ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಇವಿಎಂ ಬದಲು ಮತಪತ್ರ ಬಳಕೆ; ವಿಧೇಯಕಕ್ಕೆ ರಾಜ್ಯಪಾಲರ ಅಂಕಿತ
ಬೆಂಗಳೂರು : ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಇವಿಎಂ ಬದಲಿಗೆ ಮತಪತ್ರ ಬಳಸುವ ಉದ್ದೇಶಕ್ಕಾಗಿ ರಾಜ್ಯ ಸರಕಾರ ರೂಪಿಸಿದ್ದ ವಿದೇಯಕಕ್ಕೆ ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ಅವರು ಅಂಕಿತ ಹಾಕಿದ್ದಾರೆ. 2026ನೆ ಸಾಲಿನ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್(ತಿದ್ದುಪಡಿ) ವಿಧೇಯಕಕ್ಕೆ ವಿಧಾನಮಂಡಲ ಅನುಮೋದನೆ ನೀಡಿತ್ತು. ರಾಜ್ಯಪಾಲರ ಅಂಕಿತದೊಂದಿಗೆ ಇದು ಕಾಯ್ದೆಯಾಗಲಿದ್ದು, ಮುಂದಿನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮತಪತ್ರ ಬಳಕೆಗೆ ಅನುಕೂಲವಾಗಲಿದೆ.
ಇಸ್ಲಾಂ ಧಾರ್ಮಿಕ ಸೌಹಾರ್ದತೆ, ಸಹಬಾಳ್ವೆಯನ್ನು ಬೋಧಿಸಿದೆ: ಜಿಫ್ರಿ ಮುತ್ತುಕೋಯ ತಂಙಳ್
ಮಂಗಳೂರು, ಎ. 15: ಧಾರ್ಮಿಕ ಸೌಹಾರ್ದತೆಯಿಂದ ಹಾಗೂ ಸರ್ವಧರ್ಮೀಯರೊಂದಿಗೆ ಸಹಬಾಳ್ವೆಯಿಂದ ವರ್ತಿಸಬೇಕು ಎಂದು ಸಮಸ್ತ ಕೇರಳ ಜಂಇಯ್ಯತುಲ್ ಉಲಮಾದ ಅಧ್ಯಕ್ಷ ಸಯ್ಯಿದುಲ್ ಉಲಮಾ ಜಿಫ್ರಿ ಮುತ್ತು ಕೋಯ ತಂಙಳ್ ಅಭಿಪ್ರಾಯಪಟ್ಟಿದ್ದಾರೆ. ಕರ್ನಾಟಕ-ಕೇರಳ ಗಡಿ ಪ್ರದೇಶದಲ್ಲಿರುವ ಅಡ್ಕಸ್ಥಳದಲ್ಲಿ ಮಂಗಳವಾರ ರಾತ್ರಿ ಬಹು .ಮಶ್ಹೂರ್ ವಲಿಯುಲ್ಲಾಹಿ (ರ.ಅ) ದರ್ಗಾ ಶರೀಫ್ನ ನವೀಕೃತ ಕಟ್ಟಡದ ಲೋಕಾರ್ಪಣೆ ನೆರವೇರಿಸಿ ಮಾತನಾಡಿದರು. ಪ್ರವಾದಿಗಳು ಹಾಗೂ ಸಜ್ಜನರಾದ ಪೂರ್ವಿಕರ ಬದುಕು ಕೂಡಾ ಇಸ್ಲಾಂ ಧರ್ಮ ಬೋಧಿಸಿದಂತೆ ಇತ್ತು ಎಂದರು. ಮಹಾತ್ಮರನ್ನು ಗೌರವಿಸಬೇಕೆಂದು ಇಸ್ಲಾಮ್ ನಮಗೆ ಕಲಿಸಿ ಕೊಟ್ಟಿದೆ. ಮಹಾತ್ಮರ ಬದುಕು, ತ್ಯಾಗ ಮತ್ತು ಅವರ ಬದುಕಿನ ಸಂದೇಶಗಳನ್ನು ಎಲ್ಲರಿಗೂ ತಲುಪಿಸುವುದು ಅವರ ಹೆಸರಲ್ಲಿ ಉರೂಸ್ ಕಾರ್ಯಕ್ರಮದ ಆಯೋಜನೆ ಹಿಂದಿರುವ ಉದ್ದೇಶವಾಗಿದೆ ಎಂದು ನುಡಿದರು. ಉರೂಸ್ ಹಿನ್ನೆಲೆಯಲ್ಲಿ ಪ್ರವಚನ ಕಾರ್ಯಕ್ರಮಗಳನ್ನು ಆಯೋಜಿಸುವುದರ ಹಿಂದಿನ ಉದ್ದೇಶ ಜನರಿಗೆ ಸೌಹಾರ್ದದ ಸಂದೇಶ ಹಾಗೂ ಮಹಾತ್ಮರ ಬದುಕಿನ ಚರಿತ್ರೆಗಳನ್ನು ತಲುಪಿಸುವುದಾಗಿದೆ ಎಂದು ಹೇಳಿದರು. ಜಮಾಅತ್ ಕಮಿಟಿಯ ಗೌರವಾಧ್ಯಕ್ಷ ಮೀರ್ ಝಾಹಿದ್ ತಂಙಳ್ ಅಲ್ ಬುಖಾರಿ ಮಂಜೇಶ್ವರ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಅಸ್ಸಯ್ಯದ್ ಅಬ್ದುರ್ರಹ್ಮಾನ್ ಮಸೂದ್ ತಂಙಳ್ ಅಲ್ ಬುಖಾರಿ ಕೂರ, ಬೆದ್ರಂಪಳ್ಳ ನವಜೀವನ ವಿಶೇಷ ಶಾಲೆಯ ಅಸಿಸ್ಟೆಂಟ್ ಮ್ಯಾನೇಜರ್ ರೆ.ಫಾ.ಅಮಲ್ ಜೋಸ್, ಮಂಜೇಶ್ವರ ಶಾಸಕ ಎ.ಕೆ.ಎಂ.ಅಶ್ರಫ್ ಶುಭ ಹಾರೈಸಿದರು. ಕಾಸರಗೋಡು ಜಿ.ಪಂ ಸದಸ್ಯ ಸೋಮಶೇಖರ್ ಜೆ.ಎಸ್, ಎಣ್ಮಕಜೆ ಗ್ರಾ.ಪಂ ಸದಸ್ಯ ಐತಪ್ಪ ಕುಲಾಲ್ , ಅಡ್ಯನಡ್ಕ ಖತೀಬ್ ಮುಹಮ್ಮದ್ ಹಾರಿಸ್ ರಹ್ಮಾನಿ , ಉಕ್ಕುಡ ಮುದರ್ರಿಸ್ ಹಾಫಿಳ್ ಅಹ್ಮದ್ ಶೆರೀಫ್ ಕಾಮಿಲ್ ಸಖಾಫಿ ಶಾಫಿ ಅನ್ವರ್ ಪಾಲೆಕ್ಕಾಡ್, ಮಾಜಿ ಗ್ರಾಪಂ ಸದಸ್ಯ ಬಿ.ಎಸ್. ಗಾಂಬೀರ್, ಡಾ.ಶ್ರೀಪತಿ ಭಟ್ ಕಜಂಪಾಡಿ , ಅಡ್ಕಸ್ಥಳ ಸದರ್ ಮುಅಲ್ಲಿಂ ಮುಹಮ್ಮದ್ ಮದನಿ, ಮುಹಝ್ಝಿನ್ ಮುಝಮ್ಮಿಲ್ ಸ ಅದಿ , ಜಮಾಅತ್ ಕಮಿಟಿ ಉಪಾಧ್ಯಕ್ಷ ಆಮು ಎ ವೇದಿಕೆಯಲ್ಲಿ ಉಪಸ್ಥಿತರಿದ್ದರು. 8 ದಿನಗಳ ಧಾರ್ವಿಕ ಪ್ರವಚನ ಕಾರ್ಯಕ್ರಮದಲ್ಲಿ ಮೊದಲ ದಿನ 8 ಹಾಮಿದ್ ಯಾಸೀನ್ ಜೌಹರಿ ಅಲ್ ಮದನಿ ಕೊಲ್ಲಂ ಪ್ರವಚನ ನೀಡಿದರು. ಅಡ್ಕಸ್ಥಳ ಬದ್ರಿಯಾ ಜುಮಾ ಮಸ್ಜಿದ್ ಜಮಾಅತ್ ಕಮಿಟಿಯ ಅಧ್ಯಕ್ಷ ಸಿಎ. ಅಬ್ದುಲ್ಲ ಮಾದುಮೂಲೆ ಸ್ವಾಗತಿಸಿದರು. ಅಡ್ಕಸ್ಥಳ ಖತೀಬ್ ಹಾಫಿಳ್ ರಾಝಿಮ್ ಯಮಾನಿ ಪ್ರಾಸ್ತಾವಿಕವಾಗಿ ಮಾತನಾಡಿದರು. ನಿಝಾಮ್ ಅನ್ಸಾರಿ ಕಾರ್ಯಕ್ರಮ ನಿರೂಪಿಸಿದರು.
CBSE Result-2026| ಕಣಚೂರು ಪಬ್ಲಿಕ್ ಸ್ಕೂಲ್ಗೆ ಶೇ.100 ಫಲಿತಾಂಶ
ಕೊಣಾಜೆ: ದೇರಳಕಟ್ಟೆಯ ಕಣಚೂರು ಪಬ್ಲಿಕ್ ಸ್ಕೂಲ್ 2025–26ನೇ ಸಾಲಿನ ಸಿಬಿಎಸ್ಇ 10ನೇ ತರಗತಿ ಪರೀಕ್ಷೆಯಲ್ಲಿ ಶೇ.100 ಫಲಿತಾಂಶವನ್ನು ಸಾಧಿಸಿದೆ. ಒಟ್ಟು 70 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಎಲ್ಲಾ ವಿದ್ಯಾರ್ಥಿಗಳೂ ಉತ್ತೀರ್ಣರಾಗಿದ್ದಾರೆ. ಈ ಫಲಿತಾಂಶದಲ್ಲಿ 27 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ (ಪ್ರಥಮ ಶ್ರೇಣಿ ವಿಶಿಷ್ಟ), 31 ವಿದ್ಯಾರ್ಥಿಗಳು ಪ್ರಥಮ ಶ್ರೇಣಿ ಹಾಗೂ 12 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿ ಪಡೆದು ಗಮನಾರ್ಹ ಸಾಧನೆ ಮಾಡಿದ್ದಾರೆ. ಶಾಲೆಯ ಟಾಪರ್ಗಳಾಗಿ ಫಾತಿಮತ್ ಶಾರ್ಮಿನ್ ಎಂ.ಟಿ (93.2%), ಶಿಯಾ ಫಾತಿಮತ್ (90%) ಹಾಗೂ ಲಿಯಾ ಶಕೀನಾ (90%) ಅವರು ಅತ್ಯುತ್ತಮ ಸಾಧನೆ ಮಾಡಿದ್ದಾರೆ ಎಂದು ಪ್ರಕಟನೆ ತಿಳಿಸಿದೆ. ಈ ಅತ್ಯುತ್ತಮ ಸಾಧನೆಗೆ ಶಾಲಾ ಆಡಳಿತ ಮಂಡಳಿ, ಸಂಚಾಲಕರು, ಪ್ರಾಂಶುಪಾಲರು, ಶಿಕ್ಷಕ ಹಾಗೂ ಶಿಕ್ಷಕೇತರ ವೃಂದದವರು ಸಂತಸ ವ್ಯಕ್ತಪಡಿಸಿ ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ. ವಿದ್ಯಾರ್ಥಿಗಳ ಶ್ರಮ, ಶಿಕ್ಷಕರ ಮಾರ್ಗದರ್ಶನ ಹಾಗೂ ಪೋಷಕರ ಸಹಕಾರವೇ ಈ ಸಾಧನೆಗೆ ಕಾರಣವೆಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಕರ್ನಾಟಕದ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ EVM ರದ್ದು, ಬ್ಯಾಲೆಟ್ ಪೇಪರ್ ಮರುಜಾರಿ! ರಾಜ್ಯಪಾಲರು ಅಸ್ತು
ಗ್ರಾಮ ಪಂಚಾಯತಿ ಸೇರಿ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಇವಿಎಂ ರದ್ದುಗೊಳಿಸಿ ಬ್ಯಾಲೆಟ್ ಪೇಪರ್ ಮರುಜಾರಿಗೆ ತರಲು ರಾಜ್ಯಪಾಲರು ಅಸ್ತು ಎಂದಿದ್ದಾರೆ. ‘ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ (ತಿದ್ದುಪಡಿ) ವಿಧೇಯಕಕ್ಕೆ ಅಂಕಿತ ಹಾಕಿದ್ದಾರೆ. ಈ ಮೂಲಕ ಎಲ್ಲಾ ಸ್ಥಳೀಯ ಸಂಸ್ಥೆ ಚುನಾವಣೆಗಳಿಗೆ
ಕರುಳು ಹಿಂಡುವ ವಿಡಿಯೋ: ಸತ್ತ ಮರಿಯಾನೆಯ ಜೊತೆ ತಾಯಿ ಆನೆಯ ರೋಧನೆ
ದುಃಖ, ನೋವು, ಸಾವು, ಪ್ರೀತಿ ಕೇವಲ ಮನುಷ್ಯರಿಗೆ ಮಾತ್ರ ಸೀಮಿತವಲ್ಲ. ಪ್ರಾಣಿಗಳಿಗೂ ಈ ಎಲ್ಲಾ ಭಾವನೆಗಳು ಇರುತ್ತವೆ. ಅವುಗಳು ಕೂಡ ತಮ್ಮವರನ್ನು ಕಳೆದುಕೊಂಡಾಗ ಮನುಷ್ಯರಂತೆಯೇ ಕಣ್ಣೀರು ಹಾಕುತ್ತವೆ ಎಂಬುದಕ್ಕೆ ಸಾಕ್ಷಿಯಾದ ಅತ್ಯಂತ ಹೃದಯವಿದ್ರಾವಕ ವಿಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ. ಸತ್ತ ತನ್ನ ಮರಿಯನ್ನು ಹೇಗಾದರೂ ಮಾಡಿ ಎಬ್ಬಿಸಲೇಬೇಕು ಎಂದು ತಾಯಿ ಆನೆಯೊಂದು ನಡೆಸುವ
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ರಾಷ್ಟ್ರೀಯ, ರಾಜ್ಯ ಪ್ರಶಸ್ತಿ ಪ್ರಕಟ
► ʼಬಸವ ಪುರಸ್ಕಾರʼಕ್ಕೆ ಸಿದ್ದರಾಮ ಶರಣರು ಬೆಲ್ದಾಳ, ʼಮಹಾವೀರ ಪ್ರಶಸ್ತಿʼಗೆ ಭಾನುಕೀರ್ತಿ ಭಟ್ಟಾರಕ ಸ್ವಾಮೀಜಿ ಆಯ್ಕೆ► ಸಾಮಾಜಿಕ, ಸಾಂಸ್ಕೃತಿಕ ವಿಭಾಗದ ಪ್ರಶಸ್ತಿಗೆ ಡಾ.ಸಿದ್ದನಗೌಡ ಪಾಟೀಲ್ ಭಾಜನ
ಉಡುಪಿ, ಎ.15: ನಗರದ ಕಿನ್ನಿಮೂಲ್ಕಿ ಬಸ್ನಿಲ್ದಾಣದ ಬಳಿಯ ಕೈಗಾರಿಕಾ ಸಹಕಾರ ಸಂಘದ ಪ್ರಧಾನ ಕಛೇರಿಯ ಎರಡನೇ ಮಹಡಿಯ ಲ್ಲಿರುವ ಗ್ರೋಸ್ಪೈರ್ ಗ್ರೂಪ್ ಇಲ್ಲಿ ಎ.17ರಂದು ಬೆಳಗ್ಗೆ 10:30ಕ್ಕೆ ವಿವಿಧ ಹುದ್ದೆಗಳಿಗೆ ನೇರ ಸಂದರ್ಶನ ನಡೆಯಲಿದೆ. ಪಿಯುಸಿ, ಡಿಪ್ಲೋಮಾ ಮತ್ತು ಇತರೆ ಪದವಿ ವಿದ್ಯಾರ್ಹತೆಯೊಂದಿಗೆ ಉತ್ತೀರ್ಣರಾದ ಅಭ್ಯರ್ಥಿಗಳು ತಮ್ಮ ಅಂಕಪಟ್ಟಿ, ಸ್ವವಿವರವುಳ್ಳ ರೆಸ್ಯೂಮ್/ಸಿವಿ ಹಾಗೂ ಆಧಾರ್ ಕಾರ್ಡ್ ಪ್ರತಿಯೊಂದಿಗೆ ನೇರ ಸಂದರ್ಶನದಲ್ಲಿ ಭಾಗವಹಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಉದ್ಯೋಗ ವಿನಿಮಯ ಕಛೇರಿ, ಜಿಲ್ಲಾಧಿಕಾರಿ ಸಂಕೀರ್ಣ, ರಜತಾದ್ರಿ ಮಣಿಪಾಲ ಉಡುಪಿ ಅಥವಾ ದೂರವಾಣಿ ಸಂಖ್ಯೆ: 8105618291, 9945856670 ಹಾಗೂ 9901472710 ಅನ್ನು ಸಂಪರ್ಕಿಸಬಹುದು ಎಂದು ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ಉದ್ಯೋಗಾಧಿಕಾರಿಗಳ ಪ್ರಕಟಣೆ ತಿಳಿಸಿದೆ.
ಉಡುಪಿ: ಎ.16 ರಿಂದ ಮನೆಮನೆ ಜನಗಣತಿ
ಉಡುಪಿ, ಎ.15: ಭಾರತ ಜನಗಣತಿ-2027ಕ್ಕೆ ಸಂಬಂಧಿಸಿದಂತೆ ಸರಕಾರದ ಸುತ್ತೋಲೆಯಂತೆ ಉಡುಪಿ ನಗರಸಭಾ ವ್ಯಾಪ್ತಿಯಲ್ಲಿ ಎ.16 ರಿಂದ ಜನಗಣತಿ ಕಾರ್ಯ ಆರಂಭಗೊಳ್ಳಲಿದೆ. ಈ ಜನಗಣತಿ ಕಾರ್ಯದಲ್ಲಿ ಪಾಲ್ಗೊಳ್ಳುವ ಆಶಾ ಕಾರ್ಯಕರ್ತರು, ಅಂಗನವಾಡಿ ಕಾರ್ಯಕರ್ತರು, ಶಾಲಾ ಶಿಕ್ಷಕ ವೃಂದದವರು ಮನೆ ಮನೆ ಭೇಟಿ ನೀಡಿ, ಮನೆಪಟ್ಟಿಯನ್ನು ಮಾಡಲಿದ್ದು, ಸಾರ್ವಜನಿಕರು ಜನಗಣತಿ ಕಾರ್ಯಕ್ಕೆ ಸಂಪೂರ್ಣ ಸಹಕಾರ ನೀಡುವಂತೆ ನಗರಸಭೆ ಪೌರಾಯುಕ್ತರ ಪ್ರಕಟಣೆ ತಿಳಿಸಿದೆ.
ದ್ವಿತೀಯ ಪಿಯುಸಿ ಪರೀಕ್ಷೆ-2: ನೋಂದಣಿಗೆ ಅವಕಾಶ
ಉಡುಪಿ, ಎ.15: 2026ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ-2ಕ್ಕೆ ನೋಂದಣಿಯನ್ನು ಈಗಾಗಲೇ ಪ್ರಾರಂಭಿಸಲಾಗಿದ್ದು, ಎ.17ರವರೆಗೆ ನೋಂದಣಿಗೆ ಅವಕಾಶ ಕಲ್ಪಿಸಲಾಗಿದೆ. 2026ರಲ್ಲಿ ರೆಗ್ಯೂಲರ್ ವಿದ್ಯಾರ್ಥಿಗಳಾಗಿ ನೋಂದಾಯಿಸಿಕೊಂಡು ಮತ್ತು ಮೊದಲನೇ ಪರೀಕ್ಷೆಯಲ್ಲಿ ಫಲಿತಾಂಶ ಪೂರ್ಣಗೊಳಿಸದ ವಿದ್ಯಾರ್ಥಿಗಳು ಯಾವುದೇ ಶುಲ್ಕ ಪಾವತಿಸದೇ ಆನ್ಲೈನ್ -http://tinyurl.com/mvp9k6es-ಲಿಂಕ್ ಮೂಲಕ ಅಥವಾ ಅಭ್ಯರ್ಥಿಗಳು ಸಂಬಂಧಿಸಿದ ಕಾಲೇಜಿನ ಪ್ರಾಂಶುಪಾಲರನ್ನು ಸಂಪರ್ಕಿಸಿ ಪಿಯು ಪರೀಕ್ಷಾ ಪೋರ್ಟಲ್ನಲ್ಲಿ ಪರೀಕ್ಷೆ-2ಕ್ಕೆ ನೋಂದಾಯಿಸಿಕೊಳ್ಳಬಹುದಾಗಿದೆ. ಜಿಲ್ಲೆಯ ಎಲ್ಲಾ ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲರು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿ ಪರೀಕ್ಷೆ-2ಕ್ಕೆ ನೋಂದಾಯಿಸುವಂತೆ ನೋಡಿಕೊಳ್ಳಬೇಕು.ಪರೀಕ್ಷೆಗೆ ನೋಂದಾಯಿಸಿಕೊಂಡ ವಿದ್ಯಾರ್ಥಿಗಳಿಗೆ ಪ್ರವೇಶಪತ್ರಗಳು ನಿಗದಿತ ಸಮಯದಲ್ಲಿ ಸಂಬಂಧಿಸಿದ ಕಾಲೇಜಿನ ಪ್ರಾಂಶುಪಾಲರ ಲಾಗಿನ್ನಲ್ಲಿ ಲಭ್ಯವಿರಲಿದೆ. ದ್ವಿತೀಯ ಪಿಯುಸಿ ಪರೀಕ್ಷೆ-2ರ ದಿನಾಂಕಗಳನ್ನು ಮರು ನಿಗದಿ ಪಡಿಸಲಾಗಿದೆ. ಪರೀಕ್ಷೆಗಳು ಎ.30ರಿಂದ ಪ್ರಾರಂಭವಾಗಲಿದ್ದು, ವಿದ್ಯಾರ್ಥಿ ಗಳು ಮಂಡಲಿಯ ಜಾಲತಾಣದ ಪಿಯುಸಿ ವಿದ್ಯಾರ್ಥಿ ಅಂಕಣದಲ್ಲಿ ಲಭ್ಯವಿರುವ ಮಾದರಿ ಪ್ರಶ್ನೆ ಪತ್ರಿಕೆಗಳ ಅನ್ವಯ ಪರೀಕ್ಷೆ-2ಕ್ಕೆ ಯಾವುದೇ ಆತಂಕಗಳಿಲ್ಲದೆ ಹಾಜರಾಗುವಂತೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಲಿಯ ಪ್ರಕಟಣೆ ತಿಳಿಸಿದೆ.
ಭಾರತೀಯರ ಹೃದಯಾಂತರಂಗದಲ್ಲಿ ಮೋದಿ ನೆಲೆಸಿರುವುದು ಏಕೆ : ಕಾರಣ ವಿವರಿಸಿದ ಕುಮಾರಸ್ವಾಮಿ
PM Modi Leadership : ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಶ್ರೀ ಭೈರವೈಕ್ಯ ಪರಮಪೂಜ್ಯ ಜಗದ್ಗುರುಗಳಾದ ಪದ್ಮಭೂಷಣ ಶ್ರೀ ಶ್ರೀ ಶ್ರೀ ಡಾ. ಬಾಲಗಂಗಾಧರನಾಥ ಮಹಾಸ್ವಾಮೀಜಿ ಅವರ ಶ್ರೀ ಗುರು ಭೈರವೈಕ್ಯ ಮಂದಿರವನ್ನು ರಾಷ್ಟ್ರದ ಜನಪ್ರಿಯ ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿಯವರು ಲೋಕಾರ್ಪಣೆ ಮಾಡಿದ ದಿವ್ಯಕ್ಷಣಕ್ಕೆ ಸಾಕ್ಷಿ ಆಗುವ ಭಾಗ್ಯ ನನ್ನದಾಯಿತು. ಮೋದಿಯವರ ಜನಪ್ರಿಯತೆಗೆ ಅವರ ಪರಿಶ್ರಮ, ಬದ್ದತೆ ಮೂಲ ಕಾರಣ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ತುಳು ಸಂಸ್ಕೃತಿಯ ಉಳಿವಿಗೆ ತುಳುವರ ಆಚರಣೆ, ನಂಬಿಕೆ ಕಾರಣ: ಡಾ.ಮಾಧವ
ತುಳುಕೂಟ ಬಿಸು ಪರ್ಬ
Virat Kohli: ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬುಧವಾರ (ಏಪ್ರಿಲ್ 15) ನಡೆಯುತ್ತಿರುವ ಐಪಿಎಲ್ 2026ರ 23ನೇ ಪಂದ್ಯದಲ್ಲಿ ಆರ್ಸಿಬಿ ಮತ್ತು ಎಲ್ಎಸ್ಜಿ ಮುಖಾಮುಖಿಯಾಗಿವೆ. ಆದರೆ, ವಿರಾಟ್ ಕೊಹ್ಲಿ ಅವರು ಆರಂಭಿಕ ಪಂದ್ಯದ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆದಿಲ್ಲ. ಬದಲಾಗಿ, ಅವರನ್ನು ಆರ್ಸಿಬಿ ತಂಡವು 'ಇಂಪ್ಯಾಕ್ಟ್ ಪ್ಲೇಯರ್' ಆಗಿದ್ದಾರೆ. ಐಪಿಎಲ್ ಇತಿಹಾಸದಲ್ಲಿ ಕೊಹ್ಲಿ ಅವರು ಇಂಪ್ಯಾಕ್ಟ್ ಪ್ಲೇಯರ್ ಆಗಿ
ʼರಾಷ್ಟ್ರೀಯ ಬಸವ ಪುರಸ್ಕಾರ'ಕ್ಕೆ ಡಾ.ಸಿದ್ಧರಾಮ ಬೆಲ್ದಾಳ್ ಶರಣರು ಆಯ್ಕೆ
ಬೀದರ್ : ರಾಜ್ಯ ಸರಕಾರದ 2025-26ನೇ ಸಾಲಿನ ರಾಷ್ಟ್ರೀಯ ಪ್ರಶಸ್ತಿ, ಸಾಮಾಜಿಕ ಮತ್ತು ಸಾಂಸ್ಕೃತಿಕ ಪ್ರಶಸ್ತಿ , ಸಾಹಿತ್ಯ ಹಾಗೂ ನಾಟಕ ಪ್ರಶಸ್ತಿ, ಕಲಾ ಪ್ರಶಸ್ತಿ ಮತ್ತು ಸಂಗೀತ ನೃತ್ಯ ವಿಭಾಗದ ಪ್ರಶಸ್ತಿಗಳಿಗೆ ಹಲವು ಸಾಧಕರನ್ನು ಆಯ್ಕೆ ಮಾಡಿ ರಾಜ್ಯ ಸರಕಾರ ಆದೇಶ ಹೊರಡಿಸಿದ್ದು, ಬಸವ ರಾಷ್ಟ್ರೀಯ ಪುರಸ್ಕಾರಕ್ಕೆ ಶರಣ ಡಾ.ಸಿದ್ದರಾಮ ಬೆಲ್ದಾಳ್ ಶರಣರು ಆಯ್ಕೆಯಾಗಿದ್ದಾರೆ. ಡಾ. ಬೆಲ್ದಾಳ ಶರಣರು ಬಸವಾದಿ ಶರಣರ ಹಲವಾರು ಪುಸ್ತಕಗಳು ಬರೆದಿದ್ದಾರೆ. ನಾಡಿನಲ್ಲಿ ಬಸವ ತತ್ವ ಸಿದ್ದಾಂತ ಅಧ್ಯಯನ ಮಾಡಿ ಸಾಹಿತ್ಯ ಬರೆದು ದೇಶದ ತುಂಬಾ ಪ್ರಚಾರ ಮಾಡುತ್ತಿರುವ ಬಸವ ಪ್ರೇಮಿಯಾಗಿದ್ದಾರೆ. ಕಳೆದ ವರ್ಷ ಅವರು ಬರೆದ 'ಸತ್ಯ ಶರಣರ ಸತ್ಯ ಶೋಧ' ಸುಮಾರು ಹದಿನೈದು ನೂರು ಪುಟದ ಪುಸ್ತಕವಾಗಿದೆ. ಶೀಘ್ರದಲ್ಲಿಯೇ ಮುಖ್ಯಮಂತ್ರಿಗಳಿಂದ ದಿನಾಂಕ ಪಡೆದು ಪ್ರಶಸ್ತಿ ಪ್ರಧಾನ ಸಮಾರಂಭವನ್ನು ಆಯೋಜನೆ ಮಾಡಲಾಗುವುದು ಎಂದು ಸಚಿವ ಶಿವರಾಜ ತಂಗಡಗಿ ಅವರು ಹೇಳಿದ್ದಾರೆ.
ಸಜೀಪ| ಹಲ್ಲೆ ಪ್ರಕರಣ: ಆರೋಪಿಗಳಿಗೆ ನಿರೀಕ್ಷಣಾ ಜಾಮೀನು ಮಂಜೂರು
ಮಂಗಳೂರು: ಬಂಟ್ವಾಳ ತಾಲೂಕಿನ ಸಜೀಪ ತಲೆಮಗುರು ಎಂಬಲ್ಲಿ ಮಸೀದಿ ವಿಚಾರದಲ್ಲಿ ಇತ್ತಂಡಗಳ ನಡುವೆ ಹೊಡೆದಾಟವಾಗಿ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಶೌಕತ್ ಅಲಿ, ಇಸಾಕ್, ಸಫೀಕ್, ಯಾಕುಬ್, ಮೊಹಮ್ಮದ್ ಮುಸ್ತಫಾ, ನಾಸಿರ್, ನಿಜಾಲ್ ಎಂಬವರ ವಿರುದ್ಧ ಕೊಲೆಯತ್ನ ಪ್ರಕರಣ ಹಾಗೂ ಯಾಕುಬ್, ಸಫೀಕ್, ಇಸಾಕ್, ಸಫ್ವಾನ್ ಹಾಗೂ ಅಶ್ರಫ್ ಸಾಹೇಬ್ ಎಂಬವರ ವಿರುದ್ಧ ಹಲ್ಲೆ ಪ್ರಕರಣ ದಾಖಲಾಗಿದೆ. ಇಂದು ಮಂಗಳೂರಿನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಎಲ್ಲಾ ಆರೋಪಿಗಳಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿ ಆದೇಶಿಸಿದೆ. ಆರೋಪಿತರ ಪರವಾಗಿ ಮಂಗಳೂರಿನ ಯುವ ನ್ಯಾಯವಾದಿ ಅನ್ಸಾರ್ ಮೂಲರಪಟ್ಣ, ಅನಸ್ ದಿಲ್ದಾರ್ ಹಾಗೂ ಕವಿತಾ ಮುರುಗೇಶ್ ವಾದ ಮಂಡಿಸಿದ್ದರು.
Bengaluru FC Vs East Bengal FC -ಕೋಲ್ಕತ್ತಾದಲ್ಲಿ ಗುರುವಾರ ನಡೆಯಲಿರುವ ಐಎಸ್ಎಲ್ ಪಂದ್ಯದಲ್ಲಿ ಬೆಂಗಳೂರು ಫುಟ್ಬಾಲ್ ಕ್ಲಬ್(BFC) ತಂಡ ಈಸ್ಟ್ ಬೆಂಗಾಲ್ ಎಫ್ಸಿಯನ್ನು ಎದುರಿಸಲಿದೆ. ಕೇರಳ ಬ್ಲಾಸ್ಟರ್ಸ್ ವಿರುದ್ಧದ ಸೋಲಿನಿಂದ ಹೊರಬಂದು ಮತ್ತೆ ಗೆಲುವಿನ ಹಾದಿಗೆ ಮರಳಲು ಬಿಎಫ್ಸಿ ಸಜ್ಜಾಗಿದೆ. ಇತ್ತ ಸತತ ನಾಲ್ಕು ಪಂದ್ಯಗಳಲ್ಲಿ ಅಜೇಯವಾಗಿರುವ ಈಸ್ಟ್ ಬೆಂಗಾಲ್ ಉತ್ತಮ ಲಯದಲ್ಲಿದೆ. ಪ್ರಮುಖ ಆಟಗಾರ ಬ್ರಿಯಾನ್ ಸ್ಯಾಂಚೆಜ್ ಅಮಾನತು ರದ್ದಾಗಿರುವುದು ಬೆಂಗಳೂರು ತಂಡಕ್ಕೆ ಆನೆಬಲ ನೀಡಿದೆ. ಉಭಯ ತಂಡಗಳ ಆಕ್ರಮಣಕಾರಿ ಆಟದ ನಡುವೆ ತೀವ್ರ ಪೈಪೋಟಿ ನಿರೀಕ್ಷಿಸಲಾಗಿದೆ.
ಅಬಕಾರಿ ನೀತಿ ಪ್ರಕರಣ| ಕೇಜ್ರಿವಾಲ್ ವಾದದ ವೀಡಿಯೊ ಸಾಮಾಜಿಕ ಜಾಲತಾಣಗಳಿಂದ ತೆಗೆದುಹಾಕುವಂತೆ ದಿಲ್ಲಿ ಹೈಕೋರ್ಟ್ ಸೂಚನೆ
ಹೊಸದಿಲ್ಲಿ,ಎ.15: ಅಬಕಾರಿ ನೀತಿ ಪ್ರಕರಣದಲ್ಲಿ ದಿಲ್ಲಿ ಮಾಜಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ನ್ಯಾ.ಸ್ವರಣಕಾಂತಾ ಶರ್ಮಾ ಅವರೆದುರು ವಾದಿಸುತ್ತಿರುವ ವೀಡಿಯೊ ರೆಕಾರ್ಡಿಂಗ್ಗಳನ್ನು ಸಾಮಾಜಿಕ ಜಾಲತಾಣಗಳಿಂದ ತೆಗೆದುಹಾಕುವಂತೆ ದಿಲ್ಲಿ ಉಚ್ಚ ನ್ಯಾಯಾಲಯವು ಪೊಲೀಸರಿಗೆ ಸೂಚಿಸಿದೆ. ಈ ಬೆಳವಣಿಗೆಯನ್ನು ಸುದ್ದಿಸಂಸ್ಥೆಗೆ ದೃಢಪಡಿಸಿದ ಹೈಕೋರ್ಟ್ ಅಧಿಕಾರಿಯೋರ್ವರು, ನ್ಯಾಯಾಲಯ ಕಲಾಪಗಳ ಅನಧಿಕೃತ ರೆಕಾರ್ಡಿಂಗ್ನ್ನು ಅನುಮತಿಸಲಾಗುವುದಿಲ್ಲ ಎಂದು ತಿಳಿಸಿದರು. ಆನ್ಲೈನ್ ವಿಚಾರಣೆಗಳ ಕುರಿತು ದಿಲ್ಲಿ ಹೈಕೋರ್ಟ್ ನಿಯಮಗಳು ನ್ಯಾಯಾಲಯದ ಕಲಾಪಗಳ ಚಿತ್ರೀಕರಣ ಮತ್ತು ವೀಡಿಯೊಗಳ ಪ್ರಕಟಣೆಯನ್ನು ನಿಷೇಧಿಸಿವೆ. ಅಂತಹ ವೀಡಿಯೊಗಳನ್ನು ರೆಕಾರ್ಡ್ ಮಾಡಿ ಆನ್ಲೈನ್ನಲ್ಲಿ ಹರಿಬಿಟ್ಟಿರುವವರ ವಿರುದ್ಧ ಕ್ರಮವನ್ನು ತೆಗೆದುಕೊಳ್ಳಲಾಗುವುದು ಎಂದು ಅಧಿಕಾರಿ ತಿಳಿಸಿದರು. ‘ಹೈಕೋರ್ಟ್ ಹಿಂದೆಯೂ ಇಂತಹ ಕ್ರಮಗಳನ್ನು ತೆಗೆದುಕೊಂಡಿದೆ ಮತ್ತು ಕೇಜ್ರಿವಾಲ್ ವೀಡಿಯೊ ಹೈಕೋರ್ಟ್ ಗಮನಕ್ಕೆ ತೆಗೆದುಕೊಂಡಿರುವ ವೀಡಿಯೊಗಳಲ್ಲಿ ಒಂದಾಗಿದೆ. ಇಂತಹ ಘಟನೆಗಳು ನಮ್ಮ ಗಮನಕ್ಕೆ ಬಂದಾಗ ಅವುಗಳನ್ನು ತೆಗೆದುಹಾಕುವಂತೆ ನಾವು ಕಾನೂನು ಜಾರಿ ಸಂಸ್ಥೆಗಳಿಗೆ ಲಿಖಿತ ಸೂಚನೆ ನೀಡುತ್ತೇವೆ ’ಎಂದರು. ಎ.13ರಂದು ದಿಲ್ಲಿಉಚ್ಚ ನ್ಯಾಯಾಲಯದಲ್ಲಿ ಖುದ್ದಾಗಿ ಹಾಜರಾಗಿದ್ದ ಕೇಜ್ರಿವಾಲ್ ದಿಲ್ಲಿ ಅಬಕಾರಿ ನೀತಿ ಪ್ರಕರಣದ ವಿಚಾರಣೆಯಿಂದ ನ್ಯಾ.ಶರ್ಮಾ ಅವರನ್ನು ಹಿಂದೆಗೆದುಕೊಳ್ಳುವಂತೆ ಕೋರಿ ತಾನು ಸಲ್ಲಿಸಿದ್ದ ಅರ್ಜಿಯ ಪರ ವಾದಿಸಿದ್ದರು. ಕೇಜ್ರಿವಾಲ್ ಒಂದೂ ಗಂಟೆಗೂ ಹೆಚ್ಚು ಸಮಯ ವಾದವನ್ನು ಮಂಡಿಸಿದ್ದರು. ವಿಚಾರಣೆ ಮುಗಿದ ಬೆನ್ನಿಗೇ ಅವರು ನ್ಯಾಯಾಲಯದಲ್ಲಿ ವಾದಿಸುತ್ತಿರುವ ವಿಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದವು.
ನಾಗರಮಠ ಸೀತಾನದಿಯಲ್ಲಿ ಅವೈಜ್ಞಾನಿಕ ಮರಳುಗಾರಿಕೆ| ಉಡುಪಿ ಡಿಸಿ ಕಚೇರಿ ಎದುರು ಎ.16ರಿಂದ ಸಂತ್ರಸ್ಥರಿಂದ ಧರಣಿ
ಉಡುಪಿ, ಎ.15: ಬ್ರಹ್ಮಾವರ ತಾಲೂಕು ಹೊಸಾಳ ಗ್ರಾಮ ನಾಗರಮಠದ ಸೀತಾನದಿಯಲ್ಲಿ ನಡೆಯುತ್ತಿರುವ ಅವೈಜ್ಞಾನಿಕ ಮರಳುಗಾರಿಕೆ ವಿರುದ್ಧ ಕಳೆದ ಮೂರು ದಿನಗಳಿಂದ ಮರಳುಗಾರಿಕೆ ಸ್ಥಳದಲ್ಲಿ ಪ್ರತಿಭಟನೆ ನಡೆಸುತಿದ್ದ ಸಂತ್ರಸ್ಥ ಕೃಷಿಕರು ಹಾಗೂ ಗ್ರಾಮಸ್ಥರು ನಾಳೆಯಿಂದ ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ಎದುರು ಉಗ್ರ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದಾರೆ. ಕಳೆದ ಎರಡು ವಾರಗಳಿಂದ ಜನರ ಪ್ರತಿಭಟನೆ ನಡುವೆ ಬಲವಾದ ಪೊಲೀಸ್ ಪಹರೆಯೊಂದಿಗೆ ಮರಳುಗಾರಿಕೆ ನಡೆಯುತಿದ್ದು, ಸತತ ಮೂರು ದಿನಗಳಿಂದ ನೂರಾರು ಗ್ರಾಮಸ್ಥರು ನಡೆಸಿದ ಪ್ರತಿಭಟನೆ ಯಾವುದೇ ಫಲ ನೀಡದ ಹಿನ್ನೆಲಯಲ್ಲಿ ಇದೀಗ ನಾಳೆಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಉಪವಾಸ ಸತ್ಯಾಗ್ರಹ ನಡೆಸಲು ನಿರ್ಧರಿಸಲಾ ಗಿದೆ ಎಂದು ಪ್ರತಿಭಟನೆಯ ನೇತೃತ್ವ ವಹಿಸಿರುವ ಚಂದ್ರ ಕಾಂಚನ್ ತಿಳಿಸಿದ್ದಾರೆ. ಅವೈಜ್ಞಾನಿಕ ಹಾಗೂ ಅಕ್ರಮ ಮರಳುಗಾರಿಕೆಗಾಗಿ ಜಿಲ್ಲಾಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾ ಕಾರರು ನಾಗರಮಠದಲ್ಲಿ ನಡೆಯುತ್ತಿರುವ ಅವೈಜ್ಞಾನಿಕ ಮರಳುಗಾರಿಕೆ ಬಗ್ಗೆ ಜಿಲ್ಲಾಡಳಿತದ ಗಮನಕ್ಕೆ ತಂದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಹೀಗಾಗಿ ಅಕ್ರಮ ಮರಳುಗಾರಿಕೆಯೊಂದಿಗೆ ಜಿಲ್ಲಾಡಳಿತ ಶಾಮೀಲಾಗಿರುವ ಶಂಕೆ ನಮಗಿದೆ ಎಂದು ಆರೋಪಿಸಿದರು. ಕೈಕೊಟ್ಟ ಶಾಸಕರು, ಸಂಸದರು:ಎ.13 ಮತ್ತು 14ರಂದು ಮರಳುಗಾರಿಕಾ ಸ್ಥಳದಲ್ಲಿ ಪ್ರತಿಭಟನೆ ನಡೆಸಿ 15ರಿಂದ ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ಎದುರು ಸಂತ್ರಸ್ಥ ಗ್ರಾಮಸ್ಥರೆಲ್ಲ ಸೇರಿ ಪ್ರತಿಭಟನೆ ನಡೆಸುವುದಾಗಿ ಈ ಮೊದಲೇ ಹೋರಾಟಗಾರರು ಘೋಷಿಸಿದ್ದರೂ, ಶಾಸಕರಾದ ಕಿರಣ್ ಕುಮಾರ್ ಕೊಡ್ಗಿ ಅವರು ನಿನ್ನೆ ಪ್ರತಿಭಟನ ಕಾರರೊಂದಿಗೆ ಮಾತನಾಡಿ, ತಾವು ಜಿಲ್ಲಾಧಿಕಾರಿಗಳೊಂದಿಗೆ ಖುದ್ದಾಗಿ ಭೇಟಿಯಾಗಿ ವಿಷಯದ ಬಗ್ಗೆ ಮಾತನಾಡು ವುದಾಗಿ ತಿಳಿಸಿದ್ದಲ್ಲದೇ, ಅವರ ಪ್ರತಿಕ್ರಿಯೆ ನೋಡಿ ಮುಂದುವರಿಯೋಣ. ಅವರು ಒಪ್ಪದಿದ್ದರೆ ನಾನೂ ನಿಮ್ಮೊಂದಿಗೆ ಧರಣಿಗೆ ಬರುವುದಾಗಿ ತಿಳಿಸಿದ್ದರು ಎಂದು ಚಂದ್ರ ಕಾಂಚನ್ ವಿವರಿಸಿದರು. ಈ ಹಿನ್ನೆಲೆಯಲ್ಲಿ ಇಂದಿನ ತಮ್ಮ ಮಣಿಪಾಲ ಪ್ರತಿಭಟನೆಯನ್ನು ಮುಂದೂಡಿ ನಾಗರಮಠದಲ್ಲೇ ಧರಣಿ ಮುಂದುವ ರಿಸಿ ಶಾಸಕರಿಗಾಗಿ ಕಾದಿದ್ದಾಗಿ ತಿಳಿಸಿದ ಚಂದ್ರ ಕಾಂಚನ್, ಆದರೆ ಕೊಟ್ಟ ಮಾತಿನಂತೆ ದಿನವಿಡೀ ಸ್ಥಳಕ್ಕೆ ಬಾರದ ಶಾಸಕರು, ದೂರವಾಣಿ ಮೂಲಕ ಸಂಪರ್ಕಿಸಲು ಸತತ ಪ್ರಯತ್ನ ನಡೆಸಿದರೂ ಕರೆ ಸ್ವೀಕರಿಸಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಶಾಸಕರಂತೆ, ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರೂ ಪ್ರಯತ್ನಿಸುವ ಭರವಸೆ ನೀಡಿದ್ದರೂ ಅವರಿಂದಲೂ ಯಾವುದೇ ಉತ್ತರ ಬಂದಿಲ್ಲ. ಹೀಗಾಗಿ ನಾವು ನಾಳೆಯಿಂದ ನಮ್ಮ ಉಗ್ರ ಹೋರಾಟ ಮುಂದುವರಿಸಲು ನಿರ್ಧರಿ ಸಿದ್ದಾಗಿ ಹೇಳಿದರು. ಜಿಲ್ಲಾಧಿಕಾರಿಗಳು 10 ದಿನಗಳ ಹಿಂದೆ ಶಾಸಕರು ಹಾಗೂ ಸಂಸದರ ನೇತೃತ್ವದಲ್ಲಿ ಸ್ಥಳೀಯರು ನೀಡಿದ ಮನವಿಗೆ ಯಾವುದೇ ಸ್ಪಂದನೆ ನೀಡಿಲ್ಲ ಎಂದು ಚಂದ್ರ ಕಾಂಚನ್ ತಿಳಿಸಿದರು. ನಾಗರಮಠದಲ್ಲಿ ನಡೆದ ಧರಣಿಯನ್ನುದ್ದೇಶಿಸಿ ಮಾತನಾಡಿದ ಹೋರಾಟಗಾರರು, ಇಲ್ಲಿ ಒಂದೂವರೆ ಲಕ್ಷಕ್ಕೂ ಅಧಿಕ ಮೆಟ್ರಿಕ್ ಟನ್ ಮರಳು ತೆಗೆಯಲು ಜಿಲ್ಲಾಡಳಿತ ಅನುಮತಿ ನೀಡಿದೆ. ಇಲ್ಲಿ ಲಭ್ಯವಿರುವ ಗರಿಷ್ಠ ಮರಳು 10 ಸಾವಿರ ಮೆಟ್ರಿಕ್ ಟನ್ ಮಾತ್ರ ಎಂದು ತಜ್ಞರು ವರದಿ ನೀಡಿದ್ದಾರೆ. ಹೀಗಾಗಿ ಗ್ರಾಮಸ್ಥರು ಅವೈಜ್ಞಾನಿಕ ಮರಳು ಗಾರಿಕೆಗೆ ವಿರೋಧ ವ್ಯಕ್ತಪಡಿಸಿದರೆ, ಪೊಲೀಸ್ ಇಲಾಖೆಯನ್ನು ಬಳಸಿಕೊಂಡು ಕೇಸು ದಾಖಲಿಸುತ್ತಾರೆ ಎಂದರು. ಅವೈಜ್ಞಾನಿಕ ಮರಳು ಗಣಿಗಾರಿಕೆಯಿಂದ ಕೃಷಿ ಭೂಮಿಗೆ ತೊಂದರೆ ಯಾಗುತ್ತಿದೆ. ಜಿಲ್ಲಾಧಿಕಾರಿಗೆ ದೂರು ನೀಡಿದರೂ ಪ್ರಯೋಜನವಾಗುತ್ತಿಲ್ಲ. ನೂರಾರು ದೋಣಿಗಳಿಂದ ಮರಳು ತೆಗೆಯಲಾಗುತ್ತಿದೆ. ಬಾವಿಯ ನೀರು ಕೂಡ ಉಪ್ಪಾಗುತ್ತಿದೆ’ ಎಂದು ಸಂತ್ರಸ್ಥೆ ಆಶಾ ದೂರಿದರು. ಮುಂದಿನ ದಿನಗಳಲ್ಲಿ ಜಿಲ್ಲಾಡಳಿತದ ಯಾವುದೇ ಬೆದರಿಕೆಗಳಿಗೂ ನಾವು ಬಗ್ಗದೇ ಕಾನೂನು ರೀತಿಯ ಹೋರಾಟ ಮಾಡುವುದಾಗಿ ಎಚ್ಚರಿಸಿದರು. ಪ್ರತಿಭಟನೆಯಲ್ಲಿ ಚಂದ್ರ ಕಾಂಚನ್, ಕೃಷ್ಣ ಬಂಗೇರಾ, ಗಿರಿಜಾ ರಂಗ ಮರಕಾಲ, ಆಶಾ ಸೇರಿದಂತೆ ಗ್ರಾಮಸ್ಥರು ಭಾಗವಹಿಸಿದ್ದರು.
ಹೋರಾಟಗಾರ್ತಿ ಕೆ.ನೀಲಾಗೆ ಅಕ್ಕಮಹಾದೇವಿ, ಸಿದ್ಧರಾಮ ಶರಣರಿಗೆ ಬಸವ ರಾಷ್ಟ್ರೀಯ ಪ್ರಶಸ್ತಿ
ಕಲಬುರಗಿ: ರಾಜ್ಯ ಸರಕಾರದ 2025-26ನೇ ಸಾಲಿನ ರಾಷ್ಟ್ರೀಯ ಪ್ರಶಸ್ತಿ, ಸಾಮಾಜಿಕ ಮತ್ತು ಸಾಂಸ್ಕೃತಿಕ ಪ್ರಶಸ್ತಿ , ಸಾಹಿತ್ಯ ಹಾಗೂ ನಾಟಕ ಪ್ರಶಸ್ತಿ, ಕಲಾ ಪ್ರಶಸ್ತಿ ಮತ್ತು ಸಂಗೀತ ನೃತ್ಯ ವಿಭಾಗದ ಪ್ರಶಸ್ತಿಗಳಿಗೆ ಹಲವು ಸಾಧಕರನ್ನು ಆಯ್ಕೆ ಮಾಡಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ. ಈ ಪೈಕಿ ಕಲಬುರಗಿ ಮೂಲದ ಹೋರಾಟಗಾರ್ತಿ ಕೆ.ನೀಲಾ ಅವರು ಅಕ್ಕಮಹಾದೇವಿ ಪ್ರಶಸ್ತಿಗೆ ಆಯ್ಕೆಯಾಗಿದ್ದರೆ, ಬೆಲ್ದಾಳದ ಸಿದ್ಧರಾಮ ಶರಣರು ಅವರು ಬಸವ ರಾಷ್ಟ್ರೀಯ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ. ಸಾಹಿತ್ಯ ಮತ್ತು ನಾಟಕ ವಿಭಾಗದಲ್ಲಿ ಬಳ್ಳಾರಿ ಜಿಲ್ಲೆಯ ಡಾ.ಸುಕನ್ಯಾ ಮಾರುತಿ ಅವರಿಗೆ ದಾನ ಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿ, ವಿಜಯಪುರದ ಅಲ್ಲಬಕ್ಷ್ ಮೀರಸಾಹೇಬ ಮಿರ್ಜಿ ಅವರಿಗೆ ಪ್ರೊ. ಕೆ.ಜಿ. ಕುಂದಣಗಾರ ಗಡಿನಾಡ ಸಾಹಿತ್ಯ ಪ್ರಶಸ್ತಿ, ಯಾದಗಿರಿ ಜಿಲ್ಲೆಯ ಬಿ.ಲಕ್ಷಣ ಅವರಿಗೆ ಜಾನಪದ ಶ್ರೀ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಅಕ್ರಮ ಹಣ ವರ್ಗಾವಣೆ ಪ್ರಕರಣ: ರಾಬರ್ಟ್ ವಾದ್ರಾಗೆ ದಿಲ್ಲಿ ನ್ಯಾಯಾಲಯ ಸಮನ್ಸ್
ಹೊಸದಿಲ್ಲಿ, ಎ. 15: ಹರ್ಯಾಣದ ಶಿಖೋಹಪುರದಲ್ಲಿ ಭೂಮಿ ವ್ಯಾಪಾರಕ್ಕೆ ಸಂಬಂಧಿಸಿದ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಪತಿ, ಉದ್ಯಮಿ ರಾಬರ್ಟ್ ವಾದ್ರಾ ಹಾಗೂ ಇತರರಿಗೆ ದಿಲ್ಲಿ ನ್ಯಾಯಾಲಯ ಬುಧವಾರ ಸಮನ್ಸ್ ಜಾರಿ ಮಾಡಿದೆ. ಜಾರಿ ನಿರ್ದೇಶನಾಲಯ (ಈಡಿ) ಸಲ್ಲಿಸಿದ ಪ್ರಾಸಿಕ್ಯೂಷನ್ ದೂರನ್ನು (ಆರೋಪ ಪಟ್ಟಿಗೆ ಸಮಾನ) ಗಮನಕ್ಕೆ ತೆಗೆದುಕೊಂಡು ರೌಸ್ ಅವೆನ್ಯೂ ನ್ಯಾಯಾಲಯ ಈ ಸಮನ್ಸ್ ಜಾರಿ ಮಾಡಿದೆ. ವಾದ್ರಾ ಹಾಗೂ ಇತರ 8 ಮಂದಿ ಆರೋಪಿಗಳು ಮೇ 16ರಂದು ಹಾಜರಾಗುವಂತೆ ನ್ಯಾಯಾಲಯ ಆದೇಶಿಸಿದೆ. ನ್ಯಾಯಾಲಯದ ಕಲಾಪದ ಸಂದರ್ಭ ವಾದ್ರಾ ಅವರ ಪರ ನ್ಯಾಯವಾದಿ ಈ ವಿಷಯದಲ್ಲಿ ಅವರ ವಿರುದ್ಧ ಯಾವುದೇ ಪ್ರಕರಣ ದಾಖಲಾಗಿಲ್ಲ. ಆದ್ದರಿಂದ ಪ್ರಾಸಿಕ್ಯೂಷನ್ ದೂರನ್ನು ಗಮನಕ್ಕೆ ತೆಗೆದುಕೊಳ್ಳದಂತೆ ನ್ಯಾಯಾಲಯವನ್ನು ಆಗ್ರಹಿಸಿದರು. ವಾದ್ರಾ, ಆಗಿನ ಹರ್ಯಾಣ ಮುಖ್ಯಮಂತ್ರಿ ಭೂಪಿಂದರ್ ಸಿಂಗ್ ಹೂಡಾ, ಮಾಜಿ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್, ರಿಯಲ್ ಎಸ್ಟೇಟ್ ದೈತ್ಯ ಡಿಎಲ್ಎಫ್ ಹಾಗೂ ಆಸ್ತಿ ಮಾರಾಟಗಾರರ ವಿರುದ್ಧ 2018 ಸೆಪ್ಟಂಬರ್ನಲ್ಲಿ ದಾಖಲಾದ ಎಫ್ಐಆರ್ ಜಾರಿ ನಿರ್ದೇಶನಾಲಯದ ಈ ಪ್ರಕರಣಕ್ಕೆ ಮೂಲ.
Vijayanagara | ಕಾರು ಮರಕ್ಕೆ ಢಿಕ್ಕಿ: ಸಿಪಿಐ ರಘುನಾಥ್ ಸ್ಥಳದಲ್ಲೇ ಮೃತ್ಯು
ವಿಜಯನಗರ/ಹೊಸಪೇಟೆ: ಕಾರು ನಿಯಂತ್ರಣ ತಪ್ಪಿ ಮರಕ್ಕೆ ಢಿಕ್ಕಿ ಹೊಡೆದ ಪರಿಣಾಮ ಡಿಸಿಆರ್ಇ ಘಟಕದ ಸಿಪಿಐ ರಘುನಾಥ್ ಅವರು ಸ್ಥಳದಲ್ಲೇ ಮೃತಪಟ್ಟ ಘಟನೆ ವಿಜಯನಗರ ಜಿಲ್ಲೆಯಲ್ಲಿ ನಡೆದಿದೆ. ವಿಜಯನಗರ ಮತ್ತು ಕೊಪ್ಪಳ ಜಿಲ್ಲೆಗಳ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯ (DCRE) ಘಟಕದಲ್ಲಿ ಸಿಪಿಐ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ರಘುನಾಥ್ ಅವರು, ಚಿತ್ರದುರ್ಗ ಜಿಲ್ಲೆಯ ತಮ್ಮ ಸ್ವಗ್ರಾಮದಿಂದ ಹೊಸಪೇಟೆ ಕಡೆಗೆ ಬರುತ್ತಿರುವ ವೇಳೆ ಅಪಘಾತಕ್ಕೊಳಗಾಗಿದ್ದಾರೆ. ವಿಜಯನಗರ–ದಾವಣಗೆರೆ ಗಡಿ ಭಾಗದ ಮುಸ್ಟೂರು ಮತ್ತು ಕಡಬನಕಟ್ಟೆ ಮಧ್ಯೆ ಅವರ ಕಾರು ನಿಯಂತ್ರಣ ತಪ್ಪಿ ರಸ್ತೆ ಬದಿಯ ಬೇವಿನ ಮರಕ್ಕೆ ಢಿಕ್ಕಿ ಹೊಡೆದಿದೆ ಎಂದು ತಿಳಿದು ಬಂದಿದೆ. ಢಿಕ್ಕಿಯ ತೀವ್ರತೆಗೆ ಕಾರು ಸಂಪೂರ್ಣ ಜಜ್ಜಿಹೋಗಿದ್ದು, ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಘಟನೆ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಗಮನಾರ್ಹವಾಗಿ, ರಘುನಾಥ್ ಅವರಿಗೆ ಇತ್ತೀಚೆಗೆ ಬೆಂಗಳೂರಿನ ಕೇಂದ್ರ ಕಚೇರಿಗೆ ವರ್ಗಾವಣೆಯ ಆದೇಶವಾಗಿದ್ದು, ಇನ್ನೂ ಹೊಸ ಹುದ್ದೆಗೆ ವರದಿ ಮಾಡಿಕೊಂಡಿರಲಿಲ್ಲ ಎನ್ನಲಾಗಿದೆ.
ದೇವನೂರು ಮಹಾದೇವ ಅವರಿಗೆ ʼಪಂಪ ಪ್ರಶಸ್ತಿʼ
ಎಸ್.ಜಿ.ಸಿದ್ದರಾಮಯ್ಯರಿಗೆ ʼಕಾಯಕಯೋಗಿ ಶ್ರೀ ಸಿದ್ಧರಾಮೇಶ್ವರ ಪ್ರಶಸ್ತಿʼ, ಕೆ.ನೀಲಾರಿಗೆ ʼಅಕ್ಕಮಹಾದೇವಿ ಪ್ರಶಸ್ತಿʼ
ಜಮ್ಮು-ಕಾಶ್ಮೀರ| ಸ್ವಘೋಷಿತ ಗೋರಕ್ಷಕರಿಗೆ ಹೆದರಿ ಹೊಳೆಗೆ ಹಾರಿದ ಯುವಕ: ಮುಂದುವರಿದ ಶೋಧ ಕಾರ್ಯಾಚರಣೆ
ಶ್ರೀನಗರ, ಎ. 15: ಸ್ವಘೋಷಿತ ಗೋರಕ್ಷಕರು ರವಿವಾರ ಬೆನ್ನಟ್ಟಿ ಹಲ್ಲೆ ನಡೆಸಿದ ಬಳಿಕ ಜಮ್ಮು ಹಾಗೂ ಕಾಶ್ಮೀರದ ರಾಂಬನ್ ಜಿಲ್ಲೆಯ ರಾಮ್ಸೂ ಪ್ರದೇಶದ ಶ್ರೀನಗರ-ಜಮ್ಮು ಹೆದ್ದಾರಿಯಲ್ಲಿರುವ ಹೊಳೆಗೆ ಹಾರಿ ನಾಪತ್ತೆಯಾದ ಯುವಕನ ಮೃತದೇಹ ಪತ್ತೆ ಹಚ್ಚಲು ನಡೆಸುತ್ತಿರುವ ಶೋಧ ಕಾರ್ಯಾಚರಣೆ ಬುಧವಾರ ಕೂಡ ಮುಂದುವರಿದಿದೆ. ಈ ಯುವಕನನ್ನು 28 ವರ್ಷದ ತನ್ವೀರ್ ಅಹ್ಮದ್ ಚೋಪನ್ ಎಂದು ಗುರುತಿಸಲಾಗಿದೆ. ಈತ ರಾಂಬನ್ ಜಿಲ್ಲೆಯ ಪೋಗಲ್ನ ಮುಂಡಖಲ್ ಗ್ರಾಮದ ನಿವಾಸಿ. ಈತ ರವಿವಾರ ಜಮ್ಮುವಿನಿಂದ ತನ್ನ ಗ್ರಾಮಕ್ಕೆ ಒಂದು ಹಾಲು ಕೊಡುವ ಹಸು ಹಾಗೂ ಎರಡು ಕರುಗಳನ್ನು ಸಾಗಿಸುತ್ತಿದ್ದ. ಈ ಸಂದರ್ಭ ನಕಲಿ ಗೋರಕ್ಷಕರು ಆತನನ್ನು ಬೆನ್ನಟ್ಟಿ ಹಲ್ಲೆ ನಡೆಸಿದ್ದಾರೆ. ಅವರಿಂದ ತಪ್ಪಿಸಿಕೊಳ್ಳಲು ಆತ ರಾಮ್ಸೂ ಪ್ರದೇಶದಲ್ಲಿರುವ ಹೊಳೆಗೆ ಹಾರಿದ್ದಾನೆ ಎಂದು ಹೇಳಲಾಗಿದೆ. ರಾಮ್ಸೂವಿನ ಮಾಕರ್ಕೋಟೆಯ ಸಮೀಪ ಹೊಳೆಯಲ್ಲಿ ಆತನ ಮೃತದೇಹವನ್ನು ಪತ್ತೆ ಹಚ್ಚಲು ರವಿವಾರದಿಂದ ಶೋಧ ಕಾರ್ಯಾಚರಣೆ ನಡೆಯುತ್ತಿದೆ. ಚೋಪನ್ನ ತಂದೆ ಜಮ್ಮು ಹಾಗೂ ಕಾಶ್ಮೀರ ಪೊಲೀಸ್ನಲ್ಲಿ ವಿಶೇಷ ಪೊಲೀಸ್ ಅಧಿಕಾರಿ (ಎಸ್ಪಿಒ) ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ತನ್ವೀರ್ ಮೃತದೇಹವನ್ನು ಪತ್ತೆ ಹಚ್ಚಲು ಎನ್ಡಿಆರ್ಎಫ್, ಎಸ್ಡಿಆರ್ಎಫ್, ಯುಡಿಆರ್ಎಫ್, ಪೊಲೀಸ್, ಕ್ಯುಆರ್ಟಿ, ನಾಗರಿಕ ಆಡಳಿತದ ಸಿಬ್ಬಂದಿ ಹಾಗೂ ಸ್ಥಳೀಯ ಸ್ವಯಂಸೇವಕರು ಶೋಧ ಕಾರ್ಯಾಚರಣೆಯನ್ನು ನಾಲ್ಕನೆಯ ದಿನವಾದ ಬುಧವಾರ ಕೂಡ ಮುಂದುವರಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಬಲವಾದ ನೀರಿನ ಪ್ರವಾಹ ಹಾಗೂ ನೀರಿನ ಆಳ ರಕ್ಷಣಾ ಪ್ರಯತ್ನಕ್ಕೆ ಅಡ್ಡಿ ಉಂಟು ಮಾಡುತ್ತಿದೆ. ಆದ್ದರಿಂದ ಮೃತದೇಹ ಇದುವರೆಗೆ ಪತ್ತೆಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮೃತದೇಹ ಪತ್ತೆಯಾಗುವವರೆಗೆ ಶೋಧ ಕಾರ್ಯಾಚರಣೆ ಮುಂದುವರಿಯಲಿದೆ ಎಂದು ರಾಂಬನ್ ಪೊಲೀಸ್ ಅಧೀಕ್ಷಕ ಅರುಣ್ ಗುಪ್ತಾ ತಿಳಿಸಿದ್ದಾರೆ.
ನೌಕರನ ಕುಟುಂಬಕ್ಕೆ ಅಪಘಾತ ಅಪಘಾತ 51 ಲಕ್ಷ ರೂ. ಹೆಚ್ಚಳ: ಕರ್ನಾಟಕ ಹೈಕೋರ್ಟ್ ಆದೇಶ
ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್ ಮಹತ್ವದ ಆದೇಶ ನೀಡಿದೆ. ಮೃತರ ಪರಿಹಾರ ಮೊತ್ತವನ್ನು 41 ಲಕ್ಷ ರೂಪಾಯಿಯಿಂದ 51 ಲಕ್ಷ ರೂಪಾಯಿಗೆ ಹೆಚ್ಚಳ ಮಾಡಿದೆ. ಈ ಮೂಲಕ ಮೃತ ನೌಕರರ ಕುಟುಂಬಕ್ಕೆ ಕೋರ್ಟ್ ನ್ಯಾಯ ಒದಗಿಸಿದೆ. ಏನಿದು ಪ್ರಕರಣ? ಹಿನ್ನೆಲೆ ಏನು? ವಿವರ ಇಲ್ಲಿದೆ.
ಲೆಬನಾನ್ ನಲ್ಲಿ ಶೀಘ್ರ ಕದನ ವಿರಾಮ ಸಾಧ್ಯತೆ: ಹಿಜ್ಬುಲ್ಲಾ ವಕ್ತಾರ
ಬೈರೂತ್, ಎ.15: ಲೆಬನಾನ್ ನಲ್ಲಿ ನಡೆಯುತ್ತಿರುವ ಸಂಘರ್ಷಕ್ಕೆ ಶೀಘ್ರದಲ್ಲೇ ಕದನ ವಿರಾಮ ಜಾರಿಯಾಗುವ ಸಾಧ್ಯತೆ ಇದೆ ಎಂದು ಹಿಜ್ಬುಲ್ಲಾ ಸಂಘಟನೆಯ ವಕ್ತಾರ ಹಾಗೂ ಸಂಸದ ಇಬ್ರಾಹಿಂ ಮೌಸಾವಿ ತಿಳಿಸಿದ್ದಾರೆ. ಇರಾನ್ ಹಾಗೂ ಪ್ರಾದೇಶಿಕ ಮಟ್ಟದಲ್ಲಿ ನಡೆಯುತ್ತಿರುವ ರಾಜತಾಂತ್ರಿಕ ಪ್ರಯತ್ನಗಳು ಈ ಪ್ರಕ್ರಿಯೆಗೆ ಕಾರಣವಾಗಬಹುದು ಎಂದು ಅವರು ಹೇಳಿದ್ದಾರೆ ಎಂದು ರಾಯಿಟರ್ಸ್ ಸುದ್ದಿ ಸಂಸ್ಥೆ ವರದಿ ಮಾಡಿದೆ. ಲೆಬನಾನ್ ನಲ್ಲಿ ಕದನ ವಿರಾಮಕ್ಕಾಗಿ ತೆರೆಮರೆಯಲ್ಲಿ ಚರ್ಚೆಗಳು ಮತ್ತು ಪ್ರಯತ್ನಗಳು ನಡೆಯುತ್ತಿವೆ ಎಂದು ಹೆಸರು ಬಹಿರಂಗಪಡಿಸದ ಇಬ್ಬರು ಹಿರಿಯ ಲೆಬನಾನ್ ಅಧಿಕಾರಿಗಳು ರಾಯಿಟರ್ಸ್ಗೆ ತಿಳಿಸಿದ್ದಾರೆ. ಆದರೆ, ಕದನ ವಿರಾಮ ಯಾವಾಗ ಪ್ರಾರಂಭವಾಗುತ್ತದೆ ಅಥವಾ ಅದು ಎಷ್ಟು ಕಾಲ ಮುಂದುವರಿಯುತ್ತದೆ ಎಂಬುದರ ಕುರಿತು ಇನ್ನೂ ಸ್ಪಷ್ಟ ಮಾಹಿತಿ ಲಭ್ಯವಿಲ್ಲವೆಂದು ಅವರು ಹೇಳಿದ್ದಾರೆ. ಇದಲ್ಲದೆ, ಲೆಬನಾನ್ ನಲ್ಲಿ ಜಾರಿಗೆ ಬರಬಹುದಾದ ಕದನ ವಿರಾಮದ ಅವಧಿ ಅಮೆರಿಕ–ಇರಾನ್ ನಡುವಿನ ಕದನ ವಿರಾಮದ ಅವಧಿಯೊಂದಿಗೆ ಸಂಬಂಧ ಹೊಂದಿರಬಹುದು ಎಂದು ಅಧಿಕಾರಿಗಳು ಹೇಳಿದ್ದಾರೆ.
ಅಕ್ರಮ ಕಲ್ಲು ಗಣಿಗಾರಿಕೆ ಆರೋಪ: ಇಬ್ಬರು ವಶಕ್ಕೆ
ಕಾರ್ಕಳ, ಎ.15: ಕುಕ್ಕುಂದೂರು ಗ್ರಾಮದ ಶಂಕರಬೆಟ್ಟು ಅರ್ಬಿಪಾದೆ ಎಂಬಲ್ಲಿ ನಡೆಯುತ್ತಿದ್ದ ಅಕ್ರಮ ಕಲ್ಲು ಗಣಿಗಾರಿಕೆಗೆ ಎ.15ರಂದು ಬೆಳಗ್ಗೆ ದಾಳಿ ನಡೆಸಿದ ಪೊಲೀಸರು, ಇಬ್ಬರನ್ನು ಬಂಧಿಸಿ, ಹಲವು ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಖಚಿತ ಮಾಹಿತಿಯಂತೆ ದಾಳಿ ನಡೆಸಿದ ಪೊಲೀಸರು, ಅಕ್ರಮವಾಗಿ ಕಲ್ಲು ಗಣಿಗಾರಿಕೆ ನಡೆಸುತ್ತಿರುವ ಲಾರಿ ಚಾಲಕರಾದ ಮನೋಜ್ ಮತ್ತು ಶರಣ್ ಎಂಬವರನ್ನು ವಶಕ್ಕೆ ಪಡೆದುಕೊಂಡರು. ಅಲ್ಲದೆ ಸ್ಥಳದಲ್ಲಿದ್ದ ಟಿಪ್ಪರ್, ಲಾರಿ ಹಾಗೂ ಸೊತ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೆಜಮಾಡಿಯ ವ್ಯಕ್ತಿಗೆ 4.86ಲಕ್ಷ ರೂ. ಆನ್ಲೈನ್ ವಂಚನೆ: ಪ್ರಕರಣ ದಾಖಲು
ಉಡುಪಿ, ಎ.15: ವಾಟ್ಸಾಪ್ನಲ್ಲಿ ಬಂದ ಎಪಿಕೆ ಫೈಲ್ ಡೌನ್ಲೋಡ್ ಮಾಡಿದ ಪರಿಣಾಮ ವ್ಯಕ್ತಿಯೊಬ್ಬರು ಲಕ್ಷಾಂತರ ರೂ. ಹಣ ಕಳೆದುಕೊಂಡು ಆನ್ಲೈನ್ ವಂಚನೆ ಒಳಗಾಗಿರುವ ಬಗ್ಗೆ ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಎ.12ರಂದು ಪಡುಬಿದ್ರಿ ಹೆಜಮಾಡಿಯ ಅಬ್ದುಲ್ ಹಮೀದ್ ಎಂಬವರ ಪರಿಚಯದ ಕುಮಾರಸ್ವಾಮಿ ಎಂಬವರ ಮೊಬೈಲ್ ನಂಬ್ರದಿಂದ ಎಪಿಕೆ ಫೈಲ್ ವಾಟ್ಸಾಪ್ನಲ್ಲಿ ಬಂದಿದ್ದು, ಅದನ್ನು ಡೌನಲೋಡ್ ಮಾಡಿದಾಗ ಅಬ್ದುಲ್ ಹಮೀದ್ ಅವರ ಬ್ಯಾಂಕ್ ಖಾತೆಯಿಂದ ಎ.13ರಂದು ಹಂತ ಹಂತವಾಗಿ ಒಟ್ಟು 4,86,13ರೂ. ಹಣ ಕಡಿತವಾಗಿರುವುದಾಗಿ ದೂರಲಾಗಿದೆ.
ಕಾರು ಢಿಕ್ಕಿ: ಪಾದಚಾರಿ ಮಹಿಳೆ ಮೃತ್ಯು
ಕೊಲ್ಲೂರು, ಎ.15: ಕಾರೊಂದು ಢಿಕ್ಕಿ ಹೊಡೆದ ಪರಿಣಾಮ ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆ ಯೊಬ್ಬರು ಮೃತಪಟ್ಟ ಘಟನೆ ಎ.14ರಂದು ಸಂಜೆ 7.15ರ ಸುಮಾರಿಗೆ ವಂಡ್ಸೆ ಗ್ರಾಮ ಪಂಚಾಯತ್ ಎದುರು ಕೊಲ್ಲೂರು-ಕುಂದಾಪುರ ಮುಖ್ಯ ರಸ್ತೆಯಲ್ಲಿ ನಡೆದಿದೆ. ಮೃತರನ್ನು ವಂಡ್ಸೆ ನಿವಾಸಿ ಶಶಿಕಲಾ(52) ಎಂದು ಗುರುತಿಸಲಾಗಿದೆ. ಇವರು ದಿನಸಿ ಅಂಗಡಿಯಿಂದ ಸಾಮಾನು ತರಲು ರಸ್ತೆ ಬದಿ ನಡೆದು ಕೊಂಡು ಹೋಗುತ್ತಿದ್ದಾಗ ಕೊಲ್ಲೂರು ಕಡೆಯಿಂದ ಕುಂದಾಪುರದ ಕಡೆಗೆ ಬರುತ್ತಿದ್ದ ಕಾರು, ಢಿಕ್ಕಿ ಹೊಡೆಯಿತ್ತೆನ್ನಲಾಗಿದೆ. ಇದರ ಪರಿಣಾಮ ಶಶಿಕಲಾ ಅಲ್ಲೇ ಇದ್ದ ಚರಂಡಿಗೆ ಬಿದ್ದರು. ಅದೇ ರೀತಿ ಕಾರು ಕೂಡ ಸ್ವಲ್ಪ ಮುಂದೆ ಹೋಗಿ ಚರಂಡಿಗೆ ಬಿತ್ತೆನ್ನಲಾಗಿದೆ. ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡ ಅವರು ಕುಂದಾಪುರ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗುವ ದಾರಿ ಮಧ್ಯೆ ಮೃತಪಟ್ಟರು ಎಂದು ತಿಳಿದುಬಂದಿದೆ. ಈ ಬಗ್ಗೆ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಲ್ಪೆ: 23 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ
ಮಲ್ಪೆ, ಎ.15: ಮಲ್ಪೆ ಪೊಲೀಸ್ ಠಾಣಾ ವ್ಯಾಪ್ತಿಯ ಪ್ರಕರಣಕ್ಕೆ ಸಂಬಂಧಿಸಿ ಕಳೆದ 23 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರು ಶಿವನಗರ ನಿವಾಸಿ ಎಂ.ಬಾಬು (52) ಬಂಧಿತ ಆರೋಪಿ. ಮಲ್ಪೆ ಎಸ್ಸೈ ಅನೀಲ್ ಕುಮಾರ್ ಡಿ. ನೇತೃತ್ವದಲ್ಲಿ ಕಳೆದ 5 ತಿಂಗಳಿನಿಂದ ಪ್ರಯತ್ನಿಸಿ, ಮಾಹಿತಿ ಕಲೆ ಹಾಕಿ, ಖಚಿತ ಮಾಹಿತಿ ಮೇರೆಗೆ ಠಾಣಾ ಸಿಬ್ಬಂದಿ ಸುರೇಶ್ ಕುಮಾರ್ ಮತ್ತು ವಿಶ್ವನಾಥ್ ಎಚ್. ಎ.14ರಂದು ಬೆಂಗಳೂರಿನ ರಾಮಮೂರ್ತಿ ನಗರದಲ್ಲಿ ಪತ್ತೆ ಹಚ್ಚಿ ಬಂಧಿಸಿದ್ದಾರೆ. ಆರೋಪಿಯನ್ನು ಎ.15ರಂದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು ಎ.28ರವರೆಗೆ ನ್ಯಾಯಾಂಗ ಬಂಧನ ವಿಧಿಸಿದೆ.
ಅಪಘಾತದಲ್ಲಿ ಗಾಯಗೊಂಡಿದ್ದ ಸಾಮಾಜಿಕ ಕಾರ್ಯಕರ್ತ ಮೃತ್ಯು
ಮಂಗಳೂರು, ಎ.15: ಹಾಸನ ಜಿಲ್ಲೆಯ ಸಕಲೇಶಪುರದಲ್ಲಿ ಕಳೆದ ಶನಿವಾರ ನಡೆದ ರಸ್ತೆ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಸಾಮಾಜಿಕ ಕಾರ್ಯಕರ್ತ ನಗರದ ಬಿಕರ್ನಕಟ್ಟೆಯ ನಿವಾಸಿ ಮುಹಮ್ಮದ್ ಇರ್ಶಾದ್ ಖಾನ್ (58) ಚಿಕಿತ್ಸೆ ಫಲಕಾರಿಯಾಗದೆ ನಗರದ ಖಾಸಗಿ ಆಸ್ಪತ್ರೆಯಲ್ಲಿ ಮಂಗಳವಾರ ರಾತ್ರಿ ಮೃತಪಟ್ಟಿದ್ದಾರೆ. ಮುಹಮ್ಮದ್ ಇರ್ಶಾದ್ ಖಾನ್ ಸವಾರಿ ಮಾಡುತ್ತಿದ್ದ ದ್ವಿಚಕ್ರ ವಾಹನಕ್ಕೆ ನಾಯಿ ಅಡ್ಡ ಬಂದಿತ್ತು ಎನ್ನಲಾಗಿದೆ. ದ್ವಿಚಕ್ರ ವಾಹನ ನಿಯಂತ್ರಣ ಕಳಕೊಂಡು ರಸ್ತೆಗೆ ಬಿದ್ದ ಪರಿಣಾಮ ಇರ್ಶಾದ್ ಖಾನ್ ಗಂಭೀರ ಗಾಯಗೊಂಡಿದ್ದರು. ತಕ್ಷಣ ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ, ಹೆಚ್ಚಿನ ಚಿಕಿತ್ಸೆಗೆ ರವಿವಾರ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ ರಾತ್ರಿ ನಿಧನರಾಗಿದ್ದಾರೆ. ಪತ್ನಿ, ಇಬ್ಬರು ಪುತ್ರರು ಮತ್ತು ಒಬ್ಬರು ಪುತ್ರಿ ಹಾಗೂ ಅಪಾರ ಬಂಧುಬಳಗವನ್ನು ಮೃತರು ಅಗಲಿದ್ದಾರೆ. ರಿಯಲ್ ಎಸ್ಟೇಟ್ ಉದ್ಯಮಿಯಾಗಿದ್ದ ಇರ್ಶಾದ್ ಖಾನ್, ಸಾಮಾಜಿಕ ಕಾರ್ಯಕರ್ತರಾಗಿಯೂ ಗುರುತಿಸಿಕೊಂಡಿದ್ದರು.
ನಾರಿ ಶಕ್ತಿ ವಂದನ ಕಾಯ್ದೆ ಜಾರಿ ಐತಿಹಾಸಿಕ ಕ್ರಮ: ಶಾಸಕಿ ಭಾಗೀರಥಿ ಮುರುಳ್ಯ
ಮಂಗಳೂರು, ಎ.15: ನಾರಿ ಶಕ್ತಿ ವಂದನ ಕಾಯ್ದೆಯು ಭಾರತದ ಪ್ರಜಾಪ್ರಭುತ್ವದ ಐತಿಹಾಸಿಕ ಕ್ರಮವಾಗಿದೆ. ಈ ಕಾಯ್ದೆಯ ಮೂಲಕ ದೇಶದ ಪ್ರಜಾಪ್ರಭುತ್ವದಲ್ಲಿ ಮಹಿಳೆಯರು ನೀತಿ ನಿರೂಪಣೆ ಮತ್ತು ನಿರ್ಧಾರ ಕೈಗೊಳ್ಳುವಲ್ಲಿ ಮಹತ್ವದ ಪಾತ್ರ ನಿರ್ವಹಿಸಲಿದ್ದಾರೆ ಎಂದು ಶಾಸಕಿ ಭಾಗೀರಥಿ ಮುರುಳ್ಯ ಹೇಳಿದರು. ದ.ಕ.ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಎ.16ರಿಂದ ಆರಂಭ ವಾಗುವ ಸಂಸತ್ನ ವಿಶೇಷ ಅಧಿವೇಶನದಲ್ಲಿ ನಾರಿ ಶಕ್ತಿ ವಂದನ ಕಾಯ್ದೆಗೆ ತಿದ್ದುಪಡಿ ಮೂಲಕ ಪ್ರಜಾಪ್ರಭುತ್ವದಲ್ಲಿ ಮಹಿಳೆಯರ ಸಕ್ರಿಯ ಪಾಲ್ಗೊಳ್ಳುವಿಕೆ ಆಗಲಿದೆ. ಲೋಕಸಭೆ ಮತ್ತು ರಾಜ್ಯ ಶಾಸಕಾಂಗ ಸಭೆಗಳಲ್ಲಿ ಮಹಿಳೆಯರಿಗೆ ಮೂರನೇ ಒಂದು ಭಾಗದಷ್ಟು ಮೀಸಲಾತಿ ನೀಡುವ ಈ ನಿಬಂಧನೆಯು ಪ್ರಾತಿನಿಧ್ಯವನ್ನು ಹೆಚ್ಚಿಸುವುದಕ್ಕೆ ಮಾತ್ರ ಸೀಮಿತವಾಗಿಲ್ಲ ಎಂದರು. ಪ್ರಧಾನಿ ನರೇಂದ್ರ ಮೋದಿ ಮಹಿಳಾ ನೇತೃತ್ವದ ಅಭಿವೃದ್ಧಿ ಮಾತ್ರ ಭಾರತವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯ ಬಹುದು ಎಂದು ಸ್ಪಷ್ಟವಾಗಿ ತಿಳಿಸಿದ್ದಾರೆ. ನಾರಿ ಶಕ್ತಿ ವಂದನ ಕಾಯ್ದೆಯ ಅನುಷ್ಠಾನವು ಈ ದೃಷ್ಟಿಕೋನವನ್ನು ಸಾಕಾರಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ ಎಂದರು. ಪ್ರಧಾನಿ ನೇತೃತ್ವದಲ್ಲಿ ಬೇಟಿ ಬಚಾವೋ ಬೇಟಿ ಪಡಾವೋ ಅಭಿಯಾನ, ಸುಕನ್ಯಾ ಸಮೃದ್ಧಿ ಯೋಜನೆ, ಪ್ರಧಾನ ಮಂತ್ರಿ ಮಾತೃ ವಂದನಾ ಯೋಜನೆ, ಪೋಷನ್ 2.0 ಯಶಸ್ವಿಯಾಗಿ ಅನುಷ್ಠಾನಗೊಂಡಿದೆ. ಪ್ರಧಾನ ಮಂತ್ರಿ ಜನ್ ಧನ್ ಯೋಜನೆಯಡಿ 322.9 ಮಿಲಿಯನ್ ಮಹಿಳೆಯರು ಬ್ಯಾಂಕಿಂಗ್ ವ್ಯವಸ್ಥೆಗೆ ಸಂಪರ್ಕ ಹೊಂದಿದ್ದಾರೆ. ಮಹಿಳೆಯರು ಮುದ್ರಾ ಯೋಜನಾ ಸಾಲಗಳಲ್ಲಿ ಶೇ. 68 ರಷ್ಟು ಪಡೆದಿದ್ದಾರೆ. ಲಖ್ ಪಟ್ಟಿ ದೀದಿ ಮತ್ತು ನಮೋ ಡೋನ್ ದೀದಿಯಂತಹ ಉಪಕ್ರಮಗಳಿಂದ ಮಹಿಳೆಯರು ತಮ್ಮ ಸಾಂಪ್ರದಾಯಿಕ ಪಾತ್ರಗಳನ್ನು ಮೀರಿ ತಂತ್ರ ಜ್ಞಾನ ಮತ್ತು ಉದ್ಯಮಶೀಲತೆಯ ಕ್ಷೇತ್ರಗಳಲ್ಲಿ ಸಬಲೀಕರಣಗೊಂಡಿದ್ದಾರೆ. ಉಜ್ವಲ ಯೋಜನೆಯು ಶುದ್ಧ ಇಂಧನ ವನ್ನು ಒದಗಿಸಿದೆ. ಸ್ವಚ್ಛ ಭಾರತ ಮಿಷನ್ ಮತ್ತು ಜಲ ಜೀವನ್ ಮಿಷನ್ ದೈನಂದಿನ ಜೀವನದ ಕಷ್ಟಗಳನ್ನು ಕಡಿಮೆ ಮಾಡಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯೆ ಸುಲೋಚನಾ ಜಿ.ಕೆ. ಭಟ್, ಮಹಿಳಾ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಶಿಲ್ಪಾ ಸುವರ್ಣ, ಮಹಿಳಾ ಮೋರ್ಚಾ ರಾಜ್ಯ ಕಾರ್ಯದರ್ಶಿ ಶ್ವೇತಾ ಪೂಜಾರಿ, ದ.ಕ. ಜಿಲ್ಲಾಧ್ಯಕ್ಷೆ ಮಂಜುಳಾ ರಾವ್, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಸಂಧ್ಯಾ ವೆಂಕಟೇಶ್, ಲಖಿತಾ ಶೆಟ್ಟಿ ಉಪಸ್ಥಿತರಿದ್ದರು.
ಅಂಬೇಡ್ಕರ್ ಸಂವಿಧಾನದಿಂದ ಭಾರತ ಅಖಂಡವಾಗಿ ಉಳಿದಿದೆ: ಶ್ಯಾಮರಾಜ್ ಬಿರ್ತಿ
ಉಡುಪಿ, ಎ.15: ದೇಶಕ್ಕೆ ಬಾಬಾಸಾಹೇಬರು ಕೊಟ್ಟ ಸಂವಿಧಾನ ದಿಂದಾಗಿ ಇಂದಿಗೂ ಭಾರತ ಅಖಂಡವಾಗಿ ಉಳಿದಿದೆ. ಹಲವು ಭಾಷೆ, ಜಾತಿ, ಸಂಸ್ಕೃತಿ, ಆಹಾರ ಪದ್ಧತಿಯಲ್ಲಿ ವೈವಿಧ್ಯತೆಗಳೊಂದಿಗೆ ಭಾರತವು ಒಂದೇ ರಾಷ್ಟ್ರವಾಗಿ ಉಳಿದಿದೆ. ಇದಕ್ಕೆ ಅಂಬೇಡ್ಕರ್ ರಚಿಸಿದ ಸಂವಿಧಾನವೇ ಕಾರಣ. ಒಂದು ವೇಳೆ ಈ ಸಂವಿಧಾನವನ್ನು ಬದಲಾಯಿಸಿದರೆ ಭಾರತ ಇನ್ನೊಂದು ಸೋವಿಯತ್ ಯೂನಿಯನ್ ಆಗಬಹುದು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ಮೈಸೂರು ವಿಭಾಗೀಯ ಸಂಘಟನಾ ಸಂಚಾಲಕ ಶ್ಯಾಮರಾಜ್ ಬಿರ್ತಿ ಹೇಳಿದ್ದಾರೆ. ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ಇದರ ವತಿಯಿಂದ ಆರೂರಿನಲ್ಲಿ ಬ್ರಹ್ಮಾವರ ತಾಲೂಕು ಮಟ್ಟದ ಬಾಬಾಸಾಹೇಬ್ ಅಂಬೇಡ್ಕರ್ ಅವರ 135ನೇ ಜನ್ಮದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಒಂದು ವೇಳೆ ಅಂಬೇಡ್ಕರ್ ಈ ದೇಶದಲ್ಲಿ ಜನಿಸದೇ ಇರುತ್ತಿದ್ದರೇ ದಲಿತರು ಇಂದಿಗೂ ಹೀನಾಯ ಬದುಕು ಸಾಗಿಸಬೇಕಿತ್ತು. ದಲಿತರಿಗೆ ಸ್ವಾಭಿಮಾನ ಮತ್ತು ಶಿಕ್ಷಣದ ಮಹತ್ವದ ಅರಿವು ಮೂಡಿಸಿದ್ದೇ ಬಾಬಾ ಸಾಹೇಬರು. ತನ್ನ ಇಡೀ ಜೀವನವನ್ನು ಕತ್ತಲು ಮಾಡಿಕೊಂಡು ದಲಿತರಿಗೆ ಬೆಳಕಾದವರು ಅಂಬೇಡ್ಕರ್. ಇಡೀ ದೇಶ ಜನರು ಬ್ರೀಟೀಷರಿಂದ ತಮ್ಮ ವಿಮೋಚನೆಗಾಗಿ ಹೋರಾಟ ನಡೆಸಿದರೆ ಅಂಬೇಡ್ಕರ್ ಈ ದೇಶದೊಳಗಿನ ಅಸಮಾನತೆ, ಅವಮಾನ, ಜಾತಿ ಪಧ್ಧತಿ, ಅಸ್ಪೃಶ್ಯತೆ ವಿಮೋಚನೆಗಾಗಿ ಹೋರಾಟ ನಡೆಸಿದರು. ಆದ್ದರಿಂದ ಬಾಬಾಸಾಹೇಬರ ಋಣ ನಮ್ಮೆಲ್ಲರ ಮೇಲಿದೆ ಎಂದರು. ಅಧ್ಯಕ್ಷತೆಯನ್ನು ಬ್ರಹ್ಮಾವರ ತಾಲೂಕು ಸಂಚಾಲಕ ಶ್ಯಾಮಸುಂದರ ತೆಕ್ಕಟ್ಟೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಆರೂರು ವಿಷ್ಣುಮೂರ್ತಿ ದೇವಸ್ಥಾನದ ಮೋಕ್ತೇಸರ ಸಂತೋಷ್ ಕುಮಾರ್ ಹೆಗ್ಡೆ, ಉಡುಪಿ ಜಿಲ್ಲಾ ಸಂಚಾಲಕ ಮಂಜುನಾಥ ಗಿಳಿಯಾರು, ದಲಿತ ಸಂಘರ್ಷ ಸಮಿತಿಯ ಪದಾಧಿಕಾರಿ ಗಳಾದ ಕುಮಾರ್ ಕೋಟ, ಬಿರ್ತಿ ಸುರೇಶ್, ವಡ್ಡರ್ಸೆ ಶ್ರೀನಿವಾಸ್, ಸುಧಾಕರ ಮಾಸ್ಟರ್ ಗುಜ್ಜರಬೆಟ್ಟು, ಪ್ರಕಾಶ್ ಹೇರೂರು, ಶರತ್ ಆರೂರು, ಹರೀಶ್ಚಂದ್ರ ಬಿರ್ತಿ, ಎಸ್.ನಾರಾಯಣ್, ಗೋಪಾಲ ಗಿಳಿಯಾರು, ಶಿವಾನಂದ ಬಿರ್ತಿ, ಉಮೇಶ ಸಾಲೀಕೇರಿ, ಸದಾನಂದ ಹಂಗಾರಕಟ್ಟೆ, ನಿಶಾನ್ ಹಂದಾಡಿ, ಸುಧಾಮ ಹಂಗಾರಕಟ್ಟೆ ಉಪಸ್ಥಿತರಿದ್ದರು. ಸಂಚಾಲಕ ನರಸಿಂಹ ಸ್ವಾಗತಿಸಿ ವಂದಿಸಿದರು.
ವಿದ್ಯಾವಂತರಾದರೆ ಮಾತ್ರಕ್ಕೆ ಏಳಿಗೆ ಸಾಧ್ಯ: ಎಸ್ಸೈ ಅನೀಲ್ ಕುಮಾರ್
ಮಲ್ಪೆ : ಜಗತ್ತಿಗೆ ಬೆಳಕನ್ನು ನೀಡಿದ ಅಂಬೇಡ್ಕರ್ ಅವರ ಆದರ್ಶಗಳನ್ನು ಮೈಗೂಡಿಸಿಕೊಂಡು ವಿದ್ಯಾವಂತರಾದ ಮಾತ್ರಕ್ಕೆ ನಮ್ಮ ಏಳಿಗೆ ಸಾಧ್ಯ ಎಂದು ಮಲ್ಪೆ ಪೊಲೀಸ್ ಠಾಣೆಯ ಉಪನಿರೀಕ್ಷಕ ಅನೀಲ್ ಕುಮಾರ್ ಡಿ. ಹೇಳಿದ್ದಾರೆ. ಕೀರ್ತಿಶಾಲಿ ಕ್ರೀಡಾ ಹಾಗೂ ಸಾಂಸ್ಕೃತಿಕ ಕಲಾ ಸಂಘ ವಡಬಾಂಡೇಶ್ವರ ತೊಟ್ಟಂ ಇವರ ಆಶ್ರಯದಲ್ಲಿ ತೊಟ್ಟಂನ ಸಾರ್ವಜನಿಕ ಶ್ರೀಗಣೇಶ ವೇದಿಕೆಯಲ್ಲಿ ಮಂಗಳವಾರ ಆಯೋಜಿಸಲಾದ ಮಹಾಮಾನವತಾವಾದಿ, ಸಂವಿಧಾನ ಶಿಲ್ಪಿ ಡಾ.ಭೀಮ್ ರಾವ್ ಅಂಬೇಡ್ಕರ್ ಅವರ 135ನೇ ಜನ್ಮ ದಿನೋತ್ಸವ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು. ಇತ್ತೀಚಿನ ದಿನಗಳಲ್ಲಿ ಅಪ್ರಾಪ್ತ ಯುವಕರು ಕಾನೂನು ಉಲ್ಲಂಘನೆ ಮಾಡಿ ದ್ವಿಚಕ್ರ ವಾಹನ ಚಲಾಯಿಸುತ್ತಿದ್ದಾರೆ. ಇದರ ಪರಿಣಾಮ ಹೆತ್ತವರಿಗೆ ದಂಡ ಕಟ್ಟುವಂತಹ ಪರಿಸ್ಥಿತಿ ಬಂದಿದೆ. ಯಾರೂ ಕೂಡ ಕಾನೂನು ಉಲ್ಲಂಘನೆ ಮಾಡಬಾರದು ಎಂದರು. ಅಧ್ಯಕ್ಷತೆಯನ್ನು ಸಂಘದ ಗೌರವಾಧ್ಯಕ್ಷ ಎಂ.ನವೀನ್ ಚಂದ್ರ ಮಲ್ಪೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಉದ್ಯಮಿ ಶಾನ್ರಾಜ್ ಎಸ್. ಕೋಟ್ಯಾನ್, ಸಮಾಜ ಸೇವಕ ಜಗದೀಶ್ ಆರ್.ಸಾಲ್ಯಾನ್, ತೊಟ್ಟಂ ಸಾರ್ವಜನಿಕ ಶ್ರೀಗಣೇಶೋತ್ಸವ ಸಮಿತಿ ಅಧ್ಯಕ್ಷ ಪ್ರಶಾಂತ್ ಕೆ.ಸಾಲ್ಯಾನ್, ಶ್ರೀಮಂಜುನಾಥೇಶ್ವರ ಭಜನಾ ಮಂದಿರದ ಅಧ್ಯಕ್ಷ ಸುರೇಂದ್ರ ಕುಂದರ್, ಶ್ರೀಭಕ್ತಿ ಉದಯ ಪಂಡರೀನಾಥ ಭಜನಾ ಮಂದಿರದ ಅಧ್ಯಕ್ಷ ದಯೇಶ್ ಕಾಂಚನ್, ರಮ್ಯಾ ಬಂಗೇರ, ಶ್ರೀದೇವಿ ಮುಖ್ಯ ಪ್ರಾಣ ಭಜನಾ ಮಂದಿರ ಅಧ್ಯಕ್ಷ ಪ್ರದೀಪ್ ಕೋಟ್ಯಾನ್, ಅಂಬೇಡ್ಕರ್ ಯುವಸೇನೆ ಜಿಲ್ಲಾಧ್ಯಕ್ಷ ಗಣೇಶ್ ನೆರ್ಗಿ, ಅಜೇಯ ಕ್ರಿಕೆಟರ್ಸ್ ವ್ಯವಸ್ಥಾಪಕ ಮಹೇಶ್ ಮೆಂಡನ್ ಭಾಗವಹಿಸಿದ್ದರು. ಸಮಾಜ ಸೇವಕ ರಮೇಶ್ ಎಸ್.ತಿಂಗಳಾಯ, ಭಾರತೀಯ ಭೂಸೇನೆ ನಿವೃತ್ತ ಹವಾಲ್ದಾರ್ ಸಂತೋಷ್ ಶ್ರೀಯಾನ್ ಮತ್ತು ಪಿಎಚ್ಡಿ ಪದವಿ ಪಡೆದ ಡಾ.ನಿಶಾ ಎಸ್.ಅಮೀನ್ ಅವರನ್ನು ಸನ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಸಂಘದ ಅಧ್ಯಕ್ಷ ವಿಜಯ ಸುವರ್ಣ, ಉಪಾಧ್ಯಕ್ಷೆ ಶಶಿಕಲಾ ಪಾಲನ್ ಉಪಸ್ಥಿತರಿದ್ದರು. ಶಂಕರ್ ದಾಸ್ ಚೆಂಡ್ಕಳ ಕಾರ್ಯಕ್ರಮ ನಿರೂಪಿಸಿದರು. ಪ್ರಶಾಂತ್ ತೊಟ್ಟಂ ವಂದಿಸಿದರು.
ವೆಂಕಟೇಶ್ ಕೋಣಿ ಅನ್ಯಾಯದ ವಿರುದ್ಧ ಹೋರಾಟದ ಗಟ್ಟಿ ಧ್ವನಿ: ಸುರೇಶ್ ಕಲ್ಲಾಗರ್
ಬೈಂದೂರು, ಎ.15: ಅನ್ಯಾಯ ವಿರುದ್ಧ ಹೋರಾಟದ ಗಟ್ಟಿ ಧ್ವನಿಯ ಹೋರಾಟಗಾರರಾಗಿದ್ದ ವೆಂಕಟೇಶ್ ಕೋಣಿ, ಕೂಲಿಕಾರರಿಗೆ ಸರಕಾರಿ ಭೂಮಿ ಹಕ್ಕಿಗಾಗಿ, ಬಾಡಿಗೆ ಮನೆಯಲ್ಲಿರುವ ಕೂಲಿಕಾರರಿಗೆ ಸ್ವಂತ ಮನೆ ಒದಗಿಸ ಬೇಕೆಂದು ಹೋರಾಟಗಳನ್ನು ನಡೆಸಿದ ಅಪರೂಪದ ಹೋರಾಟ ಗಾರ ಎಂದು ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಸುರೇಶ್ ಕಲ್ಲಾಗರ ಹೇಳಿದ್ದಾರೆ. ಬೈಂದೂರಿನ ಸಿಐಟಿಯು ಕಚೇರಿಯಲ್ಲಿ ಬುಧವಾರ ನಡೆದ ವೆಂಕಟೇಶ್ ಕೋಣಿ ಅವರ ಶ್ರದ್ಧಾಂಜಲಿ ಸಭೆಯಲ್ಲಿ ಅವರು ಮಾತನಾಡುತಿದ್ದರು. ಜನರಿಗೆ ಕಾನೂನುಬದ್ಧವಾಗಿ ಸಿಗಬೇಕಾದ ಸರಕಾರಿ ಸೌಲಭ್ಯಗಳನ್ನು ತಲುಪಿಸುವ ಕಾರ್ಯದಲ್ಲಿ ಅವರು ಸದಾ ಮುಂಚೂಣಿಯಲ್ಲಿದ್ದರು. ಅವರ ಹೆಗಲ ಮೇಲಿದ್ದ ಚೀಲದಲ್ಲಿ ಜನರ ಅರ್ಜಿಗಳೇ ತುಂಬಿರು ತ್ತಿದವು. ಜನಪರ ಕಾರ್ಯಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದ ಅವರು ಜಿಲ್ಲೆಯ ಅಪರೂಪದ ವ್ಯಕ್ತಿತ್ವವಾಗಿದ್ದರು ಎಂದರು. ಬೈಂದೂರು ಕಟ್ಟಡ ಕಾರ್ಮಿಕರ ಸಂಘದ ಅಧ್ಯಕ್ಷ ರಾಜೀವ ಪಡುಕೋಣೆ ನುಡಿನಮನ ಸಲ್ಲಿಸಿ, ವೆಂಕಟೇಶ್ ಕೋಣಿ ಒಂದೇ ಕ್ಷೇತ್ರದ ಹೋರಾಟ ಗಾರರಲ್ಲ, ಬದಲಾಗಿ ಶೋಷಿತರ ಹಲವಾರು ಹೋರಾಟಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡ ಕ್ರಿಯಾಶೀಲ ವ್ಯಕ್ತಿಯಾಗಿದ್ದರು. ಯಾವುದೇ ಕೆಲಸ ಕೈಗೊಂಡರೂ ಅದನ್ನು ಪರಿಪೂರ್ಣ ಗೊಳಿಸುತ್ತಿದ್ದವರು ಎಂದು ತಿಳಿಸಿದರು. ಅಂಗವಿಕಲ ಮತ್ತು ಪಾಲಕರ ಸಂಘದ ಮುಖಂಡ ಮಂಜುನಾಥ್ ಹೆಬ್ಬಾರ್ ಮಾತನಾಡಿ, ಕೇಂದ್ರ ಮಟ್ಟದಲ್ಲಿದ್ದ ಅಂಗವಿಕಲರ ಹಾಗೂ ಪಾಲಕರ ಸಂಘಟನೆಯನ್ನು ಜಿಲ್ಲೆಯಲ್ಲಿ ರೂಪಿಸಿ, ರಾಜ್ಯ ಮುಖಂಡರು ಮತ್ತು ಅಧಿಕಾರಿ ಗಳನ್ನು ಕರೆಸಿ ಸಮಸ್ಯೆಗಳ ಪರಿಹಾರಕ್ಕಾಗಿ ಶ್ರಮಿಸಿದವರು ವೆಂಕಟೇಶ್ ಕೋಣಿ ಎಂದು ಹೇಳಿದರು. ಅವರ ಮಾನವೀಯ ತುಡಿತ ಎಲ್ಲರಿಗೂ ಮಾದರಿಯಾಗಬೇಕು. ಅವರ ಹೋರಾಟಗಳನ್ನು ನಾವು ಮುಂದುವರಿಸಬೇಕು ಎಂದರು. ಕಟ್ಟಡ ಕಾರ್ಮಿಕರ ಸಂಘಟನೆಯ ಮುಖಂಡ ಗಣೇಶ್ ತೊಂಡೆಮಕ್ಕಿ ಮಾತನಾಡಿ, ಬೈಂದೂರಿನಲ್ಲಿ ಕಟ್ಟಡ ಕಾರ್ಮಿಕರ ಸಂಘಟನೆ ನಿರ್ಮಿಸಿ ಸಾವಿರಾರು ಕುಟುಂಬಗಳಿಗೆ ನೆರವಾದ ಮಹಾನ್ ನಾಯಕ ವೆಂಕಟೇಶ್ ಕೋಣಿ. ಅವರ ಒತ್ತಾಯದಿಂದಲೇ ನಾನು ಸಂಘಟನೆಯಲ್ಲಿ ಸೇರಿ ಮಾತನಾಡುವುದನ್ನೇ ಕಲಿತೆ. ಅವರ ತ್ಯಾಗ ಮತ್ತು ಕಾರ್ಯ ಅಪೂರ್ವ ವಾದದ್ದು ಎಂದು ನೆನಪಿಸಿಕೊಂಡರು. ವೇದಿಕೆಯಲ್ಲಿ ನಾಗರತ್ನ ನಾಡ, ಗೋಪಾಲಕೃಷ್ಣ ದೇವಾಡಿಗ, ಶೀಲಾವತಿ, ನಾಗರತ್ನ ಪಡುವರಿ ಮಾತನಾಡಿ ಶ್ರದ್ಧಾಂಜಲಿ ಅರ್ಪಿಸಿದರು. ಸಭೆಯಲ್ಲಿ ಶ್ರೀಧರ ಉಪ್ಪುಂದ, ಅಣ್ಣಪ್ಪ, ಅಮ್ಮಯ್ಯ, ಜ್ಯೋತಿ, ಶಾಂತಾ, ಶೋಭಾ ನಾಡ, ರಾಮ ಕಂಬದಕೋಣೆ, ಲಕ್ಷ್ಮಣ ದೇವಾಡಿಗ ಮೊದಲಾದವರಿದ್ದರು.
ವಾಡಿ | ಸಂವಿಧಾನ ರಚಿಸಿ ದೇಶದ ಚಿತ್ರಣ ಬದಲಿಸಿದ ಮಹಾನ್ ದಾರ್ಶನಿಕ ಅಂಬೇಡ್ಕರ್: ಕಾಶೀನಾಥ್ ಹಿಂದಿನಕೇರಿ
ವಾಡಿ: ಸಾಮಾಜಿಕ ವ್ಯವಸ್ಥೆಯಲ್ಲಿ ನಲುಗುತ್ತಿದ್ದ ದೇಶಕ್ಕೆ ಸಂವಿಧಾನ ರಚಿಸಿ ಭಾರತದ ದಿಕ್ಕೇ ಬದಲಿಸಿದ ಮಹಾನ್ ನಾಯಕ ಡಾ. ಬಿ.ಆರ್. ಅಂಬೇಡ್ಕರ್ ಅವರ ಸಾಧನೆ ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದು ಸಾಹಿತಿ ಕಾಶೀನಾಥ್ ಹಿಂದಿನಕೇರಿ ಹೇಳಿದರು. ಪಟ್ಟಣ ಸಮೀಪದ ಇಂಗಳಗಿ ಗ್ರಾಮ ಪಂಚಾಯಿತಿ ಆವರಣದಲ್ಲಿ ನಡೆದ ಅಂಬೇಡ್ಕರ್ ಅವರ 135ನೇ ಜಯಂತಿ ಕಾರ್ಯಕ್ರಮದಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಅವರು, ಅಂಬೇಡ್ಕರ್ ಅಪಾರ ಜ್ಞಾನ ಹೊಂದಿದ್ದರೂ ವೈಯಕ್ತಿಕ ಸಂಪತ್ತಿಗೆ ಮೌಲ್ಯ ನೀಡದೆ, ತಮ್ಮ ಜ್ಞಾನವನ್ನು ಬಡವರ ಉನ್ನತಿಗೆ ಬಳಕೆ ಮಾಡಿದರು ಎಂದರು. ಜ್ಞಾನದಿಂದ ಇಡೀ ವಿಶ್ವವನ್ನು ಗೆಲ್ಲಬಹುದೆಂಬುದನ್ನು ತೋರಿಸಿದ ಮಹಾನ್ ದಾರ್ಶನಿಕ ಅಂಬೇಡ್ಕರ್ ಎಂದು ಅವರು ಅಭಿಪ್ರಾಯಪಟ್ಟರು. ಈ ಸಂದರ್ಭದಲ್ಲಿ ಮಾತನಾಡಿದ ಪಂಚಾಯಿತಿ ಪಿಡಿಒ, “ಓದಿಗೆ ಬಡತನ ಅಡ್ಡಿಯಾಗಬಾರದು, ಎಷ್ಟೇ ಕಷ್ಟ ಬಂದರೂ ಮಕ್ಕಳಿಗೆ ಶಿಕ್ಷಣ ನೀಡಬೇಕು” ಎಂಬ ಅಂಬೇಡ್ಕರ್ ಅವರ ಮಾತುಗಳು ತಮ್ಮ ಜೀವನವನ್ನು ಬದಲಿಸಿವೆ ಎಂದು ಹೇಳಿದರು. ಅಂಬೇಡ್ಕರ್ ಅವರ ಜೀವನ ಸುಲಭವಾಗಿರಲಿಲ್ಲ; ಕಷ್ಟಕರ ಪರಿಸ್ಥಿತಿಗಳ ನಡುವೆಯೇ ತಮ್ಮ ಪ್ರತಿಭೆ ಮತ್ತು ನಿರಂತರ ಅಧ್ಯಯನದಿಂದ ಅವರು ದೇಶದ ಅತ್ಯುನ್ನತ ಸಾಧನೆ ಮಾಡಿದ್ದಾರೆ. ಜಾತಿ ವ್ಯವಸ್ಥೆಯ ನಡುವೆ ಹುಟ್ಟಿ, ತಮ್ಮ ಶ್ರಮದಿಂದ ಮಹಾನ್ ವ್ಯಕ್ತಿಯಾಗಿರುವುದು ಎಲ್ಲರಿಗೂ ಪ್ರೇರಣೆಯಾಗುತ್ತದೆ ಎಂದು ಹೇಳಿದರು. ಪತ್ರಕರ್ತ ಡಾ.ಸಾಯಬಣ್ಣಾ ಗುಡುಬಾ ಮಾತನಾಡಿದರು. ಈ ವೇಳೆ ಪಂಚಾಯತ್ ಪಿಡಿಓ ಕಲ್ಯಾಣ ಕುಮಾರ, ಕಾರ್ಯದರ್ಶಿ ಸಂಗಮೇಶ ಹೀರೆಮಠ, ಬಿಲ್.ಕಲೆಕ್ಟರ್ ರವಿ ಅಳ್ಳೋಳಿ, ಗಣಕಯಂತ್ರ ಸಿಬ್ಬಂದಿ ರಾಜು ಸಂಕಾ, ಸಿದ್ಧರಾಮ ಭಂಕೂರ, ಕಾಯಕ ಮಿತ್ರ ಗಿಡ್ಡಮ್ಮ ಪವಾರ್, ಮುಖಂಡರಾದ ಜಗನ್ನಾಥ ಹಂದರಕಿ, ನಾಗರಾಜ ಕೇಲ್ಲೂರ್, ಮಹೇಶ್ ಹಿಂದಿನಕೇರಿ. ತಿಪ್ಪಣ್ಣ ಸಂಗನ್. ಚಂದ್ರಕಾಂತ ಸಂಕಾ. ಚಂದು ಸಂಗನ್. ಶರಣು ರಾವೂರಕರ್ ಇದ್ದರು.
ಧಾರವಾಡ ಉದ್ಯೋಗಾಕಾಂಕ್ಷಿಗಳ ಪ್ರತಿಭಟನೆ: 1 ಲಕ್ಷ ಬಾಂಡ್ಗೆ ಆಗ್ರಹಿಸಿದ ಪೊಲೀಸರ ವಿರುದ್ಧ ಯತ್ನಾಳ್ ಗರಂ
ಧಾರವಾಡ: ನಗರದಲ್ಲಿ ನಿನ್ನೆ ನಡೆದ ಉದ್ಯೋಗಾಕಾಂಕ್ಷಿಗಳ ಪ್ರತಿಭಟನೆ ಇದೀಗ ತೀವ್ರ ಸ್ವರೂಪ ಪಡೆದುಕೊಂಡಿದ್ದು, ರಾಜ್ಯ ಸರ್ಕಾರದ ವಿರುದ್ಧ ವಿಪಕ್ಷ ನಾಯಕರ ಆಕ್ರೋಶಕ್ಕೆ ಕಾರಣವಾಗಿದೆ. ನ್ಯಾಯಯುತವಾಗಿ ಉದ್ಯೋಗ ಕೇಳಿ ಬೀದಿಗಿಳಿದಿದ್ದ ಪರೀಕ್ಷಾರ್ಥಿಗಳನ್ನು ಬಂಧಿಸಿರುವ ಪೊಲೀಸರು, ಅವರಿಂದ ಒಂದು ಲಕ್ಷ ರೂಪಾಯಿ ಬಾಂಡ್ ಹಾಗೂ ಮುಂದಿನ ಒಂದು ವರ್ಷದವರೆಗೆ ಯಾವುದೇ ಪ್ರತಿಭಟನೆ ಮಾಡುವುದಿಲ್ಲ ಎಂದು ಮುಚ್ಚಳಿಕೆ ಬರೆದುಕೊಡುವಂತೆ ಒತ್ತಾಯಿಸಿದ್ದಾರೆ ಎಂಬ
RCB ಪ್ಲೇಯಿಂಗ್ ಇಲೆವೆನ್ ನಲ್ಲಿ ಕಾಣಿಸಿಕೊಳ್ಳದ ವಿರಾಟ್ ಕೊಹ್ಲಿ ಮೊದಲ ಬಾರಿ ಇಂಪ್ಯಾಕ್ಟ್ ಪ್ಲೇಯರ್ ಆಗಿ ಕಣಕ್ಕೆ!
ಐಪಿಎಲ್ ಪ್ರಾರಂಭವಾದಾಗಿನಿಂದಲೂ ರಾಯಲ್ ಚಾಲೆಂಜರ್ಸ್ ತಂಡದ ಅವಿಭಾಜ್ಯ ಅಂಗವಾಗಿರುವ ವಿರಾಟ್ ಕೊಹ್ಲಿ ಅವರು ಇದೀಗ ಲಖನೌ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ಪ್ಲೇಯಿಂಗ್ ಇಲೆವೆನ್ ನಲ್ಲಿ ಕಾಣಿಸಿಕೊಂಡಿಲ್ಲ. ಕಳೆದ ಪಂದ್ಯದಲ್ಲಿ ಬ್ಯಾಟಿಂಗ್ ವೇಳೆ ಅವರು ಗಾಯಗೊಂಡಿದ್ದ ಅವರು ಫೀಲ್ಡಿಂಗ್ ಮಾಡಿರಲಿಲ್ಲ. ಹೀಗಾಗಿ ಅವರು ಈ ಪಂದ್ಯದಲ್ಲೂ ಇಂಪ್ಯಾಕ್ಟ್ ಪ್ಲೇಯರ್ ಆಗಿ ಕಣಕ್ಕಿಳಿಯುವ ಸಾಧ್ಯತೆ ಇದೆ. ()ಏಪ್ರಿಲ್ 15 ಬುಧವಾರದಂದು ಚನ್ನಸ್ವಾಮಿ ಕ್ರೀಡಾಂಗಣದಲ್ಲಿ ಟಾಸ್ ಗೆದ್ದ ಆರ್ ಸಿಬಿ ನಾಯಕ ರಜತ್ ಪಾಟೀದಾರ್ ಅವರು ಫೀಲ್ಡಿಂಗ್ ಆಯ್ದುಕೊಂಡರು. ಬಳಿಕ ಟಿವಿ ನಿರೂಪಕರು ತಂಡದ ಸಂಯೋಜನೆ ಬಗ್ಗೆ ಕೇಳಿದಾಗ ಮಧ್ಯಮ ವೇಗಿ ಜಾಕೋಬ್ ಡಫಿ ಅವರ ಬದಲಿಗೆ ಜೋಶ್ ಹೇಜಲ್ ವುಡ್ ಆಡುತ್ತಿದ್ದಾರೆಂದು ಹೇಳಿದ್ದರು. ವಿರಾಟ್ ಕೊಹ್ಲಿಯ ವಿಚಾರವಾಗಿ ಯಾವ ಸಂಗತಿಯನ್ನೂ ಹೇಳಿರಲಿಲ್ಲ. ಆದರೆ ವಿರಾಟ್ ಕೊಹ್ಲಿ ಅವರು ಮೈದಾನದಲ್ಲಿ ಕಾಣಿಸಿಲಿಲ್ಲ. ತಂಡದ ಪ್ಲೇಯಿಂಗ್ ಇಲೆವೆನ್ ಪಟ್ಟಿಯಲ್ಲೂ ಇರಲಿಲ್ಲ. ಬದಲಿಗೆ ತಂಡದಲ್ಲಿ ಮಧ್ಯಮ ವೇಗಿ ರಸಿಕ ದಾರ್ ಸ್ಥಾನ ಪಡೆದಿದ್ದರು. ಆರ್ ಸಿಬಿ ಪ್ಲೇಯಿಂಗ್ ಇಲೆವೆನ್ ರಜತ್ ಪಾಟೀದಾರ್ (ನಾಯಕ), ಫಿಲ್ ಸಾಲ್ಟ್, ದೇವದತ್ ಪಡಿಕ್ಕಲ್, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ಟಿಮ್ ಡೇವಿಡ್, ರೊಮಾರಿಯೋ ಶೆಫರ್ಡ್, ಕೃನಾಲ್ ಪಾಂಡ್ಯ, ಭುವನೇಶ್ವರ್ ಕುಮಾರ್, ಸುಯಾಶ್ ಶರ್ಮಾ, ರಸಿಕ್ ದಾರ್ , ಜೋಶ್ ಹೇಜಲ್ ವುಡ್ ಲಖನೌ ಸೂಪರ್ ಜೈಂಟ್ಸ್ ರಿಷಭ್ ಪಂತ್ (ನಾಯಕ ಮತ್ತು ವಿಕೆಟ್ ಕೀಪರ್), ಮಿಚೆಲ್ ಮಾರ್ಷ್, ಐಡೆನ್ ಮಾರ್ಕ್ರಾಮ್, ನಿಕೋಲಸ್ ಪೂರನ್, ಆಯುಷ್ ಬಡೋನಿ, ಅಬ್ದುಲ್ ಸಮದ್, ಮುಕುಲ್ ಚೌಧರಿ, ಮೊಹಮ್ಮದ್ ಶಮಿ, ಅವೇಶ್ ಖಾನ್, ದಿಗ್ವೆಶ್ ರಾಠಿ, ಪ್ರಿನ್ಸ್ ಯಾದವ್
Tamil Nadu | ಕ್ಷೇತ್ರ ಪುನರ್ವಿಂಗಡಣೆ ವಿರೋಧಿಸಿ ಎ. 16ರಂದು ಕಪ್ಪು ಬಾವುಟ ಪ್ರದರ್ಶಿಸಲು CM ಸ್ಟಾಲಿನ್ ಕರೆ
‘ಬಿಜೆಪಿ ಬೆಂಕಿಯೊಂದಿಗೆ ಆಟವಾಡುತ್ತಿದೆ’; ಕೇಂದ್ರಕ್ಕೆ ಎಚ್ಚರಿಕೆ
ಎ. 20: ಉಡುಪಿ ಧರ್ಮಪ್ರಾಂತದ ನೂತನ ಧರ್ಮಾಧ್ಯಕ್ಷರ ಪೀಠಾರೋಹಣ
30 ಬಿಷಪ್, 250 ಧರ್ಮಗುರುಗಳು, ಧರ್ಮಭಗಿನಿಯರು ಸೇರಿ 6 ಸಾವಿರ ಮಂದಿ ಉಪಸ್ಥಿತಿ
ವಿಮರ್ಶೆ ಎಂಬುದು ಸಾಂಸ್ಕೃತಿಕ ಜವಾಬ್ದಾರಿ: ಡಾ.ಗೀತಾ ವಸಂತ
ಪ್ರೊ.ವಿ.ಎಂ.ಇನಾಂದಾರ್ ವಿಮರ್ಶಾ ಪ್ರಶಸ್ತಿ ಪ್ರದಾನ
ರಾಜ್ಯಸಭಾ ಸಂಸದ ರಾಘವ್ ಚಡ್ಡಾ ಮತ್ತು ಅವರ ಆಮ್ ಆದ್ಮಿ ಪಕ್ಷ (ಆಪ್) ನಡುವೆ ಪ್ರತಿಷ್ಠೆಯ ಕುಸ್ತಿ ಆರಂಭವಾಗಿದೆ. ಈ ಕುಸ್ತಿಯಲ್ಲಿ ಅಂತಿಮವಾಗಿ ಯಾರು ಗೆಲ್ತಾರೆ ಎಂಬ ಕುತೂಹಲ ಇದೀಗ ಮನೆ ಮಾಡಿದೆ ಕೇಂದ್ರ ಸರ್ಕಾರ ಸೈಲೆಂಟ್ ಆಗಿ ರಾಘವ್ ಚಡ್ಡಾ ಅವರಿಗೆ ಬೆಂಬಲ ನೀಡುತ್ತಿರುವುದನ್ನು ನೋಡಿದರೆ, ಈ ಫೈಟ್ ಭಾರೀ ಟಫ್ ಆಗಿರಲಿದೆ ಎಂಬುದು ಸ್ಪಷ್ಟವಾಗುತ್ತದೆ. ಸದ್ಯ ಪಂಜಾಬ್ ಸರ್ಕಾರ ರಾಘವ್ ಚಡ್ಡಾ ಅವರಿಗೆ ನೀಡಿದ್ದ Z+ ಶ್ರೇಣಿಯ ಭದ್ರತೆಯನ್ನು ಹಿಂಪಡೆದಿದ್ದು, ಕೇಂದ್ರ ಸರ್ಕಾರ ಅವರಿಗೆ Z ಶ್ರೇಣಿಯ ಭದ್ರತೆ ಮರಳಿಸಿದೆ.
ಸುರಪುರ | ಅಂಚೆ ಕಚೇರಿ ಸ್ಥಳಾಂತರಕ್ಕೆ ವಿರೋಧ: ಕರ್ನಾಟಕ ರಕ್ಷಣಾ ವೇದಿಕೆಯಿಂದ ಪ್ರತಿಭಟನೆ
ಸುರಪುರ: ಪಟ್ಟಣದ ರಂಗಂಪೇಟೆಯಲ್ಲಿರುವ ಅಂಚೆ ಕಚೇರಿಯನ್ನು ತಿಮ್ಮಾಪುರಕ್ಕೆ ಸ್ಥಳಾಂತರಿಸುವ ಕ್ರಮವನ್ನು ವಿರೋಧಿಸಿ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಮುಖ್ಯ ಅಂಚೆ ಕಚೇರಿ ಮುಂಭಾಗದಲ್ಲಿ ಸಾಂಕೇತಿಕ ಪ್ರತಿಭಟನೆ ನಡೆಸಲಾಯಿತು. ಸಂಘಟನೆಯ ತಾಲೂಕ ಅಧ್ಯಕ್ಷ ವೆಂಕಟೇಶ ನಾಯಕ ಬೈರಿಮರಡಿ ಮಾತನಾಡಿ, ಹಲವು ವರ್ಷಗಳಿಂದ ರಂಗಂಪೇಟೆಯಲ್ಲಿ ಅಂಚೆ ಕಚೇರಿ ಕಾರ್ಯನಿರ್ವಹಿಸುತ್ತಿದ್ದು, ನೂರಾರು ಜನರಿಗೆ ಇದರಿಂದ ಅನುಕೂಲವಾಗುತ್ತಿದೆ. ಆದರೆ ಯಾವುದೇ ಸ್ಪಷ್ಟ ಕಾರಣವಿಲ್ಲದೆ ತಿಮ್ಮಾಪುರಕ್ಕೆ ಸ್ಥಳಾಂತರಿಸಲು ಮುಂದಾಗಿರುವುದು ಸಾರ್ವಜನಿಕರಿಗೆ ತೊಂದರೆ ಉಂಟುಮಾಡಲಿದೆ ಎಂದು ಹೇಳಿದರು. ರಂಗಂಪೇಟೆಯ ಜನರು ತಿಮ್ಮಾಪುರಕ್ಕೆ ತೆರಳಿ ಅಂಚೆ ಸಂಬಂಧಿತ ಕಾರ್ಯಗಳನ್ನು ನಡೆಸುವುದು ಕಷ್ಟವಾಗುತ್ತದೆ. ಆದ್ದರಿಂದ ಈ ಸ್ಥಳಾಂತರವನ್ನು ತಕ್ಷಣವೇ ರದ್ದುಗೊಳಿಸಿ, ಅಂಚೆ ಕಚೇರಿಯನ್ನು ಇದೇ ಸ್ಥಳದಲ್ಲಿ ಮುಂದುವರಿಸಬೇಕು ಎಂದು ಆಗ್ರಹಿಸಿದರು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಹೋರಾಟ ನಡೆಸುವುದು ಅನಿವಾರ್ಯವಾಗಲಿದೆ ಎಂದು ಸಂಘಟನೆ ಎಚ್ಚರಿಕೆ ನೀಡಿತು. ನಂತರ ವಿಭಾಗೀಯ ಅಂಚೆ ಕಚೇರಿ ಅಧೀಕ್ಷಕರಿಗೆ ಬರೆದ ಮನವಿ ಕಚೇರಿಯ ಮುಖ್ಯ ಪೋಸ್ಟ್ ಮಾಸ್ಟರ್ ಅವರ ಮೂಲಕ ಸಲ್ಲಿಸಿದರು. ಈ ಸಂದರ್ಭದಲ್ಲಿ ಸಂಘಟನೆಯ ಉಪಾಧ್ಯಕ್ಷ ಮಲ್ಲು ವಿಷ್ಣುಸೇನಾ, ಅರವಿಂದ ಬಿಲ್ಲವ್, ನಿಂಗಣ್ಣ ಮಾಲಗತ್ತಿ, ರಘವೀರ ದೇಸಾಯಿ, ಬಲಭೀಮ ನಂಬಾ, ಬಲಭೀಮ ಬೊಮ್ಮನಹಳ್ಳಿ, ಭೀಮನಗೌಡ ರಂಗಂಪೇಟೆ, ಅವಿನಾಶ, ಮೌನೇಶ ಬಡಿಗೇರ ಇತರರು ಭಾಗವಹಿಸಿದ್ದರು.
ಐದು ದಿನಗಳ ವರೆಗೆ ರಾಜ್ಯದ ಜಿಲ್ಲೆಗಳಿಗೆ ‘ಬಿಸಿ ಗಾಳಿಯ ಯೆಲ್ಲೋ ಅಲರ್ಟ್ ಘೋಷಣೆ’
ಬೆಂಗಳೂರು : ರಾಜ್ಯದಲ್ಲಿ ದಿನೇ ದಿನೇ ತಾಪಮಾನ ಏರಿಕೆಯಾಗುತ್ತಿದ್ದು, ಹವಾಮಾನ ಇಲಾಖೆಯು ಎ.16ರಿಂದ ಐದು ದಿನಗಳ ಕಾಲ ರಾಜ್ಯದ ಕಾರವಳಿ ಜಿಲ್ಲೆಗಳು ಹಾಗೂ ಉತ್ತರ ಕರ್ನಾಟಕದ ಜಿಲ್ಲೆಗಳು ಸೇರಿ 16 ಜಿಲ್ಲೆಗಳಿಗೆ ಬಿಸಿ ಗಾಳಿಯ ಯೆಲ್ಲೋ ಅಲರ್ಟ್ ಅನ್ನು ಘೋಷಣೆ ಮಾಡಿದೆ. ಎ.16 ರಿಂದ ಎ.20ರ ವರೆಗೆ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ, ಉತ್ತರ ಕರ್ನಾಟಕದ ಜಿಲ್ಲೆಗಳಾದ ಬೀದರ್, ಕಲಬುರಗಿ, ರಾಯಚೂರು, ಯಾದಗಿರಿ, ಬೆಳಗಾವಿ, ವಿಜಯಪುರ, ಬಾಗಲಕೋಟೆ, ಧಾರವಾಡ, ಗದಗ, ಕೊಪ್ಪಳ, ಮಲೆನಾಡು ಜಿಲ್ಲೆಗಳಾದ ಶಿವಮೊಗ್ಗ, ಹಾಸನ, ಚಿಕ್ಕಮಗಳೂರು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಅನ್ನು ಘೋಷಣೆ ಮಾಡಲಾಗಿದೆ.
ಯಾದಗಿರಿ ನಗರದಲ್ಲಿ ಡಾ.ಅಂಬೇಡ್ಕರ್ ಜಯಂತಿ ಆಚರಣೆ
ಆಧುನಿಕ ಭಾರತದ ಪಿತಾಮಹ ಡಾ.ಅಂಬೇಡ್ಕರ್ : ಡಾ.ಸಿದ್ದರಾಮೇಶ್ವರ ಬೆಲ್ದಾಳ
ಮಹಾರಾಷ್ಟ್ರ| 180 ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ, ಅಶ್ಲೀಲ ವೀಡಿಯೊ ಚಿತ್ರೀಕರಣ: ಆರೋಪಿಯ ಬಂಧನ
ಅಮರಾವತಿ,ಎ.15: ಅಪ್ರಾಪ್ತ ವಯಸ್ಕ ಬಾಲಕಿಯರನ್ನು ಲೈಂಗಿಕವಾಗಿ ಬಳಸಿಕೊಂಡು ಈ ನಿರ್ಲಜ್ಜ ಕೃತ್ಯದ ವೀಡಿಯೊಗಳನ್ನು ಚಿತ್ರೀಕರಿಸಿದ್ದ ಆರೋಪಿಯನ್ನು ಮಹಾರಾಷ್ಟ್ರದ ಅಮರಾವತಿ ಜಿಲ್ಲೆಯಲ್ಲಿ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣವು ಸಾರ್ವಜನಿಕರಲ್ಲಿ ಭಾರೀ ಆಕ್ರೋಶವನ್ನು ಸೃಷ್ಟಿಸಿದ್ದು, ತೀವ್ರ ರಾಜಕೀಯ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಆರೋಪಿ ಅಯಾನ್ ಅಹ್ಮದ್ ತನ್ವೀರ್ (19) ಸುಮಾರು 180 ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯವನ್ನೆಸಗಿದ್ದಾನೆ ಮತ್ತು ಇಂತಹ 350ಕ್ಕೂ ಅಧಿಕ ವೀಡಿಯೊಗಳನ್ನು ಚಿತ್ರೀಕರಿಸಿದ್ದಾನೆ ಎಂದು ಕೆಲವು ಸ್ಥಳೀಯ ರಾಜಕೀಯ ಸಂಘಟನೆಗಳು ಆರೋಪಿಸಿವೆ. ಆದರೆ ಪೊಲೀಸರು ಈವರೆಗೆ ಎಂಟು ಬಾಲಕಿಯರು ಲೈಂಗಿಕ ಶೋಷಣೆಗೆ ಗುರಿಯಾಗಿದ್ದನ್ನು ದೃಢಪಡಿಸಿಕೊಂಡಿದ್ದಾರೆ. ಪೊಲೀಸರು ಎ.11ರಂದು ಅಮರಾವತಿಯ ಪರತವಾಡಾದಲ್ಲಿ ತನ್ವೀರ್ನನ್ನು ಬಂಧಿಸಿದ್ದು,ನ್ಯಾಯಾಲಯವು ಎ.21ರವರೆಗೆ ಪೊಲೀಸ್ ಕಸ್ಟಡಿಯನ್ನು ವಿಧಿಸಿದೆ. ಅಧಿಕಾರಿಗಳು ಆರೋಪಿಯ ಮೊಬೈಲ್ ಅನ್ನು ವಶಪಡಿಸಿಕೊಂಡಿದ್ದು, ಅದು ಹಲವಾರು ಆಕ್ಷೇಪಾರ್ಹ ವೀಡಿಯೊಗಳನ್ನು ಒಳಗೊಂಡಿದೆ. ಆತ ಅಳಿಸಿರುವ ಹೆಚ್ಚುವರಿ ಡೇಟಾದ ಮರುಪ್ರಾಪ್ತಿಗಾಗಿ ವಿಧಿವಿಜ್ಞಾನ ತಂಡಗಳು ಶ್ರಮಿಸುತ್ತಿವೆ. ತನ್ವೀರ್ ವಾಟ್ಸಆ್ಯಪ್ ಮತ್ತು ಸ್ನ್ಯಾಪ್ಚಾಟ್ ಗ್ರೂಪ್ಗಳ ಮೂಲಕ ಹಲವಾರು ಬಾಲಕಿಯರೊಂದಿಗೆ ಸ್ನೇಹವನ್ನು ಬೆಳೆಸಿಕೊಂಡು ಅವರ ನಂಬಿಕೆಯನ್ನು ಗಳಿಸಿದ್ದ ಮತ್ತು ತನ್ನೊಂದಿಗೆ ಸಂಬಂಧಕ್ಕೆ ಅವರಿಗೆ ಆಮಿಷವೊಡ್ಡಿದ್ದ. ಬಾಲಕಿಯರನ್ನು ಮುಂಬೈ ಮತ್ತು ಪುಣೆಗೆ ಕರೆದೊಯ್ಯುತ್ತಿದ್ದ ಆತ ಅವರ ಒಪ್ಪಿಗೆಯಿಲ್ಲದೆ ಆಪ್ತಕ್ಷಣಗಳ ವೀಡಿಯೊಗಳನ್ನು ಚಿತ್ರೀಕರಿಸಿ ನಂತರ ಅವರನ್ನು ಬೆದರಿಸಲು ಮತ್ತು ಬ್ಲ್ಯಾಕ್ ಮೇಲ್ ಮಾಡಲು ಅವುಗಳನ್ನು ಬಳಸಿಕೊಳ್ಳುತ್ತಿದ್ದ ಎಂದು ಪೊಲೀಸ್ ತನಿಖೆಯಲ್ಲಿ ಬಹಿರಂಗವಾಗಿದೆ. ಪೊಲೀಸರು ಈವರೆಗೆ ಎಂಟು ಸಂತ್ರಸ್ತ ಬಾಲಕಿಯರನ್ನು ಗುರುತಿಸಿದ್ದು,ತನಿಖೆಯು ಮುಂದುವರಿದಂತೆ ಈ ಸಂಖ್ಯೆ ಹೆಚ್ಚಬಹುದು. ಅಶ್ಲೀಲ ವೀಡಿಯೊಗಳ ಚಿತ್ರೀಕರಣ ಅಥವಾ ಪ್ರಸಾರದ ಹಿಂದೆ ಸಂಘಟಿತ ಜಾಲವಿದೆಯೇ ಎಂಬ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಸಂತ್ರಸ್ತರಿಗೆ ನೆರವಾಗಲು ಮತ್ತು ದೂರುಗಳನ್ನು ಸಲ್ಲಿಸುವಂತೆ ಉತ್ತೇಜಿಸಲು ಪೊಲೀಸರು ಮಹಿಳಾ ಅಧಿಕಾರಿಗಳನ್ನೊಂಡ ವಿಶೇಷ ತಂಡವೊಂದನ್ನು ರಚಿಸಿದ್ದಾರೆ. ಪ್ರಕರಣದಲ್ಲಿ ಉಜೇರ್ ಖಾನ್ ಇಕ್ಬಾಲ್ ಖಾನ್ ಎಂಬ ಇನ್ನೊಬ್ಬ ಆರೋಪಿಯನ್ನೂ ಪೊಲೀಸರು ಬಂಧಿಸಿದ್ದಾರೆ. ಈತ ತನ್ವೀರ್ನ ಮೊಬೈಲ್ನಿಂದ ಆಕ್ಷೇಪಾರ್ಹ ಮತ್ತು ಅಶ್ಲೀಲ ವೀಡಿಯೊಗಳನ್ನು ಡೌನ್ಲೋಡ್ ಮಾಡಿಕೊಂಡಿದ್ದ ಮತ್ತು ಸುಮಾರು 100 ವೀಡಿಯೊಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಪ್ರಸಾರ ಮಾಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣದ ಆರೋಪಿ ತನ್ವೀರ್ ಅಲಿಯಾಸ್ ಮುಹಮ್ಮದ್ ಅಯಾಜ್ನ ನಿವಾಸದ ಒಂದು ಭಾಗವನ್ನು ಅಕ್ರಮವಾಗಿ ನಿರ್ಮಿಸಿದ ಆರೋಪದಲ್ಲಿ ಅಚಲ್ಪುರ ನಗರಸಭೆಯ ಅಧಿಕಾರಿಗಳು ಬುಲ್ಡೋಜರ್ ಕಾರ್ಯಾಚರಣೆ ನಡೆ ಕೆಡವಿದ್ದಾರೆ. ಬಿಜೆಪಿ ಶಾಸಕ ಪ್ರವೀಣ ತಾಯಡೆ ಅವರು ನೆಲಸಮ ಕಾರ್ಯಾಚರಣೆಯ ಮೇಲ್ವಿಚಾರಣೆ ವಹಿಸಿದ್ದರು. ಅತಿಕ್ರಮಣಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳು ತನ್ವೀರ್ ಕುಟುಂಬಕ್ಕೆ ನೋಟಿಸ್ ನೀಡಿದ್ದರು ಎನ್ನಲಾಗಿದ್ದು,ಆತನ ಮನೆಯ ಹೊರಗೆ ಭಾರೀ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ.
Bengaluru | ಆರ್ಬಿಐ ಕಚೇರಿಯಲ್ಲಿ ನಕಲಿ ನೋಟುಗಳನ್ನು ಬದಲಾಯಿಸಲು ಯತ್ನ: ಆರೋಪಿ ಬಂಧನ
ಬೆಂಗಳೂರು : ಚಲಾವಣೆ ರದ್ದಾಗಿರುವ 2 ಸಾವಿರ ರೂ.ಮುಖಬೆಲೆಯ ನೋಟುಗಳಂತೆ ನಕಲಿ ನೋಟುಗಳನ್ನು ಆರ್ಬಿಐ ಕಚೇರಿಯಲ್ಲಿ ಬದಲಾಯಿಸಲು ಯತ್ನಿಸಿದ ವ್ಯಕ್ತಿಯನ್ನು ಇಲ್ಲಿನ ಹಲಸೂರು ಗೇಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ. 2 ಸಾವಿರ ರೂಪಾಯಿ ಮುಖಬೆಲೆಯ ಸುಮಾರು 375 ನಕಲಿ ನೋಟುಗಳನ್ನು ತಂದಿದ್ದ 52 ವರ್ಷ ವಯಸ್ಸಿನ ವ್ಯಕ್ತಿಯನ್ನು ಬಂಧಿಸಲಾಗಿದೆ. ನಾಗಶೆಟ್ಟಿಹಳ್ಳಿಯ ನಿವಾಸಿಯಾಗಿರುವ ಆರೋಪಿ, ಎ.9ರಂದು ನಗರದ ನೃಪತುಂಗ ರಸ್ತೆಯ ಆರ್ಬಿಐ ಕಚೇರಿಗೆ ಭೇಟಿ ನೀಡಿದ್ದ. ತನ್ನ ಬಳಿ ಇರುವ 2ಸಾವಿರ ರೂಪಾಯಿ ಮುಖಬೆಲೆಯ ಸುಮಾರು 375 ನೋಟುಗಳನ್ನು ಜಮೆ ಮಾಡುವಂತೆ ಕೋರಿದ್ದ. ಆದರೆ, ಅಧಿಕಾರಿಗಳು ನೋಟುಗಳನ್ನು ತಪಾಸಣೆ ನಡೆಸಿದಾಗ ಅವುಗಳು ನಕಲಿ ಎಂದು ತಿಳಿದುಬಂದಿದೆ. ಆರ್ಬಿಐ ಸಹಾಯಕ ಜನರಲ್ ಮ್ಯಾನೇಜರ್ ಭೀಮ್ ಚೌಧರಿ ಅವರು ನೀಡಿದ ದೂರಿನ ಮೇರೆಗೆ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿಗೆ ನಕಲಿ ನೋಟುಗಳನ್ನು ನೀಡಿದವರು ಯಾರು ಮತ್ತು ಅವುಗಳನ್ನು ಎಲ್ಲಿ ಮುದ್ರಿಸಲಾಗಿದೆ ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಹುಣಸಗಿ | ಅಂಬೇಡ್ಕರ್ ಕೇವಲ ಮೀಸಲಾತಿ ಕೊಟ್ಟವರಲ್ಲ, ಬದುಕುವ ಹಕ್ಕು ನೀಡಿದ ಮಹಾಜ್ಞಾನಿ: ತಹಶೀಲ್ದಾರ್ ಬಸವರಾಜ
ಹುಣಸಗಿ : ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರು ಕೇವಲ ಮೀಸಲಾತಿ ನೀಡಿದ ಮಹಾಪುರುಷ ಮಾತ್ರವಲ್ಲ, ಪ್ರತಿಯೊಬ್ಬರಿಗೂ ಸಮಾನವಾಗಿ ಬದುಕುವ ಹಕ್ಕು ನೀಡಿದ ಮಹಾಜ್ಞಾನಿ ಎಂದು ತಹಶೀಲ್ದಾರ ಎಂ. ಬಸವರಾಜ ಹೇಳಿದರು. ಪಟ್ಟಣದ ತಹಶೀಲ್ದಾರ ಕಚೇರಿ ಆವರಣದಲ್ಲಿ ನಡೆದ ಡಾ. ಅಂಬೇಡ್ಕರ್ ಅವರ 135ನೇ ಜಯಂತಿ ಕಾರ್ಯಕ್ರಮದಲ್ಲಿ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದ ಅವರು, ಅಂಬೇಡ್ಕರ್ ಅವರು ಕಷ್ಟಕರ ಪರಿಸ್ಥಿತಿಗಳ ನಡುವೆ ಬೆಳೆಯುತ್ತಾ, ತಮ್ಮ ನಿರಂತರ ಅಧ್ಯಯನ ಮತ್ತು ಪ್ರತಿಭೆಯಿಂದ ವಿಶ್ವದಲ್ಲೇ ಅತ್ಯುನ್ನತ ಸಂವಿಧಾನವನ್ನು ರೂಪಿಸಿದ ಮಹಾನ್ ಚಿಂತಕರಾಗಿದ್ದಾರೆ ಎಂದರು. ಭಾರತೀಯ ಸಮಾಜ ಜಾತಿ ವ್ಯವಸ್ಥೆಯಿಂದ ಬಳಲುತ್ತಿದ್ದ ಸಂದರ್ಭದಲ್ಲಿ ಸಮಾನತೆ, ನ್ಯಾಯ ಮತ್ತು ಸ್ವಾತಂತ್ರ್ಯದ ಮೌಲ್ಯಗಳನ್ನು ಸ್ಥಾಪಿಸುವಲ್ಲಿ ಅವರು ಮಹತ್ವದ ಪಾತ್ರ ವಹಿಸಿದ್ದಾರೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಮಾತನಾಡಿದ ಉಪನ್ಯಾಸಕ ವಿಜಯಕುಮಾರ ಸಾಲಿಮನಿ, ಅಂಬೇಡ್ಕರ್ ಅವರು ಶಿಕ್ಷಣಕ್ಕೆ ಅತ್ಯಂತ ಮಹತ್ವ ನೀಡಿದ್ದು, “ಶಿಕ್ಷಣವು ಹುಲಿಯ ಹಾಲಿನಂತದ್ದು, ಅದನ್ನು ಕುಡಿದವರು ಘರ್ಜಿಸಲೇಬೇಕು” ಎಂಬ ಅವರ ಮಾತುಗಳು ಇಂದಿಗೂ ಪ್ರೇರಣೆಯಾಗಿವೆ ಎಂದು ಹೇಳಿದರು. ಅಂಬೇಡ್ಕರ್ ಅವರು ಒಂದೇ ಸಮುದಾಯಕ್ಕೆ ಸೀಮಿತವಾಗಿಲ್ಲ, ಎಲ್ಲಾ ವರ್ಗಗಳ ಅಭಿವೃದ್ಧಿಗಾಗಿ ಶ್ರಮಿಸಿದ ಮಹಾನ್ ವ್ಯಕ್ತಿ. ಅವರ ಆಲೋಚನೆಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಅವರು ಕರೆ ನೀಡಿದರು. ಈ ಸಂದರ್ಭದಲ್ಲಿ ಪ.ಪಂ ಅಧ್ಯಕ್ಷ ಮರಲಿಂಗಪ್ಪ ನಾಟೇಕರ್, ಭೂ ನ್ಯಾಯ ಮಂಡಳಿ ಸದಸ್ಯ ಮಲ್ಲಣ್ಣ ಕಟ್ಟಿಮನಿ, ಪಶುವೈದ್ಯ ಮೈಬೂಬಸಾಬ ಖಾಜಿ,ಪಿಎಸ್ಐ ಬಾಗಣ್ಣ, ಸಮಾಜ ಕಲ್ಯಾಣ ಕಛೇರಿ ಅಧಿಕ್ಷಕ ಚನ್ನಕೇಶೌ, ಸುರೇಶ ಹಾದಿಮನಿ, ಗುರುದೇವಿ,ದಲಿತ ಮುಖಂಡರಾದ ಮಹ್ಮದ ರಫೀಕ್ ಪಟೇಲ್,ಕೃಷಿ ಅಧಿಕಾರಿ ಸಿದ್ದಾರ್ಥ ಪಾಟೀಲ್, ಸೇರಿದಂತೆ ದಲಿತ ಮುಖಂಡರಾದ ಶರಣಪ್ಪ ಗುಳಬಾಳ, ಭೀಮಣ್ಣ ನಾಟೇಕರ್,ರಾಮಣ್ಣ ಕಲ್ಲದೇವನಹಳ್ಳಿ, ಚೆನ್ನಪ್ಪ ತಿರ್ಥ,ಪವಾಡೆಪ್ಪ ಕಕ್ಕೇರಾ, ಶಿವಪ್ಪ ಕಲ್ಲದೇವನಹಳ್ಳಿ, ಗುರಣ್ಣ ಮಾಳನೂರ, ಜುಮ್ಮಣ್ಣ ಗುಡಿಮನಿ, ವಿರೇಶ ಗುಳಬಾಳ, ದೇವಪ್ಪ ಅರಕೇರಾ,ಪರಶುರಾಮ ಅರಕೇರಾ ಸೇರಿದಂತೆ ಇನ್ನಿತರರು ಇದ್ದರು.
ಕದನ ವಿರಾಮ ವಿಸ್ತರಣೆ ಕುರಿತು ಅಮೆರಿಕ ಔಪಚಾರಿಕ ಒಪ್ಪಿಗೆ ನೀಡಿಲ್ಲ: ವರದಿ
ವಾಷಿಂಗ್ಟನ್, ಎ.15: ಇರಾನ್ ಜೊತೆಗಿನ ಕದನ ವಿರಾಮವನ್ನು ವಿಸ್ತರಿಸುವ ಬಗ್ಗೆ ಅಮೆರಿಕ ಇನ್ನೂ ಯಾವುದೇ ಔಪಚಾರಿಕ ಒಪ್ಪಿಗೆ ನೀಡಿಲ್ಲ ಎಂದು ಅಮೆರಿಕದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ರಾಯಿಟರ್ಸ್ ಸುದ್ದಿ ಸಂಸ್ಥೆ ಉಲ್ಲೇಖಿಸಿದಂತೆ, ಹೆಸರು ಬಹಿರಂಗಪಡಿಸಬಾರದು ಎಂಬ ಷರತ್ತಿನೊಂದಿಗೆ ಮಾತನಾಡಿದ ಆ ಅಧಿಕಾರಿ, ಕದನ ವಿರಾಮ ವಿಸ್ತರಣೆ ಕುರಿತ ಅಂತಿಮ ಒಪ್ಪಂದಕ್ಕಾಗಿ ಅಮೆರಿಕ ಮತ್ತು ಇರಾನ್ ನಡುವೆ ನಿರಂತರ ಮಾತುಕತೆಗಳು ನಡೆಯುತ್ತಿವೆ ಎಂದು ಹೇಳಿದ್ದಾರೆ. ಈ ನಡುವೆ, ಮುಂದಿನ ಎರಡು ದಿನಗಳಲ್ಲಿ ಪಾಕಿಸ್ತಾನದಲ್ಲಿ ಮಾತುಕತೆಗಳು ಪುನರಾರಂಭಗೊಳ್ಳುವ ಸಾಧ್ಯತೆ ಇದೆ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿಳಿಸಿದ್ದಾರೆ. ಇದರ ಬೆನ್ನಲ್ಲೇ, ಪಾಕಿಸ್ತಾನದ ಪ್ರಧಾನಿ ಶೆಹಬಾಝ್ ಷರೀಫ್ ಇಬ್ಬರೂ ದೇಶಗಳ ನಡುವೆ ಮಾತುಕತೆ ಪ್ರಾರಂಭಿಸಲು ಆಗ್ರಹಿಸಿದ್ದಾರೆ.
Bidar | ಫೋರ್ಬ್ಸ್ ಇಂಡಿಯಾದ ‘ಲೀಡರ್ ಆಫ್ ಟುಮಾರೋ’ ಗೌರವಕ್ಕೆ ಡಾ.ಅಬ್ದುಲ್ ಖದೀರ್ ಆಯ್ಕೆ
ಬೀದರ್: ನಗರದ ಶಾಹೀನ್ ಶಿಕ್ಷಣ ಸಂಸ್ಥೆಗಳ ಸಮೂಹ ಅಧ್ಯಕ್ಷ ಹಾಗೂ ಶಿಕ್ಷಣ ತಜ್ಞ ಡಾ. ಅಬ್ದುಲ್ ಖದೀರ್ ಅವರನ್ನು ಫೋರ್ಬ್ಸ್ ಇಂಡಿಯಾ ನಿಯತಕಾಲಿಕೆಯು ‘ಲೀಡರ್ ಆಫ್ ಟುಮಾರೋ’ ಎಂದು ಗುರುತಿಸಿದೆ. ವಿಶಿಷ್ಟ ಸಾಧನೆ ಮೂಲಕ ಗಮನಾರ್ಹ ಸಾಧನೆ ಮಾಡಿದ 10 ಭಾರತೀಯರನ್ನು ಫೋರ್ಬ್ಸ್ ಇಂಡಿಯಾ ‘ನಾಳೆಯ ನಾಯಕರು’ ಎಂದು ಆಯ್ಕೆ ಮಾಡಿದ್ದು, ಅದರಲ್ಲಿ ಡಾ. ಖದೀರ್ ಸ್ಥಾನ ಪಡೆದಿರುವುದು ವಿಶೇಷವಾಗಿದೆ. ಶಾಲೆ ಬಿಟ್ಟ ಮಕ್ಕಳನ್ನು ಮತ್ತೆ ಶಿಕ್ಷಣದ ಮುಖ್ಯವಾಹಿನಿಗೆ ತರಲು ಶಾಹೀನ್ ಸಂಸ್ಥೆ ಜಾರಿಗೊಳಿಸಿದ ‘ಶೈಕ್ಷಣಿಕ ತೀವ್ರ ನಿಗಾ ಘಟಕ’ (AICU) ಮಾದರಿಯನ್ನು ಫೋರ್ಬ್ಸ್ ವಿಶೇಷವಾಗಿ ಪ್ರಶಂಸಿಸಿದೆ. ಬೀದರ್ನಲ್ಲಿ ವಿದ್ಯಾರ್ಥಿಗಳು ಖಾಸಗಿ ಟ್ಯೂಷನ್ಗಳ ಮೇಲೆ ಅವಲಂಬಿತರಾಗಿದ್ದ ಹಿನ್ನೆಲೆ, ಶಾಲಾ ಅವಧಿಯಲ್ಲೇ ವೈಯಕ್ತಿಕ ಗಮನ ನೀಡುವ ಕಾರ್ಯಕ್ರಮವನ್ನು ಶಾಹೀನ್ ಸಂಸ್ಥೆ ಆರಂಭಿಸಿತು. ಇದರಿಂದ ಟ್ಯೂಷನ್ ಅವಲಂಬನೆ ಕಡಿಮೆಯಾಗಿದ್ದು, ಬಳಿಕ ಶಾಲೆ ಬಿಟ್ಟ ಮಕ್ಕಳನ್ನು ಮತ್ತೆ ಶಿಕ್ಷಣಕ್ಕೆ ತರುವ ಯೋಜನೆಯಾಗಿ AICU ರೂಪುಗೊಂಡಿತು. ಇದಲ್ಲದೆ, ಡಾ. ಅಬ್ದುಲ್ ಖದೀರ್ ಅವರು ವಿದೇಶಗಳಲ್ಲಿ ಎಂಬಿಬಿಎಸ್ ಕಾಲೇಜುಗಳ ಸ್ಥಾಪನೆಯ ಮೂಲಕ ವೈದ್ಯಕೀಯ ಶಿಕ್ಷಣ ಪಡೆಯಲು ಬಯಸುವ ವಿದ್ಯಾರ್ಥಿಗಳಿಗೆ ಜಾಗತಿಕ ಅವಕಾಶಗಳನ್ನು ಒದಗಿಸುತ್ತಿದ್ದಾರೆ. 1989ರಲ್ಲಿ ಸ್ಥಾಪಿತವಾದ ಶಾಹೀನ್ ಶಿಕ್ಷಣ ಸಂಸ್ಥೆಯಡಿಯಲ್ಲಿ ದೇಶದಾದ್ಯಂತ 116ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿದ್ದು, 45 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ.
ಕೇಂದ್ರ ಸರ್ಕಾರಿ ನೌಕರರಿಗೆ ಬಂಪರ್: 8ನೇ ವೇತನ ಆಯೋಗದಲ್ಲಿ ಕನಿಷ್ಠ ವೇತನ 69 ಸಾವಿರ ರೂ. ಏರಿಕೆ? ಒಕ್ಕೂಟ ಪ್ರಸ್ತಾವನೆ
ಕೇಂದ್ರ ಸರ್ಕಾರದ 8 ನೇ ವೇತನ ಆಯೋಗಕ್ಕೆ ಸಂಬಂಧಿಸಿದಂತೆ ನೌಕರರ ಒಕ್ಕೂಟಗಳು ಭರ್ಜರಿ ಪ್ರಸ್ತಾವನೆ ಸಲ್ಲಿಕೆ ಮಾಡಿವೆ. ಎನ್ಸಿ ಜೆಸಿಎಂ ಕರಡು ಸಮಿತಿ ಅಂತಿಮ ಜ್ಞಾಪಕ ಪತ್ರ ನೀಡಿದ್ದು, ಮೂಲ ವೇತದಲ್ಲಿ ಭಾರೀ ಬದಲಾವಣೆ ತರಲು ಬೇಡಿಕೆ ಇಟ್ಟಿವೆ. ಇದರ ಜತೆಗೆ ಹಳೇ ಪಿಂಚಣಿ ಯೋಜನೆ ಜಾರಿ, ಬಡ್ತಿ ಸಂಬಂಧವೂ ಹಲವು ಪ್ರಸ್ತಾವನೆ ಸಲ್ಲಿಸಿವೆ. ಈ ಬಗ್ಗೆ ಸಂಪೂರ್ಣ ವಿವರ ಇಲ್ಲಿದೆ.
ಮನುಷ್ಯತ್ವವಿಲ್ಲದೆ ಪೂಜೆ ಮಾಡಿದರೆ ಫಲ ದೊರಕುವುದಿಲ್ಲ : ಸಿಎಂ ಸಿದ್ದರಾಮಯ್ಯ
‘ಕನ್ನಡ ಸಾಮರಸ್ಯದ ನೆಲೆಗಳು’ 41 ಕೃತಿಗಳ ಲೋಕಾರ್ಪಣೆ
Bidar | ಪುನಾ ಒಪ್ಪಂದವೇ ದಲಿತರ ಸಮಸ್ಯೆಗೆ ಕಾರಣ: ಪ್ರೇಮಕುಮಾರ್ ಗೆದ್ದಂ
ಬೀದರ್: ಇಂದಿಗೂ ದಲಿತರ ಸಮಸ್ಯೆಗಳಿಗೆ ಸಮರ್ಪಕ ಪರಿಹಾರ ಸಿಗದೇ ಇರುವುದಕ್ಕೆ ಪುನಾ ಒಪ್ಪಂದವೇ ಪ್ರಮುಖ ಕಾರಣವಾಗಿದೆ ಎಂದು ರಾಷ್ಟ್ರೀಯ ಬುಡಕಟ್ಟು ಸ್ವಾಯತ್ತ ಮಂಡಳಿಯ ರಾಷ್ಟ್ರೀಯ ಕಾರ್ಯಕಾರಿ ಅಧ್ಯಕ್ಷ ಪ್ರೇಮಕುಮಾರ್ ಗೆದ್ದಂ ಅಭಿಪ್ರಾಯಪಟ್ಟರು. ನಗರದ ಅಂಬೇಡ್ಕರ್ ವೃತ್ತದಲ್ಲಿ ಜಿಲ್ಲಾಡಳಿತ ಸೇರಿದಂತೆ ವಿವಿಧ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ನಡೆದ ಡಾ. ಬಿ.ಆರ್. ಅಂಬೇಡ್ಕರ್ ಅವರ 135ನೇ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ದುಂಡುಮೇಜಿನ ಪರಿಷತ್ನಲ್ಲಿ ಅಂಬೇಡ್ಕರ್ ಅವರು ಮುಂದಿಟ್ಟ ಬೇಡಿಕೆಗಳು ಜಾರಿಯಾಗಿದ್ದರೆ ಇಂದಿನ ದಿನದಲ್ಲಿ ಎಸ್ಸಿ, ಎಸ್ಟಿ, ಓಬಿಸಿ ಹಾಗೂ ಅಲ್ಪಸಂಖ್ಯಾತರು ಆಡಳಿತದಲ್ಲಿ ಹೆಚ್ಚಿನ ಸ್ಥಾನದಲ್ಲಿರುತ್ತಿದ್ದರು. ಆದರೆ ಮಹಾತ್ಮ ಗಾಂಧೀಜಿ ಅವರ ವಿರೋಧದ ಹಿನ್ನೆಲೆಯಲ್ಲಿ ಯರವಾಡ ಜೈಲಿನಲ್ಲಿ ನಡೆದ ಉಪವಾಸ ಸತ್ಯಾಗ್ರಹದ ಬಳಿಕ ಪುನಾ ಒಪ್ಪಂದ ಜಾರಿಯಾಯಿತು. ಆ ಒಪ್ಪಂದವೇ ಇಂದಿನ ಸಮಸ್ಯೆಗಳಿಗೆ ಕಾರಣವಾಗಿದೆ ಎಂದು ಹೇಳಿದರು. ಸಮಾನತೆ, ಸ್ವಾತಂತ್ರ್ಯ, ನ್ಯಾಯ ಹಾಗೂ ಬಂಧುತ್ವದ ಮೇಲೆ ಸಮಾಜ ನಿರ್ಮಾಣವಾಗಬೇಕು ಎಂಬುದು ಸಂವಿಧಾನದ ಆಶಯವಾದರೂ, ಅಸಮಾನತೆ ಮತ್ತು ಅಂಧವಿಶ್ವಾಸವನ್ನು ಕೆಲವು ಶಕ್ತಿಗಳು ಉತ್ತೇಜಿಸುತ್ತಿವೆ ಎಂದು ಅವರು ಆರೋಪಿಸಿದರು. ಅಸ್ಪೃಶ್ಯತೆ ಇನ್ನೂ ಸಂಪೂರ್ಣ ನಿರ್ಮೂಲನೆಯಾಗಿಲ್ಲ. ದಲಿತರು ಮೀಸೆ ಬೆಳೆಸಿದರೂ, ಕುದುರೆಯ ಮೇಲೆ ಕುಳಿತರೂ ಹಲ್ಲೆಗೊಳಗಾಗುವ ಘಟನೆಗಳು ನಡೆಯುತ್ತಿವೆ. ದಲಿತ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಗೆ ಸಹ ದೇವಾಲಯ ಪ್ರವೇಶದಲ್ಲಿ ಅಡೆತಡೆ ಉಂಟಾದ ಉದಾಹರಣೆಗಳಿವೆ ಎಂದು ಬೇಸರ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ಮಾತನಾಡಿದ ನಿಜಗುಣಾನಂದ ಸ್ವಾಮಿ, ಶಿಕ್ಷಣ, ಹೋರಾಟ ಮತ್ತು ಸಂಘಟನೆಗಳ ಮೂಲಕ ಸಮಾಜ ಪ್ರಗತಿಯಾಗಬೇಕು ಎಂಬುದು ಅಂಬೇಡ್ಕರ್ ಅವರ ಆಶಯವಾಗಿದ್ದು, ಸಂವಿಧಾನದ ಮೌಲ್ಯಗಳನ್ನು ಪಾಲಿಸುವುದು ನಮ್ಮ ಕರ್ತವ್ಯ ಎಂದು ಹೇಳಿದರು. ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ ಮಾತನಾಡಿ, ಬಸವಣ್ಣ ಮತ್ತು ಅಂಬೇಡ್ಕರ್ ಅವರ ಚಿಂತನೆಗಳಿಂದಲೇ ಶೋಷಿತ ವರ್ಗಗಳಿಗೆ ಶಿಕ್ಷಣದ ಅವಕಾಶ ಸಿಕ್ಕಿದೆ ಎಂದರು. ಜಿಲ್ಲೆಯಲ್ಲಿ 20 ಕೋಟಿ ರೂ. ವೆಚ್ಚದಲ್ಲಿ ಅಂಬೇಡ್ಕರ್ ಸಂಶೋಧನಾ ಕೇಂದ್ರ ನಿರ್ಮಾಣಕ್ಕೆ ಚಾಲನೆ ನೀಡಲಾಗುವುದು ಹಾಗೂ ಅಂಬೇಡ್ಕರ್ ಭವನ ನಿರ್ಮಿಸಲಾಗುವುದು ಎಂದು ಅವರು ಭರವಸೆ ನೀಡಿದರು. ಈ ಸಂದರ್ಭದಲ್ಲಿ ಭಂತೆ ಜ್ಞಾನಸಾಗರ್, ಪೌರಾಡಳಿತ ಹಾಗೂ ಹಜ್ ಸಚಿವ ರಹೀಂ ಖಾನ್, ಶಾಸಕ ಶೈಲೇಂದ್ರ ಬೆಲ್ದಾಳೆ, ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಗಿರೀಶ್ ಬದೋಲೆ, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಯೋಗೇಶ್ ಸೇರಿದಂತೆ ಸಮಾಜದ ನೂರಾರು ಮುಖಂಡರು, ಸಾರ್ವಜನಿಕರು ಉಪಸ್ಥಿತರಿದ್ದರು.
Rohit Sharma- ಸತತ ಸೋಲಿಂದ ಕಂಗೆಟ್ಟಿರುವ MIಗೆ ದೊಡ್ಡ ಹೊಡೆತ; ಗಾಯಾಳು ಹಿಟ್ ಮ್ಯಾನ್ 2 ಪಂದ್ಯಗಳಿಂದ ಔಟ್?
ಈ ಸೀಸನ್ ನಲ್ಲಿ ಸತತ 3 ಪಂದ್ಯಗಳನ್ನು ಸೋತು ಕಂಗೆಟ್ಟಿರುವ ಮುಂಬೈ ಇಂಡಿಯನ್ಸ್ ತಂಡಕ್ಕೆ ಇದೀಗ ಗಾಯದ ಮೇಲೆ ಬರೆ ಎಳೆದಂತಹ ಅನುಭವ. ಕಾರಣ ತಂಡದ ಸ್ಚಾರ್ ಬ್ಯಾಚರ್ ರೋಹಿತ್ ಶರ್ಮಾ ಅವರು ಗಾಯದ ಸಮಸ್ಯೆಯಿಂದಾಗಿ ಮುಂದಿನ 2 ಪಂದ್ಯಗಳನ್ನು ಆಢುವ ಸಾಧ್ಯತೆ ಕಡಿಮೆ ಎಂದು ವರದಿಯಾಗಿದೆ. ಅವರು ಆರ್ಸಿಬಿ ವಿರುದ್ಧದ ಪಂದ್ಯದಲ್ಲಿ ಗಾಯಗೊಂಡು ನಿವೃತ್ತರಾಗಿದ್ದರು. ಸದ್ಯ ನಾಲ್ಕು ಪಂದ್ಯಗಳಲ್ಲಿ ಮೂರು ಸೋಲು ಕಂಡು ಅಂಕಪಟ್ಟಿಯಲ್ಲಿ 9ನೇ ಸ್ಥಾನದಲ್ಲಿರುವ ಮುಂಬೈ ತಂಡಕ್ಕೆ ಇದು ದೊಡ್ಡ ಹಿನ್ನಡೆಯಾಗಿದೆ.
2026ರ ದ್ವಿತೀಯ PUC ಫಲಿತಾಂಶ: ನಗರದ ವಿದ್ಯಾರ್ಥಿಗಳನ್ನು ಹಿಂದಿಕ್ಕಿ ದಾಖಲೆ ಬರೆದ ಗ್ರಾಮೀಣ ಪ್ರತಿಭೆಗಳು
ಬೆಂಗಳೂರು: 2026ನೇ ಸಾಲಿನ ಕರ್ನಾಟಕ ದ್ವಿತೀಯ ಪಿಯುಸಿ ಫಲಿತಾಂಶವು ರಾಜ್ಯದ ಶಿಕ್ಷಣ ಕ್ಷೇತ್ರದಲ್ಲಿ ಹೊಸದೊಂದು ಭರವಸೆ ಮೂಡಿಸಿದೆ. ಸಾಮಾನ್ಯವಾಗಿ ನಗರ ಪ್ರದೇಶದ ವಿದ್ಯಾರ್ಥಿಗಳು ಅತ್ಯಾಧುನಿಕ ಸೌಲಭ್ಯಗಳೊಂದಿಗೆ ಪರೀಕ್ಷೆಗಳಲ್ಲಿ ಹೆಚ್ಚಿನ ಪೈಪೋಟಿ ನೀಡಿ ಮೇಲುಗೈ ಸಾಧಿಸುವುದು ವಾಡಿಕೆ. ಆದರೆ, ಈ ಬಾರಿಯ ದ್ವಿತೀಯ ಪಿಯುಸಿ ಬೋರ್ಡ್ ಪರೀಕ್ಷೆಯಲ್ಲಿ ಗ್ರಾಮೀಣ ಭಾಗದ ಪ್ರತಿಭೆಗಳು ನಗರದ ವಿದ್ಯಾರ್ಥಿಗಳನ್ನು ಹಿಂದಿಕ್ಕಿ ಸಾಧನೆ ಮಾಡಿದ್ದಾರೆ.
Aurad | ಅನ್ನಭಾಗ್ಯ ಯೋಜನೆ ಸಾರ್ವಜನಿಕರಿಗೆ ಸಮರ್ಪಕವಾಗಿ ತಲುಪಿಸಿ : ಚೆನ್ನಪ್ಪ ಉಪ್ಪೆ
ಔರಾದ್ : ಅನ್ನಭಾಗ್ಯ ಯೋಜನೆ ಸಾರ್ವಜನಿಕರಿಗೆ ಸಮರ್ಪಕವಾಗಿ ತಲುಪಿಸಬೇಕು ಎಂದು ತಾಲೂಕು ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷ ಚೆನ್ನಪ್ಪ ಉಪ್ಪೆ ಹೇಳಿದ್ದಾರೆ. ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಬುಧವಾರ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಗ್ಯಾರಂಟಿ ಯೋಜನೆಗಳ ಅನ್ನಭಾಗ್ಯ ಯೋಜನೆ ಪರಿಣಾಮಕಾರಿ ಅನುಷ್ಠಾನ ಕುರಿತು ಪಡಿತರ ವಿತರಕರೊಂದಿಗೆ ನಡೆಸಿದ ಸಭೆಯಲ್ಲಿ ಮಾತನಾಡಿದ ಅವರು, ರೇಷನ್ ಡೀಲರ್ಗಳು ಹಾಗೂ ಸಾರ್ವಜನಿಕರ ನಡುವೆ ಸಮನ್ವಯ ಸಾಧಿಸಿ ಸಮಸ್ಯೆಗಳನ್ನು ಬಗೆಹರಿಸಬೇಕು. ಪಡಿತರ ವಿತರಣೆಯಲ್ಲಿ ಕಮಿಟಿಗೆ ದೂರು ಬಂದಲ್ಲಿ ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು. ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಕಿರಣ್ ಪಾಟೀಲ್ ಅವರು ಮಾತನಾಡಿ, ರಾಜ್ಯ ಸರ್ಕಾರ ಜಾರಿಗೊಳಿಸಿರುವ ಪಂಚ ಗ್ಯಾರಂಟಿ ಯೋಜನೆಗಳ ಲಾಭವನ್ನು ಅರ್ಹ ಫಲಾನುಭವಿಗಳು ಪಡೆಯುವಂತೆ ಗ್ರಾಮ ಮಟ್ಟದಲ್ಲಿ ಮತ್ತಷ್ಟು ಜಾಗೃತಿ ಮೂಡಿಸುವ ಕಾರ್ಯ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು. ತಾಪಂ ಸಹಾಯಕ ನಿರ್ದೇಶಕ ಶಿವಕುಮಾರ್ ಘಾಟೆ ಅವರು ಮಾತನಾಡಿ, ಪಂಚ ಗ್ಯಾರಂಟಿ ಯೋಜನೆಗಳ ಲಾಭವು ಅರ್ಹ ಫಲಾನುಭವಿಗಳಿಗೆ ತಲುಪುವಂತೆ ನೋಡಿಕೊಳ್ಳಬೇಕು ಎಂದು ಹೇಳಿದರು. ಈ ಸಂದರ್ಭದಲ್ಲಿ ಪಂಚ ಗ್ಯಾರಂಟಿ ಯೋಜನೆಗಳ ಉಪಾಧ್ಯಕ್ಷ ಬಾಳಾಸಾಹೇಬ್ ಪಾಟೀಲ್, ಸದಸ್ಯರಾದ ಶಿವಕುಮಾರ್ ಪಾಟೀಲ್, ಶಂಕರ್ ಪಾಟೀಲ್, ಡಿ.ಕೆ ಚಂದು, ಸಂಜುಕುಮಾರ್ ಉಜನಿ, ಚೆನ್ನಬಸಪ್ಪ ಕೌಠಾ, ಸಿಡಿಪಿಒ ಇಮಾಲಪ್ಪ ಡಿ ಕೆ, ಜೆಸ್ಕಾಂ, ಆಹಾರ ಇಲಾಖೆ, ಯುವನಿಧಿ, ಸಾರಿಗೆ ಇಲಾಖೆಯ ಅಧಿಕಾರಿಗಳು ಹಾಗೂ ತಾಲೂಕು ಪಂಚಾಯತ್ ಸಿಬ್ಬಂದಿ ಉಪಸ್ಥಿತರಿದ್ದರು.
ಮಹಿಳಾ ಮೀಸಲಾತಿ, ಕ್ಷೇತ್ರ ಮರುಹಂಚಿಕೆ; ಬಿಜೆಪಿ ತನ್ನ ರಾಜಕೀಯ ಅಜೆಂಡಾಗೆ ಬಳಸಿಕೊಳ್ಳಬಾರದು: ಜನವಾದಿ ಮಹಿಳಾ ಸಂಘಟನೆ
ಬೆಂಗಳೂರು : ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಕಲ್ಪಿಸುವುದು, ಕ್ಷೇತ್ರ ಮರು ಹಂಚಿಕೆಯನ್ನು ಬಿಜೆಪಿಯು ತನ್ನ ಸೀಮಿತ ರಾಜಕೀಯ ಅಜೆಂಡಾಗೆ ಬಳಸಿಕೊಳ್ಳಬಾರದು ಎಂದು ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ಆಗ್ರಹಿಸಿದೆ. ಬುಧವಾರ ಈ ಕುರಿತು ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ ಅಧ್ಯಕ್ಷೆ ಚಂದ್ರಕುಮಾರಿ, ಪ್ರಧಾನ ಕಾರ್ಯದರ್ಶಿ ದೇವಿ ಜಂಟಿ ಪ್ರಕಟನೆ ನೀಡಿದ್ದು, 2023ರಲ್ಲಿ ‘ನಾರಿ ಶಕ್ತಿ ವಂದನ್ ಅಧಿನಿಯಮ’ದಲ್ಲಿ ಸೂಚಿಸಿದಂತೆ ಮಹಿಳಾ ಮೀಸಲಾತಿಯನ್ನು ಜನಗಣತಿ ಮತ್ತು ಕ್ಷೇತ್ರ ಮರುಹಂಚಿಕೆ (ಗಡಿ ನಿರ್ಣಯ)ಗೆ ಕೊಂಡಿಹಾಕುವ ಪ್ರಸ್ತಾಪಕ್ಕೆ ನಾವು ವಿರೋಧ ವ್ಯಕ್ತಪಡಿಸಿದ್ದರೂ, ಸಂವಿಧಾನದ 108ನೇ ತಿದ್ದುಪಡಿ ಮೂಲಕ ಒಂದು ಮೂರನೇ ಭಾಗ ಮೀಸಲಾತಿ ನೀಡುವ ಮಸೂದೆ ಅಂಗೀಕಾರಕ್ಕೆ ನಾವು ಬೆಂಬಲ ನೀಡಿದ್ದೇವೆ ಎಂದು ತಿಳಿಸಿದ್ದಾರೆ. ಮೋದಿ ಸರಕಾರವು ಈಗ ಹೊಸ ಪ್ರಸ್ತಾಪವನ್ನು ಮುಂದಿಟ್ಟಿದೆ. 2011ರ ಜನಗಣತಿ ಆಧಾರವಾಗಿ ಕ್ಷೇತ್ರ ಮರುಹಂಚಿಕೆ ಮಾಡಿ, ಸಂಸತ್ ಮತ್ತು ವಿಧಾನಸಭೆಗಳ ಸ್ಥಾನಗಳ ಸಂಖ್ಯೆಯನ್ನು ಹೆಚ್ಚಿಸುವುದರೊಂದಿಗೆ ಮಹಿಳಾ ಮೀಸಲಾತಿಯನ್ನು ಜೋಡಿಸಲು ಯತ್ನಿಸುತ್ತಿದೆ. ಈ ಪ್ರಸ್ತಾಪವನ್ನು ವಿರೋಧ ಪಕ್ಷಗಳೊಂದಿಗೆ ಯಾವುದೇ ಚರ್ಚೆ ಇಲ್ಲದೆ, ಎಲ್ಲಾ ಪಕ್ಷಗಳ ಸಭೆ ನಡೆಸಬೇಕೆಂಬ ಬೇಡಿಕೆಗಳನ್ನು ಲೆಕ್ಕಿಸದೇ ಮುಂದಿಟ್ಟಿರುವುದು ಖಂಡನೀಯ ಎಂದು ಹೇಳಿದ್ದಾರೆ. ಇಂತಹ ಕ್ರಮ ಗಂಭೀರ ಚಿಂತೆಗಳಿಗೆ ಕಾರಣವಾಗಿದೆ. ಹಳೆಯ ಜನಗಣತಿ ಆಧಾರದಲ್ಲಿ ಕ್ಷೇತ್ರ ಮರುಹಂಚಿಕೆ ಮಾಡಿ ಸ್ಥಾನಗಳನ್ನು ಹೆಚ್ಚಿಸುವುದು ದೇಶದ ವಿವಿಧ ರಾಜ್ಯಗಳ ಮೇಲೆ ವ್ಯಾಪಕ ಪರಿಣಾಮ ಬೀರುತ್ತದೆ. ಈ ವಿಷಯದಲ್ಲಿ ಎಲ್ಲಾ ರಾಜ್ಯಗಳೊಂದಿಗೆ ಸಮಗ್ರ ಚರ್ಚೆ ಮತ್ತು ಸಲಹೆ ಅಗತ್ಯವಾಗಿದೆ ಎಂದು ತಿಳಿಸಿದ್ದಾರೆ. ವಿಧಾನಸಭಾ ಚುನಾವಣೆಗಳು ನಡೆಯುತ್ತಿರುವ ಸಮಯದಲ್ಲಿ ಇಂತಹ ಪ್ರಸ್ತಾಪವನ್ನು ತುರ್ತುವಾಗಿ ಮುಂದೂಡುವುದು ಅತ್ಯಂತ ಆಕ್ಷೇಪಾರ್ಹ. ಇದು ಮಹಿಳಾ ಸಬಲೀಕರಣದ ನಿಜವಾದ ಬದ್ಧತೆಯಲ್ಲ, ಚುನಾವಣಾ ಲಾಭಕ್ಕಾಗಿ ನಡೆಸುವ ಸೀಮಿತ ರಾಜಕೀಯ ಉದ್ದೇಶವನ್ನು ಸ್ಪಷ್ಟಪಡಿಸುತ್ತದೆ. ಆದ್ದರಿಂದ, ಈ ಪ್ರಸ್ತಾಪಗಳನ್ನು ತಕ್ಷಣವೇ ಬದಿಗಿಟ್ಟು, ಸ್ಥಾನಗಳ ಹೆಚ್ಚಳದ ಪರಿಣಾಮಗಳ ಬಗ್ಗೆ ಎಲ್ಲಾ ಸಂಬಂಧಿತ ಪಕ್ಷಗಳು ಮತ್ತು ರಾಜ್ಯಗಳೊಂದಿಗೆ ವ್ಯಾಪಕ ಚರ್ಚೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ. ಮಹಿಳಾ ಮೀಸಲಾತಿಯನ್ನು 2029ರ ಸಾಮಾನ್ಯ ಚುನಾವಣೆಯಿಂದಲೇ ಜಾರಿಗೆ ತರಬೇಕು. ಇದಕ್ಕಾಗಿ ಜನಗಣತಿ ಮತ್ತು ಕ್ಷೇತ್ರ ಮರುಹಂಚಿಕೆಯಿಂದ ಅದನ್ನು ಬೇರ್ಪಡಿಸುವ ತಿದ್ದುಪಡಿ ಅಗತ್ಯವಿದೆ. ಆದರೆ ಮೋದಿ ಸರಕಾರವು ಇಂತಹ ಪ್ರಸ್ತಾಪಗಳನ್ನು ಕೇವಲ ರಾಜಕೀಯ ತಂತ್ರವಾಗಿ ಬಳಸುತ್ತಿದ್ದು, ಮಹಿಳಾ ಮೀಸಲಾತಿ ಜಾರಿಗೆ ಸ್ಪಷ್ಟ ಇಚ್ಛಾಶಕ್ತಿ ತೋರಿಸುತ್ತಿಲ್ಲ ಎಂದು ತಿಳಿಸಿದ್ದಾರೆ.
ಹುಲಸೂರ್ | ಚಿನ್ನಾಭರಣ ಕಳವು ಪ್ರಕರಣ : 13 ಲಕ್ಷ ರೂ. ಮೌಲ್ಯದ ಚಿನ್ನಾಭರಣ ವಶ, ಇಬ್ಬರ ಬಂಧನ
ಹುಲಸೂರ್ : ಭಾಲ್ಕಿ ತಾಲ್ಲೂಕಿನ ಮೇಹಕರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಚಿನ್ನಾಭರಣ ಕಳ್ಳತನ ಪ್ರಕರಣವನ್ನು ಪೊಲೀಸರು ಭೇದಿಸಿ, ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಈ ವೇಳೆ ಒಟ್ಟು ಸುಮಾರು 13 ಲಕ್ಷ ರೂ. ಮೌಲ್ಯದ ಚಿನ್ನಾಭರಣವನ್ನು ವಶಕ್ಕೆ ಪಡೆಯಲಾಗಿದೆ ಎಂದು ಪಿಎಸ್ಐ ಸುದರ್ಶನ್ ರೆಡ್ಡಿ ತಿಳಿಸಿದ್ದಾರೆ. ಕೇಸರ ಜವಳಗಾ ಗ್ರಾಮದ ಮನೆಯೊಂದರಲ್ಲಿ ಮಾ.22ರ ಬೆಳಿಗ್ಗೆಯಿಂದ ಮಾ.29ರ ಬೆಳಿಗ್ಗೆಯೊಳಗಿನ ಅವಧಿಯಲ್ಲಿ ಅಪರಿಚಿತರು ಕಳ್ಳತನ ನಡೆಸಿದ್ದರು. ಈ ಸಂಬಂಧ ಮಾರ್ಚ್ 30ರಂದು ಮೇಹಕರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರಿಂದ 25 ಗ್ರಾಂ ತೂಕದ ಎರಡು ಚಿನ್ನದ ಸರಗಳು (5 ಲಕ್ಷ ರೂ.), 10 ಗ್ರಾಂ ತೂಕದ ಎರಡು ಉಂಗುರಗಳು (2 ಲಕ್ಷ ರೂ.), 5 ಗ್ರಾಂ ತೂಕದ ಉಂಗುರ (1 ಲಕ್ಷ ರೂ.), 7 ಗ್ರಾಂ ತೂಕದ ಕಿವಿಯೋಲೆಗಳು (70 ಸಾವಿರ ರೂ.) ಹಾಗೂ 3 ಗ್ರಾಂ ತೂಕದ ಬೆಂಡೋಲೆ (30 ಸಾವಿರ ರೂ.) ಸೇರಿದಂತೆ ಒಟ್ಟು 9 ತೊಲಿ ಚಿನ್ನಾಭರಣ ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
Bidar | ಗುಣಾತ್ಮಕ ಶಿಕ್ಷಣ ನೀಡುವಂತೆ ಆಗ್ರಹಿಸಿ ಅಹೋರಾತ್ರಿ ಧರಣಿ ಸತ್ಯಾಗ್ರಹ
ಬೀದರ್ : ಗುಣಾತ್ಮಕ ಶಿಕ್ಷಣ ನೀಡುವಂತೆ ಆಗ್ರಹಿಸಿ ಅಂಬೇಡ್ಕರ್ ಜಯಂತಿ ದಿನದಂದೇ ಮಂಗಳವಾರ ಸುಮಾರು ರಾತ್ರಿ 10 ಗಂಟೆಯಿಂದ ಸರಕಾರಿ ಶಾಲಾ ಅಭಿವೃದ್ಧಿ ವೇದಿಕೆಯಿಂದ ಅಹೋರಾತ್ರಿ ಧರಣಿ ಸತ್ಯಾಗ್ರಹ ಆರಂಭಿಸಿ, ಬುಧವಾರ ಮನವಿ ಪತ್ರ ಸಲ್ಲಿಸಲಾಯಿತು. ನಗರದ ಹಳೆ ಜಿಲ್ಲಾಧಿಕಾರಿ ಕಚೇರಿ ಮುಂಭಾಗದ ಫುಟ್ ಪಾತ್ ಮೇಲೆ ಟೆಂಟ್ ಹಾಕಿ ಧರಣಿ ಆರಂಭಿಸಿದ ಪ್ರತಿಭಟನಾಕಾರರು, ಕತ್ತಲಲ್ಲಿಯೇ ಸೊಳ್ಳೆ ಕಾಟವಿದ್ದರೂ ಧರಣಿ ನಡೆದಿದ್ದರು. ವಯಸ್ಸಾದ ಮಹಿಳೆಯರು ಕೂಡ ಧರಣಿಯಲ್ಲಿ ಪಾಲ್ಗೊಂಡು, ತಮ್ಮ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿದರು. ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಸಲ್ಲಿಸಿದ ಮನವಿಯಲ್ಲಿ, ಬಾಬಾಸಾಹೇಬ್ ಅಂಬೇಡ್ಕರ್ ಅವರ ಶಿಕ್ಷಣ, ಸಂಘಟನೆ, ಹೋರಾಟ ಆಶಯದಂತೆ ಪ್ರತಿಯೊಬ್ಬರಿಗೂ ಶಿಕ್ಷಣ ಸಿಗಬೇಕು. ಆದರೆ ನಮ್ಮ ರಾಜ್ಯದಲ್ಲಿ ಅದು ಸಾಧ್ಯವಾಗದ ಕಾರಣ ಶಿಕ್ಷಣ ಹಕ್ಕು ಕಾಯಿದೆ ಪ್ರಕಾರ ಗುಣಾತ್ಮಕ ಶಿಕ್ಷಣಕ್ಕಾಗಿ ಅಹೋರಾತ್ರಿ ಧರಣಿ ಸತ್ಯಾಗ್ರಹ ಆರಂಭಿಸಲಾಗಿದೆ. ಆದರೆ ನಮ್ಮ ಧರಣಿಗೆ ಜಿಲ್ಲಾಡಳಿತದಿಂದ ಸ್ಪಂದನೆ ಸಿಗುತ್ತಿಲ್ಲ. ಮನವಿ ಪತ್ರ ಸಲ್ಲಿಸುವುದಕ್ಕಾಗಿ ಪರದಾಟ ನಡೆಸಬೇಕಾಗಿದೆ. ರಕ್ಷಣೆಗಾಗಿ ಪೊಲೀಸ್ ಸಿಬ್ಬಂದಿ ಕೂಡ ನಿಯೋಜನೆ ಮಾಡಲಿಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಲಾಗಿದೆ. ನಮ್ಮ ದೇಶದಲ್ಲಿ ಶಿಕ್ಷಣದ ಹಕ್ಕು ಕಾಯಿದೆ ಜಾರಿಯಾಗಿ 17 ವರ್ಷಗಳಾಯಿತು. ಆದರೂ ಸಹ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಸಿಗುತ್ತಿಲ್ಲ. ನಮ್ಮ ವೇದಿಕೆಯು ಕಳೆದ 10 ವರ್ಷಗಳಿಂದ ಸತತವಾಗಿ ಹೋರಾಟಗಳನ್ನು ಮಾಡುತ್ತಲೇ ಬರುತ್ತಿದ್ದರೂ ಸಹ ಸರ್ಕಾರ ಇದರ ಬಗ್ಗೆ ತುಂಬಾ ನಿಷ್ಕಾಳಜಿ ವಹಿಸುತ್ತಿದೆ. ಇದರಿಂದಾಗಿ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿದೆ. ಕೇವಲ ಬಡವರು, ದಲಿತ ಮತ್ತು ಬಡ ಕುಟುಂಬಗಳ ಹೆಣ್ಣುಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಸರ್ಕಾರಿ ಶಾಲೆಗಳಲ್ಲಿ ಓದುತ್ತಿದ್ದಾರೆ. ಇಂತಹ ಮಕ್ಕಳ ಭವಿಷ್ಯದ ಬಗ್ಗೆ ಸರ್ಕಾರದ ಧೋರಣೆ ಸರಿಯಿಲ್ಲ ಎಂದು ಆಕ್ರೋಶ ಹೊರಹಾಕಲಾಗಿದೆ. ಇಡೀ ರಾಜ್ಯದಲ್ಲಿ ಸುಮಾರು 62,420 ಸಾವಿರಕ್ಕಿಂತ ಹೆಚ್ಚು ಶಿಕ್ಷಕರ ಹುದ್ದೆಗಳು ಖಾಲಿ ಇವೆ. ಶಿಕ್ಷಣ ಹಕ್ಕು ಕಾಯಿದೆ ಪ್ರಕಾರ 1 ರಿಂದ 5ನೆ ತರಗತಿಯವರೆಗೆ ನೆರೆ ಹೊರೆ ಶಾಲೆ ಇರಬೇಕು ಎಂಬ ನಿಯಮವಿದೆ. 6 ರಿಂದ 8ನೇ ತರಗತಿಯವರೆಗೆ 3 ಕಿ.ಮೀ ಒಳಗಡೆ ಶಾಲೆಯಿರಬೇಕು ಎಂಬ ನಿಯಮವಿದೆ. ಸರ್ಕಾರ ಈ ನಿಯಮವನ್ನು ಉಲ್ಲಂಘನೆ ಮಾಡದೇ ಕಡ್ಡಾಯವಾಗಿ ಪಾಲಿಸಬೇಕು ಎಂದು ಒತ್ತಾಯಿಸಲಾಗಿದೆ. ಶಿಕ್ಷಣ ಹಕ್ಕು ಕಾಯಿದೆ ಜಾರಿಯಾಗಿ 17 ವರ್ಷಗಳಾಯಿತು. ನಮ್ಮ ಶಾಲೆಗಳಲ್ಲಿ ಇಂದಿಗೂ ಸಹ ಕುಡಿಯುವ ನೀರು, ಶೌಚಾಲಯ ಹಾಗೂ ಆಟದ ಮೈದಾನ ಇತ್ಯಾದಿ ಮೂಲಭೂತ ಸೌಲಭ್ಯಗಳ ಕೊರತೆ ತುಂಬಾ ಎದ್ದು ಕಾಣುತ್ತಿದೆ. ಎಸೆಸೆಲ್ಸಿ ಪರೀಕ್ಷೆ ಫಲಿತಾಂಶ ಹೆಚ್ಚಿಸಲು ಅಂಕಗಳನ್ನು ಕಡಿಮೆ ಮಾಡಿ ಶೇ.13 ರಷ್ಟು ಅಂಕಗಳ ನಿರ್ದೇಶನ ಮಾಡುವುದು ಸರಿಯಲ್ಲ ಎಂದು ತಿಳಿಸಲಾಗಿದೆ. ಈ ಸಂದರ್ಭದಲ್ಲಿ ಸಪ್ನಾದೀಪಾ, ಸುರೇಖಾ, ರೇಖಾ, ರಾಜಕುಮಾರ್ ಗೀತಾ, ರೇಷ್ಮಾ, ಅನ್ನಪೂರ್ಣ, ಸುಶೀಲಾ, ಸುನೀತಾ ಹಾಗೂ ಮಲ್ಲಮ್ಮ ಸೇರಿದಂತೆ ನೂರಾರು ಮಹಿಳೆಯರು ಉಪಸ್ಥಿತರಿದ್ದರು.
ಸೇಡಂನಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ
ಸಂವಿಧಾನ ಬದುಕಿನ ದರ್ಶನ ನೀಡುವ ಪವಿತ್ರ ಗ್ರಂಥ : ಡಾ.ಜಗನ್ನಾಥ
Koppal | ಉನ್ನತ ಸಾಧನೆ ಮಾಡಿದವರನ್ನು ಸ್ಫೂರ್ತಿಯಾಗಿ ತೆಗೆದುಕೊಳ್ಳಿ : ಚೈತನ್ಯಾನಂದ ಸ್ವಾಮೀಜಿ
ಕೊಪ್ಪಳ : ಉನ್ನತ ಸಾಧನೆ ಮಾಡಿದವರನ್ನು ಸ್ಫೂರ್ತಿ ಮತ್ತು ಮಾದರಿಯಾಗಿ ತೆಗೆದುಕೊಳ್ಳಬೇಕು ಎಂದು ಕೊಪ್ಪಳದ ಶ್ರೀ ರಾಮಕೃಷ್ಣ ವಿವೇಕಾನಂದ ಆಶ್ರಮದ ಶ್ರೀ ಚೈತನ್ಯಾನಂದ ಸ್ವಾಮೀಜಿ ಅವರು ಹೇಳಿದರು. ತಾಲ್ಲೂಕಿನ ಗೊಂಡಬಾಳ ಗ್ರಾಮದಲ್ಲಿ ಮಂಗಳವಾರದಂದು ಕೊಪ್ಪಳದ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಿಂದ ಆಯೋಜಿಸಿದ ರಾಷ್ಟ್ರೀಯ ಸೇವಾ ಯೋಜನೆ -2025-26 ಸಾಲಿನ ವಾರ್ಷಿಕ ವಿಶೇಷ ಶಿಬಿರ ಉದ್ಘಾಟನೆ ಮಾಡಿ ಅವರು ಮಾತನಾಡಿದರು. ಒಳ್ಳೆಯ ಚಿಂತನೆ ಮತ್ತು ಉತ್ತಮ ಅರೋಗ್ಯ ಇದ್ದರೆ ಎಲ್ಲ ಸಮಸ್ಯೆಗಳು ಪರಿಹಾರ ಆಗುತ್ತವೆ. ಎಲ್ಲರಲ್ಲೂ ಬಹಳಷ್ಟು ಶಕ್ತಿ ಇದೆ. ಅದನ್ನು ಉಪಯೋಗ ಮಾಡಿಕೊಳ್ಳಬೇಕು. ಅವಕಾಶಗಳು ಬಹಳಷ್ಟು ಇವೆ. ಅವುಗಳನ್ನು ಉಪಯೋಗ ಮಾಡಿಕೊಳ್ಳಬೇಕು. ಯಾವುದೇ ಕೆಲಸದಲ್ಲಿ ಶ್ರದ್ದೆ ಮತ್ತು ಅಧ್ಯಯನ ಬೇಕು. ಯಶಸ್ವಿ ಅನ್ನುವುದು ಅಂತಿಮ ಘಟ್ಟ ಅಲ್ಲ. ಅದು ಕೇವಲ ಸಂತೋಷ ಅಷ್ಟೇ. ಮನೋರಂಜನೆ ಸೀಮಿತವಾಗಿರಬೇಕು ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿರುವ ಬಿ.ಜಿ.ಕರಿಗಾರ ಅವರು ಮಾತನಾಡುತ್ತ ಗ್ರಾಮಗಳ ನೈರ್ಮಲ್ಯವನ್ನು ಕಾಪಾಡಿಕೊಳ್ಳಬೇಕು. ಪರಿಸರವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಬೇಕು. ವಿದ್ಯಾರ್ಥಿಗಳಲ್ಲಿ ಸೇವೆ ಮನೋಭಾವನೆ ಇರಬೇಕು. ಸ್ವಚ್ಛತೆ ಕುರಿತು ಗ್ರಾಮಗಳಲ್ಲಿ ಅರಿವು ಮೂಡಿಸಬೇಕು ಎಂದು ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಕಾಲೇಜಿನ ಪ್ರಾಚಾರ್ಯ ಡಾ. ಗಣಪತಿ ಲಮಾಣಿ ಅವರು, ವಿದ್ಯಾರ್ಥಿಗಳು ತಮ್ಮ ಮನೆ ಮತ್ತು ಗ್ರಾಮಗಳನ್ನು ಸ್ವಚ್ಛತೆ ಕಾಪಾಡಿಕೊಳ್ಳಬೇಕು. ನೀವು ಕಠಿಣ ಪರಿಶ್ರಮ ಪಟ್ಟರೆ ಯಶಸ್ವಿ ಖಂಡಿತ ಸಿಗುತ್ತದೆ. ಗ್ರಾಮಗಳ ಅಭಿವೃದ್ಧಿಯೇ ದೇಶದ ಅಭಿವೃದ್ಧಿ. ನಾವು ನಿಜವಾದ ಭಾರತವನ್ನು ಅರ್ಥ ಮಾಡಿಕೊಳ್ಳಬೇಕಾದರೆ ನಾವು ಹಳ್ಳಿಗಳಿಗೆ ಹೋಗಬೇಕು ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಧ್ಯಾಪಕರಾದ ಡಾ. ಮಲ್ಲಿಕಾರ್ಜುನ, ಡಾ.ಪ್ರದೀಪ್ ಕುಮಾರ ಮಾತನಾಡಿದರು. ಕಾರ್ಯಕ್ರಮದಲ್ಲಿ ಗೊಂಡಬಾಳ ಗ್ರಾಮದ ಮುಖಂಡರಾದ ಸೋಮಶೇಖರಯ್ಯ ವಿರೂಪಾಕ್ಷಯ್ಯ ಇನಾಮದಾರ, ಅದಪ್ಪ ಹಳ್ಳಕೆರಿ, ಬಸಣ್ಣ ಕೋಣಿ, ಕಾಲೇಜಿನ ಉಪನ್ಯಾಸಕರಾದ ಡಾ. ನರಸಿಂಹ, ಶಿವಪ್ರಸಾದ್ ಹಾದಿಮನಿ, ವೀರುಪಾಕ್ಷಿ ಮುತ್ತಾಳ, ಶ್ರೀಕಾಂತ್, ಸಂಗಪ್ಪ ಬ್ಯಾಳಿ ಹಾಗೂ ಇತರರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಶಾಹಿನ್ ನಿರೂಪಿಸಿದರು. ಭಾಗ್ಯಮ್ಮ ಸ್ವಾಗತಿಸಿದರು. ಭಾನು ಬೇಗಂ ವಂದಿಸಿದರು.
ರಾಯಚೂರಿನಲ್ಲಿ ಮೋಟಾರು ವಾಹನ ಬಾಕಿ ತೆರಿಗೆ ವಸೂಲಾತಿ ವಿಶೇಷ ಅಭಿಯಾನ
ರಾಯಚೂರು : ಪ್ರಾದೇಶಿಕ ಸಾರಿಗೆ ಇಲಾಖೆ ವತಿಯಿಂದ ಮೋಟಾರು ವಾಹನಗಳ ಬಾಕಿ ತೆರಿಗೆ ವಸೂಲಾತಿಗಾಗಿ 2026ರ ಎಪ್ರಿಲ್ ತಿಂಗಳಿಂದ ವಿಶೇಷ ಅಭಿಯಾನ ಹಮ್ಮಿಕೊಳ್ಳಲಾಗಿದೆ. ವಾಹನ ಮಾಲಕರು ತಮ್ಮ ಬಾಕಿ ತೆರಿಗೆಯನ್ನು ತಕ್ಷಣವೇ ಆನ್ಲೈನ್ ಮೂಲಕ ಅಥವಾ ಆರ್ಟಿಒ ಕಚೇರಿಗೆ ಖುದ್ದಾಗಿ ಭೇಟಿ ನೀಡಿ ಪಾವತಿಸಬೇಕೆಂದು ಇಲಾಖೆಯ ಅಧಿಕಾರಿಗಳು ಮನವಿ ಮಾಡಿದ್ದಾರೆ. ನಿಯಮಾವಳಿಗಳ ಪ್ರಕಾರ ಯಾವುದೇ ವಾಹನ ಸಾರ್ವಜನಿಕ ರಸ್ತೆಗೆ ಇಳಿಯುವ ಮೊದಲು ಮುಂಗಡವಾಗಿ ತೆರಿಗೆ ಪಾವತಿಸಬೇಕು. ತೆರಿಗೆ ಪಾವತಿಯಲ್ಲಿ ವಿಳಂಬವಾದಲ್ಲಿ ಸಾರಿಗೆ ಇಲಾಖೆ ಮಾನ್ಯ ನ್ಯಾಯಾಲಯಗಳಲ್ಲಿ ಮೊಕದ್ದಮೆ ದಾಖಲಿಸುವ ಸಾಧ್ಯತೆ ಇದೆ ಎಂದು ಎಚ್ಚರಿಕೆ ನೀಡಲಾಗಿದೆ. ಈ ಕುರಿತು ಹೊರಡಿಸಿದ ಪ್ರಕಟಣೆಯನ್ನು ಇಲಾಖೆಯ ಅಧಿಕೃತ ಸೂಚನೆ ಎಂದು ಪರಿಗಣಿಸಬೇಕು. ವಾಹನ ಮಾಲಕರು ಜವಾಬ್ದಾರಿಯಿಂದ ನಡೆದುಕೊಂಡು ಬಾಕಿ ತೆರಿಗೆಯನ್ನು ತಕ್ಷಣ ಪಾವತಿಸಿ ಕಾನೂನು ಕ್ರಮಗಳಿಂದ ತಪ್ಪಿಸಿಕೊಳ್ಳಬೇಕು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಎಚ್ಡಿಕೆ ಮತ್ತೆ ಚನ್ನಪಟ್ಟಣದಿಂದ ಸ್ಪರ್ಧೆ ಮಾಡಬೇಕೆಂಬುವುದು ಜನರ ಅಭಿಲಾಷೆ: ನಿಖಿಲ್
ಬೆಂಗಳೂರು : ಎಚ್.ಡಿ.ಕುಮಾರಸ್ವಾಮಿ ಮತ್ತೆ ಚನ್ನಪಟ್ಟಣದಿಂದ ಸ್ಪರ್ಧೆ ಮಾಡಬೇಕೆಂದು ಕ್ಷೇತ್ರದ ಕಾರ್ಯಕರ್ತರು-ಮುಖಂಡರು ಬೇಡಿಕೆ ಇಟ್ಟಿದ್ದಾರೆ. ಅವರು ಮತ್ತೆ ರಾಜ್ಯ ರಾಜಕಾರಣಕ್ಕೆ ಒಂದು ದಿನ ಬರಲೇಬೇಕಾಗುತ್ತದೆ ಎಂದು ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ತಿಳಿಸಿದ್ದಾರೆ. ಬುಧವಾರ ರಾಮನಗರ ಜಿಲ್ಲೆಯ ಚನ್ನಪಟ್ಟಣದಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಅವರು, ಕುಮಾರಸ್ವಾಮಿ ಅವರು ಲೋಕಸಭಾ ಚುನಾವಣೆಯಲ್ಲಿ ಮಂಡ್ಯದಿಂದ ಸ್ಪರ್ಧೆ ಮಾಡಬೇಕಾಯ್ತು. ಕುಮಾರಣ್ಣನಿಗೆ ಕಾರ್ಯಕರ್ತರು ಇಲ್ಲೇ ಸ್ಪರ್ಧೆ ಮಾಡಿ ಎಂದು ಬೇಡಿಕೆ ಇಟ್ಟಿರೋದಕ್ಕೆ ನಾನೇ ಸಾಕ್ಷಿ. ಇದು ಚನ್ನಪಟ್ಟಣ ಜನರ ಅಭಿಲಾಷೆ ಎಂದರು. ‘ಈ ವಿಚಾರದ ಬಗ್ಗೆ ಮುಂದಿನ ದಿನಗಳಲ್ಲಿ ಕಾಲವೇ ತಿರ್ಮಾನ ಮಾಡುತ್ತದೆ. ನಾವು ಎನ್ಡಿಎ ಮೈತ್ರಿ ಕೂಟದಲ್ಲಿದ್ದೇವೆ. ಯಾವ ಕ್ಷೇತ್ರವನ್ನ ಜೆಡಿಎಸ್ಗೆ ಬಿಟ್ಟು ಕೊಡುತ್ತಾರೆ. ಯಾರ್ಯಾರು ಎಲ್ಲಿಂದ ಸ್ಪರ್ಧೆ ಮಾಡಬೇಕು ಎಂಬುದು 2028ಕ್ಕೆ ತೀರ್ಮಾನ ಆಗುತ್ತದೆ ಎಂದು ಅವರು ತಿಳಿಸಿದರು. ಸಿಎಂ ಆಗಬೇಕು: ಪಕ್ಷದ ಕಾರ್ಯಕರ್ತರು, ರಾಜ್ಯದ ಜನರ ಮನಸ್ಸಿನಲ್ಲಿ ಕುಮಾರಸ್ವಾಮಿ ಸಿಎಂ ಆಗಬೇಕು ಎಂಬ ಭಾವನೆ ಇದೆ. ಈ ಬಗ್ಗೆ ಎನ್ಡಿಎ ಮೈತ್ರಿಕೂಟದ ರಾಷ್ಟ್ರ-ರಾಜ್ಯ ನಾಯಕರು ತೀರ್ಮಾನ ಮಾಡುತ್ತಾರೆ. ಸಿಎಂ ಆಗೋ ವಿಚಾರ ಇನ್ನೂ ದೂರ ಇದೆ. ಕಾಲ ಬರುವವರೆಗೂ ಕಾದು ನೋಡೋಣ ಎಂದು ನಿಖಿಲ್ ಹೇಳಿದರು.
TCS ಹಗರಣ | ದೂರುದಾರೆಗೆ ಆರೋಪಿ ದಾನಿಶ್ ಜೊತೆ ಸಂಬಂಧವಿತ್ತು: ದಾನಿಶ್ ಪತ್ನಿಯಿಂದ ಆರೋಪ
ನಾಸಿಕ್, ಎ.15: ಮಹಾರಾಷ್ಟ್ರದ ನಾಸಿಕ್ನಲ್ಲಿ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (TCS) ಬಿಪಿಒ ಘಟಕದ ಉದ್ಯೋಗಿಗಳ ವಿರುದ್ಧ ದಾಖಲಾಗಿರುವ ಲೈಂಗಿಕ ಕಿರುಕುಳ ಹಾಗೂ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ. ಪ್ರಕರಣದಲ್ಲಿ ಬಂಧಿತ ಉದ್ಯೋಗಿಯೊಬ್ಬರ ಪತ್ನಿ, “ದಾನಿಶ್ ಶೇಖ್ ಮತ್ತು ದೂರುದಾರಳ ನಡುವಿನ ವೈಯಕ್ತಿಕ ಸಂಬಂಧವೇ ಇತರರ ಜೀವನ ಹಾಳುಮಾಡಿದೆ” ಎಂದು ಆರೋಪಿಸಿದ್ದಾರೆ. “ನನ್ನ ಪತಿಗೆ ಈ ಪ್ರಕರಣದೊಂದಿಗೆ ಯಾವುದೇ ಸಂಬಂಧವಿಲ್ಲ. ಪರಸ್ಪರ ಸಂಬಂಧವಿಲ್ಲದ ಅನೇಕ ಘಟನೆಗಳನ್ನು ಒಟ್ಟುಗೂಡಿಸಿ ಪ್ರಕರಣ ರೂಪಿಸಲಾಗಿದೆ. ಇದರಿಂದ ನಿರಪರಾಧಿಗಳು ಸಿಕ್ಕಿಬಿದ್ದಿದ್ದಾರೆ” ಎಂದು ಅವರು ಹೇಳಿದ್ದಾರೆ. ನಾಸಿಕ್ ಮೂಲದ ಈ ಮಹಿಳೆಯ ಪತಿ, ಬಂಧಿತ ಏಳು ಉದ್ಯೋಗಿಗಳಲ್ಲಿ ಒಬ್ಬರಾಗಿದ್ದು, ಮತ್ತೊಬ್ಬ ಮಹಿಳಾ ಸಿಬ್ಬಂದಿ ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ. ನಾಸಿಕ್ ನಗರ ಪೊಲೀಸರು ಲೈಂಗಿಕ ದೌರ್ಜನ್ಯದಿಂದ ಹಿಡಿದು ಧಾರ್ಮಿಕ ಮತಾಂತರದವರೆಗೆ ಒಟ್ಟು ಒಂಭತ್ತು ಎಫ್ಐಆರ್ ಗಳನ್ನು ದಾಖಲಿಸಿದ್ದಾರೆ. ಪ್ರಮುಖ ಆರೋಪಿ ದಾನಿಶ್ ಶೇಖ್ ವಿರುದ್ಧ ಅತ್ಯಾಚಾರದ ಆರೋಪವೂ ಸೇರಿದೆ. ಈ ಹಿನ್ನೆಲೆಯಲ್ಲಿ ಟಾಟಾ ಸನ್ಸ್ ಅಧ್ಯಕ್ಷ ಎನ್ ಚಂದ್ರಶೇಖರನ್ ಸಂಪೂರ್ಣ ತನಿಖೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ. ಕಂಪೆನಿಯು ಆರೋಪಿಗಳನ್ನೆಲ್ಲ ಅಮಾನತುಗೊಳಿಸಿದೆ. ಹೆಸರು ಬಹಿರಂಗಪಡಿಸಬಾರದು ಷರತ್ತಿನ ಮೇಲೆ ಮಾತನಾಡಿದ ಮತ್ತೊಬ್ಬ ಮಹಿಳೆ, “ದಾನಿಶ್ ಮತ್ತು ಅವನ ಮೇಲೆ ಅತ್ಯಾಚಾರದ ಆರೋಪ ಮಾಡಿದ ಮಹಿಳೆ ನಡುವೆ ಸಂಬಂಧವಿದ್ದುದನ್ನು ಕಚೇರಿಯಲ್ಲಿರುವ ಎಲ್ಲರಿಗೂ ತಿಳಿದಿತ್ತು” ಎಂದು ಹೇಳಿದ್ದಾರೆ. ಫೆಬ್ರವರಿಯಲ್ಲಿ ದಾನಿಶ್ ಮತ್ತು ಅವನ ಸ್ನೇಹಿತನ ನಡುವೆ ಭಿನ್ನಾಭಿಪ್ರಾಯ ಉಂಟಾಗಿ, ಬಳಿಕ ದೂರುದಾರಳ ಪೋಷಕರು ಕೆಲ ರಾಜಕಾರಣಿಗಳನ್ನು ಸಂಪರ್ಕಿಸಿ ದೂರು ನೀಡಲು ಪ್ರೇರೇಪಿಸಿದ್ದಾರೆ ಎಂದು ಆರೋಪಿಯ ಪತ್ನಿ ಹೇಳಿದ್ದಾರೆ. “ಈ ಬೆಳವಣಿಗೆಗಳ ನಡುವೆ ನನ್ನ ಪತಿ ಸೇರಿದಂತೆ ಸಂಬಂಧವಿಲ್ಲದ ಹಲವರು ಪ್ರಕರಣದಲ್ಲಿ ಸಿಕ್ಕಿಬಿದ್ದಿದ್ದಾರೆ” ಎಂದು ಅವರು ತಿಳಿಸಿದ್ದಾರೆ. ಒಂದು ಎಫ್ಐಆರ್ ಪ್ರಕಾರ, 2023ರಲ್ಲಿ ಟೀಮ್ ಗೆ ಸೇರಿದಾಗ ಆರೋಪಿಯು ‘ಡಬಲ್ ಮೀನಿಂಗ್’ ಮಾತುಗಳನ್ನಾಡಿ ಅನುಚಿತವಾಗಿ ವರ್ತಿಸಿದ್ದಾನೆ ಎಂದು ದೂರುದಾರರು ಆರೋಪಿಸಿದ್ದಾರೆ. ಹಿರಿಯರಿಗೆ ದೂರು ನೀಡಿದಾಗ, ಆರೋಪಿಯ ವಿರುದ್ಧ ಇದೇ ರೀತಿಯ ಹಿಂದಿನ ದೂರುಗಳಿವೆ ಎಂದು ಎಚ್ಚರಿಸಲಾಗಿದೆ ಎನ್ನಲಾಗಿದೆ. 2025ರಲ್ಲಿ ಮದುವೆಯಾದ ನಂತರ ರಜೆ ಕೇಳಲು ಹೋದಾಗ ವೈಯಕ್ತಿಕ ಪ್ರಶ್ನೆಗಳು ಕೇಳಿ ಕಿರುಕುಳ ನೀಡಲಾಗಿದೆ ಎಂದು ಮತ್ತೊಂದು ಆರೋಪದಲ್ಲಿ ಉಲ್ಲೇಖಿಸಲಾಗಿದೆ. ದೂರು ನೀಡಿದ ಬಳಿಕ ಹೆಚ್ಚುವರಿ ಕೆಲಸ ಮಾಡಲು ಒತ್ತಾಯಿಸಲಾಗಿದೆ ಎಂಬ ಆರೋಪವೂ ಕೇಳಿಬಂದಿದೆ. “ಮಾರ್ಚ್ ನಲ್ಲಿ ನನ್ನ ಪತಿ ರಜೆಯಲ್ಲಿದ್ದಾಗ ಪೊಲೀಸರು ದಾನಿಶ್ ವಿರುದ್ಧದ ತನಿಖೆ ಕುರಿತು ವಿಚಾರಿಸಿದರು. ಅವರಿಗೆ ದಾನಿಶ್ ಪರಿಚಯವೇ ಇರಲಿಲ್ಲ. ಏಪ್ರಿಲ್ 1ರಂದು ಸಹಿ ಮಾಡಲು ಕರೆಸಿಕೊಂಡು, ಬಳಿಕ ಮುಂಬೈ ನಾಕಾ ಪೊಲೀಸ್ ಠಾಣೆಗೆ ಕರೆದೊಯ್ದು ರಾತ್ರಿ ಬಂಧಿಸಿದರು”, ಎಂದು ಬಂಧಿತ ಉದ್ಯೋಗಿಯ ಪತ್ನಿ ಹೇಳಿದ್ದಾರೆ. “ನನ್ನ ಪತಿಯನ್ನು ಯಾವ ಆಧಾರದ ಮೇಲೆ ಬಂಧಿಸಲಾಗಿದೆ ಎಂದು ಕೇಳಿದಾಗ ಆರಂಭದಲ್ಲಿ ಸ್ಪಷ್ಟ ಮಾಹಿತಿ ನೀಡಲಿಲ್ಲ. ನಂತರ ಇತರ ಮಹಿಳೆಯರ ದೂರುಗಳ ಆಧಾರದಲ್ಲಿ ಹೊಸ ಎಫ್ಐಆರ್ ಗಳನ್ನು ದಾಖಲಿಸಲಾಗಿದೆ ಎಂದು ತಿಳಿಸಿದರು” ಎಂದು ಅವರು ಹೇಳಿದ್ದಾರೆ. ಧಾರ್ಮಿಕ ಭಾವನೆಗಳಿಗೆ ಧಕ್ಕೆ ಆರೋಪದ ಕುರಿತು ಪ್ರತಿಕ್ರಿಯಿಸಿ, “ನನ್ನ ಪತಿ ಸಸ್ಯಾಹಾರಿ. ಇತರರು ಮಾಂಸಾಹಾರ ಸೇವಿಸಿದಾಗ ಅವರಿಗೆ ಅನಾನುಕೂಲವಾಗುತ್ತಿತ್ತು. ಅಂತಹ ವ್ಯಕ್ತಿ ಬೇರೆ ಧರ್ಮವನ್ನು ಹೇಗೆ ಅವಮಾನಿಸುತ್ತಾನೆ?” ಎಂದು ಪತ್ನಿ ಪ್ರಶ್ನಿಸಿದ್ದಾರೆ. ಪ್ರಕರಣದ ಮೊದಲ ಎಫ್ಐಆರ್ ಮಾರ್ಚ್ 26ರಂದು ಡಿಯೋಲಾಲಿ ಪೊಲೀಸ್ ಠಾಣೆಯಲ್ಲಿ ದಾನಿಶ್ ವಿರುದ್ಧ ದಾಖಲಾಗಿತ್ತು. ಈ ಎಫ್ಐಆರ್ ನಲ್ಲಿ ಅತ್ಯಾಚಾರ ಆರೋಪ ಸೇರಿದ್ದು, ತನಿಖೆಯ ವೇಳೆ ಇತರ ಘಟನೆಗಳು ಬಹಿರಂಗಗೊಂಡಿವೆ ಎಂದು ಪೊಲೀಸರು ಹೇಳಿದ್ದಾರೆ. ಅದರ ಆಧಾರದ ಮೇಲೆ ಇನ್ನೂ ಎಂಟು ಪ್ರಕರಣಗಳು ದಾಖಲಾಗಿವೆ. ಪೊಲೀಸರ ಪ್ರಕಾರ, ದಾನಿಶ್ ತನ್ನ ವೈವಾಹಿಕ ಸ್ಥಿತಿಯನ್ನು ಮರೆಮಾಡಿ ಮಹಿಳೆಯೊಂದಿಗೆ ಸಂಬಂಧ ಹೊಂದಿದ್ದ ಎನ್ನಲಾಗಿದೆ. ಮದುವೆಯಾಗುವುದಾಗಿ ಭರವಸೆ ನೀಡಿ ಲೈಂಗಿಕ ಸಂಬಂಧ ಹೊಂದಿದ್ದರಿಂದ ಅತ್ಯಾಚಾರ ಪ್ರಕರಣ ದಾಖಲಿಸಲಾಗಿದೆ. ಧಾರ್ಮಿಕ ಪ್ರಭಾವದ ಆರೋಪವನ್ನೂ ಸೇರಿಸಲಾಗಿದೆ. ಈ ಪ್ರಕರಣದಲ್ಲಿ ಆರು ಮಂದಿ ನ್ಯಾಯಾಂಗ ಬಂಧನದಲ್ಲಿದ್ದು, ಪುಣೆ ಮೂಲದ, ಕಂಪೆನಿಯ ವ್ಯವಸ್ಥಾಪಕಿ ಅಶ್ವಿನಿ ಚೈನಾನಿ ಪೊಲೀಸ್ ಕಸ್ಟಡಿಯಲ್ಲಿ ಇದ್ದಾರೆ. ಲೈಂಗಿಕ ಕಿರುಕುಳದ ದೂರುಗಳನ್ನು ನಿರ್ಲಕ್ಷಿಸಿದ ಆರೋಪವೂ ಅವರ ವಿರುದ್ಧ ಕೇಳಿಬಂದಿದೆ. ತನಿಖೆ ನಡೆಸುತ್ತಿರುವ ಎಸ್ಐಟಿ ಅಧಿಕಾರಿಗಳು, “ಮಹಿಳೆಯರ ದೂರುಗಳ ಆಧಾರದಲ್ಲಿ ಎಫ್ಐಆರ್ ಗಳನ್ನು ದಾಖಲಿಸಲಾಗಿದೆ. ಮ್ಯಾಜಿಸ್ಟ್ರೇಟ್ ಮುಂದೆ ಹೇಳಿಕೆಗಳನ್ನು ದಾಖಲಿಸಲಾಗಿದೆ. ತನಿಖೆ ಮುಂದುವರಿಯುತ್ತಿದ್ದು, ಸಾಕ್ಷ್ಯಾಧಾರಗಳ ಆಧಾರದಲ್ಲಿ ಆರೋಪಪಟ್ಟಿ ಸಲ್ಲಿಸಲಾಗುತ್ತದೆ” ಎಂದು ತಿಳಿಸಿದ್ದಾರೆ. ಸೌಜನ್ಯ: indianexpress.com
ಯುಎಸ್ ಸೇನಾನೆಲೆ ಗುರುತಿಸಲು ಇರಾನ್ಗೆ ಚೀನಾದ ಉಪಗ್ರಹ ನೆರವು; ಆಗಸದಲ್ಲಿ ಡ್ರ್ಯಾಗನ್ ಗೂಢಚಾರಿಯ ಕಳ್ಳಾಟ ಬಯಲು!
ಮಧ್ಯಪ್ರಾಚ್ಯ ಯುದ್ಧದಲ್ಲಿ ಅಮೆರಿಕ ಮತ್ತು ಇರಾನ್ ಸಾಧ್ಯವಾದ ಎಲ್ಲಾ ತಂತ್ರಗಳನ್ನೂ ಬಳಸುತ್ತಿದೆ. ಇರಾನ್ ಮೇಲೆ ದಾಳಿ ಮಾಡಲು ಅಮೆರಿಕ ಪ್ರಾದೇಶಿಕ ಗೆಳೆಯರ ನೆರವು ಪಡೆದುಕೊಳ್ಳುತ್ತಿದೆ. ಇದಕ್ಕೆ ಪ್ರತಿಯಾಗಿ ರಷ್ಯಾ ಮತ್ತು ಚೀನಾದಂತ ರಾಷ್ಟ್ರಗಳು ಇರಾನ್ನೆ ಮಿಲಿಟರಿ ನೆರವು ನೀಡುವ ಮೂಲಕ, ಅಮೆರಿಕಕ್ಕೆ ಪೆಟ್ಟು ನೀಡುತ್ತಿವೆ. ಅದರಲ್ಲೂ ಇರಾನ್ಗೆ ಸಿಗುತ್ತಿರುವ ಚೀನಾದ ಮಿಲಿಟರಿ ತಂತ್ರಜ್ಞಾನದ ನೆರವು ಯುದ್ಧದ ಗತಿಯನ್ನೇ ಬದಲಿಸುತ್ತಿದೆ. ಇರಾನ್ ಮಧ್ಯಪ್ರಾಚ್ಯದಲ್ಲಿರುವ ಅಮೆರಿಕದ ಸೇನಾ ನೆಲೆಗಳನ್ನು ಗುರುತಿಸಲು, ಚೀನಾದ ಉಪಗ್ರಹದ ನೆರವು ಪಡೆದುಕೊಂಡಿದೆ ಎನ್ನಲಾಗಿದೆ.
ಮಂಗಳೂರು| ಮೆಸ್ಕಾಂ ಕೇಬಲ್ ಅಳವಡಿಕೆ ಯೋಜನೆ ಶೀಘ್ರ ಕಾರ್ಯಗತ: ಸ್ಪೀಕರ್ ಯು.ಟಿ.ಖಾದರ್
ಉಳ್ಳಾಲ ನಗರ ಸಭೆ
ಉಡುಪಿ ಜಿಲ್ಲೆಯ ವಂಡ್ಸೆ ಸರ್ಕಾರಿ ಶಾಲೆಗೆ ರಾಜ್ಯದ ಮೊದಲ ಎಐ ಟೀಚರ್ 'ಐರಿಸ್' ಎಂಟ್ರಿ
ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಬೈಂದೂರು ಶೈಕ್ಷಣಿಕ ವಲಯದ ವಂಡ್ಸೆ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಈಗ ಹೊಸ ಸಂಚಲನ ಮೂಡಿದೆ. ರಾಜ್ಯದ ಸರ್ಕಾರಿ ಶಾಲೆಯೊಂದಕ್ಕೆ ಮೊಟ್ಟಮೊದಲ ಬಾರಿಗೆ ಪ್ರವೇಶ ಪಡೆದಿರುವ 'ಐರಿಸ್' (Iris) ಎಂಬ ಎಐ (ಆರ್ಟಿಫಿಶಿಯಲ್ ಇಂಟೆಲಿಜೆನ್ಸ್) ಶಿಕ್ಷಕಿ ಇದೀಗ ಯಶಸ್ವಿಯಾಗಿ ತನ್ನ ಬೋಧನಾ ಕಾರ್ಯವನ್ನು ಆರಂಭಿಸಿದ್ದಾಳೆ. ಕಳೆದ ಶನಿವಾರ, ಅಂದರೆ ಏಪ್ರಿಲ್
ಆಸ್ಟ್ರೇಲಿಯಾದಲ್ಲಿ ಐಪಿಎಲ್ ಪಂದ್ಯಗಳನ್ನು ನಡೆಸಲು ಗಂಭೀರ ಚಿಂತನೆ! ಏನಿದರ ಹಿಂದಿನ ಲೆಕ್ಕಾಚಾರ?
IPL Matches In Australia- ಆಸ್ಟ್ರೇಲಿಯಾದ ಅಡಿಲೇಡ್ ಓವಲ್ನಲ್ಲಿ ಐಪಿಎಲ್ ಮತ್ತು ಭಾರತದ ಚೆನ್ನೈನಲ್ಲಿ ಬಿಗ್ ಬ್ಯಾಷ್ ಲೀಗ್ (BBL) ಪಂದ್ಯಗಳನ್ನು ಆಯೋಜಿಸುವ ಬಗ್ಗೆ ಗಂಭೀರ ಚರ್ಚೆಗಳು ನಡೆಯುತ್ತಿವೆ. ದಕ್ಷಿಣ ಆಸ್ಟ್ರೇಲಿಯಾ ಕ್ರಿಕೆಟ್ ಅಸೋಸಿಯೇಷನ್ ಈ ಕುರಿತು ಬಿಸಿಸಿಐಗೆ ಶೀಘ್ರದಲ್ಲೇ ಪ್ರಸ್ತಾವನೆ ಸಲ್ಲಿಸುವ ಸಾಧ್ಯತೆಯಿದೆ. ಈ ಹಿಂದೆ ಅನಿವಾರ್ಯ ಕಾರಣಗಳಿಂದ ಐಪಿಎಲ್ ವಿದೇಶದಲ್ಲಿ ನಡೆದಿತ್ತು. ಈಗ ಯಾವುದೇ ರೀತಿಯ ಒತ್ತಡವಿಲ್ಲದ ಕಾರಣ ಬಿಸಿಸಿಐ ಮತ್ತು ಫ್ರಾಂಚೈಸಿಗಳು ಈ ಹೊಸ ಪ್ರಸ್ತಾವನೆಗೆ ಹೇಗೆ ಪ್ರತಿಕ್ರಿಯಿಸುತ್ತವೆ ಎಂಬುದು ಕುತೂಹಲ ಮೂಡಿದೆ.
ಮೂಕ ಪ್ರಾಣಿಗಳ ರಕ್ಷಣೆಗೆ ಸಾಮೂಹಿಕ ಹೊಣೆಗಾರಿಕೆ ಅಗತ್ಯ: ದ.ಕ. ಡಿಸಿ ದರ್ಶನ್
ಮಂಗಳೂರು: ಮನುಷ್ಯರಂತೆ ನೀರು ಇತರ ಪ್ರಾಣಿ , ಪಕ್ಷಿಗಳಿಗೂ ಅಗತ್ಯ. ಮೂಕ ಪ್ರಾಣಿಗಳ ರಕ್ಷಣೆಗೆ ಯುವ ಜನರು ಸೇರಿದಂತೆ ಸಾಮೂಹಿಕ ಪ್ರಯತ್ನ ದ ಅಗತ್ಯವಿದೆ. ಜೀವ-ಜಲ ಅಭಿಯಾನ ಈ ನಿಟ್ಟಿನಲ್ಲಿ ಪ್ರೇರಣೆಯಾಗಲಿ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ದರ್ಶನ್ ಕೆ.ವಿ.ಶುಭ ಹಾರೈಸಿದ್ದಾರೆ. ಅವರು ಬುಧವಾರ ಜಿಲ್ಲಾಧಿಕಾರಿ ಕಚೇರಿ ಪ್ರಜಾ ಸೌಧದ ಬಳಿ ರೋಟರಿ ಕ್ಲಬ್ ಮಂಗಳೂರು ಸೆಂಟ್ರಲ್, ಸ್ವಸ್ತಿಕ ನ್ಯಾಷನಲ್ ಬ್ಯುಸಿನೆಸ್ ಸ್ಕೂಲ್, ಗ್ಲೋಬಲ್ ಗ್ರೀನ್ ಇಕೋ ಫೌಂಡೇಶನ್, ದಕ್ಷಿಣ ಕನ್ನಡ ಜಿಲ್ಲಾಡಳಿತ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಮಂಗಳೂರು ಮಹಾ ನಗರ ಪಾಲಿಕೆ, ಮಂಗಳೂರು ಸ್ಮಾರ್ಟ್ ಸಿಟಿ ಸಹಭಾಗಿತ್ವದಲ್ಲಿ ಜೀವ -ಜಲ ಉಳಿಸಿ ಅಭಿಯಾನಕ್ಕೆ ಚಾಲನೆ ನೀಡಿ ಮಾತ ನಾಡುತ್ತಿದ್ದರು. ಈ ಸಂದರ್ಭದಲ್ಲಿ ನೀರು ಮಿತವಾಗಿ ಬಳಸಿ,ಬೊಗಸೆ ನೀರು ಇಟ್ಟು ಏರುತ್ತಿರುವ ತಾಪಮಾನದಲ್ಲಿ ಪಶು ಪಕ್ಷಿಗಳ ಜೀವ ಉಳಿಸಿ ಧ್ಯೇಯದ 'ಜೀವ -ಜಲ 'ಉಳಿಸಿ ಜಾಗೃತಿ ಅಭಿಯಾನದ ಪೋಸ್ಟರ್ ಬಿಡುಗಡೆಯನ್ನು ಜಿಲ್ಲಾಧಿಕಾರಿ ನೆರವೇರಿಸಿ ವಿದ್ಯಾರ್ಥಿ ಗಳಿಗೆ ನೀರಿನ ಕಿರು ತೊಟ್ಟಿಯನ್ನು ವಿತರಿಸುವ ಮೂಲಕ ಅಭಿಯಾನಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿ ಕಾರಿ ರಾಜು,ರೋಟರಿ 3181 (ಚು) ಜಿಲ್ಲಾ ಗವರ್ನರ್ ಶೇಖರ ಬೋಳಾರ, ಅಸಿಸ್ಟೆಂಟ್ ಗವರ್ನರ್ ಚಿನ್ನಗಿರಿ ಗೌಡ,ಗ್ಲೋಬಲ್ ಗ್ರೀನ್ ಇಕೋ ಫೌಂಡೇಶನ್ ನ ನಿರ್ದೇಶಕ ಮತ್ತು ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ ರಾಜ್ಯ ಕಾರ್ಯ ಕಾರಿ ಸಮಿತಿ ಸದಸ್ಯ ಶ್ರೀನಿವಾಸ ನಾಯಕ್ ಇಂದಾಜೆ, ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ.ಹರೀಶ್ ರೈ,ರೋಟರಿ ಕ್ಲಬ್ ಮಂಗ ಳೂರು ಸೆಂಟ್ರಲ್ ನ ನಿಕಟ ಪೂರ್ವ ಅಧ್ಯಕ್ಷ ಬ್ರಿಯಾನ್ ಪಿಂಟೊ, ಕಾರ್ಯದರ್ಶಿ ವಿಕಾಸ್ ಕೋಟ್ಯಾನ್, ರೋ.ಡಾ.ಶಿವ ಪ್ರಸಾದ್ , ರೋ.ಪ್ರದೀಪ್ ಕುಲಾಲ್ ಮೊದಲಾದವರು ಉಪಸ್ಥಿತರಿದ್ದರು. ರೋಟರಿ ಕ್ಲಬ್ ಮಂಗಳೂರು ಸೆಂಟ್ರಲ್ ನ ಅಧ್ಯಕ್ಷ ಭಾಸ್ಕರ ರೈ ಕಟ್ಟ ಸ್ವಾಗತಿಸಿ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಪುಷ್ಪರಾಜ್ ಬಿ.ಎನ್ ವಂದಿಸಿದರು.
ಗ್ರಾಹಕರಿಗೆ ಬದ್ಧತೆಯೊಂದಿಗೆ ಡಿಜಿಟಲ್ ಸೇವೆ: ಡಾ. ರಾಜೇಂದ್ರ ಕುಮಾರ್
ಮಂಗಳೂರು: ಸಹಕಾರಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ ನವೀನ ಹೆಜ್ಜೆ ಇಟ್ಟಿರುವ ಎಸ್ಸಿಡಿಸಿಸಿ ಬ್ಯಾಂಕ್, ಯುಪಿಐ ಮತ್ತು ಐಎಂಪಿಎಸ್ ಸೌಲಭ್ಯಗಳನ್ನು ಪರಿಚಯಿಸುವ ಮೂಲಕ ಗ್ರಾಹಕರಿಗೆ ಆಧುನಿಕ ಹಾಗೂ ವೇಗವಾದ ಹಣಕಾಸು ಸೇವೆಗಳನ್ನು ಒದಗಿಸುತ್ತಿದೆ. ಈ ಹೊಸ ಯೋಜನೆಗಳಿಗೆ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ ಎಂದು ಬ್ಯಾಂಕ್ ಅಧ್ಯಕ್ಷ ಡಾ.ಎಂ.ಎನ್. ರಾಜೇಂದ್ರ ಕುಮಾರ್ ತಿಳಿಸಿದ್ದಾರೆ. ಬುಧವಾರ ಬ್ಯಾಂಕ್ನಲ್ಲಿ ಆಯೋಜಿಸಲಾದ ಡಿಜಿಟಲ್ ಬ್ಯಾಂಕಿಂಗ್ ಹಾಗೂ ಸೈಬರ್ ಭದ್ರತೆ ಕುರಿತ ತರಬೇತಿ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಇಂದಿನ ಬ್ಯಾಂಕಿಂಗ್ ಕ್ಷೇತ್ರದಲ್ಲಿ ತ್ವರಿತ ಮತ್ತು ಸುರಕ್ಷಿತ ಸೇವೆ ಗಳು ಅತ್ಯಗತ್ಯವಾಗಿದ್ದು, ಗ್ರಾಹಕರ ನಿರೀಕ್ಷೆಗಳಿಗೆ ತಕ್ಕಂತೆ ಸೇವೆಗಳನ್ನು ವಿಸ್ತರಿಸುವುದು ಬ್ಯಾಂಕಿನ ಪ್ರಮುಖ ಗುರಿಯಾಗಿದೆ ಎಂದರು. ಬ್ಯಾಂಕ್ ಈಗಾಗಲೇ ಕೋರ್ ಬ್ಯಾಂಕಿಂಗ್ ವ್ಯವಸ್ಥೆಯೊಂದಿಗೆ ಆರ್ಟಿಜಿಎಸ್, ನೆಫ್ಟ್, ಸಿಟಿಎಸ್, ಎಸ್ಎಂಎಸ್ ಅಲರ್ಟ್, ಎಟಿಎಂ, ಮೊಬೈಲ್ ಬ್ಯಾಂಕಿಂಗ್ ಮತ್ತು ಪಿಒಎಸ್ ಸೇರಿದಂತೆ ಹಲವು ಡಿಜಿಟಲ್ ಸೇವೆಗಳನ್ನು ಯಶಸ್ವಿಯಾಗಿ ನೀಡುತ್ತಿದೆ. ಇತ್ತೀಚಿನ ತಾಂತ್ರಿಕ ಅಭಿವೃದ್ಧಿಗಳ ಹಿನ್ನೆಲೆಯಲ್ಲಿ, ಗ್ರಾಹಕರು ಮೊಬೈಲ್ ಅಪ್ಲಿಕೇಶನ್ಗಳ ಮೂಲಕ ಸುಲಭ ಮತ್ತು ವೇಗವಾದ ಸೇವೆಯನ್ನು ನಿರೀಕ್ಷಿಸುತ್ತಿದ್ದಾರೆ ಎಂದು ಅವರು ಹೇಳಿದರು. ಈ ಅಗತ್ಯವನ್ನು ಮನಗಂಡು, ಗ್ರಾಹಕರಿಗೆ ಇನ್ನಷ್ಟು ಸುಲಭ ಮತ್ತು ಸುರಕ್ಷಿತ ಸೇವೆಗಳನ್ನು ಒದಗಿಸುವ ಉದ್ದೇಶ ದಿಂದ ಯುಪಿಐ ಮತ್ತು ಐಎಂಪಿಎಸ್ ವ್ಯವಸ್ಥೆಗಳನ್ನು ಜಾರಿಗೆ ತರಲಾಗಿದೆ. ಈ ಸೇವೆಗಳ ಸಮರ್ಪಕ ಅನುಷ್ಠಾನ ಕ್ಕಾಗಿ ಬ್ಯಾಂಕ್ ಸಿಬ್ಬಂದಿಗೆ ವಿಶೇಷ ತರಬೇತಿಯನ್ನು ನೀಡಲಾಗುತ್ತಿದೆ ಎಂದು ಅವರು ತಿಳಿಸಿದರು. ಈ ಸಂದರ್ಭದಲ್ಲಿ ಬ್ಯಾಂಕಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗೋಪಾಲಕೃಷ್ಣ ಭಟ್, ಮಹಾಪ್ರಬಂಧಕ ಸುನಿಲ್ ಕುಮಾರ್ ಹೊಳ್ಳ ಹಾಗೂ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
Raichur | ದೇವದುರ್ಗ ತಾಲೂಕಿನ ವಿವಿಧ ಹಳ್ಳಿಗಳಿಗೆ ಆರ್ಸಿಎಚ್ ಅಧಿಕಾರಿ ಭೇಟಿ, ಪರಿಶೀಲನೆ
ಎಚ್ಪಿವಿ ಲಸಿಕೆ ಪಡೆದರೆ ಭವಿಷ್ಯದಲ್ಲಿ ಆರೋಗ್ಯಕ್ಕೆ ಭದ್ರತೆ : ಡಾ.ನಂದಿತಾ ಎಮ್.ಎನ್
ಭಟ್ಕಳ: ಎ.19ರಂದು ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರ
ಭಟ್ಕಳ: ಇಲ್ಲಿನ ಅಂಜುಮನ್ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ ಹಾಗೂ ಮಂಗಳೂರಿನ ಫಾದರ್ ಮುಲ್ಲರ್ ವೈದ್ಯಕೀಯ ಕಾಲೇಜು ಆಸ್ಪತ್ರೆಯ ಸಂಯುಕ್ತ ಆಶ್ರಯದಲ್ಲಿ ಎ. 19ರಂದು ಬೆಳಿಗ್ಗೆ 9ರಿಂದ ಮಧ್ಯಾಹ್ನ 3ರವರೆಗೆ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಯಲಿದೆ ಎಂದು ಕಾಲೇಜಿನ ಪ್ರಾಂಶುಪಾಲ ಯೂಸುಫ್ ಕೋಲಾ ತಿಳಿಸಿದರು. ಬುಧವಾರ ಕಾಲೇಜಿನ ಪ್ರಾಂಶುಪಾಲರ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಈ ಮಾಹಿತಿ ನೀಡಿದರು. ಆರೋಗ್ಯ ಜಾಗೃತಿ ಮೂಡಿಸುವ ಹಾಗೂ ಆರೋಗ್ಯವಂತ ಸಮಾಜ ನಿರ್ಮಾಣದ ಉದ್ದೇಶದಿಂದ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ. ಶಿಬಿರದಲ್ಲಿ ಸಾಮಾನ್ಯ ವೈದ್ಯಕೀಯ, ನೇತ್ರ (ಕಣ್ಣಿನ) ಪರೀಕ್ಷೆ, ಸ್ತ್ರೀರೋಗ, ಮಕ್ಕಳ ಆರೋಗ್ಯ, ಕ್ಯಾನ್ಸರ್ (ಆಂಕಾಲಜಿ) ಸೇರಿದಂತೆ ಒಂಬತ್ತು ವಿಭಾಗಗಳ ತಜ್ಞ ವೈದ್ಯರು ಸೇವೆ ನೀಡಲಿದ್ದಾರೆ ಎಂದು ಹೇಳಿದರು. ಫಾದರ್ ಮುಲ್ಲರ್ ಆಸ್ಪತ್ರೆಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಡಾ. ಕೆಲ್ವಿನ್ ಮಾತನಾಡಿ, ಶಿಬಿರಕ್ಕೆ ಆಗಮಿಸುವ ಎಲ್ಲರಿಗೆ ರೂ.200 ಮೌಲ್ಯದ ಹೆಲ್ತ್ ಕಾರ್ಡ್ ಉಚಿತವಾಗಿ ನೀಡಲಾಗುವುದು. ಜೊತೆಗೆ ರೂ.150 ನೋಂದಣಿ ಶುಲ್ಕವನ್ನು ಮನ್ನಾ ಮಾಡಲಾಗಿದೆ ಎಂದು ತಿಳಿಸಿದರು. ಈ ಕಾರ್ಡ್ ಹೊಂದಿರುವವರಿಗೆ ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಸಾಮಾನ್ಯ ಚಿಕಿತ್ಸೆ ಉಚಿತವಾಗಿದ್ದು, ಸೂಪರ್ ಸ್ಪೆಷಾಲಿಟಿ ಓಪಿಡಿ ಸಲಹೆಗಳಿಗೆ ಶೇ.50 ರಿಯಾಯಿತಿ ಲಭ್ಯವಾಗಲಿದೆ ಎಂದರು. ಶಿಬಿರದಲ್ಲಿ ಆಯುಷ್ಮಾನ್ ಭಾರತ್, ಆಭಾ ಕಾರ್ಡ್ (ABHA), ಯಶಸ್ವಿನಿ ಸೇರಿದಂತೆ ವಿವಿಧ ಸರ್ಕಾರಿ ಆರೋಗ್ಯ ವಿಮೆಗಳ ಕುರಿತು ಮಾಹಿತಿ ಹಾಗೂ ನೋಂದಣಿ ಸಹಾಯ ನೀಡಲಾಗುವುದು. ಆಸ್ಪತ್ರೆಯಲ್ಲಿ ಸುಮಾರು 70 ಶೇಕಡಾ ಹಾಸಿಗೆಗಳನ್ನು ಆಯುಷ್ಮಾನ್ ಕಾರ್ಡ್ ಹೊಂದಿರುವವರಿಗೆ ಮೀಸಲಿಟ್ಟಿರುವುದಾಗಿ ಹೇಳಿದರು. ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಕ್ಯಾನ್ಸರ್ ಚಿಕಿತ್ಸೆಯ ವಿವಿಧ ವಿಧಾನಗಳು, ಕಿಡ್ನಿ ಮತ್ತು ಲಿವರ್ ಕಸಿ, ಹೈರಿಸ್ಕ್ ಗರ್ಭಧಾರಣೆ ಚಿಕಿತ್ಸೆಗೆ ಅಗತ್ಯ ಸೌಲಭ್ಯಗಳಿವೆ. ಇತ್ತೀಚೆಗೆ 8 ವಾರಗಳ ಭ್ರೂಣಕ್ಕೆ ರಕ್ತ ವರ್ಗಾವಣೆ ಮಾಡುವ ಅಪರೂಪದ ಸಾಧನೆಯನ್ನು ಸಾಧಿಸಲಾಗಿದೆ ಎಂದು ತಿಳಿಸಿದರು. ಸಾರ್ವಜನಿಕರು ಶಿಬಿರದ ಸದುಪಯೋಗ ಪಡೆದುಕೊಳ್ಳುವಂತೆ ಕಾಲೇಜು ಆಡಳಿತ ಮಂಡಳಿ ಹಾಗೂ ಆಸ್ಪತ್ರೆಯ ವೈದ್ಯಾಧಿಕಾರಿಗಳು ಮನವಿ ಮಾಡಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಅಂಜುಮನ್ ಪ್ರಧಾನ ಕಾರ್ಯದರ್ಶಿ ಇಸ್ಹಾಕ್ ಶಾಬಂದ್ರಿ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಕೃಷಿ, ಆರೋಗ್ಯ ಕ್ಷೇತ್ರದ ಬಗ್ಗೆ ಹೆಚ್ಚೆಚ್ಚು ಸಂಶೋಧನೆ ಅಗತ್ಯ: ಸ್ಪೀಕರ್ ಯುಟಿ ಖಾದರ್
ಕುಂದಾಪುರ, ಎ.15: ದೇಶದ ಬೆನ್ನೆಲುಬಾದ ಕೃಷಿ ಕ್ಷೇತ್ರದೊಂದಿಗೆ ಆರೋಗ್ಯ ಕ್ಷೇತ್ರದ ಬಗ್ಗೆ ಹೆಚ್ಚೆಚ್ಚು ಸಂಶೋಧನೆ ಆಗಬೇಕಾಗಿದೆ. ಸಂಶೋಧನೆ ಹೆಚ್ಚಾದಷ್ಟು ದೇಶಕ್ಕೆ ದೊಡ್ಡ ಕೊಡುಗೆ ಸಿಕ್ಕಂತಾಗಲಿದೆ. ನಾವು ಕೂಡ ಮುಂಚೂಣಿ ರಾಷ್ಟ್ರಗಳ ಸಾಲಿನಲ್ಲಿರಬೇಕಾದರೆ ಸಂಶೋಧನೆ ಹೆಚ್ಚಾಗಬೇಕು. ಆ ನಿಟ್ಟಿನಲ್ಲಿ ನಮ್ಮ ಶಿಕ್ಷಣ ಸಂಸ್ಥೆಗಳು ಕಾರ್ಯ ಪ್ರವೃತ್ತರಾಗಬೇಕು ಎಂದು ರಾಜ್ಯ ವಿಧಾನಸಭಾ ಸ್ಪೀಕರ್ ಯು.ಟಿ.ಖಾದರ್ ಹೇಳಿದ್ದಾರೆ. ಮೂಡ್ಲಕಟ್ಟೆಯ ಐಎಂಜೆ ಶಿಕ್ಷಣ ಸಂಸ್ಥೆಗಳ ಆವರಣದಲ್ಲಿ ಮಂಗಳವಾರ ನಡೆದ ಕ್ವಾಂಟಮ್ ಕಂಪ್ಯೂಟೇಶನ್, ಪ್ರಿಸಿಶನ್ ಇನ್ಸ್ಟ್ರುಮೆಂಟೇಶನ್ ಮತ್ತು ಎಮರ್ಜಿಂಗ್ ರಿಸರ್ಚ್ ಇನ್ಫ್ರಾಸ್ಟ್ರಕ್ಚರ್ಸ್ ವಿಷಯದ ಕುರಿತ ರಾಷ್ಟ್ರೀಯ ಶೃಂಗಸಭೆಯ ಸಮಾರೋಪ ಸಮಾರಂಭವನ್ನುದ್ದೇಶಿಸಿ ಅವರು ಮಾತನಾಡುತಿದ್ದರು. ಐಎಂಜೆ ಕಾಲೇಜಿನಲ್ಲಿ ಕ್ವಾಂಟಮ್ ಕಂಪ್ಯೂಟೇಶನ್ ವಿಚಾರದಲ್ಲಿ ಸಂಶೋಧನಾ ಕೇಂದ್ರ ಆರಂಭಿಸಿರುವುದು ದೂರ ದೃಷ್ಟಿ ಶಿಕ್ಷಣದ ನಿದರ್ಶನ. ಇಂತಹ ಸಂಶೋಧನೆಗಳ ಕೇಂದ್ರಗಳಿಗೆ ಸರಕಾರದಿಂದ ಸಬ್ಸಿಡಿ ಒದಗಿಸುವ ಬಗ್ಗೆ ಮುಖ್ಯಮಂತ್ರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರೊಂದಿಗೆ ಮಾತನಾಡಲಾಗುವುದು ಎಂದರು. ಎನ್ಕ್ಯೂಎಂನ ಪ್ರಧಾನ ಸಂಶೋಧಕ ಪ್ರೊ.ಸಪ್ತಷಿರ್ ಚೌಧರಿ ಮಾತನಾಡಿದರು. ಸಂಸ್ಥೆಯ ಅಧ್ಯಕ್ಷ ಸಿದ್ಧಾರ್ಥ ಜೆ.ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಕೊಲ್ಕತ್ತಾದ ವಿಇಸಿಸಿಯ ಡಾ.ಪರ್ಣಿಕಾ ದಾಸ್, ಐಎಂಜೆಐಆರ್ ನಿರ್ದೇಶಕ ಡಾ.ಸತ್ಯಜಿತ್, ಎಂಐಟಿ ಪ್ರಾಂಶುಪಾಲ ಡಾ. ರಾಮಕೃಷ್ಣ ಹೆಗ್ಡೆ ಮತ್ತಿತರರು ಉಪಸ್ಥಿತರಿದ್ದರು. ಸಂಸ್ಥೆಯ ಅಕಾಡೆಮಿಕ್ ನಿರ್ದೇಶಕ ಡಾ.ಎಸ್.ಎನ್.ಭಟ್ ಸ್ವಾಗತಿಸಿ, ಪ್ರಾಧ್ಯಾಪಕಿ ರಾಜೇಶ್ವರಿ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
ಎಸ್ಸಿಎಸ್ಟಿ ಮೀಸಲಾತಿ ಪ್ರಮಾಣ ಹೆಚ್ಚಿಸಲು ಆಗ್ರಹಿಸಿ ಸಿಪಿಎಂ ಮನವಿ
ಉಡುಪಿ: ಕರ್ನಾಟಕ ರಾಜ್ಯ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮೀಸಲಾತಿ ಪ್ರಮಾಣ ಹೆಚ್ಚಳ ಜಾರಿಗೆ ಕೇಂದ್ರ ಸರಕಾರ ಮುತುವರ್ಜಿ ವಹಿಸಬೇಕೆಂದು ಆಗ್ರಹಿಸಿ ಸಿಪಿಐಎಂ ಉಡುಪಿ ಜಿಲ್ಲಾ ಸಮಿತಿ ನಿಯೋಗ ಉಡುಪಿ ಚಿಕ್ಕ ಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಅವರ ಆಪ್ತ ಸಹಾಯಕರ ಮೂಲಕ ಮನವಿ ಸಲ್ಲಿಸಿತು. ರಾಜ್ಯದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಜನಸಂಖ್ಯೆಯನ್ನು ಆಧರಿಸಿ ಶೈಕ್ಷಣಿಕ ಹಾಗೂ ಉದ್ಯೋಗದ ನೇಮಕಾತಿಯಲ್ಲಿ ಜಾರಿಯಲ್ಲಿದ್ದ ಶೇ.15 ಮತ್ತು ಶೇ.3ರ ಮೀಸಲಾತಿಯನ್ನು ಹೆಚ್ಚಿಸಬೇಕೆಂದು ರಚಿಸಲಾಗಿದ್ದ ನ್ಯಾ.ಎಚ್.ಎನ್.ನಾಗಮೋಹನ ದಾಸ್ ಆಯೋಗವು ಮೀಸಲಾತಿ ಪ್ರಮಾಣವನ್ನು ಕ್ರಮವಾಗಿ ಶೇ.17 ಮತ್ತು ಶೇ.7ರಷ್ಟು ಹೆಚ್ಚಳ ಮಾಡ ಬೇಕೆಂದು ವರದಿ ನೀಡಿದೆ. ಕರ್ನಾಟಕದಲ್ಲಿ ಅಂದಿನ ಮುಖ್ಯಮಂತ್ರಿ ಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಬಹುತೇಕ ಎಲ್ಲ ರಾಜಕೀಯ ಪಕ್ಷಗಳು ಇದನ್ನು ಬೆಂಬಲಿಸಿದೆ. ಕರ್ನಾಟಕ ವಿಧಾನಸಭೆಯ ಈ ತೀರ್ಮಾನಕ್ಕೆ ಒಕ್ಕೂಟ ಸರಕಾರ ಒಪ್ಪಿಗೆಯನ್ನು ನೀಡಿ ಸಂವಿಧಾನದ 9ನೇ ಶೆಡ್ಯೂಲ್ಗೆ ಸೇರ್ಪಡೆ ಮಾಡಬೇಕು. ಆದುದರಿಂದ ತಾವು ಒಕ್ಕೂಟ ಸರಕಾರದ ಮೇಲೆ ಒತ್ತಡವನ್ನು ತಂದು ಇದರ ಜಾರಿಗೆ ಮುತುವರ್ಜಿ ಮಾಡಬೇಕು ಎಂದು ಸಿಪಿಎಂ ಮನವಿಯಲ್ಲಿ ಆಗ್ರಹಿಸಿದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಮೀಸಲಾತಿ ಪ್ರಮಾಣ ಹೆಚ್ಚಿಸುವ ಕರ್ನಾಟಕದ ತೀರ್ಮಾನಕ್ಕೆ ಕೇಂದ್ರ ಸರಕಾರ ಕೂಡಲೇ ಅನುಮೋದನೆ ನೀಡಬೇಕು. ಇಂದಿನ ನಿರುದ್ಯೋಗ ಸಮಸ್ಯೆಯ ಗಂಭೀರತೆಯನ್ನು ಅರ್ಥ ಮಾಡಿ ಕೊಂಡು ಭಾರತದ ಒಕ್ಕೂಟದ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ನೇಮಕಾತಿ ಮಾಡಬೇಕು. ಖಾಸಗೀ ರಂಗದಲ್ಲಿಯೂ ಮೀಸಲಾತಿ ನೀತಿಯನ್ನು ಜಾರಿಗೊಳಿಸಲು ಅಗತ್ಯವಾದ ಕ್ರಮಗಳನ್ನು ಕೈಗೊಳ್ಳಬೇಕು. ಕರ್ನಾಟಕ ಸರ್ಕಾರವು ಅಲೆಮಾರಿ, ಆದಿವಾಸಿ ಮತ್ತು ಅಂಚಿನ ಜಾತಿಗಳಿಗೆ ಒಳ-ಮೀಸಲಾತಿ ಪ್ರವರ್ಗವನ್ನು ರೂಪಿಸಲು ರಾಜ್ಯ ಸರ್ಕಾರದೊಂದಿಗೆ ತಾವು ಮುತುವರ್ಜಿ ವಹಿಸಬೇಕು. ಉದ್ಯೋಗ ನೇಮಕಾತಿ ಮಾಡುವಾಗ ಒಳ ಮೀಸಲಾತಿಯ ಎಲ್ಲಾ ಪ್ರವರ್ಗಗಳಿಗೂ ನ್ಯಾಯಸಮ್ಮತವಾದ ರೀತಿಯಲ್ಲಿ ರೋಸ್ಟರ್ ಬಿಂದು ಅಳವಡಿಸಬೇಕು ಸೇರಿದಂತೆ ವಿವಿಧ 11 ಬೇಡಿಕೆಗಳನ್ನು ಸಂಸದರಿಗೆ ಸಲ್ಲಿಸಲಾಗಿದೆ. ಪರಿಸ್ಥಿತಿಯ ಗಂಭೀರತೆ ಹಾಗೂ ಸೂಕ್ಷ್ಮತೆಗಳನ್ನು ಗಮನದಲ್ಲಿರಿಸಿ ಭಾರತದ ಒಕ್ಕೂಟ ಸರಕಾರ ತುರ್ತು ಕ್ರಮ ವಹಿಸುವಂತೆ ಸೂಕ್ತ ಮುತುವರ್ಜಿ ವಹಿಸಬೇಕೆಂದು ಸಂಸದರನ್ನು ಆಗ್ರಹಿಸಲಾಗಿದೆ. ಈ ಸಂದರ್ಭದಲ್ಲಿ ಸಿಪಿಎಂ ಪಕ್ಷದ ಜಿಲ್ಲಾ ಕಾರ್ಯದರ್ಶಿ ಸುರೇಶ್ ಕಲ್ಲಾಗರ, ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಎಚ್.ನರಸಿಂಹ, ದಲಿತ ಹಕ್ಕುಗಳ ಸಮಿತಿ ಜಿಲ್ಲಾ ಅಧ್ಯಕ್ಷ ಸಂಜೀವ ಬಳ್ಕೂರು ಉಪಸ್ಥಿತರಿದ್ದರು.
Kalaburagi | ಚಿತ್ರಕಲಾ ಪ್ರತಿಭೆಗಳಿಗೆ ಪ್ರೋತ್ಸಾಹ ಅಗತ್ಯ: ಭವಾನಿ ಸಿಂಗ್ ಠಾಕೂರ್
ಕಲಬುರಗಿ : ಎಲೆ ಮರೆ ಕಾಯಿಯಂತಿರುವ ಚಿತ್ರಕಲಾ ಪ್ರತಿಭೆಗಳಿಗೆ ಪ್ರೋತ್ಸಾಹ ಅಗತ್ಯವಾಗಿದೆ ಎಂದು ಹಿರಿಯ ಛಾಯಾಗ್ರಾಹಕ ಭವಾನಿ ಸಿಂಗ್ ಠಾಕೂರ್ ಹೇಳಿದರು. ನಗರದ ಕನ್ನಡ ಭವನದಲ್ಲಿ ಇಂಡಿಯನ್ ರಾಯಲ್ ಅಕಾಡೆಮಿ ಮತ್ತು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಇವುಗಳ ಸಂಯುಕ್ತಾಶ್ರಯದಲ್ಲಿ ವಿಶ್ವ ಕಲಾ ದಿನಾಚರಣೆಯ ನಿಮಿತ್ತ ಏರ್ಪಡಿಸಿದ 'ಒಂದು ದಿನದ ಚಿತ್ರಕಲಾ ಶಿಬಿರ' ಉದ್ಘಾಟಿಸಿ ಅವರು ಮಾತನಾಡಿದರು. ಚಿತ್ರಕಲೆ ನಮ್ಮ ಸಾಂಸ್ಕೃತಿಕ ಬದುಕನ್ನು ಅನಾವರಣ ಮಾಡುವ ಶಕ್ತಿಯಿದ್ದು, ಇದರ ಇಚ್ಛಾ ಶಕ್ತಿ ಮಕ್ಕಳಲ್ಲಿ ಬೆಳೆಸಬೇಕಾಗಿದೆ. ಈ ದಿಸೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ನಿರಂತರವಾದ ಕಾರ್ಯ ಚಟುವಟಿಕೆಗಳನ್ನು ಜಾರಿಗೊಳಿಸುತ್ತಿದೆ ಎಂದರು. ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಅಧ್ಯಕ್ಷತೆ ವಹಿಸಿ, ಕಲ್ಯಾಣ ಕರ್ನಾಟಕ ಭಾಗದಲ್ಲಿರುವ ಚಿತ್ರಕಲಾವಿದರನ್ನು ಗುರುತಿಸಿ ವೇದಿಕೆ ಕಲ್ಪಿಸುವ ಕಾರ್ಯ ಪರಿಷತ್ ನಿರಂತರವಾಗಿ ಮಾಡುತ್ತಿದೆ. ನಮ್ಮ ಸಾಂಸ್ಕೃತಿಕ ಬದುಕನ್ನು ಇನ್ನಷ್ಟು ಗಟ್ಟಿಗೊಳ್ಳಲು ಕಲಾ ಪ್ರದರ್ಶನ ಪೂರಕವಾಗಿದೆ ಎಂದರು. ಇಂಡಿಯನ್ ರಾಯಲ್ ಅಕಾಡೆಮಿ ಅಧ್ಯಕ್ಷ ಡಾ.ರೆಹಮನ್ ಪಟೇಲ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಕಲಾವಿದರಾದ ಕೆ.ಎಸ್ ನಾಗೂರೆ, ಇಮ್ರಾನ್, ಕಸಾಪ ಗೌರವ ಕಾರ್ಯದರ್ಶಿಗಳಾದ ಧರ್ಮಣ್ಣ ಎಚ್.ಧನ್ನಿ, ಶಿವರಾಜ ಅಂಡಗಿ, ಮುಹಮ್ಮದ್ ಆಯಾಝುದ್ದೀನ್ ಪಟೇಲ್, ಸುಬ್ಬಯ್ಯ ನೀಲಾ, ಧರ್ಮರಾಜ ಜವಳಿ, ಸೇರಿದಂತೆ ಅನೇಕ ಗಣ್ಯರು, ಕಲಾವಿದರು ಭಾಗವಹಿಸಿದರು. ನಂತರ ಈ ಒಂದು ದಿನದ ಶಿಬಿರದಲ್ಲಿ ಭಾಗವಹಿಸಿದ ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಿ ಗೌರವಿಸಲಾಯಿತು.
ಜೀವರ್ಗಿಯಲ್ಲಿ ಅಂಬೇಡ್ಕರ್ ಜಯಂತಿ ಆಚರಣೆ
ಜೀವರ್ಗಿ : ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರು ತುಳಿತಕ್ಕೊಳಗಾದ ಸಮುದಾಯಗಳನ್ನು ಮೇಲಕ್ಕೆತ್ತಿದ ಮಹಾನ್ ವ್ಯಕ್ತಿ ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲೆ ಡಾ.ಶಾಂತಾ ಬಿ.ಅಸ್ಟಿಗೆ ಹೇಳಿದರು. ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಅಂಬೇಡ್ಕರ್ ಅವರ 135ನೇ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಅಂಬೇಡ್ಕರ್ ಅವರು ಸಂವಿಧಾನದ ಮೂಲಕ ಎಲ್ಲ ಜೀವಿಗಳಿಗೆ ಬದುಕುವ ಹಕ್ಕು ಇದೆ ಎಂದು ಸಾರಿದ್ದಾರೆ. ಪ್ರಾಣಿಗಳ ಮೇಲೂ ದಯ ತೋರಬೇಕು ಎಂಬ ಸಂದೇಶವನ್ನು ನೀಡಿದ್ದಾರೆ. ಅವರನ್ನು ಒಂದು ಸಮುದಾಯಕ್ಕೆ ಸೀಮಿತಗೊಳಿಸುವುದು ಸರಿಯಲ್ಲ ಎಂದು ಹೇಳಿದರು. ಹಿರಿಯ ಪ್ರಾಧ್ಯಾಪಕಿ ಡಾ. ರಾಬಿಯಾ ಬೇಗಂ ಅವರು ಮಾತನಾಡಿ, ಅಂಬೇಡ್ಕರ್ ಅವರ ವ್ಯಕ್ತಿತ್ವವನ್ನು ಭಾರತೀಯರು ಸಮಗ್ರವಾಗಿ ಅರ್ಥಮಾಡಿಕೊಳ್ಳಬೇಕಾಗಿದೆ. ಇಂದಿನ ವಿಶ್ವದಲ್ಲಿ ಶಾಂತಿಯ ಕೊರತೆ ಕಾಣಿಸುತ್ತಿದೆ ಎಂದರು. ಕಾರ್ಯಕ್ರಮದಲ್ಲಿ ವಾಣಿಜ್ಯ ಸ್ನಾತಕೋತ್ತರ ವಿಭಾಗದ ಸಂಯೋಜಕ ಡಾ.ಶಿವಕುಮಾರ್ ಬಿ, ಅತಿಥಿ ಉಪನ್ಯಾಸಕರಾದ ಡಾ.ನಾಗನಗೌಡ ಅವರು ಮಾತನಾಡಿದರು. ವೇದಿಕೆಯಲ್ಲಿ ಗಣಿತಶಾಸ್ತ್ರ ವಿಭಾಗದ ಮುಖ್ಯಸ್ಥ ಎನ್.ಜಿ.ಶ್ರೀಧರ್, ಐಕ್ಯುಏಸಿ ಸಂಯೋಜಕ ಡಾ.ಸಂದೀಪ್ ತಿವಾರಿ, ನಿರ್ವಹಣಾಶಾಸ್ತ್ರ ವಿಭಾಗದ ಅಧ್ಯಾಪಕ ಹೊನ್ನೂರಸ್ವಾಮಿ ಉಪಸ್ಥಿತರಿದ್ದರು. ಎನ್ನೆಸ್ಸೆಸ್ ಘಟಕದ ಸಂಚಾಲಕ ಡಾ. ಶರಣಪ್ಪ ಗುಂಡಗುರ್ತಿ ಸ್ವಾಗತಿಸಿದರು. ಸಾಂಸ್ಕೃತಿಕ ಸಮಿತಿ ಸಂಚಾಲಕ ಡಾ. ಖಾಜಾವಲಿ ಈಚನಾಳ ಕಾರ್ಯಕ್ರಮ ನಿರೂಪಿಸಿದರು. ಹಿಂದಿ ವಿಭಾಗದ ಮುಖ್ಯಸ್ಥ ಕುಪೇಂದ್ರ ವಂದಿಸಿದರು. ವಿವಿಧ ವಿಭಾಗಗಳ ಅಧ್ಯಾಪಕರು, ಅತಿಥಿ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
Afzalpur | ಮಾಜಿ ಸಚಿವ ಗುತ್ತೇದಾರ್ ವಿರುದ್ಧ ಪ್ರಕಾಶ ಜಮಾದಾರ ಆಕ್ರೋಶ
ಅಫಜಲಪುರ: ನಾನೇನು ಶಾಸಕ ಎಂ.ವೈ. ಪಾಟೀಲ್ ಅವರ ಚೇಲಾ ಅಲ್ಲ, ಅವರ ಕಟ್ಟಾ ಬೆಂಬಲಿಗ ಮಾತ್ರ ಎಂದು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಪ್ರಕಾಶ್ ಜಮಾದಾರ ಸ್ಪಷ್ಟಪಡಿಸಿದರು. ಪಟ್ಟಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾಜಿ ಸಚಿವ ಮಾಲಿಕಯ್ಯ ಗುತ್ತೇದಾರ್ ತಮ್ಮ ಬಗ್ಗೆ ಹಗುರವಾಗಿ ಮಾತನಾಡಿರುವುದು ಸರಿಯಲ್ಲ ಎಂದು ಹೇಳಿದರು. ಹಿರಿಯ ಶಾಸಕರಾಗಿರುವ ಎಂ.ವೈ. ಪಾಟೀಲ್ ಕುರಿತು ಮುನೀಮ್ ಎಂದು ಹೇಳುವುದು ತಕ್ಕದ್ದಲ್ಲ ಎಂದು ಪ್ರತಿಕ್ರಿಯಿಸಿದರು. ನೀವು ಆರು ಬಾರಿ ಶಾಸಕರಾಗಿದ್ದಾಗ ಕ್ಷೇತ್ರದಲ್ಲಿ ಕೆಲವೇ ಸಮಯ ಇದ್ದು, ಹೆಚ್ಚಿನ ಸಮಯ ಬೆಂಗಳೂರಲ್ಲೇ ಕಳೆದಿದ್ದೀರಿ. ಆಗ ನಿಮ್ಮ ಸಹೋದರ ನಿತಿನ್ ಗುತ್ತೇದಾರ್ ಕ್ಷೇತ್ರದ ಕೆಲಸಗಳನ್ನು ನೋಡಿಕೊಂಡಿದ್ದರು. ಹಾಗಾದರೆ ನೀವು ಮುನೀಮ್ ಆಗಿದ್ದೀರಾ? ಎಂದು ಪ್ರಶ್ನಿಸಿದರು. ಕಾಂಗ್ರೆಸ್ ಪಕ್ಷದಿಂದ ಹಿಂದುಳಿದ ವರ್ಗಗಳ ಕೋಟಾದಡಿ ಟಿಕೆಟ್ ಪಡೆದುಕೊಂಡು ಯಾವ ವರ್ಗಗಳಿಗೆ ನ್ಯಾಯ ಒದಗಿಸಿದ್ದೀರಿ ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದರು. ತಮಗೆ ಜಿಪಂ ಸದಸ್ಯತ್ವ ಹಾಗೂ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಸ್ಥಾನ ದೊರೆತಿರುವುದರಿಂದ ತನ್ನನ್ನು ಮಾನಸಿಕವಾಗಿ ಕುಗ್ಗಿಸಲು ಇಂತಹ ಹೇಳಿಕೆಗಳನ್ನು ನೀಡಲಾಗುತ್ತಿದೆ ಎಂದು ಆರೋಪಿಸಿದರು. ಇನ್ನೂ, ಹಿಂದುಳಿದ ಸಮುದಾಯಗಳ ಪರವಾಗಿ ನಿಂತಿದ್ದರೆ, ಜೆ.ಎಂ. ಕೊರಬು ಸ್ಪರ್ಧೆ ಘೋಷಿಸಿದಾಗ ಅವರ ವಿರುದ್ಧ ಹೇಳಿಕೆ ನೀಡಿದ್ದು ಹಾಗೂ ಮಕ್ಬೂಲ್ ಪಟೇಲ್ ಅವರನ್ನು ಜಿಪಂ ಚುನಾವಣೆಯಲ್ಲಿ ಸೋಲಿಸಿದ್ದು ಮರೆತಿರಾ ಎಂದು ಟೀಕಿಸಿದರು. ದಿ. ವಿಠ್ಠಲ್ ಹೇರೂರ ಅವರ ಮೇಲೆ ನಡೆದ ಹಲ್ಲೆ ವೇಳೆ ಎಂ.ವೈ. ಪಾಟೀಲ್ ಸ್ಪಂದಿಸಿ ರಕ್ಷಿಸಿದುದನ್ನು ಸ್ಮರಿಸಿದ ಅವರು, ಕಳೆದ 25 ವರ್ಷಗಳಿಂದ ಅವರೊಂದಿಗೆ ಇರುವುದಾಗಿ ಹೇಳಿದರು. ಹೀಗಾಗಿ ಹಿರಿಯರಾದ ಎಂ.ವೈ. ಪಾಟೀಲ್ ಅವರಿಗೆ ತಕ್ಷಣ ಕ್ಷಮೆಯಾಚಿಸಬೇಕು ಎಂದು ಮಾಲಿಕಯ್ಯ ಗುತ್ತೇದಾರ್ ಅವರಿಗೆ ಆಗ್ರಹಿಸಿದರು. ಪತ್ರಿಕಾಗೋಷ್ಠಿಯಲ್ಲಿ ಅಫಜಲಪುರ ಹಾಗೂ ಗಾಣಗಾಪುರ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಚಂದ್ರಶೇಖರ ಕರಜಗಿ, ಕಾಂಗ್ರೆಸ್ ಮುಖಂಡ ಮೈಹಿಬೂಬ ಪಟೇಲ್ ಕಲ್ಲೂರ, ಶಿವಾನಂದ ಗಾಡಿ ಸಾಹುಕಾರ, ಸಂಗನಗೌಡ ಪಾಟೀಲ್, ಶರಣು ಈಶ್ವರಗೊಂಡ, ಪ್ರವೀಣ್ ಕಲ್ಲೂರ, ದತ್ತಾತ್ರೇಯ ಮಾತನಳ್ಳಿ ಉಪಸ್ಥಿತರಿದ್ದರು.
ಯೋಗಿಶ್ ಗೌಡ ಕೊಲೆ ಪ್ರಕರಣ: ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ದೋಷಿ; ಕೋರ್ಟ್ ತೀರ್ಪು
ಬೆಂಗಳೂರು : ಧಾರವಾಡ ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಯೋಗೇಶ್ ಗೌಡ ಕೊಲೆ ಪ್ರಕರಣ ಅಂತಿಮ ತೀರ್ಪು ಇಂದು(ಎ.15) ಪ್ರಕಟವಾಗಿದೆ. ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ಸೇರಿ 19 ಮಂದಿ ಆರೋಪಿಗಳು ದೋಷಿ ಎಂದು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ತೀರ್ಪು ನೀಡಿ ಆದೇಶ ಹೊರಡಿಸಿದೆ.
Kalaburagi | ಆಳಂದದಲ್ಲಿ ಎ.21ರಂದು ಪಿಎಂ ನ್ಯಾಷನಲ್ ಅಪ್ರೆಂಟಿಸ್ ಮೇಳ
ಕಲಬುರಗಿ : ಡಿಜಿಇಟಿ ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವಾಲಯದ ವತಿಯಿಂದ ಪಿ.ಎಮ್.ನ್ಯಾಷನಲ್ ಅಪ್ರೆಂಟಿಸ್ (ಶಿಶಿಕ್ಷು) ಕಾಯ್ದೆ 1961ರಡಿ ಎ.21ರಂದು ಬೆಳಿಗ್ಗೆ 10 ಗಂಟೆಗೆ ಆಳಂದದ ಹಳೆಯ ತಹಶೀಲ್ದಾರರ ಕಚೇರಿ ಆವರಣದಲ್ಲಿರುವ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ತಾಲೂಕು ಮಟ್ಟದ ಅಪ್ರೆಂಟಿಸ್ ಮೇಳವನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಥೆಯ ಪ್ರಾಚಾರ್ಯರು ತಿಳಿಸಿದ್ದಾರೆ. ಈ ಮೇಳದಲ್ಲಿ ಟೊಯೋಟಾ ಕಿರ್ಲೋಸ್ಕರ್, ಹೋಂಡಾ ಮೋಟಾರ್ಸ್, ಟೊಯೋಟಾ ಇಂಜಿನ್ಸ್, ಎಂಆರ್ಎಫ್ ಟೈರ್ಸ್, ಟಾಟಾ ಪವರ್ ಸೋಲಾರ್, ಬಿ.ಇ.ಎಂ.ಎಲ್., ಮಹೀಂದ್ರಾ ಮತ್ತು ಮಹೀಂದ್ರಾ, ತೋಷಿಬಾ, ಜೆಎಸ್ಡಬ್ಲ್ಯೂ ಸ್ಟೀಲ್, ಅಲ್ಟ್ರಾಟೆಕ್ ಸೇರಿದಂತೆ ಅನೇಕ ಪ್ರತಿಷ್ಠಿತ ಕಂಪನಿಗಳು ಭಾಗವಹಿಸಲಿವೆ. ಕಲಬುರಗಿ ಜಿಲ್ಲೆಯ ವಿವಿಧ ವೃತ್ತಿಗಳಲ್ಲಿ ಐಟಿಐ ಪಾಸಾದ ಅಭ್ಯರ್ಥಿಗಳು ಈ ಮೇಳದಲ್ಲಿ ಭಾಗವಹಿಸಬಹುದು. ಆಸಕ್ತರು ತಮ್ಮ ಎಸೆಸೆಲ್ಸಿ ಹಾಗೂ ಐಟಿಐ ಅಂಕಪಟ್ಟಿ ಪ್ರತಿಗಳು, ಆಧಾರ್ ಕಾರ್ಡ್, ಇತ್ತೀಚಿನ ಭಾವಚಿತ್ರ ಸೇರಿದಂತೆ ಅಗತ್ಯ ದಾಖಲೆಗಳೊಂದಿಗೆ ಮೇಳಕ್ಕೆ ಹಾಜರಾಗುವಂತೆ ಸೂಚಿಸಲಾಗಿದೆ. ಆಸಕ್ತಿಯುಳ್ಳ ಅರ್ಹ ಅಭ್ಯರ್ಥಿಗಳು ಆಳಂದ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಗೆ ಭೇಟಿ ನೀಡಿ ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳಬೇಕು. ಮತ್ತಿತರ ಹೆಚ್ಚಿನ ಮಾಹಿತಿಗಾಗಿ ಸಂಸ್ಥೆಯ ಸಿಬ್ಬಂದಿಗಳ ದೂರವಾಣಿ ಸಂಖ್ಯೆ 9945691953/ 8277379441/ 9686571818/ 9886253173/ 7019634886/ 9980243372 ಗಳಿಗೆ ಸಂಪರ್ಕಿಸಲು ಕೋರಲಾಗಿದೆ.
CBSE 10ನೇ ತರಗತಿ ಫಲಿತಾಂಶ 2026: ಇಂದು ಸಂಜೆ 7 ಗಂಟೆ ಸುಮಾರಿಗೆ ಬೋರ್ಡ್ನಿಂದ ಅಧಿಕೃತ ಪತ್ರಿಕಾ ಪ್ರಕಟಣೆ
ನವದೆಹಲಿ: ಬಹುನಿರೀಕ್ಷಿತ ಸಿಬಿಎಸ್ಇ 10ನೇ ತರಗತಿ ಫಲಿತಾಂಶ 2026 ರ ಕುರಿತಂತೆ ಶಿಕ್ಷಣ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ಮಹತ್ವದ ಅಪ್ಡೇಟ್ ನೀಡಿದ್ದಾರೆ. ಂದ್ರೀಯ ಪ್ರೌಢ ಶಿಕ್ಷಣ ಮಂಡಳಿ (CBSE) ತನ್ನ 10ನೇ ತರಗತಿಯ ಬೋರ್ಡ್ ಪರೀಕ್ಷೆಯ ಫಲಿತಾಂಶಗಳ ಸಮಗ್ರ ವಿವರಗಳನ್ನು ಒಳಗೊಂಡ ಅಧಿಕೃತ ಪತ್ರಿಕಾ ಪ್ರಕಟಣೆಯನ್ನು ಇಂದು ಸಂಜೆ 7 ಗಂಟೆ ಸುಮಾರಿಗೆ ಹೊರಡಿಸುವ ಸಾಧ್ಯತೆಯಿದೆ. ಈಗಾಗಲೇ
ನನ್ನದು ಬಡವರ ಜಾತಿ, ರಾಜಕಾರಣದಲ್ಲಿ ಯಾರೂ ಗೂಟ ಹೊಡ್ಕೊಂಡು ಇರಲ್ಲ: ವಿರೋಧಿಗಳ ವಿರುದ್ಧ ಜಮೀರ್ ವಾಗ್ದಾಳಿ
ನನ್ನದು ಬಡವರ ಜಾತಿಯಾಗಿದೆ. ಯಾರೂ ಜಾತಿ ರಾಜಕಾರಣ ಮಾಡಬಾರದು ಎಂದು ಸಚಿವ ಜಮೀರ್ ಅಹ್ಮದ್ ಖಾನ್ ಕಿಡಿಕಾರಿದ್ದಾರೆ. ರಾಜಕಾರಣದಲ್ಲಿ ಯಾರೂ ಗೂಟ ಹೊಡೆದುಕೊಂಡು ಇರುವುದಿಲ್ಲ ಎಂದು ಅವರು ಇದೇ ಸಂದರ್ಭದಲ್ಲಿ ಎದುರಾಳಿಗಳ ವಿರುದ್ಧ ಕಿಡಿಕಾರಿದ್ದಾರೆ. ಆಪ್ತರ ವಿರುದ್ಧ ಸರಣಿ ಕ್ರಮದ ಹಿನ್ನೆಲೆಯಲ್ಲಿ ಅವರು ಬೆಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಅಲ್ಲದೆ ನಾನು ಹಣೆ ಬರಹದಲ್ಲಿ ನಂಬಿಕೆ ಇಟ್ಟಿದ್ದೇನೆ, ಹಣೆ ಬರಹದಲ್ಲಿ ಏನು ಬರೆದಿದ್ಯಾ ಅದೇ ಆಗುತ್ತದೆ ಎಂದಿದ್ದಾರೆ. ಈ ಕುರಿತಾದ ಮತ್ತಷ್ಟು ವಿವರ ಇಲ್ಲಿದೆ.
ಡಯಟ್ ಸೋಡಾ ಕ್ಯಾನ್ಸರ್ ಕೋಶ ಕೊಲ್ಲತ್ತೆ ಎಂದು ನಂಬ್ತಾರಂತೆ ಟ್ರಂಪ್! ಈ ಬಗ್ಗೆ ಕ್ಯಾನ್ಸರ್ ತಜ್ಞರು ಹೇಳುವುದೇನು?
ಡೊನಾಲ್ಡ್ ಟ್ರಂಪ್ ಯಾವಾಗಲೂ ತಮ್ಮ ವಿಭಿನ್ನ ಹೇಳಿಕೆಗಳು ಹಾಗೂ ನಂಬಿಕೆಗಳಿಂದಲೇ ಫೇಮಸ್. ಅಂತಯೇ ಡೊನಾಲ್ಡ್ ಟ್ರಂಪ್ ಅವರ ಕುರಿತು ರೋಚಕ ವಿಚಾರವನ್ನು ಅಮೆರಿಕಾ ವೈದ್ಯಕೀಯ ವಿಭಾಗದ ಆಡಳಿತಾಧಿಕಾರಿ ಹಂಚಿಕೊಂಡಿದ್ದಾರೆ. ಈ ಕುರಿತು ವಿವರಿಸಿದ ಅವರು ಡಯಟ್ ಸೋಡಾವನ್ನು ಹುಲ್ಲಿನ ಮೇಲೆ ಸುರಿದಾಗ ಅದನ್ನು ಕೊಲ್ಲುವುದಾದರೆ, ದೇಹದಲ್ಲಿನ ಕ್ಯಾನ್ಸರ್ ಕೋಶಗಳನ್ನು ಸಹ ಕೊಲ್ಲುತ್ತದೆ ಎಂದು ಡೊನಾಲ್ಡ್ ಟ್ರಂಪ್ ವಾದಿಸುತ್ತಾರೆ ಎಂದಿದ್ದಾರೆ. ಆದಾಗ್ಯೂ, ಈ ಹೇಳಿಕೆಗಳು ಕುರಿತು ಕ್ಯಾನ್ಸರ್ ತಜ್ಞ ವೈದ್ಯರು ತದ್ವಿರುದ್ದವಾಗಿ ಹೇಳಿಕೆ ನೀಡಿದ್ದು, ಡಯಟ್ ಸೋಡಾ ಕ್ಯಾನ್ಸರ್ ಕೋಶಗಳನ್ನು ಕೊಲ್ಲಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಈ ಕುರಿತ ಹೆಚ್ಚಿನ ವಿವರ ಇಲ್ಲಿದೆ..
Chittapur | ಬಸವ ಜಯಂತಿ ಉತ್ಸವದ ಬೃಹತ್ ಶೋಭಾಯಾತ್ರೆಯ ಪ್ರಚಾರಕ್ಕೆ ಚಾಲನೆ
ಚಿತ್ತಾಪುರ : ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆ ಚಿತ್ತಾಪುರ ಹಾಗೂ ಬಸವ ಜಯಂತಿ ಉತ್ಸವ ಆಚರಣೆ ಸಮಿತಿ ವತಿಯಿಂದ ಬಸವ ಜಯಂತಿ ಉತ್ಸವ ನಿಮಿತ್ತ ಎ.20 ರಂದು ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ಬೃಹತ್ ಶೋಭಾಯಾತ್ರೆ, ಉಚಿತ ಆರೋಗ್ಯ ತಪಾಸಣೆ ಶಿಬಿರ ಹಾಗೂ ಔಷಧಿ ವಿತರಣೆ ಕಾರ್ಯಕ್ರಮದ ಪ್ರಚಾರಕ್ಕೆ ಜಯಂತಿ ಸಮಿತಿ ಅಧ್ಯಕ್ಷ ಬಸವರಾಜ ಪಾಟೀಲ ಬೆಳಗುಂಪಾ ಚಾಲನೆ ನೀಡಿದರು. ಈ ವೇಳೆ ವೀರಶೈವ ಲಿಂಗಾಯತ ಮಹಾಸಭಾ ತಾಲೂಕು ಅಧ್ಯಕ್ಷ ನಾಗರಾಜ ಭಂಕಲಗಿ, ನಗರಾಧ್ಯಕ್ಷ ಚಂದ್ರಶೇಖರ ಉಟಗೂರ್, ಯುವ ಅಧ್ಯಕ್ಷ ಅನಿಲ್ ವಡ್ಡಡಗಿ, ಮುಖಂಡರಾದ ಅಶೋಕ ನಿಪ್ಪಾಣಿ, ನೇಹಾಲ್ ಪಾಟೀಲ, ವಿಶ್ವಾರಾಧ್ಯ ಪಾಟೀಲ ಕರದಾಳ, ಬಸವರಾಜ ಸಂಕನೂರ, ಅಂಬರೀಷ್ ಸುಲೇಗಾಂವ, ಮಹಾದೇವ ಅಂಗಡಿ, ರಾಚಪ್ಪ ಬೊಮ್ಮನಳ್ಳಿ, ರಮೇಶ್ ಕಾಳನೂರ ಸೇರಿದಂತೆ ಇತರರು ಇದ್ದರು.
ಹೊಸದಿಲ್ಲಿ, ಎ.15: ದಿಲ್ಲಿ ಮಾಜಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಮಂಗಳವಾರ ದಿಲ್ಲಿ ಉಚ್ಚ ನ್ಯಾಯಾಲಯದಲ್ಲಿ ಹೆಚ್ಚುವರಿ ಅಫಿಡವಿಟ್ ಸಲ್ಲಿಸಿದ್ದಾರೆ. ಅಬಕಾರಿ ನೀತಿ ಪ್ರಕರಣದಲ್ಲಿ ತಮ್ಮ ಖುಲಾಸೆಯ ವಿರುದ್ಧ ಸಿಬಿಐ ಸಲ್ಲಿಸಿರುವ ಮೇಲ್ಮನವಿಯ ವಿಚಾರಣೆಯಿಂದ ನ್ಯಾ. ಸ್ವರಣಕಾಂತಾ ಶರ್ಮಾ ಅವರು ಹಿಂದೆ ಸರಿಯಬೇಕು ಎಂಬ ತನ್ನ ಮನವಿಯನ್ನು ಅಫಿಡವಿಟ್ನಲ್ಲಿ ಅವರು ಪುನರುಚ್ಚರಿಸಿದ್ದಾರೆ. ನ್ಯಾ. ಶರ್ಮಾ ಅವರ ಮಕ್ಕಳು ಕೇಂದ್ರದ ವಕೀಲರ ಪಟ್ಟಿಯಲ್ಲಿದ್ದಾರೆ ಮತ್ತು ಅವರಿಗೆ ಪ್ರಸ್ತುತ ಪ್ರಕರಣದಲ್ಲಿ ಸಿಬಿಐ ಪರವಾಗಿ ವಾದಿಸುತ್ತಿರುವ ಸಾಲಿಸಿಟರ್ ಜನರಲ್ (ಎಸ್ಜಿ) ತುಷಾರ ಮೆಹ್ತಾ ಅವರು ಪ್ರಕರಣಗಳನ್ನು ಹಂಚಿಕೆ ಮಾಡುತ್ತಾರೆ ಎಂದು ಕೇಜ್ರಿವಾಲ್ ಗಮನ ಸೆಳೆದಿದ್ದಾರೆ. ನ್ಯಾ. ಶರ್ಮಾ ಅವರ ಪುತ್ರ ಸರ್ವೋಚ್ಚ ನ್ಯಾಯಾಲಯದಲ್ಲಿ ಕೇಂದ್ರವನ್ನು ಪ್ರತಿನಿಧಿಸುವ ಗ್ರೂಪ್ ಎ ವಕೀಲರಾಗಿದ್ದಾರೆ. ಅವರ ಪುತ್ರಿಯೂ ಸರ್ವೋಚ್ಚ ನ್ಯಾಯಾಲಯದಲ್ಲಿ ಕೇಂದ್ರವನ್ನು ಪ್ರತಿನಿಧಿಸುವ ಗ್ರೂಪ್ ಸಿ ವಕೀಲರಾಗಿದ್ದಾರೆ, ಜೊತೆಗೆ ದಿಲ್ಲಿ ಉಚ್ಚ ನ್ಯಾಯಾಲಯದಲ್ಲಿಯೂ ಕೇಂದ್ರದ ವಕೀಲರಾಗಿದ್ದಾರೆ. ಅಬಕಾರಿ ನೀತಿ ಪ್ರಕರಣದಲ್ಲಿ ಸಿಬಿಐ ಪರವಾಗಿ ವಾದಿಸುತ್ತಿರುವ ಎಸ್ಜಿ ಅವರೇ ನ್ಯಾ. ಶರ್ಮಾ ಅವರ ಮಕ್ಕಳಿಗೆ ಪ್ರಕರಣಗಳನ್ನು ಹಂಚಿಕೆ ಮಾಡುತ್ತಿರುವುದರಿಂದ ಇದು ಹಿತಾಸಕ್ತಿ ಸಂಘರ್ಷಕ್ಕೆ ಕಾರಣವಾಗುತ್ತದೆ ಮತ್ತು ಇದು ಪ್ರಕರಣದ ಮೇಲೆ ನೇರವಾದ ಪರಿಣಾಮ ಬೀರುತ್ತದೆ ಎಂದು ಕೇಜ್ರಿವಾಲ್ ವಾದಿಸಿದ್ದಾರೆ. ನ್ಯಾ. ಶರ್ಮಾ ಅವರ ಪುತ್ರನಿಗೆ ಗಮನಾರ್ಹ ಪ್ರಮಾಣದಲ್ಲಿ ಕೇಂದ್ರದ ಕಾನೂನು ಕೆಲಸಗಳನ್ನು ವಹಿಸಲಾಗಿದೆ ಎಂದು ಅಫಿಡವಿಟ್ ನಲ್ಲಿ ಎತ್ತಿ ತೋರಿಸಿರುವ ಕೇಜ್ರಿವಾಲ್, ಅವರಿಗೆ ಕೇಂದ್ರದಿಂದ 2023ರಲ್ಲಿ 2,487, 2024ರಲ್ಲಿ 1,784 ಮತ್ತು 2025ರಲ್ಲಿ 1,633 ಪ್ರಕರಣಗಳನ್ನು ಹಂಚಿಕೆ ಮಾಡಿರುವುದನ್ನು ಉಲ್ಲೇಖಿಸಿದ್ದಾರೆ. ತನ್ನ ಅಫಿಡವಿಟ್ ನಲ್ಲಿ ನ್ಯಾಯಾಂಗ ಪ್ರಕ್ರಿಯೆಯ ಬಗ್ಗೆ ಅಸಮಾಧಾನವನ್ನೂ ವ್ಯಕ್ತಪಡಿಸಿರುವ ಕೇಜ್ರಿವಾಲ್, ಮೇಲ್ಮನವಿ ವಿಚಾರಣೆಯಿಂದ ನ್ಯಾ. ಶರ್ಮಾ ಅವರನ್ನು ಹಿಂದೆಗೆದುಕೊಳ್ಳುವಂತೆ ಕೋರಿ ತಾನು ಸಲ್ಲಿಸಿರುವ ಅರ್ಜಿಯು ಪರಿಗಣನೆಗೆ ಬಾಕಿ ಇರುವಾಗಲೇ ಉಚ್ಚ ನ್ಯಾಯಾಲಯವು ಮುಖ್ಯ ಪ್ರಕರಣದಲ್ಲಿ ಕೆಲವು ಪರಿಣಾಮಕಾರಿ ಆದೇಶಗಳನ್ನು ನೀಡಿರುವುದು ಸರಿಯಲ್ಲ ಮತ್ತು ಇದು ಪಕ್ಷಪಾತದ ಸಂಶಯವನ್ನು ಇನ್ನಷ್ಟು ಹೆಚ್ಚಿಸಿದೆ ಎಂದು ಹೇಳಿದ್ದಾರೆ. ಫೆ.27ರಂದು ವಿಚಾರಣಾ ನ್ಯಾಯಾಲಯವು ಕೇಜ್ರಿವಾಲ್, ಮನೀಷ ಸಿಸೋದಿಯಾ ಮತ್ತು ಇತರ 21 ಜನರನ್ನು ಅಬಕಾರಿ ನೀತಿ ಪ್ರಕರಣದಿಂದ ಖುಲಾಸೆಗೊಳಿಸಿತ್ತು. ಇದನ್ನು ಪ್ರಶ್ನಿಸಿ ಸಿಬಿಐ ಉಚ್ಚ ನ್ಯಾಯಾಲಯದ ಮೆಟ್ಟಿಲೇರಿದೆ. ಮೇಲ್ಮನವಿಯ ವಿಚಾರಣೆಯನ್ನು ನ್ಯಾ. ಶರ್ಮಾ ಅವರ ಬದಲಿಗೆ ಬೇರೆ ನ್ಯಾಯಾಧೀಶರಿಗೆ ವಹಿಸಬೇಕು ಎಂದು ಕೋರಿ ಕೇಜ್ರಿವಾಲ್ ಸಲ್ಲಿಸಿದ್ದ ಅರ್ಜಿಯನ್ನು ಮಾ.13ರಂದು ಮುಖ್ಯ ನ್ಯಾಯಾಧೀಶ ಡಿ.ಕೆ. ಉಪಾಧ್ಯಾಯ ಅವರು ತಿರಸ್ಕರಿಸಿದ್ದರು. ಈ ಹಿನ್ನೆಲೆಯಲ್ಲಿ ಕೇಜ್ರಿವಾಲ್, ಸಿಸೋದಿಯಾ ಮತ್ತು ಇತರರು ನ್ಯಾ. ಶರ್ಮಾ ಅವರನ್ನು ವಿಚಾರಣೆಯಿಂದ ಹಿಂದೆಗೆದುಕೊಳ್ಳುವಂತೆ ಕೋರಿ ಅರ್ಜಿಗಳನ್ನು ಸಲ್ಲಿಸಿದ್ದಾರೆ. ಸೋಮವಾರ ನಾಲ್ಕು ಗಂಟೆಗೂ ಅಧಿಕ ಸಮಯ ವಿಚಾರಣೆ ನಡೆಸಿದ ಬಳಿಕ ನ್ಯಾ. ಶರ್ಮಾ ಅವರು ಈ ಅರ್ಜಿಗಳ ಕುರಿತು ತಮ್ಮ ಆದೇಶವನ್ನು ಕಾಯ್ದಿರಿಸಿದ್ದಾರೆ.
ಭಾರತೀಯ ಉದ್ಯಮಶೀಲತಾ ಅಭಿವೃದ್ಧಿ ಸಂಸ್ಥೆಯಲ್ಲಿ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ
ಬೆಂಗಳೂರು ನಗರದ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಒಂದಾಗಿರುವ ಭಾರತೀಯ ಉದ್ಯಮಶೀಲತಾ ಅಭಿವೃದ್ಧಿ ಸಂಸ್ಥೆ (EDII) ಖಾಲಿ ಇರುವ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಪ್ರಮುಖ ದಿನಾಂಕಗಳು ಅಧಿಸೂಚನೆ ಹೊರಬಿದ್ದ ದಿನಾಂಕ: 09 ಏಪ್ರಿಲ್ 2026 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 19 ಏಪ್ರಿಲ್ 2026 ಒಟ್ಟು ಹುದ್ದೆಗಳು 02 ಹುದ್ದೆಗಳ ವಿವರ ಬೆಂಗಳೂರು ಕಚೇರಿಯಲ್ಲಿ ಪ್ರಾಜೆಕ್ಟ್ ಆಫೀಸರ್ ಮತ್ತು ಪ್ರಾಜೆಕ್ಟ್ ಕೋಆರ್ಡಿನೇಟರ್ ಹುದ್ದೆಗಳು ಲಭ್ಯವಿವೆ. ಅರ್ಜಿ ಸಲ್ಲಿಸಲು ಯಾವುದೇ ಶುಲ್ಕ ಇರುವುದಿಲ್ಲ. ಶೈಕ್ಷಣಿಕ ಅರ್ಹತೆ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ, ಸ್ನಾತಕೋತ್ತರ ಪದವಿ ಅಥವಾ ಡಿಪ್ಲೊಮಾ ಪೂರ್ಣಗೊಳಿಸಿರಬೇಕು. ಆಯ್ಕೆ ಪ್ರಕ್ರಿಯೆ ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಅರ್ಜಿ ಸಲ್ಲಿಸುವುದು ಹೇಗೆ? 1. ಮೊದಲಿಗೆ ಅಧಿಕೃತ ವೆಬ್ಸೈಟ್ ediindia.org ಗೆ ಭೇಟಿ ನೀಡಿ ಅಧಿಸೂಚನೆಯನ್ನು ಸರಿಯಾಗಿ ಓದಿಕೊಳ್ಳಿ. 2. ನಿಮ್ಮ ಇತ್ತೀಚಿನ ಅಪ್ಡೇಟ್ ಆಗಿರುವ ರೆಸ್ಯುಮ್ (ವೈಯಕ್ತಿಕ ವಿವರಗಳು) ಮತ್ತು ಅಗತ್ಯ ದಾಖಲೆಗಳನ್ನು ಸಿದ್ಧಪಡಿಸಿಕೊಳ್ಳಿ. 3. ನಿಮ್ಮ ಅರ್ಜಿಯನ್ನು hrsro@ediindia.org ಎಂಬ ಇ-ಮೇಲ್ ವಿಳಾಸಕ್ಕೆ ಕಳುಹಿಸಬೇಕು. 4. ಇ-ಮೇಲ್ ಕಳುಹಿಸುವಾಗ ಸಬ್ಜೆಕ್ಟ್ ಲೈನ್ ನಲ್ಲಿ ನೀವು ಅರ್ಜಿ ಸಲ್ಲಿಸುತ್ತಿರುವ ಹುದ್ದೆಯ ಹೆಸರನ್ನು ತಪ್ಪದೇ ಉಲ್ಲೇಖಿಸಬೇಕು. ವೇತನ ತಿಂಗಳಿಗೆ 40,000 – 55,000 ರೂ. ವೇತನ ನೀಡಲಾಗುತ್ತದೆ.
ಡಿಸಿಎಂ ಪವನ್ ಕಲ್ಯಾಣ್ ಕುರಿತು ಹಾಸ್ಯ| ಆಂಧ್ರ ಪೊಲೀಸರಿಂದ UPಯಲ್ಲಿ ಸ್ಟ್ಯಾಂಡ್ಅಪ್ ಕಾಮಿಡಿಯನ್ ಬಂಧನ
ಹೈದರಾಬಾದ್: ಆಂಧ್ರಪ್ರದೇಶ ಉಪಮುಖ್ಯಮಂತ್ರಿ ಹಾಗೂ ಟಾಲಿವುಡ್ ನಟ ಪವನ್ ಕಲ್ಯಾಣ್ ಕುರಿತು ಹಾಸ್ಯಮಾಡಿದ ಆರೋಪದಲ್ಲಿ ತೆಲುಗು ಸ್ಟ್ಯಾಂಡ್ಅಪ್ ಕಾಮಿಡಿಯನ್ ಅನುದೀಪ್ ಕಟಿಕಲಾ ಅವರನ್ನು ಆಂಧ್ರಪ್ರದೇಶ ಪೊಲೀಸರು ಬಂಧಿಸಿದ್ದಾರೆ. ಎ.14ರಂದು ಉತ್ತರ ಪ್ರದೇಶದ ಪ್ರಯಾಗರಾಜ್ ನಲ್ಲಿ ಅವರನ್ನು ಬಂಧಿಸಲಾಗಿದೆ. ಕಾಕಿನಾಡ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಥಮ ಮಾಹಿತಿ ವರದಿ (FIR) ಆಧಾರವಾಗಿ ಈ ಕ್ರಮ ಕೈಗೊಳ್ಳಲಾಗಿದೆ. ಜನಸೇನಾ ಪಕ್ಷದ ಕಾರ್ಯಕರ್ತ ಬಡೇ ವೆಂಕಟ ಅವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿತ್ತು. ಬಂಧನದ ವೇಳೆ ಕಟಿಕಲಾ ಅವರು ಪ್ರಯಾಗರಾಜ್ ನಲ್ಲಿ ತಮ್ಮ ಪೋಷಕರನ್ನು ಭೇಟಿ ಮಾಡಲು ತೆರಳಿದ್ದರೆಂದು ಕುಟುಂಬದವರು ತಿಳಿಸಿದ್ದಾರೆ. ಈ ತಿಂಗಳ ಆರಂಭದಲ್ಲಿ ಯೂಟ್ಯೂಬ್ ನಲ್ಲಿ ಅಪ್ಲೋಡ್ ಮಾಡಿದ ಹಾಸ್ಯ ಪ್ರದರ್ಶನದ ನಂತರ ವಿವಾದದ ಕಿಡಿ ಹತ್ತಿಕೊಂಡಿತು. ವಿಡಿಯೋದಲ್ಲಿ, ಕಾಮೇಡಿಯನ್ ಅನುದೀಪ್ ಕಟಿಕಲಾ ಅವರು ರಾಮ್ ಚರಣ್(ಮೆಘಾ ಸ್ಟಾರ್ ಚಿರಂಜೀವಿ ಮಗ) ಅವರನ್ನು “ಸ್ತ್ರೀವಾದಿ” ಎಂದು ಉಲ್ಲೇಖಿಸಿ, ಅವರ ಶ್ರೀಮಂತ ಪತ್ನಿ ಉಪಾಸನಾ ಕುರಿತಾಗಿ ಅಸುರಕ್ಷಿತೆ ಇರುವಂತೆ ವ್ಯಂಗ್ಯವಾಗಿ ಹೇಳಿದ್ದರು ಎನ್ನಲಾಗಿದೆ. ಅಲ್ಲದೆ, ವಿಚ್ಛೇದನದ ವಿಷಯದಲ್ಲಿ ಪವನ್ ಕಲ್ಯಾಣ್ ಅವರನ್ನು ಉದಾಹರಣೆಯಾಗಿ ಉಲ್ಲೇಖಿಸಿ, ಅವರ ಮಾಜಿ ಪತ್ನಿಯರು ಅವರ ವಿರುದ್ಧ ದೌರ್ಜನ್ಯ ಆರೋಪ ಮಾಡಿಲ್ಲವೆಂದು ಹೇಳುವ ಮೂಲಕ ಹಾಸ್ಯಪ್ರಯೋಗ ಮಾಡಿದ್ದರು. ಬಂಧನಕ್ಕೂ ಮುನ್ನ, ಕಟಿಕಲಾ ‘The News Minute’ಗೆ ನೀಡಿದ ಹೇಳಿಕೆಯಲ್ಲಿ, ತಮ್ಮ ಹಾಸ್ಯದಲ್ಲಿ ಯಾರನ್ನೂ ಅವಮಾನಿಸುವ ಉದ್ದೇಶ ಇರಲಿಲ್ಲ. ವಿಚ್ಛೇದನವನ್ನು ಸಾಮಾನ್ಯೀಕರಿಸುವ ಸಾಮಾಜಿಕ ದೃಷ್ಟಿಕೋನವನ್ನು ಉತ್ತೇಜಿಸುವ ಪ್ರಯತ್ನ ಮಾತ್ರವಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಟೀಕೆಗಳು ಹೆಚ್ಚಾದ ಹಿನ್ನೆಲೆಯಲ್ಲಿ ಕಟಿಕಲಾ ಅವರು ಸಾರ್ವಜನಿಕವಾಗಿ ಕ್ಷಮೆಯಾಚಿಸಿದ್ದರು ಎಂದು ಕುಟುಂಬದವರು ಹೇಳಿದ್ದಾರೆ. ಕಟಿಕಲಾ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (ಬಿಎನ್ಎಸ್) ಸೆಕ್ಷನ್ಗಳು 356(2) (ಮಾನನಷ್ಟ), 353(2) (ಸಾರ್ವಜನಿಕ ಅಶಾಂತಿ ಉಂಟುಮಾಡುವ ಹೇಳಿಕೆ) ಹಾಗೂ 79 (ಮಹಿಳೆಯ ಗೌರವಕ್ಕೆ ಧಕ್ಕೆ ಉಂಟುಮಾಡುವ ಉದ್ದೇಶ) ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಜೊತೆಗೆ ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 67 ಅಡಿಯಲ್ಲೂ ಆರೋಪ ಹೊರಿಸಲಾಗಿದೆ. ಕಟಿಕಲಾ ಅವರ ಕುಟುಂಬದವರ ಹೇಳಿಕೆಯ ಪ್ರಕಾರ, ಪೊಲೀಸರು ಅವರ ಮೊಬೈಲ್ ಸಂಖ್ಯೆಯ ಮೂಲಕ ಅವರನ್ನು ಪತ್ತೆಹಚ್ಚಿದ್ದಾರೆ. “ಅವರ ತಂದೆ ಸರ್ಕಾರಿ ಅಧಿಕಾರಿಯಾಗಿರುವ ಹಿನ್ನೆಲೆಯಲ್ಲಿ, ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಲಾಗಿತ್ತು. ಬಳಿಕ ಅವರು ಎಫ್ಐಆರ್ ನ ವಿವರಗಳನ್ನು ಹಂಚಿಕೊಂಡರು. ಕಾಕಿನಾಡದ ಸೂಪರಿಂಟೆಂಡೆಂಟ್ ಪ್ರೋಟೋಕಾಲ್ ಅನುಸರಿಸಲಾಗುತ್ತಿದೆ ಎಂದು ತಿಳಿಸಿ, ಪ್ರಕರಣಕ್ಕೆ ಸಂಬಂಧಿಸಿದಂತೆ ಅವರು ವೈಯಕ್ತಿಕವಾಗಿ ಹಾಜರಾಗಬೇಕು ಎಂದು ಸೂಚಿಸಿದರು,” ಎಂದು ಕುಟುಂಬದವರು ತಿಳಿಸಿದ್ದಾರೆ. “ಅನುದೀಪ್ ತೆಲುಗಿನಲ್ಲಿ ಹಾಸ್ಯ ಪ್ರದರ್ಶನ ನೀಡುತ್ತಾ, ನಟರನ್ನು ಇಂಗ್ಲಿಷ್ ನಲ್ಲಿ ಪ್ರಶಂಸಿಸಿರುವ ಹಿನ್ನೆಲೆಯಲ್ಲಿ, ವೀಡಿಯೊವನ್ನು ಸಮಗ್ರ ಸಂದರ್ಭದೊಂದಿಗೆ ಪರಿಗಣಿಸಲಾಗಿಲ್ಲವೆಂದು ಕಾಣಿಸುತ್ತದೆ. ಪೊಲೀಸರು ವೀಡಿಯೊದ ಆಯ್ದ ಭಾಗವನ್ನಷ್ಟೇ ಆಧಾರವಾಗಿಸಿಕೊಂಡಿದ್ದಾರೆ. ಅವರು ಕ್ಷಮೆಯಾಚಿಸಿದ್ದರೂ ಸಹ, ಕ್ರಮವು ಅನಗತ್ಯ ಕಾನೂನು ಕ್ರಮ ಕೈಗೊಳ್ಳಲಾಗಿದೆ,” ಎಂದು ಕುಟುಂಬದ ಸದಸ್ಯರು ತಿಳಿಸಿದ್ದಾರೆ. ಅನುದೀಪ್ ಕಟಿಕಲಾ ಅವರು ಐಐಟಿ ಪದವೀಧರರಾಗಿದ್ದು, ಹೈದರಾಬಾದ್ ನಲ್ಲಿ ತೆಲುಗು ಸ್ಟ್ಯಾಂಡ್ಅಪ್ ಕಾಮಿಡಿ ವಲಯವನ್ನು ಬೆಳೆಸಿದವರಲ್ಲಿ ಒಬ್ಬರಾಗಿದ್ದಾರೆ. ಅವರು ‘ಸಿಲ್ಲಿ ಸೌತ್ ಕಾಮಿಡಿ’ ತಂಡದ ಸ್ಥಾಪಕರಾಗಿದ್ದಾರೆ.
CBSE 10ನೇ ತರಗತಿ ಫಲಿತಾಂಶ 2026 ಪ್ರಕಟ: ನಿಮ್ಮ ಅಂಕಗಳನ್ನು ಕ್ಷಣಾರ್ಧದಲ್ಲಿ ಇಲ್ಲಿ ಚೆಕ್ ಮಾಡಿ
ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ (CBSE) ತನ್ನ ಬಹುನಿರೀಕ್ಷಿತ 2026ನೇ ಸಾಲಿನ 10ನೇ ತರಗತಿಯ ಬೋರ್ಡ್ ಪರೀಕ್ಷೆಯ ಫಲಿತಾಂಶವನ್ನು ಇಂದು (ಏಪ್ರಿಲ್ 15) ಅಧಿಕೃತವಾಗಿ ಪ್ರಕಟಿಸಿದೆ. ಈ ವರ್ಷ ಸುಮಾರು 25 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಇದೀಗ ತಮ್ಮ ಫಲಿತಾಂಶವನ್ನು ಅಧಿಕೃತ ವೆಬ್ಸೈಟ್ಗಳು ಹಾಗೂ ಸರ್ಕಾರಿ ಅಪ್ಲಿಕೇಶನ್ಗಳ ಮೂಲಕ ಸುಲಭವಾಗಿ ವೀಕ್ಷಿಸಬಹುದಾಗಿದೆ. ಈ ವರ್ಷ
CBSE Result-2026| ಸಿಬಿಎಸ್ಇ 10ನೇ ತರಗತಿ ಫಲಿತಾಂಶ ಪ್ರಕಟ
ಹೊಸದಿಲ್ಲಿ: ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ (CBSE) 10ನೇ ತರಗತಿ ಫಲಿತಾಂಶವನ್ನು ಪ್ರಕಟಿಸಿದೆ. ವಿದ್ಯಾರ್ಥಿಗಳು cbse.gov.in ಮತ್ತು results.cbse.nic.in ಮೂಲಕ ಫಲಿತಾಂಶವನ್ನು ಪರಿಶೀಲಿಸಬಹುದಾಗಿದೆ. 2026ರ CBSE 10ನೇ ತರಗತಿ ಪರೀಕ್ಷೆಗಳನ್ನು ಫೆಬ್ರವರಿ 17 ಮತ್ತು ಮಾರ್ಚ್ 11 ರ ನಡುವೆ ನಡೆಸಲಾಗಿತ್ತು. ಪರೀಕ್ಷೆಗೆ 25 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಗಳಿಗೆ ಹಾಜರಾಗಿದ್ದರು.
Ahmed Shehzad On PSL-IPL Comparison- ಇತ್ತೀಚಿನ ವರ್ಷಗಳಲ್ಲಿ ಐಪಿಎಲ್ ಮತ್ತು ಪಿಎಸ್ಎಲ್ ನಡುವೆ ಬಲವಂತದ ಹೋಲಿಕೆ ಮಾಡುವುದು ಪಾಕಿಸ್ತಾನಿ ಮಾಧ್ಯಮಗಳಿಗೆ ಚಟ ಆಗಿಬಿಟ್ಟಿದೆ. ಈ ಕುರಿತು ಪಾಕ್ ಬ್ಯಾಟರ್ ಅಹ್ಮದ್ ಶೆಹಜಾದ್ ಪಿಸಿಬಿ ಮತ್ತು ಮಾಧ್ಯಮಗಳ ನಡೆಯನ್ನು ಟೀಕಿಸಿದ್ದಾರೆ. ಐಪಿಎಲ್ನಲ್ಲಿ ಅವಕಾಶ ಸಿಗದ ಅಥವಾ ನಿವೃತ್ತರಾದ ಆಟಗಾರರು ಮಾತ್ರ ಪಿಎಸ್ಎಲ್ಗೆ ಬರುತ್ತಾರೆ, ಸಕ್ರಿಯ ಆಟಗಾರರ ಮೊದಲ ಆಯ್ಕೆ ಯಾವಾಗಲೂ ಐಪಿಎಲ್ ಆಗಿರುತ್ತದೆ ಎಂದು ಅವರು ವಾಸ್ತವ ಬಿಚ್ಚಿಟ್ಟಿದ್ದಾರೆ. ಜೊತೆಗೆ ಪಿಎಸ್ಎಲ್ ತೊರೆದು ಐಪಿಎಲ್ ತೆರಳುವವರನ್ನು ನೀವು ನಿಷೇಧಿಸುತ್ತೀರಿ ಎಂದಾದಲ್ಲಿ ಎಷ್ಟು ಮಂದಿಯನ್ನು ನಿಷೇಧಿಸುತ್ತೀರಿ ಎಂದು ಪ್ರಶ್ನಿಸಿದ್ದಾರೆ.
ಸಿಬಿಎಸ್ಇ 10ನೇ ತರಗತಿ ಫಲಿತಾಂಶ ಪ್ರಕಟ; 25 ಲಕ್ಷ ವಿದ್ಯಾರ್ಥಿಗಳು ರಿಸಲ್ಟ್ ನೋಡುವುದು ಹೇಗೆ?
ಮಹತ್ವದ ಬೆಳವಣಿಗೆಯೊಂದರಲ್ಲಿ ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ (ಸಿಬಿಎಸ್ಸಿ) 10ನೇ ತರಗತಿ ಫಲಿತಾಂಶ ಪ್ರಕಟಿಸಿದ್ದು, ದೇಶಾದ್ಯಂತ ಪರೀಕ್ಷೆ ಬರೆದ ಸಮಾರು 25 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು cbse.gov.in ಸೇರಿದಂತೆ ಇನ್ನಿತರ ವೆಬ್ಸೈಟ್ಗಳ ಮೂಲಕ ತಮ್ಮ ಫಲಿತಾಂಶವನ್ನು ನೋಡುತ್ತಿದ್ದಾರೆ. ಈ ಬಾರಿ ಡಿಜಿ ಲಾಕರ್ನಲ್ಲೂ ಫಲಿತಾಂಶವನ್ನು ನೋಡಬಹುದಾಗಿದೆ.
ಸ್ಮಾರ್ಟ್ ಫೋನ್ ಗಳಲ್ಲಿರುವ ಆ್ಯಕ್ಸೆಸೆಬಿಲಿಟಿ ಫೀಚರ್ ಗಳ ಬಗ್ಗೆ ಗೊತ್ತೆ?
ಸ್ಕ್ರೀನ್ ರೀಡರ್ಸ್ ಮತ್ತು ಹೈ ಕಾಂಟ್ರಾಸ್ಟ್ ಡಿಸ್ಪ್ಲೇ ಮೋಡ್ ಗಳನ್ನು ಕುರುಡರು ಮತ್ತು ಅಲ್ಪ ದೃಷ್ಟಿಶಕ್ತಿ ಇರುವವರಿಗಾಗಿ ಡಿಜಿಟಲ್ ಕಂಟೆಂಟ್ ಬಳಕೆಗೆ ತಯಾರಿಸಲಾಗಿದ್ದರೂ, ಯಾರೂ ಬೇಕಾದರೂ ಬಳಸಬಹುದು. ತಂತ್ರಜ್ಞಾನಗಳನ್ನು ಹೇಗೆ ವಿನ್ಯಾಸಗೊಳಿಸಲಾಗಿದೆ ಎನ್ನುವುದರ ಮೇಲೆ ಅವು ಎಷ್ಟು ಮಂದಿಗೆ ತಲುಪುತ್ತವೆ ಎಂಬುದು ನಿರ್ಧಾರವಾಗುತ್ತದೆ. ಹೊಸ ತಲೆಮಾರಿಗೆ ಸರಾಗವಾಗಿರುವ ಬಳಕೆ ಹಳೆಯ ತಲೆಮಾರಿಗೆ ಅಷ್ಟಾಗಿ ಸರಳವಾಗಿರದೆ ಇರಬಹುದು. ಆದರೆ ಇತ್ತೀಚೆಗೆ ಧ್ವನಿ ಸಹಾಯಕಗಳು, ಭಾಷೆಯಿಂದ ಪಠ್ಯ (Speech-to-Text) ಸಾಫ್ಟ್ವೇರ್, ಕ್ಯಾಪ್ಷನ್ ಗಳು ಮತ್ತು ಲೈವ್ ಟ್ರಾನ್ಸ್ಕ್ರಿಪ್ಷನ್ ಗಳನ್ನು ಕಿವುಡರು ಮತ್ತು ಕೇಳಿಸಿಕೊಳ್ಳಲಾಗದ ವ್ಯಕ್ತಿಗಳಿಗಾಗಿ ರೂಪಿಸಲಾಗಿದೆ. ಕಳೆದ ಕೆಲವು ವರ್ಷಗಳಿಂದ ಸರ್ಕಾರೇತರ ಸಂಘಟನೆಗಳು, ಚಿಂತಕರು ಮತ್ತು ಸರ್ಕಾರಗಳ ಒತ್ತಡದಿಂದ ತಂತ್ರಜ್ಞಾನ ಕಂಪನಿಗಳು ಎಲ್ಲರಿಗೂ ಪ್ರವೇಶ ಮತ್ತು ಒಳಗೊಳ್ಳುವಿಕೆಯ ಆಧಾರದ ಮೇಲೆ ತಮ್ಮ ಉತ್ಪನ್ನಗಳನ್ನು ವಿನ್ಯಾಸಗೊಳಿಸಬೇಕಾದ ಪರಿಸ್ಥಿತಿಗೆ ಬಂದಿವೆ. ಕಟ್ಟುನಿಟ್ಟಾದ ನಿಯಮಗಳು ಮತ್ತು ಕಾನೂನು ಒತ್ತಡಗಳೂ ಇದಕ್ಕೆ ಕಾರಣವಾಗಿವೆ. ಇಂತಹ ಒಳಗೊಂಡ ವಿನ್ಯಾಸಗಳು ವಿಕಲಚೇತನರ ಜೊತೆಗೆ ಹಿರಿಯ ನಾಗರಿಕರಿಗೂ ಉತ್ಪನ್ನ ಬಳಕೆಯನ್ನು ಸುಧಾರಿಸುತ್ತಿವೆ. ಹೀಗೆ ಎಲ್ಲರಿಗೂ ಪ್ರವೇಶ ಸಿಗುವಂತೆ ಮಾಡುವ ವಿನ್ಯಾಸಗಳು ಮುಖ್ಯವಾಹಿನಿಯ ನವೀನತೆಗೆ ಆಧಾರವಾಗಿವೆ. ಐಫೋನ್, ಗೂಗಲ್ ಪಿಕ್ಸೆಲ್, ಆಂಡ್ರಾಯ್ಡ್ ಸ್ಮಾರ್ಟ್ ಫೋನ್ ಗಳು, ಮ್ಯಾಕ್ಗಳು ಮತ್ತು ವಿಂಡೋಸ್ ಪಿಸಿಗಳಂತಹ ಆಧುನಿಕ ಸಾಧನಗಳಲ್ಲಿ ಅಂತರ್ನಿರ್ಮಿತ ಪ್ರವೇಶ ವೈಶಿಷ್ಟ್ಯಗಳು ಲಭ್ಯವಿವೆ. ಕೆಲವು ಫೀಚರ್ಗಳು ವಿಕಲಚೇತನರಿಗಾಗಿ ವಿನ್ಯಾಸಗೊಳಿಸಲ್ಪಟ್ಟಿದ್ದರೂ, ಅವನ್ನು ಎಲ್ಲರೂ ಬಳಸುತ್ತಿದ್ದಾರೆ. ಸ್ಮಾರ್ಟ್ಫೋನ್ ಗಳು ಮತ್ತು ಲ್ಯಾಪ್ ಟಾಪ್ ಗಳಲ್ಲಿ ಇರುವ ಆ್ಯಕ್ಸೆಸೆಬಿಲಿಟಿ ಟೂಲ್ಗಳನ್ನು ಯಾರು ಬೇಕಾದರೂ ಬಳಸಬಹುದು. ಅವು ಹಿರಿಯ ನಾಗರಿಕರಿಗೆ ವಿಶೇಷವಾಗಿ ಉಪಯುಕ್ತ. ನಿಮ್ಮ ಮನೆಯಲ್ಲಿ ಹಿರಿಯರು ಇದ್ದರೆ, ಈ ಫೀಚರ್ ಗಳನ್ನು ಅವರಿಗೆ ಕಲಿಸುವುದು ಒಳಿತು. ►ಐಫೋನ್ ನಲ್ಲಿದೆ ಸೀನಿಯರ್ ಮೋಡ್ ಐಫೋನ್ ನಲ್ಲಿರುವ ‘ಸೀನಿಯರ್ ಮೋಡ್’ ಬಗ್ಗೆ ನೀವು ಕೇಳಿರಲಾರಿರಿ. ಕೆಲವು ವರ್ಷಗಳ ಹಿಂದೆ ಆ್ಯಪಲ್ ‘ಅಸಿಸ್ಟಿವ್ ಆ್ಯಕ್ಸೆಸ್’ ಅನ್ನು ಪರಿಚಯಿಸಿತು. ಇದು ಸರಳೀಕೃತ ಬಳಕೆದಾರ ಇಂಟರ್ಫೇಸ್ ಆಗಿದೆ. ಇದನ್ನು ಮೂಲತಃ ಅರಿವಿನ ಸಮಸ್ಯೆ ಅಥವಾ ಹಸ್ತಚಾಲಿತ ದಕ್ಷತೆಯ ಸಮಸ್ಯೆ ಇರುವವರಿಗಾಗಿ ವಿನ್ಯಾಸಗೊಳಿಸಿದ್ದರೂ, ಹಿರಿಯರಿಗೆ ಸಹ ಬಹಳ ಉಪಯುಕ್ತವಾಗಿದೆ. ಅಸಿಸ್ಟಿವ್ ಆ್ಯಕ್ಸೆಸ್ ನಲ್ಲಿ ಹೋಮ್ ಸ್ಕ್ರೀನ್ ಅನ್ನು ಸರಳಗೊಳಿಸಬಹುದು. ಅಪ್ಲಿಕೇಶನ್ ಗಳನ್ನು ಪಟ್ಟಿಯ (List) ಅಥವಾ ಟೈಲ್ (Tile) ರೂಪದಲ್ಲಿ ಪ್ರದರ್ಶಿಸಬಹುದು. ಕರೆಗಳು, ಸಂದೇಶಗಳು, ಕ್ಯಾಮೆರಾ, ಸಂಗೀತ ಮತ್ತು ಫೋಟೋಗಳು ಇದಕ್ಕಾಗಿ ಆಪ್ಟಿಮೈಸ್ ಮಾಡಲಾಗಿದೆ. ಈ ಮೋಡ್ನ ಪ್ರಮುಖ ವಿಶೇಷತೆ ಎಂದರೆ ಸ್ವೈಪ್ ಗೆಸ್ಚರ್ ಗಳನ್ನು ಮಿತಿಗೊಳಿಸುವುದು. ಇದರಿಂದ ಅನಾಯಾಸವಾಗಿ ಬೇರೆ ಮೆನುಗಳಿಗೆ ಹೋಗುವುದನ್ನು ತಪ್ಪಿಸಬಹುದು. ಈ ಫೀಚರ್ ಬಳಸಲು iOS 17 ಅಥವಾ ನಂತರದ ಸಾಫ್ಟ್ವೇರ್ ಅಗತ್ಯವಿದೆ. ಅಸಿಸ್ಟಿವ್ ಆ್ಯಕ್ಸೆಸ್ ತೆರೆಯಲು: ಸೆಟ್ಟಿಂಗ್ಸ್ > ಆ್ಯಕ್ಸೆಸಿಬಿಲಿಟಿ > ಅಸಿಸ್ಟಿವ್ ಆ್ಯಕ್ಸೆಸ್ಗೆ ಹೋಗಿ. ನಂತರ ‘ಸೆಟಪ್ ಅಸಿಸ್ಟಿವ್ ಆ್ಯಕ್ಸೆಸ್’ ಆಯ್ಕೆ ಮಾಡಿ, ಮುಂದುವರಿಸಿ. ಆ್ಯಪ್ ಲೇಔಟ್ಗೆ ಸಾಲುಗಳು (ಪಟ್ಟಿ ವೀಕ್ಷಣೆ) ಅಥವಾ ಗ್ರಿಡ್ (ದೊಡ್ಡ ಐಕಾನ್ ಗಳು) ಆಯ್ಕೆ ಮಾಡಿ. ಅಗತ್ಯವಿರುವ ಆ್ಯಪ್ ಗಳನ್ನು (ಕರೆಗಳು, ಕ್ಯಾಮೆರಾ, ಫೋಟೋಗಳು, ಸಂದೇಶಗಳು, ಸಂಗೀತ) ಕಸ್ಟಮೈಸ್ ಮಾಡಿ. ಪಾಸ್ಕೋಡ್ ಸೆಟ್ ಮಾಡಿದ ಬಳಿಕ ಬಳಸಲು ಪ್ರಾರಂಭಿಸಬಹುದು. ಈ ಮೋಡ್ ನಿಂದ ಹೊರಬರಲು ಸೈಡ್ ಬಟನ್ (ಅಥವಾ ಹಳೆಯ ಮಾದರಿಯಲ್ಲಿ ಹೋಮ್ ಬಟನ್) ಅನ್ನು ಮೂರು ಬಾರಿ ಕ್ಲಿಕ್ ಮಾಡಿ. ನಂತರ ‘Exit Assistive Access’ ಆಯ್ಕೆ ಮಾಡಿ ಮತ್ತು ಪಾಸ್ಕೋಡ್ ನಮೂದಿಸಿ. ►ವೀಡಿಯೋ ಕರೆಗಳ ಸ್ಪೀಚ್ ಟು ಟೆಕ್ಸ್ಟ್ ಗೂಗಲ್ ಪಿಕ್ಸೆಲ್ ಬಳಕೆದಾರರಿಗೆ ಸರಳ ವೀಕ್ಷಣೆ (Simple View) ಎಂಬ ವೈಶಿಷ್ಟ್ಯವಿದೆ. ಇದು ಪಠ್ಯ ಮತ್ತು ಐಕಾನ್ ಗಾತ್ರಗಳನ್ನು ಹೆಚ್ಚಿಸಿ, ನ್ಯಾವಿಗೇಶನ್ ಸುಲಭಗೊಳಿಸುತ್ತದೆ. ವಯಸ್ಸಾದವರು, ವಿಶೇಷವಾಗಿ ಕಿವುಡರು ಮತ್ತು ಶ್ರವಣ ದೋಷವುಳ್ಳವರಿಗೆ ವೀಡಿಯೋ ಕರೆಗಳು ಕಷ್ಟವಾಗಬಹುದು. ಆದರೆ ಲೈವ್ ಕ್ಯಾಪ್ಷನ್ ಗಳನ್ನು ಆನ್ ಮಾಡಿದರೆ ವೀಡಿಯೋ ಕರೆಗಳು ಸುಲಭವಾಗುತ್ತವೆ. ಐಫೋನ್ ನಲ್ಲಿ ಲೈವ್ ಕ್ಯಾಪ್ಷನ್ ಅಂತರ್ನಿರ್ಮಿತ ಫೀಚರ್ ಆಗಿದೆ. ಇದು ಆಡಿಯೊ ಜೊತೆಗೇ ಪಠ್ಯವನ್ನು ತೋರಿಸುತ್ತದೆ. ಫೋನ್ ಕರೆಗಳು, ಫೇಸ್ ಟೈಮ್, ಯೂಟ್ಯೂಬ್ ವೀಡಿಯೋಗಳು ಸೇರಿದಂತೆ ವಿವಿಧ ಧ್ವನಿಗಳನ್ನು ಟ್ರಾನ್ಸ್ಕ್ರೈಬ್ ಮಾಡುತ್ತದೆ. ಇದನ್ನು ಸಕ್ರಿಯಗೊಳಿಸಲು: ಸೆಟ್ಟಿಂಗ್ಸ್ > ಆ್ಯಕ್ಸೆಸಿಬಿಲಿಟಿ > ಲೈವ್ ಕ್ಯಾಪ್ಷನ್ ಗೆ ಹೋಗಿ. ಒಮ್ಮೆ ಆನ್ ಮಾಡಿದ ಬಳಿಕ, ಯಾವುದೇ ಆ್ಯಪ್ ಬಳಸುವಾಗ ಕ್ಯಾಪ್ಷನ್ ಕಾಣುತ್ತದೆ. ಆದರೆ ಇದು ಸದಾ ನಿಖರವಾಗಿರದೇ ಇರಬಹುದು. ಆದ್ದರಿಂದ ತುರ್ತು ಸಂದರ್ಭಗಳಲ್ಲಿ ಮಾತ್ರ ಇದನ್ನು ಅವಲಂಬಿಸಬಾರದು. ಹಿಂದಿ ಹಾಗೂ ಪ್ರಾದೇಶಿಕ ಭಾಷೆಗಳ ಬೆಂಬಲವೂ ಲಭ್ಯವಾಗಿದೆ. ಆಂಡ್ರಾಯ್ಡ್ ಸಾಧನಗಳಲ್ಲೂ ಲೈವ್ ಕ್ಯಾಪ್ಷನ್ ಫೀಚರ್ ಇದೆ. ಇದು ನೈಜ ಸಮಯದಲ್ಲಿ ಪಠ್ಯ ಕ್ಯಾಪ್ಷನ್ ಗಳನ್ನು ನೀಡುತ್ತದೆ. ಫೋನ್ ಕರೆಗಳು, ಪಾಡ್ ಕಾಸ್ಟ್ಗಳು, ವೀಡಿಯೋಗಳು ಮತ್ತು ಆಡಿಯೋ ಸಂದೇಶಗಳಿಗೆ ಸಹ ಇದು ಕೆಲಸ ಮಾಡುತ್ತದೆ. ಇದನ್ನು ಸಕ್ರಿಯಗೊಳಿಸಲು: ಸೆಟ್ಟಿಂಗ್ಸ್ > ಆ್ಯಕ್ಸೆಸಿಬಿಲಿಟಿ > ಕ್ಯಾಪ್ಷನ್ > ಲೈವ್ ಕ್ಯಾಪ್ಷನ್ ಗೆ ಹೋಗಿ. ಆಂಡ್ರಾಯ್ಡ್ ನಲ್ಲಿ ‘Select to Speak’ ಎಂಬ ಮತ್ತೊಂದು ಉಪಯುಕ್ತ ಫೀಚರ್ ಇದೆ. ಇದನ್ನು ದೃಷ್ಟಿ ಸಮಸ್ಯೆಯಿರುವವರಿಗಾಗಿ ವಿನ್ಯಾಸಗೊಳಿಸಲಾಗಿದ್ದರೂ, ಯಾರೇ ಆಗಲಿ ಬಳಸಬಹುದು. ದೀರ್ಘ ಲೇಖನಗಳನ್ನು ಓದುವಾಗ ಇದು ಪಠ್ಯವನ್ನು ಜೋರಾಗಿ ಓದುತ್ತದೆ. ಹಿರಿಯ ನಾಗರಿಕರಿಗೆ ಇದು ಬಹಳ ಸಹಾಯಕ. ಈ ಫೀಚರ್ ಸಕ್ರಿಯಗೊಂಡ ನಂತರ, ಶಾರ್ಟ್ಕಟ್ ಬಳಸಿ ಪಠ್ಯವನ್ನು ಆಯ್ಕೆ ಮಾಡಿ, ಅದನ್ನು ಓದುವಂತೆ ಮಾಡಬಹುದು. ಐಫೋನ್ ನಲ್ಲಿ ‘ವಾಯ್ಸ್ಓವರ್’ ಎಂಬ ಫೀಚರ್ ಇದೆ. ಇದು ಪರದೆಯ ಮೇಲಿನ ವಿಷಯವನ್ನು ಓದಿ ವಿವರಿಸುತ್ತದೆ. ಇದು ಟಚ್ ಗೆಸ್ಚರ್ ಗಳ ಮೇಲೆ ಅವಲಂಬಿತವಾಗಿದೆ — ಆಯ್ಕೆ ಮಾಡಲು ಒಮ್ಮೆ ಟ್ಯಾಪ್, ಸಕ್ರಿಯಗೊಳಿಸಲು ಡಬಲ್ ಟ್ಯಾಪ್. ಐಫೋನ್ ನಲ್ಲಿ ಗ್ರೇಸ್ಕೇಲ್ ಮೋಡ್ ಕೂಡ ಲಭ್ಯವಿದೆ. ಕೆಲವರಿಗೆ ಹುಟ್ಟಿನಿಂದಲೇ ಬಣ್ಣ ದೃಷ್ಟಿ ಸಮಸ್ಯೆ ಇರುತ್ತದೆ, ಕೆಲವರಿಗೆ ಜೀವನದ ನಂತರದ ಹಂತದಲ್ಲಿ ಕಾಣಿಸಬಹುದು. ಬಣ್ಣ ಕುರುಡುತನ ಎಂದರೆ ಎಲ್ಲಾ ಬಣ್ಣಗಳನ್ನು ಕಾಣಲಾಗುವುದಿಲ್ಲ ಎಂಬುದಲ್ಲ; ಅವುಗಳನ್ನು ಗುರುತಿಸಲು ಕಷ್ಟವಾಗುತ್ತದೆ ಎಂಬುದಾಗಿದೆ. ಇಂತಹ ಸಂದರ್ಭಗಳಲ್ಲಿ ‘ಕಲರ್ ಫಿಲ್ಟರ್’ ಅಡಿಯಲ್ಲಿ ಕಪ್ಪು-ಬಿಳುಪು (Grayscale) ಮೋಡ್ ಉಪಯುಕ್ತವಾಗುತ್ತದೆ. ಇದು ಕಣ್ಣಿನ ಒತ್ತಡವನ್ನು ಕಡಿಮೆ ಮಾಡುತ್ತದೆ. ಆಂಡ್ರಾಯ್ಡ್ ಬಳಕೆದಾರರು ‘Color Correction’ ಸೆಟ್ಟಿಂಗ್ ಮೂಲಕ ಇದೇ ರೀತಿಯ ಫಿಲ್ಟರ್ ಗಳನ್ನು ಬಳಸಬಹುದು.
Pawan Kalyan: ಪವನ್ ಕಲ್ಯಾಣ್ ವಿರುದ್ಧ ಕಾಮಿಡಿ ವಿಡಿಯೋ: ಸ್ಟ್ಯಾಂಡ್ಅಪ್ ಕಾಮಿಡಿಯನ್ ಅನುದೀಪ್ ಕಟಿಕಲಾ ಬಂಧನ
Pawan Kalyan: ದೇಶದಲ್ಲಿ ಮತ್ತೊಬ್ಬ ಸ್ಟ್ಯಾಂಡ್-ಅಪ್ ಕಾಮಿಡಿಯನ್ಗೆ ಸಂಕಷ್ಟ ಎದುರಾಗಿದೆ. ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಅವರನ್ನು ಅವಮಾನಿಸಿ, ಆನ್ಲೈನ್ ವಿಡಿಯೋ ಮಾಡಿರುವ ಆರೋಪದ ಮೇಲೆ ಏಪ್ರಿಲ್ 14 ರಂದು ಪ್ರಯಾಗರಾಜ್ನಲ್ಲಿ ಕಾಕಿನಾಡ ಪೊಲೀಸರು ಸ್ಟ್ಯಾಂಡ್-ಅಪ್ ಕಾಮಿಡಿಯನ್ ಅನುದೀಪ್ ಕಟಿಕಲಾ ಅವರನ್ನು ಬಂಧಿಸಿದ್ದಾರೆ. ಏಪ್ರಿಲ್ 14 ರಂದು ಸಂಜೆ 7 ಗಂಟೆಗೆ ಅನುದೀಪ್ ಕಟಿಕಲಾ ಅವರನ್ನು ಬಂಧಿಸಲಾಗಿದೆ.

31 C