SENSEX
NIFTY
GOLD
USD/INR

Weather

23    C
... ...View News by News Source

ರಾಜ್ಯಪಾಲರು ರಾಷ್ಟ್ರಪತಿಗಳಿಗೆ ವರದಿ ಕೊಟ್ಟರೆ ಕೊಡಲಿ: ಸಿಎಂ ಸಿದ್ದರಾಮಯ್ಯ

ಮೈಸೂರು, ಜ.25: ಗಣರಾಜ್ಯೋತ್ಸವ ಸಂದೇಶದಲ್ಲಿ ಸರ್ಕಾರ ಬರೆದುಕೊಟ್ಟ ಭಾಷಣವನ್ನು ಬೇಕಾದರೆ ರಾಜ್ಯಪಾಲರು ಬದಲಾಯಿಸಬಹುದು. ಆದರೆ, ಜಂಟಿ ಅಧಿವೇಶನದಲ್ಲಿ ಸರ್ಕಾರ ಏನು ಬರೆದುಕೊಡುತ್ತದೋ ಅದನ್ನು ಸಂವಿಧಾನದ ಧಾರೆಯಾದ 163 ರ ಪ್ರಕಾರ ರಾಜ್ಯಪಾಲರು ಓದಲು ಮಾತ್ರ ಮುಂದಾಗಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ರವಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ರಾಜ್ಯಪಾಲರು ರಾಷ್ಟ್ರಪತಿಗಳಿಗೆ ವರದಿ ನೀಡುತ್ತಾರೆ ಎಂದರೆ ಕೊಡಲಿ. ಜಂಟಿ ಅಧಿವೇಶನದಲ್ಲಿ ಏನು ನಡೆಯಿತು ಎಂಬುದನ್ನು ಅವರು ಅರಿತಿರಬೇಕು” ಎಂದರು. ಸಿದ್ದರಾಮಯ್ಯ ಹೇಳಿದರು, “ನಾಳೆ ನಡೆಯಲಿರುವ ಗಣರಾಜ್ಯೋತ್ಸವ ಭಾಷಣದಲ್ಲಿ ಸರ್ಕಾರ ಬರೆದುಕೊಟ್ಟ ಭಾಷಣವನ್ನು ಬೇಕಾದರೆ ಅವರು ಬದಲಾಯಿಸಬಹುದು. ಆದರೆ, ಜಂಟಿ ಅಧಿವೇಶನದಲ್ಲಿ ನಾವು ಏನು ಬರೆದುಕೊಡುತ್ತೇವೆ ಅದನ್ನು ಓದಲೇ ಬೇಕಾಗಿತ್ತು. ನಾಳೆ ನಾವು ಬರೆದುಕೊಡುತ್ತೇವೆ; ಬೇಕಾದರೆ ಅವರು ಬದಲಾಯಿಸಿಕೊಳ್ಳಲಿ” ಎಂದರು. ದೆಹಲಿಯಲ್ಲಿ ನಾಳೆ ನಡೆಯುವ ಗಣರಾಜ್ಯೋತ್ಸವ ಪೆರೇಡ್‌ನಲ್ಲಿ ಕರ್ನಾಟಕದ ಸ್ಥಬ್ಧ ಚಿತ್ರಕ್ಕೆ ಅವಕಾಶ ನೀಡುವಂತೆ ರಾಜ್ಯ ಸರ್ಕಾರ ಕೇಂದ್ರಕ್ಕೆ ಮನವಿ ಮಾಡಿರಲಿಲ್ಲ ಎಂಬ ಬಿಜೆಪಿ ಆರೋಪಕ್ಕೆ ಪ್ರತಿಕ್ರಿಯಿಸಿದ ಸಿಎಂ ಸಿದ್ದರಾಮಯ್ಯ  “ಬಿಜೆಪಿಯವರು ಸುಳ್ಳು ಹೇಳುತ್ತಿದ್ದಾರೆ. ಕರ್ನಾಟಕ ಸರ್ಕಾರ ಕೇಂದ್ರದೊಂದಿಗೆ ಪತ್ರವ್ಯವಹಾರ ನಡೆಸಿದೆ. ಅವರು ಅವಕಾಶ ನೀಡದಿದ್ದರೆ, ನಾವು ಏನು ಮಾಡೋದು? ಎಲ್ಲಾ ರಾಜ್ಯಗಳ ಸ್ಥಬ್ಧ ಚಿತ್ರಗಳಿಗೆ ಅವಕಾಶ ಮಾಡಬೇಕಿತ್ತು” ಎಂದು ಹೇಳಿದರು.

ವಾರ್ತಾ ಭಾರತಿ 25 Jan 2026 2:35 pm

ಮಾಜಿ ಸಚಿವ ರೇವಣ್ಣ ಬಂಧನ ಕಾನೂನು ಪ್ರಕಾರವೇ ಆಗಿದೆ: ಸಿಎಂ ಸಿದ್ಧರಾಮಯ್ಯ

ಮೈಸೂರು: ಮಾಜಿ ಸಚಿವ ರೇವಣ್ಣ ಬಂಧನ ಕಾನೂನು ಪ್ರಕಾರವೇ ಆಗಿದೆ. ಇದರಲ್ಲಿ ನಮ್ಮ ಹಸ್ತಕ್ಷೇಪ ಇಲ್ಲ. ಈ ಪ್ರಕರಣ ಅಲ್ಲ, ಯಾವ ಪ್ರಕರಣದಲ್ಲಿಯೂ ನಾವು ಹಸ್ತಕ್ಷೇಪ ಮಾಡುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಸ್ಪಷ್ಟಪಡಿಸಿದರು. ನಿನ್ನೆ ಹಾಸನದಲ್ಲಿ ನಡೆದ ಜೆಡಿಎಸ್ ಸಮಾವೇಶದಲ್ಲಿ ಮಾಜಿ ಪ್ರಧಾನಮಂತ್ರಿ ಎಚ್.ಡಿ.ದೇವೇಗೌಡ ನನ್ನ ಕಣ್ಣ ಎದುರೆ ರೇವಣ್ಣ ಅವರನ್ನು ಬಂಧನ ಮಾಡಿದರು ಎಂದು ಗುಡುಗಿದ್ದರು. ಈ ಹೇಳಿಕೆಗೆ ತಿರುಗೇಟು ನೀಡಿದ ಸಿದ್ಧರಾಮಯ್ಯ, ರೇವಣ್ಣ ಬಂಧನ ಕಾನೂನು ಪ್ರಕಾರ ಆಗಿದೆ. ನಾವು ಅಧಿಕಾರಿಗಳಿಗೆ ಒತ್ತಡ ಹಾಕಿ ಬಂಧಿಸಲಿಲ್ಲ. ಅಂತಹ ಯಾವ ಕೆಲಸವನ್ನು ನಾವು ಮಾಡುವುದಿಲ್ಲ. ರೇವಣ್ಣ ಬಂಧನ ಮಾಡಿದ್ದರಿಂದ ಯಾವ ಅಧಿಕಾರಿಗಳಿಗೂ ಉಡುಗೊರೆ ನೀಡಿಲ್ಲ ಎಂದು ಹೇಳಿದರು. ಜೆಡಿಎಸ್ ಅಧಿಕಾರಕ್ಕೆ ಬಂದರೆ ನಿಮ್ಮನ್ನು ಬಂಧನ‌ ಮಾಡುತ್ತೇವೆ ಎಂದು ಎಚ್.ಡಿ.ದೇವೇಗೌಡರು ಹೇಳಿದ್ದಾರಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಸಿಎಂ ಸಿದ್ಧರಾಮಯ್ಯ, ನಾವು ರೇವಣ್ಣ ಅವರನ್ನು ಕಾನೂನು ಪ್ರಕಾರ ಬಂಧನ‌ ಮಾಡಿದ್ದೇವೆ. ಅವರು ಅಧಿಕಾರಕ್ಕೆ ಬಂದರೆ ಕಾನೂನು ಪ್ರಕಾರ ಮಾಡಲಿ. ಆದರೆ ಅವರು ಅಧಿಕಾರಕ್ಕೆ ಬರುವುದಿಲ್ಲ ಎಂದು ಲೇವಡಿ ಮಾಡಿದರು. ನಾವು ಅಧಿಕಾರಕ್ಕೆ ಬರುತ್ತೇವೆ ಎಂದು ಯಾವ ಬಾಯಲ್ಲಿ ಹೇಳುತ್ತಾರೋ? ಬಾಯಲ್ಲಿ ರಾಜಕೀಯ ಭಾಷಣ ಮಾಡಿದಾಕ್ಷಣ ಅಧಿಕಾರಕ್ಕೆ ಬರಲು ಆಗುತ್ತಾ? ನಾನು ಜೆಡಿಎಸ್ ಪಕ್ಷದ ಅಧ್ಯಕ್ಷನಾಗಿದ್ದಾಗ 59 ಶಾಸಕರನ್ನು ಗೆಲ್ಲಿಸಿದ್ದೆ. ಈಗ ಅವರು ಎಷ್ಟಿದ್ದಾರೆ ಕೇವಲ 17 ಶಾಸಕರು. ಇವರು ಅಧಿಕಾರಕ್ಕೆ ಬರುತ್ತಾರ ಎಂದು ಪ್ರಶ್ನಿಸಿದರು. ಬಿಜೆಪಿ-ಜೆಡಿಎಸ್ ಮೈತ್ರಿಯಾದರೂ ಇವರು ಅಧಿಕಾರಕ್ಕೆ ಬರಲ್ಲ, ಒಂದು ವೇಳೆ ಬಂದರೂ ಬಿಜೆಪಿಯವರು ಇವರಿಗೆ ಅಧಿಕಾರ ನಡೆಸಲು ಬಿಡುತ್ತಾರ? ಮೊದಲು ಇವರು ಅಧಿಕಾರಕ್ಕೆ ಬರಲ್ಲ, ಈಗ ನಾವು 140 ಸ್ಥಾನ ಗೆದ್ದಿದ್ದೇವೆ. 2028 ಕ್ಕೂ ನಾವು ಮತ್ತೆ ಅಧಿಕಾರಕ್ಕೆ ಬರುತ್ತೇವೆ ಎಂದು ಹೇಳಿದರು. ಮುಂದಿನ 2028 ಕ್ಕೂ ನಿಮ್ಮ ನಾಯಕತ್ವದಲ್ಲೇ ಚುನಾವಣೆ ಎದುರಿಸುತ್ತೀರ ಎಂಬ ಪ್ರಶ್ನೆಗೆ ಉತ್ತರಿಸಿದ ಸಿಎಂ ಸಿದ್ಧರಾಮಯ್ಯ ಇದರ ಬಗ್ಗೆ ಹೈಕಮಾಂಡ್ ತೀರ್ಮಾನ ಮಾಡುತ್ತದೆ. ಹೈಕಮಾಂಡ್ ಏನು ಹೇಳುತ್ತದೊ ಅದನ್ನು ಕೇಳುತ್ತೇವೆ ಎಂದು ಹೇಳಿದರು.

ವಾರ್ತಾ ಭಾರತಿ 25 Jan 2026 2:31 pm

ಬೀದಿ ವ್ಯಾಪಾರಿಗಳು ಪಿಎಂ ಸ್ವನಿಧಿ ಯೋಜನೆಯ ಲಾಭ ಪಡೆದುಕೊಳ್ಳಿ: ರಾಜಕುಮಾರ

ಶಹಾಬಾದ: ನಗರದ ಬೀದಿ ವ್ಯಾಪಾರಿಗಳಿಗಾಗಿ ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಪಿಎಂ ಸ್ವನಿಧಿ ಯೋಜನೆಯ ಸದುಪಯೋಗ ಪಡೆದು ಆರ್ಥಿಕವಾಗಿ ಸಬಲರಾಗಬೇಕೆಂದು ಜಿಲ್ಲಾ ಕೌಶಲ್ಯ ಅಭಿವೃದ್ಧಿ ಇಲಾಖೆಯ ಅಧಿಕಾರಿ ರಾಜಕುಮಾರ ಗುತ್ತೆದಾರ ಹೇಳಿದರು. ಅವರು ಶನಿವಾರ ನಗರಸಭೆಯ ಸಭಾಂಗಣದಲ್ಲಿ ಪಿಎಂ ಸ್ವನಿಧಿ ಯೋಜನೆಯ ಕುರಿತು ಬೀದಿ ವ್ಯಾಪಾರಿಗಳಿಗೆ ಆಯೋಜಿಸಲಾಗಿದ್ದ ಒಂದು ದಿನದ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ದೇಶದ ಬೀದಿ ಬದಿ ವ್ಯಾಪಾರಿಗಳಿಗಾಗಿ ‘ಪಿಎಂ ಸ್ವನಿಧಿ’ ಎಂಬ ಕ್ರೆಡಿಟ್ ಕಾರ್ಡ್ ವ್ಯವಸ್ಥೆಯನ್ನು ಜಾರಿಗೊಳಿಸಲಾಗಿದ್ದು, ಇದು ಬಡ್ಡಿರಹಿತ ಸಾಲ ಸೌಲಭ್ಯವನ್ನು ಹೊಂದಿದೆ. ಈ ಯೋಜನೆಯ ಮೂಲಕ ಶ್ರೀಮಂತರಷ್ಟೇ ಅಲ್ಲ, ಬಡವರೂ ಸಹ ಕ್ರೆಡಿಟ್ ಕಾರ್ಡ್ ಬಳಸಿ ತಮ್ಮ ವ್ಯಾಪಾರವನ್ನು ಅಭಿವೃದ್ಧಿಪಡಿಸಿಕೊಳ್ಳಬಹುದು ಎಂದು ಅವರು ತಿಳಿಸಿದರು. ಪರಿಷ್ಕೃತ ಯೋಜನೆಯಂತೆ, ಮೊದಲ ಕಂತಿನಲ್ಲಿ ₹15,000, ಎರಡನೇ ಕಂತಿನಲ್ಲಿ ₹25,000 ಹಾಗೂ ಮೂರನೇ ಕಂತಿನಲ್ಲಿ ₹50,000 ವರೆಗೆ ಸಾಲವನ್ನು ಪಡೆಯಬಹುದಾಗಿದೆ ಎಂದು ಮಾಹಿತಿ ನೀಡಿದರು. ಈ ಕಾರ್ಯಕ್ರಮದಲ್ಲಿ ಕೆನರಾ ಬ್ಯಾಂಕಿನ ಸಹಾಯಕ ವ್ಯವಸ್ಥಾಪಕ ನಾಗತಾರಕೇಶ್ವರ, ನಗರಸಭೆಯ ವ್ಯವಸ್ಥಾಪಕರಾದ ಶರಣಗೌಡ ಪಾಟೀಲ ಹಾಗೂ ಸಮುದಾಯ ಸಂಘಟನಾ ಅಧಿಕಾರಿ ರಘುನಾಥ ನರಸಾಳೆ ಮಾತನಾಡಿದರು. ಈ ಸಂದರ್ಭದಲ್ಲಿ ನಗರಸಭೆಯ ಶಂಕರ, ಶಾಂತಪ್ಪ ಹಡಪದ, ಸಿಆರ್‌ಪಿಗಳಾದ ಅಂಬಿಕಾ ರಾಯಪ್ಪ, ವಿಠ್ಠಲ ಜಂಬಗಿ ಸೇರಿದಂತೆ ಅನೇಕ ಬೀದಿ ವ್ಯಾಪಾರಿಗಳು ಹಾಜರಿದ್ದರು.

ವಾರ್ತಾ ಭಾರತಿ 25 Jan 2026 2:23 pm

ಹಿಂದಿಗೆ ತಮಿಳುನಾಡು ನೆಲದಲ್ಲಿ ಜಾಗ ಇಲ್ಲ, ಸಿಎಂ ಸ್ಟಾಲಿನ್ ಹೇಳಿದ್ದೇನು? Hindi Language Policy

ಹಿಂದಿ ಭಾಷೆ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಲೇ ಇದೆ, ಅದರಲ್ಲೂ ಹಿಂದಿ ರಾಷ್ಟ್ರೀಯ ಭಾಷೆ ಎಂಬ ವಾದದ ನಡುವೆ ದೊಡ್ಡ ಕಾಳಗ ಶುರುವಾಗುತ್ತಿದೆ. ಹೀಗಿದ್ದಾಗ ದಕ್ಷಿಣ ಭಾರತದ ರಾಜ್ಯಗಳ ಮೇಲೆ ಹಿಂದಿ ಹೇರಿಕೆ ಮಾಡುವ ಪ್ರಯತ್ನ ಆಗುತ್ತಿದೆ ಎಂಬ ಆರೋಪ ಕೂಡ ಇದೆ. ಹೀಗಾಗಿಯೇ ದಕ್ಷಿಣ ಭಾರತದ ರಾಜ್ಯಗಳು ಹಿಂದಿ ಭಾಷೆ ಹೇರಿಕೆ ಮಾಡುವ ವಿಚಾರದಲ್ಲಿ, ತೀವ್ರ

ಒನ್ ಇ೦ಡಿಯ 25 Jan 2026 2:21 pm

ಚಿಕ್ಕಮಗಳೂರು | ಹಿಂದೂ ಸಮಾಜೋತ್ಸವ: ಆಯೋಜಕರು, ಭಾಷಣಕಾರರಿಗೆ ಪೊಲೀಸ್ ನೋಟಿಸ್

ಚಿಕ್ಕಮಗಳೂರು: ಹಿಂದೂ ಸಮಾಜೋತ್ಸವ ಕಾರ್ಯಕ್ರಮದ ಆಯೋಜಕರು ಹಾಗೂ ಭಾಷಣಕಾರರಿಗೆ ಪೊಲೀಸರು ನೋಟಿಸ್ ಜಾರಿಗೊಳಿಸಿರುವ ಬಗ್ಗೆ ವರದಿಯಾಗಿದೆ. ಕಾರ್ಯಕ್ರಮದ ಆಯೋಜಕರು ಮತ್ತು ಭಾಷಣಕಾರರಿಗೆ ನೋಟಿಸ್ ನೀಡಲಾಗಿದ್ದು, ದಿಕ್ಸೂಚಿ ಭಾಷಣಕಾರ ವಿಕಾಸ್ ಪುತ್ತೂರು ಅವರಿಗೆ ವಿಶೇಷವಾಗಿ ನೋಟಿಸ್ ನೀಡಲಾಗಿದೆ ಎಂದು ತಿಳಿದುಬಂದಿದೆ. ಶನಿವಾರ ತರೀಕೆರೆಯಲ್ಲಿ ನಡೆದ ಹಿಂದೂ ಸಮಾಜೋತ್ಸವ ಕಾರ್ಯಕ್ರಮದ ಪೂರ್ವಭಾವಿ ಸಭೆಯಲ್ಲಿ, ಭಾಷಣದ ವೇಳೆ ಎಚ್ಚರಿಕೆ ವಹಿಸುವಂತೆ ಪೊಲೀಸರು ಸೂಚಿಸಿದ್ದಾರೆ. ದ್ವೇಷ ಭಾಷಣ ತಡೆ ಕಾಯ್ದೆ–2025ರ ಯಾವುದೇ ವಿಧಾನದ ಉಲ್ಲಂಘನೆ ಆಗದಂತೆ ಮಾತನಾಡಬೇಕು ಎಂದು ನೋಟಿಸ್‌ನಲ್ಲಿ ಸ್ಪಷ್ಟಪಡಿಸಲಾಗಿದೆ. ಬೇರೆ ಸಮುದಾಯಗಳ ಭಾವನೆಗೆ ಧಕ್ಕೆ ಉಂಟಾಗದಂತೆ ಭಾಷಣ ಮಾಡಬೇಕು. ಯಾವುದೇ ಸಮುದಾಯ ಅಥವಾ ಗುಂಪಿನ ವಿರುದ್ಧ ದ್ವೇಷ, ವೈಷಮ್ಯ ಅಥವಾ ಹಿಂಸೆಗೆ ಪ್ರಚೋದನೆ ಉಂಟಾಗುವಂತಹ ಮಾತುಗಳನ್ನು ಆಡಬಾರದು. ಮೆರವಣಿಗೆಯ ವೇಳೆ ವಾಹನಗಳ ಸುಗಮ ಸಂಚಾರಕ್ಕೆ ಯಾವುದೇ ರೀತಿಯ ತೊಂದರೆ ಉಂಟಾಗದಂತೆ ಕ್ರಮ ವಹಿಸಬೇಕು ಎಂದು ಸೂಚಿಸಲಾಗಿದೆ. ದ್ವೇಷ ಭಾಷಣ ಮಸೂದೆ–2025ರ ಕಾಯ್ದೆ ಉಲ್ಲಂಘನೆಯಾದಲ್ಲಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.

ವಾರ್ತಾ ಭಾರತಿ 25 Jan 2026 2:20 pm

‘ಕ್ರಾಫ್ಟ್ಸ್ ಆಫ್ ಮಲ್ನಾಡ್’ ವೆಬ್‌ಸೈಟ್‌ಗೆ ಚಾಲನೆ

ಕಲೆಗೆ ಉತ್ತೇಜನ ನೀಡಿ ಬೆಳೆಸಬೇಕು: ಸಚಿವ ಎಸ್. ಮಧು ಬಂಗಾರಪ್ಪ

ವಾರ್ತಾ ಭಾರತಿ 25 Jan 2026 2:13 pm

Actor Dolly Dhananjay: ದೊನ್ನೆ ಬಿರಿಯಾನಿ ಸವಿದ ನಟ ಡಾಲಿ ಧನಂಜಯ್: ಜಾತಿ ಪ್ರಶ್ನೆ ಎತ್ತಿದ ನೆಟ್ಟಿಗರು, ಪರ - ವಿರೋಧ ಚರ್ಚೆ

Actor Dolly Dhananjay: ನಟ ಡಾಲಿ ಧನಂಜಯ್ ಅವರು ಮಾಂಸಾಹಾರ ಸೇವನೆ ಮಾಡಿರುವುದು ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಗೆ ಕಾರಣವಾಗಿದೆ. ನಟ ಧನಂಜಯ್ ದೊನ್ನೆ ಬಿರಿಯಾನಿ ಸವಿದಿದ್ದಾರೆ. ಆದರೆ ಇದು ಪರ - ವಿರೋಧಕ್ಕೆ ಕಾರಣವಾಗಿದೆ. ಆಹಾರ ಸೇವನೆ ಅವರವರ ಹಕ್ಕು. ಈಚೆಗೆ ಬಾಡೇ ನಮ್ಮ ಗಾಡು ಎನ್ನುವ ಅಭಿಯಾನವೇ ಕರ್ನಾಟಕದಲ್ಲಿ ನಡೆದಿತ್ತು. ಇದೀಗ ಧನಂಜಯ್ ಅವರ ವಿಚಾರದಲ್ಲೂ

ಒನ್ ಇ೦ಡಿಯ 25 Jan 2026 1:58 pm

ಉಕ್ರೇನ್ ಶಾಂತಿ ಒಪ್ಪಂದಕ್ಕೆ ಅಂತಿಮ ಹಂತದ ಸಿದ್ಧತೆ, ಪುಟಿನ್ ಮತ್ತು ಝೆಲೆನ್ಸ್ಕಿ ಭೇಟಿ ಶೀಘ್ರ?

ರಷ್ಯಾ ಮತ್ತು ಉಕ್ರೇನ್ ನಡುವೆ ಶುರುವಾಗಿರುವ ಭೀಕರ ಕಾಳಗಕ್ಕೆ ಇನ್ನೇನು 4 ವರ್ಷ ತುಂಬುತ್ತಿದೆ. 2022 ಫೆಬ್ರವರಿ 24 ಗುರುವಾರ ಈ ಭೀಕರ ಯುದ್ಧ ಶುರುವಾಗಿತ್ತು, ಕೆಲವೇ ದಿನಗಳಲ್ಲಿ ಮುಗಿದು ಹೋಗಬಹುದು ಎಂದು ಊಹಿಸಿದ್ದ ಯುದ್ಧ ಈಗಾಗಲೇ 4ನೇ ವರ್ಷ ಮುಗಿಸಿ 5ನೇ ವರ್ಷಕ್ಕೆ ಎಂಟ್ರಿ ಪಡೆಯಲು ಸಜ್ಜಾಗಿದೆ. ಆದರೆ ಹೇಗಾದರೂ ಮಾಡಿ 4ನೇ ವರ್ಷ ತುಂಬುವ

ಒನ್ ಇ೦ಡಿಯ 25 Jan 2026 1:25 pm

IMD Weather Forecast: ವಿಪರೀತ ಚಳಿಗಾಳಿ ನಡುವೆ ದೇಶದ ಹಲವೆಡೆ ಮೂರು ದಿನ ಬಿರುಗಾಳಿ ಮಳೆ ಮುನ್ಸೂಚನೆ

IMD Weather Forecast: ದೇಶದ ಬಹುತೇಕ ರಾಜ್ಯಗಳಲ್ಲಿ ಭಾರೀ ಶೀತಗಾಳಿ ಮುಂದುವರೆದಿದೆ. ಈ ನಡುವೆಯೇ ಮುಂದಿನ ಮೂರು ದಿನ ಹಲವೆಡೆ ಗುಡುಗು, ಮಿಂಚು ಸಹಿತ ಭಾರೀ ಮಳೆ ಸುರಿಯುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಹಾಗಾದ್ರೆ, ಎಲ್ಲೆಲ್ಲಿ ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ. ಭಾರತೀಯ ಹವಾಮಾನ ಇಲಾಖೆಯು, ಭಾನುವಾರ, ಜನವರಿ

ಒನ್ ಇ೦ಡಿಯ 25 Jan 2026 1:24 pm

‘ಹಾರ್ನ್‌ಬಿಲ್‌’ ರಕ್ಷಣೆಗೆ ಜಾಗೃತಿ ಹಕ್ಕಿಗಳ ಉಳಿವಿಗೆ ಹೀಗೊಂದು ಪ್ರಯೋಗ ; ಶಾಲೆಗಳಲ್ಲಿ ಜಾಗೃತಿಗಾಗಿ ಹಕ್ಕಿ ಪಾಠ

ಮಂಗಟ್ಟೆ ಹಕ್ಕಿಯ ಸಂರಕ್ಷಣೆಗಾಗಿ 'ವನಚೇತನಾ' ತಂಡವು ಯಲ್ಲಾಪುರ, ಜೋಯ್ಡಾ, ಅಂಕೋಲಾ ಮುಂತಾದ ಅರಣ್ಯ ಶಾಲೆಗಳ ಮಕ್ಕಳಿಂದ ಚಿತ್ರಕಲಾ ಪ್ರದರ್ಶನ ಏರ್ಪಡಿಸಿದೆ. ಕಾಡಿನ ರೈತನೆಂದೇ ಕರೆಯಲ್ಪಡುವ ಈ ಹಕ್ಕಿಯ ಅಳಿವಿನಂಚಿನ ಸ್ಥಿತಿಯನ್ನು ಚಿತ್ರಗಳ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ. ಈ ಕಾರ್ಯಕ್ರಮವು ಮಕ್ಕಳಲ್ಲಿ ವನ್ಯಜೀವಿಗಳ ಬಗ್ಗೆ ಆಸಕ್ತಿ ಹೆಚ್ಚಿಸಲು ಸಹಕಾರಿಯಾಗಿದೆ.

ವಿಜಯ ಕರ್ನಾಟಕ 25 Jan 2026 1:15 pm

ಚೋರ್ಲಾ ಘಾಟ್‌ನಲ್ಲಿ ಕಂಟೇನರ್ ದರೋಡೆ ಪ್ರಕರಣ; ಬೆಳಗಾವಿ ಜಿಲ್ಲಾ ಎಸ್‌ಪಿ ಹೇಳಿದ್ದೇನು?

ಬೆಳಗಾವಿ: ಕರ್ನಾಟಕ–ಗೋವಾ ಗಡಿಭಾಗದ ಚೋರ್ಲಾ ಘಾಟ್‌ನಲ್ಲಿ ₹400 ಕೋಟಿ ಮೊತ್ತದ ರಾಬರಿ ನಡೆದಿದೆ ಎಂಬ ಮಾಹಿತಿ ನಾಸಿಕ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಂದ ಜನವರಿ 6ರಂದು ಪತ್ರದ ಮೂಲಕ ಲಭಿಸಿದೆ ಎಂದು ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ಕೆ. ರಾಮರಾಜನ್ ತಿಳಿಸಿದ್ದಾರೆ. ಆ ಪತ್ರದಲ್ಲಿ ಅಕ್ಟೋಬರ್ 16ರಂದು ಹಣ ಅಪಹರಣ ಹಾಗೂ ಅಕ್ಟೋಬರ್ 22ರಂದು ನಾಸಿಕ್‌ನಲ್ಲಿ ಸಂದೀಪ್ ಪಾಟೀಲ್ ಅವರ ಅಪಹರಣ ನಡೆದಿರುವುದಾಗಿ ಉಲ್ಲೇಖಿಸಲಾಗಿದೆ. ಈ ಪ್ರಕರಣದ ಸಂಬಂಧ ಖಾನಾಪುರ ಉಪನಿರೀಕ್ಷಕರ ನೇತೃತ್ವದಲ್ಲಿ ಪೊಲೀಸ್ ತಂಡವನ್ನು ಸ್ಥಳಕ್ಕೆ ಕಳುಹಿಸಲಾಗಿದ್ದು, ವಿಶೇಷ ತನಿಖಾ ತಂಡ (ಎಸ್‌ಐಟಿ) ಕೂಡ ರಚಿಸಲಾಗಿದೆ. ಮಹಾರಾಷ್ಟ್ರ ಪೊಲೀಸರು ಪ್ರಕರಣದ ಮುಖ್ಯ ತನಿಖೆ ನಡೆಸುತ್ತಿದ್ದು, ಕರ್ನಾಟಕ ಪೊಲೀಸರು ಸಂಪೂರ್ಣ ಸಹಕಾರ ನೀಡುತ್ತಿದ್ದಾರೆ ಎಂದು ಎಸ್ಪಿ ತಿಳಿಸಿದ್ದಾರೆ. ಚೋರ್ಲಾ ಘಾಟ್ ಮೂರು ರಾಜ್ಯಗಳ ಗಡಿ ಪ್ರದೇಶವಾಗಿರುವುದರಿಂದ ಭದ್ರತೆ ದೃಷ್ಟಿಯಿಂದ ಮುಂದಿನ ದಿನಗಳಲ್ಲಿ ಅಲ್ಲಿ ಸಿಸಿಟಿವಿ ಕ್ಯಾಮೆರಾಗಳ ಅಳವಡಿಕೆ ಮಾಡಲಾಗುವುದು ಎಂದು ಅವರು ಮಾಹಿತಿ ನೀಡಿದ್ದಾರೆ.

ವಾರ್ತಾ ಭಾರತಿ 25 Jan 2026 1:02 pm

ಪಾಕಿಸ್ತಾನದಿಂದ ಟಿ–20 ವಿಶ್ವಕಪ್ ಬಹಿಷ್ಕಾರ ಬೆದರಿಕೆ: ಕಠಿಣ ಕ್ರಮಕ್ಕೆ ಮುಂದಾದ ಐಸಿಸಿ

ಹೊಸದಿಲ್ಲಿ: ಟಿ–20 ವಿಶ್ವಕಪ್‌ನ ಗಡುವು ಸಮೀಪಿಸುತ್ತಿದ್ದು, ಪಾಕಿಸ್ತಾನ ಕ್ರಿಕೆಟ್ ಮಂಡಳಿ ಹಾಗೂ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯ ನಡುವಿನ ಸಂಬಂಧ ಮುರಿದು ಬೀಳುವ ಹಂತಕ್ಕೆ ತಲುಪಿದೆ. ಬಾಂಗ್ಲಾದೇಶಕ್ಕೆ ಬೆಂಬಲ ವ್ಯಕ್ತಪಡಿಸಿ ಟಿ–20 ವಿಶ್ವಕಪ್‌ ಅನ್ನು ಬಹಿಷ್ಕರಿಸುವ ಬೆದರಿಕೆಯನ್ನು ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಅಧ್ಯಕ್ಷ ಮೊಹ್ಸಿನ್ ನಖ್ವಿ ಒಡ್ಡಿದ್ದಾರೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ, ಪಾಕಿಸ್ತಾನದ ವಿರುದ್ಧ ಅಭೂತಪೂರ್ವ ದಿಗ್ಬಂಧನಗಳನ್ನು ಹೇರಬಹುದು ಎಂದು ವರದಿಯಾಗಿದೆ. ಪಾಕಿಸ್ತಾನದ ಮಧ್ಯಂತರ ಸಚಿವರಾಗಿಯೂ ಕಾರ್ಯನಿರ್ವಹಿಸುತ್ತಿರುವ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಅಧ್ಯಕ್ಷ ಮೊಹ್ಸಿನ್ ನಖ್ವಿ, “ಐಸಿಸಿ ದ್ವಿಮುಖ ನೀತಿ ಅನುಸರಿಸುತ್ತಿದೆ” ಎಂಬ ಹೇಳಿಕೆ ನೀಡಿರುವುದರಿಂದ ಈ ವಿವಾದ ಸ್ಫೋಟಗೊಂಡಿದೆ. ಈ ಹಿಂದೆ ಪಾಕಿಸ್ತಾನದ ಪಂದ್ಯಗಳನ್ನು ಹೈಬ್ರಿಡ್ ಮಾದರಿಯಲ್ಲಿ ಸ್ಥಳಾಂತರ ಮಾಡಿರುವ ನಿದರ್ಶನವಿದ್ದರೂ, ಬಾಂಗ್ಲಾದೇಶದ ಪಂದ್ಯಗಳನ್ನು ಸ್ಥಳಾಂತರಿಸಬೇಕು ಎಂಬ ಮನವಿಯನ್ನು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ನಿರಾಕರಿಸಿರುವ ಹಿನ್ನೆಲೆಯಲ್ಲಿ ಅವರಿಂದ ಈ ಹೇಳಿಕೆ ಹೊರಬಿದ್ದಿದೆ. ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಗೆ ಬೆಂಬಲ ಸೂಚಿಸಿರುವುದು ಸೇರಿದಂತೆ ಮೊಹ್ಸಿನ್ ನಖ್ವಿ ಅವರ ಸಂಘರ್ಷಾತ್ಮಕ ಹೇಳಿಕೆಗಳಿಂದ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ಅಸಮಾಧಾನಗೊಂಡಿದೆ ಎಂದು ಮೂಲಗಳು ತಿಳಿಸಿವೆ ಎಂದು ವರದಿಯಾಗಿದೆ. ಪಾಕಿಸ್ತಾನ ತಂಡವು ಟಿ–20 ವಿಶ್ವಕಪ್‌ನಿಂದ ಹಿಂದೆ ಸರಿಯಲಿದೆ ಎಂದು ಸಾರ್ವಜನಿಕವಾಗಿ ಹೇಳಿಕೆ ನೀಡುವ ಮೂಲಕ ಮೊಹ್ಸಿನ್ ನಖ್ವಿ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯನ್ನು ಮುಜುಗರಕ್ಕೀಡು ಮಾಡಿದ್ದಾರೆ ಎನ್ನಲಾಗಿದೆ. ಒಂದು ವೇಳೆ ಪಾಕಿಸ್ತಾನ ತಂಡವೇನಾದರೂ ಟಿ–20 ವಿಶ್ವಕಪ್‌ನಿಂದ ಹಿಂದೆ ಸರಿದರೆ, ಪಾಕಿಸ್ತಾನವನ್ನು ಕ್ರಿಕೆಟ್ ಆಟದಿಂದ ಏಕಾಂಗಿಯಾಗಿಸುವ ಕ್ರಮ ಸೇರಿದಂತೆ ಅಭೂತಪೂರ್ವ ದಿಗ್ಬಂಧನಗಳನ್ನು ಹೇರಲು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ಮುಂದಾಗಿದೆ ಎಂದು ಹೇಳಲಾಗಿದೆ. ಈ ಕಠಿಣ ಕ್ರಮಗಳಲ್ಲಿ ಎಲ್ಲ ದ್ವಿಪಕ್ಷೀಯ ಸರಣಿಗಳ ಅಮಾನತು, ಏಶ್ಯ ಕಪ್‌ನಿಂದ ಹೊರಹಾಕುವುದು ಹಾಗೂ ಪಾಕಿಸ್ತಾನ ಸೂಪರ್ ಲೀಗ್‌ನಲ್ಲಿ ವಿದೇಶಿ ತಾರಾ ಆಟಗಾರರು ಭಾಗವಹಿಸದಂತೆ ತನ್ನ ಸದಸ್ಯ ರಾಷ್ಟ್ರಗಳೊಂದಿಗೆ ಸಮನ್ವಯ ಸಾಧಿಸಿ ನಿರಾಕ್ಷೇಪಣಾ ಪತ್ರ ನೀಡದಿರುವುದು ಸೇರಿವೆ. ಇಂತಹ ಕ್ರಮಗಳಿಂದ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಹಣಕಾಸು ಆದಾಯ ಕುಂಟಲಿದೆಯಲ್ಲದೆ, ರಾಷ್ಟ್ರೀಯ ತಂಡಕ್ಕೆ ಯಾವುದೇ ಪ್ರಮುಖ ಐಸಿಸಿ ಪಂದ್ಯಗಳಿಲ್ಲದೆ ಹೋಗುವುದರಿಂದ ಪಾಕಿಸ್ತಾನದ ದೇಶೀಯ ಕ್ರಿಕೆಟ್‌ನ ವಾಣಿಜ್ಯ ಮೌಲ್ಯ ನೆಲಕಚ್ಚಲಿದೆ ಎಂದು ವರದಿಯಾಗಿದೆ. ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಗೆ ಬೆಂಬಲವಾಗಿ ಪಾಕಿಸ್ತಾನ ತಂಡ ಈವರೆಗೆ ಟಿ–20 ವಿಶ್ವಕಪ್‌ ಅನ್ನು ಬಹಿಷ್ಕರಿಸದಿದ್ದರೂ, ಈ ಕುರಿತು ಅಂತಿಮ ನಿರ್ಧಾರವನ್ನು ಪಾಕಿಸ್ತಾನದ ಪ್ರಧಾನಿ ಶೆಹಬಾಝ್ ಶರೀಫ್ ಕೈಗೊಳ್ಳಲಿದ್ದಾರೆ ಎಂದು ಮೊಹ್ಸಿನ್ ನಖ್ವಿ ಹೇಳಿದ್ದಾರೆ. ವಾಸ್ತವವಾಗಿ, ಬಾಂಗ್ಲಾದೇಶದ ನಿಲುವಿಗೆ ಪಾಕಿಸ್ತಾನ ಬೆಂಬಲ ಸೂಚಿಸಿರುವಂತೆ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯೂ ಬೆಂಬಲ ಸೂಚಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

ವಾರ್ತಾ ಭಾರತಿ 25 Jan 2026 1:01 pm

ಜಗತ್ತಿನ ಗಮನ ಸೆಳೆದ ಪೆಂಗ್ವಿನ್ ಪಕ್ಷಿಯ ಒಂಟಿ ನಡಿಗೆ

  ಒಂಟಿಯಾಗಿ ಸಾಗುವ ಪೆಂಗ್ವಿನ್‌ ನ ನಿಗೂಢ ಪ್ರಯಾಣಕ್ಕೆ ಬಳಕೆದಾರರು ಹಾಸ್ಯ, ತತ್ವಶಾಸ್ತ್ರ ಮತ್ತು ಭಾವನಾತ್ಮಕ ಅರ್ಥಗಳನ್ನು ನೀಡುತ್ತಿದ್ದಂತೆ ಟಿಕ್‌ಟಾಕ್‌, ಇನ್‌ಸ್ಟಾಗ್ರಾಮ್‌, ರೆಡಿಟ್‌ ಮತ್ತು ಇತರ ಸಾಮಾಜಿಕ ಜಾಲತಾಣಗಳಲ್ಲಿ ಈ ವೀಡಿಯೊ ವ್ಯಾಪಕವಾಗಿ ಜನಪ್ರಿಯವಾಗುತ್ತಿದೆ.   ವರ್ನರ್ ಹೆರ್ಜಾಗ್ ಅವರ ಸಾಕ್ಷ್ಯಚಿತ್ರದಲ್ಲಿರುವ ಒಂದು ಪೆಂಗ್ವಿನ್ ಏಕಾಂಗಿಯಾಗಿ ಒಳನಾಡಿನತ್ತ ನಡೆಯುವ ದೃಶ್ಯ ಇದೀಗ ವೈರಲ್ ಮೀಮ್ ಆಗಿದೆ. ಆಧುನಿಕ ಮನಸ್ಥಿತಿಗೆ ಅಚ್ಚುಕಟ್ಟಾಗಿ ಹೊಂದಿಕೊಳ್ಳುವ ಕಾರಣದಿಂದ ಈ ಒಂಟಿ ಪೆಂಗ್ವಿನ್ ಜನರ ಗಮನ ಸೆಳೆಯುತ್ತಿದೆ. ಈ ಪೆಂಗ್ವಿನ್‌ ನ ಒಂಟಿ ನಡಿಗೆ ಆಧುನಿಕ ಕಾಲದ ಭಾವನಾತ್ಮಕ ಹೋರಾಟಗಳು ಮತ್ತು ಪ್ರತ್ಯೇಕತೆಯನ್ನು ಸಂಕೇತಿಸುತ್ತದೆ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ. ಒಂಟಿಯಾಗಿ ಭಿನ್ನ ಹಾದಿ ಹಿಡಿದು ಸಾಗುವ ಪೆಂಗ್ವಿನ್‌ ನ ಭಾವನಾತ್ಮಕ ತೊಳಲಾಟಗಳು ವೈರಲ್ ಸಂವೇದನೆಗಳಲ್ಲಿ ಒಂದಾಗಿವೆ. ಬಳಕೆದಾರರು ಅದರ ನಿಗೂಢ ಪ್ರಯಾಣಕ್ಕೆ ಹಾಸ್ಯ, ತತ್ವಶಾಸ್ತ್ರ ಮತ್ತು ಭಾವನಾತ್ಮಕ ಅರ್ಥಗಳನ್ನು ನೀಡುತ್ತಿದ್ದಂತೆ ಟಿಕ್‌ಟಾಕ್‌, ಇನ್‌ಸ್ಟಾಗ್ರಾಮ್‌, ರೆಡಿಟ್‌ ಮತ್ತು ಇತರ ವೇದಿಕೆಗಳಲ್ಲಿ ಈ ವೀಡಿಯೊ ಹೆಚ್ಚು ಜನಪ್ರಿಯವಾಗುತ್ತಿದೆ. ►ಜನರ ಗಮನ ಸೆಳೆದ ಒಂಟಿ ನಡಿಗೆ ಪ್ರಸ್ತುತ ಜಾಗತಿಕವಾಗಿ ಗಮನ ಸೆಳೆಯುತ್ತಿರುವ ಈ ಪೆಂಗ್ವಿನ್‌ ನ ದೃಶ್ಯ 2007ರಲ್ಲಿ ಬಿಡುಗಡೆಯಾದ ‘ಎನ್‌ಕೌಂಟರ್ಸ್ ಅಟ್ ದಿ ಎಂಡ್ ಆಫ್ ದಿ ವರ್ಲ್ಡ್’ ಎಂಬ ಸಾಕ್ಷ್ಯಚಿತ್ರದಿಂದ ಬಂದಿದೆ. ಹೆರ್ಜಾಗ್ ಅವರ ತಂಡ ಪೆಂಗ್ವಿನ್‌ ಗಳ ಚಿತ್ರೀಕರಣ ನಡೆಸುತ್ತಿದ್ದಾಗ, ಒಂದು ಪೆಂಗ್ವಿನ್ ಸಮುದ್ರದ ಕಡೆಗೆ ತೆರಳುತ್ತಿದ್ದ ತನ್ನ ಸಮೂಹದಿಂದ ದೂರ ಸರಿದು ಏಕಾಂಗಿಯಾಗಿ ಒಳನಾಡಿನತ್ತ, ಹಿಮಪರ್ವತಗಳ ಸಾಲಿನೆಡೆಗೆ ಸಾಗಲು ಆರಂಭಿಸುತ್ತದೆ. ಒಂದೇ ಪೆಂಗ್ವಿನ್ ದೂರ ಸಾಗುತ್ತಿರುವುದನ್ನು ತಂಡ ಗಮನಿಸುತ್ತದೆ. ಆಹಾರ, ಬದುಕುಳಿಯುವಿಕೆ ಮತ್ತು ಸಮುದಾಯದೊಂದಿಗೆ ಸಾಗುವ ಬದಲಾಗಿ ಏಕಾಂಗಿಯಾಗಿ ಸಾಗುತ್ತಿರುವ ಪೆಂಗ್ವಿನ್ ಸ್ವಲ್ಪ ದೂರ ಹೋಗಿ ತಿರುಗಿ ನೋಡುತ್ತದೆ. ಉಳಿದ ಪೆಂಗ್ವಿನ್‌ ಗಳು ಕೆಲ ಕ್ಷಣಗಳ ಕಾಲ ಅದನ್ನು ಗಮನಿಸಿ, ಮತ್ತೆ ತಮ್ಮ ಹಾದಿ ಹಿಡಿಯುತ್ತವೆ. ಸಾಮಾನ್ಯವಾಗಿ ಪೆಂಗ್ವಿನ್‌ ಗಳು ಗುಂಪಾಗಿ ಸಾಗುತ್ತವೆ. ಆದರೆ ಈ ಪೆಂಗ್ವಿನ್‌ ನ ಒಂಟಿ ನಡಿಗೆಯನ್ನು ಹೆರ್ಜಾಗ್ ‘ಡೆತ್ ಮಾರ್ಚ್’ (ಸಾವಿನ ನಡಿಗೆ) ಎಂದು ಕರೆಯುತ್ತಾರೆ. ಏಕೆಂದರೆ ಪೆಂಗ್ವಿನ್‌ ಗಳು ಒಳನಾಡಿನತ್ತ ಸಾಗಿದರೆ ಬದುಕುಳಿಯುವ ಸಾಧ್ಯತೆ ಇರುವುದಿಲ್ಲ. ►ಹಳೆಯ ವೀಡಿಯೊಗೆ ಹೊಸ ಭಾವನೆ 2026ರ ಆರಂಭದಲ್ಲಿ ಈ ಒಂಟಿ ಪೆಂಗ್ವಿನ್‌ ನ ಸಣ್ಣ ತುಣುಕುಗಳು ಆನ್‌ಲೈನ್‌ ನಲ್ಲಿ ವೇಗವಾಗಿ ಹರಡಲು ಆರಂಭಿಸಿದವು. ‘ನಿಹಿಲಿಸ್ಟ್ ಪೆಂಗ್ವಿನ್’ ಎಂಬ ಅಡ್ಡಹೆಸರಿನೊಂದಿಗೆ ಈ ದೃಶ್ಯಗಳು ವೈರಲ್ ಆದವು. ಜನವರಿ 16ರಂದು ಟಿಕ್‌ಟಾಕ್‌ ನಲ್ಲಿ ಪೋಸ್ಟ್ ಮಾಡಿದ ವೀಡಿಯೊ ಮೊದಲ ಬಾರಿಗೆ ವ್ಯಾಪಕವಾಗಿ ಗಮನ ಸೆಳೆಯಿತು. ಪೆಂಗ್ವಿನ್‌ ನ ಭಾವನಾತ್ಮಕ ಒಂಟಿ ಪಯಣವನ್ನು ‘ಎಲ್ ಅಮೂರ್ ಟೂಜೂರ್ಸ್’ ಎಂಬ ಪ್ರಸಿದ್ಧ ಹಾಡಿನೊಂದಿಗೆ ಮಿಶ್ರ ಮಾಡಿ ಟಿಕ್‌ಟಾಕ್‌ ನಲ್ಲಿ ಹಂಚಲಾಗಿತ್ತು. ನಾಟಕೀಯ ಸಂಗೀತ, ಹೆರ್ಜಾಗ್ ಅವರ ನಿರೂಪಣೆ ಮತ್ತು ಪೆಂಗ್ವಿನ್‌ ನ ನಿಧಾನಗತಿಯ ಪ್ರಯಾಣ ಪ್ರಬಲ ಆಡಿಯೊ-ವಿಜುವಲ್ ಮೀಮ್ ಆಗಿ ರೂಪುಗೊಂಡವು. ►‘ನಿಹಿಲಿಸ್ಟ್ ಪೆಂಗ್ವಿನ್’ ಎಂದರೇನು? ಈ ಬಾರಿ ಇಂಟರ್ನೆಟ್ ಮೀಮ್ ಗಳ ಮೂಲಕ ಪೆಂಗ್ವಿನ್‌ ನ ನಡಿಗೆಯಲ್ಲಿ ಹೆಚ್ಚು ಆಳವಾದ ಅರ್ಥವನ್ನು ಜನರು ಕಾಣುತ್ತಿದ್ದಾರೆ. ಇದಕ್ಕೆ ‘ನಿಹಿಲಿಸ್ಟ್ ಪೆಂಗ್ವಿನ್’ ಎಂಬ ಹೆಸರು ಲಭಿಸಿದೆ. ‘ನಿಹಿಲಿಸ್ಟ್’ ಅಥವಾ ‘ಶೂನ್ಯವಾದಿ’ ಎಂದರೆ ಜೀವನಕ್ಕೆ ಅರ್ಥವಿಲ್ಲ ಎಂದು ನಂಬುವ ಮತ್ತು ಧಾರ್ಮಿಕ ಹಾಗೂ ನೈತಿಕ ತತ್ವಗಳನ್ನು ತಿರಸ್ಕರಿಸುವ ವ್ಯಕ್ತಿ. ಹೀಗಾಗಿ ವೀಕ್ಷಕರು ಪೆಂಗ್ವಿನ್‌ ನ ನಿಧಾನಗತಿಯ ಒಂಟಿ ನಡಿಗೆಯ ಮೇಲೆ ಮಾನವ ಭಾವನೆಗಳು ಮತ್ತು ಅಸ್ತಿತ್ವವಾದದ ಪ್ರಶ್ನೆಗಳನ್ನು ಹೇರಿದ್ದಾರೆ. ಹಲವರು ಈ ಪೆಂಗ್ವಿನ್‌ ನ ಶಾಂತ ಆದರೆ ಗುರಿಯಿಲ್ಲದ ನಡಿಗೆಯನ್ನು ಆಧುನಿಕ ಜೀವನದ ಹೋರಾಟಗಳಿಗೆ ಹೋಲಿಸಿದ್ದಾರೆ. ಇನ್ನು ಕೆಲವರು ಇದನ್ನು ಸುಸ್ತು, ಭಾವನಾತ್ಮಕ ಆಯಾಸ, ದಿನಚರಿ ಮತ್ತು ನಿರೀಕ್ಷೆಗಳಿಂದ ದೂರವಿರುವ ಭಾವನೆ, ಅಥವಾ ಅಗಾಧ ಜಗತ್ತಿನಲ್ಲಿ ಕಳೆದುಹೋಗುವ ಶಾಂತತೆಯ ಸಂಕೇತವಾಗಿ ನೋಡುತ್ತಿದ್ದಾರೆ. ►ವೈಜ್ಞಾನಿಕ ವಿವರಣೆಗೆ ಯತ್ನ ವೈಜ್ಞಾನಿಕ ದೃಷ್ಟಿಯಿಂದಲೂ ಪೆಂಗ್ವಿನ್‌ ನ ಈ ನಡಿಗೆಯನ್ನು ವಿಶ್ಲೇಷಿಸಲಾಗುತ್ತಿದೆ. ಕೆಲವು ಪೆಂಗ್ವಿನ್‌ ಗಳು ತಮ್ಮ ಸಮೂಹದಿಂದ ದೂರ ಸರಿದು ಪರ್ವತಗಳ ಕಡೆಗೆ ಸಾಗುವುದು ಕಂಡುಬರುತ್ತದೆ. ಇದಕ್ಕೆ ವಯಸ್ಸು, ಗೊಂದಲ ಅಥವಾ ಕಾಂತೀಯ ಕ್ಷೇತ್ರಗಳ ಪ್ರಭಾವ ಕಾರಣವಾಗಿರಬಹುದು ಎಂದು ಕೆಲವು ವಿಜ್ಞಾನಿಗಳು ಹೇಳುತ್ತಾರೆ. ಇನ್ನು ಕೆಲವರ ಪ್ರಕಾರ ಇದು ಸಂಪೂರ್ಣವಾಗಿ ನೈಸರ್ಗಿಕವಾದ, ಕಾರಣವಿಲ್ಲದ ನಡಿಗೆಯೂ ಆಗಿರಬಹುದು. ಕೆಲ ಜೀವಿಗಳು ಸಹಜವಾಗಿಯೇ ಭಿನ್ನ ಹಾದಿಯನ್ನು ಆಯ್ಕೆ ಮಾಡುತ್ತವೆ ಎಂಬ ವಿವರಣೆಯೂ ಇದೆ. ವಿಜ್ಞಾನಿಗಳ ಅಭಿಪ್ರಾಯದಲ್ಲಿ, ಇದು ಒಂದು ಪ್ರತ್ಯೇಕ ನಡಿಗೆಯಷ್ಟೇ. ಇದಕ್ಕೆ ಮಾನವ ಜೀವನದ ಅರ್ಥಗಳನ್ನು ಹೇರಬೇಕಾಗಿಲ್ಲ. ಇದು ವೈಜ್ಞಾನಿಕವಾಗಿ ಕುತೂಹಲಕರವಾದ ವರ್ತನೆ ಮಾತ್ರ; ಎಚ್ಚರಿಕೆಯ ಸಂಕೇತವೆಂದು ಪರಿಗಣಿಸುವ ಅಗತ್ಯವಿಲ್ಲ.

ವಾರ್ತಾ ಭಾರತಿ 25 Jan 2026 12:40 pm

ಬೆಳಗಾವಿ : ಚೋರ್ಲಾ ಘಾಟ್‌ನಲ್ಲಿ 400 ಕೋಟಿ ರೂ. ಸಾಗಿಸುತ್ತಿದ್ದ ಕಂಟೇನರ್ ದರೋಡೆ

►ದೇಶವನ್ನೇ ಬೆಚ್ಚಿಬೀಳಿಸಿದ ಅತಿದೊಡ್ಡ ರಾಬರಿ ಪ್ರಕರಣ ತಡವಾಗಿ ಬಹಿರಂಗ ► ಎಸ್‌ಐಟಿ ತನಿಖೆಗೆ ಮಹಾರಷ್ಟ್ರ ಸಿಎಂ ಫಡ್ನವಿಸ್ ಆದೇಶ

ವಾರ್ತಾ ಭಾರತಿ 25 Jan 2026 12:32 pm

ರಾಜ್ಯದಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆ ಶಿಕ್ಷಕರು, ಪದವೀಧರ ಶಿಕ್ಷಕರು, ಪಿಯು ಉಪನ್ಯಾಸಕರಿಗೆ ಬಡ್ತಿ ಕುರಿತು ಗುಡ್‌ ನ್ಯೂಸ್‌

ಬೆಂಗಳೂರು, ಜನವರಿ 25: ರಾಜ್ಯದಲ್ಲಿ ಶಿಕ್ಷಣ ಇಲಾಖೆಯಲ್ಲಿ ಆಗಾಗ ಮಹತ್ವದ ಬದಲಾವಣೆಗಳನ್ನು ಮಾಡಲಾಗುತ್ತದೆ. ಇದೀಗ ಸರ್ಕಾರಿ ಪ್ರಾಥಮಿಕ ಶಾಲೆ ಶಿಕ್ಷಕರು, ಪದವೀಧರ ಶಿಕ್ಷಕರು, ಪಿಯು ಉಪನ್ಯಾಸಕರಿಗೆ ಸಿಹಿಸುದ್ದಿ ನೀಡಿದ್ದು, 4000 ಬೋಧಕರಿಗೆ ಬಡ್ತಿ ಸಿಗಲಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ. ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ. ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಮಧು ಬಂಗಾರಪ್ಪ

ಒನ್ ಇ೦ಡಿಯ 25 Jan 2026 12:30 pm

ಇ-ಖಾತೆ ವಿಳಂಬ: ಬಗೆಹರಿಯದ ಅರ್ಜಿದಾರರ ಗೋಳು

ರಾಜ್ಯದಲ್ಲಿ ಇ-ಖಾತೆ ಅರ್ಜಿ ವಿಲೇವಾರಿ ವಿಳಂಬವಾಗುತ್ತಿದ್ದು, ಸಾಫ್ಟ್‌ವೇರ್ ದೋಷ, ಸಿಬ್ಬಂದಿ ಕೊರತೆ ಮತ್ತು ಅಕ್ರಮ ಆಸ್ತಿ ನೋಂದಣಿಯಂತಹ ಸಮಸ್ಯೆಗಳು ಅರ್ಜಿದಾರರನ್ನು ಸಂಕಷ್ಟಕ್ಕೆ ದೂಡಿವೆ. ಪಾರದರ್ಶಕತೆಗಾಗಿ ಕಡ್ಡಾಯಗೊಳಿಸಲಾದ ಇ-ಖಾತೆ ವ್ಯವಸ್ಥೆಯ ಲೋಪದೋಷಗಳನ್ನು ವಂಚಕರು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ತಾಂತ್ರಿಕ ಸಮಸ್ಯೆಗಳಿಂದಾಗಿ ಆಸ್ತಿ ಮಾರಾಟ ಪ್ರಕ್ರಿಯೆಗಳು ವಿಳಂಬವಾಗುತ್ತಿವೆ.

ವಿಜಯ ಕರ್ನಾಟಕ 25 Jan 2026 12:24 pm

ಭಾರತೀಯ ನೌಕಾಪಡೆಯಲ್ಲಿ ಶಾರ್ಟ್ ಸರ್ವಿಸ್ ಕಮಿಷನರ್ ಹುದ್ದೆಗಳಿಗೆ ಅರ್ಜಿ ಆಹ್ವಾನ

ಭಾರತೀಯ ನೌಕಾಪಡೆಯಲ್ಲಿ 2027ರ ಶಾರ್ಟ್ ಸರ್ವಿಸ್ ಕಮಿಷನರ್ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ. ಒಟ್ಟು 260 ಹುದ್ದೆಗಳಿಗೆ ನೇಮಕಾತಿ ಮಾಡಲಾಗುತ್ತಿದೆ. ಭಾರತೀಯ ನೌಕಾಪಡೆಗೆ ಸೇರಿ (ನೌಸೇನಾ ಭಾರತಿ), ಜನವರಿ 2027ರ ಶಾರ್ಟ್ ಸರ್ವಿಸ್ ಕಮಿಷನರ್ (ಎಸ್ಎಸ್ಸಿ) ಅಧಿಕಾರಿ ನೇಮಕಾತಿಗಾಗಿ ಅಧಿಕೃತ ವೆಬ್‌ಸೈಟ್‌ನಲ್ಲಿ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಈ ನೇಮಕಾತಿಯ ಮೂಲಕ 260 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಭಾರತೀಯ ನೌಕಾಪಡೆಯ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಕೆ 2026 ಜನವರಿ 24ರಿಂದ ಪ್ರಾರಂಭವಾಗಿದ್ದು, ಅಭ್ಯರ್ಥಿಗಳು 2026 ಫೆಬ್ರವರಿ 24ರವರೆಗೆ ಅರ್ಜಿ ಸಲ್ಲಿಸಬಹುದು. ಅಧಿಸೂಚನೆಯಲ್ಲಿ ಇರುವ ಹೆಚ್ಚಿನ ವಿವರಗಳನ್ನು ಪರಿಶೀಲಿಸಲು ನೌಕಾಪಡೆಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಬಹುದು. 2002 ಜುಲೈ 02ರಿಂದ 2008 ಜುಲೈ 01ರ ನಡುವೆ ಜನಿಸಿದ ಅಭ್ಯರ್ಥಿಗಳು ಭಾರತೀಯ ನೌಕಾಪಡೆಯ SSC ಅಧಿಕಾರಿ ನೇಮಕಾತಿ 2027ಕ್ಕೆ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಈ ಕೆಳಗಿನ ಲಿಂಕ್ ಬಳಸಬಹುದು: https://www.joinindiannavy.gov.in/en/account/account/state ►ಪ್ರಮುಖ ದಿನಾಂಕಗಳು * ಆನ್‌ಲೈನ್ ಅರ್ಜಿ ಆರಂಭ: 24 ಜನವರಿ 2026 * ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 24 ಫೆಬ್ರವರಿ 2026 * ಶುಲ್ಕ ಪಾವತಿಗೆ ಕೊನೆಯ ದಿನಾಂಕ: 24 ಫೆಬ್ರವರಿ 2026 * ಪರೀಕ್ಷೆ ದಿನಾಂಕ: ಶೀಘ್ರವೇ ಅಪ್‌ಡೇಟ್ ಮಾಡಲಾಗುವುದು * ಪ್ರವೇಶ ಪತ್ರ (ಹಾಲ್ ಟಿಕೆಟ್): ಪರೀಕ್ಷೆಗೆ ಮೊದಲು * ಫಲಿತಾಂಶ ದಿನಾಂಕ: ಶೀಘ್ರವೇ ಅಪ್‌ಡೇಟ್ ಮಾಡಲಾಗುವುದು ವಿವರಗಳಿಗೆ ಅಭ್ಯರ್ಥಿಗಳು ಭಾರತೀಯ ನೌಕಾಪಡೆಯ ಅಧಿಕೃತ ವೆಬ್‌ಸೈಟ್ ಪರಿಶೀಲಿಸಿ ದೃಢಪಡಿಸಬಹುದು: https://www.joinindiannavy.gov.in/en/event/online-application-window-for-ssc-various-entries-jan-27-course-will-be-live-from-24-jan-24-feb-26.html ►ಅರ್ಜಿ ಶುಲ್ಕ ಯಾವುದೇ ಅಭ್ಯರ್ಥಿಗೆ ಅರ್ಜಿ ಶುಲ್ಕ ಇರುವುದಿಲ್ಲ. ►ವಯೋಮಿತಿ 2002 ಜುಲೈ 02ರಿಂದ 2008 ಜುಲೈ 01ರ ನಡುವೆ ಜನಿಸಿದ ಅಭ್ಯರ್ಥಿಗಳು ಭಾರತೀಯ ನೌಕಾಪಡೆಯ SSC ಅಧಿಕಾರಿ ನೇಮಕಾತಿ 2027ಕ್ಕೆ ಅರ್ಜಿ ಸಲ್ಲಿಸಬಹುದು. ನಿಯಮಾನುಸಾರ ವಯೋಮಿತಿ ಸಡಿಲಿಕೆಯನ್ನು ಭಾರತೀಯ ನೌಕಾಪಡೆ ನೀಡುತ್ತದೆ. ►ಒಟ್ಟು ಹುದ್ದೆಗಳು 260 ಹುದ್ದೆಗಳು ►ಹುದ್ದೆಗಳ ವಿವರ ಅಧಿಕಾರಿ ವಿಭಾಗದ ಹುದ್ದೆಗಳು • ಎಸ್ಎಸ್ಸಿ ಜನರಲ್ ಸರ್ವಿಸ್ (ಜಿಎಸ್/ಎಕ್ಸ್) – 76 • ಏರ್ ಟ್ರಾಫಿಕ್ ಕಂಟ್ರೋಲರ್ (ಎಟಿಸಿ) – 18 • ನೇವಲ್ ಏರ್ ಆಪರೇಶನ್ಸ್ ಅಧಿಕಾರಿ (ಎನ್ಎಒಒ) – 20 • ಎಸ್ಎಸ್ಸಿ ಪೈಲಟ್ – 25 • ಎಸ್ಎಸ್ಸಿ ಲಾಜಿಸ್ಟಿಕ್ಸ್ – 10 ►ತಾಂತ್ರಿಕ ವಿಭಾಗದ ಹುದ್ದೆಗಳು • ಎಂಜಿನಿಯರಿಂಗ್ ಬ್ರಾಂಚ್ ಜನರಲ್ ಸರ್ವಿಸ್ – 42 • ಎಲೆಕ್ಟ್ರಿಕಲ್ ಬ್ರಾಂಚ್ ಜನರಲ್ ಸರ್ವಿಸ್ – 38 • ಸಬ್ಮೆರೀನ್ ಟೆಕ್ ಎಂಜಿನಿಯರಿಂಗ್ – 08 • ಸಬ್ಮೆರೀನ್ ಟೆಕ್ ಎಲೆಕ್ಟ್ರಿಕಲ್ – 08 ►ಶಿಕ್ಷಣ ವಿಭಾಗದ ಹುದ್ದೆಗಳು • ಶಿಕ್ಷಣ – 15 ►ವಿದ್ಯಾರ್ಹತೆ ಅಧಿಕಾರಿ ವಿಭಾಗದ ಹುದ್ದೆಗಳು • ಎಸ್ಎಸ್ಸಿ ಜನರಲ್ ಸರ್ವಿಸ್ (ಜಿಎಸ್/ಎಕ್ಸ್): ಬಿಇ / ಬಿ.ಟೆಕ್ (ಶೇ. 60 ಅಂಕಗಳು) • ಏರ್ ಟ್ರಾಫಿಕ್ ಕಂಟ್ರೋಲರ್ (ಎಟಿಸಿ): ಬಿ.ಟೆಕ್ (ಶೇ. 60 ಅಂಕಗಳು) 10ನೇ ಮತ್ತು 12ನೇ ತರಗತಿಗಳಲ್ಲೂ ಶೇ. 60 ಅಂಕಗಳು ಅಗತ್ಯ • ನೇವಲ್ ಏರ್ ಆಪರೇಶನ್ಸ್ ಅಧಿಕಾರಿ (ಎನ್ಎಒಒ): ಬಿಇ / ಬಿ.ಟೆಕ್ (ಶೇ. 60 ಅಂಕಗಳು) 10ನೇ ಮತ್ತು 12ನೇ ತರಗತಿಗಳಲ್ಲೂ ಶೇ. 60 ಅಂಕಗಳು ಅಗತ್ಯ • ಎಸ್ಎಸ್ಸಿ ಪೈಲಟ್: ಬಿಇ / ಬಿ.ಟೆಕ್ (ಶೇ. 60 ಅಂಕಗಳು) • ಎಸ್ಎಸ್ಸಿ ಲಾಜಿಸ್ಟಿಕ್ಸ್: ಬಿಇ / ಬಿ.ಟೆಕ್ ಅಥವಾ ಎಂಬಿಎ / ಎಂಸಿಎ / ಎಂಎಸ್ಸಿ (ಐಟಿ) ಅಥವಾ ಬಿಎಸ್ಸಿ / ಬಿಕಾಂ / ಬಿಎಸ್ಸಿ (ಐಟಿ) ಜೊತೆಗೆ ಫೈನಾನ್ಸ್ ಪಿಜಿ ಡಿಪ್ಲೊಮಾ (ಶೇ. 60 ಅಂಕಗಳು) ►ತಾಂತ್ರಿಕ ವಿಭಾಗದ ಹುದ್ದೆಗಳು • ಎಂಜಿನಿಯರಿಂಗ್ ಬ್ರಾಂಚ್ ಜನರಲ್ ಸರ್ವಿಸ್: ಬಿಇ / ಬಿ.ಟೆಕ್ (ಶೇ. 60 ಅಂಕಗಳು) – ಮೆಕಾನಿಕಲ್ / ಮೆರೈನ್ / ಇನ್ಸ್ಟ್ರುಮೆಂಟೇಶನ್ / ಪ್ರೊಡಕ್ಷನ್ / ಏರೋನಾಟಿಕಲ್ / ಇಂಡಸ್ಟ್ರಿಯಲ್ ಎಂಜಿನಿಯರಿಂಗ್ & ಮ್ಯಾನೇಜ್ಮೆಂಟ್ / ಕಂಟ್ರೋಲ್ ಎಂಜಿನಿಯರಿಂಗ್ / ಏರೋಸ್ಪೇಸ್ / ಆಟೋಮೊಬೈಲ್ಸ್ / ಮೆಟಲರ್ಜಿ / ಮೆಕಾಟ್ರೋನಿಕ್ಸ್ / ಇನ್ಸ್ಟ್ರುಮೆಂಟೇಶನ್ & ಕಂಟ್ರೋಲ್ • ಸಬ್ಮೆರೀನ್ ಟೆಕ್ ಎಂಜಿನಿಯರಿಂಗ್: ಪ್ರೊಡಕ್ಷನ್, ಕಂಟ್ರೋಲ್, ಏರೋನಾಟಿಕಲ್, ಇಂಡಸ್ಟ್ರಿಯಲ್, ಇನ್ಸ್ಟ್ರುಮೆಂಟೇಶನ್ & ಕಂಟ್ರೋಲ್, ಮೆಕಾನಿಕಲ್ ಅಥವಾ ಮೆಕಾನಿಕಲ್ ವಿತ್ ಆಟೊಮೇಷನ್ ಎಂಜಿನಿಯರಿಂಗ್‌ನಲ್ಲಿ ಬಿಇ / ಬಿ.ಟೆಕ್ (ಶೇ. 60 ಅಂಕಗಳು) • ಎಲೆಕ್ಟ್ರಿಕಲ್ ಬ್ರಾಂಚ್ ಜನರಲ್ ಸರ್ವಿಸ್: ಎಲೆಕ್ಟ್ರಿಕಲ್ / ಎಲೆಕ್ಟ್ರಾನಿಕ್ಸ್ / ಎಲೆಕ್ಟ್ರಿಕಲ್ & ಎಲೆಕ್ಟ್ರಾನಿಕ್ಸ್ / ಎಲೆಕ್ಟ್ರಾನಿಕ್ಸ್ & ಕಮ್ಯುನಿಕೇಷನ್ / ಟೆಲಿಕಮ್ಯುನಿಕೇಷನ್ / ಇನ್ಸ್ಟ್ರುಮೆಂಟೇಶನ್ / ಪವರ್ ಎಂಜಿನಿಯರಿಂಗ್ / ಪವರ್ ಎಲೆಕ್ಟ್ರಾನಿಕ್ಸ್ ವಿಷಯಗಳಲ್ಲಿ ಬಿಇ / ಬಿ.ಟೆಕ್ (ಶೇ. 60 ಅಂಕಗಳು) • ಸಬ್ಮೆರೀನ್ ಟೆಕ್ ಎಲೆಕ್ಟ್ರಿಕಲ್: ಎಲೆಕ್ಟ್ರಿಕಲ್ & ಎಲೆಕ್ಟ್ರಾನಿಕ್ಸ್ / ಎಲೆಕ್ಟ್ರಾನಿಕ್ಸ್ & ಕಮ್ಯುನಿಕೇಷನ್ / ಇನ್ಸ್ಟ್ರುಮೆಂಟೇಶನ್ & ಕಂಟ್ರೋಲ್ / ಎಲೆಕ್ಟ್ರಾನಿಕ್ಸ್ & ಟೆಲಿಕಮ್ಯುನಿಕೇಷನ್ / ಅಪ್ಲೈಡ್ ಎಲೆಕ್ಟ್ರಾನಿಕ್ಸ್ & ಇನ್ಸ್ಟ್ರುಮೆಂಟೇಶನ್ ವಿಷಯಗಳಲ್ಲಿ ಬಿಇ / ಬಿ.ಟೆಕ್ (ಶೇ. 60 ಅಂಕಗಳು) ►ಶಿಕ್ಷಣ ವಿಭಾಗ • ಶಿಕ್ಷಣ: * ಬಿಎಸ್ಸಿಯಲ್ಲಿ ಭೌತಶಾಸ್ತ್ರದೊಂದಿಗೆ ಎಂಎಸ್ಸಿ (ಗಣಿತ / ಕಾರ್ಯಾಚರಣಾ ಸಂಶೋಧನೆ) ಅಥವಾ * ಬಿಎಸ್ಸಿಯಲ್ಲಿ ಗಣಿತದೊಂದಿಗೆ ಎಂಎಸ್ಸಿ (ಭೌತಶಾಸ್ತ್ರ / ಅನ್ವಯಿಕ ಭೌತಶಾಸ್ತ್ರ) ಅಥವಾ * ಬಿಎಸ್ಸಿಯಲ್ಲಿ ರಸಾಯನಶಾಸ್ತ್ರ ಮತ್ತು ಭೌತಶಾಸ್ತ್ರದೊಂದಿಗೆ ಎಂಎಸ್ಸಿ (ಎಲ್ಲಕ್ಕೂ ಶೇ. 60 ಅಂಕಗಳು ಅಗತ್ಯ) ಅಥವಾ ಮೆಕಾನಿಕಲ್ / ಎಲೆಕ್ಟ್ರಿಕಲ್ / ಎಲೆಕ್ಟ್ರಾನಿಕ್ಸ್ ವಿಭಾಗಗಳಲ್ಲಿ ಬಿಇ / ಬಿ.ಟೆಕ್ ಅಥವಾ ಎಂ.ಟೆಕ್ (ಶೇ. 60 ಅಂಕಗಳು) – ಥರ್ಮಲ್ / ಪ್ರೊಡಕ್ಷನ್ / ಮೆಷಿನ್ ಡಿಸೈನ್ / ಪವರ್ ಸಿಸ್ಟಮ್ / ವಿಎಲ್ಎಸ್ಐ / ಎಲೆಕ್ಟ್ರಾನಿಕ್ಸ್ & ಕಮ್ಯುನಿಕೇಷನ್ ಎಂಜಿನಿಯರಿಂಗ್

ವಾರ್ತಾ ಭಾರತಿ 25 Jan 2026 12:17 pm

UK Indian Communities: ಜಗತ್ತು ಎಷ್ಟೇ ಬೆಳೆದರು ಅರಿಯದ ಜನರು, ಹೆಣ್ಣು ಭ್ರೂಣಗಳೇ ಇವರ ಟಾರ್ಗೆಟ್?

ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ, ಎನ್ನುವ ಮಾತು ಎಲ್ಲರಿಗೂ ಗೊತ್ತಿದೆ. ಯಾಕೆ ಅಂದ್ರೆ ಹೆಣ್ಣು ಮಕ್ಕಳು ಈ ಸಮಾಜವನ್ನು ತಿದ್ದುವ ಸಾಮರ್ಥ್ಯ ಇರುವವರು ಎಂದು. ಅಲ್ಲದೇ ಆಧುನಿಕ ಕಾಲಘಟ್ಟದಲ್ಲಿ ಹೆಣ್ಣು ಮಕ್ಕಳಿಗೆ ಸರ್ಕಾರ ಕೂಡ ಸಾಕಷ್ಟು ಸೌಲಭ್ಯ ನೀಡುತ್ತಾ, ಆ ಮೂಲಕ ಸಮಾಜದ ಮುಖ್ಯವಾಹಿನಿ ಪ್ರವೇಶಿಸಲು ಎಲ್ಲಾ ಅವಕಾಶ ನೀಡುತ್ತಿದೆ. ಹಾಗೇ ಹಿಂದೆ ಇದ್ದ ಸಾಮಾಜಿಕ ಪಿಡುಗುಗಳನ್ನೂ

ಒನ್ ಇ೦ಡಿಯ 25 Jan 2026 11:52 am

Gold, Silver Rate: ಕರ್ನಾಟಕದ ಬೆಂಗಳೂರಿನಲ್ಲಿ ಬಂಗಾರ, ಬೆಳ್ಳಿ ಬೆಲೆ ಎಷ್ಟಿದೆ ತಿಳಿಯಿರಿ: ಇಲ್ಲಿದೆ ಜನವರಿ 25ರ ದರಪಟ್ಟಿ

Gold, Silver Rate: ಬಂಗಾರ, ಬೆಳ್ಳಿ ದರದಲ್ಲಿ ದಾಖಲೆಯ ಏರಿಕೆಯತ್ತ ಹೊರಟಿದೆ. ಹಾಗಾದ್ರೆ ಇಂದು (ಜನವರಿ 25) ಕರ್ನಾಟಕ ರಾಜಧಾನಿ ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಬೆಲೆ ಎಷ್ಟಿದೆ ಎನ್ನುವ ಸಂಪೂರ್ಣ ವಿವರವನ್ನು ಅಂಕಿಅಂಶಗಳ ಸಹಿತ ವಿವರವನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ. ಬಂಗಾರ ದರಗಳ ವಿವರ: ನಿನ್ನೆ (ಜನವರಿ 24) ಬೆಂಗಳೂರು ಸೇರಿದಂತೆ ದೇಶದ

ಒನ್ ಇ೦ಡಿಯ 25 Jan 2026 11:46 am

400 ಕೋಟಿ ರೂ ಮೌಲ್ಯದ ರದ್ದಾದ ನೋಟುಗಳ ರಾಬರಿ ಪ್ರಕರಣ: ಹವಾಲಾ ಏಜೆಂಟ್ ವಿರಾಟ್ ಗಾಂಧಿ ಎಸ್‌ಐಟಿ ವಶಕ್ಕೆ

400 ಕೋಟಿ ರೂಪಾಯಿ ಮೌಲ್ಯದ ರದ್ದಾದ 2000 ರೂಪಾಯಿ ನೋಟುಗಳಿದ್ದ ಕಂಟೈನರ್ ಕಳ್ಳತನ ಪ್ರಕರಣದಲ್ಲಿ ನಾಶಿಕ್ ಪೊಲೀಸರು ರಾಜಸ್ಥಾನ ಮೂಲದ ಹವಾಲಾ ಆಪರೇಟರ್ ವಿರಾಟ್ ಗಾಂಧಿಯನ್ನು ಬಂಧಿಸಿದ್ದಾರೆ. ಈ ಬಂಧನದೊಂದಿಗೆ ಪ್ರಕರಣದಲ್ಲಿ ಇದುವರೆಗೆ ಏಳು ಮಂದಿಯನ್ನು ಬಂಧಿಸಲಾಗಿದೆ. ಇಬ್ಬರು ಪ್ರಮುಖ ಆರೋಪಿಗಳು ಇನ್ನೂ ತಲೆಮರೆಸಿಕೊಂಡಿದ್ದಾರೆ.

ವಿಜಯ ಕರ್ನಾಟಕ 25 Jan 2026 11:41 am

ಕೃಷಿ ಪ್ರವಾಸೋದ್ಯಮ-ಹಳ್ಳಿಯ ಹೊಸ ಸಾಧ್ಯತೆಗಳು!

ಕೃಷಿ ಪ್ರವಾಸೋದ್ಯಮ ಅಂದರೆ ಎಂದಿಗೂ ರೈತನ ಭೂಮಿಯನ್ನು ಮಾರಾಟಕ್ಕಿಡುವ ಪ್ರಯತ್ನವಲ್ಲ. ಅದು ರೈತನ ಬದುಕನ್ನು ಗೌರವದಿಂದ ತೋರಿಸುವ ಪ್ರಯತ್ನವಾಗಬೇಕು. ಅಲ್ಲಿ ರೈತ ಮಾರಾಟಗಾರನಲ್ಲ - ಆತಿಥೇಯನಾಗಬೇಕು. ಹಳ್ಳಿ ಮತ್ತೆ ಹಳ್ಳಿಯಂತೆ ಉಳಿಯಬೇಕಾದರೆ, ಹಳ್ಳಿ ತನ್ನ ಬದುಕನ್ನು ಹಂಚಿಕೊಳ್ಳಬೇಕು. ಅಲ್ಲೇ ಈ ಉದ್ಯಮಕ್ಕೆ ಭವಿಷ್ಯ ಇದೆ. ಕೃಷಿಯಲ್ಲಿ ಸಾಮಾನ್ಯವಾಗಿ ಎರಡು ಬಗೆಯ ಜನರು ಕಾಣಿಸುತ್ತಾರೆ. ಮೊದಲನೆಯವರು, ತಾನು ಮಾಡುತ್ತಿರುವುದನ್ನು ಇನ್ನೊಬ್ಬರೂ ನೋಡಲಿ, ಕಲಿಯಲಿ, ಅನುಸರಿಸಲಿ ಎಂದು ಹೃದಯ ತೆರೆದವರು. ಇನ್ನೊಬ್ಬರು - ತೋಟದ ಸುತ್ತ ಗೋಡೆ ಕಟ್ಟಿಕೊಂಡು, ಯಾರಿಗೂ ಗೊತ್ತಾಗದಂತೆ ತಮ್ಮ ಕೃಷಿಯನ್ನು ನಿಗೂಢವಾಗಿ ಕಾಯುವವರು. ತಾನು ಮಾಡಿದ ಪ್ರಯೋಗವನ್ನು ಮತ್ತೊಬ್ಬನು ನೋಡಿ ಮಾಡಲಿ ಎಂದು ಬಯಸುವ ಕೃಷಿಕರು ಅಷ್ಟಾಗಿ ಕಾಣಿಸದಿರುವುದು ಕೇವಲ ಸ್ವಾರ್ಥದ ಕಾರಣದಿಂದಲ್ಲ. ‘ತಾನೇನು ಮಹಾ ಸಾಧನೆ ಮಾಡಿದ್ದೇನೆ? ನನ್ನ ಕೃಷಿಯನ್ನು ನೋಡಿ ಇನ್ನೊಬ್ಬರು ಕಲಿಯುವುದು ಏನಿದೆ?’ ಎನ್ನುವ ಮುಗ್ಧತೆಯ ನಡೆ. ತಾನೂ ಕೂಡ ಇನ್ನೊಬ್ಬರ ಹೊಲ, ತೋಟ ನೋಡಿ ಕಲಿತವನೇ ಆಗಿದ್ದರೂ, ಅದನ್ನು ಮತ್ತೆ ಸಮಾಜಕ್ಕೆ ಹಂಚಿಕೊಳ್ಳುವ ಸಹೃದಯತೆ ಬೆಳೆಸಿಕೊಳ್ಳಲಾಗದ ಅಸಮರ್ಥತೆ ಇನ್ನೊಂದು ಕಡೆ. ಇನ್ನು ಕೆಲವರದ್ದು ಪ್ರದರ್ಶನದ ಕೃಷಿ. ತೋಟದೊಳಗೆ ಕಾಲಿಟ್ಟ ಕ್ಷಣದಿಂದಲೇ ಎಲ್ಲರ ಕಣ್ಣು ತನ್ನ ಮೇಲಿರಬೇಕು, ತಾನು ನೆಟ್ಟಗಿಡ ಬಳ್ಳಿಗಳ ಮೇಲಿರಬೇಕು ಎಂಬ ಆಸೆ. ಜನ ಬರಬೇಕು, ನೋಡಬೇಕು, ಮೆಚ್ಚಬೇಕು, ಬೇರೆ ಎಲ್ಲೂ ಇಲ್ಲದ್ದು ತನ್ನಲ್ಲೇ ಇರಬೇಕು, ಹಸಿರು ಕೇವಲ ಬೆಳೆಯಾಗಿ ಅಲ್ಲ, ಕಲಾಕೃತಿಯಾಗಿಯೂ ಕಾಣಬೇಕು. ತೋಟವೆಂದರೆ ಬರೀ ಹೊಲವಲ್ಲ-ಒಂದು ಮ್ಯೂಸಿಯಂ, ಒಂದು ಪ್ರವಾಸಿ ತಾಣ ಎಂಬ ಕಲಾ ರಸಿಕ ಕೃಷಿಕರವರು. ಆದರೆ ಇಂಥ ಪ್ರದರ್ಶನಾತ್ಮಕ ಕೃಷಿ ಎಲ್ಲರ ಪಾಲಿಗೆ ಸಾಧ್ಯವಿಲ್ಲ. ಅದರ ಹಿಂದೆ ಹಣ ಹೂಡಲು ಸಿದ್ಧವಾದ ಆರ್ಥಿಕ ಶಕ್ತಿ ಅವರಲ್ಲಿರಬೇಕು. ಅದು ಇಲ್ಲದಿದ್ದರೆ ಹಸಿರು ಕನಸುಗಳು ಮಧ್ಯದಲ್ಲೇ ಒಣಗುತ್ತವೆ. ಇಂಥ ಯೋಚನೆಯ ನಡುವೆಯೇ ಕೃಷಿಗೆ ಒಂದು ಹೊಸ ದಾರಿ ತೆರೆದಿದೆ. ಅದೇ ಕೃಷಿ ಪ್ರವಾಸೋದ್ಯಮ. ಇಲ್ಲಿ ಕೃಷಿ ಕೇವಲ ಉತ್ಪಾದನೆಯ ವಿಷಯವಲ್ಲ. ಅದು ಅನುಭವ. ಹಣ್ಣು ಬೆಳೆಗಳ ವೈವಿಧ್ಯ, ಮೂಲಿಕೆಗಳ ಸುವಾಸನೆ, ಹೊಲ-ಗದ್ದೆ-ತೋಟಗಳ ನಡುವಿನ ಮೌನ -ಇವೆಲ್ಲವನ್ನೂ ನಗರದ ಕಲುಷಿತ ಉಸಿರಿಗೆ ವಿರಾಮ ಕೊಡುವ ವಿಶ್ರಾಂತಿ ತಾಣಗಳಾಗಿ ರೂಪಿಸುವ ಆಲೋಚನೆಯಿದು. ಭೂಮಿಯ ಮಧ್ಯೆ ಹರಿಯುವ ಚಿಕ್ಕ ಹೊಳೆ, ಪಕ್ಕದಲ್ಲಿ ಎರಡು-ಮೂರು ಕುಟೀರಗಳು, ವಿಶಾಲ ಕೆರೆ, ಹಿಂದೆ ಬೆಟ್ಟಗುಡ್ಡಗಳು, ಬೆಳಗ್ಗೆ ಸೂರ್ಯೋದಯ, ಸಂಜೆ ಚಂದ್ರೋದಯ, ರಾತ್ರಿ ಬೆಳದಿಂಗಳು....ಮರ ಕಡಿಯದೆ, ಬಂಡೆ ಒಡೆಯದೆ, ಪ್ರಕೃತಿಯ ರೂಪ ಕೆಡಿಸದೆ ಕಟ್ಟಿದ ವಾಸ್ತವ್ಯ ವ್ಯವಸ್ಥೆ. ಶುದ್ಧ ಸಾವಯವ ಊಟ. ಪಕ್ಷಿಗಳ ಕಲರವ. ತೋಟದೊಳಗೆ ಓಡಾಡಲು ಹಳೆಯ ಕಾಲದ ಎತ್ತಿನ ಗಾಡಿ, ಅಥವಾ ಸರಳ ಸೈಕಲ್. ಇವೆಲ್ಲವನ್ನೂ ಒಂದೇ ಕಡೆ ನೆಲೆಗೊಳಿಸಿ, ಉಸಿರುಗಟ್ಟುತ್ತಿರುವ ಪೇಟೆಯ ಬದುಕಿನಲ್ಲಿ ಸಿಲುಕಿರುವ ಜನರನ್ನು ಒಂದು-ಎರಡು ದಿನ ಹಳ್ಳಿಗೆ ಕರೆತಂದು, ಆತಿಥ್ಯಕ್ಕಾಗಿ ಒಂದಷ್ಟು ಶುಲ್ಕ ಪಡೆದು ಆರ್ಥಿಕವಾಗಿ ಬಲಗೊಳ್ಳುವ ಪ್ರಯತ್ನ ಇಂದು ನಿಧಾನವಾಗಿ ಉದ್ಯಮದ ರೂಪ ಪಡೆಯುತ್ತಿದೆ. ಉತ್ತರದಲ್ಲಿ ಇದು ಈಗಾಗಲೇ ಗಟ್ಟಿಯಾಗಿ ಬೇರುಬಿಟ್ಟಿದೆ. ಹೋಂ ಸ್ಟೇ ನಂತರದ ಸ್ವಲ್ಪ ವಿಸ್ತರಿತ ರೂಪವಿದು. ಹಾಗೆ ನೋಡಿದರೆ ಶೃಂಗೇರಿ, ಕೊಪ್ಪ, ತೀರ್ಥಹಳ್ಳಿ ಈ ಭಾಗದಲ್ಲಿ ಇತ್ತೀಚೆಗೆ ತಲೆಯೆತ್ತಿರುವ ಹೋಂ ಸ್ಟೇಗಳೆಲ್ಲ ತುಂಡು ತುಂಡು ಹಸಿರು ಭೂಭಾಗದಲ್ಲೇ ಇವೆ. ಸಮಸ್ಯೆ ಎಂದರೆ ಒಂದು ಕಾಲಕ್ಕೆ ಸುತ್ತಲೂ ಪೊರೆ ಕಟ್ಟಿದ ಹಸಿರು ಅಡಿಕೆ ತೋಟವೀಗ ತೂತು ಬಿದ್ದಿದೆ. ಕೆಲವರು ಇದೇ ಅಡಿಕೆಯ ಹಣದಿಂದಲೇ ಹೋಂ ಸ್ಟೇಗಳನ್ನು ಕಟ್ಟಿದವರು. ಇನ್ನು ಕೆಲವರು ಅಡಿಕೆ ನಾಶ ಆದಮೇಲೆ ಬದುಕಿಗಾಗಿ ಸಾಲ ಮಾಡಿ ಈ ದಾರಿಯನ್ನು ಹುಡುಕಿಕೊಂಡವರು. ತಮ್ಮ ಮನೆಯಂಗಳದಲ್ಲಿ ಚಿಗುರಿದ ಇಂಥ ಹೋಂ ಸ್ಟೇಗಳಿಗೆ ನಗರಗಳಿಂದ ಬರುವ ಅತಿಥಿಗಳನ್ನು ಪ್ರಬಲವಾಗಿ ಆಕರ್ಷಿಸುವವರು ಇದೇ ಮಲೆನಾಡಿನ ಹುಡುಗರು. ನಿಮಗೆ ಗೊತ್ತಿರಲಿ, ಇಲ್ಲೆಲ್ಲ ಹೋಂಸ್ಟೇಗಳನ್ನು ನಿರ್ವಹಿಸುವ ಹಿರಿಯರನ್ನುಳಿದು ಕಿರಿಯರೆಲ್ಲ ಈಗಾಗಲೇ ಉದ್ಯೋಗ ನಿಮಿತ್ತ ಬೆಂಗಳೂರಿಗೆ ಸೇರಿ ಆಗಿದೆ ಎಂದು ಮೊನ್ನೆಯೇ ನನ್ನ ಅಂಕಣದಲ್ಲಿ ಹೇಳಿದ್ದೆ. ನೀವು ನಂಬುತ್ತಿರೋ ಇಲ್ಲವೋ, ಮಲೆನಾಡು ಭಾಗದ ಎಷ್ಟೊಂದು ಯುವಕರು ಈಗ ರಾಜಧಾನಿ ಸೇರಿಕೊಂಡಿದ್ದಾರೆ ಎಂದರೆ ಕಳೆದ ಎರಡು ವರ್ಷದಿಂದ ಹಬ್ಬಗಳು ಬಂದು ಎರಡು ಮೂರು ದಿನಗಳ ಜೋಡಿ ರಜೆಗಳು ಲಭ್ಯವಾದಾಗಳೆಲ್ಲ ರಾಜ್ಯ ಸಾರಿಗೆ ಸಂಸ್ಥೆ ಬೆಂಗಳೂರಿನಿಂದ ವಿಶೇಷ ಬಸ್ಸುಗಳನ್ನು ಈ ಭಾಗಕ್ಕೆ ಓಡಿಸುತ್ತಿದೆ! ಊರು ಖಾಲಿ ಮಾಡಿಕೊಂಡು ಬೆಂಗಳೂರು ಸೇರಿಕೊಂಡ ತಮ್ಮ ಮನೆಯ ಯುವಕರ ಬಗ್ಗೆ ಹಿರಿಯರಿಗೀಗ ಧನ್ಯತೆ ಇದೆ. ಸರ್ವನಾಶ ಹೊಂದುತ್ತಿರುವ ಕೃಷಿಯ ಆವರಣದ ಒಳಗಡೆಯೇ ವಾಸದ ಮನೆಗೆ ಅಂಟಿಕೊಂಡೇ ವಿಸ್ತರಿಸಿಕೊಂಡ ಹೋಂ ಸ್ಟೇಗಳಿಗೆ ಇದೇ ಮನೆಮಕ್ಕಳು ತಮ್ಮ ಸಿಸ್ಟಮ್‌ನಿಂದಲೇ ಪ್ರವಾಸಿಗರನ್ನು ಆಕರ್ಷಿಸುವ ಆನ್‌ಲೈನ್ ವ್ಯವಸ್ಥೆಯನ್ನು ಮಾಡಿಕೊಂಡಿದ್ದಾರೆ. ಊರಲ್ಲಿ ಉಳಿದ ಮನೆಯ ಹಿರಿಯರು ತಿಮರೆ, ಕಣಿಲೆ, ತಂಬುಳಿ, ಚಟ್ನಿ, ಕಡ್ಲೆ ಅವಲಕ್ಕಿ, ಪುಂಡಿ.. ಹೀಗೆಲ್ಲ ರುಚಿ-ರುಚಿಯಾದ ನಾಟಿ ತಿಂಡಿಗಳನ್ನು ಮಾಡಿ ನಗರದ ಪ್ರವಾಸಿಗರಿಗೆ ಬಡಿಸುತ್ತಾರೆ. ಇನ್ನೊಂದು ಕಡೆ ಖಾಯಂ ವಾಪಸಾತಿಗೆ ನಿರ್ಧರಿಸಿದವರು. ಐಟಿ-ಬಿಟಿ ಉದ್ಯೋಗಗಳಲ್ಲಿ ಬದುಕುತ್ತಿರುವ ಅನೇಕ ಯುವಕರು ಹಳ್ಳಿ, ಮಣ್ಣು, ಕೆಸರು, ಹಸಿರು ಎಂಬ ಪದಗಳಿಗೆ ಒಳಗೊಳಗೇ ಅಲೆಯುತ್ತಿದ್ದಾರೆ. ನಗರದ ಉದ್ಯೋಗ ಅವರಿಗೀಗ ಬಚ್ಚಿದೆ. ಕೈಯಲ್ಲಿ ಸ್ವಲ್ಪ ಹಣ ಇದೆ, ಒಂದು ತುಂಡು ಭೂಮಿ, ಒಂದು ಹಸಿರು ಮನೆ, ಸ್ವಲ್ಪ ಸ್ವಚ್ಛ ಗಾಳಿ, ನೀರು ಅಷ್ಟೇ ಸಾಕು ಎಂದು ಕನಸು ಕಾಣುವವರು ಇವತ್ತು ಕಡಿಮೆಯಿಲ್ಲ. ಹಾಗಂತ ಇವರು ಇದ್ದಕ್ಕಿದ್ದಂತೆ ದೂರದ ಹಳ್ಳಿ ಕಡೆ ರೈಲು-ಬಸ್-ವಿಮಾನ ಹತ್ತುವರಲ್ಲ. ನಗರದ ಉದ್ಯೋಗ ಬಿಡುವ ಮುನ್ನ, ಹಳ್ಳಿಗೆ ಮರಳುವ ಮುನ್ನ, ಸಾವಿರ ಸಲ ಯೋಚಿಸಿದವರು. ಕಂಪ್ಯೂಟರ್, ಮೊಬೈಲ್, ವೈಫೈಗೆ ಅಂಟಿಕೊಂಡವರು ಆ ಬದುಕಿನಿಂದ ಒಮ್ಮೆಲೇ ಹೊರಬರುವುದು ಸುಲಭವಲ್ಲ. ಅವರ ಜೊತೆ ನಗರಕ್ಕೆ ಹೊಂದಿಕೊಂಡ ಮಡದಿ, ಪೇಟೆಯೊಳಗೇ ಓದುತ್ತಿರುವ ಮಕ್ಕಳ ಮನಸ್ಸು-ಇವೆಲ್ಲ ಬದಲಿಸುವುದು ಇನ್ನೂ ಕಷ್ಟ. ಒಂದು ದಿನ ಮೊಬೈಲ್‌ಗೆ ರೇಂಜ್ ಸಿಗಲಿಲ್ಲವೆಂದು ಅಜ್ಜನ ಮನೆ ಬಿಟ್ಟು ತಕ್ಷಣ ನಗರಕ್ಕೆ ಬಸ್ಸು ಹತ್ತಿದ ಮಕ್ಕಳನ್ನು ನಾನು ನೋಡಿದ್ದೇನೆ.ಮೊಬೈಲ್ ಸಿಗ್ನಲ್ ಸಿಗಲಿಲ್ಲವೆಂದು ಭೂತದ ಮನೆಯಲ್ಲಿ ಅಸಹನೀಯವಾಗಿ ವರ್ತಿಸಿದವರನ್ನು ಕಂಡಿದ್ದೇನೆ. ಅದಕ್ಕಾಗಿಯೇ ಐಟಿ-ಬಿಟಿ ಯುವಕರು ಹಳ್ಳಿಗೆ ಹೊರಡುವ ಮುನ್ನ ಗಂಭೀರವಾಗಿ ಯೋಚಿಸುತ್ತಾರೆ. ಇದೀಗ ‘ವರ್ಕ್ ಫ್ರಮ್ ಹೋಂ’ ಎಂಬ ಮಧ್ಯಮ ದಾರಿಯೊಂದು ಕೊರೋನೋತ್ತರ ಅವಧಿಯಲ್ಲಿ ತೆರೆದಿದೆ. ದೇಹ ಹಳ್ಳಿಯಲ್ಲಿ, ಮನಸ್ಸು ಕಂಪ್ಯೂಟರ್ ಕೊಂಡಿಯ ಮೂಲಕ ನಗರದಲ್ಲಿ. ಸಂಜೆ ಹಳ್ಳಿ ದಾರಿಯಲ್ಲಿ ನಡೆದು ಹೋಗುವಾಗ, ದಪ್ಪ ಕನ್ನಡಕ ಹಾಕಿಕೊಂಡು ಅನ್ಯಮನಸ್ಕರಾಗಿರುವ ಆ ಮುಖಗಳು ಕಿವಿಗೆ ವಯರ್ ಸಿಕ್ಕಿಸಿಕೊಂಡು, ಬರ್ಮುಡಾ ಧರಿಸಿಕೊಂಡು ಅರೆ ಹಳ್ಳಿಗರಾಗಿಯೂ ಮತ್ತೊಂದಿಷ್ಟು ಪೇಟೆಯವರಾಗಿಯೂ ಸುಲಭದಲ್ಲಿ ಗುರುತಿಸುವಂತಿರುತ್ತಾರೆ. ಸಡನ್ನಾಗಿ ಮಳೆ ಬಂದರೆ ಅಡಿಕೆ ರಾಶಿ ಮಾಡಲು ಈ ಮಗ ಬರುವುದಿಲ್ಲ. ಅವನು ಈಗಲೂ ಹಳ್ಳಿಯಲ್ಲಲ್ಲ, ಬೆಂಗಳೂರಲ್ಲೇ ಇದ್ದಾನೆ ಎಂಬುವುದು ಮಗನ ಮೇಲೆ ಕೂಡುಕಟ್ಟೆ ರಂಗಣ್ಣನ ಆರೋಪ. ಅದಿರಲಿ, ಈಗ ನಮ್ಮ ಹಳ್ಳಿ ಮನೆಗಳು, ತೋಟಗಳು, ಹೊಲ-ಗದ್ದೆಗಳು ಈ ದೇಶದ ಉಸಿರುಗಟ್ಟುತ್ತಿರುವ ಪೇಟೆಯ ಮಂದಿಗೆ ನೆಮ್ಮದಿಯ ಉಸಿರು ಕೊಡಬಹುದೇ? ಪೇಟೆಯ ಜೀವಗಳು ಹಳ್ಳಿಗೆ ಬರುವುದರಿಂದ ಗ್ರಾಮಗಳ ಮನಸ್ಸು ಬದಲಾಗಬಹುದೇ? ಕೃಷಿ ಪ್ರವಾಸೋದ್ಯಮ ಅಂದರೆ ಎಂದಿಗೂ ರೈತನ ಭೂಮಿಯನ್ನು ಮಾರಾಟಕ್ಕಿಡುವ ಪ್ರಯತ್ನವಲ್ಲ. ಅದು ರೈತನ ಬದುಕನ್ನು ಗೌರವದಿಂದ ತೋರಿಸುವ ಪ್ರಯತ್ನವಾಗಬೇಕು. ಅಲ್ಲಿ ರೈತ ಮಾರಾಟಗಾರನಲ್ಲ-ಆತಿಥೇಯನಾಗಬೇಕು. ಹಳ್ಳಿ ಮತ್ತೆ ಹಳ್ಳಿಯಂತೆ ಉಳಿಯಬೇಕಾದರೆ, ಹಳ್ಳಿ ತನ್ನ ಬದುಕನ್ನು ಹಂಚಿಕೊಳ್ಳಬೇಕು. ಅಲ್ಲೇ ಈ ಉದ್ಯಮಕ್ಕೆ ಭವಿಷ್ಯ ಇದೆ. ಕೃಷಿ ಪ್ರವಾಸೋದ್ಯಮ ಆರಂಭಿಸಬೇಕೆಂದು ಯೋಚಿಸುವ ರೈತ ಮೊದಲು ಕಟ್ಟಬೇಕಾದದ್ದು ಕೊಠಡಿಯಲ್ಲ, ಗೋಡೆಯಲ್ಲ; ನನ್ನ ತೋಟಕ್ಕೆ ಹೊರಗಿನವರು ಬರಬಹುದೇ? ಎಂಬ ಪ್ರಶ್ನೆಗೆ ಆತ ಹೌದು ಎನ್ನುವ ಕ್ಷಣದಿಂದಲೇ ಈ ಪ್ರಯಾಣ ಶುರುವಾಗುತ್ತದೆ. ಬಹುತೇಕ ರೈತರು ತಮ್ಮ ಹೊಲ-ತೋಟಗಳನ್ನು ಪ್ರೀತಿಯಿಂದ ನೋಡಿಕೊಳ್ಳುತ್ತಾರೆ; ಆದರೆ ಅದೇ ಪ್ರೀತಿಯನ್ನು ಹೊರಗಿನವರಿಗೆ ತೋರಿಸಲು ಹೆದರುತ್ತಾರೆ. ಬೆಳೆ ಹಾನಿಯಾಗಬಹುದು, ಕ್ರಮ ತಪ್ಪಬಹುದು, ಪ್ರಶ್ನೆಗಳು ಕಿರಿಕಿರಿ ಕೊಡಬಹುದು ಎಂಬ ಭಯಗಳು ಸಹಜ. ಆದರೆ ಕೃಷಿ ಪ್ರವಾಸೋದ್ಯಮದಲ್ಲಿ ಪ್ರವಾಸಿಗರು ಯಾವತ್ತೂ ಪರಿಶೀಲಕರಲ್ಲ, ಅನುಭವ ಹುಡುಕಿಕೊಂಡು ಬಂದ ಅತಿಥಿಗಳು. ಅವರು ಮಣ್ಣಿನ ಪರಿಪೂರ್ಣತೆಯನ್ನು ನೋಡಲು ಬರುವುದಿಲ್ಲ; ಬದುಕಿನ ನಿಜವನ್ನು ನೋಡಲು ಬರುತ್ತಾರೆ. ಹೀಗಾಗಿ ರೈತನು ಮೊದಲು ತನ್ನ ಕೃಷಿ ಪರಿಪೂರ್ಣವೇ ಎನ್ನುವ ಆತಂಕ ಬಿಟ್ಟು, ತನ್ನ ಬದುಕು ನಿಜವಾಗಿದೆಯೇ ಎನ್ನುವುದನ್ನು ತನ್ನೊಳಗೆ ಕೇಳಿಕೊಳ್ಳಬೇಕು. ಆನಂತರ ಬರುವ ದೊಡ್ಡ ತಪ್ಪು ಯಾವುದೆಂದರೆ ಸೌಕರ್ಯ ಸೌಲಭ್ಯ ಸೇರಿಸುವ ಆತುರ. ಕೃಷಿ ಪ್ರವಾಸೋದ್ಯಮ ಅಂದರೆ ನಗರಕ್ಕೆ ಹಳ್ಳಿಯೊಳಗೆ ಜಾಗ ಕೊಡಿಸುವ ಪ್ರಯತ್ನ ಎಂದು ಹಲವರು ಅರ್ಥ ಮಾಡಿಕೊಂಡಿದ್ದಾರೆ. ಎಸಿ, ಗ್ಲಾಸ್ ಗೋಡೆ, ಸ್ವಿಮ್ಮಿಂಗ್ ಪೂಲ್, ಸೆಲ್ಫಿ ಫೋಟೋ ಸ್ಪಾಟ್‌ಗಳು - ಇವೆಲ್ಲ ಇಲ್ಲದೇ ಕೃಷಿ ಪ್ರವಾಸೋದ್ಯಮ ನಡೆಯುವುದಿಲ್ಲ ಎಂಬ ಭ್ರಮೆ. ಆದರೆ ನಗರದಿಂದ ಬಂದವನು ಹಳ್ಳಿಗೆ ಬರುವುದು ಈ ಎಲ್ಲದರಿಂದ ತಪ್ಪಿಸಿಕೊಳ್ಳಲು ತಾನೆ? ಅವನಿಗೆ ಬೇಕಾಗಿರುವುದು ತಂಪಾದ ಗಾಳಿ, ಮರದ ನೆರಳು, ಸ್ವಚ್ಛ ನೆಲ ಮತ್ತು ರಾತ್ರಿ ಕಾಣುವ ನಿಜವಾದ ಕತ್ತಲೆ. ಹೀಗಾಗಿ ಸೇರಿಸಬೇಕಾದ ಸೌಲಭ್ಯಗಳಿಗಿಂತ ಮೊದಲು ತೆಗೆದು ಹಾಕಬೇಕಾದ ಅತಿರೇಕಗಳನ್ನು ರೈತ ಗಮನಿಸಬೇಕು. ಅಗತ್ಯವಿಲ್ಲದ ಗೋಡೆಗಳು, ಕಾಂಕ್ರಿಟ್, ಪ್ರದರ್ಶನದ ಅಲಂಕಾರಗಳು - ಇವೆಲ್ಲ ಹಳ್ಳಿಯ ಉಸಿರನ್ನು ಕಟ್ಟುತ್ತವೆ. ಒಂದು ಸರಳ ಕೊಠಡಿ, ಒಂದು ಕಿಟಕಿ, ಸ್ವಚ್ಛ ಶೌಚಾಲಯ, ತೋಟದ ತರಕಾರಿಯಿಂದ ಮಾಡಿದ ಊಟ-ಇಷ್ಟಿದ್ದರೆ ಸಾಕು. ಇದರಿಂದ ಹಳ್ಳಿ ಉಳಿಯುತ್ತದೆ, ರೈತನ ಖರ್ಚೂ ನಿಯಂತ್ರಣದಲ್ಲಿ ಇರುತ್ತದೆ. ಬಹುಮುಖ್ಯವಾಗಿ ಕೃಷಿ ಪ್ರವಾಸೋದ್ಯಮದ ಯಶಸ್ಸು ಕೊಠಡಿಗಳಲ್ಲಿ ಅಳೆಯುವುದಲ್ಲ; ಅದು ಸಂಬಂಧಗಳಲ್ಲಿ ಅಳೆಯುತ್ತದೆ. ಪ್ರವಾಸಿಗನನ್ನು ಗ್ರಾಹಕನಂತೆ ನೋಡಿದ ಕ್ಷಣದಿಂದಲೇ ಈ ಪ್ರಯತ್ನ ಕುಸಿಯಲು ಶುರುವಾಗುತ್ತದೆ. ಸಮಯಕ್ಕೆ ಊಟ, ಸಮಯಕ್ಕೆ ಕಾರ್ಯಕ್ರಮ, ಸಮಯಕ್ಕೆ ನಡಿಗೆ ಎಂದು ಪಟ್ಟಿ ಮಾಡಿಬಿಟ್ಟರೆ ಅದೂ ಕೂಡ ಮತ್ತೊಂದು ಹಳ್ಳಿ ಹೋಟೆಲ್ ಆಗುತ್ತದೆ. ಹಳ್ಳಿ ಅಂಥದ್ದೂ ಅಲ್ಲವೇ ಅಲ್ಲ. ಹಳ್ಳಿ ನಿಧಾನ. ಪ್ರವಾಸಿಗನಿಗೆ ಕಾರ್ಯಕ್ರಮಗಳಿಗಿಂತ ಪಾಲ್ಗೊಳ್ಳುವಿಕೆ ಬೇಕು. ಅವನಿಗೆ ಒಂದು ಗಿಡ ನೆಡಲು, ಹಸುವಿಗೆ ಮೇವು ಹಾಕಲು ಅವಕಾಶಕೊಟ್ಟರೆ, ತೋಟದೊಳಗೆ ತಾನಾಗಿಯೇ ಒಂದು ಬೊಂಡ ತೆಗೆದು ಕುಡಿಯಲು, ಹಣ್ಣು ಕೊಯ್ದು ತಿನ್ನಲು, ಹೊಳೆಯಲ್ಲಿ ಈಜಲು, ಗುಡ್ಡ ಏರಲು, ಬೆಟ್ಟ- ಕಾಡು ತಿರುಗಾಡಲು ಕಲ್ಪಿಸಿದರೆ-ಅವನೊಳಗಿನ ನಗರವಿಷ ನಿಧಾನವಾಗಿ ಕರಗುತ್ತದೆ. ಅದೇ ಪೇಟೆಯ ಆಟಿಕೆಗಳನ್ನು ಹಳ್ಳಿಗೆ ಬಂದ ಮಕ್ಕಳೆದುರು ಹರಡಿದರೆ ಅದು ಯಾವ ಸುಖ? ಮಣ್ಣು, ನೀರು, ಮರ ಇದ್ದರೆ ಸಾಕು. ರಾತ್ರಿ ಅಂಗಳದಲ್ಲಿ ಕೂತು ಮಾತಾಡಲು ಒಂದು ದೀಪ ಇದ್ದರೆ, ಅದೇ ದೊಡ್ಡ ಮನರಂಜನೆ. ಕೊತ್ತಲಿಂಗೆಯ ಬ್ಯಾಟು, ಕುಂಡೆ ಊರಿಕೂತು ಎಳೆಯಲು ಅಡಿಕೆಯ ಹಾಳೆ. ಆಟಕ್ಕೆ ಒಂದಷ್ಟು ಗೋಲಿ, ಸೆಗಣಿ ಸಾರಿಸಿದ ನೆಲ, ಅದರ ಮೇಲೆ ರಂಗೋಲಿ.... ಇವೆಲ್ಲ ಇದ್ದಾಗ ಮಾತ್ರ ಮನಸ್ಸು ಮತ್ತೊಮ್ಮೆ ಬರುವ ಎಂದು ಹಠ ಹಿಡಿಯುತ್ತವೆ. ಪ್ರವಾಸಿಗನು ಹಳ್ಳಿ ಬಿಡುವಾಗ ಇಲ್ಲಿಗೆ ಮತ್ತೆ ಬರಬೇಕು ಎಂದು ಅಂದುಕೊಂಡರೆ, ಅದೇ ಕೃಷಿ ಪ್ರವಾಸೋದ್ಯಮದ ಲಾಭ. ಅದು ಹಣಕ್ಕಿಂತ ದೊಡ್ಡದು. ಏಕೆಂದರೆ ಕೃಷಿ ಪ್ರವಾಸೋದ್ಯಮ ಒಂದು ವ್ಯಾಪಾರ ಮಾದರಿಯಲ್ಲ; ಅದು ಒಂದು ಮನಸ್ಥಿತಿ. ಇದು ದೊಡ್ಡದಾಗಿ ಬೆಳೆಯಬೇಕಿಲ್ಲ. ಐದು ಕೊಠಡಿಗಳೇ ಸಾಕು. ಐದು ಕುಟುಂಬಗಳೇ ಸಾಕು. ಹಳ್ಳಿ ತನ್ನಂತೆಯೇ ಉಳಿಯಬೇಕು, ರೈತ ತನ್ನ ಗೌರವದೊಂದಿಗೆ ಬದುಕಬೇಕು, ನಗರದಿಂದ ಬಂದವನಿಗೆ ಒಂದು ಉಸಿರು ಸಿಗಬೇಕು. ಈ ಮೂರೂ ಒಂದೇ ಜಾಗದಲ್ಲಿ ಸಿಕ್ಕರೆ, ಅಲ್ಲಿ ಕೃಷಿ ಪ್ರವಾಸೋದ್ಯಮ ಯಶಸ್ವಿಯಾಗುತ್ತದೆ. ಉಳಿದದ್ದೆಲ್ಲ ಪ್ರದರ್ಶನ ಮಾತ್ರ.

ವಾರ್ತಾ ಭಾರತಿ 25 Jan 2026 11:18 am

Chickpea Farmers: ಕರ್ನಾಟಕದ ಕಡಲೆ ಬೆಳೆಗಾರರ ಬೆನ್ನಿಗೆ ನಿಂತ ಕೇಂದ್ರ ಸರ್ಕಾರ: 1 ಲಕ್ಷ ಮೆಟ್ರಿಕ್ ಟನ್ ಕಡಲೆ ಖರೀದಿಗೆ ಅಸ್ತು

ನವದೆಹಲಿ: ಕರ್ನಾಟಕದ ಕಡಲೆ ಬೆಳೆಗಾರರ ಬೆನ್ನಿಗೆ ಕೇಂದ್ರ ಸರ್ಕಾರ ನಿಂತಿದೆ. 1 ಲಕ್ಷ ಮೆಟ್ರಿಕ್ ಟನ್ ಕಡಲೆ ಖರೀದಿ ಮಾಡುವುದಕ್ಕೆ ಒಪ್ಪಿಗೆ ಸೂಚಿಸಿದೆ. ಈ ಸಂಬಂಧ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಮನವಿ ಮಾಡಿದ್ದರು. ಈ ಮನವಿಗೆ ಕೇಂದ್ರ ಸರ್ಕಾರವು ಸಕಾರಾತ್ಮಕವಾಗಿ ಸ್ಪಂದಿಸಿದೆ. ಇದೀಗ ರಾಜ್ಯದ ಕಡಲೆ ಬೆಳೆಗಾರರ ಬೆಂಬಲಕ್ಕೂ ಬಂದಿದೆ. ಕೇಂದ್ರ ಆಹಾರ ಮತ್ತು

ಒನ್ ಇ೦ಡಿಯ 25 Jan 2026 11:09 am

ಉತ್ತರ ಕನ್ನಡದಲ್ಲಿ ಅನ್ನ ಸುವಿಧಾ ನಾಟ್‌ರೀಚೆಬಲ್‌ : ಮೊಬೈಲ್‌ ಒಟಿಪಿ ಪಡೆಯಲು ತೊಂದರೆ, ನೋಂದಣಿಗೆ ಕಿರಿಕಿರಿ, ಅವಧಿ ವಿಸ್ತರಣೆ

ಉತ್ತರ ಕನ್ನಡ ಜಿಲ್ಲೆಯಲ್ಲಿ ಬಡವರಿಗೆ ಮನೆ ಬಾಗಿಲಿಗೆ ಅಕ್ಕಿ ತಲುಪಿಸುವ ಯೋಜನೆ ವಿಳಂಬವಾಗುತ್ತಿದೆ. ಆಹಾರ ಇಲಾಖೆ ನೋಂದಣಿಗೆ ಅವಕಾಶ ವಿಸ್ತರಿಸಿದೆ. ಅರ್ಹ ಫಲಾನುಭವಿಗಳು ನೋಂದಣಿ ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಗುಡ್ಡಗಾಡು ಪ್ರದೇಶಗಳಲ್ಲಿ ಆ್ಯಪ್ ಬಳಕೆಗೆ ತೊಂದರೆಯಾಗುತ್ತಿದೆ.

ವಿಜಯ ಕರ್ನಾಟಕ 25 Jan 2026 10:48 am

ಕೆಂಪು ಮತ್ತು ಹಸಿರು

ಕೃಷ್ಣನ್ ಗಮನಿಸಿದಂತೆ, ಯಾಂತ್ರೀಕರಣದ ಹೊರೆಯನ್ನು ಅನಿವಾರ್ಯವಾಗಿ ಮಹಿಳೆಯರು ಹೊರಬೇಕಾಗುತ್ತದೆ ಎಂದು ಸಿಎಂಎಂ ತನ್ನ ಅನುಭವಗಳ ಮೂಲಕ ಅರಿತುಕೊಂಡಿತು. ಹಸ್ತಚಾಲಿತ ಗಣಿಗಳಲ್ಲಿ ಕನಿಷ್ಠ ಅರ್ಧದಷ್ಟು ಕಾರ್ಮಿಕ ಬಲ ಮಹಿಳೆಯರೇ ಆಗಿದ್ದರೂ, ಸಂಪೂರ್ಣವಾಗಿ ಯಾಂತ್ರೀಕೃತ ಗಣಿಗಳಲ್ಲಿ ಅವರನ್ನು ಕೌಶಲ್ಯವಿಲ್ಲದವರು ಎಂದು ಪರಿಗಣಿಸಲಾಗುತ್ತಿತ್ತು. ಸಿಎಂಎಂ ಈ ಉದ್ಯೋಗ ಮತ್ತು ಆರ್ಥಿಕ ಸ್ವಾತಂತ್ರ್ಯದ ನಷ್ಟವನ್ನು ಮಹಿಳೆಯರ ಘನತೆಯ ಮೇಲಿನ ವ್ಯವಸ್ಥಿತ ದಾಳಿ ಎಂದು ನೋಡಿತು. ಗುಹಾ ನಿಯೋಗಿ ಮತ್ತು ಅವರ ಸಂಸ್ಥೆಯು ಉತ್ಪಾದನೆಯ ಪರ್ಯಾಯ ಮಾದರಿಯನ್ನು ಬೆಳೆಸಲು ಕೆಲಸ ಮಾಡುತ್ತಿತ್ತು. ಇದರಲ್ಲಿ ಜೀವನೋಪಾಯವನ್ನು ರಕ್ಷಿಸುವುದು, ಕಾರ್ಮಿಕ ಶಕ್ತಿಯ ಉಪಯೋಗ ಪಡೆಯುವುದು ಮತ್ತು ಅಭಿವೃದ್ಧಿ ಹೊಂದುತ್ತಿರುವ ಆರ್ಥಿಕತೆಯನ್ನು ಉಳಿಸಿಕೊಳ್ಳಲು ಕಾರ್ಮಿಕರ ಖರೀದಿ ಶಕ್ತಿಯನ್ನು ನಿರ್ಮಿಸುವುದಕ್ಕೆ ಒತ್ತು ನೀಡಲಾಗಿತ್ತು. ಸ್ವತಂತ್ರ ಭಾರತದ ಇತಿಹಾಸವು ಪ್ರಮುಖ ರಾಜಕಾರಣಿಗಳ ಹಿಂಸಾತ್ಮಕ ಸಾವುಗಳಿಂದ ತುಂಬಿದೆ. ಇಂದಿರಾ ಗಾಂಧಿಯವರು ತಮ್ಮ ಅರುವತ್ತರ ಉತ್ತರಾರ್ಧದಲ್ಲಿ, ರಾಜೀವ್ ಗಾಂಧಿಯವರು ನಲುವತ್ತರ ಮಧ್ಯದಲ್ಲಿ, ಪ್ರಮೋದ್ ಮಹಾಜನ್ ಅವರು ಐವತ್ತರ ಮಧ್ಯದಲ್ಲಿ ಹತ್ಯೆಯಾದರು. ವಿಮಾನ, ರಸ್ತೆ ಅಪಘಾತಗಳಿಂದಾಗಿ ಸಂಜಯ್ ಗಾಂಧಿ, ರಾಜೇಶ್ ಪೈಲಟ್, ಮಾಧವರಾವ್ ಸಿಂಧಿಯಾ, ವೈ.ಎಸ್. ರಾಜಶೇಖರ್ ರೆಡ್ಡಿ ಜೀವನಪ್ರಯಾಣದ ಮಧ್ಯದಲ್ಲಿಯೇ ಸಾವನ್ನಪ್ಪಿದರು. ಅವರು ಇನ್ನೂ ಇಪ್ಪತ್ತು ವರ್ಷ ಬದುಕಿದ್ದರೆ ಅವರ ನಂತರದ ವೃತ್ತಿಜೀವನ ಹೇಗಿರುತ್ತಿತ್ತು? ನನ್ನ ಅಭಿಪ್ರಾಯದಲ್ಲಿ, ಗಮನಾರ್ಹ ಚಿಂತಕ ಮತ್ತು ಟ್ರೇಡ್ ಯೂನಿಯನ್ ನಾಯಕ ಶಂಕರ್ ಗುಹಾ ನಿಯೋಗಿಯವರ ಅಕಾಲಿಕ ಮರಣವು ಈಗ ಉಲ್ಲೇಖಿಸಲಾದ ಯಾವುದೇ ರಾಜಕಾರಣಿಗಳ ಸಾವುಗಳಿಗಿಂತಲೂ ಭಾರತಕ್ಕೆ ಹೆಚ್ಚು ನೋವುಂಟುಮಾಡಿತು. ಇದು ಭಾರತದಲ್ಲಿನ ನಾಗರಿಕ ಸಮಾಜ ಚಳವಳಿಗೆ ಒಂದು ದೊಡ್ಡ ಹೊಡೆತವನ್ನು ನೀಡಿತು. ಬಹುಶಃ ಅದರಿಂದ ಅದು ಇನ್ನೂ ಚೇತರಿಸಿಕೊಂಡಿಲ್ಲ. ಗುಹಾ ನಿಯೋಗಿ ಅವರನ್ನು 1991ರಲ್ಲಿ, ಅವರು ಇನ್ನೂ ನಲುವತ್ತರ ಹರೆಯದಲ್ಲಿದ್ದಾಗ, ಕಾರ್ಮಿಕರಿಗೆ ಸ್ವಾಭಿಮಾನ ಮತ್ತು ಅವರು ಭೂಮಿಯ ಸಮಾನ ನಾಗರಿಕರಾಗಬಹುದು ಎಂಬ ನಂಬಿಕೆಯನ್ನು ನೀಡಿದ್ದಕ್ಕಾಗಿ ಅವರನ್ನು ದ್ವೇಷಿಸುತ್ತಿದ್ದ ಬಂಡವಾಳಶಾಹಿಗಳ ಬಾಡಿಗೆ ಗೂಂಡಾಗಳು ಕೊಂದರು. ನಾನು ಈ ಪುಟಗಳಲ್ಲಿ ಗುಹಾ ನಿಯೋಗಿಯ ಬಗ್ಗೆ ಒಂದು ಉಪಾಖ್ಯಾನ ಲೇಖನವನ್ನು ಮೊದಲು ಬರೆದಿದ್ದೇನೆ. ಈಗ ನಾನು ಅವರ ಬಗ್ಗೆ ಮತ್ತೆ ಬರೆಯಬೇಕು ಮತ್ತು ಹೆಚ್ಚು ವಿಶ್ಲೇಷಣಾತ್ಮಕವಾಗಿ ಬರೆಯಬೇಕು. ಏಕೆಂದರೆ, ಅವರ ಜೀವನ ಮತ್ತು ಕೆಲಸವು ಒಂದು ಕಾಲದಲ್ಲಿ ಏನನ್ನು ಅರ್ಥೈಸುತ್ತಿತ್ತು ಮತ್ತು ಇನ್ನೂ ಏನನ್ನು ಅರ್ಥೈಸಬಹುದೆಂಬುದರ ಬಗ್ಗೆ ಸಮಾಜಶಾಸ್ತ್ರಜ್ಞೆ ರಾಧಿಕಾ ಕೃಷ್ಣನ್ ಒಂದು ಉತ್ತಮ ಪುಸ್ತಕವನ್ನು ಪ್ರಕಟಿಸಿದ್ದಾರೆ. Shankar Guha Niyogi: A Politics in Red and Green ಎಂಬ ಹೆಸರಿನ ಈ ಪುಸ್ತಕವು ವೈಯಕ್ತಿಕ ಸಂದರ್ಶನಗಳು ಮತ್ತು ಹಿಂದಿಯಲ್ಲಿನ ಮೂಲಗಳನ್ನು ವ್ಯಾಪಕವಾಗಿ ಆಧರಿಸಿದೆ. 1943ರಲ್ಲಿ ಬಂಗಾಳಿ ಮನೆಯಲ್ಲಿ ಜನಿಸಿದ ಗುಹಾ ನಿಯೋಗಿ, ಹತ್ತೊಂಭತ್ತನೇ ವಯಸ್ಸಿನಲ್ಲಿ ಭಿಲಾಯಿ ಸ್ಟೀಲ್ ಪ್ಲಾಂಟ್‌ನಲ್ಲಿ ಕೆಲಸ ಮಾಡಲು ಬಂದರು. ಇದು ಭಾರತದ ಆಧುನಿಕತೆಯ ಹಾದಿಯ ಸಂಕೇತವಾಗಿದೆ. ಶೀಘ್ರದಲ್ಲೇ ಅವರು ಪೂರ್ಣ ಸಮಯ ಕ್ರಿಯಾಶೀಲವಾಗಿ ತೊಡಗಿಸಿಕೊಳ್ಳಲು ಸಂಬಳದ ಉದ್ಯೋಗವನ್ನು ಬಿಟ್ಟರು. ಅವರು ಆದಿವಾಸಿ ಮಹಿಳೆಯನ್ನು ವಿವಾಹವಾದರು ಮತ್ತು ಗಣಿ ಕಾರ್ಮಿಕರನ್ನು ಸಂಘಟಿಸಲು ಪ್ರಾರಂಭಿಸಿದರು. ಅವರು ಪರಿಸರ ನ್ಯಾಯದ ವಿಷಯಗಳಲ್ಲಿಯೂ ಆಸಕ್ತಿ ಹೊಂದಿದ್ದರು. ರಾಜ್ಯ ನೀರು ಮತ್ತು ಅರಣ್ಯ ನೀತಿಗಳು ವಾಣಿಜ್ಯ ಮತ್ತು ಕೈಗಾರಿಕಾ ಹಿತಾಸಕ್ತಿಗಳನ್ನು ಸಂಕುಚಿತವಾಗಿ ಪೂರೈಸುವ ಬದಲು ಸ್ಥಳೀಯ ರೈತ ಮತ್ತು ಬುಡಕಟ್ಟು ಸಮುದಾಯಗಳ ಅಗತ್ಯಗಳಿಗೆ ಹೆಚ್ಚು ಸ್ಪಂದಿಸುವಂತೆ ಮಾಡಲು ಪ್ರಯತ್ನಿಸಿದರು. ೧೯೭೭ರಲ್ಲಿ ಗುಹಾ ನಿಯೋಗಿ ಛತ್ತೀಸ್‌ಗಡ ಗಣಿ ಶ್ರಮಿಕ ಸಂಘವನ್ನು (ಸಿಎಂಎಸ್‌ಎಸ್) ಸ್ಥಾಪಿಸಲು ನೆರವಾದರು. ಅದರ ಹೆಸರೇ ಗಣಿ ಕಾರ್ಮಿಕರ ಹಕ್ಕುಗಳ ಬಗೆಗಿನ ಅದರ ಪ್ರಾಥಮಿಕ ಕಾಳಜಿಯನ್ನು ಸೂಚಿಸುತ್ತದೆ. ಎರಡು ವರ್ಷಗಳ ನಂತರ ಅವರು ಛತ್ತೀಸ್‌ಗಡ ಮುಕ್ತಿ ಮೋರ್ಚಾ (ಸಿಎಂಎಂ) ಎಂಬ ಹೆಚ್ಚು ವಿಶಾಲವಾದ ಸಂಘಟನೆಯ ರಚನೆಯನ್ನು ತೀವ್ರಗೊಳಿಸಿದರು. ಟ್ರೇಡ್ ಯೂನಿಯನ್, ಸಿಎಂಎಸ್‌ಎಸ್ ಜೊತೆಗೆ, ಸಿಎಂಎಂ ಮಹಿಳಾ ವಿಭಾಗ, ಯುವ ವಿಭಾಗ ಮತ್ತು ಸಾಂಸ್ಕೃತಿಕ ವಿಭಾಗವನ್ನು ಹೊಂದಿತ್ತು. ಇದು ಗಣಿ ಕಾರ್ಮಿಕರಿಂದ ಧನಸಹಾಯ ಪಡೆದ ಪ್ರವರ್ತಕ ಆಸ್ಪತ್ರೆಯನ್ನು ನಡೆಸುವುದಕ್ಕೂ ಪ್ರಾರಂಭಿಸಿತು. ಅಂದಿನಿಂದ ಗುಹಾ ನಿಯೋಗಿಯವರ ಹತ್ಯೆಯವರೆಗೆ, ಸಿಎಂಎಂ ಮತ್ತು ಸಿಎಂಎಸ್‌ಎಸ್ ಕಾರ್ಮಿಕರ ಹಕ್ಕುಗಳು, ಸಾಮಾಜಿಕ ಸುಧಾರಣೆ ಮತ್ತು ಪರಿಸರ ಸುಸ್ಥಿರತೆಯ ಪರವಾಗಿ ನಿರಂತರವಾಗಿ ಕೆಲಸ ಮಾಡಿದವು. ಆದರ್ಶವಾದಿ ಮಧ್ಯಮ ವರ್ಗದ ಭಾರತೀಯ ಯುವಕರ ಒಂದು ಗುಂಪು ನಿಯೋಗಿಯನ್ನು ಸೇರಲು ಮತ್ತು ಅವರ ಸಂಸ್ಥೆಗಳೊಂದಿಗೆ ಕೆಲಸ ಮಾಡಲು ಆರಾಮದಾಯಕ ವೃತ್ತಿಪರ ವೃತ್ತಿಜೀವನದ ನಿರೀಕ್ಷೆಯನ್ನೇ ಬಿಟ್ಟುಕೊಟ್ಟಿತು. ಅವರಲ್ಲಿ ವೆಲ್ಲೂರಿನ ಕ್ರಿಶ್ಚಿಯನ್ ವೈದ್ಯಕೀಯ ಕಾಲೇಜಿನ ಪದವೀಧರ ಬಿನಾಯಕ್ ಸೇನ್ ಮತ್ತು ಕಾನ್ಪುರದ ಅಷ್ಟೇ ಪ್ರತಿಷ್ಠಿತ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಿಂದ ಪದವೀಧರರಾದ ಸುಧಾ ಭಾರದ್ವಾಜ್ ಅವರಂತಹ ಪ್ರಸಿದ್ಧ ಹೆಸರುಗಳು ಸೇರಿದ್ದವು. ಗಮನಾರ್ಹವಾಗಿ, ಗುಹಾ ನಿಯೋಗಿ ಮತ್ತು ಸಿಎಂಎಂ ನ್ಯಾಯಯುತ ವೇತನ, ಯೋಗ್ಯ ಕೆಲಸದ ಪರಿಸ್ಥಿತಿಗಳು, ಸಾಕಷ್ಟು ರಜೆ ಮತ್ತು ಭವಿಷ್ಯ ನಿಧಿ ಸೌಲಭ್ಯಗಳನ್ನು ಒದಗಿಸುವ ಬಗ್ಗೆ ಸಾಂಪ್ರದಾಯಿಕ ಟ್ರೇಡ್ ಯೂನಿಯನ್ ಗಮನವನ್ನು ಮೀರಿ ಹೋದರು. ಆದರೂ ಇವುಗಳನ್ನು ಸರಿಯಾಗಿ ನೋಡಿ ಕೊಳ್ಳಲಾಗಿದೆಯೇ ಎಂದು ಅವರು ಖಚಿತಪಡಿಸಿ ಕೊಂಡರು. ಒಂದು ಪ್ರಮುಖ ಕಾಳಜಿ ಔದ್ಯೋಗಿಕ ಆರೋಗ್ಯ ಮತ್ತು ಸುರಕ್ಷತೆ. ಕೆಲಸದ ಸ್ಥಳದಲ್ಲಿ ಮಾಲಿನ್ಯ ಮತ್ತು ಸುರಕ್ಷತಾ ಕ್ರಮಗಳನ್ನು ಅಳೆಯಲು ಪ್ರಯೋಗಾಲಯವನ್ನು ಸ್ಥಾಪಿಸಲು ಸಂಸ್ಥೆಯು ಸಾಮಾಜಿಕವಾಗಿ ಪ್ರಜ್ಞೆ ಹೊಂದಿರುವ ವಿಜ್ಞಾನಿಗಳು ಮತ್ತು ಇಂಜಿನಿಯರ್‌ಗಳ ಸಹಾಯವನ್ನು ಪಡೆದುಕೊಂಡಿತು. ಗುಹಾ ನಿಯೋಗಿ ತಮ್ಮದೇ ಆದ ಚಿಂತನೆಗಳನ್ನು ಹೊಂದಿದ್ದವರಾಗಿದ್ದರೂ, ಅವರ ಜೀವನದ ಪರಿಸ್ಥಿತಿಗಳ ನಡುವೆ ಅವರಿಗೆ ಬರೆಯಲು ಸಮಯ ಸಿಗುತ್ತಿದ್ದುದೇ ವಿರಳ. ಅವರು ಬಿಟ್ಟುಹೋದ ಕೆಲವೇ ವಿಸ್ತೃತ ಬರವಣಿಗೆಗಳಲ್ಲಿ ಒಂದನ್ನು ‘ಹಮಾರಾ ಪರ್ಯಾವರಣ್’ ಎಂದು ಕರೆಯಲಾಯಿತು. ಇದನ್ನು ಹಿಂದಿಯಿಂದ ರಜನಿ ಬಕ್ಷಿ ಸೂಕ್ಷ್ಮವಾಗಿ ಅನುವಾದಿಸಿದ್ದಾರೆ. ಇಲ್ಲಿ ಒಂದು ಪ್ರಾತಿನಿಧಿಕ ವಾಕ್ಯವಿದೆ: ‘ನಮ್ಮ ಪೂರ್ವಜರು ಉಸಿರಾಡಿದ ಗಾಳಿಯನ್ನು ಮತ್ತು ಅವರು ತಮ್ಮ ಬಾಯಾರಿಕೆಯನ್ನು ತಣಿಸಿಕೊಳ್ಳಲು ಬಳಸಿದ ಸ್ಫಟಿಕದಂತಹ ಸ್ಪಷ್ಟ ನೀರನ್ನು ನಾಶಮಾಡುವ ಹಕ್ಕು ನಮಗಿಲ್ಲ. ಈ ನದಿ, ಈ ಗಾಳಿ, ಈ ಪರ್ವತ, ಈ ಕಾಡು, ಈ ಚಿಲಿಪಿಲಿಗುಟ್ಟುವ ಪಕ್ಷಿಗಳು-ಇದು ನಮ್ಮ ಭೂಮಿ. ನಮ್ಮ ಜಗತ್ತನ್ನು ಮುನ್ನಡೆಸಲು ನಾವು ವಿಜ್ಞಾನದ ಸಹಾಯವನ್ನು ಪಡೆಯುತ್ತೇವೆ. ಆದರೆ ನದಿಗಳು ಸ್ವಚ್ಛವಾಗಿ ಮತ್ತು ಮುಕ್ತವಾಗಿ ಹರಿಯುವಂತೆ ಮತ್ತು ಶುದ್ಧವಾದ ಉತ್ತೇಜಕ ಗಾಳಿ ಇರುವಂತೆ ನಾವು ಖಚಿತಪಡಿಸಿಕೊಳ್ಳುತ್ತೇವೆ. ನಮ್ಮ ಪೂರ್ವಜರನ್ನು ಪ್ರಕೃತಿಯೊಂದಿಗೆ ಒಂದಾಗಿರಿಸಿಕೊಂಡಿದ್ದ ಪಕ್ಷಿಗಳ ಮಧುರ ದನಿಯನ್ನು ನಾವು ಯಾವಾಗಲೂ ಕೇಳಬೇಕಾಗುತ್ತದೆ’. ನೀರು ಮತ್ತು ವಾಯು ಮಾಲಿನ್ಯ, ಮಣ್ಣಿನ ಸವಕಳಿ ಮತ್ತು ಅತಿ ಸಾಮಾನ್ಯ ಲಾಭ ಗಳಿಸಲು ಬಯಸುವ ದೊಡ್ಡ ಕೈಗಾರಿಕೆಗಳು ನೈಸರ್ಗಿಕ ಸಂಪನ್ಮೂಲಗಳ ಅತಿಯಾದ ಶೋಷಣೆಯಿಂದ ಮಾನವ ಜೀವನ ಮತ್ತು ಜೀವನೋಪಾಯಕ್ಕೆ ಉಂಟಾಗುವ ಹಾನಿಯ ಬಗ್ಗೆ ಸಿಎಂಎಂನ ನೀತಿ ದಾಖಲೆಗಳಲ್ಲಿ ಹೆಚ್ಚಿನ ಗಮನ ನೀಡಲಾಗಿದೆ ಎಂದು ಕೃಷ್ಣನ್ ತಮ್ಮ ಪುಸ್ತಕದಲ್ಲಿ ನಮಗೆ ತಿಳಿಸುತ್ತಾರೆ. ಈ ಪರಿಸರ ದುರುಪಯೋಗವನ್ನು ಸಾರ್ವಜನಿಕ ಮತ್ತು ಖಾಸಗಿ ವಲಯದ ಕಾರ್ಖಾನೆಗಳು ಮಾಡಿದವು. ರೈತರು, ಕಾರ್ಮಿಕರು, ಮಹಿಳೆಯರು ಮತ್ತು ಮಕ್ಕಳು ಇದಕ್ಕಾಗಿ ಬೆಲೆ ತೆರಬೇಕಾಯಿತು. ಗುಹಾ ನಿಯೋಗಿ ಭಾರತೀಯ ಪರಿಸ್ಥಿತಿಗಳಿಗೆ ಹೆಚ್ಚು ಸೂಕ್ತವಾದ ಉತ್ಪಾದನಾ ತಂತ್ರಜ್ಞಾನಗಳಲ್ಲಿ ತೀವ್ರ ಆಸಕ್ತಿ ಹೊಂದಿದ್ದರು. ಯುರೋಪ್ ಮತ್ತು ಉತ್ತರ ಅಮೆರಿಕದಿಂದ ದೊಡ್ಡ ಯಂತ್ರಗಳ ಅವಿವೇಕದ ಆಮದು ಸಮಾಜವನ್ನು ವರ್ಗ ಮತ್ತು ಲಿಂಗದ ಆಧಾರದ ಮೇಲೆ ಮತ್ತಷ್ಟು ಧ್ರುವೀಕರಣಗೊಳಿಸುತ್ತದೆ ಎಂದು ಅವರು ಗುರುತಿಸಿದ್ದರು. ಕೃಷ್ಣನ್ ಗಮನಿಸಿದಂತೆ, ಯಾಂತ್ರೀಕರಣದ ಹೊರೆಯನ್ನು ಅನಿವಾರ್ಯವಾಗಿ ಮಹಿಳೆಯರು ಹೊರಬೇಕಾಗುತ್ತದೆ ಎಂದು ಸಿಎಂಎಂ ತನ್ನ ಅನುಭವಗಳ ಮೂಲಕ ಅರಿತುಕೊಂಡಿತು. ಹಸ್ತಚಾಲಿತ ಗಣಿಗಳಲ್ಲಿ ಕನಿಷ್ಠ ಅರ್ಧದಷ್ಟು ಕಾರ್ಮಿಕ ಬಲ ಮಹಿಳೆಯರೇ ಆಗಿದ್ದರೂ, ಸಂಪೂರ್ಣವಾಗಿ ಯಾಂತ್ರೀಕೃತ ಗಣಿಗಳಲ್ಲಿ ಅವರನ್ನು ಕೌಶಲ್ಯವಿಲ್ಲದವರು ಎಂದು ಪರಿಗಣಿಸಲಾಗುತ್ತಿತ್ತು. ಸಿಎಂಎಂ ಈ ಉದ್ಯೋಗ ಮತ್ತು ಆರ್ಥಿಕ ಸ್ವಾತಂತ್ರ್ಯದ ನಷ್ಟವನ್ನು ಮಹಿಳೆಯರ ಘನತೆಯ ಮೇಲಿನ ವ್ಯವಸ್ಥಿತ ದಾಳಿ ಎಂದು ನೋಡಿತು. ಗುಹಾ ನಿಯೋಗಿ ಮತ್ತು ಅವರ ಸಂಸ್ಥೆಯು ಉತ್ಪಾದನೆಯ ಪರ್ಯಾಯ ಮಾದರಿಯನ್ನು ಬೆಳೆಸಲು ಕೆಲಸ ಮಾಡುತ್ತಿತ್ತು. ಇದರಲ್ಲಿ ಜೀವನೋಪಾಯವನ್ನು ರಕ್ಷಿಸುವುದು, ಕಾರ್ಮಿಕ ಶಕ್ತಿಯ ಉಪಯೋಗ ಪಡೆಯುವುದು ಮತ್ತು ಅಭಿವೃದ್ಧಿ ಹೊಂದುತ್ತಿರುವ ಆರ್ಥಿಕತೆಯನ್ನು ಉಳಿಸಿಕೊಳ್ಳಲು ಕಾರ್ಮಿಕರ ಖರೀದಿ ಶಕ್ತಿಯನ್ನು ನಿರ್ಮಿಸುವುದಕ್ಕೆ ಒತ್ತು ನೀಡಲಾಗಿತ್ತು. ‘ಚಿಪ್ಕೋ ಚಳವಳಿ ನಮ್ಮನ್ನು ಹುರಿದುಂಬಿಸುತ್ತದೆ ಮತ್ತು ನಾವು ಅದನ್ನು ಕ್ರಾಂತಿಕಾರಿ ಚಳವಳಿ ಎಂದು ಗುರುತಿಸುತ್ತೇವೆ ಎಂದು ಗುಹಾ ನಿಯೋಗಿ ಬರೆದಿದ್ದಾರೆ’ ಎಂದು ಕೃಷ್ಣನ್ ಉಲ್ಲೇಖಿಸಿದ್ದಾರೆ. ಅವರ ಪುಸ್ತಕವನ್ನು ಓದಿದಾಗ, ಗುಹಾ ನಿಯೋಗಿ ಮತ್ತು ಮಹಾನ್ ಚಿಪ್ಕೋ ನಾಯಕ ಚಂಡಿ ಪ್ರಸಾದ್ ಭಟ್ ನಡುವಿನ ಹೋಲಿಕೆಗಳನ್ನು ನೋಡಿ ನಾನು ಆಘಾತಕ್ಕೊಳಗಾದೆ. ಗುಹಾ ನಿಯೋಗಿ ಒಬ್ಬ ಹಸಿರು ಮಾರ್ಕ್ಸ್ ವಾದಿ, ಭಟ್ (ಅವರು ಇನ್ನೂ ನಮ್ಮೊಂದಿಗಿದ್ದಾರೆ) ಎಡಪಂಥೀಯ ಗಾಂಧಿವಾದಿ. ಇಬ್ಬರೂ ಪರಿಸರ ವಿಜ್ಞಾನ ಮತ್ತು ಸಮಾನತೆಯನ್ನು ಮಿಶ್ರಣ ಮಾಡುವುದನ್ನು ತಮ್ಮ ಜೀವನದ ಕೆಲಸವನ್ನಾಗಿ ಮಾಡಿಕೊಂಡರು. ಇಬ್ಬರೂ ನಿಜವಾದ ತಳಮಟ್ಟದ ಬುದ್ಧಿಜೀವಿಗಳಾಗಿದ್ದರು. ಅವರು ಕಾರ್ಮಿಕರು ಮತ್ತು ರೈತರ ನಡುವೆ ತಮ್ಮನ್ನು ತಾವು ತೊಡಗಿಸಿಕೊಂಡರು. ಅದೇ ಸಮಯದಲ್ಲಿ ತಮ್ಮ ದೇಶ ಮತ್ತು ಪ್ರಪಂಚಕ್ಕಾಗಿ ವಿಶಾಲ ದೃಷ್ಟಿಕೋನವನ್ನು ವ್ಯಕ್ತಪಡಿಸಿದರು. ಮೂಲತಃ ಛತ್ತೀಸ್‌ಗಡಿ ಭಾಷೆಯಲ್ಲಿ ರಚಿತವಾಗಿರುವ ಸಿಎಂಎಂ ಗೀತೆ ಇಂಗ್ಲಿಷ್ ಅನುವಾದದಲ್ಲಿ ಹೀಗಿದೆ: Where there is water to slake every parched throat, Where every field is irrigated and green, Where every hand gets work to do, Where the farmer gets a fair price for his produce, Where every village has a hospital, Where every child gets a good education, Where none is deprived of land and home, All trace of poverty, oppression, and capitalism removed, O when will such a Chhattisgarh be? Where the peasant and worker will rule! ಗುಹಾ ನಿಯೋಗಿ ಅವರನ್ನು ಮೂವತ್ತು ವರ್ಷಗಳ ಹಿಂದೆ ಹತ್ಯೆ ಮಾಡಲಾಯಿತು. ಆದರೂ ಕನಿಷ್ಠ ಐದು ಪ್ರಮುಖ ರೀತಿಯಲ್ಲಿ ಅವರ ಜೀವನ ಮತ್ತು ಕೆಲಸವು ಇಂದಿನ ಭಾರತಕ್ಕೆ ಪ್ರಬಲ ಸಂದೇಶವಾಗಿದೆ: ಮೊದಲನೆಯದಾಗಿ, ಇದು ಅಸಂಘಟಿತ ಕಾರ್ಮಿಕರ ಅನಿಶ್ಚಿತ ದುಸ್ಥಿತಿಯನ್ನು ಎತ್ತಿ ತೋರಿಸುತ್ತದೆ (ವಿಶೇಷವಾಗಿ ನಿರ್ಮಾಣ ವಲಯ ಮತ್ತು ಗಿಗ್ ಆರ್ಥಿಕತೆಯಲ್ಲಿ ಈಗ ತುಂಬಾ ಗೋಚರಿಸುತ್ತಿದೆ). ಎರಡನೆಯದಾಗಿ, ಇದು ಸ್ವತಂತ್ರ ನಾಗರಿಕ ಸಮಾಜ ಸಂಸ್ಥೆಗಳ ಪ್ರಜಾಪ್ರಭುತ್ವವನ್ನು ಉಳಿಸಿಕೊಳ್ಳುವಲ್ಲಿ ಪ್ರಮುಖ ಪಾತ್ರವನ್ನು ಒತ್ತಿಹೇಳುತ್ತದೆ. ಬಿಜೆಪಿ ತನ್ನದೇ ಆದ ಹಿಂದುತ್ವ ಸಿದ್ಧಾಂತಕ್ಕೆ ಅನುಗುಣವಾಗಿರದ ನಾಗರಿಕ ಸಮಾಜ ಗುಂಪುಗಳನ್ನು ಬೆದರಿಸಿ ಕಿರುಕುಳ ನೀಡುತ್ತಿರುವಾಗ, ಅಂತಹ ಸಂಸ್ಥೆಗಳ ಅಗತ್ಯವನ್ನು ಇಂದು ಭಾರತದಲ್ಲಿ ತೀವ್ರವಾಗಿ ಅನುಭವಿಸಲಾಗುತ್ತಿದೆ. ಮೂರನೆಯದಾಗಿ, ಅಭಿವೃದ್ಧಿ ಪ್ರಕ್ರಿಯೆಯಲ್ಲಿ ಪರಿಸರ ಸುಸ್ಥಿರತೆಯನ್ನು ಸಂಯೋಜಿಸುವ ಪ್ರಾಮುಖ್ಯತೆಯನ್ನು ಇದು ತೋರಿಸುತ್ತದೆ. ನಮ್ಮ ನಗರಗಳಲ್ಲಿನ ಆತಂಕಕಾರಿ ವಾಯು ಮಾಲಿನ್ಯ, ಜಲಚರಗಳ ಸವಕಳಿ ಮತ್ತು ನಮ್ಮ ನದಿಗಳ ಮಾಲಿನ್ಯ, ಅಧಿಕಾರದಲ್ಲಿರುವ ರಾಜಕಾರಣಿಗಳಿಗೆ ಹತ್ತಿರವಿರುವ ಮೂಲ ಸೌಕರ್ಯ ಮತ್ತು ಗಣಿಗಾರಿಕೆ ನಿಗಮಗಳಿಂದ ಹಿಮಾಲಯ, ಪಶ್ಚಿಮ ಘಟ್ಟಗಳು ಮತ್ತು ಅರಾವಳಿಗಳ ಮೇಲೆ ನಡೆದ ಘೋರ ದಾಳಿಗಳು - ಇವೆಲ್ಲವೂ ಶಂಕರ್ ಗುಹಾ ನಿಯೋಗಿ (ಮತ್ತು ಚಂಡಿ ಪ್ರಸಾದ್ ಭಟ್ ಅವರ) ಎಚ್ಚರಿಕೆಗಳನ್ನು ನಿರ್ಲಕ್ಷಿಸುವುದು ಪ್ರಸ್ತುತ ಮತ್ತು ಭವಿಷ್ಯದ ಪೀಳಿಗೆಗೆ ಎಷ್ಟು ದುಬಾರಿಯಾಗಿದೆ ಎಂಬುದನ್ನು ತೋರಿಸುತ್ತದೆ. ನಾಲ್ಕನೆಯದಾಗಿ, ಗುಹಾ ನಿಯೋಗಿಯವರ ಕೃತಿಯು ಛತ್ತೀಸ್‌ಗಡ, ಜಾರ್ಖಂಡ್ ಮತ್ತು ಉತ್ತರಾಖಂಡದಂತಹ ಸಣ್ಣ, ಸಂಪ ನ್ಮೂಲ ಸಮೃದ್ಧ ರಾಜ್ಯಗಳಿಗೆ ಹೆಚ್ಚು ಅರ್ಥಪೂರ್ಣ, ಅಂದರೆ ಕಡಿಮೆ ಶೋಷಣೆ ಮತ್ತು ಕಡಿಮೆ ವಿನಾಶಕಾರಿ, ಅಭಿವೃದ್ಧಿ ಮಾದರಿಗೆ ದಾರಿಯನ್ನು ತೋರಿಸುತ್ತದೆ. ಐದನೆಯದಾಗಿ, ಇತ್ತೀಚಿನ ತಂತ್ರಜ್ಞಾನಗಳ ದೀರ್ಘಕಾಲೀನ ಪರಿಣಾಮಗಳ ಬಗ್ಗೆ ಅತಿಯಾದ ರೋಮಾಂಚಕ ದೃಷ್ಟಿಕೋನ ವನ್ನು ಹೊಂದಿರಬಾರದು ಎಂದು ಅದು ನಮಗೆ ಎಚ್ಚರಿಕೆ ನೀಡುತ್ತದೆ. ಆಟೊಮೇಷನ್ ಮತ್ತು ಎಐ ಲಕ್ಷಾಂತರ ಭಾರ ತೀಯರನ್ನು ನಿರುದ್ಯೋಗಿಗಳನ್ನಾಗಿ ಮಾಡಬಹುದು. ನಂತರ ಪುರುಷರು ತಮ್ಮ ಫೋನ್‌ಗಳಲ್ಲಿ ಅಶ್ಲೀಲ ಅಥವಾ ದ್ವೇಷದ ವೀಡಿಯೊಗಳನ್ನು ನೋಡುವತ್ತ ತಿರುಗುತ್ತಾರೆ. ಹೊಸ ತಂತ್ರ ಜ್ಞಾನಗಳು ಒಂದೆಡೆ ಖಾಸಗಿ ಸಂಸ್ಥೆಗಳಿಗೆ ಉತ್ಪಾದಕತೆ ಮತ್ತು ಲಾಭವನ್ನು ಹೆಚ್ಚಿಸುತ್ತಿದ್ದರೂ, ಮತ್ತೊಂದೆಡೆ ಸಮಾಜ ಮತ್ತು ಪ್ರಕೃತಿಯ ಮೇಲೆ ಅಪಾಯಕಾರಿಯಾಗಿ ವಿಭಜಕ ಮತ್ತು ಹಾನಿಕಾರಕ ಪರಿಣಾಮಗಳನ್ನು ಬೀರಬಹುದು ಎಂಬುದನ್ನು ಸಿಲಿಕಾನ್ ವ್ಯಾಲಿ ಅಥವಾ ಬೆಂಗಳೂರಿನ ಬೂಸ್ಟರ್‌ಗಳಿಗಿಂತ ಗುಹಾ ನಿಯೋಗಿ ಚೆನ್ನಾಗಿ ಅರ್ಥಮಾಡಿಕೊಂಡಿದ್ದರು. ಗಣರಾಜ್ಯೋತ್ಸವ ದಿನಕ್ಕೆ ಮುಂಚೆ ಈ ಅಂಕಣವನ್ನು ಪ್ರಕಟಿಸಲಾಗು ತ್ತಿದೆ. ಸಮಯ ಆಕಸ್ಮಿಕವಲ್ಲ. ನಮ್ಮ ಗಣರಾಜ್ಯದ ಇತಿಹಾಸದಲ್ಲಿ ಕೆಲವೇ ಭಾರತೀಯರು ಶಂಕರ್ ಗುಹಾ ನಿಯೋಗಿಯಂತೆ ಸ್ವಾತಂತ್ರ್ಯ, ಸಮಾನತೆ ಮತ್ತು (ವಿಶೇಷವಾಗಿ) ಭ್ರಾತೃತ್ವದ ಮೌಲ್ಯಗಳನ್ನು ಸಾಕಾರಗೊಳಿಸಿದ್ದಾರೆ.

ವಾರ್ತಾ ಭಾರತಿ 25 Jan 2026 10:42 am

Karnataka Weather: ಶೀತಗಾಳಿ ನಡುವೆ ಕರ್ನಾಟಕದ ದಕ್ಷಿಣ ಒಳನಾಡಿನ ಕೆಲವೆಡೆ ಸಾಧಾರಣ ಮಳೆ ಸಾಧ್ಯತೆ

Karnataka Weather: ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಒಣಹವೆ ಜೊತೆಗೆ ಚಳಿ ವಾತಾವರಣ ಮುಂದುವರೆದಿದೆ. ಮುಂದಿನ ನಾಲ್ಕು ದಿನಗಳವರೆಗೆ ಹಲವೆಡೆ ಇದೇ ರೀತಿಯ ವಾತಾವರಣ ಇರಲಿದ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಈ ನಡುವೆ ಇಂದು (ಜನವರಿ 25) ಬೆಂಗಳೂರು ಸೇರಿದಂತೆ ಕೆಲವೆಡೆ ಅಲ್ಲಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಅಂತಲೂ ತಿಳಿಸಿದೆ. ಸಂಪೂರ್ಣ ಮಾಹಿತಿಯನ್ನು ಇಲ್ಲಿ

ಒನ್ ಇ೦ಡಿಯ 25 Jan 2026 10:23 am

Snow Storm: ಅಮೆರಿಕದಲ್ಲಿ ಭೀಕರ ಹಿಮ ಬಿರುಗಾಳಿ, 8,000 ವಿಮಾನಗಳ ಹಾರಾಟ ದಿಢೀರ್ ರದ್ದು

ಅಮೆರಿಕ ಇದೀಗ ಪ್ರಕೃತಿಯ ಮುನಿಸಿಗೆ ಸಿಲುಕಿ ಒದ್ದಾಡುವ ಪರಿಸ್ಥಿತಿ ನಿರ್ಮಾಣ ಆಗಿದೆ, ಇದೀಗ ಅಮೆರಿಕದ ಹಲವು ರಾಜ್ಯಗಳಲ್ಲಿ ದಿಢೀರ್ ಭೀಕರ ಹಿಮ ಬಿರುಗಾಳಿ ಅಪ್ಪಳಿಸಿದೆ. ಅದರಲ್ಲೂ, ಪ್ರಮುಖ ರಾಜ್ಯಗಳ ಪರಿಸ್ಥಿತಿ ಹಿಮ ಬಿರುಗಾಳಿಯ ಪರಿಣಾಮ ಅತ್ಯಂತ ಸೂಕ್ಷ್ಮವಾಗಿದೆ. ಹೀಗಾಗಿ ಜನರು ಮನೆಗಳಿಂದ ಹೊರಗೆ ಬರಲು ಸಾವಿರ ಬಾರಿ ಯೋಚನೆ ಮಾಡುವ ಸ್ಥಿತಿಯು ನಿರ್ಮಾಣ ಆಗಿದೆ. ಇಂತಹ ಪರಿಸ್ಥಿತಿಯಲ್ಲಿ

ಒನ್ ಇ೦ಡಿಯ 25 Jan 2026 10:20 am

ಲ್ಯಾಂಡ್ ಲಾರ್ಡ್ ಕನ್ನಡ: ಕನ್ನಡದಲ್ಲಿ ಮರಾಠಿ, ತಮಿಳು ಮಾದರಿ ಜಾತಿ ವಿಷಯದ ಸಿನಿಮಾಗಳು ಯಾಕೆ ಬರಲ್ಲ: ವಿ.ಎಲ್ ನರಸಿಂಹಮೂರ್ತಿ ಬರಹ

ಕನ್ನಡದಲ್ಲಿ ಈಚೆಗೆ ತೆರೆಕಂಡಿರುವ ಲ್ಯಾಂಡ್ ಲಾರ್ಡ್ ಸಿನಿಮಾದ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಹೆಚ್ಚು ಚರ್ಚೆ ಆಗುತ್ತಿದೆ. ಹಲವರು ಈ ರೀತಿಯ ಸಿನಿಮಾ ಕನ್ನಡದಲ್ಲಿ ಇನ್ನೂ ಹೆಚ್ಚಾಗಬೇಕು ಹಾಗೂ ಈ ರೀತಿಯ ಸಿನಿಮಾಗಳಿಗೆ ಪ್ರೋತ್ಸಾಹ ಸಿಗಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ. ಜಾತಿ ಎನ್ನುವ ಕಟು ವಾಸ್ತವದ ವಸ್ತುವನ್ನಿಟ್ಟುಕೊಂಡು ಯಾಕೆ ಕನ್ನಡದಲ್ಲಿ ಮರಾಠಿ, ತಮಿಳು ಸಿನಿಮಾಗಳ ತರಹ ಸಿನಿಮಾಗಳು ಬರುವುದಿಲ್ಲ ಎನ್ನುವ

ಒನ್ ಇ೦ಡಿಯ 25 Jan 2026 10:19 am

ಗಣರಾಜ್ಯೋತ್ಸವದಲ್ಲಿ ಮೊದಲ ಬಾರಿಗೆ ‘ಬ್ಯಾಟಲ್ ಅರೇ’

ಈ ವರ್ಷದ ಗಣರಾಜ್ಯೋತ್ಸವದ ಅತ್ಯಂತ ರೋಮಾಂಚಕ ಅಂಶವೆಂದರೆ, ಹಿಂದೆಂದೂ ನಡೆದಿರದ ಒಂದು ಕಾರ್ಯಕ್ರಮ. ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ, ಭಾರತೀಯ ಸೇನೆ ಪರೇಡ್ ಸಂದರ್ಭದಲ್ಲಿ ಒಂದು ‘ಬ್ಯಾಟಲ್ ಅರೇ ಸಂರಚನೆ’ಯನ್ನು ಪ್ರದರ್ಶಿಸಲಿದೆ. ಇದು ಕೇವಲ ಒಂದು ಬದಲಾವಣೆ ಮಾತ್ರವಲ್ಲ. ನಾವು ನಮ್ಮ ಮಿಲಿಟರಿ ಬಲವನ್ನು ಹೇಗೆ ಪ್ರದರ್ಶಿಸುತ್ತೇವೆ ಎನ್ನುವುದರಲ್ಲಿನ ಬಹುದೊಡ್ಡ ಪರಿವರ್ತನೆಯೂ ಹೌದು. ಪ್ರತಿವರ್ಷವೂ ಜನವರಿ 26ರಂದು ಭಾರತ ಅತ್ಯಂತ ಹೆಮ್ಮೆ ಮತ್ತು ಸಂಭ್ರಮಗಳಿಂದ ತನ್ನ ಗಣರಾಜ್ಯ ದಿನವನ್ನು ಆಚರಿಸುತ್ತದೆ. ಇದು ಭಾರತೀಯ ಸಂವಿಧಾನ ನಮ್ಮ ನೆಲದ ಅಧಿಕೃತ ಕಾನೂನಾಗಿ ಜಾರಿಗೆ ಬಂದ ಐತಿಹಾಸಿಕ ದಿನ. 2026ರಲ್ಲಿ ನಾವು ಗಣರಾಜ್ಯೋತ್ಸವವನ್ನು 77ನೇ ಬಾರಿಗೆ ಆಚರಿಸಲಿದ್ದೇವೆ. ಹೊಸದಿಲ್ಲಿಯ ಕರ್ತವ್ಯ ಪಥದಲ್ಲಿ ನಡೆಯಲಿರುವ ಅದ್ದೂರಿ ಗಣರಾಜ್ಯೋತ್ಸವ ಪರೇಡ್ ಅನ್ನು ಎಲ್ಲರೂ ಕುತೂಹಲದಿಂದ ಎದುರು ನೋಡುತ್ತಿರುತ್ತಾರೆ. ದೇಶದ ವಿವಿಧ ಮೂಲೆಗಳಿಂದ ಆಗಮಿಸುವ ಜನರು ಯೋಧರ ಪಥಸಂಚಲವನ್ನು, ಯುದ್ಧ ಟ್ಯಾಂಕುಗಳ ಸಾಗುವಿಕೆಯನ್ನು ಮತ್ತು ಭಾರತದ ವೈವಿಧ್ಯವನ್ನು ಪ್ರದರ್ಶಿಸುವ ವರ್ಣರಂಜಿತ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ವೀಕ್ಷಿಸುತ್ತಾರೆ. ಈ ವರ್ಷದ ಗಣರಾಜ್ಯೋತ್ಸವಕ್ಕೆ ‘ವಂದೇ ಮಾತರಂ ಗೀತೆಯ 150 ವರ್ಷಗಳು’ ಎಂಬ ಥೀಮ್ ಅನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಈ ಹಾಡನ್ನು ಗೌರವಿಸಲು ವಂದೇ ಮಾತರಂನ ಸಾಲುಗಳನ್ನು ಹೊಂದಿರುವ ಸುಂದರ ಚಿತ್ರಗಳನ್ನು ಪರೇಡ್ ಸಾಗುವ ಪಥದಲ್ಲಿ ಪ್ರದರ್ಶಿಸಲಾಗುತ್ತದೆ. ಗಣರಾಜ್ಯೋತ್ಸವವನ್ನು ಸಂಭ್ರಮಿಸುವ ಸಲುವಾಗಿ ಜನವರಿ 19ರಿಂದ 26ರ ತನಕ ದೇಶಾದ್ಯಂತ ವಿವಿಧ ಸಾಂಸ್ಕೃತಿಕ ಮತ್ತು ಸಂಗೀತ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಈ ಬಾರಿಯ ಗಣರಾಜ್ಯೋತ್ಸವದ ಮುಖ್ಯ ಅತಿಥಿಗಳಾಗಿ ಯುರೋಪಿನ ಪ್ರಮುಖ ನಾಯಕರನ್ನು ಆರಿಸಲಾಗಿದೆ. ಯುರೋಪಿಯನ್ ಕೌನ್ಸಿಲ್ ಅಧ್ಯಕ್ಷ ಅಂಟೊನಿಯೊ ಕೊಸ್ಟಾ ಮತ್ತು ಯುರೋಪಿಯನ್ ಕಮಿಷನ್ ಅಧ್ಯಕ್ಷ ಉರ್ಸುಲಾ ವಾನ್ ಡೆರ್ ಲೆಯೆನ್ ಅವರು ಮುಖ್ಯ ಅತಿಥಿಗಳಾಗಿ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ. ಅವರ ಉಪಸ್ಥಿತಿ ಭಾರತ ಹೇಗೆ ಜಗತ್ತಿನಾದ್ಯಂತ ವಿವಿಧ ದೇಶಗಳೊಡನೆ ಬಲವಾದ ಸ್ನೇಹ ಸಂಬಂಧ ನಿರ್ವಹಿಸುತ್ತದೆ ಎನ್ನುವುದನ್ನು ತೋರಿಸಲಿದೆ. ಈ ವರ್ಷದ ಗಣರಾಜ್ಯೋತ್ಸವದ ಅತ್ಯಂತ ರೋಮಾಂಚಕ ಅಂಶವೆಂದರೆ, ಹಿಂದೆಂದೂ ನಡೆದಿರದ ಒಂದು ಕಾರ್ಯಕ್ರಮ. ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ, ಭಾರತೀಯ ಸೇನೆ ಪರೇಡ್ ಸಂದರ್ಭದಲ್ಲಿ ಒಂದು ‘ಬ್ಯಾಟಲ್ ಅರೇ ಸಂರಚನೆ’ಯನ್ನು ಪ್ರದರ್ಶಿಸಲಿದೆ. ಇದು ಕೇವಲ ಒಂದು ಬದಲಾವಣೆ ಮಾತ್ರವಲ್ಲ. ನಾವು ನಮ್ಮ ಮಿಲಿಟರಿ ಬಲವನ್ನು ಹೇಗೆ ಪ್ರದರ್ಶಿಸುತ್ತೇವೆ ಎನ್ನುವುದರಲ್ಲಿನ ಬಹುದೊಡ್ಡ ಪರಿವರ್ತನೆಯೂ ಹೌದು. ಬ್ಯಾಟಲ್ ಅರೇ ಎಂದರೇನು? ಹಿಂದಿನ ಎಲ್ಲ ಗಣರಾಜ್ಯೋತ್ಸವ ಪಥಸಂಚಲನಗಳಲ್ಲಿ, ಮಿಲಿಟರಿ ಉಪಕರಣಗಳು ಒಂದರ ನಂತರ ಒಂದರಂತೆ, ಸಾಲಾಗಿ ಸಾಗಿ ಹೋಗುತ್ತಿದ್ದವು. ಜನರಿಗೆ ಟ್ಯಾಂಕ್‌ಗಳು, ಗನ್‌ಗಳು, ಯೋಧರು, ಎಲ್ಲವೂ ಕಾಣುತ್ತಿದ್ದರೂ ಎಲ್ಲವೂ ಪ್ರತ್ಯೇಕವಾಗಿ ಸಾಗುತ್ತಿದ್ದವು. ಆದರೆ, ಈ ವರ್ಷ ಈ ವ್ಯವಸ್ಥೆ ಸಂಪೂರ್ಣವಾಗಿ ಬದಲಾಗುತ್ತಿದೆ. ಬ್ಯಾಟಲ್ ಅರೇ ಸಂರಚನೆ ನೈಜ ಯುದ್ಧದ ಪರಿಸ್ಥಿತಿಯಲ್ಲಿ ನಮ್ಮ ಸೇನೆ ವಾಸ್ತವವಾಗಿ ಹೇಗೆ ಸಿದ್ಧವಾಗುತ್ತದೆ, ಹೇಗೆ ಚಲಿಸುತ್ತದೆ ಎನ್ನುವುದನ್ನು ಪ್ರದರ್ಶಿಸಲಿದೆ. ಇವರೆಡರ ನಡುವಿನ ವ್ಯತ್ಯಾಸವನ್ನು ಒಂದು ರೀತಿ ಯುದ್ಧದ ಕುರಿತ ಒಂದು ಚಲನಚಿತ್ರವನ್ನು ನೋಡುವುದು ಮತ್ತು ಅದನ್ನು ಪುಸ್ತಕ ರೂಪದಲ್ಲಿ ಓದುವುದಕ್ಕೆ ಹೋಲಿಸಬಹುದು. ಈ ಸಂರಚನೆ ನೈಜ ಯುದ್ಧದ ಕಾರ್ಯತಂತ್ರವನ್ನು ಪರೇಡ್ ಮೈದಾನದಲ್ಲಿ ಎಲ್ಲರಿಗೂ ಪ್ರದರ್ಶಿಸುತ್ತದೆ. ಈ ಪ್ರಕ್ರಿಯೆ ಮೊದಲು ಸ್ಕೌಟ್ ಪಡೆಯಿಂದ ಆರಂಭವಾಗುತ್ತದೆ. ಇವರು ಒಂದು ಪ್ರದೇಶಕ್ಕೆ ಮೊದಲು ತೆರಳಿ, ಅಲ್ಲಿ ಏನಾದರೂ ಅಪಾಯವಿದೆಯೇ ಎಂದು ಪರಿಶೀಲಿಸುತ್ತಾರೆ. ಆ ಬಳಿಕ ಪೂರೈಕೆಗಳು, ಆಯುಧಗಳು ಮತ್ತು ಉಪಕರಣಗಳನ್ನು ಹೊಂದಿರುವ ಬೆಂಬಲ ತಂಡಗಳು ಬರುತ್ತವೆ. ಬಳಿಕ ಅಂತಿಮವಾಗಿ ನಮಗೆ ಮುಖ್ಯ ಹೋರಾಟದ ಗುಂಪು, ಅಂದರೆ ಸಂಪೂರ್ಣ ಯುದ್ಧ ಸಿದ್ಧರಾಗಿ ಆಯುಧಗಳನ್ನು ಹಿಡಿದು, ದಾಳಿ ನಡೆಸಲು ಅಥವಾ ನಮ್ಮ ನೆಲವನ್ನು ರಕ್ಷಿಸಲು ಸಜ್ಜಾಗಿರುವ ಯೋಧರು ಬರುತ್ತಾರೆ. ಇದೆಲ್ಲವೂ ಅತ್ಯಂತ ನಿಖರ ವಿಧಾನದಲ್ಲಿ ನಡೆಯುತ್ತದೆ. ಹೇಗೆ ನೈಜ ಕದನದಲ್ಲಿ ನಮ್ಮ ಸೇನೆ ಕಾರ್ಯಾಚರಣೆಗಳನ್ನು ಯೋಜಿಸಿ ಕಾರ್ಯರೂಪಕ್ಕೆ ತರುತ್ತದೋ, ಅದೇ ರೀತಿಯ ನಿಖರತೆಯನ್ನು ಇಲ್ಲೂ ಅನುಸರಿಸಲಾಗುತ್ತದೆ. ಶಕ್ತಿಶಾಲಿ ಟಿ-90 ಟ್ಯಾಂಕುಗಳು ಮತ್ತು ದೇಶೀಯ ನಿರ್ಮಾಣದ ಅರ್ಜುನ್ ಟ್ಯಾಂಕ್‌ಗಳು ಜೊತೆಯಾಗಿ ಚಲಿಸಲಿವೆ. ಇವುಗಳೊಡನೆ ಬಿಎಂಪಿ ಪದಾತಿದಳದ ಸಶಸ್ತ್ರ ವಾಹನಗಳು, ಎಟಿಎಜಿಎಸ್ (ಅಡ್ವಾನ್ಸ್ಡ್ ಟೋವ್ಡ್ ಆರ್ಟಿಲರಿ ಗನ್ ಸಿಸ್ಟಮ್) ರೀತಿಯ ಬೃಹತ್ ಫಿರಂಗಿಗಳು ಮತ್ತು ಧನುಷ್ ಹೊವಿಟ್ಜರ್‌ಗಳು, ಬ್ರಹ್ಮೋಸ್ ಮತ್ತು ಆಕಾಶ್ ಸೇರಿದಂತೆ ಮಾರಕ ಫಿರಂಗಿಗಳು ಮತ್ತು ಮೇಲ್ಭಾಗದಲ್ಲಿ ಹಾರುತ್ತಾ ಸಾಗುವ ಡ್ರೋನ್‌ಗಳೂ ಇರಲಿವೆ. ಇವುಗಳೊಡನೆ ರೊಬೊಟಿಕ್ ವಾಹನಗಳು ತಮ್ಮ ಪಾಡಿಗೆ ಚಲಿಸಲಿವೆ. ಎಲ್ಲವೂ ಒಂದ ಸಂರಚನೆಯಲ್ಲಿ ಸಾಗಲಿದ್ದು, ಆಧುನಿಕ ಯುದ್ಧದ ನೈಜ ಚಿತ್ರಣ ಒದಗಿಸಲಿವೆ. ಇದರಿಂದ ಪರೇಡ್ ಕೇವಲ ನೋಡಲು ಸುಂದರವಾಗಿ ಕಾಣುವುದು ಮಾತ್ರವಲ್ಲದೆ, ಅರ್ಥವತ್ತಾಗಿಯೂ, ಶೈಕ್ಷಣಿಕವಾಗಿಯೂ ಇರಲಿದೆ. ಭಾರತೀಯ ಸೇನಾ ಪಡೆಗಳು ಅತ್ಯಾಧುನಿಕ ಮತ್ತು ಅತ್ಯಂತ ಶಕ್ತಿಶಾಲಿ ಸಶಸ್ತ್ರ ಪಡೆಗಳಾಗಿ ಸಾಗಿ ಬಂದ ಹಾದಿಯನ್ನೂ ಇದು ಪ್ರದರ್ಶಿಸಲಿದೆ. ಈ ವರ್ಷ ಏಕೆ ಇಷ್ಟೊಂದು ವಿಶೇಷ? 2025ರಲ್ಲಿ ನಡೆದ ಆಪರೇಶನ್ ಸಿಂಧೂರ ಕಾರ್ಯಾಚರಣೆಯಲ್ಲಿ ಭಾರತೀಯ ಪಡೆಗಳು ಒಂದು ಮಹತ್ವದ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆ ಕೈಗೊಂಡವು. ಅದರ ಬೆನ್ನಲ್ಲೇ ಈ ಪ್ರಮುಖ ಬದಲಾವಣೆಗಳೂ ಜಾರಿಗೆ ಬಂದಿವೆ. ಈ ಬಾರಿಯ ಪರೇಡ್ ಆಪರೇಶನ್ ಸಿಂಧೂರದ ನೈಜ ಕಥೆ ಮತ್ತು ಶೌರ್ಯದ ಕ್ರಮಗಳನ್ನು ಪ್ರದರ್ಶಿಸಲಿದೆ. ಈ ಬಾರಿಯ ಗಣರಾಜ್ಯೋತ್ಸವದಲ್ಲಿ ನೂತನವಾಗಿ ಸ್ಥಾಪಿಸಿರುವ ಭೈರವ್ ಲೈಟ್ ಕಮಾಂಡೋ ಬಟಾಲಿಯನ್‌ನಂತಹ ವಿಶೇಷ ಪಡೆಗಳೂ ಮೊದಲ ಬಾರಿಗೆ ಹೆಜ್ಜೆ ಹಾಕಲಿವೆ. ಭೈರವ್ ಬಟಾಲಿಯನ್‌ಗಳು ಕ್ಷಿಪ್ರ ಕಾರ್ಯಾಚರಣಾ ಪಡೆಗಳಾಗಿದ್ದು, ಅತ್ಯಂತ ಕಠಿಣ ಪರಿಸ್ಥಿತಿಗಳಲ್ಲಿ, ಅತ್ಯಂತ ಕಷ್ಟಕರ ಕಾರ್ಯಾಚರಣೆಗಳನ್ನು ಕೈಗೊಳ್ಳಲು ತರಬೇತಿ ಹೊಂದಿವೆ. ಭಾರತೀಯ ವಾಯು ಸೇನೆ ಆಪರೇಶನ್ ಸಿಂಧೂರದ ಸಂದರ್ಭದಲ್ಲಿ ನಡೆಸಿದ ರಚನೆಯೂ ಸೇರಿದಂತೆ, ವಿವಿಧ ವಿಶೇಷ ವೈಮಾನಿಕ ರಚನೆಗಳನ್ನು ಆಗಸದಲ್ಲಿ ಪ್ರದರ್ಶಿಸಲಿದೆ. ಇದಕ್ಕಾಗಿ ರಫೇಲ್ ಯುದ್ಧ ವಿಮಾನಗಳು, ಸು-30 ಯುದ್ಧ ವಿಮಾನಗಳು ಮತ್ತು ಅಪಾಚೆ ದಾಳಿ ಹೆಲಿಕಾಪ್ಟರ್‌ಗಳು ಬಳಕೆಯಾಗಲಿವೆ. ನಮ್ಮ ವೀರ ಮಾಜಿ ಯೋಧರನ್ನು ಗೌರವಿಸುವ ಸಲುವಾಗಿ ಅವರಿಗೆ ವಿಶೇಷ ಆಸನ ವ್ಯವಸ್ಥೆಗಳನ್ನೂ ಕಲ್ಪಿಸಲಾಗುತ್ತದೆ. ಅಂದಾಜು 2,500 ಪ್ರತಿಭಾವಂತ ಕಲಾವಿದರು ನೃತ್ಯ ಮತ್ತು ಸಂಗೀತ ಪ್ರದರ್ಶನ ನೀಡಲಿದ್ದು, ಭಾರತದ ಅಮೋಘ ಸಾಂಸ್ಕೃತಿಕ ವೈವಿಧ್ಯವನ್ನು ಪ್ರಸ್ತುತಪಡಿಸಲಿದ್ದಾರೆ. ವಿವಿಧ ರಾಜ್ಯಗಳು ಮತ್ತು ಸಂಸ್ಥೆಗಳ 30ರಷ್ಟು ಸ್ತಬ್ಧಚಿತ್ರಗಳೂ ಸಮಾರಂಭಕ್ಕೆ ಮೆರುಗು ನೀಡಲಿವೆ. ಇವೆಲ್ಲವೂ ಆಯಾ ರಾಜ್ಯಗಳ ಪರಂಪರೆ ಮತ್ತು ನವೀನ ಆಲೋಚನೆಗಳನ್ನು ಪ್ರದರ್ಶಿಸಲಿವೆ. ಈ ವರ್ಷದ ಅತಿಥಿಗಳ ಪಟ್ಟಿಯೂ ಅತ್ಯಂತ ವಿಶಿಷ್ಟವಾಗಿದೆ. ಈ ಬಾರಿ ಅಂದಾಜು 10,000 ವಿಶೇಷ ಅತಿಥಿಗಳು ಆಗಮಿಸಲಿದ್ದು, ಅವರು ಕೇವಲ ರಾಜಕಾರಣಿಗಳು, ಅಧಿಕಾರಿಗಳಲ್ಲ! ಅವರಲ್ಲಿ ನೈಸರ್ಗಿಕ ಕೃಷಿಯನ್ನು ಅನುಸರಿಸುವ ರೈತರು, ಪದಕಗಳನ್ನು ಗೆದ್ದಿರುವ ಪ್ಯಾರಾ ಕ್ರೀಡಾಳುಗಳು, ಸರಕಾರಿ ಯೋಜನೆಗಳ ಪ್ರಯೋಜನ ಪಡೆದಿರುವ ತೃತೀಯ ಲಿಂಗಿಗಳು ಮತ್ತು ದೇಶಕ್ಕೆ ಹೆಮ್ಮೆ ತಂದಿರುವ ಸಾಕಷ್ಟು ಸಾಮಾನ್ಯ ನಾಗರಿಕರೂ ಸೇರಿದ್ದಾರೆ. ದಿಲ್ಲಿಯಲ್ಲಿರುವ, ದೇಶದ ವಿವಿಧ ರಾಜ್ಯಗಳಿಂದ ಬಂದಿರುವ 50 ಜೋಡಿಗಳನ್ನೂ ಸಮಾರಂಭಕ್ಕೆ ಆಹ್ವಾನಿಸಲಾಗಿದ್ದು, ಅವರು ತಮ್ಮ ಸಾಂಪ್ರದಾಯಿಕ ಉಡುಗೆಗಳಲ್ಲಿ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ. ಬೆಳಗ್ಗೆ 10 ಗಂಟೆಗೆ ಆರಂಭಗೊಳ್ಳುವ ಪಥಸಂಚಲನ 90 ನಿಮಿಷಗಳ ಅವಧಿಯದ್ದಾಗಿರಲಿದೆ. ಇದಕ್ಕೆ ಇ ಟಿಕೆಟ್‌ಗಳನ್ನು ಆನ್‌ಲೈನ್‌ನಲ್ಲೂ ಪಡೆಯಬಹುದಾಗಿದ್ದು, ಸಂಚಾರವನ್ನು ಸುಗಮಗೊಳಿಸಲು ಮೆಟ್ರೊ ರೈಲು ಸೇವೆಯನ್ನು ಉಚಿತ ಮಾಡಲಾಗಿದೆ. ಬ್ಯಾಟಲ್ ಅರೇ ಸಂರಚನೆ ಕೇವಲ ಮಿಲಿಟರಿ ಪ್ರದರ್ಶನ ಮಾತ್ರವಲ್ಲ. ಇದು ಎಲ್ಲರಿಗೂ ನಮ್ಮ ಸೇನೆ ಹೇಗೆ ಕಾರ್ಯಾಚರಿಸುತ್ತದೆ ಎನ್ನುವ ಅರಿವು, ಜ್ಞಾನ ಮೂಡಿಸಲಿದೆ. ಪ್ರತಿಯೊಬ್ಬ ಭಾರತೀಯನ ಹೃದಯವನ್ನೂ ದೇಶದ ರಕ್ಷಣಾ ಸಾಮರ್ಥ್ಯದ ಕುರಿತ ಹೆಮ್ಮೆಯಿಂದ ಇದು ತುಂಬಿಸಲಿದೆ. ಈ ವರ್ಷ ಭಾರತದ 77ನೇ ಗಣರಾಜ್ಯೋತ್ಸವ ಎಂದಿಗಿಂತಲೂ ಹೆಚ್ಚು ಸಕ್ರಿಯ ಮತ್ತು ಅರ್ಥಪೂರ್ಣವಾಗಿ ಆಚರಿಸಲ್ಪಡಲಿದೆ. ನಾವೆಲ್ಲರೂ ನಮ್ಮ ಮಹಾನ್ ದೇಶಕ್ಕೊಂದು ಗೌರವ ವಂದನೆ ಸಲ್ಲಿಸಿ, ನಮ್ಮ ಸ್ವಾತಂತ್ರ್ಯ ಮತ್ತು ಶಕ್ತಿಯನ್ನು ಸಂಭ್ರಮಿಸುವ ಈ ಹೊಸ ವಿಧಾನವನ್ನು ಸಂಭ್ರಮಿಸೋಣ.

ವಾರ್ತಾ ಭಾರತಿ 25 Jan 2026 10:18 am

ಬೆಂಗಳೂರು ಗ್ರಾಮಾಂತರ: ವ್ಹೀಲಿಂಗ್‌ ತಡೆಯಲು ಹೆದ್ದಾರಿಗಳಲ್ಲಿ ಕ್ಯಾಮೆರಾ ಕಣ್ಗಾವಲು

ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಯುವಕರ ವ್ಹೀಲಿಂಗ್‌ ಚಟುವಟಿಕೆ ಹೆಚ್ಚಾಗಿದೆ. ಇದರಿಂದಾಗಿ ಇತರ ವಾಹನ ಸವಾರರಿಗೆ ತೊಂದರೆ ಉಂಟಾಗುತ್ತಿದೆ. ಇದನ್ನು ನಿಯಂತ್ರಿಸಲು ಪೊಲೀಸ್‌ ಇಲಾಖೆ ಕಠಿಣ ಕ್ರಮಗಳನ್ನು ಕೈಗೊಂಡಿದೆ. ಹೆದ್ದಾರಿಗಳಲ್ಲಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ವ್ಹೀಲಿಂಗ್‌ ಮಾಡುವವರ ವಿರುದ್ಧ ಸ್ವಯಂಪ್ರೇರಿತ ಪ್ರಕರಣಗಳನ್ನು ದಾಖಲಿಸಿ ಕ್ರಮ ಕೈಗೊಳ್ಳಲಾಗುತ್ತಿದೆ. ದೊಡ್ಡಬಳ್ಳಾಪುರ, ಹೊಸಕೋಟೆ, ಯಲಹಂಕ, ಚೆನ್ನೈ ಎಕ್ಸ್‌ಪ್ರೆಸ್‌ ಹೈವೇಗಳಲ್ಲಿ ಈ ಸಮಸ್ಯೆ ಕಂಡುಬಂದಿದೆ. ಎಚ್ಚರಿಕೆ ವಹಿಸಲಾಗಿದೆ.

ವಿಜಯ ಕರ್ನಾಟಕ 25 Jan 2026 10:11 am

‘ಲ್ಯಾಂಡ್ ಲಾರ್ಡ್’ ಡೈಲಾಗ್ಸ್ ಗೆ ಪ್ರೇಕ್ಷಕರು ಫಿದಾ - ಕೆಲಸ ಕೊಂಡಾಡಿದವರಿಗೆ ಧನ್ಯವಾದ ಹೇಳಿದ ಸಂಭಾಷಣೆಕಾರ ಮಾಸ್ತಿ ಉಪ್ಪಾರಹಳ್ಳಿ

ದುನಿಯಾ ವಿಜಯ್ ಅಭಿನಯದ ಲ್ಯಾಂಡ್ ಲಾರ್ಡ್ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಚಿತ್ರದ ಕಥೆ, ನಿರೂಪಣೆ, ನಟನೆ ಮತ್ತು ನಿರ್ದೇಶನ ಎಲ್ಲವೂ ಮೆಚ್ಚುಗೆಗೆ ಪಾತ್ರವಾಗಿವೆ. ಸಂಭಾಷಣೆ ಬರೆದ ಮಾಸ್ತಿ ಉಪ್ಪಾರಹಳ್ಳಿ ತಮ್ಮ ಫೇಸ್ಬುಕ್ ಖಾತೆಯಲ್ಲಿ ಚಿತ್ರದ ಬಗ್ಗೆ ಹಂಚಿಕೊಂಡಿದ್ದಾರೆ. ಕನ್ನಡಿಗರ ಸ್ವಾಭಿಮಾನ, ಆತ್ಮಗೌರವ ಮತ್ತು ಅಸ್ತಿತ್ವದ ಚಿತ್ರ ಎಂದು ಪ್ರೇಕ್ಷಕರು ಹೇಳುತ್ತಿದ್ದಾರೆ.

ವಿಜಯ ಕರ್ನಾಟಕ 25 Jan 2026 9:49 am

ಚಿಮುಲ್ ಚುನಾವಣೆ ಅಂತಿಮ‌ ಅಖಾಡದಲ್ಲಿ 28 ಮಂದಿ

ಚಿಮುಲ್‌ ಚುನಾವಣೆಗೆ ನಾಮಪತ್ರ ವಾಪಸ್‌ ಪಡೆಯಲು ಶನಿವಾರ ಕೊನೆಯ ದಿನವಾಗಿದ್ದು, 14 ಮಂದಿ ಹಿಂದೆ ಸರಿದಿದ್ದು, 28 ಮಂದಿ ಅಂತಿಮ ಕಣದಲ್ಲಿದ್ದಾರೆ. ಫೆ.1ರಂದು 13 ನಿರ್ದೇಶಕ ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, 11 ಕ್ಷೇತ್ರಗಳಲ್ಲಿ ದ್ವಂದ್ವ ಸ್ಪರ್ಧೆ ಏರ್ಪಟ್ಟಿದೆ. ಮಂಚೇನಹಳ್ಳಿ ಹಾಗೂ ಚಿಕ್ಕಬಳ್ಳಾಪುರ ಮಹಿಳಾ ಕ್ಷೇತ್ರಗಳಲ್ಲಿ ಮಾತ್ರ ತ್ರಿಕೋನ ಸ್ಪರ್ಧೆ ಇದೆ.

ವಿಜಯ ಕರ್ನಾಟಕ 25 Jan 2026 9:26 am

Adani Vizhinjam Port: ಅದಾನಿ ವಿಝಿಂಜಂ ಬಂದರು ಫೇಸ್‌–2: ಕೇರಳದಲ್ಲಿ ₹30,000 ಕೋಟಿ ಹೂಡಿಕೆ: ಕರಣ್ ಅದಾನಿ

Adani Vizhinjam Port: ಶುಕ್ರವಾರ ವಿಝಿಂಜಂ ಅಂತಾರಾಷ್ಟ್ರೀಯ ಬಂದರಿನ ಎರಡನೇ ಹಂತದ (ಫೇಸ್‌-2) ಅಭಿವೃದ್ಧಿಗೆ ಶಂಕುಸ್ಥಾಪನೆ ನೆರವೇರಿಸಲಾಗಿದೆ. ಇದು ಕೇರಳದ ಕಡಲ ಹಾಗೂ ಆರ್ಥಿಕ ಅಭಿವೃದ್ಧಿಯಲ್ಲಿ ಮಹತ್ವದ ಮೈಲುಗಲ್ಲಾಗಿದೆ. ಈ ಯೋಜನೆಯನ್ನು ಅದಾನಿ ಪೋರ್ಟ್ಸ್ ಅಂಡ್ ಸ್ಪೆಷಲ್ ಎಕನಾಮಿಕ್ ಝೋನ್ ಲಿಮಿಟೆಡ್ ಅಭಿವೃದ್ಧಿಪಡಿಸುತ್ತಿದ್ದು, ಹೆಚ್ಚುವರಿ 16,000 ಕೋಟಿ ರೂಪಾಯಿ ಹೂಡಿಕೆ ಮಾಡುವುದಾಗಿ ಹೇಳಿದೆ. ಇದರಿಂದಾಗಿ ಯೋಜನೆಗೆ ಒಟ್ಟು

ಒನ್ ಇ೦ಡಿಯ 25 Jan 2026 9:17 am

West Bengal | ವಂದೇ ಭಾರತ್ ರೈಲಿನ Pure Veg ಆಹಾರ ವಿವಾದ!

ಮೀನು ಬೇಕು ಎಂದು ಒಗ್ಗಟ್ಟು ಪ್ರದರ್ಶಿಸಿದ TMC–BJP

ವಾರ್ತಾ ಭಾರತಿ 25 Jan 2026 8:48 am

ಒಡಿಶಾ | ಅಸ್ವಸ್ಥ ಪತ್ನಿಯನ್ನು ಆಸ್ಪತ್ರೆಗೆ 600 ಕಿ.ಮೀ. ಸೈಕಲ್ ರಿಕ್ಷಾದಲ್ಲೇ ಕರೆದೊಯ್ದ 70ರ ವೃದ್ಧ!

ಭುವನೇಶ್ವರ: ಅಸ್ವಸ್ಥ ಪತ್ನಿಯನ್ನು ಚಿಕಿತ್ಸೆಗಾಗಿ ಒಡಿಶಾದ ಸಂಬಲ್ಪುರದಿಂದ ಸುಮಾರು 300 ಕಿಲೋಮೀಟರ್ ದೂರದ ಕಟಕ್‌ನಲ್ಲಿರುವ ಆಸ್ಪತ್ರೆಗೆ 70 ವರ್ಷದ ವೃದ್ಧರೊಬ್ಬರು ಸೈಕಲ್ ರಿಕ್ಷಾದಲ್ಲೇ ಕರೆದೊಯ್ದು, ಚಿಕಿತ್ಸೆಯ ಬಳಿಕ ಮತ್ತೆ ಅದೇ ಸೈಕಲ್ ರಿಕ್ಷಾದಲ್ಲಿ ಮನೆಗೆ ಕರೆತಂದಿರುವ ಹೃದಯಸ್ಪರ್ಶಿ ಘಟನೆ ಬೆಳಕಿಗೆ ಬಂದಿದೆ. ಆ್ಯಂಬುಲೆನ್ಸ್ ಅಥವಾ ಇತರೆ ವಾಹನ ವ್ಯವಸ್ಥೆಗೆ ಹಣವಿಲ್ಲದ ಕಾರಣ, ವೃದ್ಧಾಪ್ಯ ಮತ್ತು ಕೊರೆಯುವ ಚಳಿಯನ್ನೂ ಲೆಕ್ಕಿಸದೇ ಒಟ್ಟು 600 ಕಿಲೋಮೀಟರ್ ದೂರ ಪತ್ನಿಯನ್ನು ಸೈಕಲ್ ರಿಕ್ಷಾದಲ್ಲೇ ಕರೆದೊಯ್ಯುವುದು ಅನಿವಾರ್ಯವಾಯಿತು. “ನನ್ನ ಜೀವನದಲ್ಲಿ ನನಗೆ ಅತ್ಯಂತ ಪ್ರೀತಿಯಾದ ಎರಡು ವಿಷಯಗಳಿವೆ. ಒಂದು—ನಾನು ಸುರಕ್ಷಿತವಾಗಿ ಮನೆಗೆ ಕರೆತಂದಿರುವ ನನ್ನ ಪತ್ನಿ, ಮತ್ತೊಂದು—ನನ್ನ ಸೈಕಲ್ ರಿಕ್ಷಾ. ಇವೆರಡನ್ನೂ ಬಿಟ್ಟು ನಾನು ಬದುಕಲು ಸಾಧ್ಯವಿಲ್ಲ,” ಎಂದು ರಿಕ್ಷಾ ಎಳೆಯುತ್ತಿದ್ದ ಬಾಬು ಲೋಹರ್ ಹೇಳಿದರು. ಅವರು ಪೊಲೀಸರು ಹಾಗೂ ಸ್ಥಳೀಯರಿಂದ ದೊರೆಯುವ ನೆರವನ್ನೂ ಸ್ವಾಭಿಮಾನದಿಂದ ನಿರಾಕರಿಸಿದರು. ಪತ್ನಿಯನ್ನು ಕುಳ್ಳಿರಿಸಿಕೊಂಡು ಕಟಕ್‌ಗೆ ತೆರಳಲು ಒಂಬತ್ತು ದಿನಗಳು ತಗುಲಿದವು. ಕಳೆದ ನವೆಂಬರ್‌ನಲ್ಲಿ ಲೋಹರ್ ಅವರ ಪತ್ನಿ ಜ್ಯೋತಿ ಪಾರ್ಶ್ವವಾಯು ಪೀಡಿತರಾದರು. ಸಂಬಲ್ಪುರದ ಮೋದಿಪಾದ ಗ್ರಾಮದ ಅಧಿಕಾರಿಗಳು ಕಟಕ್‌ನ ಎಸ್‌ಸಿಬಿ ಮೆಡಿಕಲ್ ಕಾಲೇಜು ಹಾಗೂ ಆಸ್ಪತ್ರೆಗೆ ಕರೆದೊಯ್ಯುವಂತೆ ಸಲಹೆ ನೀಡಿದ್ದರು. ಅಲ್ಲಿ ಎರಡು ತಿಂಗಳ ಕಾಲ ಚಿಕಿತ್ಸೆ ಪಡೆದ ಬಳಿಕ, ದಂಪತಿ ಜನವರಿ 19ರಂದು ಊರಿಗೆ ಮರಳುವ ಪ್ರಯಾಣ ಆರಂಭಿಸಿದರು. “ಯಾವುದೇ ವಾಹನ ಬಾಡಿಗೆಗೆ ಪಡೆಯಲು ನನ್ನ ಬಳಿ ಹಣ ಇರಲಿಲ್ಲ. ಆದ್ದರಿಂದ ನನ್ನದೇ ರಿಕ್ಷಾ ವ್ಯಾನ್‌ನಲ್ಲಿ ಪ್ರಯಾಣ ಆರಂಭಿಸಿದೆ. ಹಳೆಯ ದಿಂಬುಗಳನ್ನು ರಿಕ್ಷಾದಲ್ಲಿ ಹಾಕಿ ಪತ್ನಿಯನ್ನು ಮಲಗಿಸಿದೆ. ದೇವರ ನಾಮ ಪಠಿಸುತ್ತಾ ಸೈಕಲ್ ರಿಕ್ಷಾವನ್ನು ಎಳೆದಿದ್ದೇನೆ,” ಎಂದು ಲೋಹರ್ ಹೇಳಿದರು. ದಿನಕ್ಕೆ ಸರಾಸರಿ 30 ಕಿಲೋಮೀಟರ್‌ಗಳಂತೆ ಪ್ರಯಾಣ ಬೆಳೆಸಿ, ರಾತ್ರಿ ರಸ್ತೆಬದಿ ಅಂಗಡಿಗಳ ಬಳಿ ತಂಗುತ್ತಾ ಒಂಬತ್ತು ದಿನಗಳ ಬಳಿಕ ಕಟಕ್ ಆಸ್ಪತ್ರೆಗೆ ತಲುಪಿದರು. ಎರಡು ತಿಂಗಳ ಚಿಕಿತ್ಸೆ ಬಳಿಕ ಸಂಬಲ್ಪುರದಲ್ಲಿರುವ ಮನೆಗೆ ಜನವರಿ 19ರಂದು ಮರುಪ್ರಯಾಣ ಆರಂಭಿಸಿದ್ದಾಗಿ ಅವರು ವಿವರಿಸಿದರು. ಮರುಪ್ರಯಾಣದ ವೇಳೆ ಅವರ ಸೈಕಲ್ ರಿಕ್ಷಾಕ್ಕೆ ಮತ್ತೊಂದು ವಾಹನ ಡಿಕ್ಕಿ ಹೊಡೆದ ಪರಿಣಾಮ ಜ್ಯೋತಿ ರಸ್ತೆಗೆ ಬಿದ್ದು ತಲೆಗೆ ಗಾಯವಾಯಿತು. ಲೋಹರ್‌ಗೆ ಯಾವುದೇ ಗಾಯಗಳಾಗಿರಲಿಲ್ಲ. ತಾಂಗಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಕೊಡಿಸಿ, ಜನವರಿ 20ರಂದು ಮತ್ತೆ ಪ್ರಯಾಣ ಮುಂದುವರಿಸಿದರು. ಈ ಸಾಹಸಯಾತ್ರೆಯನ್ನು ಗಮನಿಸಿದ ಠಾಣಾಧಿಕಾರಿ ಬಿಕಾಶ್ ಸೇಥಿ ನೆರವು ನೀಡಲು ಮುಂದಾದರೂ, ಲೋಹರ್ ಅದನ್ನು ನಯವಾಗಿ ನಿರಾಕರಿಸಿ ತಮ್ಮ ಪ್ರಯಾಣ ಮುಂದುವರಿಸಿದರು.

ವಾರ್ತಾ ಭಾರತಿ 25 Jan 2026 8:40 am

ಮೆಕ್ಕೆಜೋಳ ಮಾರಾಟಕ್ಕೆ ರೈತರಿಗೆ ಅನುಕೂಲವಾಗತ್ತಾ ಎಂಐಪಿ ಯೋಜನೆ?

ಚಿಕ್ಕಬಳ್ಳಾಪುರ ಜಿಲ್ಲೆಯ ಮೆಕ್ಕೆಜೋಳ ಬೆಳೆದ ರೈತರು ಮಾರುಕಟ್ಟೆ ದರ ಕುಸಿತದಿಂದ ಸಂಕಷ್ಟದಲ್ಲಿದ್ದಾರೆ. ಬೆಂಬಲ ಬೆಲೆ ಸಿಗದೆ, ಈಗ ಎಂಐಪಿ ಯೋಜನೆಯಡಿ ಖರೀದಿಗೆ ಆದೇಶ ಹೊರಡಿಸಿದ್ದರೂ, ತಾಂತ್ರಿಕ ತೊಂದರೆಗಳು ಮತ್ತು ವ್ಯಾಪಾರಿಗಳ ಸಹಕಾರದ ಕೊರತೆಯಿಂದ ರೈತರಿಗೆ ಅನುಕೂಲವಾಗುತ್ತಿಲ್ಲ. ಎಪಿಎಂಸಿಗಳಲ್ಲಿ ವ್ಯಾಪಾರ ನಡೆಯದಿರುವುದು ಸಮಸ್ಯೆಯನ್ನು ಮತ್ತಷ್ಟು ಜಟಿಲಗೊಳಿಸಿದೆ.

ವಿಜಯ ಕರ್ನಾಟಕ 25 Jan 2026 8:13 am

ಶೀತಗಾಳಿಯ ಪ್ರಹಾರಕ್ಕೆ ಅಮೆರಿಕ ತತ್ತರ; 13 ಸಾವಿರಕ್ಕೂ ಹೆಚ್ಚು ವಿಮಾನ ರದ್ದು

ವಾಷಿಂಗ್ಟನ್: ಮಾರಕ ಶೀತಗಾಳಿ ಶನಿವಾರ ಅಮೆರಿಕದ ಸಾಮಾನ್ಯ ಜನಜೀವನವನ್ನು ಅಲ್ಲೋಲಕಲ್ಲೋಲಗೊಳಿಸಿದೆ. ವಿದ್ಯುತ್ ಪೂರೈಕೆ ವ್ಯವಸ್ಥೆ ಹದಗೆಟ್ಟಿದ್ದು, ಪ್ರಮುಖ ಹೆದ್ದಾರಿಗಳು ಅಪಾಯಕಾರಿ ಮಂಜುಗಡ್ಡೆಯಿಂದ ಆವೃತವಾಗಿವೆ. 13 ಸಾವಿರಕ್ಕೂ ಹೆಚ್ಚು ವಿಮಾನಗಳ ಹಾರಾಟ ರದ್ದುಗೊಂಡಿದೆ. ಅಮೆರಿಕದ ಒಟ್ಟು ಜನಸಂಖ್ಯೆಯ ಶೇಕಡಾ 40ರಷ್ಟು ಮಂದಿ, ಅಂದರೆ ಸುಮಾರು 14 ಕೋಟಿ ಜನರು ಈ ಶೀತಗಾಳಿಯ ಪರಿಣಾಮಕ್ಕೆ ಸಿಲುಕಿದ್ದಾರೆ. ನ್ಯೂ ಮೆಕ್ಸಿಕೋದಿಂದ ನ್ಯೂ ಇಂಗ್ಲೆಂಡ್‌ವರೆಗಿನ ಪ್ರದೇಶಗಳಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದೆ. ರಾಷ್ಟ್ರೀಯ ಹವಾಮಾನ ಸೇವೆಯ ಮುನ್ಸೂಚನೆಯಂತೆ, ವ್ಯಾಪಕ ಹಿಮಪಾತ ಸಂಭವಿಸುವ ಸಾಧ್ಯತೆ ಇದ್ದು, ಶನಿವಾರದಿಂದ ಸೋಮವಾರದವರೆಗೆ ದಕ್ಷಿಣದ ಪರ್ವತ ಪ್ರದೇಶಗಳಿಂದ ನ್ಯೂ ಇಂಗ್ಲೆಂಡ್‌ವರೆಗೂ ಗಾಳಿ ಹಾಗೂ ಮಳೆಯಾಗುವ ನಿರೀಕ್ಷೆಯಿದೆ. “ಹಿಮ ಮತ್ತು ಮಂಜುಗಡ್ಡೆ ಅತ್ಯಂತ ನಿಧಾನವಾಗಿ ಕರಗುತ್ತಿದೆ. ಈ ಪ್ರವೃತ್ತಿ ಸದ್ಯಕ್ಕೆ ಸುಧಾರಿಸುವ ಲಕ್ಷಣಗಳಿಲ್ಲ. ಇದರಿಂದ ಪರಿಸ್ಥಿತಿ ಸಾಮಾನ್ಯಗೊಳಿಸುವ ಪ್ರಯತ್ನಗಳಿಗೆ ಅಡ್ಡಿಯಾಗುತ್ತಿದೆ,” ಎಂದು ಹವಾಮಾನ ತಜ್ಞೆ ಅಲಿಸನ್ ಸೆಂಟೊರೆಲ್ಲಿ ತಿಳಿಸಿದ್ದಾರೆ. ಈ ನಡುವೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಹಲವು ರಾಜ್ಯಗಳಲ್ಲಿ ತುರ್ತು ಪರಿಸ್ಥಿತಿ ಘೋಷಣೆಗೆ ಅನುಮೋದನೆ ನೀಡಿದ್ದಾರೆ. ಫೆಡರಲ್ ಎಮರ್ಜೆನ್ಸಿ ಮ್ಯಾನೇಜ್‌ಮೆಂಟ್ ಏಜೆನ್ಸಿ (FEMA) ಅಗತ್ಯ ವಸ್ತುಗಳು ಹಾಗೂ ಸಿಬ್ಬಂದಿಯನ್ನು ನಿಯೋಜಿಸಿದ್ದು, ಶೋಧ ಹಾಗೂ ರಕ್ಷಣಾ ತಂಡಗಳು ಹಲವು ರಾಜ್ಯಗಳಿಗೆ ಧಾವಿಸಿವೆ ಎಂದು ಆಂತರಿಕ ಭದ್ರತಾ ಕಾರ್ಯದರ್ಶಿ ಕ್ರಿಸ್ಟಿ ನೊಯೆಮ್ ತಿಳಿಸಿದ್ದಾರೆ.

ವಾರ್ತಾ ಭಾರತಿ 25 Jan 2026 8:05 am

ಇರಾನ್ ಕ್ರಮ ಖಂಡಿಸುವ ವಿಶ್ವಸಂಸ್ಥೆ ನಿರ್ಣಯದ ವಿರುದ್ಧ ಭಾರತ ಮತದಾನ

ಹೊಸದಿಲ್ಲಿ: ಇರಾನ್ ಸರ್ಕಾರ ಪ್ರತಿಭಟನಾಕಾರರ ವಿರುದ್ಧ ಕೈಗೊಂಡ ಕಠಿಣ ಕ್ರಮವನ್ನು ಖಂಡಿಸುವ ಸಂಬಂಧ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಯಲ್ಲಿ ಮಂಡಿಸಲಾದ ನಿರ್ಣಯದ ವಿರುದ್ಧ ಭಾರತ, ಚೀನಾ, ಪಾಕಿಸ್ತಾನ ಸೇರಿದಂತೆ ಇನ್ನೂ ನಾಲ್ಕು ದೇಶಗಳು ಮತ ಚಲಾಯಿಸಿವೆ. ಈ ನಿರ್ಣಯವು ಇರಾನ್‌ಗೆ ಕಳುಹಿಸಲಾದ ಸತ್ಯಶೋಧನಾ ಸಮಿತಿಯ ಅವಧಿಯನ್ನು ಎರಡು ವರ್ಷಗಳಿಗೆ ವಿಸ್ತರಿಸುವುದಕ್ಕೂ, ಕಳೆದ ತಿಂಗಳು ನಡೆದ ದಮನ ಕ್ರಮಗಳ ಬಗ್ಗೆ ತನಿಖೆ ನಡೆಸುವ ಅಧಿಕಾರವನ್ನೂ ನೀಡುತ್ತದೆ. ಒಟ್ಟು 47 ಸದಸ್ಯ ರಾಷ್ಟ್ರಗಳಿರುವ ಮಂಡಳಿಯಲ್ಲಿ ಈ ನಿರ್ಣಯವನ್ನು ಅಂಗೀಕರಿಸಲಾಗಿದ್ದು, 25 ದೇಶಗಳು ನಿರ್ಣಯದ ಪರವಾಗಿ, 7 ದೇಶಗಳು ವಿರೋಧವಾಗಿ ಮತ ಚಲಾಯಿಸಿವೆ. 14 ದೇಶಗಳು ಮತದಾನದಿಂದ ದೂರ ಉಳಿದಿವೆ. ಯಾವುದೇ ದೇಶ-ನಿರ್ದಿಷ್ಟ ನಿರ್ಣಯಗಳನ್ನು ಸಾಮಾನ್ಯವಾಗಿ ಬೆಂಬಲಿಸದಿರುವ ಇತಿಹಾಸ ಹೊಂದಿರುವ ಭಾರತ, ಇರಾನ್‌ನ ಮಾನವ ಹಕ್ಕು ಉಲ್ಲಂಘನೆಗೆ ಸಂಬಂಧಿಸಿದ ಈ ನಿರ್ಣಯದ ವಿರುದ್ಧ ಮತ ಚಲಾಯಿಸಿದೆ. ಪ್ರತಿಭಟನೆಗಳ ಹಿನ್ನೆಲೆಯಲ್ಲಿ ಅಮೆರಿಕ ಇರಾನ್‌ಗೆ ಎಚ್ಚರಿಕೆ ನೀಡಿರುವ ಹಿನ್ನೆಲೆಯಲ್ಲಿಈ ಭಾರತದ ನಿಲುವು ಮಹತ್ವ ಪಡೆದುಕೊಂಡಿದೆ. 2022ರಲ್ಲಿ ಸತ್ಯಶೋಧನಾ ಸಮಿತಿ ನೇಮಕಗೊಂಡ ಸಂದರ್ಭದಲ್ಲಿ ಭಾರತ ಮತದಾನದಿಂದ ದೂರ ಉಳಿದಿದ್ದರೂ, ಆ ವೇಳೆ ನಿರ್ಣಯದ ವಿರುದ್ಧ ಮತ ಚಲಾಯಿಸಿರಲಿಲ್ಲ. ಇತ್ತ ಭಾರತದ ಈ ನಿಲುವನ್ನು ಇರಾನ್‌ನ ರಾಯಭಾರಿ ಮೊಹಮ್ಮದ್ ಫತ್ಹ್ ಅಲಿ ಸ್ವಾಗತಿಸಿದ್ದಾರೆ.

ವಾರ್ತಾ ಭಾರತಿ 25 Jan 2026 7:50 am

ಬೆಂಗಳೂರು-ಮೈಸೂರು-ಚೆನ್ನೈ ನಡುವೆ ಬುಲೆಟ್‌ ರೈಲು ಸಂಚಾರ: ಇಲ್ಲಿದೆ ಸಮಯ, ಮಾರ್ಗ, ಪ್ರಾರಂಭದ ದಿನಾಂಕದ ವಿವರ

Mysuru-Bengaluru-Chennai Bullet Train: ಭಾರತೀಯ ರೈಲ್ವೆಯು ಪ್ರಯಾಣಿಕರ ಅನುಕೂಲಕ್ಕೆ ತಕ್ಕಂತೆ ರೈಲು ಮಾರ್ಗವನ್ನು ವಿಸ್ತರಣೆ ಮಾಡುತ್ತಲಿರುತ್ತದೆ. ಹಾಗೆಯೇ ಇದೀಗ ಬೆಂಗಳೂರು-ಮೈಸೂರು-ಚೆನ್ನೈ ನಡುವಿನ ಪ್ರಯಾಣ ಅವಧಿಯನ್ನು ಕಡಿಮೆಗೊಳಿಸುವ ನಿಟ್ಟಿನಲ್ಲಿ ಈ ಮಾರ್ಗದಲ್ಲಿ ಬುಲೆಟ್ ರೈಲು ಓಡಿಸಲು ಯೋಜಿಸುತ್ತಿದೆ. ಹಾಗಾದ್ರೆ, ಇದು ಯಾವಾಗ ಟ್ರ್ಯಾಕ್‌ಗೆ ಇಳಿಯಲಿದೆ ಹಾಗೂ ಏನೆಲ್ಲಾ ಪ್ರಯೋಜನೆಗಳಿವೆ ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ. ಈಗಾಗಲೇ ಕರ್ನಾಟಕ

ಒನ್ ಇ೦ಡಿಯ 25 Jan 2026 7:48 am

Agricultural Success Story: ವಿಜಯಪುರದಲ್ಲಿ ಹೈನುಗಾರಿಕೆ ಹೈಕ್ಲಾಸು, ಕೈತುಂಬ ಕಾಸು! 1 ಕುಟುಂಬದ ಗಳಿಕೆ ಎಷ್ಟು ಗೊತ್ತಾ?

ಕೂಲಿ ಕೆಲಸಕ್ಕಾಗಿ ಮಹಾರಾಷ್ಟ್ರಕ್ಕೆ ಗುಳೆ ಹೋಗುತ್ತಿದ್ದ ನಾಗಬೇನಾಳ ತಾಂಡಾದ ಶಿವಪ್ಪ ನಾಯಕ ಕುಟುಂಬ, ಹೈನುಗಾರಿಕೆ ಆರಂಭಿಸಿ ಯಶಸ್ವಿಯಾಗಿದೆ. 11 ಹಸುಗಳಿಂದ ನಿತ್ಯ 120 ಲೀಟರ್ ಹಾಲು ಉತ್ಪಾದಿಸಿಸುತ್ತಿದೆ. ಇದರಿಂದಾಗಿ ಕುಟುಂಬವು ಊರಲ್ಲೇ ನೆಮ್ಮದಿಯ ಬದುಕು ಸಾಗಿಸುತ್ತಿದೆ.

ವಿಜಯ ಕರ್ನಾಟಕ 25 Jan 2026 7:28 am

ಜನವರಿ 25ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್‌, ಡೀಸೆಲ್‌ ದರ ಎಷ್ಟಿದೆ ತಿಳಿಯಿರಿ

Petrol, Diesel Price: ಪೆಟ್ರೋಲ್, ಡೀಸೆಲ್‌ ದರದಲ್ಲಿ ಜಾಸ್ತಿ ಅಲ್ಲದಿದ್ದರೂ, ಸ್ವಲ್ಪ ಪ್ರಮಾಣದಲ್ಲಾದರೂ, ಏರಿಳಿತ ಆಗುತ್ತಿರುತ್ತದೆ. ಹಾಗಾದರೆ, ಇಂದು (ಜನವರಿ 25) ಬೆಂಗಳೂರು ಸೇರಿದಂತೆ ರಾಜ್ಯದ ಉಳಿದ ಜಿಲ್ಲೆಗಳಲ್ಲಿ ಲೀಟರ್‌ ಪೆಟ್ರೋಲ್‌, ಡೀಸೆಲ್‌ ಬೆಲೆ ಎಷ್ಟಿದೆ ಎನ್ನುವ ಅಂಕಿಅಂಶಗಳನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ. ಶಕ್ತಿಯ ಮೂಲಗಳು ಎನಿಸಿಕೊಂಡಿರುವ ಪೆಟ್ರೋಲ್ ಮತ್ತು ಡೀಸೆಲ್ ಇಂಧನ ಅತ್ಯವಶ್ಯಕವಾಗಿ ಬೇಕಾಗುವ ಸಂಪನ್ಮೂಲಗಳಾಗಿವೆ.

ಒನ್ ಇ೦ಡಿಯ 25 Jan 2026 6:46 am

ಆಪತ್ಭಾಂಧವನಿಗೆ 25 ಸಾವಿರ! ರಸ್ತೆ ಅಪಘಾತದಲ್ಲಿ ನರಳುತ್ತಿದ್ದವನ ಕಾಪಾಡಿದರೆ ಬಹುಮಾನ - ಇದೇ ಫೆಬ್ರವರಿಗೆ ಜಾರಿ ನಿರೀಕ್ಷೆ

ರಸ್ತೆ ಅಪಘಾತದಲ್ಲಿ ಗಾಯಗೊಂಡವರನ್ನು ಆಸ್ಪತ್ರೆಗೆ ಸೇರಿಸುವವರಿಗೆ ಕೇಂದ್ರ ಸರ್ಕಾರ 25 ಸಾವಿರ ರೂ. ಪ್ರೋತ್ಸಾಹ ಧನ ನೀಡಲಿದೆ. ಈ ಯೋಜನೆ 2026ರ ಫೆಬ್ರವರಿಯಿಂದ ಜಾರಿಗೆ ಬರಲಿದ್ದು, ಗಾಯಾಳುಗಳಿಗೆ 7 ದಿನಗಳವರೆಗೆ 1.25 ಲಕ್ಷ ರೂ. ನಗದು ರಹಿತ ಚಿಕಿತ್ಸೆಯೂ ದೊರೆಯಲಿದೆ.

ವಿಜಯ ಕರ್ನಾಟಕ 25 Jan 2026 6:16 am

ಕೇಂದ್ರ ಸರ್ಕಾರದಿಂದ ಭರ್ಜರಿ ಗುಡ್‌ ನ್ಯೂಸ್: ವೇತನ ಮತ್ತು ಪಿಂಚಣಿ ಪರಿಷ್ಕರಣೆಗೆ ಅನುಮೋದನೆ

ನವದೆಹಲಿ: ಕೇಂದ್ರ ಸರ್ಕಾರವು ವೇತನ ಹಾಗೂ ಪಿಂಚಣಿ ಪರಿಷ್ಕರಣೆಗೆ ಅನುಮೋದನೆ ನೀಡುವ ಮೂಲಕ ಪಿಎಸ್‌ಜಿಐಸಿ, ನಬಾರ್ಡ್ ಮತ್ತು ಆರ್ ಬಿ ಐ ಉದ್ಯೋಗಿಗಳು ಹಾಗೂ ಪಿಂಚಣಿದಾರರಿಗೆ ಗುಡ್ ನ್ಯೂಸ್ ನೀಡಿದೆ. ಈ ನಿರ್ಧಾರದಿಂದ ಅನೇಕ ಉದ್ಯೋಗಿಗಳು ಮತ್ತು ಪಿಂಚಣಿದಾರರಿಗೆ ಆರ್ಥಿಕ ಹಾಗೂ ಸಾಮಾಜಿಕ ಭದ್ರತೆ ಒದಗಿಸುತ್ತದೆ ಎಂದು ಹಣಕಾಸು ಸಚಿವಾಲಯ ತಿಳಿಸಿದೆ. ಹಣಕಾಸು ವಲಯದಲ್ಲಿ ಸೇವೆ ಸಲ್ಲಿಸುತ್ತಿರುವ

ಒನ್ ಇ೦ಡಿಯ 25 Jan 2026 6:00 am

ದೇವನಹಳ್ಳಿಯಲ್ಲಿ ಮತ್ತೆ ಭೂಸ್ವಾಧೀನದ ಬಿಸಿ: ಕುಂದಾಣ ಹೋಬಳಿಯಲ್ಲೂ ಟೌನ್‌ಶಿಪ್‌ಗೆ ಮುಂದಾದ ಕೆಎಚ್‌ಬಿ

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನಲ್ಲಿ ಮತ್ತೆ ಭೂಸ್ವಾಧೀನ ಪ್ರಕ್ರಿಯೆ ಆರಂಭವಾಗಿದೆ. ಕುಂದಾಣ ಹೋಬಳಿಯಲ್ಲಿ ಕೆಎಚ್‌ಬಿ 590 ಎಕರೆ ಕೃಷಿಭೂಮಿಯನ್ನು ಟೌನ್‌ಶಿಪ್‌ ಯೋಜನೆಗೆ ಸ್ವಾಧೀನಪಡಿಸಿಕೊಳ್ಳಲು ಮುಂದಾಗಿದೆ. ಶ್ಯಾನಪ್ಪನಹಳ್ಳಿ, ವಾಜರಹಳ್ಳಿ, ಬೀರಸಂದ್ರ, ವಿಶ್ವನಾಥಪುರ ಗ್ರಾಮಗಳ ಭೂಮಿ ಸ್ವಾಧೀನಕ್ಕೆ ಅಂತಿಮ ಅಧಿಸೂಚನೆ ಹೊರಡಿಸಲಾಗಿದೆ. ರೈತರು ಈ ಭೂಸ್ವಾಧೀನಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಹೋರಾಟಗಾರರು ರೈತರಿಗೆ ಬೆಂಬಲ ಘೋಷಿಸಿದ್ದಾರೆ.

ವಿಜಯ ಕರ್ನಾಟಕ 25 Jan 2026 5:43 am

ಕರ್ನಾಟಕದಲ್ಲಿ 10,365 ತೃತೀಯ ಲಿಂಗಿಗಳು: ಈ 5 ಜಿಲ್ಲೆಗಳಲ್ಲೇ ಅಧಿಕ!

ರಾಜ್ಯದಲ್ಲಿ 10,365 ತೃತೀಯಲಿಂಗಿಗಳು ಗುರುತಿಸಲಾಗಿದೆ. ವಿಜಯಪುರ ಜಿಲ್ಲೆಯಲ್ಲಿ ಅತಿ ಹೆಚ್ಚು ತೃತೀಯಲಿಂಗಿಗಳಿದ್ದಾರೆ. ಇವರ ಕಲ್ಯಾಣಕ್ಕಾಗಿ ಸರ್ಕಾರ ಯೋಜನೆ ರೂಪಿಸಲಿದೆ. ಪುನರ್ವಸತಿ, ಶಿಕ್ಷಣ, ಆರೋಗ್ಯ ಸೇವೆ ನೀಡಲು ಆದ್ಯತೆ ನೀಡಲು ಸಮೀಕ್ಷೆ ಸಹಕಾರಿ.

ವಿಜಯ ಕರ್ನಾಟಕ 25 Jan 2026 5:41 am

ದ್ವೇಷ ಭಾಷಣ ವಿಧೇಯಕಕ್ಕೆ ರಾಜ್ಯಪಾಲರ ಅಂಕಿತ ಬಿದ್ದಿಲ್ಲ, ಅಷ್ಟರಲ್ಲೇ ಬಿಜೆಪಿ ಮಖಂಡಗೆ ಪೊಲೀಸ್ ನೋಟಿಸ್! ಸುರೇಶ್ ಕುಮಾರ್ ಪ್ರಶ್ನೆ

ಕರ್ನಾಟಕದಲ್ಲಿ ದ್ವೇಷ ಭಾಷಣ ವಿಧೇಯಕಕ್ಕೆ ಕ್ಯಾಬಿನೆಟ್ ಒಪ್ಪಿಗೆ ದೊರೆತಿದೆ. ಆದರೆ ರಾಜ್ಯಪಾಲರ ಅಂಕಿತ ಇನ್ನೂ ದೊರೆತಿಲ್ಲ. ಈ ನಡುವೆ, ಗೃಹ ಇಲಾಖೆಯು ಬಿಜೆಪಿ ಮುಖಂಡ ವಿಕಾಸ್ ಪುತ್ತೂರ್ ಅವರಿಗೆ ಈ ವಿಧೇಯಕದ ಅನ್ವಯ ಎಚ್ಚರಿಕೆ ನೋಟಿಸ್ ನೀಡಿದೆ. ಚಿಕ್ಕಮಗಳೂರು ಜಿಲ್ಲೆಯ ತರೀಕೆರೆಯಲ್ಲಿ ನಡೆಯಬೇಕಿದ್ದ ಹಿಂದೂ ಸಮಾಜೋತ್ಸವ ಕಾರ್ಯಕ್ರಮಕ್ಕೆ ಮುನ್ನವೇ ಈ ನೋಟಿಸ್ ಜಾರಿಯಾಗಿದೆ. ಇದು ಹಲವರಲ್ಲಿ ಅಚ್ಚರಿ ಮೂಡಿಸಿದೆ.

ವಿಜಯ ಕರ್ನಾಟಕ 25 Jan 2026 12:31 am

ಹನೂರು | ಕಂಬಕ್ಕೆ ಕಟ್ಟಿ ಮಹಿಳೆಗೆ ಹಲ್ಲೆ: ಇಬ್ಬರ ಬಂಧನ

ಹನೂರು: ಮಹಿಳೆಯೊಬ್ಬರನ್ನು ಕಂಬಕ್ಕೆ ಕಟ್ಟಿ ಹಲ್ಲೆ ಮಾಡಿರುವ ಘಟನೆ ತಾಲೂಕಿನ ಜಿ.ಆರ್.ನಗರ ಗ್ರಾಮದಲ್ಲಿ ನಡೆದಿರುವ ಬಗ್ಗೆ ವರದಿಯಾಗಿದೆ. ಹಲ್ಲೆಗೊಳಗಾದವರನ್ನು ಜಿ.ಆರ್.ನಗರ ಗ್ರಾಮದ ಕಣ್ಣಮ್ಮ ಎಂದು ಗುರುತಿಸಲಾಗಿದೆ. ಘಟನೆ ವಿವರ: ಹನೂರು ತಾಲೂಕಿನ ಜಿ.ಆರ್.ನಗರ ಗ್ರಾಮದಲ್ಲಿ ಕಣ್ಣಮ್ಮ ಎಂಬವರು ತನ್ನ ಜಮೀನಿನಲ್ಲಿ ಬೆಳೆದ ಹುರುಳಿಯನ್ನು ಸೆಲ್ವಿ ಎಂಬವರ ಜಾನುವಾರುಗಳು ಮೇಯ್ದು ನಾಶಪಡಿಸಿದ್ದಕ್ಕಾಗಿ ಕಣ್ಣಮ್ಮ ಮತ್ತು ಸೆಲ್ವಿ ಕುಟುಂಬದವರ ನಡುವೆ ಜಗಳ ನಡೆದಿತ್ತು ಎನ್ನಲಾಗಿದೆ. ಈ ವೇಳೆ ಸೆಲ್ವಿ, ಮಂಜು ಮತ್ತು ಅಂಗಮುತ್ತು ಎಂಬವರು ಕಣ್ಣಮ್ಮನನ್ನು ಕಂಬಕ್ಕೆ ಕಟ್ಟಿ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಮಹಿಳೆಯನ್ನು ಕಂಬಕ್ಕೆ ಕಟ್ಟಿ ಹಾಕಿರುವ ವೀಡಿಯೊ ತುಣುಕು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ರಾಮಾಪುರ ಠಾಣೆ ಪೊಲೀಸರು ಘಟನಾ ಸ್ಥಳಕ್ಕೆ ತೆರಳಿ ಮಂಜು ಮತ್ತು ಅಂಗಮುತ್ತು ಎಂಬವರನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ. ಚಾಮರಾಜನಗರ ಜಿಲ್ಲಾ ಪೊಲೀಸ್ ವರಿಷ್ಠಾ ಧಿಕಾರಿ ಮುತ್ತುರಾಜ್ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ವಾರ್ತಾ ಭಾರತಿ 25 Jan 2026 12:04 am

ಹುಮನಾಬಾದ್ | ಅಂಬೇಡ್ಕರ್ ಭಾವಚಿತ್ರಕ್ಕೆ ಅವಮಾನ ಆರೋಪ: ಅಂಗನವಾಡಿ ಶಿಕ್ಷಕಿಯ ಅಮಾನತಿಗೆ ಆಗ್ರಹ

ಹುಮನಾಬಾದ್: ಬಸವಕಲ್ಯಾಣ ತಾಲೂಕಿನ ಹಾರಕೂಡ್ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಅವಮಾನ ಮಾಡಲಾಗಿದೆ ಎಂದು ಆರೋಪಿಸಿ, ಸಂಬಂಧಿಸಿದ ಅಂಗನವಾಡಿ ಶಿಕ್ಷಕಿಯನ್ನು ತಕ್ಷಣ ಅಮಾನತು ಮಾಡಬೇಕು ಎಂದು ಭೀಮ್ ಆರ್ಮಿ ಹಾಗೂ ದಲಿತ ಸೇನೆ ಕಾರ್ಯಕರ್ತರು ಶನಿವಾರ ಹುಮನಾಬಾದ್‌ನಲ್ಲಿ ಒತ್ತಾಯಿಸಿದರು. ಹಾರಕೂಡ್ ಗ್ರಾಮದ ಅಂಗನವಾಡಿ ಕೇಂದ್ರದ ಗೋಡೆಯ ಮೇಲೆ ವಿವಿಧ ಮಹಾಪುರುಷರ ಭಾವಚಿತ್ರಗಳನ್ನು ಪ್ರದರ್ಶಿಸಲಾಗಿದೆ. ಆದರೆ ಡಾ.ಅಂಬೇಡ್ಕರ್ ಅವರ ಭಾವಚಿತ್ರವನ್ನು ಅಂಗನವಾಡಿಯ ಅಡುಗೆ ಕೋಣೆಯಲ್ಲಿ ಕೆಳಭಾಗದಲ್ಲಿ ಇಟ್ಟು ಅವಮಾನಿಸಲಾಗಿದೆ ಎಂದು ಆರೋಪಿಸಿದರು. ಈ ಕುರಿತು ಬಸವಕಲ್ಯಾಣ ತಾಲೂಕಿನ ದಲಿತ ಸೇನೆ ವತಿಯಿಂದ ಸಿಡಿಪಿಓ ಅವರಿಗೆ ದೂರು ಸಲ್ಲಿಸಲಾಗಿದೆ. ಆದರೆ ಇದುವರೆಗೂ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ. ತಕ್ಷಣ ಅಂಗನವಾಡಿ ಶಿಕ್ಷಕಿಯನ್ನು ಅಮಾನತು ಮಾಡಬೇಕು. ಇಲ್ಲದಿದ್ದರೆ ಶಾಸಕರ ನಿವಾಸಕ್ಕೆ ಮುತ್ತಿಗೆ ಹಾಕಿ ಹೋರಾಟ ನಡೆಸಲಾಗುವುದು ಎಂದು ಭೀಮ್ ಆರ್ಮಿ ಮತ್ತು ದಲಿತ ಸೇನೆ ಮುಖಂಡರು ಎಚ್ಚರಿಕೆ ನೀಡಿದರು.

ವಾರ್ತಾ ಭಾರತಿ 24 Jan 2026 11:59 pm

ನಾಳೆ ಮೂರನೇ ಟಿ-20: ಭಾರತಕ್ಕೆ ಸರಣಿ ಗೆಲುವಿನ ತವಕ

ಗುವಾಹಟಿ, ಜ.24: ಸರಣಿಯಲ್ಲಿ 2-0 ಮುನ್ನಡೆಯೊಂದಿಗೆ ಆತ್ಮವಿಶ್ವಾಸ ಹೆಚ್ಚಿಸಿಕೊಂಡಿರುವ ಟೀಮ್ ಇಂಡಿಯಾ ರವಿವಾರ ಬರ್ಸಪಾರದ ಎಸಿಎ ಸ್ಟೇಡಿಯಂನಲ್ಲಿ ನಡೆಯಲಿರುವ ಮೂರನೇ ಟಿ-20 ಪಂದ್ಯದಲ್ಲಿ ನ್ಯೂಝಿಲ್ಯಾಂಡ್ ಕ್ರಿಕೆಟ್ ತಂಡವನ್ನು ಎದುರಿಸಲಿದ್ದು, ಸರಣಿ ಗೆಲುವಿನ ತವಕದಲ್ಲಿದೆ. ರಾಯ್ಪುರದಲ್ಲಿ ನಡೆದಿರುವ ಎರಡನೇ ಪಂದ್ಯದಲ್ಲಿ 209 ರನ್ ಗುರಿಯನ್ನು ಕೇವಲ 15.2 ಓವರ್‌ಗಳಲ್ಲಿ ಬೆನ್ನಟ್ಟಿರುವ ಸೂರ್ಯಕುಮಾರ್ ಬಳಗ ಸ್ಪಷ್ಟ ಸಂದೇಶ ರವಾನಿಸಿದೆ. ಸುಲಭ ಜಯ ಸಾಧಿಸಿರುವ ಭಾರತ ತಂಡವು ಮುಂಬರುವ ಟಿ-20 ವಿಶ್ವಕಪ್ ಟೂರ್ನಿಗೆ ಭರ್ಜರಿ ತಯಾರಿ ನಡೆಸಿದೆ. ಬ್ಯಾಟಿಂಗ್‌ಗೆ ಇಳಿಸಲ್ಪಟ್ಟಿದ್ದ ಕಿವೀಸ್ ಪಡೆ ಕಳಪೆ ಆರಂಭದಿಂದ ಚೇತರಿಸಿಕೊಂಡು 6 ವಿಕೆಟ್‌ಗಳ ನಷ್ಟಕ್ಕೆ 208 ರನ್ ಗಳಿಸಿತ್ತು. ರಚಿನ್ ರವೀಂದ್ರ(44 ರನ್)ಹಾಗೂ ನಾಯಕ ಸ್ಯಾಂಟ್ನರ್(ಔಟಾಗದೆ 47)ತಂಡ ಗೌರವಾರ್ಹ ಮೊತ್ತ ಗಳಿಸಲು ನೆರವಾಗಿದ್ದರು. ಭಾರತದ ನಾಯಕ ಸೂರ್ಯಕುಮಾರ್ ಔಟಾಗದೆ 82 ರನ್ ಗಳಿಸುವುದರೊಂದಿಗೆ 468 ದಿನಗಳ ನಂತರ ಮೊದಲ ಬಾರಿ ಟಿ-20 ಕ್ರಿಕೆಟ್‌ನಲ್ಲಿ ಅರ್ಧಶತಕ ಗಳಿಸಿದರು. ಸೂರ್ಯ ಸತತ 23 ಇನಿಂಗ್ಸ್‌ಗಳಲ್ಲಿ ಅರ್ಧಶತಕವನ್ನೇ ಗಳಿಸಿರಲಿಲ್ಲ. 2024ರ ಅಕ್ಟೋಬರ್‌ನಲ್ಲಿ ಬಾಂಗ್ಲಾದೇಶ ವಿರುದ್ಧ ಕೊನೆಯ ಬಾರಿ ದೊಡ್ಡ ಸ್ಕೋರ್ ಗಳಿಸಿದ್ದರು. ಭಾರತದ ಪ್ರಮುಖ ಸ್ಪಿನ್ನರ್ ಕುಲದೀಪ ಯಾದವ್ ಮಧ್ಯಮ ಸರದಿಯಲ್ಲಿ ಕಿವೀಸ್‌ನ ಪ್ರಮುಖ ಬ್ಯಾಟರ್‌ಗಳನ್ನು ಔಟ್ ಮಾಡಿ ತನ್ನ ಶಕ್ತಿ ಪ್ರದರ್ಶಿಸಿದ್ದರು. 35 ರನ್‌ಗೆ ಎರಡು ವಿಕೆಟ್‌ಗಳನ್ನು ಪಡೆದಿದ್ದರು. ವಿಕೆಟ್‌ಕೀಪರ್ ಇಶಾನ್ ಕಿಶನ್ 21 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ್ದು, ಕಿವೀಸ್ ವಿರುದ್ಧ ವೇಗವಾಗಿ 50 ರನ್ ಗಳಿಸಿದ್ದರು. ಅಭಿಷೇಕ್ ಶರ್ಮಾ ದಾಖಲೆ(22 ಎಸೆತ)ಯನ್ನು ಮುರಿದಿದ್ದರು. ಭಾರತ ತಂಡವು 10 ಓವರ್‌ನೊಳಗೆ ಎರಡು ವಿಕೆಟ್ ಕಳೆದುಕೊಂಡ ನಂತರ ಮೊದಲ ಬಾರಿ 209 ರನ್ ಗುರಿಯನ್ನು ಯಶಸ್ವಿಯಾಗಿ ಬೆನ್ನಟ್ಟಿದೆ. ಎರಡನೇ ಪಂದ್ಯದಲ್ಲಿ ವಿಶ್ರಾಂತಿ ಪಡೆದಿದ್ದ ಹಿರಿಯ ವೇಗಿ ಜಸ್‌ಪ್ರಿತ್ ಬುಮ್ರಾ ಗುವಾಹಟಿ ಪಂದ್ಯದಲ್ಲಿ ಆಡಲಿದ್ದಾರೆಯೆ ಎಂಬ ಕುತೂಹಲ ಎಲ್ಲರಲ್ಲಿದೆ. ಸರಣಿಯಲ್ಲಿ ಗೆಲ್ಲುವ ಉದ್ದೇಶದಿಂದ ಭಾರತವು ಆಡುವ 11ರ ಬಳಗವನ್ನು ಬಲಿಷ್ಠಗೊಳಿಸಲು ಬಯಸಿದೆ. ಬುಮ್ರಾ ಆಡುವ ಬಳಗಕ್ಕೆ ವಾಪಸಾಗುವ ಸಾಧ್ಯತೆಯಿದೆ. ಹರ್ಷಿತ್ ರಾಣಾ ಬದಲಿಗೆ ಬುಮ್ರಾ ಆಡಬಹುದು , ಟಿ-20 ಕ್ರಿಕೆಟ್‌ನಲ್ಲಿ ಹೆಡ್-ಟು-ಹೆಡ್ ದಾಖಲೆ ಟಿ-20 ಅಂತರ್‌ರಾಷ್ಟ್ರೀಯ ಪಂದ್ಯದಲ್ಲಿ ಭಾರತ ತಂಡವು ನ್ಯೂಝಿಲ್ಯಾಂಡ್ ವಿರುದ್ಧ ಮೇಲುಗೈ ಸಾಧಿಸಿದೆ. ಉಭಯ ತಂಡಗಳು 27 ಪಂದ್ಯಗಳನ್ನು ಆಡಿದ್ದು, ಈ ಪೈಕಿ ಭಾರತವು 14 ಬಾರಿ ಜಯ ಸಾಧಿಸಿದೆ. ನ್ಯೂಝಿಲ್ಯಾಂಡ್ 10 ಬಾರಿ ಗೆದ್ದಿದೆ. ಮೂರು ಪಂದ್ಯಗಳು ಟೈನಲ್ಲಿ ಕೊನೆಗೊಂಡಿವೆ

ವಾರ್ತಾ ಭಾರತಿ 24 Jan 2026 11:58 pm

ನಮ್ಮ ಪಕ್ಷದಲ್ಲೇ ಉಂಡು, ಬೆಳೆದು ನಂತರ ದ್ರೋಹ ಬಗೆದವರಿಗೆ ಪಾಠ ಕಲಿಸುವ ಸಮಯ ಬಂದಿದೆ: ಶಿವಲಿಂಗೇಗೌಡ ವಿರುದ್ಧ ನಿಖಿಲ್ ಕುಮಾರಸ್ವಾಮಿ ವಾಗ್ದಾಳಿ

ಹಾಸನ: ನಮ್ಮ ಪಕ್ಷದಲ್ಲೇ ಉಂಡು ಬೆಳೆದು ಟಿಕೆಟ್ ಪಡೆದು ಶಾಸಕರಾಗಿ, ನಂತರ ಹೆತ್ತ ತಾಯಿಗೆ ದ್ರೋಹ ಬಗೆದವರ ವಿರುದ್ದ ಮುಂದಿನ ದಿನಗಳಲ್ಲಿ ತಕ್ಕ ಪಾಠ ಕಲಿಸುವ ಸಮಯ ಬಂದಿದೆ ಎಂದು ಜೆಡಿಎಸ್ ಯುವ ಜನತಾದಳದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಪರೋಕ್ಷವಾಗಿ ಅರಸೀಕೆರೆ ಕ್ಷೇತ್ರದ ಶಾಸಕ ಶಿವಲಿಂಗೇಗೌಡರ ವಿರುದ್ಧ ವಾಗ್ದಾಳಿ ನಡೆಸಿದರು. ರಾಜ್ಯದಲ್ಲಿ ಅನೇಕ ನಾಯಕರು ಪ್ರಾದೇಶಿಕ ಪಕ್ಷಗಳನ್ನು ಕಟ್ಟಿದರೂ ಅವು ದೀರ್ಘಕಾಲ ಉಳಿಯಲಿಲ್ಲ. ಆದರೆ ದೇವೇಗೌಡರ ದೂರದೃಷ್ಟಿ, ಬದ್ಧತೆ, ಬಡವರ ಹಾಗೂ ಎಲ್ಲಾ ವರ್ಗದವರ ಆಶೀರ್ವಾದದಿಂದ ಜೆಡಿಎಸ್ ಪಕ್ಷ ಗಟ್ಟಿಯಾಗಿ ನೆಲೆನಿಂತು 25 ವರ್ಷಗಳನ್ನು ಪೂರೈಸಿದೆ ಎಂದು ಹೇಳಿದರು. ಸಮಾವೇಶದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ಯಾವುದೇ ಸ್ಪಷ್ಟ ಸಾಧನೆ ಮಾಡದೇ, ಸಾಧನೆ ಹೆಸರಿನಲ್ಲಿ ಸಮಾವೇಶಗಳನ್ನು ಆಯೋಜಿಸಿ ಕುಮಾರಸ್ವಾಮಿ ದೇವೇಗೌಡರ ಕುಟುಂಬದ ಹಾಗೂ ವಿರುದ್ಧ ಟೀಕೆಯಲ್ಲಿ ಕಾಲಹರಣ ಮಾಡುತ್ತಿದೆ. ಜಿಲ್ಲೆಯಲ್ಲಿ ಸ್ಥಳೀಯ ನಾಯಕರನ್ನು ಕಡೆಗಣಿಸಿ, ಬೇರೆ ಜಿಲ್ಲೆಯಿಂದ ಬಂದ ಸಚಿವರನ್ನು ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ನೇಮಕ ಮಾಡಿರುವುದು ಕಾಂಗ್ರೆಸ್‌ನ ದ್ವಂದ್ವ ನಿಲುವನ್ನು ತೋರಿಸುತ್ತದೆ ಎಂದು ವ್ಯಂಗ್ಯವಾಡಿದರು. ಮುಂದಿನ ದಿನಗಳಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆಗಳು ಎದುರಾಗಲಿದ್ದು, ಪಕ್ಷದ 3 ಅಧಿಕಾರ ಕಾರ್ಯಕರ್ತರಿಗೆ ಕೊಡಿಸುವ 1 ದೃಷ್ಟಿಯಿಂದ ಈ ಸಮಾವೇಶದ ಮೂಲಕ ಎಲ್ಲ ನಾಯಕರು ಶಪಥ ಮತ್ತು ಪ್ರತಿಜ್ಞೆ ಮಾಡಬೇಕು. ಈಗಿನಿಂದಲೇ ಚುನಾವಣಾ ಸಿದ್ಧತೆ ಆರಂಭಿಸಬೇಕಿದ್ದು, ಈಗಾಗಲೇ ಒಂದು ಸುತ್ತಿನ ಜಿಲ್ಲಾ ಪ್ರವಾಸ ಮುಗಿಸಿದ್ದು, ಮುಂದಿನ ದಿನಗಳಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳಿಗೂ ಮತ್ತೆ ಪ್ರವಾಸ ಕೈಗೊಳ್ಳುವುದಾಗಿ ತಿಳಿಸಿದರು.

ವಾರ್ತಾ ಭಾರತಿ 24 Jan 2026 11:44 pm

ಯಾದಗಿರಿ | ‘ವಿಬಿ-ಜಿ ರಾಮ್ ಜಿ’ ಹೆಸರು ಕೈ ಬಿಡಲು ಆಗ್ರಹ

‘ಮನರೇಗಾ ಉಳಿಸಿ’ ಆಂದೋಲನ, ಉಪವಾಸ ಸತ್ಯಾಗ್ರಹ

ವಾರ್ತಾ ಭಾರತಿ 24 Jan 2026 11:43 pm

Donald Trump: ಕೆನಡಾ ವಿರುದ್ಧ ಡೊನಾಲ್ಡ್ ಟ್ರಂಪ್ ವಾಗ್ದಾಳಿ, ಶೇಕಡಾ 100 ರಷ್ಟು ತೆರಿಗೆ ವಿಧಿಸುವ ಸಾಧ್ಯತೆ

ಕೆನಡಾ ಮತ್ತು ಡೊನಾಲ್ಡ್ ಟ್ರಂಪ್ ಅವರ ಮಧ್ಯೆ ದೊಡ್ಡ ಮಟ್ಟದ ವಾಗ್ಯುದ್ಧ ನಡೆಯುತ್ತಾ ಇದ್ದು, ಎರಡೂ ದೇಶಗಳು ಪರಸ್ಪರ ಕೌಂಟರ್ ಕೊಡುತ್ತಿವೆ. ಒಂದೆಡೆ ಡೊನಾಲ್ಡ್ ಟ್ರಂಪ್ ಅವರ ನಿರ್ಧಾರ ಬೆಂಬಲಿಸದ ಕಾರಣ ಕೆನಡಾ ವಿರುದ್ಧ ಕ್ರಮಕ್ಕೆ ಟ್ರಂಪ್ ಅವರು ಮುಂದಾಗಿದ್ದಾರೆ. ಈ ಸಮಯದಲ್ಲಿ ಚೀನಾ ಜೊತೆಗೆ ಕೆನಡಾ ಹೊಸ ವ್ಯಾಪಾರ ಒಪ್ಪಂದ ಮಾಡಿಕೊಂಡಿದೆ ಎಂಬುದು ಕೂಡ ಡೊನಾಲ್ಡ್

ಒನ್ ಇ೦ಡಿಯ 24 Jan 2026 11:42 pm

ಬೀದರ್ ನಲ್ಲಿ ಕಾಂಗ್ರೆಸ್ ಪಕ್ಷದಿಂದ ನರೇಗಾ ಬಚಾವ್ ಪ್ರತಿಭಟನೆ

ಬೀದರ್, ಜ.24: ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಲ್ಲಿನ ಬದಲಾವಣೆ ವಿರೋಧಿಸಿ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ನಗರದಲ್ಲಿ ಶನಿವಾರ ಪ್ರತಿಭಟನೆ ನಡೆಸಲಾಯಿತು. ಇಲ್ಲಿನ ಶಿವನಗರದಲ್ಲಿರುವ ಕಾಂಗ್ರೆಸ್ ಕಚೇರಿಯಿಂದ ಜಿಲ್ಲಾಧಿಕಾರಿಗಳ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು. ತದನಂತರ ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲಾಯಿತು. ಪ್ರತಿಭಟನೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ ಅವರು ಮಾತನಾಡಿ, ಮನರೇಗಾ ಯೋಜನೆಯಿಂದ ಗಾಂಧೀಜಿ ಹೆಸರನ್ನು ತೆಗೆದುಹಾಕಿರುವುದು ಸರಿಯಲ್ಲ. ಮನರೇಗಾ ಯೋಜನೆ ಬದಲಾವಣೆಯು ಬಡವರ ಹಾಗೂ ಒಕ್ಕೂಟ ವ್ಯವಸ್ಥೆಯ ವಿರುದ್ಧದ ಕ್ರಮವಾಗಿದೆ ಎಂದು ಆರೋಪಿಸಿದರು. ಮನರೇಗಾ ಯೋಜನೆ ಮರುಸ್ಥಾಪಿಸುವವರೆಗೆ ಹಾಗೂ ಬಡವರ ಹಕ್ಕುಗಳಿಗಾಗಿ ಕಾಂಗ್ರೆಸ್ ಪಕ್ಷದ ಹೋರಾಟ ಮುಂದುವರಿಯಲಿದೆ ಎಂದು ಅವರು ತಿಳಿಸಿದರು. ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಗೆ ತಿದ್ದುಪಡಿ ಮಾಡಿದ ಕೇಂದ್ರ ಸರ್ಕಾರದ ಕ್ರಮವನ್ನು ತೀವ್ರವಾಗಿ ಖಂಡಿಸುತ್ತೇವೆ ಎಂದು ಸಮಿತಿ ತಿಳಿಸಿದೆ. ಈ ಸಂದರ್ಭದಲ್ಲಿ ಸಚಿವ ರಹೀಂ ಖಾನ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಸವರಾಜ್ ಜಾಬಶೆಟ್ಟಿ, ಮಾಜಿ ಸಂಸದ ನರಸಿಂಗರಾವ್ ಸೂರ್ಯವಂಶಿ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಅಮೃತರಾವ್ ಚಿಮಕೋಡೆ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಶಂಕರ್ ದೊಡ್ಡಿ ಹಾಗೂ ಸಂಜಯ್ ಜಾಗಿರದಾರ್ ಇತರರು ಉಪಸ್ಥಿತರಿದ್ದರು.

ವಾರ್ತಾ ಭಾರತಿ 24 Jan 2026 11:41 pm

ಐಪಿಎಲ್ ಮುನ್ನ ನೆಟ್ ಅಭ್ಯಾಸಕ್ಕೆ ಮರಳಿದ ಧೋನಿ

ರಾಂಚಿ, ಜ. 24: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2026ರ ಋತುವಿನ ಆರಂಭಕ್ಕೆ ಮುನ್ನ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ತನ್ನ ಸಿದ್ಧತೆಯನ್ನು ಆರಂಭಿಸಿದ್ದಾರೆ. ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಸಂಪೂರ್ಣವಾಗಿ ಪ್ಯಾಡ್ ಕಟ್ಟಿಕೊಂಡು ಬ್ಯಾಟಿಂಗ್ ಮಾಡುವ ವೀಡಿಯೊವೊಂದನ್ನು ಜಾರ್ಖಂಡ್ ರಾಜ್ಯ ಕ್ರಿಕೆಟ್ ಅಸೋಸಿಯೇಶನ್ (ಜೆಎಸ್‌ಸಿಎ) ತನ್ನ ಅಧಿಕೃತ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಹಂಚಿಕೊಂಡಿದೆ. 44 ವರ್ಷದ ಆಟಗಾರನ ವೀಡಿಯೊವನ್ನು ಹಾಕಿರುವ ಅಸೋಸಿಯೇಶನ್, ಧೋನಿ ನಮ್ಮ ಹೆಮ್ಮೆ ಎಂಬುದಾಗಿ ಬರೆದಿದೆ. ‘‘ನೋಡಿ, ಯಾರು ಬಂದಿದ್ದಾರೆ? ಜೆಎಸ್‌ಸಿಎಯ ಹೆಮ್ಮೆ: ಮಹೇಂದ್ರ ಸಿಂಗ್ ಧೋನಿ’’ ಎಂದು ಅದು ಹೇಳಿದೆ. ಭಾರತೀಯ ಕ್ರಿಕೆಟ್ ತಂಡ ಮತ್ತು ಜಾರ್ಖಂಡ್ ತಂಡದ ಮಾಜಿ ಬ್ಯಾಟರ್ ಸೌರಭ್ ತಿವಾರಿಯೊಂದಿಗೆ ಧೋನಿ ಲೋಕಾಭಿರಾಮವಾಗಿ ಹರಟುತ್ತಿರುವುದನ್ನೂ ವೀಡಿಯೊ ತೋರಿಸುತ್ತದೆ. ಧೋನಿ 2020ರಲ್ಲಿ ಅಂತರ್‌ರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. ಆದರೆ, ಐಪಿಎಲ್‌ನಲ್ಲಿ ಆಡುವುದನ್ನು ಮುಂದುವರಿಸಿದ್ದಾರೆ. ಈ ವರ್ಷ ಚೆನ್ನೈ ಸೂಪರ್ ಕಿಂಗ್ಸ್‌ನಲ್ಲಿ ಅವರ 17ನೇ ಋತುವಾಗಲಿದೆ.

ವಾರ್ತಾ ಭಾರತಿ 24 Jan 2026 11:38 pm

ಎಸ್‌ಐಆರ್ ಆತಂಕದಿಂದ ಪಶ್ಚಿಮ ಬಂಗಾಳದಲ್ಲಿ 110 ಜನರು ಮೃತಪಟ್ಟಿದ್ದಾರೆ: ಮಮತಾ ಬ್ಯಾನರ್ಜಿ

ಕೋಲ್ಕತಾ,ಜ.24: ರಾಜ್ಯದಲ್ಲಿ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಕುರಿತು ಆತಂಕದಿಂದಾಗಿ 110ಕ್ಕೂ ಅಧಿಕ ಜನರು ಮೃತಪಟ್ಟಿದ್ದಾರೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ. ಶುಕ್ರವಾರ ನೇತಾಜಿ ಸುಭಾಷ್ಚಂದ್ರ ಬೋಸ್ ಅವರ ಜನ್ಮದಿನದ ಪ್ರಯುಕ್ತ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ಮಮತಾ ಬ್ಯಾನರ್ಜಿ, ರಾಜ್ಯದಲ್ಲಿ ಪ್ರತಿ ದಿನ 3-4 ಜನರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಚುನಾವಣಾ ಆಯೋಗ ಮತ್ತು ಕೇಂದ್ರ ಸರಕಾರ ಇದರ ಹೊಣೆಯನ್ನು ಹೊತ್ತುಕೊಳ್ಳಬೇಕು ಎಂದು ಹೇಳಿದರು. ಚುನಾವಣಾ ಆಯೋಗದ ವಿರುದ್ಧ ಪ್ರಕರಣವನ್ನೇಕೆ ದಾಖಲಿಸಬಾರದು ಎಂದು ಅವರು ಪ್ರಶ್ನಿಸಿದರು. ಚುನಾವಣಾ ಆಯೋಗವು ಎಸ್‌ಐಆರ್ ಪ್ರಕ್ರಿಯೆ ಮೂಲಕ ಮತದಾರರಿಗೆ ಕಿರುಕುಳ ನೀಡುತ್ತದೆ ಮತ್ತು ಪ್ರಜಾಸತ್ತಾತ್ಮಕ ಹಕ್ಕುಗಳನ್ನು ಅಪಾಯದಲ್ಲಿ ಸಿಲುಕಿಸುತ್ತಿದೆ ಎಂದು ಮಮತಾ ಆರೋಪಿಸುತ್ತಲೇ ಬಂದಿದ್ದಾರೆ. ಇತ್ತೀಚಿನ ತಿಂಗಳುಗಳಲ್ಲಿ ಪಶ್ಚಿಮ ಬಂಗಾಳದಲ್ಲಿ ಹಲವಾರು ಬೂತ್ ಮಟ್ಟದ ಅಧಿಕಾರಿಗಳು ಎಸ್‌ಐಆರ್ ಕಾರ್ಯಭಾರದ ಒತ್ತಡದಿಂದಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಅಥವಾ ಅಸ್ವಸ್ಥಗೊಂಡು ಮೃತಪಟ್ಟಿದ್ದಾರೆ. ಅಕ್ಟೋಬರ್‌ನಲ್ಲಿ ತನ್ನ ಹೆಸರನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕುವ ಆತಂಕದಿಂದ 95ರ ವೃದ್ಧರೋರ್ವರು ಆತ್ಮಹತ್ಯೆ ಮಾಡಿಕೊಂಡಿದ್ದರು.

ವಾರ್ತಾ ಭಾರತಿ 24 Jan 2026 11:37 pm

ಅಂಡರ್-19 ಕ್ರಿಕೆಟ್ ವಿಶ್ವಕಪ್|ನ್ಯೂಝಿಲ್ಯಾಂಡ್ ವಿರುದ್ಧ ಭಾರತಕ್ಕೆ 7 ವಿಕೆಟ್ ಗೆಲುವು

ಹರಾರೆ, ಜ.24: ಆರ್.ಎಸ್. ಅಂಬರೀಷ್(4-29) ಅಮೋಘ ಬೌಲಿಂಗ್ ಹಾಗೂ ನಾಯಕ ಆಯುಷ್ ಮ್ಹಾತ್ರೆ ಬಿರುಸಿನ ಅರ್ಧಶತಕದ(53 ರನ್,27 ಎಸೆತ, 2 ಬೌಂಡರಿ,6 ಸಿಕ್ಸರ್) ನೆರವಿನಿಂದ ಭಾರತ ಕ್ರಿಕೆಟ್ ತಂಡವು ಅಂಡರ್-19 ಕ್ರಿಕೆಟ್ ವಿಶ್ವಕಪ್‌ನಲ್ಲಿ ಶನಿವಾರ ಆಡಿದ ತನ್ನ ಕೊನೆಯ ಗ್ರೂಪ್ ಪಂದ್ಯದಲ್ಲಿ ನ್ಯೂಝಿಲ್ಯಾಂಡ್ ತಂಡವನ್ನು ಏಳು ವಿಕೆಟ್‌ಗಳ ಅಂತರದಿಂದ ಮಣಿಸಿತು. ಭಾರತ ತಂಡವು ‘ಬಿ’ ಗುಂಪಿನಲ್ಲಿ ಆಡಿರುವ ಎಲ್ಲ ಮೂರೂ ಪಂದ್ಯಗಳಲ್ಲಿ ಜಯ ದಾಖಲಿಸಿ ಅಜೇಯ ದಾಖಲೆಯೊಂದಿಗೆ ಅಗ್ರ ಸ್ಥಾನಕ್ಕೇರಿದೆ. ಮೊದಲು ಫೀಲ್ಡಿಂಗ್ ಆಯ್ದುಕೊಂಡಿರುವ ಭಾರತ ತಂಡವು ಪವರ್‌ಪ್ಲೇ ನಲ್ಲಿ ನ್ಯೂಝಿಲ್ಯಾಂಡ್ ತಂಡವನ್ನು ಕಾಡಲಾರಂಭಿಸಿತು. ಮಳೆಯಿಂದಾಗಿ ಪಂದ್ಯ ನಿಂತಾಗ ಕಿವೀಸ್ 17 ರನ್‌ಗೆ 3 ವಿಕೆಟ್‌ಗಳನ್ನು ಕಳೆದುಕೊಂಡಿತು. ಮತ್ತೆ ಪಂದ್ಯ ಆರಂಭವಾದಾಗ ಇನಿಂಗ್ಸನ್ನು 37 ಓವರ್‌ಗಳಿಗೆ ಕಡಿತಗೊಳಿಸಲಾಯಿತು. ಕಿವೀಸ್ 69 ರನ್‌ಗೆ 7 ವಿಕೆಟ್ ಕಳೆದುಕೊಂಡಿತು. ಆಗ ಕಾಲುಮ್ ಸ್ಯಾಮ್ಸನ್(ಔಟಾಗದೆ 37)ಹಾಗೂ ಸೆಲ್ವಿನ್ ಸಂಜಯ್(28 ರನ್)ಎಂಟನೇ ವಿಕೆಟ್‌ಗೆ 53 ರನ್ ಜೊತೆಯಾಟ ನಡೆಸಿ ತಂಡವನ್ನು ಆಧರಿಸಿದರು. ಕಿವೀಸ್ 36.2 ಓವರ್‌ಗಳಲ್ಲಿ 135 ರನ್‌ಗೆ ಆಲೌಟಾಯಿತು. ಅಂಬರೀಶ್(4-29) ಹಾಗೂ ಹೆನಿಲ್ ಪಟೆಲ್(3-23) ಏಳು ವಿಕೆಟ್‌ಗಳನ್ನು ಹಂಚಿಕೊಂಡರು. ಗೆಲ್ಲಲು ಸುಲಭ ಸವಾಲು ಪಡೆದ ಭಾರತ ತಂಡವು ಎರಡನೇ ಓವರ್‌ನಲ್ಲಿ ಆರಂಭಿಕ ಆಟಗಾರ ಆ್ಯರೊನ್ ಜಾರ್ಜ್(7 ರನ್) ವಿಕೆಟನ್ನು ಕಳೆದುಕೊಂಡಿತು. ಮ್ಹಾತ್ರೆ ಹಾಗೂ ವೈಭವ್ ಸೂರ್ಯವಂಶಿ(40 ರನ್, 23 ಎಸೆತ, 2 ಬೌಂಡರಿ, 3 ಸಿಕ್ಸರ್) ಕೇವಲ 6.3 ಓವರ್‌ಗಳಲ್ಲಿ 76 ರನ್ ಕಲೆ ಹಾಕಿದರು. ಮ್ಹಾತ್ರೆ ಕೇವಲ 24 ಎಸೆತಗಳಲ್ಲಿ ಅರ್ಧಶತಕ ಪೂರೈಸಿ ತಂಡವನ್ನು ಗೆಲುವಿನ ದಡ ಸೇರಿಸಿದರು. ವೇದಾಂತ (ಔಟಾಗದೆ 17) ಗೆಲುವಿನ ರನ್ ದಾಖಲಿಸಿದರು. ಭಾರತವು ಉತ್ತಮ ರನ್‌ರೇಟ್‌ನೊಂದಿಗೆ ಸೂಪರ್ ಸಿಕ್ಸ್ ಹಂತ ಪ್ರವೇಶಿಸಿದೆ.

ವಾರ್ತಾ ಭಾರತಿ 24 Jan 2026 11:37 pm

ರಣಜಿ| ಕರ್ನಾಟಕ ವಿರುದ್ಧ ಮಧ್ಯಪ್ರದೇಶಕ್ಕೆ ಮುನ್ನಡೆ

ಆಲೂರ್, ಜ.24: ರಣಜಿ ಟ್ರೋಫಿ ಟೂರ್ನಿಯ ಎಲೈಟ್ ‘ಬಿ’ ಗುಂಪಿನ ಪಂದ್ಯದಲ್ಲಿ ಮಧ್ಯಪ್ರದೇಶ ತಂಡ ಆತಿಥೇಯ ಕರ್ನಾಟಕ ತಂಡದ ವಿರುದ್ಧ ಸಂಪೂರ್ಣ ಮೇಲುಗೈ ಸಾಧಿಸಿದೆ. ಮೂರನೇ ದಿನದಾಟವಾದ ಶನಿವಾರ 8 ವಿಕೆಟ್‌ಗಳ ನಷ್ಟಕ್ಕೆ 168 ರನ್‌ನಿಂದ ಬ್ಯಾಟಿಂಗ್ ಮುಂದುವರಿಸಿದ ಕರ್ನಾಟಕ ತಂಡ 191 ರನ್‌ಗೆ ಆಲೌಟಾಯಿತು. ಆರಂಭಿಕ ಬ್ಯಾಟರ್ ಕೆ.ವಿ. ಅನೀಶ್ 92 ರನ್(171 ಎಸೆತ, 9 ಬೌಂಡರಿ, 1 ಸಿಕ್ಸರ್)ಶತಕ ವಂಚಿತರಾದರು. ಸಾರಾಂಶ್ ಜೈನ್ (4-42)ಯಶಸ್ವಿ ಪ್ರದರ್ಶನ ನೀಡಿದರು. ಆರ್ಯನ್ ಪಾಂಡೆ(2-35)ಹಾಗೂ ಕುಲದೀಪ್ ಸೆನ್(2-45)ತಲಾ ಎರಡು ವಿಕೆಟ್‌ಗಳನ್ನು ಪಡೆದರು. ಮೊದಲ ಇನಿಂಗ್ಸ್‌ನಲ್ಲಿ 132 ರನ್ ಮುನ್ನಡೆ ಪಡೆದಿರುವ ಮಧ್ಯಪ್ರದೇಶ ತಂಡ ಮೂರನೇ ದಿನದಾಟದಂತ್ಯಕ್ಕೆ 6 ವಿಕೆಟ್‌ಗಳ ನಷ್ಟಕ್ಕೆ 204 ರನ್ ಗಳಿಸಿದ್ದು, ಒಟ್ಟು 336 ರನ್ ಮುನ್ನಡೆಯಲ್ಲಿದೆ. ಆರಂಭಿಕ ಬ್ಯಾಟರ್ ಹಿಮಾಂಶು ಮಂತ್ರಿ(89 ರನ್, 203 ಎಸೆತ, 4 ಬೌಂಡರಿ)ತಾಳ್ಮೆಯ ಬ್ಯಾಟಿಂಗ್‌ನಿಂದ ತಂಡದ ಮುನ್ನಡೆ ಹಿಗ್ಗಿಸಿದರು. ಶುಭಮ್ ಶರ್ಮಾ 32 ರನ್ ಗಳಿಸಿದರು. ಕರ್ನಾಟಕದ ಪರ ವಿದ್ಯಾಧರ ಪಾಟೀಲ್(3-39)ಯಶಸ್ವಿ ಪ್ರದರ್ಶನ ನೀಡಿದರೆ, ಶಿಖರ್ ಶೆಟ್ಟಿ(2-41)ಎರಡು ವಿಕೆಟ್ ಪಡೆದರು.

ವಾರ್ತಾ ಭಾರತಿ 24 Jan 2026 11:36 pm

ಸುರಪುರ | ಬೈಕ್ ಕಳವು ಆರೋಪಿಯ ಬಂಧನ, 57 ಬೈಕ್‌ಗಳ ವಶ: ಎಸ್ಪಿ ಪೃಥ್ವಿ ಶಂಕರ್

ಸುರಪುರ, ಜ. 24: ಕಳವು ಮಾಡಲಾದ 57 ಬೈಕ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಯಾದಗಿರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪೃಥ್ವಿಕ್ ಶಂಕರ್ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದಲ್ಲಿ ಬೈಕ್ ಕಳ್ಳತನ ಕುರಿತು ದಾಖಲಾಗಿದ್ದ ಪ್ರಕರಣದ ತನಿಖೆ ನಡೆಸಿದ ಸುರಪುರ ಪೊಲೀಸರು, ಹುಣಸಗಿ ಪಟ್ಟಣದ ಜನತಾ ಕಾಲನಿಯ ನಿವಾಸಿ ಕಟ್ಟಿಮನಿ (36) ಎಂಬ ಆರೋಪಿಯನ್ನು ಬಂಧಿಸಿ 57 ಬೈಕುಗಳನ್ನು ವಶಪಡಿಸಿಕೊಂಡಿದ್ದಾರೆ ಎಂದರು. ಜ. 11ರಂದು ಸತ್ಯಂಪೇಟೆ ನಿವಾಸಿ ನಿಂಗಪ್ಪ ಮಕಾಶಿ ಎಂಬವರು ತನ್ನ ಬೈಕ್ ಕಳ್ಳತನದ ಕುರಿತು ಸುರಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಆರಂಭಿಸಿದ್ದರು. ಆರೋಪಿಯನ್ನು ಪತ್ತೆ ಮಾಡಿ ವಿಚಾರಣೆ ನಡೆಸಿದಾಗ ಬೈಕ್ ಕಳವು ಮಾಡಿರುವ ಕುರಿತು ಮಾಹಿತಿ ನೀಡಿದ್ದಾನೆ. ಹೆಚ್ಚಿನ ವಿಚಾರಣೆ ನಡೆಸಿದಾಗ ಆರೋಪಿ ತನ್ನ ಇತರರೊಂದಿಗೆ ಸೇರಿ ಒಟ್ಟು 57 ಬೈಕುಗಳನ್ನು ಕಳ್ಳತನ ಮಾಡಿರುವ ಕುರಿತು ತಿಳಿಸಿದ ನಂತರ ಎಲ್ಲಾ ಬೈಕುಗಳನ್ನು ವಶಪಡಿಸಿಕೊಳ್ಳಲಾಗಿದೆ. ಈತನೊಂದಿಗೆ ಇನ್ನೂ ಆರು ಜನ ಸಹಚರರಿದ್ದು ಅವರಿಗಾಗಿ ಹುಡುಕಾಟ ನಡೆಸಲಾಗಿದೆ ಎಂದು ತಿಳಿಸಿದ್ದಾರೆ. ಈ ಆರೋಪಿಯು ಈ ಹಿಂದೆಯೂ ಕೂಡ ಬೇರೆ ಬೇರೆ ಕಡೆಗಳಲ್ಲಿ ಕಳ್ಳತನ ಮಾಡಿರುವ ಕುರಿತು ಮಾಹಿತಿ ತಿಳಿದು ಬಂದಿದೆ ಹೆಚ್ಚಿನ ವಿಚಾರಣೆಯನ್ನು ನಡೆಸಲಾಗುತ್ತಿದೆ ಎಂದು ಎಸ್ಪಿ ಹೇಳಿ ಹೇಳಿದರು. ಎಸ್ಪಿ ಪೃಥ್ವಿ ಶಂಕರ್ ಹಾಗೂ ಡಿವೈಎಸ್ಪಿ ಜಾವಿದ್ ಎನಂದರ್ ಮಾರ್ಗದರ್ಶನದಲ್ಲಿ ಸುರಪುರ ಠಾಣೆಯ ಪಿ ಐ ಉಮೇಶ ಎಂ ನೇತೃತ್ವದಲ್ಲಿ, ಪಿಎಸ್‌ಐ ಗಳಾದ ಸಿದ್ದಣ್ಣ ಯಡ್ರಾಮಿ, ಕೃಷ್ಣಾ ಸುಬೇದಾರ, ಹೆಚ್.ಸಿ ಗಳಾದ ಸಣ್ಣಕೆಪ್ಪ, ನಾಗರಾಜ, ಪಿಸಿ ಗಳಾದ ಮಲ್ಲಯ್ಯ, ಪ್ರಕಾಶ, ಹುಸೇನ್ ಭಾಷಾ, ಲಕ್ಷ್ಮಣ, ಜಗದೀಶ, ಹುಲಿಗೆಪ್ಪ,ಗೋವಿಂದ, ಆಂಜನೇಯ, ತಾಯಣ್ಣ, ಮಲಕಾರಿ ಹಾಗೂ ವಿಶೇಷವಾಗಿ ಯಾದಗಿರಿಯ ಬೆರಳಚ್ಚು ಘಟಕದ ಪಿಐ ರಮೇಶ ಕಾಂಬ್ಳೆ, ಜಿಲ್ಲಾ ಪೊಲೀಸ್ ಕಾರ್ಯಾಲಯದ ಎಆರ್‌ಎಸ್‌ಐ ಸುರೇಶ ತಂಡ ಕಾರ್ಯಾಚರಣೆಯಲ್ಲಿ ಭಾಗವಹಿಸಿತ್ತು. ಸುದ್ದಿಗೋಷ್ಠಿಯಲ್ಲಿ ಪೊಲೀಸ್ ಪೇದೆಗಳಾದ ಬಸವರಾಜ ಮುದಗಲ್, ಹುಲಿಗೆಪ್ಪ ಮತ್ತಿತರರು ಹಾಜರಿದ್ದರು.

ವಾರ್ತಾ ಭಾರತಿ 24 Jan 2026 11:36 pm

Delhi | ಬಿಜೆಪಿಯ ಉನ್ನತ ನಾಯಕರಿಗೆ ಸಂಬಂಧಿಸಿದ ಕಾರುಗಳಿಗೆ ನಕಲಿ ರಾಜತಾಂತ್ರಿಕ ಫಲಕಗಳ ಬಳಕೆ: ಮಹಿಳೆ ಬಂಧನ

ಬ್ರಿಕ್ಸ್‌ನಲ್ಲಿ ಭಾರತದ ರಾಯಭಾರಿಯಾಗಿ ಭಾಗಿ: ವರದಿ

ವಾರ್ತಾ ಭಾರತಿ 24 Jan 2026 11:34 pm

ಯಾದಗಿರಿ | ಸರಕಾರದ ವಿರುದ್ಧ ಮಾತನಾಡುವ ನೈತಿಕತೆ ಎಚ್‌ಡಿಕೆಗಿಲ್ಲ : ಡಾ.ಅಜಯ ಧರ್ಮಸಿಂಗ್

ಯಾದಗಿರಿ, ಜ.24: ರಾಜ್ಯ ಸರಕಾರದ ವಿರುದ್ಧ ಮಾತನಾಡುವ ಯಾವುದೇ ನೈತಿಕ ಹಕ್ಕು ಕೇಂದ್ರ ಸಚಿವ ಕುಮಾರಸ್ವಾಮಿ ಅವರಿಗೆ ಇಲ್ಲ ಎಂದು ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ಡಾ.ಅಜಯ ಧರ್ಮಸಿಂಗ್ ಟೀಕಿಸಿದ್ದಾರೆ. ನಗರದದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ 12 ವರ್ಷಗಳಿಂದ ಅಧಿಕಾರದಲ್ಲಿರುವ ನರೇಂದ್ರ ಮೋದಿ ಸರಕಾರ ರೈತರ ಪರವಾಗಿ ಒಂದೇ ಒಂದು ಪರಿಣಾಮಕಾರಿ ಯೋಜನೆ ಜಾರಿಗೊಳಿಸಿಲ್ಲ. ಬದಲಾಗಿ ಹೋರಾಟ ನಡೆಸಿದ ರೈತರ ಮೇಲೆ ದಬ್ಬಾಳಿಕೆ ನಡೆಸಿದೆ. ಇಂತಹ ಸರಕಾರದ ಕೇಂದ್ರ ಸಚಿವ ಕುಮಾರಸ್ವಾಮಿ ಅವರಿಗೆ ರೈತರ ಬಗ್ಗೆ ಮಾತನಾಡುವ ನೈತಿಕತೆಯೇ ಇಲ್ಲ. ಮೊದಲು ಅವರು ಕೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ, ಅನಂತರ ರಾಜ್ಯ ಸರ್ಕಾರದ ಬಗ್ಗೆ ಮಾತನಾಡಲಿ ಎಂದು ಟೀಕಿಸಿದರು. ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ರೈತರ ಪರವಾಗಿ ಸ್ಪಷ್ಟ ನಿಲುವು ತೆಗೆದುಕೊಂಡಿದ್ದಾರೆ. ರೈತರ ಹಿತ ಕಾಯುವ ಪಕ್ಷ ಕಾಂಗ್ರೆಸ್ ಮಾತ್ರ ಎಂಬುದನ್ನು ಕುಮಾರಸ್ವಾಮಿ ಅರಿಯಬೇಕೆಂದರು. ವಿಧಾನಸಭಾ ಅಧಿವೇಶನದಲ್ಲಿ ರಾಜ್ಯಪಾಲರ ನಡೆ ಕುರಿತು ಪ್ರತಿಕ್ರಿಯಿಸಿದ ಅವರು, ರಾಜ್ಯದ ಹಿತ ಕಾಯುವ ಬದಲು ಕೇಂದ್ರ ಸರ್ಕಾರದ ಕೈಗೊಂಬೆಯಂತೆ ರಾಜ್ಯಪಾಲರು ನಡೆದುಕೊಂಡಿದ್ದಾರೆ ಎಂದು ಆರೋಪಿಸಿದರು. ರಾಜ್ಯಪಾಲರು ಸಚಿವ ಸಂಪುಟ ಅಂಗೀಕರಿಸಿದ ನಿರ್ಣಯದಂತೆ ಸಿದ್ಧಪಡಿಸಿದ್ದ ಭಾಷಣವನ್ನು ಓದಲು ನಿರಾಕರಿಸಿದ್ದು, ಕೊನೆಯಲ್ಲಿ ರಾಷ್ಟ್ರಗೀತೆಗೆ ಅವಮಾನ ಮಾಡಿರುವುದು ಸಂವಿಧಾನ ಮತ್ತು ಪ್ರಜಾಪ್ರಭುತ್ವ ವಿರೋಧಿ ನಡೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ರಾಜ್ಯಪಾಲ ಹುದ್ದೆ ದಯಪಾಲಿಸಿದ್ದರೆಂಬ ಕಾರಣಕ್ಕಾಗಿ ಅವರು ಅಧಿವೇಶನಕ್ಕೆ ಅವಮಾನ ಮಾಡುವ ಮೂಲಕ ಕೇಂದ್ರ ಸರಕಾರದ ಋಣ ತೀರಿಸಿದ್ದಾರೆ ಎಂದು ಆರೋಪಿಸಿದರು. ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಗೆ ಹೆಚ್ಚುವರಿಯಾಗಿ 1,000 ಕೋಟಿ ರೂ. ಅನುದಾನ ನೀಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಮಂಡಳಿಗೆ ಒಟ್ಟು 6,000 ಕೋಟಿ ಅನುದಾನ ಲಭ್ಯವಾಗುವ ನಿರೀಕ್ಷೆ ಇದೆ. ಇದರಿಂದ ಕಲ್ಯಾಣ ಕರ್ನಾಟಕ ಭಾಗದ ಸಮಗ್ರ ಅಭಿವೃದ್ಧಿಗೆ ವೇಗ ಸಿಗಲಿದೆ ಎಂದು ಮಂಡಳಿ ಅಧ್ಯಕ್ಷ ಡಾ. ಅಜಯಸಿಂಗ್ ಧರ್ಮಸಿಂಗ್ ಹೇಳಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಭೀಮರಾಯ ಠಾಣಗುಂದಿ, ರಾಘವೇಂದ್ರ ಹಾಗಣಗೇರಾ ಇತರರು ಉಪಸ್ಥಿತರಿದ್ದರು.

ವಾರ್ತಾ ಭಾರತಿ 24 Jan 2026 11:31 pm

ಒಡಿಶಾ| ಗಣರಾಜ್ಯೋತ್ಸವದಂದು ಮಾಂಸ, ಮೀನು, ಮೊಟ್ಟೆ ಮಾರಾಟ ನಿಷೇಧ!

ಭುವನೇಶ್ವರ, ಜ. 24: ಗಣರಾಜ್ಯೋತ್ಸವ ದಿನವಾದ ಸೋಮವಾರ ಮಾಂಸ, ಕೋಳಿ, ಮೀನು ಮತ್ತು ಮೊಟ್ಟೆ ಮಾರಾಟವನ್ನು ನಿಷೇಧಿಸಿ ಒಡಿಶಾದ ಕೊರಾಪುಟ್ ಜಿಲ್ಲಾಡಳಿತವು ಶನಿವಾರ ಆದೇಶ ಹೊರಡಿಸಿದೆ ಹಾಗೂ ‘‘ಗೌರವದ ದ್ಯೋತಕವಾಗಿ’’ ಆ ದಿನ ಸಸ್ಯಾಹಾರ ಸೇವಿಸುವಂತೆ ಜನರಿಗೆ ಸೂಚಿಸಿದೆ. ‘‘ರಾಷ್ಟ್ರೀಯ ಹಬ್ಬವನ್ನು ಏಕರೀತಿಯಲ್ಲಿ ಆಚರಿಸುವುದಕ್ಕಾಗಿ’’ ಜಿಲ್ಲಾಧಿಕಾರಿ ಮನೋಜ್ ಸತ್ಯಬಾನ್ ಮಹಾಜನ್ ಕ್ಷೇತ್ರಾಭಿವೃದ್ಧಿ ಅಧಿಕಾರಿಗಳು, ತಹಶೀಲ್ದಾರರು ಮತ್ತು ಕಾರ್ಯಕಾರಿ ಅಧಿಕಾರಿಗಳಿಗೆ ನಿರ್ದೇಶನಗಳನ್ನು ಕಳುಹಿಸಿದ್ದಾರೆ. ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ನಿಷೇಧವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವಂತೆ ನಿರ್ದೇಶನವು ಅಧಿಕಾರಿಗಳಿಗೆ ಸೂಚಿಸುತ್ತದೆ. ಕೊರಾಪುಟ್ ಜಿಲ್ಲಾಧಿಕಾರಿಯ ಈ ಆದೇಶವು ಸಂವಿಧಾನದ 14 ಮತ್ತು 15ನೇ ವಿಧಿಗಳನ್ನು ಉಲ್ಲಂಘಿಸುತ್ತದೆ ಎಂದು ವಕೀಲ ಸತ್ಯವಾದಿ ಮೊಹಾಪಾತ್ರ ಹೇಳುತ್ತಾರೆ. ಈ ವಿಧಿಗಳು ಧರ್ಮದ ಆಧಾರದಲ್ಲಿ ತಾರತಮ್ಯವನ್ನು ನಿಷೇಧಿಸುತ್ತವೆ ಮತ್ತು ಸಮಾನತೆಯನ್ನು ಖಾತರಿಪಡಿಸುತ್ತವೆ ಎಂದು ಅವರು ಹೇಳಿದ್ದಾರೆ. ‘‘ಗಣರಾಜ್ಯೋತ್ಸವವು ರಾಷ್ಟ್ರೀಯ ಹಬ್ಬವಾಗಿದೆ, ಅದು ಧಾರ್ಮಿಕ ಹಬ್ಬವಲ್ಲ’’ ಎಂದು ಹೇಳಿದ ಅವರು, ಸಾಂವಿಧಾನಿಕ ಮೌಲ್ಯಗಳ ಆಚರಣೆಯ ವೇಳೆ ಆಹಾರ ಆಯ್ಕೆಗಳನ್ನು ಜನರ ಮೇಲೆ ಯಾಕೆ ಹೇರಬೇಕು ಎಂದು ಪ್ರಶ್ನಿಸಿದರು.

ವಾರ್ತಾ ಭಾರತಿ 24 Jan 2026 11:30 pm

ರಾಮಕುಂಜ: ತಂದೆ - ಮಗನ ನಡುವೆ ಜಗಳ; ಅಪ್ರಾಪ್ತ ವಯಸ್ಸಿನ ಮಗ ಮೃತ್ಯು, ತಂದೆಗೆ ಗಾಯ

ಕಡಬ: ತಂದೆ ಮತ್ತು ಅಪ್ರಾಪ್ತ ವಯಸ್ಸಿನ ಮಗನ ನಡುವಿನ ಜಗಳ ನಡೆದು ಮಗನ ಸಾವಿನಲ್ಲಿ ಅಂತ್ಯಗೊಂಡ ದಾರುಣ ಘಟನೆ ಕಡಬ ಠಾಣಾ ವ್ಯಾಪ್ತಿಯ ರಾಮಕುಂಜ ಗ್ರಾಮದ ಪಾದೆ ಎಂಬಲ್ಲಿ ಶನಿವಾರ ಸಂಜೆ ನಡೆದಿದೆ. ರಾಮಕುಂಜ ಗ್ರಾಮದ ಪಾದೆ ನಿವಾಸಿ ವಸಂತ ಅಮೀನ್ (60) ಮತ್ತು ಅವರ ಪುತ್ರ ಮೋಕ್ಷ (17) ನಡುವೆ ಶನಿವಾರ ಸಂಜೆ ಜಗಳವಾಗಿದ್ದು, ಈ ವೇಳೆ ಮೋಕ್ಷ ಗುಂಡೇಟು ತಗುಲಿ ಮೃತಪಟ್ಟಿದ್ದಾನೆ. ಮೂಲತಃ ಪುತ್ತೂರು ತಾಲೂಕಿನ ನಿಡ್ಪಳ್ಳಿ ಗ್ರಾಮದ ನುಳಿಯಾಳು ನಿವಾಸಿಯಾಗಿರುವ ವಸಂತ್‌ ರಿಗೆ ಪೆರ್ಲದ ಜಯಶ್ರೀ ಎಂಬವರೊಂದಿಗೆ ವಿವಾಹವಾಗಿತ್ತು. ಇವರಿಗೆ ಮೋಕ್ಷ ಏಕೈಕ ಪುತ್ರನಾಗಿದ್ದಾರೆ. ರಾಮಕುಂಜ ಗ್ರಾಮದ ಪಾದೆ ಎಂಬಲ್ಲಿ ಜಾಗ ಖರೀದಿಸಿದ್ದ ವಸಂತ್ ಇಲ್ಲೇ ವಾಸವಿದ್ದರು. ಕೆಲ ದಿನಗಳಿಂದ ಪತಿ ಮತ್ತು ಪತ್ನಿಯ ನಡುವೆ ಆಸ್ತಿ ವಿಚಾರವಾಗಿ ಜಗಳವಾಗಿದ್ದು, ಒಂದು ತಿಂಗಳ ಹಿಂದೆ ಪತ್ನಿ ತವರು ಮನೆಗೆ ತೆರಳಿದ್ದರು ಎನ್ನಲಾಗಿದೆ. ತಂದೆ ಮತ್ತು ಮಗ ಪಾದೆಯ ಮನೆಯಲ್ಲಿ ವಾಸವಿದ್ದು, ಶನಿವಾರ ಸಂಜೆ ಇವರೊಳಗೆ ಅದ್ಯಾವುದೋ ವಿಷಯಕ್ಕೆ ಜಗಳ ಉಂಟಾಗಿದೆ. ಈ ವೇಳೆ ತಂದೆ ವಸಂತ ಅಮೀನ್‌ರಿಗೆ ಚೂರಿ ಇರಿತದ ಗಂಭೀರ ಗಾಯಗಳಾಗಿವೆ. ಮಗ ಮೋಕ್ಷ ಮುಖಕ್ಕೆ ಗುಂಡೇಟು ತಗುಲಿ ಮೃತಪಟ್ಟಿದ್ದಾರೆ. ಈ ಮಧ್ಯೆ ತಂದೆಯೇ ಮಗನಿಗೆ ಗುಂಡಿಕ್ಕಿ ಸಾಯಿಸಿದ್ದಾರೆ ಎಂದು ಆರೋಪಿಸಿ ವಸಂತ್ ಅಮೀನ್‌ರ ಪತ್ನಿ ಜಯಶ್ರೀ ಪೊಲೀಸ್ ದೂರು ನೀಡಿದ್ದು, ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿರುವ ವಸಂತ ಅಮೀನ್‌ರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಯಾವ ಕಾರಣಕ್ಕಾಗಿ ಜಗಳ ನಡೆದಿದೆ ಎನ್ನುವುದು ಪೊಲೀಸ್ ತನಿಖೆಯಿಂದ ತಿಳಿದು ಬರಬೇಕಿದೆ. ಸ್ಥಳಕ್ಕೆ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಅನಿಲ್ ಕುಮಾರ್ ಭೂಮರೆಡ್ಡಿ, ಬೆಳ್ತಂಗಡಿ ಉಪ ವಿಭಾಗದ ಡಿವೈಎಸ್ಪಿ ರೋಹಿಣಿ, ಉಪ್ಪಿನಂಗಡಿ ವೃತ್ತ ನಿರೀಕ್ಷಕರಾದ ನಾಗರಾಜ್, ಕಡಬ ಠಾಣಾ ಪೊಲೀಸ್ ಉಪ ನಿರೀಕ್ಷಕರಾದ ಜಂಬೂರಾಜ್ ಮಹಾಜನ್, ಅಪರಾಧ ಸ್ಥಳ ತನಿಖಾಧಿಕಾರಿ ಅರ್ಪಿತಾ ಮತ್ತು ಕಾವ್ಯ ಸೇರಿದಂತೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತಂದೆಗೆ ಚೂರಿಯಿಂದ ಇರಿದು ಮಗ ಆತ್ಮಹತ್ಯೆ? ಕುಟುಂಬ ಕಲಹದ ಹಿನ್ನೆಲೆಯಲ್ಲಿ ಮೋಕ್ಷ ತನ್ನ ತಂದೆ ವಸಂತ ಅಮೀನ್‌ರ ಹೊಟ್ಟೆಗೆ ಚೂರಿಯಿಂದ ಇರಿದು ಬಳಿಕ ಮನೆಯಲ್ಲಿದ್ದ ಬಂದೂಕಿನಿಂದ ಗುಂಡು ಹಾರಿಸಿಕೊಂಡು ಮೃತಪಟ್ಟಿದ್ದಾನೆ ಎಂದು ಕಡಬ ಠಾಣಾ ಪೊಲೀಸರು ತನಿಖೆಯ ಪ್ರಾಥಮಿಕ ಮಾಹಿತಿಯಲ್ಲಿ ತಿಳಿಸಿದ್ದಾರೆ.    

ವಾರ್ತಾ ಭಾರತಿ 24 Jan 2026 11:26 pm

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ: ಒತ್ತಡ, ಆತಂಕದಲ್ಲಿ ಪ್ರಾಣ ಕಳೆದುಕೊಂಡವರೆಷ್ಟು?

ಪಶ್ಚಿಮ ಬಂಗಾಳದಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಿಂದ ಉಂಟಾಗಿರುವ ಆತಂಕದಿಂದಾಗಿ ರಾಜ್ಯದಲ್ಲಿ 110ಕ್ಕೂ ಹೆಚ್ಚು ಜನರು ಸಾವಿಗೀಡಾಗಿದ್ದಾರೆ. ಪ್ರತಿದಿನ ಮೂರರಿಂದ ನಾಲ್ಕು ಜನರು ಆತ್ಮಹತ್ಯೆಯಿಂದ ಸಾಯುತ್ತಿದ್ದಾರೆ. ಈ ಸಾವುಗಳಿಗೆ ಚುನಾವಣಾ ಆಯೋಗ ಮತ್ತು ಕೇಂದ್ರ ಸರ್ಕಾರ ಹೊಣೆ ಹೊತ್ತುಕೊಳ್ಳಬೇಕು ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ. ಇತ್ತೀಚಿನ ತಿಂಗಳುಗಳಲ್ಲಿ ಪಶ್ಚಿಮ ಬಂಗಾಳದಲ್ಲಿ ಹಲವಾರು ಬೂತ್ ಮಟ್ಟದ ಅಧಿಕಾರಿಗಳು (BLO) SIR ಪ್ರಕ್ರಿಯೆಯ ಸಮಯದಲ್ಲಿ ಕೆಲಸದ ಒತ್ತಡದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇನ್ನು ಕೆಲವರು ಅನಾರೋಗ್ಯದಿಂದ ಸಾವನ್ನಪ್ಪಿದ್ದಾರೆ ಎಂದು ಆರೋಪಿಸಲಾಗಿದೆ. ಅಕ್ಟೋಬರ್‌ನಲ್ಲಿ ನಡೆದ ಒಂದು ಪ್ರಕರಣದಲ್ಲಿ, 95 ವರ್ಷದ ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿದೆ. ಮತದಾರರ ಪಟ್ಟಿಯಿಂದ ಹೊರಗಿಡಲಾಗುತ್ತದೆ ಎಂಬ ಆತಂಕದಿಂದಲೇ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮೃತರ ಕುಟುಂಬ ಹೇಳಿತ್ತು. ನವೆಂಬರ್‌ನಲ್ಲಿ ಮಮತಾ ಬ್ಯಾನರ್ಜಿ ಅವರು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರಿಗೆ ಬರೆದ ಪತ್ರದಲ್ಲಿ, ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆ “ಆತಂಕಕಾರಿ” ಮತ್ತು “ಅಪಾಯಕಾರಿ” ಹಂತವನ್ನು ತಲುಪಿದೆ ಎಂದು ಹೇಳಿದ್ದಾರೆ. ಈಗ ನಡೆಯುತ್ತಿರುವ ವಿಧಾನವು ಸರಿಯಾದ ಯೋಜನೆಯಿಂದ ಕೂಡಿಲ್ಲ. ಅದು ಗೊಂದಲಮಯವಾಗಿದ್ದು ನಾಗರಿಕರು ಮತ್ತು ಅಧಿಕಾರಿಗಳನ್ನು ಅಪಾಯಕ್ಕೆ ಸಿಲುಕಿಸಿದೆ ಎಂದು ಅವರು ಉಲ್ಲೇಖಿಸಿದ್ದರು. ► ಏನಿದು SIR? ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ಅಥವಾ SIR ಮತದಾರರ ಪಟ್ಟಿಯ ನಿಖರತೆಯನ್ನು ಖಚಿತಪಡಿಸಿಕೊಳ್ಳಲು ಚುನಾವಣಾ ಆಯೋಗ ನಡೆಸುವ ದೊಡ್ಡ ಪ್ರಮಾಣದ ಮನೆಮನೆ ತಪಾಸಣೆಯ ಪ್ರಕ್ರಿಯೆಯಾಗಿದೆ. ಚುನಾವಣಾ ಆಯೋಗದ ಪ್ರಕಾರ, ಈ ಕಾರ್ಯದ ಪ್ರಾಥಮಿಕ ಉದ್ದೇಶ ದೋಷರಹಿತ ಮತದಾರರ ಪಟ್ಟಿಯನ್ನು ತಯಾರಿಸುವುದು. ಅಂದರೆ ಮತದಾರರ ಪಟ್ಟಿಯಲ್ಲಿ ಪ್ರತಿಯೊಬ್ಬ ಅರ್ಹ ನಾಗರಿಕನ ಹೆಸರು ಸರಿಯಾಗಿ ನಮೂದಾಗಿರುವುದನ್ನು ಖಚಿತಪಡಿಸಿಕೊಳ್ಳುವುದು ಮತ್ತು ಯಾವುದೇ ಅನರ್ಹ ಅಥವಾ ನಕಲಿ ಹೆಸರುಗಳು ಇರದಂತೆ ನೋಡಿಕೊಳ್ಳುವುದು. ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ (SIR) ಕಾರ್ಯಕ್ಕಾಗಿ ಬೂತ್ ಮಟ್ಟದ ಅಧಿಕಾರಿಗಳನ್ನು (BLO) ನಿಯೋಜಿಸಲಾಗುತ್ತದೆ. ಇವರಿಗೆ ಕಟ್ಟುನಿಟ್ಟಾದ ಡೆಡ್‌ಲೈನ್ ನೀಡಲಾಗಿದ್ದು, ಅದನ್ನು ಪೂರೈಸಲಾಗದೆ ಭಾರೀ ಒತ್ತಡ ಅನುಭವಿಸುತ್ತಿದ್ದಾರೆ. ಕೆಲಸದ ಒತ್ತಡದಿಂದ BLOಗಳು ಸಾವಿಗೀಡಾಗಿರುವ ಪ್ರಕರಣಗಳು ಆಗಾಗ್ಗೆ ವರದಿಯಾಗುತ್ತಿವೆ. ► BLOಗಳು ಯಾರು? BLOಗಳು ಸ್ಥಳೀಯ ಸರ್ಕಾರ ಅಥವಾ ಅರೆ ಸರ್ಕಾರಿ ನೌಕರರು. ಅವರು ಆ ಪ್ರದೇಶದ ಮತದಾರರನ್ನು ಚೆನ್ನಾಗಿ ಬಲ್ಲವರು. ಸಾಮಾನ್ಯವಾಗಿ ಅವರು ಅದೇ ಪ್ರದೇಶದಲ್ಲಿ ವಾಸಿಸುತ್ತಾರೆ. ಅವರ ಮುಖ್ಯ ಕರ್ತವ್ಯ ತಮ್ಮ ವ್ಯಾಪ್ತಿಯಲ್ಲಿನ ಮತದಾರರ ಪಟ್ಟಿಯನ್ನು ನವೀಕರಿಸುವುದಾಗಿದೆ. ಜನತಾ ಪ್ರಾತಿನಿಧ್ಯ ಕಾಯ್ದೆ, 1950ರ ಸೆಕ್ಷನ್ 13ಬಿ(2) ಅಡಿಯಲ್ಲಿ, ಸರ್ಕಾರಿ ಶಾಲೆಗಳು, ಕಚೇರಿಗಳು ಮತ್ತು ಇತರ ಸ್ಥಳೀಯ ಸಂಸ್ಥೆಗಳಲ್ಲಿ ಕೆಲಸ ಮಾಡುವ ಸಿಬ್ಬಂದಿಯನ್ನು BLOಗಳಾಗಿ ನಿಯೋಜಿಸಲಾಗುತ್ತದೆ. ► BLOಗಳ ಜವಾಬ್ದಾರಿ ಏನು? BLOಗಳು ಭಾರತದ ಚುನಾವಣಾ ಆಯೋಗದ ತಳಮಟ್ಟದ ಪ್ರತಿನಿಧಿಗಳಾಗಿದ್ದಾರೆ. ಅವರ ಜವಾಬ್ದಾರಿಗಳು ಇಂತಿವೆ: ನಿಖರವಾದ, ದೋಷರಹಿತ ಮತದಾರರ ಪಟ್ಟಿಯನ್ನು ಸಿದ್ಧಪಡಿಸುವುದು ಮತದಾರರ ವಿವರಗಳನ್ನು ದಾಖಲಿಸುವುದು, ಪರಿಶೀಲಿಸುವುದು ಮತ್ತು ನವೀಕರಿಸುವುದು ಮತದಾರರ ಹೆಸರು ಸೇರಿಸಲು, ಅಳಿಸಲು ಅಥವಾ ತಿದ್ದುಪಡಿ ಮಾಡಲು ಅಗತ್ಯ ಫಾರ್ಮ್‌ಗಳನ್ನು ಒದಗಿಸುವುದು ಅರ್ಹ ನಾಗರಿಕರು ಮತದಾರರಾಗಿ ನೋಂದಾಯಿಸಿಕೊಳ್ಳಲು ಮತ್ತು ಮತದಾರರ ಗುರುತಿನ ಚೀಟಿ ಪಡೆಯಲು ಸಹಾಯ ಮಾಡುವುದು ಭೌತಿಕ ಪರಿಶೀಲನೆ ನಡೆಸಿ ಚುನಾವಣಾ ನೋಂದಣಿ ಅಧಿಕಾರಿ (ERO)ಗೆ ವರದಿಗಳನ್ನು ಸಲ್ಲಿಸುವುದು ಪ್ರಕ್ರಿಯೆಯ ನಂತರ ತೆಗೆದುಹಾಕಬೇಕಾದ ಮೃತ, ಸ್ಥಳಾಂತರಗೊಂಡ ಅಥವಾ ನಕಲಿ ಮತದಾರರನ್ನು ಗುರುತಿಸಲು BLOಗಳು ಸ್ಥಳೀಯರು ಮತ್ತು ರಾಜಕೀಯ ಪಕ್ಷದ ಪ್ರತಿನಿಧಿಗಳೊಂದಿಗೆ ಸಂವಹನ ನಡೆಸುತ್ತಾರೆ. ಇದರಿಂದ ಅವರ ಕೆಲಸ ಇನ್ನಷ್ಟು ಕಷ್ಟಕರವಾಗುತ್ತದೆ. ► ಹೆಚ್ಚುವರಿ ಸಿಬ್ಬಂದಿ ನಿಯೋಜಿಸಲು ಸುಪ್ರೀಂಕೋರ್ಟ್ ನಿರ್ದೇಶನ ಮತದಾರರ ಪಟ್ಟಿಯ ಸಮಗ್ರ ಪರಿಷ್ಕರಣೆ ಕಾರ್ಯಕ್ಕೆ ನಿಯೋಜಿಸಲಾದ BLOಗಳ ಕೆಲಸದ ಒತ್ತಡ ಕಡಿಮೆಗೊಳಿಸಲು ಹೆಚ್ಚುವರಿ ಸಿಬ್ಬಂದಿ ನಿಯೋಜಿಸುವ ಬಗ್ಗೆ ಪರಿಗಣಿಸಬೇಕು ಎಂದು ಸುಪ್ರೀಂಕೋರ್ಟ್ ರಾಜ್ಯ ಸರ್ಕಾರಗಳಿಗೆ ನಿರ್ದೇಶಿಸಿದೆ. ಕಳೆದ ಡಿಸೆಂಬರ್‌ನಲ್ಲಿ ನಿಗದಿತ ಅವಧಿಯಲ್ಲಿ ಮುಗಿಸಬೇಕಾದ SIR ಪ್ರಕ್ರಿಯೆಯಿಂದ BLOಗಳ ಮೇಲೆ ಕೆಲಸದ ಒತ್ತಡ ಹೆಚ್ಚಾಗಿದೆ ಎಂದು ನಟ ವಿಜಯ್ ಅವರ ತಮಿಳಗ ವೆಟ್ರಿ ಕಳಗಂ (TVK) ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು. ಈ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಮತ್ತು ನ್ಯಾಯಮೂರ್ತಿ ಜಾಯ್‌ಮಾಲ್ಯ ಬಾಗ್ಚಿ ಅವರ ಪೀಠ, BLOಗಳ ಕೆಲಸದ ಒತ್ತಡ ಕಡಿಮೆ ಮಾಡಲು ಹೆಚ್ಚುವರಿ ಸಿಬ್ಬಂದಿ ನಿಯೋಜಿಸುವ ನಿಟ್ಟಿನಲ್ಲಿ ರಾಜ್ಯಗಳು ಕ್ರಮ ಕೈಗೊಳ್ಳಬಹುದು ಎಂದು ಸೂಚಿಸಿತು. ►ಕೆಲಸದ ಒತ್ತಡದಿಂದ BLO ಆತ್ಮಹತ್ಯೆ/ಸಾವು ಪ್ರಕರಣಗಳು ಪಶ್ಚಿಮ ಬಂಗಾಳದ ಬಂಕುರಾ ಜಿಲ್ಲೆಯಲ್ಲಿ 2025 ಡಿಸೆಂಬರ್ 28ರಂದು BLO ಶವವಾಗಿ ಪತ್ತೆಯಾಗಿದ್ದರು. ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ಸಂಬಂಧಿತ ಕೆಲಸದ ಒತ್ತಡವೇ ಇದಕ್ಕೆ ಕಾರಣ ಎಂದು ಆರೋಪಿಸಲಾಗಿತ್ತು. 2025 ನವೆಂಬರ್ 15ರಂದು ಕೇರಳದ ಕಣ್ಣೂರು ಜಿಲ್ಲೆಯಲ್ಲಿ 41 ವರ್ಷದ ಅನೀಶ್ ಜಾರ್ಜ್ ಎಂಬ BLO ಆತ್ಮಹತ್ಯೆ ಮಾಡಿಕೊಂಡಿದ್ದರು. ಶಾಲಾ ಅಟೆಂಡೆಂಟ್ ಆಗಿದ್ದ ಅವರು SIR ಕೆಲಸದ ಒತ್ತಡದಿಂದ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಹೇಳಲಾಗಿದೆ. ಅವರ ಸಾವಿನ ಹಿನ್ನೆಲೆಯಲ್ಲಿ ನವೆಂಬರ್ 17ರಂದು ಕೇರಳದ BLOಗಳು ಮುಷ್ಕರ ಹೂಡಿದ್ದರು. ಡಿಸೆಂಬರ್‌ನಲ್ಲಿ ಉತ್ತರ ಪ್ರದೇಶದ ಮೊರಾದಾಬಾದ್‌ನಲ್ಲಿ SIR ಕೆಲಸದ ಒತ್ತಡದಿಂದ BLO ಸರ್ವೇಶ್ ಸಿಂಗ್ (46) ಆತ್ಮಹತ್ಯೆ ಮಾಡಿಕೊಂಡಿದ್ದರು. ಸಹಾಯಕ ಶಿಕ್ಷಕರಾಗಿದ್ದ ಅವರು ಆತ್ಮಹತ್ಯೆಗೂ ಮುನ್ನ ದಾಖಲಿಸಿದ ವೀಡಿಯೊದಲ್ಲಿ ಕಳೆದ 20 ದಿನಗಳಿಂದ ನಿದ್ರೆ ಇಲ್ಲದೆ ಕೆಲಸ ಮಾಡುತ್ತಿದ್ದೇನೆ ಎಂದು ಕಣ್ಣೀರು ಹಾಕಿದ್ದರು. ಕಳೆದ ವರ್ಷ ನವೆಂಬರ್ ಕೊನೆಯ ವಾರದಲ್ಲಿ ರಾಜಸ್ಥಾನದ ಧೋಲ್ಪುರ್‌ನಲ್ಲಿ 42 ವರ್ಷದ ಅನುಜ್ ಗಾರ್ಗ್ ಎಂಬ BLO ಕುಸಿದು ಬಿದ್ದು ಸಾವನ್ನಪ್ಪಿದ್ದರು. ಉತ್ತರ ಪ್ರದೇಶದ ನೆಹರು ನಗರದಲ್ಲಿ BLO ಆಗಿದ್ದ 58 ವರ್ಷದ ಲಾಲ್ ಮೋಹನ್ ಸಿಂಗ್ ಎಂಬವರು SIR ಕೆಲಸದ ಒತ್ತಡದಿಂದ ಸಾವಿಗೀಡಾಗಿದ್ದರು. ನವೆಂಬರ್ 25ರಂದು ಉತ್ತರ ಪ್ರದೇಶದ ಗೊಂಡಾ ಜಿಲ್ಲೆಯಲ್ಲಿ ಸಹಾಯಕ ಶಿಕ್ಷಕರಾಗಿದ್ದ BLO ವಿಪಿನ್ ಯಾದವ್ ಆತ್ಮಹತ್ಯೆ ಮಾಡಿಕೊಂಡಿದ್ದರು. ಮಧ್ಯಪ್ರದೇಶದ ರಾಯ್ಸೆನ್ ಮತ್ತು ದಾಮೋಹ್ ಜಿಲ್ಲೆಗಳಲ್ಲಿ SIR ಕಾರ್ಯದಲ್ಲಿ ತೊಡಗಿದ್ದ ಇಬ್ಬರು ಶಿಕ್ಷಕರು ಅನಾರೋಗ್ಯದಿಂದ ಸಾವಿಗೀಡಾಗಿದ್ದರು. 2026 ಜನವರಿ 13ರಂದು ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದಲ್ಲಿ ಸರ್ಕಾರಿ ಶಾಲಾ ಶಿಕ್ಷಕರಾಗಿದ್ದ ಧನಂಜಯ (50) ಎಂಬ BLO ಆತ್ಮಹತ್ಯೆಗೆ ಶರಣಾಗಿದ್ದರು. ► ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಕ್ಕೆ ದೂರು ಹಲವಾರು ರಾಜ್ಯಗಳಲ್ಲಿ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ ವೇಳೆ BLOಗಳು ಮತ್ತು ಇತರ ಚುನಾವಣಾ ಅಧಿಕಾರಿಗಳ ಮೇಲೆ ಅಮಾನವೀಯ ಕೆಲಸದ ಹೊರೆ ಮತ್ತು ಬಲವಂತದ ಒತ್ತಡ ಹೇರಲಾಗಿದೆ. ಇದರ ಪರಿಣಾಮವಾಗಿ ಹಲವರು ಹೃದಯಾಘಾತದಿಂದ ಅಥವಾ ಕುಸಿದು ಬಿದ್ದು ಸಾವಿಗೀಡಾಗಿದ್ದಾರೆ ಎಂದು 2025 ನವೆಂಬರ್ 25ರಂದು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಕ್ಕೆ ದೂರು ಸಲ್ಲಿಸಲಾಗಿದೆ. ಮುಂಬೈ ಮೂಲದ ವಕೀಲ ಹಿತೇಂದ್ರ ಡಿ. ಗಾಂಧಿ ಈ ದೂರು ಸಲ್ಲಿಸಿದ್ದರು. ಗುಜರಾತ್, ಮಧ್ಯಪ್ರದೇಶ, ಪಶ್ಚಿಮ ಬಂಗಾಳ, ಕೇರಳ ಮತ್ತು ಇತರ ರಾಜ್ಯಗಳಲ್ಲಿ BLOಗಳ ಸಾವಿನ ಪ್ರಕರಣಗಳು ವರದಿಯಾಗುತ್ತಿವೆ. ಆರು ರಾಜ್ಯಗಳಲ್ಲಿ ಕನಿಷ್ಠ 15 BLOಗಳು 19 ದಿನಗಳಲ್ಲಿ ಸಾವಿಗೀಡಾಗಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ► BLO ಸಂಭಾವನೆ ದ್ವಿಗುಣ ಚುನಾವಣಾ ಆಯೋಗವು ಬೂತ್ ಮಟ್ಟದ ಅಧಿಕಾರಿಗಳ (BLO) ಸಂಭಾವನೆಯನ್ನು ದ್ವಿಗುಣಗೊಳಿಸಿದೆ. ಜೊತೆಗೆ ಮತದಾರರ ಪಟ್ಟಿಗಳ ತಯಾರಿಕೆ ಮತ್ತು ಪರಿಷ್ಕರಣೆಯಲ್ಲಿ ತೊಡಗಿರುವ BLO ಮೇಲ್ವಿಚಾರಕರ ಸಂಭಾವನೆಯನ್ನೂ ಹೆಚ್ಚಿಸಲಾಗಿದೆ. 2025 ಆಗಸ್ಟ್ 2ರಂದು ಚುನಾವಣಾ ಆಯೋಗ ಪ್ರಕಟಿಸಿದ ಅಧಿಸೂಚನೆಯ ಪ್ರಕಾರ, BLOಗಳ ವಾರ್ಷಿಕ ಸಂಭಾವನೆಯನ್ನು 6,000 ರೂ.ಗಳಿಂದ 12,000 ರೂ.ಗಳಿಗೆ ದ್ವಿಗುಣಗೊಳಿಸಲಾಗಿದೆ. ಹೆಚ್ಚುವರಿಯಾಗಿ, ಮತದಾರರ ಪಟ್ಟಿಗಳ ಪರಿಷ್ಕರಣೆಗೆ ನೀಡುತ್ತಿದ್ದ ಪ್ರೋತ್ಸಾಹಧನವನ್ನು 1,000 ರೂ.ಗಳಿಂದ 2,000 ರೂ.ಗಳಿಗೆ ಹೆಚ್ಚಿಸಲಾಗಿದೆ. ಮತದಾರರ ಪಟ್ಟಿ ತಯಾರಿಕೆ ಪ್ರಕ್ರಿಯೆಯನ್ನು ಮೇಲ್ವಿಚಾರಣೆ ಮಾಡುವಲ್ಲಿ ನಿರ್ಣಾಯಕ ಪಾತ್ರ ವಹಿಸುವ BLO ಮೇಲ್ವಿಚಾರಕರ ವಾರ್ಷಿಕ ಸಂಭಾವನೆಯನ್ನು 12,000 ರೂ.ಗಳಿಂದ 18,000 ರೂ.ಗಳಿಗೆ ಏರಿಸಲಾಗಿದೆ. ಇದೇ ಮೊದಲ ಬಾರಿಗೆ ಚುನಾವಣಾ ನೋಂದಣಿ ಅಧಿಕಾರಿಗಳು (EROಗಳು) ಮತ್ತು ಸಹಾಯಕ ಚುನಾವಣಾ ನೋಂದಣಿ ಅಧಿಕಾರಿಗಳಿಗೆ (AEROಗಳು) ಗೌರವಧನ ನೀಡಲಾಗಿದೆ. ಅದರಂತೆ, EROಗಳಿಗೆ 30,000 ರೂ. ಮತ್ತು AEROಗಳಿಗೆ 25,000 ರೂ.ಗಳನ್ನು ನೀಡಲಾಗುತ್ತದೆ.

ವಾರ್ತಾ ಭಾರತಿ 24 Jan 2026 11:20 pm

ಡೊನಾಲ್ಡ್ ಟ್ರಂಪ್ ವಿರುದ್ಧ ರೊಚ್ಚಿಗೆದ್ದ ಬ್ರೆಜಿಲ್ ಅಧ್ಯಕ್ಷ, ಮತ್ತೊಂದು ಕಿರಿಕ್ ಶುರು?

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಹಾಗೂ ಹಲವು ದೇಶಗಳ ನಾಯಕರ ನಡುವೆ ಕಿರಿಕ್ ಮುಂದುವರಿದೆ. ಒಂದಲ್ಲ... ಎರಡಲ್ಲ... ಈಗಾಗಲೇ ಹಲವು ದೇಶಗಳ ನಾಯಕರ ಜೊತೆಗೆ ಇದೇ ಟ್ರಂಪ್ ಅವರು ಕಿರಿಕ್ ಮಾಡಿಕೊಂಡಿದ್ದಾರೆ. ಹಾಗೇ ಹೆಚ್ಚಿನ ತೆರಿಗೆಯ ಎಚ್ಚರಿಕೆ ನಡುವೆ ಕೂಡ ಈಗ ಭಾರಿ ದೊಡ್ಡ ಚರ್ಚೆ ಶುರುವಾಗಿದೆ. ಅದರಲ್ಲೂ ಗಾಜಾ ಶಾಂತಿ ಮಂಡಳಿ ವಿಚಾರಕ್ಕೆ ಪದೇ,

ಒನ್ ಇ೦ಡಿಯ 24 Jan 2026 11:09 pm

ಸಂಭಲ್ ಸಿಜೆಎಂ ವರ್ಗಾವಣೆ| ನ್ಯಾಯಾಂಗ ಸ್ವಾತಂತ್ರ್ಯದ ಮೇಲಿನ ದಾಳಿ: ಕಾಂಗ್ರೆಸ್

ಹೊಸದಿಲ್ಲಿ,ಜ. 14: ಸಂಭಲ್ ಹಿಂಸಾಚಾರಕ್ಕೆ ಸಂಬಂಧಿಸಿ ಪೊಲೀಸ್ ಅಧಿಕಾರಿಗಳ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ನಿರ್ದೇಶಿಸಿದ್ದ ಸಂಭಲ್‌ನ ಮುಖ್ಯ ನ್ಯಾಯಾಂಗ ದಂಡಾಧಿಕಾರಿ ವಿಭಾಂಶು ಸುಧೀರ್ ಅವರ ವರ್ಗಾವಣೆ ಕುರಿತಂತೆ ಕಾಂಗ್ರೆಸ್ ಶನಿವಾರ ಬಿಜೆಪಿ ನೇತೃತ್ವದ ಸರಕಾರವನ್ನು ತರಾಟೆಗೆ ತೆಗೆದುಕೊಂಡಿದೆ. ಇದು ಆಡಳಿತಾತ್ಮಕ ಕ್ರಮವಲ್ಲ. ಬದಲಾಗಿ ನ್ಯಾಯಾಂಗ ಸ್ವಾತಂತ್ರ್ಯದ ಮೇಲಿನ ನೇರ ದಾಳಿ ಎಂದು ಹೇಳಿದೆ. ವಿಭಾಂಶು ಸುಧೀರ್ ಅವರ ನಿರಂಕುಶ ಹಾಗೂ ತೀವ್ರ ಆತಂಕಕಾರಿ ವರ್ಗಾವಣೆಯನ್ನು ಸ್ವಯಂ ಪ್ರೇರಿತವಾಗಿ ಗಮನಕ್ಕೆ ತೆಗೆದುಕೊಳ್ಳುವಂತೆ ಸುಪ್ರೀಂ ಕೋರ್ಟ್ ಹಾಗೂ ಅಲಬಾಬಾದ್ ಉಚ್ಚ ನ್ಯಾಯಾಲಯವನ್ನು ಕಾಂಗ್ರೆಸ್ ಆಗ್ರಹಿಸಿದೆ. ದೇಶದಲ್ಲಿ ಕಾನೂನನ್ನು ಎತ್ತಿ ಹಿಡಿಯಲು, ಸಾಂಸ್ಥಿಕ ಸ್ವಾಯತ್ತತೆಯನ್ನು ರಕ್ಷಿಸಲು ಹಾಗೂ ಪ್ರಜಾಸತ್ತಾತ್ಮಕ ಆಡಳಿತ ಇನ್ನಷ್ಟು ನಾಶವಾಗುವುದನ್ನು ತಡೆಯಲು ನ್ಯಾಯಾಂಗದ ಸಕಾಲಿಕ ಮಧ್ಯಪ್ರವೇಶ ಅತ್ಯಗತ್ಯವಾಗಿದೆ ಎಂದು ಕಾಂಗ್ರೆಸ್‌ನ ಮಾಧ್ಯಮ ಹಾಗೂ ಪ್ರಚಾರ ವಿಭಾಗದ ಮುಖ್ಯಸ್ಥ ಪವನ್ ಖೇರಾ ಹೇಳಿದ್ದಾರೆ. ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪವನ್ ಖೇರಾ, ಸಂಭಲ್ ಹಿಂಸಾಚಾರಕ್ಕೆ ಮುನ್ನ ನಡೆದ ಜಾಮಾ ಮಸೀದಿಯ ವಿವಾದಾತ್ಮಕ ಸಮೀಕ್ಷೆಗೆ ಆದೇಶ ನೀಡಿದ್ದ ನ್ಯಾಯಾಧೀಶರನ್ನೇ ವಿಭಾಂಶು ಸುಧೀರ್ ಅವರ ಸ್ಥಾನಕ್ಕೆ ನೇಮಕ ಮಾಡುವ ಆರಂಭಿಕ ಪ್ರಯತ್ನ ಇನ್ನೂ ಹೆಚ್ಚು ಆತಂಕಕಾರಿಯಾಗಿದೆ ಎಂದಿದ್ದಾರೆ.

ವಾರ್ತಾ ಭಾರತಿ 24 Jan 2026 11:09 pm

ರಾಯಚೂರು ರಿಪೋಟರ್ಸ್ ಗಿಲ್ಡ್ ಬೆಳ್ಳಿ ಮಹೋತ್ಸವ : ಕಥೆ, ಕವನಕ್ಕೆ ಅರ್ಜಿ ಆಹ್ವಾನ

ರಾಯಚೂರು: ಇಲ್ಲಿನ ರಾಯಚೂರು ರಿಪೋರ್ಟ್‌ರ್ಸ್ ಗಿಲ್ಡ್ ರಾಯಚೂರು ಬೆಳ್ಳಿ ಮಹೋತ್ಸವದ ಸಂಭ್ರಮಾಚರಣೆಯ ಅಂಗವಾಗಿ ಜಿಲ್ಲೆ ಹಾಗೂ ರಾಜ್ಯದ ಎಲ್ಲಾ ಪತ್ರಕರ್ತರಿಗಾಗಿ ಕಥೆ, ಕವನ, ಲೇಖನಗಳನ್ನು ಆಹ್ವಾನಿಸಲಾಗಿದೆ. ಆಯ್ಕೆಯಾದ ಕಥೆ, ಕವನ, ಲೇಖನಗಳನ್ನ ಪ್ರತ್ಯೇಕ ಮೂರು ಪುಸ್ತಕಗಳಾಗಿ ಪ್ರಕಟಿಸಲು ನಿರ್ಧರಿಸಲಾಗಿದೆ.ಪತ್ರಕರ್ತರಿಗಾಗಿ ರಾಜ್ಯಮಟ್ಟದ ಕವನ ಹಾಗೂ ಕಥಾ ಸ್ಪರ್ಧೆ ಹಾಗೂ ರಾಯಚೂರು ಜಿಲ್ಲಾ ಪತ್ರಕರ್ತರಿಂದ ವೃತ್ತಿ ಅನುಭವದ ಲೇಖನಗಳ ಆಹ್ವಾನ ಮಾಡಲಾಗಿದೆ. ಕವನ, ಕಥೆ, ಲೇಖನಗಳನ್ನು ಕಳುಹಿಸಲು ಫೆ.25ರ, 2026 ಕೊನೆಯದಿನವಾಗಿದ್ದು, ಕಥಾ ಸ್ಪರ್ಧೆಯ ವಿಜೇತರಿಗೆ ಪ್ರಥಮ ಬಹುಮಾನವಾಗಿ 10,000 ರೂ, ದ್ವಿತೀಯ ಬಹುಮಾನ 7,000 ರೂ. ತೃತೀಯ ಬಹುಮಾನ 3,000 ರೂ. ಗಳ ನಿಗದಿಪಡಿಸಲಾಗಿದೆ. ಕವನ ಸ್ಪರ್ಧೆಯ ವಿಜೇತರಿಗೆ ಪ್ರಥಮ ಬಹುಮಾನ 5,000 ರೂ. ದ್ವಿತೀಯ ಬಹುಮಾನ 3000 ರೂ., ತೃತೀಯ ಬಹುಮಾನ 2,000 ರೂ. ನೀಡಲಾಗುತ್ತಿದೆ. ಕಥೆ, ಕವನ ಸ್ಪರ್ಧೆಗೆ ಹಾಗೂ ಆಹ್ವಾನಿತ ಲೇಖನಗಳಿಗೆ ಯಾವುದೇ ನೋಂದಣಿ ಶುಲ್ಕ ಇರುವುದಿಲ್ಲ. ರಾಯಚೂರು ಜಿಲ್ಲಾ ಪತ್ರಕರ್ತರು 400 ಪದಗಳ ಮಿತಿಯಲ್ಲಿ ಲೇಖನ ಕಳುಹಿಸಬೇಕು, ಆಯ್ಕೆಯಾದ ಲೇಖನಗಳನ್ನು ಪುಸ್ತಕದಲ್ಲಿ ಪ್ರಕಟಿಸಲಾಗುವುದು. ಲೇಖನಗಳಿಗೆ ಯಾವುದೇ ಬಹುಮಾನಗಳು ಇರುವುದಿಲ್ಲ. ನಿಯಮಗಳು : ಸ್ಪರ್ಧೆಗೆ ಕಳುಹಿಸುವ ಕಥೆ, ಕವನ ಸ್ವರಚಿತವಾಗಿರಬೇಕು .ಯಾವುದೇ ಪುಸ್ತಕ, ಪತ್ರಿಕೆಗಳಲ್ಲಿ ಪ್ರಕಟವಾಗಿರಬಾರದು. ಕಥೆ 1500 ಗರಿಷ್ಠ ಪದಮಿತಿಯಲ್ಲಿರಬೇಕು. ಸ್ಪರ್ಧೆಯಲ್ಲಿ ಭಾಗವಹಿಸುವವರು ಕಡ್ಡಾಯವಾಗಿ ಪತ್ರಕರ್ತರಾಗಿರಬೇಕು. ಕಥೆ, ಕವನದ ಜೊತೆ ಕೆಲಸ ಮಾಡುವ ಸುದ್ದಿ ಸಂಸ್ಥೆ ನೀಡಿದ ಗುರುತಿನ ಚೀಟಿ/ಪತ್ರ ಅಥವಾ ಅಕ್ರಿಡಿಯೇಶನ್ ಚೀಟಿ ಕಡ್ಡಾಯವಾಗಿ ಲಗತ್ತಿಸಬೇಕು. ಒಬ್ಬ ಪತ್ರಕರ್ತ ಎರಡೂ ವಿಭಾಗದಲ್ಲಿ ಸ್ಪರ್ಧಿಸಬಹುದು ಒಂದು ಕಥೆ, ಒಂದು ಕವನ ಮಾತ್ರ ಕಳುಹಿಸಬೇಕು. ಲೇಖನ, ಕಥೆ, ಕವನವನ್ನು ನುಡಿ/ಯೂನಿಕೋಡ್ ತಂತ್ರಾಂಶದಲ್ಲಿ ಸಿದ್ದಪಡಿಸಿ ಇ ಮೇಲ್ : rrgraichur@gmail.com ಗೆ ಕಳುಹಿಸಬೇಕು. ಪ್ರತ್ಯೇಕ ಹಾಳೆಯಲ್ಲಿ ಸ್ವ-ಪರಿಚಯ ಬರೆದು ಕಳುಹಿಸಬೇಕು. ಹೆಸರು, ವಿಳಾಸ, ಕಿರುಪರಿಚಯ, ಭಾವಚಿತ್ರ, ಮೊಬೈಲ್ ಸಂಖ್ಯೆ, ಇ-ಮೇಲ್ ವಿಳಾಸ ನಮೂದಿಸಿರಬೇಕು. ಕಥೆ, ಕವನ, ಲೇಖನಗಳ ಆಯ್ಕೆ ಸಮಿತಿ ತೀರ್ಮಾನವೇ ಅಂತಿಮವಾಗಿರಲಿದೆ. ಹೆಚ್ಚಿನ ಮಾಹಿತಿಗಾಗಿ: ಮೊ.ಸಂ: 9964804206, 9739334156, 8971451949, 9902059734 ಸಂಪರ್ಕಿಸಬಹುದಾಗಿದೆ. ವೆಬ್ ಸೈಟ್: www.raichurreportersguild.com ಗೆ ಸಂಪರ್ಕಿಸಬಹುದು ಎಂದು ರಿಪೋಟರ್ಸ್ ಗಿಲ್ಡ್ ಅಧ್ಯಕ್ಷ ವಿಜಯ್ ಜಾಗಟಗಲ್ ಹಾಗೂ ಪ್ರಧಾನ ಕಾರ್ಯದರ್ಶಿ ವೆಂಕಟೇಶ ಹೂಗಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಾರ್ತಾ ಭಾರತಿ 24 Jan 2026 11:07 pm

ದೇವದುರ್ಗ | ನರೇಗಾ ಕಾಮಗಾರಿ ವೇಳೆ ಬೋರ್ಡ್ ಕುಸಿದು ಮಹಿಳೆಗೆ ಗಾಯ

ದೇವದುರ್ಗ : ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ (ನರೇಗಾ) ಕಾಮಗಾರಿ ನಡೆಯುತ್ತಿದ್ದ ವೇಳೆ ಸಿಮೆಂಟ್ ಬೋರ್ಡ್ ಕುಸಿದು ಬಿದ್ದು ಮಹಿಳೆಯೊಬ್ಬರಿಗೆ ಕಾಲು ಮುರಿದಿರುವ ಘಟನೆ ದೇವದುರ್ಗ ತಾಲ್ಲೂಕಿನ ಪಲಕನಮರಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ವಂದಲಿ ಗ್ರಾಮದಲ್ಲಿ ನಡೆದಿದೆ. ಗಾಯಗೊಂಡ ಮಹಿಳೆಯನ್ನು ಅಮರಮ್ಮ ಚೌಡಪ್ಪ ಎಂದು ಗುರುತಿಸಲಾಗಿದೆ. ನರೇಗಾ ಕಾಮಗಾರಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ವೇಳೆ, ಸ್ಥಳದಲ್ಲಿದ್ದ ಸಿಮೆಂಟ್ ಬೋರ್ಡ್ ಅಚಾನಕ್‌ವಾಗಿ ಕುಸಿದು ಬಿದ್ದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ ಎಂದು ತಿಳಿದುಬಂದಿದೆ. ಗಂಭೀರವಾಗಿ ಗಾಯಗೊಂಡ ಅಮರಮ್ಮ ಅವರನ್ನು ತಕ್ಷಣವೇ ಸ್ಥಳೀಯರು ಹಟ್ಟಿ ಆಸ್ಪತ್ರೆಗೆ ದಾಖಲಿಸಿದ್ದು, ಪ್ರಾಥಮಿಕ ಚಿಕಿತ್ಸೆ ಬಳಿಕ ಹೆಚ್ಚಿನ ಚಿಕಿತ್ಸೆಗೆ ರಾಯಚೂರು ಓಪೆಕ್ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.

ವಾರ್ತಾ ಭಾರತಿ 24 Jan 2026 11:03 pm

ಅಸ್ಸಾಂನಲ್ಲಿ ಬಂಗಾಳಿ ಮಾತನಾಡುವ ಮುಸ್ಲಿಮರ ವಿರುದ್ಧ ತಾರತಮ್ಯ: ವಿಶ್ವಸಂಸ್ಥೆಯ ಸಮಿತಿ ಕಳವಳ

ಹೊಸದಿಲ್ಲಿ, ಜ. 24: ಅಸ್ಸಾಂನಲ್ಲಿ ಬಂಗಾಳಿ ಮಾತನಾಡುವ ಮುಸ್ಲಿಮರನ್ನು ನಡೆಸಿಕೊಳ್ಳುತ್ತಿರುವ ರೀತಿ ಬಗ್ಗೆ ವಿಶ್ವಸಂಸ್ಥೆಯ ಜನಾಂಗೀಯ ತಾರತಮ್ಯ ನಿವಾರಣಾ ಸಮಿತಿ (ಸಿಇಆರ್‌ಡಿ) ತೀವ್ರ ಕಳವಳ ವ್ಯಕ್ತಪಡಿಸಿದೆ. ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ) ಪ್ರಕ್ರಿಯೆಯ ಸಂದರ್ಭ ಜನಾಂಗೀಯ ತಾರತಮ್ಯ, ಬಲವಂತದ ಒಕ್ಕಲೆಬ್ಬಿಸುವಿಕೆ, ದ್ವೇಷ ಭಾಷಣ ಹಾಗೂ ಕಾನೂನು ಜಾರಿ ಸಂಸ್ಥೆಗಳಿಂದ ಅತಿಯಾದ ಬಲ ಪ್ರಯೋಗವನ್ನು ಅದು ಉಲ್ಲೇಖಿಸಿದೆ. ಸಿಇಆರ್‌ಡಿ 2026 ಜನವರಿ 19ರಂದು ಜಿನೇವಾದಲ್ಲಿರುವ ವಿಶ್ವ ಸಂಸ್ಥೆಯ ಭಾರತದ ಖಾಯಂ ಪ್ರತಿನಿಧಿಗೆ ಬರೆದ ಪತ್ರದಲ್ಲಿ ಈ ವಿಚಾರ ತಿಳಿಸಿದೆ. 2025 ಮೇ 12ರಂದು ಕಳುಹಿಸಲಾದ ಈ ಹಿಂದಿನ ಪತ್ರಕ್ಕೆ ಪ್ರತಿಕ್ರಿಯೆಯಾಗಿ ಭಾರತ ಸರಕಾರ ಒದಗಿಸಿದ ಮಾಹಿತಿಯ ಕೊರತೆಗೆ ವಿಷಾದಿಸುತ್ತೇವೆ ಎಂದು ಅದು ಹೇಳಿದೆ. ಹಿಂದಿನ ಪತ್ರದಲ್ಲಿ ಅಸ್ಸಾಂನಲ್ಲಿ ಸಮುದಾಯದ ಹಕ್ಕುಗಳ ಉಲ್ಲಂಘನೆ ಆರೋಪದ ಕುರಿತು ಸ್ಪಷ್ಟೀಕರಣ ಕೋರಲಾಗಿತ್ತು ಎಂದು ಮಖ್ತೂಬ್ ಮೀಡಿಯಾ ವರದಿ ಮಾಡಿದೆ. ಕಾರ್ಯವಿದಾನ, ಆಡಳಿತಾತ್ಮಕ ಸಮಸ್ಯೆಗಳು ಹಾಗೂ ದಾಖಲೆಗಳನ್ನು ಪಡೆಯುವಲ್ಲಿನ ತೊಂದರೆಗಳಿಂದಾಗಿದೆ ಅಂತಿಮ ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ) ಪಟ್ಟಿಯಿಂದ ಬಂಗಾಳಿ ಮಾತನಾಡುವ ಮುಸ್ಲಿಮರನ್ನು ಹೊರಗಿಡುವ ಬಗ್ಗೆ ಸಮಿತಿ ಕಳವಳ ವ್ಯಕ್ತಪಡಿಸಿದೆ. ‘‘ಮೂಲ ನಿವಾಸಿಗಳಲ್ಲದವರು’’ ಎಂಬ ಅವರ ವರ್ಗೀಕರಣ ತೀವ್ರ ಪರಿಣಾಮ ಬೀರುತ್ತದೆ. ಆ ಪದಕ್ಕೆ ಸ್ಪಷ್ಟ ವ್ಯಾಖ್ಯಾನವಿಲ್ಲ ಎಂದು ಸಮಿತಿ ಗಮನ ಸೆಳೆದಿದೆ. ಅದು ಕಟ್ಟುನಿಟ್ಟಿನ ಪರಿಶೀಲನಾ ಮಾನದಂಡಗಳು ಹಾಗೂ ತಮ್ಮ ಅನರ್ಹತೆಯನ್ನು ಪ್ರಶ್ನಿಸಲು ಸಂಶಯಾಸ್ಪದ ಮತದಾರರಿಗೆ ಅವಕಾಶ ನೀಡುವ ವಿದೇಶಿ ನ್ಯಾಯಮಂಡಳಿಯನ್ನು ಅಮಾನತಿನಲ್ಲಿರಿಸಿರುವ ಬಗ್ಗೆಯೂ ಕಳವಳ ವ್ಯಕ್ತಪಡಿಸಿದೆ. ಸಮರ್ಪಕ ವಸತಿ ಅಥವಾ ಪರಿಹಾರ ನೀಡದೆ ಹಲವು ಜಿಲ್ಲೆಗಳಲ್ಲಿ ವ್ಯವಸ್ಥಿತ ಬಲವಂತದ ಒಕ್ಕಲೆಬ್ಬಿಸುವಿಕೆ ವರದಿಗಳನ್ನು ಸಿಇಆರ್‌ಡಿ ಉಲ್ಲೇಖಿಸಿದೆ. ಈ ಬಲವಂತದ ಒಕ್ಕಲೆಬ್ಬಿಸುವಿಕೆ ಬಂಗಾಳಿ ಮಾತನಾಡುವ ಮುಸ್ಲಿಂ ಕುಟುಂಬಗಳ ಮೇಲೆ ತೀವ್ರ ಪರಿಣಾಮ ಉಂಟು ಮಾಡುತ್ತಿದೆ ಎಂದು ಅದು ಹೇಳಿದೆ. ವಿಶೇಷವಾಗಿ ಅಸ್ಸಾಂನಲ್ಲಿ 2024 ರಾಷ್ಟ್ರೀಯ ಚುನಾವಣೆ ಸಂದರ್ಭ ದ್ವೇಷ ಭಾಷಣ ಹಾಗೂ ಹಿಂಸಾಚಾರಕ್ಕೆ ಪ್ರಚೋದನೆ ನೀಡುವುದು ಹೆಚ್ಚಳವಾಗಿರುವ ಕುರಿತು ಅದು ಕಳವಳ ವ್ಯಕ್ತಪಡಿಸಿದೆ. ಇದರೊಂದಿಗೆ ಪೊಲೀಸರಿಂದ ಅತಿಯಾದ, ಮಾರಕ ಬಲ ಪ್ರಯೋಗ ಹಾಗೂ ನಾಗರಿಕರು, ಸಂಘಟಿತ ಗುಂಪುಗಳಿಂದ ಹಿಂಸಾತ್ಮಕ ದಾಳಿಯನ್ನು ಉಲ್ಲೇಖಿಸಿದೆ.

ವಾರ್ತಾ ಭಾರತಿ 24 Jan 2026 11:02 pm

ಹಂಪನಕಟ್ಟೆ: ಅಕ್ಬರ್ ಕಾಂಪ್ಲೆಕ್ಸ್‌ನಲ್ಲಿ ಆಕಸ್ಮಿಕ ಬೆಂಕಿ; ಭಾರೀ ಪ್ರಮಾಣದಲ್ಲಿ ನಷ್ಟ

ಮಂಗಳೂರು: ನಗರದ ಹಂಪನಕಟ್ಟೆಯ ಅಕ್ಬರ್ ಕಾಂಪ್ಲೆಕ್ಸ್‌ನಲ್ಲಿ ಶನಿವಾರ ಸಂಜೆ ಬೆಂಕಿ ಕಾಣಿಸಿಕೊಂಡಿದ್ದು, ಕಟ್ಟಡದಲ್ಲಿ ತಳ ಅಂತಸ್ತಿನ ನಲ್ಲಿರುವ ಹಲವು ಅಂಗಡಿಗಳಿಗೆ ಹಾನಿಯಾಗಿದ್ದು, ಲಕ್ಷಾಂತರ ರೂ.ಗಳ ನಷ್ಟ ಸಂಭವಿಸಿದೆ. ಅಂಡರ್ ಗ್ರೌಂಡ್‌ನಲ್ಲಿರುವ ಇಲೆಕ್ಟ್ರಾನಿಕ್ಸ್ ಅಂಗಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಬಟ್ಟೆ ಅಂಗಡಿಗೂ ಬೆಂಕಿಯಿಂದ ಹಾನಿ ಉಂಟಾಗಿದೆ. ಸಂಪೂರ್ಣ ಬೆಂಕಿಗಾಹುತಿಯಾಗಿದೆ. ಅಂಗಡಿಗಳಲ್ಲಿರುವ ವಸ್ತುಗಳು ಸುಟ್ಟು ಕರಕಲಾಗಿದೆ ಎಂದು ತಿಳಿದು ಬಂದಿದೆ. ಬೆಂಕಿಯಿಂದಾಗಿ ಪರಿಸರದಲ್ಲಿ ದಟ್ಟವಾದ ಹೊಗೆ ಆವರಿಸಿದ್ದು, ಪಕ್ಕದ ಲಾಡ್ಜ್‌ನಲ್ಲಿದ್ದವರು ಇಂದರಿಂದ ತೊಂದರೆ ಅನುಭವಿಸಿದ್ದಾರೆ ಎಂದು ತಿಳಿದು ಬಂದಿದೆ. ಪೊಲೀಸರು, ಅಗ್ನಿ ಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದು ಕಾರ್ಯಾಚರಣೆ ಮುಂದುವರಿದಿದೆ. ಬೆಂಕಿಗೆ ನಿಖರವಾದ ಕಾರಣ ಇನ್ನೂ ದೃಢಪಟ್ಟಿಲ್ಲವಾದರೂ, ಶಾರ್ಟ್ ಸರ್ಕ್ಯೂಟ್ ಘಟನೆಗೆ ಕಾರಣವಾಗಿರಬಹುದು ಎಂದು ಶಂಕಿಸಲಾಗಿದೆ.

ವಾರ್ತಾ ಭಾರತಿ 24 Jan 2026 10:59 pm

ರಾಯಚೂರು | ಆರ್‌ಟಿಪಿಎಸ್‌ನಲ್ಲಿ ಅಣುಸ್ಥಾವರ ಸ್ಥಾಪಿಸುವ ಪ್ರಕ್ರಿಯೆ ಕೈ ಬಿಡದಿದ್ದರೆ ತೀವ್ರ ಹೋರಾಟ : ಬಸವರಾಜ ಕಳಸ

ರಾಯಚೂರು: ಜಿಲ್ಲೆಯ ಶಾಖೋತ್ಪನ್ನ ಕೇಂದ್ರ ಪ್ರದೇಶದಲ್ಲಿ ಅಣು ವಿದ್ಯುತ್ ಸ್ಥಾವರ ಸ್ಥಾಪಿಸಲು ಮುಂದಾಗಿರುವ ಕೇಂದ್ರ ಸರ್ಕಾರ, ಜನರ ಆರೋಗ್ಯ ಕಾಪಾಡುವ ಬದಲು “ಆರೋಗ್ಯ ಕೇಳಿದವರಿಗೆ ವಿಷ ಕೊಡಲು ಹೊರಟಿದೆ” ಎಂದು ನಾಗರೀಕ ವೇದಿಕೆಯ ಮುಖಂಡ ಬಸವರಾಜ ಕಳಸ ಆರೋಪಿಸಿದರು. ನಗರದಲ್ಲಿ ಸೋಮವಾರ ಮಾಧ್ಯಮಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಆರ್‌ಟಿಪಿಎಸ್ ಪ್ರದೇಶಕ್ಕೆ ಕೇಂದ್ರ ಅಣು ವಿದ್ಯುತ್ ನಿಗಮದ ಮೂವರು ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿರುವುದು ಆತಂಕಕಾರಿ ಬೆಳವಣಿಗೆ ಎಂದರು. ಅಣು ವಿದ್ಯುತ್ ಸ್ಥಾವರ ಸ್ಥಾಪನೆಯಾದರೆ ಭವಿಷ್ಯದ ಪೀಳಿಗೆಗೆ ಭವಿಷ್ಯವೇ ಇಲ್ಲದಂತಾಗುತ್ತದೆ. ವಿಕಿರಣದ ಪರಿಣಾಮದಿಂದ ಕ್ಯಾನ್ಸರ್ ಸೇರಿದಂತೆ ಶ್ವಾಸಕೋಶ ರೋಗಗಳು, ಇತರೆ ಗಂಭೀರ ಅನಾರೋಗ್ಯಗಳು ಹೆಚ್ಚಾಗುವ ಸಾಧ್ಯತೆ ಇದೆ. ಅಲ್ಲದೆ ಕೃಷಿ ವಲಯದ ಮೇಲೂ ದುಷ್ಪರಿಣಾಮ ಉಂಟಾಗಲಿದೆ ಎಂದು ಎಚ್ಚರಿಸಿದರು. ಈಗಾಗಲೇ ಜಿಲ್ಲೆಯಲ್ಲಿ ಆರೋಗ್ಯ ವ್ಯವಸ್ಥೆ ಕುಸಿತಗೊಂಡಿದ್ದು, ಏಮ್ಸ್ ಆಸ್ಪತ್ರೆ ಸ್ಥಾಪನೆಗಾಗಿ ವರ್ಷಗಳಿಂದ ಹೋರಾಟ ನಡೆದರೂ ಕೇಂದ್ರ ಸರ್ಕಾರ ಸ್ಪಂದಿಸಿಲ್ಲ. ಇಂತಹ ಸಂದರ್ಭದಲ್ಲಿ ಜನರ ಜೀವ ರಕ್ಷಿಸುವ ಬದಲು ಅಣು ವಿದ್ಯುತ್ ಸ್ಥಾವರ ಸ್ಥಾಪಿಸಲು ಮುಂದಾಗಿರುವುದು ಖಂಡನೀಯ. ಕೂಡಲೇ ಈ ನಿರ್ಧಾರವನ್ನು ಹಿಂಪಡೆಯಬೇಕು ಎಂದು ಅವರು ಆಗ್ರಹಿಸಿದರು. ಹೋರಾಟಗಾರ ಎಸ್. ಮಾರೆಪ್ಪ ಮಾತನಾಡಿ, ಅಣು ವಿದ್ಯುತ್ ಸ್ಥಾವರಗಳ ಅಪಾಯಗಳು ದೇಶದ ಜನರ ಮುಂದೆ ಸ್ಪಷ್ಟವಾಗಿವೆ. ಹೀರೋಷಿಮಾ–ನಾಗಾಸಾಕಿ ಘಟನೆಗಳೇ ವಿಕಿರಣದಿಂದ ಮಾನವ ಜೀವಕ್ಕೆ ಆಗುವ ಭೀಕರ ಪರಿಣಾಮಗಳ ಉದಾಹರಣೆಗಳಾಗಿವೆ. ಇಂತಹ ಅಪಾಯಗಳಿದ್ದರೂ ಸರ್ಕಾರ ಅಣು ವಿದ್ಯುತ್ ಸ್ಥಾವರ ಸ್ಥಾಪನೆಗೆ ಮುಂದಾಗಿರುವುದು ಗಂಭೀರ ಕಳವಳಕ್ಕೆ ಕಾರಣವಾಗಿದೆ ಎಂದು ಹೇಳಿದರು. ಯಾದಗಿರಿ ಜಿಲ್ಲೆಯ ಗೋಗಿ, ದರ್ಶನಾಪುರ ಸೇರಿದಂತೆ ಕೆಲ ಪ್ರದೇಶಗಳಲ್ಲಿ ಯುರೇನಿಯಂ ಲಭ್ಯವಾಗಿರುವ ಹಿನ್ನೆಲೆ, ಅಪಾಯಕಾರಿ ಅಣು ಸ್ಥಾವರ ಸ್ಥಾಪನೆಗೆ ಕೇಂದ್ರ ಸರ್ಕಾರ ಮುಂದಾಗಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಜೀವಕ್ಕೆ ಅಪಾಯಕಾರಿಯಾದ ಕೈಗಾರಿಕೆಗಳು ರಾಯಚೂರು ಜಿಲ್ಲೆಗೆ ಮಾತ್ರ ಸೀಮಿತವಾಗುತ್ತಿವೆ ಎಂದು ಅವರು ಆರೋಪಿಸಿದರು. ಅಣು ವಿದ್ಯುತ್ ಸ್ಥಾವರ ಸ್ಥಾಪನೆಯಾದರೆ ಭವಿಷ್ಯದ ಪೀಳಿಗೆಯೇ ಅಪಾಯಕ್ಕೆ ಸಿಲುಕಲಿದೆ. ಹೀಗಾಗಿ ನಾಗರೀಕ ವೇದಿಕೆಯ ನೇತೃತ್ವದಲ್ಲಿ ಅಣು ಸ್ಥಾವರ ವಿರೋಧಿಸಿ ತೀವ್ರ ಹೋರಾಟ ರೂಪಿಸಲಾಗುವುದು ಎಂದು ಮಾರೆಪ್ಪ ಎಚ್ಚರಿಸಿದರು. ಈ ಸಂದರ್ಭದಲ್ಲಿ ಅಶೋಕಕುಮಾರ ಜೈನ್, ಜೈ ಭೀಮ, ಮಲ್ಲಪ್ಪ ದಿನ್ನಿ, ನರಸಿಂಹಲು, ವಿನಯಕುಮಾರ ಚಿತ್ರಗಾರ ಸೇರಿದಂತೆ ಇತರರು ಉಪಸ್ಥಿತರಿದ್ದರು.

ವಾರ್ತಾ ಭಾರತಿ 24 Jan 2026 10:57 pm

ಪಶ್ಚಿಮ ಬಂಗಾಳ| ಇಬ್ಬರು ಯುವಕರ ಮೃತದೇಹ ಮರಕ್ಕೆ ನೇಣು ಹಾಕಿದ ಸ್ಥಿತಿಯಲ್ಲಿ ಪತ್ತೆ

ಕೋಲ್ಕತಾ, ಜ. 24: ಪಶ್ಚಿಮಬಂಗಾಳದ ಉತ್ತರ 24 ಪರಗಣ ಜಿಲ್ಲೆಯ ಸ್ವರೂಪ್‌ನಗರ ಪ್ರದೇಶದಲ್ಲಿ ಇಬ್ಬರು ಯುವಕರ ಮೃತದೇಹ ಮರಕ್ಕೆ ನೇಣು ಹಾಕಿದ ಸ್ಥಿತಿಯಲ್ಲಿ ಶನಿವಾರ ಪತ್ತೆಯಾಗಿದೆ. ಮೃತಪಟ್ಟ ಯುವಕರನ್ನು ರಾಜ ಭದ್ರ (19) ಹಾಗೂ ರಕಿಬುಲ್ ಮಂಡಲ್ (20) ಎಂದು ಗುರುತಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇಬ್ಬರೂ ಗೆಳೆಯರು. ದತ್ತಪಾರಾ ಪ್ರದೇಶದ ನಿವಾಸಿಗಳು ಎಂದು ಸ್ಥಳೀಯ ಮೂಲಗಳು ತಿಳಿಸಿವೆ. ರಾಜಾ ಮತ್ತು ರಕೀಬುಲ್ ಸರಸ್ವತಿ ಪೂಜೆಗಾಗಿ ಶುಕ್ರವಾರ ಬೆಳಗ್ಗೆ ತಮ್ಮ ನಿವಾಸಗಳಿಂದ ಒಟ್ಟಿಗೆ ತೆರಳಿದ್ದರು ಎಂದು ಅವರು ಕುಟಂಬದ ಸದಸ್ಯರು ಹೇಳಿದ್ದಾರೆ. ಅಪರಾಹ್ನ ಇಬ್ಬರೂ ತಮ್ಮ ಕುಟುಂಬಗಳ ಜೊತೆಗೆ ಫೋನ್‌ನಲ್ಲಿ ಮಾತನಾಡಿದ್ದಾರೆ. ಆದರೆ, ಅಪರಾಹ್ನದ ನಂತರ ಕುಟುಂಬದ ಸದಸ್ಯರಿಗೆ ಅವರನ್ನು ಸಂಪರ್ಕಿಸಲು ಸಾಧ್ಯವಾಗಲಿಲ್ಲ. ಸಂಜೆವರೆಗೆ ಇಬ್ಬರು ಯುವಕರೊಂದಿಗೆ ಫೋನ್ ಮೂಲಕ ಸಂಪರ್ಕಿಸಲು ಸಾಧ್ಯವಾಗದೇ ಇದ್ದಾಗ, ಕುಟುಂಬಗಳ ಸದಸ್ಯರು ಆತಂಕಗೊಂಡಿದ್ದಾರೆ. ರಾಜ ಭದ್ರನ ಮೊಬೈಲ್ ಸ್ವಿಚ್ ಆಫ್ ಆಗಿತ್ತು. ರಕೀಬುಲ್ ಮಂಡಲ್ ಫೋನ್ ಕೇವಲ ರಿಂಗ್ ಆಗುತ್ತಿತ್ತು. ಶನಿವಾರ ಬೆಳಗ್ಗೆ ಅವರಿಬ್ಬರ ಮೃತದೇಹಗಳು ದತ್ತಪಾರದ ಮಾವಿನ ಮರವೊಂದರಲ್ಲಿ ನೇಣು ಹಾಕಿದ ಸ್ಥಿತಿಯಲ್ಲಿ ಸ್ಥಳೀಯರು ಗಮನಿಸಿದರು. ರಾಜಾ ಮತ್ತು ರಕೀಬುಲ್ ಮೃತದೇಹ ನೇಣು ಹಾಕಿದ ಸ್ಥಿತಿಯಲ್ಲಿ ಪತ್ತೆಯಾದ ಬಗ್ಗೆ ಅವರ ಕುಟುಂಬಗಳು ಮಾಹಿತಿ ನೀಡಿದ ಬಳಿಕ ಹತ್ತಿರದ ಸ್ವರೂಪ್‌ನಗರ ಪೊಲೀಸ್ ಠಾಣೆಯ ಪೊಲೀಸರು ಸ್ಥಳಕ್ಕೆ ಧಾವಿಸಿದರು. ತಮ್ಮ ಪುತ್ರರನ್ನು ಹತ್ಯೆಗೈದು ಮರಕ್ಕೆ ನೇಣು ಹಾಕಲಾಗಿದೆ ಎಂದು ರಾಜಾ ಹಾಗೂ ರಕಿಬುಲ್ ಅವರ ತಂದೆಯಂದಿರು ಆರೋಪಿಸಿದ್ದಾರೆ. ಅವರು ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ. ಪೊಲೀಸರು ಅಸ್ವಾಭಾವಿಕ ಸಾವು ಪ್ರಕರಣ ದಾಖಲಿಸಿದ್ದಾರೆ.

ವಾರ್ತಾ ಭಾರತಿ 24 Jan 2026 10:52 pm

ಕಲಬುರಗಿ | ಪ್ರಯಾಣಿಕರ ಸುರಕ್ಷತೆ ನಮ್ಮ ಮೊದಲ ಆದ್ಯತೆ : ಅರುಣಕುಮಾರ ಪಾಟೀಲ

ಕಲಬುರಗಿ: ಬಸ್ ಚಾಲನೆ ಎನ್ನುವುದು ಕೇವಲ ವಾಹನವನ್ನು ಚಲಾಯಿಸುವುದಲ್ಲ, ಅದು ಜವಾಬ್ದಾರಿ, ಶಿಸ್ತು ಮತ್ತು ಮಾನವೀಯತೆಯ ಸೇವೆಯಾಗಿದೆ. ಪ್ರಯಾಣಿಕರ ಸುರ‍್ಷತೆಯೆ ನಮ್ಮ ಮೊದಲ ಆದ್ಯತೆಯಾಗಿದ್ದು, ಸಂಸ್ಥೆಯ ಪ್ರತಿಯೊಬ್ಬ ಸಿಬ್ಬಂದಿಯ ಧ್ಯೇಯ ಸಹ ಇದೇ ಆಗಿರಬೇಕು ಎಂದು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಅಧ್ಯಕ್ಷ ಅರುಣಕುಮಾರ ಪಾಟೀಲ ತಿಳಿಸಿದರು. ಶನಿವಾರ ನಗರದ ಸೇಡಂ ರಸ್ತೆಯಲ್ಲಿರುವ ನಿಗಮದ ಈಶಾನ್ಯ ಭವನದಲ್ಲಿ ರಸ್ತೆ ಸುರಕ್ಷತಾ ಮಾಸಾಚರಣೆ ಅಂಗವಾಗಿ ಆಯೋಜಿಸಿದ್ದ ಚಾಲಕರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕೆ.ಕೆ.ಆರ್.ಟಿ.ಸಿ. ಎಂಬ ರಥವನ್ನು ಮುನ್ನಡೆಸುತ್ತಿರುವ ಎಲ್ಲಾ ಚಾಲಕರಿಗೆ ಚಾಲಕರ ದಿನಾಚರಣೆಯ ಶುಭಾಶಯಗಳನ್ನು ತಿಳಿಸಿದ ಅವರು, ಪ್ರತಿ ಚಾಲಕರ ಕೈಯಲ್ಲೂ ಅನೇಕ ಕುಟುಂಬಗಳ ಭರವಸೆ ಹಾಗೂ ಭದ್ರತೆ ಅಡಗಿದೆ. ಈ ಅರಿವಿನಿಂದಲೇ ಪ್ರತಿಯೊಬ್ಬರೂ ಹೊಣೆಗಾರಿಕೆಯಿಂದ ಬಸ್ ಚಾಲನೆ ಮಾಡಬೇಕು ಎಂದು ಹೇಳಿದರು. ಪ್ರತಿಯೊಬ್ಬ ಚಾಲಕರು ನಿಗದಿತ ವೇಗ ಮಿತಿ ಹಾಗೂ ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಮದ್ಯಪಾನ ಮತ್ತು ಮಾದಕ ವಸ್ತುಗಳಿಂದ ಸಂಪೂರ್ಣ ದೂರವಿರಬೇಕು. ರಸ್ತೆಗಳಲ್ಲಿ ಪಾದಚಾರಿಗಳು, ಸೈಕಲ್ ಸವಾರರು ಹಾಗೂ ಇತರೆ ರಸ್ತೆ ಬಳಕೆದಾರರ ಬಗ್ಗೆ ಗೌರವ ತೋರಿ, ಪ್ರಯಾಣಿಕರೊಂದಿಗೆ ಸೌಜನ್ಯದಿಂದ ವರ್ತಿಸುವ ಮೂಲಕ ಸುರಕ್ಷಿತ, ಶಿಸ್ತಿನ ಮತ್ತು ನಿಯಮಬದ್ಧ ಚಾಲನೆಗೆ ಮತ್ತೊಮ್ಮೆ ಬದ್ಧರಾಗಬೇಕೆಂದು ಅವರು ಕರೆ ನೀಡಿದರು. ಸಾಧಕರಿಗೆ ಸನ್ಮಾನ : ಈ ಸಂದರ್ಭದಲ್ಲಿ ಅಪಘಾತರಹಿತವಾಗಿ ಸೇವೆ ಸಲ್ಲಿಸಿದ, ಅತಿ ಹೆಚ್ಚು ಕೆ.ಎಂ.ಪಿ.ಎಲ್ ಸಾಧನೆ ಮಾಡಿದ ಚಾಲಕರು ಹಾಗೂ ಅತಿ ಹೆಚ್ಚು ಇ.ಪಿ.ಕೆ.ಎಂ (ಆದಾಯ) ಗಳಿಸಿದ ನಿರ್ವಾಹಕರು ಸೇರಿದಂತೆ ಒಟ್ಟು 159 ಜನ ಸಿಬ್ಬಂದಿಗಳನ್ನು ಗಣ್ಯರು ಸನ್ಮಾನಿಸಿ ಪ್ರಶಸ್ತಿ ಪತ್ರ ಹಾಗೂ ಪ್ರೋತ್ಸಾಹ ಧನ ವಿತರಿಸಿದರು. ಉತ್ತಮ ಚಾಲನಾ ಸೇವೆಗಾಗಿ ನಿಗಮದಿಂದ ನೀಡಲಾಗುವ ಹೆಚ್ಚುವರಿ ಆರ್ಥಿಕ ಸೌಲಭ್ಯಗಳು, ಪುರಸ್ಕಾರಗಳು ಹಾಗೂ ಪ್ರೋತ್ಸಾಹ ಧನಗಳ ಕುರಿತು ಸಹ ವಿವರಿಸಲಾಯಿತು. ಪ್ರೋತ್ಸಾಹ ಭತ್ಯೆ ಹೆಚ್ಚಳ : ನಿಗಮದ ವ್ಯವಸ್ಥಾಪಕ ನಿರ್ದೇಶಕಿ ಡಾ. ಬಿ. ಸುಶೀಲಾ ಮಾತನಾಡಿ, ಮುಖ್ಯಮಂತ್ರಿಗಳ ಸ್ವರ್ಣ ಪದಕಕ್ಕೆ ಅರ್ಹರಾಗುವ ಮತ್ತು ಪದಕ ಪಡೆದ ಚಾಲಕರಿಗೆ ನೀಡುವ ಮಾಸಿಕ ಪ್ರೋತ್ಸಾಹ ಭತ್ಯೆಯನ್ನು 500 ರೂ.ರಿಂದ 1,000 ರೂ. ಗೆ ಹಾಗೂ ಬೆಳ್ಳಿ ಪದಕಕ್ಕೆ ಅರ್ಹರಾಗುವ ಚಾಲಕರಿಗೆ ನೀಡುವ ಭತ್ಯೆಯನ್ನು 250 ರೂ.ರಿಂದ 500 ರೂ. ಗೆ ಹೆಚ್ಚಿಸಲಾಗಿದೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ನಿಗಮದ ವಿವಿಧ ವಿಭಾಗಗಳ ಇಲಾಖಾ ಮುಖ್ಯಸ್ಥರು, ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಭಾಗವಹಿಸಿದ್ದರು. ನಿಗಮದ ಮುಖ್ಯ ಸಂಚಾರ ಅಧಿಕಾರಿ ಸಂತೋಷಕುಮಾರ ಸ್ವಾಗತಿಸಿದರು. ಚಂದ್ರಕಾಂತ ಫುಲೆಕರ್ ವಂದಿಸಿದರು.  

ವಾರ್ತಾ ಭಾರತಿ 24 Jan 2026 10:49 pm

ತೆಲಂಗಾಣ| ಆಧಾರ್ ಕಾರ್ಡ್ ಇಲ್ಲದೆ ಹೆರಿಗೆಗಾಗಿ ಅಲೆದಾಡಿದ ಗರ್ಭಿಣಿ

ಹೈದರಾಬಾದ್, ಜ. 24: ಆಧಾರ್ ಕಾರ್ಡ್ ಇಲ್ಲದ ಕಾರಣಕ್ಕೆ ಗರ್ಭಿಣಿಯೋರ್ವರು ಹೆರಿಗೆಗೆ ದಾಖಲಾಗಲು ಆಸ್ಪತ್ರೆಯಿದ ಆಸ್ಪತ್ರೆಗೆ ಅಲೆದಾಡಿದ ಘಟನೆ ತೆಲಂಗಾಣದ ಕರೀಮ್‌ನಗರದಲ್ಲಿ ನಡೆದಿದೆ. ಕರೀಂನಗರದ ತಿಮ್ಮಾಪುರ ಮಂಡಲದ ರಾಮಕೃಷ್ಣ ಕಾಲೂನಿ ಗ್ರಾಮದ ನಿವಾಸಿ ಉಬಿದಿ ರೇಖಾ (23)ಅವರು ‘ಬೇಡ ಬುಡಗ ಜಂಗಮ’ ಅಲೆಮಾರಿ ಸಮುದಾಯಕ್ಕೆ ಸೇರಿದವರು. ಅವರು ಹೆರಿಗಾಗಿ ದಾಖಲಾಗಲು ಆಸ್ಪತ್ರೆಗಳಿಗೆ ತೆರಳಿದ್ದರು. ಆದರೆ, ಆಧಾರ್ ಕಾರ್ಡ್ ಇಲ್ಲದ ಕಾರಣಕ್ಕೆ ಅವರನ್ನು ಆಸ್ಪತ್ರೆಗಳಲ್ಲಿ ದಾಖಲಾಸಿಕೊಳ್ಳಲು ನಿರಾಕರಿಸಲಾಗಿದೆ. ರಾಮಕೃಷ್ಣ ಕಾಲನಿಯ ಗ್ರಾಮದ ಹೆಚ್ಚಿನ ನಿವಾಸಿಗಳು ದಿನ ಕೂಲಿಗಾಗಿ ರಾಜ್ಯಾದ್ಯಂತ ವಲಸೆ ಹೋಗುತ್ತಾರೆ. ರೇಖಾ ಅವರ ಕುಟುಂಬ ಕೂಡ ವಲಸೆಯಲ್ಲಿರುವಾಗ ಅವರು ಜನಿಸಿರುವುದರಿಂದ ಜನನ ನೋಂದಣಿಯಾಗಲಿಲ್ಲ. ಇದರಿಂದ ಅವರಿಗೆ ಆಧಾರ್ ಕಾರ್ಡ್ ದೊರಕಿಲ್ಲ. ಆಧಾರ್ ಕಾರ್ಡ್ ಇಲ್ಲದಿರುವುದರಿಂದ ಅವರಿಗೆ ಯಾವುದೇ ಕಲ್ಯಾಣ ಕಾರ್ಯಕ್ರಮ, ದಿನನಿತ್ಯದ ಆರೋಗ್ಯ ತಪಾಸಣೆ ಹಾಗೂ ಈಗ ಸುರಕ್ಷಿತ ಹೆರಿಗೆ ಸೌಲಭ್ಯ ಪಡೆದುಕೊಳ್ಳಲು ಅವರಿಗೆ ಸಾಧ್ಯವಾಗುತ್ತಿಲ್ಲ. ಅವರು ಹೆರಿಗೆಗೆ ದಾಖಲಾಗಲು ಕರೀಮ್‌ನಗರದ ತಾಯಿ ಹಾಗೂ ಮಗು ಆಸ್ಪತ್ರೆ ಸೇರಿದಂತೆ ಹಲವು ಸರಕಾರಿ ಆಸ್ಪತ್ರೆಗಳನ್ನು ಸಂಪರ್ಕಿಸಿದರು. ಆದರೆ, ದಾಖಲಾತಿಗೆ ಆಧಾರ್ ಕಾರ್ಡ್ ನೀಡುವಂತೆ ಅವರಿಗೆ ತಿಳಿಸಲಾಗಿದೆ. ಖಾಸಗಿ ಆಸ್ಪತ್ರೆಯ ವೆಚ್ಚವನ್ನು ಭರಿಸುವ ಸಾಮರ್ಥ್ಯವನ್ನು ಅವರ ಕುಟುಂಬ ಹೊಂದಿಲ್ಲ. ಆಧಾರ್ ಕಾರ್ಡ್ ಇಲ್ಲದ ಕಾರಣಕ್ಕೆ ವೈದ್ಯಕೀಯ ಚಿಕಿತ್ಸೆ ನಿರಾಕರಿಸಲಾಗಿದೆ ಎಂಬ ಆರೋಪವನ್ನು ಅಧಿಕಾರಿಗಳು ನಿರಾಕರಿಸಿದ್ದಾರೆ. ಜಿಲ್ಲಾ ಜನರಲ್ ಆಸ್ಪತ್ರೆಯ ಸೂಪರಿಂಟೆಂಡೆಂಟ್ ಡಾ.ಜಿ. ವೀರ ರೆಡ್ಡಿ, ಪುರಾವೆಗಾಗಿ ಆಧಾರ್ ಕಾರ್ಡ್ ಕೇಳಲಾಗುತ್ತದೆ. ಆಧಾರ್ ಕಾರ್ಡ್ ಇಲ್ಲದ ರೋಗಿಗಳನ್ನು ‘‘ಅಪರಿಚಿತ ವ್ಯಕ್ತಿ’’ ಎಂದು ಪರಿಗಣಿಸಲಾಗುತ್ತದೆ ಹಾಗೂ ಪೊಲೀಸ್ ಹೊರ ಠಾಣೆಗೆ ಮಾಹಿತಿ ನೀಡಲಾಗುತ್ತದೆ. ಆದರೆ, ಚಿಕಿತ್ಸೆಯ ಸೌಲಭ್ಯವನ್ನು ನಿರಾಕರಿಸುವುದಿಲ್ಲ ಎಂದಿದ್ದಾರೆ. ಸದ್ಯಕ್ಕೆ ಸ್ಥಳೀಯ ರಾಜಕೀಯ ನಾಯಕರ ನೆರವಿನಿಂದ ರೇಖಾ ಅವರಿಗೆ ಗ್ರಾಮ ಪಂಚಾಯತ್‌ನಿಂದ ನಿವಾಸ ಪ್ರಮಾಣ ಪತ್ರ ದೊರೆತಿದೆ. ಆದರೆ, ತಾಂತ್ರಿಕ ಸಮಸ್ಯೆಗಳಿಂದಾಗಿ ಆಧಾರ್ ಪೋರ್ಟಲ್ ರೇಖಾ ಅವರ ವಿವರಗಳನ್ನು ಸ್ವೀಕರಿಸದ ಕಾರಣ, ಅವರ ಆಧಾರ್‌ಗೆ ಸಲ್ಲಿಸಿದ ಅರ್ಜಿ ಸ್ಥಗಿತಗೊಂಡಿದೆ. ಈ ಬಗ್ಗೆ ರೇಖಾ ಅವರು, ‘‘ನನ್ನ ಬಳಿ ಆಧಾರ್ ಕಾರ್ಡ್ ಇಲ್ಲದೇ ಇದ್ದರೆ, ನಾನು ತಾಯಿಯಾಗಲು ಸಾಧ್ಯವಿಲ್ಲವೇ ?’’ ಎಂದು ಪ್ರಶ್ನಿಸಿದ್ದಾರೆ.

ವಾರ್ತಾ ಭಾರತಿ 24 Jan 2026 10:45 pm

ಕಲಬುರಗಿಯಲ್ಲಿ ಶೇ.100ರಷ್ಟು ಫಲಿತಾಂಶ ಬರುವಂತೆ ಶ್ರಮ ವಹಿಸಿ : ಬಿ.ಫೌಝಿಯಾ ತರನ್ನುಮ್

ಪಿ.ಯು.ಸಿ ಪ್ರಾಂಶುಪಾಲರೊಂದಿಗೆ ಸಭೆ

ವಾರ್ತಾ ಭಾರತಿ 24 Jan 2026 10:45 pm

ಕಲಬುರಗಿ | ವಿಬಿ ಜಿ ರಾಮ್ ಜಿ ಕಾಯ್ದೆ ರದ್ದುಪಡಿಸಿ, ಮನರೇಗಾ ಪುನರ್ ಸ್ಥಾಪನೆಗೆ ಆಗ್ರಹ

ಉದ್ಯೋಗ ಖಾತ್ರಿ ಕಾಯಕ ಜೀವಿಗಳ ಸಂಘಟನೆಯಿಂದ ಒತ್ತಾಯ

ವಾರ್ತಾ ಭಾರತಿ 24 Jan 2026 10:39 pm

ವಿಜಯಪುರ | ಬೈಕ್-ಟಿಪ್ಪರ ಮಧ್ಯೆ ಅಪಘಾತ ಶಿಕ್ಷಕ ಸಾವು

ವಿಜಯಪುರ: ಬೈಕ್ ಹಾಗೂ ಟಿಪ್ಪರ್ ಮಧ್ಯೆ‌ ಸಂಭವಿಸಿದ ಅಪಘಾತದಲ್ಲಿ ಬೈಕ್ ಸವಾರರಾದ ಶಿಕ್ಷಕರೊಬ್ಬರು ಮೃತಪಟ್ಟರುವ ಘಟನೆ ಶನಿವಾರ ನಗರದ ಇಟಗಿ ಪೆಟ್ರೋಲ್ ಬಂಕ್ ಬಳಿ ನಡೆದಿದೆ. ಇಟ್ಟಂಗಿಹಾಳದ ಶಿಕ್ಷಕ ವೆಂಕಟೇಶ ಕುಲಕರ್ಣಿ ಮೃತಪಟ್ಟವರು. ಟಿಪ್ಪರ್ ಚಾಲಕ ಅಸ್ಲಾಂ ಮುಲ್ಲಾ ಎಂಬವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.   ಸ್ಥಳಕ್ಕೆ ಸಂಚಾರಿ ಪೊಲೀಸರು ಭೇಟಿ ಪರಿಶೀಲನೆ ನಡೆಸಿ, ತನಿಖೆ ಮುಂದುವರಿದಿದೆ. ವಿಜಯಪುರ ನಗರದ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಾರ್ತಾ ಭಾರತಿ 24 Jan 2026 10:39 pm

ಕಲಬುರಗಿ | ವಿಜ್ಞಾನ ಸಂವಹನ ಶಿಬಿರ : ಶಿಕ್ಷಕ ರವೀಂದ್ರ ರುದ್ರವಾಡಿಗೆ ಪ್ರಥಮ ಸ್ಥಾನ

ಕಲಬುರಗಿ: ಕರ್ನಾಟಕ ರಾಜ್ಯ ವಿಜ್ಞಾನ ಹಾಗೂ ತಂತ್ರಜ್ಞಾನ ಅಕಾಡೆಮಿಯು ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸಹಯೋಗದಲ್ಲಿ ಬೆಂಗಳೂರಿನಲ್ಲಿ ಆಯೋಜಿಸಿದ್ದ ಎರಡು ದಿನಗಳ ವಿಜ್ಞಾನ ಸಂವಹನ ಶಿಬಿರದ ಅಂಗವಾಗಿ ನಡೆದ ಪ್ರಬಂಧ ಸ್ಪರ್ಧೆಯಲ್ಲಿ ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ನಂದಗೂರಿನ ಪ್ರಾಥಮಿಕ ಶಾಲಾ ಶಿಕ್ಷಕ ರವೀಂದ್ರ ರುದ್ರವಾಡಿ ಅವರು ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ. ರವೀಂದ್ರ ರುದ್ರವಾಡಿಯವರು ವಿಜ್ಞಾನ ಲೇಖನ, ವಿಜ್ಞಾನ ಸಂವಹನ, ಶಿಕ್ಷಣ ಮತ್ತು ವೈಚಾರಿಕ ಸಾಹಿತ್ಯ ಕ್ಷೇತ್ರದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದು, ನ್ಯಾಷನಲ್ ಬುಕ್ ಟ್ರಸ್ಟ್, ಕರ್ನಾಟಕ ಸಾಹಿತ್ಯ ಅಕಾಡೆಮಿ ಸೇರಿದಂತೆ ಹಲವಾರು ಪ್ರತಿಷ್ಠಿತ ಸಂಸ್ಥೆಗಳ ಪ್ರಕಟಣೆಗಳಲ್ಲಿ ಲೇಖಕರಾಗಿ ತಮ್ಮ ಕೊಡುಗೆ ನೀಡಿದ್ದಾರೆ. ಜಾಗತಿಕ ತಾಪಮಾನ ಹೆಚ್ಚಳ ವಿಷಯದ ಕುರಿತು ಆಯೋಜಿಸಿದ್ದ ಈ ಪ್ರಬಂಧ ಸ್ಪರ್ಧೆಯಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ 28 ವಿಜ್ಞಾನ ಲೇಖಕರು ಹಾಗೂ ಸಂವಹನಕಾರರು ಭಾಗವಹಿಸಿದ್ದರು. ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕರ್ನಾಟಕ ರಾಜ್ಯ ವಿಜ್ಞಾನ ಹಾಗೂ ತಂತ್ರಜ್ಞಾನ ಅಕಾಡೆಮಿಯ ಅಧ್ಯಕ್ಷ ಪ್ರೊ. ರಾಜಾಸಾಬ್ ಎ.ಎಸ್, ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಎಲ್.ಎನ್. ಮುಕುಂದರಾಜ್, ಪುಸ್ತಕ ಪ್ರಾಧಿಕಾರದ ಮಾಜಿ ಅಧ್ಯಕ್ಷರು ಹಾಗೂ ಶಿಬಿರದ ನಿರ್ದೇಶಕರಾದ ಡಾ. ವಸುಂದರಾ ಭೂಪತಿ, ಖ್ಯಾತ ವಿಜ್ಞಾನ ಲೇಖಕರಾದ ಟಿ.ಆರ್. ಅನಂತರಾಮು, ಚಳ್ಳಕೇರಿ ಯರ್ರಿಸ್ವಾಮಿ, ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ ಡಾ. ಆರ್. ಸುನಂದಮ್ಮ, ದೂರದರ್ಶನ ಖ್ಯಾತಿಯ ಡಾ. ನಾ. ಸೋಮೇಶ್ವರ ಅವರು ಪ್ರಶಸ್ತಿ ಪತ್ರ ಹಾಗೂ ಬಹುಮಾನ ವಿತರಿಸಿದರು. ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಪದ್ಮಭೂಷಣ ಪುರಸ್ಕೃತ ಖ್ಯಾತ ಮನೋವಿಜ್ಞಾನಿ ಡಾ. ಸಿ.ಆರ್. ಚಂದ್ರಶೇಖರ, ವಿಜ್ಞಾನಿ ನೇಮಿಚಂದ್ರ, ಹಿರಿಯ ವಿಜ್ಞಾನಿಗಳಾದ ಡಾ. ಕೆ.ಎನ್. ಗಣೇಶಯ್ಯ, ಡಾ. ನೂರ್ ಸಮದ್ ಅಬ್ಬಲಗೆರೆ, ಕೊಳ್ಳೆಗಾಲ ಶರ್ಮಾ, ಡಾ. ಎಚ್.ಆರ್. ಸ್ವಾಮಿ, ಖ್ಯಾತ ಲೇಖಕಿ ಎಂ.ಎಸ್. ಆಶಾದೇವಿ, ಗುರುರಾಜ ಎಸ್. ದಾವಣಗೆರೆ ಸೇರಿದಂತೆ ಹಲವಾರು ಹಿರಿಯ ವಿಜ್ಞಾನಿಗಳು ಮತ್ತು ವಿಜ್ಞಾನ ಲೇಖಕರು ಭಾಗವಹಿಸಿದ್ದರು. ಎರಡು ದಿನಗಳ ಕಾಲ ವಿಜ್ಞಾನ ಸಾಹಿತ್ಯ ರಚನೆ, ಸಂವಹನದ ಅಗತ್ಯತೆ, ಸಾಧ್ಯತೆಗಳು ಮತ್ತು ಅವಕಾಶಗಳ ಕುರಿತು ವ್ಯಾಪಕ ಚರ್ಚೆ ನಡೆಸಲಾಯಿತು ಎಂದು ಶಿಬಿರದ ನಿರ್ದೇಶಕರಾದ ಡಾ. ವಸುಂದರಾ ಭೂಪತಿ ತಿಳಿಸಿದರು. ಈ ಸ್ಪರ್ಧೆಯಲ್ಲಿ ಹೊಸಪೇಟೆಯ ವಿಜ್ಞಾನ ಲೇಖಕ ಡಾ. ರಾಜಾಭಕ್ಷಿ ದ್ವಿತೀಯ ಸ್ಥಾನ ಹಾಗೂ ಬೆಂಗಳೂರು ಮೂಲದ ವೈದ್ಯ ಲೇಖಕಿ ಡಾ. ಜ್ಯೋತಿ ಸಿದ್ದಮಲ್ಲಯ್ಯ ತೃತೀಯ ಸ್ಥಾನ ಪಡೆದರು. ಶಿಬಿರದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗಾಗಿ ಕಿರು ಪ್ರಬಂಧ ರಚನಾ ಸ್ಪರ್ಧೆಯನ್ನೂ ಆಯೋಜಿಸಲಾಗಿತ್ತು.

ವಾರ್ತಾ ಭಾರತಿ 24 Jan 2026 10:36 pm

ಮೋದಿ ಭೇಟಿ ವೇಳೆ ಅಕ್ರಮ ಫ್ಲೆಕ್ಸ್ ಅಳವಡಿಕೆ| ಬಿಜೆಪಿ ನೇತೃತ್ವದ ತಿರುವನಂತಪುರ ನಗರ

ಪಾಲಿಕೆಯಿಂದ ಪಕ್ಷದ ಘಟಕಕ್ಕೆ 20 ಲಕ್ಷ ರೂ. ದಂಡ

ವಾರ್ತಾ ಭಾರತಿ 24 Jan 2026 10:33 pm

ಕಲಬುರಗಿ | ಮಹಿಳಾ ಕ್ರಿಕೆಟ್ ತಂಡಕ್ಕೆ ಪ್ರಾಶಸ್ತ್ಯ ನೀಡಿರುವುದು ಶ್ಲಾಘನೀಯ : ಸಿಪಿಐ ನಟರಾಜ್ ಲಾಡೆ

ಕಲಬುರಗಿ: ಕ್ರಿಕೆಟ್ ಕ್ಷೇತ್ರದಲ್ಲಿ ಸಾಮಾನ್ಯವಾಗಿ ಪುರುಷರಿಗೆ ಹೆಚ್ಚಿನ ಮನ್ನಣೆ ದೊರಕುತ್ತಿರುವ ಸಂದರ್ಭದಲ್ಲಿ, ಅತಿಥಿ ಉಪನ್ಯಾಸಕರ ಸಂಘವು ಮಹಿಳಾ ಕ್ರಿಕೆಟ್ ತಂಡಕ್ಕೆ ಸಮಾನ ಪ್ರಾಶಸ್ತ್ಯ ನೀಡುತ್ತಿರುವುದು ಸಂತಸದ ಸಂಗತಿಯಾಗಿದೆ ಎಂದು ಸಿಪಿಐ ನಟರಾಜ್ ಲಾಡೆ ಹೇಳಿದರು. ಸಂವಿಧಾನ ದಿನಾಚರಣೆಯ ಅಂಗವಾಗಿ ಗುಲ್ಬರ್ಗಾ ವಿಶ್ವವಿದ್ಯಾಲಯದ ಅತಿಥಿ ಉಪನ್ಯಾಸಕರ ಸಂಘದ ವತಿಯಿಂದ ವಿವಿಯ ದೈಹಿಕ ಶಿಕ್ಷಣ ವಿಭಾಗದ ಹೊರಾಂಗಣ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಸಂವಿಧಾನ ಪ್ರೀಮಿಯರ್ ಲೀಗ್–2026 ಪುರುಷ ಮತ್ತು ಮಹಿಳಾ ಕ್ರಿಕೆಟ್ ಪಂದ್ಯಾವಳಿಯಲ್ಲಿ ಟಾಸ್ ನೆರವೇರಿಸಿ ಅವರು ಮಾತನಾಡಿದರು. ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ಆಟಗಳು ಮತ್ತು ಕ್ರೀಡೆಗಳು ಅತ್ಯಂತ ಅವಶ್ಯಕವಾಗಿವೆ. ಕ್ರೀಡೆಗಳಿಂದ ದೈಹಿಕ ಹಾಗೂ ಮಾನಸಿಕ ಆರೋಗ್ಯ ವೃದ್ಧಿಯಾಗುವುದರ ಜೊತೆಗೆ ಶೈಕ್ಷಣಿಕ ಸಾಧನೆ, ಸಾಮಾಜಿಕ ಕೌಶಲ್ಯ ಮತ್ತು ಸ್ವಮೌಲ್ಯ ಬಲಪಡಿಸುವಲ್ಲಿ ಸಹಕಾರಿಯಾಗುತ್ತದೆ ಎಂದು ಅವರು ಹೇಳಿದರು. ಈ ಸಂದರ್ಭದಲ್ಲಿ ಮಾತನಾಡಿದ ನಾಗನಹಳ್ಳಿ ಪೊಲೀಸ್ ತರಬೇತಿ ಕೇಂದ್ರದ ಫೊರೆನ್ಸಿಕ್ ಅಧಿಕಾರಿ ಡಾ. ದಿಲೀಪ್ ಕುಮಾರ್ ನವಲೆ, ಸಂವಿಧಾನ ಪ್ರೀಮಿಯರ್ ಲೀಗ್‌ ಆಯೋಜಿಸಿರುವುದು ಹೆಮ್ಮೆಯ ವಿಷಯವಾಗಿದೆ ಎಂದರು. ವಿದ್ಯಾರ್ಥಿಗಳು ಗೆಲುವು–ಸೋಲುಗಳನ್ನು ಸಮಾನ ಮನೋಭಾವದಿಂದ ಸ್ವೀಕರಿಸಬೇಕು. ಇಂತಹ ಕ್ರೀಡಾ ಚಟುವಟಿಕೆಗಳು ವಿಶ್ವವಿದ್ಯಾಲಯದ ಆವರಣದಲ್ಲಿ ನಿರಂತರವಾಗಿ ನಡೆಯಲಿ ಎಂದು ಹಾರೈಸಿದರು. ಈ ಪಂದ್ಯಾವಳಿಯಲ್ಲಿ ಪಾಲ್ಗೊಂಡ ಆಟಗಾರರಿಗೆ ರಾಜ್ಯ ಮತ್ತು ರಾಷ್ಟ್ರಮಟ್ಟದ ಸ್ಪರ್ಧೆಗಳಲ್ಲಿ ಆಡುವ ಅವಕಾಶ ಸಿಗಲಿ ಎಂದು ಆಶಿಸಿದರು. ಕಾರ್ಯಕ್ರಮದಲ್ಲಿ ಸಂಘದ ಗೌರವಾಧ್ಯಕ್ಷ ಡಾ. ಎಂ.ಬಿ. ಕಟ್ಟಿ, ಅಧ್ಯಕ್ಷ ಡಾ. ಅರುಣಕುಮಾರ ಬಿ. ಕುರನೆ, ಪ್ರಧಾನ ಕಾರ್ಯದರ್ಶಿ ಡಾ. ಅಶೋಕ ದೊಡ್ಮನಿ, ಡಾ. ಹಣಮಂತ ಮೇಲಕೇರಿ, ಸುನೀಲ ಜಾಬಾದಿ, ಸಂತೋಷ ಕಂಬಾರ, ಪ್ರಕಾಶ್ ಸಂಗಮ, ಡಾ. ಮಾಧುರಿ ಬಿರಾದಾರ, ಡಾ. ಶಿವಶರಣಪ್ಪ ಕೊಡ್ಲಿ, ಡಾ. ರೂಕ್ಸನಾ, ಡಾ. ಶಂಭುಲಿಂಗ ನಾಡಿಗೇರಿ, ಡಾ. ಆನಂದ ಮೇಟಿ ಉಪಸ್ಥಿತರಿದ್ದರು. ನಿರ್ಣಾಯಕರಾಗಿ ಪುಟ್ಟರಾಜ ಮಡಿವಾಳ, ಅಜಯ ರಾಠೋಡ್, ಓಂಕಾರ ಮಡಿವಾಳ, ಗಣೇಶ ಮದರಿ, ಸಾವಿರಲಿಂಗ ಕಾರ್ಯನಿರ್ವಹಿಸಿದರು. ಅತಿಥಿ ಉಪನ್ಯಾಸಕರಾದ ಡಾ. ಪರಶುರಾಮ ಪಿ, ಡಾ. ಶೇಖರ ಸಲಗರ, ಡಾ. ಶಿವಾನಂದ ಕಡಗಂಚಿ, ಡಾ. ಮಿಲಿಂದ ಕಾಂಬಳೆ, ಡಾ. ತಾತ್ಯಾರಾವ, ಡಾ. ಮಂಜೂರ್ ಅಹ್ಮದ, ಡಾ. ಸಿದ್ಧಾರ್ಥ ಬಬಲಾದ, ಡಾ. ರಾಜಕುಮಾರ ಎಂ. ದಣ್ಣೂರ, ಡಾ. ಕವಿತಾ ನಾಗಶೆಟ್ಟಿ, ಡಾ. ಚಿಂತನ ರಾಠೋಡ್, ಡಾ. ರಾಜೇಶ್ವರಿ, ಡಾ. ಮಹಾಲಿಂಗಪ್ಪ ಮಂಗಳೂರು, ಅಭಯಕುಮಾರ ಪೋತೆ, ಡಾ. ಸಂದೀಪ ಹೋಲ್ಕರ್, ಡಾ. ನಂದಿನಿ, ಡಾ. ವಿಜಯಕುಮಾರ ಬೀಳಗೆ ಸೇರಿದಂತೆ ಹಲವರು ಭಾಗವಹಿಸಿದ್ದರು.  

ವಾರ್ತಾ ಭಾರತಿ 24 Jan 2026 10:29 pm

ಚುನಾವಣಾ ಆಯೋಗ ಮತಗಳ್ಳತನದ ಪಿತೂರಿಯಲ್ಲಿ ಪ್ರಮುಖ ಪಾಲುದಾರನಾಗಿದೆ: ರಾಹುಲ್ ಗಾಂಧಿ ವಾಗ್ದಾಳಿ

ಹೊಸದಿಲ್ಲಿ: ಗುಜರಾತ್‌ ನಲ್ಲಿ ನಡೆದಿರುವ ವಿಶೇಷ ತೀವ್ರ ಮತಪಟ್ಟಿ ಪರಿಷ್ಕರಣೆಯಲ್ಲಿ ಅತ್ಯಂತ ವ್ಯವಸ್ಥಿತ, ಸಂಘಟಿತ ಹಾಗೂ ವ್ಯೂಹಾತ್ಮಕ ಮತಗಳ್ಳತನ ಮಾಡಲಾಗಿದ್ದು, ಚುನಾವಣಾ ಆಯೋಗವು ಈ ಮತಗಳ್ಳತನದ ಪಿತೂರಿಯಲ್ಲಿ ಪ್ರಮುಖ ಪಾಲುದಾರನಾಗಿದೆ ಎಂದು ಶನಿವಾರ ಕಾಂಗ್ರೆಸ್ ನಾಯಕ ಹಾಗೂ ಲೋಕಸಭಾ ವಿಪಕ್ಷ ನಾಯಕ ರಾಹುಲ್ ಗಾಂಧಿ ಗಂಭೀರ ಆರೋಪ ಮಾಡಿದ್ದಾರೆ. ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ರಾಹುಲ್ ಗಾಂಧಿ, “ವಿಶೇಷ ತೀವ್ರ ಮತಪಟ್ಟಿ ಪರಿಷ್ಕರಣೆಯನ್ನು ಸಾಂವಿಧಾನಿಕ ‘ಒಬ್ಬ ವ್ಯಕ್ತಿ, ಒಂದು ಮತ’ ಹಕ್ಕನ್ನು ನಾಶಗೊಳಿಸುವ ಆಯುಧವನ್ನಾಗಿ ಮಾರ್ಪಡಿಸಲಾಗಿದೆ. ಯಾರು ಅಧಿಕಾರದಲ್ಲಿರಬೇಕು ಎಂಬುದನ್ನು ಜನರು ನಿರ್ಧರಿಸುವುದಲ್ಲ, ಬಿಜೆಪಿ ನಿರ್ಧರಿಸುವಂತಾಗಿದೆ” ಎಂದು ದೂರಿದ್ದಾರೆ. “ಎಲ್ಲೆಲ್ಲ ವಿಶೇಷ ತೀವ್ರ ಮತಪಟ್ಟಿ ಪರಿಷ್ಕರಣೆ ನಡೆದಿದೆಯೋ, ಅಲ್ಲೆಲ್ಲ ಮತಗಳ್ಳತನ ನಡೆದಿದೆ. ವಿಶೇಷ ತೀವ್ರ ಮತಪಟ್ಟಿ ಪರಿಷ್ಕರಣೆ ಹೆಸರಿನಲ್ಲಿ ಗುಜರಾತ್‌ನಲ್ಲಿ ಏನು ನಡೆದಿದೆ ಎಂಬುದು ಆಡಳಿತಾತ್ಮಕ ಪ್ರಕ್ರಿಯೆಯಲ್ಲ; ಅದು ಅತ್ಯಂತ ವ್ಯವಸ್ಥಿತ, ಸಂಘಟಿತ ಹಾಗೂ ವ್ಯೂಹಾತ್ಮಕ ಮತಗಳ್ಳತನವಾಗಿದೆ” ಎಂದು ಅವರು ಹೇಳಿದ್ದಾರೆ. “ಅತ್ಯಂತ ಅಪಾಯಕಾರಿ ಸಂಗತಿಯೆಂದರೆ, ಒಂದೇ ಹೆಸರಿನಲ್ಲಿ ಸಾವಿರಾರು ಬಾರಿ ಆಕ್ಷೇಪಣೆಗಳನ್ನು ಸಲ್ಲಿಸಲಾಗಿದೆ” ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ. “ನಿರ್ದಿಷ್ಟ ಸಮುದಾಯಗಳಿಂದ ಹಾಗೂ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲವಿರುವ ಮತಗಟ್ಟೆಗಳಿಂದ ಆಯ್ಕೆ ಮಾಡಿದಂತೆ ಮತಗಳನ್ನು ತೆಗೆದುಹಾಕಲಾಗಿದೆ. ಎಲ್ಲೆಲ್ಲ ದಯನೀಯವಾಗಿ ಸೋಲುವ ಅಂದಾಜು ಬಿಜೆಪಿಗಿದೆಯೋ, ಅಲ್ಲೆಲ್ಲ ಮತಗಳು ವ್ಯವಸ್ಥೆಯಿಂದ ನಾಪತ್ತೆಯಾಗುವಂತೆ ಮಾಡಲಾಗಿದೆ” ಎಂದು ಅವರು ಆಪಾದಿಸಿದ್ದಾರೆ. “ಈ ಸ್ವರೂಪ ಅಳಂದದಲ್ಲಿ ಕಂಡುಬಂದಿತ್ತು. ಇದೇ ಸಂಗತಿ ರಜೌರದಲ್ಲೂ ಆಗಿತ್ತು. ಈಗ ಅದೇ ನೀಲಿ ನಕ್ಷೆಯನ್ನು ಗುಜರಾತ್, ರಾಜಸ್ಥಾನ ಹಾಗೂ ಎಲ್ಲೆಲ್ಲ ವಿಶೇಷ ತೀವ್ರ ಮತಪಟ್ಟಿ ಪರಿಷ್ಕರಣೆ ನಡೆಯುತ್ತಿದೆಯೋ, ಆ ಎಲ್ಲ ರಾಜ್ಯಗಳಲ್ಲಿ ಹೇರಲಾಗುತ್ತಿದೆ” ಎಂದು ಅವರು ಆರೋಪಿಸಿದ್ದಾರೆ. “ಅತ್ಯಂತ ಗಂಭೀರ ಸಂಗತಿಯೆಂದರೆ, ಚುನಾವಣಾ ಆಯೋಗವು ಪ್ರಜಾತಂತ್ರದ ರಕ್ಷಕನಾಗಿ ಉಳಿದಿಲ್ಲ. ಬದಲಿಗೆ ಅದು ಮತಗಳ್ಳತನದ ಪಿತೂರಿಯಲ್ಲಿ ಪ್ರಮುಖ ಪಾಲುದಾರನಾಗಿದೆ” ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.

ವಾರ್ತಾ ಭಾರತಿ 24 Jan 2026 10:28 pm

ಸೇಡಂ | ರಾಜ್ಯಪಾಲರಿಗೆ ಕಾಂಗ್ರೆಸ್ ಶಾಸಕರಿಂದ ಅಗೌರವ : ವಿಶೇಶ್ವರ ಹೆಗಡೆ ಕಾಗೇರಿ ಆರೋಪ

ಸೇಡಂ: ವಿಧಾನಸಭೆಯಲ್ಲಿ ರಾಜ್ಯಪಾಲರು ಭಾಷಣಕ್ಕೆ ವಿರಾಮ ನೀಡಿ ಹೊರ ಹೋಗುವ ವೇಳೆ ಕಾಂಗ್ರೆಸ್ ಸರ್ಕಾರದ ಶಾಸಕರು ಅಗೌರವ ತೋರಿರುವುದು ಅತ್ಯಂತ ಖಂಡನೀಯವಾಗಿದ್ದು, ಇದು ಕರ್ನಾಟಕ ರಾಜ್ಯಕ್ಕೆ ಕಳಂಕ ತರುವಂತಹ ಘಟನೆಯಾಗಿದೆ ಎಂದು ಸಂಸದ ವಿಶೇಶ್ವರ ಹೆಗಡೆ ಕಾಗೇರಿ ತೀವ್ರ ಆರೋಪಿಸಿದರು. ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯಪಾಲರು ಸದನದಿಂದ ಹೊರ ಹೋಗುವಾಗ ಕೆಲ ಕಾಂಗ್ರೆಸ್ ಶಾಸಕರು ಅವರ ಎದುರುಗಡೆ ತೆರಳಿ ಘೋಷಣೆಗಳನ್ನು ಕೂಗುತ್ತಾ ಹೊರ ಹೋಗಲು ಅಡ್ಡಿಪಡಿಸಿದ್ದು, ಕೆಲವರು ಗೂಂಡಾಗಳಂತೆ ವರ್ತಿಸಿರುವುದು ನಾಚಿಕೆಗೇಡಿತನದ ವಿಷಯವಾಗಿದೆ ಎಂದರು. ನಾನು ಕಳೆದ 30 ವರ್ಷಗಳಿಂದ ಸದನದ ಭಾಗವಾಗಿದ್ದೇನೆ. ಈ ರೀತಿಯ ಅಸಭ್ಯ ಹಾಗೂ ಅನಾಗರಿಕ ವರ್ತನೆ ಇದುವರೆಗೂ ಕಂಡಿಲ್ಲ. ಇದು ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಧಕ್ಕೆ ತರುವ ಘಟನೆ ಎಂದು ಕಾಗೇರಿ ಹೇಳಿದರು. ಈ ಘಟನೆಯ ಕುರಿತು ಕಾಂಗ್ರೆಸ್ ಶಾಸಕರು ಕೂಡಲೇ ರಾಜ್ಯಪಾಲರಿಗೆ ಕ್ಷಮೆಯಾಚನೆ ಮಾಡಬೇಕು. ಗೂಂಡಾಗಳಂತೆ ವರ್ತಿಸಿದ ಶಾಸಕರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು. ಇನ್ನು ಕೇಂದ್ರ ಸರ್ಕಾರ ಜಾರಿಗೆ ತರಲು ಉದ್ದೇಶಿಸಿರುವ ವಿಬಿ ಜಿ ರಾಮ್ ಜೀ ಬಿಲ್ ಯೋಜನೆ ಬಡವರ ಹಿತಕ್ಕಾಗಿ ರೂಪಿಸಲಾಗಿದೆ. ಈ ಯೋಜನೆ ಜಾರಿಯಾದರೆ ಹಣ ನೇರವಾಗಿ ಗ್ರಾಮ ಪಂಚಾಯಿತಿಗಳಿಗೆ ತಲುಪುತ್ತದೆ. ಇದರಿಂದ ಮಧ್ಯವರ್ತಿಗಳಿಗೆ ಅವಕಾಶ ಇರುವುದಿಲ್ಲ. ಈ ಕಾರಣದಿಂದಲೇ ಕಾಂಗ್ರೆಸ್ ಪಕ್ಷ ರಾಜಕೀಯ ಪ್ರೇರಿತವಾಗಿ ಮಹಾತ್ಮ ಗಾಂಧೀಜಿಯವರಿಗೆ ಅವಮಾನವಾಗಿದೆ ಎಂದು ಜನರನ್ನು ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದೆ ಎಂದು ಕಾಗೇರಿ ಆರೋಪಿಸಿದರು. ಸುದ್ದಿಗೋಷ್ಠಿಯಲ್ಲಿ ಮಾಜಿ ಶಾಸಕ ರಾಜಕುಮಾರ ಪಾಟೀಲ್, ಬಿಜೆಪಿ ಮಂಡಲ ಅಧ್ಯಕ್ಷ ಶರಣು ಮೆಡಿಕಲ್, ನಗರಾಧ್ಯಕ್ಷ ಸತೀಶ ಪಾಟೀಲ್, ಓಂಪ್ರಕಾಶ್ ಪಾಟೀಲ್, ದೇವೇಂದ್ರಪ್ಪ ಎಸ್. ಕೋಟಿರ್ಕಿ, ವೇಂಕಟೇಶ ಬೇಕರಿ, ಶ್ರೀಮಂತ ಅವಂಟಿ, ಶಿವಕುಮಾರ್ ಆರ್. ಪಾಗಾ, ರಾಘವೇಂದ್ರ ಮೆಕಾನಿಕ್, ಮಲ್ಲಿಕಾರ್ಜುನ ಭೂತಪೂರ, ಸಿದ್ದು ಸೌಕರ ತೂನುರ ಸೇರಿದಂತೆ ಅನೇಕ ಬಿಜೆಪಿ ಮುಖಂಡರು ಉಪಸ್ಥಿತರಿದ್ದರು.

ವಾರ್ತಾ ಭಾರತಿ 24 Jan 2026 10:25 pm

T20 World Cup : ಬಾಂಗ್ಲಾ ಬದಲು ಸ್ಕಾಟ್ಲೆಂಡ್, ICC ವಿರುದ್ದ ಪಾಕ್ ಪ್ರತೀಕಾರ - ವಿಶ್ವಕಪ್’ಗೆ ಬಹಿಷ್ಕಾರ?

Mohsin Naqvi On Pakistan Participation In T20 World Cup : ಭಾರತದಲ್ಲಿ ಭದ್ರತೆ ಇಲ್ಲವೆಂದು, ಪಂದ್ಯಗಳ ಸ್ಥಳವನ್ನು ಬದಲಾಯಿಸಬೇಕು ಎನ್ನುವ ಬಾಂಗ್ಲಾ ಕ್ರಿಕೆಟ್ ಬೋರ್ಡಿನ ಒತ್ತಾಯಕ್ಕೆ ಐಸಿಸಿ ಮಣಿದಿಲ್ಲ. ಈ ಹಿನ್ನಲೆಯಲ್ಲಿ, ಬಾಂಗ್ಲಾದೇಶ ವಿಶ್ವಕಪ್’ನಿಂದ ಔಟಾಗಿದ್ದು, ಸ್ಕಾಟ್ಲೆಂಡ್ ಆಡುವುದು ಪಕ್ಕಾ ಆಗಿದೆ. ಇನ್ನೊಂದು ಕಡೆ, ಪಾಕಿಸ್ತಾನ ಕೂಡಾ ವಿಶ್ವಕಪ್ ಟೂರ್ನಿಗೆ ಬಹಿಷ್ಕಾರವನ್ನು ಹಾಕುತ್ತಾ ಎನ್ನುವುದು ಕುತೂಹಲಕ್ಕೆ ಕಾರಣವಾಗಿದೆ.

ವಿಜಯ ಕರ್ನಾಟಕ 24 Jan 2026 10:25 pm

ರಶ್ಯಾದಿಂದ ಭಾರತದ ತೈಲ ಆಮದು ಇಳಿಕೆ: ಅಮೆರಿಕದಿಂದ ಸುಂಕದ ಕಡಿತದ ಸುಳಿವು ನೀಡಿದ ಬೆಸೆಂಟ್

ಮುಂಬೈ: ಭಾರತವು ರಶ್ಯಾದಿಂದ ಆಮದು ಮಾಡಿಕೊಳ್ಳುತ್ತಿರುವ ತೈಲದಲ್ಲಿ ಗಮನಾರ್ಹ ಪ್ರಮಾಣದ ಇಳಿಕೆಯಾಗಿರುವ ಹಿನ್ನೆಲೆಯಲ್ಲಿ, ಹೆಚ್ಚುವರಿಯಾಗಿ ವಿಧಿಸಿರುವ ಶೇ. 25ರಷ್ಟು ಸುಂಕವನ್ನು ಅಮೆರಿಕ ಹಿಂಪಡೆಯುವ ಸಾಧ್ಯತೆ ಇದೆ ಎಂಬ ಸುಳಿವನ್ನು ಅಮೆರಿಕ ಖಜಾನೆ ಕಾರ್ಯದರ್ಶಿ ಸ್ಕಾಟ್ ಬೆಸೆಂಟ್ ನೀಡಿದ್ದಾರೆ. ಕಳೆದ ವರ್ಷದ ಆಗಸ್ಟ್ ತಿಂಗಳಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಭಾರತವು ರಶ್ಯಾದಿಂದ ತೈಲ ಆಮದು ಮಾಡಿಕೊಳ್ಳುತ್ತಿರುವುದಕ್ಕೆ ಶೇ. 25ರಷ್ಟು ಹೆಚ್ಚುವರಿ ಸುಂಕ ಸೇರಿದಂತೆ ಒಟ್ಟು ಶೇ. 50ರಷ್ಟು ಸುಂಕ ವಿಧಿಸಿದ್ದರು. ಇದರ ಪರಿಣಾಮವಾಗಿ ಭಾರತ ಮತ್ತು ಅಮೆರಿಕ ನಡುವಿನ ವ್ಯಾಪಾರ ಸಂಬಂಧ ಬಿಗಡಾಯಿಸಿತ್ತು. ಈ ಕುರಿತು ವಿಶ್ವ ಆರ್ಥಿಕ ವೇದಿಕೆಯ ನೇಪಥ್ಯದಲ್ಲಿ ಪೊಲಿಟಿಕೊ ಸುದ್ದಿ ಸಂಸ್ಥೆಗೆ ಸಂದರ್ಶನ ನೀಡಿರುವ ಸ್ಕಾಟ್ ಬೆಸೆಂಟ್, “ರಶ್ಯಾ ತೈಲ ಸಂಸ್ಕರಣಾ ಘಟಕಗಳಿಂದ ಭಾರತ ಖರೀದಿಸುತ್ತಿದ್ದ ತೈಲದ ಪ್ರಮಾಣ ಇಳಿಕೆಯಾಗಿದೆ. ಸುಂಕಗಳು ಈಗಲೂ ಜಾರಿಯಲ್ಲಿದ್ದು, ರಶ್ಯಾ ತೈಲದ ಮೇಲಿನ ಶೇ. 25ರಷ್ಟು ಸುಂಕವೂ ಜಾರಿಯಲ್ಲಿದೆ. ಅದನ್ನು ತೆಗೆದು ಹಾಕಲು ಮಾರ್ಗವಿದೆ ಎಂಬುದು ನನ್ನ ಅನಿಸಿಕೆಯಾಗಿದೆ” ಎಂದು ಹೇಳಿದ್ದಾರೆ. ಕಳೆದ ವರ್ಷದ ಡಿಸೆಂಬರ್ ತಿಂಗಳಲ್ಲಿ ಭಾರತದ ರಶ್ಯಾ ತೈಲ ಆಮದು ಕಳೆದ ಎರಡು ವರ್ಷಗಳಲ್ಲೇ ಅತ್ಯಂತ ಕನಿಷ್ಠ ಮಟ್ಟಕ್ಕೆ ಇಳಿಕೆಯಾಗಿತ್ತು. ಅದಕ್ಕೆ ಪ್ರತಿಯಾಗಿ, ಒಪೆಕ್ ದೇಶಗಳಿಂದ ಭಾರತ ಆಮದು ಮಾಡಿಕೊಳ್ಳುತ್ತಿರುವ ತೈಲದ ಪ್ರಮಾಣ ಕಳೆದ 11 ತಿಂಗಳಲ್ಲೇ ಗರಿಷ್ಠ ಮಟ್ಟಕ್ಕೇರಿತ್ತು ಎಂದು ಭಾರತದ ವ್ಯಾಪಾರವನ್ನು ಉಲ್ಲೇಖಿಸಿ Reuters ಸುದ್ದಿ ಸಂಸ್ಥೆ ವರದಿ ಮಾಡಿತ್ತು.

ವಾರ್ತಾ ಭಾರತಿ 24 Jan 2026 10:23 pm

ಹೊಸ ವಿಶ್ವಸಂಸ್ಥೆ ರಚನೆಗೆ ಟ್ರಂಪ್ ಪ್ರಯತ್ನ: ಬ್ರೆಝಿಲ್ ಅಧ್ಯಕ್ಷ ಲೂಲಾ ಆರೋಪ

ಬ್ರಸೀಲಿಯಾ, ಜ.24: ಪ್ರಸ್ತಾವಿತ `ಶಾಂತಿ ಮಂಡಳಿ'ಯ ಮೂಲಕ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೊಸ ವಿಶ್ವಸಂಸ್ಥೆಯನ್ನು ರಚಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಬ್ರೆಝಿಲ್ ಅಧ್ಯಕ್ಷ ಲೂಯಿಜ್ ಇನಾಶಿಯೊ ಲೂಲಾ ಡ ಸಿಲ್ವ ಆರೋಪಿಸಿದ್ದಾರೆ. ವಿಶ್ವಸಂಸ್ಥೆಯನ್ನು ಬಲಪಡಿಸುವ ಬದಲು ಟ್ರಂಪ್ ತಾನೊಬ್ಬನೇ ಮಾಲಕನಾಗಿರುವ ಹೊಸ ವಿಶ್ವಸಂಸ್ಥೆ ರಚಿಸಲು ಪ್ರಸ್ತಾಪಿಸಿದ್ದಾರೆ. ಟ್ವಿಟರ್ ಮೂಲಕ ಇಡೀ ಜಗತ್ತನ್ನು ಆಳಲು ಟ್ರಂಪ್ ಬಯಸಿದ್ದಾರೆ. ಇದು ಗಮನಾರ್ಹವಾಗಿದೆ. ಪ್ರತೀ ದಿನ ಅವರು ಏನಾದರೂ ಹೇಳುತ್ತಾರೆ ಮತ್ತು ಅವರು ಏನು ಹೇಳಿದರು ಎಂಬ ಬಗ್ಗೆ ಪ್ರತೀ ದಿನ ಜಗತ್ತು ಮಾತನಾಡುತ್ತದೆ' ಎಂದು ಲೂಲಾ ಹೇಳಿರುವುದಾಗಿ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಜಾಗತಿಕ ವ್ಯವಹಾರಗಳಲ್ಲಿ `ಕಾಡಿನ ನ್ಯಾಯ'ದ ಬದಲು ಬಹುಪಕ್ಷೀಯತೆಯನ್ನು ಸಮರ್ಥಿಸಿಕೊಂಡ ಲೂಲಾ, ವಿಶ್ವಸಂಸ್ಥೆಯ ಚಾರ್ಟರ್(ಸನದು) ಅನ್ನು ಹರಿದು ಹಾಕಲಾಗುತ್ತಿದೆ ಎಂದು ಎಚ್ಚರಿಸಿದರು. ಇದಕ್ಕೂ ಮುನ್ನ ಲೂಲಾಗೆ ಕರೆ ಮಾಡಿದ್ದ ಚೀನಾ ಅಧ್ಯಕ್ಷ ಕ್ಸಿ ಜಿಂಪಿಂಗ್ ಅಂತರಾಷ್ಟ್ರೀಯ ವ್ಯವಹಾರಗಳಲ್ಲಿ ವಿಶ್ವಸಂಸ್ಥೆಯ ಕೇಂದ್ರ ಪಾತ್ರವನ್ನು ರಕ್ಷಿಸುವ ಅಗತ್ಯವನ್ನು ಒತ್ತಿಹೇಳಿದರು ಎಂದು ವರದಿಯಾಗಿದೆ.

ವಾರ್ತಾ ಭಾರತಿ 24 Jan 2026 10:18 pm

ಅಬ್ಬಬ್ಬಾ... ಏನು ಪ್ರೀತಿ! ಟಿ20 ವಿಶ್ವಕಪ್ ನಿಂದ ಬಾಂಗ್ಲಾವನ್ನು ಹೊರಹಾಕಿದ್ದಕ್ಕೆ ನಾವೂ ಆಡೋದು ಡೌಟ್ ಎಂದ ಪಾಕ್!

ಬಾಂಗ್ಲಾದೇಶವನ್ನು ಟಿ20 ವಿಶ್ವಕಪ್‌ನಿಂದ ಹೊರಹಾಕಿದ್ದು ಅನ್ಯಾಯ ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಹೇಳಿದೆ. ಪಾಕಿಸ್ತಾನ ಸರ್ಕಾರವೇ ಟೂರ್ನಿಯಲ್ಲಿ ಭಾಗವಹಿಸುವ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದೆ. ಬಾಂಗ್ಲಾದೇಶಕ್ಕೆ ನ್ಯಾಯ ಸಿಗಬೇಕು ಎಂದು ಪಾಕಿಸ್ತಾನ ವಾದಿಸಿದೆ. ಐಸಿಸಿ ದ್ವಂದ್ವ ನೀತಿ ಅನುಸರಿಸಬಾರದು ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಅಧ್ಯಕ್ಷ ಮೊಹ್ಸಿನ್ ನಖ್ವಿ ಹೇಳಿದ್ದಾರೆ.

ವಿಜಯ ಕರ್ನಾಟಕ 24 Jan 2026 10:15 pm

ಕಲಬುರಗಿ | ಪಾಸ್ ನವೀಕರಣ ಗೊಂದಲ ಬಗೆಹರಿಸಿ : ಹಣಮಂತ ಶೇರಿ ಒತ್ತಾಯ

ಕಲಬುರಗಿ: ವಿಕಲಚೇತನರ ಬಸ್ ಪಾಸ್ ನವೀಕರಣದ ವೇಳೆ ಬಸ್ ಪಾಸ್ ವಿತರಣೆ ಕೌಂಟರ್‌ಗಳಲ್ಲಿ ವಿನಾಕಾರಣವಾಗಿ ಸಂಬಂಧವಿಲ್ಲದ ದಾಖಲೆಗಳನ್ನು ಕೇಳಿ ವಿಕಲಚೇತನರನ್ನು ಸುಖಾಸುಮ್ಮನೆ ಓಡಾಡಿಸಲಾಗುತ್ತಿದೆ ಎಂದು ಸಾಮಾಜಿಕ ಕಾರ್ಯಕರ್ತ ಹಣಮಂತ ಶೇರಿ ಆರೋಪಿಸಿದ್ದಾರೆ. ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮವು ನಿಯಮಗಳನ್ನು ಸರಳಗೊಳಿಸುವ ಬದಲು ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಸ್ಟ್ಯಾಂಪ್ ಪೇಪರ್, ರೇಷನ್ ಕಾರ್ಡ್, ಪ್ಯಾನ್ ಕಾರ್ಡ್ ಸೇರಿದಂತೆ ಅನಗತ್ಯ ದಾಖಲೆಗಳನ್ನು ಕೇಳಿ ವಿಕಲಚೇತನರಿಗೆ ಪಾಸ್ ನೀಡುವಲ್ಲಿ ಸತಾಯಿಸಲಾಗುತ್ತಿದೆ ಎಂದು ದೂರಿದ್ದಾರೆ. ಸೇವಾ ಸಿಂಧು ಪೋರ್ಟಲ್‌ನಲ್ಲಿ ಈಗಾಗಲೇ ಅಪ್‌ಲೋಡ್ ಮಾಡಿರುವ ದಾಖಲೆಗಳನ್ನೇ ನವೀಕರಣ ಸಂದರ್ಭದಲ್ಲಿ ಪರಿಗಣಿಸಬೇಕು. ಡಿಜಿಲಾಕರ್ ವ್ಯವಸ್ಥೆ ಮೂಲಕ ಆಧಾರ್ ಸಂಖ್ಯೆ ನಮೂದಿಸಿದರೆ ಅಗತ್ಯ ಮಾಹಿತಿಗಳು ತಕ್ಷಣ ಲಭ್ಯವಾಗುತ್ತವೆ. ಇಂತಹ ಸೌಲಭ್ಯಗಳಿದ್ದರೂ ವಿಕಲಚೇತನರನ್ನು ಅನಗತ್ಯವಾಗಿ ಕಚೇರಿಗಳ ಸುತ್ತ ಅಲೆದಾಡಿಸುವ ಪ್ರಯತ್ನ ನಡೆಯುತ್ತಿದೆ ಎಂದು ಆರೋಪಿಸಿದ್ದಾರೆ. ವಿಭಾಗದ ಕೆಲ ಕೌಂಟರ್‌ಗಳಲ್ಲಿ ಅಗತ್ಯ ಮಾಹಿತಿಯ ಫಲಕಗಳನ್ನು ಪ್ರದರ್ಶಿಸಿಲ್ಲ. ಪ್ರಶ್ನಿಸಿದರೆ ಕೌಂಟರ್ ಸಿಬ್ಬಂದಿಯಿಂದ ಅಸಮಂಜಸ ಉತ್ತರಗಳು ಬರುತ್ತಿವೆ. ಅಲ್ಲದೆ, ಕೆಲ ನಿರ್ವಾಹಕರು ಸ್ಟ್ಯಾಂಪ್ ಪೇಪರ್ ಮತ್ತು ಝರಾಕ್ಸ್ ಅಂಗಡಿಗಳ ಮಾಲೀಕರೊಂದಿಗೆ ಕೈಜೋಡಿಸಿ ವಿಕಲಚೇತನರಿಂದ ಹಣ ವಸೂಲಿ ಮಾಡುವ ಆರೋಪವನ್ನೂ ಅವರು ಮಾಡಿದ್ದಾರೆ. ಸದ್ಯ ಎಐ ತಂತ್ರಜ್ಞಾನವನ್ನು ಬಳಸಿ ಅನರ್ಹರನ್ನು ಗುರುತಿಸಿ ನೈಜ ವಿಕಲಚೇತನರಿಗೆ ಮಾತ್ರ ಬಸ್ ಪಾಸ್ ನೀಡುವತ್ತ ನಿಗಮ ಗಮನ ಹರಿಸಬೇಕು. ಅರ್ಹ ವಿಕಲಚೇತನರಿಗೆ ಕಿರುಕುಳ ನೀಡುವ ಬದಲು ನಿಗಮ ತನ್ನ ಕಾರ್ಯಕ್ಷಮತೆಯನ್ನು ಪ್ರದರ್ಶಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ. ಈ ಸಂಬಂಧ ನಾಲ್ಕು ದಿನಗಳೊಳಗೆ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳದಿದ್ದಲ್ಲಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಕಚೇರಿ ಎದುರು ವಿಕಲಚೇತನರೊಂದಿಗೆ ಉಗ್ರ ಹೋರಾಟ ಕೈಗೊಳ್ಳಲಾಗುವುದು ಎಂದು ಹಣಮಂತ ಶೇರಿ ಎಚ್ಚರಿಕೆ ನೀಡಿದ್ದಾರೆ.

ವಾರ್ತಾ ಭಾರತಿ 24 Jan 2026 10:14 pm

ಮಂಗಳೂರು| ಮಹಾವೀರ ವೃತ್ತದಲ್ಲಿ ಮರುಸ್ಥಾಪನೆಗೊಂಡ ಕಲಶ ಲೋಕಾರ್ಪಣೆ

ಮಂಗಳೂರು: ನಗರದ ಪಂಪ್‌ವೆಲ್ ಮಹಾವೀರ ವೃತ್ತದಲ್ಲಿ ಮಂಗಳೂರು ಜೈನ್ ಸೊಸೈಟಿ (ರಿ) ಇವರ ಮುಂದಾಳತ್ವ ದಲ್ಲಿ ಮರುಸ್ಥಾಪನೆಗೊಂಡ ಕಲಶವನ್ನು ಶ್ರೀಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಶನಿವಾರ ಲೋಕಾರ್ಪಣೆಗೊಳಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಮಾನವನ ಅಂತರಂಗ-ಬಹಿರಂಗ ಶುದ್ಧವಾಗಬೇಕು. ಮಂಗಳೂರಿಗೆ ಆಗಮಿಸುವ ಹಾಗೂ ತೆರಳುವವರಿಗೆ ವಿದಾಯ ಹಾಗೂ ಸ್ವಾಗತ ಕೋರುವ ಕಲಶವಾಗಿದೆ. ಎಲ್ಲರಿಗೂ ಶುಭವಾಗಲಿ ಎಂಬ ಆಶಯದಲ್ಲಿ ಈ ಪವಿತ್ರ ಕಲಶವನ್ನು ಸ್ಥಾಪಿಸಲಾಗಿದೆ ಎಂದರು. *ಸ್ವಾಭಿಮಾನದ ಸಂಕೇತ : ಯುಟಿ ಖಾದರ್ ನಾಮಫಲಕ ಅನಾವರಣಗೊಳಿಸಿದ ಸ್ಪೀಕರ್ ಯು.ಟಿ.ಖಾದರ್ ಮಾತನಾಡಿ, ಈ ಕಲಶ ಕರಾವಳಿಯ ಸಂಸ್ಕೃತಿ ಪರಂಪರೆ, ಧಾರ್ಮಿಕತೆ, ಸ್ವಾಭಿಮಾನದ ಸಂಕೇತ. ಮಹಾವೀರರ ಅಹಿಂಸಾ ಪರಮೋಧರ್ಮದ ಸಂದೇಶವನ್ನು ಸಾರುವ ಕಲಶ ಇದಾಗಿದ್ದು, ಅವರ ಚಿಂತನಾ ವಾಕ್ಯಗಳನ್ನೂ ಫಲಕಗಳಲ್ಲಿ ಅಳವಡಿಸಬೇಕು. ಈ ಮೂಲಕ ಜನತೆ ಆತ್ಮಾವಲೋಕನ ನಡೆಸಲು ನಾಂದಿಯಾಗಬೇಕು ಎಂದರು. ದ.ಕ. ಸಂಸದ ಬ್ರಿಜೇಶ್ ಚೌಟ ಮಾತನಾಡಿ, ಮಂಗಳೂರು 2.0 ಅಭಿವೃದ್ಧಿಗೆ ಈ ಕಲಶ ಕಲಶಪ್ರಾಯವಾಗಿದೆ. ‘ಮರಳಿ ಊರಿಗೆ’ ಕಲ್ಪನೆಯಡಿ ಸ್ವಂತ ಊರಿನಲ್ಲಿ ಉದ್ಯೋಗ ಕೈಗೊಳ್ಳುವವರಿಗೆ ಇದು ಪ್ರೇರಣೆಯಾಗಬೇಕು ಎಂದರು. ಬಿ.ಸಿ.ರೋಡ್-ಸುರತ್ಕಲ್ ಹೆದ್ದಾರಿಯ ಉನ್ನತೀಕರಣಕ್ಕೆ ಕಾರ್ಯಸಾಧ್ಯತಾ ವರದಿಗೆ ಕೇಂದ್ರ ಸೂಚಿಸಿದೆ. ಕುದುರೆಮುಖ ಕಾರ್ಖಾನೆಯಿಂದ ಬೈಕಂಪಾಡಿಗೆ ಹಾಗೂ ನಂತೂರಿನಿಂದ ಕೂಳೂರು ವರೆಗೆ ಎಲಿವೇಟೆಡ್ ರಸ್ತೆ ನಿರ್ಮಾಣವಾಗಬೇಕಾಗಿದೆ. ಸುರತ್ಕಲ್-ಬಿ.ಸಿ.ರೋಡ್ ಬೈಪಾಸ್ ರಸ್ತೆ ರಚನೆಯಾಗಬೇಕಾಗಿದ್ದು, ಇವಕ್ಕೆಲ್ಲ ಕೇಂದ್ರ ಹೆದ್ದಾರಿ ಸಚಿವ ಗಡ್ಕರಿ ಜೊತೆ ಮಾತುಕತೆ ನಡೆಸಲು ರಾಜ್ಯಸಭಾ ಸದಸ್ಯ ಡಾ.ವೀರೇಂದ್ರ ಹೆಗ್ಗಡೆ ಅವರ ಸಾಥ್ ಬೇಕಾಗಿದೆ ಎಂದರು. ಅಧ್ಯಕ್ಷತೆ ವಹಿಸಿದ ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಡಾ.ಎಂ.ಎನ್.ರಾಜೇಂದ್ರ ಕುಮಾರ್, ಮಂಗಳೂರಿಗೆ ಆಗಮಿಸುವವರಿಗೆ ಪಂಪ್‌ವೆಲ್ ಮಹಾವೀರ ವೃತ್ತದ ಕಲಶ ಗೌರವ ಸೂಚಕವಾಗಿದೆ. ಇಲ್ಲಿ ಉದ್ದಿಮೆ ನಡೆಸುವವರಿಗೂ ಯಶಸ್ಸು ಸಿಗಲಿ ಎಂದರು. ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ್ ಕಾಮತ್ , ವಿಧಾನ ಪರಿಷತ್ ಸದಸ್ಯ ಐವನ್ ಡಿ ಸೋಜ ಶುಭ ಹಾರೈಸಿದರು. ಮಂಗಳೂರು ಜೈನ್ ಸೊಸೈಟಿ ಅಧ್ಯಕ್ಷ ಪುಷ್ಪರಾಜ್ ಜೈನ್ ಸ್ವಾಗತಿಸಿದರು. ಮನೋಜ್ ಕುಮಾರ್ ವಾಮಂಜೂರು ನಿರೂಪಿಸಿದರು.

ವಾರ್ತಾ ಭಾರತಿ 24 Jan 2026 10:12 pm

ಪಾಕಿಸ್ತಾನ| ಮದುವೆ ಮನೆ ಮೇಲೆ ಆತ್ಮಾಹುತಿ ಬಾಂಬ್ ದಾಳಿ: 7 ಜನರು ಮೃತ್ಯು

ಪೇಷಾವರ, ಜ.24: ಪಾಕಿಸ್ತಾನದ ವಾಯವ್ಯ ಖೈಬರ್ ಪಖ್ತೂಂಕ್ವಾ ಪ್ರಾಂತದಲ್ಲಿ ಶುಕ್ರವಾರ ತಡರಾತ್ರಿ ವಿವಾಹ ಸಮಾರಂಭದ ಮೇಲೆ ನಡೆದ ಆತ್ಮಾಹುತಿ ಬಾಂಬ್ ದಾಳಿಯಲ್ಲಿ ಕನಿಷ್ಠ 7 ಮಂದಿ ಮೃತಪಟ್ಟಿದ್ದು ಇತರ 25 ಮಂದಿ ಗಾಯಗೊಂಡಿರುವುದಾಗಿ ವರದಿಯಾಗಿದೆ. ಡೇರಾ ಇಸ್ಮಾಯಿಲ್ ಖಾನ್ ಜಿಲ್ಲೆಯ ಖುರೇಷಿ ಮೊರ್ ಪ್ರದೇಶದ ಶಾಂತಿ ಸಮಿತಿಯ ನಾಯಕ ನೂರ್ ಅಹ್ಮದ್ ಮೆಷುದ್ ಅವರ ನಿವಾಸದ ಮೇಲೆ ಆತ್ಮಾಹುತಿ ಬಾಂಬ್ ದಾಳಿ ನಡೆದಿರುವುದಾಗಿ ಎಪಿ ಸುದ್ದಿಸಂಸ್ಥೆ ವರದಿ ಮಾಡಿದೆ. ಮನೆಯಲ್ಲಿ ವಿವಾಹ ಸಮಾರಂಭ ನಡೆಯುತ್ತಿತ್ತು ಮತ್ತು ಅತಿಥಿಗಳು ನೃತ್ಯ ಮಾಡುತ್ತಿದ್ದಾಗ ಸ್ಫೋಟ ಸಂಭವಿಸಿದ್ದು ಸಭಾಂಗಣದ ಛಾವಣಿ ಕುಸಿದು ಬಿದ್ದಿದ್ದು ಸ್ಫೋಟದ ದೃಶ್ಯ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಕುಸಿದು ಬಿದ್ದ ಛಾವಣಿಯಡಿ ಹಲವರು ಸಿಲುಕಿದ್ದು ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ. ಗಾಯಾಳುಗಳನ್ನು ಜಿಲ್ಲಾಸ್ಪತ್ರೆಗೆ ಸ್ಥಳಾಂತರಿಸಲಾಗಿದ್ದು ಯಾವುದೇ ಗುಂಪು ಸ್ಫೋಟದ ಹೊಣೆ ವಹಿಸಿಕೊಂಡಿಲ್ಲ ಎಂದು ಜಿಲ್ಲಾ ಪೊಲೀಸ್ ಅಧಿಕಾರಿಯನ್ನು ಉಲ್ಲೇಖಿಸಿ ವರದಿಯು ಹೇಳಿದೆ.

ವಾರ್ತಾ ಭಾರತಿ 24 Jan 2026 10:11 pm

ಸರಕಾರಕ್ಕೆ ಲಿಂಗತ್ವ ಅಲ್ಪಸಂಖ್ಯಾತರ ಸಮೀಕ್ಷಾ ವರದಿ ಸಲ್ಲಿಕೆ; ರಾಜ್ಯದಲ್ಲಿದ್ದಾರೆ 10,365 ಲಿಂಗತ್ವ ಅಲ್ಪಸಂಖ್ಯಾತರು

ಬೆಂಗಳೂರು: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮವು ಸಿದ್ದಪಡಿಸಿದ 2025-26ನೇ ಸಾಲಿನ ಲಿಂಗತ್ವ ಅಲ್ಪಸಂಖ್ಯಾತರ(ಟ್ರಾನ್ಸ್ ಜೆಂಡರ್) ಸಮೀಕ್ಷಾ ವರದಿಯನ್ನು ರಾಜ್ಯ ಸರಕಾರಕ್ಕೆ ಸಲ್ಲಿಕೆ ಮಾಡಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮಾಹಿತಿ ನೀಡಿದ್ದಾರೆ. ಶನಿವಾರ ಪ್ರಕಟನೆ ಹೊರಡಿಸಿರುವ ಅವರು, ಲಿಂಗತ್ವ ಅಲ್ಪಸಂಖ್ಯಾತರು ಎದುರಿಸುವ ಸಮಸ್ಯೆಗಳಾದ ಭಯ, ಅವಮಾನ, ಲಿಂಗ ತಾರತಮ್ಯತೆ, ಸಾಮಾಜಿಕ ತಾರತಮ್ಯ, ಖಿನ್ನತೆ, ಆತ್ಮಹತ್ಯಾ ಪ್ರವೃತ್ತಿಯಿಂದ ಅವರನ್ನು ಹೊರತರಲು ಸಮೀಕ್ಷೆಯನ್ನು ನಡೆಸಲು ರಾಜ್ಯ ಸರಕಾರ ತೀರ್ಮಾನ ಮಾಡಿತ್ತು. ಅದರಂತೆ 31 ಜಿಲ್ಲೆಗಳಲ್ಲಿ 2025ರ ಸೆ.15ರಿಂದ ಸಮೀಕ್ಷೆಯನ್ನು ನಡೆಸಲಾಯಿತು ಎಂದಿದ್ದಾರೆ. ರಾಜ್ಯದಲ್ಲಿ 18 ವರ್ಷ ಮೇಲ್ಪಟ್ಟ 10250 ಜನ ಲಿಂಗತ್ವ ಅಲ್ಪಸಂಖ್ಯಾತರು ಹಾಗೂ 18 ವರ್ಷದೊಳಗಿನ 115 ಲಿಂಗತ್ವ ಅಲ್ಪಸಂಖ್ಯಾತ ಮಕ್ಕಳು ಸೇರಿ ಒಟ್ಟು 10,365 ಲಿಂಗತ್ವ ಅಲ್ಪಸಂಖ್ಯಾತರು ಇದ್ದರೆ. ಅತಿ ಹೆಚ್ಚು ಲಿಂಗತ್ವ ಅಲ್ಪಸಂಖ್ಯಾತರನ್ನು ಹೊಂದಿರುವ ಮೊದಲ 5 ಜಿಲ್ಲೆಗಳಲ್ಲಿ ವಿಜಯಪುರ ಜಿಲ್ಲೆ(1,428), ಚಿಕ್ಕಬಳ್ಳಾಪುರ(1,252), ಬೆಂಗಳೂರು ನಗರ(757), ಕೋಲಾರ(638) ಮತ್ತು ಬೆಳಗಾವಿ(618) ಇರುವುದು ತಿಳಿದು ಬಂದಿದೆ ಎಂದು ಅವರು ಹೇಳಿದ್ದಾರೆ. ಸಮೀಕ್ಷೆಯಲ್ಲಿ ಸಾಮಾಜಿಕ ಸ್ಥಿತಿಗತಿಗಳ ಬಗ್ಗೆ, ಶೈಕ್ಷಣಿಕ ಮಾಹಿತಿ, ವಾಸಸ್ಥಳ ಹಾಗೂ ವಲಸೆ ಮಾಹಿತಿ, ಕುಟುಂಬದವರಿಂದ ಸ್ವೀಕಾರ ಹಾಗೂ ಕುಟುಂಬದ ಮೇಲಿನ ಅವಲಂಬನೆ ಮಾಹಿತಿ, ಉದ್ಯೋಗ ಮತ್ತು ಆದಾಯದ ಮಾಹಿತಿ, ಸರಕಾರಿ ಸೌಲಭ್ಯಗಳನ್ನು ಪಡೆದಿರುವ ಮಾಹಿತಿ, ಮನೆ, ನಿವೇಶನ ಹಾಗೂ ಕೃಷಿ ಭೂಮಿ ಹೊಂದಿರುವ ಮಾಹಿತಿ, ಅವರ ದೃಢೀಕರಣಕ್ಕಾಗಿ ಶಸ್ತ್ರಚಿಕಿತ್ಸೆಗೊಳಗಾದ ಮಾಹಿತಿ, ಆರೋಗ್ಯದ ಸ್ಥಿತಿಗತಿ ಮಾಹಿತಿ, ಕೌಶ್ಯಲ ತರಬೇತಿ ಮಾಹಿತಿ, ವಾಸದ ಮನೆಗಳು ಹಾಗೂ ಮೂಲಭೂತ ಸೌಕರ್ಯಗಳ ಮಾಹಿತಿಯು ಒಳಗೊಂಡಿದೆ ಎಂದು ಅವರು ವಿವರಿಸಿದ್ದಾರೆ. ವಸತಿ ನಿಲಯಗಳಲ್ಲಿ ಆದ್ಯತೆಯ ಮೇರೆಗೆ ಲಿಂಗತ್ವ ಅಲ್ಪಸಂಖ್ಯಾತರನ್ನು ದಾಖಲಾತಿ ಮಾಡಿಕೊಳ್ಳಲು ಕ್ರಮವಹಿಸುವುದು, ಲಿಂಗತ್ವ ಅಲ್ಪಸಂಖ್ಯಾತ ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡಲು ಯೋಜನೆ ರೂಪಿಸುವುದು, ಲಿಂಗತ್ವ ಅಲ್ಪಸಂಖ್ಯಾತರಿಗೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ತೆಗೆದುಕೊಳ್ಳಲು ಕೋಚಿಂಗ್ ನೀಡುವುದು, ಆರೋಗ್ಯ, ಉದ್ಯೋಗ ಮತ್ತು ಕೌಶಲ್ಯ ಅಭಿವೃದ್ಧಿ ತರಬೇತಿ, ವಸತಿ ಮತ್ತು ಮೂಲಭೂತ ಸೌಕರ್ಯಗಳ ಅಭಿವೃದ್ಧಿ ಸೇರಿ 18 ಶಿಫಾರಸುಗಳನ್ನು ಮಾಡಿದೆ ಎಂದು ವಿವರಿಸಿದ್ದಾರೆ. ‘ರಾಜ್ಯದಲ್ಲಿರುವ ಲಿಂಗತ್ವ ಅಲ್ಪಸಂಖ್ಯಾತರ ಸ್ಥಿತಿಗತಿ ಅರಿಯಲು, ಪುನರ್ವಸತಿ ಕಲ್ಪಿಸಲು ಮತ್ತು ಸರಕಾರದ ಸೌಲಭ್ಯಗಳನ್ನು ಒದಗಿಸುವ ಹಿನ್ನೆಲೆಯಲ್ಲಿ ಅವರ ನಿಖರ ಮಾಹಿತಿ ಸಂಗ್ರಹಿಸುವುದಕ್ಕಾಗಿ ಮೂಲಹಂತದ ಸಮೀಕ್ಷೆ ನಡೆಸಲಾಗಿತ್ತು. ಈಗ ಬಂದಿರುವ ವರದಿಯನ್ನು ಆಧರಿಸಿ ಸರಕಾರ ಮುಂದಿನ ಕ್ರಮಗಳನ್ನು ಕೈಗೊಳ್ಳಲಿದೆ’ - ಲಕ್ಷ್ಮೀ ಹೆಬ್ಬಾಳ್ಕರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ. ವರದಿಯಲ್ಲಿನ ಪ್ರಮುಖ ಶಿಫಾರಸ್ಸುಗಳು 1. ಲಿಂಗತ್ವ ಅಲ್ಪಸಂಖ್ಯಾತರಿಗೆ ಎಲ್ಲ ಖಾಸಗಿ ಕಂಪೆನಿಗಳಲ್ಲಿ ಶೇ.1ರಷ್ಟು ಉದ್ಯೋಗ ಮೀಸಲಾತಿ ಕಲ್ಪಿಸುವುದು. 2. ಲಿಂಗತ್ವ ಅಲ್ಪಸಂಖ್ಯಾತರ ಕ್ಷೇಮಾಭಿವೃದ್ದಿ ಮಂಡಳಿ ಸ್ಥಾಪಿಸುವುದು. 3. ಸರಕಾರದ ವಿವಿಧ ಇಲಾಖೆಗಳ ಮುಖಾಂತರ ಲಿಂಗತ್ವ ಅಲ್ಪಸಂಖ್ಯಾತರಿಗೆ ಆರ್ಥಿಕ ಚಟುವಟಿಕೆ ನಡೆಸಲು ಸಹಾಯಧನ ಕಾರ್ಯಕ್ರಮ ರೂಪಿಸುವುದು. 4. ಮನೆಗಳು ಇಲ್ಲದ ಲಿಂಗತ್ವ ಅಲ್ಪಸಂಖ್ಯಾತರಿಗೆ ಮನೆಗಳನ್ನು ಒದಗಿಸುವುದು. 5. ಸಾರ್ವಜನಿಕ ಸ್ಥಳಗಳಲ್ಲಿ ಲಿಂಗತ್ಯ ಅಲ್ಪಸಂಖ್ಯಾತರಿಗಾಗಿ ಪ್ರತ್ಯೇಕ ಶೌಚಾಲಯ, ನಿರೀಕ್ಷಣಾ ಕೊಠಡಿಗಳು ನಿರ್ಮಾಣ ಆಗಬೇಕು. 6. ಭಿಕ್ಷಾಟನೆಯಲ್ಲಿ ತೊಡಗಿರುವ ಲಿಂಗತ್ವ ಅಲ್ಪಸಂಖ್ಯಾತರಿಗೆ ಸಮಾಜ ಕಲ್ಯಾಣ ಇಲಾಖೆಯ ಭಿಕ್ಷುಕರ ಪುನರ್ವಸತಿ ಕೇಂದ್ರದಲ್ಲಿ ಅವಕಾಶ ಕಲ್ಪಿಸಬೇಕು. 7. ವಿಶೇಷ ಕ್ಯಾಂಪ್‍ಗಳನ್ನು ಆಯೋಜಿಸಿ ಎಲ್ಲ ಲಿಂಗತ್ವ ಅಲ್ಪಸಂಖ್ಯಾತರಿಗೆ ಪಡಿತರ ಚೀಟಿಗಳನ್ನು ವಿತರಿಸುವುದು. 8. ಲಿಂಗತ್ವ ಅಲ್ಪಸಂಖ್ಯಾತರಿಗೆ ಲಿಂಗತ್ವ ದೃಢೀಕರಣ ಶಸ್ತ್ರ ಚಿಕಿತ್ಸೆಗಾಗಿ ಕಾರ್ಯಕ್ರಮಗಳನ್ನು ರೂಪಿಸಬೇಕು. 9. ಹಿರಿಯ ನಾಗರಿಕ ಲಿಂಗತ್ವ ಅಲ್ಪಸಂಖ್ಯಾತರಿಗೆ ವೃದ್ಧಾಶ್ರಮಗಳ ಸೌಲಭ್ಯ ಕಲ್ಪಿಸಬೇಕು.

ವಾರ್ತಾ ಭಾರತಿ 24 Jan 2026 10:11 pm