PUC ವಿದ್ಯಾರ್ಥಿಗಳ ಗಮನಕ್ಕೆ: ದ್ವಿತೀಯ ಪಿಯುಸಿ ಫಲಿತಾಂಶ ಸುಧಾರಣೆಗೆ ಇನ್ಮುಂದೆ 2 ವರ್ಷ ಮಾತ್ರ ಅವಕಾಶ
ಬೆಂಗಳೂರು: ರಾಜ್ಯದ ದ್ವಿತೀಯ ಪಿಯುಸಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಕರ್ನಾಟಕ ಸರ್ಕಾರ ಮಹತ್ವದ ಮಾಹಿತಿಯೊಂದನ್ನು ನೀಡಿದೆ. ವಿದ್ಯಾರ್ಥಿಗಳು ತಮ್ಮ ವಾರ್ಷಿಕ ಪರೀಕ್ಷೆಯ ಫಲಿತಾಂಶವನ್ನು ಸುಧಾರಿಸಿಕೊಳ್ಳಲು ನೀಡಲಾಗುತ್ತಿದ್ದ ಅವಕಾಶಗಳ ನಿಯಮದಲ್ಲಿ ಮಹತ್ತರ ಬದಲಾವಣೆ ತರಲಾಗಿದ್ದು, ಇನ್ಮುಂದೆ ಕೇವಲ ಎರಡು ವರ್ಷಗಳ ಕಾಲಾವಕಾಶವನ್ನು ಮಾತ್ರ ನೀಡಲು ಶಿಕ್ಷಣ ಇಲಾಖೆ ಅಧಿಕೃತ ಆದೇಶ ಹೊರಡಿಸಿದೆ. ಹೊಸ ನಿಯಮದಲ್ಲೇನಿದೆ? ಹೊಸ ನಿಯಮದ ಪ್ರಕಾರ,
92,00,00,000 ರೂಪಾಯಿ ಬಹುಮಾನ, ಈತನ ಬಗ್ಗೆ ಸುಳಿವು ನೀಡಿದರೆ ನಿಮಗೂ ಸಿಗಲಿದೆ ಹಣ... Mojtaba Khamenei
ಕೋಟಿ ರೂಪಾಯಿ ಅಂದ್ರೆ ಬೆಲೆ ಇಲ್ಲದ ಪರಿಸ್ಥಿತಿ ನಿರ್ಮಾಣ ಆಗುತ್ತಿದೆ, ಒಂದು ಕಡೆ ಡಾಲರ್ ಎದುರು ರೂಪಾಯಿ ಬೆಲೆ ಕುಸಿತ ಹಾಗೂ ಇನ್ನೊಂದು ಕಡೆ ಯುದ್ಧದ ಕಾರಣಕ್ಕೆ ಆರ್ಥಿಕತೆಯಲ್ಲಿ ಭಾರಿ ದೊಡ್ಡ ಅಲ್ಲೋಲ ಕಲ್ಲೋಲವೇ ಸೃಷ್ಟಿಯಾಗಿದೆ. ಇಂತಹ ಸಮಯದಲ್ಲಿ ಷೇರು ಮಾರುಕಟ್ಟೆ ಕೂಡ ಕುಸಿದು ಬೀಳುತ್ತಿದ್ದು, ಇರಾನ್ ವಿರುದ್ಧ ಅಮೆರಿಕ ಹಾಗೂ ಇಸ್ರೇಲ್ ಒಟ್ಟಾಗಿ ಶುರು ಮಾಡಿರುವ
ಮಧ್ಯಪ್ರಾಚ್ಯ ಸಂಘರ್ಷದ ನಡುವೆ ವೀಡಿಯೊ ಹಂಚಿಕೆ: ಯುಎಇಯಲ್ಲಿ 10 ಮಂದಿ ಬಂಧನ
ಅಬುಧಾಬಿ: ನಡೆಯುತ್ತಿರುವ ಸಂಘರ್ಷದ ಹಿನ್ನೆಲೆ ಸಾಮಾಜಿಕ ಮಾಧ್ಯಮಗಳಲ್ಲಿ ನೈಜ ಹಾಗೂ AI ವೀಡಿಯೊಗಳನ್ನು ಹಂಚಿಕೊಂಡ ಆರೋಪದ ಮೇಲೆ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಸರ್ಕಾರವು ವಿವಿಧ ರಾಷ್ಟ್ರೀಯತೆಗಳಿಗೆ ಸೇರಿದ 10 ಮಂದಿಯನ್ನು ಬಂಧಿಸಿದೆ ಎಂದು Aljazeera ವರದಿ ಮಾಡಿದೆ. ಯುಎಇಯ ಅಧಿಕೃತ ಸುದ್ದಿ ಸಂಸ್ಥೆ WAM ನೀಡಿರುವ ಮಾಹಿತಿಯಂತೆ, ಆರೋಪಿತರು ಹಂಚಿಕೊಂಡ ವೀಡಿಯೊಗಳಲ್ಲಿ ಯುಎಇ ವಾಯು ರಕ್ಷಣಾ ವ್ಯವಸ್ಥೆಯನ್ನು ನಿಯೋಜಿಸಿರುವುದು ಅಥವಾ ಪ್ರೊಜೆಕ್ಟೈಲ್ ಗಳಿಂದ ದಾಳಿಗೊಳಗಾದಂತೆ ತೋರಿಸುವ ದೃಶ್ಯಗಳು ಸೇರಿವೆ. ಇದಲ್ಲದೆ, ಕೃತಕ ಬುದ್ಧಿಮತ್ತೆ (AI) ಬಳಸಿ ನಿರ್ಮಿಸಿದ ನಕಲಿ ಸ್ಫೋಟಗಳು, ಬೆಂಕಿ ಅವಘಡಗಳು ಹಾಗೂ ಪ್ರಮುಖ ಹೆಗ್ಗುರುತುಗಳ ಮೇಲೆ ದಾಳಿ ನಡೆದಂತೆ ತೋರಿಸುವ ದೃಶ್ಯಗಳೂ ಒಳಗೊಂಡಿವೆ. ಇಂತಹ ನೈಜ ಅಥವಾ ಕೃತಕ ವೀಡಿಯೊಗಳನ್ನು ಹಂಚುವುದರಿಂದ ಜನರಲ್ಲಿ ಗೊಂದಲ ಉಂಟಾಗುತ್ತದೆ ಮತ್ತು ಸಾರ್ವಜನಿಕ ಭದ್ರತೆಯ ಮೇಲೆ ಪರಿಣಾಮ ಬೀರುತ್ತದೆ. ಜೊತೆಗೆ, ಇವು ಸರ್ಕಾರದ ಮೇಲಿನ ವಿಶ್ವಾಸವನ್ನು ಕುಗ್ಗಿಸುವಂತಹ ವಿಷಯವನ್ನು ಹರಡುತ್ತವೆ ಎಂದು ಸಾರ್ವಜನಿಕ ಅಭಿಯೋಜಕರು ತಿಳಿಸಿದ್ದಾರೆ. “ಉದ್ದೇಶಪೂರ್ವಕ ವಂಚನೆ, ಸಾರ್ವಜನಿಕ ಭದ್ರತೆಯ ಮೇಲೆ ದಾಳಿ, ಜನರಲ್ಲಿ ಭಯ ಹುಟ್ಟಿಸುವುದು ಹಾಗೂ ಸಾಮಾಜಿಕ ಶಾಂತಿಯನ್ನು ಭಂಗಪಡಿಸುವುದು” ಎಂಬ ಆರೋಪಗಳಡಿ ಬಂಧಿತರಾದವರಿಗೆ ಕನಿಷ್ಠ ಒಂದು ವರ್ಷದ ಜೈಲು ಶಿಕ್ಷೆ ವಿಧಿಸುವ ಸಾಧ್ಯತೆ ಇದೆ. ಜೊತೆಗೆ 1,00,000 ದಿರ್ಹಮ್ ದಂಡ (ಸುಮಾರು 24 ಲಕ್ಷ ರೂಪಾಯಿ ) ವಿಧಿಸಬಹುದು ಎಂದು WAM ವರದಿ ತಿಳಿಸಿದೆ.
ಬಿಸಿಲು, ಬಿಸಿಗಾಳಿಯಿಂದ ತುಮಕೂರು ತತ್ತರ ; ಹೀಟ್ ವೇವ್ ಆತಂಕ, ಇರಲಿ ಮುನ್ನೆಚ್ಚರಿಕೆ
ಬೇಸಿಗೆಯಲ್ಲಿ ಅಧಿಕ ಉಷ್ಣಾಂಶ ದಾಖಲಾಗುತ್ತಿದ್ದು, ಹೀಟ್ ವೇವ್ ಸ್ಟ್ರೋಕ್ನಿಂದಾಗಿ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಇದೆ. ಹಾಗಾಗಿ ಸಾರ್ವಜನಿಕರು ಅಗತ್ಯ ಮುಂಜಾಗ್ರತೆ ವಹಿಸಬೇಕು. ಸಾರ್ವಜನಿಕರು ರೇಡಿಯೋ, ಟಿವಿ, ದಿನಪತ್ರಿಕೆಗಳಲ್ಲಿ ಬರುವ ಅತಿಯಾದ ಬಿಸಿಲಿನ ಕುರಿತು ಮುನ್ಸೂಚನೆಗಳನ್ನು ಗಮನಿಸಬೇಕು, ಬಾಯಾರಿಕೆಯಿಲ್ಲದಿದ್ದರೂ ಸಾಕಷ್ಟು ಮತ್ತು ಸಾಧ್ಯವಾದಷ್ಟು ಹೆಚ್ಚಾಗಿ ನೀರನ್ನು ಕುಡಿಯಬೇಕು, ಹಗುರವಾದ, ತಿಳಿ ಬಣ್ಣದ ಸಡಿಲ ಮತ್ತು ರಂಧ್ರವುಳ್ಳ ಹತ್ತಿ ಬಟ್ಟೆಗಳನ್ನು ಧರಿಸಬೇಕು. ಬಿಸಿಲಿನಲ್ಲಿ ಹೋಗುವಾಗ ರಕ್ಷಣಾತ್ಮಕ ಕನ್ನಡಕಗಳು, ಛತ್ರಿ/ಟೋಪಿ, ಬೂಟುಗಳು ಅಥವಾ ಚಪ್ಪಲಿ ಬಳಸಬೇಕು.
ಚೀನಾದ ಕರೆನ್ಸಿಯಲ್ಲಿ ವ್ಯಾಪಾರ ಮಾಡಿದರೆ ಹಾರ್ಮುಝ್ ಜಲಸಂಧಿಯಲ್ಲಿ ತೈಲ ಟ್ಯಾಂಕರ್ ಸಂಚಾರಕ್ಕೆ ಸಡಿಲಿಕೆ: ವರದಿ
ಹೊಸದಿಲ್ಲಿ: ಚೀನಾದ ಕರೆನ್ಸಿಯಾದ ಯುವಾನ್ ನಲ್ಲಿ ಸರಕುಗಳ ವ್ಯಾಪಾರ ನಡೆಸುವ ದೇಶಗಳಿಗೆ ಹಾರ್ಮುಝ್ ಜಲಸಂಧಿಯ ಮೂಲಕ ಸೀಮಿತ ಸಂಖ್ಯೆಯ ತೈಲ ಟ್ಯಾಂಕರ್ ಗಳನ್ನು ಹಾದುಹೋಗಲು ಇರಾನ್ ಅವಕಾಶ ನೀಡುವ ಸಾಧ್ಯತೆ ಇದೆ ಎಂದು ಅಮೆರಿಕದ ಸುದ್ದಿಸಂಸ್ಥೆ ಸಿಎನ್ಎನ್ ವರದಿ ಮಾಡಿದೆ. ಇಸ್ರೇಲ್–ಅಮೆರಿಕ ವಿರುದ್ಧದ ಯುದ್ಧದ ನಂತರ ಕಾರ್ಯತಂತ್ರದ ಮಹತ್ವ ಹೊಂದಿರುವ ಹಾರ್ಮುಝ್ ಜಲಸಂಧಿಯ ಮೂಲಕ ಟ್ಯಾಂಕರ್ ಸಂಚಾರವನ್ನು ನಿಯಂತ್ರಿಸಲು ಟೆಹ್ರಾನ್ ರೂಪಿಸುತ್ತಿರುವ ವಿಶಾಲ ಯೋಜನೆಯ ಭಾಗವಾಗಿ ಈ ಪ್ರಸ್ತಾಪವನ್ನು ರೂಪಿಸಲಾಗಿದೆ ಎಂದು ವರದಿ ಹೇಳಿದೆ. ಜಾಗತಿಕ ತೈಲ ಸಾಗಣೆಯ ಪ್ರಮುಖ ದಾರಿಗೆ ಸೇರಿದ ಹಾರ್ಮುಝ್ ಜಲಸಂಧಿಯಲ್ಲಿ ಸಂಚಾರದ ಮೇಲಿನ ನಿಯಂತ್ರಣಗಳು ಜಾಗತಿಕ ಇಂಧನ ಮಾರುಕಟ್ಟೆಯ ಮೇಲೆ ನೇರ ಪರಿಣಾಮ ಬೀರುವ ಸಾಧ್ಯತೆ ಇದೆ. ಇನ್ನೂ ಜಾಗತಿಕ ತೈಲ ವ್ಯಾಪಾರದ ಬಹುಪಾಲು ಯುಎಸ್ ಡಾಲರ್ ನಲ್ಲಿ ನಡೆಯುತ್ತಿದ್ದರೂ, ಪಾಶ್ಚಾತ್ಯ ನಿರ್ಬಂಧಗಳಿಗೆ ಒಳಗಾದ ರಷ್ಯಾದ ಕಚ್ಚಾ ತೈಲವನ್ನು ಹೆಚ್ಚಾಗಿ ರೂಬಲ್ ಅಥವಾ ಯುವಾನ್ ನಲ್ಲಿ ವ್ಯಾಪಾರ ಮಾಡಲಾಗುತ್ತಿದೆ ಎಂದು ವರದಿ ತಿಳಿಸಿದೆ.
ಬೇಸಿಗೆಯಲ್ಲಿ ಭತ್ತದ ಇಳುವರಿ ಅಧಿಕ, ರೈತರಿಗೆ ಬಿಸಿಲಿನದ್ದೇ ಆತಂಕ
ನೀರಿನ ಸಮಸ್ಯೆಯಿಂದ ಮುಕ್ತಿ ಪಡೆದು ಖುಷಿಯಿಂದ ಭತ್ತದ ನಾಟಿ ಮಾಡಿದ ರೈತರಿಗೆ ಈಗ ತೀವ್ರ ಬಿಸಿಲಿನ ಆತಂಕ ಮನೆ ಮಾಡಿದೆ. ಬಿಸಿಲ ಜತೆ ಆಗಾಗ ಬೇಸಿಗೆ ಮಳೆ ಸುರಿದು ವಾತಾವರಣ ತಂಪಾಗುತ್ತಿದ್ದರೆ ಭತ್ತಕ್ಕೆ ಸಮಸ್ಯೆ ಇರುವುದಿಲ್ಲ, ಆದರೆ ತಾಪಮಾನ 40 ಡಿಗ್ರಿ ಮೀರಿದರೆ ಇಳುವರಿ ಮೇಲೆ ಪರಿಣಾಮ ಬೀರಲಿದೆ. ಜತೆಗೆ ದುಂಡಾಣು ಅಂತಹ ರೋಗಳು ಕಾಣಿಸಿಕೊಳ್ಳಲಿವೆ ಎಂದು ತಜ್ಞರು ಹೇಳುತ್ತಿದ್ದಾರೆ.
ದೇಶವನ್ನು ಭೀತಿಗೆ ತಳ್ಳಿದ ಪ್ರಧಾನಿ ಮೋದಿಯ ಹೇಳಿಕೆ!
ಮಧ್ಯಪ್ರಾಚ್ಯ ಸಂಘರ್ಷದ ಕಾರಣದಿಂದ ಎದುರಾಗಿರುವ ಎಲ್ಪಿಜಿ ಬಿಕ್ಕಟ್ಟಿನ ಬಗ್ಗೆ ಅನಗತ್ಯವಾಗಿ ಆತಂಕಗೊಳ್ಳಬೇಡಿ ಎಂದು ಧೈರ್ಯ ಹೇಳಬೇಕಾದ ಪ್ರಧಾನಿ ನರೇಂದ್ರ ಮೋದಿಯವರೇ, ದೇಶದ ಜನರು ಹೆದರಿ ಕಂಗಾಲಾಗುವ ಹೇಳಿಕೆಯನ್ನು ನೀಡಿದ್ದಾರೆ. ಎನ್ಎಕ್ಸ್ಟಿ ಶೃಂಗಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ‘‘ಕೋವಿಡ್ ಸಾಂಕ್ರಾಮಿಕ ಕಾಲದ ಬಿಕ್ಕಟ್ಟನ್ನು ಎದುರಿಸಿದಂತೆಯೇ ನಾವು ಈ ಬಿಕ್ಕಟ್ಟನ್ನೂ ಎದುರಿಸುತ್ತೇವೆ ಎನ್ನುವ ಸಂಪೂರ್ಣ ವಿಶ್ವಾಸ ನನಗಿದೆ’’ ಎಂದು ಹೇಳಿರುವುದು ದೇಶದ ಜನರನ್ನು ಬೆಚ್ಚಿ ಬೀಳಿಸಿದೆ. ಯಾಕೆಂದರೆ, ಕೋವಿಡ್ ಕಾಲದ ಬಿಕ್ಕಟ್ಟನ್ನು ಎದುರಿಸುವಲ್ಲಿ ಸರಕಾರ ಅನುಭವಿಸಿದ ವೈಫಲ್ಯದ ಫಲವನ್ನು ಜನತೆ ಈಗಲೂ ಅನುಭವಿಸುತ್ತಿದ್ದಾರೆ. ‘ಕೊರೋನ ಕಾಲದಲ್ಲಿ ಸಂಭವಿಸಿದ ಪ್ರಮಾದ ಈ ಬಾರಿ ಸಂಭವಿಸದಂತೆ ಜಾಗರೂಕತೆ ವಹಿಸಲಾಗುವುದು’ ಎಂಬ ಭರವಸೆ ನೀಡುವ ಬದಲಿಗೆ, ಮತ್ತೆ ಕೊರೋನಾದ ಕಾಲದ ‘ಲಾಕ್ಡೌನ್ ಉಡುಗೊರೆ’ಗಳನ್ನು ನೀಡುವ ಭರವಸೆ ನೀಡುವ ಮೂಲಕ ಜನರಲ್ಲಿ ಪ್ರಧಾನಿ ಅನಗತ್ಯ ಭೀತಿಯನ್ನು ಸೃಷ್ಟಿಸುತ್ತಿದ್ದಾರೆ. ಕೊರೋನ ಕಾಲವನ್ನು ಪ್ರಧಾನಿ ಮೋದಿ ನೇತೃತ್ವದಲ್ಲಿ ಹೇಗೆ ಎದುರಿಸಲಾಯಿತು ಎನ್ನುವುದನ್ನು ದೇಶ ಇನ್ನೂ ಮರೆತಿಲ್ಲ. ಗುಜರಾತ್ನಲ್ಲಿ ನಡೆದ ‘ನಮಸ್ತೆ ಟ್ರಂಪ್’ ಸಮಾವೇಶ ಭಾರತದೊಳಗೆ ಕೊರೋನವು ಮುಕ್ತವಾಗಿ ಪ್ರವೇಶಿಸಲು ಅನುಕೂಲ ಮಾಡಿಕೊಟ್ಟಿತ್ತು. ಪ್ರಧಾನಿ ಮೋದಿಯವರು ತನ್ನ ಅಮೆರಿಕದ ಸ್ನೇಹಿತ ಟ್ರಂಪ್ನ ಹಿತಾಸಕ್ತಿಗಾಗಿ ಹಮ್ಮಿಕೊಂಡ ಸಮಾವೇಶವಾಗಿತ್ತು ಅದು. ‘ನಮಸ್ತೆ ಟ್ರಂಪ್’ ಕಾರ್ಯಕ್ರಮವೇ ಬಳಿಕ ‘ನಮಸ್ತೆ ಕೊರೋನ’ ಆಗಿ ಬದಲಾಯಿತು. ಈ ಯುದ್ಧ ಕಾಲದಲ್ಲೂ ಭಾರತದ ಪಾಲಿಗೆ ಪ್ರಧಾನಿ ಮೋದಿಯ ‘ಟ್ರಂಪ್ ಓಲೈಕೆ’ಯೇ ಮುಖ್ಯವಾಗಿರುವುದು ಭಾರತದ ಇಂದಿನ ಸಮಸ್ಯೆಗೆ ಮೂಲ ಕಾರಣವಾಗಿದೆ. ಕೊರೋನ ವೈರಸನ್ನು ಈ ದೇಶ ಎದುರಿಸಿದ್ದೇ ‘ತಟ್ಟೆ, ಗಂಟೆ, ಜಾಗಟೆಗಳನ್ನು ಬಾರಿಸುವ ಮೂಲಕ’. ಹೀಗೆ ಬಾರಿಸಲು ಸಲಹೆ ನೀಡಿದವರೂ ಸ್ವತಃ ಪ್ರಧಾನಿ ಮೋದಿಯವರೇ ಆಗಿದ್ದರು. ಇದಾದ ಬಳಿಕ, ಯಾವುದೇ ಪೂರ್ವ ಸೂಚನೆಗಳಿಲ್ಲದೆ ಅನಿರೀಕ್ಷಿತವಾಗಿ ಸರಕಾರ ದೇಶಾದ್ಯಂತ ಘೋಷಿಸಿದ ಲಾಕ್ಡೌನ್ ಕೂಡ ಜನರನ್ನು ಸಂಕಷ್ಟಕ್ಕೆ ತಳ್ಳಿತು. ನಗರದಲ್ಲಿರುವ ವಲಸೆ ಕಾರ್ಮಿಕರು ರಾತ್ರೋ ರಾತ್ರಿ ಬಸ್, ರೈಲು ನಿಲ್ದಾಣಗಳಲ್ಲಿ ನೆರೆದರು. ವೈರಸ್ಗಳನ್ನು ಇನ್ನಷ್ಟು ವೇಗವಾಗಿ ಹರಡುವುದಕ್ಕೆ ಇದೂ ಒಂದು ಕಾರಣವಾಯಿತು. ಸಾವಿರಾರು ಕಿಲೋಮೀಟರ್ ದೂರ ವಲಸೆ ಕಾರ್ಮಿಕರು ಕಾಲ್ನಡಿಗೆಯಲ್ಲಿ ತಮ್ಮ ಹಳ್ಳಿಗಳ ಕಡೆಗೆ ಸಾಗುವ ಸ್ಥಿತಿ ನಿರ್ಮಾಣವಾಯಿತು. ನೂರಾರು ಜನರು ದಾರಿಯ ಮಧ್ಯೆಯೇ ಅಸ್ವಸ್ಥರಾಗಿ ಮೃತಪಟ್ಟರು. ಕಾಲ್ನಡಿಗೆಯಲ್ಲಿ ಸಾಗುತ್ತಿದ್ದ ವಲಸೆ ಕಾರ್ಮಿಕರ ಮೇಲೆ ರೈಲು ಹರಿದು ಹಲವರು ಮೃತಪಟ್ಟಿರುವುದು ವಿಶ್ವ ಮಟ್ಟದಲ್ಲಿ ಸುದ್ದಿಯಾಯಿತು. ಇದಕ್ಕಾಗಿ ಸರಕಾರ ಸಣ್ಣದೊಂದು ವಿಷಾದವನ್ನೂ ವ್ಯಕ್ತಪಡಿಸಲಿಲ್ಲ. ಲಾಕ್ಡೌನ್ ಸಂದರ್ಭದಲ್ಲಿ ಮೃತಪಟ್ಟ ವಲಸೆ ಕಾರ್ಮಿಕರ ಅಧಿಕೃತ ಅಂಕಿಅಂಶಗಳೇ ಸರಕಾರದ ಬಳಿಯಿಲ್ಲ. ಕೊರೋನ ವೈರಸ್ನಲ್ಲೂ ‘ಹಿಂದೂ-ಮುಸ್ಲಿಮ್’ ಭೇದವನ್ನು ಹುಡುಕಿದ ಏಕೈಕ ದೇಶ ನಮ್ಮದು. ಬಿಜೆಪಿ ಮತ್ತು ಸಂಘಪರಿವಾರ ಹರಡಿದ ಕೋಮು ವೈರಸ್ ಯಾವುದೇ ವೈರಸ್ಗಳಿಗಿಂತ ಮಾರಕವಾಗಿತ್ತು. ದೇಶದಲ್ಲಿ ಹರಡುತ್ತಿರುವ ವೈರಸ್ನ್ನು ಮುಸ್ಲಿಮರ ತಲೆಗೆ ಕಟ್ಟುವ ಪ್ರಯತ್ನ ನಡೆಯಿತು. ಅದರ ಭಾಗವಾಗಿಯೇ ತಬ್ಲೀಗಿ ಜಮಾತ್ನ ಸಮಾವೇಶದಲ್ಲಿ ಭಾಗವಹಿಸಿದ ಮುಸ್ಲಿಮರ ಮೇಲೆ ಪ್ರಕರಣ ದಾಖಲಿಸಲಾಯಿತು. ಆದರೆ ಇತ್ತೀಚೆಗೆ ಅವರನ್ನೆಲ್ಲ ನ್ಯಾಯಾಲಯ ನಿರ್ದೋಷಿಗಳು ಎಂದು ಘೋಷಿಸಿತು. ಲಾಕ್ಡೌನ್ ಹೆಸರಿನಲ್ಲಿ ಜನಸಾಮಾನ್ಯರು ಬೀದಿಗಿಳಿಯದಂತೆ ದಮನಿಸಿದ ಸರಕಾರ, ಚುನಾವಣಾ ರ್ಯಾಲಿಯ ಹೆಸರಿನಲ್ಲಿ, ಕುಂಭಮೇಳದ ಹೆಸರಿನಲ್ಲಿ ಲಕ್ಷಾಂತರ ಜನರನ್ನು ಸೇರಿಸಿತು. ಕೊರೋನ ದೇಶದಲ್ಲಿ ಮತ್ತೆ ಉಲ್ಬಣಿಸಿ ಕೊರೋನದಿಂದ ಸತ್ತವರ ಹೆಣಗಳು ಗಂಗಾನದಿಯಲ್ಲಿ ತೇಲತೊಡಗಿದವು. ಗಂಗಾನದಿಯ ದಡದಲ್ಲಿ ಅರೆಬರೆ ಸಮಾಧಿ ಮಾಡಲ್ಪಟ್ಟ ಹೆಣಗಳನ್ನು ನರಿ ನಾಯಿಗಳು ಕಿತ್ತು ತಿನ್ನುತ್ತಿರುವ ಚಿತ್ರಗಳು ಪತ್ರಿಕೆಗಳ ಮುಖಪುಟದಲ್ಲಿ ರಾರಾಜಿಸಿದವು. ಸಾರ್ವಜನಿಕ ಆಸ್ಪತ್ರೆಗಳಲ್ಲಿ ಮೂಲ ಸೌಕರ್ಯಗಳ ಕೊರತೆಯಿಂದಾಗಿ ನೂರಾರು ಸಾವು -ನೋವುಗಳು ಸಂಭವಿಸಿದವು. ಬರೇ ಕೊರೋನ ಸೋಂಕಿತರಿಗೆ ಮಾತ್ರವಲ್ಲ, ಇತರ ರೋಗಿಗಳಿಗೂ ಸರಿಯಾದ ಚಿಕಿತ್ಸೆ ಸಿಗದೆ ಅವರು ನರಳಿ ಸಾಯಬೇಕಾಯಿತು. ಕೊರೋನದಿಂದ ಎಷ್ಟು ಜನರು ಸತ್ತಿದ್ದಾರೆ ಎನ್ನುವ ಬಗ್ಗೆ ಇಂದಿಗೂ ಸ್ಪಷ್ಟ ಅಂಕಿಅಂಶಗಳು ಸರಕಾರದ ಬಳಿಯಿಲ್ಲ. ಸರಕಾರದ ದಾಖಲೆಯ ಪ್ರಕಾರ, ಲಾಕ್ಡೌನ್ನ ಎರಡು ವರ್ಷಗಳಲ್ಲಿ 5,74,198 ಮಂದಿ ಮೃತಪಟ್ಟಿದ್ದಾರೆ. ಡಬ್ಲ್ಯುಎಚ್ಒ ಅಂದಾಜಿನ ಪ್ರಕಾರ, ಭಾರತದಲ್ಲಿ ಸಾಂಕ್ರಾಮಿಕ ರೋಗದಿಂದ ನೇರವಾಗಿ ಅಥವಾ ಪರೋಕ್ಷವಾಗಿ ಸಂಭವಿಸಿದ ಒಟ್ಟು ಸಾವುಗಳ ಸಂಖ್ಯೆ 33 ಲಕ್ಷದಿಂದ 65 ಲಕ್ಷಗಳವರೆಗೆ ಎಂದು ಹೇಳಲಾಗಿದೆ. ಆದರೆ ಸರಕಾರ ಈ ಅಂಕಿಅಂಶ ಗಳನ್ನು ತಿರಸ್ಕರಿಸುತ್ತಲೇ ಬಂದಿದೆ. ಕೊರೋನ ಕಾಲದ ಸಾವು ನೋವುಗಳನ್ನು, ನಾಶ ನಷ್ಟಗಳನ್ನು ಮುಚ್ಚಿ ಟ್ಟದ್ದೇ ಸರಕಾರದ ಬಹುದೊಡ್ಡ ಸಾಧನೆಯಾಗಿದೆ. ಇದೀಗ ಅದೇ ತಂತ್ರಗಳ ಮೂಲಕ ಯುದ್ಧ ಬಿಕ್ಕಟ್ಟನ್ನು ಗೆಲ್ಲುವುದಕ್ಕೆ ಸರಕಾರ ಯೋಚಿಸುತ್ತಿರುವುದು ಕಳವಳಕಾರಿಯಾಗಿದೆ. ಲಾಕ್ಡೌನ್ ಪರಿಣಾಮವಾಗಿ ಸಾವಿರಾರು ಉದ್ದಿಮೆಗಳು ಮುಚ್ಚಲ್ಪಟ್ಟು, ನಿರೋದ್ಯೋಗಿಗಳ ಸಂಖ್ಯೆ ಹೆಚ್ಚಿತು. ಇತ್ತೀಚಿನ ಅಂಕಿಅಂಶಗಳ ಪ್ರಕಾರ, ಭಾರತದಲ್ಲಿ ಸುಮಾರು 6,789 ಮಾನ್ಯತೆ ಪಡೆದ ಸ್ಟಾರ್ಟ್ಅಪ್ಗಳು ಶಾಶ್ವತವಾಗಿ ಮುಚ್ಚಲ್ಪಟ್ಟಿವೆ. ಲಾಕ್ಡೌನ್ ಪರಿಣಾಮದಿಂದಾಗಿ ಹಲವು ಉದ್ಯಮಿಗಳೇ ಆತ್ಮಹತ್ಯೆ ಮಾಡಿಕೊಳ್ಳುವ ಸ್ಥಿತಿ ನಿರ್ಮಾಣವಾಯಿತು. ಲಸಿಕೆ ಹೆಸರಿನಲ್ಲಿ ನಡೆದ ಬೃಹತ್ ಅವ್ಯವಹಾರಗಳು, ಆಕ್ಸಿಜನ್ ಸಿಲಿಂಡರ್ ಕೊರತೆಯಿಂದ ಸಂಭವಿಸಿದ ಸಾಲು ಸಾಲು ಸಾವುಗಳು ಇವೆಲ್ಲವನ್ನು ಪ್ರಧಾನಿ ಮೋದಿಯವರು ‘ಕೊರೋನ ಕಾಲದ ಯಶಸ್ವಿ ಕಾರ್ಯಾಚರಣೆ’ ಎಂದು ಕರೆಯುತ್ತಾರೆಯೆ? ಮತ್ತೊಮ್ಮೆ ಈ ದೇಶಕ್ಕೆ ಕೊರೋನ ಕಾಲದ ದುಸ್ಥಿತಿಯನ್ನು ತಂದಿಡುವುದಿಲ್ಲ ಎನ್ನುವ ಭರವಸೆಯನ್ನು ನರೇಂದ್ರ ಮೋದಿಯವರು ನೀಡಬೇಕಾಗಿದೆ. ಮಧ್ಯಪ್ರಾಚ್ಯದಲ್ಲಿ ಬರೇ ಹತ್ತು ದಿನಗಳ ಯುದ್ಧಕ್ಕೇ ಭಾರತ ಈ ಪರಿ ಕಂಗೆಟ್ಟುಕೂತಿದೆಯೆಂದರೆ ಅದಕ್ಕೆ ಯಾರು ಹೊಣೆ? ಕಳೆದ ಹತ್ತು ವರ್ಷಗಳಿಂದ ಈ ದೇಶವನ್ನು ಸ್ವಾವಲಂಬಿಯನ್ನಾಗಿಸುತ್ತಿದ್ದೇನೆ ಎಂದು ‘ಮನ್ ಕೀ ಬಾತ್’ನಲ್ಲಿ ಪದೇ ಪದೇ ತುತ್ತೂರಿ ಊದುತ್ತಿದ್ದ ಪ್ರಧಾನಿಯ ತುತ್ತೂರಿ ಧ್ವನಿ ಇದೀಗ ಅಪಸ್ವರವನ್ನು ಯಾಕೆ ಹೊರಡಿಸುತ್ತಿದೆ? ಪ್ರಧಾನಿ ಮೋದಿಯವರೇ ಉತ್ತರಿಸಬೇಕಾಗಿದೆ.
LPG ಕೊರತೆಯಿಂದ ಮರಗಳಿಗೆ ಕೊಡಲಿ ಭೀತಿ: ಅಕ್ರಮ ಮರ ಕಡಿತ ತಡೆಯಲು ಅಧಿಕಾರಿಗಳಿಗೆ ಈಶ್ವರ ಖಂಡ್ರೆ ಖಡಕ್ ಸೂಚನೆ
ಬೆಂಗಳೂರು: ಮಧ್ಯಪ್ರಾಚ್ಯ ದೇಶಗಳಲ್ಲಿ ನಡೆಯುತ್ತಿರುವ ನಿರಂತರ ಸಂಘರ್ಷದ ನೇರ ಪರಿಣಾಮ ಇದೀಗ ಕರ್ನಾಟಕದ ಮೇಲೂ ಬೀರಲಾರಂಭಿಸಿದೆ. ರಾಜ್ಯದಲ್ಲಿ ಗೃಹ ಬಳಕೆ ಹಾಗೂ ವಾಣಿಜ್ಯ ಬಳಕೆಯ ಅಡುಗೆ ಅನಿಲ (LPG) ಪೂರೈಕೆಯಲ್ಲಿ ಭಾರಿ ಕೊರತೆ ಉಂಟಾಗಿದ್ದು, ಹೋಟೆಲ್ ಉದ್ಯಮ ಸೇರಿದಂತೆ ಜನಸಾಮಾನ್ಯರು ಪರ್ಯಾಯ ವ್ಯವಸ್ಥೆಯ ಮೊರೆ ಹೋಗುತ್ತಿದ್ದಾರೆ. ಗ್ಯಾಸ್ ಸಿಲಿಂಡರ್ ಅಭಾವದಿಂದಾಗಿ ಹಳ್ಳಿಗಳು, ಅರೆ-ನಗರ ಪ್ರದೇಶಗಳು ಹಾಗೂ ವಾಣಿಜ್ಯ
ಅಡುಗೆ ಅನಿಲ ಸರಬರಾಜು ವ್ಯತ್ಯಯ ಹಿನ್ನೆಲೆ: ಪಡಿತರ ಅಂಗಡಿಗಳಲ್ಲಿ ಸೀಮೆಎಣ್ಣೆ ವಿತರಣೆಗೆ ಕೇಂದ್ರದ ಕ್ರಮ
ಹೊಸದಿಲ್ಲಿ: ಹಲವು ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಸೀಮೆಎಣ್ಣೆ ಬಳಕೆ ಮತ್ತೆ ಆರಂಭವಾಗಿದ್ದು, ಪ್ರಾಥಮಿಕವಾಗಿ ಪಡಿತರ ಅಂಗಡಿಗಳ ಮೂಲಕ ವಿವತರಿಸಲು ಕ್ರಮ ಕೈಗೊಳ್ಳಲಾಗಿದೆ. ಕೆಲವೆಡೆಗಳಲ್ಲಿ ಸಾರ್ವಜನಿಕ ವಲಯದ ತೈಲ ಮಾರಾಟ ಕಂಪನಿಗಳು, ಅಡುಗೆ ಮತ್ತು ದೀಪದ ವ್ಯವಸ್ಥೆಗೆ ಬಳಸಿಕೊಳ್ಳಲು ಅನುವಾಗುವಂತೆ ಮಳಿಗೆಗಳನ್ನು ತೆರೆದಿವೆ. ಅಡುಗೆ ಇಂಧನವಾಗಿ ಬಳಸಲು ಬಿಡುಗಡೆ ಮಾಡುತ್ತಿದ್ದ ಒಂದು ಲಕ್ಷ ಕಿಲೋಲೀಟರ್ ಸೀಮೆಎಣ್ಣೆಗೆ ಪೂರಕವಾಗಿ ಹೆಚ್ಚುವರಿಯಾಗಿ 48 ಲಕ್ಷ ಕಿಲೋಲೀಟರ್ ಸೀಮೆಎಣ್ಣೆಯನ್ನು ಕೇಂದ್ರ ಸರ್ಕಾರ ಗುರುವಾರ ಹಂಚಿಕೆ ಮಾಡಿತ್ತು. ಬಹುತೇಕ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳು ಕಳೆದ 10 ವರ್ಷಗಳಿಂದ ಸೀಮೆಎಣ್ಣೆ ಬಳಕೆಯನ್ನು ಸ್ಥಗಿತಗೊಳಿಸಿದ್ದವು. ಆದರೆ ಇದೀಗ ಅಡುಗೆ ಅನಿಲ ಸರಬರಾಜು ವ್ಯತ್ಯಯವಾಗಿರುವ ಹಿನ್ನೆಲೆಯಲ್ಲಿ ಬಳಕೆದಾರರು ಇದೀಗ ಹಳೆಯ ಸ್ಟೌಗಳನ್ನು ಮತ್ತೆ ಹೊರತೆಗೆಯಬೇಕಾಗಿದೆ ಅಥವಾ ಹೊಸ ಸ್ಟೌಗಳನ್ನು ಖರೀದಿಸಬೇಕಾದ ಪರಿಸ್ಥಿತಿ ಸೃಷ್ಟಿಯಾಗಿದೆ. ಅಂತೆಯೇ ಕೆಲ ರೆಸ್ಟೋರೆಂಟ್ ಗಳು ಅನಿಲ ಆಧರಿತ ಓವನ್ ಗಳ ಬದಲಾಗಿ ಕಲ್ಲಿದ್ದಲು ಬಳಕೆಯ ತಂದೂರ್ ಗಳನ್ನು ಮರು ಬಳಕೆಗೆ ತಂದಿವೆ. ದೊಡ್ಡ ಪ್ರಮಾಣದಲ್ಲಿ ಕಚ್ಚಾ ತೈಲವನ್ನು ಶುದ್ಧೀಕರಿಸಿ ಸುಲಭವಾಗಿ ದೊಡ್ಡ ಪ್ರಮಾಣದಲ್ಲಿ ಸೀಮೆಎಣ್ಣೆ ಉತ್ಪಾದಿಸಲು ಸಾಧ್ಯತೆಗಳು ಇರುವ ಹಿನ್ನೆಲೆಯಲ್ಲಿ ಅಡುಗೆ ಉದ್ದೇಶಕ್ಕೆ ಅದನ್ನು ಬಳಸುವ ಸಲುವಾಗಿ ಹೆಚ್ಚುವರಿ ಸೀಮೆಎಣ್ಣೆ ಹಂಚಿಕೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಎಷ್ಟು ಪ್ರಮಾಣದಲ್ಲಿ ಗ್ರಾಹಕರಿಗೆ ಸೀಮೆಎಣ್ಣೆ ವಿತರಿಸಬೇಕು ಮತ್ತು ಯಾವ ಮಾನದಂಡವನ್ನು ಅನುಸರಿಸಬೇಕು ಎನ್ನುವುದು ಆಯಾ ರಾಜ್ಯ ಸರ್ಕಾರ ಅಥವಾ ಕೇಂದ್ರಾಡಳಿತ ಪ್ರದೇಶಗಳಿಗೆ ಬಿಟ್ಟ ವಿಚಾರ ಎಂದು ಪೆಟ್ರೋಲಿಯಂ ಸಚಿವಾಲಯ ತನ್ನ ಸುತ್ತೋಲೆಯಲ್ಲಿ ಸ್ಪಷ್ಟಪಡಿಸಿದೆ. ಆದರೆ ಪಡಿತರ ಅಂಗಡಿಗಳ ಮೂಲಕ ವಿತರಿಸಿದ ಸೀಮೆಎಣ್ಣೆ ಪೆಟ್ರೋಲ್ ಅಥವಾ ಡೀಸೆಲ್ ಕಲಬೆರಕೆಗೆ ಬಳಸದಂತೆ ಅಥವಾ ಉದ್ದೇಶಿತವಲ್ಲದ ಬಳಕೆಗೆ ವಿಮುಖವಾಗದಂತೆ ಎಚ್ಚರ ವಹಿಸುವುದು ಅಗತ್ಯ ಎಂದು ಎಚ್ಚರಿಕೆ ನೀಡಿದೆ.
ಕೇರಳಾದ್ಯಂತ ಎಲ್ಪಿಸಿ ಕೊರತೆ, ಶೇ.40 ಹೋಟೆಲ್ಗಳು ಬಂದ್
ಮಧ್ಯಪ್ರಾಚ್ಯ ಸಂಘರ್ಷದ ನಂತರ ಕೇರಳದಲ್ಲಿ ಎಲ್ಪಿಜಿ ಕೊರತೆಯಿಂದಾಗಿ ಸುಮಾರು ಶೇ.40 ರೆಸ್ಟೋರೆಂಟ್ಗಳು ಬಾಗಿಲು ಹಾಕುತ್ತಿದೆ. ಕಟ್ಟಿಗೆ ಅಥವಾ ಪರ್ಯಾಯ ಅಡುಗೆ ವಿಧಾನ ಬಳಸುವವರು ಅದರ ಮೊರೆ ಹೋಗುತ್ತಿದ್ದಾರೆ. ಸಾಧ್ಯವಾಗದೇ ಇದ್ದವರು ಬಾಗಿಲು ಎಳೆಯುತ್ತಿದ್ದಾರೆ. ಕ್ಯಾಟರಿಂಗ್ ಒದಗಿಸುವವರು, ಹಾಸ್ಟೆಲ್ಗಳು, ಕ್ಯಾಂಟೀನ್ಗಳು ಸಹ ಎಲ್ಪಿಸಿ ಕೊರತೆಯನ್ನು ಎದುರಿಸಿದೆ.
ಶಬರಿಮಲೆ ದೇಗುಲಕ್ಕೆ ಮಹಿಳೆಯರಿಗೆ ಪ್ರವೇಶ: ಕೇರಳ ಸರ್ಕಾರ ಯು ಟರ್ನ್
ತಿರುವನಂತಪುರಂ: ಶಬರಿಮಲೆ ದೇವಾಲಯದಲ್ಲಿ ಮಹಿಳೆಯರ ಪ್ರವೇಶಕ್ಕೆ ಸಂಬಂಧಿಸಿದಂತೆ ಪ್ರಾಚೀನ ಸಂಪ್ರದಾಯ ಮತ್ತು ಪದ್ಧತಿಯನ್ನು ಉಳಿಸಿಕೊಳ್ಳುವುದು ಅಗತ್ಯ ಎಂದು ಕೇರಳದ ಎಲ್ಡಿಎಫ್ ಸರ್ಕಾರ ಸುಪ್ರೀಂಕೋರ್ಟ್ ನಲ್ಲಿ ಶುಕ್ರವಾರ ಅಫಿಡವಿಟ್ ಸಲ್ಲಿಸಿದೆ. ಇದು ತಿರುವಾಂಕೂರು ದೇವಸ್ವಂ ಮಂಡಳಿಯ ನಿಲುವಿಗೆ ಅನುಸಾರವಾಗಿದ್ದು, ತನ್ನ ಹಿಂದಿನ ನಿಲುವಿನಿಂದ ಸರ್ಕಾರ ಹಿಂದೆ ಸರಿದಿದೆ. ಪವಿತ್ರ ಮಂದಿರಕ್ಕೆ ಮಹಿಳೆಯರ ಪ್ರವೇಶವನ್ನು ಈ ಹಿಂದೆ ಕೇರಳ ಸರ್ಕಾರ ಬೆಂಬಲಿಸಿತ್ತು. ಇದೀಗ ಸಿಪಿಎಂ ರಾಜ್ಯ ಘಟಕವು ಶಬರಿಮಲೆ ಸಂಪ್ರದಾಯದ ಪರವಾಗಿ ನಿರ್ಣಯ ಕೈಗೊಂಡ ಹಿನ್ನೆಲೆಯಲ್ಲಿ ಸರ್ಕಾರದ ನಿಲುವು ಬದಲಾಗಿದೆ. ಅಗತ್ಯಕ್ಕೆ ತಕ್ಕಂತೆ ಕಾನೂನು ಮತ್ತು ಸಾಂವಿಧಾನಿಕ ಆಯಾಮಗಳನ್ನು ಪರಿಶೀಲಿಸಿ ಕೇರಳ ಸರ್ಕಾರ ಸುಪ್ರೀಂಕೋರ್ಟ್ ನಲ್ಲಿ ಸೂಕ್ತವಾದ ಪ್ರತಿಕ್ರಿಯೆಯನ್ನು ಸಲ್ಲಿಸಬಹುದು ಎಂದು ಸಿಪಿಎಂ ರಾಜ್ಯ ಘಟಕವು ನಿರ್ಧಾರ ಕೈಗೊಂಡಿದೆ ಎಂದು ಸಿಪಿಎಂ ರಾಜ್ಯ ಕಾರ್ಯದರ್ಶಿ ಎಂ.ವಿ.ಗೋವಿಂದನ್ ಹೇಳಿಕೆ ನೀಡಿದ್ದರು. ಧಾರ್ಮಿಕ ವಿಚಾರದ ನಂಬಿಕೆಯನ್ನು ಪಕ್ಷ ಸದಾ ಗೌರವಿಸುತ್ತದೆ. ಈ ಕ್ಷೇತ್ರದ ತಜ್ಞರ ಸಲಹೆಯನ್ನು ಪಡೆದ ಬಳಿಕ ನಿರ್ಧಾರ ಕೈಗೊಳ್ಳಲು ಪಕ್ಷ ಬಯಸಿದೆ ಎಂದು ವಿವರಿಸಿದ್ದಾರೆ. ಏಳು ಪ್ರಶ್ನೆಗಳಿಗೆ ನಾವು ಉತ್ತರಿಸಿಸಬೇಕಿದೆ. ಪವಿತ್ರ ಮಂದಿರಕ್ಕೆ ಮಹಿಳೆಯರ ಪ್ರವೇಶಕ್ಕೆ ಅವಕಾಶ ನೀಡಬೇಕೇ ಅಥವಾ ಬೇಡವೇ ಎಂದು ಯಾರೂ ಕೇಳಿಲ್ಲ. ಇದು ಸುಪ್ರೀಂಕೋರ್ಟ್ ನಲ್ಲಿರುವ ಸಾಂವಿಧಾನಿಕ ವಿಚಾರವಾಗಿದ್ದು, ಎಲ್ಲ ಧರ್ಮಗಳಿಗೂ ಸಂಬಂಧಿಸಿದ್ದು ಎಂದು ಸ್ಪಷ್ಟಪಡಿಸಿದರು. ಋತುಸ್ರಾವ ವಯಸ್ಸಿನ ಮಹಿಳೆಯರು ದೇವಸ್ಥಾನಕ್ಕೆ ಪ್ರವೇಶಿಸಲು ಅವಕಾಶ ನೀಡಿ ನೀಡಿದ್ದ ತೀರ್ಪಿನ ಪರಾಮರ್ಶನಾ ಅರ್ಜಿ ವಿಚಾರಣೆ ನಡೆಸುತ್ತಿರುವ ಸುಪ್ರೀಂಕೋರ್ಟ್, ಮಾರ್ಚ್ 14ರ ಮೊದಲು ತನ್ನ ನಿಲುವನ್ನು ಸ್ಪಷ್ಟಪಡಿಸುವಂತೆ ರಾಜ್ಯ ಸರ್ಕಾರಕ್ಕೆ ಗಡುವು ವಿಧಿಸಿತ್ತು.
Gold Rate: ಬೆಂಗಳೂರಿನಲ್ಲಿ ಇಳಿಕೆಯಾಯ್ತು ಚಿನ್ನ-ಬೆಳ್ಳಿ ಬೆಲೆ; ಇಲ್ಲಿದೆ ದರ ಪಟ್ಟಿ
ಬೆಂಗಳೂರು: ನೀವು ಚಿನ್ನ ಅಥವಾ ಬೆಳ್ಳಿ ಆಭರಣ ಖರೀದಿಸುವ ಯೋಚನೆಯಲ್ಲಿದ್ದರೆ, ಇಂದಿನ ಮಾರುಕಟ್ಟೆಯ ಟ್ರೆಂಡ್ ನಿಮಗೆ ಖುಷಿ ನೀಡಬಹುದು. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅಮೆರಿಕನ್ ಡಾಲರ್ ಮೌಲ್ಯ ಬಲಗೊಂಡಿರುವ ಪರಿಣಾಮ, ಜಾಗತಿಕ ಮಟ್ಟದಲ್ಲಿ ಚಿನ್ನದ ಬೆಲೆಯಲ್ಲಿ ಶೇ. 2ರಷ್ಟು ದಿಢೀರ್ ಕುಸಿತ ಕಂಡುಬಂದಿದೆ. ಇದರ ನೇರ ಪರಿಣಾಮ ಭಾರತೀಯ ಮಾರುಕಟ್ಟೆಯ ಮೇಲೂ ಆಗಿದ್ದು, ಮಲ್ಟಿ ಕಮಾಡಿಟಿ ಎಕ್ಸ್ಚೇಂಜ್ (MCX)
ಎಚ್ಎನ್, ಕೆಸಿ ವಿಷಕಾರಿ ವ್ಯಾಲಿ ನೀರಿನ ವಿರುದ್ಧ ರಾಜ್ಯ, ರಾಷ್ಟ್ರ ಮಟ್ಟದಲ್ಲಿ ‘ಜನ’ಧ್ವನಿ
ಕೆಸಿ ವ್ಯಾಲಿ, ಎಚ್ಎನ್ ವ್ಯಾಲಿ ನೀರು ತುಂಬಿಕೊಂಡಿರುವ ಕೆರೆಯಂಚಿನ ಗ್ರಾಮಗಳು ಹಾಗೂ ನಿವಾಸಿಗಳು ಜೀವನ ನಡೆಸುವುದೇ ಕಷ್ಟ ಎನ್ನುವಂತಾಗಿದೆ. ವ್ಯಾಲಿ ನೀರಿನ ಜತೆ ಸರಿಯಾದ ನಿರ್ವಹಣೆಯಿಲ್ಲದ ಕಾರಣ ಒಳಚರಂಡಿ ನೀರು ಕೂಡಾ ಕೆರೆಗಳ ಒಡಲು ಸೇರುತ್ತಿದ್ದು, ಕೆರೆಗಳು ಗಬ್ಬೆದ್ದು ನಾರುತ್ತಿವೆ. ನೀರು ಹರಿಸುವುದಷ್ಟೇ ನಮ್ಮ ಕೆಲಸ ಎಂದು ಅಧಿಕಾರಿಗಳು ಕೈಕಟ್ಟಿ ಕೂತಿದ್ದು, ಕೆರೆಗಳು ವಿಷಕಾರುವ ತಾಣಗಳಾಗಿ ಮಾರ್ಪಟ್ಟಿವೆ.
Karnataka Weather: ರಾಜ್ಯವನ್ನು ಸುಡುತ್ತಿದೆ ರಣಬಿಸಿಲು; ಕರಾವಳಿ, ಮಲೆನಾಡಿಗೆ ಇಂದು ಮಳೆ ಮುನ್ಸೂಚನೆ
ಬೆಂಗಳೂರು: ರಾಜ್ಯದಲ್ಲಿ ಮಾರ್ಚ್ ತಿಂಗಳ ಆರಂಭದಿಂದಲೇ ಬೇಸಿಗೆಯ ಬಿಸಿಲಿನ ಅಬ್ಬರ ಶುರುವಾಗಿದೆ. ದಿನದಿಂದ ದಿನಕ್ಕೆ ಉಷ್ಣಾಂಶ ಏರಿಕೆಯಾಗುತ್ತಿದ್ದು, ಜನಸಾಮಾನ್ಯರು ಸೆಕೆಯಿಂದ ಹೈರಾಣಾಗಿದ್ದಾರೆ. ಭಾರತೀಯ ಹವಾಮಾನ ಇಲಾಖೆಯ ಅಧಿಕೃತ ವರದಿಗಳ ಪ್ರಕಾರ, ಇಂದು (ಮಾರ್ಚ್ 14, 2026) ಕರ್ನಾಟಕದ ಹವಾಮಾನದಲ್ಲಿ ಪ್ರಮುಖ ಬದಲಾವಣೆಗಳು ಕಂಡುಬರುವ ನಿರೀಕ್ಷೆಯಿದೆ. ಒಂದೆಡೆ ನೆತ್ತಿ ಸುಡುವ ಬಿಸಿಲಿದ್ದರೆ, ಮತ್ತೊಂದೆಡೆ ಅನಿರೀಕ್ಷಿತ ಮಳೆಯ ಮುನ್ಸೂಚನೆ ಇದೆ.
ಹಾರ್ಮುಝ್ ಜಲಸಂಧಿಯ ಬಳಿ ಸರಕು ಸಾಗಣೆ ಹಡಗಿನ ಮೇಲೆ ಇರಾನ್ ದಾಳಿ: ಬಿಹಾರ ಮೂಲದ ಇಂಜಿನಿಯರ್ ಮೃತ್ಯು
ಹೊಸದಿಲ್ಲಿ: ಹಾರ್ಮುಝ್ ಜಲಸಂಧಿಯ ಬಳಿ ಅಮೆರಿಕದ ಧ್ವಜ ಹೊಂದಿದ್ದ ಸರಕು ಸಾಗಣೆ ಹಡಗಿನ ಮೇಲೆ ಇರಾನ್ ನಡೆಸಿದ ದಾಳಿಯಲ್ಲಿ ಬಿಹಾರ ಮೂಲದ ಇಂಜಿನಿಯರ್ ಒಬ್ಬರು ಮೃತಪಟ್ಟಿದ್ದು, ಅವರ ಕುಟುಂಬ ತೀವ್ರ ಆಘಾತಕ್ಕೊಳಗಾಗಿದೆ. ಮೃತದೇಹವನ್ನು ಭಾರತಕ್ಕೆ ಕರೆತರುವಂತೆ ಮೃತ ಇಂಜಿನಿಯರ್ ಕುಟುಂಬದ ಸದಸ್ಯರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಮೃತ ಇಂಜಿನಿಯರ್ ಅವರನ್ನು ಬಿಹಾರದ ಭಗಲ್ಪುರ್ ಜಿಲ್ಲೆಯ ರಾಣಿ ಬಮಿಯಾನ್ ಗ್ರಾಮದ ನಿವಾಸಿ ದೇವನಂದನ್ ಪ್ರಸಾದ್ ಸಿಂಗ್ ಎಂದು ಗುರುತಿಸಲಾಗಿದೆ. ಮಧ್ಯಪ್ರಾಚ್ಯದಲ್ಲಿ ಉದ್ಭವಿಸಿರುವ ಬಿಕ್ಕಟ್ಟಿನ ಹಿನ್ನೆಲೆ, ಮಾರ್ಚ್ 11ರಂದು ಅವರು ಕೆಲಸ ಮಾಡುತ್ತಿದ್ದ ಸರಕು ಸಾಗಣೆ ಹಡಗಿನ ಮೇಲೆ ನಡೆದ ದಾಳಿಯಲ್ಲಿ ಅವರು ಮೃತಪಟ್ಟಿದ್ದಾರೆ. ಈ ಹಡಗು ಇರಾನ್ ಮತ್ತು ಒಮಾನ್ ನಡುವಿನ ವ್ಯೂಹಾತ್ಮಕ ಜಲಮಾರ್ಗವಾದ ಹಾರ್ಮುಝ್ ಜಲಸಂಧಿಗೆ ಸಮೀಪದಲ್ಲಿರುವ ಅಲ್-ಝುಬೈರ್ ಬಂದರಿನ ಬಳಿ ಕಾರ್ಯಾಚರಿಸುತ್ತಿತ್ತು ಎಂದು ಹೇಳಲಾಗಿದೆ. ಘಟನೆಯ ವಿವರಗಳ ಪ್ರಕಾರ, ದಾಳಿಗೆ ಗುರಿಯಾದ ಸಂದರ್ಭದಲ್ಲಿ ಹಡಗು 48,000 ಮೆಟ್ರಿಕ್ ಟನ್ ನಾಫ್ತಾವನ್ನು ಸಾಗಿಸುತ್ತಿತ್ತು ಎಂದು ತಿಳಿದುಬಂದಿದೆ. ಇರಾನ್ ನ ಜಲಾಂತರ್ಗಾಮಿ ಘಟಕವು ಮಾನವರಹಿತ ಸ್ಫೋಟಕಗಳನ್ನು ಹೊಂದಿದ್ದ ವೇಗದ ದೋಣಿಯನ್ನು ಬಳಸಿ ಹಡಗಿನ ಮೇಲೆ ಮಾರಕ ದಾಳಿ ನಡೆಸಿದೆ. ಈ ದಾಳಿಯಲ್ಲಿ ಹಡಗಿನಲ್ಲಿದ್ದ ಸಾಗರ ಇಂಜಿನಿಯರ್ ದೇವನಂದನ್ ಪ್ರಸಾದ್ ಸಿಂಗ್ ಮೃತಪಟ್ಟಿದ್ದಾರೆ. ಅವರು 1994ರಿಂದ ಅಮೆರಿಕ ಮೂಲದ ಹಡಗು ಕಂಪನಿ ‘ಬ್ರೇವೊ ಶಿಪ್ ಮ್ಯಾನೇಜ್ಮೆಂಟ್’ನಲ್ಲಿ ಕೆಲಸ ಮಾಡುತ್ತಿದ್ದು, ಕಂಪೆನಿಯಲ್ಲಿ ಉಪಾಧ್ಯಕ್ಷ ಹುದ್ದೆಯನ್ನು ಹೊಂದಿದ್ದರು ಎಂದು ವರದಿಯಾಗಿದೆ.
ಇರಾನಿನ ತೈಲ ಮೂಲಸೌಕರ್ಯ ಉಳಿಸಿಕೊಂಡು ಖಾರ್ಗ್ ದ್ವೀಪದ ಮಿಲಿಟರಿ ನೆಲೆಗಳ ಮೇಲೆ ಅಮೆರಿಕ ದಾಳಿ ನಡೆಸಿದ್ದು ಯಾಕೆ?
ಟೆಹ್ರಾನ್, ಮಾ. 14: ಮಧ್ಯಪ್ರಾಚ್ಯದ ಉದ್ವಿಗ್ನತೆಯ ನಡುವೆಯೇ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇರಾನ್ನ ಖಾರ್ಗ್ ದ್ವೀಪದಲ್ಲಿರುವ ಮಿಲಿಟರಿ ಸೌಲಭ್ಯಗಳ ಮೇಲೆ ಅಮೆರಿಕ ವಾಯುಪಡೆ ಬಾಂಬ್ ದಾಳಿ ನಡೆಸಿದುದಾಗಿ ಘೋಷಿಸಿದ್ದಾರೆ. ದಾಳಿ ನಡೆದಿರುವುದು ಕಳೆದ ಒಂದು ಗಂಟೆಯ ಹಿಂದೆ ಎಂದು ಅವರು ತಿಳಿಸಿದ್ದಾರೆ ಎಂದು Aljazeera ವರದಿ ಮಾಡಿದೆ. ‘ಟ್ರೂತ್ ಸೋಷಿಯಲ್’ನಲ್ಲಿ ಪೋಸ್ಟ್ ಮಾಡಿದ ಟ್ರಂಪ್, “ದ್ವೀಪದ ತೈಲ ಸೌಲಭ್ಯಗಳನ್ನು ಈ ಹಂತದಲ್ಲಿ ಗುರಿಯಾಗಿಸಲಿಲ್ಲ. ಆದರೆ ಹಾರ್ಮುಝ್ ಜಲಸಂಧಿಯಲ್ಲಿ ಹಡಗುಗಳ ಮುಕ್ತ ಹಾಗೂ ಸುರಕ್ಷಿತ ಸಾಗಣೆಗೆ ಅಡ್ಡಿ ಉಂಟಾದರೆ, ಈ ನಿರ್ಧಾರವನ್ನು ತಕ್ಷಣ ಮರುಪರಿಶೀಲಿಸಲಾಗುವುದು” ಎಂದು ಟ್ರಂಪ್ ಎಚ್ಚರಿಸಿದ್ದಾರೆ. ಅಮೆರಿಕದ ಅಂದಾಜಿನ ಪ್ರಕಾರ, ಖಾರ್ಗ್ ದ್ವೀಪವನ್ನು ಇರಾನ್ ಹಾರ್ಮುಝ್ ಜಲಸಂಧಿಯ ಮೂಲಕ ಸಾಗುವ ಹಡಗುಗಳ ಮೇಲೆ ಕ್ಷಿಪಣಿ ದಾಳಿ ನಡೆಸಲು ಬಳಸುತ್ತಿದೆ. ಈ ಹಿನ್ನೆಲೆ, ದ್ವೀಪದಲ್ಲಿನ ಮಿಲಿಟರಿ ಸೌಲಭ್ಯಗಳನ್ನು ಗುರಿಯಾಗಿಸುವ ಮೂಲಕ ಜಲಸಂಧಿಯಲ್ಲಿನ ಸಾಗಣೆಗೆ ಇರುವ ಅಪಾಯವನ್ನು ಮಿತಿಗೊಳಿಸುವ ಪ್ರಯತ್ನ ಅಮೆರಿಕ ಮಾಡಿದೆ ಎನ್ನಲಾಗಿದೆ. ಖಾರ್ಗ್ ದ್ವೀಪವು ಇರಾನ್ ಗೆ ಆರ್ಥಿಕವಾಗಿ ಅತ್ಯಂತ ಪ್ರಮುಖ ಕೇಂದ್ರವಾಗಿದೆ. ದೇಶದ ಹೆಚ್ಚಿನ ತೈಲ ರಫ್ತುಗಳು ಇದೇ ದ್ವೀಪದಿಂದ ನಡೆಯುತ್ತವೆ. ಟ್ರಂಪ್ ಅವರ ಹೇಳಿಕೆಯಂತೆ, ಇದು ಇರಾನ್ನ “ಕಿರೀಟದ ರತ್ನ”ವಾಗಿದ್ದು, ತೈಲ ಮೂಲಸೌಕರ್ಯವನ್ನು ಗುರಿಯಾಗಿಸುವ ಬೆದರಿಕೆಯೇ ಇರಾನ್ ಮೇಲೆ ಒತ್ತಡ ಹೆಚ್ಚಿಸುವ ಪ್ರಮುಖ ಸಾಧನವಾಗಿದೆ. ಹಾರ್ಮುಝ್ ಜಲಸಂಧಿಯ ಸಮೀಪದಲ್ಲಿರುವ ಈ ದ್ವೀಪವು ಜಾಗತಿಕ ಇಂಧನ ಸಾಗಣೆಯ ಪ್ರಮುಖ ಕೊಂಡಿಯಾಗಿದ್ದು, ಇಲ್ಲಿ ನಡೆಯುವ ಯಾವುದೇ ಮಿಲಿಟರಿ ಬೆಳವಣಿಗೆಗಳು ವಿಶ್ವ ಆರ್ಥಿಕತೆಗೆ ಪರಿಣಾಮ ಬೀರುವ ಸಾಧ್ಯತೆ ಇದೆ. ಜಲಸಂಧಿಯನ್ನು ದಾಟುವ ಹಡಗುಗಳ ಮೇಲೆ ದಾಳಿ ನಡೆಸುವ ಚಟುವಟಿಕೆಗಳು ಇದೇ ಪ್ರದೇಶದಿಂದ ನಡೆಯುತ್ತಿವೆ ಎಂದು ಭಾವಿಸಿ ಅಮೆರಿಕ ಈ ಕ್ರಮ ಕೈಗೊಂಡಿರಬಹುದು ಎಂದು ವಿಶ್ಲೇಷಕರು ಹೇಳಿದ್ದಾರೆ. ಇನ್ನೊಂದೆಡೆ, ಮಿಲಿಟರಿ ತಜ್ಞರು ಖಾರ್ಗ್ ದ್ವೀಪವನ್ನು ಯುದ್ಧದ ಆರಂಭದಲ್ಲೇ ಗುರಿಯಾಗಬೇಕಾಗಿತ್ತು ಎಂದು ಅಭಿಪ್ರಾಯಪಟ್ಟಿದ್ದಾರೆ. ಈಗ ಮಾತ್ರ ದಾಳಿ ನಡೆಸಿರುವುದು ಏಕೆ ಎಂಬ ಪ್ರಶ್ನೆ ಎದುರಾಗಿದೆ. ಮಿಲಿಟರಿ ಸೌಲಭ್ಯಗಳನ್ನು ಮಾತ್ರ ಗುರಿಯಾಗಿಸಿ ತೈಲ ಮೂಲಸೌಕರ್ಯವನ್ನು ಉಳಿಸಿಕೊಂಡಿರುವುದು ಅಮೆರಿಕದ ಹಂತ ಹಂತದ ಒತ್ತಡ ತಂತ್ರದ ಸೂಚನೆಯಾಗಿದ್ದು, ಅಗತ್ಯವಿದ್ದರೆ ಮುಂದಿನ ಹಂತದಲ್ಲಿ ಕಠಿಣ ಕ್ರಮಗಳಿಗೂ ಅವಕಾಶವಿದೆ ಎಂಬ ಸಂದೇಶ ನೀಡಲಾಗಿದೆ ಎನ್ನಲಾಗಿದೆ.
ಮಹಾರಾಷ್ಟ್ರದ ಸಣ್ಣ ಪಟ್ಟಣವಾದ ನಾಸಿಕ್ನಲ್ಲಿರುವ ಸಂಜಯ್ ನೆರ್ಕರ್ ಅವರ ಮಗ ವರದ್ ನೆರ್ಕರ್ ಸುಮಾರು ಒಂದು ದಶಕದ ಕಾಲ ಶಿಕ್ಷಣಕ್ಕಾಗಿ ಮನೆಯಿಂದ ದೂರ ವಾಸಿಸುತ್ತಿದ್ದ. ಆತ ಮನೆಗೆ ಕರೆ ಮಾಡುತ್ತಿದ್ದದ್ದು ಮುಸ್ಸಂಜೆ ಹೊತ್ತಿಗೇ. ಎಷ್ಟು ಬ್ಯುಸಿ ಇದ್ದರೂ ಆತ ಫೋನ್ ಮಾಡಿ “ಅಪ್ಪಾ, ನಿಮ್ಮ ದನಿ ಕೇಳಬೇಕಿತ್ತು” ಎನ್ನುತ್ತಿದ್ದ ಎಂದು 55 ವರ್ಷದ ಸರ್ಕಾರಿ ನೌಕರ ಸಂಜಯ್ ನೆರ್ಕರ್ ನೆನಪಿಸಿಕೊಂಡರು. 2022ರಲ್ಲಿ ವರದ್ ಬಾಲ್ಯದಿಂದಲೂ ಕಾಣುತ್ತಿದ್ದ ಕನಸು ನನಸಾಯಿತು. ಆತನಿಗೆ ಐಐಟಿಯಲ್ಲಿ ಸೀಟು ಸಿಕ್ಕಿತು. ವರದ್ ದಿಲ್ಲಿಯಲ್ಲಿರುವ ಐಐಟಿ-ದೆಹಲಿ ಸಂಸ್ಥೆಯಲ್ಲಿ ಸ್ನಾತಕೋತ್ತರ ಶಿಕ್ಷಣಕ್ಕೆ ಪ್ರವೇಶ ಪಡೆದಿದ್ದ. ಅವನಿಗೆ ಅಲ್ಲಿ ಬಿಟೆಕ್ ಸೀಟು ಸಿಗಲಿಲ್ಲ, ಆದರೆ ಅವನು ಪಟ್ಟು ಬಿಡಲಿಲ್ಲ. ಎಂಟೆಕ್ ಫಲಿತಾಂಶ ಬಂದಾಗ ಕುಟುಂಬ ಸಿಹಿತಿಂಡಿ ಹಂಚಿತು. “ಅವನ ಕನಸು ನಮ್ಮದು ಕೂಡಾ” ಎಂದು ಅನಿಸಿತ್ತು. ಆದರೆ... ಸಂಜಯ್ ಅವರ ದನಿ ಗದ್ಗದಿತವಾಯಿತು. “ಐಐಟಿ-ದೆಹಲಿ ನನ್ನಿಂದ ಅವನನ್ನು ಕಸಿದುಕೊಳ್ಳುತ್ತದೆ ಎಂದು ತಿಳಿದಿದ್ದರೆ, ನಾನು ಅವನನ್ನು ಎಂದಿಗೂ ಕಳುಹಿಸುತ್ತಿರಲಿಲ್ಲ. ಓಹ್ ವರದ್... ನೀನು ಯಾಕೆ ಇಷ್ಟು ಬೇಗ ನಮ್ಮನ್ನು ಬಿಟ್ಟು ಹೊರಟೆ?” ಎಂದು ಅವರು ಕಣ್ಣೀರಾದರು. 2024ರ ಫೆಬ್ರವರಿ 15ರಂದು ವರದ್ ಐಐಟಿ-ದೆಹಲಿಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದ. 2021ರಿಂದ ಐಐಟಿ-ದೆಹಲಿಯಲ್ಲಿ ನಡೆದ 65 ವಿದ್ಯಾರ್ಥಿಗಳ ಆತ್ಮಹತ್ಯೆಗಳಲ್ಲಿ ಇದೂ ಒಂದು; ಐಐಟಿ-ದೆಹಲಿಯಲ್ಲಿ ನಡೆದ ಆತ್ಮಹತ್ಯೆ ಪ್ರಕರಣಗಳಲ್ಲಿ ಎಂಟನೆಯದು. ವರದ್ಗೆ ಆಗ 26 ವರ್ಷ. ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೆ ಕೆಲ ದಿನಗಳ ಹಿಂದೆ ತೀವ್ರ ಶೈಕ್ಷಣಿಕ ಒತ್ತಡ ಮತ್ತು ಮೇಲ್ವಿಚಾರಕರಿಂದ ಬಂದ ಒತ್ತಡದ ಬಗ್ಗೆ ತಾಯಿಗೆ ಹೇಳಿದ್ದ. ಪ್ರತಿಷ್ಠಿತ ‘ಐಐಟಿ’ ಭಾರತದಲ್ಲಿ ಐಐಟಿಗೆ ಪ್ರವೇಶವು ಶೈಕ್ಷಣಿಕ ಶ್ರೇಷ್ಠತೆ ಮತ್ತು ಸಾಮಾಜಿಕ ಪ್ರತಿಷ್ಠೆಯ ಸಂಕೇತವಾಗಿದೆ. 2025ರಲ್ಲಿ ಸುಮಾರು 1.3 ಮಿಲಿಯನ್ ವಿದ್ಯಾರ್ಥಿಗಳು ಜಂಟಿ ಪ್ರವೇಶ ಪರೀಕ್ಷೆ (JEE Main) ಬರೆದಿದ್ದಾರೆ. ಇದರಲ್ಲಿ ಮುಂದಿನ ಹಂತಕ್ಕೆ ಸುಮಾರು 2,50,000 ಮಂದಿ ಮಾತ್ರ ಅರ್ಹತೆ ಪಡೆದರು. ಇದನ್ನು ಜೆಇಇ ಅಡ್ವಾನ್ಸ್ಡ್ ಎಂದು ಕರೆಯಲಾಗುತ್ತದೆ, ಇದು ಐಐಟಿಗಳಲ್ಲಿ ಕೇವಲ 18,000 ಬಿಟೆಕ್ ಸೀಟುಗಳಿಗೆ ಸ್ಪರ್ಧಿಸಲು ಅಂತಿಮ ಹಂತವಾಗಿದೆ. ಸೀಟುಗಳನ್ನು ಶ್ರೇಣಿ, ವರ್ಗ ಮತ್ತು ಆದ್ಯತೆಗಳ ಆಧಾರದ ಮೇಲೆ ಹಂಚಲಾಗುತ್ತದೆ. ಎಂಟೆಕ್ ಕಾರ್ಯಕ್ರಮಗಳಿಗೆ ವಾರ್ಷಿಕವಾಗಿ 8,00,000ರಿಂದ 10,00,000 ಅಭ್ಯರ್ಥಿಗಳು GATE ಪರೀಕ್ಷೆಗೆ ಹಾಜರಾಗುತ್ತಾರೆ. ಇವರಲ್ಲಿ ಸುಮಾರು 8,500 ಮಂದಿ ಪ್ರವೇಶ ಪಡೆಯುತ್ತಾರೆ. ಅಂದರೆ ಸರಾಸರಿ ಬಿಟೆಕ್ನಲ್ಲಿ 72ರಲ್ಲಿ ಒಬ್ಬರು ಮತ್ತು ಎಂಟೆಕ್ ಕೋರ್ಸ್ಗಳಲ್ಲಿ 117ರಲ್ಲಿ ಒಬ್ಬರು ಮಾತ್ರ ಆಯ್ಕೆಯಾಗುತ್ತಾರೆ. ಐಐಟಿಗಳಲ್ಲಿ ಪಿಎಚ್ಡಿ ಸೀಟುಗಳ ಸಂಖ್ಯೆ ಪ್ರತಿ ವರ್ಷ ಬದಲಾಗುತ್ತದೆ. ಇದು ಪ್ರಾಧ್ಯಾಪಕರ ಬಳಿಯಿರುವ ಖಾಲಿ ಮಾರ್ಗದರ್ಶನ ಸ್ಥಾನಗಳ ಮೇಲೆ ಅವಲಂಬಿತವಾಗಿರುತ್ತದೆ. ದಶಕಗಳಿಂದ ಐಐಟಿಗಳು ಜಾಗತಿಕ ನಾಯಕರಿಗೆ ಲಾಂಚ್ಪ್ಯಾಡ್ ಆಗಿವೆ. ಗೂಗಲ್ ಸಿಇಒ ಸುಂದರ್ ಪಿಚೈ ಮತ್ತು ಐಬಿಎಂ ಸಿಇಒ ಅರವಿಂದ್ ಕೃಷ್ಣ ಅವರಂತಹ ವಿಶ್ವಪ್ರಸಿದ್ಧ ವ್ಯಕ್ತಿಗಳು ಐಐಟಿಯ ಹಳೆಯ ವಿದ್ಯಾರ್ಥಿಗಳಾಗಿದ್ದಾರೆ. ಕಾರ್ಪೊರೇಟ್ ಜಗತ್ತಿನ ಹೊರತಾಗಿ, ಐಐಟಿಯಲ್ಲಿ ಕಲಿತವರಲ್ಲಿ 35ಕ್ಕೂ ಹೆಚ್ಚು ಭಾರತೀಯ ಶತಕೋಟ್ಯಾಧಿಪತಿಗಳು, ಅನೇಕ ರಾಜಕಾರಣಿಗಳು, ಬರಹಗಾರರು ಮತ್ತು ಪತ್ರಕರ್ತರು ಇದ್ದಾರೆ. AI ಆಧಾರಿತ ವೃತ್ತಿ ದತ್ತಾಂಶ ವೇದಿಕೆ 6figr.com ಪ್ರಕಾರ, ಅಮೆರಿಕದಲ್ಲಿ ಕೆಲಸ ಮಾಡುವ ಐಐಟಿ ಪದವೀಧರರ ಸರಾಸರಿ ವಾರ್ಷಿಕ ವೇತನವು 216,000 ರಿಂದ 235,000 ಡಾಲರ್ ನಡುವೆ ಇರುತ್ತದೆ. ಇದು ಅಲ್ಲಿ ಇರುವ ರಾಷ್ಟ್ರೀಯ ಸರಾಸರಿ ವೇತನಕ್ಕಿಂತ ಸುಮಾರು ನಾಲ್ಕು ಪಟ್ಟು ಹೆಚ್ಚು. ಗ್ಲೋಬಲ್ ಐಐಟಿ-ಐಐಎಂ ಅಲುಮ್ನಿ ಸಪೋರ್ಟ್ ಗ್ರೂಪ್ನ ಸಂಸ್ಥಾಪಕ ಧೀರಜ್ ಸಿಂಗ್, ವಿದ್ಯಾರ್ಥಿಗಳಿಗೆ ಉದ್ಯೋಗ ಹಾಗೂ ಮಾನಸಿಕ ಬೆಂಬಲ ಒದಗಿಸುವ ಕೆಲಸ ಮಾಡುತ್ತಿದ್ದಾರೆ. “ಐಐಟಿಯನ್ ಆಗಿರುವುದು ಕೇವಲ ಒಂದು ಟ್ಯಾಗ್ ಅಲ್ಲ; ಅದು ಇಡೀ ಕುಟುಂಬಕ್ಕೆ ಗೌರವ ತರುತ್ತದೆ” ಎಂದು ಅವರು ಹೇಳಿದ್ದಾರೆ. ‘ನನ್ನ ಏಕೈಕ ಮಗನನ್ನು ಕಳೆದುಕೊಂಡೆ’ ಐಐಟಿಗಳು ಉನ್ನತ ಮಟ್ಟದ ಶಿಕ್ಷಣ ಮತ್ತು ಹೆಚ್ಚಿನ ಸಂಬಳದ ಉದ್ಯೋಗಗಳಿಗೆ ಪ್ರಸಿದ್ಧವಾಗಿದ್ದರೂ, ಕ್ಯಾಂಪಸ್ ಜೀವನವು ಹೆಚ್ಚಾಗಿ ಒತ್ತಡ ಮತ್ತು ನಿರಂತರ ಸ್ಪರ್ಧೆಯಿಂದ ಕೂಡಿರುತ್ತದೆ. ಸಂಸ್ಥೆಗಳು ದಾಖಲೆ ಪ್ರಮಾಣದ ಪ್ಲೇಸ್ಮೆಂಟ್ಗಳನ್ನು ಪ್ರಚಾರ ಮಾಡುತ್ತವೆಯಾದರೂ, ಅನೇಕ ಪದವೀಧರರು ಉದ್ಯೋಗವಿಲ್ಲದೆ ಉಳಿಯುತ್ತಾರೆ. 2024ರ ದತ್ತಾಂಶ ಪ್ರಕಾರ, ಸುಮಾರು 38% ಐಐಟಿ ಪದವೀಧರರಿಗೆ ಉದ್ಯೋಗ ಸಿಕ್ಕಿಲ್ಲ. ಸಿಂಗ್ ಪ್ರಕಾರ, ಸುಮಾರು ಅರ್ಧದಷ್ಟು ವಿದ್ಯಾರ್ಥಿಗಳು ಕೆಲಸ ಹುಡುಕಲು ಕಷ್ಟಪಡುತ್ತಾರೆ. ನಿರೀಕ್ಷೆಗಳು ಹೆಚ್ಚು. ಶೈಕ್ಷಣಿಕ ಒತ್ತಡ ಮತ್ತು ಉದ್ಯೋಗದ ಒತ್ತಡ ಸೇರಿ ಪರಿಸ್ಥಿತಿ ಗಂಭೀರವಾಗುತ್ತದೆ. ಐಐಟಿ-ಕಾನ್ಪುರದ ಒಬ್ಬ ವಿದ್ಯಾರ್ಥಿ “ನನಗೆ ಕೆಲಸ ಸಿಗದೇ ಇದ್ದರೆ ನಾನು ನನ್ನ ಜೀವನವನ್ನು ಕೊನೆಗೊಳಿಸುತ್ತೇನೆ” ಎಂದು ಹೇಳಿದ್ದನ್ನು ಸಿಂಗ್ ನೆನಪಿಸಿಕೊಂಡರು. ಎಲ್ಲಾ ಪ್ರಯತ್ನಗಳ ಹೊರತಾಗಿಯೂ ಆತ ಆತ್ಮಹತ್ಯೆ ಮಾಡಿಕೊಂಡನು ಎಂದು ಅವರು ಹೇಳಿದರು. ಸರ್ಕಾರಿ ದತ್ತಾಂಶ ಮತ್ತು ವಿವಿಧ ಐಐಟಿಗಳ ಮಾಹಿತಿಯ ಪ್ರಕಾರ, ಕಳೆದ ಎರಡು ದಶಕಗಳಲ್ಲಿ 160 ವಿದ್ಯಾರ್ಥಿಗಳ ಆತ್ಮಹತ್ಯೆ ದಾಖಲಾಗಿದೆ. ಅವುಗಳಲ್ಲಿ 69 ಪ್ರಕರಣಗಳು ಕಳೆದ ಐದು ವರ್ಷಗಳಲ್ಲಿ ಸಂಭವಿಸಿವೆ. ದರ್ಶನ್ ಸೋಲಂಕಿ ಎಂಬ 20 ವರ್ಷದ ಪ್ರತಿಭಾವಂತ ಯುವಕ ಕೂಡಾ ಈ ಪಟ್ಟಿಯಲ್ಲಿ ಒಬ್ಬರು. 2022ರಲ್ಲಿ ಐಐಟಿ ಪ್ರವೇಶ ಪರೀಕ್ಷೆಯಲ್ಲಿ ಉತ್ತೀರ್ಣನಾದ ದರ್ಶನ್, 2023ರಲ್ಲಿ ಐಐಟಿ-ಬಾಂಬೆನಲ್ಲಿ ರಾಸಾಯನಿಕ ಎಂಜಿನಿಯರಿಂಗ್ಗೆ ಸೇರಿದ್ದ. ಅದು ತನ್ನ ಜೀವನದ ಅತ್ಯಂತ ಸಂತೋಷದ ದಿನವಾಗಿತ್ತು ಎಂದು ತಂದೆ ರಮೇಶ್ ಸೋಲಂಕಿ ಹೇಳುತ್ತಾರೆ. “ಅಪ್ಪಾ, ನಾನು ಸಾಧಿಸಿದೆ. ಈಗ ನಮ್ಮ ಜೀವನ ಸುಲಭವಾಗುತ್ತದೆ” ಎಂದು ಮಗ ಹೇಳಿದ್ದ. ಆದರೆ ಜಾತಿ ಆಧಾರಿತ ಅಪಹಾಸ್ಯ ಮತ್ತು ಶೈಕ್ಷಣಿಕ ಒತ್ತಡ ಅವನ ಮೇಲೆ ಪರಿಣಾಮ ಬೀರಿತು ಎಂದು ಕುಟುಂಬ ಆರೋಪಿಸಿದೆ. “ನಾವು ಕೆಳ ಜಾತಿಗೆ ಸೇರಿದವರು. ಅದೇಕೆ ಮುಖ್ಯವಾಗಬೇಕು? ಅವಮಾನ ಮತ್ತು ಒತ್ತಡ ಎರಡನ್ನೂ ಅವನು ಹೇಗೆ ಸಹಿಸಬೇಕು?” ಎಂದು ರಮೇಶ್ ಪ್ರಶ್ನಿಸುತ್ತಾರೆ. ಅಧಿಕಾರದ ಅಸಮತೋಲನ ಪಿಎಚ್ಡಿ ವಿದ್ಯಾರ್ಥಿಗಳು ಮತ್ತು ಮೇಲ್ವಿಚಾರಕರ ನಡುವೆ ಅಧಿಕಾರದ ಅಸಮತೋಲನವಿದೆ ಎಂದು ತಜ್ಞರು ಸೂಚಿಸುತ್ತಾರೆ. ಫೆಲೋಶಿಪ್ಗಳು ಐದು ವರ್ಷಗಳ ನಂತರ ನಿಲ್ಲುತ್ತವೆ, ಇದರಿಂದ ವಿದ್ಯಾರ್ಥಿಗಳು ಒತ್ತಡಕ್ಕೆ ಒಳಗಾಗುತ್ತಾರೆ. ಐಐಟಿ-ಕಾನ್ಪುರದ ಪಿಎಚ್ಡಿ ವಿದ್ಯಾರ್ಥಿ ಸುಶಾಂತ್ (ಹೆಸರು ಬದಲಿಸಲಾಗಿದೆ) ಹೇಳುವಂತೆ, “ಪ್ರಬಂಧದ ಅನುಮೋದನೆ ಸಂಪೂರ್ಣವಾಗಿ ಮೇಲ್ವಿಚಾರಕರ ಕೈಯಲ್ಲಿರುತ್ತದೆ. ಇದು ವಿದ್ಯಾರ್ಥಿಗಳನ್ನು ಅವಲಂಬಿತರನ್ನಾಗಿ ಮಾಡುತ್ತದೆ. ಕೆಲವು ಮೇಲ್ವಿಚಾರಕರು ಟಾಕ್ಸಿಕ್ ಆಗಿರಬಹುದು.” ಏಳು ವರ್ಷಗಳಲ್ಲಿ ಪಿಎಚ್ಡಿ ಪೂರ್ಣಗೊಳಿಸದಿದ್ದರೆ ಪ್ರವೇಶ ರದ್ದು ಮಾಡುವ ನಿರ್ಧಾರವೂ ಒತ್ತಡ ಹೆಚ್ಚಿಸುತ್ತದೆ. ಹೊಣೆಗಾರಿಕೆಯನ್ನು ಸರಿಪಡಿಸುವುದು ಸುಪ್ರೀಂ ಕೋರ್ಟ್ನ ಮಾಜಿ ನ್ಯಾಯಾಧೀಶ ಎಸ್. ರವೀಂದ್ರ ಭಟ್ ನೇತೃತ್ವದ ರಾಷ್ಟ್ರೀಯ ಕಾರ್ಯಪಡೆ, ವಿದ್ಯಾರ್ಥಿಗಳ ಮಾನಸಿಕ ಆರೋಗ್ಯ ರಕ್ಷಣೆಗಾಗಿ ಕಾರ್ಯನಿರ್ವಹಿಸುತ್ತಿದೆ. “ಆತ್ಮಹತ್ಯೆ ಕೇವಲ ವೈಯಕ್ತಿಕ ಸಮಸ್ಯೆಯಲ್ಲ; ಇದು ಸಾಮಾಜಿಕ ಹಾಗೂ ಸಂಸ್ಥಾತ್ಮಕ ಸಮಸ್ಯೆಗಳ ಪರಿಣಾಮ” ಎಂದು ಅವರು ಹೇಳಿದ್ದಾರೆ. ಸಂಸ್ಥೆಗಳು ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳುತ್ತಿವೆ ಎಂಬ ಆರೋಪಗಳೂ ಕೇಳಿಬರುತ್ತಿವೆ. ಪರೀಕ್ಷೆಗಳ ಸಮಯದಲ್ಲಿ ಆತ್ಮಹತ್ಯೆಗಳ ಪ್ರಮಾಣ ಹೆಚ್ಚಿರುವುದರಿಂದ ತಜ್ಞರು ತಡೆಗಟ್ಟುವ ಕ್ರಮಗಳ ಅಗತ್ಯವಿದೆ ಎಂದು ಹೇಳಿದ್ದಾರೆ. ಐಐಟಿಗಳಲ್ಲಿ ಆತ್ಮಹತ್ಯೆಗಳನ್ನು ಸಕಾಲಿಕ ಹಸ್ತಕ್ಷೇಪದ ಮೂಲಕ ಕಡಿಮೆ ಮಾಡಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಆದರೆ ಮಾನಸಿಕ ಆರೋಗ್ಯ ಸಲಹೆಗಾರರ ಪ್ರಯತ್ನಗಳು ಸಾಕಾಗುತ್ತಿಲ್ಲ ಎಂದು ವೈದ್ಯೆ ಅಕ್ಸಾ ಶೇಖ್ ಹೇಳಿದ್ದಾರೆ. ಸೌಜನ್ಯ: Aljazeera.com
ತಾರಕಕ್ಕೇರಿದ ಮಧ್ಯಪ್ರಾಚ್ಯದ ಸಂಘರ್ಷ | ಇರಾನಿನ ಖಾರ್ಗ್ ದ್ವೀಪದ ಮೇಲೆ ಅಮೆರಿಕದಿಂದ ಬಾಂಬ್ ದಾಳಿ
ಮಿಲಿಟರಿ ನೆಲೆಗಳು ಸಂಪೂರ್ಣ ನಾಶ: ಟ್ರಂಪ್ ಹೇಳಿಕೆ
ಕೆನೆಪದರ ಮೀಸಲಾತಿ ಪರಿಶೀಲಿಸಿ ಸೂಕ್ತ ಕ್ರಮ : ಶಿವರಾಜ ತಂಗಡಗಿ
ಬೆಂಗಳೂರು : ಕೇಂದ್ರ ಸರಕಾರದ ಉದ್ಯೋಗ ಹಾಗೂ ಶಿಕ್ಷಣದಲ್ಲಿ ಹಿಂದುಳಿದ ವರ್ಗಗಳಿಗೆ ಕೆನೆಪದರ ಮೀಸಲಾತಿ ಜಾರಿ ಸಂಬಂಧ ಇತ್ತೀಚೆಗೆ ಸುಪ್ರೀಂ ಕೋರ್ಟ್ ಆದೇಶ ಹೊರಡಿಸಿದ್ದು, ಈ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಶಿವರಾಜ ತಂಗಡಗಿ ತಿಳಿಸಿದ್ದಾರೆ. ಶುಕ್ರವಾರ ವಿಧಾನ ಪರಿಷತ್ನ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿ ಸದಸ್ಯ ಶಶೀಲ್ ಜಿ.ನಮೋಶಿ ಪ್ರಶ್ನೆಗೆ ಉತ್ತರಿಸಿದ ಸಚಿವರು, ರಾಜ್ಯ ಸರಕಾರ ತನ್ನದೇ ಆದ ಕೆನೆಪದರ ನೀತಿ ಹೊಂದಿದೆ. ಈ ನೀತಿಯಡಿ ಆಭ್ಯರ್ಥಿ ಮತ್ತು ಅವರ ಪೋಷಕರ ವಾರ್ಷಿಕ ಆದಾಯ ಮಿತಿ 8 ಲಕ್ಷ ರೂ. ಗೆ ನಿಗದಿಪಡಿಸಲಾಗಿದೆ. ಅಭ್ಯರ್ಥಿಯ ತಂದೆ-ತಾಯಿ ಎ ಹಾಗೂ ಬಿ ದರ್ಜೆಯ ಸರಕಾರಿ ನೌಕರರಾಗಿದ್ದರೆ, ಕೆನೆಪದರಡಿ ಬರುತ್ತಾರೆ. ಆದರೆ ಕೇಂದ್ರ ಸರಕಾರ ತನ್ನದೇ ಆದ ನೀತಿ ಹೊಂದಿದೆ ಎಂದರು. ಈ ಬಗ್ಗೆ ಸುಪ್ರೀಂ ಕೋರ್ಟ್, ಮೀಸಲಾತಿ ನಿರ್ಧರಿಸುವಾಗ ಪೋಷಕರ ಆದಾಯವೊಂದನ್ನು ಆಧರಿಸಿ ತೀರ್ಮಾನಿಸುವುದು ಸಾಧ್ಯವಿಲ್ಲ ಎಂದು ಆದೇಶದಲ್ಲಿ ಹೇಳಿದೆ. ಆದೇಶದ ಪೂರ್ಣ ವಿವರ ತರಿಸಿಕೊಂಡು ಪರಿಶೀಲಿಸಿದ ಬಳಿಕ ಮುಖ್ಯಮಂತ್ರಿಯೊಂದಿಗೆ ಚರ್ಚಿಸಲಾಗುವುದು ಎಂದು ಶಿವರಾಜ್ ತಂಗಡಗಿ ಹೇಳಿದರು. ರಾಷ್ಟ್ರಮಟ್ಟದಲ್ಲಿ ಪ್ರವೇಶ ಪರೀಕ್ಷೆ ಬರೆದು ವಿವಿಧ ಕೋರ್ಸ್ಗಳಿಗೆ ಪ್ರವೇಶ ಪಡೆಯುವ ಹಿಂದುಳಿದ ವರ್ಗಗಳ ಅಭ್ಯರ್ಥಿಗಳ ಪೋಷಕರ ಆದಾಯ 8 ಲಕ್ಷ ರೂ.ಗಿಂತ ಹೆಚ್ಚಿದ್ದರೂ ಅಂತಹ ಮಕ್ಕಳಿಗೆ ಅಖಿಲ ಭಾರತ ಕೋಟಾದಡಿ ಪ್ರವೇಶ ನೀಡಲಾಗುತ್ತಿದೆ. ಆದರೆ, ಅದೇ ವಿದ್ಯಾರ್ಥಿಗಳು ರಾಜ್ಯದ ಕೋಟಾದಡಿ ಪ್ರವೇಶ ಪಡೆಯುವಾಗ ಕೆನೆಪದರ ನೀತಿ ಅನ್ವಯಿಸಲಾಗುತ್ತಿದ್ದು, ಇದರಿಂದ ಅವಕಾಶ ವಂಚಿತರಾಗುತ್ತಿದ್ದಾರೆ. ಇದರಿಂದ ಹಿಂದುಳಿದ ಅಭ್ಯರ್ಥಿಗಳಿಗೆ ಅನ್ಯಾಯವಾಗುತ್ತಿದೆ. ಹೀಗಾಗಿ ಕೇಂದ್ರ ಕೆನೆಪದರ ಮೀಸಲಾತಿ ನೀತಿ ಹಾಗೂ ಸುಪ್ರೀಂ ಆದೇಶದಂತೆ ರಾಜ್ಯದಲ್ಲಿ ಈ ನಿಯಮ ಜಾರಿಯಾಗಬೇಕು ಎಂದು ನಮೋಶಿ ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ತಂಗಡಗಿ, ಸಂವಿಧಾನದ ಪರಿಚ್ಛೇದ 342-ಎ (3) ಅಡಿಯಲ್ಲಿ ಕೆನೆಪದರ ನೀತಿಯನ್ನು ಶಿಕ್ಷಣ ಹಾಗೂ ಉದ್ಯೋಗದ ಮೀಸಲಾತಿಗೆ ಅಳವಡಿಸಿಕೊಳ್ಳಬಹುದು. ಆದಾಗ್ಯೂ, ಕೇಂದ್ರ ಸರಕಾರದ ಶಿಕ್ಷಣ ಮತ್ತು ಉದ್ಯೋಗದ ಮೀಸಲಾತಿಗೆ ಅನ್ವಯಿಸುವ ಕೆಲವು ಮಾನದಂಡಗಳು ರಾಜ್ಯ ಸರಕಾರದ ವ್ಯಾಪ್ತಿಗೆ ಬರುವ ಶಿಕ್ಷಣ ಹಾಗೂ ಉದ್ಯೋಗದ ಮೀಸಲಾತಿಯನ್ನು ಚಾಲ್ತಿಯಲ್ಲಿರುವ ಕೆನೆಪದರ ನೀತಿಯಡಿ ಅಳವಡಿಸಿಕೊಳ್ಳುವ ಬಗ್ಗೆ ಪರಿಶೀಲಿಸಲಾಗುತ್ತಿದೆ ಎಂದು ತಿಳಿಸಿದರು. ಕೆನೆಪದರ ನೀತಿ ಕುರಿತು ಸುಪ್ರೀಂ ಕೋರ್ಟ್ ಆದೇಶವನ್ನು ಪರಿಶೀಲಿಸಿ ಮುಖ್ಯಮಂತ್ರಿಗಳ ಗಮನಕ್ಕೆ ತರಲಿದ್ದೇನೆ. ಈ ಬಗ್ಗೆ ಸಚಿವ ಸಂಪುಟದಲ್ಲಿ ಚರ್ಚಿಸುವ ಉದ್ದೇಶವಿದೆ. ಇದರಿಂದ ಉದ್ಯೋಗ ಹಾಗೂ ಶಿಕ್ಷಣದಲ್ಲಿ ಅರ್ಹ ಅಭ್ಯರ್ಥಿಗಳಿಗೆ ಮೀಸಲಾತಿ ಅವಕಾಶ ಸಿಗಲಿದೆ ಎಂದು ಶಿವರಾಜ್ ತಂಗಡಗಿ ತಿಳಿಸಿದರು.
ಬೆಂಗಳೂರು : ಜಿಬಿಎ ವ್ಯಾಪ್ತಿಯಲ್ಲಿ ಇ-ಖಾತಾ ವಿತರಣೆಯನ್ನು ಸುಲಭಗೊಳಿಸುವ ಉದ್ದೇಶದಿಂದ ಸರಳವಾದ ಆನ್ಲೈನ್ ಪ್ರಕ್ರಿಯೆಯ ಮೂಲಕ ಇ-ಖಾತಾ ಸೇವೆಗಳನ್ನು ಒದಗಿಸಲಾಗುತ್ತಿದೆ. ಇದರಿಂದ ನಾಗರಿಕರು ಯಾವುದೆ ಸರಕಾರಿ ಕಚೇರಿಗಳಿಗೆ ಭೇಟಿ ನೀಡುವ ಅಗತ್ಯವಿಲ್ಲ ಎಂದು ಕಂದಾಯ ವಿಭಾಗದ ವಿಶೇಷ ಆಯುಕ್ತ ಮುನೀಶ್ ಮೌದ್ಗಿಲ್ ತಿಳಿಸಿದ್ದಾರೆ. ಶುಕ್ರವಾರ ನಗರದ ಸರ್ ಪುಟ್ಟಣ್ಣ ಚೆಟ್ಟಿ ಪುರಭವನ(ಟೌನ್ ಹಾಲ್)ದಲ್ಲಿ ಆಯೋಜಿಸಿದ್ದ ಸ್ಥಳೀಯ ಖಾಸಗಿ ಉದ್ಯಮಿಗಳ ಮೂಲಕ ಇ-ಖಾತಾ ಸೇವೆಗಳ ಕುರಿತ ಮಾರ್ಗದರ್ಶನ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು. ಇ-ಖಾತಾ ಅರ್ಜಿಗಳನ್ನು ಆನ್ಲೈನ್ ಮೂಲಕ ತಪ್ಪಿಲ್ಲದಂತೆ ಸಲ್ಲಿಸಲು ಹಾಗೂ ನಾಗರಿಕರಿಗೆ ಡಿಜಿಟಲ್ ವ್ಯವಸ್ಥೆಯನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ಸಹಾಯ ಮಾಡುವಂತೆ ಉದ್ಯಮಿಗಳಿಗೆ ಸೂಚಿಸಿದ ಅವರು, ನಾಗರಿಕರಿಗೆ ಸರಿಯಾದ ಮಾರ್ಗದರ್ಶನ ನೀಡಿ, ಅವರ ಅರ್ಜಿಗಳು ನಿಖರವಾಗಿ ಸಲ್ಲಿಕೆಯಾಗುವಂತೆ ಸಹಕರಿಸುವುದು ನಿಮ್ಮ ಪ್ರಮುಖ ಜವಾಬ್ದಾರಿಯಾಗಿದೆ ಎಂದು ಮನವರಿಕೆ ಮಾಡಿದರು. ಕಚೇರಿಗಳಿಗೆ ಭೇಟಿ ಅಥವಾ ಮಧ್ಯವರ್ತಿಗಳ ಅವಶ್ಯಕತೆ ಇಲ್ಲ : ಇ-ಖಾತಾ ಸಂಬಂಧಿತ ವಿಷಯಗಳಿಗೆ ನಾಗರಿಕರು ಅಥವಾ ಎಲ್ಪಿಇಗಳು ಯಾವುದೇ ಕಚೇರಿಗಳಿಗೆ ಭೇಟಿ ನೀಡುವ ಅಗತ್ಯವಿಲ್ಲ ಅಥವಾ ಅಧಿಕಾರಿಗಳನ್ನು ನೇರವಾಗಿ ಸಂಪರ್ಕಿಸುವ ಅಗತ್ಯವಿಲ್ಲ. ಇ-ಖಾತಾ ವಿತರಣೆ ಸಂಪೂರ್ಣವಾಗಿ ಆನ್ಲೈನ್ ಮೂಲಕ ನಡೆಯುವುದರಿಂದ ಮಧ್ಯವರ್ತಿಗಳೊಂದಿಗೆ ಸಂಪರ್ಕ ಸಾಧಿಸುವುದನ್ನು ತಪ್ಪಿಸಿಕೊಳ್ಳಿ. ಸರಾಸರಿ 3 ರಿಂದ 4 ದಿನಗಳೊಳಗೆ ನಾಗರಿಕರ ಇ-ಖಾತಾ ಅರ್ಜಿಗಳನ್ನು ಅನುಮೋದಿಸಲಾಗುತ್ತಿದೆ ಎಂದು ಮುನೀಶ್ ಮೌದ್ಗಿಲ್ ತಿಳಿಸಿದರು. ಕಾಲಮಿತಿಯಲ್ಲಿ ಪರಿಶೀಲನೆ ಮತ್ತು ಸ್ವಯಂ ಅನುಮೋದನೆ: ಸುಮಾರು ಶೇ.99ರಷ್ಟು ಇ-ಖಾತಾ ಅರ್ಜಿಗಳನ್ನು ಪರಿಶೀಲಿಸಿ ಕಾಲಮಿತಿಯೊಳಗಾಗಿ ಅನುಮೋದಿಸಲಾಗುತ್ತಿದೆ. ಅಂತಿಮ ಇ-ಖಾತಾ ಅರ್ಜಿಯನ್ನು 5 ಕೆಲಸದ ದಿನಗಳೊಳಗೆ ಪರಿಶೀಲಿಸದಿದ್ದರೆ, ವ್ಯವಸ್ಥೆಯೆ ಸ್ವಯಂಚಾಲಿತವಾಗಿ ಅನುಮೋದನೆ ಪ್ರಕ್ರಿಯೆಯನ್ನು ಪ್ರಾರಂಭಿಸುವ ವ್ಯವಸ್ಥೆ ಜಾರಿಗೆ ತರಲಾಗಿದೆ. ಇದರಿಂದ ನಾಗರಿಕರ ಅರ್ಜಿಗಳನ್ನು ಯಾರೂ ತಡೆಹಿಡಿಯಲು ಸಾಧ್ಯವಿಲ್ಲ ಎಂದು ಅವರು ತಿಳಿಸಿದರು. ಅಹವಾಲು ನಿವಾರಣಾ ವ್ಯವಸ್ಥೆ : ಇ-ಖಾತಾ ಅರ್ಜಿ ಪ್ರಕ್ರಿಯೆಗೆ ಸಂಬಂಧಿಸಿದ ಅಹವಾಲುಗಳನ್ನು ಸಲ್ಲಿಸಲು ನಾಗರಿಕರು ಹಾಗೂ ಸ್ಥಳೀಯ ಖಾಸಗಿ ಉದ್ಯಮಿಗಳಿಗಾಗಿ ವಿಶೇಷ ಪೋರ್ಟಲ್ ಅನ್ನು ರಚಿಸಲಾಗಿದೆ. ಈ ಕುರಿತು https://support.bbmpgov.in/ehelpline/](https://support.bbmpgov.in/ehelpline/ ಲಿಂಕ್ ಮೂಲಕ ಅಹವಾಲುಗಳನ್ನು ಸಲ್ಲಿಸಬಹುದು. ವೈಯಕ್ತಿಕ ಪ್ರಕರಣಗಳಿಗೆ ಸಂಬಂಧಿಸಿದ ಪ್ರಶ್ನೆಗಳಿದ್ದಲ್ಲಿ 9480683695 ಅಧಿಕೃತ ವಾಟ್ಸಾಪ್ ಸಹಾಯವಾಣಿ ಸಂಖ್ಯೆಯನ್ನು ಸಂಪರ್ಕಿಸಬಹುದು ಅಥವಾ ಅದೇ ಲಿಂಕ್ ಮೂಲಕ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಬಹುದು ಎಂದು ಮುನೀಶ್ ಮೌದ್ಗಿಲ್ ತಿಳಿಸಿದರು. ಇ-ಖಾತಾ ಸೇವೆಗಳ ಕುರಿತು ಪ್ರಾತ್ಯಕ್ಷಿಕೆ : ಕಾರ್ಯಕ್ರಮದ ವೇಳೆ ಇ-ಖಾತಾ ಸೇವೆಗಳು, ಆನ್ಲೈನ್ ಅರ್ಜಿ ಸಲ್ಲಿಕೆ ವಿಧಾನ ಹಾಗೂ ಡಿಜಿಟಲ್ ವರ್ಕ್-ಫೆÇ್ಲೀ ಕುರಿತು ಸ್ಥಳೀಯ ಖಾಸಗಿ ಉದ್ಯಮಿಗಳಿಗೆ ವಿವರವಾದ ಪ್ರಾತ್ಯಕ್ಷಿಕೆ ಮೂಲಕ ವಿವರಿಸಲಾಯಿತು. ಇದರಿಂದ ವ್ಯವಸ್ಥೆಯನ್ನು ಸಮಗ್ರವಾಗಿ ಅರ್ಥಮಾಡಿಕೊಳ್ಳಲು ಹಾಗೂ ನಾಗರಿಕರಿಗೆ ಉತ್ತಮ ಸಹಾಯ ಒದಗಿಸಲು ನೆರವಾಗಲಿದೆ. ಕಾರ್ಯಕ್ರಮದಲ್ಲಿ ಮಾಹಿತಿ ತಂತಜ್ಞಾನ(ಇ-ಆಸ್ತಿ)ದ ಉಪ ಆಯುಕ್ತ ಮದನ್ ಮೋಹನ್ ಸಿ, ಕಂದಾಯ ವಿಭಾಗದ ಜಂಟಿ ಆಯುಕ್ತರಾದ ಲಕ್ಷ್ಮೀದೇವಿ, ಕಂದಾಯ ಅಧಿಕಾರಿಗಳು ಮತ್ತು ಸ್ಥಳೀಯ ಖಾಸಗಿ ಉದ್ಯಮಿಗಳು ಉಪಸ್ಥಿತರಿದ್ದರು.
Budget Session 2026 | ಎಲೆ ಚುಕ್ಕೆ ರೋಗ: ಸದನದಲ್ಲಿ ಇಕ್ಕಟ್ಟಿಗೆ ಸಿಲುಕಿದ ಸಚಿವ ಮಲ್ಲಿಕಾರ್ಜುನ್
ಬೆಂಗಳೂರು : ರಾಜ್ಯದಲ್ಲಿ ಎಲೆ ಚುಕ್ಕೆ ರೋಗದಿಂದ ಹಾನಿಗೊಳಗಾದ ಅಡಿಕೆ ಬೆಳೆ ವಿಸ್ತೀರ್ಣ ಮತ್ತು ಅದಕ್ಕೆ ಪಾವತಿಸಲಾದ ಪರಿಹಾರದ ಬಗ್ಗೆ ಸಮರ್ಪಕ ಉತ್ತರ ನೀಡಲಾಗದೆ ತೋಟಗಾರಿಕಾ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ವಿಧಾನಸಭೆಯಲ್ಲಿ ಇಕ್ಕಟ್ಟಿಗೆ ಸಿಲುಕಿ ಪರದಾಡಿದ ಪ್ರಸಂಗ ನಡೆಯಿತು. ಶುಕ್ರವಾರ ವಿಧಾನಸಭೆಯ ಪ್ರಶ್ನೋತ್ತರ ವೇಳೆಯಲ್ಲಿ ಕಾಂಗ್ರೆಸ್ ಭೀಮಣ್ಣ ಟಿ.ನಾಯಕ್ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ರಾಜ್ಯದಲ್ಲಿ 88,559 ಹೆಕ್ಟರ್ನಲ್ಲಿ ಅಡಿಕೆ ಬೆಳೆ ಹಾನಿಯಾಗಿದೆ. ಚಿಕ್ಕಮಗಳೂರು ಶಿವಮೊಗ್ಗ. ಉತ್ತರ ಕನ್ನಡ, ಹಾಸನ, ದಕ್ಷಿಣ ಕನ್ನಡ, ಉಡುಪಿ, ಕೊಡಗು ಜಿಲ್ಲೆಗಳು ಸಮಸ್ಯೆಗೆ ಸಿಲುಕಿವೆ ಎಂದು ವಿವರಿಸಿದರು ಈ ವೇಳೆ ಸಚಿವರ ಉತ್ತರದಲ್ಲಿ ಗೊಂದಲಗಳಿತ್ತು. ಇದನ್ನು ಗುರುತಿಸಿದ ಬಿಜೆಪಿಯ ಸದಸ್ಯ ವಿ.ಸುನಿಲ್ ಕುಮಾರ್, ಬಜೆಟ್ ಅನು ಪಾಲನಾ ವರದಿಯಲ್ಲಿ 10,000 ಫಲಾನುಭವಿಗಳಿಗೆ ಪರಿಹಾರ ನೀಡಲಾಗಿದೆ ಎಂದು ತಿಳಿಸಲಾಗಿದೆ ಸಚಿವರು ನೀಡುವ ಉತ್ತರದಲ್ಲಿ ರಾಜ್ಯಾದ್ಯಂತ 16,000 ಬೆಳೆಗಾರರಿಗೆ ಪರಿಹಾರ ನೀಡಿರುವುದಾಗಿ ಹೇಳಲಾಗಿದ್ದು ಉತ್ತರ ಕನ್ನಡ ಜಿಲ್ಲೆಯ ಒಂದರಲ್ಲಿ ಒಂದರಲ್ಲೇ 22,000 ಮಂದಿ ಬೆಳೆ ನಷ್ಟ ಅನುಭವಿಸಿದ್ದಾರೆ ಎಂದು ತಿಳಿಸಲಾಗಿದೆ. ಇದರಲ್ಲಿ ಯಾವುದು ಸತ್ಯ ಎಂದು ಪ್ರಶ್ನಿಸಿದರು. ಸಚಿವರು ನೀಡುವ ಉತ್ತರಗಳು ಶಾಸಕರಿಗೆ ಸಮಾಧಾನಕರವಾಗಿರಲಿಲ್ಲ. ಹೀಗಾಗಿ ಬಿಜೆಪಿಯ ಎಲ್ಲ ಸದಸ್ಯರು ಸಚಿವರ ಮೇಲೆ ಮುಗಿಬಿದ್ದರು. ಆಗ ಆಡಳಿತ ಪಕ್ಷದ ಪಕ್ಷದ ಸದಸ್ಯರು ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಅವರ ನೆರವಿಗೆ ಬರಲಿಲ್ಲ. ಏಕಾಂಗಿಯಾಗಿ ಕಕ್ಕಾಬಿಕ್ಕಿಯಾಗಿದ್ದ ಮಲ್ಲಿಕಾರ್ಜುನ್, ಉತ್ತರ ನೀಡಲು ಪರದಾಡಿದರು. ಪರಿಸ್ಥಿತಿಯನ್ನು ಅರ್ಥೈಸಿಕೊಂಡ ಸಭಾಧ್ಯಕ್ಷ ಯು.ಟಿ.ಖಾದರ್ ಸದ್ಯಕ್ಕೆ ಈ ಪ್ರಶ್ನೆಯನ್ನು ತಡೆಹಿಡಿದಿರುತ್ತೇನೆ. ಸಚಿವರು ಅಧಿಕಾರಿಗಳಿಂದ ಸಮಗ್ರ ಮಾಹಿತಿ ಪಡೆದು ನಂತರ ಸದನಕ್ಕೆ ಉತ್ತರ ನೀಡಿ ಎಂದು ಉಲ್ಲೇಖಿಸಿದರು. ಆದರೆ ಇದಕ್ಕೂ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ಬಳಿಕ ಸಚಿವರು ವ್ಯತ್ಯಾಸ ಇರುವ ಬಗ್ಗೆ ಪರಿಶೀಲಿಸಿ ಸ್ಪಷ್ಟನೆ ನೀಡುವುದಾಗಿ ಸದನಕ್ಕೆ ತಿಳಿಸಿದರು. ಕರ್ನಾಟಕ ರಾಜ್ಯದಲ್ಲಿ ಹಂತ ಹಂತವಾಗಿ ತೋಟಗಾರಿಕಾ ಮಹಾವಿದ್ಯಾಲಯಗಳನ್ನು ಸ್ಥಾಪಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಇದೇ ವೇಳೆ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ತಿಳಿಸಿದರು. ಕಾಂಗ್ರೆಸ್ ಶಾಸಕ ಕೆ.ಷಡಕ್ಷರಿ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಹೊಸ ತೋಟಗಾರಿಕೆ ಮಹಾವಿದ್ಯಾಲಯಗಳನ್ನು ಸ್ಥಾಪಿಸಲು ಇರುವ ಸಾಧಕ-ಬಾಧಕಗಳನ್ನು ಪರಿಶೀಲಿಸಲು ತೋಟಗಾರಿಕೆ ವಿಜ್ಞಾನಿಗಳ ವಿಶ್ವವಿದ್ಯಾಲಯ, ಬಾಗಲಕೋಟೆಯ ವಿಶ್ರಾಂತ ಕುಲಪತಿಗಳ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ರಚಿಸಲಾಗಿದೆ. ತಿಪಟೂರು ತಾಲೂಕಿನ ಬಿದರೆಗುಡಿಕಾವಲಿನಲ್ಲಿ ತೋಟಗಾರಿಕೆ ಮಹಾವಿದ್ಯಾಲಯವನ್ನು ಸ್ಥಾಪಿಸುವುದು ಸೇರಿದಂತೆ ರಾಜ್ಯದ ವಿವಿಧ ಸ್ಥಳಗಳಲ್ಲಿ ತೋಟಗಾರಿಕೆ ಮಹಾವಿದ್ಯಾಲಯಗಳನ್ನು ಸ್ಥಾಪಿಸುವ ಬಗ್ಗೆ ಈ ಸಮಿತಿ ವಿವಿಧ ಆಯಾಮಗಳನ್ನು ಪರಿಶೀಲಿಸಿ ವರದಿ ನೀಡಿದೆ ಎಂದರು.
ಅಡುಗೆ ಅನಿಲಕ್ಕೆ ಕೊರತೆ ಇಲ್ಲ; ಕಾಂಗ್ರೆಸ್ ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದೆ : ಪ್ರಹ್ಲಾದ್ ಜೋಶಿ
ಬೆಂಗಳೂರು : ಅಡುಗೆ ಅನಿಲ, ವಾಣಿಜ್ಯ ಎಲ್ಪಿಜಿ ಸಿಲಿಂಡರ್ಗಳ ಕೊರತೆ ದೇಶದಲ್ಲಿ ಇಲ್ಲ. ಆದರೆ, ಸಿಲಿಂಡರ್ ಪೂರೈಕೆಗೆ ಸಂಬಂಧಿಸಿದಂತೆ ಪ್ರತಿಪಕ್ಷ ಕಾಂಗ್ರೆಸ್, ಜನರನ್ನು ತಪ್ಪು ದಾರಿಗೆ ಎಳೆಯುವ ಪ್ರಯತ್ನ ಮಾಡುತ್ತಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಆರೋಪಿಸಿದ್ದಾರೆ. ಶುಕ್ರವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಅಡುಗೆ ಅನಿಲ ಸಂಬಂಧ ಜನರನ್ನು ಗೊಂದಲಕ್ಕೀಡು ಮಾಡುವ ಪ್ರಯತ್ನವನ್ನು ಕಾಂಗ್ರೆಸ್ ಮಾಡುತ್ತಿದೆ. ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಕೊರತೆ ಆಗುತ್ತದೆ ಎಂದು ರಾಹುಲ್ ಗಾಂಧಿ ನಿನ್ನೆ ಹೇಳಿದ್ದಾರೆ. ಇದು ಸುಳ್ಳು. ಇಡೀ ದೇಶದಲ್ಲಿ ಈಗಲೂ ಮತ್ತು ಮುಂದೆಯೂ ಪೆಟ್ರೋಲಿಯಂ ಉತ್ಪನ್ನಗಳ ಕೊರತೆ ಆಗುವುದಿಲ್ಲ ಎಂದರು. ಅಡುಗೆ ಅನಿಲ ಮತ್ತು ವಾಣಿಜ್ಯ ಸಿಲಿಂಡರ್ ಪೂರೈಕೆಗೆ ಹಲವು ಮೂಲಗಳಿಂದ ಪ್ರಯತ್ನ ಮಾಡಲಾಗಿದೆ. ಈ ಮೊದಲು 20 ರಿಂದ 22 ದೇಶಗಳಿಂದ ಪೆಟ್ರೋಲಿಯಂ ಉತ್ಪನ್ನಗಳನ್ನು ಭಾರತ ಆಮದು ಮಾಡಿಕೊಳ್ತಿತ್ತು. ಇದೀಗ ಇದು 40 ದೇಶಗಳಿಗೆ ಹೆಚ್ಚಿದೆ. ಅಡುಗೆ ಅನಿಲ ಸಿಲಿಂಡರ್ ಕೊರತೆ ವಿಷಯದಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ರಾಹುಲ್ ಗಾಂಧಿ ಜನರನ್ನು ತಪ್ಪು ದಾರಿಗೆ ಎಳೆಯುತ್ತಿದ್ದಾರೆ ಎಂದು ಟೀಕಿಸಿದರು. ಅಡುಗೆ ಅನಿಲ ಮತ್ತು ವಾಣಿಜ್ಯ ಸಿಲಿಂಡರ್ಗಳ ಬುಕಿಂಗ್ ಜಾಸ್ತಿ ಇದೆ. ಹೀಗಾಗಿ ಕೆಲ ನಿರ್ಬಂಧಗಳನ್ನು ಹೇರಲಾಗಿದೆ. ಈ ಮೊದಲಿನಂತೆಯೆ ಸಿಲಿಂಡರ್ಗಳ ಪೂರೈಕೆ ಮಾಡಲಾಗುತ್ತಿದೆ. ಎಲ್ಲಿಯೂ ಕೊರತೆ ಇಲ್ಲ. ಜಾಗತಿಕ ಸರಕು ಸಾಗಣೆಯ ಪ್ರಮುಖ ಜಲಮಾರ್ಗ ಹರ್ಮುಜ್ ಜಲಸಂಧಿ ಮೂಲಕ ಈಗಾಗಲೇ ಒಂದು ಹಡಗು ಬಂದಿದೆ. ಇನ್ನೂ ಹಲವು ಹಡಗು ಬರಲಿವೆ ಎಂದರು.
ಹಾಸನದಲ್ಲಿ ಆಟೊ ಗ್ಯಾಸ್ ಕೊರತೆ : ಚಾಲಕರ ಪರದಾಟ, ಬಂಕ್ ಮಾಲಕರ ಆಕ್ರೋಶ
ಹಾಸನ : ನಗರ ಮತ್ತು ಸುತ್ತಮುತ್ತ ಪ್ರದೇಶಗಳಲ್ಲಿ ಆಟೊ ಗ್ಯಾಸ್ ಸಿಗದೆ ಆಟೊ ಚಾಲಕರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕಳೆದ ಒಂದು ವಾರದಿಂದ ಗ್ಯಾಸ್ ಸರಬರಾಜು ಸ್ಥಗಿತ ಗೊಂಡಿರುವುದರಿಂದ ಆಟೊ ಚಾಲಕರು ದಿನನಿತ್ಯದ ಜೀವನ ಸಾಗಿಸಲು ಪರದಾಡುವಂತಾಗಿದೆ. ನಗರದ ಬಿ. ಕಾಟೀಹಳ್ಳಿ ಪ್ರದೇಶದಲ್ಲಿರುವ ಎಚ್ಪಿ ಆಟೋ ಗ್ಯಾಸ್ ಬಂಕ್ನಲ್ಲಿ ಗ್ಯಾಸ್ ಲಭ್ಯವಿಲ್ಲದೆ, ಚಾಲಕರು ಮತ್ತು ಬಂಕ್ ಮಾಲಕರು ಸಂಕಷ್ಟ ಅನುಭವಿಸುತ್ತಿದ್ದಾರೆ. ಇದು ಇವರಿಬ್ಬರ ನಡುವೆ ವಾಗ್ವಾದಕ್ಕೂ ನಾಂದಿ ಹಾಡಿದೆ. ಸರ್ಕಾರಿ ಸ್ವಾಮ್ಯದ ಗ್ಯಾಸ್ ಕಂಪೆನಿಯಿಂದ ನಿಗದಿತ ದರದಲ್ಲಿ ದೊರೆಯುತ್ತಿದ್ದ ಆಟೊ ಗ್ಯಾಸ್ ಇದೀಗ ಸಿಗದಿರುವುದರಿಂದ ಚಾಲಕರು ಖಾಸಗಿ ಮಾರ್ಗದಲ್ಲಿ ದುಬಾರಿ ಬೆಲೆಯಲ್ಲಿ ಗ್ಯಾಸ್ ಖರೀದಿಸಲು ಸಿದ್ಧರಾಗಿದ್ದಾರೆ. ಇದರಿಂದ ಆಟೊ ಚಾಲಕರ ಆದಾಯಕ್ಕೂ ದೊಡ್ಡ ಹೊಡೆತ ಬಿದ್ದಿದ್ದು, ಅವರ ಜೀವನೋಪಾಯದ ಮೇಲೆ ಗಂಭೀರ ಪರಿಣಾಮ ಬೀರಿದೆ. ಗ್ಯಾಸ್ ಬಂಕ್ ಮಾಲಕರ ಮಾತಿನ ಪ್ರಕಾರ, ಈಗಾಗಲೇ ಮುಂಗಡ ಹಣ ಪಾವತಿಸಿ ಗ್ಯಾಸ್ ಬುಕ್ ಮಾಡಿದ್ದರೂ ಕಂಪೆನಿಯಿಂದ ಸರಬರಾಜು ಆಗುತ್ತಿಲ್ಲ. ‘‘ಫೋನ್ ಮಾಡಿದರೂ ಪ್ರತಿಕ್ರಿಯೆ ನೀಡುವುದಿಲ್ಲ. ಸೇಲ್ಸ್ ಆಫೀಸರ್ ಬರುವಾಗಲೇ ಸಮಸ್ಯೆ ಹೇಳಿಕೊಳ್ಳಬೇಕು. ಬೇರೆ ಯಾರನ್ನೂ ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ’’ ಎಂದು ತಮ್ಮ ಅಸಹಾಯಕತೆಯನ್ನು ವ್ಯಕ್ತಪಡಿಸಿದ್ದಾರೆ. ಆಟೋ ಚಾಲಕರಾದ ಜಾನಿ ಮತ್ತು ಇತರರು ಮಾತನಾಡಿ, ‘‘ಗ್ಯಾಸ್ ಇಲ್ಲದೆ ನಮ್ಮ ಆಟೋಗಳು ರಸ್ತೆಗೆ ಇಳಿಯುತ್ತಿಲ್ಲ. ದಿನಕ್ಕೆ ದುಡಿದು ಮನೆ ನಡೆಸುವ ನಮ್ಮಂತಹವರಿಗೆ ಇದು ದೊಡ್ಡ ಹೊಡೆತವಾಗಿದೆ’’ ಎಂದರು.
ಶಿವಮೊಗ್ಗ : ಎತ್ತುಗಳ ಸಾಗಾಟಕ್ಕೆ ಅಡ್ಡಿ ಮಾಡಿದ್ದಾರೆ ಎಂದು ಆರೋಪಿಸಿ ಬಜರಂಗದಳದ ಕಾರ್ಯಕರ್ತರ ವಿರುದ್ಧ ರೈತರು ಶಿವಮೊಗ್ಗ ಉಪವಿಭಾಗಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದ ಘಟನೆ ವರದಿಯಾಗಿದೆ. ಘಟನೆ ಹಿನ್ನೆಲೆ : ಹಾವೇರಿ ಜಿಲ್ಲೆಯ ಹಿರೇಕೇರೂರು ತಾಲೂಕಿನ ಕೆಲವು ರೈತರು ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಗಂಡಸಿ ಗ್ರಾಮದ ಎತ್ತುಗಳ ಸಂತೆಯಲ್ಲಿ ಸುಮಾರು 19 ಎತ್ತುಗಳನ್ನು ಖರೀದಿಸಿ ಲಾರಿಯಲ್ಲಿ ಹಿರೇಕೆರೂರಿಗೆ ತೆಗೆದುಕೊಂಡು ಹೋಗುತ್ತಿದ್ದರು. ಮಾರ್ಗ ಮಧ್ಯೆ ಹೊಳೆಹೊನ್ನೂರ ಪಟ್ಟಣದಲ್ಲಿ ಟೀ ಕುಡಿಯಲು ಲಾರಿಯನ್ನು ನಿಲ್ಲಿಸಿದಾಗ ಬಜರಂಗದಳದ ಕಾರ್ಯಕರ್ತರು ಲಾರಿಯನ್ನು ಅಡ್ಡಗಟ್ಟಿ ಪಟ್ಟಣದ ಪೋಲಿಸ್ ಠಾಣೆಗೆ ದೂರು ನೀಡಿದ್ದಾರೆ ಎಂದು ರೈತರು ಆರೋಪಿಸಿದ್ದಾರೆ. ಈ ವೇಳೆ ಎಷ್ಟೇ ಪರಿಪರಿಯಾಗಿ ಬೇಡಿಕೊಂಡರೂ ಕೇಳದ ಬಜರಂಗದಳದ ಕಾರ್ಯಕರ್ತರು ಪೊಲೀಸರ ಮೇಲೆ ಒತ್ತಡ ಹೇರಿ ಲಾರಿ ಚಾಲಕನ ವಿರುದ್ಧ ಪಟ್ಟಣದ ಠಾಣೆಯಲ್ಲಿ ಎಫ್ಐಆರ್ ದಾಖಲಿಸಿದ್ದಾರೆ. ನಂತರ ಎಲ್ಲ ಎತ್ತುಗಳನ್ನು ಶಿವಮೊಗ್ಗದ ಗೋ ಶಾಲೆಗೆ ಬಿಡಲಾಗಿದೆ ಎಂದು ದೂರಿದ್ದಾರೆ. ಘಟನೆಯಿಂದ ಕಂಗಾಲಾದ ಹಿರೇಕೇರೂರು ತಾಲೂಕಿನ ಸುಮಾರು 20 ಮಂದಿ ರೈತರು ಶಿವಮೊಗ್ಗ ಉಪವಿಭಾಗಾಧಿಕಾರಿ ಕಚೇರಿ ಎದುರು ಗುರುವಾರ ತಡರಾತ್ರಿಯಿಂದಲೇ ಪ್ರತಿಭಟನೆ ಆರಂಭಿಸಿದ್ದರು. ಶುಕ್ರವಾರ ವಿಷಯ ಜಿಲ್ಲಾಧಿಕಾರಿ ಗಮನಕ್ಕೆ ಬಂದಿದ್ದು, ಬಳಿಕ ಜಿಲ್ಲಾಧಿಕಾರಿ ಮತ್ತು ಉಪವಿಭಾಗಾಧಿಕಾರಿ ಅವರು ರೈತರ ಮನವಿಗೆ ಸ್ಪಂದಿಸಿ ಎಲ್ಲ ಎತ್ತುಗಳನ್ನು ಗೋ ಶಾಲೆಯಿಂದ ಬಿಡಿಸಿ ಕಳಿಸಿದ್ದಾರೆ ಎಂದು ರೈತರೋರ್ವರು ಮಾಹಿತಿ ನೀಡಿದ್ದಾರೆ.
Sagara | ಕಾರ್ಗಲ್ನಲ್ಲಿ ಹೆಚ್ಚಿದ ವಾಂತಿ, ಭೇದಿ ಪ್ರಕರಣ; ಅಸ್ವಸ್ಥಗೊಂಡಿದ್ದ ಮಹಿಳೆ ಮೃತ್ಯು
ಶಿವಮೊಗ್ಗ : ಜಿಲ್ಲೆಯ ಸಾಗರ ತಾಲೂಕಿನ ಕಾರ್ಗಲ್ ಪಟ್ಟಣದಲ್ಲಿ ಎರಡು ದಿನಗಳಿಂದ ವಾಂತಿ ಮತ್ತು ಭೇದಿ ಪ್ರಕರಣ ಹೆಚ್ಚಾಗಿದ್ದು, ಈ ಮಧ್ಯೆ ಕಾರ್ಗಲ್ ಪಟ್ಟಣದ ಭಾಗ್ಯಮಂದಿರ ಕಾಲನಿಯ ಮಹಿಳೆ ಮೃತಪಟ್ಟ ಘಟನೆ ಶುಕ್ರವಾರ ವರದಿಯಾಗಿದೆ. ಕಾರ್ಗಲ್ ಪಟ್ಟಣ ಪಂಚಾಯತ್ ಮಾಜಿ ಅಧ್ಯಕ್ಷ ಎಂ. ರಾಜು ಅವರ ತಾಯಿ ಜಯಲಕ್ಷ್ಮೀ (65) ಮೃತ ಮಹಿಳೆ. ಇವರು ಬುಧವಾರ ಜ್ವರ, ವಾಂತಿ, ಭೇದಿಯಿಂದ ಅಸ್ವಸ್ಥಗೊಂಡಿದ್ದರು. ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೆ ಗುರುವಾರ ಮೃತಪಟ್ಟಿದ್ದಾರೆ. ಕಾರ್ಗಲ್, ಜೋಗ, ಲಿಂಗನಮಕ್ಕಿ, ಅರಳಗೋಡು, ಹೆನ್ನಿ, ಇಡುವಾಣಿ ಗ್ರಾಮಗಳಲ್ಲಿ 4-5 ದಿನಗಳಿಂದ ನಿವಾಸಿಗಳಲ್ಲಿ ಹೊಟ್ಟೆ ನೋವು, ವಾಂತಿ, ಭೇದಿ, ತಲೆನೋವು, ಜ್ವರ ಕಾಣಿಸಿಕೊಂಡಿತ್ತು. ಅಸ್ವಸ್ಥಗೊಂಡಿದ್ದ ಕಾರ್ಗಲ್ನ ಸರಕಾರಿ ಶಾಲೆಯ 15ಕ್ಕೂ ಅಧಿಕ ವಿದ್ಯಾರ್ಥಿಗಳನ್ನು ಚಿಕಿತ್ಸೆಗೆ ಬುಧವಾರ ಕೆಪಿಸಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸರ್ವೇಕ್ಷಣಾಧಿಕಾರಿ ಭೇಟಿ : ವಿಷಯ ತಿಳಿಯುತ್ತಿದ್ದಂತೆ ಜಿಲ್ಲಾ ಸರ್ವೇಕ್ಷಣಾಧಿಕಾರಿ ಎಲ್. ನಾಗರಾಜ್ ನಾಯ್ಕ ಅವರು ಕಾರ್ಗಲ್ ಆಸ್ಪತ್ರೆಗೆ ಭೇಟಿ ನೀಡಿ ವೈದ್ಯರ ಜೊತೆಗೆ ಚರ್ಚಿಸಿದರು. ಅಲ್ಲದೆ, ಜಿಲ್ಲಾ ಆರೋಗ್ಯ ತಂಡವು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ವೈದ್ಯಾಧಿಕಾರಿಗಳು ಕುಡಿಯುವ ನೀರು ಹಾಗೂ ಆಹಾರದ ಮಾದರಿ ಸಂಗ್ರಹಿಸಿ ತಪಾಸಣೆಗೆ ಕಳುಹಿಸಿದ್ದಾರೆ. ಕಾರ್ಗಲ್ ಭಾಗದಲ್ಲಿ ಎರಡು ದಿನಗಳಿಂದ ವಾಂತಿ-ಭೇದಿ ಪ್ರಕರಣಗಳು ಗಮನಕ್ಕೆ ಬಂದಿವೆ. ಸುಮಾರು ನೂರಕ್ಕೂ ಹೆಚ್ಚು ಜನರಿಗೆ ವಾಂತಿ-ಭೇದಿಯಾಗಿದೆ. ಪ್ರಸಕ್ತ ಐದು ಜನ ಒಳರೋಗಿಗಳಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕುಡಿಯುವ ನೀರಿನಲ್ಲಿ ಯಾವುದೇ ದೋಷ ಕಂಡು ಬಂದಿಲ್ಲ. ಬದಲಾಗಿ ಚೌಡೇಶ್ವರಿ ಜಾತ್ರೆಯಲ್ಲಿ ಸೇವಿಸಿದ ಐಸ್ಕ್ರೀಂ ಹಾಗೂ ಆಲೂಗಡ್ಡೆಯ ತಿನಿಸುಗಳಿಂದ ಈ ಸಮಸ್ಯೆ ಉಂಟಾಗಿರುವ ಶಂಕೆ ಇದೆ. ನೀರಿನ 48 ಗಂಟೆಗಳ ಕಲ್ಚರ್ ಟೆಸ್ಟ್ ವರದಿ ಇನ್ನಷ್ಟೇ ಬರಬೇಕಿದೆ. ವರದಿ ಬಂದ ಬಳಿಕ ಹೆಚ್ಚಿನ ಮಾಹಿತಿ ನೀಡಲಾಗುವುದು. -ಪ್ರಭುಲಿಂಗ ಕವಳಿಕಟ್ಟಿ, ಶಿವಮೊಗ್ಗ ಜಿಲ್ಲಾಧಿಕಾರಿ
ಇರಾನ್ ವಿರುದ್ಧ ಮತ್ತಷ್ಟು ದಾಳಿಗೆ ಸಿದ್ಧವಾದ ಇಸ್ರೇಲ್, ಹೊಸ ತಂತ್ರದ ಮೊರೆ | Operation Roaring Lion
ಇರಾನ್ ವಿರುದ್ಧ ಈ ಬಾರಿ ಯುದ್ಧ ಗೆಲ್ಲಬೇಕು, ಆ ಮೂಲಕ ಮಧ್ಯಪ್ರಾಚ್ಯ ಭಾಗದಲ್ಲಿ ತಮ್ಮ ವಿರುದ್ಧ ಯಾವುದೇ ದೇಶ ಕಿರಿಕ್ ಮಾಡದಂತೆ ಭವಿಷ್ಯ ರೂಪಿಸಬೇಕು ಎಂಬುದು ಅಮೆರಿಕ ಹಾಗೂ ಇಸ್ರೇಲ್ ಪ್ಲಾನ್ ಆಗಿದೆ. ಅದರಲ್ಲೂ ಇರಾನ್ ದೇಶ ಪರಮಾಣು ಬಾಂಬ್ ತಯಾರಿಸುತ್ತಿದೆ ಎಂಬ ಕಾರಣಕ್ಕೆ, ಭಾರಿ ದೊಡ್ಡ ಮಟ್ಟದಲ್ಲಿ ದಾಳಿ ಶುರು ಮಾಡಿದ್ದ ಇಸ್ರೇಲ್ ಮತ್ತು ಅಮೆರಿಕ
ವಾಶಿಂಗ್ಟನ್, ಮಾ.13: ಅಮೆರಿಕ ಮತ್ತು ಇಸ್ರೇಲ್ ನಡೆಸಿದ ದಾಳಿಯಲ್ಲಿ ಇರಾನ್ ನ ನೂತನ ಸರ್ವೋಚ್ಚ ನಾಯಕ ಮೊಜ್ತಾಬಾ ಖಾಮಿನೈ ಗಾಯಗೊಂಡಿದ್ದಾರೆ ಎಂದು ಅಮೆರಿಕದ ರಕ್ಷಣಾ ಕಾರ್ಯದರ್ಶಿ ಪೀಟ್ ಹೆಗ್ಸೆತ್ ಹೇಳಿದ್ದಾರೆ ಎಂದು Aljazeera ವರದಿ ಮಾಡಿದೆ. ಮೊಜ್ತಾಬಾ ಖಾಮಿನೈ ಸರ್ವೋಚ್ಚ ನಾಯಕರಾಗಿ ನೇಮಕಗೊಂಡ ಬಳಿಕ ತಮ್ಮ ಮೊದಲ ಹೇಳಿಕೆಯಲ್ಲಿ ಹೋರಾಟ ಮುಂದುವರಿಸುವುದಾಗಿ ಪ್ರತಿಜ್ಞೆ ಮಾಡಿದ ಒಂದು ದಿನದ ಬಳಿಕ ಹೆಗ್ಸೆತ್ ಈ ಹೇಳಿಕೆ ನೀಡಿದ್ದಾರೆ. ಶುಕ್ರವಾರ ಪೆಂಟಗನ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಹೆಗ್ಸೆತ್, ಮೊಜ್ತಾಬಾ ಖಾಮಿನೈ ಗಾಯಗೊಂಡಿದ್ದಾರೆ ಮತ್ತು ವಿರೂಪಗೊಂಡಿರಬಹುದು ಎಂದು ತಿಳಿಸಿದ್ದಾರೆ. “ನಿನ್ನೆ ಅವರು ಒಂದು ಹೇಳಿಕೆ ನೀಡಿದರು. ವಾಸ್ತವವಾಗಿ ಅದು ದುರ್ಬಲವಾಗಿತ್ತು. ಯಾವುದೇ ಧ್ವನಿ ಅಥವಾ ವೀಡಿಯೊ ಇರಲಿಲ್ಲ; ಅದು ಕೇವಲ ಲಿಖಿತ ಹೇಳಿಕೆಯಾಗಿತ್ತು” ಎಂದು ಹೆಗ್ಸೆತ್ ಹೇಳಿದರು. ಆದರೆ ತಮ್ಮ ಹೇಳಿಕೆಗೆ ಪೂರಕವಾದ ಯಾವುದೇ ಪುರಾವೆಗಳನ್ನು ಹೆಗ್ಸೆತ್ ನೀಡಿಲ್ಲ. ಖಾಮಿನೈ ಅವರ ಆರೋಗ್ಯ ಸ್ಥಿತಿಯ ಕುರಿತು ಇರಾನ್ ಸರ್ಕಾರವೂ ಯಾವುದೇ ವಿವರಗಳನ್ನು ಬಹಿರಂಗಪಡಿಸಿಲ್ಲ. ಈ ಹೇಳಿಕೆಗಳಿಗೆ ಇರಾನ್ ನಾಯಕರು ತಕ್ಷಣ ಪ್ರತಿಕ್ರಿಯಿಸಲಿಲ್ಲ. ಫೆಬ್ರವರಿ 28ರಂದು ಇರಾನ್ ಮೇಲೆ ಅಮೆರಿಕ ಮತ್ತು ಇಸ್ರೇಲ್ ದಾಳಿಗಳು ಆರಂಭವಾದ ಮೊದಲ ದಿನವೇ ಮೊಜ್ತಾಬಾ ಖಾಮಿನೈ ಅವರ ತಂದೆ ಆಯತುಲ್ಲಾ ಅಲಿ ಖಾಮಿನೈ ಹತ್ಯೆಗೀಡಾದ ಬಳಿಕ ಅವರು ದೇಶದ ಸರ್ವೋಚ್ಚ ನಾಯಕನಾಗಿ ಅಧಿಕಾರ ವಹಿಸಿಕೊಂಡಿದ್ದರು. ಅಧಿಕಾರ ಸ್ವೀಕರಿಸಿದ ಬಳಿಕ ಗುರುವಾರ ಅವರು ತಮ್ಮ ಮೊದಲ ಸಾರ್ವಜನಿಕ ಹೇಳಿಕೆಯನ್ನು ಬಿಡುಗಡೆ ಮಾಡಿದ್ದರು. ಇರಾನ್ ನ ಸರಕಾರಿ ಟಿವಿಯಲ್ಲಿ ಓದಿದ ಲಿಖಿತ ಹೇಳಿಕೆಯಲ್ಲಿ, ಈ ಪ್ರದೇಶದಲ್ಲಿರುವ ಅಮೆರಿಕದ ಎಲ್ಲಾ ಸೇನಾ ನೆಲೆಗಳನ್ನು ತಕ್ಷಣವೇ ಮುಚ್ಚಬೇಕು ಎಂದು ಮೊಜ್ತಾಬಾ ಖಾಮಿನೈ ಆಗ್ರಹಿಸಿದರು. ಇಲ್ಲವಾದರೆ ಆ ನೆಲೆಗಳ ಮೇಲೆ ದಾಳಿ ನಡೆಸುವುದಾಗಿ ಎಚ್ಚರಿಕೆ ನೀಡಿದರು. ಜೊತೆಗೆ, ಹಾರ್ಮುಝ್ ಜಲಸಂಧಿಯನ್ನು ಮುಚ್ಚುವ ಕ್ರಮ ಮುಂದುವರಿಸಲಾಗುವುದು ಎಂದು ಅವರು ತಿಳಿಸಿದ್ದಾರೆ. “ದೇಶದ ಮೇಲೆ ನಡೆಯುತ್ತಿರುವ ದಾಳಿಗಳ ನಡುವೆಯೂ ಧೈರ್ಯದಿಂದ ಹೋರಾಡುತ್ತಿರುವ ಯೋಧರಿಗೆ ನಾನು ಕೃತಜ್ಞತೆ ಸಲ್ಲಿಸುತ್ತೇನೆ” ಎಂದು ಖಾಮಿನೈ ಹೇಳಿದ್ದಾರೆ. ಯುದ್ಧ ಆರಂಭವಾದ ಬಳಿಕ ಮೊಜ್ತಾಬಾ ಖಾಮಿನೈ ಅವರು ಸಾರ್ವಜನಿಕವಾಗಿ ಕಾಣಿಸಿಕೊಂಡಿಲ್ಲ. ಈ ವಾರದ ಆರಂಭದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಮೊಜ್ತಾಬಾ ಖಾಮಿನೈ ಅವರನ್ನು ಇರಾನ್ ನ ಹೊಸ ಸುಪ್ರೀಂ ಲೀಡರ್ ಆಗಿ ನೇಮಿಸಿರುವುದು ತಮಗೆ ‘ಸಂತೋಷಕರವಾಗಿಲ್ಲ’ ಎಂದು ಹೇಳಿದ್ದಾರೆ. ಅವರ ತಂದೆಯಂತೆಯೇ ಅವರನ್ನು ಗುರಿಯಾಗಿಸಿ ಕೊಲ್ಲಬಹುದೆಂಬ ಸೂಚನೆಯನ್ನು ಕೂಡ ನೀಡಿದ್ದಾರೆ. “ಅವರು ಸುಪ್ರೀಂ ಲೀಡರ್ ಆಗಿ ಹೆಚ್ಚು ಕಾಲ ಉಳಿಯುತ್ತಾರೆಯೋ ಇಲ್ಲವೋ ತಿಳಿದಿಲ್ಲ. ಅವರನ್ನು ನೇಮಿಸಿರುವುದು ತಪ್ಪು ನಿರ್ಧಾರ ಎಂದು ನಾನು ಭಾವಿಸುತ್ತೇನೆ” ಎಂದು ಟ್ರಂಪ್ ಸೋಮವಾರ ಹೇಳಿದ್ದರು. ಕಳೆದ ತಿಂಗಳ ಕೊನೆಯಲ್ಲಿ ಆರಂಭವಾದ ಯುದ್ಧದ ಬಳಿಕ ಅಮೆರಿಕ–ಇಸ್ರೇಲ್ ನಡೆಸಿದ ದಾಳಿಯಲ್ಲಿ ಕನಿಷ್ಠ 1,444 ಜನರು ಸಾವನ್ನಪ್ಪಿದ್ದು, 18,551 ಜನರು ಗಾಯಗೊಂಡಿದ್ದಾರೆ ಎಂದು ಇರಾನ್ ಆರೋಗ್ಯ ಸಚಿವಾಲಯದ ಇತ್ತೀಚಿನ ಅಂಕಿಅಂಶಗಳು ತಿಳಿಸಿವೆ. ಅಮೆರಿಕ ಮತ್ತು ಇಸ್ರೇಲ್, ಇರಾನ್ನ ನಾಯಕತ್ವ, ಮಿಲಿಟರಿ ಮತ್ತು ಪರಮಾಣು ಮೂಲಸೌಕರ್ಯಗಳನ್ನು ಗುರಿಯಾಗಿಸಿಕೊಂಡಿದ್ದೇವೆ ಎಂದು ಹೇಳಿವೆ. ಆದರೆ ಶಾಲೆಗಳು ಮತ್ತು ಆಸ್ಪತ್ರೆಗಳಂತಹ ಸಾವಿರಾರು ನಾಗರಿಕ ಸ್ಥಳಗಳ ಮೇಲೂ ದಾಳಿ ನಡೆದಿದೆ ಎಂದು ಇರಾನ್ ಆರೋಪಿಸಿದೆ. ಶುಕ್ರವಾರದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಹೆಗ್ಸೆತ್, ಫೆಬ್ರವರಿ 28ರಿಂದ ಅಮೆರಿಕ ಮತ್ತು ಇಸ್ರೇಲ್ ದಾಳಿಗಳು 15,000 ಕ್ಕೂ ಹೆಚ್ಚು ಇರಾನಿನ ಗುರಿಗಳನ್ನು ಹೊಡೆದುರುಳಿಸಿವೆ ಎಂದು ಹೇಳಿದರು. “ಅವರ ಬಳಿ ಇನ್ನೂ ಉಳಿದಿರುವ ಕ್ಷಿಪಣಿಗಳನ್ನು ನಾವು ಹೊಡೆದುರುಳಿಸಿ ನಾಶಪಡಿಸುತ್ತಿದ್ದೇವೆ. ಮುಖ್ಯವಾಗಿ ಅವರು ಮುಂದಿನ ದಾಳಿಗಳನ್ನು ನಡೆಸುವ ಸಾಮರ್ಥ್ಯವನ್ನು ಕಳೆದುಕೊಳ್ಳುವಂತೆ ಮಾಡುತ್ತಿದ್ದೇವೆ” ಎಂದು ಅವರು ಹೇಳಿದರು. “ಅವರ ಉತ್ಪಾದನಾ ಮಾರ್ಗಗಳು, ಮಿಲಿಟರಿ ಸ್ಥಾವರಗಳು ಮತ್ತು ರಕ್ಷಣಾ ನವೀನತೆ ಕೇಂದ್ರಗಳು ಸೋಲಿಸಲ್ಪಟ್ಟಿವೆ. ಇರಾನ್ ನ ನಾಯಕತ್ವ ಉತ್ತಮ ಸ್ಥಿತಿಯಲ್ಲಿ ಇಲ್ಲ. ಅವರು ಭೂಗತದಲ್ಲಿ ಅಡಗಿಕೊಂಡು ಭಯಭೀತರಾಗಿದ್ದಾರೆ” ಎಂದು ಹೆಗ್ಸೆತ್ ಹೇಳಿದರು. ಶುಕ್ರವಾರ ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಮತ್ತು ಇರಾನ್ ನ ಉನ್ನತ ಭದ್ರತಾ ಅಧಿಕಾರಿ ಅಲಿ ಲಾರಿಜಾನಿ ಅವರು ರಾಜಧಾನಿ ಟೆಹ್ರಾನ್ನಲ್ಲಿ ನಡೆದ ಅಲ್-ಕುಡ್ಸ್ ದಿನದ ಸಾಮೂಹಿಕ ಪ್ರದರ್ಶನದಲ್ಲಿ ಕಾಣಿಸಿಕೊಂಡರು. ದೋಹಾ ಇನ್ಸ್ಟಿಟ್ಯೂಟ್ ಫಾರ್ ಗ್ರಾಜುಯೇಟ್ ಸ್ಟಡೀಸ್ನ ಪ್ರಾಧ್ಯಾಪಕ ಮೊಹಮ್ಮದ್ ಎಲ್ಮಾಸ್ರಿ ಅವರ ಪ್ರಕಾರ, ಹೆಗ್ಸೆತ್ ಅವರ ಹೇಳಿಕೆಗಳು ಮುಖ್ಯವಾಗಿ ಅಮೆರಿಕದ ಸಾರ್ವಜನಿಕರನ್ನು ಗುರಿಯಾಗಿರಿಸಿಕೊಂಡಿವೆ. “ಹೆಗ್ಸೆತ್ ಆತ್ಮವಿಶ್ವಾಸ ಮತ್ತು ಯಶಸ್ಸನ್ನು ಪ್ರದರ್ಶಿಸಲು ಪ್ರಯತ್ನಿಸುತ್ತಿದ್ದಾರೆ. ಇತ್ತೀಚಿನ ಅಭಿಪ್ರಾಯ ಸಂಗ್ರಹಗಳ ಪ್ರಕಾರ ಇರಾನ್ ನಲ್ಲಿನ ಯುದ್ಧ ಅಮೆರಿಕದಲ್ಲಿ ಹೆಚ್ಚು ಜನಪ್ರಿಯವಾಗಿಲ್ಲ. ಅನಿಲ ಬೆಲೆಗಳು ಏರುತ್ತಿವೆ, ಅಮೆರಿಕದ ಸೈನಿಕರು ಸಾವನ್ನಪ್ಪುತ್ತಿದ್ದಾರೆ. ಆದ್ದರಿಂದ ಟ್ರಂಪ್ ಮತ್ತು ಹೆಗ್ಸೆತ್ ಜನರಲ್ಲಿ ವಿಶ್ವಾಸ ಮೂಡಿಸಲು ಪ್ರಯತ್ನಿಸುತ್ತಿದ್ದಾರೆ” ಎಂದು ಅವರು ಹೇಳಿದ್ದಾರೆ.
IPL 2026: ಐಪಿಎಲ್ ಹಬ್ಬ ಆರಂಭಕ್ಕೂ ಮುನ್ನ 10 ಫ್ರಾಂಚೈಸಿಗಳಿಗೂ ಬಿಸಿಸಿಐ ಕಟ್ಟುನಿಟ್ಟಿನ ಮಾರ್ಗಸೂಚಿಗಳು
IPL 2026: ಈಗಾಗಲೇ ಇಂಡಿಯನ್ ಪ್ರೀಮಿಯರ್ ಲೀಗ್ 2026ರ ಮೊದಲ ಹಂತದ ವೇಳಾಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಇದರ ಬೆನ್ನಲ್ಲೇ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಎಲ್ಲಾ 10 ಐಪಿಎಲ್ ಫ್ರಾಂಚೈಸಿಗಳಿಗೆ ಕಟ್ಟುನಿಟ್ಟಿನ ಮಾರ್ಗಸೂಚಿಗಳನ್ನು ಹೊರಡಿಸಿದೆ. ಹಾಗಾದ್ರೆ, ಅವುಗಳಲ್ಲಿ ಏನೆಲ್ಲಾ ಇದೆ ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ. ಬಿಸಿಸಿಐ ಹೊರಡಿಸಿದ ಮಾರ್ಗಸೂಚಿಗಳು ಐಪಿಎಲ್ 2026ರ
ಭಾರತದಲ್ಲಿ ಬಗೆಹರಿಯಲಿದೆ ಎಲ್ಪಿಜಿ ಸಮಸ್ಯೆ, ನೀವು ನಮ್ಮ ಗೆಳೆಯ ಎಂದು ಕರೆದ ಇರಾನ್... Donald Trump
ಭಾರತಕ್ಕೆ ಮಧ್ಯಪ್ರಾಚ್ಯ ಭಾಗದಿಂದ ಇದೀಗ ಭಾರಿ ಭರ್ಜರಿ ಸುದ್ದಿ ಸಿಕ್ಕಿದೆ, ಭಾರತದ ಹಡಗುಗಳು &ನೌಕೆಗಳು ಹಾರ್ಮುಜ್ ಜಲಸಂಧಿಯಲ್ಲಿ ಸಿಲುಕಿ ಪರದಾಡುತ್ತಿದ್ದವು. ಅದರಲ್ಲೂ ಇರಾನ್ ಮಿಲಿಟರಿ ಈ ಭಾಗದಲ್ಲಿ ಎಂದರೆ, ಹಾರ್ಮುಜ್ ಜಲಸಂಧಿ ಮೂಲಕ ಯಾವುದೇ ತೈಲ ಹಾಗೂ ಗ್ಯಾಸ್ ಹಡಗು ಸಂಚಾರ ಮಾಡದಂತೆ ಅಡ್ಡ ಹಾಕಿದೆ. ಅಕಸ್ಮಾತ್ ಹಾರ್ಮುಜ್ ಜಲಸಂಧಿ ದಾಟಲು ಪ್ರಯತ್ನಿಸುತ್ತಿದ್ದರೆ ದೊಡ್ಡ ಮಟ್ಟದಲ್ಲಿ
ಎಲ್ಪಿಜಿ ನಂತರ ಅಡುಗೆ ಎಣ್ಣೆ ವಿಚಾರದಲ್ಲೂ ಶುರುವಾಯ್ತು ದೊಡ್ಡ ಟೆನ್ಷನ್... Cooking Oil
ಇರಾನ್ ಯುದ್ಧ ಕಾರಣಕ್ಕೆ ಸಾಲು ಸಾಲು ಸಂಕಷ್ಟ ಎದುರಾಗುತ್ತಿದ್ದು, ಭಾರತದಲ್ಲಿ ಈಗಾಗಲೇ ಈ ವಿಚಾರವಾಗಿ ಎಲ್ಪಿಜಿ ಸಮಸ್ಯೆ ಭುಗಿಲೆದ್ದು ಜನರು ಪರದಾಡುತ್ತಿದ್ದಾರೆ. ಹಾಗೇ ತೈಲ ಬೆಲೆ ಕೂಡ ಈ ಹಂತದಲ್ಲಿ ಹೆಚ್ಚಾಗುವ ಭೀತಿ ಮೂಡಿದ್ದು, ಸಾಲು ಸಾಲು ಕಂಟಕದ ನಡುವೆ ಭಾರತೀಯರೆಲ್ಲಾ ಬಳಲುತ್ತಿದ್ದಾರೆ. ಹಾಗೇ ಇರಾನ್ ಯುದ್ಧ ಇನ್ನಷ್ಟು ದಿನಗಳ ಕಾಲ ಮುಂದುವರಿದರೆ ಜಾಗತಿಕ ಆರ್ಥಿಕ ಪರಿಸ್ಥಿತಿ
ಮುಟ್ಟಾದರೆ ದೇವಸ್ಥಾನ ಮೈಲಿಗೆ; 8 ವರ್ಷದಿಂದ ಖಾಲಿ ಬಿತ್ತು ಪಕ್ಕದ ವಿದ್ಯಾರ್ಥಿನಿಯರ ಹಾಸ್ಟೆಲ್; ತುಮಕೂರಿನಲ್ಲಿ ಘಟನೆ
ಮೂಢನಂಬಿಕೆಯ ಸಂಕೋಲೆಯಲ್ಲಿ ಬಾಲಕಿಯರ ವಸತಿ ನಿಲಯವು ಎಂಟು ವರ್ಷಗಳಿಂದ ಬಳಕೆಯಾಗದೆ ಖಾಲಿ ಬಿದ್ದಿದೆ. ತುಮಕೂರು ಜಿಲ್ಲೆಯ ಕೊರಟಗೆರೆ ತಾಲ್ಲೂಕಿನ ಅಕ್ಕಿರಾಂಪುರ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಈ ಬಗ್ಗೆ ಬಿಜೆಪಿ ಸದಸ್ಯೆ ಭಾರತಿ ಶೆಟ್ಟಿಯವರು ವಿಧಾನ ಪರಿಷತ್ತಿನಲ್ಲಿ ಪ್ರಶ್ನೆ ಮಾಡಿ ಸರ್ಕಾರದ ಗಮನ ಸೆಳೆದರು.
ಉಡುಪಿ| ರಸ್ತೆ ಬದಿಯ ಕಾಂಪೌಂಡ್ಗೆ ಸ್ಕೂಟರ್ ಢಿಕ್ಕಿ: ತಾಯಿ ಮೃತ್ಯು, ಮಗ ಗಂಭೀರ
ಉಡುಪಿ: ಸ್ಕೂಟರೊಂದು ನಿಯಂತ್ರಣ ತಪ್ಪಿ ರಸ್ತೆ ಬದಿಯ ಕಾಂಪೌಂಡಿಗೆ ಢಿಕ್ಕಿ ಹೊಡೆದ ಪರಿಣಾಮ ಸಹಸವಾರೆ ತಾಯಿ ಮೃತಪಟ್ಟು ಸವಾರ ಮಗ ತೀವ್ರವಾಗಿ ಗಾಯಗೊಂಡ ಘಟನೆ ಇಂದು ಸಂಜೆ ನಿಟ್ಟೂರು ಸಮೀಪ ನಡೆದಿದೆ. ಮೃತರನ್ನು ಕಟಪಾಡಿ ಮೂಲದ ಹೆಲನ್ ಸೋನ್ಸ್ (50) ಎಂದು ಗುರುತಿಸಲಾಗಿದೆ. ಇವರ ಮಗ ಸವಾರ ಶರ್ವಿನ್ (20 )ತೀವ್ರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ತಾಯಿ ಮಗ ಹೋಗುತ್ತಿದ್ದ ಸ್ಕೂಟರ್ ನಿಯಂತ್ರಣ ತಪ್ಪಿ ರಸ್ತೆ ಬದಿಯ ನಿಟ್ಟೂರು ಬಬ್ಬು ಸ್ವಾಮಿ ದೈವಸ್ಥಾನದ ಕಾಂಪೌಂಡ್ ಗೆ ಢಿಕ್ಕಿ ಹೊಡೆಯಿತ್ತೆನ್ನಲಾಗಿದೆ. ಇದರಿಂದ ಸ್ಕೂಟರ್ ಸಹ ಸವಾರೆ ಹೆಲೆನ್ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟರು ಎಂದು ತಿಳಿದುಬಂದಿದೆ. ಈ ಬಗ್ಗೆ ಉಡುಪಿ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Budget Session 2026 | ಭಿಕ್ಷಾಟನೆ ದಂಧೆ ಕಂಡು ಬಂದಲ್ಲಿ ಕಠಿಣ ಕ್ರಮ : ಸಚಿವ ಡಾ.ಎಚ್.ಸಿ.ಮಹದೇವಪ್ಪ
ಬೆಂಗಳೂರು : ರಾಜ್ಯದಲ್ಲಿ ಭಿಕ್ಷಾಟನೆ ದಂಧೆ ಕಂಡು ಬಂದಲ್ಲಿ ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್ಪ ತಿಳಿಸಿದರು. ಶುಕ್ರವಾರ ವಿಧಾನಪರಿಷತ್ತಿನ ಪ್ರಶ್ನೋತ್ತರ ಕಲಾಪದಲ್ಲಿ ಕಾಂಗ್ರೆಸ್ ಸದಸ್ಯ ಡಾ.ಕೆ.ಗೋವಿಂದರಾಜ್ ಪ್ರಶ್ನೆಗೆ ಉತ್ತರಿಸಿದ ಸಚಿವರು, ಭಿಕ್ಷಾಟನೆ ನಿರ್ಬಂಧ ಮಾಡಲು ಸಮಾಜ ಕಲ್ಯಾಣ ಇಲಾಖೆ ಮತ್ತು ಪೊಲೀಸ್ ಇಲಾಖೆಯ ಜೊತೆ ಚರ್ಚಿಸಿ ಕ್ರಮಕೈಗೊಳ್ಳಲಾಗುವುದು ಎಂದರು. ರಾಜ್ಯದಲ್ಲಿ ಕೇಂದ್ರ ಪರಿಹಾರ ಸಮಿತಿಯ ಅಧೀನದಲ್ಲಿ ಒಟ್ಟು 15 ನಿರಾಶ್ರಿತರ ಪರಿಹಾರ ಕೇಂದ್ರಗಳಿದ್ದು, ಬೆಂಗಳೂರು, ಬೆಂಗಳೂರು ಪೂರ್ವ, ಬೆಳಗಾವಿ, ಬಳ್ಳಾರಿ ಚಿತ್ರದುರ್ಗ, ದಾವಣಗೆರೆ, ಧಾರವಾಡ, ದಕ್ಷಿಣ ಕನ್ನಡ, ಕಲಬುರಗಿ, ಕೋಲಾರ, ಮೈಸೂರು, ರಾಯಚೂರು, ಶಿವಮೊಗ್ಗ, ತುಮಕೂರು ಹಾಗೂ ವಿಜಯನಗರ ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸುತ್ತಿವೆ ಎಂದು ಎಚ್.ಸಿ.ಮಹದೇವಪ್ಪ ವಿವರಿಸಿದರು. ಹಿಂದಿನ ಮೂರು ವರ್ಷಗಳಲ್ಲಿ ರಾಜ್ಯದಲ್ಲಿ ಭಿಕ್ಷುಕರ ಪುನರ್ವಸತಿಗಾಗಿ 365.17 ಕೋಟಿ ರೂ.ಗಳನ್ನು ವೆಚ್ಚ ಮಾಡಲಾಗಿದೆ. ನಿರಾಶ್ರಿತರ ಒಳಿತಿಗಾಗಿ ಮಾನಸಿಕ ಆರೋಗ್ಯ ಕೇಂದ್ರ, ಡಾ.ಬಿ.ಆರ್.ಅಂಬೇಡ್ಕರ್ ತರಬೇತಿ ಕೇಂದ್ರ ಮತ್ತು ಸಿದ್ದ ಉಡುಪು ಘಟಕವನ್ನು ಸ್ಥಾಪಿಸಲು ಕೇಂದ್ರ ಪರಿಹಾರ ಸಮಿತಿಗೆ ಸೂಚಿಸಲಾಗಿದೆ ಎಂದು ಎಚ್.ಸಿ.ಮಹದೇವಪ್ಪ ಹೇಳಿದರು. ಭಿಕ್ಷುಕರು ಸ್ವಾಭಿಮಾನದ ಬದುಕು ನಡೆಸಲು ಹಾಗೂ ಸಾಮಾಜಿಕ ಭದ್ರತೆಗಾಗಿ ಆಧಾರ್ ಕಾರ್ಡ್ ಮಾಡಿಸಿ, ವೃದ್ಧಾಪ್ಯ ವೇತನ, ಅಂಗವಿಕಲ ವೇತನ, ವಿಧವಾ ವೇತನ ಒದಗಿಸಲು ಸಂಬಂಧಿತ ಇಲಾಖೆಗಳೊಂದಿಗೆ ಮಂಜೂರಾತಿಗೆ ಕ್ರಮವಹಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಭಿಕ್ಷಾಟನೆ ಮುಕ್ತ ರಾಜ್ಯವನ್ನಾಗಿ ಮಾಡಲು ಕ್ರಮವಹಿಸಲಾಗುವುದು ಎಂದು ಎಚ್.ಸಿ.ಮಹದೇವಪ್ಪ ತಿಳಿಸಿದರು. ಭೋವಿ ನಿಗಮದಲ್ಲಿ ಫಲಾನುಭವಿಗಳ ಆಯ್ಕೆ ಕ್ರಮಬದ್ಧವಾಗಿಲ್ಲ: ಎಚ್.ಸಿ.ಮಹದೇವಪ್ಪ ಭೋವಿ ಅಭಿವೃದ್ಧಿ ನಿಗಮದಲ್ಲಿ 2025-26ನೇ ಸಾಲಿನಲ್ಲಿ ಲಭ್ಯವಿರುವ ಸರಕಾರದ ಸಾಂಸ್ಥಿಕ ಕೋಟಾದಡಿಯಲ್ಲಿ ನೇರ ಸಾಲ, ಗಂಗಾ ಕಲ್ಯಾಣ, ಉದ್ಯಮಶೀಲತೆ, ಮೈಕ್ರೋ ಕ್ರೆಡಿಟ್ ಹಾಗೂ ಸ್ವಾವಲಂಬಿ ಸಾರಥಿ ಯೋಜನೆಯಡಿ ಕೆಲವು ಫಲಾನುಭವಿಗಳನ್ನು, ಕ್ರಮಬದ್ಧವಾಗಿ ಆಯ್ಕೆಯಾಗಿಲ್ಲವೆಂದು ಕಂಡು ಬಂದಿದುದರಿಂದ ಈ ಪಟ್ಟಿಗಳನ್ನು ರದ್ದುಪಡಿಸಲಾಗಿದೆ ಎಂದು ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್ಪ ತಿಳಿಸಿದರು. ಶುಕ್ರವಾರ ಪ್ರಶ್ನೋತ್ತರ ಕಲಾಪದಲ್ಲಿ ಜೆಡಿಎಸ್ ಸದಸ್ಯ ಟಿ.ಎನ್.ಜವರಾಯಿಗೌಡ ಪ್ರಶ್ನೆಗೆ ಉತ್ತರಿಸಿದ ಸಚಿವರು, ಫಲಾನುಭವಿಗಳನ್ನು ರದ್ದುಪಡಿಸಿರುವ ಪಟ್ಟಿಯನ್ನು ಪರಿಶೀಲಿಸಿ, ಕೆಲವು ಫಲಾನುಭವಿಗಳು ಅರ್ಹರಿದ್ದಲ್ಲಿ ಸಾಂಸ್ಥಿಕ ವಿವೇಚನಾ ಕೋಟಾದ ಮಿತಿಯ ಅಡಿಯಲ್ಲಿ ಪರಿಶೀಲಿಸಲಾಗುವುದು. 2025-26ನೇ ಸಾಲಿನ ಆಯವ್ಯದಲ್ಲಿ ಸಮಾಜ ಕಲ್ಯಾಣ ಇಲಾಖೆಗೆ 6155.74 ಕೋಟಿ ರೂ.ಅನುದಾನ ಹಂಚಿಕೆಯಾಗಿದೆ ಎಂದರು.
ಇ-ಆಸ್ತಿ ತಂತ್ರಾಂಶ ಸಮಸ್ಯೆ ಬಗೆಹರಿಸಲು ಕ್ರಮ : ಭೈರತಿ ಸುರೇಶ್
ಬೆಂಗಳೂ : ಇ-ಆಸ್ತಿ ತಂತ್ರಾಂಶದಲ್ಲಿ ಉಂಟಾಗುವ ತಾಂತ್ರಿಕ ಸಮಸ್ಯೆಗಳನ್ನು ಆದ್ಯತೆಯ ಮೇರೆಗೆ ಬಗೆಹರಿಸಲಾಗುತ್ತಿದೆ. ಸ್ವತ್ತಿನ ಮಾಲಕರು ಇ-ಖಾತಾ ಕೋರಿ ಕರ್ನಾಟಕ ಒನ್ ಹಾಗೂ ಸಿಟಿಜನ್ ಪೋರ್ಟಲ್ ಮೂಲಕ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ನಗರಾಭಿವೃಧ್ಧಿ ಸಚಿವ ಭೈರತಿ ಸುರೇಶ್ ಹೇಳಿದ್ದಾರೆ. ಶುಕ್ರವಾರ ವಿಧಾನಸಭೆಯ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿ ಸದಸ್ಯ ಜ್ಯೋತಿ ಗಣೇಶ್ ಅವರು ಇ-ತಂತ್ರಾಂಶದಲ್ಲಿನ ಲೋಪದೋಷಗಳನ್ನು ಸರಿಪಡಿಸಿ ಆಸ್ತಿಯ ಮಾಲೀಕರುಗಳಿಗೆ ಇ-ಸ್ವತ್ತು ಖಾತೆ ಮಾಡಿಕೊಡಲು ಕೋರಿದರು. ಇದಕ್ಕೆ ಉತ್ತರಿಸಿದ ಸಚಿವರು, ಕರ್ನಾಟಕ ಪೌರ ನಿಗಮಗಳ ಅಧಿನಿಯಮ 1976ರ ತಿದ್ದುಪಡಿಯಂತೆ ಕೆಲ ಸ್ವತ್ತುಗಳಿಗೆ ಮಾತ್ರ ಖಾತಾ ನೀಡಲು ಇ-ಆಸ್ತಿ ತಂತ್ರಾಂಶದಲ್ಲಿ ಅವಕಾಶ ಕಲ್ಪಿಸಲಾಗಿದೆ. ಒಟ್ಟು ವಿಸ್ತೀರ್ಣ ನಿವೇಶನ ಅಥವಾ ಸ್ವತ್ತಿನ ಪೂರ್ಣ ಅಳತೆಯನ್ನು ನಮೂದಿಸಲು ಅವಕಾಶವಿದೆ. ಕ್ರಯಪತ್ರದಲ್ಲಿರುವಂತೆ ಅಳತೆಯನ್ನು ತಂತ್ರಾಂಶದಲ್ಲಿ ನಮೂದು ಮಾಡಬೇಕು. ಸ್ವತ್ತು ಎಂದರೆ ಖಾಲಿ ಭೂಮಿ ಅಥವಾ ಕಟ್ಟಡ ಎರಡನ್ನೂ ಒಳಗೊಂಡಿರುತ್ತದೆ. ಇ-ಆಸ್ತಿ ತಂತ್ರಾಂಶದಲ್ಲಿ ಉಂಟಾಗುವ ತಾಂತ್ರಿಕ ಸಮಸ್ಯೆಗಳನ್ನು ಆದ್ಯತೆಯ ಮೇರೆಗೆ ಬಗೆಹರಿಸಲಾಗುತ್ತಿದೆ ಎಂದರು.
‘ಕರ್ನಾಟಕ ಮುನ್ಸಿಪಾಲಿಟಿಗಳ ಮತ್ತು ಕೆಲವು ಇತರ ಕಾನೂನು (ತಿದ್ದುಪಡಿ) ವಿಧೇಯಕ-2026ʼ ವಿಧಾನಸಭೆಯಲ್ಲಿ ಮಂಡನೆ
ಬೆಂಗಳೂರು : ಜಾಹೀರಾತುಗಳ ಮೇಲೆ ಶುಲ್ಕ ಸಂಗ್ರಹಿಸುವುದು ಹಾಗೂ ಅನಧಿಕೃತ ಜಾಹೀರಾತುಗಳನ್ನು ನಿಯಂತ್ರಿಸುವ ಉದ್ದೇಶಕ್ಕಾಗಿ ‘ಕರ್ನಾಟಕ ಮುನ್ಸಿಪಾಲಿಟಿಗಳ ಮತ್ತು ಕೆಲವು ಇತರ ಕಾನೂನು (ತಿದ್ದುಪಡಿ) ವಿಧೇಯಕ-2026 ಅನ್ನು ವಿಧಾನಸಭೆಯಲ್ಲಿ ಮಂಡಿಸಲಾಯಿತು. ಶುಕ್ರವಾರ ವಿಧಾನಸಭೆಯಲ್ಲಿ ನಗರಾಭಿವೃದ್ಧಿ ಮತ್ತು ನಗರ ಯೋಜನೆ ಸಚಿವ ಭೈರತಿ ಸುರೇಶ್ ಅವರು ವಿಧೇಯಕವನ್ನು ಮಂಡಿಸಿದರು. ಗ್ರೇಟರ್ ಬೆಂಗಳೂರು ಆಡಳಿತ ಅಧಿನಿಯಮ 2024ರ ಅನ್ವಯ ನಗರ ಪ್ರದೇಶಗಳಲ್ಲಿನ ಕಟ್ಟಡದ ಗೋಡೆ ಅಥವಾ ರಚನೆಯ ಮೇಲ್ಬಾಗದಲ್ಲಿ ಅಳವಡಿಸಿರುವ ಸಾರ್ವಜನಿಕ ಹಾಗೂ ಖಾಸಗಿ ಸ್ಥಳಗಳಲ್ಲಿನ ಜಾಹೀರಾತುಗಳಿಗೆ ತೆರಿಗೆಗೆ ವಿಧಿಸಲು ಹಾಗೂ ಅನಧಿಕೃತ ಜಾಹೀರಾತುಗಳನ್ನು ತೆರವುಗೊಳಿಸಲು ವಿಧೇಯಕದಲ್ಲಿ ಅವಕಾಶ ಕಲ್ಪಿಸಲಾಗಿದೆ ಅವರು ತಿಳಿಸಿದರು.
Kolkata Knight Riders Team- ಕೆಕೆಆರ್ ತಂಡಕ್ಕೆ ಬ್ಲೆಸ್ಸಿಂಗ್ ಮುಝರಬಾನಿ ಸೇರ್ಪಡೆಯ ಸಮಾಧಾನದ ಬೆನ್ನಲ್ಲೇ ಹೊಸ ಆಘಾತ ಎದುರಾಗಿದೆ. ತಂಡದ ಸ್ಟಾರ್ ವೇಗಿ ಹರ್ಷಿತ್ ರಾಣಾ ಗಾಯದ ಕಾರಣ ಟೂರ್ನಿಯಿಂದ ಹೊರಬಿದ್ದಿದ್ದಾರೆ. 2024ರ ಚಾಂಪಿಯನ್ ಪಟ್ಟ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ರಾಣಾ, ಟಿ20 ವಿಶ್ವಕಪ್ ವೇಳೆ ಮೊಣಕಾಲಿನ ಗಾಯಕ್ಕೆ ತುತ್ತಾಗಿದ್ದರು. ಶಸ್ತ್ರಚಿಕಿತ್ಸೆಯ ನಂತರವೂ ಅವರು ಚೇತರಿಸಿಕೊಳ್ಳದ ಕಾರಣ ಐಪಿಎಲ್ ಆಡುವುದು ಅಸಾಧ್ಯವಾಗಿದೆ. ಇತ್ತ ಮಥೀಶ್ ಪತಿರಣ ಲಭ್ಯತೆಯೂ ಖಚಿತವಿಲ್ಲದ ಕಾರಣ, ಕೆಕೆಆರ್ ಈಗ ರಾಣಾ ಬದಲಿಗೆ ಸಮರ್ಥ ಆಲ್ರೌಂಡರ್ ಹುಡುಕಾಟದಲ್ಲಿದೆ.
ಇರಾನ್ ಮೇಲೆ ಇಸ್ರೇಲ್-ಅಮೆರಿಕ ಹತಾಶೆಯಿಂದ ದಾಳಿ ನಡೆಸುತ್ತಿವೆ : ಲಾರಿಜಾನಿ
ಟೆಹ್ರಾನ್, ಮಾ.13: ಇರಾನ್ ರಾಜಧಾನಿ ಟೆಹ್ರಾನ್ನಲ್ಲಿ ಶುಕ್ರವಾರ ನಡೆದ ಬೃಹತ್ ರ್ಯಾಲಿಯಲ್ಲಿ ಪಾಲ್ಗೊಂಡ ರಾಷ್ಟ್ರೀಯ ಭದ್ರತಾ ಮುಖ್ಯಸ್ಥ ಆಲಿ ಲಾರಿಜಾನಿ, ಟೆಹ್ರಾನ್ನ ಮೇಲೆ ಇಸ್ರೇಲ್-ಅಮೆರಿಕ ಹತಾಶೆಯಿಂದ ದಾಳಿ ನಡೆಸುತ್ತಿವೆ ಎಂದು ಟೀಕಿಸಿದ್ದಾರೆ. ರ್ಯಾಲಿಯ ಸ್ಥಳದ ಸಮೀಪದಲ್ಲಿ ಇಸ್ರೇಲ್ ನಡೆಸಿದ ಕ್ಷಿಪಣಿ ದಾಳಿಯಲ್ಲಿ ಓರ್ವ ಮಹಿಳೆ ಮೃತಪಟ್ಟಿದ್ದು, ಇತರ ಕೆಲವರು ಗಾಯಗೊಂಡಿದ್ದಾರೆ. `ಈ ದಾಳಿಗಳು ಭಯದಿಂದ, ಹತಾಶೆಯಿಂದ ನಡೆಯುತ್ತಿವೆ. ಬಲಶಾಲಿಯಾದವನು ರ್ಯಾಲಿಗಳ ಮೇಲೆ ದಾಳಿ ನಡೆಸುವುದಿಲ್ಲ. ಈ ದಾಳಿ ವಿಫಲವಾಗಿರುವುದು ಸ್ಪಷ್ಟವಾಗಿದೆ ಎಂದು ಲಾರಿಜಾನಿ ಹೇಳಿರುವುದಾಗಿ ವರದಿಯಾಗಿದೆ.
ವಿಜಯನಗರ | ಹಿರಿಯ ಪತ್ರಕರ್ತ ಕೆ.ಲಕ್ಷ್ಮಣ್ ಅವರಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪ್ರದಾನ
ವಿಜಯನಗರ /ಹೊಸಪೇಟೆ : ವಿಜಯನಗರ ಜಿಲ್ಲೆಯ ಹಿರಿಯ ಪತ್ರಕರ್ತರಾದ ಕೆ. ಲಕ್ಷ್ಮಣ್ ಅವರಿಗೆ 2025ನೇ ಸಾಲಿನ ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿಯನ್ನು ಸಿಎಂ ಸಿದ್ದರಾಮಯ್ಯನವರು ಪ್ರದಾನ ಮಾಡಿದರು. ಬೆಂಗಳೂರಿನ ವಿಧಾನ ಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಶುಕ್ರವಾರ ಸಂಜೆ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸಿಎಂ ಸಿದ್ದರಾಮಯ್ಯನವರು ಪ್ರಶಸ್ತಿ ಪ್ರದಾನ ಮಾಡಿದರು. ಶಿವಾಜಿನಗರ ಕ್ಷೇತ್ರದ ಶಾಸಕ ರಿಝ್ವಾನ್ ಅರ್ಶದ್, ಸಿಎಂ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್, ಕರ್ನಾಟಕ ಮಾಧ್ಯಮ ಅಕಾಡೆಮಿಯ ಅಧ್ಯಕ್ಷೆ ಆಯೇಶಾ ಖಾನಂ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತ ಹೇಮಂತ್ ನಿಂಬಾಳ್ಕರ್, ಕಾರ್ಯದರ್ಶಿ ಕಾವೇರಿ, ನಾಡೋಜ ಹಂಪನಾ ನಾಗರಾಜ್, ನಾಡಕ ಅಕಾಡೆಮಿ ಅಧ್ಯಕ್ಷ ನಾಗರಾಜ್ ಮೂರ್ತಿ ಸೇರಿದಂತೆ ಇತರರು ಇದ್ದರು.
ಅಮೆರಿಕ | ವಂಚನೆ ಪ್ರಕರಣದಲ್ಲಿ ಭಾರತೀಯ ಮೂಲದ ಸಹೋದರರು ತಪ್ಪಿತಸ್ಥರೆಂದು ಸಾಬೀತು
ನ್ಯೂಯಾರ್ಕ್, ಮಾ.13: ವೀಸಾ ವಂಚನೆ, ಆರೋಗ್ಯ ರಕ್ಷಣೆ ವಂಚನೆ, ಹಣ ಅಕ್ರಮ ಸಾಗಾಟ ಮತ್ತು ತೆರಿಗೆ ವಂಚನೆ ಸೇರಿದಂತೆ ಹಲವಾರು ರೀತಿಯ ವಂಚನೆಗಳನ್ನು ಒಳಗೊಂಡ ಪಿತೂರಿಯಲ್ಲಿ ಭಾರತೀಯ ಮೂಲದ ಸಹೋದರರಾದ ಭಾಸ್ಕರ್ ಸಾವನಿ(60 ವರ್ಷ) ಮತ್ತು ಅರುಣ್ ಸಾವನಿ(58 ವರ್ಷ) ತಪ್ಪಿತಸ್ಥರೆಂದು ಸಾಬೀತಾಗಿದೆ. ಈ ಸಹೋದರರು ತಮ್ಮ `ಸಾವನಿ ಸಮೂಹ ಸಂಸ್ಥೆ' ಗಳ ಮೂಲಕ ಕಳೆದ ಹಲವು ವರ್ಷಗಳಿಂದ ಈ ಅಕ್ರಮ ಯೋಜನೆಗಳಲ್ಲಿ ಕೋಟ್ಯಾಂತರ ಡಾಲರ್ಗಳನ್ನು ಸಂಗ್ರಹಿಸಿದ್ದಾರೆ ಎಂದು ಪ್ರಾಸಿಕ್ಯೂಟರ್ ಹೇಳಿದ್ದಾರೆ. ಇವರಿಬ್ಬರಿಗೆ ಪ್ರತ್ಯೇಕವಾಗಿ ಸುಮಾರು 400 ವರ್ಷಗಳ ಜೈಲುಶಿಕ್ಷೆ ವಿಧಿಸುವ ಸಾಧ್ಯತೆಯಿದೆ ಎಂದು ವರದಿ ಹೇಳಿದೆ.
ಕೋಟೇಶ್ವರ | ಅನಧೀಕೃತ ರಿಕ್ಷಾ ನಿಲ್ದಾಣ ಎಂದು ಸೂಚನಾಫಲಕ ಅಳವಡಿಕೆಗೆ ಬಂದ ಪಿಡಿಓ ವಿರುದ್ಧ ನಾಗರಿಕರ ಅಸಮಾಧಾನ
ಕುಂದಾಪುರ: ತಾಲೂಕಿನ ಕೋಟೇಶ್ವರ ಶ್ರೀ ಕೋಟಿಲಿಂಗೇಶ್ವರ ದೇವಸ್ಥಾನದ ರಥಬೀದಿಯ ಆರಂಭದಲ್ಲಿ ಹಲವು ವರ್ಷಗಳಿಂದ ಕಾರ್ಯಾಚರಿಸುತ್ತಿರುವ ರಿಕ್ಷಾ ನಿಲ್ದಾಣ ಅನಧೀಕೃತ ಎಂದು ಈ ಬಗ್ಗೆ ಸೂಚನಾಫಲಕ ಅಳವಡಿಕೆ ಗೆಂದು ಬಂದ ಕೋಟೇಶ್ವರ ಪಿಡಿಒ ಮೇಲೆ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಹಾಗೂ ನಾಗರಿಕರು ಅಸಮಾಧಾನ ವ್ಯಕ್ತಡಿಸಿದ್ದಾರೆ. ಶುಕ್ರವಾರ ಮಧ್ಯಾಹ್ನ ಗ್ರಾ.ಪಂ. ಅಧಿಕಾರಿ ಸೂಚನಾಫಲಕ ಅಳವಡಿಕೆಗೆ ಬಂದಾಗ ರಿಕ್ಷಾ-ಚಾಲಕರು ಹಾಗೂ ಮಾಲಿಕರಿದ್ದು ತಕ್ಷಣ ಇವರ ನೆರವಿಗೆ ಸ್ಥಳೀಯ ಮುಖಂಡರುಗಳು ಆಗಮಿಸಿದ್ದಾರೆ. ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಗೋಪಾಲಕೃಷ್ಣ ಶೆಟ್ಟಿ ಮಾತನಾಡಿ, ದೇವಸ್ಥಾನದ ಜಾಗ ಒತ್ತುವರಿಯಾಗಿದ್ದರೂ ಕೂಡ ಅದನ್ನು ತೆರವು ಮಾಡುವ ಇಚ್ಚಾಶಕ್ತಿಯನ್ನು ಅಧಿಕಾರಿಗಳು ತೋರುತ್ತಿಲ್ಲ. ಪ್ರಸ್ತುತ ರಿಕ್ಷಾ ನಿಲ್ದಾಣದ ಕುರಿತು ನಾಮಫಲಕ ಅಳವಡಿಸಲು ಉದ್ದೇಶಿಸಿದ ಜಾಗವು ದೇವಸ್ಥಾನದ್ದಾಗಿದ್ದು ಇಲ್ಲಿ ಸೂಚನಾಫಲಕ ಅಳವಡಿಸುವುದು ಸರಿಯಲ್ಲ. ಈಗಾಗಾಲೇ ಸರ್ವೇ ಮಾಡಿ ಒತ್ತುವರಿ ತೆರವುಗೊಳಿಸಲು ಹಲವು ಬಾರಿ ಮನವಿಯನ್ನು ದೇವಸ್ಥಾನದಿಂದ ನೀಡಿದ್ದೇವೆ ಎಂದರು. ಸಾಮಾಜಿಕ ಕಾರ್ಯಕರ್ತ ಅಶೋಕ್ ಪೂಜಾರಿ ಬೀಜಾಡಿ ಮಾತನಾಡಿ, ನ್ಯಾಯಾಂಗ ವ್ಯವಸ್ಥೆ ಮೇಲೆ ಗೌರವವಿದೆ. ಆದರೆ ಜನರ ಎಲ್ಲಾ ಸುಖ-ದುಃಖಗಳಿಗೆ ಸ್ಪಂದಿಸುವ, ಸಾಮಾಜಿಕ ಕಳಕಳಿಯುಳ್ಳ ರಿಕ್ಷಾದವರ ಕಷ್ಟವನ್ನು ಮಾನವೀಯ ನೆಲೆಯಲ್ಲಿ ನೋಡಬೇಕು. ಹಲವು ದಶಕಗಳಿಂದ ಇಲ್ಲಿ ಆಟೋ ನಿಲ್ದಾಣವಿದೆ. ಇದೇ ಭಾಗದಲ್ಲಿ ದೇವಸ್ಥಾನ ಜಾಗ ಅತಿಕ್ರಮಣವಾದ ಬಗ್ಗೆ ಅಧಿಕಾರಿಗಳು ಕ್ರಮವಹಿಸಿಲ್ಲ. ಬಡ ರಿಕ್ಷಾದವರಿಗೆ ಸಮಸ್ಯೆ ಮಾಡುವುದು ಸರಿಯಲ್ಲ ಎಂದರು. ಬೀಜಾಡಿ ಗ್ರಾ.ಪಂ ಮಾಜಿ ಅಧ್ಯಕ್ಷ ಪ್ರಕಾಶ್ ಪೂಜಾರಿ ಬೀಜಾಡಿ, ಗೋಪಾಡಿ ಗ್ರಾ.ಪಂ ಮಾಜಿ ಅಧ್ಯಕ್ಷ ಸುರೇಶ್ ಶೆಟ್ಟಿ, ಪ್ರಮುಖರಾದ ನಾರಾಯಣ ಪೇಂಟರ್, ಗುಲಾಬಿಯಮ್ಮ, ಶೇಖರ್ ಮೊದಲಾದವರು ರಿಕ್ಷಾ ಚಾಲಕರ ಸಮಸ್ಯೆ ಕುರಿತು ಮಾತನಾಡಿದರು. 4-5 ದಶಕಗಳಿಂದ ಚೇತನಾ ಹೆಸರಿನ ರಿಕ್ಷಾ ನಿಲ್ದಾಣ ಇಲ್ಲಿದ್ದು 20ಕ್ಕೂ ಅಧಿಕ ರಿಕ್ಷಾಗಳಿದೆ. ನ್ಯಾಯಾಲಯದ ಆದೇಶವೆಂದು ನಮ್ಮನ್ನು ಎಬ್ಬಿಸಿದರೆ ನಮ್ಮ ಹೊಟ್ಟೆಪಾಡಿನ ಗತಿಯೇನು? ಎಂದು ಆಟೋ ಚಾಲಕರು ತಮ್ಮ ಅಳಲು ತೋಡಿಕೊಂಡಿದ್ದಾರೆ. ಏನಿದು ಪ್ರಕರಣ? ಕೋಟೇಶ್ವರ ಗ್ರಾಮದ ರಥಬೀದಿಯ ದಕ್ಷಿಣ ಭಾಗದಲ್ಲಿ ಆಟೋ ರಿಕ್ಷಾಗಳನ್ನು ನಿಲ್ಲಿಸುವುದರಿಂದ ತೊಂದರೆಯಾ ಗುತ್ತಿದೆ ಹಾಗಾಗಿ ಅದನ್ನ ತೆರವುಗೊಳಿಸಲು ಖಾಸಗಿ ವ್ಯಕ್ತಿಯೊಬ್ಬರು ಉಚ್ಚ ನ್ಯಾಯಾಲಯದಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದು ಈ ಮನವಿಯನ್ನ ಪರಿಗಣಿಸುವಂತೆ ನ್ಯಾಯಾಲಯದಿಂದ ಆದೇಶವಾಗಿತ್ತು. ಪರಿಶೀಲಿಸಿದಾಗ ಈ ಸ್ಥಳ ಆಟೋ ಸ್ಟಾಂಡ್ ಅಥವಾ ಆಟೋ ನಿಲ್ದಾಣ ಸ್ಥಳವಾಗಿ ಅಧಿಕೃತವಾಗಿರುವುದು ಕಂಡುಬಂದಿದ್ದರಿಂದ ಯಾವುದೇ ಆಟೋಗಳನ್ನ ಇಲ್ಲಿ ನಿಲ್ಲಿಸದಿರಲು ನೋಟೀಸ್ ನೀಡಲಾಗಿತ್ತು. ಆದರೂ ಆ ಸ್ಥಳದಲ್ಲಿ ಆಟೊಗಳನ್ನು ನಿಲ್ಲಿಸಿ ಆಟೋ ಸ್ಟಾಂಡ್ ಎಂದು ಬಳಸುತ್ತಿದ್ದು ಪ್ರಸ್ತುತ ಸ್ಥಳದಲ್ಲಿ ಸೂಚನಾ ಫಲಕ ಅಳವಡಿಕೆ ಮಾಡಲಾಗಿದೆ ಎಂದು ಪಿಡಿಒ ತಿಳಿಸಿದ್ದಾರೆ.
ನೆತನ್ಯಾಹುಗಾಗಿ ಅಮೆರಿಕದ ಜನರನ್ನು ಬಲಿಕೊಡುತ್ತಿರುವ ಟ್ರಂಪ್ : ಇರಾನ್ ಆರೋಪ
ಟೆಹ್ರಾನ್, ಮಾ.13: ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ವಿಸ್ತರಣಾ ಮಹತ್ವಾಕಾಂಕ್ಷೆಗಳನ್ನು ಮುನ್ನಡೆಸಲು ಡೊನಾಲ್ಡ್ ಟ್ರಂಪ್ ಅಮೆರಿಕನ್ನರ ಜೀವಗಳನ್ನು ತ್ಯಾಗ ಮಾಡುತ್ತಿದ್ದಾರೆ ಎಂದು ಇರಾನ್ ಸಂಸತ್ತಿನ ಸ್ಪೀಕರ್ ಆರೋಪಿಸಿದ್ದಾರೆ. ಅಮೆರಿಕ, ಇಸ್ರೇಲ್ ಮತ್ತು ಇರಾನ್ ನಡುವಿನ ಸಂಘರ್ಷ ಶುಕ್ರವಾರ 14ನೇ ದಿನಕ್ಕೆ ಮುಂದುವರಿದಿದ್ದು ಎರಡೂ ಕಡೆಯವರು ದಾಳಿ ಮತ್ತು ಮಿಲಿಟರಿ ಕ್ರಮಗಳನ್ನು ತೀವ್ರಗೊಳಿಸಿದ್ದಾರೆ. ಸಂಘರ್ಷಕ್ಕೆ ಸಂಬಂಧಿಸಿದ ಕೆಲವು ಪ್ರಮುಖ ಬೆಳವಣಿಗೆಗಳು: ಶುಕ್ರವಾರ ಟೆಹ್ರಾನ್ನಲ್ಲಿ ಹಲವು ಸ್ಫೋಟ ನಡೆದಿರುವುದಾಗಿ ಇರಾನ್ ಮಾಧ್ಯಮಗಳ ವರದಿ. ಇರಾನ್ನ ಇಂಧನ ಸ್ಥಳಗಳು ಆಕ್ರಮಣಕ್ಕೆ ಒಳಗಾದ್ರೆ ಪ್ರದೇಶದ ತೈಲ ಮತ್ತು ಗ್ಯಾಸ್ ಮೂಲಸೌಕರ್ಯ ಬೆಂಕಿಗೆ ಆಹುತಿಯಾಗಲಿದೆ ಎಂದು ಇರಾನ್ನ ಇಸ್ಲಾಮಿಕ್ ರೆವೊಲ್ಯುಷನರಿ ಗಾರ್ಡ್ ಕಾಪ್ರ್ಸ್ ಶುಕ್ರವಾರ ಎಚ್ಚರಿಕೆ ನೀಡಿದೆ. ಲೆಬನಾನ್ನ ಬೈರೂತ್ ಹಾಗೂ ಉಪನಗರಗಳ ಮೇಲೆ ಶುಕ್ರವಾರ ಇಸ್ರೇಲ್ ಮತ್ತೆ ದಾಳಿ ನಡೆಸಿದೆ. ಗಲ್ಫ್ನಲ್ಲಿ ಶುಕ್ರವಾರ ಕನಿಷ್ಠ 3 ಸರಕು ನೌಕೆಗಳ ಮೇಲೆ ದಾಳಿ ನಡೆದಿರುವುದಾಗಿ ಇರಾನ್ ಮಾಧ್ಯಮಗಳು ವರದಿ ಮಾಡಿವೆ. ಇಸ್ರೇಲ್ನತ್ತ ಇರಾನ್ ಮತ್ತೆ ಕ್ಷಿಪಣಿ ದಾಳಿ ನಡೆಸಿದ್ದು ವಾಯು ರಕ್ಷಣಾ ವ್ಯವಸ್ಥೆಯನ್ನು ಸಕ್ರಿಯಗೊಳಿಸಿರುವುದಾಗಿ ಇಸ್ರೇಲ್ ಹೇಳಿದೆ. ಪರಮಾಣು ಅಸ್ತ್ರಗಳನ್ನು ಅಭಿವೃದ್ಧಿ ಪಡಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದ ಇರಾನ್ನ ಹಿರಿಯ ವಿಜ್ಞಾನಿ ಕ್ಷಿಪಣಿ ದಾಳಿಯಲ್ಲಿ ಮೃತಪಟ್ಟಿದ್ದು ಇದು ಇರಾನ್ನ ಮಿಲಿಟರಿ ಮತ್ತು ಭದ್ರತಾ ಪಡೆಗಳಿಗೆ ಭಾರೀ ಹೊಡೆತವಾಗಿದೆ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹೇಳಿದ್ದಾರೆ.
ಇಸ್ರೇಲ್ | ಕ್ಷಿಪಣಿ ದಾಳಿಯಲ್ಲಿ 58 ಮಂದಿಗೆ ಗಾಯ
ಟೆಲ್ಅವೀವ್, ಮಾ.13: ಜೆರುಸಲೇಂನ ಉತ್ತರದಲ್ಲಿ, ಲೆಬನಾನ್ ಗಡಿಯ ಸನಿಹದಲ್ಲಿರುವ ಜಾರ್ಜಿರ್ ನಗರದ ಮೇಲೆ ನಡೆದ ಕ್ಷಿಪಣಿ ದಾಳಿಯಲ್ಲಿ ಸುಮಾರು 58 ಮಂದಿ ಗಾಯಗೊಂಡಿರುವುದಾಗಿ ವರದಿಯಾಗಿದೆ. ಹಲವು ಕಾರುಗಳು ಹಾನಿಗೊಂಡಿರುವ ವೀಡಿಯೊವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಮಾಡಲಾಗಿದೆ. ದಾಳಿ ನಡೆದ ಪ್ರದೇಶದಲ್ಲಿ ರಕ್ಷಣಾ ಕಾರ್ಯಾಚರಣೆಗೆ ತುರ್ತು ಸೇವಾ ತಂಡವನ್ನು ನಿಯೋಜಿಸಿರುವುದಾಗಿ ಇಸ್ರೇಲಿ ಮಿಲಿಟರಿ ಹೇಳಿದೆ. ಉತ್ತರ ಇಸ್ರೇಲ್ ಮತ್ತು ದಕ್ಷಿಣ ಲೆಬನಾನ್ನಲ್ಲಿರುವ ಇಸ್ರೇಲಿ ಪಡೆಗಳನ್ನು ಕ್ಷಿಪಣಿ ದಾಳಿ ನಡೆಸಿರುವುದಾಗಿ ಶುಕ್ರವಾರ ಹಿಜ್ಬುಲ್ಲಾ ಹೇಳಿತ್ತು.
ಕಲಬುರಗಿ | ದೇಶದ ಗಂಭೀರ ಸಮಸ್ಯೆಗಳ ಪರಿಹಾರಕ್ಕೆ ಮಹಿಳೆಯರು ಮುಂದಾಗಿ : ತೇಜಸ್ವಿನಿ ಅನಂತ್ ಕುಮಾರ
ಮಹಿಳಾ ಸಾಧಕಿಯರಿಗೆ ಶರಣಬಸವ ವಿವಿಯಿಂದ ಪ್ರಶಸ್ತಿ ಪ್ರದಾನ
ಬಿಜೆಪಿ ಟಿಕೆಟ್ ಆಮೀಷ 2 ಕೋಟಿ ರೂ. ವಂಚನೆ ಆರೋಪ: ಪ್ರಹ್ಲಾದ್ ಜೋಶಿ ಸೋದರನ ವಿರುದ್ಧದ ಪ್ರಕರಣ ಹೈಕೋರ್ಟ್ ರದ್ದು
ಕಳೆದ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಆಮೀಷ 2 ಕೋಟಿ ರೂ. ವಂಚನೆ ಆರೋಪದಲ್ಲಿ ಪ್ರಹ್ಲಾದ್ ಜೋಶಿ ಸೋದರ ಗೋಪಾಲ್ ಜೋಶಿ ವಿರುದ್ಧದ ದಾಖಲಾಗಿದ್ದ ಪ್ರಕರಣವನ್ನು ಹೈಕೋರ್ಟ್ ರದ್ದು ಮಾಡಿದೆ. ನ್ಯಾಯಮೂರ್ತಿ ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠವು ಆದೇಶ ನೀಡಿದೆ. ಈ ಬಗ್ಗೆ ವಿವರ ಇಲ್ಲಿದೆ.
ಆಳಂದ | ಕೇಂದ್ರೀಯ ವಿವಿಯಲ್ಲಿ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ
ಆಳಂದ: ಎಲ್ಲರನ್ನೂ ಒಳಗೊಂಡ ಮತ್ತು ಸಮಾನ ಸಮಾಜವನ್ನು ನಿರ್ಮಿಸಲು ಮಹಿಳಾ ಸಬಲೀಕರಣ ಅತ್ಯಗತ್ಯ ಎಂದು ಬೆಂಗಳೂರಿನ ಕರ್ನಾಟಕ ಮಾಹಿತಿ ಆಯೋಗದ ರಾಜ್ಯ ಮಾಹಿತಿ ಆಯುಕ್ತೆ ಡಾ. ಮಮತಾ ಬಿ.ಆರ್. (ಐಎಎಸ್) ಹೇಳಿದರು. ತಾಲೂಕಿನ ಕಡಗಂಚಿ ಬಳಿಯ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ನಡೆದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಪಾಲ್ಗೊಂಡು ಮಾತನಾಡಿದರು. ಲಿಂಗ ಸಮಾನತೆಗಾಗಿ ನಾವೆಲ್ಲರೂ ಸಾಮೂಹಿಕ ಪ್ರಯತ್ನಗಳನ್ನು ಮಾಡಬೇಕು ಮತ್ತು ಮಹಿಳಾ ಸಬಲೀಕರಣಕ್ಕೆ ಹೆಚ್ಚಿನ ಅವಕಾಶಗಳನ್ನು ಸೃಷ್ಟಿಸಬೇಕು. ದುರ್ಬಲರಿಗೆ ಬೆಂಬಲ ನೀಡುವ ದೂರದೃಷ್ಟಿ ಹೊಂದಿರುವ ಜನರ ಅವಶ್ಯಕತೆಯಿದೆ ಎಂದು ಹೇಳಿದರು. ಸಿಯುಕೆ ಕುಲಪತಿ ಪ್ರೊ.ಬಟ್ಟು ಸತ್ಯನಾರಾಯಣ, ಮಾತನಾಡಿ, ಸಮಾಜದ ವಿವಿಧ ಕ್ಷೇತ್ರಗಳ ಅಭಿವೃದ್ಧಿಗೆ ಮಹಿಳೆಯರು ಗಣನೀಯ ಕೊಡುಗೆ ನೀಡಿದ್ದಾರೆ. ರಾಷ್ಟ್ರ ನಿರ್ಮಾಣ ಮತ್ತು ಕುಟುಂಬಗಳ ಒಳಗೆ ಮಹಿಳೆಯರು ಬಹಳ ಮುಖ್ಯವಾದ ಪಾತ್ರವನ್ನು ವಹಿಸುತ್ತಿದ್ದಾರೆ. ಅವರು ಸಮಾಜದಲ್ಲಿ ನಾಯಕತ್ವ ಮತ್ತು ವೃತ್ತಿಪರ ಪಾತ್ರಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸುತ್ತಿದ್ದಾರೆ ಎಂದು ಹೇಳಿದರು. ಕುಲಸಚಿವ ಪ್ರೊ. ಆರ್. ಆರ್. ಬಿರಾದಾರ್ ಮಾತನಾಡಿದರು. ಸಂಯೋಜಕಿ ಡಾ.ಶ್ಯಾಮಲಾ ಆರ್ ಸ್ವಾಗತಿಸಿದರು. ಡಾ.ಶೈಲಜಾ ಎಸ್.ಕೊನೆಕ್ ವಂದಿಸಿದರು. ಡಾ.ಪವಿತ್ರಾ ಆಲೂರ್, ಸಹ-ಸಂಯೋಜಕರಾದ ಡಾ. ರೂಪಾ ರಾಣಿ ಸೋನೋವಾಲ್, ವಿವಿಧ ವಿಭಾಗಗಳ ಅಧ್ಯಾಪಕರು ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.
ಅಫಜಲಪುರ | ವಿದ್ಯೆ-ವಿನಯ ಇದ್ದಾಗ ಬದುಕಿಗೆ ಶ್ರೇಯಸ್ಸು: ವಿಶ್ವರಾಧ್ಯ ಶ್ರೀ
ಅಫಜಲಪುರ: ಬದುಕು ಪರಿಪೂರ್ಣವಾಗಬೇಕಾದರೆ ಮನಸ್ಸು ಪರಿಶುದ್ದವಾಗಿರಬೇಕು. ಅದರಲ್ಲೂ ವಿದ್ಯೆ ಮತ್ತು ವಿನಯಗಳು ಎಲ್ಲರೂ ಬದುಕಿನಲ್ಲಿ ಮೈಗೂಡಿಸಿಕೊಂಡರೆ ಬುದಕಿಗೆ ಶ್ರೇಯಸ್ಸು ಬರಲು ಸಾಧ್ಯವಿದೆ ಎಂದು ವಿಶ್ವರಾಧ್ಯ ಮಳೇಂದ್ರ ಶಿವಾಚಾರ್ಯರು ಹೇಳಿದರು. ತಾಲೂಕಿನ ಆನೂರ ಗ್ರಾಮದ ಸ್ವಾಮಿ ವಿವೇಕಾನಂದ ಹಿರಿಯ ಪ್ರಾಥಮಿಕ ಶಾಲೆಯ 15ನೇ ವಾರ್ಷಿಕೋತ್ಸವದ ಪಾವನ ಸಾನಿಧ್ಯ ವಹಿಸಿ ಮಾತನಾಡಿದ ಅವರು, ಹಿಂದಿನ ಕಾಲದಲ್ಲಿ ಗ್ರಾಮೀಣ ಭಾಗಗಳಲ್ಲಿ ಶಾಲೆಗಳಿರಲಿಲ್ಲ. ಹೀಗಾಗಿ ಅನಕ್ಷರತೆ ಹೆಚ್ಚಾಗಿತ್ತು. ಈಗ ಶಿಕ್ಷಣ ಪ್ರೇಮಿಗಳ ಸೇವಾ ಮನೋಭಾವ ಮತ್ತು ಸಾಹಸದಿಂದ ಹೆಚ್ಚಿನ ಶಾಲೆಗಳು ಹುಟ್ಟಿಕೊಳ್ಳುತ್ತಿವೆ ಎಂದು ಹೇಳಿದರು. ಚಿಂಚೋಳಿ ಮಠದ ಗದ್ದುಗೇಶ್ವರ ಮಲ್ಲಿಕಾರ್ಜುನ ಶಿವಾಚಾರ್ಯರು ಸಾನಿಧ್ಯ ವಹಿಸಿ ಮಾತನಾಡಿ, ಆನೂರ ಗ್ರಾಮ ಗಾತ್ರದಲ್ಲಿ ಸಣ್ಣದಾಗಿದ್ದರೂ ಕೂಡ ಇಲ್ಲಿನವರ ಮನಸ್ಸು ಬಹಳ ದೊಡ್ಡದಾಗಿದೆ. ಸದಾ ಶಿಕ್ಷಣಕ್ಕೆ ಒತ್ತು ನೀಡುವ ಈ ಊರಿನವರ ಪ್ರೋತ್ಸಾಹ, ಪ್ರೇರಣೆಯಿಂದ ಸಾಕಷ್ಟು ಜನ ಸರ್ಕಾರಿ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಅಲ್ಲದೆ ಈ ಊರಲ್ಲಿ ಸದಾ ಶೈಕ್ಷಣಿಕ ವಾತಾವರಣ ನಿರ್ಮಾಣಕ್ಕೆ ಸ್ವಾಮಿ ವಿವೇಕಾನಂದ ಶಾಲೆಯ ಸಂಸ್ಥಾಪಕರು ಹಾಗೂ ಊರಿನವರು ಶ್ರಮಿಸುತ್ತಿರುವುದು ಶ್ಲಾಘನೀಯ ಕಾರ್ಯವಾಗಿದೆ ಎಂದರು. ಉದ್ಯಮಿ ಈರಣ್ಣಗೌಡ ಪಾಟೀಲ ಪುಣೆ ಅವರು ಮಾತನಾಡಿದರು. ಕಾರ್ಯಕ್ರಮದಲ್ಲಿ ಶಿಶು ಅಭಿವೃದ್ದಿ ಇಲಾಖೆ ಮೇಲ್ವಿಚಾರಕಿ ಹುದ್ದೆಯಿಂದ ಸೇವಾ ನಿವೃತ್ತರಾದ ಗುರುಬಾಯಿ ಬಳೂಂಡಗಿ, ಗುಲ್ಬರ್ಗಾ ವಿವಿಯಿಂದ ಪಿಎಚ್ಡಿ ಡಾಕ್ಟರೇಟ್ ಪದವಿ ಪಡೆದ ಡಾ.ಉದಯಕುಮಾರ ವಾಡೇಕರ್, ಡಾ.ಖಾಜಪ್ಪ ಇಟಗಿ, ಪ್ರಗತಿಪರ ರೈತ ಸಿದ್ದಪ್ಪ ಜಮಾದಾರ ಇವರನ್ನು ಅಭಿನಂದಿಸಲಾಯಿತು. ಈ ಸಂದರ್ಭದಲ್ಲಿ ಚಂದ್ರಗಿರಿ ದೇವಸ್ಥಾನದ ಪ್ರಧಾನ ಅರ್ಚಕರಾದ ರಾಹುಲ್ ಭಂಡಾರಿ, ಗ್ರಾಪಂ ಮಾಜಿ ಅಧ್ಯಕ್ಷ ನಿಂಗಣ್ಣ ಕಲಶೆಟ್ಟಿ, ದತ್ತು ಘಾಣೂರ, ರಾಜು ನಿಂಬರ್ಗಿ, ಚಂದ್ರಶೇಖರ ಪಾಟೀಲ, ಅಂಬರೀಶ ಪಟ್ಟಣ, ಶರಣಪ್ಪ ಕನ್ನೋಳ್ಳಿ, ವಿಜಯಕುಮಾರ ಭಂಡಾರಿ, ಮಲ್ಲಣಗೌಡ ಮಾಲೀ ಪಾಟೀಲ, ಭೋಗಣ್ಣಗೌಡ ರೂಗಿ, ಗುಂಡು ಮಾಳಗೆ, ಚಂದ್ರಕಾಂತ ದೇವರಮನಿ, ಹಣಮಂತ ನಾವಿ, ಶ್ರೀಮಂತ ಸಿಂಗೆ, ಜಗದೇವ ತಳವಾರ, ನಿಂಗಣ್ಣ ನಡುವಿನಕೇರಿ, ಮಲ್ಲಿನಾಥ ದೊಡಮನಿ, ಸೇರಿದಂತೆ ಶಿಕ್ಷಕರು, ವಿದ್ಯಾರ್ಥಿಗಳು ಮತ್ತು ಗ್ರಾಮಸ್ಥರು ಇದ್ದರು. ಚಂದ್ರಕಾಂತ ಸಿಂಗೆ ಸ್ವಾಗತಿಸಿದರು. ಡಾ.ಸಂಗಣ್ಣ ಸಿಂಗೆ ನಿರೂಪಿಸಿ ವಂದಿಸಿದರು.
ಅಫಜಲಪುರ | ಮೊಬೈಲ್ ನಿಂದ ಮಕ್ಕಳನ್ನು ದೂರವಿಡಿ : ವಿಶ್ವರಾಧ್ಯ ಶ್ರೀ
ಅಫಜಲಪುರ: ಇಳಿ ವಯಸ್ಸಿನಲ್ಲಿ ಹೆತ್ತವರನ್ನು ಮಕ್ಕಳಂತೆ ಪೋಷಣೆ ಮಾಡುವುದು ಹಾಗೂ ವಿದ್ಯೆ ಮತ್ತು ಸಂಸ್ಕಾರ ಎರಡೂ ಒಂದಾಗಿದ್ದರೆ ಆದರ್ಶ ಸಮಾಜ ನಿರ್ಮಾಣವಾಗಲು ಸಾಧ್ಯವಾಗುತ್ತದೆ ಎಂದು ಶ್ರೀ ವಿಶ್ವರಾಧ್ಯ ಮಳೇಂದ್ರ ಶಿವಾಚಾರ್ಯ ಹೇಳಿದರು. ತಾಲೂಕಿನ ದೇಸಾಯಿ ಕಲ್ಲೂರ ಗ್ರಾಮದಲ್ಲಿ ಶ್ರೀ ಮಹಾಂತಮ್ಮ ಯಶವಂತರಾವ್ ಪಾಟೀಲ್ ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಂಸ್ಥೆಯ ಅಡಿಯಲ್ಲಿ ನಡೆಯುತ್ತಿರುವ ಜ್ಞಾನಜ್ಯೋತಿ ಕನ್ನಡ ಹಾಗೂ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆ ಮತ್ತು ಜ್ಞಾನಸಿಂಧು ನವೋದಯ, ಸೈನಿಕ ಕೋಚಿಂಗ್ ಸೆಂಟರ್ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ 8ನೇ ತರಗತಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಸಾನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು. ಬದುಕು ಪರಿಪೂರ್ಣವಾಗಬೇಕಾದರೆ ಮನಸ್ಸು ಪರಿಶುದ್ಧವಾಗಿರಬೇಕು. ವಿದ್ಯೆ ಮತ್ತು ವಿನಯವನ್ನು ಪ್ರತಿಯೊಬ್ಬರೂ ತಮ್ಮ ಬದುಕಿನಲ್ಲಿ ಅಳವಡಿಸಿಕೊಂಡರೆ ಜೀವನದಲ್ಲಿ ಶ್ರೇಯಸ್ಸು ಸಾಧಿಸಲು ಸಾಧ್ಯವಾಗುತ್ತದೆ ಎಂದು ಹೇಳಿದರು. ಹಿಂದಿನ ಕಾಲದಲ್ಲಿ ಗ್ರಾಮೀಣ ಭಾಗಗಳಲ್ಲಿ ಶಾಲೆಗಳ ಕೊರತೆಯಿಂದ ಅನಕ್ಷರತೆ ಹೆಚ್ಚಾಗಿತ್ತು. ಆದರೆ ಶಿಕ್ಷಣ ಪ್ರೇಮಿಗಳ ಸೇವಾಭಾವದಿಂದ ಇಂದು ಹೆಚ್ಚಿನ ಶಾಲೆಗಳು ಸ್ಥಾಪನೆಯಾಗಿ ಎಲ್ಲರಿಗೂ ಗುಣಮಟ್ಟದ ಶಿಕ್ಷಣ ದೊರೆಯುತ್ತಿದೆ ಎಂದರು. ಈ ಸಂದರ್ಭದಲ್ಲಿ ಕಲಬುರಗಿ ಉತ್ತರ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಅಶೋಕ್ ಸೊನ್ನ ಮಾತನಾಡಿ, ಕೇವಲ 40 ವಿದ್ಯಾರ್ಥಿಗಳಿಂದ ಆರಂಭವಾದ ಈ ಶಿಕ್ಷಣ ಸಂಸ್ಥೆ ಇಂದು ಹೆಮ್ಮರವಾಗಿ ಬೆಳೆಯುತ್ತಿರುವುದು ಸಂತಸದ ವಿಷಯವಾಗಿದೆ ಎಂದು ಹೇಳಿದರು. ಸಿ.ಆರ್.ಪಿ ಸಿದ್ದಪ್ಪ ಬಿರಾದಾರ ಮಾತನಾಡಿ, ಕುಟುಂಬದ ಏಳಿಗೆ ಶಿಕ್ಷಣವನ್ನು ಅವಲಂಬಿಸಿದೆ. ಗ್ರಾಮಸ್ಥರು ತಮ್ಮ ಮಕ್ಕಳಿಗೆ ಶಿಕ್ಷಣದ ಜೊತೆಗೆ ಉತ್ತಮ ಸಂಸ್ಕಾರ ನೀಡುವ ಕೆಲಸ ಮಾಡಬೇಕು. ಈ ಭಾಗದಲ್ಲಿ ಜ್ಞಾನಜ್ಯೋತಿ ಶಿಕ್ಷಣ ಸಂಸ್ಥೆ ಉತ್ತಮ ಶಿಕ್ಷಣ ನೀಡುವ ಮೂಲಕ ಹೆಸರುವಾಸಿಯಾಗಿದೆ ಎಂದು ಹೇಳಿದರು. ಕಾರ್ಯಕ್ರಮಕ್ಕೆ ಪ್ರಥಮ ದರ್ಜೆ ಗುತ್ತಿಗೆದಾರರಾದ ಎಸ್.ವೈ.ಪಾಟೀಲ್ ಉದ್ಘಾಟಿಸಿದರು. ವೇ.ಗುರುಪಾದಯ್ಯ ಚರಂತಿಮಠ, ಸಿದ್ದಯ್ಯ ಆಕಾಶಮಠ, ಕಲ್ಯಾಣಿ ಸಿಂದಗೇರಿ, ಶಿವರುದ್ರ ಬಬಲಾದ,ಮಾಳಪ್ಪ ಬಿದನೂರ, ನವಿನಗೌಡ ಪಾಟೀಲ್, ಪುಜಾ ಸಿ.ಐ, ಶರಣಬಸು ದೇಶಮುಖ, ಶರಣಬಸು ದೇಶಮುಖ, ಶಿವಪುತ್ರ ಜೇವರ್ಗಿ, ಸಿದ್ರಾಮಯ್ಯ ಹಿರೇಮಠ, ಭಾಗ್ಯವಂತಿ ಆಯೋರ, ಸಿದ್ದು ತೊನಶ್ಯಾಳ,ಸಂಸ್ಥೆಯ ಅಧ್ಯಕ್ಷೆ ಗಂಗಾಶ್ರೀ ದೇಶಮುಖ, ಕಾರ್ಯದರ್ಶಿ ಗುಂಡೇರಾವ್ ದೇಶಮುಖ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ಕಲಬುರಗಿ | ಸನ್ನಡತೆ ಆಧಾರದಲ್ಲಿ ಇಬ್ಬರು ಕೈದಿಗಳ ಬಿಡುಗಡೆ
ಕಲಬುರಗಿ: ಕರ್ನಾಟಕ ಸರ್ಕಾರ ಹಾಗೂ ಕಾರಾಗೃಹ ಮತ್ತು ಸುಧಾರಣೆ ಸೇವೆಗಳ ಪೊಲೀಸ್ ಮಹಾನಿರ್ದೇಶಕರ ಆದೇಶದಂತೆ ಶುಕ್ರವಾರ ಕಲಬುರಗಿ ಕೇಂದ್ರ ಕಾರಾಗೃಹದಿಂದ ಇಬ್ಬರು ಕೈದಿಗಳನ್ನು ಸನ್ನಡತೆಯ ಆಧಾರದ ಮೇಲೆ ಬಿಡುಗಡೆ ಮಾಡಲಾಯಿತು. 1258 ಬಂದಿ ಸಂಖ್ಯೆ ಹೊಂದಿರುವ ಸುಭಾಷ್ ಅಲಿಯಾಸ್ ಸುಬ್ಬಣ್ಣ, ತಂದೆ ಶಿವರಾಯ ನಾಟೀಕರ್ ಹಾಗೂ ಜಯಮ್ಮ ಅಲಿಯಾಸ್ ಪದ್ಮಾ, ಗಂಡ ಈರೇಶ ಎಂಬಾತರೆ ಬಿಡುಗಡೆಯಾದ ಬಂದಿಗಳಾಗಿದ್ದಾರೆ. ಈ ಸಂಸ್ಥೆಯ ಮುಖ್ಯ ಅಧೀಕ್ಷಕರಾದ ಕೆ. ಸುರೇಶ್ ಅವರು ಸದರಿ ಬಂದಿಗಳಿಗೆ ಬಿಡುಗಡೆ ಪ್ರಮಾಣಪತ್ರ ಹಾಗೂ ಸಿಹಿಯನ್ನು ನೀಡಿ ಶುಭ ಹಾರೈಸಿದರು. ಹೊರಗೆ ಹೋಗಿ ಉತ್ತಮ ಬದುಕನ್ನು ಕಟ್ಟಿಕೊಂಡು ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವಂತೆ ಅವರು ಕರೆ ನೀಡಿದರು. ಈ ಸಂದರ್ಭದಲ್ಲಿ ಸಂಸ್ಥೆಯ ಅಧೀಕ್ಷಕರಾದ ರಾಕೇಶ್ ಕಾಂಬ್ಳೆ, ಸಹಾಯಕ ಅಧೀಕ್ಷಕರಾದ ಸುರೇಶ್ ಬಿ., ಚನ್ನಪ್ಪ ಯಟಗಾಲ್, ಜೈಲರ್ಗಳಾದ ಸಾಗರ್ ಪಾಟೀಲ್, ಶ್ರೀಮಂತಗೌಡ ಪಾಟೀಲ್, ಸಂಸ್ಥೆಯ ಶಿಕ್ಷಕರಾದ ನಾಗರಾಜ ಮೂಲಗೆ ಹಾಗೂ ಸಿಬ್ಬಂದಿ ವರ್ಗದವರು ಹಾಜರಿದ್ದರು.
ರಮಝಾನ್: ಭಟ್ಕಳದಲ್ಲಿ ವಿಶೇಷ ಸಂಚಾರ ವ್ಯವಸ್ಥೆ, ಮಾರ್ಗ ಬದಲಾವಣೆ
ಭಟ್ಕಳ: ಈದ್-ಉಲ್-ಫಿತರ್ ಹಿನ್ನೆಲೆಯಲ್ಲಿ ಭಟ್ಕಳ ಹಾಗೂ ಸುತ್ತಮುತ್ತಲಿನ ಪ್ರದೇಶಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನರು ಖರೀದಿಗೆ ಆಗಮಿಸುವ ನಿರೀಕ್ಷೆಯಿರುವುದರಿಂದ, ನಗರದ ರಮ್ಜಾನ್ ಬಜಾರ್ ಪ್ರದೇಶದಲ್ಲಿ ಸಂಚಾರ ದಟ್ಟಣೆ ನಿಯಂತ್ರಿಸಲು ಭಟ್ಕಳ ಪೊಲೀಸ್ ಇಲಾಖೆ ವಿಶೇಷ ಸಂಚಾರ ವ್ಯವಸ್ಥೆ ಮತ್ತು ತಾತ್ಕಾಲಿಕ ಮಾರ್ಗ ಬದಲಾವಣೆಗಳನ್ನು ಜಾರಿಗೆ ತಂದಿದೆ. ಈ ಕುರಿತು ಪ್ರಕಟಣೆ ನೀಡಿರುವ ಭಟ್ಕಳ ಪಟ್ಟಣ ಪೊಲೀಸರು, ಹಬ್ಬದ ಖರೀದಿ ಅವಧಿಯಲ್ಲಿ ಸಾರ್ವಜನಿಕರು ಸಂಚಾರ ನಿಯಮಗಳನ್ನು ಪಾಲಿಸಿ ಪೊಲೀಸ್ ಇಲಾಖೆಗೆ ಸಹಕರಿಸುವಂತೆ ಮನವಿ ಮಾಡಿದ್ದಾರೆ. ಹೊಸ ಸಂಚಾರ ವ್ಯವಸ್ಥೆಯ ಪ್ರಕಾರ, ಹಳೆಯ ಬಸ್ ನಿಲ್ದಾಣದಿಂದ ಮೌಲಾನಾ ಆಜಾದ್ ರಸ್ತೆಯ ಮೂಲಕ ವಾಹನ ಸಂಚಾರಕ್ಕೆ ಅವಕಾಶ ನೀಡಲಾಗಿದೆ. ಆದರೆ ಸುಲ್ತಾನ್ ಸ್ಟ್ರೀಟ್ನ ಮಿಸ್ಬಾಹ್ ಕ್ರಾಸ್ ಮೂಲಕ ರಮ್ಜಾನ್ ಮಾರುಕಟ್ಟೆಗೆ ಹೋಗುವ ರಸ್ತೆಯಲ್ಲಿ ಎಲ್ಲ ರೀತಿಯ ವಾಹನಗಳ ಪ್ರವೇಶವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಮರಿಕಟ್ಟೆಯಿಂದ ಹೂ ಮಾರುಕಟ್ಟೆ ಕಡೆಗೆ ಹೋಗುವ ರಸ್ತೆಯನ್ನು ಎಂದಿನಂತೆ ಏಕಮಾರ್ಗವಾಗಿ ಘೋಷಿಸಲಾಗಿದೆ. ಮರಿಕಟ್ಟೆಯಿಂದ ಹಳೆಯ ಬಸ್ ನಿಲ್ದಾಣದತ್ತ ವಾಹನ ಸಂಚಾರವನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದ್ದು, ಆ ದಿಕ್ಕಿಗೆ ತೆರಳುವವರು ಸುಲ್ತಾನ್ ಸ್ಟ್ರೀಟ್ ಅಥವಾ ಕಾರ್ ಸ್ಟ್ರೀಟ್ ಮಾರ್ಗವನ್ನು ಬಳಸಬಹುದು. ಅಲ್ಲದೆ ಮೌಲಾನಾ ಆಜಾದ್ ರಸ್ತೆ ಕ್ರಾಸ್ ಸಮೀಪದ ರಸ್ತೆಯ ಎರಡೂ ಬದಿಗಳಲ್ಲಿ ವಾಹನ ನಿಲುಗಡೆಗೆ ಅವಕಾಶ ಇರುವುದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ವಾಹನ ನಿಲುಗಡೆಗೆ ವ್ಯವಸ್ಥೆ:- ಖರೀದಿಗೆ ಬರುವ ಸಾರ್ವಜನಿಕರಿಗಾಗಿ ವಿಶೇಷ ವಾಹನ ನಿಲುಗಡೆ ಸ್ಥಳಗಳನ್ನು ಗುರುತಿಸಲಾಗಿದೆ. ನಗರಸಭೆ ಕಚೇರಿ ಹಿಂಭಾಗದಲ್ಲಿರುವ ಇಸ್ಲಾಮಿಯಾ ಆಂಗ್ಲ-ಉರ್ದು ಹೈಸ್ಕೂಲ್ ಮೈದಾನದಲ್ಲಿ ಸಂಜೆ 4 ಗಂಟೆಯಿಂದ ರಾತ್ರಿ 3 ಗಂಟೆಯವರೆಗೆ ವಾಹನ ನಿಲುಗಡೆಗೆ ಅವಕಾಶ ನೀಡಲಾಗಿದೆ. ಇದೇ ಅವಧಿಯಲ್ಲಿ ಸಾರ್ವಜನಿಕ ಚಬೂತ್ರಾ ಪ್ರದೇಶದಲ್ಲಿಯೂ ಪಾರ್ಕಿಂಗ್ ಸೌಲಭ್ಯ ಕಲ್ಪಿಸಲಾಗಿದೆ. ನಿವಾಸಿಗಳು ಮತ್ತು ವ್ಯಾಪಾರಿಗಳಿಗೆ ಪಾಸ್ ಹಳೆಯ ಬಸ್ ನಿಲ್ದಾಣದಿಂದ ಮುಖ್ಯ ರಸ್ತೆಯ ಮೂಲಕ ಮರಿಕಟ್ಟೆವರೆಗೆ ಇರುವ ರಸ್ತೆಯಲ್ಲಿರುವ ನಿವಾಸಿಗಳಿಗೆ ವಿಶೇಷ ವಾಹನ ಪಾಸ್ಗಳನ್ನು ನೀಡಲಾಗುತ್ತದೆ. ಪಾಸ್ ಹೊಂದಿರುವವರು ಸಂಜೆ 8 ಗಂಟೆಯವರೆಗೆ ಕೇವಲ ದ್ವಿಚಕ್ರ ವಾಹನಗಳನ್ನು ಮಾತ್ರ ಬಳಸುವಂತೆ ಸೂಚಿಸಲಾಗಿದೆ. ನಾಲ್ಕು ಚಕ್ರ ಅಥವಾ ದೊಡ್ಡ ವಾಹನಗಳ ಸಂಚಾರಕ್ಕೆ ಅವಕಾಶ ಇರುವುದಿಲ್ಲ. ಇದೇ ಪ್ರದೇಶದಲ್ಲಿ ವ್ಯಾಪಾರ ನಡೆಸುತ್ತಿರುವ ಅಂಗಡಿಕಾರರಿಗೂ ಪಾಸ್ ನೀಡಲಾಗುತ್ತದೆ. ಪ್ರತಿ ಅಂಗಡಿಗೆ ಕೇವಲ ಒಂದು ದ್ವಿಚಕ್ರ ವಾಹನಕ್ಕೆ ಮಾತ್ರ ಅನುಮತಿ ನೀಡಲಾಗುತ್ತದೆ. ಅಂಗಡಿಗಳಿಗೆ ಅಗತ್ಯವಿರುವ ಸರಕುಗಳನ್ನು ಬೆಳಿಗ್ಗೆ 6ರಿಂದ 10 ಗಂಟೆಯೊಳಗೆ ಮಾತ್ರ ಸಾಗಿಸಲು ಸೂಚಿಸಲಾಗಿದೆ. ರಮ್ಜಾನ್ ಬಜಾರ್ನಲ್ಲಿ ಈದ್ ಖರೀದಿ ಸಂದರ್ಭದಲ್ಲಿ ಹೆಚ್ಚಿನ ಜನಸಂದಣಿ ಮತ್ತು ಸಂಚಾರ ಒತ್ತಡ ಎದುರಾಗುವ ನಿರೀಕ್ಷೆಯಿರುವುದರಿಂದ ಸಾರ್ವಜನಿಕರು ಈ ವ್ಯವಸ್ಥೆಗೆ ಸಹಕರಿಸುವಂತೆ ಭಟ್ಕಳ ಪೊಲೀಸರು ಮನವಿ ಮಾಡಿದ್ದಾರೆ.
ಕಲಬುರಗಿಯಲ್ಲಿ ಟ್ಯಾಂಕರ್ ಮೂಲಕ ನೀರು ಪೂರೈಕೆಗೆ ಕ್ರಮ: ಸಚಿವ ಬೈರತಿ ಸುರೇಶ್
ಬೆಂಗಳೂರು : ಕಲಬುರಗಿ ನಗರದಲ್ಲಿ ಉಂಟಾಗಿರುವ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಅಗತ್ಯವಿರುವ ಕಡೆಗಳಲ್ಲಿ ಬೋರ್ವೆಲ್ ತೋಡುವುದು ಹಾಗೂ ಟ್ಯಾಂಕರ್ಗಳ ಮೂಲಕ ನೀರು ಪೂರೈಕೆ ಮಾಡುವ ಕ್ರಮ ಕೈಗೊಳ್ಳಲಾಗಿದೆ ಎಂದು ನಗರಾಭಿವೃದ್ಧಿ ಮತ್ತು ನಗರ ಯೋಜನೆ ಸಚಿವ ಬೈರತಿ ಸುರೇಶ್ ತಿಳಿಸಿದ್ದಾರೆ. ವಿಧಾನಸಭೆಯಲ್ಲಿ ಶುಕ್ರವಾರ ಪ್ರಶ್ನೋತ್ತರ ಕಲಾಪದ ವೇಳೆ ದಕ್ಷಿಣ ಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ್ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ನಂದಿಕೂರು ಗ್ರಾಮದ ಬಳಿಯ ರೊಚ್ಚು ನೀರಿನ ಸಂಸ್ಕರಣ ಘಟಕದ ಕೆಲವು ಭಾಗಗಳಲ್ಲಿ ದುರಸ್ತಿ ಕಾರ್ಯ ನಡೆಯುತ್ತಿರುವುದಾಗಿ ಹೇಳಿದರು. ಭೀಮಾ ನದಿಯ ಮೂಲಸ್ಥಾನದ ಮೇಲ್ಭಾಗದಲ್ಲಿರುವ ಗ್ರಾಮಗಳಿಂದ ನೈಸರ್ಗಿಕ ನಾಲಾಗಳ ಮೂಲಕ ಹರಿದುಬರುವ ತ್ಯಾಜ್ಯ ನೀರು ಕೆಲವು ಪ್ರದೇಶಗಳಲ್ಲಿ ಕುಡಿಯುವ ನೀರಿಗೆ ಮಿಶ್ರಣವಾಗುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆ ಎಂದು ತಿಳಿಸಿದರು. ಈ ಸಮಸ್ಯೆ ನಿವಾರಣೆಗೆ ಎಸ್ಟಿಪಿ ಘಟಕವನ್ನು 3 ಕೋಟಿ ರೂಪಾಯಿ ವೆಚ್ಚದಲ್ಲಿ ದುರಸ್ತಿ ಮಾಡಲಾಗುತ್ತಿದೆ. ಅಲ್ಲದೆ ನೈಸರ್ಗಿಕ ನಾಲಾಗಳಿಂದ ಹರಿದುಬರುವ ತ್ಯಾಜ್ಯ ನೀರನ್ನು ಬ್ಯಾರೇಜ್ನ ತಳಭಾಗಕ್ಕೆ ಹರಿಸುವಂತೆ ಮಾಡಲು 10 ಕೋಟಿ ರೂಪಾಯಿ ವೆಚ್ಚದಲ್ಲಿ ಯೋಜನೆ ರೂಪಿಸಲಾಗಿದೆ ಎಂದು ಹೇಳಿದರು. ನಗರದ ಕೆಲವು ಪ್ರದೇಶಗಳಿಗೆ ಶುದ್ಧ ಕುಡಿಯುವ ನೀರು ಪೂರೈಕೆ ಮಾಡಲು ಬೋರ್ವೆಲ್ಗಳು ಮತ್ತು ಟ್ಯಾಂಕರ್ಗಳ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ ಎಂದು ಸಚಿವರು ಮಾಹಿತಿ ನೀಡಿದರು. ಕಲಬುರಗಿ ಮಹಾನಗರ ಪಾಲಿಕೆ ವ್ಯಾಪ್ತಿಯ ಎಲ್ಲಾ ವಾರ್ಡ್ಗಳಿಗೆ ನಿರಂತರ ಕುಡಿಯುವ ನೀರು ಪೂರೈಕೆಗೆ ವಿಶ್ವಬ್ಯಾಂಕ್ ನೆರವಿನ ಯೋಜನೆ ಜಾರಿಗೊಳಿಸಲಾಗಿದೆ. ನಗರವನ್ನು ಭೌಗೋಳಿಕವಾಗಿ 47 ವಲಯಗಳಾಗಿ ವಿಭಜಿಸಿದ್ದು, ಪ್ರಸ್ತುತ 32 ವಲಯಗಳಲ್ಲಿ ಹಾಲಿ ಇರುವ ನೀರು ವಿತರಣಾ ಜಾಲವನ್ನು ವಿನ್ಯಾಸಕ್ಕೆ ಅನುಗುಣವಾಗಿ ಬದಲಾಯಿಸಲಾಗುತ್ತದೆ ಎಂದು ತಿಳಿಸಿದರು. ನಗರದ ಮನೆಗಳಿಗೆ ಕುಡಿಯುವ ನೀರು ಪೂರೈಕೆಗೆ 800 ಕೋಟಿ ರೂಪಾಯಿ ವೆಚ್ಚದ ಯೋಜನೆ ಕಾಮಗಾರಿ ಪ್ರಗತಿಯಲ್ಲಿದ್ದು, ಕಾಮಗಾರಿ ವಿಳಂಬ ಮಾಡಿದ ಗುತ್ತಿಗೆದಾರ ಸಂಸ್ಥೆಯಾದ Larsen & Toubro ಗೆ 60 ಕೋಟಿ ರೂಪಾಯಿ ದಂಡ ವಿಧಿಸಲಾಗಿದೆ ಎಂದರು. ಈಗಾಗಲೇ ಸುಮಾರು 8 ಸಾವಿರ ಮನೆಗಳಿಗೆ ನೀರು ಪೂರೈಕೆ ಮಾಡಲಾಗುತ್ತಿದ್ದು, ಉಳಿದ ಮನೆಗಳಿಗೂ ನೀರು ನೀಡಲು ಸರ್ಕಾರ ಬದ್ಧವಾಗಿದೆ ಎಂದು ಹೇಳಿದರು. ಇನ್ನೂ ಕಲಬುರಗಿ ನಗರಕ್ಕೆ ಶಾಶ್ವತ ಕುಡಿಯುವ ನೀರು ಪೂರೈಕೆಗೆ ನಾರಾಯಣಪುರ ಬ್ಯಾರೇಜ್ ನಿಂದ ನೀರು ತರಲು ಸುಮಾರು 1800 ಕೋಟಿ ರೂಪಾಯಿಗಳ ಯೋಜನೆಯನ್ನು ಈ ಬಜೆಟ್ನಲ್ಲಿ ಘೋಷಿಸಲಾಗಿದೆ ಎಂದು ಸಚಿವರು ತಿಳಿಸಿದರು.
ಜೀವನ ಶೈಲಿ ಬದಲಾವಣೆಯಿಂದ ಕಾಯಿಲೆ ದೂರ ಇಡಬಹುದು.: ಡಾ. ಜಯಕೃಷ್ಣ ನಾಯಕ್
ಕಾರ್ಕಳ : ದೇಶದ ಆರ್ಥಿಕತೆಗೂ ಆರೋಗ್ಯಕ್ಕೂ ಸಂಬಂಧವಿದೆ, ಆರ್ಥಿಕವಾಗಿ ಮುಂದುವರಿದ ದೇಶಗಳಲ್ಲಿ ಸಾಂಕ್ರಾಮಿಕ ರೋಗಗಳು ಕಡಿಮೆಯಾಗುತ್ತವೆ ಆದರೆ ಜೀವನ ಶೈಲಿಯಿಂದ ಬರುವ ಕಾಯಿಲೆಗಳು ಹೆಚ್ಚಾಗುತ್ತವೆ. ಆದ್ದರಿಂದ ಜೀವನ ಶೈಲಿಯನ್ನು ಬದಲಾಯಿಸುವುದರ ಮೂಲಕ ಕಾಯಿಲೆಯನ್ನು ದೂರ ಇಡಬಹುದು ಎಂದು ಶ್ರೀ ಮಂಜುನಾಥೇಶ್ವರ ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆ ಉದ್ಯಾವರ ಇದರ ಅಧೀಕ್ಷಕರಾದ ಡಾ. ಜಯಕೃಷ್ಣ ನಾಯಕ್ ಹೇಳಿದರು. ಅವರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, (ರಿ)ಕಾರ್ಕಳ ಶ್ರೀ ಮಂಜುನಾಥೇಶ್ವರ ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆ ಕುತ್ಪಾಡಿ ಉದ್ಯಾವರ ರೋಟರಿ ಕ್ಲಬ್ ಕಾರ್ಕಳ, ಗ್ರಾಮೀಣ ರೋಟರಿ ಸಮುದಾಯದಳ ಕಲ್ಲಂಬಾಡಿ ಪದವು, ಶಾಲಾ ಅಭಿವೃದ್ಧಿ ಸಮಿತಿ ಹಳೆ ವಿದ್ಯಾರ್ಥಿ ಸಂಘ ಕಲಂಬಾಡಿ ಪದವು, ಇವರ ಸಂಯುಕ್ತ ಆಶ್ರಯದಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಲಂಬಾಡಿ ಪದವು ಇಲ್ಲಿ ನಡೆದ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು. ಅಧ್ಯಕ್ಷತೆಯನ್ನು ವಹಿಸಿದ ರೋಟರಿ ಕ್ಲಬ್ ಕಾರ್ಕಳದ ಅಧ್ಯಕ್ಷ ಕೆ. ನವೀನ್ ಚಂದ್ರ ಶೆಟ್ಟಿ ಅವರು ಮಾತನಾಡುತ್ತಾ ನಮಗೆ ಗೊತ್ತಿಲ್ಲದಂತೆ ಕಲಬೆರಕೆ ಆಹಾರವನ್ನೇ ತಿನ್ನುತ್ತಿರುವ ಈ ಕಾಲಘಟ್ಟದಲ್ಲಿ ಪ್ರತಿಯೊಬ್ಬರು ಕಾಲ ಕಾಲಕ್ಕೆ ಆರೋಗ್ಯ ತಪಾಸಣೆ ಮಾಡುವ ಮೂಲಕ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದರು. ಕೆನರಾ ಬ್ಯಾಂಕಿನ ಸಮಾಲೋಚಕರಾದ ಪ್ರದೀಪ್ ಬಿ. ರವರು ಸೈಬರ್ ವಂಚನೆ ಜಾಗೃತಿ ಬಗ್ಗೆ ಉಪಯುಕ್ತ ಮಾಹಿತಿ ನೀಡಿದರು. ವೇದಿಕೆಯಲ್ಲಿ ಎಸ್. ಡಿ.ಎಂ.ಸಿ ಅಧ್ಯಕ್ಷೆ ಸಂಗೀತಾ ಆಚಾರ್ಯ, ಮುಖ್ಯ ಶಿಕ್ಷಕ ನಾಗರಾಜ್ ಬಿ., ಗ್ರಾಮೀಣಾಭಿವೃದ್ಧಿ ಯೋಜನೆ ಒಕ್ಕೂಟ ಪದವು ವಲಯದ ಅಧ್ಯಕ್ಷ ಸುರೇಶ ಆಚಾರ್ಯ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ರಾಜೇಶ್ ಕುಲಾಲ್, ರೋಟರಿ ಕ್ಲಬ್ಬಿನ ಕಾರ್ಯದರ್ಶಿ ಚೇತನ್ ನಾಯಕ್ ಉಪಸ್ಥಿತರಿದ್ದು ಶುಭ ಹಾರೈಸಿದರು. ಸುಮಾರು 240 ಜನರು ಉಚಿತ ಆರೋಗ್ಯ ಶಿಬಿರದ ಪ್ರಯೋಜನವನ್ನು ಪಡೆದರು. ವಿದ್ಯಾರ್ಥಿಗಳು ಪ್ರಾರ್ಥಿಸಿದರು. ವಲಯ ಮೇಲ್ವಿಚಾರಕ ಬ್ರಜೇಶ್ ಸ್ವಾಗತಿಸಿದರು. ಜ್ಞಾನವಿಕಾಸ ಕೇಂದ್ರದ ಸವಿತಾ ನಿರೂಪಿಸಿ ವಂದಿಸಿದರು.
ವರ್ಣೋತ್ಸವ ರಾಷ್ಟ್ರಮಟ್ಟದ ಸ್ಪರ್ಧೆ: ಶಿವಮೊಗ್ಗ ಕಾಲೇಜು ಚಾಂಪಿಯನ್
ಉಡುಪಿ, ಮಾ.13: ಬಂಟಕಲ್ಲಿನ ಶ್ರೀಮಧ್ವ ವಾದಿರಾಜ ತಾಂತ್ರಿಕ ಮಹಾದ್ಯಾಲಯದಲ್ಲಿ ನಡೆದ ರಾಷ್ಟ್ರ ಮಟ್ಟದ ತಾಂತ್ರಿಕ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳ ವರ್ಣೋತ್ಸವ 2026ರಲ್ಲಿ ಶಿವಮೊಗ್ಗದ ಜವಹಾರ್ ಲಾಲ್ ನೆಹರು ನ್ಯೂ ತಾಂತ್ರಿಕ ಕಾಲೇಜು ಚಾಂಪಿಯನ್ಶಿಪ್ ಬಹುಮಾನ ಗೆದ್ದುಕೊಂಡಿತು. ಮಾ.12ರಂದು ನಡೆದ ಸಮಾರೋಪ ಸಮಾರಂಭದಲ್ಲಿ ವಿವಿಧ ಸ್ಪರ್ಧೆಗಳ ವಿಜೇತ ತಂಡಗಳಿಗೆ ಬಹುಮಾನ ವಿತರಿಸಲಾಯಿತು. ಮೂಡಬಿದ್ರಿಯ ಮಂಗಳೂರು ತಾಂತ್ರಿಕ ಮಹಾದ್ಯಾಲಯವು ದ್ವಿತೀಯ ಸ್ಥಾನದೊಂದಿಗೆ ರನ್ನರ್ಸ್ ಅಪ್ ಬಹುಮಾನ ಪಡೆದುಕೊಂಡಿತು. ಈ ವರ್ಷ ವಿಶೇಷವಾಗಿ ತಾಂತ್ರಿಕ ಸ್ಪರ್ಧೆ ಚಾಂಪಿಯನ್ಶಿಪ್ ಸೈಂಟ್ ಜೋಸೆಫ್ ಇಂಜಿನಿಯರಿಂಗ್ ಕಾಲೇಜು ಹಾಗೂ ಸಾಂಸ್ಕೃತಿಕ ವಿಭಾಗದಲ್ಲಿ ಎನ್.ಎಂ.ಎ.ಎಂ.ಐ.ಟಿ, ನಿಟ್ಟೆ ಪಡೆದು ಕೊಂಡಿತು. ಸ್ಪರ್ಧೆಯಲ್ಲಿ ವಿವಿಧ ತಾಂತ್ರಿಕ ಮತ್ತು ಮ್ಯಾನೇಜ್ ಮೆಂಟ್ ಕಾಲೇಜುಗಳ ಸುಮಾರು 550ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಶ್ರೀಸೋದೆ ವಾದಿರಾಜ ಮಠ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಶ್ರೀ ವಿಶ್ವವಲ್ಲಭ ತೀರ್ಥ ಸ್ವಾಮೀಜಿ ಅಧ್ಯಕ್ಷತೆ ವಹಿಸಿದ್ದರು. ಪ್ರತಿಷ್ಠಾನದ ಉಪಾಧ್ಯಕ್ಷ ಪಿ.ಶ್ರೀನಿವಾಸ ತಂತ್ರಿ, ಕಾರ್ಯದರ್ಶಿ ರತ್ನಕುಮಾರ್, ಸೋದೆ ಸಮೂಹ ಶಿಕ್ಷಣ ಸಂಸ್ಥೆಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರೊ.ಡಾ.ರಾಧಾಕೃಷ್ಣ ಎಸ್.ಐತಾಳ್ ಉಪಸ್ಥಿತರಿದ್ದರು. ಸಂಸ್ಥೆಯ ಪ್ರಾಂಶುಪಾಲರಾದ ಡಾ.ನಾಗರಾಜ್ ಭಟ್ ಸ್ವಾಗತಿಸಿದರು. ಕಾಲೇಜಿನ ತಾಂತ್ರಿಕ ಕಾರ್ಯಕ್ರಮಗಳ ಸಂಯೋಜಕಿ ಡಾ.ರೆನಿಟಾ ಶರೋನ್ ಮೋನಿಸ್ ವರದಿಯನ್ನು ವಾಚಿಸಿದರು. ಪ್ರಾಧ್ಯಾಪಕ ರಾಘವೇಂದ್ರ ಜಿ.ಎಸ್. ವಿವಿಧ ಸ್ಪರ್ಧೆಗಳ ವಿಜೇತರ ಪಟ್ಟಿಯನ್ನು ವಾಚಿಸಿದರು. ಸಂಜೆ ಕಾಲೇಜಿನ ಯಕ್ಷಗಾನ ಸಂಘ ಯಕ್ಷಸಿಂಚನದ ವಿದ್ಯಾರ್ಥಿಗಳಿಂದ ಯಕ್ಷಗಾನ ಪ್ರದರ್ಶನ ನಡೆಯಿತು.
ಪೆರ್ಡೂರು ಜಾತ್ರೆ: ಮದ್ಯ ಮಾರಾಟ ನಿಷೇಧ; ಮಾಹನಗಳ ಸಂಚಾರಕ್ಕೆ ಬದಲಿ ಮಾರ್ಗ
ಉಡುಪಿ, ಮಾ.13: ಪೆರ್ಡೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಶ್ರೀ ಅನಂತ ಪದ್ಮನಾಭ ದೇವಸ್ಥಾನದ ವಾರ್ಷಿಕ ಜಾತ್ರೆಯ ಪ್ರಯುಕ್ತ ಕಾನೂನು ಸುವ್ಯವಸ್ಥೆ ಮತ್ತು ಸಾರ್ವಜನಿಕ ಶಾಂತಿ ಕಾಪಾಡುವ ದೃಷ್ಟಿಯಿಂದ ಕರ್ನಾಟಕ ಅಬಕಾರಿ (ಭಾರತೀಯ ಮತ್ತು ದೇಶೀಯ ಮದ್ಯ ಮಾರಾಟ) ನಿಯಮಗಳು 1968ರ ಅನ್ವಯ ಮದ್ಯ ಮಾರಾಟದ ಸನ್ನದುಗಳನ್ನು ಹೊಂದಿರುವ ಬಾರ್, ರೆಸ್ಟೋರೆಂಟ್ ಹಾಗೂ ವೈನ್ಶಾಪ್ ಅಂಗಡಿಗಳನ್ನು ಮಾ.16ರಂದು ಬೆಳಗ್ಗೆ 6 ಗಂಟೆಯಿಂದ ಮಾ.17ರ ಬೆಳಗ್ಗೆ 6:00 ಗಂಟೆಯವರೆಗೆ ಮುಚ್ಚುವಂತೆ ಹಾಗೂ ಮದ್ಯಮಾರಾಟವನ್ನು ನಿಷೇಧಿಸಿ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಆದೇಶ ಹೊರಡಿಸಿದ್ದಾರೆ. ಮಾ.16 ಮುಂಜಾನೆಯಿಂದ 17ರ ಮುಂಜಾನೆವರೆಗೆ ಪೆರ್ಡೂರು ಗ್ರಾಪಂ ವ್ಯಾಪ್ತಿಯಲ್ಲಿ ಒಣದಿನವನ್ನು ಘೋಷಿಸ ಲಾಗಿದೆ ಎಂದು ಜಿಲ್ಲಾ ದಂಡಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಆದೇಶದಲ್ಲಿ ತಿಳಿಸಿದ್ದಾರೆ. ಮಾಹನಗಳ ಸಂಚಾರಕ್ಕೆ ಬದಲಿ ಮಾರ್ಗ ಪೆರ್ಡೂರು ಶ್ರೀಅನಂತ ಪದ್ಮನಾಭ ದೇವಸ್ಥಾನದ ವಾರ್ಷಿಕ ಜಾತ್ರೆಯ ಪ್ರಯುಕ್ತ ರಾ.ಹೆ 169(ಎ) ರ ಮಾರ್ಗದಲ್ಲಿ ಸಂಚರಿಸುವ ವಾಹನಗಳ ಸುಗಮ ಸಂಚಾರಕ್ಕಾಗಿ ಮೋಟಾರು ವಾಹನ ಕಾಯ್ದೆ 1988 ಹಾಗೂ ಕರ್ನಾಟಕ ಮೋಟಾರು ವಾಹನ ನಿಯಮದಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಮಾ.16ರಂದು ಸಂಜೆ 4 ಗಂಟೆಯಿಂದ ರಾತ್ರಿ 10 ಗಂಟೆವರೆಗೆ ವಾಹನಗಳಿಗೆ ಬದಲಿ ಮಾರ್ಗದಲ್ಲಿ ಸಂಚರಿಸಲು ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ ಆದೇಶ ಹೊರಡಿಸಿದ್ದಾರೆ. ಬದಲಿ ಮಾರ್ಗ: ರಾಷ್ಟ್ರೀಯ ಹೆದ್ದಾರಿ 169(ಎ)ರಲ್ಲಿ ಉಡುಪಿಯಿಂದ ಹೆಬ್ರಿ-ಆಗುಂಬೆ ಕಡೆಗೆ ಹೋಗುವ ವಾಹನಗಳು ಹಿರಿಯಡ್ಕ ಜಂಕ್ಷನ್ನಲ್ಲಿ ಮಾರ್ಗ ಬದಲಾಯಿಸಿ-ಕೋಟ್ನಕಟ್ಟೆ- ಹರಿಖಂಡಿಗೆ-ಬೈರಂಪಳ್ಳಿ- ಪೆರ್ಡೂರು ಮೇಲ್ಪೆಟೆ ಮಾರ್ಗವಾಗಿ ಅಥವಾ ಹಿರಿಯಡ್ಕ ಬಜೆ, ಕುಕ್ಕೆಹಳ್ಳಿ, ಪೇತ್ರಿ ಮಾರ್ಗವಾಗಿ ಹೆಬ್ರಿ, ಆಗುಂಬೆಗೆ ಸಂಚರಿಸಬೇಕು. ರಾಷ್ಟ್ರೀಯ ಹೆದ್ದಾರಿ 169(ಎ)ರಲ್ಲಿ ಆಗುಂಬೆ-ಹೆಬ್ರಿ ಕಡೆಯಿಂದ ಉಡುಪಿ ಕಡೆಗೆ ಬರುವ ವಾಹನಗಳು ಪೆರ್ಡೂರು ಮೇಲ್ಪೆಟೆ- ಬೈರಂಪಳ್ಳಿ- ಹರಿಖಂಡಿಗೆ- ಕೋಟ್ನಾಕಟ್ಟೆ- ಹಿರಿಯಡ್ಕ ಜಂಕ್ಷನ್ ಮಾರ್ಗವಾಗಿ ಉಡುಪಿಗೆ ಸಂಚರಿಸಬೇಕು. ರಾಷ್ಟ್ರೀಯ ಹೆದ್ದಾರಿ 169(ಎ) ರಲ್ಲಿ ಹೆಬ್ರಿಯಿಂದ ಪೆರ್ಡೂರು ಮಾರ್ಗ ವಾಗಿ ಪೇತ್ರಿ-ಬ್ರಹ್ಮಾವರ ಕಡೆ ಸಂಚರಿಸುವ ವಾಹನಗಳು ಪೆರ್ಡೂರು ಮೇಲ್ಪೆಟೆಯ ಆರ್ಎಸ್ಎಸ್ ಬ್ಯಾಂಕ್ ಬಳಿ ಇರುವ ಅಲಂಗಾರು ರಸ್ತೆ ಮಾರ್ಗವಾಗಿ ಕರ್ಜೆ-ಪೇತ್ರಿ-ಬ್ರಹ್ಮಾವರ ಕಡೆಗೆ ಸಂಚರಿಸಬೇಕು. ಮಾರ್ಚ್16 ರಂದು ಸಂಜೆ 4:00 ಗಂಟೆಯಿಂದ ರಾತ್ರಿ 10:00 ಗಂಟೆವರೆಗೆ ಪೆರ್ಡೂರು ಕೆಳಪೇಟೆಯಿಂದ-ಮೇಲ್ಪೆಟೆಯ ಬಸ್ ನಿಲ್ದಾಣ ದವರೆಗೆ ವಾಹನ ಸಂಚಾರ ಮುಕ್ತಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ಕಚೇರಿ ಪ್ರಕಟಣೆ ತಿಳಿಸಿದೆ.
ಅನಿಲ ವ್ಯತ್ಯಯ; ವಾರದಲ್ಲಿ ಸಮಸ್ಯೆಗೆ ಪರಿಹಾರ: ಸಂಸದ ಕೋಟ ಭರವಸೆ
ಉಡುಪಿ, ಮಾ.13: ಪಶ್ಚಿಮ ಏಷ್ಯಾ ದೇಶದ ಯುದ್ಧಭೀತಿಯಿಂದ ಉಂಟಾಗಿರುವ ಅನಿಲ ವ್ಯತ್ಯಯದಿಂದಾಗಿ ಹೊಟೇಲ್ ಮಾಲಕರಿಗೆ ಆಗುತ್ತಿರುವ ಸಮಸ್ಯೆಗಳ ಬಗ್ಗೆ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಸೂಕ್ತ ಪರಿಹಾರಕ್ಕೆ ಪ್ರಯತ್ನಿಸಲಾಗುವುದು. ಕೇಂದ್ರ ಸರಕಾರ ಒಂದು ವಾರದೊಳಗೆ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ವಿಶ್ವಾಸವಿದೆ ಎಂದು ಉಡುಪಿ ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಭರವಸೆ ನೀಡಿದ್ದಾರೆ. ಉಡುಪಿ ಜಿಲ್ಲಾ ಹೋಟೇಲ್ ಮಾಲಕರ ಸಂಘದ ವತಿಯಿಂದ ನಗರದ ಡಯಾನ ಹೋಟೇಲ್ನಲ್ಲಿ ಕರೆದ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು ವಾಣಿಜ್ಯ ಬಳಕೆಯ ಅನಿಲ ಅಲಭ್ಯತೆಯ ಬಗ್ಗೆ ಈಗಾಗಲೇ ಜಿಲ್ಲಾಧಿಕಾರಿ, ಆಹಾರ ಇಲಾಖೆ ಅಧಿಕಾರಿಗಳ ಜೊತೆ ಚರ್ಚಿಸಿದ್ದು, ಒಂದು ವಾರದೊಳಗೆ ಸಮಸ್ಯೆ ಪರಿಹಾರವಾಗಲಿದೆ ಎಂದಿದ್ದಾರೆ ಎಂದರು. ಕೊಲ್ಲಿ ಪ್ರದೇಶದಲ್ಲಿ ಕಂಡುಬಂದಿರುವ ಯುದ್ಧದಿಂದ ಇಡೀ ಜಗತ್ತಿನಾ ದ್ಯಂತ ಉಂಟಾಗಿರುವ ತಾತ್ಕಾಲಿಕ ಸಮಸ್ಯೆ ಯಿದು. ಹೀಗಾಗಿ ಲಭ್ಯವಿರುವ ಅನಿಲವನ್ನು ಹೇಗೆ ಸದ್ಭಳಕೆ ಮಾಡಬೇಕು ಎಂಬ ಬಗ್ಗೆ ಚಿಂತಿಸಬೇಕು. ಇದನ್ನು ರಾಜಕೀಯ ಉದ್ದೇಶಕ್ಕೆ ಬಳಸಿಕೊಳ್ಳದೇ ಸಮಸ್ಯೆ ಬಗೆಹರಿಸಿಕೊಳ್ಳುವ ಕಡೆ ಗಮನಹರಿಸುವ ಅಗತ್ಯತೆ ಇದೆ ಎಂದರು. ಹೊಟೇಲ್ ಮಾಲಕ ಸಂಘದ ಪದಾಧಿಕಾರಿಗಳು ಕೊನೆಯಲ್ಲಿ ಮನವಿಯೊಂದನ್ನು ಸಂಸದರಿಗೆ ಅರ್ಪಿಸಿ ಶೀಘ್ರವಾಗಿ ಸಮಸ್ಯೆಗೆ ಪರಿಹಾರ ದೊರಕಿಸಿಕೊಡುವಂತೆ ಮನವಿ ಮಾಡಿದರು.
ಉಡುಪಿ ಜಿಲ್ಲೆಯ 11,274 ಹೆಣ್ಣು ಮಕ್ಕಳಿಗೆ ಎಚ್ಪಿವಿ ಲಸಿಕೆ: ಸಂಸದ ಕೋಟ
ಉಡುಪಿ ಮಾ.13: ಗರ್ಭಕಂಠ ಕ್ಯಾನ್ಸರ್ ತಡೆಗಟ್ಟುವ ಎಚ್ಪಿವಿ ಲಸಿಕೆಯನ್ನು ನೀಡಲು ಉಡುಪಿ ಜಿಲ್ಲೆಯಲ್ಲಿ 14 ವರ್ಷ ತುಂಬಿದ ಹಾಗೂ 15 ವರ್ಷ ವಯಸ್ಸಿನ ಸುಮಾರು 11,274 ಮಕ್ಕಳನ್ನು ಗುರುತಿಸಲಾಗಿದ್ದು, 4150 ಲಸಿಕೆಗಳು ಈಗಾಗಲೇ ಸರಬರಾಜಾಗಿದ್ದು, ಮುಂದಿನ ದಿನಗಳಲ್ಲಿ ಅಗತ್ಯಕ್ಕೆ ತಕ್ಕಂತೆ ಲಸಿಕೆಗಳು ಲಭ್ಯವಾಗಲಿ ದೆಂದು ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತುತಿ ಕುಟುಂಬ ಕಲ್ಯಾಣ ಇಲಾಖೆ, ಶಾಲಾ ಶಿಕ್ಷಣ ಇಲಾಖೆ ಉಡುಪಿ ಜಿಲ್ಲೆ ಹಾಗೂ ರಾಷ್ಟ್ರೀಯ ಆರೋಗ್ಯ ಅಭಿಯಾನ ಇವರ ಸಂಯುಕ್ತ ಆಶ್ರಯದಲ್ಲಿ ಬ್ರಹ್ಮಗಿರಿ ಸೈಂಟ್ ಸಿಸಿಲಿ ಪ್ರೌಢಶಾಲೆಯಲ್ಲಿ ಶುಕ್ರವಾರ ನಡೆದ ಎಚ್ಪಿವಿ ಲಸಿಕಾ ಅಭಿಯಾನವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಮಹಿಳೆಯರಲ್ಲಿ ಹೆಚ್ಚಾಗಿ ಕಾಣಿಸಿ ಕೊಳ್ಳುವ ಗರ್ಭಕಂಠ ಕ್ಯಾನ್ಸರ್ ತಡೆಗೆ ಎಚ್ಪಿವಿ ಲಸಿಕೆ ಸಹಕಾರಿಯಾಗಿದ್ದು, ಹೆಣ್ಣು ಮಕ್ಕಳ ಸದೃಢ ಆರೋಗ್ಯವನ್ನು ರಕ್ಷಿಸುವ ನಿಟ್ಟಿನಲ್ಲಿ ಈ ಲಸಿಕಾ ಅಭಿಯಾನ ಕಾರ್ಯಕ್ರಮವು ಒಂದು ಪ್ರಮುಖ ಮೈಲಿಗಲ್ಲಾಗಲಿದೆ. ಕೇಂದ್ರ ಸರಕಾರದ ಮಾರ್ಗಸೂಚಿ ಅನುಸಾರ ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಸಮುದಾಯ ಆರೋಗ್ಯ ಕೇಂದ್ರಗಳು, ಜಿಲ್ಲಾ ಆಸ್ಪತ್ರೆಗಳು ಮತ್ತು ತಾಲೂಕು ಆಸ್ಪತ್ರೆಗಳಲ್ಲಿ ಸಂಪೂರ್ಣ ಉಚಿತ ವಾಗಿ ಲಸಿಕೆಯನ್ನು ನೀಡಲಾಗುವುದು ಎಂದರು. ಸಂಪನ್ಮೂಲ ವ್ಯಕ್ತಿಯಾಗಿ ಉಡುಪಿ ಆದರ್ಶ ಆಸ್ಪತ್ರೆಯ ಆಡಳಿತ ನಿರ್ದೇಶಕ ಡಾ.ಜಿ.ಎಸ್.ಚಂದ್ರಶೇಖರ್ ಮಾತನಾಡಿ, ಪ್ರತಿಯೊಬ್ಬ ವ್ಯಕ್ತಿಯೂ ಉತ್ತಮ ಹವ್ಯಾಸ, ಪೌಷ್ಠಿಕ ಆಹಾರ ಸೇವನೆ, ನಿಯಮಿತ ದೈಹಿಕ ಚಟುವಟಿಕೆ, ದೇಹದ ತೂಕದಲ್ಲಿ ಸಮತೋಲನ ಕಾಯ್ದುಕೊಂಡಲ್ಲಿ ಆರೋಗ್ಯಯುತ ಜೀವನ ನಡೆಸಬಹುದು. ಕ್ಯಾನ್ಸರ್ ಎನ್ನುವುದು ಮಾರಣಾಂತಿಕ ಕಾಯಿಲೆಯಲ್ಲ. ಕ್ಯಾನ್ಸರ್ ಸೇರಿದಂತೆ ಯಾವುದೇ ರೋಗಗಳ ಲಕ್ಷಣಗಳು ಕಂಡುಬಂದಲ್ಲಿ ಆರಂಭಿಕ ಹಂತದಲ್ಲಿ ಪತ್ತೆ ಹಚ್ಚಿ ಸೂಕ್ತ ಚಿಕಿತ್ಸೆ ಪಡೆದುಕೊಂಡಲ್ಲಿ ಗುಣಮುಖರಾಗಿ ಆರೋಗ್ಯವಂತ ಜೀವನ ನಡೆಸ ಬಹುದು ಎಂದರು. ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನಕರ ಹೇರೂರು, ಕ್ಷೇತ್ರ ಶಿಕ್ಷಣಾಧಿಕಾರಿ ಡಾ.ಎಲ್ಲಮ್ಮ, ಜಿಲ್ಲಾ ಸರ್ಜನ್ ಡಾ.ಅಶೋಕ್ ಎಚ್, ತಾಲೂಕು ಆರೋಗ್ಯಾಧಿಕಾರಿ ಡಾ.ವಾಸುದೇವ, ಸೈಂಟ್ ಸಿಸಿಲಿ ವಿದ್ಯಾ ಸಂಸ್ಥೆಯ ಜಂಟಿ ಕಾರ್ಯದರ್ಶಿ ಸಿಸ್ಟರ್ ಪ್ರಿಯಾ ಮರೀಯಾ ಮೊದಲಾದವರು ಉಪಸ್ಥಿತರಿದ್ದರು. ಜಿಲ್ಲಾ ಆರ್ಸಿಎಚ್ ಅಧಿಕಾರಿ ಡಾ.ಜ್ಯೋತ್ಸ್ನಾ ಬಿ.ಕೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಶಿಧರ್ ನಿರೂಪಿಸಿ, ಚಂದ್ರಕಲಾ ವಂದಿಸಿದರು. ‘ದೇಶದಲ್ಲಿ 14 ವರ್ಷ ತುಂಬಿದ ಹಾಗೂ 15 ವರ್ಷ ವಯಸ್ಸಿನ 1 ಕೋಟಿ 15 ಲಕ್ಷ ವಿದ್ಯಾರ್ಥಿನಿಯರಿಗೆ ನೀಡಲು ನಿರ್ಧರಿಸಲಾಗಿದೆ. ರಾಜ್ಯದಲ್ಲಿ ಸುಮಾರು 6,89,620 ಅರ್ಹರನ್ನು ಗುರುತಿಸಲಾಗಿದೆ. ಈಗಾಗಲೇ 2,54,000 ಲಸಿಕೆಗಳನ್ನು ಆಯಾಯ ಜಿಲ್ಲಾ ಕೇಂದ್ರಕ್ಕೆ ರವಾನಿಸಲಾಗಿದೆ’ -ಕೋಟ ಶ್ರೀನಿವಾಸ ಪೂಜಾರಿ, ಸಂಸದರು
ಬೆಂಗಳೂರು : ಚಿನ್ನದ ಸಾಲ ನೀಡುತ್ತಿರುವ ಸಂಸ್ಥೆಗಳಿಂದ ಗ್ರಾಹಕರಿಗೆ ಆಗುವ ತೊಂದರೆಯನ್ನು ತಪ್ಪಿಸುವ ನಿಟ್ಟಿನಲ್ಲಿ ಅಡಮಾನವಿಟ್ಟ ಚಿನ್ನದ ಹರಾಜಿಗೆ ಮೊದಲು 180 ದಿನಗಳ ಪೂರ್ವ ನೋಟಿಸ್ ಅವಧಿಯನ್ನು ನೀಡುವ ಅಂಶಗಳುಳ್ಳ ಕರ್ನಾಟಕ ಚಿನ್ನ ಅಡಮಾನವಿಟ್ಟ ಸಾಲಗಾರರ ರಕ್ಷಣಾ ವಿಧೇಯಕ-2025 ಎಂಬ ಖಾಸಗಿ ವಿಧೇಯಕವನ್ನು ಕಾಂಗ್ರೆಸ್ ಸದಸ್ಯ ರಮೇಶ್ ಬಾಬು ಮೇಲ್ಮನೆಯಲ್ಲಿ ಶುಕ್ರವಾರ ಮಂಡಿಸಿದರು. ಈ ವಿಧೇಯಕದ ಕುರಿತು ವಿವರಣೆ ನೀಡಿದ ಅವರು, ಚಿನ್ನದ ಸಾಲ ಪಡೆಯುವ ಗ್ರಾಹಕರು ತೀವ್ರ ಶೋಷಣೆ ಅನುಭವಿಸುವಂತಾಗಿದೆ, 1 ಲಕ್ಷ ರೂ. ಮೌಲ್ಯದ ಬಂಗಾರ ಇರಿಸಿಕೊಂಡು 10 ರಿಂದ 15 ಸಾವಿರ ರೂ. ಸಾಲ ನೀಡುವ ಸಂಸ್ಥೆಗಳು ನಂತರ ಆ ಬಂಗಾರವನ್ನು ಮುಟ್ಟಗೋಲು ಹಾಕಿಕೊಳ್ಳುತ್ತವೆ. ತೂಕ, ವೇಸ್ಟೇಜ್ ಹೆಸರಿನಲ್ಲಿಯೂ ದೊಡ್ಡ ಮೋಸ ನಡೆಯುತ್ತಿದೆ. ನಾನಾ ರೂಪದಲ್ಲಿ ಚಿನ್ನದ ಸಾಲ ಪಡೆಯುವ ಗ್ರಾಹಕರು ಶೋಷಣೆ ಅನುಭವಿಸುವಂತಾಗಿದೆ. ತಮ್ಮ ಕಷ್ಟಕಾಲದಲ್ಲಿ ಈ ಬಂಗಾರ ಅನುಕೂಲವಾಗಲಿ ಎಂದು ಅದರ ಮೇಲೆ ಸಾಲದ ಮೊರೆ ಹೋಗುವ ಅನೇಕ ಬಡವರಿಗೆ ಈ ಚಿನ್ನ ಮರಳಿ ದೊರಕುವುದೇ ಇಲ್ಲ, ಚಿನ್ನದ ಮೇಲೆ ಸಾಲ ನೀಡುವ ಸಂಸ್ಥೆಗಳ ಅವೈಜ್ಞಾನಿಕ ಕ್ರಮಗಳಿಂದ ಬಹುತೇಕರ ಚಿನ್ನ ಮುಟ್ಟಗೋಲಾಗುತ್ತದೆ. ಚಿನ್ನದ ಬೆಲೆ ಏರಿಕೆಯಾದರೂ ಸಹ ಸಾಲದ ಪ್ರಮಾಣವನ್ನು ಏರಿಕೆ ಸಹ ಮಾಡುವುದಿಲ್ಲ. ಹೀಗಾಗಿ ಈ ರೀತಿ ಚಿನ್ನದ ಮೇಲೆ ಸಾಲ ನೀಡುವ ಸಂಸ್ಥೆಗಳ ಮೇಲೆ ನಿಬಂಧನೆಗಳನ್ನು ವಿಧಿಸುವುದು ಅಗತ್ಯವಾಗಿದ್ದು, ಗ್ರಾಹಕರಿಗೆ ರಕ್ಷಣೆ ಮಾಡಬೇಕಾದ ಅನಿವಾರ್ಯತೆ ಇದೆ ಎಂದರು. ಸಾಲ ನೀಡುವ ಕ್ಷೇತ್ರದಲ್ಲಿ ನ್ಯಾಯುಯುತ ವಾಣಿಜ್ಯ ಪದ್ಧತಿಗಳನ್ನು ಖಚಿತಪಡಿಸಿಕೊಳ್ಳುವಾಗ, ಖಾಸಗಿ ಹಣಕಾಸು ಸಂಸ್ಥೆಗಳಿಂದ ಹಾಗೂ ಬ್ಯಾಂಕೇತರ ಹಣಕಾಸು ಕಂಪೆನಿಗಳಿಂದ ಆಗುವ ಶೋಷಣೆಗಳನ್ನು ತಪ್ಪಿಸುವ ಉದ್ದೇಶದಿಂದ ಈ ವಿಧೇಯಕವನ್ನು ಮಂಡಿಸಿರುವೆ ಎಂದು ಅವರು ಹೇಳಿದರು. ಈ ಹಿನ್ನೆಲೆಯಲ್ಲಿ ಅಡಮಾನವಿಟ್ಟ ಚಿನ್ನದ ಯಾವುದೇ ಹರಾಜಿಗೆ ಮೊದಲು 180 ದಿನಗಳ ಪೂರ್ವ ನೋಟಿಸ್ ಅವಧಿಯನ್ನು ನಿಗದಿಗೊಳಿಸುವುದು, ಪಾರದರ್ಶಕವಾಗಿ ಮೌಲ್ಯಮಾಪನ, ಸೂಕ್ತವಾದ ಸಂವಹನ ಹಾಗೂ ಅಡವಿಟ್ಟ ಚಿನ್ನವನ್ನು ಬಿಡಿಸಿಕೊಳ್ಳುವಿಕೆಗೆ ಅವಕಾಶಗಳನ್ನು ಸೃಜಿಸುವುದು, ಪರವಾನಿಗೆ ಪಡೆದವರಿಗೆ ಹಾಗೂ ಮೇಲ್ವಿಚಾರಣೆಯ ಕಾರ್ಯ ವಿಧಾನಗಳ ಮೂಲಕ ಹರಾಜು ಪ್ರಕ್ರಿಯೆಯನ್ನು ನಿಯಂತ್ರಿಸುವ ಹಾಗೂ ಸಾಲಗಾರರ ರಕ್ಷಣಾ ಮಾನದಂಡಗಳ ಉಲ್ಲಂಘನೆಗಾಗಿ ದಂಡವನ್ನು ವಿಧಿಸುವ ಅವಕಾಶ ಕಲ್ಪಿಸುವ ಅಂದರೆ ಹರಾಜು ಪ್ರಕ್ರಿಯೆಯನ್ನು ತಹಶೀಲ್ದಾರ ಅಥವಾ ಸರಕಾರದಿಂದ ಅಧಿಕೃತ ಅಧಿಕಾರಿಯ ಸಮ್ಮುಖದಲ್ಲಿ ಪಾರದರ್ಶಕತೆಯಿಂದ ನಡೆಯಬೇಕು ಎಂಬ ಅಂಶವೂ ಈ ವಿಧೇಯಕದಲ್ಲಿ ಸೇರಿದೆ ಎಂದು ರಮೇಶ್ ಬಾಬು ತಿಳಿಸಿದರು. ವಿಧೇಯಕ ಮಂಡನೆ ಬಳಿಕ ಸಭಾಪತಿ ಬಸವರಾಜ್ ಹೊರಟ್ಟಿ ಪ್ರತಿಕ್ರಿಯಿಸಿ, ಇದಕ್ಕೆ ಸದನದ ಸಹಮತಿ ಇದೆ, ಆದರೆ ಮುಂದಿನ ಅಧಿವೇಶನ ಸಂದರ್ಭದಲ್ಲಿ ಈ ವಿಧೇಯಕವನ್ನು ಚರ್ಚೆಗೆ ತೆಗೆದುಕೊಳ್ಳಲಾಗುವುದು. ಈ ವಿಷಯವಾಗಿ ಸದಸ್ಯರು ಚರ್ಚೆಯಲ್ಲಿ ಪಾಲ್ಗೊಳ್ಳುವ ಅವಕಾಶ ಕಲ್ಪಿಸಲಾಗುವುದು ಎಂದು ತಿಳಿಸಿದರು.
ಮರಣಪತ್ರ ಬರೆದಿಟ್ಟು ಯುವಕ ಆತ್ಮಹತ್ಯೆ
ಉಡುಪಿ, ಮಾ.13: ಮರಣ ಪತ್ರ ಬರೆದಿಟ್ಟು ಅಡುಗೆ ಕೆಲಸ ಮಾಡುತ್ತಿದ್ದ ಯುವಕನೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ಶಂಕರಪುರದ ಸಾಲ್ಮರ ಎಂಬಲ್ಲಿ ನಡೆದಿದೆ. ಮೃತರನ್ನು ಗೌತಮ್ ಪೂಜಾರಿ ಎಂದು ಗುರುತಿಸಲಾಗಿದೆ. ಅವಿವಾಹಿತ ರಾಗಿದ್ದ ಇವರು, ಕ್ಯಾಟರಿಂಗ್ನಲ್ಲಿ ಮುಖ್ಯ ಅಡುಗೆ ಕೆಲಸ ಮಾಡುತ್ತಿದ್ದನು ಎನ್ನಲಾಗಿದೆ. ವೈಯಕ್ತಿಕ ಕಾರಣದಿಂದ ಜೀವನದಲ್ಲಿ ಜಿಗುಪ್ಸೆ ಗೊಂಡ ಅವರು, ಕ್ಯಾಟರಿಂಗ್ ಶೆಡ್ ಬಳಿ ರೂಮಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ. ಈ ಬಗ್ಗೆ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
National Highway: ಕರ್ನಾಟಕದ ವಿವಿಧ ಭಾಗಗಳಲ್ಲಿ ನಿರ್ಮಾಣವಾಗಿರುವ ನಾಲ್ಕು ಪ್ರಮುಖ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳಲ್ಲಿ ತಾಂತ್ರಿಕ ಲೋಪಗಳು ಕಂಡುಬಂದಿದೆ. ಈ ಸಂಬಂಧ ಕೇಂದ್ರ ಹೆದ್ದಾರಿ ಹಾಗೂ ಭೂಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ಲೋಕಸಭೆಯಲ್ಲಿ ಮಹತ್ವದ ಮಾಹಿತಿ ಹಂಚಿಕೊಂಡಿದ್ದಾರೆ. ಇಲ್ಲಿದೆ ನೋಡಿ ಸಂಪೂರ್ಣ ವಿವರ. ರಾಜ್ಯದ ನಾಲ್ಕು ಪ್ರಮುಖ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳಲ್ಲಿ ಲೋಪಗಳು ಕಂಡುಬಂದಿದ್ದು, ಈ
ಉಡುಪಿ, ಮಾ.13: ಉಡುಪಿ ಸಿಟಿ ಬಸ್ ನಿಲ್ದಾಣದ ಹತ್ತಿರ ಮಾ.13ರಂದು ನಸುಕಿನ ವೇಳೆ ಅನುಮಾನಾಸ್ಪದವಾಗಿ ನಿಂತಿದ್ದ ಓರ್ವನನ್ನು ಉಡುಪಿ ನಗರ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಬಂಧಿತನನ್ನು ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಕೊರಡಿಹಿತ್ತಲ್ಲಾ ನಿವಾಸಿ ಪ್ರಶಾಂತ ಕೆ.ವಿ.(35) ಎಂದು ಗುರುತಿಸಲಾಗಿದೆ. ಪೊಲೀಸರು ವಿಚಾರಿಸಿದಾಗ ಸಮರ್ಪಕವಾದ ಉತ್ತರವನ್ನು ನೀಡದೇ ಆತ, ಯಾವುದೇ ಅಪರಾಧ ಎಸಗಲು ಬಂದಿರುವ ಸಂಶಯದ ಮೇರೆಗೆ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಈತನ ವಿರುದ್ಧ ಈಗಾಗಲೇ ಶಿವಮೊಗ್ಗ ಜಿಲ್ಲೆಯ ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆ ಪ್ರಕರಣ ದಲ್ಲಿ ಆತ ಸಜಾ ಬಂಧಿ ಯಾಗಿರುವುದಾಗಿ ಬೆರಳಚ್ಚು ದಾಖಲೆಯಿಂದ ತಿಳಿದುಬಂದಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಉಡುಪಿ ಅಬಕಾರಿ ಡಿಸಿ ಶ್ರೀನಿವಾಸ್ ಮನೆಗೆ ಲೋಕಾಯುಕ್ತ ದಾಳಿ: 8.69 ಕೋಟಿ ರೂ. ಮೌಲ್ಯದ ಅಕ್ರಮ ಆಸ್ತಿ ಪತ್ತೆ
ಉಡುಪಿ: ಆದಾಯಕ್ಕೆ ಮೀರಿ ಆಸ್ತಿ ಹೊಂದಿರುವ ಆರೋಪದ ಹಿನ್ನೆಲೆಯಲ್ಲಿ ಲೋಕಾಯುಕ್ತ ಪೊಲೀಸರು, ಅಬಕಾರಿ ಇಲಾಖೆಯ ಜಿಲ್ಲಾ ಅಧಿಕಾರಿ ಶ್ರೀನಿವಾಸ್ ಟಿ.ಎಂ. ಅವರ ಮನೆ ಹಾಗೂ ಸಂಬಂಧಿತ ಸ್ಥಳಗಳ ಮೇಲೆ ದಾಳಿ ನಡೆಸಿ 8.69 ಕೋಟಿ ರೂ. ಮೌಲ್ಯದ ಅಕ್ರಮ ಆಸ್ತಿಯನ್ನು ಪತ್ತೆ ಹಚ್ಚಿದ್ದಾರೆ. ಕರ್ನಾಟಕ ಲೋಕಾಯುಕ್ತ ಪೊಲೀಸ್ ವಿಭಾಗದ ಉಡುಪಿ ಪೊಲೀಸ್ ಠಾಣೆಯಲ್ಲಿ ಸರಕಾರಿ ಅಧಿಕಾರಿಯು ತಮ್ಮ ಆದಾಯದ ಮೂಲಗಳಿಗಿಂತ ಹೆಚ್ಚು ಅಕ್ರಮ ಆಸ್ತಿಯನ್ನು ಹೊಂದಿದ್ದ ಬಗ್ಗೆ ಪ್ರಕರಣ ದಾಖಲಾಗಿತ್ತು. ಅದರಂತೆ ಲೋಕಾಯುಕ್ತ ಪೊಲೀಸರು, ಮಾ.11ರಂದು ಆರೋಪಿ ಅಧಿಕಾರಿಗೆ ಸಂಬಂಧಿಸಿದ ಮನೆ, ಕಚೇರಿ ಹಾಗೂ ಸಂಬಂಧಿಕರ ಮನೆಗಳು ಸೇರಿದಂತೆ ಒಟ್ಟು 15 ಸ್ಥಳಗಳಲ್ಲಿ ಏಕಕಾಲಕ್ಕೆ ಶೋಧನಾ ಕಾರ್ಯ ನಡೆಸಿದ್ದರು. ಈ ವೇಳೆ ಆರೋಪಿಗೆ ಸಂಬಂಧಿಸಿದ ಒಟ್ಟು 11 ನಿವೇಶನಗಳು, 6 ವಾಸದ ಮನೆಗಳು, 31 ಎಕರೆ ಕೃಷಿ ಜಮೀನು ಎಲ್ಲಾ ಸೇರಿ ಒಟ್ಟು 6,90,64,716ರೂ. ಮೌಲ್ಯದ ಸ್ಥಿರ ಆಸ್ತಿ, 3,95,941ರೂ. ನಗದು, 1,47,50,506 ರೂ. ಮೌಲ್ಯದ ಚಿನ್ನಾಭರಣಗಳು, 17,00,000 ರೂ. ಮೌಲ್ಯದ ವಾಹನಗಳು, 25,75,000ರೂ. ಬ್ಯಾಂಕ್ ಠೇವಣಿ, 72,68,554 ರೂ. ಮೌಲ್ಯದ ಇತರೆ ವಸ್ತುಗಳು ಎಲ್ಲಾ ಸೇರಿ ಒಟ್ಟು 2,66,90,001ರೂ. ಚರ ಆಸ್ತಿ ಕಂಡು ಬಂದಿದೆ. ಒಟ್ಟು 8,69,23,435ರೂ. ಮೌಲ್ಯದ ಅಕ್ರಮ ಆಸ್ತಿ ಕಂಡುಬಂದಿದೆ ಎಂದು ಲೋಕಾಯುಕ್ತ ಪೊಲೀಸರು ತಿಳಿಸಿದ್ದಾರೆ.
ಎಲ್ಪಿಜಿ ಬಿಕ್ಕಟ್ಟು | ಲೋಕಸಭೆಯಲ್ಲಿ ವಿಪಕ್ಷಗಳಿಂದ ಪ್ರತಿಭಟನೆ
ಹೊಸದಿಲ್ಲಿ,ಮಾ.13: ಪಶ್ಚಿಮ ಏಶ್ಯಾ ಸಂಘರ್ಷದ ಹಿನ್ನೆಲೆಯಲ್ಲಿ ದೇಶದಲ್ಲಿ ತಲೆದೋರಿರುವ ಎಲ್ಪಿಜಿ ಕೊರತೆಯ ಬಿಕ್ಕಟ್ಟು ಶುಕ್ರವಾರ ಲೋಕಸಭೆಯಲ್ಲಿ ಪ್ರತಿಧ್ವನಿಸಿತು. ಎಲ್ಪಿಜಿ ಕೊರತೆ ಹಾಗೂ ದರ ಏರಿಕೆಯ ಬಿಕ್ಕಟ್ಟನ್ನು ಕೇಂದ್ರ ಸರಕಾರವು ನಿಭಾಯಿಸುವಲ್ಲಿ ವಿಫಲವಾಗಿದೆಯೆಂದು ಆಪಾದಿಸಿ ಪ್ರತಿಪಕ್ಷ ಸದಸ್ಯರು ಸದನದಲ್ಲಿ ಭಾರೀ ಪ್ರತಿಭಟನೆ ನಡೆಸಿದರು. ಲೋಕಸಭೆಯ ಕಲಾಪ ಆರಂಭಾಗುತ್ತಿದ್ದಂತೆಯೇ ಪ್ರತಿಪಕ್ಷ ಸದಸ್ಯರು ಸದನದಲ್ಲಿ ಘೋಷಣೆಗಳನ್ನು ಕೂಗ ತೊಡಗಿದರು. ದೇಶಾದ್ಯಂತ ಉಂಟಾಗಿರುವ ಎಲ್ಪಿಜಿ ಕೊರತೆಯನ್ನು ನಿಭಾಯಿಸಲು ಕೇಂದ್ರ ಸರಕಾರ ವಿಫಲವಾಗಿದ್ದು, ಈ ಬಗ್ಗೆ ಸದನದಲ್ಲಿ ಚರ್ಚೆಯಾಗಬೇಕೆಂದು ಪಟ್ಟು ಹಿಡಿದರು. ವಿಪಕ್ಷ ಸದಸ್ಯರ ಗದ್ದಲದ ನಡುವೆ ಕಲಾಪಗಳನ್ನು ನಡೆಸುವುದೇ ಅಸಾಧ್ಯವಾಗಿ ಸ್ಪೀಕರ್ ಅವರು ಸದನವನ್ನು ಮುಂದೂಡಿದರು. ಮಧ್ಯಾಹ್ನ 12ಕ್ಕೆ ಸದನ ಮತ್ತೆ ಸೇರಿದಾಗ, ಪ್ರತಿಪಕ್ಷ ಸದಸ್ಯರು ಇದೇ ವಿಷಯವಾಗಿ ಗದ್ದಲವೆಬ್ಬಿಸಿದರು ಹಾಗೂ ಸದನದ ಮುಂಭಾಗಕ್ಕೆ ಧಾವಿಸಿ ಬಂದು ಕೇಂದ್ರ ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ವಿಪಕ್ಷ ಸದಸ್ಯರು ಕಲಾಪಗಳಿಗೆ ಅಡ್ಡಿಪಡಿಸುತ್ತಿರುವುದನ್ನು ಕಟುವಾಗಿ ಖಂಡಿಸಿದ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರು, ಜನತೆಯ ನಾಡಿಮಿಡಿತವನ್ನು ತಿಳಿದುಕೊಳ್ಳಲು ರಾಹುಲ್ಗಾಂಧಿ ಬಯಸುತ್ತಿಲ್ಲವೆಂದು ಕಿಡಿಕಾರಿದರು. ಪ್ರಧಾನ ಪ್ರತಿಪಕ್ಷವು ಸಂಸತ್ನಲ್ಲಿ ಈ ರೀತಿ ವರ್ತಿಸುತ್ತಿದ್ದರೆ, ಅವರನ್ನು ದೇಶದ ಜನತೆ ಕಠಿಣವಾಗಿ ಶಿಕ್ಷಿಸಲಿದ್ದಾರೆಂದು ಹೇಳಿದರು. ‘‘ಅವರ (ಪ್ರತಿಪಕ್ಷ) ನಾಯಕ ಬದಲಾಗಲು ಒಪ್ಪುತ್ತಿಲ್ಲ. ಸಂಸತ್ಭವನದ ಆವರಣದಲ್ಲಿ ತಟ್ಟೆ ಹಾಗೂ ಲೋಟವನ್ನು ಹಿಡಿದುಕೊಂಡು ಅವರ ನಾಯಕ ನಾಟಕವಾಡುತ್ತಿದ್ದಾರೆಂದು ರಾಹುಲ್ ಆಪಾದಿಸಿದರು. ಇಂತಹ ಪ್ರಹಸನಗಳನ್ನು ಮಾಡುವ ಮೂಲಕ ಜನತೆಯ ಗಮನವನ್ನು ಸೆಳೆಯಬಹುದೆಂದು ಅವರು ಭಾವಿಸಿದ್ದಾರೆ. ಆದರೆ ಅವರ ಬಗ್ಗೆ ದೇಶದ ಜನತೆಗೆ ಚೆನ್ನಾಗಿ ತಿಳಿದಿರುವುದಿಂದಲೇ ಅವರಿಗೆ ಅಧಿಕಾರಕ್ಕೆ ಬರಲು ಸಾಧ್ಯವಾಗುತ್ತಿಲ್ಲ’’ ಎಂದು ರಿಜಿಜು ವ್ಯಂಗ್ಯವಾಡಿದರು. ಸದನದಲ್ಲಿ ಕಾಂಗ್ರೆಸ್ ಸದಸ್ಯರ ನಡವಳಿಕೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಸಚಿವರು, ತಮ್ಮ ನಾಯಕ ತಾರ್ಕಿಕತೆಯಿಂದ ವರ್ತಿಸಲು ಕಾಂಗ್ರೆಸ್ ಪಕ್ಷದ ಯಾವುದೇ ಸದಸ್ಯರು ಪ್ರಯತ್ನಿಸುತ್ತಿಲ್ಲವೆಂದು ಹೇಳಿದರು. ಇನ್ನೂ ಬದಲಾಗಲು ಅವಕಾಶವಿದೆ. ಇಲ್ಲದೆ ಇದ್ದಲ್ಲಿ ದೇಶದ ಜನತೆ ನಿಮ್ಮನ್ನು ಕಠಿಣವಾಗಿ ಶಿಕ್ಷಿಸಲಿದ್ದಾರೆಂದು ರಿಜಿಜು ಕಾಂಗ್ರೆಸ್ ಸದಸ್ಯರ ವಿರುದ್ಧ ಕಿಡಿಕಾರಿದರು. ಆದರೆ ಪ್ರತಿಪಕ್ಷ ಸದಸ್ಯರು ಜಗ್ಗದೆ, ಪ್ರತಿಭಟನೆಯನ್ನು ಮುಂದುವರಿಸಿದಾಗ ಸ್ಪೀಕರ್ ಅವರು ಸದನವನ್ನು ಮುಂದಿನ ಮಧ್ಯಾಹ್ನ 2 ಗಂಟೆಯವರೆಗೆ ಮುಂದೂಡಿದರು.
Kolkata Knight Riders Team - ಇತ್ತೀಚೆಗೆ ಮುಗಿದ ಟಿ20 ವಿಶ್ವಕಪ್ನಲ್ಲಿ ಮಿಂಚಿದ್ದ ಜಿಂಬಾಬ್ವೆಯ ವೇಗಿ ಬ್ಲೆಸ್ಸಿಂಗ್ ಮುಝರಬಾನಿ ಅವರು ಇದೀಗ ಪಾಕಿಸ್ತಾನ ಸೂಪರ್ ಲೀಗ್ ತೊರೆದು ಕೆಕೆಆರ್ ತಂಡ ಸೇರಲಿದ್ದಾರೆ. ಬಿಸಿಸಿಐ ಸೂಚನೆಯಂತೆ ಕೆಕೆಆರ್ನಿಂದ ಬಿಡುಗಡೆಗೊಂಡ ಬಾಂಗ್ಲಾದೇಶದ ಮುಸ್ತಫಿಝುರ್ ರೆಹ್ಮಾನ್ ಅವರ ಸ್ಥಾನವನ್ನು 6.8 ಅಡಿ ಎತ್ತರದ ಜಿಂಬಾಬ್ವೆಯ ಮಧ್ಯಮ ವೇಗಿ ತುಂಬಲಿದ್ದಾರೆ. ಇದೇವೇಳೆ ಐಪಿಎಲ್ ನಿಂದ ಹೊರಹಾಕಲ್ಪಟ್ಟ ಮುಸ್ತಫಿಝುರ್ ರೆಹ್ಮಾನ್ ಅವರು ಈಗ ಪಿಎಸ್ಎಲ್ ನಲ್ಲಿ ಲಾಹೋರ್ ಖಲಂದರ್ಸ್ ಪರ ಆಡಲಿದ್ದಾರೆ.
ದತ್ತಾಂಶ ಸುರಕ್ಷತಾ ಕಾಯ್ದೆಯ ಸಿಂಧುತ್ವ ಪ್ರಶ್ನಿಸಿ ಅರ್ಜಿ : ಕೇಂದ್ರ ಸರಕಾರಕ್ಕೆ ಸುಪ್ರೀಂಕೋರ್ಟ್ ನೋಟಿಸ್
ಹೊಸದಿಲ್ಲಿ,ಮಾ.13: 2023ರ ಡಿಜಿಟಲ್ ವೈಯಕ್ತಿಕ ದತ್ತಾಂಶ ಸುರಕ್ಷತಾ ಕಾಯ್ದೆಯ ನಿಯಮವೊಂದರ ಸಿಂಧುತ್ವವನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗೆ ಸಂಬಂಧಿಸಿ ಉತ್ತರಿಸುವಂತೆ ಸುಪ್ರೀಂಕೋರ್ಟ್ ಶುಕ್ರವಾರ ಕೇಂದ್ರ ಸರಕಾರವನ್ನು ಕೋರಿದೆ. ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಹಾಗೂ ನ್ಯಾಯಮೂರ್ತಿ ಜಯಮಾಲ್ಯ ಬಾಗ್ಚಿ ಅವರನ್ನೊಳಗೊಂಡ ನ್ಯಾಯಪೀಠವು ಕೇಂದ್ರ ಸರಕಾರಕ್ಕೆ ನೋಟಿಸ್ ಜಾರಿಗೊಳಿಸಿದೆ ಹಾಗೂ ಇದೇ ವಿಷಯಕ್ಕೆ ಸಂಬಂಧಿಸಿ ವಿಚಾರಣೆಗೆ ಬಾಕಿಯಿರುವ ಇತರ ಅರ್ಜಿಗಳ ಜೊತೆಗೆ ಅದನ್ನು ಅಡಕಗೊಳಿಸಿದೆ. 2005ರ ಮಾಹಿತಿ ಹಕ್ಕು ಕಾಯ್ದೆಯಡಿ ಪಡೆದುಕೊಳ್ಳಲಾದ ವೈಯಕ್ತಿಕ ದತ್ತಾಂಶದ ಪರಿಷ್ಕರಣೆ, ವಿಶ್ಲೇಷಣೆ, ಪ್ರಸರಣೆ ಹಾಗೂ ಮರು ಪ್ರಕಟಣೆಗೆ 2023ರ ಕಾಯ್ದೆಯ ನಿಯಮಗಳು ಅನ್ವಯಿಸುವುದಿಲ್ಲವೆಂದು ಘೋಷಿಸುವಂತೆ ಆದೇಶ ನೀಡಬೇಕೆಂದು ಕೋರಿ ಅಂಜಲಿ ಭಾರದ್ವಾಜ್ ಹಾಗೂ ಅಮೃತಾ ಜೋಹ್ರಿ ಎಂಬವರು ಅರ್ಜಿ ಸಲ್ಲಿಸಿದ್ದರು. ಭ್ರಷ್ಟಾಚಾರವನ್ನು, ಸಾರ್ವಜನಿಕ ಹುದ್ದೆ ಅಥವಾ ಇಲಾಖೆಯ ದುರುಪಯೋಗವನ್ನು ಬಯಲಿಗೆಳೆಯುವರು ಸೇರಿದಂತೆ ಸಾರ್ವಜನಿಕ ಹಿತಾಸಕ್ತಿಯ ದೃಷ್ಟಿಯಿಂದ ವೈಯಕ್ತಿಕ ದತ್ತಾಂಶವನ್ನು ಪ್ರಕಟಿಸುವವರಿಗೆ 2023ರ ಕಾಯ್ದೆಯ ನಿಯಮಗಳು ಅನ್ವಯವಾಗುವುದಿಲ್ಲವೆಂಬ ನಿರ್ದೇಶನ ನೀಡುವಂತೆಯೂ ಅರ್ಜಿದಾರರು ನ್ಯಾಯಾಲಯವನ್ನು ಕೋರಿದ್ದರು. 2023ರ ಡಿಜಿಟಲ್ ವೈಯಕ್ತಿಕ ದತ್ತಾಂಶ ಕಾಯ್ದೆಯು ಸೆಕ್ಷನ್ 44(3) ಅಸಂವಿಧಾನಿಕವಾಗಿದ್ದು, ಮಾಹಿತಿ ಹಕ್ಕು ಕಾಯ್ದೆಯ ಸೆಕ್ಷನ್8 (1)ರ ಉಪವಾಕ್ಯ (ಜೆ) ಮಾಹಿತಿಯನ್ನು ಪಡೆಯುವ ಮೂಲಭೂತ ಹಕ್ಕುಗಳನ್ನು ಮೊಟಕುಗೊಳಿಸುವ ಮೂಲಕ ಸಂವಿಧಾನದ 14 ಹಾಗೂ 19(1)(ಎ) ಕಲಂಗಳನ್ನು ಉಲ್ಲಂಘಿಸುತ್ತದೆ ಎಂದು ಅರ್ಜಿದಾರರು ಆರೋಪಿಸಿದ್ದರು. ನ್ಯಾಯಪೀಠವು ಪ್ರಕರಣದ ಆಲಿಕೆಯನ್ನು ಮಾರ್ಚ್ 23ಕ್ಕೆ ಮುಂದೂಡಿದೆ.
1ರಿಂದ 10ನೇ ತರಗತಿ ಮಕ್ಕಳ ಆಧಾರ್ ಸೀಡಿಂಗ್, ಮಾಪಿಂಗ್ ಮಾಡಿಸಿ: ಶಶಿಧರ್ ಕೋಸಂಬೆ ಸೂಚನೆ
ಉಡುಪಿ, ಮಾ.13: ಜಿಲ್ಲೆಯಲ್ಲಿ 1ರಿಂದ 10ನೇ ತರಗತಿವರೆಗೆ ಒಟ್ಟು 1,59,731 ಮಕ್ಕಳಿದ್ದಾರೆ. ಇವರಲ್ಲಿ ಪ್ರತಿ ಯೊಬ್ಬರದೂ ಆಧಾರ್ ಸೀಡಿಂಗ್ ಆಗಿರಬೇಕು, ಅದರ ಜೊತೆಗೆ ಆಧಾರ್ ಮಾಪಿಂಗ್ ಸಹ ಮಾಡಿರಬೇಕು. ಇಲ್ಲದಿದ್ದರೆ ಭವಿಷ್ಯದಲ್ಲಿ ಅವರು ಸಮಸ್ಯೆ ಎದುರಿಸುತ್ತಾರೆ. ಪ್ರತಿಯೊಬ್ಬ ಮಗುವೂ ಆಧಾರ್ ಕಾರ್ಡ್ ಹೊಂದಿರು ವಂತೆ ನೋಡಿಕೊಳ್ಳುವ ಜವಾಬ್ದಾರಿ ಅಧಿಕಾರಿಗಳದು. ಮೂವತ್ತು ದಿನಗಳ ಒಳಗೆ ಜಿಲ್ಲೆಯ ಎಲ್ಲಾ ಮಕ್ಕಳಿಗೂ ಆಧಾರ್ ಲಭ್ಯವಾಗುವಂತೆ ನೋಡಿಕೊಳ್ಳಬೇಕು. ಇಲ್ಲವಾದಲ್ಲಿ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮಕ್ಕೆ ಸರಕಾರಕ್ಕೆ ವರದಿ ನೀಡಲಾಗುವುದು ಎಂದು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಶಶಿಧರ್ ಕೋಸಂಬೆ ಹೇಳಿದ್ದಾರೆ. ಮಣಿಪಾಲ ಜಿಲ್ಲಾ ಪಂಚಾಯತ್ನ ಡಾ.ವಿ.ಎಸ್.ಆಚಾರ್ಯ ಸಭಾಂಗಣ ದಲ್ಲಿ ಜಿಲ್ಲಾ ಮತ್ತು ತಾಲೂಕು ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ಆರ್.ಟಿ.ಇ ಕಾಯ್ದೆ 2009, ಪೋಕ್ಸೋ ಕಾಯ್ದೆ 2012, ಬಾಲ್ಯ ವಿವಾಹ ಕಾಯ್ದೆ 2006 ಹಾಗೂ ಬಾಲನ್ಯಾಯ ಕಾಯ್ದೆ 2015ರ ಕುರಿತ ಪ್ರಗತಿ ಪರಿಶೀಲನಾ ಸಭೆಯ ಅಧಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು. ಜಿಲ್ಲೆಯಲ್ಲಿ 76ಕ್ಕೂ ಹೆಚ್ಚು ಸ್ಕ್ಯಾನಿಂಗ್ ಸೆಂಟರ್ಗಳು ಕಾರ್ಯ ನಿರ್ವಹಿಸುತ್ತಿವೆ. ಪ್ರತಿಯೊಂದು ಸ್ಕ್ಯಾನಿಂಗ್ ಸೆಂಟರ್ಗಳು ಸರಕಾರದ ಪಿ.ಸಿ.ಪಿ.ಎನ್.ಡಿ.ಟಿ ನಿಯಮನುಸಾರ ಕಾರ್ಯನಿರ್ವಹಿಸಬೇಕು. ಇಂದು ಎರಡು ಖಾಸಗಿ ಸ್ಕ್ಯಾನಿಂಗ್ ಸೆಂಟರ್ಗೆ ಭೇಟಿ ನೀಡಿದಾಗ ಕೆಲವು ನಿಯಮ ಗಳನ್ನು ಪಾಲಿಸದೇ, ಕೆಲವು ದಾಖಲೆಗಳನ್ನು ಸಹ ನಿರ್ವಹಿಸದೆ ಇರುವುದು ಕಂಡುಬಂದಿದೆ. ಜಿಲ್ಲೆಯ ಎಲ್ಲಾ ಸ್ಕ್ಯಾನಿಂಗ್ ಸೆಂಟರ್ಗಳಿಗೆ ನಿರಂತರವಾಗಿ ಭೇಟಿ ನೀಡಿ ದಾಖಲೆಗಳನ್ನು ಸರಿಯಾಗಿ ನಿರ್ವಹಣೆ ಮಾಡುತ್ತಿರುವ ಬಗ್ಗೆ ವರದಿ ನೀಡಬೇಕು. ಇನ್ನೆರಡು ವಾರದಲ್ಲಿ ಅಭಿಯಾನದ ರೀತಿ ವಿಷಯ ಪರಿಶೀಲಿಸಿ ಆಯೋಗಕ್ಕೆ ವರದಿ ನೀಡಬೇಕು ಎಂದರು. ಸರಕಾರಿ ಆಸ್ಪತ್ರೆಗಳಲ್ಲಿ ಒಳರೋಗಿಗಳಾಗಿ ನೋಂದಣಿಯಾಗಿ ಚಿಕಿತ್ಸೆ ಪಡೆಯುತ್ತಿರುವವರಿಗೆ ಪಥ್ಯಾಹಾರವನ್ನು ಉಚಿತವಾಗಿ ನೀಡಬೇಕು. ಪಥ್ಯಾಹಾರದಲ್ಲಿ ಅನ್ನ, ಸಾಂಬಾರ್, ಚಪಾತಿ, ಮೊಟ್ಟೆ, ಬಾಳೆಹಣ್ಣು ನೀಡಬೇಕು. ಆದರೆ ಕೆಲವೊಂದು ಪಥ್ಯಾಹಾರಗಳನ್ನು ನೀಡದಿರುವುದು ಕಂಡು ಬಂದಿದ್ದು, ಈ ಬಗ್ಗೆ ಜಿಲ್ಲಾಧಿಕಾರಿ ಪರಿಶೀಲಿಸಬೇಕು. ಇದರೊಂದಿಗೆ ಅಲ್ಲಿನ ವೈದ್ಯರು ನಿಯಮಾನುಸಾರ ಕರ್ತವ್ಯ ನಿರ್ವಹಿಸುತ್ತಿರುವ ಬಗ್ಗೆಯೂ ಪರಿಶೀಲಿಸಬೇಕು ಎಂದು ಸೂಚನೆ ನೀಡಿದರು. ಮಕ್ಕಳ ಸರ್ವಾಂಗೀಣ ಅಭಿವೃದ್ಧಿ ಹಾಗೂ ರಕ್ಷಣೆಗೆ ಸರಕಾರ ಜಾರಿಗೆ ತಂದಿರುವ ಹಕ್ಕುಗಳು, ನಿಯಮಗಳು ಹಾಗೂ ಸೌಲಭ್ಯಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಗೊಳಿಸಬೇಕು. ಮಕ್ಕಳ ಹಕ್ಕುಗಳ ರಕ್ಷಣೆ ಹಾಗೂ ವಿವಿಧ ಸೌಲಭ್ಯಗಳನ್ನು ಕೊಡಲು ಅನುಕೂಲವಾಗುವಂತೆ ಪ್ರತಿ ಯೊಂದು ಗ್ರಾಮ ಪಂಚಾಯತ್ಗಳಲ್ಲಿ ಮಕ್ಕಳ ಸ್ನೇಹಿ ಗ್ರಾಮ ಪಂಚಾಯತ್ ಅಭಿಯಾನ ನಡೆಸಬೇಕು ಎಂದು ಸಲಹೆ ನೀಡಿದರು. ಏಕ ಪೋಷಕರು, ಅನಾಥರು, ಶಾಲೆಯಿಂದ ಹೊರಗುಳಿದವರು, ಲಸಿಕಾ ವಂಚಿತ ಮಕ್ಕಳು ಸೇರಿದಂತೆ ಮಕ್ಕಳ ಕುರಿತ ವಿವಿಧ ಮಾಹಿತಿಗಳನ್ನು ನಿಖರವಾಗಿ ಇಟ್ಟುಕೊಳ್ಳಬೇಕು. ಇದರ ಜೊತೆಗೆ ಮಹಿಳಾ ಮತ್ತು ಮಕ್ಕಳ ರಕ್ಷಣಾ ಕಾವಲು ಪಡೆ, ಶಿಕ್ಷಣ ಕಾವಲು ಸಮಿತಿ ಪಡೆಗಳ ಸಭೆಗಳು, ಮಕ್ಕಳ ವಿಶೇಷ ಗ್ರಾಮಸಭೆಗಳನ್ನು ನಿಯಮನುಸಾರ ಸಕಾಲದಲ್ಲಿ ನಡೆಸಬೇಕು. ಈ ಬಗ್ಗೆ ಜಿಲ್ಲಾ ಪಂಚಾಯತ್ನ ಕಾರ್ಯ ನಿರ್ವಹಣಾಧಿಕಾರಿಗಳು ಗಮನ ಹರಿಸಬೇಕು ಎಂದರು. ವಸತಿ ಶಾಲೆ ನಡೆಸುತ್ತಿರುವ ಎಲ್ಲಾ ಇಲಾಖೆಗಳು ನಿಲಯದ ಮಕ್ಕಳ ಹಕ್ಕುಗಳನ್ನು ರಕ್ಷಿಸುವ ಕೆಲಸವನ್ನು ಮುತು ವರ್ಜಿಯಿಂದ ಮಾಡಬೇಕು. ವಸತಿ ನಿಲಯಗಳಲ್ಲಿ ಮಕ್ಕಳಿಗೆ ಅನುಕೂಲವಾಗುವಂತೆ ಬಿಸಿನೀರಿನ ವ್ಯವಸ್ಥೆ ಸೇರಿ ದಂತೆ ಅಗತ್ಯ ಮೂಲಭೂತ ಸೌಲಭ್ಯ ಕಲ್ಪಿಸಬೇಕು. ಅಲ್ಲಿನ ಸಿಬ್ಬಂದಿಗಳಿಗೆ ಮಕ್ಕಳ ಹಕ್ಕು, ಪೋಕ್ಸೋ ಕಾಯ್ದೆ, ಬಾಲ ನ್ಯಾಯ ಕಾಯ್ದೆ ಸೇರಿದಂತೆ ಮಕ್ಕಳ ರಕ್ಷಣೆಗೆ ಇರುವ ಕಾಯ್ದೆಗಳ ಬಗ್ಗೆ ಮಾಹಿತಿ ನೀಡಲು ತರಬೇತಿ ಕಾರ್ಯಕ್ರಮ ಗಳನ್ನು ಆಯೋಜಿಸಬೇಕು ಎಂದರಲ್ಲದೇ, ವಸತಿ ನಿಲಯಗಳಲ್ಲಿ ಸಲಹಾ ಪೆಟ್ಟಿಗೆ ಇಟ್ಟಿರುವ ಬಗ್ಗೆ ಮಾಹಿತಿ ನೀಡುವಂತೆ ತಿಳಿಸಿದರು. ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಡಾ. ತಿಪ್ಪೇಸ್ವಾಮಿ ಕೆ.ಟಿ ಮಾತನಾಡಿ, ಜಿಲ್ಲೆಯ ಎಲ್ಲಾ ಸರಕಾರಿ ಕಚೇರಿಗಳಲ್ಲಿ ಮಕ್ಕಳ ಸಹಾಯವಾಣಿ ಸಂಖ್ಯೆಗಳನ್ನು ಕಡ್ಡಾಯವಾಗಿ ನಮೂದಿಸಬೇಕು ಎಂದು ಸುತ್ತೋಲೆ ಹೊರಡಿಸಿ ದ್ದರೂ, ಇಂದು ಭೇಟಿ ನೀಡಿದ ಸಂದರ್ಭದಲ್ಲಿ ಕೆಲವು ಕಡೆ ಸಹಾಯವಾಣಿ ಸಂಖ್ಯೆ ನಮೂದಿಸದೆ ಇರುವುದು ಕಂಡುಬಂದಿದೆ. ಈ ಬಗ್ಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳು ಪರಿಶೀಲಿಸಬೇಕು ಎಂದರು. ಸಭೆಯಲ್ಲಿ ಜಿಲ್ಲಾಧಿಕಾರಿ ಸ್ವರೂಪ ಟಿ. ಕೆ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸುಧಾಕರ್ ನಾಯಕ್, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಎಸ್. ಎಸ್ ಕಾದ್ರೊಳ್ಳಿ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ನಾಗರತ್ನ ನಾಯಕ್, ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು. ವಸತಿ ನಿಲಯಗಳಲ್ಲಿ ಸಿಸಿಟಿವಿ ಕಡ್ಡಾಯ ಜಿಲ್ಲೆಯಲ್ಲಿರುವ ಎಲ್ಲಾ ವಸತಿ ನಿಲಯಗಳಲ್ಲಿ ಕಡ್ಡಾಯವಾಗಿ ಸಿಸಿಟಿವಿ ಅಳವಡಿಸಬೇಕು.ಅರೋಗ್ಯ ಇಲಾಖೆ ವತಿಯಿಂದ ನಿರಂತರವಾಗಿ ವಿದ್ಯಾರ್ಥಿ ಗಳ ಆರೋಗ್ಯ ತಪಾಸಣೆ ಕೈಗೊಳ್ಳಬೇಕು. ನಿಲಯಾರ್ಥಿಗಳಿಗೆ ಮಾದಕ ವ್ಯಸನ, ಸೈಬರ್ ಕ್ರೈಂ ಸೇರಿದಂತೆ ವಿವಿಧ ದುಷ್ಚಟಗಳ ಬಗ್ಗೆ ಅರಿವು, ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಆಯೋಜಿಸಬೇಕು ಎಂದು ಏರ್ಪಡಿಸಬೇಕು ಎಂದು ಶಶಿಧರ್ ಕೋಸಂಬೆ ನುಡಿದರು. ಮಕ್ಕಳ ಸ್ನೇಹಿ ಸಾರಿಗೆ ವ್ಯವಸ್ಥೆ ರೂಪಿಸುವಲ್ಲಿ ನಿಗಮದ ಅಧಿಕಾರಿಗಳು ಕ್ರಮವಹಿಸಬೇಕು. ಬಸ್ ನಿಲ್ದಾಣಗಳಲ್ಲಿ ಮಹಿಳಾ ಮತ್ತು ಶಿಶುಪಾಲನ ಕೇಂದ್ರ ವ್ಯವವಸ್ಥಿತ ರೀತಿಯಲ್ಲಿ ಇರುವಂತೆ ನೋಡಿಕೊಳ್ಳಬೇಕು. ಸಾರಿಗೆ ನಿಗಮದ ನಿಲ್ದಾಣಗಳಲ್ಲಿ ಮಕ್ಕಳ ಸಹಾಯವಾಣಿ ಸಂಖ್ಯೆ ಅಳವಡಿಸಿರುವ ಬಗ್ಗೆ ಮಾಹಿತಿ ನೀಡುವಂತೆ ತಿಳಿಸಿದರು. ಜಿಲ್ಲೆಯಲ್ಲಿ 1481 ವಿಶೇಷ ಚೇತನ ಮಕ್ಕಳಿದ್ದು, ಇವರಲ್ಲಿ 575 ಮಕ್ಕಳಿಗೆ ಯು.ಡಿ.ಐ.ಡಿ ಕಾರ್ಡ್ ವಿತರಣೆಗೆ ಬಾಕಿ ಇದೆ. ಯು.ಡಿ.ಐ.ಡಿ ಕಾರ್ಡ್ ಹೊಂದದೇ ಇದ್ದಲ್ಲಿ ಸರಕಾರದ ಸೌಲಭ್ಯಗಳಿಂದ ಮಕ್ಕಳು ವಂಚಿತರಾಗುವು ದರಿಂದ ಬಾಕಿ ಉಳಿದ ಎಲ್ಲಾ ವಿಶೇಷ ಮಕ್ಕಳಿಗೂ ಒಂದು ತಿಂಗಳ ಒಳಗೆ ಯು.ಡಿ.ಐ.ಡಿ ಕಾರ್ಡ್ ವಿತರಣೆಗೆ ಜಿಲ್ಲೆಯ ಅಂಗವಿಕಲ ಕಲ್ಯಾಣಾಧಿಕಾರಿ ಅಗತ್ಯ ಕ್ರಮಕೈಗೊಳ್ಳಬೇಕು. -ಶಶಿಧರ ಕೋಸಂಬೆ, ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ
ಖಾಲಿ ಇರುವ 10 ಲಕ್ಷ ಸರ್ಕಾರಿ ಉದ್ಯೋಗಗಳನ್ನು ಭರ್ತಿ ಮಾಡಲು ರೋಜ್ ಗಾರ್ ಮೇಳಗಳು ಯಾಕೆ ಸಾಕಾಗುವುದಿಲ್ಲ?
2024ರ ಲೋಕಸಭಾ ಚುನಾವಣೆಯ ನಂತರ ಕೇಂದ್ರದಲ್ಲಿ ಅಧಿಕಾರಕ್ಕೇರಿದ ಬಿಜೆಪಿ ಸರ್ಕಾರವು ಉದ್ಯೋಗಗಳನ್ನು ಸೃಷ್ಟಿಸುವುದು ಮತ್ತು ವಿವಿಧ ಸಚಿವಾಲಯಗಳಲ್ಲಿ ಖಾಲಿ ಹುದ್ದೆಗಳನ್ನು ಭರ್ತಿ ಮಾಡುವತ್ತ ಹೆಚ್ಚು ಗಮನಹರಿಸಲು ಪ್ರಾರಂಭಿಸಿತು. ಚುನಾವಣೆಗಳ ನಂತರದ ಮೊದಲ ಕೇಂದ್ರ ಬಜೆಟ್, ಖಾಸಗಿ ವಲಯದಲ್ಲಿ ಹೆಚ್ಚಿನ ಉದ್ಯೋಗಗಳನ್ನು ಸೃಷ್ಟಿಸುವ ಗುರಿಯನ್ನು ಹೊಂದಿರುವ ಇಂಟರ್ನ್ಶಿಪ್ ಕಾರ್ಯಕ್ರಮ ಸೇರಿದಂತೆ ಕೆಲವು ಯೋಜನೆಗಳನ್ನು ಘೋಷಿಸಿತು. ಅದೇ ಸಮಯದಲ್ಲಿ ಸರ್ಕಾರವು ತನ್ನ ಸಚಿವಾಲಯಗಳು ಮತ್ತು ಇಲಾಖೆಗಳಲ್ಲಿ ಉದ್ಯೋಗಗಳನ್ನು ನೀಡುವ ಅಗತ್ಯಕ್ಕೆ ಹೆಚ್ಚಿನ ಗಮನ ನೀಡಲು ನಿರ್ಧರಿಸಿತು. ಕಳೆದ ವರ್ಷ ಜುಲೈನಲ್ಲಿ ಸಿಬ್ಬಂದಿ ಖಾತೆ ರಾಜ್ಯ ಸಚಿವ ಜಿತೇಂದ್ರ ಸಿಂಗ್ ಸಂಸತ್ತಿನಲ್ಲಿ, ಸರ್ಕಾರವು ಎಲ್ಲಾ ಕೇಂದ್ರ ಸಚಿವಾಲಯಗಳು ಮತ್ತು ಇಲಾಖೆಗಳಿಗೆ ನೇರ ನೇಮಕಾತಿ ಮೂಲಕ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಸಕಾಲಿಕ ಮತ್ತು ಮುಂಗಡ ಕ್ರಮ ಕೈಗೊಳ್ಳುವಂತೆ ನಿರ್ದೇಶನಗಳನ್ನು ನೀಡಿದೆ ಎಂದು ತಿಳಿಸಿದ್ದರು. ರೋಜ್ ಗಾರ್ ಮೇಳಗಳನ್ನು ನಿಯಮಿತವಾಗಿ 45–50 ನಗರಗಳಲ್ಲಿ ಆಯೋಜಿಸಲಾಗುತ್ತಿದೆ. ಇದು ಕೇಂದ್ರ ಸರ್ಕಾರದ ಸಚಿವಾಲಯಗಳು, ಇಲಾಖೆಗಳು ಮತ್ತು ಸಂಸ್ಥೆಗಳಲ್ಲಿ ಖಾಲಿ ಹುದ್ದೆಗಳನ್ನು ಸಮಯೋಚಿತವಾಗಿ ಭರ್ತಿ ಮಾಡಲು ಸಹಕಾರಿಯಾಗುತ್ತದೆ ಎಂದಿದ್ದರು. ವಾಸ್ತವವಾಗಿ, ಡಿಸೆಂಬರ್ 2024ರಲ್ಲಿ ಆಯೋಜಿಸಲಾದ ರೋಜ್ ಗಾರ್ ಮೇಳದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಹೊಸದಾಗಿ ನೇಮಕಗೊಂಡ ಸರ್ಕಾರಿ ಉದ್ಯೋಗಿಗಳಿಗೆ 71,000 ಕ್ಕೂ ಹೆಚ್ಚು ನೇಮಕಾತಿ ಪತ್ರಗಳನ್ನು ವಿತರಿಸಿದ್ದರು. ಅಕ್ಟೋಬರ್ 2024ರ ಆರಂಭದಲ್ಲಿ ಮೋದಿ ಅವರು ಮತ್ತೊಂದು ರೋಜ್ ಗಾರ್ ಮೇಳದಲ್ಲಿ ಸರ್ಕಾರಿ ಉದ್ಯೋಗಗಳಿಗೆ 51,000 ಕ್ಕೂ ಹೆಚ್ಚು ನೇಮಕಾತಿ ಪತ್ರಗಳನ್ನು ವಿತರಿಸಿದ್ದರು. ಸರ್ಕಾರದ ಸ್ವಂತ ಅಂಕಿಅಂಶಗಳು ಆತಂಕಕಾರಿ ಪ್ರವೃತ್ತಿಯನ್ನು ತೋರಿಸಿದ್ದರಿಂದ ಈ ಗಮನವು ಅರ್ಥವಾಗುವಂತಹದ್ದಾಗಿದೆ. ಹಣಕಾಸು ಸಚಿವಾಲಯದ ಪ್ರಕಾರ, 2023ರ ಮಾರ್ಚ್ 1ರ ಹೊತ್ತಿಗೆ ಎಲ್ಲಾ ಅಧಿಕೃತ ಸರ್ಕಾರಿ ಉದ್ಯೋಗಗಳಲ್ಲಿ 24% ಕ್ಕಿಂತ ಹೆಚ್ಚು ಹುದ್ದೆಗಳು ಭರ್ತಿಯಾಗದೆ ಉಳಿದಿವೆ ಎಂದು ಅಂದಾಜಿಸಲಾಗಿದೆ. ಸುಮಾರು 4.04 ಮಿಲಿಯನ್ ಹುದ್ದೆಗಳಲ್ಲಿ ಕೇವಲ 3.06 ಮಿಲಿಯನ್ ಜನರು ಮಾತ್ರ ವಾಸ್ತವವಾಗಿ ಕೆಲಸ ಮಾಡುತ್ತಿದ್ದರು. ಇದರರ್ಥ ಸುಮಾರು 0.98 ಮಿಲಿಯನ್ (ಸುಮಾರು 10 ಲಕ್ಷ) ಹುದ್ದೆಗಳು ಖಾಲಿ ಉಳಿದಿವೆ. ಹಾಗಾದರೆ ಸರ್ಕಾರದಲ್ಲಿ ಖಾಲಿ ಹುದ್ದೆಗಳನ್ನು ಭರ್ತಿ ಮಾಡುವ ಅಭಿಯಾನದ ನಂತರ ಪರಿಸ್ಥಿತಿ ಸುಧಾರಿಸಿದೆಯೇ? ಆ ಪ್ರಶ್ನೆಗೆ ಉತ್ತರಿಸಲು ಪ್ರಯತ್ನಿಸುವ ಮೊದಲು, ಮೋದಿ ಸರ್ಕಾರವು ಮೇ 2014ರಲ್ಲಿ ರಚನೆಯಾದಾಗಿನಿಂದ ಈ ವಿಷಯದಲ್ಲಿ ಅದರ ಕಾರ್ಯಕ್ಷಮತೆ ಮೇಲೆ ಕಣ್ಣು ಹಾಯಿಸುವುದು ಒಳ್ಳೆಯದು. ಬಜೆಟ್ ದಾಖಲೆಗಳ ಪ್ರಕಾರ, 2015ರ ಮಾರ್ಚ್ 1ರ ಹೊತ್ತಿಗೆ ಕೇಂದ್ರ ಸರ್ಕಾರವು ಸಶಸ್ತ್ರ ಪಡೆಗಳನ್ನು ಹೊರತುಪಡಿಸಿ ವಿವಿಧ ಸಚಿವಾಲಯಗಳು, ಇಲಾಖೆಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ 3.3 ಮಿಲಿಯನ್ ಜನರನ್ನು ಹೊಂದಿತ್ತು. ಕೇವಲ 10 ಇಲಾಖೆಗಳು (ರೈಲ್ವೆ, ಪರಮಾಣು ಶಕ್ತಿ, ಬಾಹ್ಯಾಕಾಶ, ಪೊಲೀಸ್, ಆರೋಗ್ಯ, ಲೆಕ್ಕಪರಿಶೋಧನೆ, ಕಂದಾಯ, ನಾಗರಿಕ ರಕ್ಷಣೆ, ಅಂಚೆ ಮತ್ತು ನಗರಾಭಿವೃದ್ಧಿ) 3.1 ಮಿಲಿಯನ್ ಜನರನ್ನು ನೇಮಿಸಿಕೊಂಡಿದ್ದು, ಇದು ಒಟ್ಟು ಸರ್ಕಾರಿ ಉದ್ಯೋಗಿಗಳ ಶೇಕಡಾ 93 ಕ್ಕಿಂತ ಹೆಚ್ಚು. ಈ ಗುಂಪಿನಲ್ಲಿ ಭಾರತೀಯ ರೈಲ್ವೆಯ ಪಾಲು (1.33 ಮಿಲಿಯನ್ ಉದ್ಯೋಗಿಗಳು) ಶೇಕಡಾ 40 ಕ್ಕಿಂತ ಹೆಚ್ಚು ಇದೆ. ಸುಮಾರು 10 ವರ್ಷಗಳ ನಂತರ, 2025ರ ಮಾರ್ಚ್ 1ರ ಹೊತ್ತಿಗೆ ಒಟ್ಟು ಸರ್ಕಾರಿ ನೌಕರರ ಸಂಖ್ಯೆ 3.3 ಮಿಲಿಯನ್ನಲ್ಲಿ ಬದಲಾಗದೆ ಉಳಿಯಿತು. ಒಟ್ಟು ಸರ್ಕಾರಿ ಕಾರ್ಯಪಡೆಯಲ್ಲಿ ಈ 10 ಇಲಾಖೆಗಳ ಪಾಲು ಕೂಡ ಹಾಗೆಯೇ ಉಳಿದಿದೆ. ಆದರೆ ಭಾರತೀಯ ರೈಲ್ವೆ ತನ್ನ ಕಾರ್ಯಪಡೆಯಲ್ಲಿ 1.21 ಮಿಲಿಯನ್ಗೆ ಇಳಿಕೆ ಕಂಡಿದ್ದು, ಇದು ಒಟ್ಟು ಉದ್ಯೋಗಿ ಬಲದ ಸುಮಾರು 37% ಅನ್ನು ಹೊಂದಿದೆ. ಇದು ಒಂದು ದಶಕದಲ್ಲಿ 100,000 ಕ್ಕೂ ಹೆಚ್ಚು ಉದ್ಯೋಗಿಗಳ ಕುಸಿತವಾಗಿದೆ. ಈ ಇಳಿಕೆಗೆ ಗುತ್ತಿಗೆ ಕಾರ್ಮಿಕರು, ಹೊರಗುತ್ತಿಗೆ ಅಥವಾ ತಂತ್ರಜ್ಞಾನದ ಬಳಕೆಯಿಂದ ಹೆಚ್ಚಿನ ಕೆಲಸಗಳನ್ನು ನಿರ್ವಹಿಸಲಾಗುತ್ತಿರುವುದೇ ಕಾರಣವೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಇದಕ್ಕೆ ವಿರುದ್ಧವಾಗಿ ಪೊಲೀಸ್, ಕಂದಾಯ, ರಕ್ಷಣಾ (ನಾಗರಿಕ) ಮತ್ತು ಅಂಚೆ ಇಲಾಖೆಗಳು ತಮ್ಮ ಕಾರ್ಯಪಡೆಯಲ್ಲಿ ಗಣನೀಯ ಏರಿಕೆ ಕಂಡಿವೆ. ತಂತ್ರಜ್ಞಾನದ ಹೆಚ್ಚುತ್ತಿರುವ ಬಳಕೆಯ ಹೊರತಾಗಿಯೂ, ಕಂದಾಯ ಇಲಾಖೆಯಲ್ಲಿನ ಉದ್ಯೋಗಿಗಳ ಸಂಖ್ಯೆ (ನೇರ ಮತ್ತು ಪರೋಕ್ಷ ತೆರಿಗೆಗಳನ್ನು ಒಳಗೊಂಡಂತೆ) ಶೇಕಡಾ 16 ರಷ್ಟು ಏರಿಕೆಯಾಗಿದ್ದು, ಈ ಅವಧಿಯಲ್ಲಿ ಸುಮಾರು 96,500 ರಿಂದ 112,000 ಕ್ಕಿಂತ ಹೆಚ್ಚಾಗಿದೆ. ನಾಗರಿಕ ರಕ್ಷಣಾ ನೌಕರರ ಸಂಖ್ಯೆ ಬಹುತೇಕ ದ್ವಿಗುಣಗೊಂಡಿದೆ. ಆದರೆ ಕೇಂದ್ರ ಪೊಲೀಸ್ ಪಡೆಗಳು ಮತ್ತು ಅಂಚೆ ಇಲಾಖೆಯಲ್ಲಿ ಉದ್ಯೋಗಿಗಳ ಸಂಖ್ಯೆ ಏರಿಕೆಯಾಗಿದ್ದರೂ ಅದು 10% ಕ್ಕಿಂತ ಕಡಿಮೆ. 2014 ಮತ್ತು 2023ರ ನಡುವಿನ ನೇಮಕಾತಿಗೆ ಹೋಲಿಸಿದರೆ, 2023 ಮತ್ತು 2025ರ ನಡುವೆ ಸರ್ಕಾರವು ತನ್ನ ಇಲಾಖೆಗಳಿಗೆ ಸಿಬ್ಬಂದಿ ನೇಮಕಾತಿಯನ್ನು ಪ್ರಾರಂಭಿಸಿದ ರೀತಿಯಲ್ಲಿ ಆಸಕ್ತಿದಾಯಕ ಬದಲಾವಣೆ ಕಂಡುಬಂದಿದೆ. ಮೋದಿ ಸರ್ಕಾರದ ಮೊದಲ ಒಂಬತ್ತು ವರ್ಷಗಳಲ್ಲಿ ಸರ್ಕಾರಿ ನೌಕರರ ಸಂಖ್ಯೆ 2014–15ರಲ್ಲಿ 3.3 ಮಿಲಿಯನ್ನಿಂದ 2022–23ರಲ್ಲಿ 3.1 ಮಿಲಿಯನ್ಗೆ ಇಳಿದಿತ್ತು. ಆದರೆ ನಂತರದ ಎರಡು ವರ್ಷಗಳಲ್ಲಿ ಈ ಸಂಖ್ಯೆ ಮತ್ತೆ ಏರಿಕೆ ಕಂಡಿದೆ. 2025ರ ಮಾರ್ಚ್ ಹೊತ್ತಿಗೆ ಅದು 3.3 ಮಿಲಿಯನ್ ಎಂದು ಅಂದಾಜಿಸಲಾಗಿದೆ. ಸರ್ಕಾರ ತನ್ನ ಸಚಿವಾಲಯಗಳು ಮತ್ತು ಇಲಾಖೆಗಳಲ್ಲಿ ಖಾಲಿ ಹುದ್ದೆಗಳನ್ನು ಭರ್ತಿ ಮಾಡುವತ್ತ ಗಮನಹರಿಸಿದ್ದರೂ, ಇದು ಕೇವಲ ಆರು ಪ್ರತಿಶತದಷ್ಟು ಹೆಚ್ಚಳವನ್ನು ಮಾತ್ರ ಸೂಚಿಸುತ್ತದೆ. ಲಭ್ಯವಿರುವ ಒಟ್ಟು ಉದ್ಯೋಗಗಳ ಸಂಖ್ಯೆ 4.04 ಮಿಲಿಯನ್ ಆಗಿಯೇ ಉಳಿದಿದೆ ಎಂದು ನಾವು ಭಾವಿಸಿದರೆ, ಖಾಲಿ ಹುದ್ದೆಗಳ ಪ್ರಮಾಣವು 24%ರಿಂದ 18%ಕ್ಕೆ ಇಳಿದಿದೆ. ಸರ್ಕಾರದ ಬಜೆಟ್ ದಾಖಲೆಗಳು ಮತ್ತೊಂದು ಆಸಕ್ತಿದಾಯಕ ಮಾದರಿಯನ್ನು ತೋರಿಸುತ್ತವೆ. ಪ್ರತಿ ವರ್ಷ ಬಜೆಟ್ ಮಂಡಿಸುವ ಸಮಯದಲ್ಲಿ ಹಣಕಾಸು ಸಚಿವಾಲಯವು ಆ ವರ್ಷದ ಮಾರ್ಚ್ ಆರಂಭದಲ್ಲಿ ಸರ್ಕಾರದ ಸಿಬ್ಬಂದಿ ಬಲದ ಅಂದಾಜನ್ನು ಹಾಗೂ ಹಿಂದಿನ ವರ್ಷದ ನಿಜವಾದ ಸಿಬ್ಬಂದಿ ಬಲದ ಅಂಕಿಅಂಶಗಳನ್ನು ಪ್ರಸ್ತುತಪಡಿಸುತ್ತದೆ. ಉದಾಹರಣೆಗೆ, 2025–26ರ ಬಜೆಟ್ನಲ್ಲಿ ಮಾರ್ಚ್ 2024ರ ನಿಜವಾದ ಉದ್ಯೋಗಿಗಳ ಸಂಖ್ಯೆ ಮತ್ತು ಮಾರ್ಚ್ 2025ರ ಅಂದಾಜು ತೋರಿಸಲಾಗಿದೆ. ಆದರೆ ಮುಂದಿನ ವರ್ಷದಲ್ಲಿ ಈ ಅಂದಾಜುಗಳು ನಿಜವಾದ ಸಂಖ್ಯೆಗಳಾಗಿ ಪ್ರಕಟವಾದಾಗ, ಯೋಜಿಸಿದಂತೆ ಜನರನ್ನು ನೇಮಿಸಿಕೊಳ್ಳುವ ಸರ್ಕಾರದ ಸಾಮರ್ಥ್ಯವು ಕಳಪೆಯಾಗಿದೆ ಅಥವಾ ಅಂದಾಜುಗಳು ಸ್ವಲ್ಪ ತಪ್ಪುತ್ತಿವೆ ಎಂಬುದು ಸ್ಪಷ್ಟವಾಗುತ್ತದೆ. 2025–26ರ ಬಜೆಟ್ನಲ್ಲಿ ಮಾರ್ಚ್ 1, 2025ರ ಅಂದಾಜು ಸಿಬ್ಬಂದಿ ಬಲವನ್ನು 3.65 ಮಿಲಿಯನ್ ಎಂದು ತೋರಿಸಲಾಗಿದೆ. ಆದರೆ ಒಂದು ವರ್ಷದ ನಂತರ 2026–27ರ ಬಜೆಟ್ನಲ್ಲಿ ಬಹಿರಂಗವಾದ ನಿಜವಾದ ಮಾಹಿತಿಯು ಸಿಬ್ಬಂದಿ ಬಲವನ್ನು 3.3 ಮಿಲಿಯನ್ ಎಂದು ತೋರಿಸುತ್ತದೆ. ಇದು ದೀರ್ಘಕಾಲದ ಪ್ರವೃತ್ತಿಯಾಗಿದ್ದು ಹಲವು ವರ್ಷಗಳಿಂದ ನಡೆಯುತ್ತಿದೆ. ಇತ್ತೀಚೆಗೆ ಈ ಅಂತರ ಇನ್ನಷ್ಟು ಹೆಚ್ಚಾಗಿದೆ. ಅಂದರೆ ಜನರನ್ನು ನೇಮಿಸಿಕೊಳ್ಳುವ ಸರ್ಕಾರದ ಸಾಮರ್ಥ್ಯವು ಸೀಮಿತವಾಗಿದೆ ಎಂಬುದನ್ನು ಇದು ಸೂಚಿಸುತ್ತದೆ. ಸಹಜವಾಗಿ ಸರ್ಕಾರವು ತನ್ನ ಯೋಜನೆಯ ಪ್ರಕಾರ ಕಾರ್ಯಪಡೆಯನ್ನು ನೇಮಿಸಿಕೊಳ್ಳಲು ಸಾಧ್ಯವಾಗದ ಕಾರಣ ಸ್ವಲ್ಪ ಹಣವನ್ನು ಉಳಿಸುತ್ತದೆ. ಉದಾಹರಣೆಗೆ, 2024–25ರಲ್ಲಿ ಈ ಸರ್ಕಾರಿ ನೌಕರರಿಗೆ ವೇತನ, ಭತ್ಯೆ ಮತ್ತು ಪ್ರಯಾಣಕ್ಕಾಗಿ ಪರಿಷ್ಕೃತ ಅಂದಾಜು ₹3.39 ಟ್ರಿಲಿಯನ್ ಆಗಿತ್ತು. ಆದರೆ ವಾಸ್ತವವಾಗಿ ಸರ್ಕಾರ ಇದಕ್ಕಾಗಿ ಯೋಜಿಸಿದ್ದಕ್ಕಿಂತ ಕಡಿಮೆ ಖರ್ಚು ಮಾಡಿದ್ದು, ಅಂತಿಮ ಮೊತ್ತ ಸುಮಾರು ₹3.35 ಟ್ರಿಲಿಯನ್ ಆಗಿದೆ. ಸರ್ಕಾರವು ಹೆಚ್ಚಿನ ಸಿಬ್ಬಂದಿಯನ್ನು ನೇಮಿಸಿಕೊಳ್ಳಲು ದೊಡ್ಡ ಪ್ರಯತ್ನ ಮಾಡುತ್ತಿರುವಂತೆಯೇ ಆಡಳಿತಾತ್ಮಕ ಸಾಮರ್ಥ್ಯಕ್ಕೆ ಸಂಬಂಧಿಸಿದ ಈ ಸಮಸ್ಯೆಗಳು ಮಹತ್ವ ಪಡೆಯುತ್ತವೆ. ನಿಜವಾದ ಚರ್ಚೆಯು ಸರ್ಕಾರ ಹೆಚ್ಚು ಜನರನ್ನು ನೇಮಿಸಿಕೊಳ್ಳಬೇಕೇ ಬೇಡವೇ ಎಂಬುದರ ಬಗ್ಗೆ ಮಾತ್ರವಲ್ಲ. ಬದಲಾಗಿ 4 ಮಿಲಿಯನ್ ಮಂಜೂರಾದ ಹುದ್ದೆಗಳನ್ನು ಮರುಪರಿಶೀಲಿಸಬೇಕೇ? ಹೆಚ್ಚುವರಿ ನೇಮಕಾತಿಗೆ ಪ್ರಸ್ತಾವನೆಗಳನ್ನು ಮಂಡಿಸಿದ ಸಚಿವಾಲಯಗಳನ್ನು ಮತ್ತು ಆ ಗುರಿಗಳನ್ನು ತಲುಪಲು ವಿಫಲವಾದರೆ ಅವರನ್ನು ಹೊಣೆಗಾರರನ್ನಾಗಿ ಮಾಡಬೇಕೇ? ಎಂಬ ಪ್ರಶ್ನೆಗಳೂ ಉದ್ಭವಿಸುತ್ತವೆ. ಈ ವರ್ಷದ ಬಜೆಟ್ ಈಗಾಗಲೇ ಸರ್ಕಾರವು ತನ್ನ ಖರ್ಚನ್ನು ನಿರ್ವಹಿಸಲು ಹೆಣಗಾಡುತ್ತಿದೆ ಎಂದು ತೋರಿಸುತ್ತಿರುವುದರಿಂದ, ಹೊಸ ಜನರನ್ನು ನೇಮಕ ಮಾಡುವ ಅದರ ಸಾಮರ್ಥ್ಯವು ಅಷ್ಟೇ ಸೀಮಿತವಾಗಿದೆ ಎಂದು ತೋರುತ್ತದೆ. ಕೃಪೆ: theprint.in
ಇರಾನ್ ನಲ್ಲಿದೆ ಅಭೇದ್ಯ 'ಮೊಸಾಯಿಕ್ ಡಿಫೆನ್ಸ್'; ಇದರ ಮಾಸ್ಟರ್ ಮೈಂಡ್ ಅಲಿ ಜಾಫರಿ ಯಾರು?
2026ರಲ್ಲಿ ಇರಾನ್ ನಲ್ಲಿ ನಡೆದ ಯುದ್ಧವು 2003ರ ಇರಾಕ್ ಯುದ್ಧದಷ್ಟು ವೇಗವಾಗಿರುತ್ತದೆ ಎಂದು ಅಮೆರಿಕ ನಿರೀಕ್ಷಿಸಿರಬಹುದು. ಆಗ ಸದ್ದಾಂ ಹುಸೇನ್ ಸೈನ್ಯವನ್ನು ಸೋಲಿಸಲು ಅಮೆರಿಕದ ಮಿಲಿಟರಿಗೆ ಕೇವಲ 26 ದಿನಗಳು ಬೇಕಾಯಿತು. ಆದರೆ ಇರಾನ್ ನಲ್ಲಿ ಯಾರೋ ಒಬ್ಬರು 2003ರ ಇರಾಕ್ ಯುದ್ಧವನ್ನು ಸೂಕ್ಷ್ಮವಾಗಿ ಅಧ್ಯಯನ ಮಾಡಿದ್ದರು. ಸದ್ದಾಂ ನೇತೃತ್ವದ ಆಡಳಿತದ ಪತನವಾದಂತೆ ಆಗಬಾರದು ಎಂದು ಅವರು ನಿರ್ಧರಿಸಿದ್ದರು. ಆ ವ್ಯಕ್ತಿಯೇ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC)ನ ಮಾಜಿ ಕಮಾಂಡರ್-ಇನ್-ಚೀಫ್ ಮೇಜರ್ ಜನರಲ್ ಮೊಹಮ್ಮದ್ ಅಲಿ ಜಾಫರಿ. ಫೆಬ್ರವರಿ 28, 2026ರಂದು ಅಮೆರಿಕ ಮತ್ತು ಇಸ್ರೇಲಿ ಪಡೆಗಳು ಇರಾನ್ ನ ಅತ್ಯುನ್ನತ ಕಮಾಂಡ್ ಶ್ರೇಣಿಗಳನ್ನು ಗುರಿಯಾಗಿಸಿಕೊಂಡು ಯುದ್ಧ ವಿಮಾನಗಳು, ಡ್ರೋನ್ ಗಳು ಮತ್ತು ನಿಖರ ಕ್ಷಿಪಣಿಗಳನ್ನು ಒಳಗೊಂಡ ಕಾರ್ಯಾಚರಣೆಯಾದ ಆಪರೇಷನ್ ಎಪಿಕ್ ಫ್ಯೂರಿಯನ್ನು ಪ್ರಾರಂಭಿಸಿದವು. ಈ ದಾಳಿಗಳಲ್ಲಿ ಇರಾನ್ ನ ಸರ್ವೋಚ್ಚ ನಾಯಕ ಆಯತುಲ್ಲಾ ಖಾಮಿನೈ, IRGC ಕಮಾಂಡರ್-ಇನ್-ಚೀಫ್ ಮೇಜರ್ ಜನರಲ್ ಮೊಹಮ್ಮದ್ ಪಕ್ ಪೋರ್, ರಕ್ಷಣಾ ಸಚಿವ ಬ್ರಿಗೇಡಿಯರ್ ಜನರಲ್ ಅಜೀಜ್ ನಾಸಿರ್ಜಾದೆ, ಸಶಸ್ತ್ರ ಪಡೆಗಳ ಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ ಸಯ್ಯದ್ ಅಬ್ದುಲ್ರಹಿಂ ಮೌಸಾವಿ ಮತ್ತು ಇತರ ಹಿರಿಯ ವ್ಯಕ್ತಿಗಳು ಹತರಾದರು. ಇನ್ಸ್ಟಿಟ್ಯೂಟ್ ಫಾರ್ ದ ಸ್ಟಡಿ ಆಫ್ ವಾರ್ ವರದಿಯ ಪ್ರಕಾರ, ಈ ದಾಳಿಗಳ ಉದ್ದೇಶವು ಇರಾನ್ ನ ಆಜ್ಞೆ ಮತ್ತು ನಿಯಂತ್ರಣ ಉಪಕರಣವನ್ನು ಛಿದ್ರಗೊಳಿಸುವುದು ಮತ್ತು ಪ್ರತೀಕಾರದ ಕ್ರಮವನ್ನು ತಡೆಯುವುದಾಗಿತ್ತು. ಆದರೆ ಅಮೆರಿಕ ಮತ್ತು ಇಸ್ರೇಲ್ ನಿರೀಕ್ಷಿಸಿದಂತೆ ಆಗಲಿಲ್ಲ. ಸಂಘರ್ಷ ಆರಂಭವಾಗಿ ಈಗ ಎರಡು ವಾರಗಳು ಕಳೆದಿವೆ. ಇರಾನ್ ನಿರಂತರವಾಗಿ ಗುಂಡು ಹಾರಿಸುತ್ತಿದ್ದು, ಮಧ್ಯಪ್ರಾಚ್ಯದ ರಾಷ್ಟ್ರಗಳ ಮೇಲೆ ದಾಳಿಯನ್ನು ನಡೆಸುತ್ತಿದೆ. ಇರಾನ್ ಈ ರೀತಿ ಮಾಡಲು ಸಾಧ್ಯವಾಗಿದ್ದು ಮೊಹಮ್ಮದ್ ಅಲಿ ಜಾಫರಿ “ಡಿಸೆಂಟ್ರಲೈಸ್ಡ್ ಮೊಸಾಯಿಕ್ ಡಿಫೆನ್ಸ್” ಎಂಬ ಪರಿಕಲ್ಪನೆಯನ್ನು ರಚಿಸಿದ್ದರಿಂದ. ತನ್ನ ನಾಯಕನ ಹತ್ಯೆಯಾದರೂ ಸೇನೆ ಹೋರಾಟವನ್ನು ಮುಂದುವರಿಸಬಹುದೆಂದು ಖಚಿತಪಡಿಸಿಕೊಳ್ಳಲು ವಿನ್ಯಾಸಗೊಳಿಸಲಾದ ಇರಾನ್ ನ ವಿಶೇಷ ಸಿದ್ಧಾಂತವಾಗಿದೆ ಇದು. ಫೆಬ್ರವರಿ 28ರಂದು ಜಂಟಿ ದಾಳಿ ನಡೆದ ತಕ್ಷಣ ಇರಾನ್ ನಿಂದ ಪ್ರತೀಕಾರ ಆರಂಭವಾಯಿತು. ಕೆಲವೇ ಗಂಟೆಗಳಲ್ಲಿ ಬಹರೇನ್, ಖತರ್, ಯುಎಇ, ಕುವೈತ್ ಮತ್ತು ಜೋರ್ಡಾನ್ ನಲ್ಲಿರುವ ಯುಎಸ್ ಮಿಲಿಟರಿ ಸೌಲಭ್ಯಗಳ ಮೇಲೆ ಬ್ಯಾಲಿಸ್ಟಿಕ್ ಕ್ಷಿಪಣಿಗಳು ಮತ್ತು ಡ್ರೋನ್ ಗಳ ದಾಳಿ ನಡೆದವು. ಇಸ್ರೇಲ್ ಮತ್ತು ಮಿತ್ರಪಕ್ಷದ ಗಲ್ಫ್ ಮೂಲಸೌಕರ್ಯಗಳ ಮೇಲೂ ದಾಳಿ ನಡೆಯಿತು. ಒಮಾನ್ ಮತ್ತು ಬಹರೇನ್ನಂತಹ ತಟಸ್ಥ ರಾಷ್ಟ್ರಗಳ ಮೇಲೆ ದಾಳಿ ಮಾಡಿದ್ದಕ್ಕಾಗಿ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಕ್ಷಮೆಯಾಚಿಸಿದ್ದು, ಗಲ್ಫ್ ರಾಷ್ಟ್ರಗಳ ಸಾರ್ವಭೌಮತ್ವವನ್ನು ಗೌರವಿಸುವ ಭರವಸೆ ನೀಡಿದ್ದಾರೆ. ಮಾರ್ಚ್ 13ರಂದು ಯುದ್ಧವು 14ನೇ ದಿನಕ್ಕೆ ಕಾಲಿಟ್ಟಿದ್ದು ದಾಳಿಗಳು ಮುಂದುವರಿದಿವೆ. ಇರಾನ್ ನ ತ್ವರಿತ ಪ್ರತೀಕಾರ, ದೇಶವು ಇನ್ನೇನು ಸೋಲುತ್ತದೆ ಎಂದು ಭಾವಿಸಿದ ಜನರನ್ನು ಆಶ್ಚರ್ಯಚಕಿತರನ್ನಾಗಿಸಿತು. ಮಾರ್ಚ್ 1ರಂದು Xನಲ್ಲಿ ಪೋಸ್ಟ್ ಮಾಡಿದ ಇರಾನ್ ವಿದೇಶಾಂಗ ಸಚಿವ ಸಯ್ಯದ್ ಅಬ್ಬಾಸ್ ಅರಾಘ್ಚಿ ಇರಾನ್ ನ ರಕ್ಷಣಾ ಕಾರ್ಯತಂತ್ರವನ್ನು ಈ ರೀತಿ ವಿವರಿಸಿದ್ದಾರೆ: “ನಮ್ಮ ಪೂರ್ವ ಮತ್ತು ಪಶ್ಚಿಮದಲ್ಲಿ ಅಮೆರಿಕದ ಮಿಲಿಟರಿಯ ಸೋಲುಗಳನ್ನು ಅಧ್ಯಯನ ಮಾಡಲು ನಮಗೆ ಎರಡು ದಶಕಗಳು ಸಿಕ್ಕಿವೆ. ನಾವು ಅದಕ್ಕೆ ತಕ್ಕಂತೆ ಪಾಠಗಳನ್ನು ಸೇರಿಸಿದ್ದೇವೆ. ನಮ್ಮ ರಾಜಧಾನಿಯಲ್ಲಿನ ಬಾಂಬ್ ದಾಳಿಗಳು ಯುದ್ಧ ನಡೆಸುವ ನಮ್ಮ ಸಾಮರ್ಥ್ಯದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಡಿಸೆಂಟ್ರಲೈಸ್ಡ್ ಮೊಸಾಯಿಕ್ ಡಿಫೆನ್ಸ್ ಯುದ್ಧ ಯಾವಾಗ ಮತ್ತು ಹೇಗೆ ಕೊನೆಗೊಳ್ಳುತ್ತದೆ ಎಂಬುದನ್ನು ನಿರ್ಧರಿಸಲು ನಮಗೆ ಅನುವು ಮಾಡಿಕೊಡುತ್ತದೆ.” ಇರಾನ್ ನ ಮಿಲಿಟರಿ ಘಟಕಗಳು ಸ್ವತಂತ್ರವಾಗಿಯೂ ಸ್ವಲ್ಪಮಟ್ಟಿಗೆ ಪ್ರತ್ಯೇಕವಾಗಿಯೂ ಇವೆ. ಇವು ಈ ಮೊದಲು ಪೂರ್ವಸ್ಥಾಪಿತ ಸಾಮಾನ್ಯ ಸೂಚನೆಗಳ ಮೇಲೆ ಕಾರ್ಯನಿರ್ವಹಿಸುತ್ತಿದ್ದವು ಎಂದು ಅರಾಘ್ಚಿ ಹೇಳಿದ್ದಾರೆ. ಇರಾನ್ ನ ಡಿಸೆಂಟ್ರಲೈಸ್ಡ್ ಮೊಸಾಯಿಕ್ ಡಿಫೆನ್ಸ್ ಪರಿಕಲ್ಪನೆಯ ಮಾಸ್ಟರ್ ಮೈಂಡ್ ಮೇಜರ್ ಜನರಲ್ ಮೊಹಮ್ಮದ್ ಅಲಿ ಜಾಫರಿ. ಇರಾನ್ ನ ಉನ್ನತ ನಾಯಕರ ಹತ್ಯೆಯಾಗಿದ್ದರೂ ದೇಶವು ತನ್ನನ್ನು ಉಳಿಸಿಕೊಳ್ಳಬಹುದೆಂದು ಖಚಿತಪಡಿಸಿಕೊಳ್ಳಲು ಅವರು ವರ್ಷಗಳ ಕಾಲ ಹೋರಾಟದ ವಿಧಾನವನ್ನು ಬದಲಾಯಿಸಿದರು. ಈ ಯೋಜನೆಯು ಇರಾನ್ ಯುದ್ಧವನ್ನು “ಗೆಲ್ಲಲು” ಸಹಾಯ ಮಾಡದಿರಬಹುದು, ಆದರೆ ಅದು ಅವರ ಸೋಲನ್ನು ಅಸಾಧ್ಯವಾಗಿಸುತ್ತದೆ. ►ಮೇಜರ್ ಜನರಲ್ ಮೊಹಮ್ಮದ್ ಅಲಿ ಜಾಫರಿ ಯಾರು? ಜನರಲ್ ಜಾಫರಿ ಇರಾನಿನ ಮಿಲಿಟರಿ ಅಧಿಕಾರಿಯಾಗಿದ್ದು, ಇಸ್ಲಾಮಿಕ್ ಕ್ರಾಂತಿಯ ನಂತರ ಇರಾನ್ ನ ಕುರ್ದಿಸ್ತಾನ್ ಪ್ರಾಂತ್ಯದಲ್ಲಿ ಕಾರ್ಯನಿರ್ವಹಿಸುತ್ತಿದ್ದ IRGCಯ ಗುಪ್ತಚರ ಘಟಕದಲ್ಲಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. RAND ಸಂಸ್ಥೆಯ 2013ರ ವರದಿಯ ಪ್ರಕಾರ, ಈ ಕ್ರಾಂತಿಯೇ ಪಹ್ಲವಿ ರಾಜವಂಶವನ್ನು ಅಧಿಕಾರದಿಂದ ಕೆಳಗಿಳಿಸಿತ್ತು. ಜನರಲ್ ಜಾಫರಿ 1979 ಮತ್ತು 1989ರ ನಡುವಿನ ಇರಾನ್–ಇರಾಕ್ ಯುದ್ಧದಲ್ಲಿ ಹೋರಾಡಿದರು. ಆ ಹತ್ತು ವರ್ಷಗಳ ಯುದ್ಧದಲ್ಲಿ ಅವರಿಗೆ ಹಲವು ಬಾರಿ ಬಡ್ತಿ ನೀಡಲಾಯಿತು. ಯುದ್ಧದ ನಂತರ ಅವರನ್ನು 1992ರಲ್ಲಿ IRGC ಭೂಪಡೆಗಳ ಕಮಾಂಡರ್ ಆಗಿ ನೇಮಿಸಲಾಯಿತು. ಜೊತೆಗೆ ಟೆಹ್ರಾನ್ ನ ರಕ್ಷಣೆಗೆ ನಿಯೋಜಿಸಲಾದ ಗಣ್ಯ IRGC ಘಟಕವಾದ ಸರಲ್ಲಾಹ್ನ ಕಮಾಂಡರ್ ಆಗಿಯೂ ನೇಮಕ ಮಾಡಲಾಯಿತು. 2005ರಲ್ಲಿ ಅವರನ್ನು ಗಾರ್ಡ್ಸ್ ಸೆಂಟರ್ ಫಾರ್ ಸ್ಟ್ರಾಟೆಜಿಕ್ ಸ್ಟಡೀಸ್ ನ ನಿರ್ದೇಶಕರನ್ನಾಗಿ ನೇಮಿಸಲಾಯಿತು. ಯುಎಸ್ ಇನ್ಸ್ಟಿಟ್ಯೂಟ್ ಆಫ್ ಪೀಸ್ನ ವರದಿಯ ಪ್ರಕಾರ, ಜಾಫರಿ ನಿರ್ದೇಶಕರಾಗಿದ್ದಾಗ “ಮೊಸಾಯಿಕ್ ಸಿದ್ಧಾಂತ”ವನ್ನು ರಚಿಸಲು ತಮ್ಮ ಸಮಯವನ್ನು ಬಳಸಿಕೊಂಡರು. ಇರಾನ್–ಇರಾಕ್ ಯುದ್ಧದ ಸಮಯದಲ್ಲಿ ಏನಾಯಿತು ಮತ್ತು 2003ರಲ್ಲಿ “ಆಪರೇಷನ್ ಇರಾಕಿ ಫ್ರೀಡಂ” ಸಮಯದಲ್ಲಿ ಯುಎಸ್ ನೇತೃತ್ವದ ಪಡೆಗಳು ಇರಾಕ್ ಅನ್ನು ಹೇಗೆ ತ್ವರಿತವಾಗಿ ವಶಪಡಿಸಿಕೊಂಡವು ಎಂಬುದನ್ನು ಅಧ್ಯಯನ ಮಾಡುವ ಮೂಲಕ ಅವರು ಈ ತಂತ್ರವನ್ನು ರೂಪಿಸಿದರು. ತರುವಾಯ ಅವರನ್ನು 2007ರಲ್ಲಿ IRGCಯ ಕಮಾಂಡರ್-ಇನ್-ಚೀಫ್ ಆಗಿ ನೇಮಿಸಲಾಯಿತು. ಅವರು ಆ ಪಾತ್ರದಲ್ಲಿ ವರ್ಷಗಟ್ಟಲೆ “ಮೊಸಾಯಿಕ್ ರಕ್ಷಣಾ” ಯೋಜನೆಯನ್ನು ಕಾರ್ಯರೂಪಕ್ಕೆ ತರುವಲ್ಲಿ ಕಳೆದರು. ಈ ತಂತ್ರವು ಇರಾನ್ ಅಮೆರಿಕ ಮತ್ತು ಇಸ್ರೇಲಿ ದಾಳಿಗಳ ವಿರುದ್ಧ ಹೋರಾಡಲು ಈಗ ಪ್ರಮುಖ ಕಾರಣವಾಗಿದೆ. ►ಇರಾನ್ ನ ಮೊಸಾಯಿಕ್ ಡಿಫೆನ್ಸ್ ಹೇಗಿರುತ್ತದೆ? “ಮೊಸಾಯಿಕ್ ಡಿಫೆನ್ಸ್” ಎಂಬುದು ಇರಾನ್ ನ ಮಿಲಿಟರಿಯನ್ನು ಅನೇಕ ಸಣ್ಣ, ಸ್ವತಂತ್ರ ಗುಂಪುಗಳಾಗಿ ವಿಭಜಿಸುವ ಯೋಜನೆಯಾಗಿದೆ. ಎಲ್ಲವನ್ನೂ ನಡೆಸುವ ಒಂದು ಕೇಂದ್ರ ಅಥವಾ ಪ್ರಧಾನ ಕಚೇರಿಯನ್ನು ಹೊಂದುವ ಬದಲು ಇಲ್ಲಿ ಅಧಿಕಾರವು ಹರಡಿಕೊಂಡಿರುತ್ತದೆ. ದಾಳಿಯಲ್ಲಿ ದೇಶದ ಉನ್ನತ ನಾಯಕರನ್ನು ಹತ್ಯೆ ಮಾಡಿದರೂ ಉಳಿದ ಮಿಲಿಟರಿ ಪಡೆ ಮಂಕಾಗುವುದಿಲ್ಲ. ಅದು ಸ್ವಂತವಾಗಿ ಹೋರಾಟವನ್ನು ಮುಂದುವರಿಸಬಹುದು ಎಂದು ಇದು ಖಚಿತಪಡಿಸುತ್ತದೆ. ಈ ಮಾದರಿಯಡಿಯಲ್ಲಿ IRGC, ಬಸಿಜ್, ನಿಯಮಿತ ಸೇನಾ ಘಟಕಗಳು, ಕ್ಷಿಪಣಿ ಪಡೆಗಳು, ನೌಕಾಪಡೆ ಮತ್ತು ಸ್ಥಳೀಯ ಕಮಾಂಡ್ ರಚನೆಗಳು ವಿತರಣಾ ವ್ಯವಸ್ಥೆಯ ಭಾಗಗಳನ್ನು ರೂಪಿಸುತ್ತವೆ. ಒಂದು ಭಾಗದ ಮೇಲೆ ದಾಳಿಯಾದರೂ ಇತರರು ಕಾರ್ಯನಿರ್ವಹಿಸುತ್ತಲೇ ಇರುತ್ತಾರೆ. ಹಿರಿಯ ನಾಯಕರು ಕೊಲ್ಲಲ್ಪಟ್ಟರೂ ಹೋರಾಟ ಮುಂದುವರಿಯುತ್ತದೆ. ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ IRGC ಅನ್ನು 31 ಪ್ರಾಂತೀಯ ಕಮಾಂಡ್ ಗಳಾಗಿ ಸಂಘಟಿಸಲಾಗಿದೆ. ಪ್ರತಿ ಪ್ರಾಂತೀಯ ಕಮಾಂಡ್ ತನ್ನದೇ ಆದ ಶಸ್ತ್ರಾಸ್ತ್ರಗಳು, ಗುಪ್ತಚರ ಮತ್ತು ಕಮಾಂಡ್ ವ್ಯವಸ್ಥೆಗಳೊಂದಿಗೆ ಮಿಲಿಟರಿ ಘಟಕವಾಗಿ ಕಾರ್ಯನಿರ್ವಹಿಸುತ್ತದೆ. ಉನ್ನತ ನಾಯಕತ್ವದಿಂದ ಸಂವಹನ ಕಡಿತಗೊಂಡರೂ ಸ್ಥಳೀಯ ಘಟಕಗಳು ತಮ್ಮದೇ ಆದ ಮೇಲೆ ಕಾರ್ಯನಿರ್ವಹಿಸುವ ಅಧಿಕಾರ ಮತ್ತು ಸಾಮರ್ಥ್ಯವನ್ನು ಈ ಸಿದ್ಧಾಂತ ಒದಗಿಸುತ್ತದೆ. 2010ರ ಯುಎಸ್ ಇನ್ಸ್ಟಿಟ್ಯೂಟ್ ಆಫ್ ಪೀಸ್ ವರದಿಯ ಪ್ರಕಾರ, ಇರಾನ್ ನ ಮೊಸಾಯಿಕ್ ಡಿಫೆನ್ಸ್ ಡಾಕ್ಟ್ರಿನ್ ಇರಾನ್–ಇರಾಕ್ ಯುದ್ಧದ ಅನುಭವ ಮತ್ತು 2003ರಲ್ಲಿ ಇರಾಕ್ ಮೇಲೆ ನಡೆದ ಅಮೆರಿಕದ ಆಕ್ರಮಣದ ಅವಲೋಕನಗಳ ಮೇಲೆ ಆಧಾರಿತವಾಗಿದೆ. ಇರಾನ್–ಇರಾಕ್ ಯುದ್ಧವು ದೀರ್ಘ ಯುದ್ಧವಾಗಿತ್ತು. ಇದರಲ್ಲಿ ಇರಾಕಿಗಳು ಇರಾನ್ ಮೇಲೆ ನೆಲದ ಆಕ್ರಮಣ ನಡೆಸಿ, ಇರಾನಿನ ಪಡೆಗಳ ವಿರುದ್ಧ ರಾಸಾಯನಿಕ ದಾಳಿಗಳು ಮತ್ತು ನಗರಗಳ ಮೇಲೆ ಕ್ಷಿಪಣಿ ದಾಳಿಗಳನ್ನು ನಡೆಸಿದರು. ಇದಕ್ಕೆ ಪ್ರತಿಕ್ರಿಯೆಯಾಗಿ ಇರಾನ್ ಇರಾಕಿ ಸೈನ್ಯದ ಮೇಲೆ ಏಕಕಾಲದಲ್ಲಿ ದಾಳಿ ಮಾಡಲು ಹೆಚ್ಚಿನ ಸಂಖ್ಯೆಯ ಸೈನಿಕರನ್ನು, ವಿಶೇಷವಾಗಿ ಬಸಿಜ್ ಗುಂಪನ್ನು, ಕಳುಹಿಸುವ ಮೂಲಕ ಪ್ರತಿದಾಳಿ ನಡೆಸಿತು. ಇನ್ಸ್ಟಿಟ್ಯೂಟ್ ಆಫ್ ಪೀಸ್ ಪ್ರಕಾರ, ಈ ಯೋಜನೆಯು ಇರಾನ್ ಅನೇಕ ಸೈನಿಕರನ್ನು ಕಳೆದುಕೊಂಡ ನಂತರವೂ ಹೋರಾಟ ಮುಂದುವರಿಸಲು ಅವಕಾಶ ಮಾಡಿಕೊಟ್ಟಿತು. ಯುದ್ಧವು ಎರಡೂ ಕಡೆಯವರು ಗೆಲ್ಲಲು ಸಾಧ್ಯವಾಗದೆ ‘ಸಮ’ ಸ್ಥಿತಿಗೆ ತಲುಪುವವರೆಗೆ ಅವರು ಬಲವಾದ ಇರಾಕಿ ಸೈನ್ಯವನ್ನು ದಣಿಸುವಲ್ಲಿ ಯಶಸ್ವಿಯಾದರು. ದೀರ್ಘಕಾಲದವರೆಗೆ ಹೆಚ್ಚು ಬಲವಾದ ಶತ್ರುವಿನ ಬಲವನ್ನು ನಿಧಾನವಾಗಿ ಬರಿದುಮಾಡುವ ಮೂಲಕ ಸೋಲನ್ನು ತಪ್ಪಿಸುವ ಈ ತಂತ್ರವು ಮೊಸಾಯಿಕ್ ಸಿದ್ಧಾಂತದ ಪ್ರಮುಖ ಭಾಗವಾಗಿದೆ. ಜಾಫರಿ 2003ರಲ್ಲಿ ಇರಾಕ್ ಮೇಲೆ ನಡೆದ ಅಮೆರಿಕದ ಆಕ್ರಮಣವನ್ನೂ ಎಚ್ಚರಿಕೆಯಿಂದ ಅಧ್ಯಯನ ಮಾಡಿದರು. RAND ಸಂಸ್ಥೆಯ ವರದಿಯ ಪ್ರಕಾರ, 2003ರಲ್ಲಿ ಇರಾಕಿನ ಸರ್ವಾಧಿಕಾರಿ ಸದ್ದಾಂ ಹುಸೇನ್ ಸುತ್ತ ಹೆಚ್ಚು ಕೇಂದ್ರೀಕೃತವಾಗಿದ್ದ ಕಮಾಂಡ್ ರಚನೆಯಿಂದಾಗಿ ಇರಾಕಿ ಪಡೆಗಳು ಸಿಲುಕಿಕೊಂಡವು. ಏಕೆಂದರೆ ಪ್ರತಿಯೊಂದು ನಿರ್ಧಾರವೂ ಉನ್ನತ ನಾಯಕ ಸದ್ದಾಂ ಹುಸೇನ್ ಅವರಿಂದಲೇ ಬರಬೇಕಾಗಿತ್ತು. ವರದಿಯ ಪ್ರಕಾರ, ಇದು ನಿಯಮಿತ ಇರಾಕಿ ಸೈನ್ಯ ಮತ್ತು ರಿಪಬ್ಲಿಕನ್ ಗಾರ್ಡ್ ಘಟಕಗಳು ಪರಸ್ಪರ ಸಮನ್ವಯ ಸಾಧಿಸುವುದನ್ನು ಅಡ್ಡಿಪಡಿಸಿತು. ಡಿವಿಷನ್ ಮತ್ತು ಕಾರ್ಪ್ಸ್ ಮಟ್ಟದ ಅಧಿಕಾರಿಗಳು ಸದ್ದಾಂ ಅವರ ಅನುಮೋದನೆಯಿಲ್ಲದೆ ಯಾವುದೇ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಿರಲಿಲ್ಲ. ಇದರಿಂದಾಗಿ ಇರಾಕಿ ಸೈನ್ಯವು ಸ್ವಂತವಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗಲಿಲ್ಲ ಮತ್ತು ಅಮೆರಿಕ ನೇತೃತ್ವದ ಆಕ್ರಮಣವನ್ನು ತಡೆಯುವಲ್ಲಿ ವಿಫಲವಾಯಿತು. 2010ರ ವರದಿಯ ಪ್ರಕಾರ, ಈ ತ್ವರಿತ ಸೋಲು ಜಾಫರಿ ಮತ್ತು ಇತರ ಇರಾನಿನ ಅಧಿಕಾರಿಗಳಿಗೆ ಒಂದು ಪ್ರಮುಖ ಪಾಠ ನೀಡಿತು. ತಮ್ಮ ಮಿಲಿಟರಿ ಪಡೆಗಳು IRGC ಮತ್ತು ನಿಯಮಿತ ಸೈನ್ಯ) ಸ್ವತಂತ್ರವಾಗಿ ಹೋರಾಡಬಹುದೆಂದು ಖಚಿತಪಡಿಸಿಕೊಳ್ಳಬೇಕು ಎಂಬುದನ್ನು ಅವರು ಅರಿತುಕೊಂಡರು. ಸೈನಿಕರು ಪ್ರಧಾನ ಕಚೇರಿಯೊಂದಿಗೆ ಸಂಪರ್ಕ ಕಳೆದುಕೊಂಡರೂ ಸಹ ಹೋರಾಟದಿಂದ ಹಿಂಜರಿಯದ ವ್ಯವಸ್ಥೆಯನ್ನು ಅವರು ಬಯಸಿದರು. ಅದೀಗ ಡಿಸೆಂಟ್ರಲೈಸ್ಡ್ ಮೊಸಾಯಿಕ್ ಡಿಫೆನ್ಸ್ ಮೂಲಕ ಸಾಧ್ಯವಾಗುತ್ತಿದೆ.
ಯುದ್ಧವನ್ನು ಟ್ರಂಪ್ ತಪ್ಪಾಗಿ ಲೆಕ್ಕಾಚಾರ ಮಾಡಿದ್ದಾರೆ: ಅಮೆರಿಕದ ಮಾಜಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಟೀಕೆ
ವಾಶಿಂಗ್ಟನ್, ಮಾ.13: ಅಮೆರಿಕ, ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧ ಮುಂದುವರಿದಂತೆ, ಅಮೆರಿಕವು ಆರ್ಥಿಕವಾಗಿ ಹಾಗೂ ಶಸ್ತ್ರಾಸ್ತ್ರಗಳ ವಿಷಯದಲ್ಲಿ ಭಾರೀ ಹಾನಿಯನ್ನು ಎದುರಿಸುತ್ತಿದೆ. ಆದರೆ ಇರಾನ್ ಹಿಂದೆ ಸರಿಯುವ ಯಾವುದೇ ಲಕ್ಷಣಗಳನ್ನು ತೋರಿಸಿಲ್ಲ. ಸಂಘರ್ಷ ಉಲ್ಬಣಗೊಳ್ಳುತ್ತಿರುವ ನಡುವೆಯೇ, ಇರಾನ್ನಲ್ಲಿನ ಪರಿಸ್ಥಿತಿಯನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಪ್ಪಾಗಿ ಲೆಕ್ಕಾಚಾರ ಮಾಡಿದ್ದಾರೆ ಎಂದು ಅಮೆರಿಕದ ಮಾಜಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಜಾನ್ ಬೋಲ್ಟನ್ ಟೀಕಿಸಿದ್ದಾರೆ. ವೆನೆಝುವೆಲಾದಲ್ಲಿ ನಡೆದಂತೆಯೇ ಇರಾನ್ನಲ್ಲೂ ಕ್ಷಿಪ್ರವಾಗಿ ಆಡಳಿತ ಬದಲಾವಣೆಯನ್ನು ಪ್ರಚೋದಿಸಬಹುದು ಎಂದು ಟ್ರಂಪ್ ನಂಬಿರುವಂತೆ ತೋರುತ್ತದೆ. ಆದರೆ ಈ ಹೋಲಿಕೆ ಆಳವಾಗಿ ತಪ್ಪು ದಾರಿಗೆ ಎಳೆಯಿತು. ಸಂಘರ್ಷವನ್ನು ನಿಭಾಯಿಸುವಲ್ಲಿ ಟ್ರಂಪ್ ದೀರ್ಘಾವಧಿಯ ಕಾರ್ಯತಂತ್ರದ ಯೋಜನೆಯನ್ನು ಹೊಂದಿಲ್ಲ. ಅಧ್ಯಕ್ಷರು ವಿವರವಾದ ಯೋಜನೆಯಿಲ್ಲದೆ ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳುತ್ತಾರೆ. ಅವರು ಕಾರ್ಯತಂತ್ರದ ಚಿಂತನೆಯನ್ನು ಅನುಸರಿಸುವುದಿಲ್ಲ ಎಂದು ಬೋಲ್ಟನ್ ಹೇಳಿದ್ದಾರೆ ಎಂದು ‘ಇಂಡಿಯಾ ಟುಡೆ’ ವರದಿ ಮಾಡಿದೆ. ಟ್ರಂಪ್ ಅವರ ಮೊದಲ ಅವಧಿಯಲ್ಲಿ ಬೋಲ್ಟನ್ ರಾಷ್ಟ್ರೀಯ ಭದ್ರತಾ ಸಲಹೆಗಾರರಾಗಿ ಕಾರ್ಯನಿರ್ವಹಿಸಿದ್ದರು.
ಅನಿಲಕ್ಕೆ ಪರ್ಯಾಯವಾಗಿ ಇತರೆ ಉರುವಲುಗಳ ಬಳಕೆಗೆ ಪ್ರಯತ್ನಿಸಿ: ಹೊಟೇಲ್ ಉದ್ಯಮಿಗಳಿಗೆ ಉಡುಪಿ ಡಿಸಿ ಕರೆ
ವಾಣಿಜ್ಯ ಅನಿಲ ಸಿಲಿಂಡರ್ ಸಮಸ್ಯೆ ಕುರಿತು ಸಭೆ
ಕಂದಾಯ ಭೂಮಿಯ ಅನಧಿಕೃತ ಬಡಾವಣೆಗಳ ‘ಬಿ' ಖಾತಾ ಸಮಸ್ಯೆ ಪರಿಹಾರಕ್ಕೆ ಕ್ರಮ : ಪ್ರಿಯಾಂಕ್ ಖರ್ಗೆ
ಬೆಂಗಳೂರು : ಬೆಂಗಳೂರು ನಗರ ಜಿಲ್ಲೆಯ ವ್ಯಾಪ್ತಿಯ ಕಂದಾಯ ಭೂಮಿಗಳಲ್ಲಿ ನಿರ್ಮಿಸಲಾಗಿರುವ ಅನಧಿಕೃತ ಬಡಾವಣೆಗಳ ನಿವೇಶನಗಳಿಗೆ ‘ಬಿ' ಖಾತಾ ನೀಡುವ ಮತ್ತು ತೆರಿಗೆ ವಿಧಿಸುವ ಕುರಿತು ಸರ್ಕಾರವು ಅಗತ್ಯ ಕ್ರಮ ವಹಿಸಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ. ಶುಕ್ರವಾರ ವಿಧಾನ ಪರಿಷತ್ತಿನ ಪ್ರಶ್ನೋತ್ತರ ಕಲಾಪದ ವೇಳೆ ಬಿಜೆಪಿ ಸದಸ್ಯ ಎಚ್.ಎಸ್.ಗೋಪಿನಾಥ್ ಪ್ರಶ್ನೆಗೆ ಉತ್ತರಿಸಿದ ಸಚಿವರು, ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್(ತಿದ್ದುಪಡಿ) ಅಧಿನಿಯಮ, 2025ರ ಅನ್ವಯ, ಅನುಮೋದಿತವಲ್ಲದ ಲೇಔಟ್ಗಳಲ್ಲಿರುವ ನಿವೇಶನ ಹಾಗೂ ಕಟ್ಟಡಗಳಿಗೆ ಆಸ್ತಿ ತೆರಿಗೆ ವಿಧಿಸಲು ಸರಕಾರ ನಿರ್ಧರಿಸಿದೆ. ಇಂತಹ ಅನಧಿಕೃತ ಆಸ್ತಿಗಳಿಗೆ ಮೊದಲ ವರ್ಷದ ತೆರಿಗೆಯ ಎರಡು ಪಟ್ಟು ದಂಡ ವಿಧಿಸಲಾಗುವುದು. ನಂತರದ ವರ್ಷಗಳಲ್ಲಿ ಸಾಮಾನ್ಯ ತೆರಿಗೆಯನ್ನು ಮಾತ್ರ ಸಂಗ್ರಹಿಸಲಾಗುತ್ತದೆ ಎಂದರು. ಈ ಆಸ್ತಿಗಳನ್ನು ಪ್ರತ್ಯೇಕ ರಿಜಿಸ್ಟರ್ನಲ್ಲಿ(ಬಿ-ಖಾತಾ ಮಾದರಿ) ದಾಖಲಿಸಲಾಗುವುದು. ಆದರೆ, ಇದು ಆಸ್ತಿಯನ್ನು ಸಂಪೂರ್ಣವಾಗಿ ಸಕ್ರಮಗೊಳಿಸಿದಂತೆ ಪರಿಗಣಿತವಾಗುವುದಿಲ್ಲ. ಲೇಔಟ್ ವಿನ್ಯಾಸ ಅನುಮೋದನೆ ಇಲ್ಲದಿದ್ದರೂ, ಮೂಲಭೂತ ಸೌಕರ್ಯಗಳನ್ನು ಪಂಚಾಯತ್ಗೆ ಹಸ್ತಾಂತರಿಸಿದ ನಿವೇಶನಗಳನ್ನು ಮಾಲಕರ ಹೆಸರಿನಲ್ಲಿ ಏಕ ನಿವೇಶನವೆಂದು ಪರಿಗಣಿಸಲು ನಿಯಮ 8(2)(4)ರಡಿ ಅವಕಾಶ ನೀಡಲಾಗಿದೆ ಎಂದು ಅವರು ಹೇಳಿದರು. ಸಾರ್ವಜನಿಕರಿಗೆ ಎದುರಾಗುತ್ತಿರುವ ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿರುವ ಸರಕಾರ, 2025ರ ಹೊಸ ನಿಯಮಗಳ ಅಡಿಯಲ್ಲಿ ತುರ್ತು ಕ್ರಮ ಕೈಗೊಳ್ಳುತ್ತಿದೆ ಎಂದು ಪ್ರಿಯಾಂಕ್ ಖರ್ಗೆ ತಿಳಿಸಿದರು.
ರಶ್ಯದ ತೈಲದ ಮೇಲಿನ ನಿರ್ಬಂಧ ತಾತ್ಕಾಲಿಕ ತೆರವು, ಎಪ್ರಿಲ್ 11ರವರೆಗೆ ಅನ್ವಯ: ಅಮೆರಿಕ ಘೋಷಣೆ
ವಾಶಿಂಗ್ಟನ್, ಮಾ.13: ಇಂಧನ ಬೆಲೆಗಳು ತೀವ್ರವಾಗಿ ಏರುತ್ತಿರುವ ಹಿನ್ನೆಲೆಯಲ್ಲಿ ರಶ್ಯದ ತೈಲ ಮಾರಾಟದ ಮೇಲಿನ ನಿರ್ಬಂಧಗಳನ್ನು ತಾತ್ಕಾಲಿಕವಾಗಿ ತೆರವುಗೊಳಿಸಲು ಅಮೆರಿಕ ಸರ್ಕಾರ ನಿರ್ಧರಿಸಿದೆ. ಇರಾನ್ನೊಂದಿಗಿನ ಇಸ್ರೇಲ್–ಅಮೆರಿಕ ಯುದ್ಧದ ಆರ್ಥಿಕ ಪರಿಣಾಮಗಳನ್ನು ನಿಗ್ರಹಿಸಲು ರಶ್ಯದ ತೈಲ ಖರೀದಿಸಲು ಇತರ ದೇಶಗಳಿಗೆ ಅವಕಾಶ ಮಾಡಿಕೊಡುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ. ತಾತ್ಕಾಲಿಕ ನಿರ್ಬಂಧ ತೆರವು ಜಾಗತಿಕ ಇಂಧನ ಮಾರುಕಟ್ಟೆಯಲ್ಲಿ ಸ್ಥಿರತೆಯನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ. ಅಲ್ಪಾವಧಿಯ ಕ್ರಮವು ರಶ್ಯ ಸರ್ಕಾರಕ್ಕೆ ಗಮನಾರ್ಹ ಆರ್ಥಿಕ ಲಾಭವನ್ನು ಒದಗಿಸುವುದಿಲ್ಲ ಎಂದು ಅಮೆರಿಕದ ಖಜಾನೆ ಕಾರ್ಯದರ್ಶಿ ಸ್ಕಾಟ್ ಬೆಸೆಂಟ್ ಹೇಳಿದ್ದಾರೆ. ತಾತ್ಕಾಲಿಕ ನಿರ್ಬಂಧ ಮನ್ನಾ ಎಪ್ರಿಲ್ 11ರವರೆಗೆ ಜಾರಿಯಲ್ಲಿರುತ್ತದೆ ಮತ್ತು ಕೇವಲ ‘ಪರ್ಮಿಟ್ ದೇಶಗಳಿಗೆ’ ಮಾತ್ರ ಅನ್ವಯಿಸುತ್ತದೆ. ತೈಲ ಬೆಲೆಯಲ್ಲಿನ ತಾತ್ಕಾಲಿಕ ಹೆಚ್ಚಳವು ಅಲ್ಪಾವಧಿಯ ಮತ್ತು ತಾತ್ಕಾಲಿಕ ಅಡ್ಡಿಯಾಗಿದ್ದು, ಇದು ದೀರ್ಘಾವಧಿಯಲ್ಲಿ ನಮ್ಮ ದೇಶ ಮತ್ತು ಆರ್ಥಿಕತೆಗೆ ಭಾರೀ ಲಾಭವನ್ನು ಉಂಟುಮಾಡುತ್ತದೆ ಎಂದು ಬೆಸೆಂಟ್ ಹೇಳಿದ್ದಾರೆ. ಸುಮಾರು 10 ಕೋಟಿ ಬ್ಯಾರೆಲ್ಗಳಷ್ಟು ತೈಲ ಪ್ರಸ್ತುತ ಸಾಗಣೆಯಲ್ಲಿದೆ ಎಂದು ರಶ್ಯ ಹೇಳಿದೆ. ಗಲ್ಫ್ ನಲ್ಲಿ ಹಡಗುಗಳು ಮತ್ತು ಇಂಧನ ಮೂಲಸೌಕರ್ಯಗಳ ಮೇಲಿನ ದಾಳಿ ಹಾಗೂ ಹಾರ್ಮುಜ್ ಜಲಸಂಧಿಯ ಮುಚ್ಚುಗಡೆಯಿಂದ ಜಾಗತಿಕ ಇಂಧನ ಮಾರುಕಟ್ಟೆ ತತ್ತರಿಸಿದೆ. ತೈಲ ಬೆಲೆಗಳು ಮತ್ತೆ ಬ್ಯಾರೆಲ್ಗೆ 100 ಡಾಲರ್ ಗಡಿ ದಾಟಿವೆ. ಗಲ್ಫ್ನಲ್ಲಿ ಮತ್ತೆ ಮೂರು ಸರಕು ನೌಕೆಗಳ ಮೇಲೆ ದಾಳಿ ನಡೆದ ಬಳಿಕ ಷೇರು ಮಾರುಕಟ್ಟೆಗಳು ಕುಸಿದಿವೆ. ಪ್ರಪಂಚದ ಸುಮಾರು ಐದನೇ ಒಂದು ಭಾಗದಷ್ಟು ತೈಲವು ಸಾಮಾನ್ಯವಾಗಿ ಹಾರ್ಮುಜ್ ಜಲಸಂಧಿ ಮೂಲಕ ಹಾದುಹೋಗುತ್ತದೆ. ಗಲ್ಫ್ನಲ್ಲಿ ಸಿಲುಕಿರುವ ತೈಲ ಟ್ಯಾಂಕರ್ಗಳು ಇರಾನ್ ಮತ್ತು ಒಮಾನ್ ನಡುವಿನ ಕಿರಿದಾದ ಜಲಸಂಧಿ (ಹಾರ್ಮುಜ್) ಮೂಲಕ ಹಾದುಹೋಗಲು ಸಾಧ್ಯವಾಗದಿರುವುದು ಬಿಕ್ಕಟ್ಟಿಗೆ ಕಾರಣವಾಗಿದೆ. ► ಅಮೆರಿಕದ ಕ್ರಮಕ್ಕೆ ಜರ್ಮನಿ, ಬ್ರಿಟನ್, ಫ್ರಾನ್ಸ್ ವಿರೋಧ ರಶ್ಯದ ತೈಲದ ಮೇಲಿನ ನಿರ್ಬಂಧವನ್ನು ತಾತ್ಕಾಲಿಕವಾಗಿ ತೆರವುಗೊಳಿಸುವ ಟ್ರಂಪ್ ಕ್ರಮವು ‘ಪುಟಿನ್ ಅವರನ್ನು ಶ್ರೀಮಂತಗೊಳಿಸುವ ಮತ್ತು ಉಕ್ರೇನ್ ಯುದ್ಧವನ್ನು ವಿಸ್ತರಿಸುವ ಭಯಾನಕ ನಿರ್ಧಾರ’ವಾಗಿದೆ ಎಂದು ಜರ್ಮನಿ, ಫ್ರಾನ್ಸ್, ಬ್ರಿಟನ್, ಉಕ್ರೇನ್ ಮತ್ತಿತರ ದೇಶಗಳು ಟೀಕಿಸಿವೆ. ನಿರ್ಬಂಧ ತೆರವುಗೊಳಿಸುವುದು ಉಕ್ರೇನಿಯನ್ನರ ಮೇಲೆ ಮಾರಕ ಪ್ರಹಾರವಾಗಿದೆ ಮತ್ತು ರಶ್ಯಕ್ಕೆ ಇನ್ನಷ್ಟು ಆಯುಧಗಳನ್ನು ಖರೀದಿಸಲು ಅವಕಾಶ ಮಾಡಿಕೊಡುತ್ತದೆ ಎಂದು ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಟೀಕಿಸಿದ್ದಾರೆ. ‘ಈಗ ನಿರ್ಬಂಧ ತೆರವುಗೊಳಿಸುವುದು ತಪ್ಪು ನಿರ್ಧಾರ’ ಎಂದು ಜರ್ಮನಿಯ ಛಾನ್ಸಲರ್ ಫ್ರೆಡ್ರಿಕ್ ಮೆರ್ಝ್ ಹೇಳಿದ್ದಾರೆ. ರಶ್ಯದ ತೈಲದ ಮೇಲಿನ ನಿರ್ಬಂಧ ತೆರವುಗೊಳಿಸಿರುವ ಅಮೆರಿಕದ ಕ್ರಮವನ್ನು ಬ್ರಿಟನ್ ಅನುಸರಿಸುವುದಿಲ್ಲ ಎಂದು ಬ್ರಿಟನ್ನ ಇಂಧನ ಸಚಿವ ಮೈಕೆಲ್ ಶಾಂಕ್ಸ್ ಶುಕ್ರವಾರ ಹೇಳಿದ್ದಾರೆ ಎಂದು ಬಿಬಿಸಿ ವರದಿ ಮಾಡಿದೆ. ಹಾರ್ಮುಜ್ ಜಲಸಂಧಿ ಮುಚ್ಚಿರುವುದು ರಶ್ಯದ ಮೇಲಿನ ನಿರ್ಬಂಧ ತೆರವುಗೊಳಿಸುವ ಕ್ರಮವನ್ನು ಸಮರ್ಥಿಸುವುದಿಲ್ಲ ಎಂದು ಫ್ರಾನ್ಸ್ ಅಧ್ಯಕ್ಷ ಇಮ್ಯಾನುವೆಲ್ ಮ್ಯಾಕ್ರೋನ್ ಪ್ರತಿಕ್ರಿಯಿಸಿದ್ದಾರೆ.
ದೇಶಾದ್ಯಂತ ನಾಪತ್ತೆಯಾಗುತ್ತಿರುವವರ ಸಂಖ್ಯೆಯಲ್ಲಿ ಹೆಚ್ಚಳ; 5 ರಾಜ್ಯಗಳಿಂದ ವರದಿ ಕೇಳಿದ NHRC
ಹೊಸದಿಲ್ಲಿ, ಮಾ. 13: ದೇಶಾದ್ಯಂತ ಹಲವು ರಾಜ್ಯಗಳಲ್ಲಿ ನಾಪತ್ತೆಯಾಗುತ್ತಿರುವವರ ಸಂಖ್ಯೆಯು ಹೆಚ್ಚುತ್ತಿದೆ ಹಾಗೂ ಅವರನ್ನು ಪತ್ತೆಹಚ್ಚುವ ದರ ಕ್ಷೀಣಿಸುತ್ತಿದೆ ಎಂಬ ಮಾಧ್ಯಮ ವರದಿಗಳನ್ನು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (NHRC) ಸ್ವಯಂಪ್ರೇರಿತವಾಗಿ ಪರಿಗಣಿಸಿದೆ. ಆಯೋಗವು ಬಿಹಾರ, ಒಡಿಶಾ, ತೆಲಂಗಾಣ, ಮಹಾರಾಷ್ಟ್ರ ಮತ್ತು ರಾಜಸ್ಥಾನ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳು ಹಾಗೂ ಪೊಲೀಸ್ ಮಹಾನಿರ್ದೇಶಕರಿಗೆ ನೋಟಿಸ್ಗಳನ್ನು ಜಾರಿಗೊಳಿಸಿ, ಈ ವಿಷಯದ ಕುರಿತು ಎರಡು ವಾರಗಳೊಳಗೆ ವಿವರವಾದ ವರದಿ ಸಲ್ಲಿಸುವಂತೆ ಸೂಚಿಸಿದೆ. ವರದಿಗಳ ಪ್ರಕಾರ, ಬಿಹಾರದಲ್ಲಿ 2013ರ ಬಳಿಕ ಪ್ರತಿ ವರ್ಷ 12,000ರಿಂದ 14,000 ಮಂದಿ ನಾಪತ್ತೆಯಾಗುತ್ತಿರುವುದು ದಾಖಲಾಗಿದೆ. ಈ ಪೈಕಿ ಹೆಚ್ಚಿನವರು ಮಕ್ಕಳು. ಆದರೆ, ನಾಪತ್ತೆಯಾದ ಮಕ್ಕಳ ಪೈಕಿ ಕೇವಲ ಮೂರನೇ ಎರಡರಷ್ಟು ಮಂದಿ ಮಾತ್ರ ಪತ್ತೆಯಾಗುತ್ತಿದ್ದಾರೆ. ಪತ್ತೆಯಾಗದ ಮಕ್ಕಳ ಸುರಕ್ಷತೆ ಮತ್ತು ಸಂಭವನೀಯ ಶೋಷಣೆಯ ಬಗ್ಗೆ ಮಾಧ್ಯಮ ವರದಿಗಳು ಕಳವಳ ವ್ಯಕ್ತಪಡಿಸಿವೆ. ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (NCRB)ದಿಂದ ಅಂಕಿಅಂಶಗಳನ್ನು ಪಡೆದಿರುವ ಆಯೋಗವು, ಒಡಿಶಾ, ಬಿಹಾರ, ತೆಲಂಗಾಣ ಮತ್ತು ಮಹಾರಾಷ್ಟ್ರ ರಾಜ್ಯಗಳಲ್ಲಿ ಗರಿಷ್ಠ ಪ್ರಮಾಣದಲ್ಲಿ ಮಾನವ ಕಳ್ಳಸಾಗಣೆ ನಡೆಯುತ್ತಿರುವುದರತ್ತ ಬೆಟ್ಟು ಮಾಡಿದೆ.
ಮೋದಿ, ಅಮಿತ್ ಶಾ ರಿಂದಲೇ ಕುಮಾರಸ್ವಾಮಿ ಸಿಎಂ ಮಾಡಲು ತಯಾರಿ : ಸಚಿವ ಪ್ರಿಯಾಂಕ್ ಖರ್ಗೆ
ಬೆಂಗಳೂರು : ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರನ್ನು ಕರ್ನಾಟಕದ ಮುಖ್ಯಮಂತ್ರಿ ಮಾಡಲು ಪ್ರಧಾನಮಂತ್ರಿ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ತಯಾರಿ ನಡೆಸುತ್ತಿದ್ದಾರೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಆರೋಪಿಸಿದ್ದಾರೆ. ಶುಕ್ರವಾರ ವಿಧಾನಸಭೆಯಲ್ಲಿ ಬಜೆಟ್ ಮೇಲಿನ ಚರ್ಚೆಯಲ್ಲಿ ಮಾತನಾಡಿದ ಬಿಜೆಪಿ ಸದಸ್ಯ ಸುರೇಶ್ ಗೌಡ, ಸಿದ್ದರಾಮಯ್ಯ ದಾಖಲೆಯ ಬಜೆಟ್ ಮಂಡಿಸಿದ ಮರು ದಿನವೇ ಡಿ.ಕೆ.ಶಿವಕುಮಾರ್ ಅವರು ಕೆಪಿಸಿಸಿ ಅಧ್ಯಕ್ಷರಾಗಿ 6 ವರ್ಷ ಪೂರೈಸಿದ್ದ ಜಾಹೀರಾತು ನೋಡಿದೆ. ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಹೇಳಿಕೆಯಲ್ಲಷ್ಟೇ ಹಾಲು-ಜೇನು, ವಾಸ್ತವದಲ್ಲಿ ಅಕ್ಕಪಕ್ಕ ಕೂಳಿತರೂ 10 ನಿಮಿಷ ಮುಖಕೊಟ್ಟು ಮಾತನಾಡುವುದಿಲ್ಲ. ಕುರ್ಚಿ ಕದನ ಜೋರಾಗಿದೆ ಎಂದು ಟೀಕಿಸಿದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸಚಿವ ಪ್ರಿಯಾಂಕ್ ಖರ್ಗೆ, ಬಜೆಟ್ ಮೇಲೆ ಚರ್ಚೆ ಮಾಡದೆ, ರಾಜಕೀಯ ಚರ್ಚೆ ಮಾಡುತ್ತಿದ್ದಾರೆ. ಕೇಂದ್ರ ಬಿಜೆಪಿ ನಾಯಕರು, ಅದರಲ್ಲೂ ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ, ಎಚ್.ಡಿ.ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡಲು ಮುಂದಾಗಿದ್ದರೂ ರಾಜ್ಯ ಬಿಜೆಪಿ ನಾಯಕರು ಮೌನವಾಗಿದ್ದಾರೆ ಎಂದು ವಾಗ್ದಾಳಿ ನಡೆಸಿದರು. ಒಂದು ಬಾರಿ ಸಿದ್ದರಾಮಯ್ಯ ಪರ ಮತ್ತೊಮ್ಮೆ ಡಿ.ಕೆ.ಶಿವಕುಮಾರ್ ಪರ ಹೇಳಿಕೆ ನೀಡುತ್ತಾ ದ್ವಂದ್ವ ನೀತಿ ಅನುಸರಿಸುತ್ತಿದ್ದಾರೆ ಎಂದ ಅವರು, ಎಚ್.ಡಿ.ಕುಮಾರಸ್ವಾಮಿ ಅವರನ್ನು ಕರ್ನಾಟಕದ ಮುಖ್ಯಮಂತ್ರಿ ಮಾಡಲು ಸಿದ್ಧತೆ ನಡೆಸಿದ್ದಾರೆ. ನೀವಿನ್ನೂ (ರಾಜ್ಯ ಬಿಜೆಪಿ ನಾಯಕರು) ಸಿದ್ದರಾಮಯ್ಯ-ಡಿ.ಕೆ.ಶಿವಕುಮಾರ್ ಸುತ್ತಲೇ ಸುತ್ತುತ್ತಿದ್ದೀರಿ ಎಂದು ಸಚಿವರು ವ್ಯಂಗ್ಯವಾಡಿದರು. ಪ್ರಿಯಾಂಕ್ ಮಾತಿಗೆ ಧ್ವನಿಗೂಡಿಸಿದ ಡಿ.ಕೆ.ಶಿವಕುಮಾರ್, ‘ಬಿಜೆಪಿಯಲ್ಲಿರುವ ನನ್ನ ಕೆಲವು ಸ್ನೇಹಿತರಿಗೆ ನನ್ನನ್ನು ಸ್ಮರಿಸದಿದ್ದರೆ ಅವರಿಗೆ ಸಮಾಧಾನವಿಲ್ಲ, ನಿದ್ದೆಯು ಬರುವುದಿಲ್ಲ, ಸಂತೋಷ ಆಗುವುದಿಲ್ಲ, ಸ್ಫೂರ್ತಿ ಬರುವುದಿಲ್ಲ. ಹೀಗಾಗಿ ನನ್ನ ಸದಾ ನೆನಪಿಸಿಕೊಳ್ಳುತ್ತಿರುತ್ತಾರೆ. ಅವರಿಗೆ ಬಜೆಟ್ ವಿರುದ್ಧವಾಗಿ ಮಾತನಾಡಲು ಏನು ಇಲ್ಲದ ಕಾರಣ ನನ್ನ ವಿಚಾರ ಎತ್ತಿ ಮಾತನಾಡುತ್ತಾರೆ. ಮಾತನಾಡಲಿ, ಖುಷಿಪಡಲಿ ಎಂದು ತಿಳಿಸಿದರು.
‘ತೃತೀಯ ಲಿಂಗಿ’ ಪದಕ್ಕೆ ನಿಖರ ವ್ಯಾಖ್ಯಾನ ನೀಡುವ ಮಸೂದೆ ಲೋಕಸಭೆಯಲ್ಲಿ ಮಂಡನೆ
ಹೊಸದಿಲ್ಲಿ, ಮಾ.13: ‘ತೃತೀಯ ಲಿಂಗಿ’ ಪದಕ್ಕೆ ನಿಖರವಾದ ವ್ಯಾಖ್ಯಾನವನ್ನು ನೀಡಲು ಮತ್ತು ಅಂತಹ ವ್ಯಕ್ತಿಗಳಿಗೆ ಉಂಟಾಗುವ ಹಾನಿಯ ಗಂಭೀರತೆಯನ್ನು ಆಧರಿಸಿ ಹಂತವಾರು ಶಿಕ್ಷೆಗಳನ್ನು ನೀಡಲು ಉದ್ದೇಶಿಸಿರುವ ಮಸೂದೆಯನ್ನು ಶುಕ್ರವಾರ ಲೋಕಸಭೆಯಲ್ಲಿ ಮಂಡಿಸಲಾಗಿದೆ. ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವ ವೀರೇಂದ್ರ ಕುಮಾರ ಅವರು ತೃತೀಯ ಲಿಂಗಿ ವ್ಯಕ್ತಿಗಳ (ಸಂರಕ್ಷಣೆಯ ಹಕ್ಕುಗಳು) ತಿದ್ದುಪಡಿ ಮಸೂದೆಯನ್ನು ಮಂಡಿಸಿದರು. ಪ್ರಸ್ತುತ ಕಾನೂನಿನಡಿ ಒದಗಿಸಲಾಗಿರುವ ರಕ್ಷಣೆ ಮತ್ತು ಪ್ರಯೋಜನಗಳು ವ್ಯಾಪಕ ಸ್ವರೂಪದ್ದಾಗಿವೆ. ಇವು ತಲುಪಲೇಬೇಕಿರುವ ತೃತೀಯ ಲಿಂಗಿ ವ್ಯಕ್ತಿಗಳನ್ನು ಸೂಕ್ತವಾಗಿ ಮತ್ತು ಖಚಿತವಾಗಿ ಗುರುತಿಸುವಿಕೆಗಾಗಿ ಹಾಗೂ ಅವರ ಸಂರಕ್ಷಣೆಗಾಗಿ ಈ ಪದಕ್ಕೆ ನಿಖರವಾದ ವ್ಯಾಖ್ಯಾನವನ್ನು ನೀಡುವುದು ಅನಿವಾರ್ಯವಾಗಿದೆ ಎಂದು ಮಸೂದೆಯಲ್ಲಿ ಹೇಳಲಾಗಿದೆ. ಮಸೂದೆಯು ಅಗತ್ಯವಿದ್ದರೆ ತಜ್ಞರ ಸಲಹೆ ಪಡೆಯುವ ಆಯ್ಕೆಯೊಂದಿಗೆ ಪ್ರಾಧಿಕಾರ ನೇಮಕಕ್ಕೆ ನಿಬಂಧನೆಗಳನ್ನೂ ಒಳಗೊಂಡಿದೆ. ಕರಡು ಶಾಸನವು ತಮ್ಮ ಅಧಿಕೃತ ದಾಖಲೆಗಳಲ್ಲಿ ಅಗತ್ಯ ಸೂಕ್ತ ಬದಲಾವಣೆಗಳನ್ನು ಮಾಡಲು ತೃತೀಯ ಲಿಂಗಿಗಳಿಗೆ ಅಧಿಕಾರವನ್ನು ನೀಡಲೂ ಉದ್ದೇಶಿಸಿದೆ.
ಕೆಂಪು ಕೋಟೆಯ ವಸ್ತು ಸಂಗ್ರಹಾಲಯಕ್ಕೆ ನೇತಾಜಿ ಟೋಪಿ ಹಿಂದಿರುಗಿಸಿದ ASI: ಅಸಲಿಯಲ್ಲ ಎಂದ ನೇತಾಜಿಯ ಸೋದರ ಮೊಮ್ಮಗ
ಹೊಸದಿಲ್ಲಿ: ದಿಲ್ಲಿಯ ಕೆಂಪು ಕೋಟೆಯ ವಸ್ತು ಸಂಗ್ರಹಾಲಯದಲ್ಲಿದ್ದ ಸ್ವಾತಂತ್ರ್ಯ ಹೋರಾಟಗಾರ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಟೋಪಿ ಕಾಣೆಯಾಗಿದೆ ಎಂದು ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಸೋದರ ಮೊಮ್ಮಗ ಚಂದ್ರ ಕುಮಾರ್ ಬೋಸ್ ಆರೋಪಿಸಿದ ಒಂದು ದಿನದ ಬಳಿಕ, ಇತ್ತೀಚೆಗೆ ಪೋರ್ಟ್ ಬ್ಲೇರ್ನಲ್ಲಿ ನಡೆದ ಪ್ರದರ್ಶನದಲ್ಲಿ ಇರಿಸಲಾಗಿದ್ದ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಟೋಪಿ ಸುರಕ್ಷಿತವಾಗಿದೆ ಎಂದು ಶುಕ್ರವಾರ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಸ್ಪಷ್ಟಪಡಿಸಿದೆ. ಆದರೆ, ಈ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿರುವ ಚಂದ್ರ ಕುಮಾರ್ ಬೋಸ್, ಮರಳಿ ಸ್ಥಾಪಿಸಲಾಗಿರುವ ಟೋಪಿಯು ಅಸಲಿ ಟೋಪಿಯಂತೆ ಭಾಸವಾಗುತ್ತಿಲ್ಲ ಎಂದು ಆರೋಪಿಸಿದ್ದಾರೆ. ಈ ವಿಷಯದ ಕುರಿತು ತನಿಖೆ ನಡೆಯಬೇಕು ಹಾಗೂ ಸೂಕ್ತ ದೃಢೀಕರಣ ಒದಗಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ. ಗುರುವಾರ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದ ಬಿಜೆಪಿಯ ಮಾಜಿ ನಾಯಕರೂ ಆದ ಚಂದ್ರ ಕುಮಾರ್ ಬೋಸ್, “ನಾನು ಹಾಗೂ ನನ್ನ ಕುಟುಂಬದ ಸದಸ್ಯರು ವೈಯಕ್ತಿಕವಾಗಿ ಪ್ರಧಾನಿ ನರೇಂದ್ರ ಮೋದಿಯವರಿಗೆ ನೇತಾಜಿಯ ಟೋಪಿಯನ್ನು ಹಸ್ತಾಂತರಿಸಿದ್ದೆವು. ಜನವರಿ 23, 2019ರಂದು ನಡೆದ ನೇತಾಜಿ ದಿನಾಚರಣೆ (ಭಾರತೀಯ ದೇಶಪ್ರೇಮಿಗಳ ದಿನಾಚರಣೆ) ಸಂದರ್ಭದಲ್ಲಿ ದಿಲ್ಲಿಯ ಕೆಂಪು ಕೋಟೆಯಲ್ಲಿನ ನೇತಾಜಿ ವಸ್ತು ಸಂಗ್ರಹಾಲಯದಲ್ಲಿ ನಾನು ನೇತಾಜಿಯವರ ಟೋಪಿಯನ್ನು ವೈಯಕ್ತಿಕವಾಗಿ ಅರ್ಪಿಸಿದ್ದೆ ಎಂಬುದನ್ನು ಸ್ಮರಿಸಿಕೊಳ್ಳಿ” ಎಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕರೆ ನೀಡಿದ್ದಾರೆ. ಆದರೆ, ಈ ಆರೋಪವನ್ನು ಅಲ್ಲಗಳೆದಿರುವ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ, “ಜನವರಿ 19ರಿಂದ 25ರವರೆಗೆ ಪೋರ್ಟ್ ಬ್ಲೇರ್ ನಲ್ಲಿ ನಡೆದ ‘ಪರಾಕ್ರಮ್ ದಿನಸ್’ ಪ್ರದರ್ಶನದ ಅಂಗವಾಗಿ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಅಸಲಿ ಟೋಪಿಯನ್ನು ಕೆಂಪು ಕೋಟೆಯ ವಸ್ತು ಸಂಗ್ರಹಾಲಯದಿಂದ ಪೋರ್ಟ್ ಬ್ಲೇರ್ ಗೆ ತಾತ್ಕಾಲಿಕವಾಗಿ ಸ್ಥಳಾಂತರಿಸಲಾಗಿತ್ತು. ಅದು ಮರಳಿದ ಬಳಿಕ ಬೀಗದ ಸಮಸ್ಯೆ ಉಂಟಾಗಿದ್ದರಿಂದ ಅದನ್ನು ಸುರಕ್ಷಿತ ವಶದಲ್ಲಿರಿಸಬೇಕಾಗಿತ್ತು. ಇದೀಗ ಬೀಗವನ್ನು ಸರಿಪಡಿಸಲಾಗಿದ್ದು, ಟೋಪಿಯನ್ನು ಮರಳಿ ಪ್ರದರ್ಶನದಲ್ಲಿ ಇರಿಸಲಾಗಿದೆ” ಎಂದು ‘ಎಕ್ಸ್’ ಪೋಸ್ಟ್ನಲ್ಲಿ ಸ್ಪಷ್ಟಪಡಿಸಿದೆ.
ಕಲಬುರಗಿ | ಬಸವಣ್ಣ, ಅಕ್ಕಮಹಾದೇವಿಯವರಿಗೆ ನಿಂದಿಸಿದ ವ್ಯಕ್ತಿಯನ್ನು ಬಂಧಿಸುವಂತೆ ಆಗ್ರಹ
ಕಲಬುರಗಿ: ವಿಶ್ವಗುರು ಬಸವಣ್ಣ ಹಾಗೂ ಅಕ್ಕಮಹಾದೇವಿಯವರ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನಕಾರಿ ಕಾಮೆಂಟ್ ಮಾಡಿರುವ ರಾಮಕಾಂತ ಎಂ. ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಜಾಗತಿಕ ಲಿಂಗಾಯತ ಮಹಾ ಸಭಾ ಜಿಲ್ಲಾ ಘಟಕ ಕಲಬುರಗಿ ವತಿಯಿಂದ ನಗರದ ಜಗತ್ ವೃತ್ತದಲ್ಲಿರುವ ಶ್ರೀ ಬಸವೇಶ್ವರ ಪುತ್ಥಳಿ ಎದುರುಗಡೆ ಪ್ರತಿಭಟನೆ ನಡೆಸಿ ನಂತರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. ರಾಮಕಾಂತ ಎಂ. ಎಂಬ ವ್ಯಕ್ತಿಯು ಸಾಮಾಜಿಕ ಜಾಲತಾಣವಾದ ಫೇಸ್ಬುಕ್ನಲ್ಲಿ ವಿಶ್ವಗುರು ಬಸವಣ್ಣ ಹಾಗೂ ಅಕ್ಕಮಹಾದೇವಿಯವರ ಕುರಿತು ಅವಹೇಳನಕಾರಿ ಮತ್ತು ಅಸಭ್ಯ ಹೇಳಿಕೆಗಳನ್ನು ಪ್ರಕಟಿಸಿ, ಶರಣ ಸಂಪ್ರದಾಯ ಹಾಗೂ ಸಮಾಜದ ಭಾವನೆಗಳಿಗೆ ಧಕ್ಕೆ ಉಂಟುಮಾಡುವ ರೀತಿಯಲ್ಲಿ ಪ್ರಚಾರ ಮಾಡಿರುವುದು ಗಮನಕ್ಕೆ ಬಂದಿದೆ. ಇದರಿಂದ ಸಮಾಜದಲ್ಲಿ ತೀವ್ರ ಅಸಮಾಧಾನ ಉಂಟಾಗಿ ಅಶಾಂತಿ ನಿರ್ಮಾಣವಾಗುವ ಸಾಧ್ಯತೆ ಇದೆ. ಹಾಗಾಗಿ ಅಂತಹ ಕಿಡಿಗೇಡಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ಸಮಾಜದ ಶಾಂತಿ ಮತ್ತು ಸೌಹಾರ್ದ ಕಾಪಾಡುವ ಹಿತದೃಷ್ಟಿಯಿಂದ ಸಂಬಂಧಿತ ವ್ಯಕ್ತಿಯ ವಿರುದ್ಧ ತಕ್ಷಣವೇ ಸೂಕ್ತ ಕಾನೂನು ಕ್ರಮ ಕೈಗೊಂಡು, ಆತನನ್ನು ಬಂಧಿಸಿ ಕಠಿಣ ಶಿಕ್ಷೆ ನೀಡುವಂತೆ ಸಂಬಂಧಿತ ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕು, ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಸಂಘಟನೆ ವತಿಯಿಂದ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು. ಲಿಂಗಾಯತ ಮಹಾಸಭಾದ ಅಧ್ಯಕ್ಷ ಆರ್. ಜಿ. ಶೆಟಗಾರ, ಪ್ರಧಾನ ಕಾರ್ಯದರ್ಶಿ ಅಶೋಕ ಗೂಳಿ, ಡಾ.ಮಲ್ಲಿಕಾರ್ಜುನ ವಡ್ಡನಕೇರಿ, ಹಣಮಂತರಾವ ಪಾಟೀಲ, ಸಿದ್ದಣ್ಣ ತಾವರಗೇರ, ಶಿವಶರಣಪ್ಪ ಡಿ, ವಿಶ್ವನಾಥ ಮಂಗಲಗಿ, ಶಿವಕುಮಾಋ ಬಿದರಿ, ಅಶೋಕ ವೀರನಾಯಕ, ದಿನೇಶ ದೊಡ್ಡಮನಿ, ಬಸವರಾಜ ಸೇರಿದಂತೆ ಇತರರು ಇದ್ದರು.
ಕಲಬುರಗಿ | ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ
ಕಲಬುರಗಿ: ನಗರದ ಸೇಡಂ ರಸ್ತೆಯಲ್ಲಿರುವ ಜ್ಯೋತಿ ಕಾಲೋನಿಯಲ್ಲಿ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಅತ್ಯಂತ ಸಂಭ್ರಮ ಹಾಗೂ ಸಡಗರದಿಂದ ಆಚರಿಸಲಾಯಿತು. ಕಾರ್ಯಕ್ರಮವನ್ನು ಬಿಜೆಪಿ ಮುಖಂಡೆ ಶಶಿಕಲಾ ವಿ.ಟೆಂಗಳಿ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಆಹಾರ ಇಲಾಖೆಯ ಸಹಾಯಕ ನಿರ್ದೇಶಕಿ ಸಾವಿತ್ರಿ ಚಿಡಗುಂಪಿ ಹಾಗೂ ರೇಶ್ಮಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಡಾ.ಭಾರತಿ ಎನ್.ರೇಷ್ಮಿ ಭಾಗವಹಿಸಿದ್ದರು. ಅತಿಥಿಗಳಾಗಿ ಕೇಂದ್ರ ವಿಶ್ವವಿದ್ಯಾಲಯದ ವೈದ್ಯಾಧಿಕಾರಿ ಡಾ.ಜ್ಯೋತಿ ಎಸ್. ತೆಗನೂರು ಮತ್ತು ಸಂಚಾರಿ ಪೊಲೀಸ್ ಠಾಣೆ2 ರ ಉಪನಿರೀಕ್ಷಕಿ (ಪಿಎಸ್ಐ) ಸುಮಂಗಲಾ ಮಾತನಾಡಿದರು. ಇದೇ ಸಂದರ್ಭದಲ್ಲಿ ಜ್ಯೋತಿ ಕಾಲೋನಿಯ ಹಿರಿಯ ಮಹಿಳೆಯರನ್ನು ಗುರುತಿಸಿ ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಮಲಾದೇವಿ ಯಡಹಳ್ಳಿಮಠ್ ವಹಿಸಿದ್ದರು. ಕಲಬುರಗಿ ಮಹಾನಗರ ಪಾಲಿಕೆಯ ಸದಸ್ಯರಾದ ವೀರಣ್ಣ ಹೊನ್ನಳಿ ಅವರ ವಿಶೇಷ ಸಹಕಾರ ಮತ್ತು ಮಾರ್ಗದರ್ಶನದಲ್ಲಿ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು. ಅರುಣಾ ನಿರೂಪಿಸಿದರು. ರೇಣುಕಾ ಗುಡ್ಡದ ಅವರು ವಂದಿಸಿದರು. ಜ್ಯೋತಿ ಕಾಲೋನಿಯ ನೂರಾರು ಮಹಿಳೆಯರು ಕಾರ್ಯಕ್ರಮದಲ್ಲಿ ಭಾಗವಹಿಸಿ ಮಹಿಳಾ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಿದರು.
29 ವರ್ಷಗಳ ಸೇವೆಯ ಮಹತ್ವದ ಮೈಲಿಗಲ್ಲು ಸಾಧಿಸಿದ ʼತುಂಬೆ ಗ್ರೂಪ್ʼ
ಯುಎಇ : ತುಂಬೆ ಗ್ರೂಪ್ ಯುಎಇಯಲ್ಲಿ ತನ್ನ 29 ವರ್ಷಗಳ ಸಾರ್ಥಕ ಪ್ರಯಾಣವನ್ನು ಪೂರ್ಣಗೊಳಿಸಿದ್ದು, ಆರೋಗ್ಯ ಸೇವೆ, ಶಿಕ್ಷಣ, ಸಂಶೋಧನೆ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಸುಮಾರು ಮೂರು ದಶಕಗಳ ಸೇವೆಯ ಮಹತ್ವದ ಮೈಲಿಗಲ್ಲನ್ನು ಸಾಧಿಸಿದೆ. 1997ರಲ್ಲಿ ಡಾ.ಮೊಯ್ದೀನ್ ಅವರು ತುಂಬೆ ಗ್ರೂಪ್ ಅನ್ನು ಸ್ಥಾಪಿಸಿದರು. ವೈದ್ಯಕೀಯ ಶಿಕ್ಷಣ, ಆರೋಗ್ಯ ಸೇವೆ ಗಳು, ಸಂಶೋಧನೆ, ತಂತ್ರಜ್ಞಾನ, ಮಾಧ್ಯಮ ಮತ್ತು ಚಿಲ್ಲರೆ ವ್ಯಾಪಾರ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಕಾರ್ಯ ನಿರ್ವಹಿಸುವ ಮೂಲಕ ಅಂತಾರಾಷ್ಟ್ರೀಯ ಮಟ್ಟದ ಸಂಸ್ಥೆಯಾಗಿ ತುಂಬೆ ಗ್ರೂಪ್ ಬೆಳೆದಿದೆ. ಈ ಗ್ರೂಪ್ ನ ಪ್ರಮುಖ ಸಂಸ್ಥೆಗಳಲ್ಲಿ ಒಂದಾದ ʼಗಲ್ಫ್ ಮೆಡಿಕಲ್ ಯುನಿವರ್ಸಿಟಿʼ ಗಲ್ಫ್ ಪ್ರದೇಶದ ಖಾಸಗಿ ವೈದ್ಯಕೀಯ ವಿಶ್ವವಿದ್ಯಾಲಯವಾಗಿದೆ. ಇದು ಶಿಕ್ಷಣ, ಆರೋಗ್ಯ ಸೇವೆ ಮತ್ತು ಸಂಶೋಧನೆಯ ಕೇಂದ್ರವಾಗಿದೆ. ಈ ವಿಶ್ವವಿದ್ಯಾಲಯದಲ್ಲಿ ವೈದ್ಯಕೀಯ, ದಂತ ವೈದ್ಯಕೀಯ, ಮೆಡಿಕಲ್, ನರ್ಸಿಂಗ್, ಆರೋಗ್ಯ ರಕ್ಷಣೆಯಲ್ಲಿ ಕೃತಕ ಬುದ್ಧಿಮತ್ತೆ ಮತ್ತು ಪಶುವೈದ್ಯಕೀಯ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಶಿಕ್ಷಣ ಮತ್ತು ತರಬೇತಿಯನ್ನು ನೀಡುತ್ತಿದೆ. ʼಗಲ್ಫ್ ಮೆಡಿಕಲ್ ಯುನಿವರ್ಸಿಟಿʼ ಜೊತೆಯಾಗಿ ಕಾರ್ಯನಿರ್ವಹಿಸುತ್ತಿರುವ ತುಂಬೆ ಹೆಲ್ ಕೇರ್ ನೆಟ್ವರ್ಕ್ ಈ ಪ್ರದೇಶದ ಪ್ರಮುಖ ಖಾಸಗಿ ಆಸ್ಪತ್ರೆಗಳ ಜಾಲವಾಗಿದೆ. ಕಳೆದ 29 ವರ್ಷಗಳಲ್ಲಿ 175ಕ್ಕೂ ಹೆಚ್ಚು ದೇಶಗಳ ಸುಮಾರು 1.6 ಕೋಟಿಗೂ ಹೆಚ್ಚು ರೋಗಿಗಳಿಗೆ ಚಿಕಿತ್ಸೆ ನೀಡಲಾಗಿದ್ದು, 1 ಲಕ್ಷಕ್ಕೂ ಹೆಚ್ಚು ಹೆರಿಗೆ ನಡೆದಿದೆ. ಸಂಶೋಧನೆಗೆ ಉತ್ತೇಜನ ನೀಡುವ ಉದ್ದೇಶದಿಂದ ತುಂಬೆ ಇಂಟರ್ ನ್ಯಾಷನಲ್ ರಿಸರ್ಚ್ ಗ್ರ್ಯಾಂಟ್ (Thumbay International Research Grant) ಯೋಜನೆಯಡಿ ವರ್ಷಕ್ಕೆ 3 ಮಿಲಿಯನ್ ದಿರ್ಹಮ್ ಅನುದಾನ ನೀಡಲಾಗುತ್ತಿದೆ. ಶೀಘ್ರದಲ್ಲೇ ಆರಂಭವಾಗಲಿರುವ ತುಂಬೆ ಇಂಟರ್ ನ್ಯಾಷನಲ್ ರಿಸರ್ಚ್ ಸೆಂಟರ್ ಹೊಸ ಸಂಶೋಧನೆ ಮತ್ತು ಆವಿಷ್ಕಾರಗಳಿಗೆ ಉತ್ತೇಜನ ನೀಡಲಿದೆ. ಆರೋಗ್ಯ ರಕ್ಷಣೆ ಮತ್ತು ಶಿಕ್ಷಣದ ಹೊರತಾಗಿ, ತುಂಬೆ ಗ್ರೂಪ್ ಉದ್ಯಮಗಳು, ರೆಸ್ಟೋರೆಂಟ್ ಗಳು ಮತ್ತು ಫಿಟ್ನೆಸ್ ಕೇಂದ್ರಗಳನ್ನು ಮುನ್ನಡೆಸುತ್ತಿದೆ. ಇದಲ್ಲದೆ ಹೆಲ್ತ್ ಮ್ಯಾಗಝೀನ್ ಬಿಡುಗಡೆ ಮಾಡುತ್ತಿದೆ. ಚಿಲ್ಲರೆ ಮಾರಾಟ ಮಳಿಗೆಗಳು ಸೇರಿದಂತೆ ಹಲವಾರು ವ್ಯವಹಾರಗಳನ್ನು ನಡೆಸುತ್ತಿದೆ. ಪ್ರಸ್ತುತ ತುಂಬೆ ಗ್ರೂಪ್ 7 ಅಕಾಡೆಮಿಕ್ ಮತ್ತು ಸ್ಪೆಷಾಲಿಟಿ ಆಸ್ಪತ್ರೆಗಳನ್ನು ನಡೆಸುತ್ತಿದ್ದು, ವೈದ್ಯಕೀಯ ಪ್ರವಾಸೋದ್ಯಮದ ಮೂಲಕ 87 ದೇಶಗಳಲ್ಲಿ ತನ್ನ ಪ್ರತಿನಿಧಿತ್ವವನ್ನು ಹೊಂದಿದೆ. ಇದಲ್ಲದೆ, ಕ್ಲಿನಿಕಲ್ ಸೇವೆಗಳು, ಶಿಕ್ಷಣ, ಸಂಶೋಧನೆ ಮತ್ತು ಡಿಜಿಟಲ್ ಆರೋಗ್ಯ ಉಪಕ್ರಮಗಳನ್ನು ಸಂಯೋಜಿಸುವ ಸಮಗ್ರ ಆರೋಗ್ಯ ರಕ್ಷಣಾ ತಾಣವಾಗಿ ದುಬೈನಲ್ಲಿ ತುಂಬೆ ಮೆಡಿಸಿಟಿ ಅಭಿವೃದ್ಧಿಯಾಗುತ್ತಿದೆ. ಈ ಸಂದರ್ಭದಲ್ಲಿ ಸಂಸ್ಥಾಪಕ ಅಧ್ಯಕ್ಷ ಡಾ. ತುಂಬೆ ಮೊಯ್ದೀನ್ ಮಾತನಾಡಿ, “ಶಿಕ್ಷಣ, ಆರೋಗ್ಯ ಸೇವೆ ಮತ್ತು ಸಂಶೋಧನೆಗಳ ಮೂಲಕ ಸಮಾಜವನ್ನು ರೂಪಿಸುವ ದೃಷ್ಟಿಯಿಂದ ನಮ್ಮ ಪಯಣ ಮುಂದುವರಿಯುತ್ತಿದೆ. ಯುಎಇ ಈ ಕನಸನ್ನು ಸಾಕಾರಗೊಳಿಸಲು ಅಗತ್ಯವಾದ ಅವಕಾಶಗಳನ್ನು ಒದಗಿಸಿದೆ ಎಂದು ಹೇಳಿದರು.
ಇರಾಕ್ ನಲ್ಲಿ ಪತನಗೊಂಡ ಅಮೆರಿಕದ KC 135 ವಿಮಾನದಲಿದ್ದ 6 ಸಿಬ್ಬಂದಿಯೂ ಮೃತ್ಯು: CENTCOM
ವಾಷಿಂಗ್ಟನ್, ಮಾ. 13: ಪಶ್ಚಿಮ ಇರಾಕ್ ನಲ್ಲಿ ಪತನಗೊಂಡ ಅಮೆರಿಕದ KC 135 ಇಂಧನ ತುಂಬುವ ಮಿಲಿಟರಿ ವಿಮಾನದಲ್ಲಿದ್ದ ಎಲ್ಲಾ ಆರು ಮಂದಿ ಸಿಬ್ಬಂದಿ ಸಾವನ್ನಪ್ಪಿರುವುದು ದೃಢಪಟ್ಟಿದೆ ಎಂದು ಅಮೆರಿಕದ ಸೆಂಟ್ರಲ್ ಕಮಾಂಡ್ (CENTCOM) ತಿಳಿಸಿದೆ. ‘ಎಕ್ಸ್’ನಲ್ಲಿ ಪ್ರಕಟಿಸಿದ ಪೋಸ್ಟ್ನಲ್ಲಿ, ಘಟನೆಯ ನಿಖರ ಸಂದರ್ಭಗಳ ಕುರಿತು ತನಿಖೆ ಮುಂದುವರಿದಿದೆ ಎಂದು CENTCOM ಹೇಳಿದೆ. ಆದರೆ ವಿಮಾನ ಪತನವು ‘ಪ್ರತಿಕೂಲ ಗುಂಡಿನ ದಾಳಿ ಅಥವಾ ಅದರ ಮಿತ್ರ ಪಡೆಗಳ ನಿಯಂತ್ರಣದಲ್ಲಿರುವ ವಾಯುಪ್ರದೇಶದಲ್ಲಿನ ಗುಂಡಿನ ದಾಳಿಯಿಂದಾಗಿ ಅಲ್ಲ’ ಎಂದು ಸ್ಪಷ್ಟಪಡಿಸಿದೆ. ಅಪಘಾತದಲ್ಲಿ ಸಾವನ್ನಪ್ಪಿದ ಸೇನಾ ಸಿಬ್ಬಂದಿಗಳ ಗುರುತುಗಳನ್ನು ಅವರ ಕುಟುಂಬಗಳಿಗೆ ಮಾಹಿತಿ ನೀಡಿದ 24 ಗಂಟೆಗಳ ಬಳಿಕ ಮಾತ್ರ ಸಾರ್ವಜನಿಕವಾಗಿ ಪ್ರಕಟಿಸಲಾಗುತ್ತದೆ ಎಂದು ತಿಳಿಸಿದೆ. ಇದಕ್ಕೂ ಮೊದಲು ಶುಕ್ರವಾರ ಮುಂಜಾನೆ ಅಮೆರಿಕ ಸೇನೆ ನೀಡಿದ್ದ ಪ್ರಾಥಮಿಕ ಮಾಹಿತಿಯಲ್ಲಿ ಅಪಘಾತದಲ್ಲಿ ನಾಲ್ವರು ಸಿಬ್ಬಂದಿ ಮೃತಪಟ್ಟಿದ್ದಾರೆ ಎಂದು ತಿಳಿಸಲಾಗಿತ್ತು. ಉಳಿದ ಇಬ್ಬರು ಕಾಣೆಯಾಗಿರುವ ಹಿನ್ನೆಲೆಯಲ್ಲಿ ಶೋಧ ಹಾಗೂ ರಕ್ಷಣಾ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಹೇಳಲಾಗಿತ್ತು. ಈಗ ವಿಮಾನದಲ್ಲಿದ್ದ ಎಲ್ಲಾ ಆರು ಮಂದಿ ಸಿಬ್ಬಂದಿ ಸಾವನ್ನಪ್ಪಿರುವುದು ದೃಢಪಟ್ಟಿದೆ.
ಹೊಸದಿಲ್ಲಿ, ಮಾ.13: ಇರಾನಿನ ಸರ್ವೋಚ್ಚ ನಾಯಕ ಆಯತೊಲ್ಲಾ ಅಲಿ ಖಾಮಿನೈ ಅವರ ಹತ್ಯೆ ಕುರಿತು ಮೌನ ವಹಿಸಿರುವುದಕ್ಕಾಗಿ ಕಾಂಗ್ರೆಸ್ ಪಕ್ಷವು ಶುಕ್ರವಾರ ಮೋದಿ ಸರಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದೆ. ‘ರಾಜಿ’ ಮಾಡಿಕೊಂಡಿರುವ ಪ್ರಧಾನಿ ತನ್ನ ಅಮೆರಿಕನ್ ಮತ್ತು ಇಸ್ರೇಲಿ ಸ್ನೇಹಿತರನ್ನು (ಟ್ರಂಪ್ ಮತ್ತು ನೆತನ್ಯಾಹು) ಅಸಮಾಧಾನಗೊಳಿಸಲು ಬಯಸುವುದಿಲ್ಲ ಎಂದು ಅದು ಕುಟುಕಿದೆ. ಕೊಲ್ಲಿ ದೇಶಗಳ ಮೇಲಿನ ಇರಾನ್ ದಾಳಿಯನ್ನು ಭಾರತವು ಸರಿಯಾಗಿಯೇ ಖಂಡಿಸಿದೆ, ಆದರೆ ಮುಖ್ಯವಾಗಿ ಇರಾನ್ ಮೇಲೆ ಅಮೆರಿಕ-ಇಸ್ರೇಲ್ ದಾಳಿ ಕುರಿತು ಸಂಪೂರ್ಣವಾಗಿ ಮೌನವಾಗಿದೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ (ಸಂವಹನ) ಜೈರಾಮ್ ರಮೇಶ್ ಅವರು ಎಕ್ಸ್ ಪೋಸ್ಟ್ನಲ್ಲಿ ಹೇಳಿದ್ದಾರೆ. ಅಮೆರಿಕ ಮತ್ತು ಇಸ್ರೇಲ್ ಫೆ.28, 2026ರಂದು ಖಾಮಿನೈ ಅವರನ್ನು ಹತ್ಯೆ ಮಾಡಿವೆ. ಪ್ರಧಾನಿ ಮೌನವಾಗಿದ್ದಾರೆ. ವಿದೇಶಾಂಗ ಸಚಿವರು ಮೌನವಾಗಿದ್ದಾರೆ. ಸಂಸತ್ತಿನಲ್ಲಿ ಇನ್ನೂ ಸಂತಾಪವನ್ನೂ ಸೂಚಿಸಿಲ್ಲ ಎಂದು ಹೇಳಿರುವ ರಮೇಶ್, ಇರಾನ್ ಈ ವರ್ಷ ಭಾರತವು ಅಧ್ಯಕ್ಷತೆಯನ್ನು ವಹಿಸಿರುವ ಬ್ರಿಕ್ಸ್+ ವೇದಿಕೆಯ ಸದಸ್ಯ ದೇಶವಾಗಿದೆ ಎಂದು ನೆನಪಿಸಿದ್ದಾರೆ. ಮೇ 2024ರಲ್ಲಿ ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿಯವರು ನಿಗೂಢ ಹೆಲಿಕಾಪ್ಟರ್ ಅಪಘಾತದಲ್ಲಿ ಮೃತಪಟ್ಟಿದ್ದರು. ಮೇ 21ರಂದು ಮೋದಿ ಸರಕಾರವು ಒಂದು ದಿನದ ಶೋಕಾಚರಣೆಗೆ ಆದೇಶಿಸಿತ್ತು ಮತ್ತು ಜು.1ರಂದು ಸಂಸತ್ತು ಸೇರಿದಾಗ ಅದು ಸಂತಾಪವನ್ನು ಸೂಚಿಸಿತ್ತು ಎಂದು ಹೇಳಿರುವ ರಮೇಶ್, ಈಗ ಹಿಂಜರಿಕೆ ಏಕೆ? ಪ್ರಧಾನಿ ತನ್ನ ಅಮೆರಿಕನ್ ಮತ್ತು ಇಸ್ರೇಲ್ ಸ್ನೇಹಿತರನ್ನು ಅಸಮಾಧಾನಗೊಳಿಸಲು ಬಯಸುವುದಿಲ್ಲ. ಹೀಗಾಗಿಯೇ ಅವರು ನುಣುಚಿಕೊಳ್ಳುತ್ತಿದ್ದಾರೆ ಎಂದಿದ್ದಾರೆ.
ಮಹಾರಾಷ್ಟ್ರ | LPG ಬಿಕ್ಕಟ್ಟಿನ ನಡುವೆ ವಂಚನೆ; ಸೈಬರ್ ಖದೀಮರ ತಂತ್ರಕ್ಕೆ 4 ಲಕ್ಷ ರೂ. ಕಳೆದುಕೊಂಡ ಇಬ್ಬರು ಮಹಿಳೆಯರು
ಹೊಸದಿಲ್ಲಿ, ಮಾ.13: ದೇಶಾದ್ಯಂತ LPG ಕೊರತೆಯನ್ನು ತಮ್ಮ ಲಾಭಕ್ಕೆ ಬಳಸಿಕೊಂಡ ಆನ್ಲೈನ್ ವಂಚಕರ ತಂತ್ರಕ್ಕೆ ಮಹಾರಾಷ್ಟ್ರದ ಕಲ್ಯಾಣ-ಡೊಂಬಿವಲಿ ಪ್ರದೇಶದ ಇಬ್ಬರು ಮಹಿಳೆಯರು ಬಲಿಯಾಗಿದ್ದಾರೆ. ಅನಿಲ ಮಾಹಿತಿಯ ನವೀಕರಣವನ್ನು ಪಡೆಯಲು ತಮ್ಮ ಫೋನ್ ಗಳಲ್ಲಿ ಫಾರಂ ಅನ್ನು ತುಂಬಿದ ಮಹಿಳೆಯರು ನಾಲ್ಕು ಲಕ್ಷ ರೂ.ಗಳನ್ನು ಕಳೆದುಕೊಂಡಿದ್ದಾರೆ. ಇಬ್ಬರು ಮಹಿಳೆಯರು ಅಪರಿಚಿತ ವ್ಯಕ್ತಿಯಿಂದ ಕರೆಯನ್ನು ಸ್ವೀಕರಿಸಿದ್ದರು. ತಾನು ಮಹಾನಗರ ಗ್ಯಾಸ್ ಲಿಮಿಟೆಡ್ ನಿಂದ ಮಾತನಾಡುತ್ತಿರುವುದಾಗಿ ಹೇಳಿಕೊಂಡಿದ್ದ ವ್ಯಕ್ತಿ ತಮ್ಮ ಫೋನ್ ಗಳಲ್ಲಿ ಫಾರಂ ಭರ್ತಿ ಮಾಡಲು ಎಪಿಕೆ ಫೈಲ್ ಒಂದನ್ನು ಡೌನ್ಲೋಡ್ ಮಾಡಿಕೊಂಡು ಅದನ್ನು ತೆರೆಯುವಂತೆ ಸೂಚಿಸಿದ್ದ. ಮಹಿಳೆಯರು ಫಾರಂ ತುಂಬಿದ ಬಳಿಕ ಅವರ ಬ್ಯಾಂಕ್ ಖಾತೆಗಳಿಂದ ಸುಮಾರು ನಾಲ್ಕು ಲಕ್ಷ ರೂ. ಮಾಯವಾಗಿದೆ ಎಂದು ಎಸಿಪಿ ಸುಹಾಶ ಹೆಮಾಡೆ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ. ಈ ಸಂಬಂಧ ಡೊಂಬಿವಲಿ ಪೊಲೀಸ್ ಠಾಣೆಯಲ್ಲಿ ಎರಡು ಆನ್ಲೈನ್ ಹಣಕಾಸು ವಂಚನೆ ಪ್ರಕರಣಗಳು ದಾಖಲಾಗಿವೆ ಎಂದರು. ಹಲವಾರು ನಗರಗಳು ಗೃಹಬಳಕೆ ಮತ್ತು ವಾಣಿಜ್ಯ LPG ಸಿಲಿಂಡರ್ ಗಳ ಕೊರತೆಯನ್ನು ಎದುರಿಸುತ್ತಿವೆ. ಇದರಿಂದಾಗಿ ಆತಂಕಗೊಂಡಿರುವ ಜನರು ಸಿಲಿಂಡರ್ ಖರೀದಿಗೆ ಮುಗಿಬೀಳುತ್ತಿದ್ದಾರೆ. ಹಲವೆಡೆಗಳಲ್ಲಿ ಜನರು ಸಿಲಿಂಡರ್ ಗಳನ್ನು ಸಂಗ್ರಹಿಸುತ್ತಿರುವುದೂ ವರದಿಯಾಗಿದೆ. ತೆಲಂಗಾಣದಲ್ಲಿಯೂ ಇಂತಹ ವಂಚನೆಯ ಘಟನೆಗಳು ಬೆಳಕಿಗೆ ಬಂದಿವೆ. ಗ್ಯಾಸ್ ಬುಕ್ಕಿಂಗ್ ಹೆಸರಿನಲ್ಲಿ ವಂಚನೆಯ ಕುರಿತು ಸಾರ್ವಜನಿಕರಿಗೆ ಎಚ್ಚರಿಕೆ ನೀಡಿರುವ ಹೈದ್ರಾಬಾದ್ ಪೊಲೀಸ್ ಆಯುಕ್ತ ವಿ.ಸಿ. ಸಜ್ಜನರ್ ಅವರು, ಸೈಬರ್ ಅಪರಾಧಿಗಳು ಈ ಬಿಕ್ಕಟ್ಟಿನ ಲಾಭವನ್ನು ಪಡೆದುಕೊಳ್ಳದಂತೆ ಜಾಗರೂಕರಾಗಿರುವಂತೆ ಸೂಚಿಸಿದ್ದಾರೆ. ವಂಚಕರು ಸಾಮಾಜಿಕ ಮಾಧ್ಯಮಗಳಲ್ಲಿ ನಕಲಿ ಜಾಹೀರಾತುಗಳನ್ನು ಪ್ರಸಾರ ಮಾಡುತ್ತಿದ್ದಾರೆ ಹಾಗೂ ತಕ್ಷಣವೇ ಸಿಲಿಂಡರ್ ಮತ್ತು ಹೆಚ್ಚುವರಿ ಸಿಲಿಂಡರ್ ಗಳ ವಿತರಣೆಯ ಭರವಸೆ ನೀಡುತ್ತಿದ್ದಾರೆ. ಜನರನ್ನು ತಮ್ಮ ಬಲೆಗೆ ಬೀಳಿಸಲು ವಾಟ್ಸ್ಆ್ಯಪ್ ಮತ್ತು ಎಸ್ಎಂಎಸ್ ಮೂಲಕ ನಕಲಿ ವೆಬ್ಸೈಟ್ ಗಳ ಲಿಂಕ್ಗಳನ್ನು ಕಳುಹಿಸುತ್ತಿದ್ದಾರೆ ಎಂದು ಅವರು ವಿವರಿಸಿದ್ದಾರೆ. ವಿಶೇಷವಾಗಿ, ಆನ್ಲೈನ್ನಲ್ಲಿ ಮೊದಲು ಹಣವನ್ನು ಪಾವತಿಸಿದರೆ LPG ಸಿಲಿಂಡರ್ ಗಳನ್ನು ತುರ್ತಾಗಿ ವಿತರಿಸುವುದಾಗಿ ತಿಳಿಸಿ ಸಂದೇಶಗಳು ಬಂದರೆ ಇದು ಖಂಡಿತವಾಗಿಯೂ ಸೈಬರ್ ವಂಚನೆ ಎನ್ನುವುದನ್ನು ಜನರು ಅರ್ಥ ಮಾಡಿಕೊಳ್ಳಬೇಕು. ಯಾವುದೇ ಸಂದರ್ಭದಲ್ಲಿಯೂ ಇಂತಹ ಸಂಶಯಾಸ್ಪದ ಲಿಂಕ್ಗಳನ್ನು ಕ್ಲಿಕ್ ಮಾಡಬಾರದು. ತಮ್ಮ ಬ್ಯಾಂಕ್ ಖಾತೆಗಳ ವಿವರಗಳು, ಒಟಿಪಿ, ಯುಪಿಐ ಪಿನ್ ಅಥವಾ ಅಂತಹ ಮಾಹಿತಿಗಳನ್ನು ಅಪರಿಚಿತ ವ್ಯಕ್ತಿಗಳೊಂದಿಗೆ ಹಂಚಿಕೊಳ್ಳಬಾರದು ಎಂದು ಸಜ್ಜನರ್ ಸಾಮಾಜಿಕ ಮಾಧ್ಯಮ ಪೋಸ್ಟ್ನಲ್ಲಿ ಎಚ್ಚರಿಕೆ ನೀಡಿದ್ದಾರೆ.
ಹರಪನಹಳ್ಳಿ | ಅರಸೀಕೆರೆ ಹೋಬಳಿ ಅಭಿವೃದ್ಧಿಗೆ ಆಗ್ರಹಿಸಿ ಪ್ರತಿಭಟನೆ
ಹರಪನಹಳ್ಳಿ : ಅರಸೀಕೆರೆ ಹೋಬಳಿಯ ಸಮಗ್ರ ಅಭಿವೃದ್ಧಿಗೆ ಆಗ್ರಹಿಸಿ ವಿವಿಧ ಪ್ರಗತಿಪರ ಸಂಘಟನೆಗಳು ಶುಕ್ರವಾರ ಅರಸೀಕೆರೆ ಬಸ್ ನಿಲ್ದಾಣದ ಎದುರು ಪ್ರತಿಭಟನೆ ನಡೆಸಿದವು. ತಾಲ್ಲೂಕಿನ ಅತಿದೊಡ್ಡ ಹಾಗೂ ಪ್ರತ್ಯೇಕ ತಾಲೂಕು ಕೇಂದ್ರದ ಅರ್ಹತೆ ಹೊಂದಿರುವ ಅರಸೀಕೆರೆ ಹೋಬಳಿ ಮೂಲಭೂತ ಸೌಕರ್ಯಗಳ ಕೊರತೆಯಿಂದ ನಲುಗುತ್ತಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು. ವಿವಿಧ ತಾಲ್ಲೂಕುಗಳಿಗೆ ಸಂಪರ್ಕ ಕಲ್ಪಿಸುವ ಅರಸೀಕೆರೆ ಗ್ರಾಮಕ್ಕೆ ಸುಸಜ್ಜಿತ ಬಸ್ ನಿಲ್ದಾಣ ಇಲ್ಲದಿರುವುದು ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ ಎಂದು ಅವರು ಹೇಳಿದರು. ಹೋಬಳಿ ವ್ಯಾಪ್ತಿಯಲ್ಲಿ 11 ಗ್ರಾಮ ಪಂಚಾಯಿತಿಗಳು ಸೇರಿದ್ದು, ಶಿಕ್ಷಣದ ದೃಷ್ಟಿಯಿಂದ ಪ್ರಮುಖ ಕೇಂದ್ರವಾಗಿದೆ. ಶಾಲೆ, ಪಿಯು ಹಾಗೂ ಪದವಿ ಕಾಲೇಜುಗಳಿದ್ದು, ನಿತ್ಯ ನೂರಾರು ವಿದ್ಯಾರ್ಥಿಗಳು ಆಗಮಿಸುತ್ತಾರೆ. ಆದರೆ ಬಾಲಕರಿಗೆ ಮಾತ್ರ ಒಂದು ವಸತಿ ನಿಲಯವಿದ್ದು, ಬಾಲಕಿಯರ ವಸತಿ ನಿಲಯದ ಕೊರತೆಯಿಂದ ವಿದ್ಯಾರ್ಥಿನಿಯರು ಶಿಕ್ಷಣವನ್ನು ಮಧ್ಯದಲ್ಲಿ ನಿಲ್ಲಿಸುವ ಪರಿಸ್ಥಿತಿ ಎದುರಿಸುತ್ತಿದ್ದಾರೆ ಎಂದು ದೂರಿದರು. ಹೋಬಳಿ ವ್ಯಾಪ್ತಿಯ ಬಹುತೇಕ ರಸ್ತೆಗಳು ಹದಗೆಟ್ಟಿದ್ದು, ಸಾರಿಗೆ ವ್ಯವಸ್ಥೆಯೂ ಸಮರ್ಪಕವಾಗಿಲ್ಲ. ನಾಲ್ಕು ವರ್ಷಗಳ ಹಿಂದೆ ಆರಂಭವಾದ ಉಚ್ಚಂಗಿದುರ್ಗ ಗ್ರಾಮದ ಬಸ್ ನಿಲ್ದಾಣ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ ಎಂದು ಆರೋಪಿಸಿದರು. ಅರಸೀಕೆರೆ ಸಮುದಾಯ ಆರೋಗ್ಯ ಕೇಂದ್ರದಲ್ಲಿ ವೈದ್ಯರು ಹಾಗೂ ಅಗತ್ಯ ಚಿಕಿತ್ಸಾ ಸೌಲಭ್ಯಗಳ ಕೊರತೆಯಿಂದ ರೋಗಿಗಳು ಪರದಾಡುತ್ತಿದ್ದಾರೆ. ಆಂಬ್ಯುಲೆನ್ಸ್ ಸೇವೆಯ ಕೊರತೆಯಿಂದ ಕೆಲವರು ಪ್ರಾಣ ಕಳೆದುಕೊಂಡ ಘಟನೆಗಳೂ ನಡೆದಿವೆ ಎಂದು ಹೇಳಿದರು. ಹೋಬಳಿ ವ್ಯಾಪ್ತಿಯಲ್ಲಿ ನೀರಿನ ಮೂಲಗಳ ಕೊರತೆಯಿಂದ ಜನರು ಸಂಕಷ್ಟ ಅನುಭವಿಸುತ್ತಿದ್ದು, ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ 105 ಗ್ರಾಮ ಕುಡಿಯುವ ನೀರಿನ ಯೋಜನೆಯನ್ನು ತ್ವರಿತವಾಗಿ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಈ ವೇಳೆ ವಿವಿಧ ಸಂಘಟನೆಗಳ ಪದಾಧಿಕಾರಿಗಳು, ವಿದ್ಯಾರ್ಥಿಗಳು ಸಮುದಾಯ ಆರೋಗ್ಯ ಕೇಂದ್ರದಿಂದ ಗಿಲ್ಲಿ ನಗರ ಸರ್ಕಲ್, ಪೊಲೀಸ್ ಠಾಣೆ ಮೂಲಕ ಗುಡಿಹಳ್ಳಿ ಸರ್ಕಲ್ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು. ಬಳಿಕ ನೂರಾರು ಪ್ರತಿಭಟನಾಕಾರರು ಮಾನವ ಸರಪಳಿ ನಿರ್ಮಿಸಿ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಕೆಲಕಾಲ ರಸ್ತೆ ತಡೆ ನಡೆಸಿದರು. ತಾಲ್ಲೂಕು ಕಾರ್ಯನಿರ್ವಾಹಕ ಅಧಿಕಾರಿ ಚಂದ್ರಶೇಖರ್, ಸಮಾಜ ಕಲ್ಯಾಣಾಧಿಕಾರಿ ಗಂಗಪ್ಪ, ತಾಲೂಕು ಆರೋಗ್ಯಾಧಿಕಾರಿ ಪೃಥ್ವಿ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಪ್ರತಿಭಟನಾಕಾರರಿಂದ ಮನವಿ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಅಖಿಲ ಭಾರತ ಕಿಸಾನ್ ಸಭಾದ ಜಿಲ್ಲಾಧ್ಯಕ್ಷ ಗುಡಿಹಳ್ಳಿ ಹಾಲೇಶ್, ಕಬ್ಬಳ್ಳಿ ಮೈಲಪ್ಪ, ಕಬ್ಬಳ್ಳಿ ಡಿ. ನಾಗರಾಜ್, ಬುದಿಹಾಳ್ ಸಿದ್ದಪ್ಪ, ಮಹಾದೇವಪ್ಪ, ಭೀಮಪ್ಪ, ನಿರ್ಮಲಾ ನಂದಿಹಳ್ಳಿ ಮಠ, ಚೂಟಿ ಪ್ರೇಮ, ನಾಗರಾಜ್ ಗೌಡ್ರು, ಎಬಿ ಮಲ್ಲನ ಗೌಡ್ರು, ರಮೇಶ್, ಮಂಜಪ್ಪ, ಮಾರುತಿ, ವಿಶಾಲಮ್ಮ, ರಂಗಪ್ಪ, ಹಾಲಪ್ಪ, ಡಿ. ಅರುಣ್ ಕುಮಾರ್, ಪ್ರಭುಗೌಡ ಸೇರಿದಂತೆ ಹಲವರು ಭಾಗವಹಿಸಿದ್ದರು.
ಸಚಿವ ಜಮೀರ್ ಅಹ್ಮದ್ ಖಾನ್ ಅವರ ಬಗ್ಗೆ ಎಸ್ ಎಸ್ ಮಲ್ಲಿಕಾರ್ಜುನ ಕೇವಲವಾಗಿ ಮಾತನಾಡಿದ್ದಾರೆ. ಬಾಗಿ ಬಿಗಿ ಇರಲಿ. ಸಚಿವ ಜಮೀರ್ ಅಹ್ಮದ್ ಖಾನ್ ರಾಜ್ಯಾದ್ಯಂತ ಪ್ರವಾಸ ಮಾಡಿ ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ಪಾತ್ರ ವಹಿಸಿದ್ದಾರೆ. ಅವರ ಬಗ್ಗೆ ಈ ರೀತಿ ಮಾತನಾಡುವುದು ಸರಿಯಲ್ಲ. ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಮುಸ್ಲಿಮರಿಗೆ ಟಿಕೆಟ್ ನೀಡಬೇಕು. ಸಿಎಂ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಅವರು ಈ ನಿಟ್ಟಿನಲ್ಲಿ ನಿರ್ಧಾರ ಕೈಗೊಳ್ಳುತ್ತಾರೆ ಎಂಬ ವಿಶ್ವಾಸ ನಮಗಿದೆ ಎಂದು ವಿಜಯ ಕರ್ನಾಟಕ ವೆಬ್ ಸಂದರ್ಶನದಲ್ಲಿ ಅಬ್ದುಲ್ ಜಬ್ಬಾರ್ ಹೇಳಿದ್ದಾರೆ.
ಒಂದು ಲಕ್ಷ ಕೋಟಿ ರೂಪಾಯಿ ಆರ್ಥಿಕ ಸ್ಥಿರತೆ ನಿಧಿ: ನಿರ್ಮಲಾ ಸೀತಾರಾಮನ್
ಹೊಸದಿಲ್ಲಿ, ಮಾ. 13: ಜಾಗತಿಕ ಸಂಕಷ್ಟದ ಸಮಯದಲ್ಲಿ ಭಾರತಕ್ಕೆ ಆರ್ಥಿಕವಾಗಿ ಚೇತರಿಸಿಕೊಳ್ಳಲು ಒಂದು ಲಕ್ಷ ಕೋಟಿ ರೂಪಾಯಿ ಆರ್ಥಿಕ ಸ್ಥಿರತೆ ನಿಧಿಯು ಸಹಾಯ ಮಾಡುತ್ತದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಶುಕ್ರವಾರ ಹೇಳಿದ್ದಾರೆ. ಲೋಕಸಭೆಯಲ್ಲಿ ಎರಡನೇ ಪೂರಕ ಅನುದಾನ ಬೇಡಿಕೆಗಳ ಕುರಿತ ಚರ್ಚೆಗೆ ಉತ್ತರಿಸಿದ ಸಚಿವೆ, ಈಗಿನ ಪಶ್ಚಿಮ ಏಶ್ಯ ಬಿಕ್ಕಟ್ಟಿನಂಥ ಅನೂಹ್ಯ ಜಾಗತಿಕ ಸವಾಲುಗಳಿಂದ ಉದ್ಭವಿಸುವ ಆಘಾತವನ್ನು ಹೀರಿಕೊಳ್ಳಲು ಈ ನಿಧಿಯು ಸಹಾಯ ಮಾಡುತ್ತದೆ ಎಂದು ಹೇಳಿದರು. ಎರಡನೇ ಪೂರಕ ಅನುದಾನ ಬೇಡಿಕೆಗಳ ಮೂಲಕ ಸರ್ಕಾರ ಹಾಲಿ ಹಣಕಾಸು ವರ್ಷದಲ್ಲಿ ಒಟ್ಟು 2.81 ಲಕ್ಷ ಕೋಟಿ ರೂ.ಹೆಚ್ಚುವರಿ ಖರ್ಚಿಗೆ ಲೋಕಸಭೆಯ ಅನುಮೋದನೆ ಕೋರಿದೆ. ಈ ಪೈಕಿ 80,000 ಕೋಟಿ ರೂ. ಮೊತ್ತವನ್ನು ಈಗಾಗಲೇ ಹೆಚ್ಚುವರಿ ಖರ್ಚಿಗಾಗಿ ಸ್ವೀಕರಿಸಲಾಗಿದೆ. ಹಾಲಿ ಹಣಕಾಸು ವರ್ಷ (2025–26)ದ ವಿತ್ತೀಯ ಕೊರತೆಯು ಪರಿಷ್ಕೃತ ಅಂದಾಜಿನ ವ್ಯಾಪ್ತಿಯಲ್ಲಿಯೇ ಇದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದರು. ಲೋಕಸಭೆಯು ನಿವ್ವಳ 2.01 ಲಕ್ಷ ಕೋಟಿ ರೂ. ಎರಡನೇ ಪೂರಕ ಅನುದಾನ ಬೇಡಿಕೆಗೆ ಅನುಮೋದನೆ ನೀಡಿತು. ಬಳಿಕ ಸದನವನ್ನು ದಿನದ ಮಟ್ಟಿಗೆ ಮುಂದೂಡಲಾಯಿತು.
ಅಡುಗೆ ಅನಿಲ ಪಡಿತರ ಆರಂಭ | ಹೊಸ ಸಿಲಿಂಡರ್ ಬುಕ್ ಮಾಡುವ ಅವಧಿ ಗ್ರಾಮೀಣಕ್ಕೆ 45, ನಗರಕ್ಕೆ 25 ದಿನಗಳಿಗೆ ವಿಸ್ತರಣೆ
ಸೀಮೆಎಣ್ಣೆ ಪೂರೈಕೆಗೆ ಕ್ರಮ: ಕೇಂದ್ರ ಸರ್ಕಾರ ಘೋಷಣೆ
ಬಳ್ಳಾರಿ | ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿ ಮಾಡಿದ ಸಂಸದ ಇ ತುಕಾರಾಂ
ಬಳ್ಳಾರಿ : ನಗರದ ಪ್ರಮುಖ ಸಮಸ್ಯೆಯಾಗಿರುವ ರಾಷ್ಟ್ರೀಯ ಹೆದ್ದಾರಿ–67 (NH-67) ರಸ್ತೆ ಸಂಚಾರ ದಟ್ಟಣೆ ಮತ್ತು ಮೂಲಭೂತ ಸೌಕರ್ಯ ಕೊರತೆಯನ್ನು ಶಾಶ್ವತವಾಗಿ ಪರಿಹರಿಸಲು ಪ್ರಸ್ತುತ ಎನ್ಎಚ್-67 ಬಳ್ಳಾರಿ ಬೈಪಾಸ್ನಿಂದ ಸುಧಾಕ್ರಾಸ್ ವರೆಗೆ ಇರುವ ರಸ್ತೆಯನ್ನು ಎರಡು ಲೇನ್ನಿಂದ ನಾಲ್ಕು ಲೇನ್ಗೆ ಅಭಿವೃದ್ಧಿಪಡಿಸಲು ಸುಮಾರು 90 ಕೋಟಿ ರೂ. ಅನುದಾನ ಮಂಜೂರು ಮಾಡುವಂತೆ ಸಂಸದ ಇ ತುಕಾರಾಂ ಅವರು ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಗೆ ಮನವಿ ಸಲ್ಲಿಸಿದ್ದಾರೆ. ಇದಲ್ಲದೆ ಗುಳ್ಯಾಮ್ ಸೇತುವೆ ನಿರ್ಮಾಣಕ್ಕಾಗಿ 60 ಕೋಟಿ ರೂ. ಅನುದಾನ ನೀಡುವಂತೆ ಸಹ ಮನವಿ ಮಾಡಲಾಗಿದೆ. ಸಂಸದರ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಕೇಂದ್ರ ಸಚಿವರು ಎನ್ಎಚ್-67 ಬಳ್ಳಾರಿ ಬೈಪಾಸ್ನಿಂದ ಸುಧಾಕ್ರಾಸ್ ವರೆಗೆ ಇರುವ ರಸ್ತೆಯನ್ನು ಎರಡು ಲೇನ್ನಿಂದ ನಾಲ್ಕು ಲೇನ್ಗೆ ಅಭಿವೃದ್ಧಿಪಡಿಸಲು ಶೀಘ್ರದಲ್ಲೇ ಅನುಮೋದನೆ ನೀಡುವುದಾಗಿ ತಿಳಿಸಿದ್ದಾರೆ. ಜೊತೆಗೆ ಗುಳ್ಯಾಮ್ ಸೇತುವೆ ನಿರ್ಮಾಣಕ್ಕೆ ಕೇಂದ್ರ ರಸ್ತೆ ಮತ್ತು ಮೂಲಸೌಕರ್ಯ ನಿಧಿ (CRIF) ಅಡಿಯಲ್ಲಿ ಅನುದಾನ ಒದಗಿಸಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ. ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳ ಕೈಗಾರಿಕಾ ಬೆಳವಣಿಗೆ, ರಾಜ್ಯಾಂತರ ಸಂಪರ್ಕ ಹಾಗೂ ಸಾರ್ವಜನಿಕರ ಸುರಕ್ಷತೆಗೆ ಈ ರಸ್ತೆ ಅತ್ಯಂತ ಮಹತ್ವದ್ದಾಗಿದ್ದು, ದಿನೇದಿನೇ ಹೆಚ್ಚುತ್ತಿರುವ ಟ್ರಾಫಿಕ್ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವ ಅಗತ್ಯವಿದೆ ಎಂದು ಮನವಿಯಲ್ಲಿ ವಿವರಿಸಲಾಗಿದೆ.
ದಾವಣಗೆರೆ ದಕ್ಷಿಣ, ಬಾಗಲಕೋಟೆ ಉಪ ಚುನಾವಣೆ ತಂತ್ರಗಾರಿಕೆಗೆ BJP ನಾಯಕರ 6 ತಂಡ ನೇಮಕ; ಮಾಜಿ CM, ಸಚಿವರ ನಿಯೋಜನೆ
ಮುಂಬರುವ ಉಪ ಚುನಾವಣೆ ಹಾಗೂ ವಿಧಾನಸಭಾ ಚುನಾವಣೆ ಗೆಲುವಿಗೆ ತಂತ್ರಗಾರಿಗೆ ರೂಪಿಸಲು ಬಿಜೆಪಿ ನಾಯಕರ ತಂಡ ರಚನೆ ಮಾಡಿದೆ. ಈ ತಂಡದಲ್ಲಿ ಮಾಜಿ ಸಿಎಂಗಳು, ಮಾಜಿ ಸಚಿವರು, ಶಾಸಕರು, ಮಾಜಿ ಶಾಸಕರು, ಸಂಸದರು ಇದ್ದಾರೆ. ಪ್ರಮುಖವಾಗಿ ದಾವಣಗೆರೆ ದಕ್ಷಿಣ, ಬಾಗಲಕೋಟೆ ಉಪ ಚುನಾವಣೆಯನ್ನು ಗುರಿಯಾಗಿಸಿಕೊಳ್ಳಲಾಗಿದೆ. ಯಾರಿಗೆಲ್ಲಾ ನಿಯೋಜನೆ ಮಾಡಲಾಗಿದೆ? ಈ ಬಗ್ಗೆ ಹೆಚ್ಚಿನ ವಿವರ ಇಲ್ಲಿದೆ.
ಉಡುಪಿ, ಮಾ.13: ಪೌಷ್ಠಿಕಾಂಶ ಕೊರತೆಯಿಂದ ಬಳಲುತ್ತಿರುವ ಮಕ್ಕಳಿಗೆ ವಿಶೇಷ ಆಹಾರ, ಚಿಕಿತ್ಸೆ ಮತ್ತು ಆರೈಕೆ ನೀಡಿ ಆರೋಗ್ಯವನ್ನು ಸುಧಾರಿಸುವ ಮಕ್ಕಳ ಪೌಷ್ಠಿಕಾಂಶ ಪುನರ್ವಸತಿ ಕೇಂದ್ರ(ಎನ್ಆರ್ಸಿ)ವೇ ಉಡುಪಿ ಜಿಲ್ಲಾ ಕೇಂದ್ರದಲ್ಲಿರು ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಇಲ್ಲದೆ ಇರುವುದು ಖೇಧಕರ ಎಂದು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಶಶಿಧರ್ ಕೋಸಂಬೆ ಹೇಳಿದ್ದಾರೆ. ಉಡುಪಿ ಕೂಸಮ್ಮ ಶಂಭು ಶೆಟ್ಟಿ ಹಾಜಿ ಅಬ್ದುಲ್ಲಾ ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ಶುಕ್ರವಾರ ಸದಸ್ಯರೊಂದಿಗೆ ದಿಢೀರ್ ಭೇಟಿ ನೀಡಿ ಆಸ್ಪತ್ರೆಯ ವಿಶೇಷ ನವಜಾತ ಶಿಶುಗಳ ಚಿಕಿತ್ಸಾ ಘಟಕ, ತಾಯಿ ಆರೈಕೆ ಕೇಂದ್ರಗಳಲ್ಲಿ ಪರಿಶೀಲನೆ ನಡೆಸಿದ ಬಳಿಕ ಅವರು ಮಾಧ್ಯಮದವರೊಂದಿಗೆ ಮಾತನಾಡುತಿದ್ದರು. ಪ್ರತಿ ಸಮುದಾಯ ಆರೋಗ್ಯ ಕೇಂದ್ರ, ತಾಲೂಕು ಆಸ್ಪತ್ರೆ ಹಾಗೂ ಜಿಲ್ಲಾ ಆಸ್ಪತ್ರೆ ಸೇರಿದಂತೆ ರಾಜ್ಯದ ಎಲ್ಲ ಕಡೆಗಳಲ್ಲಿಯೂ ಈ ಕೇಂದ್ರ ಇದೆ. ಆದರೆ ಉಡುಪಿಯ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಸರಕಾರದ ಸುಪರ್ದಿಗೆ ಬಂದು ನಾಲ್ಕು ವರ್ಷಗಳಾದರೂ ಇನ್ನೂ ಎನ್ಆರ್ಸಿಯನ್ನು ಆರಂಭಿಸಲು ಯಾವುದೇ ಕ್ರಮ ಕೈಗೊಂಡಿಲ್ಲ. ಇದು ಬಹಳ ಬೇಸರದ ಸಂಗತಿ. ಈ ಬಗ್ಗೆ ಜಿಲ್ಲಾಡಳಿತ, ಡಿಎಚ್ಓ, ಜಿಲ್ಲಾ ಸರ್ಜನ್ ಯಾವ ಕಾರಣಕ್ಕಾಗಿ ಇದನ್ನು ಇನ್ನೂ ಆರಂಭಿಸಿಲ್ಲ ಎಂಬುದರ ಬಗ್ಗೆ ಜಿಲ್ಲಾಡಳಿತದೊಂದಿಗೆ ಸಭೆಯಲ್ಲಿ ಚರ್ಚೆ ನಡೆಸಿ ಕ್ರಮ ಕೈಗೊಳ್ಳಲಾಗುವುದು ಎಂದರು. ದಾಖಲೆಗಳ ನಿರ್ವಹಣೆ ಇಲ್ಲ: ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ದಾಖಲೆಗಳ ಸರಿಯಾದ ನಿರ್ವಹಣೆ ಇಲ್ಲದ ಬಗ್ಗೆ ಆಯೋಗದ ಅಧ್ಯಕ್ಷರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಚಿಕಿತ್ಸೆ ಪಡೆಯುತ್ತಿರುವ ನವಜಾತ ಶಿಶುಗಳ ಕೇಸ್- ಶೀಟ್ ಗಳಲ್ಲಿ ಮಕ್ಕಳ ಹೆಸರು ಅಥವಾ ಅವರ ತಂದೆ-ತಾಯಿಗಳ ಹೆಸರು ನಮೂದಿಸದೇ ಇರುವುದು ಕಂಡುಬಂದ ಹಿನ್ನೆಲೆಯಲ್ಲಿ ಅವುಗಳ ನಿರ್ವಹಣೆಯನ್ನು ನಿಯಮಾ ನುಸಾರ ಮಾಡಬೇಕು ಎಂದು ಅಲ್ಲಿನ ವೈದ್ಯರುಗಳಿಗೆ ತಿಳಿಸಿದ ಅವರು, ಸರಿಯಾಗಿ ನಿರ್ವಹಿಸದೇ ಇರುವ ವೈದ್ಯಾಧಿಕಾರಿಗಳ ವಿರುದ್ಧ ಕ್ರಮವನ್ನು ಕೈಗೊಳ್ಳಲು ಸಹ ಜಿಲ್ಲಾ ಸರ್ಜನ್ಗೆ ಸೂಚಿಸಿದರು. ಯಾವುದೇ ಆಸ್ಪತ್ರೆಯಲ್ಲಿ ದಾಖಲಾಗುವ ಮಕ್ಕಳ, ಹೆಸರು, ತಂದೆತಾಯಿ ಹೆಸರು ದಾಖಲೆ ಮಾಡಿ ಬಳಿಕ ವೈದ್ಯಕೀಯ ಚಿಕಿತ್ಸೆ ನೀಡುವುದು ವ್ಯವಸ್ಥೆ. ಆದರೆ ಇಲ್ಲಿ ಕೇಸ್ ಶೀಟ್ ನೋಡಿದರೆ ಯಾವ ಮಗುವಿನ ಹೆಸರು, ತಂದೆ ತಾಯಿಯ ಹೆಸರು, ವಿಳಾಸ ಕೂಡ ಇಲ್ಲ. ಕೇವಲ ಹಿನ್ನೆಲೆಗಳನ್ನು ಮಾತ್ರ ಬರೆಯಲಾಗಿದೆ. ಇದರಿಂದ ಮಕ್ಕಳಿಗೆ ತಪ್ಪಾದ ಚಿಕಿತ್ಸೆ ನೀಡುವ ಸಾಧ್ಯತೆ ಹೆಚ್ಚು ಇರುತ್ತದೆ. ಅನಾವಶ್ಯಕವಾಗಿ ಆ ಮಗು ಅನಾರೋಗ್ಯಕ್ಕೆ ತುತ್ತಾಗಲಿದೆ. ಆದುದರಿಂದ ವೈದ್ಯರು ಈ ಬಗ್ಗೆ ಹೆಚ್ಚು ಮುತುವರ್ಜಿ ವಹಿಸಬೇಕು ಎಂದು ಅವರು ಸೂಚನೆ ನೀಡಿದರು. ಕೆಲವೊಂದು ಮಕ್ಕಳು ಡಿಸಾರ್ಚ್ ಆದರೂ ಅದನ್ನು ಕೂಡ ನಮೂದಿಸಿಲ್ಲ. ಇಲ್ಲಿ ಡಿಸಾರ್ಚ್ ಸೇರಿದಂತೆ ಯಾವುದೇ ದಾಖಲೆ ನಿರ್ವಹಣೆ ಇಲ್ಲ. ಪರಿಶೀಲನೆ ನಡೆಸಿದಾಗ ಈ ಕೊರತೆ ಎದ್ದು ಕಾಣುತ್ತದೆ ಎಂದು ಅವರು ತಿಳಿಸಿದರು. ಕೆಎಂಸಿ ಬಗ್ಗೆ ಮಾಹಿತಿ ಇಲ್ಲ: ಪ್ರತಿಯೊಂದು ಹಿಂದುಳಿದ ಪ್ರದೇಶ ಜಿಲ್ಲಾ ತಾಲೂಕು ಕೇಂದ್ರದಲ್ಲಿ ಕಂಗಾರು ತಾಯಿ ಆರೈಕೆ ಕೇಂದ್ರ(ಕೆಎಂಸಿ) ಎಂಬುದು ಇರುತ್ತದೆ. ಆದರೆ ಉಡುಪಿ ಆಸ್ಪತ್ರೆಯ ಅಧಿಕಾರಿಗಳಿಗೆ ಆ ಬಗ್ಗೆ ಮಾಹಿತಿ ಇಲ್ಲ ಎಂದು ಶಶಿಧರ್ ಕೋಸಂಬೆ ಕಳವಳ ವ್ಯಕ್ತಪಡಿಸಿದರು. ಬಾಣಂತಿಯರಿಗೆ ಎದೆ ಹಾಲು ಉಣಿಸುವ, ಯಾವ ಭಂಗಿಯಲ್ಲಿ ಹಾಲು ಉಣಿಸುವುದು ಸೇರಿದಂತೆ ಹಲವು ಮಾಹಿತಿ ಗಳನ್ನು ನೀಡಲಾಗುತ್ತದೆ. ಆದರೆ ವೈದ್ಯಾಧಿಕಾರಿಗಳಿಗೆ ಆ ವಾರ್ಡ್ ಕುರಿತು ಯಾವುದೇ ಕಲ್ಪನೆಯೇ ಇಲ್ಲ. ಆಸ್ಪತ್ರೆಯ ಮುಖ್ಯಸ್ಥರಿಗೆ ಈ ಬಗ್ಗೆ ಮಾಹಿತಿ ಕೊರತೆ ಇರುವುದು ತುಂಬಾ ಕಳವಳರಿಯಾಗಿದೆ. ಸರಕಾರ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದರೂ ಜನರಿಗೆ ಅದು ತಲುಪದೆ ಇರುವುದು ನೋವಿನ ಸಂಗತಿಯಾಗಿದೆ. ಈ ಬಗ್ಗೆ ಚರ್ಚೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಯೋಗ ಶಿಫಾರಸ್ಸು ಮಾಡುತ್ತದೆ ಎಂದು ಅವರು ಭರವಸೆ ನೀಡಿದರು. ಈ ಸಂದರ್ಭದಲ್ಲಿ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಡಾ. ತಿಪ್ಪೇಸ್ವಾಮಿ ಕೆ.ಟಿ., ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಬಸವರಾಜ ಹುಬ್ಬಳ್ಳಿ, ಜಿಲ್ಲಾ ಸರ್ಜನ್ ಡಾ.ಅಶೋಕ್, ವಾರ್ತಾಧಿಕಾರಿ ಮಂಜುನಾಥ್ ಬಿ., ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ನಾಗರತ್ನ ನಾಯಕ್, ಆರ್.ಸಿ.ಎಚ್. ಅಧಿಕಾರಿ ಜ್ಯೋತ್ಸ್ನಾ ಬಿ.ಕೆ., ನಿವಾಸಿ ವೈದ್ಯಾಧಿಕಾರಿ ವಾಸುದೇವ್ ಉಪಸ್ಥಿತರಿದ್ದರು. ತಕ್ಷಣ ಎನ್ಆರ್ಸಿ ಸ್ಥಾಪನೆಗೆ ಸೂಚನೆ! ಮಕ್ಕಳ ಪೌಷ್ಠಿಕಾಂಶ ಪುನರ್ವಸತಿ ಕೇಂದ್ರ(ಎನ್ಆರ್ಸಿ)ವನ್ನು ಉಡುಪಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ತಕ್ಷಣವೇ ಸ್ಥಾಪಿಸುವ ಕುರಿತು ಆಯೋಗದ ಅಧ್ಯಕ್ಷ ಶಶಿಧರ್ ಕೋಸಂಬೆ, ಎನ್ಆರ್ಸಿ ರಾಜ್ಯ ಡೆಪ್ಯುಟಿ ಮ್ಯಾನೇಜರ್ಗೆ ದೂರವಾಣಿ ಕರೆ ಮಾಡಿ ನಿರ್ದೇಶನ ನೀಡಿದರು. ಸಂಜೆಯೊಳಗೆ ಕುಂದಾಪುರದಲ್ಲಿದ್ದ ಎನ್ಆರ್ಸಿ ಘಟಕವನ್ನು ಉಡುಪಿಗೆ ಸ್ಥಳಾಂತರಿಸಬೇಕು. ತಾಲೂಕು ಕೇಂದ್ರ ಗಳಿಗೆ ಹೊಸದಾಗಿ ಎನ್ಆರ್ಸಿ ಘಟಕಗಳನ್ನು ಘೋಷಣೆ ಮಾಡಲಾಗಿದ್ದು, ಅದನ್ನು ಕುಂದಾಪುರಕ್ಕೆ ಒದಗಿಸಬೇಕು ಎಂದು ಅವರು ತಿಳಿಸಿದರು. ಜಿಲ್ಲಾ ಕೇಂದ್ರದಲ್ಲಿರುವ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಮಕ್ಕಳ ಪೌಷ್ಠಿಕ ಪುನಶ್ಚೇತನ ಕೇಂದ್ರ ಆರಂಭಿಸಲು ಆಯೋಗ ಕ್ರಮ ವಹಿಸಲಿದೆ ಎಂದು ಅವರು ಹೇಳಿದರು. ಸ್ಕ್ಯಾನಿಂಗ್ ಸೆಂಟರ್ಗೆ ಭೇಟಿ ಉಡುಪಿ ನಗರ ಆದರ್ಶ ಆಸ್ಪತ್ರೆಯ ಸ್ಕ್ಯಾನಿಂಗ್ ಸೆಂಟರ್ಗೆ ಭೇಟಿ ನೀಡಿದ ಶಶಿಧರ್ ಕೋಸಂಬೆ, ಅಲ್ಲಿನ ಕಡತ ಗಳು, ನಿಗದಿತ ನಮೂನೆಯ ರಿಜಿಸ್ಟರ್ಗಳ ನಿರ್ವಹಣೆ, ಸೂಚನಾ ಫಲಕಗಳ ಅಳವಡಿಕೆ, ಇತರೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿರುವುದರ ಬಗ್ಗೆ ಪರಿಶೀಲಿಸಿದರು. ಸರಕಾರದ ಮಾರ್ಗಸೂಚಿ ಅನ್ವಯ ದಾಖಲೆಗಳನ್ನು ನಿರ್ವಹಣೆ ಮಾಡಬೇಕು. ಗರ್ಭಿಣಿ ಮಹಿಳೆಯರಿಗೆ ಸ್ಕ್ಯಾನಿಂಗ್ ಮಾಡುವ ಮುನ್ನ ಸರಕಾರದ ಪೋರ್ಟಲ್ ಬಾಲಿಕಾ ಸಾಫ್ಟ್ವೇರ್ ನಲ್ಲಿ ಕಡ್ಡಾಯವಾಗಿ ನೋಂದಾಯಿಸಬೇಕು ಎಂದು ಅವರು ಸೂಚಿಸಿದರು. ಋನಂತರ ಬ್ರಹ್ಮಾವರ ಪೊಲೀಸ್ ಠಾಣೆ, ಹಂದಾಡಿಯ ಗ್ರಾಪಂ ಕಚೇರಿಗೆ ಅಲ್ಲಿನ ಶಾಲೆ ಹಾಗೂ ಅಂಗನವಾಡಿ ಕೇಂದ್ರಗಳಿಗೆ ಭೇಟಿ ನೀಡಿ, ಪರಿಶೀಲಿಸಿ ಮಾತನಾಡಿ, ಮಕ್ಕಳ ಸಹಾಯವಾಣಿ ಸಂಖ್ಯೆಯನ್ನು ಕಡ್ಡಾಯವಾಗಿ ಎಲ್ಲಾ ಕಚೇರಿಗಳಲ್ಲಿಯೂ ನಮೂದಿಸಬೇಕು. ಗ್ರಾಮ ಪಂಚಾಯತಿಗಳಲ್ಲಿ ಮಕ್ಕಳ ಗ್ರಾಮಸಭೆ, ಮಕ್ಕಳ ರಕ್ಷಣಾ ಸಮಿತಿ ಸಭೆ ಹಾಗೂ ಶಿಕ್ಷಣ ಕಾರ್ಯಪಡೆಯ ಸಭೆಯನ್ನು ಆಗಿಂದಾಗ್ಗೆ ನಡೆಸಬೇಕೆಂದರು.
ಹಾರ್ಮುಝ್ ಜಲಸಂಧಿಯಲ್ಲಿ ಮತ್ತೆ ಹಡಗಿನ ಮೇಲೆ ಕ್ಷಿಪಣಿ ದಾಳಿ
ಟೆಹ್ರಾನ್, ಮಾ. 13: ಹಾರ್ಮುಝ್ ಜಲಸಂಧಿ ಸಮೀಪದಲ್ಲಿ ಸಾಗುತ್ತಿದ್ದ ಹಡಗಿಗೆ ಕ್ಷಿಪಣಿ ದಾಳಿ ಮಾಡಿದ ಪರಿಣಾಮ ಹಡಗಿನಲ್ಲಿ ಬೆಂಕಿ ಕಾಣಿಸಿಕೊಂಡಿರುವ ಘಟನೆ ನಡೆದಿದೆ ಎಂದು ಯುನೈಟೆಡ್ ಕಿಂಗ್ ಡಮ್ ಮ್ಯಾರಿಟೈಮ್ ಟ್ರೇಡ್ ಆಪರೇಷನ್ಸ್ (UKMTO) ತಿಳಿಸಿದೆ ಎಂದು Aljazeera ವರದಿ ಮಾಡಿದೆ. ‘ಹಾರ್ಮುಝ್ ಜಲಸಂಧಿಯಲ್ಲಿ ಸಾಗುತ್ತಿದ್ದ ಹಡಗಿಗೆ ಅಜ್ಞಾತ ಕ್ಷಿಪಣಿ ದಾಳಿ ಮಾಡಿರುವ ಕುರಿತು ವರದಿ ಬಂದಿದೆ. ಇದರ ಪರಿಣಾಮವಾಗಿ ಹಡಗಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ,’ ಎಂದು UKMTO ಪ್ರಕಟನೆಯಲ್ಲಿ ತಿಳಿಸಿದೆ. ಇರಾನ್ ಪ್ರಮುಖ ಸಮುದ್ರ ಮಾರ್ಗವಾಗಿರುವ ಈ ಜಲಸಂಧಿಯನ್ನು ಮುಚ್ಚುವ ಕ್ರಮವನ್ನು ಮುಂದುವರಿಸುತ್ತಿರುವ ಹಿನ್ನೆಲೆಯಲ್ಲಿ, ಇತ್ತೀಚಿನ ದಿನಗಳಲ್ಲಿ ಈ ಪ್ರದೇಶದಲ್ಲಿ ಹಲವಾರು ಹಡಗುಗಳ ಮೇಲೆ ದಾಳಿಗಳು ನಡೆದಿರುವುದಾಗಿ ವರದಿಯಾಗಿದೆ. ಇದರ ಪರಿಣಾಮವಾಗಿ ಜಾಗತಿಕ ಮಾರುಕಟ್ಟೆಯಲ್ಲಿ ತೈಲದ ಬೆಲೆಗಳು ಗಗನಕ್ಕೇರಿವೆ. ಇದರ ನಡುವೆ, ಇರಾನ್ ನ ಸರ್ವೋಚ್ಚ ನಾಯಕನಾಗಿ ತಮ್ಮ ಮೊದಲ ಸಾರ್ವಜನಿಕ ಹೇಳಿಕೆಯಲ್ಲಿ ಮೊಜ್ತಾಬಾ ಖಾಮಿನೈ ಅವರು, ‘ಹಾರ್ಮುಝ್ ಜಲಸಂಧಿಯನ್ನು ಮುಚ್ಚುವ ತಂತ್ರವನ್ನು ಮುಂದುವರಿಸಬೇಕು,’ ಎಂದು ಹೇಳಿದ್ದಾರೆ.
ವಿಜಯನಗರ | ಹುಡೇಂ ಗ್ರಾಮದಲ್ಲಿ ಏಕಲವ್ಯ ಮಾದರಿ ವಸತಿ ಶಾಲೆ ಮಂಜೂರಿಗೆ ಸಂಸದ ತುಕಾರಾಂ ಮನವಿ
ವಿಜಯನಗರ (ಹೊಸಪೇಟೆ) : ಜಿಲ್ಲೆಯ ಕೂಡ್ಲಿಗಿ ತಾಲ್ಲೂಕಿನ ಹುಡೇಂ ಗ್ರಾಮದಲ್ಲಿ ಏಕಲವ್ಯ ಮಾದರಿ ವಸತಿ ಶಾಲೆ ಮಂಜೂರು ಮಾಡುವಂತೆ ಬಳ್ಳಾರಿ ಲೋಕಸಭಾ ಕ್ಷೇತ್ರದ ಸಂಸದ ಈ. ತುಕಾರಾಂ ಅವರು ಕೇಂದ್ರ ಬುಡಕಟ್ಟು ವ್ಯವಹಾರಗಳ ಸಚಿವ ಜುವೆಲ್ ಓರಾಮ್ ಅವರಿಗೆ ಮನವಿ ಸಲ್ಲಿಸಿದರು. ಕೂಡ್ಲಿಗಿ ತಾಲ್ಲೂಕು ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ಹಿಂದುಳಿದ ಪ್ರದೇಶವಾಗಿದ್ದು, ಇಲ್ಲಿ ವಸತಿ ಶಾಲೆ ಆರಂಭಿಸುವ ಅಗತ್ಯವಿದೆ. ಏಕಲವ್ಯ ಮಾದರಿ ವಸತಿ ಶಾಲೆ ಸ್ಥಾಪನೆಯಾದರೆ ಭವಿಷ್ಯದ ಪೀಳಿಗೆಗೆ ಉತ್ತಮ ಶೈಕ್ಷಣಿಕ ಅವಕಾಶಗಳು ದೊರೆತು ಪ್ರಗತಿ ಸಾಧಿಸಲು ಸಹಕಾರಿಯಾಗಲಿದೆ ಎಂದು ಅವರು ಮನವಿಯಲ್ಲಿ ವಿವರಿಸಿದ್ದಾರೆ. ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಸಚಿವರು ಶೀಘ್ರದಲ್ಲೇ ಅನುಮೋದನೆ ನೀಡುವ ಭರವಸೆ ನೀಡಿದ್ದಾರೆ. ಸಂಸದರ ಈ ಪ್ರಯತ್ನಕ್ಕೆ ಸ್ಥಳೀಯ ಮುಖಂಡರು, ಶಿಕ್ಷಣ ಪ್ರೇಮಿಗಳು ಹಾಗೂ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಆಸ್ಪತ್ರೆ, ವಿದ್ಯಾರ್ಥಿ ನಿಲಯಗಳಿಗೆ ವಾಣಿಜ್ಯ ಸಿಲಿಂಡರ್ ಪೂರೈಕೆ : ಕೆ.ಎಚ್.ಮುನಿಯಪ್ಪ
‘ಹೋಟೆಲ್ಗಳಿಗೆ ಒಂದು ವಾರ ವಾಣಿಜ್ಯ ಸಿಲಿಂಡರ್ಗಳ ಕೊರತೆ’

26 C