Summer Health Tips: ಬೇಸಿಗೆಯಲ್ಲಿ ಆರೋಗ್ಯ ಕಾಪಾಡಿಕೊಳ್ಳಲು ಬೇಕಾದ ಸಲಹೆಗಳು ಇಲ್ಲಿವೆ, ಪಾಲಿಸಿ
ಬೆಂಗಳೂರು: ರಾಜ್ಯದಲ್ಲಿ ಉರಿ ಬಿಸಿಲ ಬೇಗೆ ಹೆಚ್ಚಾಗಿದೆ. ಬೆಂಗಳೂರು ಸೇರಿ ವಿವಿಧ ಜಿಲ್ಲೆಗಳಲ್ಲಿ ಮಾರ್ಚ್ ಆರಂಭದಲ್ಲೇ ಸುಡು ಬಿಸಿಲು ದಾಖಲಾಗುತ್ತಿದ್ದು, ಗರಿಷ್ಠ ತಾಪಮಾನ ಏರುಗತಿಯಲ್ಲಿದೆ. ಹೀಗಿರುವಾಗ ನಾವು ಮಾನಸಿಕವಾಗಿ, ದೈಹಿಕವಾಗಿ ಆರೋಗ್ಯಯುತವಾಗಿರಬೇಕು. ಅದಕ್ಕಾಗಿ ಬದಲಾಗುವ ಹವಾಮಾನ ಕಾಲಕ್ಕೆ ಹೊಂದಿಕೊಳ್ಳುವುದು ಮುಖ್ಯವಾಗಿರುತ್ತದೆ. ಬಿಸಿಲಿನಿಂತ ನಿಮ್ಮ ಚರ್ಮದ ಆರೋಗ್ಯ, ದೇಹದಾರೋಗ್ಯ ರಕ್ಷಿಸುವುದಕ್ಕೆ ಒಂದಷ್ಟು ಸಲಹೆಗಳು ಇಲ್ಲಿವೆ. ಸಾಮಾನ್ಯವಾಗಿ ಪ್ರತಿ ವರ್ಷ
ಚಿಕ್ಕಮಗಳೂರು: ಪೋಕ್ಸೋ ಪ್ರಕರಣದ ಆರೋಪಿಗೆ 7 ವರ್ಷ ಕಠಿಣ ಶಿಕ್ಷೆ, ದಂಡ
ಚಿಕ್ಕಮಗಳೂರು: ಜಿಲ್ಲೆಯ ಮಲ್ಲಂದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಅಪ್ರಾಪ್ತ ಬಾಲಕಿಯ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣದ ವಿಚಾರಣೆ ನಡೆಸಿದ ಇಲ್ಲಿನ ನ್ಯಾಯಾಲಯವು ಆರೋಪಿಗೆ 7 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ನರಿಗುಡ್ಡೆ ಗ್ರಾಮದ ನಿವಾಸಿ ಮೂರ್ತಿ (45) ಶಿಕ್ಷೆಗೊಳಗಾದ ಆರೋಪಿ. ಪ್ರಕರಣ ಸಂಬಂಧ ರೇಣುಕ ಹೆಚ್.ಆರ್ , ರಕ್ಷಣಾಧಿಕಾರಿ (ಅಸಾಂಸ್ಥಿಕ ಸೇವೆ), ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಚಿಕ್ಕಮಗಳೂರು ಇವರು ದೂರು ದಾಖಲಿಸಿದ್ದರು. ಆರೋಪಿಯು ಬಾಲಕಿಯ ಮೇಲೆ ದೌರ್ಜನ್ಯ ಎಸಗಿದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ, ಚಿಕ್ಕಮಗಳೂರಿನ ಘನ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ (ಎಫ್.ಟಿ.ಎಸ್.ಸಿ.-1) ಈ ಮಹತ್ವದ ತೀರ್ಪು ಪ್ರಕಟಿಸಿದೆ. ಶಿಕ್ಷೆಯ ಜೊತೆಗೆ ಆರೋಪಿಗೆ 25,000 ರೂ. ದಂಡ ವಿಧಿಸಲಾಗಿದ್ದು, 'ಕರ್ನಾಟಕ ಸಂತ್ರಸ್ತ ಪರಿಹಾರ ಯೋಜನೆ-2011' ರ ಅಡಿಯಲ್ಲಿ ನೊಂದ ಬಾಲಕಿಗೆ 1,00,000 ರೂ. ಪರಿಹಾರ ನೀಡುವಂತೆ ನ್ಯಾಯಾಧೀಶರು ಆದೇಶಿಸಿದ್ದಾರೆ. ಆಲ್ದೂರು ವೃತ್ತ ನಿರೀಕ್ಷಕರಾದ ಸೋಮೇಗೌಡ ಪಿ.ಪಿ. ಅವರು ಈ ಪ್ರಕರಣದ ತನಿಖೆ ನಡೆಸಿ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕರಾದ ಬಿ. ಭರತ್ ಕುಮಾರ್ ವಾದ ಮಂಡಿಸಿದ್ದರು. ತನಿಖಾ ಸಹಾಯಕರಾಗಿ ಎ.ಎಸ್.ಐ. ಸುಬ್ರಮಣಿ, ಸಿ.ಹೆಚ್.ಸಿ. ಅಶೋಕ್ ಕೆ.ಎಂ., ಸಿ.ಪಿ.ಸಿ. ಚಿದಾನಂದ ಕೆ.ಡಿ. ಹಾಗೂ ಪ್ರೋಸೆಸ್ ಕರ್ತವ್ಯದಲ್ಲಿ ಸಿ.ಪಿ.ಸಿ. ಹರ್ಷ ಎಂ.ವಿ. ಸಹಕರಿಸಿದ್ದರು.
Moodbidri : ವಿಮೆನ್ ಇಂಡಿಯಾ ಮೂವ್ಮೆಂಟ್ ವತಿಯಿಂದ ಮಹಿಳಾ ದಿನಾಚರಣೆ
ರಾಷ್ಟ್ರೀಯ ಮಟ್ಟದ ಕ್ರೀಡಾಕೂಟದ ವಿಜೇತೆ ಸಹ್ಲಾ ಎಸ್.ಐ ಗೆ ಸನ್ಮಾನ
“ಪಶ್ಚಿಮ ಏಶ್ಯಾದಲ್ಲಿ ಸಿಲುಕಿರುವ ಭಾರತೀಯರನ್ನು ಮರಳಿ ಕರೆತರಲು ಎಲ್ಲಾ ಪ್ರಯತ್ನಗಳನ್ನು ಮಾಡಲಾಗುತ್ತಿದೆ”
ರಾಜ್ಯದಲ್ಲಿ ಏ. 15 ರಿಂದ ಶಿಕ್ಷಕರಿಗೆ 3 ನೇ ಗಣತಿ ಹೊಣೆ
ರಾಜ್ಯದಲ್ಲಿ ಏಪ್ರಿಲ್ 15 ರಿಂದ ಮೇ 15 ರವರೆಗೆ 'ಮನೆಗಳ ಪಟ್ಟಿ ಮತ್ತು ವಸತಿ ಗಣತಿ' ಪ್ರಕ್ರಿಯೆ ನಡೆಯುತ್ತಿದೆ. ಶಿಕ್ಷಕರಿಗೆ ಬೇಸಿಗೆ ರಜೆಯ ಬದಲು ಗಣತಿ ಕಾರ್ಯ ನಿರ್ವಹಿಸಬೇಕಾಗಿದೆ. ಇದು ಒಂದೇ ವರ್ಷದಲ್ಲಿ ನಡೆಸುತ್ತಿರುವ 3 ನೇ ಗಣತಿ ಕಾರ್ಯ. ಎರಡನೇ ಹಂತದಲ್ಲಿ 2027 ರ ಮಾರ್ಚ್ ತಿಂಗಳಲ್ಲಿ ಜನಸಂಖ್ಯಾ ಗಣತಿ ನಡೆಯಲಿದೆ.
ಅವಳ ಮಾತಿನ ಭಯದಲ್ಲಿ ಬದುಕುವ ಗಂಡಸರು: ಹೇಳದಿರುವ ನೋವಿನ ಕಥೆಗಳು
ಪ್ರತಿ ವರ್ಷ ಬಂದಂತೆ ಈ ವರ್ಷವು ಮಹಿಳೆಯರ ದಿನಾಚರಣೆಯು ಆಚರಿಸಲಾಯಿತು. ಮಹಿಳಾ ದಿನಾಚರಣೆ ಬಂದಾಗ ನಾವು ಮಹಿಳೆಯರ ಸಾಧನೆ, ಹೋರಾಟ ಮತ್ತು ಅವರ ಎದುರಿಸುವ ಸಮಸ್ಯೆಗಳ ಬಗ್ಗೆ ಮಾತನಾಡುತ್ತೇವೆ. ಆದರೆ ಕುಟುಂಬದೊಳಗಿನ ಸಂಬಂಧಗಳಲ್ಲಿ ನೋವು ಅನುಭವಿಸುವವರು ಕೆಲವೊಮ್ಮೆ ಗಂಡಸರೂ ಆಗಿರುತ್ತಾರೆ. ಇದು ಹೊರಗೆ ಬರುವುದಿಲ್ಲ. ಮದುವೆ ಎಂಬ ಸಂಬಂಧಗಳಲ್ಲಿ ಒಬ್ಬರ ಮೇಲೆ ಒಬ್ಬರು ಪ್ರೀತಿ, ವಿಶ್ವಾಸ, ನಂಬಿಕೆ
Stock Market Crash : ನಿಮ್ಮ ಕಣ್ಣೆದುರೇ ಕೇವಲ 10 ನಿಮಿಷಗಳಲ್ಲಿ ಬರೋಬ್ಬರಿ 12 ಲಕ್ಷ ಕೋಟಿ ರೂಪಾಯಿ ಗುಳುಂ ಆದ್ರೆ, ಹೇಗಿರುತ್ತೆ.. ಸಾವಿರಾರು ಕಿಲೋ ಮೀಟರ್ ದೂರದಲ್ಲಿ ಇರಾನ್ ಮತ್ತು ಇಸ್ರೇಲ್ ನಡುವೆ ಹೊತ್ತಿಕೊಂಡಿರುವ ಯುದ್ಧದ ಬೆಂಕಿ, ಈಗ ನೇರವಾಗಿ ನಿಮ್ಮ ಜೇಬಿಗೆ ಕತ್ತರಿ ಹಾಕಲು ಸಜ್ಜಾಗಿದೆ. ದಲಾಲ್ ಸ್ಟ್ರೀಟ್ನಲ್ಲಿ ರಕ್ತದೋಕುಳಿಯೇ ಹರಿದಿದೆ.. ಕಚ್ಚಾ ತೈಲದ ಬೆಲೆ 100 ಡಾಲರ್ ಗಡಿ ದಾಟಿ ಗಗನಕ್ಕೇರಿದ್ದು, ಕೆಲವೇ ನಿಮಿಷಗಳಲ್ಲಿ 12 ಲಕ್ಷ ಕೋಟಿ ರೂಪಾಯಿ ನಷ್ಟವಾಗಿದೆ. ಯುದ್ಧ ಶುರುವಾದ ಬಳಿಕ 30 ಲಕ್ಷ ಕೋಟಿ ರೂಪಾಯಿ ನಷ್ಟವನ್ನು ಹೂಡಿಕೆದಾರರು ಅನುಭವಿಸಿದ್ದಾರೆ. ಷೇರು ಮಾರುಕಟ್ಟೆಯಲ್ಲಿ ಏನಾಗ್ತಿದೆ ಎನ್ನುವುದನ್ನು ಇಲ್ಲಿ ನೋಡೋಣ ಬನ್ನಿ..
ಮಧ್ಯಪ್ರಾಚ್ಯದಲ್ಲಿ ಮುಂದುವರಿದ ಸಂಘರ್ಷ | ಖತರ್, ಬಹರೈನ್, ಸೌದಿ ಅರೇಬಿಯಾ, ಯುಎಇ ಮೇಲೆ ಸರಣಿ ದಾಳಿ : ವರದಿ
ರಿಯಾದ್ : ಮಧ್ಯಪ್ರಾಚ್ಯದಲ್ಲಿ ಸಂಘರ್ಷ ಮುಂದುವರಿದಿದೆ. ಖತರ್, ಬಹರೈನ್, ಸೌದಿ ಅರೇಬಿಯಾ ಮತ್ತು ಯುಎಇಯನ್ನು ಗುರಿಯಾಗಿಸಿಕೊಂಡು ಇರಾನ್ ಸರಣಿ ದಾಳಿಯನ್ನು ನಡೆಸಿರುವ ಬಗ್ಗೆ aljazeera.com ವರದಿ ಮಾಡಿದೆ. ಖತರ್ ಮೇಲೆ ಬೆಳಗಿನ ಜಾವ 3 ಗಂಟೆಗೆ ಇರಾನ್ ಕ್ಷಿಪಣಿ ದಾಳಿ ನಡೆಸಿದೆ. ಕ್ಷಿಪಣಿಗಳನ್ನು ಆಕಾಶದಲ್ಲೇ ತಡೆಯಲಾಗಿದೆ. ದೋಹಾದಲ್ಲಿ ಆಕಾಶದಲ್ಲೇ 12 ಅಥವಾ ಅದಕ್ಕಿಂತ ಹೆಚ್ಚು ಭಾರೀ ಸ್ಫೋಟಗಳ ಶಬ್ದ ಕೇಳಿಸಿದೆ. ಹೊಗೆ ದೃಶ್ಯವೂ ಕಂಡು ಬಂದಿದೆ ಎಂದು ವರದಿಯು ತಿಳಿಸಿದೆ. ಸಿತ್ರಾ ಪ್ರದೇಶದಲ್ಲಿ ಡ್ರೋನ್ ದಾಳಿಯಲ್ಲಿ 32 ನಾಗರಿಕರು ಗಾಯಗೊಂಡಿದ್ದಾರೆ ಎಂದು ಬಹರೈನ್ ಸರಕಾರಿ ಮಾಧ್ಯಮ ವರದಿ ಮಾಡಿದೆ. ಶೈಬಾ ತೈಲಕ್ಷೇತ್ರಗಳನ್ನು ಗುರಿಯಾಗಿಸಿಕೊಂಡು ನಡೆಸಿದ ಡ್ರೋನ್ ದಾಳಿಯನ್ನು ತಡೆಹಿಡಿಯಲಾಗಿದೆ ಎಂದು ಸೌದಿ ಅರೇಬಿಯಾದ ರಕ್ಷಣಾ ಸಚಿವಾಲಯ ಹೇಳಿದೆ. ರಿಯಾದ್ನ ಉತ್ತರಕ್ಕೆ ಎರಡು ಡ್ರೋನ್ಗಳನ್ನು ಹೊಡೆದುರುಳಿಸಿರುವುದಾಗಿಯೂ ತಿಳಿಸಿದೆ. ಯುಎಇ ಫುಜೈರಾ ಪ್ರದೇಶದಲ್ಲಿ ಕ್ಷಿಪಣಿಯ ಅವಶೇಷಗಳು ಬಿದ್ದ ಪರಿಣಾಮ ದೊಡ್ಡ ಮಟ್ಟದ ಬೆಂಕಿ ಕಾಣಿಸಿಕೊಂಡಿದ್ದು, ಅದನ್ನು ನಿಯಂತ್ರಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಯುಎಇ ಅಧಿಕಾರಿಗಳು ತಿಳಿಸಿದ್ದಾರೆ.
ಮಹಿಳಾ ಮೀಸಲಾತಿ : ನನ್ನ ಶ್ರಮಕ್ಕೆ ಮೋದಿ ಅಂತಿಮ ಸ್ಪರ್ಶ ಕೊಟ್ಟರು, ಅವರಿಗೆ ಅಭಿನಂದನೆ - HD ದೇವೇಗೌಡ
Women Reservation : ಮಹಿಳಾ ಮೀಸಲಾತಿಗಾಗಿ ನಾನು ಪ್ರಯತ್ನವನ್ನು ಮಾಡಿದ್ದೆ, ಪ್ರಧಾನಮಂತ್ರಿ ನರೇಂದ್ರ ಮೋದಿ ಅದಕ್ಕೆ ಅಂತಿಮ ಸ್ಪರ್ಶವನ್ನು ನೀಡಿದ್ದಾರೆ. ಅದಕ್ಕಾಗಿ, ನಾನು ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಚುನಾವಣಾ ಕಣದಲ್ಲಿ ಇದ್ದರೆ ಮಾತ್ರ, ಮಹಿಳಾ ಮೀಸಲಾತಿಗೆ ಒಂದರ್ಥ ಬರುತ್ತದೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅಭಿಪ್ರಾಯ ಪಟ್ಟಿದ್ದಾರೆ.
ಇರಾನ್ ನಾಯಕರೊಂದಿಗೆ ಸಂಪರ್ಕಕ್ಕೆ ಯತ್ನ: ಭಾರತದ ಈ ಕ್ರಮಕ್ಕೆ ಇರಾನ್ ಧನ್ಯವಾದ ಹೇಳಿದೆ: ವಿದೇಶಾಂಗ ಸಚಿವ ಎಸ್ ಜೈಶಂಕರ್
Jaishankar:ಲೋಕಸಭೆ ಸಂಸತ್ ಅಧಿವೇಶನ ಪ್ರಾರಂಭವಾಗಿದೆ. 2026ರ ಬಜೆಟ್ ಅಧಿವೇಶನದ ದ್ವಿತೀಯಾರ್ಧವು ಮಾರ್ಚ್ 9, 2026ರಿಂದ ಆರಂಭವಾಗಿದ್ದು, ಲೋಕಸಭೆ ಸ್ಪೀಕರ್ ಓಂ ಬಿರ್ಲಾ ವಿರುದ್ಧ ವಿರೋಧ ಪಕ್ಷಗಳು ಸಲ್ಲಿಸಿರುವ ಅವಿಶ್ವಾಸ ನಿರ್ಣಯದ ಚರ್ಚೆ ಮತ್ತು ಮಧ್ಯಪ್ರಾಚ್ಯದಲ್ಲಿನ ಬೆಳವಣಿಗೆ, ಭಾರತದ ವಿದೇಶಾಂಗ ನೀತಿ ಹಾಗೂ ಯುದ್ಧ ನಡೆಯುತ್ತಿರುವ ದೇಶಗಳಲ್ಲಿ, ಗಲ್ಫ್ ರಾಷ್ಟ್ರಗಳಲ್ಲಿ ಇರುವ ಭಾರತೀಯರ ರಕ್ಷಣೆಯ ವಿಚಾರಕ್ಕೆ ಸಂಬಂಧಿಸಿದಂತೆ ಗಂಭೀರ
ಅಮೆರಿಕದೊಂದಿಗೆ ಸ್ನೇಹ: ಸುರಕ್ಷಿತ ಅಂತರವಿರಲಿ
ಅಂತರ್ರಾಷ್ಟ್ರೀಯ ಸಂಬಂಧಗಳನ್ನು ಅರ್ಥ ಮಾಡಿಕೊಂಡು ವಿಶ್ಲೇಷಣೆಗೆ ಗುರಿ ಪಡಿಸುವುದು ಸುಲಭದ ಮಾತಲ್ಲ. ಯಾಕೆಂದರೆ ಅಲ್ಲಿನ ಸಂಕೀರ್ಣತೆ, ಒತ್ತಡಗಳು, ಒಳ ಸುಳಿಗಳೆಲ್ಲ ಮೇಲ್ನೋಟಕ್ಕೆ ಗೋಚರಿಸುವಂತಿರುವುದಿಲ್ಲ. ಇನ್ನು ದೇಶಗಳ ನಾಯಕರ ವೈಯಕ್ತಿಕ ಸ್ನೇಹ, ಒತ್ತಾಸೆಗಳು ಸಂಬಂಧಗಳ ನಡುವೆ ತಲೆ ಹಾಕಿದರೆ ಹೇಳುವುದೇ ಬೇಡ. ಆಗ ವಿಷಯ ಜಟಿಲಗೊಂಡು ಹೊರಗಿನವರಿಗೆ ಒಂದು ತೀರ್ಮಾನಕ್ಕೆ ಬಂದು ಬಿಡಲು ಕಷ್ಟವಾಗುತ್ತದೆ. ಆದರೆ ಅಮೆರಿಕದಂತಹ ದೇಶ ಮತ್ತು ಟ್ರಂಪ್ ಅವರಂತಹ ನಾಯಕನ ವಿಷಯದಲ್ಲಿ ಸಂಬಂಧಗಳನ್ನು ಅರ್ಥ ಮಾಡಿಕೊಳ್ಳಲು ಅಂತಹ ಬುದ್ಧಿವಂತಿಕೆಯ ಅಗತ್ಯವಿಲ್ಲ ಎಂದು ಧಾರಾಳವಾಗಿ ಹೇಳಬಹುದು. ಟ್ರಂಪ್ ಅವರ ಎರಡನೇ ಅಧಿಕಾರ ಅವಧಿಯ ಹೇಳಿಕೆಗಳು ಮತ್ತು ನಡವಳಿಕೆಗಳು ಈ ಅಭಿಪ್ರಾಯವನ್ನು ಧ್ವನಿಪೂರ್ಣವಾಗಿ ಸಮರ್ಥಿಸುವಂತಿವೆ. ಅಮೆರಿಕ ಪಕ್ಕಾ ವ್ಯಾವಹಾರಿಕ ದೇಶ ಎಂಬುದು ಎಲ್ಲರಿಗೂ ಗೊತ್ತು. ಆ ದೇಶಕ್ಕೆ ಲಾಭವಿಲ್ಲದೆ ಇನ್ನೊಂದು ದೇಶಕ್ಕೆ ಅನುಕೂಲ ಮಾಡಿಕೊಡುವುದು ಅದರ ಜಾಯಮಾನದಲ್ಲೇ ಇಲ್ಲ. ಇನ್ನು ಜಗತ್ತಿನ ಯಾಜಮಾನಿಕೆ ವಹಿಸಿಕೊಂಡು ಎಲ್ಲದರಲ್ಲೂ ತನ್ನ ಕೈ ಮೇಲು ಎಂದು ಸಾಧಿಸುವುದು ಆ ದೇಶದ ಅಲಿಖಿತ ನೀತಿ. ಹೀಗಾಗಿ ಯಾರು ಒಪ್ಪಲಿ ಬಿಡಲಿ ಅದು ಜಗತ್ತಿಗೆ ದೊಡ್ಡಣ್ಣ! ಅದರ ಸಾಧನೆ ಮತ್ತು ಸಾಮರ್ಥ್ಯಗಳೂ ಹಾಗೆ ಇವೆ ಕೂಡಾ. ರಶ್ಯದಂತಹ ದೇಶದ ಪತನದ ಬಳಿಕ ಅದನ್ನು ಪ್ರಶ್ನಿಸುವವರೇ ಇಲ್ಲದಂತಾಗಿದೆ. ಇಲ್ಲಿ ಚೀನಾ ನೇರಾ ನೇರ ಅಖಾಡಕ್ಕೆ ಇಳಿಯದಿರುವುದು ಸದ್ಯಕ್ಕೆ ಅಮೆರಿಕದ ಸ್ಥಾನಮಾನ ಅಭಾದಿತವೆನ್ನಬಹುದು. ಇಂತಹ ದೇಶಕ್ಕೆ ಟ್ರಂಪ್ ಅವರಂತಹ ವ್ಯಕ್ತಿ ಅಧ್ಯಕ್ಷರಾಗಿ ಬಂದರೆ ಏನಾಗ ಬಹುದು? ಏನಾಗಿದೆ, ಏನಾಗುತ್ತಿದೆ ಎಲ್ಲವೂ ನಮ್ಮ ಕಣ್ಣ ಮುಂದಿವೆ. ಮುಂದೆ ಏನಾಗಲಿವೆ ಎಂಬುದನ್ನು ಆತಂಕದಿಂದ ಕಾದು ನೋಡ ಬೇಕಾದ ಪರಿಸ್ಥಿತಿ ಬಂದೊದಗಿದೆ. ಪ್ರಸಕ್ತ ಭಾರತ ಮತ್ತು ಅಮೆರಿಕದ ಸಂಬಂಧ ಆಗಾಗ ಮಹತ್ವದ ತಿರುವು ತೆಗೆದು ಕೊಳ್ಳುತ್ತಿರುವುದರಿಂದ ಈ ನಿಟ್ಟಿನಲ್ಲಿ ಚಿಂತಿಸುವುದು ಅತ್ಯಂತ ಅಗತ್ಯವಾಗಿದೆ. ಇದನ್ನು ಎಲ್ಲಿಂದ ಪ್ರಾರಂಭಿಸುವುದು; ಎಲ್ಲಿಗೆ ನಿಲ್ಲಿಸುವುದು? ಹೊಸ ಸುದ್ದಿ ಬಂದಿದೆ, ನೋಡಿ. ಭಾರತಕ್ಕೆ ಇನ್ನು 30 ದಿನಗಳ ವರೆಗೆ ರಶ್ಯದಿಂದ ತೈಲ ಅಮದು ಕೊಳ್ಳುವುದಕ್ಕೆ ವಿನಾಯಿತಿ ಇದೆ! ಹೀಗಂತ ಅಮೆರಿಕ ಅಪ್ಪಣೆ ಕೊಡಿಸಿದೆ. ಭಾರತ ಒಂದು ಸರ್ವ ಸ್ವತಂತ್ರ ಸಾರ್ವಭೌಮ ದೇಶವೆಂದು ಅಮೆರಿಕಕ್ಕೆ ಮರೆತು ಹೋಯಿತೇ? ಭಾರತದ ಆಂತರಿಕ ವಿಷಯದೊಳಗೆ ಈ ರೀತಿ ಮಧ್ಯ ಪ್ರವೇಶ ಮಾಡಲು ಆ ದೇಶಕ್ಕೆ ಯಾವ ಅಧಿಕಾರವಿದೆ? ಈ ನಿಟ್ಟಿನಲ್ಲಿ ಕೇಂದ್ರ ಸರಕಾರ ತಕ್ಕುದಾಗಿ ಪ್ರತಿಕ್ರಿಯಿಸ ಬೇಕಾಗಿರುವುದು ಅಗತ್ಯ. ಇಂತಹ ಅಧಿಕ ಪ್ರಸಂಗದ ನಡವಳಿಕೆ ಅಮೆರಿಕದಿಂದ ಮೊದಲ ಬಾರಿ ಏನಲ್ಲ. ಈ ಹಿಂದೆ ಟ್ರಂಪ್ ಭಾರತವನ್ನು ನಿರಂತರ ಅವಮಾನ, ಸಂಕಷ್ಟಕ್ಕೆ ಗುರಿ ಮಾಡಿರುವುದನ್ನು ಯಾವ ಭಾರತೀಯನೂ ಮರೆಯಲು ಸಾಧ್ಯವಿಲ್ಲ. ಭಾರತ ಪಾಕಿಸ್ತಾನದೊಂದಿಗೆ ಸ್ಪಷ್ಟ ಮೇಲುಗೈ ಸಾಧಿಸಿದಂತಹ ‘ಅಪರೇಷನ್ ಸಿಂಧೂರ’ ದ ಯಶಸ್ಸನ್ನು ಸಂಭ್ರಮಿಸಲು ಟ್ರಂಪ್ ಅವರ ಉಡಾಫೆ ಹೇಳಿಕೆಗಳು ಅಡ್ಡಿ ಉಂಟು ಮಾಡಿರುವುದನ್ನೊಮ್ಮೆ ನೆನಪಿಸಿಕೊಳ್ಳೋಣ. ಸೈನಿಕರ ಶೌರ್ಯದ ಫಲವಾಗಿ ಯಶಸ್ಸು ನಮ್ಮದಾಗಿತ್ತು. ಈ ಯುದ್ಧವನ್ನು ನಿಲ್ಲಿಸಿದ್ದು ತಾನೇ ಎಂದು ಟ್ರಂಪ್ಮಹಾಶಯರು ಪದೇ ಪದೇ ಹೇಳುತ್ತಲೇ ಹೋದರು. ಅದೆಷ್ಟು ಬಾರಿ ಹೇಳಿದರೋ ಗೊತ್ತಿಲ್ಲ, ಇಂದಿಗೂ ಅದನ್ನೇ ಬಡ ಬಡಿಸುತ್ತಲೇ ಇದ್ದಾರೆ. ಇಷ್ಟು ಸಾಲದೆಂಬಂತೆ ಪಾಕಿಸ್ತಾನದ ಸೇನಾ ದಂಡ ನಾಯಕನಿಗೆ ಶ್ವೇತ ಭವನದಲ್ಲಿ ಔತಣ ನೀಡಿದರು. ಜೊತೆಗೆ ಅಡ್ಡ ಗೋಡೆ ಮೇಲೆ ದೀಪ ಇಡುವಂತೆ ಇಷ್ಟು ಯುದ್ಧ ವಿಮಾನಗಳು ಪತನವಾಗಿವೆ ಎಂಬ ಹೇಳಿಕೆಯನ್ನೂ ನೀಡಿದರು. ಈ ವಿಚಾರದಲ್ಲಿ ನಮ್ಮ ಪ್ರಧಾನಿ ಅಸಹಾಯಕರಾಗಿ ಮೌನಕ್ಕೆ ಶರಣಾಗಿ ಬಿಟ್ಟರು ಇದಾದ ಬಳಿಕ ಟ್ರಂಪ್ ರಶ್ಯದಿಂದ ಕಚ್ಚಾ ತೈಲ ಆಮದನ್ನು ನಿಲ್ಲಿಸ ಬೇಕೆಂಬ ಒತ್ತಡ ಹೇರಲಾರಂಭಿಸಿದರು. ತಪ್ಪಿದರೆ ಆಮದು ಸರಕುಗಳ ಮೇಲೆ ಶೇ. 50ರ ಬೆದರಿಕೆಯೂ ಇತ್ತು. ಕಷ್ಟ ಕಾಲದ ಮಿತ್ರ ರಾಷ್ಟ್ರ ರಶ್ಯಕ್ಕೆ ಭಾರತ ದ್ರೋಹ ಬಗೆಯ ಬೇಕೆ? ಟ್ರಂಪ್ ಅವರನ್ನು ತನ್ನ ಮಿತ್ರನೆಂದೂ ಭಾರತದ ಮಿತ್ರನೆಂದೂ ಹೆಮ್ಮೆಯಿಂದ ಹೇಳಿ ಕೊಳ್ಳುತ್ತಿದ್ದಂತಹ ಮೋದಿಯವರು ಟ್ರಂಪ್ಜೊತೆ ಮಾತುಕತೆ ನಡೆಸಿದರೋ ಇಲ್ಲವೊ ಗೊತ್ತಿಲ್ಲ. ಅಂತೂ ಒಂದು ದಿನ ಟ್ರಂಪ್ ಭಾರತದ ಮೇಲೆ ಶೇಕಡ ಸುಂಕ ವಿಧಿಸಿಯೇ ಬಿಟ್ಟರು! ಅವರಿಗೆ ತನ್ನ ‘ಆಪ್ತ ಮಿತ್ರ’ನ ಆತ್ಮೀಯತೆಯಾಗಲಿ, ಸ್ನೇಹವಾಗಲಿ ನೆನಪಿಗೆ ಬರಲಿಲ್ಲ. ತರುವಾಯ ಭಾರತ ಐರೋಪ್ಯ ಒಕ್ಕೂಟದ ಜೊತೆ ವ್ಯಾಪಾರ ಒಪ್ಪಂದ ಮಾಡುತ್ತಿದ್ದಂತೆ ಅವರಿಗೆ ಮೋದಿಯವರ ನೆನಪಾಯಿತೇನೋ? ಭಾರತದ ಮೇಲಿನ ಸುಂಕ 50ರಿಂದ 18ಕ್ಕೆ ಇಳಿಕೆ ಮಾಡಲಾಗುವುದು ಎಂಬ ಆಕರ್ಷಕ ಘೋಷಣೆಯನ್ನು ಮಾಡಲಾಯಿತು. ಇಲ್ಲಿಯೂ ಗುಪ್ತ ಕಾರ್ಯಸೂಚಿಗಳಿದ್ದವು. ಅವುಗಳು ನಂತರ ಬಯಲಾಯಿತು. ಅಮೆರಿಕ ಕೆಲವು ಕೃಷಿ ಉತ್ಪನ್ನಗಳನ್ನು ಭಾರತಕ್ಕೆ ರಪ್ತು ಮಾಡುವುದು ಈ ಪ್ರಸ್ತಾವದಲ್ಲಿ ಒಳಗೊಂಡಿತ್ತು. ಭಾರತದ ರೈತರ ಹಿತಾಸಕ್ತಿಗಳಿಗೆ ಧಕ್ಕೆ ತರುವಂತಹ ಈ ಪ್ರಸ್ತಾವವನ್ನು ರೈತರು ಮತ್ತು ಪ್ರತಿ ಪಕ್ಷಗಳು ತೀವ್ರವಾಗಿ ವಿರೋಧಿಸಿವೆ. ಈ ನಡುವೆ ಅಮೆರಿಕದ ಸರ್ವೋಚ್ಚ ನ್ಯಾಯಾಲಯ ವಿದೇಶಗಳ ಮೇಲಿನ ಆಮದು ತೆರಿಗೆಯನ್ನು ಶೇ. 10ಕ್ಕೆ ಇಳಿಸಿದೆ. ಕೊನೆಗೆ ಅದು ಶೇ. 15ಕ್ಕೆ ನಿಗದಿಯಾಗಿದೆ ಎಂಬ ಸುದ್ದಿ ಬಂದಿದೆ. ಈ ಎಲ್ಲ ಬೆಳವಣಿಗೆಗಳ ನಡುವೆ ಟ್ರಂಪ್ ತನ್ನ ವಿಶಿಷ್ಟ ಹಾವಭಾವಗಳಿಂದ ‘‘ಭಾರತದ ವಸ್ತುಗಳ ಮೇಲೆ ನಾವು ತೆರಿಗೆ ವಿಧಿಸಿದ್ದೇವೆ, ಭಾರತ ಅಮೇರಿಕದ ರಪ್ತುಗಳ ಮೇಲೆ ಯಾವುದೇ ತೆರಿಗೆ ವಿಧಿಸುತ್ತಿಲ್ಲ’’ ಎಂದೆಲ್ಲ ಅಮೆರಿಕ ಜನತೆಯನ್ನು ಖುಷಿ ಪಡಿಸುವಂತಹ ಹೇಳಿಕೆಯನ್ನು ನೀಡುತ್ತಿದ್ದಾರೆ. ನಂತರ ಭಾರತ ರಶ್ಯದ ಬದಲು ವೆನೆಝುವೆಲಾದಿಂದ ಕಚ್ಚಾ ತೈಲ ಖರೀದಿಸುವುದೆಂದು ಟ್ರಂಪ್ ಅವರೇ ಸ್ವಯಂ ಘೋಷಿಸಿ ಕೊಂಡರು. ಬಹುಶಃ ಅವರು ಈಗ ಅದಕ್ಕೆ ತಾತ್ಕಾಲಿಕ ವಿನಾಯಿತಿ ನೀಡುವಂತಹ ಧಾರಾಳತನ ತೋರಿರ ಬೇಕು! ಈ ಬಗ್ಗೆ ನಮ್ಮ ಸರಕಾರ ತೋರಬೇಕಾದ ದಿಟ್ಟತನದ ಗೈರು ಹಾಜರಿ ಆಶ್ಚರ್ಯವನ್ನೂ ಬೇಸರವನ್ನೂ ಏಕ ಕಾಲದಲ್ಲಿ ಉಂಟು ಮಾಡುತ್ತದೆ. ಯಾಕೆ ಈ ತರಹದ ನಿರ್ಲಕ್ಷ್ಯ, ಅಸಹಾಯಕತೆ? ಅರ್ಥವಾಗುತ್ತಿಲ್ಲ ಟ್ರಂಪ್ ಮತ್ತು ಮೋದಿಯವರ ಒಡನಾಟ, ಗೆಳೆತನ ಎಲ್ಲರಿಗೂ ಗೊತ್ತಿರುವಂತಹದ್ದೆ. ಟ್ರಂಪ್ ಅವರ ಮೊದಲ ಅಧಿಕಾರ ಅವಧಿಯಲ್ಲಿ ಮೊಳಕೆಯೊಡೆದ ಒಡನಾಟ ಕ್ರಮೇಣ ಗಾಢವಾಗಿ ಬೆಳೆದು ಬಂದಿರುವುದು ಹಳೆಯ ಕತೆ. ಭಾರತದಲ್ಲಿ ಏರ್ಪಡಿಸಲಾಗಿದ್ದ ‘ನಮಸ್ತೆ ಟ್ರಂಪ್’ ಹಾಗೂ ಅಮೆರಿಕದಲ್ಲಿ ಅನಿವಾಸಿ ಭಾರತೀಯರು ಸಂಘಟಿಸಿದ್ದ ‘ಹೌಡಿ ಮೋದಿ’ ಕಾರ್ಯಕ್ರಮಗಳೆರಡು ಜನರಲ್ಲಿ ಭಾರತೀಯರಲ್ಲಿ ಅಪಾರ ನಿರೀಕ್ಷೆಗಳನ್ನು ಹುಟ್ಟಿ ಹಾಕಿದ್ದು ನಿಜ. ಅಮೆರಿಕದ ಕಾರ್ಯಕ್ರಮದಲ್ಲಿ ಮುಂದಿನ ಅಧ್ಯಕ್ಷೀಯ ಚುನಾವಣಾ ಸ್ಪರ್ಧೆಯನ್ನು ದೃಷ್ಟಿಯಲ್ಲಿಟ್ಟು ‘ಅಬ್ಕಿ ಬಾರಿ ಟ್ರಂಪ್ ಸರಕಾರ್’ ಎಂಬ ಮೋದಿಯವರ ಘೋಷಣೆ ವಿವಾದವನ್ನು ಸೃಷ್ಟಿಸಿತ್ತಾದರೂ ಅವರಿಬ್ಬರ ಗಾಢ ಸ್ನೇಹವನ್ನು ಮತ್ತಷ್ಟು ದೃಢ ಪಡಿಸುವಂತಿತ್ತು. ಜೊತೆಗೆ ಅಮೆರಿಕದಂತಹ ಸೂಪರ್ಪವರ್ ದೇಶದ ಮುಖ್ಯಸ್ಥನನ್ನು ಮೋದಿ ಒಲಿಸಿ ಕೊಂಡು ಬಿಟ್ಟರಲ್ಲ ಎಂದು ಸಂಭ್ರಮ ಪಟ್ಟವರೇ ಹೆಚ್ಚು. ಆದರೆ ಎರಡನೇ ಅವಧಿಯಲ್ಲಿ ಅವರು ಜಗತ್ತಿಗೆ ತನ್ನ ಅಸಲಿ ರೂಪದ ದರ್ಶವನ್ನು ಮಾಡಿಯೇ ಬಿಟ್ಟರು. ಟ್ರಂಪ್ ವ್ಯಕ್ತಿತ್ವ, ನಡವಳಿಕೆಗಳು ಒಂದು ಬಲಿಷ್ಠ ದೇಶದ ನಾಯಕನಿಗೆ ಸಲ್ಲುವಂತಹದ್ದಲ್ಲ. ಈಗಾಗಲೇ ಅವರ ವಿಲಕ್ಷಣ ನಡೆ ನುಡಿಗಳು ಜಗತ್ತಿನಾದ್ಯಂತ ರೇಜಿಗೆ ಹುಟ್ಟಿಸಿದೆ. ಅವರ ವ್ಯಕ್ತಿತ್ವದ ಬಗ್ಗೆ ಅಮೆರಿಕ ಜನತೆ ಸಹಿತ ಜಗತ್ತಿನಾದ್ಯಂತ ಜನರು ಭ್ರಮ ನಿರಸನ ಗೊಂಡಿದ್ದಾರೆ. ಹಾಗಾದರೆ ಪ್ರಧಾನಿ ಮೋದಿಯವರು ಟ್ರಂಪ್ ಅವರನ್ನು ಅರ್ಥ ಮಾಡಿಕೊಳ್ಳಲು ವಿಫಲರಾದರೇ? ರಾಜತಾಂತ್ರಿಕ ನೆಲೆಯ ಸ್ನೇಹಕ್ಕಿಂತ ಹೆಚ್ಚಿನ ವೈಯಕ್ತಿಕ ಆಪ್ತ ಸಂಬಂಧ ಬೆಳೆಸಿದ ಮೋದಿಯವರು, ಏನೋ ಮಾಡಲು ಹೋಗಿ ಇನ್ನೇನನ್ನೋ ಮೈ ಮೇಲೆ ಎಳೆದು ಕೊಂಡು ಬಿಟ್ಟರೆ? ಟ್ರಂಪ್ ಅವರ ನಿಯಂತ್ರಣವಿಲ್ಲದ ಸರ್ವಾಧಿಕಾರಿ ಧೋರಣೆಗೆ ವೆನೆಝುವೆಲಾ ಪ್ರಕರಣ ಸಾಕ್ಷಿಯಾಯಿತು. ಐರೋಷ್ಯ ಒಕ್ಕೂಟದ ಎಚ್ಚರಿಕೆಯಿಂದ ಗ್ರೀನ್ಲ್ಯಾಂಡ್ ವಶ ಸ್ವಲ್ಪದರಲ್ಲಿ ಉಳಿದು ಕೊಂಡು ಬಿಟ್ಟಿತು. ಇದೀಗ ಟ್ರಂಪ್ ಇಸ್ರೇಲ್ ಜೊತೆಗೆ ಸೇರಿ ಇರಾನ್ ಮೇಲೆ ಯುದ್ಧ ಸಾರಿದ್ದಾರೆ. ಈ ಯುದ್ಧದಿಂದ ಅಪಾರ ಹಾನಿಯೊಂದಿಗೆ ಮುಗ್ಧ ಜೀವಗಳು ಬಲಿಯಾಗುತ್ತಿರುವುದನ್ನು ನೋಡುತ್ತಿದ್ದೇವೆ. ಮೇಲ್ನೋಟಕ್ಕೆ ಇರಾನ್ ಅಪಾಯಕಾರಿ ಪರಮಾಣು ಕಾರ್ಯಕ್ರಮ ಕೈಗೊಂಡಿರುವ ಕಾರಣವಿದೆ. ಆದರೆ ಈ ಯುದ್ಧಕ್ಕೆ ಅಮೆರಿಕ ಇರಾನ್ ದೇಶದ ತೈಲ ಸಂಪತ್ತಿನ ಮೇಲೆ ಕಣ್ಣಿರಿಸಿರುವುದೆಂದು ಅಥವಾ ಎಪ್ಸ್ಟೀನ್ ಫೈಲ್ಸ್ನಿಂದ ಹಾಳಾಗಿರುವ ಮಾನವನ್ನು ಈ ಯುದ್ಧದಿಂದ ತುಂಬಿ ಕೊಳ್ಳುವ ಪ್ರಯತ್ನವೆಂದೂ ಅಭಿಪ್ರಾಯ ಪಡುತ್ತಾರೆ. ಯಾವುದಿದ್ದರೂ ಟ್ರಂಪ್ ಅವರಂತೂ ವಿವೇಚನಾರಹಿತ ಆಕ್ರಮಣಕಾರಿ ಧೋರಣೆಗಳನ್ನು ಅನುಸರಿಸುವವರು ಎಂದು ಈಗಾಗಲೇ ಸಾಬೀತಾಗಿದೆ. ಆದ್ದರಿಂದ ಭಾರತ ಸರಕಾರ ಎಚ್ಚರಿಕೆಯ ಹೆಜ್ಜೆಗಳನ್ನು ಇನ್ನು ಮುಂದಾದರೂ ಇಡುವುದು ಅಗತ್ಯವೆಂದು ಮನಗಾಣ ಬೇಕು. ಟ್ರಂಪ್ ಅವರ ಉಡಾಫೆ ಹೇಳಿಕೆಗಳು, ನಡವಳಿಕೆಗಳು ಭಾರತದ ಘನತೆ, ಗೌರವಗಳಿಗೆ ಹಾನಿ ಉಂಟು ಮಾಡಿವೆ. ಹಾಗೆಯೇ ಆರ್ಥಿಕ ನಷ್ಟಗಳಿಗೂ ಕಾರಣವಾಗಿದೆ. ಟ್ರಂಪ್ರ ಎಲ್ಲ ಕ್ರಮಗಳನ್ನು ಸಮರ್ಥಿಸುವಂತಹ ನಡೆಗಳು ಅಥವಾ ಪ್ರತಿರೋಧ ತೋರಿಸಬೇಕಾದ ಸಂದರ್ಭದಲ್ಲಿ ಮೌನ ವಹಿಸುವಂತಹ ಸನ್ನಿವೇಶಗಳು ಅಪೇಕ್ಷಣೀಯವಲ್ಲ. ಈ ನಿಟ್ಟಿನಲ್ಲಿ ಅಮೆರಿಕದೊಂದಿಗೆ ಭಾರತ ಮುತ್ಸದ್ದಿತನವುಳ್ಳ ಒಂದು ಸುರಕ್ಷಿತ ಅಂತರವಿರುವಂತಹ ಸಂಬಂಧವನ್ನು ಕಾಯ್ದು ಕೊಳ್ಳುವುದೇ ಕ್ಷೇಮ ಎಂದನಿಸುತ್ತದೆ.
ಜಾಗತಿಕ ಮಾರುಕಟ್ಟೆಯಲ್ಲಿನ ಅಸ್ಥಿರತೆ ಮತ್ತು ರೂಪಾಯಿ ಮೌಲ್ಯದ ಕುಸಿತದ ನಡುವೆ ಚಿನ್ನದ ಬೆಲೆಗಳು ಕಡಿಮೆಯಾಗಿವೆ. ಕಳೆದ ಕೆಲವು ದಿನಗಳಿಂದ ಸತತವಾಗಿ ಏರಿಕೆ ಕಾಣುತ್ತಿದ್ದ ಚಿನ್ನದ ದರದಲ್ಲಿ ಇಂದು ದಿಢೀರ್ ಇಳಿಕೆ ಕಂಡುಬಂದಿದೆ. ಜಾಗತಿಕ ಮಾರುಕಟ್ಟೆಯಲ್ಲಿನ ಸಣ್ಣ ಬದಲಾವಣೆಗಳು ಬೆಂಗಳೂರಿನ ಚಿನ್ನದ ದರದ ಮೇಲೂ ಪರಿಣಾಮ ಬೀರಿದ್ದು, ಆಭರಣ ಖರೀದಿದಾರರಿಗೆ ಇದು ಸಿಹಿ ಸುದ್ದಿಯಾಗಿದೆ. ಮದುವೆ ಸೀಸನ್ನಲ್ಲಿ ಚಿನ್ನ
ವಿಧಾನಸೌಧಕ್ಕೆ ಸಿಗಲಿದೆ ಹೊಸ ಲುಕ್! ನಾಲ್ಕು ಪ್ರವೇಶದ್ವಾರಕ್ಕೆ ಆಕರ್ಷಕ ಬಾಗಿಲು, ಖರ್ಚು ವೆಚ್ಚ ಎಷ್ಟು?
ರಾಜ್ಯದ ಶಕ್ತಿ ಸೌಧ ವಿಧಾನಸೌಧದ ಅಂದವನ್ನು ಮತ್ತಷ್ಟು ಹೆಚ್ಚಿಸಲು ಸರ್ಕಾರವ ಮುಂದಾಗಿದ್ದು, ವಿಧಾನಸೌಧದ 4 ಮುಖ್ಯ ದ್ವಾರಗಳಲ್ಲಿ ಆಕರ್ಷಕ ಕೆತ್ತನೆಗಳನ್ನು ಮಾಡುವ ಮೂಲಕ ಅದರ ಲುಕ್ ಅನ್ನು ಇನ್ನಷ್ಟು ಹೆಚ್ಚಿಸಲು ನಿರ್ಧರಿಸಲಾಗಿದ್ದು, ಇದರ ಕಾಮಗಾರಿ ಆರಂಭವಾಗಿದೆ. ಈ ಕುರಿತು ಮಾತನಾಡಿದ ಸ್ಪೀಕರ್ ಖಾದರ್ ದೇಶ, ವಿದೇಶಗಳಿಂದ ಬಂದ ಜನರಿಗೆ ಆಕರ್ಷಣೆಯನ್ನು ಹೆಚ್ಚಿಸಲು ಈ ಬಾಗಿಲುಗಳನ್ನು ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ. ಇನ್ನು, ಪ್ರತಿಯೊಂದು ದ್ವಾರಗಳಿಗೂ ಸುಮಾರು 70-80ಲಕ್ಷ ಖರ್ಚಾಗಲಿದೆ ಎಂದು ಅಂದಾಜಿಸಲಾಗಿದೆ. ಈ ಕುರಿತ ಮಾಹಿತಿ ಇಲ್ಲಿದೆ..
ಪರೀಕ್ಷೆ ಹಬ್ಬ, ಸಂಭ್ರಮದ ಕ್ಷಣ ಎಂದೆಷ್ಟೇ ಹೇಳಿದರೂ ಸಾಮಾಜಿಕ ಸಮೂಹ ಸನ್ನಿಯ ಪರಿಣಾಮದಿಂದಾಗಿ ಪರೀಕ್ಷಾ ತಿಂಗಳು 'ಭಯದ ಮಾಸ' ಎಂದೇ ಬಿಂಬಿತವಾಗಿದೆ. ಇಡೀ ವ್ಯವಸ್ಥೆ ಮಕ್ಕಳ ಮೇಲೆ ಹೇರುತ್ತಿರುವ ಒತ್ತಡ ಮಾನಸಿಕ ಸಮಸ್ಯೆಗಳ ಉಲ್ಬಣಕ್ಕೆ ಕಾರಣವಾಗುತ್ತಿದೆ.
ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಹೆಚ್ಚಾಗುತ್ತಿದ್ದು, ಈ ನಡುವೆ ಇರಾನ್ ಸುಪ್ರೀಂ ಲೀಡರ್ ಆಗಿ ಖಮೇನಿ ಪುತ್ರ ಮೊಜ್ತಬಾ ಖಮೇನಿಯವರನ್ನು ನೇಮಕ ಮಾಡಲಾಗಿದ್ದು, ಈ ಬೆನ್ನಲ್ಲೇ, ಇವರ ಅಧಿಕಾರದಡಿಯಲ್ಲಿ ಇರಾನ್ ಮೊದಲ ದಾಳಿಗಳನ್ನು ನಡೆಸಲಾಗಿದೆ ಎಂದು ಇರಾನ್ ಸರ್ಕಾರಿ ಮಾಧ್ಯಮ ತಿಳಿಸಿದೆ. ಇನ್ನು, ಗಲ್ಫ್ ನಲ್ಲಿರುವ ನೆರೆರಾಷ್ಟ್ರಗಳ ಮೇಲೆ ದಾಳಿ ಮಾಡುವುದಿಲ್ಲ ಎಂದು ಇರಾನ್ ಅಧ್ಯಕ್ಷ ಮಸೂದ್ ಪೆಜಿಶ್ಕಿಯಾನ್ ತಿಳಿಸಿದ ಮೇಲೂ IRGC ಇದಕ್ಕೆ ಕಿಮ್ಮತ್ತು ನೀಡದೆ ಗಲ್ಫ್ ದೇಶಗಳ ಮೇಲೆ ದಾಳಿಯನ್ನು ಮುಂದುವರೆಸಿದೆ. ಈ ಕುರಿತ ವರದಿ ಇಲ್ಲಿದೆ..
ಲೋಕಸಭೆ ಕಲಾಪ ಮಧ್ಯಾಹ್ನ 12 ಗಂಟೆಯವರೆಗೆ ಮುಂದೂಡಿಕೆ
ವಾಹನ ಸವಾರರಿಗೆ ಗುಡ್ನ್ಯೂಸ್: ಕರ್ನಾಟಕದ 66 RTOಗಳಲ್ಲಿ Geo-Fencing ಆಧಾರಿತ mVahan ಅಪ್ಲಿಕೇಷನ್ ಆರಂಭ
Vehicle: ಕರ್ನಾಟಕ ಸರ್ಕಾರವು ವಾಹನ ಸವಾರರಿಗೆ ಭರ್ಜರಿ ಗುಡ್ನ್ಯೂಸ್ ಕೊಟ್ಟಿದೆ. ಕರ್ನಾಟಕದ 66 ಆರ್ಟಿಒ ಕಚೇರಿಗಳಲ್ಲಿ Geo-fencing ಆಧಾರಿತ mVahan ಫಿಟೈಸ್ ಮೊಬೈಲ್ ಅಪ್ಲಿಕೇಷನ್ ಅನುಷ್ಠಾನ ಮಾಡಿದೆ. ಇದರ ಉಪಯೋಗವೇನು ಹಾಗೂ ಇದು ಹೇಗೆ ಕಾರ್ಯನಿರ್ವಹಿಸುತ್ತದೆ ಎನ್ನುವ ಸಂಪೂರ್ಣ ವಿವರ ಇಲ್ಲಿದೆ. ರಾಜ್ಯದಲ್ಲಿ ನೋಂದಣಿಯಾಗಿ ಚಾಲ್ತಿಯಲ್ಲಿರುವ ವಾಣಿಜ್ಯ (ಸಾರಿಗೆ) ವಾಹನಗಳ ಅರ್ಹತಾ (ಫಿಟೈಸ್) ಪ್ರಮಾಣ ಪತ್ರ ವಿತರಣೆಯಲ್ಲಿ
ಈಗ ಹಿಂಗ್ ಆದ್ರ ಮುಂದ ಹ್ಯಾಂಗ್ರಿ...! ಬಿಸಿಲಿನ ತಾಪಕ್ಕೆ ಹೊರಗೆ ಬಾರದ ಜನ
ಹಿರಿಯ ಜೀವಿಗಳಂತೂ ಬಿಸಿಲಿನ ತಾಪಕ್ಕೆ ಕಂಗೆಟ್ಟಿದ್ದು, ಮನೆಯಿಂದ ಹೊರಗೆ ಬಂದು ದೇವಸ್ಥಾನ, ಸಮುದಾಯ ಭವನಗಳಂತಹ ತಂಪಾದ ವಾತಾವರಣದಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಮಾರ್ಚ್ ಮೊದಲ ವಾರದಲ್ಲೇ ಬಿಸಿಲಿನ ತಾಪಮಾನ ತೀವ್ರಗೊಂಡಿದ್ದರಿಂದ ಮಕ್ಕಳಿಂದ ಹಿಡಿದು ಜನಸಾಮಾನ್ಯರು ತೊಂದರೆ ಅನುಭವಿಸುವಂತಾಗಿದೆ.
ನಿತೀಶ್ ಕುಮಾರ್ ನಿರ್ಗಮನದ ಸಂದೇಶ ಏನು?
ಬಿಹಾರದಲ್ಲಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ನಿತೀಶ್ ಕುಮಾರ್ ಮುಖ್ಯಮಂತ್ರಿಯಾಗಲಿ ಎಂದು ಅವರ ಪಕ್ಷಕ್ಕೆ ಬಹುಮತ ನೀಡಿದರು. ಆದರೆ ಜನ ಏನೇ ತೀರ್ಮಾನ ನೀಡಲಿ ನೀವು ರಾಜ್ಯಸಭಾ ಸದಸ್ಯರಾಗಿ ಎಂದು ಮಿತ್ರ ಪಕ್ಷ ಬಿಜೆಪಿ ಆದೇಶ ನೀಡಿದ ನಂತರ ನಿತೀಶ್ ಕುಮಾರ್ ದುಸರಾ ಮಾತಾಡದೇ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಒಪ್ಪಿಗೆ ನೀಡಿದರು. ಆದರೆ ತಕ್ಷಣಕ್ಕೆ ರಾಜೀನಾಮೆ ನೀಡಿಲ್ಲ. ಬಹುಶಃ ಎಪ್ರಿಲ್ 5 ಅಥವಾ 6ರಂದು ಬಿಹಾರದ ಎನ್ಡಿಎ ಶಾಸಕಾಂಗ ಸಭೆಯಲ್ಲಿ ನೂತನ ನಾಯಕನ ಆಯ್ಕೆಯ ಸಂದರ್ಭ ಅವರು ಪದತ್ಯಾಗ ಮಾಡಬಹುದು. ರಾಜ್ಯಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸುವಾಗ ಪಕ್ಕದಲ್ಲಿ ಕೂತಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ ಸರಿಯಾಗಿ ತುಂಬಿದ್ದಾರೋ ಇಲ್ಲವೋ ಎಂದು ಅವರ ನಾಮಪತ್ರವನ್ನೇ ದಿಟ್ಟಿಸಿ ನೋಡುತ್ತಿದ್ದರು. ಬಿಜೆಪಿ ಸ್ನೇಹ ಧರ್ಮ ಹೇಗೆಂದರೆ ತನ್ನೊಂದಿಗೆ ಮೈತ್ರಿ ಮಾಡಿಕೊಂಡ ಯಾವ ಮಿತ್ರಪಕ್ಷವನ್ನೂ ಅದು ನಾಶ ಮಾಡದೇ ಬಿಡುವುದಿಲ್ಲ. ನಿತೀಶ್ ಕುಮಾರ್ ಅವರ ಸಂಯುಕ್ತ ಜನತಾ ದಳವನ್ನು ಮುಗಿಸಲು ಅಮಿತ್ ಶಾ ಮತ್ತು ನಾಗಪುರದ ಗುರುಗಳು ತಮ್ಮ ಕಟ್ಟಾ ಭಕ್ತರನ್ನು ಆ ಪಕ್ಷದೊಳಗೆ ಸೇರಿಸಿದ್ದರು. ಸಂಜಯ ಝಾ ಅವರಂಥ ಸ್ವಯಂ ಸೇವಕ ಜೆಡಿಯುವನ್ನು ನಿಯಂತ್ರಿಸುತ್ತಿದ್ದರು. ಬಿಜೆಪಿ ಆರೆಸ್ಸೆಸ್ನ ರಾಜಕೀಯ ವೇದಿಕೆ. ಪ್ರಜಾಪ್ರಭುತ್ವ ಮತ್ತು ಮೈತ್ರಿ ಧರ್ಮದಲ್ಲಿ ಅದಕ್ಕೆ ಅಂಥ ನಂಬಿಕೆಯಿಲ್ಲ. ಅದು ತನ್ನೊಂದಿಗೆ ಮೈತ್ರಿ ಮಾಡಿಕೊಂಡ ಪಕ್ಷಗಳನ್ನು ಒಡೆದು ನಾಶ ಮಾಡತ್ತಿರುವುದು ಇದು ಮೊದಲ ಸಲವಲ್ಲ. ಲೋಕ ಜನಶಕ್ತಿ ಪಕ್ಷದ ರಾಮ್ ವಿಲಾಸ್ ಪಾಸ್ವಾನ್ ಅವರನ್ನು ಬುಟ್ಟಿಗೆ ಹಾಕಿಕೊಂಡ ಬಿಜೆಪಿ ಪಾಸ್ವಾನ್ ನಿಧನದ ನಂತರ ಅವರ ಪಕ್ಷವನ್ನು ಇಬ್ಭಾಗ ಮಾಡಿ ದುರ್ಬಲಗೊಳಿಸಿತು. ಪಂಜಾಬ್ನಲ್ಲಿ ದೊಡ್ಡ ಪಕ್ಷವಾಗಿದ್ದ ಅಕಾಲಿದಳದ ಜೊತೆಗೆ ಮೈತ್ರಿ ಮಾಡಿಕೊಂಡು ಹಂತ ಹಂತವಾಗಿ ಅದನ್ನು ಮುಗಿಸಿದ ಬಿಜೆಪಿ ನಾಲ್ಕನೇ ಸ್ಥಾನಕ್ಕೆ ತಳ್ಳಿತು. ಈಗ ಅದು ಹೇಳ ಹೆಸರಿಲ್ಲದಂತಾಗಿದೆ. ಮಹಾರಾಷ್ಟ್ರದಲ್ಲಿ ಉದ್ಧವ್ ಠಾಕ್ರೆ ಅವರ ಶಿವಸೇನೆಯ ಜೊತೆಗೆ ಮೈತ್ರಿ ಮಾಡಿಕೊಂಡ ಬಿಜೆಪಿ ಆ ಪಕ್ಷವನ್ನು ಒಡೆದು ಎರಡು ಭಾಗ ಮಾಡಿತು. ಉದ್ಧವ್ ಠಾಕ್ರೆ ಅವರ ಪಕ್ಷದ ಏಕನಾಥ್ ಶಿಂದೆಗೆ ಅಧಿಕಾರದ ಆಸೆ ಹಚ್ಚಿ ಮತ್ತು ತನಿಖಾ ಸಂಸ್ಥೆಗಳ ಬೆದರಿಕೆ ಹಾಕಿ ಇಬ್ಭಾಗವಾದ ಶಿವಸೇನೆಯ ಇನ್ನೊಂದು ಬಣಕ್ಕೆ ಅವರನ್ನು ನಾಯಕನನ್ನಾಗಿ ಮಾಡಿತು. ರಾಜಕೀಯ ಚಾಣಕ್ಯ ಎಂದೇ ಹೆಸರಾಗಿದ್ದ ರಾಷ್ಟ್ರವಾದಿ ಕಾಂಗ್ರೆಸ್ ಪಕ್ಷದ (ಎನ್ಸಿಪಿ) ನಾಯಕ ಶರದ್ ಪವಾರ್ರ ಪಕ್ಷವನ್ನು ಒಡೆದು ಹೋಳು ಮಾಡಿತು. ಅವರ ಅಣ್ಣನ ಮಗ ಅಜಿತ್ ಪವಾರ್ ನೇತೃತ್ವದಲ್ಲಿ ಹೊಸ ಬಣವನ್ನು ಕಟ್ಟಿತು. ಉತ್ತರ ಪ್ರದೇಶದಲ್ಲಿ ಬಲಿಷ್ಠ ಪಕ್ಷವಾಗಿದ್ದ ಬಹುಜನ ಸಮಾಜ ಪಕ್ಷದ ಮಾಯಾವತಿ ಅವರಿಗೆ ತನಿಖಾ ಸಂಸ್ಥೆಯ ಬೆದರಿಕೆಯನ್ನು ಹಾಕಿ ನಿಧಾನವಾಗಿ ಅವರ ಪಕ್ಷದ ಓಟ್ ಬ್ಯಾಂಕ್ ಅನ್ನು ಕಬ್ಜಾ ಮಾಡಿಕೊಂಡಿತು. ಒಡಿಶಾದಲ್ಲಿ ಬಿಜೆಪಿಯ ಜೊತೆಗೆ ದೀರ್ಘ ಕಾಲದ ಮೈತ್ರಿ ಮಾಡಿಕೊಂಡಿದ್ದ ಬಿಜೆಡಿ (ನವೀನ್ ಪಟ್ನಾಯಕ್) ಪಕ್ಷವನ್ನು ಮುಗಿಸಿ ಸ್ವಂತ ಬಲದಿಂದ ರಾಜ್ಯದ ಅಧಿಕಾರ ಸೂತ್ರವನ್ನು ಹಿಡಿಯಿತು. ಹರ್ಯಾಣದಲ್ಲಿ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿದ್ದ ದುಷ್ಯಂತ ಚೌಟಾಲರ ಪಕ್ಷ ಜೆಜೆಪಿ ಮಣ್ಣು ಮುಕ್ಕಿತು. ಈಗ ನಿತೀಶ್ ಕುಮಾರ್ ಸರದಿ. ಅವರು ಮುಖ್ಯಮಂತ್ರಿ ಸ್ಥಾನವನ್ನು ತ್ಯಜಿಸಿದ ನಂತರ ಬಿಹಾರದಲ್ಲಿ ಬಿಜೆಪಿ ಮುಖ್ಯಮಂತ್ರಿ ಬರುತ್ತಾರೆ. ಮತ್ತೊಂದೆಡೆ ಅವರ ಸಂಯುಕ್ತ ಜನತಾ ದಳ (ಜೆಡಿಯು) ಹೇಳ ಹೆಸರಿಲ್ಲದಂತೆ ಆಗುತ್ತದೆ. ಬಿಹಾರ ಮತ್ತು ಉತ್ತರ ಪ್ರದೇಶಗಳು ಅತ್ಯಂತ ಹೆಚ್ಚು ಲೋಕಸಭಾ ಸದಸ್ಯರನ್ನು ಹೊಂದಿರುವ ಹಿಂದಿ ಭಾಷಿಕ ರಾಜ್ಯಗಳು. ಇವೆರಡು ರಾಜ್ಯಗಳನ್ನು ವಶಪಡಿಸಿಕೊಂಡರೆ ಇಡೀ ಭಾರತವನ್ನು ಸ್ವಾಧೀನ ಪಡಿಸಿಕೊಳ್ಳುವುದು ಸುಲಭ ಎಂಬುದು ಬಿಜೆಪಿ ಮತ್ತು ಅದರ ಸೈದ್ಧಾಂತಿಕ ಹಿನ್ನೆಲೆಯ ಸಂಘಟನೆಯಾದ ಆರೆಸ್ಸೆಸ್ ಲೆಕ್ಕಾಚಾರ. ಈ ಗುರಿಯನ್ನು ಇಟ್ಟುಕೊಂಡೇ ಗುಜರಾತ್ನ ಸೋಮೇಶ್ವರದಿಂದ ಅಡ್ವಾಣಿ ಅವರು ರಥಯಾತ್ರೆ ಹೊರಡಿಸಲು ಸೂಚನೆ ನೀಡಿದವರು ನಾಗಪುರದ ಸಂವಿಧಾನೇತರ ಶಕ್ತಿ ಕೇಂದ್ರದ ಗುರುಗಳು. ಆಗ ಅಂದರೆ ತೊಂಭತ್ತರ ದಶಕದಲ್ಲಿ ಸಂಘ ಪರಿವಾರಕ್ಕೆ ದೊಡ್ಡ ಅಡ್ಡಿಯಾದವರು ಇಬ್ಬರು ಸಮಾಜವಾದಿಗಳು. ಅವರೆಂದರೆ ಉತ್ತರ ಪ್ರದೇಶದ ಮುಲಾಯಂ ಸಿಂಗ್ ಯಾದವ್ ಮತ್ತು ಬಿಹಾರದ ಲಾಲು ಪ್ರಸಾದ್ ಯಾದವ್. ಬಿಜೆಪಿಯ ಕಮಂಡಲದ ಕೋಮುವಾದಿ ಹುನ್ನಾರದ ವಿರುದ್ಧ ಇವರಿಬ್ಬರೂ ಹಿಂದುಳಿದವರಿಗೆ ಮೀಸಲು ನೀಡುವ ಮಂಡಲ್ ವಸ್ತ್ರವನ್ನು ಪ್ರಯೋಗಿಸಿದರು. ಬಿಹಾರ ಮುಖ್ಯಮಂತ್ರಿಯಾಗಿದ್ದ ಲಾಲು ಪ್ರಸಾದ್ ಯಾದವ್ ಅವರು ಕೋಮುವಾದಿ ಶಕ್ತಿಗಳ ವಿರುದ್ಧ ಎಂಥ ದಿಟ್ಟ ಕ್ರಮವನ್ನು ಕೈಗೊಂಡರೆಂದರೆ ಬಿಹಾರವನ್ನು ಪ್ರವೇಶಿಸಿದ ವಿಎಚ್ಪಿಯ ರಥಯಾತ್ರೆಯನ್ನು ತಡೆದು ಅಡ್ವಾಣಿ ಅವರನ್ನು ಬಂಧಿಸಿದರು. ಉತ್ತರ ಪ್ತದೇಶದಲ್ಲೂ ಮುಲಾಯಂ ಸಿಂಗ್ ಯಾದವ್ ದಿಟ್ಟ ಹೆಜ್ಜೆಯನ್ನು ಇಟ್ಟರು. ಆಗಿನಿಂದಲೂ ಲಾಲು ಪ್ರಸಾದ್ ಯಾದವ್ರ ಮೇಲೆ ಕಣ್ಣಿಟ್ಟ ಕೋಮುವಾದಿ ಶಕ್ತಿಗಳು ನಾನಾ ಹಗರಣಗಳಲ್ಲಿ ಜೈಲು ಪಾಲಾಗುವಂತೆ ಮಾಡಿದರು. ಇದುವರೆಗೂ ಲಾಲು ಆ ಹಗರಣಗಳಲ್ಲಿ ಸಿಲುಕಿ ಒದ್ದಾಡುತ್ತಿದ್ದಾರೆ. ಬಿಜೆಪಿ ಜೊತೆಗೆ ರಾಜಿ ಮಾಡಿಕೊಂಡಿದ್ದರೆ ಯಾವ ಕೇಸೂ ಇಲ್ಲದೇ ಮುಖ್ಯಮಂತ್ರಿಯಾಗಿ ಮುಂದುವರಿಯುತ್ತಿದ್ದ ಲಾಲು ಜೈಲು ಪಾಲಾಗಿ ಆರೋಗ್ಯ ಹದಗೆಟ್ಟರೂ ಕೂಡ ಸಂಘ ಪರಿವಾರಕ್ಕೆ ಶರಣಾಗತರಾಗಲಿಲ್ಲ. ಜಾರ್ಜ್ ಫೆರ್ನಾಂಡಿಸ್ ಜೊತೆಗೆ ಸೇರಿ ಬಿಜೆಪಿ ಜೊತೆಗೆ ರಾಜಿ ಮಾಡಿಕೊಂಡ ನಿತೀಶ್ ಕುಮಾರ್ ಆಗಾಗ ಬಣ್ಣ ಬದಲಿಸುತ್ತ ತಾನು ಮಾಡುತ್ತ ಬಂದ ಸಂದರ್ಭ ಸಾಧಕ ರಾಜಕಾರಣ ಮತ್ತು ರಾಜಿ, ಹೊಂದಾಣಿಕೆಗಳಿಗೆ ಭಾರೀ ಬೆಲೆ ತೆರುತ್ತಿದ್ದಾರೆ.ಅವರು ರಾಜ್ಯಸಭೆ ಚುನಾವಣೆಯಲ್ಲಿ ನಾಮಪತ್ರ ಸಲ್ಲಿಸುವಾಗ ಅವರ ಪಕ್ಷದವರೂ ಸೇರಿದಂತೆ ಯಾರೂ ಕಣ್ಣೀರು ಹಾಕಲಿಲ್ಲ. ನಿತೀಶ್ ಕುಮಾರ್ರನ್ನು ದಿಲ್ಲಿಗೆ ಕರೆಸಿಕೊಂಡು ಬಿಹಾರಕ್ಕೆ ಬಿಜೆಪಿಗೆ ಮುಖ್ಯಮಂತ್ರಿಯ ಪಟ್ಟ ಕಟ್ಟಲಾಗುತ್ತದೆ. ಕ್ರಮೇಣ ಸಂಯುಕ್ತ ಜನತಾ ದಳ ಅಸ್ತಿತ್ವವನ್ನು ಕಳೆದುಕೊಳ್ಳುತ್ತದೆ. ಹೀಗೆ ಒಂದೊಂದಾಗಿ ಪಕ್ಷಗಳನ್ನು ಮುಗಿಸಿ ಮನುವಾದಿ ಹಿಂದೂ ರಾಷ್ಟ್ರ ನಿರ್ಮಾಣಕ್ಕೆ ದಾರಿಯನ್ನು ಸುಗಮಗೊಳಿಸಿಕೊಳ್ಳುವುದು ಇವರ ಕುತಂತ್ರವಾಗಿದೆ. ಕರ್ನಾಟಕದಲ್ಲೂ ಇಂಥದೇ ಮಸಲತ್ತಿಗೆ ಜೆಡಿಎಸ್ ಬಲಿಯಾಗಲಿದೆ. ಎಚ್.ಡಿ .ಕುಮಾರಸ್ವಾಮಿ ಅವರಿಗೆ ಸಿಎಂ ಕುರ್ಚಿಯ ಆಸೆ ಹಚ್ಚಿ ಬುಟ್ಟಿಗೆ ಹಾಕಿಕೊಂಡಾಗಿದೆ. ಕರ್ನಾಟಕದಲ್ಲಿ ದೇವೇಗೌಡರ ಜಾತ್ಯತೀತ ಜನತಾ ದಳಕ್ಕೆ ಹಳೆಯ ಮೈಸೂರಿನ ಒಂದೆರಡು ಜಿಲ್ಲೆಗಳನ್ನು ಬಿಟ್ಟರೆ ಅಂಥ ವ್ಯಾಪಕ ನೆಲೆಯಿಲ್ಲ. ನಿತೀಶ್ ಕುಮಾರ್ರಂಥ ಪ್ರಭಾವಿ ಹಿನ್ನೆಲೆ ಇವರಿಗಿಲ್ಲ. ಹೀಗಾಗಿ ಇವರನ್ನು ಮುಗಿಸುವುದು ಸುಲಭ. ಸಂಘ ಪರಿವಾರದ ಕಾರ್ಯಸೂಚಿಯನ್ನು ಒಪ್ಪದ ಭಿನ್ನ ವಿಚಾರ ಧಾರೆಯ ಯಾವ ಪಕ್ಷ ಇಲ್ಲವೇ ಸಂಘಟನೆ ಇರಲೇಬಾರದು ಎಂಬುದು ನಾಗಪುರದ ಅಲಿಖಿತ ಆದೇಶ. ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅದನ್ನು ಚಾಚೂ ತಪ್ಪದೇ ಕಾರ್ಯಗತಗೊಳಿಸುತ್ತಿದ್ದಾರೆ. ಈಗಾಗಲೇ ಧೃತರಾಷ್ಟ್ರ ಆಲಿಂಗನದ ಮೂಲಕ ಬಹುತೇಕ ಪ್ರಾದೇಶಿಕ ಪಕ್ಷಗಳನ್ನು ಮುಗಿಸಿದ್ದಾರೆ. ಆದರೆ ತಾತ್ವಿಕವಾಗಿ ಅವರ ಸಿದ್ಧಾಂತವನ್ನು ವಿರೋಧಿಸುವ ಡಿಎಂಕೆಯಂಥ ಪಕ್ಷಗಳು ತಮ್ಮ ದ್ರಾವಿಡ ಕೋಟೆಗೆ ಅವರನ್ನು ಬಿಟ್ಟಿಲ್ಲ. ಕರ್ನಾಟಕದಲ್ಲಿ ಜಾತ್ಯತೀತ ಜನತಾದಳಕ್ಕೆ ಅಂಥದೊಂದು ಅವಕಾಶವಿತ್ತು. ಅವರು ಸರಿಯಾಗಿ ಅದನ್ನು ಬಳಸಿಕೊಳ್ಳಲಿಲ್ಲ. ಕರ್ನಾಟಕದಲ್ಲಿ ಬಿಜೆಪಿ ಜೆಡಿಎಸ್ ಮೈತ್ರಿಕೂಟ ಅಧಿಕಾರಕ್ಕೆ ಬಂದರೆ ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡುವುದಾಗಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಭರವಸೆಯನ್ನು ನೀಡಿದ್ದಾರೆಂದು ಹೇಳಲಾಗುತ್ತಿದೆ. ಇದರಿಂದ ಮುಖ್ಯಮಂತ್ರಿ ಕುರ್ಚಿಯ ಮೇಲೆ ಟವೆಲ್ ಹಾಕಿ ಕಾಯುತ್ತಿರುವ ವಿಜಯೇಂದ್ರ, ಅಶೋಕ, ಅಶ್ವತ್ಥ ನಾರಾಯಣ, ನಿರಾಣಿ, ಬೆಲ್ಲದ ಸೇರಿದಂತೆ ಕರ್ನಾಟಕದ ಕೆಲವು ಬಿಜೆಪಿ ನಾಯಕರು ದಿಗಿಲುಗೊಂಡಿದ್ದಾರೆ. ಆದರೆ ಮೋದಿಯವರು ಹೇಳುವುದೊಂದು ಮಾಡುವುದು ಇನ್ನೊಂದು ಎಂಬುದನ್ನು ತಳ್ಳಿಹಾಕಲಾಗುವುದಿಲ್ಲ. ಕರ್ನಾಟಕದ ಬಿಜೆಪಿಯಲ್ಲಿ ಒಂದಲ್ಲ, ಎರಡಲ್ಲ ಹಲವಾರು ಗುಂಪುಗಳಿವೆ. ಯಡಿಯೂರಪ್ಪ ಮತ್ತು ಅವರ ಮಗ ವಿಜಯೇಂದ್ರರನ್ನು ಕಂಡರಾಗದ ಪ್ರಹ್ಲಾದ್ ಜೋಶಿ, ಅರವಿಂದ ಬೆಲ್ಲದ್, ಯತ್ನಾಳ್, ಈಶ್ವರಪ್ಪ, ಅಶೋಕ್ ಹೀಗೆ ಹಲವರಿದ್ದಾರೆ. ಎಲ್ಲಕಿಂತ ಮುಖ್ಯವಾಗಿ ದಿಲ್ಲಿಯಲ್ಲಿ ಇರುವ ಆರೆಸ್ಸೆಸ್ನ ಸಂತೋಷ್ ಮೊದಲಾದವರು ಕಡ್ಡಿಯಾಡಿಸುತ್ತಲೇ ಇದ್ದಾರೆ. ಕುಮಾರಸ್ವಾಮಿ ಮುಖ್ಯಮಂತ್ರಿ ಆಗುತ್ತಾರೆಂದರೆ ಇವರೆಲ್ಲ ಒಟ್ಟುಗೂಡಿದರೂ ಅಚ್ಚರಿ ಪಡಬೇಕಾಗಿಲ್ಲ.
“ಪ್ರಜ್ಞಾಪೂರ್ವಕ ನಿರ್ಧಾರ” : ರಾಜ್ಯಪಾಲರ ಹುದ್ದೆಗೆ ರಾಜೀನಾಮೆ ಬಳಿಕ ಸಿ.ವಿ. ಆನಂದ ಬೋಸ್ ಮೊದಲ ಪ್ರತಿಕ್ರಿಯೆ
“ಸೂಕ್ತ ಸಮಯ ಬರುವವರೆಗೂ ರಾಜೀನಾಮೆ ಹಿಂದಿನ ಕಾರಣ ಗೌಪ್ಯವಾಗಿರಲಿವೆ”
ಬಜೆಟ್ ಅಧಿವೇಶನ: ಆಡಳಿತ ಪಕ್ಷದ ವಿರುದ್ಧ ದಾಳಿಗೆ ವಿಪಕ್ಷ ಸಜ್ಜು, ಕಮಲ-ದಳದ ಬತ್ತಳಿಕೆಯಲ್ಲಿವೆ 5 ಅಸ್ತ್ರಗಳು
ಇಂದಿನಿಂದ ಬಜೆಟ್ ಮೇಲಿನ ಚರ್ಚೆ ನಡೆಯಲಿದೆ. ಇದೇ ಸಂದರ್ಭದಲ್ಲಿ ಆಡಳಿತ ಪಕ್ಷದ ಮೇಲೆ ಮುಗಿಬೀಳಲು ವಿಪಕ್ಷಗಳು ಸಜ್ಜಾಗಿವೆ. ಆಡಳಿತಾತ್ಮಕ ಪಕ್ಷವನ್ನು ಕಟ್ಟಿ ಹಾಕಲು ಬತ್ತಳಿಕೆಯಲ್ಲಿ ಸಾಕಷ್ಟು ಅಸ್ತ್ರಗಳನ್ನು ಇಟ್ಟುಕೊಂಡು ಚರ್ಚೆಗೆ ಸಿದ್ಧವಾಗಿವೆ.
ವಿಶ್ವದ 3ನೇ ಅತಿದೊಡ್ದ ಸಾಗರ ಹಿಂದೂ ಮಹಾಸಾಗರದ ಹೆಸರಿನಲ್ಲೇಕೆ ’ಹಿಂದೂ’ ಎನ್ನುವ ಪದವಿದೆ : ಇಲ್ಲಿದೆ ಮಾಹಿತಿ
Ocean Named after Indian Ocean : ಆಫ್ರಿಕಾ, ಏಷ್ಯಾ, ಆಸ್ಟ್ರೇಲಿಯಾ ಮತ್ತು ಅಂಟಾರ್ಟಿಕಾ ಖಂಡಗಳಿಂದ ಆವೃತವಾಗಿರುವ ಹಿಂದೂ ಮಹಾಸಾಗರದ ಹೆಸರಿನಲ್ಲಿ ’ಹಿಂದೂ’ ಎನ್ನುವ ಹೆಸರು ಏಕಿದೆ? ಹಿಂದೂ ಮಹಾಸಾಗರದಲ್ಲಿ ಇರಾನ್ ದೇಶದ ಹಡಗನ್ನು ಅಮೆರಿಕಾದ ನೌಕಾಪಡೆ ಮುಳುಗಿಸಿದ ನಂತರ, ಹಿಂದೂ ಮಹಾಸಾಗರದ ಹೆಸರು ಮುನ್ನಲೆಯಲ್ಲಿದೆ. ಭಾರತದ ವಿದೇಶಾಂಗ ಇಲಾಖೆಯ ಸಚಿವ ಎಸ್.ಜೈಶಂಕರ್, ಯಾವ ಕಾರಣಕ್ಕಾಗಿ ’ಹಿಂದೂ ಮಹಾಸಾಗರ’ ಎನ್ನುವ ಹೆಸರನ್ನು ಇಡಲಾಗಿದೆ ಎನ್ನುವ ಸಂಕ್ಷಿಪ್ತ ವಿವರವನ್ನು ನೀಡಿದ್ದಾರೆ. ಹಿಂದೂ ಮಹಾಸಾಗರದ ಇತಿಹಾಸದ ಬಗ್ಗೆ ಕೆಲವು ಮಾಹಿತಿಗಳನ್ನು ಈ ಲೇಖನದಲ್ಲಿ ಹಂಚಿಕೊಳ್ಳಲಾಗಿದೆ.
ಇರಾನ್ ಹಾಗೂ ಅಮೆರಿಕಾ ನಡುವಿನ ಯುದ್ದ ತಾರಕಕ್ಕೇರಿದ್ದು, ಈ ನಡುವೆ ಇರಾನ್ ಗಲ್ಫ್ ನಲ್ಲಿರುವ ತನ್ನ ನರೆಹೊರೆಯವರ ಮೇಲೆ ದಾಳಿ ನಡೆಸಿದ್ದಕ್ಕೆ ಕ್ಷಮೆಯಾಚಿಸಿ ಮತ್ತೆ ಹೀಗೆ ಮಾಡುವುದಿಲ್ಲ ಎಂದು ಇರಾನ್ ಅಧ್ಯಕ್ಷರು ಹೇಳಿದ್ದರು. ಆದರೆ, ಇದಾದ ಬಳಿಕವೂ ಇರಾನ್ ಗಲ್ಫ್ ನಲ್ಲಿರುವ ಯುಎಸ್ ನೆಲೆಗಳ ಮೇಲೆ ತನ್ನ ದಾಳಿಯನ್ನು ಮುಂದುವರೆಸಿದ್ದು, ಬಹ್ರೇನ್ ನಲ್ಲಿರುವ ಅಮೆರಿಕಾದ ನೌಕಾಪಡೆಯ 5ನೇ ಫ್ಲೀಟ್ ಮೇಲೆ ದಾಳಿ ನಡೆಸಿದೆ. ಈ ದಾಳಿಯಲ್ಲಿ 21 ಸೈನಿಕರು ಸಾವನ್ನಪ್ಪಿದ್ದು, ಈ ಪ್ರದೇಶದಲ್ಲಿನ ಬಹುತೇಕ ಸೌಲಭ್ಯಗಳು ಧ್ವಂಸವಾಗಿದೆ ಎಂದು ವರದಿಯಾಗಿದೆ.
Gold Rate Fall: ಚಿನ್ನದ 10 ಗ್ರಾಂ ಬೆಲೆಯಲ್ಲಿ 1960 ರೂ ಇಳಿಕೆ, ಬೆಳ್ಳಿ ಬೆಲೆಯೂ ಕುಸಿತ
ಡಾಲರ್ ಮೌಲ್ಯ ಏರಿಕೆಯಾದ ಹಿನ್ನೆಲೆ ಇತರ ಕರೆನ್ಸಿಗಳಲ್ಲಿ ಕೊಳ್ಳುವವರಿಗೆ ಚಿನ್ನ ಬೆಳ್ಳಿ ದರ ಅಗ್ಗವಾಗಿದೆ. ಇರಾನ್ -ಅಮೆರಿಕ ಸಂಘರ್ಷದ ಮಧ್ಯೆಯೂ ಚಿನ್ನಬೆಳ್ಳಿ ದರ ಕುಸಿದಿದೆ
ಒಳಮೀಸಲಾತಿ: ಮದ್ದಿರುವುದು ಖರ್ಗೆ ಬಳಿ!
ಹುಟ್ಟುತ್ತಾ ಅಣ್ಣ ತಮ್ಮಂದಿರು ಬೆಳೆಯುತ್ತಾ ದಾಯಾದಿಗಳು ಎನ್ನುವ ಮಾತನ್ನು ಪರಿಶಿಷ್ಟ ಜಾತಿಯ ನಾಯಕರು ನಿಜ ಮಾಡುತ್ತಿದ್ದಾರೆ. ಹಂಚುಣ್ಣಬೇಕಾಗಿದ್ದ ಸಹೋದರರು ಪರಸ್ಪರ ವಿಷಕಾರಿಕೊಳ್ಳುವ ಪರಿಸ್ಥಿತಿಗೆ ತಲುಪಿದ್ದಾರೆ. ಮುಲಾಮು ಹಚ್ಚಬೇಕಾದವರೇ ಗಾಯವನ್ನು ಕೆರೆಯುತ್ತಿದ್ದಾರೆ. ಪರಿಣಾಮ ಈಗ ಒಳಮೀಸಲಾತಿ ಜಾರಿಯಾದರೂ, ಆಗದಿದ್ದರೂ ಎಡ-ಬಲದವರ ನಡುವೆ ಮೂಡಿರುವ ಬಿರುಕು ಮಾಯವಾಗುವುದು ಅನುಮಾನಾಸ್ಪದವಾಗಿದೆ. ಸುಪ್ರೀಂ ಕೋರ್ಟ್ ಆದೇಶದ ಕಾರಣಕ್ಕೆ ಒಳಮೀಸಲಾತಿ ವಿಷಯ ಜಾರಿಯಾಗುವ ಹಂತಕ್ಕೆ ಬಂದಿದೆ. ಆದರೆ ಯಾವಾಗ ಜಾರಿಯಾಗುತ್ತದೆ ಎನ್ನುವ ಖಾತರಿ ಇಲ್ಲ. ಒಳ ಮೀಸಲಾತಿ ಜಾರಿ ಮಾಡುವುದು ಸರಕಾರದ ಕರ್ತವ್ಯ. ಅದಕ್ಕಿಂತ ಮಿಗಿಲಾಗಿ ಸಿದ್ದರಾಮಯ್ಯ ಅವರ ಕರ್ತವ್ಯ. ಏಕೆಂದರೆ ಜಾರಿಯಾಗಲೇಬೇಕು ಎಂದು ಒತ್ತಾಯ ಮಾಡುತ್ತಿರುವ ಸಮುದಾಯದ ಜನ ಅವರದೇ ಜಾತಿಯ ನಾಯಕರಿಗಿಂತಲೂ ಅಥವಾ ಅವರ ಹಿರಿಯಣ್ಣನಂತಿರುವ ಜಾತಿಯ ನಾಯಕರಿ ಗಿಂತಲೂ ಹೆಚ್ಚು ಭರವಸೆ ಹೊಂದಿರುವುದು (ಈಗಲೂ) ಸಿದ್ದರಾಮಯ್ಯ ಮೇಲೆ. ಸಿದ್ದರಾಮಯ್ಯ ಮೇಲೆ ಇಂಥ ವಿಶ್ವಾಸ ಮೂಡಲು ಅವರ ದಲಿತ ಪರ ನಿಲುವುಗಳು ಕಾರಣ. ದಲಿತ ಮುಖ್ಯಮಂತ್ರಿಯೇ ಇದ್ದರೂ SCSP-TSP ಕಾಯ್ದೆ ತರಲು ಸಾಧ್ಯವಾಗುತ್ತಿರಲಿಲ್ಲ. ಕಾಯ್ದೆ ತರಲು ಪಟ್ಟಭದ್ರ ಹಿತಾಸಕ್ತಿಗಳು ಬಿಟ್ಟುಕೊಡುತ್ತಿರಲಿಲ್ಲ. ಕೆಲವು ಸ್ಥಾಪಿತ ಹಿತಾಸಕ್ತಿಗಳ ಒತ್ತಡವನ್ನು ಸಹಿಸಿಕೊಂಡು ಕಾಯ್ದೆ ತರಲು ಸಾಧ್ಯವಾಗಿದ್ದು ಸಿದ್ದರಾಮಯ್ಯ ಕಾರಣಕ್ಕೆ ಎಂದು ದಲಿತ ನಾಯಕರೇ ಮಾತನಾಡಿಕೊಳ್ಳುತ್ತಾರೆ. ರೋಹಿತ್ ವೇಮುಲಾ ಕಾಯ್ದೆ ಬಗೆಗೂ ಇದೇ ಅಭಿಪ್ರಾಯವಿದೆ. ಇವೇ ಕಾರಣಗಳಿಗೆ ಸಿದ್ದರಾಮಯ್ಯ ಬಗ್ಗೆ ನಿರೀಕ್ಷೆಗಳಿವೆ. ಆದರೆ ಒಳಮೀಸಲಾತಿ ಸಮಸ್ಯೆಗೆ ಸಿದ್ದರಾಮಯ್ಯ ಬಳಿ ಪರಿಹಾರ ಇಲ್ಲ; ಅದಿರುವುದು ಮಲ್ಲಿಕಾರ್ಜುನ ಖರ್ಗೆ ಬಳಿ. ಒಳಮೀಸಲಾತಿ ವಿಷಯ ಸಂಪುಟ ಸಭೆಯಲ್ಲಿ ಚರ್ಚೆಗೆ ಬಂದಾಗ ಬಲಗೈ ಸಮುದಾಯದ ಸಚಿವರಾದ ಡಾ. ಜಿ. ಪರಮೇಶ್ವರ್, ಎಚ್.ಸಿ. ಮಹದೇವಪ್ಪ ಮತ್ತು ಪ್ರಿಯಾಂಕ್ ಖರ್ಗೆ ಅತ್ಯಂತ ಸ್ಪಷ್ಟವಾಗಿ ಮತ್ತು ಜೋರುದನಿಯಲ್ಲಿ ‘ಶೇ. 15ರಿಂದ ಶೇ. 17ಕ್ಕೆ ಏರಿಸಲಾಗಿರುವ ಪರಿಶಿಷ್ಟ ಜಾತಿಯವರ ಮೀಸಲಾತಿ ಬಗ್ಗೆ ರಾಜ್ಯ ಹೈಕೋರ್ಟ್ ತೀರ್ಪು ಬರುವವರೆಗೆ ಜಾರಿ ಬೇಡ’ ಎಂದು ಒಳಮೀಸಲಾತಿಯನ್ನು ವಿರೋಧಿಸಿದ್ದಾರೆ. ಎಡಗೈ ಸಮುದಾಯದ ಸಚಿವರಾದ ಕೆ.ಎಚ್. ಮುನಿಯಪ್ಪ ಮತ್ತು ಆರ್.ಬಿ. ತಿಮ್ಮಾಪುರ ಮಾಮೂಲಿ ದನಿಯಲ್ಲಿ ‘ಒಳಮೀಸಲಾತಿ ಜಾರಿ ಮಾಡಿ’ ಎಂದು ಹೇಳಿದ್ದಾರಷ್ಟೇ. ಮುನಿಯಪ್ಪ ಮತ್ತು ತಿಮ್ಮಾಪುರ ಅಧಿಕಾರಯುತವಾಗಿ ಮಾತನಾಡದ ಕಾರಣಕ್ಕೆ ಒಳಮೀಸಲಾತಿ ಇಲ್ಲದೆ 56,432 ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲು ನಿರ್ಧರಿಸಲಾಗಿದೆ. ಕಡೆಯ ಪಕ್ಷ ಮುನಿಯಪ್ಪ ಮತ್ತು ತಿಮ್ಮಾಪುರ ‘ಸಂಪುಟ ಸಭೆಯ ತೀರ್ಮಾನಕ್ಕೆ ತಮ್ಮ ವಿರೋಧವಿದೆ’ ಎಂಬ dissent ಬರೆಯಬೇಕಾಗಿತ್ತು. ಈಗ ‘ಸಂಪುಟ ಸಭೆಯಲ್ಲಿ ತೀರ್ಮಾನವಾಗಿದೆ ಅದರಂತೆ ಕ್ರಮ ಕೈಗೊಳ್ಳಿ’ ಎಂದು ಬಲಗೈ ಸಚಿವರು ಸಿದ್ದರಾಮಯ್ಯ ಮೇಲೆ ಒತ್ತಡ ಹೇರುತ್ತಿದ್ದಾರೆ. ಅದರಿಂದಾಗಿ ಅವರ ಬಳಿ ಪರಿಹಾರವಿಲ್ಲ. ಆದರೂ ಸಿದ್ದರಾಮಯ್ಯ ಮುಂಬರುವ ವಿಶೇಷ ಸಂಪುಟ ಸಭೆಯ ವೇಳೆಗೆ ಪರಮೇಶ್ವರ್, ಮಹದೇವಪ್ಪ ಮತ್ತು ಪ್ರಿಯಾಂಕ್ ಖರ್ಗೆ ಅವರ ಮನವೊಲಿಸಿ ನ್ಯಾಯಬದ್ಧವಾದ ತೀರ್ಮಾನ ಕೈಗೊಳ್ಳಬೇಕಾಗಿದೆ. ಮಲ್ಲಿಕಾರ್ಜುನ ಖರ್ಗೆ ಸಮುದಾಯದ ಹಿರಿಯ ನಾಯಕನಾಗಿ ‘ಎಲ್ಲರೂ ಕೂಡಿ ಬಾಳೋಣ’ ಎಂಬ ಸಲಹೆಯನ್ನು ಕೊಟ್ಟು ವಿರೋಧ ಮಾಡುತ್ತಿರುವ ಸಚಿವರ ವಿಶ್ವಾಸ ಗಳಿಸಬಹುದು. ಅಥವಾ 2023ರ ವಿಧಾನಸಭಾ ಚುನಾವಣೆಯ ಕೆಪಿಸಿಸಿ ಪ್ರಣಾಳಿಕೆ ತೋರಿಸಿ ಎಐಸಿಸಿ ಅಧ್ಯಕ್ಷನಾಗಿ ಇದು ನನ್ನ ಸೂಚನೆ ಎಂದು ವಿರೋಧ ಮಾಡುತ್ತಿರುವ ಸಚಿವರ ಬಾಯಿ ಮುಚ್ಚಿಸಬಹುದು. ಹಾಗೆಯೇ ಪ್ರಣಾಳಿಕೆ ನೆನಪಿಸಿ ಸಿದ್ಧರಾಮಯ್ಯ ಮೂಲಕ ಇಡೀ ಸಂಪುಟಕ್ಕೆ ‘ಒಳಮೀಸಲಾತಿ ಜಾರಿಯಾಗಲೇಬೇಕು’ ಎಂಬ ಫರ್ಮಾನು ಹೊರಡಿಸಬಹುದು. ಮಲ್ಲಿಕಾರ್ಜುನ ಖರ್ಗೆ ಈ ಮೂರರ ಪೈಕಿ ಒಂದನ್ನು ಮಾಡಿದರೂ ಸಾಕು ಒಳಮೀಸಲಾತಿಯ ಸಮಸ್ಯೆ ಬಗೆಹರಿಯುತ್ತದೆ. ಅಗತ್ಯ ಬಿದ್ದರೆ ಮೂರೂ ಪಟ್ಟುಗಳನ್ನು ಹಾಕಿ ಸಮಸ್ಯೆ ಬಗೆಹರಿಸಬೇಕು. ಅದಕ್ಕೆ ಹೇಳಿದ್ದು ಒಳಮೀಸಲಾತಿಯ ಸಮಸ್ಯೆಗೆ ಪರಿಹಾರ ಇರುವುದು ಮಲ್ಲಿಕಾರ್ಜುನ ಖರ್ಗೆ ಬಳಿ ಎಂದು. ಹಿಂದೆಯೂ ಒಂದಾಗುವ ಅವಕಾಶವಿತ್ತು! ಸದಾಶಿವ ಆಯೋಗದ ಶಿಫಾರಸುಗಳ ಜಾರಿ ವಿಷಯದಲ್ಲೂ ಇದೇ ರೀತಿಯ ಗೊಂದಲ ಉಂಟಾಗಿತ್ತು. ಆಗಲೂ ಅದು ಮಲ್ಲಿಕಾರ್ಜುನ ಖರ್ಗೆ ಮನೆಬಾಗಿಲಿಗೆ ಹೋಗಿತ್ತು. ಸಿದ್ದರಾಮಯ್ಯ ‘ನೀವು ಎಡ-ಬಲದವರು ಒಮ್ಮತದ ನಿರ್ಧಾರಕ್ಕೆ ಬನ್ನಿ; ಸರಕಾರ ಅದನ್ನು ಜಾರಿ ಮಾಡುತ್ತದೆ’ ಎಂದು ಹೇಳಿದ್ದರು. ಆದರೆ ಎರಡೂ ಕಡೆಯವರು ಒಂದೆಡೆ ಸೇರಲೇ ಇಲ್ಲ. ಸದಾಶಿವ ಆಯೋಗದ ಶಿಫಾರಸುಗಳನ್ನು ಒಪ್ಪುವುದು ಅಥವಾ ಬಿಡುವುದು ಬೇರೆ ವಿಷಯ. ಒಂದೊಮ್ಮೆ ಮಲ್ಲಿಕಾರ್ಜುನ ಖರ್ಗೆ ಆಗ ಮನಸ್ಸು ಮಾಡಿದ್ದರೆ ಎಡ-ಬಲದವರು ಒಟ್ಟಿಗೆ ಕೂತು ಚರ್ಚೆ ಮಾಡುವುದಕ್ಕಾದರೂ ಸಾಧ್ಯವಾಗುತ್ತಿತ್ತು. ಈಗಲೂ ಮಲ್ಲಿಕಾರ್ಜುನ ಖರ್ಗೆ ಅವರನ್ನು ಎಡ-ಬಲದವರು ಪ್ರತ್ಯೇಕವಾಗಿ ಹೋಗಿ ಭೇಟಿ ಮಾಡಿದ್ದಾರೆ. ತಮ್ಮ ಬಳಿ ಬಂದವರಿಗೆ ಖರ್ಗೆ ‘ಇದು ರಾಜ್ಯದ ಸಮಸ್ಯೆ, ನನ್ನ ಬಳಿಗೆ ಏಕೆ ತರುತ್ತೀರಿ?, ನೀವೇ ಬಗೆಹರಿಸಿಕೊಳ್ಳಿ’ ಎಂದು ಹೇಳಿದ್ದಾರಂತೆ. ಮಲ್ಲಿಕಾರ್ಜುನ ಖರ್ಗೆ ರಾಜ್ಯದವರಲ್ಲವಾ? ಪರಿಶಿಷ್ಟ ಜಾತಿಯವರಲ್ಲವಾ? ಇದರಿಂದ ಕರ್ನಾಟಕದ ಕಾಂಗ್ರೆಸ್ ಸರಕಾರಕ್ಕೆ ಕಳಂಕ ಬರುತ್ತಿಲ್ಲವಾ? ಕರ್ನಾಟಕದ ಕಾಂಗ್ರೆಸ್ ಪಕ್ಷಕ್ಕೆ ಕಿವಿ ಹಿಂಡುವುದು ಖರ್ಗೆ ಜವಾಬ್ದಾರಿ ಅಲ್ಲವಾ? ಎಲ್ಲಕ್ಕಿಂತ ಮುಖ್ಯವಾಗಿ ಅವರೇ ಬಗೆಹರಿಸಿಕೊಳ್ಳುವುದಾಗಿದ್ದರೆ ಖರ್ಗೆ ಬಳಿ ಏಕೆ ಹೋಗಬೇಕಿತ್ತು? ಎನ್ನುವ ಪ್ರಶ್ನೆಗಳು ಹುಟ್ಟಿಕೊಂಡಿವೆ. ಮಲ್ಲಿಕಾರ್ಜುನ ಖರ್ಗೆ ಅವರೇ ಉತ್ತರಿಸಬೇಕು. ಮೀಸಲಾತಿಗೇ ವಿರೋಧ! ಇದೇ ರಾಜ್ಯ ಸರಕಾರ ಒಳಮೀಸಲಾತಿ ಸಂಬಂಧಿಸಿದ ಕಾಯ್ದೆ ರೂಪಿಸಿದೆ. ರಾಜ್ಯಪಾಲರು ಶೇ. 17ರ ಒಳಮೀಸಲಾತಿ ಕಾಯ್ದೆಗೆ ಅಂಕಿತ ಹಾಕಿದ್ದಾರೆ. ಹೈಕೋರ್ಟ್ ‘ಬೇಕಿದ್ದರೆ ಈಗ ಶೇ. 17ರಷ್ಟು ಒಳಮೀಸಲಾತಿ ಅಡಿ ನೇಮಕ ಮಾಡಿ, ಆದರೆ ಅಂತಿಮ ತೀರ್ಪು ಬರುವವರೆಗೆ ಹೆಚ್ಚುವರಿ ಶೇ. 2ರಷ್ಟು ನೇಮಕಾತಿಯನ್ನು ತಡೆಹಿಡಿಯಿರಿ’ ಎಂದು ಹೇಳಿದೆ. ಹಾಗಾಗಿ ಒಳಮೀಸಲಾತಿ ಅಡಿ ನೇಮಕ ಮಾಡಲು ಯಾವ ಅಡ್ಡಿಯೂ ಇಲ್ಲ. ಆದರೂ ‘ಕೆಲವರು’ ಕೋರ್ಟ್ ನೆಪ ಹೇಳಿಕೊಂಡು ಒಳಮೀಸಲಾತಿಯನ್ನು ವಿರೋಧಿಸುತ್ತಿದ್ದಾರೆ. ಅವರು ಒಂದನ್ನು ಅರ್ಥ ಮಾಡಿಕೊಳ್ಳಬೇಕು. ಒಳಮೀಸಲಾತಿ ಎನ್ನುವುದು ಮೀಸಲಾತಿಯ ಪರಿಷ್ಕೃತ ಮಾದರಿ. ಅಥವಾ ಮುಂದುವರಿದ ಭಾಗ. ಅದನ್ನು ವಿರೋಧ ಮಾಡುತ್ತಾರೆ ಎಂದರೆ ಮೀಸಲಾತಿಯನ್ನು ವಿರೋಧ ಮಾಡುತ್ತಾರೆ ಎಂದೇ ಅರ್ಥ. ಇದಾ ಸಹೋದರತ್ವ? ಹಿಂದೆ ಮಾದಿಗರು ನೀರು ತುಂಬಿಸಿದರೆಂದು ಹೊಲೆಯರು ಬಾವಿ ನೀರು ಮುಟ್ಟದೆ ಹೊಲೆಯರಿಗೆ ಪ್ರತ್ಯೇಕ ಬಾವಿ ತೋಡಿಸಿಕೊಡಲಾಗಿದೆ. ಎಡಗೈ ಮತ್ತು ಬಲಗೈ ಸಮುದಾಯದ ಸಚಿವರಿಗೆ ಅವರವರ ಜಾತಿಯ ಜನ ಪ್ರತ್ಯೇಕವಾಗಿ ಸನ್ಮಾನ ಮಾಡಿದ್ದಾರೆ. ಹೊಲೆಯರು ಬೌದ್ಧ ಮತಕ್ಕೆ ಹೋದರೆಂದು, ಮಾದಿಗರು ಕ್ರಿಶ್ಚಿಯನ್ ಧರ್ಮದತ್ತ ಹೋಗಿದ್ದಾರೆ. ಹೀಗೆ ಬಹಳ ಹಿಂದಿನಿಂದಲೇ ಒಡಕಿತ್ತು. ಬರಬರುತ್ತಾ ಬಿರುಕು ಮಾಯವಾಗಬೇಕಿತ್ತು. ಆದರೆ ಇನ್ನೂ ಜಾಸ್ತಿಯಾಗುತ್ತಿದೆ. ಈಗ ಸದಾ ಸಂವಿಧಾನದ ಬಗ್ಗೆ ಮಾತನಾಡುವ ಸಚಿವರೊಬ್ಬರು ತಮ್ಮ ಕಚೇರಿಯಲ್ಲಿ ಪ್ರಧಾನ ಕಾರ್ಯದರ್ಶಿಯಿಂದ ಹಿಡಿದು ಗುಮಾಸ್ತರವರೆಗೆ ಎಲ್ಲರನ್ನೂ ತಮ್ಮ ಒಳಪಂಗಡದವರನ್ನೇ ಸೇರಿಸಿಕೊಂಡಿದ್ದಾರೆ ಎನ್ನುವ ಮಾಹಿತಿ ಇದೆ. ಇನ್ನೊಬ್ಬ ಸಚಿವರು ಇತ್ತೀಚೆಗೆ ಕೆಲವು ಆಯ್ದ ವ್ಯಕ್ತಿಗಳ ಜೊತೆ ಚರ್ಚೆ ಮಾಡುತ್ತಿದ್ದರು. ಮಾತಿನ ಮಧ್ಯೆ ಅಲ್ಲಿದ್ದವರ ಪೈಕಿ ಒಬ್ಬರೇ ಒಬ್ಬರು ಎಡಗೈ ಸಮುದಾಯದವರು ಎಂದು ಗೊತ್ತಾಗಿ ತಕ್ಷಣವೇ ಸಭೆಯನ್ನು ಬರ್ಖಾಸ್ತುಗೊಳಿಸಿದರಂತೆ. ಇದಾ ಸಹೋದರತ್ವ? ದಲಿತ ಸಿಎಂ ವಿಷಯದಲ್ಲೂ ಒಡಕು! ರಾಜ್ಯದಲ್ಲಿ ಆಗಾಗ ದಲಿತ ಸಿಎಂ ಎನ್ನುವ ವಿಷಯ ಚರ್ಚೆ ಹುಟ್ಟಿ, ಹುಟ್ಟಿದ ರಭಸದಲ್ಲೇ ಸತ್ತುಹೋಗುತ್ತದೆ. ದಲಿತರಿಗೆ ಮುಖ್ಯಮಂತ್ರಿ ಸ್ಥಾನ ಕೊಡುವ ವಿಷಯದಲ್ಲಿ ರಾಜಕೀಯ ಪಕ್ಷಗಳು ಉದಾರವಾಗಿ ನಡೆದುಕೊಂಡಿಲ್ಲ. ಬೇರೆ ಜಾತಿಯ ರಾಜಕೀಯ ನಾಯಕರೂ ಔದಾರ್ಯ ತೋರಿಲ್ಲ ಎನ್ನುವ ಮಾತುಗಳಲ್ಲಿ ಎಳ್ಳಷ್ಟೂ ಸುಳ್ಳಿಲ್ಲ. ಆದರೆ ದಲಿತ ನಾಯಕರಲ್ಲೇ ಒಮ್ಮತವಿಲ್ಲ ಎನ್ನುವುದನ್ನೂ ಅಲ್ಲಗಳೆಯುವಂತಿಲ್ಲ. ‘ದಲಿತ ಕೋಟಾದಲ್ಲಿ ಮುಖ್ಯಮಂತ್ರಿ ಸ್ಥಾನ ಸಿಗುವುದಿದ್ದರೆ ನನಗೇ ಸಿಗಲಿ, ಇಲ್ಲದಿದ್ದರೆ ದಲಿತರು ಮುಖ್ಯಮಂತ್ರಿ ಆಗುವುದೇ ಬೇಡ’ ಎನ್ನುವವರಿಗೆ ಕಡಿಮೆ ಇಲ್ಲ. ಮುಖ್ಯಮಂತ್ರಿಯಾಗುವ ಎಲ್ಲಾ ಅರ್ಹತೆ ಇರುವ ಮಲ್ಲಿಕಾರ್ಜುನ ಖರ್ಗೆಗೆ ಆ ಸ್ಥಾನ ಕೊಡುವುದು ಪರಮೇಶ್ವರ್, ಮಹದೇವಪ್ಪ ಮತ್ತು ಮುನಿಯಪ್ಪಗೆ ಬಿಲ್ ಕುಲ್ ಇಷ್ಟವಿಲ್ಲ. ಅದೇ ರೀತಿ ಪರಮೇಶ್ವರ್ ಸಿಎಂ ಆಗಲು ಮಲ್ಲಿಕಾರ್ಜುನ ಖರ್ಗೆ ಒಪ್ಪುವುದು ಅನುಮಾನ. ಮಹದೇವಪ್ಪ ಮತ್ತು ಮುನಿಯಪ್ಪ ಒಳಗೊಳಗೇ ವಿರೋಧಿಸುತ್ತಾರೆ ಎನ್ನುವ ಬಗ್ಗೆ ಅನುಮಾನವೇ ಬೇಡ. ಮಲ್ಲಿಕಾರ್ಜುನ ಖರ್ಗೆ ಮತ್ತು ಪರಮೇಶ್ವರ್ ಬಿಟ್ಟು ಬೇರೊಬ್ಬ ದಲಿತ ನಾಯಕನಿಗೆ ಅವಕಾಶವಿಲ್ಲ. ಆದರೂ ಮಹದೇವಪ್ಪ ಮತ್ತು ಮುನಿಯಪ್ಪ ಸುಮ್ಮನಿರುವವರಲ್ಲ. ಇಬ್ಬರ ಜಗಳದಲ್ಲಿ ಮೂರನೆಯವರಿಗೆ ಲಾಭ ಎನ್ನುವಂತೆ ಇವರ ಕಾದಾಟ ಬೇರೆಯವರಿಗೆ ರಸದೂಟವಾಗುತ್ತಿದೆ. ಬಿಜೆಪಿಯ ರಾಜಕೀಯ ಲೆಕ್ಕಾಚಾರ! ಅಣ್ಣ ತಮ್ಮಂದಿರ ನಡುವೆ ಜಗಳ ನಡೆಯುತ್ತಿದ್ದಾಗ ಆಸ್ತಿಯಲ್ಲಿ ಪಾಲು ಕೇಳು ಎಂದು ಪ್ರಚೋದಿಸುವ ಪಕ್ಕದ ಮನೆಯವರಿಗೆ ಸಹೋದರರು ಕಚ್ಚಾಡಬಾರದು ಎನ್ನುವ ಕಾಳಜಿ ಇರುವುದಿಲ್ಲ. ಬದಲಿಗೆ ಅವರ ಕಿತ್ತಾಟ ಕಂಡು ಸುಖಿಸುವ ವಿಕೃತಭಾವ ಇರುತ್ತದೆ ಅಥವಾ ಒಡಕಿನ ಲಾಭ ಮಾಡಿಕೊಳ್ಳುವ ಸಂಚು ಇರುತ್ತದೆ. ಸದ್ಯ ಎಡಗೈ ಮತ್ತು ಬಲಗೈ ಎಂಬ ಅಣ್ಣ ತಮ್ಮಂದಿರ ವಿಷಯದಲ್ಲಿ ಆಗುತ್ತಿರುವುದು ಇದೇ. ಬಲಗೈ ಸಮುದಾಯ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುತ್ತದೆ ಎನ್ನುವ ಕಾರಣಕ್ಕೆ ಬಿಜೆಪಿ ಎಡಗೈ ಸಮುದಾಯಕ್ಕೆ ‘ಪಾಲು ಕೇಳುವಂತೆ’ ಪ್ರಚೋದಿಸುತ್ತಿದೆ. ಎಡಗೈ ಸಮುದಾಯಕ್ಕೆ ಅರ್ಹ ಪಾಲು ಸಿಗಬೇಕು ಎನ್ನುವುದು ನ್ಯಾಯ. ಆದರೆ ಬಿಜೆಪಿ ಎಡಗೈ ನಾಯಕರನ್ನು ಪ್ರಚೋದಿಸುತ್ತಿರುವುದು ನ್ಯಾಯಕ್ಕಾಗಿ ಅಲ್ಲ, ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು. ಇವತ್ತು ಎಡಗೈ ಸಮುದಾಯಕ್ಕೆ ಅನ್ಯಾಯವಾಯಿತು ಎಂದು ಬೊಬ್ಬೆಹೊಡೆಯುತ್ತಿರುವ ಬಿಜೆಪಿ ಕಳೆದ ಬಾರಿ ಚಿತ್ರದುರ್ಗ ಲೋಕಸಭಾ ಕ್ಷೇತ್ರದಲ್ಲಿ ಎ. ನಾರಾಯಣಸ್ವಾಮಿಗೆ ಟಿಕೆಟ್ ತಪ್ಪಿಸಿದ್ದೇಕೆ (ಅಲ್ಲಿ ಎಡಗೈಗೆ ಅವಕಾಶ ಕೊಟ್ಟಿದೆ)? ಬಿಜಾಪುರದಲ್ಲಿ ರಮೇಶ್ ಜಿಗಜಿಗಣಿಗೆ ಟಿಕೆಟ್ ತಪ್ಪಿಸಲು ಪ್ರಯತ್ನಿಸಿದ್ದೇಕೆ? ಎಡಗೈ ಸಮುದಾಯಕ್ಕೆ ಇದು ಅರ್ಥವಾಗಬೇಕಿದೆ. ಆಫ್ ದಿ ರೆಕಾರ್ಡ್! ಸಚಿವ ಸಂಪುಟ ಸಭೆಯಲ್ಲಿ ಒಳಮೀಸಲಾತಿ ವಿಷಯ ಚರ್ಚೆಗೆ ಬಂದಾಗ ದಲಿತೇತರ ಸಚಿವರು ಸುಮ್ಮನೆ ಕುಳಿತಿದ್ದರಂತೆ. ದಲಿತರ ವಿಷಯವನ್ನು ದಲಿತರೇ ಬಗೆಹರಿಸಿಕೊಳ್ಳಲಿ ಎನ್ನುವುದು ಅವರ ನಿಲುವಾಗಿತ್ತಂತೆ. ಮೇಲ್ನೋಟಕ್ಕೆ ಇದು ಸರಿ ಎನಿಸಬಹುದು. ಆದರೆ ಸಚಿವರು ಯಾವುದು ಸರಿಯೋ ಅದರ ಪರ ಇರಬೇಕಿತ್ತಲ್ಲವೇ? ದಲಿತರು ಅವರಿಗೆ ಮತ ಹಾಕುವುದಿಲ್ಲವೇ? ಇವರೆಲ್ಲ ಸುಮ್ಮನಿದ್ದ ಕಾರಣಕ್ಕೆ ಬಾಯಿ ಇದ್ದವರ ಪರ ನಿರ್ಧಾರವಾಗಿದೆ. ಬಾಯಿ ಇದ್ದವರು ಮಾತ್ರ ಬದುಕಬೇಕು ಎನ್ನುವುದಾದರೆ ಸರಕಾರ ಏಕೆ ಇರಬೇಕು?
ತಮಿಳುನಾಡು | ಪೊಲೀಸ್ ಕಸ್ಟಡಿಯಲ್ಲಿದ್ದ ದಲಿತ ಯುವಕ ಮೃತ್ಯು : ಪೊಲೀಸರ ವಿರುದ್ಧ ಚಿತ್ರಹಿಂಸೆ ಆರೋಪಿಸಿದ ಕುಟುಂಬಸ್ಥರು
ಮಧುರೈ : ತಮಿಳುನಾಡಿನ ಮಧುರೈನಲ್ಲಿ ಪೊಲೀಸ್ ಕಸ್ಟಡಿಯಲ್ಲಿದ್ದ 26 ವರ್ಷದ ದಲಿತ ಯುವಕನೋರ್ವ ಮೃತಪಟ್ಟಿದ್ದಾನೆ. ವಿಚಾರಣೆ ವೇಳೆ ಪೊಲೀಸರು ಚಿತ್ರಹಿಂಸೆ ನೀಡಿದ್ದಾರೆ ಎಂದು ಆತನ ಕುಟುಂಬಸ್ಥರು ಆರೋಪಿಸಿದ್ದಾರೆ. ಆಕಾಶ್ ಮೃತ ಯುವಕ. ಈತನನ್ನು ಶಿವಗಂಗಾದಲ್ಲಿ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಬಂಧಿಸಿದ್ದರು. ANI ಜೊತೆ ಮಾತನಾಡಿದ ಆಕಾಶ್ ತಂದೆ ಕಣ್ಣನ್, ಸ್ನೇಹಿತರ ನಡುವೆ ಜಗಳ ನಡೆದಿತ್ತು. ಪೊಲೀಸರು ನನ್ನ ಮಗ ಮತ್ತು ಘಟನೆಯಲ್ಲಿ ಭಾಗಿಯಾದ ಇನ್ನೋರ್ವನನ್ನು ಹುಡುಕಿಕೊಂಡು ನಮ್ಮ ಬಳಿ ಬಂದರು. ಬಳಿಕ ಪತ್ನಿ ಮತ್ತು ನನ್ನನ್ನು ಪೊಲೀಸ್ ಠಾಣೆಗೆ ಕರೆದೊಯ್ದು ಆಕಾಶ್ ಬಗ್ಗೆ ವಿಚಾರಿಸಿದರು. ಈ ಮಧ್ಯೆ, ಆಕಾಶ್ ಮತ್ತು ಅವನ ಸ್ನೇಹಿತನನ್ನು ಪೊಲೀಸರು ಬಂಧಿಸಿದ್ದಾರೆ ಎಂದು ನಮಗೆ ಮಾಹಿತಿ ಸಿಕ್ಕಿತು. ಆದರೆ, ಅವರು ನನ್ನ ಮಗನನ್ನು ಪೊಲೀಸ್ ಠಾಣೆಗೆ ಕರೆತರಲಿಲ್ಲ. ಇನ್ನೋರ್ವನನ್ನು ಮಾತ್ರ ಠಾಣೆಗೆ ಕರೆ ತಂದಿದ್ದಾರೆ. ನನ್ನ ಮಗನ ಬಗ್ಗೆ ನಮಗೆ ಮಾಹಿತಿ ನೀಡಿಲ್ಲ ಎಂದು ಕಣ್ಣನ್ ಹೇಳಿದರು. ಪೊಲೀಸರು ನನ್ನ ಮಗನನ್ನು ಒಬ್ಬಂಟಿಯಾಗಿ ಶಿವಗಂಗಾ ಪ್ರದೇಶಕ್ಕೆ ಕರೆದೊಯ್ದು, ಅವನ ಕಾಲಿನ ಮೇಲೆ ಕಲ್ಲು ಇಟ್ಟು ಹಲ್ಲೆ ಮಾಡಿ ಅವನ ಕಾಲು ಮುರಿದರು. ಬಳಿಕ ಅವನನ್ನು ಶಿವಗಂಗಾ ಸರಕಾರಿ ಆಸ್ಪತ್ರೆಗೆ ದಾಖಲಿಸಿದರು. ಆದರೆ ಈ ಬಗ್ಗೆ ನಮಗೆ ತಿಳಿದಿರಲಿಲ್ಲ. ನಂತರ, ಹೆಚ್ಚಿನ ಚಿಕಿತ್ಸೆಗೆ ಮಧುರೈನ ಸರಕಾರಿ ಆಸ್ಪತ್ರೆಗೆ ಕರೆತಂದರು. ನಮಗೆ ಮಾಹಿತಿ ಸಿಕ್ಕಿ ನಾವು ಅಲ್ಲಿಗೆ ತೆರಳಿದಾಗ ಪೊಲೀಸರು ಹಲ್ಲೆ ನಡೆಸಿ ಜಾತಿ ನಿಂದನೆ ಮಾಡಿರುವ ಬಗ್ಗೆ ಆಕಾಶ್ ನಮಗೆ ಮಾಹಿತಿ ನೀಡಿದ್ದಾನೆ. ಮಗನ ಸಾವಿಗೆ ಕಾರಣರಾದ ಪೊಲೀಸ್ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮವನ್ನು ಕೈಗೊಳ್ಳಬೇಕು ಮತ್ತು ಅವರ ವಿರುದ್ಧ ಎಸ್ಸಿ,ಎಸ್ಟಿ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಬೇಕು ಎಂದು ಕಣ್ಣನ್ ಆಗ್ರಹಿಸಿದ್ದಾರೆ.
Petrol Price: ಅಮೆರಿಕ, ಇಸ್ರೇಲ್ ಹಾಗೂ ಇರಾನ್ ನಡುವಿನ ಯುದ್ಧವು ಒಂದು ವಾರದ ನಂತರವೂ ಮುಂದುವರಿದಿದ್ದು, ಯುದ್ಧದ ಬಿಸಿ ಇದೀಗ ಭಾರತ ಸೇರಿದಂತೆ ವಿವಿಧ ರಾಷ್ಟ್ರಗಳ ಮೇಲಾಗುವುದಕ್ಕೆ ಪ್ರಾರಂಭವಾಗಿದೆ. ಯುದ್ಧವು ತೀವ್ರ ಸ್ವರೂಪವನ್ನು ಪಡೆದುಕೊಳ್ಳುತ್ತಿರುವಂತೆಯೇ ಕಚ್ಚಾ ತೈಲದ ದರವು ಭಾರೀ ಹೆಚ್ಚಳವಾಗುತ್ತಿದೆ. ಇದರಿಂದ ಭಾರತದಲ್ಲೂ ಪೆಟ್ರೋಲ್ - ಡೀಸೆಲ್ ದರವು ಶೀಘ್ರ ಹೆಚ್ಚಳವಾಗಲಿದೆ. ಪೆಟ್ರೋಲ್ ಬೆಲೆಯು ಲೀಟರ್ಗೆ
ಗಲ್ಫ್ ಪ್ರದೇಶದಲ್ಲಿ ವಿಮಾನ ಪ್ರಯಾಣ ಸುರಕ್ಷಿತವೇ? ಏರ್ ಟ್ರಾಫಿಕ್ ತಜ್ಞರ ವಿವರಣೆ, ಪ್ರಯಾಣಿಕರ ಅನುಭವ ಇಲ್ಲಿದೆ..
ಇರಾನ್ - ಇಸ್ರೇಲ್ ಸಂಘರ್ಷದಿಂದಾಗಿ ಮಧ್ಯಪ್ರಾಚ್ಯದಲ್ಲಿ ಯುದ್ಧೋನ್ಮಾದ ಹೆಚ್ಚಾಗಿದೆ. ಪರಿಣಾಮ, ಗಲ್ಫ್ ಪ್ರದೇಶದಲ್ಲಿನ ವಿಮಾನ ಸಂಚಾರದಲ್ಲಿ ದೊಡ್ಡ ಮಟ್ಟದ ವ್ಯತ್ಯಯ ಉಂಟಾಗಿದೆ. ಈ ಸಮಯದಲ್ಲಿ ಮಧ್ಯಪ್ರಾಚ್ಯ / ಗಲ್ಫ್ ರಾಷ್ಟ್ರಗಳಲ್ಲಿ ವಿಮಾನ ಪ್ರಯಾಣ ಸುರಕ್ಷಿತವೇ? ಏರ್ ಟ್ರಾಫಿಕ್ ಮ್ಯಾನೇಜ್ಮೆಂಟ್ ತಜ್ಞರು ಹಾಗೂ ಪ್ರಯಾಣಿಕರ ಅನುಭವ ಇಲ್ಲಿದೆ ನೋಡಿ…
ಚಾಮರಾಜನಗರ : ಗ್ಯಾಸ್ ಬೆಲೆ ಏರಿಕೆ ಖಂಡಿಸಿ ಮಹಿಳಾ ಕಾಂಗ್ರೆಸ್ನಿಂದ ಪ್ರತಿಭಟನೆ
ಚಾಮರಾಜನಗರ: ಅಮೇರಿಕಾ–ಇರಾನ್ ಯುದ್ಧದ ನೆಪವೊಡ್ಡಿ ಕೇಂದ್ರ ಸರ್ಕಾರ ಗ್ಯಾಸ್ ಸಿಲಿಂಡರ್ ದರ ಹೆಚ್ಚಿಸಿರುವುದನ್ನು ಖಂಡಿಸಿ ಚಾಮರಾಜನಗರ ಜಿಲ್ಲಾ ಮಹಿಳಾ ಕಾಂಗ್ರೆಸ್ ವತಿಯಿಂದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯಂದು ಪ್ರತಿಭಟನೆ ನಡೆಯಿತು. ಕೇಂದ್ರ ಸರ್ಕಾರವು ಯುದ್ಧದ ನೆಪವೊಡ್ಡಿ ರಾತ್ರೋರಾತ್ರಿ ಅಡುಗೆ ಅನಿಲ ಸಿಲಿಂಡರ್ ದರವನ್ನು ಹೆಚ್ಚಿಸಿರುವುದು ಸರಿಯಲ್ಲ. ಕೂಡಲೇ ಗ್ಯಾಸ್ ದರ ಇಳಿಕೆ ಮಾಡಬೇಕು ಎಂದು ಆಗ್ರಹಿಸಿ ಮಹಿಳಾ ಕಾಂಗ್ರೆಸ್ ಕಾರ್ಯಕರ್ತರು ಖಾಲಿ ಸಿಲಿಂಡರ್ ಹೊತ್ತು ಪ್ರತಿಭಟನೆ ನಡೆಸಿದರು. ಈ ಸಂದರ್ಭದಲ್ಲಿ ಚಾಮರಾಜನಗರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷೆ ನಾಗರತ್ನ, ಮಾಜಿ ನಗರಸಭಾ ಅಧ್ಯಕ್ಷೆ ಚಿನ್ನಮ್ಮ ಸಿದ್ದರಾಮಯ್ಯ, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರ ಸದಸ್ಯೆ ಉಮ್ಮತ್ತೂರು ಭಾಗ್ಯ, ರಾಜ್ಯ ಕಾರ್ಯದರ್ಶಿ ಕಾವೇರಿ ಶಿವಕುಮಾರ್ ಸೇರಿದಂತೆ ಮಹಿಳಾ ಕಾಂಗ್ರೆಸ್ ಕಾರ್ಯಕರ್ತರು ಭಾಗವಹಿಸಿದ್ದರು.
Sensex crash: ಷೇರು ಮಾರುಕಟ್ಟೆಯಲ್ಲಿ ಭಾರಿ ಸಂಚಲನ; ಸೆನ್ಸೆಕ್ಸ್ 2100 ಅಂಕ ಕುಸಿತ
ಮುಂಬೈ: ವಾರದ ಆರಂಭದಲ್ಲೇ ಭಾರತೀಯ ಷೇರು ಮಾರುಕಟ್ಟೆಯಲ್ಲಿ ಭಾರಿ ಕುಸಿತ ಕಂಡುಬಂದಿದ್ದು, ಹೂಡಿಕೆದಾರರಲ್ಲಿ ಆತಂಕ ಸೃಷ್ಟಿಸಿದೆ. ಜಾಗತಿಕ ಮಾರುಕಟ್ಟೆಯ ಇತ್ತೀಚಿನ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಬಿಎಸ್ಇ (BSE) ಸೆನ್ಸೆಕ್ಸ್ 2100 ಅಂಕಗಳಿಗಿಂತಲೂ ಹೆಚ್ಚು ಕುಸಿತ ಕಂಡಿದೆ. ಆರಂಭಿಕ ವ್ಯವಹಾರದಲ್ಲೇ ಸೆನ್ಸೆಕ್ಸ್ 2100ಕ್ಕೂ ಹೆಚ್ಚು ಅಂಕಗಳನ್ನು ಕಳೆದುಕೊಂಡು ಕೆಳಮಟ್ಟಕ್ಕೆ ಕುಸಿದಿದೆ. ರಾಷ್ಟ್ರೀಯ ಷೇರು ಸೂಚ್ಯಂಕವಾದ ನಿಫ್ಟಿ (Nifty) ಕೂಡ ಭಾರಿ
ಕೆಲವೇ ದಿನಗಳಲ್ಲಿ ಭಾರತ - ಪಾಕ್ ನಡುವೆ ಪೂರ್ಣ ಪ್ರಮಾಣದ ’ಸಿಂಧೂ ನದಿ’ ಯುದ್ದ ಶುರು : ಭವಿಷ್ಯ
Astrology Prediction : ಕಾಶ್ಮೀರದ ಪಹಲ್ಗಾಮ್ ನಲ್ಲಿ ಉಗ್ರರ ದಾಳಿಯ ಹಿನ್ನಲೆಯಲ್ಲಿ ಭಾರತವು ಪಾಕಿಸ್ತಾನದ ಉಗ್ರ ನೆಲೆಗಳ ಮೇಲೆ ದಾಳಿಯನ್ನು ನಡೆಸಿತ್ತು. ಇದಾದ ನಂತರ, ಕೆಲವು ದಿನಗಳ ಕಾಲ ಎರಡು ದೇಶಗಳ ನಡುವೆ ಉದ್ವಿಗ್ನತೆ ಮುಂದುವರಿದಿತ್ತು. ಈಗ, ಸಿಂಧೂ ನದಿನೀರು ಹಂಚಿಕೆಯ ವಿಚಾರದಲ್ಲಿ, ಭಾರತ ಮತ್ತು ಪಾಕಿಸ್ತಾನದ ನಡುವೆ ಪೂರ್ಣ ಪ್ರಮಾಣದ ಯುದ್ದ ನಡೆಯಲಿದೆ ಎಂದು ಖ್ಯಾತ ಜ್ಯೋತಿಷಿಯೊಬ್ಬರು ಭವಿಷ್ಯ ನುಡಿದಿದ್ದಾರೆ.
ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ: ಮಹಿಳಾ ಸಿಬ್ಬಂದಿಯಿಂದ ಬೆಂಗಳೂರು -ಮೈಸೂರು ನಡುವೆ ವಂದೇ ಭಾರತ್ ರೈಲು ಚಾಲನೆ
ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಬೆಂಗಳೂರು ಮತ್ತು ಮೈಸೂರು ನಡುವಿನ ವಂದೇ ಭಾರತ್ ಎಕ್ಸ್ಪ್ರೆಸ್ ಅನ್ನು ಸಂಪೂರ್ಣವಾಗಿ ಮಹಿಳಾ ಸಿಬ್ಬಂದಿಯೇ ನಿರ್ವಹಿಸಿದರು. ಲೋಕೋ ಪೈಲಟ್ ಬಲ್ಲ ಶಿವಪಾರ್ವತಿ, ಸಹಾಯಕ ಲೋಕೋ ಪೈಲಟ್ ಅಶ್ವತಿ ಎಸ್ ನಾಯರ್ ಮತ್ತು ರೈಲು ನಿರ್ವಾಹಕಿ ಪ್ರಿಯದರ್ಶಿನಿ ಅವರು ರೈಲು ಸಂಖ್ಯೆ 20607 ಚೆನ್ನೈ ಸೆಂಟ್ರಲ್-ಮೈಸೂರು ವಂದೇ ಭಾರತ್ ಎಕ್ಸ್ಪ್ರೆಸ್ ಅನ್ನು ನಿರ್ವಹಿಸಿದರು.
ಮಧ್ಯಪ್ರಾಚ್ಯ ಯುದ್ಧದ ಬಿಸಿ: ಮೊಟ್ಟೆ ದರ ದಿಢೀರ್ ಕುಸಿತ, ಗ್ರಾಹಕರಿಗೆ ಹಬ್ಬ
ಮಧ್ಯಪ್ರಾಚ್ಯ ರಾಷ್ಟ್ರಗಳ ನಡುವಿನ ಯುದ್ಧದಿಂದಾಗಿ ಮೊಟ್ಟೆ ದರ ಗಣನೀಯವಾಗಿ ಕುಸಿತ ಕಂಡಿದೆ. ವಿದೇಶಗಳಿಗೆ ರಫ್ತು ಸ್ಥಗಿತಗೊಂಡಿದೆ. ಇದು ಅಂತಾರಾಷ್ಟ್ರೀಯ ಮಾರುಕಟ್ಟೆ ಮೇಲೆ ಪ್ರಭಾವ ಬೀರಿದ್ದರೆ, ಜನಸಾಮಾನ್ಯರ ಜೇಬಿಗೆ ತುಸು ಸಮಾಧಾನ ತಂದಿದೆ.
ಸೇವಾ ಕಟ್ಟಡಗಳು, ವಸತಿ ಚಾವಣಿಗಳಲ್ಲಿ ಸೌರಶಕ್ತಿ ಫಲಕ: 3.47 ಕೋಟಿ ಉಳಿತಾಯ
ನೈಋತ್ಯ ರೈಲ್ವೆ ಸೌರ ವಿದ್ಯುತ್ ಉತ್ಪಾದನೆಯಲ್ಲಿ ಮಹತ್ವದ ಹೆಜ್ಜೆ ಇಟ್ಟಿದೆ. ಸೇವಾ ಕಟ್ಟಡಗಳು ಮತ್ತು ವಸತಿ ಮೂಲಸೌಕರ್ಯಗಳ ಚಾವಣಿಗಳಲ್ಲಿ ಸೌರಶಕ್ತಿ ಘಟಕಗಳನ್ನು ಅಳವಡಿಸುವ ಮೂಲಕ 2025–26 ಸಾಲಿನಲ್ಲಿ 54.7 ಲಕ್ಷ ಯೂನಿಟ್ ವಿದ್ಯುತ್ ಉತ್ಪಾದಿಸಿ, 3.47 ಕೋಟಿ ರೂಪಾಯಿ ಉಳಿತಾಯ ಮಾಡಿದೆ.
ಬರಿದಾಗುತ್ತಿದೆ ಚಕ್ರಾ ನದಿ; ಹೆಚ್ಚಾಗ್ತಿದೆ ಬೇಸಿಗೆ ಬವಣೆ
ಮೇ ಅಂತ್ಯದವರೆಗೂ ಸ್ವಲ್ಪ ಮಟ್ಟಿನ ನೀರನ್ನು ಉಳಿಸಿಕೊಳ್ಳುತ್ತಿದ್ದ ಚಕ್ರಾ ನದಿ ಕಳೆದ ಎರಡು- ಮೂರು ವರ್ಷಗಳಿಂದಲೇ ಮಾರ್ಚ್ ಅಂತ್ಯದೊಳಗೆ ಬರಿದಾಗುವ ಸ್ಥಿತಿ ಉಂಟಾಗಿದೆ. ಇದರಿಂದ ನದಿಪಾತ್ರದ ರೈತರ ಕೃಷಿತೋಟಗಳಿಗೆ ನೀರಿನ ಅಭಾವ ಎದುರಾಗಿದ್ದು, ವನ್ಯಜೀವಿಗಳಿಗೂ ನೀರಿನ ತೀವ್ರ ಕೊರತೆ ಕಾಣಿಸಿಕೊಳ್ಳುತ್ತಿದೆ
ಚಳಿಯಿಂದ ನಡುಗಿದ್ದ ಬೆಂಗಳೂರು ಗ್ರಾಮಾಂತರ ಜನ ಈಗ ಬಿಸಿಲ ಬೇಗೆಯಿಂದ ಪರಿತಪಿಸುತ್ತಿದ್ದಾರೆ. ಆರೋಗ್ಯದ ಮೇಲೆ ಭಾರಿ ಬಿಸಿಲು ಪರಿಣಾಮ ಬೀರುವ ಸಾಧ್ಯತೆ ಇರುವುದರಿಂದ ಹಿರಿಯರು, ಮಕ್ಕಳ ಆರೋಗ್ಯ ರಕ್ಷಣೆಗೆ ಸಲಹೆ ನೀಡಿದ್ದಾರೆ.
ರಾಮನಗರದ ರೇಷ್ಮೆ ಮಾರುಕಟ್ಟೆ ಏಷ್ಯಾದಲ್ಲಿಯೇ ದೊಡ್ಡ ಮಾರುಕಟ್ಟೆಯಾಗಿದ್ದು, ವಿಶ್ವದಲ್ಲೇ ಖ್ಯಾತಿ ಹಬ್ಬಲು ಸಜ್ಜಾಗಿದೆ. 200 ಕೋಟಿ ರೂ ವೆಚ್ಚದ ಹೈಟೆಕ್ ಮಾರುಕಟ್ಟೆ ಕಾಮಗಾರಿ ಚುರುಕಿಂದ ಸಾಗಿದ್ದು, ಸಿಲ್ಕ್ ಪಾರ್ಕ್ ಘೋಷಣೆಯೂ ಆಗಿದ್ದು, ಇದರಿಂದಾಗುವ ಅನುಕೂಲಗಳ ವಿವರ ಇಲ್ಲಿದೆ.
ರೇಣುಕಾಸ್ವಾಮಿ ಕೊಲೆ ಪ್ರಕರಣ; ಆರೋಪಿಗಳಿಗೆ ಜಾಮೀನು ನೀಡಲೇಬಾರದು ಎಂಬ ನಿಯಮ ಇಲ್ಲ ಎಂದ ಹೈಕೋರ್ಟ್
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ನಾಲ್ವರು ಆರೋಪಿಗಳ ಜಾಮೀನು ರದ್ದು ಕೋರಿ ರಾಜ್ಯ ಸರ್ಕಾರ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಹೈಕೋರ್ಟ್ನಲ್ಲಿ ನಡೆದಿದೆ. ಈ ವೇಳೆ ಹೈಕೋರ್ಟ್ ಮಹತ್ವದ ಕಾನೂನು ಅಂಶವೊಂದನ್ನು ಉಲ್ಲೇಖಿಸಿದೆ. ಕೊಲೆ ಪ್ರಕರಣಗಳಲ್ಲಿ ಭಾಗಿಯಾದ ಮಾತ್ರಕ್ಕೆ ಆರೋಪಿಗಳಿಗೆ ಜಾಮೀನು ನೀಡಬಾರದು ಎಂಬ ನಿಯಮವೇನೂ ಇಲ್ಲ ಎಂದು ನ್ಯಾಯಮೂರ್ತಿ ಎಸ್.ರಾಚಯ್ಯ ಅವರಿದ್ದ ನ್ಯಾಯಪೀಠ ಅಭಿಪ್ರಾಯಪಟ್ಟಿದೆ. ವಿಶೇಷವಾಗಿ, ಜಾಮೀನು
ಮೈಸೂರು : ಟಾಂಗಾ ಟೂರಿಸಂಗೆ ಹೈಟೆಕ್ ಸ್ಪರ್ಶ , ಪ್ರವಾಸಿಗರಿಗೆ ಹೊಸ ಅನುಭವ
ಮೈಸೂರಿನಲ್ಲಿ‘ಟಾಂಗಾ ಸವಾರಿ’ ಗೆ ಹೈಟೆಕ್ ಸ್ಪರ್ಶ ನೀಡಲಾಗಿದೆ. ಪ್ರವಾಸೋದ್ಯಮ ಇಲಾಖೆ ಕೇಂದ್ರದ ‘ಸ್ವದೇಶ ದರ್ಶನ್’ ಯೋಜನೆಯಡಿ ಕುದುರೆ ಸವಾರಿಗೆ ಆಧುನಿಕ ಸ್ಪರ್ಶ ನೀಡಲಾಗಿದೆ. ಪ್ರವಾಸಿಗರಿಗೆ ಹೊಸ ಅನುಭವ ನೀಡಲಿದೆ.
ಕರ್ನಾಟಕದಲ್ಲಿ 40 ಡಿಗ್ರಿ ಸೆಲ್ಸಿಯಸ್ ದಾಟಿದೆ ಉಷ್ಣಾಂಶ: ಈಗಿನ್ನೂ ಮಾರ್ಚ್, ಮೇ ಕಥೆ ಹೇಗೆ? ಬಿಸಿಗಾಳಿಗೆ ಬಸವಳಿದ ಜನ
ರಾಜ್ಯದಲ್ಲಿ ಬಿಸಿಲ ತಾಪ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಕಳೆದ 24 ಗಂಟೆಗಳಲ್ಲಿ ಕಲಬುರಗಿಯಲ್ಲಿ 39.8 ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಾಪಮಾನ ದಾಖಲಾಗುವ ಮೂಲಕ ರಾಜ್ಯದಲ್ಲೇ ಅತ್ಯಂತ ಬಿಸಿಯಾದ ಪ್ರದೇಶವಾಗಿ ವರದಿಯಾಗಿದೆ. ಕೆಲವು ಪ್ರದೇಶಗಳಲ್ಲಿ ಸಾಮಾನ್ಯಕ್ಕಿಂತ ಹೆಚ್ಚು ತಾಪಮಾನ ದಾಖಲಾಗಿದೆ. ಬೀದರ್ ಜಿಲ್ಲೆಯಲ್ಲಿ 16 ಡಿಗ್ರಿ ಸೆಲ್ಸಿಯಸ್ ಕನಿಷ್ಠ ತಾಪಮಾನ ದಾಖಲಾಗಿದೆ. ಮನ್ನಾರ್ ಕೊಲ್ಲಿಯಲ್ಲಿ ಉಂಟಾಗಿರುವ ಚಂಡಮಾರುತದ ಪರಿಚಲನೆಯಿಂದಾಗಿ
ಐಪಿಎಲ್ 2026ಕ್ಕೆ ಮುಹೂರ್ತ ಫಿಕ್ಸ್: ಇಲ್ಲಿದೆ ಮಾಹಿತಿ
IPL 2026: ಕ್ರಿಕೆಟ್ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದ ಇಂಡಿಯನ್ ಪ್ರೀಮಿಯರ್ ಲೀಗ್ 19ನೇ ಆವೃತ್ತಿಯ ಆರಂಭಕ್ಕೆ ದಿನಗಣನೆ ಶುರುವಾಗಿದೆ. ಇದೀಗ ಟಿ20 ವಿಶ್ವಕಪ್ ಫೈನಲ್ ಪಂದ್ಯ ಮುಗಿದಿದ್ದು, ಇದರ ಮುಂಚೆಯೇ ಐಪಿಎಲ್ ಪ್ರಸಾರಕರು ಅಧಿಕೃತವಾಗಿ ಮಾರ್ಚ್ 28ರಿಂದ ಟೂರ್ನಿ ಪ್ರಾರಂಭವಾಗಲಿದೆ ಎಂದು ಘೋಷಿಸಿದ್ದಾರೆ. ಈ ಬಾರಿ ಐಪಿಎಲ್ನ ಉದ್ಘಾಟನಾ ಪಂದ್ಯವು ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ ಎಂಬುದು
ಇತಿಹಾಸ ಬರೆದ ಭಾರತ ಟಿ20 ತಂಡ: ಸೃಷ್ಟಿಯಾದ ದಾಖಲೆಗಳೆಷ್ಟು ಗೊತ್ತೇ?
ಅಹ್ಮದಾಬಾದ್: ನ್ಯೂಝಿಲೆಂಡ್ ವಿರುದ್ಧ ಸರ್ವಾಂಗೀಣ ಪ್ರದರ್ಶನ ನೀಡಿ, ಮೂರನೇ ಬಾರಿಗೆ ಐಸಿಸಿ ಪುರುಷರ ಟಿ20 ವಿಶ್ವಕಪ್ ಗೆದ್ದ ಭಾರತ ತಂಡ ಫೈನಲ್ನಲ್ಲಿ ಹಲವು ಇತಿಹಾಸಗಳನ್ನು ಸೃಷ್ಟಿಸಿದೆ. ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ರವಿವಾರ ಸೂರ್ಯಕುಮಾರ್ ಯಾದವ್ ನೇತೃತ್ವದ ತಂಡ ಟಾಸ್ ಸೋತು ಬ್ಯಾಟಿಂಗ್ ಗೆ ಆಹ್ವಾನಿಸಲ್ಪಟ್ಟಾಗ ಸಂಜು ಸ್ಯಾಮ್ಸನ್ ಹಾಗೂ ಅಭಿಷೇಕ್ ಶರ್ಮಾ ಅರ್ಧಶತಕಗಳೊಂದಿಗೆ ಪರಿಪೂರ್ಣ ಆರಂಭ ಒದಗಿಸಿಕೊಟ್ಟರು. ಬಳಿಕ ಕೇವಲ 15 ರನ್ ಗಳಿಗೆ ನಾಲ್ಕು ವಿಕೆಟ್ ಕಿತ್ತ ಜಸ್ಪ್ರೀತ್ ಬೂಮ್ರಾ ಎದುರಾಳಿಗಳನ್ನು ನಿಬ್ಬೆರಗುಗೊಳಿಸಿದರು. ನ್ಯೂಝಿಲೆಂಡ್ ವಿರುದ್ಧ 96 ರನ್ ಅಂತರದ ಭಾರೀ ಜಯ ಸಾಧಿಸುವ ಮೂಲಕ ಮೂರು ಬಾರಿ ಟಿ20 ವಿಶ್ವಕಪ್ ಗೆದ್ದ ಏಕೈಕ ತಂಡ ಎಂಬ ದಾಖಲೆಯನ್ನು ಭಾರತ ಸೃಷ್ಟಿಸಿತು. ಅಂತೆಯೇ ತವರಿನಲ್ಲಿ ಟ್ರೋಫಿ ಜಯಿಸಿದ ಮೊಟ್ಟಮೊದಲ ತಂಡ ಎಂಬ ಹೆಗ್ಗಳಿಕೆಯೂ ಭಾರತದ್ದಾಯಿತು. ಅಂತೆಯೇ 2024ರಲ್ಲೂ ಪ್ರಶಸ್ತಿ ಜಯಿಸಿದ್ದ ಭಾರತ ಟ್ರೋಫಿ ಉಳಿಸಿಕೊಂಡ ಮೊಟ್ಟಮೊದಲ ತಂಡ ಎನಿಸಿಕೊಂಡಿತು. ಈ ಐತಿಹಾಸಿಕ ಜಯದ ಸಂಭ್ರಮದಲ್ಲಿ ಪ್ರತಿಕ್ರಿಯಿಸಿದ ನಾಯಕ ಸೂರ್ಯಕುಮಾರ್ ಯಾದವ್, ವೇಗದ ಬೌಲರ್ ಜಸ್ಪ್ರೀತ್ ಬೂಮ್ರಾ ಅವರನ್ನು ರಾಷ್ಟ್ರದ ಖಜಾನೆ ಎಂದರು. ಸ್ವಲ್ಪಮಟ್ಟಿಗೆ ಸಮಯ ತೆಗೆದುಕೊಳ್ಳುತ್ತದೆ ಎನ್ನುವುದು ನನ್ನ ಭಾವನೆಯಾಗಿತ್ತು. ಆದರೆ ಇಂದಿನ ಫಲಿತಾಂಶದ ಬಗ್ಗೆ ಅತೀವ ಸಂತಸ ಇದೆ. ಇದು ಸುಧೀರ್ಘ ಪಯಣ. 2024ರ ವಿಶ್ವಕಪ್ ಗೆದ್ದ ಬಳಿಕ ಬಿಸಿಸಿಐ ಕಡೆಯಿಂದ ಜಯ್ ಶಾ, ರೋಹಿತ್ ಶರ್ಮಾ ನಂಬಿಕೆ ಇರಿಸಿ, ಅದ್ಭುತ ತಂಡದ ನಾಯಕತ್ವದ ಹೊಣೆ ವಹಿಸಿದರು. ಅದಾದ ಬಳಿಕ ಸುಧೀರ್ಘ ಪಯಣ; ಇದೀಗ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಮತ್ತೆ ಕಪ್ ಗೆದ್ದದ್ದು ವಿಶೇಷ ಅನುಭವ. ನಿರಂತರ ಎರಡು ವರ್ಷ ಕಾಲ ನಾವು ಉತ್ತಮ ಪ್ರದರ್ಶನ ನೀಡುತ್ತಾ ಬಂದಿದ್ದೇವೆ. ನಿಜವಾಗಿಯೂ ಅದ್ಭುತ ಎಂದು ಸೂರ್ಯಕುಮಾರ್ ಯಾದವ್ ಬಣ್ಣಿಸಿದರು. ವಿಶ್ವಕಪ್ ಫೈನಲ್ ನಲ್ಲಿ ಸ್ಯಾಮ್ಸನ್ (46 ಎಸೆತಗಳಲ್ಲಿ 89), ಅಭಿಷೇಕ್ ಶರ್ಮಾ (21 ಎಸೆತಗಳಲ್ಲಿ 52) ಮತ್ತು ಇಶಾನ್ ಕಿಶನ್ (25 ಎಸೆತಗಳಲ್ಲಿ 54) ಹೀಗೆ ಮೂವರು ಅರ್ಧಶತಕ ಗಳಿಸುವ ಮೂಲಕ 255 ರನ್ ಗಳನ್ನು ಭಾರತ ಕಲೆಹಾಕಿತು. ಇದು ವಿಶ್ವಕಪ್ ಟಿ20 ಇತಿಹಾಸದಲ್ಲೇ ಫೈನಲ್ ನಲ್ಲಿ ದಾಖಲಾದ ಗರಿಷ್ಠ ಸ್ಕೋರ್ ಎನಿಸಿದೆ.
ಇರಾನ್ ನ ನೂತನ ಸರ್ವೋಚ್ಚ ನಾಯಕನಾಗಿ ಆಯತುಲ್ಲಾ ಅಲಿ ಖಾಮಿನೈರ 2ನೇ ಪುತ್ರ ಮೊಜ್ತಬಾ ಆಯ್ಕೆ
ಟೆಹ್ರಾನ್: ಆಯತುಲ್ಲಾ ಅಲಿ ಖಾಮಿನೈ ಅವರ ಎಡನೇ ಪುತ್ರ ಮೊಜ್ತಬಾ ಖಾಮಿನೈ ಅವರನ್ನು ದೇಶದ ಹೊಸ ಸರ್ವೋಚ್ಚ ನಾಯಕರನ್ನಾಗಿ ಆಯ್ಕೆ ಮಾಡಲಾಗಿದೆ ಎಂದು ಇರಾನ್ ದೇಶದ ಮಾಧ್ಯಮಗಳನ್ನು ಉಲ್ಲೇಖಿಸಿ Aljazeera ವರದಿ ಮಾಡಿದೆ. ಅಮೆರಿಕ ಹಾಗೂ ಇಸ್ರೇಲ್, ಇರಾನ್ ಮೇಲೆ ನಡೆಸಿದ ಯುದ್ಧದ ಮೊದಲ ದಿನವೇ ಸರ್ವೋಚ್ಚ ನಾಯಕರಾಗಿದ್ದ ಆಯತುಲ್ಲಾ ಅಲಿ ಖಾಮಿನೈ ಅವರು ಮೃತಪಟ್ಟಿದ್ದರು. 56 ವರ್ಷದ ಧರ್ಮಗುರು ಆಗಿರುವ ಮೊಜ್ತಬಾ ಖಾಮಿನೈ, ಇರಾನ್ ನ ಧಾರ್ಮಿಕ ಮತ್ತು ರಾಜಕೀಯ ವಲಯಗಳಲ್ಲಿ ಪ್ರಭಾವಶಾಲಿ ವ್ಯಕ್ತಿಯಾಗಿದ್ದಾರೆ. ಅಮೆರಿಕ ಹಾಗೂ ಇಸ್ರೇಲ್ ನಡೆಸಿದ ದಾಳಿಯಲ್ಲಿ ಮೊಜ್ತಬಾ ಖಾಮಿನೈ ಅವರ ತಂದೆ ಆಯತುಲ್ಲಾ ಅಲಿ ಖಾಮಿನೈ ಅವರ ಜೊತೆಗೆ ಅವರ ತಾಯಿ, ಪತ್ನಿ ಮತ್ತು ಸಹೋದರಿಯೊಬ್ಬರು ಮೃತಪಟ್ಟಿದ್ದರು. ದಾಳಿಯ ವೇಳೆ ಮೊಜ್ತಬಾ ಖಾಮಿನೈ ಅವರು ಆ ಸ್ಥಳದಲ್ಲಿಲ್ಲದ ಕಾರಣ ಪಾರಾಗಿದ್ದರು.
ತುಂಬಿದ ಸಭೆಗಳಲ್ಲಿ, ಜಾತ್ರೆಗಳಲ್ಲಿ ಮಗು ಹೆತ್ತವರಿಂದ ತಪ್ಪಿಸಿಕೊಂಡು ಬಿಕ್ಕಿಬಿಕ್ಕಿ ಅಳುತ್ತಿರುವ ಘಟನೆ ಸಾಮಾನ್ಯವಾಗಿ ಹಲವೆಡೆ ನಡೆಯುತ್ತದೆ. ಅದೇ ರೀತಿ ಮೈಸೂರು ನಗರದಲ್ಲಿ ಭಿಕ್ಷೆ ಬೇಡುತ್ತಿದ್ದ 14 ವರ್ಷದ ಬಾಲಕಿಯ ಹಿಂದೆಯೂ ಕರುಣಾಜನಕ ಕಥೆಯಿತ್ತು. ಪೊಲೀಸರ ಸಹಾಯದಿಂದ ಬಾಲಕಿ ಮತ್ತೆ ಪೋಷಕರ ಮಡಿಲು ಸೇರಿದ್ದಾಳೆ.
ಮಹಿಳಾ ದಿನಾಚರಣೆ ಪ್ರಯುಕ್ತ ‘ನಾರಿ ಶಕ್ತಿ ರೈಡ್ 2026’
ಬೆಂಗಳೂರು : ಅಂತರ್ರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಶಿ ಫಾರ್ ಸೊಸೈಟಿ ಸಂಸ್ಥೆ, ಮದರ್ಹುಡ್ ಆಸ್ಪತ್ರೆ, ಸಹಯೋಗದೊಂದಿಗೆ ರವಿವಾರ ನಗರದಲ್ಲಿ ನಾರಿ ಶಕ್ತಿ ರೈಡ್ 2026 ನಡೆಸಲಾಯಿತು. ಬೆಳಗ್ಗೆ ಹೆಬ್ಬಾಳ ಫ್ಲೈಓವರ್ ಕೆಳಭಾಗದಲ್ಲಿರುವ ಮದರ್ ಹುಡ್ ಆಸ್ಪತ್ರೆ, ಸಹಕಾರನಗರದಿಂದ ಆರಂಭವಾದ ಈ ನಾರಿ ಶಕ್ತಿ ರೈಡ್ನ್ನು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮಹಿಳೆಯರು ಅದ್ಧೂರಿಯಾಗಿ ಆರಂಭಿಸಿದರು. ಬಳಿಕ ಈ ರ್ಯಾಲಿ ನಗರದ ವಿವಿಧ ರಸ್ತೆಗಳ ಮೂಲಕ ಸಾಗುತ್ತಾ ಮಾಕ್ಸಿ ಬೆಂಗಳೂರು ಏರ್ ಪೋರ್ಟ್, ಪ್ರೆಸ್ಟೀಜ್ ಟೆಕ್ ಕ್ಲೌಡ್, ನವರತ್ನ ಅಗ್ರಹಾರದಲ್ಲಿ ಸಮಾರೋಪಗೊಂಡಿತು. ಈ ರೈಡ್ನಲ್ಲಿ ಸುಮಾರು 50 ಮಹಿಳಾ ಬೈಕರ್ಸ್, ತಾಲಿರು ಫೌಂಡೇಶನ್ನ 20 ಮಹಿಳಾ ಆಟೋ ಚಾಲಕರು, 20 ಮಹಿಳಾ ಕಾರ್ ಚಾಲಕರು, ವೈದ್ಯರು, ವೃತ್ತಿಪರರು ಹಾಗೂ ಸೈಬರ್ ಸುರಕ್ಷತಾ ತಜ್ಞರು ಉತ್ಸಾಹದಿಂದ ಭಾಗವಹಿಸಿದ್ದರು.
ಕೆಇಎ: ವಾಯುವ್ಯ ಸಾರಿಗೆ ಸಂಸ್ಥೆಯ ಹುದ್ದೆಗಳ ಸ್ಪರ್ಧಾತ್ಮಕ ಪರೀಕ್ಷೆಯ ವೇಳಾಪಟ್ಟಿ ಪ್ರಕಟ
ಬೆಂಗಳೂರು : ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (ಕೆಇಎ) ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಲ್ಲಿನ (ಎನ್ಡಬ್ಯೂಕೆಆರ್ಟಿಸಿ) ವಿವಿಧ ವೃಂದಗಳ ದರ್ಜೆ-2 ಅಧಿಕಾರಿ ಹುದ್ದೆಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಯ ವೇಳಾಪಟ್ಟಿಯನ್ನು ಪ್ರಕಟಿಸಿದ್ದು, ಎ.9ರಂದು ಪರೀಕ್ಷೆಯು ನಡೆಯಲಿದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರವು 2025ರ ನ.19ರಂದು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಖಾಲಿ ಇರುವ ಸಹಾಯಕ ಆಡಳಿತಾಧಿಕಾರಿ, ಸಹಾಯಕ ಲೆಕ್ಕಾಧಿಕಾರಿ, ಸಹಾಯಕ ಕಾನೂನು ಅಧಿಕಾರಿ, ಸಹಾಯಕ ಕಾರ್ಮಿಕ ಮತ್ತು ಕಲ್ಯಾಣಾಧಿಕಾರಿ, ಸಹಾಯಕ ತಾಂತ್ರಿಕ ಶಿಲ್ಪಿ ಮತ್ತು ಸಹಾಯಕ ಸಂಚಾರ ವ್ಯವಸ್ಥಾಪಕ ಹುದ್ದೆಗಳಿಗೆ (ಆಂತರಿಕ ನೇಮಕಾತಿ ಮತ್ತು ನೇರ ನೇಮಕಾತಿ) ಅರ್ಜಿಗಳನ್ನು ಆಹ್ವಾನಿಸಲಾಗಿತ್ತು. ಈಗ ಸ್ಪರ್ಧಾತ್ಮಕ ಪರೀಕ್ಷೆಯ ವೇಳಾಪಟ್ಟಿಯನ್ನು ಪ್ರಕಟಿಸಿದ್ದು, ಎ.9ರ ಬೆಳಗ್ಗೆ 10.30 ರಿಂದ 12.30ರವರೆಗೆ ಮೊದಲನೆ ಪತ್ರಿಕೆ ನಡೆಯಲಿದೆ. ಅದೇ ದಿನ ಮಧ್ಯಾಹ್ನ 2.30 ರಿಂದ 4.30 ರವರೆಗೆ ಎರಡನೆ ಪತ್ರಿಕೆ ನಡೆಯಲಿದೆ. ಎರಡು ಪತ್ರಿಕೆಗಳು ತಲಾ 100 ಪ್ರಶ್ನೆಗಳನ್ನು ಒಳಗೊಂಡಿದ್ದು, ಎರಡು ಪತ್ರಿಕೆಗಳು ಸೇರಿ ಗರಿಷ್ಟ 600 ಅಂಕಗಳಿರುತ್ತವೆ. ಪರೀಕ್ಷಾ ಕೇಂದ್ರದಲ್ಲಿ ಮುಖಚಹರೆ ಪರಿಶೀಲಿಸಿ ಪ್ರವೇಶ ನೀಡುವುದರಿಂದ ಎರಡು ಘಂಟೆ ಮುಂಚಿತವಾಗಿ ಪರೀಕ್ಷಾ ಕೇಂದ್ರದೊಳಗೆ ಹಾಜರಿರಬೇಕು. ಋಣಾತ್ಮಕ ಮೌಲ್ಯಮಾಪನವಿದ್ದು, ಪ್ರತಿ ತಪ್ಪು ಉತ್ತರಕ್ಕೆ 1/4 ರಷ್ಟು (0.75) ಅಂಕಗಳನ್ನು ಕಡಿತಗೊಳಿಸಲಾಗುವುದು. ಉತ್ತರಿಸದೇ ಇರುವ ಪ್ರಶ್ನೆಗಳಿಗೆ ಐದನೇ ಆಯ್ಕೆ/ವೃತ್ತವನ್ನು ಶೇಡ್ ಮಾಡಲು ಕೊನೆಯ ಬೆಲ್ ಆದ ನಂತರ ಹೆಚ್ಚುವರಿಯಾಗಿ ಐದು ನಿಮಿಷಗಳನ್ನು ನೀಡಲಾಗುವುದು. ಯಾವುದೇ ಆಯ್ಕೆಯನ್ನು / ವೃತ್ತವನ್ನು ಶೇಡ್ ಮಾಡಿಲ್ಲದಿದ್ದರೆ, ಪ್ರಶ್ನೆಗೆ 1/4 ರಷ್ಟು (0.75) ಅಂಕಗಳನ್ನು ಕಡಿತಗೊಳಿಸಲಾಗುತ್ತದೆ ಎಂದು ಪ್ರಾಧಿಕಾರದ ಆಡಳಿತಾಧಿಕಾರಿ ಇಸ್ಲಾವುದ್ದೀನ್ ಗದ್ಯಾಳ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಕೆಪಿಎಸ್ಸಿ: ಗ್ರೂಪ್ ‘ಬಿ’ ವೃಂದದ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟ
ಬೆಂಗಳೂರು, ಮಾ.8: ಕೆಪಿಎಸ್ಸಿ 2024ನೇ ಮಾ.13ರಂದು ಅಧಿಸೂಚಿಸಲಾಗಿದ್ದ ವಿವಿಧ ಇಲಾಖೆಗಳ ಗ್ರೂಪ್ ‘ಬಿ’ ವೃಂದದ ಹುದ್ದೆಗಳಿಗೆ ತಾತ್ಕಾಲಿಕ ಆಯ್ಕೆಪಟ್ಟಿ ಮತ್ತು ಕಟ್ಆಫ್ ಅಂಕಗಳನ್ನು ಆಯೋಗದ ಜಾಲತಾಣ http://kpsc.kar.nic.in ನಲ್ಲಿ ಅಭ್ಯರ್ಥಿಗಳ ಮಾಹಿತಿಗಾಗಿ ಪ್ರಕಟಿಸಲಾಗಿದೆ. ಬಿಬಿಎಂಪಿ ಸಹಾಯಕ ಇಂಜಿನಿಯರ್(ಸಿವಿಲ್) ವಿಭಾಗ-1ರ 92 ಉಳಿಕೆ ಮೂಲ ವೃಂದ ಮತ್ತು 8 ಹೈ.ಕ., ಜಲಸಂಪನ್ಮೂಲ ಇಲಾಖೆಯಲ್ಲಿನ ಸಹಾಯಕ ಇಂಜಿನಿಯರ್(ಸಿವಿಲ್) ವಿಭಾಗ-1ರ 90 ಉಳಿಕೆ ಮೂಲ ವೃಂದ, ಭೂಮಾಪನ, ಕಂದಾಯ ವ್ಯವಸ್ಥೆ ಮತ್ತು ಭೂದಾಖಲೆಗಳ ಇಲಾಖೆಯಲ್ಲಿನ ಸಹಾಯಕ ನಿರ್ದೇಶಕರ 24 ಉಳಿಕೆ ಮೂಲ ವೃಂದ ಮತ್ತು 3 ಹೈ.ಕ., ಹಿಂ.ವರ್ಗಗಳ ಕಲ್ಯಾಣ ಇಲಾಖೆಯಲ್ಲಿ ಪತ್ರಾಂಕಿತ ವ್ಯವಸ್ಥಾಪಕರು/ತಾಲೂಕು ಹಿಂ.ವರ್ಗಗಳ ಕಲ್ಯಾಣಾಧಿಕಾರಿಗಳ 21 ಉಳಿಕೆ ಮೂಲ ವೃಂದ ಮತ್ತು 19 ಹೈ.ಕ. ಸೇರಿದಂತೆ ವಿವಿಧ ಹುದ್ದೆಗಳಿಗೆ ತಾತ್ಕಾಲಿಕ ಆಯ್ಕೆಪಟ್ಟಿ ಮತ್ತು ಕಟ್ಆಫ್ ಅಂಕಗಳನ್ನು ಪ್ರಕಟಿಸಲಾಗಿದೆ. ತಾತ್ಕಾಲಿಕ ಆಯ್ಕೆ ಪಟ್ಟಿ ಸಂಬಂಧ ಯಾವುದಾದರೂ ಆಕ್ಷೇಪಗಳಿದ್ದಲ್ಲಿ ಈ ತಾತ್ಕಾಲಿಕ ಆಯ್ಕೆಪಟ್ಟಿ ಪ್ರಕಟಿಸಿದ 7 ದಿನಗಳೊಳಗಾಗಿ ಕಾರ್ಯದರ್ಶಿ, ಕರ್ನಾಟಕ ಲೋಕಸೇವಾ ಆಯೋಗ, ಉದ್ಯೋಗ ಸೌಧ, ಬೆಂಗಳೂರು-560 001 ಇವರಿಗೆ ಆಕ್ಷೇಪಗಳನ್ನು ಸಲ್ಲಿಸಬಹುದು. ಕೊನೆಯ ದಿನದ ನಂತರ ಸಲ್ಲಿಸುವ ಆಕ್ಷೇಪಣೆಗಳನ್ನು ಪರಿಗಣಿಸಲಾಗುವುದಿಲ್ಲ. ತಾತ್ಕಾಲಿಕ ಆಯ್ಕೆ ಪಟ್ಟಿಯಲ್ಲಿ ಆಯ್ಕೆಯಾಗಿರುವ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಆಯ್ಕೆಯಾಗಲು ಇಚ್ಛಿಸದಿದ್ದಲ್ಲಿ ಆಯೋಗದ ಜಾಲತಾಣದಲ್ಲಿ ಲಭ್ಯವಿರುವ Not-Willingness Certificate ಅನ್ನು ಡೌನ್ಲೋಡ್ ಮಾಡಿಕೊಂಡು ಸ್ಟಾಂಪ್ ಪೇಪರ್ನಲ್ಲಿ ನೋಟರಿ ಮೂಲಕ ದೃಢೀಕರಿಸಿರುವ ಪ್ರಮಾಣಪತ್ರ ಮತ್ತು ಪೂರಕ ದಾಖಲೆಗಳೊಂದಿಗೆ ಆಯೋಗಕ್ಕೆ ಖುದ್ದಾಗಿ ಹಾಜರಾಗಿ ಇಚ್ಛಾ ಹೇಳಿಕೆಯನ್ನು ಸಲ್ಲಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ವಿಜಯನಗರ / ಹಗರಿಬೊಮ್ಮನಹಳ್ಳಿ: ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ಹಂಪಾಪಟ್ಟಣ ಗ್ರಾಮದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಪ್ರಭಾರಿ ಮುಖ್ಯ ಶಿಕ್ಷಕ ಉಮೇಶ್ ಅವರು ಇಬ್ಬರು ವಿದ್ಯಾರ್ಥಿಗಳಿಗೆ ಬಾಳೆಹಣ್ಣಿನ ಆಸೆ ತೋರಿಸಿ ಶಾಲೆಯ ಶೌಚಾಲಯವನ್ನು ಸ್ವಚ್ಛಗೊಳಿಸಿದ ಘಟನೆ ಬೆಳಕಿಗೆ ಬಂದಿದ್ದು, ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಕ್ಕಳಿಗೆ ಪಾಠ ಹೇಳಬೇಕಾದ ಶಿಕ್ಷಕರೇ ವಿದ್ಯಾರ್ಥಿಗಳಿಂದ ಇಂತಹ ಕೆಲಸ ಮಾಡಿಸಿಕೊಂಡಿರುವುದು ಅಮಾನವೀಯ ಕೃತ್ಯ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಘಟನೆಯನ್ನು ಗಮನಿಸಿದ ಸ್ಥಳೀಯ ಯುವಕರು ಶಿಕ್ಷಕನನ್ನು ಪ್ರಶ್ನಿಸಿದಾಗ, ತಮ್ಮನ್ನು ಪ್ರಶ್ನಿಸಲು ಯಾರಿಗೂ ಹಕ್ಕಿಲ್ಲ ಎಂದು ಹೇಳಿ ಪೊಲೀಸ್ ಕೇಸ್ ಹಾಕಿಸುವುದಾಗಿ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ. ಈ ವಿಚಾರ ತಿಳಿಯುತ್ತಿದ್ದಂತೆಯೇ ನೂರಾರು ಸಂಖ್ಯೆಯಲ್ಲಿ ಗ್ರಾಮಸ್ಥರು ಶಾಲೆಯ ಮುಂದೆ ಜಮಾಯಿಸಿ ಪ್ರತಿಭಟನೆ ನಡೆಸಿದರು. ಮಕ್ಕಳಿಗೆ ವಿದ್ಯೆ ಕಲಿಸಬೇಕಾದ ಶಿಕ್ಷಕರು ಇಂತಹ ವರ್ತನೆ ತೋರಿದರೆ ಮಕ್ಕಳ ಭವಿಷ್ಯ ಹಾಳಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಘಟನೆಗೆ ಸಂಬಂಧಿಸಿ ಗ್ರಾಮಸ್ಥರು ಹಗರಿಬೊಮ್ಮನಹಳ್ಳಿ ಕ್ಷೇತ್ರ ಶಿಕ್ಷಣಾಧಿಕಾರಿ (ಬಿಇಒ) ಅವರಿಗೆ ದೂರು ಸಲ್ಲಿಸಿ, ಶಿಕ್ಷಕ ಉಮೇಶ್ ವಿರುದ್ಧ ಸೂಕ್ತ ಕ್ರಮ ಕೈಗೊಂಡು ಅಮಾನತು ಮಾಡುವಂತೆ ಒತ್ತಾಯಿಸಿದ್ದಾರೆ.
Mysuru| ನಾಲೆಯಲ್ಲಿ ಈಜಲು ಹೋಗಿದ್ದ ವಿದ್ಯಾರ್ಥಿ ಮುಳುಗಿ ಸಾವು
ಮೈಸೂರು : ಹುಲ್ಲಹಳ್ಳಿ ನಾಲೆಯಲ್ಲಿ ಈಜಲು ಹೋಗಿ ನೀರಿನಲ್ಲಿ ಮುಳುಗಿ ಓರ್ವ ವಿದ್ಯಾರ್ಥಿ ಸಾವನ್ನಪ್ಪಿರುವ ಘಟನೆ ನಂಜನಗೂಡು ತಾಲೂಕಿನಲ್ಲಿ ನಡೆದಿರುವುದು ವರದಿಯಾಗಿದೆ. ದರ್ಶನ್ (21) ಮೃತ ವಿದ್ಯಾರ್ಥಿ. ಈತ ಮೈಸೂರಿನ ಕಾವೇರಿ ಕಾಲೇಜಿನಲ್ಲಿ ಡಿ.ಫಾರ್ಮ ವಿದ್ಯಾಭ್ಯಾಸ ಮಾಡುತ್ತಿದ್ದ ಎನ್ನಲಾಗಿದೆ. ರವಿವಾರ ರಜಾ ಇರುವ ಕಾರಣ ತನ್ನ ನಾಲ್ವರು ಸ್ನೇಹಿತರೊಂದಿಗೆ ನಂಜನಗೂಡು ಸಮೀಪದಲ್ಲಿರುವ ದೇಬೂರು ಗ್ರಾಮದ ಬಳಿಯ ಕಬಿನಿ ಹುಲ್ಲಹಳ್ಳಿ ನಾಲೆಯಲ್ಲಿ ಮಧ್ಯಾಹ್ನ ಈಜಲು ಹೋಗಿದ್ದಾರೆ. ಈ ವೇಳೆ ದರ್ಶನ್ ನೀರಿನಲ್ಲಿ ಮುಳುಗಿದವನು ಮತ್ತೆ ಮೇಲೆ ಬರಲಿಲ್ಲ ಎನ್ನಲಾಗಿದೆ. ಜೊತೆಯಲ್ಲಿದ್ದ ಸ್ನೇಹಿತರು ಗಾಬರಿಯಾಗಿ ಅಕ್ಕಪಕ್ಕದ ಗದ್ದೆಯಲ್ಲಿ ಕೆಲಸ ಮಾಡುತ್ತಿದ್ದವರಿಗೆ ವಿಷಯ ಮುಟ್ಟಿಸಿದ್ದಾರೆ. ಅಷ್ಟರಲ್ಲಾಗಲೆ ದರ್ಶನ್ ಸಾವನ್ನಪ್ಪಿರುವುದು ತಿಳಿದು ಬಂದಿದೆ. ಬಳಿಕ ಕುಟುಂಬದವರು ಆಗಮಿಸಿ ಅಗ್ನಿಶಾಮಕ ಸಿಬ್ಬಂದಿ ಮತ್ತು ನುರಿತ ಈಜುಗಾರರ ಸಹಾಯದಿಂದ ಮೃತದೇಹವನ್ನು ಮೇಲೆತ್ತಲಾಗಿದೆ. ಮೃತ ದರ್ಶನ್ ನಂಜನಗೂಡು ನಗರದ ಚಾಮಲಾಪುರ ಹುಂಡಿ ಬಳಿಯ ಎನ್ಜಿಒ ಕಾಲನಿ ನಿವಾಸಿ ನೆಸ್ಲೆ ಕಂಪೆನಿ ನೌಕರ ಯೋಗೀಶ ಮತ್ತು ಪ್ರೇಮಾ ದಂಪತಿಯ ಪುತ್ರನಾಗಿದ್ದಾನೆ. ಈ ಸಂಬಂಧ ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಳ್ಳಾರಿ | ಸಕ್ಕರೆ ಕಾರ್ಖಾನೆ ಶಾಲಾ ಆವರಣದಲ್ಲಿ ಹೊಸ ಕಟ್ಟಡಕ್ಕೆ ವಿರೋಧ : ಶಾಲೆ ಸ್ಥಳಾಂತರಕ್ಕೆ ಆಗ್ರಹ
ಬಳ್ಳಾರಿ / ಕಂಪ್ಲಿ: ಸಕ್ಕರೆ ಕಾರ್ಖಾನೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಮೌಲಾನಾ ಆಜಾದ್ ಶಾಲೆಯ ಕಟ್ಟಡ ನಿರ್ಮಾಣಕ್ಕೆ ಮುಂದಾಗಿರುವುದಕ್ಕೆ ವಿರೋಧ ವ್ಯಕ್ತಪಡಿಸಿ, ಶಾಲೆಯನ್ನು ಬೇರೆಡೆ ಸ್ಥಳಾಂತರಿಸುವಂತೆ ಆಗ್ರಹಿಸಿ ಎಸ್ಡಿಎಂಸಿ ಅಧ್ಯಕ್ಷ ರಾಮಲಿಂಗ ಅವರ ನೇತೃತ್ವದಲ್ಲಿ ಸದಸ್ಯರು, ಹಳೆಯ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಕುರುಗೋಡು ಪಟ್ಟಣದಲ್ಲಿರುವ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಗೆ ಭೇಟಿ ನೀಡಿ ಮ್ಯಾನೇಜರ್ ಭುಜಂಗಯ್ಯ ಮಠ ಅವರಿಗೆ ಮನವಿ ಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ಯುವ ಮುಖಂಡ ಎನ್. ಮನೋಜಗೌಡ ಮಾತನಾಡಿ, ಇಲ್ಲಿನ ಶಾಲೆ ಹಳೆಯದಾಗಿದ್ದು ಅನೇಕ ವಿದ್ಯಾರ್ಥಿಗಳು ಇಲ್ಲಿ ಶಿಕ್ಷಣ ಪಡೆದುಕೊಂಡಿದ್ದಾರೆ. ಪ್ರಸ್ತುತವೂ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದು, ಶಾಲೆಗೆ ವಿಶಾಲವಾದ ಆಟದ ಮೈದಾನವೂ ಇದೆ ಎಂದು ಹೇಳಿದರು. ಪಿಎಂಶ್ರೀ ಯೋಜನೆಗೆ ಈ ಶಾಲೆ ಒಳಪಟ್ಟಿದ್ದು, ಅದನ್ನು ಆಧುನಿಕ ಮಾದರಿ ಶಾಲೆಯಾಗಿ ಮೇಲ್ದರ್ಜೆಗೆ ಏರಿಸಲು ಸರ್ಕಾರಕ್ಕೆ ಈಗಾಗಲೇ ಪ್ರಸ್ತಾವನೆ ಸಲ್ಲಿಸಲಾಗಿದೆ. ಇಂತಹ ಸಂದರ್ಭದಲ್ಲಿ ಇದೇ ಆವರಣದಲ್ಲಿ ಮೌಲಾನಾ ಆಜಾದ್ ಶಾಲೆಯ ಕಟ್ಟಡ ನಿರ್ಮಿಸಿದರೆ ಉಗ್ರ ಹೋರಾಟ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು. ಈ ವೇಳೆ ಸುಂಕಣ್ಣ, ಪ್ರಕಾಶ, ರಿಸ್ವಾಮಿ, ಆದಿನಾರಾಯಣ, ಓಬಳೇಶ, ಕಾರ್ತಿಕ ಸೇರಿದಂತೆ ಹಳೆಯ ವಿದ್ಯಾರ್ಥಿಗಳು ಹಾಗೂ ಎಸ್ಡಿಎಂಸಿ ಸದಸ್ಯರು ಉಪಸ್ಥಿತರಿದ್ದರು.
ಬಳ್ಳಾರಿ | ಉಚಿತ ಅರೋಗ್ಯ ತಪಾಸಣಾ, ಔಷಧ ವಿತರಣಾ ಕಾರ್ಯಕ್ರಮ
ಗಿಡಮೂಲಿಕೆ ಔಷಧಿಯಿಂದ ಆರೋಗ್ಯ ಕಾಪಾಡಿಕೊಳ್ಳಬಹುದು: ಕಲ್ಗುಡಿ ವಿಶ್ವನಾಥ
T20 World Cup- ಚಾಂಪಿಯನ್ ಟೀಂ ಇಂಡಿಯಾಗೆ 20 ಕೋಟಿ ರೂ ಇನಾಮು! ಉಳಿದವರಿಗೂ ಉಂಟು ದೊಡ್ಡ ಗಂಟು!
ICC Prize Money- ಅಹ್ಮದಾಬಾದ್ನಲ್ಲಿ ನಡೆದ ಫೈನಲ್ನಲ್ಲಿ ನ್ಯೂಜಿಲೆಂಡ್ ಮಣಿಸಿ ಐಸಿಸಿ ಟಿ20 ವಿಶ್ವಕಪ್ 2026 ಗೆದ್ದಿರುವ ಭಾರತ ತಂಡಕ್ಕೆ ಐಸಿಸಿಯು ಸುಮಾರು 20.4 ಕೋಟಿ ರೂಪಾಯಿ ಬಹುಮಾನ ನೀಡಿದೆ. ಇದರೊಂದಿಗೆ ರನ್ನರ್ ಅಪ್ ನ್ಯೂಜಿಲೆಂಡ್ 10.6 ಕೋಟಿ ರೂಪಾಯಿ ಪಡೆದರೆ, ಸೆಮಿಫೈನಲಿಸ್ಟ್ ಇಂಗ್ಲೆಂಡ್ ಮತ್ತು ದಕ್ಷಿಣ ಆಫ್ರಿಕಾ ತಲಾ 6.5 ಕೋಟಿ ರೂಪಾಯಿ ತಮ್ಮದಾಗಿಸಿಕೊಂಡಿವೆ. ಇದರ ಹೊರತಾಗಿ ಬಿಸಿಸಿಐ ಸಹ ಭಾರತ ತಂಡದ ಆಟಗಾರರಿಗೆ, ಕೋಚಿಂಗ್ ಸಿಬ್ಬಂದಿಗೆ ಶೀಘ್ರದಲ್ಲೇ ಬೃಹತ್ ಮೊತ್ತದ ವಿಶೇಷ ಬೋನಸ್ ಘೋಷಿಸುವ ನಿರೀಕ್ಷೆಯಿದೆ.
ರಷ್ಯಾ ಮತ್ತು ಉಕ್ರೇನ್ ಯುದ್ಧದ ಪರಿಣಾಮ ಯುರೋಪ್ ನೆಲದಲ್ಲಿ ಹೊಸ ಸಮಸ್ಯೆ | Ukraine And Russia
ಪ್ರಪಂಚ ಮತ್ತೆ ಶಾಂತವಾಗಬೇಕು, ಇದಕ್ಕಾಗಿ ಯುದ್ಧಗಳು ನಿಲ್ಲಬೇಕು ಎಂಬುದು ಎಲ್ಲರ ಆಸೆಯೂ ಆಗಿದೆ. ಹೀಗಿದ್ದರೂ ಜಗತ್ತಿನಲ್ಲಿ ಯುದ್ಧಗಳು ನಿಲ್ಲುವ ಬದಲಾಗಿ ಮತ್ತಷ್ಟು ವಾರ್ ಶುರುವಾಗುತ್ತಿದ್ದು, ದಿನದಿಂದ ದಿನಕ್ಕೆ ಪರಿಸ್ಥಿತಿ ಕೂಡ ಚಿಂತಾಜನಕ ಆಗುತ್ತಿದೆ. ಅದರಲ್ಲೂ ರಷ್ಯಾ ಮತ್ತು ಉಕ್ರೇನ್ ಯುದ್ಧ ಇಡೀ ಜಗತ್ತಿಗೆ ತಲೆನೋವಾಗಿ ಪರಿಣಮಿಸಿದ್ದು, ಏನಾದರೂ ಮಾಡಿ ಈ ಯುದ್ಧ ನಿಲ್ಲಿಸಬೇಕು ಎಂಬ ಪ್ರಯತ್ನ ನಡೆಯುತ್ತಲೇ
ಕಂಪ್ಲಿ | ಪಂಚ ಗ್ಯಾರಂಟಿ ಯೋಜನೆಗಳಿಂದ ಜನರ ಬದುಕಿಗೆ ನೆಮ್ಮದಿ: ಕೆ.ಶ್ರೀನಿವಾಸರಾವ್
ಕಂಪ್ಲಿ: ರಾಜ್ಯದಲ್ಲಿ ಬಡ ಹಾಗೂ ಮಧ್ಯಮ ವರ್ಗದ ಜನರ ಬದುಕು ಉತ್ತಮವಾಗಿರಲಿ ಎಂಬ ಉದ್ದೇಶದಿಂದ ರಾಜ್ಯ ಸರ್ಕಾರ ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದ್ದು, ಇದರಿಂದ ಸಾಕಷ್ಟು ಜನರ ಜೀವನ ನೆಮ್ಮದಿಯಿಂದ ಕೂಡಿದೆ ಎಂದು ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷ ಕೆ. ಶ್ರೀನಿವಾಸರಾವ್ ಹೇಳಿದರು. ತಾಲೂಕ ಪಂಚಾಯತಿ ಸಭಾಂಗಣದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಭಾನುವಾರ ಆಯೋಜಿಸಿದ್ದ ಕರ್ನಾಟಕ ಸರ್ಕಾರದ ಗ್ಯಾರಂಟಿ ಯೋಜನೆಗಳ ಅರಿವು ಕಾರ್ಯಕ್ರಮವನ್ನು ಸಸಿಗೆ ನೀರೆರೆಯುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು. ಐದು ಗ್ಯಾರಂಟಿ ಯೋಜನೆಗಳು ಜನರಿಗೆ ವರದಾನವಾಗಿದ್ದು, ಈ ಯೋಜನೆಗಳು ಅರ್ಹ ಕುಟುಂಬಗಳಿಗೆ ತಲುಪುವಂತೆ ಮಾಡಬೇಕು ಎಂದು ಹೇಳಿದರು. ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಆರ್.ಕೆ. ಶ್ರೀಕುಮಾರ ಪ್ರಾಸ್ತಾವಿಕವಾಗಿ ಮಾತನಾಡಿ, ಮಹಿಳೆಯರು ಕೂಡ ಪುರುಷರಷ್ಟೇ ಸಮಾನರು. ಮನೆಯ ಯಜಮಾನಿಕೆಯಿಂದ ಹಿಡಿದು ದೇಶದ ಹಣಕಾಸು ಸಚಿವೆಯ ಸ್ಥಾನವರೆಗೂ ಮಹಿಳೆಯರು ತಮ್ಮ ಸಾಮರ್ಥ್ಯವನ್ನು ತೋರಿಸಿದ್ದಾರೆ ಎಂದು ಹೇಳಿದರು. ಇಂದಿನ ಆಧುನಿಕ ಸಮಾಜದಲ್ಲಿ ಮಹಿಳೆಯರು ಸಮಾಜದ ಮುಖ್ಯವಾಹಿನಿಗೆ ಬಂದು ಹಲವಾರು ಕ್ಷೇತ್ರಗಳಲ್ಲಿ ತಮ್ಮದೇ ಆದ ಪ್ರತಿಭೆ ತೋರಿಸುತ್ತಿದ್ದು, ಸ್ಪರ್ಧಾತ್ಮಕ ಯುಗದಲ್ಲಿಯೂ ಪ್ರಬಲ ಪೈಪೋಟಿ ನೀಡುತ್ತಿರುವುದು ಸಂತೋಷದಾಯಕ ಸಂಗತಿಯಾಗಿದೆ ಎಂದು ಅಭಿಪ್ರಾಯಪಟ್ಟರು. ಈ ಸಂದರ್ಭದಲ್ಲಿ ಸಹಾಯಕ ನಿರ್ದೇಶಕ ಕೆ.ಎಸ್.ಮಲ್ಲನಗೌಡ ಹಾಗೂ ಶ್ರೀಶೈಲಗೌಡ, ಕಲ್ಯಾಣ ಕರ್ನಾಟಕ ರಸ್ತೆ ವಿಭಾಗದ ದೇವರೆಡ್ಡಿ, ಆಹಾರ ಮತ್ತು ನಾಗರಿಕ ಇಲಾಖೆಯ ವಿರುಪಾಕ್ಷಿಗೌಡ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮೋಹನ್, ಲತಿಫಾಬೇಗಂ, ಪಿಡಿಒಗಳು, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ನಿರ್ದೇಶಕರು, ಸ್ವಸಹಾಯ ಸಂಘದ ಅಧ್ಯಕ್ಷರು, ಅಂಗನವಾಡಿ ಕಾರ್ಯಕರ್ತೆಯರು, ಮತ್ತು ತಾಲೂಕು ಪಂಚಾಯಿತಿಯ ಎಲ್ಲಾ ಅಧಿಕಾರಿ ವೃಂದದವರು ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ರಷ್ಯಾ ವಿರುದ್ಧ ರೊಚ್ಚಿಗೆದ್ದ ಅಮೆರಿಕ ನಾಯಕರು, ಕಾರಣ ತಿಳಿಯಿರಿ | Operation Roaring Lion
ಅಮೆರಿಕ ಮತ್ತು ಇರಾನ್ ನಡುವೆ ಯುದ್ಧ ನಡೆಯುತ್ತಿದ್ದು, ಈ ಯುದ್ಧದಲ್ಲಿ ಇಸ್ರೇಲ್ ಕೂಡ ಜಗತ್ತಿನ ದೊಡ್ಡಣ್ಣ ಅಮೆರಿಕ ಜೊತೆಗೆ ನಿಂತು ಹೋರಾಡುತ್ತಿದೆ. ಹೇಗಾದರೂ ಮಾಡಿ ಈ ಬಾರಿ ಇರಾನ್ ಸೇನೆ ಸೋಲಬೇಕು, ಎಂಬ ಒನ್ಲೈನ್ ಅಜೆಂಡಾ ಇಟ್ಟುಕೊಂಡು ಎರಡೂ ದೇಶಗಳು ವಾರ್ ಶುರು ಮಾಡಿ ದೊಡ್ಡದಾಗಿ ದಾಳಿ ನಡೆಸುತ್ತಿವೆ. ಆದರೆ ಇಂತಹ ಸಮಯದಲ್ಲೇ ಅಮೆರಿಕಗೆ ಸಾಲು ಸಾಲು
ಸುರಪುರ | ಕುಡಿಯುವ ನೀರಿನ ಕುರಿತು ಟಾಸ್ಕ್ ಫೋರ್ಸ್ ಸಭೆ
ಸುರಪುರ: ತಾಲೂಕಿನಾದ್ಯಂತ ಬೇಸಿಗೆ ವೇಳೆ ಎಲ್ಲಿಯೂ ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ಅಧಿಕಾರಿಗಳು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಶಾಸಕ ರಾಜಾ ವೇಣುಗೋಪಾಲ್ ನಾಯಕ್ ಸೂಚಿಸಿದರು. ಪಟ್ಟಣದ ತಹಸೀಲ್ದಾರ್ ಕಚೇರಿ ಸಭಾಂಗಣದಲ್ಲಿ ಬೇಸಿಗೆ ಕುಡಿಯುವ ನೀರಿನ ಕುರಿತು ನಡೆದ ಟಾಸ್ಕ್ ಫೋರ್ಸ್ ಸಭೆಗೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಈಗಾಗಲೇ ಬೇಸಿಗೆ ಆರಂಭಗೊಂಡಿರುವುದರಿಂದ ಮುಂಬರುವ ದಿನಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಕಾಣಿಸಿಕೊಳ್ಳದಂತೆ ಪಟ್ಟಣ ಸೇರಿದಂತೆ ತಾಲೂಕಿನ ಎಲ್ಲಾ ಗ್ರಾಮಗಳಲ್ಲಿ ಈಗಿನಿಂದಲೇ ಪರಿಶೀಲನೆ ನಡೆಸಬೇಕು. ಬೋರ್ವೆಲ್ಗಳ ದುರಸ್ತಿ, ಶುದ್ಧ ಕುಡಿಯುವ ನೀರಿನ ಘಟಕಗಳ ನಿರ್ವಹಣೆ ಹಾಗೂ ತೀವ್ರ ಸಮಸ್ಯೆ ಉಂಟಾಗುವ ಸ್ಥಳಗಳಿಗೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡುವಂತೆ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು. ಮುಂಚಿತವಾಗಿ ಕ್ರಮ ಕೈಗೊಳ್ಳದೇ ನಂತರ ಸಮಸ್ಯೆ ಕಂಡುಬಂದಲ್ಲಿ ಅದಕ್ಕೆ ಸಂಬಂಧಿಸಿದ ಅಧಿಕಾರಿಗಳೇ ನೇರ ಹೊಣೆಗಾರರಾಗುತ್ತಾರೆ ಎಂದು ಎಚ್ಚರಿಕೆ ನೀಡಿದರು. ಬೋರ್ವೆಲ್ ರಿಫ್ರೆಶಿಂಗ್ ಮಾಡಿಸುವುದು, ನೀರು ಸರಬರಾಜು ಮಾಡುವ ಗುಮ್ಮಿಗಳನ್ನು ಸ್ವಚ್ಛಗೊಳಿಸುವುದು ಹಾಗೂ ನೀರಿನ ಟ್ಯಾಂಕರ್ ಅಥವಾ ಬೋರ್ವೆಲ್ ದುರಸ್ತಿ ಅಗತ್ಯವಿದ್ದರೆ ಈಗಲೇ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು. ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಹಣಮಂತ್ರಾಯ ಪಾಟೀಲ ಮಾತನಾಡಿ, ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ ಈಗಾಗಲೇ ಎಲ್ಲ ರೀತಿಯ ಎಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ. ತಾಲೂಕಿನಲ್ಲಿ 29 ಗ್ರಾಮಗಳಲ್ಲಿ ಸಮಸ್ಯೆ ಉಂಟಾಗುವ ಸಾಧ್ಯತೆ ಇದ್ದು, ಅದನ್ನು ತಡೆಯಲು ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು. ಬೇಸಿಗೆ ಸಮಯದಲ್ಲಿ ನದಿಗೆ ನೀರು ಹರಿಸಲು ಕ್ರಮ ಕೈಗೊಳ್ಳುವಂತೆ ಶಾಸಕರಿಗೆ ಮನವಿ ಮಾಡಿದರು. ಸಭೆಯಲ್ಲಿ ತಾಲೂಕು ಆರೋಗ್ಯಾಧಿಕಾರಿ ಡಾ. ರಾಜಾ ವೆಂಕಟಪ್ಪ ನಾಯಕ, ಕ್ಷೇತ್ರ ಶಿಕ್ಷಣಾಧಿಕಾರಿ ಯಲ್ಲಪ್ಪ ಕಾಡ್ಲೂರ, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ರಾಮನಗೌಡ ಪಾಟೀಲ, ನಗರ ಕುಡಿಯುವ ನೀರು ಸರಬರಾಜು ಇಲಾಖೆಯ ಸಹಾಯಕ ಅಭಿಯಂತರ ಶಂಕರಗೌಡ, ನಗರಸಭೆ ಪೌರಾಯುಕ್ತ ಬಸವರಾಜ ಟಣಕೆದಾರ, ಕೆಂಭಾವಿ ಪುರಸಭೆಯ ಮುಖ್ಯ ಅಧಿಕಾರಿ ಪ್ರಕಾಶ ಹಾಗೂ ಕಕ್ಕೇರಾ ಪುರಸಭೆಯ ಜೆಇ ರೇಣುಕಮ್ಮ ಸೇರಿದಂತೆ ಅಧಿಕಾರಿಗಳು ಬೇಸಿಗೆ ನಿರ್ವಹಣೆ ಕುರಿತು ಮಾಹಿತಿ ನೀಡಿದರು. ಸಭೆಯಲ್ಲಿ ಉಪಸ್ಥಿತರಿದ್ದ ತಹಸಿಲ್ದಾರ್ ಹುಸೇನ ಸಾಬ್ ಎ ಸರಕಾವಸ್, ಹುಣಸಗಿ ತಹಸಿಲ್ದಾರ್ ಬಸವರಾಜ, ತಾಲೂಕ ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜ ಸಜ್ಜನ್ ಮಾತನಾಡಿದರು. ವಿವಿಧ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು.
ಸುರಪುರ | ಗರ್ಭಕೋಶ ಕ್ಯಾನ್ಸರ್ ತಡೆಗೆ ಹೆಚ್ಪಿವಿ ಲಸಿಕೆ ಪಡೆಯಿರಿ: ಶಾಸಕ ರಾಜಾ ವೇಣುಗೋಪಾಲ ನಾಯಕ
ಸುರಪುರ: 14 ವರ್ಷ ಮೇಲ್ಪಟ್ಟ ಬಾಲಕಿಯರು ಗರ್ಭಕೋಶದ ಕ್ಯಾನ್ಸರ್ ತಡೆಗಟ್ಟಲು ಸರ್ಕಾರ ನೀಡುತ್ತಿರುವ HPV ಲಸಿಕೆ ಅನ್ನು ಕಡ್ಡಾಯವಾಗಿ ಪಡೆಯಬೇಕು ಎಂದು ಶಾಸಕ ರಾಜಾ ವೇಣುಗೋಪಾಲ ನಾಯಕ ಸಲಹೆ ನೀಡಿದರು. ಪಟ್ಟಣದ ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿಯಲ್ಲಿ ಆಯೋಜಿಸಲಾದ ಲಸಿಕೆ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಇತ್ತೀಚೆಗೆ ಮಹಿಳೆಯರಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರುವ ಗರ್ಭಕೋಶ ಕ್ಯಾನ್ಸರ್ ಅಪಾಯಕಾರಿ ರೋಗವಾಗಿದ್ದು, ಅದನ್ನು ತಡೆಗಟ್ಟುವ ಉದ್ದೇಶದಿಂದ ಸರ್ಕಾರ ಮುಂಜಾಗ್ರತಾ ಕ್ರಮವಾಗಿ ಈ ಲಸಿಕೆಯನ್ನು ನೀಡುತ್ತಿದೆ. ಆದ್ದರಿಂದ 14 ವರ್ಷ ಮೇಲ್ಪಟ್ಟ ಎಲ್ಲಾ ಬಾಲಕಿಯರು ಲಸಿಕೆ ಪಡೆಯಬೇಕು ಎಂದು ಹೇಳಿದರು. ಈ ಸಂದರ್ಭದಲ್ಲಿ ಮಾತನಾಡಿದ ತಾಲೂಕು ಆರೋಗ್ಯ ಅಧಿಕಾರಿ ಡಾ. ರಾಜಾ ವೆಂಕಟಪ್ಪ ನಾಯಕ್, ಗರ್ಭಕೋಶ ಕ್ಯಾನ್ಸರ್ ತಡೆಗಟ್ಟಲು ಸರ್ಕಾರ ನೀಡುತ್ತಿರುವ ಈ ಲಸಿಕೆ ಬಹಳ ಅಮೂಲ್ಯವಾಗಿದೆ. ಇತರ ಲಸಿಕೆಗಳಿಗಿಂತ ಇದು ಹೆಚ್ಚಿನ ದರದ ಲಸಿಕೆಯಾಗಿದ್ದು, 14 ರಿಂದ 15 ವರ್ಷದೊಳಗಿನ ಬಾಲಕಿಯರಿಗೆ ನೀಡಲಾಗುತ್ತಿದೆ ಎಂದು ತಿಳಿಸಿದರು. ತಾಲೂಕು ಸಾರ್ವಜನಿಕ ಆಸ್ಪತ್ರೆ, ಸಮುದಾಯ ಆರೋಗ್ಯ ಕೇಂದ್ರಗಳು ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಈ ಲಸಿಕೆ ನೀಡಲಾಗುತ್ತಿದೆ. ಗ್ರಾಮಗಳ ವ್ಯಾಪ್ತಿಯ ಜನರು ತಮ್ಮ ಸಮೀಪದ ಆರೋಗ್ಯ ಕೇಂದ್ರಗಳಲ್ಲಿ ಲಸಿಕೆ ಪಡೆಯುವಂತೆ ಅವರು ಮನವಿ ಮಾಡಿದರು. ಸುರಪುರ ಮತ್ತು ಹುಣಸಗಿ ತಾಲೂಕುಗಳಲ್ಲಿ ಒಟ್ಟು 4,750 ಬಾಲಕಿಯರಿಗೆ ಲಸಿಕೆ ನೀಡುವ ಗುರಿ ಹೊಂದಲಾಗಿದ್ದು, ಈಗಾಗಲೇ ಸುಮಾರು 300 ಬಾಲಕಿಯರಿಗೆ ಲಸಿಕೆ ನೀಡಲಾಗಿದೆ ಎಂದು ಅವರು ಮಾಹಿತಿ ನೀಡಿದರು. ಕಾರ್ಯಕ್ರಮದ ವೇದಿಕೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಎಲ್ಲಪ್ಪ ಕಾಡ್ಲೂರ, ಮುಖಂಡರಾದ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಪ್ರಕಾಶ ಗುತ್ತೇದಾರ, ಮಲ್ಲಣ್ಣ ಸಾಹುಕಾರ್ ಮುಧೋಳ, ಅಬ್ದುಲ್ ಗಫರ್ ನಗನೂರಿ, ಶಕೀಲ್ ಅಹ್ಮದ್ ಖುರೇಶಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಬಾಲಕಿಯರಿಗೆ ಲಸಿಕೆಯನ್ನು ಕೂಡ ಹಾಕಲಾಯಿತು.
ಹುಣಸಗಿ | ಒಳ ಮೀಸಲಾತಿ ಅನುಷ್ಠಾನಕ್ಕೆ ಒತ್ತಾಯಿಸಿ ಮಾದಿಗ ಸಂಘಟನೆಗಳಿಂದ ರಸ್ತೆ ತಡೆ ಪ್ರತಿಭಟನೆ
ಹುಣಸಗಿ: ಪರಿಶಿಷ್ಟ ಜಾತಿಗಳ ಒಳ ಮೀಸಲಾತಿಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕು ಎಂದು ಒತ್ತಾಯಿಸಿ ಮಾದಿಗ ಸಂಘಟನೆಗಳ ವತಿಯಿಂದ ಪಟ್ಟಣದ ಬಿ. ಆರ್. ಅಂಬೇಡ್ಕರ್ ವೃತ್ತದಲ್ಲಿ ಮುಖ್ಯರಸ್ತೆ ತಡೆದು ಬೃಹತ್ ಪ್ರತಿಭಟನೆ ನಡೆಸಲಾಯಿತು. ಈ ವೇಳೆ ಮಾತನಾಡಿದ ಸಮುದಾಯದ ಮುಖಂಡ ಶಿವಪ್ಪ ಸದಬ, ಹಲವು ರಾಜ್ಯಗಳಲ್ಲಿ ಪರಿಶಿಷ್ಟ ಜಾತಿ ಹಾಗೂ ಪಂಗಡ ಸಮುದಾಯಗಳಿಗೆ ಜನಸಂಖ್ಯೆಗೆ ಅನುಗುಣವಾಗಿ ಸಂವಿಧಾನಬದ್ಧವಾಗಿ ಮೀಸಲಾತಿ ಪ್ರಮಾಣ ಹೆಚ್ಚಿಸಿ ಜಾರಿಗೆ ತರಲಾಗಿದೆ. ಆದರೆ ಕರ್ನಾಟಕದಲ್ಲಿ ದಶಕಗಳಿಂದಲೂ ಜನಸಂಖ್ಯೆಗೆ ಅನುಗುಣವಾಗಿ ನ್ಯಾಯದ ಪಾಲು ನೀಡದೇ ಸರ್ಕಾರ ಮಾದಿಗ ಸಮುದಾಯಕ್ಕೆ ಅನ್ಯಾಯ ಮಾಡುತ್ತಿದೆ ಎಂದು ಆರೋಪಿಸಿದರು. ಪರಿಶಿಷ್ಟ ಜಾತಿಗಳ ಒಳ ಮೀಸಲಾತಿ ಕುರಿತು ಭಾರತದ ಸರ್ವೋಚ್ಚ ನ್ಯಾಯಾಲಯ ನೀಡಿರುವ ನಿರ್ದೇಶನಗಳ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಕಾಯ್ದೆ ರೂಪಿಸಿ ರಾಜ್ಯಪಾಲರಿಂದ ಅಂಕಿತ ಪಡೆದಿರುವುದು ಮಾದಿಗ ಸಮುದಾಯದ 35 ವರ್ಷಗಳ ಹೋರಾಟಕ್ಕೆ ದೊರೆತ ಐತಿಹಾಸಿಕ ಜಯವಾಗಿದೆ ಎಂದು ಹೇಳಿದರು. ಆದರೆ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ 56,432 ಹುದ್ದೆಗಳನ್ನು ಭರ್ತಿ ಮಾಡುವಾಗ ರೋಸ್ಟರ್ ಪ್ರಕಾರ ಒಳ ಮೀಸಲಾತಿ ಅನ್ವಯವಾಗಬೇಕು. ಆಗ ಮಾತ್ರ ಮಾದಿಗ ಸಮುದಾಯಕ್ಕೆ ನ್ಯಾಯ ಸಿಗಲಿದೆ, ಇಲ್ಲವಾದರೆ ಸಮುದಾಯ ಮತ್ತೆ ಸಂಕಷ್ಟಕ್ಕೆ ಸಿಲುಕಲಿದೆ ಎಂದು ಅವರು ಹೇಳಿದರು. ಬಸವರಾಜ ಹಗರಟಗಿ ಮಾತನಾಡಿ, ಸರ್ಕಾರ ಪ್ರಸ್ತುತ ನಡೆಯುತ್ತಿರುವ ನೇಮಕಾತಿಗಳಲ್ಲಿ ಒಳ ಮೀಸಲಾತಿ ನಿಯಮವನ್ನು ಕಟ್ಟುನಿಟ್ಟಾಗಿ ಜಾರಿಗೆ ತರಬೇಕು. ಸರ್ಕಾರ ಇದನ್ನು ನಿರ್ಲಕ್ಷಿಸಿದರೆ ಮಾದಿಗರ ತಾಳ್ಮೆಯ ಕಟ್ಟೆ ಒಡೆದು ಹೋಗಿದ್ದು, ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು. ನಾಗರಾಜ ದೊಡ್ಡಮನಿ ಕೊಡೇಕಲ್ಲ ಮಾತನಾಡಿ, ಪರಿಶಿಷ್ಟ ಜಾತಿಗೆ ಮೀಸಲಾಗಿರುವ ಎಲ್ಲ ಕ್ಷೇತ್ರಗಳಲ್ಲಿ ಒಳ ಮೀಸಲಾತಿ ಅನುಷ್ಠಾನಗೊಳಿಸಬೇಕು. ಶಿಕ್ಷಣ ಸಂಸ್ಥೆಗಳಲ್ಲಿ ಪರಿಶಿಷ್ಟ ಜಾತಿಯ ಮಕ್ಕಳಿಗೆ ವರ್ಗೀಕರಣದ ಅನುಪಾತದಲ್ಲಿ ಸೌಲಭ್ಯ ನೀಡಬೇಕು. ಸಂವಿಧಾನದ Article 16(4) of the Constitution of India ಪ್ರಕಾರ ಉದ್ಯೋಗ ಮೀಸಲಾತಿಯಲ್ಲಿ ನೇರ ನೇಮಕಾತಿ, ಬಡ್ತಿ ಹಾಗೂ ಬ್ಯಾಕ್ಲಾಗ್ ನೇಮಕಾತಿ ಸೇರಿದಂತೆ ಎಲ್ಲಾ ಹುದ್ದೆಗಳಿಗೂ ಒಳ ಮೀಸಲಾತಿ ಅನ್ವಯವಾಗಬೇಕು ಎಂದು ಆಗ್ರಹಿಸಿದರು. ಸರ್ಕಾರ ತಕ್ಷಣ ಸ್ಪಂದಿಸದಿದ್ದರೆ ಸಾಮಾಜಿಕ ನ್ಯಾಯಕ್ಕಾಗಿ ರಾಜ್ಯದಾದ್ಯಂತ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು. ಪ್ರತಿಭಟನೆ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಉದ್ದೇಶಿಸಿ ಬರೆದ ಮನವಿಪತ್ರವನ್ನು ಗ್ರೇಡ್–2 ತಹಶೀಲ್ದಾರರಿಗೆ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ತಿಪ್ಪಣ್ಣ ಕಡಿಮನಿ, ಸಂಗಣ್ಣ ಅಗ್ನಿ, ನೋಟಪ್ಪ ಗ್ಯಾಂಗಮ್ಯಾನ, ಅಮಲಪ್ಪ ಹಳ್ಳಿ, ದೇವಪ್ಪ ಮಂಜಲಾಪೂರ, ಸಿದ್ದಣ್ಣ ಮೇಲಿನಮನಿ, ಬಸವರಾಜ ದೊಡ್ಡಮನಿ, ಪರಮಣ್ಣ ಕಟ್ಟಿಮನಿ, ಮಹಾಂತೇಶ ದೊಡ್ಡಮನಿ, ಪ್ರಭು ಕಚಕನೂರ, ಹಣಮಂತ ಕಚನೂರ, ಭೀಮಶಂಕರ ಯಡಹಳ್ಳಿ, ನಾಗಪ್ಪ ಯಡಹಳ್ಳಿ, ಪರಮಣ್ಣ ಕನ್ನೆಳ್ಳಿ, ತಾಯಪ್ಪ ಕನ್ನಳ್ಳಿ, ತಿಮ್ಮಣ್ಣ ವಜ್ಜಲ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಯಾದಗಿರಿ | ಡಿಡಿಯು ಸಿಬಿಎಸ್ಇ ಶಾಲೆಯಲ್ಲಿ ದಶಮ ತರಗತಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ
ಯಾದಗಿರಿ: ನಗರದ ಡಿಡಿಯು ಸಮೂಹ ಸಂಸ್ಥೆಗಳ ಅಂಗ ಸಂಸ್ಥೆಯಾದ DDU CBSE ಶಾಲೆಯಲ್ಲಿ ದಶಮ ತರಗತಿ ವಿದ್ಯಾರ್ಥಿಗಳಿಗೆ ಭಾವಪೂರ್ಣ ಬೀಳ್ಕೊಡುಗೆ ಸಮಾರಂಭವನ್ನು ವಿಜೃಂಭಣೆಯಿಂದ ಆಯೋಜಿಸಲಾಯಿತು. ಕಾರ್ಯಕ್ರಮವು ಆಡಳಿತಾಧಿಕಾರಿ ಮಲ್ಲಿಕಾರ್ಜುನ ಮೆಟಿ ಅವರ ಉಪಸ್ಥಿತಿಯಲ್ಲಿ ನಡೆಯಿತು. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಯಾದಗಿರಿಯ ಅರ್ಬನ್ ಸೆಂಟರ್ನ ಡಾ. ವಿನಿತಾ ಮಾತನಾಡಿ, ವಿದ್ಯಾರ್ಥಿಗಳು ಪರಿಶ್ರಮ, ಶಿಸ್ತು ಹಾಗೂ ಆತ್ಮವಿಶ್ವಾಸದೊಂದಿಗೆ ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಈ ಸಂದರ್ಭದಲ್ಲಿ ಸಂಸ್ಥೆಯ ಪ್ರಮುಖ ಸದಸ್ಯರಿಗೆ ಸನ್ಮಾನ ಸಲ್ಲಿಸಲಾಯಿತು. DDU ICSE ಶಾಲೆಯ ಪ್ರಾಂಶುಪಾಲರಾದ ರಾಜೇಶ್ ಕುಮಾರ್, ಡಿಡಿಯು ಸಿಬಿಎಸ್ಇ ಶಾಲೆಯ ಪ್ರಾಂಶುಪಾಲರಾದ ಬಾಬಿನ್ ರಾಜ್ ಹಾಗೂ ವಸತಿ ನಿಲಯ ವಾರ್ಡನ್ ನಿಂಗಣ್ಣ ಹೊಸಮನಿ ಅವರನ್ನು ಗೌರವಿಸಲಾಯಿತು. ಸಂಸ್ಥೆಯ ವ್ಯವಸ್ಥಾಪಕರಾದ ರಾಜಶೇಖರ್, ರವಿ ಪವಾರ್ ಮತ್ತು ಮಹಮ್ಮದ್ ಸೌದಾಗರ್ ಸೇರಿದಂತೆ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಈ ವರ್ಷ ಡಿಡಿಯು ಸಿಬಿಎಸ್ಇ ಮತ್ತು ಐಸಿಎಸ್ಇ ಶಾಲೆಗಳಿಂದ ಒಟ್ಟು 113 ವಿದ್ಯಾರ್ಥಿಗಳು ಬೋರ್ಡ್ ಪರೀಕ್ಷೆಗೆ ಹಾಜರಾಗಲಿದ್ದಾರೆ. ಈ ವೇಳೆ ವಿದ್ಯಾರ್ಥಿಗಳು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡು, ಶಿಕ್ಷಕರು ಸ್ನೇಹಪೂರ್ಣವಾಗಿ ಮಾರ್ಗದರ್ಶನ ನೀಡಿ ತಮ್ಮ ಭವಿಷ್ಯ ನಿರ್ಮಾಣಕ್ಕೆ ಶ್ರಮಪಟ್ಟಿದ್ದಾರೆ ಎಂದು ಕೃತಜ್ಞತೆ ವ್ಯಕ್ತಪಡಿಸಿದರು. ಮುಂದಿನ ದಿನಗಳಲ್ಲಿ ಯಶಸ್ಸು ಸಾಧಿಸಿ ಮತ್ತೆ ಶಾಲೆಗೆ ಬಂದು ತಮ್ಮ ಯಶೋಗಾಥೆಗಳನ್ನು ಹಂಚಿಕೊಳ್ಳುವುದಾಗಿ ಭರವಸೆ ನೀಡಿದರು. ಇದೇ ವೇಳೆ ಆಡಳಿತ ಮಂಡಳಿ ಹಾಗೂ ಶಿಕ್ಷಕರು ವಿದ್ಯಾರ್ಥಿಗಳಿಗೆ ಬೋರ್ಡ್ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಲು ಶುಭ ಹಾರೈಸಿದರು.
ನೇಪಾಳ ಚುಣಾವಣೆ ಫಲಿತಾಂಶ ಅಂತಿಮ, ಬಲೇಂದ್ರ ಶಾ ಪಕ್ಷಕ್ಕೆ ಒಟ್ಟು 119 ಸ್ಥಾನ | Nepal Election 2026
ಭಾರತದ ನೆರೆಯ ದೇಶದಲ್ಲಿ ಇದೀಗ ಶಾಂತಿ ನೆಲೆಸಿದ್ದು, ಕಣಿವೆ ದೇಶ ನೇಪಾಳದಲ್ಲಿ ಹೊಸ ಸರ್ಕಾರ ಅಸ್ತಿತ್ವಕ್ಕೆ ಬರಲಿದೆ. 2025ರ ಕೊನೆಯಲ್ಲಿ ಘೋರವಾದ ಆಂತರಿಕ ಹಿಂಸಾಚಾರಕ್ಕೆ ನಲುಗಿ ಹೋಗಿದ್ದ ನೇಪಾಳ ದೇಶದಲ್ಲಿ ಕೆಲವು ದಿನಗಳ ಹಿಂದಷ್ಟೇ ಚುನಾವಣೆ ನಡೆಸಲಾಗಿತ್ತು. ಇದೀಗ ಚುನಾವಣೆಯ ಫಲಿತಾಂಶ ಹೊರಬಿದ್ದಿದ್ದು, ಭ್ರಷ್ಟ ರಾಜಕೀಯ ನಾಯಕರಿಗೆ ನೆಪಾಳದ ಹೊಸ ತಲೆಮಾರಿನ ಯುವ ಮತದಾರರು ಸರಿಯಾಗಿಯೇ ಪಾಠ
ರಾಯಚೂರು | ವಿಜ್ಞಾನ ಸಮಾಜದ ಅಭಿವೃದ್ಧಿಗೆ ದಾರಿ ತೋರಿಸುವ ಶಕ್ತಿ: ಡಾ.ವಿಜಯಕುಮಾರ ಪಲ್ಲೇದ್
ರಾಯಚೂರು: ವಿಜ್ಞಾನವು ಕೇವಲ ಪಠ್ಯಪುಸ್ತಕಗಳಲ್ಲಿ ಇರುವ ವಿಷಯವಲ್ಲ; ಅದು ಸಮಾಜದ ಅಭಿವೃದ್ಧಿಗೆ ದಾರಿ ತೋರಿಸುವ ಶಕ್ತಿಯಾಗಿದೆ. ಪ್ರಶ್ನಿಸುವ ಮನಸ್ಸು ಮತ್ತು ಹೊಸದನ್ನು ತಿಳಿಯುವ ಕುತೂಹಲವೇ ವಿಜ್ಞಾನದ ಮೂಲ ಎಂದು ಡಾ.ವಿಜಯಕುಮಾರ ಪಲ್ಲೇದ್ ಹೇಳಿದರು. ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಐಕ್ಯುಎಸಿ ಸಹಯೋಗದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ವಿಜ್ಞಾನ ದಿನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ವಿದ್ಯಾರ್ಥಿಗಳು ಸಂಶೋಧನಾ ಮನೋಭಾವ ಬೆಳೆಸಿಕೊಳ್ಳಬೇಕು. ವೈಫಲ್ಯಗಳಿಗೆ ಹೆದರದೆ ಹೊಸ ಪ್ರಯೋಗಗಳನ್ನು ಕೈಗೊಳ್ಳಬೇಕು. ವಿಜ್ಞಾನವನ್ನು ಸಮಾಜದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಸಾಧನವಾಗಿಸಬೇಕು ಎಂದು ಅವರು ಕರೆ ನೀಡಿದರು. ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ ಅವರು, “ನಿಮ್ಮ ಕನಸು ದೊಡ್ಡದಾಗಿರಲಿ, ಪರಿಶ್ರಮ ನಿರಂತರವಾಗಿರಲಿ; ಇಂದಿನ ವಿದ್ಯಾರ್ಥಿಗಳೇ ನಾಳೆಯ ವಿಜ್ಞಾನಿಗಳು ಹಾಗೂ ದೇಶದ ನಿರ್ಮಾತೃಗಳು” ಎಂದು ಪ್ರೇರಣೆ ನೀಡಿದರು. ಪ್ರಾಚಾರ್ಯ ಡಾ. ಪ್ರಾಣೇಶ್ ಕುಲಕರ್ಣಿ ಮಾತನಾಡಿ, ವಿಜ್ಞಾನ ಶಿಕ್ಷಣವು ರಾಷ್ಟ್ರದ ಅಭಿವೃದ್ಧಿಗೆ ಮೂಲಸ್ತಂಭವಾಗಿದ್ದು, ವಿದ್ಯಾರ್ಥಿಗಳು ವೈಜ್ಞಾನಿಕ ಚಿಂತನೆ ಮತ್ತು ಸಂಶೋಧನಾ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಹೇಳಿದರು. ಈ ವರ್ಷದ ವಿಷಯ “ವಿಜ್ಞಾನದಲ್ಲಿ ಮಹಿಳೆಯರು: ವಿಕಸಿತ ಭಾರತಕ್ಕೆ ಚಾಲನೆ” ಆಗಿದ್ದು, ವಿಜ್ಞಾನ ಕ್ಷೇತ್ರದಲ್ಲಿ ಮಹಿಳೆಯರ ಸಾಧನೆ, ಸಂಶೋಧನಾ ಮನೋಭಾವ ಹಾಗೂ ರಾಷ್ಟ್ರ ನಿರ್ಮಾಣದಲ್ಲಿ ಅವರ ಪಾತ್ರವನ್ನು ವಿದ್ಯಾರ್ಥಿಗಳಿಗೆ ಪರಿಚಯಿಸುವ ಉದ್ದೇಶದಿಂದ ಕಾರ್ಯಕ್ರಮ ಆಯೋಜಿಸಲಾಗಿತ್ತು. ರಸಾಯನಶಾಸ್ತ್ರ ವಿಭಾಗದ ವಿದ್ಯಾರ್ಥಿಗಳು ಆಮ್ಲ–ಕ್ಷಾರ ಟೈಟ್ರೇಶನ್, ಕೆಮಿಕಲ್ ಕ್ಯಾಮಿಲಿಯನ್ ಮತ್ತು ಫೇಕ್ ಬ್ಲಡ್ ಪ್ರಯೋಗಗಳನ್ನು ಪ್ರದರ್ಶಿಸಿದರು. ಚರ್ಚಾ ಸ್ಪರ್ಧೆಯಲ್ಲಿ “ಶಿಕ್ಷಣದಲ್ಲಿ ಕೃತಕ ಬುದ್ಧಿಮತ್ತೆ: ಅಧ್ಯಯನಕ್ಕೆ ಉತ್ತೇಜನವೇ ಅಥವಾ ಅವಲಂಬನೆಯೇ?” ಎಂಬ ವಿಷಯದ ಮೇಲೆ ವಿದ್ಯಾರ್ಥಿಗಳು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ವಿದ್ಯಾರ್ಥಿಗಳಾದ ಅಲ್ಫಿಯಾ ಮತ್ತು ಪ್ರಸನ್ನ ಪ್ರಥಮ ಬಹುಮಾನ ಪಡೆದರು. ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಡಾ. ಗಂಗಾ ಶಿರಿ ಸ್ವಾಗತಿಸಿದರು. ಡಾ. ಚಂದ್ರಶೇಖರ್ ಸಜ್ಜನ್ ಪ್ರತಿಜ್ಞಾವಿಧಿ ಬೋಧಿಸಿದರು. ಡಾ. ಸೋಮನಾಥ ರೆಡ್ಡಿ ಸಿ. ಪಾಟೀಲ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಐಕ್ಯುಎಸಿ ಸಂಯೋಜಕ ಡಾ. ಮಹಾಂತೇಶ್ ಅಂಗಡಿ, ಡಾ. ಶಿಲ್ಪಕಲಾ, ನಿಹಾಲ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಜಮಾಅತೆ ಇಸ್ಲಾಮೀ ಹಿಂದ್ ನವಲಗುಂದ ವತಿಯಿಂದ ʼಸೌಹಾರ್ದ ಇಫ್ತಾರ್ ಕೂಟʼ ಆಯೋಜನೆ
ಧಾರವಾಡ : ʼಇಂದು ಜಾತಿ-ಧರ್ಮ ಹಾಗೂ ಭಾಷೆಯ ಆಧಾರದಲ್ಲಿ ಜನರನ್ನು ವಿಂಗಡಿಸುತ್ತಿರುವುದು ನಿಜಕ್ಕೂ ಅಪಾಯಕಾರಿ ಬೆಳವಣಿಗೆಯಾಗಿದ್ದು, ಧರ್ಮವನ್ನು ನಂಬುವವರು ಸಮಾನತೆಯ ಪ್ರತಿಪಾದಕರಾಗಬೇಕು ಎಂದು ಜಮಾಅತೆ ಇಸ್ಲಾಮೀ ಹಿಂದ್ ಕರ್ನಾಟಕದ ರಾಜ್ಯ ಸಹ ಕಾರ್ಯದರ್ಶಿ ರಿಯಾಝ್ ಅಹ್ಮದ್ ರೋಣ ಹೇಳಿದರು. ಅವರು ನಗರದ ಅಂಬೇಡ್ಕರ್ ಭವನದಲ್ಲಿ ಜಮಾಅತೆ ಇಸ್ಲಾಮೀ ಹಿಂದ್ ನವಲಗುಂದ ವತಿಯಿಂದ ಆಯೋಜಿಸಿದ್ದ ಸೌಹಾರ್ದ ಇಫ್ತಾರ್ ಕೂಟದಲ್ಲಿ ಭಾಗವಹಿಸಿ ಮಾತನಾಡಿದರು. ಸಾಮಾಜಿಕ ಕಾರ್ಯಕರ್ತ ಈರಣ್ಣ ಶಿಡಗಂಟಿ ಮಾತನಾಡಿ, ದೇಶದ ದೊಡ್ಡ ಪಿಡುಗು ಅಸ್ಪೃಶ್ಯತೆ ಆಚರಣೆಯಾಗಿದೆ, ಇಂದು ಮಸೀದಿ ಅಥವಾ ದರ್ಗಾಗಳಿಗೆ ಭೇಟಿ ನೀಡುವಾಗ ದಲಿತರಿಗೆ ಯಾವ ಅಡೆತಡೆಗಳು ಇರುವುದಿಲ್ಲ. ಆದರೆ ಕೆಲವು ಕಡೆಗಳಲ್ಲಿ ಇವರ ಪ್ರವೇಶವು ನಿಷೇಧವಾಗಿರುವುದು, ನಿಜಕ್ಕೂ ಆತಂಕದ ಸಂಗತಿಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು. ಜ.ಇ.ಹಿಂದ್ ಸ್ಥಾನಿಯ ಅಧ್ಯಕ್ಷ ಮುಖ್ತಾರ್ ಅಹ್ಮದ್ ಎಂ.ಕೆ. ಸ್ವಾಗತ ಹಾಗೂ ಪ್ರಾಸ್ತಾವಿಕ ಭಾಷಣ ಮಾಡಿದರು. ಸಮಾರಂಭವು ಕುರ್ಆನ್ ಪಠಣದೊಂದಿಗೆ ಪ್ರಾರಂಭಗೊಂಡಿತು. ಜಾಫರ್ ಸಾದಿಕ್ ಕಾರ್ಯಕ್ರಮವನ್ನು ನಿರೂಪಿಸಿ ಕೊನೆಯಲ್ಲಿ ಧನ್ಯವಾದ ಅರ್ಪಿಸಿದರು.
ಸಿಂಧನೂರು | ದೇಶದ ಏಕತೆ ಕಾಪಾಡಲು ಎಲ್ಲ ಧರ್ಮೀಯರು ಒಗ್ಗಟ್ಟಾಗಬೇಕು: ಸಲೀಂ ಅಹ್ಮದ್
ಸೌಹಾರ್ದ ಇಫ್ತಾರ್ ಕೂಟ
ಬೆಂಗಳೂರು ನಗರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ನಿವೇಶನ ಮಂಜೂರಿಗೆ ಪ್ರಯತ್ನ : ಕೆ.ವಿ.ಪ್ರಭಾಕರ್ ಭರವಸೆ
ಬೆಂಗಳೂರು, ಮಾ. 8: ಬೆಂಗಳೂರು ನಗರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ(ಕೆಯುಡಬ್ಲ್ಯುಜೆ) ಕಚೇರಿಗೆ ಸ್ವಂತ ನಿವೇಶನ ನೀಡುವ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಜಿಬಿಎ ಆಯುಕ್ತರೊಂದಿಗೆ ಮಾತುಕತೆ ನಡೆಸಿ, ಶೀಘ್ರವೇ ನಿವೇಶನ ಮಂಜೂರು ಮಾಡಲು ಪ್ರಾಮಾಣಿಕ ಪ್ರಯತ್ನ ನಡೆಸಲಾಗುವುದು ಎಂದು ಸಿಎಂ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ಭರವಸೆ ನೀಡಿದ್ದಾರೆ. ರವಿವಾರ ನಗರದ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಕಚೇರಿಯಲ್ಲಿ ನಡೆದ ಬೆಂಗಳೂರು ನಗರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಪದಾಧಿಕಾರಿಗಳಿಗೆ ಪ್ರಮಾಣಪತ್ರ ವಿತರಣೆ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಇತ್ತೀಚಿನ ದಿನಗಳಲ್ಲಿ ಎಐ(ಕೃತಕ ಬುದ್ಧಿಮತ್ತೆ) ತಂತ್ರಜ್ಞಾನ ಬಂದ ಮೇಲೆ ಸುದ್ದಿಯ ಸತ್ಯಾಸತ್ಯತೆ ಸವಾಲಾಗಿದೆ. ಊಹೆಗಳ ಮೇಲೆ ಸುದ್ದಿ ಬರೆಯುವ ಪ್ರವೃತ್ತಿ ಬಿಟ್ಟು, ನಿಖರವಾದ ಮಾಹಿತಿ ಗ್ರಹಿಸಿ ವರದಿ ಮಾಡಬೇಕು. ಪತ್ರಕರ್ತರು ಸಮಾಜ ಮತ್ತು ಸರಕಾರದ ನಡುವೆ ಸೇತುವೆಯಾಗಿ ಕೆಲಸ ಮಾಡಬೇಕು ಎಂದು ಪ್ರಭಾಕರ್ ಹೇಳಿದರು. ಕೆಯುಡಬ್ಲ್ಯುಜೆ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಮಾತನಾಡಿ, ವಾರ್ತಾ ಇಲಾಖೆಯ ಮಾನ್ಯತೆ ಇಲ್ಲದ ಪತ್ರಕರ್ತರಿಗೂ ಮಾಧ್ಯಮ ಸಂಜೀವಿನಿ ಯೋಜನೆ ವಿಸ್ತರಿಸಬೇಕು. ವಸತಿ ಇಲಾಖೆಯ ಯೋಜನೆಗಳಲ್ಲಿ ಪತ್ರಕರ್ತರಿಗೆ ಶೇ.5ರಷ್ಟು ಮೀಸಲಾತಿ ನೀಡಬೇಕು ಎಂದು ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ವಸತಿ ಸಚಿವ ಝಮೀರ್ ಅಹ್ಮದ್ ಅವರ ಮಾಧ್ಯಮ ಸಲಹೆಗಾರ ಲಕ್ಷ್ಮೀನಾರಾಯಣ, ಪತ್ರಕರ್ತರಿಗೆ ನಿವೇಶನ ಅಥವಾ ಮನೆ ನೀಡುವ ಬಗ್ಗೆ ಶೀಘ್ರವೇ ಸಿಹಿ ಸುದ್ದಿ ನೀಡುವುದಾಗಿ ತಿಳಿಸಿದರು. ಇದೇ ಸಂದರ್ಭದಲ್ಲಿ ನೂತನ ಪದಾಧಿಕಾರಿಗಳು ಪ್ರತಿಜ್ಞಾ ವಿಧಿ ಸ್ವೀಕರಿಸಿ ಪದಗ್ರಹಣ ಮಾಡಿದರು. ಇದಾದ ಬಳಿಕ ಸಂಘದ ನೂತನ ಜಿಲ್ಲಾಧ್ಯಕ್ಷ ಸೋಮಶೇಖರ್ ಗಾಂಧಿ ನೇತೃತ್ವದಲ್ಲಿ ಮೊದಲ ಸಭೆ ನಡೆಯಿತು.
ಟಿ20 ವಿಶ್ವಕಪ್ 2026 ಭಾರತದ ಮುಡಿಗೆ: ಬಾಲ ಮುದುರಿಕೊಂಡ 'ಸೈಲೆಂಟ್' ಸ್ಯಾಂಟ್ನರ್
T20 World Cup 2026: ಅಹಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ 2026ರ ಟಿ20 ವಿಶ್ವಕಪ್ನ ರೋಚಕ ಫೈನಲ್ ಪಂದ್ಯದಲ್ಲಿ ಭಾರತ ತಂಡವು ನ್ಯೂಜಿಲೆಂಡ್ ವಿರುದ್ಧ ಭರ್ಜರಿ ಗೆಲುವು ಸಾಧಿಸುವ ಮೂಲಕ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಬ್ಯಾಟಿಂಗ್ ಮತ್ತು ಬೌಲಿಂಗ್ನಲ್ಲಿ ಅದ್ಭುತ ಪ್ರದರ್ಶನ ನೀಡಿದ ಟೀಂ ಇಂಡಿಯಾ, ಕಿವೀಸ್ ಪಡೆಯ ಕನಸನ್ನು ನುಚ್ಚುನೂರು ಮಾಡಿ ಸತತ ಎರಡನೇ
ಬಿತ್ತು.. ಬಿತ್ತು.. ಕ್ಷಿಪಣಿಗಳ ರಾಶಿ ಅರಬ್ ದೇಶಗಳ ಮೇಲೆ ಮತ್ತೆ ಬಿತ್ತು | Operation Roaring Lion
ಇರಾನ್ ಮಿಲಿಟರಿ ಮೈಮೇಲೆ ಈಗ ದೆವ್ವ ಬಂದಂತೆ ಆಗಿದ್ದು, ಇರಾನ್ ದೇಶದ ಸರ್ವಾಧಿಕಾರಿ ಖಮೇನಿ ಹತ್ಯೆ ನಂತರ ದೊಡ್ಡ ಸಂಚಲನ ಸೃಷ್ಟಿಯಾಗಿದೆ. ಖಮೇನಿ ಮೇಲೆ ಇಸ್ರೇಲ್ ಹಾಗೂ ಅಮೆರಿಕ ಸೇನೆ ಒಟ್ಟಾಗಿ ಪ್ಲಾನ್ ಮಾಡಿ ದಾಳಿ ಮಾಡಿ ಕಥೆ ಮುಗಿಸಿದ್ದವು. ಆ ನಂತರ ರೊಚ್ಚಿಗೆದ್ದ ಇರಾನ್ ಮಿಲಿಟರಿ ಇದೀಗ ಎಲ್ಲಾ ರೀತಿ ಅಸ್ತ್ರಗಳನ್ನು ಬಳಕೆ ಮಾಡಿ ದಾಳಿ
ವಿವಿ, ಕಾಲೇಜುಗಳಲ್ಲಿ ಚುನಾವಣೆ ಘೋಷಣೆ: ಸಿಎಂಗೆ ಅಭಿನಂದಿಸಿದ ಸವಾದ್ ಸುಳ್ಯ
ಮಂಗಳೂರು: ಕರ್ನಾಟಕದಲ್ಲಿ ವಿಶ್ವವಿದ್ಯಾನಿಲಯ ಹಾಗೂ ಕಾಲೇಜುಗಳಲ್ಲಿ ವಿದ್ಯಾರ್ಥಿ ಸಂಘದ ಚುನಾವಣೆ ಮರುಪ್ರಾರಂಭಿಸಲು ಘೋಷಿಸಿದ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಮಂಗಳೂರು ವಿಶ್ವವಿದ್ಯಾನಿಲಯ ಸಿಂಡಿಕೇಟ್ ಸದಸ್ಯರಾದ ಸವಾದ್ ಸುಳ್ಯ ಅವರು ಶನಿವಾರ ಮಂಗಳೂರಿಗೆ ಆಗಮಿಸಿದ್ದ ವೇಳೆ ಅಭಿನಂದಿಸಿದರು. ಈ ಸಂದರ್ಭದಲ್ಲಿ ಮಾಜಿ ಸಚಿವರಾದ ಬಿ. ರಮಾನಾಥ ರೈ, ಕರ್ನಾಟಕ ರಾಜ್ಯ ಅಲೈಡ್ ಹೆಲ್ತ್ ಸೈನ್ಸಸ್ ಅಧ್ಯಕ್ಷರಾದ ಯು.ಟಿ. ಇಫ್ತಿಕಾರ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪದ್ಮರಾಜ್ ಆರ್. ಪೂಜಾರಿ, ಮನಪಾ ಮಾಜಿ ಮೇಯರ್ ಶಶಿಧರ್ ಹೆಗ್ಡೆ ಮೊದಲಾದವರು ಉಪಸ್ಥಿತರಿದ್ದರು.
ಮಂಗಳೂರು - ಜಿದ್ದಾ, ದುಬೈ, ವಿಮಾನಗಳ ಯಾನ ರದ್ದು
ಮಂಗಳೂರು, ಮಾ.8: ಮಂಗಳೂರು - ಜಿದ್ದಾ, ಮಂಗಳೂರು- ದುಬೈ ಏರ್ ಇಂಡಿಯಾ ಎಕ್ಸ್ಪ್ರೆಸ್ ವಿಮಾನಗಳ ಮಾ.9ರ ಯಾನ ರದ್ದಾಗಿದೆ. ಮಾ.9ರಂದು ಬೆಳಗ್ಗೆ 5:20 (ಐಎಸ್ಟಿ) ಕ್ಕೆ ಮುಂಗಳೂರು -ಜಿದ್ದಾ ( ಐಎಕ್ಸ್ 845), ಮತ್ತು 18:20 (ಎಸ್ಟಿಎ) ಜಿದ್ದಾ-ಮಂಗಳೂರು (ಐಎಕ್ಸ್ 846) , 13:20 ಮಂಗಳೂರು -ದುಬೈ (ಐಎಕ್ಸ್ 831) ಮತ್ತು 22: 10 (ಎಸ್ಟಿಎ) ದುಬೈ -ಮಂಗಳೂರು(ಐಎಕ್ಸ್ 832). 20:15ರ ಮಂಗಳೂರು -ದುಬೈ ( ಐಎಕ್ಸ್ 813) ಮತ್ತು ಮಾ.10ರಂದು 4:55 (ಎಸ್ಟಿಎ) ದುಬೈ -ಮಂಗಳೂರು (ಐಎಕ್ಸ್ 814) , ಮಾ.9ರಂದು 23:10 (ಐಎಸ್ಟಿ) ಮಂಗಳೂರು -ದಮಾಮ್ (ಐಎಕ್ಸ್ 847) ಮತ್ತು ಮಾ.10 ಬೆಳಗ್ಗೆ 9:25 (ಐಎಸ್ಟಿ) ದಮಾಮ್ - ಮಂಗಳೂರು, ಮಾ.9ರಂದು ರಾತ್ರಿ 23:20 ಮಂಗಳೂರು - ದುಬೈ (ಎಯುಎಚ್ ನಂ. ಐಎಕ್ಸ್ 815) ಮತ್ತು ಮಾ.10ರ 8:15 (ಎಸ್ಟಿಎ) ದುಬೈ (ಎಯುಎಚ್ ) -ಮಂಗಳೂರು (ನಂ. ಐಎಕ್ಸ್ 816) ವಿಮಾನಗಳು ರದ್ದಾಗಿವೆ. ಇಂಡಿಗೊ ವಿಮಾನ : ಮಾ.9 ರಂದು 5:20 ದುಬೈ ಮಂಗಳೂರು (ನಂ. 6ಇ 1437), 21:15 (ಐಎಸ್ಡಿ) ಮಂಗಳೂರು - ದುಬೈ (6ಇ 1438) ರದ್ದಾಗಿದೆ ಮತ್ತು 19:35 (ಐಎಸ್ಡಿ) ಬೆಂಗಳೂರು -ಮಂಗಳೂರು (6ಇ 578) ಹೊರಡುವುದಿಲ್ಲ ಎಂದು ಪ್ರಕಟನೆ ತಿಳಿಸಿದೆ.
ಸಂಜು ಶೋ… ಭಾರತಕ್ಕೆ ಮೂರನೇ ಟಿ20 ವಿಶ್ವಕಪ್
ಕಿವೀಸ್ ಸೋಲಿಸಿದ ಭಾರತಕ್ಕೆ ಪ್ರಶಸ್ತಿಯ ಮುಕುಟ
ಮುಂದಿನ ವಿಧಾನಸಭೆ, ಲೋಕಸಭೆಗೆ ಮಹಿಳಾ ಮೀಸಲಾತಿ ಜಾರಿ : ಎಚ್.ಡಿ.ದೇವೇಗೌಡ
ಬೆಂಗಳೂರು : ಮುಂದಿನ ವಿಧಾನಸಭೆ, ಲೋಕಸಭೆಗೆ ಬಹುಶಃ ಮಹಿಳಾ ಮೀಸಲಾತಿ ಜಾರಿಯಾಗಬಹುದು. ಅದರಂತೆ ರಾಜ್ಯದಲ್ಲಿ 75 ರಿಂದ 80 ಮಹಿಳೆಯರು ವಿಧಾನಸಭೆ ಸ್ಪರ್ಧಿಗಳಾಗುತ್ತಾರೆ ಎಂದು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹೇಳಿದ್ದಾರೆ. ರವಿವಾರ ನಗರದ ಡಾ.ಬಾಬು ಜಗಜೀವನ ರಾಮ್ ಭವನದಲ್ಲಿ ಜೆಡಿಎಸ್ ಮಹಿಳಾ ಘಟಕ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಜಿಬಿಎ ಚುನಾವಣೆ ಸಂಬಂಧ ಮೀಸಲಾತಿ ಪಟ್ಟಿ ಅಂತಿಮವಾಗಿ ಪ್ರಕಟವಾಗಿದೆ. ಮುಂಬರುವ ಈ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದಿಂದ ಹೆಚ್ಚು ಮಹಿಳೆಯರು ಸ್ಪರ್ಧೆ ಮಾಡಬೇಕು ಎಂದು ಕರೆ ನೀಡಿದರು. ಜಿಬಿಎನಲ್ಲಿ 369 ವಾರ್ಡುಗಳಲ್ಲಿ ಜೆಡಿಎಸ್ಗೆ ಎಷ್ಟು ವಾರ್ಡ್ಗಳಲ್ಲಿ ಸ್ಪರ್ಧಿಸುವ ಶಕ್ತಿ ಇದೆ ಎಂಬುದನ್ನು ಗಮನಿಸಿ. ಬಳಿಕ ಮಹಿಯರಿಗೆ ಎಷ್ಟು ಜನರಿಗೆ ಅವಕಾಶ ನೀಡಬಹುದು ಎಂದು ತೀರ್ಮಾನ ಮಾಡಿ. ಅದಷ್ಟು ಹೆಚ್ಚು ಪ್ರಮಾಣದಲ್ಲಿ ಮಹಿಳೆಯರು ಸ್ಪರ್ಧೆ ಮಾಡಬೇಕು. ಆಗ ಮಾತ್ರ ಮಹಿಳಾ ಮೀಸಲುಗೆ ಅರ್ಥ ಬರುತ್ತದೆ ಎಂದು ಅವರು ಉಲ್ಲೇಖಿಸಿದರು. ಸರಕಾರದ ಎಲ್ಲ ಇಲಾಖೆಗಳಲ್ಲಿ ಶೇ.33ರಷ್ಟು ಮಹಿಳಾ ಮೀಸಲಾತಿ ಕೊಟ್ಟಿದ್ದು ನಾವು. ಶೇ.33ರಷ್ಟು ಮಹಿಳಾ ಮೀಸಲಾತಿ ಕೊಡಲು ತೀರ್ಮಾನ ಮಾಡಿದ್ದು ನಾವು. ಇವತ್ತು ಅದೆಲ್ಲವೂ ಜಾರಿಗೆ ಬರುತ್ತಿದೆ. ಈ ಬಗ್ಗೆ ನನಗೆ ಆತ್ಮತೃಪ್ತಿ ಇದೆ. ನಮ್ಮ ಮುಖಂಡರು, ಕಾರ್ಯಕರ್ತರು ಜನರಿಗೆ ಈ ವಿಷಯ ಹೇಳಬೇಕು ಎಂದು ಅವರು ಹೇಳಿದರು.
ಮಹಿಳಾ ದಿನಾಚರಣೆ ದಿನವೇ ಕೇಂದ್ರದಿಂದ ‘ಸಿಲಿಂಡರ್ ಬೆಲೆ ಏರಿಕೆ ಉಡುಗೊರೆ’: ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್
ಬೆಂಗಳೂರು : ಮಹಿಳಾ ದಿನಾಚರಣೆಯ ದಿನವೇ ದೇಶದ ಮಹಿಳೆಯರಿಗೆ ಕೇಂದ್ರದ ಬಿಜೆಪಿ ಸರಕಾರ ಅಡುಗೆ ಅನಿಲದ ಬೆಲೆ ಏರಿಕೆ ಮಾಡಿ ಉಡುಗೊರೆ ನೀಡಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಲೇವಡಿ ಮಾಡಿದ್ದಾರೆ. ರವಿವಾರ ಈ ಕುರಿತು ಪ್ರಕಟಣೆ ನೀಡಿರುವ ಅವರು, ಗೃಹ ಬಳಕೆಯ ಅಡುಗೆ ಅನಿಲದ ಸಿಲಿಂಡರ್ ಬೆಲೆಯಲ್ಲಿ ಏಕಾಏಕಿ 60 ರೂ.ಹೆಚ್ಚಳ ಮಾಡಲಾಗಿದ್ದು, ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆಯಲ್ಲಿ 115 ರೂ.ಗಳಿಗೆ ಏರಿಕೆ ಮಾಡಲಾಗಿದೆ. 11 ತಿಂಗಳಲ್ಲಿ ಗೃಹ ಬಳಕೆಯ ಸಿಲಿಂಡರ್ ಬೆಲೆ ಒಟ್ಟು 110 ರೂ.ಹೆಚ್ಚಳ ಮಾಡಿರುವುದು ಮಧ್ಯಮ ವರ್ಗ ಮತ್ತು ಬಡ ಕುಟುಂಬಗಳ ಮೇಲೆ ಭಾರೀ ಹೊರೆ ಹಾಕಿದಂತಾಗಿದೆ ಎಂದು ಟೀಕಿಸಿದ್ದಾರೆ. ಅಡುಗೆ ಅನಿಲವು ಪ್ರತಿಯೊಂದು ಮನೆಯ ಅಗತ್ಯ ವಸ್ತುವಾಗಿದೆ. ಮನೆಗಳನ್ನು ನಡೆಸುವ ಮಹಿಳೆಯರ ಬದುಕಿನೊಂದಿಗೆ ನೇರವಾಗಿ ಸಂಬಂಧ ಹೊಂದಿರುವ ಈ ಅಗತ್ಯ ವಸ್ತುವಿನ ಬೆಲೆ ಹೆಚ್ಚಿಸುವುದು ಮಹಿಳೆಯರ ಮೇಲೆ ಮತ್ತಷ್ಟು ಆರ್ಥಿಕ ಒತ್ತಡ ತರುವ ಕ್ರಮವಾಗಿದೆ. ಮಹಿಳಾ ಸಬಲೀಕರಣದ ಬಗ್ಗೆ ಮಾತಾಡುವ ಕೇಂದ್ರ ಸರಕಾರ ಮಹಿಳೆಯರ ದಿನದಂದೇ ಇಂತಹ ನಿರ್ಧಾರ ಕೈಗೊಂಡಿರುವುದು ವಿಷಾದಕರ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಜ್ಯ ಸರಕಾರದ ವಿರುದ್ಧ ಸದಾ ಆರೋಪ ಮತ್ತು ಪ್ರತಿಭಟನೆ ಮಾಡುವ ಬಿಜೆಪಿ ನಾಯಕರು ಇದೀಗ ಏನು ಹೇಳುತ್ತಾರೆ?. ಕೇಂದ್ರ ಸರಕಾರದ ಈ ಬೆಲೆ ಏರಿಕೆಯನ್ನು ಅವರು ಸಮರ್ಥಿಸಿಕೊಳ್ಳುತ್ತಾರೆಯೇ? ಅಥವಾ ಬಡವರ ಮತ್ತು ಮಹಿಳೆಯರ ಪರವಾಗಿ ಧ್ವನಿ ಎತ್ತುತ್ತಾರೆಯೇ? ಎಂದು ಲಕ್ಷ್ಮಿ ಹೆಬ್ಬಾಳ್ಕರ್ ಪ್ರಶ್ನಿಸಿದ್ದಾರೆ. ಕೇಂದ್ರದ ಬಿಜೆಪಿ ಸರಕಾರಕ್ಕೆ ಜನಸಾಮಾನ್ಯರ ಬಗ್ಗೆ ಕನಿಷ್ಟ ಕಳಕಳಿ ಇದ್ದರೆ ತಕ್ಷಣವೇ ಅಡುಗೆ ಅನಿಲ ಸಿಲಿಂಡರ್ ಬೆಲೆ ಏರಿಕೆ ನಿರ್ಧಾರವನ್ನು ಹಿಂಪಡೆಯಬೇಕು. ಆಮೂಲಕ ಜನರಿಗೆ, ವಿಶೇಷವಾಗಿ ಮಹಿಳೆಯರಿಗೆ ಉಂಟಾಗಿರುವ ಆರ್ಥಿಕ ಭಾರವನ್ನು ಕಡಿಮೆ ಮಾಡಬೇಕು ಎಂದು ಲಕ್ಷ್ಮಿ ಹೆಬ್ಬಾಳ್ಕರ್ ಆಗ್ರಹಿಸಿದ್ದಾರೆ.
Saudi Arabia | ಕ್ಷಿಪಣಿ ದಾಳಿಯಲ್ಲಿ ಮೃತಪಟ್ಟವರಲ್ಲಿ ಓರ್ವ ಭಾರತೀಯ
ರಿಯಾದ್: ಸೌದಿ ಅರೇಬಿಯಾದ ಅಲ್-ಖರ್ಜ್ ನಲ್ಲಿ ವಸತಿ ಕಟ್ಟಡದ ಮೇಲೆ ನಡೆದ ದಾಳಿಯಲ್ಲಿ ಮೃತಪಟ್ಟವರಲ್ಲಿ ಇಬ್ಬರಲ್ಲಿ ಓರ್ವರು ಭಾರತೀಯ, ಮತ್ತೋರ್ವರು ಬಾಂಗ್ಲಾದೇಶದ ಪ್ರಜೆ ಎಂದು ಸೌದಿ ನಾಗರಿಕ ರಕ್ಷಣಾ ಸಂಸ್ಥೆ ತಿಳಿಸಿದೆ ಎಂದು Aljazeera ವರದಿ ಮಾಡಿದೆ. ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪ್ರಕಟಿಸಿದ ಪೋಸ್ಟ್ನಲ್ಲಿ ನಾಗರಿಕ ರಕ್ಷಣಾ ಸಂಸ್ಥೆ, ಮೃತರು ಭಾರತೀಯ ಮತ್ತು ಬಾಂಗ್ಲಾದೇಶದ ಪ್ರಜೆಗಳು ಎಂದು ಸ್ಪಷ್ಟಪಡಿಸಿದೆ. ಸೌದಿ ಅರೇಬಿಯಾದ ಅಲ್-ಖರ್ಜ್ ಸೇರಿದಂತೆ ಕೆಲವು ಪ್ರದೇಶಗಳಲ್ಲಿನ ರಾಡಾರ್ ವ್ಯವಸ್ಥೆಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿರುವುದಾಗಿ ಇರಾನ್ನ ಕ್ರಾಂತಿಕಾರಿ ಗಾರ್ಡ್ ಈ ಹಿಂದೆ ಹೇಳಿಕೆ ನೀಡಿತ್ತು. ಫೆಬ್ರವರಿ 28ರಂದು ಇರಾನ್ ಮೇಲೆ ಅಮೆರಿಕ–ಇಸ್ರೇಲ್ ದಾಳಿಗಳು ನಡೆಸಿದ ಬಳಿಕ, ಇರಾನಿನ ಸುಪ್ರೀಂ ನಾಯಕ ಆಯತುಲ್ಲಾ ಅಲಿ ಖಾಮಿನೈ ಹತ್ಯೆಯಾದ ಘಟನೆಯ ಬಳಿಕ ಗಲ್ಫ್ ಉದ್ವಿಗ್ನತೆಯನ್ನು ಮತ್ತಷ್ಟು ತೀವ್ರಗೊಳಿಸಿತು. ಈ ಬೆಳವಣಿಗೆಯ ನಂತರ ಇರಾನ್, ಇಸ್ರೇಲ್ ನಲ್ಲಿನ ನೆಲೆಗಳ ಜೊತೆಗೆ ಗಲ್ಫ್ ರಾಷ್ಟ್ರಗಳಲ್ಲಿರುವ ಅಮೆರಿಕದ ಮಿಲಿಟರಿ ನೆಲಗಳನ್ನು ಗುರಿಯಾಗಿಸಿಕೊಂಡು ದಾಳಿ ಆರಂಭಿಸಿತು.
Sachin Tendulkar: ಅಭಿಷೇಕ್ ಶರ್ಮಾಗೆ ಕ್ರಿಕೆಟ್ ದೇವರು ಸಚಿನ್ ತೆಂಡ್ಯೂಲ್ಕರ್ ವಿಶೇಷ ಸಂದೇಶ
Sachin Tendulkar: ಅಹಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್ 2026 ಫೈನಲ್ನಲ್ಲಿ ನ್ಯೂಜಿಲೆಂಡ್ ವಿರುದ್ಧ ಟೀಂ ಇಂಡಿಯಾ ಬ್ಯಾಟರ್ಗಳು ಆಕ್ರಮಣಕಾರಿ ಆಟ ಆಡಿದರು. ಇದಕ್ಕೆ ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ ತಮ್ಮ ಟ್ವಿಟರ್ ಖಾತೆಯಲ್ಲಿ ವಿಶೇಷ ಸಂದೇಶದ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಭಾರತ ತಂಡವು ಅಭಿಷೇಕ್ ಶರ್ಮಾ, ಇಶಾನ್ ಕಿಶನ್ ಮತ್ತು ಸಂಜು ಸ್ಯಾಮ್ಸನ್
ಕಲಬುರಗಿ | ಸಾಧಕ ಮಹಿಳೆಯರಿಗೆ ಪ್ರಶಸ್ತಿ ಪ್ರದಾನ : ಕವನ ಸಂಕಲನ ಲೋಕಾರ್ಪಣೆ
ಕಲಬುರಗಿ : ಡಾ.ರಾಜಕುಮಾರ ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಕಲಾ ಸಂಘ (ರಿ), ರಾಜಾಪೂರ-ಕಲಬುರಗಿ ವತಿಯಿಂದ ನಗರದ ಡಾ.ಎಸ್.ಎಂ.ಪಂಡಿತ ರಂಗಮಂದಿರದಲ್ಲಿ ಸಂಘದ 5ನೇ ವಾರ್ಷಿಕೋತ್ಸವ ಹಾಗೂ ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಯಿತು. ಈ ಸಂದರ್ಭದಲ್ಲಿ ನಾಡಿನ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸುಮಾರು 17 ಮಹಿಳೆಯರಿಗೆ “ಕರ್ನಾಟಕ ಸಾಧಕ ಮಹಿಳೆ-2026” ಪ್ರಶಸ್ತಿ ಪ್ರದಾನ ಮಾಡಲಾಯಿತು. ಜೊತೆಗೆ ಸಮಾಜಸೇವೆಯಲ್ಲಿ ತೊಡಗಿಕೊಂಡಿರುವ ಸುಮಾರು 8 ಸಾಧಕರಿಗೆ “ಸೇವಾರತ್ನ” ಪ್ರಶಸ್ತಿಯನ್ನೂ ನೀಡಿ ಗೌರವಿಸಲಾಯಿತು. ಕಾರ್ಯಕ್ರಮವನ್ನು ಖ್ಯಾತ ಉದ್ಯಮಿಗಳಾದ ಡಾ.ಅಮರೇಶ್ವರಿ ಬಾಬುರಾವ ಚಿಂಚನಸೂರ ಉದ್ಘಾಟಿಸಿದರು. ಪ್ರೊ.ರಮೇಶ ಬಿ.ಯಾಳಗಿ ರಚಿಸಿದ “ನನ್ನೆದೆಯ ಅಂಗಳದಿ”ಕವನ ಸಂಕಲನವನ್ನು ವಿಧಾನ ಪರಿಷತ್ ಸದಸ್ಯರಾದ ಶಶಿಲ್ ಜಿ.ನಮೋಶಿ ಅವರು ಲೋಕಾರ್ಪಣೆ ಮಾಡಿ, ಮಾತನಾಡಿದರು. ಕಾರ್ಯಕ್ರಮದ ಆರಂಭದಲ್ಲಿ ಮಲ್ಲಿಕಾರ್ಜುನ ಖರ್ಗೆ ಪಿ.ಯು ಕಾಲೇಜಿನ ಪ್ರಾಚಾರ್ಯರಾದ ಬಿ.ಎಸ್.ಮಾಲಿಪಾಟೀಲ ಅವರು ಪೂಜೆ ಮತ್ತು ಪುಷ್ಪಾರ್ಚನೆ ನೆರವೇರಿಸಿದರು. ಕನ್ನಡ ಪುಸ್ತಕ ಪ್ರಾಧಿಕಾರದ ಸದಸ್ಯರಾದ ಬಿ.ಎಚ್.ನಿರಗುಡಿ ಅವರು ಕೃತಿಯ ಪರಿಚಯ ಮಾಡಿಕೊಟ್ಟರು. ಮಹಾನಗರ ಪಾಲಿಕೆಯ ಉಪಮೇಯರ್ ತೃಪ್ತಿ ಎಸ್. ಲಾಖೆ ಅವರು ಪ್ರಶಸ್ತಿ ಪ್ರದಾನ ಮಾಡಿದರು. ಕೃಷಿ ಇಲಾಖೆಯ ನಿವೃತ್ತ ಸಹ ನಿರ್ದೇಶಕಿ ಮಧುಮತಿ ಪಾಟೀಲ ಅವರು ವಿಶೇಷ ಉಪನ್ಯಾಸ ನೀಡಿದರು. ಕಾರ್ಯಕ್ರಮದಲ್ಲಿ ಶರಣಮ್ಮ ಹೆಂಬಾಡಿ ಗೌರವ ಉಪಸ್ಥಿತರಿದ್ದರು. ಸಂಘದ ಗೌರವ ಕಾರ್ಯದರ್ಶಿಗಳಾದ ಡಾ.ವಿಜಯಕುಮಾರ ಗೋತಗಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಡಾ.ಶರಣಪ್ಪ ಗುಂಡಗುರ್ತಿ, ಗುರು ಬಂಡಿ, ಶ್ರೀ ಸಿದ್ದರಾಮ ದಂಡಗುಲ್ಕರ್, ಡಾ.ಸುನೀಲಕುಮಾರ್ ವಂಟಿ, ಕುಶಾಲ ಆಂದೋಲ, ರಾಜಕುಮಾರ ತರಿ, ಶಂಕರ್ಜಿ ಹೂವಿನಹಿಪ್ಪರಗಿ, ಕಲ್ಯಾಣಕುಮಾರ ಬೆಳಕೇರಿ, ರಾಜಶೇಖರ ಮುಸ್ತಾರಿ ಹಾಗೂ ಗೌತಮ ಬೊಮ್ಮನಹಳ್ಳಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರಾದ ಪ್ರೊ.ರಮೇಶ ಬಿ.ಯಾಳಗಿ, ಕಾರ್ಯದರ್ಶಿ ಯಲ್ಲಾಲಿಂಗ ಝ ದಂಡಿನ, ಸಂಚಾಲಕ ಅಶೋಕ ಉಪ್ಪಿನ ಹಾಗೂ ಸದಸ್ಯರಾದ ವಾಣಿ ಶ್ರೀ, ಸಿದ್ದರಾಮ ಹಂಚನಾಳ, ಸಂತೋಷ ನಗನೂರ, ಭೀರು ಪೂಜಾರಿ ಮತ್ತು ನಾಗಣ್ಣ ಪೂಜಾರಿ ಸೇರಿದಂತೆ ಹಲವರು ಭಾಗವಹಿಸಿದ್ದರು. ಕಾರ್ಯಕ್ರಮದ ಬಳಿಕ ವಿವಿಧ ಕಲಾವಿದರಿಂದ ಭರತನಾಟ್ಯ, ಜಾನಪದ ನೃತ್ಯ, ಸಂಗೀತ ರಸಮಂಜರಿ, ಹಾಸ್ಯ ಹಾಗೂ ಮಿಮಿಕ್ರಿ ಕಾರ್ಯಕ್ರಮಗಳು ಜರುಗಿದ್ದು, ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು.
ನಾರ್ವೆ: ಅಮೆರಿಕದ ರಾಯಭಾರಿ ಕಚೇರಿಯಲ್ಲಿ ಸ್ಫೋಟ
ಒಸ್ಲೋ,ಮಾ.8: ನಾರ್ವೆ ರಾಜಧಾನಿ ಓಸ್ಲೊದಲ್ಲಿರುವ ಅಮೆರಿಕ ರಾಯಭಾರಿ ಕಚೇರಿಯಲ್ಲಿ ರವಿವಾರ ಸ್ಫೋಟ ನಡೆದಿದ್ದು, ಯಾರೂ ಗಾಯಗೊಂಡಿರುವ ಬಗ್ಗೆ ವರದಿಯಾಗಿಲ್ಲ. ಆದರೆ ಕಟ್ಟಡಕ್ಕೆ ಅಲ್ಪ ಪ್ರಮಾಣದ ಹಾನಿಯಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ರಾಯಭಾರಿ ಕಚೇರಿಯ ಕಾನ್ಸುಲರ್ ವಿಭಾಗದಲ್ಲಿ ಸ್ಫೋಟ ಸಂಭವಿಸಿದೆ. ಘಟನೆಯ ಬಗ್ಗೆ ಪೊಲೀಸರು ಹೆಚ್ಚಿನ ವಿವರಗಳನ್ನು ನೀಡಿಲ್ಲ. ಆದರೆ ಸ್ಫೋಟಕ ಸಾಧನವೊಂದನ್ನು ಬಳಸಲಾಗಿತ್ತೆಂದು ಅವರು ತಿಳಿಸಿದ್ದಾರೆ. ಇದೊಂದು ಭಯೋತ್ಪಾದಕ ಕೃತ್ಯವಾಗಿರುವ ಸಾಧ್ಯತೆಯಿದೆಯೆಂದು ತನಿಖೆ ಹಾಗೂ ಬೇಹುಗಾರಿಕೆ ವಿಭಾಗದ ಜಂಟಿ ಪೊಲೀಸ್ ವರಿಷ್ಠ ಫ್ರೋಡ್ ಲಾರ್ಸೆನ್ ತಿಳಿಸಿದ್ದಾರೆ. ಈ ಕೃತ್ಯದ ಹಿಂದಿರುವವರನ್ನು ಪತ್ತೆ ಹಚ್ಚಲು ಪೊಲೀಸರು ಶೋಧ ಕಾರ್ಯನಡೆಸುತ್ತಿದ್ದರಾದರೂ ಇನ್ನೂ ಪತ್ತೆಯಾಗಿಲ್ಲವೆಂದು ಲಾರ್ಸೆನ್ ಹೇಳಿದ್ದಾರೆ. ಇರಾನ್ನಲ್ಲಿ ಅಮೆರಿಕವು ನಡೆಸುತ್ತಿರುವ ಯುದ್ಧಕ್ಕೂ, ಈ ಸ್ಫೋಟ ಘಟನೆಗೂ ನಂಟಿರುವ ಸಾಧ್ಯತೆಯನ್ನು ತಳ್ಳಿಹಾಕಲಾಗದೆಂದು ಒಸ್ಲೋದ ತನಿಖಾಧಿಕಾರಿಗಳು ತಿಳಿಸಿದ್ದಾರೆ.
ಕಲಬುರಗಿ | ಶ್ರೀ ಶರಣಬಸವೇಶ್ವರರ ಮಹಾರಥೋತ್ಸವ : ಸಹಸ್ರಾರು ಮಂದಿ ಭಾಗಿ
ಕಲಬುರಗಿ: ಕಲ್ಯಾಣ ಕರ್ನಾಟಕದ ಪ್ರಸಿದ್ಧ ಧಾರ್ಮಿಕ ಸ್ಥಳವಾದ ಶ್ರೀ ಶರಣಬಸವೇಶ್ವರರ 204ನೆಯ ಜಾತ್ರೋತ್ಸವ ನಿಮಿತ್ತ ರವಿವಾರ ಸಂಜೆ ಸಹಸ್ರಾರು ಭಕ್ತರ ಮಧ್ಯೆ ಮಹಾದಾಸೋಹಿ ಶರಣ ಶ್ರೀ ಶರಣಬಸವೇಶ್ವರರ ಮಹಾರಥೋತ್ಸವವು ಜರುಗಿತು. ಶರಣಬಸವೇಶ್ವರ ಸಂಸ್ಥಾನದ 9ನೆಯ ಪೀಠಾಧಿಪತಿ ಚಿ.ದೊಡ್ಡಪ್ಪ ಅಪ್ಪ ಅವರು ಪ್ರಸಾದ ಬಟ್ಟಲು (ಬೆಳ್ಳಿ ತಟ್ಟೆ) ಹಾಗೂ ಲಿಂಗ ಸಜ್ಜಿಕೆ (ಪವಿತ್ರ ಲಿಂಗವನ್ನು ಇಟ್ಟುಕೊಳ್ಳಲು ಸಂತರು ಬಳಸುತ್ತಿದ್ದ ಶ್ರೀಗಂಧದ ಪೆಟ್ಟಿಗೆ)ತೋರಿಸುವ ಮೂಲಕ ರಥೋತ್ಸವಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಸಂಸ್ಥಾನದ ಅಧ್ಯಕ್ಷೆ ಮಾತೋಶ್ರೀ ಡಾ.ದಾಕ್ಷಾಯಣಿ ಅವ್ವಾಜಿ, ಕಾರ್ಯದರ್ಶಿ ಬಸವರಾಜ ದೇಶಮುಖ, ಭವಾನಿ ಎಸ್. ಅಪ್ಪ, ಶಿವಾನಿ ಎಸ್.ಅಪ್ಪ, ಮಹೇಶ್ವರಿ ಎಸ್.ಅಪ್ಪ, ಡಾ.ಅಲ್ಲಮಪ್ರಭು ದೇಶಮುಖ ಸೇರಿದಂತೆ ಸಂಸ್ಥಾನದ ಪ್ರಮುಖರು ಇದ್ದರು. ಸಹಸ್ರಾರು ಭಕ್ತರು ಇದೇ ವೇಳೆಯಲ್ಲಿ ಜೈಘೋಷಣೆ ಹಾಕಿದರು. ರಥೋತ್ಸವ ಪ್ರಾರಂಭವಾಗುವ ಮೊದಲು ದೇವಾಲಯದಲ್ಲಿ ಅಲಂಕರಿಸಲಾದ ರಥದಲ್ಲಿ ಸಾಂಪ್ರದಾಯಿಕ ವಿಧಿ ವಿಧಾನಗಳು ಮತ್ತು ವಿಶೇಷ ಪೂಜೆಗಳನ್ನು ನೆರವೇರಿಸಲಾಯಿತು. ಇದೇ ವೇಳೆಯಲ್ಲಿ ದೇವಸ್ಥಾನದ ಆವರಣದಲ್ಲಿ ನಂದಿಕೋಲು, ಪಲ್ಲಕ್ಕಿ ಉತ್ಸವ ನಡೆಯಿತು. ಶ್ರೀ ಶರಣಬಸವೇಶ್ವರರ ಮಹಾರಥೋತ್ಸವಕ್ಕೆ ಯಾದಗಿರಿ, ರಾಯಚೂರು, ಕಲಬುರಗಿ, ಬೀದರ್, ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆ, ತಾಲೂಕುಗಳಿಂದ ಸಾವಿರಾರು ಭಕ್ತರು ಆಗಮಿಸಿದ್ದರು. ಕೆಲವು ಭಕ್ತರು ಕಾಲ್ನಡಿಗೆಯ ಮೂಲಕ ದೇವಸ್ಥಾನಕ್ಕೆ ತಲುಪಿದರೆ ಇನ್ನುಳಿದವರು ಕಾರು, ಕ್ರಷರ್, ಜೀಪ್, ಮಿನಿ ಬಸ್, ಮತ್ತಿತ್ತರ ವಾಹನಗಳ ಮೂಲಕ ಆಗಮಿಸಿದ್ದರು. ವಿವಿಧ ವಾಧ್ಯಗಳೊಂದಿಗೆ ನೆರವೇರಿದ ರಥೋತ್ಸವದಲ್ಲಿ ಸಾರ್ವಜನಿಕರಿಗೆ ಯಾವುದೇ ತೊಂದರೆ ಆಗದಂತೆ ನಗರ ಪೊಲೀಸರು ಬಿಗಿ ಬಂದೋಬಸ್ತ್ ಒದಗಿಸಿದರು. ಡಾ.ಶರಣಬಸವಪ್ಪ ಅಪ್ಪ ಅವರ ಅನುಪಸ್ಥಿತಿಯಲ್ಲಿ ರಥೋತ್ಸವ: ಕಳೆದ ನಾಲ್ಕು ದಶಕಗಳಿಗೂ ಹೆಚ್ಚು ಕಾಲದ ನಂತರ ಇದೇ ಮೊದಲ ಬಾರಿಗೆ, ಸಂಸ್ಥಾನದ 8ನೇ ಮಹಾದಾಸೋಹ ಪೀಠಾಧಿಪತಿಗಳಾದ ಲಿಂಗೈಕ್ಯ ಡಾ.ಶರಣಬಸವಪ್ಪ ಅಪ್ಪಾಜಿಯಯವರ ಅನುಪಸ್ಥಿತಿಯಲ್ಲಿ ಜಾತ್ರೆಗೆ ಚಾಲನೆ ದೊರಕಿತು.
ಆಯತುಲ್ಲಾ ಅಲಿ ಖಾಮಿನೈ ಹತ್ಯೆಗಾಗಿ ಟ್ರಂಪ್ ಭಾರೀ ಬೆಲೆ ತೆರಲಿದ್ದಾರೆ : ಲಾರಿಜಾನಿ
ಟೆಹರಾನ್,ಮಾ.8: ಆಯತುಲ್ಲಾ ಅಲಿ ಖಾಮಿನೈ ಅವರ ಹತ್ಯೆಗಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಾರೀ ಬೆಲೆ ತೆರಬೇಕಾಗಿ ಬರಲಿದೆ ಮತ್ತು ನಮ್ಮ ನಾಯಕನ ರಕ್ತವನ್ನು ಚೆಲ್ಲಿದ್ದಕ್ಕಾಗಿ ಇರಾನ್ ಪ್ರತೀಕಾರ ತೀರಿಸಲಿದೆ ಎಂದು ಆ ದೇಶದ ಭದ್ರತಾ ವರಿಷ್ಠ ಅಲಿ ಲಾರಿಜಾನಿ ಶುಕ್ರವಾರ ತಿಳಿಸಿದ್ದಾರೆ. ಲಾರಿಜಾನಿ ಹೇಳಿಕೆಗೆ ತಕ್ಷಣವೇ ಪ್ರತಿಕ್ರಿಯಿಸಿರುವ ಟ್ರಂಪ್ ಅವರು, ಸಣ್ಣಪುಟ್ಟ ವ್ಯಕ್ತಿಗಳ ಹೇಳಿಕೆಗಳಿಗೆ ತಾನು ಗಮನಹರಿಸುವುದಿಲ್ಲವೆಂದು ಹೇಳಿದ್ದಾರೆ. ಲಾರಿಜಾನಿ ಅವರು ಖಾಮಿನೈ ಅವರ ಉನ್ನತ ಸಲಹೆಗಾರರಾಗಿ ಕಾರ್ಯನಿರ್ವಹಿಸಿದ್ದರು. ಇರಾನ್ನ ಸರಕಾರಿ ಟಿವಿ ವಾಹಿನಿ ಜೊತೆ ಶನಿವಾರ ಮಾತನಾಡಿದ ಲಾರಿಜಾನಿ ಅವರು, ಟ್ರಂಪ್ ಅವರನ್ನು ನಾವು ಸುಮ್ಮನೆ ಬಿಡುವುದಿಲ್ಲ. ಇರಾನ್ನ ಪ್ರತಿಕ್ರಿಯೆಯನ್ನು ಟ್ರಂಪ್ ತಪ್ಪಾಗಿ ಲೆಕ್ಕಹಾಕಿದ್ದಾರೆ ಹಾಗೂ ಈ ಸಂಘರ್ಷ ಬೇಗನೇ ನಿಲ್ಲುವುದಿಲ್ಲವೆಂದು ಹೇಳಿದ್ದರು. ವೆನೆಝುವೆಲಾದಲ್ಲಿ ನಡೆದಂತೆ ಇರಾನ್ನಲ್ಲೂ ಕಾರ್ಯಾಚರಣೆಯನ್ನು ಬೇಗನೇ ಮಾಡಿಮುಗಿಸಬಹುದೆಂದು ಟ್ರಂಪ್ ಭಾವಿಸಿದ್ದರು. ಆದರೆ ಅವರೀಗ ಸಿಕ್ಕಿಹಾಕಿಕೊಂಡಿದ್ದಾರೆ ಎಂದು ಲಾರಿಜಾನಿ ತಿಳಿಸಿದರು. ಟ್ರಂಪ್ ಅವರನ್ನು ಸುಮ್ಮನೆ ಬಿಡಲಾಗದು. ಅವರು ಮಾಡಿದ ಕೃತ್ಯಕ್ಕೆ ತಕ್ಕ ಬೆಲೆಯನ್ನು ತೆರಲೇಬೇಕು. ನಮ್ಮ ನಾಯಕನನ್ನು ಅವರು ಕೊಂದಿದ್ದಾರೆ ಹಾಗೂ 1 ಸಾವಿರಕ್ಕೂ ಅಧಿಕ ಮಂದಿ ಹುತಾತ್ಮರಾಗಿದ್ದಾರೆ. ಇದು ಸಣ್ಣಪುಟ್ಟ ವಿಷಯವೇನಲ್ಲ’’ ಎಂದು ಲಾರಿಜಾನಿ ತಿಳಿಸಿದ್ದಾರೆ. ಲಾರಿಜಾನಿಯ ಹೇಳಿಕೆಗೆ ಪ್ರತಿಕ್ರಿಯಿಸಿರುವ ಟ್ರಂಪ್, ಆತ ಯಾರೆಂಬುದೇ ತನಗೆ ಗೊತ್ತಿಲ್ಲ. ನಾನು ಸಣ್ಣಪುಟ್ಟ ವ್ಯಕ್ತಿಗಳ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ ಎಂದು ಟ್ರಂಪ್ ಸಿಬಿಎಸ್ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ. ಇರಾನ್ನ ನಾಯಕರು ದುರ್ಬಲಗೊಂಡಿದ್ದಾರೆ ಹಾಗೂ ವಿನಾಶದೆಡೆಗೆ ಸಾಗುತ್ತಿದ್ದಾರೆ. ಇರಾನ್ನಲ್ಲಿ ಅಮೆರಿಕದ ಸೇನಾ ಕಾರ್ಯಾಚರಣೆಯು ಮಂದುವರಿದಿದ್ದು, ಇರಾನ್ ಆಡಳಿತವು ಕ್ಷಮೆಯಾಚಿಸಬೇಕೆಂದು ಟ್ರಂಪ್ ಕರೆ ನೀಡಿದ್ದಾರೆ.
ಬಿಹಾರ | ಮೂಕ ಮಹಿಳೆಗೆ ಲೈಂಗಿಕ ಕಿರುಕುಳ ಆರೋಪ : ವ್ಯಕ್ತಿಯ ತಲೆ ಬೋಳಿಸಿ ಮೆರವಣಿಗೆ ಮಾಡಿದ ಗ್ರಾಮಸ್ಥರು
ಮುಝಫರ್ಪುರ, ಮಾ. 8: ಬಿಹಾರದ ಮುಝಪ್ಫರ್ಪುರ ಜಿಲ್ಲೆಯಲ್ಲಿ ಮೂಕ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ವ್ಯಕ್ತಿಯೋರ್ವರಿಗೆ ಗ್ರಾಮಸ್ಥರು ಸಾರ್ವಜನಿಕವಾಗಿ ಶಿಕ್ಷೆ ವಿಧಿಸಿದ್ದಾರೆ. ಆತನಿಗೆ 5001 ರೂ. ದಂಡ ವಿಧಿಸಿದ್ದಾರೆ. ಅಲ್ಲದೆ, ತಲೆ ಬೋಳಿಸಿ ಮೆರವಣಿಗೆ ಮಾಡಿದ್ದಾರೆ. ಈ ಘಟನೆ ಕುರಿತ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದ್ದು, ಇದೀಗ ಪೊಲೀಸರ ಗಮನಕ್ಕೆ ಬಂದಿದೆ. ಸ್ಥಳೀಯ ಮೂಲಗಳ ಪ್ರಕಾರ, ಆರೋಪಿ ಅದೇ ಗ್ರಾಮದ ಮೂಕ ಮಹಿಳೆಯೊಂದಿಗೆ ಅನುಚಿತವಾಗಿ ವರ್ತಿಸಿದ್ದಾನೆ. ಘಟನೆಯ ಬಗ್ಗೆ ಮಹಿಳೆಯ ಕುಟುಂಬ ಹಾಗೂ ಗ್ರಾಮಸ್ಥರಿಗೆ ತಿಳಿಸಿದಾಗ ಆವರು ಆತನನ್ನು ಸೆರೆ ಹಿಡಿದ್ದಾರೆ. ಸ್ಪಲ್ಪ ಸಮಯದ ನಂತರ ಆತನಿಗೆ ಶಿಕ್ಷೆ ನಿರ್ಧರಿಸಲು ಗ್ರಾಮ ಸಭೆಯನ್ನು ಕರೆದಿದ್ದಾರೆ. ಗ್ರಾಮ ಸಭೆ ಆರೋಪಿಗೆ 5,001 ರೂ. ದಂಡ ವಿಧಿಸಿದೆ. ಅನಂತರ ಗ್ರಾಮಸ್ಥರು ಆತನ ತಲೆ ಬೋಳಿಸಿದ್ದಾರೆ. ಆತನ ಹಣೆಗೆ ಕಪ್ಪು ಗುರುತು ಮಾಡಿದ್ದಾರೆ. ಬಳಿಕ ಗ್ರಾಮದಲ್ಲಿ ಸಾರ್ವಜನಿಕ ಮೆರವಣಿಗೆ ಮಾಡಿದ್ದಾರೆ ಎಂದು ಹೇಳಲಾಗಿದೆ. ವೈರಲ್ ಆಗಿರುವ ವೀಡಿಯೊ ದೃಶ್ಯದ ಬಗ್ಗೆ ಪ್ರತಿಕ್ರಿಯಿಸಿರುವ ಪೂರ್ವ-1 ಡಿಎಸ್ಪಿ ಅಲಯ್ ವಾಟ್ಸ್, ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿರುವ ವೀಡಿಯೊವನ್ನು ಪೊಲೀಸರು ಸ್ವಯಂಪ್ರೇರಿತವಾಗಿ ಗಮನಕ್ಕೆ ತೆಗೆದುಕೊಂಡಿದ್ದಾರೆ. ಘಟನೆಯ ಬಗ್ಗೆ ಪರಿಶೀಲಿಸಲಾಗುತ್ತಿದೆ. ಆರೋಪ ಸತ್ಯವೆಂದು ಕಂಡು ಬಂದಲ್ಲಿ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದಿದ್ದಾರೆ.
ಟಿ20 ವಿಶ್ವಕಪ್ ಫೈನಲ್ನಲ್ಲಿ ಐತಿಹಾಸಿಕ ದಾಖಲೆ ಮಾಡಿದ ಟೀಂ ಇಂಡಿಯಾ
T20 World Cup 2026 Final: ಅಹಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಭಾರತ ತಂಡವು ನ್ಯೂಜಿಲೆಂಡ್ ವಿರುದ್ಧ ಐತಿಹಾಸಿಕ ಸಾಧನೆಯನ್ನು ಮಾಡಿದೆ. ಟಾಸ್ ಸೋತು ಮೊದಲು ಬ್ಯಾಟ್ ಬೀಸಿದ ಟೀಂ ಇಂಡಿಯಾ ನಿಗದಿತ 20 ಓವರ್ಗಳಲ್ಲಿ 255 ರನ್ಗಳನ್ನು ಗಳಿಸಿದೆ. ಟಿ20 ವಿಶ್ವಕಪ್ ಫೈನಲ್ ಇತಿಹಾಸದಲ್ಲೇ ಇದು ಅತಿ ಹೆಚ್ಚು
1965ರ ಭಾರತ-ಪಾಕ್ ಯುದ್ಧದ ಹಿರೋ ಕೆ.ಜಿ.ಜಾರ್ಜ್ ನಿಧನ
ತಿರುವನಂತಪುರ,ಮಾ.8: 1965ರ ಭಾರತ-ಪಾಕಿಸ್ತಾನ ಯುದ್ಧದಲ್ಲಿ ತನ್ನ ಶೌರ್ಯ ಪ್ರದರ್ಶನಕ್ಕಾಗಿ ವೀರಚಕ್ರವನ್ನು ಪಡೆದಿದ್ದ ಲಾನ್ಸ್ ಹವಾಲ್ದಾರ್ ಕೆ.ಜಿ.ಜಾರ್ಜ್ (95) ಅವರು ಶನಿವಾರ ಬೆಳಿಗ್ಗೆ ಕೊಟ್ಟಾಯಂನಲ್ಲಿಯ ಸ್ವಗೃಹದಲ್ಲಿ ನಿಧನರಾಗಿದ್ದಾರೆ ಎಂದು ಅವರ ಕುಟುಂಬವು ರವಿವಾರ ತಿಳಿಸಿದೆ. ಜಾರ್ಜ್ ವಯೋಸಂಬಂಧಿತ ಸಮಸ್ಯೆಗಳಿಂದ ಬಳಲುತ್ತಿದ್ದರು ಎಂದು ಅವರ ಮೊಮ್ಮಗ ರೆಮೋ ಜಾನ್ ಸುದ್ದಿಸಂಸ್ಥೆಗೆ ತಿಳಿಸಿದರು. ಫೆ.1931ರಲ್ಲಿ ಕೇರಳದಲ್ಲಿ ಜನಿಸಿದ್ದ ಜಾರ್ಜ್ ಸೇನೆಯ ಕಾರ್ಪ್ ಆಫ್ ಸಿಗ್ನಲ್ಸ್ನಲ್ಲಿ ಸೇವೆ ಸಲ್ಲಿಸಿದ್ದರು. ಲಾನ್ಸ್ ಹವಾಲ್ದಾರ್ ಜಾರ್ಜ್ ಅವರು 1965,ಸೆ.6ರಿಂದ 10ರವರೆಗೆ ಶತ್ರುಗಳ ನಿರಂತರ ಶೆಲ್ ಮತ್ತು ವಾಯುದಾಳಿಗಳ ನಡುವೆಯೂ ವಾಘಾ ವಿಭಾಗದಲ್ಲಿ ಕಡಿತಗೊಂಡಿದ್ದ ಸಂವಹನ ವ್ಯವಸ್ಥೆಯನ್ನು ಮರುಸ್ಥಾಪಿಸುವಲ್ಲಿ ತನ್ನ ಯೂನಿಟ್ನ್ನು ಮುನ್ನಡೆಸುವ ಮೂಲಕ ಅಸಾಧಾರಣ ಧೈರ್ಯ ಮತ್ತು ಕರ್ತವ್ಯ ನಿಷ್ಠೆಯನ್ನು ಪ್ರದರ್ಶಿಸಿದ್ದರು ಎಂದು ವೀರಚಕ್ರ ಪ್ರಶಸ್ತಿಯ ಉಲ್ಲೇಖದಲ್ಲಿ ಹೇಳಲಾಗಿದೆ. ಜಾರ್ಜ್ ಅವರ ಇಬ್ಬರು ಪುತ್ರರು ದುಬೈನಲ್ಲಿದ್ದು,ಅವರು ಸ್ವದೇಶಕ್ಕೆ ಮರಳಿದ ಬಳಿಕ ಅಂತ್ಯಸಂಸ್ಕಾರ ನಡೆಯಲಿದೆ.
ಸಿಎಂ ಕಚೇರಿಯನ್ನು ಆರೆಸ್ಸೆಸ್ ಸಂಪರ್ಕ ಮುಕ್ತಗೊಳಿಸಿ; ಸರಣಿ ಪೋಸ್ಟ್ಗಳ ಮೂಲಕ ನವೀನ್ ಸೂರಿಂಜೆ ಆಗ್ರಹ
ಬಜೆಟ್ ಮಂಡನೆಗೂ ಮುನ್ನವೇ ಬಿಜೆಪಿ ಶಾಸಕನಿಗೆ ಬಜೆಟ್ ಲೀಕ್ ಆಗಿದ್ದು ಹೇಗೆ? ಎಂದು ಪ್ರಶ್ನೆ
Saudi Arabia | ಕಟ್ಟಡದ ಮೇಲೆ ಕ್ಷಿಪಣಿ ದಾಳಿ: ಇಬ್ಬರು ಮೃತ್ಯು, 12 ಮಂದಿಗೆ ಗಾಯ
ರಿಯಾದ್: ಸೌದಿ ಅರೇಬಿಯಾದಲ್ಲಿ ವಸತಿ ಕಟ್ಟಡದ ಮೇಲೆ ನಡೆದ ಕ್ಷಿಪಣಿ ದಾಳಿಯಲ್ಲಿ ಕನಿಷ್ಠ ಇಬ್ಬರು ಸಾವನ್ನಪ್ಪಿದ್ದು, 12 ಮಂದಿ ಗಾಯಗೊಂಡಿದ್ದಾರೆ ಎಂದು ದೇಶದ ನಾಗರಿಕ ರಕ್ಷಣಾ ಸಂಸ್ಥೆ ತಿಳಿಸಿದೆ ಎಂದು Aljazeera ವರದಿ ಮಾಡಿದೆ. ಸೆಂಟ್ರಲ್ ಅಲ್-ಖರ್ಜ್ ಗವರ್ನರೇಟ್ ನಲ್ಲಿರುವ ವಸತಿ ಕಟ್ಟಡಕ್ಕೆ ದಾಳಿ ನಡೆದಿದೆ ಎಂದು ನಾಗರಿಕ ರಕ್ಷಣಾ ಏಜೆನ್ಸಿ ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಪ್ರಕಟಿಸಿದ ಹೇಳಿಕೆಯಲ್ಲಿ ತಿಳಿಸಿದೆ. ‘ದಾಳಿಯಲ್ಲಿ ಇಬ್ಬರು ಮೃತಪಟ್ಟಿದ್ದು, 12 ಮಂದಿ ಗಾಯಗೊಂಡಿದ್ದಾರೆ’ ಎಂದು ತಿಳಿದು ಬಂದಿದೆ. ಗಾಯಾಳುಗಳನ್ನು ತಕ್ಷಣವೇ ಸಮೀಪದ ಆಸ್ಪತ್ರೆಗೆ ಸಾಗಿಸಲಾಗಿದ್ದು, ಘಟನಾ ಸ್ಥಳಕ್ಕೆ ರಕ್ಷಣಾ ಸಿಬ್ಬಂದಿ ಹಾಗೂ ಭದ್ರತಾ ಪಡೆಗಳು ಧಾವಿಸಿ ನೆರವು ಕಾರ್ಯಾಚರಣೆ ಕೈಗೊಂಡಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನಮಗೆ ಮುಸ್ಲಿಮರು ಅಥವಾ ಕ್ರೈಸ್ತರಿಂದ ಅಪಾಯ ಬಂದಿಲ್ಲ: ಅನಂತ್ ಕುಮಾರ್ ಹೆಗಡೆ
ಭಟ್ಕಳದಲ್ಲಿ 'ಹಿಂದೂ ಸಂಗಮ' ಸಮ್ಮೇಳನ
ಉಪಚುನಾವಣೆ ಹಿನ್ನೆಲೆ: ಕಾಂಗ್ರೆಸ್ ಉಸ್ತುವಾರಿ ಸಮಿತಿ ರಚನೆ
ಬೆಂಗಳೂರು : ಬಾಗಲಕೋಟೆ, ದಾವಣಗೆರೆ ದಕ್ಷಿಣ ವಿಧಾನಸಭಾ ಉಪ ಚುನಾವಣೆಗೆ ಸಂಬಂಧಿಸಿದಂತೆ ಸಚಿವರು ಸೇರಿದಂತೆ 31 ಮಂದಿಗೆ ಜವಾಬ್ದಾರಿ ನೀಡುವ ಉಸ್ತುವಾರಿ ಸಮಿತಿ ರಚನೆ ಮಾಡಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆದೇಶ ಹೊರಡಿಸಿದ್ದಾರೆ. ದಾವಣಗೆರೆ ದಕ್ಷಿಣ, ಬಾಗಲಕೋಟೆ ವಿಧಾನಸಭಾ ಕ್ಷೇತ್ರಕ್ಕೆ ಉಪಚುನಾವಣೆ ನಡೆಯಲಿರುವ ಹಿನ್ನಲೆಯಲ್ಲಿ, ನಮ್ಮ ಪಕ್ಷದ ಅಭ್ಯರ್ಥಿ ಆಯ್ಕೆ ಪ್ರಕ್ರಿಯೆಗಾಗಿ ಹಾಗೂ ನಮ್ಮ ಅಭ್ಯರ್ಥಿಯು ಜಯಶಾಲಿಯಾಗಲು ಅಗತ್ಯ ಚುನಾವಣಾ ತಂತ್ರಗಳನ್ನು ರೂಪಿಸುವ ಸಲುವಾಗಿ ಎಐಸಿಸಿ ನಿರ್ದೇಶನದ ಮೇರೆಗೆ ದಾವಣಗೆರೆ ದಕ್ಷಿಣ ವಿಧಾನಸಭೆ ಉಪಚುನಾವಣೆ ಉಸ್ತುವಾರಿ ಸಮಿತಿಯನ್ನು ರಚಿಸಲಾಗಿದೆ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ. ಸಮಿತಿಯು ಕ್ಷೇತ್ರದಲ್ಲಿ ನಮ್ಮ ಪಕ್ಷದ ಸಂಭಾವ್ಯ ಅಭ್ಯರ್ಥಿಯನ್ನು ಕೆಪಿಸಿಸಿಗೆ ಶಿಫಾರಸ್ಸು ಮಾಡಬೇಕು. ಉಪಚುನಾವಣೆಯಲ್ಲಿ ನಮ್ಮ ಅಭ್ಯರ್ಥಿಯ ಗೆಲುವಿಗೆ ಅಗತ್ಯವಾದ ಕ್ರಮಗಳನ್ನು ಕೈಗೊಳ್ಳುವ ಪ್ರಕ್ರಿಯೆಯಲ್ಲಿ ದಾವಣಗೆರೆ, ಬಾಗಲಕೋಟೆ ಜಿಲ್ಲೆಯ ಸಚಿವರು, ಸಂಸದರು, ಶಾಸಕರು, ಎಐಸಿಸಿ ಉಸ್ತುವಾರಿ ಕಾಯದರ್ಶಿಗಳು, ಜಿಲ್ಲಾ, ಬ್ಲಾಕ್ ಅಧ್ಯಕ್ಷರು, ಮಾಜಿ ಶಾಸಕರು, ಎಐಸಿಸಿ, ಕೆಪಿಸಿಸಿ ಪದಾಧಿಕಾರಿಗಳು, ಹಿರಿಯ ಮುಖಂಡರು, ಜಿಲ್ಲಾ ಮುಂಚೂಣಿ ಘಟಕ, ಸೆಲ್ ಅಧ್ಯಕ್ಷರು ಹಾಗೂ ಇತರರೊಂದಿಗೆ ಸಮಾಲೋಚನೆ ನಡೆಸಿ ತಕ್ಷಣ ಕೆಪಿಸಿಸಿಗೆ ವರದಿಯನ್ನು ಸಲ್ಲಿಸಬೇಕು ಎಂದು ಅಧ್ಯಕ್ಷರು ಸೂಚಿಸಿದ್ದಾರೆ. ಮಾಜಿ ಸಚಿವ ಶಾಮನೂರು ಶಿವಶಂಕರಪ್ಪ ನಿಧನದ ಬಳಿಕ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರ, ಮತ್ತೋರ್ವ ಮಾಜಿ ಸಚಿವ ವೆ.ಎಸ್.ಮೇಟಿ ನಿಧನದ ಬಳಿಕ ಬಾಗಲಕೋಟೆ ವಿಧಾನಸಭಾ ಕ್ಷೇತ್ರ ತೆರವಾಗಿದ್ದವು. ಇದೀಗ ಶೀಘ್ರದಲ್ಲಿಯೇ ಚುನಾವಣೆ ನಡೆಸಲು ಚುನಾವಣಾ ಆಯೋಗ ಮುಂದಾಗಿರುವ ಹಿನ್ನೆಲೆ ಉಸ್ತುವಾರಿ ಸಮಿತಿ ನೇಮಕ ಮಾಡಲಾಗಿದೆ. ದಾವಣಗೆರೆ ದಕ್ಷಿಣ ಸಮಿತಿಯ ಸಂಚಾಲಕರಾಗಿ ವಿಧಾನ ಪರಿಷತ್ತಿನ ಸದಸ್ಯ ಮಂಜುನಾಥ್ ಭಂಡಾರಿ ಅವರನ್ನು ನೇಮಿಸಲಾಗಿದ್ದು, ಸಚಿವರಾದ ಎಸ್.ಎಸ್.ಮಲ್ಲಿಕಾರ್ಜುನ, ಕೆ.ಎಚ್.ಮುನಿಯಪ್ಪ, ಬಿ.ಝೆಡ್.ಝಮೀರ್ ಅಹ್ಮದ್ ಖಾನ್, ಈಶ್ವರ್ ಖಂಡ್ರೆ, ಕೃಷ್ಣ ಭೈರೇಗೌಡ, ಶರಣಪ್ರಕಾಶ್ ಪಾಟೀಲ್, ಪ್ರಿಯಾಂಕ್ ಖರ್ಗೆ, ಲಕ್ಷ್ಮೀ ಹೆಬ್ಬಾಳ್ಕರ್, ಸಂತೋಷ್ ಲಾಡ್, ಮಧುಬಂಗಾರಪ್ಪ, ವಿಧಾನ ಪರಿಷತ್ತಿನ ಆಡಳಿತ ಪಕ್ಷದ ಮುಖ್ಯ ಸಚೇತಕ ಸಲೀಂ ಅಹ್ಮದ್, ಶಾಸಕ ತನ್ವೀರ್ ಸೇಠ್, ವಿ.ಆರ್.ಸುದರ್ಶನ್,ಎಚ್.ಎಂ.ರೇವಣ್ಣ, ಎಚ್.ಆಂಜನೇಯ ಸಮಿತಿಯಲ್ಲಿದ್ದಾರೆ. ಬಾಗಲಕೋಟೆ ಉಪ ಚುನಾವಣೆ ಉಸ್ತುವಾರಿ ಸಮಿತಿಯ ಸಂಚಾಲಕರಾಗಿ ವಿಧಾನ ಪರಿಷತ್ತಿನ ಸದಸ್ಯ ವಸಂತ ಕುಮಾರ್ ಅವರನ್ನು ನೇಮಿಸಲಾಗಿದೆ. ಸಚಿವರಾದ ಆರ್.ಬಿ.ತಿಮ್ಮಾಪುರ, ಸತೀಶ್ ಜಾರಕಿಹೊಳಿ, ಎಂ.ಬಿ.ಪಾಟೀಲ್, ಶಿವಾನಂದ ಪಾಟೀಲ್, ಶಿವರಾಜ್ ತಂಗಡಗಿ, ಶರಣಬಸಪ್ಪ ದರ್ಶನಾಪುರ, ಭೈರತಿ ಸುರೇಶ್, ರಹೀಂ ಖಾನ್, ಶಾಸಕರಾದ ವಿಜಯಾನಂದ ಕಾಶಪ್ಪನವರ್, ಸಿ.ಎಸ್.ನಾಡಗೌಡ, ಮಾಜಿ ಸಚಿವ ರಾಜಶೇಖರ್ ಪಾಟೀಲ್, ಪರಿಷತ್ತಿನ ಸದಸ್ಯರಾದ ಎಫ್.ಎಚ್.ಜಕ್ಕಪ್ಪನವರ್, ಬಸನಗೌಡ ಬಾದರ್ಲಿ, ಹಾಗೂ ಕಾಂಗ್ರೆಸ್ ಮುಖಂಡ ಸೋಮಣ್ಣ ಬೇವಿನಮರದ ಸಮಿತಿಯಲ್ಲಿದ್ದಾರೆ.
ಬಿಹಾರ | ಥಳಿಸಿ, ಮೂತ್ರ ಕುಡಿಸಿದ ದುಷ್ಕರ್ಮಿಗಳು : ಗಂಭೀರವಾಗಿ ಗಾಯಗೊಂಡಿದ್ದ ಮಹಿಳೆ ಮೃತ್ಯು
ಪಾಟ್ನಾ, ಮಾ. 8: ಬಿಹಾರದ ಮಧುಬನಿ ಜಿಲ್ಲೆಯಲ್ಲಿ ಗ್ರಾಮ ಮುಖ್ಯಸ್ಥೆಯ ಪುತ್ರನ ನೇತೃತ್ವದ ಗುಂಪಿನಿಂದ ಬರ್ಬರವಾಗಿ ಹಲ್ಲೆಗೊಳಗಾದ ಮಹಿಳೆಯೊಬ್ಬರು ಅನಂತರ ಮೃತಪಟ್ಟಿದ್ದಾರೆ ಎಂದು ‘ಮಖ್ತೂಬ್ ಮೀಡಿಯಾ’ ಶನಿವಾರ ವರದಿ ಮಾಡಿದೆ. ಮೃತಪಟ್ಟ ಮಹಿಳೆಯನ್ನು ರೋಶನ್ ಖಾತೂನ್ ಎಂದು ಗುರುತಿಸಲಾಗಿದೆ. ಇವರು ಮಧುಬನಿಯ ಘೋಘಡದಿಹದ ಅಮ್ಹಿ ಗ್ರಾಮದ ನಿವಾಸಿ ಎಂದು ಅದು ವರದಿ ಮಾಡಿದೆ. ಪೊಲೀಸ್ ಅಧಿಕಾರಿಗಳು ಹಾಗೂ ಪ್ರತ್ಯಕ್ಷದರ್ಶಿಗಳನ್ನು ಉಲ್ಲೇಖಿಸಿದ ವರದಿ ಪ್ರಕಾರ, ಖಾತೂನ್ ಅವರು ಸ್ಥಳೀಯ ವಿವಾದವೊಂದನ್ನು ಪರಿಹರಿಸಲು ಗ್ರಾಮದ ಮುಖ್ಯಸ್ಥೆ ಕುಮಾರಿ ದೇವಿ ಅವರನ್ನು ಭೇಟಿಯಾಗಲು ಫೆಬ್ರವರಿ 28ರಂದು ತೆರಳಿದ್ದರು. ಈ ಸಂದರ್ಭ ಕುಮಾರಿ ದೇವಿ ಅವರ ಪುತ್ರ ಮನು ಸಿಂಗ್ ಗುಂಪಿನೊಂದಿಗೆ ಸೇರಿ ಖಾತೂನ್ ಅವರಿಗೆ ಹಲ್ಲೆ ನಡೆಸಿದ್ದಾನೆ. ಇದರಿಂದ ಗಂಭೀರ ಗಾಯಗೊಂಡ ಖಾತೂನ್ ಅವರು ಪಾಟ್ನಾ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆಯಲ್ಲಿ ಮಾರ್ಚ್ 1ರಂದು ಮೃತಪಟ್ಟಿದ್ದಾರೆ. ಸ್ಥಳೀಯ ಡಿಜಿಟಲ್ ಸುದ್ದಿ ಪತ್ರಿಕೆ ‘ಮಿಥ್ಲಾ ಸಮಾಚಾರ್’ ವರದಿ ಪ್ರಕಾರ ಮಹಿಳೆ ರಂಝಾನ್ ಪವಿತ್ರ ತಿಂಗಳಿನ ಉಪವಾಸದಲ್ಲಿದ್ದಾಗ ಅವರಿಗೆ ಥಳಿಸಲಾಗಿದೆ. ಅವರು ನೀರು ಕೇಳಿದಾಗ ಗುಂಪು ಮೂತ್ರ ಬೆರೆಸಿದ ಮಧ್ಯವನ್ನು ಕುಡಿಯುವಂತೆ ಬಲವಂತಪಡಿಸಿದೆ. ‘ಮಖ್ತೂಬ್ ಮೀಡಿಯಾ’ ಉಲ್ಲೇಖಿಸಿದ ಪ್ರತ್ಯಕ್ಷದರ್ಶಿಗಳ ಪ್ರಕಾರ, ದಾಳಿಕೋರರು ಖಾತೂನ್ ಅವರನ್ನು ಕಂಬಕ್ಕೆ ಕಟ್ಟಿದ್ದಾರೆ ಹಾಗೂ ತೀವ್ರವಾಗಿ ಥಳಿಸಿದ್ದಾರೆ. ಹಲ್ಲೆಯ ಸಂದರ್ಭ ಗುಂಪಿನಲ್ಲಿದ್ದವರು ಅವರನ್ನು ನಿಂದಿಸಿದ್ದಾರೆ. ಈ ಘಟನೆ ಹಿನ್ನೆಲೆಯಲ್ಲಿ ಖಾತೂನ್ ಅವರ ಪತಿ ಆರೋಪಿಗಳಿಗೆ ಮರಣ ದಂಡನೆ ವಿಧಿಸುವಂತೆ ಆಗ್ರಹಿಸಿದ್ದಾರೆ. ಘಟನೆಗೆ ಸಂಬಂಧಿಸಿ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.
ಜಿಬಿಎ ಚುನಾವಣೆ: 369 ವಾರ್ಡ್ಗಳ ಅಂತಿಮ ಮೀಸಲಾತಿ ಪಟ್ಟಿ ಪ್ರಕಟ
ಬೆಂಗಳೂರು : ರಾಜ್ಯ ಸರಕಾರವು ಗ್ರೇಟರ್ ಬೆಂಗಳೂರು ಪ್ರಾಧಿಕಾರ(ಜಿಬಿಎ)ದ ಐದು ಪಾಲಿಕೆಗಳ ಚುನಾವಣೆಗೆ ಸಂಬಂಧಿಸಿದಂತೆ ವಾರ್ಡ್ವಾರು ಅಂತಿಮ ಮೀಸಲಾತಿ ಪಟ್ಟಿ ಪ್ರಕಟಿಸಿದ್ದು, ಶೇ.47ರಷ್ಟು ಸ್ಥಾನಗಳನ್ನು ಮಹಿಳೆಯರಿಗೆ ಮೀಸಲಿಡಲಾಗಿದೆ. ಜಿಬಿಎನ ಒಟ್ಟು 369 ವಾರ್ಡ್ಗಳ ಪೈಕಿ ವಿವಿಧ ವರ್ಗಗಳ 176 ವಾರ್ಡ್ಗಳು ಮಹಿಳೆಯರಿಗೆ ಮೀಸಲಿಡಲಾಗಿದೆ. ಪರಿಶಿಷ್ಟ ಜಾತಿಗೆ 43, ಪರಿಶಿಷ್ಟ ಪಂಗಡಕ್ಕೆ 7, ಹಿಂದುಳಿದ ವರ್ಗಗಳಿಗೆ 121 ವಾರ್ಡ್ ಮತ್ತು ಉಳಿದ ವಾರ್ಡ್ಗಳನ್ನು ಸಾಮಾನ್ಯ ವರ್ಗಕ್ಕೆ ಮೀಸಲಿಡಲಾಗಿದೆ. ಬೆಂಗಳೂರು ಕೇಂದ್ರ ನಗರ ಪಾಲಿಕೆಯಲ್ಲಿ ಒಟ್ಟು 63 ವಾರ್ಡ್ಗಳಿದ್ದು, ಪರಿಶಿಷ್ಟ ಜಾತಿಗೆ 11(5 ಮಹಿಳೆ), ಪರಿಶಿಷ್ಟ ಪಂಗಡಕ್ಕೆ 1, ಹಿಂದುಳಿದ ವರ್ಗ-ಎಗೆ 15(ಮಹಿಳೆ 7), ಹಿಂದುಳಿದ ವರ್ಗ-ಬಿಗೆ 4 (ಮಹಿಳೆ 2) ಸಾಮಾನ್ಯ ವರ್ಗಕ್ಕೆ 32 (ಮಹಿಳೆ 16) ವಾರ್ಡ್ಗಳನ್ನು ಮೀಸಲಿಡಲಾಗಿದೆ. ಬೆಂಗಳೂರು ಪೂರ್ವ ನಗರ ಪಾಲಿಕೆಯಲ್ಲಿ ಒಟ್ಟು 50 ವಾರ್ಡ್ಗಳಿದ್ದು, ಪರಿಶಿಷ್ಟ ಜಾತಿಗೆ 7 (ಮಹಿಳೆ 3), ಪರಿಶಿಷ್ಟ ಪಂಗಡಕ್ಕೆ 1, ಹಿಂದುಳಿದ ವರ್ಗ- ಎಗೆ 14 (ಮಹಿಳೆ 7), ಹಿಂದುಳಿದ ವರ್ಗ-ಬಿಗೆ 3 (ಮಹಿಳೆ 1), ಸಾಮಾನ್ಯ ವರ್ಗಕ್ಕೆ 25 (ಮಹಿಳೆ 12) ವಾರ್ಡ್ಗಳನ್ನು ಮೀಸಲಿಡಲಾಗಿದೆ. ಬೆಂಗಳೂರು ಪಶ್ಚಿಮ ನಗರ ಪಾಲಿಕೆಯಲ್ಲಿ ಒಟ್ಟು 112 ವಾರ್ಡ್ಗಳಿದ್ದು, ಪರಿಶಿಷ್ಟ ಜಾತಿಗೆ 9 (ಮಹಿಳೆ 4), ಪರಿಶಿಷ್ಟ ಪಂಗಡಕ್ಕೆ 2 (ಮಹಿಳೆ 1), ಹಿಂದುಳಿದ ವರ್ಗ-ಎಗೆ 30 (ಮಹಿಳೆ 15), ಹಿಂದುಳಿದ ವರ್ಗ-ಬಿಗೆ 7 (ಮಹಿಳೆ 3), ಸಾಮಾನ್ಯ ವರ್ಗಕ್ಕೆ 64 (ಮಹಿಳೆ 32) ವಾರ್ಡ್ಗಳನ್ನು ಮೀಸಲಿಡಲಾಗಿದೆ. ಬೆಂಗಳೂರು ಉತ್ತರ ನಗರ ಪಾಲಿಕೆ ಪಾಲಿಕೆಯಲ್ಲಿ ಒಟ್ಟು 72 ವಾರ್ಡ್ಗಳಿದ್ದು, ಪರಿಶಿಷ್ಟ ಜಾತಿಗೆ 9 (ಮಹಿಳೆ 4), ಪರಿಶಿಷ್ಟ ಪಂಗಡಕ್ಕೆ 2 (ಮಹಿಳೆ 1), ಹಿಂದುಳಿದ ವರ್ಗ-ಎಗೆ 19 (ಮಹಿಳೆ 9), ಹಿಂದುಳಿದ ವರ್ಗ-ಬಿಗೆ 5 (ಮಹಿಳೆ 2), ಸಾಮಾನ್ಯ ವರ್ಗಕ್ಕೆ 37 (ಮಹಿಳೆ 18) ವಾರ್ಡ್ಗಳನ್ನು ಮೀಸಲಿಡಲಾಗಿದೆ. ಬೆಂಗಳೂರು ದಕ್ಷಿಣ ನಗರ ಪಾಲಿಕೆಯಲ್ಲಿ ಒಟ್ಟು 72ವಾರ್ಡ್ಗಳಿದ್ದು, ಪರಿಶಿಷ್ಟ ಜಾತಿಗೆ 7 (ಮಹಿಳೆ 3), ಪರಿಶಿಷ್ಟ ಪಂಗಡಕ್ಕೆ 1, ಹಿಂದುಳಿದ ವರ್ಗ-ಎಗೆ 19 (ಮಹಿಳೆ 9), ಹಿಂದುಳಿದ ವರ್ಗ-ಬಿಗೆ 5 (ಮಹಿಳೆ 2), ಸಾಮಾನ್ಯ ವರ್ಗಕ್ಕೆ 40 (ಮಹಿಳೆ 20) ವಾರ್ಡ್ಗಳನ್ನು ಮೀಸಲಿಡಲಾಗಿದೆ.
ತಾಂತ್ರಿಕ ದೋಷ | ಉತ್ತರಾಖಂಡ ರಾಜ್ಯಪಾಲ ಗುರ್ಮಿತ್ ಸಿಂಗ್ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ತುರ್ತು ಭೂಸ್ಪರ್ಶ
ಡೆಹ್ರಾಡೂನ್, ಮಾ. 8: ಉತ್ತರಾಖಂಡದ ರಾಜ್ಯಪಾಲ ಲೆಫ್ಟಿನೆಂಟ್ ಜನರಲ್ ಗುರ್ಮಿತ್ ಸಿಂಗ್ (ನಿವೃತ್ತ) ಅವರು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ತಾಂತ್ರಿಕ ದೋಷದ ಹಿನ್ನೆಲೆಯಲ್ಲಿ ಶ್ರೀನಗರದ ಜಿವಿಕೆ ಹೆಲಿಪ್ಯಾಡ್ನಲ್ಲಿ ರವಿವಾರ ತುರ್ತು ಭೂಸ್ಪರ್ಶ ಮಾಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪೌರಿ ಪೊಲೀಸ್ ಠಾಣೆಯ ಪೊಲೀಸರಿಂದ ಸ್ವೀಕರಿಸಲಾದ ಮಾಹಿತಿಯ ಪ್ರಕಾರ, ಹಾರಾಟದ ಸಂದರ್ಭ ಹೆಲಿಕಾಪ್ಟರ್ನಲ್ಲಿ ಕೆಲವು ತಾಂತ್ರಿಕ ದೋಷಗಳು ಕಾಣಸಿಕೊಂಡಿವೆ. ಮುನ್ನೆಚ್ಚರಿಕೆ ಕ್ರಮವಾಗಿ ಪೈಲಟ್ ಹೆಲಿಕಾಪ್ಟರ್ ಅನ್ನು ಶ್ರೀನಗರದ ಜಿವಿಕೆ ಹೆಲಿಪ್ಯಾಡ್ನಲ್ಲಿ ತುರ್ತು ಭೂಸ್ಪರ್ಶ ಮಾಡಿದರು. ಹೆಲಿಕಾಪ್ಟರ್ ಇಳಿದ ಬಳಿಕ ರಾಜ್ಯಪಾಲರನ್ನು ಶ್ರೀನಗರದಲ್ಲಿರುವ ಪೊಲೀಸ್ ಅತಿಥಿ ಗೃಹಕ್ಕೆ ಕರೆದೊಯ್ಯಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
T20 World Cup 2026 Final: ಶಿವಂ ದುಬೆ ಅವರ ಅಬ್ಬರದ ಬ್ಯಾಟಿಂಗ್ನ ನೆರವಿನಿಂದ ಭಾರತ ತಂಡವು 2026ರ ಟಿ20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ 255 ರನ್ಗಳ ಬೃಹತ್ ಮೊತ್ತ ಕಲೆಹಾಕಿದೆ. ಇನ್ನಿಂಗ್ಸ್ನ ಅಂತಿಮ ಹಂತದಲ್ಲಿ ಕಣಕ್ಕಿಳಿದ ಎಡಗೈ ಬ್ಯಾಟರ್ ಶಿವಂ ದುಬೆ, ಕೇವಲ 8 ಎಸೆತಗಳಲ್ಲಿ ಅಜೇಯ 26 ರನ್ ಚಚ್ಚುವ ಮೂಲಕ
ನಾಳೆಯಿಂದ ಸಂಸತ್ತಿನ ಬಜೆಟ್ ಅಧಿವೇಶನ ಪುನರಾರಂಭ
ಹೊಸದಿಲ್ಲಿ,ಮಾ.8: ಸಂಸತ್ತಿನ ಬಜೆಟ್ ಅಧಿವೇಶನ ಸೋಮವಾರದಿಂದ ಪುನರಾರಂಭಗೊಳ್ಳಲಿದ್ದು,ಪ್ರತಿಪಕ್ಷಗಳು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರ ಪದಚ್ಯುತಿಯನ್ನು ಕೋರಿ ಸಲ್ಲಿಸಿರುವ ನಿರ್ಣಯವನ್ನು ಮೊದಲನೇ ದಿನವೇ ಸದನವು ಕೈಗೆತ್ತಿಕೊಳ್ಳಲಿದೆ. ಇದೇ ವೇಳೆ ಇರಾನ್,ಎಪ್ಸ್ಟೀನ್ ಫೈಲ್ಗಳು ಮತ್ತು ಭಾರತ-ಅಮೆರಿಕ ವ್ಯಾಪಾರ ಒಪ್ಪಂದ ಕುರಿತು ಮೋದಿ ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಪ್ರತಿಪಕ್ಷಗಳು ತಮ್ಮ ಬತ್ತಳಿಕೆಯನ್ನು ಸಜ್ಜುಗೊಳಿಸಿವೆ. ಎ.2ರಂದು ಅಂತ್ಯಗೊಳ್ಳಲಿರುವ ಬಜೆಟ್ ಅಧಿವೇಶನದ ಉತ್ತರಾರ್ಧವು ಭಾರೀ ಝಟಾಪಟಿಗೆ ಸಾಕ್ಷಿಯಾಗಲಿದೆ. ವಿಶೇಷವಾಗಿ ತಮಿಳುನಾಡು, ಕೇರಳ,ಪುದುಚೇರಿ,ಅಸ್ಸಾಂ ಮತ್ತು ಪಶ್ಚಿಮ ಬಂಗಾಳಗಳಲ್ಲಿ ವಿಧಾನಸಭಾ ಚುನಾವಣೆಗಳು ಸನ್ನಿಹಿತವಾಗಿರುವ ಹಿನ್ನೆಲೆಯಲ್ಲಿ ಪ್ರತಿಪಕ್ಷಗಳ ಮೇಲೆ ದಾಳಿ ನಡೆಸಲು ಮೋದಿ ಸರಕಾರವು ಸಂಸದೀಯ ವೇದಿಕೆಯನ್ನು ಬಳಸಿಕೊಳ್ಳಲಿದೆ. ತನ್ನ ಆಕ್ರಮಣಕಾರಿ ನಿಲುವಿನ ಬಗ್ಗೆ ಈಗಾಗಲೇ ಸಂಕೇತ ನೀಡಿರುವ ಬಿಜೆಪಿ ಪ.ಬಂಗಾಳದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಕಾರ್ಯಕ್ರಮದಲ್ಲಿ ಶಿಷ್ಟಾಚಾರ ಉಲ್ಲಂಘನೆಯ ಪ್ರಸಂಗವನ್ನು ಬಳಸಿಕೊಳ್ಳುವ ಅವಕಾಶವನ್ನು ತಾನು ಬಿಟ್ಟುಕೊಡುವುದಿಲ್ಲ ಎಂಬ ಇಂಗಿತವನ್ನು ವ್ಯಕ್ತಪಡಿಸಿದ್ದು,ಇದನ್ನು ಎದುರಿಸಲು ಟಿಎಂಸಿ ಸಜ್ಜಾಗಿದೆ. ಬಿಜೆಪಿಯು ಕಾಂಗ್ರೆಸ್,ವಿಶೇಷವಾಗಿ ಲೊಕಸಭೆಯಲ್ಲಿ ವಿಪಕ್ಷ ನಾಯಕ ರಾಹುಲ್ ಗಾಂಧಿಯವರ ವಿರುದ್ಧ ದಾಳಿಯನ್ನೂ ಮುಂದುವರಿಸಲಿದೆ. ಮೋದಿ ಸರಕಾರವು ಪಶ್ಚಿಮ ಏಶ್ಯಾ ಬಿಕ್ಕಟ್ಟನ್ನು ನಿರ್ವಹಿಸುತ್ತಿರುವ ರೀತಿ,ಎಪ್ಸ್ಟೀನ್ ಫೈಲ್ಗಳು ಮತ್ತು ಭಾರತ-ಅಮೆರಿಕ ಒಪ್ಪಂದ ತನಗೆ ಸಾಕಷ್ಟು ಅಸ್ತ್ರಗಳನ್ನು ಒದಗಿಸಿವೆ ಎಂದು ಪ್ರತಿಪಕ್ಷವು ಭಾವಿಸಿದೆ. ತಮ್ಮ ಕಾರ್ಯತಂತ್ರವನ್ನು ಅಂತಿಮಗೊಳಿಸಲು ಪ್ರತಿಪಕ್ಷಗಳ ಸದನ ನಾಯಕರು ಸೋಮವಾರ ಬೆಳಿಗ್ಗೆ ಸಭೆ ಸೇರಲಿದ್ದಾರೆ. ಪ್ರತಿಪಕ್ಷಗಳು ಪ್ರಧಾನಿ ಮೋದಿ ವಿರುದ್ಧ ತಮ್ಮ ದಾಳಿಯನ್ನು ಇನ್ನಷ್ಟು ತೀವ್ರಗೊಳಿಸಲಿವೆ. ಇರಾನ್ ವಿರುದ್ಧ ಇಸ್ರೇಲ್-ಅಮೆರಿಕ ಜಂಟಿ ದಾಳಿಗೆ ಮುನ್ನ ಇಸ್ರೇಲ್ಗೆ ಮೋದಿ ಭೇಟಿ,ಇರಾನಿನ ಸರ್ವೋಚ್ಚ ನಾಯಕ ಆಯತೊಲ್ಲಾ ಅಲಿ ಖಾಮಿನೈ ಅವ ಹತ್ಯೆಯನ್ನು ಖಂಡಿಸುವುದರಲ್ಲಿ ವಿಳಂಬ ಮತ್ತು ಪಶ್ಚಿಮ ಏಶ್ಯಾ ಬಿಕ್ಕಟ್ಟಿನ ಹಿನ್ನಲೆಯಲ್ಲಿ ಅಡಿಗೆ ಅನಿಲದ ಬೆಲೆ ಏರಿಕೆ ಮತ್ತಿತರ ವಿಷಯಗಳನ್ನು ಪ್ರತಿಪಕ್ಷಗಳು ಪ್ರಮುಖವಾಗಿ ಎತ್ತಲಿವೆ. ಎರಡನೇ ಹಂತದ ಅಧಿವೇಶನದಲ್ಲಿ ಬಿರ್ಲಾ ಅವರ ಪದಚ್ಯುತಿಯನ್ನು ಕೋರಿ ಪ್ರತಿಕ್ಷಗಳ ಅಭೂತಪೂರ್ವ ನಿರ್ಣಯವು ಕೇಂದ್ರಬಿಂದುವಾಗಿರಲಿದೆ. ಬಿರ್ಲಾ ರಾಹುಲ್ ಗಾಂಧಿ ಮತ್ತು ಇತರ ಪ್ರತಿಪಕ್ಷ ನಾಯಕರು ಮಾತನಾಡಲು ಅವಕಾಶ ನೀಡುತ್ತಿಲ್ಲ,ಸಂಸದರನ್ನು ಅಮಾನತುಗೊಳಿಸುತ್ತಿದ್ದಾರೆ.ಮೋದಿಯವರ ಮೇಲೆ ಹಲ್ಲೆಗೆ ಮಹಿಳಾ ಸಂಸದರು ಸಂಚು ನಡೆಸಿದ್ದರು ಎಂದು ಆರೋಪಿಸಿದ್ದಾರೆ ಮತ್ತು ವಿವಾದಾತ್ಮಕ ವಿಷಯಗಳಲ್ಲಿ ಸರಕಾರವು ಹೇಳಿಕೊಟ್ಟಿರುವ ಗಿಳಿಪಾಠವನ್ನು ಒಪ್ಪಿಸುತ್ತಿದ್ದಾರೆ ಎಂದು ಪ್ರತಿಪಕ್ಷಗಳು ಆರೋಪಿಸಿವೆ. ಪ್ರತಿಪಕ್ಷದ ಬಳಿ ಸಾಕಷ್ಟು ಸಂಖ್ಯೆಯಲ್ಲಿ ಸಂಸದರಿಲ್ಲ. ಹೀಗಾಗಿ ಅವಿಶ್ವಾಸ ನಿರ್ಣಯದ ಹಣೆಬರಹ ಮೊದಲೇ ನಿರ್ಧಾರವಾಗಿದೆ. ಆದರೆ ಇದು ತನ್ನನ್ನು ಸಂಸತ್ತಿನಲ್ಲಿ ಕಡೆಗಣಿಸಲಾಗಿದೆ ಮತ್ತು ಎನ್ಡಿಎಯೇತರ ಪಕ್ಷಗಳು ಒಗ್ಗಟ್ಟಾಗಿವೆ ಎಂಬ ಸಂದೇಶವನ್ನು ರವಾನಿಸುತ್ತದೆ ಎಂದು ಪ್ರತಿಪಕ್ಷ ಭಾವಿಸಿದೆ. ಟಿಎಂಸಿ ಆರಂಭದಲ್ಲಿ ಹಿಂಜರಿದಿದ್ದರೂ ನಂತರ ಇತರ ಪ್ರತಿಪಕ್ಷಗಳೊಂದಿಗೆ ಕೈಜೋಡಿಸಿದೆ. ಬಜೆಟ್ ಅಧಿವೇಶನದ ಪೂರ್ವಾರ್ಧ ಫೆ.13ರಂದು ಅಂತ್ಯಗೊಂಡಿದ್ದು, ಫೆ.11ರಂದು ಪ್ರತಿಪಕ್ಷಗಳು ತನ್ನ ವಿರುದ್ಧ ನಿರ್ಣಯವನ್ನು ಸಲ್ಲಿಸಿದ್ದರಿಂದ ಸಾಂವಿಧಾನಿಕ ನಿಬಂಧನೆಗಳ ಪ್ರಕಾರ ಬಿರ್ಲಾ ಅವರು ಸ್ಪೀಕರ್ ಪೀಠದಲ್ಲಿ ಕುಳಿತುಕೊಳ್ಳುವುದಿಲ್ಲ, ಆದರೆ ಅವರು ಚರ್ಚೆಗೆ ಉತ್ತರಿಸಬಹುದು. ಎರಡನೇ ಹಂತದಲ್ಲಿ ಲೋಕಸಭೆ ಮತ್ತು ರಾಜ್ಯಸಭೆ ಬಜೆಟ್ ಅಂಗೀಕಾರಕ್ಕೆ ಮುನ್ನ ಆರರಿಂದ ಎಂಟು ಸಚಿವಾಲಯಗಳ ಅನುದಾನ ಬೇಡಿಕೆಗಳನ್ನು ಚರ್ಚಿಸಲಿವೆ. ಅಧಿವೇಶನದ ಉಳಿದ ಅವಧಿಯಲ್ಲಿ ಸರಕಾರವು ‘ಪ್ರಮುಖ’ ಮಸೂದೆಯೊಂದನ್ನು ಮಂಡಿಸುವ ಸಾಧ್ಯತೆಯಿದೆ. ಕಳೆದ ತಿಂಗಳು ಈ ಬಗ್ಗೆ ಸುಳಿವು ನೀಡಿದ್ದ ಸಂಸದೀಯ ವ್ಯವಹಾರಗಳ ಸಚಿವ ಕಿರಣ ರಿಜಿಜು ಹೆಚ್ಚಿನ ವಿವರಗಳನ್ನು ಒದಗಿಸಿರಲಿಲ್ಲ. ಸರಕಾರವು ವಿದ್ಯುತ್ ತಿದ್ದುಪಡಿ ಮಸೂದೆಯನ್ನೂ ಮಂಡಿಸುವ ಸಾಧ್ಯತೆಯಿದೆ.
ಇರಾನ್ ವಿರುದ್ಧದ ಯುದ್ಧದಲ್ಲಿ ಬ್ರಿಟನ್ನ ನೆರವಿನ ಅಗತ್ಯವಿಲ್ಲ: ಡೊನಾಲ್ಡ್ ಟ್ರಂಪ್
ವಾಶಿಂಗ್ಟನ್,ಮಾ.8: ಇರಾನ್ ವಿರುದ್ಧ ಅಮೆರಿಕ-ಇಸ್ರೇಲ್ ಮಿಲಿಟರಿ ಕಾರ್ಯಾಚರಣೆ ನಡೆಸಿದ ಆರಂಭದಲ್ಲಿ ವಿರೋಧಿಸಿದ್ದ ಬ್ರಿಟನ್ ಅಧ್ಯಕ್ಷ ಕೀರ್ ಸ್ಟಾರ್ಮರ್, ಇದೀಗ ಅಮೆರಿಕಕ್ಕೆ ನೆರವಾಗಲು ಎರಡು ಯುದ್ಧ ವಿಮಾನ ವಾಹಕ ನೌಕೆಗಳನ್ನು ಕಳುಹಿಸಲು ಮುಂದಾಗಿರುವುದನ್ನು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತೀವ್ರವಾಗಿ ಟೀಕಿಸಿದ್ದಾರೆ. ಯುದ್ಧ ಗೆದ್ದ ಬಳಿಕ ಜೊತೆಗೂಡಲು ಬರುವಂತಹ ಜನರು ಅಮೆರಿಕ ಸೇನೆಗೆ ಬೇಕಾಗಿಲ್ಲವೆಂದು ಮತ್ತು ಅವರ ನೆರವಿನ ಅಗತ್ಯವಿಲ್ಲವೆಂದು ಕಟುವಾಗಿ ಹೇಳಿದ್ದಾರೆ. ಇರಾನ್ ಜೊತೆಗಿನ ಸಂಘರ್ಷದಲ್ಲಿ ಬ್ರಿಟನ್ನ ಬೆಂಬಲದ ಕೊರತೆಯನ್ನು ನಾನು ಯಾವತ್ತೂ ನೆನಪಿಟ್ಟುಕೊಳ್ಳುವುದಾಗಿ ಟ್ರಂಪ್ ಹೇಳಿದ್ದಾರೆ. ಇರಾನ್ ಮೇಲೆ ದಾಳಿ ನಡೆಸಲು ಬ್ರಿಟಿಷ್ ಸೇನಾ ನೆಲೆಗಳನ್ನು ಬಳಸಿಕೊಳ್ಳುವುದಕ್ಕೆ ಆರಂಭದಲ್ಲಿ ಕೀರ್ಸ್ಟಾರ್ಮರ್ ತಡೆಯೊಡ್ಡಿದ್ದಕ್ಕಾಗಿ ಟ್ರಂಪ್ ಅವರು ಬ್ರಿಟನ್ ಸರಕಾರವನ್ನು ತೀವ್ರವಾಗಿ ಟೀಕಿಸಿದ್ದರು.

29 C