ದುಬೈನಲ್ಲಿ ಅದ್ದೂರಿಯಾಗಿ ನಡೆದ ಯುಎಇ ‘ಸಾಹೇಬಾನ್’ನ ‘ಕುಟುಂಬ ಸ್ನೇಹಕೂಟ'
ಡಾ.ಸಫ್ವಾನ್, ಮಥೀನ್ ಅಹಮದ್ ಚಿಲ್ಮಿ, ಶಫಿ ಶಾಬಾನ್, ಇಕ್ಬಾಲ್ ಮನ್ನಾರಿಗೆ 'ಸಾಹೇಬಾನ್ ಎಕ್ಸೆಲೆನ್ಸ್ ಅವಾರ್ಡ್' ಪ್ರದಾನ
ಜ. 11ರಿಂದ 24 ಗಂಟೆ ಭಾರಿ ಚಳಿ; ಈ ಜಿಲ್ಲೆಗಳಲ್ಲಿ ಉಷ್ಣಾಂಶ 3-4 ಡಿಗ್ರಿಗೆ ಕುಸಿತ ಸಾಧ್ಯತೆ
ರಾಜ್ಯದ ಉತ್ತರ ಒಳನಾಡಿನಲ್ಲಿಮುಂದಿನ 24 ಗಂಟೆಗಳಲ್ಲಿತೀವ್ರ ಚಳಿ ಇರಲಿದೆ. ಕನಿಷ್ಠ ತಾಪಮಾನ ಸಾಮಾನ್ಯಕ್ಕಿಂತ 3-6 ಡಿಗ್ರಿ ಸೆಲ್ಸಿಯಸ್ ಕುಸಿಯಲಿದೆ. ಬಾಗಲಕೋಟೆ, ಬೆಳಗಾವಿ, ಬೀದರ್, ಧಾರವಾಡ, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ ಜಿಲ್ಲೆಗಳಲ್ಲಿತುಂಪು ಹವಾಗುಣ ಇರಲಿದೆ. ಬೆಂಗಳೂರು, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ಮಂಡ್ಯ, ಮೈಸೂರು, ದಾವಣಗೆರೆ, ಚಿತ್ರದುರ್ಗ ಜಿಲ್ಲೆಗಳಲ್ಲೂ ಚಳಿಯ ವಾತಾವರಣ ಇರಲಿದೆ. ಹಲವೆಡೆ ಮಂಜು ಮುಸುಕಿದ ವಾತಾವರಣ ಕಂಡುಬರಲಿದೆ.
ಲೇಖಕ ಗಣೇಶ ಅಮೀನಗಡಗೆ ಎಂಆರ್ಎಂ ಪ್ರಕಾಶನ ಪ್ರಶಸ್ತಿ
ಮೈಸೂರು : ಪತ್ರಕರ್ತ, ಲೇಖಕ ಹಾಗೂ ಕವಿತಾ ಪ್ರಕಾಶನದ ಗಣೇಶ ಅಮೀನಗಡ ಅವರು ಮಂಡ್ಯದ ಎಂಆರ್ಎಂ ಪ್ರಕಾಶನ ಪ್ರಶಸ್ತಿ ಪುರಸ್ಕೃತರಾಗಿದ್ದಾರೆ. ಎಂಆರ್ಎಂ ಸಾಹಿತ್ಯ ಪ್ರಶಸ್ತಿ ಪುರಸ್ಕಾರಕ್ಕೆ ಮಂಡ್ಯದ ಕವಿ ಕೆ.ಪಿ.ಮೃತ್ಯುಂಜಯ ಭಾಜನರಾಗಿದ್ದಾರೆ. ಈ ಇಬ್ಬರಿಗೂ ತಲಾ 10 ಸಾವಿರ ರೂ. ನಗದು, ಸ್ಮರಣಿಕೆಯೊಂದಿಗೆ ಸನ್ಮಾನಿಸಲಾಗುವುದು ಎಂದು ಲೇಖಕ ಹಾಗೂ ಪತ್ರಕರ್ತ ಚಂದ್ರಶೇಖರ ದ.ಕೋ.ಹಳ್ಳಿ ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಮಂಡ್ಯದ ಎಂಆರ್ಎಂ ಪ್ರಕಾಶನದ ಮೊದಲ ವಾರ್ಷಿಕೋತ್ಸವ ಅಂಗವಾಗಿ ತಿ.ನರಸೀಪುರ ತಾಲ್ಲೂಕಿನ ಯಾಚೇನಹಳ್ಳಿಯ ಶ್ರೀರಾಮಕೃಷ್ಣ ಸೇವಾ ಕೇಂದ್ರ ಪ್ರೌಢಶಾಲೆಯ ವಿಶ್ವಮಾನವ ವೇದಿಕೆಯಲ್ಲಿ ಜನವರಿ 12ರಂದು ಮಧ್ಯಾಹ್ನ 2 ಗಂಟೆಗೆ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ ಎಂದು ಅವರು ಹೇಳಿದರು. ಇದೇ ಸಮಾರಂಭದಲ್ಲಿ ನಾದಾನಂದನಾಥ ಸ್ವಾಮೀಜಿ ರಚಿಸಿದ 'ಅವಧೂತ ಮಾದಪ್ಪ' ಹಾಗೂ ವೈದ್ಯಕೀಯ ವಿದ್ಯಾರ್ಥಿನಿ ಎಸ್.ಪಿ.ನಿಧಿ ಅವರು ಇಂಗ್ಲಿಷ್ ನಲ್ಲಿ ರಚಿಸಿದ 'ದಿ ಕಾಪಿ – ಎ ಫಾಟಲ್ ಪ್ಯಾಟನ್9' ಕಾದಂಬರಿ ಬಿಡುಗಡೆಗೊಳ್ಳಲಿವೆ ಎಂದು ಮಾಹಿತಿ ನೀಡಿದರು. ಯಾಚೇನಹಳ್ಳಿಯ ಶ್ರೀರಾಮಕೃಷ್ಣ ಸೇವಾ ಕೇಂದ್ರದ ಅಧ್ಯಕ್ಷ ನಾದಾನಂದನಾಥ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಪೀಠಾಧಿಪತಿ ಡಾ.ನಿಶ್ಚಲಾನಂದನಾಥ ಸ್ವಾಮೀಜಿ ಕೃತಿಗಳನ್ನು ಬಿಡುಗಡೆಗೊಳಿಸುವರು. ಯಾಚೇನಹಳ್ಳಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ವೈ.ಎನ್.ಶಂಕರೇಗೌಡ ಕಾರ್ಯಕ್ರಮ ಉದ್ಘಾಟಿಸುವರು. ಕಥೆಗಾರ ಅದೀಬ್ ಅಖ್ತರ್ ಪ್ರಶಸ್ತಿ ಪುರಸ್ಕೃತರನ್ನು ಅಭಿನಂದಿಸುವರು. ನಿಧಿ ಅವರ ಕೃತಿ ಕುರಿತು ಪ್ರಕಾಶಕ ಹಾಗೂ ಮಂಡ್ಯ ವಿವಿಯ ಕನ್ನಡ ಅಧ್ಯಾಪಕ ಉಮೇಶ್ ದಡಮಹಳ್ಳಿ ಮಾತನಾಡುವರು. ಇದೇ ಸಂದರ್ಭದಲ್ಲಿ ಕರ್ನಾಟಕ ಜಾನಪದ ಅಕಾಡಮಿ ಪ್ರಶಸ್ತಿ ಪುರಸ್ಕೃತ ಚನ್ನಾಜಮ್ಮ ಅವರನ್ನು ಸನ್ಮಾನಿಸಲಾಗುವುದು ಎಂದು ಅವರು ವಿವರಿಸಿದರು. ಈ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಲೇಖಕ ಹಾಗೂ ಕನ್ನಡ ಉಪನ್ಯಾಸಕ ಲೋಕೇಶ್ ಬೆಕ್ಕಳ, ಕವಯಿತ್ರಿ ಎಚ್. ಆರ್.ಕನ್ನಿಕಾ, ಬನ್ನೂರಿನ ಆಕಾಶ್ ಸ್ಟೀಲ್ಸ್ ಅಂಡ್ ಸಿಮೆಂಟ್ ಮಾಲಕ ಜಿ.ಸುರೇಶ್, ಕವಿ ಹಾಗೂ ಶಿಕ್ಷಕ ಕೊತ್ತತ್ತಿ ರಾಜು ಹಾಗೂ ನೇರಲಕೆರೆಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಿಇಒ ನೇರಲಕೆರ ಲೋಕೇಶ್ ಭಾಗವಹಿಸುವರು. ಎಂಆರ್ ಎಂ ಪ್ರಕಾಶನದ ಪ್ರಕಾಶಕ ಮಂಜು ಮುತ್ತೇಗೆರೆ ಅಧ್ಯಕ್ಷತೆ ವಹಿಸುವರು ಎಂದರು. ಸುದ್ದಿಗೋಷ್ಠಿಯಲ್ಲಿ ಪ್ರಕಾಶಕ ಹಾಗೂ ಕನ್ನಡ ಅಧ್ಯಾಪಕ ಉಮೇಶ್ ದಡಮಹಳ್ಳಿ ಪತ್ರಕರ್ತ ರುದ್ರಗೌಡ ಮುರಾಳ, ಲೇಖಕಿ ನಿಧಿ ಹೆತ್ತವರಾದ ಪ್ರವೀಣಕುಮಾರ್ ಹಾಗೂ ಪೂರ್ಣಿಮಾ ಹಾಜರಿದ್ದರು
Chitradurga | ಕಾರು-ಕ್ಯಾಂಟರ್ ಲಾರಿ ನಡುವೆ ಢಿಕ್ಕಿ; ನಾಲ್ವರು ಮೃತ್ಯು
ಚಿತ್ರದುರ್ಗ : ಕಾರು ಹಾಗೂ ಕ್ಯಾಂಟರ್ ಲಾರಿ ಮಧ್ಯೆ ಢಿಕ್ಕಿಯಾದ ಪರಿಣಾಮ ಕಾರಿನಲ್ಲಿದ್ದ ನಾಲ್ವರು ಮೃತಪಟ್ಟಿರುವ ಘಟನೆ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಹಿಂಡಸಕಟ್ಟೆ ಗ್ರಾಮದ ಬಳಿ ನಡೆದಿದೆ. ಬೀದರ್-ಶ್ರೀರಂಗಪಟ್ಟಣ ರಾಜ್ಯ ಹೆದ್ದಾರಿಯಲ್ಲಿ ಭೀಕರ ಅಪಘಾತ ಸಂಭವಿಸಿದ್ದು, ಢಿಕ್ಕಿಯ ರಭಸಕ್ಕೆ ಕಾರು ನಜ್ಜುಗುಜ್ಜಾಗಿದೆ. ಮೃತರನ್ನು ವಿಶ್ವನಾಥ್(22), ನಂಜುಂಡಿ(23), ರಾಹುಲ್(23), ಯಶ್ವಂತ್ (22) ಎಂದು ಗುರುತಿಸಲಾಗಿದೆ. ಇವರೆಲ್ಲರು ಹುಳಿಯಾರಿನಿಂದ ಹಿರಿಯೂರಿಗೆ ಆಗಮಿಸುತ್ತಿದ್ದರು ಎನ್ನಲಾಗಿದೆ. ಘಟನಾ ಸ್ಥಳಕ್ಕೆ ಹಿರಿಯೂರು ಗ್ರಾಮಾಂತರ ಠಾಣೆ ಸಿಪಿಐ ಆನಂದ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಪ್ರಕರಣ ಹಿರಿಯೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಡಾಲರ್ನ ಮೌಲ್ಯ 90 ರೂ.ಗೆ ತಲುಪಿರುವುದಕ್ಕಿಂತ ಅವಮಾನಬೇಕೇ? : ರಮೇಶ್ ಕುಮಾರ್
‘ಸೌಹಾರ್ದ ಭಾರತ-ಸಮಾನತೆಯ ಸ್ನೇಹಿತ’ ಕೃತಿಯ ಜನಾರ್ಪಣೆ ಸಮಾರಂಭ
Gadag | ಮನೆ ಕಟ್ಟಲು ಅಡಿಪಾಯ ತೆಗೆಯುವ ವೇಳೆ ನಿಧಿ ಪತ್ತೆ!
ಗದಗ : ಮನೆಯ ಹೊಸ ಅಡಿಪಾಯ ಅಗೆಯುವ ಸಂದರ್ಭದಲ್ಲಿ ಮಣ್ಣಿನ ಚೆಂಬೊಂದರಲ್ಲಿ ಅಂದಾಜು 1 ಕೆಜಿಯಷ್ಟು ತೂಕದ ಪುರಾತನ ಚಿನ್ನಾಭರಣಗಳು ಲಕ್ಕುಂಡಿ ಗ್ರಾಮದಲ್ಲಿ ಪತ್ತೆಯಾಗಿರುವುದಾಗಿ ವರದಿಯಾಗಿದೆ. ಗದಗ ತಾಲೂಕಿನ ಲಕ್ಕುಂಡಿ ಗ್ರಾಮದ ವಾರ್ಡ್ ಸಂಖ್ಯೆ 4ರ ನಿವಾಸಿ ಗಂಗವ್ವ ಬಸವರಾಜ ರಿತ್ತಿ ಅವರ ಮನೆ ಜಾಗದಲ್ಲಿ ನಿಧಿ ಪತ್ತೆಯಾಗಿದೆ. ಹಳೆಯ ಮನೆಯನ್ನು ಕೆಡವಿ ಹೊಸ ಮನೆ ನಿರ್ಮಾಣಕ್ಕಾಗಿ ಭೂಮಿ ಅಗೆಯುತ್ತಿದ್ದಾಗ ತಾಮ್ರದ ಚೆಂಬು ಸಿಕ್ಕಿದೆ. ಚೆಂಬಿನೊಳಗೆ ಚಿನ್ನದ ಬಳೆಗಳು, ಚೈನ್ಗಳು, ಉಂಗುರಗಳು ಮತ್ತು ಇತರ ಆಭರಣಗಳು ಪತ್ತೆಯಾಗಿವೆ ತಿಳಿದುಬಂದಿದೆ. ಈ ವಿಷಯ ತಿಳಿದು ಸ್ಥಳಕ್ಕೆ ಗ್ರಾಮಸ್ಥರು ಸೇರಿದ್ದಾರೆ. ಆ ಬಳಿಕ ಸ್ಥಳಕ್ಕೆ ಅಪರ ಜಿಲ್ಲಾಧಿಕಾರಿ ದುರ್ಗೇಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ್ ಸೇರಿದಂತೆ ಇತರೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪತ್ತೆಯಾದ ನಿಧಿಯನ್ನು ಪೊಲೀಸರು ವಶಪಡಿಸಿಕೊಂಡು ಸುರಕ್ಷಿತವಾಗಿ ಇಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಡಿ. 23ರಂದು ಬೆಂಗಳೂರಿನ ಬಸವೇಶ್ವರ ನಗರದಲ್ಲಿ ಪತ್ನಿಯ ಹಣೆಗೆ ಗುಂಡಿಟ್ಟು ಕೊಂದಿದ್ದ ಪತಿಯ ಕೇಸ್ ನಲ್ಲಿ ಹೊಸ ಟ್ವಿಸ್ಟ್
ಬೆಂಗಳೂರಿನ ಬಸವೇಶ್ವರ ನಗರದಲ್ಲಿ ನಡೆದಿದ್ದ ಬ್ಯಾಂಕ್ ಮ್ಯಾನೇಜರ್ ಭುವನೇಶ್ವರಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಬ್ಬ ಆರೋಪಿ ಮೌಳೇಶ್ ನನ್ನು ಪೊಲೀಸರು ಬಂಧಿಸಿದ್ದಾರೆ. ಪತ್ನಿ ಭುವನೇಶ್ವರಿಯನ್ನು ಕೊಲ್ಲಲು ಪತಿ ಬಾಲಮುರುಗನ್, ಮೌಳೇಶ್ಗೆ ಸುಪಾರಿ ನೀಡಿದ್ದ. ಹಣ ಪಡೆದು ಬೆಂಗಳೂರಿಗೆ ಬಂದಿದ್ದ ಮೌಳೇಶ್, ಭುವನೇಶ್ವರಿ ಚಲನವಲನಗಳ ಮೇಲೆ ನಿಗಾ ಇಟ್ಟಿದ್ದ. ಕೊನೆಗೆ ಬಾಲಮುರುಗನ್ ಸ್ವತಃ ಕೊಲೆ ಮಾಡಿದ್ದ. ಮೌಳೇಶ್ ನನ್ನು ವಿಚಾರಣೆಗಾಗಿ ವಶಕ್ಕೆ ಪಡೆಯಲಾಗಿದೆ.
ಕಲಬುರಗಿ| ವೆನೆಜುವೆಲಾ ಮೇಲೆ ಅಮೆರಿಕ ದಾಳಿ ಖಂಡಿಸಿ ಪ್ರತಿಭಟನೆ
ಕಲಬುರಗಿ: ಸಿಪಿಐ, ಸಿಪಿಐಎಂ ಹಾಗೂ ಎಸ್.ಯು.ಸಿ.ಐ ಎಡ ಪಕ್ಷಗಳ ನೇತೃತ್ವದಲ್ಲಿ ವೆನೆಜುವೆಲಾ ದೇಶದ ಮೇಲೆ ಅಮೆರಿಕ ದಾಳಿ ಖಂಡಿಸಿ, ಇಲ್ಲಿಯ ಸರ್ದಾರ್ ವಲ್ಲಭ್ ಭಾಯಿ ಪಟೇಲ್ ವೃತ್ತದಲ್ಲಿ ಅಮೇರಿಕಾ ಸಾಮ್ರಾಜ್ಯಶಾಹಿಯ ಪ್ರತಿಕೃತಿಯನ್ನು ದಹಿಸಿ ಪ್ರತಿಭಟನೆ ನಡೆಸಲಾಯಿತು. ಈ ವೇಳೆ ಮಾತನಾಡಿದ ಪ್ರತಿಭಟನಾಕಾರರು, ವೆನೆಜುವೆಲಾ ವಿರುದ್ಧ ಯು.ಎಸ್. ಆಕ್ರಮಣ ಹಾಗೂ ಅಲ್ಲಿನ ಅಧ್ಯಕ್ಷ ನಿಕೋಲಸ್ ಮಡುರೊ, ಅವರ ಪತ್ನಿ ಸಿಲಿಯಾ ಫ್ಲೋರ್ಸ್ ಅವರ ಅಪಹರಣವನ್ನು ನಾವು ಬಲವಾಗಿ ಖಂಡಿಸುತ್ತೇವೆ. ಇದು ವಿಶ್ವಸಂಸ್ಥೆಯ ಚಾರ್ಟರನ್ನು ಮತ್ತು ಹಲವು ಅಂತರರಾಷ್ಟೀಯ ಕಾನೂನು ನಿಯಮಗಳನ್ನು ಉಲ್ಲಂಘಿಸಲಾಗಿದೆ ಎಂದು ಆರೋಪಿಸಿದರು. ಮಾದಕದ್ರವ್ಯ-ಭಯೋತ್ಪಾದಕ ಗ್ಯಾಂಗ್ಗಳ ವಿರುದ್ಧ ಯುದ್ಧದ ನೆಪದಲ್ಲಿ ವೆನೆಜುವೆಲಾದ ಸುತ್ತಲೂ ಕಳೆದ ಹಲವು ದಶಕಗಳಲ್ಲಿ ಕಂಡಿರದ ಭಾರೀ ನೌಕಾ-ವಾಯುಸೇನಾ ಜಮಾವಣೆಯಾಗಿತ್ತು. ಯಾವುದೇ ಪುರಾವೆ ಇಲ್ಲದೆ ನರ್ಕೊ-ಟೆರರಿಸ್ಟ್ ಗ್ಯಾಂಗ್ಗಳದ್ದು ಎಂದು ಆಪಾದಿಸಿ 35 ನಾಗರಿಕ ದೋಣಿಗಳ ಮೇಲೆ ಬಾಂಬ್ ದಾಳಿ ನಡೆಸಿ 115 ಅಮಾಯಕ ಜನರ ಕಗ್ಗೊಲೆ ಮಾಡಲಾಗಿದೆ. “ದಿಗ್ಬಂಧಿತ ತೈಲ” ಸಾಗಾಣಿಕೆಯೆಂದು ಆಪಾದಿಸಿ ಎರಡು ತೈಲ ಹಡಗಗಳನ್ನು ಕಡಲುಗಳ್ಳತನದಂತಹ ಕಾರ್ಯಾಚರಣೆಯಲ್ಲಿ ತಡೆದು ನಿಲ್ಲಿಸಲಾಗಿದೆ ಎಂದು ಹೇಳಿದರು. ಈ ವೇಳೆ ಮಾತನಾಡಿದ ಸಿಪಿಐಎಂ ಪಕ್ಷದ ಜಿಲ್ಲಾ ಕಾರ್ಯದರ್ಶಿ ಕೆ. ನೀಲಾ, ನಾವು ಹಾಕಿದ್ದಷ್ಟು ಸುಂಕ ತೆಗೆದುಕೊಳ್ಳಬೇಕು, ತಾನು ಹೇಳಿದ ಕಡೆ ವ್ಯಾಪಾರ ಮಾಡಬೇಕು, ರಷ್ಯಾ ಕಡೆಯಿಂದ ತೈಲ ಆಮದು ಮಾಡಿಕೊಳ್ಳಬಾರದು, ಇಲ್ಲದಿದ್ದರೆ ದೊಡ್ಡ ನಷ್ಟ ಅನುಭವಿಸುತ್ತೀರಿ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬೇರೆ ದೇಶಗಳಿಗೆ ಬೆದರಿಕೆ ಹಾಕುತ್ತಿದ್ದಾರೆ ಇಂತಹ ಸಾಮ್ರಾಜ್ಯಶಾಹಿಗಳ ಧೋರಣೆಯನ್ನು ಎಡಪಕ್ಷಗಳು ಇಡೀ ದೇಶದಾದ್ಯಂತ ಖಂಡಿಸುತ್ತೇವೆ ಎಂದು ಹೇಳಿದರು. ಸಿಪಿಐ ಮುಖಂಡ ಭೀಮಾಶಂಕರ ಮಾಡ್ಯಾಳ ಮಾತನಾಡಿ, ಸಾಮ್ರಾಜ್ಯಶಾಹಿ ಅಮೆರಿಕ ಸಣ್ಣಪುಟ್ಟ ದೇಶಗಳ ಮೇಲೆ ಬೆದರಿಯೊಡ್ಡಿ ದಾಳಿ ನಡೆಸುತ್ತಿದೆ, ಇಂತಹ ದಾಳಿಗಳು ಮುಂದುವರೆಸಿದರೆ ಅಮೆರಿಕ ಹೊತ್ತಿ ಉರಿಯುವುದರಲ್ಲಿ ಸಂದೇಹವಿಲ್ಲ ಎಂದು ಹೇಳಿದರು. ಇದೇ ವೇಳೆಯಲ್ಲಿ SUCI (C) ನ ಜಿಲ್ಲಾ ಸಮಿತಿಯ ಸದಸ್ಯರಾದ ಎಸ್. ಎಂ. ಶರ್ಮಾ, ಮೌಲಾ ಮುಲ್ಲಾ ಅವರು ಮಾತನಾಡಿದರು. ಈ ಸಂಧರ್ಭದಲ್ಲಿ ವಿ.ಜಿ. ದೇಸಾಯಿ, ಮಹೇಶ್ ಎಸ್.ಬಿ., ಮಹೇಶ್ ನಾಡಗೌಡ, ಸೀಮಾ ದೇಶಪಾಂಡೆ, ಜಗನ್ನಾಥ್ ಎಸ್. ಎಚ್., ಹಣಮಂತ ಎಸ್. ಎಚ್., ಸಂತೋಷ್ ಕುಮಾರ್ ಹಿರವೆ, ಮೀನಾಕ್ಷಿ ಬಾಳಿ, ಪರಶುರಾಮ್, ಸುಧಾಮ್ ಧನ್ನಿ, ಪದ್ಮಿನಿ ಕಿರಣಗಿ, ಗೌರಮ್ಮ ಪಾಟೀಲ್, ಶಾಂತಾ ಘಂಟಿ, ಶ್ರೀಮಂತ ಬಿರಾದರ್, ಲವಿತ್ರಾ ವಸ್ತ್ರದ್, ಸಾಜೀದ್ ಅಹ್ಮದ್, ಭೀಮಶೆಟ್ಟಿ ಯಂಪಳ್ಳಿ, ವಿರೂಪಾಕ್ಷಿ ತಡಕಲ್, ಸರ್ವೇಶ್, ಸಿದ್ದಪ್ಪ ಫಾಲ್ಕಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಮೌಲಾನಾ ಆಜಾದ್ ಮಾದರಿ ಶಾಲೆಯಲ್ಲಿ ಪೊಕ್ಸೊ ಕಾನೂನು ಕುರಿತು ಜಾಗೃತಿ ಕಾರ್ಯಕ್ರಮ
ಕೊಪ್ಪಳ: ಮೌಲಾನಾ ಆಜಾದ್ ಮಾದರಿ ಶಾಲೆ, ದಿಡ್ಡಿಕೇರಾದಲ್ಲಿ ಶನಿವಾರ ಪೊಕ್ಸೊ(ಮಕ್ಕಳ ಲೈಂಗಿಕ ಅಪರಾಧಗಳ ತಡೆ) ಕಾನೂನು ಕುರಿತು ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಕೊಪ್ಪಳದ ಯುವ ವಕೀಲೆಯಾದ ಶಗುಫ್ತಾ ತಬ್ಸುಮ್ ಅವರು ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಹೈಸ್ಕೂಲ್ ವಿದ್ಯಾರ್ಥಿಗಳಿಗೆ ಸುರಕ್ಷಿತ ಹಾಗೂ ಅಸುರಕ್ಷಿತ ಪರಿಸ್ಥಿತಿಗಳನ್ನು ಹೇಗೆ ಗುರುತಿಸಬೇಕು, ಅಂತರ್ಜಾಲದ ಮೂಲಕ ಉಂಟಾಗುವ ಅಪಾಯಗಳಿಂದ ಹೇಗೆ ಎಚ್ಚರಿಕೆಯಿಂದ ಇರಬೇಕು ಎಂಬುದನ್ನು ವಿವರಿಸಲಾಯಿತು. ತಪ್ಪು ಮಾಡಿದವರು ಆರೋಪಿಗಳೇ ಹೊರತು ಶೋಷಣೆಗೆ ಒಳಗಾದ ಮಕ್ಕಳು ಯಾವುದೇ ಕಾರಣಕ್ಕೂ ತಪ್ಪಿತಸ್ಥರಲ್ಲ ಎಂಬುದನ್ನು ಅವರು ಸ್ಪಷ್ಟಪಡಿಸಿದರು. ಅಸುರಕ್ಷಿತ ಅಥವಾ ಅಹಿತಕರ ಘಟನೆಗಳು ಸಂಭವಿಸಿದಲ್ಲಿ ಅದನ್ನು ಹೇಗೆ ಎದುರಿಸಬೇಕು? ಪಾಲಕರು, ಶಿಕ್ಷಕರು ಕಾನೂನು ನೆರವನ್ನು ಹೇಗೆ ಪಡೆಯಬೇಕು ಎಂಬುದನ್ನು ಆಟಗಳು ಮತ್ತು ಚಟುವಟಿಕೆಗಳ ಮೂಲಕ ಮಕ್ಕಳಿಗೆ ಸುಲಭವಾಗಿ ಅರ್ಥವಾಗುವ ರೀತಿಯಲ್ಲಿ ವಿವರಿಸಲಾಯಿತು. ಈ ಸಂದರ್ಭದಲ್ಲಿ ಶಾಲೆಯ ಮುಖ್ಯಸ್ಥರಾದ ಪ್ರಕಾಶ್, ಶಿಕ್ಷಕಿ ತರ್ನುಮ್, ಕೊಪ್ಪಳ ವಿಶ್ವವಿದ್ಯಾಲಯದ ರಾಜ್ಯಶಾಸ್ತ್ರ ವಿಭಾಗದ ಅತಿಥಿ ಸಹಾಯಕ ಪ್ರಾಧ್ಯಾಪಕರಾದ ಮೌಲಾಸಾಬ ಭಾಗವಹಿಸಿದ್ದರು.
‘ನಿನಗೆ ಇಬ್ಬರು ಹೆಂಡ್ರು…. ನನಗೆ ಒಬ್ಬಳೂ ಇಲ್ಲ’ - ಮದುವೆ ಮಾಡದ ತಂದೆಯನ್ನು ಥಳಿಸಿ ಕೊಂದ ಮಗ
ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆಯಲ್ಲಿ ತಂದೆಯನ್ನು ಮಗನೇ ಹತ್ಯೆಗೈದ ಘಟನೆ ನಡೆದಿದೆ. ಮದುವೆ ಮಾಡದ ಕಾರಣಕ್ಕೆ ಮಗ ತಂದೆಯ ಮೇಲೆ ಹಲ್ಲೆ ನಡೆಸಿದ್ದಾನೆ. ತಂದೆ ಸಣ್ಣ ನಿಂಗಪ್ಪನವರನ್ನು ಮಗ ಎಸ್. ನಿಂಗರಾಜ ರಾಡ್ ನಿಂದ ಹೊಡೆದು ಕೊಂದಿದ್ದಾನೆ. ಈ ಸಂಬಂಧ ಪೊಲೀಸರು ಮಗನನ್ನು ಬಂಧಿಸಿದ್ದಾರೆ. ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ರಸ್ತೆ ಸುರಕ್ಷತಾ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಿ: ಡಿವೈಎಸ್ಪಿ ಸಂತೋಷ್ ಚೌಹಾಣ್
ಹರಪನಹಳ್ಳಿ : ರಸ್ತೆ ಸುರಕ್ಷತಾ ನಿಯಮಗಳನ್ನು ಎಲ್ಲರೂ ಕಡ್ಡಾಯವಾಗಿ ಪಾಲಿಸಿ ಕಾನೂನು ಪಾಲನೆ ಮಾಡಬೇಕೆಂದು ಹರಪನಹಳ್ಳಿ ಉಪ ವಿಭಾಗದ ಡಿವೈಎಸ್ಪಿ ಸಂತೋಷ್ ಚೌಹಾಣ್ ಹೇಳಿದರು. ನಗರದ ಹರಪನಹಳ್ಳಿ ಪೊಲೀಸ್ ಠಾಣೆ ಆವರಣದಲ್ಲಿ ಹರಪನಹಳ್ಳಿ ಪೊಲೀಸ್ ಠಾಣೆ ವತಿಯಿಂದ 37ನೇ ರಸ್ತೆ ಸುರಕ್ಷತಾ ಸಪ್ತಾಹ ಅಂಗವಾಗಿ ಆಯೋಜಿಸಿದ್ದ ರಸ್ತೆ ಸುರಕ್ಷತ ಜಾಗೃತಿ ಅಭಿಯಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಡಿವೈಎಸ್ಪಿ ಸಂತೋಷ್ ಚೌಹಾಣ್, ದ್ವಿಚಕ್ರ ವಾಹನ ಚಾಲನೆ ಮಾಡುವವರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಿ ಸಂಚಾರ ನಿಯಮಗಳನ್ನು ಪಾಲಿಸಬೇಕು. ಚಾಲನಾ ಪರವಾನಗಿ, ಇನ್ಶೂರೆನ್ಸ್ ಸೇರಿ ಅಗತ್ಯ ದಾಖಲೆಗಳನ್ನು ಇಟ್ಟುಕೊಳ್ಳಬೇಕು. ಕಾರು ಚಾಲಕರು ಸೀಟ್ ಬೆಲ್ಟ್ ಧರಿಸುವುದು ಕಡ್ಡಾಯವಾಗಿದೆ. ರಸ್ತೆ ಸುರಕ್ಷತಾ ನಿಯಮಗಳ ಪಾಲನೆಯಿಂದ ಸಾರ್ವಜನಿಕರ ಸಾಕಷ್ಟು ಸಾವು ನೋವುಗಳನ್ನು ತಪ್ಪಿಸಬಹುದಾಗಿದೆ ಎಂದು ಹೇಳಿದರು. ಹರಿಹರ ವೃತ್ತದಿಂದ್ದ ಸರಕಾರಿ ಆಸ್ಪತ್ರೆಯ ಮುಖ್ಯ ರಸ್ತೆ ಸೇರಿದಂತೆ ನಗರದ ವಿವಿಧ ರಸ್ತೆಗಳಲ್ಲಿ ರಸ್ತೆ ಸುರಕ್ಷತಾ ಕಾನೂನಿನ ಬಗ್ಗೆ ವಿವಿಧ ಘೋಷ ವಾಕ್ಯಗಳೊಂದಿಗೆ ಪೊಲೀಸರು ಜಾಥಾ ನಡೆಸುವುದರ ಮೂಲಕ ಸಾರ್ವಜನಿಕರಿಗೆ ಅರಿವು ಮೂಡಿಸಿದರು. ಈ ಸಂದರ್ಭದಲ್ಲಿ ಹರಪನಹಳ್ಳಿ ಸಿಪಿಐ ಮಹಾಂತೇಶ್ ಸಜ್ಜನ್, ವಿವಿಧ ಠಾಣೆ ಪಿಎಸ್ಐಗಳಾದ ಶಂಭುಲಿಂಗ ಹಿರೇಮಠ, ವಿಜಯ ಕೃಷ್ಣ, ಕಿರಣ್ ಕುಮಾರ್, ನಾಗರತ್ನ, ಕ್ರೈಮ್ ವಿಭಾಗದ ಮೀನಾಕ್ಷೀ ಹಾಗೂ ಎಎಸ್ಐಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.
ಕುಂದಾಪುರ: ವಿದ್ಯಾರ್ಥಿ ವೇತನ, ಅನಾರೋಗ್ಯ ಪೀಡಿತರಿಗೆ ಸಹಾಯಧನ ವಿತರಣೆ
ಕುಂದಾಪುರ, ಜ.10: ಅಲ್ತಾರು ಬಿ.ಆರ್.ಸೇವಾಟ್ರಸ್ಟ್ ವತಿಯಿಂದ 3ನೇ ವರ್ಷದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಹಾಗೂ ಅನಾರೋಗ್ಯ ಪೀಡಿತರಿಗೆ ಸಹಾಯಧನ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಸಾಹೇಬರಕಟ್ಟೆ ಸ್ವಾಗತ್ ಹಾಲ್ನಲ್ಲಿ ಇತ್ತೀಚೆಗೆ ನಡೆಯಿತು. ಕಾರ್ಯಕ್ರಮವನ್ನು ವನದುರ್ಗಪರಮೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರ ನಿರಂಜನ್ ಹೆಗ್ಡೆ ಅಲ್ತಾರ್ ಉದ್ಘಾಟಿಸಿದರು. ಬಸ್ರೂರಿನ ನಿವೃತ್ತ ಮುಖ್ಯೋಪಾಧ್ಯಾಯ ದಿನಕರ್ ಶೆಟ್ಟಿ, ಅಂಬೇಡ್ಕರ್ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿದರು. ಅಧ್ಯಕ್ಷತೆಯನ್ನು ಟ್ರಸ್ಟ್ನ ಅಧ್ಯಕ್ಷ ಚಂದ್ರ ಅಲ್ತಾರ್ ವಹಿಸಿದ್ದರು. ದಸಂಸ ಭೀಮಘರ್ಜನೆ ರಾಜ್ಯ ಸಂಚಾಲಕ ಉದಯ್ ಕುಮಾರ್ ತಲ್ಲೂರು, ಮುಖ್ಯ ಅತಿಥಿಗಳಾಗಿ ಪ್ರದೀಪ್ ಬಲ್ಲಾಳ್, ಸ್ವರ್ಣ ಕಾಮತ್ ಉಡುಪಿ, ವಿಜಯ್ ಕುಮಾರ್ ಶೆಟ್ಟಿ ಆವರ್ಸೆ, ರಘುರಾಮ್ ಶೆಟ್ಟಿ ಅಲ್ತಾರು, ಅಮೃತ್ ಪೂಜಾರಿ ಯಡ್ತಾಡಿ, ಶಶಿ ಬಳ್ಕೂರು, ರಾಘು ಶಿರೂರು ಬೇಬಿ ಅಂಡಾರು ಮೊದಲಾದವರು ಉಪಸ್ಥಿತರಿದ್ದರು. ಪೂರ್ವಿಕ ಅಲ್ತಾರು ಸ್ವಾಗತಿಸಿದರು. ಸತೀಶ್ ಸೂರ್ಗೋಳಿ ಪ್ರಾಸ್ತಾವಿಕವಾಗಿ ಮಾತನಾಡಿದರು. ರಕ್ಷಿತಾ ಅಂಡಾರು ನಿರೂಪಿಸಿ, ವಂದಿಸಿದರು.
Syria | ರಾಜಭವನವನ್ನು ಗುರಿಯಾಗಿಸಿಕೊಂಡು ಡ್ರೋನ್ ದಾಳಿ
ಡಮಾಸ್ಕಸ್: ರಾಜ್ಯಪಾಲರು ಸುದ್ದಿಗೋಷ್ಠಿ ನಡೆಸುತ್ತಿದ್ದ ಅಲೆಪ್ಪೊದಲ್ಲಿನ ರಾಜಭವನವನ್ನು ಗುರಿಯಾಗಿಸಿಕೊಂಡು ಡ್ರೋನ್ ದಾಳಿ ನಡೆಸಲಾಗಿದೆ. ಸಿರಿಯಾ ಸೇನೆಯು ಅಲೆಪ್ಪೊದ ಶೇಖ್ ಮಕ್ಸೂದ್ ಜಿಲ್ಲೆಯಲ್ಲಿ ನಡೆಸುತ್ತಿರುವ ಎಲ್ಲ ಸೇನಾ ಚಟುವಟಿಕೆಗಳನ್ನು ಅಮಾನತುಗೊಳಿಸಿ, ಕುರ್ದಿಶ್ ನೇತೃತ್ವದ ಎಸ್ಡಿಎಫ್ ಬಂಡುಕೋರರನ್ನು ತಬ್ಕಾಗೆ ಉಚ್ಚಾಟಿಸಲಿದೆ ಎಂದು ಸರಕಾರಿ ಸುದ್ದಿ ಸಂಸ್ಥೆ ವರದಿ ಮಾಡಿದೆ. ಅಲೆಪ್ಪೊ ನಗರದ ಅಶ್ರಫಿಯೆ ಮತ್ತು ಶೇಖ್ ಮಕ್ಸೂದ್ ನೆರೆಹೊರೆಯಲ್ಲಿ ನಡೆಯುತ್ತಿರುವ ಕಾಳಗದಿಂದಾಗಿ ಕನಿಷ್ಠ ಪಕ್ಷ 1,80,000 ಮಂದಿ ನಗರದಿಂದ ಪರಾರಿಯಾಗಿದ್ದಾರೆ. ಎಸ್ಡಿಎಫ್ ಬಂಡುಕೋರರು ಕನಿಷ್ಠ ಮೂವರು ಯೋಧರನ್ನು ಹತ್ಯೆಗೈದಿದ್ದಾರೆ ಎಂದು ಸಿರಿಯಾ ಸೇನೆ ಹೇಳಿದೆ. ಸಿರಿಯಾ ಸರಕಾರದೊಂದಿಗೆ ಸೇರಿಕೊಂಡಿರುವ ಬಣಗಳು ಫಿರಂಗಿ ದಾಳಿ ನಡೆಸುತ್ತಿದ್ದು, ಈ ದಾಳಿಯಲ್ಲಿ ಪೂರ್ವ ಅಲೆಪ್ಪೊದ ಡೈರ್ ಹಾಫರ್ನಲ್ಲಿ ಒಬ್ಬ 10 ವರ್ಷದ ಬಾಲಕಿ ಮೃತಪಟ್ಟಿದ್ದಾಳೆ ಎಂದು ಎಸ್ಡಿಎಫ್ ಆರೋಪಿಸಿದೆ. ಮಂಗಳವಾರದಿಂದ ಹಿಂಸಾಚಾರ ಸ್ಫೋಟಗೊಂಡಾಗಿನಿಂದ ನಾಗರಿಕರು ಸೇರಿ ಕನಿಷ್ಠ ಪಕ್ಷ 22 ಮಂದಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
ರಸ್ತೆ ಅಪಘಾತಗಳಿಗೆ ಬ್ರೇಕ್ ಹಾಕಲು ಬರುತ್ತಿದೆ V2V ಸಂವಹನ ತಂತ್ರಜ್ಞಾನ
ಗ್ರೀನ್ಲ್ಯಾಂಡ್ ರಕ್ಷಣೆ ಅಮೆರಿಕದಿಂದ ಮಾತ್ರ ಸಾಧ್ಯ: ಟ್ರಂಪ್ ಹೇಳಿಕೆ
ವಾಷಿಂಗ್ಟನ್, ಜ.10: ಗ್ರೀನ್ಲ್ಯಾಂಡ್ ನಲ್ಲಿ ಹೆಚ್ಚುತ್ತಿರುವ ರಶ್ಯ ಮತ್ತು ಚೀನಾದ ಪ್ರಭಾವಕ್ಕೆ ತಡೆಯೊಡ್ಡಲು ಆ ಪ್ರದೇಶವನ್ನು ನಿಯಂತ್ರಣಕ್ಕೆ ಪಡೆಯಲು ಅಮೆರಿಕ ಉದ್ದೇಶಿಸಿದೆ ಎಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರತಿಪಾದಿಸಿದ್ದಾರೆ. ಪ್ರದೇಶಗಳನ್ನು ರಕ್ಷಿಸಲು ಅದರ ಮಾಲಿಕತ್ವ ಹೊಂದಿರಬೇಕು. ಭೋಗ್ಯಕ್ಕೆ ಪಡೆದ ಪ್ರದೇಶಗಳನ್ನು ನೀವು ರಕ್ಷಿಸಬೇಕಿಲ್ಲ. ಆದ್ದರಿಂದ ಗ್ರೀನ್ಲ್ಯಾಂಡ್ ಅನ್ನು ರಕ್ಷಿಸಲು ಅದರ ಮಾಲಿಕತ್ವವನ್ನು ಪಡೆಯಲು ಅಮೆರಿಕಾ ಬಯಸುತ್ತದೆ. ಅಮೆರಿಕಾದ ರಾಷ್ಟ್ರೀಯ ಭದ್ರತೆಗೆ ಗ್ರೀನ್ಲ್ಯಾಂಡ್ ಅತ್ಯಗತ್ಯ. ಗ್ರೀನ್ಲ್ಯಾಂಡ್ನಾದ್ಯಂತ ಈಗ ರಶ್ಯ ಮತ್ತು ಚೀನಾದ ಹಡಗುಗಳು ತುಂಬಿವೆ. ಅದನ್ನು ಚೀನಾ ಮತ್ತು ರಶ್ಯ ನಿಯಂತ್ರಣಕ್ಕೆ ಪಡೆಯುವುದನ್ನು ನಾವು ತಡೆಯಬೇಕಿದೆ ಎಂದು ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಟ್ರಂಪ್ ಪ್ರತಿಪಾದಿಸಿದ್ದಾರೆ. ಗ್ರೀನ್ಲ್ಯಾಂಡ್ ಮಾರಾಟಕ್ಕಿಲ್ಲ ಎಂದು ಡೆನ್ಮಾರ್ಕ್ ಮತ್ತು ಗ್ರೀನ್ಲ್ಯಾಂಡ್ ಎರಡೂ ಹೇಳಿದ್ದು, ಯಾವುದೇ ಸೈನಿಕ ಕ್ರಮವು ಅಟ್ಲಾಂಟಿಕ್ ರಕ್ಷಣಾ ಮೈತ್ರಿಯನ್ನು ಕೊನೆಗೊಳಿಸುತ್ತದೆ ಎಂದು ಡೆನ್ಮಾರ್ಕ್ ಎಚ್ಚರಿಸಿದೆ.
ಅಂಕಿತಾ ಭಂಡಾರಿ ಕೊಲೆ ಪ್ರಕರಣ | ಸಿಬಿಐ ತನಿಖೆಗೆ ಉತ್ತರಾಖಂಡ ಸಿಎಂ ಶಿಫಾರಸು
ಡೆಹ್ರಾಡೂನ್, ಜ.10: ರಾಜ್ಯ ಸರಕಾರವು 2022ರ ಅಂಕಿತಾ ಭಂಡಾರಿ ಕೊಲೆ ಪ್ರಕರಣದಲ್ಲಿ ಸಿಬಿಐ ತನಿಖೆಗೆ ಶಿಫಾರಸು ಮಾಡಿದೆ ಎಂದು ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರಸಿಂಗ್ ಧಾಮಿ ಪ್ರಕಟಿಸಿದ್ದಾರೆ. ಉತ್ತರಾಖಂಡದ ಋಷಿಕೇಶದಲ್ಲಿ ಮಾಜಿ ಬಿಜೆಪಿ ನಾಯಕ ವಿನೋದ ಆರ್ಯ ಅವರ ಪುತ್ರ ಪುಲ್ಕಿತ್ ಆರ್ಯ ಒಡೆತನದ ರೆಸಾರ್ಟ್ನಲ್ಲಿ ರಿಸೆಪ್ಶನಿಸ್ಟ್ ಆಗಿದ್ದ ಅಂಕಿತಾ ಸೆ.18, 2022ರಂದು ನಾಪತ್ತೆಯಾಗಿದ್ದರು. ಮರುದಿನ ಪುಲ್ಕಿತ್, ರೆಸಾರ್ಟ್ ಮ್ಯಾನೇಜರ್ ಸೌರಭ ಭಾಸ್ಕರ್ ಮತ್ತು ಸಹಾಯಕ ಮ್ಯಾನೇಜರ್ ಅಂಕಿತ ಗುಪ್ತಾ ನಾಪತ್ತೆ ದೂರು ದಾಖಲಿಸಿದ್ದರು. ಆದರೆ ನಂತರ ಅವರು ಜಗಳದ ಬಳಿಕ ಅಂಕಿತಾರನ್ನು ಕಾಲುವೆಗೆ ತಳ್ಳಿ ಕೊಂದಿದ್ದಾಗಿ ಒಪ್ಪಿಕೊಂಡಿದ್ದರು. ನಾಪತ್ತೆಯಾದ ಆರು ದಿನಗಳ ಬಳಿಕ ಅಂಕಿತಾ ಅವರ ಮೃತದೇಹ ಋಷಿಕೇಶದ ಚಿಲ್ಲಾ ಕಾಲುವೆಯಲ್ಲಿ ಪತ್ತೆಯಾಗಿತ್ತು. ವಿಷಯ ಬೆಳಕಿಗೆ ಬಂದ ಬಳಿಕ ಬಿಜೆಪಿ ವಿನೋದ ಆರ್ಯ ಮತ್ತು ಅವರ ಇನ್ನೋರ್ವ ಪುತ್ರ ಅಂಕಿತ ಆರ್ಯರನ್ನು ಪಕ್ಷದಿಂದ ಉಚ್ಚಾಟಿಸಿತ್ತು. ಆರೋಪಿಗಳು ಅಂಕಿತಾರನ್ನು ವೇಶ್ಯಾವೃತ್ತಿಗೆ ತಳ್ಳಲು ಪ್ರಯತ್ನಿಸಿದ್ದರೆಂದು ಸಾಬೀತುಗೊಳಿಸುವ ಸಾಕ್ಷ್ಯಾಧಾರಗಳು ನಂತರ ಲಭ್ಯವಾಗಿದ್ದವು. ‘ವಿಐಪಿ’ಯೋರ್ವರಿಗೆ ‘ವಿಶೇಷ ಸೇವೆ’ ಒದಗಿಸಲು ನಿರಾಕರಿಸಿದ್ದಕ್ಕೆ ಅಂಕಿತಾರನ್ನು ಕೊಲ್ಲಲಾಗಿದೆ ಎಂದು ಆರೋಪಿಸಲಾಗಿತ್ತು. ಮೇ 2025ರಲ್ಲಿ ಪುಲ್ಕಿತ್, ಭಾಸ್ಕರ್ ಮತ್ತು ಗುಪ್ತಾಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿತ್ತು. ಧಾಮಿ ಅಂಕಿತಾಳ ಹೆತ್ತವರೊಂದಿಗೆ ಮಾತುಕತೆ ನಡೆಸಿದ ಎರಡು ದಿನಗಳ ಬಳಿಕ ಸಿಬಿಐ ತನಿಖೆಗೆ ಒಪ್ಪಿಸುವ ಕುರಿತು ಪ್ರಕಟಣೆ ಹೊರಬಿದ್ದಿದೆ. ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರ ಮೇಲ್ವಿಚಾರಣೆಯಲ್ಲಿ ಸಿಬಿಐ ತನಿಖೆ ನಡೆಸಬೇಕೆಂದು ಅಂಕಿತಾರ ಹೆತ್ತವರು ಆಗ್ರಹಿಸಿದ್ದರು. ಈಗಲೂ ಗುರುತು ಪತ್ತೆಯಾಗದೆ ಉಳಿದಿರುವ ‘ವಿಐಪಿ’ಯ ಕಾರಣದಿಂದಲೇ ತಮ್ಮ ಪುತ್ರಿಯನ್ನು ಕೊಲೆ ಮಾಡಲಾಗಿದೆ ಎಂದು ಅವರು ಆರೋಪಿಸಿದ್ದಾರೆ. ಈ ವಿಷಯದಲ್ಲಿ ಕಾಂಗ್ರೆಸ್ ಹಾಗೂ ಹಲವಾರು ನಾಗರಿಕ ಗುಂಪುಗಳು ಇತ್ತೀಚಿನ ದಿನಗಳಲ್ಲಿ ಪ್ರತಿಭಟನೆಗಳನ್ನು ನಡೆಸಿದ್ದವು.
ರಸ್ತೆ ಅಪಘಾತ: ಗಾಯಗೊಂಡಿದ್ದ ಬೈಕ್ ಸವಾರ ಮೃತ್ಯು
ಉಳ್ಳಾಲ: ಕಾರಿಗೆ ಸ್ಕೂಟರ್ ಢಿಕ್ಕಿ ಹೊಡೆದ ಪರಿಣಾಮ ಗಂಭೀರ ಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಸವಾರ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ಶುಕ್ರವಾರ ತಡರಾತ್ರಿ ನಡೆದಿದೆ. ಮೃತ ವ್ಯಕ್ತಿಯನ್ನು ಮುಹಮ್ಮದ್ ಮಹಾಝ್ ಬಟ್ಟಪ್ಪಾಡಿ (24) ಎಂದು ಗುರುತಿಸಲಾಗಿದೆ. ಘಟನೆ ವಿವರ: ಜ.5 ರಂದು ರಾತ್ರಿ ಮಂಗಳೂರಿನಲ್ಲಿ ಕ್ಯಾಟರಿಂಗ್ ಕೆಲಸ ಮುಗಿಸಿ ಸ್ಕೂಟರ್ ನಲ್ಲಿ ಊರಿಗೆ ಮರಳುತ್ತಿದ್ದು, ಈ ವೇಳೆ ಬೀರಿ ಬಳಿ ಸ್ಕೂಟರ್ ತಲಪಾಡಿ ಕಡೆ ಹೋಗುತ್ತಿದ್ದ ಕಾರಿಗೆ ಢಿಕ್ಕಿ ಆಗಿದೆ. ಇದರಿಂದ ಅವರು ರಸ್ತೆಗೆಸೆಯಲ್ಪಟ್ಟು ಗಂಭೀರ ಗಾಯಗೊಂಡಿದ್ದು, ಅವರನ್ನು ದೇರಳಕಟ್ಟೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಹೆಚ್ಚುವರಿ ಚಿಕಿತ್ಸೆ ಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರು ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರ ತಡರಾತ್ರಿ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಈ ಬಗ್ಗೆ ಮಂಗಳೂರು ದಕ್ಷಿಣ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಾವು ಅಮೆರಿಕನ್ನರಾಗಲು ಬಯಸುವುದಿಲ್ಲ: ಗ್ರೀನ್ಲ್ಯಾಂಡ್ನ 5 ರಾಜಕೀಯ ಪಕ್ಷಗಳ ಹೇಳಿಕೆ
ನುಕ್, ಜ.10: ಗ್ರೀನ್ಲ್ಯಾಂಡನ್ನು ವಶಪಡಿಸಿಕೊಳ್ಳುವುದಾಗಿ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೀಡಿದ ಬೆದರಿಕೆಗೆ ಪ್ರತ್ಯುತ್ತರವಾಗಿ ಗ್ರೀನ್ಲ್ಯಾಂಡ್ನ ಐದು ಪ್ರಮುಖ ರಾಜಕೀಯ ಪಕ್ಷಗಳ ನಾಯಕರು, ತಾವು ಅಮೆರಿಕನ್ನರಾಗಲು ಬಯಸುವುದಿಲ್ಲ ಮತ್ತು ಗ್ರೀನ್ಲ್ಯಾಂಡ್ನ ಭವಿಷ್ಯವನ್ನು ಅದರ ಪ್ರಜೆಗಳು ಮಾತ್ರ ನಿರ್ಧರಿಸಬೇಕು ಎಂದು ಹೇಳಿದ್ದಾರೆ. ನಾವು ಅಮೆರಿಕಾ ಅಥವಾ ಡೆನ್ಮಾರ್ಕ್ನ ನಿಯಂತ್ರಣದಲ್ಲಿರಲು ಬಯಸುವುದಿಲ್ಲ. ನಾವು ಗ್ರೀನ್ಲ್ಯಾಂಡರ್ಗಳಾಗಿ ಇರಲು ಮಾತ್ರ ಬಯಸುತ್ತೇವೆ. ನಮ್ಮ ಭೂಪ್ರದೇಶದ ಮೇಲೆ ನಮ್ಮ ಜನರಿಗೆ ಇರುವ ಅಧಿಕಾರವನ್ನು ತಿರಸ್ಕರಿಸುವ ಅಮೆರಿಕಾದ ಧೋರಣೆಯನ್ನು ಒಪ್ಪುವುದಿಲ್ಲ ಎಂದು ಗ್ರೀನ್ಲ್ಯಾಂಡ್ ಸಂಸತ್ತಿನಲ್ಲಿ ಮಂಡಿಸಲಾದ ಹೇಳಿಕೆಯಲ್ಲಿ ಐದು ಪಕ್ಷಗಳ ನಾಯಕರು ಒತ್ತಿಹೇಳಿದ್ದಾರೆ.
ಶೀಘ್ರವೇ ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆ : ಮಾಜಿ ಸಚಿವ ಕುಮಾರ ಬಂಗಾರಪ್ಪ
ರಾಯಚೂರು: ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆಗೆ ಪಕ್ಷದ ವರಿಷ್ಟರ ಮುಂದೆ ಅಭಿಪ್ರಾಯ ತಿಳಿಸಲಾಗಿದೆ. ಶೀಘ್ರವೇ ವರಿಷ್ಠರು ತೀರ್ಮಾನ ಕೈಗೊಳ್ಳುವ ಭರವಸೆ ನೀಡಿದ್ದಾರೆ ಹಾಗೂ ಬಸನಗೌಡ ಪಾಟೀಲ್ ಯತ್ನಾಳ್ ಬಿಜೆಪಿಗೆ ಮರಳಲಿದ್ದಾರೆ ಎಂದು ಮಾಜಿ ಸಚಿವ ಕುಮಾರ ಬಂಗಾರಪ್ಪ ಹೇಳಿದರು. ಮಾಧ್ಯಮಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ ಕುಮಾರ ಬಂಗಾರಪ್ಪ, ರಾಜ್ಯಾಧ್ಯಕ್ಷರ ಬದಲಾವಣೆ ವಿಷಯದಲ್ಲಿ ನಾವು ಸೋತಿಲ್ಲ. ಎಲ್ಲರೂ ಒಟ್ಟಾಗಿ ಬದಲಾವಣೆ ಅವಶ್ಯಕತೆಯನ್ನು ಪ್ರತಿಪಾದಿಸಲಾಗಿದೆ. ಸ್ಪಂದನೆ ದೊರೆಯದೇ ಹೋದಲ್ಲಿ ಅವರ ದಾರಿ ಅವರಿಗೆ ನಮ್ಮದಾರಿ ನಮಗೆ. ಆದರೆ ಪಕ್ಷ ಸಕಾಲದಲ್ಲಿ ಸೂಕ್ತ ನಿರ್ಧಾರ ತೆಗೆದಕೊಳ್ಳುವ ಭರವಸೆಯಿದೆ. ಮಾಜಿ ಸಚಿವ ಬಸನಗೌಡ ಯತ್ನಾಳ ಶೀಘ್ರದಲ್ಲಿ ಮರಳಿ ಪಕ್ಷಕ್ಕೆ ಬರುವ ವಿಶ್ವಾಸವಿದೆ. ಅವರೊಂದಿಗೆ ನಾವಿದ್ದೇವೆ. ನಾವೆಂದು ಬದಲಾಗಿಲ್ಲ ಎಂದರು. ವಿಬಿ ಜಿ ರಾಮ್ ಜಿ ಯೋಜನೆಯನ್ನು ಸಂಸತ್ತಿನಿಂದ ಕಾಯ್ದೆಯಾಗಿ ಪಾಸಾಗಿದ್ದು, ದೇಶದ ಸಂಸತ್ತಿಗೆ ಗೌರವಿಸಬೇಕು. ಜೀವನೋಪಾಯ ಯೋಜನೆ ಸೇರಿ ವಿಕಸಿತ ಭಾರತ ಒಗ್ಗೂಡಿಸಿ ಕಾಯ್ದೆ ರೂಪಿಸಲಾಗಿದೆ. ಮಹಾತ್ಮ ಗಾಂಧಿ ಎಂದಿಗೂ ಮಹಾತ್ಮರೇ. ಹೆಸರು ಬದಲಾವಣೆ ಮಾಡಿದರೆ ಗೌರವ ಕಡಿಮೆ ಯಾಗುವುದಿಲ್ಲ ಎಂದು ಅಭಿಪ್ರಾಯ ಪಟ್ಟರು. ಭದ್ರ ಯೋಜನೆಗೆ ಅನುದಾನ ಕೇಂದ್ರ ಘೋಷಣೆ ಮಾಡಿತ್ತು. ಆದರೆ ರಾಜ್ಯ ಸರಕಾರ ಸೂಕ್ತ ದಾಖಲೆಗಳನ್ನು ನೀಡದೇ ಇರುವುದು ಅನುದಾನ ಬಿಡುಗಡೆಗೆ ಅಡ್ಡಿಯಾಗಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಮಾಜಿ ಸಂಸದ ಬಿ.ವಿ.ನಾಯಕ, ಮಾಜಿ ಶಾಸಕ ಬಸನಗೌಡ ಬ್ಯಾಗವಾಟ, ಕೆ.ಎಂ.ಪಾಟೀಲ್, ಡಾ.ನಾಗರಾಜ ಬಾಲ್ಕಿ, ಕಿರಣ ಬೆಲ್ಲಂ, ನಾಗನಗೌಡ ಹರವಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಹಿಜಾಬ್ ಧಾರಿ ಮಹಿಳೆ ಭಾರತದ ಪ್ರಧಾನಿಯಾಗುವ ದಿನ ಬರಲಿದೆ: ಉವೈಸಿ
ಹೊಸದಿಲ್ಲಿ, ಜ.10: ಭಾರತದ ಸಂವಿಧಾನವು ಎಲ್ಲರಿಗೂ ಸಮಾನ ಸ್ಥಾನಮಾನ ನೀಡಿದ್ದು, ಭವಿಷ್ಯದಲ್ಲಿ ಹಿಜಾಬ್ ಧರಿಸುವ ಮಹಿಳೆಯೊಬ್ಬಳು ಭಾರತದ ಪ್ರಧಾನಿಯಾಗುವ ದಿನ ಬರಲಿದೆ ಎಂದು ಎಐಎಂಐಎಂ ಪಕ್ಷದ ವರಿಷ್ಠ ಅಸಾದುದ್ದೀನ್ ಉವೈಸಿ ಹೇಳಿದ್ದಾರೆ. ಜನವರಿ 15ರಂದು ಪೌರಾಡಳಿತ ಚುನಾವಣೆಯ ಹಿನ್ನೆಲೆಯಲ್ಲಿ ಮಹಾರಾಷ್ಟ್ರದ ಸೋಲಾಪುರದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು, ಪಾಕಿಸ್ತಾನವು ಉನ್ನತ ಸಾಂವಿಧಾನಿಕ ಹುದ್ದೆಗಳನ್ನು ಒಂದೇ ಸಮುದಾಯಕ್ಕೆ ಸೀಮಿತಗೊಳಿಸಿದೆ. ಆದರೆ ಭಾರತದಲ್ಲಿ ಹಾಗಿಲ್ಲ. ಬಾಬಾಸಾಹೇಬ್ ಅಂಬೇಡ್ಕರ್ ರಚಿಸಿದ ಸಂವಿಧಾನವು ಭಾರತದ ಯಾವುದೇ ಪ್ರಜೆಯು ಪ್ರಧಾನಿ, ಮುಖ್ಯಮಂತ್ರಿ ಅಥವಾ ಮೇಯರ್ ಆಗಬಹುದೆಂದು ಹೇಳುತ್ತದೆ ಎಂದು ಅವರು ಪ್ರತಿಪಾದಿಸಿದರು. ಒಂದು ದಿನ ಹಿಜಾಬ್ ಧರಿಸಿದ ಮಗಳೊಬ್ಬಳು ಈ ದೇಶದ ಪ್ರಧಾನಿಯಾಗಬೇಕೆಂಬುದು ನನ್ನ ಕನಸಾಗಿದೆ ಎಂದು ಅವರು ಹೇಳಿದರು. ಮುಸ್ಲಿಮರ ವಿರುದ್ಧ ನಡೆಯುತ್ತಿರುವ ದ್ವೇಷ ರಾಜಕಾರಣದ ಕುರಿತು ವಾಗ್ದಾಳಿ ನಡೆಸಿದ ಅವರು, ಅದು ಹೆಚ್ಚು ಕಾಲ ಇರಲಾರದು. ದ್ವೇಷ ಹರಡುವಿಕೆಯು ಅಂತ್ಯಗೊಳ್ಳಲಿದೆ ಎಂದು ಹೇಳಿದರು. ಉವೈಸಿ ಅವರ ಹೇಳಿಕೆಗೆ ಬಿಜೆಪಿಯು ಕಟುವಾದ ಪ್ರತಿಕ್ರಿಯೆ ನೀಡಿದ್ದು, ಹೈದರಾಬಾದ್ ನ ಈ ಸಂಸದರು ಬೇಜವಾಬ್ದಾರಿಯುತ ಹೇಳಿಕೆಗಳನ್ನು ನೀಡುತ್ತಿದ್ದಾರೆ ಹಾಗೂ ಅರ್ಧಸತ್ಯವನ್ನಷ್ಟೇ ಮುಂದಿಡುತ್ತಿದ್ದಾರೆ ಎಂದು ಟೀಕಿಸಿದೆ. ಹಿಜಾಬ್ ಧರಿಸಿದ ಮಹಿಳೆ ಪ್ರಧಾನಿಯಾಗಬೇಕೆಂದು ಉವೈಸಿ ಹೇಳುತ್ತಾರೆ. ಸಂವಿಧಾನವು ಯಾರನ್ನೂ ತಡೆಯುವುದಿಲ್ಲ. ಆದರೆ ಮೊದಲಿಗೆ ಉವೈಸಿಯವರು ಹಿಂದುಳಿದ ಪಾಸ್ಮಾಂಡ ಮುಸ್ಲಿಂ ಸಮುದಾಯಕ್ಕೆ ಸೇರಿದ ಹಿಜಾಬ್ ಧಾರಿ ಮಹಿಳೆಯನ್ನು ಎಐಎಂಐಎಂನ ಅಧ್ಯಕ್ಷರಾಗಿ ನೇಮಿಸಲಿ ಎಂದು ಬಿಜೆಪಿಯ ರಾಷ್ಟ್ರೀಯ ವಕ್ತಾರ ಶಹಜಾದ್ ಪೂನಾವಾಲಾ ಸವಾಲು ಹಾಕಿದ್ದಾರೆ.
ಅಫ್ಘಾನ್ ರಾಯಭಾರಿ ಕಚೇರಿಯ ಉಸ್ತುವಾರಿ ರಾಜತಾಂತ್ರಿಕರಾಗಿ ನೂರ್ ಅಹ್ಮದ್ ನೂರ್ ನೇಮಕ
ಹೊಸದಿಲ್ಲಿ, ಜ.10: ಇಲ್ಲಿರುವ ಅಫ್ಘಾನ್ ರಾಯಭಾರಿ ಕಚೇರಿಯ ಉಸ್ತುವಾರಿ ರಾಜತಾಂತ್ರಿಕರಾಗಿ ನೂರ್ ಅಹ್ಮದ್ ನೂರ್ ಅವರನ್ನು ನೇಮಿಸಲಾಗಿದೆ ಎಂದು ಅಧಿಕೃತ ಮೂಲಗಳು ಶನಿವಾರ ತಿಳಿಸಿವೆ. ತಾಲಿಬಾನ್ ನ ಹಿರಿಯ ಸದಸ್ಯರಾದ ಮುಫ್ತಿ ನೂರ್ ಅಹ್ಮದ್ ನೂರ್ ಶನಿವಾರ ಹೊಸದಿಲ್ಲಿಗೆ ಆಗಮಿಸಿದ್ದು, ಅಫ್ಘಾನಿಸ್ತಾನದ ರಾಯಭಾರಿ ಕಚೇರಿಯ ಉಸ್ತುವಾರಿ ರಾಜತಾಂತ್ರಿಕರಾಗಿ ಪದಗ್ರಹಣ ಮಾಡಿದ್ದಾರೆಂದು ಅವು ತಿಳಿಸಿವೆ. ನೂರ್ ಅಹ್ಮದ್ ಅವರು ಈ ಹಿಂದೆ ಅಫ್ಘಾನಿಸ್ತಾನದ ವಿದೇಶಾಂಗ ವ್ಯವಹಾರಗಳ ಆದ್ಯ ರಾಜಕೀಯ ವಿಭಾಗದ ಮಹಾನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದರು. ಕಳೆದ ಕೆಲವು ತಿಂಗಳುಗಳಲ್ಲಿ, ಅದರಲ್ಲೂ ವಿಶೇಷವಾಗಿ ಅಫ್ಘಾನ್ ವಿದೇಶಾಂಗ ಸಚಿವ ಆಮೀರ್ ಖಾನ್ ಮುತ್ತಾಕಿ ಅವರು ಅಕ್ಟೋಬರ್ನಲ್ಲಿ ಭಾರತಕ್ಕೆ ಏಳು ದಿನಗಳ ಭೇಟಿ ನೀಡಿದ ನಂತರ ಉಭಯ ದೇಶಗಳ ದ್ವಿಪಕ್ಷೀಯ ಬಾಂಧವ್ಯಗಳಲ್ಲಿ ಸ್ಥಿರವಾದ ಪ್ರಗತಿ ಉಂಟಾಗಿದೆ. ಮುತ್ತಾಕಿ ಅವರ ಭಾರತ ಭೇಟಿ ಸಂದರ್ಭದಲ್ಲಿ ಅವರ ಜೊತೆಗೆ ಬಂದಿದ್ದ ಅಫ್ಘಾನ್ ನಿಯೋಗದಲ್ಲಿ ಮುಫ್ತಿ ನೂರ್ ಅಹ್ಮದ್ ನೂರ್ ಕೂಡ ಇದ್ದರು. ಅಫ್ಘಾನಿಸ್ತಾನದ ತಾಲಿಬಾನ್ ಆಡಳಿತಕ್ಕೆ ಭಾರತವು ಈತನಕ ಅಧಿಕೃತ ಮಾನ್ಯತೆಯನ್ನು ನೀಡಿಲ್ಲವಾದರೂ, ಆ ದೇಶಕ್ಕೆ ನೆರವು ಹಾಗೂ ವೈದ್ಯಕೀಯ ಸಾಮಗ್ರಿಗಳನ್ನು ಪೂರೈಕೆ ಮಾಡುವ ಪ್ರಮುಖ ದಾನಿ ದೇಶಗಳಲ್ಲೊಂದಾಗಿದೆ. ಹೈದರಾಬಾದ್ ಹಾಗೂ ಮುಂಬೈನಲ್ಲಿರುವ ಅಫ್ಘಾನ್ ದೂತಾವಾಸ ಕಚೇರಿಗಳನ್ನು ಕೂಡ ತಾಲಿಬಾನ್ ನೇಮಕಗೊಳಿಸಿದ ರಾಜತಾಂತ್ರಿಕರೇ ನಿರ್ವಹಿಸುತ್ತಿದ್ದಾರೆ.
Uttar Pradesh | ಬಾಲಕನನ್ನು ನರಬಲಿಕೊಟ್ಟ ಸೋದರ ಸಂಬಂಧಿಗೆ ಮರಣದಂಡನೆ
ಲಕ್ನೋ, ಜ.10: 10 ವರ್ಷದ ಬಾಲಕನನ್ನು ನರಬಲಿಕೊಟ್ಟ ಪ್ರಕರಣದ ದೋಷಿಗೆ ಬಹರಾಯಿಚ್ನ ಸ್ಥಳೀಯ ನ್ಯಾಯಾಲಯವು ಮರಣದಂಡನೆ ವಿಧಿಸಿ ತೀರ್ಪು ನೀಡಿದೆ. ಅಲ್ಲದೆ ಆತನಿಗೆ 1 ಲಕ್ಷ ರೂ. ದಂಡವನ್ನೂ ವಿಧಿಸಲಾಗಿದೆ. ತಾಂತ್ರಿಕ ಸೇರಿದಂತೆ ಪ್ರಕರಣದ ಇನ್ನಿಬ್ಬರು ಆರೋಪಿಗಳನ್ನು ಪುರಾವೆಗಳ ಕೊರತೆಯ ಹಿನ್ನೆಲೆಯಲ್ಲಿ ದೋಷಮುಕ್ತಗೊಳಿಸಲಾಗಿದೆ. ಹೆಚ್ಚುವರಿ ಜಿಲ್ಲಾ ಹಾಗೂ ಸೆಶನ್ಸ್ ನ್ಯಾಯಾಧೀಶ ಸುನೀಲ್ ಪ್ರಸಾದ್ ಅವರು ಆರೋಪಿ ಅನೂಪ್ ಕುಮಾರ್ ವರ್ಮಾಗೆ ಗಲ್ಲು ಶಿಕ್ಷೆಯನ್ನು ಘೋಷಿಸಿದರು. ನರಬಲಿ ನೀಡಿದಲ್ಲಿ ರೋಗಪೀಡಿತ ಪುತ್ರನು ಗುಣಮುಖನಾಗುವನೆಂದು ನಂಬಿದ ಅನೂಪ್ ಕುಮಾರ್, 10 ವರ್ಷದ ತನ್ನ ಸೋದರ ಸಂಬಂಧಿಯನ್ನು ಮೂಢನಂಬಿಕೆಯ ಆಚರಣೆಯೊಂದರಲ್ಲಿ ನರಬಲಿಕೊಟ್ಟಿದ್ದನು. ಬಂಧನದ ಬಳಿಕ ಆತ ತಪ್ಪೊಪ್ಪಿಕೊಂಡಿದ್ದನು. ಬಹರಾಯಿಚ್ ಜಿಲ್ಲೆಯ ನಾನಪಾರಾ ಕೋಟ್ವಾಲಿ ಪ್ರದೇಶದಲ್ಲಿ ಈ ಕೃತ್ಯ ನಡೆದಿತ್ತು. ಅಪರಾಧದ ಬರ್ಬರತೆ ಹಾಗೂ ಗಂಭೀರತೆಯನ್ನು ಪರಿಗಣನೆಗೆ ತೆಗೆದುಕೊಂಡು ಆರೋಪಿಗೆ ಅತ್ಯಂತ ಕಠಿಣ ಶಿಕ್ಷೆ ನೀಡಬೇಕೆಂದು ಪ್ರಾಸಿಕ್ಯೂಶನ್ ಪರ ವಕೀಲ ಸುನೀಲ್ ಕುಮಾರ್ ಜೈಸ್ವಾಲ್ ನ್ಯಾಯಾಲಯವನ್ನು ಆಗ್ರಹಿಸಿದ್ದರು. 2023ರ ಮಾರ್ಚ್ 23ರಂದು ಉತ್ತರಪ್ರದೇಶದ ಬಹರಾಯಿಚ್ ಜಿಲ್ಲೆಯ ಆಗೈಯಾ ಗ್ರಾಮದಲ್ಲಿ ರಾಮ್ ಕಿಶನ್ ಅವರ 10 ವರ್ಷದ ಪುತ್ರ ವಿವೇಕ್ ವರ್ಮಾನ ವಿರೂಪಗೊಂಡ ಮೃತದೇಹ ಪತ್ತೆಯಾಗಿತ್ತು. ಘಟನೆ ನಡೆದ ಸಮಯದಲ್ಲಿ ವಿವೇಕ್ನ ತಂದೆ ಕೌಟುಂಬಿಕ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ತೆರಳಿದ್ದರು. ತನ್ನ ಪುತ್ರನ ಹತ್ಯೆಯ ಮಾಹಿತಿ ದೊರೆತ ಬಳಿಕ ಅವರು ಗ್ರಾಮಕ್ಕೆ ವಾಪಸಾಗಿದ್ದರು. ರಾಮ್ ಕಿಶನ್ ಅವರ ದೂರಿನ ಆಧಾರದಲ್ಲಿ ಪೊಲೀಸರು ಭಾರತೀಯ ದಂಡಸಂಹಿತೆಯ ವಿವಿಧ ಸೆಕ್ಷನ್ಗಳಡಿ ಕೊಲೆ ಹಾಗೂ ಕ್ರಿಮಿನಲ್ ಸಂಚಿನ ಪ್ರಕರಣ ದಾಖಲಿಸಿದ್ದರು. ಪ್ರಕರಣದ ತನಿಖೆ ನಡೆಸಿದ ಪೊಲೀಸರು ವಿವೇಕ್ನ ಸೋದರ ಸಂಬಂಧಿ ಅನೂಪ್ ಕುಮಾರ್ ಹಾಗೂ ತಾಂತ್ರಿಕ ಜಾಂಗ್ಲಿಯನ್ನು ಬಂಧಿಸಿದ್ದರು. ತನ್ನ ಪುತ್ರ ಸತ್ಯಂ ಆಗಾಗ ಅಸ್ವಸ್ಥನಾಗುತ್ತಿದ್ದನು. ತನ್ನದೇ ಕುಟುಂಬದ ಮಗುವೊಂದನ್ನು ನರಬಲಿಕೊಟ್ಟಲ್ಲಿ ಪುತ್ರ ಗುಣಮುಖನಾಗುವನೆಂದು ತಾಂತ್ರಿಕನೊಬ್ಬ ಸಲಹೆ ನೀಡಿದ್ದನು. ಅದನ್ನು ನಂಬಿ ಈ ಕೃತ್ಯ ಎಸಗಿದ್ದಾಗಿ ಅನೂಪ್ ವಿಚಾರಣೆಯ ವೇಳೆ ತಿಳಿಸಿದ್ದನು.
ಶೀರೂರು ಪರ್ಯಾಯ: ಹೊರೆಕಾಣಿಕೆ ಸಮರ್ಪಣೆಗೆ ಚಾಲನೆ
ಉಡುಪಿ: ಶೀರೂರು ಮಠದ ಶ್ರೀವೇದವರ್ಧನ ತೀರ್ಥ ಸ್ವಾಮೀಜಿ ಪರ್ಯಾಯ ಮಹೋತ್ಸವದ ಪ್ರಯುಕ್ತ ಹೊರೆಕಾಣಿಕೆ ಸಮರ್ಪಣೆ ಕಾರ್ಯಕ್ರಮಕ್ಕೆ ಶನಿವಾರ ಚಾಲನೆ ನೀಡಲಾಯಿತು. ಪ್ರಥಮ ದಿನದ ಹೊರೆಕಾಣಿಯನ್ನು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ಮತ್ತು ಒಕ್ಕೂಟ ಉಡುಪಿ ಜಿಲ್ಲೆ ವತಿಯಿಂದ ಸಮರ್ಪಿಸಲಾಯಿತು. ಉಡುಪಿಯ ಜೋಡುಕಟ್ಟೆ ಬಳಿ ಇರುವ ಪೂರ್ಣಪ್ರಜ್ಞ ಮಂಟಪದ ಬಳಿ ಹೊರೆಕಾಣಿಕೆ ಸಮರ್ಪಣೆಯ ಮೆರವಣಿಗೆಗೆ ಪರ್ಯಾಯ ಸ್ವಾಗತ ಸಮಿತಿ ಅಧ್ಯಕ್ಷ, ಶಾಸಕ ಯಶ್ಪಾಲ್ ಸುವರ್ಣ ಚಾಲನೆ ನೀಡಿದರು. ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರಾದೇಶಿಕ ನಿರ್ದೇಶಕ ಆನಂದ ಸುವರ್ಣ ಮಾತನಾಡಿ, ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಮಾರ್ಗದರ್ಶನದಲ್ಲಿ ಶೀರೂರು ಪರ್ಯಾಯಕ್ಕಾಗಿ ಬೃಹತ್ ಪ್ರಮಾಣದಲ್ಲಿ ಇಂದು ಹೊರಕಾಣಿಕೆ ಸಮರ್ಪಿಸಿದ್ದೇವೆ. 150ಕ್ಕೂ ಅಧಿಕ ವಾಹನಗಳಲ್ಲಿ ಸುವಸ್ತುಗಳನ್ನು ಶ್ರದ್ಧಾ ಭಕ್ತಿಯ ಮೆರವಣಿಗೆಯ ಮೂಲಕ ಉಗ್ರಾಣಕ್ಕೆ ಸಾಗಿಸಲಾಗುತ್ತಿದೆ. ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟ, ಜನಜಾಗೃತಿ ವೇದಿಕೆ, ಶೌರ್ಯ ವಿಪತ್ತು ವಿಭಾಗ, ನವ ಜೀವನ ಸಮಿತಿ, ಭಜನಾ ಪರಿಷತ್ ಸದಸ್ಯರ ಸಹಕಾರದಲ್ಲಿ ಸಂಗ್ರಹಿಸಿರುವ ಹೊರೆಕಾಣಿಕೆಯನ್ನು ಅತ್ಯಂತ ಸಂಭ್ರಮ, ಸಡಗರದೊಂದಿಗೆ ಸಮರ್ಪಿಸಿದ್ದೇವೆ ಎಂದರು. ತೆಂಗಿನಕಾಯಿ 40 ಸಾವಿರ, ಅಕ್ಕಿ 205 ಕ್ವಿಂಟಲ್, ಬೆಲ್ಲ 105 ಕ್ವಿಂಟಲ್, ಸಕ್ಕರೆ 10 ಕ್ವಿಂಟಲ್, ಬೇಳೆ 2.5 ಕ್ವಿಂಟಲ್, ಅವಲಕ್ಕಿ 10 ಕ್ವಿಂಟಲ್, ತರಕಾರಿ 15 ಕ್ವಿಂಟಲ್, ಎಣ್ಣೆ/ತುಪ್ಪ 700 ಲೀಟರ್ ವಸ್ತುಗಳನ್ನು ಸಮರ್ಪಿಸಲಾಯಿತು. ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ನಾಗರಾಜ್ ಶೆಟ್ಟಿ, ಶೀರೂರು ಹೊರೆಕಾಣಿಕೆ ಸಮಿತಿಯ ಸಂಚಾಲಕ ಸುಪ್ರಸಾದ್ ಶೆಟ್ಟಿ ಬೈಕಾಡಿ, ಪರ್ಯಾಯ ಸ್ವಾಗತ ಸಮಿತಿಯ ಪ್ರಧಾನ ಕಾರ್ಯದರ್ಶಿ ಮಟ್ಟಾರು ರತ್ನಾಕರ್ ಹೆಗ್ಡೆ, ಕಾರ್ಯದರ್ಶಿ ಮೋಹನ್ ಭಟ್, ಮಠದ ದಿವಾನ ಡಾ. ಉದಯಕುಮಾರ್ ಸರಳತ್ತಾಯ, ಶ್ರೀವಿದ್ಯಾ ಸರಳತ್ತಾಯ, ಜನಜಾಗ್ರತಿ ಸಮಿತಿಯ ಅಧ್ಯಕ್ಷ ನೀರೆ ಕೃಷ್ಣ ಶೆಟ್ಟಿ, ದೇವದಾಸ್ ಹೆಬ್ಬಾರ್, ಕಾಪು ಮಾರಿಗುಡಿ ಮೊಕ್ತೇಸರ ರತ್ನಾಕರ್ ಶೆಟ್ಟಿ, ಬ್ರಾಹ್ಮಣ ಪರಿಷತ್ ಜಿಲ್ಲಾಧ್ಯಕ್ಷ ಸಂದೀಪ್ ಮಂಜ, ಶ್ರೀನಿವಾಸ್ ಉಪಾಧ್ಯ, ಶ್ರೀಕಾಂತ ನಾಯಕ, ಸತ್ಯಾನಂದ ನಾಯಕ, ಉದಯ ಶೆಟ್ಟಿ ಇನ್ನಾ, ಮಧುಕರ್ ಮುದ್ರಾಡಿ, ವಿಜಯ್ ಕೊಡವೂರು, ವೀಣಾ ಶೆಟ್ಟಿ ಇನ್ನಿತರರು ಉಪಸ್ಥಿತರಿದ್ದರು.
I-PAC ಮೇಲೆ ಜಾರಿ ನಿರ್ದೇಶನಾಲಯ ದಾಳಿ ಪ್ರಕರಣ: ಮಮತಾ ಬ್ಯಾನರ್ಜಿ Vs ED; ಇಲ್ಲಿವರೆಗೆ ಏನೇನಾಯ್ತು?
ಪಶ್ಚಿಮ ಬಂಗಾಳದಲ್ಲಿ ಜಾರಿ ನಿರ್ದೇಶನಾಲಯ (ED) ಮತ್ತು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನಡುವಿನ ಸಂಘರ್ಷ ತಾರಕಕ್ಕೇರಿದೆ. ರಾಜಕೀಯ ತಂತ್ರಗಾರಿಕೆ ಸಂಸ್ಥೆ I-PAC ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ನಿವಾಸದ ಮೇಲೆ ನಡೆದ ED ದಾಳಿ ಪ್ರಕರಣ ಇದೀಗ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ. I-PAC ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಶನಿವಾರ ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿರುವ ED, ಘಟನೆಗಳ ಸಂಪೂರ್ಣ ಅನುಕ್ರಮವನ್ನು ವಿವರಿಸಿದ್ದು, ರಾಜ್ಯ ಸರ್ಕಾರದ ಹಸ್ತಕ್ಷೇಪದಿಂದಾಗಿ ನ್ಯಾಯಯುತ ತನಿಖೆ ನಡೆಸುವ ತನ್ನ ಹಕ್ಕಿಗೆ ತಡೆಯೊಡ್ಡಲಾಗಿದೆ ಎಂದು ಆರೋಪಿಸಿದೆ. ಈಡಿ ಈ ವಿಷಯದ ಕುರಿತು ಕೇಂದ್ರ ತನಿಖಾ ದಳ (CBI) ತನಿಖೆಯನ್ನು ಕೋರಿದೆ. ಇದೇ ವೇಳೆ, ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ವಾದವನ್ನು ಆಲಿಸದೇ ಯಾವುದೇ ಪ್ರತಿಕೂಲ ಆದೇಶ ಅಥವಾ ನಿರ್ದೇಶನ ನೀಡಬಾರದು ಎಂದು ಕೋರಿ ಪಶ್ಚಿಮ ಬಂಗಾಳ ಸರ್ಕಾರ ಸುಪ್ರೀಂ ಕೋರ್ಟ್ನಲ್ಲಿ ಕೇವಿಯಟ್ ಸಲ್ಲಿಸಿದೆ. ನ್ಯಾಯಾಲಯಗಳಲ್ಲಿ ಪ್ರತಿವಾದಿಯ ಅನುಪಸ್ಥಿತಿಯಲ್ಲಿ ಏಕಪಕ್ಷೀಯ ತೀರ್ಪುಗಳನ್ನು ತಡೆಯಲು ಕೇವಿಯಟ್ ಸಲ್ಲಿಸಲಾಗುತ್ತದೆ. ರಾಜಕೀಯ ಸಲಹಾ ಸಂಸ್ಥೆ I-PAC ಮತ್ತು ಅದರ ನಿರ್ದೇಶಕ ಪ್ರತೀಕ್ ಜೈನ್ ಅವರ ನಿವಾಸದ ಮೇಲೆ ಗುರುವಾರ ಜಾರಿ ನಿರ್ದೇಶನಾಲಯ ದಾಳಿ ನಡೆಸಿತ್ತು. ED ದಾಳಿ ವೇಳೆ ಅಲ್ಲಿಗೆ ಧಾವಿಸಿದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಪ್ರಮುಖ ದಾಖಲೆಗಳು ಹಾಗೂ ಎಲೆಕ್ಟ್ರಾನಿಕ್ ಸಾಧನಗಳನ್ನು ಅಧಿಕಾರಿಗಳು ತೆಗೆದುಕೊಂಡು ಹೋಗುತ್ತಿದ್ದಾರೆ ಎಂದು ಆರೋಪಿಸಿದ್ದರು. ಆ ವೇಳೆ, I-PAC ಕಚೇರಿಯ ಮುಂದೆ ಮಮತಾ ಬ್ಯಾನರ್ಜಿ ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. “ಪಕ್ಷದ ಹಾರ್ಡ್ ಡಿಸ್ಕ್ಗಳು, ಅಭ್ಯರ್ಥಿಗಳ ಪಟ್ಟಿಗಳನ್ನು ಸಂಗ್ರಹಿಸುವುದು ED ಮತ್ತು ಅಮಿತ್ ಶಾ ಅವರ ಕರ್ತವ್ಯವೇ? ದೇಶವನ್ನು ರಕ್ಷಿಸಲು ಸಾಧ್ಯವಾಗದ ಮತ್ತು ನನ್ನ ಪಕ್ಷದ ಎಲ್ಲಾ ದಾಖಲೆಗಳನ್ನು ಕಿತ್ತುಕೊಳ್ಳುತ್ತಿರುವ The nasty, naughty ಗೃಹ ಸಚಿವರು. ನಾನು ಬಿಜೆಪಿ ಕಚೇರಿಯ ಮೇಲೆ ದಾಳಿ ಮಾಡಿದರೆ ಫಲಿತಾಂಶ ಏನಾಗುತ್ತದೆ?” ಎಂದು ಪ್ರಶ್ನಿಸಿದರು. “ಒಂದೆಡೆ, ಅವರು ಪಶ್ಚಿಮ ಬಂಗಾಳದಲ್ಲಿ SIR ನಡೆಸುವ ಮೂಲಕ ಮತದಾರರ ಹೆಸರುಗಳನ್ನು ಅಳಿಸುತ್ತಿದ್ದಾರೆ. ಚುನಾವಣೆಗಳ ನೆಪದಲ್ಲಿ ನನ್ನ ಪಕ್ಷದ ಬಗ್ಗೆ ಎಲ್ಲಾ ಮಾಹಿತಿಯನ್ನು ಸಂಗ್ರಹಿಸುತ್ತಿದ್ದಾರೆ” ಎಂದು ಅವರು ಗುಡುಗಿದರು. ಆಡಳಿತ ಪಕ್ಷದ ಆಂತರಿಕ ಕಾರ್ಯತಂತ್ರ, ಅಭ್ಯರ್ಥಿಗಳ ಪಟ್ಟಿಗಳು ಮತ್ತು ಗೌಪ್ಯ ಡಿಜಿಟಲ್ ಸಾಮಗ್ರಿಗಳನ್ನು ಪ್ರವೇಶಿಸಲು ED ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದ ಬ್ಯಾನರ್ಜಿ, ಅಂತಹ ಮಾಹಿತಿಗೆ ಹಣಕಾಸು ತನಿಖೆಯೊಂದಿಗೆ ಯಾವುದೇ ಸಂಬಂಧವಿಲ್ಲ ಎಂದು ಹೇಳಿದರು. ಬೀದಿಗಿಳಿದು ಪ್ರತಿಭಟನೆ I-PAC ಕಚೇರಿ ಹಾಗೂ ಅದರ ಮುಖ್ಯಸ್ಥರ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ ನಡೆಸಿದ ದಾಳಿಯನ್ನು ಖಂಡಿಸಿ ಶುಕ್ರವಾರ ಬೀದಿಗಿಳಿದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ತಮ್ಮ ಪಕ್ಷದ ಆಂತರಿಕ ಕಾರ್ಯತಂತ್ರವನ್ನು ಕದಿಯಲು ಪ್ರಯತ್ನಗಳು ನಡೆಯುತ್ತಿವೆ ಎಂದು ಹೇಳುವ ಮೂಲಕ, ದಾಳಿಯ ಸಮಯದಲ್ಲಿ ತಾವು ಹಸ್ತಕ್ಷೇಪ ಮಾಡಿದ ನಿರ್ಧಾರವನ್ನು ಸಮರ್ಥಿಸಿಕೊಂಡರು. ಪ್ರತಿಭಟನಾ ಮೆರವಣಿಗೆಯ ನಂತರ ನಡೆದ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಬ್ಯಾನರ್ಜಿ, “ನಿನ್ನೆ (ಗುರುವಾರ) ತೃಣಮೂಲ ಕಾಂಗ್ರೆಸ್ ಅಧ್ಯಕ್ಷೆಯಾಗಿ ನಾನು ಯಾವುದೇ ತಪ್ಪು ಮಾಡಿಲ್ಲ. ನೀವು ನನ್ನನ್ನು ಕೊಲ್ಲಲು ಬಂದಿದ್ದೀರಿ. ನನಗೆ ನನ್ನನ್ನು ರಕ್ಷಿಸಿಕೊಳ್ಳುವ ಹಕ್ಕಿದೆ. ನನ್ನ ಪಕ್ಷವೇ ಅಸ್ತಿತ್ವದಲ್ಲಿಲ್ಲದಿದ್ದರೆ, ನಾನು ಜನರಿಗಾಗಿ ಹೇಗೆ ಹೋರಾಡಲಿ?” ಎಂದು ಪ್ರಶ್ನಿಸಿದರು. “ಅವರು ಕಲ್ಲಿದ್ದಲು ಹಗರಣದ ಹಣದ ಬಗ್ಗೆ ಮಾತನಾಡುತ್ತಾರೆ. ಆದರೆ ಕಲ್ಲಿದ್ದಲು ಹಣವನ್ನು ಯಾರು ತಿನ್ನುತ್ತಾರೆ? ಅದನ್ನು ಹೇಗೆ ತಿನ್ನಲಾಗುತ್ತದೆ? ಇದು ದೇಶದ್ರೋಹಿಗಳ ಮೂಲಕ ನಡೆಯುತ್ತದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಪಶ್ಚಿಮ ಬಂಗಾಳದ ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ ಕಲ್ಲಿದ್ದಲು ಕಳ್ಳಸಾಗಣೆ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ. ಕಲ್ಲಿದ್ದಲು ಹಗರಣದ ಹಣ ಸುವೇಂದು ಅಧಿಕಾರಿ ಮೂಲಕ ಅಮಿತ್ ಶಾ ಅವರಿಗೆ ಹೋಗಿದೆ” ಎಂದು ಆರೋಪಿಸಿದರು. ಮಮತಾ ಬ್ಯಾನರ್ಜಿ ಕೋಲ್ಕತ್ತಾದಲ್ಲಿ ಪ್ರತಿಭಟನೆ ನಡೆಸುತ್ತಿದ್ದಂತೆ, ತೃಣಮೂಲ ಕಾಂಗ್ರೆಸ್ ಸಂಸದರು ದೆಹಲಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ನಿವಾಸದ ಹೊರಗೆ ಪ್ರತಿಭಟನೆ ನಡೆಸಿದರು. ಸಭೆಯನ್ನು ಉದ್ದೇಶಿಸಿ ಮಾತನಾಡಿದ ಸಿಎಂ, “ಚುನಾವಣಾ ಆಯೋಗದಲ್ಲಿ ಯಾರು ಕುಳಿತಿದ್ದಾರೆಂದು ನಿಮಗೆ ಗೊತ್ತಿದೆ. ಅವರು ಅಮಿತ್ ಶಾ ಅವರ ಸಹಕಾರ ಇಲಾಖೆಯ ಕಾರ್ಯದರ್ಶಿಯಾಗಿದ್ದರು. ಜ್ಞಾನೇಶ್ ಕುಮಾರ್ ಮತಗಳನ್ನು ಕಣ್ಮರೆಯಾಗಿಸುತ್ತಿದ್ದರೆ, ನಾನು ಏಕೆ ಸುಮ್ಮನಿರಬೇಕು? ಮತದಾರರ ಹಕ್ಕುಗಳನ್ನು ಕಸಿದುಕೊಂಡರೆ, ನಾನು ನಿಮ್ಮ ಹಕ್ಕುಗಳನ್ನು ಕಸಿದುಕೊಳ್ಳುತ್ತೇನೆ” ಎಂದು ಎಚ್ಚರಿಸಿದರು. “ಹರಿಯಾಣ ಮತ್ತು ಬಿಹಾರದಲ್ಲಿ ಅವರು ಬಲವಂತವಾಗಿ ಅಧಿಕಾರಕ್ಕೆ ಬಂದಿದ್ದಾರೆ. ಈಗ ಬಂಗಾಳದಲ್ಲೂ ಅದೇ ಪ್ರಯತ್ನ ನಡೆಯುತ್ತಿದೆ. ಕಲ್ಲಿದ್ದಲು ಹಗರಣದ ಹಣವನ್ನು ಯಾರು ಪಡೆಯುತ್ತಾರೆ? ಅಮಿತ್ ಶಾ. ಹಣ ಜಗನ್ನಾಥ್ ಚಟ್ಟೋಪಾಧ್ಯಾಯ ಮೂಲಕ ಸುವೇಂದು ಅಧಿಕಾರಿಗೆ ಹೋಗುತ್ತದೆ. ಸುವೇಂದು ಅಧಿಕಾರಿ ಅದನ್ನು ಅಮಿತ್ ಶಾಗೆ ಕಳುಹಿಸುತ್ತಾರೆ” ಎಂದು ಹೇಳಿದರು. “ನನ್ನ ಬಳಿ ಪೆನ್ ಡ್ರೈವ್ಗಳಿವೆ. ನನ್ನ ಸ್ಥಾನದ ಗೌರವದಿಂದಾಗಿ ನಾನು ಸುಮ್ಮನಿದ್ದೇನೆ. ಒಂದು ಹಂತದವರೆಗೆ ಮಾತ್ರ ನಾನು ಸಹಿಸುತ್ತೇನೆ. ನೆನಪಿಡಿ, ಲಕ್ಷ್ಮಣ ರೇಖೆ ಇದೆ. ನನ್ನ ಮೇಲೆ ಹೆಚ್ಚು ಒತ್ತಡ ಹೇರಬೇಡಿ. ನಾನು ಎಲ್ಲವನ್ನೂ ಬಹಿರಂಗಪಡಿಸುತ್ತೇನೆ. ಇಡೀ ದೇಶವೇ ಆಘಾತಕ್ಕೊಳಗಾಗುತ್ತದೆ” ಎಂದು ಮಮತಾ ಎಚ್ಚರಿಕೆ ನೀಡಿದರು. BSF ಮತ್ತು CISF ಪಡೆಗಳ ಪಾತ್ರದ ಕುರಿತಾಗಿಯೂ ಗೃಹ ಸಚಿವರನ್ನು ಪ್ರಶ್ನಿಸಿದ ಮಮತಾ, ಅಕ್ರಮ ಕಲ್ಲಿದ್ದಲು ಕಳ್ಳಸಾಗಣೆ ತಡೆಯುವಲ್ಲಿ ಅವರು ವಿಫಲರಾಗಿದ್ದಾರೆ ಎಂದು ಆರೋಪಿಸಿದರು. ಹೈಕೋರ್ಟ್ ಮೆಟ್ಟಿಲೇರಿದ ED ತಮ್ಮ ಶೋಧ ಕಾರ್ಯಾಚರಣೆಗೆ “ತಡೆ” ಒಡ್ಡಲಾಗಿದೆ ಎಂದು ಆರೋಪಿಸಿ ಮಮತಾ ಬ್ಯಾನರ್ಜಿ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಕೋರಿ ED ಶುಕ್ರವಾರ ಕಲ್ಕತ್ತಾ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿತು. ಇದಕ್ಕೆ ಪ್ರತಿಯಾಗಿ ತೃಣಮೂಲ ಕಾಂಗ್ರೆಸ್ ಮತ್ತು I-PAC ಕಲ್ಕತ್ತಾ ಹೈಕೋರ್ಟ್ನಲ್ಲಿ ಪ್ರತಿ-ಅರ್ಜಿಗಳನ್ನು ಸಲ್ಲಿಸಿವೆ. ದಾಳಿಯ ವೇಳೆ ವಶಪಡಿಸಿಕೊಂಡ ದಾಖಲೆಗಳು ಚುನಾವಣಾ ಯೋಜನೆ ಮತ್ತು ಪ್ರಚಾರ ತಂತ್ರಕ್ಕೆ ಮಾತ್ರ ಸಂಬಂಧಿಸಿದ್ದಾಗಿವೆ. ಇವು ಹಣ ವರ್ಗಾವಣೆ ತಡೆ ಕಾಯ್ದೆ, 2002ರ ವ್ಯಾಪ್ತಿಗೆ ಒಳಪಡುವುದಿಲ್ಲ ಎಂದು ಟಿಎಂಸಿ ವಾದಿಸಿದೆ. ವಶಪಡಿಸಿಕೊಂಡ ವಸ್ತುಗಳು “ಮುಂಬರುವ 2026ರ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಗೆ” ಸಂಬಂಧಿಸಿದ್ದಾಗಿವೆ ಎಂದು ಪಕ್ಷ ತಿಳಿಸಿದೆ. ಶೋಧದ ವೇಳೆ ಪ್ರಮುಖ ದಾಖಲೆಗಳನ್ನು ಕದ್ದಿದ್ದಾರೆ ಎಂದು ಆರೋಪಿಸಿ I-PAC ಮುಖ್ಯಸ್ಥ ಪ್ರತೀಕ್ ಜೈನ್ ಅವರ ಕುಟುಂಬವು ಹೆಚ್ಚುವರಿ ದೂರುಗಳನ್ನು ಸಲ್ಲಿಸಿದೆ. ಈ ಆರೋಪಗಳನ್ನು ED ತಿರಸ್ಕರಿಸಿದ್ದು, ತಮ್ಮ ಕ್ರಮಗಳು ಕಾನೂನುಬದ್ಧವಾಗಿದ್ದು ಸರಿಯಾದ ಪ್ರಕ್ರಿಯೆಯಂತೆ ನಡೆದಿವೆ ಎಂದು ಸ್ಪಷ್ಟಪಡಿಸಿದೆ. ಆದರೆ ನ್ಯಾಯಾಲಯದಲ್ಲಿ ಉಂಟಾದ ಗದ್ದಲದ ಹಿನ್ನೆಲೆಯಲ್ಲಿ ನ್ಯಾಯಮೂರ್ತಿ ಸುವ್ರಾ ಘೋಷ್ ಅವರು ವಿಚಾರಣೆಯನ್ನು ಜನವರಿ 14ಕ್ಕೆ ಮುಂದೂಡಿದರು. ಇದರಿಂದ ED ಸುಪ್ರೀಂ ಕೋರ್ಟ್ ಮೆಟ್ಟಿಲೇರಿತು. ಮಮತಾಗೆ ಕಾನೂನು ನೋಟಿಸ್ ಕಳುಹಿಸಿದ ಸುವೇಂದು ಕಲ್ಲಿದ್ದಲು ಕಳ್ಳಸಾಗಣೆ ಪ್ರಕರಣದಲ್ಲಿ ತಮ್ಮ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ಆರೋಪ ಮಾಡಿದ ಹಿನ್ನೆಲೆಯಲ್ಲಿ, ಪಶ್ಚಿಮ ಬಂಗಾಳದ ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ ಶುಕ್ರವಾರ ಸಿಎಂ ಮಮತಾ ಬ್ಯಾನರ್ಜಿ ಅವರಿಗೆ ಕಾನೂನು ನೋಟಿಸ್ ಕಳುಹಿಸಿದ್ದಾರೆ. 72 ಗಂಟೆಗಳೊಳಗೆ ಆರೋಪಗಳನ್ನು ಸಾಬೀತುಪಡಿಸಬೇಕು ಎಂದು ಅವರು ಒತ್ತಾಯಿಸಿದ್ದು, ವಿಫಲವಾದಲ್ಲಿ ಮಾನನಷ್ಟಕ್ಕೆ ಸಂಬಂಧಿಸಿದ ಸಿವಿಲ್ ಮತ್ತು ಕ್ರಿಮಿನಲ್ ಮೊಕದ್ದಮೆಗಳನ್ನು ದಾಖಲಿಸಲಾಗುವುದು ಎಂದು ಎಚ್ಚರಿಸಿದ್ದಾರೆ. “ED ತನಿಖೆಯಿಂದ ಗಮನ ಬೇರೆಡೆಗೆ ಸೆಳೆಯುವ ಹತಾಶ ಪ್ರಯತ್ನವಾಗಿ ಸಿಎಂ ನನ್ನ ವಿರುದ್ಧ ಆಧಾರರಹಿತ ಆರೋಪಗಳನ್ನು ಮಾಡಿದ್ದಾರೆ. ಯಾವುದೇ ಸಾಕ್ಷ್ಯವಿಲ್ಲದೆ ನನ್ನನ್ನು ಹಾಗೂ ಗೌರವಾನ್ವಿತ ಗೃಹ ಸಚಿವರನ್ನು ಕಲ್ಲಿದ್ದಲು ಹಗರಣಕ್ಕೆ ಲಿಂಕ್ ಮಾಡಿದ್ದಾರೆ. ಇಂತಹ ಹೇಳಿಕೆಗಳು ಸಾರ್ವಜನಿಕ ಚರ್ಚೆಯ ಘನತೆಯನ್ನು ಹಾಳುಮಾಡುತ್ತವೆ” ಎಂದು ಸುವೇಂದು ಅಧಿಕಾರಿ Xನಲ್ಲಿ ಬರೆದುಕೊಂಡಿದ್ದಾರೆ. ED ಅಧಿಕಾರಿಗಳ ವಿರುದ್ಧ ಪೊಲೀಸ್ ತನಿಖೆ ಅರ್ಜಿ ಮತ್ತು ಪ್ರತಿ-ಅರ್ಜಿಗಳ ನಡುವೆಯೇ, ಚುನಾವಣೆಗೆ ಸಂಬಂಧಿಸಿದ ಡೇಟಾ ಕಳ್ಳತನವಾಗಿದೆ ಎಂದು ತೃಣಮೂಲ ಕಾಂಗ್ರೆಸ್ ಆರೋಪಿಸಿದೆ. ಈ ಹಿನ್ನೆಲೆಯಲ್ಲಿ ಎಫ್ಐಆರ್ಗಳು ದಾಖಲಾಗಿದ್ದು, ದಾಳಿ ವೇಳೆ ದಾಖಲೆಗಳನ್ನು ಕದ್ದಿದ್ದಾರೆ ಎಂಬ ಆರೋಪದ ಮೇಲೆ ED ಅಧಿಕಾರಿಗಳನ್ನು ಕೋಲ್ಕತ್ತಾ ಪೊಲೀಸರು ಗುರುತಿಸುವ ಪ್ರಕ್ರಿಯೆ ಆರಂಭಿಸಿದ್ದಾರೆ. CCTV ದೃಶ್ಯಾವಳಿಗಳು, DVR ದಾಖಲೆಗಳು ಮತ್ತು ಸಾಕ್ಷಿಗಳ ಹೇಳಿಕೆಗಳನ್ನು ಸಂಗ್ರಹಿಸಲಾಗಿದೆ. ಗುರುತಿಸುವಿಕೆ ಪೂರ್ಣಗೊಂಡ ಬಳಿಕ ನೋಟಿಸ್ಗಳನ್ನು ಜಾರಿ ಮಾಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ED ಮತ್ತು CRPF ಸಿಬ್ಬಂದಿ ಸರಿಯಾದ ಮಾಹಿತಿ ಇಲ್ಲದೆ ಶೋಧ ನಡೆಸಿದ್ದಾರೆ. ಸ್ಥಳೀಯ ಅಧಿಕಾರಿಗಳಿಗೆ ಅಡ್ಡಿಪಡಿಸಿದ್ದು, ವಾರಂಟ್ಗಳನ್ನು ತೋರಿಸಲು ವಿಫಲರಾಗಿದ್ದಾರೆ ಎಂದು ಪೊಲೀಸರು ಆರೋಪಿಸಿದ್ದಾರೆ. ಕ್ರಿಮಿನಲ್, ಅತಿಕ್ರಮಣ ಮತ್ತು ಐಟಿ ಕಾಯ್ದೆಯ ವಿವಿಧ ನಿಬಂಧನೆಗಳ ಅಡಿಯಲ್ಲಿ ಪ್ರಕರಣಗಳು ದಾಖಲಾಗಿದ್ದು ತನಿಖೆ ಮುಂದುವರಿದಿದೆ. ಈ ಪ್ರಕರಣ ಈಗ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದು, ED ಮತ್ತು ಮಮತಾ ಬ್ಯಾನರ್ಜಿ ನಡುವಿನ ಕಾನೂನು ಸಂಘರ್ಷ ನಿರ್ಣಾಯಕ ಹಂತವನ್ನು ಪ್ರವೇಶಿಸಿದೆ. ED vs ಮಮತಾ ಬ್ಯಾನರ್ಜಿ ಕಾನೂನು ಸಮರ I-PAC ಕಲ್ಲಿದ್ದಲು ಹಗರಣ ಪ್ರಕರಣದ ತನಿಖೆಗೆ ಪಶ್ಚಿಮ ಬಂಗಾಳ ಸರ್ಕಾರ ಮತ್ತು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅಡ್ಡಿಪಡಿಸಿದ್ದಾರೆ ಎಂದು ಆರೋಪಿಸಿ ಜಾರಿ ನಿರ್ದೇಶನಾಲಯ (ಈಡಿ) ಸುಪ್ರೀಂಕೋರ್ಟ್ ನಲ್ಲಿ ಆರ್ಟಿಕಲ್ 32 ಅರ್ಜಿ ಸಲ್ಲಿಸಿದೆ. ಘಟನೆಯ ಬಗ್ಗೆ ಕೇಂದ್ರ ತನಿಖಾ ದಳ (ಸಿಬಿಐ) ತನಿಖೆಯನ್ನು ಕೋರಿದ ಈಡಿ, ನ್ಯಾಯಯುತ ಮತ್ತು ಸ್ವತಂತ್ರ ತನಿಖೆ ನಡೆಸುವ ಹಕ್ಕಿಗೆ ರಾಜ್ಯ ಸರ್ಕಾರ ತಡೆಯೊಡ್ಡಿದೆ ಎಂದು ಹೇಳಿಕೊಂಡಿದೆ. ಈಡಿ ಪ್ರಕಾರ, ಕಲ್ಲಿದ್ದಲು ಕಳ್ಳಸಾಗಣೆ ತನಿಖೆಗೆ ಸಂಬಂಧಿಸಿದ ವಸ್ತುಗಳನ್ನು ಕಾನೂನುಬದ್ಧವಾಗಿ ಶೋಧ ನಡೆಸದಂತೆ ಮತ್ತು ವಶಪಡಿಸಿಕೊಳ್ಳದಂತೆ ಅಧಿಕಾರಿಗಳನ್ನು ತಡೆಯಲಾಗಿದೆ. ಶೋಧ ವೇಳೆ ಹಿರಿಯ ರಾಜ್ಯ ಅಧಿಕಾರಿಗಳ ಸಮ್ಮುಖದಲ್ಲಿ ಭೌತಿಕ ದಾಖಲೆಗಳು ಮತ್ತು ಎಲೆಕ್ಟ್ರಾನಿಕ್ ಸಾಧನಗಳನ್ನು ಆವರಣದಿಂದ ಬಲವಂತವಾಗಿ ತೆಗೆದುಕೊಂಡು ಹೋಗಲಾಗಿದೆ ಎಂದು ಸಂಸ್ಥೆ ಆರೋಪಿಸಿದೆ. ಪೊಲೀಸ್ ಸಿಬ್ಬಂದಿ ಸೇರಿದಂತೆ ರಾಜ್ಯ ಅಧಿಕಾರಿಗಳ ಹಸ್ತಕ್ಷೇಪವು ನ್ಯಾಯಕ್ಕೆ ಅಡ್ಡಿಪಡಿಸುತ್ತದೆ ಮತ್ತು ಅದರ ತನಿಖೆಯ ಸಮಗ್ರತೆಗೆ ಧಕ್ಕೆ ತರುತ್ತದೆ ಎಂದು ಈಡಿ ವಾದಿಸಿದೆ. ಅದೇ ವೇಳೆ ಪಶ್ಚಿಮ ಬಂಗಾಳ ಸರ್ಕಾರವು ಸುಪ್ರೀಂ ಕೋರ್ಟ್ನಲ್ಲಿ ಕೇವಿಯಟ್ ಸಲ್ಲಿಸಿದೆ.
ಕಲಬುರಗಿ| ನಿರುದ್ಯೋಗ, ಪರೀಕ್ಷಾ ಪ್ರಶ್ನೆಪತ್ರಿಕೆಗಳ ಸೋರಿಕೆ, ಭ್ರಷ್ಟಾಚಾರದ ವಿರುದ್ಧ ಸಹಿ ಸಂಗ್ರಹ ಅಭಿಯಾನ
ಕಲಬುರಗಿ: ದೇಶದಲ್ಲಿ ಹೆಚ್ಚುತ್ತಿರುವ ನಿರುದ್ಯೋಗ, ಪರೀಕ್ಷಾ ಪ್ರಶ್ನೆಪತ್ರಿಕೆಗಳ ಸೋರಿಕೆ, ಭ್ರಷ್ಟಾಚಾರ ಸೇರಿದಂತೆ ಹಲವು ವಿಷಯಗಳನ್ನು ಮುಂದಿಟ್ಟು ಆಲ್ ಇಂಡಿಯಾ ಡೆಮಾಕ್ರಟಿಕ್ ಯೂತ್ ಆರ್ಗನೈಜೇಷನ್ (AIDYO) ವತಿಯಿಂದ ನಗರದಲ್ಲಿ ಸಹಿ ಸಂಗ್ರಹ ಅಭಿಯಾನ ನಡೆಯಿತು. ನಗರದ ರೈಲು ನಿಲ್ದಾಣದ ಎದುರುಗಡೆ ಹಾಗೂ ಸೂಪರ್ ಮಾರ್ಕೆಟ್ ಸಮೀಪ ಸಹಿ ಸಂಗ್ರಹ ಆಂದೋಲನಕ್ಕೆ ಚಾಲನೆ ನೀಡಲಾಯಿತು. ದೇಶದಲ್ಲಿ ಹೆಚ್ಚುತ್ತಿರುವ ನಿರುದ್ಯೋಗ ಸಮಸ್ಯೆ ಭಯಾನಕ ಸ್ವರೂಪ ಪಡೆದುಕೊಂಡಿದೆ. 78 ಕೇಂದ್ರ ಸರಕಾರದ ಸಚಿವಾಲಯಗಳು ಮತ್ತು ಇಲಾಖೆಗಳಲ್ಲಿ 9.78 ಲಕ್ಷಕ್ಕೂ ಹೆಚ್ಚು ಹುದ್ದೆಗಳು ಖಾಲಿಯಾಗಿದೆ ಮತ್ತು ಬಹುತೇಕ ಎಲ್ಲಾ ರಾಜ್ಯಗಳಲ್ಲಿಯೂ ಇದೇ ಪರಿಸ್ಥಿತಿ ಇದೆ. ಇದಲ್ಲದೆ, ಭ್ರಷ್ಟಾಚಾರ, ಪ್ರಶ್ನೆ ಪತ್ರಿಕೆ ಸೋರಿಕೆ, ಸರಕಾರಿ ಇಲಾಖೆಗಳ ಖಾಸಗೀಕರಣವು ಪರಿಸ್ಥಿತಿಯನ್ನು ಹದಗೆಡಿಸಿವೆ. 2014ರಲ್ಲಿ ಪ್ರತಿ ವರ್ಷ ಯುವಕರಿಗೆ 20 ಮಿಲಿಯನ್ ಉದ್ಯೋಗಗಳನ್ನು ಒದಗಿಸುವುದಾಗಿ ಭರವಸೆ ನೀಡಲಾಗಿತ್ತು. ಆದರೆ, ಭರವಸೆ ಈಡೇರಿಸಿಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪರೀಕ್ಷೆಗಳಲ್ಲಿ ಎಲ್ಲಾ ಅಭ್ಯರ್ಥಿಗಳ ಗರಿಷ್ಟ ವಯಸ್ಸಿನ ಮಿತಿಯನ್ನು 5 ವರ್ಷ ಹೆಚ್ಚಿಸಬೇಕು, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅರ್ಜಿ ಶುಲ್ಕ ವಿಧಿಸಬಾರದು ಮತ್ತು ಅಭ್ಯರ್ಥಿಗಳಿಗೆ ಉಚಿತ ಪ್ರಯಾಣ ಸೌಲಭ್ಯಗಳನ್ನು ಒದಗಿಸಬೇಕು. ಗುತ್ತಿಗೆ ಪದ್ಧತಿಯನ್ನು ರದ್ದುಗೊಳಿಸಿ ಎಲ್ಲಾ ಹುದ್ದೆಗಳನ್ನು ಖಾಯಂ ಮಾಡಬೇಕು, ದೇಶದಾದ್ಯಂತ ಗಿಗ್ ಕಾರ್ಮಿಕರಿಗೆ ಉದ್ಯೋಗ, ಸ್ಥಾನಮಾನ, ಕನಿಷ್ಠ ವೇತನ ಮತ್ತು ಸಾಮಾಜಿಕ ಭದ್ರತೆ ನೀಡಬೇಕು ಎಂದು ಒತ್ತಾಯಿಸಿದರು ಈ ಸಂದರ್ಭದಲ್ಲಿ ಸಂಘಟನೆಯ ಜಿಲ್ಲಾಧ್ಯಕ್ಷ ಜಗನ್ನಾಥ ಎಸ್, ಹೆಚ್., ಜಿಲ್ಲಾ ಕಾರ್ಯದರ್ಶಿ ಈಶ್ವರ , ರಮೇಶ ದೇವಕರ್, ಪ್ರಶಾಂತ ಹಾದಿಮನಿ, ತೇಜಶ್ವಿನಿ ಆರ್. ಇಬ್ರಾಹಿಂಪುರ್, ಸಚಿನ್ ಪವಾರ್, ಪ್ರಭಾಕರ ಚಿಂಚೋಳ್ಳಿ, ಗಣೇಶ ಜಾಧವ್, ಸಚಿನ್ ಪವಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಫೆಲೆಸ್ತೀನೀಯರು ಸ್ವಂತ ನೆಲದಲ್ಲಿ ಶಾಂತಿಯಿಂದ ಬದುಕುವ ಹಕ್ಕು ಹೊಂದಿದ್ದಾರೆ: ಪೋಪ್
ವ್ಯಾಟಿಕನ್ ಸಿಟಿ, ಜ.10: ಆಕ್ರಮಿತ ಪಶ್ಚಿಮ ದಂಡೆಯಲ್ಲಿ ಹೆಚ್ಚುತ್ತಿರುವ ಹಿಂಸಾಚಾರ ಮತ್ತು ಗಾಝಾದಲ್ಲಿ ಉಂಟಾಗಿರುವ ಮಾನವೀಯ ಬಿಕ್ಕಟ್ಟಿನ ಕುರಿತು ಪೋಪ್ ಲಿಯೋ ದುಃಖ ವ್ಯಕ್ತಪಡಿಸಿದ್ದು, ಫೆಲೆಸ್ತೀನೀಯರು ತಮ್ಮ ಸ್ವಂತ ನೆಲದಲ್ಲಿ ಶಾಂತಿಯುತವಾಗಿ ಬದುಕುವ ಹಕ್ಕು ಹೊಂದಿದ್ದಾರೆ ಎಂದು ಹೇಳಿದ್ದಾರೆ. ತಮ್ಮ ಸ್ವಂತ ಭೂಮಿಯಲ್ಲಿ ವಾಸಿಸುವ ಹಕ್ಕು ಹೊಂದಿರುವ ಫೆಲೆಸ್ತೀನೀಯ ನಾಗರಿಕರ ವಿರುದ್ಧ ಹಿಂಸಾಚಾರ ಹೆಚ್ಚುತ್ತಿರುವುದು ಅತ್ಯಂತ ದುಃಖದ ಸಂಗತಿಯಾಗಿದೆ. ಗಾಝಾದಲ್ಲಿನ ನಾಗರಿಕರಿಗೆ ತಮ್ಮದೇ ಭೂಮಿಯಲ್ಲಿ ಶಾಶ್ವತ ಶಾಂತಿ ಮತ್ತು ನ್ಯಾಯಯುತ ಭವಿಷ್ಯದ ಭರವಸೆಯನ್ನು ನೀಡಬೇಕು. ಅಕ್ಟೋಬರ್ನಲ್ಲಿ ಘೋಷಿಸಲಾದ ಕದನ ವಿರಾಮದ ಹೊರತಾಗಿಯೂ ನಾಗರಿಕರ ಮಾನವೀಯ ನೋವು ಮುಂದುವರಿದಿದೆ. ಗಾಝಾದಲ್ಲಿರುವ ಫೆಲೆಸ್ತೀನೀಯರು ಸೇರಿದಂತೆ ಎಲ್ಲಾ ಫೆಲೆಸ್ತೀನೀಯರಿಗೆ ಹಾಗೂ ಎಲ್ಲಾ ಇಸ್ರೇಲ್ ನಾಗರಿಕರಿಗೆ ಶಾಶ್ವತ ಶಾಂತಿ ಮತ್ತು ನ್ಯಾಯದ ಭವಿಷ್ಯವನ್ನು ಖಾತ್ರಿ ಪಡಿಸುವ ಗುರಿಯನ್ನು ಹೊಂದಿರುವ ಪ್ರತಿಯೊಂದು ರಾಜತಾಂತ್ರಿಕ ಉಪಕ್ರಮವನ್ನೂ ವ್ಯಾಟಿಕನ್ ನಿಖರವಾಗಿ ಅನುಸರಿಸುತ್ತದೆ ಎಂದು ಲಿಯೋ ಹೇಳಿದ್ದಾರೆ.
ಕಾರ್ಕಳ| ಪರಶುರಾಮ ಥೀಮ್ ಪಾರ್ಕ್ನಲ್ಲಿ ತಾಮ್ರದ ಹೊದಿಕೆ ಕಳವು ಪ್ರಕರಣ: ಇಬ್ಬರು ಆರೋಪಿಗಳ ಬಂಧನ
ಕಾರ್ಕಳ: ಬೈಲೂರು ಉಮ್ಮಿಕಲ್ ಬೆಟ್ಟದಲ್ಲಿರುವ ಪರಶುರಾಮ್ ಥೀಮ್ ಪಾರ್ಕ್ ನ ಕಟ್ಟಡದ ಮೇಲ್ಚಾವಣಿಗೆ ಅಳವಡಿಸಿದ ತಾಮ್ರದ ಹೊದಿಕೆ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಕಾರ್ಕಳ ಪೊಲೀಸರು ಯಶಸ್ವಿಯಾಗಿದ್ದಾರೆ. ಮಂಗಳೂರು ಕಳವಾರು ಚಚ್೯ ಗುಡ್ಡೆಯ ಆರೀಫ್ ಯಾನೆ ಮುನ್ನ(37) ಹಾಗೂ ಮಂಗಳೂರು ಕಾವೂರಿನ ಅಬ್ದುಲ್ ಹಮೀದ್ (32) ಬಂಧಿತ ಆರೋಪಿಗಳು ಎಂದು ಪೊಲೀಸರು ತಿಳಿಸಿದ್ದಾರೆ. ಇವರು ಜ.3ರಂದು ಪಾಕ್೯ನ ಕಟ್ಟಡದ ಮುಖ್ಯ ಬಾಗಿಲನ್ನು ಮುರಿದು ಒಳನುಗ್ಗಿ ಕಟ್ಟಡದ ಮೇಲ್ಛಾವಣಿಗೆ ಅಳವಡಿಸಿದ ತಾಮ್ರದ ಹೊದಿಕೆಯನ್ನು ಕಳವು ಮಾಡಿಕೊಂಡು ಹೋಗಿರುವ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ಗಂಭೀರತೆ ಹಾಗೂ ಸೂಕ್ಷ್ಮತೆಯನ್ನು ಅರಿತ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಹರೀರಾಂ ಶಂಕರ ಆರೋಪಿಗಳ ಪತ್ತೆಗಾಗಿ ಮೂರು ವಿಶೇಷ ತಂಡಗಳನ್ನು ರಚಿಸಿದ್ದು ವಿಶೇಷ ಪೊಲೀಸ್ ತಂಡವು ಉಡುಪಿ, ದ.ಕ ಜಿಲ್ಲೆಯಲ್ಲಿ ಹಾಗೂ ಮಂಗಳೂರು ನಗರದಲ್ಲಿ ಹುಡುಕಾಡಿ ಆರೋಪಿಗಳನ್ನು ಬಂಧಿಸಿದೆ. ಬಂಧಿತರಿಂದ ಕಳವು ಮಾಡಿದ 45,000 ರೂ. ಮೌಲ್ಯದ 51 ಕೆಜಿ ತಾಮ್ರದ ಹೊದಿಕೆ ಹಾಗೂ 1200ರೂ. ಮೌಲ್ಯದ 2 ಸಿಲಿಂಗ್ ಫ್ಯಾನ್, ಕೃತ್ಯಕ್ಕೆ ಬಳಸಿದ 1 ಲಕ್ಷ ರೂ. ಮೌಲ್ಯದ ಗೂಡ್ಸ್ ಅಟೋರಿಕ್ಷಾ, 70,000ರೂ. ಮೌಲ್ಯದ ಬೈಕ್ ನ್ನು ಪೊಲೀಸರು ವಶ ಪಡಿಸಿಕೊಂಡಿದ್ದಾರೆ. ತಲೆಮರೆಸಿಕೊಂಡ ಇತರ ಆರೋಪಿಗಳ ಪತ್ತೆಗೆ ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ. ಆರೀಫ್ ವಿರುದ್ಧ ಪಡುಬಿದ್ರೆ, ಉಡುಪಿ ನಗರ, ಬ್ರಹ್ಮಾವರ ಪೊಲೀಸ್ ಠಾಣೆ, ಕಾರ್ಕಳ ಗ್ರಾಮಾಂತರ ಹಾಗೂ ಮುಲ್ಕಿ, ಮೂಡುಬಿದಿರೆ ಪೊಲೀಸ್ ಠಾಣೆಗಳಲ್ಲಿ 9 ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಹಮೀದ್ ವಿರುದ್ಧ ಬಜ್ಪೆ ಹಾಗೂ ಮೂಡುಬಿದಿರೆ ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ. ಕಾರ್ಕಳ ಉಪವಿಭಾಗದ ಪ್ರಭಾರ ಪೊಲೀಸ್ ಉಪಾಧೀಕ್ಷಕ ಪ್ರಭು ಡಿ.ಟಿ. ನೇತೃತ್ವದಲ್ಲಿ ಕಾರ್ಕಳ ನಗರ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕ ಮಂಜಪ್ಪ ಡಿ.ಆರ್. ಕಾರ್ಕಳ ನಗರ ಪೊಲೀಸ್ ಠಾಣಾ ಎಸ್ಸೈಗಳಾದ ಮುರುಳೀಧರ ನಾಯ್ಕ, ಶಿವಕುಮಾರ್ ಎಸ್.ಆರ್., ಕಾರ್ಕಳ ಗ್ರಾಮಾಂತರ ಠಾಣಾ ಎಸ್ಸೈಗಳಾದ ಪ್ರಸನ್ನ ಕುಮಾರ್ ಎಮ್.ಎಸ್., ಸುಂದರ ಹಾಗೂ ಸಿಬ್ಬಂದಿ ರಂಜೀತ್ ಕುಮಾರ್ ಶೆಟ್ಟಿ, ಸದಾಶಿವ ಶೆಟ್ಟಿ ಗೋಪಾಲಕೃಷ್ಣ, ಚಂದ್ರ ಶೇಖರ, ಸತೀಶ ಪ್ರದೀಪ, ಶಿವಾನಂದ ಲೊಕೇಶ, ಮಹಾತೇಶ, ಸಂತೋಷ ಗೋಣಿಯಪ್ಪನವರ್, ಶ್ರೀನಿವಾಸ, ಆನಂದ, ಸಂತೋಷ, ಅರ್ಚನಾ ಹಾಗೂ ಚಾಲಕರಾದ ಅಶೋಕ ಕುಮಾರ್ ಹಾಗೂ ಪ್ರಸಾದ ಹಾಗೂ ಜಿಲ್ಲಾ ಆರ್ಡಿಸೆಲ್ ವಿಭಾಗದ ದಿನೇಶ ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ಕಲಬುರಗಿ| ರಾಜ್ಯ ಸರಕಾರದ ವಿರುದ್ಧ ಬಿಜೆಪಿಯಿಂದ ಪ್ರತಿಭಟನೆ
ಕಲಬುರಗಿ: ಕಾಂಗ್ರೆಸ್ ಸರಕಾರ ಅಭಿವೃದ್ಧಿಯತ್ತ ಗಮನ ಸಹರಿಸದೇ ಜನರ ಸಂಕಷ್ಟಗಳಿಗೆ ಸ್ಪಂದಿಸದೇ ಕಾಲಹರಣ ಮಾಡುತ್ತಿದೆ ಎಂದು ಆರೋಪಿಸಿ ಬಿಜೆಪಿ ಓಬಿಸಿ ಮೋರ್ಚಾ ನಗರಾಧ್ಯಕ್ಷ ದೇವೇಂದ್ರ ದೇಸಾಯಿ ಕಲ್ಲೂರ ಅವರ ನೇತೃತ್ವದಲ್ಲಿ ಕುದರೆ ಹಾಗೂ ಕತ್ತೆಗಳೊಂದಿಗೆ ವಿನೂತನ ಪ್ರತಿಭಟನೆ ನಡೆಸಲಾಯಿತು. ಎಸ್ವಿಪಿ ವೃತ್ತದಿಂದ ಶುರುವಾರ ಕುದುರೆ ಹಾಗೂ ಕತ್ತೆಗಳೊಂದಿಗೆ ನಡೆದ ಪ್ರತಿಭಟನೆ ಜಿಲ್ಲಾಧಿಕಾರಿಗಳ ಕಚೇರಿ ಬಳಿ ಮುಕ್ತಾಯವಾಯಿತು. ಬಳಿಕ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯಪಾಲರಿಗೆ ಮನವಿ ಪತ್ರ ಸಲ್ಲಿಸಲಾಯಿತು. ಗೃಹ ಲಕ್ಷ್ಮೀ ಯೋಜನೆ ಮೂಲಕ ಮಹಿಳೆಯರಿಗೆ ರೂ. 2,000 ನೀಡಲಾಗುತ್ತಿದೆ. ಆದರೆ ಅದರಿಂದ ಮಹಿಳೆಯರಿಗೆ ಏನು ಲಾಭ? ಅದರ ಬದಲಾಗಿ ಮಹಿಳೆಯರಿಗೆ ಉದ್ಯೋಗಾವಕಾಶಗಳನ್ನು ಸೃಷ್ಠಿ ಮಾಡುವಂತ ಯೋಜನೆಗಳನ್ನು ರೂಪಸಬೇಕಾಗಿತ್ತು. ಅಲ್ಲದೇ ಅನ್ನಭಾಗ ಯೋಜನೆಯಲ್ಲಿಯೂ ಪಡಿತರ ಅಕ್ಕಿ ಬದಲು ತಲಾ 38 ರೂ ಹಣವನ್ನು ಖಾತೆಗೆ ಹಾಕಲಾಗುತ್ತಿದೆ. ಹಣದ ಬದಲು ಅಕ್ಕಿ ಖರೀದಿಸಲು ಸರ್ಕಾರಕ್ಕೆ ಏಕೆ ಸಾಧ್ಯವಾಗುತ್ತಿಲ್ಲ? ಗೃಹಜ್ಯೋತಿ ಯೋಜನೆಯಲ್ಲಿ ಉಚಿತ ವಿದ್ಯುತ್ ಎಂದು ಮಾತ್ರ ಹೇಳಲಾಗುತ್ತಿದೆ. ಅದರ ಹೊರೆಯನ್ನು ಸಾಮಾನ್ಯ ಗ್ರಾಹಕರ ಮೇಲೆ ಬೆಲೆ ಏರಿಕೆಯಿಂದ ಹಾಕುವುದು ಎಷ್ಟು ಸರಿ? ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ಗ್ಯಾರಂಟಿ ಹೆಸರಿನಲ್ಲಿ ಸರಕಾರ ಅಭಿವೃದ್ಧಿಯನ್ನು ಮರೆತಿದೆ, ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ ಬಹುತೇಕ ಅಭಿವೃದ್ಧಿ ಕಾರ್ಯ ನಿಂತು ಹೋಗಿವೆ. ಕಲಬುರಗಿ ನಗರದಲ್ಲಿನ ಎಲ್ಲಾ ಮುಖ್ಯ ರಸ್ತೆಗಳ ಟಾರ್ ಕಿತ್ತು ಹೋಗುತ್ತಿದೆ. ಅದಕ್ಕೆ ದುರಸ್ಥಿ ಮಾಡಲು ಇಲಾಖೆಗಳಲ್ಲಿ ಹಣದ ಕೊರತೆ ಇದೆ ಎಂದು ಅಧಿಕಾರಿಗಳು ಹೇಳಿತ್ತಿದ್ದಾರೆ. ಇನ್ನೂ ಗ್ರಾಮೀಣ ಭಾಗದ ರಸ್ತೆಗಳ ಗತಿಯೇನು? ಎಂದು ದೇವೇಂದ್ರ ದೇಸಾಯಿ ಪ್ರಶ್ನಿಸಿದರು. ಈ ಸಂದರ್ಭದಲ್ಲಿ ನಗರ ಪ್ರಧಾನ ಕಾರ್ಯದರ್ಶಿ ಅಭಿಷೇಕ್, ಶಶಿ ಮದ್ದೂರು, ರಾಮೋಜಿ ಜ್ಯೋತಿಬಾ, ಸಂಗಮೇಶ, ಲೋಕೇಶ್, ರಾಕೇಶ್ ಮಾಡ್ಯಾಳ, ಶಿವಾನಂದ ಕಲ್ಲೂರ್, ಕಮಲಾಕರ್ ಅಣಕಲ್, ಸಿದ್ದು ಬುಸನೂರ್, ನಾಗು ಹತಗುಂದಿ, ಶಿವರಾಜ್, ಮಲ್ಲು ಪೊದ್ದಾರ್ ಸೇರಿದಂತೆ ಹಲವರು ಇದ್ದರು.
ಪತಿಯ ಎಡವಟ್ಟಿನಿಂದ ಕೋಟ್ಯಂತರ ರೂಪಾಯಿ, ಜಮೀನು ಕಳೆದುಕೊಂಡೆ - ಬಾಕ್ಸಿಂಗ್ ಮಾಜಿ ವಿಶ್ವ ಚಾಂಪಿಯನ್ ಮೇರಿ ಕೋಂ ಅಳಲು
ಖ್ಯಾತ ಬಾಕ್ಸರ್ ಮೇರಿ ಕೋಂ, ತಮ್ಮ ವಿಚ್ಛೇದನದ ಬಗ್ಗೆ ಮೊದಲ ಬಾರಿಗೆ ಮಾತನಾಡಿದ್ದು, ಪತಿ ಹಣಕಾಸಿನ ದುರುಪಯೋಗ ಮತ್ತು ಮೋಸ ಮಾಡಿದ್ದಾರೆಂದು ಆರೋಪಿಸಿದ್ದಾರೆ. ಗಾಯಗೊಂಡಿದ್ದಾಗ ಕುಟುಂಬದ ಹಣಕಾಸಿನ ಸ್ಥಿತಿ ಅರಿತು, ನಂಬಿದ್ದ ವ್ಯಕ್ತಿ ಸರಿಯಾಗಿರಲಿಲ್ಲ ಎಂದು ತಿಳಿಯಿತು. ಪತಿ ಆಸ್ತಿ ಅಡವಿಟ್ಟು ಸಾಲ ಪಡೆದು, ಭೂಗತರಿಂದ ಭೂಮಿ ಕಳೆದುಕೊಂಡಿದ್ದರಿಂದ ಬೇಸತ್ತು ವಿಚ್ಛೇದನ ಪಡೆದಿದ್ದಾಗಿ ಹೇಳಿದ್ದಾರೆ.
ಹಿಂಸಾತ್ಮಕ ಪ್ರತಿಭಟನೆಗಳಿಗೆ ಅಮೆರಿಕ ಹೊಣೆ: ವಿಶ್ವಸಂಸ್ಥೆಗೆ Iran ರಾಯಭಾರಿ ಪತ್ರ
ಟೆಹ್ರಾನ್, ಜ.10: ಇರಾನ್ ನಲ್ಲಿ ನಡೆದ ಶಾಂತಿಯುತ ಪ್ರತಿಭಟನೆಗಳು ಹಿಂಸಾತ್ಮಕ, ದೇಶದ್ರೋಹಿ ಚಟುವಟಿಕೆಗಳು ಹಾಗೂ ವಿಧ್ವಂಸಕ ಕೃತ್ಯಗಳಾಗಿ ರೂಪಾಂತರಗೊಳ್ಳಲು ಅಮೆರಿಕವೇ ಹೊಣೆ ಎಂದು ವಿಶ್ವಸಂಸ್ಥೆಯಲ್ಲಿ ಇರಾನಿನ ರಾಯಭಾರಿ, ವಿಶ್ವಸಂಸ್ಥೆಯ ಭದ್ರತಾ ಮಂಡಳಿಗೆ ಬರೆದಿರುವ ಪತ್ರದಲ್ಲಿ ಆರೋಪಿಸಿದ್ದಾರೆ. ಇಸ್ರೇಲಿ ಆಡಳಿತದೊಂದಿಗೆ ಸಮನ್ವಯ ಸಾಧಿಸಿ ಅಮೆರಿಕಾ ನಡೆಸುತ್ತಿರುವ ಕಾನೂನುಬಾಹಿರ ಹಾಗೂ ಬೇಜವಾಬ್ದಾರಿ ನಡವಳಿಕೆಯನ್ನು, ಅಸ್ಥಿರತೆ ಮತ್ತು ಹಿಂಸಾಚಾರವನ್ನು ಪ್ರಚೋದಿಸುವ ಉದ್ದೇಶದಿಂದ ಇರಾನ್ನ ಆಂತರಿಕ ವ್ಯವಹಾರಗಳಲ್ಲಿ ಮಧ್ಯಪ್ರವೇಶಿಸುತ್ತಿರುವ ಕ್ರಮಗಳನ್ನು ಇರಾನ್ ಖಂಡಿಸುತ್ತದೆ ಎಂದು ಇರಾನ್ ರಾಯಭಾರಿ ಅಮೀರ್ ಸಯೀದ್ ಇರಾವಾನಿ ಪತ್ರದಲ್ಲಿ ಉಲ್ಲೇಖಿಸಿದ್ದಾರೆ ಎಂದು ‘ರಾಯ್ಟರ್ಸ್’ ವರದಿ ಮಾಡಿದೆ. ವಿಶ್ವಸಂಸ್ಥೆಯ ಚಾರ್ಟರ್ ಅನ್ನು (ಸನದು) ದುರ್ಬಲಗೊಳಿಸುವ, ಅಂತಾರಾಷ್ಟ್ರೀಯ ಕಾನೂನಿನ ಮೂಲಭೂತ ತತ್ವಗಳನ್ನು ಉಲ್ಲಂಘಿಸುವ ಮತ್ತು ಅಂತಾರಾಷ್ಟ್ರೀಯ ಶಾಂತಿ ಹಾಗೂ ಭದ್ರತೆಯ ಅಡಿಪಾಯಗಳಿಗೆ ಬೆದರಿಕೆಯೊಡ್ಡುವ ‘ಅಸ್ಥಿರಗೊಳಿಸುವ ಕ್ರಮಗಳನ್ನು’ ಅಮೆರಿಕಾ ಅನುಸರಿಸುತ್ತಿದೆ ಎಂದು ಅವರು ಆರೋಪಿಸಿದ್ದಾರೆ. ಇರಾನ್ ನಲ್ಲಿ ವ್ಯಾಪಕಗೊಂಡಿರುವ ಪ್ರತಿಭಟನೆ 14ನೇ ದಿನವಾದ ಶುಕ್ರವಾರವೂ ಮುಂದುವರಿದಿದ್ದು, ಕಾರ್ಯತಂತ್ರದ ಮೂಲಸೌಕರ್ಯಗಳು ಹಾಗೂ ಸಾರ್ವಜನಿಕ ಆಸ್ತಿಯನ್ನು ರಕ್ಷಿಸಲು ದೃಢಸಂಕಲ್ಪ ಹೊಂದಿರುವುದಾಗಿ ಇರಾನ್ ಸೇನೆ ಹೇಳಿದೆ. ಈ ನಡುವೆ ರಾಜಧಾನಿ ಟೆಹ್ರಾನ್, ಮಶ್ಹಾದ್ ಸೇರಿದಂತೆ ಪ್ರಮುಖ ನಗರಗಳ ಬೀದಿಗಳಲ್ಲಿ ಪ್ರತಿಭಟನೆ ಮುಂದುವರಿದಿದ್ದು, ಟೆಹ್ರಾನ್ನ ಪಶ್ಚಿಮದ ಕರಾಜ್ ನಗರದಲ್ಲಿ ಪುರಸಭೆ ಕಟ್ಟಡಕ್ಕೆ ಬೆಂಕಿ ಹಚ್ಚಲಾಗಿದೆ. ಗುರುವಾರ ರಾತ್ರಿ 50ಕ್ಕೂ ಹೆಚ್ಚು ಬ್ಯಾಂಕ್ಗಳು ಹಾಗೂ ಸರ್ಕಾರಿ ಕಟ್ಟಡಗಳಿಗೆ ಬೆಂಕಿ ಹಚ್ಚಲಾಗಿದೆ ಎಂದು ಟೆಹ್ರಾನ್ ಮೇಯರ್ ರನ್ನು ಉಲ್ಲೇಖಿಸಿ ಸರ್ಕಾರಿ ಸ್ವಾಮ್ಯದ ಮಾಧ್ಯಮಗಳು ವರದಿ ಮಾಡಿವೆ.
ಗುಲಾಬಿ ಮಾರ್ಗದಲ್ಲಿ ಭಾನುವಾರದಿಂದ ಪರೀಕ್ಷಾರ್ಥ ಮೆಟ್ರೋ ರೈಲು ಸಂಚಾರ ಶುರು, ವಾಣಿಜ್ಯ ಸಂಚಾರ ಯಾವಾಗ?
ಬನ್ನೇರುಘಟ್ಟ ರಸ್ತೆಯ ಕಾಳೇನ ಅಗ್ರಹಾರದಿಂದ ತಾವರೆಕೆರೆವರೆಗಿನ 7.5 ಕಿ.ಮೀ. ಉದ್ದದ ಗುಲಾಬಿ ಮಾರ್ಗದಲ್ಲಿ ಭಾನುವಾರದಿಂದ ಪರೀಕ್ಷಾರ್ಥ ಮೆಟ್ರೋ ರೈಲು ಸಂಚಾರ ಆರಂಭವಾಗಲಿದೆ. ವರ್ಷಾಂತ್ಯದೊಳಗೆ ಈ ಮಾರ್ಗದಲ್ಲಿ ವಾಣಿಜ್ಯ ಕಾರ್ಯಾಚರಣೆ ಶುರು ಮಾಡಲು ಬಿಎಂಆರ್ಸಿಎಲ್ ಸಿದ್ಧತೆ ನಡೆಸಿದೆ. ಏಪ್ರಿಲ್ವರೆಗೆ ನಡೆಯುವ ಪರೀಕ್ಷೆಗಳ ಬಳಿಕ ಸುರಕ್ಷತಾ ಪ್ರಮಾಣಪತ್ರ ಲಭಿಸಿದ ಕೂಡಲೇ ಸಂಚಾರ ಆರಂಭವಾಗಲಿದೆ.
ಕೋಚ್ ಜಾನ್ ಝೆಲೆಝ್ನಿ ನಂಟು ಕಡಿದುಕೊಂಡ ನೀರಜ್ ಚೋಪ್ರಾ
ಹೊಸದಿಲ್ಲಿ, ಜ.10: ‘‘ಝೆಕ್ನ ಜಾವೆಲಿನ್ ದಂತಕತೆ ಜಾನ್ ಝೆಲೆಝ್ನಿ ಅವರಿಂದ ಬೇರ್ಪಡುತ್ತಿದ್ದೇನೆ’’ ಎಂದು ಎರಡು ಬಾರಿ ಒಲಿಂಪಿಕ್ಸ್ ಪದಕ ವಿಜೇತ ನೀರಜ್ ಚೋಪ್ರಾ ಶನಿವಾರ ಘೋಷಿಸಿದ್ದಾರೆ. ಚೋಪ್ರಾ ಅವರು 2024ರ ಕೊನೆಯಲ್ಲಿ ಝೆಲೆಝ್ನಿ ಅವರಿಂದ ತರಬೇತಿಯನ್ನು ಪಡೆಯಲು ಆರಂಭಿಸಿದ್ದು, ಇದೀಗ ಇಬ್ಬರೂ ಬೇರ್ಪಡಲು ಒಪ್ಪಿಕೊಂಡಿದ್ದಾರೆ. ಝೆಲೆಝ್ನಿ ಅವರಿಂದ ಬೇರ್ಪಡಲು ಕಾರಣವೇನೆಂದು ಚೋಪ್ರಾ ವಿವರ ನೀಡಿಲ್ಲ. ಕಳೆದ ವರ್ಷ ಝೆಲೆಝ್ನಿ ಅವರ ಮಾರ್ಗದರ್ಶನದಲ್ಲಿ ಚೋಪ್ರಾ ಅವರು ವೃತ್ತಿಜೀವನದಲ್ಲಿ ಮೊದಲ ಬಾರಿಗೆ 90 ಮೀಟರ್ಗೂ ಅಧಿಕ ದೂರ ಜಾವೆಲಿನ್ ಎಸೆದಿದ್ದರು. 2025ರ ದೋಹಾ ಡೈಮಂಡ್ ಲೀಗ್ನಲ್ಲಿ ಇಬ್ಬರು ಒಟ್ಟಿಗೆ ಕೆಲಸ ಮಾಡಲು ಆರಂಭಿಸಿದ್ದರು. ಆಗ ಚೋಪ್ರಾ ತಮ್ಮ ವೃತ್ತಿಜೀವನದಲ್ಲಿ ಮೊದಲ ಬಾರಿಗೆ 90 ಮೀಟರ್ ದೂರಕ್ಕೆ ಜಾವೆಲಿನ್ ಎಸೆದಿದ್ದರು. ‘‘ಜಾನ್ ಜೊತೆ ಕೆಲಸ ಮಾಡುವುದರಿಂದ ನನ್ನ ಕಣ್ಣುಗಳು ಹಲವು ಹೊಸ ವಿಚಾರಗಳಿಗೆ ತೆರೆಯಿತು. ತಂತ್ರ, ಲಯ ಹಾಗೂ ಚಲನೆಯ ಬಗ್ಗೆ ಅವರು ಯೋಚಿಸುವ ರೀತಿ ಅದ್ಭುತವಾಗಿದೆ. ನಾವು ಒಟ್ಟಿಗೆ ಇದ್ದ ಪ್ರತಿಯೊಂದು ಅವಧಿಯಲ್ಲೂ ನಾನು ಬಹಳಷ್ಟು ಕಲಿತಿದ್ದೇನೆ’’ ಎಂದು ನೀರಜ್ ಚೋಪ್ರಾ ಹೇಳಿದ್ದಾರೆ. ಝೆಲೆಝ್ನಿ ಅವರು ಮೂರು ಒಲಿಂಪಿಕ್ಸ್ ಚಿನ್ನದ ಪದಕಗಳು (1992, 1996, 2000) ಹಾಗೂ ಮೂರು ಬಾರಿ ವಿಶ್ವ ಚಾಂಪಿಯನ್ ಶಿಪ್ ಗಳು (1993, 1995, 2001) ಜಯಿಸಿದ್ದರು. 1988ರಲ್ಲಿ ಒಲಿಂಪಿಕ್ಸ್ನಲ್ಲಿ ಬೆಳ್ಳಿ ಪದಕ ಗಳಿಸಿದ್ದರು. 98.48 ಮೀಟರ್ ವಿಶ್ವ ದಾಖಲೆ ಸೇರಿದಂತೆ ಸಾರ್ವಕಾಲಿಕ ಒಂಬತ್ತು ಅತ್ಯುತ್ತಮ ಜಾವೆಲಿನ್ ಎಸೆತಗಳಲ್ಲಿ ಐದು ದಾಖಲೆಗಳನ್ನು ತಮ್ಮ ಹೆಸರಲ್ಲಿ ಹೊಂದಿದ್ದಾರೆ. ನೀರಜ್ ಜೊತೆ ಕೈಜೋಡಿಸುವ ಮೊದಲು ಝೆಕ್ನ ಜಾವೆಲಿನ್ ಥ್ರೋವರ್ ಜಾಕಬ್ ವಾಡ್ಲೆಚ್ ಅವರೊಂದಿಗೆ ಕೆಲಸ ಮಾಡಿದ್ದರು. ‘‘ನೀರಜ್ ರಂತಹ ಕ್ರೀಡಾಪಟುವಿನೊಂದಿಗೆ ಕೆಲಸ ಮಾಡುವುದು ಒಳ್ಳೆಯ ಅನುಭವವಾಗಿತ್ತು. ಅವರೊಂದಿಗೆ ಒಟ್ಟಿಗೆ ಕೆಲಸ ಮಾಡಲು ಸಾಧ್ಯವಾದಾಗ ನನಗೆ ತುಂಬಾ ಖುಷಿಯಾಯಿತು. ಅವರು ಮೊದಲ ಬಾರಿಗೆ 90 ಮೀಟರ್ ತಡೆಗೋಡೆ ಮುರಿಯಲು ಸಾಧ್ಯವಾಯಿತು. ವಿಶ್ವ ಚಾಂಪಿಯನ್ಶಿಪ್ ಹೊರತುಪಡಿಸಿ ಉಳಿದ ಟೂರ್ನಿಗಳಲ್ಲಿ ಎರಡನೇ ಸ್ಥಾನ ಪಡೆದರು. ಇದು ಕಳಪೆ ದಾಖಲೆಯಲ್ಲ. ದುರದೃಷ್ಟವಶಾತ್ ಟೋಕಿಯೊಗೆ ತೆರಳಲು 12 ದಿನಗಳ ಮೊದಲು ಬೆನ್ನುನೋವಿಗೆ ಒಳಗಾದದ್ದು ಅವರ ಅವಕಾಶಗಳ ಮೇಲೆ ಪರಿಣಾಮ ಬೀರಿತು’’ ಎಂದು ಝೆಲೆಝ್ನಿ ಹೇಳಿದ್ದಾರೆ. ‘‘2026ರಲ್ಲಿ ಉತ್ತಮ ಸಾಧನೆ ಮಾಡಲು ಎದುರು ನೋಡುತ್ತಿದ್ದೇನೆ. ನವೆಂಬರ್ ಆರಂಭದಲ್ಲಿ ನಾನು ತಯಾರಿಯನ್ನು ಆರಂಭಿಸಿದ್ದೇನೆ. ಆರೋಗ್ಯವಾಗಿರುವುದು ಎಂದಿನಂತೆ ನನ್ನ ಮುಖ್ಯ ಉದ್ದೇಶ. ಶೀಘ್ರದಲ್ಲೇ ಸ್ಪರ್ಧಿಸಲು ಉತ್ಸುಕನಾಗಿದ್ದೇನೆ. ವಿಶೇಷವಾಗಿ 2027ರ ವಿಶ್ವ ಚಾಂಪಿಯನ್ಶಿಪ್ ಹಾಗೂ 2028ರ ಒಲಿಂಪಿಕ್ಸ್ ಕ್ರೀಡಾಕೂಟಗಳತ್ತ ಗಮನ ಹರಿಸುತ್ತಿದ್ದೇನೆ’’ ಎಂದು ನೀರಜ್ ಹೇಳಿದ್ದಾರೆ. ನೀರಜ್ ಚೋಪ್ರಾ ಅವರು ಕಳೆದ ವರ್ಷ ದೋಹಾ ಡೈಮಂಡ್ ಲೀಗ್ನಲ್ಲಿ 90 ಮೀಟರ್ ದೂರಕ್ಕೆ ಜಾವೆಲಿನ್ ಎಸೆದ ಬಳಿಕ ವಿಶ್ವ ಚಾಂಪಿಯನ್ಶಿಪ್ನಲ್ಲಿ ಎಂಟನೇ ಸ್ಥಾನ ಪಡೆದಿದ್ದರು.
Brisbane International ಟೆನಿಸ್ ಟೂರ್ನಿ | ಸತತ ಮೂರನೇ ಬಾರಿ ಸಬಲೆಂಕಾ ಫೈನಲ್ ಗೆ
ಬ್ರಿಸ್ಬೇನ್, ಜ.10: ಬೆಲಾರುಸ್ ಆಟಗಾರ್ತಿ ಆರ್ಯನಾ ಸಬಲೆಂಕಾ ಝೆಕ್ ಆಟಗಾರ್ತಿ ಕರೊಲಿನಾ ಮುಚೋವಾರನ್ನು ನೇರ ಸೆಟ್ ಗಳ ಅಂತರದಿಂದ ಮಣಿಸುವ ಮೂಲಕ ಬ್ರಿಸ್ಬೇನ್ ಇಂಟರ್ನ್ಯಾಶನಲ್ ಟೆನಿಸ್ ಟೂರ್ನಿಯಲ್ಲಿ ಸತತ ಮೂರನೇ ಬಾರಿ ಫೈನಲ್ ಗೆ ಪ್ರವೇಶಿಸಿದ್ದಾರೆ. ಆಸ್ಟ್ರೇಲಿಯನ್ ಓಪನ್ ಟೂರ್ನಿ ಆರಂಭವಾಗಲು ಇನ್ನೊಂದು ವಾರ ಬಾಕಿ ಇರುವಾಗ ಸಬಲೆಂಕಾ ಈ ಸಾಧನೆ ಮಾಡಿದ್ದಾರೆ. ಶನಿವಾರ 89 ನಿಮಿಷಗಳ ಕಾಲ ನಡೆದ ಮಹಿಳೆಯರ ಸಿಂಗಲ್ಸ್ ವಿಭಾಗದ ಸೆಮಿ ಫೈನಲ್ ನಲ್ಲಿ ಸಬಲೆಂಕಾ ಅವರು ಮುಚೋವಾರನ್ನು 6-3, 6-4 ನೇರ ಸೆಟ್ಗಳ ಅಂತರದಿಂದ ಸದೆಬಡಿದರು. ಸಬಲೆಂಕಾ ಅವರು ಹಿಂದಿನ ಮೂರು ಮುಖಾಮುಖಿಗಳಲ್ಲಿ ಮುಚೋವಾ ವಿರುದ್ಧ ಸೋತಿದ್ದರು. ಇಂದಿನ ಪಂದ್ಯದಲ್ಲಿ ಅವರು ಉತ್ತಮ ಟಚ್ನಲ್ಲಿದ್ದಂತೆ ಕಾಣಿಸಿಕೊಂಡರು. ‘‘ನಾನು ಈ ಹಿಂದೆ ಹಲವು ಬಾರಿ ಮುಚೋವಾ ವಿರುದ್ಧದ ಪಂದ್ಯಗಳಲ್ಲಿ ಪರದಾಟ ನಡೆಸಿದ್ದೆ. ಇಂದು ಆರಂಭದಲ್ಲೇ ಪಂದ್ಯದತ್ತ ಗಮನ ಹರಿಸಿದೆ. ಉತ್ತಮ ಟೆನಿಸ್ ಆಡಲು ಶಕ್ತಳಾಗಿ ಹೆಚ್ಚಿನ ಒತ್ತಡ ಹೇರಿದೆ. ನೇರ ಸೆಟ್ಗಳಿಂದ ಜಯಶಾಲಿಯಾದೆ’’ ಎಂದು ಸಬಲೆಂಕಾ ಹೇಳಿದರು. ‘‘ವಿಶ್ವದ ಅಗ್ರ-10ರಲ್ಲಿ ಸ್ಥಾನ ಪಡೆದ ಏಳು ಆಟಗಾರ್ತಿಯರು ಈ ಪಂದ್ಯಾವಳಿಯಲ್ಲಿ ಆಡಿದ್ದು, ಇದು ಜನವರಿ 18ರಿಂದ ಮೆಲ್ಬರ್ನ್ನಲ್ಲಿ ಆರಂಭವಾಗಲಿರುವ ಆಸ್ಟ್ರೇಲಿಯನ್ ಓಪನ್ಗೆ ತಯಾರಿ ನಡೆಸಲು ಸೂಕ್ತವಾಗಿದೆ. ನಾಲ್ಕು ವರ್ಷಗಳಲ್ಲಿ ಮೂರನೇ ಬಾರಿ ಆಸ್ಟ್ರೇಲಿಯನ್ ಓಪನ್ನಲ್ಲಿ ಜಯಶಾಲಿಯಾಗುವ ಗುರಿ ಇಟ್ಟುಕೊಂಡಿದ್ದೇನೆ’’ ಎಂದು 27ರ ಹರೆಯದ ಸಬಲೆಂಕಾ ಹೇಳಿದರು. ಹಾಲಿ ಚಾಂಪಿಯನ್ ಆಗಿರುವ ಸಬಲೆಂಕಾ ರವಿವಾರ ನಡೆಯಲಿರುವ ಫೈನಲ್ನಲ್ಲಿ ನಾಲ್ಕನೇ ಶ್ರೇಯಾಂಕದ ಜೆಸ್ಸಿಕಾ ಪೆಗುಲಾ ಅಥವಾ ಉಕ್ರೇನ್ ನ ಮಾರ್ಟಾ ಕೊಸ್ಟ್ಯುಕ್ ಅವರನ್ನು ಎದುರಿಸಲಿದ್ದಾರೆ.
Malaysia Open | ಬ್ಯಾಡ್ಮಿಂಟನ್ ಪಂದ್ಯಾವಳಿ ಸೆಮಿ ಫೈನಲ್ ನಲ್ಲಿ ಸೋಲುಂಡ ಸಿಂಧು
ಕೌಲಾಲಂಪುರ, ಜ.10: ಭಾರತೀಯ ಶಟ್ಲರ್ ಪಿ.ವಿ. ಸಿಂಧು ವರ್ಷದ ಮೊದಲ ಮಲೇಶ್ಯ ಓಪನ್ ಸೂಪರ್–1000 ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಅಂತಿಮ ನಾಲ್ಕರ ಹಂತದಲ್ಲೇ ತಮ್ಮ ಅಭಿಯಾನವನ್ನು ಅಂತ್ಯಗೊಳಿಸಿದ್ದಾರೆ. ಶನಿವಾರ ನಡೆದ ಮಹಿಳೆಯರ ಸಿಂಗಲ್ಸ್ ಸೆಮಿ ಫೈನಲ್ನಲ್ಲಿ ಎರಡು ಬಾರಿ ಒಲಿಂಪಿಕ್ಸ್ ಪದಕ ವಿಜೇತೆ ಸಿಂಧು ಅವರು ಚೀನಾದ ವಾಂಗ್ ಝಿಹಿ ವಿರುದ್ಧ 16-21, 15-21 ನೇರ ಗೇಮ್ ಗಳ ಅಂತರದಿಂದ ಸೋಲುಂಡರು. ಕಳೆದ ವರ್ಷ ಅಕ್ಟೋಬರ್ ನಲ್ಲಿ ಕಾಣಿಸಿಕೊಂಡ ಕಾಲಿನ ನೋವಿನಿಂದ ಚೇತರಿಸಿಕೊಂಡ ಬಳಿಕ ಆಡಿದ ತಮ್ಮ ಮೊದಲ ಪಂದ್ಯಾವಳಿಯಲ್ಲಿ ಸಿಂಧು ಅವರು ಸೆಮಿ ಫೈನಲ್ನುದ್ದಕ್ಕೂ ಅನಗತ್ಯ ತಪ್ಪುಗಳನ್ನು ಎಸಗಿದರು. ಸಿಂಧು ಸೋಲಿನೊಂದಿಗೆ ಪ್ರತಿಷ್ಠಿತ ಪಂದ್ಯಾವಳಿಯಲ್ಲಿ ಭಾರತ ತಂಡದ ಅಭಿಯಾನ ಅಂತ್ಯಗೊಂಡಿತು. ಸಿಂಧು ಅವರು ಆಕ್ರಮಣಕಾರಿ ಆರಂಭ ಪಡೆದು ಗರಿಷ್ಠ ರ್ಯಾಂಕಿನ ಎದುರಾಳಿಯ ವಿರುದ್ಧ ಕಠಿಣ ಹೋರಾಟ ನೀಡುತ್ತಾ 5-2 ಮುನ್ನಡೆ ಪಡೆದರು. ಪ್ರತಿರೋಧ ಒಡ್ಡುವಲ್ಲಿ ಯಶಸ್ವಿಯಾದ ವಾಂಗ್ ಸ್ಕೋರನ್ನು ಸಮಬಲಗೊಳಿಸಿದರು. ಚೀನಾ ಶಟ್ಲರ್ ಎಸಗಿದ ಕೆಲವು ತಪ್ಪುಗಳು ಸಿಂಧು ಅವರಿಗೆ 9-7ರಿಂದ ಮುನ್ನಡೆ ಪಡೆಯಲು ಸಹಾಯಮಾಡಿದವು. 13-13ರಿಂದ ಸಮಬಲಗೊಂಡಾಗ ಉಭಯ ಆಟಗಾರ್ತಿಯರು ಲೆಂಗ್ತ್ ಕಾಯ್ದುಕೊಳ್ಳಲು ಪರದಾಟ ನಡೆಸಿದರು. 18-14ರಿಂದ ಮುನ್ನಡೆ ಸಾಧಿಸಿದ ವಾಂಗ್ ಅವರು ಇನ್ನೂ ನಾಲ್ಕು ಅಂಕ ಗಳಿಸಿ ಮೊದಲ ಗೇಮ್ ಅನ್ನು ವಶಪಡಿಸಿಕೊಂಡರು. ಎರಡನೇ ಗೇಮ್ನ ಆರಂಭದಲ್ಲೇ ಅನಗತ್ಯ ತಪ್ಪುಗಳನ್ನು ಎಸಗಿದ ಸಿಂಧು 1-3 ಅಂತರದಿಂದ ಹಿನ್ನಡೆ ಅನುಭವಿಸಿದರು. ಆದರೆ ತಕ್ಷಣವೇ ತಮ್ಮ ತಪ್ಪುಗಳನ್ನು ತಿದ್ದಿಕೊಂಡು 6-3ರಿಂದ ಮುನ್ನಡೆ ಸಾಧಿಸಿದರು. ಮಧ್ಯಂತರದಲ್ಲಿ ಸಿಂಧು 11-6 ಮುನ್ನಡೆಯಲ್ಲಿದ್ದರು. ವಿರಾಮದ ಬಳಿಕ ವಾಂಗ್ ಭಾರೀ ಹುಮ್ಮಸ್ಸಿನಲ್ಲಿ ಆಡಿದರೂ ಸಿಂಧು 13-9ರಿಂದ ಮುನ್ನಡೆಯಲ್ಲಿದ್ದರು. ಆದರೆ ವಾಂಗ್ ಮತ್ತೊಮ್ಮೆ ಪುಟಿದು ನಿಂತು ಸ್ಕೋರನ್ನು 13-13ರಿಂದ ಸಮಬಲಗೊಳಿಸಿ ಪಂದ್ಯದ ಮೇಲೆ ಹಿಡಿತ ಸಾಧಿಸಿದರು. ಐದು ಮ್ಯಾಚ್ ಪಾಯಿಂಟ್ಗಳನ್ನು ಪಡೆದ ವಾಂಗ್ ಅವರು 21-15 ಅಂತರದಿಂದ ಎರಡನೇ ಗೇಮ್ ಗೆದ್ದುಕೊಂಡು ಫೈನಲ್ ನಲ್ಲಿ ಸ್ಥಾನ ಗಿಟ್ಟಿಸಿಕೊಂಡರು.
ಶೀರೂರು ಪರ್ಯಾಯಕ್ಕೆ ಡಿ.ಕೆ.ಶಿವಕುಮಾರ್ಗೆ ಆಮಂತ್ರಣ
ಉಡುಪಿ: ಜ.18ರಂದು ನಡೆಯುವ ಶ್ರೀಕೃಷ್ಣ ಮಠದ ದ್ವೈವಾರ್ಷಿಕ ಪರ್ಯಾಯ ಮಹೋತ್ಸವಕ್ಕೆ ರಾಜ್ಯದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಪರ್ಯಾಯ ಸ್ವಾಗತ ಸಮಿತಿಯ ಅಧ್ಯಕ್ಷರಾದ ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಮಂಗಳೂರಿನಲ್ಲಿ ಭೇಟಿ ಮಾಡಿ ಆಹ್ವಾನಿಸಿದರು. ಶೀರೂರು ಮಠದ ಶ್ರೀವೇದವರ್ಧನ ತೀರ್ಥ ಶ್ರೀಪಾದರು ಈ ಬಾರಿ ಪರ್ಯಾಯ ಪೀಠಾರೋಹಣ ಮಾಡಲಿದ್ದು, ಯಶಪಾಲ್ ಸುವರ್ಣ ಅವರು ಶೀರೂರು ಪರ್ಯಾಯದ ಆಮಂತ್ರಣ ಪತ್ರಿಕೆಯನ್ನು ನೀಡಿ ಡಿಕೆಶಿ ಅವರನ್ನು ಪರ್ಯಾಯಕ್ಕೆ ಆಹ್ವಾನಿಸಿದರು. ಈ ಸಂದರ್ಭದಲ್ಲಿ ಡಿಕೆಶಿ ಪರ್ಯಾಯದ ಕಾರ್ಯಕ್ರಮಗಳಲ್ಲಿ ಭಾಗವ ಹಿಸುವ ಇಚ್ಛೆಯನ್ನು ವ್ಯಕ್ತಪಡಿಸಿದರು. ಸ್ವಾಗತ ಸಮಿತಿ ಕೋಶಾಧಿಕಾರಿ ಜಯಪ್ರಕಾಶ್ ಕೆದ್ಲಾಯ, ವಿಷ್ಣುಮೂರ್ತಿ ಆಚಾರ್ಯ, ಪ್ರಚಾರ ಸಮಿತಿ ಸಂಚಾಲಕ ನಂದನ್ ಜೈನ್ ಈ ವೇಳೆ ಉಪಸ್ಥಿತರಿದ್ದರು.
ಹಾಲುಮತದವರ ಕೈಗೆ ಅಧಿಕಾರ ಬಂದರೆ.... : ಸಿಎಂ ಬದಲಾವಣೆ ಚರ್ಚೆ ನಡುವೆ ಕೋಡಿಮಠ ಶ್ರೀ ಸ್ಫೋಟಕ ಭವಿಷ್ಯ
ಮುಖ್ಯಮಂತ್ರಿ ಬದಲಾವಣೆ ಕುರಿತು ಕೋಡಿಮಠದ ಶ್ರೀಗಳು ಭವಿಷ್ಯ ನುಡಿದಿದ್ದು, ಯುಗಾದಿಯ ನಂತರವೇ ಬದಲಾವಣೆ ಸಾಧ್ಯತೆ ಇದೆ ಎಂದಿದ್ದಾರೆ. ಹಾಲುಮತ ಸಮಾಜಕ್ಕೆ ಅಧಿಕಾರ ಸಿಕ್ಕಿರುವುದರಿಂದ ಸಿದ್ದರಾಮಯ್ಯನವರನ್ನು ಬದಲಾಯಿಸುವುದು ಕಷ್ಟ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. 2026ರಲ್ಲಿ ಭಾರತಕ್ಕೆ ಹೆಚ್ಚಿನ ಅಪಾಯವಿದ್ದು, ಜಾಗತಿಕವಾಗಿ ದೇಶಗಳು ನಾಶವಾಗುವ ಸಾಧ್ಯತೆ ಇದೆ ಎಂದು ಎಚ್ಚರಿಸಿದ್ದಾರೆ.
Pariksha Pe Charcha 2026: ನೋಂದಣಿಯಲ್ಲಿ ಭಾರೀ ದಾಖಲೆ ಬರೆದ ಪರೀಕ್ಷಾ ಪೇ ಚರ್ಚಾ, ಇನ್ನೊಂದೇ ದಿನ ಬಾಕಿ
ಪ್ರಧಾನಿ ನರೇಂದ್ರ ಮೋದಿಯವರ ಅತ್ಯಂತ ಜನಪ್ರಿಯ ಪರೀಕ್ಷಾ ಪೇ ಚರ್ಚಾ (ಪಿಪಿಸಿ) ಸಂವಾದ ಕಾರ್ಯಕ್ರಮವು ಈ ವರ್ಷ ಇತಿಹಾಸ ಸೃಷ್ಟಿಸಲು ಮುಂದಾಗಿದೆ ಸಜ್ಜಾಗಿದೆ. ಪರೀಕ್ಷಾ ಒತ್ತಡವನ್ನು ಒಂದು ಆಚರಣೆಯಾಗಿ ಪರಿವರ್ತಿಸುವ ಗುರಿಯೊಂದಿಗೆ ಪ್ರಾರಂಭಿಸಲಾದ ಈ ಉಪಕ್ರಮವು ಈಗ ವಿಶ್ವದ ಅತಿದೊಡ್ಡ ಶೈಕ್ಷಣಿಕ ಸಂವಾದ ವೇದಿಕೆಯಾಗಿ ಹೊರಹೊಮ್ಮಿದೆ. 2026ರ ಆವೃತ್ತಿಯು ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪೋಷಕರಲ್ಲಿ ಅಭೂತಪೂರ್ವ ಉತ್ಸಾಹಕ್ಕೆ
ಅನಾಥ ಮಕ್ಕಳನ್ನು ಮೀಸಲಾತಿ ವ್ಯಾಪ್ತಿಗೆ ತಂದಿದ್ದು ತೃಪ್ತಿದಾಯಕ ಕ್ಷಣ: ಹಿರಿಯ ರಾಜಕಾರಣಿ ಜಯಪ್ರಕಾಶ್ ಹೆಗ್ಡೆ
ಐವರು ಸಾಧಕರಿಗೆ ಮಣಿಪಾಲ ಸಮೂಹದ ‘ಹೊಸ ವರ್ಷದ ಪ್ರಶಸ್ತಿ’ ಪ್ರದಾನ
ಸಹ-ವಾಸಿ ಸಂಗಾತಿಯನ್ನು ಪಿಂಚಣಿಗೆ ಪರಿಗಣಿಸಿ ಕೇಂದ್ರ ಸರಕಾರಕ್ಕೆ DELHI ಹೈಕೋರ್ಟ್ ನಿರ್ದೇಶನ
ಹೊಸದಿಲ್ಲಿ, ಜ. 10: ಕುಟುಂಬ ಪಿಂಚಣಿ ಮತ್ತು ಆರೋಗ್ಯ ರಕ್ಷಣೆ ಸೌಲಭ್ಯಗಳಿಗಾಗಿ ಪಿಂಚಣಿ ಪಾವತಿ ಆದೇಶದಲ್ಲಿ ತನ್ನ 40 ವರ್ಷಗಳಿಗೂ ಅಧಿಕ ಅವಧಿಯ ಸಹ-ವಾಸಿ ಸಂಗಾತಿ ಹಾಗೂ ತಮ್ಮ ಮಕ್ಕಳನ್ನು ಸೇರ್ಪಡೆಗೊಳಿಸುವಂತೆ ಕೋರಿ ನಿವೃತ್ತ ಸರಕಾರಿ ಉದ್ಯೋಗಿಯೊಬ್ಬರು ಸಲ್ಲಿಸಿದ್ದ ಮನವಿಯನ್ನು ಪರಿಗಣಿಸುವಂತೆ ದಿಲ್ಲಿ ಹೈಕೋರ್ಟ್ ಕೇಂದ್ರ ಸರಕಾರಕ್ಕೆ ನಿರ್ದೇಶನ ನೀಡಿದೆ. ಅರ್ಜಿದಾರ ಸರಕಾರಿ ಉದ್ಯೋಗಿಯು ತನ್ನ ಸಂಬಂಧವನ್ನು ಯಾವತ್ತೂ ಮುಚ್ಚಿಡಲಿಲ್ಲ ಎಂದು ನ್ಯಾಯಮೂರ್ತಿಗಳಾದ ನವೀನ್ ಚಾವ್ಲ ಮತ್ತು ಮಧು ಜೈನ್ ಅವರನ್ನೊಳಗೊಂಡ ನ್ಯಾಯಪೀಠ ಹೇಳಿದೆ. ತನ್ನ ಸಂಗಾತಿ ಮತ್ತು ಮಕ್ಕಳನ್ನು ತನ್ನ ಕುಟುಂಬವಾಗಿ ಪರಿಗಣಿಸಬೇಕೆನ್ನುವ ಮನವಿಯನ್ನು ‘‘ತೀವ್ರ ದುರ್ನಡತೆ’’ ಎಂದು ಪರಿಗಣಿಸಿ ನಿವೃತ್ತಿ ನಂತರದ ಸವಲತ್ತುಗಳನ್ನು ನಿರಾಕರಿಸುವುದು ತಪ್ಪು ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಇದರೊಂದಿಗೆ, ಮಾಸಿಕ ಪಿಂಚಣಿ ಮತ್ತು ಗ್ರಾಚ್ಯುಯಿಟಿಯ 50 ಶೇಕಡ ಭಾಗವನ್ನು ತಡೆಹಿಡಿಯುವ ಅಧಿಕಾರಿಗಳ ನಿರ್ಧಾರವನ್ನು ಎತ್ತಿಹಿಡಿದ ಕೇಂದ್ರೀಯ ಆಡಳಿತಾತ್ಮಕ ನ್ಯಾಯಮಂಡಳಿಯ 2018ರ ಆದೇಶವನ್ನು ನ್ಯಾಯಾಲಯ ರದ್ದುಗೊಳಿಸಿದೆ. ‘‘ಅರ್ಜಿದಾರರ ತಿಂಗಳ ಪಿಂಚಣಿ ಮತ್ತು ಗ್ರಾಚ್ಯುಯಿಟಿಯ 50 ಶೇಕಡವನ್ನು ಶಾಶ್ವತವಾಗಿ ತಡೆಹಿಡಿಯುವ ಅಥವಾ ಅರ್ಜಿದಾರರ ಆಶ್ರಿತರಿಗೆ ಕುಟುಂಬ ಪಿಂಚಣಿಯನ್ನು ನಿರಾಕರಿಸುವ ಪ್ರತಿವಾದಿಗಳ (ಸರಕಾರ) ನಿರ್ಧಾರದಲ್ಲಿ ನಮಗೆ ಸಕಾರಣ ಕಾಣುವುದಿಲ್ಲ’’ ಎಂದು ಇತ್ತೀಚೆಗೆ ನೀಡಿದ ತೀರ್ಪಿನಲ್ಲಿ ನ್ಯಾಯಾಲಯ ಹೇಳಿದೆ.
ಬೆಂಗಳೂರು ಮೂಲದ ಕಂಪನಿ ಸೇರಿ ಮುಂದಿನ ವಾರ ಬರಲಿವೆ 6 ಐಪಿಒಗಳು, ಹೂಡಿಕೆದಾರರಿಗೆ ಸಂಕ್ರಾಂತಿ ಸುಗ್ಗಿ
ಷೇರು ಮಾರುಕಟ್ಟೆಯಲ್ಲಿ ಮುಂದಿನ ವಾರ (ಜನವರಿ 12 ರಿಂದ 16) ಐಪಿಒಗಳ ಸುಗ್ಗಿ ನಡೆಯಲಿದೆ. ಬೆಂಗಳೂರು ಮೂಲದ 'ಅಮಾಜಿ ಮೀಡಿಯಾ ಲ್ಯಾಬ್ಸ್' ಸೇರಿದಂತೆ ಒಟ್ಟು ಆರು ಕಂಪನಿಗಳು ಬಂಡವಾಳ ಸಂಗ್ರಹಕ್ಕೆ ಇಳಿಯಲಿವೆ. ಇದರಲ್ಲಿ ಅಮಾಜಿ ಮಾತ್ರ ಮೇನ್ಬೋರ್ಡ್ ಐಪಿಒ ಆಗಿದ್ದು, ಉಳಿದ ಐದು ಎಸ್ಎಂಇ (ಎಸ್ಎಂಇ) ವಲಯದ ಐಪಿಒಗಳಾಗಿವೆ. ಇದಲ್ಲದೆ, ಈಗಾಗಲೇ ಉತ್ತಮ ಪ್ರತಿಕ್ರಿಯೆ ಪಡೆದಿರುವ ಭಾರತ್ ಕೋಕಿಂಗ್ ಕೋಲ್ ಷೇರು ಮಾರುಕಟ್ಟೆಗೆ ಲಿಸ್ಟಿಂಗ್ ಆಗಲು ಸಜ್ಜಾಗಿದೆ.
ಬೆಂಗಳೂರು : ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಜಾಗತಿಕ ಗುಣಮಟ್ಟದ ಕ್ರೀಡಾ ಮೂಲಸೌಕರ್ಯ ಕಲ್ಪಿಸುವ ಉದ್ದೇಶಕ್ಕಾಗಿ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರ ಮನವಿಯ ಮೇರೆಗೆ ಕೇಂದ್ರ ಸರಕಾರವು 14 ಕೋಟಿ ರೂ.ಮಂಜೂರು ಮಾಡಿದೆ. ಮಂಡ್ಯ ಜಿಲ್ಲೆಯಲ್ಲಿ ಕ್ರೀಡಾ ಸೌಕರ್ಯವನ್ನು ಉತ್ತಮಪಡಿಸುವ ನಿಟ್ಟಿನಲ್ಲಿ ಕುಮಾರಸ್ವಾಮಿ ಅವರು ಕೇಂದ್ರದ ಕ್ರೀಡಾ ಮತ್ತು ಯುವಜನ ಸಬಲೀಕರಣ ಖಾತೆ ಸಚಿವ ಮನ್ಸುಖ್ ಮಾಂಡವೀಯ ಅವರಿಗೆ ಪತ್ರ ಬರೆದು ವಿನಂತಿಸಿದ್ದರು. ಅದಕ್ಕೆ ಸ್ಪಂದಿಸಿ, ಖೇಲೋ ಇಂಡಿಯಾ ಯೋಜನೆಯಡಿ ಮಂಡ್ಯ ಜಿಲ್ಲೆಯಲ್ಲಿ ಬಹುಪಯೋಗಿ ಕ್ರೀಡಾ ಸೌಲಭ್ಯ ನಿರ್ಮಾಣಕ್ಕೆ 14 ಕೋಟಿ ರೂ.ಗಳನ್ನು ಕ್ರೀಡಾ ಸಚಿವರು ಮಂಜೂರು ಮಾಡಿದ್ದಾರೆ. ಈ ಅನುಮೋದಿತ ವೆಚ್ಚದಲ್ಲಿ ಮಂಡ್ಯದ ಕೃಷಿ ವಿಜ್ಞಾನ ವಿಶ್ವವಿದ್ಯಾಲಯದಲ್ಲಿ ಬಹುಪಯೋಗಿ ಒಳಾಂಗಣ ಕ್ರೀಡಾಂಗಣ ನಿರ್ಮಾಣಕ್ಕೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ಮಂಡ್ಯ ಜಿಲ್ಲೆಯ ಅನೇಕ ಕ್ರೀಡಾಪಟುಗಳು ರಾಷ್ಟ್ರೀಯ ಮತ್ತು ಅಂತರ್ರಾಷ್ಟ್ರೀಯ ಮಟ್ಟದಲ್ಲಿ ರಾಜ್ಯ ಮತ್ತು ರಾಷ್ಟ್ರವನ್ನು ಪ್ರತಿನಿಧಿಸಿದ್ದಾರೆ. ಅನೇಕ ಯುವ ಪ್ರತಿಭೆಗಳು ಜಿಲ್ಲೆಯಲ್ಲಿ ಅವಕಾಶ ಸಿಗದೆ ಹೊರ ಭಾಗಗಳಲ್ಲಿ ತರಬೇತಿಗೆ ಹೋಗುತ್ತಿದ್ದಾರೆ ಎಂದು ಕುಮಾರಸ್ವಾಮಿ ತಿಳಿಸಿದ್ದಾರೆ. ಅನೇಕ ಕ್ರೀಡಾಪಟುಗಳು ರಾಷ್ಟ್ರೀಯ ಶಿಬಿರಗಳಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಇಂತಹ ಸೌಕರ್ಯವನ್ನು ಮಂಡ್ಯದಲ್ಲಿಯೆ ಒದಗಿಸುವ ಉದೇಶದಿಂದ ಈ ಯೋಜನೆಯನ್ನು ಅನುಷ್ಠಾನಕ್ಕೆ ತರಲಾಗುತ್ತಿದೆ. ಇದು ಉತ್ತಮ ಯೋಜನೆಯಾಗಿದೆ. ನನ್ನ ಮನವಿಗೆ ಸ್ಪಂದಿಸಿದ ಕೇಂದ್ರ ಕ್ರೀಡಾ ಸಚಿವ ಮನ್ಸುಖ್ ಮಾಂಡವೀಯ ಅವರಿಗೆ ಧನ್ಯವಾದ ಎಂದು ಕುಮಾರಸ್ವಾಮಿ ಹೇಳಿದ್ದಾರೆ. ಜಿಲ್ಲೆಯ ಕ್ರೀಡೆಗೆ ಬಹುದೊಡ್ಡ ಉತ್ತೇಜನ: ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಸರಕಾರವು ದೇಶದ ಉದ್ದಗಲಕ್ಕೂ ಜಾಗತಿಕ ಗುಣಮಟ್ಟದ ಕ್ರೀಡಾ ಸೌಕರ್ಯ ಅಭಿವೃದ್ಧಿಪಡಿಸಿ ಗ್ರಾಮೀಣ ಮಟ್ಟದ ಕ್ರೀಡಾಪಟುಗಳಿಗೆ ಪ್ರೋ ತ್ಸಾಹ ನೀಡುತ್ತಿದೆ. ಈ ಯೋಜನೆಯ ಭಾಗವಾಗಿ ಮಂಡ್ಯದಲ್ಲಿ 14 ಕೋಟಿ ರೂ.ವೆಚ್ಚದಲ್ಲಿ ಅತ್ಯುತ್ತಮ ಗುಣಮಟ್ಟದ ಕ್ರೀಡಾ ಸೌಲಭ್ಯವನ್ನು ನಿರ್ಮಾಣ ಮಾಡಲಾಗುವುದು ಎಂದು ಕುಮಾರಸ್ವಾಮಿ ತಿಳಿಸಿದ್ದಾರೆ. ಬಹುಪಯೋಗಿ ಕ್ರೀಡಾ ಸೌಲಭ್ಯಕ್ಕೆ ಈಗ ಅನುಮೋದನೆ ದೊರೆತಿರುವುದರಿಂದ ಮಂಡ್ಯ ಕ್ರೀಡಾ ಅಭಿವೃದ್ಧಿ ಮತ್ತು ಉತ್ತೇಜನದಲ್ಲಿ ಹೊಸ ಯುಗಕ್ಕೆ ನಾಂದಿಯಾಗಲಿದೆ. ಈ ಕ್ರೀಡಾ ಸಮುಚ್ಚಯದಲ್ಲಿ ಯುವ ಕ್ರೀಡಾಪಟುಗಳ ತರಬೇತಿ, ಜಿಲ್ಲಾ ಮತ್ತು ರಾಜ್ಯ ಮಟ್ಟದ ಸ್ಪರ್ಧೆಗಳನ್ನು ಆಯೋಜಿಸುವುದು, ಸಾರ್ವಜನಿಕರಲ್ಲಿ ಫಿಟ್ನೆಸ್ ಅನ್ನು ಉತ್ತೇಜಿಸುವ ಸೌಲಭ್ಯಗಳನ್ನು ಕಲ್ಪಿಸಲಾಗುತ್ತದೆ. ಈ ಮಂಜೂರಾತಿಯು ಮಂಡ್ಯಕ್ಕೆ ಮಹತ್ವದ ಕೊಡುಗೆಯಾಗಿದೆ ಎಂದು ಅವರು ಹೇಳಿದ್ದಾರೆ. ಕೃಷಿ ಆಧರಿತವಾದ ಮಂಡ್ಯ ಜಿಲ್ಲೆಯೂ ಪ್ರತಿಭೆಗಳ ಆಗರ. ಆನೇಕ ಪ್ರತಿಭಾವಂತರು ರಾಷ್ಟ್ರ, ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗಳಿಸಿದ್ದಾರೆ. ಈ ನಿಟ್ಟಿನಲ್ಲಿ ಕ್ರೀಡೆಯನ್ನು ಉತ್ತೇಜಿಸುವುದು ಅಗತ್ಯವಾಗಿದೆ. ಆರೋಗ್ಯವಂತ ಸಶಕ್ತ ಮಂಡ್ಯ ಜಿಲ್ಲೆ ನಿರ್ಮಾಣಕ್ಕೆ ಈ ಯೋಜನೆ ಪೂರಕವಾಗಿದೆ. ಇದು ಪ್ರಧಾನಿ ಮೋದಿ ಅವರ ಕನಸು ಕೂಡ ಆಗಿದೆ ಎಂದು ಕುಮಾರಸ್ವಾಮಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮಾಜಿ ಕ್ರಿಕೆಟಿಗ ರಾಬಿನ್ ಉತ್ತಪ್ಪ ವಿರಾಟ್ ಕೊಹ್ಲಿ ಅವರನ್ನು ಟೆಸ್ಟ್ ಕ್ರಿಕೆಟ್ಗೆ ಮರಳುವಂತೆ ಮನವಿ ಮಾಡಿದ್ದಾರೆ. ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮುಂಬರುವ ಏಕದಿನ ಸರಣಿಗೆ ಸಿದ್ಧತೆಗಳು ನಡೆಯುತ್ತಿವೆ. ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರ ಫಾರ್ಮ್ ಭಾರತಕ್ಕೆ ಆಶಾದಾಯಕವಾಗಿದೆ. ಗಿಲ್, ಅಯ್ಯರ್, ರಾಹುಲ್, ಪಂತ್ ಅವರ ಸ್ಥಾನಗಳ ಬಗ್ಗೆಯೂ ಚರ್ಚಿಸಲಾಗಿದೆ. ಬುಮ್ರಾ ಮತ್ತು ಪಾಂಡ್ಯ ವಿಶ್ರಾಂತಿ ಪಡೆಯುತ್ತಿದ್ದಾರೆ. ನ್ಯೂಜಿಲೆಂಡ್ ತಂಡವು ಕೆಲವು ಪ್ರಮುಖ ಆಟಗಾರರ ಅನುಪಸ್ಥಿತಿಯಲ್ಲಿ ಸರಣಿ ಆಡಲಿದೆ.
Meghalaya | ಯುವಕನ ಹತ್ಯೆ; ಮೂವರ ಬಂಧನ: ಕೋಮು ಸಾಮರಸ್ಯಕ್ಕೆ ಸಿಎಂ ಕರೆ
ಗುವಾಹಟಿ, ಜ.10: ಬಾಂಗ್ಲಾದೇಶ ಗಡಿಗೆ ಹೊಂದಿಕೊಂಡಿರುವ ಮೇಘಾಲಯದ ಪಶ್ಚಿಮ ಗ್ಯಾರೋ ಹಿಲ್ಸ್ ಜಿಲ್ಲೆಯಲ್ಲಿ ಶುಕ್ರವಾರ ದುಷ್ಕರ್ಮಿಗಳು ನಡೆಸಿದ ದಾಳಿಯಲ್ಲಿ ಓರ್ವ ಯುವಕ ಮೃತಪಟ್ಟಿದ್ದು, ಇನ್ನೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಮುಖ್ಯಮಂತ್ರಿ ಕಾನ್ರಾಡ್ ಕೆ. ಸಂಗ್ಮಾ ಅವರು ಶಾಂತಿ ಮತ್ತು ಕೋಮು ಸಾಮರಸ್ಯವನ್ನು ಕಾಪಾಡುವಂತೆ ಶನಿವಾರ ಜನರಿಗೆ ಮನವಿ ಮಾಡಿದ್ದಾರೆ. ಮೃತ ದಿಲ್ಸೆಂಗ್ ಎಂ. ಸಂಗ್ಮಾ ಗ್ಯಾರೋ ಹಿಲ್ಸ್ನ ‘ಅಚಿಕ್’ ಎಂಬ ಎನ್ಜಿಒದ ಸದಸ್ಯರಾಗಿದ್ದರು. ಜಿಲ್ಲೆಯ ರಾಜಬಾಲಾ ಗ್ರಾಮದ ಸಮೀಪ ನಡೆದ ಈ ಘಟನೆಗೆ ಸಂಬಂಧಿಸಿದಂತೆ ನಿರ್ದಿಷ್ಟ ಸಮುದಾಯಕ್ಕೆ ಸೇರಿದ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಘಟನೆಯನ್ನು ಖಂಡಿಸಿದ ಮುಖ್ಯಮಂತ್ರಿ ಸಂಗ್ಮಾ, ವಿವಿಧ ಸ್ಥಳಗಳಲ್ಲಿ ನಡೆದ ದಾಳಿಗಳ ಬಳಿಕ ಮೂವರನ್ನು ಬಂಧಿಸಲಾಗಿದ್ದು, ಘಟನೆಯಲ್ಲಿ ಭಾಗಿಯಾಗಿರುವ ಇತರರನ್ನು ಪತ್ತೆ ಹಚ್ಚಲು ನಿರಂತರ ಪ್ರಯತ್ನಗಳು ನಡೆಯುತ್ತಿವೆ ಎಂದು ತಿಳಿಸಿದರು. ಶಾಂತಿ ಮತ್ತು ಕೋಮು ಸಾಮರಸ್ಯ ಕಾಪಾಡುವಂತೆ ಕರೆ ನೀಡಿದ ಅವರು, ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ಸುದ್ದಿಗಳನ್ನು ಎಚ್ಚರಿಕೆಯಿಂದ ಪರಿಶೀಲಿಸುವಂತೆ ಮನವಿ ಮಾಡಿದರು. ಈ ಘೋರ ಅಪರಾಧದಲ್ಲಿ ಭಾಗಿಯಾಗಿರುವ ಎಲ್ಲರನ್ನು ನ್ಯಾಯದ ಕಟಕಟೆಗೆ ತರಲಾಗುವುದು ಎಂದು ಅವರು ಭರವಸೆ ನೀಡಿದರು. ಶುಕ್ರವಾರ ಮಧ್ಯಾಹ್ನ ಅಕ್ರಮ ಕಲ್ಲು ಕೋರೆಯೊಂದರ ತಪಾಸಣೆಗಾಗಿ ಯುವಕರ ಗುಂಪೊಂದು ರಾಜಬಾಲಾ ಸಮೀಪ ತೆರಳಿತ್ತು. ವಾಪಸ್ ಬರುತ್ತಿದ್ದ ವೇಳೆ ಮತ್ತೊಂದು ಗುಂಪು ಅವರ ವಾಹನಗಳನ್ನು ತಡೆದಿದೆ. ವಾಗ್ವಾದ ಶೀಘ್ರವೇ ದಾಳಿಗೆ ತಿರುಗಿದ್ದು, ಮೊದಲ ಗುಂಪಿನ ಹೆಚ್ಚಿನವರು ಅಲ್ಲಿಂದ ಪರಾರಿಯಾಗಲು ಯಶಸ್ವಿಯಾದರು. ಇಬ್ಬರು ತೀವ್ರವಾಗಿ ಗಾಯಗೊಂಡು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲ್ಪಟ್ಟಿದ್ದು, ಚಿಕಿತ್ಸೆ ಫಲಕಾರಿಯಾಗದೆ ಒಬ್ಬರು ಮೃತಪಟ್ಟಿದ್ದಾರೆ. ದಾಳಿಯನ್ನು ಯಾರು ನಡೆಸಿದರು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ದಿಲ್ಸೆಂಗ್ ಅವರ ‘ಘೋರ ಮತ್ತು ಕ್ರೂರ’ ಹತ್ಯೆಯನ್ನು ಖಂಡಿಸಿರುವ ಗ್ಯಾರೋ ಸ್ಟುಡೆಂಟ್ಸ್ ಯೂನಿಯನ್, ಘಟನೆಯಲ್ಲಿ ಭಾಗಿಯಾಗಿರುವ ಎಲ್ಲರನ್ನು ತಕ್ಷಣ ಗುರುತಿಸಿ ಬಂಧಿಸುವಂತೆ ಆಗ್ರಹಿಸಿದೆ. ಸ್ಥಳೀಯ ಶಾಸಕ ಡಾ. ಮಿಝನೂರ್ ರಹ್ಮಾನ್ ಕಾಜಿಯವರೂ ಹತ್ಯೆಯನ್ನು ಖಂಡಿಸಿದ್ದಾರೆ.
‘ದುರ್ಬಲ ವರ್ಗಗಳ ಮತಾಧಿಕಾರ ಕಿತ್ತುಕೊಳ್ಳಲು ಸಂಚು’: ಪಶ್ಚಿಮ ಬಂಗಾಳ AERO ರಾಜೀನಾಮೆ
ಕೋಲ್ಕತಾ, ಜ.10: ಪಶ್ಚಿಮ ಬಂಗಾಳದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಗಳ ತೀವ್ರ ಪರಿಷ್ಕರಣೆ (SIR) ಸಂದರ್ಭದಲ್ಲಿ ಮತದಾರರ ಎಣಿಕೆ ಫಾರ್ಮ್ಗಳಲ್ಲಿ ಕಂಡುಬಂದ ತಾರ್ಕಿಕ ವ್ಯತ್ಯಾಸಗಳಿಗೆ ಸಂಬಂಧಿಸಿದ ಕಾರ್ಯವಿಧಾನಗಳನ್ನು ವಿರೋಧಿಸಿ ಹೌರಾ ಜಿಲ್ಲೆಯ ಸಹಾಯಕ ಚುನಾವಣಾ ನೋಂದಣಿ ಅಧಿಕಾರಿ (AERO) ಒಬ್ಬರು ರಾಜೀನಾಮೆ ಸಲ್ಲಿಸಿದ್ದಾರೆ. ಇದು ದುರ್ಬಲ ವರ್ಗಗಳಿಗೆ ಸೇರಿದ ಭಾರೀ ಸಂಖ್ಯೆಯ ಜನರ ಮತದಾನದ ಹಕ್ಕನ್ನು ಕಿತ್ತುಕೊಳ್ಳುವ ಸಂಚು ಎಂದು ಅವರು ಆರೋಪಿಸಿದ್ದಾರೆ. ಪಶ್ಚಿಮ ಬಂಗಾಳ ನಾಗರಿಕ ಸೇವೆಯ ಬ್ಲಾಕ್ ಡೆವಲಪ್ಮೆಂಟ್ ಆಫೀಸರ್ ದರ್ಜೆಯ ಅಧಿಕಾರಿ ಮೌಸಮಿ ಸರ್ಕಾರ್ ಅವರು ಜ.8ರಂದು ರಾಜೀನಾಮೆ ಸಲ್ಲಿಸಿದ್ದಾರೆ. ಪಶ್ಚಿಮ ಬಂಗಾಳದ ಹೆಚ್ಚುವರಿ ಮುಖ್ಯ ಚುನಾವಣಾಧಿಕಾರಿಗಳು 2025ರ ಡಿಸೆಂಬರ್ 25ರಂದು ಬರೆದ ಪತ್ರದಲ್ಲಿ, ರಾಜ್ಯದಲ್ಲಿ ಹಿಂದಿನ ಎಸ್ಐಆರ್ ನಡೆದಿದ್ದ 2002ರ ಮತದಾರರ ಪಟ್ಟಿಯ ದತ್ತಾಂಶಗಳನ್ನು ಪಿಡಿಎಫ್ನಿಂದ ಸಿಎಸ್ವಿ ಕಡತಗಳಿಗೆ ಪರಿವರ್ತಿಸುವ ವೇಳೆ ಸಂಭವಿಸಿದ ವಿರಳ ದೋಷಗಳಿಂದಾಗಿ ಬಿಎಲ್ಒ ಆ್ಯಪ್ಗಳಲ್ಲಿ ತಾರ್ಕಿಕ ವ್ಯತ್ಯಾಸಗಳು ಕಾಣಿಸಿಕೊಂಡಿವೆ ಎಂದು ಒಪ್ಪಿಕೊಂಡಿದ್ದಾರೆ. 2002ರ ಪಟ್ಟಿಗಳಲ್ಲಿನ ಹೆಸರುಗಳ ಕಾಗುಣಿತವನ್ನು ಯಥಾಸ್ಥಿತಿಯಲ್ಲೇ ಉಳಿಸಿಕೊಳ್ಳಲಾಗಿತ್ತು. ಆದರೆ ನಂತರ ಚುನಾವಣಾ ಆಯೋಗದ ನಿಯಮಗಳಿಗೆ ಅನುಗುಣವಾಗಿ ಫಾರ್ಮ್–8ರ ಮೂಲಕ ಅನೇಕ ಹೆಸರುಗಳನ್ನು ಸರಿಪಡಿಸಲಾಗಿದೆ. ವಂಶಾನುಕ್ರಮ ಮ್ಯಾಪಿಂಗ್ ಪ್ರಕರಣಗಳಲ್ಲಿ ತಂದೆಯ ಹೆಸರಿನ ಹೊಂದಾಣಿಕೆ ತಪ್ಪಿದ್ದಕ್ಕೆ ಇದುವೇ ಪ್ರಮುಖ ಕಾರಣ ಎಂದು ಸರ್ಕಾರ್ ತಮ್ಮ ರಾಜೀನಾಮೆ ಪತ್ರದಲ್ಲಿ ತಿಳಿಸಿದ್ದಾರೆ. ಹಲವು ಪ್ರಕರಣಗಳಲ್ಲಿ 2002ರ ಪಟ್ಟಿಯಲ್ಲಿನ ಹೆಸರುಗಳ ವಯಸ್ಸು ಮತ್ತು ಲಿಂಗ ದೋಷಪೂರಿತವಾಗಿದ್ದವು. ಅವುಗಳನ್ನೂ ನಂತರ ಫಾರ್ಮ್–8ರ ಮೂಲಕ ಸರಿಪಡಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. ಅನೇಕ ಪ್ರಕರಣಗಳಲ್ಲಿ ಮತದಾರರ ಹೆಸರುಗಳು ‘Ya’ ಎಂದು ಕಾಣಿಸಿಕೊಂಡಿವೆ ಎಂದು ಉಲ್ಲೇಖಿಸಿರುವ ಸರ್ಕಾರ್, ಭಾರತದಲ್ಲಿ ಈ ರೀತಿಯ ಹೆಸರು ಹೊಂದಿರುವ ಜನರಿರುವ ಸಾಧ್ಯತೆಯಿಲ್ಲ ಎಂದು ಹೇಳಿದ್ದಾರೆ. ‘ಒಬ್ಬ ಜವಾಬ್ದಾರಿಯುತ ಪ್ರಜೆಯಾಗಿ, ಈ ರೀತಿಯ ತಾರ್ಕಿಕ ವ್ಯತ್ಯಾಸಗಳಿಗೆ ಯಾವುದೇ ಅರ್ಥವಿಲ್ಲ ಎಂದು ನಾನು ಭಾವಿಸಿದ್ದೇನೆ. ಇದು ಎಣಿಕೆ ಫಾರ್ಮ್ಗಳ ಮೂಲಕ ತಮ್ಮ ಹೇಳಿಕೆಯ ಸತ್ಯಾಸತ್ಯತೆಯನ್ನು ಸಾಬೀತುಪಡಿಸಲು ಚುನಾವಣಾ ಆಯೋಗ ಅಗತ್ಯವಾಗಿಸಿರುವ 12 ದಾಖಲೆಗಳ ಪೈಕಿ ಒಂದನ್ನೂ ಹೊಂದಿರದ ದುರ್ಬಲ ವರ್ಗಗಳ ದೊಡ್ಡ ಸಂಖ್ಯೆಯ ಜನರ ಮತದಾನದ ಹಕ್ಕನ್ನು ಕಿತ್ತುಕೊಳ್ಳುವ ಸಂಚು ಆಗಿದೆ. ಆದ್ದರಿಂದ, ನಾನು ನನ್ನ ದೇಶವಾಸಿಗಳು ಹಾಗೂ ರಾಷ್ಟ್ರಕ್ಕೆ ಪ್ರಜ್ಞಾಪೂರ್ವಕವಾಗಿ ಮೋಸ ಮಾಡುತ್ತಿಲ್ಲ ಎಂಬ ಸಮಾಧಾನ ಹೊಂದಲು ಎಇಆರ್ಒ ಹುದ್ದೆಗೆ ರಾಜೀನಾಮೆ ಸಲ್ಲಿಸುತ್ತಿದ್ದೇನೆ. ಅಗತ್ಯವಿದ್ದಲ್ಲಿ ಚುನಾವಣಾ ಆಯೋಗ ನನಗೆ ವಹಿಸುವ ಇತರ ಕರ್ತವ್ಯಗಳನ್ನು ನಿರ್ವಹಿಸಲು ನಾನು ಸಿದ್ಧಳಿದ್ದೇನೆ’ ಎಂದು ಅವರು ಪತ್ರದಲ್ಲಿ ತಿಳಿಸಿದ್ದಾರೆ. ಬಗ್ನಾನ್ ಬ್ಲಾಕ್ ನಲ್ಲಿ ತಾರ್ಕಿಕ ವ್ಯತ್ಯಾಸಗಳಿಗೆ ಸಂಬಂಧಿಸಿದ ನಿಗದಿತ ವಿಚಾರಣೆಗೆ ಆರು ದಿನಗಳ ಮುನ್ನ ಸರ್ಕಾರ್ ರಾಜೀನಾಮೆ ಸಲ್ಲಿಸಿದ್ದಾರೆ. ಅವರ ರಾಜೀನಾಮೆ ರಾಜ್ಯ ಮುಖ್ಯ ಚುನಾವಣಾಧಿಕಾರಿಗಳ ಕಚೇರಿಯಲ್ಲಿ ವಿವಾದಕ್ಕೆ ಕಾರಣವಾಗಿದೆ ಎಂದು ತಿಳಿದುಬಂದಿದೆ.
ಹೊಸದಿಲ್ಲಿ, ಜ.10: I-PAC ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ED) ಶನಿವಾರ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರ ವಿರುದ್ಧ ಸರ್ವೋಚ್ಚ ನ್ಯಾಯಾಲಯದ ಮೆಟ್ಟಿಲೇರಿದೆ. ಇದೇ ವೇಳೆ, ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ತನ್ನ ವಾದವನ್ನು ಆಲಿಸದೆ ಯಾವುದೇ ಆದೇಶ ಹೊರಡಿಸದಂತೆ ಕೋರಿ ಪಶ್ಚಿಮ ಬಂಗಾಳ ಸರಕಾರವು ಸರ್ವೋಚ್ಚ ನ್ಯಾಯಾಲಯದಲ್ಲಿ ಕೇವಿಯಟ್ ಅರ್ಜಿ ಸಲ್ಲಿಸಿದೆ. ಸಂವಿಧಾನದ ವಿಧಿ 32ರಡಿ ಸಲ್ಲಿಸಿರುವ ಅರ್ಜಿಯಲ್ಲಿ ಇಡೀ ಘಟನಾವಳಿಯನ್ನು ವಿವರಿಸಿರುವ ED, ರಾಜ್ಯ ಸರಕಾರದ ಹಸ್ತಕ್ಷೇಪದಿಂದ ನ್ಯಾಯಯುತ ತನಿಖೆ ನಡೆಸುವ ತನ್ನ ಹಕ್ಕಿಗೆ ಧಕ್ಕೆಯುಂಟಾಗಿದೆ ಎಂದು ಹೇಳಿದೆ. ಈ ವಿಷಯದಲ್ಲಿ ಸಿಬಿಐ ತನಿಖೆಯನ್ನೂ ಅದು ಕೋರಿದೆ. ಗುರುವಾರ ಕೋಲ್ಕತಾದಲ್ಲಿ ರಾಜಕೀಯ ಸಲಹಾ ಸಂಸ್ಥೆ I-PAC ಹಾಗೂ ಅದರ ನಿರ್ದೇಶಕ ಪ್ರತೀಕ್ ಜೈನ್ ವಿರುದ್ಧ ನಡೆಸಿದ ದಾಳಿಗಳಿಗೆ ಅಡ್ಡಿಯುಂಟು ಮಾಡಿದ ಆರೋಪಕ್ಕೆ ಸಂಬಂಧಿಸಿ, ಮಮತಾ ಬ್ಯಾನರ್ಜಿ, ಹಿರಿಯ ಪೊಲೀಸ್ ಅಧಿಕಾರಿಗಳು ಹಾಗೂ ಇತರರ ಪಾತ್ರದ ಕುರಿತು ಸಿಬಿಐ ತನಿಖೆ ನಡೆಸುವಂತೆ ಕೋರಿ ಸಲ್ಲಿಸಿದ್ದ ತನ್ನ ಅರ್ಜಿಗೆ ತುರ್ತು ವಿಚಾರಣೆ ನೀಡುವ ಮನವಿ ಕಲಕತ್ತಾ ಉಚ್ಚ ನ್ಯಾಯಾಲಯದಲ್ಲಿ ವಿಫಲವಾದ ಬಳಿಕ ED ಸರ್ವೋಚ್ಚ ನ್ಯಾಯಾಲಯದ ಮೆಟ್ಟಿಲೇರಿದೆ. ಕಲಕತ್ತಾ ಹೈಕೋರ್ಟ್ ನಲ್ಲಿ ನಡೆದಿದ್ದೇನು? ED ಹಾಗೂ ಟಿಎಂಸಿ ಪರಸ್ಪರರ ವಿರುದ್ಧ ಸಲ್ಲಿಸಿದ್ದ ಎರಡು ಅರ್ಜಿಗಳ ವಿಚಾರಣೆಯನ್ನು ಶುಕ್ರವಾರ ಮಧ್ಯಾಹ್ನ 2.30ಕ್ಕೆ ಕೈಗೆತ್ತಿಕೊಳ್ಳಲು ಕಲಕತ್ತಾ ಉಚ್ಚ ನ್ಯಾಯಾಲಯ ನಿರ್ಧರಿಸಿತ್ತು. ಆದರೆ, ನ್ಯಾಯಾಲಯದ ಕೊಠಡಿಯಲ್ಲಿ ಭಾರೀ ಸಂಖ್ಯೆಯಲ್ಲಿ ವಕೀಲರು, ಟಿಎಂಸಿ ಕಾರ್ಯಕರ್ತರು ಹಾಗೂ ಕುತೂಹಲಿಗಳು ಸೇರಿದ್ದರಿಂದ ವ್ಯಾಪಕ ಕೋಲಾಹಲ ಸೃಷ್ಟಿಯಾಯಿತು. ಶಾಂತಿ ಕಾಪಾಡುವಂತೆ ನ್ಯಾಯಮೂರ್ತಿ ಸುವ್ರಾ ಘೋಷ್ ಪದೇಪದೇ ಮಾಡಿದ ಮನವಿಗಳು ವಿಫಲವಾದ ಹಿನ್ನೆಲೆಯಲ್ಲಿ ಅವರು ವಿಚಾರಣೆಯನ್ನು ಜ.14ಕ್ಕೆ ಮುಂದೂಡಿದರು. ಜೈನ್ ನಿವಾಸದಲ್ಲಿ ದಾಳಿ ನಡೆಸಿದ ವೇಳೆ ಮುಖ್ಯಮಂತ್ರಿಗಳು ತನ್ನ ವಶದಲ್ಲಿದ್ದ ಆಕ್ಷೇಪಾರ್ಹ ದಾಖಲೆಗಳನ್ನು ಕಸಿದುಕೊಂಡು ಹೋಗಿದ್ದಾರೆ ಎಂದು ED ಆರೋಪಿಸಿದೆ. ಆದರೆ, ದಾಖಲೆಗಳು ಹಾಗೂ ದತ್ತಾಂಶಗಳು ತನ್ನ ಪಕ್ಷಕ್ಕೆ ಸಂಬಂಧಿಸಿದ್ದೇ ಎಂದು ಪ್ರತಿಪಾದಿಸಿರುವ ಮಮತಾ ಬ್ಯಾನರ್ಜಿ, ED ತನ್ನನ್ನು ಮತ್ತು ಟಿಎಂಸಿಯನ್ನು ಗುರಿಯಾಗಿಸಿಕೊಂಡಿದೆ ಎಂದು ಆರೋಪಿಸಿದ್ದಾರೆ. 2019ರ ಲೋಕಸಭಾ ಚುನಾವಣೆಯ ಬಳಿಕ I-PAC, ಟಿಎಂಸಿಯೊಂದಿಗೆ ಕೈಜೋಡಿಸಿದೆ.
ವಿಶೇಷಚೇತನರಿಗೆ ಶಿಕ್ಷಣ, ಉದ್ಯೋಗದಲ್ಲಿ ಮೀಸಲಾತಿ : ಸಂತೋಷ್ ಲಾಡ್
ಬೆಂಗಳೂರು : ವಿಶೇಷಚೇತನರಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿ ನೀಡುವ ಮಸೂದೆ ಜಾರಿಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಮುಂದಿನ ದಿನಗಳಲ್ಲಿ ಸಚಿವ ಸಂಪುಟದ ಮುಂದೆ ಈ ಮಸೂದೆ ಬರಲಿದೆ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಹೇಳಿದರು. ಶನಿವಾರ ಸ್ನೇಹದೀಪ ಅಂಗವಿಕಲರ ಸಂಸ್ಥೆಯು ಮಲ್ಲೇಶ್ವರದಲ್ಲಿರುವ ಜಲಮಂಡಳಿ ರಜತ ಭವನದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಾನ್ವೇಷಣೆ (ರಾಜ್ಯ ಮಟ್ಟದ ಸಾಂಸ್ಕೃ ತಿಕ ಕಾರ್ಯಕ್ರಮ) ದಲ್ಲಿ ಅವರು ಮಾತನಾಡಿದರು. ಕರ್ನಾಟಕದಲ್ಲಿ 35 ಲಕ್ಷ ವಿಶೇಷಚೇತನರು ಇದ್ದಾರೆ ಎಂಬ ಅಂದಾಜು ಇದೆ. ಇವರಿಗೆ ಸರಕಾರದ ನೆರವು ಸಿಗಬೇಕು. ಆದುದರಿಂದ, ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿಗೆ ಚಿಂತನೆ ನಡೆದಿದೆ. ಖಾಸಗಿ ಉದ್ದಿಮೆಗಳಲ್ಲಿ ಶೇ.5ರಷ್ಟು ಮೀಸಲು ಸಿಗಬೇಕು. ಇಡೀ ದೇಶದಲ್ಲೆ ಮೊದಲ ಬಾರಿಗೆ ಇಂತಹ ಕ್ರಮಕ್ಕೆ ಸರಕಾರ ಮುಂದಾಗಿದೆ. ಈ ಬಗ್ಗೆ ಸರಕಾರದ ಮಟ್ಟದಲ್ಲಿ ಪ್ರಯತ್ನ ಮಾಡಲಾಗುವುದು ಎಂದು ಸಂತೋಷ್ ಲಾಡ್ ಹೇಳಿದರು. ಅಧಿಕಾರದಲ್ಲಿ ಇರುವವರು ಸಮಾಜಕ್ಕೆ ಏನಾದರೂ ಉಪಯೋಗವಾಗುವಂತ ಕೆಲಸ ಮಾಡಬೇಕು. ಎಷ್ಟು ದಿನ ಅಧಿಕಾರದಲ್ಲಿ ಇರುತ್ತೇವೋ ಗೊತ್ತಿಲ್ಲ. ಸ್ನೇಹದೀಪ ಅಂಗವಿಕಲರ ಸಂಸ್ಥೆ ವಿಶೇಷಚೇತರಿಗಾಗಿ ಸಾಕಷ್ಟು ಕೆಲಸ ಮಾಡುತ್ತಿದೆ. ಇಂತಹವರಿಗೆ ಬೆಂಬಲ ನೀಡಬೇಕು. ವಿಶೇಷಚೇತನ ಮಕ್ಕಳ ಭವಿಷ್ಯ ಉಜ್ವಲವಾಗಲು ಸರಕಾರವೂ ಮುಂದೆ ಬರಬೇಕು ಎಂದು ಅವರು ನುಡಿದರು. ನಾವು ವಿಶೇಷಚೇತನರ ಬಗ್ಗೆ ಮಾತನಾಡುತ್ತೇವೆ. ಕನಸು ಕಾಣಲು ಕಣ್ಣು ಬೇಕಾಗಿಲ್ಲ. ನಮಗೆ ದೃಷ್ಟಿ ಇದೆ. ಆದರೆ ವಿಷನ್ ಇಲ್ಲ. ವಿಶೇಷಚೇತನರ ಹೃದಯ ಮತ್ತು ಮನಸ್ಸು ಸುಂದರವಾಗಿದೆ. ನಮಗೆ ದೇವರು ಎಲ್ಲ ಅವಕಾಶ ನೀಡಿದ್ದಾನೆ. ವಿಶೇಷಚೇತನರನ್ನು ನೋಡಿ ನಾವೆಲ್ಲ ಕಲಿಯಬೇಕು. ಉಸಿರು ಇರುವವರೆಗೆ ಬಡವರ ಪರವಾಗಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ ಎಂದು ಸಂತೋಷ್ ಲಾಡ್ ಹೇಳಿದರು. ಈ ಕಾರ್ಯಕ್ರಮದಲ್ಲಿ ಸ್ನೇಹದೀಪ ಟ್ರಸ್ಟ್ ನ ವ್ಯವಸ್ಥಾಪಕ ಟ್ರಸ್ಟಿ ಡಾ.ಪೌಲ್ ಮುದ್ದಾ, ಹಿರಿಯ ಗಾಯಕಿ ಡಾ.ಪ್ರಿಯದರ್ಶಿನಿ, ಹಿರಿಯ ವ್ಯವಸ್ಥಾಪಕಿ ಭಾರತಿ ರಾಮ್ಬಜ್, ಲಯನ್ಸ್ ಇಂಟರ್ ನ್ಯಾಷನಲ್ನ ಸಶ ಕೊಲತುಂಗಾ ಮತ್ತಿತರರು ಉಪಸ್ಥಿತರಿದ್ದರು.
ರಾಯಚೂರು| ಆತ್ಮಬಂಧು ಕೃತಿ ಲೋಕಾರ್ಪಣೆಗೊಳಿಸಿದ ಸಚಿವ ಬೋಸರಾಜು
ರಾಯಚೂರು: ಜಿ.ಸುರೇಶ ಅವರು ಹಿಂದುಳಿದವರ ಶೋಷಿತರ ಪರವಾಗಿ ಹೋರಾಡಿದ್ದರು. ಪಕ್ಷದಲ್ಲಿಯೂ ಗುರುತಿಸಿಕೊಂಡು ಉತ್ಸಾಹದಿಂದ ಇದ್ದರು. ಅವರ ಅಗಲಿಕೆ ಜೀರ್ಣಿಸಿಕೊಳ್ಳಲು ಆಗುತ್ತಿಲ್ಲ ಎಂದು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್.ಬೋಸರಾಜು ಹೇಳಿದರು. ನಗರದ ಪಂಡಿತ ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಜಿ.ಸುರೇಶ ಪ್ರತಿಷ್ಠಾನದಿಂದ ಹಮ್ಮಿಕೊಂಡಿದ್ದ ವೀರಹನುಮಾನ ರಚಿತ ‘ಆತ್ಮಬಂಧು ಎರಡು ಜೀವ ಒಂದು ಕಥಾನಕ’ ಕೃತಿ ಲೋಕಾರ್ಪಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸಚಿವ ಬೋಸರಾಜು, ಸಾಹಿತಿ ವೀರಹನುಮಾನ ಮತ್ತು ಜಿ.ಸುರೇಶ ಅವರು ಎರಡು ದೇಹ ಒಂದೇ ಆತ್ಮದಂತೆ ಇದ್ದವರಾಗಿದ್ದರು. ಜಿ.ಸುರೇಶ ಅವರನ್ನು ಸದಾ ಕಾಲ ನೆನೆಯುವಂತೆ ಕೃತಿಯನ್ನು ರಚಿಸಿರುವುದು ಹೆಮ್ಮೆಯ ವಿಚಾರವಾಗಿದೆ. ಸುರೇಶ ಅವರ ಆತ್ಮವಿಚಾರಗಳಿಗೆ ಅಕ್ಷರ ರೂಪವನ್ನು ನೀಡಿ, ಸರಳವಾಗಿ ಕೃತಿ ಬಿಡುಗಡೆ ಮಾಡಲಾಗುತ್ತಿದೆ ಎಂದು ತಿಳಿಸಿದರು. ಇದೇ ವೇಳೆ ಮಾಜಿ ಸಚಿವ ಕುಮಾರ ಬಂಗಾರಪ್ಪ ಅವರು ಮಾತನಾಡಿ, ತಂದೆ ಬಂಗಾರಪ್ಪ ಅವರಿಂದ ಜಿ.ಸುರೇಶ ಅವರು ಪರಿಚಯವಾಗಿತ್ತು. ಅಂದಿನಿಂದಲೂ ಜಿ.ಸುರೇಶ ನಮ್ಮ ಮನೆಯ ಬಂಧುವಾಗಿದ್ದರು. ಬಂಗಾರಪ್ಪ ಅವರನ್ನು ಮನೆಯ ಮಗನಂತೆ ಕಂಡಿದ್ದು ರಾಯಚೂರು ಜಿಲ್ಲೆಯಾಗಿದೆ. ಸುರೇಶ ಅವರ ಕುರಿತಾದ ಕೃತಿಯು 14 ಭಾಗಗಳನ್ನು ಒಳಗೊಂಡಿದ್ದು, ಬಾಲ್ಯದಿಂದ ಸುರೇಶ ಅವರ ಜೀವನವನ್ನು ಹಾಗೂ ಅವರೊಂದಿಗೆ ಕಳೆದ ಒಡನಾಟವನ್ನು ಕೃತಿಯಲ್ಲಿ ನೆನೆಯಲಾಗಿದೆ. ಸುರೇಶ ಅವರು ಹಿತಚಿಂತಕರಾಗಿ ಬೆನ್ನೆಲುಬಾಗಿ ನಿಂತಿದ್ದರು ಎಂದು ತಿಳಿಸಿದರು. ಕನ್ನಡ ಸಾಹಿತ್ಯಕ್ಕೆ ಸುರೇಶ ಅವರ ಕೊಡುಗೆ ಅಪಾರವಾದದ್ದು, ಹಿಂದುಳಿದ ವರ್ಗಗಳ ಹಾಗೂ ದಲಿತರ ಮೇಲೆ ಅಪಾರವಾದ ಬಾಂದ್ಯವ್ಯವನ್ನು ಸುರೇಶ ಅವರು ಹೊಂದಿದ್ದರು. ಜಿಲ್ಲೆಯಲ್ಲಿರುವ ನೀರಾವರಿ ಸಮಸ್ಯೆಗಳು, ಬೆಲೆ ಏರಿಕೆ ಸೇರಿದಂತೆ ಅನೇಕ ಸಮಸ್ಯೆಗಳ ಕುರಿತು ನಿರಂತರವಾಗಿ ಹೋರಾಟ ಮಾಡುತ್ತಾ ಎಲ್ಲಾ ಕ್ಷೇತ್ರಗಳಲ್ಲಿ ಆವರಿಸಿಕೊಂಡಿದ್ದರು. ಇಂದಿಗೂ ಜಿಲ್ಲೆಯ ಪ್ರತಿಯೊಬ್ಬರ ಹೃದಯದಲ್ಲಿ ಜಿ.ಸುರೇಶ ನೆಲೆಸಿದ್ದಾರೆ ಎಂದು ಹೇಳಿದರು. ಈ ಸಂದರ್ಭದಲ್ಲಿ ತಾರನಾಥ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಪಾರಸಮಲ್ ಸುಖಾಣಿ ಮಾತನಾಡಿ, ಜಿ.ಸುರೇಶ ಕ್ರಿಯಾಶೀಲತೆಯಿಂದ ಗುರುತಿಸಿಕೊಂಡವರು. ಜಿಲ್ಲೆಯ ಪ್ರಗತಿಗೆ ಎನ್.ಎಸ್.ಬೋಸರಾಜ ಇವರನ್ನು ಉಸ್ತುವಾರಿ ಸಚಿವರನ್ನಾಗಿಸುವುದು ಅಗತ್ಯವಾಗಿದೆ ಎಂದು ಹೇಳಿದರು. ಈ ವೇಳೆ ಸಾಹಿತಿ ಮಹಾಂತೇಶ ಮಸ್ಕಿ, ಹನುಮಾನ ದೇವಸ್ಥಾನದ ಅರ್ಚಕ ಹನುಮೇಶಾಚಾರ್, ಮಾಹಿತಿ ಹಕ್ಕು ಆಯೋಗದ ಆಯುಕ್ತ ಬಿ.ವೆಂಕಟಸಿಂಗ್, ರಾಜೋತ್ಸವ ಪ್ರಶಸ್ತಿ ಪುರಸ್ಕೃತ ಹಾಗೂ ಹಿರಿಯ ಸಾಹಿತಿ ರಾಮಣ್ಣ ಹವಳೆ, ಕೃತಿಕಾರ ವೀರಹನುಮಾನ ಸೇರಿದಂತೆ ಹಲವರು ಉಪಸ್ಥಿತರಿದ್ದರು.
Uttar Pradesh | ರಿಕ್ಷಾ ಚಾಲಕಿ ಹತ್ಯೆ: ಗುಂಡು ಹಾರಿಸಿ ಪ್ರಿಯತಮನನ್ನು ಬಂಧಿಸಿದ ಪೊಲೀಸರು
ಝಾನ್ಸಿ, ಜ. 10: ಕೆಲವು ದಿನಗಳ ಹಿಂದೆ ಆಟೊರಿಕ್ಷಾ ಚಾಲಕಿಯೊಬ್ಬರು ಝಾನ್ಸಿಯಲ್ಲಿ ಮೃತಪಟ್ಟಿದ್ದು, ಈ ಘಟನೆಗೆ ಸಂಬಂಧಿಸಿ ಪೊಲೀಸರು ರಿಕ್ಷಾ ಚಾಲಕಿಯ ಪ್ರಿಯತಮನನ್ನು ಬಂಧಿಸಿದ್ದಾರೆ. ಮಹಿಳೆಯನ್ನು ಗುಂಡು ಹಾರಿಸಿ ಕೊಲ್ಲಲಾಗಿದೆ ಎನ್ನುವುದು ಮರಣೋತ್ತರ ಪರೀಕ್ಷೆಯಲ್ಲಿ ಪತ್ತೆಯಾದ ಬಳಿಕ ಈ ಬೆಳವಣಿಗೆ ನಡೆದಿದೆ. ರಿಕ್ಷಾವೊಂದು ಅಪಘಾತಕ್ಕೀಡಾಗಿ ಅದರ ಚಾಲಕಿ ವಾಹನವೊಂದರ ಅಡಿಗೆ ಸಿಲುಕಿ ಮೃತಪಟ್ಟಿರುವ ಬಗ್ಗೆ ಸೋಮವಾರ ಮುಂಜಾನೆ 2.30ರ ಸುಮಾರಿಗೆ ಪೊಲೀಸ್ ನಿಯಂತ್ರಣ ಕೊಠಡಿಗೆ ಮಾಹಿತಿ ಬಂದಿತ್ತು. ಪೊಲೀಸರು ಸ್ಥಳಕ್ಕೆ ತೆರಳಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದರು. ಮೃತ ಮಹಿಳೆಯನ್ನು ದ್ವಾರಕ ಚೌಧರಿಯ ಪತ್ನಿ ಅನಿತಾ ಚೌಧರಿ ಎಂದು ಗುರುತಿಸಲಾಗಿತ್ತು. ತನ್ನ ಪತ್ನಿಯನ್ನು ಕೊಲೆಗೈದಿದ್ದಾರೆ ಎಂದು ಆರೋಪಿಸಿ ದ್ವಾರಕ ಚೌಧರಿ ಮೂವರ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದರು. ಅನಿತಾರನ್ನು ಗುಂಡು ಹಾರಿಸಿ ಕೊಲೆಗೈಯಲಾಗಿದೆ ಎನ್ನುವುದು ಶನಿವಾರ ಬಿಡುಗಡೆಯಾದ ಮರಣೋತ್ತರ ಪರೀಕ್ಷಾ ವರದಿಯಿಂದ ತಿಳಿದುಬಂದಿದೆ. ಪೊಲೀಸರು ಮುಕೇಶ್ ಝಾ, ಅವನ ಮಗ ಶಿವಮ್ ಮತ್ತು ಭಾವ ಮನೋಜ್ ನನ್ನು ಬಂಧಿಸಿದ್ದಾರೆ. ಮುಕೇಶ್ ಝಾ ಕಳೆದ 6–7 ವರ್ಷಗಳಿಂದ ಮಹಿಳೆಯೊಂದಿಗೆ ಸಂಪರ್ಕದಲ್ಲಿದ್ದನು ಹಾಗೂ ಇತ್ತೀಚಿನ ದಿನಗಳಲ್ಲಿ ಅವರ ನಡುವೆ ವೈಷಮ್ಯ ತಲೆದೋರಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಶಿವಮ್ ಮತ್ತು ಮನೋಜ್ನನ್ನು ಪೊಲೀಸರು ಸೋಮವಾರವೇ ಬಂಧಿಸಿದ್ದರು. ಪ್ರಧಾನ ಆರೋಪಿ ಮುಕೇಶ್ ತಪ್ಪಿಸಿಕೊಂಡಿದ್ದನು. ಶುಕ್ರವಾರ ರಾತ್ರಿ ಪೊಲೀಸರು ಮುಕೇಶ್ ನನ್ನು ಬಂಧಿಸಲು ಪ್ರಯತ್ನಿಸಿದಾಗ ಅವನು ಪೊಲೀಸರತ್ತ ಗುಂಡು ಹಾರಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಬಳಿಕ ಪೊಲೀಸರು ಪ್ರತಿಯಾಗಿ ಅವನ ಕಾಲಿಗೆ ಗುಂಡು ಹಾರಿಸಿ ಬಂಧಿಸಿದ್ದಾರೆ.
‘ನಾಯಕತ್ವ ಬದಲಾವಣೆʼ ವಿಚಾರ | ರಾಯರೆಡ್ಡಿ ಹೇಳಿಕೆಗೆ ಶಾಸಕ ಬಸವರಾಜ್ ವಿ.ಶಿವಗಂಗ ಆಕ್ಷೇಪ
ಬೆಂಗಳೂರು : ‘2028ರ ವರೆಗೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿರಲಿ’ ಎಂಬ ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ಪತ್ರ ಬರೆದಿರುವುದು ‘ಕಾಂಗ್ರೆಸ್ ಪಕ್ಷಕ್ಕೆ ಒಳ್ಳೆಯದಲ್ಲ’ ಎಂದು ಡಿ.ಕೆ.ಶಿವಕುಮಾರ್ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಚನ್ನಗಿರಿ ಕ್ಷೇತ್ರದ ಶಾಸಕ ಬಸವರಾಜ್ ವಿ.ಶಿವಗಂಗ ಆಕ್ಷೇಪಿಸಿದ್ದಾರೆ. ಶನಿವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ರಾಯರೆಡ್ಡಿ ಹಿರಿಯರಿದ್ದಾರೆ, ಅವರ ಮಾತನ್ನು ಹೈಕಮಾಂಡ್ ಗಮನಿಸಬೇಕಾಗಿದೆ. ‘ಪಕ್ಷದ ಆಂತರಿಕ ಬೆಳವಣಿಗೆಗಳ ಬಗ್ಗೆ ಯಾರೂ ಮಾತನಾಡಬೇಡಿ’ ಎಂದು ಹೈಕಮಾಂಡ್ ಸೂಚನೆ ನೀಡಿದೆ. ಹೈಕಮಾಂಡ್ ತೀರ್ಮಾನಕ್ಕೆ ಎಲ್ಲರೂ ಬದ್ದ. ಹೀಗಿರುವಾಗ ರಾಯರೆಡ್ಡಿ ಹೇಳಿಕೆ ಪಕ್ಷದ ಭವಿಷ್ಯದ ದೃಷ್ಟಿಯಿಂದ ಒಳ್ಳೆಯದಲ್ಲ ಎಂದು ಟೀಕಿಸಿದರು. ನಾಯಕತ್ವ ಬದಲಾವಣೆ ವಿಚಾರದಲ್ಲಿ ಸಿದ್ದರಾಮಯ್ಯ ಅವರೂ ಹೈಕಮಾಂಡ್ ತೀರ್ಮಾನಕ್ಕೆ ಬದ್ದ ಎಂದು ಹೇಳಿದ್ದಾರೆ. ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲೂ ಈ ವಿಚಾರವನ್ನು ನಾವು ಒಪ್ಪಿಕೊಂಡಿದ್ದೇವೆ. ಪ್ರತಿಯೊಬ್ಬ ಶಾಸಕರಿಗೂ ಅವರದ್ದೇ ಆದ ಗೌರವ ಇದೆ. ಒಬ್ಬರಿಗೊಂದು ನೋಟಿಸ್ ಮತ್ತೊಬ್ಬರಿಗೆ ನೀಡದೆ ಇರುವುದು ಸರಿಯಲ್ಲ ಎಂದು ಶಿವಗಂಗ ಅಸಮಾಧಾನ ವ್ಯಕ್ತಪಡಿಸಿದರು. ನಾನು ಮಾತನಾಡುತ್ತೇನೆ: ಸಂಕ್ರಾಂತಿ ಬಳಿಕ ನಾನು ಮಾತನಾಡುತ್ತೇನೆ. ಮಾಜಿ ಸಚಿವ ಕೆ.ಎನ್.ರಾಜಣ್ಣ ಎರಡೆರೆಡು ಬಾರಿ ಹೇಳಿಕೆ ನೀಡಿದ್ದಾರೆ. ನುಡಿದಂತೆ ನಡೆಯಬೇಕು ಎಂದೂ ಅವರು ಹೇಳಿದ್ದಾರೆ. ರಾಯರೆಡ್ಡಿ, ರಾಜಣ್ಣ ನಾನು ಯಾರೂ ಹೈಕಮಾಂಡ್ ಅಲ್ಲ. 2030ರ ವರೆಗೂ ಸಿದ್ದರಾಮಯ್ಯ ಸಿಎಂ ಎಂದು ಹೈಕಮಾಂಡ್ ಹೇಳಿದರೆ ಅದಕ್ಕೆ ನಾವೂ ಬದ್ದ ಎಂದು ಹೇಳಿದರು. ಕೆಪಿಸಿಸಿ ಅಧ್ಯಕ್ಷರಾಗಿರುವ ಡಿಸಿಎಂ ಡಿ.ಕೆ.ಶಿವಕುಮಾರ್ ಅವರನ್ನು ಅಸ್ಸಾಂ ವೀಕ್ಷಕರಾಗಿ ನೇಮಕ ಮಾಡಿರುವುದು ಅವರ ಪರಿಶ್ರಮಕ್ಕೆ ಸಿಕ್ಕ ಪ್ರತಿಫಲ. ಅವರಿಗೆ ಸಾಮರ್ಥ್ಯ ಇದೆ ಎಂದು ಆ ಸ್ಥಾನವನ್ನು ನೀಡಲಾಗಿದೆ. ಎಲ್ಲವನ್ನೂ ಹೈಕಮಾಂಡ್ ಗಮನಿಸುತ್ತಿದೆ. ಕೆಪಿಸಿಸಿ ಅಧ್ಯಕ್ಷ ಸ್ಥಾನ ಅಥವಾ ಸಿಎಂ ಕುರ್ಚಿ ವಿಚಾರದ ಬಗ್ಗೆ ಯಾವುದೇ ಚರ್ಚೆ ಆಗಿಲ್ಲ ಎಂದು ಅವರು ಹೇಳಿದರು.
Jharkhand | ಜಾನುವಾರು ಸಾಗಣೆದಾರನ ಮೇಲೆ ಗುಂಪಿನಿಂದ ಥಳಿಸಿ ಹತ್ಯೆ
ಧರ್ಮದ ಕಾರಣಕ್ಕೆ ನಡೆದ ಘಟನೆ ಎಂದು ಆರೋಪಿಸಿದ ಸಂತ್ರಸ್ತನ ಕುಟುಂಬ
ತೊಗರಿಗೆ ಬೆಂಬಲ ಬೆಲೆ ನೀಡದಿದ್ದರೆ ಕೊಪ್ಪಳ ಬಂದ್ : ಕರ್ನಾಟಕ ರೈತ ಸಂಘ ಎಚ್ಚರಿಕೆ
ಕನಕಗಿರಿ: ತೊಗರಿಗೆ ರಾಜ್ಯ ಸರಕಾರದಿಂದ ಹೆಚ್ಚು ವರಿಯಾಗಿ 500ರೂ. ಬೆಂಬಲ ಬೆಲೆ ನೀಡಬೇಕು. ಇಲ್ಲವಾದರೆ ಕೊಪ್ಪಳ ಜಿಲ್ಲಾ ಬಂದ್ ಗೆ ಕರೆ ನೀಡಲಾಗುವುದು ಎಂದು ಕರ್ನಾಟಕ ರೈತ ಸಂಘ ಮತ್ತು ಹಸಿರು ಸೇನೆ ವಿಭಾಗೀಯ ಅಧ್ಯಕ್ಷ ಪಂಪಣ್ಣ ನಾಯಕ್ ಹೇಳಿದ್ದಾರೆ. ಈ ಬಗ್ಗೆ ಪ್ರಕಟಣೆ ಹೊರಡಿಸಿರುವ ಪಂಪಣ್ಣ ನಾಯಕ್, ಕೇಂದ್ರ ಸರಕಾರ ನಿಗದಿ ಮಾಡಿರುವ ಪ್ರತಿ ಕ್ವಿಂಟಾಲ್ ಗೆ 8 ಸಾವಿರ ರೂ.ನಂತೆ ತೊಗರಿ ಖರೀದಿ ಮಾಡುವ ರಾಜ್ಯ ಸರಕಾರದ ಕ್ರಮ ಖಂಡನೀಯ. ಕೂಡಲೇ ಸರಕಾರ ಕೇಂದ್ರದ 8 ಸಾವಿರ ರೂ.ಗೆ ಕನಿಷ್ಠ 500 ರೂ.ಸೇರಿಸಿ ಪ್ರತಿ ಕ್ವಿಂಟಾಲ್ ಗೆ 8500 ರೂ.ಯಂತೆ ತೊಗರಿ ಖರೀದಿ ಮಾಡಬೇಕು. ಈ ಬಗ್ಗೆ ಈಗಾಗಲೇ ಕನಕಗಿರಿಯಲ್ಲಿ ಬೃಹತ್ ಪ್ರತಿಭಟನೆ ಮಾಡಿ, ರಾಜ್ಯ ಸರಕಾರಕ್ಕೆ ಮನವಿ ಸಲ್ಲಿಸಲಾಗಿದೆ. ಆದರೆ, ಸರಕಾರ ಈ ಬಗ್ಗೆ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ. ಇದು ರೈತರಿಗೆ ಮಾಡಿದ ಅನ್ಯಾಯ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಕಲ್ಯಾಣ ಕರ್ನಾಟಕದಲ್ಲಿ ಹೆಚ್ಚು ತೊಗರಿ ಬೆಳೆಯಲಾಗಿದೆ. ರಾಜ್ಯ ಸರಕಾರ 500ರೂ. ಪ್ರೋತ್ಸಾಹ ಧನ ನೀಡುವ ಮೂಲಕ ರೈತರಿಗೆ ಅನುಕೂಲ ಮಾಡಬೇಕು. ಕಳೆದ ವರ್ಷ ಕೇಂದ್ರ ಸರಕಾರ ಪ್ರತಿ ಕ್ವಿಂಟಾಲ್ ಗೆ 7550 ರೂ.ನೀಡಿತ್ತು. ರಾಜ್ಯ ಸರಕಾರ ತನ್ನ ಪಾಲಿನ 450 ರೂ.ನೀಡಿತ್ತು. ಕಳೆದ ವರ್ಷದಂತೆ ಈ ಬಾರಿ ಕೇಂದ್ರದ ಸರಕಾರದ 800 ಸಾವಿರ ರೂ.ಬೆಂಬಲ ಬೆಲೆಗೆ 500 ರೂ.ಸೇರಿಸಿ, ತೊಗರಿ ಖರೀದಿ ಮಾಡಬೇಕು. ಸರಕಾರ ಜನವರಿ 20ರ ಒಳಗೆ ನಿರ್ಧಾರ ಕೈಗೊಳ್ಳದಿದ್ದರೆ ಕೊಪ್ಪಳ ಬಂದ್, ಕಲ್ಯಾಣ ಕರ್ನಾಟಕ ಬಂದ್ ಗೆ ಕರೆ ನೀಡಲಾಗುವುದು. ಜೊತೆಗೆ ಮುಖ್ಯಮಂತ್ರಿಗಳು ಕಲ್ಯಾಣ ಕರ್ನಾಟಕ ಭಾಗದಲ್ಲಿ ಎಲ್ಲೇ ಬಂದರೂ ಕಪ್ಪುಬಟ್ಟೆ ಪ್ರದರ್ಶಿಸಲಾಗುವುದು ಎಂದು ಪಂಪಣ್ಣ ನಾಯಕ ಎಚ್ಚರಿಸಿದ್ದಾರೆ.
ನಿಮ್ಮ ಹುಡುಗನ ಹಾಸನ್ ಬ್ಲೂ ಚಿತ್ರ ವರ್ಲ್ಡ್ ಫೇಮಸ್: ಕಾಂಗ್ರೆಸ್-ಜೆಡಿಎಸ್ ನಡುವೆ ಎಕ್ಸ್ ವಾರ್
ಕಾಂಗ್ರೆಸ್ ಹಾಗೂ ಜೆಡಿಎಸ್ ನಡುವೆ ಎಕ್ಸ್ನಲ್ಲಿ ವಾಗ್ಯುದ್ಧ ಜೋರಾಗಿ ನಡೆಯುತ್ತಿದೆ. ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ಪರ ಪಕ್ಷಗಳು ದಾಳಿಗೆ ಪ್ರತಿದಾಳಿ ನಡೆಸುತ್ತಿವೆ. ಆರಂಭದಲ್ಲಿ ಆರೋಗ್ಯಕರ ಚರ್ಚೆಯಂತಿದ್ದ ಈ ಜಗಳ ಇದೀಗ ಬೇರೆ ಸ್ವರೂಪ ಪಡೆದುಕೊಳ್ಳುತ್ತಿದೆ. ನಿಮ್ಮ ಹುಡುಗ ನಟಿಸಿದ ಹಾಸನ್ ಬ್ಲೂ ಚಿತ್ರ ವರ್ಲ್ಡ್ ಫೇಮಸ್ ಆಗಿದೆ ಎಂದು ಕಾಂಗ್ರೆಸ್ ಜೆಡಿಎಸ್ಗೆ
ಮಂಗಳೂರು: ವಿಮೆನ್ ಇಂಡಿಯಾ ಮೂವ್ಮೆಂಟ್ ಸಂಸ್ಥಾಪನಾ ದಿನ
ಮಂಗಳೂರು: ವಿಮೆನ್ ಇಂಡಿಯಾ ಮೂವ್ಮೆಂಟ್ ಮಹಿಳಾ ಸಬಲೀಕರಣ ಮತ್ತು ಸಾಮಾಜಿಕ ನ್ಯಾಯಕ್ಕಾಗಿ ನಿರಂತರ ಹಾಗೂ ನಿಷ್ಠಾವಂತ ಹೋರಾಟ ನಡೆಸಿ ಒಂದು ದಶಕವನ್ನು ಪೂರ್ಣಗೊಳಿಸಿದೆ. ವಿಮೆನ್ ಇಂಡಿಯಾ ಮೂವ್ಮೆಂಟ್ ನ 10 ನೆಯ ವರ್ಷದ ಸಂಸ್ಥಾಪನಾ ದಿನದ ಅಂಗವಾಗಿ ಇಂದು ಮೂಡುಬಿದಿರೆ ಯಲ್ಲಿ ಧ್ವಜಾರೋಹಣ ಕಾರ್ಯಕ್ರಮ ವನ್ನು ಹಮ್ಮಿಕೊಳ್ಳಲಾಗಿತ್ತು. ಮುಖ್ಯ ಅತಿಥಿಯಾಗಿ ತನ್ಹ ಕ್ಲಿನಿಕ್ ನ ಡಾ. ಆಯಿಷ ತಹ್ನೀನ ಉಪಸ್ಥಿತರಿದ್ದರು. ಕಾರ್ಯಕ್ರಮ ದ ಅಧ್ಯಕ್ಷತೆಯನ್ನು ವಹಿಸಿದ ನಸೀಮ ಸಿದ್ದಕಟ್ಟೆ ಯವರು ವಿಮೆನ್ ಇಂಡಿಯಾ ಮೂವ್ಮೆಂಟ್ ನಿಂದ ಮಹಿಳೆಯರು ಸಮಾಜದಲ್ಲಿ ಯಾವ ರೀತಿ ನಾಯಕತ್ವವನ್ನು ಹೊಂದಿರುವ ಬಗ್ಗೆ, ಹಾಗೂ ಮಹಿಳೆಯರ ಹಕ್ಕುಗಳು, ಸಬಲೀಕರಣದ ಬಗ್ಗೆ ಮಾತನಾಡಿದರು. ಮೂಡುಬಿದಿರೆ ಬ್ರಾಂಚ್ ಅದ್ಯಕ್ಷೆ ಮಿಸ್ರಿಯ, ವಾಲ್ಪಾಡಿಯ ಅಬೀದ, ಹಾಗೂ ಕೋಟೆಬಾಗಿಲಿನ ಶಮೀಮ ಹಾಗು ಎಲ್ಲಾ ಬ್ರಾಂಚ್ ನ ಸದಸ್ಯರು ಉಪಸ್ಥಿತರಿದ್ದರು. ಮೆಹ್ತಾಬ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಣೆ ಮಾಡಿದರು. ಮಾಸುಮ ದನ್ಯವಾದ ಸಮರ್ಪಣೆ ನಿರ್ವಹಿಸಿದರು.
‘ವಿಬಿ-ಜಿ ರಾಮ್ ಜಿ ಯೋಜನೆ ಕುರಿತು ಅಪಪ್ರಚಾರ’ | ಕಾಂಗ್ರೆಸ್ ಷಡ್ಯಂತ್ರಕ್ಕೆ ಅವಕಾಶ ನೀಡುವುದಿಲ್ಲ: ಬಿ.ವೈ.ವಿಜಯೇಂದ್ರ
ಬೆಂಗಳೂರು : ‘ವಿಬಿ: ಜಿ ರಾಮ್ ಜಿ ಯೋಜನೆ’ ಕುರಿತು ಸುಳ್ಳು ಅಪಪ್ರಚಾರಕ್ಕೆ ಬಿಜೆಪಿ ಮತ್ತು ಜೆಡಿಎಸ್ ಅವಕಾಶ ಕೊಡುವುದಿಲ್ಲ. ಗ್ರಾಮ ಮಟ್ಟಕ್ಕೂ ತೆರಳಿ ಜನರಿಗೆ, ಕಾರ್ಮಿಕರಿಗೆ ಮನವರಿಕೆ ಮಾಡಿಕೊಡುತ್ತೇವೆ. ಆ ಮೂಲಕ ಕಾಂಗ್ರೆಸ್ ಪಕ್ಷದ ಷಡ್ಯಂತ್ರವನ್ನು ಬಯಲಿಗೆ ಎಳೆಯುತ್ತೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು. ಶನಿವಾರ ನಗರದ ಖಾಸಗಿ ಹೊಟೇಲ್ನಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಹಾಗೂ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಸೇರಿದಂತೆ ಇನ್ನಿತರ ಮುಖಂಡರ ಜೊತೆ ಜಂಟಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು. ಕೇಂದ್ರ ಸರಕಾರದ ಯೋಜನೆಗಳ ಕುರಿತು ಅಪಪ್ರಚಾರ ಮಾಡುವ ಮೂಲಕ ಜನರಲ್ಲಿ ತಪ್ಪು ಕಲ್ಪನೆ ಮೂಡಿಸುವ ಕೆಲಸವನ್ನು ರಾಜ್ಯ ಸರಕಾರ ಮಾಡುತ್ತಿದೆ. ಗಾಂಧೀಜಿ ಅವರ ಗ್ರಾಮ ಸ್ವರಾಜ್ಯದ ಕನಸು ನನಸಾಗಲು ಏಳೆಂಟು ಲಕ್ಷ ಕೋಟಿ ರೂ. ಖರ್ಚು ಮಾಡುವ ಈ ಯೋಜನೆ ಸುಲಲಿತವಾಗಿ ಸಾಗಬೇಕು, ಬಡವರಿಗೆ ತಲುಪಬೇಕೆಂದು ಪ್ರಧಾನಿ ಮೋದಿ ಆಲೋಚಿಸಿದ್ದು ತಪ್ಪೇ ಎಂದು ಅವರು ಪ್ರಶ್ನಿಸಿದರು. ನರೇಗಾ ಯೋಜನೆಯನ್ನು ಮರು ಜಾರಿ ಮಾಡುವ ಮೊದಲೆ ಕಾಂಗ್ರೆಸ್ ಪಕ್ಷವು ವಿಬಿ ಜಿ ರಾಮ್ ಜಿ ಯೋಜನೆ ಬಗ್ಗೆ ಸುಳ್ಳುಗಳನ್ನು ಹರಡುತ್ತಿದೆ. ಗ್ರಾಮಗಳ ಸರ್ವಾಂಗೀಣ ಅಭಿವೃದ್ಧಿ ಆಗಬೇಕು, ಜೊತೆಗೆ ಮೂಲಭೂತ ಸೌಕರ್ಯಗಳನ್ನೂ ಕೊಡಬೇಕೆಂಬ ಉದ್ದೇಶದೊಂದಿಗೆ ಪ್ರಧಾನಿ, ಇಡಿ ಯೋಜನೆಯಲ್ಲಿ ಗಮನಾರ್ಹ, ಮೌಲ್ಯಯುತ ಬದಲಾವಣೆಗಳನ್ನು ಜಾರಿಗೊಳಿಸಿದ್ದಾರೆ ಎಂದು ವಿಜಯೇಂದ್ರ ವಿವರಿಸಿದರು. ಕೆಲಸ ಮಾಡುವ ದಿನಗಳನ್ನು 100 ರಿಂದ 125ಕ್ಕೆ ಏರಿಸಿದ್ದಾರೆ. ಕೃಷಿ ಚಟುವಟಿಕೆ ನಡೆಯುವಾಗ ರೈತರಿಗೆ ಅನಾನುಕೂಲ ಆಗಬಾರದೆಂಬ ದೃಷ್ಟಿಯಿಂದ ಆ ಸಂದರ್ಭದಲ್ಲಿ ಜಿ ರಾಮ್ ಜಿ ನಿಲ್ಲಿಸಿದ್ದಾರೆ. ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಹಿಂದಿನಂತೆ ತೀರ್ಮಾನಗಳು ಆಗಲಿವೆ. ಗ್ರಾಮ ಪಂಚಾಯಿತಿ ಅಧಿಕಾರವನ್ನು ಕಿತ್ತುಕೊಳ್ಳುವ ಕೆಲಸವನ್ನು ಮಾಡುತ್ತಿಲ್ಲ ಎಂದು ಅವರು ಹೇಳಿದರು. ವಿಬಿ: ಜಿ ರಾಮ್ ಜಿ ಯೋಜನೆ ಕುರಿತು ಚರ್ಚಿಸಲು ವಿಶೇಷ ಅಧಿವೇಶನ ಕರೆಯುವ ಮುಖ್ಯಮಂತ್ರಿ ಸಿದ್ದರಾಮಯ್ಯನವರ ನಿರ್ಧಾರ ಸ್ವಾಗತಾರ್ಹ. ಸದನದಲ್ಲಿ ಇದನ್ನು ಚರ್ಚಿಸೋಣ. ಮನರೇಗಾ ಮೂಲಕ ಕಾಂಗ್ರೆಸ್ ಇಷ್ಟು ವರ್ಷಗಳಲ್ಲಿ ಏನು ಮಾಡಿದೆ? ಕಳೆದ 10 ವರ್ಷಗಳಲ್ಲಿ ನಾವು ಮೋದಿ ನಾಯಕತ್ವದಡಿ ಮಾಡಿದ ಸಾಧನೆ ಏನು ಎಂಬುದನ್ನು ಚರ್ಚಿಸಲು ನಾವು ಸಿದ್ಧರಿದ್ದೇವೆ ಎಂದು ವಿಜಯೇಂದ್ರ ಸವಾಲು ಹಾಕಿದರು.
Bengaluru | 200 ರೂ. ವಿಚಾರಕ್ಕೆ ದಂಪತಿ ನಡುವೆ ಗಲಾಟೆ: ಪತ್ನಿ ಆತ್ಮಹತ್ಯೆ
ಬೆಂಗಳೂರು : ಎರಡು ನೂರು ರೂ. ವಿಚಾರಕ್ಕೆ ಗಂಡ-ಹೆಂಡತಿ ನಡುವೆ ಗಲಾಟೆ ನಡೆದು ಮನನೊಂದು ಪತ್ನಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನೆಲಮಂಗಲ ತಾಲೂಕಿನ ಬ್ಯಾಡರಹಳ್ಳಿಯಲ್ಲಿ ನಡೆದಿರುವುದಾಗಿ ವರದಿಯಾಗಿದೆ. ಎರಡು ಮಕ್ಕಳ ತಾಯಿ ಸುಮಾ(30) ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸುಮಾ 8 ವರ್ಷಗಳ ಹಿಂದೆ ಚಂದ್ರಶೇಖರ್ ಜೊತೆ ಮದುವೆಯಾಗಿದ್ದರು. ಸ್ವಸಹಾಯ ಸಂಘದ ಕಂತು ಕಟ್ಟಲೆಂದು ಸುಮಾ ಗಂಡನಿಗೆ ಕಾಣದಂತೆ 1,300 ರೂ. ಮನೆಯಲ್ಲಿಟ್ಟಿದ್ದರು ಎನ್ನಲಾಗಿದೆ. 1,300 ರೂ. ಪೈಕಿ ಚಂದ್ರಶೇಖರ್ ಸಬೂಬು ಹೇಳಿ 200 ರೂ. ಸ್ವಂತ ಖರ್ಚಿಗೆ ಬಳಸಿದ್ದ. ಈ ಸಂಬಂಧ ಶುಕ್ರವಾರ(ಜ.9) ಬೆಳಗ್ಗೆ ಇಬ್ಬರ ನಡುವೆ ಗಲಾಟೆ ನಡೆದಿತ್ತು ಎನ್ನಲಾಗಿದೆ. ಇದರಿಂದ ಮನನೊಂದು ಪತಿ ಹಾಗೂ ಅತ್ತೆ ಕೆಲಸಕ್ಕೆ ಹೋಗಿದ್ದ ವೇಳೆ ಸುಮಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪತಿ ಊಟಕ್ಕೆಂದು ಮನೆಗೆ ಬಂದಾಗ ಘಟನೆ ಬೆಳಕಿಗೆ ಬಂದಿದೆ. ಈ ಸಂಬಂಧ ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸದ್ಯ ಸುಮಾ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ನೆಲಮಂಗಲ ಸಾರ್ವಜನಿಕ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ.
ಉಡುಪಿ, ಜ.10: ಮಾರ್ಪಳ್ಳಿ ನಿವಾಸಿ, ಆಯುರ್ವೇದ ವೈದ್ಯ ಡಾ.ರವಿಚಂದ್ರ ರಾವ್ ಉಚ್ಚಿಲ(79) ಅಸೌಖ್ಯದಿಂದ ಶುಕ್ರವಾರ ರಾತ್ರಿ ಉಡುಪಿಯ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಡಾ.ಉಚ್ಚಿಲ ಎಂದೇ ಹೆಸರುವಾಸಿಗಿದ್ದ ಇವರು ಉಚ್ಚಿಲದಲ್ಲಿ 40 ವರ್ಷಗಳ ಆಯುರ್ವೇದ ವೈದ್ಯರಾಗಿ ಸೇವೆ ಸಲ್ಲಿಸಿ ದ್ದರು. ಕಳೆದ ಹದಿನೈದು ವರ್ಷಗಳಿಂದ ಮಾರ್ಪಳ್ಳಿ ಮಹಾಲಿಂಗೇಶ್ವರ ದೇವಸ್ಥಾನದ ಬಳಿ ವಾಸವಾಗಿದ್ದ ಇವರು ಸ್ಥಳೀಯವಾಗಿ ಉತ್ತಮ ಆಯುರ್ವೇದ ವೈದ್ಯರಾಗಿ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದರು. ಬ್ರಾಹ್ಮಣ ಸಮಾಜ, ಪರ್ಯಾಯ ಸ್ವಾಗತ ಕಮಿಟಿಗಳಲ್ಲಿ ತೊಡಗಿಸಿ ಕೊಂಡಿದ್ದ ಇವರು ಉತ್ತಮ ಸಾಮಾಜಿಕ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಸೇವೆ ನೀಡಿದ್ದರು. ಶ್ರೀಕೃಷ್ಣ ಮಠದ ಉಚಿತ ಆರೋಗ್ಯ ಸೇವೆ ಮತ್ತು ಅಂಬಲಪಾಡಿ ದೇವಳದಲ್ಲಿ ರೋಗಿಗಳಿಗೆ ಯಾವುದೇ ಫಲಾಪೇಕ್ಷೆ ಇಲ್ಲದೆ ಸೇವೆ ನೀಡುತ್ತಿದ್ದರು. ಪೇಜಾವರ ಮಠ ಕೊಡಮಾಡುವ ಶ್ರೀರಾಮ ವಿಠಲ ಪ್ರಶಸ್ತಿ ಸಹಿತ ಹಲವಾರು ಸಂಘ ಸಂಸ್ಥೆಗಳ ಗೌರವಕ್ಕೆ ಇವರು ಪಾತ್ರರಾಗಿದ್ದರು. ಮೃತರು ಪತ್ನಿ, ಇಬ್ಬರು ಪುತ್ರರು, ಮೂವರು ಮೊಮ್ಮಕ್ಕಳನ್ನು ಅಗಲಿದ್ದಾರೆ.
ಕ್ರೀಡಾಪಟು ಮೇಲೆ ಪ್ರಿಯಾಂಕ್ ಖರ್ಗೆ ಅಣತಿಯಂತೆ ಎಫ್ಐಆರ್ ಎಂದು ಪ್ರಚಾರ
ಕಲಬುರಗಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜನವರಿ 12ರಂದು ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಪ್ರಜಾ ಸೌಧ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಲು ಕಲಬುರಗಿ ಜಿಲ್ಲೆಗೆ ಪ್ರವಾಸ ಕೈಗೊಂಡಿದ್ದು, ಯಡ್ರಾಮಿ ಮತ್ತು ಸೇಡಂನಲ್ಲಿ ಪ್ರತ್ಯೇಕ ಕಾರ್ಯಕ್ರಮದಲ್ಲಿ 1,595 ಕೋಟಿ ರೂ. ವೆಚ್ಚದ ಜಿಲ್ಲೆಯ 467 ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಿದ್ದಾರೆ ಎಂದು ರಾಜ್ಯದ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್, ಐ.ಟಿ-ಬಿ.ಟಿ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು. ಶನಿವಾರ ಇಲ್ಲಿನ ಐವಾನ್-ಎ-ಶಾಹಿ ಅತಿಥಿಗೃಹದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಪ್ರಿಯಾಂಕ್ ಖರ್ಗೆ, ಜನವರಿ 12ರಂದು ಮುಖ್ಯಮಂತ್ರಿಗಳು ಬೆಂಗಳೂರಿನಿಂದ ವಿಶೇಷ ವಿಮಾನದ ಮೂಲಕ ಕಲಬುರಗಿ ವಿಮಾನ ನಿಲ್ದಾಣಕ್ಕೆ ಬಂದು ಅಲ್ಲಿಂದ ಹೆಲಿಕಾಪ್ಟರ್ ಮೂಲಕ ಯಡ್ರಾಮಿಗೆ ಆಗಮಿಸಲಿದ್ದಾರೆ. ಅಲ್ಲಿ ಕೆ.ಕೆ.ಅರ್.ಡಿ.ಬಿ, ಶಾಲಾ ಶಿಕ್ಷಣ ಇಲಾಖೆ ಹಾಗೂ ಕಂದಾಯ ಇಲಾಖೆಯ ಜಂಟಿ ಆಶ್ರಯದಲ್ಲಿ ನಡೆಯುವ ಪ್ರಜಾ ಸೌಧ ನಿರ್ಮಾಣಕ್ಕೆ ಅಡಿಗಲ್ಲು ಹಾಗೂ 300 ಕೆ.ಪಿ.ಎಸ್. ಶಾಲೆ ಮಂಜೂರಾತಿಯ ಘೋಷಣೆ ಮಾಡುವುದರ ಜೊತೆಗೆ ಜೇವರ್ಗಿ ಮತ್ತು ಯಡ್ರಾಮಿ ತಾಲೂಕಿಗೆ ಸಂಬಂಧಿಸಿದಂತೆ 867.49 ಕೋಟಿ ರೂ. ವೆಚ್ಚದ ನಿರ್ಮಾಣ ಕಾರ್ಯಕ್ಕೆ 82 ಅಡಿಗಲ್ಲು ಮತ್ತು 38.37 ಕೋಟಿ ರೂ. ವೆಚ್ಚದ 17 ಕಾಮಗಾರಿಗಳ ಉದ್ಘಾಟನೆ ಮಾಡಲಿದ್ದಾರೆ ಎಂದು ಹೇಳಿದರು. ಸೇಡಂ ಪಟ್ಟಣದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ 579.68 ಕೋಟಿ ರೂ. ವೆಚ್ಚದ 292 ಯೋಜನೆಗಳಿಗೆ ಅಡಿಗಲ್ಲು ಹಾಗೂ 110.35 ಕೋಟಿ ರೂ. ವೆಚ್ಚದಲ್ಲಿ ಈಗಾಗಲೇ ಕೈಗೆತ್ತಿಕೊಂಡು ಪೂರ್ಣಗೊಂಡ 76 ಅಭಿವೃದ್ದಿ ಕಾಮಗಾರಿಗಳನ್ನು ಲೋಕಾರ್ಪಣೆ ಮಾಡಲಿದ್ದಾರೆ. ಇದರಲ್ಲಿ ಪ್ರಮುಖವಾಗಿ 85.50 ಕೋಟಿ ರೂ. ವೆಚ್ಚದ ಕಾಚೂರ, 90 ಕೋಟಿ ರೂ. ವೆಚ್ಚದ ಬೀರನಳ್ಳಿ, 67.3 ಕೋಟಿ ರೂ. ವೆಚ್ಚದ ಯಡ್ಡಳ್ಳಿ, 82.90 ಕೋಟಿ ರೂ. ವೆಚ್ಚದಲ್ಲಿ ತರನಹಳ್ಳಿ ಏತ ನೀರಾವರಿ ಯೋಜನೆ ಸೇರಿವೆ. ಇದಲ್ಲದೆ ಸೇಡಂ, ಚಿಂಚೋಳಿ ತಾಲೂಕಿನ ಅನೇಕ ಕಡೆ ರಸ್ತೆ ನಿರ್ಮಾಣ, ಸುಧಾರಣೆ ಕಾಮಗಾರಿಗೂ ಇಲ್ಲಿ ಅಡಿಗಲ್ಲು ಹಾಕಲಾಗುತ್ತಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಮಾಹಿತಿ ನೀಡಿದರು. 2025-26ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಭಾರಿ ಮಳೆ ಹಾಗೂ ಪ್ರವಾಹದಿಂದ ಹಾನಿಯಾದ ಜಿಲ್ಲೆಯ ಕೃಷಿ ಮತ್ತು ತೋಟಗಾರಿಕೆ ಇಲಾಖೆಯ ಜಂಟಿ ಸಮೀಕ್ಷೇಯ ವರದಿಯಂತೆ ಒಟ್ಟು 3.24 ಲಕ್ಷ ಹೇಕ್ಟರ್ ಪ್ರದೇಶ ಹಾನಿಯಾಗಿದೆ. ಎನ್.ಡಿ.ಆರ್.ಎಫ್ ಮಾರ್ಗಸೂಚಿಯಂತೆ ಈಗಾಗಲೆ ಜಿಲ್ಲೆಯ 3,23,318 ರೈತರಿಗೆ 250.97 ಕೋಟಿ ರೂ. ಪಾವತಿ ಮಾಡಲಾಗಿದೆ. ಇದರ ಜೊತೆಗೆ ರಾಜ್ಯ ಸರಕಾರದಿಂದ ಘೋಷಿಸಿದ ಇನ್ಪುಟ್ ಸಬ್ಸಿಡಿ ಪ್ರತಿ ಹೆಕ್ಟೇರ್ ಗೆ 8,500ರೂ. ಗಳಂತೆ 247.75 ಕೋಟಿ ರೂ. ಸಹ ಪರಿಹಾರ ನೀಡಿದ್ದು, ಒಟ್ಟಾರೆ ಜಿಲ್ಲೆಗೆ 498.73 ಕೋಟಿ ರೂ. ಅತಿವೃಷ್ಠಿ ಪರಿಹಾರ ರೈತರಿಗೆ ವಿತರಿಸಿದೆ ಎಂದು ಸಚಿವರು ತಿಳಿಸಿದರು. ಇದರಲ್ಲಿ 12,313 ರೈತರಿಗೆ ಬೇರೆ ಬೇರೆ ಕಾರಣಗಳಿಂದಾಗಿ ಪರಿಹಾರ ಪಾವತಿಗೆ ಬಾಕಿ ಇದ್ದು, 10,548 ಜನ ಅರ್ಹರಿದ್ದು, ತಾಂತ್ರಿಕ ಸಮಸ್ಯೆ ಬಗೆಹರಿಸಿ ಇವರಿಗೆ ಪರಿಹಾರ ಹಣ ಬಿಡುಗಡೆ ಮಾಡಲಾಗುವುದು. ಇನ್ನು 1,771 ರೈತರ ಪರಿಹಾರ ಹಣ ಪಾವತಿಸಲು ಕೆವೈಸಿ ಪೆಂಡಿಂಗ್, ನಿಷ್ಟ್ರೀಯ ಖಾತೆ, ಖಾತೆ ರದ್ದು, ನಿಖರವಲ್ಲದ ಖಾತೆ, ನಿಷ್ಕ್ರಿಯ ಆಧಾರ್ ಜೋಡಣೆಯಿಂದ ಹೀಗೆ ಅನೇಕ ತಾಂತ್ರಿಕ ಕಾರಣಗಳಿಂದ ವೈಫಲ್ಯವಾದ ರೈತರು ಕೊಡಲೇ ತಮ್ಮ ಸಮಸ್ಯೆಗಳನ್ನು ಸರಿಪಡಿಸಿಕೊಳ್ಳಲು ಈ ಮೂಲಕ ತಿಳಿಸಲಾಗಿದೆ ಎಂದು ಹೇಳಿದರು. ಕಳೆದ ಆಗಸ್ಟ್ ಮತ್ತು ಸೆಪ್ಟೆಂಬರ್ ಮಾಹೆಯಲ್ಲಿ ಬಿದ್ದ ಭಾರಿ ಮಳೆಯಿಂದ ಜಿಲ್ಲೆಯಲ್ಲಿ ರಸ್ತೆಗಳು ಹಾನಿಯಾಗಿದ್ದು, ಜಿಲ್ಲೆಯ ಅಫಜಲಪುರ, ಆಳಂದ, ಚಿಂಚೋಳಿ, ಚಿತ್ತಾಪುರ ಜೇವರ್ಗಿ, ಕಲಬುರಗಿ ದಕ್ಷಿಣ, ಕಲಬುರಗಿ ಗ್ರಾಮಾಂತರ ಹೀಗೆ ಒಟ್ಟಾರೆ 90 ರಸ್ತೆ ಕಾಮಗಾರಿಗಳಿಗೆ ಗ್ರಾಮೀಣಾಭಿವೃದ್ಧಿ ಇಲಾಖೆಯಿಂದ 88.08 ಕೋಟಿ ರೂ. ಮಂಜೂರು ಮಾಡಿದ್ದು, ಇದರಲ್ಲಿ ಹೊಸದಾಗಿ ರಸ್ತೆ ನಿರ್ಮಾಣ, ಸುಧಾರಣೆ ಮಾಡಲಾಗುತ್ತದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು. 163 ಕೋಟಿ ರೂ. ವೆಚ್ಚದಲ್ಲಿ 17 ಪ್ರಜಾ ಸೌಧ ನಿರ್ಮಾಣ: ಅಜಯ್ ಸಿಂಗ್ ಕೆ.ಕೆ.ಆರ್.ಡಿ.ಬಿ. ಅಧ್ಯಕ್ಷ, ಜೇವರ್ಗಿ ಶಾಸಕ ಡಾ.ಅಜಯ್ ಸಿಂಗ್ ಈ ವೇಳೆ ಮಾತನಾಡಿ, ಜ.12ರ ಯಡ್ರಾಮಿ ಕಾರ್ಯಕ್ರಮಕ್ಕೆ ರಾಜ್ಯಸಭೆ ವಿಪಕ್ಷ ನಾಯಕ ಡಾ.ಮಲ್ಲಿಕಾರ್ಜುನ ಖರ್ಗೆ, ಸಿಎಂ.ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಕಂದಾಯ ಸಚಿವ ಕೃಷ್ಣ ಬೈರೇಗೌಡ, ಶಾಲಾ ಶಿಕ್ಷಣ ಸಚಿವ ಎಸ್.ಮಧು ಬಂಗಾರಪ್ಪ ಸೇರಿದಂತೆ ಪ್ರದೇಶದ ಜನಪ್ರತಿನಿಧಿಗಳು ಆಗಮಿಸಲಿದ್ದಾರೆ. ಇಲ್ಲಿ ಪ್ರಸಕ್ತ 2025-26ನೇ ಸಾಲಿನಲ್ಲಿ ಶಾಲಾ ಶಿಕ್ಷಣ ಇಲಾಖೆಯಿಂದ ಪ್ರದೇಶಕ್ಕೆ ಘೋಷಿಸಿದ 100 ಕೆ.ಪಿ.ಎಸ್. ಶಾಲೆ ಜೊತೆಗೆ ಮಂಡಳಿಯಿಂದ ಹೆಚ್ಚುವರಿಯಾಗಿ 200 ಶಾಲೆ ನಿರ್ಮಿಸುವ ಕಾಮಗಾರಿಗೆ ಶಂಕುಸ್ಥಾಪನೆ ನೀಡಲಾಗುತ್ತದೆ. ಇದರಿಂದ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ 8-10 ಕೆ.ಪಿ.ಎಸ್. ಶಾಲೆ ಬರಲಿವೆ. ಕಂದಾಯ ಇಲಾಖೆ ಮತ್ತು ಮಂಡಳಿ ಅನುದಾನ ಸೇರಿ ಒಟ್ಟು 163 ಕೋಟಿ ರೂ. ವೆಚ್ಚದಲ್ಲಿ 17 ಪ್ರಜಾ ಸೌಧ ನಿರ್ಮಾಣಕ್ಕೆ ಸಿ.ಎಂ. ಅವರು ಅಡಿಗಲ್ಲು ನೆರವೇರಿಸಲಿದ್ದಾರೆ ಎಂದರು. ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ರೇಷ್ಮೆ ಉದ್ಯಮಗಳ ನಿಯಮಿತದ ಅಧ್ಯಕ್ಷರು ಹಾಗೂ ಕಲಬುರಗಿ ಉತ್ತರ ಕ್ಷೇತ್ರದ ಶಾಸಕಿ ಕನೀಜ್ ಫಾತಿಮಾ, ಶಾಸಕ ಅಲ್ಲಮಪ್ರಭು ಪಾಟೀಲ್, ಎಂ.ಎಲ್.ಸಿ ತಿಪ್ಪಣ್ಣಪ್ಪ ಕಮಕನೂರ, ಜಗದೇವ ಗುತ್ತೇದಾರ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಝಹರ್ ಖಾನ್ ಆಲಂ, ಕೆ.ಕೆ.ಆರ್.ಟಿ.ಸಿ ಅಧ್ಯಕ್ಷ ಅರುಣಕುಮಾರ್ ಪಾಟೀಲ್, ಜೆಸ್ಕಾಂ ಅಧ್ಯಕ್ಷ ಪ್ರವೀಣ ಪಾಟೀಲ್ ಹರವಾಳ ಮತ್ತಿತ್ತರರು ಇದ್ದರು.
Bengaluru | ಅಗ್ನಿ ಅವಘಡ: ಐವರು ಕಾರ್ಮಿಕರಿಗೆ ಗಂಭೀರ ಗಾಯ
ಬೆಂಗಳೂರು : ಅಡುಗೆ ಅನಿಲ ಸೋರಿಕೆಯಿಂದ ಅಗ್ನಿ ಅವಘಡ ಸಂಭವಿಸಿ ಐವರು ಕಾರ್ಮಿಕರು ಗಂಭೀರವಾಗಿ ಗಾಯಗೊಂಡ ಘಟನೆ ಪೀಣ್ಯ ಪೊಲೀಸ್ ಠಾಣಾ ವ್ಯಾಪ್ತಿಯ ಚೊಕ್ಕಸಂದ್ರದಲ್ಲಿ ನಡೆದಿದೆ. ಜ.9ರ ಶುಕ್ರವಾರ ಬೆಳಗ್ಗೆ ಅವಘಡ ಸಂಭವಿಸಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಘಟನೆಯಲ್ಲಿ ಬಿಹಾರ ಮೂಲದ ಅಂಶುರಾಜ್ ಕುಮಾರ್(18), ಹುಸೈನ್ ಖಾನ್(21), ರೋಹಿತ್ ಚೌದರಿ (20), ಆರಬೇಗ್ ಆಲಂ(26) ಹಾಗೂ ಮುಜಾಫರ್ ಹುಸೈನ್(19) ಎಂಬ ಕಾರ್ಮಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ. ಬೆಂಗಳೂರಲ್ಲಿ ಕೆಲಸ ಮಾಡುತ್ತಿದ್ದ ಐವರೂ ಚೊಕ್ಕಸಂದ್ರದಲ್ಲಿ ಒಂದೇ ರೂಮ್ನಲ್ಲಿ ವಾಸವಿದ್ದರು. ರೂಮ್ನಲ್ಲಿದ್ದ ಸಿಲಿಂಡರ್ನಿಂದ ಅಡುಗೆ ಅನಿಲ ಸೋರಿಕೆ ಆಗಿರುವುದನ್ನು ಗಮನಿಸದೆ ಶುಕ್ರವಾರ ಬೆಳಗ್ಗೆ ಟೀ ಕಾಯಿಸಲು ಲೈಟರ್ ಹೊತ್ತಿಸಿದಾಗ ಅಗ್ನಿ ಅವಘಡ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸದ್ಯ, ಗಾಯಾಳುಗಳಿಗೆ ನಗರದ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಈ ಸಂಬಂಧ ಪೀಣ್ಯಾ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನೇಜಾರು ನಾಲ್ವರ ಹತ್ಯೆ ಪ್ರಕರಣ: ಒಟ್ಟು 18 ಸಾಕ್ಷಿಗಳ ವಿಚಾರಣೆ ಪೂರ್ಣ
ಉಡುಪಿ, ಜ.10: ನೇಜಾರು ತಾಯಿ ಮತ್ತು ಮೂವರು ಮಕ್ಕಳ ಹತ್ಯೆ ಪ್ರಕರಣಕ್ಕೆ ಮೃತದೇಹ ಮಹಜರಿಗೆ ಸಂಬಂಧಿಸಿ ನಾಲ್ಕು ಸಾಕ್ಷಿಗಳ ಮುಖ್ಯ ವಿಚಾರಣೆ ಹಾಗೂ ಪಾಟಿ ಸವಾಲು ಉಡುಪಿ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಜ.7ರಂದು ನಡೆಯಿತು. ಕೊಲೆಯ ನಾಲ್ವರ ಮೃತದೇಹಗಳ ಮಹಜರು ನಡೆಸಿದವರನ್ನು ಸರಕಾರದ ಪರವಾಗಿ ವಿಶೇಷ ಸರಕಾರಿ ಅಭಿಯೋಜಕ ಶಿವಪ್ರಸಾದ್ ಆಳ್ವಾ ಮುಖ್ಯ ವಿಚಾರಣೆಗೆ ಒಳಪಡಿಸಿದರೆ, ಆರೋಪಿ ಪರ ವಕೀಲ ರಾಜು ಪೂಜಾರಿ ಪಾಟಿಸವಾಲು ನಡೆಸಿದರು. ಎರಡನೇ ಹಂತದಲ್ಲಿ ಒಟ್ಟು 15 ಸಾಕ್ಷಿಗಳಿಗೆ ಸಮನ್ಸ್ ಜಾರಿ ಮಾಡಲಾಗಿದ್ದು, ಅದರಲ್ಲಿ 11ಮಂದಿಯನ್ನು ಕೈಬಿಟ್ಟು ಕೇವಲ ನಾಲ್ಕು ಮಂದಿಯ ವಿಚಾರಣೆ ಮಾತ್ರ ನಡೆಸಲಾಯಿತು. ಈವರೆಗೆ ಒಟ್ಟು 18 ಸಾಕ್ಷಿಗಳ ವಿಚಾರಣೆ ನಡೆಸಲಾಗಿದೆ. ಮುಂದಿನ ವಿಚಾರಣೆಯನ್ನು ಜ.30 ಮತ್ತು 31ಕ್ಕೆ ನಿಗದಿ ಪಡಿಸಿ ನ್ಯಾಯಾಧೀಶರು ಆದೇಶ ಹೊರಡಿಸಿದರು. ಆ ದಿನದಂದು ಮತ್ತೆ 15 ಸಾಕ್ಷಿಗಳ ವಿಚಾರಣೆ ಗಾಗಿ ಸಮನ್ಸ್ ಜಾರಿ ಮಾಡಲು ಸೂಚಿಸಲಾಗಿದೆ. ಈ ಸಂದರ್ಭದಲ್ಲಿ ಆರೋಪಿಯನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರುಪಡಿಸಲಾಯಿತು.
ಅಲುಗಾಡ್ತಿದೆ ಇರಾನ್ನ ಇಸ್ಲಾಮಿಕ್ ರಿಪಬ್ಲಿಕ್ ಅಡಿಪಾಯ, ಅಮೆರಿಕದಿಂದ ಬಂತು 'ಯುವರಾಜ'ನ ಸಂದೇಶ! ಏನಿದು ಗದ್ದಲ?
ಇರಾನ್ನಲ್ಲಿ ಆರ್ಥಿಕ ಬಿಕ್ಕಟ್ಟು ಮತ್ತು ಕರೆನ್ಸಿ ಮೌಲ್ಯ ಕುಸಿತದಿಂದಾಗಿ ಪ್ರಾರಂಭವಾದ ಪ್ರತಿಭಟನೆಗಳು ಈಗ ಬೃಹತ್ ಕ್ರಾಂತಿಯ ಸ್ವರೂಪ ಪಡೆದುಕೊಂಡಿವೆ. ಡಿಸೆಂಬರ್ 28 ರಂದು ಪ್ರಾರಂಭವಾದ ಈ ಪ್ರತಿಭಟನೆಗಳು, ಕಳೆದ ಎರಡು ವಾರಗಳಲ್ಲಿ ದೇಶದ ಮೂಲೆ ಮೂಲೆಗೂ ಹರಡಿವೆ. ಆರಂಭದಲ್ಲಿ ಆರ್ಥಿಕ ಸಮಸ್ಯೆಗಳ ವಿರುದ್ಧವಾಗಿದ್ದ ಈ ಹೋರಾಟ, ಈಗ ಆಡಳಿತಾರೂಢ ಇಸ್ಲಾಮಿಕ್ ರಿಪಬ್ಲಿಕ್ ಮತ್ತು ಸುಪ್ರೀಂ ಲೀಡರ್ ಅಯತೊಲ್ಲಾ ಅಲಿ ಖಮೇನಿ ವಿರುದ್ಧ ನೇರ ಯುದ್ಧವಾಗಿ ಮಾರ್ಪಟ್ಟಿದೆ.
‘ವಿಬಿ- ಜಿ ರಾಮ್ ಜಿ ಯೋಜನೆ’ ಕುರಿತು ಕಾಂಗ್ರೆಸ್ ಸುಳ್ಳಿನ ಸಂಕಥನ ಸೃಷ್ಟಿಸುತ್ತಿದೆ : ಎಚ್.ಡಿ.ಕುಮಾರಸ್ವಾಮಿ
ಬೆಂಗಳೂರು : ‘ವಿಬಿ: ಜಿ ರಾಮ್ ಜಿ ಯೋಜನೆ’ಯ ಬಗ್ಗೆ ಕಾಂಗ್ರೆಸ್ ಪಕ್ಷ ಸುಳ್ಳಿನ ಸಂಕಥನ ಸೃಷ್ಟಿ ಮಾಡುತ್ತಿದ್ದು, ಆ ಸುಳ್ಳನ್ನು ಎದುರಿಸಲು ನಾವು ದಾಖಲೆ ಸಮೇತ ಬಹಿರಂಗ ಚರ್ಚೆಗೆ ತಯಾರಿದ್ದೇವೆ ಎಂದು ಕೇಂದ್ರ ಬೃಹತ್ ಕೈಗಾರಿಕೆ ಹಾಗೂ ಉಕ್ಕು ಖಾತೆ ಸಚಿವ ಎಚ್.ಡಿ.ಕುಮಾರಸ್ವಾಮಿ, ರಾಜ್ಯ ಕಾಂಗ್ರೆಸ್ ನಾಯಕರಿಗೆ ಸವಾಲು ಹಾಕಿದ್ದಾರೆ. ಶನಿವಾರ ನಗರದ ಖಾಸಗಿ ಹೊಟೇಲ್ನಲ್ಲಿ ಬಿಜೆಪಿ ನಾಯಕರೊಂದಿಗೆ ಜಂಟಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷವು ದೇಶದಲ್ಲಿ ಸುದೀರ್ಘ ಕಾಲ ಆಡಳಿತ ನಡೆಸಿದೆ. ಯಾವುದಾದರೂ ಪ್ರಮುಖ ಯೋಜನೆಗಳಿಗೆ ಮಹಾತ್ಮ ಗಾಂಧಿ ಅವರ ಹೆಸರನ್ನಿಟ್ಟಿದ್ದಾರೆಯೇ? ಎಲ್ಲ ಯೋಜನೆಗಳಿಗೆ ನೆಹರು ಕುಟುಂಬದ ಸದಸ್ಯರ ಹೆಸರುಗಳನ್ನು ಇಟ್ಟು ಗಾಂಧೀಜಿಗೆ ದ್ರೋಹ ಬಗೆದಿದ್ದಾರೆ. ಇವರಿಗೆ ಗಾಂಧೀಜಿ ಬಗ್ಗೆ ಮಾತನಾಡಲು ನೈತಿಕತೆ ಇಲ್ಲ ಎಂದು ಕಿಡಿಕಾರಿದರು. ನಕಲಿ ಬಿಲ್ ಸೃಷ್ಟಿಸಿ ಲೂಟಿ ಮಾಡಿದ್ದು ಸಾಲದೇ?: ಹೊರಗೆ ಅಪಪ್ರಚಾರ ಮಾಡುತ್ತಿರುವುದು ಸಾಲದು ಎಂಬಂತೆ ವಿಧಾನಸಭೆ ಅಧಿವೇಶನವನ್ನು ಬೇರೆ ಕರೆಯುತ್ತಿದ್ದಾರೆ. ಪಾದಯಾತ್ರೆಯನ್ನು ಕೂಡ ನಡೆಸುತ್ತಾರಂತೆ. ನರೇಗಾ ಹೆಸರಿನಲ್ಲಿ ನಕಲಿ ಬಿಲ್ ಗಳನ್ನು ಸೃಷ್ಟಿಸಿ ಲೂಟಿ ಮಾಡಿದ್ದು ಸಾಲದೇ? ಎಂದು ಪ್ರಶ್ನಿಸಿದ ಅವರು, ನರೇಗಾ ಯೋಜನೆ ಸ್ಥಗಿತವಾಗಿಲ್ಲ. ಕಳೆದ ಅನೇಕ ವರ್ಷಗಳಿಂದ ಈ ಯೋಜನೆಯಲ್ಲಿ ನಡೆದಿದ್ದ ಅಕ್ರಮಗಳನ್ನು ನರೇಂದ್ರ ಮೋದಿ ಅವರ ಸರಕಾರ ಸರಿಪಡಿಸಿ ಸುಧಾರಣೆಗಳನ್ನು ತಂದಿದೆ ಎಂದು ಹೇಳಿದರು. ಜಿ ರಾಮ್ ಜಿ ಯೋಜನೆಯಿಂದ ಗ್ರಾಮ ಪಂಚಾಯ್ತಿ ಅಧಿಕಾರಕ್ಕೆ ಆಗಲಿ ಅಥವಾ ರಾಜ್ಯ ಸರಕಾರಗಳ ಅಧಿಕಾರಕ್ಕೆ ಯಾವುದೇ ಧಕ್ಕೆ ಆಗಲ್ಲ. ಈ ಯೋಜನೆಗೆ ಪೂರ್ಣ ಅನುದಾನ ನೀಡುತ್ತಿರುವುದು ಕೇಂದ್ರ ಸರಕಾರ. ಆ ಅನುದಾನವನ್ನು ರಾಜ್ಯ ಸರಕಾರ ಸರಿಯಾಗಿ ಬಳಕೆ ಮಾಡುತ್ತಿಲ್ಲ. ಈ ಯೋಜನೆಯಲ್ಲಿ ಗ್ರಾಮ ಪಂಚಾಯಿತಿಗಳಿಗೆ ಹೆಚ್ಚು ಶಕ್ತಿ, ಅಧಿಕಾರ ನೀಡಲಾಗಿದೆ ಎಂದು ಕುಮಾರಸ್ವಾಮಿ ತಿಳಿಸಿದರು. ಗ್ರಾಮ ಪಂಚಾಯಿತಿಗಳೆ ತಮಗೆ ಬೇಕಾದ ಯೋಜನೆಗಳನ್ನು ರೂಪಿಸಲಿವೆ ಹಾಗೂ ಗ್ರಾಮ ಸಭೆಗಳು ಕೆಲಸದ ಆದ್ಯತೆ ಗುರುತಿಸಿ ಅನುಷ್ಠಾನ, ಮೇಲ್ವಿಚಾರಣೆ ಮತ್ತು ಸಾಮಾಜಿಕ ಲೆಕ್ಕಪರಿಶೋಧನೆಯನ್ನು ಕಡ್ಡಾಯಗೊಳಿಸುವ ಮೂಲಕ ಪಾರದರ್ಶಕತೆ ತರಲಾಗಿದೆ. ಜಿ ರಾಮ್ ಜಿ ಯೋಜನೆಯನ್ನು ಶೇ.60:40ರಷ್ಟು ಅನುಪಾತದಲ್ಲಿ ರೂಪಿಸಲಾಗಿದೆ. ರಾಜ್ಯ ಸರಕಾರಕ್ಕೂ ಜವಾಬ್ದಾರಿ ಇರಲಿ ಅಂತ ಶೇ.40ರಷ್ಟು ರಾಜ್ಯದ ಪಾಲು ನಿಗದಿ ಮಾಡಲಾಗಿದೆ ಎಂದು ಕುಮಾರಸ್ವಾಮಿ ಹೇಳಿದರು. ಈ ಹಿಂದೆ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾಗ ಕೊಪ್ಪಳದಲ್ಲಿ ನರೇಗಾ ಕೂಲಿ ಕೊಟ್ಟಿಲ್ಲ ಅಂತ ಲಾಠಿ ಚಾರ್ಜ್ ಮಾಡಿದ ಪ್ರಕರಣ ನಡೆದಿತ್ತು. ಕೂಲಿ ನೀಡುವುದಾಗಿ ಕಾರ್ಮಿಕರನ್ನು ಟ್ರಾಕ್ಟರ್ ನಲ್ಲಿ ಕರೆದುಕೊಂಡು ಹೋಗಿದ್ದರು. ದುರದೃಷ್ಟವಶಾತ್ ಆ ಟ್ರಾಕ್ಟರ್ ಅಪಘಾತಕ್ಕೆ ತುತ್ತಾಗಿ ಕೆಲ ಕಾರ್ಮಿಕರು ಸಾವನ್ನಪ್ಪಿದರು. ಅವರಿಗೆ ಪರಿಹಾರ ಕೊಡಬೇಕು ಅಂತ ನೋಡಿದಾಗ ಅವರ ಬಳಿ ಜಾಬ್ ಕಾರ್ಡೇ ಇರಲಿಲ್ಲ ಎಂದು ಕುಮಾರಸ್ವಾಮಿ ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ವಿಪಕ್ಷ ನಾಯಕ ಆರ್.ಅಶೋಕ್, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸಿ.ಬಿ. ಸುರೇಶ್ ಬಾಬು, ಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಮಾಜಿ ಸಚಿವ ವೆಂಕಟರಾವ್ ನಾಡಗೌಡ, ಪರಿಷತ್ ಮಾಜಿ ಸದಸ್ಯರಾದ ಕೆ.ಎ.ತಿಪ್ಪೇಸ್ವಾಮಿ, ಅಶ್ವತ್ಥನಾರಾಯಣ, ಚೌಡರೆಡ್ಡಿ ತೂಪಲ್ಲಿ, ಜೆಡಿಎಸ್ ಯುವ ಘಟಕದ ನಿಖಿಲ್ ಕುಮಾರಸ್ವಾಮಿ ಮುಂತಾದವರು ಉಪಸ್ಥಿತರಿದ್ದರು.
ಮಲಯಾಳಂ ಭಾಷಾ ಮಸೂದೆಯ ಕುರಿತು ಎದ್ದಿರುವ ಕಳವಳಗಳು ವಾಸ್ತವವನ್ನು ಪ್ರತಿಫಲಿಸುವುದಿಲ್ಲ: ಸಿಎಂ ಪಿಣರಾಯಿ ವಿಜಯನ್
ತಿರುವನಂತಪುರಂ: ಮಲಯಾಳಂ ಭಾಷಾ ಮಸೂದೆಯ ಕುರಿತು ಎದ್ದಿರುವ ಕಳವಳಗಳನ್ನು ಶನಿವಾರ ತಳ್ಳಿ ಹಾಕಿರುವ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಅವು ವಾಸ್ತವಗಳನ್ನು ಆಧರಿಸಿಲ್ಲ ಎಂದು ಹೇಳಿದ್ದಾರೆ. ಪ್ರಸ್ತಾವಿತ ಶಾಸನದ ಕುರಿತು ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬರೆದಿದ್ದ ಪತ್ರದಲ್ಲಿ ಬಲವಾದ ಆಕ್ಷೇಪಣೆ ವ್ಯಕ್ತಪಡಿಸಿದ ಬಳಿಕ, ಪಿಣರಾಯಿ ವಿಜಯನ್ ಅವರು ಎಕ್ಸ್ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಈ ಸ್ಪಷ್ಟನೆ ನೀಡಿದ್ದಾರೆ. ಭಾಷಾ ಅಲ್ಪಸಂಖ್ಯಾತರು ಹಾಗೂ ದೇಶದ ಬಹುಸಾಂಸ್ಕೃತಿಕ ಗುಣವನ್ನು ರಕ್ಷಿಸಬೇಕಾದ ಅಗತ್ಯವಿದೆ. ಒಂದು ವೇಳೆ ಈ ಕಾಯ್ದೆಯನ್ನು ಜಾರಿಗೊಳಿಸಿದರೆ, ಲಭ್ಯವಿರುವ ಎಲ್ಲ ಸಾಂವಿಧಾನಿಕ ಪರಿಹಾರಗಳನ್ನು ಬಳಸಿಕೊಂಡು ಕರ್ನಾಟಕ ಈ ಮಸೂದೆಯನ್ನು ವಿರೋಧಿಸಲಿದೆ ಎಂದು ಸಿದ್ದರಾಮಯ್ಯ ತಮ್ಮ ಪತ್ರದಲ್ಲಿ ಎಚ್ಚರಿಸಿದ್ದರು. ಇದಕ್ಕೂ ಮುನ್ನ, ಈ ಕುರಿತು ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದ ಸಿದ್ದರಾಮಯ್ಯ, “ಪ್ರಸ್ತಾವಿತ ಮಲಯಾಳಂ ಭಾಷಾ ಮಸೂದೆ–2025 ಮಲಯಾಳಂ ಭಾಷೆಯನ್ನು ಕನ್ನಡ ಮಾಧ್ಯಮ ಶಾಲೆಗಳಲ್ಲೂ ಮೊದಲ ಭಾಷೆಯನ್ನಾಗಿ ಕಡ್ಡಾಯಗೊಳಿಸುವ ಮೂಲಕ, ಭಾಷಾ ಸ್ವಾತಂತ್ರ್ಯ ಹಾಗೂ ಕೇರಳ ಗಡಿ ಜಿಲ್ಲೆಗಳಲ್ಲಿನ ಜೀವಂತ ವಾಸ್ತವದ ಮೇಲೆ ದಾಳಿ ನಡೆಸುತ್ತಿದೆ, ವಿಶೇಷವಾಗಿ ಕಾಸರಗೋಡಿನಲ್ಲಿ” ಎಂದು ಕಳವಳ ವ್ಯಕ್ತಪಡಿಸಿದ್ದರು. ಈ ಬೆಳವಣಿಗೆಗಳ ಕುರಿತು ಎಕ್ಸ್ನಲ್ಲಿ ಪ್ರತಿಕ್ರಿಯಿಸಿರುವ ಪಿಣರಾಯಿ ವಿಜಯನ್, “ಜಾತ್ಯತೀತತೆ ಮತ್ತು ಬಹುಸಾಂಸ್ಕೃತಿಕ ಸಾಂವಿಧಾನಿಕ ಮೌಲ್ಯಗಳನ್ನು ಎತ್ತಿ ಹಿಡಿಯುವಲ್ಲಿ ನಾವು ದೃಢವಾಗಿ ನಿಲ್ಲುತ್ತೇವೆ” ಎಂದು ಸ್ಪಷ್ಟಪಡಿಸಿದ್ದಾರೆ. “ಪ್ರಸ್ತಾವಿತ ಮಸೂದೆಯು ಸ್ಪಷ್ಟ ಹಾಗೂ ನಿಸ್ಸಂದಿಗ್ಧ ಅನುಚ್ಛೇದವನ್ನು ಒಳಗೊಂಡಿದ್ದು, ಈ ಅನುಚ್ಛೇದವು ಭಾಷಾ ಅಲ್ಪಸಂಖ್ಯಾತರ, ವಿಶೇಷವಾಗಿ ಕನ್ನಡ ಮತ್ತು ತಮಿಳು ಭಾಷಿಕ ಸಮುದಾಯಗಳ ಹಕ್ಕುಗಳನ್ನು ರಕ್ಷಿಸುತ್ತದೆ” ಎಂದು ಅವರು ತಿಳಿಸಿದ್ದಾರೆ. ಈ ಪೋಸ್ಟ್ನೊಂದಿಗೆ ಮಸೂದೆಯಲ್ಲಿ ಕಲ್ಪಿಸಲಾಗಿರುವ ಸೂಕ್ತ ಅವಕಾಶಗಳ ಛಾಯಾಚಿತ್ರವನ್ನೂ ಅವರು ಹಂಚಿಕೊಂಡಿದ್ದಾರೆ.
ಮತದಾರರ ಪಟ್ಟಿಯ ಮ್ಯಾಪಿಂಗ್ಗೆ ಸಹಕರಿಸಲು ಮುಹಮ್ಮದ್ ಮಸೂದ್ ಮನವಿ
ಮಂಗಳೂರು, ಜ.10: ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ 2002ನೇ ಸಾಲಿನ ಮತದಾರರ ಪಟ್ಟಿಯನ್ನು 2025 ಪರಿಷ್ಕೃತ ಮತದಾರ ಪಟ್ಟಿಗೆ ಮ್ಯಾಪಿಂಗ್ ಮಾಡುವ ಕಾರ್ಯವು ನಡೆಯುತ್ತಿದೆ. ಇದಕ್ಕೆ ಸಹಕರಿಸಲು ಮುಸ್ಲಿಂ ಸೆಂಟ್ರಲ್ ಕಮಿಟಿಯ ಅಧ್ಯಕ್ಷ ಹಾಗೂ ಮಾಜಿ ವಿಧಾನ ಪರಿಷತ್ ಸದಸ್ಯ ಅಲ್ಹಾಜ್ ಕೆ.ಎಸ್.ಮುಹಮ್ಮದ್ ಮಸೂದ್ ಮನವಿ ಮಾಡಿದ್ದಾರೆ. ಈ ಪ್ರಕ್ರಿಯೆಯು ಪ್ರತಿಯೊಬ್ಬ ಮತದಾರರಿಗೆ ಅತಿ ಮಹತ್ವದ್ದಾಗಿದೆ. 2002ರ ಮತದಾರರಾಗಿದ್ದ ವಾಸಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಸ್ಥಳಾಂತರಗೊಂಡ ಮತದಾರರು ಹಾಗೂ ಮದುವೆಯಾಗಿ ಬಂದವರು ಕಡ್ಡಾಯವಾಗಿ ಮ್ಯಾಪಿಂಗ್ ಕಾರ್ಯ ಮಾಡಿಸಿಕೊಳ್ಳಬೇಕು. ಈ ಹಿಂದೆ ವಾಸವಿದ್ದ ತಮ್ಮ ವಿಧಾನಸಭಾ ಕ್ಷೇತ್ರದ ಸಂಖ್ಯೆ, ಭಾಗದ ಸಂಖ್ಯೆ ಹಾಗೂ ಕ್ರಮ ಸಂಖ್ಯೆಯನ್ನು ತಿಳಿದಿರಬೇಕು. ಒಂದು ವೇಳೆ 2002ರ ಮತದಾರರ ಪಟ್ಟಿಯಲ್ಲಿ ಹೆಸರು ಇಲ್ಲದಿದ್ದರೆ ಈ ಮೊದಲು ನೀವು ವಾಸ್ತವಿದ್ದ ಸ್ಥಳದ ಮತದಾರರ ಪಟ್ಟಿಯಲ್ಲಿ ನಿಮ್ಮ ತಂದೆ ತಾಯಿಯ ಕ್ರಮ ಸಂಖ್ಯೆ ಅಥವಾ ಅಜ್ಜ ಅಜ್ಜಿಯ ಕ್ರಮ ಸಂಖ್ಯೆಯೊಂದಿಗೆ ಮಾಹಿತಿ ಒದಗಿಸಬೇಕು. ಈ ಎಲ್ಲ ಮಾಹಿತಿಯನ್ನು ನಿಮ್ಮ ಪ್ರದೇಶದ ಬೂತ್ ಲೆವೆಲ್ ಆಫೀಸರ್ಗೆ ಒಪ್ಪಿಸಿ ಅವರ ಮುಖಾಂತರ ಮ್ಯಾಪಿಂಗ್ ಮಾಡಿಸಿಕೊಳ್ಳಬೇಕು ಎಂದು ಕರೆ ನೀಡಿದರು. ಈ ಬಗ್ಗೆ ಎಲ್ಲಾ ಜಮಾಅತ್ನ ಮಸೀದಿಯ ಪದಾಧಿಕಾರಿಗಳು ಮುತುವರ್ಜಿ ವಹಿಸಿ ಸೂಕ್ತ ಮಾಹಿತಿ ನೀಡಿ ಸಹಕರಿಸಬೇಕೆಂದು ಅಲ್ಹಾಜ್ ಕೆ.ಎಸ್. ಮುಹಮ್ಮದ್ ಮಸೂದ್ ಸೂಚಿಸಿದ್ದಾರೆ.
ತೈಲ ಟ್ಯಾಂಕರ್ ವಶ ಪಡಿಸಿದ ಅಮೆರಿಕ; ಯಾಕಾಗಿ ಈ ಕ್ರಮ? ʼಶ್ಯಾಡೋ ಫ್ಲೀಟ್ʼ ಹೇಗೆ ಕಾರ್ಯನಿರ್ವಹಿಸುತ್ತದೆ?
ಕಳೆದ ಕೆಲವು ವಾರಗಳಲ್ಲಿ ತೈಲ ಟ್ಯಾಂಕರ್ಗಳನ್ನು ವಶಪಡಿಸಿಕೊಳ್ಳುವ ಮೂಲಕ ಅಮೆರಿಕವು ಶ್ಯಾಡೋ ಫ್ಲೀಟ್ ಟ್ಯಾಂಕರ್ಗಳ ಮೇಲೆ ತೀವ್ರ ಕ್ರಮ ಕೈಗೊಳ್ಳುವ ಸೂಚನೆ ನೀಡಿದೆ. ನಿರ್ಬಂಧಗಳನ್ನು ತಪ್ಪಿಸಲು, ರಷ್ಯಾ ತೈಲವನ್ನು ಅಕ್ರಮವಾಗಿ ಮಾರಾಟ ಮಾಡಲು ಶ್ಯಾಡೋ ಫ್ಲೀಟ್ ಟ್ಯಾಂಕರ್ ಬಳಸುತ್ತಿದೆ. ರಹಸ್ಯವಾಗಿ ತೈಲವನ್ನು ಸಾಗಿಸುವ ಈ ಹಡಗುಗಳು ಬೇರೆ ಬೇರೆ ಹೆಸರು ಮತ್ತು ಧ್ವಜ ಬಳಸುವುದರಿಂದ ಅವುಗಳ ಚಲನೆಯನ್ನು ಟ್ರ್ಯಾಕ್ ಮಾಡುವುದು ಅಷ್ಟು ಸುಲಭವಲ್ಲ. ಇವು ಅದರ ಸರಕುಗಳ ಮೂಲವನ್ನು ಮರೆಮಾಡಲು ವಿವಿಧ ತಂತ್ರಗಳನ್ನು ಬಳಸುತ್ತದೆ. ನಿಷೇಧಿಸಿದ ಕಚ್ಚಾ ತೈಲ ಸಾಗಣೆಯಲ್ಲಿ ಭಾಗಿಯಾಗಿದೆ ಎಂದು ಹೇಳಲಾದ ಮರಿನೆರಾ ಮತ್ತು ಸೋಫಿಯಾ ಎರಡು ತೈಲ ಟ್ಯಾಂಕರ್ಗಳನ್ನು ಬುಧವಾರ ಅಮೆರಿಕ ವಶಪಡಿಸಿಕೊಂಡಿದೆ. ಶ್ಯಾಡೋ ಫ್ಲೀಟ್ ಭಾಗವೆಂದು ಹೇಳಲಾದ ಎರಡೂ ಟ್ಯಾಂಕರ್ಗಳನ್ನು ಯುಎಸ್ ಮೊದಲೇ ನಿಷೇಧಿಸಿತ್ತು. ಕಳೆದ ತಿಂಗಳು, ವೆನೆಜುವೆಲಾದ ತೈಲ ವ್ಯಾಪಾರದಲ್ಲಿ ಭಾಗಿಯಾಗಿದೆ ಎಂಬ ಆರೋಪದ ಮೇಲೆ ಯುಎಸ್ ಸೆಂಚುರೀಸ್ ಮತ್ತು ಸ್ಕಿಪ್ಪರ್ ಎರಡು ತೈಲ ಟ್ಯಾಂಕರ್ಗಳನ್ನು ವಶಪಡಿಸಿಕೊಂಡಿದೆ. ಟ್ಯಾಂಕರ್ ಅನ್ನು ಅಮೆರಿಕ ವಶಪಡಿಸಿಕೊಂಡಿದ್ದು ಹೇಗೆ? ಅಮೆರಿಕದ ಕರಾವಳಿ ಕಾವಲು ಪಡೆ ವಾರಗಳ ಕಾಲ ಬೆನ್ನಟ್ಟಿದ ನಂತರ ಹಡಗುಗಳನ್ನು ವಶ ಪಡಿಸಿಕೊಳ್ಳಲಾಯಿತು. ಮೂಲತಃ ಬೆಲ್ಲಾ 1 ಎಂದು ಕರೆಯಲಾಗುತ್ತಿದ್ದ ಈ ಟ್ಯಾಂಕರ್, ಇರಾನ್ ಮತ್ತು ವೆನೆಜುವೆಲಾಗೆ ಸಂಬಂಧಿಸಿದ ಅಕ್ರಮ ತೈಲವನ್ನು ಸಾಗಿಸುವ ಶ್ಯಾಡೋ ಫ್ಲೀಟ್ (ನೆರಳು ನೌಕಾಪಡೆಯ) ಭಾಗವಾಗಿ ಕಾರ್ಯನಿರ್ವಹಿಸಿದ್ದಕ್ಕಾಗಿ 2024 ರಲ್ಲಿ ಅಮೆರಿಕ ನಿಷೇಧ ವಿಧಿಸಿತ್ತು. ಕಳೆದ ತಿಂಗಳು, ಗಯಾನಾ ಧ್ವಜದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮತ್ತು ವೆನೆಜುವೆಲಾ ಕಡೆಗೆ ಸಾಗುತ್ತಿದ್ದ ಹಡಗನ್ನು ವಶಪಡಿಸಿಕೊಳ್ಳಲು ಯುಎಸ್ ಅಧಿಕಾರಿಗಳು ಪ್ರಯತ್ನಿಸಿದರು. ಹಡಗಿನ ಸಿಬ್ಬಂದಿ ಅದನ್ನು ನಿಲ್ಲಿಸಲು ನಿರಾಕರಿಸಿ ಹಠಾತ್ತನೆ ಅಟ್ಲಾಂಟಿಕ್ಗೆ ಮಾರ್ಗ ಬದಲಾಯಿಸಿದರು. ಹಡಗನ್ನು ನಂತರ ಮರಿನೆರಾ ಎಂದು ಮರುನಾಮಕರಣ ಮಾಡಿ ರಷ್ಯಾದ ಧ್ವಜದ ಅಡಿಯಲ್ಲಿ ಮರು ನೋಂದಾಯಿಸಲಾಯಿತು. ಅಮೆರಿಕ ಅಧಿಕಾರಿಗಳ ಪ್ರಕಾರ, ಕಾರ್ಯಾಚರಣೆಗೆ ಮುಂಚಿತವಾಗಿ ಮಿಲಿಟರಿ ಸ್ವತ್ತುಗಳನ್ನು ಯುಕೆಗೆ ಮರುಸ್ಥಾಪಿಸಲಾಯಿತು. ಅಂತಿಮವಾಗಿ ಉತ್ತರ ಅಟ್ಲಾಂಟಿಕ್ ಮಹಾಸಾಗರದಲ್ಲಿ ಐಸ್ಲ್ಯಾಂಡ್ನ ದಕ್ಷಿಣಕ್ಕೆ 190 ಮೈಲುಗಳಷ್ಟು ದೂರದಲ್ಲಿ ಟ್ಯಾಂಕರ್ ಅನ್ನು ವಶಪಡಿಸಿಕೊಳ್ಳಲಾಯಿತು. ಅಮೆರಿಕದ ನಿರ್ಬಂಧಗಳ ಉಲ್ಲಂಘನೆಗಾಗಿ ಫೆಡರಲ್ ನ್ಯಾಯಾಲಯದ ವಾರಂಟ್ ಅಡಿಯಲ್ಲಿ ಕಾರ್ಯಾಚರಣೆಯನ್ನು ನಡೆಸಲಾಯಿತು. ಅಮೆರಿಕದ ಬಹು ಏಜೆನ್ಸಿಗಳ ಬೆಂಬಲದೊಂದಿಗೆ ಈ ಕಾರ್ಯಾಚರಣೆಯನ್ನು ನಡೆಸಲಾಯಿತು ಎಂದು ಯುಎಸ್ ಯುರೋಪಿಯನ್ ಕಮಾಂಡ್ ಹೇಳಿದೆ. ► ಐದು ತೈಲ ಟ್ಯಾಂಕರ್ ವಶಪಡಿಸಿಕೊಂಡ ಅಮೆರಿಕ ವೆನೆಜುವೆಲಾದ ತೈಲ ರಫ್ತುಗಳನ್ನು ನಿಯಂತ್ರಿಸಲು ಟ್ರಂಪ್ ಆಡಳಿತವು ತನ್ನ ಪ್ರಯತ್ನಗಳನ್ನು ಮುಂದುವರಿಸುತ್ತಿದ್ದಂತೆ, ಕೆರಿಬಿಯನ್ ಸಮುದ್ರದಲ್ಲಿ ಅಮೆರಿಕದ ಪಡೆಗಳು ಟ್ಯಾಂಕರ್ ಅನ್ನು ವಶಪಡಿಸಿಕೊಳ್ಳುತ್ತಿವೆ. 2026 ಜನವರಿ 09ರಂದು ಅಮೆರಿಕ ವಶಪಡಿಸಿಕೊಂಡ ಐದನೇ ಹಡಗಿನ ಹೆಸರು ಒಲಿನಾ. ವೆನೆಜುವೆಲಾದ ಮಧ್ಯಂತರ ಸರ್ಕಾರದ ಮೇಲೆ ಒತ್ತಡ ಹೇರಲು ಮತ್ತು ಡಾರ್ಕ್ ಫ್ಲೀಟ್ ಆಫ್ ಟ್ಯಾಂಕರ್ಗಳನ್ನು ಸೇವೆಯಿಂದ ತೆಗೆದುಹಾಕಲು ಅಮೆರಿಕ ಈ ಕ್ರಮ ಕೈಗೊಳ್ಳುತ್ತಿದೆ. ಈ ಫ್ಲೀಟ್ ನಿಷೇಧಿತ ಮತ್ತು ಅಕ್ರಮ ತೈಲವನ್ನು ಸಾಗಿಸುವ 1,000 ಕ್ಕೂ ಹೆಚ್ಚು ಹಡಗುಗಳನ್ನು ಒಳಗೊಂಡಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಈ ವಾರದ ಆರಂಭದಲ್ಲಿ ಉತ್ತರ ಅಟ್ಲಾಂಟಿಕ್ ಮತ್ತು ಕೆರಿಬಿಯನ್ನಲ್ಲಿ ನಡೆದ ಕಾರ್ಯಾಚರಣೆಗಳಲ್ಲಿ ವೆನೆಜುವೆಲಾದ ತೈಲ ರಫ್ತಿಗೆ ಸಂಬಂಧಿಸಿದ ಎರಡು ಇತರ ಟ್ಯಾಂಕರ್ಗಳನ್ನು ವಶಪಡಿಸಿಕೊಂಡಿರುವುದಾಗಿ ಅಮೆರಿಕ ಹೇಳಿದೆ. ಅವುಗಳಲ್ಲಿ ಒಂದು ಯುಕೆ ರಾಯಲ್ ನೇವಿಯ ಸಹಾಯದಿಂದ ವಶಪಡಿಸಿಕೊಂಡ ರಷ್ಯಾದ ಧ್ವಜ ಹೊಂದಿರುವ ಮರಿನೆರಾ . ಇದು ವೆನೆಜುವೆಲಾ, ರಷ್ಯಾ ಮತ್ತು ಇರಾನ್ಗೆ ತೈಲ ಸಾಗಿಸುವ ನೆರಳು ನೌಕಾಪಡೆಯ ಭಾಗವಾಗಿದೆ ಎಂದು ಹೇಳಲಾಗಿದೆ. ಇನ್ನೊಂದು ಟ್ಯಾಂಕರ್ - ಎಂ/ಟಿ ಸೋಫಿಯಾ. ಇದು ಅಕ್ರಮ ಚಟುವಟಿಕೆಗಳನ್ನು ನಡೆಸುತ್ತಿದೆ ಎಂದು ಯುಎಸ್ ಅಧಿಕಾರಿಗಳು ಆರೋಪಿಸಿದ್ದಾರೆ. 2025 ಡಿಸೆಂಬರ್ 10 ರಂದು ಕೆರೆಬಿಯನ್ ಸಮುದ್ರದಲ್ಲಿ MT Skipper,MT Centuries, 2026 ಜನವರಿ 7ರಂದು ಮರಿನೆರಾ, MT ಸೋಫಿಯಾವನ್ನು ಅಮೆರಿಕ Operation Southern Spear ಕಾರ್ಯಾಚರಣೆಯಡಿಯಲ್ಲಿ ವಶಪಡಿಸಿಕೊಂಡಿತ್ತು. ► ಅಮೆರಿಕದ್ದು ಕಾನೂನುಬಾಹಿರ ಕ್ರಮ ಎಂದ ರಷ್ಯಾ ಅಂತರರಾಷ್ಟ್ರೀಯ ನೀರಿನಲ್ಲಿ ಅಮೆರಿಕದ ಪಡೆಗಳು ರಷ್ಯಾದ ಧ್ವಜ ಹೊತ್ತ ತೈಲ ಟ್ಯಾಂಕರ್ ಮರಿನೆರಾವನ್ನು ವಶಪಡಿಸಿಕೊಂಡಿದ್ದಕ್ಕೆ ಪ್ರತಿಕ್ರಯಿಸಿರುವ ರಷ್ಯಾದ ವಿದೇಶಾಂಗ ಸಚಿವಾಲಯವು ಇದು ಕಾನೂನುಬಾಹಿರ ಕ್ರಮ ಎಂದು ಹೇಳಿದೆ. ಈ ವಶಪಡಿಸಿಕೊಳ್ಳುವಿಕೆಯು ಅಂತರರಾಷ್ಟ್ರೀಯ ಕಡಲ ಕಾನೂನನ್ನು ಉಲ್ಲಂಘಿಸುತ್ತದೆ. ಇದು ಈಗಾಗಲೇ ಹದಗೆಟ್ಟಿರುವ ರಷ್ಯಾ-ಯುಎಸ್ ಸಂಬಂಧಗಳನ್ನು ಮತ್ತಷ್ಟು ಹೆಚ್ಚಿಸುವ ಅಪಾಯವನ್ನುಂಟುಮಾಡುತ್ತದೆ ಎಂದು ಮಾಸ್ಕೋ ಹೇಳಿದೆ. ಜನವರಿ 7 ರಂದು ಅಮೆರಿಕ ಪಡೆಗಳು ಟ್ಯಾಂಕರ್ ಅನ್ನು ವಶಪಡಿಸಿಕೊಂಡ ನಂತರ, ಗುರುವಾರ ಬಿಡುಗಡೆ ಮಾಡಿದ ಅಧಿಕೃತ ಹೇಳಿಕೆಯಲ್ಲಿ ರಷ್ಯಾದ ವಿದೇಶಾಂಗ ಸಚಿವ ಸೆರ್ಗೆಯ್ ಲಾವ್ರೊವ್, ಅಮೆರಿಕ ಅಂತರರಾಷ್ಟ್ರೀಯ ಕಡಲ ಕಾನೂನಿನ ಸ್ಥಾಪಿತ ತತ್ವಗಳನ್ನು ಗೌರವಿಸಬೇಕು, ಸಮುದ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಮರಿನೆರಾ ಮತ್ತು ಇತರ ನಾಗರಿಕ ಹಡಗುಗಳ ವಿರುದ್ಧದ ಕ್ರಮಗಳನ್ನು ತಕ್ಷಣವೇ ನಿಲ್ಲಿಸಬೇಕು ಎಂದು ಕರೆ ನೀಡಿದ್ದಾರೆ. ಸಚಿವಾಲಯದ ಪ್ರಕಾರ, ಮರಿನೆರಾ ಒಳಗೊಂಡ ಘಟನೆಯು ಯುರೋ-ಅಟ್ಲಾಂಟಿಕ್ ಪ್ರದೇಶದಲ್ಲಿ ಮಿಲಿಟರಿ ಮತ್ತು ರಾಜಕೀಯ ಉದ್ವಿಗ್ನತೆಗಳ ಮತ್ತಷ್ಟು ಉಲ್ಬಣಕ್ಕೆ ಕಾರಣವಾಗಬಹುದು. ಅಮೆರಿಕದ ಬೇಜವಾಬ್ದಾರಿಯುತ ನಡೆಗಳನ್ನು ನೋಡಿ ಇತರ ದೇಶಗಳೂ ಇದೇ ರೀತಿಯ ಕ್ರಮಗಳನ್ನು ತೆಗೆದುಕೊಳ್ಳಲು ಮುಂದಾಗಬಹುದು. ಏತನ್ಮಧ್ಯೆ ಇದರಲ್ಲಿ ಯುನೈಟೆಡ್ ಕಿಂಗ್ಡಮ್ ಭಾಗಿಯಾಗಿದೆ ಎಂದು ಆರೋಪಿಸಿರುವ ರಷ್ಯಾ , ಬ್ರಿಟಿಷ್ ಅಧಿಕಾರಿಗಳು ಉತ್ತರ ಅಟ್ಲಾಂಟಿಕ್ ನೀರಿನಲ್ಲಿ ಯುಎಸ್ ಮಿಲಿಟರಿ ಕಾರ್ಯಾಚರಣೆಯಲ್ಲಿ ತಮ್ಮ ಪಾತ್ರವನ್ನು ಬಹಿರಂಗವಾಗಿ ಒಪ್ಪಿಕೊಂಡಿದ್ದಾರೆ ಎಂದು ಹೇಳಿಕೊಂಡಿದೆ. ಈ ಹಿಂದೆ ಬೆಲ್ಲಾ 1 ಎಂದು ಕರೆಯಲ್ಪಡುತ್ತಿದ್ದ ಮರಿನೆರಾ, ಡಿಸೆಂಬರ್ 24 ರಂದು ರಷ್ಯಾದ ಧ್ವಜದ ಅಡಿಯಲ್ಲಿ ನೌಕಾಯಾನ ಮಾಡಲು ರಷ್ಯಾದ ಮತ್ತು ಅಂತರರಾಷ್ಟ್ರೀಯ ಕಾನೂನುಗಳೆರಡರ ಅನುಸಾರ ತಾತ್ಕಾಲಿಕವಾಗಿ ಅಧಿಕಾರ ಹೊಂದಿದೆ ಎಂದು ರಷ್ಯಾ ಹೇಳಿಕೊಂಡಿದೆ. ಈ ಹಡಗು ರಷ್ಯಾದ ಬಂದರಿಗೆ ಹೋಗುವ ಮಾರ್ಗದಲ್ಲಿ ಉತ್ತರ ಅಟ್ಲಾಂಟಿಕ್ನಲ್ಲಿ ಅಂತರರಾಷ್ಟ್ರೀಯ ನೀರಿನಲ್ಲಿ ಸಾಗುತ್ತಿತ್ತು. ಟ್ಯಾಂಕರ್ನ ಕಾನೂನು ಸ್ಥಿತಿ ಮತ್ತು ನಾಗರಿಕ ಸ್ವರೂಪದ ಬಗ್ಗೆ ಅಮೆರಿಕದ ಅಧಿಕಾರಿಗಳಿಗೆ ಪದೇ ಪದೇ ತಿಳಿಸಲಾಗಿದೆ. ಈ ಸಂಗತಿಯ ಬಗ್ಗೆ ಯಾವುದೇ ಸಂದೇಹವಿರಲು ಸಾಧ್ಯವಿಲ್ಲ ಅಥವಾ ಟ್ಯಾಂಕರ್ 'ಧ್ವಜವಿಲ್ಲದೆ' ಅಥವಾ 'ಸುಳ್ಳು ಧ್ವಜದ ಅಡಿಯಲ್ಲಿ' ನೌಕಾಯಾನ ಮಾಡುತ್ತಿದೆ ಎಂದು ಆರೋಪಿಸಲು ಯಾವುದೇ ಆಧಾರವಿರಲಿಲ್ಲ ಎಂದು ರಷ್ಯಾ ಸಚಿವಾಲಯದ ಹೇಳಿಕೆ ತಿಳಿಸಿದೆ. ಅಂತರರಾಷ್ಟ್ರೀಯ ನೀರಿನಲ್ಲಿ ಹಡಗನ್ನು ನಿಲ್ಲಿಸುವುದು ಮತ್ತು ಪರಿಶೀಲಿಸುವುದು ಶಂಕಿತ ಕಡಲ್ಗಳ್ಳತನ ಅಥವಾ ಗುಲಾಮರ ವ್ಯಾಪಾರದಂತಹ ಸಂಕುಚಿತವಾಗಿ ವ್ಯಾಖ್ಯಾನಿಸಲಾದ ಸಂದರ್ಭಗಳಲ್ಲಿ ಮಾತ್ರ ಅನುಮತಿಸಲಾಗಿದೆ . ಇವೆರಡೂ ಮರಿನೆರಾಗೆ ಅನ್ವಯಿಸುವುದಿಲ್ಲ. ಇತರ ಎಲ್ಲಾ ಸಂದರ್ಭಗಳಲ್ಲಿ, ಅಂತಹ ಕ್ರಮಗಳಿಗೆ ಧ್ವಜ ರಾಷ್ಟ್ರದ ಒಪ್ಪಿಗೆಯ ಅಗತ್ಯವಿರುತ್ತದೆ. ಅಮೆರಿಕದ ಮಿಲಿಟರಿ ಸಿಬ್ಬಂದಿ ಯಾವುದೇ ದೇಶದ ಭಾಗವಾಗಿರದ ಸಮುದ್ರಗಳಲ್ಲಿ ನಾಗರಿಕ ಹಡಗನ್ನು ಹತ್ತುವುದು, ಅವುಗಳನ್ನ ವಶಪಡಿಸಿಕೊಳ್ಳುವುದು, ಅದರ ಸಿಬ್ಬಂದಿಯನ್ನು ಬಂಧಿಸುವುದರ ಜೊತೆಗೆ, ಅಂತರರಾಷ್ಟ್ರೀಯ ಕಡಲ ಕಾನೂನಿನ ಮೂಲಭೂತ ತತ್ವಗಳು ಮತ್ತು ಮಾನದಂಡಗಳು ಮತ್ತು ಚಲಿಸುವ ಸ್ವಾತಂತ್ರ್ಯದ ಸಂಪೂರ್ಣ ಉಲ್ಲಂಘನೆ ಮಾಡಿದೆ. ಹಲವಾರು ದೇಶಗಳ ನಾಗರಿಕರನ್ನು ಒಳಗೊಂಡಂತೆ ಸಿಬ್ಬಂದಿಯ ಸುರಕ್ಷತೆಯ ಬಗ್ಗೆ ಕಳವಳ ವ್ಯಕ್ತಪಡಿಸಿರುವ ರಷ್ಯಾ, ತೀವ್ರ ಹವಾಮಾನ ಪರಿಸ್ಥಿತಿಗಳಲ್ಲಿ ನಡೆಸಲಾಗುತ್ತಿರುವ ವಶಪಡಿಸಿಕೊಳ್ಳುವಿಕೆಯಿಂದ ಉಂಟಾಗುವ ಪರಿಸರ ಅಪಾಯಗಳ ಬಗ್ಗೆ ಎಚ್ಚರಿಕೆ ನೀಡಿದೆ. ಮರಿನೆರಾ ಮತ್ತು ಸಮುದ್ರಗಳಲ್ಲಿ ಕಾನೂನುಬದ್ಧ ಚಟುವಟಿಕೆಗಳಲ್ಲಿ ತೊಡಗಿರುವ ಇತರ ಹಡಗುಗಳ ವಿರುದ್ಧದ ಕಾನೂನುಬಾಹಿರ ಕ್ರಮಗಳನ್ನು ತಕ್ಷಣವೇ ನಿಲ್ಲಿಸುವಂತೆ ನಾವು ವಾಷಿಂಗ್ಟನ್ಗೆ ಕರೆ ನೀಡುತ್ತೇವೆ ಎಂದು ರಷ್ಯಾ ಹೇಳಿದೆ. ಇರಾನ್, ವೆನೆಜುವೆಲಾ ಮತ್ತು ರಷ್ಯಾದಂತಹ ದೇಶಗಳಿಂದ ತೈಲ ಮತ್ತು ಪೆಟ್ರೋಲಿಯಂ ಉತ್ಪನ್ನಗಳ ಸಾಗಣೆಗೆ ಶ್ಯಾಡೋ ಫ್ಲೀಟ್ (ನೆರಳು ನೌಕಾಪಡೆ) ಹಡಗುಗಳನ್ನೇ ಬಳಸಲಾಗುತ್ತವೆ. ಇವು ಅಮೆರಿಕ ವಿಧಿಸಿರುವ ವಿವಿಧ ಹಂತದ ನಿರ್ಬಂಧಗಳಿಗೆ ಒಳಪಟ್ಟಿವೆ. ನೆರಳು ನೌಕಾಪಡೆಯು 3,000 ಕ್ಕೂ ಹೆಚ್ಚು ಹಡಗುಗಳನ್ನು ಒಳಗೊಂಡಿದೆ ಎಂದು ಅಂದಾಜಿಸಲಾಗಿದೆ. ► ‘ಡಾರ್ಕ್’ ಮತ್ತು ‘ಗ್ರೇ’ಶ್ಯಾಡೋ ಶ್ಯಾಡೋ ಫ್ಲೀಟ್ ಎಂಬುದು ವಿಶಾಲವಾದ ಅರ್ಥ ಹೊಂದಿರುವ ಪದವಾಗಿದ್ದು, ನಿಷೇಧಿತ ಅಥವಾ ನಿರ್ಬಂಧಿತ ಸರಕುಗಳನ್ನು ಸಾಗಿಸುವಾಗಲೂ ಸಹ ನಿರ್ಬಂಧಗಳ ಜಾರಿಯನ್ನು ತಪ್ಪಿಸಲು ಮೋಸಗೊಳಿಸುವ ನಡವಳಿಕೆಯನ್ನು ಪ್ರದರ್ಶಿಸುವ ಹಡಗುಗಳನ್ನು ಉಲ್ಲೇಖಿಸಲು ಈ ಪದ ಬಳಸಲಾಗುತ್ತದೆ. ಶ್ಯಾಡೋ ಫ್ಲೀಟ್ ನಲ್ಲಿಯೇ ಎರಡು ವರ್ಗಗಳಿವೆ. ಒಂದು ಡಾರ್ಕ್ ಫ್ಲೀಟ್ ಇನ್ನೊಂದು ಗ್ರೇ ಫ್ಲೀಟ್ . ಕಡಲ ಗುಪ್ತಚರ ಪೂರೈಕೆದಾರ ವಿಂಡ್ವರ್ಡ್ ಪ್ರಕಾರ, ಈ ಪದಗಳನ್ನು ಹೆಚ್ಚಾಗಿ ಪರಸ್ಪರ ಬದಲಿಯಾಗಿ ಬಳಸಲಾಗುತ್ತದೆ. ಡಾರ್ಕ್ ಫ್ಲೀಟ್ ಅತ್ಯಂತ ಅಪಾಯಕಾರಿ, ಇದು ಅಸಹಕಾರವನ್ನು ಪ್ರತಿನಿಧಿಸುತ್ತದೆ. ಈ ಹಡಗುಗಳು ಉದ್ದೇಶಪೂರ್ವಕವಾಗಿ AIS (ಸ್ವಯಂಚಾಲಿತ ಗುರುತಿನ ವ್ಯವಸ್ಥೆ) ಮುಚ್ಚಿಡುವ ನಡವಳಿಕೆ, GNSS (ಜಾಗತಿಕ ಸಂಚರಣೆ ಉಪಗ್ರಹ ವ್ಯವಸ್ಥೆ)ಗಳಲ್ಲಿ ಮೋಸ ಮಾಡುವುದು, ಸುಳ್ಳು ಧ್ವಜಗಳ ಬಳಕೆ, ಗುರುತು ಮರೆ ಮಾಚುವುದು ಮತ್ತು ರಹಸ್ಯ ಹಡಗಿನಿಂದ ಹಡಗಿಗೆ ವರ್ಗಾವಣೆಗಳ ಮೂಲಕ ತಮ್ಮ ಚಟುವಟಿಕೆಯನ್ನು ಮರೆಮಾಡುತ್ತವೆ. ಅವು ಅಪಾರದರ್ಶಕ ಮತ್ತು ನಿರ್ಬಂಧಗಳಿಗೆ ಸಂಬಂಧಿಸಿದ ಸರಕು ಹರಿವುಗಳಿಗೆ ಕೇಂದ್ರಬಿಂದುವಾಗಿವೆ ಎಂದು ವಿಂಡ್ವರ್ಡ್ ಹೇಳಿದೆ. AIS ಒಂದು ಟ್ರಾನ್ಸ್ಪಾಂಡರ್ ವ್ಯವಸ್ಥೆಯಾಗಿದ್ದು ಅದು ಹಡಗಿನ ಗುರುತು, ಸ್ಥಾನ, ಮಾರ್ಗ ಮತ್ತು ಇತರ ಪ್ರಮುಖ ಡೇಟಾವನ್ನು ರವಾನಿಸುತ್ತದೆ. ಇದರಿಂದ ಇತರ ಹಡಗುಗಳು ಮತ್ತು ಅಧಿಕಾರಿಗಳು ನೈಜ-ಸಮಯದ ಆಧಾರದ ಮೇಲೆ ಚಲನೆಯನ್ನು ಟ್ರ್ಯಾಕ್ ಮಾಡಬಹುದು. ರಷ್ಯಾ-ಉಕ್ರೇನ್ ಯುದ್ಧದ ನಂತರ ಹೊರಹೊಮ್ಮಿದ ಹೊಸ ವರ್ಗವೇ ಗ್ರೇ ಫ್ಲೀಟ್ . ಗ್ರೇ ಫ್ಲೀಟ್ ಹಡಗುಗಳು ವ್ಯವಹಾರಕ್ಕೆ ಸ್ವಯಂಚಾಲಿತವಾಗಿ ನಿಷೇಧಿಸಲ್ಪಡುವುದಿಲ್ಲ. ಆದರೆ ಅವು ಅನಿಯಮಿತ ವ್ಯಾಪಾರ ಮಾರ್ಗಗಳು, ತ್ವರಿತ ಮಾಲೀಕತ್ವ ಬದಲಾವಣೆಗಳು, ಹೆಚ್ಚಿನ ಅಪಾಯದ ಬಂದರಗಳನ್ನು ಹೊಂದಿವೆ. ಹೆಚ್ಚಿನ ಸಂಖ್ಯೆಯ ನೆರಳು ನೌಕಾಪಡೆಯ ಟ್ಯಾಂಕರ್ಗಳು ಸಂಕೀರ್ಣ ಮತ್ತು ಅಸ್ಪಷ್ಟ ಮಾಲೀಕತ್ವವನ್ನು ಹೊಂದಿವೆ . ಇವು ಗ್ಯಾಬೊನ್, ಮಾರ್ಷಲ್ ದ್ವೀಪಗಳು, ಕುಕ್ ದ್ವೀಪಗಳು, ಲೈಬೀರಿಯಾ, ಪನಾಮ ಮತ್ತು ಭೂಕುಸಿತ ಮಂಗೋಲಿಯಾದಂತಹ ನಿಯಂತ್ರಕ ಮೇಲ್ವಿಚಾರಣೆ ಕಡಿಮೆ ಇರುವ ಭೌಗೋಳಿಕ ಪ್ರದೇಶಗಳಲ್ಲಿ ನೋಂದಾಯಿಸಲ್ಪಟ್ಟಿವೆ. ಸಾಮಾನ್ಯವಾಗಿ, 15 ಅಥವಾ 20 ವರ್ಷಗಳಿಗಿಂತ ಹೆಚ್ಚು ಹಳೆಯದಾದ ಹಡಗುಗಳು ಕಳಪೆ ಗುಣಮಟ್ಟದ ವಿಮೆ ಮತ್ತು ಪ್ರಮಾಣೀಕರಣಗಳೊಂದಿಗೆ ಕಾರ್ಯನಿರ್ವಹಿಸುತ್ತವೆ. ಮುಂಬೈ ಮೂಲದ ನಿಗೂಢ ನೆರಳು ನೌಕಾಪಡೆಯ ಸಾಗಣೆದಾರ - ಗ್ಯಾಟಿಕ್ ಶಿಪ್ ಮ್ಯಾನೇಜ್ಮೆಂಟ್ 2022 ಮತ್ತು 2023 ರ ನಡುವೆ ರಷ್ಯಾದ ಕಚ್ಚಾ ತೈಲದ ಅತಿದೊಡ್ಡ ಸಾಗಣೆದಾರ ಆಗಿತ್ತು. ಈ ವೇಳೆ ಗ್ಯಾಟಿಕ್ ಸುಮಾರು 60ರಷ್ಟು ಕಚ್ಚಾ ತೈಲ ಮತ್ತು ಪೆಟ್ರೋಲಿಯಂ ಉತ್ಪನ್ನ ಟ್ಯಾಂಕರ್ಗಳ ವಾಣಿಜ್ಯ ವ್ಯವಸ್ಥಾಪಕರಾಗಿ ಕಾರ್ಯ ನಿರ್ವಹಿಸಿತ್ತು. ಇದರ ಮೌಲ್ಯ $1.5 ಬಿಲಿಯನ್ಗಿಂತಲೂ ಹೆಚ್ಚು. ಆದಾಗ್ಯೂ, ಆಗಸ್ಟ್ 2023 ರ ಹೊತ್ತಿಗೆ, ರಷ್ಯಾದ ತೈಲವನ್ನು ಸಾಗಿಸಲು ಅದು ನಿರ್ವಹಿಸುತ್ತಿದ್ದ ಎಲ್ಲಾ ಟ್ಯಾಂಕರ್ಗಳನ್ನು ಸಂಬಂಧಿತ ಕಂಪನಿಗಳ ಜಾಲಕ್ಕೆ ವರ್ಗಾಯಿಸಿತು. ►ಶ್ಯಾಡೋ ಫ್ಲೀಟ್ ಕಾರ್ಯಾಚರಣೆ ಹೇಗಿರುತ್ತದೆ? ಶ್ಯಾಡೋ ಫ್ಲೀಟ್ ಟ್ಯಾಂಕರ್ಗಳು ತಮ್ಮ ಸ್ಥಳ ಮತ್ತು ಸರಕುಗಳನ್ನು ಗುರುತಿಸುವುದನ್ನು ತಪ್ಪಿಸಲು ಮೋಸದ/ ತಪ್ಪಾದ ಗುರುತುಗಳನ್ನು ಪ್ರದರ್ಶಿಸುತ್ತವೆ . ನಿರ್ಬಂಧಗಳ ತಪ್ಪಿಸಿಕೊಳ್ಳುವಿಕೆಯನ್ನು ಗುರುತಿಸಲು ಮತ್ತು ನಿರ್ಬಂಧಗಳನ್ನು ಜಾರಿಗೊಳಿಸಲು ನಿಯೋಜಿಸಲಾದ ಏಜೆನ್ಸಿಗಳು, ಟ್ಯಾಂಕರ್ ನಿಷೇಧಿತ ವಹಿವಾಟಿನಲ್ಲಿ ಭಾಗಿಯಾಗಿದೆಯೇ ಎಂದು ಖಚಿತಪಡಿಸಿಕೊಳ್ಳಲು ಈ ಗುರುತುಗಳನ್ನು ನೋಡುತ್ತವೆ. ಹಾಗಿದ್ದಲ್ಲಿ, ಹಡಗುಗಳು ಮತ್ತು ಅವುಗಳಿಗೆ ಸಂಬಂಧಿಸಿದ ಹಡಗುಗಳನ್ನು ಸಾಮಾನ್ಯವಾಗಿ ನಿಷೇಧಿಸಲಾಗುತ್ತದೆ. ಆದರೆ ಮಿಲಿಟರಿ ಬಲವನ್ನು ಬಳಸಿಕೊಂಡು ಟ್ಯಾಂಕರ್ಗಳನ್ನು ಸಂಪೂರ್ಣವಾಗಿ ವಶಪಡಿಸಿಕೊಳ್ಳುವುದು ಹಿಂದೆ ಬಹುತೇಕ ಕೇಳಿರದ ವಿಷಯವಾಗಿತ್ತು. ನಿಷೇಧಿತ ಬಂದರುಗಳನ್ನು ಪ್ರವೇಶಿಸುವುದು ಅಥವಾ ವರ್ಗಾವಣೆಗಳನ್ನು ನಡೆಸುವಂತಹ ಹೆಚ್ಚಿನ ಅಪಾಯದ ಚಟುವಟಿಕೆಗಳಲ್ಲಿ ನೆರಳು ನೌಕಾ ಟ್ಯಾಂಕರ್ಗಳು ಆಗಾಗ್ಗೆ ತಮ್ಮ AIS ಟ್ರಾನ್ಸ್ಪಾಂಡರ್ಗಳನ್ನು ನಿಷ್ಕ್ರಿಯಗೊಳಿಸುತ್ತವೆ, ಇದರಿಂದಾಗಿ ಅವರು ನಿರ್ಬಂಧಿತ ಸರಕು ವರ್ಗಾವಣೆಯಲ್ಲಿ ಭಾಗವಹಿಸುತ್ತಿರುವಾಗ ಅವರ ಸ್ಥಳವನ್ನು ಗುರುತಿಸುವುದು ಕಷ್ಟಕರವಾಗುತ್ತದೆ. ಕೆಲವೊಮ್ಮೆ GNSS ವಂಚನೆಯೂ ನಡೆಯುತ್ತದೆ. ಸ್ಥಳದ ಬಗ್ಗೆ ತಪ್ಪಾದ(ಸುಳ್ಳು) ಡೇಟಾವನ್ನು ಪ್ರಸಾರ ಮಾಡುವ ಮೂಲ ನಿಜವಾದ ಸ್ಥಳದಿಂದ ನೂರಾರು ಮೈಲುಗಳಷ್ಟು ದೂರದಲ್ಲಿ ಈ ಹಡಗುಗಳು ಇರುವಂತೆ ತೋರಿಸಲಾಗುತ್ತದೆ. ಈ ಹಡಗುಗಳು ಹೆಚ್ಚಾಗಿ ಹಡಗಿನಿಂದ ಹಡಗಿಗೆ (STS) ತೈಲ ವರ್ಗಾವಣೆಯಲ್ಲಿ ತೊಡಗಿಕೊಂಡಿವೆ. ನೆರಳು ನೌಕಾಪಡೆಯ ಟ್ಯಾಂಕರ್ಗಳ ಸಂದರ್ಭದಲ್ಲಿ, STS ವರ್ಗಾವಣೆಗಳನ್ನು ಹೆಚ್ಚಾಗಿ ಬಂದರುಗಳ ಮೇಲ್ವಿಚಾರಣೆಯಿಂದ ದೂರದಲ್ಲಿರುವ ಸಮುದ್ರಗಳಲ್ಲಿ ಮಾಡಲಾಗುತ್ತದೆ .ಆಗಾಗ್ಗೆ ಅನುಮೋದಿತ ಕಚ್ಚಾ ತೈಲವನ್ನು ಅನುಮೋದಿಸದ ಎಣ್ಣೆಯೊಂದಿಗೆ ಬೆರೆಸುವುದು ಅಥವಾ ತೈಲದ ನಿಜವಾದ ಮೂಲವನ್ನು ಮರೆಮಾಚುವ ಉದ್ದೇಶದಿಂದ ಬಹು ಹಡಗುಗಳ ನಡುವೆ ಹಲವಾರು STS ವರ್ಗಾವಣೆಗಳನ್ನು ಮಾಡುವುದೂ ಇಲ್ಲಿ ನಡೆಯುತ್ತದೆ. ಈ ಹಡಗುಗಳು ಆಗಾಗ್ಗೆ ತಮ್ಮ ನೋಂದಣಿ ದೇಶವನ್ನು ಬದಲಾಯಿಸುತ್ತವೆ. ಕನಿಷ್ಠ ಮೇಲ್ವಿಚಾರಣೆ ಹೊಂದಿರುವ ದೇಶಗಳನ್ನೇ ಅದಕ್ಕಾಗಿ ಆಯ್ಕೆ ಮಾಡಲಾಗುತ್ತದ. ಕೆಲವು ಬೇರೆ ಧ್ವಜಗಳ ಅಡಿಯಲ್ಲಿಯೂ ಕಾರ್ಯನಿರ್ವಹಿಸುತ್ತವೆ. ಹಡಗುಗಳ ಹೆಸರುಗಳು ಮತ್ತು ಹಡಗುಗಳನ್ನು ನಿರ್ವಹಿಸುವ ಕಂಪನಿಗಳಲ್ಲಿ ಆಗಾಗ್ಗೆ ಬದಲಾವಣೆಗಳನ್ನು ಸಹ ಗಮನಿಸಲಾಗಿದೆ. ಕಡಲ ಉದ್ಯಮದಲ್ಲಿ ಹಡಗು ಮಾಲೀಕತ್ವ ಮರೆ ಮಾಚಲಾಗುತ್ತಿದ್ದು ಇದು ಹಡಗಿನ ನಿಜವಾದ ಮಾಲಕರು ಮತ್ತು ಟ್ಯಾಂಕರ್ಗಳನ್ನು ನಿರ್ವಹಿಸುವವರನ್ನು ಪತ್ತೆಹಚ್ಚಲು ಅಸಾಧ್ಯವಾಗಿಸುತ್ತದೆ. ಕಡಲ ಉದ್ಯಮದಲ್ಲಿ ವಾಣಿಜ್ಯ ವ್ಯವಸ್ಥಾಪಕರು, ನೋಂದಾಯಿತ ಮಾಲೀಕರು ಮತ್ತು ಲಾಭದಾಯಕ ಮಾಲೀಕರು ಸೇರಿದಂತೆ ವಿವಿಧ ಮಾಲೀಕತ್ವ-ಸಂಬಂಧಿತ ವರ್ಗಗಳಿವೆ. ಸರಳವಾಗಿ ಹೇಳುವುದಾದರೆ, ವಾಣಿಜ್ಯ ವ್ಯವಸ್ಥಾಪಕರು ನೌಕಾಪಡೆಯ ಪರಿಣಾಮಕಾರಿ ವ್ಯವಸ್ಥಾಪಕರಾಗಿದ್ದಾರೆ . ಹಡಗುಗಳಿಗೆ ಸಂಬಂಧಿಸಿದ ವಾಣಿಜ್ಯ ನಿರ್ಧಾರಗಳಿಗೆ ಇವರೇ ಜವಾಬ್ದಾರರಾಗಿರುತ್ತಾರೆ. ಹಡಗಿನ ನೋಂದಾಯಿತ ಮಾಲಕರು ಅಂತರರಾಷ್ಟ್ರೀಯ ಹಡಗು ನೋಂದಣಿಯಲ್ಲಿ ಹಡಗನ್ನು ನೋಂದಾಯಿಸಿದವರಾಗಿರುತ್ತಾರೆ. ಸಾಮಾನ್ಯವಾಗಿ, ನೋಂದಾಯಿತ ಮಾಲೀಕರು ತೆರಿಗೆ-ಸಂಬಂಧಿತ ಉದ್ದೇಶಗಳಿಗಾಗಿ ಮತ್ತು ಗೌಪ್ಯತೆಯನ್ನು ಕಾಪಾಡಿಕೊಳ್ಳಲು ಕಡಲಾಚೆಯ ಸುರಕ್ಷಿತ ತಾಣಗಳಲ್ಲಿ ನೆಲೆಸಿರುತ್ತಾರೆ. ಲಾಭದಾಯಕ ಮಾಲಕರು ಹಡಗಿನ ಅಂತಿಮ ಮಾಲಕರಾಗಿರುತ್ತಾರೆ, ಆದರೆ ಅದರ ಹೆಸರನ್ನು ಹೆಚ್ಚಾಗಿ ಬಹಿರಂಗಪಡಿಸುವುದಿಲ್ಲ ಸರಕು ಮಾರುಕಟ್ಟೆ ವಿಶ್ಲೇಷಣಾ ಸಂಸ್ಥೆ ಕೆಪ್ಲರ್ ಪ್ರಕಾರ, 2025 ರ ಜನವರಿ ಮತ್ತು ಅಕ್ಟೋಬರ್ ನಡುವೆ 904 ಹಡಗುಗಳನ್ನು ಯುಎಸ್, ಯುರೋಪಿಯನ್ ಯೂನಿಯನ್ ಅಥವಾ ಇತರ ಪಾಶ್ಚಿಮಾತ್ಯ ಶಕ್ತಿಗಳು ನಿಷೇಧ ಮಾಡಿವೆ. ಇವುಗಳಲ್ಲಿ, 234 ಡಾರ್ಕ್ STS ವರ್ಗಾವಣೆಗಳ ನಂತರ, 261 ಸ್ಥಳ ವಂಚನೆಯ ನಂತರ ಮತ್ತು 168 ಹಡಗುಗಳನ್ನು ಡಾರ್ಕ್ ಪೋರ್ಟ್ ಕರೆಗಳ ನಂತರ ನಿಷೇಧಿಸಲಾಗಿದೆ . ಡಾರ್ಕ್ STS ವರ್ಗಾವಣೆಗಳು ಹಡಗುಗಳ AIS ಟ್ರಾನ್ಸ್ಪಾಂಡರ್ಗಳು ಆಫ್ ಆಗಿರುವಾಗ ಅವುಗಳ ನಡುವಿನ ಸರಕು ವರ್ಗಾವಣೆಯನ್ನು ತೋರಿಸುತ್ತವೆ. ಅದೇ ರೀತಿ, ಡಾರ್ಕ್ ಪೋರ್ಟ್ ಕರೆಗಳು ಎಂದರೆ ಹಡಗು ಸಮೀಪಿಸುವುದು, ಡಾಕಿಂಗ್ ಮಾಡುವುದು ಅಥವಾ AIS ಟ್ರಾನ್ಸ್ಪಾಂಡರ್ ಆಫ್ ಆಗಿರುವಾಗ ಬಂದರಿನಿಂದ ಹೊರಡುವುದು ಆಗಿದೆ. ಅಕ್ಟೋಬರ್ 2025 ರ ಹೊತ್ತಿಗೆ ಅನುಮತಿ ಪಡೆಯದ 2,974 ಹಡಗುಗಳಲ್ಲಿ ಕನಿಷ್ಠ ಒಂದು ಅನುಮಾನಾಸ್ಪದ ನಡವಳಿಕೆಯನ್ನು ಪ್ರದರ್ಶಿಸಿದ 302 ಹಡಗುಗಳು ಮುಂದಿನ 12 ತಿಂಗಳುಗಳಲ್ಲಿ ನಿರ್ಬಂಧಗಳನ್ನು ಎದುರಿಸುವ ಸಾಧ್ಯತೆ ಇದೆ ಎಂದು ಕೆಪ್ಲರ್ ವಿಶ್ಲೇಷಣೆ ತೋರಿಸಿದೆ. ಈ 302 ಹಡಗುಗಳಲ್ಲಿ ಎಲ್ಲವೂ ಸರಾಸರಿ 20 ವರ್ಷಗಳಿಗಿಂತ ಸ್ವಲ್ಪ ಹೆಚ್ಚು ವಯಸ್ಸಿನ ಟ್ಯಾಂಕರ್ಗಳಾಗಿವೆ. ಹಡಗುಗಳ ಪನಾಮ (101), ಲೈಬೀರಿಯಾ (29), ಮತ್ತು ಪಲಾವ್ (24) ಧ್ವಜಗಳಿವೆ. ಸುಮಾರು ಅರ್ಧದಷ್ಟು ಅಂದರೆ 137 ಹಡಗುಗಳು, ಸ್ಪಷ್ಟ P&I (protection and indemnity insurance) ವ್ಯಾಪ್ತಿಯಿಲ್ಲದೆ ಕಾರ್ಯನಿರ್ವಹಿಸುತ್ತವೆ ಎಂದು ಕೆಪ್ಲರ್ ವರದಿಯಲ್ಲಿ ಹೇಳಲಾಗಿದೆ.
ಸಮಾಜದಲ್ಲಿ ಎಲ್ಲರನ್ನೂ ಸಮಾನವಾಗಿ ಕಾಣಬೇಕು : ಸಿದ್ದರಾಮಯ್ಯ
ಅಭಿಯೋಜಕರ ಅಕಾಡೆಮಿ ಸ್ಥಾಪನೆ: ಸಿಎಂ ಭರವಸೆ
ವಿಬಿ-ಜಿ ರಾಮ್ ಜಿ ಬಗ್ಗೆ ಕಾಂಗ್ರೆಸ್ನಿಂದ ಅಪಪ್ರಚಾರ: ವಿಶ್ವೇಶ್ವರ ಕಾಗೇರಿ ಆರೋಪ
ಬಿಜೆಪಿಯಿಂದ ಜ.15ರಿಂದ ಫೆ. 25ರವರೆಗೆ ರಾಜ್ಯವ್ಯಾಪಿ ಅಭಿಯಾನ
EMI - ಆದಾಯದ ನಡುವಿನ ಅಸಮತೋಲನದಿಂದ ಸಾಲದ ಕೂಪಕ್ಕೆ ಬೀಳುತ್ತಿರುವ ಭಾರತೀಯ ಕುಟುಂಬಗಳು!
ಸಮೀಕ್ಷೆಯಲ್ಲಿ ಕಂಡುಬಂದ ಆಘಾತಕಾರಿ ಮಾಹಿತಿ ಏನು?
Bengaluru | ಯುವತಿಗೆ ಲೈಂಗಿಕ ಕಿರುಕುಳ ಆರೋಪ : ರಾಪಿಡೋ ಬೈಕ್ ಟ್ಯಾಕ್ಸಿ ಚಾಲಕನ ಬಂಧನ
ಬೆಂಗಳೂರು : ಯುವತಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಡಿ ರಾಪಿಡೋ ಬೈಕ್ ಟ್ಯಾಕ್ಸಿ ಚಾಲಕನನ್ನು ಇಲ್ಲಿನ ಅನ್ನಪೂರ್ಣೇಶ್ವರಿನಗರ ಠಾಣೆಯ ಪೊಲೀಸರು ಬಂಧಿಸಿರುವುದಾಗಿ ವರದಿಯಾಗಿದೆ. ವಿವೇಕ್ ಎಂಬಾತ ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ. ಸಾಫ್ಟ್ ವೇರ್ ಕಂಪೆನಿಯಲ್ಲಿ ಕೆಲಸ ಮಾಡುವ ಯುವತಿಯು ಶನಿವಾರ ಬೆಳಗ್ಗೆ ತಮ್ಮ ನಿವಾಸದಿಂದ ಮಾನ್ಯತಾ ಟೆಕ್ ಪಾರ್ಕ್ಗೆ ತೆರಳಲು ರಾಪಿಡೋ ಬೈಕ್ ಟ್ಯಾಕ್ಸಿಯನ್ನು ಬುಕ್ ಮಾಡಿದ್ದರು. ಪ್ರಯಾಣದ ವೇಳೆ, ಚಾಲಕ ವಿವೇಕ್ ಹಿಂಬದಿಗೆ ಸರಿದು ಆಕೆ ಜತೆ ಅಸಭ್ಯವಾಗಿ ವರ್ತಿಸಿದ್ದಾನೆ. ಯುವತಿ ಆಕ್ಷೇಪಿಸಿದಾಗ, ಆತ ಆಕೆಯ ಖಾಸಗಿ ಅಂಗಾಂಗಗಳನ್ನು ಸ್ಪರ್ಶಿಸಲು ಪ್ರಯತ್ನಿಸಿದ್ದಾನೆ ಎಂದು ಆರೋಪಿಸಲಾಗಿದೆ. ಘಟನೆಯ ನಂತರ ಯುವತಿಯು ಪೊಲೀಸರಿಗೆ ಮಾಹಿತಿ ನೀಡಿದ್ದು, ಈ ಬಗ್ಗೆ ದೂರು ದಾಖಲಿಸಿಕೊಂಡ ಅನ್ನಪೂರ್ಣೇಶ್ವರಿನಗರ ಠಾಣಾ ಪೊಲೀಸರು ಆರೋಪಿ ವಿವೇಕ್ನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿರುವುದಾಗಿ ತಿಳಿಸಿದ್ದಾರೆ.
ಗದಗ ಲಕ್ಕುಂಡಿಯಲ್ಲಿ ಮನೆ ಕಟ್ಟಲು ಪಾಯ ತೋಡುವಾಗ ನಿಧಿ ಪತ್ತೆ
ಗದಗ ಜಿಲ್ಲೆಯ ಲಕ್ಕುಂಡಿ ಗ್ರಾಮದಲ್ಲಿ ಮನೆ ನಿರ್ಮಾಣದ ವೇಳೆ ಪುರಾತನ ನಿಧಿ ಪತ್ತೆಯಾಗಿದೆ. ಸುಮಾರು ಒಂದು ಕೆಜಿ ತೂಕದ ಚಿನ್ನಾಭರಣಗಳು, ವಿಗ್ರಹಗಳು ದೊರೆತಿವೆ. ಈ ನಿಧಿ ಬಸವರಾಜ ರಿತ್ತಿ ಅವರ ಜಾಗದಲ್ಲಿ ಸಿಕ್ಕಿದೆ. ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನಿಧಿಯನ್ನು ಗ್ರಾಮದ ಗಣೇಶನ ದೇವಸ್ಥಾನದಲ್ಲಿ ಇಡಲಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಜನರು ನೋಡಲು ಬರುತ್ತಿದ್ದಾರೆ. ಜನಸಂದಣಿಯನ್ನು ನಿಯಂತ್ರಿಸಲು ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.
ಮಂಗಳೂರು| ಬ್ಯಾರಿ ಪರಂಪರೆಯನ್ನು ಎತ್ತಿ ಹಿಡಿಯೋಣ: ಕುಲಪತಿ ಎ.ಎಂ.ಖಾನ್
*ಬ್ಯಾರಿ ಸಂಶೋಧನಾ ಮತ್ತು ಅಭಿವೃದ್ಧಿ ಕೇಂದ್ರ ಉದ್ಘಾಟನೆ
ಬಸವರಾಜ ರಾಯರೆಡ್ಡಿ ನಡೆ ಪಕ್ಷಕ್ಕೆ ಒಳ್ಳೆಯದಲ್ಲ, ಸಂಕ್ರಾಂತಿ ಬಳಿಕ ನಾನೂ ಮಾತನಾಡುತ್ತೇನೆ: ಬಸವರಾಜ್ ಶಿವಗಂಗಾ ಗರಂ
ಸಿಎಂ ಸಿದ್ದರಾಮಯ್ಯ ಅವರು ಸುದೀರ್ಘ ಅವಧಿಯ ಸಿಎಂ ಎಂದು ದಾಖಲೆ ಸೃಷ್ಟಿ ಮಾಡಿರುವ ಹಿನ್ನೆಲೆಯಲ್ಲಿ ಶಾಸಕ ಬಸವರಾಜ ರಾಯರೆಡ್ಡಿ ಅವರು ಪತ್ರ ಬರೆದಿದ್ದರು. ಈ ಪತ್ರದಲ್ಲಿ ಸಿದ್ದರಾಮಯ್ಯ ಅವರು 2028 ರವರೆಗೆ ಸಿಎಂ ಆಗಿರಬೇಕು ಎಂದು ಉಲ್ಲೇಖ ಮಾಡಿದ್ದರು. ಈ ಕುರಿತಾಗಿ ಡಿಕೆ ಶಿವಕುಮಾರ್ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಶಾಸಕ ಬಸವರಾಜ ರಾಯರೆಡ್ಡಿ ಪ್ರತಿಕ್ರಿಯೆ ನೀಡಿದ್ದಾರೆ. ಇಂತಹ ನಡೆ ಪಕ್ಷಕ್ಕೆ ಒಳ್ಳೆಯದಲ್ಲ, ಸಂಕ್ರಾಂತಿ ಬಳಿಕ ನಾನೂ ಮಾತನಾಡುತ್ತೇನೆ ಎಂದಿದ್ದಾರೆ ಬಸವರಾಜ್ ಶಿವಗಂಗಾ.
ಗುಣಮಟ್ಟದ ಕೆಲಸದಿಂದ ಗುರಿ ಸಾಧನೆ ಸಾಧ್ಯ: ಡಾ.ವಿಜಯ ಬಲ್ಲಾಳ್
35ನೇ ಮದ್ಯವ್ಯಸನ ವಿಮುಕ್ತಿ -ವಸತಿ ಶಿಬಿರ ಸಮಾರೋಪ
ದೌರ್ಜನ್ಯಕ್ಕೊಳಗಾಗಿ ಮೃತಪಟ್ಟವರ ಕುಟುಂಬಕ್ಕೆ ಉದ್ಯೋಗ: 5 ವರ್ಷಗಳಲ್ಲಿ 130 ಮಂದಿ ಅನುಕಂಪದ ಆಧಾರದಲ್ಲಿ ನೇಮಕಾತಿ
ದೌರ್ಜನ್ಯಕ್ಕೊಳಗಾಗಿ ಮೃತಪಟ್ಟ ಎಸ್ ಸಿ ಎಸ್ ಟಿ ಸಮುದಾಯದ ವ್ಯಕ್ತಿಗಳ ಕುಟುಂಬಸ್ಥರ ಪೈಕಿ ಕಳೆದ 5 ವರ್ಷಗಳಲ್ಲಿ 130 ಮಂದಿಗೆ ಸರ್ಕಾರಿ ಉದ್ಯೋಗವನ್ನು ನೀಡಲಾಗಿದೆ. 2022 ರ ಸರ್ಕಾರಿ ಅಧಿಸೂಚನೆಯ ಪ್ರಕಾರ ಅನುಕಂಪದ ನೌಕರರಿಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ 1 ವರ್ಷದ ಬದಲಾಗಿ 2 ವರ್ಷಗಳ ಒಳಗಾಗಿ ಸಲ್ಲಿಸಲು ತಿದ್ದುಪಡಿಯನ್ನು ಮಾಡಲಾಗಿದೆ. ಈ ನಡುವೆ ಒಮ್ಮೆ ಅನುಕಂಪದ ಆಧಾರದಲ್ಲಿ ನೇಮಕಾತಿಗೊಂಡವರು ಉನ್ನತ ಉದ್ಯೋಗಕ್ಕೆ ಬೇಡಿಕೆ ಇಡುವ ಹಾಗಿಲ್ಲ ಎಂದು ಸುಪ್ರೀಂ ಕೋರ್ಟ್ ಇತ್ತೀಚೆಗೆ ಆದೇಶ ಹೊರಡಿಸಿತ್ತು ಎಂಬುವುದನ್ನು ಇಲ್ಲಿ ಉಲ್ಲೇಖಿಸಬಹುದಾಗಿದೆ.
ಮಣಿಪಾಲ ವಿ.ಪಿ.ನಗರದಲ್ಲಿ ಅಪರಾಧ ತಡೆಯುವ ದೃಷ್ಠಿ ಯೋಜನೆಗೆ ಚಾಲನೆ
ಮಣಿಪಾಲ, ಜ.10: ಅಪರಾಧ ತಡೆಗಟ್ಟುವ ನಿಟ್ಟಿನಲ್ಲಿ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಂ ಶಂಕರ್ ಆರಂಭಿಸಿರುವ ಮಹತ್ವಾಕಾಂಕ್ಷೆಯ ದೃಷ್ಟಿ ಯೋಜನೆಗೆ ಮಣಿಪಾಲ ಠಾಣಾ ವ್ಯಾಪ್ತಿಯಲ್ಲಿ ಶನಿವಾರ ಚಾಲನೆ ನೀಡಲಾಯಿತು. ಮಣಿಪಾಲದ ವಿ.ಪಿ.ನಗರದಲ್ಲಿರುವ 86 ಮನೆಗಳನ್ನು ಕೇಂದ್ರೀಕರಿಸಿ ಕೊಂಡು ಜಂಬೋ ಸ್ಟಾರ್ ಸೆಕ್ಯೂರಿಟಿ ಮತ್ತು ಫೆಸಿಲಿಟೀ ಸರ್ವಿಸಸ್ ಏಜೆನ್ಸಿಯಿಂದ ಒಬ್ಬ ಸಂಪೂರ್ಣ ತರಬೇತಿ ಪಡೆದ ಗಾರ್ಡನ್ನು ನೇಮಕ ಮಾಡಿ, ಇಲ್ಲಿ ಕಳ್ಳತನ ಸೇರಿದಂತೆ ಯಾವುದೇ ಅಪರಾಧ ನಡೆಯದಂತೆ ತಡೆಯಲಾಗುತ್ತದೆ. ಇದು ಜಿಲ್ಲೆಯ 12ನೆ ದೃಷ್ಠಿ ಯೋಜನೆಯಾಗಿದೆ. ಯೋಜನೆಯನ್ನು ಉದ್ಘಾಟಿಸಿ ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸುಧಾಕರ್ ನಾಯಕ್ ಮಾತನಾಡಿ, ಒಂದು ಕಡೆ ಒಮ್ಮೆ ಕಳ್ಳತನ ನಡೆದರೆ ಕಳ್ಳರನ್ನು ಪತ್ತೆ ಮಾಡುವುದು ಅಷ್ಟು ಸುಲಭ ಅಲ್ಲ. ಯಾಕೆಂದರೆ ಕಳ್ಳರು ಅಲ್ಲೇ ಇರಲ್ಲ. ದೂರ ಹೋಗಿರುವುದರಿಂದ ಅವರನ್ನು ಹುಡುಕಲು ತುಂಬಾ ಸಮಯ ಬೇಕಾಗುತ್ತದೆ. ಅಲ್ಲದೆ ಮನೆಯವರು ಕೂಡ ಆರ್ಥಿಕ ನಷ್ಟ ಅನುಭವಿಸುತ್ತಾರೆ. ಆದುದರಿಂದ ನಾವು ಬಹಳ ಎಚ್ಚರಿಕೆಯಿಂದ ಇದ್ದು, ಕಳ್ಳತನ ನಡೆಯದಂತೆ ತಡೆಯಬೇಕಾಗಿದೆ. ಇದಕ್ಕೆ ಈ ದೃಷ್ಠಿ ಯೋಜನೆ ತುಂಬಾ ಸಹಕಾರಿಯಾಗಿದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಸ್ಥಳೀಯ ದೃಷ್ಠಿ ಯೋಜನೆಯ ಅಧ್ಯಕ್ಷ ಸುರೇಶ್ ಕುಮಾರ್, ಜಂಬೋ ಸ್ಟಾರ್ ಸೆಕ್ಯೂರಿಟಿ ಮತ್ತು ಫೆಸಿಲಿಟೀ ಸರ್ವಿಸಸ್ನ ಎಚ್ಆರ್ ಕಾವ್ಯ ಹಾಗೂ ಮಣಿಪಾಲ ಪೊಲೀಸ್ ಠಾಣೆಯ ಸಿಬ್ಬಂದಿ ಹಾಗೂ ವಿಪಿ ನಗರದ ನಾಗರಿಕರು ಉಪಸ್ಥಿತರಿದ್ದರು. ಮಣಿಪಾಲ ಠಾಣೆಯ ಪೊಲೀಸ್ ನಿರೀಕ್ಷಕ ಮಹೇಶ್ ಪ್ರಸಾದ್ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಪೊಲೀಸ್ ಉಪನಿರೀಕ್ಷಕ ಅನಿಲ್ ವಂದಿಸಿದರು. ಸಿಬ್ಬಂದಿ ಚೇತನ್ ಕಾರ್ಯಕ್ರಮ ನಿರೂಪಿಸಿದರು.
ಮಂಗಳೂರು: ನಿವೃತ್ತ ಎಡಿಸಿ ಅಮರನಾಥ್ ಸುಮತಿ ನಿಧನ
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ನಿವೃತ್ತ ಅಪರ ಜಿಲ್ಲಾಧಿಕಾರಿ ಎಂ. ಅಮರನಾಥ್ ಸುಮತಿ ಅವರು ಶುಕ್ರವಾರ ನಿಧನರಾದರು. ಆವರ ಅಂತ್ಯಕ್ರಿಯೆಯು ಜನವರಿ 11 ರಂದು ಸಂಜೆ 4 ಗಂಟೆಗೆ ಮಂಗಳೂರಿನ ಪಡೀಲ್ನ ಬಡ್ಲಾ ಹಿಲ್ಸ್ ನಲ್ಲಿರುವ ಅವರ ನಿವಾಸದಿಂದ ನಡೆಯಲಿದೆ ಎಂದು ಕುಟುಂಬದ ಮೂಲ ತಿಳಿಸಿದೆ.
ಸಿದ್ದರಾಮಯ್ಯ ಒಬ್ಬ ಲೀಸ್ ಬೇಸ್ಡ್ ಮುಖ್ಯಮಂತ್ರಿ: ಹೆಚ್ ಡಿ ಕುಮಾರಸ್ವಾಮಿ
ಬೆಂಗಳೂರು: ಸಿದ್ದರಾಮಯ್ಯ ಒಬ್ಬ ಲೀಸ್ ಬೇಸ್ಡ್ ಮುಖ್ಯಮಂತ್ರಿ ಎಂದು ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿ ಲೇವಡಿ ಮಾಡಿದರು. ದೇವರಾಜ ಅರಸು ದಾಖಲೆ ಮುರಿದೆ ಅಂತಾ ಹೇಳ್ತಿದ್ದಾರಲ್ಲಾ. ಹಿಂದೆ ಇಂದಿರಾಗಾಂಧಿ ವಿರುದ್ಧ ಅರಸು ಸೆಡ್ಡು ಹೊಡೆದು ನಿಂತಿದ್ದರು. ನಿರಂತರವಾಗಿ ಅವರು ಅಧಿಕಾರ ನಡೆಸಿದ್ದರು. ಸಿದ್ದರಾಮಯ್ಯ ಅವರು ಈಗ ರಾಹುಲ್ ಗಾಂಧಿ ಯಾವಾಗ ಹೋಗು ಅಂತಾರೆ ಅಂತಾ ಕಾಯುತ್ತಿದ್ದಾರೆ ಎಂದು
ಬೀದರ್ : ವಯೋಸಹಜ ರೋಗದಿಂದ ಬಳಲುತ್ತಿರುವ ಮಾಜಿ ಸಚಿವ ಭೀಮಣ್ಣ ಖಂಡ್ರೆ ಅವರ ಆರೋಗ್ಯದಲ್ಲಿ ಏರುಪೇರಾಗಿದ್ದು, ನಗರದ ಗುದಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸಚಿವ ಈಶ್ವರ್ ಖಂಡ್ರೆ ಅವರು ಶನಿವಾರ ಆಸ್ಪತ್ರೆಗೆ ಭೇಟಿ ನೀಡಿ ತಂದೆಯ ಆರೋಗ್ಯ ವಿಚಾರಿಸಿದರು. ಭೀಮಣ್ಣ ಖಂಡ್ರೆ ಅವರ ಆರೋಗ್ಯ ವಿಚಾರಿಸಿದ ನಂತರ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ ಅವರು ಸುದ್ಧಿಗಾರರೊಂದಿಗೆ ಮಾತನಾಡಿ, ನಮ್ಮ ತಂದೆಯವರು ಒಂದು ವಾರದಿಂದ ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ವೈದ್ಯರ ತಂಡ 24 ತಾಸು ಅವರನ್ನು ನಿಗಾ ವಹಿಸಿದೆ. ಇವತ್ತು ಅವರ ಆರೋಗ್ಯದಲ್ಲಿ ಸ್ವಲ್ಪ ಸುಧಾರಣೆ ಇದೆ ಎಂದರು. ನಮ್ಮ ತಂದೆಯವರಿಗೆ 102 ವಯಸ್ಸಾಗಿದೆ. ಅವರ ಆರೋಗ್ಯ ಸ್ಥಿರವಾಗಿದೆ. ಅವರು ಗುಣಮುಖರಾಗುತ್ತಾರೆ ಎನ್ನುವ ವಿಶ್ವಾಸ ಇದೆ. ಅವರ ಅಭಿಮಾನಿಗಳು ಅವರ ಆರೋಗ್ಯದ ಬಗ್ಗೆ ದೇವರಲ್ಲಿ ಪ್ರಾರ್ಥನೆ ಮಾಡಲಿ ಎಂದು ಅವರು ವಿನಂತಿಸಿದರು. ಅವರಿಗೆ ಉಸಿರಾಟದಲ್ಲಿ ತೊಂದರೆಯಾಗುತ್ತಿತ್ತು. ರಕ್ತದೊತ್ತಡದಲ್ಲಿ ಏರುಪೇರಾಗುತ್ತಿದ್ದು, ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ. ಇವತ್ತು ಬೆಳಿಗ್ಗೆಯಿಂದ ಅವರ ಆರೋಗ್ಯದಲ್ಲಿ ಸ್ವಲ್ಪ ಸುಧಾರಣೆ ಇದೆ. ಅವರು ಗುಣಮುಖರಾಗುತ್ತಾರೆ ಎಂದು ಈಶ್ವರ್ ಖಂಡ್ರೆ ಅವರು ವಿಶ್ವಾಸ ವ್ಯಕ್ತಪಡಿಸಿದರು.
ಭಾರತಕ್ಕೆ ವೆನೆಝುವೆಲಾದ ತೈಲ ಮಾರಾಟಕ್ಕೆ ಅಮೆರಿಕ ಸಿದ್ಧತೆ: ಶ್ವೇತಭವನ
ಆಮದು ಮಾಡಿಕೊಳ್ಳಲು ರಿಲಯನ್ಸ್ ಸಜ್ಜು
ವೆನೆಜುವೆಲಾದಲ್ಲಿ ₹100 ಬಿಲಿಯನ್ ಹೂಡಿಕೆಗೆ ಟ್ರಂಪ್ ಸೂಚನೆ, ಅಧ್ಯಕ್ಷರ ಸಮ್ಮುಖದಲ್ಲೇ 'ಆಗಲ್ಲ' ಎಂದ ಉದ್ಯಮಿ!
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ವೆನೆಜುವೆಲಾದ ತೈಲ ವಲಯದಲ್ಲಿ ಕನಿಷ್ಠ 100 ಬಿಲಿಯನ್ ಡಾಲರ್ ಹೂಡಿಕೆ ಮಾಡುವಂತೆ ಅಮೆರಿಕದ ಪ್ರಮುಖ ತೈಲ ಕಂಪನಿಗಳಿಗೆ ಕರೆ ನೀಡಿದ್ದಾರೆ. ಆದರೆ, ಶ್ವೇತಭವನದಲ್ಲಿ ನಡೆದ ಸಭೆಯಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಪ್ರಮುಖ ತೈಲ ಕಂಪನಿ ಎಕ್ಸಾನ್ ಮುಖ್ಯಸ್ಥರು ವೆನೆಜುವೆಲಾ ಸದ್ಯದ ಪರಿಸ್ಥಿತಿಯಲ್ಲಿ 'ಹೂಡಿಕೆಗೆ ಯೋಗ್ಯವಾಗಿಲ್ಲ' ಎಂದು ನೇರವಾಗಿಯೇ ಹೇಳಿದ್ದಾರೆ. ಅಧ್ಯಕ್ಷ ನಿಕೋಲಸ್ ಮಡುರೊ ಬಂಧನದ ನಂತರ ವೆನೆಜುವೆಲಾದ ಮೇಲೆ ಹಿಡಿತ ಸಾಧಿಸಿರುವ ಅಮೆರಿಕ, ಅಲ್ಲಿನ ತೈಲ ಸಂಪತ್ತನ್ನು ಬಳಸಿಕೊಳ್ಳಲು ಮುಂದಾಗಿದೆ.
ಪ್ರತಿಭಾವಂತ ಕರಾವಳಿಯ ಯುವ ಸಮುದಾಯ ಕೆಲಸ ಅರಸಿ ಬೇರಡೆ ಹೋಗುತ್ತಿರುವುದೇಕೆ: ಡಿಕೆ ಶಿವಕುಮಾರ್ ಪ್ರಶ್ನೆ
DCM On Coastal Development : ಕರಾವಳಿ ಭಾಗ ಅಭಿವೃದ್ಧಿ ಮಾಡಲು ಬಂಡವಾಳ ಹೂಡಿಕೆದಾರರನ್ನು ಆಕರ್ಷಿಸಿ, ಈ ಭಾಗದಲ್ಲಿ ಉದ್ಯೋಗ ಸೃಷ್ಟಿಸಿ ಎಲ್ಲರೂ ಬೆಳೆಯುವಂತಾಗಲಿ ಎಂಬುದು ಎಲ್ಲರ ಇಚ್ಛಾಶಕ್ತಿಯಾಗಿದೆ. ಇಲ್ಲಿ ರಾಜಕೀಯ ಮುಖ್ಯವಲ್ಲ. ನಮಗೆ ಸಿಕ್ಕ ಅವಕಾಶದಲ್ಲಿ ನಾವು ಏನು ಮಾಡುತ್ತೇವೆ ಅದು ಶಾಶ್ವತವಾಗಿ ಉಳಿಯಲಿದೆ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದರು.
Gen Zಯ ಒಂದು ವರ್ಗ ಸಾಮಾಜಿಕ ಜಾಲತಾಣಗಳಿಂದ ದೂರ ಸರಿಯುತ್ತಿರುವುದೇಕೆ?
ವಯಸ್ಕರಿಂದ ಆರಂಭಿಸಿ Gen Z ಎಂದು ಕರೆಯಲಾಗುವ 20ರಿಂದ 30ರ ವಯಸ್ಸಿನೊಳಗಿನವರವರೆಗೆ ಒಂದು ವರ್ಗ ಸಾಮಾಜಿಕ ಜಾಲತಾಣಗಳಿಂದ ದೂರ ಸರಿಯುತ್ತಿದೆ. ಜಾಲತಾಣಗಳನ್ನು ಬಳಸಿದರೂ ತಮ್ಮ ಗುರುತನ್ನು ಬಿಡದಂತೆ ಜಾಗರೂಕತೆ ವಹಿಸುತ್ತಿದ್ದಾರೆ! ಒಂದೆಡೆ Gen Z ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೋಗಳನ್ನು ಹಾಕುವ ಮೂಲಕ ಇನ್ಫ್ಲೂಯೆನ್ಸರ್ ಆಗಿ ಲಕ್ಷಾಂತರ ದುಡಿಯುತ್ತಿದ್ದಾರೆ. ಅದೇ ಸಂದರ್ಭದಲ್ಲಿ Gen Z ನ ಮತ್ತೊಂದು ವರ್ಗ ಸಾಮಾಜಿಕ ಜಾಲತಾಣಗಳಿಂದ ದೂರ ಸರಿಯುತ್ತಿದೆ. ಸಾಮಾಜಿಕ ಜಾಲತಾಣದ ಚಟ ತಮ್ಮ ವೃತ್ತಿಜೀವನಕ್ಕೆ ಮಾರಕವಾಗಬಹುದು ಎಂದು ಕೆಲವರು ಪರಿಗಣಿಸಿದರೆ, ಇನ್ನು ಕೆಲವರು ತಮ್ಮ ಜೀವನದ ಗೌಪ್ಯತೆ ಕಾಪಾಡುವ ಅಗತ್ಯವಿದೆ ಎಂದು ಸಾಮಾಜಿಕ ಜಾಲತಾಣಗಳಿಂದ ದೂರ ಸರಿದಿದ್ದಾರೆ. ಇನ್ನೊಂದು ವರ್ಗ ಸಾಮಾಜಿಕ ಜಾಲತಾಣ ತಮ್ಮ ಬಹಳಷ್ಟು ಸಮಯವನ್ನು ಕಸಿಯುತ್ತಿರುವ ಕಾರಣ ಚಟ ಬಿಡಬೇಕು ಎಂದು ದೂರ ಸರಿದಿದ್ದಾರೆ. ಭಾರತದಲ್ಲಿ ಸಾಮಾಜಿಕ ಜಾಲತಾಣದ ಆರಂಭಿಕ ಹಂತ ‘Orkut’ನಿಂದಲೇ ಪ್ರಾರಂಭಿಸಿದ ಮಹಿಳೆಯೊಬ್ಬರು ಹೇಳುವ ಪ್ರಕಾರ ಕಳೆದ ಹತ್ತು ವರ್ಷಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಫೋಟೋಗಳು ಮತ್ತು ವೈಯಕ್ತಿಕ ವಿವರಗಳನ್ನು ಹಾಕುವುದು, ಬರೆದುಕೊಳ್ಳುವುದನ್ನು ಬಿಟ್ಟಿದ್ದಾರೆ. ಅದೇ ವಯಸ್ಸಿನ ಮತ್ತೊಬ್ಬ ಮಹಿಳೆ ಫೇಸ್ಬುಕ್ ನಲ್ಲಿ ಇದ್ದರೂ ಸ್ವಂತಕ್ಕೆ ಸಂಬಂಧಿಸಿದ ಯಾವುದೇ ವಿವರಗಳನ್ನು ಎಂದಿಗೂ ಪ್ರಕಟಿಸಿಲ್ಲ. ಇದು 35-40ರ ವಯಸ್ಸಿನ ಮಹಿಳೆಯರು ಸಾಮಾಜಿಕ ಜಾಲತಾಣಗಳಿಂದ ಹಿಂಜರಿದ ವಿಚಾರ. ಆದರೆ ಇದೀಗ Gen Z ಎಂದು ಕರೆಯಲಾಗುವ 20ರಿಂದ 30ರ ವಯಸ್ಸಿನೊಳಗಿನವರು ಏಕೆ ಸಾಮಾಜಿಕ ಜಾಲತಾಣಗಳಿಂದ ದೂರ ಸರಿಯುತ್ತಿದ್ದಾರೆ? ಮಾನಸಿಕ ತಜ್ಞರು ಇದನ್ನು ಚರ್ಚಿಸಬೇಕಾದ ವಿಷಯ ಎಂದು ಅಭಿಪ್ರಾಯಪಟ್ಟಿದ್ದಾರೆ. ಆದರೆ ಇದು ʼಟೆಕ್ಫೋಬಿಯಾʼ ಅಲ್ಲ, ಸೋಷಿಯಲ್ ಮೀಡಿಯಾ ಫೋಬಿಯಾ ಎಂದು ಬೇಕಾದರೆ ಹೇಳಬಹುದು. ಟೆಕ್ಫೋಬಿಯ ಎಂದರೆ ಎಲ್ಲಾ ರೀತಿಯ ಗಜೆಟ್ ಕುರಿತ ಭಯ ಆವರಿಸಬೇಕು. “ಇದೊಂದು ನಿಜಕ್ಕೂ ಚರ್ಚೆಗೆ ಒಳಪಡಬೇಕಾದ ವಿಷಯ. ಸಾಮಾಜಿಕ ಜಾಲತಾಣದಿಂದ ದೂರ ಸರಿಯವುದು ವೈಯಕ್ತಿಕ ಆಯ್ಕೆ. ಆದರೆ ವ್ಯಕ್ತಿಗಳು ಇತರರಿಂದ ಬರುವ ಕಮೆಂಟ್ಗಳಿಗೆ ಬಹಳ ಭಾವನಾತ್ಮಕವಾಗಿ ಪ್ರತಿಕ್ರಿಯಿಸುತ್ತಾರೆ ಎಂದಾದಲ್ಲಿ ಗೌಪ್ಯತೆ ಕಾಪಾಡಿಕೊಳ್ಳುವುದೇ ಉತ್ತಮ” ಎಂದು ಮಾನಸಿಕ ತಜ್ಞರಾದ ಗಣೇಶ್ ಪ್ರಸಾದ್ ಮುದ್ರಾಜೆ ಅಭಿಪ್ರಾಯಪಟ್ಟಿದ್ದಾರೆ. ► ಸಾಮಾಜಿಕ ಜಾಲತಾಣದ ಚಟ ಬಿಡುವ ಪ್ರಯತ್ನ 22ರ ವಯಸ್ಸಿನ ಪತ್ರಕರ್ತನಾಗಿರುವ ಮಹೇಶ್ ಅವರಿಗೆ ಸಾಮಾಜಿಕ ಜಾಲತಾಣ ಬಳಕೆ ಅತಿ ಅಗತ್ಯವಾಗಿದೆ. “ನನಗೂ ಸಾಮಾಜಿಕ ಜಾಲತಾಣ ಚಟವಾಗಿರುವುದು ಅನುಭವವಾಗಿ ಎರಡು ವರ್ಷ ಸಂಪೂರ್ಣವಾಗಿ ಬಳಕೆಯನ್ನು ತೊರೆದಿದ್ದೆ. ನಾನು ಯಾವಾಗಲೂ ಮೊಬೈಲ್ ನಲ್ಲೇ ಇರುತ್ತಿದ್ದೆ. ಸಂಬಂಧಿಕರು, ಮನೆಯವರು, ಸ್ನೇಹಿತರು ಯಾರು ಜೊತೆಗಿದ್ದರೂ ಕೇರ್ ಮಾಡ್ತಾ ಇರಲಿಲ್ಲ. ಒಬ್ಬನೇ ಮೊಬೈಲ್ ಅಲ್ಲಿ ಮಗ್ನ. ಅದು ಯಾವತ್ತೋ ಒಂದಿನ ಅನ್ನಿಸಿತು ನನ್ನನ್ನ ಮೊಬೈಲ್, ಸಾಮಾಜಿಕ ಜಾಲತಾಣ ಆಳೋದಕ್ಕೆ ಶುರು ಮಾಡಿದೆ ಅಂತ. ಆಗ 2 ವರ್ಷ ಬಳಸದೆ ಬಿಟ್ಟಿದ್ದೆ. ಈಗ ಕೆಲಸಕ್ಕೆ ಸೇರಿದ ಮೇಲೆ ಅನಿವಾರ್ಯ ಎಂದು ಇನ್ಸ್ಟಾಲ್ ಮಾಡಿಕೊಂಡಿದ್ದೇನೆ. ಆದರೆ, ಈಗ ಅಪರೂಪಕ್ಕೊಮ್ಮೆ ಬಳಸುತ್ತೇನೆ. ಸಾಮಾಜಿಕ ಜಾಲತಾಣಗಳಿಂದ ದೂರ ನಿಂತ ಮೇಲೆ ಮನಸ್ಸಿಗೆ ಸಮಾಧಾನ ಆಗಿದೆ, ಗಿಜಿಗಿಜಿ ತಪ್ಪಿದೆ” ಎಂದು ಅಭಿಪ್ರಾಯಪಟ್ಟರು. ► ಕೆಲಸಕ್ಕೆ ತೊಂದರೆ ನೀಡುತ್ತಿರುವ ಸಾಮಾಜಿಕ ಜಾಲತಾಣದ ಚಟ ಶಿವಮೊಗ್ಗದ ನಿವಾಸಿಯಾಗಿರುವ 24 ಹರೆಯದ ಲೇಖಕಿ ದಿವ್ಯಶ್ರೀ ಅದರಂತೆ ಅವರು ಕಳೆದ ಒಂದು ವರ್ಷದಿಂದ ವಾಟ್ಸ್ಆ್ಯಪ್ ಹೊರತುಪಡಿಸಿ ಉಳಿದೆಲ್ಲಾ ಸಾಮಾಜಿಕ ಜಾಲತಾಣಗಳನ್ನು ತೊರೆದಿದ್ದಾರೆ. “ಇದೀಗ ಮನಸ್ಸಿಗೆ ಸಮಾಧಾನ ತಂದಿದೆ. ಸಂತೋಷವೆನಿಸುತ್ತಿದೆ. ನನ್ನ ಎಲ್ಲಾ ಕೆಲಸಗಳನ್ನು ಸಮಯಕ್ಕೆ ಸರಿಯಾಗಿ ಮುಗಿಸುತ್ತಿದ್ದೇನೆ. ನನಗಾಗಿ ಸಮಯ ದೊರೆತಿದೆ” ಎನ್ನುತ್ತಾರೆ ದಿವ್ಯಶ್ರೀ. ಮುಂಬೈಯಲ್ಲಿ ಅನುವಾದಕಿಯಾಗಿ ಕೆಲಸ ಮಾಡುತ್ತಿರುವ 27ರ ಹರೆಯದ ಅನುವಾದಕಿಯಾಗಿರುವ ಪ್ರಾಜಕ್ತಾ ದೀಪಕ ಅಲಗೌಡರ ಪ್ರಕಾರ, “ಒಂದು ಸಮಯದಲ್ಲಿ ನಾನು ರೀಲ್ಸ್ ಮೊದಲಾಗಿ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿದ್ದಾಗ ನನ್ನ ವೃತ್ತಿಯ ಕೆಲಸಗಳನ್ನು ವಿಳಂಬ ಮಾಡುತ್ತಿದ್ದೆ. ಒಂದೊಮ್ಮೆ ಎಲ್ಲಾ ಆ್ಯಪ್ ಗಳನ್ನು ಡಿಲೀಟ್ ಮಾಡಿರುವುದೂ ಇದೆ. ಆದರೆ, ನಂತರ ಮತ್ತೆ ಇನ್ಸ್ಟಾಲ್ ಮಾಡಿಕೊಳ್ಳುತ್ತೇನೆ” ಎನ್ನುತ್ತಾರೆ. ಪ್ರಾಜಕ್ತಾ ಅವರು ಸಾಮಾಜಿಕ ಜಾಲತಾಣ ಚಟವಾಗದಂತೆ ಸಾಕಷ್ಟು ಮುತುವರ್ಜಿ ವಹಿಸುತ್ತಿದ್ದಾರೆ. ► ಗೌಪ್ಯತೆ ಕಾಪಾಡಿಕೊಂಡು ಸಾಮಾಜಿಕ ಜಾಲತಾಣದ ಬಳಕೆ ಪ್ರಾಜಕ್ತಾ ಮತ್ತು ಮಹೇಶ್ ಹೇಳುವ ಪ್ರಕಾರ ಅವರು ಸಂಪೂರ್ಣವಾಗಿ ಸಾಮಾಜಿಕ ಜಾಲತಾಣದಿಂದ ಹೊರಬಂದಿಲ್ಲ. ಈಗಲೂ ರೀಲ್ಸ್ ನೋಡುತ್ತಾರೆ ಮತ್ತು ಬೇರೆಯವರು ಹಾಕಿರುವ ಪೋಸ್ಟ್ ಗಳನ್ನು ಗಮನಿಸುತ್ತಾರೆ. ಆದರೆ ಸ್ವಂತದ ವಿಷಯಗಳನ್ನು ಹಂಚಿಕೊಳ್ಳುವುದಿಲ್ಲ. “ಸಾಮಾಜಿಕ ಜಾಲತಾಣಗಳಲ್ಲಿ ಅಗತ್ಯಕ್ಕಿಂತ ಹೆಚ್ಚು ವಿವರಗಳನ್ನು ಹಾಕುವುದರಿಂದ ವಂಚನೆಗೂ ದಾರಿಯಾಗಲಿದೆ” ಎಂದು ಪ್ರಾಜಕ್ತಾ ಅಭಿಪ್ರಾಯಪಟ್ಟಿದ್ದಾರೆ. ಇತ್ತೀಚೆಗೆ ಕುಟುಂಬವೊಂದು ತಿರುಗಾಡಲೆಂದು ಈಶಾನ್ಯ ಭಾರತಕ್ಕೆ ಹೋಗಿದ್ದರು. ಅವರು ತಿರುಗಾಡುತ್ತಿದ್ದಾಗಲೇ ತಮ್ಮ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದರು. ಮನೆಯಲ್ಲಿ ಯಾರೂ ಇಲ್ಲ ಎಂದು ತಿಳಿದುಕೊಂಡ ಕಳ್ಳರು ಮನೆಗೆ ದಾಳಿ ಮಾಡಿದ್ದಾರೆ. ಸುಮಾರು 25 ಲಕ್ಷ ರೂ.ಗಳಷ್ಟು ವಸ್ತುಗಳು ಕಳುವಾಗಿವೆ! ಇಂತಹ ಆನ್ಲೈನ್ ವಂಚನೆ ಇತ್ತೀಚೆಗೆ ಹೆಚ್ಚಾಗುತ್ತಿರುವ ಕಾರಣ ಸಾಮಾಜಿಕ ಜಾಲತಾಣದಲ್ಲಿ ಏನು ಹಾಕಬೇಕು ಮತ್ತು ಹಾಕಬಾರದು ಎನ್ನುವ ಕುರಿತು ವಿವೇಚನೆಯಿಂದ ನಡೆದುಕೊಳ್ಳಬೇಕು. ಸಾಮಾಜಿಕ ಜಾಲತಾಣಗಳನ್ನು ಸಮತೋಲಿತವಾಗಿ ಬಳಸಬೇಕು ಎನ್ನುತ್ತಾರೆ ತಜ್ಞರು. “ಇತ್ತೀಚೆಗೆ ಸಾಮಾಜಿಕ ಜಾಲತಾಣಗಳು ಮತ್ತು ChatGPT ಅಥವಾ ಜೆಮಿನಿಯಿಂದಾಗಿ ನಮ್ಮ ಎಲ್ಲಾ ವಿವರಗಳೂ ಜನರಿಗೆ ತಿಳಿಯುತ್ತಿದೆ. ಹೀಗಾಗಿ ವಂಚನೆಗಳೂ ಹೆಚ್ಚಾಗಿವೆ. ಗೌಪ್ಯತೆ ಎನ್ನುವುದೇ ಇಲ್ಲ. ಎಲ್ಲವೂ ಎಲ್ಲರಿಗೂ ಗೊತ್ತಾಗುವ ಕಾರಣದಿಂದ ವಂಚನೆ ಹೆಚ್ಚಾಗುತ್ತಿದೆ” ಎನ್ನುತ್ತಾರೆ ಪ್ರಾಜಕ್ತಾ. ►ಆನ್ಲೈನ್ ಬಳಕೆಯಿಂದಾಗಿ ಪ್ರಾಡಕ್ಟ್ ಆಗುತ್ತಿರುವ ಆತಂಕ ಇತ್ತೀಚೆಗೆ ಆಲ್ಗಾರಿದಂನಿಂದಾಗಿ ಡಾಟಾ ಬಹುಬೇಗನೇ ಕ್ಯಾಚ್ ಆಗಿಬಿಡುತ್ತದೆ. ನಮ್ಮ ಮೊಬೈಲ್ ಗಳ ಮೈಕ್ರೋಫೋನ್ಗಳಿಂದ ಆರಂಭಿಸಿ ಆನ್ಲೈನ್ ಹುಡುಕಾಟಗಳವರೆಗೆ ಎಲ್ಲವೂ ನೋಟೆಡ್ ಆಗಿರುತ್ತದೆ. ಈ ಬಗ್ಗೆ ವಿವರಿಸಿರುವ ಪ್ರಾಜಕ್ತಾ, “ನನಗೆ ಬಹಳ ಭಯವಾಗಿರುವ ಸಂಗತಿಯೆಂದರೆ ನಾವು ಏನಾದರೂ ಮಾತನಾಡಿದರೆ ಅಥವಾ ಆಲೋಚಿಸಿದರೂ ಸಹ ಮರುಕ್ಷಣದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಅದಕ್ಕೆ ಸಂಬಂಧಿಸಿದ ಜಾಹೀರಾತು ಕಂಡುಬರುತ್ತದೆ. ಹೀಗಾಗಿ ನಮ್ಮ ಡಾಟಾ ಮತ್ತೊಬ್ಬರಿಗೆ ಸಿಗುತ್ತಿದೆ. ನಾವೊಂದು ಪ್ರೊಡಕ್ಟ್ ಆಗಿ ಬಿಟ್ಟಿದ್ದೇವೆ ಎನ್ನುವ ಭಾವನೆ ಬಂದುಬಿಟ್ಟಿದೆ” ಎನ್ನುತ್ತಾರೆ. ►ಸಾಮಾಜಿಕ ಜಾಲತಾಣದಲ್ಲಿ ʼಶೋಆಫ್ʼ ಆಗುತ್ತಿದೆಯೆ? “ಮುಖ್ಯವಾಗಿ ಸಾಮಾಜಿಕ ಜಾಲತಾಣಗಳಲ್ಲಿ ವಿಷಯಗಳನ್ನು ಹಾಕುವವರು ತಮ್ಮ ಸಂಭ್ರಮಕ್ಕಾಗಿ ಅದನ್ನು ಬರೆದುಕೊಳ್ಳುತ್ತಿಲ್ಲ. ತಾವು ಎಲ್ಲಿಗೆ ಊಟಕ್ಕೆ ಹೋಗಿದ್ದೇವೆ, ಎಷ್ಟು ಸುಖವಾಗಿದ್ದೇವೆ ಮತ್ತು ಸಂತೋಷದಿಂದ ಇದ್ದೇವೆ ಎನ್ನುವುದನ್ನು ಇತರರಿಗೆ ತೋರಿಸಲು ಫೋಟೋಗಳನ್ನು ಹಾಕುತ್ತಾರೆ. ಇದೊಂದು ರೀತಿಯ ಶೋ ಆಫ್ ಎಂದು ನನಗೆ ಅನಿಸುತ್ತದೆ” ಎನ್ನುತ್ತಾರೆ ಪ್ರಾಜಕ್ತಾ. ಈ ಬಗ್ಗೆ ವಿಶ್ಲೇಷಿಸಿರುವ ಮುದ್ರಾಜೆ ಅವರು ಹೇಳುವ ಪ್ರಕಾರ, “ಗುರುತಿಸಿಕೊಳ್ಳಬೇಕು ಎನ್ನುವುದು ಜನರಲ್ಲಿರುವ ಸಹಜ ಪ್ರಚೋದನೆಯಾಗಿರುತ್ತದೆ. ಬಾಲ್ಯದಿಂದಲೇ ಈ ಪ್ರಚೋದನೆ ಬೆಳೆದು ಬಂದಿರುತ್ತದೆ. ಮಗುವನ್ನು ಪ್ರಶಂಸಿಸಿದರೆ ಖುಷಿಯಾಗಿಬಿಡುತ್ತದೆ. ಅದೇ ರೀತಿ ಬಾಲ್ಯದಿಂದಲೇ ಬೆಳೆದು ಬಂದಿರುವ ವರ್ತನೆ ಇದಾಗಿದೆ. ದೊಡ್ಡವರೂ ಅದಕ್ಕೆ ಭಿನ್ನವಾಗಿರುವುದಿಲ್ಲ. ತಮ್ಮ ಬಗ್ಗೆ ಹೇಳಿಕೊಳ್ಳುವುದು ಇತರರು ಲೈಕ್ ಮಾಡುವಾಗ ಖುಷಿಯಾಗುತ್ತದೆ. ಎಷ್ಟೋ ಮಂದಿ ರೋಗಿಗಳನ್ನು ನೋಡಿದ್ದೇನೆ. ಲೈಕ್ ಬಂದಿಲ್ಲ ಎಂದರೆ ಖಿನ್ನತೆಗೆ ಬೀಳುತ್ತಾರೆ. ಸಾಮಾಜಿಕ ಜಾಲತಾಣದಲ್ಲಿ ಮಾಡಿದ ಪೋಸ್ಟ್ ಗೆ ಲೈಕ್ ಬಂದಿಲ್ಲ ಎಂದರೆ ನನ್ನನ್ನು ಅಲಕ್ಷಿಸುತ್ತಿದ್ದಾರೆ ಎನ್ನುವ ಭಾವನೆ ಬರುವುದು. ನನ್ನ ಬಗ್ಗೆ ಯಾರಿಗೂ ಇಷ್ಟವಿಲ್ಲ ಎಂದು ತಮ್ಮ ವ್ಯಕ್ತಿತ್ವವನ್ನು ನೆಗೆಟಿವ್ ಆಗಿ ವಿಶ್ಲೇಷಿಸಲು ಆರಂಭಿಸುತ್ತಾರೆ. ಇಂತಹ ತುಡಿತವನ್ನು ವಾಟ್ಸ್ಆ್ಯಪ್, ಫೇಸ್ಬುಕ್ ಮೊದಲಾದ ಸಂಸ್ಥೆಗಳು ಬಳಸಿಕೊಳ್ಳಲು ತಮ್ಮ ಉತ್ಪನ್ನಗಳನ್ನು ಬಿಟ್ಟಿದ್ದಾರೆ” ದಿವ್ಯಶ್ರೀ ಅವರೂ ಇಂತಹುದೇ ಕಳವಳ ವ್ಯಕ್ತಪಡಿಸಿದ್ದಾರೆ. “ಸಾಮಾಜಿಕ ಜಾಲತಾಣದಲ್ಲಿ ನಮ್ಮ ಪ್ರೊಫೈಲ್ ರೂಪಿಸುತ್ತಾರೆ ಮತ್ತು ಜಡ್ಜ್ ಮಾಡುತ್ತಾರೆ ಎಂದು ಅನಿಸಿದೆ. ನಾಲ್ಕು ವರ್ಷಗಳ ಹಿಂದೆ, ಫೇಸ್ಬುಕ್ ನಲ್ಲಿ ನನ್ನ ಖಾತೆ ತೆರೆದೆ. ಅದಕ್ಕಿಂತ ಮೊದಲು, ನನ್ನ ಆಪ್ತ ವಲಯ ಬಹಳ ಸೀಮಿತವಾಗಿತ್ತು. ನನ್ನ ಖಾತೆಯ ಮೂಲಕ ಆಲೋಚನೆಗಳನ್ನ ಬರೆದು ಹಂಚಿಕೊಳ್ಳುತ್ತಿದ್ದ ಕಾರಣಕ್ಕೆ, ಊಹೆಗೂ ನಿಲುಕದ ವಲಯವೊಂದು ಹತ್ತಿರವಾಯಿತು. ಮುಂದೆ ಇವರನ್ನು ಖುಷಿಯಾಗಿ ಇಡುವ ಸಲುವಾಗಿಯೇ ಬರೆಯುತ್ತಿದ್ದೇನೆ, ಫೋಟೋಗಳನ್ನ ಶೇರ್ ಮಾಡುತ್ತಿದ್ದೇನೆ ಅನ್ನಿಸಿದ್ದು ಸಹ ನಿಜ. ನಾನು ಏನಾಗಿದ್ದೇನೆ ಅನ್ನುವುದಕ್ಕಿಂತ ಮುಖ್ಯವಾಗಿ, ಅವರಿಗೆ ಹೇಗೇ ಕಾಣಬೇಕು ಅನ್ನುವ ಯೋಚನೆ ಶುರುವಾಯಿತು. ಇದರೊಂದಿಗೆ ಬೇರೆಯವರ ಪೋಸ್ಟ್ಗಳೊಂದಿಗೆ ನನ್ನನ್ನ ಹೋಲಿಸುಕೊಳ್ಳುವ ಕೆಟ್ಟ ಚಟ ಶುರುವಾಯಿತು. ಎಷ್ಟು ಲೈಕ್, ಎಷ್ಟು ಕಾಮೆಂಟ್ ಬಂದಿವೆ ಅನ್ನುವುದನ್ನೇ ನೋಡುತ್ತಾ ಕುಳಿತಿದ್ದ ನಾನು, ನನ್ನ ಮೇಲೆ ಗಮನ ಕೊಡಲೇ ಇಲ್ಲ, ಕೆಲವೇ ದಿನಗಳಲ್ಲಿ ನನ್ನೊಳಗಿದ್ದ ಒರಿಜಿನಲ್ ವ್ಯಕ್ತಿತ್ವವನ್ನ ಕಳೆದುಕೊಂಡು, ಸಮಾಜದ ಕಣ್ಣಿಗೆ ಹೇಗೇ ಬೇಕು ಹಾಗೇ ಒಂದು ಪ್ರೊಫೈಲ್ ನನಗೆ ಗೊತ್ತಿಲ್ಲದ ಹಾಗೇ ತಯಾರಾಯಿತು” ಎಂದು ಅಭಿಪ್ರಾಯಪಟ್ಟರು. ► ಸಾಮಾಜಿಕ ಜಾಲತಾಣ ತೊರೆದು ಸಮಾಧಾನ ಸಾಮಾಜಿಕ ಜಾಲತಾಣ ತೊರೆದ ನಂತರ ಅನೇಕರು ಸಮಾಧಾನದ ನಿಟ್ಟುಸಿರು ಬಿಟ್ಟಿದ್ದಾರೆ. “ಸಾಮಾಜಿಕ ಜಾಲತಾಣಗಳಿಂದ ಸ್ವಲ್ಪ ದೂರ ನಿಂತ ಮೇಲೆ ಮನಸ್ಸಿಗೆ ಸಮಾಧಾನ ಆಗಿದೆ. ಮನಸ್ಸು ನನ್ನ ನಿಯಂತ್ರಣದಲ್ಲಿದೆ, ಯಾರದ್ದೋ ಕಾಮೆಂಟ್ ಗೆ ತಲೆ ಕೆಡಿಸಿಕೊಂಡು, ಇಡೀ ದಿನ ಹಾಳು ಮಾಡಿಕೊಳ್ಳುತ್ತಿದ್ದ ಪರಿಸ್ಥಿತಿಯಿಂದ ಹೊರಬಂದಿದ್ದೇನೆ. ನನ್ನ ಖುಷಿಗಾಗಿ, ನಂಗೆ ಏನು ಬೇಕು ಅದನ್ನಷ್ಟೇ ಮಾಡುತ್ತಾ, ನೆಮ್ಮದಿಯಿಂದ ಇದ್ದೇನೆ. ಟೀಕೆಗೆ ಒಳಗಾಗಿ, ಖಿನ್ನತೆಗೊಳಗಾಗುತ್ತಿದ್ದ ದಿನಗಳು ಈಗಿಲ್ಲ. ಈಗ ಯಾರೂ ನನ್ನನ್ನು ಗಮನಿಸುತ್ತಿಲ್ಲ ಎನ್ನುವ ಅನುಭವ ಆಗಿದೆ. ಇದು ಒಳ್ಳೇದು ಅಂತಾನೇ ಅನಿಸಿದೆ, ಕಾರಣ ಕೆಲವೊಮ್ಮೆ, ಯಾರೋ ಒಬ್ಬರು, ನಮ್ಮನ್ನೂ ಅತಿಯಾಗಿ ಗಮನಿಸುತ್ತಿದ್ದಾರೆ ಅಂತ ಗೊತ್ತಾದರೆ, ಆಗುವ ಕಿರಿಕಿರಿ ಸಾಮಾನ್ಯವಾದುದಲ್ಲ, ಹಾಗಾಗಿ ನನಗೆ ಈಗ ಅಂತ ಕಿರಿಕಿರಿ ಇಲ್ಲ” ಎಂದು ಉತ್ತರಿಸಿದರು ದಿವ್ಯಶ್ರೀ. ► ಪೂರ್ಣ ಇತಿಹಾಸ ತಿಳಿಯದೆ ಜಡ್ಜ್ ಮಾಡುವ ಆತಂಕ 21 ವರ್ಷ ವಯಸ್ಸಿನ ಕೇರಳದ ನಿವಾಸಿ ಧನುಷ್ ಪ್ರಕಾರ ಸಾಮಾಜಿಕ ಜಾಲತಾಣಗಳ ಕಾರಣದಿಂದ ದೈನಂದಿನ ಜೀವನದಲ್ಲಿ ನೈಜತೆ ಮರೆಯಾಗುತ್ತಿದೆ. ಓದನ್ನು ಮುಗಿಸಿ ಇನ್ನೇನು ಜುಲೈನಲ್ಲಿ ಕಂಪನಿಯೊಂದರಲ್ಲಿ ಕೆಲಸಕ್ಕೆ ಸೇರಲಿರುವ ಧನುಷ್ ಪ್ರಕಾರ, “ಇನ್ಸ್ಟಾಗ್ರಾಂನಂತಹ ವೇದಿಕೆಗಳಲ್ಲಿ ಎಲ್ಲವೂ ರಂಜನೀಯವಾಗಿ ಕಾಣಿಸುತ್ತದೆ ಮತ್ತು ಅದೊಂದು ರೀತಿಯ ಸುಸ್ತಾದ ಭಾವನೆ ತರುತ್ತದೆ. ಕೇವಲ ಲೈಕ್ಗಳು ಮತ್ತು ಮಾನ್ಯತೆಗಳಿಗಾಗಿ ನನ್ನ ವೈಯಕ್ತಿಕ ಜೀವನದ ಅಥವಾ ದೈನಂದಿನ ಜೀವನವನ್ನು ಸಾಮಾಜಿಕ ಜಾಲತಾಣದಲ್ಲಿ ತೋರಿಸಲು ನನಗೆ ಆಸಕ್ತಿ ಇಲ್ಲ. ಪೂರ್ಣ ಇತಿಹಾಸ ತಿಳಿದುಕೊಳ್ಳದೇ ಜನರು ಬೇಗನೇ ಜಡ್ಜ್ ಮಾಡುತ್ತಾರೆ. ನನ್ನ ಮಟ್ಟಿಗೆ ಆನ್ಲೈನ್ನಲ್ಲಿರುವುದೆಂದರೆ ತಂತ್ರಜ್ಞಾನಕ್ಕೆ ಸಂಬಂಧಿಸಿದ ಕೆಲಸಗಳನ್ನು ಹಂಚಿಕೊಳ್ಳುವುದು, ಕಲಿಕೆ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿನ ಹೊಸ ಅನ್ವೇಷಣೆಗಳನ್ನು ಅರ್ಥಮಾಡಿಕೊಳ್ಳುವುದೇ ವಿನಾ ಜೀವನಶೈಲಿಯನ್ನು ತೋರಿಸುವುದು ಅಲ್ಲ. ನನ್ನ ಖಾಸಗಿ ಜೀವನವನ್ನು ಕಂಟೆಂಟ್ ಆಗಿಸುವ ಬದಲಾಗಿ ಗೌಪ್ಯವಾಗಿ ಇಡಲು ಬಯಸುತ್ತೇನೆ. ಅತಿಯಾಗಿ ಹಂಚಿಕೊಳ್ಳುವುದರಿಂದ ಹಿಂದೆ ಸರಿದಿರುವುದರಿಂದ ಇತರರು ನನ್ನ ಬಗ್ಗೆ ಏನು ಅಂದುಕೊಳ್ಳುತ್ತಾರೆ ಎಂದು ಚಿಂತಿಸುವ ಬದಲಾಗಿ ಮನಸ್ಸಿಗೆ ಸಮಾಧಾನ ತಂದಿದೆ.”
ಮನರೇಗಾ v/s ಜಿ ರಾಮ್ ಜಿ: ಕಾಂಗ್ರೆಸ್ ಆರೋಪಕ್ಕೆ ಮೈತ್ರಿ ಕೌಂಟರ್, ದಾಖಲೆ ಬಿಡುಗಡೆಗೊಳಿಸಿದ ಎಚ್ಡಿಕೆ
ಜಿ ರಾಮ್ ಜಿ ಯೋಜನೆಯ ವಿರುದ್ಧ ಕಾಂಗ್ರೆಸ್ ಸರ್ಕಾರ ಸುಪ್ರೀಂ ಕೋರ್ಟ್ ಕದ ತಟ್ಟಲು ತೀರ್ಮಾನಿಸಿದೆ. ಅಲ್ಲದೆ, ಜನತಾ ಹೋರಾಟಕ್ಕೂ ಕರೆ ನೀಡಲು ನಿರ್ಧಾರ ಮಾಡಿದೆ. ಈ ನಡುವೆ ಕೇಂದ್ರ ಸಚಿವ ಎಚ್ಡಿ ಕುಮಾರಸ್ವಾಮಿ ಅವರು ಕಾಂಗ್ರೆಸ್ ವಿರುದ್ದ ಸುಳ್ಳು ಮತ್ತು ವಾಸ್ತವ ಏನು ಎಂಬ ಬಗ್ಗೆ ಪತ್ರಿಕಾಗೋಷ್ಠಿಯನ್ನು ನಡೆಸಿ ವಾಗ್ದಾಳಿ ನಡೆಸಿದ್ದಾರೆ. ಅಲ್ಲದೆ, ಕೆಲವೊಂದು ಮಹತ್ವದ ದಾಖಲೆಗಳನ್ನು ಬಿಡುಗಡೆ ಮಾಡಿದ್ದಾರೆ. ಈ ಪತ್ರಿಕಾಗೋಷ್ಠಿಯಲ್ಲಿ ವಿಪಕ್ಷ ನಾಯಕ ಆರ್ ಅಶೋಕ್, ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಮತ್ತಿತರರು ಇದ್ದರು.
ಮನರೇಗಾ ಯೋಜನೆಯಲ್ಲಿ 2025ನೇ ಸಾಲಿನಲ್ಲಿ 9 ಕೋಟಿ ಮಾನವ ದಿನಗಳ ನಿಗದಿ, ಕೇಂದ್ರದಿಂದ ಬಿಡುಗಡೆಯಾದ ಮೊತ್ತ 2717 ಕೋಟಿ
ಗ್ರಾಮೀಣ ಭಾಗದ ಜನರಿಗೆ ಉದ್ಯೋಗ ನೀಡುವ ಮನರೇಗಾ ಯೋಜನೆಯನ್ನು ಕೇಂದ್ರ ಸರ್ಕಾರ ರದ್ದು ಮಾಡಿದೆ. ಇದರ ಬದಲಾಗಿ ಜಿ ರಾಮ್ ಜಿ ಯೋಜನೆಯನ್ನು ಜಾರಿಗೊಳಿಸಿದೆ. ಕೇಂದ್ರದ ವಿರುದ್ದ ರಾಜ್ಯ ಸರ್ಕಾರದ ಕಾನೂನು ಸಮರ ಮಾಡಲು ನಿರ್ಧಾರ ಮಾಡಿದೆ. ಈ ನಡುವೆ ಮನರೇಗಾ ಯೋಜನೆಯಲ್ಲಿ 2025ನೇ ಸಾಲಿನಲ್ಲಿ 9 ಕೋಟಿ ಮಾನವ ದಿನಗಳ ನಿಗದಿಯಾಗಿದ್ದು, ಕೇಂದ್ರದಿಂದ 2717 ಕೋಟಿ ಬಿಡುಗಡೆಯಾಗಿದೆ. ಜೊತೆಗೆ 6.42 ಕೋಟಿ ಮಾನವ ದಿನಗಳು ಪ್ರಗತಿ ಸಾಧಿಸಿದೆ. ಈ ಕುರಿತಾಗಿ ಗ್ರಾಮೀಣಾಭಿವೃದ್ದಿ ಪಂಚಾಯತ್ ರಾಜ್ ಇಲಾಖೆ ನೀಡಿದ ವಿವರಗಳು ಇಲ್ಲಿವೆ.
ಕೊಟ್ಟ ಮಾತು ಉಳಿಸಿಕೊಂಡ ಸುನೀಲ್ ಗಾವಸ್ಕರ್; ಜೆಮಿಮಾ ರೋಡ್ರಿಗಸ್ ಗೆ ವಿಶೇಷ ಉಡುಗೊರೆ!
ಹೊಸದಿಲ್ಲಿ: ಭಾರತದ ಕ್ರಿಕೆಟ್ ದಂತಕತೆ ಸುನೀಲ್ ಗಾವಸ್ಕರ್ ಅವರು ಭಾರತೀಯ ಮಹಿಳಾ ತಂಡದ ಸ್ಟಾರ್ ಬ್ಯಾಟರ್ ಜೆಮಿಮಾ ರೋಡ್ರಿಗಸ್ ಗೆ ಬ್ಯಾಟ್ ವಿನ್ಯಾಸದ ಗಿಟಾರ್ ಉಡುಗೊರೆ ನೀಡುವ ಮೂಲಕ ಅವರನ್ನು ಅಚ್ಚರಿಗೊಳಿಸಿದ್ದು, ತಾನು ನೀಡಿದ್ದ ಭರವಸೆಯನ್ನೂ ಪೂರೈಸಿದ್ದಾರೆ. ಶುಕ್ರವಾರ ಬ್ಯಾಟ್ ವಿನ್ಯಾಸ ಹೊಂದಿರುವ ಸಾಂಪ್ರದಾಯಿಕ ಗಿಟಾರ್ ಅನ್ನು ಜೆಮಿಮಾ ರೋಡ್ರಿಗಸ್ ಗೆ ಉಡುಗೊರೆ ನೀಡಿದ ಸುನೀಲ್ ಗಾವಸ್ಕರ್, ಆಕೆಯೊಂದಿಗೆ ಕುಳಿತುಕೊಂಡು ಹರಟೆ ನಡೆಸಿದರು. ಇದೇ ವೇಳೆ ಗವಾಸ್ಕರ್ ಜೆಮಿಮಾ ಜೊತೆ ಸೇರಿ ಹಾಡು ಹಾಡುವ ಮೂಲಕ ಈ ಹಿಂದೆ ತಾನು ನೀಡಿದ್ದ ಮಾತನ್ನು ಉಳಿಸಿಕೊಂಡಿದ್ದಾರೆ. View this post on Instagram A post shared by Jemimah Jessica Rodrigues (@jemimahrodrigues)
Siddaramaiah: ಗಡಿ ಭಾಗದ ಶಾಲೆಗಳಲ್ಲಿ ಮಲಯಾಳಂ ಕಲಿಕೆ ಕಡ್ಡಾಯ: ಹೋರಾಟ ಮಾಡುತ್ತೇವೆ ಎಂದ ಸಿದ್ದರಾಮಯ್ಯ
ಬೆಂಗಳೂರು: ಕೇರಳದ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಮಲಯಾಳಂ ಕಲಿಕೆ ಕಡ್ಡಾಯಗೊಳಿಸುವ ಮಸೂದೆಯನ್ನು ಸಿಎಂ ಸಿದ್ದರಾಮಯ್ಯ ತೀವ್ರವಾಗಿ ಖಂಡಿಸಿದ್ದಾರೆ. ಕೇರಳ ಸಿಎಂ ಪಿಣರಾಯಿ ವಿಜಯನ್ಗೆ ಪತ್ರ ಬರೆದಿರುವ ಸಿಎಂ ಸಿದ್ದರಾಮಯ್ಯ, ಒಂದು ವೇಳೆ ಮಸೂದೆ ಜಾರಿಯಾದರೆ ಕರ್ನಾಟಕ ಸಾಂವಿಧಾನಿಕವಾಗಿ ವಿರೋಧಿಸುವುದಾಗಿ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ. ಇದೀಗ ಕೇರಳದ ಗಡಿ ಭಾಗಗಳ ಶಾಲೆಗಳಲ್ಲಿ ಮಲಯಾಳಂನ್ನು ಮೊದಲ ಭಾಷೆಯಾಗಿ ಕಲಿಯುವುದನ್ನು ಕಡ್ಡಾಯಗೊಳಿಸಿರುವ
ಪುಣೆ ಸ್ಥಳೀಯ ಸಂಸ್ಥೆ ಚುನಾವಣೆಗೆ ಜಂಟಿ ಪ್ರಣಾಳಿಕೆ ಬಿಡುಗಡೆ ಮಾಡಿದ NCP ಬಣಗಳು
ಅಜಿತ್ ಪವಾರ್ ರೊಂದಿಗೆ ವೇದಿಕೆ ಹಂಚಿಕೊಂಡ ಸುಪ್ರಿಯಾ ಸುಳೆ
ಮಮತಾ vs ಇ.ಡಿ: ತಾರಕಕ್ಕೇರಿದ ಕಾನೂನು ಸಮರ, ಸುಪ್ರೀಂ ಕೋರ್ಟ್ಗೆ 'ಕೇವಿಯಟ್' ಸಲ್ಲಿಸಿದ ಪಶ್ಚಿಮ ಬಂಗಾಳ ಸರ್ಕಾರ
ರಾಜಕೀಯ ತಂತ್ರಗಾರಿಕೆ ಸಂಸ್ಥೆ 'ಐ-ಪ್ಯಾಕ್' ಮೇಲಿನ ಇ.ಡಿ ದಾಳಿಯ ನಂತರ ಪಶ್ಚಿಮ ಬಂಗಾಳದಲ್ಲಿ ಹೈಡ್ರಾಮಾ ಸೃಷ್ಟಿಯಾಗಿದೆ. ಜಾರಿ ನಿರ್ದೇಶನಾಲಯವು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ಸಾಕ್ಷ್ಯ ನಾಶದ ಆರೋಪ ಮಾಡಿದ ಬೆನ್ನಲ್ಲೇ, ಪಶ್ಚಿಮ ಬಂಗಾಳ ಸರ್ಕಾರ ಸುಪ್ರೀಂ ಕೋರ್ಟ್ನಲ್ಲಿ 'ಕೇವಿಯಟ್' ಸಲ್ಲಿಸಿದೆ. ತನ್ನ ಅಹವಾಲನ್ನು ಕೇಳದೆ ಯಾವುದೇ ಆದೇಶ ನೀಡಬಾರದು ಎಂದು ಸರ್ಕಾರ ಮನವಿ ಮಾಡಿದೆ.
ಕೇಂದ್ರದ ಬಿಜೆಪಿ ಸರಕಾರಕ್ಕೆ ಸೆನ್ಸಾರ್ ಮಂಡಳಿ ಹೊಸ ಆಯುಧ: ತಮಿಳುನಾಡು ಸಿಎಂ ಸ್ಟಾಲಿನ್ ವಾಗ್ದಾಳಿ
ಚೆನ್ನೈ: ಕೇಂದ್ರದಲ್ಲಿನ ಬಿಜೆಪಿ ಸರಕಾರಕ್ಕೆ ಸೆನ್ಸಾರ್ ಮಂಡಳಿ ಹೊಸ ಆಯುಧವಾಗಿ ಬದಲಾಗಿದೆ ಎಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ವಾಗ್ದಾಳಿ ನಡೆಸಿದ್ದಾರೆ. ನಟ, ತಮಿಳ ವೆಟ್ರಿ ಕಳಗಂ ಮುಖ್ಯಸ್ಥ ವಿಜಯ್ ಅವರ ‘ಜನನಾಯಗನ್’ ಚಲನಚಿತ್ರ ಬಿಡುಗಡೆಗೆ ಇನ್ನು ಕೆಲವೇ ದಿನಗಳಿರುವಾಗ, ಆ ಚಿತ್ರವನ್ನು ಸಿಬಿಎಫ್ಸಿ ಪರಿಶೀಲನೆಗೆ ಒಪ್ಪಿಸಿರುವ ಹಿನ್ನೆಲೆಯಲ್ಲಿ ಅವರಿಂದ ಈ ಹೇಳಿಕೆ ಹೊರ ಬಿದ್ದಿದೆ. ‘ಜನನಾಯಗನ್’ ಚಲನಚಿತ್ರವನ್ನು ಉಲ್ಲೇಖಿಸದೆಯೇ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಎಂ.ಕೆ.ಸ್ಟಾಲಿನ್, “ಸಿಬಿಐ, ಈಡಿ, ಐಟಿಯ ನಂತರ ಸೆನ್ಸಾರ್ ಮಂಡಳಿ ಬಿಜೆಪಿ ಸರಕಾರದ ಹೊಸ ಆಯುಧವಾಗಿ ಬದಲಾಗಿದೆ. ಇದು ತೀವ್ರ ಖಂಡನೀಯ” ಎಂದು ವಾಗ್ದಾಳಿ ನಡೆಸಿದ್ದಾರೆ.
ಮೀರತ್: ಮೇಲ್ಜಾತಿಯ ಯುವಕನೋರ್ವ ತನ್ನ ಪುತ್ರಿಯನ್ನು ಅಪಹರಿಸುತ್ತಿದ್ದಾಗ ಆಕೆಯನ್ನು ರಕ್ಷಿಸಲು ಯತ್ನಿಸಿದ್ದ ದಲಿತ ಮಹಿಳೆಯೊಬ್ಬರನ್ನು ಕೊಲೆ ಮಾಡಲಾಗಿದ್ದು, ಇಡೀ ಗ್ರಾಮವನ್ನು ಪೋಲಿಸರು ಸುತ್ತುವರಿದಿದ್ದಾರೆ ಎಂದು telegraphindia.com ವರದಿ ಮಾಡಿದೆ. ಸುನೀತಾ ದೇವಿ (50) ಮೃತ ಮಹಿಳೆಯಾಗಿದ್ದು, ಅವರ ಪುತ್ರಿ 20ರ ಹರೆಯದ ರೂಬಿ ಕುಮಾರಿಯನ್ನು ಅಪಹರಿಸಲಾಗಿದೆ. ಘಟನೆಯು ಪ್ರದೇಶದಲ್ಲಿ ಉದ್ವಿಗ್ನತೆಯನ್ನು ಸೃಷ್ಟಿಸಿದ್ದು, ಆರೋಪಿಯನ್ನು ಬಂಧಿಸಿ ತನ್ನ ಮಗಳನ್ನು ಸುರಕ್ಷಿತವಾಗಿ ಮನೆಗೆ ಮರಳಿ ಕರೆತರುವವರೆಗೆ ಪತ್ನಿಯ ಅಂತ್ಯಸಂಸ್ಕಾರ ನಡೆಸಲು ಮೃತಳ ಪತಿ ಸತ್ಯೇಂದ್ರ ಕುಮಾರ ನಿರಾಕರಿಸಿದ್ದಾರೆ. ಪೋಲಿಸರ ಪ್ರಕಾರ ಸರ್ಧಾನಾದ ಕಪ್ಸಾಡ್ ಗ್ರಾಮದಲ್ಲಿ ಗುರುವಾರ ಬೆಳಿಗ್ಗೆ ಈ ಘಟನೆ ನಡೆದಿದೆ. ಸುನೀತಾ ದೇವಿ ಪುತ್ರಿಯೊಂದಿಗೆ ತನ್ನ ಪುತ್ರಿಯೊಂದಿಗೆ ಹೊಲಕ್ಕೆ ತೆರಳುತ್ತಿದ್ದಾಗ ಆರೋಪಿ ಪರಸ್ ಸಿಂಗ್ (25) ಅವರನ್ನು ತಡೆದಿದ್ದ. ಪರಸ್ ಮತ್ತು ಆತನ ಮೂವರು ಸ್ನೇಹಿತರು ರೂಬಿಯನ್ನು ಬಲವಂತದಿಂದ ಎಳೆದೊಯ್ಯುತ್ತಿದ್ದಾಗ ಸುನೀತಾ ದೇವಿ ಅದನ್ನು ತಡೆಯಲು ಯತ್ನಿಸಿದ್ದಳು. ಪರಸ್ ಕೊಡಲಿಯಿಂದ ಆಕೆಯ ಮೇಲೆ ಹಲ್ಲೆ ನಡೆಸಿದ್ದ. ಮಾಹಿತಿ ತಿಳಿದು ಸ್ಥಳಕ್ಕೆ ಧಾವಿಸಿದ ಸತ್ಯೇಂದ್ರ ಪತ್ನಿಯನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ತಲೆ ಮತ್ತು ಕುತ್ತಿಗೆಗೆ ತೀವ್ರವಾಗಿ ಗಾಯಗೊಂಡಿದ್ದ ಸುನೀತಾ ದೇವಿ ಅದೇ ದಿನ ರಾತ್ರಿ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ. ಪ್ರತ್ಯಕ್ಷದರ್ಶಿಗಳು ಪರಸ್ನ ಸ್ನೇಹಿತರಲ್ಲೋರ್ವನನ್ನು ಸುನಿಲ್ ಕುಮಾರ್ ಎಂದು ಗುರುತಿಸಿದ್ದಾರೆ. ಉಳಿದ ಇಬ್ಬರು ಯಾರು ಎನ್ನುವುದು ಅವರಿಗೆ ತಿಳಿದಿಲ್ಲ ಎಂದು ರೂಬಿಯ ಹಿರಿಯ ಸೋದರ ಮಂದೀಪ ಕುಮಾರ ಶುಕ್ರವಾರ ಸುದ್ದಿಗಾರರಿಗೆ ತಿಳಿಸಿದರು. ಪೋಲಿಸರು ಪರಸ್,ಸುನಿಲ್ ಕುಮಾರ್ ಮತ್ತು ಇಬ್ಬರು ಅಪರಿಚಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸ್ಥಳೀಯ ಎಸ್ಪಿ ಶಾಸಕ ಅತುಲ್ ಪ್ರಧಾನ ಸೇರಿದಂತೆ ಹಲವಾರು ಪ್ರತಿಪಕ್ಷ ನಾಯಕರು ಶುಕ್ರವಾರ ಸಂತ್ರಸ್ತ ಕುಟುಂಬವನ್ನು ಭೇಟಿಯಾಗಲು ತೆರಳಿದ್ದರು. ಆದರೆ ಪೋಲಿಸರು ತಡೆದ ಬಳಿಕ ಗ್ರಾಮದ ಹೊರಗೆ ಪ್ರತಿಭಟನೆ ನಡೆಸಿದರು. ‘ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಯ್ದುಕೊಳ್ಳಲು ಹಾಗೂ ಮೃತ ಮಹಿಳೆಯ ಅಂತ್ಯಸಂಸ್ಕಾರ ನಡೆಸುವಂತೆ ಕುಟುಂಬದ ಮನವೊಲಿಸಲು ನಾವು ಪ್ರಯತ್ನಿಸುತ್ತಿದ್ದೇವೆ. ನಾವು ಕುಟುಂಬಕ್ಕೆ ರಕ್ಷಣೆ ಒದಗಿಸಿದ್ದು, ಯುವತಿಯನ್ನು ಪತ್ತೆ ಹಚ್ಚಲು ಮತ್ತು ಆರೋಪಿಗಳನ್ನು ಬಂಧಿಸಲು ಪೋಲಿಸ್ ತಂಡಗಳು ಪ್ರಯತ್ನಿಸುತ್ತಿವೆ’ ಎಂದು ಮೀರತ್ ಗ್ರಾಮೀಣ ಎಸ್ಪಿ ಅಭಿಜಿತ ಕುಮಾರ ಸುದ್ದಿಗಾರರಿಗೆ ತಿಳಿಸಿದರು. ಪರಸ್ ಮತ್ತು ರೂಬಿ ನಡುವೆ ಸಂಬಂಧವಿತ್ತು ಎಂದು ಸಾಬೀತುಗೊಳಿಸಲು ಪ್ರಯತ್ನಿಸುವ ಮೂಲಕ ಪೋಲಿಸರು ಲಕ್ನೋದಲ್ಲಿಯ ತಮ್ಮ ಮೇಲಾಧಿಕಾರಿಗಳನ್ನು ದಾರಿತಪ್ಪಿಸುತ್ತಿದ್ದಾರೆ ಎಂದು ಆರೋಪಿಸಿದ ಕುಟುಂಬ ಸದಸ್ಯರೋರ್ವರು, ಇದು ಸಂಪೂರ್ಣ ಸುಳ್ಳು, ನಿಜವೇನೆಂದರೆ ಕೆಲವು ತಿಂಗಳುಗಳ ಹಿಂದೆ ಪರಸ್ ರೂಬಿಗೆ ಲೈಂಗಿಕ ಕಿರುಕುಳ ನೀಡಲು ಪ್ರಯತ್ನಿಸಿದ್ದ ಮತ್ತು ಆಕೆ ಈ ಬಗ್ಗೆ ತನ್ನ ಪೋಷಕರ ಬಳಿ ದೂರಿಕೊಂಡಿದ್ದಳು. ಪೋಷಕರು ಸ್ಥಳೀಯ ಪಂಚಾಯತ್ನ ಮೆಟ್ಟಿಲೇರಿದ್ದು, ಪ್ರಕರಣವನ್ನು ದಾಖಲಿಸದಂತೆ ರೂಬಿಗೆ ಸೂಚಿಸಿದ್ದ ಅದು, ಆಕೆಯ ಕುಟುಂಬಕ್ಕೆ 50,000 ರೂ.ದಂಡ ಪಾವತಿಸುವಂತೆ ಪರಸ್ಗೆ ಆದೇಶಿಸಿತ್ತು ಎಂದರು. ಆರೋಪಿಗಳು ಪ್ರಬಲ ಜಾತಿಗೆ ಸೇರಿದವರಾಗಿದ್ದು, ಆಡಳಿತ ಪಕ್ಷಕ್ಕೆ ಹತ್ತಿರವಾಗಿರುವುದರಿಂದ ಅವರ ವಿರುದ್ಧ ಕ್ರಮ ಕೈಗೊಳ್ಳಲು ಸರಕಾರವು ವಿಳಂಬಿಸುತ್ತಿದೆ ಎಂದು ಪ್ರಧಾನ ಆರೋಪಿಸಿದರು.

17 C