಖ್ಯಸ್ಥ ಮೌಲಾನಾ ಫಜ್ಲುರ್ ರೆಹಮಾನ್, ಮತ್ತೊಮ್ಮೆ ಪಾಕಿಸ್ತಾನ ಸೇನೆಯ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಅಫ್ಘಾನಿಸ್ತಾನ ಗಡಿಯಲ್ಲಿ ಉಗ್ರರ ಉಪಟಳವನ್ನು ನಿಗ್ರಹಿಸುವಲ್ಲಿ ಪಾಕ್ ಸೇನೆ ವಿಫಲವಾಗಿದೆ ಎಂದಿರುವ ಫಜ್ಲುರ್ ರೆಹಮಾನ್, ಪಾಕ್-ಅಫ್ಘಾನ್ ಗಡಿಯಲ್ಲಿ ಒಂದು ದಾಳಿಂಬ ಹಣ್ಣೂ ಕೂಡ ಸೇನೆಯ ಕಣ್ತಪ್ಪಿಸಿ ಒಳಬರುವಂತಿಲ್ಲ. ಆದರೆ ಉಗ್ರರು ಬರಬಹುದು ಎಂದು ವ್ಯಂಗ್ಯವಾಡಿದ್ದಾರೆ. ಇಲ್ಲಿದೆ ಹೆಚ್ಚಿನ ಮಾಹಿತಿ.
ಭಾರತ ವಿರುದ್ಧ ಟಿ20 ವಿಶ್ವಕಪ್ ಪಂದ್ಯ ಆಡಲು ಪಾಕ್ ಸರ್ಕಾರ ಅನುಮತಿ
ಹೊಸದಿಲ್ಲಿ: ಭಾರತ ವಿರುದ್ಧ ಈ ತಿಂಗಳ 15ರಂದು ಕೊಲಂಬೊದಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಲೀಗ್ ಪಂದ್ಯವನ್ನು ಪಾಕಿಸ್ತಾನ ಬಹಿಷ್ಕರಿಸುವ ಘೋಷಣೆ ಮಾಡಿದ ಹಿನ್ನೆಲೆಯಲ್ಲಿ ಸೃಷ್ಟಿಯಾಗಿದ್ದ ಗೊಂದಲ ಇದೀಗ ಸಂಪೂರ್ಣವಾಗಿ ಬಗೆಹರಿದಿದ್ದು, ನಿಗದಿಯಂತೆ ಪಂದ್ಯ ನಡೆಯಲಿದೆ. ಪಾಕಿಸ್ತಾನ ಸರ್ಕಾರ ಸೋಮವಾರ ಈ ಸಂಬಂಧ ರಾಷ್ಟ್ರೀಯ ತಂಡ ಟಿ20 ಟೂರ್ನಿಯಲ್ಲಿ ಭಾರತದ ವಿರುದ್ಧ ಪಂದ್ಯ ಆಡಲು ಅನುಮತಿ ನೀಡಿದ್ದು, ಪಂದ್ಯದ ವೇಳಾಪಟ್ಟಿಯನ್ನು ತಾನು ಗೌರವಿಸುವುದಾಗಿ ಸ್ಪಷ್ಟಪಡಿಸಿದೆ. ಪಂದ್ಯ ಬಹಿಷ್ಕರಿಸುವುದರಿಂದ ಪಾಕಿಸ್ತಾನದ ಮೇಲಾಗುವ ಸಂಭಾವ್ಯ ಹಣಕಾಸು ಪರಿಣಾಮದ ಬಗ್ಗೆ ಐಸಿಸಿ ಎಚ್ಚರಿಕೆ ನೀಡಿರುವ ಹಿನ್ನೆಲೆಯಲ್ಲಿ ಸರ್ಕಾರದ ಸೂಚನೆಯಂತೆ ಇದೀಗ ಪಾಕಿಸ್ತಾನ ತನ್ನ ನಿಲುವು ಬದಲಿಸಿದೆ. ಫೋರ್ಸ್ ಮಜೂರ್ ನಿಯಮಾವಳಿಯ ಆಧಾರದಲ್ಲಿ ಕೊನೆಕ್ಷಣದಲ್ಲಿ ಭಾರತದ ವಿರುದ್ಧದ ಪಂದ್ಯದಿಂದ ಹಿಂದೆ ಸರಿಯಲು ಪಾಕಿಸ್ತಾನ ನಿರ್ಧರಿಸಿತ್ತು. ಅನಿಶ್ಚಿತ ಸಂದರ್ಭಗಳಲ್ಲಿ ಪಾಲುದಾರ ದೇಶ ತನ್ನ ಗುತ್ತಿಗೆ ಹೊಣೆಗಾರಿಕೆಯನ್ನು ಈಡೇರಿಸದಿರಲು ಅವಕಾಶವಿದೆ. ಪಾಕಿಸ್ತಾನದ ಘನ ಪ್ರಧಾನಿ ಶ್ರೀ ಶೆಹಬಾಝ್ ಷರೀಫ್ ಅವರಿಗೆ ಪಿಸಿಬಿ ಅಧ್ಯಕ್ಚ ಶ್ರೀ ಮೊಹ್ಸಿನ್ ನಖ್ವಿಯವರು ಅಧಿಕೃತವಾಗಿ ಪಿಸಿಬಿ, ಬಿಸಿಬಿ ಹಾಗೂ ಐಸಿಸಿ ನಡುವೆ ನಡೆದ ಸುಧೀರ್ಘ ಚರ್ಚೆಯ ವಿವರ ನೀಡಿದ್ದಾರೆ ಎಂದು ಪಾಕಿಸ್ತಾನ ಸರ್ಕಾರ ಹೇಳಿಕೆ ನೀಡಿದೆ. ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ಪಿಸಿಬಿಗೆ ಮಾಡಿಕೊಂಡಿದ್ದ ಮನವಿಯನ್ನು ಪಾಕ್ ಸರ್ಕಾರ ಪರಾಮರ್ಶಿಸಿದ್ದು, ಶ್ರೀಲಂಕಾ, ಯುಎಇ ಹಾಗೂ ಇತರ ಸದಸ್ಯದೇಶಗಳ ಬೆಂಬಲವನ್ನು ಕೂಡಾ ಪರಾಮರ್ಶಿಸಿ ಈ ನಿರ್ಧಾರ ಕೈಗೊಂಡಿದೆ ಎಂದು ಸ್ಪಷ್ಟಪಡಿಸಿದೆ.
T20 World Cup: ಭಾರತ ವಿರುದ್ಧ ಪಂದ್ಯವಾಡಲು ಪಿಸಿಬಿಗೆ ಪಾಕ್ ಸರ್ಕಾರ ನಿರ್ದೇಶನ, ಬಿಕ್ಕಟ್ಟು ಅಂತ್ಯವಾಗಿದ್ದೇಗೆ?
ನವದೆಹಲಿ: ಐಸಿಸಿ ಪುರುಷರ ಟಿ20 ವಿಶ್ವಕಪ್ 2026ನಲ್ಲಿ ಭಾರತ ವಿರುದ್ಧ ಆಟವಾಡಲ್ಲ ಎಂದು ಬಹಿಷ್ಕಾರ ನಿರ್ಧಾರ ಮಾಡಿದ್ದ ಪಾಕಿಸ್ತಾನ ಕ್ರಿಕೆಟ್ ಮಂಡಳಿಗೆ (ಪಿಸಿಬಿ) ಪಾಕ್ ಸರ್ಕಾರ ಪಂದ್ಯದಲ್ಲಿ ಭಾಗವಹಿಸಲು ನಿರ್ದೇಶನ ನೀಡಿದೆ. ಇದರ ಬೆನ್ನಲ್ಲೆ ಇದೇ ಫೆಬ್ರವರಿ 15 ರಂದು ಕೊಲಂಬೊದಲ್ಲಿ ನಡೆಯಲಿರುವ ಮ್ಯಾಚ್ನಲ್ಲಿ ಭಾರತ ಮತ್ತು ಪಾಕಿಸ್ತಾನ ಮುಖಾಮುಖಿಗೆ ಆಗಲಿವೆ. ಈ ಮೂಲಕ ಒಂದು ವಾರದಿಂದ
ಅಮೆರಿಕ-ಬಾಂಗ್ಲಾದೇಶ ದ್ವಿಪಕ್ಷೀಯ ವ್ಯಾಪಾರ ಒಪ್ಪಂದ ಜಾರಿ, ಶೇ. 19ಕ್ಕೆ ಸುಂಕ ಇಳಿಕೆ; ಭಾರತಕ್ಕೆ ಏನು ಸಂದೇಶ?
ಭಾರತದೊಂದಿಗೆ ದ್ವಿಪಕ್ಷೀಯ ವ್ಯಾಪಾರ ಒಪ್ಪಂದವನ್ನು ಘೋಷಿಸಿದ್ದ ಅಮೆರಿಕ, ಭಾರತೀಯ ಸರಕುಗಳ ಮೇಲಿನ ಸುಂಕವನ್ನು ಶೇ. 50ರಿಂದ ಶೇ. 18ಕ್ಕೆ ಇಳಿಕೆ ಮಾಡಿತ್ತು. ಇದಿಗ ಇಂತದ್ದೇ ವ್ಯಾಪಾರ ಒಪ್ಪಂದವನ್ನು ಅಮೆರಿಕದೊಂದಿಗೂ ಜಾರಿಗೊಳಿಸಿರುವ ಅಮೆರಿಕ, ಬಾಂಗ್ಲಾದೇಶಿ ಸರಕುಗಳ ಮೇಲಿನ ಸುಂಕವನ್ನು ಶೇ. 19ಕ್ಕೆ ಇಳಿಕೆ ಮಾಡಿದೆ. ಘೋಷಿತ ವ್ಯಾಪಾರ ಒಪ್ಪಂದದ ಅಡಿಯಲ್ಲಿ ಬಾಂಗ್ಲಾದೇಶದ ಜವಳಿ ಉಡುಪುಗಳು ಅಮೆರಿಕದ ಸುಂಕದಿಂದ ವಿನಾಯಿತಿ ಪಡೆಯಲಿವೆ ಎಂದು ಮೂಲಗಳು ತಿಳಿಸಿವೆ. ಈ ಕುರಿತು ಇಲ್ಲಿದೆ ಹೆಚ್ಚಿನ ಮಾಹಿತಿ.
ಮೈಸೂರು ಸ್ಯಾಂಡಲ್ ಸೋಪ್ಗೆ ನಟಿ ತಮನ್ನಾ 2 ವರ್ಷ ರಾಯಭಾರಿ, 2 ಕಡೆ ಹೊಸ ಘಟಕ ಸ್ಥಾಪನೆ: ಎಂಬಿ ಪಾಟೀಲ್
ಬೆಂಗಳೂರು: ಪಾರಂಪರಿಕ ಹೆಮ್ಮೆಯ ಮೈಸೂರು ಸ್ಯಾಂಡಲ್ ಸೋಪ್ ನಕಲು ತಡೆಗಟ್ಟಿರುವ ರಾಜ್ಯ ಸರ್ಕಾರ ಇದೀಗ ಈ ಉತ್ಪನ್ನ ತಯಾರಿಕೆಯ ಎರಡು ಘಟಕಗಳನ್ನು ಸ್ಥಾಪಿಸಲು ಮುಂದಾಗಿದೆ. ಹೊಸ ರೂಪ ಪಡೆದ ಈ ಉತ್ಪನ್ನದ ಪ್ರಚಾರದ ರಾಯಭಾರಿಯಾಗಿ ಖ್ಯಾತ ನಟಿ ತಮನ್ನಾ ಭಾಟಿಯಾ ಅವರನ್ನು ನೇಮಿಸಿಕೊಳ್ಳಲಾಗಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ತಿಳಿಸಿದರು. ಈ ಹಿಂದೆ
ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು ಗ್ರಾಮಾಂತರಕ್ಕೆ 2027ರ ಅಂತ್ಯಕ್ಕೆ ಹರಿಯುತ್ತಾ ಎತ್ತಿನಹೊಳೆ?
ಚಿಕ್ಕಬಳ್ಳಾಪುರದಲ್ಲಿ ಸಚಿವರು ಸಭೆ ನಡೆಸಿ ಕಾಮಗಾರಿ ಪೂರ್ಣಗೊಳಿಸುವಂತೆ ತಾಕೀತು ಮಾಡುತ್ತಿದ್ದು, ಮುಂದಿನ ವರ್ಷವೇ ಸರ್ಕಾರ ಕೊಟ್ಟ ಮಾತಿನಂತೆ ಎತ್ತಿನಹೊಳೆ ಬಯಲು ಸೀಮೆಗೆ ಹರಿಯುವುದು ಖಾತ್ರಿ ಎಂದಾದರೂ, ವಿರೋಧ ಪಕ್ಷಗಳು ಇದು ಅಸಾಧ್ಯವೆಂದೇ ಹೇಳುತ್ತಿದೆ. ಸದ್ಯಕ್ಕಾಗಿರುವ ಬೆಳವಣಿಗೆಗಳು ಏನೇನು ಎಂಬ ಮಾಹಿತಿ ಇಲ್ಲಿವೆ.
ಚಾಮುಂಡಿ ಬೆಟ್ಟದಲ್ಲಿ ಪ್ರಸಾದ್ ಯೋಜನೆಗೆ ನ್ಯಾಯಾಲಯ ತಡೆಯಾಜ್ಞೆ; ಯಾವೆಲ್ಲಾ ಕಾಮಗಾರಿ ಸ್ಥಗಿತ?
ಪರಿಸರವಾದಿಗಳ ಹೋರಾಟ ಮತ್ತು ರಾಜವಂಶಸ್ಥರ ತೀವ್ರ ವಿರೋಧದ ಬಳಿಕ, ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಕೇಂದ್ರ ಸರ್ಕಾರದ ಪ್ರಸಾದ್ ಯೋಜನೆಯಡಿ ಕೈಗೊಂಡಿದ್ದ ಕಾಮಗಾರಿಗಳನ್ನು ನ್ಯಾಯಾಲಯದ ಆದೇಶದಂತೆ ಸ್ಥಗಿತಗೊಳಿಸಲಾಗಿದೆ. 2025ರಲ್ಲಿ ಆರಂಭಿಸಿದ್ದ ಚಾಮುಂಡೇಶ್ವರಿ ದೇವಸ್ಥಾನದ ಆವರಣದಲ್ಲಿ ಮಲ್ಟಿಪರ್ಪಸ್ ಏರಿಯಾ ಅಭಿವೃದ್ಧಿ ಕಾಮಗಾರಿಗೆ ತೀವ್ರ ವಿರೋಧ ವ್ಯಕ್ತವಾಗಿತ್ತು. ಈ ಕುರಿತು ವಾದ-ವಿವಾದ ಆಲಿಸಿದ ನ್ಯಾಯಾಲಯ, ಬೆಟ್ಟದಲ್ಲಿ ಒಂದು ಕಾಮಗಾರಿಯನ್ನು ಹೊರತುಪಡಿಸಿ, ಉಳಿದೆಲ್ಲಾ ಕಾಮಗಾರಿಗಳನ್ನು ತಕ್ಷಣ ನಿಲ್ಲಿಸುವಂತೆ ತಡೆಯಾಜ್ಞೆ ನೀಡಿದೆ. ಈ ಕುರಿತು ಇಲ್ಲಿದೆ ಮಾಹಿತಿ.
ನಾಯಕತ್ವ ಮಹತ್ವಾಕಾಂಕ್ಷೆ; ಬಜೆಟ್ ಪೂರ್ವ ಸಭೆ ಬಿಟ್ಟು ದೆಹಲಿಗೆ ಹೊರಟ ಡಿಸಿಎಂ ಡಿಕೆ ಶಿವಕುಮಾರ್!
ಕರ್ನಾಟಕ ಕಾಂಗ್ರೆಸ್ ಸರ್ಕಾರದಲ್ಲಿ ನಾಯಕತ್ವ ಬದಲಾವಣೆ ಕುರಿತ ಚರ್ಚೆಗಳಿಗೆ ಅಂತ್ಯವೇ ಇಲ್ಲದಂತಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ನಡುವೆ ನಾಯಕತ್ವಕ್ಕಾಗಿ ಪೈಪೋಟಿ ನಡೆಯುತ್ತಿದ್ದು, ದಿನನಿತ್ಯವೂ ಹೊಸ ಬೆಳವಣಿಗೆಗಳು ನಡೆಯುತ್ತಿವೆ. ಇದೀಗ ಸಿಎಂ ಕರೆದಿರುವ ಇಲಾಖಾವಾರು ಬಜೆಟ್ ಪೂರ್ವ ಸಿದ್ಧತಾ ಸಭೆ ಬಿಟ್ಟು, ಡಿಸಿಎಂ ದೆಹಲಿ ಪ್ರವಾಸ ಕೈಗೊಂಡಿರುವುದು ಕುತೂಹಲ ಕೆರಳಿಸಿದೆ. ತಮ್ಮ ದೆಹಲಿ ಪ್ರವಾಸದ ಬಗ್ಗೆ ಗುಟ್ಟು ಬಿಟ್ಟುಕೊಡದೇ, ಡಿಕೆ ಶಿವಕುಮಾರ್ ಅವರು ಕುತೂಹಲನ್ನು ಮತ್ತಷ್ಟು ಹೆಚ್ಚಿಸಿದ್ದಾರೆ.
ಹಾಲಿನ ಪ್ರೋತ್ಸಾಹಧನ ಲೀಟರ್ಗೆ 2 ರೂ. ಹೆಚ್ಚಳಕ್ಕೆ ಚಿಂತನೆ; ಬಮೂಲ್ ಅಧ್ಯಕ್ಷ ಡಿಕೆ ಸುರೇಶ್
ರಾಜ್ಯ ಸರ್ಕಾರವು ಪ್ರತಿ ಲೀಟರ್ಗೆ ಹಾಲಿಗೆ ಪ್ರಸ್ತುತ 5 ರೂ. ಪ್ರೋತ್ಸಾಹಧನ ನೀಡುತ್ತಿದ್ದು, ಇದನ್ನು 2 ರೂ.ಗೆ ಹೆಚ್ಚಳ ಮಾಡುವ ಬಗ್ಗೆ ಗಂಭೀರ ಚಿಂತನೆ ನಡೆಸಿದೆ ಎಂದು ಬಮೂಲ್ ಅಧ್ಯಕ್ಷ ಡಿಕೆ ಸುರೇಶ್ ಹೇಳಿದ್ದಾರೆ. ರೈತರು ಹೈನುಗಾರಿಕೆಗೆ ಹೆಚ್ಚಿನ ಪ್ರಾಶಸ್ತ್ಯ ನೀಡಬೇಕೆಂದು ಮನವಿ ಮಾಡಿರುವ ಅವರು, ಕರ್ನಾಟಕದಲ್ಲಿ ಹಾಲು ಉತ್ಪಾದನೆ ಗುರಿಯನ್ನು ಹೆಚ್ಚಿಸುವ ಸರ್ಕಾರದ ಪ್ರಯತ್ನಗಳಿಗೆ ಕೈಜೋಡಿಸುವಂತೆ ಕರೆ ನೀಡಿದ್ದಾರೆ. ಹಾಲಿಗೆ ಪ್ರೋತ್ಸಾಹಧನ ಹೆಚ್ಚಿಸುವ ಕುರಿತು ಡಿಕೆ ಸುರೇಶ್ ನೀಡಿರುವ ಹೇಳಿಕೆ ಇಲ್ಲಿದೆ.
ವೃದ್ಧ ತಂದೆಯ ಆರೈಕೆ ಮಾಡದ ಪುತ್ರಿಯರು, 2.4 ಎಕರೆ ಜಮೀನಿನ ಗಿಫ್ಟ್ ಡೀಡ್ ರದ್ದುಪಡಿಸಿದ ಹೈಕೋರ್ಟ್
ಬೆಂಗಳೂರು : ಜೀವನದ ಸಂಧ್ಯಾಕಾಲದಲ್ಲಿ ಚೆನ್ನಾಗಿ ನೋಡಿಕೊಳ್ಳುತ್ತಾರೆಂಬ ನಂಬಿಕೆಯಿಂದ ಜೀವನಾಧಾರವಾಗಿದ್ದ 2.4 ಎಕರೆ ಭೂಮಿಯನ್ನು ಪುತ್ರಿಯರಿಬ್ಬರ ಹೆಸರಿಗೆ ಮಾಡಿಕೊಟ್ಟಿದ್ದ ವೃದ್ಧರೊಬ್ಬರು, ನಂತರ ಪುತ್ರಿಯರು ತಮ್ಮನ್ನು ನಿರಾಶ್ರಿತನನ್ನಾಗಿ ಮಾಡಿದ್ದ ಹಿನ್ನೆಲೆಯಲ್ಲಿ ಗಿಫ್ಟ್ ಡೀಡ್ ರದ್ದು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ಪುರಸ್ಕರಿಸಿದೆ. ಹಿರಿಯ ನಾಗರಿಕರಿಗೆ ಅವರ ವೃದ್ಧಾಪ್ಯದಲ್ಲಿ ಮಕ್ಕಳು ಆರೈಕೆ ಮಾಡದ ಸಂದರ್ಭದಲ್ಲಿ ನ್ಯಾಯಾಲಯ ಅವರ ರಕ್ಷಣೆಗೆ ಧಾವಿಸಿ ಅವರ ಆಸ್ತಿಯನ್ನು ರಕ್ಷಿಸಿ, ಅವರ ಹಕ್ಕುಗಳನ್ನು ಮರಳಿ ದೊರಕಿಸಿಕೊಡಲಾಗುತ್ತದೆ ಎಂದು ನ್ಯಾಯಾಲಯ ಹೇಳಿದೆ. ಹೆಬ್ಬೂರು ಹೋಬಳಿಯ ದೊಡ್ಡಗೊಲ್ಲಹಳ್ಳಿಯ ವೆಂಕಟಯ್ಯ (84) ಸಲ್ಲಿಸಿದ್ದ ಅರ್ಜಿ ಮಾನ್ಯ ಮಾಡಿರುವ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯನ್ಯಾಯಪೀಠ, 2007ರ ಹಿರಿಯ ನಾಗರಿಕರ ಮತ್ತು ಪೋಷಕರ ನಿರ್ವಹಣಾ ಮತ್ತು ಕಲ್ಯಾಣ ಕಾಯಿದೆಯನ್ನು ಅನ್ವಯಿಸಿ, ಕೃಷಿ ಭೂಮಿಯನ್ನು ಪುತ್ರಿಯರ ಹೆಸರಿಗೆ ಮಾಡಿಕೊಟ್ಟಿದ್ದ ಗಿಫ್ಟ್ ಡೀಡ್ ರದ್ದುಪಡಿಸಿದೆ. ಪ್ರಕರಣವೇನು? ಸುಮಾರು 2.4 ಎಕರೆ ಕೃಷಿ ಭೂಮಿ ಹೊಂದಿದ್ದ ವೆಂಕಟಯ್ಯ, ತಮ್ಮನ್ನು ಚೆನ್ನಾಗಿ ನೋಡಿಕೊಳ್ಳುತ್ತೇವೆಂದು ಭರವಸೆ ನೀಡಿದ್ದ ಪುತ್ರಿಯರಾದ ಶಿವಮ್ಮ ಮತ್ತು ಪುಟ್ಟಮ್ಮ ಅವರ ಪರವಾಗಿ ಉಡುಗೊರೆ ಪತ್ರವನ್ನು ಮಾಡಿಕೊಟ್ಟು ಆಸ್ತಿಯನ್ನು ವರ್ಗಾವಣೆ ಮಾಡಿದ್ದರು. ಆನಂತರ, ಪುತ್ರಿಯರು ತಮ್ಮನ್ನು ನೋಡಿಕೊಳ್ಳಲು ವಿಫಲರಾಗಿದ್ದಾರೆಂದು ಅವರು ಆರೋಪಿಸಿದ್ದರಲ್ಲದೆ, ಹಿರಿಯ ನಾಗರಿಕರ ಕಾಯ್ದೆಯಡಿ, ಗಿಫ್ಟ್ ಡೀಡ್ ರದ್ದು ಕೋರಿ ಉಪವಿಭಾಗಾಧಿಕಾರಿ ನೇತೃತ್ವದ ನ್ಯಾಯಮಂಡಳಿ ಮುಂದೆ ಮನವಿ ಸಲ್ಲಿಸಿದ್ದರು. ಇದನ್ನು ವಜಾಗೊಳಿಸಿದ್ದ ನ್ಯಾಯಮಂಡಳಿ, ಉಡುಗೊರೆ ಪತ್ರದಲ್ಲಿ ಹೆಣ್ಣು ಮಕ್ಕಳು ತಮ್ಮನ್ನು ನೋಡಿಕೊಳ್ಳಲು ನಿರ್ಬಂಧವನ್ನು ಹೊಂದಿರುವ ಸ್ಪಷ್ಟ ಷರತ್ತು ಇಲ್ಲ ಎಂದು ತೀರ್ಪು ನೀಡಿತ್ತು. ಈ ಆದೇಶವನ್ನು ಜಿಲ್ಲಾಧಿಕಾರಿ ಸಹ ಎತ್ತಿಹಿಡಿದಿದ್ದರು. ಇದರಿಂದ, ಗಿಫ್ಟ್ ಡೀಡ್ ರದ್ದು ಕೋರಿ ಹೈಕೋರ್ಟ್ಗೆ ಮೊರೆ ಹೋಗಿದ್ದ ವೆಂಕಟಯ್ಯ, ತಾವು ಅನಕ್ಷರಸ್ಥರು ಮತ್ತು ಗಿಫ್ಟ್ ಡೀಡ್ ಬಗ್ಗೆ ತಿಳಿದಿಲ್ಲದ ಕಾರಣ ಪುತ್ರಿಯರಾದ ಶಿವಮ್ಮ ಮತ್ತು ಪುಟ್ಟಮ್ಮ ಉಡುಗೊರೆ ಪತ್ರ ಸಿದ್ಧಪಡಿಸಿದ್ದರು. ತನ್ನನ್ನು ಚೆನ್ನಾಗಿ ನೋಡಿಕೊಳ್ಳಲಾಗುವುದೆಂಬ ಭರವಸೆಯ ಮೇರೆಗೆ ಗಿಫ್ಟ್ ಡೀಡ್ ಮಾಡಿಕೊಟ್ಟಿದ್ದೆನು ಎಂದು ನ್ಯಾಯಾಲಯಕ್ಕೆ ತಿಳಿಸಿದ್ದರು. ಹೈಕೋರ್ಟ್ ಹೇಳಿದ್ದೇನು? ಅಧಿಕಾರಿಗಳು ಅಳವಡಿಸಿಕೊಂಡ ವ್ಯಾಖ್ಯಾನವನ್ನು ಒಪ್ಪದ ನ್ಯಾಯಪೀಠ, ಗಿಫ್ಟ್ ಡೀಡ್ನಲ್ಲಿ ಸ್ಪಷ್ಟವಾದ ನಿರ್ವಹಣಾ ಷರತ್ತು ಕಾಯ್ದೆಯ ಸೆಕ್ಷನ್ 23(1) ರಡಿಯಲ್ಲಿ ಕಡ್ಡಾಯ ಅವಶ್ಯಕತೆಯಲ್ಲ. ಒಂದು ವೇಳೆ ಅಂತಹ ಪ್ರಕರಣಗಳು ಎದುರಾದರೆ, ಅವುಗಳ ಸಂಗತಿಗಳು, ಸಂದರ್ಭಗಳು ಮತ್ತು ನಡವಳಿಕೆಯಿಂದ ಊಹಿಸಬಹುದು ಎಂದು ಹೇಳಿದೆ. ಉಪವಿಭಾಗಾಧಿಕಾರಿ ಮತ್ತು ಜಿಲ್ಲಾಧಿಕಾರಿಗಳು ತಮ್ಮ ಆದೇಶದಲ್ಲಿ ನೀಡಿರುವ ಕಾರಣಗಳು ಕಾನೂನುಬದ್ಧವಾಗಿ ದೋಷಪೂರಿತ ಮತ್ತು ಕಾಯ್ದೆಯ ತಪ್ಪು ತಿಳುವಳಿಕೆ ಆಧರಿಸಿವೆ. ಇದು ವಯಸ್ಸಾದ ಪೋಷಕರು ತಮ್ಮ ಮಕ್ಕಳಿಗೆ ಆಸ್ತಿಯನ್ನು ವರ್ಗಾಯಿಸುವಾಗ ಕಟ್ಟುನಿಟ್ಟಾದ ಕಾನೂನು ವಿಧಿವಿಧಾನಗಳಿಗಿಂತ ಹೆಚ್ಚಾಗಿ ನಂಬಿಕೆ, ನೈತಿಕ ಭರವಸೆಗಳು ಮತ್ತು ಕೌಟುಂಬಿಕ ಬಂಧಗಳನ್ನು ಅವಲಂಬಿಸುತ್ತಾರೆ ಎಂದು ನ್ಯಾಯಾಲಯ ಆದೇಶದಲ್ಲಿ ಅಭಿಪ್ರಾಯಪಟ್ಟಿದೆ.
ಮಹಿಳಾ ಸಿಬ್ಬಂದಿಗೆ ಋತುಚಕ್ರದ ರಜೆ ಪ್ರಶ್ನಿಸಿದ ಅರ್ಜಿ ವಿಚಾರಣೆ ಮುಂದೂಡಿದ ಹೈಕೋರ್ಟ್
ಬೆಂಗಳೂರು : ರಾಜ್ಯದಲ್ಲಿ ವಿವಿಧ ಕಾರ್ಮಿಕ ಕಾಯ್ದೆಗಳಡಿ ನೋಂದಣಿಯಾಗಿರುವ ಉದ್ದಿಮೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಮಹಿಳಾ ನೌಕರರಿಗೆ ಅವರ ಋತುಚಕ್ರದ ಸಮಯದಲ್ಲಿ ಮಾಸಿಕ ಒಂದು ದಿನದ ವೇತನಸಹಿತ ರಜೆ ನೀಡುವ ಸಂಬಂಧ ರಾಜ್ಯ ಸರ್ಕಾರದ ಹೊರಡಿಸಿರುವ ಅಧಿಸೂಚನೆ ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ಫೆಬ್ರವರಿ 23ಕ್ಕೆ ಮುಂದೂಡಿದೆ. ರಾಜ್ಯ ಕಾರ್ಮಿಕ ಇಲಾಖೆ 2025ರ ನವೆಂಬರ್ 20ರಂದು ಹೊರಡಿಸಿರುವ ಅಧಿಸೂಚನೆ ಪ್ರಶ್ನಿಸಿ ಕರ್ನಾಟಕ ಉದ್ಯೋಗದಾತರ ಸಂಘ, ಬೆಂಗಳೂರು ಹೋಟೆಲ್ಗಳ ಸಂಘ, ಅವಿರತ ಡಿಫೆನ್ಸ್ ಸಿಸ್ಟಮ್, ಫೆಸಿಲ್ ಏರೋಸ್ಪೇಸ್ ಟೆಕ್ನಾಲಜೀಸ್ ಲಿಮಿಟೆಡ್, ಸ್ಯಾಮೋಸ್ ಟೆಕ್ನಾಲಜೀಸ್ ಲಿಮಿಟೆಡ್ಗಳ ಆಡಳಿತ ಮಂಡಳಿಗಳು ಸಲ್ಲಿಸಿದ್ದ ಅರ್ಜಿಗಳನ್ನು ನ್ಯಾಯಮೂರ್ತಿ ಅನಂತ ರಾಮನಾಥ ಹೆಗಡೆ ಏಕಸದಸ್ಯ ನ್ಯಾಯಪೀಠ ಸೋಮವಾರ ವಿಚಾರಣೆ ನಡೆಸಿತು. ಅರ್ಜಿದಾರರೊಬ್ಬರ ಪರ ವಕೀಲರು, ರಾಜ್ಯದ ಮಹಿಳಾ ನೌಕರರಿಗೆ ಮಾಸಿಕ 1 ದಿನದ ವೇತನಸಹಿತ ರಜೆಯಂತೆ ವಾರ್ಷಿಕ 12 ಋತುಚಕ್ರದ ರಜೆ ಘೋಷಿಸಿ ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿದೆ. ಈ ಅಧಿಸೂಚನೆಗೆ ಯಾವುದೇ ತಡೆಯಾಜ್ಞೆ ನೀಡಿರದ ಕಾರಣ ಸಮಸ್ಯೆಯಾಗುತ್ತಿದೆ. ಆದ್ದರಿಂದ, ಅರ್ಜಿಯನ್ನು ಶೀಘ್ರ ವಿಚಾರಣೆ ನಡೆಸಬೇಕು ಎಂದು ಮನವಿ ಮಾಡಿದರು. ಇದನ್ನು ಆಲಿಸಿದ ನ್ಯಾಯಪೀಠ, ಅರ್ಜಿ ವಿಚಾರಣೆಯನ್ನು ಫೆಬ್ರವರಿ 23ಕ್ಕೆ ಮುಂದೂಡಿತು.
5 ವರ್ಷಗಳಲ್ಲಿ 3.4 ಸಾವಿರಕ್ಕೂ ಹೆಚ್ಚು ಕ್ಯಾನ್ಸರ್ ಪ್ರಕರಣ: ದಕ್ಷಿಣ ಕನ್ನಡದಲ್ಲೇ ಅತಿ ಹೆಚ್ಚು ಕೇಸ್
ಮಂಗಳೂರು: ಕರ್ನಾಟಕದ ಆರೋಗ್ಯ ವಲಯಕ್ಕೆ ಎಚ್ಚರಿಕೆಯ ಗಂಟೆಯೆಂಬಂತೆ, ರಾಜ್ಯದ ಮೂರು ಪ್ರಮುಖ ಜಿಲ್ಲೆಗಳಲ್ಲಿ ಕಳೆದ ಐದು ವರ್ಷಗಳಲ್ಲಿ ಆತಂಕಕಾರಿ ಪ್ರಮಾಣದಲ್ಲಿ ಕ್ಯಾನ್ಸರ್ ಪ್ರಕರಣಗಳು ಪತ್ತೆಯಾಗಿವೆ. ಲೋಕಸಭೆಯಲ್ಲಿ ಮಂಡಿಸಲಾದ ಇತ್ತೀಚಿನ ದತ್ತಾಂಶಗಳ ಪ್ರಕಾರ, 2020-21 ರಿಂದ 2024-25ರ ಅವಧಿಯಲ್ಲಿ ದಕ್ಷಿಣ ಕನ್ನಡ, ಕಲಬುರಗಿ ಮತ್ತು ಹಾಸನ ಜಿಲ್ಲೆಗಳು ಕ್ಯಾನ್ಸರ್ ಪತ್ತೆ ಹಚ್ಚುವಿಕೆಯಲ್ಲಿ ರಾಜ್ಯದಲ್ಲೇ ಮುಂಚೂಣಿಯಲ್ಲಿವೆ. ಬಾಯಿ, ಗರ್ಭಕಂಠ ಮತ್ತು
Epstein files | ಎಪ್ಸ್ಟೀನ್ ಬಳಿ ಪತ್ತೆಯಾದ ಕಾಬಾದ ಪವಿತ್ರ ಬಟ್ಟೆ ‘ಕಿಸ್ವಾ’!
ಆಕ್ರೋಶ ವ್ಯಕ್ತಪಡಿಸಿದ ಜಾಗತಿಕ ಮುಸ್ಲಿಂ ಸಮುದಾಯ
ವಿಜಯನಗರ | ಫೆ.21ರಂದು ಬೃಹತ್ ಉದ್ಯೋಗ ಮೇಳ : 50ಕ್ಕೂ ಹೆಚ್ಚು ಕಂಪನಿಗಳು ಭಾಗಿ
ವಿಜಯನಗರ (ಹೊಸಪೇಟೆ), ಫೆ.09: ಫೆಬ್ರವರಿ 21ರಂದು ನಗರದ ವಿಜಯನಗರ ಕಾಲೇಜಿನಲ್ಲಿ ಜಿಲ್ಲಾ ಮಟ್ಟದ ಬೃಹತ್ ಉದ್ಯೋಗ ಮೇಳ ಆಯೋಜಿಸಲಾಗಿದ್ದು, 50ಕ್ಕೂ ಹೆಚ್ಚು ಪ್ರತಿಷ್ಠಿತ ಕಂಪನಿಗಳು ಭಾಗವಹಿಸಲಿವೆ ಎಂದು ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ ತಿಳಿಸಿದ್ದಾರೆ. ಸಂಜೀವಿನಿ ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನ ಸಂಸ್ಥೆ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ದೀನ್ ದಯಾಳ್ ಉಪಾಧ್ಯಾಯ ಗ್ರಾಮೀಣ ಕೌಶಲ್ಯ ಯೋಜನೆ, ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಹಾಗೂ ವಿಜಯನಗರ ಕಾಲೇಜುಗಳ ಸಹಯೋಗದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಉದ್ಯೋಗ ಮೇಳದಲ್ಲಿ ರಾಜ್ಯದ ವಿವಿಧ ಪ್ರತಿಷ್ಠಿತ ಎಂಎನ್ಸಿ ಕಂಪನಿಗಳು ಭಾಗವಹಿಸಲಿದ್ದು, ಜಿಲ್ಲೆಯ ನಿರುದ್ಯೋಗ ಯುವಕ-ಯುವತಿಯರಿಗೆ ಉತ್ತಮ ಅವಕಾಶ ಕಲ್ಪಿಸಲಿದೆ. ವಿಶೇಷವಾಗಿ ಗ್ರಾಮೀಣ ಪ್ರದೇಶದ ಪ್ರತಿಭಾವಂತ ಅಭ್ಯರ್ಥಿಗಳಿಗೆ ಪ್ರಥಮ ಆದ್ಯತೆ ನೀಡಲಾಗುವುದು ಎಂದು ಹೇಳಿದರು. 18ರಿಂದ 35 ವರ್ಷದೊಳಗಿನ ಎಸೆಸೆಲ್ಸಿ, ಪಿಯುಸಿ, ಐಟಿಐ, ಡಿಪ್ಲೋಮಾ, ನರ್ಸಿಂಗ್, ಇಂಜಿನಿಯರಿಂಗ್, ಬಿಕಾಂ, ಬಿಎಸ್ಸಿ, ಬಿಎ, ಬಿಬಿಎ, ಬಿಎಚ್ಎಂ, ಎಂಕಾಂ, ಎಂಬಿಎ, ಎಂಎಸ್ಸಿ, ಎಂಎ ಪದವಿ ಪಡೆದ ಅಭ್ಯರ್ಥಿಗಳು ಮೇಳದಲ್ಲಿ ಭಾಗವಹಿಸಬಹುದು ಎಂದು ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ ಉದ್ಯೋಗ ಮೇಳದ ಕರಪತ್ರ ಬಿಡುಗಡೆಗೊಳಿಸಿದರು. ನೋಂದಣಿ ಹಾಗೂ ಹೆಚ್ಚಿನ ಮಾಹಿತಿಗಾಗಿ ವಿಜಯನಗರ ಕಾಲೇಜನ್ನು ಅಥವಾ ದೂರವಾಣಿ ಸಂಖ್ಯೆ 7975278783, 9986779624 ಅನ್ನು ಸಂಪರ್ಕಿಸಬಹುದು. ಸಭೆಯಲ್ಲಿ ಜಿಲ್ಲಾ ಪಂಚಾಯತ್ ಸಿಇಒ ಮಹ್ಮದ್ ಅಲಿ ಅಕ್ರಂ ಷಾ, ವಿಜಯನಗರ ಕಾಲೇಜು ಅಧ್ಯಕ್ಷ ಮೆಟ್ರಿ ಮಲ್ಲಿಕಾರ್ಜುನ, ಪ್ರಾಂಶುಪಾಲ ಎ. ಮಹಾಂತೇಶ್ ಸೇರಿದಂತೆ ವಿವಿಧ ಕಂಪನಿಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.
ಮಹೇಶ್ ಜೋಶಿಯನ್ನು ಬಂಧಿಸಲು ಸರಕಾರ ಪ್ರಯತ್ನ ಮಾಡುತ್ತಿದೆ : ಜೋಶಿ ಪರ ವಕೀಲರು ಹೈಕೋರ್ಟ್ಗೆ ಮಾಹಿತಿ
ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ (ಕಸಾಪ) ಅಧ್ಯಕ್ಷ ಮಹೇಶ್ ಜೋಶಿ ಅವರನ್ನು ಬಂಧಿಸಲು ರಾಜ್ಯ ಸರಕಾರ ಎಲ್ಲ ಪ್ರಯತ್ನ ಮಾಡುತ್ತಿದೆ ಎಂದು ಜೋಶಿ ಪರ ವಕೀಲರು ಹೈಕೋರ್ಟ್ಗೆ ಮೌಖಿಕವಾಗಿ ತಿಳಿಸಿದರು. ಕಸಾಪ ಪದಾಧಿಕಾರಿಗಳ ಕಾರ್ಯವೈಖರಿ, ಅನುದಾನ ಮತ್ತು ಖರ್ಚು-ವೆಚ್ಚಗಳ ಕುರಿತು ವಿಚಾರಣೆ ನಡೆಸಲು ತನಿಖಾಧಿಕಾರಿ ನೇಮಕ ಮಾಡಿ 2025ರ ಜೂನ್ 26 ಹಾಗೂ 30ರಂದು ಸಹಕಾರ ಸಂಘಗಳ ನೋಂದಣಾಧಿಕಾರಿ ಹೊರಡಿಸಿದ್ದ ಆದೇಶಕ್ಕೆ ತಡೆ ಕೋರಿ ಕಸಾಪ ಅಧ್ಯಕ್ಷ ಮಹೇಶ್ ಜೋಶಿ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರ ಏಕಸದಸ್ಯ ನ್ಯಾಯಪೀಠ ಸೋಮವಾರ ವಿಚಾರಣೆ ನಡೆಸಿತು. ಮಹೇಶ್ ಜೋಶಿ ಪರ ಹಿರಿಯ ವಕೀಲ ಜಯಕುಮಾರ್ ಎ. ಪಾಟೀಲ್ ಅವರು, ನ್ಯಾಯಾಲಯದಲ್ಲಿ ಅರ್ಜಿ ಬಾಕಿ ಇದ್ದು, ಅದಕ್ಕೆ ಸಂಬಂಧಿಸಿದ ದಾಖಲೆಯನ್ನು ಅಧಿಕೃತವಾಗಿ ಕಚೇರಿಯಲ್ಲಿ ಇಡಲಾಗಿದೆ. ಅದನ್ನು ತೆಗೆದುಕೊಳ್ಳಲು ನಿರ್ದೇಶನ ಕೋರಿ ಅರ್ಜಿ ಸಲ್ಲಿಸಿದ್ದೇವೆ ಎಂದರು. ಆಗ ಹೆಚ್ಚುವರಿ ಅಡ್ವೊಕೇಟ್ ಜನರಲ್ ಪ್ರತಿಮಾ ಹೊನ್ನಾಪುರ ಅವರು, ಜೋಶಿ ಬಂದು ಅದನ್ನು ಪಡೆದುಕೊಳ್ಳಬಹುದು. ಅದನ್ನು ಎಲ್ಲಿಡಲಾಗಿದೆ ಎಂಬುದು ಅವರಿಗೇ ಗೊತ್ತಿದೆ ಎಂದರು. ಈ ವೇಳೆ ಪಾಟೀಲ್ ಅವರು, ಅರ್ಜಿದಾರರು ಅಲ್ಲಿಗೆ ಹೋಗುವುದಿಲ್ಲ, ಹೋದರೆ ಈ ದಾಖಲೆಯನ್ನು ತಿರುಚಲಾಗಿದೆ ಎನ್ನುತ್ತಾರೆ. ದಾಖಲೆ ತಿರುಚುವ ಸಾಧ್ಯತೆ ಇದೆ ಎಂದು ಸರ್ಕಾರ ಆಡಳಿತಾಧಿಕಾರಿ ನೇಮಿಸಿದೆ. ಅಲ್ಲಿ ಅರ್ಜಿದಾರರು ಹಾಜರಿರುತ್ತಾರೆ, ಸರ್ಕಾರ/ಆಡಳಿತಾಧಿಕಾರಿ ಅದನ್ನು ಶೋಧಿಸಿಕೊಡಲಿ. ಅರ್ಜಿದಾರರು ದಾಖಲೆಗಳನ್ನು ತಿರುಚಿದ್ದು, ಮುಂದೆಯೂ ತಿರುಚುವ ಸಾಧ್ಯತೆ ಎನ್ನುವುದು ಸರ್ಕಾರದ ವಾದವಾಗಿದೆ. ಅರ್ಜಿದಾರರು ಇದ್ದಾಗ ದಾಖಲೆಗಳು ಕಬೋರ್ಡ್ನಲ್ಲಿ ಇದ್ದವು, ಈಗ ಅಲ್ಲಿಲ್ಲ. ಅದೆಲ್ಲವನ್ನೂ ಬಂಡಲ್ ಮಾಡಿದ್ದಾರೆ. ಅರ್ಜಿದಾರರು ಮುಟ್ಟಿದರೆ ಬೇರೇನೋ ಮಾಡಿದ್ದಾರೆ ಎಂದು ಹೇಳುವ ಸಾಧ್ಯತೆ ಇದೆ. ಅರ್ಜಿದಾರರನ್ನು ಬಂಧಿಸಲು ಬೇಕಾದ ಎಲ್ಲ ಪ್ರಯತ್ನವನ್ನೂ ಸರ್ಕಾರ ಮಾಡುತ್ತಿದೆ. ದಾಖಲೆಗಳನ್ನು ಕಳವು ಮಾಡಲಾಗಿದೆ ಎಂದು ಅವರು ಆರೋಪಿಸಬಹುದು ಎಂದರು. ಇದಕ್ಕೆ ನ್ಯಾಯಪೀಠ, ನೀವು ಅಲ್ಲಿ ಹೋಗದಿದ್ದರೆ ಆ ಪತ್ರಗಳು ಹೇಗೆ ಸಿಗುತ್ತವೆ? ಅದು ಎಲ್ಲಿದೆ ಎಂಬುದು ಸರ್ಕಾರಕ್ಕೆ ಏನು ಗೊತ್ತಿದೆ. ಸರ್ಕಾರದ ಉಸ್ತುವಾರಿಯಡಿ ನೀವು ಅಲ್ಲಿಗೆ ಹೋಗಿ ನಿಮ್ಮ ದಾಖಲೆ ಪಡೆಯಬಹುದು. ಶೋಧಿಸಿ ನಿಮಗೆ ಕೊಡಿ ಎಂದು ಸರ್ಕಾರಕ್ಕ ನಿರ್ದೇಶಿಸಿಲಾಗದು. ಕಸಾಪದಲ್ಲಿ ವಿಡಿಯೊ ಕ್ಯಾಮರಾ ಇದೆಯಲ್ಲವೇ? ಅದರಲ್ಲಿ ರೆಕಾರ್ಡ್ ಆಗುವುದಿಲ್ಲವೇ ಅದನ್ನು ನೀವು ಬಳಕೆ ಮಾಡಬಹುದಲ್ಲವೇ? ಎಂದು ಹೇಳಿತು. ಅಂತಿಮವಾಗಿ ನ್ಯಾಯಪೀಠ ಅರ್ಜಿ ವಿಚಾರಣೆಯನ್ನು ಫೆಬ್ರವರಿ 16ಕ್ಕೆ ಮುಂದೂಡಿತು.
ವಿಜಯನಗರ | ಹಂಪಿ ಉತ್ಸವಕ್ಕೆ ಎಲ್ಲರ ಸಹಕಾರ ಅಗತ್ಯ: ಡಿಸಿ
ವಿಜಯನಗರ : ಹಂಪಿ ಉತ್ಸವ ಫೆ. 13ರಿಂದ 15ರವರೆಗೆ ಆಯೋಜಿಸಲಾಗಿದ್ದು, ಉತ್ಸವದ ಯಶಸ್ವಿಗೆ ತಮ್ಮೆಲ್ಲರ ಸಹಕಾರ ಅತ್ಯಗತ್ಯ ಎಂದು ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ ಮನವಿ ಮಾಡಿದ್ದಾರೆ. ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಹಂಪಿ ಉತ್ಸವದ ಅಂಗವಾಗಿ ಹತ್ತು ಹಲವು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಫೆ.13ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಉತ್ಸವಕ್ಕೆ ಅಧಿಕೃತವಾಗಿ ಚಾಲನೆ ನೀಡಲಿದ್ದಾರೆ ಎಂದು ಅವರು ಹೇಳಿದರು. ಉತ್ಸವಕ್ಕೆ ಆಗಮಿಸುವ ಸಾರ್ವಜನಿಕರ ಅನುಕೂಲಕ್ಕಾಗಿ ಜಿಲ್ಲೆಯ ಎಲ್ಲಾ ತಾಲೂಕುಗಳಿಗೆ 3 ದಿನಗಳ ಕಾಲ ಉಚಿತ ಸಾರಿಗೆ ವ್ಯವಸ್ಥೆ ಕಲ್ಪಿಸಲಾಗಿದೆ. ಅದರಂತೆ ಅಗತ್ಯ ಮೂಲಭೂತ ಸೌಕರ್ಯ ನೀಡಲು ಜಿಲ್ಲಾಡಳಿತ ಸಕಲ ಸಿದ್ದತೆ ಕೈಗೊಂಡಿದೆ ಎಂದು ಡಿಸಿ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷ ಎನ್.ರೂಪೇಶ್ ಕುಮಾರ್, ಉಪಾಧ್ಯಕ್ಷ ಜಿ.ಎಸ್.ರಮೇಶ್ ಗುಪ್ತಾ ಮತ್ತಿತರರು ಉಪಸ್ಥಿತರಿದ್ದರು.
ಬೀದರ್ | ಫೆ.12ರಂದು ಜಿಲ್ಲೆಯಲ್ಲಿ ಸಾರ್ವತ್ರಿಕ ಮುಷ್ಕರ : ಬಾಬುರಾವ್ ಹೊನ್ನಾ
ಬೀದರ್ : ಫೆ.12ರಂದು ಜಿಲ್ಲೆಯಲ್ಲಿ ಸಂಯುಕ್ತ ಕಿಸಾನ್ ಮೋರ್ಚಾ ವತಿಯಿಂದ ಸಾರ್ವತ್ರಿಕ ಮುಷ್ಕರ ಹಮ್ಮಿಕೊಳ್ಳಲಾಗಿದೆ ಎಂದು ಆಲ್ ಇಂಡಿಯಾ ಕಿಸಾನ್ ಸಭಾದ ರಾಜ್ಯ ಉಪಾಧ್ಯಕ್ಷ ಬಾಬುರಾವ್ ಹೊನ್ನಾ ತಿಳಿಸಿದರು. ನಗರದ ಸ್ಟಾರ್ ಲಾಡ್ಜ್ ಸಭಾಂಗಣದಲ್ಲಿ ರವಿವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕ ಪ್ರಾಂತ ರೈತ ಸಂಘ, ಅಖಿಲ ಭಾರತ ಕಿಸಾನ್ ಸಭಾ ಹಾಗೂ ಕರ್ನಾಟಕ ರಾಜ್ಯ ರೈತ ಸಂಘಗಳು ಸೇರಿ ಸಂಯುಕ್ತ ಕಿಸಾನ್ ಮೋರ್ಚಾ ಅಡಿಯಲ್ಲಿ ಈ ಮುಷ್ಕರಕ್ಕೆ ಕರೆ ನೀಡಲಾಗಿದೆ ಎಂದರು. ಕೇಂದ್ರ ಸರ್ಕಾರ ಅಮೇರಿಕಾದೊಂದಿಗೆ ಕೃಷಿ ಒಪ್ಪಂದ ಮಾಡಿಕೊಂಡಿರುವುದು, ವಿದ್ಯುತ್ ಖಾಸಗಿಕರಣ, ಕಾರ್ಪೊರೇಟ್ ಕಂಪನಿಗಳ ಬೀಜ ಬಳಕೆ ಕಡ್ಡಾಯಗೊಳಿಸುವ ಬೀಜ ಕಾಯಿದೆ ಸೇರಿದಂತೆ ಹಲವು ನೀತಿಗಳ ವಿರುದ್ಧ ಈ ಹೋರಾಟ ನಡೆಯುತ್ತಿದೆ. ರೈತರಿಗೆ ಹಾನಿ ಉಂಟುಮಾಡುವ ಎಲ್ಲಾ ಕಾನೂನುಗಳನ್ನು ವಾಪಸ್ಸು ಪಡೆಯಬೇಕು ಹಾಗೂ ರೈತರ ಸಂಪೂರ್ಣ ಸಾಲ ಮನ್ನಾ ಮಾಡಬೇಕು ಎಂಬ ಬೇಡಿಕೆಗಳನ್ನು ಮುಂದಿಟ್ಟು ಮುಷ್ಕರ ನಡೆಸಲಾಗುತ್ತಿದೆ ಎಂದು ಹೇಳಿದರು. ಈ ಹೋರಾಟ ದೇಶವ್ಯಾಪಿಯಾಗಿ ನಡೆಯುತ್ತಿದ್ದು, ಕೆಲವು ರಾಜ್ಯಗಳಲ್ಲಿ ರೈಲು ತಡೆ, ಪಾದಯಾತ್ರೆ ಸೇರಿದಂತೆ ವಿವಿಧ ರೀತಿಯ ಪ್ರತಿಭಟನೆಗಳು ನಡೆಯುತ್ತಿವೆ ಎಂದು ಅವರು ಮಾಹಿತಿ ನೀಡಿದರು. ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾಧ್ಯಕ್ಷ ನಜೀರ್ ಅಹಮ್ಮದ್ ಚೊಂಡಿ, ಬಸವರಾಜ್ ಅಷ್ಟೂರೆ, ಶಾಂತಮ್ಮ ಮೂಲಗೆ, ವಾಮನರಾವ್, ಖಮರ್ ಪಟೇಲ್, ಶಫಿಯತ್ ಅಲಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಇಂಡಿಯನ್ ಮುಸ್ಲಿಮ್ಸ್ ಫಾರ್ ಪ್ರೊಗ್ರೆಸ್ ಆ್ಯಂಡ್ ರಿಫಾರ್ಮ್ಸ್ ನಿಯೋಗದಿಂದ ಕೇಂದ್ರ ರಕ್ಷಣಾ ಸಚಿವರ ಭೇಟಿ
ಏಕತೆ, ಸಾಮಾಜಿಕ ಸೌಹಾರ್ದ ಪ್ರಜಾಪ್ರಭುತ್ವದ ಶಕ್ತಿಗೆ ಮೂಲಾಧಾರ : ರಾಜನಾಥ್ ಸಿಂಗ್
ಬೀದರ್ | ಮಕ್ಕಳಿಗೆ ಶಿಕ್ಷಣ ನೀಡಿ ಸ್ವಾವಲಂಬಿಗಳಾಗಿ ಮಾಡಬೇಕು : ಮಾಲಾ ಬಿ.ನಾರಾಯಣರಾವ್
ಐಡಿಯಲ್ ಗ್ಲೋಬಲ್ ಶಾಲೆಯ ಸಿಲ್ವರ್ ಜುಬಿಲಿ ಆಚರಣೆ
ಯಶಸ್ವಿಯಾದ ರಾಯಚೂರು ಉತ್ಸವ | ಸಚಿವ ಎನ್ಎಸ್ ಬೋಸರಾಜು ಅವರಿಂದ ಶ್ಲಾಘನೆ
ರಾಯಚೂರು: ʼಎಡೆದೊರೆ ನಾಡುʼ ರಾಯಚೂರು (ದೋ-ಅಬ್) ಪ್ರದೇಶದ ಐತಿಹಾಸಿಕ ಹಾಗೂ ಸಾಂಸ್ಕೃತಿಕ ಪರಂಪರೆಯನ್ನು ಮರುಕಳಿಸುವ ಹಾಗೂ ಸ್ಥಳೀಯ ಕಲೆ ಮತ್ತು ಪ್ರತಿಭೆಗಳಿಗೆ ಉತ್ತೇಜನ ನೀಡುವ ಉದ್ದೇಶದಿಂದ ಫೆ.5, 6 ಮತ್ತು 7ರಂದು ಮೂರು ದಿನಗಳ ಕಾಲ ಆಯೋಜಿಸಲಾಗಿದ್ದ ʼರಾಯಚೂರು ಉತ್ಸವ–2026ʼ ಯಶಸ್ಸು ಕಂಡ ಹಿನ್ನೆಲೆಯಲ್ಲಿ ಜಿಲ್ಲೆಯ ಜನತೆ ಹಾಗೂ ಆಯೋಜಕರಿಗೆ ಸಣ್ಣ ನೀರಾವರಿ ಮತ್ತು ವಿಜ್ಞಾನ–ತಂತ್ರಜ್ಞಾನ ಸಚಿವ ಎನ್.ಎಸ್.ಬೋಸರಾಜು ಅಭಿನಂದನೆ ಸಲ್ಲಿಸಿದ್ದಾರೆ. ನಾಡಹಬ್ಬದ ಸಂಭ್ರಮದಂತೆ ನಡೆದ ಉತ್ಸವದಲ್ಲಿ ಜಿಲ್ಲೆಯ ಜನತೆ ನಿರೀಕ್ಷೆಗೂ ಮೀರಿದ ಉತ್ಸಾಹದಿಂದ ಭಾಗವಹಿಸಿ ಕಾರ್ಯಕ್ರಮವನ್ನು ಅಭೂತಪೂರ್ವವಾಗಿ ಯಶಸ್ವಿಗೊಳಿಸಿರುವುದು ಸಂತಸದ ಸಂಗತಿ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಈ ಉತ್ಸವವು ರಾಯಚೂರು ಜಿಲ್ಲೆಯ ಜನರ ಬಹುದಿನದ ಕನಸಾಗಿದ್ದು, ಯಾವುದೇ ಅಹಿತಕರ ಘಟನೆಗಳಿಲ್ಲದೆ ಶಿಸ್ತಿನಿಂದ ಮತ್ತು ಸುವ್ಯವಸ್ಥಿತವಾಗಿ ನಡೆದಿರುವುದು ವಿಶೇಷ. ಉತ್ಸವದ ಯಶಸ್ಸಿಗೆ ಅಚ್ಚುಕಟ್ಟಾಗಿ ಯೋಜನೆ ರೂಪಿಸಿ ಕಾರ್ಯಗತಗೊಳಿಸಿದ ಜಿಲ್ಲಾಡಳಿತ, ಜವಾಬ್ದಾರಿಯುತವಾಗಿ ಕರ್ತವ್ಯ ನಿರ್ವಹಿಸಿದ ಜಿಲ್ಲಾ ಪೊಲೀಸ್ ಇಲಾಖೆ, ವಿವಿಧ ಸಂಘ-ಸಂಸ್ಥೆಗಳು, ಕೈಗಾರಿಕಾ ಸಂಸ್ಥೆಗಳು ಹಾಗೂ ಪ್ರತ್ಯಕ್ಷ-ಪರೋಕ್ಷವಾಗಿ ಸಹಕರಿಸಿದ ಎಲ್ಲರಿಗೂ ಸಚಿವರು ಹೃತ್ಪೂರ್ವಕ ಅಭಿನಂದನೆ ಸಲ್ಲಿಸಿದ್ದಾರೆ.
ಮಕ್ಕಳಿಂದ ನಿರ್ಲಕ್ಷ್ಯಕ್ಕೊಳಗಾಗಿದ್ದ ವಯೋವೃದ್ಧಗೆ ನ್ಯಾಯ: ಪುತ್ರಿಯರ ಆಸ್ತಿ ಮೋಹಕ್ಕೆ ಮದ್ದು ಅರೆದ ಹೈಕೋರ್ಟ್
ಬೆಂಗಳೂರು: ಇಳಿವಯಸ್ಸಿನಲ್ಲಿ ತನ್ನನ್ನು ಚೆನ್ನಾಗಿ ನೋಡಿಕೊಳ್ಳುತ್ತಾರೆಂಬ ನಂಬಿಕೆಯಿಂದ ವಯೋವೃದ್ಧರೊಬ್ಬರು ಜೀವನಾಧಾರವಾಗಿದ್ದ 2.4 ಎಕರೆ ಭೂಮಿಯನ್ನು ಪುತ್ರಿಯರಿಬ್ಬರ ಹೆಸರಿಗೆ ಮಾಡಿಕೊಟ್ಟಿದ್ದರು. ನಂತರ ಪುತ್ರಿಯರ 'ನಿಜ ಬಣ್ಣ' ಬಯಲಾಗಿ ತನ್ನನ್ನು ನಿರಾಶ್ರಿತನನ್ನಾಗಿ ಮಾಡಿದ ಹಿನ್ನೆಲೆಯಲ್ಲಿ ಗಿಫ್ಟ್ ಡೀಡ್ ರದ್ದು ಕೋರಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಇದನ್ನು ಮಾನ್ಯ ಮಾಡಿರುವ ಹೈಕೋರ್ಟ್ ತುಮಕೂರಿನ 84 ವರ್ಷದ ವೃದ್ಧನ ನೆರವಿಗೆ ಧಾವಿಸಿದೆ.ಹೆಬ್ಬೂರು ಹೋಬಳಿಯ ದೊಡ್ಡಗೊಲ್ಲಹಳ್ಳಿಯ ವೆಂಕಟಯ್ಯ ಸಲ್ಲಿಸಿದ್ದ ಅರ್ಜಿ ಪುರಸ್ಕರಿಸಿರುವ ಅವರಿದ್ದ ಏಕಸದಸ್ಯ ಪೀಠ, 2007ರ ಹಿರಿಯ ನಾಗರಿಕರ ಮತ್ತು ಅನ್ವಯಿಸಿ, ಕೃಷಿ ಭೂಮಿಯನ್ನು ಪುತ್ರಿಯರ ಹೆಸರಿಗೆ ಮಾಡಿಕೊಟ್ಟಿದ್ದ ಗಿಫ್ಟ್ ಡೀಡ್ ರದ್ದುಗೊಳಿಸಿದೆ. ಅಲ್ಲದೆ, 'ಹಿರಿಯ ನಾಗರಿಕರಿಗೆ ವೃದ್ಧಾಪ್ಯದಲ್ಲಿ ಆರೈಕೆ ಮಾಡದೆ ಅವರ ಜೀವನ ನಿರ್ವಹಣೆಗೆ ನೆರವಾಗದೆ ಇದ್ದರೆ ಅಂತಹ ಸಂದರ್ಭದಲ್ಲಿ ನ್ಯಾಯಾಲಯ ಅವರ ರಕ್ಷಣೆಗೆ ಧಾವಿಸಿ ಆಸ್ತಿ ರಕ್ಷಿಸಿ, ಅವರ ಹಕ್ಕುಗಳನ್ನು ಮರಳಿ ದೊರಕಿಸಿಕೊಡಲಾಗುತ್ತದೆ,'' ಎಂದು ಹೇಳಿದೆ. ಆದೇಶದಲ್ಲಿ ಹೇಳಿದ್ದೇನು? ಉಪವಿಭಾಗಾಧಿಕಾರಿ ಮತ್ತು ಜಿಲ್ಲಾಧಿಕಾರಿಗಳು ತಮ್ಮ ಆದೇಶದಲ್ಲಿ ನೀಡಿರುವ ಕಾರಣಗಳು 'ಕಾನೂನುಬದ್ಧವಾಗಿ ದೋಷಪೂರಿತ' ಮತ್ತು ಕಾಯಿದೆಯ ತಪ್ಪು ತಿಳಿವಳಿಕೆ ಆಧರಿಸಿವೆ ಎಂದು ಹೇಳಿರುವ ನ್ಯಾಯಾಲಯ, 'ಇದು ವಯಸ್ಸಾದ ಪೋಷಕರು ತಮ್ಮ ಮಕ್ಕಳಿಗೆ ಆಸ್ತಿ ವರ್ಗಾಯಿಸುವಾಗ ಕಟ್ಟುನಿಟ್ಟಾದ ಕಾನೂನು ವಿಧಿವಿಧಾನಗಳಿಗಿಂತ ಹೆಚ್ಚಾಗಿ ನಂಬಿಕೆ, ನೈತಿಕ ಭರವಸೆಗಳು ಮತ್ತು ಕೌಟುಂಬಿಕ ಬಂಧಗಳನ್ನು ಅವಲಂಬಿಸುತ್ತಾರೆ,'' ಎಂದು ಅಭಿಪ್ರಾಯಪಟ್ಟಿದೆ.ಹಿರಿಯ ನಾಗರಿಕರ, ವಿಶೇಷವಾಗಿ ಗ್ರಾಮೀಣ ಕರ್ನಾಟಕದವರ ವಿಶ್ವಾಸಾರ್ಹ ಸ್ವಭಾವ ಮತ್ತು ಮಕ್ಕಳ ಮೇಲೆ ಅವರ ಭಾವನಾತ್ಮಕ ಮತ್ತು ಆರ್ಥಿಕ ಅವಲಂಬನೆಯು ಕಾನೂನಿನಿಂದ ಸ್ಪಷ್ಟವಾಗಿ ಗುರುತಿಸಲ್ಪಟ್ಟ ಸಾಮಾಜಿಕ ವಾಸ್ತವವಾಗಿದೆ. ವೆಂಕಟಯ್ಯನವರ ವೃದ್ಧಾಪ್ಯ, ಗ್ರಾಮೀಣ ಹಿನ್ನೆಲೆ, ನಿಕಟ ಕುಟುಂಬ ಸಂಬಂಧ ಮತ್ತು ಆಸ್ತಿ ವರ್ಗಾವಣೆಯ ನಂತರದ ನಿರ್ಲಕ್ಷ್ಯ ಗಮನಿಸಿದ ನ್ಯಾಯಾಲಯವು, ಗಿಫ್ಟ್ ಡೀಡ್ ಆರೈಕೆ ಮತ್ತು ನಿರ್ವಹಣೆಯ ನಿರೀಕ್ಷೆಗೆ ಸ್ಪಷ್ಟವಾಗಿ ಸಂಬಂಸಿದೆ ಎಂದು ಅಭಿಪ್ರಾಯಪಟ್ಟಿದೆ. ಪ್ರಕರಣದ ಹಿನ್ನೆಲೆ ಹೆಬ್ಬೂರು ಹೋಬಳಿಯ ದೊಡ್ಡಗೊಲ್ಲಹಳ್ಳಿಯ ವೆಂಕಟಯ್ಯ ಸುಮಾರು 2.4 ಎಕರೆ ಕೃಷಿ ಭೂಮಿ ಹೊಂದಿದ್ದರು. ವೃದ್ಧಾಪ್ಯದಲ್ಲಿ ತನ್ನನ್ನು ಚೆನ್ನಾಗಿ ನೋಡಿಕೊಳ್ಳುತಾರೆಂಬ ಭರವಸೆ ಹಿನ್ನೆಲೆಯಲ್ಲಿ ಪುತ್ರಿಯರಾದ ಶಿವಮ್ಮ ಮತ್ತು ಪುಟ್ಟಮ್ಮ ಅವರ ಪರವಾಗಿ ಉಡುಗೊರೆ ಪತ್ರವನ್ನು ಮಾಡಿಕೊಟ್ಟು ಆಸ್ತಿಯನ್ನು ವರ್ಗಾವಣೆ ಮಾಡಿದ್ದರು. ಆನಂತರ ಪುತ್ರಿಯರು ತಮ್ಮನ್ನು ನೋಡಿಕೊಳ್ಳಲು ವಿಫಲರಾಗಿದ್ದಾರೆಂದು ಅವರು ಆರೋಪಿಸಿದ್ದರು. ಅಲ್ಲದೆ, ಹಿರಿಯ ನಾಗರಿಕರ ಕಾಯಿದೆಯಡಿ ತಮ್ಮ ಗಿಫ್ಟ್ ಡೀಡ್ ರದ್ದು ಕೋರಿ ಉಪವಿಭಾಗಾಧಿಕಾರಿ ನೇತೃತ್ವದ ನ್ಯಾಯಮಂಡಳಿ ಮುಂದೆ ಮನವಿ ಸಲ್ಲಿಸಿದ್ದರು.ನ್ಯಾಯಮಂಡಳಿಯು 2023ರ ಡಿಸೆಂಬರ್ 19 ರಂದು ಅವರ ದೂರನ್ನು ವಜಾಗೊಳಿಸಿತು. ಉಡುಗೊರೆ ಪತ್ರದಲ್ಲಿ ಹೆಣ್ಣು ಮಕ್ಕಳು ತಮ್ಮನ್ನು ನೋಡಿಕೊಳ್ಳಲು ನಿರ್ಬಂಧ ಹೊಂದಿರುವ ಸ್ಪಷ್ಟ ಷರತ್ತು ಇಲ್ಲಎಂದು ತೀರ್ಪು ನೀಡಿತ್ತು. 2024ರ ಅ.22ರಂದು ಜಿಲ್ಲಾಕಾರಿ ಕೂಡ ಅದೇ ಆದೇಶವನ್ನು ಎತ್ತಿ ಹಿಡಿದಿದ್ದರು. ಹಾಗಾಗಿ, ಗಿಫ್ಟ್ ಡೀಡ್ ರದ್ದು ಕೋರಿ ಹೈಕೋರ್ಟ್ಗೆ ಮೊರೆ ಹೋಗಿದ್ದ ವೆಂಕಟಯ್ಯ, ''ನಾನು ಅನಕ್ಷರಸ್ಥ ಮತ್ತು ಗಿಫ್ಟ್ ಡೀಡ್ ಬಗ್ಗೆ ತಿಳಿದಿಲ್ಲದ ಕಾರಣ ಪುತ್ರಿಯರಾದ ಶಿವಮ್ಮ ಮತ್ತು ಪುಟ್ಟಮ್ಮ ಉಡುಗೊರೆ ಪತ್ರ ಸಿದ್ಧಪಡಿಸಿದ್ದೆ. ಅಲ್ಲದೆ, ನನ್ನನ್ನು ಚೆನ್ನಾಗಿ ನೋಡಿಕೊಳ್ಳುತ್ತಾರೆಂಬ ಭರವಸೆಯ ಮೇರೆಗೆ ಗಿಫ್ಟ್ ಡೀಡ್ ಮಾಡಿಕೊಟ್ಟಿದ್ದೆ,'' ಎಂದು ನ್ಯಾಯಾಲಯಕ್ಕೆ ತಿಳಿಸಿದ್ದರು.
ರಾಯಚೂರು | ಉಚಿತ ಔಷಧಿ, ಆರೋಗ್ಯ ಹಕ್ಕು ಕಾಯ್ದೆ ಜಾರಿಗೆ ಆಗ್ರಹಿಸಿ ಲಿಂಗತ್ವ ಅಲ್ಪಸಂಖ್ಯಾತರಿಂದ ಪ್ರತಿಭಟನೆ
ರಾಯಚೂರು: ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಮತ್ತು ಉತ್ತಮ ಗುಣಮಟ್ಟದ ಔಷಧಿಗಳನ್ನು ಲಭ್ಯವಾಗುವಂತೆ ಮಾಡಬೇಕು ಹಾಗೂ ರಾಜ್ಯದಲ್ಲಿ ಆರೋಗ್ಯ ಹಕ್ಕಿನ ಕಾಯ್ದೆ ಜಾರಿಗೆ ತರಬೇಕು ಎಂದು ಒತ್ತಾಯಿಸಿ ಸಂಗಮ ಸಂಸ್ಥೆ ಹಾಗೂ ಲಿಂಗತ್ವ ಅಲ್ಪಸಂಖ್ಯಾತರು ನಗರದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು. ಪ್ರತಿಭಟನಾಕಾರರು ಮಾತನಾಡಿ, ಚಿಕಿತ್ಸೆ ವೆಚ್ಚದಲ್ಲಿ ಶೇ.60 ರಿಂದ 70ರಷ್ಟು ಹಣ ಔಷಧಿಗಳ ಖರೀದಿಗೆ ವ್ಯಯವಾಗುತ್ತಿದೆ. ಆದ್ದರಿಂದ ಸರ್ಕಾರಿ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಉಚಿತ ಔಷಧಿ ನೀಡಬೇಕು. ಸರ್ಕಾರಿ ಆಸ್ಪತ್ರೆಗಳ ವೈದ್ಯರು ಯಾವುದೇ ಕಾರಣಕ್ಕೂ ರೋಗಿಗಳಿಗೆ ಹೊರಗಡೆ ಔಷಧಿ ಖರೀದಿಸಲು ಚೀಟಿ ಬರೆಯಬಾರದು. ಅಲ್ಲದೆ, ಸರ್ಕಾರಿ ಆಸ್ಪತ್ರೆಗಳಲ್ಲಿ ಲಭ್ಯವಾಗುವ ಔಷಧಿಗಳ ಗುಣಮಟ್ಟವೂ ಉತ್ತಮವಾಗಿರಬೇಕು ಎಂದು ಆಗ್ರಹಿಸಿದರು. ತಮಿಳುನಾಡು, ಕೇರಳ ಹಾಗೂ ರಾಜಸ್ಥಾನ ರಾಜ್ಯಗಳಲ್ಲಿ ಉಚಿತ ಔಷಧಿ ವ್ಯವಸ್ಥೆ ಸಮರ್ಪಕವಾಗಿ ಜಾರಿಯಲ್ಲಿದೆ. ಆದರೆ ಕರ್ನಾಟಕದಲ್ಲಿ ಈ ವ್ಯವಸ್ಥೆ ಸಂಪೂರ್ಣವಾಗಿ ಜಾರಿಗೆ ಬಂದಿಲ್ಲ. ಸರ್ಕಾರಿ ಆಸ್ಪತ್ರೆಗಳ ಮುಂದೆಯೇ ಖಾಸಗಿ ಔಷಧಿ ಅಂಗಡಿಗಳು ಸಾಲಾಗಿ ಇರುವುದೇ ಇದರ ಸ್ಪಷ್ಟ ಉದಾಹರಣೆಯಾಗಿದೆ ಎಂದು ಹೇಳಿದರು. ಸಾರ್ವಜನಿಕ ಆರೋಗ್ಯ ಆಂದೋಲನ ಕರ್ನಾಟಕ ಸಂಘಟನೆಯ ಸಮೀಕ್ಷೆಯ ಪ್ರಕಾರ, 12 ಜಿಲ್ಲೆಗಳ 568 ರೋಗಿಗಳು ಔಷಧಿಗಾಗಿ ಒಟ್ಟು 4,05,140 ರೂ. ಖರ್ಚು ಮಾಡಿರುವುದು ಬೆಳಕಿಗೆ ಬಂದಿದೆ ಎಂದು ತಿಳಿಸಿದರು. ರಾಜ್ಯದಲ್ಲಿ ಆರೋಗ್ಯ ಸೇವೆಗಳು ಎಲ್ಲಾ ಜಾತಿ, ಧರ್ಮ, ಜನಾಂಗ ಹಾಗೂ ಲಿಂಗದವರಿಗೆ ಸಮಾನವಾಗಿ ದೊರೆಯಬೇಕು. ವಿಶೇಷವಾಗಿ ಬಡವರು, ಕಾರ್ಮಿಕರು, ದಲಿತರು, ಹಿಂದುಳಿದ ಸಮುದಾಯದವರು, ಸ್ಲಂ ನಿವಾಸಿಗಳು ಹಾಗೂ ಲಿಂಗತ್ವ ಮತ್ತು ಲೈಂಗಿಕ ಅಲ್ಪಸಂಖ್ಯಾತರಿಗೆ ಸಮರ್ಪಕ ಆರೋಗ್ಯ ಸೌಲಭ್ಯ ಕಲ್ಪಿಸಬೇಕು ಎಂದು ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ಮಹೇಶ, ಮಹಾದೇವ್, ರಾಜ್, ಕಾಜಲ್, ಬೃಂದಾ, ಸ್ನೇಹರೆಡ್ಡಿ, ವಂದನಾ, ಕಾವ್ಯ, ಆನಂದ, ತಿಮ್ಮಪ್ಪ, ಅಮೃತಾ, ಅಪೂರ್ವ, ಕೀರ್ತಿ, ಸಪ್ನ, ಹುಲಿಗಮ್ಮ, ಅಂಕಿತ, ವೀರೇಶ, ಈರಣ್ಣ ನಾಯಕ ಸೇರಿದಂತೆ ಹಲವರು ಭಾಗವಹಿಸಿದ್ದರು.
ಎಸ್ಸಿ-ಎಸ್ಟಿಯ ಮೀಸಲಾತಿಯ ಹೆಚ್ಚಳಕ್ಕೆ ಕೇಂದ್ರಕ್ಕೆ ಒತ್ತಾಯ : ಮುಖ್ಯಮಂತ್ರಿ ಸಿದ್ದರಾಮಯ್ಯ
ಹರಿಹರ : ಸರ್ಕಾರ ಸಾಮಾಜಿಕ ನ್ಯಾಯದ ಪರವಾಗಿದ್ದು, ಜನಸಂಖ್ಯೆಯ ಅನುಗುಣವಾಗಿ ಪರಿಶಿಷ್ಟ ಜಾತಿ, ಪರಿಶಿಷ್ಠ ವರ್ಗಗಳ ಮೀಸಲಾತಿಯ ಹೆಚ್ಚಳಕ್ಕೆ ಕೇಂದ್ರವನ್ನು ಒತ್ತಾಯಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಅವರು ಇಂದು ಶ್ರೀ ಮಹರ್ಷಿ ವಾಲ್ಮೀಕಿ ಗುರುಪೀಠ ರಾಜನಹಳ್ಳಿ ಇವರ ವತಿಯಿಂದ ಆಯೋಜಿಸಲಾಗಿದ್ದ ಶ್ರೀ ಮಹರ್ಷಿ ವಾಲ್ಮೀಕಿ ಜಾತ್ರೆ -2026 ಜನ ಜಾಗೃತಿ ಜಾತ್ರ ಮಹೋತ್ಸವ ಉದ್ಘಾಟನ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು. ಹಕ್ಕುಗಳ ರಕ್ಷಣೆಗೆ ಶಿಕ್ಷಣ ಅಗತ್ಯ ವಾಲ್ಮೀಕಿ ಸಮುದಾಯವಷ್ಟೇ ಅಲ್ಲದೇ, ಎಲ್ಲ ಶೋಷಿತ ಸಮಾಜಗಳೂ ತಮ್ಮ ಇತಿಹಾಸ ಮರೆಯಬಾರದು. ಈ ದಿಸೆಯಲ್ಲಿ ಇಂದಿನ ಜಾತ್ರೆ ಅತ್ಯಂತ ಮಹತ್ವವಾಗಿದೆ. ಇತಿಹಾಸ ತಿಳಿಯದಿದ್ದರೆ ಭವಿಷ್ಯ ನಿರ್ಮಾಣ ಸಾಧ್ಯವಿಲ್ಲ. ಶಿಕ್ಷಣ , ಸಂಘಟನೆ ಹಾಗೂ ಹೋರಾಟಗಳಿಂದ ಮಾತ್ರ ಶೋಷಿತರು ತಮ್ಮ ಹಕ್ಕುಗಳನ್ನು ರಕ್ಷಿಸಿಕೊಳ್ಳಬಹುದು. ಮೌಢ್ಯ ಕಂದಾಚಾರಗಳಿಂದ ದೂರವಾಗಲು ಶಿಕ್ಷಣ ಅಗತ್ಯ. ಹಿಂದಿನಿಂದಲೂ ಶೋಷಿತ ಸಮುದಾಯ ಶಿಕ್ಷಣದಿಂದ ವಂಚಿತವಾಗಿತ್ತು. ಮಹರ್ಷಿ ವಾಲ್ಮೀಕಿಯವರು ಶಿಕ್ಷಣ ಪಡೆದು ರಾಮಾಯಣದಂತಹ ಮಹತ್ತರ ರಚನೆ ಮಾಡಿದರು. ಮಹಾಭಾರತ ರಚಿಸಿದ ವ್ಯಾಸ ಮುನಿಗಳು ಬೆಸ್ತರ ಸಮುದಾಯಕ್ಕೆ ಸೇರಿದವರು. ಚತುರ್ವರ್ಣ ವ್ಯವಸ್ಥೆಯಲ್ಲಿ ಶೂದ್ರರಿಗೆ ಶಿಕ್ಷಣದಿಂದ ಹೊರಗಿಡಲಾಯಿತು. ಆದರೆ ಸಂವಿಧಾನ ಜಾರಿಗೆ ಬಂದ ನಂತರ ಸಮಾನ ಅವಕಾಶಗಳು ದೊರೆಯತೊಡಗಿತು. ಶೋಷಿತರು ಶಿಕ್ಷಣದಿಂದ ಸಮಾಜದ ಮುಖ್ಯವಾಹಿನಿಗೆ ಬರಲು ಸಾಧ್ಯವಾಗುತ್ತದೆ. ಆದ್ದರಿಂದ ಸರ್ಕಾರ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡುತ್ತಿದೆ. ತಳಸಮುದಾಯದವರಿಗೆ ಆರ್ಥಿಕವಾಗಿ, ಸಾಮಾಜಿಕವಾಗಿ , ಶೈಕ್ಷಣಿಕವಾಗಿ ಶಕ್ತಿ ತುಂಬಲಾಗುತ್ತಿದೆ ಎಂದರು. ಬಿಜೆಪಿಯಿರುವ ರಾಜ್ಯಗಳಲ್ಲಿ ಎಸ್ ಸಿ ಎಸ್ ಪಿ/ಟಿಎಸ್ ಪಿ ಕಾಯ್ದೆ ಇಲ್ಲ : ನಮ್ಮ ಸರ್ಕಾರ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳಿಗೆ ಎಸ್ ಸಿ ಎಸ್ ಪಿ/ಟಿಎಸ್ ಪಿ ಯೋಜನೆಯನ್ನು ಜಾರಿಗೆ ತಂದಿತು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ಜನಸಂಖ್ಯೆಗೆ ಅನುಗುಣವಾಗಿ ಅನುದಾನ ದೊರೆಯಬೇಕೆಂದು 2013 ರಲ್ಲಿ ಜಾರಿಗೆ ತರಲಾಯಿತು. 2025-26 ಕ್ಕೆ ಈ ಯೋಜನೆಯಡಿ 42018 ಕೋಟಿ ರೂ.ಗಳನ್ನು ನೀಡಲಾಗಿದೆ. ಬಿಜೆಪಿಯವರು ನಾಲ್ಕು ವರ್ಷ ಅಧಿಕಾರದಲ್ಲಿದ್ದರೂ , ಈ ಅವಧಿಯಲ್ಲಿ 1.10 ಲಕ್ಷ ಕೋಟಿ ಮಾಡಿದರೆ, ಆದರೆ ಕಾಂಗ್ರೆಸ್ ಸರ್ಕಾರ ಮೂರು ವರ್ಷದಲ್ಲಿ 1.17 ಕೋಟಿ ರೂ.ಗಳನ್ನು ವೆಚ್ಚ ಮಾಡಿದೆ. ಇಂತಹ ಜನಪರ ಕಾನೂನನ್ನು ಜಾರಿಗೆ ತಂದ ಕೇವಲ ಮೂರು ರಾಜ್ಯಗಳಲ್ಲಿ ಕರ್ನಾಟಕವೂ ಒಂದು ಎಂಬ ಹೆಮ್ಮೆ ನಮಗಿದೆ. ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಈ ಕಾಯ್ದೆಯನ್ನು ಜಾರಿಗೆ ತಂದಿಲ್ಲ. ಸುಪ್ರೀಂ ಕೋರ್ಟ್ ನಲ್ಲಿ ಎಸ್ ಸಿ ಎಸ್ ಪಿ/ಟಿಎಸ್ ಪಿ ಕಾಯ್ದೆಯನ್ನು ಎತ್ತಿಹಿಡಿಯಲಾಗಿದೆ ಎಂದರು. ಸಮುದಾಯದ ಬೇಡಿಕೆಗಳನ್ನು ಹಂತಹಂತವಾಗಿ ಈಡೇರಿಸುವ ಭರವಸೆ ಉದ್ಯೋಗ, ಶಿಕ್ಷಣ, ಆರ್ಥಿಕ ಸಾಮಾಜಿಕ ಸಮಾನತೆ ದೊರೆಯದ ಹೊರತು ಸಮಾನತೆ ಸ್ಥಾಪಿಸಲು ಸಾಧ್ಯವಿಲ್ಲ. ಸಮುದಾಯದ ಬೇಡಿಕೆಗಳನ್ನು ಹಂತಹಂತವಾಗಿ ಈಡೇರಿಸಲಾಗುವುದು. ಸಂವಿಧಾನ ವಿರೋಧಿಗಳು ಅಧಿಕಾರದಲ್ಲಿದ್ದರೆ, ಸಂವಿಧಾನದ ಜಾರಿಯಾಗುವುದಿಲ್ಲ ಎಂಬ ಸತ್ಯವನ್ನು ಎಲ್ಲರೂ ಅರಿಯಬೇಕಿದೆ. ನಮ್ಮ ಸರ್ಕಾರ ಸಾಮಾಜಿಕ ನ್ಯಾಯದ ಪರ ಎಂದರು.
1500 ವರ್ಷಗಳ ಇತಿಹಾಸವಿರುವ ಭಟ್ಕಳದ ಪಶುಪತಿ ದೇವಸ್ಥಾನಕ್ಕೆ ಶಿಲಾನ್ಯಾಸ: ಸಚಿವ ಮಂಕಾಳು ವೈದ್ಯ ಭರವಸೆ
ಭಟ್ಕಳ: ಇಲ್ಲಿನ ಬೋಯಿರಕೇರಿಯಲ್ಲಿರುವ ಸುಮಾರು 1500 ವರ್ಷಗಳ ಇತಿಹಾಸ ಹೊಂದಿರುವ ಶ್ರೀ ಪಶುಪತಿ ದೇವಸ್ಥಾನದ ನೂತನ ಶಿಲಾಮಯ ಕಟ್ಟಡದ ಶಿಲಾನ್ಯಾಸ ಕಾರ್ಯಕ್ರಮ ಸೋಮವಾರ ನೆರವೇರಿತು. ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ ಅವರು ದೇವಸ್ಥಾನದ ನೂತನ ಕಟ್ಟಡಕ್ಕೆ ಶಿಲಾನ್ಯಾಸ ನೆರವೇರಿಸಿದರು. ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಸಚಿವರು, “ದೇವಸ್ಥಾನಗಳ ನಿರ್ಮಾಣ ಹಾಗೂ ಬಡವರ ಸೇವೆ ಪುಣ್ಯದ ಕಾರ್ಯ. ಇಂತಹ ಸೇವೆ ಮಾಡುವ ಅವಕಾಶ ದೊರೆತಿರುವುದು ನನ್ನ ಮಹಾಪುಣ್ಯ” ಎಂದು ಹೇಳಿದರು. ಪಶುಪತಿ ದೇವಸ್ಥಾನವು ಅತ್ಯಂತ ಪುರಾತನ ಕ್ಷೇತ್ರವಾಗಿದ್ದರೂ, ಹಲವು ವರ್ಷಗಳಿಂದ ಜೀರ್ಣೋದ್ಧಾರವಾಗದೇ ಉಳಿದಿತ್ತು. ಇದೀಗ ಗ್ರಾಮದ ಹಿರಿಯರು ಹಾಗೂ ಗ್ರಾಮಸ್ಥರು ಒಟ್ಟಾಗಿ ಈ ಕ್ಷೇತ್ರದ ಜೀರ್ಣೋದ್ಧಾರಕ್ಕೆ ಮುಂದಾಗಿರುವುದು ಸಂತಸದ ಸಂಗತಿ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು. ಈ ಜೀರ್ಣೋದ್ಧಾರ ಕಾರ್ಯಕ್ಕೆ ಸರ್ಕಾರದಿಂದ ಅಗತ್ಯ ಅನುದಾನ ಒದಗಿಸುವುದಾಗಿ ಹಾಗೂ ವೈಯಕ್ತಿಕವಾಗಿ ಸದಾ ಬೆಂಬಲ ನೀಡುವುದಾಗಿ ಸಚಿವರು ಇದೇ ಸಂದರ್ಭದಲ್ಲಿ ಭರವಸೆ ನೀಡಿದರು. ಮುಖ್ಯ ಅತಿಥಿಯಾಗಿದ್ದ ಮಾಜಿ ಸಚಿವ ಶಿವಾನಂದ ನಾಯ್ಕ್ ಮಾತನಾಡಿ, “ಊರಿನ ಹಿರಿಯರ ಮಾರ್ಗದರ್ಶನದಲ್ಲಿ ಯುವಕರು ದೇವಸ್ಥಾನದ ಜೀರ್ಣೋದ್ಧಾರ ಎಂಬ ಮಹತ್ತರ ಕಾರ್ಯ ಕೈಗೊಂಡಿದ್ದಾರೆ. ನೂತನ ದೇವಾಲಯವು ಶೀಘ್ರದಲ್ಲೇ ಪೂರ್ಣಗೊಳ್ಳಲಿದೆ ಎಂಬ ವಿಶ್ವಾಸವಿದ್ದು, ಅಗತ್ಯವಿರುವ ಎಲ್ಲ ರೀತಿಯ ಸಹಕಾರ ನೀಡಲಾಗುವುದು” ಎಂದು ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಗೋವಿಂದ ನಾಯ್ಕ್ ವಹಿಸಿದ್ದರು. ವೇದಿಕೆಯಲ್ಲಿ ಮಾಜಿ ಶಾಸಕ ಸುನಿಲ್ ನಾಯ್ಕ್, ನಾಮಧಾರಿ ಸಮಾಜದ ಅಧ್ಯಕ್ಷ ಅರುಣ್ ನಾಯ್ಕ್, ಉದ್ಯಮಿ ಪದ್ಮನಾಭ ಪ್ರಭು ಸೇರಿದಂತೆ ಊರಿನ ಅನೇಕ ಹಿರಿಯ ಮುಖಂಡರು ಉಪಸ್ಥಿತರಿದ್ದರು.
ಕಲಬುರಗಿ | ವಿದ್ಯಾರ್ಥಿಗಳಿಗೆ ಪರೀಕ್ಷಾ ಪ್ಯಾಡ್ ವಿತರಣೆ
ಕಲಬುರಗಿ: ನಗರದ ಪಂಡಿತ್ ರಂಗಮಂದಿರದಲ್ಲಿ ಸನ್ ಶಾಹೀನ್ ಪಬ್ಲಿಕ್ ಶಾಲೆಯ ವಾರ್ಷಿಕೋತ್ಸವದ ಕಾರ್ಯಕ್ರಮದಲ್ಲಿ ಜನವಿಕಾಸ್ ಫೌಂಡೇಶನ್ ವತಿಯಿಂದ ವಿದ್ಯಾರ್ಥಿಗಳಿಗೆ ಪರೀಕ್ಷಾ ಪ್ಯಾಡ್ ಮತ್ತು ಪೆನ್ ಗಳು ವಿತರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಶಾಹೀನ್ ಬೇಗಂ, ಮಶಾಕ್ ಪಟೇಲ್, ನಿವೃತ್ತ ಶಿಕ್ಷಕ ಮೊಹಮ್ಮದ್ ಗೇಸುದರಾಜ್, ತಾಹೇರ್ ಅಲಿ, ರೀಜ್ವಾನ್ ಸಿದ್ದಿಖಿ ಸೇರಿದಂತೆ ಶಾಲಾ ಶಿಕ್ಷಕರು ಮತ್ತು ಸಿಬ್ಬಂದಿಗಳು ಇದ್ದರು.
ಕಲಬುರಗಿ | ಮಾ.2ರಂದು ಪ್ರೀಡಂ ಪಾರ್ಕ್ನಲ್ಲಿ ಬಿಸಿಯೂಟ ತಯಾರಕರ ಬೃಹತ್ ಪ್ರತಿಭಟನೆ
ಕಲಬುರಗಿ: ರಾಜ್ಯದಲ್ಲಿರುವ ಅಕ್ಷರ ದಾಸೋಹ ಬಿಸಿಯೂಟ ತಯಾರಕರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಮಾ. 2ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ರಾಜ್ಯ ಅಕ್ಷರ ದಾಸೋಹ ಬಿಸಿಯೂಟ ತಯಾರಕರ ಫೆಡರೇಷನ್ ರಾಜ್ಯ ಪ್ರಧಾನ ಕಾರ್ಯದರ್ಶಿ ಜಿ.ಜಿ.ಅಕ್ಕಮ್ಮ ಹಾಗೂ ಜಿಲ್ಲಾ ಗೌರವ ಅಧ್ಯಕ್ಷ ಪ್ರಭುದೇವ ಯಳಸಂಗಿ ತಿಳಿಸಿದ್ದಾರೆ. ನಗರದಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ 31 ಜಿಲ್ಲೆಗಳಿಂದ ಸುಮಾರು 20 ಸಾವಿರಕ್ಕೂ ಅಧಿಕ ತಯಾರಕರು ಪ್ರತಿಭಟನೆಯಲ್ಲಿ ಭಾಗವಹಿಸುವ ನಿರೀಕ್ಷೆಯಿದೆ ಎಂದರು. ಬಿಸಿಯೂಟ ತಯಾರಕರು ಸೇವೆಯಲ್ಲಿದ್ದಾಗ ಶಾಲೆಯಲ್ಲಿ ಅಥವಾ ಹೊರಗಡೆ ಮರಣ ಹೊಂದಿದಲ್ಲಿ, ಅವರ ಕುಟುಂಬಕ್ಕೆ ಕನಿಷ್ಠ 20 ಲಕ್ಷ ರೂ. ಮರಣ ಪರಿಹಾರ ನೀಡಬೇಕು ಹಾಗೂ ಅವಲಂಬಿತ ಕುಟುಂಬ ಸದಸ್ಯರಿಗೆ ಅನುಕಂಪದ ನೌಕರಿ ನೀಡಬೇಕು ಎಂಬುದು ಪ್ರಮುಖ ಬೇಡಿಕೆಯಾಗಿದೆ. ಈ ಸೇರಿದಂತೆ ಹಲವು ಬೇಡಿಕೆಗಳನ್ನು ನಗರದ ಹಿಂದಿ ಪ್ರಚಾರ ಸಭಾಭವನದಲ್ಲಿ ಭಾನುವಾರ ನಡೆದ ಜಿಲ್ಲಾ ಸಮಾವೇಶದಲ್ಲಿ ಅಂಗೀಕರಿಸಿ ನಿರ್ಣಯ ಕೈಗೊಳ್ಳಲಾಗಿದೆ ಎಂದು ತಿಳಿಸಿದರು. ತಯಾರಕರು ಹಾಗೂ ಅವರ ಕುಟುಂಬ ಸದಸ್ಯರ ವೈದ್ಯಕೀಯ ಚಿಕಿತ್ಸೆಯ ಸಂಪೂರ್ಣ ವೆಚ್ಚವನ್ನು ಸರ್ಕಾರವೇ ಭರಿಸಬೇಕು ಅಥವಾ ಅವರನ್ನು ಇಎಸ್ಐ ವ್ಯಾಪ್ತಿಗೆ ಒಳಪಡಿಸಬೇಕು. ವೇತನ ಮತ್ತು ಭತ್ಯೆಗಳನ್ನು ವಿಳಂಬವಿಲ್ಲದೆ ಪಾವತಿಸಬೇಕು. ಕನಿಷ್ಠ ವೇತನ ಜಾರಿಗೊಳಿಸಬೇಕು. 2022-23ನೇ ಸಾಲಿನಿಂದ ನಿವೃತ್ತಿಯಾಗುತ್ತಿರುವ ಬಿಸಿಯೂಟ ತಯಾರಕರ ಬಾಕಿ ಇಡುಗಂಟು ಹಣವನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು. ಸುದ್ದಿಗೋಷ್ಠಿಯಲ್ಲಿ ಯಶೋಧಾ ರಾಠೋಡ್, ಸರೋಜಿನಿ ಹೀರಾಪುರ, ಶಿವಲಿಂಗಮ್ಮ ಲೆಂಗಟಿಕರ್, ಅನೀತಾ ಸೊಂತ ಸೇರಿದಂತೆ ಹಲವು ಪದಾಧಿಕಾರಿಗಳು ಉಪಸ್ಥಿತರಿದ್ದರು.
ಕರ್ನಾಟಕದಲ್ಲಿ ಈ ಬಾರಿ ಅವಧಿಗೆ ಮುನ್ನವೇ ಬೇಸಿಗೆಯ ಬೇಗೆ ಆರಂಭ! ಏನು ಹೇಳ್ತಾರೆ ಹವಾಮಾನ ತಜ್ಞರು?
Karnataka Weather- ಈ ಬಾರಿ ತೀವ್ರ ಚಳಿ ಅನುಭವಿಸಿದ್ದಾಯ್ತು. ಇದೀಗ ಕರ್ನಾಟಕ ರಾಜ್ಯದ ಜನತೆ ಕಡು ಬೇಸಗೆಯನ್ನು ಎದುರಿಸಲು ಸಿದ್ಧವಾಗಬೇಕಿದೆ. ಈ ಬಾರಿ ಅವಧಿಗೆ ಮುನ್ನವೇ ಬೇಸಿಗೆಯ ತಾಪ ಆರಂಭ ಆಗಲಿದೆ ಎಂದು ಹವಾಮಾನ ತಜ್ಞರು ಮಾಹಿತಿ ನೀಡಿದ್ದಾರೆ. ಫೆಬ್ರವರಿ ಮೂರನೇ ವರದಿಂದ ಬೇಸಿಗೆ ಆರಂಭವಾಗುವ ಸಾಧ್ಯತೆ ಇದೆ. ಕರಾವಳಿ ಸೇರಿದಂತೆ ಕೆಲ ಭಾಗಗಳಲ್ಲಿ ಗರಿಷ್ಠ ತಾಪಮಾನ 2ರಿಂದ 3 ಡಿಗ್ರಿಯಷ್ಟು ಹೆಚ್ಚಳವಾಗುವ ಸಂಭವ ಇದೆ. ಶಾಖದ ಅಲೆಯ ಪ್ರಭಾವ ಹೆಚ್ಚಾಗುವ ಸಾಧ್ಯತೆಗಳಿವೆ.
ಮಧ್ಯಪ್ರದೇಶ| 100ರೂ. ಮೌಲ್ಯದ ಗೋದಿ ಕಳ್ಳತನ ಆರೋಪ: 45 ವರ್ಷಗಳ ಬಳಿಕ ಆರೋಪಿಯ ಬಂಧನ
ಭೋಪಾಲ.ಫೆ.9: ಜನಮಾನಸದಿಂದ ಅಳಿಸಿ ಹೋಗಿದ್ದಿರಬಹುದಾದ, 1980ರಲ್ಲಿ ಮಧ್ಯಪ್ರದೇಶದ ಖರ್ಗೋನ್ ಜಿಲ್ಲೆಯ ಗ್ರಾಮವೊಂದರಲ್ಲಿ ನಡೆದಿದ್ದ ಕೇವಲ ನೂರು ರೂ.ಮೌಲ್ಯದ ಗೋದಿ ಕಳ್ಳತನವು ಮತ್ತೆ ಮುನ್ನೆಲೆಗೆ ಬಂದಿದೆ. ಬಲ್ಕಾವಾಡಾ ಪೋಲಿಸ್ ಠಾಣಾ ವ್ಯಾಪ್ತಿಯ ಬಲ್ಖಾಡ್ ಗ್ರಾಮದ ಸಮೀಪದ ಹೊಲಕ್ಕೆ ನುಗ್ಗಿದ್ದ ಸಲೀಂ ಮತ್ತು ಇತರ ಆರು ಜನರು ನೂರು ರೂ.ಮೌಲ್ಯದ ಗೋದಿಯನ್ನು ಕದ್ದ ಬಗ್ಗೆ ಪೋಲಿಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದರು. ಆಗ 20 ವರ್ಷದವನಾಗಿದ್ದ ಸಲೀಂ ಘಟನೆಯ ಬಳಿಕ ಕುಟುಂಬದೊಂದಿಗೆ ನೆರೆಯ ಧಾರ್ ಜಿಲ್ಲೆಗೆ ಸ್ಥಳಾಂತರಗೊಂಡು ಅಲ್ಲಿಯ ಬಾಗ್ ಪ್ರದೇಶದಲ್ಲಿ ತನ್ನ ಬದುಕನ್ನು ಮತ್ತೆ ಕಟ್ಟಿಕೊಂಡಿದ್ದ. ಈಗ 65 ವರ್ಷ ಪ್ರಾಯವಾಗಿರುವ ಸಲೀಂ ಅಲ್ಲಿ ಸಣ್ಣ ಅಂಗಡಿಯೊಂದನ್ನು ನಡೆಸುತ್ತಿದ್ದು,ಕುಟುಂಬವನ್ನು ಹೊಂದಿದ್ದಾನೆ. ಮಧ್ಯಪ್ರದೇಶ ಪೋಲಿಸರು ಸುದೀರ್ಘ ಕಾಲದಿಂದ ಬಾಕಿಯುಳಿದಿರುವ ಪ್ರಕರಣಗಳಿಗೆ ಅಂತ್ಯ ಕಾಣಿಸಲು ಮತ್ತು ತಲೆ ಮರೆಸಿಕೊಂಡಿರುವ ಆರೋಪಿಗಳನ್ನು ಬಂಧಿಸಲು ರಾಜ್ಯಾದ್ಯಂತ ನಡೆಸುತ್ತಿರುವ ಅಭಿಯಾನ ಸಲೀಂ ಬಂಧನಕ್ಕೆ ಕಾರಣವಾಗಿದೆ. ಸಲೀಂ ಇರುವಿಕೆಯ ಬಗ್ಗೆ ಮಾಜಿ ಸಹಚರನೋರ್ವ ನೀಡಿದ ಮಾಹಿತಿಯನ್ನು ಆಧರಿಸಿ ಪೋಲಿಸರು ಆತನನ್ನು ಬಂಧಿಸಿದ್ದಾರೆ. ಅಪರಾಧವು ಜುಜುಬಿ ಕಳ್ಳತನದ್ದಾಗಿದ್ದರೂ 45 ವರ್ಷಗಳ ಬಳಿಕ ನಡೆದ ಬಂಧನವು ಪ್ರಕರಣವನ್ನು ವಿಶಿಷ್ಟವಾಗಿಸಿದೆ.
ವಾಡಿ | ಐಎನ್ಎ ಸಾಹಸಗಾಥೆ ಶಾಲಾ ಪಠ್ಯದಲ್ಲಿ ಸೇರಲಿ: ಮಹೇಶ್ ಎಸ್.ಬಿ
ವಾಡಿ: ಭಾರತವನ್ನು ಬ್ರಿಟೀಷರ ಆಳ್ವಿಕೆಯಿಂದ ಮುಕ್ತಗೊಳಿಸಲು ನೇತಾಜಿ ಸುಭಾಷ್ಚಂದ್ರ ಬೋಸ್ ಅವರು ಸ್ಥಾಪಿಸಿದ್ದ ಇಂಡಿಯನ್ ನ್ಯಾಷನಲ್ ಆರ್ಮಿ (ಐಎನ್ಎ)ಯ ಸಾಹಸಗಾಥೆಯನ್ನು ಶಾಲಾ ಪಠ್ಯಕ್ರಮದಲ್ಲಿ ಸೇರಿಸಬೇಕು ಎಂದು ಅಖಿಲ ಭಾರತ ರೈತ ಕೃಷಿ ಕಾರ್ಮಿಕ ಸಂಘಟನೆ (ಎಐಕೆಕೆಎಂಎಸ್) ಜಿಲ್ಲಾ ಕಾರ್ಯದರ್ಶಿ ಮಹೇಶ್ ಎಸ್.ಬಿ ಅವರು ಆಗ್ರಹಿಸಿದರು. ಹಲಕರಟಿ ಗ್ರಾಮದಲ್ಲಿ ಎಐಡಿಎಸ್ಒ, ಎಐಡಿವೈಒ ಹಾಗೂ ಎಐಕೆಕೆಎಂಎಸ್ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ನೇತಾಜಿ ಸುಭಾಷ್ಚಂದ್ರ ಬೋಸ್ ಜನ್ಮದಿನಾಚರಣೆಯ ಬಹಿರಂಗ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು. ಭಾರತದಲ್ಲಿ ಎರಡು ನೂರು ವರ್ಷಗಳ ಕಾಲ ಕ್ರೌರ್ಯ ಮೆರೆದ ಬ್ರಿಟೀಷರು, ಸ್ವಾತಂತ್ರ್ಯ ಚಳವಳಿಯ ಸಂಧಾನಪರ ನಾಯಕರಿಗೆ ಕಿಂಚಿತ್ತೂ ಬೆದರಲಿಲ್ಲ. ಆದರೆ ನೇತಾಜಿ ಸುಭಾಷ್ಚಂದ್ರ ಬೋಸ್, ಭಗತ್ ಸಿಂಗ್, ಚಂದ್ರಶೇಖರ ಆಜಾದ್, ಅಶ್ಫಾಕುಲ್ಲಾ ಖಾನ್, ಖುದಿರಾಂ ಬೋಸ್ ಮೊದಲಾದ ಕ್ರಾಂತಿಕಾರಿಗಳ ಹೋರಾಟದ ತೀವ್ರತೆಗೆ ಬ್ರಿಟೀಷರು ತತ್ತರಿಸಿದರು. ಇಂತಹ ಶ್ರೇಷ್ಠ ಹೋರಾಟಗಾರರ ಇತಿಹಾಸವನ್ನು ಸರ್ಕಾರಗಳು ಮಕ್ಕಳಿಗೆ ಸಮರ್ಪಕವಾಗಿ ಬೋಧಿಸಲು ಹಿಂದೇಟು ಹಾಕುತ್ತಿರುವುದು ವಿಷಾದನೀಯ ಎಂದು ಅವರು ಆಪಾದಿಸಿದರು. ಸ್ವಾತಂತ್ರ್ಯಾನಂತರ ಅಧಿಕಾರಕ್ಕೆ ಬಂದ ರಾಜಕೀಯ ಪಕ್ಷಗಳು ಶೋಷಣಾ ವ್ಯವಸ್ಥೆಯನ್ನು ಮುಂದುವರಿಸಿಕೊಂಡು ಬಂದಿವೆ. ಶಿಕ್ಷಣ ದುಬಾರಿಯಾಗಿದೆ, ಉದ್ಯೋಗಾವಕಾಶಗಳು ಕಡಿಮೆಯಾಗಿವೆ, ಭ್ರಷ್ಟಾಚಾರ ಹೆಚ್ಚಾಗಿದೆ. ಸಮಾನತೆಯ ಸಮಾಜ ನಿರ್ಮಾಣಕ್ಕಾಗಿ ಜನರು ಜಾಗೃತರಾಗಬೇಕು ಎಂದು ಅವರು ಕರೆ ನೀಡಿದರು. ಸಭೆಯಲ್ಲಿ ಗೌತಮ್ ಪರ್ತೂರಕರ, ಭೀಮಪ್ಪ ಮಾಟ್ನಳ್ಳಿ, ಚೌಡಪ್ಪ ಗಂಜಿ, ಮಹಾಂತೇಶ ಹುಳಗೊಳ, ಸಾಬಣ್ಣ ಸುಣಗಾರ, ದತ್ತಾತ್ರೇಯ ಹುಡೇಕರ್, ರಮೇಶ್ ಮಣಿಗಿರಿ, ಶಿವಕುಮಾರ ಆಂದೋಲಾ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.
ಸೇಡಂ | ಜಾನಪದ ಸಾಹಿತ್ಯ ಉಳಿಸಲು ರಾಜಕುಮಾರ್ ಪಾಟೀಲ್ ತೆಲ್ಕೂರ ಕರೆ
ಸೇಡಂ: ಮನುಷ್ಯನ ಜೀವನದಲ್ಲಿ ಜಾನಪದ ಸಾಹಿತ್ಯ ಮಹತ್ವದ್ದಾಗಿದ್ದು, ಅದನ್ನು ಉಳಿಸಿ ಬೆಳೆಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ಮಾಜಿ ಶಾಸಕ ರಾಜಕುಮಾರ್ ಪಾಟೀಲ್ ತೆಲ್ಕೂರ ಹೇಳಿದರು. ಪಟ್ಟಣದ ಕರ್ನಾಟಕ ನೌಕರರ ಭವನದಲ್ಲಿ ಕನ್ನಡ ಜಾನಪದ ಸಾಹಿತ್ಯ ವತಿಯಿಂದ ಆಯೋಜಿಸಿದ್ದ ತಾಲೂಕು ಜಾನಪದ ಸಮ್ಮೇಳನದಲ್ಲಿ ಶತಮಾನೋತ್ಸವ ಲೋಗೋ ಬಿಡುಗಡೆಗೊಳಿಸಿ ಅವರು ಮಾತನಾಡಿದರು. ಎಲ್ಲಾ ಕ್ಷೇತ್ರಗಳಲ್ಲಿ ಜಾನಪದ ಕಲೆ ಮರೆಮಾಚುತ್ತಿರುವುದು ವಿಷಾದನೀಯ. ಜಾನಪದ ಸಾಹಿತ್ಯವು ಶ್ರೇಷ್ಠವಾದ ಪರಂಪರೆ; ಅದನ್ನು ನಾವು ಕಾಪಾಡಿ ಮುಂದಿನ ಪೀಳಿಗೆಗೆ ಹಸ್ತಾಂತರಿಸಬೇಕಾಗಿದೆ ಎಂದರು. ಸಮ್ಮೇಳನದ ಸರ್ವಾಧ್ಯಕ್ಷರಾದ ಡಾ. ಎಂ.ಜಿ. ದೇಶಪಾಂಡೆ ಮಾತನಾಡಿ, ಹಿಂದಿನ ಕಾಲದಲ್ಲಿ ಬೆಳಗ್ಗೆ ಎದ್ದ ಕೂಡಲೇ ತಾಯಿಯ ಕಟ್ಟುವ, ಬೀಸುವ ಹಾಗೂ ಮಗುವಿನ ಲಾಲಿ ಹಾಡುಗಳು ಕೇಳಿಬರುತ್ತಿದ್ದವು. ಇಂದಿನ ದಿನಗಳಲ್ಲಿ ಆ ಪರಂಪರೆ ಮರೆಯಾಗುತ್ತಿದೆ. ಮನೆಗಳಲ್ಲಿ ಪರಂಪರೆಯ ಆಹಾರ ಪದ್ಧತಿಗಳ ಬದಲು ರಾಸಾಯನಿಕ ಮಿಶ್ರಿತ ಆಹಾರ ಪದಾರ್ಥಗಳಿಗೆ ಆದ್ಯತೆ ನೀಡಲಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ಕಜಾಪ ರಾಜ್ಯಾಧ್ಯಕ್ಷ ಡಾ. ಎಸ್. ಬಾಲಾಜಿ, ಜಿಲ್ಲಾಧ್ಯಕ್ಷ ಎಂ.ಬಿ. ನಿಂಗಪ್ಪ, ತಾಲೂಕು ಅಧ್ಯಕ್ಷ ಶಿವರಾವ್ ಭೋವಿ, ಶ್ರೀ ವಿರಕ್ತ ಮಠದ ಪರಮ ಪೂಜ್ಯ ಶ್ರೀ ಪಂಚಾಕ್ಷರ ಸ್ವಾಮಿಜಿಗಳು, ಬಸವರಾಜ ಪಾಟೀಲ್ ಉಡಗಿ, ಪತ್ರಕರ್ತ ಪ್ರಭಾಕರ ಜೋಶಿ, ಹಿರಿಯ ಸಾಹಿತಿ ಮುಡುಬಿ ಗುಂಡೆರಾವ್, ಲಿಂಗರೆಡ್ಡಿ ಶೇರಿ, ಶೋಭಾದೇವಿ ಚಿಕ್ಕಿ, ಶ್ರೀನಿವಾಸ ಮೊಕದ್ದಮ್, ಶಿವಯೋಗಿ ಸಂಕಲ್ಪ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಜ್ಯೋತಿ ಲಿಂಗಂಪಲ್ಲಿ ನಿರೂಪಿಸಿದರು. ಡಾ. ಜಗನ್ನಾಥ ತರನಳ್ಳಿ ವಂದಿಸಿದರು. ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಡಾ. ಸಾಬಯ್ಯ ಬೋವಿ, ಶಿವಯ್ಯ ಸ್ವಾಮಿ ಬಿಬ್ಬಳ್ಳಿ, ಡಾ. ಶ್ರೀನಿವಾಸ ಮೊಕದ್ದಮ್ ಹಾಗೂ ಉಮೇಶ್ ಚೌವ್ಹಾಣ್ ಅವರನ್ನು ವೇದಿಕೆಯಲ್ಲಿ ಕಜಾಪ ದಶಮಾನೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಕಲಬುರಗಿ | ಫೆ.15ರಂದು ಶ್ರೀ ಸಂತ ಸೇವಾಲಾಲ್ ಮಹಾರಾಜರ ಜಯಂತಿ ಆಚರಣೆ
ಕಲಬುರಗಿ: ಕಲಬುರಗಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮಹಾನಗರ ಪಾಲಿಕೆ ಹಾಗೂ ಜಿಲ್ಲಾ ಪಂಚಾಯತ್ ಸಂಯುಕ್ತಾಶ್ರಯದಲ್ಲಿ ಸಂತ ಶ್ರೀ ಸೇವಾಲಾಲ್ ಮಹಾರಾಜರ ಜಯಂತಿ ಆಚರಣೆ ಕಾರ್ಯಕ್ರಮವನ್ನು ಫೆ.15 ರಂದು ರವಿವಾರ ಮಧ್ಯಾಹ್ನ 2 ಗಂಟೆಗೆ ನಗರದ ಡಾ. ಎಸ್.ಎಂ. ಪಂಡಿತ ರಂಗಮಂದಿರದಲ್ಲಿ ಆಯೋಜಿಸಲಾಗಿದೆ. ಕಾರ್ಯಕ್ರಮಕ್ಕೆ ಪಂಗರಗಾ ಬೆಡ್ಸೂರು ಸೋನ್ಯಾಲಗಿರಿ ಶ್ರೀ ಪರವತಲಿಂಗ ಪರಮೇಶ್ವರ ಮಹಾರಾಜರು, ಚಿತ್ತಾಪುರ ತಾಲೂಕಿನ ಮುಗಳನಾಗಾಂವ ಶ್ರೀ ಯಲ್ಲಾಲಿಂಗ ಪುಣ್ಯಾಶ್ರಮ ಮಹಾನಗರದ ಶ್ರೀ ಜೇಮಸಿಂಗ್ ಮಹಾರಾಜರು, ಗೊಬ್ಬುರವಾಡಿ ಸಂತ ಶ್ರೀ ಸೇವಾಲಾಲ್ ಪುಣ್ಯಾಶ್ರಮದ ಶ್ರೀ ಬಳಿರಾಮ ಮಹಾರಾಜರು ಹಾಗೂ ಕೆಸರಟಗಿ ಸುಕ್ಷೇತ್ರದ ಮಾತಾ ಲತಾ ದೇವಿ ದಿವ್ಯ ಸಾನಿಧ್ಯ ವಹಿಸುವರು. ರಾಜ್ಯಸಭೆಯ ವಿರೋಧ ಪಕ್ಷದ ನಾಯಕರು ಹಾಗೂ ರಾಜ್ಯಸಭಾ ಸದಸ್ಯರಾದ ಡಾ. ಮಲ್ಲಿಕಾರ್ಜುನ ಖರ್ಗೆ ಅವರು ಘನ ಉಪಸ್ಥಿತಿ ವಹಿಸಲಿದ್ದಾರೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಮಾಹಿತಿ ತಂತ್ರಜ್ಞಾನ ಹಾಗೂ ಜೈವಿಕ ತಂತ್ರಜ್ಞಾನ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಿಯಾಂಕ್ ಖರ್ಗೆ ಅವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ರಾಜ್ಯದ ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಸಚಿವರಾದ ಡಾ. ಶರಣಪ್ರಕಾಶ ಪಾಟೀಲ, ಆಳಂದ ಶಾಸಕ ಹಾಗೂ ಕರ್ನಾಟಕ ರಾಜ್ಯ ನೀತಿ ಮತ್ತು ಯೋಜನಾ ಆಯೋಗದ ಉಪಾಧ್ಯಕ್ಷರಾದ ಬಿ.ಆರ್. ಪಾಟೀಲ, ಕರ್ನಾಟಕ ರೇಷ್ಮೆ ಉದ್ದಿಮೆಗಳ ನಿಗಮದ ಅಧ್ಯಕ್ಷೆ ಹಾಗೂ ಉತ್ತರ ಶಾಸಕಿ ಕನೀಜ್ ಫಾತೀಮಾ, ಜೇವರ್ಗಿ ಶಾಸಕ ಹಾಗೂ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಅಧ್ಯಕ್ಷರಾದ ಡಾ. ಅಜಯಸಿಂಗ್ ಅವರು ಗೌರವ ಉಪಸ್ಥಿತಿ ವಹಿಸಲಿದ್ದಾರೆ. ಕಲಬುರಗಿ ದಕ್ಷಿಣ ಶಾಸಕ ಅಲ್ಲಮಪ್ರಭು ಪಾಟೀಲ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಕಲಬುರಗಿ ಲೋಕಸಭಾ ಸದಸ್ಯ ರಾಧಾಕೃಷ್ಣ ದೊಡ್ಡಮನಿ, ಬೀದರ್ ಲೋಕಸಭಾ ಸದಸ್ಯ ಸಾಗರ್ ಖಂಡ್ರೆ, ಶಾಸಕರುಗಳಾದ ಎಂ.ವೈ. ಪಾಟೀಲ, ಬಸವರಾಜ ಮತ್ತಿಮಡು, ಡಾ. ಅವಿನಾಶ ಜಾಧವ, ವಿಧಾನ ಪರಿಷತ್ ಶಾಸಕರುಗಳಾದ ಶಶೀಲ ಜಿ. ನಮೋಶಿ, ಡಾ. ಬಿ.ಜಿ.ಪಾಟೀಲ, ಡಾ. ಚಂದ್ರಶೇಖರ ಪಾಟೀಲ ಹುಮನಾಬಾದ, ತಿಮ್ಮಣ್ಣಪ್ಪ ಕಮಕನೂರ, ಸುನೀಲ್ ವಲ್ಲ್ಯಾಪುರೆ, ಡಾ. ತಳವಾರ ಸಾಬಣ್ಣ, ಜಗದೇವ ಗುತ್ತೇದಾರ್, ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಅಧ್ಯಕ್ಷ ದೇವಿಂದ್ರಪ್ಪ ಮರತೂರ, ಕರ್ನಾಟಕ ರಾಜ್ಯ ವಕ್ಪ್ ಮಂಡಳಿಯ ಅಧ್ಯಕ್ಷ ಸೈಯದ್ ಮುಹಮ್ಮದ್ ಅಲಿ ಅಲ್ ಹುಸೇನಿ, ಅಚ್ಚುಕಟ್ಟು ಪ್ರದೇಶ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಅಬ್ದುಲ್ ರಶೀದ, ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷ ಅರುಣಕುಮಾರ್ ಎಂ.ವೈ. ಪಾಟೀಲ, ಜೆಸ್ಕಾಂ ಅಧ್ಯಕ್ಷ ಪ್ರವೀಣ ಪಾಟೀಲ ಹರವಾಳ, ಕರ್ನಾಟಕ ರಾಜ್ಯ ದ್ವಿದಳ ಧಾನ್ಯ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಸೈಯ್ಯದ್ ಮಹೆಬೂಬ್ ಚಿಸ್ತಿ ಸಾಹೇಬ್, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾ ಅಧ್ಯಕ್ಷೆ ಚಂದ್ರಿಕಾ ಪರಮೇಶ್ವರ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಜಹರ್ ಆಲಂ ಖಾನ್ ಹಾಗೂ ಮಹಾನಗರಪಾಲಿಕೆ ಮಹಾಪೌರ ವರ್ಷಾ ರಾಜೀವ ಜಾನೆ ಅವರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು. ಕಲಬುರಗಿ ವಿಭಾಗದ ಪ್ರಾದೇಶಿಕ ಆಯುಕ್ತೆ ಜಹೀರಾ ನಸೀಮ್, ಕಲಬುರಗಿ ಈಶಾನ್ಯ ವಲಯದ ಪೊಲೀಸ್ ಉಪ ಮಹಾನಿರೀಕ್ಷಕ ಶಾಂತನು ಸಿನ್ಹಾ, ಜೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಕೃಷ್ಣ ಭಾಜಪೇಯಿ, ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಕಾರ್ಯದರ್ಶಿ ನಲಿನ್ ಅತುಲ್, ಕೆ.ಕೆ.ಆರ್.ಟಿ.ಸಿ. ವ್ಯವಸ್ಥಾಪಕ ನಿರ್ದೇಶಕಿ ಡಾ. ಬಿ. ಸುಶೀಲಾ, ಕಲಬುರಗಿ ವಿಭಾಗದ ಶಾಲಾ ಶಿಕ್ಷಣ ಇಲಾಖೆಯ ಅಪರ ಆಯುಕ್ತ ಪಾಂಡ್ವೆ ರಾಹುಲ್ ತುಕಾರಾಮ್, ಮಾಜಿ ಸಚಿವರು ಹಾಗೂ ಶ್ರೀ ಸಂತ ಸೇವಾಲಾಲ್ ಮಹಾರಾಜ ಸಮಾಜದ ಗೌರವಾಧ್ಯಕ್ಷರಾದ ರೇವುನಾಯಕ ಬೆಳಮಗಿ ಅವರು ವಿಶೇಷ ಆಹ್ವಾನಿತರಾಗಿ ಪಾಲ್ಗೊಳ್ಳುವರು. ಕಾರ್ಯಕ್ರಮದಲ್ಲಿ ಸಮಾಜದ ಮುಖಂಡರಾದ ಡಾ. ಗಣಪತಿ ರಾಠೋಡ ಅವರು ವಿಶೇಷ ಉಪನ್ಯಾಸ ನೀಡುವರು.
ಉದ್ಯೋಗ ಅರ್ಜಿ ಶುಲ್ಕವಾಗಿ ನಿರುದ್ಯೋಗಿ ಯುವಜನರಿಂದ 48 ಕೋಟಿ.ರೂ. ಸಂಗ್ರಹಿಸಿದ ಜಮ್ಮು-ಕಾಶ್ಮೀರ ಸರಕಾರ
ಶ್ರೀನಗರ, ಫೆ. 9: ಕಳೆದ ಎರಡು ವರ್ಷಗಳಲ್ಲಿ ಸರಕಾರಿ ಉದ್ಯೋಗಗಳಿಗೆ ಅರ್ಜಿ ಸಲ್ಲಿಸಿದ ನಿರುದ್ಯೋಗಿ ಯುವಕರಿಂದ ಜಮ್ಮು ಹಾಗೂ ಕಾಶ್ಮೀರ ಸರಕಾರ 48 ಕೋ.ರೂ. ಶುಲ್ಕ ಸಂಗ್ರಹಿಸಿದೆ. ಜಮ್ಮು ಹಾಗೂ ಕಾಶ್ಮೀರದಲ್ಲಿ ನಿರುದ್ಯೋಗದ ಪ್ರಮಾಣ ಶೇ. 6.7 ಇದೆ. ಇದು ರಾಷ್ಟ್ರೀಯ ಸರಾಸರಿ ಶೇ. 3.5ಕ್ಕಿಂತ ಹೆಚ್ಚು. ಪಿಡಿಪಿ ಶಾಸಕ ವಹೀದ್ ಉರ್ ರೆಹ್ಮಾನ್ ಪಾರಾ ಅವರ ಪ್ರಶ್ನೆಗೆ ಲಿಖಿತ ಉತ್ತರದಲ್ಲಿ ಸರಕಾರ ಸೋಮವಾರ ವಿಧಾನ ಸಭೆಗೆ ಈ ಮಾಹಿತಿ ನೀಡಿತು. ಜಮ್ಮು ಹಾಗೂ ಕಾಶ್ಮೀರದ ಎರಡು ನೇಮಕಾತಿ ಸಂಸ್ಥೆಗಳಾದ ಜಮ್ಮು ಹಾಗೂ ಕಾಶ್ಮೀರ ನಾಗರಿಕ ಸೇವಾ ಆಯೋಗ ಮತ್ತು ಜಮ್ಮು ಹಾಗೂ ಕಾಶ್ಮೀರ ಸೇವೆಗಳ ಆಯ್ಕೆ ಮಂಡಳಿ ನಿರುದ್ಯೋಗಿ ಯುವಕರಿಂದ ಅರ್ಜಿ ಶುಲ್ಕವನ್ನು ಸಂಗ್ರಹಿಸಿವೆ ಎಂದು ಅದು ಹೇಳಿದೆ. ಈ ಎರಡು ಸಂಸ್ಥೆಗಳು ಕಳೆದ ಎರಡು ಹಣಕಾಸು ವರ್ಷಗಳಲ್ಲಿ ಒಟ್ಟಾಗಿ 48 ಕೋ.ರೂ.ಗೂ ಅಧಿಕ ಸಂಗ್ರಹಿಸಿವೆ ಎಂದು ಅದು ತಿಳಿಸಿದೆ.
ಎಸ್ಐಆರ್ ಪ್ರಕ್ರಿಯೆಗೆ ಯಾವುದೇ ರೀತಿಯ ಅಡಚಣೆಗೆ ಅವಕಾಶ ನೀಡುವುದಿಲ್ಲ: ರಾಜ್ಯಗಳಿಗೆ ಸುಪ್ರೀಂ ಕೋರ್ಟ್ ಎಚ್ಚರಿಕೆ
ಹೊಸದಿಲ್ಲಿ, ಫೆ. 9: ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್ಐಆರ್) ಪ್ರಕ್ರಿಯೆಗೆ ಯಾವುದೇ ರೀತಿಯ ಅಡಚಣೆಗೆ ಅವಕಾಶ ನೀಡುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಎಲ್ಲಾ ರಾಜ್ಯ ಸರಕಾರಗಳಿಗೆ ಎಚ್ಚರಿಕೆ ನೀಡಿದೆ. ‘‘ತಾರ್ಕಿಕ ವ್ಯತ್ಯಾಸ’’ ಪಟ್ಟಿಯಲ್ಲಿ ಮತದಾರರನ್ನು ಸೇರಿಸಿದ ವಿಧಾನವನ್ನು ಪ್ರಶ್ನಿಸುವ ಮಮತಾ ಬ್ಯಾನರ್ಜಿ ಅವರ ಅರ್ಜಿ ಸೇರಿದಂತೆ ಪಶ್ಚಿಮಬಂಗಾಳದ ಎಸ್ಐಆರ್ಗೆ ಸಂಬಂಧಿಸಿದ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ಸೋಮವಾರ ವಿಚಾರಣೆ ನಡೆಸಿತು. ಅಲ್ಲದೆ ಪಶ್ಚಿಮಬಂಗಾಳದಲ್ಲಿ ಎಸ್ಐಆರ್ಗೆ ನೀಡಲಾಗಿದ್ದ ಗಡುವನ್ನು ಮತ್ತೆ ಒಂದು ವಾರಗಳ ಕಾಲ ವಿಸ್ತರಿಸಿತು. ‘‘ಯಾವುದೇ ಆದೇಶಗಳು ಅಥವಾ ಸ್ಪಷ್ಟನೆಗಳು ಅಗತ್ಯವಿದ್ದರೆ, ನಾವು ಹೊರಡಿಸುತ್ತೇವೆ. ಆದರೆ, ನಾವು ಎಸ್ಐಆರ್ ಪ್ರಕ್ರಿಯೆಗೆ ಯಾವುದೇ ರೀತಿಯ ಅಡಚಣೆಗೆ ಅವಕಾಶ ನೀಡುವುದಿಲ್ಲ. ಇದನ್ನು ಎಲ್ಲಾ ರಾಜ್ಯಗಳು ಅರ್ಥ ಮಾಡಿಕೊಳ್ಳಬೇಕು’’ ಎಂದು ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಅವರು ಹೇಳಿದರು. ಎಸ್ಐಆರ್ ಕರ್ತವ್ಯಕ್ಕೆ ಚುನಾವಣಾ ಆಯೋಗಕ್ಕೆ ಬಿ ಗುಂಪಿನ ಅಧಿಕಾರಿಗಳನ್ನು ಒದಗಿಸುವಂತೆ ಸುಪ್ರೀಂ ಕೋರ್ಟ್ ಪಶ್ಚಿಮಬಂಗಾಳ ಸರಕಾರಕ್ಕೆ ನಿರ್ದೇಶಿಸಿತು. ಇಸಿಐ ನಿಯೋಜಿಸಿದ ತಳಮಟ್ಟದ ವೀಕ್ಷಕರನ್ನು ಬದಲಾಯಿಸಲು ಅನುಮತಿ ನೀಡಿತು. ಹಕ್ಕು ಪ್ರತಿಪಾದನೆ ಹಾಗೂ ಆಕ್ಷೇಪದ ಬಗ್ಗೆ ಚುನಾವಣಾ ನೋಂದಣಿ ಅಧಿಕಾರಿಗಳು ಮಾತ್ರ ಅಂತಿಮ ಆದೇಶಗಳನ್ನು ನೀಡಬಹುದು ಎಂದು ಸ್ಪಷ್ಟಪಡಿಸಿತು. ತಳಮಟ್ಟದ ವೀಕ್ಷಕರು ನೆರವು ಮಾತ್ರ ನೀಡಬಹುದು ಎಂದು ಹೇಳಿತು. ಈ ಪ್ರಕರಣವನ್ನು ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್, ನ್ಯಾಯಮೂರ್ತಿಗಳಾದ ಜೋಯ್ಮಲ್ಯ ಬಾಗ್ಚಿ ಹಾಗೂ ವಿಪುಲ್ ಎಂ. ಪಂಚೋಳಿ ಅವರನ್ನು ಒಳಗೊಂಡ ಪೀಠ ವಿಚಾರಣೆ ನಡೆಸುತ್ತಿದೆ.
ಮದುರೈ ಬೆಟ್ಟದಲ್ಲಿ ಕಾರ್ತಿಕ ದೀಪ ಬೆಳಗಲು ಅನುಮತಿಸುವ ಮದ್ರಾಸ್ ಹೈಕೋರ್ಟ್ ಆದೇಶ ಎತ್ತಿಹಿಡಿದ ಸುಪ್ರೀಂ ಕೋರ್ಟ್
ಹೊಸದಿಲ್ಲಿ,ಫೆ.9: ಮದುರೈನ ತಿರುಪರಂಕುಂಡ್ರಂ ಬೆಟ್ಟದಲ್ಲಿ ಧಾರ್ಮಿಕ ಆಚರಣೆಗಳ ಕುರಿತು ದೀರ್ಘಕಾಲದ ವಿವಾದಕ್ಕೆ ಸಂಬಂಧಿಸಿದಂತೆ ಸರ್ವೋಚ್ಚ ನ್ಯಾಯಾಲಯವು ಬೆಟ್ಟದ ಮೇಲಿರುವ ಕಲ್ಲಿನ ಸ್ತಂಭದ ಮೇಲೆ ಕಾರ್ತಿಕ ದೀಪವನ್ನು ಬೆಳಗಿಸಲು ಅಲ್ಲಿಯ ಮುರುಗನ್ ದೇವಸ್ಥಾನದ ಆಡಳಿತಕ್ಕೆ ಅನುಮತಿ ನೀಡಿರುವ ಮದ್ರಾಸ್ ಉಚ್ಚ ನ್ಯಾಯಾಲಯದ ತೀರ್ಪಿನಲ್ಲಿ ಹಸ್ತಕ್ಷೇಪ ಮಾಡಲು ಸೋಮವಾರ ನಿರಾಕರಿಸಿದೆ. ಸಮೀಪದ ನೆಲ್ಲಿತೊಪ್ಪು ನಿವೇಶನದಲ್ಲಿ ರಮಝಾನ್ ಮತ್ತು ಬಕ್ರೀದ್ ಸಂದರ್ಭಗಳನ್ನು ಹೊರತುಪಡಿಸಿ ಮುಸ್ಲಿಮರು ಪ್ರಾರ್ಥನೆ ಸಲ್ಲಿಸುವುದನ್ನೂ ಉಚ್ಚ ನ್ಯಾಯಾಲಯವು ನಿರ್ಬಂಧಿಸಿತ್ತು. 33 ಸೆಂಟ್ಸ್ ವಿಸ್ತೀರ್ಣದ ನಿವೇಶನವು ಸಿಕಂದರ್ ಬಾದುಶಾ ಔಲಿಯಾ ದರ್ಗಾದ ಒಡೆತನಕ್ಕೆ ಸೇರಿದೆ. ಪ್ರದೇಶದಲ್ಲಿ ಪ್ರಾಣಿಬಲಿಗೂ ಅವಕಾಶ ನೀಡಲು ಸಾಧ್ಯವಿಲ್ಲ ಎಂದು ಉಚ್ಚ ನ್ಯಾಯಾಲಯವು ತೀರ್ಪಿನಲ್ಲಿ ಸ್ಪಷ್ಟ ಪಡಿಸಿತ್ತು. ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ದರ್ಗಾದ ಭಕ್ತ ಇಮಾಮ್ ಹುಸೇನ್ ಸರ್ವೋಚ್ಚ ನ್ಯಾಯಾಲಯದ ಮೆಟ್ಟಿಲೇರಿದ್ದರು. ಹೈಕೋರ್ಟ್ ಆದೇಶದಲ್ಲಿ ಹಸ್ತಕ್ಷೇಪ ಮಾಡಲು ನಿರಾಕರಿಸಿದ ನ್ಯಾಯಮೂರ್ತಿಗಳಾದ ಅರವಿಂದ್ ಕುಮಾರ್ ಮತ್ತು ಪಿ.ಬಿ.ವರಾಳೆ ಅವರ ಪೀಠವು,ಅದು ಅತ್ಯಂತ ಸಮತೋಲಿತವಾಗಿದೆ ಎಂದು ಬಣ್ಣಿಸಿತು. ಪ್ರದೇಶದಲ್ಲಿ ಎಂದೂ ಕಾನೂನು ಮತ್ತು ಸುವ್ಯವಸ್ಥೆ ಸಮಸ್ಯೆಯಾಗಿರಲಿಲ್ಲ ಎಂದು ನ್ಯಾಯವಾದಿ ಪ್ರಶಾಂತ ಭೂಷಣ ಹೇಳಿದಾಗ,ಅಂತಹ ಸಮಸ್ಯೆಯಾಗಿರದಿದ್ದರೆ ಶಾಂತಿ ಸಮಿತಿಯ ಸಭೆ ನಡೆಯುತ್ತಿರಲಿಲ್ಲ ಎಂದು ನ್ಯಾ.ಕುಮಾರ ಬೆಟ್ಟು ಮಾಡಿದರು.
ಕಲಬುರಗಿ | ರೋಹಿತ್ ವೇಮುಲ ಕಾಯ್ದೆ ಜಾರಿಗೊಳಿಸಲು ದಸಂಸ ಧರಣಿ
ಯುಜಿಸಿ ನಿಯಮಗಳ ಮೇಲೆ ಸುಪ್ರೀಂ ತಡೆ ತೆರವುಗೊಳಿಸಲು ಆಗ್ರಹ
ಇರಾನ್ನ ಟಿವಿ ಪತ್ರಕರ್ತೆ ಲತೀಫಾ ಅಬೌಚಕ್ರರನ್ನು ಬಂಧಿಸಿದ ಬ್ರಿಟನ್ ಪೊಲೀಸರು
ಲಂಡನ್, ಫೆ.9: ಬರ್ಮಿಂಗ್ಹಾಮ್ನಲ್ಲಿ ಆಯೋಜಿಸಿದ್ದ ಯಹೂದಿ ವಿರೋಧಿ ಅಭಿಯಾನದ ಉದ್ಘಾಟನಾ ಕಾರ್ಯಕ್ರಮಕ್ಕೆ ತೆರಳುತ್ತಿದ್ದ ಇರಾನ್ನ ಸರಕಾರಿ ಸ್ವಾಮ್ಯದ ಪ್ರೆಸ್ ಟಿವಿಯ ಲಂಡನ್ ಮೂಲದ ಪತ್ರಕರ್ತೆಯನ್ನು ಬ್ರಿಟನ್ ಪೊಲೀಸರು ರವಿವಾರ ಬಂಧಿಸಿರುವುದಾಗಿ ವರದಿಯಾಗಿದೆ. 35 ವರ್ಷದ ಲತೀಫಾ ಅಬೌಚಕ್ರ ಅವರನ್ನು `ಜನಾಂಗೀಯ ದ್ವೇಷವನ್ನು ಪ್ರಚೋದಿಸುವ' ಆರೋಪದಲ್ಲಿ ಬಂಧಿಸಲಾಗಿದೆ. ಯೆಹೂದಿ ವಿರೋಧಿ ಅಭಿಯಾನದ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಪಾಲ್ಗೊಳ್ಳಲು ತೆರಳುತ್ತಿದ್ದಾರೆ ಎಂಬ ಮಾಹಿತಿಯ ಮೇರೆಗೆ ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ. ಲತೀಫಾ ಕಳೆದ ವರ್ಷ ಮೇ ತಿಂಗಳಿಂದ ಅಕ್ಟೋಬರ್ ಅವಧಿಯಲ್ಲಿ ಸಾಮಾಜಿಕ ಮಾಧ್ಯಮದ ಪೋಸ್ಟ್ಗಳಿಗೆ ಸಂಬಂಧಿಸಿದಂತೆ ಸಾರ್ವಜನಿಕ ಸುವ್ಯವಸ್ಥೆ ಕಾಯ್ದೆಯಡಿಯ ಅಪರಾಧಕ್ಕಾಗಿ ಪೊಲೀಸರ `ವಾಂಟೆಡ್ ಲಿಸ್ಟ್'ನಲ್ಲಿದ್ದರು ಎಂದು ವೆಸ್ಟ್ ಮಿಡ್ಲ್ಯಾಂಡ್ಸ್ ಪೊಲೀಸರು ಹೇಳಿದ್ದಾರೆ.
ಇರಾನ್| 37 ವರ್ಷಗಳಲ್ಲಿ ಮೊದಲ ಬಾರಿಗೆ ವಾಯುಪಡೆಯ ಸಭೆಗೆ ಆಯತುಲ್ಲಾ ಆಲಿ ಖಾಮಿನೈ ಗೈರು
ಟೆಹ್ರಾನ್, ಫೆ.9: ಅಮೆರಿಕಾ-ಇರಾನ್ ಉದ್ವಿಗ್ನತೆ ಹೆಚ್ಚುತ್ತಿರುವ ನಡುವೆಯೇ 37 ವರ್ಷಗಳಲ್ಲಿ ಮೊದಲ ಬಾರಿಗೆ ಇರಾನ್ನ ಪರಮೋಚ್ಛ ನಾಯಕ ಆಯತುಲ್ಲಾ ಆಲಿ ಖಾಮಿನೈ ವಾರ್ಷಿಕ ವಾಯುಪಡೆಯ ಸಭೆಗೆ ಗೈರು ಹಾಜರಾಗಿರುವುದಾಗಿ ವರದಿಯಾಗಿದೆ. ಫೆಬ್ರವರಿ 8ರಂದು ನಡೆದಿದ್ದ ವಾಯುಪಡೆ ಕಮಾಂಡರ್ಗಳ ವಾರ್ಷಿಕ ಸಭೆಯಲ್ಲಿ ಖಾಮಿನೈ ಭಾಗವಹಿಸಲಿಲ್ಲ. ಅವರ ಬದಲು ಸಶಸ್ತ್ರ ಪಡೆಗಳ ಸಿಬ್ಬಂದಿ ಮುಖ್ಯಸ್ಥ ಅಬ್ದುಲ್ರಹೀಂ ಮೌಸವಿ ವಾಯುಪಡೆಯ ಹಿರಿಯ ಅಧಿಕಾರಿಗಳನ್ನು ಭೇಟಿಯಾದರು. 1989ರಲ್ಲಿ ಅಧಿಕಾರ ವಹಿಸಿಕೊಂಡಂದಿನಿಂದ ಪ್ರತೀ ವರ್ಷ ಖಾಮಿನೈ ಅವರ ಉಪಸ್ಥಿತಿಯಲ್ಲಿ ಸಭೆ ನಡೆಯುತ್ತಿತ್ತು. ವ್ಯಾಪಕ ಭೌಗೋಳಿಕ ರಾಜಕೀಯ ಸನ್ನಿವೇಶಗಳ ಹಿನ್ನೆಲೆಯಲ್ಲಿ ಸಭೆಯಿಂದ ದೂರವಿರುವ ಖಾಮಿನೈ ಅವರ ನಿರ್ಧಾರ ಗಮನ ಸೆಳೆದಿದೆ. ಒಮಾನ್ನಲ್ಲಿ ಇರಾನ್-ಅಮೆರಿಕಾ ನಡುವೆ ಪರಮಾಣು ಮಾತುಕತೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಇರಾನ್ನ ನಾಯಕತ್ವವು ಸಾಂಕೇತಿಕ ಶಕ್ತಿ ಪ್ರದರ್ಶನದ ಬದಲು ಕಾರ್ಯತಂತ್ರದ ಸಂಯಮಕ್ಕೆ ಆದ್ಯತೆ ನೀಡಿರಬಹುದು. ಈ ಕ್ರಮವು ಲೆಕ್ಕಾಚಾರದ ಬದಲಾವಣೆಯನ್ನು ಸೂಚಿಸುತ್ತದೆ ಎಂದು ರಾಜಕೀಯ ತಜ್ಞರು ವಿಶ್ಲೇಷಿಸಿದ್ದಾರೆ.
ಕಲಬುರಗಿ | ಪತ್ರಕರ್ತ ಅಪ್ಪಾರಾವ್ ಬಿರಾದಾರ್ ನಿಧನ
ಕಲಬುರಗಿ : ಹಿರಿಯ ಪತ್ರಕರ್ತ ಅಪ್ಪಾರಾವ್ ಬಿರಾದಾರ್ (80) ಸೋಮವಾರ ಸಂಜೆ ನಿಧನರಾಗಿದ್ದಾರೆ. ಬಿರಾದಾರ್ 1980ರ ದಶಕದಲ್ಲಿ ಕಲಬುರಗಿ ಜಿಲ್ಲೆಯಲ್ಲಿ ಗ್ರಾಮವಾಣಿ ಕನ್ನಡ ದಿನ ಪತ್ರಿಕೆಯ ಸಂಪಾದಕರಾಗಿದ್ದು, ಪತ್ರಿಕೋದ್ಯಮದಲ್ಲಿ ಸುದೀರ್ಘ ಸೇವೆ ಸಲ್ಲಿಸಿದ್ದರು. ಮೃತರು ಹಿರಿಯ ಪತ್ರಕರ್ತ ಸಿದ್ದು ಬಿರಾದಾರ್ ಸೇರಿದಂತೆ ನಾಲ್ವರು ಪುತ್ರರು, ಇಬ್ಬರು ಪುತ್ರಿಯರು, ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆ ಕಮಲಾಪುರ ತಾಲೂಕಿನ ಗೋಗಿ (ಕೆ) ಗ್ರಾಮದಲ್ಲಿ ಫೆ. 10ರಂದು ಮಧ್ಯಾಹ್ನ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ
ಸಾರ್ವಭೌಮತ್ವ ರಕ್ಷಣೆಗೆ ಜಪಾನ್ ದೃಢನಿಲುವು: ಪ್ರಧಾನಿ ಸಾನೆ ತಕೈಚಿ
ಟೋಕಿಯೊ, ಫೆ.9: ಪ್ರಾದೇಶಿಕ ಕಡಲ ವ್ಯಾಪ್ತಿ, ವಾಯು ಪ್ರದೇಶ ಸೇರಿದಂತೆ ತನ್ನ ಸಾರ್ವಭೌಮತ್ವವನ್ನು ರಕ್ಷಿಸಿಕೊಳ್ಳಲು ಜಪಾನ್ ದೃಢ ನಿಲುವು ತೆಗೆದುಕೊಳ್ಳಲಿದೆ ಎಂದು ಜಪಾನ್ನ ಪ್ರಧಾನಿ ಸಾನೆ ತಕೈಚಿ ಸೋಮವಾರ ಹೇಳಿದ್ದು, ಈ ಮೂಲಕ ಚೀನಾಕ್ಕೆ ಪರೋಕ್ಷ ಸಂದೇಶ ರವಾನಿಸಿದ್ದಾರೆ. ಜಪಾನ್ ಸಂಸತ್ತಿನ ಕೆಳಮನೆಗೆ ನಡೆದ ಚುನಾವಣೆಯಲ್ಲಿ ತಕೈಚಿ ನೇತೃತ್ವದ ಲಿಬರಲ್ ಡೆಮಾಕ್ರಟಿಕ್ ಪಾರ್ಟಿ(ಎಲ್ಡಿಪಿ) ಮೂರನೇ ಎರಡರಷ್ಟು ಬಹುಮತ ಗಳಿಸಿದೆ. 456 ಸದಸ್ಯ ಬಲದ ಸಂಸತ್ತಿನ ಕೆಳಮನೆಯಲ್ಲಿ ಎಲ್ಡಿಪಿ 316 ಸ್ಥಾನಗಳನ್ನು ಗೆದ್ದಿದ್ದರೆ, ಅದರ ಮಿತ್ರಪಕ್ಷ ಜಪಾನ್ ಇನ್ನೊವೇಶನ್ ಪಾರ್ಟಿ 36 ಸ್ಥಾನಗಳಲ್ಲಿ ಗೆಲುವು ಸಾಧಿರುವುದಾಗಿ ಸೋಮವಾರ ಪ್ರಕಟಿಸಲಾಗಿದೆ. ಭರ್ಜರಿ ಗೆಲುವು ಸಾಧಿಸಿದ ಬಳಿಕ ಸರಕಾರಿ ಸ್ವಾಮ್ಯದ ಟೆಲಿವಿಷನ್ ಜಾಲಕ್ಕೆ ನೀಡಿದ ಸಂದರ್ಶನಲ್ಲಿ ಸಾನೆ ತಕೈಚಿ ಜಪಾನ್ ದೇಶವನ್ನು ಪ್ರಬಲ ಮತ್ತು ಸಮೃದ್ಧ ದೇಶವನ್ನಾಗಿ ರೂಪಿಸುವ ನಿಟ್ಟಿನಲ್ಲಿ ನೀತಿಗಳನ್ನು ಜಾರಿಗೊಳಿಸುವುದಾಗಿ ಹೇಳಿದ್ದಾರೆ.
ರಸ್ತೆ ತೆರವಾಗದಿದ್ದರೆ ಹನ್ನೆರಡು ಕುಟುಂಬಗಳಿಂದ ಚುನಾವಣೆ ಬಹಿಷ್ಕಾರದ ಎಚ್ಚರಿಕೆ
ಕುರ್ನಾಡು ಗ್ರಾಮ ಕಿನ್ನಾಜೆ ಬೆಟ್ಟುವಿನ ರಸ್ತೆ ಅತಿಕ್ರಮಣ ವಿರೋಧಿಸಿ ಪ್ರತಿಭಟನೆ
ಯಾದಗಿರಿ | 11 ವರ್ಷದ ಮಗಳನ್ನು ಕತ್ತು ಹಿಸುಕಿ ಕೊಂದ ತಾಯಿ
ಯಾದಗಿರಿ : ಹೆತ್ತ ತಾಯಿಯೇ ತನ್ನ 11 ವರ್ಷದ ಮಗಳನ್ನು ಕತ್ತು ಹಿಸುಕಿ ಕೊಲೆ ಮಾಡಿರುವ ದುರ್ಘಟನೆ ನಗರದಲ್ಲಿನ ರಾಜೀವ್ ಗಾಂಧಿ ನಗರದಲ್ಲಿ ಸಂಭವಿಸಿದೆ. ಮೃತ ಬಾಲಕಿಯನ್ನು ಪ್ರತಿಭಾ (11) ಎಂದು ಗುರುತಿಸಲಾಗಿದ್ದು, ಆಕೆಯ ತಾಯಿ ನಿರ್ಮಲಾ ಮಲ್ಲಯ್ಯ ಬೀಳಾರ್ ಈ ಕೃತ್ಯ ಎಸಗಿದ್ದಾಳೆ ಎಂದು ಆರೋಪಿಸಲಾಗಿದೆ. ನಿರ್ಮಲಾ ಮದ್ಯಪಾನ ಮಾಡುವ ಅಭ್ಯಾಸ ಹೊಂದಿದ್ದಳು. ಸೋಮವಾರ ಮಧ್ಯಾಹ್ನ ಸುಮಾರು 2 ಗಂಟೆ ವೇಳೆ ಮದ್ಯ ಸೇವಿಸಿ ಮನೆಗೆ ಬಂದಿದ್ದಾಳೆ ಎನ್ನಲಾಗಿದೆ. ಇದನ್ನು ಗಮನಿಸಿದ ಪ್ರತಿಭಾ ತಾಯಿಯನ್ನು ಪ್ರಶ್ನಿಸಿದ್ದರಿಂದ ಇಬ್ಬರ ನಡುವೆ ವಾಗ್ವಾದ ಉಂಟಾಗಿದೆ. ಈ ವೇಳೆ ಪಾನಮತ್ತಳಾಗಿದ್ದ ತಾಯಿ ಆಕ್ರೋಶಗೊಂಡು ಮಗಳ ಕತ್ತು ಹಿಸುಕಿದ ಪರಿಣಾಮ, ಬಾಲಕಿ ಸ್ಥಳದಲ್ಲೇ ಮೃತಪಟ್ಟಿದ್ದಾಳೆ ಎಂದು ತಿಳಿದುಬಂದಿದೆ. ಘಟನೆಯ ಕುರಿತು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ವಶಕ್ಕೆ ಪಡೆದು ತನಿಖೆ ಮುಂದುವರಿಸಲಾಗಿದೆ.
ಬಾಂಗ್ಲಾದೇಶವನ್ನು ಈ ಬಾರಿಯ ಟೂರ್ನಿಯಿಂದ ಹೊರಗಿಟ್ಟಿರುವ ಕ್ರಮವನ್ನು ವಿರೋಧಿಸಿ ಭಾರತದ ವಿರುದ್ಧ ಪಂದ್ಯವನ್ನು ಬಹಿಷ್ಕರಿಸಿದ್ದ ಪಾಕಿಸ್ತಾನ ಇದೀಗ ಯೂ ಟರ್ನ್ ಹೊಡೆಯುವ ಪ್ರಯತ್ನದಲ್ಲಿ ಅನೇಕ ಬೇಡಿಕೆಗಳನ್ನು ಐಸಿಸಿ ಮುಂದಿಟ್ಟಿದೆಯಷ್ಟೇ. ಎಲ್ಲವನ್ನೂ ಕೇಳಿಸಿಕೊಂಡಿರುವ ಐಸಿಸಿಯು ಭಾರತದೊಂದಿಗೆ ದ್ವಿಪಕ್ಷೀಯ ಸರಣಿ ಸೇರಿದಂತೆ ಬಹುತೇಕ ಬೇಡಿಕೆಗಳಿಗೆ ನಕಾರ ಸೂಚಿಸಿದೆ. ಹಾಗಾಗಿ ಗಳೆಲ್ಲವೂ ನೀರ ಮೇಲಿನ ಹೋಮವಾಗುವುದು ಖಚತ ಎಂಬಂತಾಗಿದೆ. ಪಾಕ್ ನ ಪಂಚ ಬೇಡಿಕೆ ಮತ್ತು ಐಸಿಸಿ ಪ್ರತಿಕ್ರಿಯೆ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯನ್ನು ಬಪಿಷ್ಕರಿಸಿರುವ ಬಾಂಗ್ಲಾದೇಶಕ್ಕೆ ಯಾವುದೇ ಆರ್ಥಿಕ ದಂಡವನ್ನು ಹಾಕಬಾರದು. ಟಿ20 ವಿಶ್ವಕಪ್ ಆಡದಿದ್ದರೂ ಬಾಂಗ್ಲಾದೇಶ ತನ್ನ ಸಂಪೂರ್ಣ ಐಸಿಸಿ ಆದಾಯದ ಪಾಲನ್ನು ಪಡೆಯಬೇಕು ಎಂದು ಪಿಸಿಬಿಯ ಮೊದಲ ಒತ್ತಾಯವಾಗಿತ್ತು. ಇದಕ್ಕೆ ಐಸಿಸಿಯು `ಇದು ಈಗಾಗಲೇ ತನ್ನ ನಿರ್ಧಾರವಾಗಿದ್ದು ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಗೆ ಯಾವುದೇ ರೀತಿಯ ದಂಡವನ್ನೂ ವಿಧಿಸಲಾಗುವುದಿಲ್ಲ ಎಂದು ಸ್ಪಷ್ಟಪಡಿಸಿದೆ. . ಬಾಂಗ್ಲಾದೇಶಕ್ಕೆ ಹೆಚ್ಚುವರಿ ಐಸಿಸಿ ಟೂರ್ನಿಯಲ್ಲಿ ಪಾಲ್ಗೊಳ್ಳಲು ಅಪಕಾಶ ನೀಡಬೇಕೆಂದು ಪಿಸಿಬಿ ಮನವಿ ಮಾಡಿತ್ತು. ಮುಂದಿನ ಅಂಡರ್ 19 ವಿಶ್ವಕಪ್ ಟೂರ್ನಿಯಲ್ಲಿ ಬಾಂಗ್ಲಾದೇಶವನ್ನು ಪರಿಗಣಿಸಲಾಗಿವುದು ಎಂದು ಐಸಿಸಿಯು ಪರಿಗಣಿಸಲಾಗುತ್ತಿದೆ ಎಂದು ಐಸಿಸಿಯು ತಿಳಿಸಿದೆ. ಪಿಸಿಬಿಯು ಮೂರನೇ ಬೇಡಿಕೆಯಾಗಿ ಐಸಿಸಿಯ ಮುಂದಿಟ್ಟಿದ್ದೇ ಭಾರತ ಮತ್ತು ಪಾಕಿಸ್ತಾನ ನಡುವೆ ದ್ವಿಪಕ್ಷೀಯ ಸರಣಿ ನಡೆಸಲು ಐಸಿಸಿ ಹಸ್ತಕ್ಷೇಪ ಮಾಡಬೇಕೆಂಬ ಒತ್ತಾಯವನ್ನು ಮಾಡಿತು. ಇದಕ್ಕೆ ಐಸಿಸಿಯು ಅಷ್ಟೇ ತಾರ್ಕಿಕವಾದ ಪ್ರತಿಕ್ರಿಯೆಯನ್ನು ನೀಡಿದೆ. ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಆವೃತ್ತಿಯೂ ಸೇರಿದಂತೆ ಎಲ್ಲಾ ದ್ವಿಪಕ್ಷೀಯ ಸರಣಿಗಳು ತನ್ನ ಆದೇಶದ ಮಿತಿಯಿಂದ ಹೊರಗಿವೆ ಎಂದು ಕಾರಣ ತಿಳಿಸಿದ ಐಸಿಸಿಯು ಇದನ್ನೂ ತಿರಸ್ಕರಿಸಿತು. ಭಾರತ-ಪಾಕಿಸ್ತಾನ-ಬಾಂಗ್ಲಾದೇಶಗಳ ನಡುವೆ ತ್ರಿಕೋನ ಸರಣಿಯ ಬಗ್ಗೆ ಪಿಸಿಬಿ ಪ್ರಸ್ತಾಪವನ್ನು ಇಟ್ಟಿತ್ತು. ಅದಕ್ಕೆ ಐಸಿಸಿಯು ಇದು ಸಹ ತನ್ನ ವ್ಯಾಪ್ತಿಯ ಒಳಗೆ ಬರುವುದಲ್ಲ ಎಂದು ತಿಳಿಸಿ ಮನವಿಯನ್ನು ಪ್ರಸ್ತಾಪಿಸಿತು. 2026 ರಲ್ಲಿ ಭಾರತದ ಬಾಂಗ್ಲಾದೇಶ ಪ್ರವಾಸ ಮತ್ತು ಬಾಂಗ್ಲಾದೇಶದ ಭಾರತದ ಪ್ರವಾಸವನ್ನು ಖಚಿತಪಡಿಸಿಕೊಳ್ಳುವಲ್ಲಿ ಐಸಿಸಿಯು ಮಧ್ಯೆ ಪ್ರವೇಶಿಸಬೇಕೆಂಬುದು ಪಿಸಿಬಿಯ ಐದನೇ ಬೇಡಿಕೆಯಾಗಿತ್ತು. ಆದರೆ ದ್ವಿಪಕ್ಷೀಯ ಪ್ರವಾಸಗಗಳನ್ನು ಆಯಾ ಕ್ರಿಕೆಟ್ ಮಂಡಳಿಗಳೇ ನಿರ್ಧರಿಸುತ್ತವೆ ಎಂದು ಪುನರುಚ್ಚರಿಸಿದ ಐಸಿಸಿ ಇದನ್ನೂ ಪುರಸ್ಕರಿಸಿಲ್ಲ. ಹೀಗೆ ಪಾಕಿಸ್ತಾನದ ಒಟ್ಟು ಐದು ಬೇಡಿಕೆಗಳಲ್ಲಿ ಮೊದಲೆರಡನ್ನು ಸಹಜವಾಗಿ ಒಪ್ಪಿಕೊಂಡಿರುವ ಐಸಿಸಿಯು ಕೊನೆಯ ಮೂರನ್ನೂ ಒಪ್ಪಿಕೊಂಡಿಲ್ಲ. ಯಾವೆಲ್ಲ ಬೇಡಿಕೆಗಳಲ್ಲಿ ಭಾರತದ ಪ್ರಸ್ತಾಪ ಬರುತ್ತದೋ ಅಲ್ಲೆಲ್ಲಾ ಐಸಿಸಿಯು ಕಡ್ಡಿ ಮುರಿದಂತೆ ಪ್ರತಿಕ್ರಿಯಿಸಿದೆ. ಏತನ್ಮಧ್ಯೆ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಅಧ್ಯಕ್ಷ ಅಧ್ಯಕ್ಷರೂ ಆಗಿರುವ ಅಲ್ಲಿನ ಆಂತರಿಕ ಸಚಿವ ಪಾಕಿಸ್ತಾನದ ಪ್ರಧಾನಿಯೊಂದಿಗೆ ಸಮಾಲೋಚಿಸಲು ಪಿಸಿಬಿಗೆ 24 ಗಂಟೆಗಳ ಸಮಯ ನೀಡಿದೆ ಎಂದು ಮೂಲಗಳು ತಿಳಿಸಿವೆ. ಮುಂದಿನ ಸಭೆಯನ್ನು ಶೀಘ್ರದಲ್ಲೇ ನಿರೀಕ್ಷಿಸಲಾಗಿದೆ. ಜೊತೆಗೆ ಮುಂದಿನ 24 ಗಂಟೆಗಳಲ್ಲಿ ಐಸಿಸಿ ಅಧಿಕೃತ ಪ್ರಕಟಣೆಯ ಸಾಧ್ಯತೆಯಿದೆ.
ನಾಳೆ ದಿಲ್ಲಿ ಭೇಟಿ | ನನ್ನನ್ನು ಕರೆದಿರುವ ಕಾಂಗ್ರೆಸ್ ನಾಯಕರನ್ನು ಭೇಟಿ ಮಾಡುತ್ತೇನೆ: ಡಿ.ಕೆ.ಶಿವಕುಮಾರ್
ಬೆಂಗಳೂರು : ನನ್ನನ್ನು ದಿಲ್ಲಿಗೆ ಕರೆದಿರುವ ಕಾಂಗ್ರೆಸ್ ನಾಯಕರನ್ನು ಭೇಟಿ ಮಾಡುತ್ತಿದ್ದೇನೆ. ದಿಲ್ಲಿ ಪ್ರವಾಸದಲ್ಲಿ ರಾಜಕಾರಣ ಜೊತೆಗೆ ಕೇಂದ್ರ ಜಲಶಕ್ತಿ ಸಚಿವರು, ಕಾನೂನು ತಜ್ಞರನ್ನು ಭೇಟಿ ಮಾಡುತ್ತಿರುವೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು. ರಾಜ್ಯ ಬಜೆಟ್ ಸಿದ್ಧತೆಯ ಸಭೆ ನಡೆಯುವ ಸಂದರ್ಭದಲ್ಲೆ ದಿಲ್ಲಿಗೆ ಭೇಟಿ ನೀಡುತ್ತಿರುವ ಕುರಿತು ಸೋಮವಾರ ವಿಧಾನಸೌಧದಲ್ಲಿ ಸುದ್ದಿಗಾರರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಅವರು, ನಾನು ಯಾರನ್ನು ಭೇಟಿ ಮಾಡುತ್ತೇನೋ ಅವರ ಎಲ್ಲ ಹೆಸರನ್ನು ಹೇಳಲು ಆಗುವುದಿಲ್ಲ. ನಿಮಗೆ ಏಕೆ ಇಷ್ಟು ಕುತೂಹಲ ಎಂದು ಹೇಳಿದರು. ನಾನು ಉಪಮುಖ್ಯಮಂತ್ರಿ ಅಷ್ಟೇ ಅಲ್ಲ, ಕೆಪಿಸಿಸಿ ಅಧ್ಯಕ್ಷ ಕೂಡ. ನಾನು ಕೆಪಿಸಿಸಿ ಅಧ್ಯಕ್ಷನಾಗಿ ಮಾ.10ಕ್ಕೆ 6 ವರ್ಷವಾಗುತ್ತದೆ. ನಮ್ಮ ಸಂಸದರನ್ನು, ನಾಯಕರನ್ನು ಭೇಟಿ ಮಾಡುವುದು ನನ್ನ ಕರ್ತವ್ಯ. ನಾನು ಭೇಟಿ ಮಾಡುತ್ತಾ ಇರುತ್ತೇನೆ, ಆಗ ನನ್ನ ಕಷ್ಟ, ದುಃಖ, ದುಮ್ಮಾನ, ನಿಮ್ಮ ಸಂತೋಷ, ಬಯಕೆ ಎಲ್ಲ ಹೇಳುತ್ತಾ ಇರುತ್ತೇನೆ ಎಂದು ಶಿವಕುಮಾರ್ ತಿಳಿಸಿದರು. ನಿಮ್ಮ ಇಲಾಖೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಬಜೆಟ್ ಪೂರ್ವಸಿದ್ಧತಾ ಸಭೆ ಕರೆದಿದ್ದಾರೆ. ಇದೇ ಸಂದರ್ಭದಲ್ಲಿ ನೀವು ದಿಲ್ಲಿಗೆ ಹೋಗುತ್ತಿದ್ದೀರಲ್ಲ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ನಾನು ಮುಖ್ಯಮಂತ್ರಿ ಅನುಮತಿ ಪಡೆದುಕೊಳ್ಳುತ್ತಿದ್ದೇನೆ. ನೀರಾವರಿ ನಿಗಮಗಳಿಗೆ ಮುಖ್ಯಮಂತ್ರಿಯೆ ಅಧ್ಯಕ್ಷರಾಗಿದ್ದು, ಮಂಗಳವಾರದ ಸಭೆಯಲ್ಲಿ ಅಧಿಕಾರಿಗಳು ಭಾಗವಹಿಸಲಿದ್ದಾರೆ. ನನಗಿಂತ ಮುಖ್ಯಮಂತ್ರಿ ಅವರಿಗೆ ನೀರಾವರಿ ಯೋಜನೆಗಳ ಬಗ್ಗೆ ಹೆಚ್ಚು ಗೊತ್ತಿದೆ. ಮೇಕೆದಾಟು ಯೋಜನೆ ಬಗ್ಗೆ ಅಧಿಕಾರಿಗಳು ಭೇಟಿ ಮಾಡಿದ್ದಾರೆ ಎಂದರು.
Bengaluru | 25 ಲಕ್ಷ ಆಸ್ತಿಗಳ ಡಿಜಿಟಲೀಕರಣ, 9 ಲಕ್ಷ ಇ ಖಾತಾ ಹಂಚಿಕೆ : ಡಿಸಿಎಂ ಡಿ.ಕೆ.ಶಿವಕುಮಾರ್
ಬೆಂಗಳೂರು : ಬೆಂಗಳೂರು ನಗರದಾದ್ಯಂತ ಇದುವರೆಗೂ 25 ಲಕ್ಷ ಆಸ್ತಿಗಳನ್ನು ಡಿಜಿಟಲೀಕರಣ ಮಾಡಲಾಗಿದೆ. 9 ಲಕ್ಷ ಇ ಖಾತಾಗಳನ್ನು ಜನರಿಗೆ ಹಂಚಿಕೆ ಮಾಡಲಾಗಿದೆ. ಉಚಿತವಾಗಿ ಇ ಖಾತಾ ಅಭಿಯಾನ ಪ್ರಾರಂಭ ಮಾಡಲು ಜಿಬಿಎ ವ್ಯಾಪ್ತಿಯ ಎಲ್ಲ ನಗರ ಪಾಲಿಕೆಗಳಿಗೆ ಸೂಚನೆ ನೀಡಲಾಗಿದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದರು. ಸೋಮವಾರ ವಿಧಾನಸೌಧದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಬೆಂಗಳೂರಿನ ಎಲ್ಲ ಆಸ್ತಿ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಇ-ಖಾತಾ ವ್ಯವಸ್ಥೆ ತರಬೇಕು. ತೆರಿಗೆ ಸೋರಿಕೆ ತಡೆಯಬೇಕು. ಸಬ್ ರಿಜಿಸ್ಟ್ರಾರ್ ಕಚೇರಿಗಳಲ್ಲಿ ಕಾವೇರಿ ಸಾಫ್ಟ್ ವೇರ್ ತಂದು ಇದನ್ನು ಪರಶೀಲನೆ ಮಾಡಲು ಅವಕಾಶ ನೀಡಿದ್ದೇವೆ. ಜೊತೆಗೆ ಪ್ರತಿಯೊಂದು ದಾಖಲೆಗಳು ಆಧಾರ್ ಜೊತೆ ಲಿಂಕ್ ಮಾಡುವ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ತಿಳಿಸಿದರು. ಯೂನಿಫಾರ್ಮ್ ಲ್ಯಾಂಡ್ ರೆಕಾರ್ಡ್ ಮ್ಯಾನೇಜ್ ಮೆಂಟ್ ಸಿಸ್ಟಮ್ ಮೂಲಕ ಬಿ ಖಾತಾ ಮೂಲಕ ಎ ಖಾತಾ ನೀಡುವ ಯೋಜನೆ ಇದಾಗಿದೆ. ಈಗಾಗಲೇ 7 ಸಾವಿರ ಅರ್ಜಿಗಳು ಇದಕ್ಕೆ ಬಂದಿವೆ. 15 ದಿನದಲ್ಲಿ ಬಿ ಖಾತಾಯಿಂದ ಎ ಖಾತಾಗೆ ವರ್ಗಾವಣೆ ಮಾಡಲಾಗುವುದು ಎಂದು ಶಿವಕುಮಾರ್ ತಿಳಿಸಿದರು. ಇನ್ನೂ ಅನೇಕರು ಸೇಲ್ ಡೀಡ್ ಇಟ್ಟುಕೊಂಡು ಖಾತಾವನ್ನು ಮಾಡಿಸಿಕೊಂಡಿಲ್ಲ. 1.20 ಲಕ್ಷ ಜನ ಈ ಬಗ್ಗೆ ಅರ್ಜಿ ನೀಡಿದ್ದಾರೆ. 60 ಸಾವಿರ ಜನರ ಅರ್ಜಿ ಒಪ್ಪಿತವಾಗಿದೆ. 40 ಸಾವಿರ ಅರ್ಜಿ ರದ್ದಾಗಿದೆ. 15 ಸಾವಿರ ಅರ್ಜಿಗಳು ವಿವಿಧ ಹಂತದಲ್ಲಿವೆ. ಅರ್ಜಿಗಳು ಏಕೆ ತಿರಸ್ಕೃ ತವಾಗಿವೆ ಎಂದು ಮತ್ತೊಮ್ಮೆ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಉಪ ಮುಖ್ಯಮಂತ್ರಿ ಹೇಳಿದರು. 12 ಸಾವಿರ ನಕ್ಷೆ ಹಂಚಿಕೆ: ನಂಬಿಕೆ ನಕ್ಷೆ ಯೋಜನೆಯಡಿ 12 ಸಾವಿರ ನಕ್ಷೆಗಳನ್ನು ನೀಡಲಾಗಿದೆ. ಓಟಿಎಸ್ ಯೋಜನೆಯ ಅಡಿ ದಂಡ ಹಾಗೂ ಬಡ್ಡಿಯನ್ನು ರದ್ದು ಮಾಡಲಾಯಿತು. ಇದರಿಂದ 2 ಲಕ್ಷ ಜನರಿಗೆ ಅನುಕೂಲವಾಗಿದೆ. ಜಿಬಿಎ ವ್ಯಾಪ್ತಿಯಲ್ಲಿ 1,200 ಕೋಟಿ ರೂ. ಸಂಗ್ರಹವಾಗಿದೆ ಎಂದು ಅವರು ನುಡಿದರು. ಕಳೆದ ವರ್ಷ ಪ್ರಾರಂಭ ಮಾಡಿದ ‘ಬಿ ಸ್ಮೈಲ್’ ಕಂಪೆನಿಯಡಿ 1.47 ಲಕ್ಷ ಕೋಟಿ ರೂ. ಹೂಡಿಕೆ ಮಾಡಿ, ಟೆಂಡರ್ ಕರೆಯಲಾಗಿದೆ. 1.5 ಕಿಮೀ ಉದ್ದದ ಕಟ್ ಅಂಡ್ ಕವರ್ ಟನಲ್, ಮೇಖ್ರಿ ವೃತ್ತದ ಬಳಿ ವಾಹನ ದಟ್ಟಣೆ ತಪ್ಪಿಸಲು ಯೋಜನೆ ಮಾಡಲಾಗುವುದು. 1,700 ಕೋಟಿ ರೂ. ವೆಚ್ಚದ ವೈಟ್ ಟಾಪಿಂಗ್ 150 ಕಿ.ಮೀ. ಉದ್ದದ ಕಾಮಗಾರಿ ಮುಗಿಯುವ ಹಂತಕ್ಕೆ ಬಂದಿದೆ. ಎರಡನೆ ಹಂತದಲ್ಲಿ 7,500 ಕೋಟಿ ರೂ.ವೆಚ್ಚದಲ್ಲಿ ಯೋಜನೆ ಶೀಘ್ರದಲ್ಲೇ ಪ್ರಾರಂಭವಾಗಲಿದೆ. 690 ಕೋಟಿ ರೂ.ವೆಚ್ಚದಲ್ಲಿ ಬ್ಲಾಕ್ ಟಾಪಿಂಗ್ ಕಾಮಗಾರಿ ಪ್ರಾರಂಭವಾಗಲಿದೆ ಎಂದು ಅವರು ಮಾಹಿತಿ ನೀಡಿದರು. ಕೆ.ಆರ್.ಪುರಂ ನಿಂದ ಮೈಸೂರು ರಸ್ತೆ ವರೆಗಿನ ಟನಲ್ ರಸ್ತೆ ಯೋಜನೆಯ ಡಿಪಿಆರ್ ಪ್ರಗತಿಯ ಹಂತದಲ್ಲಿದೆ. ಬೆಂಗಳೂರು ಬಿಜಿನೆಸ್ ಕಾರಿಡಾರ್ ಯೋಜನೆಯಡಿ ಭೂಮಿ ಕಳೆದುಕೊಂಡವರಿಗೆ ಸೂಕ್ತ ಪರಿಹಾರದ ಯೋಜನೆ ಮೊದಲೆ ಮಾಡಿದ್ದರೆ 4-5 ಸಾವಿರ ಕೋಟಿ ರೂ.ಗಳಿಗೆ ಮುಗಿದು ಹೋಗುತ್ತಿತ್ತು. ಈಗ ನಾನು ನೋಡಿರುವ ಪರಿಹಾರ ನೋಡಿ ಸಂತ್ರಸ್ತರು ಸಂತೋಷದಿಂದ ಪರಿಹಾರ ತೆಗೆದುಕೊಳ್ಳುತ್ತಿದ್ದಾರೆ ಎಂದು ಅವರು ತಿಳಿಸಿದರು. ಪ್ರತಿಯೊಬ್ಬರೂ 3 ರಿಂದ 15 ಕೋಟಿ ರೂ.ವರೆಗೆ ಪರಿಹಾರ ತೆಗೆದುಕೊಳ್ಳುತ್ತಿದ್ದಾರೆ. ಮೊದಲನೇ ಹಂತದಲ್ಲಿ 129 ಕಿ.ಮೀ. ಇರಲಿದೆ. ಎರಡನೇ ಹಂತದ ರಸ್ತೆ ಎಲೆಕ್ಟ್ರಾನಿಕ್ ಸಿಟಿಯಿಂದ ಮೈಸೂರು ರಸ್ತೆವರೆಗೆ ಇರಲಿದೆ. 9 ಸಾವಿರ ಕೋಟಿ ರೂ.ವೆಚ್ಚದ 44 ಕಿ.ಮೀ. ಉದ್ದದ ಡಬಲ್ ಡೆಕ್ಕರ್ ಯೋಜನೆಯ ಡಿಪಿಆರ್ ಸಿದ್ಧವಿದೆ. ಇದಕ್ಕೆ ಸದ್ಯದಲ್ಲೇ ಟೆಂಡರ್ ಕರೆಯಲಾಗುವುದು ಎಂದು ಅವರು ಹೇಳಿದರು. ರಾಜಕಾಲುವೆಗಳ ಬಫರ್ ಜೋನ್ ಗಳ ಪಕ್ಕ ರಸ್ತೆ ನಿರ್ಮಾಣ ಕಾರ್ಯ ಮೂರು ಕಡೆ ಪ್ರಾರಂಭವಾಗಿದೆ. ಬೀದಿ ಬದಿ ವ್ಯಾಪಾರಿಗಳಿಗೆ 50 ಕೋಟಿ ರೂ. ಮೀಸಲು ಇಡಲಾಗಿದೆ ಎಂದು ಉಪ ಮುಖ್ಯಮಂತ್ರಿ ತಿಳಿಸಿದರು. 17 ಸಾವಿರ ನಿವೇಶನ ಭೂ ಮಾಲಕರಿಗೆ ಹಂಚಿಕೆ : ಶಿವರಾಂ ಕಾರಂತ್ ಬಡಾವಣೆಯಲ್ಲಿ ಭೂಮಿ ಕಳೆದುಕೊಂಡವರಿಗೆ ಪರಿಹಾರ ನೀಡಿ ಎಂದು ನ್ಯಾಯಲಯ ತಿಳಿಸಿದೆ. 34,977 ನಿವೇಶನ ಮಾಡಲಾಗಿದೆ. 17 ಸಾವಿರ ನಿವೇಶನಗಳನ್ನು ಭೂ ಮಾಲಕರಿಗೆ ನೀಡಬೇಕು. ಶೇ. 75ರಷ್ಟು ಮಾಲಕರು ಇದಕ್ಕೆ ತಯಾರಿದ್ದಾರೆ. ಉಳಿದವರಿಗೂ ನಾನು ಮನವಿ ಮಾಡುತ್ತಿದ್ದೇನೆ ಎಂದು ಅವರು ಹೇಳಿದರು. ಬಿಡಿಎಗೆ 50 ವರ್ಷ ತುಂಬುತ್ತಿದ್ದು 17 ಸಾವಿರ ಜನರಿಗೂ ಒಂದೇ ದಿನ ನಿವೇಶನ ಹಂಚಿಕೆ ಮಾಡುವ ಕಾರ್ಯಕ್ರಮ ನಡೆಸಲಾಗುವುದು. ಉಳಿದ ನಿವೇಶನಗಳಿಗೆ ಅರ್ಜಿ ಕರೆದು ನೀಡಲಾಗವುದು. ಸ್ಕೈಡೆಕ್ ಬಗ್ಗೆ ಬಿಡಿಎಗೆ ಜವಾಬ್ದಾರಿ ನೀಡಿದ್ದೇನೆ. ಕೆಂಪೇಗೌಡ ಲೇಔಟ್ ಬಳಿ ಪರಿಶೀಲನೆ ಮಾಡಲಾಗುತ್ತಿದೆ ಎಂದು ಉಪ ಮುಖ್ಯಮಂತ್ರಿ ತಿಳಿಸಿದರು. ಜಿಬಿಎ ಐದು ಪಾಲಿಕೆಗಳ ಚುನಾವಣೆ ಮಾಡಬೇಕು. ವಾರ್ಡ್ ಗಳ ವಿಂಗಡೆಯಾಗಿದೆ, ಮೀಸಲಾತಿ ಮುಗಿದಿದೆ. ಇದಕ್ಕೆ ಆಕ್ಷೇಪಣೆಗಳಿದ್ದರೆ ಸಲ್ಲಿಕೆ ಮಾಡಿ ಎಂದೂ ತಿಳಿಸಲಾಗಿದೆ. ನ್ಯಾಯಲಯಕ್ಕೂ ಅಫಿಡವಿಟ್ ಸಲ್ಲಿಕೆ ಮಾಡಲಾಗಿದೆ. ನ್ಯಾಯಲಯವೂ ನಮಗೆ ಮಾಗದರ್ಶನ ನೀಡಿದೆ ಎಂದು ಶಿವಕುಮಾರ್ ಹೇಳಿದರು. ʼಅಧಿಕಾರಕ್ಕೆ ತಂದವರಿಗೆ ಅಧಿಕಾರ ಕೊಡುವುದರಲ್ಲಿ ತಪ್ಪೇನಿದೆ?’ : ‘54 ನಿಗಮ ಮಂಡಳಿ ಅಧ್ಯಕ್ಷರಿಗೆ ಸಂಪುಟ ದರ್ಜೆ ಸ್ಥಾನಮಾನ ನೀಡಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಉಪ ಮುಖ್ಯಮಂತ್ರಿ, ಪಕ್ಷವನ್ನು ಅಧಿಕಾರಕ್ಕೆ ತಂದವರಿಗೆ ಅಧಿಕಾರ ಕೊಡುವುದರಲ್ಲಿ ತಪ್ಪೇನಿದೆ?. ಈ ಹಿಂದೆ ಬಿಜೆಪಿಯವರು ಯಾರಿಗೆಲ್ಲ ಅಧಿಕಾರ ಕೊಟ್ಟಿದ್ದಾರೆ ಎಂದು ಗೊತ್ತಿದೆ. ನಮಗೆ ಅವರೆ ಮಾದರಿ. ಅವರು ನಮ್ಮ ಕಾರ್ಯಕರ್ತರು. ಅವರಿಗೆ ಅಧಿಕಾರ ನೀಡಿರುವುದರಲ್ಲಿ ತಪ್ಪೇನು ಇಲ್ಲ ಎಂದು ಸರ್ಮರ್ಥಿಸಿಕೊಂಡರು.
ಭದ್ರಾ ಮೇಲ್ದಂಡೆ ಯೋಜನೆ ವಿಳಂಬ: ಸಿಡಿದೆದ್ದ ರೈತರಿಂದ ನಾಳೆ ಚಿತ್ರದುರ್ಗ ಬಂದ್ಗೆ ಕರೆ
ಚಿತ್ರದುರ್ಗ: ಬಯಲು ಸೀಮೆಯ ಜನರ ದಶಕಗಳ ಕನಸಾದ ಭದ್ರಾ ಮೇಲ್ದಂಡೆ ಯೋಜನೆಯು ಕಳೆದ ಎರಡು ದಶಕಗಳಿಂದ ಕುಂಟುತ್ತಾ ಸಾಗುತ್ತಿದೆ. ಸರ್ಕಾರದ ಭರವಸೆಗಳು ಕೇವಲ ಕಾಗದಕ್ಕಷ್ಟೇ ಸೀಮಿತವಾಗಿದ್ದು, ಹೊಲಗಳಿಗೆ ನೀರು ಬರುವುದು ಮಾತ್ರ ಗಗನಕುಸುಮವಾಗಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿಳಂಬವನ್ನು ಖಂಡಿಸಿ ಚಿತ್ರದುರ್ಗದ ರೈತರು ನಾಳೆ, ಅಂದರೆ ಫೆಬ್ರವರಿ 10 ರಂದು ಜಿಲ್ಲೆಯ ಪ್ರಮುಖ
ಉಡುಪಿ: ಪೆರಂಪಳ್ಳಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅಲ್ ಇಬಾದ ಇಂಡಿಯನ್ ಸ್ಕೂಲ್ (CBSE) ಇಲ್ಲಿನ 4ನೇ ತರಗತಿಯ ವಿದ್ಯಾರ್ಥಿ ಅಹ್ಮದ್ ಅಕ್ಸುರ್ ಶೇಖ್ ಅವರು ಶೈಕ್ಷಣಿಕ ಅಧ್ಯಯನದ ಜೊತೆಗೆ ಒಂದೂವರೆ ವರ್ಷಕ್ಕಿಂತ ಕಡಿಮೆ ಅವಧಿಯಲ್ಲಿ ಹಿಫ್ಝುಲ್ ಖುರ್ಆನ್ ಅನ್ನು ಪೂರ್ಣಗೊಳಿಸಿದ್ದಾರೆ. ಅಹ್ಮದ್ ಅಕ್ಸುರ್ ಶೇಖ್ ಅವರು ಅಕ್ಸುರ್ ಅಹ್ಮದ್ ಹಾಗೂ ಐನುಸ್ ಸಬಾಹ್ ಕರಾಣಿ ದಂಪತಿಯ ಪುತ್ರ ಹಾಗು ದಿ. ಪೊಲೀಸ್ ನಝೀರ್ ಅಹಮದ್ ಗುಡ್ಮಿ ಸಸ್ತಾನ ಅವರ ಮೊಮ್ಮಗ. ಈ ಮಹತ್ವದ ಸಾಧನೆ ವಿದ್ಯಾರ್ಥಿಯ ವೈಯಕ್ತಿಕ ಪರಿಶ್ರಮದ ಜೊತೆಗೆ, ಪಾಲಕರ ನಿರಂತರ ಸಹಕಾರ ಮತ್ತು ಶಾಲೆಯ ಶಿಕ್ಷಕರ ಸಮರ್ಪಿತ ಮಾರ್ಗದರ್ಶನದ ಫಲವಾಗಿದೆ ಎಂದು ಶಾಲಾ ಆಡಳಿತ ಮಂಡಳಿ ತಿಳಿಸಿದೆ. ಶಾಲೆಯು ಅನುಸರಿಸುತ್ತಿರುವ ಶಿಕ್ಷಣ ಪದ್ಧತಿ ಅಕಾಡೆಮಿಕ್ ಶ್ರೇಷ್ಠತೆಯೊಂದಿಗೆ ನೈತಿಕ ಮತ್ತು ಆತ್ಮೀಯ ಬೆಳವಣಿಗೆಯನ್ನು ಸಮತೋಲನದಿಂದ ಒಗ್ಗೂಡಿಸುವುದಾಗಿದೆ. ಹೊಸತನದ ಬೋಧನಾ ವಿಧಾನಗಳು, ವೈಯಕ್ತಿಕ ಮೇಲ್ವಿಚಾರಣೆ ಹಾಗೂ ಪೋಷಕ ಕಲಿಕಾ ವಾತಾವರಣವು ವಿದ್ಯಾರ್ಥಿಗಳ ಸಮಗ್ರ ಬೆಳವಣಿಗೆಗೆ ಸಹಕಾರಿಯಾಗಿವೆ ಎಂದು ತಿಳಿಸಲಾಗಿದೆ. ಅಲ್ ಇಬಾದ ಇಂಡಿಯನ್ ಸ್ಕೂಲ್ ನಲ್ಲಿ ಆರಂಭಿಕ ವಯಸ್ಸಿನಲ್ಲಿಯೇ ಅನೇಕ ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಪ್ರಗತಿಗೆ ಯಾವುದೇ ಅಡಚಣೆ ಇಲ್ಲದೆ ಖುರ್ಆನ್ ಹಿಫ್ಝ್ ಪೂರ್ಣಗೊಳಿಸುತ್ತಿದ್ದಾರೆ. ಇಂತಹ ವಿದ್ಯಾರ್ಥಿಗಳು ಆಧುನಿಕ ಶಿಕ್ಷಣದಲ್ಲಿಯೂ ಉತ್ತಮ ಸಾಧನೆ ಮಾಡುತ್ತಿದ್ದು, ದೈವಿಕ ಜ್ಞಾನಕ್ಕೆ ಗಾಢವಾಗಿ ಸಂಪರ್ಕಿತರಾಗಿರುವುದು ಗಮನಾರ್ಹವಾಗಿದೆ ಎಂದು ಅವರು ವಿವರಿಸಿದ್ದಾರೆ. ಈ ರೀತಿಯ ಸಮಗ್ರ ಶಿಕ್ಷಣ ವ್ಯವಸ್ಥೆ ಮುಂದಿನ ದಿನಗಳಲ್ಲಿ ಸಮುದಾಯ, ಸಮಾಜ ಮತ್ತು ರಾಷ್ಟ್ರಕ್ಕೆ ಹೆಚ್ಚಿನ ಲಾಭವನ್ನು ತರಲಿದೆ ಎಂಬ ವಿಶ್ವಾಸವನ್ನು ಸಂಸ್ಥೆ ವ್ಯಕ್ತಪಡಿಸಿದೆ. ಬಲವಾದ ನೈತಿಕ ಹಾಗೂ ಆತ್ಮೀಯ ಮೌಲ್ಯಗಳೊಂದಿಗೆ ವಿಶ್ವಮಟ್ಟದ CBSE ಶಿಕ್ಷಣ ನೀಡುವ ತನ್ನ ಧ್ಯೇಯವನ್ನು ಶಾಲೆ ಮುಂದುವರಿಸುತ್ತಿದೆ ಎಂದು ಪ್ರಕಟಣೆ ತಿಳಿಸಿದೆ.
AI ವೀಡಿಯೊ ಪ್ರಕರಣ | ಜೈಲಿಗೆ ಹೋಗಲು ಸಿದ್ಧ: ಹಿಮಂತ ಬಿಸ್ವ ಶರ್ಮ
► ದೂರು ದಾಖಲಿಸಿದ AIMIM ಮುಖ್ಯಸ್ಥ ಅಸದುದ್ದೀನ್ ಉವೈಸಿ ► “ನನಗೆ ಆ ವಿಡಿಯೊ ಬಗ್ಗೆ ಏನೂ ತಿಳಿದಿಲ್ಲ” ಎಂದ ಅಸ್ಸಾಂ ಸಿಎಂ
ಪಕ್ಷಾಂತರ ವಿರೋಧಿ ಕಾಯ್ದೆಯ ಪರಿಶೀಲನಾ ಸಮಿತಿಗೆ ಸ್ಪೀಕರ್ ಯು.ಟಿ. ಖಾದರ್ ನೇಮಕ
ಮುಂಬೈ, ಫೆ.9: ಪಕ್ಷಾಂತರ ವಿರೋಧಿ ಕಾಯ್ದೆಗೆ ಸಂಬಂಧಿಸಿದಂತೆ ಸಂವಿಧಾನದ 10ನೆ ಅನುಸೂಚಿಯಡಿ ರಚಿಸಲಾದ ನಾಲ್ಕು ಮಂದಿ ಸ್ಪೀಕರ್ಗಳ ಉನ್ನತ ಮಟ್ಟದ ಪರಿಶೀಲನಾ ಸಮಿತಿಗೆ ರಾಜ್ಯ ವಿಧಾನ ಸಭೆಯ ಸ್ಪೀಕರ್ ಯು.ಟಿ.ಖಾದರ್ ಅವರನ್ನು ನೇಮಕ ಮಾಡಲಾಗಿದೆ. ಮಹಾರಾಷ್ಟ್ರ ವಿಧಾನ ಸಭೆಯ ಸ್ಪೀಕರ್ ರಾಹುಲ್ ನಾಗ್ವೇಕರ್ ಅಧ್ಯಕ್ಷತೆಯ ಈ ಉನ್ನತ ಮಟ್ಟದ ಅಧಿಕಾರ ಸಮಿತಿಯಲ್ಲಿ ಸ್ಪೀಕರ್ ಯು.ಟಿ.ಖಾದರ್ ಅವರಲ್ಲದೆ ಒರಿಸ್ಸಾ ಮತ್ತು ನಾಗಲ್ಯಾಂಡ್ ಸ್ಪೀಕರ್ ಕೂಡಾ ಇದ್ದಾರೆ. ಮಹಾರಾಷ್ಟ್ರದ ವಿಧಾನಸೌಧದ ಕ್ಯಾಬಿನೆಟ್ ಹಾಲ್ನಲ್ಲಿ ಸೋಮವಾರ ಈ ಸಮಿತಿಯ ಸಭೆಯು ನಡೆಯಿತು. ಸ್ಪೀಕರ್ ಯು.ಟಿ. ಖಾದರ್ ಚರ್ಚೆಯಲ್ಲಿ ಪಾಲ್ಗೊಂಡರು.
54,000 ಕೋಟಿ ರೂ. ಡಿಜಿಟಲ್ ವಂಚನೆ ‘ಡಕಾಯಿತಿಗೆ ಸಮಾನ’: ಸುಪ್ರೀಂ ಕೋರ್ಟ್ ಕಳವಳ
ಹೊಸದಿಲ್ಲಿ: 54,000 ಕೋಟಿ ರೂ. ಮೌಲ್ಯದ ಡಿಜಿಟಲ್ ವಂಚನೆಯನ್ನು ನಿಶ್ಚಿತವಾಗಿ ದರೋಡೆ ಮತ್ತು ಡಕಾಯಿತಿ ಎಂದು ಸೋಮವಾರ ಕಳವಳ ವ್ಯಕ್ತಪಡಿಸಿದ ಸುಪ್ರೀಂ ಕೋರ್ಟ್, RBI, ಬ್ಯಾಂಕ್ಗಳು ಹಾಗೂ ದೂರಸಂಪರ್ಕ ಇಲಾಖೆಯಂತಹ ಸಂಬಂಧಿತ ಸಂಸ್ಥೆಗಳೊಂದಿಗೆ ಸಮಾಲೋಚನೆ ನಡೆಸಿ, ಇಂತಹ ಪ್ರಕರಣಗಳನ್ನು ನಿಭಾಯಿಸಲು ಪ್ರಮಾಣಿತ ಕಾರ್ಯಾಚರಣಾ ವಿಧಾನ ಕರಡನ್ನು ರೂಪಿಸಬೇಕು ಎಂದು ಕೇಂದ್ರ ಸರಕಾರಕ್ಕೆ ನಿರ್ದೇಶನ ನೀಡಿದೆ. ಈ ಪ್ರಕರಣದ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್, ನ್ಯಾ. ಜೋಯ್ ಮಲ್ಯ ಬಾಗ್ಚಿ ಮತ್ತು ನ್ಯಾ. ಎನ್.ವಿ. ಅಂಜಾರಿಯಾರನ್ನೊಳಗೊಂಡ ನ್ಯಾಯಪೀಠ, ಡಿಜಿಟಲ್ ವಂಚನೆಯಲ್ಲಿ ಅಕ್ರಮವಾಗಿ ವರ್ಗಾಯಿಸಲಾಗಿರುವ ಮೊತ್ತವು ಹಲವು ಸಣ್ಣ ರಾಜ್ಯಗಳ ಬಜೆಟ್ಗಿಂತ ಹೆಚ್ಚಿದೆ ಎಂದು ಕಳವಳ ವ್ಯಕ್ತಪಡಿಸಿತು. ಇಂತಹ ಅಪರಾಧಗಳು ಬ್ಯಾಂಕ್ ಅಧಿಕಾರಿಗಳು ಕೈಮಿಲಾಯಿಸಿರುವುದರಿಂದ ಅಥವಾ ನಿರ್ಲಕ್ಷ್ಯದಿಂದ ನಡೆಯುತ್ತಿವೆ ಎಂಬುದನ್ನು ಗಮನಕ್ಕೆ ತೆಗೆದುಕೊಂಡ ನ್ಯಾಯಾಲಯ, ಇಂತಹ ಪ್ರಕರಣಗಳಲ್ಲಿ ಆರ್ಬಿಐ ಹಾಗೂ ಬ್ಯಾಂಕ್ಗಳು ಸಕಾಲಿಕ ಕ್ರಮ ಕೈಗೊಳ್ಳಬೇಕು ಎಂದು ಒತ್ತಿ ಹೇಳಿತು. ಈ ಪ್ರಕರಣದಲ್ಲಿ ಸರಣಿ ನಿರ್ದೇಶನಗಳನ್ನು ನೀಡಿದ ನ್ಯಾಯಾಲಯ, ಭಾರತೀಯ ರಿಸರ್ವ್ ಬ್ಯಾಂಕ್ನ ಪ್ರಮಾಣಿತ ಕಾರ್ಯಾಚರಣಾ ವಿಧಾನ ಹಾಗೂ ದೂರಸಂಪರ್ಕ ಇಲಾಖೆಯ ಪ್ರಮಾಣಿತ ಕಾರ್ಯಾಚರಣಾ ವಿಧಾನಗಳನ್ನು ಪರಿಗಣಿಸಬೇಕು ಎಂದು ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯಕ್ಕೆ ಸೂಚಿಸಿತು. ಇಂತಹ ಅಪರಾಧ ಕೃತ್ಯಗಳನ್ನು ಪರಿಣಾಮಕಾರಿಯಾಗಿ ನಿಭಾಯಿಸಲು ಇನ್ನು ನಾಲ್ಕು ವಾರಗಳಲ್ಲಿ ಒಡಂಬಡಿಕೆ ಕರಡಿನೊಂದಿಗೆ ನ್ಯಾಯಾಲಯಕ್ಕೆ ಬರಬೇಕು ಎಂದು ನಿರ್ದೇಶನ ನೀಡಿತು.
ಸಾಮಾಜಿಕ ಮಾಧ್ಯಮ ಪೋಸ್ಟ್ಗಳಿಗೆ ಸಂಬಂಧಿಸಿದಂತೆ FIR ದಾಖಲಿಸಲು ಹೊಸ ಮಾರ್ಗಸೂಚಿ: ಡಿಜಿಪಿ ಎಂ.ಎ. ಸಲೀಮ್ ಆದೇಶ
ಬೆಂಗಳೂರು: ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳುವ ಪೋಸ್ಟ್ಗಳಿಗೆ ಸಂಬಂಧಿಸಿದಂತೆ ಪೊಲೀಸ್ ಠಾಣೆಗಳಲ್ಲಿ ಪ್ರಾಥಮಿಕ ವಿಚಾರಣೆ ನಡೆಸದೆ ಏಕಾಏಕಿ ಎಫ್ಐಆರ್ ದಾಖಲಿಸುವುದಕ್ಕೆ ರಾಜ್ಯ ಪೊಲೀಸ್ ಮಹಾನಿರ್ದೇಶಕ (DG & IGP) ಎಂ.ಎ. ಸಲೀಮ್ ಬ್ರೇಕ್ ಹಾಕಿದ್ದಾರೆ. ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಎತ್ತಿಹಿಡಿಯುವ ನಿಟ್ಟಿನಲ್ಲಿ ಮತ್ತು ಸುಪ್ರೀಂ ಕೋರ್ಟ್ ನೀಡಿರುವ ನಿರ್ದೇಶನಗಳನ್ನು ಪಾಲಿಸುವ ಉದ್ದೇಶದಿಂದ ಫೆಬ್ರವರಿ 7 ರಂದು ಹೊಸ ಸುತ್ತೋಲೆಯನ್ನು ಹೊರಡಿಸಲಾಗಿದ್ದು,
ಭಾರತ–ಯುಎಸ್ ವ್ಯಾಪಾರ ಒಪ್ಪಂದದ ನಂತರ ರಷ್ಯಾದಿಂದ ತೈಲ ಖರೀದಿ ನಿಲ್ಲಿಸಲಿದೆಯೇ ಭಾರತ?
ಕಳೆದ ವಾರ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಪ್ರಧಾನಿ ನರೇಂದ್ರ ಮೋದಿ ಭಾರತ ಮತ್ತು ಅಮೆರಿಕ ನಡುವಿನ ಬಹುನಿರೀಕ್ಷಿತ ವ್ಯಾಪಾರ ಒಪ್ಪಂದವನ್ನು ಘೋಷಿಸಿದ್ದಾರೆ. ಒಪ್ಪಂದದ ಭಾಗವಾಗಿ ಭಾರತ ರಷ್ಯಾದಿಂದ ತೈಲ ಖರೀದಿಯನ್ನು ನಿಲ್ಲಿಸುತ್ತದೆ ಎಂದು ಟ್ರಂಪ್ ಹೇಳಿದ್ದಾರೆ. ಭಾರತ ಹಾಗೂ ಅಮೆರಿಕ ನಡುವಣ ವ್ಯಾಪಾರ ಒಪ್ಪಂದದ ಚೌಕಟ್ಟಿನಲ್ಲಿ ರಷ್ಯಾ ತೈಲ ಖರೀದಿ ಬಗ್ಗೆ ಯಾವುದೇ ಉಲ್ಲೇಖ ಇಲ್ಲದಿದ್ದರೂ, ಭಾರತವು ಮಹತ್ವದ ಕ್ರಮಗಳನ್ನು ತೆಗೆದುಕೊಂಡಿದೆ. ಅದು ಮಾಸ್ಕೋದಿಂದ ನೇರ ಅಥವಾ ಪರೋಕ್ಷವಾಗಿ ತೈಲ ಆಮದು ಮಾಡಿಕೊಳ್ಳುವುದನ್ನು ನಿಲ್ಲಿಸಲು ಬದ್ಧತೆ ವ್ಯಕ್ತಪಡಿಸಿದೆ ಎಂದು ಟ್ರಂಪ್ ವ್ಯಾಪಾರ ಚೌಕಟ್ಟು ಘೋಷಣೆಯಾದ ಬಳಿಕ ಹೇಳಿದ್ದರು. ಅಂದಹಾಗೆ, ರಷ್ಯಾದಿಂದ ತೈಲ ಆಮದು ನಿಲ್ಲಿಸುವ ಬಗ್ಗೆ ಭಾರತದಿಂದ ಯಾವುದೇ ಅಧಿಕೃತ ಘೋಷಣೆಯಾಗಿಲ್ಲ. ರಷ್ಯಾದ ತೈಲದ ಬಗ್ಗೆ ಟ್ರಂಪ್ ಹೇಳಿದ್ದೇನು? ಫೆಬ್ರವರಿ 2ರಂದು ಡೊನಾಲ್ಡ್ ಟ್ರಂಪ್ ಅವರು ಪ್ರಧಾನಿ ಮೋದಿ ಅವರೊಂದಿಗೆ ಮಾತನಾಡಿರುವುದಾಗಿ ಹೇಳಿದ್ದು, ನಾವು ವ್ಯಾಪಾರ ಒಪ್ಪಂದಕ್ಕೆ ಒಪ್ಪಿಕೊಂಡಿದ್ದೇವೆ. ಈ ವ್ಯಾಪಾರ ಒಪ್ಪಂದದ ಅಡಿಯಲ್ಲಿ ಅಮೆರಿಕ ಭಾರತದ ಸುಂಕವನ್ನು ಶೇಕಡಾ 25ರಿಂದ 18ಕ್ಕೆ ಇಳಿಸುತ್ತದೆ ಎಂದಿದ್ದರು. ಟ್ರಂಪ್ ತಮ್ಮ ಟ್ರೂತ್ ಸೋಶಿಯಲ್ ಪೋಸ್ಟ್ನಲ್ಲಿ ಪ್ರಧಾನಿ ಮೋದಿ ರಷ್ಯಾದ ತೈಲವನ್ನು ಖರೀದಿಸುವುದನ್ನು ನಿಲ್ಲಿಸುವುದಾಗಿ ಮತ್ತು ಅಮೆರಿಕದಿಂದ ಹಾಗೂ ಬಹುಶಃ ವೆನೆಝುವೆಲಾದಿಂದ ಹೆಚ್ಚಿನದನ್ನು ಖರೀದಿಸಲು ಒಪ್ಪಿಕೊಂಡಿದ್ದಾರೆ ಎಂದು ಹೇಳಿಕೊಂಡಿದ್ದಾರೆ. ಅಮೆರಿಕದಿಂದ 500 ಬಿಲಿಯನ್ ಡಾಲರ್ ಮೊತ್ತದ ಇಂಧನ, ತಂತ್ರಜ್ಞಾನ, ಕೃಷಿ ಉತ್ಪನ್ನ ಮತ್ತು ಕಲ್ಲಿದ್ದಲು ಖರೀದಿಸಲು ಭಾರತ ಒಪ್ಪಿದೆ. ಭಾರತದೊಂದಿಗಿನ ನಮ್ಮ ಸಂಬಂಧ ಇನ್ನಷ್ಟು ಸದೃಢವಾಗಿ ಮುಂದುವರಿಯಲಿದೆ. ಕೆಲವರಿಗೆ ಹೇಳಲು, ಮಾಡಲು ಸಾಧ್ಯವಾಗದ ವಿಷಯವನ್ನು ಪ್ರಧಾನಿ ನರೇಂದ್ರ ಮೋದಿ ಮತ್ತು ನಾನು ಇಬ್ಬರು ಸೇರಿ ಮಾಡಿದ್ದೇವೆ ಎಂದಿದ್ದರು. ಶುಕ್ರವಾರ ಟ್ರಂಪ್ ಕಾರ್ಯಕಾರಿ ಆದೇಶಕ್ಕೆ ಸಹಿ ಹಾಕಿದ್ದು, ಅದು ಭಾರತದ ರಷ್ಯಾದ ಇಂಧನ ಖರೀದಿಗಾಗಿ ವಿಧಿಸಲಾದ ಶೇಕಡಾ 25ರಷ್ಟು ದಂಡ ಸುಂಕವನ್ನು ತೆಗೆದುಹಾಕುತ್ತದೆ. ತಮ್ಮ ಆದೇಶದಲ್ಲಿ ಭಾರತ ರಷ್ಯಾದಿಂದ ತೈಲ ಖರೀದಿಸುವುದನ್ನು ನಿಲ್ಲಿಸುತ್ತದೆ ಎಂಬ ಹೇಳಿಕೆಯನ್ನು ಟ್ರಂಪ್ ಪುನರುಚ್ಚರಿಸಿದರು. ನಿರ್ದಿಷ್ಟವಾಗಿ ಹೇಳುವುದಾದರೆ, ಭಾರತವು ರಷ್ಯಾದ ಒಕ್ಕೂಟದ ತೈಲವನ್ನು ನೇರವಾಗಿ ಅಥವಾ ಪರೋಕ್ಷವಾಗಿ ಆಮದು ಮಾಡಿಕೊಳ್ಳುವುದನ್ನು ನಿಲ್ಲಿಸಲು ಬದ್ಧವಾಗಿದೆ. ಇದು ಯುನೈಟೆಡ್ ಸ್ಟೇಟ್ಸ್ನಿಂದ ಇಂಧನ ಉತ್ಪನ್ನಗಳನ್ನು ಖರೀದಿಸುವುದಾಗಿ ಪ್ರತಿನಿಧಿಸಿದೆ ಮತ್ತು ಮುಂದಿನ 10 ವರ್ಷಗಳಲ್ಲಿ ರಕ್ಷಣಾ ಸಹಕಾರವನ್ನು ವಿಸ್ತರಿಸಲು ಅಮೆರಿಕದೊಂದಿಗೆ ಒಂದು ಚೌಕಟ್ಟಿಗೆ ಬದ್ಧವಾಗಿದೆ ಎಂದು ಆದೇಶದಲ್ಲಿ ಹೇಳಲಾಗಿದೆ. ರಷ್ಯಾದ ತೈಲ ಖರೀದಿಯ ಕುರಿತಾದ ಅಮೆರಿಕದ ಕಳವಳಗಳನ್ನು ಪರಿಹರಿಸಲು ಮತ್ತು ರಾಷ್ಟ್ರೀಯ ಭದ್ರತೆ, ವಿದೇಶಾಂಗ ನೀತಿ ಹಾಗೂ ಆರ್ಥಿಕ ವಿಷಯಗಳಲ್ಲಿ ಅಮೆರಿಕದೊಂದಿಗೆ ಸಾಕಷ್ಟು ಹೊಂದಾಣಿಕೆ ಮಾಡಿಕೊಳ್ಳಲು ಭಾರತವು “ಮಹತ್ವದ ಕ್ರಮಗಳನ್ನು” ತೆಗೆದುಕೊಂಡಿದೆ ಎಂದು ಆದೇಶದಲ್ಲಿ ಹೇಳಿದೆ. ಕಾರ್ಯಕಾರಿ ಆದೇಶವು ಮೇಲ್ವಿಚಾರಣಾ ಕಾರ್ಯವಿಧಾನವನ್ನು ಸಹ ಜಾರಿಗೆ ತಂದಿದೆ. ಇದರಲ್ಲಿ ಭಾರತ ರಷ್ಯಾದಿಂದ ಇಂಧನ ಖರೀದಿಯನ್ನು ನಿಲ್ಲಿಸಿದೆಯೇ ಎಂದು ಅಮೆರಿಕದ ವಾಣಿಜ್ಯ ಕಾರ್ಯದರ್ಶಿ ಹೊವಾರ್ಡ್ ಲುಟ್ನಿಕ್ ಮೇಲ್ವಿಚಾರಣೆ ಮಾಡಲಿದ್ದಾರೆ. ಭಾರತವು ರಷ್ಯಾದ ಇಂಧನದ ನೇರ ಅಥವಾ ಪರೋಕ್ಷ ಆಮದನ್ನು ಪುನರಾರಂಭಿಸಿದೆ ಎಂದು ಲುಟ್ನಿಕ್ ಕಂಡುಕೊಂಡರೆ, ಅವರ ತಂಡದ ಶಿಫಾರಸುಗಳಿಗೆ ಅನುಗುಣವಾಗಿ ಟ್ರಂಪ್ ಭಾರತೀಯ ಸರಕುಗಳ ಮೇಲೆ ದಂಡವಾಗಿ ಹೆಚ್ಚುವರಿ 25 ಪ್ರತಿಶತ ಸುಂಕವನ್ನು ಮತ್ತೆ ವಿಧಿಸಬಹುದು ಎಂದು ಅದು ಹೇಳಿದೆ. ‘ಮಧ್ಯಂತರ’ ವ್ಯಾಪಾರ ಒಪ್ಪಂದದ ಕುರಿತು ಶ್ವೇತಭವನ ಶನಿವಾರ ಅಮೆರಿಕ–ಭಾರತ ಜಂಟಿ ಹೇಳಿಕೆಯನ್ನು ಬಿಡುಗಡೆ ಮಾಡಿತು. ಆದಾಗ್ಯೂ, ಇದು ಭಾರತದ ರಷ್ಯಾದ ತೈಲ ಖರೀದಿಗಳ ಬಗ್ಗೆ ಯಾವುದೇ ಉಲ್ಲೇಖವನ್ನು ಹೊಂದಿಲ್ಲ. ರಷ್ಯಾ ಖರೀದಿಗಳ ಬಗ್ಗೆ ಭಾರತ ಏನು ಹೇಳಿದೆ? ಅಮೆರಿಕದೊಂದಿಗಿನ ವ್ಯಾಪಾರ ಒಪ್ಪಂದದ ಅಡಿಯಲ್ಲಿ ಭಾರತ ರಷ್ಯಾದ ತೈಲ ಖರೀದಿಯನ್ನು ನಿಲ್ಲಿಸುತ್ತದೆ ಎಂದು ಟ್ರಂಪ್ ಹೇಳಿಕೆಯ ನಂತರದ ಮೊದಲ ಹೇಳಿಕೆಗಳಲ್ಲಿ, ಮಾರುಕಟ್ಟೆ ಪರಿಸ್ಥಿತಿ ಮತ್ತು ಅಂತಾರಾಷ್ಟ್ರೀಯ ಪರಿಸ್ಥಿತಿಗೆ ಅನುಗುಣವಾಗಿ ಇಂಧನದ ಮೂಲ ವಿಸ್ತರಿಸುವುದು ನಮ್ಮ ಕಾರ್ಯತಂತ್ರದ ಭಾಗವಾಗಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಎಲ್ಲಾ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುತ್ತದೆ ಎಂದು ಭಾರತ ಹೇಳಿದೆ. ಭಾರತದ ಇಂಧನ ಭದ್ರತೆ ಅಥವಾ ಮೂಲಗಳ ಖರೀದಿ ದೃಢಪಟ್ಟಿರುವ ಮಟ್ಟಿಗೆ, ಸರ್ಕಾರವು ಹಲವಾರು ಸಂದರ್ಭಗಳಲ್ಲಿ — ನಾನು ಸೇರಿದಂತೆ — 1.4 ಶತಕೋಟಿ ಜನರಿಗೆ ಇಂಧನ ಭದ್ರತೆಯನ್ನು ಖಾತರಿಪಡಿಸುವುದು ಸರ್ಕಾರದ ಅತ್ಯುನ್ನತ ಆದ್ಯತೆಯಾಗಿದೆ ಎಂದು ಸಾರ್ವಜನಿಕವಾಗಿ ಹೇಳಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಹೇಳಿದ್ದಾರೆ. ಭಾರತವು ಜನವರಿಯಲ್ಲಿ ದಿನಕ್ಕೆ 1.215 ಮಿಲಿಯನ್ ಬ್ಯಾರೆಲ್ (bpd) ರಷ್ಯಾದ ಕಚ್ಚಾ ತೈಲವನ್ನು ಆಮದು ಮಾಡಿಕೊಂಡಿದೆ ಎಂದು ವರದಿಯಾಗಿದೆ. ನಯಾರಾ ಸಂಸ್ಕರಣಾಗಾರವು ರೋಸ್ನೆಫ್ಟ್ ಮತ್ತು ಹೂಡಿಕೆ ಒಕ್ಕೂಟದ ಜಂಟಿ ಒಡೆತನದಲ್ಲಿದೆ. ಇದರಲ್ಲಿ 0.41 ಮಿಲಿಯನ್ bpd ನಷ್ಟಿದೆ ಎಂದು ರಾಯಿಟರ್ಸ್ ವರದಿ ಮಾಡಿದೆ. ಜನವರಿಯಲ್ಲಿ ಭಾರತದ ರಷ್ಯಾದ ತೈಲ ಆಮದು ಡಿಸೆಂಬರ್ ನಿಂದ ಪ್ರತಿದಿನ ಶೇ.12ರಷ್ಟು ಕಡಿಮೆಯಾಗಿದೆ. ನವೆಂಬರ್ನಿಂದ ಡಿಸೆಂಬರ್ನಲ್ಲಿ ಸುಮಾರು ಶೇ.22ರಷ್ಟು ಕಡಿಮೆಯಾಗಿದೆ. 2025ರ ಮಧ್ಯದಲ್ಲಿ ಕೊನೆಯ ಬಾರಿಗೆ 2 ಮಿಲಿಯನ್ bpd ಆಮದು ಮಟ್ಟಗಳು ಕಂಡುಬಂದಿವೆ. ವ್ಯಾಪಾರ ಒಪ್ಪಂದದ ಭಾಗವಾಗಿ ರಷ್ಯಾದ ತೈಲ ಖರೀದಿಯನ್ನು ನಿಲ್ಲಿಸಲು ಭಾರತ ಬದ್ಧವಾಗಿದೆ ಎಂಬ ಟ್ರಂಪ್ ಆಡಳಿತದ ಹೇಳಿಕೆಗಳನ್ನು ಭಾರತ ದೃಢಪಡಿಸಲಿಲ್ಲ ಅಥವಾ ನಿರಾಕರಿಸಲಿಲ್ಲ. ಭಾರತ ಮತ್ತು ಅದರ ರಷ್ಯಾದ ತೈಲ ಖರೀದಿಗಳ ಕುರಿತು ಅಮೆರಿಕದ ಹೇಳಿಕೆಗಳ ಕುರಿತು ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ಪ್ರತಿಕ್ರಿಯಿಸಿದ್ದು, ಈ ವಿಷಯದ ಬಗ್ಗೆ MEA ಮಾಹಿತಿಯನ್ನು ಒದಗಿಸಬಹುದು ಎಂದು ಹೇಳಿದರು. ಬಳಿಕ ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಅವರು ಹಿಂದಿನ ಹೇಳಿಕೆಯನ್ನು ಪುನರುಚ್ಚರಿಸಿದ್ದು, ಇಂಧನ ಮೂಲದಲ್ಲಿ “ಸರ್ವೋಚ್ಚ ಆದ್ಯತೆ” 1.4 ಶತಕೋಟಿ ನಾಗರಿಕರ ಇಂಧನ ಸುರಕ್ಷತೆಯನ್ನು ರಕ್ಷಿಸುವುದು ಎಂದಿದ್ದಾರೆ. ರವಿವಾರ ಭಾರತದ ರಷ್ಯಾದ ತೈಲ ಖರೀದಿಗಳ ಕುರಿತು ಟ್ರಂಪ್ ಅವರ ಹೇಳಿಕೆಗಳ ಬಗ್ಗೆ ಗೋಯಲ್ ನೇರ ಉತ್ತರವನ್ನು ನೀಡಿಲ್ಲ. ನಾವು ನಮ್ಮ ತೈಲ ಮೂಲಗಳನ್ನು ವೈವಿಧ್ಯಗೊಳಿಸುವುದರಿಂದ ಅಮೆರಿಕದಿಂದ ಕಚ್ಚಾ ತೈಲ ಅಥವಾ LNG, LPG ಖರೀದಿಸುವುದು ಭಾರತದ ಸ್ವಂತ ಕಾರ್ಯತಂತ್ರದ ಹಿತಾಸಕ್ತಿಗಳಲ್ಲಿದೆ ಎಂದಿದ್ದಾರೆ ಅವರು. ಸುದ್ದಿ ಸಂಸ್ಥೆ ANIಗೆ ನೀಡಿದ ಸಂದರ್ಶನದಲ್ಲಿ ಗೋಯಲ್ ಅವರಲ್ಲಿ, ‘ರಷ್ಯಾದ ತೈಲ ಅಥವಾ ರಕ್ಷಣಾ ವಿಷಯಗಳಲ್ಲಿ ದ್ವಿಪಕ್ಷೀಯ ಒಮ್ಮತದ ಕೊರತೆಯಿದ್ದರೆ, ಅದು ವ್ಯಾಪಾರ ಒಪ್ಪಂದದ ಮೇಲೂ ಪರಿಣಾಮ ಬೀರುವುದಿಲ್ಲವೇ?’ ಎಂದು ಕೇಳಲಾಯಿತು. ಅದಕ್ಕೆ ಅವರು, “ಇಲ್ಲ, ಖಂಡಿತ ಇಲ್ಲ. ಈ ಒಪ್ಪಂದವು ಯಾರು ಏನು ಮತ್ತು ಎಲ್ಲಿಂದ ಖರೀದಿಸುತ್ತಾರೆ ಎಂಬುದನ್ನು ಚರ್ಚಿಸುವುದಿಲ್ಲ. ವ್ಯಾಪಾರ ಒಪ್ಪಂದವು ವ್ಯಾಪಾರದ ಹಾದಿ ಸುಗಮವಾಗಿರುವುದನ್ನು ಖಚಿತಪಡಿಸುತ್ತದೆ, ಆದ್ಯತೆಯ ಪ್ರವೇಶವನ್ನು ಖಚಿತಪಡಿಸುತ್ತದೆ. ಮುಕ್ತ ವ್ಯಾಪಾರ ಒಪ್ಪಂದಗಳು ಎಲ್ಲವೂ ಆದ್ಯತೆಯ ಪ್ರವೇಶದ ಬಗ್ಗೆಯಾಗಿದೆ. ನಾವು 18% ಪ್ರತಿಸುಂಕವನ್ನು ಹೊಂದಿರುವಾಗ ಸಾಮಾನ್ಯವಾಗಿ ನಮ್ಮ ಪ್ರತಿಸ್ಪರ್ಧಿಯಾಗಿರುವ ಇತರ ಅಭಿವೃದ್ಧಿಶೀಲ ರಾಷ್ಟ್ರಗಳಿಗಿಂತ ನಮಗೆ ಆದ್ಯತೆ ಇರುತ್ತದೆ” ಎಂದಿದ್ದಾರೆ. ರಷ್ಯಾ ಏನು ಹೇಳಿದೆ? ಭಾರತ ಇನ್ನು ಮುಂದೆ ರಷ್ಯಾದ ತೈಲವನ್ನು ಖರೀದಿಸುವುದಿಲ್ಲ ಎಂದು ಟ್ರಂಪ್ ಹೇಳಿಕೆ ನೀಡಿದ ನಂತರ ಕ್ರೆಮ್ಲಿನ್ ಭಾರತವು ಯಾವುದೇ ದೇಶದಿಂದ ಬೇಕಿದ್ದರೂ ತೈಲ ಖರೀದಿಸಬಹುದು. ಭಾರತಕ್ಕೆ ರಷ್ಯಾ ಮಾತ್ರ ತೈಲ ಮತ್ತು ಪೆಟ್ರೋಲಿಯಂ ಉತ್ಪನ್ನಗಳನ್ನು ರಫ್ತು ಮಾಡುತ್ತಿಲ್ಲ. ದೇಶವೊಂದು ಯಾರಿಂದ ಬೇಕಿದ್ದರೂ ತೈಲ ಖರೀದಿಸಬಹುದು ಎಂದು ಪ್ರತಿಕ್ರಿಯೆ ನೀಡಿದೆ. ಗ್ರಾಹಕರ ಹಿತಾಸಕ್ತಿಗಳನ್ನು ರಕ್ಷಿಸುವುದು ಸರ್ಕಾರದ ಪ್ರಮುಖ ಆದ್ಯತೆ: ಮಿಸ್ರಿ ಇತ್ತೀಚೆಗೆ ಅಮೆರಿಕದೊಂದಿಗೆ ಘೋಷಿಸಲಾದ ವ್ಯಾಪಾರ ಒಪ್ಪಂದದ ನಂತರ ಭಾರತ ರಷ್ಯಾದ ತೈಲ ಖರೀದಿಯನ್ನು ನಿಲ್ಲಿಸುತ್ತದೆಯೇ ಎಂಬ ಪ್ರಶ್ನೆಗಳ ನಡುವೆ, ರಾಷ್ಟ್ರೀಯ ಹಿತಾಸಕ್ತಿ, ಗ್ರಾಹಕರ ಕೈಗೆಟುಕುವಿಕೆ ಮತ್ತು ಪೂರೈಕೆ ಸುರಕ್ಷತೆಯಿಂದ ತನ್ನ ಇಂಧನ ಆಮದು ನೀತಿಯನ್ನು ನಿರ್ದೇಶಿಸಲಾಗಿದೆ ಎಂದು ಭಾರತ ಸೋಮವಾರ ಪುನರುಚ್ಚರಿಸಿದೆ. ಭಾರತದ ರಷ್ಯಾದ ಕಚ್ಚಾ ತೈಲದ ಮೂಲದ ಕುರಿತಾದ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ, ಅಭಿವೃದ್ಧಿ ಹೊಂದುತ್ತಿರುವ ಆರ್ಥಿಕತೆ ಮತ್ತು ತೈಲ-ಅನಿಲದ ದೊಡ್ಡ ನಿವ್ವಳ ಆಮದುದಾರರಾಗಿ ಭಾರತ ಸ್ಥಿರ, ವಿಶ್ವಾಸಾರ್ಹ ಮತ್ತು ಸಮಂಜಸ ಬೆಲೆಯ ಇಂಧನ ಪೂರೈಕೆಯನ್ನು ಖಚಿತಪಡಿಸಿಕೊಳ್ಳಬೇಕು ಎಂದರು. ನೀವು ಆಮದು ಮಾಡಿಕೊಂಡ ಇಂಧನದ ಮೇಲೆ ಶೇಕಡಾ 80–85ರಷ್ಟು ಅವಲಂಬಿತರಾಗಿರುವಾಗ ಇಂಧನ ವೆಚ್ಚಗಳಿಂದ ಉಂಟಾಗುವ ಹಣದುಬ್ಬರದ ಬಗ್ಗೆ ಕಳವಳಗಳು ಸಹಜ. ಆದರೆ ಭಾರತೀಯ ಗ್ರಾಹಕರ ಹಿತಾಸಕ್ತಿಗಳನ್ನು ರಕ್ಷಿಸುವುದು ಸರ್ಕಾರದ ಪ್ರಮುಖ ಆದ್ಯತೆಯಾಗಿದೆ ಎಂದು ಒತ್ತಿ ಹೇಳಿದರು. ಇತ್ತೀಚಿನ ವರ್ಷಗಳಲ್ಲಿ ಜಾಗತಿಕ ಇಂಧನ ಮಾರುಕಟ್ಟೆಗಳು ಬೆಲೆಗಳು ಮತ್ತು ಪೂರೈಕೆ ಸರಪಳಿಗಳ ಮೇಲೆ ಪರಿಣಾಮ ಬೀರುವ ಗಣನೀಯ ಅನಿಶ್ಚಿತತೆಯನ್ನು ಕಂಡಿವೆ. ಈ ಹಿನ್ನೆಲೆಯಲ್ಲಿ ಭಾರತವು ಯಾವುದೇ ಒಂದೇ ಪೂರೈಕೆದಾರರನ್ನು ಅವಲಂಬಿಸುವ ಬದಲು ತನ್ನ ಇಂಧನ ಆಮದು ಮೂಲಗಳನ್ನು ವೈವಿಧ್ಯಗೊಳಿಸುವತ್ತ ಗಮನಹರಿಸಿದೆ. ಭಾರತವು ಜಾಗತಿಕ ಇಂಧನ ಮಾರುಕಟ್ಟೆಗಳಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ನಾವು ಬಹು ಮೂಲಗಳಿಂದ ಶಕ್ತಿಯನ್ನು ಆಮದು ಮಾಡಿಕೊಳ್ಳಲು ಇದು ಒಂದು ಕಾರಣವಾಗಿದೆ. ಲಭ್ಯತೆ, ನ್ಯಾಯಯುತ ಬೆಲೆ ನಿಗದಿ ಮತ್ತು ವಿಶ್ವಾಸಾರ್ಹತೆ ಭಾರತದ ಆಮದು ನೀತಿಯ ಮೂಲ ತತ್ವಗಳಾಗಿವೆ ಎಂದು ಒತ್ತಿ ಹೇಳಿದ ಮಿಸ್ರಿ, ಅಧಿಕೃತ ದತ್ತಾಂಶವು ಭಾರತವು ಡಜನ್ಗಟ್ಟಲೆ ದೇಶಗಳಿಂದ ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳುತ್ತದೆ ಎಂದು ತೋರಿಸುತ್ತದೆ. ನಾವು ಯಾವುದೇ ಒಂದೇ ಮೂಲವನ್ನು ಅವಲಂಬಿಸಿಲ್ಲ ಅಥವಾ ಅವಲಂಬಿಸಿರಲು ಉದ್ದೇಶಿಸಿಲ್ಲ. ವಸ್ತುನಿಷ್ಠ ಮಾರುಕಟ್ಟೆ ಪರಿಸ್ಥಿತಿಗಳನ್ನು ಅವಲಂಬಿಸಿ ಇದು ಕಾಲಕಾಲಕ್ಕೆ ಬದಲಾಗಬಹುದು. ಮಾರುಕಟ್ಟೆ ಪರಿಸ್ಥಿತಿಗಳು, ವೆಚ್ಚಗಳು, ಅಪಾಯಗಳು ಮತ್ತು ಲಭ್ಯತೆಯನ್ನು ನಿರ್ಣಯಿಸುವ ಸಾರ್ವಜನಿಕ ಮತ್ತು ಖಾಸಗಿ ವಲಯದ ಕಂಪನಿಗಳು ನಿಜವಾದ ಸೋರ್ಸಿಂಗ್ ನಿರ್ಧಾರಗಳನ್ನು ತೆಗೆದುಕೊಳ್ಳುತ್ತವೆ. ಈ ಕಂಪನಿಗಳು ತಮ್ಮದೇ ಆದ ಆಂತರಿಕ ಹೊಣೆಗಾರಿಕೆ ಕಾರ್ಯವಿಧಾನಗಳನ್ನು ಹೊಂದಿವೆ. ಅದು ಸರ್ಕಾರವಾಗಲಿ ಅಥವಾ ವ್ಯವಹಾರಗಳಾಗಲಿ, ದಿನದ ಕೊನೆಯಲ್ಲಿ ರಾಷ್ಟ್ರೀಯ ಹಿತಾಸಕ್ತಿ ಮಾರ್ಗದರ್ಶಕ ಅಂಶವಾಗಿದೆ ಎಂದು ಮಿಸ್ರಿ ಹೇಳಿದ್ದಾರೆ.
ಹಾಂಕಾಂಗ್| ಉದ್ಯಮಿ ಜಿಮ್ಮಿ ಲಾಯ್ಗೆ 20 ವರ್ಷ ಜೈಲುಶಿಕ್ಷೆ
ಹಾಂಕಾಂಗ್. ಫೆ.9: ಹಾಂಕಾಂಗ್ನ ಪ್ರಸಿದ್ಧ ಮಾಧ್ಯಮ ಉದ್ಯಮಿ, ಚೀನಾ ಆಡಳಿತವನ್ನು ಕಟುವಾಗಿ ಟೀಕಿಸುವ ಜಿಮ್ಮಿ ಲಾಯ್ ಅವರಿಗೆ ರಾಷ್ಟ್ರೀಯ ಭದ್ರತಾ ಕಾನೂನಿನಡಿ 20 ವರ್ಷ ಜೈಲು ಶಿಕ್ಷೆ ವಿಧಿಸಿರುವುದಾಗಿ ವರದಿಯಾಗಿದೆ. ಹಾಂಕಾಂಗ್ ಪ್ರಜಾಪ್ರಭುತ್ವದ ಪರ ಚಳವಳಿಗೆ ಬೆಂಬಲ ನೀಡುತ್ತಿದ್ದ ಹಾಗೂ ಚೀನಾವನ್ನು ಟೀಕಿಸುತ್ತಿದ್ದ 78 ವರ್ಷದ ಲಾಯ್ ಅವರನ್ನು ವಿದೇಶಿ ಪಡೆಗಳೊಂದಿಗೆ ಒಳಸಂಚು ರೂಪಿಸುತ್ತಿದ್ದ ಆರೋಪದಡಿ ಬಂಧಿಸಿದ್ದು ಕಳೆದ ಸುಮಾರು ಐದು ವರ್ಷಗಳಿಂದ ಬಂಧನದಲ್ಲಿದ್ದರು. ವಿದೇಶೀ ಪಡೆಗಳೊಂದಿಗೆ ಕೈಜೋಡಿಸಿದ ಸಂಚುಕೋರರ ಹಿಂದಿರುವ `ಮಾಸ್ಟರ್ ಮೈಂಡ್' ಎಂದು ಲಾಯ್ ಅವರನ್ನು ಪರಿಗಣಿಸಿದ್ದರಿಂದ ಅವರ ಶಿಕ್ಷೆಯನ್ನು ಹೆಚ್ಚಿಸಿರುವುದಾಗಿ ನ್ಯಾಯಾಧೀಶರು ತೀರ್ಪು ನೀಡಿದ್ದಾರೆ.
ಪಶ್ಚಿಮದಂಡೆಯ ಮೇಲೆ ನಿಯಂತ್ರಣ ಪ್ರಬಲಗೊಳಿಸುವ ಕ್ರಮ ಘೋಷಿಸಿದ ಇಸ್ರೇಲ್
ಜೆರುಸಲೇಂ, ಫೆ.9: ಆಕ್ರಮಿತ ಪಶ್ಚಿಮದಂಡೆಯ ಮೇಲೆ ಇಸ್ರೇಲ್ನ ನಿಯಂತ್ರಣವನ್ನು ಪ್ರಬಲಗೊಳಿಸುವ ಸರಣಿ ಕ್ರಮಗಳನ್ನು ಇಸ್ರೇಲ್ನ ಕ್ಯಾಬಿನೆಟ್ ಅನುಮೋದಿಸಿದ್ದು ಫೆಲೆಸ್ತೀನಿಯನ್ ಪ್ರದೇಶದಲ್ಲಿ ಮತ್ತಷ್ಟು ವಸಾಹತು ವಿಸ್ತರಣೆಗೆ ದಾರಿ ಮಾಡಿಕೊಟ್ಟಿದೆ. ಭದ್ರತಾ ಕ್ಯಾಬಿನೆಟ್ ಇವತ್ತು ನಿರ್ಧಾರಗಳ ಸರಣಿಯನ್ನು ಅನುಮೋದಿಸಿದ್ದು ಪಶ್ಚಿಮದಂಡೆಯಲ್ಲಿ ಕಾನೂನು ಮತ್ತು ನಾಗರಿಕ ವಾಸ್ತವತೆಯನ್ನು ಮೂಲಭೂತವಾಗಿ ಬದಲಾಯಿಸುತ್ತದೆ. ಮತ್ತು ಪಶ್ಚಿಮದಂಡೆಯಲ್ಲಿ ಯಹೂದಿ ನಾಗರಿಕರು ಭೂಮಿಯನ್ನು ಖರೀದಿಸುವುದನ್ನು ತಡೆಯುವ ದಶಕಗಳ ಹಳೆಯ ನಿಯಮವನ್ನು ತೆಗೆದುಹಾಕಿದೆ ಎಂದು ವಿತ್ತ ಸಚಿವ ಬೆಝಲೆಲ್ ಸ್ಮೊಟ್ರಿಚ್ ಮತ್ತು ರಕ್ಷಣಾ ಸಚಿವ ಇಸ್ರೇಲ್ ಕಾಟ್ಜ್ ಜಂಟಿಯಾಗಿ ಘೋಷಿಸಿದ್ದಾರೆ. ಈ ಕ್ರಮವು ಇಸ್ರೇಲ್ನ ಭೂಮಿಯ ಎಲ್ಲಾ ಪ್ರದೇಶಗಳಲ್ಲೂ ನಮ್ಮ ಬೇರುಗಳನ್ನು ಆಳವಾಗಿಸುವ ಮತ್ತು ಫೆಲೆಸ್ತೀನಿಯನ್ ರಾಷ್ಟ್ರದ ಪರಿಕಲ್ಪನೆಯನ್ನು ಸಮಾಧಿ ಮಾಡುವ ಉದ್ದೇಶವನ್ನು ಹೊಂದಿದೆ . ಪಶ್ಚಿಮದಂಡೆಯು ದೇಶದ ಹೃದಯಭಾಗವಾಗಿದೆ ಮತ್ತು ಅದನ್ನು ಬಲಪಡಿಸುವುದು ಅತ್ಯುನ್ನತ ಭದ್ರತಾ, ರಾಷ್ಟ್ರೀಯ ಮತ್ತು ಯಹೂದಿ ರಾಷ್ಟ್ರೀಯತಾವಾದ ಹಿತಾಸಕ್ತಿಯ ಕ್ರಮವಾಗಿದೆ ಎಂದು ಹೇಳಿಕೆ ಪ್ರತಿಪಾದಿಸಿದೆ. ಹೆಬ್ರಾನ್ ಸೇರಿದಂತೆ ಫೆಲೆಸ್ತೀನಿಯನ್ ನಗರಗಳ ಕೆಲವು ಭಾಗಗಳಲ್ಲಿ ವಸಾಹತುಗಳಿಗೆ ಕಟ್ಟಡ ಪರವಾನಗಿಗಳ ಮೇಲಿನ ಅಧಿಕಾರವನ್ನು ಫೆಲೆಸ್ತೀನಿಯನ್ ಪ್ರಾಧಿಕಾರದ ಮುನ್ಸಿಪಲ್ ಸಂಸ್ಥೆಗಳಿಂದ ಇಸ್ರೇಲ್ಗೆ ವರ್ಗಾಯಿಸುವುದಕ್ಕೆ ಈ ಕ್ರಮಗಳು ಅವಕಾಶ ನೀಡುತ್ತವೆ. ಇದುವರೆಗೆ, ನಗರದ ಯಹೂದಿ ಸಮುದಾಯದವರು ನಿರ್ಮಾಣ ಕಾಮಗಾರಿಗೆ ಸಂಬಂಧಿಸಿ ಸ್ಥಳೀಯ ಮುನ್ಸಿಪಾಲಿಟಿ ಹಾಗೂ ಇಸ್ರೇಲ್ ಅಧಿಕಾರಿಗಳು ಇಬ್ಬರಿಂದಲೂ ಲೈಸೆನ್ಸ್ ಪಡೆಯಬೇಕಿತ್ತು. ಹೊಸ ಕ್ರಮದಡಿ ಇಸ್ರೇಲ್ ಅಧಿಕಾರಿಗಳಿಂದ ಮಾತ್ರ ಲೈಸೆನ್ಸ್ ಪಡೆದರೆ ಸಾಕು ಎಂದು ಮೂಲಗಳನ್ನು ಉಲ್ಲೇಖಿಸಿ `ದಿ ಟೈಮ್ಸ್ ಆಫ್ ಇಸ್ರೇಲ್' ವರದಿ ಮಾಡಿದೆ. ಈ ಕ್ರಮಗಳು ಇಸ್ರೇಲಿ ಅಧಿಕಾರಿಗಳಿಗೆ ಕೆಲವು ಧಾರ್ಮಿಕ ಸ್ಥಳಗಳನ್ನು (ಫೆಲೆಸ್ತೀನಿಯನ್ ನಿಯಂತ್ರಣದ ಪ್ರದೇಶದಲ್ಲಿ ಇದ್ದರೂ ಕೂಡಾ) ನಿರ್ವಹಿಸಲು ಅನುವು ಮಾಡಿಕೊಡುತ್ತದೆ. 1967ರಿಂದ ಇಸ್ರೇಲ್ ವಶಪಡಿಸಿಕೊಂಡಿರುವ ಪ್ರದೇಶವು ಭವಿಷ್ಯದ ಯಾವುದೇ ಫೆಲೆಸ್ತೀನಿಯನ್ ರಾಷ್ಟ್ರದ ಅತಿದೊಡ್ಡ ಭಾಗವನ್ನು ರೂಪಿಸುತ್ತದೆ. ಆದರೆ ಧಾರ್ಮಿಕ ಹಕ್ಕಿನ ಮೇಲೆ ಇದು ಇಸ್ರೇಲ್ನ ಪ್ರದೇಶವೆಂದೂ ಹಲವರು ವಾದಿಸುತ್ತಾರೆ. ಫೆಲೆಸ್ತೀನಿಯನ್ ಆಡಳಿತದ ಖಂಡನೆ ಈ ನಿರ್ಧಾರವು ಆಕ್ರಮಿತ ಪಶ್ಚಿಮದಂಡೆಯನ್ನು ಸ್ವಾಧೀನಪಡಿಸಿಕೊಳ್ಳುವ ಪ್ರಯತ್ನಗಳನ್ನು ಆಳವಾಗಿಸುವ ಗುರಿಯನ್ನು ಹೊಂದಿದೆ ಎಂದು ರಮಲ್ಲಾದಲ್ಲಿನ ಫೆಲೆಸ್ತೀನಿಯನ್ ಆಡಳಿತ ಖಂಡಿಸಿದೆ. ಈ ನಿರ್ಧಾರಗಳು ಫೆಲೆಸ್ತೀನಿಯನ್ ಸಾರ್ವಭೌಮತ್ವದ ಅಡಿಯಲ್ಲಿರುವ ಪ್ರದೇಶಗಳಲ್ಲಿಯೂ ಸಹ ವಸಾಹತು ವಿಸ್ತರಣೆ, ಭೂಮಿ ವಶಪಡಿಸಿಕೊಳ್ಳುವಿಕೆ ಮತ್ತು ಫೆಲೆಸ್ತೀನಿಯನ್ ಆಸ್ತಿಗಳನ್ನು ನೆಲಸಮಗೊಳಿಸುವುದನ್ನು ಕಾನೂನುಬದ್ಧಗೊಳಿಸುವ ಇಸ್ರೇಲ್ನ ಮುಕ್ತ ಪ್ರಯತ್ನಗಳನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿಕೆ ತಿಳಿಸಿದೆ.

27 C