ಕೆಪಿಸಿಸಿ ಅಲ್ಪಸಂಖ್ಯಾತ ವಿಭಾಗಕ್ಕೆ ಅಬ್ದುಲ್ ಜಬ್ಬಾರ್ ನೀಡಿದ ರಾಜೀನಾಮೇ ಅಂಗೀಕಾರವಾಗಿದೆ. ಇದರ ಜತೆಗೆ ಅಲ್ಪಸಂಖ್ಯಾತ ವಿಭಾಗದ ಸಮಿತಿಯನ್ನೂ ವಿಸರ್ಜನೆ ಮಾಡಲಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ತಿಳಿಸಿದ್ದಾರೆ. ಜತೆಗೆ ಹೊಸ ಸಮಿತಿಯನ್ನು ಶೀಘ್ರ ರಚಿಸಲಾಗುವುದು ಎಂದ ಹೇಳಿದ್ದಾರೆ.
Asha Bhosle: ಸಂಗೀತ ಜಗತ್ತಿಗೆ ಆಶಾ ಭೋಸ್ಲೆ ನೀಡಿದ ಕೊಡುಗೆ ಅಪಾರ: ಪ್ರಧಾನಿ ಮೋದಿ ಸೇರಿ ಗಣ್ಯರ ಸಂತಾಪ
Asha Bhosle Tributes: ಖ್ಯಾತ ಹಿನ್ನೆಲೆ ಗಾಯಕಿ ಆಶಾ ಭೋಸ್ಲೆ ಅವರು ತಮ್ಮ 92ನೇ ವಯಸ್ಸಿನಲ್ಲಿ ನಿಧನರಾಗಿದ್ದು, ದೇಶವೇ ಶೋಕ ಸಾಗರದಲ್ಲಿ ಮುಳುಗಿದೆ. ಅವರು ಚಿಕಿತ್ಸೆ ಪಡೆಯುತ್ತಿದ್ದ ಮುಂಬೈನ ಬ್ರೀಚ್ ಸ್ಯಾಂಡಿ ಆಸ್ಪತ್ರೆಯತ್ತ ಅಭಿಮಾನಿಗಳು, ಆಪ್ತರು ಧಾವಿಸುತ್ತಿದ್ದಾರೆ. ದೇಶವ್ಯಾಪಿ ಅಪಾರ ಅಭಿಮಾನಿಗಳನ್ನು ಅವರ ಅಗಲಿದ್ದಾರೆ. ಅವರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಸೇರಿದಂತೆ ಕರ್ನಾಟಕ ಒಳಗೊಂಡಂತೆ ರಾಜಕಾರಣಿಗಳು,
ಅಬ್ದುಲ್ ಜಬ್ಬಾರ್ ರಾಜೀನಾಮೆ ಅಂಗೀಕರಿಸಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್
ಬೆಂಗಳೂರು: ಕೆಪಿಸಿಸಿ ಅಲ್ಪಸಂಖ್ಯಾತ ವಿಭಾಗದ ಅಧ್ಯಕ್ಷ ಸ್ಥಾನಕ್ಕೆ ಅಬ್ದುಲ್ ಜಬ್ಬಾರ್ ಅವರು ನೀಡಿರುವ ರಾಜೀನಾಮೆಯನ್ನು ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅಂಗೀಕರಿಸಿದ್ದಾರೆ. ಅಬ್ದುಲ್ ಜಬ್ಬಾರ್ ಅವರ ನೇತೃತ್ವದಲ್ಲಿ ರಚಿಸಲಾಗಿದ್ದ ಅಲ್ಪಸಂಖ್ಯಾತ ವಿಭಾಗದ ಸಮಿತಿಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ವಿಸರ್ಜಿಸಲಾಗಿದೆ ಎಂದು ಡಿ.ಕೆ. ಶಿವಕುಮಾರ್ ಅವರು ಮಾಧ್ಯಮ ಹೇಳಿಕೆಯಲ್ಲಿ ತಿಳಿಸಿದ್ದಾರೆ. ನೂತನ ಸಮಿತಿ ಶೀಘ್ರ ರಚನೆಗೆ ಕ್ರಮ ವಹಿಸಲಾಗಿದೆ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.
Asha Bhosle Life: ಆಶಾ ಭೋಸ್ಲೆ ವೃತ್ತಿ - ವೈಯಕ್ತಿಕ ಜೀವನ: 16 ವರ್ಷಕ್ಕೆ ವಿವಾಹ, 2ನೇ ಮದುವೆ - ಬದುಕಿನ ಏರಿಳಿತ
Asha Bhosle Life: ಭಾರತೀಯ ಸಿನಿಮಾ ರಂಗದ ಖ್ಯಾತ ಗಾಯಕಿ ಆಶಾ ಭೋಸ್ಲೆ ಅವರು ಭಾನುವಾರ ಮೃತಪಟ್ಟಿದ್ದಾರೆ. ಆಶಾ ಭೋಸ್ಲೆ ಅವರು ಭಾರತೀಯ ಸಿನಿಮಾ ರಂಗದಲ್ಲಿ ಅಮೋಘ ಸಾಧನೆಯನ್ನು ಮಾಡಿದ್ದಾರೆ. ಸಂಗೀತ ಕ್ಷೇತ್ರದಲ್ಲಿ ಮೇರು ಸಾಧನೆ ಮಾಡಿರುವ ಅವರು ತಮ್ಮ 16ನೇ ವಯಸ್ಸಿನಲ್ಲಿಯೇ ಅವರ ಕುಟುಂಬದ ಇಚ್ಛೆಗೆ ವಿರುದ್ಧವಾಗಿ 31 ವರ್ಷದ ಗಣಪತ್ರಾವ್ ಭೋಸ್ಲೆ ಅವರೊಂದಿಗೆ ಓಡಿಹೋಗಿ
ಪ್ರಯಾಣಿಕರ ಬೇಡಿಕೆ ಮೇರೆಗೆ ಬೆಂಗಳೂರಿನಿಂದ 2 ಹೊಸ ಮಾರ್ಗದಲ್ಲಿ ಪಲ್ಲಕ್ಕಿ ಬಸ್ ಸೇವೆ ಆರಂಭವಾಗಿದೆ. ಬೆಂಗಳೂರು ಅಥಣಿ, ಬೆಂಗಳೂರು ದಾಂಡೇಲಿ ನಡುವೆ ಈ ಬಸ್ಗಳು ಸಂಚಾರ ನಡೆಸಲಿವೆ. ಇದರಿಂದ ನಾಲ್ಕು ಜಿಲ್ಲೆಗಳ ಪ್ರಯಾಣಿಕರಿಗೆ ಅನುಕೂಲವಾಗಲಿದೆ. ಬಸ್ಗಳ ವೇಳಾಪಟ್ಟಿ ಏನು? ಟಿಕೆಟ್ ದರ ಎಷ್ಟು? ಎಲ್ಲೆಲ್ಲಿ ನಿಲುಗಡೆಯಾಗಲಿದೆ? ಸಂಪೂರ್ಣ ವಿವರ ಇಲ್ಲಿದೆ.
ಹುಲಿಕಲ್ ಘಾಟ್ ಗುಡ್ಡ ಕುಸಿತ: ತೀರ್ಥಹಳ್ಳಿ ಕುಂದಾಪುರ ಹೆದ್ದಾರಿಗೆ ಪರ್ಯಾಯ ಮಾರ್ಗಗಳ ಸೂಚನೆ
ರಾಜ್ಯ ಹೆದ್ದಾರಿ-52 ರ ಬಾಳೆಬರೆ ಘಾಟ್ ನಲ್ಲಿ ಮತ್ತೆ ಭೂಕುಸಿತವಾಗುವ ಸಂಭವವಿರುವುದರಿಂದ ಎಲ್ಲಾ ವಾಹನಗಳ ಸಂಚಾರ ನಿಷೇಧ ಮಾಡಿ ಪರ್ಯಾಯ ಮಾರ್ಗಗಳನ್ನು ಸೂಚಿಸಲಾಗಿದೆ. ಬಾಳೆಬರೆ ಘಾಟ್ ನ ಮೂಲಕ ಎಲ್ಲಾ ವಾಹನಗಳ ಸಂಚಾರವನ್ನು ತಾತ್ಕಾಲಿಕವಾಗಿ ರಕ್ಷಣಾತ್ಮಕ ಕಾಮಗಾರಿ ಪೂರ್ಣಗೊಳ್ಳುವವರೆಗೆ ಸಂಚಾರವನ್ನು ನಿಷೇಧಗೊಳಿಸಲಾಗಿದೆ. ಹಾಗೂ ಈ ಕೆಳಗಿನಂತೆ ಪರ್ಯಾಯ ಮಾರ್ಗಗಳಲ್ಲಿ ತಾತ್ಕಾಲಿಕವಾಗಿ ಸಂಚರಿಸಲು ಆದೇಶ ಹೊರಡಿಸಲಾಗಿದೆ.
ಇರಾನ್ಗೆ ಶಸ್ತ್ರಾಸ್ತ್ರ ರವಾನಿಸಿದರೆ ದೊಡ್ಡ ಸಮಸ್ಯೆ ಎದುರಿಸಬೇಕಾಗುತ್ತದೆ: ಚೀನಾಕ್ಕೆ ಟ್ರಂಪ್ ಎಚ್ಚರಿಕೆ
ವಾಶಿಂಗ್ಟನ್: ಅಮೆರಿಕ ಮತ್ತು ಟೆಹ್ರಾನ್ ನಡುವಿನ ಕದನ ವಿರಾಮ ಮುಂದುವರಿಯುತ್ತಾ ಎಂಬ ಕಳವಳದ ಮಧ್ಯೆ ಇರಾನ್ಗೆ ಶಸ್ತ್ರಾಸ್ತ್ರಗಳನ್ನು ರವಾನಿಸಿದರೆ ದೊಡ್ಡ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಚೀನಾಕ್ಕೆ ಎಚ್ಚರಿಕೆ ನೀಡಿದ್ದಾರೆ. ಶ್ವೇತಭವನದಿಂದ ಮಿಯಾಮಿಗೆ ತೆರಳುವ ಮೊದಲು ಸುದ್ದಿಗಾರರೊಂದಿಗೆ ಮಾತನಾಡಿದ ಡೊನಾಲ್ಡ್ ಟ್ರಂಪ್, ಇರಾನ್ಗೆ ಶಸ್ತ್ರಾಸ್ತ್ರಗಳನ್ನು ರವಾನಿಸಿದರೆ ಚೀನಾ ದೊಡ್ಡ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎಂದು ಹೇಳಿದರು. ಆದರೆ ಈ ಬಗ್ಗೆ ಹೆಚ್ಚಿನ ವಿವರಗಳನ್ನು ನೀಡಲಿಲ್ಲ ಎಂದು ʼರಾಯಿಟರ್ಸ್ʼ ಸುದ್ದಿ ಸಂಸ್ಥೆ ವರದಿ ಮಾಡಿದೆ. ಮುಂಬರುವ ದಿನಗಳಲ್ಲಿ ಇರಾನ್ ಚೀನಾದ ವಾಯು ರಕ್ಷಣಾ ವ್ಯವಸ್ಥೆಗಳನ್ನು ಪಡೆಯಬಹುದು ಎಂಬ ವರದಿ ಬೆನ್ನಲ್ಲೆ ಈ ಹೇಳಿಕೆಯನ್ನು ನೀಡಲಾಗಿದೆ. ವರದಿಯ ಪ್ರಕಾರ, ಚೀನಾ ಈ ಶಸ್ತ್ರ ಸಾಗಣೆಗಳನ್ನು ನೇರವಾಗಿ ಕಳುಹಿಸುವ ಬದಲು, ಮೂರನೇ ದೇಶಗಳ ಮೂಲಕ ರಹಸ್ಯವಾಗಿ ಸಾಗಿಸುವ ಸಾಧ್ಯತೆ ಇದೆ.
Asha Bhosle: ಗಾನ ಕೋಗಿಲೆ ಆಶಾ ಭೋಸ್ಲೆ ನಿಧನ: ದೇಶವೇ ಶೋಕದಲ್ಲಿ, ಸಾಮಾಜಿಕ ಜಾಲತಾಣದಲ್ಲಿ ಫ್ಯಾನ್ಸ್ ಕಂಬನಿ
Asha Bhosle: ಭಾರತೀಯ ಚಿತ್ರರಂಗದ ಖ್ಯಾತ ಗಾಯಕಿ ಆಶಾ ಭೋಸ್ಲೆ (96) ಅವರು ನಿಧನರಾದರು. ಅವರ ನಿಧನಕ್ಕೆ ಅಪಾರ ಗಣ್ಯರು, ಸಂಗೀತ ಪ್ರೇಮಿಗಳು, ವಿವಿಧ ಚಿತ್ರರಂಗದ ದಿಗ್ಗಜರು ಕಂಬನಿ ಮಿಡಿದಿದ್ದಾರೆ. ಅವರ ನಿಧಣ ಸುದ್ದಿ ಅದೆಷ್ಟೋ ಜನರಿಗೆ ಬರಸಿಡಿಲು ಬಡಿದಂತಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಅವರ ಹೆಸರು #Asha Bhosle ಟ್ರೆಂಡಿಂಗ್ನಲ್ಲಿದೆ. ಮೃತರ ಆರೋಗ್ಯದ ಬಗ್ಗೆ ಮೊಮ್ಮಗಳಾದ ಝನೈ
ಹೊಸದಿಲ್ಲಿ: “ಆರೆಸ್ಸೆಸ್-ಬಿಜೆಪಿ ಸಮಾನ ಭಾರತದ ಪರಿಕಲ್ಪನೆಯನ್ನು ವಿರೋಧಿಸುತ್ತಿದ್ದು, ಸಂವಿಧಾನವನ್ನು ಮುಗಿಸಲು ಬಯಸುತ್ತಿದೆ” ಎಂದು ರವಿವಾರ ಲೋಕಸಭಾ ವಿಪಕ್ಷ ನಾಯಕ ರಾಹುಲ್ ಗಾಂಧಿ ಆರೋಪಿಸಿದರು. ಎಪ್ರಿಲ್ 14ರ ಅಂಬೇಡ್ಕರ್ ಜಯಂತಿಗೂ ಮುನ್ನ ಮಂಡಿ ಹೌಸ್ ಬಳಿ “ಅಂಬೇಡ್ಕರ್ ಗಾಗಿ ಓಟ, ಸಂವಿಧಾನಕ್ಕಾಗಿ ಓಟ” ಮ್ಯಾರಥಾನ್ ಗೆ ಹಸಿರು ನಿಶಾನೆ ತೋರಿಸಿ ಅವರು ಮಾತನಾಡಿದರು. “ಅಂಬೇಡ್ಕರ್ ಅವರ ಪ್ರಮುಖ ಸಂದೇಶ ಸಂವಿಧಾನ. ಸಂವಿಧಾನವಿಲ್ಲದೆ ನಾವು ಕರೆಯುತ್ತಿರುವ ಭಾರತ ಇರುತ್ತಿರಲಿಲ್ಲ. ಆರೆಸ್ಸೆಸ್-ಬಿಜೆಪಿ ಮನಸ್ಥಿತಿ ಹೊಂದಿರುವವರು ಇಂದು ಸಂವಿಧಾನವನ್ನು ಮುಗಿಸಲು ಬಯಸುತ್ತಿದ್ದಾರೆ. ಅವರೇನೇ ಹೇಳಿದರೂ, ಅವರ ಪ್ರಮುಖ ಉದ್ದೇಶ ಸಂವಿಧಾನವನ್ನು ಅಳಿಸಿ ಹಾಕುವುದು. ಯಾಕೆಂದರೆ, ಅವರಿಗೆ ಭಾರತದಲ್ಲಿನ ಎಲ್ಲರನ್ನೂ ಸಮಾನರು ಎಂದು ಪರಿಗಣಿಸುವುದು ಬೇಕಿಲ್ಲ” ಎಂದು ಅವರು ಆರೋಪಿಸಿದರು. “ಆರೆಸ್ಸೆಸ್—ಬಿಜೆಪಿ ಏನೇ ಮಾಡಿದರೂ, ಅಂಬೇಡ್ಕರ್ ಪ್ರತಿಮೆಯೆದುರು ತಲೆ ಬಾಗಿದರೂ, ಅವರ ಉದ್ದೇಶ ಮಾತ್ರ ಸಂವಿಧಾನವನ್ನು ಮುಗಿಸುವುದಾಗಿದೆ. ನಮ್ಮ ಉದ್ದೇಶ ಸಂವಿಧಾನವನ್ನು ರಕ್ಷಿಸುವುದು ಹಾಗೂ ಸಂವಿಧಾನವನ್ನು ಬಲಪಡಿಸುವುದಾಗಿದೆ” ಎಂದು ಅವರು ಘೋಷಿಸಿದರು. ಸಂವಿಧಾನಿಕ ಮೌಲ್ಯಗಳ ಸಂದೇಶವನ್ನು ದೇಶಾದ್ಯಂತ ಕೊಂಡೊಯ್ಯುವ ಗುರಿಯನ್ನು ಈ ಉಪಕ್ರಮ ಹೊಂದಿದೆ. ನಮಗೆ ಸಂವಿಧಾನದ ಚಿಂತನೆ ಬೇಕಿದೆ ಹಾಗೂ ಅದರ ರಕ್ಷಣೆ ದೇಶದ ಮೂಲೆಮೂಲೆಗೂ ತಲುಪಬೇಕಿದೆ. ಹೀಗಾಗಿಯೇ ನಾವು, “ಅಂಬೇಡ್ಕರ್ ಗಾಗಿ ಓಟ, ಸಂವಿಧಾನಕ್ಕಾಗಿ ಓಟ” ಆಯೋಜಿಸಿದ್ದೇವೆ ಎಂದು ಅವರು ಹೇಳಿದರು. ಬಳಿಕ ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿರುವ ರಾಹುಲ್ ಗಾಂಧಿ, “ಈ ಮ್ಯಾರಥಾನ್ ಅನ್ನು ಕಾಂಗ್ರೆಸ್ ಪಕ್ಷದ ಪರಿಶಿಷ್ಟ ವಿಭಾಗ ಆಯೋಜಿಸಿದ್ದು, ಬಿ.ಆರ್.ಅಂಬೇಡ್ಕರ್ ಅವರ ಆದರ್ಶಗಳಿಗೆ ಕಾಂಗ್ರೆಸ್ ಪಕ್ಷದ ಬದ್ಧತೆಯನ್ನು ಸೂಚಿಸುತ್ತಿದೆ” ಎಂದು ಬರೆದುಕೊಂಡಿದ್ದಾರೆ.
ಯಾದಗಿರಿ: ಡಾ.ಬಿ.ಆರ್.ಅಂಬೇಡ್ಕರ್ ಅವರ 135ನೇ ಜಯಂತ್ಯೋತ್ಸವದ ಅಂಗವಾಗಿ ನಗರದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಸಮಿತಿ ಅಧ್ಯಕ್ಷ ಪರಶುರಾಮ ಒಡೆಯರ್ ತಿಳಿಸಿದ್ದಾರೆ. ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎ.13ರಂದು ಸಂಜೆ 6:30ಕ್ಕೆ ಅಂಬೇಡ್ಕರ್ ವೃತ್ತದ ಬಳಿ ಮಾತೋಶ್ರೀ ರಮಾಬಾಯಿ ಅಂಬೇಡ್ಕರ್ ಕುರಿತು ನಾಟಕ ಪ್ರದರ್ಶನ ನಡೆಯಲಿದೆ. ಏಪ್ರಿಲ್ 14ರಂದು ಸಂಜೆ 6 ಗಂಟೆಗೆ ಅದೇ ಸ್ಥಳದಲ್ಲಿ ಬಹಿರಂಗ ಸಭೆ ಆಯೋಜಿಸಲಾಗಿದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಶ್ರೀಶ್ರೀ ಶಾಂತವೀರ ಗುರು ಮುರಘರಾಜೇಂದ್ರ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಲಿದ್ದು, ಪೂಜ್ಯ ಸಿದ್ದರಾಮೇಶ್ವರ ಬೆಲ್ದಾಳ ಶರಣರು ಹಾಗೂ ಸಣ್ಣ ಕೈಗಾರಿಕಾ ಸಚಿವ ಶರಣಬಸಪ್ಪಗೌಡ ದರ್ಶನಾಪುರ ಉದ್ಘಾಟನೆ ನೆರವೇರಿಸಲಿದ್ದಾರೆ. ಶಾಸಕ ಚನ್ನಾರೆಡ್ಡಿ ಪಾಟೀಲ್ ತುನ್ನೂರು ಜ್ಯೋತಿ ಬೆಳಗಿಸಲಿದ್ದು, ಶಾಸಕ ಶರಣಗೌಡ ಕಂದಕೂರ ಹಾಗೂ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಬಾಬುರಾವ ಕಾಡ್ಲೂರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಲಿದ್ದಾರೆ. ದಲಿತ ಮುಖಂಡ ಮರೆಪ್ಪ ಚಟ್ಟೇರಕರ್ ಮಾಹಿತಿ ನೀಡಿದ್ದು, ಏಪ್ರಿಲ್ 14ರ ಬೆಳಿಗ್ಗೆ ಅಂಬೇಡ್ಕರ್ ನಗರದಿಂದ ಬೈಕ್ ರ್ಯಾಲಿ ಆರಂಭವಾಗಿ ನಗರದ ಪ್ರಮುಖ ಮಾರ್ಗಗಳ ಮೂಲಕ ಡಿಸಿ ಕಚೇರಿ ವರೆಗೆ ಸಾಗಲಿದೆ. ಬಳಿಕ ಜಿಲ್ಲಾಡಳಿತದಿಂದ ಜಯಂತಿ ಆಚರಣೆ ನಡೆಯಲಿದೆ ಎಂದು ತಿಳಿಸಿದರು. ಜಿಲ್ಲೆಯ ವಿವಿಧ ಭಾಗಗಳಿಂದ ದಲಿತ ಮುಖಂಡರು, ಚಿಂತಕರು ಹಾಗೂ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮನವಿ ಮಾಡಲಾಗಿದೆ. ಈ ಸಂದರ್ಭದಲ್ಲಿ ಸಮಿತಿ ಗೌರವಾಧ್ಯಕ್ಷ ವೀರಭದ್ರಪ್ಪ ಯಡ್ಡಳ್ಳಿ, ಕಾರ್ಯದರ್ಶಿ ಕಾಶೀನಾಥ್ ನಾಟೇಕಾರ್, ಖಜಾಂಚಿ ಅರುಣ್ ದಾಸನಕೇರಿ, ಉಪಾಧ್ಯಕ್ಷ ಮಂಜುನಾಥ ಗುರುಸಣಗಿ, ಸುಭಾಷ್ ವಾಡಿ, ಸಹ ಖಜಾಂಚಿ ಭೀಮಾಶಂಕರ ಅರಕೇರಿ, ಶರಣು ಎಸ್ ನಾಟೇಕಾರ್, ಮಲ್ಲಿಕಾರ್ಜುನ ಈಟೇ, ಭೀಮರಾಯ ಹೊಸ್ಮನಿ, ನಿಂಗಪ್ಪ ಬೀರನಾಳ, ಹಣಮಂತ ಮಿಲ್ಟ್ರೀ ಸೇರಿದಂತೆ ಹಲವರು ಉಪಸ್ಥಿತರಿದ್ದರು.
Yadgiri | ಎ.13ರಂದು 135ನೇ ಅಂಬೇಡ್ಕರ್ ಜಯಂತಿ
ಯಾದಗಿರಿ: ಡಾ.ಬಿ.ಆರ್.ಅಂಬೇಡ್ಕರ್ ಅವರ 135ನೇ ಜಯಂತ್ಯೋತ್ಸವದ ಅಂಗವಾಗಿ ನಗರದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಸಮಿತಿ ಅಧ್ಯಕ್ಷ ಪರಶುರಾಮ ಒಡೆಯರ್ ತಿಳಿಸಿದ್ದಾರೆ. ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎ.13ರಂದು ಸಂಜೆ 6:30ಕ್ಕೆ ಅಂಬೇಡ್ಕರ್ ವೃತ್ತದ ಬಳಿ ಮಾತೋಶ್ರೀ ರಮಾಬಾಯಿ ಅಂಬೇಡ್ಕರ್ ಕುರಿತು ನಾಟಕ ಪ್ರದರ್ಶನ ನಡೆಯಲಿದೆ. ಏಪ್ರಿಲ್ 14ರಂದು ಸಂಜೆ 6 ಗಂಟೆಗೆ ಅದೇ ಸ್ಥಳದಲ್ಲಿ ಬಹಿರಂಗ ಸಭೆ ಆಯೋಜಿಸಲಾಗಿದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಶ್ರೀಶ್ರೀ ಶಾಂತವೀರ ಗುರು ಮುರಘರಾಜೇಂದ್ರ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಲಿದ್ದು, ಪೂಜ್ಯ ಸಿದ್ದರಾಮೇಶ್ವರ ಬೆಲ್ದಾಳ ಶರಣರು ಹಾಗೂ ಸಣ್ಣ ಕೈಗಾರಿಕಾ ಸಚಿವ ಶರಣಬಸಪ್ಪಗೌಡ ದರ್ಶನಾಪುರ ಉದ್ಘಾಟನೆ ನೆರವೇರಿಸಲಿದ್ದಾರೆ. ಶಾಸಕ ಚನ್ನಾರೆಡ್ಡಿ ಪಾಟೀಲ್ ತುನ್ನೂರು ಜ್ಯೋತಿ ಬೆಳಗಿಸಲಿದ್ದು, ಶಾಸಕ ಶರಣಗೌಡ ಕಂದಕೂರ ಹಾಗೂ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಬಾಬುರಾವ ಕಾಡ್ಲೂರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಲಿದ್ದಾರೆ. ದಲಿತ ಮುಖಂಡ ಮರೆಪ್ಪ ಚಟ್ಟೇರಕರ್ ಮಾಹಿತಿ ನೀಡಿದ್ದು, ಏಪ್ರಿಲ್ 14ರ ಬೆಳಿಗ್ಗೆ ಅಂಬೇಡ್ಕರ್ ನಗರದಿಂದ ಬೈಕ್ ರ್ಯಾಲಿ ಆರಂಭವಾಗಿ ನಗರದ ಪ್ರಮುಖ ಮಾರ್ಗಗಳ ಮೂಲಕ ಡಿಸಿ ಕಚೇರಿ ವರೆಗೆ ಸಾಗಲಿದೆ. ಬಳಿಕ ಜಿಲ್ಲಾಡಳಿತದಿಂದ ಜಯಂತಿ ಆಚರಣೆ ನಡೆಯಲಿದೆ ಎಂದು ತಿಳಿಸಿದರು. ಜಿಲ್ಲೆಯ ವಿವಿಧ ಭಾಗಗಳಿಂದ ದಲಿತ ಮುಖಂಡರು, ಚಿಂತಕರು ಹಾಗೂ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮನವಿ ಮಾಡಲಾಗಿದೆ. ಈ ಸಂದರ್ಭದಲ್ಲಿ ಸಮಿತಿ ಗೌರವಾಧ್ಯಕ್ಷ ವೀರಭದ್ರಪ್ಪ ಯಡ್ಡಳ್ಳಿ, ಕಾರ್ಯದರ್ಶಿ ಕಾಶೀನಾಥ್ ನಾಟೇಕಾರ್, ಖಜಾಂಚಿ ಅರುಣ್ ದಾಸನಕೇರಿ, ಉಪಾಧ್ಯಕ್ಷ ಮಂಜುನಾಥ ಗುರುಸಣಗಿ, ಸುಭಾಷ್ ವಾಡಿ, ಸಹ ಖಜಾಂಚಿ ಭೀಮಾಶಂಕರ ಅರಕೇರಿ, ಶರಣು ಎಸ್ ನಾಟೇಕಾರ್, ಮಲ್ಲಿಕಾರ್ಜುನ ಈಟೇ, ಭೀಮರಾಯ ಹೊಸ್ಮನಿ, ನಿಂಗಪ್ಪ ಬೀರನಾಳ, ಹಣಮಂತ ಮಿಲ್ಟ್ರೀ ಸೇರಿದಂತೆ ಹಲವರು ಉಪಸ್ಥಿತರಿದ್ದರು.
Asha Bhosle: ಭಾರತೀಯ ಸಿನಿಮಾ ರಂಗದ ಖ್ಯಾತ ಗಾಯಕಿ ಆಶಾ ಭೋಸ್ಲೆ ಇನ್ನಿಲ್ಲ, ಸಂಗೀತ ರಾಣಿ ಎಂದೇ ಖ್ಯಾತಿ
Asha Bhosle: ಭಾರತೀಯ ಸಿನಿಮಾ ರಂಗದ ಖ್ಯಾತ ಗಾಯಕಿ ಆಶಾ ಭೋಸ್ಲೆ ಇನ್ನಿಲ್ಲ. ಆಶಾ ಭೋಸ್ಲೆ (92) ಅವರು ಭಾನುವಾರ ಮೃತಪಟ್ಟಿದ್ದಾರೆ. ಸಂಗೀತ ಲೋಕದ ರಾಣಿ ಎಂದೇ ಖ್ಯಾತಿ ಗಳಿಸಿದ್ದ ಪ್ರಸಿದ್ಧ ಗಾಯಕಿ ಆಶಾ ಭೋಸ್ಲೆ ಈಗ ನಮ್ಮೊಂದಿಗಿಲ್ಲ. ಮಹಾರಾಷ್ಟ್ರದ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ಅವರು ನಿಧನರಾದರು. ಆಶಾ ಭೋಸ್ಲೆ 92ನೇ ವಯಸ್ಸಿನಲ್ಲಿ ನಿಧನರಾದರು. ವರದಿಗಳ
92ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ ಸಂಗೀತ ಲೋಕದ ಧ್ರುವತಾರೆ ಆಶಾ ಭೋಂಸ್ಲೆ
ದಶಕಗಳ ಕಾಲ ತಮ್ಮ ಸುಮಧುರ ಧ್ವನಿಯ ಮೂಲಕ ಕೋಟ್ಯಂತರ ಅಭಿಮಾನಿಗಳನ್ನ ರಂಜಿಸಿದ್ದ ಭಾರತದ ಖ್ಯಾತ ಗಾಯಕಿ ಆಶಾ ಭೋಸ್ಲೆ ಅವರು ಇಂದು (ಏ.12) ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಅವರಿಗೆ 92 ವರ್ಷ ವಯಸ್ಸಾಗಿತ್ತು.
ವಾಂಖೆಡೆಯಲ್ಲಿ ಆರ್ಸಿಬಿ-ಮುಂಬೈ ಇಂಡಿಯನ್ಸ್ ಪಂದ್ಯಕ್ಕೆ ಮಳೆ ಅಡ್ಡಿಯಾಗಲಿದ್ಯಾ? ಹವಾಮಾನ ಇಲಾಖೆ ವರದಿ ಹೀಗಿದೆ
RCB Vs MI Match Weather Report: ಮುಂಬೈ ವಾಂಖೆಡೆ ಸ್ಟೇಡಿಯಂನಲ್ಲಿ ಭಾನುವಾರ (ಏಪ್ರಿಲ್ 12) ಸಂಜೆ ನಡೆಯಲಿರುವ ಹೈವೋಲ್ಟೇಜ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಮುಂಬೈ ಇಂಡಿಯನ್ಸ್ ತಂಡಗಳು ಮುಖಾಮುಖಿ ಆಗಲಿವೆ. ಈ ಪಂದ್ಯದಕ್ಕೆ ಮಳೆ ಭೀತಿ ಇದ್ಯಾ? ಹವಾಮಾನ ಇಲಾಖೆ ಮುನ್ಸೂಚನೆ ಏನಿದೆ ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ. ವಾಂಖೆಡೆ ಕ್ರೀಡಾಂಗಣದಲ್ಲಿಂದು
ಖ್ಯಾತ ಹಿನ್ನೆಲೆ ಗಾಯಕಿ ಆಶಾ ಭೋಸ್ಲೆ ನಿಧನ
ಮುಂಬೈ: ಖ್ಯಾತ ಹಿನ್ನೆಲೆ ಗಾಯಕಿ ಆಶಾ ಭೋಸ್ಲೆ (92) ಅವರು ನಿಧನರಾಗಿದ್ದಾರೆ ಎಂದು ANI ವರದಿ ಮಾಡಿದೆ. ಹೃದಯಾಘಾತದ ಹಿನ್ನೆಲೆ ಶನಿವಾರ ಆಶಾ ಭೋಸ್ಲೆ ಅವರನ್ನು ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ರವಿವಾರ ಚಿಕಿತ್ಸೆ ಫಲಿಸದೆ ಅವರು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ದಾವಣಗೆರೆ : ಉಪಚುನಾವಣೆಯಲ್ಲಿ ಜನರ ಪ್ರತಿಕ್ರಿಯೆ ಚೆನ್ನಾಗಿದೆ. ನಾವು ಗೆಲುವು ಸಾಧಿಸುತ್ತೇವೆ ಎಂಬ ವಿಶ್ವಾಸವಿದೆ. ದಾವಣಗೆರೆ ದಕ್ಷಿಣ ಉಪಚುನಾವಣೆಯಲ್ಲಿ ನಮ್ಮ ಮತದಾರ ಬಂಧುಗಳು ಉತ್ತಮವಾಗಿ ಮತದಾನ ಮಾಡಿದ್ದಾರೆ. ಒಳ್ಳೆಯ ಅಂತರದಲ್ಲಿ ಕಾಂಗ್ರೆಸ್ ಪಕ್ಷ ಗೆಲ್ಲುತ್ತೆ, ಸಮರ್ಥ್ ಶಾಸಕರಾಗುತ್ತಾರೆ ಎಂಬ ವಿಶ್ವಾಸ ಇದೆ ಎಂದು ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಹೇಳಿದರು. ಶನಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷದ ಸಚಿವರು, ನಾಯಕರು, ಕಾರ್ಯಕರ್ತರು ಚುನಾವಣೆಯಲ್ಲಿ ಉತ್ತಮ ಕೆಲಸ ಮಾಡಿದ್ದಾರೆ, ಅವರಿಗೆ ಧನ್ಯವಾದ. ಸಿಎಂ ಸಿದ್ದರಾಮಯ್ಯರಿಂದ ಹಿಡಿದು ಕಟ್ಟಕಡೆಯ ಕಾರ್ಯಕರ್ತರಿಗೆ ಧನ್ಯವಾದ ತಿಳಿಸಿದರು. ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಸ್ಥಾನಕ್ಕೆ ಎಂಎಲ್ಸಿ ಅಬ್ದುಲ್ ಜಬ್ಬಾರ್ ರಾಜೀನಾಮೆ ವಿಚಾರವಾಗಿ ಪ್ರತಿಕ್ರಿಯಿಸಿ, ನನಗೆ ಅದರ ಬಗ್ಗೆ ಮಾಹಿತಿ ಇಲ್ಲ. ಒಂದು ಚಹಾ ಕುಡಿದರೂ ಋಣ ಇಟ್ಟುಕೊಳ್ಳಬೇಕು. ಅಬ್ದುಲ್ ಜಬ್ಬಾರ್ನನ್ನು ಎಂಎಲ್ಸಿ ಮಾಡಿದ್ದು ನಾವು, ಕಾಂಗ್ರೆಸ್ ಪಕ್ಷದ ಅನ್ನ ತಿಂದ ಮೇಲೆ ಕೆಲಸ ಮಾಡಬೇಕಿತ್ತು ಎಂದು ನುಡಿದರು. ನಾಯಕರ ನಡುವೆ ಸಣ್ಣಪುಟ್ಟ ವ್ಯತ್ಯಾಸ ಆಗಿದೆ. ಗೆದ್ದರೆ ಹೆಚ್ಚು ಅಂತರದಲ್ಲಿ ಗೆಲ್ಲುತ್ತೇವೆ, ಇಲ್ಲ ಕಡಿಮೆ ಅಂತರದಲ್ಲಿ ಗೆಲ್ಲುತ್ತೇವೆ ಎನ್ನುವ ವಿಶ್ವಾಸವಿದೆ ಎಂದು ತಿಳಿಸಿದರು.
ಮುಂಬೈ: ಕಾಮಿಡಿಯನ್ ಕುನಾಲ್ ಕಾಮ್ರಾ ಅವರು ಮಹಾರಾಷ್ಟ್ರ ವಿಧಾನ ಪರಿಷತ್ ಸಮಿತಿಯ ಮುಂದೆ ಹಕ್ಕುಚ್ಯುತಿ ವಿಚಾರಣೆ ವೇಳೆ ರಾಜಕೀಯ ವಿಡಂಬನೆಯ ಬಗ್ಗೆ ದೃಢವಾದ ನಿಲುವನ್ನು ಪ್ರತಿಪಾದನೆ ಮಾಡಿದರು. ಬಾಳಾಸಾಹೇಬ್ ಠಾಕ್ರೆ ಅವರ ರಾಜಕೀಯ ವ್ಯಂಗ್ಯಚಿತ್ರಗಳನ್ನು ಉಲ್ಲೇಖಿಸಿ ವಾಕ್ ಸ್ವಾತಂತ್ರ್ಯವನ್ನು ಪ್ರತಿಪಾದಿಸಿದರು. ಇತ್ತೀಚೆಗೆ ಮಹಾರಾಷ್ಟ್ರ ವಿಧಾನ ಪರಿಷತ್ತಿನ ಸವಲತ್ತು ಸಮಿತಿಯ ಮುಂದೆ ಕುನಾಲ್ ಕಾಮ್ರಾ ಹಾಜರಾಗಿದ್ದರು. ಕಾಮ್ರಾ ಅವರು ಭಾರತದ ಪ್ರಮುಖ ರಾಜಕೀಯ ವ್ಯಂಗ್ಯಚಿತ್ರಕಾರರಲ್ಲಿ ಒಬ್ಬರಾದ ಬಾಳಾಸಾಹೇಬ್ ಠಾಕ್ರೆ ಅವರ ರಾಜಕೀಯ ಪರಂಪರೆಯ ಹೊರತಾಗಿಯೂ ತಮ್ಮನ್ನು ತಮಾಷೆಗಾಗಿ ಗುರಿಯಾಗಿಸಲಾಗುತ್ತಿದೆ ಎಂದು ಗಮನಸೆಳೆದರು. ಬಾಳಾಸಾಹೇಬ್ ಠಾಕ್ರೆ ಅವರು ಭಾರತದ ಪ್ರಮುಖ ರಾಜಕೀಯ ವ್ಯಂಗ್ಯಚಿತ್ರಕಾರರಲ್ಲಿ ಒಬ್ಬರು ಮತ್ತು ಶಿವಸೇನಾ ಮುಖ್ಯಸ್ಥರಾಗಿದ್ದವರು. ಬಾಳಾಸಾಹೇಬ್ ಠಾಕ್ರೆ ಹಲವು ದಶಕಗಳ ಕಾಲ ಪ್ರಧಾನ ಮಂತ್ರಿಗಳನ್ನೂ ಒಳಗೊಂಡಂತೆ ಅಧಿಕಾರದಲ್ಲಿರುವ ನಾಯಕರನ್ನು ಟೀಕಿಸುತ್ತಿದ್ದರು ಮತ್ತು ವ್ಯಂಗ್ಯವಾಡುತ್ತಿದ್ದರು. ಅವರು ಯಾವತ್ತೂ ಕ್ರಮವನ್ನು ಎದುರಿಸಿಲ್ಲ ಎಂದು ಕುನಾಲ್ ಕಾಮ್ರಾ ಹೇಳಿದ್ದಾರೆ. ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ಪ್ರತಿನಿಧಿಸುವ ಪಕ್ಷದ ಸಿದ್ಧಾಂತದ ಅಡಿಪಾಯ ರಾಜಕೀಯ ವಿಡಂಬನೆಯಾಗಿದೆ. ಅಂತಹ ಪರಂಪರೆಯನ್ನು ರಕ್ಷಿಸುವುದೆಂದರೆ ಆಧುನಿಕ ಕಾಲದ ವಿಡಂಬನಕಾರರ ಸ್ವಾತಂತ್ರ್ಯವನ್ನು ರಕ್ಷಿಸುವುದಾಗಿದೆ ಎಂದು ಕುನಾಲ್ ಕಾಮ್ರಾ ಹೇಳಿದ್ದಾರೆ. 2022ರಲ್ಲಿ ಆಗಿನ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರ ವಿರುದ್ಧದ ಬಂಡಾಯ ಮತ್ತು ನಂತರದ ಮಹಾರಾಷ್ಟ್ರದಲ್ಲಿನ ರಾಜಕೀಯ ಬಿಕ್ಕಟ್ಟನ್ನು ಉಲ್ಲೇಖಿಸುವಾಗ ಶಿಂಧೆಯವರ ಹೆಸರೆತ್ತದೆ ಅವರನ್ನು ಕುನಾಲ್ ಕಾಮ್ರಾ ಪರೋಕ್ಷವಾಗಿ ಟೀಕಿಸಿದ್ದರು. ಇದು ವಿವಾದಕ್ಕೆ ಕಾರಣವಾಗಿತ್ತು.
ಇಸ್ಲಾಮಾಬಾದ್ ವೇದಿಕೆಯಾಗಿ ಅಮೆರಿಕಾ-ಇರಾನ್ ನಡುವಿನ ಶಾಂತಿ ಮಾತುಕತೆ ವಿಫಲವಾದ ಬೆನ್ನಲ್ಲೇ, ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್ ಮೇಲಿನ ಸಂಭಾವ್ಯ ದಾಳಿ ಹಾಗೂ ನಿಯಂತ್ರಣದ ವಿಶ್ಲೇಷಣಾತ್ಮಕ ಪತ್ರಿಕಾ ವರದಿಯೊಂದನ್ನು ತಮ್ಮ ಟ್ರುತ್ ಸೋಶಿಯಲ್ ನಲ್ಲಿ ರಿಪೋಸ್ಟ್ ಮಾಡಿದ್ದಾರೆ. ಇದು ಸದ್ಯ ಇರಾನ್ ಮೇಲೆ ಅಮೆರಿಕಾದ ವಿಧ್ವಂಸಕ ದಾಳಿಯ ಮುನ್ಸೂಚನೆ ನೀಡುತ್ತಿದ್ದು, ಈ ಹಿಂದೆ ಟೆಹ್ರಾನ್ ವಿರುದ್ದ ಮಾಡಿದ್ದ ಶಿಲಾಯುಗ ಹೇಳಿಕೆ ಮತ್ತೆ ಮುನ್ನೆಲೆಗೆ ಬರುವಂತೆ ಮಾಡಿದೆ. ಹಾಗಾದ್ರೆ ಟ್ರಂಪ್ ರಿಪೋಸ್ಟ್ ಮಾಡಿದ ಈ ವರದಿಯಲ್ಲಿ ಅಂತದ್ದೇನಿದೆ ಎಂಬ ಮಾಹಿತಿ ಇಲ್ಲಿದೆ..
Mining Properties: \ಕರ್ನಾಟಕದ ಗಣಿ ಸಂಪತ್ತು ಕೇರಳಂಗೆ; ಈ 'ಕಲೆಕ್ಷನ್' ಹಣ ಯಾರ ಜೇಬಿಗೆ\
Mining Properties: ಕರ್ನಾಟಕದ ಗಣಿ ಸಂಪತ್ತನ್ನು ಕೇರಳಂಗೆ ಗುಳುಂ ಮಾಡುವ ಪ್ರಯತ್ನ ನಡೆದಿದೆ ಎನ್ನುವ ಗಂಭೀರವಾದ ಆರೋಪವೊಂದು ಕೇಳಿ ಬಂದಿದೆ. ಸೋಷಿಯಲ್ ಮೀಡಿಯಾದಲ್ಲಿ ಈ ವಿಚಾರವಾಗಿ ಚರ್ಚೆ ನಡೆದಿದ್ದು, ಇದಕ್ಕೆ ಮುಖ್ಯ ಕಾರಣವಾಗಿರುವುದು ಕರ್ನಾಟಕದ ಗಡಿ ಭಾಗದಿಂದ ಕೇರಳಂಗೆ ಗಣಿ ಸಂಪತ್ತು ಸಾಗಾಣಿಕೆ ಅವ್ಯಾಹತವಾಗಿದೆ ಎನ್ನುವುದು. ಕರ್ನಾಟಕದಿಂದ ನಿತ್ಯವೂ ಅಂದಾಜು 200ಕ್ಕೂ ಹೆಚ್ಚು ಟಿಪ್ಪರ್ಗಳಲ್ಲಿ ಎಂ ಸ್ಯಾಂಡ್,
ಕರ್ನಾಟಕ ರಾಜ್ಯ ಸರ್ಕಾರದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಎಸ್ಎಸ್ಎಲ್ಸಿ ಪರೀಕ್ಷಾ ನಿಯಮಗಳಲ್ಲಿ ಮಹತ್ವದ ಬದಲಾವಣೆ ತರಲು ಕರಡು ಅಧಿಸೂಚನೆಯನ್ನು ಹೊರಡಿಸಿದೆ. ಹೊಸ ನಿಯಮದ ಪ್ರಕಾರ, ತೃತೀಯ ಭಾಷೆಯ ಅಂಕಗಳನ್ನು ವಿದ್ಯಾರ್ಥಿಯ ಉತ್ತೀರ್ಣತೆಗೆ ಪರಿಗಣಿಸದಿರಲು ನಿರ್ಧರಿಸಲಾಗಿದೆ. ಇದರ ಜತೆಗೆ ಪರೀಕ್ಷೆ ಉತ್ತೀರ್ಣಕ್ಕೆ ಹೊಸ ಮಾನದಂಡವು ನಿಗದಿಯಾಗಿದೆ.
ನಮ್ಮ ಋಣ ಇದೆ, ಪಕ್ಷದ ಅನ್ನ ತಿಂದ ಮೇಲೆ ಕೆಲಸ ಮಾಡಬೇಕಿತ್ತು: MLC ಜಬ್ಬಾರ್ ವಿರುದ್ಧ SS ಮಲ್ಲಿಕಾರ್ಜುನ್ ಕಿಡಿ
ದಾವಣಗೆರೆ ಉಪ ಚುನಾವಣೆಗೆ ಸಂಬಂಧಿಸಿದಂತೆ ಪ್ರಚಾರಕ್ಕೆ ಬಾರದೇ ಕಾರಣಕೊಟ್ಟ ಎಂಎಲ್ಸಿ ಅಬ್ದುಲ್ ಜಬ್ಬಾರ್ ವಿರುದ್ಧ ಸಚಿವ ಎಸ್ಎಸ್ ಮಲ್ಲಿಕಾರ್ಜುನ ವಾಗ್ದಾಳಿ ನಡೆಸಿದ್ದಾರೆ. ನಮ್ಮ ಋಣ ಇದೆ, ಪಕ್ಷದ ಅನ್ನ ತಿಂದಿದ್ದಾರೆ. ಕೆಲಸ ಮಾಡಬೇಕಿತ್ತು ಎಂದು ಸಚಿವರು ಕಿಡಿಕಾರಿದ್ದಾರೆ. ಇನ್ನೂ ಹೈಕಮಾಂಡ್ ಸೂಚನೆಯಂತೆ ಚುನಾವಣೆ ನಡೆಸಿದ್ದೇವೆ, ಜನರಿಂದ ಉತ್ತಮ ಪ್ರತಿಕ್ರಿಯೆ ಬಂದಿದೆ ಎಂದು ತಿಳಿಸಿದ್ದಾರೆ.
Vijay: ತಮಿಳುನಾಡು ವಿಧಾನಸಭೆ ಚುನಾವಣೆಗೆ ಕೆಲವೇ ದಿನಗಳು ಬಾಕಿ ಇರುವಾಗಲೇ ನಟ ಹಾಗೂ ರಾಜಕಾರಣ ವಿಜಯ್ ಅವರು ವಿಶೇಷ ಟ್ವೀಟ್ವೊಂದನ್ನು ಮಾಡಿದ್ದಾರೆ. ತಮಿಳುನಾಡಿನ ತಮಿಳಗ ವೆಟ್ರಿ ಕಳಗಂ ಪಕ್ಷದ ಅಧ್ಯಕ್ಷರೂ ಆಗಿರುವ ನಟ ವಿಜಯ್ ಅವರು, ಅವರ ಅಭಿಮಾನಿಗಳಿಗೆ ವಿಶೇಷ ಸಂದೇಶವೊಂನ್ನು ನೀಡಿದ್ದಾರೆ. ನನ್ನ ಹೃದಯದಲ್ಲಿ ನೆಲೆಸಿರುವ ಎಲ್ಲಾ ಸಹೋದರರಿಗೆ ಹಾರ್ದಿಕ ಶುಭಾಶಯಗಳು. ಈ ಮಹತ್ವದ ಪ್ರಯಾಣದಲ್ಲಿ
ಅಮೆರಿಕದ “ಅಸಮಂಜಸ” ಬೇಡಿಕೆಯಿಂದ ಮಾತುಕತೆ ವಿಫಲ: ಇರಾನ್
ಟೆಹ್ರಾನ್: ಇಸ್ಲಾಮಾಬಾದ್ನಲ್ಲಿ ನಡೆದ ಶಾಂತಿ ಮಾತುಕತೆ ವಿಫಲವಾದ ಬೆನ್ನಲ್ಲೆ ಜೆಡಿ ವ್ಯಾನ್ಸ್ ನೇತೃತ್ವದ ನಿಯೋಗ ಅಮೆರಿಕಗೆ ವಾಪಸ್ಸಾಗಿದೆ. ಅಮೆರಿಕದ “ಅಸಮಂಜಸ” ಬೇಡಿಕೆಯಿಂದ ಮಾತುಕತೆ ವಿಫಲವಾಗಿದೆ ಎಂದು ಇರಾನ್ನ ಸರಕಾರಿ ಮಾಧ್ಯಮ ಸಂಸ್ಥೆ ವರದಿ ಮಾಡಿದೆ. ಮಾತುಕತೆ ವಿಫಲವಾಗಿರುವ ಬಗ್ಗೆ ಪ್ರತಿಕ್ರಿಯಿಸಿದ ಇರಾನ್ ವಿದೇಶಾಂಗ ಸಚಿವಾಲಯದ ವಕ್ತಾರ ಇಸ್ಮಾಯಿಲ್ ಬಘೈ, ಅಮೆರಿಕ ಕೆಲವು ವಿಷಯಗಳಲ್ಲಿ ಪರಸ್ಪರ ಒಪ್ಪಂದದ ಹಂತಕ್ಕೆ ತಲುಪಿದೆ. ಆದರೆ ಎರಡು-ಮೂರು ಪ್ರಮುಖ ವಿಷಯಗಳಲ್ಲಿ ಭಿನ್ನಾಭಿಪ್ರಾಯಗಳಿವೆ. ಈ ಮಾತುಕತೆಗಳು 40 ದಿನಗಳ ಬಲವಂತದ ಯುದ್ಧದ ನಂತರ ನಡೆದಿವೆ. ಪರಸ್ಪರ ಅನುಮಾನ ಮತ್ತು ಅವಿಶ್ವಾಸದ ವಾತಾವರಣದಲ್ಲಿ ನಡೆದಿದೆ. ಆದ್ದರಿಂದ, ಒಂದೇ ಸಭೆಯಲ್ಲಿ ಒಪ್ಪಂದ ಸಾಧ್ಯವೆಂದು ಆರಂಭದಿಂದಲೇ ನಾವು ನಿರೀಕ್ಷಿಸಿಲ್ಲ ಎಂದು ಹೇಳಿದ್ದಾರೆ. ಮಾತುಕತೆಗಳ ಯಶಸ್ಸು ಎದುರಾಳಿಗಳ ಗಂಭೀರತೆ ಮತ್ತು ನಂಬಿಕೆ ಮೇಲೆ ಅವಲಂಬಿತವಾಗಿದೆ. ಜೊತೆಗೆ, ಇರಾನ್ನ ನ್ಯಾಯಸಮ್ಮತ ಹಕ್ಕುಗಳು ಮತ್ತು ಹಿತಾಸಕ್ತಿಗಳನ್ನು ಒಪ್ಪಿಕೊಳ್ಳುವುದು ಅಗತ್ಯ ಎಂದು ಹೇಳಿದ್ದಾರೆ. ಮಧ್ಯಪ್ರಾಚ್ಯದ ಯುದ್ಧ ಅಂತ್ಯಗೊಳಿಸಲು ಇಸ್ಲಾಮಾಬಾದ್ನಲ್ಲಿ ನಡೆದ ಮಾತುಕತೆಗಳು ಅಮೆರಿಕದ “ಅಸಂಗತ ಬೇಡಿಕೆಗಳ” ಕಾರಣದಿಂದ ವಿಫಲವಾಗಿದೆ ಎಂದು ಇರಾನ್ ರಾಜ್ಯ ಪ್ರಸಾರ ಸಂಸ್ಥೆ IRIB ರವಿವಾರ ತಿಳಿಸಿದೆ. “ಇರಾನ್ ನಿಯೋಗ 21 ಗಂಟೆಗಳ ಕಾಲ ನಿರಂತರವಾಗಿ ಮಾತುಕತೆ ನಡೆಸಿತು. ಇದರ ಉದ್ದೇಶ ಇರಾನ್ ಜನರ ರಾಷ್ಟ್ರೀಯ ಹಿತಾಸಕ್ತಿಗಳನ್ನು ರಕ್ಷಿಸುವುದಾಗಿತ್ತು. ಇರಾನ್ ಹಲವಾರು ಪ್ರಸ್ತಾಪಗಳನ್ನು ಮುಂದಿಟ್ಟಿದ್ದರೂ, ಅಮೆರಿಕದ ಅಸಂಗತ ಬೇಡಿಕೆಗಳು ಮಾತುಕತೆ ಮುಂದುವರಿಯುವುದನ್ನು ತಡೆಯುವಲ್ಲಿ ಕಾರಣವಾದವು. ಹೀಗಾಗಿ, ಮಾತುಕತೆಗಳು ಅಂತ್ಯಗೊಂಡವು ಎಂದು IRIB ಹೇಳಿದೆ.
ಗುವಾಹಟಿಯಲ್ಲಿ RCB ಹಾಗೂ RR ನಡುವೆ ನಡೆದ ಮ್ಯಾಚ್ ವೇಳೆ ರಾಜಸ್ಥಾನ್ ರಾಯಲ್ಸ್ ತಂಡದ ಮ್ಯಾನೇಜರ್ ರೋಮಿ ಭಿಂದರ್ ಡಗೌಟ್ ಓಳಗೆ ಕೂತು ಫೋನ್ ಬಳಕೆ ಮಾಡಿದ್ದು, ಕಾನೂನು ಉಲ್ಲಂಘನೆ ಮಾಡಿದ್ದಾರೆ ಎಂಬ ಚರ್ಚೆ ಶುರುವಾಗಿದೆ. ಇದಕ್ಕೆ ವಿವಾದವನ್ನು ಮತ್ತಷ್ಟು ಜೋರಾಗುವಂತೆ ಮಾಡಿದ್ದು, ರೋಮಿ ಬಿಂಧರ್ ಫೋನ್ ಬಳಕೆ ವೇಳೆ RR ತಂಡದ ಆಟಗಾರ ವೈಭವ್ ಸೂರ್ಯವಂಶಿ ಪಕ್ಕದಲ್ಲೇ ಕುಳಿತು ಫೋನ್ನತ್ತ ನೋಡುತ್ತಾ ಇರುವುದು. ಇದು ಸದ್ಯ ವಿವಾದ ಹುಟ್ಟುಹಾಕಿದ್ದು, ಈ ಕುರಿತು IPL PMOA ನಿಯಮ ಹೇಳೋದೇನು? ಎಂಬ ಮಾಹಿತಿ ಇಲ್ಲಿದೆ..
ಬೇಸಿಗೆ ಬಿಸಿಲು ಜನರನ್ನು ಹೈರಾಣಾಗಿಸುತ್ತಿದೆ. ಮನೆಯಿಂದ ಹೊರಗೆ ಕಾಲಿಡುವುದೇ ಆತಂಕಕಾರಿಯೆನಿಸಿದೆ.
ಕಾನೂನುಗಳು ಸುರಕ್ಷತೆ ಮತ್ತು ಭದ್ರತೆಯನ್ನು ನೀಡುವ ಸಾಧನಗಳು. ಜೀವ ಜಗತ್ತಿಗೆ ತೊಂದರೆ ಆಗದಂತೆ ಬದುಕುವುದನ್ನು ಕಲಿಸಿಕೊಡುತ್ತವೆ. ಅದೊಂದು ರೀತಿಯ ಜೀವನ ಪಾಠದ ಮಾರ್ಗಗಳಾಗಿರುತ್ತವೆ. ದುರ್ಬಳಕೆ ಮತ್ತು ದುರ್ನಡತೆಗೆ ಅಲ್ಲಿ ಅವಕಾಶವಿರುವುದಿಲ್ಲ. ಅದರ ಮುಂದೆ ಎಲ್ಲರೂ ಸಮಾನರೇ. ಅಧಿಕಾರ, ಅಂತಸ್ತು, ಯಜಮಾನಿಕೆ ಇವ್ಯಾವುವು ಕೂಡ ಅಲ್ಲಿ ಬರುವುದಿಲ್ಲ. ಒಟ್ಟಿನಲ್ಲಿ ಸುವ್ಯವಸ್ಥೆಯನ್ನು ಕಾಪಾಡಿ ಜನರಲ್ಲಿ ಭರವಸೆಯನ್ನು ಮೂಡಿಸುವ ವಿಶಿಷ್ಟ ಶಕ್ತಿ ಅವುಗಳಲ್ಲಿ ಅಡಕ ಮಾಡಲಾಗಿದೆ. ಕಾನೂನನ್ನು ಕಾಪಾಡುವುದು ಪ್ರತಿಯೊಬ್ಬರ ಆದ್ಯ ಮೂಲಭೂತ ಕರ್ತವ್ಯ. ಆದರೂ ಅಂಕೆ ಮೀರುವ ವ್ಯವಸ್ಥೆಯನ್ನು ಮೇಲ್ವಿಚಾರಣೆ ಮಾಡಲು ಸರಕಾರ, ಪೊಲೀಸು ಮತ್ತು ನ್ಯಾಯಾಂಗ ವ್ಯವಸ್ಥೆಗಳು ನಮ್ಮಲ್ಲಿ ಜಾರಿಯಲ್ಲಿವೆ. ಇತ್ತೀಚೆಗೆ ಮದುರೈನ ನ್ಯಾಯಾಲಯವು ನೀಡಿರುವ ತೀರ್ಪು ಮಾನವ ಕುಲದ ಇತಿಹಾಸದಲ್ಲೇ ಬಹುದೊಡ್ಡ ಸಂಚಲನವನ್ನು ಸೃಷ್ಟಿಸಿದೆ. ನೆಲದ ಕಾನೂನನ್ನು ಜೀವ ಪರವಾಗಿಸಿಕೊಳ್ಳಬೇಕು. ಸ್ವೇಚ್ಛಾಚಾರದಿಂದ ದುರ್ಬಳಕೆ ಮಾಡಿಕೊಳ್ಳುವಂತಿಲ್ಲ ಎಂಬ ಕಟು ಎಚ್ಚರಿಕೆಯ ಸಂದೇಶ ದೇಶದ ಮೂಲೆ ಮೂಲೆಗಳಿಗೂ ತಲುಪಿಸಿದೆ. ಇದೊಂದು ತೀರ್ಪು ಹಲವು ಪಾಠಗಳನ್ನು ಹೇಳಿಕೊಡುತ್ತಿದೆ. ಘಟನೆ 2020, ಜೂನ್, 19ರ ಕೋವಿಡ್ ಕಾಲದ್ದು. ಸ್ಥಳ- ತಮಿಳುನಾಡಿನ ತೂತ್ತುಕ್ಕುಡಿ ಜಿಲ್ಲೆಯ ಸಾತ್ತಾನ್ಕುಳಂ ಪೊಲೀಸ್ ಠಾಣೆಯಲ್ಲಿ ಸಂಭವಿಸಿದ್ದು. ಕೊರೋನ ಕಾಲದಲ್ಲಿ ವಿಧಿಸಿದ ಸಮಯವನ್ನು ಉಲ್ಲಂಘಿಸಿದ ಕಾರಣಕ್ಕಾಗಿ ಪೊಲೀಸರು ಅಂಗಡಿಯ ಪಿ. ಜಯರಾಜ್ ಮತ್ತು ಪುತ್ರ ಜೆ. ಬೆನಿಕ್ಸ್ರನ್ನು ಎಫ್ಐಆರ್ ಮೂಲಕ ಲಾಕ್ ಮಾಡಲಾಗಿತ್ತು. ಆ ಘಟನೆ ಕೊನೆಗೆ ಲಾಕಪ್ ಡೆತ್ ಆಗಿ ಹೆಚ್ಚು ಸುದ್ದಿ ಮಾಡಿತು. ಇದು ಬಹುದೊಡ್ಡ ಜನಾಕ್ರೋಶಕ್ಕೂ ಕಾರಣವಾಯಿತು. ಆಗ ಸಿಬಿಐಯೂ ತನಿಖೆ ಮಾಡಿ, ಅಪರೂಪದಲ್ಲಿಯೇ ಅಪರೂಪದ ಪ್ರಕರಣ ಎಂದು ಹೇಳಿದ್ದಲ್ಲದೆ, ಪೆರೋಲ್ ಸಾಧ್ಯತೆ ಇಲ್ಲದೆ ಮರಣದಂಡನೆ ಅಥವಾ ಜೀವಾವಧಿ ಶಿಕ್ಷೆಯ ಗರಿಷ್ಠ ಶಿಕ್ಷೆಯನ್ನು ವಿಧಿಸಬೇಕೆಂದು ಒತ್ತಾಯಿಸಿತ್ತು. ಆನಂತರ ಮಧುರೈನ ನ್ಯಾಯಾಲಯವು ಒಂಭತ್ತು ಜನ ಪೊಲೀಸ್ ಅಧಿಕಾರಿಗಳಿಗೆ ಮರಣದಂಡನೆ ಶಿಕ್ಷೆ ವಿಧಿಸಿದೆ. ಕಾನ್ಸ್ಟೇಬಲ್ ರೇವತಿ ಜಗತ್ತಿನಲ್ಲಿ ಮರಣದಂಡನೆ ಶಿಕ್ಷೆಯನ್ನು ರದ್ದುಪಡಿಸಿದ ದೇಶಗಳಿವೆ. ಇನ್ನೂ ಕೆಲವು ದೇಶಗಳು ಚಿಂತನೆಗಳಲ್ಲಿವೆ. ಈ ಪ್ರಕರಣವು ನಮ್ಮ ದೇಶದ ಸರ್ವೋಚ್ಚ ನ್ಯಾಯಾಲಯದ ಮಾರ್ಗಸೂಚಿಗೆ ಒಳಪಡುವ ಗಂಭೀರ ಪ್ರಕರಣವಲ್ಲ ಎಂಬ ಭಿನ್ನ ಚರ್ಚೆಗೆ ಎಡೆ ಮಾಡಿಕೊಟ್ಟಿದೆ. ಅದೇನೇ ಇರಲಿ, ಚಿತ್ರಹಿಂಸೆಗೆ ಬಲಿಯಾದ ಎರಡು ಜೀವಗಳು ಲಾಕಪ್ ಡೆತ್ ಆಗಿರುವುದಂತೂ ಹೇಯ ಕೃತ್ಯ. ಪೊಲೀಸ್ ಕಸ್ಟಡಿಯಲ್ಲಿ ಮೃತಪಟ್ಟ ಪ್ರಕರಣಗಳು ಇದೇ ಮೊದಲಲ್ಲ, ಇದೇ ಕೊನೆಯೂ ಆಗಬಹುದೆಂದು ಭಾವಿಸಲು ಸಾಧ್ಯವಿಲ್ಲ. ಆದರೆ ಅಮಾನವೀಯತೆಗೆ ಮನ್ನಣೆ ಇಲ್ಲ ಎನ್ನುವುದನ್ನು ಒತ್ತಾಯಿಸುತ್ತದೆ. ಅರಿವು, ಜಾಗೃತಿ ಮತ್ತು ಸ್ವಯಂಪ್ರಜ್ಞೆ ಹಾಗೂ ಕರ್ತವ್ಯ ಪ್ರಜ್ಞೆಗೆ ಸಂಯಮದ ನಡವಳಿಕೆಯನ್ನು ಬೋಧಿಸುತ್ತದೆ. ಪಾಠ ಒಂದು, ರಕ್ಷಕರೇ ಭಕ್ಷಕರಾದರೆ ಅವರಿಗೂ ತಕ್ಕ ಶಾಸ್ತಿ ಇದೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕಿದೆ. ವ್ಯವಸ್ಥೆಯ ಒಳಗೆ ನಡೆಯುವ ದೌರ್ಜನ್ಯಗಳಿಗೆ ವಿರುದ್ಧವಾಗಿ ಪ್ರಾಮಾಣಿಕತೆ ಮತ್ತು ಕರ್ತವ್ಯದ ಮೂಲಕ ನ್ಯಾಯವನ್ನು ಹುಟ್ಟು ಹಾಕುವ ಹೊಸ ಪರಂಪರೆಗೆ ಒಬ್ಬ ಮಹಿಳೆ ದಾಖಲಾಗುತ್ತಾರೆ. ಆಕೆಯ ಹೆಸರು ಅದೇ ಪೊಲೀಸ್ ಠಾಣೆಯ ಮಹಿಳಾ ಕಾನ್ಸ್ಟೇಬಲ್ ರೇವತಿ. ಈ ಹೊಸ ಬಗೆಯ ನ್ಯಾಯಕ್ಕೆ ತಾನೇ ಸಾಕ್ಷಿಯಾಗಿ ತನ್ನದೇ ವ್ಯವಸ್ಥೆಯ ವಿರುದ್ಧವಾಗಿ ಹೋರಾಡುವ ದಿಟ್ಟತನ ಸಾಮಾನ್ಯವಾದದ್ದಲ್ಲ. ಬಾಹ್ಯ ಮತ್ತು ಆಂತರಿಕ ಒತ್ತಡಗಳನ್ನು ಮೆಟ್ಟಿನಿಂತು ಸಾಕ್ಷಿಯಾಗಿ ದಡ ಸೇರಿಸಿದ ತೀರ್ಪಿದು. ಒಂದು ಕ್ಷಣ ‘ಜೈ ಭೀಮ್’ ಸಿನೆಮಾ ನೆನಪಿಸುತ್ತದೆ. ಅದರ ವಸ್ತು ವಿಷಯವು ಲಾಕಪ್ ಡೆತ್ ಕುರಿತದ್ದು. ತನ್ನ ಗಂಡನ ಸಾವಿನ ನ್ಯಾಯಕ್ಕಾಗಿ ಅಲ್ಲಿಯೂ ಕೂಡ ಮಹಿಳೆಯ ಹೋರಾಟವೇ ಇದೆ. ಪಾಠ ಎರಡು, ಕಾನೂನುಗಳು ಇಚ್ಛಾನುಸಾರಿಗಳಲ್ಲ; ವಿವೇಚನ ಅಧಿಕಾರವುಳ್ಳವು. ಜನಪರ ಮತ್ತು ಜೀವ ಪರವಾಗಿ ಯೋಚಿಸಬೇಕು. ತಾನು ಬದುಕುವುದು ಮತ್ತು ಇತರರಿಗೆ ಬದುಕಲು ಬಿಡುವುದನ್ನು ಹೇಳಿ ಕೊಡುತ್ತವೆ. ನ್ಯಾಯ ವಿಮರ್ಶೆ ಮಾಡುವ ಮೇಲ್ವಿಚಾರಣೆಗಳಿವೆ. ವಿವಿಧ ಬಗೆಯ ತನಿಖೆ ಸಂಸ್ಥೆಗಳಿವೆ. ವಿವಿಧ ಹಂತದ ನ್ಯಾಯಾಂಗಗಳಿವೆ. ಸತ್ಯಾಸತ್ಯತೆಯನ್ನು ಒರೆಗಚ್ಚುವ ಪ್ರಕ್ರಿಯೆ ಇದೆ. ಹೀಗಿರುವಾಗ ಸಾಕ್ಷಿ ನಾಶ ಮಾಡಬಲ್ಲ ಹುಂಬತನಕ್ಕೆ ಗರ್ವಭಂಗವಾಗದಿರದೆ? ಅಧಿಕಾರ ಎನ್ನುವುದು ದರ್ಪದ ಹೊರತಾಗಿರಬೇಕು. ಅದು ಅಂಗಿಯ ಮೇಲಿನದ್ದಲ್ಲ ಅಂಗದ ಒಳಗಿನದ್ದು. ಕಾನೂನಿನ ಅರಿವಿನ ಚೌಕಟ್ಟಿನಲ್ಲಿ ವರ್ತಿಸಬೇಕಾದದ್ದು ಅತ್ಯಗತ್ಯ. ಹಾಗಂತ ಪೊಲೀಸರು ಕೆಟ್ಟವರು ಎಂದು ಹೇಳಲು ಸಾಧ್ಯವೇ ಇಲ್ಲ. ಅವರೂ ಮನುಷ್ಯರು, ಮನುಷ್ಯತ್ವ ಉಳ್ಳವರು. ಮನುಷ್ಯತ್ವ ಕಳೆದುಕೊಂಡವರಿಂದ ಇಂತಹ ಘಟನೆಗಳು ಸಂಭವಿಸಿ ಸಮಾಜಕ್ಕೆ ಕೆಟ್ಟ ಪರಂಪರೆಯನ್ನು ಸೃಷ್ಟಿಸುವುದು ದುರದೃಷ್ಟಕರ. ಪ್ರತೀ ಕಾನೂನುಗಳ ಮೂಲ ಆಶಯ ಮನುಷ್ಯ ಮನುಷ್ಯನನ್ನಾಗಿಯೇ ಮಾಡುವುದು, ನೋಡುವುದಾಗಿರುತ್ತದೆ. ಜೆ. ಬೆನಿಕ್ಸ್ ಮತ್ತು ಪಿ. ಜಯರಾಜ್ ಪಾಠ ಮೂರು, ಈ ತೀರ್ಪು ನಮ್ಮ ಆತ್ಮವಿಮರ್ಶೆಯ ಭಾಗವಾಗಿಯೇ ನೋಡಬೇಕು. ನಮ್ಮ ನಡವಳಿಕೆಯನ್ನು ತಿದ್ದುತ್ತದೆ. ಮುಂದಿನ ದೃಷ್ಟಿಯನ್ನು ಬದಲಾಯಿಸುತ್ತದೆ. ಕ್ರೌರ್ಯದ ಸ್ವರೂಪಕ್ಕೆ ಕಾಲದ ಪ್ರತಿಕ್ರಿಯೆಗಳು ಇದ್ದೇ ಇರುತ್ತವೆ. ಅದು ಕಾನೂನಿನ ಮೂಲಕ ದೃಢಪಡಿಸುವುದು ಸಹಜವಾಗಿರುತ್ತದೆ. ಬಸವಣ್ಣನವರು ಹೇಳುವ ಅಂತರಂಗ ಮತ್ತು ಬಹಿರಂಗದ ಶುದ್ಧಿಗಳು ನಮ್ಮ ಕರ್ತವ್ಯಕ್ಕೆ ಗರಿಮೆಗಳನ್ನು ಉಂಟು ಮಾಡುತ್ತವೆ. ಕುವೆಂಪು ಅವರು ಪಕ್ಷಿಕಾಶಿ ಪದ್ಯದಲ್ಲಿ ಅರ್ಥಪೂರ್ಣ ಪದ್ಯವೊಂದಿದೆ. ‘ಇಲ್ಲಿ ಹುಗಲಿಲ್ಲ ನಿನಗೆ, ಓ ಬಿಯದ:/ ಇದು ಪಕ್ಷಿಕಾಶಿ!....../ ಬಿಂಕದುಕುತಿಯನು ಕೊಂಕುಯುಕುತಿಯನು/ ಎಲ್ಲ ಬಿಟ್ಟು ಬಾ’ ಎನ್ನುತ್ತಾರೆ. ಪೊಲೀಸರನ್ನೆಲ್ಲಾ ಕೆಟ್ಟ ದೃಷ್ಟಿಯಿಂದ ನೋಡಲು ಸಾಧ್ಯವಾಗುವುದಿಲ್ಲ. ಮಾನವೀಯತೆಯ ಮಹಾನುಭಾವರು ಇದ್ದಾರೆ. ಇಂತಹವರ ಪರಂಪರೆ ಹೆಚ್ಚಲಿ.
ಇರಾನ್ ಜೊತೆಗಿನ ಮಾತುಕತೆ ವಿಫಲ: ಪಾಕಿಸ್ತಾನದಿಂದ ನಿರ್ಗಮಿಸಿದ ಅಮೆರಿಕದ ಉಪಾಧ್ಯಕ್ಷ ಜೆಡಿ ವ್ಯಾನ್ಸ್
ಟೆಹ್ರಾನ್: ಇರಾನ್ ಜೊತೆಗಿನ ಮಾತುಕತೆಗಳು ಫಲಪ್ರದವಾಗದ ಹಿನ್ನೆಲೆ ಅಮೆರಿಕದ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ರವಿವಾರ ಪಾಕಿಸ್ತಾನದಿಂದ ನಿರ್ಗಮಿಸಿದ್ದಾರೆ. 21 ಗಂಟೆಗಳ ಕಾಲ ನಡೆದ ಮಾತುಕತೆಗಳ ನಂತರವೂ ಇರಾನ್-ಅಮೆರಿಕ ಒಪ್ಪಂದ ಮಾಡಿಕೊಳ್ಳಲು ವಿಫಲವಾಗಿದೆ. ಇದರಿಂದ ಅಮೆರಿಕದ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಇಸ್ಲಾಮಾಬಾದ್ನಿಂದ ವಾಪಾಸ್ಸಾಗಿದ್ದಾರೆ. ನಾವು ಈಗ 21 ಗಂಟೆಗಳ ಕಾಲ ಹಲವಾರು ಮಹತ್ವದ ಚರ್ಚೆಗಳನ್ನು ನಡೆಸಿದ್ದೇವೆ. ಅದು ಒಳ್ಳೆಯ ಸುದ್ದಿ. ಕೆಟ್ಟ ಸುದ್ದಿ ಎಂದರೆ ನಾವು ಒಪ್ಪಂದಕ್ಕೆ ಬಂದಿಲ್ಲ ಎಂಬುದಾಗಿದೆ ಎಂದು ಜೆಡಿ ವ್ಯಾನ್ಸ್ ಹೇಳಿದರು. ನಮ್ಮ ಕೆಂಪು ರೇಖೆಗಳು ಯಾವುವು, ನಾವು ಯಾವ ವಿಷಯಗಳ ಬಗ್ಗೆ ಅವಕಾಶ ನೀಡಲು ಸಿದ್ಧರಿದ್ದೇವೆ ಮತ್ತು ನಾವು ಯಾವ ವಿಷಯಗಳ ಬಗ್ಗೆ ಅವಕಾಶ ನೀಡಲು ಸಿದ್ದರಿಲ್ಲ ಎಂದು ಸ್ಪಷ್ಟಪಡಿಸಿದ್ದೇವೆ. ನಮ್ಮ ಷರತ್ತುಗಳನ್ನು ಸ್ವೀಕರಿಸದಿರಲು ಇರಾನಿನ ನಿಯೋಗ ನಿರ್ಧರಿಸಿದೆ ಎಂದು ಜೆಡಿ ವ್ಯಾನ್ಸ್ ಹೇಳಿದ್ದಾರೆ.
ಅನುಭವ-ಅನುಭಾವದ ವಿಶಿಷ್ಟ ಹೂರಣ ‘ಆಚೀಚಿನ ಆಯಾಮಗಳು’
ಅಂಕಣ ಬರಹಗಳ ಒಂದು ವೈಶಿಷ್ಟ್ಯ ಎಂದರೆ ಬರಹಗಾರರಿಗೆ ಯಾವುದೇ ನಿರ್ಬಂಧಗಳಿರುವುದಿಲ್ಲ. ವ್ಯಕ್ತಿಗತ ನೆಲೆಯಲ್ಲಿ ತಾತ್ವಿಕ ಹಾಗೂ ಮುದ್ರಣ ಮಾಧ್ಯಮಗಳ ಪದಮಿತಿ/ಪುಟಮಿತಿ ಹೊರತುಪಡಿಸಿದರೆ, ಅಕ್ಷರಜೋಡಣೆಗೆ ಅನಿರ್ಬಂಧಿತ ಸ್ವಾತಂತ್ರ್ಯ ಇರುವುದೇ ಅಂಕಣ ಬರಹದ ಸೌಂದರ್ಯಕ್ಕೆ ಕಾರಣ. ಸಾಮಾನ್ಯವಾಗಿ ವೈಯಕ್ತಿಕ ಅಭಿವ್ಯಕ್ತಿಯನ್ನು ಸಾಮಾಜಿಕ/ಸಾಂಸ್ಕೃತಿಕ ಹಂದರದಲ್ಲಿ ಹರಡುವ ಪ್ರವೃತ್ತಿಯನ್ನು ಇಲ್ಲಿ ಗುರುತಿಸಬಹುದು. ಒಬ್ಬ ಅಂಕಣಕಾರನಾಗಿ ಹೇಳುವುದಾದರೆ, ಕೆಲವು ಬರಹಗಳನ್ನು ಓದುವಾಗ, ‘ಹೌದಲ್ಲವೇ? ಈ ರೀತಿಯಲ್ಲೂ ಬರೆಯಬಹುದಲ್ಲಾ !!’ ಎಂದು ಭಾಸವಾಗುತ್ತದೆ. ಅಂತಹ ಒಂದು ಬರಹ ಗುಚ್ಛ ಚಂದಕಚರ್ಲ ರಮೇಶಬಾಬು ಅವರ ‘ಆಚೀಚಿನ ಆಯಾಮಗಳು’. ರಮೇಶಬಾಬು ಅವರು ನನ್ನಂತೆಯೇ ಬ್ಯಾಂಕ್ಉದ್ಯೋಗಿ. ಹಾಗಾಗಿ ಬಿಡುವಿನ ವೇಳೆಯಲ್ಲಿ ಲೇಖನ ಬರೆಯುವಾಗ ಅವರ ಮನಸ್ಸು, ಬ್ಯಾಂಕ್ಸೇವೆಯಲ್ಲಿರುವಾಗ ಕಂಡಂತಹ ಎಲ್ಲ ಸಾಮಾಜಿಕ ವಾಸ್ತವಗಳ ಕಡೆಗೂ ವಾಲುವುದು ಸಹಜ. ಈ ವೈವಿಧ್ಯಮಯ ಆಯಾಮ ಮತ್ತು ರಮೇಶ್ಬಾಬು ಅವರ ಬರಹದ ಚೆಂದದ ಶೈಲಿ ಓದುಗರಲ್ಲಿ ನಗು ಮೂಡಿಸುತ್ತಾ, ಅಚ್ಚರಿ ಹುಟ್ಟಿಸುತ್ತಾ, ಕುತೂಹಲ ಕೆರಳಿಸುತ್ತಾ, ಆಸಕ್ತಿ ಸೃಷ್ಟಿಸುತ್ತಾ 34 ಅಧ್ಯಾಯಗಳನ್ನೂ ಪಯಣಿಸುವಂತೆ ಮಾಡುತ್ತದೆ. ಹಾಸ್ಯಪ್ರಜ್ಞೆ ಅವರಲ್ಲಿ ಅಂತರ್ಗತವಾಗಿರುವುದು ಈ ಕೃತಿಯಲ್ಲಿ ಸ್ಪಷ್ಟವಾಗಿ ಕಾಣುತ್ತದೆ. ಆಧುನಿಕ ಸಂವಹನ ತಂತ್ರಜ್ಞಾನ, ಕ್ರೀಡೆ, ಸಾಹಿತ್ಯ, ಪುರಾಣ, ರಾಜಕಾರಣ, ಜೀವ ಪ್ರೀತಿ ಮತ್ತು ವೈಯಕ್ತಿಕ ಬದುಕಿನ ಸುಂದರ ಕ್ಷಣಗಳು ಇವೆಲ್ಲವನ್ನೂ ಒಳಗೊಂಡ ಈ ಪುಸ್ತಕದ Sಠಿeಛಿಣಡಿum ಬಹಳ ವಿಸ್ತಾರದ್ದು. ಸರಳ ನಿರೂಪಣೆಯ ಮೂಲಕ ಗಂಭೀರ ವಿಚಾರಗಳನ್ನು ಸಂವಾದಿಸುವ ರಮೇಶ್ಬಾಬು ಅವರ ಶೈಲಿ ಸಹಜವಾಗಿ ಆಪ್ತತೆ ಮೂಡಿಸುತ್ತದೆ. ಅವರಲ್ಲಿನ ಹಾಸ್ಯಪ್ರಜ್ಞೆ ‘ನಾಸಿಕ ಪುರಾಣ’ದಿಂದಲೇ ಆರಂಭವಾಗುತ್ತದೆ. ಮೂಗಿನ ಉಪಯುಕ್ತತೆಗಳೊಂದಿಗೇ ಅದರ ವಿಶೇಷ ಗುಣಗಳನ್ನು ರಸವತ್ತಾಗಿ ವರ್ಣಿಸುವ ಮೂಲಕ ಲೇಖಕರು, ಓದುಗರ ವಿಸ್ಮತಿಯ ಕಣಜದಿಂದ ಮರೆತ ಕ್ಷಣಗಳನ್ನೂ ಹೊರತೆಗೆಯುತ್ತಾರೆ. ಕನ್ನಡ ಭಾಷೆಯ ಬಗ್ಗೆ ಅವರಲ್ಲಿರುವ ಪ್ರೀತಿ-ಅಭಿಮಾನ ‘ಕನ್ನಡವೆನ್ನುವ ಗುಪ್ತಗಾಮಿನಿ’ ಲೇಖನದಲ್ಲಿ ಸ್ಫುಟವಾಗಿ ನಿರೂಪಿಸಲಾಗಿದೆ. ‘ಕನ್ನಡವೆಂದರೆ ಬರೀ ಭಾಷೆಯಲ್ಲ, ಒಂದು ಸಂಸ್ಕೃತಿ...’ (ಪುಟ 29) ಎಂಬ ಸಾಲುಗಳು ರಮೇಶ ಬಾಬು ಅವರ ಭಾಷಾ ಪ್ರೇಮದ ದ್ಯೋತಕವಾಗಿ ಕಾಣುತ್ತದೆ. ಮುಂದೆ ‘ಬಕ್ಕತಲೆ’ ನಗೆಬರಹ ಓದುತ್ತಾ ಹೋದಂತೆ, ಗತ ಬದುಕಿನ ಹಲವಾರು ಕ್ಷಣಗಳು ಮೆರವಣಿಗೆಯಂತೆ ಸಾಗುತ್ತವೆ. ಇದು ಎಲ್ಲರ ಅನುಭವವೂ ಆಗಲು ಸಾಧ್ಯ. ‘ಬಾಚಲು ಕಡಿಮೆ ತಲೆ ತೊಳೆಯಲು ಹೆಚ್ಚು ಮುಖ’ ಎಂಬ ವ್ಯಾಖ್ಯಾನವೂ ಉಂಟು. ಲೇಖಕರು ಈ ರೀತಿಯ ಹಲವು ಪ್ರಸಂಗಗಳನ್ನು ಮನಮುಟ್ಟುವಂತೆ ವರ್ಣಿಸಿದ್ದಾರೆ. ಸಾಂಪ್ರದಾಯಿಕ ಸಮಾಜದಲ್ಲಿ ಬೆಳೆದು, ಅಮೆರಿಕ ಅಥವಾ ಪಾಶ್ಚಾತ್ಯ ದೇಶಗಳಿಗೆ ಆಕಾಶಯಾನ ಮಾಡುವಾಗ ಎದುರಾಗಬಹುದಾದ ವಾಸ್ತವ ಸನ್ನಿವೇಶಗಳನ್ನು ‘ಆಕಾಶಯಾನವೂ...’ ಲೇಖನದಲ್ಲಿ ರಮೇಶಬಾಬು ತಮ್ಮದೇ ಅನುಭವದ ನೆಲೆಯಲ್ಲಿ ವಿವರಿಸಿದ್ದರೂ, ಈ ಅನುಭವಗಳು ಎಲ್ಲರದೂ ಹೌದು. ನಮ್ಮ ಪೀಳಿಗೆಯವರಿಗೆ ಕೇವಲ ಕಣ್ತುಂಬಿಕೊಳ್ಳುವ ಒಂದು ಪಯಣ ಸಾಧನವಾಗಿದ್ದ ವಿಮಾನ, ವಯಸ್ಸಾದ ಮೇಲೆ ಪಯಣದ ಸಾಥಿಯಾದಾಗ ಎದುರಾಗುವ ವಿಚಿತ್ರ ಸಂದರ್ಭಗಳು, ಲೇಖಕರ ಶೈಲಿಯ ಕಾರಣದಿಂದ ಇನ್ನೂ ಹೆಚ್ಚು ಆಕರ್ಷಣೀಯವಾಗುತ್ತದೆ. ರಮೇಶ ಬಾಬು ಅವರ ಅಕ್ಷರದೌತಣ ಮನಸ್ಸಿಗೆ ಮುದ ನೀಡುತ್ತಲೇ ಥಟ್ಟನೆ ನಾಲಗೆಯಲ್ಲಿ ನೀರೂರಿಸಿಬಿಡುವುದು ಒಂದು ವಿಶೇಷ. ‘ರಸಂ ಎನ್ನುವ ಅಪ್ಪಟ ಕನ್ನಡ ಸಾರು’ ಈ ಲೇಖನ ಓದುಗರ ಮುಂದೆ ಊಟದೆಲೆಯನ್ನು ಇಡುವ ರೀತಿಯಲ್ಲಿ ರುಚಿಕರ ರಸಂ ಇಲ್ಲಿ ಸ್ಥಾನ ಗಳಿಸಿಕೊಂಡಿದೆ. ರಸಂ ಇಲ್ಲದ ಊಟ ಊಟವೇ ಅಲ್ಲ ಎನ್ನುವುದು ಒಂದು ಕಾಲದ ನಾಣ್ಣುಡಿಯೇ ಆಗಿದ್ದುದು ಸತ್ಯ. ಅಧುನಿಕ ತಂತ್ರಜ್ಞಾನ ಮತ್ತು ಸಂವಹನ ಮಾಧ್ಯಮಗಳು ಮಿಲೆನಿಯಂ ಸಮಾಜವನ್ನು ಪ್ರಭಾವಿಸುತ್ತಿರುವ ರೀತಿ ಆತಂಕಕಾರಿಯಾದದ್ದು. ಇದನ್ನು ಲೇಖಕರು ‘ಸಾಹಿತ್ಯದ ಮೇಲೆ...’’ ಲೇಖನದಲ್ಲಿ ಸೋಷಿಯಲ್ ಮೀಡಿಯಾ ಪ್ಲಾಟ್ಫಾರ್ಮ್ಸ್ ದೃಷ್ಟಿಯನ್ನಿಟ್ಟುಕೊಂಡು ವಿಶ್ಲೇಷಿಸಿದ್ದಾರೆ. ‘‘ಬೆಂಕಿ ಕಡ್ಡಿಯಿಂದ ದೀಪವನ್ನಾದರೂ ಬೆಳಗಬಹುದು ಅಥವಾ ಮನೆಗೆ ಬೆಂಕಿ ಸಹ ಹಚ್ಚಬಹುದು’’(ಪುಟ 75) ರಮೇಶಬಾಬು ಅವರ ಈ ಸಾಲು ಯುವ ಸಮಾಜವನ್ನು ಜಾಗೃತಗೊಳಿಸುವ ಘೋಷವಾಕ್ಯವಾಗಿ ಕಾಣುತ್ತದೆ. ಅದೇ ರೀತಿಯ ಜಾಗೃತಿಯ ಸಂದೇಶ ‘ಬೇಲಿಯೇ ಎದ್ದು’ ಲೇಖನದಲ್ಲಿದೆ. ಪ್ರಜಾಪ್ರಭುತ್ವವನ್ನು ಕಾಪಾಡುವ ನಿಟ್ಟಿನಲ್ಲಿ ವೈಚಾರಿಕ-ವೈಜ್ಞಾನಿಕ ಪ್ರಜ್ಞೆ ಮತ್ತು ಸಾಮಾಜಿಕ ಅರಿವು ಎಷ್ಟು ಮುಖ್ಯ ಎನ್ನುವುದನ್ನು ಈ ಲೇಖನ ಸೂಚ್ಯವಾಗಿ ಕಾಣಿಸುತ್ತದೆ. ಗಾಂಧಿವಾದವನ್ನು ಕುರಿತ ಲೇಖಕರ ಅಭಿಪ್ರಾಯಗಳು ಇವತ್ತಿನ ಸಮಾಜಕ್ಕೆ ಅಗತ್ಯವಾದ ಮಾರ್ಗದರ್ಶನವೇ ಸರಿ. ಏಕೆಂದರೆ ತಾತ್ವಿಕವಾಗಿ-ಸೈದ್ಧಾಂತಿಕವಾಗಿ ಗಾಂಧಿಯನ್ನು ಸಮರ್ಥಿಸುವುದು, ನಿರಾಕರಿಸುವುದು ವೈಯುಕ್ತಿಕ ಅಭಿವ್ಯಕ್ತಿಯಾದರೂ, ಕುಸಿಯುತ್ತಿರುವ ಮಾನವೀಯ-ನೈತಿಕ-ರಾಜಕೀಯ ಮೌಲ್ಯಗಳ ನಡುವೆ ಗಾಂಧಿ ಹೆಚ್ಚು ಪ್ರಸ್ತುತವಾಗುವುದನ್ನು ಲೇಖಕರು ಸುಂದರವಾಗಿ ವಿಶ್ಲೇಷಿಸಿದ್ದಾರೆ. ಶ್ವಾನಪ್ರೀತಿ, ಪಾರ್ಕಿಂಗ್ ಸಮಸ್ಯೆ, ಐಪಿಎಲ್ ಜಾತ್ರೆ, ನಿರೂಪಕರ ಬವಣೆ ಹೀಗೆ ವಿಭಿನ್ನ ಆಯಾಮಗಳಲ್ಲಿ ನಮ್ಮ ಸುತ್ತಲೂ ನಿತ್ಯ ನಡೆಯುವ ಪ್ರಸಂಗಗಳ ವಿಶಿಷ್ಟ ಆಯಾಮಗಳನ್ನು ರಮೇಶ ಬಾಬು ತಮ್ಮ ಈ ಕೃತಿಯಲ್ಲಿ ಅನಾವರಣಗೊಳಿಸಿದ್ದಾರೆ. ರಮೇಶ ಬಾಬು ಅವರ ‘ಆಚೀಚಿನ ಆಯಾಮಗಳು’ ಎಲ್ಲರ ಬದುಕಿನಲ್ಲಿ ಹಾದು ಹೋಗುವ ಆಯಾಮಗಳನ್ನು ತೆರೆದಿಡುವ ಒಂದು ಅಪೂರ್ವ ಕೃತಿ. ಕನ್ನಡ ಸಾಹಿತ್ಯ ಲೋಕಕ್ಕೆ ಒಂದು ಸುಂದರ ಉಡುಗೊರೆ. ರಮೇಶ ಬಾಬು ಈ ಕಾರಣಕ್ಕಾಗಿ ಅಭಿನಂದನಾರ್ಹರು.
ಅಂಡಮಾನ್ : ಮೋಜಿಗಾಗಿ ಕರಗದಿರಲಿ ಕಾಡು-ಕಡಲಿನ ಮೌನ!
ಕಾಡು ಮತ್ತು ಕಡಲಿನ ನಡುವೆ ಇರುವ ಸಮತೋಲನ ಬಹಳ ನಾಜೂಕು. ಅದು ಕೇವಲ ದೃಶ್ಯವಲ್ಲ, ಒಂದು ಜೀವಂತ ಸಮೀಕರಣ. ಅದನ್ನು ನಾವು ಪ್ರವಾಸದ ಹೆಸರಿನಲ್ಲಿ ನಿಧಾನವಾಗಿ ಬದಲಾಯಿಸುತ್ತಿದ್ದೇವೆ ಎಂಬ ಅರಿವು ನಮ್ಮೊಳಗೆ ಮೂಡದಿದ್ದರೆ, ಅಂಡಮಾನ್ ಕೂಡ ಬೇರೆ ಪ್ರವಾಸಿ ಸ್ಥಳಗಳಂತೆಯೇ ತನ್ನ ಮೂಲ ಸ್ವರೂಪವನ್ನು ಕಳೆದುಕೊಳ್ಳುವ ದಿನ ದೂರದಲ್ಲಿಲ್ಲ. ಹೀಗಾಗಿ, ಅಂಡಮಾನ್ ನೋಡಬೇಕೆಂದರೆ ಕೇವಲ ಕಣ್ಣುಗಳಿಂದ ಅಲ್ಲ, ಒಂದು ಜವಾಬ್ದಾರಿಯ ಮನಸ್ಸಿನಿಂದ ನೋಡಬೇಕು. ಇಲ್ಲವಾದರೆ, ನಾವು ನೋಡಲು ಹೊರಟ ಪ್ರಕೃತಿಯೇ ನಮ್ಮಿಂದ ಅಳಿದುಹೋಗುವ ಸಾಧ್ಯತೆ ಇದೆ. ಅಂಡಮಾನ್ ಗುಂಪುದ್ವೀಪಗಳು ಮನುಷ್ಯನಿಗೆ ತಡವಾಗಿ ಸಿಕ್ಕಿದವು ಎನ್ನುವುದರಲ್ಲಿ ಒಂದು ವಿಚಿತ್ರ ವ್ಯಂಗ್ಯವಿದೆ. ಲಕ್ಷಾಂತರ ವರ್ಷಗಳಿಂದ ಇಲ್ಲಿ ಕಾಡು ಮತ್ತು ಕಡಲು ತನ್ನದೇ ಭಾಷೆಯಲ್ಲಿ ಉಸಿರಾಡುತ್ತಿತ್ತು. ಯಾವಾಗ ಮನುಷ್ಯ ಕಾಲಿಟ್ಟನೋ ಆ ಕ್ಷಣದಿಂದ ಅಲ್ಲಿಯ ಮೌನದೊಳಗೆ ಬೇರೆ ಅರ್ಥಗಳು ತುಂಬಲು ಆರಂಭವಾಯಿತು.ಈಗ ಆ ಅರ್ಥಗಳು ಪೂರ್ಣ ಪ್ರವಾಸದ ರೂಪ ತಾಳಿವೆ. ಹೊರ ಜಗತ್ತು ನಾವೇ ಸೃಷ್ಟಿಸಿಕೊಂಡ ಒತ್ತಡ, ತ್ರಿಶಂಕು ಸ್ಥಿತಿ, ಶಬ್ದ ಮಾಲಿನ್ಯಕ್ಕೆ ಒಳಗೊಳ್ಳುತ್ತಿದ್ದ ಹಾಗೆಯೇ ದೂರದ ಅಂಡಮಾನಿನ ದ್ವೀಪಗಳು ಅನೇಕರಿಗೆ ವಿರಾಮದ ಮನೆಗಳಾಗಿ ರೂಪಗೊಂಡಿವೆ. ಆದಿವಾಸಿಗಳನ್ನು ಬಿಟ್ಟು ಇಲ್ಲಿ ಇರುವವರಿಗೆಲ್ಲ ಬಹಳ ದೊಡ್ಡ ಇತಿಹಾಸವಿಲ್ಲ. ಇಷ್ಟರಲ್ಲೇ ಭೂಮಿಯ ಆಯಪಾಯವನ್ನು ಅವರು ತಮ್ಮ ಬದುಕಿನ ಮಾರ್ಗವನ್ನಾಗಿ ಮಾಡಿಕೊಳ್ಳುತ್ತಿದ್ದಾರೆ. ಕಾಡು ಮತ್ತು ಕಡಲು ಈ ಎರಡೂ ಇಲ್ಲಿನ ಜನರಿಗೆ ಕೇವಲ ನಿಸರ್ಗ ದೃಶ್ಯವಲ್ಲ, ಆದಾಯದ ದಾರಿಗಳು. ಒಂದು ಕಡೆ ದಟ್ಟವಾದ ಕಾಡು, ಇನ್ನೊಂದು ಕಡೆ ಅಂತ್ಯವಿಲ್ಲದ ಸ್ಪಟಿಕ ಶುಭ್ರ ನೀಲಿ ಕಡಲು ಈ ಎರಡು ಅಂಚುಗಳ ಮಧ್ಯೆ ಹರಿಯುವ ಹೆದ್ದಾರಿ ನನಗೆ ಒಂದು ಸಂಕೇತದಂತೆ ಕಾಣುತ್ತದೆ. ಅದೇ ಹೆದ್ದಾರಿಯ ಎರಡೂ ಬದಿಯಲ್ಲಿ ನಿಂತಿರುವ ನೂರಾರು ರೆಸಾರ್ಟ್ಗಳು ಮನುಷ್ಯನ ಅನ್ನದಾರಿಯ ಹೊಸ ರೂಪಗಳು. ಕಾಡಿನ ಕಡೆ ಕುಟೀರ ಕಟ್ಟಿಕೊಂಡವರು ಪ್ರವಾಸಿಗರಿಗೆ ಕಾಡಿನ ಸುಖವನ್ನು ತೋರಿಸುತ್ತಾರೆ. ಕಡಲಿನ ಕಡೆ ಮನೆ ಕಟ್ಟಿಕೊಂಡವರು ಉಪ್ಪು ನೀರನ್ನು ಜೀವನ ದಾರಿಯನ್ನಾಗಿಸಿದ್ದಾರೆ. ಇಲ್ಲಿ ಕಾಡು ಕೇವಲ ಮರಗಳ ಗುಂಪಲ್ಲ, ಅದು ಹೊರಗಡೆಯಿಂದ ಬಂದವರಿಗೆ ಅನುಭವವಾಗುತ್ತದೆ. ಕಡಲು ಕೇವಲ ನೀರಿನ ವಿಸ್ತಾರವಲ್ಲ, ಅದು ಮನರಂಜನೆಯಾಗಿ ರೂಪಾಂತರಗೊಳ್ಳುತ್ತದೆ. ಒಂದು ಕಡೆ ನೀವು ಕಾಡನ್ನು ನೋಡುತ್ತೀರಿ ಸ್ವಚ್ಛ ಗಾಳಿ, ಪುಟ್ಟ ಜಲಪಾತಗಳು, ತೊರೆಗಳ ನಿನಾದ. ಮತ್ತೊಂದು ಕಡೆ ಕಡಲಿನೊಳಗೆ ಇಳಿದು ಚಿಪ್ಪುಗಳು, ಜಲಚರಗಳ ಲೋಕವನ್ನು ಕಣ್ಣು ತುಂಬಿಕೊಳ್ಳುತ್ತೀರಿ. ಈ ಎರಡರ ನಡುವೆ ಮನುಷ್ಯ ನಿರಂತರ ತನ್ನ ನೆಮ್ಮದಿಯನ್ನು ಹುಡುಕುತ್ತಾನೆ. ಆದರೆ ಇಲ್ಲಿ ಒಂದು ಸೂಕ್ಷ್ಮ ಪ್ರಶ್ನೆ ಎದ್ದೆದ್ದು ಬರುತ್ತದೆ. ಇದು ಪ್ರಕೃತಿಯೊಂದಿಗೆ ಹೊಂದಾಣಿಕೆಯಾ ಅಥವಾ ಪ್ರಕೃತಿಯನ್ನು ರೂಪಾಂತರಗೊಳಿಸುವ ಒಂದು ಮೌನದ ಪ್ರಯತ್ನವಾ? ಮನುಷ್ಯ ಪ್ರವೇಶ ಅತಿಯಾಗಿ ಕಾಡು ಮತ್ತು ಕಡಲು ತನ್ನ ಸಹಜ ಸ್ವಭಾವವನ್ನು ಉಳಿಸಿಕೊಂಡಿದೆಯಾ ಅಥವಾ ಅದು ನಮ್ಮ ಮನರಂಜನೆಗೆ ತಕ್ಕಂತೆ ಮೃದುವಾಗಿಸಿಕೊಂಡಿದೆಯಾ? ಹೌದು, ಇಲ್ಲಿ ಬರುವ ಪ್ರತಿಯೊಬ್ಬ ಪ್ರವಾಸಿಗನು ಒಂದು ಕ್ಷಣ ತನ್ನನ್ನು ತಾನು ಮರೆತು ಪ್ರಕೃತಿಯೊಳಗೆ ಕರಗಲು ಪ್ರಯತ್ನಿಸುತ್ತಾನೆ. ಆದರೆ ಅದೇ ಸಮಯದಲ್ಲಿ, ಆ ಪ್ರಕೃತಿಯೇ ನಿಧಾನವಾಗಿ ಮನುಷ್ಯನ ಕೈಯಲ್ಲಿ ರೂಪಾಂತರಗೊಳ್ಳುತ್ತಿರುವುದನ್ನು ಗಮನಿಸಬೇಕು. ಹೀಗಾಗಿಯೇ, ಅಂಡಮಾನ್ ಕೇವಲ ವಿರಾಮದ ಮನೆ ಅಲ್ಲ. ಅದು ಮನುಷ್ಯ ಮತ್ತು ಪ್ರಕೃತಿಯ ನಡುವೆ ನಡೆಯುತ್ತಿರುವ ಮೌನ ಸಂಭಾಷಣೆ. ಒಂದು ಕಡೆ ಕಾಡು ತನ್ನದೇ ಭಾಷೆಯಲ್ಲಿ ಮಾತಾಡುತ್ತಿದೆಯಾದರೆ, ಇನ್ನೊಂದು ಕಡೆ ಕಡಲು ತನ್ನದೇ ಲಯದಲ್ಲಿ ಪ್ರತಿಕ್ರಿಯಿಸುತ್ತಿದೆ. ಈ ಎರಡರ ನಡುವೆ ನಿಂತಿರುವ ಮನುಷ್ಯ ತನ್ನ ಸುಖಕ್ಕಾಗಿ ಎಲ್ಲವನ್ನೂ ರೂಪಾಂತರಗೊಳಿಸುವವನೂ, ಅದೇ ಸಮಯದಲ್ಲಿ ಅದರಲ್ಲಿ ನೆಮ್ಮದಿಯನ್ನು ಹುಡುಕುವವನೂ ಆಗಿದ್ದಾನೆ. ಅಂಡಮಾನ್ಗೆ ಇನ್ನೊಂದು ಮುಖವಿದೆ. ಬೆಂಗಾಲಿಗಳು, ತಮಿಳಿಗರು, ಕೇರಳಿಗರು, ಆಂಧ್ರದ ರೆಡ್ಡಿಗಳು ಪ್ರತೀ ಸಮುದಾಯವೂ ಭಾಗಶಃ ತಮ್ಮ ತಮ್ಮ ನೆಲದಿಂದ ದೂರ ಬಂದು ಇಲ್ಲಿ ಒಂದು ಹೊಸ ನೆಲೆಯನ್ನೇ ಕಟ್ಟಿಕೊಂಡಿದ್ದರೂ ಅವರು ಕಟ್ಟಿಕೊಂಡಿದ್ದು ಕೇವಲ ಮನೆಗಳಲ್ಲ; ಒಂದು ದೃಷ್ಟಿ, ಒಂದು ಸಂಯಮ. ಇಲ್ಲಿ ಸುಸ್ಥಿರವಾಗಿ ನಿಲ್ಲಬೇಕು ಎಂದರೆ, ಪ್ರಕೃತಿಯನ್ನು ನೇರವಾಗಿ ಎದುರಿಸದೆ, ಅದರ ಜೊತೆ ಸೇರಿ ಬದುಕಬೇಕು ಎನ್ನುವ ಅಲ್ಪಾಂಶದ ಅರಿವು ಇವರಲ್ಲಿ ನಿಧಾನವಾಗಿ ಬೆಳೆದಿದೆ. ಪ್ರವಾಸೋದ್ಯಮವೇ ಬದುಕಿನ ದಾರಿ ಎನ್ನುವ ನಿರ್ಧಾರ ಮಾಡಿದ ಕ್ಷಣದಿಂದ, ಅದನ್ನು ಉಳಿಸುವ ಹೊಣೆಗಾರಿಕೆಯನ್ನು ಸಹ ಇವರೇ ಹೊತ್ತಿದ್ದಾರೆ. ಈ ನಡುವೆ ಮುಂದಿನ ತಲೆಮಾರು ಮತ್ತು ಹೊಸ ತಂತ್ರಜ್ಞಾನ ಇಲ್ಲಿ ಅಗಾಧಶಕ್ತಿಯ ಪ್ರಕೃತಿಯನ್ನು ಸುಸ್ಥಿರವಾಗಿ ಉಳಿಸುತ್ತದೆಯೇ ಎನ್ನುವುದು ದೊಡ್ಡ ಪ್ರಶ್ನೆ. ‘ನಾವು ಪ್ರಕೃತಿಯನ್ನು ಹಾಳು ಮಾಡಿದರೆ, ಅದು ನಮ್ಮ ಬದುಕಿನ ಬೇರುಗಳನ್ನು ಕತ್ತರಿಸುತ್ತದೆ’ ಎನ್ನುವ ಸರಳವಾದ, ಆದರೆ ಗಂಭೀರವಾದ ಅರಿವು ಈಗ ಇಲ್ಲಿ ಭಾಗಶಃ ರಸ್ತೆಗುಂಟ ಸ್ವಚ್ಛತೆಯಾಗಿ ಕಾಣುತ್ತದೆ. ಕೆಲವು ದ್ವೀಪಗಳಲ್ಲಿ ನಾನು ನಡೆದುಹೋಗುತ್ತಿದ್ದಾಗ ಗಮನಿಸಿದ ಒಂದು ಸಣ್ಣ ಸಂಗತಿ ರಸ್ತೆಯ ಎರಡೂ ಬದಿಯಲ್ಲಿ ಕಸದ ಗೂಡುಗಳಿಗಿಂತ, ಕಸ ಹಾಕದಿರುವ ಶಿಸ್ತೇ ಹೆಚ್ಚು ಗೋಚರಿಸಿತು. ಎಲ್ಲೂ ದೂಳು ಇಲ್ಲ. ಇದು ನಿಯಮದ ಭಯವಲ್ಲ, ಬದುಕಿನ ಅರಿವು. ಪ್ಲಾಸ್ಟಿಕ್ ಕಸದಿಂದ ತುಂಬಿದ ಕರಾವಳಿಗಳು ಪ್ರವಾಸಿಗರನ್ನು ದೂರ ತಳ್ಳುತ್ತವೆ ಎಂಬುದನ್ನು ಅವರು ಅನುಭವದಿಂದಲೇ ಕಲಿತಿದ್ದಾರೆ. ಕಾಡು-ಕಡಲನ್ನು ಹಂಚಿಕೊಂಡ ರೆಸಾರ್ಟ್ಗಳು ಕೂಡ ಇಲ್ಲಿ ಒಂದು ಬೇರೆ ರೀತಿಯ ಕಥೆ ಹೇಳುತ್ತವೆ. ಬಹುಮಹಡಿ ಕಾಂಕ್ರಿಟ್ ಕಟ್ಟಡಗಳ ಬದಲು, ಮರದ ಮನೆಗಳು, ಸಣ್ಣ ಸಣ್ಣ ಕಟ್ಟಡಗಳು ಅವು ಕಾಡಿನ ನಡುವೆ ಬೆರೆತು ಹೋಗುವಂತೆ ನಿರ್ಮಾಣಗೊಂಡಿವೆ. ಕಟ್ಟಡಕ್ಕೆ ಬೇಕಾಗುವ ವಸ್ತುಗಳು ಹೊರಗಡೆಯಿಂದಲೇ ಬರಬೇಕಾದ ಕಾರಣಕ್ಕಾಗಿ ಈಗ ಈ ಮಿತಿಗಳಿವೆ. ಬೀಚ್ ಬದಿಯನ್ನು ಚೊಕ್ಕಟವಾಗಿಡುವ ಅವರ ಪ್ರಯತ್ನದಲ್ಲಿ ಒಂದು ವ್ಯಾವಹಾರಿಕ ಬುದ್ಧಿ ಇದ್ದರೂ, ಅದರ ಒಳಹೊರತಿನಲ್ಲಿ ಪ್ರಕೃತಿಯ ಬಗ್ಗೆ ಇರುವ ಮೌನ ಗೌರವವೂ ಕಾಣುತ್ತದೆ. ಈವರೆಗೆ ಇಲ್ಲಿ ಮನುಷ್ಯ ತನ್ನ ಅಸ್ತಿತ್ವವನ್ನು ದೊಡ್ಡದಾಗಿ ತೋರಿಸಿಕೊಂಡಿಲ್ಲ; ಕಾಡಿನೊಳಗೆ ನಡೆಸುವ ಚಾರಣಗಳು, ಕಡಲಿನೊಳಗೆ ತೋರಿಸುವ ಜಲಚರಗಳ ಲೋಕ, ಆದಿವಾಸಿಗಳ ಮುಖಾಮುಖಿ ಇವು ಎಲ್ಲವೂ ಇಲ್ಲಿ ಕೇವಲ ಮನರಂಜನೆಯ ಸಾಧನಗಳಲ್ಲ, ಪ್ರಕೃತಿಯೊಂದಿಗೆ ಹೊಂದಾಣಿಕೆಯ ಒಂದು ರೀತಿಯ ಪಾಠಗಳು. ಇಲ್ಲೆಲ್ಲಾ ತನ್ನನ್ನು ಸ್ವಲ್ಪ ಸಣ್ಣದಾಗಿ ಮಾಡಿಕೊಂಡು ಪ್ರಕೃತಿಯೊಳಗೆ ಹೊಂದಿಕೊಳ್ಳಲು ಪ್ರಯತ್ನಿಸುತ್ತಿದ್ದಾನೆ. ಈ ಕಾರಣಕ್ಕಾಗಿಯೇ ಇಲ್ಲಿಯ ಕಡಲು ಇನ್ನೂ ಸ್ಪಟಿಕ ಶುಭ್ರವಾಗಿ ಉಳಿದಿದೆ. ಕಾಡಿನ ಬಹುಭಾಗ ನಿಬಿಡವಾಗಿದೆ. ಮನುಷ್ಯನ ಸ್ಪರ್ಶ ನಿಧಾನವಾಗಿ ಅವುಗಳೊಳಗೆ ಪ್ರವೇಶಿಸುತ್ತಿದೆ. ಆ ಸ್ಪರ್ಶ ಸೌಮ್ಯವಾಗಿರಬೇಕು, ಸಂಯಮಿತವಾಗಿರಬೇಕು ಎನ್ನುವ ಅರಿವು ಇಲ್ಲಿನ ಜನರಲ್ಲಿ ಕಾಣುವುದು ಈ ದ್ವೀಪಗಳ ಭವಿಷ್ಯಕ್ಕೆ ಒಂದು ಆಶೆಯಾಗಿದೆ. ದೇಶ ಯಾವುದು ಎಂಬುದು ಇಲ್ಲಿ ಮುಖ್ಯವಲ್ಲ; ಪ್ರಕೃತಿ ಯಾವ ಭಾಷೆಯಲ್ಲಿ ಮಾತನಾಡುತ್ತದೆ ಎಂಬುದೇ ಮುಖ್ಯ. ಬೆಟ್ಟಗಳು, ನದಿಗಳು, ಕಡಲುಗಳು ಇವುಗಳೆಲ್ಲ ಪ್ರಪಂಚದ ಯಾವ ಮೂಲೆಯಲ್ಲೂ ಒಂದೇ ಮಾತನ್ನು ಹೇಳುತ್ತವೆ: ‘‘ನನ್ನನ್ನು ಹಾಗೆಯೇ ಉಳಿಸು, ನಾನು ನಿನ್ನ ಬದುಕನ್ನು ಉಳಿಸುತ್ತೇನೆ’’ ಎಂದು. ಈ ಸರಳ ವಾಕ್ಯವನ್ನು ಮನುಷ್ಯ ಎಲ್ಲಿಯವರೆಗೆ ಅರ್ಥ ಮಾಡಿಕೊಂಡಿರುತ್ತಾರೋ, ಅಲ್ಲಿ ಪರಿಸರ ಪ್ರವಾಸೋದ್ಯಮ ಯಶಸ್ಸು ಕಾಣುತ್ತದೆ. ಪ್ರವಾಸಿಗನು ಯಾವ ದೇಶದಿಂದ ಬಂದವನಾಗಿರಲಿ, ಅವನು ಮೊದಲು ಹುಡುಕುವುದು ಸ್ವಚ್ಛತೆ, ಶಾಂತಿ ಮತ್ತು ಸ್ಪರ್ಶಿಸದಂತೆ ಉಳಿದಿರುವ ಪ್ರಕೃತಿ. ಆ ಅನುಭವವನ್ನು ಕೊಡಬಲ್ಲವರು ಅಲ್ಲಿ ಬದುಕುವ ಸ್ಥಳೀಯರು ಮಾತ್ರ. ಬೆಟ್ಟದ ಬುಡದಲ್ಲಿ ಕುಟೀರ ಕಟ್ಟಿಕೊಂಡವನಾಗಲೀ, ಕಡಲ ಕಿನಾರೆಯಲ್ಲಿ ರೆಸಾರ್ಟ್ ನಡೆಸುವವನಾಗಲೀ, ಕಾಡಿನ ಅಂಚಿನಲ್ಲಿ ಮಾರ್ಗದರ್ಶಕನಾಗಿರುವವನಾಗಲೀ ಅವರ ಕೈಯಲ್ಲೇ ಆ ಪ್ರದೇಶದ ಭವಿಷ್ಯ ಇದೆ. ಅಂಡಮಾನ್-ನಿಕೋಬಾರ್ ದ್ವೀಪಗಳಲ್ಲಿ ಈ ಸತ್ಯವು ನಿಧಾನವಾಗಿ, ಆದರೆ ಸ್ಪಷ್ಟವಾಗಿ ಗೋಚರಿಸುತ್ತದೆ. ಇಲ್ಲಿ ಪ್ರಕೃತಿ ಕೇವಲ ಒಂದು ಸಂಪನ್ಮೂಲ ಅಲ್ಲ; ಅದು ಬದುಕಿನ ಮೂಲ. ಕಡಲನ್ನು ತೋರಿಸುವವನು ಮೊದಲು ಕಡಲನ್ನು ಕಾಪಾಡಿಕೊಳ್ಳಬೇಕು, ಕಾಡನ್ನು ತೋರಿಸುವವನು ಕಾಡಿನ ಉಸಿರನ್ನು ಕದಡುವಂತಾಗಬಾರದು. ಈ ಬದ್ಧತೆ ಇಲ್ಲದೆ, ಪ್ರವಾಸೋದ್ಯಮ ಕೇವಲ ಕ್ಷಣಿಕ ಆದಾಯವಾಗಬಹುದು; ದೀರ್ಘಕಾಲದ ಬದುಕಾಗಲು ಸಾಧ್ಯವಿಲ್ಲ. ನಾವು ಯಾವ ಕಾರಣಕ್ಕಾಗಿ ಪ್ರವಾಸೋದ್ಯಮವನ್ನು ಆರಂಭಿಸಿದ್ದೇವೋ, ಆ ಮೂಲ ಕಾರಣವನ್ನು ಮರೆಯುವ ಕ್ಷಣದಿಂದಲೇ ಕುಸಿತ ಆರಂಭವಾಗುತ್ತದೆ. ಪ್ರಕೃತಿಯನ್ನು ತೋರಿಸಲು ಆರಂಭಿಸಿದ ಉದ್ಯಮ, ಪ್ರಕೃತಿಯನ್ನು ನಾಶಮಾಡಲು ಆರಂಭಿಸಿದರೆ, ಅದು ತನ್ನದೇ ಪಾದವನ್ನು ಕಡಿದಂತಾಗುತ್ತದೆ. ಹೀಗಾಗಿಯೇ, ಪರಿಸರ ಪ್ರವಾಸೋದ್ಯಮ ಒಂದು ವ್ಯವಹಾರವಲ್ಲ-ಒಂದು ಸಂಸ್ಕಾರ. ಅದು ಸ್ಥಳೀಯರ ಮನಸ್ಸಿನಲ್ಲಿ ಹುಟ್ಟಬೇಕು, ಅವರ ನಡೆಗಳಲ್ಲಿ ಕಾಣಬೇಕು. ಅಂಡಮಾನ್ ನಿಕೋಬಾರ್ ದ್ವೀಪಗಳು ಭಾಗಶಃ ಇಂದು ಈ ಸಂಸ್ಕಾರದ ಒಂದು ಪಾಠಶಾಲೆಯಂತೆ ಕಾಣುತ್ತಿವೆ. ಈ ಕಾರಣದಿಂದಾಗಿಯೇ ನನಗೆ ಇಡೀ ಅಂಡಮಾನ್ನಲ್ಲಿ ಹೆಚ್ಚು ಪೊಲೀಸರು ಕಾಣಿಸಲಿಲ್ಲ. ಅಲ್ಲಿ ಪ್ರತಿದಿನ ದೂರದ ನಗರ, ದೇಶಗಳಿಂದ ವಿಮಾನ ಮತ್ತು ಹಡಗಿನಲ್ಲಿ ಬಂದು ರಾಶಿ ಬೀಳುವ ಪ್ರವಾಸಿ ಜನರ ಮುಂದೆ ಸ್ಥಳೀಯ ಜನ ಒಂದು ದೊಡ್ಡ ಪಾಠವನ್ನು ಕಲಿಯಬೇಕು. ಪ್ರಕೃತಿಯನ್ನು ಕಾಪಾಡುವುದು ಎಂದರೆ, ತಮ್ಮ ಬದುಕನ್ನು ಕಾಪಾಡಿಕೊಳ್ಳುವುದೇ ಎಂದು. ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳನ್ನು ನಕ್ಷೆಯಲ್ಲಿ ನೋಡಿದರೆ, ಅವು ಭಾರತದಿಂದ ದೂರ ಸರಿದು ನಿಂತಿರುವ ಚಿಕ್ಕ ಚಿಕ್ಕ ಬಿಂದುಗಳಂತೆ ಕಾಣುತ್ತವೆ. ಆದರೆ ಆ ಬಿಂದುಗಳೊಳಗೆ ಒಂದು ದೊಡ್ಡ ಭೂಗೋಳ, ಒಂದು ಮೌನ ಇತಿಹಾಸ ಮತ್ತು ಒಂದು ಸಂಕೀರ್ಣ ಮಾನವಕಥೆ ಅಡಗಿದೆ. ಬಂಗಾಳ ಕೊಲ್ಲಿಯ ಮಧ್ಯಭಾಗದಲ್ಲಿ, ಮ್ಯಾನ್ಮಾರ್ ಮತ್ತು ಇಂಡೋನೇಶ್ಯಕ್ಕೆ ಹತ್ತಿರವಾಗಿ ಹಬ್ಬಿಕೊಂಡಿರುವ ಈ ದ್ವೀಪಸಮೂಹ, ಸುಮಾರು ಐನೂರಕ್ಕೂ ಹೆಚ್ಚು ದ್ವೀಪಗಳನ್ನು ಹೊಂದಿದೆ. ಅವುಗಳಲ್ಲಿ ಕೆಲವೇ ದ್ವೀಪಗಳಲ್ಲಿ ಮನುಷ್ಯನ ಹೆಜ್ಜೆ ಗುರುತು ಇದೆ; ಉಳಿದವುಗಳು ಇನ್ನೂ ಕಾಡಿನ ಉಸಿರಿನಲ್ಲೇ ಜೀವಿಸುತ್ತಿವೆ. ಇಲ್ಲಿನ ಪ್ರಮುಖ ಪ್ರವಾಸಿ ಸ್ಥಳಗಳು ಪೋರ್ಟ್ ಬ್ಲೇರ್ನ ಸೆಲ್ಲ್ಯುಲರ್ ಜೈಲು, ಹೇವ್ಲಾಕ್ (ಸ್ವರಾಜ್ ದ್ವೀಪ) ದ್ವೀಪದ ರಾಧಾನಗರ ಬೀಚ್, ನೀಲ್ ದ್ವೀಪದ ನಿಶ್ಶಬ್ದ ಕಡಲುತೀರಗಳು, ನ್ಯಾಚುರಲ್ ಬ್ರಿಡ್ಜ್, ಲೈಮ್ಸ್ಟೋನ್ ಗುಹೆಗಳು ಇವೆಲ್ಲವೂ ಕೇವಲ ದೃಶ್ಯಗಳಲ್ಲ, ಅನುಭವಗಳಾಗಿವೆ. ಪ್ರತೀ ಸ್ಥಳವೂ ತನ್ನದೇ ಕಥೆಯನ್ನು ಹೇಳುತ್ತದೆ. ಕೆಲವೆಡೆ ಇತಿಹಾಸದ ನೋವು, ಕೆಲವೆಡೆ ಪ್ರಕೃತಿಯ ಮೌನ, ಇನ್ನೂ ಕೆಲವೆಡೆ ಮನುಷ್ಯನ ಸಂಯಮ ಎಲ್ಲ ಸೇರಿ ಈ ದ್ವೀಪಗಳ ರೂಪವನ್ನು ಕಟ್ಟುತ್ತವೆ. ಬಹಳಷ್ಟು ಜನರಿಗೆ ಅಂಡಮಾನ್ ಎಂದರೆ ಇನ್ನೂ ಕೂಡ ಒಂದು ಚಿತ್ರ ಮಾತ್ರ-ಕಟ್ಟುನಿಟ್ಟಿನ ಗೋಡೆಗಳೊಳಗೆ ಸಿಲುಕಿದ ಸೆಲ್ಯುಲರ್ ಜೈಲ್. ಇತಿಹಾಸದ ಭಾರದಿಂದ ತುಂಬಿದ ಆ ಜಾಗವೇ ಅಂಡಮಾನ್ನ ಸಂಪೂರ್ಣ ರೂಪ ಎಂದುಕೊಳ್ಳುವ ಸರಳ ಕಲ್ಪನೆ. ಆದರೆ ವರ್ಷದಿಂದ ವರ್ಷಕ್ಕೆ, ಆ ಕಲ್ಪನೆಯ ಅಂಚುಗಳನ್ನು ಮೀರಿ ಅಂಡಮಾನ್ ತನ್ನ ಹಸಿರು ರೆಕ್ಕೆಗಳನ್ನು ನಿಧಾನವಾಗಿ ಬಿಚ್ಚಿಕೊಳ್ಳುತ್ತಿದೆ. ಅದು ಕೇವಲ ಒಂದೇ ದ್ವೀಪದ ಕಥೆಯಲ್ಲ; ನೂರಾರು ಕಿಲೋಮೀಟರ್ ವ್ಯಾಪ್ತಿಯಲ್ಲಿ ಚದುರಿರುವ ಪುಟ್ಟ ಪುಟ್ಟ ಹಸಿರು ದ್ವೀಪಗಳ ಕಥೆ. ಇವತ್ತು ಮನುಷ್ಯನ ಕಾಲು ಅಲ್ಲಿ ಮುಟ್ಟುತ್ತಿದೆ. ಅದರ ಜೊತೆಗೇ, ರೆಸಾರ್ಟ್ಗಳು, ಹೊಸ ಪ್ಯಾಕೇಜುಗಳು, ಮೋಜುಮಸ್ತಿಯ ಆವಿಷ್ಕಾರಗಳು ಕೂಡ ಅಲ್ಲಿ ಬೇರು ಬಿಡುತ್ತಿವೆ. ಒಮ್ಮೆ ಜೈಲನ್ನು ನೋಡಲು ಬಂದು ಹಿಂದಿರುಗುತ್ತಿದ್ದ ಪ್ರವಾಸಿಗರು, ಇವತ್ತು ಒಂದು ದ್ವೀಪಕ್ಕೆ ಸೀಮಿತವಾಗದೆ ಮತ್ತೊಂದು ದ್ವೀಪದತ್ತ ಕಣ್ಣು ಹಾಯಿಸುತ್ತಿದ್ದಾರೆ. ಕಡಲ ತೀರದಲ್ಲಿ ಮೌನವಾಗಿ ಕುಳಿತುಕೊಳ್ಳುವುದಕ್ಕೂ, ನೀರಿನ ಮೇಲಿನ ಕ್ರೀಡೆಗಳಲ್ಲಿ ತೊಡಗಿಕೊಳ್ಳುವುದಕ್ಕೂ, ಅಡಗಿರುವ ಸಣ್ಣ ಪ್ರಕೃತಿಯ ವಿಸ್ಮಯಗಳನ್ನು ಹುಡುಕುವುದಕ್ಕೂ ಅವರು ಹೆಚ್ಚು ದಿನಗಳನ್ನು ಮೀಸಲಿಡುತ್ತಿದ್ದಾರೆ. ಮೊದಮೊದಲು ಈ ಬದಲಾವಣೆ ಸಣ್ಣದಾಗಿ ಕಾಣಬಹುದು, ಆದರೆ ಅದರ ಹಿಂದೆ ಒಂದು ದೊಡ್ಡ ಚಲನೆ ಇದೆ. ಎರಡು ದಿನಗಳಲ್ಲಿ ಮುಗಿಯುತ್ತಿದ್ದ ಪ್ರವಾಸ ಇವತ್ತು ದ್ವೀಪದಿಂದ ದ್ವೀಪಕ್ಕೆ ವಿಸ್ತರಿಸುತ್ತಿದೆ. ಪೆರಿಗಳು, ದೋಣಿಗಳು, ಹೊಸ ಹೊಸ ಮಾರ್ಗಗಳು ಎಲ್ಲವೂ ಪ್ರವಾಸಿಗರನ್ನು ಇನ್ನಷ್ಟು ಒಳಗೆ, ಇನ್ನಷ್ಟು ದೂರಕ್ಕೆ ಕರೆದೊಯ್ಯಲು ಹಾತೊರೆಯುತ್ತಿವೆ. ಆದರೆ ಇದೇ ಜಾಗದಲ್ಲಿ ಒಂದು ಸೂಕ್ಷ್ಮವಾದ ಪ್ರಶ್ನೆ ಮೂಡುತ್ತದೆ. ಈ ವಿಸ್ತರಣೆ ಯಾವ ದಿಕ್ಕಿಗೆ ಸಾಗುತ್ತಿದೆ? ಇಂದಿಗೂ ಮನುಷ್ಯನ ಹೆಜ್ಜೆ ತಟ್ಟದ ನಿರ್ಜನ, ನಿಬಿಡ ಅರಣ್ಯಗಳು ಇನ್ನೂ ಉಳಿದಿವೆ. ಅವು ಕೇವಲ ಕಾಡುಗಳಲ್ಲ-ಪರಿಸರದ ಸಮತೋಲನವನ್ನು ಹಿಡಿದು ನಿಲ್ಲಿಸುವ ನಿಶ್ಶಬ್ದ ಖಜಾನೆಗಳು. ಆದರೆ ಈ ಪ್ರವಾಸೋದ್ಯಮದ ವೇಗ ಇದೇ ರೀತಿ ಮುಂದುವರಿದರೆ, ಇನ್ನೂ 25-50 ವರ್ಷಗಳಲ್ಲಿ ಅಂಡಮಾನ್ನ ಆ ಮೌನವೂ ಮುರಿಯಬಹುದು. ಸರಕಾರ ಕಟ್ಟುನಿಟ್ಟಿನ ನಿರ್ಬಂಧಗಳನ್ನು ಹಾಕದೆ ಇದ್ದರೆ, ಇವತ್ತಿನ ಅಪರೂಪದ ಎನ್ನುವ ಪದ ನಾಳೆ ಸಾಮಾನ್ಯವಾಗಬಹುದು. ದುರ್ಗಮ ಕಾಡುಗಳು, ಮನುಷ್ಯ ಮುಟ್ಟದ ಕಡಲ ತೀರಗಳು ಇವೆಲ್ಲವೂ ನಿಧಾನವಾಗಿ ಮನುಷ್ಯನ ಪ್ರವೇಶಕ್ಕೆ ತೆರೆದುಕೊಳ್ಳಬಹುದು. ಅದರ ಜೊತೆಗೆ, ನಾವು ಯಾವತ್ತೂ ತಪ್ಪಿಸಿಕೊಳ್ಳಲಾಗದ ಒಂದು ನೆರಳು ಮಾಲಿನ್ಯ ಅಲ್ಲಿಯೂ ನೆಲೆಸಬಹುದು. ಕಾಡು ಮತ್ತು ಕಡಲಿನ ನಡುವೆ ಇರುವ ಈ ಸಮತೋಲನ ಬಹಳ ನಾಜೂಕು. ಅದು ಕೇವಲ ದೃಶ್ಯವಲ್ಲ, ಒಂದು ಜೀವಂತ ಸಮೀಕರಣ. ಅದನ್ನು ನಾವು ಪ್ರವಾಸದ ಹೆಸರಿನಲ್ಲಿ ನಿಧಾನವಾಗಿ ಬದಲಾಯಿಸುತ್ತಿದ್ದೇವೆ ಎಂಬ ಅರಿವು ನಮ್ಮೊಳಗೆ ಮೂಡದಿದ್ದರೆ, ಅಂಡಮಾನ್ ಕೂಡ ಬೇರೆ ಪ್ರವಾಸಿ ಸ್ಥಳಗಳಂತೆಯೇ ತನ್ನ ಮೂಲ ಸ್ವರೂಪವನ್ನು ಕಳೆದುಕೊಳ್ಳುವ ದಿನ ದೂರದಲ್ಲಿಲ್ಲ. ಹೀಗಾಗಿ, ಅಂಡಮಾನ್ ನೋಡಬೇಕೆಂದರೆ ಕೇವಲ ಕಣ್ಣುಗಳಿಂದ ಅಲ್ಲ, ಒಂದು ಜವಾಬ್ದಾರಿಯ ಮನಸ್ಸಿನಿಂದ ನೋಡಬೇಕು. ಇಲ್ಲವಾದರೆ, ನಾವು ನೋಡಲು ಹೊರಟ ಪ್ರಕೃತಿಯೇ ನಮ್ಮಿಂದ ಅಳಿದುಹೋಗುವ ಸಾಧ್ಯತೆ ಇದೆ. ಅಂಡಮಾನಿನ ಮಣ್ಣು ಸಾಮಾನ್ಯ ಮಣ್ಣು ಅಲ್ಲ; ಅದು ಕಾಲದ ನಿಧಾನ ಉಸಿರು. ಲಕ್ಷಾಂತರ ವರ್ಷಗಳಿಂದ ಮರಗಳು ಉದುರಿಸಿದ ತರಗೆಲೆ, ಬಿದ್ದ ಮರ,ಕೊಂಬೆ ತ್ಯಾಜ್ಯಗಳು, ಬಾನಾಡಿ ಕಾಡಾಡಿಗಳ ಮಲಮೂತ್ರ ಎಲ್ಲವೂ ಸೇರಿ ಒಂದು ಜೀವಂತ ಹಾಸಿಗೆಯನ್ನೇ ಅಲ್ಲಿ ಹಾಸಿವೆ. ಆ ಮಣ್ಣಿನ ಒಂದು ಹಿಡಿ ಕೈಗೆತ್ತಿಕೊಂಡರೆ, ಅದರಲ್ಲಿ ಎಷ್ಟು ಜೀವಶಕ್ತಿ ಇರುತ್ತದೆ ಎಂಬುದನ್ನು ಅಳೆಯಲು ನಮ್ಮ ಅಂಕೆಗಳು ಸಾಲುವುದಿಲ್ಲ. ಅದು ಕೇವಲ ಮಣ್ಣು ಅಲ್ಲ; ಅದೊಂದು ಅತ್ಯಪೂರ್ವ ಹಸಿರು ನಿಧಿ. ಕಾಡಿನ ಅಂಚಿನಲ್ಲಿ ಕೃಷಿಗೆ ಸಜ್ಜಾಗುವುದು ಪ್ರಕೃತಿಯ ಸಹಜ ವಿಸ್ತರಣೆ. ಆದರೆ ಅದೇ ಅಂಚು ಮೀರಿದಾಗ, ಪ್ರವಾಸೋದ್ಯಮದ ಹೆಸರಿನಲ್ಲಿ ಹೊಸಹೊಸ ಆವಿಷ್ಕಾರಗಳು ಕಾಡಿನ ಒಳಗಡೆ ನುಗ್ಗಲಾರಂಭಿಸಿದಾಗ, ಸಮಸ್ಯೆ ಶುರುವಾಗುತ್ತದೆ. ನಿಧಾನವಾಗಿ, ಅಜಾಗರೂಕವಾಗಿ, ಕಾಡಿನ ಕಡಲಿನ ಮೌನವನ್ನು ಕತ್ತರಿಸುತ್ತಾ ಒಳನುಗ್ಗುವ ಮಾನವ ಹೆಜ್ಜೆಗಳು ಅನೇಕ ಜೀವ ವೈವಿಧ್ಯಗಳನ್ನು ಅಳಿಸಿಬಿಡುವ ಶಕ್ತಿಯನ್ನು ಹೊತ್ತಿವೆ. ಈ ಕಡಲ ಮಧ್ಯೆ ಹರಡಿಕೊಂಡಿರುವ ಹಸಿರು ತುಂಡುಗಳು ಕೇವಲ ದ್ವೀಪಗಳಲ್ಲ; ಅವು ಪ್ರಪಂಚದ ಉಸಿರಿನ ತುಣುಕುಗಳು. ಅವು ನಾಶವಾದರೆ ಅದು ಭಾರತಕ್ಕೆ ಮಾತ್ರ ನಷ್ಟವಲ್ಲ ಈ ಭೂಮಿಯನ್ನೇ ಉಸಿರಾಡಿಸುವ ಶಕ್ತಿಗೆ ಆಗುವ ಗಾಯ. ಪ್ರಕೃತಿಯೊಳಗೆ ನಾವು ಅತಿಥಿಗಳೆಂಬ ಸತ್ಯವನ್ನು ಮರೆಯುವ ಕ್ಷಣದಲ್ಲೇ, ಈ ಹಸಿರು ಮೌನ ನಮ್ಮಿಂದ ದೂರವಾಗುವ ಆರಂಭವಾಗುತ್ತದೆ.
ಮಧ್ಯಪ್ರಾಚ್ಯದಲ್ಲಿನ ಯುದ್ಧವನ್ನು ಶಾಶ್ವತವಾಗಿ ಅಂತ್ಯಗೊಳಿಸುವ ನಿಟ್ಟಿನಲ್ಲಿ ಇಸ್ಲಾಮಾಬಾದ್ನಲ್ಲಿ ಅಮೆರಿಕಾ-ಇರಾನ್ ನಡುವೆ ನಡೆದ ಮಾತುಕತೆಗಳು ವಿಫಲವಾಗಿದೆ. ಈ ಕುರಿತು ಅಮೆರಿಕಾ ಉಪಾಧ್ಯಕ್ಷ ಜೆ.ಡಿ ವ್ಯಾನ್ಸ್ ತಿಳಿಸಿದ್ದು, ಅಮೆರಿಕಾ ನೀಡಿದ ಷರತ್ತುಗಳನ್ನು ಟೆಹ್ರಾನ್ ತಿರಸ್ಕರಿಸಿದೆ ಎಂದಿದ್ದಾರೆ. ಇನ್ನು ಈ ಮಾತುಕತೆಗಳಲ್ಲಿ ಅಮೆರಿಕಾದ ಪ್ರಮುಖ ಗುರಿ ಇರಾನ್ ಪರಮಾಣು ಶಸ್ತ್ರಾಸ್ತ್ರಗಳನ್ನು ಹೊಂದಿರಬಾರದು ಎಂಬದಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಇನ್ನು, ಮಾತುಕತೆಗಳಿಗೆ ಕುರಿತು ಇರಾನ್ ಸಹ ಹೇಳಿಕೆ ನೀಡಿದ್ದು, ಅಮೆರಿಕಾದ ಅತಿಯಾದ ಬೇಡಿಕೆ ಹಾಗೂ ಕಾನೂನುಬಾಹಿರ ವಿನಂತಿಯಿಂದಾಗಿ ಒಪ್ಪಂದವಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
Gold Rate Today: ಆಭರಣಪ್ರಿಯರೇ ಗಮನಿಸಿ, ಇಂದು ಚಿನ್ನದ ಬೆಲೆ ಏರಿಕೆ- ಬೆಳ್ಳಿ ಸ್ಥಿರ, ಮಾರುಕಟ್ಟೆ ದರ ವಿವರ
Gold Silver Price Today: ದೇಶೀಯ ಚಿನ್ನದ ಬೆಲೆ ಏರಿಕೆ ಕಂಡರೆ, ಬೆಳ್ಳಿ ಇತ್ತೀಚಿನ ಗರಿಷ್ಠ ಮಟ್ಟ ತಲುಪಿದರೂ ಇದೀಗ ಸ್ಥಿರವಾಗಿದೆ. ದುರ್ಬಲ ಡಾಲರ್, ಕಡಿಮೆ ಕಚ್ಚಾ ತೈಲ ಬೆಲೆಗಳು ಹಾಗೂ ಇನ್ನಿತರ ಅಂಶಗಳಿಂದ ಲೋಹಗಳ ಬೆಲೆಯಲ್ಲಿ ಆಶಾವಾದ ಏರಿಕೆ ಆಗಿದೆ. ಜೊತೆಗೆ, ಪ್ರಾದೇಶಿಕ ಬೇಡಿಕೆ ಮತ್ತು ತಯಾರಿಕಾ ಶುಲ್ಕಗಳೂ ಸಹ ಪ್ರಮುಖ ಕೇಂದ್ರಗಳಲ್ಲಿ ಬೆಲೆಗಳ ಮೇಲೆ
ಯಡ್ರಾಮಿ | ಗೃಹಬಳಕೆ ಸಿಲಿಂಡರ್ಗಳ ಪೂರೈಕೆ ಸರಾಗ, ವಾಣಿಜ್ಯ ಬಳಕೆಗೆ ಸವಾಲು
ಯಡ್ರಾಮಿ: ಕೊಲ್ಲಿ ಯುದ್ಧದ ಬಿಸಿ ಅವಳಿ ತಾಲೂಕು ಗಳಿಗೂ ತಟ್ಟಲು ಶುರುವಾಗಿದ್ದು, ಜೇವರ್ಗಿ, ಯಡ್ರಾಮಿ ತಾಲೂಕುಗಳಲ್ಲಿ ಗೃಹಬಳಕೆ ಸಿಲಿಂಡರ್ಗಳ ಪೂರೈಕೆ ಸ್ವಲ್ಪ ಮಟ್ಟಿಗೆ ಸರಾಗವಾಗಿದೆ. ಆದರೆ ವಾಣಿಜ್ಯ ಬಳಕೆಯ ಸಿಲಿಂಡರ್ ಪೂರೈಸುವಲ್ಲಿ ತೊಂದರೆ ಉಂಟಾಗಿದೆ. ಯುದ್ಧ ಶುರುವಾದ ಕಾರಣ ಎಲ್ಪಿಜಿ ಸಿಲಿಂಡರ್ ದೊರೆಯುವುದಿಲ್ಲ ಎಂಬ ವದಂತಿ ಹಿನ್ನೆಲೆಯಲ್ಲಿ ಜನ ಮುಗಿಬೀಳುತ್ತಿರುವುದು ಕಂಡು ಬಂದಿದ್ದು ಬುಕಿಂಗ್ ಭರಾಟೆಯೂ ಜೋರಾಗಿ ನಡೆದಿದೆ. ಅವಳಿ ತಾಲೂಕಿನಲ್ಲಿರುವ ಸರಕಾರಿ ಸ್ವಾಮ್ಯ ಹಾಗೂ ಖಾಸಗಿ ಗ್ಯಾಸ್ ಏಜೆನ್ಸಿಗಳಿಂದ ಸಿಲಿಂಡರ್ಗಳು ಪೂರೈಕೆ ಯಾಗುತ್ತವೆ. ದೇಶದ ನಾನಾ ಭಾಗಗಳಲ್ಲಿರುವ ಗ್ಯಾಸ್ ರೀಫಿಲ್ಲಿಂಗ್ ಘಟಕಗಳಿಂದ ಇಲ್ಲಿಗೆ ಸಿಲಿಂಡರ್ ಬಂದು ತಲುಪುತ್ತಿದ್ದು, ಜನ ಗೃಹಬಳಕೆ ಸಿಲಿಂಡರ್ ಬುಕ್ ಮಾಡುತ್ತಿದ್ದಾರೆ. ಯಡ್ರಾಮಿ ಪಟ್ಟಣದ ಏಜೆನ್ಸಿಯೊಂದರಲ್ಲಿ ಪ್ರತಿ ದಿನ 80ರಷ್ಟು ಸಿಲಿಂಡರ್ ಬುಕ್ ಮಾಡಲಾಗುತ್ತಿತ್ತು. ಆದರೆ ಸದ್ಯ ಸುಮಾರು 200ರಷ್ಟು ಸಿಲಿಂಡರ್ ಬುಕ್ ಆಗುತ್ತಿವೆ. ಮುಂದಿನ ದಿನಗಳಲ್ಲಿ ಅಲಭ್ಯವಾದರೆ ಎಂಬ ಭೀತಿಯಲ್ಲಿ ಜನ ಸಿಲಿಂಡರ್ ಕಾಯ್ದಿಟ್ಟುಕೊಳ್ಳಲು ಹವಣಿಸುತ್ತಿದ್ದಾರೆ. ಕೆಲವರು ಸಿಲಿಂಡರ್ ಖಾಲಿ ಇಲ್ಲದಿದ್ದರೂ ಬುಕ್ ಮಾಡುತ್ತಿರುವ ಉದಾಹರಣೆಗಳಿವೆ. ಸರಕಾರಿ ಅಧಿಕಾರಿಗಳು ಹಾಗೂ ಗ್ಯಾಸ್ ಏಜೆನ್ಸಿ ಗಳ ಪ್ರಕಾರ ಗೃಹಬಳಕೆ ಸಿಲಿಂಡರ್ಗಳ ಕೊರತೆ ಕಂಡು ಬಂದಿಲ್ಲ. ಕಳೆದ 30 ದಿನಗಳಿಂದ ಸಿಲಿಂಡರ್ ಪೂರೈಕೆಯಾಗುತ್ತಿವೆ. ಗೃಹಬಳಕೆ ಸಿಲಿಂಡರ್ಗಳ ಜತೆಗೆ ವಾಣಿಜ್ಯ ಬಳಕೆಯ ಸಿಲಿಂಡರ್ ಬೇಡಿಕೆ ಕಳುಹಿಸಿಕೊಡಲಾಗುತ್ತದೆ. ಆದರೆ ಕೇಂದ್ರ ಸರಕಾರ ಗೃಹ ಬಳಕೆ ಸಿಲಿಂಡರ್ ಗಳ ನಿಯಮಿತ ಪೂರೈಕೆಗೆ ಆದೇಶಿಸಿದೆ. ಹೀಗಾಗಿ ಸಿಲಿಂಡರ್ ಪೂರೈಕೆ ಸರಾಗವಾಗಿದೆ. ಆದರೆ ಬೇಡಿಕೆ ಹೆಚ್ಚಾದ ಕಾರಣ ಪೂರೈಕೆ ಕಡಿಮೆಯಾಗಿ ಕೆಲವೆಡೆ ನಿಗದಿತ ದಿನಗಳಂದು ಗ್ರಾಹಕರಿಗೆ ತಲುಪುತ್ತಿಲ್ಲ. ಸಿಲಿಂಡರ್ ಬಗ್ಗೆ ಇನ್ನಿಲ್ಲದ ಗೊಂದಲಕ್ಕೆ ಒಳಗಾಗಿ ಏಜೆನ್ಸಿಗಳ ಮುಂದೆ ಜನರು ಮುಗಿಬೀಳುತ್ತಿದ್ದಾರೆ. ಸದ್ಯಕ್ಕೆ ಗೃಹ ಬಳಕೆ ಸಿಲಿಂಡರ್ ಪೂರೈಕೆಯಲ್ಲಿ ಅಂತಹ ಸಮಸ್ಯೆ ಇಲ್ಲ. ಆದರೆ ವಾಣಿಜ್ಯ ಸಿಲಿಂಡರ್ ಪೂರೈಕೆ ಅಷ್ಟೊಂದು ಸರಿ ಇಲ್ಲ. -ಸಾಹಿಲ್, ಗ್ಯಾಸ್ ಏಜೆನ್ಸಿ ಸಿಬ್ಬಂದಿ, ಯಡ್ರಾಮಿ ಗ್ಯಾಸ್ ಬಂದಿದ್ದರಿಂದ ಸೌದೆ ಒಲೆ ಮರೆತಿದ್ದೆವು. ಈಗ ಹೋಟೆಲ್ಗಳಂತೆ ನಾಳೆ ಮನೆಗೂ ಗ್ಯಾಸ್ ಪೂರೈಕೆ ನಿಲ್ಲುತ್ತದೆಯೇ ಎಂಬ ಭಯವಿದೆ. -ಸೋನಾಬಾಯಿ ಚವ್ಹಾಣ, ಗೃಹಿಣಿ ಗ್ರಾಹಕರನ್ನು ಉಳಿಸಿಕೊಳ್ಳಲು ಸೌದೆ ಒಲೆ ಹಚ್ಚುತ್ತಿದ್ದೇವೆ. ಆದರೆ ಅಡುಗೆ ಭಟ್ಟರು ಒಪ್ಪುತ್ತಿಲ್ಲ ಆದರೂ ಅನಿವಾರ್ಯವಾಗಿಒತ್ತಾಯ ಪೂರ್ವಕವಾಗಿ ಕೆಲಸ ಮಾಡಿಸುತ್ತಿದ್ದೇವೆ. -ಬಸವರಾಜ, ಹೋಟೆಲ್ ಮಾಲಕರು. ನಾಗರಹಳ್ಳಿ
ಬೀದಿ ನಾಯಿಗಳ ಹಾವಳಿ: ಬೈಕ್ ಸವಾರರಿಗೆ ಸಂಕಟ
ಕನಕಗಿರಿಯಲ್ಲಿ ನಿಲ್ಲದ ಶ್ವಾನಗಳ ಕಾಟ
ಬೀದಿಯಲ್ಲಿ ಹೊರಹೊಮ್ಮಿದ ‘ಸಮುದಾಯ’ದ ಧ್ವನಿ
1989ರಲ್ಲಿ ದುಷ್ಕರ್ಮಿಗಳಿಂದ ಹತ್ಯೆಗೀಡಾದ ಖ್ಯಾತ ರಂಗಕರ್ಮಿ ಸಫ್ದರ್ ಹಷ್ಮಿಯವರ ನೆನಪಿಗಾಗಿ ಅವರ ಹುಟ್ಟಿದ ದಿನವಾದ ಎಪ್ರಿಲ್ 12ರಂದು ‘ರಾಷ್ಟ್ರೀಯ ಬೀದಿ ನಾಟಕ ದಿನ’ವೆಂದು ಆಚರಿಸಲಾಗುತ್ತಿದೆ. ಕಳೆದ 50 ವರ್ಷಗಳಿಂದ ಬೀದಿನಾಟಕ ಕ್ಷೇತ್ರದಲ್ಲಿ ಬಹಳಷ್ಟು ಕೆಲಸ ಮಾಡುತ್ತಿರುವ ನಾಡಿನ ಹೆಸರಾಂತ ಸಾಂಸ್ಕೃತಿಕ ತಂಡ ‘ಸಮುದಾಯ’ಕ್ಕೆ 50ರ ಸಂಭ್ರಮಾಚರಣೆಯ ಸಂದರ್ಭದಲ್ಲಿ ಅದರ ಸಾಧನೆಯ ಬಗ್ಗೆ ಒಂದು ಕಿರುನೋಟ... 1975ರಲ್ಲಿ ಬೆಂಗಳೂರಿನಲ್ಲಿ ಒಂದು ಸಾಂಸ್ಕೃತಿಕ ಹಾಗೂ ರಂಗತಂಡವಾಗಿ ಪ್ರಾರಂಭವಾಗಿರುವ ‘ಸಮುದಾಯ’ವು, ಇವತ್ತು ‘ಸಮುದಾಯ ಕರ್ನಾಟಕ’ ಎಂಬ ಹೆಸರಲ್ಲಿ 50 ವರ್ಷಗಳನ್ನು ಪೂರೈಸಿ, ಹಲವಾರು ಘಟಕಗಳನ್ನೊಳಗೊಂಡ ಒಂದು ರಾಜ್ಯವ್ಯಾಪಿ ಸಾಂಸ್ಕೃತಿಕ ಸಂಘಟನೆಯಾಗಿ ಸುವರ್ಣ ಮಹೋತ್ಸವವನ್ನು ಆಚರಿಸುತ್ತಿದೆ. 1970ರ ದಶಕ. ಅದು ದೇಶದಲ್ಲಿ ಹೇಗೋ ಕರ್ನಾಟಕದಲ್ಲೂ ಒಂದು ಬಿಕ್ಕಟ್ಟಿನ ಕಾಲ. ರಾಜಕೀಯವಾಗಿ, ಸಾಮಾಜಿಕವಾಗಿ ಹಾಗೂ ಸಾಂಸ್ಕೃತಿಕವಾಗಿ ಈ ಬಿಕ್ಕಟ್ಟಿಗೆ ಪ್ರತಿಕ್ರಿಯೆಗಳು ಕರ್ನಾಟಕದಲ್ಲಿ ಪ್ರಬಲವಾಗಿಯೇ ಮೂಡಿಬಂದವು. ಇಂದಿರಾ ಗಾಂಧಿಯವರು ಪ್ರಧಾನಿಯಾಗಿ ದೇಶದ ಜನತೆಯ ಪ್ರಜಾಸತ್ತಾತ್ಮಕ ಪ್ರತಿಕ್ರಿಯೆಗಳನ್ನು ದಮನಕಾರಿಯಾಗಿ ನಿಭಾಯಿಸತೊಡಗಿದ್ದರು. ಕಾರ್ಮಿಕ ಚಳವಳಿಯನ್ನು ಬಗ್ಗು ಬಡಿಯಲಾಗುತ್ತಿತ್ತು. ಕರ್ನಾಟಕದಲ್ಲಿ ನಡೆದ ರೈತ ಚಳವಳಿಗಳು, ಭೂಸುಧಾರಣ ಕಾನೂನು ಜಾರಿಗೊಳಿಸುವ ಒತ್ತಾಯವನ್ನು ನಿರೂಪಿಸಿದವು. ಕೃಷಿಕೂಲಿಕಾರ ದಲಿತರ ಮೇಲಿನ ಶೋಷಣೆಗೆ ಪ್ರತಿಕ್ರಿಯೆಯಾಗಿ ದಲಿತ ಸಂಘರ್ಷ ಸಮಿತಿ ಕರ್ನಾಟಕದಲ್ಲಿ ರೂಪುಗೊಂಡಿತು. ಸಮಾಜವಾದಿ ಚಿಂತನೆಯ ಸಾಹಿತಿಗಳು 1974ರಲ್ಲಿ ಪ್ರಗತಿಪರ ಸಾಹಿತಿಗಳ ಒಕ್ಕೂಟದಿಂದ ಕನ್ನಡ ಸಾಹಿತ್ಯ ಸಮ್ಮೇಳನವೊಂದನ್ನು ನಡೆಸಿದರು ಕೂಡಾ. ಅದರ ಬೆನ್ನಿಗೇ 1975ರ ಜೂನ್ನಲ್ಲಿ ದೇಶದಲ್ಲಿ ಜಾರಿಗೊಂಡ ತುರ್ತುಪರಿಸ್ಥಿತಿ ದೇಶಾದ್ಯಂತ ಒಂದು ಕಳವಳವನ್ನು ಮೂಡಿಸಿತು. ಈ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ನೆಲೆಯೂರಿದ್ದ ಜನಪರ ಸಾಹಿತಿಗಳು ಮತ್ತು ರಂಗಾಸಕ್ತರು, ಸಾಂಸ್ಕೃತಿಕವಾಗಿ ಈ ಬಿಕ್ಕಟ್ಟನ್ನು ಎದುರಿಸಲು ಒಂದು ಸಾಂಸ್ಕೃತಿಕ ಸಂಘಟನೆಯನ್ನು ಕಟ್ಟುವ ನಿರ್ಧಾರ ಮಾಡಿದರು. ಆ ವೇಳೆಗಾಗಲೇ ರಂಗಭೂಮಿಯಲ್ಲಿ ಬಂಡಾಯ ಧೋರಣೆಯ ನಾಟಕಗಳನ್ನು ಪ್ರದರ್ಶಿಸಿದ್ದ ಯುವ ನಿರ್ದೇಶಕ ಪ್ರಸನ್ನ ಅವರು ಈ ನಿರ್ಧಾರದಲ್ಲಿ ಪ್ರಮುಖ ಪಾತ್ರ ವಹಿಸಿದರು. ‘ಸಮುದಾಯ’ ಹೆಸರಿನಲ್ಲಿ ರೂಪುಗೊಂಡ ತಂಡ ಬೆಂಗಳೂರಿನಲ್ಲಿ 1975 ಆಗಸ್ಟ್ 17ರಂದು ‘ಹುತ್ತವ ಬಡಿದರೆ’ ಎಂಬ ನಾಟಕ ಪ್ರದರ್ಶನ ನೀಡುವ ಮೂಲಕ ‘ಸಮುದಾಯ’ ಆರಂಭವಾಯಿತು. ಇದೀಗ ‘ಸಮುದಾಯ’ವು 50 ವರ್ಷಗಳನ್ನು ಪೂರೈಸಿದೆ. ಪ್ರಸನ್ನ ಅವರ ಜೊತೆ ‘ಸಮುದಾಯ’ದ ರೂಪುರೇಷೆ ಮೂಡಿಸುವಲ್ಲಿ ತೊಡಗಿದ್ದ ಸಾಹಿತಿಗಳೆಂದರೆ ಕೆ.ವಿ.ನಾರಾಯಣ, ಕಿ.ರಂ.ನಾಗರಾಜ್, ಡಿ.ಆರ್. ನಾಗರಾಜ್, ಸಿದ್ಧಲಿಂಗಯ್ಯ ಮೊದಲಾದವರು. ಇಂಥ ವಿಚಾರವುಳ್ಳ ಹತ್ತು ಹಲವು ತಂಡಗಳು ಒಂದೇ ಧ್ಯೇಯೋದ್ದೇಶ ಇಟ್ಟುಕೊಂಡು ಕಾರ್ಯಾಚರಿಸಬೇಕೆಂಬ ತೀರ್ಮಾನವಾಯಿತು. ಎಸ್. ಮಾಲತಿ, ಎಂ.ಜಿ. ವೆಂಕಟೇಶ್, ಸಿ.ಕೆ. ಗುಂಡಣ್ಣ, ಗಂಗಾಧರ ಸ್ವಾಮಿ, ಸಿ.ಜಿ. ಕೃಷ್ಣಸ್ವಾಮಿ ಮತ್ತಿತರರು ಈ ಸಾಂಸ್ಕೃತಿಕ ಸಂಘಟನೆಯನ್ನು ರಾಜ್ಯಾದ್ಯಂತ ವಿಸ್ತರಿಸುವಲ್ಲಿ ಕೆಲಸ ಮಾಡಿದರು. ಬೆಂಗಳೂರಿನ ಬಳಿಕ ಮೈಸೂರಿನಲ್ಲಿ ಆ ಬಳಿಕ ಮಂಗಳೂರಿನಲ್ಲಿ, ತುಮಕೂರಿನಲ್ಲಿ, ಉಡುಪಿಯಲ್ಲಿ, ಕೆ.ಜಿ.ಎಫ್ನಲ್ಲಿ ಸಮಾನ ಮನಸ್ಕ ಸಾಂಸ್ಕೃತಿಕ ಸಂಗಾತಿಗಳ ಪಾಲ್ಗೊಳ್ಳುವಿಕೆಯಲ್ಲಿ ಸಮುದಾಯದ ಘಟಕಗಳು ಪ್ರಾರಂಭವಾಗಿ ಮುಂದೆ ರಾಜ್ಯದ ದೂರದೂರದ ನಗರ ಪಟ್ಟಣಗಳಲ್ಲೂ ಸಮುದಾಯ ಘಟಕಗಳು ಕಾರ್ಯಾಚರಿಸತೊಡಗಿದವು. ಪ್ರಧಾನವಾಗಿ ಈ ಘಟಕಗಳು ರಂಗತಂಡಗಳೇ ಆಗಿದ್ದವು. ಸಮುದಾಯದ ಇತಿಹಾಸದಲ್ಲಿ ರಂಗಭೂಮಿಯೇ ಪ್ರಧಾನವಾದುದು ನಿಜ. ಆದರೆ ಜನ ಶಿಕ್ಷಣವನ್ನು ನೀಡುವ ಬೀದಿ ನಾಟಕಗಳನ್ನು ಮತ್ತು ನಾಟಕ ಜಾಥಾಗಳನ್ನು ಒಂದು ಪ್ರಧಾನ ಸಾಂಸ್ಕೃತಿಕ ಸಾಧನವಾಗಿ ಬಳಸಿದ್ದು ಸಮುದಾಯದ ವೈಶಿಷ್ಟ್ಯ. ಜೊತೆಗೆ ಕವಿ ಸಿದ್ಧಲಿಂಗಯ್ಯನವರ ಕವಿತೆಗಳೂ ಜನಪ್ರಿಯ ಹಾಡುಗಳಾದುವು. ಇವತ್ತಿಗೂ ಆ ಹಾಡುಗಳು ಹಾಡಲ್ಪಡುತ್ತಿದ್ದು, ಕ್ರಾಂತಿಗೀತೆಗಳು ಎನಿಸಿಕೊಂಡಿವೆ. ಪ್ರಸನ್ನ ಅವರು 1977 ಜೂನ್ನಲ್ಲಿ ಒಂದು ರಾಜ್ಯ ಮಟ್ಟದ ಬೀದಿ ನಾಟಕ ಹಾಗೂ ರಂಗಭೂಮಿ ತರಬೇತಿ ಶಿಬಿರವನ್ನು ಬೆಂಗಳೂರಿನ ಸಮೀಪ ಕುಂಬಳಗೋಡಿನಲ್ಲಿ ನಿರ್ದೇಶಿಸಿದಾಗ, ರಾಜ್ಯದ ವಿವಿಧೆಡೆಗಳಿಂದ ಯುವ ನಾಟಕಾಸಕ್ತರು ಭಾಗವಹಿಸಿದ್ದರು. ಇದರಿಂದ ಜನಜಾಗೃತಿಗೆ ಬೀದಿ ನಾಟಕ ಸಮರ್ಥ ಮಾಧ್ಯಮ ಎಂಬುದು ಸಮುದಾಯದ ಅರಿವಿಗೆ ಬಂತು. ಅಲ್ಲದೆ ಮುಂದೆ ಖ್ಯಾತ ರಂಗನಿರ್ದೇಶಕ ಬಾದಲ್ ಸರ್ಕಾರ್ ಅವರೂ 1979ರಲ್ಲಿ ಅಂಥದ್ದೇ ಒಂದು ಕಾರ್ಯಾಗಾರವನ್ನು ಸಮುದಾಯಕ್ಕಾಗಿ ನಡೆಸಿಕೊಟ್ಟರು. ಬೀದಿ ನಾಟಕದ ಪ್ರಯೋಗಗಳು ದೇಶದ ಬೇರೆ ಬೇರೆ ಭಾಷಾ ಪ್ರದೇಶಗಳಲ್ಲಿ ಆಯಾ ಭಾಷೆಗಳಲ್ಲಿ ನಡೆದಿದ್ದವಾದರೂ, ಬೀದಿ ನಾಟಕಗಳನ್ನು ಒಂದು ಜಾಥಾವಾಗಿ ಕೊಂಡುಹೋದುದು ಪ್ರಥಮವಾಗಿ ಕರ್ನಾಟಕದಲ್ಲೇ. 1979ರಲ್ಲಿ ‘‘ಹೊಸ ಮೌಲ್ಯದೆಡೆಗೆ’’ ಹೆಸರಲ್ಲಿ ಹೊರಟ 2 ಜಾಥಾಗಳು ಒಂದು ತಿಂಗಳ ಬಳಿಕ ಧಾರವಾಡದಲ್ಲಿ ಸಮಾಪನಗೊಂಡವು. ಇಂಥದೊಂದು ರಾಜ್ಯವ್ಯಾಪಿ ಜಾಥಾ ರಾಜ್ಯದ ಪ್ರಜ್ಞಾವಂತ ಜನಸಮೂಹದಲ್ಲೂ ಪುಳಕವನ್ನು ಉಂಟು ಮಾಡಿತು. ಈ ಜಾಥಾದಲ್ಲಿ ಪ್ರದರ್ಶಿತವಾದ ‘ಬೆಲ್ಚಿ’ ನಾಟಕವು ಭಾರೀ ಜನಪ್ರಶಂಸೆ ಗಳಿಸಿತು. ಜಾಥಾ ಬಳಿಕದ ವರ್ಷಗಳಲ್ಲಿ ಸಮುದಾಯದ ಹಲವು ಘಟಕಗಳು ‘ಬೆಲ್ಚಿ’ ನಾಟಕವನ್ನು ಪ್ರದರ್ಶಿಸಿದ್ದು, ಈ ಪ್ರದರ್ಶನಗಳ ಸಂಖ್ಯೆ ಸಾವಿರವನ್ನು ಮೀರಿವೆ. ಮುಂದಿನ ವರ್ಷದಲ್ಲಿ (1980ರಲ್ಲಿ) ರಾಜ್ಯದಲ್ಲಿ ರೈತರ ಸಂಕಷ್ಟಗಳು ಹೆಚ್ಚಾಗಿ, ರೈತ ಸಂಘಟನೆಗಳಿಂದ ಸರಕಾರದ ವಿರುದ್ಧವಾಗಿ ತೀವ್ರತರ ಹೋರಾಟಗಳು ನಡೆದವು. ಈ ವೇಳೆಗೆ ರಾಜ್ಯದಲ್ಲಿ 22 ಸಮುದಾಯ ಘಟಕಗಳಿದ್ದುವು. ರೈತ ಹೋರಾಟದ ಆಶಯವನ್ನು ಪ್ರತಿಬಿಂಬಿಸುವ ಬೀದಿ ನಾಟಕ ಜಾಥಾಗಳನ್ನು ಸಮುದಾಯದ ಘಟಕಗಳಿರುವ ಜಿಲ್ಲೆಗಳಲ್ಲಿ 1981ರಲ್ಲಿ ‘ರೈತನೆಡೆಗೆ ಜಾಥಾ’ ಹೆಸರಲ್ಲಿ ತಿಂಗಳ ಕಾಲ ರಾಜ್ಯಾದ್ಯಂತ ನಡೆಸಲಾಯಿತು. ‘ವಿಶ್ವಶಾಂತಿಗಾಗಿ ಬಣ್ಣದ ನಡೆ’’ ಹೆಸರಿನಲ್ಲಿ 1984ರಲ್ಲಿ ರಾಜ್ಯದ ಪ್ರಸಿದ್ಧ ಚಿತ್ರಕಲಾವಿದರಾದ ಎಸ್.ಬಿ.ಸೊಲಬಕ್ಕನವರ್ ಮತ್ತು ಕರಿರಾಜು ಅವರು ರಚಿಸಿದ 120 ಅಡಿ ಉದ್ದವಾದ ಪೈಂಟಿಂಗ್ ಭಿತ್ತಿಯನ್ನು ರಾಜ್ಯದ ಪ್ರಮುಖ ನಗರಗಳಿಗೆ ಕೊಂಡು ಹೋಗಿ ತಿಂಗಳ ಕಾಲ ಪ್ರದರ್ಶಿಸಲಾಯಿತು. ಮುಂದಿನ ಎರಡು ವರ್ಷಗಳಲ್ಲಿ ಕರ್ನಾಟಕದಲ್ಲಿ ಮಳೆ ಕೊರತೆ ಮೊದಲಾದ ಕಾರಣಗಳಿಂದ ರಾಜ್ಯದಲ್ಲಿ ಬರಗಾಲ ಬಂದಿತ್ತು. ರಾಜ್ಯದಲ್ಲಿ ಸಮುದಾಯಕ್ಕೆ 10 ವರ್ಷಗಳೂ ಸಂದಿದ್ದವು. ಈ ಹಿನ್ನೆಲೆಯಲ್ಲಿ ‘ಭೀಕರ ಬರದೆದುರು ಸಮುದಾಯದ ದಶಕದ ಜಾಥಾ’ವನ್ನು ಜಿಲ್ಲೆ ಜಿಲ್ಲೆಗಳಲ್ಲಿ ಆಯೋಜಿಸಲಾಯಿತು; ಬರಗಾಲ ಮಾನವ ನಿರ್ಮಿತವೇ ಹೊರತು ಕೇವಲ ಪ್ರಕೃತಿದತ್ತವಾದುದಲ್ಲ ಎಂದು ಜಾಥಾ ನಾಟಕಗಳಲ್ಲಿ ನಿರೂಪಿಸಲಾಯಿತು. ಈ ಏಳೆಂಟು ವರ್ಷಗಳಲ್ಲಿ ಉಡುಪಿ, ಬೆಂಗಳೂರು ಘಟಕಗಳು ಚಿತ್ರ ಸಮುದಾಯವನ್ನು, ಕೆಲವು ಘಟಕಗಳು ಗ್ರಂಥ ಸಮುದಾಯವನ್ನು ತಮ್ಮ ಪ್ರಮುಖ ಚಟುವಟಿಕೆಗಳಾಗಿ ಮಾಡಿಕೊಂಡಿದ್ದವು. 1989ರಲ್ಲಿ ಖ್ಯಾತ ರಂಗಕರ್ಮಿ ಸಫ್ದರ್ ಹಷ್ಮಿ ಹತ್ಯೆಗೀಡಾದಾಗ ಎಪ್ರಿಲ್ 10, 11ರಂದು ರಾಜ್ಯದ ಎಲ್ಲ ಸಮುದಾಯ ರಂಗತಂಡಗಳೂ ಒಟ್ಟು ಸೇರಿ, ಬೆಂಗಳೂರಿನಲ್ಲಿ ಬೀದಿ ನಾಟಕಗಳ ಉತ್ಸವವನ್ನು ಏರ್ಪಡಿಸಿತು. ಸಮುದಾಯಕ್ಕೆ 20 ವರ್ಷ ತುಂಬಿದಾಗ 1995ರಲ್ಲಿ ಮತ್ತು ಸಮುದಾಯಕ್ಕೆ 25 ವರ್ಷ ನಡೆಯುತ್ತಿದ್ದಾಗ 2000ದಲ್ಲಿ ಮೂರು ಮೂರು ದಿನಗಳ ನಾಟಕ ಹಾಗೂ ಸಾಹಿತ್ಯಕ ಉತ್ಸವವನ್ನು ಎಲ್ಲ ಘಟಕಗಳ ಸೇರುವಿಕೆಯಿಂದ ಬೆಂಗಳೂರಿನಲ್ಲಿ ನಡೆಸಲಾಯಿತು. ಸಮುದಾಯವು ಸಂಘಟನಾತ್ಮಕವಾಗಿ ದುರ್ಬಲಗೊಂಡ ಸನ್ನಿವೇಶ ಬಹುಶಃ 1990ರ ಸಂಪೂರ್ಣ ಸಾಕ್ಷರತಾ ಆಂದೋಲನದ ಭಾಗವಾಗಿ, ಭಾರತ ಜ್ಞಾನವಿಜ್ಞಾನ ಜಾಥಾವನ್ನು ರಾಜ್ಯಾದ್ಯಂತ ಹಮ್ಮಿಕೊಂಡ ವೇಳೆ ಉಂಟಾಯಿತು. ಸರಕಾರಗಳಿಂದ ಬೆಂಬಲಿತವಾದ ಈ ಬೀದಿ ನಾಟಕ ಜಾಥಾ ಕಾರ್ಯಕ್ರಮ, ರಾಜ್ಯದ ಎಲ್ಲ ಜಿಲ್ಲೆಗಳಲ್ಲಿಯೂ ಒಂದೂವರೆ ತಿಂಗಳ ಕಾಲ ನಡೆಯಿತು. ಸಮುದಾಯ ಘಟಕಗಳು ಅಸ್ತಿತ್ವದಲ್ಲಿದ್ದ ಜಿಲ್ಲೆಗಳಲ್ಲಿ, ಸಮುದಾಯದ ಕಲಾವಿದರು ತೊಡಗಿದ್ದುದರಿಂದ ಆ ಜಾಥಾಗಳು ಅತ್ಯಂತ ಯಶಸ್ವಿಯಾದುವು. ಇದರ ಪರಿಣಾಮವೇನೆಂದರೆ ಸಮುದಾಯ ಘಟಕಗಳ ಅನೇಕ ಕಲಾವಿದರು ಮುಂದೆ ಸಮುದಾಯದ ಹೊರತಾದ ಸಾಂಸ್ಕೃತಿಕ ಹಾಗೂ ರಂಗಭೂಮಿ ತಂಡಗಳಲ್ಲಿ ತೊಡಗಿಕೊಂಡುದು ಇಲ್ಲವೇ ತಮ್ಮದೇ ಆದ ಸ್ಥಳೀಯ ರಂಗತಂಡಗಳನ್ನು ರಚಿಸಿಕೊಂಡುದು. ಈ ವೇಳೆಗೆ ಸಮುದಾಯವನ್ನು ಸಕ್ರಿಯವಾಗಿ ಇರಿಸುವಲ್ಲಿ ದಿ. ಸಿ.ಆರ್.ಭಟ್ (ಧಾರವಾಡ), ಆರ್ಕೆ. ಹುಡಗಿ (ಗುಲ್ಬರ್ಗಾ), ಜಿ.ವಿ.ಕಾರಂತ (ಕುಂದಾಪುರ), ಅಚ್ಯುತ (ಕೆ.ಜಿ.ಎಫ್) ಪ್ರಧಾನವಾಗಿ ದುಡಿದಿರುತ್ತಾರೆ. ಈ ಅವಧಿಯಲ್ಲಿ ಸಮುದಾಯದಿಂದಲೇ ಮೂಡಿಬಂದವರಾದರೂ, ಪ್ರಸನ್ನ, ಸಿ.ಜಿ. ಕೃಷ್ಣ ಸ್ವಾಮಿ, ಸಿ. ಬಸವಲಿಂಗಯ್ಯ, ಎಚ್. ಜನಾರ್ದನ್ (ಹಾಡುಗಾರರಾಗಿಯೂ), ಮೋಹನಚಂದ್ರ, ಐ.ಕೆ. ಬೊಳುವಾರ್, ಶಶಿಧರ ಬಾರಿಘಾಟ್ ಮೊದಲಾದವರು ಸಮುದಾಯದ ಹೊರಗೂ ಪ್ರತಿಭಾವಂತ ನಿರ್ದೇಶಕರಾಗಿ ಪ್ರಸಿದ್ಧಿ ಪಡೆದಿದ್ದಾರೆ. ಅಂತೆಯೇ ಶಶಿಧರ ಅಡಪ (ರಂಗ ವಿನ್ಯಾಸ), ಮುದ್ದಣ್ಣ (ಬೆಳಕಿನ ವಿನ್ಯಾಸ) ಮೊದಲಾದವರು ರಂಗಭೂಮಿ ಸಂಬಂಧಿತ ಪರಿಕರ ವಿನ್ಯಾಸದಲ್ಲಿ ದೊಡ್ಡ ಹೆಸರಾಗಿದ್ದಾರೆ. ಇಸವಿ 2000ದಿಂದ 2005ರ ವರೆಗೆ ಕ್ಷೀಣಗೊಂಡಿದ್ದ ಸಮುದಾಯದ ರಾಜ್ಯ ಸಮಿತಿ 2006ರಲ್ಲಿ ಮೈಕೊಡವಿಕೊಂಡು ಧಾರವಾಡದಲ್ಲಿ ಸಮಾವೇಶ ಗೊಂಡಿತು. ಆರ್.ಕೆ.ಹುಡಗಿ, ಟಿ.ಸುರೇಂದ್ರರಾವ್, ಬಿ.ಪಿ.ಈಳಗೇರ, ಅಚ್ಯುತ, ಕೆ.ಎಸ್.ವಿಮಲಾ, ವಾಸುದೇವ ಉಚ್ಚಿಲ, ದೇವೇಂದ್ರ ಗೌಡ, ವಸಂತರಾಜ್ ಮೊದಲಾದವರು ಈ ಪುನಶ್ಚೇತನಕ್ಕೆ ಹೆಗಲುಕೊಟ್ಟರು. ಅಲ್ಲಿಂದೀಚೆಗೆ ಸಮುದಾಯ ರಾಜ್ಯಸಮಿತಿ, ನಿಷ್ಕ್ರಿಯವಾಗಿದ್ದ ಘಟಕಗಳನ್ನು ಚುರುಕುಗೊಳಿಸುತ್ತಾ, ಇಲ್ಲವೇ ಹೊಸ ರೀತಿಯ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಮುನ್ನಡೆ ಸಾಧಿಸುತ್ತಿದೆ. ಬೀದಿನಾಟಕ ಜಾಥಾಗೆ ಹೋಲಿಕೆಯುಳ್ಳ ‘ಕಾವ್ಯರಂಗ ಜಾಥಾ’ವನ್ನು ‘ರಂಗ ಸಂಚಾರ’ವಾಗಿ 2015-16ರಲ್ಲಿ ರಾಜ್ಯ ಸಮಿತಿ ರೂಪಿಸಿತು. ಕನ್ನಡದ ಪ್ರಖ್ಯಾತ ಕಾವ್ಯ ಭಾಗಗಳನ್ನು ಗುಂಪಿನಲ್ಲಿ ಹಾಡಿ ಅಭಿನಯಿಸುವ ರಂಗ ಪ್ರಯೋಗವನ್ನು ರೂಪಿಸಿದವರು ಹೊಸ ತಲೆಮಾರಿನ ನಿರ್ದೇಶಕ ಡಾ|ಶ್ರೀಪಾದ ಭಟ್ ಅವರು. ಕಾವ್ಯರಂಗದ ಕಲಾತಂಡ ಮತ್ತೆರಡು ನಾಟಕಗಳನ್ನೂ ಸಿದ್ಧಪಡಿಸಿಕೊಂಡು, ರಾಜ್ಯದೆಲ್ಲೆಡೆ ಸಂಚಾರ ಮಾಡಿ ರಂಗಭೂಮಿಯಲ್ಲಿ ಒಂದು ವಿಭಿನ್ನ ವಿನ್ಯಾಸವನ್ನು ರೂಪಿಸಿತು. ಮುಂದಿನ ವರ್ಷ 2017ರಲ್ಲಿ ಹೊಸ ಕವಿತೆಗಳನ್ನು ಬಳಸಿದ ರೂಪಕಗಳನ್ನು ನಿರ್ಮಿಸಿ ಶ್ರೀಪಾದ ಭಟ್ಟರು ರೂಪಿಸಿದ ಎರಡನೇ ಕಾವ್ಯರಂಗ ತಂಡ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಸಂಚಾರ ಮಾಡಿತು. ಕೋಮುವಾದ ರಾಜಕೀಯವಾಗಿ ಬಲಗೊಳ್ಳುತ್ತಿರುವುದು ದೇಶದ ಹೇಗೋ ಕರ್ನಾಟಕದ ಬಹುತ್ವ ಹಾಗೂ ಸೌಹಾರ್ದಕ್ಕೆ ಸವಾಲಾಗಿದೆ. ಸಮುದಾಯ ಸಂಘಟನೆ ಇವತ್ತು ಎದುರಿಸಬೇಕಾದ ಪ್ರಥಮ ಸವಾಲು ಇದೇ ಆಗಿದೆ. ಸಮುದಾಯ ಘಟಕಗಳು ಸಪ್ಧರ್ ಹಷ್ಮಿಯವರ ‘ಅಲಿಘರ್’ ನಾಟಕವನ್ನು ಆಡುವ ಕಾಲದಿಂದಲೂ ಈ ಸವಾಲನ್ನು ಸಾಂಸ್ಕೃತಿಕವಾಗಿ ಎದುರಿಸುವ ಕೆಲಸವನ್ನು ವಿವಿಧ ರೀತಿಯಲ್ಲಿ ಮಾಡುತ್ತಲೇ ಬಂದಿದೆ. 2018 ಜನವರಿ 30 ರಂದು ಬೆಂಗಳೂರಿನಲ್ಲಿ ಹಮ್ಮಿಕೊಳ್ಳಲಾಗಿದ್ದ ‘ಸೌಹಾರ್ದ ಮಾನವ ಸರಪಣಿ’ಯಲ್ಲಿ ಸಮುದಾಯ ಸಕ್ರಿಯ ಪಾತ್ರ ವಹಿಸಿತು. ಅದೇ ವರ್ಷ ಕರ್ನಾಟಕದ ಸೌಹಾರ್ದ ತಾಲೂಕುಗಳೆಂದು ಪ್ರಖ್ಯಾತವಾಗಿರುವ ಉಡುತಡಿ, ಮಸ್ಕಿ ಮತ್ತು ಚಿಂತಾಮಣಿಗಳಲ್ಲಿ ರಾಜ್ಯ ಸಮಿತಿ ಸ್ಥಳೀಯ ಘಟಕಗಳ ಸಹಕಾರದಿಂದ ‘ಸೌಹಾರ್ದ ಕರ್ನಾಟಕ ಪರಂಪರೆ ಸಮಾವೇಶ’ಗಳನ್ನು ಹಮ್ಮಿಕೊಂಡಿತು. ಸಮುದಾಯ ಅಸ್ತಿತ್ವಕ್ಕೆ ಬಂದು 50 ವರ್ಷಗಳನ್ನು ಪೂರ್ಣಗೊಳಿಸುತ್ತಿರುವುದು ನಿಜವಾದರೂ, ಈ ಚಳವಳಿಗೆ ಆದ್ಯರು 1936ರಲ್ಲೇ ರೂಪುಗೊಂಡ ಪ್ರೊಗ್ರಸ್ಸಿವ್ ರೈಟರ್ಸ್ ಅಸೋಸಿಯೇಶನ್ ಮತ್ತು 1941ರಲ್ಲಿ ಮೂಡಿಬಂದ ‘ಇಪ್ಟಾ’ (ಇಂಡಿಯನ್ ಪೀಪಲ್ಸ್ ಥಿಯೇಟರ್ಸ್ ಅಸೋಸಿಯೇಶನ್). 1973ರಲ್ಲಿ ಆರಂಭಗೊಂಡ ಸಫ್ದರ್ ಹಷ್ಮಿಯವರ ನೇತೃತ್ವದ ದಿಲ್ಲಿಯ ‘ಜನಮ್’ (ಜನ ನಾಟ್ಯ ಮಂಚ್)ಗೆ ಸಮಾನಾಂತರವಾಗಿ ‘ಸಮುದಾಯ’ ಕೂಡಾ ಬೆಳೆದು ಬಂದಿದೆ. ಜನಮ್ ಒಂದೇ ತಂಡವಾಗಿದ್ದರೆ, ಸಮುದಾಯ ಕರ್ನಾಟಕ ಹಲವು ತಂಡಗಳ ಒಕ್ಕೂಟ. ಒಂದೊಂದು ತಂಡಗಳ ಏರಿಳಿತಗಳು ಅಷ್ಟಿಷ್ಟು ಒಕ್ಕೂಟಕ್ಕೆ ಬಾಧೆ ಮಾಡಿದ್ದರೂ, 50 ವರ್ಷಗಳಲ್ಲಿ ಸಮುದಾಯ ತನ್ನ ಕರ್ತವ್ಯವನ್ನು ನಿರ್ವಹಿಸಿಕೊಂಡು ಸಾಗಿದೆ.
US-Iran Talks: ಪಾಕ್ ನೆಲದಲ್ಲಿ 21 ಗಂಟೆಗಳ ಸಂಧಾನ ಮಾತುಕತೆ ವಿಫಲ: ಹೆಚ್ಚಿದ ಯುದ್ಧ ಭೀತಿ- ಪ್ರಮುಖಾಂಶಗಳು
ಕೊಲ್ಲಿ ರಾಷ್ಟ್ರಗಳ ಯುದ್ಧಕ್ಕೆ ಎರಡು ವಾರಗಳ ತಾತ್ಕಾಲಿಕ ಕದನ ವಿರಾಮ ಘೋಷಿಸಲಾಗಿತ್ತು. ಈ ಸಂಬಂಧ ಪಾಕಿಸ್ತಾನದ ಮಧ್ಯಸ್ಥಿಕೆಯಲ್ಲಿ ನಡೆದ ಇಸ್ರೇಲ್ ಮತ್ತು ಅಮೆರಿಕ-ಇರಾನ್ ಕದನ ವಿರಾಮ ಮಾತುಕತೆಗಳು ವಿಫಲವಾಗಿವೆ. ಉಭಯ ದೇಶಗಳು ಒಮ್ಮತ ನಿರ್ಧಾರಕ್ಕೆ ಬಂದಿಲ್ಲ, ಹೀಗಾಗಿ ಸಂಧಾನ ಮಾತುಕತೆ ಯಶಸ್ವಿಯಾಗಲಿಲ್ಲ ಎಂದು ಅಮೆರಿಕದ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ತಿಳಿಸಿದ್ದಾರೆ. ಹಣಕಾಸು ಮತ್ತು ಭದ್ರತೆಗೆ ಅಮೆರಿಕವನ್ನು ಅವಲಂಬಿಸಿ,
ಯಡ್ರಾಮಿ ಬಸ್ ನಿಲ್ದಾಣ ಕ್ಯಾಂಟೀನ್ ನಿರುಪಯುಕ್ತ
ಯಡ್ರಾಮಿ: ಪಟ್ಟಣದ ಬಸ್ ನಿಲ್ದಾಣದಲ್ಲಿರುವ ಕ್ಯಾಂಟೀನ್ ಬಾಡಿಗೆ ದರವು ಹೆಚ್ಚಿರುವುದರಿಂದ ಹೋಟೆಲ್ ನಡೆಸಲು ಯಾರು ಮುಂದೆ ಬರದ ಪರಿಣಾಮ ಅದು ಪ್ರಯಾಣಿಕರ ಉಪಯೋಗಕ್ಕೆ ಇಲ್ಲದಂತಾಗಿದೆ. ಪಟ್ಟಣದಿಂದ ರಾಜ್ಯದ ಪ್ರಮುಖ ನಗರಗಳಿಗೆ ಸಂಪರ್ಕ ಕಲ್ಪಿಸುವ ಇಲ್ಲಿನ ಬಸ್ ನಿಲ್ದಾಣದಲ್ಲಿ ನಿರ್ಮಾಣಗೊಂಡಿರುವ ಕ್ಯಾಂಟೀನ್, ಸುಮಾರು ಮೂರು ವರ್ಷದಿಂದ ಮುಚ್ಚಲಾಗಿದೆ. ಇದನ್ನು ತೆರೆಯಲು ಸಾರಿಗೆ ಇಲಾಖೆ ಅಧಿಕಾರಿಗಳೂ ಮುಂದಾಗದ ಕಾರಣ ಸಿಬ್ಬಂದಿ ಆಹಾರಕ್ಕಾಗಿ ಪರದಾಟ ನಡೆಸಬೇಕಿದೆ. ಪ್ರಯಾಣಿಕರು ಮತ್ತು ಸಾರಿಗೆ ಸಿಬ್ಬಂದಿ ಉಪಾಹಾರ ಮತ್ತು ಊಟಕ್ಕಾಗಿ ಬಸ್ನಿಲ್ದಾಣದ ಹೊರಗಿನ ಹೋಟೆಲ್ಗಳನ್ನು ಹುಡುಕಿ ಹೋಗುವಂತಾಗಿದೆ. ಶಕ್ತಿ ಯೋಜನೆ ಜಾರಿಗೆ ಬಂದಾಗಿನಿಂದ ಬಸ್ ನಿಲ್ದಾಣದಲ್ಲಿ ಜನ ದಟ್ಟಣೆ ಹೆಚ್ಚಾಗಿದೆ. ನಿಲ್ದಾಣದಲ್ಲಿ ಮೂಲ ಸೌಕರ್ಯಗಳನ್ನು ಒದಗಿಸುವಂತೆ ಸಾರ್ವಜನಿಕರಿಂದ ಬೇಡಿಕೆ ಹೆಚ್ಚಾಗಿದೆ. ಬಂದ್ ಆಗಲು ಕಾರಣ : ಎನ್ಈಕೆಎಸ್ಆರ್ಟಿಸಿ ಕ್ಯಾಂಟೀನ್ ಬಂದ್ ಆಗಿರುವುದಕ್ಕೆ ದುಬಾರಿ ಬಾಡಿಗೆಯೇ ಕಾರಣ ಎಂಬ ಮಾತು ಕೇಳಿಬಂದಿದೆ. ಈ ಮುಂಚಿನ ಬಾಡಿಗೆದಾರರಿಗೆ ಮಾಸಿಕ ಸುಮಾರು 4 ಸಾವಿರ ರೂ.ಬಾಡಿಗೆಗೆ ಕ್ಯಾಂಟೀನ್ ನಿರ್ವಹಣೆಗೆ ನೀಡಲಾಗಿತ್ತು. ವಿದ್ಯುತ್ ಬಿಲ್ ಇತರ ಖರ್ಚು ಸೇರಿ ಮಾಸಿಕ 15 ಸಾವಿರ ರೂ.ವರೆಗೆ ಖರ್ಚು ತಗಲುತ್ತಿತ್ತು. ಹಿಂದಿನ ಬಾಡಿಗೆದಾರರು ಬೇಸತ್ತು ಬಾಡಿಗೆ ಕಟ್ಟಲಾಗದೆ ಬೇರೆ ಕಡೆ ಹೋಗಿದ್ದಾರೆ. ಈಗಾಗಲೇ ಸುಮಾರು ಬಾರಿ ಟೆಂಡರ್ ಕರೆದರೂ ದುಬಾರಿ ಬಾಡಿಗೆ ಹಿನ್ನೆಲೆಯಲ್ಲಿ ಯಾರೊಬ್ಬರೂ ಟೆಂಡರ್ ಹಾಕುತ್ತಿಲ್ಲ. ಕುಡಿಯುವ ನೀರೂ ಮರೀಚಿಕೆ : ಕ್ಯಾಂಟೀನ್ ಬಂದಾಗಿರುವುದು ಒಂದು ಸಮಸ್ಯೆಯಾದರೆ ಕುಡಿಯುವ ನೀರು ನಿಲ್ದಾಣದಲ್ಲಿ ಇಲ್ಲದಂತಾಗಿರುವುದು ಇನ್ನೊಂದು ಮುಖ್ಯ ಸಮಸ್ಯೆಯಾಗಿದೆ. ಇದು ಕ್ಯಾಂಟೀನ್ ನಡೆಸಲೂ ಒಂದು ಸವಾಲಾಗಿದೆ ಎನ್ನಲಾದೆ. ಈ ಬಗ್ಗೆ ಎಷ್ಟೋ ಬಾರಿ ಜನಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ ತಿಳಿಸಿದರೂ ಏನು ಪ್ರಯೋಜನವಾಗಿಲ್ಲ ಎಂದು ಪ್ರಯಾಣಿಕರು ಅಳಲು ತೋಡಿಕೊಂಡಿದ್ದಾರೆ. ಬಸ್ ತಪ್ಪುವ ಭಯ : ಕ್ಯಾಂಟೀನ್ ಬಂದ್ ಆಗಿದ್ದರಿಂದ ನಿಲ್ದಾಣದಲ್ಲಿರುವ ಬೇಕರಿಗಳಲ್ಲಿ ಸಿಗುವ ತಿಂಡಿ ತಿನಿಸನ್ನೆ ತಿಂದು ಹೊಟ್ಟೆ ತುಂಬಿಸಬೇಕಿದೆ. ಮತ್ತೊಂದೆಡೆ ಬಸ್ ನಿಲ್ದಾಣ ಸಮೀಪದಲ್ಲಿರುವ ಹೋಟೆಲ್ಗಳಿಗೆ ಹೋದರೆ ಬಸ್ ತಪ್ಪುತ್ತದೆ. ಹಳ್ಳಿಗಳಿಗೆ ಒಂದು ಅಥವಾ ಎರಡು ಬಸ್ ಇರುವುದರಿಂದ ಅವುಗಳು ತಪ್ಪುತ್ತವೆ. ವಿದ್ಯಾರ್ಥಿಗಳು, ಚಿಕ್ಕ ಮಕ್ಕಳು, ವೃದ್ದರು ನಿಲ್ದಾಣದಿಂದ ಹೊರಬಂದು ಹೋಟೆಲ್ ಹುಡುಕುವಷ್ಟರಲ್ಲಿ ಪ್ರಯಾಣಿಕರು ಬಸ್ ತಪ್ಪಿಸಿಕೊಂಡ ಉದಾಹರಣೆಗಳಿವೆ. ಸಂಬಂಧಿಸಿದ ಅಧಿಕಾರಿಗಳು ಕ್ಯಾಂಟೀನ್ ಆರಂಭಕ್ಕೆ ಕ್ರಮಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ. ಸಾರಿಗೆ ಇಲಾಖೆ ಅಧಿಕಾರಿಗಳು ಕೂಡಲೇ ಸರಕಾರಕ್ಕೆ ಪತ್ರ ಬರೆದು ದುಬಾರಿ ಬಾಡಿಗೆ ಕಡಿತಗೊಳಿಸಬೇಕು. ಕಡಿಮೆ ಬಾಡಿಗೆಯನ್ನು ಮಾಡಿದಾಗ ಇದಕ್ಕೆ ಒಂದು ಸಮಸ್ಯೆ ಪರಿಹಾರ ಸಿಕ್ಕಂತಾಗುತ್ತದೆ. ಈಗಾಗಲೇ ಸುಮಾರು ಬಾರಿ ಟೆಂಡರ್ ಕರೆದರೂ ಯಾರೊಬ್ಬರೂ ಟೆಂಡರ್ ಹಾಕಿಲ್ಲ. ಇದರ ಬಗ್ಗೆ ಸಾರಿಗೆ ಇಲಾಖೆಯ ಅಧಿಕಾರಿಗಳು ಗಮನಹರಿಸಬೇಕಾಗಿದೆ. -ಸಾಹೇಬಗೌಡ ದೇಸಾಯಿ ಕನ್ನಡಪರ ಹೋರಾಟಗಾರ ಬಸ್ ನಿಲ್ದಾಣದಲ್ಲಿರುವ ಕ್ಯಾಂಟೀನ್ ಬಾಡಿಗೆ ದುಬಾರಿಯಾಗಿದೆ ಎಂದು ಬಾಡಿಗೆದಾರರು ಹೇಳಿರುವ ವಿಷಯದನ್ವಯ ಬಾಡಿಗೆ ಕಡಿಮೆ ಮಾಡಲು ಮೇಲಧಿಕಾರಿಗಳಿಗೆ ಪತ್ರ ಬರೆಯುತ್ತೇನೆ. -ಶಿವನಗೌಡ ಹಚ್ಚಡ ಹರನಾಳ ಬಸ್ ನಿಲ್ದಾಣ ನಿಯಂತ್ರಣಾಧಿಕಾರಿ
ಬಸ್ ನಿಲ್ದಾಣದಲ್ಲಿ ಮುಚ್ಚಿದ ಶೌಚಾಲಯ
ಬಯಲಲ್ಲೇ ಶೌಚ; ಹುಮನಾಬಾದ್ನಲ್ಲಿ ಸಾರ್ವಜನಿಕರ ಪರದಾಟ
Islamabad Talks | ಅಮೆರಿಕ–ಇರಾನ್ ಮಾತುಕತೆ: ಪ್ರಗತಿಯೂ ಇಲ್ಲ, ಸ್ಥಗಿತವೂ ಇಲ್ಲ: ವರದಿ
ಐದು ಸುತ್ತು ನಡೆದ ಮಾತುಕತೆ
ಅಗ್ನಿಶಾಮಕ ಅನುಮತಿ ಇಲ್ಲದೆ ಅವೈಜ್ಞಾನಿಕ ಕಟ್ಟಡಗಳ ನಿರ್ಮಾಣ: ಅಧಿಕಾರಿಗಳು ಮೌನ!
ದೇವದುರ್ಗ: ಅಗ್ನಿಶಾಮಕ ಇಲಾಖೆ ಅನುಮತಿ ಅಥವಾ ನಿರಾಕ್ಷೇಪಣಾ ಪತ್ರ ಇಲ್ಲದೆ ಸರಕಾರಿ, ಖಾಸಗಿ ಕಟ್ಟಡ ನಿರ್ಮಾಣ ಮಾಡುವುದು ಕಾನೂನುಬಾಹಿರ. 15 ಮೀಟರ್ಗಿಂತ ಎತ್ತರದ ಅಥವಾ 4 ಅಂತಸ್ತಿನ ಮೇಲ್ಪಟ್ಟ ಕಟ್ಟಡಗಳಿಗೆ, ಹಾಗೂ ಕಾಟನ್ ಜಿನ್ ಫ್ಯಾಕ್ಟರಿ, ಎಸಿ ಗೋಡಾನ್, ಮತ್ತಿತರ ಸಾರ್ವಜನಿಕರು ಸೇರುವ ಸ್ಥಳಗಳಿಗೆ ಎನ್ಒಸಿ ಕಡ್ಡಾಯ. ಇಲಾಖೆ ಅನುಮತಿ ಇಲ್ಲದಿದ್ದರೆ ನೋಟಿಸ್, ಕಟ್ಟಡ ತೆರವು, ಮತ್ತು ವಿದ್ಯುತ್/ನೀರಿನ ಸಂಪರ್ಕ ಕಡಿತದ ತೀವ್ರ ಕ್ರಮಗಳನ್ನು ಕೈಗೊಳ್ಳಬಹುದು. ಆದರೆ, ಅಗ್ನಿಶಾಮಕ ಇಲಾಖೆ ಮೌನವಹಿಸಿದೆ ಎಂಬ ಆರೋಪಗಳು ಕೇಳಿಬರುತ್ತಿವೆ. ತಾಲೂಕಿನ ಹಲವಾರು ಕಾಟನ್ ಫ್ಯಾಕ್ಟರಿಗಳು, ಬಣವೆ, ಕಟಿಗೆ ಮಿಲ್, ಗದ್ದಿಗಳು, ಪೆಟ್ರೊಲ್ ಬಂಕ್ ಆಕಸ್ಮಿಕ ಬೆಂಕಿಗಾಹುತಿಯಾಗುತ್ತಿರುವುದು ಸಾಮಾನ್ಯವಾಗುತ್ತಿದೆ. ಹಲವಾರು ಫ್ಯಾಕ್ಟರಿಗಳಲ್ಲಿ ಸುರಕ್ಷತೆ ಮುನ್ನೆಚ್ಚರಿಕೆಗಾಗಿ ಅಗ್ನಿ ಉಪಕರಣಗಳು ಫ್ಯಾಕ್ಟರಿಗಳಲ್ಲಿ ಅಳವಡಿಸಿ ಮುಂದಾಗುವ ಅನಾಹುತಗಳು ತಪ್ಪಿಸುವ ಸಲುವಾಗಿ ತಿಂಗಳಿಗೆ ಒಂದು ಬಾರಿ ಮೊಕ್ ಡ್ರಿಲ್ ಮಾಡುತ್ತ ಸಿಬ್ಬಂದಿಗಳಿಗೆ ಅರಿವು ನೀಡುವ ಕೆಲಸ ಆಗಬೇಕು. ಆದರೆ, ಈ ಕಾರ್ಯವು ಸಮರ್ಪಕವಾಗಿ ಆಗುತ್ತಿಲ್ಲ. ಇದರಿಂದಾಗಿ, ಯಾವುದೇ ಅನಾಹುತವಾದರೂ ಅಗ್ನಿಶಾಮಕ ವಾಹನ ಬರುವವರೆಗೆ ಕಾಯುವ ಪ್ರಸಂಗ ಉದ್ಭವವಾಗುತ್ತಿದೆ. ಪಟ್ಟಣದ ಸರಕಾರಿ, ಖಾಸಗಿ ಶಾಲಾ, ಕಾಲೇಜ್ಗಳಲ್ಲಿ ಮಕ್ಕಳ ಸುರಕ್ಷತೆ ಮುನ್ನೆಚ್ಚರಿಕೆಗಾಗಿ ಅಗ್ನಿ ನಿರೋಧಕ ಸಲಕರಣಗಳು ಕೂಡಿಸಬೇಕೆಂಬ ನಿಯಮವಿದೆ ಆದರೆ ಈ ನಿಯಮ ಗಾಳಿಗೆ ತೂರಿ ಮನಬಂದಂತೆ ಕಾನೂನು ಬಾಹಿರವಾಗಿ ಕಟ್ಟಡ ನಿರ್ಮಿಸುತ್ತಿದ್ದಾರೆಂದು ಕೆಲ ಪಾಲಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಅನುದಾನ ರಹಿತ, ಸಹಿತ ಶಾಲೆಗಳಿಗೆ ವಿಧಿಸಲಾಗಿರುವ ಕಟ್ಟಡ-ಅಗ್ನಿ ಸುರಕ್ಷತೆ ಸೇರಿದಂತೆ ಹಲವು ಷರತ್ತುಗಳ ಪಾಲನೆ ಹಾಗೂ ಈ ದಿಸೆಯಲ್ಲಿ ಅನುಸರಿಸಬೇಕಾದ ಕ್ರಮಗಳನ್ನು ಸರಕಾರಿ ಶಾಲೆಗಳೂ ಅಳವಡಿಸಿಕೊಳ್ಳಬೇಕು, ಹೈಕೋರ್ಟ್ ಆದೇಶ ಪಾಲಿಸಬೇಕು ಎಂದು ಸಾರ್ವಜನಿಕರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಅಭಿವೃದ್ಧಿ ಹೊಂದುತ್ತಿರುವ ದೇವದುರ್ಗ ತಾಲೂಕಿನಲ್ಲಿ ಬೆಂಕಿ ನಂದಿಸಲು ಒಂದೇ ಅಗ್ನಿಶಾಮಕ ವಾಹನ ಇದ್ದು ಇದರಿಂದ ಆಕಸ್ಮಿಕವಾಗಿ ಬೆಂಕಿ ನಂದಿಸಲು ಎಲ್ಲಾ ಕಡೆ ಹೋಗಲು ಸಾದ್ಯವಿಲ್ಲ. ಯಾವುದೇ ಬೆಂಕಿ ಅವಘಡ ತಕ್ಷಣ ನಡೆದಾಗ ಅಗತ್ಯ ಇರುವ ಶಾಲಾ, ಕಾಲೇಜ್, ಪೆಟ್ರೊಲ್ ಬಂಕ್, ಕಾಟನ್ ಫ್ಯಾಕ್ಟರಿ, ಸರಕಾರಿ ಕಟ್ಟಡಗಳಲ್ಲಿ ಉಪಕರಣಗಳು ಅವಶ್ಯಕತೆ ಇದೆ. ಆದರೆ ಇಲ್ಲಿ ನಿಯಮಗಳು ಪಾಲಿಸುತ್ತಿಲ್ಲ. ಅಧಿಕಾರಿಗಳು ಸೂಕ್ತ ಕಾನೂನು ಕ್ರಮಕೈಗೊಳ್ಳಬೇಕು. -ಹನುಮಂತಪ್ಪ ಕಾಕರಗಲ್ ದೇವದುರ್ಗ ಅನುಮತಿ ತೆಗೆದುಕೊಳ್ಳದ ಶಾಲಾ, ಕಾಲೇಜ್, ಕಾಟನ್ ಫ್ಯಾಕ್ಟರಿ, ಪೆಟ್ರೋಲ್ ಬಂಕ್ ಮತ್ತಿತರ ಅವೈಜ್ಞಾನಿಕ ಕಟ್ಟಡಗಳಿಗೆ ನೋಟಿಸ್ ನೀಡಿದ್ದೇವೆ. -ರವಿಕುಮಾರ್ ಅಗ್ನಿಶಾಮಕ ಠಾಣಾಧಿಕಾರಿ, ದೇವದುರ್ಗ
ಸಂಪುಟ ಪುನಾರಚನೆ : ಸಿಂಧನೂರಿಗೆ ಸಿಗುತ್ತಾ ಮಂತ್ರಿಗಿರಿ?
ಶಾಸಕ ಹಂಪನಗೌಡ ಬಾದರ್ಲಿ ಪ್ರಬಲ ಆಕಾಂಕ್ಷಿ
ಸಾಲದ ಆಮಿಷವೊಡ್ಡಿ ಉದ್ಯಮಿಗೆ ಸೈಬರ್ ಖೆಡ್ಡಾ: ಬ್ಯಾಂಕ್ ಖಾತೆ ಮಾಹಿತಿ ಪಡೆದು ಲಕ್ಷಾಂತರ ಹಣ ವರ್ಗಾವಣೆ ಮಾಡಿ ವಂಚನೆ!
ಸಾಲ ಕೊಡಿಸುವ ಆಮಿಷವೊಡ್ಡಿ ಉದ್ಯಮಿಯೊಬ್ಬರಿಗೆ ಸೈಬರ್ ವಂಚನೆ ಮಾಡಿರುವ ಪ್ರಕರಣ ನಡೆದಿದೆ. ಆರ್ಥಿಕ ಸಂಕಷ್ಟದಲ್ಲಿದ್ದು, ಸಾಲಕ್ಕಾಗಿ ನೋಡುತ್ತಿದ್ದ ವ್ಯಕ್ತಿಗೆ ಭಾರಿ ಮೊತ್ತದ ಸಾಲ ಕೊಡಿಸುವ ಆಸೆಯೊಡ್ಡಿ ಇದಕ್ಕಾಗಿ ಹೊಸ ಸಿಮ್ ಕಾರ್ಡ್ ಹಾಗೂ ಬ್ಯಾಂಕ್ ಖಾತೆ ತೆರೆಯುವಂತೆ ಸೂಚಿಸಿದ್ದು, ಇದರ ವಿವರಗಳನ್ನು ಪಡೆದುಕೊಂಡು ಉದ್ಯಮಿಗೆ ತಿಳಿಯದ ರೀತಿಯಲ್ಲಿ ಲಕ್ಷಾಂತರ ರೂಗಳನ್ನು ವರ್ಗಾವಣೆ ಮಾಡಿಕೊಂಡಿದ್ದು, ಸೈಬರ್ ಪೊಲೀಸರಿಂದ ನೋಟಿಸ್ ಸಿಕ್ಕ ಬಳಿಕ ತಾನು ವಂಚನೆಗೊಳಗಾಗಿರುವುದು ಗೊತ್ತಾಗಿದೆ.ಈ ಕುರಿತಂತೆ ಉದ್ಯಮಿ ವಂಚಕರ ವಿರುದ್ದ ಸೈಬರ್ ಪೊಲೀಸರಿಗೆ ದೂರು ದಾಖಲು ಮಾಡಿದ್ದಾರೆ.
West Bengal | ಭವಾನಿಪುರದಲ್ಲಿ ನಾಮಪತ್ರ ರದ್ದತಿಗೆ ಪಿತೂರಿ: ಮಮತಾ ಬ್ಯಾನರ್ಜಿ ಆರೋಪ
ಕೋಲ್ಕತ್ತಾ,ಎ.12: ಪಶ್ಚಿಮ ಬಂಗಾಳದ ಭವಾನಿಪುರ ವಿಧಾನಸಭಾ ಕ್ಷೇತ್ರದಲ್ಲಿ ತನ್ನ ನಾಮಪತ್ರವನ್ನು ರದ್ದುಗೊಳಿಸಲು ಉದ್ದೇಶಪೂರ್ವಕ ಪಿತೂರಿ ನಡೆದಿತ್ತು ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ. “ನಮ್ಮ ಹೋರಾಟ ಬಿಜೆಪಿ ವಿರುದ್ಧವಲ್ಲ; ವ್ಯವಸ್ಥೆಯಲ್ಲಿರುವ ದೋಷಗಳ ವಿರುದ್ಧ. ನನ್ನ ಸ್ವಂತ ಕ್ಷೇತ್ರದಲ್ಲೇ ನನ್ನ ವಿರುದ್ಧ ಎರಡು ಸುಳ್ಳು ಅಫಿಡವಿಟ್ ಗಳನ್ನು ಸಲ್ಲಿಸಿ ನಾಮಪತ್ರವನ್ನು ರದ್ದುಗೊಳಿಸಲು ಯತ್ನಿಸಿದರು. ಅವರು ಯಶಸ್ವಿಯಾಗಲಿಲ್ಲ, ಆದರೆ ಹಲವು ಬಾರಿ ಪ್ರಯತ್ನಿಸಿದರು,” ಎಂದು ಅವರು ಹೇಳಿದ್ದಾರೆ. “ನನ್ನನ್ನು ಸ್ಪರ್ಧಿಸದಂತೆ ತಡೆಯಲು ಪ್ರಯತ್ನಿಸಿದ್ದರೆ, ಸಾಮಾನ್ಯ ಜನರ ಮೇಲೂ ಏನು ಮಾಡಬಹುದು ಎಂಬುದನ್ನು ನೀವು ಅರ್ಥಮಾಡಿಕೊಳ್ಳಬಹುದು,” ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ. ನಾಮಪತ್ರ ಪರಿಶೀಲನೆ ವೇಳೆ ಕೆಲವು ಆಕ್ಷೇಪಣೆಗಳು ಎದುರಾಯಿತು. ಕೋಲ್ಕತ್ತಾ ಮೇಯರ್ ಫಿರ್ಹಾದ್ ಹಕೀಮ್ ಅವರ ಪತ್ನಿ ಹಾಗೂ ಸೂಚಕರಾದ ಇಸ್ಮತ್ ಹಕೀಮ್ ಅವರ ಹೆಸರಿನ ವ್ಯತ್ಯಾಸದ ಬಗ್ಗೆ ಪ್ರಶ್ನೆ ಎತ್ತಲಾಗಿತ್ತು. ಅವರು ವಿವಾಹಕ್ಕೂ ಮೊದಲು ‘ಇಸ್ಮತ್ ಅರಾ’ ಎಂಬ ಹೆಸರನ್ನು ಬಳಸುತ್ತಿದ್ದರು. ನಂತರ ದಾಖಲೆಗಳಲ್ಲಿ ‘ಇಸ್ಮತ್ ಹಕೀಮ್’ ಎಂದು ಬದಲಾಯಿಸಲಾಗಿತ್ತು. ಪರಿಶೀಲನೆ ವೇಳೆ ದಾಖಲೆಗಳನ್ನು ಸಲ್ಲಿಸಿದ ಬಳಿಕ ಈ ಗೊಂದಲ ನಿವಾರಣೆಯಾಯಿತು. “ಇಂತಹ ವಿಷಯಗಳು ಸಾಮಾನ್ಯವಾಗಿ ಕೆಲವೇ ನಿಮಿಷಗಳಲ್ಲಿ ಮುಗಿಯುತ್ತವೆ. ಆದರೆ ಇಲ್ಲಿ ಸೂಚಕರನ್ನು ಸುಮಾರು ಎರಡು ಗಂಟೆಗಳ ಕಾಲ ಕಾಯುವಂತೆ ಮಾಡಲಾಯಿತು. ಇದರಿಂದ ಅನುಮಾನ ಉಂಟಾಯಿತು,” ಎಂದು ಟಿಎಂಸಿ ಸದಸ್ಯರೊಬ್ಬರು ಹೇಳಿದರು. ಇನ್ನೊಂದು ಆಕ್ಷೇಪಣೆ, ಸುಮಾರು ಎರಡು ದಶಕಗಳ ಹಿಂದೆ ಬಹಿರಂಗಪಡಿಸದ ಕ್ರಿಮಿನಲ್ ಪ್ರಕರಣಗಳ ಕುರಿತು ಮಾಡಲಾಗಿತ್ತು. ಆದರೆ ಇದಕ್ಕೆ ಯಾವುದೇ ಪುರಾವೆಗಳು ಇರಲಿಲ್ಲ ಎಂದು ಪಕ್ಷದ ಕಾರ್ಯಕಾರಿಣಿ ಸ್ಪಷ್ಟಪಡಿಸಿದರು. ಆ ವಿಭಾಗವನ್ನು ‘ಅನ್ವಯಿಸುವುದಿಲ್ಲ’ ಎಂದು ಗುರುತಿಸಲಾಗಿತ್ತು ಎಂದರು. ಇದೇ ವೇಳೆ, ಅಭ್ಯರ್ಥಿಗಳ ಸಂಖ್ಯೆ 17ಕ್ಕೆ ಏರಿದ ಹಿನ್ನೆಲೆಯಲ್ಲಿ ಇವಿಎಂ ವ್ಯವಸ್ಥೆಯ ಸಮಸ್ಯೆಯೂ ಎದುರಾಯಿತು. ಒಂದು ಇವಿಎಂನಲ್ಲಿ 16 ಹೆಸರುಗಳನ್ನು ಮಾತ್ರ ತೋರಿಸಲು ಸಾಧ್ಯವಾಗುವುದರಿಂದ, ಮಮತಾ ಬ್ಯಾನರ್ಜಿ ಅವರ ಹೆಸರು ಎರಡನೇ ಯಂತ್ರಕ್ಕೆ ಹೋಗುವ ಸಾಧ್ಯತೆ ಇತ್ತು. ಇದಕ್ಕೆ ಟಿಎಂಸಿ ಆಕ್ಷೇಪ ವ್ಯಕ್ತಪಡಿಸಿತು. “ಮುಖ್ಯಮಂತ್ರಿಯವರ ಹೆಸರನ್ನು ಎರಡನೇ ಇವಿಎಂಗೆ ಹಾಕುವುದು ಗೊಂದಲಕ್ಕೆ ಕಾರಣವಾಗುತ್ತಿತ್ತು,” ಎಂದು ಪಕ್ಷದ ಕಾರ್ಯಕಾರಿಣಿ ಹೇಳಿದರು. ನಂತರ ನಾಲ್ಕು ನಾಮಪತ್ರಗಳನ್ನು ರದ್ದುಗೊಳಿಸಲಾಗಿದ್ದು, ಒಂದೇ ಇವಿಎಂ ಸಾಕಾವ ಪರಿಸ್ಥಿತಿ ನಿರ್ಮಾಣವಾಯಿತು.
ಅಮೆರಿಕದ ಬೇಡಿಕೆ ಬದಲಾದರೆ ಮಾತ್ರ ಮಾತುಕತೆ ಮುಂದುವರಿಯಬಹುದು : ಇರಾನ್
ಇಸ್ಲಾಮಾಬಾದ್/ಟೆಹ್ರಾನ್, ಎ. 12: ಅಮೆರಿಕ ತನ್ನ ಕೆಲವು ಬೇಡಿಕೆಗಳನ್ನು ಬದಲಾಯಿಸಿದರೆ ಮಾತ್ರ ಇರಾನ್–ಅಮೆರಿಕ ಮಾತುಕತೆ ಮುಂದುವರಿಯಬಹುದು ಎಂದು ಇರಾನ್ ಹೇಳಿದೆ ಎಂದು Aljazeera ವರದಿ ಮಾಡಿದೆ. ಇರಾನ್ ನ ಫಾರ್ಸ್ ಸುದ್ದಿ ಸಂಸ್ಥೆಯ ಪ್ರಕಾರ, ಅಮೆರಿಕದ ಕೆಲವು ಬೇಡಿಕೆಗಳನ್ನು ಇರಾನ್ ‘ಅಸಮಂಜಸ’ ಎಂದು ಪರಿಗಣಿಸಿದೆ. ಹಾರ್ಮುಝ್ ಜಲಸಂಧಿ ಸೇರಿದಂತೆ ಕೆಲವು ವಿಷಯಗಳಲ್ಲಿ ಇನ್ನೂ ಒಪ್ಪಂದವಾಗಿಲ್ಲ. ಎರಡೂ ದೇಶಗಳ ತಜ್ಞರು ಸಮಸ್ಯೆಗಳಿಗೆ ಪರಿಹಾರ ಹುಡುಕಲು ಚರ್ಚೆ ನಡೆಸುತ್ತಿದ್ದಾರೆ. ಪಾಕಿಸ್ತಾನವು ಮಧ್ಯವರ್ತಿಯಾಗಿ ಕೆಲಸ ಮಾಡುತ್ತಿದ್ದು, ಎರಡೂ ಕಡೆಯ ಭಿನ್ನಾಭಿಪ್ರಾಯಗಳನ್ನು ಕಡಿಮೆ ಮಾಡಲು ಪ್ರಯತ್ನಿಸುತ್ತಿದೆ ಎಂದು ತಿಳಿದು ಬಂದಿದೆ. ಕರಡು ಒಪ್ಪಂದದ ಬಗ್ಗೆ ತಮ್ಮ ತಜ್ಞರೊಂದಿಗೆ ಚರ್ಚಿಸಲು ಉಭಯ ಪಕ್ಷಗಳು ಮಾತುಕತೆಯಿಂದ ತಾತ್ಕಾಲಿಕವಾಗಿ ಹಿಂದೆ ಸರಿದಿವೆ. ಚರ್ಚೆಗಳು ಪೂರ್ಣಗೊಂಡ ಬಳಿಕ ಮಾತುಕತೆಗಳನ್ನು ಮತ್ತೆ ಆರಂಭಿಸುವ ಸಾಧ್ಯತೆ ಇದೆ.
Israel | ಯುದ್ಧದ ಅಂತ್ಯಕ್ಕೆ ಆಗ್ರಹಿಸಿ ನೆತನ್ಯಾಹು ಸರ್ಕಾರದ ವಿರುದ್ಧ ನಾಗರಿಕರಿಂದ ಪ್ರತಿಭಟನೆ
ಟೆಲ್ ಅವೀವ್, ಎ. 12: ಯುದ್ಧವನ್ನು ತಕ್ಷಣವೇ ಕೊನೆಗೊಳಿಸುವಂತೆ ಆಗ್ರಹಿಸಿ, ಟೆಲ್ ಅವೀವ್ ನಲ್ಲಿ ಇಸ್ರೇಲಿನ ನೂರಾರು ನಾಗರಿಕರು ಪ್ರಧಾನಿ ಬೆಂಜಮಿನ್ ನೆತನ್ಯಾಹು ಸರ್ಕಾರದ ವಿರುದ್ಧ ಶನಿವಾರ ಪ್ರತಿಭಟನೆ ನಡೆಸಿದರು ಎಂದು Aljazeera ವರದಿ ಮಾಡಿದೆ. ದೇಶ ನಿರಂತರ ಸಂಘರ್ಷದಲ್ಲಿ ಸಿಲುಕಿಕೊಳ್ಳುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದ ಪ್ರತಿಭಟನಾಕಾರರು, ಶಾಂತಿಯುತವಾಗಿ ಮೆರವಣಿಗೆ ನಡೆಸಿದರು. ಯುದ್ಧ ಮುಂದುವರಿದರೆ ಹಾನಿ ಹೆಚ್ಚಾಗುತ್ತದೆ. “ಕದನ ನಿಲ್ಲಿಸಿ, ಮಾತುಕತೆ ಆರಂಭಿಸಿ” ಎಂದು ಘೋಷಣೆ ಕೂಗಿದರು. ಆರ್ಥಿಕವಾಗಿ ಮತ್ತು ಮಾನವೀಯವಾಗಿ ದೇಶಕ್ಕೆ ಹಾನಿಯುಂಟು ಮಾಡುತ್ತಿರುವ ಯುದ್ಧದ ನಿಲುಗಡೆಗೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
IPL 2026 | ಹ್ಯಾಟ್ರಿಕ್ ಸೋಲಿನ ಬಳಿಕ ಯಶಸ್ಸಿನ ಗುಟ್ಟು ಬಿಚ್ಚಿಟ್ಟ ಸಂಜು ಸ್ಯಾಮ್ಸನ್
ಹೊಸದಿಲ್ಲಿ: ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಶನಿವಾರ ನಡೆದ ಐಪಿಎಲ್ ಪಂದ್ಯದಲ್ಲಿ ವಿಕೆಟ್ ಕೀಪರ್-ಬ್ಯಾಟ್ಸ್ ಮನ್ ಸಂಜು ಸ್ಯಾಮ್ಸನ್ ಅವರ ಬ್ಯಾಟಿಂಗ್ ಶಕ್ತಿ ಅನಾವರಣಗೊಂಡಿತು. ಚೆನ್ನೈ ಪರ ಮೊದಲ ಮೂರು ಪಂದ್ಯಗಳಲ್ಲಿ 6, 7 ಹಾಗೂ 9 ರನ್ ಮಾತ್ರಗಳಿಸಿದ್ದ ಸಂಜು ನಾಲ್ಕನೇ ಪಂದ್ಯದಲ್ಲಿ ಅಜೇಯ ಶತಕ ಸಿಡಿಸುವ ಮೂಲಕ ತಂಡದ ಗೆಲುವಿನ ರೂವಾರಿ ಎನಿಸಿದರು. ಈ ಗೆಲುವಿನೊಂದಿಗೆ ಹ್ಯಾಟ್ರಿಕ್ ಸೋಲಿನ ಬಳಿಕ ಸಿಎಸ್ಕೆ ಗೆಲುವಿನ ಖಾತೆ ತೆರೆಯಿತು. ಕಳೆದ ಮಾರ್ಚ್ನಲ್ಲಿ ನಡೆದ ಟಿ20 ವಿಶ್ವಕಪ್ನಲ್ಲಿ ಮೂರು ಅರ್ಧಶತಕಗಳೊಂದಿಗೆ ಭಾರತ ಕಪ್ ಗೆಲ್ಲಲು ಕೊಡುಗೆ ನೀಡಿದ್ದ ಸಂಜು ಬಗ್ಗೆ ಪ್ರಸಕ್ತ ಐಪಿಎಲ್ನಲ್ಲಿ ಭಾರಿ ಭರವಸೆ ಇತ್ತು. ಶನಿವಾರದ ಪಂದ್ಯದಲ್ಲಿ ಕೇವಲ 56 ಎಸೆತಗಳಲ್ಲಿ 115 ರನ್ ಸಿಡಿಸುವ ಮೂಲಕ ತಂಡ ತಮ್ಮ ಮೇಲೆ ಇಟ್ಟ ಭರವಸೆಯನ್ನು ಉಳಿಸಿಕೊಂಡರು. ಆಯುಷ್ ಮ್ಹಾತ್ರೆ 36 ಎಸೆತಗಳಲ್ಲಿ 59 ರನ್ ಸಿಡಿಸಿ ಸಂಜುಗೆ ಸಾಥ್ ನೀಡುವ ಮೂಲಕ 2 ವಿಕೆಟ್ ನಷ್ಟಕ್ಕೆ 212 ರನ್ ಕಲೆಹಾಕಲು ಸಾಧ್ಯವಾಯಿತು. ಈ ಜೋಡಿ ಎರಡನೇ ವಿಕೆಟ್ಗೆ 113 ರನ್ ಗಳಿಸಿತು. ಇದು ನನಗೆ ದೊಡ್ಡದು, ಅವರು ಇರಿಸಿದ ವಿಶ್ವಾಸ, ಹೆಚ್ಚಿನ ಹೊಣೆಗಾರಿಕೆ ನೀಡಿತು. ಅದೃಷ್ಟವೆಂದರೆ ಪ್ರತಿಯೊಂದೂ ಸುಲಲಿತವಾಯಿತು. ನನಗೆ ಬೇರೆ ಫ್ರಾಂಚೈಸಿ ಎನಿಸಲೇ ಇಲ್ಲ ಎಂದು ರಾಜಸ್ಥಾನ ರಾಯಲ್ಸ್ ನಿಂದ ಬಂದ ಸ್ಯಾಮ್ಸನ್ ಬಣ್ಣಿಸಿದರು. ಸಹ ಆಟಗಾರರು ಒಳ್ಳೆಯವರು, ಮೂರು ಪಂದ್ಯಗಳನ್ನು ಸೋತ ಬಳಿಕವೂ ನಾವು ಇಂದು 50 ಸೆಕೆಂಡ್ ಭೇಟಿ ಮಾಡಿದೆವು ಎಂದು ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದ ಸ್ಯಾಮ್ಸನ್ ಬಣ್ಣಿಸಿದರು. ನಾನು ಸಾಕಷ್ಟು ವಿಫಲನಾಗಿದ್ದೆ. ಮನಸ್ಸು ಚಂಚಲವಾಗಿತ್ತು. ನನ್ನ ಮೂಲಭೂತ ಅಂಶಗಳೇನು ಎಂದು ನಾನು ತಿಳಿದುಕೊಳ್ಳಬೇಕಿತ್ತು. ಮೂಲವನ್ನು ಸರಿಪಡಿಸಿಕೊಳ್ಳುವುದು ಅಗತ್ಯವಾಗಿತ್ತು. ಬೆಂಬಲ ಸಿಬ್ಬಂದಿಯೊಂದಿಗೆ ಒಳ್ಳೆಯ ಸಂವಾದ ನಡೆಯಿತು ಎಂದು ವಿವರಿಸಿದರು. ಇದು ಸ್ಯಾಮ್ಸನ್ ಅವರ ನಾಲ್ಕನೇ ಐಪಿಎಲ್ ಶತಕವಾಗಿದ್ದು, ಸಿಎಸ್ಕೆ ಪರ ಹಾಗೂ ಪ್ರಸಕ್ತ ಐಪಿಎಲ್ನಲ್ಲಿ ಮೊದಲ ಶತಕ. ಮೊದಲ ಮೂರು ಪಂದ್ಯಗಳನ್ನು ನಿರಾಶಾದಾಯಕವಾಗಿ ಆರಂಭಿಸಿದ ಬಳಿಕ ಇಂದಿನ ಭರ್ಜರಿ ಪ್ರದರ್ಶನ ನಿಜಕ್ಕೂ ಚೇತೋಹಾರಿಯಾಗಿತ್ತು.
ಫಲಪ್ರದವಾಗದ ನೇರ ಮಾತುಕತೆ!
ವಿದ್ಯೆ ಕೊಡುವ ದೇವರು ಎಂದುಕೊಂಡ ಶಿಕ್ಷಕನಿಂದಲೇ ಬಾಲಕಿಗೆ ಮಹಾ ಅನ್ಯಾಯವಾಗಿದ್ದು, ಬೆದರಿಕೆ ಒಡ್ಡಿ ಲೈಂಗಿಕ ದೌರ್ಜನ್ಯ ಎಸಗಿದ ಹಿನ್ನೆಲೆ ಪೋಕ್ಸೋ ಕೇಸ್ ದಾಖಲಾಗಿದೆ. ಅವಿವಾಹಿತ ಅಪ್ರಾಪ್ತ ಬಾಲಕಿಗೆ ಬೇನಾಮಿ ಪತಿ ಕಥೆ ಸೃಷ್ಟಿಸಿ, ರಕ್ತಸ್ರಾವ ಆಗ್ತಿತ್ತು, ಅದಕ್ಕೆ ಗರ್ಭಪಾತ ಮಾಡಲಾಗಿದೆ ಎಂಬ ಸುಳ್ಳು ಕಥೆ ಕಟ್ಟಿದ ನರ್ಸಿಂಗ್ ಹೋಂಗೂ ಈಗ ಸಂಕಷ್ಟ ಎದುರಾಗಿದೆ,
Patna | ವ್ಯಾನ್- ಬಸ್ ಢಿಕ್ಕಿ : 13 ಮಂದಿ ಮೃತ್ಯು, 22 ಮಂದಿಗೆ ಗಾಯ
ಪಾಟ್ನಾ: ವೇಗವಾಗಿ ಚಲಿಸುತ್ತಿದ್ದ ಬಸ್ಸು ಎದುರಿನಿಂದ ಬಂದ ವ್ಯಾನ್ಗೆ ಮುಖಾಮುಖಿ ಢಿಕ್ಕಿ ಹೊಡೆದ ಪರಿಣಾಮ ಕನಿಷ್ಠ 13 ಮಂದಿ ಮೃತಪಟ್ಟಿದ್ದು, 22 ಮಂದಿ ಗಾಯಗೊಂಡ ಘಟನೆ ಶನಿವಾರ ರಾತ್ರಿ ಕಟಿಯಾರ್ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ 31ರ ಗೆರಬರಿ ಗ್ರಾಮದ ಬಳಿ ನಡೆದಿದೆ. ಘಟನೆಯ ಮಾಹಿತಿ ತಿಳಿದು ತಕ್ಷಣವೇ ಸ್ಥಳಕ್ಕೆ ಆಗಮಿಸಿದ ಪೊಲೀಸ್ ತಂಡ, ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸುವಲ್ಲಿ ನೆರವಾಯಿತು. ಘಟನೆಯ ಬೆನ್ನಲ್ಲೇ ಮುಖ್ಯಮಂತ್ರಿ, ಮೃತರ ಕುಟುಂಬಕ್ಕೆ 2 ಲಕ್ಷ ರೂ. ಹಾಗೂ ಗಾಯಾಳುಗಳ ಕುಟುಂಬಕ್ಕೆ 50 ಸಾವಿರ ರೂಪಾಯಿ ಪರಿಹಾರ ಘೋಷಿಸಿದ್ದಾರೆ. ಎಂಟು ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದರೆ, ಇತರ ಐದು ಮಂದಿ ಕಟಿಯಾರ್ ಸದರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ ವೇಳೆ ಅಸು ಮೃತಪಟ್ಟಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ಅಪಘಾತಕ್ಕೀಡಾದ ವ್ಯಾನ್ನಲ್ಲಿ ಬುಡಕಟ್ಟು ಜನಾಂಗದವರು ಜಾರ್ಖಂಡ್ನಿಂದ ನೌಗಾಚಿಯಾ ಮೂಲಕ ಪುರ್ನಿಯಾಗೆ ವಾಪಸ್ಸಾಗುತ್ತಿದ್ದರು. ಪುರ್ನಿಯಾದಿಂದ ನಗೌಚಿಯಾಗೆ ಬರುತ್ತಿದ್ದ ಬಸ್ಸು ಮುಖಾಮುಖಿ ಢಿಕ್ಕಿ ಹೊಡೆಯಿತು ಎಂದು ತಿಳಿದು ಬಂದಿದೆ. ಬಸ್ಸಿನ ಚಾಲಕ ಪಾನಮತ್ತನಾಗಿದ್ದ ಎಂದು ಗಾಯಾಳು ಪ್ರಯಾಣಿಕರು ಹೇಳಿದ್ದಾರೆ. ಇದಕ್ಕೂ ಮುನ್ನ ಒಂದೆರಡು ಕಡೆ ಬಸ್ಸು ಢಿಕ್ಕಿ ಹೊಡೆದಿತ್ತು ಎನ್ನಲಾಗಿದೆ. ದಾತಪುರ ಮುಸಾಹರಿ ಚೌಕ್ಗೆ ತಲುಪಿದಾಗ ಎದುರಿನಿಂದ ಬರುತ್ತಿದ್ದ ವ್ಯಾನ್ಗೆ ಬಸ್ ಢಿಕ್ಕಿ ಹೊಡೆಯಿತು ಎಂದು ಪೊಲೀಸರು ವಿವರಿಸಿದ್ದಾರೆ.
ನವದೆಹಲಿ: ಮನುಷ್ಯನನ್ನು ಮತ್ತೆ ಚಂದ್ರನ ಕಕ್ಷೆಗೆ ಕಳುಹಿಸಿದ ನಾಸಾದ (NASA) ಐತಿಹಾಸಿಕ 'ಆರ್ಟೆಮಿಸ್ 2' ಬಾಹ್ಯಾಕಾಶಯಾನ ಪೂರ್ಣಗೊಂಡಿದ್ದು, ಗಗನಯಾನಿಗಳು ಭೂಮಿಗೆ ಬಂದಿಳಿದಿದ್ದಾರೆ. ಒಟ್ಟು ಈ 10 ದಿನಗಳ ರೋಮಾಂಚನಕಾರಿ ಈ ಪಯಣದಲ್ಲಿ ಗಗನಯಾತ್ರಿಗಳ ಆರೋಗ್ಯ ರಕ್ಷಣೆಯೂ ಮುಖ್ಯವಾಗಿರುತ್ತದೆ. ಅವರ ಪ್ರಥಮ ಚಿಕಿತ್ಸಾ ಪೆಟ್ಟಿಗೆಯಲ್ಲಿ ಜೀರ್ಣಕ್ರಿಯೆ ಹಾಗೂ ಮಲಬದ್ಧತೆ ನಿವಾರಕ ಔಷಧ 'ಡಲ್ಕೋಲಾಕ್ಸ್' ಕೂಡ ಸ್ಥಾನ ಪಡೆದಿದೆ. ಭಾರತದಲ್ಲಿ
ಇರಾಕ್ ನ ನೂತನ ರಾಷ್ಟ್ರಾಧ್ಯಕ್ಷರಾಗಿ ನಿಝಾರ್ ಅಮೆದಿ ಆಯ್ಕೆ
227 ಮತಗಳೊಂದಿಗೆ ಜಯ; ರಾಜಕೀಯ ಅಸ್ಥಿರತೆಗೆ ತೆರೆ
Summer Specail Train: ಮೈಸೂರಿನಿಂದ ಇಲ್ಲಿಗೆ ವಿಶೇಷ ಎಕ್ಸ್ಪ್ರೆಸ್ ರೈಲು, 3 ರಾಜ್ಯಗಳಿಗೆ ಅನುಕೂಲ
Summer Special Trains: ಶಾಲಾ ಮಕ್ಕಳಿಗೆ ಬೇಸಿಗೆ ರಜೆ ಈಗಾಗಲೇ ಆರಂಭವಾಗಿದೆ. ಮಕ್ಕಳು, ಕುಟುಂಬಸ್ಥರೊಂದಿಗೆ ಪ್ರಯಾಣ ಮಾಡುವವರ ಸಂಖ್ಯೆ ಹೆಚ್ಚಿರುತ್ತದೆ. ಈ ಕಾರಣಕ್ಕೆ ಬೇಸಿಗೆ ವಿಶೇಷ ರೈಲುಗಳನ್ನು ನೈಋತ್ಯ ರೈಲು ಆರಂಭಿಸಿದೆ. ಮೈಸೂರು-ದಿಬೂಗಡ ನಡುವೆ ವಿಶೇಷ ಎಕ್ಸ್ ಪ್ರೆಸ್ ಸಂಚಾರ ಮಾಡಲಿದ್ದು, ಇದರ ಮಾರ್ಗ, ನಿಲುಗಡೆ, ವೇಳಾಪಟ್ಟಿ ಮಾಹಿತಿ ಇಲ್ಲಿ ನೀಡಲಾಗಿದೆ. ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ಗಮನದಲ್ಲಿಟ್ಟುಕೊಂಡು,
ಒಂದೆಡೆ ತಾಂಡವವಾಡುತ್ತಿರುವ ನಿರುದ್ಯೋಗ, ಇನ್ನೊಂದೆಡೆ ಸರಕಾರಿ ಹುದ್ದೆ ಆಕಾಂಕ್ಷಿಗಳು ಚಾತಕ ಪಕ್ಷಿಯಂತೆ ಕಾಯುತ್ತಿರುವ ನೇಮಕಾತಿ ಪ್ರಕ್ರಿಯೆ. ಹೌದು ಪರೀಕ್ಷೆಗಳನ್ನು ಪಾಸ್ ಆದರೂ ಸಂದರ್ಶನದ ಹಂತದಲ್ಲಿ ವಿದ್ಯಾರ್ಥಿಗಳ ಭವಿಷ್ಯವೂ ನಿಲುಗಡೆ ಆಗಿದೆ.
ಸಂಭ್ರಮದ ವಿಷು ಹಬ್ಬಕ್ಕೆ ಕೇರಳದಾದ್ಯಂತ ಸಿದ್ಧತೆ: ಏನಿದರ ಮಹತ್ವ ಗೊತ್ತಾ?
ದೇವರ ನಾಡು ಕೇರಳದಲ್ಲಿ ಹಬ್ಬಗಳಿಗೆ ತನ್ನದೇ ಆದ ಮಹತ್ವವಿದೆ. ಕಾಲ ಎಷ್ಟೇ ಬದಲಾದರೂ ಹಬ್ಬಗಳ ಸಂಭ್ರಮ ಜನರಲ್ಲಿ ಭೇರೆ ಬೇರೆ ರೀತಿಯಾಗಿ ಮನೆಮಾಡಿದೆ. ಬಿತ್ತನೆಯ ಸಂದರ್ಭದಲ್ಲಿ ಬರುವ ವಿಷು ಹಬ್ಬದ ಮಹತ್ವಗಳೇನು, ಆಚರಣೆ ವೀಧಾನಗಳೇನು ಎಂದು ತಿಳಿಯಲು ಆಸಕ್ತಿಗೆ ಇಲ್ಲಿದೆ ಉತ್ತರ..
ದಾವಣಗೆರೆಯಲ್ಲಿ ಪಕ್ಷ ವಿರೋಧಿ ಚಟುವಟಿಕೆ ನಡೆದಿದೆ : ಯಾಸೀರ್ ಖಾನ್ ಪಠಾಣ್
ಹಾವೇರಿ : ʼದಾವಣಗೆರೆಯಲ್ಲಿ ಪಕ್ಷ ವಿರೋಧಿ ಚಟುವಟಿಕೆ ನಡೆದಿದೆ. ಷಡ್ಯಂತ್ರ ನಡೆದಿದ್ದು ನನ್ನ ಕಣ್ಣಿಗೂ ಕಂಡಿದೆ. ಈ ಬಗ್ಗೆ ಹೈಕಮಾಂಡ್ ವರದಿ ತರಿಸಿದೆʼ ಎಂದು ಶಿಗ್ಗಾಂವಿ ಶಾಸಕ ಯಾಸೀರ್ ಖಾನ್ ಪಠಾಣ್ ಹೇಳಿದ್ದಾರೆ. ಶನಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ʼಅಲ್ಪಸಂಖ್ಯಾತರು ವೋಟ್ ಹಾಕಬೇಡಿ ಎಂದು ಬೇರೆಯವರು ಅಭಿಯಾನ ನಡೆಸಿದ್ದರು. ಅದಕ್ಕೆ ವಿರುದ್ಧವಾಗಿ ಕಾಂಗ್ರೆಸ್ಗೆ ಮತ ಹಾಕಿ ಎಂದು ನಾವು ಮನವಿ ಮಾಡಿದ್ದೀವಿ. ನಮ್ಮ ಸಮುದಾಯ ಕಾಂಗ್ರೆಸ್ ಪಕ್ಷದ ಋಣ ತೀರಿಸಬೇಕು ಎಂದು ಕರೆ ಕೊಟ್ಟಿದ್ದೆ. ಪಕ್ಷ ವಿರೋಧಿ ಚಟುವಟಿಕೆ ಮಾಡಬಾರದು ಎಂಬುದು ನಮ್ಮ ನಿಲುವು. ಸಿದ್ದಾಂತದ ಮೇಲೆ ಹೋರಾಟ ಮುಂದುವರಿಯುತ್ತದೆ. ಉಪಚುನಾವಣೆಯಲ್ಲಿ ಸರಕಾರದ ಪ್ರತಿಷ್ಠೆ ಪ್ರಶ್ನೆ ಇದೆ ಎಂದು ಹೇಳಿದರು. ಜಬ್ಬಾರ್ ಅವರಿಗೆ ಟಿಕೆಟ್ ಕೇಳಿದ್ದು ನಮ್ಮ ದೊಡ್ಡ ತಪ್ಪು, ಪಕ್ಷ ಯಾರಿಗಾದರೂ ಟಿಕೆಟ್ ನೀಡಲಿ ಎಂದು ಕೇಳಬೇಕಿತ್ತು. ಸಭೆಯಲ್ಲಿ ಮಲ್ಲಣ್ಣ ಇಬ್ಬರ ಹೆಸರುಗಳನ್ನು ಪ್ರಸ್ತಾಪಿಸಿದ್ದರು. ಕಾಂಗ್ರೆಸ್ ಪಕ್ಷದ ಅಧಿಕಾರ ಅನುಭವಿಸಿ, ಪಕ್ಷ ವಿರೋಧಿ ಚಟುವಟಿಕೆ ಮಾಡಿದರೆ, ಹೆತ್ತತಾಯಿಗೆ ದೋಹ್ರ ಮಾಡಿದೆ ಹಾಗೆ. ಕಾಂಗ್ರೆಸ್ ಹೈಕಮಾಂಡ್ ಎಲ್ಲವನ್ನೂ ನೋಡುತ್ತಿದೆ ಎಂದು ತಿಳಿಸಿದರು.
ಒಬಿಸಿ ಪಟ್ಟಿಗೆ ಸೇರಲು ಕೊಡವರಿಗೆ ಅರ್ಹತೆಯಿದೆ : ಯದುವೀರ್ ಒಡೆಯರ್
ʼದಿವ್ಯ ಜೀವನ ಭವ್ಯ ಮಾನವʼ, ʼಕೂರ್ಗ್ ದ ಲ್ಯಾಂಡ್ ಆಫ್ ಜನರಲ್ಸ್ ಹಾಗೂ ಡಿವೈನ್ ಲೈಫ್ ಆಫ್ ಸಬ್ಲೈನ್ ಹ್ಯುಮಾನಿಟಿʼ ಕೃತಿಗಳ ಲೋಕಾರ್ಪಣೆ
ರಾಷ್ಟ್ರೀಯ ಪ್ರತಿಭಾನ್ವೇಷಣೆ ಕಾರ್ಯಕ್ರಮಕ್ಕೆ ಕೆಪಿಸಿಸಿಯಿಂದ ಚಾಲನೆ
ಬೆಂಗಳೂರು : ರಾಷ್ಟ್ರೀಯ ಪ್ರತಿಭಾನ್ವೇಷಣೆ ಕಾರ್ಯಕ್ರಮವನ್ನು ರಾಹುಲ್ ಗಾಂಧಿ ಮಾರ್ಗದರ್ಶನದ ಮೇರೆಗೆ ಪ್ರಾರಂಭಿಸಲಾಗಿದೆ. ಆ ಮೂಲಕ ಪಕ್ಷದ ವಕ್ತಾರರು, ಮಾಧ್ಯಮ ಚರ್ಚೆಯಲ್ಲಿ ಭಾಗವಹಿಸುವವರು, ಸಂಶೋಧಕರು ಹಾಗೂ ವಿಶ್ಲೇಷಕರ ಜೊತೆಗೆ ಪ್ರಚಾರ ಸಂಯೋಜಕರನ್ನು ಹೊರ ತೆಗೆಯುವುದೇ ಈ ಕಾರ್ಯಕ್ರಮದ ಉದ್ದೇಶ ಎಂದು ಪ್ರತಿಭಾನ್ವೇಷಣೆ ರಾಷ್ಟ್ರೀಯ ಸಂಯೋಜಕ ಹಾಗೂ ಮಾಜಿ ಶಾಸಕ ಹರಿಶೇಖರ್ ಗುಪ್ತ ತಿಳಿಸಿದ್ದಾರೆ. ಶನಿವಾರ ಇಲ್ಲಿನ ಕೆಪಿಸಿಸಿ ಕಚೇರಿಯಲ್ಲಿ ಏರ್ಪಡಿಸ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಎರಡೂ ಕ್ಷೇತ್ರಗಳ ಉಪಚುನಾವಣೆ ಕಾರಣಕ್ಕೆ ಕರ್ನಾಟಕದಲ್ಲಿ ತಡವಾಗಿ ಇದನ್ನು ಆರಂಭಿಸಲಾಗಿದೆ. ಒಟ್ಟು ಎರಡು ಹಂತದಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಮೊದಲಿಗೆ ಸ್ಥಳೀಯವಾಗಿ ಆಯ್ಕೆ ನಡೆಸಲಾಗುವುದು. ನಂತರ ರಾಜ್ಯಮಟ್ಟದಲ್ಲಿ ಆಯ್ಕೆ ನಡೆಸಲಾಗುವುದು. ಇದರಲ್ಲಿ ಭಾಗವಹಿಸಲು ಇಚ್ಚಿಸುವ ಪ್ರತಿಯೊಬ್ಬರೂ ಎಐಸಿಸಿ ಪೋರ್ಟಲ್ನಲ್ಲಿ ನೋಂದಣಿ ಮಾಡಿಸಿಕೊಳ್ಳಬೇಕು. ನಿಗದಿತ ಕ್ಯೂ ಆರ್ ಕೋಡ್ ಅನ್ನು ಸ್ಕ್ಯಾನ್ ಮಾಡಿದರೆ ಇಂಗ್ಲಿಷ್ ಹಾಗೂ ಕನ್ನಡದಲ್ಲಿ ಅರ್ಜಿಯು ತೆರೆದುಕೊಳ್ಳುವುದು ಎಂದರು. ಅರ್ಜಿಯಲ್ಲಿ ಕೇಳಿದ ಮಾಹಿತಿ ಹಾಗೂ ಮಾಧ್ಯಮ ಅನುಭವವನ್ನು ಭರ್ತಿ ಮಾಡಬೇಕು. ಸಮರ್ಥರು ಇರುವ ತಂಡವು ಅಭ್ಯರ್ಥಿಗಳನ್ನು ಆಯ್ಕೆ ಮಾಡಲಿದೆ. ಶಾರ್ಟ್ ಲಿಸ್ಟ್ ಆದ ಅಭ್ಯರ್ಥಿಗಳನ್ನು ಸ್ವತಃ ರಾಹುಲ್ ಗಾಂಧಿ ಸಂದರ್ಶನ ಮಾಡಲಿದ್ದಾರೆ. ಎಐಸಿಸಿಯ ಸಂಘಟನಾ ಸೃಜನ್ ಅಭಿಯಾನದ ಅಡಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಪಕ್ಷದ ಬೇರೆ ಬೇರೆ ವಿಭಾಗಗಳು ಇತರೇ ಕಾರ್ಯಕ್ರಮಗಳನ್ನು ಆಯೋಜಿಸಿದ್ದರೆ ಇದು ಮಾಧ್ಯಮ ವಿಭಾಗದ ವಿನೂತನ ಕಾರ್ಯಕ್ರಮವಾಗಿದೆ ಎಂದರು. ಕೆಪಿಸಿಸಿ ಮಾಧ್ಯಮ ವಿಭಾಗವು ಕ್ರಿಯಾಶೀಲವಾಗಿ ಕೆಲಸ ಮಾಡುತ್ತಿದೆ. ಇದರ ಜೊತೆಗೆ ಹೊಸ, ಅಲೋಚನೆಗಳು ಮಾಧ್ಯಮ ವಿಭಾಗಕ್ಕೆ ಬರಬೇಕು. ಈ ಕಾರಣಕ್ಕೆ ಯುವ ಜನತೆ ಈ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು. ಯುವಜನರಲ್ಲಿನ ಹೊಸ ದೃಷ್ಟಿಕೋನ, ಆಲೋಚನೆ ಪಕ್ಷದೊಳಗೆ ಹರಿಯಬೇಕಿದೆ. ಅದಕ್ಕೆ ಜಿಲ್ಲಾ, ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ವಿವರಿಸಿದರು. ಪರಿಷತ್ ಸದಸ್ಯ ರಮೇಶ್ಬಾಬು ಮಾತನಾಡಿ, ಕೇಂದ್ರ ಸಚಿವ ಎಚ್.ಡಿಕುಮಾರಸ್ವಾಮಿ, ನಮ್ಮ ಪಕ್ಷದ ಡಾ.ಯತೀಂದ್ರ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡುತ್ತಿದ್ದಾರೆ. ಜೆಡಿಎಸ್ 25ನೇ ವರ್ಷದ ಸಂಭ್ರಮವನ್ನ ಆಚರಿಸುತ್ತಿದ್ದಾರೆ. ಆದರೆ ಮೂಲವಾಗಿ ಜೆಡಿಎಸ್ ಪಕ್ಷ ಅವರಿಗೆ ಸೇರಿದ್ದಲ್ಲ. ಕರ್ನಾಟಕದಲ್ಲಿ ಜನತಾದಳ ಮೂಲ ಹಾಗೂ ಪರಿವಾರ ಬೇರೆಯಿದೆ ಎಂದು ಟೀಕಿಸಿದರು. ರಾಮಕೃಷ್ಣ ಹೆಗಡೆ, ಎಸ್.ಆರ್.ಬೊಮ್ಮಾಯಿ, ಜೆ.ಎಚ್.ಪಟೇಲ್ ಹಾಗೂ ಸಿದ್ದರಾಮಯ್ಯ ಅವರನ್ನು ಹೊರಗೆ ಹಾಕಿ ಆ ಪಕ್ಷವನ್ನು ಇಟ್ಟುಕೊಂಡಿದ್ದಾರೆ. ಕರ್ನಾಟಕದಲ್ಲಿ ದೇವೇಗೌಡರು ಮಾಡಿದ್ದು ಸಮಾಜವಾದಿ ಜನತಾಪಕ್ಷ. ಯಾವ ಕಾರಣಕ್ಕೆ ಈ ಪಕ್ಷದ ಬೋರ್ಡ್ ಅನ್ನು ತಿರುಗ-ಮುರುಗ ಮಾಡಿದರು ಎಂಬುದನ್ನು ಕುಮಾರಸ್ವಾಮಿ ಹೇಳಬೇಕು ಎಂದು ಅವರು ಆಗ್ರಹಿಸಿದರು. ಇವರಿಗೆ ಕರ್ನಾಟಕದ ಬಗ್ಗೆ ನಿಜಕ್ಕೂ ಕಾಳಜಿ ಇದ್ದರೆ ಇಲ್ಲಿ ಎಷ್ಟು ಕೈಗಾರಿಕಾ ಯೋಜನೆಗಳು ಬಾಕಿ ಉಳಿದಿವೆ ಅದನ್ನು ಕಾರ್ಯಗತಗೊಳಿಸುವ ಬಗ್ಗೆ ಆಲೋಚನೆ ಮಾಡಿ. ಅದನ್ನು ಬಿಟ್ಟು ಬೇಜವಾಬ್ದಾರಿ ಹೇಳಿಕೆ ಕೊಡುವುದು ನಿಲ್ಲಿಸಿ. ಅನಗತ್ಯ ಟೀಕೆಗಳು ನಿಮಗೆ ರಾಜಕೀಯ ಶಕ್ತಿ ನೀಡುವುದಿಲ್ಲ. ಪಲಾಯನವಾದ ನಿಮಗೆ ಬಲ ತುಂಬುವುದಿಲ್ಲ. ವಿಷಯಾಧಾರಿತವಾಗಿ, ಸೈದ್ದಾಂತಿಕವಾಗಿ ನೀವು ರಾಜಕೀಯ ಮಾಡಿ ಎಂದು ಅವರು ಹೇಳಿದರು.
ಕನ್ನಡ ಭಾಷೆ ಸ್ವಾಭಿಮಾನದ ಪ್ರತೀಕವಾಗಲಿ : ಬರಗೂರು ರಾಮಚಂದ್ರಪ್ಪ
ಕಡೂರು 21ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ
ಪತ್ರಕರ್ತ ಡಿ.ಮಹಾದೇವಪ್ಪಗೆ ʼಪಿ.ಲಂಕೇಶ್ ಪ್ರಶಸ್ತಿʼ
ಶಿವಮೊಗ್ಗ : ಶಿವಮೊಗ್ಗ ಪ್ರೆಸ್ ಟ್ರಸ್ಟ್ ವತಿಯಿಂದ ಎ.14ರಂದು ಬೆಳಗ್ಗೆ 10:30ಕ್ಕೆ ಆರ್ಟಿಒ ರಸ್ತೆಯಲ್ಲಿರುವ ಸರಕಾರಿ ನೌಕರರ ಭವನದಲ್ಲಿ 2026ನೇ ಸಾಲಿನ ಪಿ.ಲಂಕೇಶ್ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದ್ದು, ಈ ಬಾರಿಯ ಪ್ರಶಸ್ತಿಯನ್ನು ಹಿರಿಯ ಪತ್ರಕರ್ತ ಡಿ.ಮಹಾದೇವಪ್ಪ ಅವರಿಗೆ ಪ್ರದಾನ ಮಾಡಲಾಗುವುದು ಎಂದು ಪ್ರೆಸ್ ಟ್ರಸ್ಟ್ ಅಧ್ಯಕ್ಷ ಎನ್.ಮಂಜುನಾಥ್ ಹೇಳಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ, ಪ್ರಶಸ್ತಿ ಪ್ರದಾನ ಮಾಡಲಾಗುವುದು. ಕಾರ್ಯಕ್ರಮವನ್ನು ರಾಜ್ಯ ಮಾಹಿತಿ ಆಯೋಗದ ಆಯುಕ್ತರಾದ ಬಿ.ವೆಂಕಟ ಸಿಂಗ್ ಉದ್ಘಾಟಿಸಲಿದ್ದಾರೆ. ಚಿಂತಕ ಪ್ರೊ.ರಾಜೇಂದ್ರ ಚೆನ್ನಿ ಪ್ರಶಸ್ತಿ ಪ್ರದಾನ ಮಾಡಲಿದ್ದು, ಸಮಾರಂಭದ ಅಧ್ಯಕ್ಷತೆಯನ್ನು ಪ್ರೆಸ್ ಟ್ರಸ್ಟ್ ಅಧ್ಯಕ್ಷ ಎನ್. ಮಂಜುನಾಥ್ ವಹಿಸಲಿದ್ದಾರೆ. ಜಿಲ್ಲಾ ಕಾರ್ಯನಿರತ ಪತ್ರರ್ಕರ ಸಂಘದ ಅಧ್ಯಕ್ಷ ವೈದ್ಯನಾಥ್ ಯು.ಎಚ್. ಉಪಸ್ಥಿತರಿರುತ್ತಾರೆ ಎಂದರು. ಮೈಸೂರಿನ ಕೃಷ್ಣರಾಜನಗರ ತಾಲೂಕಿನ ಸೌತನಹಳ್ಳಿಯಲ್ಲಿ ಜನಿಸಿದ ಪತ್ರಕರ್ತ ಡಿ.ಮಹಾದೇವಪ್ಪ ಅವರು, ದಿ.ಪಟೇಲ್ ದೇವಪ್ಪ ಮತ್ತು ದಿ.ಶಿವಲಿಂಗಮ್ಮನವರ ಪುತ್ರರಾಗಿದ್ದಾರೆ. 1973ರಲ್ಲಿ ಮೈಸೂರು ವಿವಿಯಿಂದ ಪತ್ರಿಕೋದ್ಯಮ ವಿಷಯದಲ್ಲಿ ಎಂಎ ಪದವಿ ಪಡೆದಿದ್ದು, ಫಲಿತಾಂಶ ಬರುವುದಕ್ಕೆ ಮುಂಚಿತವಾಗಿಯೇ ಪತ್ರಕರ್ತ ವೃತ್ತಿಯನ್ನು ಬೆಂಗಳೂರಿನಲ್ಲಿ ಆರಂಭಿಸಿ, ಲೋಕವಾಣಿ, ವಿಶಾಲ ಕರ್ನಾಟಕ ಪತ್ರಿಕೆಗಳಲ್ಲಿ ವರದಿಗಾರರಾಗಿ ಕೆಲಸ ಮಾಡಿ, ಕನ್ನಡಪ್ರಭದಲ್ಲಿ ಎರಡುವರೆ ದಶಕಗಳಿಗೆ ಹೆಚ್ಚು ಕಾಲ ಪತ್ರಿಕಾ ವೃತ್ತಿನಲ್ಲಿ ಅನುಭವ ಪಡೆದಿದ್ದಾರೆ. ಅಲ್ಲದೆ ವಿಜಯ ಕರ್ನಾಟಕ ಪತ್ರಿಕೆಯ ಬ್ಯೂರೋಚೀಫ್ ಆಗಿ ಕಾರ್ಯನಿರ್ವಹಿಸಿ, ಪತ್ರಿಕೆಯ ಪ್ರದಾನ ಸಂಪಾದಕರಾಗಿದ್ದ ಕೆ.ಶ್ಯಾಮ್ ರಾವ್, ಖಾದ್ರಿಶಾಮಣ್ಣ, ರಾಮಕೃಷ್ಣಮೂರ್ತಿ, ವೈಎನ್ಕೆ ಮೊದಲಾದವರ ನಿಕಟವರ್ತಿಗಳಾಗಿದ್ದರು. ಈ ಪ್ರಶಸ್ತಿ 25 ಸಾವಿರ ರೂ. ಗಳ ನಗದು ಮತ್ತು ಪ್ರಶಸ್ತಿ ಪತ್ರವನ್ನು ಹೊಂದಿರುತ್ತದೆ. ಅಂದು ನಾಡಿನ ಅನೇಕ ಹಿರಿಯ ಪತ್ರಕರ್ತರು ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ ಎಂದರು. ಡಿ.ಮಹಾದೇವಪ್ಪಅವರಿಗೆ ಕರ್ನಾಟಕ ಮಾಧ್ಯಮ ಅಕಾಡಮಿ ಪ್ರಶಸ್ತಿ, ಬೆಂಗಳೂರು ಪ್ರೆಸ್ ಕ್ಲಬ್ ಪ್ರಶಸ್ತಿ, ಖಾದ್ರಿ ಶಾಮಣ್ಣ ಪ್ರಶಸ್ತಿ, ಬೆಂಗಳೂರು ವರದಿಗಾರರ ಕೂಟ ಪ್ರಶಸ್ತಿ, ರಾಮಕೃಷ್ಣ ರಾಷ್ಟ್ರೀಯ ಚಿಂತನಾವೇದಿಕೆ ಪ್ರಶಸ್ತಿ, ಮುಖ್ಯಪ್ರಾಣ ವಾಯು ಸಾಂಸ್ಕೃತಿಕ ಅಕಾಡಮಿ ಚಿತ್ರೋದ್ಯಮ ಪ್ರಶಸ್ತಿ, ಮೈಸೂರು ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ಕುವೆಂಪು ಟ್ರಸ್ಟ್ನ ಎಚ್.ಕೆ.ವೀರಣ್ಣಗೌಡ ಪತ್ರಿಕೋದ್ಯಮ ಪ್ರಶಸ್ತಿ, ಶಿವರಾತ್ರೇಶ್ವರ ಮಾಧ್ಯಮ ಪ್ರಶಸ್ತಿ, ಪತ್ರಿಕಾರಂಗದ ಹರಿಕಾರ ಟಿಎಸ್ಆರ್ ಪ್ರಶಸ್ತಿ ಲಭಿಸಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ನಾಗರಾಜ್ ನೇರಿಗೆ, ಚಂದ್ರಶೇಖರ್, ಹುಲಿಮನೆ ತಿಮ್ಮಪ್ಪ, ಸಂತೋಷ್ ಕಾಚಿನಕಟ್ಟೆ, ಗೋಪಾಲ್, ಜಿ.ಪದ್ಮನಾಭ್, ಗಜೇಂದ್ರಸ್ವಾಮಿ, ಗೋವಾ ಮೋಹನ್ ಇದ್ದರು.
Belagavi | ಡಿಜಿಟಲ್ ಅರೆಸ್ಟ್ ಮೂಲಕ 15.45 ಕೋಟಿ ರೂ. ವಂಚನೆ: ಇಬ್ಬರ ಬಂಧನ
ಬೆಳಗಾವಿ : ನಗರದಲ್ಲಿರುವ ಉದ್ಯಮಿಯೊಬ್ಬರನ್ನು ‘ಡಿಜಿಟಲ್ ಅರೆಸ್ಟ್’ ಮಾಡಿ 15.45 ಕೋಟಿ ರೂ. ವಂಚಿಸಿದ್ದ ಪ್ರಕರಣದಲ್ಲಿ ಇಬ್ಬರು ಆರೋಪಿಗಳನ್ನು ಬೆಳಗಾವಿ ಸೈಬರ್ ಕ್ರೈಂ ಪೊಲೀಸರು ಬಂಧಿಸಿದ್ದಾರೆ. ಉದ್ಯಮಿ ಅಜಿತ್ ಗೋಪಾಲಕೃಷ್ಣ ಅವರನ್ನು ಫೆಬ್ರವರಿ 7ರಿಂದ ಮಾರ್ಚ್ 9ರವರೆಗೆ ವಂಚಕರು ಡಿಜಿಟಲ್ ಅರೆಸ್ಟ್ ಮಾಡಿದ್ದರು. ಈ ಅವಧಿಯಲ್ಲಿ ಹಂತ ಹಂತವಾಗಿ ಅವರ ಬ್ಯಾಂಕ್ ಖಾತೆಯಿಂದ ಒಟ್ಟು 15.45 ಕೋಟಿ ರೂ. ವರ್ಗಾಯಿಸಿಕೊಂಡಿದ್ದರು. ಈ ಕುರಿತು ಬೆಳಗಾವಿ ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ತನಿಖೆ ಕೈಗೊಂಡ ಸೈಬರ್ ಕಮಾಂಡ್ ಅಧಿಕಾರಿಗಳು ವೆಂಕದೋತ ಶರತ್ ನಾಯಕ್ ಹಾಗೂ ದೇಗಾವತ ಶ್ರೀಪಾದ ನಾಯಕ್ ಎಂಬ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿಗಳ ಬ್ಯಾಂಕ್ ಖಾತೆಗಳಿಂದ ಸುಮಾರು 2 ಕೋಟಿ ರೂ.ಜಪ್ತಿ ಮಾಡಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳಗಾವಿ ಸೈಬರ್ ಕ್ರೈಂ ಪೊಲೀಸರು ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.
IPL 2026 | ಸ್ಯಾಮ್ಸನ್ ಶತಕ, ಆಯುಷ್ ಅರ್ಧಶತಕ; ಕೊನೆಗೂ ಗೆಲುವಿನ ಖಾತೆ ತೆರೆದ CSK
ಚೆನ್ನೈ, ಎ.11: ಆರಂಭಿಕ ಆಟಗಾರ ಸಂಜು ಸ್ಯಾಮ್ಸನ್ (ಔಟಾಗದೆ 115, 56 ಎಸೆತ, 15 ಬೌಂಡರಿ, 4 ಸಿಕ್ಸರ್) ಅವರ ಶತಕ, ಆಯುಷ್ ಮ್ಹಾತ್ರೆ ಅವರ ಅರ್ಧಶತಕ (59 ರನ್, 36 ಎಸೆತ, 3 ಬೌಂಡರಿ, 4 ಸಿಕ್ಸರ್) ಹಾಗೂ ಜೇಮಿ ಓವರ್ಟನ್ (4-18) ಅವರ ಅಮೋಘ ಬೌಲಿಂಗ್ ನೆರವಿನಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು 23 ರನ್ಗಳ ಅಂತರದಿಂದ ಮಣಿಸಿದೆ. ಈ ಮೂಲಕ ಈ ವರ್ಷದ ಐಪಿಎಲ್ನಲ್ಲಿ ಸಿಎಸ್ಕೆ ಕೊನೆಗೂ ಗೆಲುವಿನ ಖಾತೆ ತೆರೆದಿದೆ. ಶನಿವಾರ ನಡೆದ ಐಪಿಎಲ್ ಟಿ-20 ಟೂರ್ನಿಯ 18ನೇ ಪಂದ್ಯದಲ್ಲಿ ಡೆಲ್ಲಿ ತಂಡದ ನಾಯಕ ಅಕ್ಷರ್ ಪಟೇಲ್ ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡರು. ಬ್ಯಾಟಿಂಗ್ ಗೆ ಇಳಿದ ಸಿಎಸ್ಕೆ ನಿಗದಿತ 20 ಓವರ್ಗಳಲ್ಲಿ 2 ವಿಕೆಟ್ ನಷ್ಟಕ್ಕೆ 212 ರನ್ ಗಳಿಸಿತು. ಗೆಲ್ಲಲು 213 ರನ್ ಗುರಿ ಪಡೆದಿದ್ದ ಡೆಲ್ಲಿ ತಂಡವು ಟ್ರಿಸ್ಟನ್ ಸ್ಟಬ್ಸ್ (60 ರನ್, 38 ಎಸೆತ, 4 ಬೌಂಡರಿ, 3 ಸಿಕ್ಸರ್), ಪಥುಮ್ ನಿಸ್ಸಾಂಕ (41 ರನ್, 24 ಎಸೆತ, 5 ಬೌಂಡರಿ, 2 ಸಿಕ್ಸರ್) ಅವರ ಹೋರಾಟದ ಹೊರತಾಗಿಯೂ 20 ಓವರ್ಗಳಲ್ಲಿ 189 ರನ್ ಗಳಿಸಿ ಆಲೌಟ್ ಆಯಿತು. ಕೆ.ಎಲ್. ರಾಹುಲ್ (18), ಸಮೀರ್ ರಿಝ್ವಿ (6), ಅಕ್ಷರ್ ಪಟೇಲ್ (1), ಡೇವಿಡ್ ಮಿಲ್ಲರ್ (17) ಹಾಗೂ ಅಶುತೋಶ್ ಶರ್ಮಾ (19) ನಿರೀಕ್ಷಿತ ಪ್ರದರ್ಶನ ನೀಡಲಿಲ್ಲ. ಸಿಎಸ್ಕೆ ಪರ ಓವರ್ಟನ್ ಯಶಸ್ವಿ ಪ್ರದರ್ಶನ ನೀಡಿದರೆ, ಅನ್ಶುಲ್ ಕಾಂಬೋಜ್ (3-35) ಮೂರು ವಿಕೆಟ್ ಪಡೆದರು. ಇದಕ್ಕೂ ಮೊದಲು ವಿಕೆಟ್ ಕೀಪರ್ ಸ್ಯಾಮ್ಸನ್ ಈ ವರ್ಷದ ಟೂರ್ನಿಯಲ್ಲಿ ಕೊನೆಗೂ ತನ್ನ ಲಯಕ್ಕೆ ಮರಳಿದರು. 52 ಎಸೆತಗಳಲ್ಲಿ 14 ಬೌಂಡರಿ ಹಾಗೂ 3 ಸಿಕ್ಸರ್ ಗಳ ನೆರವಿನಿಂದ ಐಪಿಎಲ್ ನಲ್ಲಿ ತನ್ನ ನಾಲ್ಕನೇ ಶತಕ ಪೂರೈಸಿದರು. ಸ್ಯಾಮ್ಸನ್ ಹಿಂದಿನ ಮೂರು ಇನಿಂಗ್ಸ್ಗಳಲ್ಲಿ ಎರಡಂಕೆಯ ದಾಟುವಲ್ಲಿ ವಿಫಲರಾಗಿದ್ದರು. ನಾಲ್ಕನೇ ಪಂದ್ಯದಲ್ಲಿ ತಮ್ಮ ಸ್ಥಿರ ಪ್ರದರ್ಶನವನ್ನು ನೆನಪಿಸಿದರು. ಸ್ಯಾಮ್ಸನ್ ಜೊತೆ ಮೊದಲ ವಿಕೆಟ್ಗೆ 62 ರನ್ ಸೇರಿಸಿದ ನಾಯಕ ಋತುರಾಜ್ ಗಾಯಕ್ವಾಡ್ (15) ಪವರ್ಪ್ಲೇ ನಂತರ ಔಟಾದರು. ನಂತರ ಸ್ಯಾಮ್ಸನ್ ಅವರು ಯುವ ಆಟಗಾರ ಆಯುಷ್ ಮ್ಹಾತ್ರೆ ಅವರೊಂದಿಗೆ ನಿರ್ಣಾಯಕ 113 ರನ್ ಜೊತೆಯಾಟ ನಡೆಸಿದರು. 52 ರನ್ ಗಳಿಸಿದ್ದಾಗ ಜೀವದಾನ ಪಡೆದ ಸ್ಯಾಮ್ಸನ್ ಇನಿಂಗ್ಸ್ನುದ್ದಕ್ಕೂ ಹಿಡಿತ ಸಾಧಿಸಿದರು. ವೇಗ ಹಾಗೂ ಸ್ಪಿನ್ ಬೌಲಿಂಗ್ ಎರಡನ್ನೂ ಸಮರ್ಥವಾಗಿ ಎದುರಿಸಿದರು. ಸ್ಯಾಮ್ಸನ್ 400ನೇ ಸಿಕ್ಸರ್: ಇದೇ ವೇಳೆ ಸ್ಯಾಮ್ಸನ್ ಅವರು ಟಿ-20 ಕ್ರಿಕೆಟ್ನಲ್ಲಿ 400ನೇ ಸಿಕ್ಸರ್ ಸಿಡಿಸಿದರು. ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಹಾಗೂ ಸೂರ್ಯಕುಮಾರ್ ಯಾದವ್ ನಂತರ ಈ ಸಾಧನೆ ಮಾಡಿದ ಭಾರತದ ನಾಲ್ಕನೇ ಬ್ಯಾಟರ್ ಎನಿಸಿಕೊಂಡರು. ಸ್ಯಾಮ್ಸನ್ ಅವರು ಡೆಲ್ಲಿ ವಿರುದ್ಧ ಶತಕ ಗಳಿಸಿದ ಚೆನ್ನೈನ ಎರಡನೇ ಬ್ಯಾಟರ್ ಎನಿಸಿಕೊಂಡರು. 2012ರಲ್ಲಿ ಮುರಳಿ ವಿಜಯ್ ಡೆಲ್ಲಿ ವಿರುದ್ಧ 113 ರನ್ ಗಳಿಸಿದ್ದರು. ಸಂಕ್ಷಿಪ್ತ ಸ್ಕೋರ್ ಚೆನ್ನೈ ಸೂಪರ್ ಕಿಂಗ್ಸ್: 20 ಓವರ್ಗಳಲ್ಲಿ 212/2 (ಸಂಜು ಸ್ಯಾಮ್ಸನ್ ಔಟಾಗದೆ 115, ಆಯುಷ್ ಮ್ಹಾತ್ರೆ 59, ಶಿವಂ ದುಬೆ ಔಟಾಗದೆ 20) ಡೆಲ್ಲಿ ಕ್ಯಾಪಿಟಲ್ಸ್: 20 ಓವರ್ಗಳಲ್ಲಿ 189 ರನ್ಗೆ ಆಲೌಟ್ (ಟ್ರಿಸ್ಟನ್ ಸ್ಟಬ್ಸ್ 60, ಪಥುಮ್ ನಿಸ್ಸಾಂಕ 41, ಓವರ್ಟನ್ 4-18, ಅನ್ಶುಲ್ ಕಾಂಬೋಜ್ 3-35)
ಧಾರವಾಡ : ಧಾರವಾಡ ಯೂತ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಫೈರೋಝ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಅನುಮಾನಾಸ್ಪದ ವ್ಯಕ್ತಿಗಳನ್ನು ವಶಕ್ಕೆ ಪಡೆದಿದ್ದು ಮಾಹಿತಿಯನ್ನು ಕಲೆಹಾಕುತ್ತಿದ್ದೇವೆ ಎಂದು ಹು-ಧಾ ನಗರ ಪೊಲೀಸ್ ಕಮಿಷನರ್ಎನ್. ಶಶಿಕುಮಾರ್ ಮಾಹಿತಿ ನೀಡಿದ್ದಾರೆ. ಈ ಸಂಬಂಧ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹತ್ಯೆ ಮಾಡಿರುವ ಆರೋಪಿಗಳು ಫೈರೋಝ್ನ ಸ್ನೇಹಿತರು ಎಂದು ತಿಳಿದುಬಂದಿದ್ದು, ಎಲ್ಲರೂ ಕೂಡ ಒಂದೇ ಪಕ್ಷದಲ್ಲಿ ಗುರುತಿಸಿಕೊಂಡಿದ್ದವರು. ಆದರೆ ಇತ್ತೀಚೆಗೆ ಫೈರೋಝ್ ಮತ್ತು ಆರೋಪಿಗಳಿಗೆ ವೈಮನಸ್ಸು ಬೆಳೆದಿತ್ತು ಎನ್ನುವ ಮಾಹಿತಿ ನಮಗೆ ದೊರೆತಿದ್ದು, ಕೊಲೆ ನಡೆದಿರುವ ಮನೆಯ ಸುತ್ತಮುತ್ತಲಿನ ಸಿಸಿ ಕ್ಯಾಮರಾಗಳಲ್ಲಿ ಸೆರೆಯಾಗಿರುವ ದೃಶ್ಯಗಳ ಆಧಾರದ ಮೇಲೆ ಆರೋಪಿಗಳನ್ನು ಬಂಧಿಸುತ್ತೇವೆ ಎಂದು ತಿಳಿಸಿದ್ದಾರೆ.
IPL 2026- ಸೀಸನ್ ನ ಮೊದಲ ಶತಕವೀರ ಸಂಜು ಸ್ಯಾಮ್ಸನ್; ಕೊನೆಗೂ ಚೆನ್ನೈ ಸೂಪರ್ ಕಿಂಗ್ಸ್ ಬಳಗಕ್ಕೆ ಮೊದಲ ಗೆಲುವಿನ ಸವಿ
ಮೊದಲ ಮೂರು ಪಂದ್ಯಗಳಲ್ಲಿ ಕಳಪೆ ಪ್ರದರ್ಶನ ನೀಡಿದ್ದ ಸಂಜು ಸ್ಯಾಮ್ಸನ್ ಅವರು ಸೀಸನ್ ನ ಮೊದಲ ಶತಕ ಬಾರಿಸುವುದರೊಂದಿಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡ ಸಹ ಸೀಸನ್ ನ ಮೊದಲ ಜಯ ದಾಖಲಿಸುವಲ್ಲಿ ಸಫಲವಾಗಿದೆ. ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 23 ರನ್ ಗಳ ಜಯ ದಾಖಲಿಸುವ ಮೂಲಕ ಯಲ್ಲಿ ಸಹ ತನ್ನ ಖಾತೆಯನ್ನು ತೆರೆಯುವಲ್ಲಿ ಸಫಲವಾಗಿದೆ. ಚೆನ್ನೈನ ಚೆಪಾಕ್ ಕ್ರೀಡಾಂಗಣದಲ್ಲಿ ಏಪ್ರಿಲ್ 11ರ ಶನಿವಾರದಂದು ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್ ನಿಗದಿತ 20 ಓವರ್ ಗಳಲ್ಲಿ 2 ವಿಕೆಟ್ ನಷ್ಟಕ್ಕೆ 212 ರನ್ ಕಲೆಹಾಕಿತು. ಇದಕ್ಕೆ ಉತ್ತರವಾಗಿ ಡೆಲ್ಲಿ ಕ್ಯಾಪಿಟಲ್ಸ್ ತಂಡ 20 ಓವರ್ ಗಳಲ್ಲಿ 189 ರನ್ ಗಳಿಗೆ ಆಲೌಟ್ ಆಯಿತು.()ಡೆಲ್ಲಿ ಕ್ಯಾಪಿಟಲ್ಸ್ ಪರವಾಗಿ ಆರಂಭಿಕ ಬ್ಯಾಟರ್ ಪಥುಮ್ ನಿಸ್ಸಾಂಕಾ(24 ಎಸೆತದಲ್ಲಿ 41 ರನ್) ಮತ್ತು ಮಧ್ಯಮ ಕ್ರಮಾಂಕದಲ್ಲಿ ತ್ರಿಸ್ಟನ್ ಸ್ಟಬ್ಸ್ (38 ಎಸೆತದಲ್ಲಿ 60 ರನ್) ಉತ್ತಮ ಆಟ ಪ್ರದರ್ಶಿಸಿದರು. ಆದರೆ ಉಳಿದ ಬ್ಯಾಟರ್ ಗಳಿಂದ ಉತ್ತಮ ಕೊಡುಗೆ ಬಾರದ ಕಾರಣ ತಂಡ ಅಂತಿಮವಾಗಿ ಸೋಲೊಪ್ಪಿಕೊಳ್ಳಲಾಯಿತು. ಸೆಟ್ ಆಗಿದ್ದ ಕನ್ನಡಿಗ ಕೆಎಲ್ ರಾಹುಲ್ ಅವರು ಖಲೀಲ್ ಅಹ್ಮದ್ ಅವರ ಬೌಲಿಂಗ್ ನಲ್ಲಿ ಕೆಟ್ಟ ಹೊಡೆತಕ್ಕೆ ಕೈಹಾಕಿ ವಿಕೆಟ್ ಒಪ್ಪಿಸಿದರು. ಚೆನ್ನೈ ಪರವಾಗಿ ಜಾಮಿ ಓವರ್ಟನ್ 4 ವಿಕೆಟ್, ಅನ್ಶುಲ್ ಕಾಂಬೋಜ್ 3 ವಿಕೆಟ್ ಪಡೆದರು. ಖಲೀಲ್ ಅಹ್ಮದ್, ಗುರ್ಜನ್ ಪ್ರೀತ್ ಸಿಂಗ್ ಮತ್ತು ನೂರ್ ಅಹ್ಮದ್ ತಲಾ ಒಂದು ವಿಕೆಟ್ ಪಡೆದರು. ಸಂಜು ಸ್ಯಾಮ್ಸನ್ ಬಿರುಸಿನ ಶತಕ ಇದಕ್ಕೂ ಮೊದಲು ಟಾಸ್ ಸೋತು ಬ್ಯಾಟಿಂಗ್ ಗೆ ಇಳಿಸಲ್ಪಟ್ಟ ಚೆನ್ನೈ ತಂಡಕ್ಕೆ ಸಂಜು ಸ್ಯಾಮ್ಸನ್ ಮತ್ತು ನಾಯಕ ಋತುರಾಜ್ ಗಾಯಕ್ವಾಡ್(18 ಎಸೆತದಲ್ಲಿ 15 ರನ್) ಅವರು ಎಚ್ಚರಿಕೆಯ ಆರಂಭ ನೀಡಿದರು. ಪವರ್ ಪ್ಲೇನಲ್ಲಿ ಸಂಜು ಸ್ಯಾಮ್ಸನ್ ವೇಗವಾಗಿ ಆಡಿದ್ದರಿಂದ ಈ ಜೋಡಿ 61 ರನ್ ಬಾಚುತ್ತದೆ. ಪವರ್ ಪ್ಲೇ ಮುಗಿದೊಡನೆ ಋತುರಾಜ್ ವಿಕೆಟ್ ಪತನವಾಗುತ್ತದೆ. ಇದಾದ ಬಳಿಕ ಆಯುಷ್ ಮ್ಹಾತ್ರೆ ಅವರನ್ನು ಸೇರಿಕೊಂಡ ಸಂಜು ಸ್ಯಾಮ್ಸನ್ ಅವರು ಡೆಲ್ಲಿ ಬೌಲರ್ ಗಳನ್ನು ಗೋಳಾಡಿಸುತ್ತಾರೆ. ಎಷ್ಟೇ ಪ್ರಯತ್ನಪಟ್ಟರೂ ಈ ಜೋಡಿಯನ್ನು ಮುರಿಯಲು ಎದುರಾಳಿ ತಂಡಕ್ಕೆ ಸಾಧ್ಯವಾಗುವುದಿಲ್ಲ. 11 ಓವರ್ ಮುಗಿಯುವುದರೊಳಗಾಗಿ ತಂಡ ಮೊತ್ತವನ್ನು 100ರ ಗಡಿ ದಾಟಿಸುತ್ತದೆ ಈ ಜೋಡಿ. ಅದಕ್ಕೂ ಮೊದಲು ಸಂಜು ಸ್ಯಾಮ್ಸನ್ ಅವರು 26 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಆದರಲ್ಲಿ 9 ಬೌಂಡರಿಗಳಿದ್ದವು. ಆದರೆ ಆವರೆಗೂ ಒಂದೇ ಒಂದು ಸಿಕ್ಸರ್ ಅವರು ಸಿಡಿಸಿರಲಿಲ್ಲ. ಇಜಾದ ಬಳಿಕ ಆಯುಷ್ ಮ್ಹಾತ್ರೆ ಅವರು 27 ಎಸೆತದಲ್ಲಿ ಅರ್ಧಶತಕ ಪೂರೈಸಿದರು. 14.3 ಓವರ್ ಗಳಲ್ಲಿ ತಂಡದ ಮೊತ್ತವನ್ನು 150ಕ್ಕೆ ತಲುಪಿಸುತ್ತಾರೆ. ತಂಡದ ಮೊತ್ತ 175 ಆಗಿದ್ದಾಗ ಆಯುಷ್ ಅವರು ರಿಟೈರ್ಡ್ ಔಟ್ ಆಗುವ ನಿರ್ಧಾರಕ್ಕೆ ಬಂದು ಅವರ ಜಾಗಕ್ಕೆ ಶಿವಂ ದುಬೆ ಅವರು ಬರುತ್ತಾರೆ. ಇದಕ್ಕೂ ಮೊದಲು ಆಯುಷ್ ಅವರು 36 ಎಸೆತದಲ್ಲಿ 3 ಬೌಂಡರಿ ಮತ್ತು 4 ಸಿಕ್ಸರ್ ಗಳನ್ನು ಒಳಗೊಂಡ 59 ರನ್ ಗಳಿಸಿದ್ದರು. ಬಳಿಕ ಸಂಜು ಸ್ಯಾಮ್ಸನ್ ಅವರು ಕೇವಲ 52 ಎಸೆತಗಳಲ್ಲಿ ತಮ್ಮಶತಕವನ್ನು ಪೂರೈಸಿಕೊಳ್ಳುತ್ತಾರೆ. ಅದರಲ್ಲಿ 14 ಬೌಂಡರಿ ಮತ್ತು 3 ಸಿಕ್ಸರ್ ಗಳಿರುತ್ತಾರೆ. ಐಪಿಎಲ್ ನಲ್ಲಿ ಇದು ಅವರ 4ನೇ ಶತಕವಾಗಿದೆ. ಅಂತಿಮವಾಗಿ ಅವರು 56 ಎಸೆತಗಳಲ್ಲಿ 15 ಬೌಂಡರಿ ಮತ್ತು 4 ಸಿಕ್ಸರ್ ಗಳನ್ನೊಳಗೊಂಡ 115 ರನ್ ಬಾರಿಸಿ ಅಜೇಯರಾಗಿ ಉಳಿಯುತ್ತಾರೆ. ಮತ್ತೊಂದು ತುದಿಯಲ್ಲಿ ಶಿವಂ ದುಬೆಯಲ್ಲಿ 10 ಎಸೆತಗಳಲ್ಲಿ 2 ಬೌಂಡರಿ ಮತ್ತು 1 ಸಿಕ್ಸರ್ ಅನ್ನು ಒಳಗೊಂಡ 20 ರನ್ ಗಳಿಸಿ ನಾಟೌಟ್ ಆಗಿ ಉಳಿಯುತ್ತಾರೆ. ಸಂಕ್ಷಿಪ್ತ ಸ್ಕೋರ್ ಚೆನ್ನೈ ಸೂಪರ್ ಕಿಂಗ್ಸ್ 20 ಓವರ್ ಗಳಲ್ಲಿ 212/2, ಸಂಜು ಸ್ಯಾಮ್ಸನ್ ಅಜೇಯ 115(56), ಆಯುಷ್ ಮ್ಹಾತ್ರೆ 59(36), ಶಿವಂ ದುಬೆ ನಾಟೌಟ್ 20(10), ಅಕ್ಷರ್ ಪಟೇಲ್ 39ಕ್ಕೆ 1. ಡೆಲ್ಲಿ ಕ್ಯಾಪಿಟಲ್ಸ್
ಫೆ. 13ರಂದೇ ಆರಿಫ್ ಹತ್ಯೆಗೆ ಯತ್ನ ನಡೆದಿತ್ತು: ಪೊಲೀಸರ ತನಿಖೆಯಲ್ಲಿ ಬಹಿರಂಗ
ಮಂಗಳೂರು, ಎ.11: ರೌಡಿ ಶೀಟರ್ ಕಿನ್ಯ ಅಜ್ಜಿನಡ್ಕ ನಿವಾಸಿ ಆರೀಫ್ ಹತ್ಯೆಗೆ ಆರೋಪಿಗಳು ಫೆಬ್ರವರಿ 13ರಂದೇ ಮೊದಲ ಯತ್ನ ನಡೆಸಿದ್ದರು ಎಂಬ ಆಘಾತಕಾರಿ ವಿಷಯ ಪೊಲೀಸ್ ವಿಚಾರಣೆಯಿಂದ ಬೆಳಕಿಗೆ ಬಂದಿದೆ. ಫೆಬ್ರವರಿ 13ರಂದು ಬೆಳ್ಳಂಬೆಳಿಗ್ಗೆ ಆರೋಪಿಗಳು ಆರಿಫ್ನನ್ನು ಹಿಂಬಾಲಿಸಿದ್ದರು. ಆತನನ್ನು ಕೊಲೆ ಮಾಡುವ ಉದ್ದೇಶದಿಂದಲೇ ಹೊಂಚು ಹಾಕಿದ್ದರು. ಆದರೆ ಆರಿಫ್ನನ್ನು ಹಿಂಬಾಲಿಸುತ್ತಿದ್ದ ಸಂದರ್ಭದಲ್ಲಿ ಕೆಲವು ಅನಿರೀಕ್ಷಿತ ಬೆಳವಣಿಗೆಗಳು ನಡೆದ ಕಾರಣ, ಅಂದು ದಾಳಿ ನಡೆಸಲು ಆರೋಪಿಗಳಿಗೆ ಸಾಧ್ಯವಾಗಿರಲಿಲ್ಲ ಎಂದು ತಿಳಿದು ಬಂದಿದೆ. ಬಳಿಕ ಮಾ.27ರಂದು ಬೆಳಗ್ಗೆ ದಕ್ಕೆ ಮೀನು ಮಾರುಕಟ್ಟೆಗೆ ಬೈಕ್ನಲ್ಲಿ ತೆರಳುತ್ತಿದ್ದ ಆರೀಫ್ನನ್ನು ತೊಕ್ಕೊಟ್ಟು ಫ್ಲೈ ಓವರ್ ಬಳಿ ಅಡ್ಡಗಟ್ಟಿ ಮಾರಕಾಸ್ತ್ರಗಳಿಂದ ಕೊಚ್ಚಿ ಹತ್ಯೆಗೈದು ಆರೋಪಿಗಳು ಪರಾರಿಯಾಗಿದ್ದರು. ಹೊಸಬರ ಕೈವಾಡ: ಮೊದಲ ಪ್ರಯತ್ನದಲ್ಲಿ, ಈಗಾಗಲೇ ಬಂಧಿತರಾಗಿರುವ ಆರೋಪಿಗಳಲ್ಲದೆ ಇನ್ನೂ ಕೆಲವರು ಭಾಗಿಯಾಗಿದ್ದಾರೆ ಎಂಬ ಮಾಹಿತಿ ಪೊಲೀಸ್ ತನಿಖೆಯಿಂದ ಲಭ್ಯವಾಗಿದೆ. ಮೊದಲ ಪ್ರಯತ್ನದಲ್ಲಿ ಭಾಗಿಯಾದ ಇತರ ಆರೋಪಿಗಳ ಬಗ್ಗೆ ಖಚಿತ ಮಾಹಿತಿ ಸಿಕ್ಕಿದೆ. ಅವರನ್ನು ಶೀಘ್ರ ವಶಕ್ಕೆ ಪಡೆಯಲಾಗುವುದು. ಕೊಲೆ ಪ್ರಕರಣದ ಆರೋಪಿಗಳಾದ ರಿಫಾತ್ ,ಜುಟ್ಟು ಅಶ್ಫಾಕ್, ಖಲೀಲ್, ಶಾಕಿರ್, ಇರ್ಫಾನ್ , ರಿಝ್ವಾನ್ ಹಾಗೂ ಇವರಿಗೆ ಕೊಲೆಕೃತ್ಯಕ್ಕೆ ಸಹಕರಿಸಿದ ಇರ್ಷಾದ್ ಎಂಬವರನ್ನು ಈಗಾಗಲೇ ಬಂಧಿಸಲಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದಾರೆ. ಎರಡನೇ ದಾಳಿಯಲ್ಲಿ ಭಾಗಿಯಾದವರು ಮತ್ತು ಮೊದಲ ಸಂಚಿನಲ್ಲಿ ಸಾಥ್ ನೀಡಿದವರ ನಡುವಿನ ಸಂಪರ್ಕದ ಬಗ್ಗೆ ಹೆಚ್ಚಿನ ತನಿಖೆ ನಡೆಸಲಾಗುತ್ತದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ.
Vijay: ಇದು ತಲೆಮಾರಿನ ಬದಲಾವಣೆಗಾಗಿ ನಡೆಯುತ್ತಿರುವ ಚುನಾವಣೆ: ಕಾರ್ಯಕರ್ತರಿಗೆ ದಳಪತಿ ವಿಜಯ್ ವಿಶೇಷ ಕರೆ
ಚೆನ್ನೈ: ಇತಿಹಾಸವು ತನ್ನ ಗರಿಮೆಯ ಮಾಲೆಗಳೊಂದಿಗೆ ಮತ್ತೆ ಮರಳುತ್ತಿದೆ. ಈ ಚುನಾವಣೆ ಕೇವಲ ನಮಗಾಗಿ ಮಾತ್ರವಲ್ಲ, ಬದಲಿಗೆ ತಮಿಳುನಾಡಿನ ದೊಡ್ಡ ಬದಲಾವಣೆಗಾಗಿ ಮತ್ತು ಮುಂದಿನ ತಲೆಮಾರಿನ ಭವಿಷ್ಯಕ್ಕಾಗಿ ನಡೆಯುತ್ತಿರುವ ಮಹತ್ವದ ಸಮರ ಎಂದು 'ತಮಿಳಗ ವೆಟ್ರಿ ಕಳಗಂ' (TVK) ಅಧ್ಯಕ್ಷ, ನಟ ದಳಪತಿ ವಿಜಯ್ ಹೇಳಿದ್ದಾರೆ. ಕಾರ್ಯಕರ್ತರಿಗೆ ಸ್ಫೂರ್ತಿದಾಯಕ ಪತ್ರ ತಮಿಳುನಾಡು ವಿಧಾನಸಭಾ ಚುನಾವಣೆಯ ಮತದಾನದ ದಿನಾಂಕ
Hubballi | ಕಡಿಮೆ ಫಲಿತಾಂಶ: ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಆತ್ಮಹತ್ಯೆ
ಹುಬ್ಬಳ್ಳಿ : ದ್ವಿತೀಯ ಪಿಯುಸಿಯಲ್ಲಿ ನಿರೀಕ್ಷಿತ ಫಲಿತಾಂಶ ಬಾರದ ಹಿನ್ನೆಲೆಯಲ್ಲಿ ನೇಣು ಬಿಗಿದುಕೊಂಡು ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹುಬ್ಬಳ್ಳಿ ಉಣಕಲ್ನ ಸಿದ್ಧಕಲ್ಯಾಣ ನಗರದಲ್ಲಿ ನಡೆದಿರುವುದಾಗಿ ವರದಿಯಾಗಿದೆ. ಹುಬ್ಬಳ್ಳಿ ವಿದ್ಯಾನಗರದ ಕನಕದಾಸ ಕಾಲೇಜಿನ ಶ್ರಾವಣಿ ಮಾರುತಿ ಕಾಳೆ(18) ಮೃತಪಟ್ಟ ವಿದ್ಯಾರ್ಥಿನಿ. ಶ್ರಾವಣಿ ಈ ಬಾರಿಯ ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದಲ್ಲಿ ಶೇ.71 ಫಲಿತಾಂಶ ಪಡೆದಿದ್ದು, ಶೇ.100 ಫಲಿತಾಂಶ ತೆಗೆದುಕೊಳ್ಳುವುದಾಗಿ ಹೇಳಿದ್ದಳು ಎನ್ನಲಾಗಿದೆ. ತಾನು ನಿರೀಕ್ಷೆ ಮಾಡಿದ ಫಲಿತಾಂಶ ಬಾರದ ಹಿನ್ನೆಲೆ ಮನನೊಂದು ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ತಿಳಿದು ಬಂದಿದೆ. ಶ್ರಾವಣಿ ತುಂಬಾ ಬುದ್ಧಿವಂತೆಯಾಗಿದ್ದಳು. ತಂದೆ ಆಟೊ ಓಡಿಸಿ ಜೀವನ ನಡೆಸುತ್ತಾರೆ. ಮನೆಯಲ್ಲಿ ಓದಲು ಆಗುವುದಿಲ್ಲ ಎಂದು ಅಜ್ಜಿ ತಾತನ ಮನೆಯಲ್ಲಿ ಓದುತ್ತಿದ್ದಳು. ಆಕೆ ದ್ವಿತೀಯ ಪಿಯುಸಿಯಲ್ಲಿ 600ಕ್ಕೆ 600 ಅಂಕ ತೆಗೆದುಕೊಳ್ಳುವ ಗುರಿ ಇಟ್ಟುಕೊಂಡಿದ್ದಳು. ಎಲ್ಲರ ಮುಂದೆ ಚಾಲೆಂಜ್ ಸಹ ಮಾಡಿದ್ದಳು. ಫಲಿತಾಂಶ ಬಂದ ಬಳಿಕ ಯಾರ ಜೊತೆಗೆ ಮಾತನಾಡದೆ ನೇರವಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. -ಮಾರುತಿ (ವಿದ್ಯಾರ್ಥಿನಿ ಚಿಕ್ಕಪ್ಪ) ಆತ್ಮಹತ್ಯೆಯ ಯೋಚನೆ ಬಂದಾಗ ಅದನ್ನು ನಿಗ್ರಹಿಸಲು ರಾಜ್ಯ ಸರಕಾರದ ಅರೋಗ್ಯ ಇಲಾಖೆಯ ಹೆಲ್ಪ್ ಲೈನ್ 104 ಸಹಾಯ ಮಾಡುತ್ತದೆ. ಅದರ ಜೊತೆಗೆ Tele-MANAS ನ 14416 ಅನ್ನೂ ಸಂಪರ್ಕಿಸಬಹುದು.
ಅಮೆರಿಕ - ಇರಾನ್ ಮೊದಲ ಹಂತದ ಮಾತುಕತೆ ಪೂರ್ಣ; ಲಿಖಿತ ದಾಖಲೆ ವಿನಿಮಯಕ್ಕೆ ಸಿದ್ಧತೆ
ಇಸ್ಲಾಮಾಬಾದ್, ಎ.11: ಪಾಕಿಸ್ತಾನದ ಇಸ್ಲಾಮಾಬಾದ್ ನಲ್ಲಿ ನಡೆದ ಅಮೆರಿಕ–ಇರಾನ್ ನಡುವಿನ ಮೊದಲ ಹಂತದ ಮುಖಾಮುಖಿ ಮಾತುಕತೆಗಳು ಪೂರ್ಣಗೊಂಡಿವೆ ಎಂದು ಮಧ್ಯಸ್ಥಿಕೆಗೆ ಹತ್ತಿರವಿರುವ ಮೂಲಗಳು ತಿಳಿಸಿವೆ ಎಂದು Aljazeera ವರದಿ ಮಾಡಿದೆ. ಮಾತುಕತೆಗಳ ನಂತರ ಎರಡೂ ದೇಶಗಳ ನಿಯೋಗಗಳು ಲಿಖಿತ ದಾಖಲೆಗಳನ್ನು ಪರಸ್ಪರ ವಿನಿಮಯ ಮಾಡಿಕೊಳ್ಳಲು ಮುಂದಾಗಿವೆ. ಚರ್ಚೆಗಳ ವೇಳೆ ತಲುಪಿದ ಒಪ್ಪಂದಗಳ ಬಗ್ಗೆ ಒಂದೇ ಅಭಿಪ್ರಾಯದಲ್ಲಿರುವುದನ್ನು ಖಚಿತಪಡಿಸಿಕೊಳ್ಳುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಮೂಲಗಳು ಹೇಳಿವೆ. ಮುಂದಿನ ಹಂತದ ಮಾತುಕತೆಗಳಿಗೆ ಈ ಬೆಳವಣಿಗೆ ದಾರಿಯಾಗಲಿದೆ ಎಂದು ತಿಳಿದುಬಂದಿದೆ.
ವಾರಾಣಸಿ, ಎ. 11: ಪ್ರಧಾನಿ ನರೇಂದ್ರ ಮೋದಿ ಹಾಗೂ ಉತ್ತರ ಪ್ರದೇಶ CM ಆದಿತ್ಯನಾಥ್ ವಿರುದ್ಧ ಸಾಮಾಜಿಕ ಮಾಧ್ಯಮಗಳಲ್ಲಿ ಆಕ್ಷೇಪಾರ್ಹ ಪೋಸ್ಟ್ ಗಳನ್ನು ಪ್ರಕಟಿಸಿದ್ದಾರೆ ಎಂದು ಆರೋಪಿಸಿ, ಲೇಖಕಿ ಹಾಗೂ ಶಿಕ್ಷಣ ತಜ್ಞೆ ಪ್ರೊ. ಮಧು ಪೂರ್ಣಿಮಾ ಕಿಶ್ವರ್ ವಿರುದ್ಧ FIR ದಾಖಲಿಸಲು ಆದೇಶಿಸಬೇಕೆಂದು ಕೋರಿ ವಾರಾಣಸಿಯ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲಾಗಿದೆ ಎಂದು livelaw.in ವರದಿ ಮಾಡಿದೆ. ಕಾಶಿ ಪ್ರಾಂತ್ಯದ ಬಿಜೆಪಿಯ ಕಾನೂನು ವಿಭಾಗದ ಸಂಚಾಲಕ ಶಶಾಂಕ್ ಶೇಖರ್ ತ್ರಿಪಾಠಿ ಸಲ್ಲಿಸಿದ ದೂರಿನಲ್ಲಿ, ಪ್ರೊ. ಕಿಶ್ವರ್ ಅವರು ಪ್ರಧಾನಿ ಮೋದಿ, ಸಿಎಂ ಆದಿತ್ಯನಾಥ್ ಹಾಗೂ ನ್ಯಾಯಾಂಗದ ವಿರುದ್ಧ ದುರುದ್ದೇಶಪೂರಿತ ಮತ್ತು ಪೂರ್ವನಿಯೋಜಿತ ಸಾಮಾಜಿಕ ಮಾಧ್ಯಮ ಅಭಿಯಾನ ನಡೆಸುತ್ತಿದ್ದಾರೆ ಎಂದು ಆರೋಪಿಸಲಾಗಿದೆ. ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ, ಪ್ರಕರಣವನ್ನು ದಾಖಲಿಸಿಕೊಂಡು ಸ್ಥಳೀಯ ಪೊಲೀಸರಿಂದ ವರದಿ ಕೋರಿದೆ. ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 173(4) ಅಡಿ ಸಲ್ಲಿಸಿದ ದೂರಿನಲ್ಲಿ, ಪ್ರೊ. ಕಿಶ್ವರ್ ಅವರು ಪ್ರಧಾನಿ ಮೋದಿ ಅವರನ್ನು ಎಪ್ಸ್ಟೀನ್ ಪ್ರಕರಣಕ್ಕೆ ಸಂಬಂಧಿಸಿ ಆಕ್ಷೇಪಾರ್ಹ ಪದಗಳನ್ನು ಬಳಸಿರುವುದಾಗಿ ಹೇಳಲಾಗಿದೆ. ಇದರಿಂದ ಉನ್ನತ ಸಾರ್ವಜನಿಕ ಹುದ್ದೆಯ ಗೌರವಕ್ಕೆ ಧಕ್ಕೆಯಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಇದೇ ವೇಳೆ, ಸಾಮಾಜಿಕ ಮಾಧ್ಯಮ ಪೋಸ್ಟ್ಗಳಲ್ಲಿ ಸಿಎಂ ಆದಿತ್ಯನಾಥ್ ವಿರುದ್ಧವೂ ಆಕ್ಷೇಪಾರ್ಹ ಭಾಷೆ ಬಳಸಲಾಗಿದ್ದು, ಅವರ ಆಡಳಿತವನ್ನು ಸರ್ವಾಧಿಕಾರಕ್ಕೆ ಹೋಲಿಸಿರುವ ಮೂಲಕ ಸಾರ್ವಜನಿಕ ಪ್ರತಿಷ್ಠೆಗೆ ಹಾನಿಯಾಗಿದೆ ಎಂದು ದೂರಿನಲ್ಲಿ ವಿವರಿಸಲಾಗಿದೆ.
Keralaದಲ್ಲಿ ಹೆಚ್ಚಿನ ಪ್ರಮಾಣದ ಮತದಾನ | LDF, ಕಾಂಗ್ರೆಸ್ ಮತ್ತು ಬಿಜೆಪಿಯ ಭವಿಷ್ಯದ ಮೇಲೆ ಹೇಗೆ ಪರಿಣಾಮ ಬೀರುತ್ತದೆ?
ಕೇರಳ ವಿಧಾನಸಭಾ ಚುನಾವಣೆಗೆ ಗುರುವಾರ ನಡೆದ ಮತದಾನದಲ್ಲಿ ಶೇಕಡಾ 78.03 ರಷ್ಟು ಮತದಾನವಾಗಿದೆ. ಭಾರತೀಯ ಚುನಾವಣಾ ಆಯೋಗದ (ECI) ದತ್ತಾಂಶದ ಪ್ರಕಾರ, 2021 ರ ವಿಧಾನಸಭಾ ಚುನಾವಣೆಯಲ್ಲಿ ಶೇಕಡಾ 73.9 ಮತದಾನವಾಗಿತ್ತು. ಮತದಾನದ ಈ ಪ್ರಮಾಣ ವಿಧಾನಸಭಾ ಚುನಾವಣೆಯ ಮಹತ್ವವನ್ನು ಸೂಚಿಸುತ್ತದೆ. ಈ ಬಾರಿ ಕೇರಳದಲ್ಲಿ ಬಿಜೆಪಿ ತನ್ನ ಅತ್ಯಂತ ಸ್ಪರ್ಧಾತ್ಮಕ ಪ್ರಚಾರ ನಡೆಸಿದ್ದು ಮಾತ್ರವಲ್ಲದೆ, ಎಡಪಂಥೀಯರು ತಮ್ಮ ನಿಯಂತ್ರಣದಲ್ಲಿರುವ ಕೊನೆಯ ರಾಜ್ಯದಲ್ಲಿ ಅಧಿಕಾರವನ್ನು ಉಳಿಸಿಕೊಳ್ಳಲು ಈ ಚುನಾವಣೆಯಲ್ಲಿ ತಮ್ಮಿಂದಾಗುವ ಹೋರಾಟ ನಡೆಸಿದ್ದಾರೆ. ಒಂದು, SIR (ವಿಶೇಷ ತೀವ್ರ ಪರಿಷ್ಕರಣೆ) ನಂತರ ಮತದಾರರ ಪಟ್ಟಿಯ ಸುಧಾರಣೆ. ಇದು ಖಂಡಿತವಾಗಿಯೂ ಮತದಾನದ ಗುಣಮಟ್ಟವನ್ನು ಸುಧಾರಿಸಿದೆ, ಇದು ಮತದಾನದ ಪ್ರಮಾಣವನ್ನು ಹೆಚ್ಚಿಸಿದೆ. ಎರಡನೆಯದು ಸ್ಪಷ್ಟವಾದ ನಿರ್ಣಯ. ಇದನ್ನು ನಾವು ಆಡಳಿತ ವಿರೋಧಿ ಎಂದು ಕರೆಯುತ್ತೇವೆ, ಇದು ಹೆಚ್ಚಿನ ಜನರನ್ನು ಮತಗಟ್ಟೆಗಳಿಗೆ ಕರೆತಂದಿತು. ಮೂರನೇ ಕಾರಣ ಬಿಜೆಪಿಯ ಸ್ಪರ್ಧಾತ್ಮಕ ಪ್ರಚಾರ, ಇದು ಹೆಚ್ಚಿನ ಮತದಾರರನ್ನು ಸಜ್ಜುಗೊಳಿಸಿತು, ಇದು ತನ್ನದೇ ಆದ ಮತಪಾಲನ್ನು ಎರಡರಿಂದ ಮೂರು ಪ್ರತಿಶತದಷ್ಟು ಹೆಚ್ಚಿಸುವ ಸಾಮರ್ಥ್ಯವನ್ನು ಹೊಂದಿತ್ತು. ಇತರ ಎರಡು (ಸಿಪಿಐಎಂ ನೇತೃತ್ವದ LDF ಮತ್ತು ಕಾಂಗ್ರೆಸ್ ನೇತೃತ್ವದ UDF) ಸಾಂಪ್ರದಾಯಿಕ ಒಕ್ಕೂಟಗಳಾಗಿವೆ, ಆದರೆ ಈ ಒಕ್ಕೂಟ (NDA) ಎಂದಿಗೂ ಬಂದಿಲ್ಲ. ಬಿಜೆಪಿಗೆ ಹಿಂದಿನದಕ್ಕಿಂತ ಉತ್ತಮ ಆಕರ್ಷಣೆ ಇದೆ ಎಂದು ದಿ ಪ್ರಿಂಟ್ ಜೊತೆ ಮಾತನಾಡಿದ ಕೇರಳ ಕೇಂದ್ರ ವಿಶ್ವವಿದ್ಯಾಲಯದ (CUK) ಮಾಜಿ ಉಪಕುಲಪತಿ ಮತ್ತು ರಾಜಕೀಯ ವಿಶ್ಲೇಷಕ ಪ್ರೊಫೆಸರ್ ಜಿ. ಗೋಪ ಕುಮಾರ್ ಅಭಿಪ್ರಾಯಪಟ್ಟಿದ್ದಾರೆ. 2021 ರವರೆಗೆ ಆಡಳಿತ ಬದಲಾವಣೆಗಳು ರೂಢಿಯಾಗಿದ್ದ ಕಾರಣ, ಕೇರಳದ ಮತದಾರರ ಮತದಾನದ ಪ್ರಮಾಣವನ್ನು ಐತಿಹಾಸಿಕವಾಗಿ ಸೂಕ್ಷ್ಮವಾಗಿ ಪರಿಶೀಲಿಸಲಾಗಿಲ್ಲ. 1970 ರ ದಶಕದ ಅಂತ್ಯದಿಂದಲೂ LDF ಮತ್ತು UDF ಚುನಾವಣಾ ಪೂರ್ವ ಮೈತ್ರಿಗಳಾಗಿ ಸ್ಪರ್ಧಿಸಿವೆ. ಅದಕ್ಕೂ ಮೊದಲು ಮೈತ್ರಿಗಳು ಅಸ್ತಿತ್ವದಲ್ಲಿದ್ದರೂ, ಅವು ಇಂದಿನ ಒಕ್ಕೂಟಗಳಿಗಿಂತ ಭಿನ್ನವಾಗಿವೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ, ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನೇತೃತ್ವದ LDF ಅಧಿಕಾರವನ್ನು ಉಳಿಸಿಕೊಂಡಿತು, ಇದು ಕೇರಳದ ರಾಜಕೀಯ ಇತಿಹಾಸದಲ್ಲೇ ಮೊದಲು. ಅದರ ನಂತರ, ರಾಜಕೀಯ ಪಕ್ಷಗಳು ಮತ್ತು ವೀಕ್ಷಕರು ಮತದಾರರ ಮತದಾನದ ಪ್ರಮಾಣವನ್ನು ಹೆಚ್ಚು ಗಂಭೀರವಾಗಿ ಪರಿಗಣಿಸಲು ಪ್ರಾರಂಭಿಸಿದರು. 1967 ರಿಂದ 2021 ರವರೆಗೆ, ಮತದಾನದ ಪ್ರಮಾಣ ಹೆಚ್ಚಾಗಿ 70 ರ ದಶಕದ ಮಧ್ಯಭಾಗದಲ್ಲಿತ್ತು. 1960 ರಲ್ಲಿ ಮತದಾನ ಶೇಕಡಾ 85.7 ಮತ್ತು 1987 ರಲ್ಲಿ ಅದು ಶೇಕಡಾ 80.54 ರಷ್ಟಿತ್ತು. ಮತದಾನದ ಪ್ರಮಾಣದಲ್ಲಿನ ಏರಿಳಿತಗಳು 2021 ರವರೆಗೆ ಅಧಿಕಾರ ಬದಲಾವಣೆಯ ಮೇಲೆ ಕಡಿಮೆ ಪರಿಣಾಮ ಬೀರಿವೆ. ಈ ಬಾರಿ ವಿಭಿನ್ನವಾಗಿರಬಹುದು. 2026 ರ ವಿಧಾನಸಭಾ ಚುನಾವಣೆಗಳು ಕೇರಳದ ಇತಿಹಾಸದಲ್ಲಿ ಅತ್ಯಂತ ಮುಖ್ಯವಾಗಿರುತ್ತವೆ. ಕೇರಳದ ಜನರು ಮತ್ತು ಎಲ್ಲಾ ಮಲಯಾಳಿಗಳು ಸಹ ಅದನ್ನು ನಂಬುತ್ತಾರೆ ಎಂಬುದನ್ನು ಹೆಚ್ಚಿನ ಮತದಾನವು ಪ್ರತಿಬಿಂಬಿಸುತ್ತದೆ ಎಂದು ಬಿಜೆಪಿ ಕೇರಳ ಅಧ್ಯಕ್ಷ ರಾಜೀವ್ ಚಂದ್ರಶೇಖರ್ ಏಪ್ರಿಲ್ 10 ರಂದು ಎಕ್ಸ್ ಪೋಸ್ಟ್ ನಲ್ಲಿ ಬರೆದಿದ್ದಾರೆ. ►ಸಂಖ್ಯೆಗಳು ಏನು ಸೂಚಿಸುತ್ತವೆ? 2021 ರಲ್ಲಿ ಕೇರಳದಲ್ಲಿ LDF ಅಧಿಕಾರವನ್ನು ಉಳಿಸಿಕೊಂಡಿತು. ಆದರೆ, ಈ ಚುನಾವಣೆಯಲ್ಲಿ ಹಿಂದಿನ ಪ್ರವೃತ್ತಿ ಮರಳುತ್ತಿದೆ ಎಂದು ಗೋಪ ಕುಮಾರ್ ಹೇಳಿದ್ದಾರೆ. ಹೆಚ್ಚಿನ ಮತದಾನವು ಸರ್ಕಾರದಲ್ಲಿ ಬದಲಾವಣೆಯನ್ನು ಸೂಚಿಸುತ್ತದೆ ಎಂದು ಅವರು ಹೇಳಿದ್ದಾರೆ. 2016 ರಲ್ಲಿ ಮತದಾನದ ಪ್ರಮಾಣವು 2011 ರ ಚುನಾವಣೆಯಲ್ಲಿ ಶೇಕಡಾ 74.92 ರಿಂದ ಶೇಕಡಾ 77.1 ಕ್ಕೆ ಏರಿತು, ಇದು ಉಮ್ಮನ್ ಚಾಂಡಿ ನೇತೃತ್ವದ UDF ಅನ್ನು ಅಧಿಕಾರದಿಂದ ಕೆಳಗಿಳಿಸಲು ಮತ್ತು ವಿಜಯನ್ ಅವರನ್ನು ಮುಖ್ಯಮಂತ್ರಿಯಾಗಿ ನೇಮಿಸಲು ಕಾರಣವಾಯಿತು. LDF ನ 2021 ರ ವಿಜಯವು ಅದರ ಸಾಂಕ್ರಾಮಿಕ ರೋಗ ನಿರ್ವಹಣೆ ಮತ್ತು ಹೊಸ ಆರ್ಥಿಕ ಸುಧಾರಣೆಗಳಿಂದ ನಡೆಸಲ್ಪಟ್ಟಿದೆ. ಆದರೂ, ಕಾರ್ಮಿಕ ಹಕ್ಕುಗಳು ಮತ್ತು ಜನರ ಕಲ್ಯಾಣ ಉದ್ದೇಶದ ಮೇಲೆ ನಿರ್ಮಿಸಲಾದ ಕೇರಳದ ಸಮಾಜವಾದಿ ನೀತಿಗಳು ಎಷ್ಟು ಆಳವಾಗಿ ಬೇರೂರಿವೆ ಎಂದರೆ ಅದು UDF ಆಡಳಿತದ ಅಡಿಯಲ್ಲಿಯೂ ಸಹ ಮುಂದುವರಿಯುತ್ತವೆ. ಬಹುಶಃ ಇದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿಗೆ ಕೇರಳದಲ್ಲಿ ಅಧಿಕಾರ ಕೊಡುವ ಬಗ್ಗೆ ಎಚ್ಚರಿಕೆಯಿಂದ ಇರಲು ಒಂದು ಕಾರಣವಾಗಿರಬಹುದು. ಕೇರಳದ ಹೆಚ್ಚಿನ ಜನಸಂಖ್ಯೆ ಇತರ ವಿಷಯಗಳ ಜೊತೆಗೆ ಬಂಡವಾಳಶಾಹಿ ಪರ ಒಲವುಗಳೊಂದಿಗೆ ಸಂಬಂಧ ಹೊಂದಿದೆ, ಇದು ರಾಜ್ಯದ ಮೂಲ ಸಮಾಜವಾದಿ ಅಡಿಪಾಯಗಳಿಗೆ ಬೆದರಿಕೆಯೊಡ್ಡಬಹುದು. ಆದರೆ ಕೇರಳದಲ್ಲಿ ಅದರ ಹೆಚ್ಚಿನ ಮತಹಂಚಿಕೆ ಮತ್ತು ಪರಿಣಾಮಕಾರಿ ಬೆಂಬಲ ಕ್ರೋಢೀಕರಣವನ್ನು ಇನ್ನು ಮುಂದೆ ನಿರ್ಲಕ್ಷಿಸಲಾಗುವುದಿಲ್ಲ ಎಂದು ವಿಶ್ಲೇಷಕರು ಹೇಳುತ್ತಾರೆ. 1970 ರ ದಶಕದ ಅಂತ್ಯದಿಂದ, ಕೇರಳದ ರಾಜಕೀಯ ಭೂದೃಶ್ಯವನ್ನು ಹೆಚ್ಚಾಗಿ ಎರಡು 'ರಂಗಗಳು' ವ್ಯಾಖ್ಯಾನಿಸಿವೆ. ಸಮಾನ ಮನಸ್ಕ ಪಕ್ಷಗಳ ಶಾಶ್ವತ ಚುನಾವಣಾ ಪೂರ್ವ ಮೈತ್ರಿಕೂಟ ಒಟ್ಟಾಗಿ ಚುನಾವಣೆಗಳನ್ನು ಎದುರಿಸುತ್ತವೆ. ಆದರೆ ಈ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಪ್ರಚಾರವನ್ನು ನಡೆಸಿತು. ವಿಶೇಷವಾಗಿ ಡಿಸೆಂಬರ್ 2025 ರ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ತಿರುವನಂತಪುರಂ ಪುರಸಭೆಯಲ್ಲಿ ಐತಿಹಾಸಿಕ ಗೆಲುವು ಸಾಧಿಸಿದ ನಂತರ ಬಿಜೆಪಿ ತಮ್ಮ ಪ್ರಾಬಲ್ಯವನ್ನು ವಿಸ್ತರಿಸಲು ನೋಡುತ್ತಿದೆ. 2016 ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 98 ಸ್ಥಾನಗಳಲ್ಲಿ ಸ್ಪರ್ಧಿಸಿ ಒಟ್ಟು ಮತಗಳ ಶೇ. 10.53 ರಷ್ಟು ಗಳಿಸಿತು. ಇದರಲ್ಲಿ ಹಿರಿಯ ನಾಯಕ ಓ. ರಾಜಗೋಪಾಲ್ ಅವರು ಮಾತ್ರ ನೇಮಂ ಸೀಟು ಗೆದ್ದಿದ್ದರು. ನಂತರ 2021 ರಲ್ಲಿ ಬಿಜೆಪಿ 115 ಸ್ಥಾನಗಳಲ್ಲಿ ಸ್ಪರ್ಧಿಸಿ ಒಟ್ಟು ಮತಗಳ ಶೇ. 11.3 ರಷ್ಟು ಗಳಿಸಿತು. ಆದರೆ ಒಂದೇ ಒಂದು ಸ್ಥಾನವನ್ನು ಗೆಲ್ಲಲು ಸಾಧ್ಯವಾಗಲಿಲ್ಲ. ಅದೇ ವೇಳೆ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಸಿಪಿಐ) ಒಟ್ಟು ಮತಗಳ ಶೇ. 7.58 ರಷ್ಟು ಮಾತ್ರ ಗಳಿಸಿದ್ದು 17 ಸೀಟು ಗೆದ್ದಿತ್ತು. ಈ ಚುನಾವಣೆಯಲ್ಲಿ ಬಿಜೆಪಿ ಕನಿಷ್ಠ ಮೂರು ಸ್ಥಾನಗಳನ್ನು ಗೆಲ್ಲಬಹುದು ಎಂದು ರಾಜಕೀಯ ಪಂಡಿತರು ಭವಿಷ್ಯ ನುಡಿಯುತ್ತಾರೆ. ಅದು ಸಂಭವಿಸದಿದ್ದರೂ ಸಹ ಪಕ್ಷದ ಮತಹಂಚಿಕೆ ಗಮನಾರ್ಹವಾಗಿ ಹೆಚ್ಚಾಗುವ ಸಾಧ್ಯತೆಯಿದೆ. ಇದು ಬಹುಶಃ ಶೇಕಡಾ 20 ಕ್ಕೆ ತಲುಪುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ►ಹಲವು ಪಕ್ಷಗಳು, 2 ಪ್ರಮುಖ ಒಕ್ಕೂಟಗಳು 1957 ರ ಕೇರಳ ವಿಧಾನಸಭಾ ಚುನಾವಣೆಯಲ್ಲಿ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ ನೇತೃತ್ವದಲ್ಲಿ ಮೊದಲ ಚುನಾಯಿತ ಕಮ್ಯುನಿಸ್ಟ್ ಸರ್ಕಾರವನ್ನು ಮುನ್ನಡೆಸಿತು. ಇದರಲ್ಲಿ ಶೇಕಡಾ 65.49 ರಷ್ಟು ಮತದಾನವಾಗಿತ್ತು. ಇದರ ನಂತರ 1960 ರಲ್ಲಿ ಕಾಂಗ್ರೆಸ್ ನೇತೃತ್ವದ ಮೈತ್ರಿಕೂಟ ಅಧಿಕಾರಕ್ಕೆ ಬಂದಾಗ ಶೇಕಡಾ 85.72 ರಷ್ಟು ದಾಖಲೆಯ ಮತದಾನವಾಯಿತು. ಇದು 34.42 ರಷ್ಟು ಮತಹಂಚಿಕೆಯೊಂದಿಗೆ 63 ಸ್ಥಾನಗಳನ್ನು ಗೆದ್ದಿತು. 1980 ರಲ್ಲಿ ಶೇಕಡಾ 72.23 ಮತದಾನದ ಹೊರತಾಗಿಯೂ LDF ರಾಜ್ಯದಲ್ಲಿ UDF ಅನ್ನು ಸೋಲಿಸಿತು. 1996 ರಲ್ಲಿ ಮತದಾರರ ಮತದಾನವು ಶೇಕಡಾ 70 ರಷ್ಟಿತ್ತು, ಆಗ UDF ಅಧಿಕಾರಕ್ಕೇರಿತು. ಒಟ್ಟಾರೆಯಾಗಿ ವರ್ಷಗಳಲ್ಲಿ ಮತದಾರರ ಮತದಾನವು ಏರಿಳಿತಗೊಂಡಿದ್ದರೂ, ಕೇರಳದಲ್ಲಿ ಚುನಾವಣಾ ಫಲಿತಾಂಶಗಳೊಂದಿಗೆ ಇದು ಸ್ಥಿರವಾದ ಸಂಬಂಧವನ್ನು ತೋರಿಸುವುದಿಲ್ಲ. ಈ ಮಧ್ಯೆ, LDF ಮತ್ತು UDF ನಲ್ಲಿ ಕೆಲವು ಶಾಶ್ವತ ಹೊಂದಾಣಿಕೆಗಳು ನಡೆದಿವೆ. ಉದಾಹರಣೆಗೆ ಎಡ ಮೈತ್ರಿಕೂಟದ ವಿವಿಧ ಆವೃತ್ತಿಗಳ ಹೊರತಾಗಿಯೂ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್ವಾದಿ) ಪ್ರಬಲ ಪಕ್ಷವಾಗಿ ಉಳಿದಿದೆ. ಅದೇ ರೀತಿ UDF ನಲ್ಲಿ ಕಾಂಗ್ರೆಸ್ನ ನಾಯಕತ್ವದ ಪಾತ್ರ ಮತ್ತು ಆಲ್ ಇಂಡಿಯಾ ಮುಸ್ಲಿಂ ಲೀಗ್ (AIMUL) ಜೊತೆಗಿನ ದೃಢ ಪಾಲುದಾರಿಕೆ ಅಸ್ತಿತ್ವದಲ್ಲಿವೆ. ಕೇರಳದಲ್ಲಿ ಆಂತರಿಕ ಭಿನ್ನಾಭಿಪ್ರಾಯಗಳ ನಂತರ ರಾಜಕೀಯ ಪಕ್ಷಗಳು ಆಗಾಗ್ಗೆ ತಮ್ಮ ಮಿತ್ರ ಪಕ್ಷಗಳನ್ನು ಬದಲಾಯಿಸಿಕೊಂಡಿವೆ. ಆದರೆ ಮತದಾರರ ಮೇಲಿನ ಅವರ ಹಿಡಿತ ಇನ್ನೂ ಬಲವಾಗಿದೆ. ಅಂತಹ ಒಂದು ಪಕ್ಷವೆಂದರೆ ಮುಸ್ಲಿಂ ಲೀಗ್, ಇದು ಮಲಪ್ಪುರಂ, ಕೋಝಿಕ್ಕೋಡ್, ಕಣ್ಣೂರು ಮತ್ತು ಕಾಸರಗೋಡಿನಂತಹ ಉತ್ತರ ಜಿಲ್ಲೆಗಳಲ್ಲಿ ಗಮನಾರ್ಹ ಉಪಸ್ಥಿತಿಯನ್ನು ಹೊಂದಿದೆ. ಈ ಚುನಾವಣೆಯಲ್ಲಿ ಕಾಂಗ್ರೆಸ್ ನೇತೃತ್ವದ UDF ಗೆಲುವು ಎಂದರೆ 1967 ರಿಂದ ದೇಶದಲ್ಲಿ ಎಲ್ಲಿಯೂ ಎಡಪಂಥೀಯ ನೇತೃತ್ವದ ಸರ್ಕಾರ ಇರುವುದಿಲ್ಲ ಎಂದು ಸೆಫಾಲಜಿಸ್ಟ್ ಮತ್ತು ರಾಜಕೀಯ ವಿಶ್ಲೇಷಕ ಜೆ.ವಿ.ಸಿ. ಶ್ರೀರಾಮ್ ಹೇಳಿದ್ದಾರೆ. ಇದಕ್ಕೆ ವಿರುದ್ಧವಾಗಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನೇತೃತ್ವದ LDF ಸತತ ಮೂರನೇ ಅವಧಿಗೆ ಅಧಿಕಾರವನ್ನು ಉಳಿಸಿಕೊಂಡರೆ ಅದು ಅಷ್ಟೇ ಐತಿಹಾಸಿಕವಾಗಿರುತ್ತದೆ. ಪ್ರೊಫೆಸರ್ ಕುಮಾರ್ 2026 ರ ಕೇರಳ ವಿಧಾನಸಭಾ ಚುನಾವಣೆಯನ್ನು 1967 ರ ಮಧ್ಯಂತರ ಸಮೀಕ್ಷೆಗೆ ಹೋಲಿಸಿದ್ದಾರೆ, ಅಲ್ಲಿ CPI(M) ನೇತೃತ್ವದ ಏಳು ಪಕ್ಷಗಳ ಒಕ್ಕೂಟವು ಸಿಪಿಐ ಮತ್ತು ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ಅನ್ನು ಒಳಗೊಂಡಿದ್ದು ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಅನ್ನು ಎದುರಿಸಲು ರಚಿಸಲಾಯಿತು. ಆದಾಗ್ಯೂ, ಅಂದಿನ ಮೈತ್ರಿಗಳ ಸ್ವರೂಪವು ಇಂದು ಕಂಡುಬರುವ ರಚನಾತ್ಮಕ ರಂಗಗಳಿಗಿಂತ ಹೆಚ್ಚು ಅಸ್ಥಿರವಾಗಿತ್ತು ಎಂದು ಅವರು ಹೇಳಿದ್ದಾರೆ. ಅತಂತ್ರ ವಿಧಾನಸಭೆ ರಚನೆಯಾದರೂ ಒಂದು ಅಥವಾ ಇನ್ನೊಂದು ಸಣ್ಣ LDF ಘಟಕವು UDF ಗೆ ಅಥವಾ ಪ್ರತಿಯಾಗಿ ಬದಲಾಗಬಹುದು, ಏಕೆಂದರೆ ಈ ಮೈತ್ರಿಗಳು ಸೈದ್ಧಾಂತಿಕವಲ್ಲ. ಆದ್ದರಿಂದ ಅಂಥಾ ತೀರ್ಪು ಬಂದರೂ ಸರ್ಕಾರ ಇರುತ್ತದೆ ಎಂದು ನಾನು ನಿಮಗೆ ಭರವಸೆ ನೀಡಬಲ್ಲೆ ಎಂದು ಪ್ರೊಫೆಸರ್ ಕುಮಾರ್ ಹೇಳಿದ್ದಾರೆ. ಕೇರಳದ ರಾಜಕೀಯದಲ್ಲಿ ಬಿಜೆಪಿ ಗಮನಾರ್ಹ ಪಾಲುದಾರನಾಗಿ ಹೊರಹೊಮ್ಮುತ್ತದೆ ಎಂಬುದು ಒಂದು ನಿರ್ದಿಷ್ಟ ಅಂಶವಾಗಿದೆ. ಹಲವಾರು ಕ್ಷೇತ್ರಗಳಲ್ಲಿ ಹಿಂದೂ ಮತಗಳನ್ನು ಕಸಿದುಕೊಂಡ ನಂತರ ಪಕ್ಷವು ಈ ಬಾರಿ 'ಅಭಿವೃದ್ಧಿ ಮಂತ್ರ'ದ ಮೇಲೆ ಪ್ರಚಾರ ಮಾಡಿ ಮಂಜೇಶ್ವರ, ಕಾಸರಗೋಡು, ಪಾಲಕ್ಕಾಡ್ ಮತ್ತು ನೇಮಂ ನಂತಹ ಪ್ರದೇಶಗಳಲ್ಲಿ ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆ ಇಟ್ಟುಕೊಂಡಿದೆ. ಎಲ್ಲದಕ್ಕೂ ಮೇ 4 ರಂದು ಉತ್ತರ ಸಿಗಲಿದೆ.
ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯು ಈಗ ರಾಜ್ಯ ಕಾಂಗ್ರೆಸ್ನಲ್ಲಿ ಆಂತರಿಕ ಬಿರುಗಾಳಿ ಎಬ್ಬಿಸಿದೆ. ಚುನಾವಣಾ ಕಣದಲ್ಲಿನ ಬೆಳವಣಿಗೆಗಳಿಂದ ಅಸಮಾಧಾನಗೊಂಡಿರುವ ವಿಧಾನ ಪರಿಷತ್ ಸದಸ್ಯ ಅಬ್ದುಲ್ ಜಬ್ಬಾರ್ ಅವರು ಕೆಪಿಸಿಸಿ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ ಎಂದು ವರದಿಯಾಗಿದೆ. ಟಿಕೆಟ್ ಹಂಚಿಕೆ ಮತ್ತು ಬಂಡಾಯದ ಕಿಡಿ ದಾವಣಗೆರೆ ದಕ್ಷಿಣ ಕ್ಷೇತ್ರದ ಉಪಚುನಾವಣೆಯಲ್ಲಿ ಪ್ರಬಲ ಆಕಾಂಕ್ಷಿಯಾಗಿದ್ದ
ಯುವಕನಿಂದ HIV ರಕ್ತವಿರುವ ಇಂಜೆಕ್ಷನ್ ಚುಚ್ಚಲ್ಪಟ್ಟ ಯುವತಿ ಸಾವಿಗೆ ಶರಣು
ಹೈದರಾಬಾದ್, ಎ. 11: ಮದುವೆಯಾಗಲು ನಿರಾಕರಿಸಿದ ಕಾರಣ ಯುವಕನೊಬ್ಬ ಇಂಜೆಕ್ಷನ್ ಮೂಲಕ HIV ಸೋಂಕಿತ ರಕ್ತವನ್ನು ಚುಚ್ಚಿದ ಘಟನೆದಿಂದ ಖಿನ್ನಳಾದ 22 ವರ್ಷದ ಯುವತಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡ ಘಟನೆ ಶುಕ್ರವಾರ ನಡೆದಿದೆ. ರಮಣಿ ಸಾವಿಗೆ ಶರಣಾದ ಯುವತಿ. ಆಕೆ ಆರೋಪಿ ಮನೋಹರ್ ನ ಸಂಬಂಧಿಯಾಗಿದ್ದು, ಆತನೊಂದಿಗೆ ವಿವಾಹ ನಿಶ್ಚಯವಾಗಿತ್ತು. ಆದರೆ ಆತ HIV ಸೋಂಕಿತನೆಂದು ತಿಳಿದುಬಂದ ಬಳಿಕ ರಮಣಿ ವಿವಾಹವನ್ನು ರದ್ದುಪಡಿಸಿದ್ದಳು. ಕಳೆದ ತಿಂಗಳು ಮನೋಹರ್ ಯುವತಿಯ ಮನೆಗೆ ನುಗ್ಗಿ, ಬಲವಂತವಾಗಿ ಆಕೆಗೆ HIV ಸೋಂಕಿತ ರಕ್ತವನ್ನು ಇಂಜೆಕ್ಷನ್ ಮೂಲಕ ಚುಚ್ಚಿದ್ದ. ಮನೋಹರ್ ನ ಪಾಲಕರು HIV ಸೋಂಕು ಪೀಡಿತರಾಗಿದ್ದರಿಂದ, ರಮಣಿಯ ಹೆತ್ತವರು ಆತನನ್ನು ಕಳೆದ ವರ್ಷದ ಸೆಪ್ಟೆಂಬರ್ ನಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದರು. ಆಗ ಆತ ಕೂಡ HIV ಸೋಂಕಿತನೆಂದು ದೃಢಪಟ್ಟಿತ್ತು. ಆ ನಂತರ ಯುವತಿ ತಕ್ಷಣವೇ ವಿವಾಹವನ್ನು ರದ್ದುಪಡಿಸಿದಳು. ಇದರಿಂದ ಕೆರಳಿದ ಮನೋಹರ್ ಆಕೆಯ ಮೇಲೆ ದಾಳಿ ನಡೆಸಿ HIV ರಕ್ತವಿರುವ ಇಂಜೆಕ್ಷನ್ ಚುಚ್ಚಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ. HIV ಇಂಜೆಕ್ಷನ್ ಚುಚ್ಚಿದ ಕಾರಣ ಭಯಭೀತಳಾದ ಯುವತಿ ಸಾಮಾಜಿಕ ಕಳಂಕ ಹಾಗೂ ಮಾನಸಿಕ ಯಾತನೆಯಿಂದಾಗಿ ಸಾವಿಗೆ ಶರಣಾಗಿರಬಹುದೆಂದು ಪೊಲೀಸರು ತಿಳಿಸಿದ್ದಾರೆ.
ಹೊಸದಿಲ್ಲಿ, ಎ. 11: ಅಪ್ರಾಪ್ತ ವಯಸ್ಸಿನ ಬಾಲಕಿ ಸ್ವಇಚ್ಛೆಯಿಂದ ಯಾರೊಂದಿಗಾದರೂ ಓಡಿ ಹೋದರೆ, ಆತನ ವಿರುದ್ಧ ಅಪಹರಣ ಪ್ರಕರಣ ದಾಖಲಿಸಲು ಸಾಧ್ಯವಿಲ್ಲ ಎಂದು ಚತ್ತೀಸ್ ಗಢ ಉಚ್ಚ ನ್ಯಾಯಾಲಯ ಅಭಿಪ್ರಾಯಿಸಿದೆ ಎಂದು barandbench.com ಶನಿವಾರ ವರದಿ ಮಾಡಿದೆ. ಈ ಹಿನ್ನೆಲೆಯಲ್ಲಿ 2022ರ ಸೆಪ್ಟೆಂಬರ್ ನಲ್ಲಿ 15 ವರ್ಷದ ಬಾಲಕಿ ಓಡಿ ಹೋದ ಪ್ರಕರಣದಲ್ಲಿ ಪೊಕ್ಸೊ ಕಾಯ್ದೆ ಅಡಿಯಲ್ಲಿ 20 ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿದ್ದ 24 ವರ್ಷದ ವ್ಯಕ್ತಿಯನ್ನು ನಿರ್ದೋಷಿ ಎಂದು ನ್ಯಾಯಾಲಯ ಗುರುವಾರ ಖುಲಾಸೆಗೊಳಿಸಿದೆ. ಯಾವುದೇ ಸಮಯದಲ್ಲಿ ಮೇಲ್ಮನವಿದಾರನು ಬಾಲಕಿಯನ್ನು ಬಲವಂತವಾಗಿ ಮನೆ ತ್ಯಜಿಸುವಂತೆ ಮನವೊಲಿಸಿದ್ದಾನೆ ಅಥವಾ ಪ್ರೇರೇಪಿಸಿದ್ದಾನೆ ಎಂಬುದಕ್ಕೆ ದಾಖಲೆಗಳಲ್ಲಿ ಯಾವುದೇ ಸಾಕ್ಷ್ಯಗಳಿಲ್ಲ ಎಂದು ಮುಖ್ಯ ನ್ಯಾಯಮೂರ್ತಿ ರಮೇಶ್ ಸಿನ್ಹಾ ಹಾಗೂ ನ್ಯಾಯಮೂರ್ತಿ ರವೀಂದ್ರ ಕುಮಾರ್ ಅಗ್ರವಾಲ್ ಅವರನ್ನು ಒಳಗೊಂಡ ಪೀಠ ಹೇಳಿದೆ. ಬಾಲಕಿ ಸ್ವಇಚ್ಛೆಯಿಂದ ಆರೋಪಿಯ ಜೊತೆಗೆ ಹೋಗಿದ್ದಾಳೆ. ಯಾವುದೇ ವಿರೋಧ ತೋರದೆ, ದೂರು ನೀಡದೆ ಅವನ ಜೊತೆ ಉಳಿದಿದ್ದಾಳೆ ಎಂದು ಪೀಠ ತಿಳಿಸಿದೆ. ಶಾಲೆಗೆ ಹೋದ ಬಾಲಕಿ ಹಿಂದಿರುಗದೇ ಇದ್ದಾಗ ಆಕೆಯ ತಂದೆ ದೂರು ನೀಡಿದ್ದರು. ಈ ದೂರಿನ ಆಧಾರದಲ್ಲಿ ಆತನ ವಿರುದ್ಧ 2022ರ ಸೆಪ್ಟೆಂಬರ್ ನಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಬಾಲಕಿ ಈ ವ್ಯಕ್ತಿಯೊಂದಿಗೆ ರಾಯಪುರಕ್ಕೆ ಹಾಗೂ ಅನಂತರ ಹೈದರಾಬಾದ್ ಗೆ ಓಡಿ ಹೋಗಿದ್ದಳು. ನಂತರ ಆತನೊಂದಿಗೆ ಆಂಧ್ರಪ್ರದೇಶದ ವಿಜಯವಾಡಕ್ಕೆ ಪ್ರಯಾಣಿಸಿದ್ದಳು. ಬಳಿಕ ಅಗ್ರಪಳ್ಳಿ ತಲುಪಿದ್ದಳು. ಅಗ್ರಪಳ್ಳಿಯಲ್ಲಿ ಅವರು ಸುಮಾರು ಒಂದು ತಿಂಗಳು ತಂಗಿದ್ದರು. ಈ ನಡುವೆ ಬಾಲಕಿಯ ತಂದೆಯ ದೂರಿನ ಆಧಾರದಲ್ಲಿ ಪೊಲೀಸರು ಅವರಿಬ್ಬರನ್ನು ಪತ್ತೆಹಚ್ಚಿದ್ದರು. ಈ ಪ್ರಕರಣದಲ್ಲಿ ವಿಚಾರಣಾ ನ್ಯಾಯಾಲಯ ಆರೋಪಿಗೆ 2023ರ ಅಕ್ಟೋಬರ್ ನಲ್ಲಿ 20 ವರ್ಷಗಳ ಜೈಲು ಶಿಕ್ಷೆ ವಿಧಿಸಿತ್ತು. ಈ ತೀರ್ಪನ್ನು ವ್ಯಕ್ತಿ ಉಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದ.
Middle East Conflict- ಡೀಸೆಲ್, ವಿಮಾನ ಇಂಧನದ ಮೇಲಿನ ಆಕಸ್ಮಿಕ ತೆರಿಗೆ ಹೆಚ್ಚಿಸಿದೆ ಕೇಂದ್ರ ಸರ್ಕಾರ
ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಯುದ್ಧದ ನಡುವೆ, ದೇಶೀಯವಾಗಿ ಇಂಧನದ ಲಭ್ಯತೆಯನ್ನು ಹೆಚ್ಚಿಸುವ ಉದ್ದೇಶದಿಂದ ಭಾರತ ಸರ್ಕಾರ ಇಂಧನ ರಫ್ತಿನ ಮೇಲಿನ ಆಕಸ್ಮಿಕ ಲಾಭದ ಮೇಲೆ ಹಾಕುವ ತೆರಿಗೆ() ತೆರಿಗೆಗಳನ್ನು (duties) ಪರಿಷ್ಕರಿಸಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಮತ್ತು ಇಂಧನಗಳ ಬೆಲೆಯಲ್ಲಿ ಕಂಡುಬಂದ ಏರಿಳಿತಗಳಿಗೆ ಅನುಗುಣವಾಗಿ ಭಾರತ ಸರ್ಕಾರವು ಈ ನಿರ್ಧಾರ ಕೈಗೊಂಡಿದೆ. ನೂತನ ಅಧಿಸೂಚನೆಯ ಪ್ರಕಾರ ಡೀಸೆಲ್ ರಫ್ತಿನ ಮೇಲಿನ ವಿಶೇಷ ಹೆಚ್ಚುವರಿ ಅಬಕಾರಿ ಸುಂಕವನ್ನು () ಪ್ರತಿ ಲೀಟರ್ಗೆ 55.5 ರೂಪಾಯಿಗಳಿಗೆ ಹೆಚ್ಚಿಸಲಾಗಿದೆ. ಅದೇ ರೀತಿ, (ATF) ಮೇಲಿನ ರಫ್ತು ಸುಂಕವನ್ನು ಪ್ರತಿ ಲೀಟರ್ಗೆ 42 ರೂಪಾಯಿಗಳಿಗೆ ಏರಿಸಲಾಗಿದೆ. ಈ ಬದಲಾವಣೆಗಳು ಏಪ್ರಿಲ್ 11ರಿಂದಲೇ ಜಾರಿಗೆ ಬರಲಿವೆ.
ಮಂಗಳೂರು: ಲಾರಿ ಢಿಕ್ಕಿ; ದ್ವಿಚಕ್ರ ವಾಹನ ಸವಾರ ಸ್ಥಳದಲ್ಲೇ ಮೃತ್ಯು
ಮಂಗಳೂರು: ರಾ.ಹೆ. 66ರ ನಂತೂರು-ಪಂಪ್ವೆಲ್ ಸರ್ವಿಸ್ ರಸ್ತೆಯಲ್ಲಿ ಟಿಪ್ಪರ್ ಲಾರಿಯೊಂದು ದ್ವಿಚಕ್ರ ವಾಹನಕ್ಕೆ ಢಿಕ್ಕಿ ಹೊಡೆದ ಪರಿಣಾಮ ಸವಾರ ಮೃತಪಟ್ಟ ಘಟನೆ ಶನಿವಾರ ರಾತ್ರಿ ಸಂಭವಿಸಿದೆ. ಮೃತ ಸವಾರನನ್ನು ಗೋಪಾಲ್ (29) ಎಂದು ಗುರುತಿಸಲಾಗಿದೆ. ಟಿಪ್ಪರ್ ಲಾರಿ ಢಿಕ್ಕಿ ಹೊಡೆದ ಪರಿಣಾಮ ಸವಾರ ಸ್ಥಳದಲ್ಲೇ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ. ಗುರುಪುರದ ಬೇಕರಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಗೋಪಾಲ ಮುಳಿಹಿತ್ಲು ಬಳಿ ವಾಸವಾಗಿದ್ದರು ಎನ್ನಲಾಗಿದೆ. ಈ ಅಪಘಾತದಲ್ಲಿ ಮತ್ತೊಂದು ದ್ವಿಚಕ್ರ ವಾಹನಕ್ಕೂ ಹಾನಿಯಾಗಿದ್ದು, ಸವಾರನಿಗೆ ಗಾಯವಾಗಿದೆ ಎಂದು ಹೇಳಲಾಗಿದೆ. ಸಂಚಾರ ಪೊಲೀಸರು ಪ್ರಕರಣ ದಾಖಲಿಸಿದ್ದು, ತನಿಖೆ ನಡೆಸುತ್ತಿದ್ದಾರೆ.
ಇರಾನ್ ಗೆ ವಾಯುರಕ್ಷಣಾ ವ್ಯವಸ್ಥೆ ಪೂರೈಕೆಗೆ ಚೀನಾ ತಯಾರಿ: ಅಮೆರಿಕ ಗುಪ್ತಚರ ಏಜೆನ್ಸಿ ವರದಿ
ವಾಶಿಂಗ್ಟನ್, ಎ.11: ಮುಂದಿನ ವಾರಗಳಲ್ಲಿ ಇರಾನ್ ಗೆ ವಾಯುರಕ್ಷಣಾ ವ್ಯವಸ್ಥೆಯನ್ನು ಪೂರೈಸಲು ಚೀನಾ ತಯಾರಿ ನಡೆಸುತ್ತಿರುವ ಸೂಚನೆಗಳಿವೆ ಎಂದು ಅಮೆರಿಕದ ಗುಪ್ತಚರ ಏಜೆನ್ಸಿಯ ವರದಿ ತಿಳಿಸಿದೆ. ಮಾಹಿತಿಯ ಪ್ರಕಾರ, ಚೀನಾವು ಅತ್ಯಾಧುನಿಕ ವಾಯು ರಕ್ಷಣಾ ವ್ಯವಸ್ಥೆಯನ್ನು ಇರಾನ್ ಗೆ ವರ್ಗಾಯಿಸಲು ಯೋಜಿಸುತ್ತಿದೆ. ಮೂಲವನ್ನು ಮರೆಮಾಚುವ ಸಲುವಾಗಿ ಈ ಸಾಗಣೆಗಳನ್ನು ಮೂರನೇ ದೇಶದ ಮೂಲಕ ಸಾಗಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಗುಪ್ತಚರ ಮೂಲಗಳನ್ನು ಉಲ್ಲೇಖಿಸಿ CNN ವರದಿ ಮಾಡಿದೆ. ಚೀನಾವು ಇರಾನ್ ಗೆ ದ್ವಿ-ಬಳಕೆಯ ತಂತ್ರಜ್ಞಾನ, ಗುಪ್ತಚರ ಬೆಂಬಲ ಮತ್ತು ಕ್ಷಿಪಣಿ ಸಂಬಂಧಿತ ಸಹಾಯವನ್ನು ಒದಗಿಸಿದೆ. ಈ ಕ್ರಮಗಳು ಇರಾನ್ ತನ್ನ ರಕ್ಷಣಾ ಸಾಮರ್ಥ್ಯಗಳನ್ನು ಕಾಪಾಡಿಕೊಳ್ಳಲು ಸಹಾಯ ಮಾಡಿವೆ ಎಂದು ವರದಿಗಳು ಹಾಗೂ ಕಾರ್ಯನೀತಿ ಮೌಲ್ಯಮಾಪನಗಳು ಸೂಚಿಸಿವೆ. ಈ ವರದಿಯನ್ನು ವಾಶಿಂಗ್ಟನ್ ನಲ್ಲಿನ ಚೀನಾದ ರಾಯಭಾರ ಕಚೇರಿ ತಿರಸ್ಕರಿಸಿದ್ದು, ಸಂಘರ್ಷದಲ್ಲಿನ ಯಾವುದೇ ಪಕ್ಷಕ್ಕೆ ಎಂದಿಗೂ ಶಸ್ತ್ರಾಸ್ತ್ರಗಳನ್ನು ಒದಗಿಸಿಲ್ಲ ಎಂದು ಹೇಳಿದೆ.
Kasaragod ತಾಲೂಕಿನಲ್ಲಿ ಸರಕಾರಿ ವ್ಯವಹಾರಗಳಲ್ಲಿ ಕನ್ನಡ ಬಳಕೆ ಕುರಿತು ನಿರ್ಧರಿಸಿ: ಸರಕಾರಕ್ಕೆ ಹೈಕೋರ್ಟ್ ಸೂಚನೆ
ಕೊಚ್ಚಿ, ಎ.11: ಕಾಸರಗೋಡು ತಾಲೂಕಿನಲ್ಲಿ ಸರಕಾರಿ ಪತ್ರ ವ್ಯವಹಾರಗಳಲ್ಲಿ ಕನ್ನಡ ಭಾಷೆಯ ಬಳಕೆಗೆ ಅನುಮತಿಸಿರುವ 1982ರ ಸುತ್ತೋಲೆಯ ಅನುಷ್ಠಾನವನ್ನು ಕೋರಿ ಸಲ್ಲಿಸಲಾಗಿರುವ ಅರ್ಜಿಯನ್ನು ಎರಡು ತಿಂಗಳೊಳಗೆ ಪರಿಶೀಲಿಸಿ ನಿರ್ಧಾರವೊಂದನ್ನು ಕೈಗೊಳ್ಳುವಂತೆ ಕೇರಳ ಉಚ್ಚ ನ್ಯಾಯಾಲಯವು ರಾಜ್ಯ ಸರಕಾರಕ್ಕೆ ಸೂಚಿಸಿದೆ. ಕಾಸರಗೋಡು ಮೂಲದ ವಕೀಲರೊಬ್ಬರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ನಡೆಸಿದ ಮುಖ್ಯ ನ್ಯಾಯಮೂರ್ತಿ ಸೌಮೇನ್ ಸೇನ್ ಹಾಗೂ ನ್ಯಾ. ಶ್ಯಾಮಕುಮಾರ ಅವರ ಪೀಠವು ಈ ನಿರ್ದೇಶನವನ್ನು ಹೊರಡಿಸಿದೆ. ಕಾಸರಗೋಡು ಹಾಗೂ ಮಂಜೇಶ್ವರ ತಾಲೂಕುಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸರಕಾರಿ ಇಲಾಖೆಗಳು ಮತ್ತು ಕಚೇರಿಗಳು ಕನ್ನಡದಲ್ಲಿರುವ ಅರ್ಜಿಗಳನ್ನು ಸ್ವೀಕರಿಸುತ್ತಿಲ್ಲ ಎಂದು ಅರ್ಜಿದಾರರು ದೂರಿದ್ದಾರೆ. 1982ರ ಮಾರ್ಚ್ 5ರಂದು ಕಣ್ಣೂರು ಜಿಲ್ಲಾಧಿಕಾರಿಗಳು ಹೊರಡಿಸಿದ್ದ ಸುತ್ತೋಲೆಯಲ್ಲಿ ಅಂದಿನ ಕಾಸರಗೋಡು ತಾಲೂಕನ್ನು ಕನ್ನಡ ಭಾಷಿಕ ಪ್ರದೇಶ ಎಂದು ಘೋಷಿಸಲಾಗಿದ್ದು, ಅಧಿಕೃತ ಪತ್ರ ವ್ಯವಹಾರಗಳಲ್ಲಿ ಕನ್ನಡ ಬಳಕೆಗೆ ಅನುಮತಿ ನೀಡಲಾಗಿತ್ತು. ಸುತ್ತೋಲೆಯ ಅನುಷ್ಠಾನಕ್ಕಾಗಿ ಎಲ್ಲ ಸಂಬಂಧಿತ ಇಲಾಖೆಗಳಿಗೆ ಅಗತ್ಯ ನಿರ್ದೇಶನಗಳನ್ನು ನೀಡುವಂತೆ ಈ ವರ್ಷದ ಜನವರಿಯಲ್ಲಿ ಸರಕಾರಕ್ಕೆ ಅಹವಾಲು ಸಲ್ಲಿಸಿದ್ದೆ. ಆದರೆ ಅದರ ಬಗ್ಗೆ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಅರ್ಜಿದಾರರು ತಿಳಿಸಿದ್ದಾರೆ. ನ್ಯಾಯಾಲಯವು ನಿರ್ದೇಶಿಸಿದರೆ ಸೂಕ್ತ ಪ್ರಾಧಿಕಾರವು ಅರ್ಜಿಯನ್ನು ಪರಿಶೀಲಿಸಿ ನಿರ್ಧಾರ ಕೈಗೊಳ್ಳುತ್ತದೆ ಎಂದು ಸರಕಾರ ತಿಳಿಸಿದ ಬಳಿಕ ಪೀಠವು ಅರ್ಜಿಯನ್ನು ವಿಲೇವಾರಿ ಮಾಡಿತು. ಈ ತೀರ್ಪಿನ ಪ್ರತಿಯನ್ನು ಸ್ವೀಕರಿಸಿದ ಎಂಟು ವಾರಗಳೊಳಗೆ ಅರ್ಜಿದಾರರಿಗೆ ತಮ್ಮ ಅಭಿಪ್ರಾಯ ಮಂಡನೆಗೆ ಸಮಂಜಸವಾದ ಅವಕಾಶ ನೀಡಿದ ಬಳಿಕ ಕಾನೂನಿನ ಪ್ರಕಾರ ಅರ್ಜಿಯನ್ನು ಪರಿಶೀಲಿಸಿ ನಿರ್ಧರಿಸಬೇಕು. ನಂತರ ಒಂದು ವಾರದೊಳಗೆ ಕಾರಣಸಹಿತ ನಿರ್ಧಾರವನ್ನು ಅರ್ಜಿದಾರರಿಗೆ ತಿಳಿಸಬೇಕು ಎಂದು ಪೀಠವು ಸ್ಪಷ್ಟಪಡಿಸಿದೆ.
ಕಾರಿನಲ್ಲಿ ಹೋಗುತ್ತಿದ್ದ ವ್ಯಕ್ತಿಯ ಸುಲಿಗೆಗೆ ಯತ್ನ ಆರೋಪ: ಪ್ರಕರಣ ದಾಖಲು
ಸುಳ್ಯ: ಐವರ್ನಾಡಿನಲ್ಲಿ ಕಾರು ನಿಲ್ಲಿಸಿ ಮೂತ್ರ ವಿಸರ್ಜನೆ ಮಾಡಿ ಕಾರಿಗೆ ಹತ್ತುವಾಗ ಅಪರಿಚಿತ ವ್ಯಕ್ತಿಗಳು ಕಾರಿನ ಚಾಲಕನಿಗೆ ಖಾರದ ಪುಡಿ ಎರಚಿ ಸುಲಿಗೆಗೆ ಯತ್ನಿಸಿದ್ದಾರೆ ಎನ್ನಲಾದ ಘಟನೆ ಶುಕ್ರವಾರ ರಾತ್ರಿ ಬೆಳ್ಳಾರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ತಮಿಳುನಾಡಿನ ಗುಡಲೂರು ನೀಲಗಿರಿಯ ಅರುಣ್ ಕುಮಾರ್ ಎಂಬವರು ತಮಿಳುನಾಡಿನಿಂದ ಮೈಸೂರು ಆಗಿ ಸುಳ್ಯ ಕಡೆಯಿಂದ ಬೆಳ್ಳಾರೆ ಮಾರ್ಗವಾಗಿ ಮರ್ಧಾಳಕ್ಕೆ ಹೋಗುವಾಗ ರಾತ್ರಿ 12.00 ಗಂಟೆ ಸಮಯಕ್ಕೆ ಐವರ್ನಾಡು ಗ್ರಾಮದ ಪುತ್ತಿಲ ಸಮೀಪ ತಿರುವಿನಲ್ಲಿ ಮೂತ್ರ ವಿಸರ್ಜನೆಗೆ ಕಾರು ನಿಲ್ಲಿಸಿದರು. ಬಳಿಕ ಕಾರು ಚಲಾಯಿಸಲು ಕಾರಿನ ಹತ್ತಿರ ಬಂದಾಗ ದೂರದಿಂದ ವಿಶಲ್ ಹಾಕಿದ ಶಬ್ದ ಕೇಳಿದ್ದು ಈ ವೇಳೆ ಕಾರಿನ ಮೇಲೆ ಕಲ್ಲು ಎಸೆದುದಿದ್ದಾರೆ. ಕಲ್ಲು ಕಾರಿನ ಗ್ಲಾಸಿಗೆ ಬಿದ್ದಿದ್ದು ಕಾರಿನ ಮುಂದಿನ ಗ್ಲಾಸ್ ಬಿರುಕುಬಿಟ್ಟಿದೆ. ಈ ವೇಳೆ ಕಾರನ್ನು ಮುಂದೆ ಚಲಿಸಲು ಪ್ರಯತ್ನಿಸಿದಾಗ ಇಬ್ಬರು ಬೈಕಲ್ಲಿ ಬಂದ ವ್ಯಕ್ತಿಗಳು ಅರುಣ್ ಅವರ ಶರ್ಟ್ ಕಾಲರ್ ಹಿಡಿದೆಳೆದು ಮುಖದ ಮೇಲೆ ಖಾರದ ಪುಡಿ ಎರಚಿದ್ದು ಅರುಣ್ ತಪ್ಪಿಸಿಕೊಂಡು ಮುಂದೆ ಹೋಗಿ ರಸ್ತೆ ಬದಿ ಇದ್ದವರಲ್ಲಿ ಘಟಣೆಯ ಬಗ್ಗೆ ತಿಳಿಸಿದ್ದಾರೆ. ಸ್ಥಳೀಯರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಸ್ಥಳಕ್ಕೆ ಬರುವಷ್ಟರಲ್ಲಿ ಅಪರಿಚಿತರು ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ. ಈ ಬಗ್ಗೆ ಅರುಣ್ ಕುಮಾರ್ ಅವರು ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಪ್ರಥಮ ವಿಶ್ವ ಕೊಂಕಣಿ ಸಂಗೀತ ಮಹಾ ಸಮಾವೇಶದ ಲಾಂಛನ ಬಿಡುಗಡೆ
ಮಂಗಳೂರು: ಕೊಂಕಣಿಗರ ಜನಸಂಖ್ಯೆ ಕಡಿಮೆಯಿದ್ದರೂ ಕೂಡ ಕೊಂಕಣಿಗರ ಉತ್ಸಾಹ ಮತ್ತು ಸೃಜನಶೀಲತೆ ಶ್ಲಾಘನೀಯ. ಸಾಂಸ್ಕೃತಿಕ ನೆಲೆಗಟ್ಟಿನಲ್ಲಿ ಮತ್ತು ಸಮಾಜ ಸೇವೆಯಲ್ಲಿ ಕೊಂಕಣಿ ಸಮುದಾಯ ಮುಂಚೂಣಿಯ ಲ್ಲಿದೆ. ಸಂಗೀತ ಅವರಿಗೆ ರಕ್ತಗತವಾಗಿದೆ. ಹಲವು ದಾಖಲೆಗಳನ್ನು ಬರೆದ ಮಾಂಡ್ ಸೊಭಾಣ್ ಸಂಸ್ಥೆ ಈಗ ಆರು ಸಾವಿರ ಗಾಯಕರು ಮತ್ತು ಐದು ಸಾವಿರ ಹಾಡುಗಳಿಂದ ಹೊಸ ವಿಶ್ವ ದಾಖಲೆಯನ್ನು ರಚಿಸಲು ಸಜ್ಜಾಗಿದೆ. ಇದು ವಿಶ್ವ ದಾಖಲೆ ಆಗಲಿದೆ ಎಂದು ದ.ಕ.ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೇಳಿದರು. ಮಾಂಡ್ ಸೊಭಾಣ್ ಕೊಂಕಣಿಯ ಸಾಂಸೃತಿಕ ಸಂಘಟನೆಯ ಮಾಣಿಕ್ಯ ಮಹೋತ್ಸವ ಆಚರಣೆಯ ಪ್ರಯುಕ್ತ ನ.3ರಿಂದ 15ರವರೆಗೆ ನಡೆಯಲಿರುವ ಪ್ರಥಮ ವಿಶ್ವ ಕೊಂಕಣಿ ಸಂಗೀತ ಮಹಾ ಸಮಾವೇಶದ ಮುಹೂರ್ತವನ್ನು ವೀಣೆಯ ಪ್ರತಿಕೃತಿ ಮೇಲಿರುವ 12 ವಿಭಿನ್ನ ರಂಗಿನ ದೀಪಗಳನ್ನು ಬೆಳಗಿಸಿ ಮತ್ತು ಹೂವಿನ ಮೊಗ್ಗಿನಿಂದ ಸಮಾವೇಶದ ಲಾಂಛನವನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು. ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ಸಂಗೀತ ನಿರ್ದೇಶಕ ಜೊಯೆಲ್ ಪಿರೇರಾ ಅವರಿಗೆ ಸಂಗೀತ ಬೇಟನ್ ಹಸ್ತಾಂತರಿಸಲಾಯಿತು. ಶಾಸಕ ವೇದವ್ಯಾಸ ಕಾಮತ್ ಮತ್ತು ಕಲಾವಿದ ಮೈಕಲ್ ಗ್ರೇಶಿಯಸ್ ಶುಭ ಹಾರೈಸಿದರು. ಪ್ರಸ್ತಾವಿಕ ನುಡಿಗಳನ್ನಾಡಿದ ಅಧ್ಯಕ್ಷ ಲುವಿ ಪಿಂಟೊ ಕೊಂಕಣಿ ಸಂಗೀತಕ್ಕೆ ಮಹೋನ್ನತ ಹಿರಿಮೆ ತಂದು ಕೊಟ್ಟ ಎರಿಕ್ ಒಝೇರಿಯೊರವರ ಕೆಲಸಗಳನ್ನು ಮುಂದುವರಿಸುವುದೇ ನಾವು ಅವರಿಗೆ ಸಲ್ಲಿಸುವ ಶ್ರದ್ಧಾಂಜಲಿಯಾಗಿದೆ. ಇದು ಕೇವಲ ಗಿನ್ನೆಸ್ ದಾಖಲೆಯ ಪ್ರಯತ್ನವಾಗದೆ ಕೊಂಕಣಿಯ ಒಗ್ಗಟ್ಟನ್ನು ಆಚರಿಸುವ, ಕೊಂಕಣಿಯ ಬಾವುಟ ವನ್ನು ಜಗದೆತ್ತರಕ್ಕೆ ಏರಿಸುವ ಹಾಗೂ ಈ ಮೂಲಕ ಕೊಂಕಣಿ ಸಂಗೀತದ ಶ್ರೀಮಂತ ಪರಂಪರೆಯನ್ನು ಸಂಭ್ರಮಿಸುವ ಅವಕಾಶವಾಗಲಿದೆ ಎಂದು ಹೇಳಿದರು. ಗಾಯಕಿ ಜೊಯ್ಸ್ ಒಝೇರಿಯೊರನ್ನು ಗೌರವಿಸಲಾಯಿತು. ವೇದಿಕೆಯಲ್ಲಿ ಮೆಸ್ಕಾಂ ಅಧ್ಯಕ್ಷ ಹರೀಶ್ ಕುಮಾರ್, ಸಂಘಟಕ ಸ್ಟ್ಯಾನಿ ಆಲ್ವಾರಿಸ್ ಮತ್ತು ಕಾರ್ಯದರ್ಶಿ ರೊನಾಲ್ಡ್ ಕ್ರಾಸ್ತಾ ಉಪಸ್ಥಿತರಿದ್ದರು. ರೈನಾ ಸಿಕ್ವೇರಾ ನೇತೃತ್ವದಲ್ಲಿ ಸುಮೇಳ್ ತಂಡದಿಂದ ಗಾಯನ ನಡೆಯಿತು. ಮಾಂಡ್ ಸೊಭಾಣ್ ನಡೆದು ಬಂದ ಹಾದಿಯ ಬಗ್ಗೆ ಸಾಕ್ಷ್ಯಚಿತ್ರ ಪ್ರದರ್ಶಿಸಲಾಯಿತು. ಕಲಾಂಗಣ ಪಿರ್ಜೆಂತ್ ರೊಯ್ ಕ್ಯಾಸ್ತೆಲಿನೊ ವಂದಿಸಿದರು. ಐರಿನ್ ರೆಬೆಲ್ಲೊ ಕಾರ್ಯಕ್ರಮ ನಿರೂಪಿಸಿದರು.
Tamil Nadu | ಅಲ್ಪಸಂಖ್ಯಾತರನ್ನು ಭೀತಿಯಲ್ಲಿ ಇರಿಸುವುದು ಬಿಜೆಪಿಯ ಪ್ರಮುಖ ಕಾರ್ಯಸೂಚಿ: ಸ್ಟಾಲಿನ್
ಚೆನ್ನೈ, ಎ. 11: ಅಲ್ಪಸಂಖ್ಯಾತರನ್ನು ಭೀತಿಯಲ್ಲಿ ಇರಿಸುವುದು ಬಿಜೆಪಿಯ ಪ್ರಮುಖ ಕಾರ್ಯಸೂಚಿಯಾಗಿದೆ ಎಂದು ಡಿಎಂಕೆ ಅಧ್ಯಕ್ಷ ಎಂ.ಕೆ. ಸ್ಟಾಲಿನ್ ಆರೋಪಿಸಿದ್ದಾರೆ. ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಏನು ನಡೆಯುತ್ತಿದೆ ಎಂಬುದು ಎಲ್ಲರಿಗೂ ತಿಳಿದಿದೆ. ಈ ರಾಜ್ಯಗಳಲ್ಲಿ ಮುಸ್ಲಿಮರು ದಾಳಿಗೆ ಗುರಿಯಾಗುತ್ತಿದ್ದಾರೆ ಎಂದು ಅವರು ತಿಳಿಸಿದರು. ಈಗ ಕ್ರಿಸ್ಮಸ್ ಅನ್ನು ಕೂಡ ಶಾಂತಿಯುತವಾಗಿ ಆಚರಿಸಲು ಸಾಧ್ಯವಾಗದ ಪರಿಸ್ಥಿತಿ ಉದ್ಭವಿಸಿದೆ. ಕ್ರೈಸ್ತರನ್ನು ಗುರಿ ಮಾಡಲಾಗುತ್ತಿದೆ. ಮಣಿಪುರದಲ್ಲಿ ಏನು ನಡೆಯುತ್ತಿದೆ ಎಂಬುದಕ್ಕೆ ಇಡೀ ದೇಶವೇ ಸಾಕ್ಷಿಯಾಗಿದೆ ಎಂದು ಅವರು ಹೇಳಿದರು. ಅಲ್ಪಸಂಖ್ಯಾತರ ಅಭದ್ರತೆಯ ಸ್ಥಿತಿ ದೇಶಾದ್ಯಂತ ಕಾಡ್ಗಿಚ್ಚಿನಂತೆ ಹರಡಬೇಕು ಎಂಬುದು ಬಿಜೆಪಿಯ ಕಾರ್ಯಯೋಜನೆಯಾಗಿದೆ ಎಂದು ಅವರು ಸುದ್ದಿಸಂಸ್ಥೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿದರು. ಅದಕ್ಕಾಗಿಯೇ ಅದು ಮೊದಲು ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಗೆ ತಂದಿತು. ಅನಂತರ ವಕ್ಫ್ ಕಾಯ್ದೆಗೆ ತಿದ್ದುಪಡಿ ತಂದಿತು. ಈಗ ಅದು FCRA ಅನ್ನು ತಿದ್ದುಪಡಿ ಮಾಡುವ ಆತುರದಲ್ಲಿದೆ ಎಂದು ಅವರು ತಿಳಿಸಿದರು. ಈ ಮೂರು ತಿದ್ದುಪಡಿಗಳನ್ನು ಬೆಂಬಲಿಸುವ ಹಾಗೂ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿರುವ ಪಳನಿಸ್ವಾಮಿ ಅವರಿಗೆ ಅಲ್ಪಸಂಖ್ಯಾತರ ಯೋಗಕ್ಷೇಮದ ಬಗ್ಗೆ ಯಾವುದೇ ಕಾಳಜಿ ಇಲ್ಲ ಎಂದು ಅವರು ಆರೋಪಿಸಿದರು. ಭಾರತ ಯಾವಾಗಲೂ ಜಾತ್ಯತೀತ ರಾಷ್ಟ್ರವಾಗಿರಬೇಕು; ಎಲ್ಲಾ ಧರ್ಮಗಳಿಗೆ ಸೇರಿದ ಜನರನ್ನು ಸಮಾನವಾಗಿ ಗೌರವಿಸಬೇಕು ಹಾಗೂ ಅಲ್ಪಸಂಖ್ಯಾತರಿಗೆ ನೀಡಲಾದ ಸಾಂವಿಧಾನಿಕ ರಕ್ಷಣೆಯನ್ನು ಎತ್ತಿಹಿಡಿಯಬೇಕು ಎಂಬುದು ಪಕ್ಷದ ಅಚಲ ನಿಲುವಾಗಿದೆ ಎಂದು ಅವರು ಹೇಳಿದರು. ಇವುಗಳಲ್ಲಿ ಯಾವುದಾದರೂ ಒಂದಕ್ಕೆ ಬೆದರಿಕೆ ಬಂದರೆ, ಅದರ ವಿರುದ್ಧ ಧ್ವನಿ ಎತ್ತುವ ಮೊದಲ ಪಕ್ಷ ಡಿಎಂಕೆಯಾಗಿರುತ್ತದೆ ಎಂದು ಸ್ಟಾಲಿನ್ ಹೇಳಿದರು.
Thailandನಿಂದ ಗಡಿಪಾರಾದ ಭೂಗತ ಪಾತಕಿ: ಸಾಹಿಲ್ ಚೌಹಾಣ್ ಬಂಧನ
ಗುರ್ಗಾಂವ್, ಎ. 11: ಥೈಲ್ಯಾಂಡ್ ನಿಂದ ಗಡಿಪಾರು ಮಾಡಲಾದ ಭೂಗತ ಪಾತಕಿ ಸಾಹಿಲ್ ಚೌಹಾಣ್ ನನ್ನು ವಿಶೇಷ ಕಾರ್ಯ ಪಡೆ (STF) ಶನಿವಾರ ಬಂಧಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಭೂಗತ ಪಾತಕಿ ಕೌಸಲ್ ಚೌಧರಿಯ ಸಹಚರ ಚೌಹಾಣ್ ನನ್ನು ಅಂಬಾಲದ STF ತಂಡ ದಿಲ್ಲಿಯ ಇಂದಿರಾಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಶಕ್ಕೆ ತೆಗೆದುಕೊಂಡಿತು. ಅಧಿಕಾರಿಗಳ ಪ್ರಕಾರ, ಚೌಹಾಣ್ ಹರಿಯಾಣದಲ್ಲಿ ಹಲವು ಕ್ರಿಮಿನಲ್ ಪ್ರಕರಣಗಳಲ್ಲಿ ಬೇಕಾಗಿದ್ದಾನೆ. ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಹಾಗೂ ರಾಜ್ಯಗಳ ಇತರ ತನಿಖಾ ಸಂಸ್ಥೆಗಳು ಆತನ ಮೇಲೆ ಕಣ್ಣಿಟ್ಟಿದ್ದವು. ಚೌಹಾಣ್ ವಿರುದ್ಧ 16 ಪ್ರಕರಣಗಳಿವೆ. ಈತ ಕೌಸಲ್ ಚೌಧರಿ ಗ್ಯಾಂಗ್, ಭೂಪ್ಪಿ ರಾಣಾ ಗ್ಯಾಂಗ್ ಹಾಗೂ ದವೀಂದರ್ ಬಂಬಿಹಿಯಾ ಗ್ಯಾಂಗ್ ನ ನಿಕಟ ಸಹಚರ. ಚೌಹಾಣ್ ಥೈಲ್ಯಾಂಡ್ ತಲುಪಿದ್ದಾನೆ ಎಂದು ಪಂಜಾಬ್ ಪೊಲೀಸರು ಹರಿಯಾಣ ಪೊಲೀಸರಿಗೆ ಮಾಹಿತಿ ನೀಡಿದ್ದರು. ಈ ಮಾಹಿತಿ ಪಡೆದ ಬಳಿಕ ಹರಿಯಾಣದ ವಿಶೇಷ ಕಾರ್ಯ ಪಡೆ ಕ್ರಮ ಕೈಗೊಂಡು ಆತನನ್ನು ಥೈಲ್ಯಾಂಡ್ ನಿಂದ ಗಡಿಪಾರು ಮಾಡಿಸಿತು.
2028ರಿಂದ ದಿಲ್ಲಿಯಲ್ಲಿ ಪೆಟ್ರೋಲ್ ದ್ವಿಚಕ್ರ ವಾಹನಗಳ ನೋಂದಣಿಯಿಲ್ಲ!
ಹೊಸದಿಲ್ಲಿ, ಎ. 11: ದಿಲ್ಲಿ ಸರಕಾರ ಸಾರ್ವಜನಿಕ ಪ್ರತಿಕ್ರಿಯೆಗಾಗಿ ದಿಲ್ಲಿ ಇಲೆಕ್ಟ್ರಿಕ್ ವಾಹನ (EV) ನೀತಿ 2026-30ರ ಕರಡನ್ನು ಬಿಡುಗಡೆ ಮಾಡಿದ್ದು, ಹೊಸ ಪೆಟ್ರೋಲ್ ದ್ವಿಚಕ್ರ ವಾಹನಗಳ ನೋಂದಣಿಯನ್ನು 2028ರಿಂದ ಹಾಗೂ ತ್ರಿಚಕ್ರ ವಾಹನಗಳ ನೋಂದಣಿಯನ್ನು 2027ರಿಂದ ನಿಷೇಧಿಸುವ ಮೂಲಕ ಇಲೆಕ್ಟ್ರಿಕ್ ಚಾಲಿತ ವಾಹನಗಳತ್ತ ಪ್ರಮುಖ ಪರಿವರ್ತನೆಯನ್ನು ಪ್ರಸ್ತಾವಿಸಿದೆ. ಕರಡು ನೀತಿಯನ್ನು ಸಾರಿಗೆ ಇಲಾಖೆಯ ವೆಬ್ ಸೈಟ್ ನಲ್ಲಿ ಅಪ್ಲೋಡ್ ಮಾಡಲಾಗಿದ್ದು, 30 ದಿನಗಳವರೆಗೆ ಸಾರ್ವಜನಿಕ ಅಭಿಪ್ರಾಯಗಳಿಗೆ ಮುಕ್ತವಾಗಿರುತ್ತದೆ. ಅನಂತರ ಅಂತಿಮ ನೀತಿಯನ್ನು ಅಧಿಸೂಚಿಸಲಾಗುತ್ತದೆ ಹಾಗೂ 2030ರವರೆಗೆ ಜಾರಿಯಲ್ಲಿರುತ್ತದೆ. ಕರಡಿನ ಪ್ರಕಾರ, ದಿಲ್ಲಿ ವಾಯು ಮಾಲಿನ್ಯಕ್ಕೆ ವಾಹನಗಳು ಹೊರಸೂಸುವ ಹೊಗೆಯು ಸುಮಾರು ಶೇ. 23 ಕೊಡುಗೆ ನೀಡುವುದರಿಂದ, ವಾಯು ಮಾಲಿನ್ಯವನ್ನು ಕಡಿಮೆ ಮಾಡುವ ಹಾಗೂ ದಿಲ್ಲಿಯಲ್ಲಿ ಸ್ವಚ್ಛ ವಾಹನ ಸಂಚಾರವನ್ನು ಉತ್ತೇಜಿಸುವ ಉದ್ದೇಶವನ್ನು ಈ ನೀತಿ ಹೊಂದಿದೆ. ದ್ವಿಚಕ್ರ, ತ್ರಿಚಕ್ರ ಕುರಿತಂತೆ ದಿಲ್ಲಿ EV ಕರಡು ನೀತಿ ಏನು ಹೇಳುತ್ತದೆ: 2028ರಿಂದ ದಿಲ್ಲಿಯಲ್ಲಿ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳಿಗೆ ಮಾತ್ರ ಹೊಸ ನೋಂದಣಿಗೆ ಅವಕಾಶ ನೀಡಲಾಗುವುದು. ಅದೇ ರೀತಿ 2027ರಿಂದ ಎಲೆಕ್ಟ್ರಿಕ್ ತ್ರಿಚಕ್ರ ವಾಹನಗಳಿಗೆ ಮಾತ್ರ ನೋಂದಣಿಗೆ ಅವಕಾಶ ನೀಡಲಾಗುವುದು. 2030ರ ವೇಳೆಗೆ ಶಾಲಾ ಬಸ್ ಗಳಲ್ಲಿ ಕನಿಷ್ಠ ಶೇ. 30 ಎಲೆಕ್ಟ್ರಿಕ್ ಚಾಲಿತವಾಗಿರಬೇಕು. ಸರಕಾರಿ ವಾಹನಗಳನ್ನು ಕ್ರಮೇಣ ಎಲೆಕ್ಟ್ರಿಕ್ ಚಾಲಿತ ವಾಹನಗಳಾಗಿ ಬದಲಾಯಿಸಬೇಕು ಎಂದು ಕರಡು ನೀತಿ ಪ್ರಸ್ತಾವಿಸಿದೆ. ಕರಡು ಖರೀದಿದಾರರಿಗೆ ಬ್ಯಾಟರಿ ಸಾಮರ್ಥ್ಯಕ್ಕೆ ಸಂಬಂಧಿಸಿದ ಖರೀದಿ ಪ್ರೋತ್ಸಾಹಕಗಳನ್ನು ಪ್ರಸ್ತಾವಿಸಿದೆ. 2.25 ಲಕ್ಷ ರೂ.ವರೆಗಿನ ಬೆಲೆಯ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳಿಗೆ ಪ್ರೋತ್ಸಾಹ ಧನ ಮೊದಲ ವರ್ಷದಲ್ಲಿ ಪ್ರತಿ ಕಿ.ವ್ಯಾ.ಗೆ 10,000 ರೂ.ನಿಂದ ಪ್ರಾರಂಭವಾಗುತ್ತದೆ (ಗರಿಷ್ಠ 30 ಸಾವಿರ ರೂ.). ಎರಡನೇ ವರ್ಷದಲ್ಲಿ ಇದು ಪ್ರತಿ ಕಿ.ವ್ಯಾ.ಗೆ 6,600 ರೂ. (ಗರಿಷ್ಠ 20 ಸಾವಿರ ರೂ.)ಗೆ ಇಳಿಯುತ್ತದೆ ಹಾಗೂ ಮೂರನೇ ವರ್ಷದಲ್ಲಿ ಪ್ರತಿ ಕಿ.ವ್ಯಾ.ಗೆ 3,300 ರೂ. (ಗರಿಷ್ಠ 10,000 ರೂ.)ಗೆ ಕಡಿಮೆಯಾಗುತ್ತದೆ. ಇಲೆಕ್ಟ್ರಿಕ್ ತ್ರಿಚಕ್ರ ವಾಹನಗಳು (ಇ-ರಿಕ್ಷಾ) ಮೊದಲ ವರ್ಷ 50,000 ರೂ., ಎರಡನೇ ವರ್ಷ 40,000 ರೂ. ಹಾಗೂ ಮೂರನೇ ವರ್ಷ 30,000 ರೂ.ವನ್ನು ಪಡೆಯುತ್ತವೆ. ಇಲೆಕ್ಟ್ರಿಕ್ ಸರಕು ಸಾಗಾಟ ವಾಹನಗಳು (ಎನ್ಐ ವರ್ಗ) ಮೊದಲ ವರ್ಷ 1 ಲಕ್ಷ ರೂ., ಎರಡನೇ ವರ್ಷ 75,000 ರೂ. ಹಾಗೂ ಮೂರನೇ ವರ್ಷ 50 ಸಾವಿರ ರೂ. ಪಡೆಯಲು ಅರ್ಹವಾಗಿವೆ.
ಜೂನಿಯರ್ ಬ್ಯಾಡ್ಮಿಂಟನ್ ಸ್ಪರ್ಧೆ: ಆರ್ಯನ್ ಕರ್ಕೇರಗೆ ಚಿನ್ನದ ಪದಕ
ಮಂಗಳೂರು, ಎ.11: ದಕ್ಷಿಣ ಕನ್ನಡ ಬ್ಯಾಡ್ಮಿಂಟನ್ ಅಸೋಸಿಯೇಶನ್ನ ಆರ್ಯನ್ ಕರ್ಕೇರ ಅವರು ಜೂನಿಯರ್ ರಾಜ್ಯ ಮುಕ್ತ ಬ್ಯಾಡ್ಮಿಂಟನ್ ಪಂದ್ಯಾಟದಲ್ಲಿ ಚಿನ್ನದ ಪದಕ ಪಡೆದಿದ್ದಾರೆ. ಶಿವಮೊಗ್ಗದ ರಾವ್ ಸ್ಪೋರ್ಟ್ಸ್ ಕ್ರೀಡಾಂಗಣದಲ್ಲಿ ಅಲ್ಲಿನ ಫ್ರೆಂಡ್ಸ್ ಕ್ಲಬ್ ಆಶ್ರಯದಲ್ಲಿ ಶನಿವಾರ ಪಂದ್ಯಾಟ ನಡೆದಿದ್ದು, ಜೂನಿಯರ್ ವಿಭಾಗದಲ್ಲಿ ಆರ್ಯನ್ ಅವರು ಸೆಮಿಫೈನಲ್ನಲ್ಲಿ ಮಂಗಳೂರಿನ ಲಕ್ಷ್ ದೇವಾಡಿಗ ಹಾಗೂ ಫೈನಲ್ ನಲ್ಲಿ ಹೊನ್ನಹಳ್ಳಿಯ ಪ್ರಣವ್ ಅವರ ವಿರುದ್ಧ ಜಯ ಗಳಿಸಿದರು. ಮಂಗಳೂರಿನ ಮಣಿಪಾಲ ಶಾಲೆಯ ವಿದ್ಯಾರ್ಥಿಯಾಗಿರುವ ಆರ್ಯನ್ ಕರ್ಕೇರ ಅವರು ಉರ್ವಾದ ಒಳಾಂಗಣ ಕ್ರೀಡಾಂಗಣದಲ್ಲಿ ಕೋಚ್ಗಳಾದ ಅನಿರುದ್ಧ ಪಟವರ್ಧನ್ ಮತ್ತು ವಿವೇಕ್ ಜಾನ್ ಅವರಿಂದ ಬ್ಯಾಡ್ಮಿಂಟನ್ ತರಬೇತಿ ಪಡೆಯುತ್ತಿದ್ದಾರೆ.
ಮೂಡುಬಿದಿರೆ|ದ.ಕ. ಜಿಲ್ಲಾ ಮಟ್ಟದ ವಾಲಿಬಾಲ್ ಚಾಂಪಿಯನ್ಶಿಪ್ ಗೆ ಚಾಲನೆ
ಮೂಡುಬಿದಿರೆ: ದಕ್ಷಿಣ ಕನ್ನಡ ಜಿಲ್ಲಾ ವಾಲಿಬಾಲ್ ಅಸೋಸಿಯೇಷನ್ ಹಾಗೂ ಮೂಡುಬಿದಿರೆ ತಾಲೂಕು ವಾಲಿಬಾಲ್ ಅಸೋಸಿಯೇಷನ್ ಇವುಗಳ ಜಂಟಿ ಆಶ್ರಯದಲ್ಲಿ ಜಿಲ್ಲಾ ಮಟ್ಟದ ಪುರುಷರ ಮತ್ತು ಮಹಿಳೆಯರ ವಿಭಾಗದ ವಾಲಿಬಾಲ್ ಚಾಂಪಿಯನ್ಶಿಪ್-2026ಕ್ಕೆ ಮೂಡುಬಿದಿರೆಯ ಸ್ವರಾಜ್ಯ ಮೈದಾನದಲ್ಲಿ ಶನಿವಾರ ಸಂಜೆ ಆರಂಭಗೊಂಡಿತು. ಮಹಿಳೆಯರ ವಿಭಾಗದ ಚಾಂಪಿಯನ್ ಶಿಫ್ ನ್ನು ಮಹಿಳೆಯರ ವಿಭಾಗದ ಪಂದ್ಯಾಟವನ್ನು ವಕೀಲರಾದ ಶ್ವೇತಾ ಜೈನ್ ಉದ್ಘಾಟಿಸಿ ಮಾತನಾಡಿ ಮಹಿಳೆಯರು ಪುರುಷರಿಗೆ ಸಮಾನವಾಗಿ ಎಲ್ಲಾ ಕಡೆಗಳಲ್ಲೂ ಇದ್ದಾರೆ. ಭಾರತದ ವಾಲಿಬಾಲ್ ತಂಡವು ದಕ್ಷಿಣ ಭಾರತಕ್ಕೆ ಹೋಲಿಸಿದರೆ ಬಲಿಷ್ಠವಾದ ತಂಡವಾಗಿದೆ ಆದರೆ ಜಪಾನ್, ಚೀನಾ ಮತ್ತು ಕೊರಿಯಾ ತಂಡಗಳಿಗೆ ಹೋಲಿಸಿದರೆ ನಮ್ಮ ದೇಶದ ಮಹಿಳಾ ತಂಡಗಳಿಗೆ ಹೆಚ್ಚಿನ ತರಬೇತಿಯ ಅವಶ್ಯಕತೆಯಿದೆ ಎಂದೆನಿಸುತ್ತದೆ ಎಂದರು. ಜಿಲ್ಲಾ ವಾಲಿಬಾಲ್ ಅಸೋಸಿಯೇಷನ್ ಅಧ್ಯಕ್ಷ ಬಿ. ಎಸ್ ಸತೀಶ್ ಕುಮಾರ್ ಅವರು ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ ಕ್ರಿಕೆಟ್ ಮತ್ತು ವಾಲಿಬಾಲ್ ಕ್ರೀಡೆಗಳು ಜೀವನದ ಒಂದು ಭಾಗವಾಗಿದೆ. ಮಹಿಳೆಯರು ಪುರುಷರಿ ಗಿಂತ ಹೆಚ್ಚಿನ ಸಾಮಥ್ಯ೯ವನ್ನು ಹೊಂದಿದ್ದಾರೆ ಆದರೆ ಸಮಾಜ ಆಕೆಯ ಮಾನಸಿಕವಾಗಿ ಕುಗ್ಗಿಸುತ್ತಿದೆ.ಮಹಿಳೆ ಸವಾಲುಗಳನ್ನು ಎದುರಿಸಿ ಮಂದೆ ಬಂದಾಗ ಯಶಸ್ಸು ಸಾಧ್ಯ ಎಂದ ಅವರು ಅಸೋಸಿಯೇಷನ್ ಪಂದ್ಯಾಟಗಳನ್ನು ಆಯೋಜಿಸುವ ಮೂಲಕ ಗ್ರಾಮೀಣ ಪ್ರತಿಭೆಗಳ ಹುಡುಕಾಟದಲ್ಲಿದ್ದು ಇದಕ್ಕೆ ಎಲ್ಲರ ಸಹಕಾರ ಅಗತ್ಯ ಎಂದರು. ಮೂಡುಬಿದಿರೆ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಹರ್ಷವರ್ಧನ್ ಪಡಿವಾಳ್ ಅಂಕಣವನ್ನು ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಮೂಡುಬಿದಿರೆ ತಾಲೂಕು ವಾಲಿಬಾಲ್ ಅಸೋಸಿಯೇಷನ್ ನ ಅಧ್ಯಕ್ಷ ಡಾ. ವಿನಯ್ ಆಳ್ವ, ಉಜಿರೆ ಎಸ್. ಡಿ. ಎಂ ಕಾಲೇಜಿನ ದೈಹಿಕ ಶಿಕ್ಷಣ ನಿದೇ೯ಶಕ ರಮೇಶ್ ಶೆಟ್ಪಿ ಹಾಗೂ ಮಾಡರ್ನ್ ಡೆವೆಲಪರ್ಸ್ನ ಇಂಜಿನಿಯರ್ ಜಾವೆದ್ ಶೇಕ್ ಭಾಗವಹಿಸಲಿದ್ದಾರೆ. ನಾಗೇಶ್ ಎಸ್ ಸ್ವಾಗತಿಸಿದರು. ಜಿಲ್ಲಾ ಅಸೋಸಿಯೇಷನ್ ಕಾಯ೯ದಶಿ೯ ಶಂಕರ್ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಆಳ್ವಾಸ್ ನ ದೈಹಿಕ ಶಿಕ್ಷಣ ನಿದೇ೯ಶಕ ಪ್ರಮೋದ್ ಕಾಯ೯ಕ್ರಮ ನಿರೂಪಿಸಿ ವಂದಿಸಿದರು.
ಎರಡು ಪೂರ್ವಭಾವಿ ಷರತ್ತುಗಳನ್ನು ಅಮೆರಿಕ ಒಪ್ಪಿಕೊಂಡಿದೆ: ಇರಾನ್
ಷರತ್ತುಗಳನ್ನು ನಿರ್ಲಕ್ಷಿಸಿದರೆ ಮಾತುಕತೆ ರದ್ದಾಗಬಹುದು
ಕೆಎಸ್ಸಾರ್ಟಿಸಿಗೆ 3 ರಾಷ್ಟ್ರಮಟ್ಟದ ಆಡ್ವರ್ಲ್ಡ್ ಶೋಡೌನ್ ಪ್ರಶಸ್ತಿ
ಬೆಂಗಳೂರು : ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ(ಕೆಎಸ್ಸಾರ್ಟಿಸಿ)ಗೆ ಅತ್ಯುತ್ತಮ ಗ್ರಾಹಕ ಸ್ವಾಧೀನ ಮತ್ತು ಧಾರಣ ವರ್ಗದಲ್ಲಿ ನಿಗಮದ ಬಸ್ಗಳ ಬ್ರ್ಯಾಂಡಿಂಗ್ಗೆ ಹಾಗೂ ತಂತ್ರಜ್ಞಾನದ ಅತ್ಯುತ್ತಮ ಬಳಕೆ ವರ್ಗದಲ್ಲಿ ಅವತಾರ್ 4.0, ಯುಪಿಐ ಸೌಲಭ್ಯ ಸೇರಿ ಮಾನವ ಸಂಪನ್ಮೂಲ ಮತ್ತು ಆರೋಗ್ಯ ಉಪಕ್ರಮಗಳಿಗೆ ಪ್ರಶಸ್ತಿ ಲಭಿಸಿವೆ. ‘ಅವತಾರ್’ ವ್ಯವಸ್ಥೆ ಮೂಲಕ ಆನ್ಲೈನ್ ಟಿಕೆಟ್ ಕಾಯ್ದಿರಿಸುವಿಕೆ, ನೈಜ-ಸಮಯ ಆಸನ ಮಾಹಿತಿ ಮತ್ತು ನಗದು ರಹಿತ ಯುಪಿಐ ಪಾವತಿಗಳು ಸುಲಭವಾಗಿವೆ. ನಿಗಮದ ಅತ್ಯುತ್ತಮ ಮಾನವ ಸಂಪನ್ಮೂಲ ಮತ್ತು ಆರೋಗ್ಯ ಉಪಕ್ರಮಗಳಿಗೆ ಹಾಗೂ ನಿಗಮದ ಬಸ್ ಬ್ರ್ಯಾಂಡಿಂಗ್ ‘ಅಂಬಾರಿ ಉತ್ಸವ, ಪಲ್ಲಕ್ಕಿ, ಐರಾವತ ಕ್ಲಬ್ ಕ್ಲಾಸ್ 2.0, ಅಶ್ವಮೇಧ’ ಬಸ್ಗಳು ಪ್ರಯಾಣಿಕರಲ್ಲಿ ಹೆಚ್ಚು ಜನಮನ್ನಣೆ ಗಳಿಸಿದೆ ಎಂಬುದಾಗಿ ಗುರುತಿಸಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ನವದಿಲ್ಲಿಯಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಹುಲ್ಟ್ ಇಂಟರ್ ನ್ಯಾಷನಲ್ ಬಿಸಿನೆಸ್ ಸ್ಕೂಲ್ನ ಮಾರ್ಕೆಟಿಂಗ್ ಲೀಡರ್ ನಿಧಿ ಎಸ್.ಮಿತ್ತಲ್ ಪ್ರಶಸ್ತಿ ಪ್ರದಾನ ಮಾಡಿದರು. ಕೆಎಸ್ಸಾರ್ಟಿಸಿಯ ವಿಭಾಗೀಯ ನಿಯಂತ್ರಣಾಧಿಕಾರಿ ಎಂ.ಪಿ. ಶ್ರೀಹರಿ ಬಾಬು, ಎಸ್.ಎಸ್.ದಶರಥ್ ಮತ್ತಿತರರು ಉಪಸ್ಥಿತರಿದ್ದರು.
ಸಿಸಿಲಿಯಾ ಫರೀದಾ ಗೋವಿಯಸ್ಗೆ ಪಿಎಚ್ಡಿ ಪದವಿ
ಕೊಣಾಜೆ; ಸಿಸಿಲಿಯಾ ಫರೀದಾ ಗೋವಿಯಸ್ ಅವರು ಮಂಗಳೂರು ವಿಶ್ವವಿದ್ಯಾಲಯದ ಅರ್ಥಶಾಸ್ತ್ರ ವಿಭಾಗದ ನಿವೃತ್ತ ಪ್ರಾಧ್ಯಾಪಕರಾದ ಪ್ರೊ. ಶ್ರೀಪತಿ ಕಲ್ಲೂರಾಯ ಅವರ ಮಾರ್ಗದರ್ಶನದಲ್ಲಿ ದಕ್ಷಿಣ ಕನ್ನಡದ ವಾಣಿಜ್ಯ ಬ್ಯಾಂಕುಗಳು ಒದಗಿಸುವ ಇ-ಬ್ಯಾಂಕಿಂಗ್ ಉತ್ಪನ್ನಗಳು ಮತ್ತು ಸೇವೆಗಳ ಬಗ್ಗೆ ಗ್ರಾಹಕರ ತೃಪ್ತಿ ಎಂಬ ವಿಷಯದಲ್ಲಿ ಶ್ರೀನಿವಾಸ್ ವಿಶ್ವವಿದ್ಯಾಲಯಕ್ಕೆ ಮಂಡಿಸಿದ ಮಹಾಪ್ರಬಂದಕ್ಕೆ ಶ್ರೀನಿವಾಸ ವಿಶ್ವವಿದ್ಯಾಲಯ ಅವರಿಗೆ ಅರ್ಥಶಾಸ್ತ್ರದಲ್ಲಿ ಪಿ.ಎಚ್.ಡಿ ಪದವಿಯನ್ನು ನೀಡಿದೆ. ಗೋವಿಯಸ್ ಅವರು ಪ್ರಸ್ತುತ ಸ್ಕೂಲ್ ಆಫ್ ಸೋಷಿಯಲ್ ವರ್ಕ್ ರೋಶನಿ ನಿಲಯ (ಸ್ವಾಯತ್ತ) ಕಾಲೇಜಿನಲ್ಲಿ ಅರ್ಥಶಾಸ್ತ್ರದ ಸಹ ಪ್ರಾಧ್ಯಾಪಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು ದಿ.ಫ್ರಾನ್ಸಿಸ್ ಪೆರೇರಾ ಮತ್ತು ಕ್ಯಾಥರೀನ್ ಪೆರೇರಾ ದಂಪತಿಗಳ ಪುತ್ರಿ ಹಾಗೂ ಶ್ರೀ ಕಾನ್ಫ್ರೆಡ್ ಗೋವಿಯಸ್ ಅವರ ಪತ್ನಿ.
‘90 ಎಂಎಲ್’ಗೆ ತುಳು ಪ್ರೇಕ್ಷಕರಿಂದ ಭರ್ಜರಿ ಸ್ವಾಗತ’
ಉಡುಪಿ, ಎ.11: ಸೆನ್ಸಾರ್ ಮಂಡಳಿಯಿಂದ ಹಸಿರುನಿಶಾನೆ ಪಡೆಯಲು ವಿಳಂಬವಾದ ಕಾರಣ ನಿನ್ನೆಯಷ್ಟೇ ಬಿಡುಗಡೆಗೊಂಡ ‘90 ಎಂಎಲ್’ ತುಳು ಚಲನಚಿತ್ರಕ್ಕೆ ತುಳುನಾಡಿನ ಪ್ರೇಕ್ಷಕರು ಭರ್ಜರಿ ಸ್ವಾಗತ ನೀಡಿದ್ದಾರೆ ಎಂದು ಚಿತ್ರದ ನಾಯಕ ನಟ ವಿನೀತ್ ಕುಮಾರ್ ಹೇಳಿದ್ದಾರೆ. ಉಡುಪಿಯಲ್ಲಿಂದು ಕರೆದ ತುರ್ತು ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ವಿನೀತ್ ಕುಮಾರ್, ಅದ್ಧೂರಿಯಾಗಿ ತೆರೆಕಂಡ ಚಿತ್ರ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆಯುತ್ತಿದೆ ಎಂದು ತಿಳಿಸಿದರು. ಡಿ.ಡಿ. ಪ್ರೊಡಕ್ಷನ್ ಲಾಂಛನದಲ್ಲಿ ನಿರ್ಮಾಣವಾಗಿರುವ ಈ ಚಿತ್ರವನ್ನು ರಂಜಿತ್ ಸಿ. ಬಜಾಲ್ ನಿರ್ದೇಶಿಸಿದ್ದಾರೆ. ಅಶ್ಲೀಲತೆ ಅಥವಾ ನೇತ್ಯಾತ್ಮಕ ವಿಷಯಕ್ಕೆ ಅವಕಾಶ ನೀಡದೆ, ಕುಟುಂಬ ಸಮೇತವಾಗಿ ನೋಡಬಹುದಾದ ಹಾಸ್ಯಭರಿತ ಮನರಂಜನಾ ಕಥೆಯನ್ನು ನೀಡಿದ್ದೇವೆ. ಜನ ಅದನ್ನು ಖುಷಿಯಿಂದ ಸ್ವೀಕರಿಸಿದ್ದಾರೆ ಎಂಬುದು ನಮಗೆ ಸಂತೋಷ ತಂದಿದೆ ಎಂದರು. ಚಿತ್ರದಲ್ಲಿ ವಿನೀತ್ ಕುಮಾರ್ ಹಾಗೂ ರುಹಾನಿ ಶೆಟ್ಟಿ ಮುಖ್ಯ ಪಾತ್ರಗಳಲ್ಲಿ ಅಭಿನಯಿಸಿದ್ದು, ನವೀನ್ ಡಿ. ಪಡೀಲ್, ಅರವಿಂದ ಬೋಳಾರ್, ರೋಶನ್ ಶೆಟ್ಟಿ, ಉಮೇಶ್ ಮಿಜಾರ್, ದೀಪಕ್ ರೈ ಪಾಣಾಜೆ, ಪುಷ್ಪರಾಜ್ ಬೋಳಾರ್, ನಮಿತಾ, ಶೈಲಾಶ್ರೀ ಹಾಗೂ ಧೃತಿ ಸೇರಿದಂತೆ ಹಲವಾರು ಖ್ಯಾತ ಕಲಾವಿದರು ನಟಿಸಿದ್ದಾರೆ. ಡೋಲ್ಸಿ ಡಿ ಸೋಜ ನಿರ್ಮಾಣದ ಈ ಚಿತ್ರಕ್ಕೆ ರಂಜಿತ್ ಸಿ. ಬಜಾಲ್ ಕಥೆ, ಚಿತ್ರಕಥೆ ಹಾಗೂ ನಿರ್ದೇಶನವಿದೆ. ತುಳಸಿದಾಸ್ ಮಂಜೇಶ್ವರ್ ಸಂಭಾಷಣೆ ಬರೆದಿದ್ದು, ಸೃಜನ್ ಕುಮಾರ್ ತೋನ್ಸೆ ಸಂಗೀತವಿದೆ. ಪ್ರಸ್ತುತ ಮಂಗಳೂರು, ಉಡುಪಿ, ಪುತ್ತೂರು, ಬೆಳ್ತಂಗಡಿ, ಸುರತ್ಕಲ್, ಪಡುಬಿದ್ರೆ, ಕಾರ್ಕಳ ಹಾಗೂ ದೇರಳಕಟ್ಟೆ ಸೇರಿದಂತೆ ಕರಾವಳಿಯ ಪ್ರಮುಖ ಕೇಂದ್ರಗಳ ಚಿತ್ರಮಂದಿರಗಳಲ್ಲಿ ಸಿನಿಮಾ ಯಶಸ್ವಿಯಾಗಿ ಪ್ರದರ್ಶನ ಗೊಳ್ಳು ತ್ತಿದೆ. ಉಡುಪಿಯ ಕಲ್ಪನಾ, ಭಾರತ್ ಹಾಗೂ ಮಣಿಪಾಲದಲ್ಲೂ ಚಿತ್ರ ಬಿಡುಗಡೆಯಾಗಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ ಎಂದು ವಿನೀತ್ ನುಡಿದರು. ಚಿತ್ರದ ಕುರಿತು ನಿರ್ದೇಶಕ ರಂಜಿತ್ ಸಿ. ಬಜಾಲ್ ಮಾತನಾಡಿ, ಪ್ರೇಕ್ಷಕರ ಅಭಿರುಚಿಗೆ ತಕ್ಕಂತೆ ಹಾಸ್ಯ ಮತ್ತು ಮನರಂಜನೆಯೊಂದಿಗೆ ಉತ್ತಮ ಕಥೆಯನ್ನು ನೀಡಿದ್ದೇವೆ. ದಕ್ಷಿಣ ಕನ್ನಡ ಜಿಲ್ಲೆಯ ಸುಂದರ ಪ್ರದೇಶಗಳಲ್ಲಿ ಈ ಸಿನಿಮಾವನ್ನು ಚಿತ್ರೀಕರಿಸಲಾಗಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ನಟಿ ರುಹಾನಿ ಶೆಟ್ಟಿ ಹಾಗೂ ನಟ ರೋಶನ್ ಶೆಟ್ಟಿ ಉಪಸ್ಥಿತರಿದ್ದರು.
ಮಾತುಕತೆ ವಿಫಲಗೊಂಡರೆ ಮುಂದಿನ ಕ್ರಮಕ್ಕೆ ಸಿದ್ಧವಿದ್ದೇವೆ: ಡೊನಾಲ್ಡ್ ಟ್ರಂಪ್ ಎಚ್ಚರಿಕೆ
ವಾಷಿಂಗ್ಟನ್, ಎ.11: ಪಾಕಿಸ್ತಾನದ ಮಧ್ಯಸ್ಥಿಕೆಯಲ್ಲಿ ಅಮೆರಿಕ ಮತ್ತು ಇರಾನ್ ನಡುವೆ ನಡೆಯುತ್ತಿರುವ ಮಾತುಕತೆ ವಿಫಲವಾದರೆ ನಾವು ಮುಂದಿನ ಕ್ರಮಕ್ಕೆ ಸಿದ್ಧವಿದ್ದೇವೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶನಿವಾರ ಎಚ್ಚರಿಕೆ ನೀಡಿದ್ದಾರೆ. ಹಾರ್ಮುಝ್ ಜಲಸಂಧಿ ಶೀಘ್ರದಲ್ಲೇ ಮತ್ತೆ ತೆರೆಯಲಿದೆ ಎಂದೂ ಹೇಳಿದ್ದಾರೆ. ಇರಾನ್ ಒಂದು ವಿಫಲ ರಾಷ್ಟ್ರವಾಗಿದೆ ಎಂದು ಲೇವಡಿ ಮಾಡಿದ ಟ್ರಂಪ್, ಹಲವು ರಾಷ್ಟ್ರಗಳು ಈಗಾಗಲೇ ತೈಲ ಸಾಗಣೆಗೆ ಹಾರ್ಮುಝ್ ಬದಲಿಗೆ ಪರ್ಯಾಯ ಮಾರ್ಗಗಳನ್ನು ಕಂಡುಕೊಂಡಿವೆ ಎಂದು ಪ್ರತಿಪಾದಿಸಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.
ಉಡುಪಿ, ಎ.11: ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ 2026-2031ನೇ ಸಾಲಿನ ಚುನಾವಣೆಗೆ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಚುನಾವಣಾ ಅಧಿಕಾರಿಗಳು ಅಧಿಸೂಚನೆಯನ್ನು ಹೊರಡಿಸಿ ದ್ದಾರೆ. ಆದರೆ ಕೆಲವು ತಾಂತ್ರಿಕ ಕಾರಣಗಳಿಗಾಗಿ ಉಡುಪಿ ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಚುನಾವಣೆ ಯನ್ನು ಸ್ಥಗಿತಗೊಳಿಸಲಾಗಿದೆ ಎಂದು ಜಿಲ್ಲಾಧ್ಯಕ್ಷ ಕೆ.ದಿನಕರ ಶೆಟ್ಟಿ ಅಂಪಾರು ತಿಳಿಸಿದ್ದಾರೆ. ಉಡುಪಿ ಜಿಲ್ಲೆಯಲ್ಲಿ ಎ.11ರಿಂದ ಚುನಾವಣಾ ಪ್ರಕ್ರಿಯೆ ಪ್ರಾರಂಭವಾಗ ಬೇಕಾಗಿದ್ದು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಕೇಂದ್ರ ಸಮಿತಿಯು ಉಡುಪಿ ಜಿಲ್ಲೆಯ ಮತದಾರರ ಪಟ್ಟಿಯನ್ನು ಫೆಬ್ರವರಿ ತಿಂಗಳಿನಲ್ಲಿ ನಡೆದ ರಾಜ್ಯ ಮಟ್ಟದ ಧನ್ಯತಾ ಸಮಾವೇಶಕ್ಕೆ ಜಿಲ್ಲೆಯ ಶಿಕ್ಷಕರಿಂದ ಹಣ ವಸೂಲಿ ಮಾಡಿ ರಾಜ್ಯಸಂಘಕ್ಕೆ ನೀಡದೇ ಇರುವ ಕಾರಣಕ್ಕೆ ಅನುಮೋದನೆ ನೀಡಿಲ್ಲ ಎಂದು ಅವರು ಹೇಳಿದ್ದಾರೆ. ಅಲ್ಲದೇ ಕಳೆದ ನಾಲ್ಕು ವರ್ಷಗಳಿಂದ ಉಡುಪಿ ಜಿಲ್ಲೆಯ ಜಿಲ್ಲಾ ಮತ್ತು ತಾಲೂಕು ಶಾಖೆಗಳಿಗೆ ಶಿಕ್ಷಕರ ಸದಸ್ಯತ್ವ ಶುಲ್ಕದ ಮೊತ್ತದ ಪಾಲನ್ನು ಪಾವತಿ ಮಾಡದೇ ಇರುವುದರಿಂದ, ತಾನು ಮತ್ತೆ ಕೇಂದ್ರ ಸಮಿತಿಯ ಚುನಾವಣೆ ಯಲ್ಲಿ ಬಾಗವಹಿಸಬಾರದು ಎಂಬ ಕಾರಣಕ್ಕಾಗಿ ಉಡುಪಿ ಜಿಲ್ಲೆಯ ಎಲ್ಲಾ ತಾಲೂಕುಗಳ ಮತದಾರ ಪಟ್ಟಿ ಮತ್ತು ಚುನಾವಣಾ ಅಧಿಕಾರಿಗಳ ನೇಮಕ ಪ್ರಕ್ರಿಯೆಗೆ ಅನುಮೋದನೆ ನೀಡಿಲ್ಲ ಎಂದು ಜಿಲ್ಲಾಧ್ಯಕ್ಷ ಕೆ ದಿನಕರ ಶೆಟ್ಟಿ ಅಂಪಾರು ಆರೋಪಿಸಿದ್ದಾರೆ. ತಾನು ಜಿಲ್ಲೆಯ ಇತರೆ ಹಲವು ಸಂಘಟನೆಗಳಲ್ಲಿ ಸಕ್ರಿಯವಾಗಿ ತೊಡಗಿಸಿ ಕೊಂಡು ಜಿಲ್ಲೆಯ ಸಮಸ್ತ ನೌಕರರ, ಶಿಕ್ಷಕರ ಸಮಸ್ಯೆಗಳಿಗೆ ತಾಲೂಕು, ಜಿಲ್ಲೆ ಮತ್ತು ರಾಜ್ಯಮಟ್ಟದಲ್ಲಿ ಸ್ಪಂದಿಸುತ್ತಾ ಕಾರ್ಯ ಚಟುವಟಿಕೆಗಳನ್ನು ಮಾಡುತ್ತಾ ಬಂದಿರುವ ಕಾರಣಕ್ಕಾಗಿಯೂ ಕೇಂದ್ರ ಸಮಿತಿ ಜಿಲ್ಲಾ ಸಂಘದ ಚುನಾವಣಾ ಪ್ರಕ್ರಿಯೆಯನ್ನು ಸ್ಥಗಿತದೊಳಿಸಿದೆ ಎಂದವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಕೇಂದ್ರ ಸಮಿತಿಯ ಈ ನಡೆಯಿಂದಾಗಿ ಉಡುಪಿ ಜಿಲ್ಲೆಯಲ್ಲಿ ಚುನಾವಣಾ ಪ್ರಕ್ರಿಯೆಗಳು ಸ್ಥಗಿತಗೊಂಡಿದ್ದು, ಕೇಂದ್ರ ಸಮಿತಿಯಿಂದ ಉಡುಪಿ ಜಿಲ್ಲೆಯ ಶಿಕ್ಷಕರಿಗೆ ಆದ ಅನ್ಯಾಯ ಪ್ರಜಾಪ್ರಭುತ್ವ ವ್ಯವಸ್ಥೆಯಡಿಯಲ್ಲಿ ಸಂವಿಧಾನದ ಆಶಯ ಗಳಿಗೆ ಧಕ್ಕೆ ತಂದಿದೆ. ಈ ಎಲ್ಲ ಪ್ರಕ್ರಿಯೆಗೆ ಕೆಲವು ವ್ಯಕ್ತಿಗಳು ಉಡುಪಿ ಜಿಲ್ಲೆಯ ಒಗ್ಗಟ್ಟನ್ನು ಒಡೆದು ವೈಯಕ್ತಿಕ ಹಿತಾಸಕ್ತಿಯಿಂದಾಗಿ ಕೈಜೋಡಿಸಿ ರುವುದು ವಿಷಾದನೀಯ ಎಂದವರು ಹೇಳಿದ್ದಾರೆ. ಉಡುಪಿ ಜಿಲ್ಲೆಯ ಸಮಸ್ತ ಶಿಕ್ಷಕರಿಗೆ, ಸಂಘಟನೆಯ ಆಶಯಗಳಿಗೆ ಕುಂದಾಗುತ್ತಿರುವುದರ ಜೊತೆಗೆ ಅನ್ಯಾಯವನ್ನು ಉಡುಪಿ ಜಲ್ಲೆಯ ಸಮಸ್ತ ಶಿಕ್ಷಕರು ಖಂಡಿಸಿದ್ದಾರೆ ಎಂದು ಜಿಲ್ಲಾಧ್ಯಕ್ಷರ ಪ್ರಕಟನೆ ತಿಳಿಸಿದೆ.
‘ಇಸ್ರೇಲ್ ಫಸ್ಟ್’ ಬದಲಿಗೆ ‘ಅಮೆರಿಕ ಫಸ್ಟ್’ ಮೇಲೆ ಕೇಂದ್ರೀಕರಿಸಿದರೆ ಒಪ್ಪಂದ ಸಾಧ್ಯ: ಇರಾನ್
ಟೆಹರಾನ್, ಎ.11: ‘ಇಸ್ರೇಲ್ ಫಸ್ಟ್’ ಬದಲಿಗೆ ‘ಅಮೆರಿಕ ಫಸ್ಟ್’ ಮೇಲೆ ಅಮೆರಿಕ ಕೇಂದ್ರೀಕರಿಸಿದರೆ ಒಪ್ಪಂದ ಸಾಧ್ಯ ಎಂದು ಇರಾನ್ ನ ಮೊದಲ ಉಪಾಧ್ಯಕ್ಷ ಮುಹಮ್ಮದ್ ರೆಜಾ ಅರೆಫ್ ಶನಿವಾರ ಹೇಳಿದ್ದಾರೆ. ಮಾತುಕತೆ ಸಂದರ್ಭ ‘ಇಸ್ರೇಲ್ ಫಸ್ಟ್’ ಪ್ರತಿನಿಧಿಗಳನ್ನು ಎದುರಿಸಿದರೆ ಇರಾನ್ ಯಾವುದೇ ಒಪ್ಪಂದವನ್ನು ರದ್ದುಗೊಳಿಸಿ ಹೋರಾಟವನ್ನು ಮುಂದುವರಿಸುತ್ತದೆ. ‘ಅಮೆರಿಕ ಫಸ್ಟ್’ ಪ್ರತಿನಿಧಿಗಳೊಂದಿಗೆ ಮಾತುಕತೆ ನಡೆಸಿದರೆ ಎರಡೂ ಕಡೆಯವರಿಗೆ ಹಾಗೂ ಜಗತ್ತಿಗೆ ಪ್ರಯೋಜನಕಾರಿ ಒಪ್ಪಂದದ ಸಾಧ್ಯತೆಯಿದೆ. ಒಪ್ಪಂದ ಆಗದಿದ್ದರೆ ನಾವು ಅನಿವಾರ್ಯವಾಗಿ ನಮ್ಮ ರಕ್ಷಣೆಯನ್ನು ಮೊದಲಿಗಿಂತ ಹೆಚ್ಚು ತೀವ್ರವಾಗಿ ಮುಂದುವರಿಸುತ್ತೇವೆ ಮತ್ತು ಜಗತ್ತು ಹೆಚ್ಚಿನ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಅವರು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ. ಇಸ್ಲಾಮಾಬಾದ್ ನಲ್ಲಿ ಅಮೆರಿಕ ಮತ್ತು ಇರಾನ್ ನಡುವಿನ ಪ್ರಮುಖ ಮಾತುಕತೆಗೆ ಪಾಕಿಸ್ತಾನ ಮಧ್ಯಸ್ಥಿಕೆ ವಹಿಸಿದೆ.

34 C