ಷೇರು ಮಾರುಕಟ್ಟೆಯಲ್ಲಿ ಹೂಡಿಕೆದಾರರ 11 ಲಕ್ಷ ಕೋಟಿ ರೂ. ನಾಶ; ಕಾರಣವೇನು?
ಒಂದು ದಿನದ ಮೊದಲು ಬುಧವಾರ ಉತ್ಸಾಹದಿಂದ ಮಾರುಕಟ್ಟೆ ಅಮೆರಿಕದ ನೀತಿಗೆ ಅನುಗುಣವಾಗಿ ಕುಸಿತ ದಾಖಲಿಸಿದೆ. ಅಮೆರಿಕದ ಫೆಡರಲ್ ರಿಸರ್ವ್ ನೀತಿ ಬಡ್ಡಿ ದರಗಳನ್ನು ಯಥಾ ಸ್ಥಿತಿಯಲ್ಲಿರಿಸಿದ ನಂತರ ಮತ್ತು ತೈಲ ಬೆಲೆಗಳು ಬ್ಯಾರೆಲ್ ಗೆ 110 ಡಾಲರ್ ಗಿಂತ ಹೆಚ್ಚಾದ ಮೇಲೆ ಗುರುವಾರ ಮಾರುಕಟ್ಟೆ ಆರಂಭವಾದ ಕೆಲವೇ ಸೆಕೆಂಡುಗಳಲ್ಲಿ ತೀವ್ರ ಷೇರು ಮಾರುಕಟ್ಟೆ ಕುಸಿತದ ವರದಿಯಾಗಿದೆ. ಐದೇ ನಿಮಿಷಗಳಲ್ಲಿ ಒಟ್ಟು 8 ಲಕ್ಷ ಕೋಟಿ ರೂ. ನಷ್ಟವಾಗಿದೆ. ನಿಫ್ಟಿ50 ಮತ್ತು ಬಿಎಸ್ಇ ಸೂಚ್ಯಂಕ ವಹಿವಾಟಿನಲ್ಲಿ ಕುಸಿತ ದಾಖಲಿಸಿದವು. ಬಾಂಬೆ ಸ್ಟಾಕ್ ಎಕ್ಸ್ಚೇಂಜ್ 2500 ಪಾಯಿಂಟ್ ಗಳಿಗೆ ಮೀರಿ ಕುಸಿದರೆ, ನಿಫ್ಟಿ 50 ಮೂರು ಸತತ ಅವಧಿಗಳಲ್ಲಿ ಲಾಭ ದಾಖಲಿಸಿದ ನಂತರ ದಿನದ ವಹಿವಾಟಿನಲ್ಲಿ 23,200 ಅಂಕಗಳಿಗಿಂತ ಕೆಳಗೆ ಕುಸಿಯಿತು. ಒಂದು ದಿನದ ಮೊದಲು ಬುಧವಾರ ಉತ್ಸಾಹದಿಂದ ಮಾರುಕಟ್ಟೆ ಅಮೆರಿಕದ ನೀತಿಗೆ ಅನುಗುಣವಾಗಿ ಕುಸಿತ ದಾಖಲಿಸಿದೆ. ಮಧ್ಯಾಹ್ನ 3:05ಕ್ಕೆ ನಿಫ್ಟಿ 50ಯು 789 ಪಾಯಿಂಟ್ಗಳು ಅಥವಾ ಶೇ. 3.32 ರಷ್ಟು ಕುಸಿದು 22,988.95 ಕ್ಕೆ ವಹಿವಾಟು ನಡೆಸುತ್ತಿತ್ತು. ಬಿಎಸ್ಯಿ ಸೂಚ್ಯಂಕವು 74,157.67 ಕ್ಕೆ ತಲುಪಿ 2,552 ಪಾಯಿಂಟ್ಗಳು ಅಥವಾ ಶೇ 3.33 ರಷ್ಟು ಕುಸಿತ ದಾಖಲಿಸಿದೆ. ಕಚ್ಚಾ ತೈಲ ಬೆಲೆಗಳ ಏರಿಕೆ ಮತ್ತು ಅಮೆರಿಕದ ಫೆಡರಲ್ ರಿಸರ್ವ್ ನ ಆತಂಕಕಾರಿ ನಿಲುವು ಹೂಡಿಕೆದಾರರ ಭಾವನೆಗಳ ಮೇಲೆ ಪರಿಣಾಮ ಬೀರಿದೆ. ತೀವ್ರ ಕುಸಿತವು ಬಿಎಸ್ಇ ಪಟ್ಟಿಮಾಡಿದ ಸಂಸ್ಥೆಗಳ ಒಟ್ಟು ಮಾರುಕಟ್ಟೆ ಬಂಡವಾಳೀಕರಣದಿಂದ 11 ಲಕ್ಷ ಕೋಟಿ ರೂ.ಗಳಿಗಿಂತ ಹೆಚ್ಚಿನದನ್ನು ಅಳಿಸಿಹಾಕಿದೆ. ಹೀಗಾಗಿ 428 ಲಕ್ಷ ಕೋಟಿ ರೂ.ಗೆ ಇಳಿಯಿತು. ಎಲ್ಲಾ ವಲಯಗಳಲ್ಲೂ ಮಾರಾಟದ ಒತ್ತಡವು ಗೋಚರಿಸಿದೆ. ಎಲ್ಲಾ ಎನ್ಎಸ್ಇ ಸೂಚ್ಯಂಕಗಳು ಕಡಿಮೆ ಪ್ರಮಾಣದಲ್ಲಿ ಪ್ರಾರಂಭವಾದವು. ಮತ್ತಷ್ಟು ದುರ್ಬಲಗೊಂಡ ರೂಪಾಯಿ: ಭಾರತೀಯ ರೂಪಾಯಿ ಮತ್ತಷ್ಟು ದುರ್ಬಲಗೊಂಡು ಅಮೆರಿಕದ ಡಾಲರ್ ವಿರುದ್ಧ ದಾಖಲೆ ಕನಿಷ್ಠ ಮಟ್ಟವಾದ 92.63ಕ್ಕೆ ತಲುಪಿದೆ. “ಆಮದು ಬಿಲ್ ಏರುತ್ತಿರುವುದರಿಂದ ನಿರಂತರ ಒತ್ತಡವು ಕರೆನ್ಸಿಯ ಮೇಲೆ ಪರಿಣಾಮ ಬೀರುತ್ತಿದೆ. ಹಾರ್ಮುಜ್ ಜಲಸಂಧಿಯ ಮೂಲಕ ಸಾಗಣೆಯಲ್ಲಿ ನಡೆಯುತ್ತಿರುವ ಅಡಚಣೆಗಳೊಂದಿಗೆ ಹೆಚ್ಚಿದ ಕಚ್ಚಾ ತೈಲ ಬೆಲೆಗಳು ಭಾರತಕ್ಕೆ ನಿರಂತರವಾಗಿ ಆಮದು ವೆಚ್ಚಗಳು ಏರುವ ಕಳವಳ ತಂದಿದೆ. ಕಚ್ಚಾ ತೈಲವು ದೀರ್ಘಕಾಲದವರೆಗೆ ಏರುತ್ತಲೇ ಇದೆ. ಹೀಗಾಗಿ ರೂಪಾಯಿ ಒತ್ತಡದಲ್ಲಿದೆ” ಎಂದು ಮಾರುಕಟ್ಟೆ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಮಾರುಕಟ್ಟೆ ಕುಸಿತಕ್ಕೆ ಕಾರಣವೇನು? ತೈಲ ಬೆಲೆ 110 ಡಾಲರ್ ದಾಟಿದೆ. ತೈಲ ಸಮೃದ್ಧ ಮಧ್ಯಪ್ರಾಚ್ಯದಲ್ಲಿ ಏರುತ್ತಿರುವ ಉದ್ವಿಗ್ನತೆ ಮತ್ತು ಹಾರ್ಮುಜ್ ಜಲಸಂಧಿಯ ನಿರಂತರ ಮುಚ್ಚುವಿಕೆಯಿಂದಾಗಿ ಕಚ್ಚಾ ತೈಲ ಬೆಲೆಗಳು ಸ್ವಲ್ಪ ವಿರಾಮದ ನಂತರ 110 ಡಾಲರ್ ಗೆ ಏರಿತು. ಎನ್ಎನ್ಜಿ ಸಂಸ್ಕರಣೆಯ ಪ್ರಮುಖ ಕೇಂದ್ರವಾದ ರಾಸ್ ಲಫಾನ್ ಮೇಲೆ ಇರಾನ್ನ ಕ್ಷಿಪಣಿ ದಾಳಿಗಳು ಷೇರು ಮಾರುಕಟ್ಟೆಯಲ್ಲಿ ಸಂವೇದನೆಗೆ ಕಾರಣವಾಗಿದೆ. ಇದೇ ಸಮಯದಲ್ಲಿ ಯುಎಇ ಗುರುವಾರ ಮುಂಜಾನೆ ಕ್ಷಿಪಣಿಗಳನ್ನು ಯಶಸ್ವಿಯಾಗಿ ತಡೆದ ನಂತರ ಕೆಲವು ಅನಿಲ ಸೌಲಭ್ಯಗಳನ್ನು ಸ್ಥಗಿತಗೊಳಿಸಿದೆ. HDFC ಬ್ಯಾಂಕ್ ಷೇರುಗಳು ತೀವ್ರ ಮಾರಾಟ: HDFC ಬ್ಯಾಂಕ್ ನ ಅರೆಕಾಲಿಕ ಅಧ್ಯಕ್ಷ ಮತ್ತು ಸ್ವತಂತ್ರ ನಿರ್ದೇಶಕ ಅತನು ಚಕ್ರವರ್ತಿ ರಾಜೀನಾಮೆ ಘೋಷಿಸಿದ ನಂತರ ಗುರುವಾರ ಆರಂಭಿಕ ವಹಿವಾಟಿನಲ್ಲಿ ಷೇರುಗಳು ಸುಮಾರು ಶೇ 8ರಷ್ಟು ಕುಸಿದವು. ಭಾರತೀಯ ರಿಸರ್ವ್ ಬ್ಯಾಂಕ್ ಅನುಮೋದನೆ ನಂತರ ಮಾಜಿ ಸಿಇಒ ಕೇಕಿ ಮಿಸ್ತ್ರಿರನ್ನು ಮಧ್ಯಂತರ ಅರೆಕಾಲಿಕ ಅಧ್ಯಕ್ಷರಾಗಿ ನೇಮಿಸಲಾಗಿದೆ ಎಂದು ಬ್ಯಾಂಕ್ ತಿಳಿಸಿದೆ. “ಕಳೆದ ಎರಡು ವರ್ಷಗಳಲ್ಲಿ ಬ್ಯಾಂಕ್ ನ ಕೆಲವು ಬೆಳವಣಿಗೆಗಳು ಮತ್ತು ಅಭ್ಯಾಸಗಳು ತಮ್ಮ ವೈಯಕ್ತಿಕ ತತ್ವಗಳು ಮತ್ತು ನೈತಿಕ ಮಾನದಂಡಗಳಿಗೆ ಹೊಂದಿಕೆಯಾಗುವುದಿಲ್ಲ” ಎಂದು ಚಕ್ರವರ್ತಿ ರಾಜೀನಾಮೆ ಪತ್ರದಲ್ಲಿ ತಿಳಿಸಿದ್ದಾರೆ. ಹೀಗಾಗಿ HDFC ಷೇರುಗಳಲ್ಲಿನ ತೀವ್ರ ಕುಸಿತವು ಬಿಎಸ್ಇ ಸೆನ್ಸೆಕ್ಸ್ ಮತ್ತು ನಿಫ್ಟಿ ಎರಡರ ಮೇಲೂ ಕೆಳಮುಖ ಒತ್ತಡ ಬೀರುವ ಸಾಧ್ಯತೆಯಿದೆ ಮತ್ತು ಒಟ್ಟು ಮಾರುಟಕ್ಟೆ ಭಾವನೆಯನ್ನು ಇನ್ನಷ್ಟು ಕುಗ್ಗಿಸಲಿದೆ. ಅಮೆರಿಕದ ಫೆಡರಲ್ ನೀತಿ ಅಮೆರಿಕದ ಕೇಂದ್ರೀಯ ಬ್ಯಾಂಕ್ ಫೆಡರಲ್ ರಿಸರ್ವ್ ಅಧ್ಯಕ್ಷ ಜೆರೋಮ್ ಪಾವೆಲ್ ಅವರು, “ಹಣದುಬ್ಬರ ನಿರೀಕ್ಷಿಸಿದಷ್ಟು ಕಡಿಮೆಯಾಗಿಲ್ಲ. ಹೀಗಾಗಿ, ಕೇಂದ್ರ ಬ್ಯಾಂಕ್ ಬಡ್ಡಿ ದರಗಳನ್ನು ಸ್ಥಿರವಾಗಿಡಲು ಆಯ್ಕೆ ಮಾಡಿಕೊಂಡಿದೆ” ಎಂದು ತಿಳಿಸಿದ್ದಾರೆ. ಮಧ್ಯಪ್ರಾಚ್ಯದ ಭೌಗೋಳಿಕ-ರಾಜಕೀಯ ಉದ್ವಿಗ್ನತೆಗಳು ಮತ್ತು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಬದಲಾಗುತ್ತಿರುವ ಸುಂಕದ ನಿಲುವಿಗೆ ಸಂಬಂಧಿಸಿದ ನೀತಿ ಅನಿಶ್ಚಿತತೆ ಹಣದುಬ್ಬರಕ್ಕೆ ಕೊಡುಗೆ ನೀಡುತ್ತಿವೆ ಎಂದು ಅವರು ತಿಳಿಸಿದ್ದಾರೆ. ಫೆಡರಲ್ ರಿಸರ್ವ್ ತನ್ನ ಮಾನದಂಡ ನೀತಿಯಲ್ಲಿ ಬಡ್ಡಿ ದರವನ್ನು ಶೇ. 3.50–3.75 ರಲ್ಲಿ ಬದಲಾಗದೆ ಉಳಿಸಿಕೊಂಡಿದೆ. ದೃಢವಾದ ಹಣದುಬ್ಬರ, ಸ್ಥಿರ ನಿರುದ್ಯೋಗ ಮಟ್ಟ ಮತ್ತು ವರ್ಷದಲ್ಲಿ ಕೇವಲ ಒಂದು ದರ ಕಡಿತದ ನಿರೀಕ್ಷೆಗಳನ್ನು ಸೂಚಿಸುತ್ತದೆ ಎಂದು ಅವರು ತಿಳಿಸಿದ್ದಾರೆ. ಮಾರಾಟ ಮುಂದುವರಿಸಿದ ವಿದೇಶಿ ಹೂಡಿಕೆದಾರರು ವಿದೇಶಿ ಸಂಸ್ಥೆಗಳ ಹೂಡಿಕೆದಾರರು ಭಾರತೀಯ ಷೇರುಗಳಲ್ಲಿ ನಿವ್ವಳ ಮಾರಾಟಗಾರರಾಗಿ ಉಳಿದಿದ್ದಾರೆ. ಬುಧವಾರ 2,714 ಕೋಟಿ ರೂ. ಮೌಲ್ಯದ ಷೇರುಗಳನ್ನು ವಿದೇಶಿ ಮಾರಾಟಗಾರರು ಮಾರಿದ್ದಾರೆ. 14ನೇ ಬಾರಿಗೆ ನೇರ ಹೊರಹರಿವಿನ ಅವಧಿಯನ್ನು ನಮೂದಿಸಿದೆ. ಇತ್ತೀಚೆಗಿನ ಇಂತಹ ಹೊರಹರಿವಿನ ಪ್ರವೃತ್ತಿ ಒಟ್ಟು ಮಾರುಕಟ್ಟೆಯ ಭಾವನೆ ಮೇಲೆ ಪರಿಣಾಮ ಬೀರುತ್ತಿದೆ.
ದಾವಣಗೆರೆ : ಬಿಜೆಪಿ ರಾಜ್ಯ ಎಸ್ಟಿ ಮೋರ್ಚಾದ ರಾಜ್ಯ ಉಪಾಧ್ಯಕ್ಷ ಶ್ರೀನಿವಾಸ್ ಟಿ ದಾಸಕರಿಯಪ್ಪ ಅವರಿಗೆ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಅಭ್ಯರ್ಥಿಯಾಗಿ ಬಿಜೆಪಿ ಕಣಕ್ಕಿಳಿಸಿದೆ. ಫೆ. 1 ರಂದು 1981 ರಲ್ಲಿ ಜನಿಸಿರುವ ಶ್ರೀನಿವಾಸ್ ಕರಿಯಪ್ಪ ಅವರು ಉದ್ಯಮಿಯಾಗಿ ಗುರುತಿಸಿಕೊಂಡಿದ್ದಾರೆ. ಮಾಹಿತಿ ತಂತ್ರಜ್ಞಾನದಲ್ಲಿ ಪದವಿ (ಐಟಿ) ಪಡೆದಿರುವ ಅವರು, ಸಮಾಜ ಸೇವೆ ಮೂಲಕ ರಾಜಕೀಯಕ್ಕೆ ಬಂದಿದ್ದಾರೆ. ತಂದೆ ದಾಸಕರಿಯಪ್ಪ ಅವರು ಜೆಡಿಎಸ್ ಅಧಿಕಾರದ ಅವಧಿಯಲ್ಲಿ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರಾಗಿದ್ದರು. ಕಳೆದ 20 ವರ್ಷಗಳಿಂದ ಬಿಜೆಪಿಯಲ್ಲಿ ಜಿಲ್ಲಾ ಉಪಾಧ್ಯಕ್ಷರಾಗಿ 5 ವರ್ಷ ಹಾಗೂ ರಾಜ್ಯ ಎಸ್ಟಿ ಮೋರ್ಚಾದ ಉಪಾಧ್ಯಕ್ಷರಾಗಿ ಕಳೆದ ಮೂರು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ. ಮಾಜಿ ಸಂಸದರ ಅಪ್ತ ಬಳಗ : ಶ್ರೀನಿವಾಸ್ ದಾಸಕರಿಯಪ್ಪ ಅವರು ಮಾಜಿ ಸಂಸದ ಹಾಗೂ ಕೇಂದ್ರದ ಮಾಜಿ ಸಚಿವ ಡಾ.ಜಿ.ಎಂ.ಸಿದ್ದಶ್ವರ್ ಅವರ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿದ್ದರು. ಮಾತ್ರವಲ್ಲ, ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಬಣದ ವಿರುದ್ಧ ಯಾವುದೇ ಮಾತನಾಡಿರಲಿಲ್ಲ. ವಿರೋಧವೂ ವ್ಯಕ್ತಪಡಿಸಿರಲಿಲ್ಲ. ಎರಡು ಬಣಗಳ ಜೊತೆ ಉತ್ತಮ ಒಡನಾಟ ಹೊಂದಿದ್ದ ಶ್ರೀನಿವಾಸ್ ದಾಸಕರಿಯಪ್ಪ ಅವರಿಗೆ ಬಿಜೆಪಿ ಮಣೆ ಹಾಕುವ ಮೂಲಕ ತಂತ್ರಗಾರಿಕೆ ನಡೆಸಿದೆ. ಯಶವಂತ ರಾವ್ ಜಾಧವ್, ಅಜಯ್ ಕುಮಾರ್ ಸೇರಿದಂತೆ ಅನೇಕರು ಬಿಜೆಪಿ ಟಿಕೆಟ್ ಗೆ ಪೈಪೋಟಿ ನಡೆಸಿದ್ದರು. ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್ ಕೇಳಿ ಕೊನೆಗೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಜಿ.ಬಿ ವಿನಯ್ ಕುಮಾರ್ ಅವರಿಗೆ ಟಿಕೆಟ್ ನೀಡಲು ಬಿಜೆಪಿ ಒಲವು ತೋರಿದೆ ಎಂಬ ಮಾತುಗಳು ಕೇಳಿ ಬಂದಿದ್ದವು. ಆದರೆ ಇದೀಗ ಎಲ್ಲ ಲೆಕ್ಕಚಾರಗಳನ್ನು ತಲೆಕೆಳಗಾಗಿದ್ದು, ಬಿಜೆಪಿ ಶ್ರೀನಿವಾಸ್ ದಾಸಕರಿಯಪ್ಪ ಅವರಿಗೆ ಟಿಕೆಟ್ ನೀಡಿದೆ. ಶ್ರೀನಿವಾಸ ದಾಸಕರಿಯಪ್ಪ ಮಾತನಾಡಿ, ʼಮಾಜಿ ಸಂಸದ ಸಿದ್ದೇಶ್ವರ ರವೀಂದ್ರನಾಥ, ರೇಣುಕಾಚಾರ್ಯ ಸೇರಿದಂತೆ ಪಕ್ಷದ ಎಲ್ಲಾ ಮುಖಂಡ ನೇತೃತ್ವದಲ್ಲಿ ಚುನಾವಣೆ ಎದುರಿಸುತ್ತೇವೆ. ಕಾಂಗ್ರೆಸ್ ವಿರುದ್ದ ಚುನಾವಣೆ ನಡೆಸುತ್ತೇವೆ. ಯಶವಂತರಾವ್ ಜಾಧವ್, ಅಜಯಕುಮಾರ್, ದೇವರಮನೆ ಶಿವಕುಮಾರ್, ರಾಜನಹಳ್ಳಿ ಶಿವಕುಮಾರ್ ಸೇರಿದಂತೆ ಪಕ್ಷದ ಎಲ್ಲಾ ಮುಖಂಡರು ಒಟ್ಟಾಗಿ ಚುನಾವಣೆ ಎದುರಿಸುತ್ತೇವೆ. ಈ ಬಾರಿ ದಕ್ಷಿಣದಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆʼ ಎಂದರು.
13,00,000 ಕೋಟಿ ರೂಪಾಯಿ ಹೂಡಿಕೆದಾರರ ಹಣ ಉಡೀಸ್, ಭಾರತೀಯ ಷೇರುಪೇಟೆಯಲ್ಲಿ ಬಿರುಗಾಳಿ... Stock Market
ಷೇರು ಮಾರುಕಟ್ಟೆ ಇಂದು ಕೂಡ ಮಕಾಡೆ ಮಲಗಿದೆ, ಕಳೆದ ಕೆಲವು ದಿನಗಳಿಂದ ಸತತವಾಗಿ ಬಿದ್ದು ಭಯ ಹುಟ್ಟಿಸಿದ್ದ ಭಾರತದ ಷೇರುಪೇಟೆ ನಿನ್ನೆ ಎಂದರೆ ಮಾರ್ಚ್ 18 ಬುಧವಾರ ಒಂದಷ್ಟು ಚೇತರಿಕೆ ಕಂಡು ಹೊಸ ಹುಮ್ಮಸ್ಸು ಮೂಡಿಸಿತ್ತು. ಇದೇ ಕಾರಣಕ್ಕೆ ರೀಟೇಲ್ ಹೂಡಿಕೆದಾರರು ಇಂದು ಮತ್ತೆ ಭಾರತೀಯ ಷೇರು ಮಾರುಕಟ್ಟೆ ಏರಿಕೆ ಕಾಣುವ ಆಸೆಯಲ್ಲಿ ಇದ್ದರು. ಹೀಗಾಗಿ ಹೂಡಿಕೆ
Love Mocktail 3 Review: ಸಾಕು ತಂದೆ - ದತ್ತು ಪುತ್ರಿ ಬಾಂಧವ್ಯದ ಮನಮಿಡಿಯುವ ಕಥೆ
ಡಾರ್ಲಿಂಗ್ ಕೃಷ್ಣ ಕಥೆ ಬರೆದು, ನಿರ್ದೇಶನ ಮಾಡಿರುವ ‘ಲವ್ ಮಾಕ್ಟೇಲ್’ ಹಾಗೂ ‘ಲವ್ ಮಾಕ್ಟೇಲ್ 2’ ಚಿತ್ರಗಳು ಭರ್ಜರಿ ಯಶಸ್ಸು ಗಳಿಸಿದ್ದವು. ಅದೇ ಫ್ರಾಂಚೈಸಿಯ ಸೀಕ್ವೆಲ್ ಆಗಿ ಬಂದಿರುವ ‘ಲವ್ ಮಾಕ್ಟೇಲ್ 3’ ಚಿತ್ರ ಹೇಗಿರಬಹುದು ಎಂಬ ಕುತೂಹಲ, ನಿರೀಕ್ಷೆ ಹಲವರಿಗೆ ಇದೆ. ಎಲ್ಲರ ನಿರೀಕ್ಷೆಗೆ ತಕ್ಕ ಹಾಗೆಯೇ ಡಾರ್ಲಿಂಗ್ ಕೃಷ್ಣ ‘ಲವ್ ಮಾಕ್ಟೇಲ್ 3’ ಚಿತ್ರವನ್ನ ತೆರೆಗೆ ತಂದಿದ್ದಾರೆ. ‘ಲವ್ ಮಾಕ್ಟೇಲ್ 3’ ಚಿತ್ರದಲ್ಲಿ ಹೆಚ್ಚು ಆಡಂಬರ ಇಲ್ಲ.. ಓವರ್ ಡ್ರಾಮಾ ಇಲ್ಲ.. ಅನವಶ್ಯಕ ಬಿಲ್ಡಪ್ ಇಲ್ಲ.. ಸುಖಾ ಸುಮ್ಮನೆ ಯಾವ ದೃಶ್ಯವನ್ನೂ ರಬ್ಬರ್ ತರಹ ಎಳೆದಿಲ್ಲ.. ಬೇಕು ಬೇಕು ಅಂತ ಕಾಮಿಡಿಯನ್ನ ತುರುಕಿಲ್ಲ. ಈ ಎಲ್ಲಾ ‘ಇಲ್ಲ’ಗಳ ಮಧ್ಯೆ ‘ಲವ್ ಮಾಕ್ಟೇಲ್ 3’ ಸಿನಿಮಾದಲ್ಲಿ ಸರಳ, ಸುಂದರ ಕಥೆ ಇದೆ. ಎಲ್ಲದಕ್ಕಿಂತ ಹೆಚ್ಚಾಗಿ ತಂದೆ - ಮಗಳ ಬಾಂಧವ್ಯ ಪ್ರೇಕ್ಷಕರನ್ನ ಹಿಡಿದು ಕೂರಿಸುತ್ತದೆ. ಇಡೀ ಸಿನಿಮಾವನ್ನ ಎಮೋಷನಲ್ ಆಗಿ ಕನೆಕ್ಟ್ ಮಾಡಿ, ಪ್ರೇಕ್ಷಕರ ಕಣ್ಣಾಲಿಗಳನ್ನ ಒದ್ದೆ ಮಾಡಿಸುವಲ್ಲಿ ಡಾರ್ಲಿಂಗ್ ಕೃಷ್ಣ ಯಶಸ್ವಿಯಾಗಿದ್ದಾರೆ. ಕಥೆ ಏನು? ‘ಲವ್ ಮಾಕ್ಟೇಲ್ 2’ ಚಿತ್ರದ ಮುಂದುವರಿದ ಭಾಗವೇ ‘ಲವ್ ಮಾಕ್ಟೇಲ್ 3’. ಪತ್ನಿ ನಿಧಿಮಾಳನ್ನ ಮರೆಯಲಾಗದೆ ಡಿಪ್ರೆಶನ್ಗೆ ಜಾರಿದ್ದ ಆದಿತ್ಯ ಅನಾಥಾಶ್ರಮಕ್ಕೆ ಹೋಗಿ ಒಂದು ಹೆಣ್ಣು ಮಗುವನ್ನ ದತ್ತು ಪಡೆಯುತ್ತಾನೆ. ಆ ಮಗುವಿಗೆ ನಿಧಿ ಅಂತಲೇ ಆದಿತ್ಯ ನಾಮಕರಣ ಮಾಡುತ್ತಾನೆ. ಅಲ್ಲಿಗೆ ‘ಲವ್ ಮಾಕ್ಟೇಲ್ 2’ ಚಿತ್ರ ಎಂಡ್ ಆಗಿರುತ್ತದೆ. ಆದಿ ಜೀವನಕ್ಕೆ ಪುಟಾಣಿ ನಿಧಿ ಬಂದ್ಮೇಲೆ ಏನೇನಾಗುತ್ತೆ. ಅನಾಥಶ್ರಮದಲ್ಲಿದ್ದ ಆ ಪುಟಾಣಿಯ ಹಿನ್ನಲೆ ಏನು? ನಿಜವಾದ ಅಪ್ಪ - ಅಮ್ಮ ಯಾರು? ಪುಟಾಣಿ ನಿಧಿಯ ನಿಜವಾದ ಅಮ್ಮ ಪ್ರತ್ಯಕ್ಷವಾದ್ಮೇಲೆ ಏನೆಲ್ಲಾ ಆಗುತ್ತದೆ ಎಂಬುದೇ ‘ಲವ್ ಮಾಕ್ಟೇಲ್ 3’ ಚಿತ್ರದ ಹೂರಣ. ಪ್ರಬುದ್ಧವಾಗಿ ಕಾಣಿಸುವ ಡಾರ್ಲಿಂಗ್ ಕೃಷ್ಣ ‘ಲವ್ ಮಾಕ್ಟೇಲ್ 3’ ಚಿತ್ರದಲ್ಲಿ ಡಾರ್ಲಿಂಗ್ ಕೃಷ್ಣ ಬಾಯಲ್ಲಿ ಮಾತಾಡೋಕ್ಕಿಂತ ಹೆಚ್ಚಾಗಿ ಕಣ್ಣಲ್ಲೇ ಮಾತಾಡುತ್ತಾರೆ. ಪತ್ನಿಯ ನೆನಪಲ್ಲೇ ಜೀವನ ಸಾಗಿಸುತ್ತಿರುವವನಾಗಿ, ಒಂದು ಹೆಣ್ಣು ಮಗುವಿನ ಜವಾಬ್ದಾರಿಯುತ ತಂದೆಯಾಗಿ ಡಾರ್ಲಿಂಗ್ ಕೃಷ್ಣ ಪ್ರಬುದ್ಧ ಅಭಿನಯ ನೀಡಿದ್ದಾರೆ. ಅದರಲ್ಲೂ ಕೋರ್ಟ್ ಸನ್ನಿವೇಶದಲ್ಲಿ ಅವರು ಆಡುವ ಮಾತುಗಳು ಕಣ್ಣೀರು ತರಿಸುತ್ತೆ ಅಂದ್ರೆ ಅದಕ್ಕೆ ಕಾರಣ ಅವರ ನೈಜ ಅಭಿನಯ. ಮುಗ್ಧ ಅಭಿನಯ ನೀಡಿರುವ ಪುಟಾಣಿ ಸಂವೃತ ದ ಮೇಜರ್ ಹೈಲೈಟ್ ಪುಟಾಣಿ ಸಂವೃತ. ಶಾಲೆಯಿಂದ ಪ್ರತಿ ಬಾರಿ ಕಂಪ್ಲೇಂಟ್ ತರುವ ತುಂಟಿಯಾಗಿ, ಅಪ್ಪನ ಮುದ್ದಿನ ಮಗಳಾಗಿ ಸಂವೃತ ಮುದ್ದಾಗಿ ನಟಿಸಿದ್ದಾಳೆ. ತೆರೆಮೇಲೆ ಇದ್ದಷ್ಟು ಹೊತ್ತು ಲವಲವಿಕೆಯಿಂದಲೇ ಕಾಣಿಸಿಕೊಂಡಿದ್ದಾಳೆ ಸಂವೃತ. ಇತರೆ ತಾರೆಯರ ಅಭಿನಯ ಹೇಗಿದೆ? ವಿಜು ಮಾಮ ಆಗಿ ದಳಪತಿ ಅಭಿಲಾಶ್ ನಟನೆ ಚೆನ್ನಾಗಿದೆ. ಜಗ್ಗ ಮಮ್ಮಿ ಆಗಿ ಜಗದೀಶ್ ಅವರ ನಟನೆ ಇಷ್ಟವಾಗುತ್ತದೆ. ಜಗದೀಶ್ ಅವರ ಕಾಮಿಡಿ ಟೈಮಿಂಗ್ ಸಹ ವರ್ಕೌಟ್ ಆಗಿದೆ. ವಕೀಲರಾಗಿ ದಿಲೀಪ್ ರಾಜ್ ಹಾಗೂ ಶ್ವೇತಾ ಆರ್ ಪ್ರಸಾದ್ ಗಮನ ಸೆಳೆಯುತ್ತಾರೆ. ಜಡ್ಜ್ ಪಾತ್ರಕ್ಕೆ ಬಿ ಎಂ ಗಿರಿರಾಜ್ ನ್ಯಾಯ ಒದಗಿಸಿದ್ದಾರೆ. ನಟಿ ರೇಖಾ ಕುಡ್ಲಿಗಿ, ನಿಯಾರಾ ದೀಪಕ್, ರಜನಿ ಭಾರದ್ವಾಜ್ ತಮ್ಮ ತಮ್ಮ ಪಾತ್ರಗಳನ್ನ ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಸ್ಕ್ರೀನ್ ಮೇಲೆ ಮಿಲನಾ ನಾಗರಾಜ್ ಕಡಿಮೆ ಸಮಯ ಕಾಣಿಸಿಕೊಂಡರೂ ಕಾಡುತ್ತಾರೆ. ಟೆಕ್ನಿಕಲಿ ಚಿತ್ರ ಹೇಗಿದೆ? ಸಿಂಪಲ್ ಆಗಿದೆ. ಆದರೂ ಶುರುವಿನಿಂದ ಹಿಡಿದು ಎಂಡಿಂಗ್ವರೆಗೂ ಎಲ್ಲೂ ಬೋರಿಂಗ್ ಎನಿಸುವುದಿಲ್ಲ. ಯಾವ ದೃಶ್ಯವೂ ಅನವಶ್ಯಕ ಅನಿಸುವುದಿಲ್ಲ. ಅಷ್ಟರಮಟ್ಟಿಗೆ ಸ್ಕ್ರೀನ್ ಪ್ಲೇ ಮತ್ತು ಸಂಕಲನ ಉತ್ತಮವಾಗಿ ಮೂಡಿಬಂದಿದೆ. ಚಿತ್ರಕಥೆಯ ಮೂಡ್ಗೆ ತಕ್ಕ ಹಾಗೆ ಸಂಗೀತ ಹಾಗೂ ಬ್ಯಾಕ್ಗ್ರೌಂಡ್ ಸ್ಕೋರ್ ಇದೆ. ಫಾರಿನ್ ಲೊಕೇಷನ್ಗಳಲ್ಲಿ ಕ್ಯಾಮರಾ ವರ್ಕ್ ಕಣ್ಣು ಕೋರೈಸುವಂತಿದೆ. ಎಮೋಷನಲ್ ಸಿನಿಮಾ ಇಂದಿನ ಜನರೇಷನ್ಗೆ ಕನೆಕ್ಟ್ ಆಗುವ ರೀತಿಯಲ್ಲಿಯೇ ‘ಲವ್ ಮಾಕ್ಟೇಲ್’ ಹಾಗೂ ತಯಾರಿಸಿದ್ದರು. ‘ಲವ್ ಮಾಕ್ಟೇಲ್ 3’ ಚಿತ್ರವನ್ನೂ ಫ್ಯಾಮಿಲಿ ಆಡಿಯೆನ್ಸ್ನ ಗಮನದಲ್ಲಿಟ್ಟುಕೊಂಡೇ ಮಾಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ಸ್ಯಾಂಡಲ್ವುಡ್ನಲ್ಲಿ ಎಮೋಷನಲ್ ಸಿನಿಮಾಗಳೇ ಬಂದಿರಲಿಲ್ಲ. ಅದರಲ್ಲೂ ತಂದೆ - ಮಗಳ ಸೆಂಟಿಮೆಂಟ್ ಹೊಂದಿರುವ ಚಿತ್ರ ಅಪರೂಪವಾಗಿತ್ತು. ಸಬ್ಜೆಕ್ಟ್ ಆಯ್ಕೆ ಹಾಗೂ ಅದನ್ನ ಕಾರ್ಯರೂಪಕ್ಕೆ ತಂದಿರುವ ಶೈಲಿ ಮೆಚ್ಚಲಾರ್ಹ. ಫೈನಲ್ ಸ್ಟೇಟ್ಮೆಂಟ್ ಈಗಾಗಲೇ ‘ಲವ್ ಮಾಕ್ಟೇಲ್’ ಎರಡೂ ಭಾಗಗಳನ್ನ ನೋಡಿ ಇಷ್ಟಪಟ್ಟಿರುವವರಿಗೆ ಮೂರನೇ ಭಾಗ ಖಂಡಿತ ನಿರಾಸೆ ಮಾಡುವುದಿಲ್ಲ. ಸೆಂಟಿಮೆಂಟ್ ಚಿತ್ರಗಳನ್ನ ಮೆಚ್ಚಿಕೊಳ್ಳುವವರಿಗೆ ಇದು ಹೇಳಿ ಮಾಡಿಸಿದ ಚಿತ್ರ. ಕೆಲಸದ ಒತ್ತಡದ ಮಧ್ಯೆ ಒಂದೊಳ್ಳೆ ಫೀಲ್ ಕೊಡುವ ಸಿನಿಮಾ ನೋಡಬೇಕು ಅಂತಿದ್ರೆ ‘ಲವ್ ಮಾಕ್ಟೇಲ್ 3’ ಚಿತ್ರವನ್ನ ಮಿಸ್ ಮಾಡಬೇಡಿ.
ಗಾಝಾ : ಯುದ್ಧದಿಂದ ತೀವ್ರ ಸಂಕಷ್ಟ ಎದುರಿಸುತ್ತಿರುವ ಗಾಝಾಗೆ ಮಾನವೀಯ ನೆರವು ತಲುಪಿಸಲು ಗ್ರೇಟಾ ಥನ್ಬರ್ಗ್, ಮಾಂಡ್ಲಾ ಮಂಡೇಲಾ ಅವರ ನೇತೃತ್ವದಲ್ಲಿ “ಗ್ಲೋಬಲ್ ಸುಮುದ್ ಫ್ಲೋಟಿಲ್ಲಾ” ಹೊಸ ಮಹಾ ಕಾರ್ಯಾಚರಣೆಯನ್ನು ಘೋಷಿಸಿದೆ. ಈ ಕಾರ್ಯಾಚರಣೆಯಲ್ಲಿ ಸಮುದ್ರಮಾರ್ಗದ ಮೂಲಕ 100 ದೋಣಿಗಳನ್ನು ಕಳುಹಿಸುವ ಯೋಜನೆ ರೂಪಿಸಲಾಗಿದೆ. ಇದರ ಜೊತೆಗೆ ಭೂಮಾರ್ಗದಲ್ಲಿಯೂ ಮಾನವೀಯ ನೆರವು ಕಳುಹಿಸಲು ಸಿದ್ಧತೆಗಳನ್ನು ಕೈಗೊಳ್ಳಲಾಗುತ್ತದೆ ಎಂದು ಸಂಘಟನೆ ತಿಳಿಸಿದೆ. ಈ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಹಂಚಿದ ವೀಡಿಯೊದಲ್ಲಿ ಪರಿಸರ ಹೋರಾಟಗಾರ್ತಿ ಗ್ರೇಟಾ ಥನ್ಬರ್ಗ್ ಹಾಗೂ ದಕ್ಷಿಣ ಆಫ್ರಿಕಾದ ಮಾಜಿ ರಾಷ್ಟ್ರಪತಿ ನೆಲ್ಸನ್ ಮಂಡೇಲಾ ಅವರ ಮೊಮ್ಮಗ ಮಾಂಡ್ಲಾ ಮಂಡೇಲಾ ಸೇರಿದಂತೆ ಫ್ಲೋಟಿಲ್ಲಾ ಚಳವಳಿಯಲ್ಲಿ ಭಾಗವಹಿಸಿದ್ದವರು ಕಾರ್ಯಾಚರಣೆಯನ್ನು ಘೋಷಿಸಿದ್ದಾರೆ. “100 ಕ್ಕೂ ಹೆಚ್ಚು ದೇಶಗಳ ಪ್ರತಿನಿಧಿಗಳು ಗಾಝಾದ ಮೇಲಿನ ಇಸ್ರೇಲ್ ಮುತ್ತಿಗೆಯನ್ನು ಪ್ರಶ್ನಿಸಲು ಒಗ್ಗೂಡಿದ್ದಾರೆ,” ಎಂದು ಪೋಸ್ಟ್ನಲ್ಲಿ ಉಲ್ಲೇಖಿಸಲಾಗಿದೆ. ಗಾಝಾದಲ್ಲಿ ಮುಂದುವರಿಯುತ್ತಿರುವ ಮಾನವೀಯ ಸಂಕಷ್ಟದ ನಡುವೆ ಈ ಕಾರ್ಯಾಚರಣೆ ಅಂತರರಾಷ್ಟ್ರೀಯ ಗಮನ ಸೆಳೆಯುತ್ತಿದೆ.
ಬಾಗಲಕೋಟೆ ಉಪಚುನಾವಣೆ : ಸಿದ್ದರಾಮಯ್ಯ ಮನವೋಲಿಕೆ ಆಗಿದ್ಯಾ ಯಶಸ್ವಿ, ಮೇಟಿ ಕುಟುಂಬದ ನಾಲ್ವರಲ್ಲಿ ಯಾರಿಗೆ ಟಿಕೆಟ್?
ಬಾಗಲಕೋಟೆ ಉಪಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್ ಇನ್ನೂ ಅಂತಿಮಗೊಂಡಿಲ್ಲ. ಮೇಟಿ ಕುಟುಂಬದಲ್ಲಿ ಟಿಕೆಟ್ ಗಾಗಿ ಸಾಕಷ್ಟು ಪೈಪೋಟಿ ಇದೆ. ಎಚ್ ವೈ ಮೇಟಿ ಅವರ ನಾಲ್ವರು ಮಕ್ಕಳಲ್ಲಿ ಟಿಕೆಟ್ ಗಾಗಿ ಪೈಪೋಟಿ ಇದೆ. ಈ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರು ಬುಧವಾರ ವಿಧಾನಸೌಧದ ಕಚೇರಿಯಲ್ಲಿ ಮನವೋಲಿಕೆ ಪ್ರಯತ್ನ ನಡೆಸಿದ್ದಾರೆ. ಆದರೆ ಈ ಮನವೋಲಿಕೆ ಪ್ರಯತ್ನ ಎಷ್ಟರ ಮಟ್ಟಿಗೆ ಯಶಸ್ವಿ ಆಗಿದೆ? ಎಂಬುವುದು ಕುತೂಹಲಕ್ಕೆ ಕಾರಣವಾಗಿದೆ. ಮೇಟಿ ಕುಟುಂಬದ ನಾಲ್ವರಲ್ಲಿ ಯಾರಿಗೆ ಟಿಕೆಟ್? ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ.
ತೈಲ ಬಿಕ್ಕಟ್ಟಿನಿಂದ ಪಾಕಿಸ್ತಾನದಲ್ಲಿ ಗಣರಾಜ್ಯೋತ್ಸವ ಪರೇಡ್ ರದ್ದು: ಸೇನಾ ಪ್ರದರ್ಶನಕ್ಕೂ ಇಂಧನ ಇಲ್ಲದೆ ಪರದಾಟ!
ಮಧ್ಯಪ್ರಾಚ್ಯದಲ್ಲಿ ಯುದ್ದದಿಂದಾಗಿ ಉಂಟಾಗಿರುವ ತೈಲ ಬಿಕ್ಕಟ್ಟು ಈಗಾಗಲೇ ದಯನೀಯ ಸ್ಥಿತಿಯಲ್ಲಿದ್ದ ಪಾಕಿಸ್ತಾನವನ್ನು ಮತ್ತಷ್ಟು ಅತಂತ್ರ ಸ್ಥಿತಿಗೆ ತಳ್ಳಿದ್ದು, ಇದರಿಂದಾಗಿ ಮಾ.23ರಂದು ನಡೆಯಬೇಕಿದ್ದ ಪಾಕ್ ಗಣರಾಜ್ಯೋತ್ಸವ ದಿನಾಚರಣೆಯ ಮಿಲಿಟರಿ ಪರೇಡ್ ಕಾರ್ಯಕ್ರಮವನ್ನು ರದ್ದುಗೊಳಿಸಿದ್ದು, ಸರಳವಾಗಿ ಧ್ವಜಾರೋಹಣ ಸಮಾರಂಭದ ಮೂಲಕ ಆಚರಿಸಲು ಪಾಕ್ ಸರ್ಕಾರ ಆದೇಶ ನೀಡಿದೆ. ಇತ್ತ ಇರಾನ್ ಮೇಲಿನ ದಾಳಿಗಳನ್ನು ಖಂಡಿಸಿದ ಪಾಕಿಸ್ತಾನದಲ್ಲಿ ವ್ಯಾಪಕ ಪ್ರತಿಭಟನೆಗಳು ಭುಗಿಲೆದಿದ್ದು, ಇದರಿಂದಾಗಿ ಹತ್ತಾರು ಜನ ಸಾವನ್ನಪ್ಪಿದ್ದಾರೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಪಾಕ್ ಸೇನಾ ಮುಖ್ಯಸ್ಥ ಆಸೀಮ್ ಮುನೀರ್ ಇತರ ದೇಶಗಳ ಬೆಳವಣಿಗೆಗಳ ಬಗ್ಗೆ ಪಾಕ್ ನಲ್ಲಿ ಹಿಂಸಾಚಾರ ನಡೆಸುವುದನ್ನು ಸಹಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.
ಗಾಳಿ ಆಂಜನೇಯ ಸ್ವಾಮಿ ಜಾತ್ರೆ: ಟ್ರಸ್ಟಿಗಳ ಸಹಭಾಗಿತ್ವಕ್ಕೆ ಹೈಕೋರ್ಟ್ ಹಸಿರು ನಿಶಾನೆ
ಮೈಸೂರು ರಸ್ತೆಯ ಐತಿಹಾಸಿಕ ಗಾಳಿ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ನಡೆಯಲಿರುವ ವಾರ್ಷಿಕ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲು ದೇಗುಲದ ಟ್ರಸ್ಟಿಗಳಿಗೆ ಕರ್ನಾಟಕ ಹೈಕೋರ್ಟ್ ಅನುಮತಿ ನೀಡಿದೆ. ನ್ಯಾಯಮೂರ್ತಿ ಸಚಿನ್ ಶಂಕರ್ ಮಗದುಮ್ ಅವರಿದ್ದ ಏಕಸದಸ್ಯ ಪೀಠವು ಈ ಕುರಿತು ಮಧ್ಯಂತರ ಆದೇಶ ಹೊರಡಿಸಿದೆ.
ʼನೈತಿಕ ಕಾರಣʼ ಉಲ್ಲೇಖಿಸಿ HDFC ಬ್ಯಾಂಕ್ ಅಧ್ಯಕ್ಷ ಅತನು ಚಕ್ರವರ್ತಿ ರಾಜೀನಾಮೆ
ಷೇರುಗಳಲ್ಲಿ ಕುಸಿತ; RBI ಯಿಂದ ಮಧ್ಯಂತರ ವ್ಯವಸ್ಥೆಗೆ ಅನುಮೋದನೆ
ಕಟ್ಟಡ ಕಾಮಗಾರಿಗೆ ಕುಡಿಯುವ ನೀರು ಬಳಕೆ: ಅಧಿಕಾರಿಗಳಿಂದ ಮೌನ ಸಮ್ಮತಿ
ಸಿಂಧನೂರು: ಸರಕಾರಿ ಕಾಲೇಜೊಂದರ ನೂತನ ಕಟ್ಟಡದ ಕಾಮಗಾರಿಗೆ ಅಕ್ರಮ ನೀರು ಬಳಕೆ ಮಾಡಿಕೊಳ್ಳುತ್ತಿದ್ದರೂ ನಗರಸಭೆ ಅಧಿಕಾರಿಗಳು ಮಾತ್ರ ನಿರ್ಲಕ್ಷ್ಯ ತಾಳಿದ್ದು, ಅಧಿಕಾರಿಗಳ ಅಸಡ್ಡೆಗೆ ಸಾಕ್ಷಿಯಾಗಿದೆ. ನಗರದ ಪದವಿ ಮಹಾವಿದ್ಯಾಲಯದ ಹಿಂದುಗಡೆ ಕಾಲೇಜಿನ ನೂತನ ಕಟ್ಟಡದ ಕಾಮಗಾರಿ ನಡೆದಿದ್ದು, ಕಾಮಗಾರಿಗೆ ನಗರಸಭೆಯ ಕೆರೆ ಮತ್ತು ಸಾರ್ವಜನಿಕರ ಬಳಕೆಗೆ ಹಾಕಲಾಗಿರುವ ಪೈಪ್ಲೈನ್ ಮುಖಾಂತರ ಅನಧಿಕೃತವಾಗಿ ನೀರನ್ನು ಬಳಸಿಕೊಳ್ಳಲಾಗುತ್ತಿದೆ. ತಮ್ಮ ನೀರನ್ನು ಅನಧಿಕೃತವಾಗಿ ಕಟ್ಟಡಕ್ಕೆ ಬಳಸಿಕೊಳ್ಳುತ್ತಿರುವುದು ಅಧಿಕಾರಿಗಳ ಗಮನಕ್ಕೆ ಬಂದಿದ್ದರೂ ಕ್ರಮಕ್ಕೆ ಮುಂದಾಗದೇ ಕೈ ಕಟ್ಟಿ ಕುಳಿತಿರುವುದು ಅನುಮಾನ ಮೂಡಿಸಿದೆ. ಕೆರೆ ನೀರು ಬಳಕೆ: ಬೇಸಿಗೆ ಹಿನ್ನೆಲೆಯಲ್ಲಿ ಈಗಾಗಲೇ ನಗರ ವ್ಯಾಪ್ತಿಯಲ್ಲಿ 8ರಿಂದ 10 ದಿನಕ್ಕೊಮ್ಮೆ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ. ಕೆಲ ವಾರ್ಡುಗಳಲ್ಲಿ ಸಮರ್ಪಕ ನೀರು ಪೂರೈಕೆಯಾಗದೇ ಜನರು ನಗರಸಭೆ ವಿರುದ್ಧ ಹಿಡಿಶಾಪ ಹಾಕುತ್ತಿದ್ದಾರೆ. ಈ ನಡುವೆ ಸರಕಾರಿ ಕಟ್ಟಡಕ್ಕೆ ನೇರವಾಗಿ ಸಣ್ಣ ಕೆರೆಗೆ ಮೋಟಾರು ಇಟ್ಟು ಕೆರೆ ನೀರನ್ನು ಬಳಸಿಕೊಳ್ಳುತ್ತಿರುವುದು ಆಕ್ರೋಶಕ್ಕೆ ಕಾರಣವಾಗಿದೆ. ಕಟ್ಟಡ ಕಾಮಗಾರಿಗೆ ಅನಧಿಕೃತವಾಗಿ ನಗರಸಭೆ ನೀರನ್ನು ಬಳಸಿಕೊಳ್ಳುತ್ತಿರುವ ಬಗ್ಗೆ ಜನರು ನಗರಸಭೆ ಅಧಿಕಾರಿಗಳಿಗೆ ಗಮನಕ್ಕೆ ತಂದರೂ ಕ್ರಮಕ್ಕೆ ಹಿಂದೇಟು ಹಾಕುತ್ತಿರುವ ಅಧಿಕಾರಿಗಳ ನಡೆಗೆ ಆಕ್ರೋಶ ವ್ಯಕ್ತವಾಗುತ್ತಿದೆ. ಕಟ್ಟಡದ ಗುತ್ತಿಗೆ ಪಡೆದ ಗುತ್ತೇದಾರರ ಪರ ಕೆಲ ರಾಜಕೀಯ ಮುಖಂಡರು ವಕಾಲತ್ತು ವಹಿಸಿ, ಅಧಿಕಾರಿಗಳ ಮೇಲೆ ಪ್ರಭಾವ ಬೀರುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ನಗರಸಭೆಯಿಂದ ಅಧಿಕೃತವಾಗಿ ಪರವಾನಿಗೆ ಪಡೆಯದೇ ಈಗಾಗಲೇ ನಗರದ ಹಲವೆಡೆ ನೀರು ಬಳಕೆ ಮಾಡಿಕೊಳ್ಳಲಾಗುತ್ತಿದೆ. ಕೆಲವು ದೊಡ್ಡ ದೊಡ್ಡ ಹೋಟೆಲ್, ರೆಸ್ಟೋರೆಂಟ್ ಹಾಗೂ ಅಪಾರ್ಟ್ಮೆಂಟ್ಗಳಲ್ಲಿ ಒಂದೇ ನಳದ ಸಂಪರ್ಕಕ್ಕೆ ಅನುಮತಿ ಪಡೆದು, ನಾಲ್ಕೈದು ನಳದ ಸಂಪರ್ಕವನ್ನು ಅಕ್ರಮವಾಗಿ ಪಡೆದು ಹೆಚ್ಚಿನ ನೀರನ್ನು ಬಳಸಿಕೊಳ್ಳುತ್ತಿದ್ದಾರೆ. ಈಗಿರುವ ಎರಡು ಕೆರೆಗಳ ನೀರೇ ನಗರದ ಜನತೆಗೆ ಆಧಾರವಾಗಿದ್ದು, ಅಕ್ರಮ ಬಳಕೆ ನಿರಂತರವಾಗಿ ನಡೆದರೆ ಬೇಸಿಗೆಯಲ್ಲಿ ನೀರಿನ ಅಭಾವ ಸೃಷ್ಟಿಯಾಗಲಿದೆ. ಕೂಡಲೇ ನಗರಸಭೆ ಅಧಿಕಾರಿಗಳು ಎಚ್ಚೆತ್ತುಕೊಂಡು ಅಕ್ರಮ ನೀರು ಬಳಕೆದಾರರ ವಿರುದ್ಧ ಕ್ರಮಕ್ಕೆ ಮುಂದಾಗುತ್ತಾರೋ ಇಲ್ಲವೋ ಕಾದು ನೋಡಬೇಕಿದೆ. ಬೇಸಿಗೆ ಹಿನ್ನಲೆಯಲ್ಲಿ ಈಗಾಗಲೇ ನಗರಸಭೆಯಿಂದ ಕುಡಿಯುವ ನೀರಿನ ಕೆರೆಗೆ ನೀರನ್ನು ತುಂಬಿಸಿಕೊಳ್ಳುವ ಕಾರ್ಯ ಒಂದೆಡೆ ಸಾಗಿದ್ದರೆ, ಇನ್ನೊಂದೆಡೆ ಕಟ್ಟಡ ಕಾಮಗಾರಿಗೆ ನೀರನ್ನು ಬಳಸುತ್ತಿರುವುದು ನೋಡಿದರೆ ಬೇಸಿಗೆಯಲ್ಲಿ ನೀರಿನ ಅಭಾವ ಸೃಷ್ಟಿಯಾಗುವ ಸಾಧ್ಯತೆಗಳಿವೆ. ಅಧಿಕಾರಿಗಳು ಎಚ್ಚೆತ್ತುಕೊಂಡು ಅಕ್ರಮವಾಗಿ ನೀರು ಬಳಕೆಗೆ ಕಡಿವಾಣ ಹಾಕಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಎದುರಾಗುವ ನೀರಿನ ಸಮಸ್ಯೆಗೆ ಅಧಿಕಾರಿಗಳೇ ಹೊಣೆಯಾಗಲಿದ್ದಾರೆ. -ಮಂಜುನಾಥ ಬಾದರ್ಲಿ, ಯುವ ಮುಖಂಡ ಸಿಂಧನೂರು ಕೆರೆ ನೀರು ಬಳಸಿ, ಹಣ ಉಳಿಸಿಕೊಳ್ಳುವ ಹುನ್ನಾರ... ಕೋಟ್ಯಾಂತರ ರೂ. ವೆಚ್ಚದ ಕಾಮಗಾರಿಯನ್ನು ಗುತ್ತಿಗೆ ಪಡೆದ ಗುತ್ತಿಗೆದಾರರು, ನಿಗದಿತ ಗುತ್ತಿಗೆ ನಿಯಮಗಳ ಪ್ರಕಾರ ಪ್ರತ್ಯೇಕವಾಗಿ ನೀರಿನ ಮೂಲದಿಂದ ನೀರು ಬಳಸಿಕೊಳ್ಳುವುದು ನಿಯಮ. ಆದರೆ ಇಲ್ಲಿನ ಗುತ್ತೇದಾರರು ಪಕ್ಕದಲ್ಲಿರುವ ಸಾರ್ವಜನಿಕ ಕುಡಿಯುವ ನೀರನ್ನೇ ಅಕ್ರಮವಾಗಿ ಬಳಸಿಕೊಂಡು ಹಣ ಉಳಿಸಿಕೊಳ್ಳುವ ಹುನ್ನಾರ ನಡೆಸಿದ್ದಾರೆ. ಈ ನಡುವೆ ನಗರಸಭೆ ಕಣ್ತಪ್ಪಿಸಿ, ನಗರಸಭೆಯ ಕೆರೆಯಿಂದಲೇ ಅಕ್ರಮವಾಗಿ ನೀರು ಬಳಸಿಕೊಳ್ಳುತ್ತಿರುವುದು ಬಹಿರಂಗವಾಗಿದೆ. ಸರಕಾರಿ ಕಟ್ಟಡಕ್ಕೆ ಕುಡಿಯುವ ನೀರಿನ ಕೆರೆ ನೀರನ್ನು ಬಳಸಿಕೊಳ್ಳುವಂತಿಲ್ಲ. ದೂರು ಬಂದ ಹಿನ್ನೆಲೆಯಲ್ಲಿ ಸಣ್ಣ ಕೆರೆಗೆ ಅಳವಡಿಸಿದ್ದ ಮೋಟಾರನ್ನು ಕಿತ್ತೆಸೆಯಲಾಗಿದೆ. ಯಾವುದೇ ಕಾರಣಕ್ಕೂ ಕೆರೆಯ ನೀರನ್ನು ಬಳಸಿಕೊಳ್ಳಬಾರದು ಎಂದು ಕಾಮಗಾರಿ ನಿರ್ವಹಿಸುವ ಗುತ್ತೇದಾರರಿಗೆ ಸೂಚನೆ ನೀಡಲಾಗಿದೆ. ಕುಡಿಯುವ ನೀರಿಗೆ ನಳದ ಸಂಪರ್ಕ ಬೇಕಾದರೆ ನಿಯಮಾನುಸಾರ ನಗರಸಭೆಗೆ ಶುಲ್ಕ ಕಟ್ಟಿ, ಪರವಾನಿಗೆ ಪಡೆದುಕೊಂಡು ನಳದ ಸಂಪರ್ಕ ಪಡೆದುಕೊಳ್ಳಬೇಕು. -ಶಾಂತಕುಮಾರ, ಸಹಾಯಕ ಅಭಿಯಂತರ
ಚಿತ್ತಾಪುರದ ಮುಖ್ಯ ರಸ್ತೆಯ ಬೀದಿ ದೀಪಗಳ ಕಣ್ಣಾಮುಚ್ಚಾಲೆ
ಕತ್ತಲೆಯಲ್ಲಿ ಹೆದ್ದಾರಿ: ಸಂಚರಿಸಲು ಭಯ
ಕುಂದಾಪುರ : ಮಳಿಚಿಪ್ಪು ಹೆಕ್ಕುತ್ತಿದ್ದ ಯುವಕ ನೀರಿನಲ್ಲಿ ಮುಳುಗಿ ಮೃತ್ಯು
ಕುಂದಾಪುರ: ಅರಾಟೆ ಸೇತುವೆ ಬಳಿ ಹೊಳೆಯಲ್ಲಿ ಮರುವಾಯಿ (ಮಳಿಚಿಪ್ಪು) ಹೆಕ್ಕುತಿದ್ದ ಯುವಕನೊಬ್ಬ ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ವರದಿಯಾಗಿದೆ. ಮೃತರನ್ನು ಹಂಗಳೂರಿನ ಚಂದ್ರ (39) ಎಂದು ಗುರುತಿಸಲಾಗಿದೆ. ಚಂದ್ರ ಅವರು ತನ್ನ ಸಂಬಂಧಿಕ ಅಜಿತ್ ಅವರೊಂದಿಗೆ ಮಂಗಳವಾರ ಬೆಳಗ್ಗೆ 10ಗಂಟೆಗೆ ಅರಾಟೆ ಸೇತುವೆ ಬಳಿ ಮಳಿ ಹೆಕ್ಕಲು ಹೋಗಿದ್ದರು. ಕೆಲ ಹೊತ್ತಿನ ಬಳಿಕ ನೋಡಿದಾಗ ಚಂದ್ರ ಅವರು ಹೊಳೆಯಲ್ಲಿ ಕಾಣಿಸದೇ ಇದ್ದಾಗ ಅಜಿತ್ ಅವರಿಗಾಗಿ ಎಲ್ಲಾ ಕಡೆ ಹುಡುಕಾಟ ನಡೆಸಿದ್ದರು. ಬುಧವಾರ ಬೆಳಗ್ಗೆ ಮತ್ತೆ ಹುಡುಕಾಡಿದಾಗ ಬೆಳಿಗ್ಗೆ 09:45 ಗಂಟೆಗೆ ಅರಾಟೆ ಬ್ರಿಡ್ಜ್ ಬಳಿ ನದಿಯಲ್ಲಿ ಚಂದ್ರ ಅವರ ಮೃತ ದೇಹ ತೇಲುತ್ತಿರುವುದು ಪತ್ತೆಯಾಯಿತು. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆ ಪ್ರಕರಣ ದಾಖಲಾಗಿದೆ.
ಸಿದ್ದರಾಮಯ್ಯ ಮಾತನ್ನು ಮೇಟಿ ಕುಟುಂಬ ಮೀರಲ್ಲ, ಬಾಗಲಕೋಟೆಯಲ್ಲಿ ಕಾಂಗ್ರೆಸ್ ಗೆಲ್ಲುತ್ತೆ: ಆರ್ ಬಿ ತಿಮ್ಮಾಪುರ ವಿಶ್ವಾಸ
ಸಿದ್ದರಾಮಯ್ಯನವರ ಮಾತನ್ನು ಎಚ್ ವೈ ಮೇಟಿ ಕುಟುಂಬ ಮೀರುವುದಿಲ್ಲ. ಹಾಗಾಗಿ ಬಾಗಲಕೋಟೆಯಲ್ಲಿ ಕಾಂಗ್ರೆಸ್ ಗೆಲ್ಲುತ್ತದೆ ಎಂದು ಅಬಕಾರಿ ಸಚಿವ ಆರ್ ಬಿ ತಿಮ್ಮಾಪುರ ವಿಶ್ವಾಸ ವ್ಯಕ್ತಪಡಿಸಿದರು. ಬೆಂಗಳೂರಿನಲ್ಲಿ ಈ ಕುರಿತಾಗಿ ಅವರು ಗುರುವಾರ ಮಾತನಾಡಿ, ಬಾಗಲಕೋಟೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಆಯ್ಕೆ ವಿಚಾರವಾಗಿ ಯಾವುದೇ ಗೊಂದಲ ಇಲ್ಲ ಎಂದು ಸ್ಪಷ್ಟಪಡಿಸಿದರು. ಟಿಕೆಟ್ ವಿಚಾರವಾಗಿ ಬುಧವಾರ ಎಚ್ವೈ ಮೇಟಿ ಕುಟುಂಬ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿತ್ತು. ಭಿನ್ನಮತಕ್ಕೆ ಅವಕಾಶ ಕೊಡಬೇಡಿ ಎಂದು ಸಿಎಂ ಸೂಚಿಸಿದ್ದರು.
ಬೈಂದೂರು : ಚಲಿಸುತ್ತಿದ್ದ ರೈಲಿನಿಂದ ಬಿದ್ದು ಕೇರಳದ ಯುವಕ ಮೃತ್ಯು
ಬೈಂದೂರು: ಚಲಿಸುತ್ತಿದ್ದ ರೈಲಿನ ಬಾಗಿಲಿನ ಬಳಿ ಮೊಬೈಲ್ನಲ್ಲಿ ಮಾತನಾಡುತಿದ್ದ ಕೇರಳದ ಯುವಕರೊಬ್ಬರು ಆಕಸ್ಮಿಕವಾಗಿ ಆಯತಪ್ಪಿ ಕೆಳಗೆ ಬಿದ್ದು ಮೃತಪಟ್ಟ ಘಟನೆ ಮಂಗಳವಾರ ರಾತ್ರಿ ಕಿರಿಮಂಜೇಶ್ವರ ಹೈಸ್ಕೂಲ್ ಬಳಿಯ ರೆಲ್ವೆ ಹಳಿಯಲ್ಲಿ ನಡೆದಿದೆ. ಮೃತರನ್ನು ಕೊಲ್ಲಂ ಜಿಲ್ಲೆಯ ಸೈಫುರ್ರಹ್ಮಾನ್ (33) ಎಂದು ಗುರುತಿಸಲಾಗಿದೆ. ಇವರು ಸಂಬಂಧಿಕರೊಂದಿಗೆ ಗೋವಾ ಮಡಗಾಂವ್ನಿಂದ ತ್ರಿವೆಂಡ್ರಮ್ ನಾರ್ತ್ ಸೂಪರ್ ಫಾಸ್ಟ್ ಎಕ್ಸ್ಪ್ರೆಸ್ನಲ್ಲಿ ಕೊಲ್ಲಂಗೆ ಪ್ರಯಾಣಿಸುತ್ತಿದ್ದರು. ಮಾ.17ರ ರಾತ್ರಿ 9ಗಂಟೆ ಸುಮಾರಿಗೆ ಸೈಫುರ್ರಹ್ಮಾನ್ ಅವರು ಡೋರ್ ಸಮೀಪದಲ್ಲಿ ಮೊಬೈಲ್ ನಲ್ಲಿ ಮಾತಾಡಿಕೊಂಡಿದ್ದಾಗ ಬೈಂದೂರು ಕಿರಿಮಂಜೇಶ್ವರದ ಹೈಸ್ಕೂಲ್ ಹತ್ತಿರ ಬರುವಾಗ ಚಲಿಸುತ್ತಿದ್ದ ರೈಲಿನಿಂದ ಆಯತಪ್ಪಿ ಕೆಳಗೆ ಟ್ರಾಕ್ ಗೆ ಬಿದ್ದು ಗಂಬೀರ ಗಾಯಗೊಂಡು ಮೃತಪಟ್ಟಿದ್ದಾರೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
IMD Weather Forecast: ಈ ಭಾಗಗಳಲ್ಲಿ ಮುಂದಿನ 3 ದಿನ ಬಿರುಗಾಳಿ, ಆಲಿಕಲ್ಲು ಸಹಿತ ಭಾರೀ ಮಳೆ
India Rain Alert: ಕರ್ನಾಟಕ, ತಮಿಳುನಾಡು ಸೇರಿದಂತೆ ಭಾರತದಾದ್ಯಂತ ಪೂರ್ವ ಮುಂಗಾರು ಮಳೆ ಅಬ್ಬರ ಜೋರಾಗಿದೆ. ಮುಂದಿನ ಕೆಲ ದಿನಗಳ ಕಾಲ ದೇಶದ ವಿವಿಧ ರಾಜ್ಯಗಳಲ್ಲಿ ಆಲಿಕಲ್ಲು ಹಾಗೂ ಬಿರುಗಾಳಿ ಸಹಿತ ಜೋರು ಮಳೆ ನಿರೀಕ್ಷೆ ಇದೆ. ಅಲ್ಲಲ್ಲಿ ಒಣಹವೆ ಮುಂದುವರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಮುನ್ಸೂಚನೆ ನೀಡಿದೆ. ವಾಯುವ್ಯ ಭಾರತದ ಪ್ರದೇಶಗಳಾದ ಜಮ್ಮು-ಕಾಶ್ಮೀರ,
Kotekar| ಬಾಲಕನಿಗೆ ಲೈಂಗಿಕ ಕಿರುಕುಳ: ಆರೋಪಿ ಪೊಲೀಸ್ ವಶಕ್ಕೆ
ಕೊಣಾಜೆ: 9 ವರ್ಷದ ಬಾಲಕನನ್ನು ಹಣ ಹಾಗೂ ತಿಂಡಿ ನೀಡುವ ನೆಪದಲ್ಲಿ ಕರೆದುಕೊಂಡು ಹೋಗಿ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣಕ್ಕೆ ಸಂಬಂದಿಸಿದಂತೆ ವ್ಯಕ್ತಿಯೋರ್ವನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಬಂಧಿತ ಆರೋಪಿಯನ್ನು ಕೋಟೆಕಾರ್ ಮಡ್ಯಾರ್ ನಿವಾಸಿ ಆಶೀಶ್ ಪೂಜಾರಿ (33) ಎಂದು ಗುರುತಿಸಲಾಗಿದೆ. ಆರೋಪಿಯು ಅಶ್ಲೀಲ ವಿಡಿಯೋ ತೋರಿಸಿ ಅಸಭ್ಯ ಕ್ರಿಯೆಗಳಿಗೆ ಪ್ರೇರೇಪಿಸಿರುವುದು ಬೆಳಕಿಗೆ ಬಂದಿದೆ. ಈ ಸಂಬಂಧ ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲಿಸಿ ಆರೋಪಿಯನ್ನು ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಸೌದಿ ಅರೇಬಿಯಾ | ಅರಾಮ್ಕೊದ ಸ್ಯಾಮ್ರೆಫ್ ಸಂಸ್ಕರಣಾಗಾರದ ಮೇಲೆ ಅಪ್ಪಳಿಸಿದ ಡ್ರೋನ್ : ವರದಿ
ರಿಯಾದ್ : ಸೌದಿ ಅರೇಬಿಯಾದ ಅರಾಮ್ಕೊದ ಸ್ಯಾಮ್ರೆಫ್ ಸಂಸ್ಕರಣಾಗಾರದ ಮೇಲೆ ಡ್ರೋನ್ ಅಪ್ಪಳಿಸಿರುವ ಬಗ್ಗೆ ಸೌದಿ ಅರೇಬಿಯಾದ ರಕ್ಷಣಾ ಸಚಿವಾಲಯ ತಿಳಿಸಿದೆ ಎಂದು Aljazeera ವರದಿ ಮಾಡಿದೆ. ಸೌದಿ ಅರೇಬಿಯಾದ ರಕ್ಷಣಾ ಸಚಿವಾಲಯದ ಪ್ರಕಾರ, ಬಂದರು ನಗರ ಯಾನ್ಬುನಲ್ಲಿ ಇರುವ ಸೌದಿ ಅರಾಮ್ಕೋಗೆ ಸೇರಿದ ಸ್ಯಾಮ್ರಿಫ್ ರಿಫೈನರಿಗೆ ಡ್ರೋನ್ ಅಪ್ಪಳಿಸಿದೆ. ಘಟನೆಯಿಂದಾದ ಹಾನಿಯ ಬಗ್ಗೆ ಮೌಲ್ಯಮಾಪನ ನಡೆಯುತ್ತಿದೆ ಎಂದು ಸಚಿವಾಲಯ ತಿಳಿಸಿದೆ. ಇರಾನ್ನ ಸೌತ್ ಪಾರ್ಸ್ ಗ್ಯಾಸ್ ಫೀಲ್ಡ್ ಮೇಲೆ ಇಸ್ರೇಲ್ ದಾಳಿ ನಡೆಸಿದ ಬೆನ್ನಲ್ಲೆ ಇರಾನ್ ಪ್ರತೀಕಾರದ ಎಚ್ಚರಿಕೆಯನ್ನು ನೀಡಿತ್ತು.
ಇರಾನ್ ಸಂಘರ್ಷದ ಪರಿಣಾಮ ಹೊಸ ಸಮುದ್ರ ಮಾರ್ಗ ರೂಪಿಸಲು ಶುರುವಾಯ್ತು ಒತ್ತಡ... Iran Conflict
ಇರಾನ್ ಮತ್ತು ಅಮೆರಿಕ ನಡುವಿನ ಯುದ್ಧವು ಜಗತ್ತಿನಲ್ಲಿ ಹಲವು ದೊಡ್ಡ ದೊಡ್ಡ ಬದಲಾವಣೆಗೆ ಈಗ ನಾಂದಿ ಹಾಡುತ್ತಿದೆ. ಒಂದು ಕಡೆ ಕಚ್ಚಾತೈಲ ಎಂಬ ಅತಿ ಅಗತ್ಯ ವಸ್ತುವಿನ ಬೆಲೆ ಏರಿಕೆಯು ತಲ್ಲಣ ಎಬ್ಬಿಸಿ ಜಗತ್ತಿನ ಆರ್ಥಿಕತೆ ಅಲ್ಲಾಡಿ ಹೋಗುವಂತೆ ಮಾಡುತ್ತಿದೆ. ಯಾವಾಗ ಕಚ್ಚಾತೈಲ ಬೆಲೆ ಪ್ರತಿ ಬ್ಯಾರಲ್ಗೆ 100 ಅಮೆರಿಕನ್ ಡಾಲರ್ ಮೀರಿ ಹೋಯ್ತೋ ಅಲ್ಲಿಂದಲೇ ಹೊಸ
Karnataka Weather: ಇನ್ನೂ ಒಂದು ವಾರಗಳ ಕಾಲ ರಾಜ್ಯದಲ್ಲಿ ಭಾರಿ ಮಳೆ , ಗಾಳಿ, ಗುಡುಗಿನ ಅಬ್ಬರ ಇರಲಿದೆ. ರಾಜಧಾನಿ ಬೆಂಗಳುರು ಸೇರಿಂದ ದಕ್ಷಿಣ ಒಳನಾಡಿನ ಬಹುತೇಕ ಜಿಲ್ಲೆಗಳಲ್ಲಿ, ಕರಾವಳಿ ಜಿಲ್ಲೆಗಳು ಹಾಗೂ ಉತ್ತರ ಒಳನಾಡಿನಲ್ಲಿಯೂ ಮಳೆಯಾಗಲಿದೆ.
ಸಿಂಧನೂರು | ಮಠದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಸ್ವಾಮೀಜಿಯ ಮೃತದೇಹ ಪತ್ತೆ
ಸಿಂಧನೂರು : ಸರಕಾರಿ ಸೇವೆಯಲ್ಲಿದ್ದುಕೊಂಡೇ ಮಠ ಸ್ಥಾಪಿಸಿ, ಸ್ವಾಮೀಜಿಯಾಗಿದ್ದ ಮುಖ್ಯಗುರುವೊಬ್ಬರ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ತಾಲೂಕಿನ ಬಸ್ಸಾಪುರ (ಇಜೆ) ಗ್ರಾಮದಲ್ಲಿ ಬುಧವಾರ ಬೆಳಗ್ಗೆ ನಡೆದಿದೆ. ಮುಳ್ಳೂರು ಇಜೆ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಗುರು ದೇವೆಂದ್ರಪ್ಪ (58) ಮೃತರು. ಸರಕಾರಿ ಶಿಕ್ಷಕನಾಗಿ ಸೇವೆಯಲ್ಲಿದ್ದ ದೇವೆಂದ್ರಪ್ಪ ಅವರು, ಕಳೆದ ಅನೇಕ ವರ್ಷಗಳಿಂದ ವೈರಾಗ್ಯ ಜೀವನದತ್ತ ಮುಖ ಮಾಡಿದ್ದರು ಎನ್ನಲಾಗಿದೆ. ಮೂಲತಃ ಗದಗ ಜಿಲ್ಲೆಯ ಗಜೇಂದ್ರಗಡ ತಾಲೂಕಿನ ಗುಳಗುಳಿ ಗ್ರಾಮದ ಅವರು ಕಳೆದ ಎರಡು ದಶಕಗಳಿಂದ ಸಿಂಧನೂರಿನಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಾ, ಸರಕಾರಿ ನೌಕರಿ ಜೊತೆಗೆ ಬಸ್ಸಾಪುರ ಗ್ರಾಮದಲ್ಲಿ ಮಠ ಶಿವಾನಂದ ಜಗದ್ಗುರು ನಾಮದಡಿ ಮಠವನ್ನು ಸ್ಥಾಪಿಸಿ, ತಮ್ಮದೇ ಆದ ಭಕ್ತಸಮೂಹ ಸಂಪಾದಿಸಿದ್ದರು. ಶಾಲಾ ಅವಧಿ ನಂತರ ಮಠದಲ್ಲಿ ಪುರಾಣ, ಪ್ರವಚನ ನಡೆಸುತ್ತಿದ್ದ ತಮ್ಮ ಮಠದಲ್ಲೇ ಅವರ ಮೃತದೇಹ ಪತ್ತೆಯಾಗಿದೆ. ವಿಷಯ ತಿಳಿದು ಸ್ಥಳಕ್ಕೆ ತುರ್ವಿಹಾ ಳ ಪಿಎಸ್ಐ ಸುಜಾತ ಭೇಟಿ ನೀಡಿ ಘಟನೆ ಬಗ್ಗೆ ಕುಟುಂಬಸ್ಥರು ಹಾಗೂ ಭಕ್ತರ ಬಳಿ ಮಾಹಿತಿ ಪಡೆದುಕೊಂಡಿದ್ದಾರೆ. ರಮೇಶ ಎನ್ನುವವರು ದೂರು ನೀಡಿದ್ದು, ತುರ್ವಿಹಾಳ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಆಕ್ಸಿಜನ್ ಸಿಲಿಂಡರ್ ನೆರವಿವಿಂದ ಎಸ್ಎಸ್ಎಲ್ಸಿ ಪರೀಕ್ಷೆ ಬರೆದ ವಿದ್ಯಾರ್ಥಿ: ಸಲಾಂ ಎಂದ ದೇಶದ ಜನತೆ
SSLC Examination 2026: ದೃಢ ಸಂಕಲ್ಪ ಮತ್ತು ಛಲವಿದ್ದರೆ ಎಂತಹ ಕಷ್ಟವನ್ನೂ ಎದುರಿಸಬಹುದು ಎಂಬುದಕ್ಕೆ ಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆಯ ಕೊತ್ತಪಟ್ನಂನ 10ನೇ ತರಗತಿ ವಿದ್ಯಾರ್ಥಿಯೊಬ್ಬ ಸಾಕ್ಷಿಯಾಗಿದ್ದಾನೆ. ತೀವ್ರ ಅನಾರೋಗ್ಯದ ನಡುವೆಯೂ ಈ ವಿದ್ಯಾರ್ಥಿ ಆಮ್ಲಜನಕದ (Oxygen) ಸಿಲಿಂಡರ್ ಇಟ್ಟುಕೊಂಡು ಮತ್ತು ಮುಖಕ್ಕೆ ಮಾಸ್ಕ್ ಧರಿಸಿ ಬೋರ್ಡ್ ಪರೀಕ್ಷೆಗೆ ಹಾಜರಾಗುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರನಾಗಿದ್ದಾನೆ. ಅನಾರೋಗ್ಯದಿಂದಾಗಿ ಉಸಿರಾಟದ
ಮಧ್ಯಪ್ರಾಚ್ಯದಲ್ಲಿನ ಯುದ್ಧದಿಂದಾಗಿ ದೇಶದಾದ್ಯಂತ ಅಡುಗೆ ಅನಿಲ ವ್ಯತ್ಯಯ ಉಂಟಾಗಿದ್ದು, ಇದರಿಂದಾಗಿ ಜನರು ಕಂಗಾಲಾಗಿದ್ದಾರೆ. ಆದರೆ, ರಾಮನಗರದ ಹಲವು ಗ್ರಾಮಗಳಲ್ಲಿ LPG ಸಿಲಿಂಡರ್ ಗಳಿಗೆ ಬದಲಾಗಿ ಸರಕಾರಿ ಸ್ವಾಮ್ಯದ ಕಂಪನಿಯೊಂದು ಪೈಪ್ಲೈನ್ ಮೂಲಕ ನ್ಯಾಚುರಲ್ ಗ್ಯಾಸ್ (ಪಿಎನ್ಜಿ) ವ್ಯವಸ್ಥೆಯನ್ನು ಅಳವಡಿಸಿಕೊಂಡಿದ್ದು, ಇದರಿಂದಾಗಿ ಅಡುಗೆ ಅನಿಲ ಬಿಕ್ಕಟ್ಟಿನ ನಡುವೆಯೂ ಯಾವುದೇ ಬುಕ್ಕಿಂಗ್ ಸಮಸ್ಯೆ ಇಲ್ಲದೆ, ದಿನದ 24 ಗಂಟೆಯೂ ಸಹ ಗ್ಯಾಸ್ ಪೂರೈಕೆಯಾಗುತ್ತಿದೆ. ಹೀಗೆ ಜಿಲ್ಲೆಯಲ್ಲಿನ ಸುಮಾರು 10 ಸಾವಿರ ಮನೆಗಳಿಗೆ PNG ಗ್ಯಾಸ್ ಸರಬರಾಜಾಗುತ್ತಿದ್ದು, ಆತಂಕವಿಲ್ಲದೆ ಜೀವನ ಸಾಗಿಸುತ್ತಿದ್ದಾರೆ.
ಯುದ್ಧದ ಬಿಸಿ: ಬೆಂಗಳೂರಿಗೆ ಅರಬ್ ರಾಷ್ಟ್ರಗಳ ವಿಮಾನ ಸಂಚಾರ ಕಡಿತ; ರಾಜ್ಯ ಟ್ರಾವೆಲ್ಸ್ ಮಾಲೀಕರಲ್ಲಿ ಆತಂಕ
ಬೆಂಗಳೂರು: ಮಧ್ಯಪ್ರಾಚ್ಯದಲ್ಲಿ ಮುಂದುವರಿದ ಯುದ್ಧ ಪರಿಸ್ಥಿತಿ ಮತ್ತು ಭೂರಾಜಕೀಯ ಉದ್ವಿಗ್ನತೆ ಜಾಗತಿಕ ವಿಮಾನಯಾನ ಮತ್ತು ಪ್ರವಾಸೋದ್ಯಮ ಕ್ಷೇತ್ರದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ. ಹಲವಾರು ದೇಶಗಳ ವಾಯುಪ್ರದೇಶಗಳಲ್ಲಿ ನಿರ್ಬಂಧಗಳು, ವಿಮಾನ ಮಾರ್ಗ ಬದಲಾವಣೆಗಳು ಹಾಗೂ ದಿಢೀರ್ ವಿಮಾನಗಳ ಸಂಚಾರ ರದ್ದತಿ ಹೆಚ್ಚುತ್ತಿರುವುದರಿಂದ ಜಾಗತಿಕ ವಿಮಾನ ಸಂಚಾರ ವ್ಯವಸ್ಥೆ ಅಸ್ತವ್ಯಸ್ತವಾಗಿದೆ. ಇದರ ಪರಿಣಾಮವಾಗಿ ಯುರೋಪ್, ಏಷ್ಯಾ ಮತ್ತು ಆಫ್ರಿಕಾ
ಕಣಚೂರು ವಿದ್ಯಾ ಸಂಸ್ಥೆಯಿಂದ ಮೀಫ್ ಗೆ 51 ಉಚಿತ ಸೀಟುಗಳು
ಮೆಡಿಕಲ್ ಸೇರಿ NEET, JEE, CET ಇಂಟಿಗ್ರೇಟೆಡ್ ಪಿಯುಸಿ ಅವಕಾಶ
T20 ವಿಶ್ವಕಪ್ ಗೆದ್ದ ಬೆನ್ನಲ್ಲೇ, ಬಿಸಿಸಿಐಗೆ Chief Selector ಅಜಿತ್ ಅಗರ್ಕರ್ ವಿಶೇಷ ಮನವಿ
Ajit Agarkar : ಭಾರತ ಮತ್ತು ಶ್ರೀಲಂಕಾದಲ್ಲಿ ಜಂಟಿಯಾಗಿ ಆಯೋಜಿಸಲಾಗಿದ್ದ ಟಿ20 ವಿಶ್ವಕಪ್ ಟೂರ್ನಿ ಗೆದ್ದ ಬೆನ್ನಲ್ಲೇ, ಮುಖ್ಯ ಆಯ್ಕೆಗಾರ ಅಜಿತ್ ಅಗರ್ಕರ್, ಬಿಸಿಸಿಐಗೆ ವಿಶೇಷ ಮನವಿಯೊಂದನ್ನು ಮಾಡಿದ್ದಾರೆ. ಅಧಿಕಾರದ ಅವಧಿಯನ್ನು ವಿಸ್ತರಿಸುವಂತೆ, ಅಗರ್ಕರ್ ಮನವಿಯನ್ನು ಮಾಡಿದ್ದಾರೆ.
ಕಾಂಗ್ರೆಸ್ ದಡ ಮುಟ್ಟಿಸುವರೇ ಗೌರವ್?
ಅಸ್ಸಾಮಿನ ಸಾಮಾಜಿಕ- ರಾಜಕೀಯ ಪರಿಸ್ಥಿತಿ ಸುಲಭವಾಗಿ ಅರ್ಥವಾಗುವುದಿಲ್ಲ. ಒಂದಲ್ಲ, ಎರಡಲ್ಲ ಹತ್ತಾರು ಸಮಸ್ಯೆಗಳು ಗಿರಕಿ ಹೊಡೆಯುತ್ತಿವೆ. ವಸಾಹತುಶಾಹಿ ಕಾಲಘಟ್ಟದಿಂದ ಆರಂಭವಾದ ಗೋಜಲುಗಳು ಹಾಗೇ ಮುಂದುವರಿದಿವೆ. ಮೂಲ ನಿವಾಸಿಗಳು ಮತ್ತು ಅಕ್ರಮ ವಲಸಿಗರ ಹೆಸರಲ್ಲಿ ಅಸ್ಸಾಂ ಹೊತ್ತಿ ಉರಿದಿದೆ. ಉರಿಯುತ್ತಿದೆ. ದಶಕಗಳು ಕಳೆದರೂ ಸಮಸ್ಯೆಗೆ ಪರಿಹಾರ ಹುಡುಕಲಾಗಿಲ್ಲ. 1950-60ರ ದಶಕದಲ್ಲಿ ಪ್ರಬಲವಾಗಿದ್ದ ಭಾಷಾ-ಜನಾಂಗೀಯ ದ್ವೇಷ ದಳ್ಳೂರಿಯಾಗಿದ್ದು, 1970- 80ರ ದಶಕದಲ್ಲಿ. 1983ರ ‘ನೆಲ್ಲಿ ಹಿಂಸಾಚಾರ’ 2,000 ಜನರನ್ನು ಬಲಿ ಪಡೆದಿದೆ. ಇದಾದ ಮೂರು ದಶಕದ (2012) ಬಳಿಕ ನಡೆದ ಗಲಭೆಯಲ್ಲಿ 100ಕ್ಕೂ ಹೆಚ್ಚು ಜನ ಪ್ರಾಣ ಕಳೆದುಕೊಂಡಿದ್ದಾರೆ. ‘ನಮ್ಮ ಭೂಮಿ- ಬದುಕನ್ನು ಅಕ್ರಮ ವಲಸಿಗರು ಕಸಿದುಕೊಂಡಿದ್ದಾರೆ. ಅವರನ್ನು ಪತ್ತೆ ಹಚ್ಚಿ, ಹೊರಗಟ್ಟಲು ಸರಕಾರ ವಿಫಲವಾಗಿವೆ’ ಎಂಬುದು ಸ್ಥಳೀಯರ ಆಕ್ರೋಶ. ಇದೀಗ ಹಿಂದೂ-ಮುಸ್ಲಿಮ್ ದ್ವೇಷವಾಗಿ ಮಾರ್ಪಟ್ಟಿದೆ. ನೆಲ್ಲಿ ಹಿಂಸಾಚಾರ ಸಂಬಂಧ ನೇಮಿಸಿದ್ದ ತ್ರಿಭುವನ್ ಪ್ರಸಾದ್ ತಿವಾರಿ ಅವರ ವಿಚಾರಣಾ ಆಯೋಗ ಹಾಗೂ ನಿವೃತ್ತ ನ್ಯಾಯಮೂರ್ತಿ ಟಿ.ಯು. ಮೆಹ್ತಾ ಅವರ ಸಮಿತಿ ವರದಿಗಳನ್ನು ರಾಜ್ಯ ಸರಕಾರ ಕಳೆದ ನವೆಂಬರ್ ತಿಂಗಳಲ್ಲಿ ವಿಧಾನಸಭೆಯಲ್ಲಿ ಮಂಡಿಸಿದೆ. ಇವೆರಡೂ ವರದಿಗಳು ಇದುವರೆಗೂ ಬಹಿರಂಗವಾಗಿರಲಿಲ್ಲ. ಚುನಾವಣೆ ಹೊತ್ತಿನಲ್ಲಿ ವರದಿಗಳನ್ನು ಮಂಡಿಸಿದ್ದರ ಹಿಂದಿನ ಉದ್ದೇಶ ಸ್ಪಷ್ಟವಾಗಿದೆ. ತಿವಾರಿ ಆಯೋಗವನ್ನು ಆಗಿನ ಕಾಂಗ್ರೆಸ್ ಸರಕಾರ ನೇಮಿಸಿತ್ತು. ಈ ಹತ್ಯಾಕಾಂಡ ಸಂಬಂಧ ಎರಡೂ ಆಯೋಗಗಳು ವಿಭಿನ್ನ ಕಾರಣ ಪಟ್ಟಿ ಮಾಡಿವೆ. ಮೆಹ್ತಾ ಆಯೋಗ ಆಗಿನ ಕಾಂಗ್ರೆಸ್ ಸರಕಾರದ ಮೇಲೆ ಆರೋಪ ಹೊರಿಸಿದೆ. ‘ಗಲಭೆಯ ಸುಳಿವಿದ್ದರೂ ಸರಕಾರ ತಡೆಯಲಿಲ್ಲ’ ಎಂದಿದೆ. ಪ್ರತೀ ಸಲದ ಚುನಾವಣೆ ವೇಳೆ ನುಸುಳುಕೋರರ ಸಮಸ್ಯೆ ಮತದಾರರ ಅಂಗಳಕ್ಕೆ ಬರುತ್ತದೆ. ಎಲ್ಲ ಪಕ್ಷಗಳೂ ಬಂಡವಾಳ ಮಾಡಿಕೊಳ್ಳಲು ಹವಣಿಸುತ್ತವೆ. ವರದಿ ಮುಂದಿಟ್ಟು ಹಿಂದೂ ಮತಗಳನ್ನು ಒಗ್ಗೂಡಿಸುವುದು ಬಿಜೆಪಿ ಉದ್ದೇಶ. ಪಕ್ಷದೊಳಗೆ ತಮ್ಮ ಹಿಡಿತ ಬಿಗಿಗೊಳಿಸಲು ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರಿಗೂ ಇದು ಬೇಕಾಗಿದೆ. ಅಸ್ಸಾಮಿನಲ್ಲಿ 1979-85ರ ಮಧ್ಯೆ ಅಕ್ರಮ ವಲಸಿಗರ ವಿರುದ್ಧ ನಡೆದ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿದ್ದು ‘ಅಸ್ಸಾಂ ಗಣ ಸಂಗ್ರಾಮ ಪರಿಷತ್’ (ಎಜಿಎಸ್ಪಿ) ವಿದ್ಯಾರ್ಥಿ ಸಂಘಟನೆ. ನೆರೆಯ ಬಾಂಗ್ಲಾದಿಂದ ಅಕ್ರಮವಾಗಿ ನುಸುಳಿರುವ ಜನರನ್ನು ಪತ್ತೆ ಹಚ್ಚಿ ಹೊರಹಾಕುವ ಒಪ್ಪಂದಕ್ಕೆ ಸಹಿ ಹಾಕಿದ ಪ್ರಮುಖ ಸಂಘಟನೆಗಳಲ್ಲಿ ಇದೂ ಒಂದು. ಬಳಿಕ 1985ರಲ್ಲಿ ಅದು ಅಸ್ಸಾಂ ಗಣ ಪರಿಷತ್ (ಎಜಿಪಿ) ರಾಜಕೀಯ ಪಕ್ಷವಾಯಿತು. ಅಕ್ರಮ ವಲಸಿಗರ ಪತ್ತೆ ಹಚ್ಚುವುದು; ಮೂಲ ನಿವಾಸಿಗಳ ಅಸ್ಮಿತೆ ರಕ್ಷಣೆ; ಆರ್ಥಿಕ ಅಭಿವೃದ್ಧಿ ಪಕ್ಷದ ಆದ್ಯತೆಯಾಯಿತು. ಅದೇ ವರ್ಷ ನಡೆದ ವಿಧಾನಸಭೆ ಚುನಾವಣೆಯಲ್ಲಿ ಎಜಿಪಿ 67 ಸ್ಥಾನ ಗೆದ್ದು ಅಧಿಕಾರ ಹಿಡಿಯಿತು. ಎಜೆಪಿ ಮುಖಂಡ ಪ್ರಫುಲ್ಲ ಕುಮಾರ್ ಮಹಾಂತ ಮುಖ್ಯಮಂತ್ರಿ ಆದರು. ಈ ಸರಕಾರ ಹೆಚ್ಚು ಕಾಲ ಉಳಿಯಲಿಲ್ಲ. 1990ರಲ್ಲಿ ‘ಉಲ್ಫಾ’ ಉಗ್ರರ ಉಪಟಳ ಹೆಚ್ಚಾದಾಗ ಸರಕಾರ ವಜಾ ಆಯಿತು. ರಾಷ್ಟ್ರಪತಿ ಆಳ್ವಿಕೆ ಜಾರಿಯಾಯಿತು. 1996ರ ಚುನಾವಣೆಯಲ್ಲಿ ಪುನಃ ಮಹಾಂತ ಗೆದ್ದು ಮುಖ್ಯಮಂತ್ರಿ ಆದರು. ಮಹಾಂತ ಎರಡು ಸಲ ಅಧಿಕಾರ ಹಿಡಿದರೂ ಕೊಟ್ಟ ಮಾತು ಉಳಿಸಿಕೊಳ್ಳಲಿಲ್ಲ. ಜನರ ನಿರೀಕ್ಷೆ ಹುಸಿಯಾಯಿತು. ನಂಬಿಕೆ ಹಾಗೂ ವಿಶ್ವಾಸ ಕಳೆದುಕೊಂಡರು. ಅಧಿಕಾರಕ್ಕಾಗಿ ಕಚ್ಚಾಡಿದ್ದರಿಂದ ಪಕ್ಷ ಹೋಳಾಯಿತು. 2016ರಲ್ಲಿ ಬಿಜೆಪಿ ಜತೆ ಮೈತ್ರಿ. ಸರಕಾರ ರಚನೆ. 2019ರ ಲೋಕಸಭೆ ಚುನಾವಣೆ ವೇಳೆ ಸಿಎಎ ವಿರೋಧಿಸಿ, ಎನ್ಡಿಎ ಜತೆಗಿನ ಮೈತ್ರಿಗೆ ಆಕ್ಷೇಪ. ಅಕ್ರಮ ನುಸುಳುಕೋರರ ಸಮಸ್ಯೆ ಮುಂದಿಟ್ಟುಕೊಂಡು ಎಜಿಪಿ ಪ್ರಬಲವಾಗಿ ಬೆಳೆಯಿತು. ಆದರೆ, ಕೆಲವೇ ವರ್ಷಗಳಲ್ಲಿ ಶಕ್ತಿ ಕಳೆದುಕೊಂಡಿತು. ಎನ್ಡಿಎ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಈಗ ಬಂಗಾಳಿ ಮುಸ್ಲಿಮರನ್ನು ತೋರಿಸಿ, ಹಿಂದೂ ಮತಗಳನ್ನು ಒಗ್ಗೂಡಿಸುವ ಕೆಲಸ ಮಾಡುತ್ತಿದ್ದಾರೆ. ಕುತೂಹಲದ ಸಂಗತಿ ಎಂದರೆ, ‘‘ಮಿಯಾಗಳು, ಭೂ ಒತ್ತುವರಿ ತೆರವು ಸೇರಿ ತಮ್ಮ ಷರತ್ತುಗಳನ್ನು ಒಪ್ಪಿದರೆ ಅವರನ್ನು ತಾವು ವಿರೋಧ ಮಾಡುವುದಿಲ್ಲ’’ ಎಂದು ಈಚೆಗೆ ಮುಖ್ಯಮಂತ್ರಿ ಹೇಳಿದ್ದಾರೆ. ಅವರ ನಿಲುವು ಬದಲಾಗಿರುವುದು ಅಚ್ಚರಿ ಹುಟ್ಟಿಸಿದೆ. ಇದಕ್ಕೂ ಮೊದಲು, ‘‘ಮಿಯಾಗಳ ಬಳಿ ಮೀನು ಖರೀದಿಸಬೇಡಿ. ತರಕಾರಿ ಕೊಳ್ಳಬೇಡಿ. ಮಿಯಾ ಸಮುದಾಯದ ಆಟೊರಿಕ್ಷಾ ಚಾಲಕರು ಐದು ರೂಪಾಯಿ ಕೇಳಿದರೆ, ನಾಲ್ಕು ರೂಪಾಯಿ ಕೊಡಿ. ಅವರನ್ನು ಕೆಲಸಕ್ಕೆ ಕರೆಯಬೇಡಿ. ಈ ಜನಾಂಗಕ್ಕೆ ಬದುಕಲು ತೊಂದರೆ ಆದರೆ ಅಸ್ಸಾಂ ಬಿಡುತ್ತಾರೆ’’ ಎಂದಿದ್ದರು ಶರ್ಮಾ. ಒಂದು ಅಂಶವನ್ನು ಇಲ್ಲಿ ಗಮನಿಸಬೇಕು. ಸಂಘ- ಪರಿವಾರ ಅಥವಾ ಬಿಜೆಪಿ ನಾಯಕರಿಗಿಂತ ಹೊರಗಿನಿಂದ ಬಂದಿರುವ ಮುಖಂಡರೇ ಕಟ್ಟಾ ಮತೀಯವಾದಿಗಳಾಗಿದ್ದಾರೆ. ಪ್ರತೀ ಹೆಜ್ಜೆಯಲ್ಲೂ ತಾವು ಬಿಜೆಪಿಗೆ ನಿಷ್ಠರು ಎಂದು ಸಾಬೀತುಪಡಿಸಲು ಹಾತೊರೆಯುತ್ತಾರೆ. ಹಿಮಂತ ಬಿಸ್ವಾ ಶರ್ಮಾ ಅವರ ವಿಷಯದಲ್ಲೂ ಈ ಮಾತು ಸತ್ಯ. ಕಾಂಗ್ರೆಸ್ನಿಂದ ಅವರು ಬಿಜೆಪಿಗೆ ವಲಸೆ ಬಂದಿದ್ದಾರೆ. ವಿಪರ್ಯಾಸವೆಂದರೆ, ಕಾಂಗ್ರೆಸ್ ಬೆಳೆಸಿದ್ದು, ಬೆಳೆಸುತ್ತಿರುವುದು ಇಂಥ ನಾಯಕರನ್ನೇ. ಈಗಲೂ ಕಾಂಗ್ರೆಸ್ನ ಅನೇಕ ನಾಯಕರು ಮತೀಯವಾದ ಬೆಂಬಲಿಸುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರನ್ನು ಹಾಡಿ ಹೊಗಳಿದ್ದಾರೆ. ಹೊಗಳುತ್ತಿದ್ದಾರೆ. ಬಹುಶಃ ಇದನ್ನು ಕಂಡೇ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ‘ಬಿಜೆಪಿ ಮನಸ್ಥಿತಿಯ ನಾಯಕರು ಹೊರ ಹೋಗಬಹುದು’ ಎಂದು ಹೇಳಿದ್ದು. ಹಿಮಂತ ಬಿಸ್ವಾ ಶರ್ಮಾ ಕಟ್ಟಾ ಹಿಂದುತ್ವವಾದಿ. ಐದು ಸಲ ಶಾಸಕ. ಕಾಂಗ್ರೆಸ್ನ ತರುಣ್ ಗೊಗೊಯಿ ಸಂಪುಟದಲ್ಲಿ ಸಚಿವರಾಗಿದ್ದವರು. ಆನಂತರ ಬಂಡೆದ್ದು ರಾಜೀನಾಮೆ ನೀಡಿ ಬಿಜೆಪಿ ಸೇರಿದರು. 2021ರಲ್ಲಿ ಮೊದಲ ಸಲ ಮುಖ್ಯಮಂತ್ರಿ. ಕಾಂಗ್ರೆಸ್ ಸರಕಾರದಲ್ಲಿ ಮಂತ್ರಿ ಆಗಿದ್ದಾಗಲೇ ಭ್ರಷ್ಟಾಚಾರದ ಆರೋಪ ಸುತ್ತಿಕೊಂಡಿತ್ತು. ‘ಶಾರದಾ ಚಿಟ್ಫಂಡ್’ ಹಗರಣದಲ್ಲಿ ಅವರ ಹೆಸರು ತಳಕುಹಾಕಿಕೊಂಡಿತ್ತು. ಅವರ ಗುವಾಹಟಿ ಮನೆಯ ಮೇಲೆ ಸಿಬಿಐ ದಾಳಿ ನಡೆದಿತ್ತು. ಭ್ರಷ್ಟಾಚಾರ ಆರೋಪದಿಂದ ಮುಕ್ತರಾಗಲು ಬಿಜೆಪಿ ಸೇರಿದ್ದಾರೆ ಎನ್ನುವ ಟೀಕೆಗಳೂ ಬಂದಿತ್ತು. 2015ರಲ್ಲಿ ಬಿಜೆಪಿ ಸೇರಿದ ಶರ್ಮಾ, 2016ರಲ್ಲಿ ಅಸ್ಸಾಮಿನಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ ಸರಕಾರದಲ್ಲಿ ಮಂತ್ರಿಯಾದರು. ಆಗ ಸರ್ಬಾನಂದ ಸೋನೋವಾಲ್ ಮುಖ್ಯಮಂತ್ರಿ. ಕಳೆದ ಐದು ವರ್ಷಗಳಿಂದ ಅಸ್ಸಾಂ ಬಿಜೆಪಿಗೆ ಶರ್ಮಾ ಅವರದ್ದೇ ನಾಯಕತ್ವ. ಅವರ ನೇತೃತ್ವದಲ್ಲೇ ಚುನಾವಣೆ. ಆಕ್ರಮಣಕಾರಿ ಮನೋಧರ್ಮ ಪ್ರದರ್ಶಿಸುತ್ತಿರುವ ಮುಖ್ಯಮಂತ್ರಿ ಶರ್ಮಾರನ್ನು ಗೌರವ್ ಗೊಗೊಯಿ ಸರಿಗಟ್ಟುವರೇ? ಬಿಜೆಪಿಗಿರುವ ಕಾರ್ಯಕರ್ತರ ಪಡೆ ಕಾಂಗ್ರೆಸ್ಗೆ ಇದೆಯೇ? 2024ರ ಲೋಕಸಭೆ ಚುನಾವಣೆಯಲ್ಲಿ ಜೋಹ್ರತ್ ಲೋಕಸಭೆ ಕ್ಷೇತ್ರದಿಂದ ಆಯ್ಕೆಯಾದ ಗೌರವ್ ಗೊಗೊಯಿ ಲೋಕಸಭೆ ವಿರೋಧ ಪಕ್ಷದ ಉಪ ನಾಯಕ. ಒಳ್ಳೆಯ ವಾಗ್ಮಿ. ಅಷ್ಟೇ ಸಾಲದು. ಶರ್ಮಾ ಅವರಿಗೆ ಸರಿಸಮಾನವಾಗಿ ನಿಲ್ಲುವ ತಾಕತ್ತು ಇರಬೇಕು. ಕಾಂಗ್ರೆಸ್ ಉಳಿದ ರಾಜ್ಯಗಳಂತೆ ಇಲ್ಲೂ ಒಳಜಗಳ, ಗುಂಪುಗಾರಿಕೆ ಎದುರಿಸುತ್ತಿದೆ. ಪಕ್ಷದ ಪ್ರಮುಖ ನಾಯಕರೇ ಪಕ್ಷಾಂತರ ಮಾಡಿದ್ದಾರೆ. ರಾಜ್ಯ ಕಾಂಗ್ರೆಸ್ ಮಾಜಿ ಅಧ್ಯಕ್ಷರೇ ಬಿಜೆಪಿ ಸೇರಿದ್ದಾರೆ. ಇದೊಂದು ದೊಡ್ಡ ಹೊಡೆತ. ಅಧಿಕಾರದಲ್ಲಿ ಇಲ್ಲದ ಪಕ್ಷದ ನಾಯಕರು, ಕಾರ್ಯಕರ್ತರನ್ನು ಹಿಡಿದಿಡುವುದು ಸಣ್ಣ ವಿಷಯವಲ್ಲ. ಎಲ್ಲರಿಗೂ ಅಧಿಕಾರ ಬೇಕು. ಹಣ ಬೇಕು. ಇವೆರಡೂ ಇಲ್ಲದಿರುವುದು ಕಾಂಗ್ರೆಸ್ ಪಕ್ಷದ ದೊಡ್ಡ ಸಮಸ್ಯೆ. ಹತ್ತು ವರ್ಷದಿಂದ ಅಧಿಕಾರಲ್ಲಿರುವ ಬಿಜೆಪಿಗೆ ಆಡಳಿತ ವಿರೋಧಿ ಅಲೆ ಇದೆ. ಮುಖ್ಯಮಂತ್ರಿ ಮತ್ತು ಅವರ ಕುಟುಂಬದ ಸದಸ್ಯರ ವಿರುದ್ಧ ಭ್ರಷ್ಟಾಚಾರ ಆರೋಪಗಳಿವೆ. ಒಂದು ಕಾಲಕ್ಕೆ ಕಾಂಗ್ರೆಸ್ಗೆ ಬೆಂಬಲವಾಗಿದ್ದ ಚಹಾ ಎಸ್ಟೇಟ್ ಕೂಲಿಕಾರರು ಈಗ ಬಿಜೆಪಿ ಪರ ವಾಲಿದ್ದಾರೆ. ಆದರೆ, ಬೆಂಗಾಲಿ ಮಾತಾಡುವ ಮುಸ್ಲಿಮರ ಬಲ ಕಾಂಗ್ರೆಸ್ಗೆ ಇದ್ದಂತಿದೆ. ಈ ಸಮುದಾಯ ರಾಜ್ಯದ ಒಟ್ಟು ಸಂಖ್ಯೆಯಲ್ಲಿ ಶೇ. 38ರಿಂದ 40ರಷ್ಟಿದೆ. ಈ ಮತಗಳನ್ನು ಸಂಪೂರ್ಣವಾಗಿ ಕಾಂಗ್ರೆಸ್ ಪರ ಸೆಳೆಯಲು ಗೌರವ್ ಗೊಗೊಯಿ ಕಾರ್ಯತಂತ್ರ ಹೆಣೆಯಬೇಕಿದೆ. ಗೌರವ್ ಮೇಲೆ ಹೈಕಮಾಂಡ್ ಸಂಪೂರ್ಣ ವಿಶ್ವಾಸವಿಟ್ಟಿದೆ. ಹೀಗಾಗಿ, ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಬಿಂಬಿಸುತ್ತಿದೆ. ರಾಜ್ಯ ಕಾಂಗ್ರೆಸ್ಗೆ ಅವರೇ ಅಧ್ಯಕ್ಷರು. ಲೋಕಸಭೆ ಚುನಾವಣೆಯಲ್ಲಿ ಅವರನ್ನು ಸೋಲಿಸಲು ಬಿಜೆಪಿ ಶತಾಯಗತಾಯ ಪ್ರಯತ್ನಿಸಿದರೂ ಆಗಲಿಲ್ಲ. ಅಸ್ಸಾಮಿನ ರಾಜಕೀಯ ವಾತಾವರಣ ಗಮನಿಸಿದರೆ ಬಿಜೆಪಿ ನೇತೃತ್ವದ ಎನ್ಡಿಎ ಒಕ್ಕೂಟಕ್ಕೆ ಮೇಲುಗೈ ಇದ್ದಂತಿದೆ. ಅನೇಕ ಕಡೆಗಳಲ್ಲಿ ಕಾಂಗ್ರೆಸ್ ಮತ್ತದರ ಮಿತ್ರ ಪಕ್ಷಗಳು ಪ್ರಬಲವಾಗಿ ಕಂಡರೂ ‘ಲೆವೆಲ್ ಪ್ಲೇಯಿಂಗ್ ಫೀಲ್ಡ್’ ಇದ್ದಂತಿಲ್ಲ. ಕಾರಣವೇನೆಂದು ಬಿಡಿಸಿ ಹೇಳಬೇಕಾದ ಅಗತ್ಯವಿಲ್ಲ. 2016ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 60 (ಶೇ. 29.8 ಮತಗಳು), ಕಾಂಗ್ರೆಸ್ 26 (ಶೇ. 31.3), ಅಸ್ಸಾಂ ಗಣ ಪರಿಷತ್ 14 (ಶೇ. 8.2), ಎಐಯುಡಿಎಫ್ 13 (ಶೇ. 13.2) ಮತ್ತು ಬಿಪಿಎಫ್ 12 (ಶೇ. 4)ಸ್ಥಾನ ಪಡೆದಿದ್ದವು. 2021ರಲ್ಲಿ ಬಿಜೆಪಿ 60 (ಶೇ. 33.21 ಮತಗಳು), ಕಾಂಗ್ರೆಸ್ 29 (ಶೇ. 30), ಎಐಯುಡಿಎಫ್ 16 (ಶೇ. 8.43), ಎಜಿಪಿ 9 (ಶೇ. 8),ಯುಪಿಪಿಎಲ್ 6 (ಶೇ. 2.97), ಬಿಪಿಎಫ್ 4 (ಶೇ. 3.39)ಸ್ಥಾನ ಪಡೆದಿವೆ. ಈ ಚುನಾವಣೆ ಗೌರವ್ ಗೊಗೊಯಿ ಅವರಿಗೆ ಅಗ್ನಿ ಪರೀಕ್ಷೆ. ಅವರ ನೇತೃತ್ವದಲ್ಲಿ ಕಾಂಗ್ರೆಸ್ ದಡ ಮುಟ್ಟುವುದೇ?
ಭಾರೀ ಕುಸಿತ ಕಂಡ ಚಿನ್ನ-ಬೆಳ್ಳಿ; ಇಂದಿನ ದರವೆಷ್ಟು?
ಅಮೆರಿಕದ ಫೆಡರಲ್ ರಿಸರ್ವ್ ಕೈಗೊಂಡ ನಿರ್ಧಾರದಿಂದಾಗಿ ಚಿನ್ನ-ಬೆಳ್ಳಿ ದರ ಏರಿಳಿತ ಕಾಣುತ್ತಿದೆ. ಅಮೆರಿಕ ಮತ್ತು ಇಸ್ರೇಲ್ ಜೊತೆಗೂಡಿ ಇರಾನ್ ಮೇಲೆ ದಾಳಿ ಮಾಡಿರುವುದು, ಜಾಗತಿಕ ಭೌಗೋಳಿಕ ರಾಜಕೀಯದ ಉದ್ವಿಗ್ನತೆ ಮತ್ತು ಪಶ್ಚಿಮ ಏಷ್ಯಾದಲ್ಲಿ ಸಂಘರ್ಷದ ವಾತಾವರಣದ ನಡುವೆಯೂ ಚಿನ್ನ ಮತ್ತು ಬೆಳ್ಳಿಯ ಬೆಲೆಗಳು ವಿಪರೀತ ಏರಿಲ್ಲ. ಬದಲಾಗಿ ಕುಸಿಯುತ್ತಿದೆ. ಮಾರ್ಚ್ 09 ಸೋಮವಾರದಂದು ಕುಸಿದ ಶುದ್ಧ ಚಿನ್ನದ ಬೆಲೆ 16 ಸಾವಿರದ ಮಿತಿಯೊಳಗೆ ನಿಂತಿತ್ತು. ಕಳೆದ ಮಂಗಳವಾರ ಮತ್ತು ಬುಧವಾರ ಚಿನ್ನದ ಬೆಲೆಯಲ್ಲಿ ಅಲ್ಪ ಮಟ್ಟಿಗೆ ಸತತ ಏರಿಕೆಯಾಗಿದ್ದು, ಮತ್ತೆ 16 ಸಾವಿರದ ಮಿತಿ ಮೀರಿ ಬೆಳೆದಿತ್ತು. ಆದರೆ ನಂತರ ಗುರುವಾರ, ಶುಕ್ರವಾರ ಮತ್ತು ಶನಿವಾರ ಸತತ ಕುಸಿತದ ನಂತರ ಚಿನ್ನದ ಬೆಲೆಯು 15 ಸಾವಿರದ ಮಿತಿಯೊಳಗೆ ಬಂದು ನಿಂತಿದೆ. ಸೋಮವಾರವೂ ತೀವ್ರ ಕುಸಿತ ಕಂಡಿದ್ದ ಚಿನ್ನದ ಬೆಲೆ ಇದೀಗ ಬುಧವಾರ ಮತ್ತು ಗುರುವಾರವೂ ಸತತ ಕುಸಿತ ಕಂಡಿದೆ. ಅಮೆರಿಕದ ಫೆಡರಲ್ ರಿಸರ್ವ್ ಕೈಗೊಂಡ ನಿರ್ಧಾರದಿಂದಾಗಿ ಚಿನ್ನ-ಬೆಳ್ಳಿ ದರ ಏರಿಳಿತ ಕಾಣುತ್ತಿದೆ. ಅಮೆರಿಕದ ಫೆಡರಲ್ ರಿಸರ್ವ್ ಈ ವರ್ಷ ಸತತ ಎರಡು ಬಾರಿ ಪ್ರಮುಖ ಬಡ್ಡಿದರವನ್ನು ಕಡಿತಗೊಳಿಸಿದ ನಂತರ ಈ ಬಾರಿ ಬಡ್ಡಿದರವನ್ನು ಯಥಾಸ್ಥಿತಿಯಲ್ಲಿಡಲು ನಿರ್ಧರಿಸಿದೆ. ಮಾರ್ಚ್ 18ರಂದು ಅಮೆರಿಕದ ಫೆಡರಲ್ ಓಪನ್ ಮಾರ್ಕೆಟ್ ಸಮಿತಿ (FOMC) ಸತತ ಎರಡನೇ ಬಾರಿಗೆ ಮಾನದಂಡ ಬಡ್ಡಿದರಗಳನ್ನು ಸ್ಥಿರವಾಗಿರಿಸಿದೆ. ಯುದ್ಧದಿಂದಾಗಿ ಉಂಟಾಗುವ ಹಣದುಬ್ಬರದ ಅಪಾಯ ಹೆಚ್ಚಾದ ಕಾರಣ ಮಾರುಕಟ್ಟೆ ನಿರೀಕ್ಷೆಗಳಿಗೆ ಅನುಗುಣವಾಗಿ ಕ್ರಮ ಕೈಗೊಳ್ಳಲಾಗಿದೆ. ಈ ಕ್ರಮಗಳು ಚಿನ್ನ-ಬೆಳ್ಳಿ ದರದ ಮೇಲೆ ಪರಿಣಾಮ ಬೀರಿದೆ. ಇಂದಿನ ಚಿನ್ನದ ದರ ಹೇಗಿದೆ? ಮಾರ್ಚ್ 19ರಂದು ಗುರುವಾರ ಬೆಂಗಳೂರಿನ ಮಾರುಕಟ್ಟೆಗಳಲ್ಲಿ 24 ಕ್ಯಾರೆಟ್ ಶುದ್ಧ ಚಿನ್ನದ ಬೆಲೆ ಬುಧವಾರ ಸಂಜೆಯ ಬೆಲೆಗೆ ಹೋಲಿಸಿದರೆ ಪ್ರತಿ ಗ್ರಾಂಗೆ 278 ರೂ. ಕುಸಿತ ಕಂಡು ಹತ್ತು ಗ್ರಾಂ ಬೆಲೆ 1,54,640 ರೂ. ಗೆ ಬಂದು ನಿಂತಿದೆ. ಆಭರಣ ಚಿನ್ನವಾದ 22 ಕ್ಯಾರೆಟ್ ಬೆಲೆಯು ಪ್ರತಿ ಗ್ರಾಂಗೆ 255 ರೂ. ಕುಸಿತವಾಗಿ ಹತ್ತು ಗ್ರಾಂಗೆ 1,41,750 ರೂ. ಗೆ ತಲುಪಿದೆ. 18 ಕ್ಯಾರೆಟ್ ಚಿನ್ನವು ಪ್ರತಿ ಗ್ರಾಂಗೆ 209 ರೂ. ಕುಸಿದು ಹತ್ತು ಗ್ರಾಂಗೆ 1,15,980 ರೂ. ಗೆ ತಲುಪಿದೆ. ಮಂಗಳೂರಿನಲ್ಲಿ ಚಿನ್ನದ ದರವೆಷ್ಟಿದೆ? ಮಾರ್ಚ್ 19ರಂದು ಗುರುವಾರ ಬೆಳಗಿನ 11 ಗಂಟೆಯ ವಹಿವಾಟಿನಲ್ಲಿ ಮಂಗಳೂರಿನಲ್ಲಿ ಚಿನ್ನದ ಬೆಲೆ ಮತ್ತೆ ತೀವ್ರ ಕುಸಿತ ಕಂಡುಬಂದಿದೆ. ಒಂದು ಗ್ರಾಂ 24 ಕ್ಯಾರೆಟ್ ಚಿನ್ನದ ದರ 15,464 (-278) ರೂ. ನಷ್ಟಿದೆ. ಒಂದು ಗ್ರಾಂ 22 ಕ್ಯಾರೆಟ್ ಚಿನ್ನದ 14,175 (-255) ರೂ. ಮತ್ತು ಒಂದು ಗ್ರಾಂ 18 ಕ್ಯಾರೆಟ್ ಚಿನ್ನದ ದರ 11,598 (-209) ರೂ. ಬೆಲೆಗೆ ತಲುಪಿದೆ. ಸತತ ಕುಸಿತ ಕಂಡ ಬೆಳ್ಳಿ ಮಾರ್ಚ್ ಆರಂಭದಲ್ಲಿ ಹೆಚ್ಚು ಏರಿಳಿತ ಕಾಣದೆ ಸ್ಥಿರವಾಗಿದ್ದ ಬೆಳ್ಳಿ ದರ, ಮಾರ್ಚ್ 09ರಂದು ಸೋಮವಾರ ಮತ್ತೆ ಪ್ರತಿ ಗ್ರಾಂಗೆ 5 ರೂ. ಕುಸಿದು ಪ್ರತಿ ಕೆಜಿಗೆ 2,80,000 ರೂ. ಗೆ ತಲುಪಿತ್ತು. ನಂತರ ಮಂಗಳವಾರ ಪ್ರತಿ ಗ್ರಾಂಗೆ 10 ರೂ. ಏರಿಕೆಯಾಗಿರುವ ಬೆಳ್ಳಿಯ ಬೆಲೆ ಪ್ರತಿ ಕೆಜಿಗೆ 2,90,000 ರೂ.ಗೆ ಆಗಿತ್ತು. ಗುರುವಾರ ಪ್ರತಿ ಗ್ರಾಂ ಬೆಳ್ಳಿಯ ಬೆಲೆ 10 ರೂ. ಕುಸಿದು ಮತ್ತೆ ಪ್ರತಿ ಕೆಜಿಗೆ 2,80,000 ರೂ.ಗೆ ಬಂದು ತಲುಪಿದೆ. ಶನಿವಾರ ಮತ್ತೆ ಪ್ರತಿ ಗ್ರಾಂಗೆ 5 ರೂ. ಕುಸಿದು ಪ್ರತಿ ಕೆಜಿಗೆ 2,75,000 ರೂ. ಗೆ ತಲುಪಿತ್ತು. ಸೋಮವಾರ ಮಾರ್ಚ್ 16ರಂದು ಮತ್ತೆ ಪ್ರತಿ ಗ್ರಾಂಗೆ 5 ರೂ. ಕುಸಿದು ಪ್ರತಿ ಕೆಜಿ ಬೆಳ್ಳಿಯ ಬೆಲೆ 2,70,000 ರೂ.ಗೆ ತಲುಪಿದರೆ, ಮಂಗಳವಾರ ಪ್ರತಿ ಗ್ರಾಂಗೆ 5 ರೂ. ಏರಿಕೆಯಾಗಿ ಪ್ರತಿ ಕೆಜಿಗೆ ಮತ್ತೆ 2,75,000 ರೂ.ಗೆ ಬಂದು ನಿಂತಿದೆ. ಇದೀಗ ಬುಧವಾರ ಪ್ರತಿಗ್ರಾಂಗೆ 10 ರೂ. ಕುಸಿತ ಕಂಡಿರುವ ಬೆಳ್ಳಿ, ಗುರುವಾರ ಪ್ರತಿ ಗ್ರಾಂಗೆ 5 ರೂ. ಕುಸಿತ ಕಂಡು ಪ್ರತಿ ಕೆಜಿಗೆ 2,60,000 ರೂ.ಗೆ ಕುಸಿದಿದೆ. ವಿವಿಧ ನಗರಗಳಲ್ಲಿ 1 ಗ್ರಾಮ್ ಚಿನ್ನದ ದರ (ಬೆಳಗಿನ ವಹಿವಾಟು) ಹೇಗಿದೆ? ದಿಲ್ಲಿ: 24 ಕ್ಯಾರೆಟ್ ಚಿನ್ನದ ದರ 15,479 (-278) ರೂ., 22 ಕ್ಯಾರೆಟ್ ಚಿನ್ನದ ದರ 14,190 (-255) ರೂ. ಮುಂಬೈ: 24 ಕ್ಯಾರೆಟ್ ಚಿನ್ನದ ದರ 15,464 (-278) ರೂ., 22 ಕ್ಯಾರೆಟ್ ಚಿನ್ನದ ದರ 14,175 (-255) ರೂ. ಅಹಮದಾಬಾದ್: 24 ಕ್ಯಾರೆಟ್ ಚಿನ್ನದ ದರ 15,469 (-278) ರೂ., 22 ಕ್ಯಾರೆಟ್ ಚಿನ್ನದ ದರ 14,180 (-255) ರೂ. ಚೆನ್ನೈ: 24 ಕ್ಯಾರೆಟ್ ಚಿನ್ನದ ದರ 15,600 (-295) ರೂ., 22 ಕ್ಯಾರೆಟ್ ಚಿನ್ನದ ದರ 14,300 (-270) ರೂ. ಕೋಲ್ಕತ್ತಾ: 24 ಕ್ಯಾರೆಟ್ ಚಿನ್ನದ ದರ 15,464 (-278) ರೂ., 22 ಕ್ಯಾರೆಟ್ ಚಿನ್ನದ ದರ 14,175 (-255) ರೂ. ಹೈದರಾಬಾದ್: 24 ಕ್ಯಾರೆಟ್ ಚಿನ್ನದ ದರ 15,464 (-278) ರೂ., 22 ಕ್ಯಾರೆಟ್ ಚಿನ್ನದ ದರ 14,175 (-255) ರೂ. ಜೈಪುರ: 24 ಕ್ಯಾರೆಟ್ ಚಿನ್ನದ ದರ 15,479 (-278) ರೂ., 22 ಕ್ಯಾರೆಟ್ ಚಿನ್ನದ ದರ 14,190 (-255) ರೂ. ಚಂಡೀಗಢ: 24 ಕ್ಯಾರೆಟ್ ಚಿನ್ನದ ದರ 15,479 (-278) ರೂ., 22 ಕ್ಯಾರೆಟ್ ಚಿನ್ನದ ದರ 14,190 (-255) ರೂ. ಲಕ್ನೋ: 24 ಕ್ಯಾರೆಟ್ ಚಿನ್ನದ ದರ 15,479 (-278) ರೂ., 22 ಕ್ಯಾರೆಟ್ ಚಿನ್ನದ ದರ 14,190 (-255) ರೂ.
ಉಜಿರೆ : ಅನೈತಿಕ ಪೊಲೀಸ್ ಗಿರಿ ಪ್ರಕರಣ ; SDPI ಖಂಡನೆ
ಬೆಳ್ತಂಗಡಿ : ತಾಲೂಕಿನ ಉಜಿರೆಯಲ್ಲಿ ನಡೆದ ಅಪ್ರಾಪ್ತ ಮುಸ್ಲಿಂ ಬಾಲಕನ ಅಪಹರಣ, ಅಮಾನುಷ ಹಲ್ಲೆ ಮತ್ತು ಆತ್ಮಹತ್ಯೆಗೆ ಪ್ರೇರೇಪಿಸಿದ ಘಟನೆ ಅತ್ಯಂತ ಕ್ರೂರ, ಮಾನವೀಯತೆಯಿಲ್ಲದ ಹಾಗೂ ಕಾನೂನು ಸುವ್ಯವಸ್ಥೆಗೆ ಸವಾಲು ಹಾಕುವಂತದ್ದಾಗಿದೆ. ಧಾರ್ಮಿಕ ಕಾರ್ಯಕ್ರಮಕ್ಕೆ ಸ್ನೇಹಿತರೊಂದಿಗೆ ತೆರಳಿದ್ದ ಅಪ್ರಾಪ್ತ ಬಾಲಕನನ್ನು ಧರ್ಮದ ಆಧಾರದ ಮೇಲೆ ಗುರುತಿಸಿ ಹಲ್ಲೆ ನಡೆಸಿರುವುದು ಸಂಘಟಿತ ದ್ವೇಷ ರಾಜಕಾರಣದ ಪ್ರತಿಫಲವಾಗಿದೆ. “ಅನೈತಿಕ ಪೊಲೀಸ್ ಗಿರಿ” ಎಂಬ ಹೆಸರಿನಲ್ಲಿ ಕೆಲ ಸಂಘಪರಿವಾರದ ಕಾರ್ಯಕರ್ತರು ಕಾನೂನನ್ನು ಕೈಗೆತ್ತಿಕೊಂಡು ನಿರಪರಾಧಿಗಳಾದ ಯುವಕರ ಮೇಲೆ ದೌರ್ಜನ್ಯ ಎಸಗುತ್ತಿರುವುದು ಅತ್ಯಂತ ಖಂಡನೀಯ ಎಂದು ಎಸ್ ಡಿ ಪಿ ಐ ಮಂಗಳೂರು ಗ್ರಾಮಾಂತರ ಜಿಲ್ಲಾ ಕಾರ್ಯದರ್ಶಿ ನವಾಝ್ ಕಟ್ಟೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಾಲಕನನ್ನು ಅಪಹರಿಸಿ ನಿರ್ಜನ ಪ್ರದೇಶಕ್ಕೆ ಕೊಂಡೊಯ್ದು ಗುಂಪಾಗಿ ಹಲ್ಲೆ ನಡೆಸಿರುವುದು ಹಾಗೂ ಬಳಿಕ ಜೀವಬೆದರಿಕೆ ಹಾಕಿ ಆತ್ಮಹತ್ಯೆಗೆ ಪ್ರೇರೇಪಿಸಿರುವುದು ಗಂಭೀರ ಅಪರಾಧವಾಗಿದ್ದು, ಈ ಪ್ರಕರಣವನ್ನು ಲಘುವಾಗಿ ಪರಿಗಣಿಸಲು ಸಾಧ್ಯವಿಲ್ಲ. ಈ ಹಿನ್ನೆಲೆಯಲ್ಲಿ ಆರೋಪಿಗಳಾದ ಗೌರವ್ ಶೆಟ್ಟಿ, ರಮೇಶ್ ಸೇರಿದಂತೆ ಸಂಬಂಧಪಟ್ಟ ಎಲ್ಲರನ್ನು ತಕ್ಷಣ ಬಂಧಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು SDPI ಆಗ್ರಹಿಸುತ್ತದೆ. ಜೊತೆಗೆ, ಇಂತಹ ಸಂಘಟಿತ ದಾಳಿಗಳ ಹಿಂದೆ ಇರುವ ಶಕ್ತಿಗಳನ್ನು ಪತ್ತೆಹಚ್ಚಿ ಸಂಪೂರ್ಣವಾಗಿ ನಿಗ್ರಹಿಸಬೇಕು ಎಂದು ಒತ್ತಾಯಿಸಿದ್ದಾರೆ. ರಾಜ್ಯದಲ್ಲಿ ಹೆಚ್ಚುತ್ತಿರುವ ಅನೈತಿಕ ಪೊಲೀಸ್ ಗಿರಿ” ಕೃತ್ಯಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ, ಅಪ್ರಾಪ್ತರು ಮತ್ತು ಅಲ್ಪಸಂಖ್ಯಾತ ಸಮುದಾಯದ ಸುರಕ್ಷತೆಯನ್ನು ಖಚಿತಪಡಿಸಬೇಕಾಗಿದೆ. ಕಾನೂನು ಕೈಗೆತ್ತಿಕೊಳ್ಳುವ ಪ್ರವೃತ್ತಿಯನ್ನು ಕಟ್ಟುನಿಟ್ಟಾಗಿ ತಡೆಯದಿದ್ದರೆ ಸಮಾಜದಲ್ಲಿ ಭಯ ಮತ್ತು ಅಶಾಂತಿ ಹೆಚ್ಚುವ ಅಪಾಯವಿದೆ. ಈ ಅಮಾನುಷ ಘಟನೆಯನ್ನು SDPI ತೀವ್ರವಾಗಿ ಖಂಡಿಸುತ್ತದೆ ಹಾಗೂ ಸಂತ್ರಸ್ತ ಬಾಲಕನಿಗೆ ನ್ಯಾಯ ದೊರಕುವವರೆಗೆ ಹೋರಾಟ ನಡೆಸುವುದಾಗಿ ನವಾಝ್ ಕಟ್ಟೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಯಾಣಿಕರೇ ಗಮನಿಸಿ, ಮಂಗಳೂರು - ಸುಬ್ರಹ್ಮಣ್ಯ ಮಾರ್ಗದ ರೈಲು 35 ದಿನ ರದ್ದು; ಸಂಚಾರದಲ್ಲಿ ತಾತ್ಕಾಲಿಕ ಬದಲಾವಣೆ
ದಕ್ಷಿಣ ಪಶ್ಚಿಮ ರೈಲ್ವೆ ವ್ಯಾಪ್ತಿಯಲ್ಲಿ ನಡೆಯಲಿರುವ ವಿವಿಧ ಕಾಮಗಾರಿಗಳ ಕಾರಣದಿಂದಾಗಿ ಮಂಗಳೂರು ಮತ್ತು ಸುಬ್ರಹ್ಮಣ್ಯ ನಡುವಿನ ರೈಲು ಸಂಚಾರದಲ್ಲಿ ಮಹತ್ವದ ಬದಲಾವಣೆಗಳನ್ನು ಮಾಡಲಾಗಿದೆ. ಮಂಗಳೂರು - ಸುಬ್ರಹ್ಮಣ್ಯ ರೋಡ್ ಪ್ಯಾಸೆಂಜರ್ (ರೈಲು ಸಂಖ್ಯೆ 56629) ಮತ್ತು ಸುಬ್ರಹ್ಮಣ್ಯ ರೋಡ್ - ಮಂಗಳೂರು ಪ್ಯಾಸೆಂಜರ್ (ರೈಲು ಸಂಖ್ಯೆ 56630) ರೈಲುಗಳನ್ನು ಮಾರ್ಚ್ 23 ರಿಂದ ಏಪ್ರಿಲ್ 14 ರವರೆಗೆ ಮತ್ತು ಜೂನ್ 10 ರಿಂದ ಜೂನ್ 21 ರವರೆಗೆ ಒಟ್ಟು 35 ದಿನಗಳ ಕಾಲ ಸಂಪೂರ್ಣವಾಗಿ ರದ್ದುಗೊಳಿಸಲಾಗಿದೆ.
ಹೊಸದಿಲ್ಲಿ | ಇಂಡೋ-ಯುಎಸ್ ವ್ಯಾಪಾರ ಒಪ್ಪಂದ ವಿರೋಧಿಸಿ ಯುವ ಕಾಂಗ್ರೆಸ್ ಪ್ರತಿಭಟನೆ
ಹೊಸದಿಲ್ಲಿ : ಕೇಂದ್ರ ಸರಕಾರ ಇತ್ತೀಚೆಗೆ ಮುಂದಿಟ್ಟಿರುವ ಬಹುಚರ್ಚಿತ ಇಂಡೋ-ಯುಎಸ್ ವ್ಯಾಪಾರ ಒಪ್ಪಂದವನ್ನು ವಿರೋಧಿಸಿ ಭಾರತೀಯ ಯುವ ಕಾಂಗ್ರೆಸ್ ಕಾರ್ಯಕರ್ತರು ಹೊಸದಿಲ್ಲಿಯಲ್ಲಿ ಬೃಹತ್ ಮಟ್ಟದ 'ಸಂಸತ್ ಘೇರಾವ್' ಪ್ರತಿಭಟನೆ ನಡೆಸಿದರು. ಹೊಸದಿಲ್ಲಿಯ ಜಂತರ್ ಮಂತರ್ನಲ್ಲಿ ನಡೆದ ಹೋರಾಟದಲ್ಲಿ ಕರ್ನಾಟಕದಿಂದ ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಎಚ್.ಎಸ್. ಮಂಜುನಾಥ್ ಗೌಡ ನೇತೃತ್ವದಲ್ಲಿ ಹಲವು ಕಾರ್ಯಕರ್ತರು ಭಾಗವಹಿಸಿದ್ದರು. ಈ ಒಪ್ಪಂದದಿಂದ ದೇಶದ ರೈತರು, ಕಾರ್ಮಿಕರು ಹಾಗೂ ಸಣ್ಣ ಕೈಗಾರಿಕೆಗಳಿಗೆ ಭಾರಿ ನಷ್ಟ ಉಂಟಾಗಲಿದೆ ಎಂದು ಆರೋಪಿಸಿದ ಯುವ ಕಾಂಗ್ರೆಸ್ ಕಾರ್ಯಕರ್ತರು, ಸರಕಾರದ ಆರ್ಥಿಕ ನೀತಿಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ದೇಶದ ಸ್ವಾಯತ್ತತೆಯನ್ನು ರಕ್ಷಿಸುವುದು, ಸಾರ್ವಜನಿಕ ಹಿತಾಸಕ್ತಿಯನ್ನು ಕಾಪಾಡುವುದು ಹಾಗೂ ಜನತಾಂತ್ರಿಕ ಮೌಲ್ಯಗಳ ಸಂರಕ್ಷಣೆಯೇ ಈ ಹೋರಾಟದ ಪ್ರಮುಖ ಉದ್ದೇಶವಾಗಿದೆ ಎಂದು ಪ್ರತಿಭಟನೆ ನಿರತ ಎಚ್.ಎಸ್. ಮಂಜುನಾಥ್ ಗೌಡ ಹೇಳಿದರು.
ಇರಾನ್ ವಿರುದ್ಧ ಮಿಲಿಟರಿ ಕ್ರಮದ ಹಕ್ಕನ್ನು ಕಾಯ್ದಿರಿಸಿದ್ದೇವೆ : ಸೌದಿ ಅರೇಬಿಯಾ
ರಿಯಾದ್ : ಸೌದಿ ಅರೇಬಿಯಾ ಇರಾನ್ ವಿರುದ್ಧ ಸೇನಾ ಕ್ರಮ ಕೈಗೊಳ್ಳುವ ಹಕ್ಕು ಹೊಂದಿದೆ. ಇರಾನ್ ಮೇಲಿನ ನಂಬಿಕೆ ಸಂಪೂರ್ಣವಾಗಿ ಕಳೆದುಹೋಗಿದೆ ಎಂದು ಸೌದಿ ವಿದೇಶಾಂಗ ಸಚಿವರು ಗುರುವಾರ ಹೇಳಿದ್ದಾರೆ. ರಿಯಾದ್ ಅನ್ನು ಗುರಿಯಾಗಿಸಿ ಇರಾನ್ ಬ್ಯಾಲಿಸ್ಟಿಕ್ ಕ್ಷಿಪಣಿ ದಾಳಿ ನಡೆಸಿದ ಬೆನ್ನಲ್ಲೆ ಈ ಹೇಳಿಕೆ ಹೊರಬಿದ್ದಿದೆ. ಇದಕ್ಕೂ ಮೊದಲು ಇರಾನ್ನ ಸೌತ್ ಪಾರ್ಸ್ ಗ್ಯಾಸ್ ಫೀಲ್ಡ್ ಮೇಲೆ ಇಸ್ರೇಲ್ ದಾಳಿ ನಡೆಸಿದೆ ಎಂದು ಇರಾನ್ ಆರೋಪಿಸಿತ್ತು. ಇದಕ್ಕೆ ಪ್ರತಿಯಾಗಿ, ಗಲ್ಫ್ ಪ್ರದೇಶದ ತೈಲ ಮತ್ತು ಅನಿಲ ಮೂಲಸೌಕರ್ಯಗಳ ಮೇಲೆ ದಾಳಿ ಮಾಡುವುದಾಗಿ ಇರಾನ್ ಹೇಳಿತ್ತು. ಖತರ್ ಮತ್ತು ಸೌದಿ ಅರೇಬಿಯಾವನ್ನು ಗುರಿಯಾಗಿಸಿ ಕ್ಷಿಪಣಿ ದಾಳಿ ನಡೆಸಿತ್ತು. ರಿಯಾದ್ ನಲ್ಲಿ ನಡೆದ ಉನ್ನತ ರಾಜತಾಂತ್ರಿಕ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸೌದಿ ವಿದೇಶಾಂಗ ಸಚಿವ ಫೈಸಲ್ ಬಿನ್ ಫರ್ಹಾನ್, ಇರಾನ್ ತನ್ನ ನೆರೆ ರಾಷ್ಟ್ರಗಳ ವಿರುದ್ಧ ಪೂರ್ವನಿಯೋಜಿತ ಶತ್ರುತ್ವದ ಕ್ರಮಗಳನ್ನು ನೇರವಾಗಿ ಹಾಗೂ ಪ್ರಾದೇಶಿಕ ಪ್ರತಿನಿಧಿ ಗುಂಪುಗಳ ಮೂಲಕ ತೆಗೆದುಕೊಂಡಿದೆ. ಇರಾನ್ನ ಈ ಒತ್ತಡವು ರಾಜಕೀಯವಾಗಿ ಮತ್ತು ನೈತಿಕವಾಗಿ ಹಿನ್ನಡೆಯನ್ನುಂಟು ಮಾಡುತ್ತದೆ. ಅಗತ್ಯವೆಂದು ಕಂಡು ಬಂದರೆ ನಾವು ಸೇನಾ ಕ್ರಮ ಕೈಗೊಳ್ಳುವ ಹಕ್ಕನ್ನು ಖಂಡಿತವಾಗಿಯೂ ಕಾಯ್ದಿರಿಸಿದ್ದೇವೆ ಎಂದು ಹೇಳಿದರು. ಮೂರು ವಾರಗಳಿಂದ ನಡೆಯುತ್ತಿರುವ ಯುದ್ಧದ ತೀವ್ರತೆ ಕಡಿಮೆಯಾಗುವ ಲಕ್ಷಣಗಳು ಕಾಣುತ್ತಿಲ್ಲ. ಈ ಸಂಘರ್ಷವು ಜಾಗತಿಕ ಇಂಧನ ಪೂರೈಕೆಗೆ ಅಡ್ಡಿಯನ್ನುಂಟು ಮಾಡಿದೆ.
ಮಧ್ಯಪ್ರಾಚ್ಯ ಮುಳುಗುವಂತೆ ಮಾಡುತ್ತಿದೆ ಇರಾನ್ ಸಂಘರ್ಷ, ಅಮೆರಿಕದ ಹೊಸ ರಣತಂತ್ರ | Iran Conflict
ಇರಾನ್ ಎಷ್ಟು ಹೇಳಿದರೂ ಮಾತು ಕೇಳುತ್ತಿಲ್ಲ, ಅಮೆರಿಕ ಹಾಗೂ ಮಿತ್ರ ದೇಶಗಳು ಯುದ್ಧ ನಿಲ್ಲಿಸಿ ಶಾಂತಿ ಒಪ್ಪಂದ ಮಾಡಿಕೊಳ್ಳಿ ಎಂದು ಇರಾನ್ ಬಳಿ ಮನವಿ ಮಾಡಿದರೂ ಅದು ವರ್ಕೌಟ್ ಆಗ್ತಾ ಇಲ್ಲ. ಯುದ್ಧದ ಕಿಚ್ಚು ಇನ್ನಷ್ಟು ಹೆಚ್ಚಾಗುತ್ತಿರುವ ಕಾರಣಕ್ಕೆ ಆತಂಕ ಕೂಡ ಮನೆಮಾಡಿದೆ, ಇದು ಹಾಳಾಗಿ ಹೋಗಲಿ ಅಂತಾ ಬಿಟ್ಟರೂ ಆರ್ಥಿಕವಾಗಿ ದೊಡ್ಡ ಹಿನ್ನಡೆ ಎದುರಾಗುತ್ತಿದೆ. ಈಗಾಗಲೇ
Hotel Gas Bill: ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿನ ಯುದ್ಧದ ಪರಿಣಾಮ ಭಾರತದ ಹೋಟೆಲ್ ಉದ್ಯಮ ಮತ್ತು ಸಾಮಾನ್ಯ ಜನರ ಮೇಲೆ ನೇರ ಪರಿಣಾಮ ಬೀರಲಾರಂಭಿಸಿದೆ. ಜಾಗತಿಕ ಇಂಧನ ಪೂರೈಕೆ ಉಂಟಾಗಿರುವ ವ್ಯತ್ಯಯದಿಂದಾಗಿ ದೇಶೀಯ ಮಾರುಕಟ್ಟೆಯಲ್ಲಿ ಎಲ್ಪಿಜಿ ಕೊರತೆ ಎದುರಾಗಿದ್ದು, ಸಿಲಿಂಡರ್ಗಳ ಬೆಲೆ ಗಗನಕ್ಕೇರಿದೆ. ಈ ಅನಿರೀಕ್ಷಿತ ಆರ್ಥಿಕ ಹೊರೆಯನ್ನು ಸರಿದೂಗಿಸಲು ಕೆಲ ಕಡೆ ಹೋಟೆಲ್ ಮಾಲೀಕರು ಅನಿವಾರ್ಯವಾಗಿ ಗ್ರಾಹಕರ
ಇರಾನ್ ಯುದ್ಧದಲ್ಲಿ ಭಾರತದ ನಿಲುವಿಗೆ ಕಾಂಗ್ರೆಸ್ ಸಂಸದರ ಜೈಕಾರ! ಸರ್ಕಾರದ ನಡೆ ಸರಿಯಾಗಿದೆ ಎಂದು ಶಶಿ ತರೂರ್ ಮೆಚ್ಚುಗೆ
ಮಧ್ಯಪ್ರಾಚ್ಯದಲ್ಲಿನ ಯುದ್ಧದಲ್ಲಿ ಭಾರತ ಯಾರ ಪರವೂ ವಹಿಸದೆ ಮೌನವಾಗಿರುವ ಮೂಲಕ ತಟಸ್ಥ ನೀತಿಯನ್ನು ಅನುಸರಿಸುತ್ತಿದ್ದು, ಇದಕ್ಕೆ ಕಾಂಗ್ರೆಸ್ ನಿಂದ ವಿರೋಧ ವ್ಯಕ್ತವಾಗುತ್ತಿದೆ. ಈ ನಡುವೆ ಕಾಂಗ್ರೆಸ್ ಸಂಸದ ಶಶಿ ತರೂರ್ ಹಾಗೂ ಮನೀಶ್ ತಿವಾರಿ ಅವರು ಇರಾನ್ ಯುದ್ಧದಲ್ಲಿ ಭಾರತ ಹೊಂದಿರುವ ನಿಲುವು ರಾಷ್ಟ್ರೀಯ ಹಿತಾಸಕ್ತಿಗಳಿಗೆ ಬದ್ದವಾಗಿದ್ದು, ಅವರ ಮೌನ ಸರಿಯಾಗಿದೆ ಎಂದು ಸರ್ಕಾರದ ನಿಲುವನ್ನು ಶ್ಲಾಘಿಸಿದ್ದಾರೆ. ಈ ಕುರಿತ ಮಾಹಿತಿ ಇಲ್ಲಿದೆ..
ಅಸ್ಸಾಂ ವಿಧಾನಸಭಾ ಚುನಾವಣೆ | ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ
ಗುವಾಹಟಿ: ಅಸ್ಸಾಂ ವಿಧಾನಸಭಾ ಚುನಾವಣೆ ಹಿನ್ನೆಲೆ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಜೆಪಿ ಬಿಡುಗಡೆ ಮಾಡಿದೆ. ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ ಜಲುಕ್ಬರಿ ವಿಧಾನಸಭಾ ಕ್ಷೇತ್ರದಿಂದ ಮತ್ತು ಬುಧವಾರ ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರ್ಪಡೆಯಾದ ಪ್ರದ್ಯುತ್ ಬೋರ್ಡೊಲೊಯಿ ದಿಸ್ಪುರ್ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ. ಜಲುಕ್ಬರಿ ಕ್ಷೇತ್ರವನ್ನು ಹಿಮಂತ ಬಿಸ್ವಾ ಶರ್ಮಾ ಅವರ ಭದ್ರಕೋಟೆ ಎಂದು ಪರಿಗಣಿಸಲಾಗಿದೆ. ನಾಗಾಂವ್ ಲೋಕಸಭೆ ಕ್ಷೇತ್ರದಲ್ಲಿ ಪ್ರಾಬಲ್ಯವನ್ನು ಹೊಂದಿರುವ ಬೋರ್ಡೊಲೊಯಿ ಅವರಿಗೆ ದಿಸ್ಪುರ್ ಕ್ಷೇತ್ರದಿಂದ ಟಿಕೆಟ್ ನೀಡಲಾಗಿದೆ.
ಬೆಂಗಳೂರಿನಿಂದ ಬೀದರ್-ಕಲಬುರಗಿಗೆ ವಿಮಾನಸೇವೆ: 23ರೊಳಗೆ ಪ್ರಸ್ತಾವನೆ ಸಲ್ಲಿಸಲು ಸೂಚನೆ
ಬೆಂಗಳೂರು: ಎಂ.ಬಿ. ಪಾಟಿಲ್ ನೇತೃತ್ವದಲ್ಲಿ ನಡೆದ ಮಹತ್ವದ ಸಭೆಯಲ್ಲಿ ಬೆಂಗಳೂರಿನಿಂದ ಬೀದರ್ ಮತ್ತು ಕಲ್ಬುರ್ಗಿಗೆ ವಿಮಾನಸೇವೆ ಪುನ: ಆರಂಭಿಸುವ ಪ್ರಕಿಯೆಗೆ ವೇಗ ನೀಡಲಾಗಿದೆ. ಈ ಹಿನ್ನಲೆಯಲ್ಲಿ ವಿಮಾನಯಾನ ಸಂಸ್ಥೆಗಳು ಇದೇ ತಿಂಗಳು 23ರ ಒಳಗೆ ತಮ್ಮ ಪ್ರಸ್ತಾವನೆಗಳನ್ನು ಸಲ್ಲಿಸಲು ಸೂಚನೆ ನೀಡಲಾಗಿದ್ದು, ಮುಂದಿನ ಸಭೆಯಲ್ಲಿ ಅಂತಿಮ ತೀರ್ಮಾನ ಕೈಗೊಳ್ಳುವ ಸಾದ್ಯತೆ ಇದು ಎಂದು ಸಚಿವ ಎಂ ಬಿ
ಇಂಧನ ಉತ್ಪಾದನೆ : ದಶಕದ ಹಿಂದೆ ದೂರದ ಬೆಟ್ಟ - ಈಗ, ಭಾರತ ವಿಶ್ವದ 3ನೇ ಅತಿದೊಡ್ಡ ರಾಷ್ಟ್ರ
Renewable Energy : ರಸಗೊಬ್ಬರ ಉದ್ಯಮದಲ್ಲಿ ಬಳಸುವ ಶೇ.28ರಷ್ಟು ಅಮೋನಿಯಾವನ್ನು ಹಸಿರು ಅಮೋನಿಯಾದೊಂದಿಗೆ ಬದಲಾಯಿಸಲು ಸಿದ್ಧವಾಗಿದೆ. ಇದು ಆಮದು ಅವಲಂಬನೆಯನ್ನು ಪರಿಹರಿಸಿ ಆತ್ಮನಿರ್ಭರ ಭಾರತವನ್ನು ಬಲಪಡಿಸುತ್ತದೆ. ನವೀಕರಿಸಬಹುದಾದ ಇಂಧನದಲ್ಲಿ ಭಾರತ 3ನೇ ಅತಿದೊಡ್ಡ ರಾಷ್ಟ್ರವಾಗಿ ಹೊರಹೊಮ್ಮಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದ್ದಾರೆ.
ಬಾಗಲಕೋಟೆ, ದಾವಣಗೆರೆ ದಕ್ಷಿಣ ಉಪಚುನಾವಣೆ : ಬಿಜೆಪಿ ಅಭ್ಯರ್ಥಿಗಳ ಘೋಷಣೆ
ಬೆಂಗಳೂರು : ರಾಜ್ಯದ ಎರಡು ವಿಧಾನಸಭೆ ಕ್ಷೇತ್ರಗಳ ಉಪ ಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಘೋಷಿಸಿದೆ. ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ವೀರಭದ್ರಯ್ಯ ಚರಂತಿಮಠ ಹಾಗೂ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಶ್ರೀನಿವಾಸ ಟಿ.ದಾಸಕರಿಯಪ್ಪ ಅವರನ್ನು ಅಭ್ಯರ್ಥಿಯಾಗಿ ಘೋಷಿಸಲಾಗಿದೆ. ಎರಡು ವಿಧಾನಸಭೆ ಕ್ಷೇತ್ರಗಳಿಗೆ ಎ.9ರಂದು ಉಪ ಚುನಾವಣೆಯ ಮತದಾನ ನಡೆಯಲಿದ್ದು, ಮೇ 5 ರಂದು ಫಲಿತಾಂಶ ಪ್ರಕಟವಾಗಲಿದೆ.
ಕರ್ನಾಟಕ ಉಪಚುನಾವಣೆ: ದಾವಣಗೆರೆ ದಕ್ಷಿಣ, ಬಾಗಲಕೋಟೆ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ ಬಿಜೆಪಿ
Karnarnataka Election: ರಾಜ್ಯದ ಕುತೂಹಲ ಕೆರಳಿಸಿರುವ ಎರಡು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ಬಿಜೆಪಿ ಹೈಕಮಾಂಡ್ ಅಭ್ಯರ್ಥಿಗಳ ಹೆಸರನ್ನು ಅಧಿಕೃತವಾಗಿ ಪ್ರಕಟಿಸಿದೆ. ಬಾಗಲಕೋಟೆ ಮತ್ತು ದಾವಣಗೆರೆ ದಕ್ಷಿಣ ಕ್ಷೇತ್ರಗಳಿಗೆ ಕಣಕ್ಕಿಳಿಯುವ ನಾಯಕರನ್ನು ಅಂತಿಮಗೊಳಿಸಿದೆ. ಬಾಗಲಕೋಟೆಯಿಂದ ನಿರೀಕ್ಷೆಯಂತೆ ವೀರಭದ್ರಯ್ಯ ಚರಂತಿಮಠ ಅವರಿಗೆ ಟಿಕೆಟ್ ನೀಡಲಾಗಿದ್ದರೆ, ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಶ್ರೀನಿವಾಸ ಟಿ.ದಾಸಕರಿಯಪ್ಪ ಅವರಿಗೆ ಅವಕಾಶ ನೀಡುವ ಮೂಲಕ ಪಕ್ಷವು ಅಚ್ಚರಿಯ
ಯುಗಾದಿಯ ಸಂಭ್ರಮಕ್ಕೆ ವರ್ಷ ತೊಡಕಿನ ಮೆರುಗು
ಹಿಂದೂ ಪಂಚಾಂಗದಂತೆ ಹೊಸ ಸಂವತ್ಸರದ ಮೊದಲ ದಿನ ಯುಗಾದಿ ಹಬ್ಬ ಆಚರಿಸಲಾಗುತ್ತದೆ. ಯುಗಾದಿ ಹಬ್ಬದಂದು ಮನೆಯ ಮುಖ್ಯದ್ವಾರಗಳನ್ನು ಮಾವು-ಬೇವುಗಳ ತಳಿರು ತೋರಣಗಳಿಂದ ಅಲಂಕರಿಸಲಾಗುವುದು. ಮನೆಮಂದಿಯೆಲ್ಲಾ ಅಭ್ಯಂಜನ ಸ್ನಾನ ಮಾಡಿ, ಹೊಸ ಉಡುಗೆಯನ್ನು ತೊಟ್ಟು ತಮ್ಮ ತಮ್ಮ ಕುಲದೇವರಿಗೆ ವಿಶೇಷ ಪೂಜೆಯನ್ನು ನೆರವೇರಿಸುತ್ತಾರೆ. ಕಷ್ಟ ಸುಖಗಳ ಸಾಂಕೇತಿಕವಾಗಿ ಬೇವು-ಬೆಲ್ಲದ ಮಿಶ್ರಣವನ್ನು ಸೇವಿಸುವುದರ ಮೂಲಕ ಸುಖ-ದುಃಖಗಳನ್ನು ಸಮಾನವಾಗಿ ಸ್ವೀಕರಿಸುವಂತೆ ಮನಸ್ಸನ್ನು ಸಜ್ಜುಗೊಳಿಸಿಕೊಳ್ಳಲಾಗುತ್ತದೆ! ಹೊಸ ಸಂವತ್ಸರದ ಮೊದಲ ದಿನ ವಿಶೇಷವಾಗಿ ಹೋಳಿಗೆ ತುಪ್ಪದ ಜೊತೆಗೆ ಕೋಸಂಬರಿ, ತರಕಾರಿ ಪಲ್ಯಗಳ ಸಾಂಪ್ರದಾಯಿಕ ಊಟದೊಂದಿಗೆ ಸಂಭ್ರಮ ಸಡಗರದಿಂದ ಆಚರಿಸಲ್ಪಡುವ ಹಬ್ಬ ಯುಗಾದಿ. ಯುಗಾದಿಗಿಂತಲೂ ಮಾರನೇ ದಿನದ ಹೊಸ್ತೊಡಕು ಮಾಂಸಾಹಾರಿಗಳ ಪಾಲಿಗೆ ಬಾಡೂಟದ ದೊಡ್ಡ ಹಬ್ಬವಾಗಿದೆ. ಯುಗಾದಿ ಹಬ್ಬದ ಮಾರನೆಯ ದಿನದ ಹೊಸ್ತೊಡಕು ಹಬ್ಬ, ಬಹುಜನರು ಬಹು ಸಂಭ್ರಮದಿಂದ ಅನಾದಿಕಾಲದಿಂದ ಆಚರಿಸಿಕೊಂಡು ಬರುತ್ತಿರುವ ಹಬ್ಬವಾಗಿದೆ. ವರ್ಷ ತೊಡಕು, ಹೊಸ್ತೊಡಕು, ಹೊಸ್ದುಡುಕು ಹೀಗೆಲ್ಲ ಕರೆಯಲ್ಪಡುವ ತೊಡಕು ಪದಕ್ಕೆ ಅಡಚಣೆ, ಅಡೆತಡೆ, ನಿಷೇಧ, ಕಠಿಣ ಹೀಗೆ ವಿವಿಧ ಅರ್ಥಗಳಿವೆಯಾದರೂ ಇಲ್ಲಿವರೆಗೂ ವರ್ಷತೊಡಕಿನ ಆಚರಣೆಗೂ ತೊಡಕು ಪದಕ್ಕೂ ನಿರ್ದಿಷ್ಟವಾದ ಸಂಬಂಧ ಕಲ್ಪಿಸಲು ಸಾಧ್ಯವಾಗಿಲ್ಲ. ಹೊಸ ಯೋಜನೆಗಳಲ್ಲಿ ತೊಡಗು, ವರ್ಷದ ಮೊದಲ ಬಾಡೂಟದಲ್ಲಿ ತೊಡಗು ಹೀಗೆಲ್ಲಾ ಅರ್ಥೈಸಿಕೊಂಡರು, ಹೊಸ್ತಡಗು ಹೊಸ+ಅಡಗು ಎಂಬ ಪದ ಅಡಗು ಅರ್ಥಾತ್ ಮಾಂಸ ಎಂಬ ಮೂಲದ್ದು ಎಂದು ಹೇಳುತ್ತಾರಾದರೂ ವರ್ಷತೊಡಕು ಅರ್ಥವನ್ನು ಅವರವರ ಭಾವಕ್ಕೆ ತಕ್ಕಂತೆ ಅರ್ಥೈಸಿಕೊಂಡು ಬರಲಾಗುತ್ತಿದೆ. ಬಹುಜನರು ಆಚರಿಸಲ್ಪಡುವ ಹೊಸ್ತಡಗು ಹಬ್ಬ, ಶ್ರಮಜೀವಿಗಳು ಅನಾದಿಕಾಲದಲ್ಲಿ ಕಾಡು ಪ್ರಾಣಿ, ಪಕ್ಷಿಗಳನ್ನು ಬೇಟೆಯಾಡಿ ಮಾಂಸದಡುಗೆ ಮಾಡಿ ತಿಂದುಂಡು, ಎಲ್ಲರೂ ಒಟ್ಟಾಗಿ ಕಲೆತು ಸಂಭ್ರಮದಿಂದ ಹಲವಾರು ಮನರಂಜನೆಯಾಟವಾಡಿ ಖುಷಿಪಡುತ್ತಿದ್ದ ಪರಿಪಾಟ ಕಾಲಾನುಕಾಲಕ್ಕೆ ಬದಲಾವಣೆಗಳನ್ನು ಕಂಡಿದೆ. ವರ್ಷ ತೊಡಕು ಆಚರಣೆ ಎಂಬುದು ಬೇರೆ ಬೇರೆ ಪ್ರದೇಶಗಳಲ್ಲಿ ಬೇರೆ ಬೇರೆ ಹೆಸರಿನಿಂದ ಕರೆಯಲ್ಪಡಬಹುದು. ಹಳೆ ಮೈಸೂರು ಪ್ರಾಂತದಲ್ಲಂತೂ ವರ್ಷ ತೊಡಕಿನ ಕಾರುಬಾರು! ಜೋರೇ ಜೋರು. ಮುಂದಿನ ವರ್ಷದ ಹಬ್ಬಕ್ಕೆ ಈ ವರ್ಷದ ಹಬ್ಬ ಮುಗಿದ ದಿನದಿಂದಲೇ ಯೋಜನೆಗಳು ಪ್ರಾರಂಭವಾಗುತ್ತವೆ! ಎಂದರೇ ನಾವೇ ಊಹಿಸಿಕೊಳ್ಳಬಹುದು ವರ್ಷ ತೊಡಕಿಗಿರುವ ಅಗಾಧತೆಯನ್ನು! ಹಬ್ಬ ಮುಗಿಯಿತು ಎಂದು ಗ್ರಾಮೀಣ ಜನರು ಮರೆತು ಸುಮ್ಮನಾಗುವುದಿಲ್ಲ. ವರ್ಷ ತೊಡಕು ಮುಗಿದ ಒಂದೆರಡು ದಿನಗಳಲ್ಲಿ ಅಥವಾ ಸಮಯಾವಕಾಶವನ್ನು ಮಾಡಿಕೊಂಡು ತಮ್ಮದೇ ಜನರ ಒಂದೊಂದು ಗುಂಪುಗಳು ಒಂದೆಡೆ ಸೇರಿ ಮುಂದಿನ ವರ್ಷ ತೊಡಕಿಗೆ ಯೋಜನೆಯನ್ನು ರೂಪಿಸಲು ತೊಡಗಿಕೊಳ್ಳುತ್ತಾರೆ. ಗುಂಪಿನ ಪ್ರತೀ ಸದಸ್ಯರು ಇಂತಿಷ್ಟು ಹಣ ಹೂಡಿ (ಮಟನ್ ಚೀಟಿ) ಮರಿ (ಆಡು ಅಥವಾ ಕುರಿ ಮರಿಗಳು) ತರಬೇಕಾಗುತ್ತದೆ. ಮರಿ ತರಲು ಅನುಭವಿಯೊಬ್ಬನನ್ನು ನಿಯೋಜಿಸಲಾಗುತ್ತದೆ. ಆತ ಸುತ್ತಮುತ್ತಲ ವಾರದ ಸಂತೆಗಳಿಗೆ ಹೋಗಿ ತನ್ನ ಚಾಣಕ್ಷತೆಯಿಂದ ಕಣ್ಣಳತೆಯಲ್ಲೇ ಮರಿಯ ತೂಕವನ್ನು ಅಂದಾಜಿಸಿ ನಿಖರ ಬೆಲೆಯನ್ನು ಕಟ್ಟಿ ವ್ಯಾಪಾರ ಮುಗಿಸಿಕೊಂಡು ಮರಿಗಳನ್ನು ತರುತ್ತಾನೆ. ಮರಿಗಳನ್ನು (ಆಡು-ಕುರಿ) ತಂದ ನಂತರ ಅವುಗಳನ್ನು ದಷ್ಟಪುಷ್ಟವಾಗಿ ಸಾಕಿ ಸಲಹಬಹುದಾದ ಸೂಕ್ತ ವ್ಯಕ್ತಿಯನ್ನು ಅವುಗಳನ್ನು ಮೇಯಿಸಲು ನಿಯೋಜಿಸಲಾಗುತ್ತದೆ. ಆ ವ್ಯಕ್ತಿಗೆ ಹಬ್ಬದಂದು ಒಂದು ಗುಡ್ಡೆ ಮಾಂಸವನ್ನು ಉಚಿತವಾಗಿ ಕೊಡಲಾಗುತ್ತದೆ. ಮತ್ತೊಂದು ವಿಧಾನವೂ ಇದೆ. ಅದೇನೆಂದರೆ ಗುಂಪಿನ ಪ್ರತೀ ಸದಸ್ಯರು ಪ್ರತೀ ತಿಂಗಳು ಇಂತಿಷ್ಟು ಹಣ ಹೂಡಿಕೆ ಮಾಡಿ, ಪ್ರತಿಯೊಬ್ಬರು ಹೂಡಿಕೆ ಹಣವನ್ನು ಬಡ್ಡಿಗೆ ಸಾಲವಾಗಿ ತೆಗೆದುಕೊಂಡು ಹಣವನ್ನು ಬೆಳೆಸಿ ಕೊನೆಯಲ್ಲಿ ಆ ಹಣಕ್ಕೆ ಮರಿ ತಂದು ಪಾಲು ಹಾಕಲಾಗುತ್ತದೆ. ಮರಿ ಪಾಲು ಅರ್ಥಾತ್ ಹಂಚಿಕೆಯ ಕೆಲಸದಲ್ಲಿ ಪ್ರತಿಯೊಬ್ಬರೂ ತೊಡಗಿಸಿಕೊಳ್ಳಬೇಕಾಗುತ್ತದೆ. ಮರಿಗಳನ್ನು ತರುವುದು ಮತ್ತು ಮರಿಗಳನ್ನು ಸಾಕುವುದು ಒಂದು ಭಾಗವಾದರೆ, ಮರಿ ಕುಯ್ದು ಪಾಲು ಅಥವಾ ಗುಡ್ಡೆ ಹಾಕುವುದಕ್ಕೂ ಕೂಡ ನೈಪುಣ್ಯ ಬೇಕಾಗುತ್ತದೆ. ಗುಡ್ಡೆ ಬಾಡು ಎಂದರೆ, ಮೇಕೆ ಅಥವಾ ಕುರಿಯ ಪ್ರತಿಯೊಂದು ಭಾಗಗಳನ್ನು ಪ್ರತೀ ಗುಡ್ಡೆಗಳಿಗೂ ಸರಿಯಾಗಿ ಹಂಚಿಕೆ ಮಾಡಲಾಗುತ್ತದೆ. ಅಷ್ಟೂ ಸದಸ್ಯರಿಗೆ ತೂಕ ಮತ್ತು ಮಾಂಸದ ತುಂಡುಗಳ ನ್ಯಾಯ ಒದಗಿಸಲಾಗುತ್ತದೆ. ಗುಡ್ಡೆ ಬಾಡು ಮಾದರಿ ಈಗ ನಗರ ಪ್ರದೇಶಗಳಿಗೂ ವಿಸ್ತರಿಸಿಕೊಂಡು ಜನರು ಗುಡ್ಡೆ ಬಾಡಿಗೆ ಮುಗಿಬೀಳುತ್ತಿದ್ದಾರೆ. ಗುಡ್ಡೆ ಬಾಡಿನಲ್ಲಿ ಸರ್ವಾಂಗಗಳು ಸಲ್ಲುವುದರಿಂದ ಸಾಂಬಾರ್ ರುಚಿ ಹೆಚ್ಚಾಗುತ್ತದೆ ಎಂದು ರುಚಿ ಕಂಡುಕೊಂಡ ಜನರು ಹೇಳುತ್ತಾರೆ. ಗುಡ್ಡೆ ಬಾಡು ಇಷ್ಟವಾಗದ ಜನರು ಪ್ರತ್ಯೇಕವಾಗಿ ಮಾಂಸದಂಗಡಿಗಳಲ್ಲಿ ತಮಗಿಷ್ಟವಾದ ಮಾಂಸ ತಂದು ವರ್ಷತೊಡಕು ಆಚರಿಸಿಕೊಳ್ಳುತ್ತಾರೆ. ವರ್ಷ ತೊಡಕಿಗೆ ಮೂರ್ನಾಲ್ಕು ದಿನಗಳ ಮುಂಚೆಯೇ ಚಟುವಟಿಕೆಗಳು ಪ್ರಾರಂಭವಾಗುತ್ತವೆ. ನಗರ ಪ್ರದೇಶಗಳ ಮಾಂಸದಂಗಡಿಗಳು ನಾಟಿ ಮರಿಯ ಹೆಸರಿನಲ್ಲಿ ವ್ಯಾಪಾರ ಸೃಷ್ಟಿಸಿಕೊಳ್ಳುತ್ತವೆ. ಬಹಳ ಮುಖ್ಯವಾಗಿ ಈ ಹಬ್ಬದಲ್ಲಿ ಮಾಂಸದ ಬೆಲೆಯನ್ನು ಹೆಚ್ಚಿಸಿಕೊಳ್ಳುತ್ತಾರೆ. ಮುಂದಿನ ದಿನಗಳಲ್ಲಿ ಹೆಚ್ಚು ಕಡಿಮೆ ಅದೇ ಪರಿಷ್ಕರಣೆಗೊಂಡ ಬೆಲೆಯೇ ನಿಗದಿಯಾಗುತ್ತದೆ. ಯುಗಾದಿಯು ಮೊದಲದಿನದ ರಾತ್ರಿಯೇ ಗುಡ್ಡೆ ಬಾಡಿನ ಅಥವಾ ಮಾಂಸದಂಗಡಿಗಳ ಚಟುವಟಿಕೆಗಳು ಗರಿಗೆದರತ್ತವೆ. ಮಾಂಸ ಪ್ರಿಯರು ಬೆಳಗಿನ ಜಾವ ಮೂರುಗಂಟೆಗೆ ಜಾಗರೂಕರಾಗಿ ಮಾಂಸದಂಗಡಿಗಳತ್ತ ಸಾಗುವುದು ಸಾಮಾನ್ಯವಾಗಿರುತ್ತದೆ. ಇತ್ತ ಮಾಂಸದಂಗಡಿಗಳು ಜನಜಂಗುಳಿಯ ಒತ್ತಡದಿಂದ ತಪ್ಪಿಸಿಕೊಳ್ಳಲು ಟೋಕನ್ ವ್ಯವಸ್ಥೆಯನ್ನು ಮಾಡಿಕೊಂಡಿರುತ್ತವೆ. ಈಗಾಗಲೇ ಜನಪ್ರಿಯತೆ ಗಳಿಸಿರುವ ಮಾಂಸದಂಗಡಿಗಳ ಮುಂದೆಯಂತೂ ಬೆಳಗಿನ ಜಾವದಿಂದ ಮಧ್ಯಾಹ್ನದ ಬೇಸಿಗೆಯ ಬಿಸಿಲ ಝಳಕ್ಕೂ ಜಗ್ಗದೆ ಸರತಿ ಸಾಲುಗಳಲ್ಲಿ ಜನರು ನಿಲ್ಲುವ ನೋಟ ಸಾಮಾನ್ಯವಾಗಿರುತ್ತದೆ. ಕೆಲವರು ತಮ್ಮ ಲಾಭಕ್ಕಾಗಿ ಹಲಾಲ್-ಜಟ್ಕಾ ಹೆಸರಿನಲ್ಲಿ ಪ್ರತ್ಯೇಕಿಸಲು ಪ್ರಯತ್ನಿಸಿದರೂ ಅತ್ತ ಕಡೆ ಗಮನಹರಿಸದ ಜನರು ಒಳ್ಳೆ ಮಾಂಸ ಮತ್ತು ಸರಿಯಾದ ಬೆಲೆಗಷ್ಟೇ ಪ್ರಾಮುಖ್ಯತೆ ಕೊಡುತ್ತಾರೆ. ಇನ್ನು ಆರೋಗ್ಯ ದೃಷ್ಟಿಯಿಂದಲೋ, ಹಣದ ಲೆಕ್ಕಾಚಾರದಿಂದಲೋ ಅಥವಾ ಅವರಿಗೆ ರುಚಿಸದ ಕಾರಣ ಅವರವರ ರುಚಿಗೆ ತಕ್ಕಂತೆ, ಕೋಳಿ, ಮೀನು, ಹಂದಿ ಮಾಂಸಗಳಿಗೆ ಮೊರೆ ಹೋಗುತ್ತಾರೆ ಈಗಿನ ಕಾಲಕ್ಕೆ ತಕ್ಕಂತೆ ಅಡುಗೆ ವಿಧಾನಗಳು ಬದಲಾದಂತೆ ಮಾಂಸದಡುಗೆಯೆಂದರೆ ಅದರಲ್ಲೂ ವರ್ಷತೊಡಕಿನಲ್ಲಿ ನಾಲ್ಕಾರು ವಿಧಗಳು ಸಾಮಾನ್ಯವಾಗಿರುತ್ತವೆ. ಇಡೀ ದಿನ ಮಾಂಸದೂಟದ ರಸಾನುಭವವನ್ನೂ ಸ್ವಾದಿಸುತ್ತಾ ವರ್ಷ ತೊಡಕನ್ನು ಅತ್ಯಂತ ಶ್ರದ್ಧೆಯಿಂದ ಆಚರಿಸುತ್ತಾರೆ. ಜೊತೆಗೆ ಅನೇಕ ಆಟೋಟಗಳಲ್ಲೂ ತೊಡಗಿಸಿಕೊಳ್ಳುತ್ತಾರೆ. ಹೀಗೆ ವರ್ಷ ತೊಡಕು ಮಾಂಸದೂಟದ ಸಡಗರದಿಂದ ಪ್ರಾರಂಭವಾಗಿ ಮನರಂಜನೆಯ ಆಟಗಳೂ ಸೇರಿ ಸಂಪೂರ್ಣವಾಗಿ ಸಂಪನ್ನವಾಗುತ್ತದೆ.
ಉಜಿರೆ | ʼನೀವು ಬ್ಯಾರಿಗಳು ಟೆರರಿಸ್ಟ್ಗಳುʼ ಎಂದು ಹೇಳಿ ಬಾಲಕನ ಮೇಲೆ ಗುಂಪಿನಿಂದ ಹಲ್ಲೆ ಆರೋಪ; ಪ್ರಕರಣ ದಾಖಲು
ಬೆಳ್ತಂಗಡಿ: ಉಜಿರೆಯ ಜನಾರ್ಧನ ಸ್ವಾಮಿ ದೇವಸ್ಥಾನದ ಬ್ರಹ್ಮಕಲಶೋತ್ಸವ ಕಾರ್ಯಕ್ರಮಕ್ಕೆ ಗೆಳೆಯರೊಂದಿಗೆ ಬಂದಿದ್ದ ಅಪ್ರಾಪ್ತ ವಯಸ್ಸಿನ ಮುಸ್ಲಿಂ ಬಾಲಕನ ಮೇಲೆ ಬಜರಂಗ ದಳದ ಕಾರ್ಯಕರ್ತರೆನ್ನಲಾದ ತಂಡವೊಂದು ಅಮಾನುಷವಾಗಿ ಹಲ್ಲೆ ನಡೆಸಿ, ಅಪಹರಿಸಿ, ಬೆದರಿಕೆ ಹಾಕಿ ಆತ್ಮಹತ್ಯೆಗೆ ಪ್ರೇರೇಪಿಸಿದ ಬಗ್ಗೆ ಬಾಲಕನ ತಂದೆ ನೀಡಿದ ದೂರಿನಂತೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಉಜಿರೆಯ ಖಾಸಗಿ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿಯಾಗಿರುವ ಬಾಲಕ, ಮಾರ್ಚ್ 11ರಂದು ತನ್ನ ಸ್ನೇಹಿತರೊಂದಿಗೆ ಉಜಿರೆ ದೇವಸ್ಥಾನದ ಬ್ರಹ್ಮಕಲಶೋತ್ಸವ ಕಾರ್ಯಕ್ರಮಕ್ಕೆ ಹೋಗಿದ್ದಾನೆ. ರಾತ್ರಿ 8.30ರ ಸುಮಾರಿಗೆ ಜಾತ್ರೆಯಲ್ಲಿ ಆತನ ಸ್ನೇಹಿತರು ಜಾಯಿಂಟ್ ವ್ಹೀಲ್ ಮೇಲೆ ಹತ್ತಿದ ಸಂದರ್ಭದಲ್ಲಿ ಅವರ ಮೊಬೈಲ್ ಹಿಡಿದುಕೊಂಡು ಸಮೀಪದಲ್ಲಿ ನಿಂತಿದ್ದ ಬಾಲಕನನ್ನು ಉಜಿರೆಯ ಬಜರಂಗ ದಳದ ಕಾರ್ಯಕರ್ತರೆನ್ನಲಾದ ಗೌರವ್ ಶೆಟ್ಟಿ ಮತ್ತು ರಮೇಶ್ ಸೇರಿದಂತೆ ಇತರರು “ನೀನು ಮುಸ್ಲಿಮನಾ?” ಎಂದು ಪ್ರಶ್ನಿಸಿದ್ದಾರೆ. ಹೌದು ಎಂದಾಗ ಆತನ ಮೇಲೆ ಮುಗಿಬಿದ್ದು ಹಲ್ಲೆ ನಡೆಸಿದ್ದಾರೆ. ಈ ವೇಳೆ ಆತನ ಸ್ನೇಹಿತರು ಬಿಡಿಸಲು ಬಂದರೂ ಅವರ ಮೇಲೆಯೂ ಹಲ್ಲೆಗೆ ಮುಂದಾಗಿದ್ದಾರೆ. ಜಾತ್ರೆಯ ನಡುವೆ ಜನಸಂದಣಿ ಹೆಚ್ಚಾದಾಗ ಬಾಲಕನನ್ನು ಅಲ್ಲಿಂದ ಬೈಕ್ನಲ್ಲಿ ಅಪಹರಿಸಿ ಸುಮಾರು ಐದು ಕಿ.ಮೀ ದೂರಕ್ಕೆ ಕೊಂಡೊಯ್ದು, ನಿರ್ಜನ ಪ್ರದೇಶದಲ್ಲಿ ಹತ್ತಕ್ಕೂ ಹೆಚ್ಚು ಮಂದಿಯ ತಂಡ ನಿರಂತರವಾಗಿ ಹಲ್ಲೆ ನಡೆಸಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. “ನೀವು ಬ್ಯಾರಿಗಳು ಟೆರರಿಸ್ಟ್ಗಳು, ನಿಮ್ಮನ್ನು ಕೊಂದರೆ ಒಬ್ಬ ಟೆರರಿಸ್ಟ್ನ್ನು ಕೊಂದ ಹಾಗೆ” ಎಂದು ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ. ಆತನಿಗೆ ಬೆದರಿಕೆ ಹಾಕಿ ವಿಡಿಯೋ ಕೂಡ ಮಾಡಿಕೊಂಡಿದ್ದಾರೆ. ನಿರಂತರ ಹಲ್ಲೆ ನಡೆಸಿದ ಬಳಿಕ ತಡರಾತ್ರಿ ಬಾಲಕನನ್ನು ಉಜಿರೆಯ ಸಾಯಿರಾಂ ಕಟ್ಟಡದ ಬಳಿ ಬಿಟ್ಟು ಹೋಗಿದ್ದು, ಈ ವಿಷಯವನ್ನು ಯಾರಿಗಾದರೂ ಹೇಳಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಹಲ್ಲೆಗೆ ಒಳಗಾದ ಬಳಿಕ ಮನೆಗೆ ಬಂದು ಖಿನ್ನತೆಯಿಂದಿದ್ದ ಬಾಲಕ ಘಟನೆ ಕುರಿತು ಮನೆಯವರಿಗೆ ಹೇಳಿರಲಿಲ್ಲ. ಆರೋಪಿಗಳು ಪ್ರತಿದಿನ ಕರೆ ಮಾಡಿ ಬೆದರಿಕೆ ಹಾಕುತ್ತಿದ್ದರು. ಬಾಲಕ ಕರೆ ಸ್ವೀಕರಿಸದಿದ್ದಾಗ ಆತನ ಮೊಬೈಲ್ಗೆ ಗೌರವ್ ಶೆಟ್ಟಿ ಸಂದೇಶ ಕಳುಹಿಸಿ, “ಕರೆ ಸ್ವೀಕರಿಸದಿದ್ದರೆ ನಿನ್ನ ಮನೆಗೆ ಬರುತ್ತೇವೆ” ಎಂದು ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ. ಇದರಿಂದ ಖಿನ್ನತೆಗೆ ಒಳಗಾದ ಬಾಲಕ ಆತ್ಮಹತ್ಯೆ ಮಾಡಲು ನಿರ್ಧರಿಸಿ ಡೆತ್ ನೋಟ್ ಬರೆದಿದ್ದಾನೆ. ಈ ಡೆತ್ ನೋಟ್ ಮನೆಯವರ ಗಮನಕ್ಕೆ ಆಕಸ್ಮಿಕವಾಗಿ ಬಂದಿದ್ದು, ಬಾಲಕನನ್ನು ವಿಚಾರಿಸಿದಾಗ ಘಟನೆ ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಬಾಲಕನ ತಂದೆ ಮಾರ್ಚ್ 18ರಂದು ಬೆಳ್ತಂಗಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಹಲ್ಲೆ, ಕೊಲೆ ಬೆದರಿಕೆ, ಗುಂಪು ಹಲ್ಲೆ, ಜೀವ ಬೆದರಿಕೆ, ಅಪಹರಣ ಹಾಗೂ ಆತ್ಮಹತ್ಯೆಗೆ ಪ್ರೇರಣೆ ಆರೋಪಗಳ ಮೇರೆಗೆ ಪೊಲೀಸರು BNS 137(2), 115(2), 351(2), 352, 353(2) ಹಾಗೂ 190 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪ್ರಕರಣದ ತನಿಖೆ ಮುಂದುವರಿದಿದೆ.
ಇರಾನ್ ಸೇನೆಗೆ ಎಚ್ಚರಿಕೆ ಸಂದೇಶ ರವಾನಿಸಿದ ಸೌದಿ ಅರೇಬಿಯಾ, ಪರಿಸ್ಥಿತಿ ಭೀಕರ | Iran Conflict
ಮಧ್ಯಪ್ರಾಚ್ಯ ಇಷ್ಟುದಿನ ತೈಲ ಮಾರಾಟಕ್ಕೆ ಹೆಸರು ಮಾಡಿತ್ತು, ಆದರೆ ಈಗ ಯುದ್ಧದ ಕಾರಣದಿಂದ ಇಡೀ ಜಗತ್ತಿನಾದ್ಯಂತ ಚರ್ಚೆಯಲ್ಲಿದೆ. ಇರಾನ್ ಯಾರ ಮಾತನ್ನು ಕೇಳುತ್ತಿಲ್ಲ, ತನ್ನ ಮೇಲೆ ನಡೆದಿರುವ ದಾಳಿಗೆ ಪ್ರತಿಕಾರದ ಮಂತ್ರ ಜಪಿಸುತ್ತಾ ಮತ್ತೆ ಮತ್ತೆ ತನ್ನ ಅಕ್ಕಪಕ್ಕ ಇರುವ ದೇಶಗಳ ಮೇಲೆ ದಾಳಿ ಮಾಡುತ್ತಿದೆ. ಈವರೆಗೂ ಈ ರೀತಿ ಇರಾನ್ ನಡೆಸಿರುವ ದಾಳಿ ಪರಿಣಾಮ, ಸೌದಿ
'ಸಮಾಧಾನ ಮಹೋತ್ಸವ'ದ ವಿರುದ್ಧ ಹಿಂದೂ ಜಾಗರಣ ವೇದಿಕೆ ಹೇಳಿಕೆಗೆ ರಾಜ್ಯ ಕ್ರೈಸ್ತ ಸಂಘಟನೆ ಖಂಡನೆ
ಉಡುಪಿ, ಮಾ.19: ನಗರದ ಕ್ರಿಶ್ಚಿಯನ್ ಪಿಯು ಕಾಲೇಜು ಮೈದಾನದಲ್ಲಿ ಮಾರ್ಚ್ 20 ರಿಂದ 22 ರವರೆಗೆ ನಡೆಯಲಿರುವ ‘ಸಮಾಧಾನ ಮಹೋತ್ಸವ’ ಪ್ರಾರ್ಥನಾ ಕೂಟದ ವಿರುದ್ಧ ಹಿಂದೂ ಜಾಗರಣ ವೇದಿಕೆ ಮಾಧ್ಯಮಗಳಲ್ಲಿ ನೀಡಿರುವ ದ್ವೇಷಪೂರಿತ ಹಾಗೂ ಸುಳ್ಳು ಹೇಳಿಕೆಗಳನ್ನು ಕರ್ನಾಟಕ ಕ್ರೈಸ್ತ ಸಂಘಟನೆಯ ರಾಜ್ಯಾಧ್ಯಕ್ಷರಾದ ಸ್ಟ್ಯಾನಿ ಪಿಂಟೋ ಬೆಂಗಳೂರು ತೀವ್ರವಾಗಿ ಖಂಡಿಸಿದ್ದಾರೆ. ಮೋಹನ್ ಸಿ. ಲಜಾರಸ್ ಅವರ ನೇತೃತ್ವದಲ್ಲಿ ನಡೆಯಲಿರುವ ಈ ಪ್ರಾರ್ಥನಾ ಕೂಟದ ಕುರಿತು ಸಮಾಜದಲ್ಲಿ ತಪ್ಪು ಕಲ್ಪನೆ ಮೂಡಿಸಿ, ಕೋಮು ಸೌಹಾರ್ದತೆಗೆ ಧಕ್ಕೆ ತರುವ ಪ್ರಯತ್ನ ನಡೆಯುತ್ತಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಭಾರತದ ಸಂವಿಧಾನವು ಪ್ರತಿಯೊಬ್ಬರಿಗೂ ತಮ್ಮ ಧರ್ಮವನ್ನು ಪಾಲಿಸುವ ಮತ್ತು ಪ್ರಚಾರ ಮಾಡುವ ಸಮಾನ ಹಕ್ಕನ್ನು ನೀಡಿದೆ. ಇದರ ವಿರುದ್ಧ ಸಮಾಜದಲ್ಲಿ ದ್ವೇಷ ಬಿತ್ತುವ ಹೇಳಿಕೆಗಳು ಕಾನೂನುಬಾಹಿರ ಎಂದು ಪಿಂಟೋ ಎಚ್ಚರಿಸಿದ್ದಾರೆ. ಪೊಲೀಸ್ ಇಲಾಖೆಗೆ ಮನವಿ: ಆಧಾರರಹಿತ ಹೇಳಿಕೆ ನೀಡಿ ಸಾರ್ವಜನಿಕರಲ್ಲಿ ಗೊಂದಲ ಮೂಡಿಸುತ್ತಿರುವವರ ವಿರುದ್ಧ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಳ್ಳಬೇಕು ಎಂದು ಅವರು ಹೇಳಿಕೆಯಲ್ಲಿ ಒತ್ತಾಯಿಸಿದ್ದಾರೆ. ಸುರಕ್ಷತೆಗೆ ಆಗ್ರಹ: ಕಾರ್ಯಕ್ರಮದ ಸಮಯದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಹೆಚ್ಚಿನ ಪೊಲೀಸ್ ಬಂದೋಬಸ್ತ್ ಒದಗಿಸಿ, ಸಮಾಧಾನ ಮಹೋತ್ಸವವು ಶಾಂತಿಯುತವಾಗಿ ನಡೆಯಲು ಸಹಕರಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.
Gold Silver Price Today: ಜನರು ಯುಗಾದಿ ಹಬ್ಬದ (Ugadi 2026) ಸಂಭ್ರಮದಲ್ಲಿದ್ದಾರೆ. ಹೊಸ ವರ್ಷದ ಈ ಹಬ್ಬದ ವೇಳೆ ಚಿನ್ನ ಬೆಳ್ಳಿ ಗ್ರಾಹಕರಿಗೆ ಶುಭ ಸುದ್ದಿ ಸಿಕ್ಕಿದೆ. ಸತತ ಎರಡನೇ ದಿನವೂ ಚಿನ್ನದ ಹಾಗೂ ಬೆಳ್ಳಿಯ ದರದಲ್ಲಿ ಭರ್ಜರಿ ಕುಸಿತವಾಗಿದೆ. ಕೆಲವು ದಿನಗಳಿಂದ ಇಳಿಕೆಯತ್ತ ಮುಖ ಮಾಡಿರುವ ಈ ಎರಡು ಲೋಹಗಳಿಗೆ ಬೇಡಿಕೆ ಮಾತ್ರ ಕಡಿಮೆ
ಲಾಂಗ್ ಜಂಪರ್ ಲೋಕೇಶ್ಗೆ ಚಿನ್ನದ ಪದಕ ; ಐತಿಹಾಸಿಕ ಸಾಧನೆ ಹಿಂದಿದೆ ಕಠಿಣ ಪರಿಶ್ರಮ, ಕುಟುಂಬದ ತ್ಯಾಗ
ಬೆಂಗಳೂರಿನ ಅಥ್ಲೀಟ್ ಲೋಕೇಶ್ ಸತ್ಯನಾಥನ್ ಅಮೆರಿಕಾದಲ್ಲಿ ನಡೆದ ಎನ್ಸಿಎಎ (NCAA) ಚಾಂಪಿಯನ್ಶಿಪ್ನಲ್ಲಿ 8. 21 ಮೀಟರ್ ಲಾಂಗ್ ಜಂಪ್ ಮಾಡುವ ಮೂಲಕ ಹೊಸ ರಾಷ್ಟ್ರೀಯ ಇಂಡೋರ್ ದಾಖಲೆ ಬರೆದಿದ್ದಾರೆ. ಮಗನ ಕ್ರೀಡಾ ಕನಸಿಗಾಗಿ ಟ್ಯಾಕ್ಸಿ ಚಾಲಕರಾಗಿರುವ ಅವರ ತಂದೆ ತಮ್ಮ ಕಾರು ಮತ್ತು ಮನೆಯ ಒಡವೆಗಳನ್ನು ಮಾರಿ 10 ಲಕ್ಷ ರೂಪಾಯಿ ಹಣ ಹೊಂದಿಸಿ ಲೋಕೇಶ್ರನ್ನು ಅಮೆರಿಕಾಗೆ ಕಳುಹಿಸಿದ್ದರು.
ಇರಾನ್ನ ಸೌತ್ ಪಾರ್ಸ್ ಗ್ಯಾಸ್ ಫೀಲ್ಡ್ ಮೇಲೆ ಇಸ್ರೇಲ್ ಇನ್ನು ಮುಂದೆ ದಾಳಿ ಮಾಡುವುದಿಲ್ಲ: ಡೊನಾಲ್ಡ್ ಟ್ರಂಪ್
ಪ್ರತೀಕಾರ ತೀರಿಸಿಕೊಳ್ಳುವುದಾಗಿ ಇರಾನ್ ಹೇಳಿಕೆ ಬೆನ್ನಲ್ಲೆ ಟ್ರಂಪ್ ಪ್ರತಿಕ್ರಿಯೆ
ಮಾರ್ಚ್ 19ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ
Petrol, Diesel Price: ಶಕ್ತಿಯ ಮೂಲಗಳು ಎನಿಸಿಕೊಂಡಿರುವ ಪೆಟ್ರೋಲ್ ಮತ್ತು ಡೀಸೆಲ್ ಇಂಧನ ಅತ್ಯವಶ್ಯಕವಾಗಿ ಬೇಕಾಗುವ ಸಂಪನ್ಮೂಲಗಳಾಗಿವೆ. ಹಾಗಾದ್ರೆ, ಬೆಂಗಳೂರು ಸೇರಿದಂತೆ ಕರ್ನಾಟಕದ ಇತರ ಜಿಲ್ಲೆಗಳಲ್ಲಿ ಇಂದು (ಮಾರ್ಚ್ 19) ಲೀಟರ್ ಪೆಟ್ರೋಲ್, ಡೀಸೆಲ್ ಬೆಲೆ ಎಷ್ಟಿದೆ ಎಂದು ಇಲ್ಲಿ ತಿಳಿಯಿರಿ. ಇತ್ತೀಚಿನ ದಿನಗಳಲ್ಲಿ ಎಲೆಕ್ಟ್ರಿಕ್ ವಾಹನಗಳು ಹೆಚ್ಚಾಗುತ್ತಿವೆ. ಹಾಗಂತ ಇಂಧನದ ಬೇಡಿಕೆ ಏನು ಕಡಿಮೆ ಆಗಿಲ್ಲ.
Cost Of Living : ವಿವಿಧ ನಗರಗಳಲ್ಲಿನ ಖರ್ಚುವೆಚ್ಚ - ಬೆಂಗಳೂರಿನಲ್ಲಿ ಬ್ಯಾಚುಲರ್ಸ್’ಗೆ ಎಷ್ಟಿರಬೇಕು ಹಣ?
Bachelors Living Cost In Bangalore : ಬದಲಾಗುತ್ತಿರುವ ಜೀವನಶೈಲಿ, ದುಬಾರಿಯಾಗುತ್ತಿರುವ ಪದಾರ್ಥಗಳ ನಡುವೆ ದೇಶದ ವಿವಿಧ ನಗರಗಳ ಸರಾಸರಿ ಜೀವನವೆಚ್ಚವೇನು ಎನ್ನುವ ಅಂಕಿಅಂಶವೊಂದು ಹೊರಬಂದಿದೆ. ದೇಶದ ಏಳು ನಗರಗಳ ಸರಾಸರಿ ಜೀವನವೆಚ್ಚದ ಪೈಕಿ, ಕೋಲ್ಕತ್ತ ಅತ್ಯಂತ ಕಡಿಮೆ ಜೀವನವೆಚ್ಚವನ್ನು ಹೊಂದಿರುವ ನಗರವಾಗಿದೆ. ಬೆಂಗಳೂರಿನಲ್ಲಿ ಮುಂಬೈನಲ್ಲಿ ಇದ್ದಷ್ಟು ಜೀವನವೆಚ್ಚವಿಲ್ಲ.
ಪಶ್ಚಿಮ ಏಷ್ಯಾದಲ್ಲಿ ಉದ್ವಿಗ್ನತೆಯ ನಡುವೆ ಇಸ್ರೇಲ್ ಇರಾನ್ ನ ಸೌತ್ ಪಾರ್ಸ್ ಅನಿಲ ಕ್ಷೇತ್ರದ ಮೇಲೆ ದಾಳಿ ನಡೆಸಿದ್ದು, ಈ ಕುರಿತು ಪ್ರತಿಕ್ರಿಯೆ ನೀಡಿರುವ ಟ್ರಂಪ್ ಈ ದಾಳಿಯ ಬಗ್ಗೆ ನಮಗಾಗಲಿ ಅಥವಾ ಕತಾರ್ ಗಾಗಲಿ ಯಾವುದೇ ಮಾಹಿತಿ ಇಲ್ಲ ಮತ್ತು ನಾವು ಈ ದಾಳಿಯಲ್ಲಿ ಭಾಗಿಯಾಗಿಲ್ಲ, ಆದಾಗ್ಯೂ, ಇರಾನ್ ಕತಾರ್ ಮೇಲೆ ದಾಳಿ ನಡೆಸಿದೆ ಎಂದು ತಿಳಿಸಿದ್ದಾರೆ. ಅಲ್ಲದೆ, ಇನ್ನು, ಮುಂದೆ ಇಸ್ರೇಲ್ ಈ ಸನಿಲ ಸೌಲಭ್ಯದ ಮೇಲೆ ಯಾವುದೇ ದಾಳಿ ನಡೆಸುವುದಿಲ್ಲ, ಆದರೆ, ಇದಕ್ಕೆ ಪ್ರತಿಯಾಗಿ ಇರಾನ್ ಸಹ ಕತಾರ್ ಮೇಲೆ ದಾಳಿ ನಡೆಸುವಂತಿಲ್ಲ ಎಂದು ಹೇಳಿದ್ದಾರೆ. ಇನ್ನು, ಇತ್ತ ಯುದ್ಧದಿಂದಾಗಿ ಭಾರತದಲ್ಲಿ ಔಷಧ ತಯಾರಿಕೆಗೆ ಬೇಕಾಗುವ ಕಚ್ಚಾ ವಸ್ತುಗಳ ಪೂರೈಕೆಯಲ್ಲಿ ಅಡಚಣೆ ಎದುರಾಗಿದ್ದು, ಔಷಧಗಳ ಬೆಲೆ ಏರಿಕೆಯಾಗುವ ಆತಂಕ ಎದುರಾಗಿದೆ.
ಚಿನ್ನಾಭರಣ ಪ್ರಿಯರಿಗೆ ಯುಗಾದಿ ದಿನವೇ ಸಿಹಿಸುದ್ದಿ ಸಿಕ್ಕಿದ್ದು, ಇಂದು ಭಾರೀ ಬೆಲೆ ಇಳಿಕೆ ಆಗಿದೆ.
ಚಾಮರಾಜನಗರ : ಭಾರಿ ಮಳೆ; ಬೆಳೆಗಳಿಗೆ ಹಾನಿ
ಗ್ರಾಮಾಂತರ ಪ್ರದೇಶಗಳಲ್ಲಿ ಆಲಿಕಲ್ಲು ಮಳೆ
ಸತ್ಯದೊಂದಿಗೆ ಮುಖಾಮುಖಿ : ಪ್ರಾಯೋಗಿಕ ಮಾತ್ರಾ-ಭೌತಶಾಸ್ತ್ರಕ್ಕೆ 'ಪ್ರಸವವೇದನೆ'!
ಆ ಪವಿತ್ರ ಗರ್ಭಗುಡಿಯೊಳಗೆ ಇಡೀ ಬ್ರಹ್ಮಾಂಡವನ್ನೇ ಆಳುತ್ತಿರುವ ಪ್ರಶ್ನಾತೀತವಾದ ಮಹಾನ್ ಶಕ್ತಿಯೊಂದಿದ್ದು, ಪ್ರವೇಶಿಸಿದರೆ ಭಸ್ಮವಾವುದು ಖಚಿತ. ಸುಮ್ಮನೆ ನಮಿಸಿ ಶರಣಾಗತಿಯನ್ನು ಸೂಚಿಸು, ಎಂದಿಗೂ ಪರೀಕ್ಷಿಸಲು ಹೋಗಬೇಡ ಎಂದು ನೊಬೆಲ್ ಪ್ರಶಸ್ತಿ ವಿಜೇತ ಮಹಾ ವಿಜ್ಞಾನಿ ಜಾನ್ ಕ್ಲಾಸರ್ ನನ್ನು ಹೆದರಿಸಿದ್ದು ಮತ್ತೊಬ್ಬ ಮಹಾನ್ ವಿಜ್ಞಾನಿ ರಿಚರ್ಡ್ ಫೇಯ್ನ್ಮನ್! ಆ ಗರ್ಭಗುಡಿ ಕೋಪನ್ ಹೇಗನ್ ಮತ್ತು ಆ ಮಹಾ ಶಕ್ತಿಯೇ ಮಾತ್ರಾ-ಭೌತಶಾಸ್ತ್ರ. ಆದರೆ, ಮುಂದೆ ಆಗಿದ್ದೇನು? ಅಂಕಣಕಾರ ಡಾ. ಡಿಎಂ ಸಾಗರ್ ವಿವರಿಸಿದ್ದಾರೆ.
ಹೊಸದಿಲ್ಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬಗ್ಗೆ ʼಟಪೋರಿ' ಎಂದು ಹೇಳಿಕೆ ನೀಡಿದ ಬಿಜೆಪಿ ಸಂಸದೆ ಕಂಗನಾ ರಾಣಾವತ್ ವಿರುದ್ಧ ಕಾಂಗ್ರೆಸ್ ನಾಯಕಿ ಸುಪ್ರಿಯಾ ಶ್ರಿನೇತ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಬಿಜೆಪಿ ಒಳಗೆ ಯಾರು ಅತಿ ಕೆಳಮಟ್ಟದ ಭಾಷೆ ಬಳಸಿ ಮಾತನಾಡುತ್ತಾರೆ ಎಂಬುದಕ್ಕೆ ವಿಚಿತ್ರ ಸ್ಪರ್ಧೆ ಇದೆ ಎಂದು ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಸುಪ್ರಿಯಾ ಶ್ರಿನೇತ್, ಬಿಜೆಪಿ ನಾಯಕರು ತಮ್ಮ ಭಾಷಣದಲ್ಲಿ ಯಾರು ಅತಿ ಕೆಳಮಟ್ಟದ ಭಾಷೆ ಬಳಸಿ ಮಾತನಾಡುತ್ತಾರೆ. ಅತ್ಯಂತ ಕೆಟ್ಟ ಮತ್ತು ಅಸಂಬದ್ಧ ಹೇಳಿಕೆಗಳನ್ನು ನೀಡುತ್ತಾರೆ ಎಂಬ ಬಗ್ಗೆ ಪೈಪೋಟಿ ನಡೆಸುತ್ತಿದ್ದಾರೆ ಎಂದು ಹೇಳಿದರು. ಈ ಹಿಂದೆಯೂ ಅವರು ವಿಲಕ್ಷಣ ಹೇಳಿಕೆಯನ್ನು ನೀಡಿದ್ದಾರೆ. ಅವರ ಹೇಳಿಕೆಗಳು ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸಿತ್ತು. ಅವರ ಹಳೆಯ ವಿಷಯಗಳನ್ನು ತೆಗೆಯಲು ನಾನು ಇಷ್ಟಪಡುವುದಿಲ್ಲ. ಆದರೆ, ಅವರು ಪ್ರಸ್ತುತ ನೀಡುತ್ತಿರುವ ಹೇಳಿಕೆಗಳ ಸ್ವರೂಪವನ್ನು ಗಮನಿಸಿದರೆ ಅವರಿಗೆ ಮನೋವೈದ್ಯರ ಅವಶ್ಯಕತೆಯಿದೆ ಎಂಬಂತೆ ಕಂಡು ಬರುತ್ತದೆ ಎಂದು ಕಂಗನಾ ವಿರುದ್ಧ ಸುಪ್ರಿಯಾ ಶ್ರಿನೇತ್ ವಾಗ್ದಾಳಿ ನಡೆಸಿದ್ದಾರೆ. ಕಾಂಗ್ರೆಸ್ ನಾಯಕಿ ಜೋತಿಮಣಿ ಕೂಡ ಬಿಜೆಪಿ ಸಂಸದೆ ಕಂಗನಾ ರಾಣಾವತ್ ವಿರುದ್ಧ ವಾಗ್ದಾಳಿ ನಡೆಸಿದ್ದು, ಕಂಗನಾ ಅವರಿಗೆ ಸ್ವಲ್ಪ ತುರ್ತು ವೈದ್ಯಕೀಯ ಸಹಾಯದ ಅಗತ್ಯವಿದೆ ಎಂದು ನಾನು ಭಾವಿಸುತ್ತೇನೆ. ಅವರಿಗೆ ಏನೋ ತುಂಬಾ ತೊಂದರೆಯಾಗಿದೆ. ಬಹುಶಃ ಅವರ ಸಿನಿಮಾಗಳು ಚೆನ್ನಾಗಿ ಫಲಿತಾಂಶ ನೀಡದ ಕಾರಣ, ಅವರಿಗೆ ಖಿನ್ನತೆ ಉಂಟಾಗಿರಬಹುದು. ಇದರಿಂದ ಅವರು ಈ ರೀತಿ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಅವರಿಗೆ ರಾಜಕೀಯ ಅಥವಾ ಸಾರ್ವಜನಿಕ ವಿಚಾರಗಳ ಬಗ್ಗೆ ಯಾವುದೇ ಅರಿವು ಇಲ್ಲ ಎಂದು ಹೇಳಿದ್ದಾರೆ.
ಚಾಮರಾಜನಗರ: ಭಾರೀ ಗಾಳಿ-ಮಳೆಗೆ ತೆಂಗಿನ ಮರ ಮುರಿದು ಬಿದ್ದು ವ್ಯಕ್ತಿ ಮೃತ್ಯು
ಚಾಮರಾಜನಗರ: ಬುಧವಾರ ಸಂಜೆ ರಭಸವಾಗಿ ಬಂದ ಗಾಳಿ-ಮಳೆಗೆ ಮರಗಳು ಮತ್ತು ವಿದ್ಯುತ್ ಕಂಬಗಳು ಧರೆಗುರುಳಿದ್ದು, ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಚಾಮರಾಜನಗರ ತಾಲ್ಲೂಕಿನಲ್ಲಿ ನಡೆದಿದೆ. ಚಾಮರಾಜನಗರ ತಾಲ್ಲೂಕಿನಅರಳೀಪುರ ಗ್ರಾಮದ ಕುಂಬಾರ ಬೀದಿಯ ನಿವಾಸಿ ರೇವಣ್ಣ (55) ಮೃತ ವ್ಯಕ್ತಿ. ಬುಧವಾರ ಸಂಜೆ ಐದು ಗಂಟೆ ಸುಮಾರಿಗೆ ಬಿರುಗಾಳಿ ಸಹಿತ ಮಳೆ ಆರಂಭವಾಗಿದ್ದು, ಸುಮಾರು ಒಂದು ಗಂಟೆ ಕಾಲ ಧಾರಾಕಾರವಾಗಿ ಮಳೆಯಾಗಿದೆ ಎಂದು ತಿಳಿದು ಬಂದಿದೆ. ಈ ವೇಳೆ ಜಮೀನಿನಿಂದ ವಾಪಸ್ಸಾಗುತ್ತಿದ್ದ ರೇವಣ್ಣ ಅವರ ಮೇಲೆ ರಭಸವಾಗಿ ಬೀಸಿದ ಗಾಳಿಯಿಂದ ತೆಂಗಿನ ಮರ ಮುರಿದು ಬಿದ್ದಿದೆ. ಪರಿಣಾಮ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮಧ್ಯಾಹ್ನ ಮೂರು ಗಂಟೆಗೆ ಮನೆಯಿಂದ ತೆರಳಿದ್ದ ರೇವಣ್ಣ ಸಂಜೆಯಾದರೂ ಮನೆಗೆ ವಾಪಸ್ಸಾಗದ ಕಾರಣ ಕುಟುಂಬಸ್ಥರು ತೆರಳಿ ಪರಿಶೀಲಿಸಿದಾಗ ಘಟನೆ ಬೆಳಕಿಗೆ ಬಂದಿದೆ. ಅಯ್ಯನಪುರ ಗ್ರಾಮದ ಬಳಿ ಮರದ ಕೊಂಬೆ ವಿದ್ಯುತ್ ತಂತಿಗಳ ಮೇಲೆ ಮುರಿದು ಬಿದ್ದಿದೆ. ಕರಿಯನಕಟ್ಟೆ ಬಳಿ ವಿದ್ಯುತ್ ಲೈನ್ ಮೇಲೆ ಮರ ಬಿದ್ದಿದೆ. ಹೊಂಗನೂರು ಬಳಿ ವಿದ್ಯುತ್ ಕಂಬ ಧರೆಗುರುಳಿದೆ.
ಪಾಕಿಸ್ತಾನ ಹಾಗೂ ಅಫ್ಘಾನಿಸ್ತಾನದ ನಡುವಿನ ಯುದ್ಧಕ್ಕೆ ರಂಜಾನ್ ಹಬ್ಬದ ಪ್ರಯುಕ್ತ ತಾತ್ಕಾಲಿಕ ಕದನ ವಿರಾಮ ಬಿದ್ದಿದ್ದು, ಇಸ್ಲಾಮಿಕ್ ರಾಷ್ಟ್ರಗಳಾದ ಸೌದಿ ಅರೇಬಿಯಾ, ಕತಾರ್ ಮತ್ತು ಟರ್ಕಿ ಮನವಿಯ ಮೇರೆಗೆ ಈದ್-ಅಲ್-ಫಿತರ್ ಹಬ್ಬದ ವಾರ ಮುಗಿಯುವವರೆಗೂ ಅಂದರೆ ಮಾ.23ರವರೆಗೂ ಕದನ ವಿರಾಮ ಘೋಷಿಸಲಾಗಿದ್ದು, ಯಾವುದೇ ಮಿಲಿಟರಿ ದಾಳಿಗಳನ್ನು ನಡೆಸುವುದಿಲ್ಲ ಎಂದು ಪಾಕ್ ಹಾಗೂ ಅಫ್ಘಾನಿಸ್ತಾನ ಕಡೆಗಳವರು ತಿಳಿಸಿದ್ದಾರೆ. ಅಲ್ಲದೆ, ಒಂದು ವೇಳೆ ಈ ಸಮಯದಲ್ಲಿ ನಿಯಮ ಮೀರಿ ದಾಳಿ ನಡೆದರೆ ತಕ್ಕ ಪ್ರತಿಕ್ರಿಯೆ ನೀಡಲಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಕುಕನೂರು: ತಳ್ಳುಗಾಡಿಗೆ ಬೈಕ್ ಢಿಕ್ಕಿ; ಓರ್ವ ಮೃತ್ಯು
ಕುಕನೂರು, ಮಾ.19: ಪಟ್ಟಣದ ವಿದ್ಯಾನಂದ ಗುರುಕುಲ ಶಾಲೆ ಸಮೀಪ ಬುಧವಾರ ರಾತ್ರಿ ತಳ್ಳುಗಾಡಿ ಮತ್ತು ಬೈಕ್ ನಡುವೆ ಸಂಭವಿಸಿದ ಅಪಘಾತದಲ್ಲಿ ಓರ್ವ ವ್ಯಕ್ತಿ ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ. ಮೃತರನ್ನು ತಾಲೂಕಿನ ಕಕ್ಕಿಹಳ್ಳಿ ಗ್ರಾಮದ ಅಬ್ದುಲ್ ರಹ್ಮಾನ್ (50) ಎಂದು ಗುರುತಿಸಲಾಗಿದೆ. ಪೊಲೀಸರ ಪ್ರಾಥಮಿಕ ಮಾಹಿತಿಯ ಪ್ರಕಾರ, ರಾತ್ರಿ ಸುಮಾರು 10 ಗಂಟೆಯ ವೇಳೆಗೆ ಕುಕನೂರು ನಿವಾಸಿ ಹಮೀದ್ ತಮ್ಮ ತಳ್ಳುಗಾಡಿಯಲ್ಲಿ ವ್ಯಾಪಾರ ಮುಗಿಸಿಕೊಂಡು ರಸ್ತೆಯ ಬದಿಯಲ್ಲಿ ಸಾಗುತ್ತಿದ್ದರು. ಈ ವೇಳೆ ವೇಗವಾಗಿ ಬಂದ ಬೈಕ್ ಸವಾರ ನಿಯಂತ್ರಣ ತಪ್ಪಿ ತಳ್ಳುಗಾಡಿಗೆ ಢಿಕ್ಕಿ ಹೊಡೆದಿದ್ದಾನೆ ಎನ್ನಲಾಗಿದೆ. ಢಿಕ್ಕಿಯ ತೀವ್ರತೆಗೆ ಬೈಕ್ ಸವಾರನ ತಲೆಗೆ ಗಂಭೀರ ಪೆಟ್ಟು ಬಿದ್ದು, ರಕ್ತಸ್ರಾವದಿಂದ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ತಳ್ಳುಗಾಡಿ ಸಾಗಿಸುತ್ತಿದ್ದ ಹಮೀದ್ ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಸ್ಥಳೀಯರು ಗಾಯಾಳುವನ್ನು ತಕ್ಷಣ ಸಮೀಪದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದರೂ, ಬೈಕ್ ಸವಾರ ಮೃತಪಟ್ಟಿರುವುದಾಗಿ ವೈದ್ಯರು ದೃಢಪಡಿಸಿದ್ದಾರೆ. ಈ ಘಟನೆ ಕುಕನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಪ್ರಕರಣ ದಾಖಲಿಸಲಾಗಿದೆ.
ಕರ್ನಾಟಕ ಉಪಚುನಾವಣೆ : ದಾವಣಗೆರೆ ದಕ್ಷಿಣ, ಬಾಗಲಕೋಟೆಗೆ ಬಿಜೆಪಿ ಅಭ್ಯರ್ಥಿ ಘೋಷಣೆ
Karnataka By Election : ರಾಜ್ಯದಲ್ಲಿ ಭಾರೀ ಚರ್ಚೆಯಲ್ಲಿರುವ ಎರಡು ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಬಿಜೆಪಿಯ ಕೇಂದ್ರೀಯ ಆಯ್ಕೆ ಸಮಿತಿ, ಅಭ್ಯರ್ಥಿಯನ್ನು ಪ್ರಕಟಿಸಿದೆ. ಬಾಗಲಕೋಟೆಯಲ್ಲಿ ನಿರೀಕ್ಷಿತ ಆಕಾಂಕ್ಷಿಗೆ ಟಿಕೆಟ್ ನೀಡಿದರೆ, ದಾವಣಗೆರೆಯಲ್ಲಿ ಯಾರೂ ನಿರೀಕ್ಷೆ ಮಾಡದವರಿಗೆ ಟಿಕೆಟ್ ಸಿಕ್ಕಿದೆ.
ಹಾವೇರಿ: ಮಾವಿಗೆ ಬ್ಲಾಸಮ್ ಬ್ಲೈಟ್ ರೋಗ; ಭಾರೀ ಪ್ರಮಾಣದಲ್ಲಿ ಹಾನಿ
ಮಾವು ಬೆಳೆಯು ಹಾವೇರಿ ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆಗಳಲ್ಲಿ ಒಂದಾಗಿದೆ. ಸಾವಿರಾರು ರೈತರು ಮಾವು ಬೆಳೆ ಅವಲಂಬಿಸಿ ಜೀವನ ಸಾಗಿಸುತ್ತಿದ್ದಾರೆ. ಆದರೆ ಹೂ ಬಿಡುವ ಮಹತ್ವದ ಹಂತದಲ್ಲೇ ರೋಗ ಬಾಧಿಸಿರುವುದರಿಂದ ವರ್ಷದ ಆದಾಯ ಕೈ ತಪ್ಪುವ ಭೀತಿ ಉಂಟಾಗಿದೆ. ಸಾಕಷ್ಟು ವೆಚ್ಚ ಮಾಡಿ ಗೊಬ್ಬರ, ಔಷಧ, ಕಾರ್ಮಿಕ ವೆಚ್ಚಗಳನ್ನು ಭರಿಸಿದ ರೈತರಿಗೆ ಇದು ದೊಡ್ಡ ಆರ್ಥಿಕ ಹೊಡೆತ ನೀಡಿದೆ.
ಹೊಸ ವರುಷ, ನವ ಹರುಷ, ಎಲ್ಲೆಲ್ಲೂ ಯುಗಾದಿ ಖರೀದಿ ಸಂಭ್ರಮ!
ಹೊಸ ವರುಷ ಹೊಸತು ಹರುಷ ಎಂಬ ನಾಣ್ಣುಡಿಯಂತೆ, ಭಾರತೀಯ ಸಂಸ್ಕೃತಿಯ ಹೊಸ ವರ್ಷವಾದ ಯುಗಾದಿಯನ್ನು ಸ್ವಾಗತಿಸಲು ಸಡಗರದ ಸಿದ್ಧತೆಗಳು ನಡೆದಿವೆ. ನಗರದ ಪ್ರಮುಖ ಮಾರುಕಟ್ಟೆಗಳು ಹಾಗೂ ರಸ್ತೆಗಳು ಜನಜಂಗುಳಿಯಿಂದ ಕೂಡಿದ್ದು, ಹಬ್ಬದ ಕಳೆ ಮನೆ ಮಾಡಿತ್ತು. ಹೂವು, ಹಣ್ಣು, ತರಕಾರಿಗಳ ಮಾರಾಟ ಭರಾಟೆ ಹೆಚ್ಚಾಗಿದೆ.
ಪ್ರಯಾಣಿಕರೇ ಗಮನಿಸಿ: ವಿಮಾನದಲ್ಲಿ ನಿಮ್ಮಿಷ್ಟದ ಆಸನ ಉಚಿತವಾಗಿ ಆರಿಸಿಕೊಳ್ಳಲು ಅವಕಾಶ
ವಿಮಾನ ಪ್ರಯಾಣಿಕರಿಗೆ ಕೇಂದ್ರ ಸರ್ಕಾರ ಮಹತ್ವದ ಸುದ್ದಿ ನೀಡಿದ್ದು, ಇನ್ನು ಮುಂದೆ ಹೆಚ್ಚುವರಿ ಶುಲ್ಕವಿಲ್ಲದೆ ನೆಚ್ಚಿನ ಸೀಟುಗಳನ್ನು ಆಯ್ಕೆ ಮಾಡುವ ಅವಕಾಶ ಕಲ್ಪಿಸಿದೆ. ಇದುವರೆಗೆ ಶೇ.20 ಸೀಟುಗಳಿಗೆ ಮಾತ್ರ ಉಚಿತ ಆಯ್ಕೆ ಅವಕಾಶ ಇತ್ತು. ಈಗ ಅದನ್ನು ವಿಸ್ತರಿಸಿ ಹೆಚ್ಚಿನ ಸೀಟುಗಳನ್ನು ಉಚಿತವಾಗಿ ಆಯ್ಕೆ ಮಾಡಬಹುದಾಗಿದೆ. ಹೊಸ ನಿಯಮಗಳು ದೇಶೀಯ ವಿಮಾನ ಪ್ರಯಾಣಗಳಿಗೆ ಅನ್ವಯವಾಗಲಿದ್ದು, ಪ್ರಯಾಣಿಕರ ಹಕ್ಕುಗಳನ್ನು ಕಾಪಾಡಲು ಸರ್ಕಾರ ಹಲವು ಮಾರ್ಗಸೂಚಿಗಳನ್ನು ಜಾರಿಗೊಳಿಸಿದೆ.
Dhurandhar 2 Twitter Review: ‘ಇದು ಭಾರತದ ಅತ್ಯುತ್ತಮ ಚಿತ್ರ, ಮಿಸ್ ಮಾಡಬೇಡಿ’ ಎಂದ ಪ್ರೇಕ್ಷಕರು!
ರಣ್ವೀರ್ ಸಿಂಗ್ ಅಭಿನಯದ ‘ಧುರಂಧರ್’ ಚಿತ್ರ ನೋಡಿ ಶಿಳ್ಳೆ - ಚಪ್ಪಾಳೆ ಹೊಡೆದಿದ್ದ ಪ್ರೇಕ್ಷಕರು ‘ಧುರಂಧರ್ 2’ ಚಿತ್ರವನ್ನೂ ಹಾಡಿ ಹೊಗಳುತ್ತಿದ್ದಾರೆ. ಚಿತ್ರದ ಸ್ಕ್ರೀನ್ ಟೈಮ್ ತುಸು ಜಾಸ್ತಿಯೇ ಇದ್ದರೂ, ಎಲ್ಲೂ ಬೋರಿಂಗ್ ಸನ್ನಿವೇಶಗಳಿಲ್ಲ ಅಂತಿದ್ದಾರೆ ಪ್ರೇಕ್ಷಕರು. ಅಷ್ಟರಮಟ್ಟಿಗೆ ಎಲ್ಲರನ್ನೂ ಹಿಡಿದಿಟ್ಟುಕೊಳ್ಳುವಂತೆ ಚಿತ್ರಕಥೆ ರಚಿಸಿದ್ದಾರೆ ನಿರ್ದೇಶಕ ಆದಿತ್ಯ ಧರ್.
US ಕಡೆ ಮುಖ ಮಾಡುತ್ತಿದೆ ಪಾಕ್ ನ್ಯೂಕ್ಲಿಯರ್ ಕ್ಷಿಪಣಿಗಳು: ಅಮೆರಿಕ ಗುಪ್ತಚರ ಇಲಾಖೆ ಗಂಭೀರ ಎಚ್ಚರಿಕೆ
Intel warns US Government : ಪಾಕಿಸ್ತಾನವೇ ಅಮೆರಿಕಕ್ಕೆ ದೊಡ್ಡ ಪರಮಾಣು ಭೀತಿ ಎಂದು ಯುಎಸ್ ಗುಪ್ತಚರ ಇಲಾಖೆ ಅಲ್ಲಿನ ಸರ್ಕಾರಕ್ಕೆ ಎಚ್ಚರಿಕೆಯನ್ನು ನೀಡಿದೆ. ಅಮೆರಿಕದ ಮೇಲೆ ದಾಳಿ ಮಾಡಬಹುದಾದ ಕ್ಷಿಪಣಿಗಳ ಸಂಖ್ಯೆಯನ್ನು ಪಾಕಿಸ್ತಾನ ದಿನದಿಂದ ದಿನಕ್ಕೆ ಹೆಚ್ಚಿಸುತ್ತಿದೆ ಎಂದು ಇಂಟೆಲ್ ಮುಖ್ಯಸ್ಥೆ ತುಳಸಿ ಗಬ್ಬಾರ್ಡ್ ಎಚ್ಚರಿಕೆಯನ್ನು ನೀಡಿದ್ದಾರೆ.
ನವದೆಹಲಿ/ಬೆಂಗಳೂರು: ಭಾರತೀಯ ರೈಲ್ವೆ ಇಲಾಖೆ ಕರ್ನಾಟಕ ವ್ಯಾಪ್ತಿಯಲ್ಲಿ ಹೊಸ ರೈಲು ಮಾರ್ಗಗಳನ್ನು ನಿರ್ಮಿಸುತ್ತಿದೆ. ವಿವಿಧ ಅಭಿವೃದ್ಧಿ ಕೆಲಸಗಳು ಪ್ರಗತಿಯಲ್ಲಿವೆ. ಇದೀಗ ಮಲೆನಾಡು-ಉತ್ತರ ಕರ್ನಾಟಕ, ಮಲೆನಾಡು-ಕರಾವಳಿ ಸಂಪರ್ಕಿಸುವ ಹೊಸ ರೈಲು ಮಾರ್ಗಗಳಿಗೆ ಕೇಂದ್ರ ರೈಲ್ವೆ ಸಚಿವರಿಗೆ ಮನವಿ ಸಲ್ಲಿಸಲಾಗಿದೆ. ಇದರೊಂದಿಗೆ ದಶಕಗಳ ಮಲೆನಾಡಿನ ಜನರ ಬೇಡಿಕೆಗಳು ಇಡೇರಿಸುವಂತೆ, ಅತ್ಯಗತ್ಯ ಮಾರ್ಗಗಳ ಮೂಲಸೌಕರ್ಯ ಅಭಿವೃದ್ಧಿಗೂ ಮನವಿ ಮಾಡಲಾಗಿದೆ. ಸಂಸದರಾದ ಬಿ.ವೈ
ಬಿಸಿಲಿನ ಪ್ರಖರ ಛಾಯೆ ಮಂಕಾದ ಮಲಪ್ರಭೆ; ನವಿಲುತೀರ್ಥದಿಂದ ನೀರು ಹರಿದರೆ ಮಾತ್ರ ಪರಿಹಾರ
ಬಾದಾಮಿ ತಾಲೂಕಿನ ದಕ್ಷಿಣ ಭಾಗದ ಹಾಗನೂರು ಬಳಿ ಹರಿವು ಆರಂಭಿಸುವ ಮಲಪ್ರಭಾ ನದಿ ವ್ಯಾಪ್ತಿಯಲ್ಲಿ 40 ಹಳ್ಳಿಗಳಿವೆ. ಎಲ್ಲ ಹಳ್ಳಿಗಳೂ ಮಲಪ್ರಭಾ ನೀರೇ ಜೀವಜಲ. ಬೇಸಿಗೆಯಲ್ಲಿ ನದಿ ಬತ್ತಿದರೆ ಬೋರವೆಲ್ ಮತ್ತು ತೆರೆದ ಬಾವಿಗಳತ್ತ ಜನರು ಮುಖ ಮಾಡುತ್ತಾರೆ. ‘‘ಗ್ರಾಪಂಗಳು ಅನುಸರಿಸುವ ಸಮರ್ಪಕ ನಿರ್ವಹಣೆಯಿಂದ ಮಾತ್ರ ನೀರಿನ ಸಮಸ್ಯೆ ನಿವಾರಿಸಲು ಸಾಧ್ಯ,’’ ಎಂದು ನದಿ ತೀರದ ಜನರು ಹೇಳುತ್ತಾರೆ.
ಹೊಸದಿಲ್ಲಿ: ಭಾರತ ಟಿ20 ಕ್ರಿಕೆಟ್ ತಂಡದ ನಾಯಕ ಸೂರ್ಯಕುಮಾರ್ ಯಾದವ್ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಕೊನೆಗೂ ಶೇಕಡಾ 80ರಷ್ಟು ಗೆಲುವಿನ ದಾಖಲೆ ಸಾಧಿಸಿರುವ ಖುಷಿಯಲ್ಲಿದ್ದಾರೆ. ಸತತ ಎರಡು ಬಾರಿ ವಿಶ್ವಕಪ್ ಗೆದ್ದ ಏಕೈಕ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾದ ಭಾರತ ತಂಡವನ್ನು ಚುಟುಕು ಕ್ರಿಕೆಟ್ನಲ್ಲಿ ಮುನ್ನಡೆಸಿದ ಎಸ್ಕೆವೈ ಅವರ ಗೆಲುವಿನ ಪ್ರಮಾಣ ಶೇಕಡಾ 80ರಷ್ಟಿದೆ. ಶಿಕ್ಷಣ ಕ್ಷೇತ್ರದಲ್ಲಿ ಪಡೆಯಲು ಸಾಧ್ಯವಾಗದ ಅಂಕವನ್ನು ಕ್ರಿಕೆಟ್ನಲ್ಲಿ ಪಡೆಯಲು ಸಾಧ್ಯವಾದ ಬಗ್ಗೆ ಅವರು ಅಪಾರ ಸಂತಸ ವ್ಯಕ್ತಪಡಿಸಿದ್ದಾರೆ. ಶಾಲೆ ಮತ್ತು ಕಾಲೇಜಿನಲ್ಲಿ ಓದಿನ ಮೂಲಕ ನಾನು ಸಾಧಿಸಲು ಬಯಸಿದ್ದ ಶೇಕಡಾವಾರು ಅಂಕವನ್ನು ಇಂದು ಕ್ರಿಕೆಟ್ನಲ್ಲಿ ಪಡೆಯುತ್ತಿದ್ದೇನೆ, ಎಂದು 2024ರಿಂದ ಚುಟುಕು ಕ್ರಿಕೆಟ್ ನಾಯಕನಾಗಿ ತಂಡವನ್ನು ಮುನ್ನಡೆಸುತ್ತಿರುವ ಎಸ್ಕೆವೈ ತಿಳಿಸಿದ್ದಾರೆ. ಎಸ್ಕೆವೈ ನೇತೃತ್ವದಲ್ಲಿ ಭಾರತ ಟಿ20 ತಂಡ 52 ಪಂದ್ಯಗಳನ್ನು ಆಡಿದ್ದು, ಅದರಲ್ಲಿ 42 ಪಂದ್ಯಗಳನ್ನು ಗೆದ್ದಿದೆ. ಅಲ್ಲಿ (ಶಾಲೆ, ಕಾಲೇಜಿನಲ್ಲಿ) ನಾನು ಎಂದೂ ಶೇಕಡಾ 50-60ರ ಗಡಿ ದಾಟಿಲ್ಲ. ಆದರೆ ಖಂಡಿತವಾಗಿಯೂ ಶೇಕಡಾ 80ರ ಗೆಲುವು ಖುಷಿ ನೀಡುವಂತದ್ದು. ಅಂಕಿ ಅಂಶಗಳಿಗೆ ನಾನು ಹೆಚ್ಚಿನ ಮಹತ್ವ ಕೊಡುವುದಿಲ್ಲವಾದರೂ, ಯಾವುದೇ ಪಂದ್ಯವನ್ನು ಸೋಲಲು ಯಾರೂ ಬಯಸುವುದಿಲ್ಲ. ಎಲ್ಲ ಪಂದ್ಯಗಳನ್ನು ಗೆಲ್ಲುವುದು ನನಗೆ ಹೆಚ್ಚು ಸಂತೋಷ ನೀಡುತ್ತದೆ, ಎಂದು ಹೇಳಿದ್ದಾರೆ. ಮುಂಬೈ ಮೂಲದ ಎಸ್ಕೆವೈ ಅವರ ತಂದೆ ಅಶೋಕ್ ಕುಮಾರ್ ಯಾದವ್ ಭಾಭಾ ಅಟೊಮಿಕ್ ರಿಸರ್ಚ್ ಸೆಂಟರ್ನಲ್ಲಿ ಎಲೆಕ್ಟ್ರಿಕಲ್ ಎಂಜಿನಿಯರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಸೂರ್ಯಕುಮಾರ್ ಅವರಿಗೆ ಓದಿನ ಬಗ್ಗೆ ಹೆಚ್ಚಿನ ಆಸಕ್ತಿ ಇರಲಿಲ್ಲ. ಅವರ ಕುಟುಂಬವೂ ಕ್ರಿಕೆಟ್ ಮಹತ್ವಾಕಾಂಕ್ಷೆಗೆ ಸದಾ ಬೆಂಬಲ ನೀಡಿದೆ.
Maharashtra | ಜೈಲಿನ ಹೊರಗೆ ಪಟಾಕಿ ಸಿಡಿಸಿ ಗೂಂಡಾನ ಹುಟ್ಟುಹಬ್ಬ ಆಚರಣೆ: ಮೂವರ ಬಂಧನ
ಕಲ್ಯಾಣ್: ಆಧಾರ್ ವಾಡಿ ಸೆರೆಮನೆಯಲ್ಲಿದ್ದ ಗೂಂಡಾನ ಹುಟ್ಟುಹಬ್ಬದ ಸಂಭ್ರಮಾಚರಣೆಯ ಅಂಗವಾಗಿ ಜೈಲಿನ ಹೊರಗೆ ಪಟಾಕಿ ಸಿಡಿಸಿದ ನಾಲ್ಕು ಮಂದಿಯ ಪೈಕಿ ಮೂವರನ್ನು ಖದಕ್ ಪಾಡ ಪೊಲೀಸರು ಬಂಧಿಸಿದ್ದಾರೆ. ಒಬ್ಬ ತಲೆಮರೆಸಿಕೊಂಡಿದ್ದಾನೆ. ಜೈಲಿನಲ್ಲಿದ್ದ ಉಲ್ಲಾಸನಗರದ ಗೂಂಡಾ ಸತೀಶ್ ಅಲಿಯಾಸ್ ಸತ್ಯಭಾಯಿ ಕಾಂಬ್ಳೆ ಎಂಬಾತನ ಹುಟ್ಟುಹಬ್ಬದ ಆಚರಣೆಯ ಅಂಗವಾಗಿ ಜೈಲಿನ ಹೊರಗೆ ಪಟಾಕಿ ಸಿಡಿಸಿದ ರೋಹಿತ್ ಜಗದಾಳೆ, ಕ್ಷಿತಿಜ್ ಭಗತ್, ಆಕಾಶ್ ಖಾಡ್ಸೆಯನ್ನು ಬಂಧಿಸಲಾಗಿದೆ. ಮತ್ತೊಬ್ಬ ತಪ್ಪಿಸಿಕೊಂಡಿದ್ದಾನೆ. ಆರೋಪಿಗಳು ಜೈಲು ಪ್ರದೇಶದಲ್ಲಿ ಪ್ರಕ್ಷುಬ್ಧತೆಯನ್ನು ಸೃಷ್ಟಿಸಿ ಭದ್ರತಾ ಆತಂಕಕ್ಕೆ ಕಾರಣರಾಗಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ಜೈಲಿನ ಹೊರಗೆ ಪಟಾಕಿ ಸಿಡಿಸಿದ್ದು ತಿಳಿದುಬಂದ ಬೆನ್ನಲ್ಲೇ ಖದಕ್ ಪಾಡ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ತಕ್ಷಣ ಶೋಧ ಕಾರ್ಯಾಚರಣೆ ಕೈಗೊಂಡು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ನಾಲ್ಕನೇ ಆರೋಪಿಗಾಗಿ ಶೋಧ ನಡೆದಿಯುತ್ತಿದೆ ಎಂದು ಸಹಾಯಕ ಪೊಲೀಸ್ ಆಯುಕ್ತ ಕಲ್ಯಾಣ್ ಜೀ ಘಾಟೆ ವಿವರಿಸಿದ್ದಾರೆ. ಇಂಥ ಕಾನೂನುಬಾಹಿರ ಕೃತ್ಯಗಳನ್ನು ಎಸಗಿದವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತದೆ ಎಂಬ ಸಂದೇಶವನ್ನು ರವಾನಿಸುವ ಸಲುವಾಗಿ ಪೊಲೀಸರು ನಗರದಲ್ಲಿ ಆರೋಪಿಗಳ ಪರೇಡ್ ನಡೆಸಿದರು.
ಕೊಡಗು ಟೂರಿಸಂಗೆ ಎಲ್ ಪಿಜಿ ಪೆಟ್ಟು ; ಖಾಲಿ ಹೊಡೆಯುತ್ತಿವೆ ಪ್ರವಾಸಿತಾಣಗಳು
ಸಿಲಿಂಡರ್ ಅಭಾವ ನೇರವಾಗಿ ಪ್ರವಾಸೋದ್ಯಮವನ್ನು ಬಾಧಿಸಿದೆ. ಫೆಬ್ರವರಿ ಮತ್ತು ಮಾರ್ಚ್ನಲ್ಲಿ ಶಾಲಾ-ಕಾಲೇಜು ಪರೀಕ್ಷೆಗಳಿರುವುದರಿಂದ ಸಾಮಾನ್ಯವಾಗಿ ಪ್ರವಾಸೋದ್ಯಮ ಕೊಂಚ ಡಲ್ ಹೊಡೆಯುತ್ತದೆ. ಮಾರ್ಚ್ ಅಂತ್ಯದಿಂದ(ಯುಗಾದಿ ಸಂದರ್ಭ) ಮತ್ತೆ ಪ್ರವಾಸಿಗರು ಬರಲಾರಂಭಿಸುತ್ತಾರೆ. ಆದರೆ, ಈ ಬಾರಿ ಯುಗಾದಿಗೆ ಮುನ್ನಾ ದಿನವೂ ಜಿಲ್ಲೆಯ ಪ್ರವಾಸಿ ತಾಣಗಳು ಬಣಗುಡುತ್ತಿವೆ.
Rain Alert: ಕರ್ನಾಟಕದ ಈ 9 ಜಿಲ್ಲೆಗಳಿಗೆ ಮುಂದಿನ 2 ದಿನ ವ್ಯಾಪಕ ಆಲಿಕಲ್ಲು ಮಳೆ ಎಚ್ಚರಿಕೆ
ಬೆಂಗಳೂರು: ಕರ್ನಾಟಕದಾದ್ಯಂತ ಪೂರ್ವ ಮುಂಗಾರು ಮಳೆ ಅಬ್ಬರ ಶುರುವಾಗಿದೆ. ಮಲೆನಾಡು ಹಾಗೂ ಒಳನಾಡು ಜಿಲ್ಲೆಗಳಲ್ಲಿ ಮುಂದಿನ 02 ದಿನ ಭರ್ಜರಿ ಮಳೆಯಾಗುವ ಸಾಧ್ಯತೆ ಇದೆ. ಬಿರುಗಾಳಿ ಸಹಿತ ಗುಡಗು, ಮಿಂಚಿನೊಂದಿಗೆ ಆಲಿಕಲ್ಲು ಮಳೆ ಆಗಲಿದೆ. ಈ ಪೈಕಿ 09 ಜಿಲ್ಲೆಗಳಿಗೆ ಆಲಿಕಲ್ಲು ಮಳೆ (ಆರೆಂಜ್ ಅಲರ್ಟ್) ಮುನ್ಸೂಚನೆ ಹವಾಮಾನ ಇಲಾಖೆ ನೀಡಿದೆ. ಈಗಾಗಲೇ ಧಾರವಾಡ, ಶಿವಮೊಗ್ಗ, ಹಾಸನ,
ಮಧ್ಯಪ್ರಾಚ್ಯ ಸಂಘರ್ಷ | ಕುವೈತ್ ನಲ್ಲಿ ಈದುಲ್ ಫಿತ್ರ್ ಸಾಮೂಹಿಕ ಪ್ರಾರ್ಥನೆ ರದ್ದು
ಕುವೈತ್ ಸಿಟಿ: ಪ್ರಸ್ತುತ ಉದ್ವಿಗ್ನ ಸನ್ನಿವೇಶಗಳ ಹಿನ್ನೆಲೆಯಲ್ಲಿ ಕುವೈತ್ ನ ಗ್ರ್ಯಾಂಡ್ ಮಸೀದಿಯಲ್ಲಿ ಈದುಲ್ ಫಿತ್ರ್ ಸಾಮೂಹಿಕ ಪ್ರಾರ್ಥನೆಗಳನ್ನು ರದ್ದುಗೊಳಿಸಲಾಗಿದೆ. “ಪ್ರಸ್ತುತ ಪರಿಸ್ಥಿತಿಗಳನ್ನು ಗಮನದಲ್ಲಿಟ್ಟುಕೊಂಡು ಈದುಲ್ ಫಿತ್ರ್ ಪ್ರಾರ್ಥನೆಗಳನ್ನು ನಡೆಸಲು ಸಾಧ್ಯವಾಗುವುದಿಲ್ಲ” ಎಂದು ಮಸೀದಿ ಆಡಳಿತ ಪ್ರಕಟಣೆಯಲ್ಲಿ ವಿಷಾದ ವ್ಯಕ್ತಪಡಿಸಿದೆ ಎಂದು Aljazeera ವರದಿ ಮಾಡಿದೆ. ಇದಕ್ಕೂ ಮೊದಲು, ಕುವೈತ್ ಸುದ್ದಿ ಸಂಸ್ಥೆ ವರದಿ ಮಾಡಿರುವಂತೆ, ದೇಶದ ಚಂದ್ರ ದರ್ಶನ ಸಮಿತಿಯು ಶುಕ್ರವಾರವನ್ನು ಶವ್ವಾಲ್ ತಿಂಗಳ ಮೊದಲ ದಿನವೆಂದು ಅಧಿಕೃತವಾಗಿ ದೃಢಪಡಿಸಿದೆ. ಪವಿತ್ರ ರಮಝಾನ್ ತಿಂಗಳ ಅಂತ್ಯವನ್ನು ಸೂಚಿಸುವ ಈದುಲ್ ಫಿತ್ರ್ ವಿಶ್ವದಾದ್ಯಂತ ಭಕ್ತಿಭಾವದಿಂದ ಆಚರಿಸಲ್ಪಡುವ ಪ್ರಮುಖ ಹಬ್ಬವಾಗಿದೆ. ಆದರೆ, ಇರಾನ್ ಮೇಲೆ ನಡೆಯುತ್ತಿರುವ ಯುಎಸ್–ಇಸ್ರೇಲ್ ಯುದ್ಧ ಹಾಗೂ ಅದರ ಪರಿಣಾಮವಾಗಿ ಗಲ್ಫ್ ಪ್ರದೇಶ ಮತ್ತು ಅದರಾಚೆಗೆ ವಿಸ್ತರಿಸುತ್ತಿರುವ ಉದ್ವಿಗ್ನ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಈ ಬಾರಿ ಈದುಲ್ ಫಿತ್ರ್ ಆಚರಣೆಗಳ ಮೇಲೆ ಯುದ್ಧದ ಕರಿನೆರಳು ಆವರಿಸಿದೆ
ಅಮೆರಿಕದ ಯುದ್ಧ ತಂತ್ರಕ್ಕೆ ಬಲಿಯಾಗಬೇಡಿ: ‘ದಿ ಎಲ್ಡರ್ಸ್’ ಎಚ್ಚರಿಕೆ
ಹೊಸದಿಲ್ಲಿ/ಲಂಡನ್: ಇರಾನ್ ಬಿಕ್ಕಟ್ಟಿನ ಸಂದರ್ಭದಲ್ಲಿ ಅಮೆರಿಕಕ್ಕೆ ಸಹಾಯ ಮಾಡಲು ಹೋಗಿ ಯುದ್ಧದಲ್ಲಿ ಭಾಗವಹಿಸಬೇಡಿ. ಅಮೆರಿಕದ ಯುದ್ಧ ತಂತ್ರಕ್ಕೆ ಬಲಿಯಾಗಬೇಡಿ ಎಂದು ‘ದಿ ಎಲ್ಡರ್ಸ್’ ಗುಂಪು ಎಲ್ಲಾ ದೇಶಗಳಿಗೆ ಎಚ್ಚರಿಕೆ ನೀಡಿದೆ ಎಂದು Aljazeera ವರದಿ ಮಾಡಿದೆ. ಹಾರ್ಮುಝ್ ಜಲಸಂಧಿಯಲ್ಲಿ ಹಡಗುಗಳ ಸುರಕ್ಷತೆಗೆ ಸಹಾಯ ಮಾಡುವಂತೆ ಅಮೆರಿಕ ಕೆಲವು ದೇಶಗಳನ್ನು ಒತ್ತಾಯಿಸುತ್ತಿದೆ ಎಂದು ‘ದಿ ಎಲ್ಡರ್ಸ್’ ಗುಂಪು ಉಲ್ಲೇಖಿಸಿದೆ. “ಈ ಒತ್ತಡವನ್ನು ದೇಶಗಳು ಒಟ್ಟಾಗಿ ವಿರೋಧಿಸಬೇಕು. ಯುದ್ಧವನ್ನು ಆರಂಭಿಸಿದವರೇ ಅದರ ಪರಿಣಾಮಗಳಿಗೆ ಜವಾಬ್ದಾರರು ಎಂದು ಹೇಳಬೇಕು. ಯುದ್ಧವನ್ನು ಬೇಗನೆ ನಿಲ್ಲಿಸಲು ಒತ್ತಾಯಿಸಬೇಕು” ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ. ‘ದಿ ಎಲ್ಡರ್ಸ್’ (The Elders) ಎನ್ನುವುದು 2007ರಲ್ಲಿ ನೆಲ್ಸನ್ ಮಂಡೇಲಾ ಅವರ ಪ್ರೇರಣೆಯಿಂದ ಸ್ಥಾಪಿತವಾದ ಸ್ವತಂತ್ರ ಜಾಗತಿಕ ಹಿರಿಯ ನಾಯಕರ ಗುಂಪಾಗಿದೆ. ಮಾಜಿ ರಾಷ್ಟ್ರಾಧ್ಯಕ್ಷರು, ವಿಶ್ವಸಂಸ್ಥೆಯ ಮಾಜಿ ಮುಖ್ಯಸ್ಥರು ಮತ್ತು ನೊಬೆಲ್ ಪ್ರಶಸ್ತಿ ವಿಜೇತರು ಇದರ ಸದಸ್ಯರಾಗಿದ್ದು, ಶಾಂತಿ, ನ್ಯಾಯ ಮತ್ತು ಮಾನವ ಹಕ್ಕುಗಳ ರಕ್ಷಣೆಯನ್ನು ಮಾಡುವುದು ಇದರ ಪ್ರಮುಖ ಉದ್ದೇಶವಾಗಿದೆ. ಯಾವುದೇ ಸರ್ಕಾರದ ಪ್ರಭಾವಕ್ಕೆ ಒಳಗಾಗದೆ, ಜಾಗತಿಕ ಸಂಘರ್ಷಗಳು, ಯುದ್ಧ ಪರಿಸ್ಥಿತಿಗಳು ಮತ್ತು ಪ್ರಮುಖ ರಾಜಕೀಯ ವಿಷಯಗಳ ಕುರಿತು ಸ್ಪಷ್ಟ ಅಭಿಪ್ರಾಯ ವ್ಯಕ್ತಪಡಿಸಿ, ಸಂವಾದ ಮತ್ತು ಶಾಂತಿಯುತ ಪರಿಹಾರಗಳನ್ನು ಉತ್ತೇಜಿಸುವುದು ಈ ಗುಂಪಿನ ಕಾರ್ಯವಾಗಿದೆ. ಈ ಗುಂಪಿನಲ್ಲಿ ಐರ್ಲೆಂಡ್, ಲೈಬೀರಿಯಾ, ಕೊಲಂಬಿಯಾ, ನಾರ್ವೆ ಮತ್ತು ಮಂಗೋಲಿಯಾದ ಮಾಜಿ ನಾಯಕರು ಇದ್ದಾರೆ. ಪಾಶ್ಚಿಮಾತ್ಯ ದೇಶಗಳು ಅಂತರರಾಷ್ಟ್ರೀಯ ಕಾನೂನನ್ನು ಎಲ್ಲರಿಗೂ ಸಮಾನವಾಗಿ ಅನ್ವಯಿಸುತ್ತಿಲ್ಲ ಎಂದು ಅವರು ಟೀಕಿಸಿದ್ದಾರೆ. “ಈ ದ್ವಂದ್ವ ಧೋರಣೆ ಮಧ್ಯಪ್ರಾಚ್ಯ ಮತ್ತು ಜಾಗತಿಕ ದಕ್ಷಿಣದ ದೇಶಗಳಿಗೆ ಸ್ಪಷ್ಟವಾಗಿದೆ. ಪಾಶ್ಚಿಮಾತ್ಯ ದೇಶಗಳು ತಮ್ಮ ಅನುಕೂಲಕ್ಕೆ ತಕ್ಕಂತೆ ಮಾತ್ರ ನಿಯಮಗಳನ್ನು ಬಳಸುತ್ತವೆ ಎಂಬ ಅಭಿಪ್ರಾಯ ಹೆಚ್ಚುತ್ತಿದೆ” ಎಂದು ಅವರು ಹೇಳಿದ್ದಾರೆ. ಇರಾನ್ ನಲ್ಲಿ ಮಾನವ ಹಕ್ಕು ಉಲ್ಲಂಘನೆಗಳು ನಡೆದಿದ್ದರೂ, ಮಿಲಿಟರಿ ಕ್ರಮದಿಂದ ಶಾಂತಿ ಅಥವಾ ಕಾನೂನು ಸುವ್ಯವಸ್ಥೆ ಬರದು ಎಂದು ಗುಂಪು ಹೇಳಿದೆ. “2003ರಲ್ಲಿ ಇರಾಕ್ ನಲ್ಲಿ ನಡೆದ ಯುದ್ಧದ ಬಳಿಕ ಉಂಟಾದ ಅಸ್ಥಿರತೆಯಂತೆಯೇ ಪರಿಸ್ಥಿತಿ ಇರಾನ್ ನಲ್ಲೂ ಉಂಟಾಗಬಹುದು. ಅಮೆರಿಕದ ಸ್ಪಷ್ಟ ಯೋಜನೆಯ ಕೊರತೆಯು ಇದಕ್ಕೆ ಕಾರಣವಾಗಿರಬಹುದು” ಎಂದು ‘ದಿ ಎಲ್ಡರ್ಸ್’ ಎಚ್ಚರಿಸಿದೆ.
ಬೆಂಗಳೂರು ಸುತ್ತ ಮತ್ತೆ ಭೂಸ್ವಾಧೀನದ ಭೀತಿ: ದೊಡ್ಡಬಳ್ಳಾಪುರದಲ್ಲಿ 2100 ಎಕರೆ ಭೂಸ್ವಾಧೀನಕ್ಕೆ ಸ್ಥಳ ಗುರುತು
ದೊಡ್ಡಬಳ್ಳಾಪುರದ ದೊಡ್ಡಬೆಳವಂಗಲ ವ್ಯಾಪ್ತಿಯಲ್ಲಿ ಒಟ್ಟು 4 ಹಳ್ಳಿಗಳ ಜಾಗಗಳನ್ನು. ಕೈಗಾರಿಕೆಗಳ ಅಭಿವೃದ್ಧಿಗಾಗಿ ಬಳಸಿ 2100 ಎಕರೆ ಕೃಷಿ ಭೂಮಿ ವಶಕ್ಕೆ ಮುಂದಾಗಿರುವುದರಿಂದ ರೈತರು ಒಗ್ಗಟ್ಟಲ್ಲಿ ವಿರೋಧ ಮಾಡಲು ಮುಂದಾಗಿದ್ದಾರೆ.
ಇರಾನ್ ಸಂಘರ್ಷ | ರಾಸ್ ಲಫಾನ್ ಮೇಲಿನ ದಾಳಿಯ ಬಳಿಕ ಖತರ್ ಅಮೀರ್, ಟ್ರಂಪ್ ಜೊತೆ ಮ್ಯಾಕ್ರನ್ ಮಾತುಕತೆ
ಪ್ಯಾರಿಸ್/ದೋಹಾ: ಖತರ್ ನ ರಾಸ್ ಲಫಾನ್ ಕೈಗಾರಿಕಾ ನಗರದಲ್ಲಿರುವ ವಿಶ್ವದ ಅತಿದೊಡ್ಡ ನೈಸರ್ಗಿಕ ಅನಿಲ ಸೌಲಭ್ಯವನ್ನು ಇರಾನ್ ಕ್ಷಿಪಣಿಗಳು ಗುರಿಯಾಗಿಸಿಕೊಂಡು ದಾಳಿ ನಡೆಸಿದ ನಂತರ, ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಖತರ್ ಅಮೀರ್ ಶೇಖ್ ತಮೀಮ್ ಬಿನ್ ಹಮದ್ ಅಲ್ ಥಾನಿ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿದ್ದಾರೆ. ಈ ಕುರಿತು ಮ್ಯಾಕ್ರನ್ ಸಾಮಾಜಿಕ ಜಾಲತಾಣ X ನಲ್ಲಿ ಮಾಹಿತಿ ನೀಡಿದ್ದಾರೆ.“ಇಂಧನ ಮತ್ತು ನೀರು ಸರಬರಾಜು ಸೇರಿದಂತೆ ನಾಗರಿಕರಿಗೆ ಸಂಬಂಧಿಸಿದ ಸೌಲಭ್ಯಗಳ ಮೇಲೆ ದಾಳಿ ನಡೆಯಬಾರದು. ಇಂತಹ ದಾಳಿಗಳನ್ನು ತಕ್ಷಣವೇ ನಿಲ್ಲಿಸಬೇಕು,” ಎಂದು ಅವರು ಹೇಳಿದ್ದಾರೆ. “ನಾಗರಿಕರು, ಅವರ ದಿನನಿತ್ಯದ ಅಗತ್ಯಗಳು ಹಾಗೂ ಜಾಗತಿಕ ಇಂಧನ ಪೂರೈಕೆಗಳನ್ನು ಯುದ್ಧದ ಉದ್ವಿಗ್ನತೆಯಿಂದ ರಕ್ಷಿಸುವುದು ಅತ್ಯಗತ್ಯ,” ಎಂದು ಮ್ಯಾಕ್ರನ್ ಹೇಳಿದ್ದಾರೆ. ರಾಸ್ ಲಫಾನ್ ಪ್ರದೇಶವು ಖತರ್ನ ಪ್ರಮುಖ ಅನಿಲ ಉತ್ಪಾದನಾ ಕೇಂದ್ರವಾಗಿದ್ದು, ಈ ದಾಳಿಯಿಂದ ಜಾಗತಿಕ ಇಂಧನ ಪೂರೈಕೆಯಲ್ಲಿ ವ್ಯತ್ಯಯವುಂಟಾಗುವ ಆತಂಕ ಉಂಟಾಗಿದೆ.
ಬೈಂದೂರು ಕಿರು ವಿಮಾನ ನಿಲ್ದಾಣ ಯೋಜನೆಗೆ ಗ್ರಹಣ : ಒತ್ತಿನೆಣೆಯಲ್ಲಿ ಮೂಕಾಂಬಿಕಾ ವಿಮಾನ ನಿಲ್ದಾಣಕ್ಕೆ ಜಾಗ ಗುರುತು
ಉಡುಪಿ ಜಿಲ್ಲೆಯ ಬೈಂದೂರಲ್ಲಿ ಉಪವಿಮಾನ ನಿಲ್ದಾಣ ರಚನೆಗೆ ಕೇಂದ್ರ ವಿಮಾನಯಾನ ಸಚಿವರಿಗೆ ಮನವಿ ಸಲ್ಲಿಸಿದ ಬಳಿಕ ಸ್ಥಳ ಗುರುತಿಸುವಿಕೆ ನಂತರ ಯಾವುದೇ ಪ್ರಗತಿಯಾಗಿಲ್ಲ. ಸರಕಾರ ಉಡುಪಿಯಲ್ಲಿ ಗ್ರೀನ್ಫೀಲ್ಡ್ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಕೆ ಮಾಡಿದರೆ, ನಾಗರಿಕ ವಿಮಾನಯಾನ ಇಲಾಖೆ ಪರಿಗಣಿಸುವುದಾಗಿ ಹೇಳಿತ್ತು. ಆದರೆ ಈವರೆಗೂ ಪ್ರಗತಿಯಿಲ್ಲ.
ಮಧ್ಯಪ್ರಾಚ್ಯ ಸಂಘರ್ಷ | ಮತ್ತೆ ದಾಳಿ ನಡೆದರೆ ಗಲ್ಫ್ ಇಂಧನ ವಲಯವೇ ನಾಶ: ಇರಾನ್ ಎಚ್ಚರಿಕೆ
ಟೆಹ್ರಾನ್: ತನ್ನ ಇಂಧನ ಮೂಲಸೌಕರ್ಯದ ಮೇಲೆ ಮತ್ತೆ ದಾಳಿ ನಡೆದರೆ ಗಲ್ಫ್ ಪ್ರದೇಶದ ತೈಲ ಹಾಗೂ ಅನಿಲ ವಲಯವನ್ನು ಸಂಪೂರ್ಣವಾಗಿ ನಾಶಪಡಿಸಲಾಗುವುದು ಎಂದು ಇರಾನ್ ಕಠಿಣ ಎಚ್ಚರಿಕೆ ನೀಡಿದೆ. ಇರಾನ್ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (ಐಆರ್ಜಿಸಿ) ಈ ಎಚ್ಚರಿಕೆ ನೀಡಿದೆ. “ಇಸ್ಲಾಮಿಕ್ ಗಣರಾಜ್ಯದ ಇಂಧನ ಮೂಲಸೌಕರ್ಯದ ಮೇಲೆ ದಾಳಿ ಮಾಡುವ ಮೂಲಕ ನೀವು ದೊಡ್ಡ ತಪ್ಪು ಮಾಡಿದ್ದೀರಿ. ಅದರ ಪ್ರತಿಕ್ರಿಯೆಯನ್ನು ಈಗಾಗಲೇ ಕಾರ್ಯಗತಗೊಳಿಸಲಾಗುತ್ತಿದೆ,” ಎಂದು ಇರಾನ್ ಮಾಧ್ಯಮಗಳಿಗೆ ನೀಡಿದ ಹೇಳಿಕೆಯಲ್ಲಿ ತಿಳಿಸಲಾಗಿದೆ. “ಇದೇ ದಾಳಿ ಮತ್ತೆ ಪುನರಾವರ್ತನೆಯಾದರೆ, ನಿಮ್ಮ ಇಂಧನ ಮೂಲಸೌಕರ್ಯ ಹಾಗೂ ನಿಮ್ಮ ಮಿತ್ರ ರಾಷ್ಟ್ರಗಳ ಮೇಲಿನ ದಾಳಿಗಳು ಸಂಪೂರ್ಣ ನಾಶವಾಗುವವರೆಗೆ ನಿಲ್ಲುವುದಿಲ್ಲ. ಇಂದು ರಾತ್ರಿ ನಡೆದ ದಾಳಿಗಿಂತ ನಮ್ಮ ಪ್ರತಿಕ್ರಿಯೆ ಇನ್ನಷ್ಟು ತೀವ್ರವಾಗಿರುತ್ತದೆ,” ಎಂದು ಹೇಳಿಕೆಯಲ್ಲಿ ಎಚ್ಚರಿಸಲಾಗಿದೆ. ಹಿಂದಿನ ದಿನ, ದಕ್ಷಿಣ ಇರಾನ್ನ ಬುಶೆಹರ್ ಪ್ರಾಂತ್ಯದ ಕರಾವಳಿಯಲ್ಲಿರುವ ವಿಶ್ವದ ಅತಿದೊಡ್ಡ ಅನಿಲ ಕ್ಷೇತ್ರವಾದ ಕಡಲಾಚೆಯ ಸೌತ್ ಪಾರ್ಸ್ ಕ್ಷೇತ್ರಕ್ಕೆ ಸಂಬಂಧಿಸಿದ ನೈಸರ್ಗಿಕ ಅನಿಲ ಸೌಲಭ್ಯಗಳ ಮೇಲೆ ದಾಳಿ ನಡೆದಿರುವುದಾಗಿ ಇರಾನ್ ರಾಜ್ಯ ಮಾಧ್ಯಮ ವರದಿ ಮಾಡಿತ್ತು. ಈ ಬೆಳವಣಿಗೆಯ ನಂತರ, ಐಆರ್ಜಿಸಿ ಖತರ್, ಸೌದಿ ಅರೇಬಿಯಾ ಮತ್ತು ಯುಎಇ ದೇಶಗಳ ತೈಲ ಹಾಗೂ ಅನಿಲ ಮೂಲಸೌಕರ್ಯಗಳನ್ನು ಗುರಿಯಾಗಿಸಬಹುದು ಎಂದು ಬೆದರಿಕೆ ಹಾಕಿತ್ತು. ಅದರ ಬೆನ್ನಲ್ಲೇ, ಇರಾನಿನ ಕ್ಷಿಪಣಿ ದಾಳಿ ಖತರ್ ನ ರಾಸ್ ಲಫಾನ್ ಅನಿಲ ಸೌಲಭ್ಯದಲ್ಲಿ ವ್ಯಾಪಕ ಹಾನಿ ಉಂಟುಮಾಡಿದ್ದು, ಈ ಘಟನೆಯನ್ನು ಗಲ್ಫ್ ರಾಷ್ಟ್ರಗಳು ತೀವ್ರವಾಗಿ ಖಂಡಿಸಿವೆ.
UAE | ಕ್ಷಿಪಣಿ ತಡೆದ ಬಳಿಕ ಅವಶೇಷಗಳು ಬಿದ್ದು ಹಾನಿ: ಅಬುಧಾಬಿಯ ಹಬ್ಶಾನ್ ಅನಿಲ ಸಂಸ್ಕರಣಾ ಘಟಕ ಸ್ಥಗಿತ
ಅಬುಧಾಬಿ: ಆಕಾಶದಲ್ಲೇ ಕ್ಷಿಪಣಿಯನ್ನು ತಡೆದ ಬಳಿಕ ಅದರ ಅವಶೇಷಗಳು ಕೆಳಗೆ ಬಿದ್ದು ಹಾನಿಯಾದ ಪರಿಣಾಮ ಅಬುಧಾಬಿಯ ಹಬ್ಶಾನ್ ಅನಿಲ ಸಂಸ್ಕರಣಾ ಘಟಕವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ಅಬುಧಾಬಿ ಮಾಧ್ಯಮ ಕಚೇರಿ ತಿಳಿಸಿದೆ. ಈ ಘಟನೆಯಿಂದ ಹಬ್ಶಾನ್ ಅನಿಲ ಘಟಕದ ಜೊತೆಗೆ ಬಾಬ್ ತೈಲಕ್ಷೇತ್ರದ ಭಾಗದಲ್ಲಿಯೂ ಹಾನಿಯಾಗಿದ್ದು, ಅಧಿಕಾರಿಗಳು ತಕ್ಷಣ ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ತುರ್ತು ಕ್ರಮಗಳನ್ನು ಕೈಗೊಂಡಿದ್ದಾರೆ. “ಅನಿಲ ಸಂಸ್ಕರಣಾ ಘಟಕದಲ್ಲಿನ ಕಾರ್ಯಾಚರಣೆಗಳನ್ನು ಸ್ಥಗಿತಗೊಳಿಸಲಾಗಿದೆ. ಯಾವುದೇ ಗಾಯಗಳ ವರದಿ ಬಂದಿಲ್ಲ,” ಎಂದು ಮಾಧ್ಯಮ ಕಚೇರಿ ಸ್ಪಷ್ಟಪಡಿಸಿದೆ. ಕ್ಷಿಪಣಿಯನ್ನು ಆಕಾಶದಲ್ಲೇ ತಡೆದ ವೇಳೆ ಅದರ ತುಂಡುಗಳು ಕೆಳಗೆ ಬಿದ್ದ ಪರಿಣಾಮ ಹಾನಿಯಾಗಿದೆ ಎಂದು ತಿಳಿದುಬಂದಿದ್ದು, ಭದ್ರತಾ ಹಾಗೂ ತಾಂತ್ರಿಕ ತಂಡಗಳು ಸ್ಥಳದಲ್ಲೇ ಪರಿಶೀಲನೆ ನಡೆಸುತ್ತಿವೆ.
ಯುಗಾದಿ ವೇಳೆ ಕರ್ನಾಟಕದಲ್ಲಿ ಆಲಿಕಲ್ಲು ಮಳೆ ಅವಾಂತರ; ಇನ್ನೂ 4 ದಿನ ವರುಣನ ಆರ್ಭಟ; 4 ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್
Karnataka Rain- ರಾಜ್ಯಾದ್ಯಂತ ಯುಗಾದಿ ಸಂಭ್ರಮದ ನಡುವೆಯೇ ಬೇಸಿಗೆ ಮಳೆ ಅಬ್ಬರಿಸಿದ್ದು, ಬಿಸಿಲ ಬೇಗೆಯಿಂದ ಕಾದಿದ್ದ ಭೂಮಿ ತಂಪಾಗಿದೆ. ಶಿವಮೊಗ್ಗ, ಧಾರವಾಡ, ಬಳ್ಳಾರಿ ಸೇರಿದಂತೆ ಹಲವೆಡೆ ಆಲಿಕಲ್ಲು ಮಳೆಯಿಂದಾಗಿ ಭತ್ತ, ಮಾವು, ದ್ರಾಕ್ಷಿ ಮತ್ತು ತರಕಾರಿ ಬೆಳೆಗಳಿಗೆ ಅಪಾರ ಹಾನಿಯಾಗಿದ್ದು, ರೈತರು ಸಂಕಷ್ಟಕ್ಕೀಡಾಗಿದ್ದಾರೆ. ಸಿಡಿಲಿಗೆ ಕುರಿಗಳು ಹಾಗೂ ಮಳೆಗೆ ಕರುಗಳು ಬಲಿಯಾಗಿವೆ. ಮಲೆನಾಡಿನಲ್ಲಿ ಕಾಫಿ ಬೆಳೆಗೆ ಮಳೆ ಪೂರಕವಾಗಿದ್ದರೂ, ಬಯಲು ಸೀಮೆಯಲ್ಲಿ ಬಿರುಗಾಳಿಗೆ ಮರಗಳು ಮತ್ತು ವಿದ್ಯುತ್ ಕಂಬಗಳು ನೆಲಕ್ಕುರುಳಿವೆ. ಮುಂದಿನ ನಾಲ್ಕು ದಿನಗಳ ಕಾಲ ರಾಜ್ಯದ ವಿವಿಧೆಡೆ ಹವಾಮಾನ ಇಲಾಖೆ ಮಳೆಯ ಮುನ್ಸೂಚನೆ ನೀಡಿದೆ.
ʼಉಪಚುನಾವಣೆ’ ಆಭ್ಯರ್ಥಿಗಳ ಆಯ್ಕೆಗೆ ಕಾಂಗ್ರೆಸ್ನಲ್ಲಿ ಕಸರತ್ತು
ಬೆಂಗಳೂರು : ಬಾಗಲಕೋಟೆ ಹಾಗೂ ದಾವಣಗೆರೆ ದಕ್ಷಿಣ ಕ್ಷೇತ್ರಗಳ ಉಪಚುನಾವಣೆ ಅಭ್ಯರ್ಥಿಗಳ ಆಯ್ಕೆಗೆ ಆಡಳಿತಾರೂಢ ಕಾಂಗ್ರೆಸ್ ಪಕ್ಷದಲ್ಲಿ ಕಸರತ್ತು ಆರಂಭಿಸಲಾಗಿದ್ದು, ಶೀಘ್ರದಲ್ಲೇ ಅಭ್ಯರ್ಥಿಗಳ ಹೆಸರುಗಳನ್ನು ಅಂತಿಮಗೊಳಿಸಿ ಹೈಕಮಾಂಡ್ಗೆ ರವಾನಿಸುವ ಸಾಧ್ಯತೆಗಳಿವೆ. ಎರಡೂ ಕ್ಷೇತ್ರಗಳಲ್ಲಿಯೂ ಕ್ರಮವಾಗಿ ಎಚ್.ವೈ.ಮೇಟಿ ಮತ್ತು ಶಾಮನೂರು ಶಿವಶಂಕರಪ್ಪರ ಕುಟುಂಬದ ಸದಸ್ಯರಿಗೆ ಟಿಕೆಟ್ ನೀಡುವುದು ಬಹುತೇಕ ಖಚಿತವಾಗಿದ್ದು, ಹೆಸರುಗಳನ್ನು ಅಂತಿಮಗೊಳಿಸಬೇಕಿದೆ. ಈ ಮಧ್ಯೆ ಕಾಂಗ್ರೆಸ್ ಪಕ್ಷಕ್ಕೆ ಎರಡೂ ಕ್ಷೇತ್ರಗಳಲ್ಲಿಯೂ ಬಂಡಾಯದ ಬಿಸಿ ಕಾಡುತ್ತಿದ್ದು, ತೀವ್ರ ರಾಜಕೀಯ ಕುತೂಹಲಕ್ಕೆ ಕಾರಣವಾಗಿದೆ. ಈ ಬೆಳವಣಿಗೆಗಳ ಮಧ್ಯೆ ಟಿಕೆಟ್ಗಾಗಿ ಪೈಪೋಟಿಗೆ ಇಳಿದಿರುವ ಮಾಜಿ ಸಚಿವ ಎಚ್.ವೈ.ಮೇಟಿ ಅವರ ಹಿರಿಯ ಪುತ್ರ ಮಲ್ಲಿಕಾರ್ಜುನ, ಕಿರಿಯ ಪುತ್ರ ಉಮೇಶ, ಪುತ್ರಿಯರಾದ ಮಹಾದೇವಿ ಮೇಟಿ, ಬಾಯಕ್ಕ ಅವರನ್ನು ಬೆಂಗಳೂರಿಗೆ ಕರೆಸಿಕೊಂಡ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಅವರೊಂದಿಗೆ ಚರ್ಚೆ ನಡೆಸಿದರು. ಅಲ್ಲದೆ, ‘ಪಕ್ಷದ ಹೈಕಮಾಂಡ್ ಯಾರಿಗೆ ಟಿಕೆಟ್ ನೀಡಿದರೂ ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಬೇಕು’ ಎಂದು ಸೂಚನೆ ನೀಡಿದ್ದಾರೆ. ‘ಮೇಟಿ ಕುಟುಂಬದ ನಾಲ್ವರ ಪೈಕಿ ಒಬ್ಬರಿಗೆ ಮಾತ್ರ ಟಿಕೆಟ್ ನೀಡಲಾಗುವುದು. ಉಳಿದವರು ಪಕ್ಷಕ್ಕೆ ಕೆಲಸ ಮಾಡಬೇಕು’ ಎಂದು ಸಿದ್ದರಾಮಯ್ಯ, ಮೇಟಿ ಕುಟುಂಬದ ಸದಸ್ಯರಿಗೆ ತಾಕೀತು ಮಾಡಿದ್ದಾರೆ. ಇದಕ್ಕೆ ಮೇಟಿ ಕುಟುಂಬದ ಸದಸ್ಯರು ಒಪ್ಪಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಆ ಮೂಲಕ ಬಾಗಲಕೋಟೆ ಉಪಚುನಾವಣೆ ಕಾಂಗ್ರೆಸ್ ಟಿಕೆಟ್ ಮೇಟಿ ಕುಟುಂಬಕ್ಕೆ ಎನ್ನುವುದು ಸ್ಪಷ್ಟವಾದಂತೆ ಆಗಿದೆ. ಸಭೆ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ‘ಬಾಗಲಕೋಟೆಯಲ್ಲಿ ಮೇಟಿ ಕುಟುಂಬದ ಮಲ್ಲಿಕಾರ್ಜುನ, ಉಮೇಶ್, ಮಹಾದೇವಿ ಟಿಕೆಟ್ ಕೇಳುತ್ತಿದ್ದು, ಯಾರಿಗೆ ಟಿಕೆಟ್ ನೀಡಿದರೂ ಒಗ್ಗಟ್ಟಿನಿಂದ ಕೆಲಸ ಮಾಡಬೇಕು ಎಂದು ಸೂಚನೆ ನೀಡಿದ್ದು, ಎಲ್ಲರೂ ಸಮ್ಮತಿಸಿದ್ದಾರೆ’ ಎಂದರು. ‘ಬಾಗಲಕೋಟೆ ಮತ್ತು ದಾವಣಗೆರೆ ದಕ್ಷಿಣ ಕ್ಷೇತ್ರಗಳ ಉಪಚುನಾವಣಾ ಅಭ್ಯರ್ಥಿಗಳ ಆಯ್ಕೆ ಸಂಬಂಧ ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ, ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ನಾನು ಸೇರಿ ಚರ್ಚಿಸಿ ಅಂತಿಮ ಪಟ್ಟಿಯನ್ನು ವರಿಷ್ಠರಿಗೆ ರವಾನಿಸಲಾಗುವುದು. ಹೈಕಮಾಂಡ್ ಅಭ್ಯರ್ಥಿಗಳನ್ನು ಪ್ರಕಟಿಸಲಿದೆ’ -ಸಿದ್ದರಾಮಯ್ಯ ಮುಖ್ಯಮಂತ್ರಿ ‘ಈಗಾಗಲೇ ಚುನಾವಣಾ(ಮಾ.16) ಅಧಿಸೂಚನೆ ಪ್ರಕಟಿಸಲಾಗಿದ್ದು, ನಾಮಪತ್ರ ಸಲ್ಲಿಕೆ ಆರಂಭವಾಗಿದೆ. ಮಾ.23ಕ್ಕೆ ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದ್ದು, ಮಾ.24ಕ್ಕೆ ನಾಮಪತ್ರ ಪರಿಶೀಲನೆ, ಮಾ.26ಕ್ಕೆ ಉಮೇದುವಾರಿಕೆ ವಾಪಸ್ ಪಡೆಯಲು ಕಡೆಯ ದಿನ. ಎಪ್ರಿಲ್ 9ಕ್ಕೆ ಉಪಚುನಾವಣೆ ಮತದಾನ ನಡೆಯಲಿದೆ’
ಇಂಧನ ಮೂಲಸೌಕರ್ಯದ ಮೇಲೆ ದಾಳಿ ‘ಅನಿಯಂತ್ರಿತ ಪರಿಣಾಮಗಳಿಗೆ’ ಕಾರಣ: ಇರಾನ್ ಅಧ್ಯಕ್ಷರಿಂದ ಎಚ್ಚರಿಕೆ
ಟೆಹ್ರಾನ್: ಬುಧವಾರ ಮುಂಜಾನೆ ಇರಾನ್ ನ ಸೌತ್ ಪಾರ್ಸ್ ಅನಿಲಕ್ಷೇತ್ರವನ್ನು ಗುರಿಯಾಗಿಸಿಕೊಂಡು ನಡೆದ ದಾಳಿಯ ಹಿನ್ನೆಲೆಯಲ್ಲಿ, ದೇಶದ ಇಂಧನ ಮೂಲಸೌಕರ್ಯದ ಮೇಲಿನ ದಾಳಿಯನ್ನು ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯನ್ ತೀವ್ರವಾಗಿ ಖಂಡಿಸಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಪ್ರತಿಕ್ರಿಯಿಸಿದ ಅವರು, “ಇಂತಹ ಆಕ್ರಮಣಕಾರಿ ಕ್ರಮಗಳು ಅಮೆರಿಕನ್ ಝಿಯೋನಿಸ್ಟ್ ಶತ್ರು ಮತ್ತು ಅವರ ಬೆಂಬಲಿಗರಿಗೆ ಯಾವುದೇ ಗರಿಮೆ ತಂದುಕೊಡುವುದಿಲ್ಲ. ಬದಲಿಗೆ, ಇವು ಪರಿಸ್ಥಿತಿಯನ್ನು ಮತ್ತಷ್ಟು ಸಂಕೀರ್ಣಗೊಳಿಸಿ, ಇಡೀ ಜಗತ್ತಿನ ಮೇಲೆ ಪರಿಣಾಮ ಬೀರುವ ಅನಿಯಂತ್ರಿತ ಪರಿಣಾಮಗಳಿಗೆ ಕಾರಣವಾಗಬಹುದು” ಎಂದು ಎಚ್ಚರಿಸಿದ್ದಾರೆ.
ಅನಿಲ ಘಟಕದ ಮೇಲೆ ದಾಳಿಗೆ ಯತ್ನಿಸಿದ ಡ್ರೋನ್ ಹೊಡೆದುರುಳಿಸಿದ ಸೌದಿ ಅರೇಬಿಯಾ
ರಿಯಾದ್: ದೇಶದ ಪೂರ್ವ ಪ್ರಾಂತ್ಯದಲ್ಲಿರುವ ಅನಿಲ ಸೌಲಭ್ಯದ ಮೇಲೆ ದಾಳಿ ಮಾಡಲು ಬರುತ್ತಿದ್ದ ಡ್ರೋನ್ ಅನ್ನು ಸೌದಿ ಅರೇಬಿಯಾ ತಡೆದು ಹೊಡೆದುರುಳಿಸಿದೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ. ಸಚಿವಾಲಯದ ವಕ್ತಾರರು ಹೇಳುವಂತೆ, ಡ್ರೋನ್ ಗುರಿ ತಲುಪುವ ಮುನ್ನವೇ ಅದನ್ನು ಪತ್ತೆಹಚ್ಚಿ ನಾಶಪಡಿಸಲಾಗಿದೆ.ಈ ಘಟನೆದಲ್ಲಿ ಯಾವುದೇ ಹಾನಿ ಸಂಭವಿಸಿಲ್ಲ ಎಂದು ತಿಳಿದು ಬಂದಿದೆ.
Chikkamagaluru | ಕಂದಕಕ್ಕೆ ಉರುಳಿದ ಕಾರು: ಚಾಲಕ ನಾಪತ್ತೆ
ಚಿಕ್ಕಮಗಳೂರು : ಚಾಲಕನ ನಿಯಂತ್ರಣ ತಪ್ಪಿ ಕಾರು ಸುಮಾರು 50 ಅಡಿ ಆಳದ ಕಂದಕಕ್ಕೆ ಉರುಳಿ ಬಿದ್ದ ಘಟನೆ ಬುಧವಾರ ಬೆಳಗ್ಗೆ ತಾಲೂಕಿನ ಮತ್ತೋಡಿ ಅರಣ್ಯ ವಲಯದ ಹೊನ್ನಾಳ ಗ್ರಾಮದ ಬಳಿ ನಡೆದಿದೆ. ಮುತ್ತೋಡಿ ಅರಣ್ಯದ ಕಡೆಯಿಂದ ಬಂದ ಹೊನ್ನಾಳ ಗ್ರಾಮದ ಬಳಿ ಇರುವ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿಕಂದಕಕ್ಕೆ ಉರುಳಿ ಬಿದ್ದಿದೆ. ಕಾರು ತಲೆ ಕೆಳಕಾಗಿ ಬಿದ್ದಿದ್ದು, ಕಾರಿನಲ್ಲಿದ್ದವರು ಯಾರೆಂದು ತಿಳಿದು ಬಂದಿಲ್ಲ. ಸ್ಥಳೀಯರು ಕಾರಿನ ಬಳಿ ಹೋದ ಸಂದರ್ಭದಲ್ಲಿ ಕಾರಿನಲ್ಲಿ ಯಾರೂ ಇಲ್ಲದಿರುವುದು ಕಂಡು ಬಂದಿದೆ. ಅಲ್ಲದೇ ಈ ಅಪಘಾತದ ಘಟನೆ ಸ್ಥಳೀಯ ಪೊಲೀಸರಿಗೂ ತಡವಾಗಿ ತಿಳಿದು ಬಂದಿದೆ ಎಂದು ಹೇಳಲಾಗುತ್ತಿದ್ದು, ಅಪಘಾತದ ಬಗ್ಗೆ ಸಾರ್ವಜನಿಕ ವಲಯದಲ್ಲಿ ಕುತೂಹಲ ಮೂಡಿದೆ. ಕಾರು ಅಪಘಾತವಾದಾಗ ಕಾರು ಚಲಾಯಿಸುತ್ತಿದ್ದವರು ಯಾರು?, ಕಾರಿನಲ್ಲಿದ್ದವರು ಎಲ್ಲಿ ಹೋದರು?, ಅಪಘಾತದಲ್ಲಿ ಗಾಯಗೊಂಡವರು ಆಸ್ಪತ್ರೆಗೆ ದಾಖಲಾದರೇ? ಎಂಬ ಮಾಹಿತಿ ಇದುವರೆಗೂ ತಿಳಿದು ಬಂದಿಲ್ಲ. ಕಾರಿನಲ್ಲಿ ಬಂದವರು ಪ್ರಾಣಿಗಳ ಬೇಟೆಗೆ ಬಂದಿದ್ದರೇ ಎಂಬ ಪ್ರಶ್ನೆಯೂ ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿದೆ. ಘಟನೆ ಸಂಬಂಧ ಮಲ್ಲಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರ ತನಿಖೆಯಿಂದ ಹೆಚ್ಚಿನ ಮಾಹಿತಿ ತಿಳಿದು ಬರಬೇಕಿದೆ
ಕಲಬುರಗಿ: ಮುಖ್ಯಮಂತ್ರಿಗಳಿಂದ ಕಾಫಿ ಟೇಬಲ್ ಪುಸ್ತಕ, ಬ್ರೋಶರ್ ಬಿಡುಗಡೆ
ಕಲಬುರಗಿ: ಕಲಬುರಗಿ ಜಿಲ್ಲೆಯ ಪ್ರವಾಸೋದ್ಯಮವನ್ನು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಚಾರಪಡಿಸಲು ಜಿಲ್ಲಾಡಳಿತ ಹಾಗೂ ಪ್ರವಾಸೋದ್ಯಮ ಇಲಾಖೆ ಮಹತ್ವದ ಹೆಜ್ಜೆ ಇಟ್ಟಿದ್ದು, ಕಲಬುರಗಿ ಜಿಲ್ಲೆಯ ಕಲೆ, ಸಂಸ್ಕೃತಿ, ಪರಂಪರೆ ಮತ್ತು ಇತಿಹಾಸವನ್ನು ಒಳಗೊಂಡ ಆಕರ್ಷಕ ಕಾಫಿ ಟೇಬಲ್ ಪುಸ್ತಕ ಹಾಗೂ ಪ್ರವಾಸಿ ಮಾಹಿತಿ ಬ್ರೋಶರ್ಗಳನ್ನು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬುಧವಾರ ಬೆಂಗಳೂರಿನ ವಿಧಾನಸೌಧದಲ್ಲಿ ಬಿಡುಗಡೆ ಮಾಡಿದರು. ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿಯ ಆಶಯದಂತೆ, ಜಿಲ್ಲಾಧಿಕಾರಿಗಳ ಮಾರ್ಗದರ್ಶನದಲ್ಲಿ ಪ್ರಪ್ರಥಮ ಬಾರಿಗೆ ಕನ್ನಡ ಮತ್ತು ಆಂಗ್ಲ ಭಾಷೆಗಳಲ್ಲಿ ಈ ಪ್ರಕಟಣೆಗಳನ್ನು ಸಿದ್ಧಪಡಿಸಲಾಗಿದೆ. ಸುಮಾರು ರೂ. 11.05 ಲಕ್ಷ ಅನುದಾನದಲ್ಲಿ ಮುದ್ರಿಸಲಾದ ಈ ಕಾಫಿ ಟೇಬಲ್ ಪುಸ್ತಕ ಹಾಗೂ ಬ್ರೋಶರ್ಗಳು ಜಿಲ್ಲೆಯ ಐತಿಹಾಸಿಕ, ಧಾರ್ಮಿಕ, ನೈಸರ್ಗಿಕ ಹಾಗೂ ಇತರೆ ಪ್ರವಾಸಿ ತಾಣಗಳ ಸಮಗ್ರ ಮಾಹಿತಿಯನ್ನು ಒಳಗೊಂಡಿವೆ. ಕಲಬುರಗಿ ಜಿಲ್ಲೆಗೆ ಭೇಟಿ ನೀಡುವ ದೇಶೀಯ ಹಾಗೂ ವಿದೇಶಿ ಪ್ರವಾಸಿಗರಿಗೆ ಸಂಕ್ಷಿಪ್ತ ಮತ್ತು ಸ್ಪಷ್ಟ ಮಾಹಿತಿಯನ್ನು ಒದಗಿಸಲು ಬ್ರೋಶರ್ಗಳು ಸಹಾಯಕವಾಗಲಿವೆ. ಇದೇ ವೇಳೆ ಪ್ರವಾಸೋದ್ಯಮ ಮೇಳಗಳು, ಟ್ರಾವೆಲ್ ಎಕ್ಸ್ ಪೋಗಳು ಸೇರಿದಂತೆ ವಿವಿಧ ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ವೇದಿಕೆಗಳಲ್ಲಿ ಈ ಕಾಫಿ ಟೇಬಲ್ ಪುಸ್ತಕಗಳು ಜಿಲ್ಲೆಯ ಪ್ರವಾಸೋದ್ಯಮವನ್ನು ವ್ಯಾಪಕವಾಗಿ ಪರಿಚಯಿಸಲು ನೆರವಾಗಲಿವೆ. ಬಿಡುಗಡೆ ಕಾರ್ಯಕ್ರಮದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ, ವೈದ್ಯಕೀಯ ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿ ಸಚಿವ ಡಾ. ಶರಣಪ್ರಕಾಶ ಪಾಟೀಲ, ಕರ್ನಾಟಕ ರಾಜ್ಯ ನೀತಿ ಮತ್ತು ಯೋಜನಾ ಆಯೋಗದ ಉಪಾಧ್ಯಕ್ಷ ಬಿ.ಆರ್. ಪಾಟೀಲ್, ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ಡಾ. ಅಜಯಸಿಂಗ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಕಲಬುರಗಿ ಜಿಲ್ಲಾಧಿಕಾರಿ ಬಿ. ಫೌಝಿಯಾ ತರನ್ನುಮ್, ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಭಾಗವಹಿಸಿದ್ದರು.
Somwarpet | ಅರಣ್ಯ ಜಮೀನು ತೆರವು ಕಾರ್ಯಾಚರಣೆ; ಅರಣ್ಯಾಧಿಕಾರಿಗಳು, ರೈತರ ನಡುವೆ ಮಾತಿನ ಚಕಮಕಿ
ಸೋಮವಾರಪೇಟೆ : ಅರಣ್ಯ ಜಮೀನು ತೆರವು ಕಾರ್ಯಾಚರಣೆ ಸಂದರ್ಭ ಅರಣ್ಯಾಧಿಕಾರಿಗಳು ಮತ್ತು ರೈತರ ನಡುವೆ ಮಾತಿನ ಚಕಮಕಿ ನಡೆದ ಘಟನೆ ಮಸಗೋಡು ಗ್ರಾಮದಲ್ಲಿ ಬುಧವಾರ ನಡೆದಿದೆ. ಮಸಗೋಡು ಗ್ರಾಮದ ಸರ್ವೇ ನಂ. 24/1ರಲ್ಲಿ 2.50 ಎಕರೆ ಜಾಗವನ್ನು ಜೆಸಿಬಿಯಿಂದ ತೆರವುಗೊಳಿಸಲು ಅರಣ್ಯ ಇಲಾಖೆ ಪೊಲೀಸ್ ಸಿಬ್ಬಂದಿ ರಕ್ಷಣೆಯಲ್ಲಿ ತೆರಳಿತ್ತು. ಈ ಸಂದರ್ಭ ರೈತ ಹೋರಾಟ ಸಮಿತಿಯ ಜಿಲ್ಲಾಧ್ಯಕ್ಷ ಕೆ.ಬಿ.ಸುರೇಶ್, ರೈತ ಸಂಘದ ತಾಲೂಕು ಅಧ್ಯಕ್ಷ ಕೆ.ಎಂ.ದಿನೇಶ್, ಜಿಲ್ಲಾ ಉಪಾಧ್ಯಕ್ಷ ಜಿ.ಎಂ.ಹೂವಯ್ಯ ನೇತೃತ್ವದಲ್ಲಿ ರೈತರು ಜಾಗ ತೆರವುಗೊಳಿಸಲು ಬಿಡುವುದಿಲ್ಲ ಎಂದು ಪಟ್ಟು ಹಿಡಿದರು. ರೈತರ ಕೃಷಿ ಭೂಮಿಯನ್ನು ಕಸಿದುಕೊಳ್ಳುವ ಯತ್ನವನ್ನು ಮಾಡಬಾರದು. ಕಳೆದ ಒಂದು ವರ್ಷದ ಹಿಂದಿನಿಂದಲೂ ರೈತ ಹೇಮಂತ್ ಅವರಿಗೆ ಅರಣ್ಯ ಇಲಾಖೆಯಿಂದ ಕಿರುಕುಳವಾಗುತ್ತಿದೆ. ಸ್ಥಳಕ್ಕೆ ಎಸಿಎಫ್ ಮತ್ತು ಡಿಎಫ್ಒ ಬಂದು ಸಮಾಜಾಯಿಸಿ ನೀಡಬೇಕೆಂದು ರೈತರು ಒತ್ತಾಯಿಸಿದರು. ರೈತ ಮುಖಂಡ ಸುರೇಶ್ ಮಾತನಾಡಿ, ರೈತರ ಮೇಲಿನ ಕಿರುಕುಳವನ್ನು ಅರಣ್ಯ ಇಲಾಖೆ ನಿಲ್ಲಿಸಬೇಕು. ಇಂದು ಅರಣ್ಯ ಇಲಾಖೆಯವರು ಕಾಫಿ ತೋಟಕ್ಕೆ ನುಗ್ಗಿ ಜೆಸಿಬಿಯ ಮುಖಾಂತರ ತೋಟವನ್ನು ನಾಶಪಡಿಸಲು ಹೊರಟಿದ್ದಾರೆ. ಆನೆ ಮಾನವ ಸಂಘಷರ್ವನ್ನು ತಡೆಯಲು ವಿಫಲವಾಗಿರುವ ಇಲಾಖೆ, ರೈತರ ಮೇಲೆ ದಬ್ಬಾಳಿಕೆ ಮಾಡುತ್ತಿರುವುದು ಖಂಡನೀಯ, ಹೀಗೆ ದಬ್ಬಾಳಿಕೆ ಮುಂದುವರಿದರೆ ಜಿಲ್ಲಾದ್ಯಂತ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದರು. ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಹೂವಯ್ಯ ಮಾತನಾಡಿ, ಸಿ ಆಂಡ್ ಡಿ ಭೂಮಿ ಸಮಸ್ಯೆ ಬಗೆಹರಿಸಲು ಸರಕಾರ ವಿಶೇಷ ಸಮಿತಿ ರಚಿಸಿದೆ. ಅನುಪಾಲನ ವರದಿ ಸರಕಾರಕ್ಕೆ ಸೇರುವ ಮೊದಲೇ ಅರಣ್ಯ ಇಲಾಖೆ ಸಣ್ಣಪುಟ್ಟ ರೈತರ ಜಮೀನನ್ನು ಕಸಿದುಕೊಳ್ಳುತ್ತಿರುವುದು ಅನ್ಯಾಯವಾಗಿದೆ. ಇದನ್ನು ರೈತ ಸಂಘ ವಿರೋಧಿಸುತ್ತದೆ ಎಂದು ಹೇಳಿದರು. ಬಳಿಕಅರಣ್ಯ ಇಲಾಖೆಯ ಸಿಬ್ಬಂದಿ ವಾಪಸ್ ತೆರಳಿದರು. ಈ ವೇಳೆ ರೈತ ಮುಖಂಡರಾದ ಲಕ್ಷ್ಮ್ಮಣ, ಬಿ.ಪಿ.ಮೊಗಪ್ಪ, ಎಸ್.ಎಂ.ಡಿಸಿಲ್ವಾ, ಮಚ್ಚಂಡ ಅಶೋಕ್,ವಿಜಯ, ರಮೇಶ್, ಕುಶಾಲಪ್ಪ, ದೇಶ್ರಾಜ್ ಹಾಗೂ ಡಿಆರ್ಎಫ್ ಪ್ರಶಾಂತ್, ಲೋಹಿತ್,ಕಿರಣ್, ರೇಣುಕುಮಾರ್, ಸಿಬ್ಬಂದಿ ಉಪಸ್ಥಿತರಿದ್ದರು.
ಇರಾನ್ ನ ಬುಶೆಹರ್ ಅಣು ಸ್ಥಾವರ ಸಮೀಪದ ರಚನೆ ದಾಳಿಯಲ್ಲಿ ಧ್ವಂಸ: ದೃಢಪಡಿಸಿದ IAEA
ಟೆಹ್ರಾನ್: ಇರಾನ್ ನ ಬುಶೆಹರ್ ಪರಮಾಣು ವಿದ್ಯುತ್ ಸ್ಥಾವರದ ರಿಯಾಕ್ಟರ್ ನಿಂದ ಸುಮಾರು 350 ಮೀಟರ್ (1,150 ಅಡಿ) ದೂರದಲ್ಲಿದ್ದ ಒಂದು ರಚನೆ “ಪ್ರೊಜೆಕ್ಟೈಲ್” ದಾಳಿಯಿಂದ ನಾಶವಾಗಿದೆ ಎಂದು ಅಂತರರಾಷ್ಟ್ರೀಯ ಪರಮಾಣು ಶಕ್ತಿ ಸಂಸ್ಥೆ (IAEA) ದೃಢಪಡಿಸಿದೆ ಎಂದು Aljazeera ವರದಿ ಮಾಡಿದೆ. IAEA ಮಹಾನಿರ್ದೇಶಕ ರಾಫೆಲ್ ಗ್ರೋಸಿ ಸಂಸ್ಥೆ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ, “ರಿಯಾಕ್ಟರ್ ಗೆ ಯಾವುದೇ ಹಾನಿಯಾಗಿಲ್ಲ. ಸಿಬ್ಬಂದಿಗೂ ಯಾವುದೇ ಗಾಯಗಳಾಗಿಲ್ಲ. ಆದರೆ ಅಣು ಸ್ಥಾವರಗಳ ಮೇಲೆ ಅಥವಾ ಅದರ ಸಮೀಪ ದಾಳಿ ನಡೆಯುವುದು ಸಶಸ್ತ್ರ ಸಂಘರ್ಷದ ಸಂದರ್ಭದಲ್ಲಿ ಅಣು ಸುರಕ್ಷತೆ ಮತ್ತು ಭದ್ರತೆಯನ್ನು ಕಾಪಾಡುವ ಏಳು ಪ್ರಮುಖ ನಿಯಮಗಳನ್ನು ಉಲ್ಲಂಘಿಸಲಾಗಿದೆ. ಇಂತಹ ಘಟನೆಗಳು ಎಂದಿಗೂ ನಡೆಯಬಾರದು” ಎಂದು ತಿಳಿಸಿದ್ದಾರೆ. ಇದಕ್ಕೂ ಮುನ್ನ ಗ್ರೋಸಿ, ಸೈಟ್ ಗೆ ಉಂಟಾದ ಹಾನಿ “ಗಂಭೀರ ಸ್ವರೂಪದ್ದಾಗಿಲ್ಲ” ಎಂದು ಹೇಳಿದ್ದರು. ಆದರೆ ದಾಳಿಯ ಸಂಪೂರ್ಣ ವಿವರಗಳು ಇನ್ನೂ ಸ್ಪಷ್ಟವಾಗಿಲ್ಲ ಎಂದು ಅವರು ತಿಳಿಸಿದ್ದಾರೆ.
Kolar | ಲೋಕಾಯುಕ್ತ ಬಲೆಗೆ ಬಿದ್ದ ಔಷಧ ನಿಯಂತ್ರಣಾಧಿಕಾರಿ
ಕೋಲಾರ : ಮೆಡಿಕಲ್ ಸ್ಟೋರ್ ಪರವಾನಿಗೆ ನವೀಕರಣ ಸಂಬಂಧ ಅರ್ಜಿದಾರನಿಂದ ನೇರವಾಗಿ ಲಂಚ ಸ್ವೀಕರಿಸುತ್ತಿದ್ದ ವೇಳೆ ಜಿಲ್ಲಾ ಔಷಧ ನಿಯಂತ್ರಣಾಧಿಕಾರಿ ಶ್ಯಾಮಲಾ ಸೇರಿ ಮೂವರು ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಕರ್ನಾಟಕ ದಲಿತ ಸಿಂಹ ಸೇನೆ ಅಧ್ಯಕ್ಷ ಹೂಹಳ್ಳಿ ಪ್ರಕಾಶ್, ಕೃಷ್ಣಯ್ಯ ದೂರಿನ ಮೇರೆಗೆ ಲೋಕಾಯುಕ್ತ ಉಪ ಪೊಲೀಸ್ ವರಿಷ್ಠಾಧಿಕಾರಿ ವೆಂಕಟೇಶ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿದ್ದು, ಈ ಸಂಬಂಧ ಜಿಲ್ಲಾ ಔಷಧ ನಿಯಂತ್ರಣಾಧಿಕಾರಿ ಶ್ಯಾಮಲಾ, ವಾಹನ ಚಾಲಕ ಮಹಂತೇಶ್ ಮತ್ತು ನಿವೃತ್ತ ನೌಕರ ಶ್ರೀನಿವಾಸ ಅವರನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ. ಮೆಡಿಕಲ್ ಸ್ಟೋರ್ ಲೈಸೆನ್ಸ್ ನವೀಕರಣಕ್ಕೆಂದು 35 ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ. ಅದರಂತೆ ಜಿಲ್ಲೆಯ ಮಾಲೂರು ತಾಲೂಕಿನ ಟೇಕಲ್ ಬಳಿ ಲಂಚ ಸ್ವೀಕಾರ ಮಾಡುತ್ತಿದ್ದ ವೇಳೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ. ಆ ವೇಳೆ ಅಧಿಕಾರಿಗಳನ್ನು ಕಂಡು ಶ್ಯಾಮಲಾ ಹಾಗೂ ಮತ್ತಿಬ್ಬರು ತಲೆ ಮರಿಸಿಕೊಳ್ಳಲು ಯತ್ನಿಸಿದ್ದಾರೆ ಮೂಲಗಳು ತಿಳಿಸಿವೆ. ಮೆಡಿಕಲ್ ಸ್ಟೋರ್ ಪರವಾನಿಗೆ ನವೀಕರಣಕ್ಕಾಗಿ 38,000 ರೂ ಲಂಚಕ್ಕೆ ಜಿಲ್ಲಾ ಡ್ರಗ್ಕಂಟ್ರೋಲರ್ ಬೇಡಿಕೆ ಇಟ್ಟಿದ್ದ ಬಗ್ಗೆ ದೂರು ಬಂದಿತ್ತು, ಆ ಹಿನ್ನೆಲೆ ದಾಳಿ ನಡೆಸಲಾಗಿದೆ. ಇನ್ನೂ ಅನುಮತಿಯಿಲ್ಲದ ಔಷಧ ಮಾರಾಟ ಹೆಗ್ಗಿಲ್ಲದೆ ನಡೆಯುತ್ತಿರುವುದು, ಮಾದಕ ವಸ್ತುಗಳ ಅಕ್ರಮ ಮಾರಾಟವನ್ನು ಜಿಲ್ಲಾ ಔಷಧ ನಿಯಂತ್ರಣ ಇಲಾಖೆಯಿಂದ ಯಾವುದೇ ಕ್ರಮ ಆಗುತ್ತಿಲ್ಲ ಎಂಬ ಅರೋಪಗಳು ಕೇಳಿ ಬಂದಿತ್ತು.
ʼತುಳವರ ಭವನ ನಿರ್ಮಾಣದ ಕುರಿತು ತೀರ್ಮಾನಿಸಿʼ : ಸಿಎಂಗೆ ಬಿ.ಆರ್.ಪಾಟೀಲ್ ಪತ್ರ
ಬೆಂಗಳೂರು : ‘ತುಳವರ ಭವನ ನಿರ್ಮಾಣ ಮಾಡಲು ಸರಕಾರದ ವತಿಯಿಂದ ಟ್ರಸ್ಟ್ ರಚಿಸಿ ರಾಷ್ಟ್ರ ಮಟ್ಟದ ಪ್ರಮುಖ ಸಂಸ್ಥೆಯಾಗಿ ರೂಪಿಸುವ ಉದ್ದೇಶವನ್ನು ತಾವು ಅಧಿವೇಶನದಲ್ಲಿ ಉತ್ತರ ನೀಡುವ ವೇಳೆಯಲ್ಲಿ ತೀರ್ಮಾನ ಕೈಗೊಳ್ಳಬೇಕು’ ಎಂದು ಕರ್ನಾಟಕ ರಾಜ್ಯ ನೀತಿ ಮತ್ತು ಯೋಜನಾ ಆಯೋಗದ ಉಪಾಧ್ಯಕ್ಷ ಬಿ.ಆರ್.ಪಾಟೀಲ್ ತಿಳಿಸಿದ್ದಾರೆ. ಬುಧವಾರ ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿರುವ ಅವರು, ಕರ್ನಾಟಕ ರಾಜ್ಯದಲ್ಲಿ ತುಳುವ ಸಮುದಾಯದ ಸಾಮಾಜಿಕ, ಸಾಂಸ್ಕೃತಿ ಕ, ಶೈಕ್ಷಣಿಕ ಹಾಗೂ ಆರ್ಥಿಕ ಆಶಯಗಳನ್ನು ಉತ್ತೇಜಿಸುವ ಉದ್ದೇಶದಿಂದ ‘ತುಳುವರ ಭವನ’ ಸ್ಥಾಪನೆ ಕುರಿತು ಕರ್ನಾಟಕ ರಾಜ್ಯ ನೀತಿ ಮತ್ತು ಯೋಜನಾ ಆಯೋಗದ ಸದಸ್ಯ ಎಸ್.ಮೋಹನ್ ದಾಸ್ ಹೆಗ್ಡೆ ಅವರು ಪ್ರಸ್ತಾವ ಸಲ್ಲಿಸಿದ್ದು, ತುಳುವ ಸಮುದಾಯವು ಮುಖ್ಯವಾಗಿ ಮಂಗಳೂರು, ಉಡುಪಿ ಹಾಗೂ ಬೆಂಗಳೂರು ಸೇರಿದಂತೆ ವಿವಿಧ ನಗರ ಪ್ರದೇಶಗಳಲ್ಲಿ ವಾಸಿಸುತ್ತಿದ್ದು, ಈ ಭಾಷೆಯು ಪಂಚ ದ್ರಾವಿಡ ಭಾಷೆಗಳಲ್ಲಿ ಒಂದಾಗಿದೆ ಎಂದು ಹೇಳಿದ್ದಾರೆ. ತುಳು ಭಾಷೆ, ಸಂಸ್ಕೃತಿ ಮತ್ತು ಪರಂಪರೆಯನ್ನು ಉಳಿಸಿ ಬೆಳೆಸುವ ಜೊತೆಗೆ ಶಿಕ್ಷಣ, ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆಯಲ್ಲಿ ಮುಂದುವರಿಯಲು ಏಕೀಕೃತ ವೇದಿಕೆಯ ಅಗತ್ಯತೆಯನ್ನು ದೀರ್ಘಕಾಲದಿಂದ ಅನುಭವಿಸುತ್ತಿದೆ ಎಂದು ತಿಳಿಸಿದ್ದಾರೆ. ಈ ಪ್ರಸ್ತಾವ ಒಂದು ಆಧುನಿಕ ಹಾಗೂ ಬಹುಮುಖ ‘ಭವನ’ವನ್ನು ರೂಪಿಸುವುದನ್ನು ಉದ್ದೇಶಿಸಿಕೊಂಡಿದ್ದು ಇದು ತುಳು ಸಂಸ್ಕೃತಿ, ಶಿಕ್ಷಣ ಮತ್ತು ಆರ್ಥಿಕ ಅಭಿವೃದ್ಧಿಗೆ ಕೇಂದ್ರ ಬಿಂದುವಾಗುವಂತಿದೆ. ಇದು ಕರ್ನಾಟಕದ ಸಮಾವೇಶಾತ್ಮಕತೆ, ಪ್ರಾದೇಶಿಕ ವೈವಿಧ್ಯತೆ ಮತ್ತು ಸುಸ್ಥಿರ ಅಭಿವೃದ್ಧಿಯ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ ಎಂದು ತಿಳಿಸಿದ್ದಾರೆ.
ವಾಡಿ | ಎಸ್ಸೆಸೆಲ್ಸಿ ಪರೀಕ್ಷೆ ಬರೆದ 748 ವಿದ್ಯಾರ್ಥಿಗಳು, 13 ಮಂದಿ ಗೈರು
ವಾಡಿ: ಪಟ್ಟಣದಲ್ಲಿ 3 ಪರೀಕ್ಷಾ ಕೇಂದ್ರಗಳಾದ ಮೊರಾರ್ಜಿ ದೇಸಾಯಿ ವಸತಿ ಶಾಲೆ, ಡಾ. ಬಿ .ಆರ್. ಅಂಬೇಡ್ಕರ್ ವಸತಿ ಶಾಲೆ ಹಾಗೂ ಸೇಂಟ್ ಅಂಬ್ರೋಸ್ ಕಾನ್ವೆಂಟ್ ಶಾಲೆಯಲ್ಲಿ ಒಟ್ಟು 748 ವಿದ್ಯಾರ್ಥಿಗಳು ಪರೀಕ್ಷೆ ಬರೆದರೆ 13 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ. ಮುರಾರ್ಜಿ ದೇಸಾಯಿ ವಸತಿ ಶಾಲೆ ಮತ್ತು ಡಾ.ಬಿ.ಆರ್. ಅಂಬೇಡ್ಕರ್ ವಸತಿ ಶಾಲೆಗಳಲ್ಲಿ 18 ಕೊಠಡಿಗಳು ಗುರುತಿಸಿ 410 ವಿದ್ಯಾರ್ಥಿಗಳಿಗೆ ಹಂಚಿಕೆ ಮಾಡಲಾಯಿತು. 229 ವಿದ್ಯಾರ್ಥಿಗಳು, 181 ವಿದ್ಯಾರ್ಥಿನಿಯರಲ್ಲಿ 404 ಪರೀಕ್ಷೆಗೆ ಹಾಜರಾದರೆ, 6 ಜನ ವಿದ್ಯಾರ್ಥಿಗಳು ಗೈರು ಹಾಜರಾದರು. ಸೈಂಟ್ ಅಂಬ್ರೋಸ್ ಕಾನ್ವೆಂಟ್ ಶಾಲೆಯಲ್ಲಿ 15 ಕೊಠಡಿಗಳನ್ನು ಹಂಚಿಕೆ ಮಾಡಲಾಗಿದ್ದು, ಒಟ್ಟು 35 ವಿದ್ಯಾರ್ಥಿಗಳಲ್ಲಿ 344 ಹಾಜರಾದರೆ, 7 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ. ಆಳಂದದಲ್ಲಿ ಶೇ 93.89 ಮಕ್ಕಳು ಹಾಜರು: ಆಳಂದ ತಾಲೂಕಿನ ಗ್ರಾಮೀಣ ಹಾಗೂ ಪಟ್ಟಣ ಸೇರಿ ಸ್ಥಾಪಿತ ಒಟ್ಟು 18 ಪರೀಕ್ಷಾ ಕೇಂದ್ರಗಳಲ್ಲಿ ಬುಧವಾರ ನಡೆದ ಪ್ರಥಮ ಭಾಷೆ 10ನೇ ತರಗತಿಯ ವಾರ್ಷಿಕ ಬೋರ್ಡ್ ಪರೀಕ್ಷೆ ಕಟ್ಟುನಿಟ್ಟಾಗಿ ಬಂದೋಬಸ್ತ್ ನಡುವೆ ಮೊದಲು ದಿನ ಸುಸೂತ್ರವಾಗಿ ಸಾಗಿದೆ. ವೆಬ್ಕಾಸ್ಟಿಂಗ್ ಕ್ಯಾಮಿರಾ ನಿಗಾದೊಳಗೆ ನಡೆದ ಪರೀಕ್ಷೆ ಕೊರಳ್ಳಿ, ಪಡಸಾವಳಿ, ಆಳಂದ ಸಿಪಿಎಸ್ ಶಾಲೆ ಕೇಂದ್ರದಲ್ಲಿ ಕೆಲ ನಿಮಿಷ ಕೈಕೊಟ್ಟು ಇಕ್ಕಟ್ಟು ಸೃಷ್ಟಿ ಬಿಟ್ಟರೆ, ಸಕಾಲಕ್ಕೆ ಪ್ರಶ್ನೆ ಪತ್ರಿಕೆ ಪೂರೈಕೆ, ಜಾಗೃತದಳ ತಪಾಸಣೆ ಸುಸೂತ್ರವಾಗಿ ಸಾಗಿದೆ. ಒಟ್ಟು ಪರೀಕ್ಷೆಗೆ ನೋಂದಾಯಿತ 5410 ವಿದ್ಯಾರ್ಥಿಗಳಲ್ಲಿ 5079 ಪರೀಕ್ಷೆಗೆ ಹಾಜರಾದರೆ, 331 ವಿದ್ಯಾರ್ಥಿಗಳು ಗೈರಾಗಿದ್ದ ಒಟ್ಟು ಶೇ 93.89 ವಿದ್ಯಾರ್ಥಿಗಳು ಪರೀಕ್ಷೆ ಬರೆದರು. ಜಿಲ್ಲಾ ಪಂಚಾಯತ್ ಅಕ್ಷರದಾಸೋಹ ಯೋಜನೆಯ ಶಿಕ್ಷಣಾಧಿಕಾರಿ ಈಶ್ವರ ನಿರಡಗಿ ಮತ್ತು ಹಣಮಂತಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ ವಿ.ರಂಗಸ್ವಾಮಿ ಶೆಟ್ಟಿ ಸೇರಿ ಇನ್ನೂಳಿದ ಮೇಲ್ವಿಚಾರಣೆ ಅಧಿಕಾರಿಗಳು ಕೆಲವು ಕೇಂದ್ರಗಳಿಗೆ ಭೇಟಿ ಪರಿಶೀಲಿಸಿದರು.
ಇರಾನಿನ ನೆಲೆಗಳ ಮೇಲಿನ ದಾಳಿಯ ಬೆನ್ನಲ್ಲೇ ಖತರ್ ನ ರಾಸ್ ಲಫಾನ್ ನಲ್ಲಿ ಬೆಂಕಿ ಅವಘಡ
ದೋಹಾ: ಇರಾನಿನ ನೆಲೆಗಳ ಮೇಲಿನ ದಾಳಿಯ ನಂತರ ಖತರ್ ನ ರಾಸ್ ಲಫಾನ್ ಕೈಗಾರಿಕಾ ಪ್ರದೇಶದಲ್ಲಿ ಬೆಂಕಿ ಅವಘಡ ಸಂಭವಿಸಿದೆ ಎಂದು ಖತರ್ ಆಂತರಿಕ ಸಚಿವಾಲಯ ತಿಳಿಸಿದೆ. ವಿಶ್ವದ ಅತಿದೊಡ್ಡ LNG (ದ್ರವೀಕೃತ ನೈಸರ್ಗಿಕ ಅನಿಲ) ಉತ್ಪಾದನಾ ಘಟಕವಿರುವ ರಾಸ್ ಲಫಾನ್ ಪ್ರದೇಶದಲ್ಲಿ ಈ ಅವಘಡ ಸಂಭವಿಸಿದ್ದು, ಪರಿಸ್ಥಿತಿ ತೀವ್ರ ಆತಂಕಕ್ಕೆ ಕಾರಣವಾಗಿದೆ. ಆಂತರಿಕ ಸಚಿವಾಲಯದ ಪ್ರಕಾರ, ಇರಾನಿನ ನೆಲೆಗಳ ಮೇಲಿನ ದಾಳಿಯ ನಂತರ ಬೆಂಕಿ ಕಾಣಿಸಿಕೊಂಡಿದ್ದು, ಅಗ್ನಿಶಾಮಕ ದಳವು ತಕ್ಷಣವೇ ಸ್ಥಳಕ್ಕೆ ತೆರಳಿ ಬೆಂಕಿ ನಿಯಂತ್ರಣಕ್ಕೆ ಕ್ರಮ ಕೈಗೊಂಡಿದೆ ಎಂದು ತಿಳಿದು ಬಂದಿದೆ. ಖತರ್ ನ ಪ್ರಮುಖ ಇಂಧನ ಮೂಲಸೌಕರ್ಯ ಕೇಂದ್ರವಾಗಿರುವ ರಾಸ್ ಲಫಾನ್ ಪ್ರದೇಶವು ಜಾಗತಿಕ LNG ಸರಬರಾಜಿನಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ಇಲ್ಲಿ ಸಂಭವಿಸಿದ ಬೆಂಕಿ ಅವಘಡವು ಜಾಗತಿಕ ಇಂಧನ ಮಾರುಕಟ್ಟೆಯ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಹಸನ್ ನಯೀಮ್ ಸುರಕೋಡರಿಗೆ ‘ಲೋಹಿಯಾ ಪ್ರಶಸ್ತಿ’
ಬೆಂಗಳೂರು : ಭಾರತ ಯಾತ್ರಾ ಕೇಂದ್ರವು ಪ್ರತಿವರ್ಷ ನೀಡುವ ಡಾ.ರಾಮಮನೋಹರ ಲೋಹಿಯಾ ಪ್ರಶಸ್ತಿಯನ್ನು ಈ ಸಾಲಿನಲ್ಲಿ ಬೆಳಗಾವಿ ಜಿಲ್ಲೆಯ ರಾಮದುರ್ಗದ ಸಮಾಜವಾದಿ ಚಿಂತಕ ಹಸನ್ ನಯೀಮ್ ಸುರಕೋಡ ಅವರಿಗೆ ನೀಡಲಾಗುತ್ತಿದೆ ಎಂದು ನಾಟಕ ಅಕಾಡಮಿಯ ಅಧ್ಯಕ್ಷ ಕೆ.ವಿ. ನಾಗರಾಜಮೂರ್ತಿ ತಿಳಿಸಿದ್ದಾರೆ. ಬುಧವಾರ ಈ ಕುರಿತು ಪ್ರಕಟನೆ ನೀಡಿದ ಅವರು, ಡಾ.ರಾಮಮನೋಹರ ಲೋಹಿಯಾ ಅವರ ಜನ್ಮದಿನಾಚರಣೆ ಅಂಗವಾಗಿ ಧಾರವಾಡದ ವಿದ್ಯಾವರ್ಧಕ ಸಂಘದಲ್ಲಿ ಮಾ.22ರಂದು ಸಂಜೆ 4ಗಂಟೆಗೆ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ. ಪ್ರಶಸ್ತಿಯು 10 ಸಾವಿರ ರೂ. ನಗದು ಮತ್ತು ತಾಮ್ರದ ಫಲಕವನ್ನು ಹೊಂದಿರುತ್ತದೆ. ಸಾಹಿತಿ ಡಾ.ಕಾಳೇಗೌಡ ನಾಗವಾರ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಮಾಜಿ ಶಾಸಕ ಚಂದ್ರಕಾಂತ ಬೆಲ್ಲದ, ಹಿರಿಯ ಪತ್ರಕರ್ತ ಜಿ.ಎನ್.ಮೋಹನ್ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದ್ದಾರೆ. ರಾಜ್ಯ ಯೋಜನಾ ಆಯೋಗದ ಉಪಾಧ್ಯಕ್ಷ ಬಿ.ಆರ್.ಪಾಟೀಲ್ ಅವರು ಸಮಾರಂಭದ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ಡಾ.ಎಂ.ಪಿ.ಪ್ರಕಾಶ್ ಸಮಾಜಮುಖಿ ಟ್ರಸ್ಟ್ ನ ಅಧ್ಯಕ್ಷೆ ಸುಮಾ ವಿಜಯ್, ಕರ್ನಾಟಕ ನಾಟಕ ಅಕಾಡಮಿಯ ಸದಸ್ಯೆ ಗಾಯಿತ್ರಿ ಹಡಪದ್ ಅವರು ಉಪಸ್ಥಿತರಿರುತ್ತಾರೆ ಎಂದು ತಿಳಿಸಿದ್ದಾರೆ.
ಯಾದಗಿರಿಯಲ್ಲಿ ಎಸ್ಸೆಸೆಲ್ಸಿ ಪರೀಕ್ಷೆ ಆರಂಭ: 97% ಹಾಜರಾತಿ
ಯಾದಗಿರಿ: ನಗರ ಸೇರಿದಂತೆ ಜಿಲ್ಲೆಯಾದ್ಯಾಂತ ಸ್ಥಾಪಿಸಲಾದ 61 ಪರೀಕ್ಷಾ ಕೇಂದ್ರಗಳಲ್ಲಿ ಬುಧವಾರ ಆರಂಭಗೊಂಡ ಎಸ್ಎಸ್ಎಲ್ಸಿ ಪರೀಕ್ಷೆ ಸುಸೂತ್ರವಾಗಿ ಜರುಗಿತು. ಇಂದಿನ ಪರೀಕ್ಷೆಗೆ ಒಟ್ಟು 16,306 ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದು, ಅದರಲ್ಲಿ 15,821 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದಾರೆ. 485 ವಿದ್ಯಾರ್ಥಿಗಳು ಗೈರಾಗಿದ್ದು, ಶೇ.97.03 ಹಾಜರಾತಿ ಹಾಗೂ ಶೇ.2.97 ಗೈರು ದಾಖಲಾಗಿದೆ. ಮೊದಲ ದಿನದ ಪರೀಕ್ಷೆಗೆ ಆಗಮಿಸಿದ ವಿದ್ಯಾರ್ಥಿಗಳಿಗೆ ಆಯಾ ಕೇಂದ್ರಗಳಲ್ಲಿ ಶಾಲಾ ಶಿಕ್ಷಣ ಇಲಾಖೆಯ ಅಧಿಕಾರಿಗಳು ಚಾಕಲೆಟ್ ಮತ್ತು ಗುಲಾಬಿ ಹೂ ನೀಡಿ ಸ್ವಾಗತಿಸಿ, ಧೈರ್ಯ ತುಂಬಿ ಪರೀಕ್ಷಾ ಕೋಣೆಗೆ ಕಳುಹಿಸುವ ಮೂಲಕ ಹುರಿದುಂಬಿಸಿದರು. ಜಿಲ್ಲೆಯ ಆರು ತಾಲೂಕು ಕೇಂದ್ರಗಳು ಹಾಗೂ ವಿವಿಧ ಹೋಬಳಿಗಳಲ್ಲಿನ ಪರೀಕ್ಷಾ ಕೇಂದ್ರಗಳಿಗೆ ನಿಯೋಜಿಸಲಾದ ಅಧಿಕಾರಿಗಳು ಭೇಟಿ ನೀಡಿ, ಪರೀಕ್ಷೆ ಶಾಂತಿಯುತವಾಗಿ ನಡೆಯುವಂತೆ ಮೇಲ್ವಿಚಾರಣೆ ನಡೆಸಿದರು. ಬೆಳಿಗ್ಗೆ ಜಿಪಂ ಸಿಇಒ ಲವೀಶ್ ಒರ್ಡಿಯಾ, ಡಿಸಿ ಹರ್ಷಲ್ ಬೋಯರ್, ಎಸ್ಪಿ ಪೃಥ್ವಿಕ್ ಶಂಕರ್ ಹಾಗೂ ಡಿಡಿಪಿಐ ಸಿ.ಎಸ್. ಮುದೋಳ್ ಅವರು ಪ್ರತ್ಯೇಕವಾಗಿ ಕೇಂದ್ರಗಳಿಗೆ ಭೇಟಿ ನೀಡಿ ವ್ಯವಸ್ಥೆ ಪರಿಶೀಲಿಸಿದರು. ನಗರದ ಒಂದು ಕೇಂದ್ರದಲ್ಲಿ ಡಿಡಿಪಿಐ ಮುದೋಳ್ ಅವರು ವಿದ್ಯಾರ್ಥಿಗಳನ್ನು ಸ್ವಾಗತಿಸಿದರು. ಇಂದು ಕನ್ನಡ, ಆಂಗ್ಲ, ಉರ್ದು ಮತ್ತು ಹಿಂದಿ ಭಾಷೆಗಳ ಪರೀಕ್ಷೆಗಳು ನಡೆದವು. ವೈದ್ಯಕೀಯ ತಂಡ, ಪೊಲೀಸ್ ಬಂದೋಬಸ್ತ್ ಜಿಲ್ಲೆಯ ಎಲ್ಲಾ 61 ಪರೀಕ್ಷಾ ಕೇಂದ್ರಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ ಮಾಡಲಾಗಿತ್ತು. ಪ್ರತಿ ಕೇಂದ್ರದಲ್ಲೂ ವೈದ್ಯಕೀಯ ತಂಡ ಹಾಗೂ ಆಶಾ ಕಾರ್ಯಕರ್ತೆಯರನ್ನು ನಿಯೋಜಿಸಲಾಗಿದ್ದು, ವಿದ್ಯಾರ್ಥಿಗಳಿಗೆ ಆರೋಗ್ಯ ಸಮಸ್ಯೆ ಉಂಟಾದಲ್ಲಿ ಸ್ಥಳದಲ್ಲೇ ಚಿಕಿತ್ಸೆ ನೀಡಲು ವ್ಯವಸ್ಥೆ ಮಾಡಲಾಗಿತ್ತು. ತಾಲೂಕುವಾರು ಹಾಜರಾತಿ ವಿವರ ಪರೀಕ್ಷೆ ಬರೆದ 15,821 ವಿದ್ಯಾರ್ಥಿಗಳಲ್ಲಿ ಯಾದಗಿರಿ ತಾಲೂಕಿನಲ್ಲಿ 5,810 (133 ಗೈರು), ಶಹಾಪುರ ತಾಲೂಕಿನಲ್ಲಿ 5,068 (142 ಗೈರು) ಹಾಗೂ ಸುರಪುರ ತಾಲೂಕಿನಲ್ಲಿ 4,943 (210 ಗೈರು) ವಿದ್ಯಾರ್ಥಿಗಳು ಹಾಜರಾಗಿದ್ದಾರೆ. ಬಸ್ಗಾಗಿ ವಿದ್ಯಾರ್ಥಿಗಳ ಪರದಾಟ ದೋರನಹಳ್ಳಿ: ಪರೀಕ್ಷೆ ಬರೆದ ಬಳಿಕ ಊರಿಗೆ ಮರಳಲು ದೋರನಹಳ್ಳಿ ಸುತ್ತಮುತ್ತಲಿನ ನೂರಾರು ವಿದ್ಯಾರ್ಥಿಗಳು ಬಸ್ಗಾಗಿ ಭಾರಿ ಪರದಾಡಿದರು. ಮುಖ್ಯ ರಸ್ತೆಯಲ್ಲಿ ಬಸ್ಗಾಗಿ ಕಾಯುತ್ತಿದ್ದ ವಿದ್ಯಾರ್ಥಿಗಳನ್ನು ಗಮನಿಸದೇ ಕೆಲವು ಬಸ್ಗಳು ಸಾಗಿದ ಪರಿಣಾಮ ಮಕ್ಕಳು ಸಾಕಷ್ಟು ಸಮಯ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು. ಬಳಿಕ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ವಿಷಯ ತರಲಾಗಿದ್ದು, ತಕ್ಷಣ ಬಸ್ ವ್ಯವಸ್ಥೆ ಮಾಡಲಾಯಿತು. ಗುರುಮಠಕಲ್, ಸುರಪುರ, ಕೆಂಭಾವಿ, ಕಕ್ಕೆರಾ, ಕೊಡೆಕಲ್, ಹುಣಸಗಿ, ನಾರಾಯಣಪುರ, ವಡಗೇರಾ, ಸೈದಾಪುರ ಸೇರಿದಂತೆ ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ ವಿದ್ಯಾರ್ಥಿಗಳನ್ನು ಸ್ವಾಗತಿಸಿ ಪರೀಕ್ಷಾ ಕೋಣೆಗೆ ಕಳುಹಿಸಿರುವುದು ಕಂಡುಬಂತು.
ಜಪಾನ್ ಮತ್ತು ದಕ್ಷಿಣ ಕೊರಿಯಾಗೆ ಕಿಮ್ ಜಾಂಗ್ ಉನ್ ಭಯ ಶುರುವಾಯ್ತು | Kim Jong Un
ಉತ್ತರ ಕೊರಿಯಾ ಅನ್ನೋ ದೇಶ ಎಷ್ಟು ಚಿಕ್ಕದಾಗಿ ಇದೆಯೋ ಅಷ್ಟೇ ದೊಡ್ಡದಾಗಿ ಹವಾ ಇಟ್ಟಿದ್ದು, ಪಾಶ್ಚಿಮಾತ್ಯ ದೇಶಗಳು ಕೂಡ ಉತ್ತರ ಕೊರಿಯಾ ಬಗ್ಗೆ ಯೋಚನೆ ಮಾಡುವ ಪರಿಸ್ಥಿತಿ ಇದೆ. ಒಂದು ಕಡೆ ಪದೇ ಪದೇ ತನ್ನ ಬಳಿ ಇರುವ ಪರಮಾಣು ಸಾಮರ್ಥ್ಯದ ಕ್ಷಿಪಣಿ ಹಾಗೂ ಪರಮಾಣು ಅಸ್ತ್ರದ ರಾಶಿ ಹೊರಗೆ ತೆಗೆದು ಕಿಮ್ ಹವಾ ಎಬ್ಬಿಸುತ್ತಾನೆ. ಆದರೆ

30 C