ಯುಎಸ್-ಇಸ್ರೇಲ್ ಜಂಟಿ ದಾಳಿಯಲ್ಲಿ ಖಮೇನಿ ಮಗಳು, ಅಳಿಯ ಸೇರಿ ಹಲವರ ಸಾವು; ಇರಾನ್ ರಕ್ಷಣಾ ಸಚಿವರ ಮೃತದೇಹ ಪತ್ತೆ!
ಅಮೆರಿಕ ಮತ್ತು ಇಸ್ರೇಲ್ ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ, ಇರಾನ್ ಸರ್ವೋಚ್ಚ ನಾಯಕ ಆಯತೊಲ್ಲಾ ಅಲಿ ಖಮೇನಿ ಮೃತಪಟ್ಟಿದ್ದಾರೆ ಎಂದ ದೃಢೀಕರಣಗಳ ನಡುವೆಯೇ, ವೈಮಾನಿಕ ದಾಳಿಯಲ್ಲಿ ಖಮೇನಿ ಅವರ ಪುತ್ರಿ, ಅಳಿಯ ಮತ್ತು ಮೊಮ್ಮಗಳೂ ಕೂಡ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗುತ್ತಿದೆ. ಅಷ್ಟೇ ಅಲ್ಲದೇ ಕ್ಷಿಪಣಿ ದಾಳಿಗೆ ಬಲಿಯಾದ ಇರಾನ್ ರಕ್ಷಣಾ ಸಚಿವ ಅಮೀರ್ ನಾಸಿರ್ಜಾದೆ ಅವರ ಮೃತದೇಹ ಪತ್ತೆಯಾಗಿದೆ ಎಂದೂ ಇಸ್ರೇಲ್ ಮಾಧ್ಯಮಗಳು ವರದಿ ಮಾಡಿವೆ. ಈ ಕುರಿತು ಇಲ್ಲಿದೆ ಮಾಹಿತಿ.
Karnataka Weather: ಕರ್ನಾಟಕದ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಮಳೆ ಸಾಧ್ಯತೆ, ಬಿಸಿಲೂ ಹೆಚ್ಚು
ಬೆಂಗಳೂರು: ಕಳೆದ 24 ಗಂಟೆಗಳಲ್ಲಿ ಕರ್ನಾಟಕದ ಹವಾಮಾನದಲ್ಲಿ ಏರುಪೇರು ಕಂಡುಬಂದಿದೆ. ದಕ್ಷಿಣ ಒಳನಾಡಿನ ಒಂದೆರಡು ಕಡೆಗಳಲ್ಲಿ ಮಳೆಯಾಗಿದ್ದರೆ, ಕರಾವಳಿ ಮತ್ತು ಉತ್ತರ ಒಳನಾಡಿನಲ್ಲಿ ಒಣ ಹವಾಮಾನ ಮುಂದುವರಿದಿದೆ. ರಾಜ್ಯದ ಬಯಲು ಸೀಮೆಯಲ್ಲಿ ವಿಜಯಪುರವು 15.2 ಡಿಗ್ರಿ ಸೆಲ್ಸಿಯಸ್ ಕನಿಷ್ಠ ತಾಪಮಾನ ದಾಖಲಿಸುವ ಮೂಲಕ ಅತಿ ತಂಪಾದ ಪ್ರದೇಶವಾಗಿ ಹೊರಹೊಮ್ಮಿದೆ. ಹಾಸನದಲ್ಲಿ ಕನಿಷ್ಠ ತಾಪಮಾನ 13.4 ಡಿಗ್ರಿ ಸೆಲ್ಸಿಯಸ್
ಕೆಲವರಿಗೆ ಮುಂದಾಗುವ ಅನಾಹುತಗಳ ಬಗ್ಗೆ ಮೊದಲೇ ಭಾಸವಾಗುತ್ತದೆಯಂತೆ. ಅದೇ ರೀತಿ ಅಮೆರಿಕ ಮತ್ತು ಇಸ್ರೇಲ್ ಜೊತೆಗೂಡಿ ಇರಾನ್ ಮೇಲೆ ದಾಳಿ ನಡೆಸುವ ಬಗ್ಗೆ, ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಅವರಿಗೂ ಮೊದಲೇ ಭಾಸವಾಗಿತ್ತು. ಈ ಕುರಿತು ಹೇಳಿಕೆ ನೀಡಿದ್ದ ಹೈದರಾಬಾದ್ ಸಂಸದ, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಇಸ್ರೇಲ್ ಪ್ರವಾಸದ ಸಮಯವನ್ನೂ ಪ್ರಶ್ನಿಸಿದ್ದರು. ಇರಾನ್ ಮೇಲಿನ ದಾಳಿಯ ಬಗ್ಗೆ ಓವೈಸಿ ಅವರ ಭವಿಷ್ಯವಾಗಿ ಈಗ ನಿಜವಾಗಿದೆ. ಇಲ್ಲದೆ ಹೆಚ್ಚಿನ ಮಾಹಿತಿ.
ಡೊನಾಲ್ಡ್ ಟ್ರಂಪ್ ಮತ್ತು ಬೆಂಜಮಿನ್ ನೆತನ್ಯಾಹು ಅವರಿಗೆ ಖಮೇನಿ ಮೃತದೇಹದ ಫೋಟೋ ರವಾನೆ! ದುಷ್ಮನಿ ಅಂತ್ಯ
ಅಮೆರಿಕ ಮತ್ತು ಇಸ್ರೇಲ್ ಜಂಟಿ ವೈಮಾನಿಕ ದಾಳಿಯಲ್ಲಿ, ಇರಾನ್ ಸರ್ವೋಚ್ಚ ನಾಯಕ ಆಯತೊಲ್ಲಾ ಅಲಿ ಖಮೇನಿ ಮೃತಪಟ್ಟಿದ್ದಾರೆ ಎಂದು ಇಸ್ರೇಲ್ ಮಾಧ್ಯಮ ವರದಿ ಮಾಡಿದೆ. ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಕೂಡ ಖಮೇನಿ ಸಾವನ್ನು ದೃಢಪಡಿಸಿದ್ದಾರೆ. ಈ ಮಧ್ಯೆ ಇಸ್ರೇಲ್ ಮಾಧ್ಯಮಗಳು, ಖಮೇನಿ ಮೃತದೇಹದ ಫೋಟೋಗಳನ್ನು ಡೊನಾಲ್ಡ್ ಟ್ರಂಪ್ ಮತ್ತು ಬೆಂಜಮಿನ್ ನೆತನ್ಯಾಹು ಅವರಿಗೆ ರವಾನಿಸಲಾಗಿದೆ ಎಂದು ತಿಳಿಸಿವೆ. ಇಲ್ಲಿದೆ ಹೆಚ್ಚಿನ ಮಾಹಿತಿ.
ಅಮೆರಿಕ ಮತ್ತು ಇಸ್ರೇಲ್ ನಡೆಸಿದ ದಾಳಿಯಲ್ಲಿ ಇರಾನ್ ಸರ್ವೋಚ್ಚ ನಾಯಕ ಆಯತೊಲ್ಲಾ ಅಲಿ ಖಮೇನಿ ಹತ್ಯೆಯನ್ನು, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ದೃಢಪಡಿಸಿದ್ದಾರೆ. ಯುಎಸ್ ಅಧ್ಯಕ್ಷ ತಮ್ಮ ಟ್ರೂತ್ ಸೋಶಿಯಲ್ ಮಿಡಿಯಾದಲ್ಲಿ ಜಗತ್ತಿನ ಅತಿ ದುಷ್ಟ ವ್ಯಕ್ತಿ ಇನ್ನಿಲ್ಲ ಎಂದು ಪೋಸ್ಟ್ ಮಾಡಿದ್ದಾರೆ. ಖಮೇನಿ ಹತ್ಯೆ ಇರಾನ್ಗೆ ಬಹುದೊಡ್ಡ ಆಘಾತ ನೀಡಿದ್ದರೆ, ಅಮೆರಿಕ ಮತ್ತು ಇಸ್ರೇಲ್ ಸಂಭ್ರಮಿಸುತ್ತಿವೆ. ಇರಾನ್ ಈ ಕುರಿತು ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ. ಇಲ್ಲಿದೆ ಮಾಹಿತಿ.
ಇಸ್ರೇಲ್ ನಿಂದ ಇರಾನ್ ನ ಮಿನಾಬ್ ಬಾಲಕಿಯರ ಶಾಲೆಯ ಮೇಲೆ ದಾಳಿ; ಮೃತರ ಸಂಖ್ಯೆ 108ಕ್ಕೆ ಏರಿಕೆ
ಮಿನಾಬ್ (ಇರಾನ್): ಇರಾನಿನ ಮಿನಾಬ್ ನಗರದ ಶಾಜರೆಹ್ ತಯ್ಯೆಬೆಹ್ ಬಾಲಕಿಯರ ಪ್ರಾಥಮಿಕ ಶಾಲೆಯ ಮೇಲೆ ಇಸ್ರೇಲ್ ನಡೆಸಿದ ದಾಳಿಯಲ್ಲಿ ಸಾವನ್ನಪ್ಪಿದವರ ಸಂಖ್ಯೆ 108ಕ್ಕೆ ಏರಿಕೆಯಾಗಿದೆ ಎಂದು ವರದಿಯಾಗಿದೆ. ಮಿನಾಬ್ ಪ್ರಾಸಿಕ್ಯೂಟರ್ ಕಚೇರಿಯನ್ನು ಉಲ್ಲೇಖಿಸಿ ಮಿಝಾನ್ ಸುದ್ದಿ ಸಂಸ್ಥೆ ಈ ಮಾಹಿತಿ ಪ್ರಕಟಿಸಿದೆ. ದಾಳಿಯಿಂದ ಶಾಲಾ ಕಟ್ಟಡವು ಭಾರೀ ಹಾನಿಗೊಳಗಾಗಿದ್ದು, ಅವಶೇಷಗಳಡಿ ಇನ್ನೂ ಕೆಲವರು ಸಿಲುಕಿರುವ ಸಾಧ್ಯತೆ ಇರುವುದಾಗಿ ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ. ಗಾಯಗೊಂಡ ವಿದ್ಯಾರ್ಥಿನಿಯರು ಹಾಗೂ ಸಿಬ್ಬಂದಿಯನ್ನು ಸಮೀಪದ ಆಸ್ಪತ್ರೆಗಳಿಗೆ ದಾಖಲಿಸಲಾಗಿದ್ದು, ಕೆಲವರ ಸ್ಥಿತಿ ಚಿಂತಾಜನಕವಾಗಿದೆ. ಸಾವಿನ ಸಂಖ್ಯೆ ಇನ್ನಷ್ಟು ಏರಿಕೆಯಾಗುವ ಸಾಧ್ಯತೆಯಿದೆ ಎಂಬ ಆತಂಕವೂ ವ್ಯಕ್ತವಾಗಿದೆ. ಘಟನೆ ಹಿನ್ನೆಲೆಯಲ್ಲಿ ಪ್ರದೇಶದಲ್ಲಿ ಉದ್ವಿಗ್ನತೆ ಮುಂದುವರೆದಿದೆ. ಭದ್ರತಾ ಪಡೆಗಳು ಸ್ಥಳವನ್ನು ಸುತ್ತುವರಿದು ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ಕೈಗೊಂಡಿವೆ ಎಂದು ತಿಳಿದು ಬಂದಿದೆ.
ದುಬೈ/ಅಬುಧಾಬಿ: ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ)ಯಾದ್ಯಂತ ನಿವಾಸಿಗಳು ಹಾಗೂ ಪ್ರವಾಸಿಗರ ಮೊಬೈಲ್ಗಳಿಗೆ ತುರ್ತು ಎಚ್ಚರಿಕೆ ಸಂದೇಶಗಳು ರವಾನೆಯಾದವು. ಪ್ರದೇಶದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆ ಮತ್ತು ಸಂಭಾವ್ಯ ಕ್ಷಿಪಣಿ ಬೆದರಿಕೆ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಆಂತರಿಕ ಸಚಿವಾಲಯ (ಎಂಒಐ) ಬಿಡುಗಡೆ ಮಾಡಿದ ಸಂದೇಶದಲ್ಲಿ, “ಪ್ರಸ್ತುತ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಸಂಭಾವ್ಯ ಕ್ಷಿಪಣಿ ಬೆದರಿಕೆಗಳಿವೆ. ತಕ್ಷಣವೇ ಹತ್ತಿರದ ಸುರಕ್ಷಿತ ಕಟ್ಟಡದಲ್ಲಿ ಆಶ್ರಯ ಪಡೆಯಿರಿ. ಕಿಟಕಿಗಳು, ಬಾಗಿಲುಗಳು ಹಾಗೂ ತೆರೆದ ಪ್ರದೇಶಗಳಿಂದ ದೂರವಿರಿ. ಮುಂದಿನ ಸೂಚನೆಗಳಿಗಾಗಿ ಕಾಯಿರಿ” ಎಂದು ತಿಳಿಸಲಾಗಿದೆ. ಎಚ್ಚರಿಕೆ ಅರೇಬಿಕ್ ಹಾಗೂ ಇಂಗ್ಲಿಷ್ ಭಾಷೆಗಳಲ್ಲಿ ದೇಶದ ತುರ್ತು ಅಧಿಸೂಚನಾ ವ್ಯವಸ್ಥೆಯ ಮೂಲಕ ಪ್ರಸಾರಗೊಂಡಿದೆ. ಎಮಿರೇಟ್ ನಾದ್ಯಂತ ಒಂದೇ ಸಮಯದಲ್ಲಿ ತುರ್ತು ಸಂದೇಶ ತಲುಪಿದೆ ಎಂದು ತಿಳಿದು ಬಂದಿದೆ. ಜನರು ಆತಂಕಕ್ಕೆ ಒಳಗಾಗದೆ ಶಾಂತವಾಗಿದ್ದು, ಅಧಿಕೃತ ಮೂಲಗಳಿಂದ ಹೊರಬರುವ ಸೂಚನೆಗಳನ್ನು ಮಾತ್ರ ಪಾಲಿಸಬೇಕು ಎಂದು ಅಧಿಕಾರಿಗಳು ಮನವಿ ಮಾಡಿದ್ದಾರೆ.
ದುಬೈನಲ್ಲಿ ತುರ್ತು ಎಚ್ಚರಿಕೆಗಳ ನಡುವೆ ಜಬಲ್ ಅಲಿ ಪೋರ್ಟ್ ಮೇಲೆ ಕ್ಷಿಪಣಿ ದಾಳಿ: ವರದಿ
ದುಬೈ: ದೇಶಾದ್ಯಂತ ನಿವಾಸಿಗಳು ಮತ್ತು ಪ್ರವಾಸಿಗರಿಗೆ ತುರ್ತು ಎಚ್ಚರಿಕೆ ಸಂದೇಶಗಳನ್ನು ಕಳುಹಿಸಿದ ಕೆಲವೇ ಕ್ಷಣಗಳಲ್ಲಿ, ದುಬೈ ನ ಜಬಲ್ ಅಲಿ ಪೋರ್ಟ್ ಮೇಲೆ ಕ್ಷಿಪಣಿ ದಾಳಿ ನಡೆದಿದೆ ಎಂದು ವರದಿಯಾಗಿದೆ. ಸಂಭಾವ್ಯ ಕ್ಷಿಪಣಿ ಬೆದರಿಕೆ ಹಿನ್ನೆಲೆಯಲ್ಲಿ ತಕ್ಷಣ ಆಶ್ರಯ ಪಡೆಯುವಂತೆ ಸೂಚಿಸುವ ಎಚ್ಚರಿಕೆಗಳನ್ನು ಅಧಿಕಾರಿಗಳು ಮೊಬೈಲ್ ಫೋನ್ಗಳಿಗೆ ರವಾನಿಸಿದ್ದರು. ಇದರ ಬೆನ್ನಲ್ಲೇ ಜಬಲ್ ಅಲಿ ಪೋರ್ಟ್ ಪ್ರದೇಶದಲ್ಲಿ ಸ್ಫೋಟದ ಶಬ್ದಗಳು ಕೇಳಿಬಂದಿವೆ ಎಂಬ ಮಾಹಿತಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಆದರೆ, ಪೋರ್ಟ್ ಮೇಲೆ ದಾಳಿ ನಡೆದಿರುವ ಕುರಿತು ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಅಧಿಕಾರಿಗಳಿಂದ ಇನ್ನೂ ಯಾವುದೇ ಅಧಿಕೃತ ದೃಢೀಕರಣ ಲಭ್ಯವಾಗಿಲ್ಲ. ಘಟನೆಯ ಸ್ವರೂಪ, ಸಂಭವನೀಯ ಹಾನಿ ಹಾಗೂ ಸಾವುನೋವುಗಳ ಬಗ್ಗೆ ತಕ್ಷಣ ಸ್ಪಷ್ಟ ಮಾಹಿತಿ ದೊರಕಿಲ್ಲ. ಘಟನೆಯ ಕುರಿತಂತೆ ಸಂಬಂಧಿತ ಇಲಾಖೆಗಳು ಪರಿಶೀಲನೆ ನಡೆಸುತ್ತಿವೆ ಎಂದು ಮೂಲಗಳು ತಿಳಿಸಿವೆ. ಸಾರ್ವಜನಿಕರು ವದಂತಿಗಳಿಗೆ ಕಿವಿಗೊಡದೆ, ಅಧಿಕೃತ ಮಾಹಿತಿಯನ್ನು ಮಾತ್ರ ಅನುಸರಿಸುವಂತೆ ಮನವಿ ಮಾಡಲಾಗಿದೆ.
ಇರಾನ್ ನ ಪರಮೋಚ್ಚ ನಾಯಕ ಖಾಮಿನೈ ಅವರ ಹತ್ಯೆಯಾಗಿದೆ; ರಾಯಿಟರ್ಸ್ ಹಾಗೂ ಇಸ್ರೇಲಿ ಮಾಧ್ಯಮಗಳ ವರದಿ
ಇರಾನ್ ಸರಕಾರ, ಮಾಧ್ಯಮಗಳಿಂದ ನಿರಾಕರಣೆ
ವಿಬಿ ಜಿ ರಾಮ್ ಜಿ ಕಾಯ್ದೆ ಬಗ್ಗೆ ಕಾಂಗ್ರೆಸ್ ತಪ್ಪು ಸಂದೇಶ ಕೊಡುತ್ತಿದೆ : ಪ್ರಹ್ಲಾದ್ ಜೋಶಿ
ಹುಬ್ಬಳ್ಳಿ, ಫೆ.28: ಕೇಂದ್ರ ಸರಕಾರವು ಜಾರಿಗೆ ತಂದಿರುವ ‘ವಿಬಿ ಜಿ ರಾಮ್ ಜಿ ಕಾಯ್ದೆ’ ಬಗ್ಗೆ ದೇಶದ ಜನಕ್ಕೆ ಕಾಂಗ್ರೆಸ್ ತಪ್ಪು ಸಂದೇಶ ಕೊಡುತ್ತಿದೆ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಹ್ಲಾದ್ ಜೋಶಿ ಆರೋಪಿಸಿದರು. ಶನಿವಾರ ಇಲ್ಲಿನ ಅರವಿಂದ ನಗರದಲ್ಲಿರವ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ‘ವಿಬಿ ಜಿ ರಾಮ್ ಜಿ' ಕುರಿತು ಮಾತನಾಡಿದ ಅವರು, ಈ ಹಿಂದೆ ಮನರೇಗಾದಲ್ಲಿ ಅನುದಾನ ಸೋರಿಕೆ ದೊಡ್ಡ ಪ್ರಮಾಣದಲ್ಲಿತ್ತು. ಭ್ರಷ್ಟಾಚಾರ ವ್ಯಾಪಕವಾಗಿತ್ತು. ಅಲ್ಲದೆ, ನಕಲಿ ಜಾಬ್ ಕಾರ್ಡ್ಗಳನ್ನು ಸೃಷ್ಟಿಸಲಾಗುತ್ತಿತ್ತು. ಇದೀಗ ಇದೆಲ್ಲದಕ್ಕೂ ಕಡಿವಾಣ ಬೀಳಲಿದೆ. ಆ ಕಾರಣಕ್ಕೆ ಕಾಂಗ್ರೆಸ್ ತಗಾದೆ ತೆಗೆಯುತ್ತಿದೆ ಎಂದು ದೂರಿದರು. ಎನ್ಡಿಎ ಸರಕಾರ ಜಾರಿಗೆ ತಂದ ವಿಬಿ-ಜಿ ರಾಮ್ ಜಿ ಯೋಜನೆ ಮೂಲಕ ಗ್ರಾಮೀಣ ಭಾಗದ ಜನರಿಗೆ 125 ದಿನಗಳ ಉದ್ಯೋಗ ಖಾತರಿ ದೊರೆಯಲಿದೆ. ಕೃತಕಬುದ್ಧಿಮತ್ತೆ ಚಾಲಿತ ಮೇಲ್ವಿಚಾರಣೆ, ಬಯೋಮೆಟ್ರಿಕ್ ಹಾಜರಾತಿ ಮತ್ತು ಡಿಜಿಟಲ್ ಲೆಕ್ಕಪರಿಶೋಧನೆಗಳೊಂದಿಗೆ ಈಗ ಸಂಪೂರ್ಣ ಪ್ರಕ್ರಿಯೆ ಪಾರದರ್ಶಕವಾಗಲಿದೆ ಎಂದು ಪ್ರಹ್ಲಾದ್ ಜೋಶಿ ಹೇಳಿದರು. ವಿಬಿ ಜಿ ರಾಮ್ ಜಿ ಭ್ರಷ್ಟಾಚಾರಕ್ಕೆ ಸಂಪೂರ್ಣ ಕಡಿವಾಣ ಹಾಕಲಿದೆ. ಅಲ್ಲದೆ, ಗ್ರಾಮೀಣ ಭಾರತದ ಆರ್ಥಿಕತೆಗೆ ಹೊಸ ಶಕ್ತಿ ನೀಡಲಿದೆ ಮತ್ತು ವಿಕಸಿತ ಭಾರತ ನಿರ್ಮಾಣಕ್ಕೆ ಮಹತ್ವದ ಹೆಜ್ಜೆಯಾಗಲಿದೆ ಎಂದು ಅವರು ಪ್ರತಿಪಾದಿಸಿದರು.
ಹೋಳಿ ಹಬ್ಬದ ಪ್ರಯುಕ್ತ ಯಶವಂತಪುರ-ಸಂತ್ರಾಗಚಿ ನಡುವೆ ವಿಶೇಷ ಎಕ್ಸ್ಪ್ರೆಸ್ ರೈಲು
ಬೆಂಗಳೂರು, ಫೆ.28: ಮುಂಬರುವ ಹೋಳಿ ಹಬ್ಬದ ಸಮಯದಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿವಾರಿಸಲು, ನೈಋತ್ಯ ರೈಲ್ವೆಯು ಯಶವಂತಪುರ ಮತ್ತು ಸಂತ್ರಾಗಚಿ ನಿಲ್ದಾಣಗಳ ನಡುವೆ ವಿಶೇಷ ಎಕ್ಸ್ಪ್ರೆಸ್ ರೈಲುಗಳನ್ನು ಓಡಿಸಲಿದೆ. ಸೇವೆಯ ವಿವರಗಳು: ರೈಲು ಸಂಖ್ಯೆ 06233 ಯಶವಂತಪುರ-ಸಂತ್ರಾಗಚಿ ವಿಶೇಷ ಎಕ್ಸ್ಪ್ರೆಸ್ ಮಾ.1ರಂದು(ರವಿವಾರ) ಬೆಳಗ್ಗೆ 7.30ಕ್ಕೆ ಯಶವಂತಪುರ ನಿಲ್ದಾಣದಿಂದ ಹೊರಟು ಸೋಮವಾರ ರಾತ್ರಿ 8.45ಕ್ಕೆ ಸಂತ್ರಾಗಚಿ ನಿಲ್ದಾಣಕ್ಕೆ ಆಗಮಿಸಲಿದೆ. ರೈಲು ಸಂಖ್ಯೆ 06234 ಸಂತ್ರಾಗಚಿ-ಯಶವಂತಪುರ ವಿಶೇಷ ಎಕ್ಸ್ಪ್ರೆಸ್ ಮಾ.3ರಂದು (ಮಂಗಳವಾರ) ಮಧ್ಯಾಹ್ನ 2.45ಕ್ಕೆ ಸಂತ್ರಾಗಚಿ ನಿಲ್ದಾಣದಿಂದ ಹೊರಟು ಗುರುವಾರ ಬೆಳಗ್ಗೆ 4 ಗಂಟೆಗೆ ಯಶವಂತಪುರಕ್ಕೆ ಆಗಮಿಸಲಿದೆ. ಮಾರ್ಗದಲ್ಲಿ ಈ ವಿಶೇಷ ರೈಲುಗಳು ಎರಡೂ ದಿಕ್ಕುಗಳಲ್ಲಿ ಯಲಹಂಕ, ಹಿಂದೂಪುರ, ಧರ್ಮಾವರಂ, ಅನಂತಪುರ, ಗುತ್ತಿ, ಧೋಣ್, ನಂದ್ಯಾಲ್, ಗಿದ್ದಲೂರು, ಮಾರ್ಕಾಪುರ ರೋಡ್, ನರಸರಾವ್ಪೇಟೆ, ಗುಂಟೂರು, ವಿಜಯವಾಡ, ರಾಜಮಂಡ್ರಿ, ವಿಜಯನಗರಂ, ಬ್ರಹ್ಮಪುರ, ಖುರ್ದಾ ರೋಡ್, ಭುವನೇಶ್ವರ್, ಕಟಕ್, ಭದ್ರಕ್, ಬಾಲೇಶ್ವರ್ ಹಾಗೂ ಖರಗ್ ಪುರ್ ನಿಲ್ದಾಣಗಳಲ್ಲಿ ನಿಲುಗಡೆಯನ್ನು ಹೊಂದಿರುತ್ತವೆ. ಈ ವಿಶೇಷ ರೈಲು 20 ಕೋಚ್ ಗಳಿಂದ ಕೂಡಿದ್ದು ಇದರಲ್ಲಿ 1 ಎಸಿ ಟು-ಟಯರ್ ಕೋಚ್, 3 ಎಸಿ ಥ್ರೀ-ಟಯರ್ ಕೋಚ್ ಗಳು, 9 ಸ್ಲೀಪರ್ ದರ್ಜೆಯ ಕೋಚ್ ಗಳು, 5 ಸಾಮಾನ್ಯ ದ್ವಿತೀಯ ದರ್ಜೆಯ ಕೋಚ್ ಗಳು ಮತ್ತು 2 ದ್ವಿತೀಯ ದರ್ಜೆ ಲಗೇಜ್-ಕಮ್-ಬ್ರೇಕ್ ವ್ಯಾನ್ಗಳು (ದಿವ್ಯಾಂಗಸ್ನೇಹಿ ಕಂಪಾರ್ಟ್ಮೆಂಟ್ ನೊಂದಿಗೆ) ಇರುತ್ತವೆ ಎಂದು ಪ್ರಕಟಣೆ ತಿಳಿಸಿದೆ.
ರಾಜ್ಯದಲ್ಲಿ ಗರ್ಭಕಂಠ ಕ್ಯಾನ್ಸರ್ ತಡೆಯಲು ಲಸಿಕೆ ಅಭಿಯಾನಕ್ಕೆ ಚಾಲನೆ
ಬೆಂಗಳೂರು : ದೇಶದಲ್ಲಿ ಬಾಲಕಿಯರ ಆರೋಗ್ಯ ಸುರಕ್ಷತೆಗೆ ಹೆಚ್ಚು ಒತ್ತು ನೀಡಲು ಮುಂದಾಗಿರುವ ಸರಕಾರ ಈಗ ಗರ್ಭಕಂಠ ಕ್ಯಾನ್ಸರ್ ತಡೆಗೆ ಹ್ಯೂಮನ್ ಪ್ಯಾಪಿಲೋಮವೈರಸ್ (ಎಚ್ಪಿವಿ) ಲಸಿಕೆ ನೀಡುವ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ. ಕೇಂದ್ರ ಸರಕಾರದ ಆಶಯದಂತೆ ರಾಜ್ಯದಲ್ಲಿಯೂ ಈ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ. ರಾಜಸ್ಥಾನದ ಅಜ್ಮೀರ್ನಲ್ಲಿ ನಡೆದ ಕಾರ್ಯಕ್ರಮಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಚಾಲನೆ ನೀಡಿದರು. ಬೆಂಗಳೂರಿನ ಕೆ.ಸಿ.ಜನರಲ್ ಆಸ್ಪತ್ರೆಯಲ್ಲಿ ವೆಬ್ಕ್ಯಾಸ್ಟ್ ಮೂಲಕ ಕಾರ್ಯಕ್ರಮ ವೀಕ್ಷಿಸಲಾಯಿತು. ಕೆ.ಸಿ.ಜನರಲ್ ಆಸ್ಪತ್ರೆಯಲ್ಲಿ ವೈದ್ಯಕೀಯ ಶಿಕ್ಷಣ ಇಲಾಖೆ ನಿರ್ದೇಶಕಿ ಡಾ.ಸುಜಾತಾ ರಾಥೋಡ್, ರಾಷ್ಟ್ರೀಯ ಆರೋಗ್ಯ ಮಿಷನ್ ವ್ಯವಸ್ಥಾಪಕ ನಿರ್ದೇಶಕ ಅವಿನಾಶ್ ಮೆನನ್, ಬೆಂಗಳೂರು ಮೆಡಿಕಲ್ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ಡೀನ್, ಕಿದ್ವಾಯಿ ಆಸ್ಪತ್ರೆಯ ನಿರ್ದೇಶಕರು ಹಾಗೂ ಇತರ ಹಿರಿಯ ಅಧಿಕಾರಿಗಳು ಇದೇ ಸಂದರ್ಭದಲ್ಲಿ ಹಾಜರಿದ್ದರು. 14 ವರ್ಷ ಮೇಲ್ಪಟ್ಟ ವಯಸ್ಸಿನ ಸುಮಾರು 1.15 ಕೋಟಿ ಹುಡುಗಿಯರಿಗೆ ಸರಕಾರಿ ಆರೋಗ್ಯ ಸೌಲಭ್ಯಗಳಲ್ಲಿ, ಆಯುಷ್ಮಾನ್ ಆರೋಗ್ಯ ಮಂದಿರಗಳು (ಪ್ರಾಥಮಿಕ ಆರೋಗ್ಯ ಕೇಂದ್ರಗಳು), ಸಮುದಾಯ ಆರೋಗ್ಯ ಕೇಂದ್ರಗಳು, ಉಪ-ಜಿಲ್ಲಾ ಮತ್ತು ಜಿಲ್ಲಾ ಆಸ್ಪತ್ರೆಗಳು ಹಾಗೂ ಸರಕಾರಿ ವೈದ್ಯಕೀಯ ಕಾಲೇಜುಗಳು ಮತ್ತು ಆಸ್ಪತ್ರೆಗಳಲ್ಲಿ ಲಸಿಕೆಯನ್ನು ಹಾಕಲಾಗುತ್ತದೆ. ಈ ಅಭಿಯಾನವು ಮೂರು ತಿಂಗಳ ಅವಧಿ ನಡೆಯಲಿದ್ದು, ಸಮರೋಪಾದಿಯಲ್ಲಿ ಕೈಗೊಂಡು ನಿಗದಿಪಡಿಸಿದ ಬಾಲಕಿಯರಿಗೆ ಲಸಿಕೆ ನೀಡಲಾಗುತ್ತದೆ. ಮಹಿಳೆಯರಲ್ಲಿ ಕ್ಯಾನ್ಸರ್ ಸಂಬಂಧಿತ ಕಾಯಿಲೆಗೆ ಪ್ರಮುಖ ಕಾರಣಗಳಲ್ಲಿ ಒಂದಾದ ಗರ್ಭಕಂಠದ ಕ್ಯಾನ್ಸರ್ ಅನ್ನು ತಡೆಗಟ್ಟಲು ಹ್ಯೂಮನ್ ಪ್ಯಾಪಿಲೋಮವೈರಸ್ (ಎಚ್ಪಿವಿ) ಲಸಿಕೆ ನೀಡಲಾಗುತ್ತದೆ. ನಾಡಿನಾದ್ಯಂತ ಹುಡುಗಿಯರು ಮತ್ತು ಮಹಿಳೆಯರ ದೀರ್ಘಕಾಲೀನ ಆರೋಗ್ಯವನ್ನು ಕಾಪಾಡುವಲ್ಲಿ ಇದೊಂದು ಮಹತ್ವದ ಮೈಲಿಗಲ್ಲಾಗಲಿದೆ. ಮುಂದಿನ ದಿನಗಳಲ್ಲಿ ಈ ಅಭಿಯಾನವನ್ನು ಎಲ್ಲೆಡೆ ವಿಸ್ತರಿಸಲಾಗುವುದು ಎಂದು ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಪರಿಶಿಷ್ಟ ಜಾತಿಗಳಲ್ಲಿಯೇ ತಾರತಮ್ಯ ತೊಲಗಬೇಕಿದೆ : ನ್ಯಾ.ನಾಗಮೋಹನ್ ದಾಸ್
ಬೆಂಗಳೂರು, ಫೆ. 28: ಪರಿಶಿಷ್ಟ ಜಾತಿಗಳಲ್ಲಿಯೇ ಸ್ಪೃಶ್ಯ ಮತ್ತು ಅಸ್ಪೃಶ್ಯ ಜಾತಿಗಳಿದ್ದು, ಜಾತಿಗಳಲ್ಲಿ ಮೇಲು-ಕೀಳು ಎಂಬ ತಾರತಮ್ಯ ಹೆಚ್ಚಾಗಿದೆ. ಈ ತಾರತಮ್ಯವನ್ನು ತೊಲಗಿಸಬೇಕು. ಇಲ್ಲವಾದಲ್ಲಿ, ನಮ್ಮ ಸಂವಿಧಾನದ ಆಶಯಗಳು ಅನುಷ್ಟಾನಕ್ಕೆ ಬರುವುದಿಲ್ಲ ಎಂದು ನಿವೃತ್ತ ನ್ಯಾಯಮೂರ್ತಿ ಎಚ್.ಎನ್. ನಾಗಮೊಹನ್ ದಾಸ್ ಹೇಳಿದ್ದಾರೆ. ಶನಿವಾರ ಇಲ್ಲಿನ ವಸಂತನಗರದಲ್ಲಿರುವ ದೇವರಾಜ ಅರಸು ಭವನದಲ್ಲಿ ಕರ್ನಾಟಕ ರಾಜ್ಯ ದ್ರಾವಿಡರ್ ಕಳಗಂ ವತಿಯಿಂದ ಆಯೋಜಿಸಿದ್ದ ‘ಸ್ವಾಭಿಮಾನ ಚಳುವಳಿಯ ಶತಮಾನೋತ್ಸವ’ದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಪರಿಶಿಷ್ಟ ಜಾತಿ ಪಟ್ಟಿಯ 101 ಜಾತಿಗಳಲ್ಲಿ ಸ್ಪೃಶ್ಯರು-ಅಸ್ಪೃಶ್ಯರು ಇದ್ದು, ಈ ಸ್ಪೃಶ್ಯರು ಅಸ್ಪೃಶ್ಯರಿಗಿಂತ ಶ್ರೇಷ್ಟರು ಎನ್ನುತ್ತಾರೆ. ಇವರಿಬ್ಬರ ನಡುವೆ ಅಲೆಮಾರಿಗಳು ಇದ್ದಾರೆ. ಸ್ಪೃಶ್ಯರು ಅಲೆಮಾರಿಗಳಿಗಿಂತ ಶ್ರೇಷ್ಟ ಎಂದು ಭಾವಿಸಿದ್ದಾರೆ. ಹೀಗಾಗಿ ಪರಿಶಿಷ್ಟ ಜಾತಿಗಳಲ್ಲಿಯೇ ಜಾತಿ ತಾರತಮ್ಯ ಇಂದಿಗೂ ಇದೆ. ಈ ಜಾತಿಗಳಲ್ಲಿ ಕೃಷಿಕರಿದ್ದಾರೆ, ಕೂಲಿ ಕಾರ್ಮಿಕರಿದ್ದಾರೆ, ಕಸಗುಡಿಸುವವರಿದ್ದಾರೆ. ವೃತ್ತಿ ಆಧಾರದಲ್ಲಿಯೂ ತಾರತಮ್ಯ ಮಾಡುತ್ತಿದ್ದಾರೆ ಎಂದು ಅವರು ಹೇಳಿದರು. ಅಸ್ಪೃಶ್ಯತೆಯನ್ನು ನಿವಾರಣೆ ಮಾಡಬೇಕು ಎಂದು ಸಂವಿಧಾನದಲ್ಲಿದೆ. ಅಸ್ಪೃಶ್ಯತೆ ಆಚರಣೆಯ ವಿರುದ್ಧ ಕಾನೂನುಗಳನ್ನೂ ಜಾರಿ ಮಾಡಿದ್ದೇವೆ. ಇದರ ಪರಿಣಾಮವಾಗಿ ಪರಿಶಿಷ್ಟ ಸಮುದಾಯಗಳಲ್ಲಿ ಸಾಕಷ್ಟು ಅಭಿವೃದ್ಧಿಯಾಗಿದೆ. ಆದರೆ ಪರಿಶಿಷ್ಟ ಜಾತಿಗಳಲ್ಲಿಯೇ ಅಸ್ಪೃಶ್ಯತೆ ಇದ್ದು, ಅಸ್ಪೃಶ್ಯತೆಯಲ್ಲಿರುವ ಅಸ್ಪೃಶ್ಯತೆಯನ್ನು ನಿವಾರಣೆ ಮಾಡುವ ನಿಟ್ಟಿನಲ್ಲಿ ಯಾರೂ ಬರೆದಿಲ್ಲ, ಯಾರು ಧ್ವನಿಯನ್ನೂ ಎತ್ತಲಿಲ್ಲ. ಈ ಬಗ್ಗೆ ಸರಕಾರದಲ್ಲಿಯೂ ಯೋಜನೆಗಳಿಲ್ಲ. ಇಂತಹ ಕಾಲಘಟ್ಟದಲ್ಲಿ ನಾವು ಬದುಕುತ್ತಿದ್ದೇವೆ ಎಂದು ಅವರು ಬೇಸರ ವ್ಯಕ್ತಪಡಿಸಿದರು. ಭಾರತದ ಸಂವಿಧಾನದಲ್ಲಿ ಧರ್ಮ, ಜಾತಿ, ಭಾಷೆ, ಲಿಂಗ, ಪ್ರಾಂತ್ಯ ಬೇಧವಿಲ್ಲದೆ, ಕಾನೂನಿನ ಮುಂದೆ ಎಲ್ಲರೂ ಸಮಾನರು ಎಂದು ಉಲ್ಲೇಖಿಸಲಾಗಿದೆ. ಸಮಾನ ರಕ್ಷಣೆ, ಸಮಾನ ಅವಕಾಶಗಳು ದೇಶದ ಜನರಿಗೆ ಸಿಕ್ಕಿದೆ. ಸಂವಿಧಾನ ಜಾರಿಯಾಗಿ ಏಳು ದಶಕಗಳು ಕಳೆದಿವೆ. ಈ ಕಾಲಮಾನದಲ್ಲಿ ನಾವು ಒಂದಿಷ್ಟು ಸಾಧನೆಯನ್ನು ಮಾಡಿದ್ದೇವೆ. ಈ ಸಾಧನೆಯ ಮಧ್ಯೆಯೂ ಸಂವಿಧಾನಕ್ಕೆ ಒಂದು ಗಂಡಾಂತರ ಬಂದಿದೆ ಎಂದು ಆತಂಕ ವ್ಯಕ್ತಪಡಿಸಿದರು. ಸಂವಿಧಾನವನ್ನು ಅಪವ್ಯಾಖ್ಯಾನ ಮಾಡಲಾಗುತ್ತಿದೆ, ಸಂವಿಧಾನವನ್ನೇ ಅಪ್ರಸ್ತುತ ಮಾಡಲಾಗುತ್ತಿದೆ. ಇದನ್ನು ಗಂಭೀರವಾಗಿ ಪರಿಗಣಿಸಿ, ಪರಿಹಾರ ಕಂಡುಕೊಳ್ಳಬೇಕು. ಇಲ್ಲವಾದರೆ, ಸಂವಿಧಾನ ಕಳೆದುಕೊಳ್ಳುತ್ತೇವೆ. ಸಂವಿಧಾನವನ್ನು ಕಳೆದುಕೊಂಡರೆ, ಪೆರಿಯಾರ್, ಅಂಬೇಡ್ಕರ್ ಚಿಂತನೆಗಳನ್ನು ಕಳೆದುಕೊಳ್ಳುವಂತಾಗುತ್ತದೆ ಎಂದು ಎಚ್.ಎನ್. ನಾಗಮೋಹನ್ ದಾಸ್ ಹೇಳಿದರು. ನಮಗೆ ವಿಜ್ಞಾನ ತಿಳಿದಿದೆ, ವಿಜ್ಞಾನವನ್ನು ಬಳಕೆ ಮಾಡುತ್ತೇವೆ. ಆದರೆ ನಾವು ವೈಜ್ಞಾನಿಕ ಮನೋಭಾವನೆಯನ್ನು ಬೆಳೆಸಿಕೊಳ್ಳುತ್ತಿಲ್ಲ. ಈ ದೇಶದ ಹೆಚ್ಚಿನ ಜನರು ವೈಜ್ಞಾನಿಕ ಮನೋಭಾವನೆಯನ್ನು ರೂಪಿಸಿಕೊಳ್ಳುತ್ತಿಲ್ಲ. ಕೆಲವರಿಗೆ ವೈಜ್ಞಾನಿಕ ಮನೋಭಾವನೆ ಇದ್ದರೂ, ಅವರು ವಿಚಾರವಾದಿಗಳಾಗುತ್ತಿಲ್ಲ. ವೈಜ್ಞಾನಿಕ ಮನೋಭಾವನೆಯನ್ನು ಹೊಂದಿರುವವರು ಇನ್ನೂ ಪಾಳೆಗಾರಿಕೆಯನ್ನು ಪ್ರೋತ್ಸಾಹಿಸುತ್ತಿದ್ದಾರೆ, ಅಪ್ರಜಾಪ್ರಭುತ್ವ ರೀತಿಯಲ್ಲಿ ನಡೆದುಕೊಳ್ಳುತ್ತಿದ್ದಾರೆ. ಸಾಮಾಜಿಕ ನ್ಯಾಯದ ವಿರುದ್ಧ ನಡೆದುಕೊಳ್ಳುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ಮಾಜಿ ಅಡ್ವೊಕೇಟ್ ಜನರಲ್ ರವಿವರ್ಮ ಕುಮಾರ್, ಚಿಂತಕ ಕೆ.ಎಸ್.ಭಗವಾನ್, ಮಾಜಿ ಸಚಿವೆ ಬಿ.ಟಿ.ಲಲಿತಾ ನಾಯಕ್, ದ್ರಾವಿಡರ್ ಕಳಗಂನ ಅಧ್ಯಕ್ಷ ಡಾ.ಕೆ.ವೀರಮಣಿ, ವಿಚಾರವಾದಿ ನರೇಂದ್ರ ನಾಯಕ್, ದಸಂಸ ಸಂಚಾಲಕ ಮಾವಳ್ಳಿ ಶಂಕರ್, ಕರ್ನಾಟಕ ರಾಜ್ಯ ದ್ರಾವಿಡರ್ ಕಳಗಂನ ಎಸ್.ಗುಣವೇಂದನ್, ಮುತ್ತುಮಣಿ ನನ್ನನ್ ಸೇರಿದಂತೆ ಮತ್ತಿತರರು ಹಾಜರಿದ್ದರು. ‘ಮೌಢ್ಯ ಮತ್ತು ಕಂದಾಚಾರ ನಿಷೇಧ ಕಾನೂನಿನ ಮಾದರಿಯಲ್ಲೇ ಕರ್ನಾಟಕ ರಾಜ್ಯದಲ್ಲಿ ‘ಸ್ವಾಭಿಮಾನ’ವನ್ನು ಎತ್ತಿಹಿಡಿಯಲು ಕಾನೂನು ರೂಪಿಸುವ ಅಗತ್ಯವಿದೆ. ಇದರಿಂದ ಅಂತರ್ಜಾತಿ, ಅಂತರ್ ಧರ್ಮೀಯ ವಿವಾಹಿತರಿಗೆ ರಕ್ಷಣೆ ಕಲ್ಪಿಸಲು ಸಾಧ್ಯವಾಗಲಿದೆ. ಆ ನಿಟ್ಟಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರಕಾರ ಮುಂದಾಗಬೇಕು’ -ಕೆ.ವೀರಮಣಿ ದ್ರಾವಿಡ ಕಳಗಂ ಅಧ್ಯಕ್ಷ
ಇರಾನ್ ಸರ್ವೋಚ್ಚ ನಾಯಕ ಆಯತೊಲ್ಲಾ ಖಾಮಿನೈ ಅವರ ಅಧಿಕೃತ ನಿವಾಸ ನಾಶವಾಗಿದೆ: ನೆತನ್ಯಾಹು ಹೇಳಿಕೆ
► ಇರಾನ್ ಸರಕಾರ ಉರುಳಿಸಲು ಅವಕಾಶ ಎಂದು ಭಾವಿಸಬೇಕು► ಟಿವಿ ಮೂಲಕ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಿದ ಇಸ್ರೇಲ್ ಪ್ರಧಾನಿ
ಜಿಲ್ಲಾ ರಕ್ತ ವರ್ಗಾವಣಾ ಅಧಿಕಾರಿಗಳ ನೇಮಕಕ್ಕೆ ಅನುಮತಿ ನೀಡಿದ ಸರಕಾರ
ಬೆಂಗಳೂರು, ಫೆ.28: ರಾಜ್ಯ ಸರಕಾರವು ರಕ್ತ ವರ್ಗಾವಣೆಯಿಂದ ಹರಡಬಹುದಾದ ಸೋಂಕುಗಳನ್ನು ತಡೆಗಟ್ಟಲು ಹಾಗೂ ರಕ್ತಕೇಂದ್ರಗಳ ಸಮರ್ಪಕ ನಿರ್ವಹಣೆಯನ್ನು ಬಲಪಡಿಸಲು ಜಿಲ್ಲಾ ರಕ್ತ ವರ್ಗಾವಣಾ ಅಧಿಕಾರಿಗಳನ್ನು ನೇಮಕ ಮಾಡಲು ಅನುಮತಿ ನೀಡಿದೆ. ಈ ಸಂಬಂಧ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧೀನ ಕಾರ್ಯದರ್ಶಿ ಪ್ರಭಾಕರ್ ಟಿ. ಆದೇಶ ಹೊರಡಿಸಿದ್ದು, ರಕ್ತ ವರ್ಗಾವಣೆಯಿಂದ ಹರಡಬಹುದಾದ ಸೋಂಕುಗಳನ್ನು ತಡೆಗಟ್ಟಲು, ರಕ್ತಕೇಂದ್ರಗಳ ಸಮರ್ಪಕ ನಿರ್ವಹಣೆಯನ್ನು ಬಲಪಡಿಸಲು, ರಕ್ತದ ಅವಶ್ಯವಿರುವ ರೋಗಿಗಳಿಗೆ ಉತ್ತಮ ಗುಣಮಟ್ಟದ ಹಾಗೂ ಸಮರ್ಪಕ ರಕ್ತವನ್ನು ಪೂರೈಸಲು ಜಿಲ್ಲಾ ರಕ್ತ ವರ್ಗಾವಣಾ ಅಧಿಕಾರಿಗಳನ್ನು ನೇಮಕ ಮಾಡಬೇಕು ಎಂದಿದ್ದಾರೆ. ಜಿಲ್ಲೆಯ ಸರಕಾರಿ ವೈದ್ಯಕೀಯ ಕಾಲೇಜಿನ ರಕ್ತ ವರ್ಗಾವಣಾ ವಿಭಾಗದ ಮುಖ್ಯಸ್ಥರು ಅಥವಾ ರಕ್ತ ವರ್ಗಾವಣಾ ವಿಭಾಗದ ಹಿರಿಯ ಪ್ರಾಧ್ಯಾಪಕರನ್ನು ಜಿಲ್ಲಾ ರಕ್ತ ವರ್ಗಾವಣಾ ಅಧಿಕಾರಿಗಳನ್ನಾಗಿ ನೇಮಿಸಬೇಕು. ಈ ಅಧಿಕಾರಿಗಳು ಲಭ್ಯವಿಲ್ಲದಿದ್ದಲ್ಲಿ, ಜಿಲ್ಲೆಯ ಸರಕಾರಿ ವೈದ್ಯಕೀಯ ಕಾಲೇಜಿನ ರೋಗಶಾಸ್ತ್ರ ವಿಭಾಗದ ಮುಖ್ಯಸ್ಥರು ಅಥವಾ ರೋಗಶಾಸ್ತ್ರ ವಿಭಾಗದ ಹಿರಿಯ ಪ್ರಾಧ್ಯಾಪಕರು ಅಥವಾ ರಕ್ತ ನಿಧಿ ಅಧಿಕಾರಿಗಳನ್ನು ನೇಮಕ ಮಾಡಬೇಕು ಎಂದು ಅವರು ಹೇಳಿದ್ದಾರೆ.
ಇರಾನ್ ಮೇಲಿನ ದಾಳಿ | ಅಧ್ಯಕ್ಷ ಟ್ರಂಪ್ ಅಧಿಕಾರಕ್ಕೆ ಮಿತಿ ಹಾಕಲು ಅಮೆರಿಕ ಕಾಂಗ್ರೆಸ್ ನಲ್ಲಿ ಆಗ್ರಹ
ವಾಷಿಂಗ್ಟನ್: ಇರಾನ್ ವಿರುದ್ಧ ಅಮೆರಿಕ ಕೈಗೊಂಡಿರುವ ಮಿಲಿಟರಿ ದಾಳಿಗಳ ಹಿನ್ನೆಲೆ ಅಧ್ಯಕ್ಷ ಟ್ರಂಪ್ ಅವರ ಯುದ್ಧಾಧಿಕಾರವನ್ನು ಮಿತಿಗೊಳಿಸುವ ಕುರಿತಂತೆ ಅಮೆರಿಕ ಕಾಂಗ್ರೆಸ್ ನಲ್ಲಿ ಚರ್ಚೆ ತೀವ್ರಗೊಂಡಿದೆ ಎಂದು Al Jazeera ವರದಿ ಮಾಡಿದೆ. ತಮ್ಮ ಕ್ಷೇತ್ರಗಳಲ್ಲಿ ಇರುವ ಎಲ್ಲಾ ಸೆನೆಟರ್ ಗಳನ್ನು ತುರ್ತಾಗಿ ವಾಷಿಂಗ್ಟನ್ ಗೆ ಕರೆಸಿ, ಇರಾನ್ ದಾಳಿಗಳಿಗೆ ಸಂಬಂಧಿಸಿದಂತೆ ಅಧ್ಯಕ್ಷರ ಅಧಿಕಾರಕ್ಕೆ ಮಿತಿ ವಿಧಿಸುವ ನಿರ್ಣಯದ ಮೇಲೆ ಮತದಾನ ನಡೆಸಬೇಕು ಎಂಬ ಬೇಡಿಕೆ ಡೆಮೋಕ್ರಾಟ್ ಪಕ್ಷದ ಸದಸ್ಯರಿಂದ ಕೇಳಿಬಂದಿದೆ. ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇರಾನ್ ನಿಂದ ಅಮೆರಿಕ ಇರುವ ಅಪಾಯವನ್ನು ಉತ್ಪ್ರೇಕ್ಷಿಸಿದ್ದಾರೆ. ಈ ದಾಳಿಗಳು ಕಾನೂನುಬಾಹಿರ ಮತ್ತು ಸಂವಿಧಾನಬಾಹಿರ ಎಂದು ಅನೇಕ ಡೆಮೋಕ್ರಾಟ್ಗಳು ಆರೋಪಿಸಿದ್ದಾರೆ. ಸಾಮಾನ್ಯ ಅಮೆರಿಕನ್ನರು ಮತ್ತೊಂದು “ಅಂತ್ಯವಿಲ್ಲದ ಯುದ್ಧ”ವನ್ನು ಬಯಸುವುದಿಲ್ಲ ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ. “ಇದನ್ನು ನಿಲ್ಲಿಸಲು ಕಾಂಗ್ರೆಸ್ ತಕ್ಷಣವೇ ಸಭೆ ಸೇರಬೇಕು. ಶಾಸನಾಂಗದ ಅನುಮೋದನೆ ಇಲ್ಲದೆ ಅಧ್ಯಕ್ಷರು ಮಿಲಿಟರಿ ಕ್ರಮ ಕೈಗೊಳ್ಳುವುದು ಸಂವಿಧಾನದ ಆತ್ಮಕ್ಕೆ ವಿರುದ್ಧ” ಎಂದು ಮತ್ತೊಬ್ಬ ಡೆಮೋಕ್ರಾಟ್ ನಾಯಕ ಹೇಳಿದ್ದಾರೆ. ಅಮೆರಿಕ ಸಂವಿಧಾನದ ಪ್ರಕಾರ ಯುದ್ಧ ಘೋಷಿಸುವ ಅಧಿಕಾರ ಅಧ್ಯಕ್ಷರಿಗೆ ಇಲ್ಲ; ಅದು ಕಾಂಗ್ರೆಸ್ಗೆ ಸೇರಿದೆ. ಆದರೆ 1973ರಲ್ಲಿ ಅಂಗೀಕರಿಸಲಾದ ಯುದ್ಧಾಧಿಕಾರಗಳ ನಿರ್ಣಯ ಪ್ರಕಾರ, ತುರ್ತು ಪರಿಸ್ಥಿತಿಯಲ್ಲಿ ಅಧ್ಯಕ್ಷರು ಮಿಲಿಟರಿ ಕ್ರಮ ಕೈಗೊಳ್ಳಬಹುದು. ಆದರೆ ಅವರು ಕಾಂಗ್ರೆಸ್ ಗೆ ಮಾಹಿತಿ ನೀಡಿ ಅನುಮೋದನೆ ಪಡೆಯಬೇಕು. ಕಾಂಗ್ರೆಸ್ ಅನುಮೋದನೆ ನೀಡದಿದ್ದರೆ 60 ದಿನಗಳೊಳಗೆ ಪಡೆಗಳನ್ನು ಹಿಂತೆಗೆದುಕೊಳ್ಳಬೇಕು ಎಂಬ ನಿಯಮವೂ ಈ ನಿರ್ಣಯದಲ್ಲಿದೆ. ಅಮೆರಿಕ ನೇರ ದಾಳಿಗೆ ಒಳಗಾದ ಸಂದರ್ಭದಲ್ಲಿ ಮಾತ್ರ ಅಧ್ಯಕ್ಷರಿಗೆ ಕಾರ್ಯನಿರ್ವಾಹಕ ಅಧಿಕಾರ ಅನ್ವಯಿಸುತ್ತದೆ. ಆದರೆ ಪ್ರಸ್ತುತ ಪರಿಸ್ಥಿತಿಯಲ್ಲಿ ಅಮೆರಿಕ ನೇರ ಬೆದರಿಕೆಗೆ ಒಳಗಾಗಿದೆ ಎಂಬುದಕ್ಕೆ ಸ್ಪಷ್ಟ ಕಾರಣವಿಲ್ಲ ಎಂದು ರಾಜಕೀಯ ಪ್ರಶ್ನಿಸುತ್ತಿದ್ದಾರೆ. ಹೀಗಾಗಿ ಇರಾನ್ ದಾಳಿಗಳ ವಿಷಯದಲ್ಲಿ ಅಧ್ಯಕ್ಷರ ಕ್ರಮ ಸಂವಿಧಾನಾತ್ಮಕ ಮಿತಿಗಳನ್ನು ಮೀರುತ್ತಿದೆಯೇ ಎಂಬ ವಿಚಾರ ಇದೀಗ ಅಮೆರಿಕ ರಾಜಕೀಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಬೆಳಗಾವಿಯಲ್ಲಿ ಮತ್ತೊಂದು ಸೈಬರ್ ವಂಚನೆ; ವಿದೇಶಿ ಉದ್ಯೋಗದ ಆಮಿಷವೊಡ್ಡಿ ಯುವಕರ ಬ್ಯಾಂಕ್ ಖಾತೆ ದುರುಪಯೋಗ
ಬೆಳಗಾವಿ : ವಿದೇಶದಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಯುವಕರ ಹೆಸರಿನಲ್ಲಿ ಬ್ಯಾಂಕ್ ಖಾತೆ ತೆರೆಸಿಕೊಂಡು, ಅದರ ಮೂಲಕ ಸೈಬರ್ ವಂಚನೆಯ ಹಣ ವರ್ಗಾವಣೆ ಮಾಡಿರುವ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ. ನಗರದ ಸಿಇಎನ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದ್ದು, ನಾಲ್ವರು ಯುವಕರು ವಂಚನೆಗೊಳಗಾಗಿರುವುದು ವರದಿಯಾಗಿದೆ. ಪೀರನವಾಡಿ ನಿವಾಸಿಗಳಾದ ಪ್ರಥಮೇಶ ರಮೇಶ ದೇಸಾಯಿ(21), ಭಂಡು ಇಂಗಳ, ಕಿರಣ ಸುರೇಶ ದೇಸಾಯಿ ಮತ್ತು ಕಿಣೆಯೆ ಅನಿಲ ಬಹುಸಾಹೇಬ ಪಾಟೀಲ ಎಂಬವರು ಈ ವಂಚನೆಗೊಳಗಾದ ಯುವಕರು. ಖಾಸಗಿ ಏಜೆಂಟರ ನಂಬಿಕೆಗೆ ಬಿದ್ದ ಇವರು ತಮ್ಮ ಭವಿಷ್ಯದ ಕನಸನ್ನು ನನಸಾಗಿಸಿಕೊಳ್ಳಲು ಹೊರಟಿದ್ದರು, ಆದರೆ ಅದು ಅವರಿಗೆ ದೊಡ್ಡ ಮೋಸದ ಪಾಠವಾಗಿ ಪರಿಣಮಿಸಿದೆ. ವಂಚನೆಗೊಳಗಾದ ಪ್ರಥಮೇಶ ದೇಸಾಯಿ ಅವರು ನಗರದ ಸಿಇಎನ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಆರೋಪಿಗಳಾದ ಕಿಣೆಯೆ ಲಕ್ಷ್ಮಣ ಸಂದೀಪ್ ದೇಸಾಯಿ ಮತ್ತು ಕೊಲ್ಲಾಪುರದ ಸುಮಿತ್ ಶಿಂಧೆ ಅವರ ವಿರುದ್ಧ ಪ್ರಕರಣ ದಾಖಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಸಿಇಎನ್ ಠಾಣೆಯ ಪೊಲೀಸರು ಆರೋಪಿಗಳಾದ ಲಕ್ಷ್ಮಣ ದೇಸಾಯಿ ಮತ್ತು ಸುಮಿತ್ ಶಿಂಧೆ ಅವರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಬ್ಯಾಂಕ್ ವಹಿವಾಟುಗಳ ವಿವರ ಪಡೆಯಲು ಬ್ಯಾಂಕ್ಗಳಿಗೆ ಪತ್ರ ಬರೆಯಲಾಗಿದೆ. ಯುವಕರ ಭವಿಷ್ಯದ ಕನಸನ್ನು ಬಂಡವಾಳವಾಗಿಸಿಕೊಂಡು ನಡೆಸಲಾದ ಈ ವಂಚನೆ ಪ್ರಕರಣದ ತನಿಖೆಗೆ ಪೊಲೀಸರು ಎಲ್ಲಾ ಆಯಾಮಗಳಲ್ಲೂ ತನಿಖೆ ನಡೆಸುತ್ತಿದ್ದಾರೆ. ಸೈಬರ್ ವಂಚನೆಯ ಈ ಜಾಲಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿ ಲಭ್ಯವಾಗುವ ನಿರೀಕ್ಷೆಯಿದೆ.
Iran | ಇಸ್ಫಹಾನ್ ಕೈಗಾರಿಕಾ ವಲಯ ಖಾಲಿ ಮಾಡುವಂತೆ ಇಸ್ರೇಲಿ ಸೇನೆಯ ಎಚ್ಚರಿಕೆ
ಟೆಹ್ರಾನ್/ಇಸ್ಫಹಾನ್: ಇರಾನ್ ನ ಇಸ್ಫಹಾನ್ ನಗರದ ಕೈಗಾರಿಕಾ ವಲಯದಲ್ಲಿರುವ ಜನರಿಗೆ ಇಸ್ರೇಲಿ ಸೇನೆ ಬಲವಂತದ ಸ್ಥಳಾಂತರದ ಬೆದರಿಕೆ ನೀಡಿದೆ. ದಾಳಿ ನಡೆಸುವ ಮುನ್ನ ಸಂಬಂಧಿತ ಪ್ರದೇಶವನ್ನು ತಕ್ಷಣವೇ ಖಾಲಿ ಮಾಡುವಂತೆ ಎಚ್ಚರಿಕೆ ನೀಡಲಾಗಿದೆ. #BREAKING ⚡️ ❌ - The IDF has issued an urgent warning to Iranians of an incoming IDF strike in the industrial zone of Isfahan in the coming minutes. Coordinates: 32.668922, 51.845391 pic.twitter.com/eAUvxF2d0k — Syria Retold Daily (@SyriaRetold) February 28, 2026 ಸಾಮಾಜಿಕ ಜಾಲತಾಣ X ನಲ್ಲಿ ಪ್ರಕಟಿಸಿದ ಪೋಸ್ಟ್ ನಲ್ಲಿ ಕೆಂಪು ಬಣ್ಣದಲ್ಲಿ ಗುರುತಿಸಲಾದ ಪ್ರದೇಶವನ್ನು ಹೊಂದಿರುವ ನಕ್ಷೆಯನ್ನು ಹಂಚಿಕೊಳ್ಳಲಾಗಿದೆ. ಅದರಲ್ಲಿ ಸೂಚಿಸಿರುವ ವಲಯದಲ್ಲಿ ಸೈನಿಕ ನೆಲೆಗಳಿವೆ ಎಂದು ಹೇಳಲಾಗಿದೆ. “ಕೆಲವೇ ನಿಮಿಷಗಳಲ್ಲಿ, ಇಸ್ರೇಲಿ ಸೇನೆ ಈ ಪ್ರದೇಶದ ಮಿಲಿಟರಿ ನೆಲೆಗಳ ಮೇಲೆ ದಾಳಿ ಮಾಡುತ್ತದೆ” ಎಂದು ಪೋಸ್ಟ್ ನಲ್ಲಿ ಉಲ್ಲೇಖಿಸಲಾಗಿದೆ. ನಾಗರಿಕರು ತಮ್ಮ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ತಕ್ಷಣ ಸ್ಥಳಾಂತರಗೊಳ್ಳಬೇಕು ಎಂಬ ಸಂದೇಶವೂ ನೀಡಲಾಗಿದೆ. ಇಸ್ಫಹಾನ್ ಇರಾನ್ನ ಪ್ರಮುಖ ಕೈಗಾರಿಕಾ ಕೇಂದ್ರಗಳಲ್ಲಿ ಒಂದಾಗಿದ್ದು, ಅಲ್ಲಿ ಸೈನಿಕ ಸಂಬಂಧಿತ ಸೌಕರ್ಯಗಳೂ ಇರುವುದಾಗಿ ವರದಿಗಳು ಸೂಚಿಸುತ್ತಿವೆ. ಇಸ್ರೇಲ್–ಇರಾನ್ ನಡುವಿನ ಉದ್ವಿಗ್ನತೆ ಹೆಚ್ಚುತ್ತಿರುವ ಹಿನ್ನೆಲೆ ಈ ಎಚ್ಚರಿಕೆ ಹೊರಬಿದ್ದಿದೆ.
Bengaluru | ಜ್ಯೋತಿಷಿಯ ಭವಿಷ್ಯಕ್ಕೆ ಹೆದರಿ ಮದುವೆ ನಿಶ್ಚಯವಾಗಿದ್ದ ಯುವತಿ ಆತ್ಮಹತ್ಯೆ!
ಬೆಂಗಳೂರು : ಜ್ಯೋತಿಷಿಯೊಬ್ಬ ‘ನೀನು ಅಲ್ಪಾಯುಷಿ’ ಎಂದು ಭವಿಷ್ಯ ಹೇಳಿದ್ದಕ್ಕೆ ಹೆದರಿ ಮದುವೆ ನಿಶ್ಚಯವಾಗಿದ್ದ ಯುವತಿಯೊಬ್ಬಳು ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಆತಂಕಕಾರಿ ಘಟನೆ ಬಾಗಲಗುಂಟೆ ಪೊಲೀಸ್ ಠಾಣಾ ವ್ಯಾಪ್ತಿಯ ಎಂಇಐ ಲೇಔಟ್ನಲ್ಲಿ ಶನಿವಾರ ವರದಿಯಾಗಿದೆ. ಖಾಸಗಿ ಕಂಪೆನಿಯಲ್ಲಿ ಉದ್ಯೋಗಿಯಾಗಿ ಮನೆಯಿಂದಲೇ ಕೆಲಸ ಮಾಡುತ್ತಿದ್ದ ವಿದ್ಯಾಜ್ಯೋತಿ(29) ಎಂಬಾಕೆ ಮೃತಪಟ್ಟ ಯುವತಿ ಎಂದು ಗುರುತಿಸಲಾಗಿದೆ. ಮೃತ ವಿದ್ಯಾಜ್ಯೋತಿ ಕೊಡಗು ಮೂಲದ ಯುವಕನನ್ನು ಪ್ರೀತಿಸುತ್ತಿದ್ದಳು. ಆಕೆಯ ಇಷ್ಟದಂತೆ ಎರಡೂ ಕಡೆಯ ಕುಟುಂಬದವರು ಒಪ್ಪಿ ಮದುವೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದರು. ಆದರೆ, ಇತ್ತೀಚೆಗೆ ಜ್ಯೋತಿಷಿಯೊಬ್ಬರು ವಿದ್ಯಾಜ್ಯೋತಿಗೆ ‘ನೀನು ಅಲ್ಪಾಯುಷಿ’ ಎಂದು ಭವಿಷ್ಯ ನುಡಿದಿದ್ದರು ಎನ್ನಲಾಗಿದೆ. ಇದೇ ವಿಚಾರಕ್ಕೆ ನೊಂದು, ಹೆದರಿದ ಆಕೆ ಈ ಕಠಿಣ ನಿರ್ಧಾರ ತೆಗೆದುಕೊಂಡಿರಬಹುದು ಎಂದು ಶಂಕಿಸಲಾಗಿದೆ. ವಿದ್ಯಾಜ್ಯೋತಿ ಅಲ್ಪಾಯುಷಿ ಎಂದು ಹೇಳಿದ್ದ ಜ್ಯೋತಿಷಿ, ದೋಷ ಪರಿಹಾರಕ್ಕಾಗಿ 9 ದಿನಗಳ ಕಾಲ ಪೂಜೆ ಮಾಡುವಂತೆ ಸೂಚಿಸಿದ್ದರು. ಜತೆಗೆ 9ನೇ ದಿನ ಮಾರಮ್ಮ ದೇವರಿಗೆ ತಾಳಿ ಒಪ್ಪಿಸುವಂತೆ ತಿಳಿಸಿದ್ದರು. ಇದರಂತೆ ಕುಟುಂಬಸ್ಥರು ದೇವರಿಗೆ ತಾಳಿ ಕೊಡಲು ಸಿದ್ಧತೆ ನಡೆಸಿದ್ದರು. ಆದರೆ, ಫೆ.27ರಂದು ಮಧ್ಯಾಹ್ನದ ಊಟದ ನಂತರ ವಿದ್ಯಾಜ್ಯೋತಿ ತನ್ನ ಕೊಠಡಿಗೆ ಹೋಗಿದ್ದಳು. ಆಕೆ ಮನೆಯಿಂದಲೇ ಕೆಲಸ ಮಾಡುತ್ತಿದ್ದ ಕಾರಣ, ಕೆಲಸ ಮಾಡುತ್ತಿರಬಹುದೆಂದು ಮನೆಯವರು ಭಾವಿಸಿದ್ದರು. ಆದರೆ, ಸಂಜೆ ತಾಯಿ ಕರೆದರೂ ಆಕೆ ಹೊರಬಂದಿರಲಿಲ್ಲ. ರಾತ್ರಿ 8ಗಂಟೆ ಸುಮಾರಿಗೆ ದೇವಸ್ಥಾನಕ್ಕೆ ಹೋಗಬೇಕಿದ್ದ ಕಾರಣ ತಾಯಿ ಮತ್ತೆ ಮಗಳನ್ನು ಕರೆದಿದ್ದಾರೆ. ಎಷ್ಟು ಬಾಗಿಲು ತಟ್ಟಿದರೂ ತೆಗೆಯದಿದ್ದಾಗ, ಅನುಮಾನಗೊಂಡು ಕಿಟಕಿಯ ಮೂಲಕ ನೋಡಿದ್ದಾರೆ. ಈ ವೇಳೆ ಆಕೆ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಈ ಘಟನೆ ಕುರಿತು ಮಾಹಿತಿ ತಿಳಿದ ಬಾಗಲಗುಂಟೆ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿರುವುದಾಗಿ ತಿಳಿಸಿದ್ದಾರೆ.
ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ | ಕುವೈತ್ ನಲ್ಲಿ ಮುಂದಿನ ಸೂಚನೆವರೆಗೆ ತರಾವೀಹ್ ನಮಾಝ್ ರದ್ದು
ಕುವೈತ್: ರಮಝಾನ್ ಮಾಸದ ಅಂಗವಾಗಿ ದೇಶದಾದ್ಯಂತ ಮಸೀದಿಗಳಲ್ಲಿ ರಾತ್ರಿ ವೇಳೆ ನಡೆಯುವ ತರಾವೀಹ್ ನಮಾಝ್ ಮುಂದಿನ ಸೂಚನೆವರೆಗೆ ರದ್ದುಗೊಳಿಸುವುದಾಗಿ ಕುವೈತ್ನ ಇಸ್ಲಾಮಿಕ್ ವ್ಯವಹಾರಗಳ ಸಚಿವಾಲಯ ಘೋಷಿಸಿದೆ. ಸಚಿವಾಲಯ ಹೊರಡಿಸಿದ ಪ್ರಕಟಣೆಯಲ್ಲಿ, ದೇಶದ ಎಲ್ಲಾ ಮಸೀದಿಗಳಲ್ಲಿ ಸಾಮೂಹಿಕವಾಗಿ ನಡೆಯುವ ತರಾವೀಹ್ ನಮಾಝ್ ಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುವಂತೆ ನಿರ್ದೇಶಿಸಲಾಗಿದೆ. ಪರಿಸ್ಥಿತಿಯನ್ನು ಪರಿಗಣಿಸಿ ಮುನ್ನೆಚ್ಚರಿಕಾ ಕ್ರಮವಾಗಿ ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದು ತಿಳಿಸಲಾಗಿದೆ. ಮುಂದಿನ ಸೂಚನೆ ಪ್ರಕಟವಾಗುವವರೆಗೆ ಈ ಆದೇಶ ಜಾರಿಯಲ್ಲಿರಲಿದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಪರಿಸ್ಥಿತಿಯ ಪರಿಶೀಲನೆಯ ನಂತರ ಅಗತ್ಯ ಮಾರ್ಗಸೂಚಿಗಳನ್ನು ಪ್ರಕಟಿಸಲಾಗುವುದು ಎಂದು ಸಚಿವಾಲಯ ತಿಳಿಸಿದೆ.
Belagavi | ಮಕ್ಕಳ ಕಳ್ಳಿ ಎಂದು ಆರೋಪಿಸಿ ಮಹಿಳೆಗೆ ಹಲ್ಲೆ
ಬೆಳಗಾವಿ, ಫೆ.28: ನಗರದಲ್ಲಿ ಹರಿದಾಡುತ್ತಿರುವ ‘ಮಕ್ಕಳ ಕಳ್ಳರ’ ವದಂತಿಯ ಹಿನ್ನೆಲೆಯಲ್ಲಿ ಭಿಕ್ಷೆ ಬೇಡಲು ಬಂದ ಮಹಿಳೆಯೊಬ್ಬರನ್ನು ಮಕ್ಕಳ ಕಳ್ಳಿ ಎಂದು ಶಂಕಿಸಿ ಸ್ಥಳೀಯರು ಧರ್ಮದೇಟು ನೀಡಿದ ಘಟನೆ ನಗರದ ನ್ಯೂ ಗಾಂಧಿ ನಗರದಲ್ಲಿ ಶನಿವಾರ ನಡೆದಿರುವುದು ವರದಿಯಾಗಿದೆ. ಈ ಘಟನೆಯಿಂದಾಗಿ ಸ್ವಲ್ಪಹೊತ್ತು ಆ ಪ್ರದೇಶದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಪ್ರತಿವರ್ಷದಂತೆ ಈ ಬಾರಿಯೂ ರಮಝಾನ್ ಸಂದರ್ಭದಲ್ಲಿ ಭಿಕ್ಷೆ ಸಂಗ್ರಹಿಸಲು ಬಂದಿದ್ದ ಮಹಿಳೆಯನ್ನು ಸ್ಥಳೀಯ ಮಹಿಳೆಯರು ಆಕೆಯನ್ನು ಮಕ್ಕಳ ಅಪಹರಣಕಾರ್ತಿ ಎಂದು ಆರೋಪಿಸಿ ಥಳಿಸಲಾರಂಭಿಸಿದರು. ಘಟನೆಯ ಮಾಹಿತಿ ತಿಳಿದ ತಕ್ಷಣ ಮಾಳಮಾರುತಿ ಪೊಲೀಸರು ಸ್ಥಳಕ್ಕೆ ಧಾವಿಸಿ, ಆಕ್ರೋಶಗೊಂಡಿದ್ದ ಜನರ ಮಧ್ಯೆ ನುಗ್ಗಿ ಪರಿಸ್ಥಿತಿಯನ್ನು ಹತೋಟಿಗೆ ತರಬೇಕಾಯಿತು. ಪೊಲೀಸರು ಆ ಭಿಕ್ಷುಕ ಮಹಿಳೆಯನ್ನು ಜನರ ಕೈಯಿಂದ ಬಿಡಿಸಿ ವಶಕ್ಕೆ ತೆಗೆದುಕೊಂಡು, ಸ್ಥಳದಲ್ಲಿ ಜಮಾಯಿಸಿದ್ದ ಜನರನ್ನು ಗದರಿಸಿ ಚದುರಿಸಿದರು. ನಂತರ ನಡೆಸಿದ ವಿಚಾರಣೆಯಲ್ಲಿ ಆ ಮಹಿಳೆ ಸಂಪೂರ್ಣ ನಿರಪರಾಧಿ ಎಂದು ತಿಳಿದುಬಂದಿದೆ. ಈ ಬೆಳವಣಿಗೆಗಳ ಹಿನ್ನೆಲೆಯಲ್ಲಿ, ಬೆಳಗಾವಿ ಪೊಲೀಸ್ ಆಯುಕ್ತ ಭೂಷಣ್ ಬೊರಸೆ ಅವರು ಸ್ವತಃ ಮಾಧ್ಯಮದ ಮುಂದೆ ಬಂದು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ. ವೀಡಿಯೊ ಹೇಳಿಕೆಯನ್ನು ಬಿಡುಗಡೆ ಮಾಡಿರುವ ಅವರು, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ಯಾವುದೇ ಅನಾಮಧೇಯ ಮತ್ತು ದೃಢೀಕರಿಸದ ಆಡಿಯೊ ಅಥವಾ ಸಂದೇಶಗಳನ್ನು ಸಾರ್ವಜನಿಕರು ನಂಬಬಾರದು. ನಿಮಗೆ ಯಾವುದೇ ಅನುಮಾನಾಸ್ಪದ ವ್ಯಕ್ತಿ ಅಥವಾ ಚಟುವಟಿಕೆ ಕಂಡುಬಂದರೆ, ದಯವಿಟ್ಟು ತಕ್ಷಣವೇ ನಮ್ಮ ಸಹಾಯವಾಣಿ 100 ಗೆ ಕರೆ ಮಾಡಿ ಮಾಹಿತಿ ನೀಡಿ. ಕಾನೂನನ್ನು ಕೈಗೆತ್ತಿಕೊಳ್ಳಬೇಡಿ ಎಂದು ಮನವಿ ಮಾಡಿದ್ದಾರೆ.
ಟೆಹ್ರಾನ್, ಫೆ. 28: ಅಮೆರಿಕ ಮತ್ತು ಇಸ್ರೇಲ್ ನಡೆಸಿದ ದಾಳಿಗಳ ಪರಿಣಾಮವಾಗಿ ಇರಾನ್ ನ 24 ಪ್ರಾಂತ್ಯಗಳು ತೀವ್ರವಾಗಿ ಬಾಧಿತವಾಗಿದ್ದು, ಇದುವರೆಗೆ 201 ಜನರು ಸಾವನ್ನಪ್ಪಿದ್ದಾರೆ ಮತ್ತು 747 ಮಂದಿ ಗಾಯಗೊಂಡಿದ್ದಾರೆ ಎಂದು ಇರಾನ್ನ ರೆಡ್ ಕ್ರೆಸೆಂಟ್ ಸೊಸೈಟಿ ತಿಳಿಸಿದೆ ಎಂದು al jazeera ವರದಿ ಮಾಡಿದೆ. ರೆಡ್ ಕ್ರೆಸೆಂಟ್ ಸೊಸೈಟಿಯ ವಕ್ತಾರರು ಮೆಹರ್ ನ್ಯೂಸ್ ಏಜೆನ್ಸಿಗೆ ನೀಡಿದ ಮಾಹಿತಿಯ ಪ್ರಕಾರ, ದಾಳಿಗಳು ವಿವಿಧ ಪ್ರದೇಶಗಳಲ್ಲಿ ವ್ಯಾಪಕ ಪರಿಣಾಮ ಬೀರಿವೆ. ಹಾನಿಗೊಳಗಾದ ಸ್ಥಳಗಳಲ್ಲಿ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗಳನ್ನು ಮುಂದುವರಿಸಲಾಗುತ್ತಿದೆ. ದಾಳಿಗೊಳಗಾದ ಪ್ರದೇಶಗಳಲ್ಲಿ 220 ಕ್ಕೂ ಹೆಚ್ಚು ರೆಡ್ ಕ್ರೆಸೆಂಟ್ ತಂಡಗಳನ್ನು ನಿಯೋಜಿಸಲಾಗಿದ್ದು, ಅವು ಅವಶೇಷ ತೆರವು, ಸಿಲುಕಿರುವವರ ಶೋಧ ಹಾಗೂ ಗಾಯಾಳುಗಳಿಗೆ ತುರ್ತು ನೆರವು ಒದಗಿಸುವ ಕಾರ್ಯದಲ್ಲಿ ತೊಡಗಿವೆ ಎಂದು ವಕ್ತಾರರು ತಿಳಿಸಿದ್ದಾರೆ. ಪರಿಸ್ಥಿತಿ ಇನ್ನೂ ಉದ್ವಿಗ್ನವಾಗಿದ್ದು, ಮೃತರು ಮತ್ತು ಗಾಯಾಳುಗಳ ಸಂಖ್ಯೆ ಹೆಚ್ಚುವ ಸಾಧ್ಯತೆ ಇರುವುದಾಗಿ ಅಧಿಕಾರಿಗಳು ಸೂಚಿಸಿದ್ದಾರೆ.
ಉಕ್ರೇನ್ ವಿರುದ್ಧ ರೊಚ್ಚಿಗೆದ್ದ ರಷ್ಯಾ, ಶಾಂತಿ ಮಾತುಕತೆಗೆ ಬ್ರೇಕ್ ಬೀಳುವ ಸಾಧ್ಯತೆ | Ukraine And Russia
ಪ್ರಪಂಚ ಹಾಳಾಗಿ ಹೋಗುತ್ತಿದ್ದು, ಎಲ್ಲೆಲ್ಲೂ ಬರೀ ಯುದ್ಧದ ಮಾತೇ ಕೇಳಿಬರುತ್ತಿದೆ. ಒಂದು ಕಡೆ ದಿಢೀರ್ ಅಂತಾ ಶುರುವಾಗಿರುವ ಇರಾನ್ ಮತ್ತು ಇಸ್ರೇಲ್ ಯುದ್ಧ ಭೀತಿ ಹುಟ್ಟುಹಾಕಿದೆ. ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ ಇರಾನ್ ವಿರುದ್ಧ ಕಾರ್ಯಾಚರಣೆ ಶುರು ಮಾಡಿವೆ. ಈ ನಡುವೆ ಅತ್ತ ರಷ್ಯಾ ಮತ್ತು ಉಕ್ರೇನ್ ಕಳೆದ 4 ವರ್ಷಗಳಿಂದ ಬಡಿದಾಡುತ್ತಿವೆ. ಇನ್ನೊಂದು ಕಡೆ ಇಸ್ರೇಲ್
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ತಾವು ಅಂದುಕೊಂಡ ರೀತಿಯಲ್ಲೇ ಈಗ ಮಾಡಿದ್ದು, ಅಮೆರಿಕದ ದೊಡ್ಡ ಶತ್ರು ಇರಾನ್ ವಿರುದ್ಧ ಘೋರ ಯುದ್ಧ ಆರಂಭಿಸಿದ್ದಾರೆ. ಇಸ್ರೇಲ್ ಮೊದಲಿಗೆ ಈ ವಿಚಾರದಲ್ಲಿ ಮುಂದೆ ನುಗ್ಗಿ ದಾಳಿ ಆರಂಭ ಮಾಡಿದ್ದು, ಇರಾನ್ ಮತ್ತು ಇಸ್ರೇಲ್ ನಡುವೆ ಭಾರಿ ದೊಡ್ಡ ತಿಕ್ಕಾಟ ಆರಂಭ ಆಗಿದೆ. ಅದರಲ್ಲೂ ಇರಾನ್ ರಾಜಧಾನಿ ತೆಹ್ರಾನ್ ಈಗಾಗಲೇ
ಇರಾನ್ ನಿಂದ 35 ಬ್ಯಾಲಿಸ್ಟಿಕ್ ಕ್ಷಿಪಣಿ ಉಡಾವಣೆ; ಇಸ್ರೇಲ್ ನಲ್ಲಿ ಆತಂಕದ ವಾತಾವರಣ
ಜೆರುಸಲೇಮ್: ಇರಾನ್ ಒಂದೇ ಸಮನೆ ಇಸ್ರೇಲ್ ಕಡೆಗೆ ಸುಮಾರು 35 ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಉಡಾಯಿಸಿರುವುದೆ. ಇದು ಮದ್ಯ ಪ್ರಾಚ್ಯದಲ್ಲಿನ ಉದ್ವಿಗ್ನತೆಯನ್ನು ಮತ್ತಷ್ಟು ಹೆಚ್ಚಿಸಿದೆ. ಇಸ್ರೇಲ್ ನ ಬಹು-ಪದರದ ವಾಯು ರಕ್ಷಣಾ ವ್ಯವಸ್ಥೆಗಳು ಹೆಚ್ಚಿನ ಕ್ಷಿಪಣಿಗಳನ್ನು ಮಧ್ಯದಲ್ಲೇ ತಡೆಹಿಡಿದಿದ್ದರೂ, ಕೆಲವು ಭೇದಿಸಿ ಒಳನುಗ್ಗಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಕ್ಷಿಪಣಿಗಳ ಅವಶೇಷಗಳು ವಿವಿಧ ಪ್ರದೇಶಗಳಲ್ಲಿ ಬಿದ್ದಿದ್ದು, ಹಲವೆಡೆ ಸ್ಫೋಟದ ಶಬ್ದಗಳು ಕೇಳಿಬಂದಿದೆ ಎಂದು ಇಸ್ರೇಲಿ ಪೊಲೀಸರನ್ನು ಉಲ್ಲೇಖಿಸಿ times of India ವರದಿ ಮಾಡಿದೆ. ಹಾನಿಯ ನಿಖರ ಪ್ರಮಾಣವನ್ನು ಅಂದಾಜಿಸುವ ಕಾರ್ಯ ಮುಂದುವರಿದಿದೆ. ಆದರೆ ಪ್ರಮುಖ ನಗರ ಕೇಂದ್ರಗಳ ಮೇಲೆ ಯಾವುದೇ ನೇರ ಹೊಡೆತಗಳು ಸಂಭವಿಸಿವೆಯೇ ಎಂಬುದು ಇನ್ನೂ ಪರಿಶೀಲನೆಯಲ್ಲಿದೆ ಎಂದು ತಿಳಿಸಲಾಗಿದೆ. ಉತ್ತರ ಇಸ್ರೇಲ್ನಲ್ಲಿ ಕನಿಷ್ಠ ಒಬ್ಬ ವ್ಯಕ್ತಿಗೆ ಲಘು ಗಾಯಗಳಾಗಿರುವುದಾಗಿ ವೈದ್ಯರು ತಿಳಿಸಿದ್ದಾರೆ. ದಾಳಿ ಎಚ್ಚರಿಕೆಯ ಸೈರನ್ ಮೊಳಗುತ್ತಿದ್ದಂತೆ ಆಶ್ರಯಗಳಿಗೆ ಧಾವಿಸುವ ಸಂದರ್ಭಗಳಲ್ಲಿ ಉಂಟಾದ ಆತಂಕ ಮತ್ತು ಸಂಬಂಧಿತ ಸಣ್ಣಪುಟ್ಟ ಗಾಯಗಳಿಗೆ ಇನ್ನೂ ಹಲವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಹೆಚ್ಚುವರಿ ಕ್ಷಿಪಣಿ ದಾಳಿ ಸಂಭವಿಸುವ ಸಾಧ್ಯತೆ ಇರುವುದಾಗಿ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.
ಕರ್ನಾಟಕ ಬಜೆಟ್ 2026 ಬಳಿಕ ನಾಯಕತ್ವ ಬದಲಾವಣೆ ಅಂತಿಮ ಕಾದಾಟ ಆಗುತ್ತೆ: ಮಾಜಿ ಸಿಎಂ ಭವಿಷ್ಯ
ಹಾವೇರಿ: ಕರ್ನಾಟಕ ಕಾಂಗ್ರೆಸ್ ಸರ್ಕಾರದ ಕುರ್ಚಿಯ ಗುದ್ದಾಟ ತೀವ್ರವಾಗಿದೆ. ಮಾರ್ಚ್ ತಿಂಗಳಲ್ಲಿ ನಡೆಯಲಿರುವ ರಾಜ್ಯ ಬಜೆಟ್ 2026 (Karnataka Budget 2026) ನಂತರ ನಾಯಕತ್ವ ಬದಲಾವಣೆ ಅಂತಿಮ ಘಟಕ್ಕೆ ತಲುಪಲಿದೆ. ಅದು ಕಾದಾಟವೇ ಆಗಲಿದೆ. ಸಂಧಾನ ಆಗಲು ಸಾಧ್ಯವಿಲ್ಲ. ಅದು ಯಾವ ರೀತಿ ಆಗುತ್ತದೆ ಎನ್ನುವುದನ್ನು ಕಾದು ನೋಡಬೇಕು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ
ಕಲಬುರಗಿ | ಇಫ್ತಾರ್ ಕೂಟ, ಬೈಬಲ್ ವಿನಿಮಯ ಕಾರ್ಯಕ್ರಮ
ಕಲಬುರಗಿ: ರಮಝಾನ್ ಉಪವಾಸ ನಿಮಿತ್ತ ನಗರದ ಸಂತ್ರಾಸ್ ವಾಡಿ ಸಮೀಪದ ಹಿದಾಯತ್ ಸೆಂಟರ್ ನಲ್ಲಿ ಮಸ್ಸಿಹ್ ಸೇನಾ ಮತ್ತು ಜಮಾಅತೆ ಎ ಇಸ್ಲಾಮಿ ಹಿಂದ್ ಸಂಯುಕ್ತ ಆಶ್ರಯದಲ್ಲಿ ಲೆಂಟ್ ಮತ್ತು ರಮಝಾನ್ ವಿಚಾರ ಸಂಕಿರಣ ಜರುಗಿತು. ಮುಹಮ್ಮದ್ ಜೀಯವುಲ್ಲಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಇಸಾಯಿ ಮಹಾಸಭಾದ ಸಂಧ್ಯಾರಾಜ್ ಸ್ಯಾಮುಯೆಲ್ ಕಾರ್ಯಕ್ರಮ ಉದ್ಘಾಟಿಸಿದ್ದರು. ಫಾದರ್ ಸ್ಟಾನಿ ಲೋಬೋ ಕಾರ್ಯಕ್ರಮದ ಸಾನಿಧ್ಯವಹಿಸಿದ್ದರು. ಮೆರಾಜೊದ್ದೀನ್ ಪಟೇಲ್ ತಾವರಗೇರಾ, ಫಾಸ್ಟರ್ ಶಿರೋಮಣಿ ಉಪನ್ಯಾಸ ನೀಡಿದ್ದರು. ಲಕ್ಮಿಕಾಂತ್ ಹುಬಳಿ, ಎಂಡಿ ಅಬ್ದುಲ್ ಖಾದರ್, ಡಾ. ಕಿರಣ ಜಾರ್ಜ, ಫಾಸ್ಟರ್ ಪರಶುರಾಮ, ಸ್ಯಾಮುಯಲ್ ಬಾಲೆಕರ್, ಫಾಸ್ಟರ್ ಪಂಡಿತ್ ಎಸ್, ರಾಬಿನ್ ಪ್ರತಾಪ್, ಶೇಕ್ ಶಫಿ ಅಹ್ಮದ್ ಸೇರಿದಂತೆ ಮುಂತಾದವರು ಇದ್ದರು. ಕಾರ್ಯಕ್ರಮದಲ್ಲಿ ಕ್ರಿಶ್ಚಿಯನ್ ಸಮುದಾಯದಿಂದ ಬೈಬಲ್ ವಿನಿಮಯ ಮತ್ತು ಜಮಾಅತೆ ಎ ಇಸ್ಲಾಮಿ ಹಿಂದ್ ವತಿಯಿಂದ ಇಫ್ತಾರ್ ಕೂಟ ನಡೆಸಲಾಯಿತು.
ನಶೆ, ಭಿಕ್ಷಾಟನೆ ಮುಕ್ತ ಬೀದರ್ ಜಿಲ್ಲೆಗೆ ಸಂಕಲ್ಪ : ಡಾ.ಅಬ್ದುಲ್ ಖದೀರ್
ಬೀದರ್ : ಜಿಲ್ಲೆಯನ್ನು ನಶೆ, ಭಿಕ್ಷಾಟನೆ ಹಾಗೂ ದ್ವೇಷದಿಂದ ಮುಕ್ತಗೊಳಿಸಲು ಬೀದರ್ ನಾಗರಿಕ ಸನ್ಮಾರ್ಗ ಸಮಿತಿ ಸಂಕಲ್ಪ ತೊಟ್ಟಿದೆ ಎಂದು ಸಮಿತಿಯ ಅಧ್ಯಕ್ಷ ಡಾ. ಅಬ್ದುಲ್ ಖದೀರ್ ಹೇಳಿದರು. ನಗರದ ಜಿಲ್ಲಾ ಕನ್ನಡ ಭವನದಲ್ಲಿ ನಡೆದ ದುಶ್ಚಟಗಳ ನಿಯಂತ್ರಣ ಕುರಿತ ಸಮಾಲೋಚನಾ ಸಭೆಯಲ್ಲಿ ಅವರು ಮಾತನಾಡಿ, ಹಿರಿಯರ ಮಾರ್ಗದರ್ಶನದಲ್ಲಿ ಜಿಲ್ಲೆಯ ಪ್ರತೀ ಗ್ರಾಮದಲ್ಲೂ ಯುವಕರ ಸಮಿತಿ ರಚಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು. ಗುಟ್ಕಾ, ಸಿಗರೇಟ್, ಮದ್ಯಪಾನ, ಅತಿಯಾದ ಮೊಬೈಲ್ ಬಳಕೆ ಹಾಗೂ ಭಿಕ್ಷಾಟನೆ ಸಾಮಾಜಿಕ ಪಿಡುಗಾಗಿವೆ. 25ರಿಂದ 30 ವರ್ಷದೊಳಗಿನ ಯುವಕರು ಮಾದಕ ವಸ್ತುಗಳು ಮತ್ತು ಇತರ ವ್ಯಸನಗಳಿಗೆ ಬಲಿಯಾಗುತ್ತಿದ್ದಾರೆ. ತಮ್ಮ ಹಣವನ್ನು ಖರ್ಚು ಮಾಡಿ ಭವಿಷ್ಯ ಹಾಳು ಮಾಡಿಕೊಳ್ಳುತ್ತಿದ್ದಾರೆ. ಇದರಿಂದ ಕುಟುಂಬಕ್ಕೂ ಭಾರವಾಗುತ್ತಿದ್ದಾರೆ ಎಂದು ಅವರು ಕಳವಳ ವ್ಯಕ್ತಪಡಿಸಿದರು. ಯುವಕರು ರೋಗಪೀಡಿತರಾದರೆ ದೇಶ ದುರ್ಬಲವಾಗುತ್ತದೆ. ಹೀಗಾಗಿ ಯುವಕರನ್ನು ದುಶ್ಚಟಗಳಿಂದ ದೂರವಿಟ್ಟು ಪ್ರೀತಿ, ವಿಶ್ವಾಸ ಹಾಗೂ ಸಹೋದರತ್ವದ ವಾತಾವರಣ ನಿರ್ಮಿಸುವುದು ಸಮಿತಿಯ ಉದ್ದೇಶವಾಗಿದೆ ಎಂದು ಹೇಳಿದರು. ಹಿಂದುಳಿದ ವರ್ಗಗಳ ಒಕ್ಕೂಟದ ಗೌರವಾಧ್ಯಕ್ಷ ಬಸವರಾಜ್ ಮಾಳಗೆ ಮಾತನಾಡಿ, ದುಶ್ಚಟಗಳ ವಿರುದ್ಧ ಜಿಲ್ಲೆಯಲ್ಲಿ ಜನಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಎಲ್ಲರೂ ಕೈಜೋಡಿಸಿದರೆ ಬೀದರ್ ಜಿಲ್ಲೆ ನಶೆ ಮತ್ತು ಭಿಕ್ಷಾಟನೆ ಮುಕ್ತವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಸಮಿತಿಯ ಕಾರ್ಯದರ್ಶಿ ಅಶೋಕ್ ವಡಗಾವೆ ಹಾಗೂ ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ್ ಚನಶೆಟ್ಟಿ ಕೂಡ ಮಾತನಾಡಿದರು. ಈ ಸಂದರ್ಭದಲ್ಲಿ ಹಿಂದುಳಿದ ವರ್ಗಗಳ ಒಕ್ಕೂಟದ ಅಧ್ಯಕ್ಷ ಡಾ. ರಾಜಶೇಖರ್ ಸೇಡಂಕರ್, ಪ್ರಮುಖರಾದ ಅಬ್ದುಲ್ ಮನ್ನಾನ್ ಸೇಠ್, ಹಾವಶೆಟ್ಟಿ ಪಾಟೀಲ್ ಹಾಗೂ ಶರಣಪ್ಪ ಮಿಠಾರೆ ಸೇರಿದಂತೆ ಅನೇಕರು ಇದ್ದರು.
ಮಂಗಳೂರು: ಬೃಹತ್ ಬೈಬಲ್ ಅಧಿವೇಶನ 3ನೇ ದಿನ ಸಂಪನ್ನ
ಗಲ್ಫ್ ರಾಷ್ಟ್ರಗಳಲ್ಲಿ ಶಾಂತಿಗಾಗಿ ವಿಶೇಷ ಪ್ರಾರ್ಥನೆ
ಬಸವಕಲ್ಯಾಣ | ಗ್ಯಾರಂಟಿ ಯೋಜನೆಯ ಪ್ರಗತಿ ಪರಿಶೀಲನಾ ಸಭೆ
ಆಹಾರ ಇಲಾಖೆ ಅಧಿಕಾರಿಗಳ ವಿರುದ್ಧ ಭ್ರಷ್ಟಾಚಾರ ಆರೋಪ
War: ವಿಶ್ವಸಂಸ್ಥೆ ತುರ್ತು ಸಭೆ: ಇರಾನ್ ಮೇಲಿನ ಜಂಟಿ ವೈಮಾನಿಕ ದಾಳಿಗೆ ಬೀಳುತ್ತಾ ಬ್ರೇಕ್
Middle East War UN reaction:ಇರಾನ್ ಮೇಲೆ ಮೊದಲು ಇಸ್ರೇಲ್ ನಂತರ ಯುಎಸ್ ನಡೆಸಿದ ವೈಮಾನಿಕ ದಾಳಿಯು ಜಾಗತಿಕವಾಗಿ ಗಮನ ಸೆಳೆದಿದೆ. ಈ ಯುದ್ಧವು ಕೇವಲ ಮೂರು ರಾಷ್ಟ್ರಗಳಿಗೆ ಮಾತ್ರವಲ್ಲದೇ ವಿಶ್ವದ ಬೇರೆ ಬೇರೆ ರಾಷ್ಟ್ರಗಳ ಮೇಲೂ ಪರಿಣಾಮ ಬೀರುತ್ತಿದೆ. ಈ ಕಾರಣದಿಂದ ವಿಶ್ವಸಂಸ್ಥೆ (United Nation) ಇಂದಿನ ಬೆಳವಣಿಗೆಯನ್ನು ಖಂಡಿಸಿ ತುರ್ತು ಸಭೆ ಕರೆದಿದೆ. ತಡವಾದರೂ
ಹಾಸನ, ಕೊಡಗು, ಚಿಕ್ಕಮಗಳೂರು ಆನೆ ಸಮಸ್ಯೆಗೆ ಶಾಶ್ವತ ಪರಿಹಾರಕ್ಕೆ ಕ್ರಮ : ಈಶ್ವರ್ ಖಂಡ್ರೆ
ಬಾಳೆಹೊನ್ನೂರು : ಅರಣ್ಯ ಸಂರಕ್ಷಣೆಯಲ್ಲಿ ಅರಣ್ಯವಾಸಿಗಳ ಪಾತ್ರ ಮಹತ್ವದ್ದಾಗಿದ್ದು, ಅರಣ್ಯ ಇಲಾಖೆ ಯಾವುದೇ ಜನರ ವಿರುದ್ಧವಿಲ್ಲ. ಆದರೆ, ಸುಪ್ರೀಂಕೋರ್ಟ್ ತೀರ್ಪು ಮತ್ತು ಕೇಂದ್ರ ಹಾಗೂ ರಾಜ್ಯ ಸರಕಾರದ ಅರಣ್ಯ ಕಾಯಿದೆ ಕಾನೂನುಗಳ ಪಾಲನೆ ಮಾಡುವ ನಿಟ್ಟಿನಲ್ಲಿ ಕೆಲವು ಅಸಮಾಧಾನಗಳಿವೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ್ ಬಿ ಖಂಡ್ರೆ ಹೇಳಿದ್ದಾರೆ. ಬಾಳೆಹೊನ್ನೂರಿನ ನಾರಾಯಣಗುರು ಸಮುದಾಯ ಭವನದಲ್ಲಿಂದು ಆಯೋಜಿಸಲಾಗಿದ್ದ ಮಲೆನಾಡು ರೈತರ ಸಮಸ್ಯೆಗಳ ಕುರಿತ ಸಂವಾದದಲ್ಲಿ ಮಾತನಾಡಿದ ಅವರು, ಅರಣ್ಯ ಜಮೀನನ್ನು ಯಾರಿಗೂ ಪರಿಭಾರೆ ಮಾಡಲು ಅವಕಾಶವಿಲ್ಲ. ಆ ರೀತಿ ಅನ್ಯ ಉದ್ದೇಶಕ್ಕೆ ಕಾಡನ್ನು ಬಳಸಲು ನ್ಯಾಯಾಲಯದ ಅನುಮತಿ ಮತ್ತು ಕೇಂದ್ರ ಸರಕಾರದ ಸಮ್ಮತಿ ಅಗತ್ಯ ಎಂದು ಹೇಳಿದರು. ಸೆಕ್ಷನ್ 4 ಸಮಸ್ಯೆ ಸ್ವಾತಂತ್ರ್ಯಪೂರ್ವದಿಂದಲೂ ಇದೆ. ರಾಜ ಮಹಾರಾಜರ ಕಾಲದಲ್ಲೇ ಅಧಿಸೂಚನೆ ಆದ ಹಲವು ಪ್ರಕರಣ ಸೆಕ್ಷನ್ 17 ಆಗದೆ ಬಾಕಿ ಇದೆ. ಈಗ ಈ ಸಮಸ್ಯೆ ಪರಿಹರಿಸಲು ಸರಕಾರ ಕಾನೂನು ವ್ಯಾಪ್ತಿಯಲ್ಲೇ ಪ್ರಯತ್ನಿಸುತ್ತಿದೆ ಎಂದ ಅವರು, ಅರಣ್ಯ ಭೂಮಿಯನ್ನು ಮೂಲಸೌಕರ್ಯ ಅಭಿವೃದ್ಧಿಗೆ ಬಳಸಬೇಕಾದರೆ ತೀರುವಳಿ (ಎಫ್.ಸಿ.) ನಿಯಮಗಳ ಪಾಲನೆ ಮಾಡಬೇಕಾಗುತ್ತದೆ ಪರ್ಯಾಯ ಭೂಮಿ ಪಡೆದು, ಅರಣ್ಯ ಬೆಳೆಸಬೇಕಾಗುತ್ತದೆ ಎಂದೂ ತಿಳಿಸಿದರು. ಇತ್ತೀಚಿಗೆ ಆನೆ ದಾಳಿಯಿಂದ ಎರಡು ಅಮೂಲ್ಯ ಜೀವಹಾನಿ ಆಗಿರುವುದು ಅತ್ಯಂತ ನೋವಿನ ಸಂಗತಿ. ಸರಕಾರ ಆನೆ ಸೆರೆಗೆ ತಕ್ಷಣವೇ ಆದೇಶ ನೀಡಿತ್ತು. ಆನೆ ಸೆರೆ ಕಾರ್ಯಾಚರಣೆ ಅತ್ಯಂತ ಕ್ಲಿಷ್ಟಕರವಾಗಿದ್ದು, ಇಲಾಖೆಯ ಶಾರ್ಪ್ ಶೂಟರ್ ಆನೆ ವೆಂಕಟೇಶ್ ಅವರೇ ಮೃತಪಟ್ಟಿದ್ದರು. ದಸರಾ ಅಂಬಾರಿ ಹೊರುತ್ತಿದ್ದ ಅರ್ಜುನ ಆನೆಯೂ ಹುತಾತ್ಮನಾಯಿತು ಎಂದು ಹೇಳಿದರು. ಮಾನವ ವನ್ಯಜೀವಿ ಸಮಸ್ಯೆ ಇಂದು ನಿನ್ನೆಯದಲ್ಲ. ರಾಜ ಮಹಾರಾಜರು ವನ್ಯಜೀವಿ ಉಪಟಳ ಹೆಚ್ಚಾದಾಗ ಬೇಟೆಗೆ ಹೋಗುತ್ತಿದ್ದರು. ಕಳ್ಳಬೇಟೆಯೂ ನಡೆಯುತ್ತಿತ್ತು. ಪ್ರಕೃತಿ ಪರಿಸರದ ಸಮತೋಲನ ಕಾಪಾಡಲು ವನ್ಯಜೀವಿಗಳ ಮಹತ್ವ ಮನಗಂಡು ದಿವಂಗತ ಪ್ರಧಾನಿ ಇಂದಿರಾಗಾಂಧೀ ಅವರು 1972ರಲ್ಲಿ ವನ್ಯಜೀವಿ ಸಂರಕ್ಷಣಾ ಕಾಯಿದೆ ತಂದ ಬಳಿಕ ರಾಜ್ಯದಲ್ಲಿ ವನ್ಯಜೀವಿಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. 6395 ಆನೆಗಳೊಂದಿಗೆ ರಾಜ್ಯ ಗಜಪಡೆಯಲ್ಲಿ ನಂ.1 ಆಗಿದೆ. ಹುಲಿ ಸಂಖ್ಯೆಯಲ್ಲಿ ನಂ.2 ಸ್ಥಾನದಲ್ಲಿದೆ. ಆನೆ, ಹುಲಿಗಳ ಸಂಖ್ಯೆಯಲ್ಲಿನ ಹೆಚ್ಚಳ ಮತ್ತು ಕ್ಷೀಣಿಸುತ್ತಿರುವ ಅರಣ್ಯದಿಂದಾಗಿ ಮಾನವ-ವನ್ಯಜೀವಿ ಸಂಘರ್ಷ ಹೆಚ್ಚಾಗುತ್ತಿದೆ ಎಂದರು. ಆನೆಗಳೂ ಕೂಡ ನಮ್ಮಂತೆಯೇ ತಮ್ಮ ಆಹಾರ ಪದ್ಧತಿಯಲ್ಲಿ ಬದಲಾವಣೆ ಮಾಡಿಕೊಂಡಿವೆ. ತೋಟಗಳಿಗೆ ಬಂದು ತಿನ್ನಲು ಆರಂಭಿಸಿವೆ. ವನ್ಯಜೀವಿ ಸಂಘರ್ಷ ನಿಯಂತ್ರಿಸಲು ಮತ್ತು ಶಾಶ್ವತ ಪರಿಹಾರ ಕಂಡುಕೊಳ್ಳಲು ರಾಜ್ಯ ಸರ್ಕಾರ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದೆ ಎಂದರು. ಆನೆಗಳು, ಕಾಡೆಮ್ಮೆ, ಕಾಡುಕೋಣ ನಾಡಿಗೆ ಬಾರದಂತೆ ತಡೆಯಲು ಅಗತ್ಯಕ್ಕೆ ಅನುಗುಣವಾಗಿ ರೈಲ್ವೆ ಬ್ಯಾರಿಕೇಡ್ ಮಂಜೂರು ಮಾಡಲಾಗಿದೆ. ಈಗ ಪ್ರಕ್ರಿಯೆ ಪ್ರಾರಂಭವಾಗಿದ್ದು, 140 ಕಿ.ಮೀ. ರೈಲ್ವೆ ಬ್ಯಾರಿಕೇಡ್ ನಿರ್ಮಾಣಕ್ಕೆ ಪ್ರಸ್ತಾವನೆ ಬಂದಿದೆ. 12 ಕೋಟಿ ರೂ. ವೆಚ್ಚದಲ್ಲಿ ಸೂಕ್ಷ್ಮ ಪ್ರದೇಶದಲ್ಲಿ 7 ಕಿ.ಮೀ. ರೈಲ್ವೆ ಬ್ಯಾರಿಕೇಡ್ ಹಾಕಲು ಕ್ರಮ ಕೈಗೊಳ್ಳಲಾಗಿದ್ದು, ಶೀಘ್ರ ಕಾಮಗಾರಿ ಆರಂಭವಾಗುತ್ತದೆ. ಎಂದರು. ಕೊಪ್ಪದಲ್ಲಿ ಆನೆಗಳ ಹಾವಳಿ ಹೆಚ್ಚಾಗಿದ್ದು, ಬೆಳೆ ಹಾನಿ ಮತ್ತು ಜೀವ ಆನೆ ಆಗುತ್ತಿದ್ದು, ಕೊಪ್ಪದಲ್ಲಿ ಪ್ರತ್ಯೇಕ ಆನೆ ಕಾರ್ಯಪಡೆ ಸ್ಥಾಪನೆಗೆ ಶೀಘ್ರವೇ ಆದೇಶ ಹೊರಡಿಸಲಾಗುವುದು ಎಂದು ತಿಳಿಸಿದರು. ವನ್ಯಜೀವಿ ಸಂಚಾರ ಹೆಚ್ಚಾಗಿರುವ ಕಡೆ ಥರ್ಮಲ್ ಡ್ರೋನ್ ಕ್ಯಾಮರಾ ನೆರವಿನಿಂದ ಅವುಗಳ ಚಲನ ವಲನದ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡಲು ಸೂಚಿಸಲಾಗಿದೆ. ದೇಶೀಯವಾಗಿ ಅಭಿವೃದ್ಧಿ ಪಡಿಸಿರುವ ರೇಡಿಯೋ ಕಾಲರ್ ಗಳನ್ನು ಹಿಂಡು ಆನೆಗೆ ಅಳವಡಿಸಿ, ಜನವಸತಿ ಪ್ರದೇಶಕ್ಕೆ ಬಂದರೆ ತತ್ ಕ್ಷಣವೇ ಮಾಹಿತಿ ನೀಡುವ ವ್ಯವಸ್ಥೆ ಮಾಡಲು ಸೂಚಿಸಲಾಗಿದೆ ಎಂದು ತಿಳಿಸಿದರು. ಮಧ್ಯಪ್ರದೇಶದಲ್ಲಿ ಕಾಡೆಮ್ಮೆ, ಕಾಡುಕೋಣದ ಸಮಸ್ಯೆಗೆ ಪರಿಹಾರ ಕಂಡುಕೊಂಡಿದ್ದು, ಅದರ ಅಧ್ಯಯನಕ್ಕೆ ತಂಡ ಕಳಿಸಲಾಗುತ್ತಿದೆ ಎಂದು ತಿಳಿಸಿದರು.
ಬೆಳ್ತಂಗಡಿ: ಎಳನೀರು ಅರಣ್ಯ ಪ್ರದೇಶದಲ್ಲಿ ಬೆಂಕಿ
ಬೆಳ್ತಂಗಡಿ: ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಬೆಳ್ತಂಗಡಿ ತಾಲೂಕಿನ ಮಲವಂತಿಗೆ ಗ್ರಾಮದ ಎಳನೀರು ಅರಣ್ಯ ಪ್ರದೇಶದಲ್ಲಿ ಬೆಂಕಿ ಕಂಡುಬಂದಿದೆ. ಈ ಪ್ರದೇಶದ ಹುಲ್ಲುಗಾವಲಿಗೆ ಬೆಂಕಿ ಬಿದ್ದಿದ್ದು, ವನ್ಯಜೀವಿ ವಿಭಾಗದಿಂದ ಹತೋಟಿಗೆ ತರಲಾಗುತ್ತಿದ್ದೆ ಹಾಗೂ ಬೆಂಕಿ ಸದ್ಯ ಹತೋಟಿಗೆ ಬಂದಿರುತ್ತದೆ ಎಂದು ಬೆಳ್ತಂಗಡಿ ವನ್ಯಜೀವಿ ಭಾಗದ ಆರ್ ಎಫ್ ಒ ಶರ್ಮಿಷ್ಠಾ ತಿಳಿಸಿದ್ದಾರೆ. ಅರಣ್ಯ ಪ್ರದೇಶದಲ್ಲಿ ಬೆಂಕಿ ಬಿದ್ದಿರುವುದರಿಂದ ಸಮೀಪದ ಗ್ರಾಮಗಳಲ್ಲಿ ಉರಿಬಿಸಿಲು ರಾತ್ರಿ ಕೊಂಚ ಚಳಿಯ ವಾತಾವರಣ ಕಂಡುಬಂದಿದೆ
ಜೇವರ್ಗಿ | ಮಲ್ಲಾಬಾದ್ ಏತ ನೀರಾವರಿ ಹೋರಾಟ ತೀವ್ರಗೊಳಿಸಲು ರೈತ ಮುಖಂಡರ ನಿರ್ಧಾರ
ಜೇವರ್ಗಿ : ಯಡ್ರಾಮಿ ಸೇರಿದಂತೆ ಜೇವರ್ಗಿ ತಾಲೂಕಿನ ರೈತರ ಬಹುಕಾಲದ ಬೇಡಿಕೆಯಾದ ಮಲ್ಲಾಬಾದ್ ಏತ ನೀರಾವರಿ ಯೋಜನೆಗೆ ತಕ್ಷಣ ಚಾಲನೆ ನೀಡಬೇಕು ಹಾಗೂ ಗ್ರಾಮೀಣ ಭಾಗಗಳಲ್ಲಿನ ಸರ್ಕಾರಿ ಶಾಲೆಗಳ ಮುಚ್ಚುವಿಕೆ ಕ್ರಮವನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿ ರೈತ ಮುಖಂಡರು ಮುಂದಿನ ಹೋರಾಟವನ್ನು ತೀವ್ರಗೊಳಿಸಲು ನಿರ್ಧರಿಸಿದರು. ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಸಭೆಯಲ್ಲಿ ಸರ್ಕಾರದ ನೀತಿ ಕುರಿತು ಚರ್ಚಿಸಿದ ಬಳಿಕ ಈ ತೀರ್ಮಾನ ಕೈಗೊಳ್ಳಲಾಯಿತು. ಸಭೆಯಲ್ಲಿ ಮಾತನಾಡಿದ ಮಹೇಶ್ ಕುಮಾರ್ ರಾಠೋಡ್, ಮಲ್ಲಾಬಾದ್ ಏತ ನೀರಾವರಿ ಯೋಜನೆ ರೈತರ ಜೀವನಾಡಿಯಾಗಿದೆ. ವರ್ಷಗಳಿಂದ ನಿರೀಕ್ಷೆಯಲ್ಲಿರುವ ಯೋಜನೆಯನ್ನು ಇನ್ನಷ್ಟು ವಿಳಂಬ ಮಾಡುವುದು ಅನ್ಯಾಯ. ತಕ್ಷಣ ಕಾರ್ಯಾರಂಭವಾಗಬೇಕು ಎಂದು ಒತ್ತಾಯಿಸಿದರು. ಬಾಬು ಪಾಟೀಲ್ ಮುತ್ತಕೋಡ ಮಾತನಾಡಿ, ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಎಂಬ ನೆಪದಲ್ಲಿ ಸರ್ಕಾರಿ ಶಾಲೆಗಳನ್ನು ಮುಚ್ಚುವುದು ಗ್ರಾಮೀಣ ಬಡ ಮಕ್ಕಳ ಭವಿಷ್ಯಕ್ಕೆ ದೊಡ್ಡ ಹೊಡೆತ. ಬದಲಾಗಿ ಮೂಲಸೌಕರ್ಯ ಅಭಿವೃದ್ಧಿ ಹಾಗೂ ಶಿಕ್ಷಕರ ನಿಯೋಜನೆಗೆ ಒತ್ತು ನೀಡಬೇಕು ಎಂದರು. ಇಬ್ರಾಹಿಂ ಪಟೇಲ್ ಯಾಳವಾರ್ ಶಾಂತಿಪೂರ್ಣ ಹೋರಾಟದ ಮೂಲಕ ಸರ್ಕಾರದ ಗಮನ ಸೆಳೆಯಲು ಕರೆ ನೀಡಿದರು. ಮೈನುದ್ದಿನ್ ಇನಾಮ್ದಾರ್ (ವಕೀಲರು) ಕೂಡ ಅಭಿಪ್ರಾಯ ವ್ಯಕ್ತಪಡಿಸಿದರು. ಸಭೆಯಲ್ಲಿ ಬಿ.ಹೆಚ್. ಮಾಲಿ ಪಾಟೀಲ್, ಭೀಮಶಂಕರ್ ಬಿಲ್ಲಾಡ, ಸಿದ್ದಲಿಂಗ ಪೂಜಾರಿ, ನಿಂಗಪ್ಪ ಪೂಜಾರಿ ಯಾಳವಾರ್, ಪರಮೇಶ್ ಬಿರಾಳ್, ಗುರುನಾಥ್ ಸಾಹು ರಾಜವಾಳ್, ಮಲ್ಲಿಕಾರ್ಜುನ್ ದೊಡ್ಮನಿ (ಕೆಲ್ಲೂರು), ದೇವು ಚಿಗರಳ್ಳಿ, ಸಲೀಂ ಪಟೇಲ್ ಸಿಗರತಳ್ಳಿ, ಅಜೀಜ್ ಪಟೇಲ್, ಶಾಂತಯ್ಯ ಗುತ್ತೇದಾರ್, ರಫೀಕ್ ಸರ್ ಹಾಗೂ ಗಿರೀಶ ತುಂಬಗಿ ಸೇರಿದಂತೆ ಅನೇಕರು ಭಾಗವಹಿಸಿದ್ದರು. ಕೃಷಿ ಮತ್ತು ಶಿಕ್ಷಣ ಗ್ರಾಮೀಣ ಪ್ರದೇಶಗಳ ಪ್ರಮುಖ ಆಧಾರಸ್ತಂಭಗಳಾಗಿದ್ದು, ಇವುಗಳ ಮೇಲಿನ ನಿರ್ಲಕ್ಷ್ಯವನ್ನು ಸಹಿಸಲಾಗುವುದಿಲ್ಲ ಎಂದು ಮುಖಂಡರು ಎಚ್ಚರಿಸಿದರು.
ಇರಾನ್ ಮೇಲೆ ಅಮೆರಿಕ-ಇಸ್ರೇಲ್ ಮಿಲಿಟರಿ ದಾಳಿ: ಕೆಂಪೇಗೌಡ ಏರ್ಪೋರ್ಟ್ನಿಂದ ಗಲ್ಫ್ಗೆ ತೆರಳುವ ವಿಮಾನ ಹಾರಾಟ ರದ್ದು
ಬೆಂಗಳೂರು, ಫೆ.28 : ಅಮೆರಿಕ ಮತ್ತು ಇಸ್ರೇಲ್, ಇರಾನ್ ಮೇಲೆ ಮಿಲಿಟರಿ ದಾಳಿ ಶುರು ಮಾಡಿದ್ದು, ಸದ್ಯ ಈ ಯುದ್ಧ ಆತಂಕಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಎಲ್ಲೆಡೆ ವಿಮಾನಗಳ ಹಾರಾಟ ರದ್ದು ಮಾಡಲಾಗಿದೆ. ಇತ್ತ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ತೆರಳಬೇಕಿದ್ದ ಕೆಲ ವಿಮಾನಗಳೂ ರದ್ದಾಗಿವೆ. ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ ಇರಾನ್ ವಿರುದ್ಧ ಮಿಲಿಟರಿ ದಾಳಿ ನಡೆಸುತ್ತಿವೆ. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ವಿಮಾನಗಳ ಹಾರಾಟವನ್ನು ರದ್ದು ಮಾಡಲಾಗಿದೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ತೆರಳಬೇಕಿದ್ದ ವಿಮಾನಗಳು ಸೇರಿದಂತೆ ವಿದೇಶದಿಂದ ಬೆಂಗಳೂರಿಗೆ ಬರಬೇಕಿದ್ದ ಕೆಲ ವಿಮಾನಗಳನ್ನು ಸಹ ರದ್ದು ಮಾಡಲಾಗಿದೆ ಎಂದು ಮೂಲಗಳಿಂದ ತಿಳಿದುಬಂದಿದೆ. ದುಬೈ, ಅಬುಧಾಬಿ, ಜಿದ್ದಾಗೆ ತೆರಳಬೇಕಿದ್ದ ವಿಮಾನಗಳು ರದ್ದು ಮಾಡಲಾಗಿದೆ. ಏರ್ಲೈನ್ಸ್ ಸಿಬ್ಬಂದಿ ಈಗಾಗಲೇ ಪ್ರಯಾಣಿಕರಿಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.
ಚಿಂಚೋಳಿ | ಒಳಮೀಸಲಾತಿಯ ದೋಷ ಸರಿಪಡಿಸಲು ಒತ್ತಾಯಿಸಿ ಪ್ರತಿಭಟನೆ
ಚಿಂಚೋಳಿ : ಕರ್ನಾಟಕ ಸರ್ಕಾರ ಜಾರಿಗೆ ತಂದಿರುವ ಪರಿಶಿಷ್ಟ ಜಾತಿ (SC) ಒಳಮೀಸಲಾತಿ ರೋಸ್ಟರ್ ಪಟ್ಟಿಯಲ್ಲಿನ ತಾಂತ್ರಿಕ ದೋಷಗಳನ್ನು ಸರಿಪಡಿಸಿ, ಪ್ರವರ್ಗ ‘ಬಿ’ ಮತ್ತು ‘ಸಿ’ ಗುಂಪುಗಳಿಗೆ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿ ಪರಿಶಿಷ್ಟ ಜಾತಿ ಸಮಾಜ ತಾಲೂಕು ಸಮಿತಿ ವತಿಯಿಂದ ತಹಸೀಲ್ದಾರರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು. ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಮುಖಂಡರು, ಪ್ರಸ್ತುತ ಜಾರಿಯಲ್ಲಿರುವ ಒಳಮೀಸಲಾತಿ ರೋಸ್ಟರ್ ಪಟ್ಟಿಯು ಪ್ರವರ್ಗ ‘ಬಿ’ ಮತ್ತು ‘ಸಿ’ ಅಡಿಯಲ್ಲಿ ಬರುವ ಸಮುದಾಯಗಳನ್ನು ಪರಿಶಿಷ್ಟ ಜಾತಿ ಪಟ್ಟಿಯಿಂದ ಹೊರಗಿಟ್ಟಂತೆಯೇ ಭಾಸವಾಗುತ್ತಿದೆ ಎಂದು ಆರೋಪಿಸಿದರು. ಒಳಮೀಸಲಾತಿಯ ಮೂಲ ಉದ್ದೇಶ ಅಸಮಾನರಿಗೆ ಸಮಾನ ಅವಕಾಶ ಕಲ್ಪಿಸುವುದಾಗಿದ್ದರೂ, ಅನುಷ್ಠಾನ ಹಂತದಲ್ಲಿ ಉಂಟಾದ ತಾಂತ್ರಿಕ ತೊಂದರೆಗಳಿಂದ ಅನೇಕ ಸಮುದಾಯಗಳಿಗೆ ಅನ್ಯಾಯವಾಗುತ್ತಿದೆ ಎಂದು ಹೇಳಿದರು. ಒಳಮೀಸಲಾತಿ ಸಂಬಂಧಿಸಿದ ಗೊಂದಲಗಳು ಬಗೆಹರಿಯುವವರೆಗೆ ಪ್ರಸ್ತುತ ನಡೆಯುತ್ತಿರುವ ಶಿಕ್ಷಣ ಹಾಗೂ ಉದ್ಯೋಗ ನೇಮಕಾತಿ ಪ್ರಕ್ರಿಯೆಗಳನ್ನು ತಕ್ಷಣ ತಡೆಹಿಡಿಯಬೇಕು ಎಂದು ಒತ್ತಾಯಿಸಿದರು. ಪ್ರವರ್ಗ ‘ಬಿ’ ಮತ್ತು ‘ಸಿ’ಗೆ ಮಾರಕವಾಗಿರುವ ರೋಸ್ಟರ್ ಬಿಂದುಗಳನ್ನು ಕೂಡಲೇ ಹಿಂಪಡೆಯಬೇಕು ಎಂದು ಆಗ್ರಹಿಸಿದರು. ಎಲ್ಲಾ ಪ್ರವರ್ಗಗಳಿಗೆ (ಎ, ಬಿ, ಸಿ) ಸಮಾನ ಅವಕಾಶ ಕಲ್ಪಿಸುವಂತೆ ಹೊಸ ಕಾಯ್ದೆ ರೂಪಿಸಬೇಕು. ಹೊಸ ಜಾತಿ ಪ್ರಮಾಣಪತ್ರ ವಿತರಣೆಯನ್ನು ತಾತ್ಕಾಲಿಕವಾಗಿ ನಿಲ್ಲಿಸಿ, ಗೊಂದಲಗಳು ನಿವಾರಣೆಯಾಗುವವರೆಗೆ ಹಳೆಯ ಮೀಸಲಾತಿ ಪದ್ಧತಿಯ ಅಡಿಯಲ್ಲೇ ಖಾಲಿ ಹುದ್ದೆಗಳನ್ನು ಭರ್ತಿ ಮಾಡಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ. ಈ ಸಂದರ್ಭದಲ್ಲಿ ಗೌತಮ್ ಬೊಮ್ನಳ್ಳಿ, ಮಾರುತಿ ಗಂಜಗೇರಿ, ಆನಂದ್ ಟೈಗರ್, ರೇವಣಸಿದ್ದಪ್ಪ ಸುಬೆದಾರ್, ರಾಜೇಂದ್ರ ಪ್ರಸಾದ, ಅಮರ ಲೋಡ್ಡನೂರ್,ಚೇತನ್ ನಿರಾಳಕರ, ಪಾಂಡುರಂಗ ಲೋಡ್ದನೊರ್,ಓಮನರಾವ್ ಕೊರವಿ,ರಾಜು ಎಲಕಪಳ್ಳಿ,ವಿವೇಕ್ ಗಂಗನ್, ಗೈಬಣ್ಣ ವಾಲಿಕಾರ, ರಾಜಶೇಖರ್ ಮೌರ್ಯ, ರಾಜಶೇಖರ್ ಹೊಸಮನಿ, ವಿಶ್ವನಾಥ್ ವಾಲಿಕಾರ ದಸ್ತಾಪುರ, ಮಾರುತಿ ಕೊಳ್ಳುರ್, ಕಾಶೀನಾಥ್ ಶಿಂದೆ, ಆರ್, ಗಣಪತ್ ರಾವ್, ಜಗನಾಥ್ ಡಾಕ್ಟರ್, ಸತೀಶ್ ದೇಗಲ್ಮಡಿ, ಪ್ರೇಮಕುಮಾರ್ ಗಾರಂಪಳ್ಳಿ, ದೇವೇಂದ್ರಪ್ಪ ಜಾಬೀನ್, ಜಗನ್ನಾಥ್ ಗಂಜಗೇರಿ, ರಮೇಶ್ ಕುಸರಂಪಳ್ಳಿ,ಜೈಭೀಮ್ ಹೊಲ್ಕರ್, ಸಂಜು ಸಾಸರಗಾವ್,ಬಸವರಾಜ್ ಶಿರಸಿ,ರಘು ದಳಪತಿ, ಗೌತಮ್ ಇತಪುರ,ಅಭಿಜಿತ್ ಕೊರವಿ, ಆನಂದ್ ಗುರಂಪಳ್ಳಿ ಇದ್ದರು.
ಅಫಜಲಪುರ | ಶಿಕ್ಷಣವು ಮಕ್ಕಳ ಭವಿಷ್ಯವನ್ನು ರೂಪಿಸುವ ದೊಡ್ಡ ಶಕ್ತಿ : ಮಳೇಂದ್ರ ಶಿವಾಚಾರ್ಯ
ಅಫಜಲಪುರ : ವಿದ್ಯಾ ಭಾರತಿ ಶಿಕ್ಷಣ ಸಂಸ್ಥೆ ವತಿಯಿಂದ 17ನೇ ಶಾಲಾ ವಾರ್ಷಿಕೋತ್ಸವ ಹಾಗೂ ಸ್ನೇಹ ಸಮ್ಮೇಳನ ಕಾರ್ಯಕ್ರಮ ಪಟ್ಟಣದ ಸರಸಂಬಾ ಕಲ್ಯಾಣ ಮಂಟಪದಲ್ಲಿ ಅದ್ದೂರಿಯಾಗಿ ನಡೆಯಿತು. ಶ್ರೀ ಮಳೇಂದ್ರ ಸಂಸ್ಥಾನ ಹಿರೇಮಠದ ಶ್ರೀ ವಿಶ್ವರಾಧ್ಯ ಮಳೇಂದ್ರ ಶಿವಾಚಾರ್ಯರು ಸಾನಿಧ್ಯ ವಹಿಸಿ ಆಶೀರ್ವಚನ ನೀಡಿ, ಶಿಕ್ಷಣವು ಮಕ್ಕಳ ಭವಿಷ್ಯವನ್ನು ರೂಪಿಸುವ ಶಕ್ತಿಯಾಗಿದೆ. ಶಿಕ್ಷಣ ಸಂಸ್ಥೆ ಕಟ್ಟುವುದು ಸುಲಭವಾದರೂ ಅದನ್ನು ನಿಷ್ಠೆಯಿಂದ, ಗುಣಮಟ್ಟದಿಂದ ನಡೆಸುವುದು ಬಹಳ ಕಠಿಣ ಪರಿಶ್ರಮದ ಕೆಲಸ ಎಂದು ಹೇಳಿದರು. ಶಿಕ್ಷಕರು ಮಕ್ಕಳಿಗೆ ಮೌಲ್ಯಯುತ ಶಿಕ್ಷಣ ನೀಡಬೇಕು ಹಾಗೂ ಪಾಲಕರು ಮಕ್ಕಳನ್ನು ಮೊಬೈಲ್ ಬಳಕೆಯಿಂದ ದೂರ ಇಡಬೇಕು ಎಂದು ಸಲಹೆ ನೀಡಿದರು. ಖ್ಯಾತ ಉದ್ಯಮಿ ಶಂಕರ ಮ್ಯಾಕೇರಿ, ಸಂಸ್ಥೆಯ ಅಧ್ಯಕ್ಷ ಸಿದ್ದು ಪೂಜಾರಿ, ನೆರವು ಸಮಾಜ ಸೇವಾ ಟ್ರಸ್ಟ್ ಅಧ್ಯಕ್ಷ ಸಿದ್ದರಾಮ ಶಿವಣಗಿ ಪ್ರಸ್ತಾವಿಕವಾಗಿ ಮಾತನಾಡಿದರು. ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಶಾಂತಾ ಘಂಟೆ ಹಾಗೂ ಧನರಾಜ ಖೈರಾಟ ಬಡದಾಳ ಅವರನ್ನು ಸನ್ಮಾನಿಸಲಾಯಿತು. ಗೋಳಸಾರದ ಪರಂ ಶ್ರೀ ಅಭಿನವ ಪುಂಡಲಿಂಗ ಮಹಾ ಶಿವಯೋಗಿಗಳು ಸಾನಿಧ್ಯ ವಹಿಸಿದ್ದರು. ಕೆಪಿಸಿಸಿ ಸದಸ್ಯ ಪಪ್ಪು ಪಟೇಲ್ ಕಾರ್ಯಕ್ರಮ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಸಾಹಿತಿ ಬಿ.ಎಂ.ರಾವ್, ತಾಲೂಕು ಪತ್ರಕರ್ತರ ಸಂಘದ ತಾಲೂಕ ಅಧ್ಯಕ್ಷ ಮಕಾರ್ಜುನ ಹಿರೇಮಠ, ಜಿಲ್ಲಾ ಪತ್ರಕರ್ತರ ಸಂಘದ ಕಾರ್ಯಕಾರಣಿ ಸದಸ್ಯ ಶಕೀಲ್ ಚೌಧರಿ, ಕಸಾಪ ಅಧ್ಯಕ್ಷೆ ಪ್ರಭಾವತಿ ಮೇತ್ರಿ, ಭೀಮರಾಯ ಜಮಾದಾರ, ಆನಂದ ಛತ್ರಬಂದ, ಶರಣಮ್ಮಾ ಮಠ, ರೂಪಾ ಮೂಝಾವದೇಶ್ವರ ಮಠ, ವಿಜಯಲಕ್ಷ್ಮಿ ಸರಾಒ, ಸರೋಜಿನಿ ಗುಗ್ಗರಿ, ಶಾಂಭವಿ ಯಲ್ಲದೆ, ಸವಿತಾ ತಳವಾರ,ನಿಂಗಮ್ಮಾ ಹೆಗ್ಗಣದೊಡ್ಡಿ, ಮಾಳಪ್ಪ ಗುಡ್ಡಳ್ಳಿ ಉಪಸ್ಥಿತರಿದ್ದರು. ಸ್ವಾಗತವನ್ನು ಶಿಕ್ಷಕಿ ಪಂಕಜಾ ಆನೂರಕರ್ ನೆರವೇರಿಸಿದರು. ವಿದ್ಯಾರ್ಥಿನಿ ಕೀರ್ತಿ ಯಳಸಂಗಿ ಹಾಗೂ ಲಕ್ಷ್ಮಿ ಪಾಟೀಲಾ ನಿರೂಪಿಸಿದರು. ಶಿಕ್ಷಕಿ ವಿಶಾಲಾಕ್ಷಿ ನಾಯ್ಕೋಡಿ ವಂದಿಸಿದರು.
T20 World Cup : ನಿರ್ಣಾಯಕ ಪಂದ್ಯದಲ್ಲಿ ಶ್ರೀಲಂಕಾ ವಿರುದ್ದ ಗೆದ್ದರೂ, ಟೂರ್ನಿಯಿಂದ ಪಾಕಿಸ್ತಾನ ಔಟ್
Pakistan Out of T20 World Cup : ಪಾಕಿಸ್ತಾನಕ್ಕೆ ಶ್ರೀಲಂಕಾದ ವಿರುದ್ದದ ಪಂದ್ಯದಲ್ಲಿ ಗೆಲುವು ಮಾತ್ರ ಮುಖ್ಯವಾಗಿರಲಿಲ್ಲ, ಗೆಲುವಿನ ಅಂತರವೂ ಮುಖ್ಯವಾಗಿತ್ತು. ಪೆಲ್ಲೆಕಲೆ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಪಾಕಿಸ್ತಾನ, ಶ್ರೀಲಂಕಾದ ವಿರುದ್ದ ಗೆಲುವು ಸಾಧಿಸಿತು. ಆದರೆ, ರನ್’ರೇಟ್ ಲೆಕ್ಕಾಚಾರದಲ್ಲಿ ಹಿಂದೆ ಬಿದ್ದ ಹಿನ್ನಲೆಯಲ್ಲಿ, ಟೂರ್ನಿಯಿಂದ ಔಟ್ ಆಗಬೇಕಾಯಿತು.
ಯಾದಗಿರಿ | ದ್ವಿತೀಯ ಪಿಯು ಪರೀಕ್ಷೆ : 8,076 ವಿದ್ಯಾರ್ಥಿಗಳು ಹಾಜರು, 551 ಮಂದಿ ಗೈರು
ಯಾದಗಿರಿ : ಜಿಲ್ಲೆಯಾದ್ಯಂತ ಶನಿವಾರದಿಂದ ಆರಂಭಗೊಂಡ ದ್ವಿತೀಯ ಪಿಯು ಪರೀಕ್ಷೆಗಳು ಒಂದೆರಡು ಸಣ್ಣ ಗೊಂದಲಗಳನ್ನು ಹೊರತುಪಡಿಸಿ ಬಹುತೇಕ ಸುಸೂತ್ರವಾಗಿ ನಡೆದಿವೆ. ಮೊದಲ ದಿನ ಕನ್ನಡ ಮತ್ತು ಅರೇಬಿಕ್ ವಿಷಯಗಳ ಪರೀಕ್ಷೆಗೆ ಜಿಲ್ಲೆಯ 20 ಕೇಂದ್ರಗಳಲ್ಲಿ ಒಟ್ಟು 8,627 ವಿದ್ಯಾರ್ಥಿಗಳು ಹೆಸರು ನೋಂದಾಯಿಸಿದ್ದರು. ಅದರಲ್ಲಿ 551 ವಿದ್ಯಾರ್ಥಿಗಳು ಗೈರುಹಾಜರಾಗಿದ್ದು, 8,076 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದಾರೆ. ಯಾದಗಿರಿ ನಗರದ ಒಂದು ಪರೀಕ್ಷಾ ಕೇಂದ್ರ ಸ್ಥಳ ಬದಲಾವಣೆಯಿಂದಾಗಿ ಸಬಾ ಕಾಲೇಜಿನ ವಿದ್ಯಾರ್ಥಿಗಳು ಕೆಲ ನಿಮಿಷ ಗೊಂದಲಕ್ಕೀಡಾದರು. ಕೆಂಭಾವಿ ಕೇಂದ್ರದಲ್ಲಿ ಹಾಲ್ಟಿಕೆಟ್ ವಿಚಾರವಾಗಿ ಪ್ರಾಚಾರ್ಯ ಮತ್ತು ವಿದ್ಯಾರ್ಥಿಗಳ ನಡುವೆ ವಾಗ್ವಾದ ನಡೆದಿರುವ ಮಾಹಿತಿ ದೊರೆತಿದೆ. ಇವುಗಳನ್ನು ಹೊರತುಪಡಿಸಿ ಪರೀಕ್ಷೆಗಳು ಶಾಂತಿಯುತವಾಗಿ ನಡೆದಿವೆ. ಜಿಲ್ಲಾಡಳಿತ ಮತ್ತು ಜಿಲ್ಲಾ ಪೊಲೀಸ್ ಇಲಾಖೆ ನಕಲು ಹಾಗೂ ಅಹಿತಕರ ಘಟನೆಗಳಿಗೆ ಅವಕಾಶ ನೀಡದಂತೆ ಕಟ್ಟುನಿಟ್ಟಿನ ಬಂದೋಬಸ್ತ್ ಕೈಗೊಂಡಿತ್ತು. ಸುರಪುರದ ಸರ್ಕಾರಿ ಪಿಯು ಕಾಲೇಜಿನಲ್ಲಿ ಅತಿ ಹೆಚ್ಚು 66 ವಿದ್ಯಾರ್ಥಿಗಳು ಗೈರಾಗಿದ್ದಾರೆ. ರಂಗಪೇಟೆಯ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಪಿಯು ಕಾಲೇಜಿನಲ್ಲಿ ಕೇವಲ 7 ವಿದ್ಯಾರ್ಥಿಗಳು ಗೈರಾಗಿದ್ದಾರೆ. ಶಹಾಪುರ ಸರ್ಕಾರಿ ಬಾಲಕರ ಪಿಯು ಕಾಲೇಜಿನಲ್ಲಿ ಅತ್ಯಧಿಕ 691 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಗುರುಮಠಕಲ್ ಸರ್ಕಾರಿ ಬಾಲಕಿಯರ ಪಿಯು ಕಾಲೇಜಿನಲ್ಲಿ 174 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದಾರೆ. ಪರೀಕ್ಷಾ ಕೇಂದ್ರದ ಎಡವಟ್ಟು : ಯಾದಗಿರಿ ನಗರದಲ್ಲಿ ಹಾಲ್ಟಿಕೆಟ್ನಲ್ಲಿ ಪರೀಕ್ಷಾ ಕೇಂದ್ರದ ವಿಳಾಸ ತಪ್ಪಾಗಿ ಮುದ್ರಿತಗೊಂಡ ಪರಿಣಾಮ ವಿದ್ಯಾರ್ಥಿಗಳು ಕೆಲಕಾಲ ಪರದಾಡಿದರು. ಲುಂಬಿನಿ ವನದ ಬಳಿ ಇರುವ ಕೇಂದ್ರದ ಬದಲು ಗಂಜ್ ರಸ್ತೆಯ ವಿಳಾಸ ಮುದ್ರಿತವಾಗಿದ್ದರಿಂದ ಗೊಂದಲ ಉಂಟಾಯಿತು. ಬಳಿಕ ಅಧಿಕಾರಿಗಳು ತಕ್ಷಣ ಸ್ಪಂದಿಸಿ ವಿದ್ಯಾರ್ಥಿಗಳನ್ನು ಸರಿಯಾದ ಕೇಂದ್ರಕ್ಕೆ ಕಳುಹಿಸಿ ಸಮಸ್ಯೆ ನಿವಾರಿಸಿದರು. ಸೂಕ್ತ ವ್ಯವಸ್ಥೆ : ಜಿಲ್ಲಾಧಿಕಾರಿ ಹರ್ಷಲ್ ಭೋಯೆರ್, ಎಸ್ಪಿ ಪೃಥ್ವಿಕ್ ಶಂಕರ್ ಹಾಗೂ ಪಿಯು ಉಪನಿರ್ದೇಶಕ ಪಂಡಿತರಾವ ಪವಾರ್ ನೇತೃತ್ವದಲ್ಲಿ ಸಮರ್ಪಕ ವ್ಯವಸ್ಥೆ ಮಾಡಲಾಗಿತ್ತು. ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲಿ ಸಿಸಿ ಕ್ಯಾಮೆರಾ, ಬೆಳಕು ಮತ್ತು ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿತ್ತು. ಕೇಂದ್ರಗಳ 200 ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿತ್ತು.
Israel Attacks Iran: ಪರಮೋಚ್ಚ ನಾಯಕ ಖಮೇನಿ ಫಿನೀಶ್? ಇಸ್ರೇಲ್ ಮಾಧ್ಯಮ ವರದಿ; ಈವರೆಗೂ ಇಲ್ಲ ಎಂದ ಇರಾನ್
ಇಸ್ರೇಲ್ ನಡೆಸಿದ ದಾಳಿಯಲ್ಲಿ ಇರಾನ್ ಪರಮೋಚ್ಚ ನಾಯಕ ಯತೊಲ್ಲಾಅಲಿ ಖಮೇನಿ ಮೃತಪಟ್ಟಿದ್ದಾರೆ ಎಂದು ಇಸ್ರೇಲ್ ಮಾಧ್ಯಗಳು ವರದಿ ಮಾಡಿದೆ. ಖಮೇನಿ ಕಚೇರಿ ಮೇಲೆಯೇ ದಾಳಿ ನಡೆದಿದ್ದು, ಸಾವಿನ ಸಾಧ್ಯತೆ ಹೆಚ್ಚಿದೆ. ಆದರೆ, ಇರಾನ್ ಈ ಬಗ್ಗೆ ಯಾವುದೇ ಅಧಿಕೃತ ಘೋಷಣೆ ಮಾಡಿಲ್ಲ. ಈವರೆಗೂ ಜೀವಂತ ಇದ್ದಾರೆ ಎಂದು ಅಲ್ಲಿನ ವಿದೇಶಾಂಗ ಸಚಿವ ಹೇಳಿದ್ದಾರೆ.
ದ.ಕ. ಜಿಲ್ಲೆ| ದ್ವಿತೀಯ ಪಿಯುಸಿ ಪರೀಕ್ಷೆ ಆರಂಭ: 163 ಮಂದಿ ಗೈರು
ಮಂಗಳೂರು, ಫೆ.28: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ ಶನಿವಾರ ಆರಂಭಗೊಂಡಿದೆ. ಕನ್ನಡ ಭಾಷಾ ಪರೀಕ್ಷೆಗೆ ನೋಂದಾಯಿಸಿದ 21,661 ಮಂದಿ ಅಭ್ಯರ್ಥಿಗಳ ಪೈಕಿ 21, 498 ಮಂದಿ ಪರೀಕ್ಷೆಗೆ ಹಾಜರಾಗಿದ್ದಾರೆ. 163 ಮಂದಿ ಗೈರು ಹಾಜರಾಗಿದ್ದಾರೆ. ಶೇ 99.24 ಮಂದಿ ಪರೀಕ್ಷೆ ಬರೆದಿದ್ದಾರೆ. ಅರೇಬಿಕ್ ಪರೀಕ್ಷೆಗೆ 315 ಮಂದಿ ಪೈಕಿ 313 ಮಂದಿ ಪರೀಕ್ಷೆ ಬರೆದಿದ್ದಾರೆ. ಕೇವಲ 2 ಮಂದಿ ಗೈರು ಹಾಜರಾಗಿದ್ದಾರೆ. ಪರೀಕ್ಷೆಗೆ ಹಾಜರಾತಿ ಶೇ 99.36 ಎಂದು ಅಧಿಕೃತ ಮೂಲಗಳು ತಿಳಿಸಿದೆ. ದ.ಕ. ಜಿಲ್ಲಾಧಿಕಾರಿ ದರ್ಶನ್ ಎಚ್ವಿ ಅವರು ಪಿಯುಸಿ ವಿವಿಧ ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿದರು. ಈ ಬಾರಿ ಜಿಲ್ಲೆಯಲ್ಲಿ ಕಲೆ , ವಾಣಿಜ್ಯ ಮತ್ತು ವಿಜ್ಞಾನ ವಿಭಾಗದಲ್ಲಿ ಒಟ್ಟು 33,337 ಮಂದಿ ಅಭ್ಯರ್ಥಿಗಳು ಪರೀಕ್ಷೆ ತೆಗೆದುಕೊಂಡಿದ್ದಾರೆ. ಕಲಾ ವಿಭಾಗದಲ್ಲಿ ಒಟ್ಟು 3,724 ಮಂದಿ. ವಾಣಿಜ್ಯ ವಿಭಾಗದಲ್ಲಿ 15, 054 ಮತ್ತು ವಿಜ್ಞಾನ ವಿಭಾಗದಲ್ಲಿ 18, 559 ಮಂದಿ ಪರೀಕ್ಷೆ ಬರೆಯಲಿದ್ದಾರೆ. *59 ಪರೀಕ್ಷಾ ಕೇಂದ್ರ: ಹದಿನೈದು ದಿನಗಳ ಕಾಲ ನಡೆಯಲಿರುವ ಪರೀಕ್ಷೆಗೆ 59 ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸ ಲಾಗಿದೆ, ಕಳೆದ ವರ್ಷಕ್ಕಿಂತ ಈ ಬಾರಿ 5 ಕೇಂದ್ರಗಳ ಸಂಖ್ಯೆ ಜಾಸ್ತಿಯಾಗಿದೆ. ಸರಕಾರಿ ಕಾಲೇಜುಗಳಲ್ಲಿ 15, ಖಾಸಗಿ ಅನುದಾನಿತ 22 ಮತ್ತು ಖಾಸಗಿ ಅನುದಾನರಹಿತ 22 ಕಾಲೇಜುಗಳನ್ನು ಪರೀಕ್ಷಾ ಕೇಂದ್ರಗಳಾಗಿ ರೂಪಿಸಲಾಗಿದೆ.
ಅಫಜಲಪುರ | ಸರಕಾರಿ ಕಾಲೇಜುಗಳಲ್ಲಿ ಪ್ರವೇಶ ಪಡೆದು ಯೋಜನೆಗಳ ಸದುಪಯೋಗ ಪಡೆದುಕೊಳ್ಳಿ: ಡಾ.ಸಂತೋಷ ಹುಗ್ಗಿ
ಅಫಜಲಪುರ : ಉನ್ನತ ಶಿಕ್ಷಣ ಪಡೆಯಲಿರುವ ವಿದ್ಯಾರ್ಥಿಗಳ ಭವಿಷ್ಯ ಹಿತದೃಷ್ಟಿಯಿಂದ ಸರ್ಕಾರ ಹಾಗೂ ಕಾಲೇಜು ಶಿಕ್ಷಣ ಇಲಾಖೆ ಹಲವು ಮಹತ್ವದ ಯೋಜನೆಗಳನ್ನು ಜಾರಿಗೊಳಿಸುತ್ತಿದೆ. ವಿದ್ಯಾರ್ಥಿಗಳು ಸರಕಾರಿ ಕಾಲೇಜುಗಳಲ್ಲಿ ಪ್ರವೇಶ ಪಡೆದು ಈ ಯೋಜನೆಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದು ಪ್ರಾಚಾರ್ಯ ಡಾ. ಸಂತೋಷ ಹುಗ್ಗಿ ಹೇಳಿದರು. ಪಟ್ಟಣದ ಸರಕಾರಿ ಕಾಲೇಜಿನಲ್ಲಿ 2026-27ನೇ ಶೈಕ್ಷಣಿಕ ಸಾಲಿನ ಪ್ರವೇಶಾತಿ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಸರಕಾರಿ ಕಾಲೇಜುಗಳಲ್ಲಿ ಉತ್ತಮ ಸೌಲಭ್ಯಗಳಿವೆ. ಬಿಎ, ಬಿಎಸ್ಸಿ, ಬಿಕಾಂ ಹಾಗೂ ಪಿಜಿ ಕೋರ್ಸ್ಗಳು ಲಭ್ಯವಿದ್ದು, ಅನುಭವಿ ಉಪನ್ಯಾಸಕರು, ಸುಸಜ್ಜಿತ ಗ್ರಂಥಾಲಯ ಮತ್ತು ಪ್ರಯೋಗಾಲಯಗಳಿವೆ ಎಂದು ವಿವರಿಸಿದರು. ನಂತರ ಅಫಜಲಪುರ ಪಟ್ಟಣದ ವಿವಿಧ ಪದವಿ ಪೂರ್ವ ಕಾಲೇಜುಗಳಿಗೆ ಭೇಟಿ ನೀಡಿ ವಿದ್ಯಾರ್ಥಿಗಳು ಸರಕಾರಿ ಮಹಾವಿದ್ಯಾಲಯದಲ್ಲಿ ಪ್ರವೇಶ ಪಡೆಯುವಂತೆ ಮನವಿ ಮಾಡಿದರು. ಈ ಸಂದರ್ಭದಲ್ಲಿ ಡಾ. ಚಿನ್ನಾ ಆಶೆಪ್ಪ, ಡಾ. ವಿನಾಯಕ ಕೆ., ಡಾ. ರಾಘವೇಂದ್ರ, ಪ್ರವೀಣ, ಡಾ. ಸಂಗಣ್ಣ ಎಂ. ಸಿಂಗೆ, ಡಾ. ಮಲ್ಲಿಕಾರ್ಜುನ ಸಂದಿಮನಿ, ಡಾ. ಶರಣಬಸವೇಶ್ವರ, ಡಾ. ಗುಂಡಪ್ಪ ಸಿಂಗೆ, ಡಾ. ಮಮತಾ ಪಾಟೀಲ, ಡಾ. ಸಂತೋಷ ಬಡಿಗೇರ, ಡಾ. ಸುರೇಶ ಗುಡ್ಡಡಗಿ ಸೇರಿದಂತೆ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಕಾರ್ಮಿಕ ಮುರುಗನ್ ಕುಟುಂಬಕ್ಕೆ 25 ಲಕ್ಷ ರೂ. ಪರಿಹಾರಕ್ಕೆ ಆಗ್ರಹ: ಸಿಐಟಿಯು - ಡಿವೈಎಫ್ಐ ನೇತೃತ್ವದಲ್ಲಿ ಪ್ರತಿಭಟನೆ
ಮಂಗಳೂರು: ಮೀನುಗಾರಿಕಾ ಧಕ್ಕೆ ಪ್ರದೇಶದಲ್ಲಿ ದಾರಿದೀಪದ ಕಂಬವೊಂದು ಬಿದ್ದು ಪರಿಣಾಮವಾಗಿ ತಮಿಳುನಾಡು ಮೂಲದ ಕಾರ್ಮಿಕ ಮುರುಗನ್ ಸ್ಥಳದಲ್ಲೇ ಮೃತಪಟ್ಟಿದ್ದು,ಈ ಸಾವಿಗೆ ಕಾರಣರಾದವರ ವಿರುದ್ದ ಕಠಿಣ ಕ್ರಮಕ್ಕೆ ಆಗ್ರಹಿಸಿ ಹಾಗೂ ಈ ಸಾವಿಗೆ ನ್ಯಾಯ ದೊರಕಿಸಿಕೊಡಬೇಕು, ಮೃತರಾದ ಮುರುಗನ್ ಕುಟುಂಬಕ್ಕೆ ರೂ.25 ಲಕ್ಷದಷ್ಟು ಪರಿಹಾರ ನೀಡಬೇಕೆಂದು ಒತ್ತಾಯಿಸಿ ಕೇಂದ್ರ ಕಾರ್ಮಿಕ ಸಂಘಟನೆ ಸಿಐಟಿಯು ಹಾಗೂ ಯುವಜನ ಸಂಘಟನೆ ಡಿವೈಎಫ್ಐ ಜಂಟಿ ನೇತೃತ್ವದಲ್ಲಿ ಶನಿವಾರ ದಕ್ಕೆ ಪ್ರದೇಶದಲ್ಲಿ ನಡೆದ ಪ್ರತಿಭಟನಾ ಪ್ರದರ್ಶನ ದಲ್ಲಿ ಆಗ್ರಹಿಸಲಾಯಿತು. 300ಕ್ಕೂ ಮಿಕ್ಕಿದ ಮೀನುಗಾರಿಕಾ ಕಾರ್ಮಿಕರು ಮೀನುಗಾರಿಕಾ ಇಲಾಖೆ ಹಾಗೂ ಜಿಲ್ಲಾಡಳಿತದ ಬೇಜವಾಬ್ದಾರಿ ಯನ್ನು ಖಂಡಿಸಿ ಘೋಷಣೆಗಳನ್ನು ಕೂಗಿದರು. ಪ್ರತಿಭಟನೆಯನ್ನು ಉದ್ಘಾಟಿಸಿ ಮಾತನಾಡಿದ ಸಿಐಟಿಯು ದ.ಕ.ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ರವರು, ದಿನವೊಂದಕ್ಕೆ ಕೋಟ್ಯಾಂತರ ರೂಪಾಯಿ ವ್ಯಾಪಾರ ವಹಿವಾಟು ನಡೆಯುವ ಮೀನುಗಾರಿಕಾ ದಕ್ಕೆ ಪ್ರದೇಶದಲ್ಲಿ ಯಾವುದೇ ರೀತಿಯ ಮೂಲಭೂತ ಸೌಕರ್ಯಗಳಿಲ್ಲದಿರುವುದು ಮೀನುಗಾರಿಕಾ ಇಲಾಖೆ ಹಾಗೂ ಜಿಲ್ಲಾಡಳಿತದ ಬೇಜವಾಬ್ದಾರಿಯನ್ನು ಎತ್ತಿ ತೋರಿಸುತ್ತದೆ.ಸಾವಿರಾರು ಕಾರ್ಮಿಕರು ತಮ್ಮ ಹೊಟ್ಟೆಪಾಡಿ ಗಾಗಿ ಕಳೆದ ಹಲವಾರು ವರ್ಷಗಳಿಂದ ದುಡಿದು ಜಿಲ್ಲೆಯ ಅರ್ಥಿಕ ಚಟುವಟಿಕೆಗಳಿಗೆ ಶಕ್ತಿ ತುಂಬುತ್ತಿದ್ದರೂ ಅವರ ಬದುಕಿನ ರಕ್ಷಣೆಗಾಗಿ,ಸಾಮಾಜಿಕ ಭದ್ರತೆಗಾಗಿ ಯಾವುದೇ ಸವಲತ್ತುಗಳ ಇಲ್ಲದೆ ಅತಂತ್ರರಾಗಿದ್ದಾರೆ.ಮಹಿಳಾ ಕಾರ್ಮಿಕರಿಗೆ ಪ್ರತ್ಯೇಕ ವಿಶ್ರಾಂತಿ ಕೊಠಡಿ,ಶೌಚಾಲಯ ವ್ಯವಸ್ಥೆ, ಶುದ್ದ ಕುಡಿಯುವ ನೀರು ಸೇರಿದಂತೆ ಮೂಲ ಭೂತ ಸೌಕರ್ಯಗಳಿಲ್ಲ. ಘಟನೆ ನಡೆದು ವಾರ ಕಳೆದರೂ ಯಾವುದೇ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿಲ್ಲ, ಆ ಮೂಲಕ ಕಾರ್ಮಿಕರ ಜೀವಕ್ಕೆ ಬೆಲೆಯೇ ಇಲ್ಲ ಎಂಬಂತೆ ಮೀನುಗಾರಿಕಾ ಇಲಾಖೆ ಅಮಾನುಷವಾಗಿ ವರ್ತಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಡಿವೈಎಫ್ಐ ಜಿಲ್ಲಾಧ್ಯಕ್ಷ ಬಿ.ಕೆ.ಇಮ್ತಿಯಾಝ್ ಅವರು ಮಾತನಾಡಿ , ತಮಿಳುನಾಡು ಮೂಲದ ಕಾರ್ಮಿಕರು ಮಂಗಳೂರಿಗಾಗಿ ದುಡಿಯುತ್ತಿದ್ದಾರೆ.ಮೃತಪಟ್ಟಿರುವ ಕಾರ್ಮಿಕ ತಮಿಳನೆಂದು ಜಿಲ್ಲಾಡಳಿತ ತೀರಾ ನಿರ್ಲಕ್ಷ್ಯ ವಹಿಸಿರುವುದು ಖೇದಕರ. ಧಕ್ಕೆಯಲ್ಲಿ ಕಾರ್ಮಿಕರಿಗೆ ಯಾವುದೇ ರೀತಿಯ ಸುರಕ್ಷತಾ ಕ್ರಮಗಳಿಲ್ಲ.ಕಳೆದ ಹಲವು ವರ್ಷಗಳಿಂದ ಧಕ್ಕೆಯನ್ನು ಪ್ರವೇಶಿಸುವ ಎಲ್ಲಾ ವಾಹನಗಳಿಂದ ಲಕ್ಷಾಂತರ ರೂಪಾಯಿ ಸುಂಕ ಸಂಗ್ರಹಿಸಲಾ ಗುತ್ತಿದೆ. ಆದರೆ ಸಮರ್ಪಕ ಪಾರ್ಕಿಂಗ್ ವ್ಯವಸ್ಥೆ ಇಲ್ಲ. ಪ್ರತಿನಿತ್ಯ ಟ್ರಾಫಿಕ್ ಸಮಸ್ಯೆ ಉಂಟಾಗಿ ಜನರ ಸಮಯ ಟ್ರಾಫಿಕ್ ಜಾಮ್ನಲ್ಲಿ ವ್ಯರ್ಥವಾಗುತ್ತಿದೆ . ಡ್ರೈನೇಜ್ ಅವ್ಯವಸ್ಥೆಯಿಂದಾಗಿ ಪ್ರದೇಶವಿಡೀ ದುರ್ನಾತ ಬೀರುತ್ತಿದೆ. ಮುರುಗನ್ ಸಾವಿಗೆ ಕಾರಣರಾದ ಅಧಿಕಾರಿಗಳು ಹಾಗೂ ಧಕ್ಕೆ ನಿರ್ವಹಣೆಯನ್ನು ವಹಿಸುತ್ತಿರುವ ಗುತ್ತಿಗೆದಾರರ ವಿರುದ್ದ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕೆಂದು ಆಗ್ರಹಿಸಿದ ಅವರು ಜಿಲ್ಲಾಡಳಿತವು ಮುರುಗನ್ ಕುಟುಂಬಕ್ಕೆ ಒಂದು ವಾರದ ಒಳಗಾಗಿ 25ಲಕ್ಷ ಘೋಷಣೆ ಮಾಡಬೇಕು .ಅದು ಅಸಾಧ್ಯವಾದರೆ ಮೀನುಗಾರಿಕಾ ಇಲಾಖೆಯ ಜಂಟಿ ನಿರ್ದೇಶಕರ ಕಚೇರಿಗೆ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಸಿದರು. ಸಿಐಟಿಯು ಜಿಲ್ಲಾ ನಾಯಕರಾದ ಯೋಗೀಶ್ ಜಪ್ಪಿನಮೊಗರು ಹಾಗೂ ಡಿವೈಎಫ್ಐ ಜಿಲ್ಲಾ ಮುಖಂಡರಾದ ಸಂತೋಷ್ ಬಜಾಲ್ ರವರು ಮಾತನಾಡಿ,ಘಟನೆಯ ಗಂಭೀರತೆಯನ್ನು ಎಳೆಎಳೆಯಾಗಿ ವಿವರಿಸುತ್ತಾ,ಸ್ಥಳೀಯ ಸಂಸದರು, ಶಾಸಕರು ಸೇರಿದಂತೆ ಎಲ್ಲಾ ಜನಪ್ರತಿನಿಧಿಗಳ ನಿರ್ಲಕ್ಷ್ಯತೆಯನ್ನು ಖಂಡಿಸಿದರು. ಪ್ರತಿಭಟನೆಯಲ್ಲಿ ಸಿಐಟಿಯು ಜಿಲ್ಲಾ ನಾಯಕರಾದ ರವಿಚಂದ್ರ ಕೊಂಚಾಡಿ,ನಾಗೇಶ್ ಕೊಟ್ಯಾನ್, ಡಿವೈಎಫ್ಐ ಜಿಲ್ಲಾ ನಾಯಕರಾದ ಮನೋಜ್ ವಾಮಂಜೂರು, ನವೀನ್ ಕೊಂಚಾಡಿ,ತಯ್ಯುಬ್ ಬೆಂಗರೆ, ರಿಝ್ವಾನ್ ಹರೇಕಳ, ಜಗದೀಶ್ ಕುಲಾಲ್,ಸಾಧಿಕ್ ಮುಲ್ಕಿ, ಹನೀಫ್ ಬೆಂಗ್ರೆ, ಪಿ.ಜಿ ರಫೀಕ್, ಅಬ್ದುಲ್ ರಫೀಕ್ ಬೆಂಗ್ರೆ, ಬಿಲಾಲ್ ಬೆಂಗ್ರೆ, ಮುವಾಜ್ ಬೆಂಗ್ರೆ, ಅಶ್ರಫ್ ಹರೇಕಳ, ಜನವಾದಿ ಮಹಿಳಾ ಸಂಘಟನೆಯ ಪ್ರಮುಖರಾದ ಅಸುಂತ ಡಿಸೋಜಾ, ಯೋಗೀತಾ ಸುವರ್ಣ, ಹಸಿ ಮೀನು ಕಾರ್ಮಿಕರ ಸಂಘದ ಮುಖಂಡರಾದ ಆಸಿಫ್, ಇಕ್ಬಾಲ್, ಆಶ್ರಫ್, ರಫೀಕ್, ಅಝೀಝ್, ಶಫಿಕ್ ರೆಹಮಾನ್, ಸ್ಥಳೀಯ ಕಾರ್ಮಿಕ ಮುಖಂಡರಾದ ಮುಝಮ್ಮಿಲ್ ಕುಪ್ಪೆಟ್ಟು, ಮೂರ್ತಿ, ವೇಕಟೇಶ್ ಮುಂತಾದವರು ಉಪಸ್ಥಿತರಿದ್ದರು.
ಮಂಗಳೂರು| ಪಾರ್ಟ್ ಟೈಮ್ ಉದ್ಯೋಗದ ಹೆಸರಿನಲ್ಲಿ ವಿದ್ಯಾರ್ಥಿನಿಗೆ ವಂಚನೆ ಆರೋಪ: ಪ್ರಕರಣ ದಾಖಲು
ಮಂಗಳೂರು, ಫೆ.28: ಪಾರ್ಟ್ ಟೈಮ್ ಉದ್ಯೋಗದ ಹೆಸರಿನಲ್ಲಿ ವಿದ್ಯಾರ್ಥಿಗಳನ್ನು ವಂಚಿಸಿದ ಆರೋಪದಡಿ ಕುದ್ರೋಳಿಯಲ್ಲಿ ಕಾರ್ಯಾಚರಿಸುತ್ತಿರುವ ವೆಕ್ಸಾನ್ ಕಂಪೆನಿ ವಿರುದ್ಧ ಕದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವಿದ್ಯಾರ್ಥಿನಿಯೊಬ್ಬಳು ನೀಡಿದ ದೂರಿನಂತೆ ವೆಕ್ಸಾನ್ ಕಂಪೆನಿಯ ಸಂಸ್ಥಾಪಕ ದಿಗ್ವಿಜಯ್ ದೇಸಾಯಿ, ಸಹ ಸಂಸ್ಥಾಪಕರಾದ ರಾಮಚಂದ್ರ ಶೆವಾಲೆ, ಸುನಿಲ್ ಸಾವಂತ್, ಅನನ್ ಅಹೈರ್, ಮಂಗಳೂರಿನ ಶಾಖೆಯ ನೌಕರರಾದ ಪಲ್ಲವಿ, ಅಂಜಲಿ, ನವ್ಯ, ನಿವಿಶ್, ಜಯಶ್ರೀ, ಜುನೈದ್ ಎಂಬವರ ವಿರುದ್ಧ ಪ್ರಕರಣ ದಾಖಲಾಗಿದೆ. ವಿದ್ಯಾರ್ಥಿಗಳು ಹಾಗೂ ಇತರ ಉದ್ಯೋಗಾಂಕ್ಷಿಗಳಿಗೆ ಸುಳ್ಳು ಮಾಹಿತಿ ನೀಡಿ, ನಂಬಿಕೆ ದ್ರೋಹವನ್ನೆಸಗಿ ಮೋಸ ಮಾಡಿರುವುದಾಗಿ ಪ್ರಕರಣದಲ್ಲಿ ಉಲ್ಲೇಖಿಸಲಾಗಿದೆ. ದೂರುದಾರೆ ವಿದ್ಯಾರ್ಥಿನಿಯನ್ನು ಜನವರಿಯಲ್ಲಿ ನವ್ಯಾ ಎಂಬಾಕೆ ತಾನು ವೆಕ್ಸಾನ್ ಕಂಪೆನಿಯ ಉದ್ಯೋಗಿ ಎಂದು ಪರಿಚಯಿಸಿಕೊಂಡು ಮಧ್ಯಾಹ್ನ 2 ರಿಂದ 5 ಗಂಟೆಯವರೆಗೆ ಪಾರ್ಟ್ ಟೈಮ್ ಕೆಲಸ ಮಾಡಿ ತಿಂಗಳಿಗೆ 15,000 ರೂ. ನಿಂದ 30,000 ರೂ. ಗಳಿಸಬಹುದು. ಸಾಫ್ಟ್ ವೇರ್, ಡೇಟಾ ಎಂಟ್ರಿ ಕೆಲಸ, ತರಬೇತಿ ಸಮಯದಲ್ಲಿ ಉಳಿದುಕೊಳ್ಳಲು ಮತ್ತು ಆಹಾರಕ್ಕಾಗಿ ಶುಲ್ಕವಾಗಿ 2,500 ರೂ. ಭರಿಸಬೇಕು ಎಂದು ತಿಳಿಸಿದ್ದಳು ಎಂದು ಆರೋಪಿಸಲಾಗಿದೆ. ಅದಕ್ಕೆ ಒಪ್ಪಿಕೊಂಡು 2,500 ರೂ. ಪಾವತಿಸಿ, ಸಂಸ್ಥೆಯಲ್ಲಿ ಇತರ ಉದ್ಯೋಗಾಕಾಂಕ್ಷಿಗಳೊಂದಿಗೆ ತರಬೇತಿ ಪಡೆದಿದ್ದು, ಈ ವೇಳೆ ಬುಸಿನೆಸ್ ಮಾಡಬೇಕು, 51 ಸಾವಿರ ರೂ. ಮೌಲ್ಯದ ವಿವಿಧ ಕಂಪೆನಿಗಳ ಸೊತ್ತು ಖರೀದಿ ಮಾಡಬೇಕು ಮತ್ತು ಇತರರನ್ನು ಸಂಸ್ಥೆಗೆ ಸೇರಿಸಬೇಕು. ಅವರು ಕೂಡಾ ಸೊತ್ತು ಖರೀದಿಸಿದರೆ ಕಮಿಷನ್ ದೊರೆಯುತ್ತದೆ ಎಂದು ತಿಳಿಸಿದ್ದಾರೆ. ಅದರಂತೆ ನಿವೇಶ್ ಎನ್ನುವ ವ್ಯಕ್ತಿಯ ಗೂಗಲ್ ಪೇ ನಂಬರ್ ಗೆ 51 ಸಾವಿರ ರೂ. ಪಾವತಿಸಿದ್ದು, ಆದರೆ ಸಂಸ್ಥೆ ಕೊಟ್ಟಿರುವ ವಸ್ತುಗಳು ಗುಣಮಟ್ಟ ಇಲ್ಲದ್ದಾಗಿತ್ತು. ಮಾತ್ರವಲ್ಲದೆ ಸಾಫ್ಟ್ ವೇರ್, ಡೇಟಾ ಎಂಟ್ರಿ ಕೆಲಸವೆಂದು ನಂಬಿಸಿ, ಬಳಿಕ ಇತರರನ್ನು ಕಂಪೆನಿಗೆ ಸೇರಿಸುವಂತೆ ಮಾನಸಿಕವಾಗಿ ಒತ್ತಡ ಹಾಕಿ, ಅವರು ಹೇಳಿದಂತೆ ನಡೆದುಕೊಳ್ಳುವ ರೀತಿಯಲ್ಲಿ ಬ್ರೈನ್ ವಾಶ್ ಮಾಡಿದ್ದಾರೆ. ಒತ್ತಾಯ ಪೂರ್ವಕವಾಗಿ ಅವರು ಹೇಳಿದ ದಾಖಲಾತಿಗಳಿಗೆ ಸಹಿ ಮಾಡಿಸಿಕೊಂಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಕಲಬುರಗಿ | ಶರಣಬಸವೇಶ್ವರ ಕಾಲೇಜಿನಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆ
ಕಲಬುರಗಿ: ನಗರದ ಶರಣಬಸವೇಶ್ವರ ವಿಜ್ಞಾನ ಮಹಾ ವಿದ್ಯಾಲಯದಲ್ಲಿ ಶನಿವಾರ ರಾಷ್ಟ್ರೀಯ ವಿಜ್ಞಾನ ದಿನಾಚರಣೆಯ ಅಂಗವಾಗಿ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಜಿಲ್ಲಾ ವಿಜ್ಞಾನ ಕೇಂದ್ರದ ನಿವೃತ್ತ ವೈಜ್ಞಾನಿಕ ಅಧಿಕಾರಿ ಲಕ್ಷ್ಮಿ ನಾರಾಯಣ್ ಹೆಬ್ಬಾರ್ ಮುಖ್ಯ ಅತಿಥಿಯಾಗಿ ಭಾಗವಹಿಸಿ, 1928ರಲ್ಲಿ ಸಿ.ವಿ.ರಾಮನ್ ಅವರು ರಾಮನ್ ಪರಿಣಾಮವನ್ನು ಆವಿಷ್ಕರಿಸಿದ ಗೌರವಾರ್ಥವಾಗಿ ಪ್ರತಿವರ್ಷ ಫೆ.28ರಂದು ರಾಷ್ಟ್ರೀಯ ವಿಜ್ಞಾನ ದಿನವನ್ನು ಆಚರಿಸಲಾಗುತ್ತದೆ ಎಂದು ಅವರು ತಿಳಿಸಿದರು. ಐತಿಹಾಸಿಕ ಆವಿಷ್ಕಾರಗಳಿಂದ ಆಧುನಿಕ ತಂತ್ರಜ್ಞಾನವರೆಗೆ ಜೀವನವನ್ನು ಪರಿವರ್ತಿಸುವಲ್ಲಿ ವೈಜ್ಞಾನಿಕ ನಾವೀನ್ಯತೆಯ ಮಹತ್ವವನ್ನು ಅವರು ವಿವರಿಸಿದರು. 2026ರ ರಾಷ್ಟ್ರೀಯ ವಿಜ್ಞಾನ ದಿನದ ಧ್ಯೇಯವಾಕ್ಯ “ವಿಜ್ಞಾನದಲ್ಲಿ ಮಹಿಳೆಯರು: ವಿಕ್ಷಿತ ಭಾರತವನ್ನು ವೇಗಗೊಳಿಸುವುದು” ಎಂಬುದಾಗಿದೆ ಎಂದು ಸಹಾಯಕ ಪ್ರಾಧ್ಯಾಪಕಿ ಡಾ.ಶಿಲ್ಪಾ ಭಂಡಾರಿ ತಿಳಿಸಿದರು. ಪ್ರಾಂಶುಪಾಲರಾದ ರಾಮಕೃಷ್ಣ ಬಿ.ರೆಡ್ಡಿ ಮಾತನಾಡಿ, ಸಿ.ವಿ.ರಾಮನ್ ಅವರ ರಾಮನ್ ಪರಿಣಾಮದ ಆವಿಷ್ಕಾರದ ಗೌರವಾರ್ಥವಾಗಿ ಆಚರಿಸುವ ಈ ದಿನವು ವಿದ್ಯಾರ್ಥಿಗಳು ಮತ್ತು ಶಿಕ್ಷಕರಲ್ಲಿ ವೈಜ್ಞಾನಿಕ ಕುತೂಹಲ, ನಾವೀನ್ಯತೆ ಹಾಗೂ ಸಂಶೋಧನಾ ಮನೋಭಾವ ಬೆಳೆಸಬೇಕು ಎಂದು ಹೇಳಿದರು. ಈ ಅಂಗವಾಗಿ ವಿದ್ಯಾರ್ಥಿಗಳಿಗಾಗಿ “ಕ್ವಾಂಟಮ್ ಸೈನ್ಸ್ ಅಂಡ್ ಟೆಕ್ನಾಲಜಿ” ವಿಷಯದ ಕುರಿತು ಅಂತರ್ ಮಹಾವಿದ್ಯಾಲಯ ಪ್ರಬಂಧ, ಭಾಷಣ ಮತ್ತು ರಸಪ್ರಶ್ನೆ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ನಗರದ ವಿವಿಧ ಮಹಾವಿದ್ಯಾಲಯಗಳಿಂದ ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿದರು. ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ಮತ್ತು ನಗದು ಬಹುಮಾನಗಳನ್ನು ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಭೌತಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ಓಂ ಪ್ರಕಾಶ್ ಎಸ್., ಡಾ. ಬಾಲಾಜಿ ಬಿರಾದಾರ್, ಗುರುಪ್ರಸಾದ್ ಬಿರಾದಾರ್ ಸೇರಿದಂತೆ ವಿವಿಧ ವಿಭಾಗಗಳ ಮುಖ್ಯಸ್ಥರು, ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಕಲಬುರಗಿ | ಉಸ್ತುವಾರಿ ಸಚಿವರ ಕಚೇರಿ ಎದುರು ರೈತರ ಪ್ರತಿಭಟನೆ
ಕಲಬುರಗಿ: ರೈತರ ಬೆಳೆ ವಿಮೆ ಹಣ ಬಿಡುಗಡೆ, ಅತಿವೃಷ್ಟಿ ಪರಿಹಾರ ಮತ್ತು ಪ್ರತಿ ಕ್ವಿಂಟಲ್ ತೊಗರಿಗೆ 12 ಸಾವಿರ ರೂ. ಬೆಂಬಲ ಬೆಲೆ ನಿಗದಿಗೆ ಆಗ್ರಹಿಸಿ ಕರ್ನಾಟಕ ಪ್ರಾಂತ ರೈತ ಸಂಘದ ಕಾರ್ಯಕರ್ತರು ಶುಕ್ರವಾರ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಆಗಸ್ಟ್-ಸೆಪ್ಟೆಂಬರ್ ತಿಂಗಳಲ್ಲಿ ಸುರಿದ ಅತಿವೃಷ್ಟಿಯಿಂದ ಲಕ್ಷಾಂತರ ಎಕರೆ ಬೆಳೆಗಳು ನೀರುಪಾಲಾಗಿದ್ದು, ಅತಿವೃಷ್ಟಿ ಪರಿಹಾರ ಬಿಡುಗಡೆಯಾಗಿದೆ. ಆದರೆ, ಬೆಳೆ ವಿಮೆ ಮಾಡಿಸಿದ ರೈತರಿಗೆ ವಿಮೆ ಪರಿಹಾರ ತಕ್ಷಣಕ್ಕೆ ಬಿಡುಗಡೆಗೊಳಿಸಬೇಕು. ಸಾಲಬಾಧೆ ತಾಳಲಾರದೆ ರೈತರ ಆತ್ಮಹತ್ಯೆ ಪ್ರಕರಣಗಳು ಬೆಳೆಕಿಗೆ ಬರುತ್ತಲೇ ಇವೆ. ರೈತರ ಪರಿಹಾರದ ಅರ್ಜಿಗಳು ಕುಂಟು ನೆಪ ಹೇಳಿ ರದ್ದುಪಡಿಸಿರುವುದು ಮತ್ತೊಮ್ಮೆ ಅರ್ಜಿ ಸ್ವೀಕರಿಸಬೇಕು. ಜಿಲ್ಲೆಯಲ್ಲಿ ಒಟ್ಟು 3 ಲಕ್ಷಗಿಂತ ಹೆಚ್ಚಿನ ರೈತರು ವಿಮೆ ಪಾವತಿಸಿದ್ದು, 99 ಕೋಟಿ ರೂಪಾಯಿ ವಿಮೆ ಹಣ ಸಂಗ್ರಹವಾಗಿದೆ. ಜಿಲ್ಲೆಯ ಒಟ್ಟು 3,78,990 ಹೆಕ್ಟೇರ್ ಬೆಳೆ ವಿಮೆಗೊಳಪಟ್ಟಿದ್ದು, ವಿಳಂಬ ಮಾಡದೆ ಬೆಳೆ ವಿಮೆ ಪರಿಹಾರ ಬಿಡುಗಡೆಗೊಳಿಸಬೇಕು ಎಂದು ಆಗ್ರಹಿಸಿದರು. ಪ್ರತಿಭಟನೆಯಲ್ಲಿ ಪ್ರಮುಖರಾದ ಎಂ.ಬಿ. ಸಜ್ಜನ್, ಶರಣಬಸಪ್ಪ ಮಮ್ಮಶೆಟ್ಟಿ, ದಿಲೀಪ ಮತ್ತಿತರರಿದ್ದರು.
ಅಫಜಲಪುರ | ವಸ್ತು ಪ್ರದರ್ಶನದಲ್ಲಿ ಸರಸ್ವತಿ ಶಾಲೆಗೆ ಪ್ರಶಸ್ತಿ
ಅಫಜಲಪುರ: ತಾಲೂಕಿನ ಘತ್ತರಗಾ ಗ್ರಾಮದಲ್ಲಿ ಹವಳಗಾ ಶ್ರೀ ರೇಣುಕಾ ಫೌಂಡೇಶನ್ ಶಿಕ್ಷಣ ಸಂಸ್ಥೆ ವತಿಯಿಂದ ಆಯೋಜಿಸಲಾದ ಶಾಲಾ ವಸ್ತು ಪ್ರದರ್ಶನ ಸ್ಪರ್ಧೆ ವಿಜೃಂಭಣೆಯಿಂದ ನಡೆಯಿತು. ವಿವಿಧ ಶಾಲೆಗಳ ವಿದ್ಯಾರ್ಥಿಗಳು ಭಾಗವಹಿಸಿ ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಿದರು. ತಾಲೂಕಿನ ದೇಸಾಯಿ ಕಲ್ಲೂರ ಗ್ರಾಮದ ಸರಸ್ವತಿ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳು ವಸ್ತು ಪ್ರದರ್ಶನದಲ್ಲಿ ಪಾಲ್ಗೊಂಡು ತಮ್ಮ ಸೃಜನಶೀಲತೆ ಹಾಗೂ ವೈಜ್ಞಾನಿಕ ಮನೋಭಾವವನ್ನು ಪ್ರತಿಬಿಂಬಿಸುವ ವಿವಿಧ ಮಾದರಿ ವಸ್ತುಗಳನ್ನು ಪ್ರದರ್ಶಿಸಿದರು. ವಿದ್ಯಾರ್ಥಿಗಳ ಪ್ರಸ್ತುತಿಗಳು ಪ್ರೇಕ್ಷಕರ ಹಾಗೂ ನಿರ್ಣಾಯಕರ ಮೆಚ್ಚುಗೆಗೆ ಪಾತ್ರವಾದವು. 8ನೇ ತರಗತಿಯ ವಿದ್ಯಾರ್ಥಿಗಳಾದ ಆಲಿಯಾ ಪೈಗಂಬರ್ ಮಕಂದಾರ ಹಾಗೂ ಗೌರಿಶಂಕರ ಸುನೀಲ ದೇಸಾಯಿ ಅವರು ಅತ್ಯುತ್ತಮವಾಗಿ ಪ್ರದರ್ಶನ ನೀಡಿ ತೃತೀಯ ಸ್ಥಾನವನ್ನು ಪಡೆದು ಶಾಲೆಗೆ ಕೀರ್ತಿ ತಂದಿದ್ದಾರೆ. ವಿಜೇತ ವಿದ್ಯಾರ್ಥಿಗಳಿಗೆ ಟ್ರೋಫಿ, 1000 ರೂ. ನಗದು ಬಹುಮಾನ ಹಾಗೂ ಪ್ರಮಾಣಪತ್ರಗಳನ್ನು ನೀಡಿ ಗೌರವಿಸಲಾಯಿತು. ವಿದ್ಯಾರ್ಥಿಗಳ ಸಾಧನೆಗೆ ಘತ್ತರಗಾ ಕ್ಲಸ್ಟರಿನ ಸಂಪನ್ಮೂಲ ಅಧಿಕಾರಿಯಾದ ಸಿದ್ದಪ್ಪ ಬಿರಾದಾರ, ಶಾಲೆಯ ಆಡಳಿತ ಮಂಡಳಿ ಅಧ್ಯಕ್ಷರು, ಮುಖ್ಯಗುರುಗಳು ಹಾಗೂ ಶಿಕ್ಷಕ ಸಿಬ್ಬಂದಿ ಹರ್ಷ ವ್ಯಕ್ತಪಡಿಸಿ ಅಭಿನಂದನೆ ಸಲ್ಲಿಸಿದರು.
ಶಂಕರಾಚಾರ್ಯ ಅವಿಮುಕ್ತೇಶ್ವರಾನಂದ ಸರಸ್ವತಿಗೆ ಬಂಧನದಿಂದ ಮಧ್ಯಂತರ ರಕ್ಷಣೆ
ಹೊಸದಿಲ್ಲಿ: ಪೋಕ್ಸೊ ಕಾಯ್ದೆ ಅಡಿಯಲ್ಲಿ ದಾಖಲಾದ ಪ್ರಕರಣದಲ್ಲಿ ಜ್ಯೋತಿರ್ಮಠದ 46ನೇ ಶಂಕರಾಚಾರ್ಯರಾಗಿರುವ ಅವಿಮುಕ್ತೇಶ್ವರಾನಂದ ಸರಸ್ವತಿ ಅವರಿಗೆ ಅಲಹಬಾದ್ ಉಚ್ಚ ನ್ಯಾಯಾಲಯ ಶುಕ್ರವಾರ ಬಂಧನದಿಂದ ಮಧ್ಯಂತರ ರಕ್ಷಣೆ ನೀಡಿದೆ. ನ್ಯಾಯಮೂರ್ತಿ ಜಿತೇಂದ್ರ ಕುಮಾರ್ ಸಿನ್ಹಾ ಅವರು ಸರಸ್ವತಿ ಅವರ ಅನುಯಾಯಿಯಾಗಿರುವ ಮುಕುಂದಾನಂದ ಗಿರಿ ಅವರಿಗೆ ಕೂಡ ಬಂಧನದಿಂದ ಮಧ್ಯಂತರ ರಕ್ಷಣೆ ನೀಡಿದ್ದಾರೆ. ಆರೋಪದ ಕುರಿತಂತೆ ತನಿಖೆ ಮುಂದುವರಿಯಲಿದೆ ಎಂದು ನ್ಯಾಯಮೂರ್ತಿಗಳು ತಿಳಿಸಿದ್ದಾರೆ. ಜ್ಯೋತಿರ್ಮಠದ ಮುಖ್ಯಸ್ಥರಾಗಿರುವ ಸರಸ್ವತಿ ಅವರು ಪ್ರಯಾಗ್ರಾಜ್ನ ಶಿಬಿರದಲ್ಲಿ ಇಬ್ಬರು ಅಪ್ರಾಪ್ತ ವಯಸ್ಸಿನ ಬಾಲಕರಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂಬ ಆರೋಪಗಳಿಗೆ ಈ ಪ್ರಕರಣ ಸಂಬಂಧಿಸಿದೆ.
ಕಲಬುರಗಿ | ಜಾತಿ ಸಮೀಕ್ಷೆಯಲ್ಲಿ ‘ಬಂಜಾರ’ ನಮೂದಿಸಲು ಡಾ.ಉಮೇಶ್ ಜಾಧವ್ ಕರೆ
ದೆಹಲಿಯಲ್ಲಿ ಸಂಭ್ರಮದ ಸಂತ ಸೇವಾಲಾಲ್ ಜಯಂತಿ ಆಚರಣೆ
ಪದವಿನಂಗಡಿ: ಜೀಪು ಢಿಕ್ಕಿ; ಸ್ಕೂಟರ್ ಸವಾರ ಮೃತ್ಯು
ಮಂಗಳೂರು, ಫೆ.28: ವಿಮಾನ ನಿಲ್ದಾಣ ರಸ್ತೆಯ ಪದವಿನಂಗಡಿ ಕೊರಗಜ್ಜನ ಕಟ್ಟೆಯ ಸಮೀಪ ಶನಿವಾರ ಮಧ್ಯಾಹ್ನ ಬೊಂದೇಲ್ ಕಡೆಗೆ ಸಾಗುತ್ತಿದ್ದ ಜೀಪೊಂದು ಸ್ಕೂಟರ್ ಗೆ ಢಿಕ್ಕಿ ಹೊಡೆದ ಪರಿಣಾಮ ಸ್ಕೂಟರ್ ಸವಾರ ಗಂಭೀರ ಗಾಯಗೊಂಡು ಮೃತಪಟ್ಟಿರುವ ಘಟನೆ ವರದಿಯಾಗಿದೆ. ಕುಪ್ಪೆಪದವು ನಿವಾಸಿ ಇಮ್ತಿಯಾಝ್ ಹಸೇನ್ (45) ಮೃತಪಟ್ಟವರು. ಇಮ್ತಿಯಾಝ್ ಹಸೇನ್ ಆನ್ ಲೈನ್ ಡೆಲಿವರಿ ಕೆಲಸ ಮಾಡುತ್ತಿದ್ದರು. ಘಟನೆಯಲ್ಲಿ ಸ್ಕೂಟರ್ ಸಂಪೂರ್ಣ ಜಖಂಗೊಂಡಿದೆ. ಘಟನೆಯ ದೃಶ್ಯ ಪಕ್ಕದ ಅಂಗಡಿಯೊಂದರ ಸಿಸಿ ಕೆಮರಾದಲ್ಲಿ ಸೆರೆಯಾಗಿದೆ. ಮಂಗಳೂರು ಉತ್ತರ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ದುಬೈ: ದುಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣವು 700ಕ್ಕೂ ಹೆಚ್ಚು ಒಳಬರುವ ಮತ್ತು ಹೊರ ಹೋಗುವ ವಿಮಾನಗಳನ್ನು ರದ್ದುಗೊಳಿಸಿರುವುದಾಗಿ ಎಎಫ್ಪಿ ವರದಿ ಮಾಡಿದೆ. ಪರಿಸ್ಥಿತಿ ತ್ವರಿತವಾಗಿ ಬದಲಾಗುತ್ತಿದೆ ಮತ್ತು ವಿಮಾನ ನಿಲ್ದಾಣಕ್ಕೆ ತೆರಳುವ ಮೊದಲು ಆನ್ಲೈನ್ನಲ್ಲಿ ಪರಿಶೀಲಿಸುವಂತೆ ವಿಮಾನಯಾನ ಸಂಸ್ಥೆಗಳು ಪ್ರಯಾಣಿಕರನ್ನು ಒತ್ತಾಯಿಸಿವೆ.
T20 World Cup 2026: ಕೊನೆಗೂ ಟೀಂ ಇಂಡಿಯಾ ವಿರಾಟ್ ಕೊಹ್ಲಿ ದಾಖಲೆ ಚೇಸ್ ಮಾಡಿದ ಪಾಕಿಸ್ತಾನದ ಫರ್ಹಾನ್
T20 World Cup 2026: ಪಾಕಿಸ್ತಾನದ ಆರಂಭಿಕ ಬ್ಯಾಟ್ಸ್ಮನ್ ಸಾಹಿಬ್ಜಾದಾ ಫರ್ಹಾನ್ ಅವರು ಟಿ20 ವಿಶ್ವಕಪ್ನ ಒಂದೇ ಆವೃತ್ತಿಯಲ್ಲಿ ಅತಿ ಹೆಚ್ಚು ರನ್ ಬಾರಿಸಿ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಅವರು ಟೀಂ ಇಂಡಿಯಾ ಚೇಸ್ ಮಾಸ್ಟರ್ ಅಂತಲೇ ಹೆಸರು ಗಳಿಸಿರುವ ವಿರಾಟ್ ಕೊಹ್ಲಿ ಅವರ ದೀರ್ಘಕಾಲದ ದಾಖಲೆಯನ್ನು ಮುರಿದು ಗಮನ ಸೆಳೆದಿದ್ದಾರೆ. ಪಲ್ಲೆಕೆಲೆ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ
ಇರಾನ್ನ ಸಾರ್ವಭೌಮತ್ವವನ್ನು ಗೌರವಿಸಬೇಕು: ಚೀನಾ
ಬೀಜಿಂಗ್: ಮಧ್ಯಪ್ರಾಚ್ಯದಲ್ಲಿನ ಬೆಳವಣಿಗೆಗಳ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿರುವ ಚೀನಾ, ತಕ್ಷಣ ಕದನ ವಿರಾಮಕ್ಕೆ ಆಗ್ರಹಿಸಿದೆ. ಇರಾನ್ನ ರಾಷ್ಟ್ರೀಯ ಸಾರ್ವಭೌಮತ್ವ, ಭದ್ರತೆ ಮತ್ತು ಪ್ರಾದೇಶಿಕ ಸಮಗ್ರತೆಯನ್ನು ಗೌರವಿಸಬೇಕು. ಪರಿಸ್ಥಿತಿ ಇನ್ನಷ್ಟು ಉಲ್ಬಣಿಸದಂತೆ ಸಂಯಮ ವಹಿಸಬೇಕು ಮತ್ತು ತಕ್ಷಣ ಮಾತುಕತೆಯನ್ನು ಪುನರಾರಂಭಿಸಬೇಕು ಎಂದು ಚೀನಾದ ವಿದೇಶಾಂಗ ಇಲಾಖೆ ಒತ್ತಾಯಿಸಿದೆ.
ಲಕ್ನೊ: “ಈ ರಸ್ತೆ ಮುಸ್ಲಿಮರಿಗಲ್ಲ” ಎಂದು ದಿಲ್ಲಿ-ಡೆಹ್ರಾಡೂನ್ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 72ಎಯಲ್ಲಿನ ಗೋಡೆಯೊಂದರ ಮೇಲೆ ದ್ವೇಷಪೂರಿತ ಗೋಡೆ ಬರಹ ಬರೆದಿದ್ದ ಆರೋಪದ ಮೇಲೆ ಸಂಘ ಪರಿವಾರದ ಸಂಘಟನೆಯೊಂದರ ವಿರುದ್ಧ ಉತ್ತರ ಪ್ರದೇಶದ ಸಹರಣ್ಪುರ್ ಜಿಲ್ಲೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. “ಹೆದ್ದಾರಿಯಲ್ಲಿ ‘ಈ ರಸ್ತೆ ಮುಸ್ಲಿಮರಿಗಲ್ಲ’ ಎಂದು ಹಿಂದಿಯಲ್ಲಿ ಗೋಡೆ ಬರಹ ಬರೆಯಲಾಗಿತ್ತು. ಈ ಕುರಿತು ಶುಕ್ರವಾರ ಪೊಲೀಸರಿಗೆ ಮಾಹಿತಿ ದೊರೆಯಿತು. ಬಳಿಕ ಈ ಗೋಡೆ ಬರಹವನ್ನು ತೆರವುಗೊಳಿಸಲಾಯಿತು” ಎಂದು ಪೊಲೀಸರು ತಿಳಿಸಿದ್ದಾರೆ. ಮಹಿಳೆಯೊಬ್ಬರು ಹೆದ್ದಾರಿಯ ಎತ್ತರಿಸಿದ ರೈಲಿಂಗ್ ಮೇಲೆ ಸ್ಪ್ರೇ ಪೇಂಟ್ ಬಳಸಿ ಈ ಘೋಷಣೆಯನ್ನು ಬರೆಯುತ್ತಿರುವ ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. Illegal fringe group goons wrote on a highway that “this road is not for Muslims.” All this is happening in Ghaziabad, in BJP ruled Uttar Pradesh. This is the result of the hate being unleashed by the BJP against minorities in the country. Is the world not watching this? Is… pic.twitter.com/eG7t7tTwpM — Saral Patel (@SaralPatel) February 27, 2026 ಈ ವೀಡಿಯೊದಲ್ಲಿ ಉತ್ತರಾಖಂಡ ಸಂಖ್ಯಾಫಲಕ ಹೊಂದಿರುವ ವಾಹನ ಕೂಡ ಕಂಡು ಬಂದಿದೆ. ಮಹಿಳೆ ಸೇರಿದಂತೆ ಕೆಲವರು ‘ಜೈ ಶ್ರೀರಾಂ’ ಘೋಷಣೆ ಕೂಗುತ್ತಿರುವುದೂ ವೀಡಿಯೊದಲ್ಲಿ ಸೆರೆಯಾಗಿದೆ. ಹಿಂದೂ ರಕ್ಷಾ ದಳ ಎಂಬ ಹಿಂದೂ ಬಲಪಂಥೀಯ ಸಂಘಟನೆಯ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 353(2)ರ ಅಡಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ವೀಡಿಯೊದ ನೈಜತೆಯನ್ನು ಪರಿಶೀಲಿಸಲಾಗುತ್ತಿದೆ ಎಂದು ಸಹರಣ್ಪುರ್ ನ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈ ಪ್ರದೇಶದಲ್ಲಿ ಗಸ್ತು ಕಾರ್ಯಾಚರಣೆಯನ್ನು ತೀವ್ರಗೊಳಿಸಲಾಗಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಹೆಚ್ಚುವರಿ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. “ನಮ್ಮ ಸಂಘಟನೆಯ ಕಾರ್ಯಕರ್ತರು ಈ ಗೋಡೆ ಬರಹ ಬರೆದಿದ್ದಾರೆ” ಎಂದು ಘಾಝಿಯಾಬಾದ್ ಮೂಲದ ಹಿಂದೂ ರಕ್ಷಾ ದಳ ನಾಯಕ ಭೂಪೇಂದ್ರ ಚೌಧರಿ ದೃಢಪಡಿಸಿದ್ದಾರೆ. “ರಸ್ತೆಗಳು ಹಿಂದೂಗಳ ತೆರಿಗೆ ಹಣದಲ್ಲಿ ನಿರ್ಮಿಸಲ್ಪಟ್ಟಿವೆ. ಗೋಡೆ ಬರಹದಲ್ಲಿ ಏನು ಬರೆಯಲಾಗಿದೆಯೋ ಅದು ಸರಿಯಾಗಿದೆ” ಎಂದು ಅವರು ಸಾಮಾಜಿಕ ಮಾಧ್ಯಮ ಪೋಸ್ಟ್ ನಲ್ಲಿ ಈ ನಡವಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ.
ಮಂಗಳೂರು: ಮದನಿ ನಗರ ನಿವಾಸಿ ಎಂಎಂಕ್ಯೂ ಫಿಷರೀಸ್ ಮಾಲಕರಾದ ಮಮ್ಮಿಕುಂಞಿ ಹಾಜಿ (68) ಅಲ್ಪಕಾಲದ ಅಸೌಖ್ಯದಿಂದ ಶನಿವಾರ ಸಂಜೆ 4 ಗಂಟೆಯ ಸುಮಾರಿಗೆ ತನ್ನ ಮನೆಯಲ್ಲಿ ನಿಧನರಾದರು. ಸೀಫುಡ್ ಬೈಯರ್ಸ್ ಅಸೋಸಿಯೇಶನ್ ಇದರ ಸದಸ್ಯರಾಗಿರುವ ಮಮ್ಮಿ ಹಾಜಿ ಅವರು ಪತ್ನಿ, ಇಬ್ಬರು ಪುತ್ರರು ಹಾಗೂ ಓರ್ವ ಪುತ್ರಿ ಸಹಿತ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಬಿಹಾರ ಗಡಿ ಜಿಲ್ಲೆಗಳಲ್ಲಿ ಭದ್ರತಾ ವ್ಯವಸ್ಥೆ ಪರಾಮರ್ಶೆಗೆ ಉನ್ನತ ಮಟ್ಟದ ಸಭೆ: ಅಮಿತ್ ಶಾ
ಹೊಸದಿಲ್ಲಿ: ಬಿಹಾರದಲ್ಲಿನ ಭಾರತ-ನೇಪಾಳ ಗಡಿಗೆ ಹೊಂದಿಕೊಂಡಿರುವ ಜಿಲ್ಲೆಗಳ ಭದ್ರತಾ ಸಮಸ್ಯೆಗಳ ಪರಾಮರ್ಶೆಗೆ ಶುಕ್ರವಾರ ಕೇಂದ್ರ ಗೃಹ ಸಚಿವ ಅಮಿತ್ ಶಾ ನೇತೃತ್ವದಲ್ಲಿ ಉನ್ನತ ಮಟ್ಟದ ಸಭೆ ನಡೆಯಿತು. ಈ ವೇಳೆ ಗಡಿ ನಿರ್ವಹಣೆಯನ್ನು ಬಲಪಡಿಸಲು, ಒತ್ತುವರಿಯನ್ನು ತೆರವುಗೊಳಿಸಲು ಹಾಗೂ ಪ್ರಾಂತ್ಯದಲ್ಲಿ ಹಣಕಾಸು ನಿಗಾವಣೆಯನ್ನು ಬಲಿಷ್ಠಗೊಳಿಸಲು ನಿರ್ದೇಶನ ನೀಡಲಾಯಿತು. ಗಡಿ ಪ್ರದೇಶಗಳಲ್ಲಿ ಅಕ್ರಮ ನಿರ್ಮಾಣಗಳು, ಅಕ್ರಮ ವಲಸೆ, ನಕಲಿ ಭಾರತೀಯ ನೋಟುಗಳ ಚಲಾವಣೆ, ಯಾರೂ ಇಲ್ಲದ ಪ್ರದೇಶಗಳ ಒತ್ತುವರಿ ಹಾಗೂ ಅನಧಿಕೃತ ಹಣಕಾಸು ಹರಿವಿನ ಕುರಿತು ಚರ್ಚೆ ನಡೆಯಿತು. ಅಕ್ರಮ ನಿರ್ಮಾಣಗಳ ವಿರುದ್ಧ ಶೂನ್ಯ ಸಹಿಷ್ಣುತೆ ನೀತಿಯನ್ನು ಜಾರಿಗೊಳಿಸಬೇಕು, ವಿಶೇಷವಾಗಿ ಅರಣ್ಯ ಮತ್ತು ಯಾರೂ ಇಲ್ಲದ ಪ್ರದೇಶಗಳಲ್ಲಿ ಎಂದು ಅಮಿತ್ ಶಾ ಸೂಚಿಸಿದರು. ಇದೇ ವೇಳೆ ಆಡಳಿತಾತ್ಮಕ ಪರಿಶೀಲನಾ ಪ್ರಕ್ರಿಯೆಗಳನ್ನೂ ಚರ್ಚಿಸಲಾಯಿತು. ವಿಶೇಷ ತೀವ್ರ ಮತಪಟ್ಟಿ ಪರಿಷ್ಕರಣೆ ಮುಕ್ತಾಯಗೊಂಡ ಬಳಿಕ ವರದಿಯಾಗಿರುವ ಸಾವು ಪ್ರಕರಣಗಳ ಕುರಿತು ಸೂಕ್ತ ಪ್ರಕ್ರಿಯೆಯೊಂದಿಗೆ ಪರಿಶೀಲನೆ ನಡೆಯಲಿದೆ. ಪ್ರಕರಣಗಳು ದೃಢಪಟ್ಟ ಬಳಿಕ ಯುಐಡಿ ದಾಖಲೆಗಳು, ಚಾಲನಾ ಪರವಾನಗಿ, ಪ್ಯಾನ್ ದತ್ತಾಂಶ ಸೇರಿದಂತೆ ಅಧಿಕೃತ ದಾಖಲೆಗಳಲ್ಲಿ ಅಗತ್ಯ ತಿದ್ದುಪಡಿ ಕೈಗೊಳ್ಳಲಾಗುತ್ತದೆ. ವಲಸಿಗರು ಎಂದು ವರದಿಯಾಗಿರುವ, ಆದರೆ ಪರಿಶೀಲನೆಯ ವೇಳೆ ಗೈರಾಗಿರುವ ವ್ಯಕ್ತಿಗಳ ಮನೆಮನೆ ಸಮೀಕ್ಷೆ ನಡೆಸಲಾಗುತ್ತದೆ. ಯಾವುದೇ ನೈಜ ಮತದಾರರನ್ನು ತಪ್ಪಾಗಿ ಕೈಬಿಡದಂತೆ ಈ ಅಭಿಯಾನ ಖಾತರಿಗೊಳಿಸಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಜಿತ್ ಪವಾರ್ ವಿಮಾನ ಅಪಘಾತ ಪ್ರಕರಣ: ಮಧ್ಯಂತರ ವರದಿ ಸಲ್ಲಿಸಿದ AAIB
ಸಣ್ಣ ವಿಮಾನ ನಿಲ್ದಾಣಗಳಲ್ಲಿ ಕಾರ್ಯಾಚರಣೆಗೆ ಕಟ್ಟುನಿಟ್ಟಿನ ನಿಗಾವಣೆಗೆ ಸಲಹೆ
ಇರಾನ್ ನ ಮೇಲೆ ಅಮೆರಿಕ, ಇಸ್ರೇಲ್ ದಾಳಿ: ಸಂಘರ್ಷ ಶುರುವಾಗಿದ್ದು ಹೇಗೆ? ಭಾರತದ ಕಳವಳಗಳೇನು?
ಅಮೆರಿಕ ಮತ್ತು ಇಸ್ರೇಲ್ ಸೇರಿ ಶನಿವಾರ ಟೆಹ್ರಾನ್ ಸೇರಿದಂತೆ ಇರಾನ್ ನಾದ್ಯಂತ ಹಲವಾರು ಸ್ಥಳಗಳ ಮೇಲೆ ದಾಳಿ ನಡೆಸಿವೆ. ಇದನ್ನು ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ “ಪ್ರಮುಖ ಯುದ್ಧ ಕಾರ್ಯಾಚರಣೆಗಳು” ಎಂದು ಹೇಳಿದ್ದಾರೆ. ಈ ದಾಳಿಗಳು ಹತ್ತಿರದ ತೈಲ ಉತ್ಪಾದಕ ಗಲ್ಫ್ ಅರಬ್ ದೇಶಗಳನ್ನು ಆತಂಕಕ್ಕೆ ದೂಡಿದ್ದು, ಟೆಹ್ರಾನ್ ಇಸ್ರೇಲ್ ಕಡೆಗೆ ಕ್ಷಿಪಣಿಗಳನ್ನು ಹಾರಿಸುವ ಮೂಲಕ ಪ್ರತಿದಾಳಿ ನಡೆಸಿತು. ಇರಾನ್ ನ ಪರಮೋಚ್ಛ ನಾಯಕ ಆಯತುಲ್ಲಾ ಆಲಿ ಖಾಮಿನೈ ಮತ್ತು ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಅವರನ್ನು ಗುರಿಯಾಗಿಸಿಕೊಂಡು ಅಮೆರಿಕ–ಇಸ್ರೇಲ್ ದಾಳಿ ನಡೆಸಿದೆ ಎಂದು ಇಸ್ರೇಲ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಖಾಮಿನೈ ಟೆಹ್ರಾನ್ ನಲ್ಲಿ ಇಲ್ಲ; ಅವರನ್ನು ಸುರಕ್ಷಿತ ಸ್ಥಳಕ್ಕೆ ವರ್ಗಾಯಿಸಲಾಗಿದೆ ಎಂದು ಮೂಲವೊಂದು ತಿಳಿಸಿರುವುದಾಗಿ ರಾಯಿಟರ್ಸ್ ವರದಿ ಮಾಡಿದೆ. ಹಲವಾರು ಹಿರಿಯ ಗಾರ್ಡ್ ಕಮಾಂಡರ್ ಗಳು ಮತ್ತು ರಾಜಕೀಯ ಅಧಿಕಾರಿಗಳು ದಾಳಿಯಲ್ಲಿ ಸಾವನ್ನಪ್ಪಿದ್ದಾರೆ ಎಂದು ಇರಾನ್ ಮೂಲಗಳು ತಿಳಿಸಿವೆ. ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಖ್ಚಿ ಸುರಕ್ಷಿತವಾಗಿದ್ದಾರೆ ಎಂದು ಇರಾನ್ ಮಾಧ್ಯಮಗಳು ವರದಿ ಮಾಡಿವೆ. ಅಮೆರಿಕ ಮತ್ತು ಇಸ್ರೇಲ್ ಎಲ್ಲೆಲ್ಲಿ ದಾಳಿ ಮಾಡಿವೆ? ಶನಿವಾರ ಬೆಳಿಗ್ಗೆ ಇರಾನ್ ಮೇಲೆ ಕ್ಷಿಪಣಿ ದಾಳಿ ನಡೆಸಿರುವುದಾಗಿ ಇಸ್ರೇಲ್ ಮೊದಲು ಘೋಷಿಸಿತು. ನಂತರ ಅಮೆರಿಕದ ಅಧಿಕಾರಿಯೊಬ್ಬರು, ಇಸ್ರೇಲ್ ನ ದಾಳಿಗಳನ್ನು ಅಮೆರಿಕದೊಂದಿಗೆ ಜಂಟಿ ಮಿಲಿಟರಿ ಕಾರ್ಯಾಚರಣೆಯಾಗಿ ನಡೆಸಲಾಗಿದೆ ಎಂದು ಹೇಳಿರುವುದಾಗಿ al jazeera ವರದಿ ಮಾಡಿದೆ. ಕಳೆದ ಕೆಲವು ವಾರಗಳಲ್ಲಿ ಈ ಪ್ರದೇಶದಲ್ಲಿ ಯುದ್ಧ ವಿಮಾನಗಳು ಮತ್ತು ಯುದ್ಧನೌಕೆಗಳನ್ನು ಭಾರೀ ಸಂಖ್ಯೆಯಲ್ಲಿ ನಿಯೋಜಿಸಲಾಗಿತ್ತು. ಯೂನಿವರ್ಸಿಟಿ ಸ್ಟ್ರೀಟ್, ಟೆಹ್ರಾನ್ ನ ಜೋಮ್ಹೌರಿ ಪ್ರದೇಶ ಹಾಗೂ ಇರಾನ್ ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ ಪ್ರಧಾನ ಕಚೇರಿಯ ಬಳಿ ಕ್ಷಿಪಣಿ ದಾಳಿ ನಡೆದಿದೆ ಎಂದು ಫಾರ್ಸ್ ಸುದ್ದಿ ಸಂಸ್ಥೆ ವರದಿ ಮಾಡಿದೆ. ಇರಾನ್ ನ ರಾಜಧಾನಿಯಲ್ಲಿ ಖಾಮಿನೈ ಅವರ ಕಚೇರಿಗಳ ಬಳಿ ದಾಳಿ ನಡೆದಿದೆ ಎಂದು ಅಸೋಸಿಯೇಟೆಡ್ ಪ್ರೆಸ್ ಸುದ್ದಿ ಸಂಸ್ಥೆ ವರದಿ ಮಾಡಿದೆ. ಟೆಹ್ರಾನ್ ನ ಉತ್ತರ ಸಯ್ಯದ್ ಖಾಂದನ್ ಪ್ರದೇಶದಲ್ಲಿಯೂ ಸ್ಫೋಟಗಳು ಸಂಭವಿಸಿವೆ ಎಂದು ಇರಾನ್ ನ ತಸ್ನಿಮ್ ಸುದ್ದಿ ಸಂಸ್ಥೆ ವರದಿ ಮಾಡಿದೆ. ಸ್ಥಳೀಯ ಮಾಧ್ಯಮಗಳ ಪ್ರಕಾರ, ಕೆರ್ಮನ್ಶಾ, ಕೋಮ್, ತಬ್ರಿಜ್, ಇಸ್ಫಹಾನ್, ಇಲಾಮ್ ಮತ್ತು ಕರಾಜ್ ನಗರಗಳಲ್ಲಿ ಹಾಗೂ ಲೊರೆಸ್ತಾನ್ ಪ್ರಾಂತ್ಯದಲ್ಲಿಯೂ ಸ್ಫೋಟಗಳು ವರದಿಯಾಗಿವೆ. ಇರಾನ್ ನಲ್ಲಿ ಎರಡು ಶಾಲೆಗಳ ಮೇಲೆ ಇಸ್ರೇಲ್ ದಾಳಿ ನಡೆಸಿದ್ದು, 50ಕ್ಕೂ ಹೆಚ್ಚು ಮಕ್ಕಳು ಇಲ್ಲಿ ಸಾವಿಗೀಡಾಗಿದ್ದಾರೆ. ►ಡೊನಾಲ್ಡ್ ಟ್ರಂಪ್ ಹೇಳಿದ್ದೇನು? “ಪ್ರಮುಖ ಮಿಲಿಟರಿ ಕಾರ್ಯಾಚರಣೆ”ಯನ್ನು ಘೋಷಿಸುವಾಗ, ಇರಾನ್ ನ ಕ್ಷಿಪಣಿಗಳನ್ನು ನಾಶಮಾಡುವುದು ಮತ್ತು ಅವರ ಕ್ಷಿಪಣಿ ಉದ್ಯಮವನ್ನು ಸಂಪೂರ್ಣವಾಗಿ ನಿರ್ನಾಮ ಮಾಡುವುದು ಅಮೆರಿಕದ ಗುರಿಯಾಗಿದೆ ಎಂದು ಟ್ರಂಪ್ ಹೇಳಿದ್ದಾರೆ. ಅವರ ನೌಕಾಪಡೆಯನ್ನು ಸಂಪೂರ್ಣವಾಗಿ ನಾಶಮಾಡುತ್ತೇವೆ ಎಂದು ಟ್ರಂಪ್ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಮಾಡಿದ್ದಾರೆ. ಹಮಾಸ್, ಹಿಝ್ಬುಲ್ಲ ಮತ್ತು ಹೌತಿಗಳು ಸೇರಿದಂತೆ ಈ ಪ್ರದೇಶದಲ್ಲಿನ ಟೆಹ್ರಾನ್ ಒಡನಾಡಿ ಗುಂಪುಗಳನ್ನು ಉಲ್ಲೇಖಿಸಿ, ಇರಾನ್ ನ ಸಂಘಟನೆಗಳು ಇನ್ನು ಮುಂದೆ ಪ್ರದೇಶ ಅಥವಾ ಜಗತ್ತನ್ನು ಅಸ್ಥಿರಗೊಳಿಸುವುದಿಲ್ಲ ಎಂದು ಅಮೆರಿಕ ಖಚಿತಪಡಿಸುತ್ತದೆ. ಅಮೆರಿಕದ ಸಶಸ್ತ್ರ ಪಡೆಗಳ ಶಕ್ತಿಯನ್ನು ಯಾರೂ ಪ್ರಶ್ನಿಸಬಾರದು; ಈ ಆಡಳಿತವು ಶೀಘ್ರದಲ್ಲೇ ಅದನ್ನು ಕಲಿಸುತ್ತದೆ ಎಂದು ಟ್ರಂಪ್ ಹೇಳಿದ್ದಾರೆ. ಟ್ರಂಪ್ ಆಡಳಿತವು “ಬಹುದಿನಗಳ ಕಾರ್ಯಾಚರಣೆ”ಯನ್ನು ಯೋಜಿಸುತ್ತಿದೆ ಎಂದು ಅಮೆರಿಕದ ಅಧಿಕಾರಿಯೊಬ್ಬರು ಹೇಳಿರುವುದಾಗಿ ರಾಯಿಟರ್ಸ್ ಉಲ್ಲೇಖಿಸಿದೆ. ►ಇರಾನ್ ನ ಪ್ರತಿಕ್ರಿಯೆ ಏನು? ಇಸ್ರೇಲ್ ಮೇಲೆ ಕ್ಷಿಪಣಿ ದಾಳಿ ನಡೆಸುವ ಮೂಲಕ ಇರಾನ್ ಪ್ರತಿಕ್ರಿಯಿಸಿದೆ. ದೇಶದ ಹಲವಾರು ಭಾಗಗಳಲ್ಲಿ ಸೈರನ್ ಗಳು ಕೇಳಿಬಂದವು. ಇಸ್ರೇಲ್ ನ ಉತ್ತರ ಭಾಗದಲ್ಲಿ ಸ್ಫೋಟಗಳ ಸದ್ದು ಕೇಳಿಸಿತು. ಸಾರ್ವಜನಿಕರು ಹೋಮ್ ಫ್ರಂಟ್ ಕಮಾಂಡ್ ಸೂಚನೆಗಳನ್ನು ಪಾಲಿಸಬೇಕೆಂದು ವಿನಂತಿಸಲಾಗಿದೆ ಎಂದು ಇಸ್ರೇಲ್ ಸೇನೆ ತಿಳಿಸಿದೆ. ಈ ಸಮಯದಲ್ಲಿ ಬೆದರಿಕೆಯನ್ನು ತಡೆಯಲು ಅಗತ್ಯವಿರುವ ಕಡೆಗಳಲ್ಲಿ ಇಸ್ರೇಲಿ ವಾಯುಪಡೆ ಕಾರ್ಯನಿರ್ವಹಿಸುತ್ತಿದೆ ಎಂದು ಅದು ಹೇಳಿದೆ. “ನಾವು ನಿಮಗೆ ಎಚ್ಚರಿಕೆ ನೀಡಿದ್ದೇವೆ! ನೀವು ಪ್ರಾರಂಭಿಸಿದ್ದೀರಿ; ಈಗ ಅದು ಹೇಗೆ ಕೊನೆಗೊಳ್ಳುತ್ತದೆ ಎಂಬುದನ್ನು ನೀವು ನಿಯಂತ್ರಿಸಲು ಸಾಧ್ಯವಿಲ್ಲ” ಎಂದು ಇರಾನ್ ಸಂಸತ್ತಿನ ರಾಷ್ಟ್ರೀಯ ಭದ್ರತಾ ಆಯೋಗದ ಮುಖ್ಯಸ್ಥ ಇಬ್ರಾಹಿಂ ಅಝೀಝಿ ಸಾಮಾಜಿಕ ಮಾಧ್ಯಮದಲ್ಲಿ ಗುಡುಗಿದ್ದಾರೆ. ►ಇರಾನ್ ನಾಯಕರು ಎಲ್ಲಿದ್ದಾರೆ? 86 ವರ್ಷದ ಖಾಮಿನೈ ಎಲ್ಲಿದ್ದಾರೆ ಎಂಬುದು ತಕ್ಷಣಕ್ಕೆ ಸ್ಪಷ್ಟವಾಗಿಲ್ಲ. ಅಮೆರಿಕದೊಂದಿಗೆ ಉದ್ವಿಗ್ನತೆ ಹೆಚ್ಚಾದ ನಂತರ ಅವರು ಸಾರ್ವಜನಿಕವಾಗಿ ಎಲ್ಲೂ ಕಾಣಿಸಿಕೊಂಡಿಲ್ಲ. ರಾಜಧಾನಿಯಾದ್ಯಂತ ಸ್ಫೋಟಗಳು ಸಂಭವಿಸಿದ್ದರಿಂದ, ಟೆಹ್ರಾನ್ ನ ಡೌನ್ಟೌನ್ ನಲ್ಲಿರುವ ಖಾಮಿನೈ ಅವರ ಕಾಂಪೌಂಡ್ ಗೆ ಹೋಗುವ ರಸ್ತೆಗಳನ್ನು ಮುಚ್ಚಲಾಗಿದೆ. ►ಮುಚ್ಚಿದ ವಾಯುಪ್ರದೇಶ, ವಿಮಾನಯಾನ ಸ್ಥಗಿತ ಇರಾನ್ ಮೇಲೆ ಅಮೆರಿಕ ಮತ್ತು ಇಸ್ರೇಲ್ ದಾಳಿಗಳು ಹಾಗೂ ಟೆಹ್ರಾನ್ ನ ಪ್ರತೀಕಾರವು ಪ್ರಾದೇಶಿಕ ಹಿಂಸಾಚಾರದ ಸ್ಫೋಟಕ್ಕೆ ಕಾರಣವಾಗಿದ್ದು, ಮಧ್ಯಪ್ರಾಚ್ಯದ ಹೆಚ್ಚಿನ ವಾಯುಪ್ರದೇಶವನ್ನು ಮುಚ್ಚಲಾಗಿದೆ. ಶನಿವಾರ ಸಂಘರ್ಷ ಭುಗಿಲೆದ್ದಂತೆ ಇರಾನ್, ಇಸ್ರೇಲ್, ಇರಾಕ್, ಜೋರ್ಡಾನ್, ಖತರ್, ಬಹರೇನ್, ಕುವೈತ್ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ ಸೇರಿದಂತೆ ಕನಿಷ್ಠ ಎಂಟು ರಾಷ್ಟ್ರಗಳು ತಮ್ಮ ವಾಯುಪ್ರದೇಶವನ್ನು ಮುಚ್ಚಲಾಗಿದೆ ಎಂದು ಘೋಷಿಸಿವೆ. ಇಸ್ರೇಲ್ನೊಂದಿಗೆ ಗಡಿಯನ್ನು ಹೊಂದಿರುವ ದಕ್ಷಿಣ ಭಾಗದ ತನ್ನ ವಾಯುಪ್ರದೇಶದ ಒಂದು ಭಾಗವನ್ನು 12 ಗಂಟೆಗಳ ಕಾಲ ಮುಚ್ಚಿರುವುದಾಗಿ ಸಿರಿಯಾ ಕೂಡ ಘೋಷಿಸಿದೆ. ಈ ಅಡಚಣೆಯಿಂದಾಗಿ ಜಾಗತಿಕ ವಿಮಾನಯಾನ ಸಂಸ್ಥೆಗಳು ಮಧ್ಯಪ್ರಾಚ್ಯದ ಸ್ಥಳಗಳಿಂದ ವಿಮಾನಗಳನ್ನು ರದ್ದುಗೊಳಿಸಲು ಅಥವಾ ಬೇರೆಡೆಗೆ ತಿರುಗಿಸಲು ಆರಂಭಿಸಿವೆ. ಇದು ಯುರೋಪ್ ಮತ್ತು ಏಷ್ಯಾ ನಡುವಿನ ವಿಮಾನಗಳಿಗೆ ಪ್ರಮುಖ ಮಾರ್ಗವಾಗಿದೆ. ಯಾಕೆಂದರೆ ಯುದ್ಧದ ಕಾರಣದಿಂದ ರಷ್ಯಾ ಮತ್ತು ಉಕ್ರೇನ್ ವಾಯುಪ್ರದೇಶವು ಹೆಚ್ಚಿನ ವಿಮಾನಯಾನ ಸಂಸ್ಥೆಗಳಿಗೆ ಈಗಾಗಲೇ ಮುಚ್ಚಲ್ಪಟ್ಟಿದೆ. ರಷ್ಯಾದ ವಿಮಾನಯಾನ ಸಂಸ್ಥೆಗಳು ಇರಾನ್ ಮತ್ತು ಇಸ್ರೇಲ್ ಗೆ ವಿಮಾನಗಳನ್ನು ಸ್ಥಗಿತಗೊಳಿಸಿವೆ ಎಂದು ರಷ್ಯಾದ ಸಾರಿಗೆ ಸಚಿವಾಲಯ ತಿಳಿಸಿದೆ. ಏರ್ ಇಂಡಿಯಾ ತಾತ್ಕಾಲಿಕವಾಗಿ ಮಧ್ಯಪ್ರಾಚ್ಯಕ್ಕೆ ವಿಮಾನ ಸಂಚಾರ ನಿಲ್ಲಿಸುವುದಾಗಿ ಹೇಳಿದೆ. ಲುಫ್ತಾನ್ಸಾ, ಏರ್ ಫ್ರಾನ್ಸ್, ಐಬೇರಿಯಾ, ವಿಜ್ ಏರ್, ಟರ್ಕಿಶ್ ಏರ್ಲೈನ್ಸ್, ಖತರ್ ಏರ್ವೇಸ್, ವರ್ಜಿನ್ ಅಟ್ಲಾಂಟಿಕ್, ಕೆಎಲ್ಎಂ, ಬ್ರಿಟಿಷ್ ಏರ್ವೇಸ್, ಏಜಿಯನ್ ಏರ್ಲೈನ್ಸ್, ಏರ್ ಇಂಡಿಯಾ ಎಕ್ಸ್ ಪ್ರೆಸ್, ಇಂಡಿಗೊ, ಜಪಾನ್ ಏರ್ಲೈನ್ಸ್ ಮತ್ತು ಸ್ಕ್ಯಾಂಡಿನೇವಿಯನ್ ಏರ್ಲೈನ್ಸ್ ಕೂಡ ವಿಮಾನಯಾನ ಸ್ಥಗಿತಗೊಳಿಸಿವೆ. ►ಭಾರತೀಯರಿಗೆ ರಾಯಭಾರಿ ಕಚೇರಿ ಸಲಹೆ ಇರಾನ್ ಜೊತೆಗಿನ ಉದ್ವಿಗ್ನತೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಇಸ್ರೇಲ್ ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಭಾರತೀಯ ಪ್ರಜೆಗಳಿಗೆ ಸುರಕ್ಷತೆ ಮತ್ತು ಪ್ರಯಾಣ ಸಲಹೆ ನೀಡಿದೆ. ನಾಗರಿಕರು ಎಚ್ಚರಿಕೆಯಿಂದ ವರ್ತಿಸಬೇಕು ಮತ್ತು ಅನಿವಾರ್ಯವಲ್ಲದ ಪ್ರಯಾಣವನ್ನು ತಪ್ಪಿಸಬೇಕು. ಪ್ರದೇಶದ ಭದ್ರತಾ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ಇಸ್ರೇಲ್ ನಲ್ಲಿರುವ ಎಲ್ಲಾ ಭಾರತೀಯರು ಅತ್ಯಂತ ಎಚ್ಚರಿಕೆಯಿಂದ ಮತ್ತು ಎಲ್ಲ ಸಮಯದಲ್ಲೂ ಜಾಗರೂಕರಾಗಿರಬೇಕು ಎಂದು ಸೂಚಿಸಲಾಗಿದೆ. ಇಸ್ರೇಲಿ ಅಧಿಕಾರಿಗಳು ಮತ್ತು ಹೋಮ್ ಫ್ರಂಟ್ ಕಮಾಂಡ್ ಹೊರಡಿಸಿದ ಸುರಕ್ಷತಾ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಭಾರತೀಯ ಪ್ರಜೆಗಳಿಗೆ ಸೂಚಿಸಲಾಗಿದೆ ಎಂದು ರಾಯಭಾರಿ ಕಚೇರಿ ತಿಳಿಸಿದೆ. ತುರ್ತು ಸಂದರ್ಭದಲ್ಲಿ ಭಾರತೀಯರು ಟೆಲ್ ಅವೀವ್ನಲ್ಲಿರುವ ಭಾರತದ ರಾಯಭಾರ ಕಚೇರಿಯನ್ನು 24x7 ಸಹಾಯವಾಣಿ ಸಂಖ್ಯೆ +972-54-7520711 ಮೂಲಕ ಸಂಪರ್ಕಿಸಬಹುದು ಅಥವಾ cons1.telaviv@mea.gov.in ಗೆ ಇಮೇಲ್ ಕಳುಹಿಸಬಹುದು. ಎಲ್ಲ ಭಾರತೀಯರು ಗುರುತಿಸಲಾದ ಆಶ್ರಯಗಳ ಸಮೀಪದಲ್ಲೇ ಇರಬೇಕು. ತಮ್ಮ ನಿವಾಸ ಅಥವಾ ಕೆಲಸದ ಪ್ರದೇಶದ ಹತ್ತಿರದ ಸಂರಕ್ಷಿತ ಸ್ಥಳಗಳ ಬಗ್ಗೆ ಮಾಹಿತಿ ಹೊಂದಿರಲು ಸಲಹೆ ನೀಡಲಾಗಿದೆ. ಸ್ಥಳೀಯ ಸುದ್ದಿ ಮತ್ತು ತುರ್ತು ಎಚ್ಚರಿಕೆಗಳನ್ನು ನಿರಂತರವಾಗಿ ಗಮನಿಸುವಂತೆ ಸೂಚಿಸಲಾಗಿದೆ. ಇರಾನ್ ನಲ್ಲಿರುವ ಭಾರತೀಯ ರಾಯಭಾರ ಕಚೇರಿಯೂ ನಾಗರಿಕರು ಜಾಗರೂಕರಾಗಿದ್ದು ಸಾಧ್ಯವಾದಷ್ಟು ಮನೆಯೊಳಗೆ ಇರಬೇಕೆಂದು ಸಲಹೆ ನೀಡಿದೆ. ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಇರಾನ್ ನಲ್ಲಿರುವ ಎಲ್ಲಾ ಭಾರತೀಯರು ಅನಗತ್ಯ ಸಂಚಾರ ತಪ್ಪಿಸಿ, ಸಾಧ್ಯವಾದಷ್ಟು ಮನೆಯೊಳಗೆ ಇರಬೇಕು. ಪರಿಸ್ಥಿತಿಯ ಬಗ್ಗೆ ತಿಳಿದುಕೊಳ್ಳಲು ಸುದ್ದಿಗಳನ್ನು ಮೇಲ್ವಿಚಾರಣೆ ಮಾಡಬೇಕು ಮತ್ತು ರಾಯಭಾರಿ ಕಚೇರಿಯಿಂದ ಹೆಚ್ಚಿನ ಮಾರ್ಗದರ್ಶನಕ್ಕಾಗಿ ಕಾಯಬೇಕು ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. ►ಭಾರತದ ಕಳವಳಗಳೇನು? ಶುಕ್ರವಾರ ತೈಲ ಬೆಲೆಗಳು ಏಳು ತಿಂಗಳ ಗರಿಷ್ಠ ಮಟ್ಟ ತಲುಪಿದವು. ಈ ವಾರಾಂತ್ಯದಲ್ಲಿ ಇರಾನ್ ಮೇಲೆ ನಡೆದ ದಾಳಿಗಳ ಹಿನ್ನೆಲೆ, ಸೋಮವಾರ ಬೆಲೆ ಇನ್ನಷ್ಟು ಏರಿಕೆಯಾಗುವ ಸಾಧ್ಯತೆ ಇದೆ. ದೇಶಗಳು ಶಾಂತಿ ಸ್ಥಾಪಿಸಿದರೆ ಬೆಲೆಗಳು ಇಳಿಯಬಹುದು. ಜಾಗತಿಕವಾಗಿ ಪ್ರಮುಖ ತೈಲ ಆಮದುದಾರರಲ್ಲಿ ಒಂದಾದ ಭಾರತಕ್ಕೆ, ಹೆಚ್ಚಿನ ತೈಲ ಬೆಲೆಗಳು ಅನನುಕೂಲಕರ. ಭಾರತವು ವಾರ್ಷಿಕವಾಗಿ ಸುಮಾರು 2 ಬಿಲಿಯನ್ ಬ್ಯಾರೆಲ್ ತೈಲವನ್ನು ಆಮದು ಮಾಡಿಕೊಳ್ಳುವುದರಿಂದ, ತೈಲ ಬೆಲೆಯಲ್ಲಿನ ಪ್ರತಿ 1 ಡಾಲರ್ ಏರಿಕೆಯಿಂದ ದೇಶದ ತೈಲ ಆಮದು ಬಿಲ್ ವರ್ಷಕ್ಕೆ ಸುಮಾರು 2 ಬಿಲಿಯನ್ ಡಾಲರ್ ಹೆಚ್ಚಾಗಬಹುದು. ಈಗ ನಡೆಯುತ್ತಿರುವ ಸಂಘರ್ಷವು ವಿಶ್ವದ ಹೆಚ್ಚಿನ ತೈಲ ಪೂರೈಕೆ ಮಾಡುವ ಗಲ್ಫ್ ಪ್ರದೇಶದಿಂದ ಸರಬರಾಜು ಅಸ್ತವ್ಯಸ್ತವಾಗುವ ಭಯವನ್ನು ಹೆಚ್ಚಿಸಿದೆ. ಟೆಹ್ರಾನ್ ನ ಆಡಳಿತವು ಅಸ್ತಿತ್ವದ ಬೆದರಿಕೆಯನ್ನು ಎದುರಿಸಿದರೆ, ಜಾಗತಿಕ ತೈಲ ಮತ್ತು ಅನಿಲ ಹರಿವುಗಳಿಗೆ ನಿರ್ಣಾಯಕವಾದ ಹಾರ್ಮುಜ್ ಜಲಸಂಧಿಯ ಮೂಲಕ ಇಂಧನ ಹರಿವನ್ನು ಅಡ್ಡಿಪಡಿಸುವ ಅಪಾಯ ಇದೆ ಎಂಬ ಆತಂಕ ತೈಲ ಮಾರುಕಟ್ಟೆಗಳಲ್ಲಿ ಇದೆ. ಪ್ರಸ್ತುತ ಹೆಚ್ಚುವರಿ ತೈಲ ಲಭ್ಯವಿರುವುದರಿಂದ ಬೆಲೆಗಳು ಹೆಚ್ಚಿನ ಮಟ್ಟಕ್ಕೆ ಏರಿಕೆಯಾಗುವುದಿಲ್ಲ ಎಂದು ಟ್ರಂಪ್ ಆಡಳಿತ ನಂಬಿದೆ. ಆದರೆ ಹಾರ್ಮುಜ್ ಜಲಸಂಧಿಯನ್ನು ದೀರ್ಘಕಾಲ ನಿರ್ಬಂಧಿಸಿದರೆ ಅಥವಾ ಯುದ್ಧ ನೆರೆಯ ದೇಶಗಳಿಗೆ ವಿಸ್ತರಿಸಿದರೆ ಪರಿಸ್ಥಿತಿ ತಕ್ಷಣ ಬದಲಾಗಬಹುದು. ಈ ಜಲಮಾರ್ಗವನ್ನು ಇರಾನ್ ಮಾತ್ರವಲ್ಲ, ಸೌದಿ ಅರೇಬಿಯಾ, ಇರಾಕ್, ಯುಎಇ ಮತ್ತು ಕುವೈತ್ನಂತಹ ಪ್ರಮುಖ ತೈಲ ಉತ್ಪಾದಕರು ಬಳಸುತ್ತಾರೆ. ಯುದ್ಧದ ಭೀತಿ ಹೆಚ್ಚಿದಂತೆ, ತೈಲ ಬೆಲೆಗಳು ವಾರದಲ್ಲಿ ಪ್ರತಿ ಬ್ಯಾರೆಲ್ ಗೆ 72 ಡಾಲರ್ ಗಿಂತ ಹೆಚ್ಚು ಏರಿಕೆಯಾಗಿದೆ. ►ಹಾರ್ಮುಜ್ ಜಲಸಂಧಿ ಹಾರ್ಮುಜ್ ಜಲಸಂಧಿಯು ಇರಾನ್ ಮತ್ತು ಒಮಾನ್ ನಡುವಿನ ಸಣ್ಣ ಆದರೆ ಅತ್ಯಂತ ಪ್ರಮುಖ ಜಲಮಾರ್ಗವಾಗಿದೆ. ಇದು ತೈಲ ಮತ್ತು ಅನಿಲ ಸಾಗಣೆಗೆ ವಿಶ್ವದ ಪ್ರಮುಖ ಮಾರ್ಗಗಳಲ್ಲಿ ಒಂದಾಗಿದೆ. ಪ್ರತಿದಿನ ವಿಶ್ವದಲ್ಲಿ ಬಳಸುವ ತೈಲ ಮತ್ತು ನೈಸರ್ಗಿಕ ಅನಿಲದ ಸುಮಾರು ಐದನೇ ಒಂದು ಭಾಗ ಈ ಜಲಮಾರ್ಗದ ಮೂಲಕ ಸಾಗುತ್ತದೆ. ಸರಿಸುಮಾರು 15 ಮಿಲಿಯನ್ ಬ್ಯಾರೆಲ್ ತೈಲ ಹಾಗೂ ಜಾಗತಿಕ ಅನಿಲ ಸರಬರಾಜಿನ ಸುಮಾರು 20% ಈ ಮಾರ್ಗದ ಮೂಲಕವೇ ಸಾಗುತ್ತದೆ. ಈ ಸ್ಥಳದಲ್ಲಿ ಅಡಚಣೆ ಉಂಟಾದರೆ ಜಾಗತಿಕ ಆರ್ಥಿಕತೆಗೆ ಭಾರಿ ಪರಿಣಾಮ ಉಂಟಾಗುತ್ತದೆ. ಶಾಂತಿ ಒಪ್ಪಂದದ ಸಾಧ್ಯತೆ ಕಡಿಮೆ ಮತ್ತು ಹೆಚ್ಚಿನ ಅಮೆರಿಕನ್ ಪಡೆಗಳು ಈ ಪ್ರದೇಶದಲ್ಲಿ ಇರುವುದರಿಂದ ಪರಿಸ್ಥಿತಿ ಶಮನಗೊಳಿಸುವುದು ಕಷ್ಟಕರವಾಗಬಹುದು ಎಂದು ING ಬ್ಯಾಂಕ್ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಪರಿಸ್ಥಿತಿ ಹದಗೆಟ್ಟರೆ ಅಮೆರಿಕದ ದಾಳಿ ಮತ್ತು ಇರಾನ್ ಪ್ರತಿದಾಳಿ ಹೇಗಿರಬಹುದು ಎಂಬುದು ದೊಡ್ಡ ಪ್ರಶ್ನೆ. ಹಾರ್ಮುಜ್ ಜಲಸಂಧಿ ಮೂಲಕ ಪರ್ಷಿಯನ್ ಕೊಲ್ಲಿಗೆ ಸರಬರಾಜಾಗುವ ತೈಲ ಅಡ್ಡಿಯಾಗುವ ಭೀತಿ ತೈಲ ಮಾರುಕಟ್ಟೆಗಳಲ್ಲಿ ಇದೆ. ಪೈಪ್ಲೈನ್ ಮಾರ್ಗಗಳು ಇದ್ದರೂ ಅವು ಸಂಪೂರ್ಣ ಅಗತ್ಯವನ್ನು ಪೂರೈಸಲು ಸಾಕಾಗುವುದಿಲ್ಲ. ಪೂರ್ಣ ಸಾಮರ್ಥ್ಯದಲ್ಲಿ ಬಳಸಿದರೂ ದಿನಕ್ಕೆ ಸುಮಾರು 9 ಮಿಲಿಯನ್ ಬ್ಯಾರೆಲ್ ತೈಲ, ಅಂದರೆ ಜಾಗತಿಕ ಅವಶ್ಯಕತೆಯ ಸುಮಾರು 9%, ಅಪಾಯದಲ್ಲಿರಬಹುದು. ಇದು ಭಾರತಕ್ಕೆ ದೊಡ್ಡ ಸಮಸ್ಯೆ. ಭಾರತ ಖರೀದಿಸುವ ತೈಲದ 40%ಕ್ಕಿಂತ ಹೆಚ್ಚು ಈ ಜಲಮಾರ್ಗದ ಮೂಲಕ ಬರುತ್ತದೆ. ಭಾರತವು ವಿಶ್ವದ ಮೂರನೇ ಅತಿದೊಡ್ಡ ತೈಲ ಬಳಕೆದಾರನಾಗಿದ್ದು, ಅದರ ಸುಮಾರು 88%ಕ್ಕಿಂತ ಹೆಚ್ಚು ತೈಲವನ್ನು ಆಮದು ಮಾಡಿಕೊಳ್ಳುತ್ತದೆ. ಆದ್ದರಿಂದ ಹಾರ್ಮುಜ್ ಜಲಸಂಧಿ ದೇಶದ ಇಂಧನ ಭದ್ರತೆಗೆ ಅತ್ಯಂತ ಪ್ರಮುಖ. ಇರಾನ್ ಜಲಸಂಧಿಯನ್ನು ನಿರ್ಬಂಧಿಸುವುದಾಗಿ ಮತ್ತು ತೈಲ ಟ್ಯಾಂಕರ್ ಗಳ ಮೇಲೆ ದಾಳಿ ಮಾಡುವುದಾಗಿ ಪದೇಪದೇ ಬೆದರಿಕೆ ಹಾಕಿದೆ. ಜೊತೆಗೆ ಯೆಮನ್ ನಲ್ಲಿರುವ ಇರಾನ್ ಬೆಂಬಲಿತ ಗುಂಪುಗಳು ಬಾಬ್ ಎಲ್-ಮಂಡೇಬ್ ಜಲಸಂಧಿಯಲ್ಲಿ ತೈಲ ಹಡಗುಗಳ ಮೇಲೆ ದಾಳಿ ಮಾಡುವ ಅಪಾಯವೂ ಇದೆ. ಇದು ಕೆಂಪು ಸಮುದ್ರವನ್ನು ಅರೇಬಿಯನ್ ಸಮುದ್ರಕ್ಕೆ ಸಂಪರ್ಕಿಸುವ ಪ್ರಮುಖ ಜಲಮಾರ್ಗವಾಗಿದ್ದು, ಸೂಯೆಜ್ ಕಾಲುವೆ ಮೂಲಕ ಸಾಗುವ ಹಡಗುಗಳಿಗೆ ಅಗತ್ಯ ಮಾರ್ಗವಾಗಿದೆ. ►ವಿವಿಧ ರಾಷ್ಟ್ರಗಳ ಪ್ರತಿಕ್ರಿಯೆ ►ಯುರೋಪಿಯನ್ ಒಕ್ಕೂಟ ಯುರೋಪಿಯನ್ ಆಯೋಗದ ಅಧ್ಯಕ್ಷೆ ಉರ್ಸುಲಾ ವಾನ್ ಡೆರ್ ಲೇಯೆನ್ ಮತ್ತು ಯುರೋಪಿಯನ್ ಕೌನ್ಸಿಲ್ ಅಧ್ಯಕ್ಷ ಆಂಟೋನಿಯೊ ಕೋಸ್ಟಾ ಈ ಸಂಘರ್ಷವನ್ನು “ಬಹಳ ಕಳವಳಕಾರಿ” ಎಂದು ಹೇಳಿದ್ದಾರೆ. ಎಲ್ಲಾ ದೇಶಗಳು ಗರಿಷ್ಠ ಸಂಯಮ ಪಾಲಿಸಿ, ನಾಗರಿಕರನ್ನು ರಕ್ಷಿಸಿ ಹಾಗೂ ಅಂತರರಾಷ್ಟ್ರೀಯ ಕಾನೂನನ್ನು ಗೌರವಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ. ►ರೆಡ್ ಕ್ರಾಸ್ ಅಂತರರಾಷ್ಟ್ರೀಯ ರೆಡ್ ಕ್ರಾಸ್ ಸಮಿತಿಯ ಅಧ್ಯಕ್ಷೆ ಮಿರ್ಜಾನಾ ಸ್ಪೋಲ್ಜಾರಿಕ್ ದೇಶಗಳು ಯುದ್ಧ ಕಾನೂನುಗಳನ್ನು ಪಾಲಿಸಿ ಹಿಂಸಾಚಾರ ನಿಲ್ಲಿಸಬೇಕು ಎಂದು ಕರೆ ನೀಡಿದ್ದಾರೆ. ಮಧ್ಯಪ್ರಾಚ್ಯದಲ್ಲಿ ಬೆಳೆಯುತ್ತಿರುವ ಸಂಘರ್ಷವು ಅಪಾಯಕಾರಿ ಸರಪಳಿ ಕ್ರಿಯೆಯಂತಿದ್ದು ಅನೇಕ ನಾಗರಿಕರನ್ನು ಅಪಾಯಕ್ಕೆ ಸಿಲುಕಿಸಬಹುದು ಎಂದು ಎಚ್ಚರಿಸಿದ್ದಾರೆ. ►ಒಮಾನ್ ಅಮೆರಿಕ–ಇರಾನ್ ಮಾತುಕತೆಗೆ ನೆರವಾಗಿರುವ ಒಮಾನ್ ಈ ಸಂಘರ್ಷದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದೆ. ಒಮಾನ್ ವಿದೇಶಾಂಗ ಸಚಿವ ಬದ್ರ್ ಅಲ್ಬುಸೈದಿ, ಈ ಯುದ್ಧವು ಅಮೆರಿಕ ಅಥವಾ ವಿಶ್ವ ಶಾಂತಿಗೆ ಸಹಾಯಕವಲ್ಲ ಎಂದು ಹೇಳಿದ್ದಾರೆ. ಅಮೆರಿಕ ಹೆಚ್ಚಿನ ತೊಡಗಿಸಿಕೊಳ್ಳಬಾರದು ಎಂದು ಒತ್ತಾಯಿಸಿದ್ದಾರೆ. ►ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ತುರ್ತು ಸಭೆಗೆ ಕರೆ ನೀಡಿದ್ದಾರೆ. ಸಂಘರ್ಷವು ಅಂತರರಾಷ್ಟ್ರೀಯ ಶಾಂತಿ ಮತ್ತು ಭದ್ರತೆಗೆ ಗಂಭೀರ ಪರಿಣಾಮ ಬೀರುತ್ತದೆ ಎಂದು ಹೇಳಿದ್ದಾರೆ. ಇರಾನ್ ತನ್ನ ಪರಮಾಣು ಮತ್ತು ಬ್ಯಾಲಿಸ್ಟಿಕ್ ಕ್ಷಿಪಣಿ ಕಾರ್ಯಕ್ರಮಗಳ ಬಗ್ಗೆ ಮಾತುಕತೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ. ►ಖತರ್ ಅಲ್ ಉದೈದ್ ವಾಯುನೆಲೆ ಇರುವ ಖತರ್, ತನ್ನ ಪ್ರದೇಶದ ಮೇಲೆ ಕ್ಷಿಪಣಿ ದಾಳಿ ನಡೆಸಿದ್ದಕ್ಕಾಗಿ ಇರಾನ್ ಅನ್ನು ಖಂಡಿಸಿದೆ. ಇದು ರಾಷ್ಟ್ರೀಯ ಸಾರ್ವಭೌಮತ್ವದ ಉಲ್ಲಂಘನೆ ಎಂದು ಹೇಳಿದೆ. ►ಯುನೈಟೆಡ್ ಅರಬ್ ಎಮಿರೇಟ್ಸ್ ಇರಾನ್ ತನ್ನ ಪ್ರದೇಶದ ಮೇಲೆ ನಡೆಸಿದ ದಾಳಿಯನ್ನು ಖಂಡಿಸಿರುವ ಯುಎಇ, ಇದು ನಾಗರಿಕರ ಸುರಕ್ಷತೆಗೆ ಬೆದರಿಕೆ ಎಂದು ಹೇಳಿದೆ. ►ಬಹರೇನ್ ಇರಾನ್ ಕ್ಷಿಪಣಿ ದಾಳಿಯನ್ನು “ದ್ರೋಹ” ಎಂದು ಬಹರೇನ್ ಕರೆದಿದೆ. ಇದು ಯುಎಸ್ 5ನೇ ನೌಕಾಪಡೆಯ ಪ್ರಧಾನ ಕಚೇರಿಯನ್ನು ಗುರಿಯಾಗಿಸಿತ್ತು ಎಂದು ತಿಳಿಸಿದೆ. ►ಕುವೈತ್ ಇರಾನ್ ನಡೆಸಿದ ದಾಳಿ ಅಂತರರಾಷ್ಟ್ರೀಯ ಕಾನೂನಿನ ಸ್ಪಷ್ಟ ಉಲ್ಲಂಘನೆ ಎಂದು ಕುವೈತ್ ಖಂಡಿಸಿದೆ. ►ಸೌದಿ ಅರೇಬಿಯಾ ಗಲ್ಫ್ ರಾಷ್ಟ್ರಗಳ ಮೇಲಿನ ಇರಾನ್ ದಾಳಿಯನ್ನು ಸೌದಿ ಅರೇಬಿಯಾ ಖಂಡಿಸಿ, ಗಂಭೀರ ಪರಿಣಾಮಗಳ ಬಗ್ಗೆ ಎಚ್ಚರಿಸಿದೆ. ►ಪಾಕಿಸ್ತಾನ ವಿದೇಶಾಂಗ ಸಚಿವ ಇಶಾಕ್ ದಾರ್, ಇರಾನ್ ವಿರುದ್ಧದ ದಾಳಿಗಳನ್ನು ಖಂಡಿಸಿ, ರಾಜತಾಂತ್ರಿಕ ಮಾತುಕತೆಯ ಮೂಲಕ ಶಾಂತಿಯುತ ಪರಿಹಾರ ಅಗತ್ಯವಿದೆ ಎಂದು ಹೇಳಿದ್ದಾರೆ. ►ರಷ್ಯಾ ಭದ್ರತಾ ಮಂಡಳಿಯ ಉಪಾಧ್ಯಕ್ಷ ಡಿಮಿಟ್ರಿ ಮೆಡ್ವೆಡೆವ್, ಅಮೆರಿಕ ಪರಮಾಣು ಮಾತುಕತೆಯನ್ನು ತಂತ್ರವಾಗಿ ಬಳಸುತ್ತಿದೆ ಎಂದು ಆರೋಪಿಸಿದ್ದಾರೆ. ಸಂಘರ್ಷವು ಮಧ್ಯಪ್ರಾಚ್ಯದ ಪರಿಸ್ಥಿತಿಯನ್ನು ಹದಗೆಡಿಸಬಹುದು ಎಂದು ಎಚ್ಚರಿಸಿದ್ದಾರೆ. ►ಉಕ್ರೇನ್ ವಿದೇಶಾಂಗ ಸಚಿವಾಲಯ, ಸಂಘರ್ಷಕ್ಕೆ ಇರಾನ್ ಸರ್ಕಾರವೇ ಕಾರಣ ಎಂದು ಹೇಳಿದೆ. ►ನಾರ್ವೆ ಇಸ್ರೇಲ್ ನ ಆರಂಭಿಕ ದಾಳಿ ಅಂತರರಾಷ್ಟ್ರೀಯ ಕಾನೂನಿಗೆ ವಿರುದ್ಧವಾಗಿದೆ ಎಂದು ವಿದೇಶಾಂಗ ಸಚಿವ ಎಸ್ಪೆನ್ ಬಾರ್ತ್ ಹೇಳಿದ್ದಾರೆ. ►ಬೆಲ್ಜಿಯಂ ಇರಾನ್ ನ ಜನರು ತಮ್ಮ ಸರ್ಕಾರದ ಕ್ರಮಗಳಿಗೆ ಬೆಲೆ ತೆರುವುದು ಅನ್ಯಾಯ ಎಂದು ವಿದೇಶಾಂಗ ಸಚಿವ ಮ್ಯಾಕ್ಸಿಮ್ ಪ್ರೀವೋಟ್ ಹೇಳಿದ್ದಾರೆ. ಶಾಂತಿಯುತ ಒಪ್ಪಂದ ಸಾಧ್ಯವಾಗದಿರುವುದಕ್ಕೆ ವಿಷಾದ ವ್ಯಕ್ತಪಡಿಸಿದ್ದಾರೆ.
ಬ್ಯಾಂಕ್ ಖಾತೆಯಿಂದ ಹಣ ವರ್ಗಾಯಿಸಿ ವಂಚನೆ: ಪ್ರಕರಣ ದಾಖಲು
ಬ್ರಹ್ಮಾವರ, ಫೆ.28: ವ್ಯಕ್ತಿಯೊಬ್ಬರ ಬ್ಯಾಂಕ್ ಖಾತೆಯಿಂದ ಅವರ ಅರಿವಿಗೆ ಬಾರದಂತೆ ಹಣ ವರ್ಗಾವಣೆ ಮಾಡುವ ಮೂಲಕ ಆನ್ಲೈನ್ ವಂಚನೆ ಎಸಗಿರುವ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಚಾಂತಾರು ಗ್ರಾಮದ ಬಿ.ಅಶೋಕ(64) ಎಂಬವರ ಬ್ಯಾಂಕ್ ಖಾತೆಯಿಂದ ಫೆ.23ರಂದು ರಾತ್ರಿಯಿಂದ ಫೆ.24ರಂದು ಬೆಳಗ್ಗಿನ ಮಧ್ಯಾವಧಿಯಲ್ಲಿ ಅವರ ಅರಿವಿಗೆ ಬಾರದೇ ಆರೋಪಿಗಳು ಹಂತ ಹಂತವಾಗಿ ಒಟ್ಟು 99,950ರೂ. ಹಣವನ್ನು ವರ್ಗಾವಣೆ ಮಾಡಿ ವಂಚನೆ ಎಸಗಿರುವುದಾಗಿ ದೂರಲಾಗಿದೆ.
‘ಕೆಲಸ ಮಾಡಲು ಮನಸ್ಸಿಲ್ಲದಿದ್ರೆ ರಾಜಿನಾಮೆ ಕೊಟ್ಟು ಹೋಗ್ರಿ...!’
ಪ್ರಾಧಿಕಾರದಲ್ಲಿ ಗುಡುಗಿದ ಉಪಲೋಕಾಯುಕ್ತ
ಇಸ್ರೇಲ್ ಮತ್ತು ಇರಾನ್ ಯುದ್ಧಕ್ಕೆ ಕಾರಣವಾದ ಖಮೇನಿ ಯಾರು ಎಂಬದನ್ನು ತಿಳಿಯಿರಿ | Israel Military
ಇರಾನ್ ಧಗಧಗ ಅಂತಿದೆ, ಇಸ್ರೇಲ್ ಮತ್ತು ಅಮೆರಿಕ ಒಟ್ಟಾಗಿ ಕೊಡುತ್ತಿರುವ ಏಟಿಗೆ ನಲುಗಿ ಹೋಗಿ ಒದ್ದಾಡುತ್ತಿದೆ ಇರಾನ್. ತನ್ನ ಜೊತೆಗೆ ಸ್ನೇಹಿತ ದೇಶಗಳು ಇಲ್ಲದೆ ಒಂಟಿಯಾಗಿ ಅಮೆರಿಕ &ಇಸ್ರೇಲ್ ಸೇನೆಯ ದಾಳಿ ಎದುರಿಸುವ ಅನಿವಾರ್ಯತೆಗೆ ಈಗ ಸಿಲುಕಿದೆ. ಅಮೆರಿಕ &ಇಸ್ರೇಲ್ ಪಡೆಗಳು ಒಂದಾಗಿ ಇರಾನ್ ವಿರುದ್ಧ ದೊಡ್ಡ ಮಟ್ಟದಲ್ಲಿ ಕಾರ್ಯಾಚರಣೆ ಶುರು ಮಾಡಿದ್ದು, ಇರಾನ್
ಪ.ಬಂಗಾಳ:ಎಸ್ಐಆರ್ ಬಳಿಕ ಮತದಾರರ ಪಟ್ಟಿಗಳಿಂದ ಸುಮಾರು 66 ಲಕ್ಷ ಹೆಸರುಗಳು ಅಳಿಸಲ್ಪಡುವ ಸಾಧ್ಯತೆ
ಹೊಸದಿಲ್ಲಿ: ಪಶ್ಚಿಮ ಬಂಗಾಳದ ಕರಡು ಮತದಾರರ ಪಟ್ಟಿಗಳಿಂದ ಈಗಾಗಲೇ 58 ಲಕ್ಷ ಮತದಾರರನ್ನು ಕೈಬಿಡಲಾಗಿದ್ದು ಚುನಾವಣಾ ಆಯೋಗವು ಇನ್ನೂ ಎಂಟು ಲಕ್ಷ ಹೆಸರುಗಳನ್ನು ಅಳಿಸುವ ಸಾಧ್ಯತೆಯಿದೆ. ಇದರೊಂದಿಗೆ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆಯಲ್ಲಿ (ಎಸ್ಐಆರ್) ಈವರೆಗೆ ಅಳಿಸಲಾಗಿರುವ ಹೆಸರುಗಳ ಸಂಖ್ಯೆ ಸುಮಾರು 66 ಲಕ್ಷಕ್ಕೇರಿದೆ ಎಂದು ಆಯೋಗದ ಮೂಲಗಳನ್ನು ಉಲ್ಲೇಖಿಸಿ ಸುದ್ದಿಸಂಸ್ಥೆಯು ವರದಿ ಮಾಡಿದೆ. ಸಂಪೂರ್ಣ ಮತದಾರರ ಪಟ್ಟಿಗಳು ಆನ್ಲೈನ್ನಲ್ಲಿ ಪ್ರಕಟಗೊಂಡ ಬಳಿಕವಷ್ಟೇ ಕೈಬಿಡಲಾದ ಹೆಸರುಗಳ ನಿಖರ ಸಂಖ್ಯೆಯನ್ನು ದೃಢಪಡಿಸಬಹುದು ಎಂದು ಚುನಾವಣಾ ಆಯೋಗದ ಅಧಿಕಾರಿಯೋರ್ವರು ತಿಳಿಸಿದರು. ಅಂತಿಮ ಅಂಕಿಅಂಶಗಳೂ ಸ್ಥಿರವಲ್ಲ, ಏಕೆಂದರೆ ಫಾರಂ 7 ಅರ್ಜಿಗಳ ಮೂಲಕ ಹೆಸರುಗಳ ಸೇರ್ಪಡೆ ಮತ್ತು ಅಳಿಸುವಿಕೆ ಮುಂದುವರಿಯುತ್ತವೆ ಎಂದರು. ವರದಿಯ ಪ್ರಕಾರ ಇನ್ನೂ 60.06 ಲಕ್ಷ ಹೆಸರುಗಳನ್ನು ‘ಪರಿಶೀಲನೆಯಲ್ಲಿದೆ’ ವರ್ಗದಲ್ಲಿ ಇರಿಸಲಾಗಿದೆ. ಈ ಪ್ರಕರಣಗಳನ್ನು ನ್ಯಾಯಾಂಗ ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ ಮತ್ತು ಅವುಗಳ ಸೇರ್ಪಡೆ ಅಥವಾ ಅಳಿಸುವಿಕೆಯನ್ನು ಪೂರಕ ಪಟ್ಟಿಗಳಲ್ಲಿ ನಿರ್ಧರಿಸಲಾಗುತ್ತದೆ. ಈ ಪರಿಶೀಲನೆ ಪ್ರಕ್ರಿಯೆಯಿಂದ ಅಂತಿಮ ಪಟ್ಟಿಯಲ್ಲಿ ಹೆಸರುಗಳ ಅಳಿಸುವಿಕೆ ಇನ್ನಷ್ಟು ಹೆಚ್ಚುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ಸುಳಿವು ನೀಡಿದ್ದಾರೆ. ಪ್ರಸ್ತುತ ರಾಜ್ಯಾದ್ಯಂತ ಸುಮಾರು 6.4 ಕೋಟಿ ಹೆಸರುಗಳನ್ನು ಮತದಾರರು ಎಂದು ಅನುಮೋದಿಸಲಾಗಿದೆ. ಆದರೆ ಪರಿಶೀಲನೆಯಲ್ಲಿರುವ ಸುಮಾರು 60 ಲಕ್ಷ ಮತದಾರರ ಪ್ರಕರಣಗಳು ಇತ್ಯರ್ಥಗೊಂಡು ಅಂತಿಮ ಪೂರಕ ಪಟ್ಟಿ ಪ್ರಕಟವಾದ ಬಳಿಕ ಈ ಸಂಖ್ಯೆಯಲ್ಲಿ ಗಮನಾರ್ಹ ಏರಿಕೆಯಾಗುವ ನಿರೀಕ್ಷೆಯಿದೆ. ಶನಿವಾರ ಅಪರಾಹ್ನ ಎಸ್ಡಿಒ ಮತ್ತು ಬಿಡಿಒ ಕಚೇರಿಗಳಲ್ಲಿ ಮತದಾರರ ಪಟ್ಟಿಗಳನ್ನು ಪ್ರಕಟಿಸಲಾಗಿದೆ. ಆದರೆ ಅಧಿಕೃತ ಪೋರ್ಟಲ್ಗಳಲ್ಲಿ ಏಕೀಕೃತ ಪಟ್ಟಿಗಳನ್ನು ಇನ್ನೂ ಪ್ರಕಟಿಸಿಲ್ಲ. ಪ್ರಕಟಿತ ಪಟ್ಟಿಗಳಲ್ಲಿ ಕರಡು ಪಟ್ಟಿಗಳಲ್ಲಿದ್ದ ಎಲ್ಲ 7.08 ಕೋಟಿ ಮತದಾರರನ್ನು ‘ಅನುಮೋದಿತ’,‘ಅಳಿಸಲಾಗಿದೆ’ ಅಥವಾ ‘ಪರಿಶೀಲನೆಯಲ್ಲಿದೆ’ ವರ್ಗಗಳಲ್ಲಿ ಇರಿಸಲಾಗಿದೆ. ತಮ್ಮ ಹೆಸರುಗಳು ಅನುಮೋದನೆಗೊಂಡವರು ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಮತ ಚಲಾಯಿಸಲು ಅರ್ಹರಾಗುತ್ತಾರೆ. ಚುನಾವಣಾ ಆಯೋಗವು ಮಾರ್ಚ್ ಮಧ್ಯದಲ್ಲಿ ಚುನಾವಣಾ ವೇಳಾಪಟ್ಟಿಯನ್ನು ಪ್ರಕಟಿಸುವ ಸಾಧ್ಯತೆಯಿದೆ.
ಇಸ್ರೇಲ್–ಇರಾನ್ ಯುದ್ಧ ಮುಂದುವರಿದರೆ ಜಗತ್ತು ಹಿಂದೆ ಹೋಗುತ್ತದೆಯೇ? ತಜ್ಞರ ಎಚ್ಚರಿಕೆ
ಮಧ್ಯಪ್ರಾಚ್ಯದಲ್ಲಿ ಇರಾನ್ ಮೇಲೆ ಇಸ್ರೇಲ್ ಹಾಗೂ ಅಮೆರಿಕ ನಡೆಸಿದ ಜಂಟಿ ಯುದ್ಧದ ಉದ್ವಿಗ್ನತೆ ಹೆಚ್ಚುತ್ತಿದ್ದು, ಜಗತ್ತಿನ ಗಮನ ಸೆಳೆದಿದೆ. ಇತ್ತೀಚಿನ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಈ ಸಂಘರ್ಷ ದೊಡ್ಡ ಯುದ್ಧವಾಗಿ ಮಾರ್ಪಡುವ ಸಾಧ್ಯತೆ ಇದೆ ಎಂಬ ಆತಂಕ ವ್ಯಕ್ತವಾಗಿದೆ. ಈ ವಿಷಯದ ಕುರಿತು ನಿವೃತ್ತ ವಾಯುಪಡೆಯ ಅಧಿಕಾರಿ ಹಾಗೂ ಅಂತರರಾಷ್ಟ್ರೀಯ ವ್ಯವಹಾರ ತಜ್ಞರಾದ ಮೋಹನ್ ಚಿತ್ತಲೆ ಮಾತನಾಡಿ ಈ
ಚಿಂಚೋಳಿ | ಸತತ ಪ್ರಯತ್ನದಿಂದ ಗುರಿ ಮುಟ್ಟಲು ಸಾಧ್ಯ: ಮಾಜಿ ಶಾಸಕ ತೇಲ್ಕೂರ
ಚಿಂಚೋಳಿ: ವಿದ್ಯಾರ್ಥಿಗಳು ಕಠಿಣ ಪರಿಶ್ರಮ, ಸತತ ಪ್ರಯತ್ನದಿಂದ ಮಾತ್ರ ಉದ್ದೇಶಿತ ಗುರಿ ಮುಟ್ಟಲು ಸಾಧ್ಯ ಎಂದು ಮಾಜಿ ಶಾಸಕ ರಾಜಕುಮಾರ ಪಾಟೀಲ್ ತೇಲ್ಕೂರ ಅಭಿಪ್ರಾಯಪಟ್ಟರು. ಚಿಂಚೋಳಿ ತಾಲೂಕಿನ ಸುಲೇಪೇಟ ಗ್ರಾಮದ ಶಿವಪ್ರಸಾದ ಏಜ್ಯುಕೇಷನಲ್ ಮತ್ತು ಚಾರಿಟೇಬಲ ಟ್ರಸ್ಟನ ಶಿವಪ್ರಸಾದ ಕಿರಿಯ ಪ್ರಾಥಮಿಕ ಶಾಲೆಯ 10ನೇ ಶಾಲಾ ವಾರ್ಷಿಕೋತ್ಸವದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸ್ಪರ್ಧಾತ್ಮಕ ಜಗತ್ತಿನಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಸಾಕಷ್ಟು ಪೈಪೋಟಿ ಇದೆ. ಇದನ್ನು ವಿದ್ಯಾರ್ಥಿಗಳು ಅರಿತುಕೊಳ್ಳುವುದು ಅವಶ್ಯವಿದೆ ಎಂದರು. ಇಂದಿನ ವ್ಯವಸ್ಥೆಯಲ್ಲಿ ಅನೇಕ ಅನುಕೂಲತೆ ಮತ್ತು ಅವಕಾಶಗಳಿವೆ. ವಿದ್ಯಾರ್ಥಿಗಳು ಅವುಗಳನ್ನು ಸರಿಯಾಗಿ ಸದುಪಯೋಗ ಪಡಿಸಿಕೊಂಡಲ್ಲಿ ತಾವು ಇಟ್ಟುಕೊಂಡ ಗುರಿ ತಲುಪಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು. ಸಂಸ್ಥೆ ಕಾರ್ಯದರ್ಶಿಗಳಾದ ಅರವಿಂದ ಬಸೂದೆ ಮಾತನಾಡಿ, ವಿದ್ಯಾರ್ಥಿಗಳು ಉತ್ತಮ ಅಧ್ಯಯನ ಮಾಡಿದಾಗ ಮಾತ್ರ ಜೀವನದಲ್ಲಿ ಗುರಿ ಮುಟ್ಟಲು ಸಾಧ್ಯವಾಗುತ್ತದೆ. ನಿಷ್ಕಾಳಜಿ ವಹಿಸಿದರೆ ಗಂಭೀರವಾದ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಕೋರವಿ ದೊಡ್ಡತಾಂಡದ ಕಾಳಿಕಾದೇವಿ ಶಕ್ತಿ ಪೀಠದ ಶ್ರೀ ವಿಠಲ ಮಹಾರಾಜ, ವಿಷ್ಣುರಾವ ಮಹಾರಾಜ, ಡಾ.ವಿಶ್ವನಾಥ ಪವಾರ, ದೇವೇಂದ್ರಪ್ಪ ಹೊಳ್ಳರ, ಮಹಾರುದ್ರಪ್ಪ ದೇಸಾಯಿ, ಸುಲೇಪೇಟ ಸಿಪಿಐ ಕೃಷ್ಣಕುಮಾರ, ರುದ್ರಶೆಟ್ಟಿ ಪಡಶೆಟ್ಟಿ, ಶಿವಲಿಂಗಯ್ಯಾ ಶಾಸ್ತ್ರಿ, ಸುನೀಲಕುಮಾರ ಕೋರಿ, ಡಾಕಪ್ಪಾ ಮಾಸ್ಟರ ರಾಠೋಡ. ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯ ಅಕ್ರಂಪಾಶಾ ಮೋಮಿನ , ಸುನೀಲ ಸಲಗಾರ, ಶಿವಕುಮಾರ ತಳವಾರ,ನಾಗುರಾವ ಬಸುದೆ, ಓಂ ಪ್ರಕಾಶ ಪಾಟೀಲ್, ರಾಜಶೇಖರ ಶ್ರೀಗಿರಿ, ಸುಧಾಕರ್ ಪಾಟೀಲ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಒಂದೇ ಆವೃತ್ತಿಯ ವಿಶ್ವಕಪ್ನಲ್ಲಿ ಗರಿಷ್ಠ ರನ್: ವಿರಾಟ್ ಕೊಹ್ಲಿ ದಾಖಲೆ ಮುರಿದ ಫರ್ಹಾನ್
ಪಲ್ಲೆಕೆಲೆ: ಪಾಕಿಸ್ತಾನ ತಂಡದ ಆರಂಭಿಕ ಬ್ಯಾಟರ್ ಸಾಹಿಬ್ರಝಾ ಫರ್ಹಾನ್ ಒಂದೇ ಆವೃತ್ತಿಯ ಟಿ-20 ವಿಶ್ವಕಪ್ ಟೂರ್ನಿಯಲ್ಲಿ ಗರಿಷ್ಠ ರನ್ ಗಳಿಸಿ ಭಾರತದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಅವರ ದಾಖಲೆಯನ್ನು ಮುರಿದಿದ್ದಾರೆ. ಶ್ರೀಲಂಕಾ ವಿರುದ್ಧ ಶನಿವಾರ ನಡೆದ ಟಿ-20 ವಿಶ್ವಕಪ್ನ ಸೂಪರ್-8 ಪಂದ್ಯದಲ್ಲಿ ಫರ್ಹಾನ್ ಈ ಸಾಧನೆ ಮಾಡಿದರು. ಪ್ರಸಕ್ತ ಪಂದ್ಯಾವಳಿಯಲ್ಲಿ ಗರಿಷ್ಠ ರನ್ (323) ಗಳಿಸಿರುವ ಬಲಗೈ ಆಟಗಾರ ಫರ್ಹಾನ್ ಭಾರತದ ಮಾಜಿ ನಾಯಕ ಕೊಹ್ಲಿ 2014ರ ಆವೃತ್ತಿಯ ಟಿ-20 ವಿಶ್ವಕಪ್ನಲ್ಲಿ ನಿರ್ಮಿಸಿದ್ದ ದಾಖಲೆ(319 ರನ್)ಮುರಿದಿದ್ದಾರೆ. ಕೊಹ್ಲಿ ದಾಖಲೆ ಮುರಿಯಲು ಫರ್ಹಾನ್ಗೆ ಇಂದು 38 ರನ್ ಅಗತ್ಯವಿತ್ತು. 40 ರನ್ ಗಳಿಸುತ್ತಲ್ಲೇ ಕೊಹ್ಲಿ ದಾಖಲೆಯನ್ನು ಮುರಿದು ಮುನ್ನುಗ್ಗಿದರು. 2026ರ ಟಿ-20 ವಿಶ್ವಕಪ್ನಲ್ಲಿ ಫರ್ಹಾನ್ ಎರಡು ಶತಕ ಹಾಗೂ ಮೂರು ಅರ್ಧಶತಕಗಳನ್ನು ಗಳಿಸಿದ್ದಾರೆ. ಒಂದೇ ಆವೃತ್ತಿಯ ಟಿ-20 ವಿಶ್ವಕಪ್ನಲ್ಲಿ ಗರಿಷ್ಠ ರನ್ ಗಳಿಸಿದ ಆಟಗಾರರು: ► 323-ಸಾಹಿಬ್ಝದಾ ಫರ್ಹಾನ್, ಪಾಕಿಸ್ತಾನ(2026) ► 319-ವಿರಾಟ್ ಕೊಹ್ಲಿ, ಭಾರತ(2014) ► 317-ತಿಲಕರತ್ನೆ ದಿಲ್ಶನ್, ಶ್ರೀಲಂಕಾ(2009) ► 303-ಬಾಬರ್ ಆಝಂ, ಪಾಕಿಸ್ತಾನ(2021) ► 302-ಮಹೇಲ ಜಯವರ್ಧನೆ, ಶ್ರೀಲಂಕಾ(2010) ► 296-ವಿರಾಟ್ ಕೊಹ್ಲಿ, ಭಾರತ(2022) ► 295-ತಮೀಮ್ ಇಕ್ಬಾಲ್, ಬಾಂಗ್ಲಾದೇಶ(2016) ► 289-ಡೇವಿಡ್ ವಾರ್ನರ್,ಆಸ್ಟ್ರೇಲಿಯ(2021) ► 281-ಮುಹಮ್ಮದ್ ರಿಝ್ವಾನ್,ಪಾಕಿಸ್ತಾನ(2021)
ಆಳಂದ | ಗ್ರಾಮೀಣ ಅಭಿವೃದ್ಧಿಗೆ ಸಿಎಸ್ಆರ್ ಬಲ : ಸುಮಿತ್ ಬರಾಟ್
ಆಳಂದ : ಸ್ವಚ್ಛ ಕುಡಿಯುವ ನೀರು, ಶಿಕ್ಷಣ, ಕೌಶಲ್ಯಾಭಿವೃದ್ಧಿ ಹಾಗೂ ಮೂಲಸೌಕರ್ಯಗಳ ಅವೃದ್ಧಿಯ ಮೂಲಕ ಗ್ರಾಮೀಣ ಸಮುದಾಯಗಳ ಸಮಗ್ರ ಅಭಿವೃದ್ಧಿಗೆ ಉತ್ತೇಜನ ನೀಡುವುದು ಸಿಎಸ್ಆರ್ ಯೋಜನೆಗಳ ಪ್ರಮುಖ ಉದ್ದೇಶವಾಗಿದೆ ಎಂದು ಬ್ಲುಪೈನ್ ಎನರ್ಜಿ ಸಂಸ್ಥೆಯ ದೆಹಲಿ ಮುಖ್ಯ ಕಚೇರಿ ಮುಖ್ಯ ಸಸ್ಟೇನಬಿಲಿಟಿ ಅಧಿಕಾರಿ ಸುಮಿತ್ ಬರಾಟ್ ಹೇಳಿದರು. ತಾಲೂಕಿನ ಮೋಘಾ, ಜಮಗಾ, ಸಕ್ಕರಗಾ, ಚಿಂಚೋಳಿ ಬಿ. ಹಿರೋಳಿ ಸೇರಿ ಹಲವು ಗ್ರಾಮಗಳಲ್ಲಿ ಬ್ಲುಪೈನ್ ಎನರ್ಜಿ ಸಂಸ್ಥೆಯು ಎರಡು ದಿನಗಳಕಾಲ ವ್ಯಾಪಕ ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ ಸಿಎಸ್ಆರ್ ಚಟುವಟಿಕೆಗಳನ್ನು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಬ್ಲುಪೈನ್ ಎನರ್ಜಿ ಸಂಸ್ಥೆಯ ದೃಷ್ಟಿಕೋನವು ಕೇವಲ ಇಂಧನ ಉತ್ಪಾದನೆಗೆ ಸೀಮಿತವಲ್ಲ. ನಾವು ಕಾರ್ಯನಿರ್ವಹಿಸುವ ಗ್ರಾಮಗಳ ಸಾಮಾಜಿಕ ಹಾಗೂ ಆರ್ಥಿಕ ಅಭಿವೃದ್ಧಿಗೆ ಕೈಜೋಡಿಸುವುದು ನಮ್ಮ ಬದ್ಧತೆ. ಸ್ವಚ್ಛ ನೀರು, ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿ ಗ್ರಾಮೀಣ ಬದುಕನ್ನು ಸುಧಾರಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ ಎಂದರು. ಕoಪನಿಯ ಹಿರಿಯ ವ್ಯವಸ್ಥಾಪಕಿ ಸಾಮಾಜಿಕ ಮತ್ತು ಸ್ಥಿರತೆ ವಿಭಾಗದ ಸುಶ್ರೀ ಸುಚಿತ್ರಾ ಬಿಸೇನ್ ಅವರು, “ಈ ಯೋಜನೆಗಳು ಸ್ಥಳೀಯ ಸಮುದಾಯಕ್ಕೆ ದೀರ್ಘಕಾಲಿಕ ಲಾಭ ನೀಡಲಿವೆ. ಮಿನಿ ಸೈನ್ಸ್ ಸೆಂಟರ್ ಮತ್ತು ಕೌಶಲ್ಯಾಭಿವೃದ್ಧಿ ಕಾರ್ಯಕ್ರಮಗಳು ಮಕ್ಕಳ ಹಾಗೂ ಯುವಕರ ಭವಿಷ್ಯವನ್ನು ಬೆಳಗಿಸಲಿವೆ. ಸಮುದಾಯದ ಸಹಭಾಗಿತ್ವವಿಲ್ಲದೆ ಅಭಿವೃದ್ಧಿ ಸಾಧ್ಯವಿಲ್ಲ” ಎಂದು ಹೇಳಿದರು. ಸಂವಹನ ವಿಭಾಗದ ವ್ಯವಸ್ಥಾಪಕಿ ಅಂಜಲಿ ಬಾವಾ ಮಾತನಾಡಿದರು. ಸ್ಥಳೀಯ ಯೋಜನಾ ತಂಡದ ಸೌರ ಘಟಕ ವ್ಯವಸ್ಥಾಪಕ ಅಮರನಾಥ್, ಗಾಳಿ ವಿದ್ಯುತ್ ಘಟಕ ವ್ಯವಸ್ಥಾಪಕ ವಿಜಯ ಶ್ರೀವಾಸ್ತವ್ ಸೇರಿದಂತೆ ಸಿಬ್ಬಂದಿ, ಗ್ರಾಮ ಸರಪಂಚರು ಹಾಗೂ ಪಂಚಾಯಿತಿ ಪ್ರತಿನಿಧಿಗಳು ಉಪಸ್ಥಿತರಿದ್ದರು. ಫೌಂಡೇಶನ್ ನಿರ್ದೇಶಕ ಶಿವಧರ್ ದುಬೆ, ಕಾರ್ಯಕ್ರಮ ವ್ಯವಸ್ಥಾಪಕ ಅಮಿತ್ ಸಾಗರ್, ಕ್ಷೇತ್ರ ಸಂಯೋಜಕರು ಪವನ್ ಹಾಗೂ ಆಶುತೋಷ್ ಸಿಂಗ್ ಭಾಗವಹಿಸಿದ್ದರು. ಈ ಯೋಜನೆಗಳನ್ನು ಪಿಆರ್ಎಸ್ಡಿ ಫೌಂಡೇಶನ್ ಸಹಯೋಗದೊಂದಿಗೆ ಅನುಷ್ಠಾನಗೊಳಿಸಲಾಯಿತು. ಕೆರೂರು, ಅಂಬೇವಾಡ ಹಾಗೂ ಚಿಂಚೋಳಿ ಗ್ರಾಮಗಳಲ್ಲಿ ಆರ್ಒ ನೀರು ಶುದ್ಧೀಕರಣ ಘಟಕಗಳನ್ನು ಸ್ಥಾಪಿಸಿ ಗ್ರಾಮಸ್ಥರಿಗೆ ಶುದ್ಧ ಹಾಗೂ ಸುರಕ್ಷಿತ ಕುಡಿಯುವ ನೀರಿನ ಸೌಲಭ್ಯ ಒದಗಿಸಲಾಯಿತು. ಜಾಮಗಾ ಜೆ ಗ್ರಾಮದಲ್ಲಿ ಆರ್ಒ ಘಟಕದೊಂದಿಗೆ ತರಬೇತಿ ಕೇಂದ್ರ ಸ್ಥಾಪಿಸಲಾಯಿತು. ಮೊಘಾ ಬಿ. ಗ್ರಾಮದಲ್ಲಿ ಕೌಶಲ್ಯಾಭಿವೃದ್ಧಿ ತರಬೇತಿ ಕೇಂದ್ರ ಉದ್ಘಾಟಿಸಲಾಯಿತು. ಜಿಡಗಾ ಗ್ರಾಮದಲ್ಲಿ ಸೌರ ಬೀದಿ ದೀಪಗಳನ್ನು ಅಳವಡಿಸಿ ಗ್ರಾಮಸ್ಥರ ಸುರಕ್ಷತೆ ಮತ್ತು ಸಂಚಾರ ಸೌಲಭ್ಯವನ್ನು ಕಲ್ಪಿಸಲಾಗಿದೆ ಎಂದು ಅವರು ಹೇಳಿದರು.
'ಮದುವೆ ವಿಚಾರದಲ್ಲಿ ನಿನಗೆ ಅಶುಭ' - ಜ್ಯೋತಿಷಿ ಭವಿಷ್ಯಕ್ಕೆ ಮನನೊಂದು ಬೆಂಗಳೂರು ಟೆಕ್ಕಿ ಸಾವಿಗೆ ಶರಣು!
ಜ್ಯೋತಿಷಿ ಮಾತಿಗೆ ಮನನೊಂದು ಬೆಂಗಳೂರು ಯುವತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮದುವೆ ವಿಚಾರದಲ್ಲಿ ನಿಮಗೆ ಅಶುಭವಾಗಲಿದೆ ಎಂದು ಹೇಳಿದ್ದ ಜ್ಯೋತಿಷಿ ವಿವಿಧ ಪೂಜೆಗೆ ಸೂಚನೆ ನೀಡಿದ್ದರು. ಪೋಷಕರು ಪೂಜೆ ಮಾಡಿಸಿಕೊಂಡು ಬರುವಷ್ಟರಲ್ಲಿ ಯುವತಿ ಸಾವಿಗೆ ಶರಣಾಗಿದ್ದಾರೆ. ಬಾಗಲಗುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
War: ಇಸ್ರೇಲ್-ಯುಎಸ್ ಜಂಟಿ ದಾಳಿಗೆ ಇರಾನ್ ರಕ್ಷಣಾ ಸಚಿವ, ಐಆರ್ಜಿಸಿ ಕಮಾಂಡರ್ ಸಾವು
Iran-Israel War: ಇರಾನ್, ಯುಎಸ್, ಮತ್ತು ಇಸ್ರೇಲ್ ಮೂರು ರಾಷ್ಟ್ರಗಳು ಯುದ್ಧದ ಕಾರಣದಿಂದಾಗಿ ಜಾಗತಿಕವಾಗಿ ಮುಂಚೂಣಿಗೆ ಬಂದಿವೆ. ನಿರೀಕ್ಷೆಯಂತೆ ಯುಎಸ್ ಸಹ ಇರಾನ್ ಮೇಲೆ ದಾಳಿ ಮಾಡಿದೆ. ಇಂದು ಶನಿವಾರ (ಫೆ.28) ಇಸ್ರೇಲ್ ಮತ್ತು ಅಮೆರಿಕ ದೇಶಗಳು ಇರಾನ್ ಮೇಲೆ ನಡೆಸಿದ ಜಂಟಿ ವೈಮಾನಿಕ ದಾಳಿಯಲ್ಲಿ ಇರಾನ್ನ ಕಮಾಂಡರ್ ಹಾಗೂ ರಕ್ಷಣಾ ಸಚಿವ ಮೇಜರ್ ಜನರಲ್ ಅವರನ್ನು
ಕುವೈತ್ ವಿಮಾನ ನಿಲ್ದಾಣದ ಮೇಲೆ ಡ್ರೋನ್ ದಾಳಿ
ಪ್ರಯಾಣಿಕರ ಟರ್ಮಿನಲ್ ಗೆ ಸೀಮಿತ ಹಾನಿ; ಇರಾನಿನಲ್ಲಿ ಮುಂದುವರಿದ ಇಸ್ರೇಲ್ ವಾಯುದಾಳಿ
ಮಕ್ಕಳನ್ನು ಮೊಬೈಲ್ನಿಂದ ದೂರ ಇಡಲು ರಂಗಚಟುವಟಿಕೆ ಅಗತ್ಯ: ಪೂರ್ಣಿಮಾ
ಸುಮನಸಾ ಕೊಡವೂರು ನಾಟಕೋತ್ಸವ ರಂಗಹಬ್ಬ ಸಮಾರೋಪ
ಟ್ರಂಪ್ ಮತ್ತು ಇಸ್ರೇಲ್ ಮಧ್ಯಪ್ರಾಚ್ಯವನ್ನು ಪಾತಾಳಕ್ಕೆ ತಳ್ಳುತ್ತಿದ್ದಾರೆ: ರಶ್ಯ ಟೀಕೆ
ಮಾಸ್ಕೋ: ಇಸ್ರೇಲ್ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್ನ ಮೇಲೆ ಅಪಾಯಕಾರಿ ಬೇಜವಾಬ್ದಾರಿ ದಾಳಿ ನಡೆಸುತ್ತಿದ್ದಾರೆ ಎಂದು ರಶ್ಯ ಖಂಡಿಸಿದ್ದು ಇಬ್ಬರು ಸೇರಿಕೊಂಡು ಸಂಪೂರ್ಣ ಮಧ್ಯಪ್ರಾಚ್ಯವನ್ನು ಪಾತಾಳಕ್ಕೆ ತಳ್ಳುತ್ತಿದ್ದಾರೆ ಎಂದು ಟೀಕಿಸಿದೆ. ಅಮೆರಿಕ ಮತ್ತು ಇಸ್ರೇಲ್ ಮತ್ತೊಮ್ಮೆ ಅಪಾಯಕಾರಿ ದುಸ್ಸಾಹಸವನ್ನು ಕೈಗೊಂಡಿದೆ. ಅದು ಈ ಪ್ರದೇಶವನ್ನು ಮಾನವೀಯ, ಆರ್ಥಿಕ ಮತ್ತು ಪ್ರಾಯಶಃ ವಿಕಿರಣಶಾಸ್ತ್ರದ ದುರಂತಕ್ಕೆ ತ್ವರಿತವಾಗಿ ತಳ್ಳುತ್ತದೆ ಎಂದು ರಶ್ಯದ ವಿದೇಶಾಂಗ ಇಲಾಖೆ ಹೇಳಿದ್ದು ಇರಾನ್ನಿಂದ ತಕ್ಷಣ ನಿರ್ಗಮಿಸುವಂತೆ ತನ್ನ ಪ್ರಜೆಗಳಿಗೆ ಕರೆ ನೀಡಿದೆ. ಮಾತುಕತೆ ಒಂದು ನೆಪ ಮಾತ್ರ. ಶಾಂತಿಪಾಲಕ ಮತ್ತೆ ಶುರು ಮಾಡಿದ್ದಾರೆ' ಎಂದು ಟ್ರಂಪ್ರನ್ನು ಪರೋಕ್ಷವಾಗಿ ಉಲ್ಲೇಖಿಸಿ ರಶ್ಯದ ಮಾಜಿ ಅಧ್ಯಕ್ಷ, ರಾಷ್ಟ್ರೀಯ ಭದ್ರತಾ ಸಮಿತಿಯ ಅಧ್ಯಕ್ಷ ಡಿಮಿಟ್ರಿ ಮೆಡ್ವೆಡೇವ್ `ಎಕ್ಸ್'ನಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಪ್ರದೇಶದಲ್ಲಿ ಉಲ್ಬಣಗೊಳ್ಳುತ್ತಿರುವ ಪರಿಸ್ಥಿತಿ ಅಪಾಯಕಾರಿ ಎಂದು ಯುರೋಪಿಯನ್ ಯೂನಿಯನ್ ಎಚ್ಚರಿಸಿದ್ದು ಯಾವುದೇ ಸಂಘರ್ಷದಲ್ಲಿ ನಾಗರಿಕರ ರಕ್ಷಣೆಗೆ ಮೊದಲ ಆದ್ಯತೆ ನೀಡಬೇಕು ಎಂದು ಆಗ್ರಹಿಸಿದೆ. ಬ್ರಿಟನ್, ಉಕ್ರೇನ್ ಸೇರಿದಂತೆ ಜಾಗತಿಕ ಮುಖಂಡರು ಮಧ್ಯಪ್ರಾಚ್ಯದಲ್ಲಿ ಪರಿಸ್ಥಿತಿ ಉಲ್ಬಣಿಸಿರುವ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.
ಪಾಕ್ಗೆ ಟ್ರಂಪ್ ಬೆಂಬಲ | ಭಾರತದ ‘ಹಗ್ಲೊಮಸಿ’ಗೆ ಮತ್ತೆ ಹಿನ್ನಡೆ; ಪ್ರಧಾನಿ ಮೋದಿ ವಿರುದ್ಧ ಕಾಂಗ್ರೆಸ್ ವಾಗ್ದಾಳಿ
ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಶನಿವಾರ ವಾಗ್ದಾಳಿ ನಡೆಸಿರುವ ಕಾಂಗ್ರೆಸ್, ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಅಫ್ಘಾನಿಸ್ತಾನದೊಂದಿಗೆ ಯುದ್ಧದಲ್ಲಿ ಪಾಕಿಸ್ಥಾನಕ್ಕೆ ನೀಡಿರುವ ಸಂಪೂರ್ಣ ಬೆಂಬಲವು ಭಾರತೀಯ ‘ಹಗ್ಲೊಮಸಿ’ಗೆ (ಆಲಿಂಗನ ಮತ್ತು ರಾಜತಾಂತ್ರಿಕತೆಯ ಮಿಶ್ರಪದ) ಇನ್ನೊಂದು ಹಿನ್ನಡೆಯಾಗಿದೆ ಎಂದು ಹೇಳಿದೆ. ಜಗತ್ತು, ವಿಶೇಷವಾಗಿ ಅಮೆರಿಕವು ‘ಸ್ವಯಂಘೋಷಿತ ವಿಶ್ವಗುರು’ವಿನ ನಿಜಸ್ವರೂಪವನ್ನು ಅರಿತುಕೊಂಡಿದೆ ಎಂದು ಅದು ಹೇಳಿದೆ. ಪಹಲ್ಗಾಮ್ ಭಯೋತ್ಪಾದಕ ದಾಳಿಯನ್ನು ಪ್ರಚೋದಿಸಿದ್ದ ಪಾಕ್ ಸೇನಾ ಮುಖ್ಯಸ್ಥ ಜನರಲ್ ಆಸಿಮ್ ಮುನೀರ್ರನ್ನು ಅಮೆರಿಕವು ಪ್ರಶಂಸಿಸಿದ್ದು ಮತ್ತು ಅಫ್ಘಾನಿಸ್ತಾನದೊಂದಿಗೆ ಯುದ್ಧದಲ್ಲಿ ಪಾಕಿಸ್ತಾನಕ್ಕೆ ಸಂಪೂರ್ಣ ಬೆಂಬಲವನ್ನು ಘೋಷಿಸಿದ್ದು ದೇಶದ ರಾಜತಾಂತ್ರಿಕತೆಗೆ ಇನ್ನೊಂದು ಹಿನ್ನಡೆಯಾಗಿದೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ (ಸಂವಹನ) ಜೈರಾಮ್ ರಮೇಶ್ ಅವರು ಎಕ್ಸ್ ಪೋಸ್ಟ್ನಲ್ಲಿ ಬೆಟ್ಟು ಮಾಡಿದ್ದಾರೆ. ‘ಅಮೆರಿಕದೊಂದಿಗೆ ನಮ್ಮ ಆರ್ಥಿಕ ರಾಜತಾಂತ್ರಿಕತೆಯು ಸಂಪೂರ್ಣವಾಗಿ ವಿಫಲಗೊಂಡಿದೆ. ಮೋದಿಯವರು ದಿಢೀರ್ನೆ ಏಕಪಕ್ಷೀಯ ವ್ಯಾಪಾರ ಒಪ್ಪಂದಕ್ಕೆ ಶರಣಾಗಿದ್ದಾರೆ. ಭಾರತವು ಅಮೆರಿಕದಿಂದ ಕೃಷ್ಯುತ್ಪನ್ನಗಳ ಆಮದಿಗೆ ಸ್ಪಷ್ಟ ಬದ್ಧತೆಯನ್ನು ವ್ಯಕ್ತಪಡಿಸಿದ್ದರೆ ಅಮೆರಿಕವು ಭಾರತದಿಂದ ಹೆಚ್ಚಿನ ಆಮದುಗಳಿಗೆ ಅವಕಾಶದ ಅಸ್ಪಷ್ಟ ಭರವಸೆಗಳನ್ನಷ್ಟೇ ನೀಡಿದೆ. ಅಷ್ಟು ಮಾತ್ರವಲ್ಲ, ಒಪ್ಪಂದದ ಬಳಿಕ ಅಮೆರಿಕವು ಭಾರತದಿಂದ ಆಮದಾಗುವ ಸೋಲಾರ್ ಮಾಡ್ಯೂಲ್ಗಳ ಮೇಲೆ ಶೇ.125.87ರಷ್ಟು ಸುಂಕವನ್ನೂ ಹೇರಿದೆ ’ ಎಂದು ರಮೇಶ್ ಹೇಳಿದ್ದಾರೆ.
ಮಾ.3-4ರಂದು ವಾರಾಹಿ ಬಲದಂಡೆ ಯೋಜನೆ ತ್ವರಿತ ಅನುಷ್ಠಾನಕ್ಕಾಗಿ ಪಾದಯಾತ್ರೆ
ಕುಂದಾಪುರ, ಫೆ.28: ವಾರಾಹಿ ಬಲದಂಡೆ ಯೋಜನೆ ತ್ವರಿತ ಅನುಷ್ಠಾನ ಮತ್ತು ಸಿದ್ಧಾಪುರ ಹಾಗೂ ಸೌಕೂರು ಏತ ನೀರಾವರಿ ಯೋಜನೆಯಲ್ಲಿ ಬಿಟ್ಟು ಹೋದ ಕೃಷಿ ಭೂಮಿಗೆ ಮತ್ತು ಪ್ರದೇಶಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸುವಂತೆ ರೈತರ ಪರವಾಗಿ ಸರಕಾರದ ಗಮನ ಸೆಳೆಯಲು ಮತ್ತು ಜನಜಾಗೃತಿ ಮೂಡಿಸಲು ವಂಡ್ಸೆ ಮತ್ತು ಬೈಂದೂರು ಬ್ಲಾಕ್ ಕಾಂಗ್ರೆಸ್ ಸಮಿತಿ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ, ರೈತರೊಡಗೂಡಿ ಕಂಡ್ಲೂರಿನಿಂದ ಸಿದ್ಧಾಪುರದವರೆಗೆ ಮಾ.3 ಮತ್ತು 4ರಂದು ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ ತಿಳಿಸಿದ್ದಾರೆ. ಕುಂದಾಪುರದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಾರಾಹಿ ನೀರಾವರಿ ಮೂಲ ಯೋಜನೆ ದಾರಿ ತಪ್ಪುತ್ತಿದೆ. ಮೂಲ ಯೋಜನೆಯಂತೆ ವಾರಾಹಿ ಯೋಜನೆ ಅನುಷ್ಠಾನಗೊಳ್ಳಬೇಕು. ಆ ಬಳಿಕ ಉಪ ಯೋಜನೆಗಳ ಬಗ್ಗೆ ಗಮನ ಹರಿಸಬೇಕು. 47 ವರ್ಷಗಳಿಂದ ವಾರಾಹಿ ಬಲದಂಡೆ ಪೂರ್ಣಗೊಂಡಿಲ್ಲ. ಯಾವುದೇ ಕಾರಣಕ್ಕೂ ಸಿದ್ಧಾಪುರ ಏತ ನೀರಾವರಿ ಯೋಜನೆ ರದ್ದು ಮಾಡಲು ಬಿಡುವುದಿಲ್ಲ. ಸಿದ್ಧಾಪುರ ಮತ್ತು ಸೌಕೂರು ಏತ ನೀರಾವರಿ ಯೋಜನೆಯಲ್ಲಿ ಬಿಟ್ಟು ಹೋದ ಕೃಷಿ ಭೂಮಿಗೆ ನೀರಾವರಿ ಸೌಲಭ್ಯ ಒದಗಿಸಬೇಕು. ಜಲಜೀವನ್ ಮಿಷನ್ ಯೋಜನೆಯಡಿ ನೀರು ನೀಡಲು ಪೈಪ್ಲೈನ್ ಮಾತ್ರ ಅಳವಡಿಸಲಾಗಿದ್ದು, ಇದಕ್ಕೆ ವಾರಾಹಿ ನೀರು ನೀಡಲು ಗಮನಹರಿಸಬೇಕು ಎಂದರು. ವಾರಾಹಿ ನೀರನ್ನು ಉಪಯೋಗಿಸಿಕೊಂಡು ಮೂಲ ಯೋಜನೆಯ ವ್ಯಾಪ್ತಿಯನ್ನು ಬಿಟ್ಟು ಬೇರೆ ಬೇರೆ ಕಡೆಗೆ ನೀರನ್ನು ಕೊಂಡೊಯ್ಯಲಾಗುತ್ತಿದೆ. ಕುಡಿಯಲು ನೀರು ತೆಗೆದುಕೊಂಡು ಹೋಗಲು ನಮ್ಮ ಆಕ್ಷೇಪವಿಲ್ಲ. ಉಡುಪಿ ಜಿಲ್ಲೆಯಲ್ಲಿ ಹರಿಯುವ ವಾರಾಹಿ ಅಲ್ಲದೆ ಇತರ ನದಿಗಳ ನೀರನ್ನು ಉಪಯೋಗಿಸಿಕೊಂಡು ಜಿಲ್ಲೆಯ ಜನರ ನೀರಿನ ಅವಶ್ಯಕತೆ ಪೂರೈಸಲು ಅಗತ್ಯ ಯೋಜನೆ ರೂಪಿಸಲು ಕ್ರಮ ಕೈಗೊಳ್ಳುವಂತೆ, ಮೂಲ ಯೋಜನೆಯಲ್ಲಿ ಪ್ರಾಸ್ತಾವಿಕವಾಗಿರುವ ಪ್ರದೇಶಗಳಿಗೆ ಮೊದಲು ನೀರು ನೀಡಬೇಕು. ವಿವಿಧ ಗ್ರಾಮಗಳಿಗೆ ನೀರು ನೀಡುವ ಸಿದ್ಧಾಪುರ ಏತ ನೀರಾವರಿ ಯೋಜನೆಯ ಮೂಲ ಉದ್ದೇಶ ಯಾವುದೇ ಕಾರಣಕ್ಕೂ ಬದಲಾಗಬಾರದು ಎಂದು ಅವರು ಒತ್ತಾಯಿಸಿದರು. ವಾರಾಹಿ ಯೋಜನೆ ಸಂಬಂಧ ಸರಕಾರ ತಜ್ಞರ ಸಮಿತಿ ರಚಿಸಿದ್ದು, ಸಮಿತಿ ಈಗಾಗಲೇ ಸ್ಥಳಕ್ಕೆ ಭೇಟಿ ನೀಡಿ ವರದಿ ಸಿದ್ಧಪಡಿಸುತ್ತಿದೆ. ತಜ್ಞರ ಸಮಿತಿ ನೀಡುವ ವರದಿಯನ್ನು ಒಪ್ಪುತ್ತೇವೆ ಮತ್ತು ವರದಿಗೆ ತಲೆಬಾಗುತ್ತೇವೆ. ವಾರಾಹಿ ನದಿ ಉಳಿಸಿ ಕಮಿಟಿ ಮೂಲಕ ರೈತರ ಪರವಾಗಿ ಹೋರಾಟಕ್ಕೆ ಚಾಲನೆ ನೀಡಲಾಗಿದ್ದು, ಸಮಿತಿಯ ಪ್ರಮುಖ ರೊಂದಿಗೆ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಯವರನ್ನು ಭೇಟಿ ಮಾಡಿ ವಾರಾಹಿ ಮೂಲ ಯೋಜನೆ ಅನುಷ್ಠಾನಕ್ಕೆ ಆಗ್ರಹಿಸಲು ನಿರ್ಧರಿಸಿದ್ದೇವೆ ಎಂದು ಅವರು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ವಕ್ತಾರ ವಿಕಾಸ್ ಹೆಗ್ಡೆ, ವಂಡ್ಸೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರದೀಪ ಕುಮಾರ್ ಶೆಟ್ಟಿ ಗುಡಿಬೆಟ್ಟು, ಬೈಂದೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅರವಿಂದ ಪೂಜಾರಿ, ಪ್ರಮುಖರಾದ ಸಂಜೀವ ಶೆಟ್ಟಿ ಸಂಪಿಗೇಡಿ, ಸತೀಶ್ ಕೊಠಾರಿ ಉಪಸ್ಥಿತರಿದ್ದರು.
ಕಲಬುರಗಿ | ಶಿವಾಜಿ ಜಯಂತಿ ಮೆರವಣಿಗೆ ವೇಳೆ ಕಲ್ಲುತೂರಾಟ ಪ್ರಕರಣದ ಸಮಗ್ರ ತನಿಖೆಗೆ ಆಗ್ರಹ
ಕಲಬುರಗಿ: ಬಾಗಲಕೋಟೆಯಲ್ಲಿ ಶಿವಾಜಿ ಜಯಂತಿ ಮೆರವಣಿಗೆ ವೇಳೆ ನಡೆದ ಕಲ್ಲುತೂರಾಟ ಪ್ರಕರಣವನ್ನು ರಾಜ್ಯ ಸರ್ಕಾರ ಸಮಗ್ರವಾಗಿ ತನಿಖೆ ನಡೆಸಬೇಕು ಎಂದು ಸೌಹಾರ್ದ ಕರ್ನಾಟಕ ವೇದಿಕೆಯ ಕೆ.ನೀಲಾ, ಮೀನಾಕ್ಷಿ ಬಾಳಿ ಒತ್ತಾಯಿಸಿದರು. ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಲ್ಲಿರುವ ಎಸ್ಪಿ ಮತ್ತು ಡಿಸಿ ಅವರನ್ನು ವರ್ಗಾವಣೆ ಮಾಡಬೇಕು. ಮುಂಬರುವ ಹೋಳಿ, ಯುಗಾದಿ, ರಮಝಾನ್ ಹಬ್ಬಕ್ಕೆ ಯಾವುದೇ ಸಮಸ್ಯೆ ಆಗದಂತೆ ನೋಡಿಕೊಳ್ಳಬೇಕು. ಉಪಚುನಾವಣೆ ಶಾಂತಿಯುತವಾಗಿ ನಡೆಸಬೇಕು ಎಂದು ಒತ್ತಾಯಿಸಿದರು. ಶಿವಾಜಿ ಜಯಂತಿ ಮೆರವಣಿಗೆಯಲ್ಲಿ ಕೋಮುವಾದಿಗಳು ಅನಾವಶ್ಯಕ ನೃತ್ಯ, ಡಿಜೆ ಹಚ್ಚಿ ಕುಣಿದುಕುಪ್ಪಳಿಸಿದ್ದಲ್ಲದೇ, ಅಲ್ಪಸಂಖ್ಯಾತರನ್ನು ಗುರಿಯಾಗಿಸಿಕೊಂಡು ನಿಂದಿನೀಯವಾಗಿ ವರ್ತಿಸಿದ್ದಾರೆ. ಇದು ಅಲ್ಲಿನ ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿದೆ. ಇದೊಂದು ಪೂರ್ವನಿಯೋಜಿತ ರಾಜಕೀಯ ಸಂಚು. ಆಕಸ್ಮಿಕವಾಗಿ ಸಂಬಂಧಿಸಿದ್ದಲ್ಲ. ಅಲ್ಲಿ ನಡೆಯಲಿರುವ ಉಪಚುನಾವಣೆ ಗಮನದಲ್ಲಿಟ್ಟುಕೊಂಡು ಸಂಘ ಪರಿವಾರದವರು ಉದ್ದೇಶಪೂರ್ವಕವಾಗಿ ಗಲಭೆ ಎಬ್ಬಿಸಿದ್ದಾರೆ ಎಂದು ಆರೋಪಿಸಿದರು. ತಡರಾತ್ರಿವರೆಗೂ ಮೆರವಣಿಗೆ ನಡೆಸಲು ಅನುಮತಿಸಿದ್ದು ಮತ್ತು ಮಸೀದಿಯ ಎದುರು ಉದ್ರೇಕಕಾರಿ ಹಾಡುಗಳಿಗೆ ಅವಕಾಶ ಕಲ್ಪಿಸಿದ್ದಕ್ಕೆ ಜಿಲ್ಲಾಡಳಿತ ಹೊಣೆಯಾಗಿದೆ ಎಂದ ಅವರು, ಮೆರವಣಿಗೆ ವೇಳೆ ಮಸೀದಿಯೊಳಗಿನಿಂದ ಕಲ್ಲು ಬಂದಿದೆ ಎಂದು ಹೇಳಲಾಗುತ್ತಿದ್ದು, ಆ ಯುವಕನನ್ನು ಬಂಧಿಸಲಾಗಿದೆ. ಆದರೆ, ಕೋಮುವಾದಿಗಳು ಮರುದಿನ ಅಂಗಡಿಗಳನ್ನು ಮುಚ್ಚಿಸಿದ್ದು, ಕಲ್ಲು ತೂರಾಟ ಸಹ ನಡೆದಿದೆ. ತಳ್ಳುಗಾಡಿಗಳನ್ನು ಸುಡಲಾಗಿದೆ. ಕೋಮುವಾದಿ ಸಂಘಟನೆಗಳು ನಡೆಸಿದ ಧರಣಿಯಲ್ಲಿ ದ್ವೇಷಭಾಷಣ ಮಾಡಿದ ಜೇವರ್ಗಿಯ ಸಿದ್ದಲಿಂಗ ಸ್ವಾಮೀಜಿ ಅವರನ್ನು ಬಂಧಿಸಬೇಕು ಎಂದು ಒತ್ತಾಯಿಸಿದರು. ವಿವಿಧ ಸಂಘಟನೆಗಳ 10ಕ್ಕೂ ಹೆಚ್ಚು ಜನರ ಸತ್ಯಶೋಧನಾ ಸಮಿತಿಯಿಂದ ಶುಕ್ರವಾರ ಬಾಗಲಕೋಟೆಗೆ ನಿಯೋಗ ತೆರಳಿ, ಫೆ.19ರಂದು ಮಸೀದಿ ಎದುರು ಸಂಭವಿಸಿದ್ದ ಘಟನೆ ಕುರಿತು ಸ್ಥಳೀಯರಿಂದ ಮಾಹಿತಿ ಕಲೆಹಾಕಲಾಗಿದೆ. ಸದ್ಯದಲ್ಲೇ ಸರ್ಕಾರಕ್ಕೆ ಈ ವರದಿ ಸಲ್ಲಿಸಲಾಗುವುದು ಎಂದರು. ಶರಣಬಸವೇಶ್ವರ ವಿದ್ಯಾವರ್ಧಕ ಸಂಘ, ಕಲ್ಯಾಣ ಕರ್ನಾಟಕ ಹೋರಾಟ ಸಮಿತಿ ಹಾಗೂ ಪ್ರಗತಿಪರ ಸಂಘಟನೆಗಳ ಒಕ್ಕೂಟದ ಆಶ್ರಯದಲ್ಲಿ ಎಸ್ಐಆರ್ ಒಂದು ಚಿಂತನೆ ಕುರಿತು ಒಂದು ದಿನದ ಕಾರ್ಯಾಗಾರವನ್ನು ಮಾ.1ರಂದು ಬೆಳಿಗ್ಗೆ 10.30ಕ್ಕೆ ನಗರದ ಎಸ್.ಬಿ.ಕಾಲೇಜು ಕ್ಯಾಂಪಸ್ನ ದೊಡ್ಡಪ್ಪ ಅಪ್ಪ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸಂಚಾಲಕ ಪ್ರೊ.ಆರ್.ಕೆ. ಹುಡಗಿ ತಿಳಿಸಿದರು. ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ ಅಧ್ಯಕ್ಷತೆ ವಹಿಸುವರು. ಚಿಂತಕರಾದ ಕೆ.ಪ್ರಕಾಶ್, ಶಿವಸುಂದರ್ ಸಂಪನ್ಮೂಲ ವ್ಯಕ್ತಿಗಳಾಗಿದ್ದಾರೆ ಎಂದರು. ಸುದ್ದಿಗೋಷ್ಠಿಯಲ್ಲಿ ಕಾಶಿನಾಥ ಅಂಬಲಗಿ ಇದ್ದರು.
ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ವ್ಯಕ್ತಿ ನಾಪತ್ತೆ
ಉಡುಪಿ, ಫೆ.28: ಕಳೆದ ಹಲವು ವರ್ಷಗಳಿಂದ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದು ಚಿಕಿತ್ಸೆ ಪಡೆಯುತ್ತಿದ್ದ ಪುತ್ತೂರು ಗ್ರಾಮದ ಲಿಂಗೊಟ್ಟಿಗುಡ್ಡೆ ನಿವಾಸಿ ಸುರೇಶ್ ಪೂಜಾರಿ (54) ಎಂಬವರು ಫೆಬ್ರವರಿ 21ರಂದು ಮನೆಯಲ್ಲಿ ಯಾರೂ ಇಲ್ಲದ ವೇಳೆ ಹೊರ ಹೋಗಿದ್ದು ವಾಪಸು ಮನೆಗೆ ಬಾರದೆ ನಾಪತ್ತೆಯಾಗಿದ್ದಾರೆ. 163 ಸೆಂ.ಮೀ ಎತ್ತರ, ಸಾಮಾನ್ಯ ಶರೀರ, ಗೋಧಿ ಮೈಬಣ್ಣ ಹೊಂದಿದ್ದು, ಕನ್ನಡ ಹಾಗೂ ತುಳು ಮಾತಾಡಬಲ್ಲವ ರಾಗಿದ್ದಾರೆ. ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಉಡುಪಿ ನಗರ ಪೊಲೀಸ್ ಠಾಣೆ ಕಂಟ್ರೋಲ್ ರೂಂ ದೂ.ಸಂ: 0820-2520444, ಎಸ್.ಡಿ.ಪಿ.ಒ ಸಂ:0820-2521257, ಡಿಪಿಒ ಸಂ:0820-2534777, ರೇಂಜ್ ಸಂ: 8242220501, ಚೀಫ್ ಆಫೀಸ್ ಸಂ:22212108 ಅನ್ನು ಸಂಪರ್ಕಿಸುವಂತೆ ಉಡುಪಿ ನಗರ ಪೊಲೀಸ್ ಠಾಣಾಧಿಕಾರಿಗಳ ಪ್ರಕಟಣೆ ತಿಳಿಸಿದೆ.
ಮಾನ್ವಿ | ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳಿ: ಡಾ. ಬಸವಪ್ರಭು ಪಾಟೀಲ್
ಮಾನ್ವಿ : ಯುವಕರು ಮೂಢನಂಬಿಕೆಗಳಿಗೆ ಬಲಿಯಾಗದೆ ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳಬೇಕು. ಮಾನಸಿಕ ಅಸ್ವಸ್ಥರನ್ನು ದೇವರ, ದೆವ್ವದ ಹೆಸರಿನಲ್ಲಿ ಹಿಂಸೆ ನೀಡದೇ ವೈದ್ಯರ ಬಳಿ ಚಿಕಿತ್ಸೆ ಪಡೆಯಲು ಕರೆದೊಯ್ಯಬೇಕು ಎಂದು 11ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಡಾ. ಬಸವಪ್ರಭು ಪಾಟೀಲ್ ಬೆಟ್ಟದೂರು ಹೇಳಿದರು. ನೀರಮಾನ್ವಿ ಗ್ರಾಮದ ಸಿದ್ದಾರೂಢ ಮಠದ ಆವರಣದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಆಯೋಜಿಸಿದ್ದ ಸಮ್ಮೇಳನದಲ್ಲಿ ಮಾತನಾಡಿದ ಅವರು, ದೇಶದ ಸಂವಿಧಾನವನ್ನು ಗೌರವಿಸಿ ಅದರಡಿ ನಡೆದುಕೊಳ್ಳಬೇಕು. ಬಿ.ಆರ್.ಅಂಬೇಡ್ಕರ್ ನೀಡಿದ ಸಂವಿಧಾನ ಸಮಾನತೆಯ ಸಂದೇಶ ನೀಡುತ್ತದೆ. ಬಸವಣ್ಣನವರ ಸಮಾನತೆಯ ತತ್ವವನ್ನು ಅಳವಡಿಸಿಕೊಂಡು ಎಲ್ಲರನ್ನು ಸಮದೃಷ್ಟಿಯಿಂದ ನೋಡುವ ಮನಸ್ಥಿತಿ ಬೆಳೆಸಬೇಕು ಎಂದರು. ನಾವೆಲ್ಲರೂ ಮೊದಲು ಮನುಷ್ಯರು. ಧರ್ಮ, ಜಾತಿ ಹೆಸರಿನಲ್ಲಿ ಜಗಳವಾಡುವುದು ಸರಿಯಲ್ಲ. ಪ್ರೀತಿ, ವಿಶ್ವಾಸದಿಂದ ಬದುಕಬೇಕು. ದೇಶ ಕಟ್ಟಬೇಕೇ ಹೊರತು ಒಡೆಯಬಾರದು ಎಂದು ಅವರು ಹೇಳಿದರು. ಪ್ರಸ್ತುತ ದೇಶ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದು, ರೈತರ ಆತ್ಮಹತ್ಯೆ ಸೇರಿದಂತೆ ಹಲವು ಸಂಕಷ್ಟಗಳಿಗೆ ಸಾಹಿತಿಗಳು ಸ್ಪಂದಿಸಬೇಕು. ರಾಯಚೂರು ಜಿಲ್ಲೆ ಅಭಿವೃದ್ಧಿಯಲ್ಲಿ ಹಿಂದೆಬಿದ್ದಿದ್ದು, ಸಮಸ್ಯೆಗಳ ಪರಿಹಾರಕ್ಕಾಗಿ ಹೋರಾಟ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು. ಇಂದಿನ ಯುವಕರಲ್ಲಿ ಬರವಣಿಗೆಯ ಆಸಕ್ತಿ ಇದೆ. ಆದರೆ ಉತ್ತಮ ಸಾಹಿತ್ಯ ರಚನೆಗೆ ಹೆಚ್ಚು ಓದು ಅಗತ್ಯ. ಕಥೆ, ಕವಿತೆ, ಕಾದಂಬರಿ, ನಾಟಕಗಳನ್ನು ಓದಿ ಹಿರಿಯ ಸಾಹಿತಿಗಳಿಂದ ಕಲಿಯಬೇಕು. ತಾಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ಕಾವ್ಯ ಕಮ್ಮಟ, ಸಾಹಿತ್ಯ ಕಾರ್ಯಕ್ರಮಗಳನ್ನು ಹೆಚ್ಚಾಗಿ ನಡೆಸಿ ಯುವಕರಿಗೆ ದಾರಿ ತೋರಿಸಬೇಕು ಎಂದರು. ಗ್ರಾಮೀಣ ಭಾಗದಲ್ಲಿ ಬಯಲಾಟ, ನಾಟಕ, ಭಜನೆ ಮುಂತಾದ ಸಾಂಸ್ಕೃತಿಕ ಚಟುವಟಿಕೆಗಳು ಕಡಿಮೆಯಾಗುತ್ತಿವೆ. ಇದರಿಂದ ಗ್ರಾಮೀಣ ಕಲಾವಿದರ ಬದುಕು ಸಂಕಷ್ಟಕ್ಕೆ ಸಿಲುಕುತ್ತಿದೆ. ಉದ್ಯೋಗಕ್ಕಾಗಿ ಯುವಕರು ನಗರಗಳಿಗೆ ವಲಸೆ ಹೋಗುತ್ತಿದ್ದಾರೆ. ಈ ವಲಸೆ ತಪ್ಪಿಸಲು ಸರ್ಕಾರ ಕೃಷಿ ಆಧಾರಿತ ಹಾಗೂ ಇತರೆ ಕೈಗಾರಿಕೆಗಳನ್ನು ಸ್ಥಾಪಿಸಿ ಉದ್ಯೋಗಾವಕಾಶ ಕಲ್ಪಿಸಬೇಕು ಎಂದು ಅವರು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಸಣ್ಣ ನೀರಾವರಿ ಮತ್ತು ವಿಜ್ಞಾನ ತಂತ್ರಜ್ಞಾನ ಸಚಿವ ಎನ್.ಎಸ್ ಬೋಸರಾಜು, ಶಾಸಕ ಜಿ.ಹಂಪಯ್ಯನಾಯಕ ಸಾಹುಕಾರ, ಮಾಜಿಶಾಸಕರಾದ ಬಸನಗೌಡ ಬ್ಯಾಗವಾಟ್, ಗಂಗಾಧರನಾಯಕ, ರಾಜಾವೆಂಕಟಪ್ಪನಾಯಕ, ಕಲ್ಮಠದ ಶ್ರೀವಿರೂಪಾಕ್ಷ ಪಂಡಿತರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು, ಜನಾಬ್ ಮುಫ್ತಿ ಮೌಲಾನಾ ಸೈಯದ್ ಹಸನ್ ಜಿಶಾನ್ ಖಾದ್ರಿ, ಫಾ.ವಿನ್ಸೆಂಟ್ ಸುರೇಶ ಸೆಂಟ್ ಮೇರಿಸ್ ಚರ್ಚ್, ದೇವೇಂದ್ರಪ್ಪ ತಾತ, ಸಿದ್ದರಾಮ ಹೊನ್ನಕಲ್, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ರಂಗಣ್ಣ ಅಳ್ಳುಂಡಿ, ಮಾನ್ವಿ ತಾಲೂಕ ಅಧ್ಯಕ್ಷ ಶರಣಬಸವ ನೀರಮಾನ್ವಿ, ಸಾಹಿತಿ ರಮೇಶಬಾಬು ಯಾಳಗಿ, ಎ.ಬಾಲಸ್ವಾಮಿ ಕೊಡ್ಲಿ, ಶಿವರಾಜನಾಯಕ ಸಾಹುಕಾರ, ಜಿಕಸಾಪ ಗೌರವ ಕಾರ್ಯದರ್ಶಿ ತಾಯಪ್ಪ ಬಿ.ಹೊಸೂರು, ಲಕ್ಷ್ಮೀದೇವಿನಾಯಕ, ಚನ್ನಪ್ಪಗೌಡ ಬೆಟ್ಟದೂರು, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಸಿದ್ದರಾಮಪ್ಪ , ಗುಮ್ಮಾ ಬಸವರಾಜ್, ಹನುಮಂತಪ್ಪ ಕೊಟ್ನೆಕಲ್, ಹೆಚ್.ಶರ್ಪುದ್ದೀನ್ ಪೋತ್ನಾಳ, , ದೊಡ್ಡಬಸಪ್ಪಗೌಡ ಭೋಗಾವತಿ, ಅಬ್ದುಲ್ ಗಪೂರ್ ಸಾಬ್, ಬಿ.ಕೆ ಅಮರೇಶಪ್ಪ, ಸಿದ್ದನಗೌಡ ರಾಯಚೂರು, ಮಲ್ಲಿಕಾರ್ಜುನಗೌಡ ಪೋತ್ನಾಳ, ರಾಜಾಸುಭಾಷಚಂದ್ರನಾಯಕ, ಪತ್ರಕರ್ತರ ಸಂಘದ ಅಧ್ಯಕ್ಷ ಅಶೋಕ ತಡಕಲ್, ಅರಕೇತಿ ರಾಮಣ್ಣ, ಬುಡ್ಡುಸಾಬ್, ಶ್ರೀರಾಮುಲು, ಕೆ.ಅಲ್ಲಾಭಕ್ಷ ಸೇರಿದಂತೆ ಇನ್ನಿತರರಿದ್ದರು. ನಂತರ ನಡೆದ ಪ್ರಥಮ ಗೋಷ್ಠಿಯಲ್ಲಿ ರೈತರ ಆತ್ಮಹತ್ಯೆ ಹಾಗೂ ಪರಿಹಾರ ಕುರಿತು ಕರ್ನಾಟಕ ರಾಜ್ಯ ರೈತ ಸಂಘದ ಗೌರವಾಧ್ಯಕ್ಷ ಚಾಮರಸ ಮಾಲಿಪಾಟೀಲ್ ಮತ್ತು ಮಾನ್ವಿ ತಾಲೂಕಿನ ಸಾಹಿತ್ಯ ಕುರಿತು ಉಪನ್ಯಾಸಕಿ ಚಂದ್ರಕಲಾ ಹಾಗೂ ತಾಲೂಕಿನಲ್ಲಿನ ಶಿಲಾಶಾಸನಗಳ ಇತಿಹಾಸ ಬಗ್ಗೆ ಸಂಶೋಧಕ ಡಾ.ಚನ್ನಬಸವಪ್ಪ ಮಲ್ಕಂದಿನ್ನಿ ಉಪನ್ಯಾಸ ಮಂಡಿಸಿದರು. ಈ ಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ಕಸಾಪ ಮಾಜಿ ಅಧ್ಯಕ್ಷ ಕೆ.ಈ.ನರಸಿಂಹ ಮಾತನಾಡಿದರು. ತದನಂತರ ನಡೆದ ಎರಡನೇ ಗೋಷ್ಠಿಯಲ್ಲಿ ಸಮ್ಮೇಳನಾಧ್ಯಕ್ಷರ ಸಾಹಿತ್ಯ ಕೃಷಿಯ ಅವಲೋಕನ ಬಗ್ಗೆ ನಿವೃತ್ತ ವೈಧ್ಯಾಧಿಕಾರಿ ಡಾ.ಚಂದ್ರಶೇಖರಯ್ಯ ಸುವರ್ಣಗಿರಿಮಠ ಮತ್ತು ಗಡಿನಾಡು ಕನ್ನಡ ಶಾಲೆಗಳ ಸ್ಥಿತಿಗತಿ ಕುರಿತು ಪತ್ರಕರ್ತ ಪಿ.ಪರಮೇಶ, ದಲಿತ ಚಳುವಳಿ ಮತ್ತು ಬೆಳವಣಿಗೆ ಹೋರಾಟಗಾರರ ಪಾತ್ರ ಬಗ್ಗೆ ದಲಿತ ಹೋರಾಟಗಾರ ಎಂ.ಆರ್.ಭೇರಿ ಉಪನ್ಯಾಸ ನೀಡಿದರು. ಈ ಗೋಷ್ಠಿಯ ಅಧ್ಯಕ್ಷತೆಯನ್ನು ಬಂಡಾಯ ಸಾಹಿತಿ ಬಾಬು ಭಂಡಾರಿಗಲ್ ವಹಿಸಿದ್ದರು.
ಉಡುಪಿ ಜಿಲ್ಲೆಯ ಅಗ್ನಿಶಾಮಕರಿಗೆ ಮುಖ್ಯಮಂತ್ರಿಗಳ ಚಿನ್ನದ ಪದಕ
ಉಡುಪಿ, ಫೆ.28: ಬೈಂದೂರು ಅಗ್ನಿಶಾಮಕ ಠಾಣೆಯ ಸಹಾಯಕ ಅಗ್ನಿಶಾಮಕ ರಾಜೇಶ್ ಹಾಗೂ ಉಡುಪಿ ಅಗ್ನಿಶಾಮಕ ಠಾಣೆಯ ಸತೀಶ್ ಇವರು ಇಲಾಖೆಯಲ್ಲಿನ ತಮ್ಮ ಉತ್ತಮ ಸೇವೆಗಾಗಿ ಮತ್ತು ತುರ್ತು ಪರಿಸ್ಥಿತಿಯಲ್ಲಿ ನೀಡಿದ ಶ್ರೇಷ್ಠ ಕಾರ್ಯಕ್ಕಾಗಿ 2025ನೇ ಸಾಲಿನ ಮುಖ್ಯಮಂತ್ರಿಗಳ ಚಿನ್ನದ ಪದಕವನ್ನು ಪಡೆದಿದ್ದಾರೆ. ಬೆಂಗಳೂರಿನ ಆರ್.ಎ ಮುಂಡ್ಕೂರು ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ತರಬೇತಿ ಮಹಾದ್ಯಾಲಯದಲ್ಲಿ ಇತ್ತೀಚೆಗೆ ನಡೆದ ಸಮಾರಂಭದಲ್ಲಿ ಗೃಹ ಸಚಿವರಾದ ಡಾ. ಜಿ. ಪರಮೇಶ್ವರ್ ಪದಕಗಳನ್ನು ನೀಡಿ ಗೌರವಿಸಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
ಇರಾನ್ ದಾಳಿ ಆತಂಕ: ಅಬುಧಾಬಿಯಲ್ಲಿ ನಿವಾಸಿಗಳ ಫೋನ್ಗಳಿಗೆ ತುರ್ತು ಎಚ್ಚರಿಕೆ ಸಂದೇಶ
ಅಬುಧಾಬಿ, ಫೆ. 28: ಇರಾನ್ ದಾಳಿ ಸಂಬಂಧಿತ ಆತಂಕದ ನಡುವೆ ಯುನೈಟೆಡ್ ಅರಬ್ ಎಮಿರೇಟ್ಸ್ ರಾಜಧಾನಿ ಅಬುಧಾಬಿಯಲ್ಲಿ ಶನಿವಾರ ಮಧ್ಯಾಹ್ನ ಸ್ಫೋಟಗಳ ವರದಿಗಳು ಕೇಳಿಬಂದ ಹಿನ್ನೆಲೆಯಲ್ಲಿ ನಿವಾಸಿಗಳು ಹಾಗೂ ವಲಸಿಗರ ಮೊಬೈಲ್ ಫೋನ್ಗಳಿಗೆ ತುರ್ತು ಎಚ್ಚರಿಕೆ ಸಂದೇಶಗಳು ರವಾನೆಯಾದವು. ಸಂಭಾವ್ಯ ಕ್ಷಿಪಣಿ ಬೆದರಿಕೆಗಳು ಇರುವ ಸಾಧ್ಯತೆ ಕುರಿತು ಸಂದೇಶಗಳಲ್ಲಿ ಎಚ್ಚರಿಕೆ ನೀಡಲಾಗಿತ್ತು. ಎಚ್ಚರಿಕೆ ಸಂದೇಶಗಳು ಪ್ರಸಾರವಾಗುತ್ತಿದ್ದಂತೆ ನಗರಾದ್ಯಂತ ಮೊಬೈಲ್ ಫೋನ್ಗಳು ಅಲಾರಂ ಧ್ವನಿಯಲ್ಲಿ ಮೊಳಗಿದವು. ಇದರಿಂದ ಸಾರ್ವಜನಿಕರಲ್ಲಿ ಕ್ಷಣಿಕ ಆತಂಕ ಉಂಟಾದರೂ, ಅಧಿಕಾರಿಗಳ ಸೂಚನೆಗಳಂತೆ ಜನರು ತಕ್ಷಣದ ಸುರಕ್ಷತಾ ಮುನ್ನೆಚ್ಚರಿಕೆಗಳನ್ನು ಕೈಗೊಂಡರು. ಆಂತರಿಕ ಸಚಿವಾಲಯ ಹಂಚಿಕೊಂಡಿರುವ ಸಂದೇಶದಲ್ಲಿ, “ಪ್ರಸ್ತುತ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ಸಂಭಾವ್ಯ ಕ್ಷಿಪಣಿ ಬೆದರಿಕೆಗಳ ಹಿನ್ನೆಲೆ ಹತ್ತಿರದ ಸುರಕ್ಷಿತ ಕಟ್ಟಡದಲ್ಲಿ ತಕ್ಷಣ ಆಶ್ರಯ ಪಡೆಯಿರಿ. ಕಿಟಕಿಗಳು, ಬಾಗಿಲುಗಳು ಹಾಗೂ ತೆರೆದ ಪ್ರದೇಶಗಳಿಂದ ದೂರವಿರಿ. ಹೆಚ್ಚಿನ ಸೂಚನೆಗಳಿಗಾಗಿ ಕಾಯಿರಿ” ಎಂದು ತಿಳಿಸಲಾಗಿದೆ. ಎಚ್ಚರಿಕೆ ಸಂದೇಶ ಹೊರಬಂದ ನಂತರ ಸಾಮಾಜಿಕ ಜಾಲತಾಣಗಳಲ್ಲಿ ಹಲವಾರು ಬಳಕೆದಾರರು ಸ್ಕ್ರೀನ್ಶಾಟ್ಗಳು ಹಾಗೂ ವೀಡಿಯೊಗಳನ್ನು ಹಂಚಿಕೊಂಡಿದ್ದಾರೆ. ನಗರದಲ್ಲಿನ ಪರಿಸ್ಥಿತಿಯನ್ನು ವಿವರಿಸುವ ಅನೇಕ ಪೋಸ್ಟ್ಗಳು ಆನ್ಲೈನ್ನಲ್ಲಿ ವೈರಲ್ ಆಗಿದೆ.
Gruhalakshmi scheme: ರಾಜ್ಯ ಸರ್ಕಾರದ ಪಂಚ ಗ್ಯಾರಂಟಿಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಯ 26ನೇ ಕಂತಿನ 2,000 ರೂಪಾಯಿ ಫಲಾನುಭವಿಗಳ ಖಾತೆಗಳಿಗೆ ಜಮೆಯಾಗಿದೆ ಎಂದು ದಿನೇಶ್ ಗೂಳಿಗೌಡ ತಿಳಿಸಿದ್ದಾರೆ. ಹಾಗೆಯೇ ಇದೇ ವೇಳೆ 27ನೇ ಕಂತಿನ ಹಣ ಬಿಡುಗಡೆ ಬಗ್ಗೆಯೂ ಅವರು ಮಾಹಿತಿ ನೀಡಿದ್ದಾರೆ. ಇಲ್ಲಿದೆ ನೋಡಿ ಸಂಪೂರ್ಣ ವಿವರ. ಇದುವರೆಗೆ ಪ್ರತಿ ಮನೆ ಯಜಮಾನಿಗೆ ಒಟ್ಟು 52,000
ಇರಾನ್ ಮೇಲೆ ಅಮೆರಿಕ–ಇಸ್ರೇಲ್ ದಾಳಿ: ‘ತೀವ್ರ ಕಳವಳ’ ವ್ಯಕ್ತಪಡಿಸಿದ ಭಾರತ
ಹೊಸದಿಲ್ಲಿ, ಫೆ. 28: ಇರಾನ್ ಮೇಲೆ ಅಮೆರಿಕ–ಇಸ್ರೇಲ್ ನಡೆಸಿದ ದಾಳಿಗಳ ಹಿನ್ನೆಲೆಯಲ್ಲಿ ಭಾರತವು ‘ತೀವ್ರ ಕಳವಳ’ ವ್ಯಕ್ತಪಡಿಸಿದೆ. ಪರಿಸ್ಥಿತಿ ಮತ್ತಷ್ಟು ಉದ್ವಿಗ್ನಗೊಳ್ಳದಂತೆ ಎಲ್ಲರೂ ಸಂಯಮದಿಂದ ವರ್ತಿಸಬೇಕು ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ (MEA) ಶನಿವಾರ ತಿಳಿಸಿದೆ. “ಇರಾನ್ ಮತ್ತು ಗಲ್ಫ್ ಪ್ರದೇಶದಲ್ಲಿನ ಇತ್ತೀಚಿನ ಬೆಳವಣಿಗೆಗಳ ಬಗ್ಗೆ ಭಾರತ ತೀವ್ರ ಕಳವಳ ವ್ಯಕ್ತಪಡಿಸಿದೆ. ಎಲ್ಲರೂ ಸಂಯಮದಿಂದ ವರ್ತಿಸಬೇಕು, ಉದ್ವಿಗ್ನತೆಯನ್ನು ತಪ್ಪಿಸಬೇಕು ಮತ್ತು ನಾಗರಿಕರ ಸುರಕ್ಷತೆಗೆ ಆದ್ಯತೆ ನೀಡಬೇಕು” ಎಂದು MEA ಹೇಳಿಕೆಯಲ್ಲಿ ಸ್ಪಷ್ಟಪಡಿಸಿದೆ. ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ತೀವ್ರಗೊಂಡಿರುವ ಹಿನ್ನೆಲೆಯಲ್ಲಿ ಅಲ್ಲಿರುವ ಭಾರತೀಯರ ಸುರಕ್ಷತೆ ಕುರಿತ ಆತಂಕವೂ ವ್ಯಕ್ತವಾಗಿದೆ. ನಗರಗಳ ಸಮೀಪವಿರುವ ಅಮೆರಿಕದ ನೆಲೆಗಳ ಮೇಲೆ ಇರಾನ್ ಪ್ರತಿದಾಳಿಗಳು ನಡೆದಿರುವ ಮಾಹಿತಿ ಲಭ್ಯವಾಗಿದೆ. “ಈ ಪ್ರದೇಶದಲ್ಲಿನ ನಮ್ಮ ರಾಯಭಾರ ಕಚೇರಿಗಳು ಭಾರತೀಯ ಪ್ರಜೆಗಳೊಂದಿಗೆ ಸಂಪರ್ಕದಲ್ಲಿವೆ. ಜಾಗರೂಕರಾಗಿರಲು, ರಾಯಭಾರ ಕಚೇರಿಗಳೊಂದಿಗೆ ಸಂಪರ್ಕದಲ್ಲಿರಲು ಮತ್ತು ಸ್ಥಳೀಯ ಭದ್ರತಾ ಮಾರ್ಗಸೂಚಿಗಳನ್ನು ಅನುಸರಿಸಲು ಅವರನ್ನು ಕೇಳಲಾಗಿದೆ” ಎಂದು MEA ತಿಳಿಸಿದೆ. ಯುದ್ಧ ವಿಮಾನಗಳು, ಕ್ಷಿಪಣಿಗಳು ಹಾಗೂ ಡ್ರೋನ್ಗಳ ಹಾರಾಟ ಮುಂದುವರಿದಿರುವುದರಿಂದ ಮಧ್ಯಪ್ರಾಚ್ಯ/ಪಶ್ಚಿಮ ಏಷ್ಯಾ ಪ್ರದೇಶದ ವಾಯುಪ್ರದೇಶದ ಕೆಲವು ಭಾಗಗಳು ಮುಚ್ಚಲ್ಪಟ್ಟಿವೆ. ಇದರ ಪರಿಣಾಮವಾಗಿ ತಕ್ಷಣದ ಸ್ಥಳಾಂತರ ಯೋಜನೆಗಳ ಬಗ್ಗೆ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ. ಇದಕ್ಕೂ ಮುನ್ನ ನಾಗರಿಕ ವಿಮಾನಯಾನ ಸಚಿವಾಲಯವು ಪರಿಸ್ಥಿತಿಯ ಸಮಗ್ರ ಪರಿಶೀಲನೆ ನಡೆಸಿರುವುದಾಗಿ ತಿಳಿಸಿದೆ. ಸಚಿವ ಕೆ. ರಾಮ್ ಮೋಹನ್ ಸಂಬಂಧಪಟ್ಟ ಎಲ್ಲಾ ಪಾಲುದಾರರೊಂದಿಗೆ ಸನ್ನದ್ಧತೆ ಹಾಗೂ ಪ್ರತಿಕ್ರಿಯಾ ಕ್ರಮಗಳ ಅವಲೋಕನ ನಡೆಸಿದ್ದು, ಅಂತರರಾಷ್ಟ್ರೀಯ ವಾಯು ಕಾರ್ಯಾಚರಣೆಗಳ ಮೇಲಿನ ಪರಿಣಾಮವನ್ನು ಪರಿಶೀಲಿಸಿದ್ದಾರೆ ಎಂದು ಸಚಿವಾಲಯದ ಪ್ರಕಟಣೆ ಹೇಳಿದೆ. ಮಧ್ಯಪ್ರಾಚ್ಯದಲ್ಲಿ 90 ಲಕ್ಷಕ್ಕೂ ಹೆಚ್ಚು ಭಾರತೀಯರು ವಾಸಿಸುತ್ತಿದ್ದಾರೆ. ಇವರಲ್ಲಿ ಬಹುತೇಕರು ಯುಎಇಯಲ್ಲಿದ್ದು, ಸುಮಾರು 10,000 ಮಂದಿ ಇರಾನ್ನಲ್ಲಿ ನೆಲೆಸಿದ್ದಾರೆ. ಪ್ರಮುಖ ವಿಮಾನಯಾನ ಸಂಸ್ಥೆಗಳಾದ ಏರ್ ಇಂಡಿಯಾ ಮತ್ತು ಇಂಡಿಗೊ ಮಧ್ಯಪ್ರಾಚ್ಯಕ್ಕೆ ಮತ್ತು ಅಲ್ಲಿಂದ ಸೇವೆಗಳನ್ನು ಈಗಾಗಲೇ ಸ್ಥಗಿತಗೊಳಿಸಿವೆ. “ನಾಗರಿಕ ವಿಮಾನಯಾನ ಸಚಿವಾಲಯವು ವಿದೇಶಾಂಗ ಸಚಿವಾಲಯದೊಂದಿಗೆ ನಿಕಟ ಸಂಪರ್ಕದಲ್ಲಿದ್ದು, ಯಾವುದೇ ತುರ್ತು ಪರಿಸ್ಥಿತಿಯಲ್ಲಿ ಸುಗಮ ಮಾಹಿತಿ ವಿನಿಮಯ ಮತ್ತು ಸಮನ್ವಯವನ್ನು ಖಚಿತಪಡಿಸಿಕೊಳ್ಳಲಿದೆ” ಎಂದು ಪ್ರಕಟಣೆ ತಿಳಿಸಿದೆ.
ಇರಾನಿಂದ ಕ್ಷಿಪಣಿ ದಾಳಿ; ವಾಯು ರಕ್ಷಣಾ ವ್ಯವಸ್ಥೆಯಿಂದ ಹಲವಾರು ಕ್ಷಿಪಣಿಗಳು ನಿಷ್ಕ್ರಿಯ: ಯುಎಇ
ಅಬುಧಾಬಿ, ಫೆ. 28: ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ದೇಶವನ್ನು ಗುರಿಯಾಗಿಸಿಕೊಂಡು ಹಾರಿಸಲಾದ ಹಲವಾರು ಇರಾನಿನ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಯಶಸ್ವಿಯಾಗಿ ತಡೆಹಿಡಿಯಲಾಗಿದೆ ಎಂದು ಯುಎಇ ರಕ್ಷಣಾ ಸಚಿವಾಲಯ (MoD) ಶುಕ್ರವಾರ ಘೋಷಿಸಿದೆ. ಶನಿವಾರ ನಡೆದ ದಾಳಿಯಲ್ಲಿ ಇರಾನ್ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಹಾರಿಸಿದ್ದು, ಯುಎಇ ವಾಯು ರಕ್ಷಣಾ ವ್ಯವಸ್ಥೆಗಳು ಹೆಚ್ಚಿನ ದಕ್ಷತೆಯೊಂದಿಗೆ ಅವುಗಳನ್ನು ನಿಷ್ಕ್ರಿಯಗೊಳಿಸಿ ಹಲವಾರು ಕ್ಷಿಪಣಿಗಳನ್ನು ಮಧ್ಯಾಕಾಶದಲ್ಲೇ ಹೊಡೆದುರುಳಿಸಿವೆ ಎಂದು ಸಚಿವಾಲಯ ತಿಳಿಸಿದೆ. ತಡೆಹಿಡಿದ ಕ್ಷಿಪಣಿಗಳ ಅವಶೇಷಗಳು ಕೆಲವು ವಸತಿ ಪ್ರದೇಶಗಳಲ್ಲಿ ಪತನಗೊಂಡಿದ್ದು, ಇದರಿಂದ ವಸ್ತು ಹಾನಿ ಸಂಭವಿಸಿದೆ. ಬಿದ್ದ ಅವಶೇಷಗಳಿಂದ ಏಷ್ಯನ್ ಪ್ರಜೆಯೊಬ್ಬರು ಸಾವನ್ನಪ್ಪಿರುವುದು ದೃಢಪಟ್ಟಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಯುಎಇಯಲ್ಲಿ ಭದ್ರತಾ ಪರಿಸ್ಥಿತಿ ಸ್ಥಿರವಾಗಿದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಸಂಬಂಧಪಟ್ಟ ಎಲ್ಲಾ ಸಂಸ್ಥೆಗಳು ದಿನದ 24 ಗಂಟೆಯೂ ಬೆಳವಣಿಗೆಗಳನ್ನು ಮೇಲ್ವಿಚಾರಣೆ ಮಾಡುತ್ತಿದ್ದು, ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದ್ದಾರೆ. ರಕ್ಷಣಾ ಸಚಿವಾಲಯವು ಈ ದಾಳಿಯನ್ನು ತೀವ್ರವಾಗಿ ಖಂಡಿಸಿದ್ದು, ನಾಗರಿಕ ಆಸ್ತಿಪಾಸ್ತಿ, ಸಾರ್ವಜನಿಕ ಸೌಲಭ್ಯಗಳು ಹಾಗೂ ರಾಷ್ಟ್ರೀಯ ಸಂಸ್ಥೆಗಳನ್ನು ಗುರಿಯಾಗಿಸಿಕೊಳ್ಳುವುದನ್ನು ಯುಎಇ ಸ್ಪಷ್ಟವಾಗಿ ತಿರಸ್ಕರಿಸುತ್ತದೆ ಎಂದು ಹೇಳಿದೆ. ಇಂತಹ ಕೃತ್ಯಗಳು ಉದ್ವಿಗ್ನತೆಗೂ ಕಾರಣವಾಗುವುದಲ್ಲದೆ, ನಾಗರಿಕರ ಸುರಕ್ಷತೆಗೆ ಬೆದರಿಕೆ ಹಾಕಿ ದೇಶದ ಸ್ಥಿರತೆಯನ್ನು ಹಾಳು ಮಾಡುವ ಹೇಡಿತನದ ಕ್ರಮಗಳಾಗಿವೆ ಎಂದು ಒತ್ತಿ ಹೇಳಿದೆ. ರಾಷ್ಟ್ರೀಯ ಸಾರ್ವಭೌಮತ್ವ ಮತ್ತು ಅಂತರರಾಷ್ಟ್ರೀಯ ಕಾನೂನಿನ ಸ್ಪಷ್ಟ ಉಲ್ಲಂಘನೆಯೇ ಈ ದಾಳಿ ಎಂದು ರಕ್ಷಣಾ ಸಚಿವಾಲಯ ಅಭಿಪ್ರಾಯಪಟ್ಟಿದೆ. ಈ ಬೆಳವಣಿಗೆಗೆ ಪ್ರತಿಕ್ರಿಯಿಸಲು ಹಾಗೂ ತನ್ನ ಪ್ರದೇಶ, ನಾಗರಿಕರು ಮತ್ತು ನಿವಾಸಿಗಳನ್ನು ರಕ್ಷಿಸಲು, ತನ್ನ ಸಾರ್ವಭೌಮತ್ವ, ಭದ್ರತೆ ಮತ್ತು ಸ್ಥಿರತೆಯನ್ನು ಕಾಪಾಡಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ಕೈಗೊಳ್ಳುವ ಸಂಪೂರ್ಣ ಹಕ್ಕು ಯುಎಇ ಕಾಯ್ದಿರಿಸಿದೆ ಎಂದು ಸಚಿವಾಲಯ ಸ್ಪಷ್ಟಪಡಿಸಿದೆ. ಯಾವುದೇ ಬೆದರಿಕೆಗಳನ್ನು ಎದುರಿಸಲು ಸಂಪೂರ್ಣ ಸಿದ್ಧತೆ ಮತ್ತು ಸನ್ನದ್ಧತೆ ಇದೆ ಎಂದು ಸಚಿವಾಲಯ ಪುನರುಚ್ಚರಿಸಿದೆ. ದೇಶದ ಭದ್ರತೆ ಮತ್ತು ಸ್ಥಿರತೆಯನ್ನು ದುರ್ಬಲಗೊಳಿಸುವ ಯಾವುದೇ ಪ್ರಯತ್ನಗಳನ್ನು ಕಟ್ಟುನಿಟ್ಟಾಗಿ ಎದುರಿಸಲಾಗುತ್ತದೆ ಎಂದು ಎಚ್ಚರಿಸಿದೆ. ಮಾಹಿತಿಗಾಗಿ ಅಧಿಕೃತ ಮೂಲಗಳನ್ನು ಮಾತ್ರ ಅವಲಂಬಿಸುವಂತೆ ಹಾಗೂ ವದಂತಿಗಳು ಅಥವಾ ಪರಿಶೀಲಿಸದ ವರದಿಗಳನ್ನು ಹರಡುವುದನ್ನು ತಪ್ಪಿಸುವಂತೆ ಸಚಿವಾಲಯ ಸಾರ್ವಜನಿಕರನ್ನು ಒತ್ತಾಯಿಸಿದೆ. ಯುಎಇಯೊಳಗಿನ ಅಧಿಕೃತ ಮೂಲಗಳಿಂದಲೇ ಮಾಹಿತಿ ಪಡೆಯುವಂತೆ ಮನವಿ ಮಾಡಿದೆ.
Bengaluru | ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ಕಿರುಕುಳ ಆರೋಪ: ವಸತಿ ಶಾಲೆಯ ದಂಪತಿ ವಿರುದ್ಧ ಪ್ರಕರಣ ದಾಖಲು
ಬೆಂಗಳೂರು, ಫೆ. 28: ವಿದ್ಯಾರ್ಥಿನಿಯರ ಮೇಲೆ ವಸತಿ ಶಾಲೆಯ ಮಾಲಕನೊಬ್ಬ ಲೈಂಗಿಕ ಕಿರುಕುಳ ನೀಡಿದ ಆರೋಪ ಸಂಬಂಧ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪೊಕ್ಸೋ ಪ್ರಕರಣ ದಾಖಲಾಗಿರುವುದಾಗಿ ವರದಿಯಾಗಿದೆ. ವಸತಿ ಶಾಲೆಯ ಮಾಲಕ ಧನಂಜಯ್ ಮತ್ತು ಅವರ ಪತ್ನಿ ಶೈಲಜಾ ಎಂಬುವರ ವಿರುದ್ಧ ಪೊಕೋ ಕಾಯ್ದೆಯಡಿ ದೇವನಹಳ್ಳಿ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ವಸತಿ ಶಾಲೆಯಲ್ಲಿ ವಾಸಿಸುತ್ತಿದ್ದ ಇಬ್ಬರು ಬಾಲಕಿಯರಿಗೆ ಮಾಲಕ ಧನಂಜಯ್ ಲೈಂಗಿಕ ಕಿರುಕುಳ ನೀಡುತ್ತಿದ್ದ. ಧನಂಜಯ್ ರಾತ್ರಿ ವೇಳೆ ಮದ್ಯದ ಅಮಲಿನಲ್ಲಿ ಬಾಲಕಿಯರ ಕೊಠಡಿಗೆ ತೆರಳಿ ಕಿರುಕುಳ ನೀಡುತ್ತಿದ್ದ. ಈ ವಿಷಯ ಆತನ ಪತ್ನಿ ಶೈಲಜಾ ತಿಳಿದಿದ್ದರೂ ಸಹ ಆಕೆಯೂ ಗಂಡನ ನೀಚ ಕೃತ್ಯಕ್ಕೆ ಸಾಥ್ ನೀಡಿ, ಕಿರುಕುಳದ ಬಗ್ಗೆ ಯಾರಿಗೂ ಹೇಳದಂತೆ ವಿದ್ಯಾರ್ಥಿನಿಯರಿಗೆ ತಾಕೀತು ಮಾಡಿದ್ದಳು ಎಂದು ಆರೋಪಿಸಲಾಗಿದೆ. ವಿದ್ಯಾರ್ಥಿನಿಯರ ಮೇಲೆ ಒತ್ತಡ ಹೇರಿದ್ದ ದಂಪತಿ, ಅದರಲ್ಲಿಯೂ ಪೋಷಕರಿಗೆ ಸುದ್ದಿ ಮುಟ್ಟಿಸಬಾರದೆಂದು ಸತತ 8 ದಿನ ಹೊರಗೆ ಹೋಗಲೂ ಬಿಡದೆ, ಪೋಷಕರಿಗೆ ಕರೆ ಮಾಡಲೂ ಬಿಡದೆ ಕಿರುಕುಳ ನೀಡಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಸದ್ಯ, ಸಂತ್ರಸ್ತ ಬಾಲಕಿಯರು ನೀಡಿದ ಮಾಹಿತಿ ಮೇರೆಗೆ ಅವರ ಪೋಷಕರು ದಂಪತಿ ವಿರುದ್ಧ ದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ನಿಗಮ-ಮಂಡಳಿ ಅಧ್ಯಕ್ಷರ ಅವಧಿ ಮುಂದುವರಿಸಿ ಸರಕಾರ ಆದೇಶ
ಬೆಂಗಳೂರು, ಫೆ.28: ರಾಜ್ಯ ಸರಕಾರದ ವಿವಿಧ ಇಲಾಖೆಗಳ ಅಧೀನದಲ್ಲಿ ಬರುವ ನಿಗಮ, ಮಂಡಳಿ ಹಾಗೂ ಪ್ರಾಧಿಕಾರಗಳ ನಾಮ ನಿರ್ದೇಶನಗೊಂಡ ಅಧ್ಯಕ್ಷರ ಮುಕ್ತಾಯಗೊಂಡ, ಮುಕ್ತಾಯಗೊಳ್ಳಲಿರುವ ಅವಧಿಯನ್ನು ಮುಂದುವರಿಸಿ, ಸರಕಾರ ಆದೇಶಿಸಿದೆ. ಅಧ್ಯಕ್ಷರ ಅವಧಿಯನ್ನು ಮುಂದಿನ ಆದೇಶದವರೆಗೆ ಮುಂದುವರಿಸಲಾಗುತ್ತಿದ್ದು, ಆಡಳಿತ ಇಲಾಖೆಯ ಸಂಬಂಧಿಸಿದ ಅಧಿನಿಯಮ, ನಿಯಮಗಳ ರೀತ್ಯಾ ತಕ್ಷಣದಿಂದ ಅಧ್ಯಕ್ಷರು ಕಾರ್ಯನಿರ್ವಹಿಸಲು ಸೂಕ್ತ ಅಧಿಸೂಚನೆ ಹೊರಡಿಸುವಂತೆ ಆಡಳಿತ ಇಲಾಖೆಗಳಿಗೆ ಸೂಚಿಸಿದೆ.
ಹೊಸದಿಲ್ಲಿ: ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಮತ್ತೊಮ್ಮೆ ಯುದ್ಧದಂತಹ ಪರಿಸ್ಥಿತಿಯತ್ತ ಸಾಗುತ್ತಿರುವುದು ತೀವ್ರ ಕಳವಳಕಾರಿಯಾಗಿದೆ. ಸಂಘರ್ಷವು ಶೀಘ್ರವೇ ಅಂತ್ಯಗೊಂಡು ಶಾಂತಿ ಸ್ಥಾಪನೆಯಾಗಲಿ ಎಂದು ಇಂಡಿಯನ್ ಗ್ರ್ಯಾಂಡ್ ಮುಫ್ತಿ ಎಪಿ ಅಬೂಬಕ್ಕರ್ ಮುಸ್ಲಿಯಾರ್ ಹೇಳಿದ್ದಾರೆ. ಹಲವಾರು ಶಾಂತಿಯುತ ಪರಿಹಾರ ಮಾರ್ಗಗಳಿದ್ದರೂ, ಈ ಪ್ರದೇಶದಲ್ಲಿ ಅಸ್ಥಿರತೆಯನ್ನು ಸೃಷ್ಟಿಸುವ ನಿರಂತರ ಕ್ರಮಗಳನ್ನು ಯಾವುದೇ ರೀತಿಯಲ್ಲಿ ನ್ಯಾಯೀಕರಿಸಲು ಸಾಧ್ಯವಿಲ್ಲ. ದಾಳಿಗಳು ತೀವ್ರಗೊಂಡರೆ, ಮಧ್ಯಪ್ರಾಚ್ಯವನ್ನು ಜೀವನೋಪಾಯಕ್ಕಾಗಿ ಅವಲಂಬಿಸಿರುವ ಭಾರತೀಯರು ಸೇರಿದಂತೆ ಲಕ್ಷಾಂತರ ಜನರ ಮೇಲೆ ತೀವ್ರವಾಗಿ ಪರಿಣಾಮ ಬೀರುತ್ತದೆ ಎಂದು ಅಬೂಬಕ್ಕರ್ ಮುಸ್ಲಿಯಾರ್ ಹೇಳಿದ್ದಾರೆ. ಸಂಘರ್ಷವು ಶೀಘ್ರವೇ ಅಂತ್ಯಗೊಂಡು ಶಾಂತಿ ನೆಲೆಸಬೇಕೆಂದು ನಾವು ಪ್ರಾರ್ಥಿಸಬೇಕು. ಶಾಂತಿ ಸ್ಥಾಪನೆಗಾಗಿ ತುರ್ತು ರಾಜತಾಂತ್ರಿಕ ಮಧ್ಯಸ್ಥಿಕೆ ವಹಿಸುವಂತೆ ವಿಶ್ವಸಂಸ್ಥೆ ಮತ್ತು ಇತರ ಅಂತಾರಾಷ್ಟ್ರೀಯ ಸಂಸ್ಥೆಗಳು ಹಾಗೂ ಜಾಗತಿಕ ನಾಯಕರು ಮತ್ತು ರಾಷ್ಟ್ರಗಳನ್ನು ನಾನು ಒತ್ತಾಯಿಸುತ್ತೇನೆ ಎಂದು ಎಪಿ ಅಬೂಬಕ್ಕರ್ ಮುಸ್ಲಿಯಾರ್ ಹೇಳಿದ್ದಾರೆ.
ಸರಕಾರಿ ಶಾಲೆಗಳ ಮೂಲಸೌಕರ್ಯ ಅಭಿವೃದ್ಧಿಗೆ 10 ಸಾವಿರ ಕೋಟಿ ರೂ. ಸಿಎಸ್ಆರ್ ನಿಧಿ ಬಳಕೆ : ಡಿ.ಕೆ.ಶಿವಕುಮಾರ್
ಬೆಂಗಳೂರು, ಫೆ. 28: ಹಳ್ಳಿಗಳಲ್ಲಿ ಉತ್ತಮ ಶಿಕ್ಷಣ ಸಿಗಬೇಕೆಂಬ ಉದ್ದೇಶದಿಂದ ಸಿಎಸ್ಆರ್ ಶಾಲೆ ಆರಂಭಿಸಲು ನೀತಿ ರೂಪಿಸಿದ್ದೇವೆ. 8-10 ಸಾವಿರ ಕೋಟಿ ರೂ. ಸಿಎಸ್ಆರ್ ನಿಧಿಯನ್ನು ಗ್ರಾಮೀಣ ಭಾಗದ ಸರಕಾರಿ ಶಾಲೆಗಳ ಮೂಲಸೌಕರ್ಯ ಅಭಿವೃದ್ಧಿಗೆ ಬಳಸಲು ತೀರ್ಮಾನಿಸಿದ್ದೇವೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು. ಶನಿವಾರ ನಗರದ ಅರಮನೆ ಮೈದಾನದಲ್ಲಿ ನಡೆದ ರಾಜ್ಯಮಟ್ಟದ ಶೈಕ್ಷಣಿಕ ಮಹಾ ಸಮ್ಮೇಳನವನ್ನು ಉದ್ದೇಶಿಸಿ ಮಾತನಾಡಿದ ಅವರು, ಮಕ್ಕಳು ಶಿಕ್ಷಣಕ್ಕೆ ಹಳ್ಳಿಯಿಂದ ಪಟ್ಟಣಕ್ಕೆ ವಲಸೆ ಬರುವುದು ತಪ್ಪಬೇಕು. ಉತ್ತಮವಾಗಿರುವ ಖಾಸಗಿ ಶಾಲೆಗಳು ಈ ಸರಕಾರಿ ಶಾಲೆಗಳನ್ನು ದತ್ತು ಪಡೆದು, ಶಿಕ್ಷಕರನ್ನು ನೇಮಿಸಬೇಕು ಎಂದು ಸೂಚಿಸಿದ್ದೇವೆ. ಈ ಮೂಲಕ 90 ಸಾವಿರ ಶಿಕ್ಷಕರ ಹುದ್ದೆ ಭರ್ತಿ ಮಾಡಬೇಕು. ಮುಂದಿನ ದಿನಗಳಲ್ಲಿ ಇದನ್ನು ಜಾರಿ ಮಾಡುತ್ತೇವೆ ಎಂದು ಹೇಳಿದರು. ಶೀಘ್ರ ಹೊಸ ನೇಮಕಾತಿಗಳಿಗೆ ಆದ್ಯತೆ: ನಾವು ನಿಮ್ಮ ಮೇಲೆ ಅಪಾರ ವಿಶ್ವಾಸ ಇಟ್ಟುಕೊಂಡು, ಅನೇಕ ಸಮಸ್ಯೆಗಳನ್ನು ಬಗೆಹರಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇವೆ. 1 ಲಕ್ಷಕ್ಕೂ ಹೆಚ್ಚು ಶಿಕ್ಷಕರ ಹುದ್ದೆ ಖಾಲಿ ಇರುವುದು ನಮ್ಮ ಗಮನಕ್ಕೆ ಬಂದಿದೆ. ನಾವು ಮೊನ್ನೆಯಷ್ಟೇ ಯುವಕರ ಬದುಕಿನ ವಿಚಾರದಲ್ಲಿ ದೊಡ್ಡ ತೀರ್ಮಾನ ಮಾಡಿದ್ದು, 2.50 ಲಕ್ಷ ಹುದ್ದೆಗಳ ಪೈಕಿ, 56 ಸಾವಿರ ನೇಮಕಾತಿ ಮಾಡಲು ಅನುಮೋದನೆ ನೀಡಿದ್ದೇವೆ ಎಂದು ಅವರು ತಿಳಿಸಿದರು. ಇತಿಹಾಸದ ಪಾಠ ಕಲಿಸುವ ಕೆಲಸವಷ್ಟೇ ಆಗಬಾರದು, ಇತಿಹಾಸ ಸೃಷ್ಟಿಸುವಂತೆ ಮಕ್ಕಳನ್ನು ತಯಾರು ಮಾಡಿ. ನೀವು ಶಾಲೆಗೆ ಬರುವ ಮಕ್ಕಳನ್ನು ಮಾತ್ರ ಬೆಳೆಸುತ್ತಿಲ್ಲ. ಸಮಾಜವನ್ನೇ ಬೆಳೆಸುತ್ತಿದ್ದೀರಿ. ನೀವು ಪಾಠ ಹೇಳಿಕೊಟ್ಟ ಮಕ್ಕಳು ಎತ್ತರಕ್ಕೆ ಬೆಳೆದಾಗ ನಿಮಗೆ ಆಗುವ ಸಂತೋಷ ಬೇರೆ ಯಾವ ಸಮಯದಲ್ಲೂ ಆಗುವುದಿಲ್ಲ ಎಂದು ಶಿಕ್ಷಕರಿಗೆ ಶಿವಕುಮಾರ್ ಹೇಳಿದರು. ಈ ನಾಡಿದ ಮಕ್ಕಳ ಭವಿಷ್ಯ ರೂಪಿಸುವ ಜವಾಬ್ದಾರಿಯನ್ನು ನಿಮಗೆ ನೀಡಲಾಗಿದೆ. ಅವರನ್ನು ಓಡುವ ಕುದುರೆಗಳಂತೆ ತಯಾರು ಮಾಡಬೇಕು. ಬೆಂಗಳೂರಿನಲ್ಲಿ ಸಿಗುವ ಗುಣಮಟ್ಟದ ಶಿಕ್ಷಣ ಗ್ರಾಮೀಣ ಪ್ರದೇಶದ ಪ್ರತಿಯೊಂದು ಶಾಲೆಯಲ್ಲೂ ದೊರೆಯುವಂತೆ ಶಿಕ್ಷಕರು ಶ್ರಮಿಸಬೇಕು ಎಂದು ಅವರು ಕರೆ ನೀಡಿದರು. ಸಂಘದ ಕಟ್ಟಡಕ್ಕೆ ನಿವೇಶನ: ಸಂಘದ ಅಧ್ಯಕ್ಷರು ಅನೇಕ ಬೇಡಿಕೆಗಳನ್ನು ನೀಡಿದ್ದಾರೆ. ನನ್ನ ಪರಿಮಿತಿಯಲ್ಲಿ ಸಾಧ್ಯವಾಗುವ ಬೇಡಿಕೆಗಳನ್ನು ನಾನು ಈಡೇರಿಸುತ್ತೇನೆ. ಸಂಘದ ಕಟ್ಟಡಕ್ಕೆ ಬಿಡಿಎ ಅಥವಾ ಜಿಬಿಎ ಅಡಿ ಎಲ್ಲಿ ನಿವೇಶನ ಲಭ್ಯವಿದೆಯೆ ಎಂದು ನೋಡಿಕೊಂಡು ನಿಮಗೆ ನೀಡಲಾಗುವುದು ಎಂದು ಉಪ ಮುಖ್ಯಮಂತ್ರಿ ತಿಳಿಸಿದರು. ಬಂಗಾರಪ್ಪ ಅವರ ಕಾಲದಲ್ಲಿ ಗ್ರಾಮೀಣ ಕೃಪಾಂಕ ಯೋಜನೆಯಿಂದ ಅನೇಕರು ಶಿಕ್ಷಣ ವೃತ್ತಿಗೆ ಸೇರುವಂತಾಯಿತು. ರಾಜೀವ್ ಗಾಂಧಿ ಅವರು ಆಪರೇಷನ್ ಬ್ಲಾಕ್ ಬೋರ್ಡ್ ಯೋಜನೆ ಮೂಲಕ ಪ್ರಾಥಮಿಕ ಶಿಕ್ಷಣಕ್ಕೆ ಒತ್ತು ನೀಡಿದರು ಎಂದು ಶಿವಕುಮಾರ್ ಸ್ಮರಿಸಿದರು. ಮೂರು ಶಾಲೆ ನಡೆಸುತ್ತಿರುವ ನನ್ನ ಮಗಳಿಗೂ ಸರಕಾರಿ ಶಾಲೆ ದತ್ತು ಪಡೆಯುವಂತೆ ಸೂಚಿಸಿದ್ದೇನೆ. ನಮ್ಮ ಕ್ಷೇತ್ರದ ಶಾಲೆಗಳನ್ನು ದತ್ತು ಪಡೆಯಲಾಗುತ್ತಿದೆ. ನಾನು ಶಿಕ್ಷಣ ಪ್ರೇಮಿ. ಶಿಕ್ಷಣದ ಮೇಲಿನ ಪ್ರೀತಿಯಿಂದ 2007ರಲ್ಲಿ ಪದವಿ ಪಡೆದೆ. ಇದು ನನಗೆ ಬಹಳ ಸಂತೋಷ ನೀಡಿದ ಸಮಯ ಎಂದು ಅವರು ಹೇಳಿದರು. ಕೈಬಿಡಲು ಸಾಧ್ಯವಿಲ್ಲ: ಬೂತ್ ಮಟ್ಟದ ಕೆಲಸಗಳಿಂದ ಕೈಬಿಡುವಂತೆ ಕೇಳಿದ್ದೀರಿ. ಆದರೆ, ಇದು ಮಾತ್ರ ಸಾಧ್ಯವಿಲ್ಲ. ಒಂದು ಮನೆಯಲ್ಲಿ ನಾಲ್ಕು ಮತಗಳು ಇದ್ದರೆ ಒಂದು ಮತವನ್ನು ಒಂದು ಬೂತ್ ನಲ್ಲಿ ಮಿಕ್ಕ ಮತಗಳನ್ನು ಇನ್ನೆಲ್ಲೋ ಹಾಕಿ ದೊಡ್ಡ ಕುತಂತ್ರ ಮಾಡುತ್ತಿದ್ದಾರೆ. ಶಿಕ್ಷಕರು ನ್ಯಾಯಬದ್ದವಾಗಿ ಕೆಲಸ ಮಾಡುವವರು. ಇನ್ನೇನು ಸ್ಥಳೀಯ ಸಂಸ್ಥೆಗಳ ಚುನಾವಣೆ ಬರಲಿದ್ದು ನೀವುಗಳು ಕೆಲಸ ಮಾಡಬೇಕು. ನಾವು ನಿಮ್ಮ ಜೊತೆ ಇದ್ದೇವೆ. ನಿಮ್ಮ ಆಶೀರ್ವಾದ ಈ ಸರಕಾರದ ಮೇಲಿರಲಿ ಎಂದು ಶಿವಕುಮಾರ್ ಕೋರಿದರು.
ಇಸ್ರೇಲ್ನತ್ತ ಡ್ರೋನ್, ಕ್ಷಿಪಣಿ ಮಳೆಗರೆದ ಇರಾನ್; ಜೆರುಸಲೇಂ, ಟೆಲ್ಅವೀವ್ನಲ್ಲಿ ಸ್ಫೋಟ
ಟೆಹ್ರಾನ್: ಅಮೆರಿಕ-ಇಸ್ರೇಲ್ ವೈಮಾನಿಕ ದಾಳಿಗೆ ಪ್ರತಿಯಾಗಿ ಇಸ್ರೇಲನ್ನು ಗುರಿಯಾಗಿಸಿ ಕ್ಷಿಪಣಿಗಳು ಮತ್ತು ಡ್ರೋನ್ಗಳ ಸುರಿಮಳೆಗರೆದಿರುವುದಾಗಿ ಇರಾನ್ನ ರೆವೊಲ್ಯುಷನರಿ ಗಾರ್ಡ್ ಕಾಪ್ರ್ಸ್(ಐಆರ್ಜಿಸಿ) ಘೋಷಿಸಿದೆ. ಜೆರುಸಲೇಂ ಮತ್ತು ಟೆಲ್ ಅವೀವ್ನಲ್ಲಿ ಹಲವು ಸ್ಫೋಟಗಳು ಕೇಳಿಸಿವೆ. ಆದರೆ ಸಾವು-ನೋವಿನ ಮಾಹಿತಿಯಿಲ್ಲ ಎಂದು ವರದಿಯಾಗಿದೆ. `ಆಕ್ರಮಣಕ್ಕೆ ಉತ್ತರವಾಗಿ ಇಸ್ರೇಲ್ನತ್ತ ಪ್ರಥಮ ಹಂತದ ಬೃಹತ್ ಮಟ್ಟದ ಕ್ಷಿಪಣಿ ಮತ್ತು ಡ್ರೋನ್ಗಳ ದಾಳಿ ಪ್ರಾರಂಭಗೊಂಡಿದೆ. ಇರಾನ್ ವಿರುದ್ದ ಪ್ರತಿಕೂಲ ಮತ್ತು ಕ್ರಿಮಿನಲ್ ಶಕ್ತಿಗಳ ಆಕ್ರಮಣಕ್ಕೆ ಇದು ಪ್ರತೀಕಾರವಾಗಿದೆ. ಅಮೆರಿಕ ಮತ್ತು ಇಸ್ರೇಲ್ ವಿರುದ್ದದ ನಮ್ಮ ಪ್ರತೀಕಾರವು ಅವರ ಸೋಲಿನವರೆಗೆ ಮುಂದುವರಿಯಲಿದೆ. ಪರಿಸ್ಥಿತಿಯನ್ನು ಕೀಳಂದಾಜಿಸದಂತೆ ನಾವು ಈ ಹಿಂದೆ ಅವರಿಗೆ ಎಚ್ಚರಿಕೆ ನೀಡಿದ್ದೇವೆ' ಎಂದು ಇರಾನ್ನ ಸಶಸ್ತ್ರ ಪಡೆಗಳ ವಕ್ತಾರರು ಹೇಳಿದ್ದಾರೆ.
Chandra Grahan 2026: ವರ್ಷದ ಮೊದಲ ಚಂದ್ರಗ್ರಹಣ: ಹೋಳಿ ಹುಣ್ಣಿಮೆಯಂದೇ ದೀರ್ಘಕಾಲದ ಗ್ರಹಣ; ಭಾರತದಲ್ಲಿ ಗೋಚರ ಸಮಯ
Chandra Grahan 2026: ಈ ವರ್ಷದ ಮೊದಲ ಚಂದ್ರಗ್ರಹಣವು ಮಾರ್ಚ್ ತಿಂಗಳ ಆರಂಭದಲ್ಲೇ ಸಂಭವಿಸಲಿದೆ. ಹೋಳಿ ಹುಣ್ಣಿಮೆ ದಿನ ಮಾರ್ಚ್ 3ರಂದು ಚಂದ್ರಗ್ರಹಣ ಸಂಭವಿಸಲಿದೆ. ದೀರ್ಘ ಸಮಯದ ಚಂದ್ರಗ್ರಹಣ ಇದಾಗಿದ್ದು, ಸಿಂಹ ಮತ್ತು ಫಾಲ್ಗುಣಿ ನಕ್ಷತ್ರ ಪುಂಜದಲ್ಲಿ ಜರುಗಲಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಚಂದ್ರನು ಸಿಂಹ ರಾಶಿಯಲ್ಲಿ ಬರುತ್ತದೆ. ಈ ರಾಶಿಯವರು ಹೆಚ್ಚು ಎಚ್ಚರಿಕೆ ವಹಿಸುವಂತೆಯೂ ಹೇಳಲಾಗಿದೆ.
ರಾಜಕೀಯ ಬಿಟ್ಟು ಉಡುಪಿ ಕಂಬಳವನ್ನು ಬೆಂಬಲಿಸಿ: ಶಾಸಕ ಗುರ್ಮೆ ಸುರೇಶ್ ಮನವಿ
ಉಡುಪಿ: ಉಭಯ ಜಿಲ್ಲೆಗಳಲ್ಲಿ ಸರಕಾರಿ ಜಾಗದಲ್ಲಿ ನಡೆಯುವ ಎಲ್ಲಾ ಕಂಬಳಗಳೂ ಆಯಾ ಪ್ರದೇಶದ ಶಾಸಕರ ನೇತೃತ್ವದಲ್ಲೇ ನಡೆಯುತ್ತಿವೆ. ಮಿಯಾರು, ಮೂಡಬಿದ್ರೆ, ನೆರಿಂಗಾನ ಕಂಬಳಗಳು ಇದಕ್ಕೆ ಉದಾಹರಣೆ ಯಾಗಿವೆ. ಆದ್ದರಿಂದ ಬಡಗುಬೆಟ್ಟು ಗ್ರಾಮದಲ್ಲಿ ಜಿಲ್ಲಾಡಳಿತ ಯುವಜನ ಸಬಲೀಕರಣ ಇಲಾಖೆಯ ಮೂಲಕ ಕಂಬಳ ಸಮಿತಿಗೆ ನೀಡಿರುವ 6.30ಎಕರೆ ಪ್ರದೇಶದಲ್ಲಿ ಮೊದಲ ಬಾರಿ ನಡೆಯುವ ಉಡುಪಿ ಕಂಬಳಕ್ಕೆ ಎಲ್ಲಾ ರೀತಿಯ ಬೆಂಬಲವನ್ನು ನೀಡುವಂತೆ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಅವರು ಕಾಂಗ್ರೆಸ್ ನಾಯಕರಲ್ಲಿ ಮನವಿ ಮಾಡಿದ್ದಾರೆ. ಉಡುಪಿ ಕೋಟಿ ಚೆನ್ನಯ್ಯ ಜೋಡುಕೆರೆ ಕಂಬಳ ಸಮಿತಿಯ ವತಿಯಿಂದ ಮುಂಬರುವ ಎಪ್ರಿಲ್ 25ರಂದು ಮೊದಲ ಬಾರಿ ನಡೆಯಲು ನಿಗದಿಯಾಗಿ ರುವ ಉಡುಪಿ ಕಂಬಳಕ್ಕೆ ಶಂಕುಸ್ಥಾಪನೆ ನೆರವೇರಿಸಿ, ಸಭಾ ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕ ಮಾತುಗಳನ್ನಾಡುತ್ತಾ ಅವರು ಈ ಮನವಿ ಮಾಡಿದರು. ಉಡುಪಿಯಲ್ಲಿ ಮೊದಲ ಬಾರಿ ನಡೆಯುವ ಜೋಡುಕೆರೆ ಕಂಬಳಕ್ಕಾಗಿ ಗುಡ್ಡ ಪ್ರದೇಶವನ್ನು ಸಿದ್ಧಗೊಳಿಸಬೇಕಾಗಿದೆ. ಇದಕ್ಕೆ ಸುಮಾರು ಎರಡು ಕೋಟಿ ರೂ. ಬೇಕಾಗುತ್ತದೆ. ಈಗಾಗಲೇ 60 ಲಕ್ಷ ರೂ.ಗಳಿಗೂ ಅಧಿಕ ಮೊತ್ತವನ್ನು ವಿವಿಧ ಕಾರ್ಯಗಳಿಗೆ ವ್ಯಯಿಸಲಾಗಿದೆ. ಇದಕ್ಕೆ ಸರಕಾರದಿಂದ ಸಿಗುವುದು ಗರಿಷ್ಠ ಐದು ಲಕ್ಷ ರೂ. ಮಾತ್ರ. ಹೀಗಾಗಿ ದಾನಿಗಳಿಂದ ಉಳಿದ ಹಣವನ್ನು ಸಂಗ್ರಹಿಸಬೇಕಿದೆ. ಹೀಗಾಗಿ ತುಳುನಾಡಿನ ಈ ಜಾನಪದ ಕ್ರೀಡೆ ಯಲ್ಲಿ ಯಾವುದೇ ರಾಜಕೀಯ ಮಾಡದಂತೆ ಅವರು ಮನವಿ ಮಾಡಿದರು. ಶಂಕುಸ್ಥಾಪನೆಗೆ ಶುಭಸಮಯವನ್ನು ಕೇಳಿ ದಿನ ನಿಗದಿ ಪಡಿಸಲಾಗಿದೆ. ಕೊನೆಯ ಕ್ಷಣದಲ್ಲಿ ಅಡ್ಡಿಪಡಿಸದಂತೆ ಪರಿಪರಿಯಾಗಿ ಉಸ್ತುವಾರಿ ಸಚಿವರಲ್ಲಿ ಮನವಿ ಮಾಡಿದ್ದೆ. ಕೆಲವು ನಾಯಕರ ಒತ್ತಡ ತಮ್ಮ ಮೇಲಿದೆ ಎಂದವರು ಹೇಳಿದ್ದರು. ಸಮಿತಿಗೆ ಲಕ್ಷ್ಮೀ ಹೆಬ್ಬಾಳ್ಕರ್, ವಿನಯಕುಮಾರ್ ಸೊರಕೆ, ಲಾಲಾಜಿ ಮೆಂಡನ್ ಮುಂತಾದವರು ಗೌರವಾಧ್ಯಕ್ಷರಾಗಿದ್ದಾರೆ. ಎಲ್ಲರನ್ನೂ ಕೇಳಿಯೇ ಈ ದಿನವನ್ನು ನಿಗದಿ ಪಡಿಸಲಾಗಿದೆ ಎಂದರು. ಕಾರ್ಯಕ್ರಮದಲ್ಲಿ ಪಾಲ್ಗೊಂಡ ಕಾರ್ಕಳದ ಶಾಸಕ ವಿ.ಸುನಿಲ್ಕುಮಾರ್, ಜಿಲ್ಲಾಡಳಿತ ಮಾರ್ಚ್ ನಾಲ್ಕರಂದು ಇಲ್ಲಿ ಶಂಕುಸ್ಥಾಪನೆ ಇಟ್ಟುಕೊಂಡಿದೆ. ಶಂಕುಸ್ಥಾಪನೆ ಮಾಡಿದರೆ ಸರಕಾರದ ವತಿಯಿಂದಲೇ ಕಂಬಳ ನಡೆಸುತ್ತೀರಾ? ಕಾಪು ಶಾಸಕರು ದಾನಿಗಳ ನೆರವಿನಿಂದ ಕಂಬಳ ಮಾಡಲು ಹೊರಟಿದ್ದಾರೆ. ಆದರೆ ಸರಕಾರ ಎಷ್ಟು ಅನುದಾನ ಕಂಬಳಕ್ಕೆ ನೀಡುತ್ತದೆ? ಯಾವ ಕಂಬಳಕ್ಕೂ ಸರಕಾರ ಅನುದಾನ ನೀಡುತ್ತಿಲ್ಲ. ನೀಡಿದರೂ ಎರಡರಿಂದ ಐದು ಲಕ್ಷ ಮಾತ್ರ. ಒಂದು ಕಂಬಳ ಆಯೋಜಿಸಲು 2 ಕೋಟಿಗೂ ಹೆಚ್ಚು ಹಣ ಬೇಕು. ಇಂತಹ ಉತ್ತಮ ಕಾರ್ಯಕ್ರಮದಂದು ಜಿಲ್ಲಾಡಳಿತ ನಿಷೇಧಾಜ್ಞೆ ಜಾರಿ ಮಾಡಿದೆ. ಯಾಕೆ? ಎಂದು ಪ್ರಶ್ನಿಸಿದರು. ಉಡುಪಿ ಚಿಕ್ಕಮಗಳೂರು ಲೋಕಸಭಾ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಅವರು ಕಂಬಳ ಪೋಸ್ಟರ್ ಬಿಡುಗಡೆ ಗೊಳಿಸಿದರು. ಕಾರ್ಯಕ್ರಮದಲ್ಲಿ ಶಾಸಕರಾದ ಉಡುಪಿಯ ಯಶಪಾಲ್ ಸುವರ್ಣ, ಕುಂದಾಪುರದ ಕಿರಣ್ಕುಮಾರ್ ಕೊಡ್ಗಿ, ಬೈಂದೂರಿನ ಗುರುರಾಜ್ ಗಂಟಿಹೊಳೆ, ಬಂಟ್ವಾಳದ ಶಾಸಕ ರಾಜೇಶ್ ನಾಯಕ್, ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ, ವಿಧಾನಪರಿಷತ್ ಸದಸ್ಯ ಡಾ.ಧನಂಜಯ್ ಸರ್ಜಿ ಭಾಗವಹಿಸಿದ್ದರು. ರಾಜ್ಯ ಕಂಬಳ ಸಮಿತಿ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ ಬೆಳಪು, ಕಾರ್ಯದರ್ಶಿ ವಿಜಯಕುಮಾರ್ ಕಂಗಿನಮನೆ, ಕೋಶಾಧಿಕಾರಿ ಲೋಕೇಶ್ ಶೆಟ್ಟಿ, ಸದಸ್ಯ ಶ್ರೀಕಾಂತ್ ಭಟ್ ನಂದಳಿಕೆ,ಮಾಜಿ ಶಾಸಕ ಲಾಲಾಜಿ ಮೆಂಡನ್, ಬಿಜೆಪಿ ನಾಯಕರಾದ ಮಟ್ಟಾರು ರತ್ನಾಕರ್ ಹೆಗ್ಡೆ, ಹರಿಕೃಷ್ಣ ಬಂಟ್ವಾಳ ಮುಂತಾದವರು ಉಪಸ್ಥಿತರಿದ್ದರು.
ಇರಾನ್ನ ಆಡಳಿತದಿಂದ ಅಸ್ತಿತ್ವದ ಬೆದರಿಕೆ ನಿವಾರಿಸಲು ದಾಳಿ: ಇಸ್ರೇಲ್ ಪ್ರಧಾನಿ ನೆತನ್ಯಾಹು
ಟೆಲ್ಅವೀವ್: ಅಮೆರಿಕಾದೊಂದಿಗೆ ಹೊಂದಾಣಿಕೆಯಲ್ಲಿ ಇರಾನ್ ವಿರುದ್ಧ ಇಸ್ರೇಲ್ ಮಿಲಿಟರಿ ಕಾರ್ಯಾಚರಣೆ ಪ್ರಾರಂಭಿಸಿದೆ. ಇರಾನ್ನಲ್ಲಿನ ` ಭಯೋತ್ಪಾದನಾ ಆಡಳಿತ'ದಿಂದ ಎದುರಾದ ಅಸ್ತಿತ್ವದ ಬೆದರಿಕೆ ನಿವಾರಿಸಲು ಈ ಕ್ರಮ ಅಗತ್ಯವಾಗಿದೆ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಶನಿವಾರ ಘೋಷಿಸಿದ್ದಾರೆ. ಮಿಲಿಟರಿ ಕಾರ್ಯಾಚರಣೆ ಪ್ರಾರಂಭವಾದ ಸ್ವಲ್ಪ ಸಮಯದ ನಂತರ ಟಿವಿ ವಾಹಿನಿಯಲ್ಲಿ ದೇಶವನ್ನುದ್ದೇಶಿಸಿ ಮಾತನಾಡಿದ ನೆತನ್ಯಾಹು `ಇರಾನ್ ಮೇಲಿನ ದಾಳಿಯನ್ನು ಬೆಂಬಲಿಸಿದ ನನ್ನ ಮಹಾನ್ ಮಿತ್ರ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಐತಿಹಾಸಿಕ ನಾಯಕತ್ವಕ್ಕಾಗಿ ಧನ್ಯವಾದ ಹೇಳುತ್ತೇನೆ. 47 ವರ್ಷಗಳಿಂದ ಆಯತುಲ್ಲಾ ಆಡಳಿತವು ಅನೇಕ ಅಮೆರಿಕನ್ನರನ್ನು, ಇಸ್ರೇಲಿಯನ್ನರನ್ನು ಮತ್ತು ತನ್ನದೇ ನಾಗರಿಕರನ್ನು ಹತ್ಯೆಗೈದಿದೆ. ಇರಾನ್ ಪರಮಾಣು ಅಸ್ತ್ರ ಹೊಂದುವುದನ್ನು ತಡೆಯಲು ನಿರ್ಣಾಯಕ ಮಿಲಿಟರಿ ಕ್ರಮ ಅತ್ಯಗತ್ಯವಾಗಿತ್ತು' ಎಂದು ಹೇಳಿದರು.
ನಿಷೇಧಾಜ್ಞೆಯ ನಡುವೆ ಉಡುಪಿ ಕಂಬಳಕ್ಕೆ ಶಂಕುಸ್ಥಾಪನೆ
ಉಡುಪಿ, ಫೆ.28: ಜಿಲ್ಲಾಡಳಿತ ಇಂದು ಮುಂಜಾನೆ 6 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ಮಣಿಪಾಲ ಠಾಣಾ ವ್ಯಾಪ್ತಿಯ 80 ಬಡಗುಬೆಟ್ಟು ಗ್ರಾಮದ ಸ.ನಂ.11/1ರಲ್ಲಿ ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆಗೆ ಸೇರಿದ 6.30 ಎಕರೆ ಪ್ರದೇಶದಲ್ಲಿ ನಿಷೇಧಾಜ್ಞೆ ವಿಧಿಸಿದ ಹೊರತಾಗಿಯೂ ನೂರಾರು ಮಂದಿ ಸೇರಿ ಕಾಪು ಶಾಸಕ ರಾದ ಗುರ್ಮೆ ಸುರೇಶ್ ಶೆಟ್ಟಿ ಅವರ ನೇತೃತ್ವದಲ್ಲಿ ನಡೆಯುವ ಉಡುಪಿ ಕಂಬಳಕ್ಕೆ ಶಂಕುಸ್ಥಾಪನೆ ನೆರವೇರಿಸಲಾಯಿತು. ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರ ಜಿದ್ದಾಜಿದ್ದಿನ ರಾಜಕೀಯದ ನಡುವೆ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಒಟ್ಟು ಎಂಟು ಮಂದಿ ಶಾಸಕರ ಉಪಸ್ಥಿತಿಯ ನಡುವೆ ಕೋಟಿ ಚೆನ್ನಯ ಜೋಡುಕೆರೆ ಕಂಬಳ ಸಮಿಯ ಅಧ್ಯಕ್ಷರಾಗಿರುವ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಅವರು ಉಡುಪಿ ಕಂಬಳಕ್ಕೆ ಶಂಕುಸ್ಥಾಪನೆ ನೆರವೇರಿಸಿದರಲ್ಲದೇ ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಕಂಬಳದ ಪೋಸ್ಟರ್ನ್ನು ಬಿಡುಗಡೆಗೊಳಿಸಿದರು. ಈ ನಡುವೆ ಉಡುಪಿ ಜಿಲ್ಲಾಡಳಿತ ಮತ್ತು ಯುವಜನ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ವತಿಯಿಂದ ನಡೆ ಯುವ ಉಡುಪಿ ಕಂಬಳಕ್ಕೆ ಇದೇ ಮಾ.4ರಂದು ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಶಂಕು ಸ್ಥಾಪನೆ ನೆರವೇರಿಸಲಿದ್ದಾರೆ ಎಂದು ಜಿಲ್ಲಾಡಳಿತ ಶುಕ್ರವಾರ ನೀಡಿದ ಪ್ರಕಟಣೆಯಲ್ಲಿ ತಿಳಿಸಿತ್ತು.ಉಡುಪಿ ಕಂಬಳಕ್ಕೆ ಮತ್ತೊಮ್ಮೆ ಶಂಕುಸ್ಥಾಪನೆ ನಡೆಯಲಿದೆಯೇ ಎಂಬ ಕುತೂಹಲ ಇದೀಗ ಭಯ ಜಿಲ್ಲೆಗಳ ಕಂಬಳ ಪ್ರೇಮಿಗಳಲ್ಲಿ ಹುಟ್ಟಿಕೊಂಡಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಅವರು ಶುಕ್ರವಾರ ರಾತ್ರಿ 80 ಬಡಗು ಬೆಟ್ಟು ಗ್ರಾಮದಲ್ಲಿ ಯುವಜನ ಸಬಲೀಕರಣ ಇಲಾಖೆಗೆ ಸೇರಿದ ಜಾಗದಲ್ಲಿ ನಿಷೇಧಾಜ್ಞೆಯನ್ನು ವಿಧಿಸಿ ಆದೇಶ ಹೊರಡಿಸಿದ್ದರು. ಇದು ಫೆ.28ರಂದು ನಡೆಯಲು ಶಾಸಕರ ನೇತೃತ್ವದ ಕಂಬಳ ಸಮಿತಿಯಿಂದ ಪೂರ್ವನಿಗದಿಯಾದ ಶಂಕುಸ್ಥಾಪನೆಯನ್ನು ತಡೆಯಲು ಕಾಪುವಿನ ಮಾಜಿ ಶಾಸಕ ವಿನಯಕುಮಾರ್ ಸೊರಕೆ ಅವರ ಒತ್ತಡದಿಂದ ಹೊರಡಿಸಿ ಆದೇಶವಾಗಿದೆ ಎಂದು ಗುರ್ಮೆ ನೇರವಾಗಿ ಆರೋಪಿಸಿದರು. ಜಿಲ್ಲಾಡಳಿತ ಹೊರಡಿಸಿದ ನಿಷೇಧಾಜ್ಞೆಯ ಆದೇಶ ವಿವಾದಕ್ಕೆ ಕಾರಣವಾಗಿ ಜಿಲ್ಲೆಯ ಕಂಬಳ ಪ್ರೇಮಿಗಳಲ್ಲಿ ಗೊಂದಲಕ್ಕೆ ಕಾರಣವಾಗಿತ್ತು. ಆದರೆ ಜಿಲ್ಲಾಡಳಿತದ ಆದೇಶ ಹಾಗೂ ಸ್ಥಳದಲ್ಲಿ ಬಿಗು ಪೊಲೀಸ್ ಬಂದೋಬಸ್ತ್ನ ನಡುವೆ ಯಾವುದೇ ಸದ್ದುಗದ್ದಲವಿಲ್ಲದೆ ಶಂಕುಸ್ಥಾಪನೆ ಶಾಂತಿಯುತವಾಗಿ ನೆರವೇರಿತು. ಉಭಯ ಜಿಲ್ಲೆಗಳ ಬಿಜೆಪಿ ನಾಯಕರು ಸೇರಿದಂತೆ ನೂರಾರು ಸಂಖ್ಯೆಯಲ್ಲಿ ಬಿಜೆಪಿ ಕಾರ್ಯಕರ್ತರು, ಕಂಬಳ ಪ್ರೇಮಿಗಳು ಹಾಗೂ ಆಸುಪಾಸಿನ ಗ್ರಾಮಸ್ಥರು ಇದರಲ್ಲಿ ಭಾಗವಹಿಸಿದ್ದರು. ಹಿರಿಯ ಕಾಂಗ್ರೆಸ್ ನಾಯಕರೂ ಆಗಿರುವ ರಾಜ್ಯ ಕಂಬಳ ಅಸೋಸಿಯೇಷನ್ನ ಅಧ್ಯಕ್ಷ ಐಕಳಬಾವ ದೇವಿಪ್ರಸಾದ್ ಶೆಟ್ಟಿ ಬೆಳಪು ಕಾರ್ಯಕ್ರಮದಲ್ಲಿ ಭಾಗವಹಿಸಿರುವುದು ಶಾಸಕರ ನೇತೃತ್ವದ ಕಂಬಳ ಸಮಿತಿಗೆ ಹೆಚ್ಚಿನ ಬಲವನ್ನು ನೀಡಿತ್ತು. ಈ ವರ್ಷ ಮೂರು ಹೊಸ ಕಂಬಳವನ್ನು ನಡೆಸಲು ಸಮಿತಿ ಸಮ್ಮತಿಯನ್ನು ನೀಡಿದ್ದು, ಇವುಗಳಲ್ಲಿ ಉಡುಪಿ ಕಂಬಳವೂ ಒಂದು. ಈ ಕಂಬಳ ಮುಂದಿನ ಎ.25ಕ್ಕೆ ನಡೆಯಲು ದಿನ ನಿಗದಿಯಾಗಿದೆ ಎಂದು ದೇವಿಪ್ರಸಾದ್ ಶೆಟ್ಟಿ ಪ್ರಕಟಿಸಿದರು.

20 C