ಐಸಿಸ್ ನೆಲೆಗಳನ್ನು ಗುರಿಯಾಗಿಸಿಕೊಂಡು ಸಿರಿಯಾ ಮೇಲೆ ಮತ್ತೆ ದಾಳಿ ನಡೆಸಿದ ಅಮೆರಿಕ
ವಾಷಿಂಗ್ಟನ್: ಸಿರಿಯಾದ ಐಸಿಸ್ ನೆಲೆಗಳನ್ನು ಗುರಿಯಾಗಿಸಿಕೊಂಡು ಅಮೆರಿಕಾ ಶುಕ್ರವಾರ ಮೂರನೇ ಪ್ರತೀಕಾರದ ದಾಳಿ ನಡೆಸಿದೆ. ವಾಯವ್ಯ ಸಿರಿಯಾದ ಮೇಲೆ ನಡೆದ ವಾಯುದಾಳಿಯಲ್ಲಿ ಅಲ್ಖೈದಾ ಜತೆ ಸಂಪರ್ಕ ಹೊಂದಿದ್ದ ಬಿಲಾಲ್ ಹಸನ್ ಅಲ್ ಜಸೀಮ್ ಎಂಬಾತನನ್ನು ಹತ್ಯೆ ಮಾಡಲಾಗಿದೆ ಎಂದು ಅಮೆರಿಕದ ಸೆಂಟ್ರಲ್ ಕಮಾಂಡ್ ಹೇಳಿದೆ. ಬಿಲಾಲ್ ಹಸನ್ ಅಲ್ ಜಸೀಮ್ ಡಿಸೆಂಬರ್ 13ರಂದು ನಡೆದ ಇಬ್ಬರು ಅಮೆರಿಕದ ಸೈನಿಕರು ಮತ್ತು ಒಬ್ಬ ನಾಗರಿಕನ ಹತ್ಯೆ ನಡೆಸಿದ ಸಂಘಟನೆ ಜತೆ ಸಂಬಂಧ ಹೊಂದಿದ್ದ ಎಂದು ಅಮೆರಿಕ ಹೇಳಿಕೊಂಡಿದೆ. ಮೂವರು ಅಮೆರಿಕನ್ನರನ್ನು ಹತ್ಯೆ ಮಾಡಿದ ಭಯೋತ್ಪಾದಕನ ಹತ್ಯೆ ನಮ್ಮ ಪಡೆಗಳ ಮೇಲೆ ದಾಳಿ ನಡೆಸುವವರ ಬಗೆಗಿನ ನಮ್ಮ ನಿಲುವನ್ನು ಬಿಂಬಿಸುತ್ತದೆ ಎಂದು ಸೆಂಟ್ರಲ್ ಕಮಾಂಡ್ನ ಕಮಾಂಡರ್ ಅಡ್ಮಿರಲ್ ಬ್ರಾಡ್ ಕೂಪರ್ ಹೇಳಿಕೆ ನೀಡಿದ್ದಾರೆ. ಅಮೆರಿಕನ್ ನಾಗರಿಕರು ಮತ್ತು ಯುದ್ಧಯೋಧರನ್ನು ಹತ್ಯೆ ಮಾಡುವವರಿಗೆ ಯಾವುದೇ ಸುರಕ್ಷಿತ ಜಾಗ ಇಲ್ಲ. ಎಲ್ಲಿದ್ದರೂ ನಾವು ಹುಡುಕುತ್ತೇವೆ ಎಂದು ಹೇಳಿದ್ದಾರೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ನೀಡಿದ ಆದೇಶದ ಅಂಗವಾಗಿ ಈ ಕಾರ್ಯಾಚರಣೆ ನಡೆದಿದೆ ಎಂದು ಹೇಳಲಾಗಿದೆ.
ಎಣ್ಣೆ ಮಾರಾಟ ಬಂದ್, ಈ 3 ದಿನಗಳ ಕಾಲ ಬಾರ್ &ಎಂಆರ್ಪಿ ಬಂದ್... Dry Days And Holidays
ಎಣ್ಣೆ ಅಂದ್ರೆ ಲಿಕ್ಕರ್ ಮಾರಾಟದ ಮೂಲಕ ಸರ್ಕಾರಗಳು ಸಾವಿರಾರು ಕೋಟಿ ರೂಪಾಯಿ ಆದಾಯ ಗಳಿಸಿ ಲಾಭ ಮಾಡುತ್ತವೆ. ಹಾಗೇ ದಿನದಿಂದ ದಿನಕ್ಕೆ, ಎಣ್ಣೆ ಹೊಡೆಯುವವರ ಸಂಖ್ಯೆ ಕೂಡ ಭಾರಿ ದೊಡ್ಡ ಪ್ರಮಾಣದಲ್ಲಿ ಏರಿಕೆ ಆಗುತ್ತಲೇ ಇದೆ. ಮದ್ಯ ಮಾರಾಟ ಮಾಡುವ ಕಂಪನಿಗಳು ಈ ಮೂಲಕ ಭರ್ಜರಿ ಲಾಭ ಕೂಡ ಮಾಡುತ್ತಿದ್ದಾರೆ. ಅಕಸ್ಮಾತ್ ಒಂದು ದಿನ ಬಾರ್ ಅಥವಾ
ಕನಕಗಿರಿ | ಕೆಆರ್ಎಸ್ ಪಕ್ಷದ ತಾಲೂಕು ಸಮಿತಿ ಪುನರ್ ರಚನೆ : ಅಧ್ಯಕ್ಷರಾಗಿ ರಾಜೇಶ ಚಿನ್ನೂರು ಆಯ್ಕೆ
ಕನಕಗಿರಿ : ತಾಲೂಕಿನ ಪರಿವೀಕ್ಷಣಾ ಮಂದಿರದಲ್ಲಿ ಶನಿವಾರ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಕೊಪ್ಪಳ ಜಿಲ್ಲಾ ಸಂಚಾಲಕರಾದ ಗಣೇಶ ಅಮೃತ ಅವರ ಆದೇಶದ ಮೇರೆಗೆ 3 ವರ್ಷಗಳ ಕಾಲಾವಧಿ, ಜಿಲ್ಲಾ ಸಮಿತಿಯ ವಿಶ್ವಾಸವಿರುವ ತನಕ ಕನಕಗಿರಿ ತಾಲ್ಲೂಕು ಸಮಿತಿಗೆ ಪದಾಧಿಕಾರಿಗಳನ್ನು ನೇಮಕಾತಿ ಮಾಡಲಾಯಿತು. ಅಧ್ಯಕ್ಷರಾಗಿ ರಾಜೇಶ ಚಿನ್ನೂರು, ಉಪಾಧ್ಯಕ್ಷರಾಗಿ ಹನುಮಂತಪ್ಪ ವಾಲೆಕಾರ್, ಪ್ರಧಾನ ಕಾರ್ಯದರ್ಶಿ ದುರುಗಪ್ಪ ನಾಯಕ, ಕಾರ್ಯದರ್ಶಿ ಸಂಗನಗೌಡ, ಯಮನೂರು, ಬಾಬುಸಾಬ ಗುರಿಕಾರ, ಹುಸೇನ, ಸಂಘಟನಾ ಕಾರ್ಯದರ್ಶಿ ಮರಿಸ್ವಾಮ ಅವರನ್ನು ಆಯ್ಕೆಮಾಡಿದರು.
ಮೆಕ್ಕೆಜೋಳ ಬೆಳೆದರೂ ಸಿಗಲಿಲ್ಲ ಬೆಂಬಲ: ಬೆಳೆಗಾರ ಕಂಗಾಲ
ಚಿಕ್ಕಬಳ್ಳಾಪುರ ಜಿಲ್ಲೆಯ ಮೆಕ್ಕೆಜೋಳ ಬೆಳೆಗಾರರು ಕನಿಷ್ಠ ಬೆಂಬಲ ಬೆಲೆಗಾಗಿ ಪರದಾಡುತ್ತಿದ್ದಾರೆ. ಮಾರುಕಟ್ಟೆಯಲ್ಲಿ ಬೆಲೆ ಕುಸಿದಿದ್ದು, ರೈತರು ಹಾಕಿದ ಬಂಡವಾಳವೂ ವಾಪಸ್ ಬಾರದ ಸ್ಥಿತಿ ಇದೆ. ಸರ್ಕಾರ ಘೋಷಿಸಿದ ಬೆಂಬಲ ಬೆಲೆ ಪಡೆಯಲು ಷರತ್ತುಗಳು ಅಡ್ಡಿಯಾಗಿದ್ದು, ರೈತರು ಆಕ್ರೋಶಗೊಂಡಿದ್ದಾರೆ. ಖರೀದಿ ಕೇಂದ್ರಗಳೂ ಹೆಸರಿಗಷ್ಟೇ ತೆರೆದಿದ್ದು, ರೈತರು ದಿಕ್ಕುತೋಚದೆ ಪರದಾಡುತ್ತಿದ್ದಾರೆ.
ದಿಲ್ಲಿ ಗಣರಾಜ್ಯೋತ್ಸವ: ಚಾಮರಾಜನಗರ ಜಿಲ್ಲೆಯ ರೈತ ಮಹಿಳೆ ವರ್ಷಾಗೆ ಆಹ್ವಾನ
ಚಾಮರಾಜನಗರ, ಜ.17: ಜಿಲ್ಲೆಯ ರೈತ ಮಹಿಳೆ ವರ್ಷಾ ಅವರು ಜ.26ರಂದು ದಿಲ್ಲಿಯಲ್ಲಿ ನಡೆಯಲಿರುವ ಗಣರಾಜ್ಯೋತ್ಸವ ದಿನಾಚರಣೆಯಲ್ಲಿ ಪಾಲ್ಗೊಳ್ಳಲು ಆಹ್ವಾನ ಪಡೆದಿದ್ದಾರೆ. ಚಾಮರಾಜನಗರ ತಾಲೂಕಿನ ಉಮ್ಮತ್ತೂರು ಗ್ರಾಮದಲ್ಲಿ ಬಾಳೆ ದಿಂಡಿನಿಂದ ಉತ್ಪನ್ನ ತಯಾರಿಸುತ್ತಿರುವ ವರ್ಷಾ ಜಿಲ್ಲೆಯ ಹಿರಿಮೆಯನ್ನು ಹೆಚ್ಚಿಸಿದ್ದಾರೆ. ರಾಜ್ಯದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವವರಿಗೆ ಈ ಅವಕಾಶ ದೊರೆತಿದೆ. ಕೃಷಿ ವಲಯದಿಂದ ವರ್ಷಾ ಆಯ್ಕೆಯಾಗಿದ್ದು, ಪತಿ ಶ್ರೀಕಂಠ ಅವರೊಂದಿಗೆ ಜ.25ರಂದು ದಿಲ್ಲಿಗೆ ಹೋಗಲು ತಯಾರಿ ನಡೆಸಿದ್ದಾರೆ. ಎಂಟೆಕ್ ಪದವೀಧರೆಯಾಗಿರುವ ವರ್ಷಾ ‘ಆಕೃತಿ ಇಕೋ ಫ್ರೆಂಡ್ಲಿ ಎಂಟರ್ಪ್ರೈಸಸ್’ ಸಂಸ್ಥೆ ಸ್ಥಾಪಿಸಿದ್ದಾರೆ. ಇದಕ್ಕೆ ಸಾಫ್ಟ್ವೇರ್ ಉದ್ಯೋಗಿಯಾಗಿರುವ ಪತಿ ಶ್ರೀಕಂಠ ಸಾಥ್ ನೀಡಿದ್ದಾರೆ. ಕೋವಿಡ್ 2ನೇ ಅಲೆಯ ಲಾಕ್ಡೌನ್ನಿಂದ ಉದ್ಯಮಗಳು ನಲುಗಿದ್ದ ಸಂದರ್ಭದಲ್ಲಿ ವರ್ಷಾ ಅವರ ಸಂಸ್ಥೆ ಆರಂಭಗೊಂಡಿತು ಎನ್ನುವುದು ಮತ್ತೊಂದು ವಿಶೇಷ. ಪ್ರಸ್ತುತ ಇವರ ಬಳಿ ಹಲವರು ಉದ್ಯೋಗ ಮಾಡುತ್ತಿದ್ದಾರೆ. ವರ್ಷಾ ಅವರ ಸಾಧನೆಗೆ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಸಂಸ್ಥೆಗಳಿಂದ ಪ್ರಶಸ್ತಿ ಲಭಿಸಿದೆ. ವರ್ಷಾ ತಮ್ಮ ಜಮೀನಿನಲ್ಲಿ ಬಾಳೆ, ಮಾವು, ಅರಿಶಿಣ ಬೆಳೆದಿದ್ದಾರೆ. ಬಾಳೆ ದಿಂಡಿನ ನಾರಿನಿಂದ ಬ್ಯಾಗ್, ಬಾಕ್ಸ್, ಪೂಜೆ ಬ್ಯಾಗ್, ಪರ್ಸ್, ಲ್ಯಾಪ್ಟಾಪ್ ಬ್ಯಾಗ್, ಯೋಗ ಮ್ಯಾಟ್, ಕಪ್ ಮತ್ತು ಇನ್ನಿತರ ಕರಕುಶಲ ವಸ್ತುಗಳನ್ನು ತಯಾರು ಮಾಡುತ್ತಿದ್ದಾರೆ. ಬಾಳೆಯ ನಾರು ತೆಗೆದಾಗ ಬರುವ ರಸವನ್ನು ಶೇಖರಣೆ ಮಾಡಿ ಇದರಲ್ಲಿ ಪೊಟ್ಯಾಷಿಯಂ ದ್ರವರೂಪದ ಗೊಬ್ಬರವನ್ನು ತಮ್ಮ ಜಮೀನಿಗೆ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಆಕಾಶವಾಣಿಯಲ್ಲಿ 2023ರ ನ.26ರಂದು ಪ್ರಸಾರಗೊಂಡ ಮನ್ ಕಿ ಬಾತ್ 107ನೇ ಆವೃತ್ತಿಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ವರ್ಷಾ ಬಗ್ಗೆ ಪ್ರಸ್ತಾಪಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಮನ್ ಕಿ ಬಾತ್ ಹಲವರಿಗೆ ಪ್ರೇರಣೆಯಾಗಿದೆ. ವರ್ಷಾ ಅವರು ಬಾಳೆ ದಿಂಡಿನಿಂದ ಜೈವಿಕ ಗೊಬ್ಬರ ತಯಾರಿಸಲು ಆರಂಭಿಸಿದರು. ಪ್ರಕೃತಿ ಬಗ್ಗೆ ಪ್ರೀತಿ ಇರುವ ವರ್ಷಾ ಅವರ ಈ ಕೆಲಸ ಇತರರಿಗೆ ಉದ್ಯೋಗ ನೀಡಿದೆ ಎಂದು ಶ್ಲಾಘಿಸಿದ್ದರು. ದೇಶದ ರಾಜಧಾನಿ ದಿಲ್ಲಿಯಲ್ಲಿ ನಡೆಯುವ ಗಣರಾಜ್ಯೋತ್ಸವದಲ್ಲಿ ಜಿಲ್ಲೆಯವರಿಗೆ ಭಾಗವಹಿಸುವ ಅವಕಾಶ ಒದಗಿ ಬರುತ್ತಲೇ ಇದೆ. ಪ್ರಧಾನ ಮಂತ್ರಿ ಬೀದಿಬದಿ ವ್ಯಾಪಾರಿಗಳ ಆತ್ಮನಿರ್ಭರ ನಿಧಿ(ಪಿಎಂ ಸ್ವನಿಧಿ) ಯೋಜನೆಯಲ್ಲಿ ಕಿರು ಸಾಲ ಸೌಲಭ್ಯ ಪಡೆದು ನಿಗದಿತ ಅವಧಿಯಲ್ಲಿ ಮರು ಪಾವತಿ ಮಾಡುತ್ತಿದ್ದ ನಗರದ ಗುಂಡ್ಲುಪೇಟೆ ರಸ್ತೆಯ ಬೀದಿಬದಿಯ ಟೀ ಅಂಗಡಿ ವ್ಯಾಪಾರಿ ಸಮೀವುಲ್ಲಾ 2024ರಲ್ಲಿ ದಿಲ್ಲಿಯಲ್ಲಿ ನಡೆದಿದ್ದ ಗಣರಾಜ್ಯೋತ್ಸವದಲ್ಲಿ ಪಾಲ್ಗೊಳ್ಳಲು ಅವಕಾಶ ಪಡೆದಿದ್ದರು. ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ವಡ್ಡಗೆರೆಯಲ್ಲಿ ಮಾದರಿ ಕೃಷಿ ಮಾಡುತ್ತಿರುವ ಚಿನ್ನಸ್ವಾಮಿ ಮತ್ತು ಪತ್ನಿ ಗಿರಿಕನ್ಯೆ ಅವರಿಗೆ 2025ರಲ್ಲಿ ಆಹ್ವಾನ ಸಿಕ್ಕಿತ್ತು. ಈ ವರ್ಷ ವರ್ಷಾ ಅವರಿಗೆ ಅವಕಾಶ ದೊರೆತಿದೆ. ಹೊಸದಿಲ್ಲಿಯಲ್ಲಿ ನಡೆಯುವ ಗಣರಾಜ್ಯೋತ್ಸವ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಅವಕಾಶ ಸಿಕ್ಕಿರುವುದಕ್ಕೆ ತುಂಬಾ ಸಂತೋಷವಾಗುತ್ತಿದೆ. ದೇಶದ ಬೇರೆ ಬೇರೆ ಕಡೆಗಳಿಂದ ವಿವಿಧ ಕ್ಷೇತ್ರಗಳ ಸಾಧಕರು ಗಣರಾಜ್ಯೋತ್ಸವದಲ್ಲಿ ಪಾಲ್ಗೊಳ್ಳಲಿದ್ದಾರೆ. ಅವರ ಬಗ್ಗೆ ತಿಳಿದುಕೊಳ್ಳುವ ಮತ್ತು ಕಲಿತುಕೊಳ್ಳುವುದಕ್ಕೂ ಅವಕಾಶ ಸಿಗುತ್ತಿರುವುದು ಸಂತಸ ತಂದಿದೆ. -ವರ್ಷಾ, ರೈತ ಮಹಿಳೆ
New Railway Line: ಕೇರಳ ಚುನಾವಣೆ ಹೊತ್ತಲ್ಲಿ ನೀಲಂಬೂರು-ನಂಜನಗೂಡು ರೈಲು ಯೋಜನೆ ಮುನ್ನೆಲೆಗೆ
ನವದೆಹಲಿ: ಕೇಂದ್ರ ರೈಲ್ವೆ ಇಲಾಖೆ ವ್ಯಾಪ್ತಿಯಲ್ಲಿ ದೇಶದಾದ್ಯಂತ ಹೊಸ ರೈಲು ಯೋಜನೆಗಳು, ರೈಲ್ವೆ ಮೂಲ ಸೌಕರ್ಯ ಅಭಿವೃದ್ಧಿಗೊಳ್ಳುತ್ತಿವೆ. ಇದೀಗ ಕರ್ನಾಟಕ ಹಾಗೂ ನೆರೆಯ ಕೇರಳ ರಾಜ್ಯ ಸಂಪರ್ಕಿಸುವ ಉದ್ದೇಶಿತ ರೈಲು ಯೋಜನೆಗೆ ವೇಗ ಸಿಗುವ ಮುನ್ಸೂಚನೆ ಸಿಕ್ಕಿದೆ. ಈ ಸಂಬಂಧ ಕೇಂದ್ರ ರೈಲ್ವೆ ಖಾತೆ ಸಚಿವ ಅಶ್ವಿನಿ ವೈಷ್ಣವ್ ಅವರು ಮಾಹಿತಿ ಹಂಚಿಕೊಂಡಿದ್ದಾರೆ. ಕೇರಳ ವಿಧಾನಸಭಾ ಚುನಾವಣೆ
1,500 ಮಕ್ಕಳನ್ನು ರಕ್ಷಿಸಿದ ಯುಪಿ ಆರ್ಪಿಎಫ್ ಅಧಿಕಾರಿಗೆ ರೈಲ್ವೆ ಅತ್ಯುನ್ನತ ಗೌರವ
ಮೀರಠ್ : ಕಳೆದು ಹೋಗುವ, ಕಳ್ಳಸಾಗಾಣಿಕೆದಾರರ ಬಲೆಗೆ ಬೀಳುವ, ಉದ್ಯೋಗದ ಆಮಿಷಕ್ಕೆ ಬಲೆ ಬಿದ್ದ ಹಾಗೂ ಮನೆ ಬಿಟ್ಟು ಓಡಿಬರುವ ಮಕ್ಕಳು ಹೀಗೆ ಪ್ರತಿವಾರ ರೈಲು ನಿಲ್ದಾಣಗಳಲ್ಲಿ ಹಲವು ಮಕ್ಕಳು ಕಾಣೆಯಾಗುತ್ತಾರೆ. ಕಳೆದ ಮೂರು ವರ್ಷಗಳಲ್ಲಿ ರೈಲ್ವೆ ಸುರಕ್ಷಾ ಪಡೆಯ ಇನ್ಸ್ಪೆಕ್ಟರ್ ಚಂದನಾ ಸಿನ್ಹಾ ಉತ್ತರ ಪ್ರದೇಶದ ರೈಲ್ವೆ ಜಾಲದಲ್ಲಿ ಇಂಥ 1,500ಕ್ಕೂ ಹೆಚ್ಚು ಮಕ್ಕಳನ್ನು ರಕ್ಷಿಸಿ, ರೈಲ್ವೆಯ ಅತ್ಯುನ್ನತ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಇವರ ನೇತೃತ್ವದ ತಂಡ 2024ರಲ್ಲೇ 494 ಮಕ್ಕಳನ್ನು ರಕ್ಷಿಸಿದ್ದು, ಇವರಲ್ಲಿ ಬಾಲಕಾರ್ಮಿಕರಾಗಲು ಕಳ್ಳಸಾಗಾಣಿಕೆದಾರರ ಜಾಲಕ್ಕೆ ಬಿದ್ದ 41 ಮಕ್ಕಳೂ ಸೇರಿದ್ದಾರೆ. ಈ ಪೈಕಿ 152 ಮಕ್ಕಳನ್ನು ಇವರು ಸ್ವತಃ ರಕ್ಷಿಸಿದ್ದಾರೆ. ಈ ಸಾಧನೆಗಾಗಿ ಇವರಿಗೆ ಭಾರತೀಯ ರೈಲ್ವೆ ನಿಡುವ ಅತಿ ವಿಶಿಷ್ಟ ರೈಲು ಸೇವಾ ಪುರಸ್ಕಾರವನ್ನು ಜ.9ರಂದು ದೆಹಲಿಯಲ್ಲಿ ನಡೆದ ಸಮಾರಂಭದಲ್ಲಿ ಪ್ರದಾನ ಮಾಡಲಾಯಿತು. ಲಕ್ನೋ ರೈಲು ನಿಲ್ದಾಣದ 3ನೇ ಪ್ಲಾಟ್ಫಾರಂನಲ್ಲಿ ಒಂದು ಮಗು ಒಬ್ಬಂಟಿಯಾಗಿ ಇದೆ ಎಂಬ ಮಾಹಿತಿ ಬಂದ ಹಿನ್ನೆಲೆಯಲ್ಲಿ ಪ್ರಶಸ್ತಿ ಸ್ವೀಕರಿಸಿದ ತಕ್ಷಣವೇ ಕರ್ತವ್ಯಕ್ಕೆ ಹಾಜರಾದರು. ಅಧಿಕಾರಿಯ ಕ್ರಮವನ್ನು ಮಾತ್ರವಲ್ಲದೇ ಎಲ್ಲ ಪ್ಲಾಟ್ಫಾರಂ ಹಾಗೂ ಮಕ್ಕಳು ಕಳೆದುಹೋಗುವ ಸ್ಥಳಗಳಲ್ಲಿ ಸದ್ದುಗದ್ದಲವಿಲ್ಲದೇ ರಕ್ಷಿಸುವ ಜಾಲವನ್ನು ಅಭಿವೃದ್ಧಿಪಡಿಸಿರುವುದನ್ನು ಗುರುತಿಸಲಾಗಿದೆ. ಲಕ್ನೋದ ಚಾರ್ಭಾಗ್ನಿಂದ ಇವರು ತಮ್ಮ ಕಾರ್ಯಾಚರಣೆ ಆರಂಭಿಸಿದ್ದರು. ಒಂದು ಕಾಣೆಯಾದ ಮಗು ಮತ್ತು ಒಂದು ಸಂಶಯಾಸ್ಪದ ಪ್ರಯಾಣಿಕನಿಂದ ಇವರ ಯಶೋಗಾಥೆ ಆರಂಭವಾಗಿದ್ದು, ಬಳಿಕ ರಕ್ಷಣಾ ಜಾಲ ವ್ಯವಸ್ಥಿತವಾಗಿ ಬೆಳೆದಿದೆ. ಅಧಿಕಾರಿಗಳಿಗೆ ಪ್ಲಾಟ್ಫಾರಂ ಚಲನವಲನಗಳ ಬಗ್ಗೆ ನಿಗಾ ಇಡುವ ತರಬೇತಿ, ಮಾಹಿತಿದಾರರ ಜಾಲ, ಎನ್ಜಿಓ ಪಾಲುದಾರಿಕೆ ಬೆಳೆಸಿರುವುದು ಹೀಗೆ ರಕ್ಷಣಾ ಜಾಲವನ್ನು ಅತಿ ವಿಶಿಷ್ಟವಾಗಿ ಅಭಿವೃದ್ಧಿಪಡಿಸಿದರು ಎಂದು ತಿಳಿದು ಬಂದಿದೆ. ನವದೆಹಲಿ ರೈಲು ನಿಲ್ದಾಣಕ್ಕೆ 2022ರಲ್ಲಿ ನಿಯೋಜಿತರಾದ ಬಳಿಕ ಈ ಪ್ರಯತ್ನ ಮತ್ತಷ್ಟು ತೀಕ್ಷ್ಣವಾಯಿತು. ಛಾತ್ಪೂಜಾ ಗದ್ದಲದಲ್ಲಿ ಕಳೆದುಹೋದ ಮಹಿಳೆ ಮತ್ತು ಮೂರು ವರ್ಷದ ಮಗನನ್ನು ಪತ್ತೆ ಮಾಡಿದರು. ಬಳಿಕ 2024ರಲ್ಲಿ ಅವರನ್ನು ರೈಲ್ವೆ ಇಲಾಖೆಯ ಮಕ್ಕಳ ರಕ್ಷಣಾ ಉಪಕ್ರಮದ ಮುಖ್ಯಸ್ಥರನ್ನಾಗಿ ನೇಮಿಸಲಾಯಿತು. ಬಿಹಾರದಿಂದ ಪಂಜಾಬ್, ಹರ್ಯಾಣ ಹೀಗೆ ದೇಶದ ಉದ್ದಗಲಕ್ಕೂ ಕಳ್ಳಸಾಗಾಣಿಕೆದಾರರ ಜಾಲವನ್ನು ಬೇಧಿಸಿ ಹಲವು ಮಕ್ಕಳನ್ನು ಇವರ ಘಟಕ ರಕ್ಷಿಸಿದೆ.
ಅಪರೂಪದ ಅನುವಂಶಿಕ ಅಸ್ವಸ್ಥತೆ ಬಗ್ಗೆ ಜಾಗೃತಿ ಮೂಡಿಸುತ್ತಿರುವ ಇಂಡೋನೇಷ್ಯಾದ ಮನುರುಂಗ್ ಮನೆತನ
'ಹಲ್ಲಿ ಕುಟುಂಬ' ಎಂಬ ಕಳಂಕದಿಂದ ಜಾಗೃತಿಯವರೆಗೆ
ಮರಣ ಪೂರ್ವ ಹೇಳಿಕೆಗಳು ನಿಖರ, ಸಂಕ್ಷಿಪ್ತ, ಪ್ರಶ್ನೋತ್ತರ ರೂಪದಲ್ಲಿದ್ದು, ವಿಶ್ವಾಸಾರ್ಹವಾಗಿರಬೇಕು ಎಂದು ಹೈಕೋರ್ಟ್ ಆದೇಶಿಸಿದೆ. ಮಹಿಳೆಯೊಬ್ಬರಿಗೆ ಬೆಂಕಿ ಹಚ್ಚಿ ಸುಟ್ಟು ಹಾಕಿದ ಆರೋಪದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಆರೋಪಿಯನ್ನು ಖುಲಾಸೆಗೊಳಿಸಲಾಗಿದೆ. ಮರಣ ಪೂರ್ವ ಹೇಳಿಕೆ ಎರಡು ಪುಟಗಳಿದ್ದು, ವಿಶ್ವಾಸಾರ್ಹವಾಗಿಲ್ಲ ಎಂದು ನ್ಯಾಯಪೀಠ ತಿಳಿಸಿದೆ. ಮೃತರ ಹೇಳಿಕೆ ನೀಡಲು ಮಾನಸಿಕ, ದೈಹಿಕವಾಗಿ ಸಮರ್ಥರಿದ್ದರೇ ಎಂಬುದು ಸಂದೇಹ. ಮರಣಪೂರ್ವ ಹೇಳಿಕೆಯೊಂದನ್ನೇ ಅಧರಿಸಿ ಶಿಕ್ಷೆ ವಿಧಿಸಲು ಸಾಧ್ಯವಿಲ್ಲ ಎಂದು ಸುಪ್ರೀಂಕೋರ್ಟ್ ಆದೇಶಿಸಿದೆ.
ವಿಮಾನಯಾನ ಸೇವೆ ವ್ಯತ್ಯಯ | ಇಂಡಿಗೋ ಸಂಸ್ಥೆಗೆ 22 ಕೋಟಿ ರೂ. ದಂಡ !
ಹೊಸದಿಲ್ಲಿ: ಕಳೆದ ತಿಂಗಳು ವಿಮಾನಯಾನ ಸೇವೆಯಲ್ಲಿ ಆಗಿರುವ ಭಾರಿ ವ್ಯತ್ಯಯಕ್ಕೆ ಸಂಬಂಧಿಸಿದಂತೆ ನಾಗರಿಕ ವಿಮಾನಯಾನಗಳ ಮಹಾನಿರ್ದೇಶನಾಲಯ, ಇಂಡಿಗೋ ವಿಮಾನಯಾನ ಸಂಸ್ಥೆಗೆ 22.2 ಕೋಟಿ ರೂಪಾಯಿ ದಂಡ ವಿಧಿಸಿದೆ. ಹೆಚ್ಚುವರಿಯಾಗಿ, ವಿಮಾನ ಸುರಕ್ಷತೆಯನ್ನು ವಿಸ್ಕೃತಗೊಳಿಸುವುದು ಹಾಗೂ ಪೈಲಟ್ ಹಾಗೂ ಸಿಬ್ಬಂದಿಯ ಕರ್ತವ್ಯಗಳಿಗೆ ಸಂಬಂಧಿಸಿದ ನಿಯಮಗಳ ಅನುಷ್ಠಾನದ ಷರತ್ತಿಗಾಗಿ 50 ಕೋಟಿ ರೂಪಾಯಿಗಳ ಬ್ಯಾಂಕ್ ಗ್ಯಾರೆಂಟಿ ನೀಡಬೇಕಾಗುತ್ತದೆ. ನಿಯಮಗಳ ಅನುಷ್ಠಾನದ ಬಳಿಕ ಈ ಹಣ ಬಿಡುಗಡೆ ಮಾಡಲಾಗುತ್ತದೆ. ಸಂಸ್ಥೆಯ ಸಿಇಓ ಮತ್ತು ಸಿಓಓ ಸೇರಿದಂತೆ ಏರ್ ಲೈನ್ಸ್ ನ ಹಿರಿಯ ಅಧಿಕಾರಿಗಳಿಗೆ ನಿಯಂತ್ರಕ ಸಂಸ್ಥೆ ಎಚ್ಚರಿಕೆ ನೀಡಿದೆ. ಕಾರ್ಯಾಚರಣೆ ನಿಯಂತ್ರಣ ಕೇಂದ್ರದ ಹಿರಿಯ ಉಪಾಧ್ಯಕ್ಷರನ್ನು ಹುದ್ದೆಯಿಂದ ಕಿತ್ತುಹಾಕುವಂತೆಯೂ ಸೂಚಿಸಲಾಗಿದೆ. ಕಾರ್ಯಾಚರಣೆ ನಿಯಂತ್ರಣ ಕೇಂದ್ರದ ಹಿರಿಯ ಉಪಾಧ್ಯಕ್ಷರನ್ನು ಆ ಹುದ್ದೆಯಿಂದ ಕಿತ್ತುಹಾಕುವ ಜತೆಗೆ ಭವಿಷ್ಯದಲ್ಲಿ ಯಾವುದೇ ಹೊಣೆಗಾರಿಕೆಯ ಹುದ್ದೆ ನೀಡಬಾರದು. ಲೋಪವನ್ನು ಪತ್ತೆ ಮಾಡಲು ಮತ್ತು ಡಿಜಿಸಿಎ ನಿಯಮಾವಳಿಯ ಅಡಿಯಲ್ಲಿ ವ್ಯವಸ್ಥಿತ ಸುಧಾರಣೆಗಳನ್ನು ಜಾರಿಗೊಳಿಸುವ ಸಂಬಂಧ ಆಂತರಿಕ ತನಿಖೆ ನಡೆಸುವಂತೆ ವಿಮಾನಯಾನ ಸಚಿವಾಲಯ ಆದೇಶ ನೀಡಿದೆ ಎಂದು ತಿಳಿದು ಬಂದಿದೆ. ಕಳೆದ ತಿಂಗಳು ಇಂಡಿಗೋ ವಿಮಾನಗಳ ವೇಳಾಪಟ್ಟಿಯಲ್ಲಿ ಭಾರಿ ವ್ಯತ್ಯಯವಾದ ಹಿನ್ನೆಲೆಯಲ್ಲಿ ರಚಿಸಲಾಗಿದ್ದ ನಾಲ್ವರು ಸದಸ್ಯರ ಸಮಿತಿ ನೀಡಿದ ವರದಿಯನ್ನು ಶನಿವಾರ ರಾತ್ರಿ ನಿಯಂತ್ರಕ ಸಂಸ್ಥೆ ಬಿಡುಗಡೆ ಮಾಡಿದೆ.
ಭಟ್ಕಳ | ವೆಂಕಟಾಪುರ ಹೆದ್ದಾರಿಯಲ್ಲಿ ಕಾರು ಅಪಘಾತ : ಇಬ್ಬರು ಯುವಕರು ಮೃತ್ಯು
ಭಟ್ಕಳ : ವೆಂಕಟಾಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ಶನಿವಾರ ತಡರಾತ್ರಿ ಸಂಭವಿಸಿದ ಕಾರು ಅಪಘಾತದಲ್ಲಿ ಇಬ್ಬರು ಯುವಕರು ಮೃತಪಟ್ಟಿರುವ ಘಟನೆ ನಡೆದಿದೆ. ಅಪಘಾತದ ವೇಳೆ ಭಟ್ಕಳದ ಆಜಾದ್ ನಗರ ನಿವಾಸಿ ಮೊಹಮ್ಮದ್ ಅಶ್ರಫ್ ರುಕ್ನುದ್ದೀನ್ ಶಿಪಾಯಿ ಅವರ ಪುತ್ರ ಬಿಲಾಲ್ (15) ಸ್ಥಳದಲ್ಲೇ ಮೃತಪಟ್ಟಿದ್ದು, ಗಾಯಗೊಂಡಿದ್ದ ಕಾರು ಚಾಲನೆ ಮಾಡುತ್ತಿದ್ದ ಆಯಾನ್ (20) ಹೆಚ್ಚಿನ ಚಿಕಿತ್ಸೆಗೆ ಉಡುಪಿಗೆ ಕರೆದೊಯ್ಯುವ ವೇಳೆ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಶಿರಾಲಿಯಿಂದ ಭಟ್ಕಳದತ್ತ ಕಾರಿನಲ್ಲಿ ಬರುತ್ತಿದ್ದ ಯುವಕರು ಮಧ್ಯರಾತ್ರಿ ವೇಳೆಗೆ ವೆಂಕಟಾಪುರ ಹೆದ್ದಾರಿ ಭಾಗದಲ್ಲಿ ಕಾರು ನಿಯಂತ್ರಣ ತಪ್ಪಿ ರಸ್ತೆ ಬದಿಯ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದಿದೆ ಎನ್ನಲಾಗಿದೆ. ಅಪಘಾತದ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಆದರೆ, ಅಪಘಾತ ಸ್ಥಳದಲ್ಲಿ ಜೆಲ್ಲಿ ಕಲ್ಲುಗಳು ಚದುರಿರುವುದು ಕಂಡುಬಂದಿದ್ದು, ಅವುಗಳಿಂದಲೇ ಅಪಘಾತ ಸಂಭವಿಸಿರಬಹುದೆಂಬ ಅನುಮಾನ ವ್ಯಕ್ತವಾಗಿದೆ. ಮೃತ ಬಿಲಾಲ್ನ ಮೃತದೇಹವನ್ನು ಭಟ್ಕಳ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಗಿದ್ದು, ಮರಣೋತ್ತರ ಪರೀಕ್ಷೆ ನಂತರ ಕುಟುಂಬಕ್ಕೆ ಒಪ್ಪಿಸಲಾಗುವುದು ಎಂದು ತಿಳಿದು ಬಂದಿದೆ.
ಇತಿಹಾಸದ ಪ್ರೇಮಿಗಳಿಗೆ ರಾಜ್ಯ ಪುರಾತತ್ವ ಇಲಾಖೆಯು ಸಿಹಿಸುದ್ದಿಯೊಂದನ್ನು ಕೊಟ್ಟಿದೆ. ಶಿಲಾಯುಗದ ಬಗ್ಗೆ ಹೆಚ್ಚು ಹುಡುಕಾಟ ನಡೆಸಿ ಹೆಣಗಾಡುವ ಬದಲಿಗೆ ಒಂದು ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡುವ ಮೂಲಕ ಮಾಹಿತಿ ಪಡೆದುಕೊಳ್ಳುವ ರೀತಿ ವ್ಯವಸ್ಥೆಯನ್ನು ಜಾರಿ ಮಾಡಿದೆ. ಆ ಮೂಲಕ ಕರ್ನಾಟಕದ 200ಕ್ಕೂ ಹೆಚ್ಚು ಪ್ರಾಚೀನ ಐತಿಹಾಸಿಕ ತಾಣಗಳ ಸಮಗ್ರ ಮಾಹಿತಿ ಈಗ ಸುಲಭವಾಗಿ ದೊರಕಲಿದೆ. ಈ ತಾಣಗಳ ವಿವರಗಳನ್ನು ಕನ್ನಡ ಮತ್ತು ಇಂಗ್ಲಿಷ್ನಲ್ಲಿ ಡಿಜಿಟಲ್ ಹಾಗೂ ಪುಸ್ತಕ ರೂಪದಲ್ಲಿ ಇರಲಿದೆ.
ಜಿಲ್ಲಾ ಕೇಂದ್ರವಾಗುವ ಅರ್ಹತೆಯಿದ್ದರೂ ಸಾರಿಗೆ ಕೊರತೆ ಅನುಭವಿಸುತ್ತಿರುವ ಇಂಡಿ
ವಿಜಯಪುರ: ಇಂಡಿ ನಗರವಾಗಿ ಮೇಲ್ದರ್ಜೆಗೇರಿದೆ, ಜಿಲ್ಲಾ ಕೇಂದ್ರವಾಗುವ ಎಲ್ಲ ಸೌಲಭ್ಯಗಳನ್ನು ಹೊಂದುವ ಮೂಲಕ ಜಿಲ್ಲಾ ಕೇಂದ್ರ ರಚನೆಯ ಕೂಗು ಇಂಡಿಯಲ್ಲಿ ಪ್ರಬಲಗೊಂಡಿದೆ. ಆದರೆ, ನಗರ ಸಾರಿಗೆ ಕೊರತೆ ವ್ಯಾಪಕವಾಗಿದ್ದು ಈ ಕೊರತೆ ನೀಗಿದರೆ ಇಂಡಿ ಜನತೆಗೆ ಅನುಕೂಲವಾಗಲಿದೆ. ವಿವಿಧ ಅಭಿವೃದ್ಧಿ ಕಾಮಗಾರಿಗಳ ಫಲವಾಗಿ ಇಂಡಿಯಲ್ಲಿ ನೆಲೆಸುವವರ ಸಂಖ್ಯೆ ಹೆಚ್ಚುತ್ತಿದೆ. ಇಂಡಿ ನಗರದಲ್ಲಿಯೇ 50 ಸಾವಿರ ಕ್ಕೂ ಅಧಿಕ ಜನಸಂಖ್ಯೆ ಇದೆ. ಆದರೆ ನಗರ ಸಾರಿಗೆ ವ್ಯವಸ್ಥೆ ಅತ್ಯಂತ ಹೀನಾಯ ಸ್ಥಿತಿಯಲ್ಲಿದ್ದು ಕೇವಲ ಎರಡು ಬಸ್ಗಳು ಮಾತ್ರ ಸಂಚರಿಸುತ್ತಿವೆ. ನಗರ ವ್ಯಾಪ್ತಿಯೂ ಬೆಳೆಯುತ್ತಿರುವುದರಿಂದ ಒಂದು ಪ್ರದೇಶದಿಂದ ಇನ್ನೊಂದು ಪ್ರದಶಕ್ಕೆ ಸಂಚರಿಸಲು ಇಂಡಿ ಜನತೆ ಹೈರಾಣಾಗುವಂತಾಗಿದೆ. ಇನ್ನೊಂದೆಡೆ ಖಾಸಗಿ ವಾಹನಗಳ ಮೇಲೆ ಅವಲಂಬಿತರಾಗುತ್ತಿರುವುದು ಅವರ ಜೇಬಿಗೆ ಹೊರೆ ಬೀಳುವಂತೆ ಮಾಡಿದೆ. ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ ಪಾಟೀಲ ಅವರು ಕೂಡಾ ಜಿಲ್ಲೆಗೆ ಇನ್ನೂ ಹೆಚ್ಚಿಗೆ ಬಸ್ ಬೇಕು ಎಂದು ಪತ್ರ ಬರೆದು ಮುಖ್ಯಮಂತ್ರಿಗಳ ಗಮನ ಸೆಳೆದಿದ್ದಾರೆ. ಈಗಾಗಲೇ ಶಾಸಕ ಯಶವಂತರಾಯಗೌಡ ಪಾಟೀಲ ಅವರು ನಗರ ಪ್ರದೇಶದಲ್ಲಿನ ಸಾರ್ವಜನಿಕರಿಗೆ ಸಾರಿಗೆ ಅನುಕೂಲ ಕಲ್ಪಿಸಬೇಕು ಎಂಬ ಚಿಂತನೆಯಿಂದ ನಗರ ಸಾರಿಗೆ ಪ್ರಾರಂಭಿಸಿ ಈಗ 9 ತಿಂಗಳು ಕಳೆಯುತ್ತಿದೆ. ನಗರ ಸಾರಿಗೆ ಸೇವೆಯು ಪ್ರಾರಂಭವಾದ ದಿನದಿಂದಲೇ ಜನರಿಂದ ಉತ್ತಮ ಪ್ರತಿಕ್ರಿಯೆ ಪಡೆಯುತ್ತಿದೆ. ನಗರ ಸಾರಿಗೆ ಬಸ್ಗಳ ಸಂಚಾರ ಶುರುವಾದ ಬಳಿಕ ಖಾಸಗಿ ವಾಹನಗಳಿಗೆ ಸ್ವಲ್ಪಮಟ್ಟಿಗೆ ಕಡಿವಾಣ ಬಿದ್ದಿದೆ. ನಗರ ಸಾರಿಗೆ ಬಸ್ಗಳು ಆರಂಭವಾದ ಬಳಿಕ ಸಾರ್ವಜನಿಕರು ಖಾಸಗಿ ವಾಹನಗಳತ್ತ ಮುಖ ಮಾಡುವುದು ಕಡಿಮೆಯಾಗಿದ್ದು, ನಗರ ಸಾರಿಗೆ ಬಸ್ಸಿನ ದಾರಿ ಕಾಯುತ್ತಿದ್ದಾರೆ. ಪ್ರತಿ ದಿನ ಮೂರು ಮಾರ್ಗಗಳಲ್ಲಿ ನಗರ ಸಾರಿಗೆ ಬಸ್ ಓಡಿಸಲಾಗುತ್ತಿದೆ. ನಗರ ಸಾರಿಗೆ ಜನಪ್ರಿಯತೆ ಹೆಚ್ಚಾದಂತೆ ಹೆಚ್ಚಿನ ಸಾರಿಗೆ ಬಸ್ ಗಳ ಬೇಡಿಕೆಯೂ ಹೆಚ್ಚಾಗಿದೆ. ನಗರ ಬಸ್ ನಿಲ್ದಾಣದಿಂದ ಸರಕಾರಿ ವಿಜಯಪುರ ರಸ್ತೆಯ ಆಸ್ಪತ್ರೆ, ಕೆಇಬಿ, ಚರ್ಚ್, ಆದರ್ಶ ಶಾಲೆ, ವಾಟರ್ ಟ್ಯಾಂಕ್ (ಸೇವಾಲಾಲ್ ವೃತ್ತ), ಸಿಂದಗಿ ರಸ್ತೆಯ ಶ್ರೀ ಶಾಂತೇಶ್ವರ ಮಂಗಲ ಕಾರ್ಯಾಲಯ, ವೀರ ಭಾರತಿ ಶಾಲೆ, ಧನಶೆಟ್ಟಿ ತಾಂಡಾ, ಸಾಲೋಟಗಿ ಹಾಗೂ ರೈಲು ನಿಲ್ದಾಣ ಮಾರ್ಗಗಳಲ್ಲಿ ಸಾರಿಗೆ ಬಸ್ಗಳು ಸಂಚರಿಸುತ್ತಿದ್ದು, ಪ್ರತಿ 20 ನಿಮಿಷಕ್ಕೊಮ್ಮೆಯಾದರೂ ಈ ಮಾರ್ಗದಲ್ಲಿ ಬಸ್ ಓಡಿಸಬೇಕೆನ್ನುವುದು ಇಲ್ಲಿನ ನಗರ ನಿವಾಸಿಗಳ ಬೇಡಿಕೆಯಾಗಿದೆ. ಈಗಾಗಲೇ ಓಡುತ್ತಿರುವ ನಗರ ಸಾರಿಗೆಯನ್ನು ಮಹಿಳೆಯರು, ವಿದ್ಯಾರ್ಥಿಗಳು, ವೃದ್ಧರು, ಯುವಕರು ಸೇರಿದಂತೆ ಸಾಮಾನ್ಯ ಸಾರ್ವಜನಿಕರು ಈ ಹೆಚ್ಚು ಪ್ರಮಾಣದಲ್ಲಿ ಬಳಸಿಕೊಳ್ಳುತ್ತಿದ್ದಾರೆ. ‘ಹೆಚ್ಚಿನ ಪ್ರಯಾಣಿಕರು ಈ ಸೌಲಭ್ಯವನ್ನು ಬಳಸಿಕೊಳ್ಳುವುದಕ್ಕಾಗಿ ನಗರ ಸಾರಿಗೆ ಬಸ್ ಸಂಚಾರ ಮಾರ್ಗಗಳ ಜೊತೆಗೆ ಬಸ್ಸುಗಳ ಸಂಖ್ಯೆಯನ್ನು ಕೂಡಾ ಹೆಚ್ಚಿಸಬೇಕಾಗಿದೆ. ದಿನದಿಂದ ದಿನಕ್ಕೆ ಪ್ರಯಾಣಿಕರ ಸಂಖ್ಯೆ ಹೆಚ್ಚಾಗುತ್ತಿದೆ. ಪ್ರತಿ ಕಿ.ಮೀ.ಗೆ ಸಾರಿಗೆ ಸಂಚಾರಕ್ಕೆ 50 ರೂಗಳ ವೆಚ್ಚವಾಗುತ್ತಿದೆ. ಸರಾಸರಿ ನೋಡಿದರೆ ನಗರ ಸಾರಿಗೆ ಓಡಾಟದಿಂದ ಕಿಮೀಗೆ 40 ರೂ.ಗಳು ದೊರೆಯುತ್ತಿದೆ. ಆದರೂ, ನಗರ ಸಾರಿಗೆಯಿಂದ ಸಂಸ್ಥೆಗೆ ಹಾನಿಯಿಲ್ಲ. ಮೂರು ನಗರ ಸಾರಿಗೆ ಬಸ್ ಓಡಾಟಕ್ಕೂ ಕಿಮೀ ಗಳಿಕೆಗೂ ಹೊಂದಾಣಿಕೆ ಇದೆ. ಶಾಸಕರು ಇನ್ನೂ ಮೂರು ಬಸ್ ಗಳ ಬೇಡಿಕೆ ಇಟ್ಟಿದ್ದಾರೆ. ಅವು ಸಧ್ಯದಲ್ಲಿ ಬರಲಿವೆ ಎಂದು ಹೆಸರು ಹೇಳಲಿಚ್ಛಿಸದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಎಪ್ರಿಲ್ ತಿಂಗಳಲ್ಲಿ ಇಂಡಿಯಲ್ಲಿ ನಗರ ಸಾರಿಗೆ ಪ್ರಾರಂಭಿಸಲಾಯಿತು. ಅಂದಿನಿಂದ ಇಂದಿನವರೆಗೆ ಪ್ರಯಾಣಿಕರ ಕೊರತೆ, ಆರ್ಥಿಕ ನಷ್ಟದಿಂದ ನಗರ ಸಾರಿಗೆ ಸ್ಥಗತ ಆಗಿರುವುದಿಲ್ಲ. ಜನಸ್ಪಂದನೆ ಉತ್ತಮವಾಗಿರುವುದರಿಂದ, ಸಾರ್ವಜನಿಕರು ನಗರ ಸಾರಿಗೆಯ ನಿರಂತರತೆ ಕಾಪಾಡುವತ್ತ ಆಶಾವಾದಿ ದೃಷ್ಟಿಯಿಂದ ನೋಡುತ್ತಿದ್ದಾರೆ. ಇಲ್ಲಿಗೆ ನಗರ ಸಾರಿಗೆ ವ್ಯವಸ್ಥೆಯಾಗಬೇಕೆಂದು ಹೋರಾಟ ಮಾಡಲಾಗಿತ್ತು. ಶಾಸಕರು ನಗರ ಸಾರಿಗೆ ಓಡಾಟಕ್ಕೆ ಕ್ರಮ ಕೈಗೊಂಡಿದ್ದಾರೆ. ನಗರದಲ್ಲಿ 3-4 ಕೂತು ಪ್ರಯಾಣಿಸುವ ಆಟೋಗಳಲ್ಲಿ ಪ್ರಯಾಣ ಮಾಡಲು ಒಬ್ಬನಿಗೆ ಕನಿಷ್ಠ 50ರೂ. ಪಾವತಿಸಬೇಕು. ತುಸು ದೂರದ ಪ್ರಯಾಣಕ್ಕೆ 100 ರೂ. ತನಕೂ ತೆರಬೇಕಾಗುತ್ತದೆ. ಸರ್ವೀಸ್ ಓಡುವ ಅಟೋ-ಪಿಯಾಜೋಗಳಿಗೆ ತಲಾ 20 ರೂ. ನಂತೆ ನೀಡಬೇಕು. ಅದರೆ ನಗರ ಸಾರಿಗೆ ಆರಂಭವಾದ ಬಳಿಕ ಈ ವೆಚ್ಚವು 6 ರಿಂದ 10 ರೂ.ಗಳಿಗೆ ಇಳಿಕೆಯಾಗಿದೆ. ಹಾಗಾಗಿ, ನಗರದ 23 ವಾರ್ಡುಗಳಿಗೂ ನಗರ ಸಾರಿಗೆ ಸಂಚಾರ ವಿಸ್ತರಣೆ ಆದರೆ, ಸಾರ್ವಜನಿಕ ಸಾರಿಗೆ ಸೇವೆಯ ಲಾಭ ಇನ್ನಷ್ಟು ಸಾರ್ವಜನಿಕರನ್ನು ತಲುಪುತ್ತದೆ. ಇದರಿಂದ ಸಾರಿಗೆ ಸಂಸ್ಥೆಗೂ ಲಾಭವಾಗಲಿದೆ. ನಗರದ ಸುತ್ತ ವರ್ತುಲ ಸಂಚಾರ ಪ್ರಾರಂಭಿಸಿ ವಿದ್ಯಾರ್ಥಿಗಳಿಗೆ, ಕಾರ್ಮಿಕರಿಗೆ, ಎಪಿಎಂಸಿ ಮಾರುಕಟ್ಟೆ, ರೇವಪ್ಪನ ಮಡ್ಡಿ, ಇಂಗಳಗಿ ತಾಂಡಾದವರೆಗಿನ ಮಾರ್ಗಗಳಲ್ಲಿ ಬಸ್ ಸಂಚಾರ ಅತ್ಯಗತ್ಯವಾಗಿದೆ. ಇದರಿಂದ ಇಲ್ಲಿನ ಜನರಿಗೆ ಬಹಳ ಅನುಕೂಲವಾಗಲಿದೆ ಎಂದು ಹೇಳುತ್ತಾರೆ ಇಂಡಿ ನಿವಾಸಿ ಚವಡಪ್ಪಾ ಜನ್ನಾ. ನಗರ ಸಾರಿಗೆ ಬಸ್ಸಿನಿಂದ ಶಾಲೆ, ಕಾಲೇಜಿಗೆ ಹೋಗಲು ಅನುಕೂಲವಾಗಿದೆ. ನಗರ ಸಾರಿಗೆ ಬಸ್ ಇಲ್ಲದಿದ್ದಾಗ ಬಸ್ಸಿಗಾಗಿ ಕಾಯುತ್ತಾ ನಿಲ್ಲಬೇಕಾಗುತಿತ್ತು. ಕಾಲೇಜು ಅವಧಿ ಮುಗಿದ ಮೇಲೆ ಹೋಗಬೇಕಾಗಿತ್ತು. ಸಧ್ಯ ನಗರ ಸಾರಿಗೆಯಿಂದ ಅನುಕೂಲವಾಗಿದೆ. -ಸಿದ್ದಾರ್ಥ, ವಿದ್ಯಾರ್ಥಿ ನಗರ ವ್ಯಾಪ್ತಿಯಲ್ಲಿ ಎರಡು ನಗರ ಸಾರಿಗೆ ಬಸ್ ಗಳು ಓಡಾಡುತ್ತಿವೆ. ಇದರಿಂದ ಶಾಲೆ,ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳಿಗೆ ಅನುಕೂಲವಾಗಿದೆ.ಪ್ರಯಾಣಿಕರಿಂದ ನಗರ ಸಾರಿಗೆ ಬಸ್ ಗಳ ಬೇಡಿಕೆ ಇದೆ. ಹೊಸ ಬಸ್ ಗಳು ಬಂದ ಮೆಲೆ ನಗರ ಸಾರಿಗೆ ಹೆಚ್ಚಿನ ಬಸ್ ಓಡಿಸಲಾಗುತ್ತದೆ. -ರೇವಣಸಿದ್ದಪ್ಪ ಖೈನೂರ ಘಟಕ ವ್ಯವಸ್ಥಾಪಕರು, ಇಂಡಿ ಇಂಡಿ ನಗರಕ್ಕೆ ಜಿಲ್ಲಾ ಸ್ಥಾನಮಾನ ದೊರಕಿಸಿಕೊಡಬೇಕು. ಜಿಲ್ಲೆಯಲ್ಲಿನ ಎಲ್ಲಾ ಸೌಲಭ್ಯಗಳು ಇಂಡಿಯಲ್ಲಿ ದೊರೆಯಬೇಕು ಎಂಬ ಉದ್ದೇಶದಿಂದ ಮಿನಿ ವಿಧಾನಸೌಧ, ಸೇರಿದಂತೆ ಹಲವು ಸೌಲಭ್ಯಗಳ ಜತೆಗೆ ನಗರ ಸಾರಿಗೆ ಸೇವೆ ನಗರ ವಾಸಿಗಳಿಗೆ ದೊರಕಿಸಿ ಕೊಡುವ ಉದ್ದೇಶದಿಂದ ನಗರ ಸಾರಿಗೆ ಬಸ್ ಓಡಾಟಕ್ಕೆ ಚಾಲನೆ ನೀಡಲಾಗಿದೆ. ಸಾರ್ವಜನಿಕರಿಂದ ಹೆಚ್ಚಿನ ಬೇಡಿಕೆ ಇರುವುದರಿಂದ ಬಸ್ ಗಳ ಸಂಖ್ಯೆ ಹೆಚ್ಚಿಗೆ ಮಾಡಲು ಅಧಿಕಾರಿಗಳಿಗೆ ತಿಳಿಸಲಾಗುತ್ತದೆ. -ಯಶವಂತರಾಯಗೌಡ ಪಾಟೀಲ ಶಾಸಕರು, ಇಂಡಿ
ಕಲಬುರಗಿ | ಕಾಚಾಪೂರ ಮಾದರಿ ಶಾಲೆಯ ಮಕ್ಕಳಿಗೆ ಬಯಲೇ ವಿದ್ಯಾಲಯ
ಕಲಬುರಗಿ ಜಿಲ್ಲೆಯ ಕಾಚಾಪೂರ ಗ್ರಾಮದ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕೊಠಡಿಗಳ ಕೊರತೆಯಿಂದ ಮಕ್ಕಳು ಬಯಲಲ್ಲೇ ಕುಳಿತು ಪಾಠ ಕೇಳಬೇಕಾದ ಸಂದರ್ಭ ಬಂದೊದಗಿದೆ. ಶಾಲೆಯಲ್ಲಿ 1 ರಿಂದ 8ನೇ ತರಗತಿವರೆಗೂ ಒಟ್ಟು 296 ವಿದ್ಯಾರ್ಥಿಗಳು ಇದ್ದಾರೆ. ಒಂದು ಕೊಠಡಿಯಲ್ಲಿ 50-60 ವಿದ್ಯಾರ್ಥಿಗಳು ಕುಳಿತು ಪಾಠ ಕೇಳಬೇಕಾದ ದುಃಸ್ಥಿತಿ ಇದೆ. ಒಂದೇ ಕೊಠಡಿಯಲ್ಲಿ ಎರಡೆರಡು ತರಗತಿಯ ವಿದ್ಯಾರ್ಥಿಗಳಿಗೆ ಪಾಠ ಬೋಧನೆ ಮಾಡಲಾಗುತ್ತಿದ್ದು ಮಕ್ಕಳು ಕಿರಿಕಿರಿ ಅನುಭವಿಸುತ್ತಿದ್ದಾರೆ. ಶಿಕ್ಷಕರು ಮಾಡಿದ ಪಾಠವನ್ನು ಮಕ್ಕಳು ಮನನ ಮಾಡಿಕೊಳ್ಳಲು ಸಮಸ್ಯೆ ಎದುರಿಸುತ್ತಿದ್ದಾರೆ. 6 ಕೊಠಡಿ ಶಿಥಿಲ: ಶಾಲೆಯಲ್ಲಿ ಒಟ್ಟು 9 ಕೊಠಡಿಗಳಿವೆ. ಆದರೆ 6 ಕೊಠಡಿಗಳು ಶಿಥಿಲಗೊಂಡಿವೆ. ಇವುಗಳನ್ನು 6 ತಿಂಗಳುಗಳಿಂದ ಮುಚ್ಚಲಾಗಿದೆೆ. ಮಕ್ಕಳ ಸಂಖ್ಯೆಗೆ ಅನುಗುಣವಾಗಿ 8-12 ಕೊಠಡಿಗಳ ಅವಶ್ಯಕತೆ ಇದೆ. ಆದರೆ, ವಿದ್ಯಾರ್ಥಿಗಳು ಶಾಲಾ ಆವರಣದಲ್ಲಿ ಗಾಳಿ, ಬಿಸಿಲು, ಧೂಳು ಲೆಕ್ಕಿಸದೆ ಗಿಡದ ನೆರಳಿನಲ್ಲಿ ಕುಳಿತು ಪಾಠ ಕೇಳುವಂತಾಗಿದೆ. ಶಿಕ್ಷಕರ ಕೊರತೆ : ಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಪ್ರತಿ ವರ್ಷ ಹೆಚ್ಚಾಗುತ್ತಿದ್ದು, ವಿದ್ಯಾರ್ಥಿಗಳ ಸಂಖ್ಯೆಗನುಗುಣವಾಗಿ ಶಿಕ್ಷಕರ ಕೊರತೆ ಇದೆ. ಅತಿಥಿ ಶಿಕ್ಷಕರೇ ಮಕ್ಕಳಿಗೆ ಬೋಧನೆ ಮಾಡುತ್ತಿದ್ದಾರೆ. ಶಿಕ್ಷಣ ಇಲಾಖೆಮಕ್ಕಳ ಸಂಖ್ಯೆಗನುಗುಣವಾಗಿ ಕೊಠಡಿ ನಿರ್ಮಿಸುವುದರ ಜತೆಗೆ ಶಿಕ್ಷಕರನ್ನು ನಿಯೋಜಿಸಬೇಕು ಎನ್ನುವುದು ಶಿಕ್ಷಣ ಪ್ರೇಮಿಗಳ ಒತ್ತಾಯ. ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಕೊಠಡಿಗಳು ಇಲ್ಲ. ಹೀಗಾಗಿ ಮಕ್ಕಳಿಗೆ ಗಿಡದ ನೆರಳಲ್ಲಿ ಬೋಧನೆ ಮಾಡಲಾಗುತ್ತಿದೆ. ಹೊಸ ಕೊಠಡಿಗಳನ್ನು ನಿರ್ಮಿಸುವಂತೆ ಶಾಲೆಯ ವತಿಯಿಂದ ಶಾಸಕರಿಗೆ ಮನವಿ ಮಾಡಿದ್ದೇವೆ. <ಪ್ರೇಮ ಸಿಂಗ್ ಚವ್ಹಾಣ ಮುಖ್ಯಶಿಕ್ಷಕ, ಕಾಚಾಪೂರ ಮಕ್ಕಳು ಬಿಸಿಲು, ಮಳೆ, ಚಳಿಯೆನ್ನದೆ ಬಯಲಲ್ಲೇ ಪಾಠ ಕೇಳುತ್ತಿದ್ದಾರೆ. ಕಲಿಕೆಗೆ ಎಲ್ಲಕ್ಕಿಂತ ಮುಖ್ಯವಾಗಿ ಇರಬೇಕಾಗಿರುವುದು ಉತ್ತಮ ಪರಿಸರ. ಆದರೆ ಈ ಶಾಲೆಯ ಮಕ್ಕಳಿಗೆ ಕನಿಷ್ಠ ಸೌಕರ್ಯವಾದ ಕೊಠಡಿಯೂ ಇಲ್ಲ. ಇದರಿಂದಾಗಿ ಮಕ್ಕಳು ಏಕಾಗ್ರತೆಯಿಂದ ಕಲಿಯಲು ಆಗುವುದಿಲ್ಲ. ಕಲಿಕೆಗೆ ಉತ್ತಮ ವಾತಾವರಣ ಕಲ್ಪಿಸಲು ಆದಷ್ಟು ಬೇಗ ಸರಕಾರ ಕೊಠಡಿ ಸೌಕರ್ಯ ಒದಗಿಸಬೇಕು. <ನಿಂಗಪ್ಪ, ಕಾಚಾಪೂರ, ಗ್ರಾಮಸ್ಥ
Karnataka Weather: ಗರಿಷ್ಠ ತಾಪಮಾನದಲ್ಲಿ ಏರಿಕೆ, ರಾಜ್ಯಾದ್ಯಂತ ಒಣಹವೆ ಮುನ್ಸೂಚನೆ
ಬೆಂಗಳೂರು: ಕರ್ನಾಟಕದಲ್ಲಿ ಈವರೆಗೆ ದಾಖಲಾಗಿದ್ದ ಚಳಿ ನಿಧಾನವಾಗಿ ಕಡಿಮೆ ಆಗುತ್ತಿದೆ ಎನ್ನುವಾಗಲೇ ರಾಜಧಾನಿ ಬೆಂಗಳೂರು ಸೇರಿ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಮತ್ತೆ ಚಳಿ ಹೆಚ್ಚಾಗಿದೆ. ಮುಂದಿನ ಮೂರು ದಿನ ಇದ ರೀತಿ ವಾತಾವರಣ ಕಂಡ ಬರಲಿದೆ. ಕೆಲವು ಜಿಲ್ಲೆಗಳಲ್ಲಿ ಮಂಜು ಕವಿಯಲಿದೆ. ಉಳಿದಂತೆ ರಾಜ್ಯಾದ್ಯಂತ ಗರಿಷ್ಠ ತಾಪಮಾನದಲ್ಲಿ ಏರಿಕೆ ಆಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ
ಮೈಸೂರು | ಮಹಿಳಾ ಅಧಿಕಾರಿಗೆ ಕೊಲೆ ಬೆದರಿಕೆ : ಪ್ರಕರಣ ದಾಖಲು
ಮೈಸೂರು : ಸರಕಾರದ ಸ್ವಾಧೀನಕ್ಕೆ ಪಡೆಯಬೇಕಾದ ಜಮೀನು ಪರಿಶೀಲನೆಗೆ ತೆರಳಿದ ಗ್ರಾಮ ಆಡಳಿತ ಮಹಿಳಾ ಅಧಿಕಾರಿ ಹಾಗೂ ಗ್ರಾಮ ಸಹಾಯಕನಿಗೆ ಕೊಲೆ ಬೆದರಿಕೆ ಹಾಕಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಘಟನೆ ವರುಣಾ ಹೋಬಳಿ ಗುಡಮಾದನಹಳ್ಳಿ ಗ್ರಾಮದಲ್ಲಿ ನಡೆದಿರುವುದು ತಡವಾಗಿ ವರದಿಯಾಗಿದೆ. ಕೊಲೆ ಬೆದರಿಕೆ ಹಾಕಿ ನಿಂದಿಸಿದ ವ್ಯಕ್ತಿ ವಿರುದ್ಧ ಮಹಿಳಾ ಅಧಿಕಾರಿ, ರಕ್ಷಣೆ ಕೋರಿ ಮೈಸೂರು ದಕ್ಷಿಣ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಗ್ರಾಮ ಆಡಳಿತಾಧಿಕಾರಿ ಬಂಡೀಪಾಳ್ಯ ವೃತ್ತದ ಜಿ.ಭವ್ಯ ಹಾಗೂ ಗ್ರಾಮ ಸಹಾಯಕ ನವೀನ್ ಕುಮಾರ್ ಎಂಬವರ ಮೇಲೆ ವರುಣಾ ಹೋಬಳಿ ಗುಡಮಾದನಹಳ್ಳಿ ಗ್ರಾಮದ ನಿವಾಸಿ ಜಿ.ಎಂ. ಪುಟ್ಟಸ್ವಾಮಿ ಬೆದರಿಕೆ ಹಾಕಿದ ಆರೋಪಿ. ಧಮ್ಕಿ ಹಾಕಿ ಕೊಲೆ ಬೆದರಿಕೆ ಹಾಕಿದ ದೃಶ್ಯಗನ್ನ್ನು ಮೊಬೈಲ್ನಲ್ಲಿ ಚಿತ್ರೀಕರಿಸಲಾಗಿದೆ. ಈ ವೇಳೆ ಆರೋಪಿ ಪುಟ್ಟಸ್ವಾಮಿ ಬಲವಂತವಾಗಿ ಮೊಬೈಲ್ ಕಿತ್ತುಕೊಂಡು ವೀಡಿಯೊ ಡಿಲೀಟ್ ಮಾಡಿದರು ಎನ್ನಲಾಗಿದೆ. ವರುಣಾ ಹೋಬಳಿಯ ಗುಡಮಾ ದನಹಳ್ಳಿಯಲ್ಲಿ ‘‘ ನಿಮ್ಹಾನ್ಸ್ ’’ ಮಾದರಿ ಆಸ್ಪತ್ರೆ ನಿರ್ಮಿಸಲು ಸರ್ವೇ ನಂ.8 ರಲ್ಲಿ 5 ಎಕರೆ 05 ಗುಂಟೆ, ಸರ್ವೇ ನಂ.60 ರಲ್ಲಿ 6 ಎಕರೆ 10 ಗುಂಟೆ ಹಾಗೂ ಸರ್ವೇ ನಂ.68 ರಲ್ಲಿ 8 ಎಕರೆ 25 ಗುಂಟೆ ಸೇರಿ ಒಟ್ಟು 20 ಎಕರೆ ಜಾಗ ಮೀಸಲಿಡಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕನಸಿನ ಯೋಜನೆ ಇದಾಗಿದೆ. ತಮ್ಮ ಸ್ವಕ್ಷೇತ್ರದಲ್ಲಿ ಆಸ್ಪತ್ರೆ ನಿರ್ಮಾಣಕ್ಕೆ ಸಿದ್ದರಾಮಯ್ಯ ಆಸಕ್ತಿ ತೋರಿದ ಹಿನ್ನೆಲೆಯಲಿ ಜಾಗ ಗುರುತಿಸಿ ಸ್ವಾಧೀನ ಪ್ರಕ್ರಿಯೆ ಆರಂಭಿಸುವಂತೆ ಆದೇಶವಾಗಿದೆ. ಗುಡಮಾದನಹಳ್ಳಿಯಲ್ಲಿ ಗುರುತಿಸಲಾದ ಜಮೀನು ಪರಿಶೀಲನೆಗೆ ಮಹಿಳಾ ಅಧಿಕಾರಿ ಜಿ.ಭವ್ಯಾ ಹಾಗೂ ನವೀನ್ ಕುಮಾರ್ ತೆರಳಿದ್ದರು. ಈ ವೇಳೆ ಸದರಿ ಜಮೀನಿನಲ್ಲಿ ಅನಧಿಕೃತವಾಗಿ ಅಡಿಕೆ ತೋಟ ನಿರ್ಮಿಸಿಕೊಂಡಿದ್ದ ಪುಟ್ಟಸ್ವಾಮಿ ದಿಢೀರ್ ಪ್ರತ್ಯಕ್ಷವಾಗಿ ಯಾರನ್ನು ಕೇಳಿ ನಿಮ್ಹಾನ್ಸ್ ಆಸ್ಪತ್ರೆಗೆ ಜಮೀನು ಮಂಜೂರು ಮಾಡಿದ್ದೀರಿ? ಎಂದು ಬೆದರಿಕೆ ಹಾಕಿ ನಿಂದಿಸಿದ್ದಾರೆ. ಪುಟ್ಟಸ್ವಾಮಿಯ ದೌರ್ಜನ್ಯ ಮೊಬೈಲ್ನಲ್ಲಿ ಚಿತ್ರೀಕರಿಸುತ್ತಿದ್ದ ಗ್ರಾಮ ಸಹಾಯಕ ನವೀನ್ ಕುಮಾರ್ ಗೂ ಕೊಲೆ ಬೆದರಿಕೆ ಹಾಕಿ ಮೊಬೈಲ್ ಕಿತ್ತುಕೊಂಡು ವೀಡಿಯೊ ಡಿಲೀಟ್ ಮಾಡಿಸಿರುವ ಆರೋಪ ಕೇಳಿ ಬಂದಿದೆ. ಸರಕಾರಿ ಕೆಲಸವನ್ನ ನಿರ್ಭಯವಾಗಿ ನಿರ್ವಹಿಸಲು ಮಹಿಳಾ ಸಿಬ್ಬಂದಿಯಾದ ನನಗೆ ಭಯದ ವಾತಾವರಣ ಉಂಟು ಮಾಡಿರುವ ಪುಟ್ಟಸ್ವಾಮಿ ವಿರುದ್ದ ಕಾನೂನು ರೀತಿ ಕ್ರಮ ಕೈಗೊಳ್ಳುವಂತೆ ಭವ್ಯಾ ಪ್ರಕರಣ ದಾಖಲಿಸಿ ತಮಗೆ ರಕ್ಷಣೆ ನೀಡುವಂತೆ ಮನವಿ ಮಾಡಿದ್ದಾರೆ.
ನೀರಿಗಾಗಿ 2ನೇ ಸ್ವಾತಂತ್ರ್ಯ ಸಂಗ್ರಾಮ ಖಚಿತ : ನ್ಯಾ.ವಿ.ಗೋಪಾಲಗೌಡ
ʼಜಲಾಗ್ರಹʼ ಸಮಾವೇಶ
ಮಂಗ, ಹಕ್ಕಿ ಹಿಕ್ಕೆ, ಕಳಪೆ ಗುಣಮಟ್ಟದ ಗಾಳಿ: ಇಂಡಿಯಾ ಓಪನ್ ಬ್ಯಾಡ್ಮಿಂಟನ್ ಟೂರ್ನಿಯನ್ನು ಆವರಿಸಿದ ವಿವಾದಗಳು
ಹಕ್ಕಿ ಹಿಕ್ಕೆ, ಮಂಗಗಳ ಕಾಟ, ಜೊತೆಗೆ ದಿಲ್ಲಿಯ ಕಳಪೆ ಗುಣಮಟ್ಟದ ಗಾಳಿ… ಭಾರತದ ಪ್ರಮುಖ ಬ್ಯಾಡ್ಮಿಂಟನ್ ಟೂರ್ನಿಯಾದ BWF ಇಂಡಿಯಾ ಓಪನ್ ಸೂಪರ್ 750 ಅನ್ನು ಆವರಿಸಿಕೊಂಡಿರುವ ಅವ್ಯವಸ್ಥೆಗಳು ಮತ್ತು ವಿವಾದಗಳು ಒಂದೆರಡಲ್ಲ. ಹೊಸದಿಲ್ಲಿಯ ಇಂದಿರಾ ಗಾಂಧಿ ಒಳಾಂಗಣ ಕ್ರೀಡಾಂಗಣದಲ್ಲಿ ಎದುರಾದ ಈ ಸಮಸ್ಯೆಗಳನ್ನು ಉಲ್ಲೇಖಿಸಿ, ಒಬ್ಬ ಅಗ್ರ ಶ್ರೇಯಾಂಕಿತ ಆಟಗಾರ ಟೂರ್ನಿಯಿಂದ ಹಿಂದೆ ಸರಿದಿದ್ದಾರೆ. ಟೂರ್ನಿಯಲ್ಲಿ ಭಾಗವಹಿಸಿದ ಇನ್ನೂ ಹಲವರು ಇಲ್ಲಿ ಸ್ವಚ್ಛತೆ ಇಲ್ಲವೆಂದು ಟೀಕಿಸಿದ್ದಾರೆ. ಹವಾಮಾನ ಮತ್ತು ಮಾಲಿನ್ಯದಂತಹ ಅಂಶಗಳು ತಮ್ಮ ನಿಯಂತ್ರಣದಲ್ಲಿಲ್ಲವೆಂದು ಸೂಚಿಸಿರುವ ಬ್ಯಾಡ್ಮಿಂಟನ್ ಅಸೋಸಿಯೇಷನ್ ಆಫ್ ಇಂಡಿಯಾ (ಬಿಎಐ), ಈ ಟೀಕೆಗಳಿಗೆ ಸಮರ್ಥನೆ ನೀಡಿದೆ. ಪ್ರತಿಕ್ರಿಯೆಗಳನ್ನು ಗಮನಿಸಿದ ಬ್ಯಾಡ್ಮಿಂಟನ್ ವಿಶ್ವ ಒಕ್ಕೂಟ (ಬಿಡಬ್ಲ್ಯೂಎಫ್) ಕೂಡ ಹೇಳಿಕೆ ನೀಡಿದ್ದು, ಇಂದಿರಾ ಗಾಂಧಿ ಕ್ರೀಡಾಂಗಣವು ಆಟದ ಕ್ಷೇತ್ರದ ಅವಶ್ಯಕತೆಗಳನ್ನು ಪೂರೈಸುತ್ತದೆ ಎಂದು ಪುನರುಚ್ಚರಿಸಿದೆ. ಆದರೆ ಸ್ವಚ್ಛತೆ ಮತ್ತು ನೈರ್ಮಲ್ಯ ಸಂಬಂಧಿತ ಸಮಸ್ಯೆಗಳಿರುವುದನ್ನು ಒಪ್ಪಿಕೊಂಡಿದೆ. ಆಗಸ್ಟ್ನಲ್ಲಿ ಇಲ್ಲಿ ನಡೆಯಲಿರುವ ವಿಶ್ವ ಚಾಂಪಿಯನ್ಶಿಪ್ನಲ್ಲಿ ಅಂತಹ ಸಮಸ್ಯೆಗಳು ಇರಲಾರವು ಎಂದು ಎರಡೂ ಫೆಡರೇಷನ್ಗಳು ಸ್ಪಷ್ಟಪಡಿಸಿವೆ. ಅಂಗಣ ಸ್ವಚ್ಛವಾಗಿಲ್ಲ “ಇದು ಇತರ ಅಂಗಣಗಳಿಗಿಂತ ಉತ್ತಮವಾಗಿರುತ್ತದೆ ಎಂದು ನಾನು ನಿಜವಾಗಿಯೂ ಆಶಿಸಿದ್ದೆ. ಆದರೆ ಇದು ತುಂಬಾ ಕೊಳಕು. ಇದು ಆಟಗಾರರ ಆರೋಗ್ಯಕ್ಕೆ ತೊಂದರೆಯೊಡ್ಡಬಹುದು,” ಎಂದು ವಿಶ್ವದ 20ನೇ ಶ್ರೇಯಾಂಕದ ಡ್ಯಾನಿಶ್ ಆಟಗಾರ್ತಿ ಮಿಯಾ ಬ್ಲಿಚ್ಫೆಲ್ಡ್ ಹೇಳಿದ್ದಾರೆ. ಅಂಗಣದ ರಚನೆ ಬಗ್ಗೆ ತಕರಾರು ಇಲ್ಲದಿದ್ದರೂ, ಈ ವರ್ಷದ ಪಂದ್ಯಾವಳಿಯಲ್ಲಿ ಆಟಗಾರರ ಆರೋಗ್ಯ ಸ್ಥಿತಿಗಳ ಬಗ್ಗೆ ಅವರು ಕಳವಳ ವ್ಯಕ್ತಪಡಿಸಿದ್ದಾರೆ. ಆದರೆ ಬ್ಲಿಚ್ಫೆಲ್ಡ್ ರ ದೂರುಗಳು ಅವರ ವೈಯಕ್ತಿಕ ಅನುಭವ ಮತ್ತು ಆರೋಗ್ಯದ ಸಂವೇದನಶೀಲತೆಯಿಂದ ಉಂಟಾಗಿರುವುದೆಂದು ಬಿಎಐ ತಿಳಿಸಿದೆ. ಈ ವರ್ಷದ ಇಂಡಿಯಾ ಓಪನ್ನಲ್ಲಿ ಮಾಡಲಾದ ವ್ಯವಸ್ಥೆಗಳನ್ನು ಅನೇಕ ಆಟಗಾರರು ಮೆಚ್ಚಿದ್ದಾರೆ ಎಂದು ಸಂಸ್ಥೆ ಹೇಳಿದೆ. ಮಿಯಾ ಅವರ ಹೇಳಿಕೆಗಳು ಸಾಮಾನ್ಯ ಆಟದ ಪರಿಸ್ಥಿತಿಗಳು ಮತ್ತು ವೈಯಕ್ತಿಕ ಆರೋಗ್ಯ ಸೂಕ್ಷ್ಮತೆಗಳಿಗೆ ಸಂಬಂಧಿಸಿದವು; ನಿರ್ದಿಷ್ಟವಾಗಿ ಮುಖ್ಯ ಆಟದ ಮೈದಾನದ ಕುರಿತು ಅಲ್ಲ. ಅವರು ಉಲ್ಲೇಖಿಸಿದ್ದದ್ದು ಅಭ್ಯಾಸಕ್ಕೆ ಬಳಸುವ ಕೆಡಿ ಜಾಧವ್ ಕ್ರೀಡಾಂಗಣವಾಗಿದ್ದು, ಮುಖ್ಯ ಪಂದ್ಯ ನಡೆಯುವ ಅಂಗಣವಲ್ಲ ಎಂಬುದನ್ನು ಗಮನಿಸಬೇಕು. “ಧೂಳು ಮತ್ತು ಪರಿಸರದಲ್ಲಿನ ಇತರ ಅಂಶಗಳಿಗೆ ಹೆಚ್ಚು ಸಂವೇದನಶೀಲರಾಗಿರುವ ಆಟಗಾರ್ತಿಯಾಗಿ, ಪರಿಸ್ಥಿತಿಗಳು ಕೆಲವೊಮ್ಮೆ ಅವರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತವೆ. ಮುಖ್ಯ ಆಟದ ಮೈದಾನವನ್ನು ಸ್ವಚ್ಛವಾಗಿ, ಕೊಳಕು ಮತ್ತು ಪಾರಿವಾಳ ಮುಕ್ತವಾಗಿ ಇರಿಸಲಾಗಿದೆ. ಹಲವಾರು ಆಟಗಾರರು ಸ್ಥಳದ ಪರಿಸ್ಥಿತಿಗಳ ಬಗ್ಗೆ ತೃಪ್ತಿ ವ್ಯಕ್ತಪಡಿಸಿದ್ದಾರೆ,” ಎಂದು ಬಿಎಐ ಕಾರ್ಯದರ್ಶಿ ಸಂಜಯ್ ಮಿಶ್ರಾ ಹೇಳಿದ್ದಾರೆ. ಅಂಗಣದಲ್ಲಿ ತಾಪಮಾನ ನಿಯಂತ್ರಣ ಅಂಗಣಗಳಲ್ಲಿನ ತಾಪಮಾನ ಕುರಿತೂ ಆಟಗಾರರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. “ಇಲ್ಲಿನ ವಾತಾವರಣ ತುಂಬಾ ತಂಪಾಗಿದೆ. ಇದರಿಂದ ಅಭ್ಯಾಸಕ್ಕೆ ಅಡ್ಡಿಯಾಗಿದೆ. ಬಹು ಪದರದ ರಕ್ಷಣಾತ್ಮಕ ಉಡುಪು ಧರಿಸಬೇಕಾಯಿತು. ಅದು ಸೂಕ್ತವಲ್ಲ,” ಎಂದು ಬ್ಲಿಚ್ಫೆಲ್ಡ್ ಹೇಳಿದ್ದಾರೆ. ಆಟಗಾರರಿಗೆ ಅಂಗಣಗಳಲ್ಲಿ ಹೀಟರ್ ಅಗತ್ಯವಿದೆ ಎಂದು ಥೈಲ್ಯಾಂಡ್ ನ ಆಟಗಾರ್ತಿ ರಾಟ್ಚಾನೋಕ್ ಇಂಟಾನಾನ್ ಹೇಳಿದ್ದಾರೆ. “ನನಗೆ ಸ್ವಲ್ಪ ಚಳಿ ಅನಿಸಿತು. ಅಲ್ಲಿ ಬೆಚ್ಚಗಾಗಲು ಕಷ್ಟವಾಯಿತು,” ಎಂದು ಕೆನಡಾದ ಆಟಗಾರ್ತಿ ಮಿಚೆಲ್ ಲಿ ಹೇಳಿದ್ದಾರೆ. “ಹೌದು, ದಿಲ್ಲಿಯಲ್ಲಿ ಚಳಿ ಇದೆ. ಆದ್ದರಿಂದ ನಾವು ವಾತಾವರಣ ಬಿಸಿಯಾಗಿಸುವ ಸಾಧನಗಳನ್ನು ಒದಗಿಸಿದ್ದೇವೆ. ಬಹುತೇಕ ಆಟಗಾರರು ಇದನ್ನು ಮೆಚ್ಚಿದ್ದಾರೆ. ಒಬ್ಬ ಆಟಗಾರ್ತಿಯ ಪ್ರತಿಕ್ರಿಯೆಯನ್ನೇ ಆಧಾರವಾಗಿಸಿಕೊಳ್ಳಬಾರದು,” ಎಂದು ಮಿಶ್ರಾ ಹೇಳಿದ್ದಾರೆ. ಆದರೆ ಚಳಿ ಕುರಿತು ದೂರು ನೀಡಿರುವುದು ಒಬ್ಬ ಆಟಗಾರ್ತಿ ಮಾತ್ರ ಅಲ್ಲ. ಮಂಗಗಳ ಕಾಟ ಟೂರ್ನಿಯನ್ನು ವರದಿ ಮಾಡಲು ದಿಲ್ಲಿಗೆ ತೆರಳಿದ್ದ ಛಾಯಾಗ್ರಾಹಕಿ ಅಜ್ಲಿನ್ನಾ ದೇವಿ, ಬುಧವಾರ ಮೊದಲ ಸುತ್ತಿನ ಪಂದ್ಯಗಳ ವೇಳೆ ಮುಖ್ಯ ಕ್ರೀಡಾಂಗಣದ ಸ್ಟ್ಯಾಂಡ್ ಗಳಲ್ಲಿ ಮಂಗವೊಂದು ಕಾಣಿಸಿಕೊಂಡಿರುವ ಕುರಿತು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಸ್ಟೋರಿ ಪೋಸ್ಟ್ ಮಾಡಿದ್ದಾರೆ. ತರಬೇತಿ ಸ್ಥಳವಾದ ಕೆಡಿ ಜಾಧವ್ ಹಾಲ್ ಗೆ ಮಂಗವೊಂದು ಪ್ರವೇಶಿಸಿದ ಬಗ್ಗೆ, ಕೊರಿಯಾದ ಡಬಲ್ಸ್ ಆಟಗಾರ್ತಿ ಕಾಂಗ್ ಮಿನ್ಹ್ಯುಕ್ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿ, “ಪ್ರಾಣಿಗಳಿಗೆ ಉಚಿತ ಪ್ರವೇಶ ನೀಡಲಾಗಿದೆಯೇ?” ಎಂದು ಪ್ರಶ್ನಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿದ ಮಿಶ್ರಾ, “ಬಿಎಐ ಮತ್ತು ಸ್ಥಳದ ಸಿಬ್ಬಂದಿ ಕಳೆದ 20 ದಿನಗಳಿಂದ ನಿರಂತರವಾಗಿ ಕ್ರೀಡಾಂಗಣದಲ್ಲಿ ಕೆಲಸ ಮಾಡುತ್ತಿದ್ದಾರೆ. ಇಂತಹ ಘಟನೆ ಕಂಡುಬಂದಿರುವುದು ಇದೇ ಮೊದಲು. ಒಂದು ಬಾಗಿಲು ಸರಿಯಾಗಿ ಮುಚ್ಚಿರಲಿಲ್ಲ. ಈಗ ಎಲ್ಲಾ ಬಾಗಿಲುಗಳು ಸರಿಯಾಗಿ ಮುಚ್ಚಿರುವುದನ್ನು ಖಚಿತಪಡಿಸಲಾಗುತ್ತಿದೆ. ಕ್ರೀಡಾಂಗಣದ ಸುತ್ತಲೂ ಕಾಡು ಪ್ರದೇಶಗಳಿವೆ. ಇದು ಪರಿಸರದ ಭಾಗ. ಸುರಕ್ಷಿತ ಮತ್ತು ನಿಯಂತ್ರಿತ ಆಟದ ವಾತಾವರಣ ಕಾಪಾಡಿಕೊಳ್ಳಲು ಅಧಿಕಾರಿಗಳೊಂದಿಗೆ ನಿಕಟವಾಗಿ ಕೆಲಸ ಮುಂದುವರಿಸುತ್ತೇವೆ,” ಎಂದಿದ್ದಾರೆ. ಹೊಸದಿಲ್ಲಿಯ ವಾಯು ಮಾಲಿನ್ಯ ದಿಲ್ಲಿಯ ವಾಯು ಗುಣಮಟ್ಟ ಸೂಚ್ಯಂಕವು ಒಂದು ತಿಂಗಳ ಹಿಂದಿನಷ್ಟು ಆತಂಕಕಾರಿಯಾಗಿಲ್ಲದಿದ್ದರೂ, ಇನ್ನೂ ಹಾನಿಕಾರಕ ಮತ್ತು ಅಪಾಯಕಾರಿ ಮಟ್ಟದ ಮಧ್ಯದಲ್ಲೇ ಇದೆ. “ಇಲ್ಲಿನ ಗಾಳಿ ಕಳಪೆಯಾಗಿದೆ. ಇದು ಬ್ಯಾಡ್ಮಿಂಟನ್ ಪಂದ್ಯಾವಳಿಯನ್ನು ಆಯೋಜಿಸಲು ಸೂಕ್ತ ಸ್ಥಳ ಎಂದು ನಾನು ಭಾವಿಸುವುದಿಲ್ಲ,” ಎಂದು ಡೆನ್ಮಾರ್ಕ್ನ ಪುರುಷರ ಸಿಂಗಲ್ಸ್ ಆಟಗಾರ ಆಂಡರ್ಸ್ ಆಂಟನ್ಸನ್ ದಿಲ್ಲಿಗೆ ಬರಲು ನಿರಾಕರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಪಂದ್ಯದಿಂದ ಹಿಂದೆ ಸರಿದ ಕಾರಣಕ್ಕೆ ಬ್ಯಾಡ್ಮಿಂಟನ್ ವಿಶ್ವ ಒಕ್ಕೂಟವು ಅವರಿಗೆ 5,000 ಡಾಲರ್ ದಂಡ ವಿಧಿಸಿದೆ. ಅಂಗಣದಲ್ಲಿ ಹಕ್ಕಿ ಹಿಕ್ಕೆ ಅಭ್ಯಾಸ ಅಂಗಣಗಳಲ್ಲಿ ಹಕ್ಕಿ ಹಿಕ್ಕೆಗಳಿವೆ ಎಂದು ಬ್ಲಿಚ್ಫೆಲ್ಡ್ ಹೇಳಿದಾಗ ಮಿಶ್ರಾ ಅದನ್ನು ನಿರಾಕರಿಸಿದ್ದರು. ಆದರೆ ಎರಡು ದಿನಗಳ ಬಳಿಕ, ಪಂದ್ಯ ನಡೆಯುತ್ತಿರುವಾಗ ಹಕ್ಕಿ ಹಿಕ್ಕೆಯಿಂದಾಗಿ ಎಚ್.ಎಸ್. ಪ್ರಣಯ್ ಮತ್ತು ಲೋ ಕಿಯನ್ ಯೂ ನಡುವಿನ ಎರಡನೇ ಸುತ್ತಿನ ಪಂದ್ಯವನ್ನು ಎರಡು ಬಾರಿ ನಿಲ್ಲಿಸಬೇಕಾಯಿತು. ಆಟಗಾರರ ಪ್ರತಿಕ್ರಿಯೆ “2016–17ರ ಋತುವಿನಲ್ಲಿ ದೀಪಗಳು ಆರಿದ್ದರಿಂದ ನಾನು ಡೆನ್ಮಾರ್ಕ್ನಲ್ಲಿ ನನ್ನ ಪಂದ್ಯಕ್ಕಾಗಿ ಒಂದು ಗಂಟೆ ಕಾಯಬೇಕಾಯಿತು. ಪ್ರಣಯ್ ಒಂದು ದಿನ ಒಂದು ಪಂದ್ಯ, ಮರುದಿನ ಮತ್ತೊಂದು ಪಂದ್ಯ ಆಡಿದ್ದೇನೆ ಎಂದು ಹೇಳಿದರು. ಇಂತಹ ಸಂಗತಿಗಳು ಆಗಾಗ ನಡೆಯುತ್ತವೆ. ಯಾವುದೇ ದೇಶವೂ ಉದ್ದೇಶಪೂರ್ವಕವಾಗಿ ಇಂಥದ್ದನ್ನು ಮಾಡುವುದಿಲ್ಲ. ಎಲ್ಲರೂ ಅತ್ಯುತ್ತಮ ವ್ಯವಸ್ಥೆ ನೀಡಲು ಬಯಸುತ್ತಾರೆ,” ಎಂದು ಭಾರತದ ಆಟಗಾರ ಶ್ರೀಕಾಂತ್ ಕಿದಂಬಿ ಪ್ರತಿಕ್ರಿಯಿಸಿದ್ದಾರೆ. ಬ್ಯಾಡ್ಮಿಂಟನ್ ವಿಶ್ವ ಒಕ್ಕೂಟದ ಪ್ರತಿಕ್ರಿಯೆ ಯೋನೆಕ್ಸ್–ಸನ್ರೈಸ್ ಇಂಡಿಯಾ ಓಪನ್ 2026ರ ಸಮಯದಲ್ಲಿ, ದಿಲ್ಲಿಯ ಇಂದಿರಾ ಗಾಂಧಿ ಕ್ರೀಡಾಂಗಣದಲ್ಲಿ ಇರುವ ಪರಿಸ್ಥಿತಿಗಳನ್ನು ಪರಿಶೀಲಿಸಲು ಬ್ಯಾಡ್ಮಿಂಟನ್ ವಿಶ್ವ ಒಕ್ಕೂಟವು ಆಟಗಾರರು ಮತ್ತು ತಂಡಗಳೊಂದಿಗೆ ನಿರಂತರ ಸಂಪರ್ಕದಲ್ಲಿದೆ ಎಂದು ಹೇಳಿದೆ. “ಸಕಾರಾತ್ಮಕ ಮತ್ತು ರಚನಾತ್ಮಕ ಪ್ರತಿಕ್ರಿಯೆಗಳು ಈ ಪಂದ್ಯಾವಳಿ ಮತ್ತು ಭವಿಷ್ಯದ ಚಾಂಪಿಯನ್ಶಿಪ್ಗಳಿಗೆ ಸಾಧ್ಯವಾದಷ್ಟು ಉತ್ತಮ ವಾತಾವರಣ ರೂಪಿಸಲು ಸಹಕಾರಿಯಾಗುತ್ತವೆ. ಆಟಗಾರರು ಹಂಚಿಕೊಂಡ ದೂರುಗಳು ಮತ್ತು ನಂತರದ ಮಾಧ್ಯಮ ವರದಿಗಳನ್ನು ನಾವು ಅಂಗೀಕರಿಸುತ್ತೇವೆ. ಆದರೆ ಸ್ಥಳದೊಳಗಿನ ಗಾಳಿಯ ಗುಣಮಟ್ಟ ಮತ್ತು ತಾಪಮಾನದ ಮೇಲೆ ಪರಿಣಾಮ ಬೀರುವ ಶೀತ ಹವಾಮಾನದಂತಹ ಕಾಲೋಚಿತ ಅಂಶಗಳನ್ನು ಸಂಪೂರ್ಣವಾಗಿ ನಿಯಂತ್ರಿಸಲು ಸಾಧ್ಯವಿಲ್ಲ,” ಎಂದು ಹೇಳಿಕೆಯಲ್ಲಿ ತಿಳಿಸಿದೆ. ಸಾಮಾನ್ಯ ಸ್ವಚ್ಛತೆ, ನೈರ್ಮಲ್ಯ ಮತ್ತು ಪ್ರಾಣಿಗಳ ನಿಯಂತ್ರಣ ಸೇರಿದಂತೆ ಕೆಲವು ಕ್ಷೇತ್ರಗಳಿಗೆ ಇನ್ನಷ್ಟು ಗಮನ ಅಗತ್ಯವಿದ್ದರೂ, ಭಾರತೀಯ ಬ್ಯಾಡ್ಮಿಂಟನ್ ಅಸೋಸಿಯೇಷನ್ ಈ ಕಾಳಜಿಗಳಿಗೆ ತ್ವರಿತವಾಗಿ ಸ್ಪಂದಿಸಿದೆ ಎಂದು ಬಿಡಬ್ಲ್ಯೂಎಫ್ ಹೇಳಿದೆ. ಆಟದ ಅಂಗಣ, ನೆಲಹಾಸು, ಜಿಮ್ನಾಷಿಯಂ ಮತ್ತು ವೈದ್ಯಕೀಯ ಸೌಲಭ್ಯಗಳು ಉತ್ತಮವಾಗಿವೆ ಎಂಬುದನ್ನು ಆಟಗಾರರು ಗಮನಿಸಿದ್ದಾರೆ ಎಂದಿದೆ. ಇಂದಿರಾ ಗಾಂಧಿ ಕ್ರೀಡಾ ಸಂಕೀರ್ಣವು ಕ್ರೀಡಾಪಟುಗಳು ಮತ್ತು ಅಧಿಕಾರಿಗಳಿಗೆ ಹೆಚ್ಚಿನ ಸ್ಥಳಾವಕಾಶ ಒದಗಿಸುತ್ತದೆ. ವಿಶ್ವ ಚಾಂಪಿಯನ್ಶಿಪ್ಗಳನ್ನು ಆಯೋಜಿಸಲು ಅಗತ್ಯವಿರುವ ಆಟದ ಮೈದಾನದ ಮಾನದಂಡಗಳನ್ನು ಇದು ಪೂರೈಸುತ್ತದೆ. ಇಲ್ಲಿ ಭಾಗವಹಿಸುವವರಿಗೆ ಸುರಕ್ಷಿತ ಮತ್ತು ಉನ್ನತ ಗುಣಮಟ್ಟದ ವಾತಾವರಣವನ್ನು ಖಚಿತಪಡಿಸುವುದೇ ನಮ್ಮ ಆದ್ಯತೆ. ಇದು ಎಲ್ಲಾ ಪಾಲುದಾರರ ನಿರೀಕ್ಷೆಗಳನ್ನು ಪೂರೈಸುತ್ತದೆ ಎಂಬ ವಿಶ್ವಾಸ ನಮಗಿದೆ ಎಂದು ಬಿಡಬ್ಲ್ಯೂಎಫ್ ತಿಳಿಸಿದೆ.
ದೇಶದಲ್ಲಿ ಪ್ರಶ್ನಿಸಿದವರ ವಿರುದ್ಧ ಪ್ರಕರಣ ದಾಖಲಿಸಲಾಗುತ್ತಿದೆ : ಸಿದ್ಧಾರ್ಥ ವರದರಾಜನ್
ಬಹುರೂಪಿ ಬಾಬಾಸಾಹೇಬ್ ರಾಷ್ಟ್ರೀಯ ನಾಟಕೋತ್ಸವದ ವಿಚಾರ ಸಂಕಿರಣ
ಕೊಡಗಿನ ವಿಶಿಷ್ಟ ಭೂ ದಾಖಲೆ ವ್ಯವಸ್ಥೆ ಜಮ್ಮಾ ಬಾಣೆ: ಕರ್ನಾಟಕ ಸರಕಾರ ಭೂಕಂದಾಯ ಕಾನೂನು ತಿದ್ದುಪಡಿ ಮಾಡಿದ್ದೇಕೆ?
ಸ್ಥಳೀಯ ಕೊಡವ ಸಮುದಾಯಕ್ಕೆ ನೆಲೆಯಾಗಿರುವ ಸುಂದರ ಕೊಡಗು ಪ್ರದೇಶದಲ್ಲಿ ಹಳೆಯ ಭೂ ದಾಖಲೆಗಳ ವ್ಯವಸ್ಥೆಯನ್ನು ಆಧುನೀಕರಿಸುವ ಉದ್ದೇಶದಿಂದ ಕರ್ನಾಟಕ ಸರಕಾರ ತನ್ನ ಭೂ ಕಂದಾಯ ಕಾನೂನನ್ನು ತಿದ್ದುಪಡಿ ಮಾಡಿದೆ. ಕೊಡಗಿನಲ್ಲಿ ಇರುವ ವಿಶಿಷ್ಟವಾದ ಜಮ್ಮಾ ಬಾಣೆ ಭೂ ಹಿಡುವಳಿಗಳಿಗೆ ಸಂಬಂಧಿಸಿದ ಭೂ ದಾಖಲೆಗಳನ್ನು ಆಧುನೀಕರಿಸುವುದೇ ಈ ತಿದ್ದುಪಡಿಯ ಗುರಿಯಾಗಿದೆ. ಈ ಪ್ರದೇಶದಲ್ಲಿ ಬ್ರಿಟಿಷ್ ಹಾಗೂ ಕೊಡವ ರಾಜರ ಕಾಲದಿಂದ ಕುಟುಂಬಗಳು ತಲೆಮಾರುಗಳಿಂದ ಭೂ ಅನುದಾನಗಳನ್ನು ಹೊಂದಿವೆ. ಆದರೆ ದಾಖಲೆಗಳು ಹೊಸ ಪೀಳಿಗೆಗೆ ವರ್ಗಾವಣೆಗೊಂಡರೂ ಮೂಲ ಅನುದಾನಿತರ (ಪಟ್ಟೇದಾರರ) ಹೆಸರುಗಳೇ ಮುಂದುವರಿದಿವೆ. ಅಧಿಕೃತವಾಗಿ ಗುರುತಿಸಲ್ಪಟ್ಟ ಭೂ ಮಾಲೀಕತ್ವ ದಾಖಲೆಗಳ ಕೊರತೆಯಿಂದ ಪ್ರಸ್ತುತ ಮಾಲೀಕರಿಗೆ ಭೂಮಿಯನ್ನು ಖರೀದಿ–ಮಾರಾಟ ಮಾಡುವುದು ಅಥವಾ ಬ್ಯಾಂಕ್ ಸಾಲ ಪಡೆಯುವುದು ಕಷ್ಟಕರವಾಗಿದೆ. ಜಮ್ಮಾ ಬಾಣೆ ಭೂಮಿ ಎಂದರೇನು? ಕೊಡಗಿನ ವಿಶಿಷ್ಟ ಭೂ ದಾಖಲೆ ವ್ಯವಸ್ಥೆಯಿಂದ ಉಂಟಾಗುವ ಸಮಸ್ಯೆಗಳನ್ನು ಪರಿಹರಿಸಲು ಕಾನೂನು ತಿದ್ದುಪಡಿ ಮಾಡಿದ್ದೇಕೆ? ಇಲ್ಲಿದೆ ಮಾಹಿತಿ. ಜಮ್ಮಾ ಬಾಣೆ ಭೂಮಿ ಅಂದರೆ ಏನು? ಜಮ್ಮಾ ಬಾಣೆ ಹಿಡುವಳಿ ಕೊಡಗು ಜಿಲ್ಲೆಯಲ್ಲಿ ಪ್ರಚಲಿತದಲ್ಲಿರುವ ವಿಶಿಷ್ಟ ಭೂ ಹಿಡುವಳಿ ರೂಪವಾಗಿದ್ದು, ಇದು ರಾಜ್ಯದ ಇತರ ಭೂ ಹಿಡುವಳಿ ವರ್ಗಗಳಿಗಿಂತ ಭಿನ್ನವಾಗಿದೆ. ‘ಜಮ್ಮಾ’ ಎಂದರೆ ಆನುವಂಶಿಕ ಎಂಬ ಅರ್ಥವಿದೆ. ಈ ಜಮ್ಮಾ ಭೂಮಿಯನ್ನು ಕೊಡಗಿನ ಹಿಂದಿನ ರಾಜರು ಹಾಗೂ ಬ್ರಿಟಿಷರು 1600ರಿಂದ 1800ರ ನಡುವೆ ಸ್ಥಳೀಯ ಸಮುದಾಯಗಳಿಗೆ ಸೈನಿಕ ಸೇವೆಗೆ ಪ್ರತಿಫಲವಾಗಿ ನೀಡಿದ್ದರು. ಜಮ್ಮಾ ಭೂಮಿಗಳು ಭತ್ತದ ಕೃಷಿಗೆ ಬಳಸಲಾಗುತ್ತಿದ್ದ ಜೌಗು ಪ್ರದೇಶಗಳು ಮತ್ತು ಅರಣ್ಯದಿಂದ ಕೂಡಿದ ಎತ್ತರದ ಪ್ರದೇಶಗಳನ್ನು ಒಳಗೊಂಡಿದ್ದವು. ಈ ಪ್ರದೇಶಗಳು ನಂತರ ಕೊಡಗಿನ ಪ್ರಸಿದ್ಧ ಕಾಫಿ ಎಸ್ಟೇಟ್ಗಳಾಗಿ ರೂಪಾಂತರಗೊಂಡಿವೆ. ಜಮ್ಮಾ ಬಾಣೆ ಭೂ ಮಾಲೀಕತ್ವವನ್ನು ಮೂಲ ಪಟ್ಟೇದಾರರ ಹೆಸರಿನಲ್ಲಿ ನೋಂದಾಯಿಸಲಾಗಿದ್ದು, ತಲೆಮಾರುಗಳಿಂದ ಹೊಸ ಮಾಲೀಕರ ಹೆಸರುಗಳನ್ನು ಪಟ್ಟೇದಾರರ ಹೆಸರಿನ ಜೊತೆಗೆ ಸೇರಿಸಲಾಗುತ್ತಿತ್ತು. ಆದರೆ ಹೊಸ ಮಾಲೀಕರನ್ನು ತೋರಿಸಲು ಭೂ ಮಾಲೀಕತ್ವದ ಹೆಸರನ್ನೇ ಬದಲಾಯಿಸುವ ಪದ್ಧತಿ ಇರಲಿಲ್ಲ. ಕರ್ನಾಟಕ ಭೂ ಕಂದಾಯ ಕಾಯ್ದೆ, 1964 ಜಾರಿಗೆ ಬರುವವರೆಗೆ ಕೊಡಗು ಪ್ರದೇಶದಲ್ಲಿ ಭೂ ಮಾಲೀಕತ್ವವನ್ನು ನಿಯಂತ್ರಿಸಲು ಕೊಡಗು ಭೂ ಕಂದಾಯ ಮತ್ತು ನಿಯಂತ್ರಣ ಕಾಯ್ದೆ, 1899 ಜಾರಿಯಲ್ಲಿತ್ತು. 1964ರ ಕರ್ನಾಟಕ ಭೂ ಕಂದಾಯ ಕಾಯ್ದೆಯಲ್ಲಿ ಈ ನಿಬಂಧನೆಗಳು ಇಲ್ಲದಿದ್ದರೂ, 1899ರ ಕಾಯ್ದೆಯ ಕೆಲವು ಅಂಶಗಳನ್ನು ಕೊಡಗಿನಲ್ಲಿ ಮುಂದುವರಿಸಲಾಯಿತು. ಕರ್ನಾಟಕ ವಿಧಾನಸಭೆಯ ಚರ್ಚೆಯ ಸಂದರ್ಭದಲ್ಲಿ ವಿರಾಜಪೇಟೆಯ ಕಾಂಗ್ರೆಸ್ ಶಾಸಕ ಎ.ಎಸ್. ಪೊನ್ನಣ್ಣ ಅವರು, “ಕುಟುಂಬದ ಮುಖ್ಯಸ್ಥರ (ಪಟ್ಟೇದಾರರ) ಹೆಸರು ಮರಣದ ನಂತರವೂ, 40–50 ವರ್ಷಗಳಲ್ಲಿ ಮಾಲೀಕರು ಬದಲಾಗಿದ್ದರೂ ಸಹ ಭೂ ದಾಖಲೆಗಳಲ್ಲಿ ಮುಂದುವರಿದಿದೆ. ಇದನ್ನು ಸಂಪ್ರದಾಯದಂತೆ ಅನುಸರಿಸಲಾಗಿದೆ. ಕರ್ನಾಟಕ ಭೂ ಕಂದಾಯ ಕಾಯ್ದೆಯಲ್ಲಿ ಸ್ಪಷ್ಟ ನಿಬಂಧನೆಗಳಿಲ್ಲದಿದ್ದರೂ ಇದು ಮುಂದುವರಿದಿದೆ” ಎಂದು ಹೇಳಿದ್ದಾರೆ. 1993ರಲ್ಲಿ ಕರ್ನಾಟಕ ಹೈಕೋರ್ಟ್ನ ಪೂರ್ಣ ಪೀಠವು ‘ಚೆಕ್ಕೇರ ಪೂವಯ್ಯ ವಿರುದ್ಧ ಕರ್ನಾಟಕ ರಾಜ್ಯ’ ಪ್ರಕರಣದಲ್ಲಿ ಕೊಡಗಿನ ಜಮ್ಮಾ ಬಾಣೆ ಭೂಮಿಯ ಮೇಲಿನ ಮಾಲೀಕತ್ವ ಹಕ್ಕುಗಳನ್ನು ಗುರುತಿಸಿತು. 2024ರಲ್ಲಿ ಕರ್ನಾಟಕ ಹೈಕೋರ್ಟ್ 2011ರ ಕರ್ನಾಟಕ ಭೂ ಕಂದಾಯ (ಮೂರನೇ ತಿದ್ದುಪಡಿ) ಕಾಯ್ದೆಯನ್ನು ಎತ್ತಿಹಿಡಿದಿದ್ದು, ಇದರಿಂದ ಕೊಡವ ಕುಟುಂಬಗಳಿಗೆ ಜಮ್ಮಾ ಬಾಣೆ ಭೂಮಿಯ ಮೇಲೆ ಸಂಪೂರ್ಣ ಮಾಲೀಕತ್ವ ಹಕ್ಕು ದೊರಕಿದೆ. 2011ರ ತಿದ್ದುಪಡಿಯ ಮೂಲಕ ಈ ಹಿಂದೆ ಸರಕಾರಕ್ಕೆ ಸೇರಿದ್ದ ಹಾಗೂ ಸರಕಾರವೇ ಮಾಲೀಕರಾಗಿದ್ದ ಭೂಮಿಯ ಸಂಪೂರ್ಣ ಮಾಲೀಕತ್ವವನ್ನು ಕೊಡವ ಕುಟುಂಬಗಳಿಗೆ ನೀಡಲಾಗಿದೆ. ಇದರಲ್ಲಿ ಕುಟುಂಬದ ಎಲ್ಲಾ ಸದಸ್ಯರೂ ಸೇರಿದ್ದಾರೆ ಎಂದು ಕರ್ನಾಟಕ ಹೈಕೋರ್ಟ್ ಸ್ಪಷ್ಟಪಡಿಸಿದೆ. ಕರ್ನಾಟಕ ಭೂ ಕಂದಾಯ (ಎರಡನೇ ತಿದ್ದುಪಡಿ) ಮಸೂದೆ-2025 ಐತಿಹಾಸಿಕವಾಗಿ ಈ ಭೂಮಿಯನ್ನು ಅವಿಭಕ್ತ ಕುಟುಂಬಗಳ ಸದಸ್ಯರು ಸಂಪ್ರದಾಯಿಕ ಹಕ್ಕುಗಳ ಆಧಾರದ ಮೇಲೆ ತಮ್ಮ ಹಿಡಿತದಲ್ಲಿಟ್ಟುಕೊಂಡಿದ್ದರು. ಆದರೆ ಹಕ್ಕುಗಳ ದಾಖಲೆಗಳಲ್ಲಿ ಸ್ಪಷ್ಟ ನಮೂದುಗಳ ಕೊರತೆಯಿತ್ತು. ಕಾಲಾನಂತರದಲ್ಲಿ ಜಮ್ಮಾ ಬಾಣೆ ಹಿಡುವಳಿಗಳ ಮಾಲೀಕತ್ವ, ಆನುವಂಶಿಕತೆ, ಬದುಕುಳಿದವರು ಮತ್ತು ಪರಭಾರೆಗಳ ನಿಖರ ದಾಖಲೆ ನಿರ್ವಹಣೆಯಲ್ಲಿ ಸಮಸ್ಯೆಗಳು ಎದುರಾದವು ಎಂದು 2025ರ ಆಗಸ್ಟ್ನಲ್ಲಿ ನಡೆದ ಕರ್ನಾಟಕ ವಿಧಾನಸಭೆಯ ಮಳೆಗಾಲ ಅಧಿವೇಶನದಲ್ಲಿ ಮಂಡಿಸಲಾದ ಮಸೂದೆಯ ಕರಡಿನಲ್ಲಿ ಹೇಳಲಾಗಿದೆ. ನಿರ್ದಿಷ್ಟವಾಗಿ, ಕರ್ನಾಟಕ ಭೂ ಕಂದಾಯ ಕಾಯ್ದೆ, 1964ರಲ್ಲಿ ಇಂತಹ ಹಿಡುವಳಿಗಳಲ್ಲಿರುವ ಅವಿಭಕ್ತ ಕುಟುಂಬ ಸದಸ್ಯರ ಹಕ್ಕುಗಳನ್ನು ದಾಖಲಿಸಲು ಸ್ಪಷ್ಟ ನಿಬಂಧನೆಗಳ ಕೊರತೆಯಿಂದ ರೂಪಾಂತರ, ನೋಂದಣಿ, ಉತ್ತರಾಧಿಕಾರ ಮತ್ತು ಕಂದಾಯ ದಾಖಲೆಗಳ ನಿರ್ವಹಣೆಯಲ್ಲಿ ತೊಂದರೆಗಳು ಉಂಟಾಗಿವೆ. ಇದರಿಂದ ಜಮ್ಮಾ ಬಾಣೆ ಭೂಮಿಗಳ ಉತ್ತರಾಧಿಕಾರ, ಪರಭಾರೆ ಹಾಗೂ ಸವಲತ್ತುಗಳಿಗೆ ಸಂಬಂಧಿಸಿದ ಅನೇಕ ವಿವಾದಗಳು ಉದ್ಭವಿಸಿವೆ. ಕೊಡಗು ಜಿಲ್ಲೆಯ ಜಮ್ಮಾ ಬಾಣೆ ಹಿಡುವಳಿಯ ವಿಶಿಷ್ಟ ಸ್ವರೂಪಕ್ಕೆ ಶಾಸನಬದ್ಧ ಮಾನ್ಯತೆ ನೀಡುವುದು ಹಾಗೂ ಅವಿಭಕ್ತ ಕುಟುಂಬದ ಎಲ್ಲಾ ಸದಸ್ಯರ ಹಕ್ಕುಗಳನ್ನು ರೂಪಾಂತರ ಮತ್ತು ಕಂದಾಯ ದಾಖಲೆಗಳಲ್ಲಿ ಸರಿಯಾಗಿ ದಾಖಲಿಸಲಾಗುತ್ತಿದೆ ಎಂಬುದನ್ನು ಖಚಿತಪಡಿಸಿಕೊಳ್ಳುವುದು ಅಗತ್ಯವೆಂದು ಮಸೂದೆ ಹೇಳುತ್ತದೆ. ರಾಜ್ಯ ಶಾಸಕಾಂಗದ ಉಪಸಮಿತಿಯ ಶಿಫಾರಸುಗಳನ್ನು ಸೇರಿಸಿ ಕಳೆದ ತಿಂಗಳು ಅಂಗೀಕರಿಸಲಾದ ಮಸೂದೆಯ ಮಾರ್ಪಡಿತ ಆವೃತ್ತಿಯಲ್ಲಿ, ಕೊಡಗು ಜಿಲ್ಲೆಯ ಭೂ ದಾಖಲೆಗಳಲ್ಲಿ ಮಾಡಲಾಗಿದ್ದ ಕೆಲವು ಬದಲಾವಣೆಗಳು ಕರ್ನಾಟಕ ಭೂ ಕಂದಾಯ ಕಾಯ್ದೆ, 1964ಕ್ಕೆ ಅನುಗುಣವಾಗಿಲ್ಲವೆಂದು ಉಲ್ಲೇಖಿಸಲಾಗಿದೆ. 14.09.2000ರ ಸುತ್ತೋಲೆಯ ಆಧಾರದಲ್ಲಿ ಭೂ ದಾಖಲೆಗಳಿಗೆ ಮಾಡಲಾದ ಬದಲಾವಣೆಗಳು, ಹಕ್ಕುಗಳ ದಾಖಲೆ (RTC)ಯಲ್ಲಿನ ನಮೂದುಗಳನ್ನು ಒಳಗೊಂಡಂತೆ ಭೂ ದಾಖಲೆಗಳ ವರ್ಗೀಕರಣ ಮತ್ತು ನಿರ್ವಹಣೆಯಲ್ಲಿ ಸಮಸ್ಯೆಗಳಿಗೆ ಕಾರಣವಾಗಿವೆ ಎಂದು ಮಸೂದೆಯಲ್ಲಿ ಹೇಳಲಾಗಿದೆ. ಇವು ಕಾನೂನುಬದ್ಧವಾಗಿ ಸಮರ್ಥನೀಯವಲ್ಲ ಹಾಗೂ ಕಾಯ್ದೆಯಡಿಯಲ್ಲಿ ನಿಗದಿಪಡಿಸಿದ ಕಾರ್ಯವಿಧಾನಕ್ಕೆ ಅನುಗುಣವಾಗಿಲ್ಲ. ಭೂಮಿ ಯೋಜನೆಯಡಿಯಲ್ಲಿ ಭೂ ದಾಖಲೆಗಳ ಡಿಜಿಟಲೀಕರಣ ಮತ್ತು ಪ್ರಮಾಣೀಕರಣ ನಡೆಯುತ್ತಿರುವ ಹಿನ್ನೆಲೆಯಲ್ಲಿ ಹಾಗೂ ಕಂದಾಯ ದಾಖಲೆಗಳ ನಿರ್ವಹಣೆಯಲ್ಲಿ ನಿಖರತೆ, ಏಕರೂಪತೆ ಮತ್ತು ಕಾನೂನುಬದ್ಧತೆಯ ಅಗತ್ಯವನ್ನು ಒತ್ತಿ ಹೇಳುವ ನ್ಯಾಯಾಂಗ ತೀರ್ಪುಗಳ ಬೆಳಕಿನಲ್ಲಿ, ಕಾನೂನಿನ ಸರಿಯಾದ ಪ್ರಕ್ರಿಯೆ ಅನುಸರಿಸಿ ಇಂತಹ ಕೊರತೆಗಳನ್ನು ಸರಿಪಡಿಸಲು ಕೊಡಗು ಜಿಲ್ಲೆಯ ತಹಶೀಲ್ದಾರ್ಗಳಿಗೆ ಅಧಿಕಾರ ನೀಡುವುದು ಅಗತ್ಯವಾಗಿದೆ ಎಂದು ಮಸೂದೆ ಸ್ಪಷ್ಟಪಡಿಸುತ್ತದೆ. ಹೊಸ ತಿದ್ದುಪಡಿಯಲ್ಲೇನಿದೆ? ಹೊಸ ತಿದ್ದುಪಡಿಯ ಮೂಲಕ ಕೊಡಗಿನ ತಹಶೀಲ್ದಾರ್ಗಳಿಗೆ (ಕಂದಾಯ ಇಲಾಖೆಯ ಸಹಾಯಕ ಆಯುಕ್ತರು) ಕರ್ನಾಟಕ ಭೂ ಕಂದಾಯ ಕಾಯ್ದೆ, 1964ರ ಪ್ರಕಾರ ಭೂ ದಾಖಲೆಗಳಲ್ಲಿ ಅಗತ್ಯ ತಿದ್ದುಪಡಿಗಳನ್ನು ಮಾಡಲು ಅಧಿಕಾರ ನೀಡಲಾಗಿದೆ. “ಭೂಮಿಯ ಹಿಡುವಳಿದಾರರು, ನಿವಾಸಿಗಳು, ಮಾಲೀಕರು, ಅಡಮಾನದಾರರು, ಭೂಮಾಲೀಕರು ಅಥವಾ ಬಾಡಿಗೆದಾರರು ಅಥವಾ ಬಾಡಿಗೆ ಅಥವಾ ಆದಾಯದ ನಿಯೋಜಿತ ವ್ಯಕ್ತಿಗಳ ಹೆಸರುಗಳನ್ನು” ಒಳಗೊಂಡ ಹಕ್ಕುಗಳ ದಾಖಲೆಗಳನ್ನು ತಿದ್ದುಪಡಿ ಮಾಡುವ ಅಧಿಕಾರ ಇದರಲ್ಲಿ ಸೇರಿದೆ. ಈ ತಿದ್ದುಪಡಿ ಕೊಡಗು ಜಿಲ್ಲೆಯ ಭೂ ದಾಖಲೆಗಳನ್ನು ಕಾನೂನು ವ್ಯಾಪ್ತಿಗೆ ತಂದು, ರಾಜ್ಯದ ಉಳಿದ ಭಾಗಗಳೊಂದಿಗೆ ಏಕರೂಪತೆಯನ್ನು ಖಚಿತಪಡಿಸುತ್ತದೆ ಎಂದು ಕಾನೂನು ಹೇಳುತ್ತದೆ. ರಾಜ್ಯ ವಿಧಾನಸಭೆಯ ಚರ್ಚೆಯ ವೇಳೆ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು, ಭೂ ದಾಖಲೆಗಳನ್ನು ಆಧುನೀಕರಿಸುವ ಮೊದಲು ಹಾಗೂ ಮಾಲೀಕರಿಗೆ ಭೂ ಹಕ್ಕುಗಳನ್ನು ನೀಡುವ ಮುನ್ನ ಆಕ್ಷೇಪಣೆಗಳನ್ನು ಪರಿಹರಿಸಲು ಸ್ಥಳೀಯ ತಹಶೀಲ್ದಾರ್ ಗಳು ಅದಾಲತ್ ಗಳನ್ನು ನಡೆಸಲಿದ್ದಾರೆ ಎಂದು ತಿಳಿಸಿದ್ದಾರೆ. ಮಸೂದೆಯ ಪ್ರಾರಂಭಿಕ ಕರಡು, ಜಮ್ಮಾ ಬಾಣೆ ಹಿಡುವಳಿಗಳ ರೂಪಾಂತರ ನೋಂದಣಿಯಲ್ಲಿ ಅವಿಭಕ್ತ ಕುಟುಂಬ ಸದಸ್ಯರ ವಿವರಗಳನ್ನು ಸೇರಿಸುವುದು, ಹಕ್ಕುಗಳ ಸ್ವಾಧೀನ ವರದಿ ಮಾಡುವುದು, ಭೂ ದಾಖಲೆಗಳಲ್ಲಿ ಹಕ್ಕುಗಳ ನೋಂದಣಿ, ವಂಶಾವಳಿ, ಬದುಕುಳಿದಿರುವಿಕೆ, ಆನುವಂಶಿಕತೆ ಹಾಗೂ ಸವಲತ್ತುಗಳಿಗೆ ಸಂಬಂಧಿಸಿದ ಮಾಹಿತಿಯನ್ನು ದಾಖಲಿಸುವ ಉದ್ದೇಶದಿಂದ ಕರ್ನಾಟಕ ಭೂ ಕಂದಾಯ ಕಾಯ್ದೆ, 1964ರ ಸೆಕ್ಷನ್ಗಳು 127, 128, 129 ಮತ್ತು 130 ತಿದ್ದುಪಡಿ ಮಾಡುವುದನ್ನು ಉದ್ದೇಶಿಸಿತ್ತು. ಆದರೆ ಅಂತಿಮವಾಗಿ ಜಾರಿಗೆ ಬಂದ ಮಸೂದೆಯಲ್ಲಿ ಸೆಕ್ಷನ್ 127ಕ್ಕೆ ಉಪವಿಭಾಗವನ್ನು ಸೇರಿಸುವ ಮೂಲಕ ಮಾತ್ರ ತಿದ್ದುಪಡಿ ಮಾಡಲಾಗಿದೆ. ಉಪವಿಭಾಗ (4)ರ ಪ್ರಕಾರ, ಇತರ ಯಾವುದೇ ನಿಯಮಗಳಿರಲಿ, ತಹಶೀಲ್ದಾರ್ ಈಗ ಅಧಿಕೃತ ಭೂ ದಾಖಲೆಗಳಲ್ಲಿ ಇರುವ ಹಳೆಯ ಅಥವಾ ತಪ್ಪಾದ ನಮೂದುಗಳನ್ನು ಅಳಿಸಲು ಅಥವಾ ಸರಿಪಡಿಸಲು ಅಧಿಕಾರ ಹೊಂದಿರುತ್ತಾರೆ. ಇದಕ್ಕಾಗಿ ನ್ಯಾಯಾಲಯದ ಆದೇಶಕ್ಕಾಗಿ ಕಾಯಬೇಕಾಗಿಲ್ಲ. ಕುಟುಂಬ ಅರ್ಜಿ ಸಲ್ಲಿಸಿದರೂ ಅಥವಾ ತಹಶೀಲ್ದಾರ್ ಸ್ವತಃ ದೋಷವನ್ನು ಗಮನಿಸಿದರೂ ತಿದ್ದುಪಡಿ ಮಾಡಬಹುದು. ಹಿಂದೆ ಅನೇಕ ಕುಟುಂಬಗಳ ಹೆಸರುಗಳನ್ನು ‘ಮಾಲೀಕತ್ವ’ ವಿಭಾಗದಿಂದ (ಹಳೆಯ ನೋಂದಣಿಗಳ ಕಾಲಂ 3) ‘ಬಾಡಿಗೆದಾರರು’ ಅಥವಾ ‘ವಿಶೇಷ ವರ್ಗಗಳು’ (ಕಾಲಂ 9 ಮತ್ತು 12)ಗೆ ಸ್ಥಳಾಂತರಿಸಲಾಗಿತ್ತು. ಇದರಿಂದ ಸರ್ಕಾರವೇ ಭೂಮಿಯ ಮಾಲೀಕ, ಕುಟುಂಬಗಳು ಬಳಕೆದಾರರು ಮಾತ್ರ ಎಂಬ ಭಾವನೆ ಉಂಟಾಗಿತ್ತು. ಹೊಸ ಕಾನೂನು ತಹಶೀಲ್ದಾರ್ಗೆ ಆ ಹೆಸರುಗಳನ್ನು ‘ಮಾಲೀಕತ್ವ’ ವಿಭಾಗಕ್ಕೆ ಮರುಸ್ಥಾಪಿಸಲು ಸೂಚಿಸುತ್ತದೆ. ಇದರಿಂದ ಕೊಡವ ಕುಟುಂಬಗಳೇ ಭೂಮಿಯ ಸಂಪೂರ್ಣ ಮಾಲೀಕರು, ಸರ್ಕಾರವಲ್ಲ ಎಂಬುದನ್ನು ಸ್ಪಷ್ಟಪಡಿಸಲಾಗುತ್ತದೆ.
ದೇಶದಲ್ಲಿ ಜಾತಿ ತಾರತಮ್ಯ ನಿವಾರಣೆ ಕಾಯ್ದೆ ಇಂದಿನ ಅಗತ್ಯ: ರಾಹುಲ್ ಗಾಂಧಿ
ಹೊಸದಿಲ್ಲಿ, ಜ. 17: ಶಿಕ್ಷಣ ಸಂಸ್ಥೆಗಳ ಕ್ಯಾಂಪಸ್ಗಳಲ್ಲಿ ದಲಿತ ಯುವ ಸಮುದಾಯಗಳ ವಾಸ್ತವ ಪರಿಸ್ಥಿತಿ ಬದಲಾಗಿಲ್ಲ. ಆದ್ದರಿಂದ ದೇಶಕ್ಕೆ ಜಾತಿ ತಾರತಮ್ಯ ನಿವಾರಣೆ ಕಾಯ್ದೆಯ ಅಗತ್ಯವಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಶನಿವಾರ ಹೇಳಿದ್ದಾರೆ. ಹೈದರಾಬಾದ್ ವಿಶ್ವವಿದ್ಯಾನಿಲಯದ 26 ವರ್ಷದ ದಲಿತ ವಿದ್ಯಾರ್ಥಿಯಾಗಿದ್ದ ರೋಹಿತ್ ವೇಮುಲ ಕಿರುಕುಳದ ಹಿನ್ನೆಲೆಯಲ್ಲಿ 2016 ಜನವರಿ 17ರಂದು ಆತ್ಮಹತ್ಯೆಗೆ ಶರಣಾಗಿದ್ದರು. ರೋಹಿತ್ ವೇಮುಲ ಅವರ 10ನೇ ವರ್ಷದ ಸ್ಮರಣೆ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿ ಅವರು ‘ಎಕ್ಸ್’ನಲ್ಲಿ ಈ ಪೋಸ್ಟ್ ಮಾಡಿದ್ದಾರೆ. ಪೋಸ್ಟ್ನಲ್ಲಿ ಅವರು, ‘‘ರೋಹಿತ್ ವೇಮುಲ ನಿಧನರಾಗಿ ಇಂದಿಗೆ 10 ವರ್ಷಗಳು ಆಗಿವೆ. ಆದರೆ, ರೋಹಿತ್ ಅವರ ಪ್ರಶ್ನೆಗಳು ಇಂದಿಗೂ ನಮ್ಮ ಹೃದಯದಲ್ಲಿ ಪ್ರತಿಧ್ವನಿಸುತ್ತಿವೆ. ಈ ದೇಶದಲ್ಲಿ ಎಲ್ಲರಿಗೂ ಕನಸು ಕಾಣುವ ಸಮಾನ ಹಕ್ಕು ಇದೆಯೇ ? ರೋಹಿತ್ ಅವರು ಕಲಿಯಲು ಬಯಸಿದರು, ಅವರು ಬರೆಯಲು ಬಯಸಿದರು. ಅವರು ಈ ದೇಶವನ್ನು ಉತ್ತಮಗೊಳಿಸಲು ವಿಜ್ಞಾನ, ಸಮಾಜ ಹಾಗೂ ಮಾನವತೆಯನ್ನು ಅರ್ಥ ಮಾಡಿಕೊಳ್ಳಲು ಬಯಸಿದರು. ಆದರೆ, ಈ ವ್ಯವಸ್ಥೆ ದಲಿತರ ಅಭಿವೃದ್ಧಿಯನ್ನು ಸಹಿಸುವುದಿಲ್ಲ’’ ಎಂದು ಅವರು ಹೇಳಿದರು. ‘‘ಇಂದು ಏನಾಗಿದೆ ? ದಲಿತ ಯುವಜನರ ವಾಸ್ತವ ಸ್ಥಿತಿ ಬದಲಾಗಿದೆಯೇ ? ಕ್ಯಾಂಪಸ್ನಲ್ಲಿ ಅದೇ ನಿಂದನೆ, ಹಾಸ್ಟೆಲ್ಗಳಲ್ಲಿ ಅದೇ ಪ್ರತ್ಯೇಕತೆ, ತರಗತಿ ಕೊಠಡಿಯಲ್ಲಿ ಅದೇ ಕೀಳರಿಮೆ, ಅದೇ ಹಿಂಸೆ, ಕೆಲವೊಮ್ಮೆ ಅಂತದ್ದೇ ಸಾವು. ಈ ದೇಶದಲ್ಲಿ ಜಾತಿಯೇ ಅತಿ ದೊಡ್ಡ ಪ್ರವೇಶ ಪತ್ರವಾಗಿರುವುದು ಇದಕ್ಕೆ ಕಾರಣ’’ ಎಂದು ಅವರು ಹೇಳಿದ್ದಾರೆ. ಆದ್ದರಿಂದ ರೋಹಿತ್ ವೇಮುಲ ಕಾಯ್ದೆ ಕೇವಲ ಘೋಷಣೆ ಅಲ್ಲ, ಅದು ಇಂದಿನ ಅಗತ್ಯ ಎಂದು ರಾಹುಲ್ ಗಾಂಧಿ ತಿಳಿಸಿದ್ದಾರೆ.
16 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಸೋಷಿಯಲ್ ಮೀಡಿಯಾ ಬಳಸುವುದನ್ನು ನಿಷೇಧಿಸಿದ ನಂತರ, ಸಾಮಾಜಿಕ ಮಾಧ್ಯಮ ಕಂಪೆನಿಗಳು ಆಸ್ಟ್ರೇಲಿಯಾದಲ್ಲಿ ಮಕ್ಕಳಿಗೆ ಸೇರಿದ ಸುಮಾರು 4.7 ಮಿಲಿಯನ್ ಖಾತೆಗಳಿಗೆ ಪ್ರವೇಶವನ್ನು ರದ್ದುಗೊಳಿಸಿವೆ. ತಂತ್ರಜ್ಞಾನ ಬಳಕೆ, ಗೌಪ್ಯತೆ, ಮಕ್ಕಳ ಸುರಕ್ಷತೆ ಮತ್ತು ಮಾನಸಿಕ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ 16 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ಸಾಮಾಜಿಕ ಮಾಧ್ಯಮ ನಿಷೇಧ ಮಾಡುವ ಈ ಕಾನೂನು ಆಸ್ಟ್ರೇಲಿಯಾದಲ್ಲಿ ಚರ್ಚೆಗಳನ್ನು ಹುಟ್ಟುಹಾಕಿತ್ತು. ಆಸ್ಟ್ರೇಲಿಯಾದ ಕಾನೂನಿನಡಿಯಲ್ಲಿ, ಫೇಸ್ಬುಕ್, ಇನ್ಸ್ಟಾಗ್ರಾಮ್, ಕಿಕ್, ರೆಡ್ಡಿಟ್, ಸ್ನ್ಯಾಪ್ಚಾಟ್, ಥ್ರೆಡ್ಸ್, ಟಿಕ್ಟಾಕ್, ಎಕ್ಸ್, ಯೂಟ್ಯೂಬ್ ಮತ್ತು ಟ್ವಿಚ್ 16 ವರ್ಷಕ್ಕಿಂತ ಕಡಿಮೆ ವಯಸ್ಸಿನ ಆಸ್ಟ್ರೇಲಿಯಾದ ಮಕ್ಕಳ ಖಾತೆಗಳನ್ನು ತೆಗೆದುಹಾಕಲು ಸಮಂಜಸವಾದ ಕ್ರಮಗಳನ್ನು ತೆಗೆದುಕೊಳ್ಳದಿದ್ದರೆ 49.5 ಮಿಲಿಯನ್ ಆಸ್ಟ್ರೇಲಿಯನ್ ಡಾಲರ್ಗಳವರೆಗೆ ($33.2 ಮಿಲಿಯನ್) ದಂಡವನ್ನು ಎದುರಿಸಬೇಕಾಗುತ್ತದೆ. ಆದಾಗ್ಯೂ ವಾಟ್ಸಾಪ್ ಮತ್ತು ಫೇಸ್ಬುಕ್ ಮೆಸೆಂಜರ್ನಂತಹ ಸಂದೇಶ ಸೇವೆಗಳಿಗೆ ವಿನಾಯಿತಿ ನೀಡಲಾಗಿದೆ. 16 ವರ್ಷದೊಳಗಿನವರಿಗೆ ಆಸ್ಟ್ರೇಲಿಯಾ ಸಾಮಾಜಿಕ ಮಾಧ್ಯಮವನ್ನು ನಿಷೇಧಿಸಿದ್ದೇಕೆ? ಆಸ್ಟ್ರೇಲಿಯಾದ ಸಾಮಾಜಿಕ ಮಾಧ್ಯಮ ನಿಷೇಧವು ಡಿಸೆಂಬರ್ 10, 2025 ರಂದು ಜಾರಿಗೆ ಬಂತು. ಐಡಿ ದಾಖಲೆಗಳು, ಮುಖ ಸ್ಕ್ಯಾನ್ ಮಾಡಿ ವಯಸ್ಸು ಅಂದಾಜು ಮಾಡುವ ತಂತ್ರಜ್ಞಾನ ಅಥವಾ ಖಾತೆ ರಚನೆ ದಿನಾಂಕಗಳಂತಹ ಅಸ್ತಿತ್ವದಲ್ಲಿರುವ ಖಾತೆ ಡೇಟಾವನ್ನು ವಿಶ್ಲೇಷಿಸುವ ಮೂಲಕ ಪ್ಲಾಟ್ಫಾರ್ಮ್ಗಳು ಬಳಕೆದಾರರ ವಯಸ್ಸನ್ನು ಪರಿಶೀಲಿಸುತ್ತವೆ. ಇದು 16 ವರ್ಷದೊಳಗಿನ ಎಲ್ಲಾ ಬಳಕೆದಾರರು ಟಿಕ್ಟಾಕ್, ಸ್ನ್ಯಾಪ್ಚಾಟ್, ಯೂಟ್ಯೂಬ್, ರೆಡ್ಡಿಟ್, ಇನ್ಸ್ಟಾಗ್ರಾಮ್, ಫೇಸ್ಬುಕ್, ಕಿಕ್, ಟ್ವಿಚ್, ಥ್ರೆಡ್ಸ್ ಮತ್ತು ಎಕ್ಸ್ ಸೇರಿದಂತೆ ಪ್ರಮುಖ ಪ್ಲಾಟ್ಫಾರ್ಮ್ಗಳಲ್ಲಿ ಖಾತೆಗಳನ್ನು ಹೊಂದುವುದನ್ನು ನಿರ್ಬಂಧಿಸಿತು. ವರ್ಷಗಳಿಂದಲೂ ಸ್ವಯಂಪ್ರೇರಿತ ಸುರಕ್ಷತಾ ಬದ್ಧತೆಗಳ ಹೊರತಾಗಿಯೂ, ಸಾಮಾಜಿಕ ಮಾಧ್ಯಮ ವೇದಿಕೆಗಳು ಮಕ್ಕಳನ್ನು ರಕ್ಷಿಸುವಲ್ಲಿ ವಿಫಲವಾಗಿವೆ ಎಂದು ಆಸ್ಟ್ರೇಲಿಯಾ ಸರಕಾರ ಹೇಳಿದೆ. ಹದಿಹರೆಯದವರಲ್ಲಿ ಹೆಚ್ಚುತ್ತಿರುವ ಆತಂಕ, ಖಿನ್ನತೆ, ನಿದ್ರಾಹೀನತೆಗೆ ಸಾಮಾಜಿಕ ಮಾಧ್ಯಮದ ಭಾರೀ ಬಳಕೆ ಕಾರಣವಾಗಿದೆ ಎಂದು ಇಲ್ಲಿನ ಶಾಸಕರು ಹೇಳಿದ್ದಾರೆ. 16 ವರ್ಷದೊಳಗಿನವರಿಗೆ ಸಾಮಾಜಿಕ ಮಾಧ್ಯಮ ನಿಷೇಧ ಜಾರಿಗೆ ಬಂದ ದಿನದಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಆಸ್ಟ್ರೇಲಿಯಾದ ಪ್ರಧಾನ ಮಂತ್ರಿ ಆಂಥೋನಿ ಅಲ್ಬನೀಸ್ ಇದು ಕುಟುಂಬಗಳಿಗೆ ಹೆಮ್ಮೆಯ ದಿನ. ನೀತಿ ನಿರೂಪಕರು ಸಾಂಪ್ರದಾಯಿಕ ಸುರಕ್ಷತಾ ಕ್ರಮಗಳನ್ನು ಮೀರಿದ ಆನ್ಲೈನ್ ಹಾನಿಗಳನ್ನು ತಡೆಯಬಹುದು ಎಂಬುದಕ್ಕೆ ಈ ಕಾನೂನು ಸಾಕ್ಷಿ.ಇದು ದೊಡ್ಡ ಮಟ್ಟದಲ್ಲಿ ವ್ಯತ್ಯಾಸವನ್ನುಂಟು ಮಾಡುತ್ತದೆ. ಇದು ನಮ್ಮ ರಾಷ್ಟ್ರ ಎದುರಿಸಿದ ಅತಿದೊಡ್ಡ ಸಾಮಾಜಿಕ ಮತ್ತು ಸಾಂಸ್ಕೃತಿಕ ಬದಲಾವಣೆಗಳಲ್ಲಿ ಒಂದಾಗಿದೆ. ಇದು ಪ್ರಪಂಚದಾದ್ಯಂತ ಪ್ರತಿಧ್ವನಿಸುತ್ತಲೇ ಇರುವ ಸುಧಾರಣೆಯಾಗಿದೆ ಎಂದಿದ್ದಾರೆ. 4.7 ಮಿಲಿಯನ್ ಖಾತೆ ರದ್ದು ಸುಮಾರು 2.5 ಮಿಲಿಯನ್ ಆಸ್ಟ್ರೇಲಿಯನ್ನರು 8 ರಿಂದ 15 ವರ್ಷದೊಳಗಿನವರು. ಅಂದಾಜಿನ ಪ್ರಕಾರ 8 ರಿಂದ 12 ವರ್ಷ ವಯಸ್ಸಿನವರಲ್ಲಿ 84% ಜನರು ಸಾಮಾಜಿಕ ಮಾಧ್ಯಮ ಖಾತೆಗಳನ್ನು ಹೊಂದಿದ್ದಾರೆ. 10 ಪ್ಲಾಟ್ಫಾರ್ಮ್ಗಳಲ್ಲಿ ಎಷ್ಟು ಖಾತೆಗಳನ್ನು ರದ್ದು ಮಾಡಲಾಗಿದೆ ಎಂಬುದು ತಿಳಿದಿಲ್ಲ. ಆದರೆ 4.7 ಮಿಲಿಯನ್ ಖಾತೆಗಳನ್ನು ನಿಷ್ಕ್ರಿಯಗೊಳಿಸಲಾಗಿದೆ ಅಥವಾ ನಿರ್ಬಂಧಿಸಲಾಗಿದೆ. ಸಾಮಾಜಿಕ ಮಾಧ್ಯಮ ಕಂಪನಿಗಳು ನಮ್ಮ ಮಕ್ಕಳನ್ನು ಪ್ರವೇಶಿಸುವುದನ್ನು ನಾವು ತಡೆಯುತ್ತಿದ್ದೇವೆ ಎಂದು ದೇಶದ ಇ-ಸೇಫ್ಟಿ ಆಯುಕ್ತೆ ಜೂಲಿ ಇನ್ಮನ್ ಗ್ರಾಂಟ್ ಹೇಳಿದ್ದಾರೆ. ನಿಷೇಧಕ್ಕೊಳಗಾದ 10 ದೊಡ್ಡ ಕಂಪೆನಿಗಳು ಖಾತೆ ರದ್ದು ಮಾಡಿದ ಅಂಕಿಅಂಶಗಳನ್ನು ನಿಯಮಿತವಾಗಿ ಆಸ್ಟ್ರೇಲಿಯಾದ ನಿಯಂತ್ರಕಕ್ಕೆ ವರದಿ ಮಾಡಿವೆ. ಸಾಮಾಜಿಕ ಮಾಧ್ಯಮ ಕಂಪೆನಿಗಳು ನಿಷೇಧವನ್ನು ಜಾರಿಗೊಳಿಸುವುದರಿಂದ ಮಕ್ಕಳು ಹೊಸ ಖಾತೆಗಳನ್ನು ರಚಿಸುವುದನ್ನು ತಡೆಯಲಾಗುತ್ತದೆ. ಮೆಟಾ 5,50,000 ಖಾತೆಗಳನ್ನು ತೆಗೆದುಹಾಕಿದೆ. ಆದಾಗ್ಯೂ ಆಸ್ಟ್ರೇಲಿಯಾದ ಅಧಿಕಾರಿಗಳು ಯಾವ ಸೋಷಿಯಲ್ ಮೀಡಿಯಾ ಎಷ್ಟು ಖಾತೆ ರದ್ದು ಮಾಡಿದೆ ಎಂಬ ಅಂಕಿಅಂಶಗಳನ್ನು ಬಹಿರಂಗಪಡಿಸಿಲ್ಲ. ಆದರೆ ಫೇಸ್ಬುಕ್, ಇನ್ಸ್ಟಾಗ್ರಾಮ್ ಮತ್ತು ಥ್ರೆಡ್ಗಳನ್ನು ಹೊಂದಿರುವ ಮೆಟಾ, ನಿಷೇಧ ಜಾರಿಗೆ ಬಂದ ಮರುದಿನದ ವೇಳೆಗೆ 16 ವರ್ಷದೊಳಗಿನ ಬಳಕೆದಾರರಿಗೆ ಸೇರಿದ ಸುಮಾರು 5,50,000 ಖಾತೆಗಳನ್ನು ತೆಗೆದುಹಾಕಿದೆ ಎಂದು ಹೇಳಿದೆ. ಅಂಕಿಅಂಶಗಳನ್ನು ಬಹಿರಂಗಪಡಿಸುವ ಬ್ಲಾಗ್ ಪೋಸ್ಟ್ನಲ್ಲಿ, ಮೆಟಾ ನಿಷೇಧವನ್ನು ಟೀಕಿಸಿದ್ದು ನಿಷೇಧ ಅನ್ವಯಿಸದ ಸಣ್ಣ ವೇದಿಕೆಗಳು ಸುರಕ್ಷತೆಗೆ ಆದ್ಯತೆ ನೀಡದಿರಬಹುದು ಎಂದು ಹೇಳಿದೆ. ಕಾನೂನು ಅನುಷ್ಠಾನ ಸುಗಮ ಆಸ್ಟ್ರೇಲಿಯಾದಲ್ಲಿ 16 ವರ್ಷಗಳಿಗಿಂತ ಕೆಳಗಿನ ಮಕ್ಕಳಿಗೆ ಸಾಮಾಜಿಕ ಮಾಧ್ಯಮ ನಿಷೇಧಿಸುವ ಕಾನೂನು ಅನುಷ್ಠಾನ ಸುಗಮವಾಗಿತ್ತು. ಸಾರ್ವಜನಿಕ ಶಿಕ್ಷಣ ಅಭಿಯಾನಗಳು ಮತ್ತು ಮಕ್ಕಳ ವಯಸ್ಸನ್ನು ಪರಿಶೀಲಿಸುವ ತಂತ್ರಜ್ಞಾನಗಳು ಹೊಸ ಅವಶ್ಯಕತೆಗಳನ್ನು ಪೂರೈಸುವಲ್ಲಿ ಸಹಾಯ ಮಾಡಿದೆ. ಇ-ಸೇಫ್ಟಿಯ ನಿಯಂತ್ರಕ ಮಾರ್ಗದರ್ಶನ ಮತ್ತು ವೇದಿಕೆಗಳೊಂದಿಗೆ ತೊಡಗಿಸಿಕೊಳ್ಳುವುದು ಈಗಾಗಲೇ ಗಮನಾರ್ಹ ಫಲಿತಾಂಶಗಳನ್ನು ನೀಡುತ್ತಿದೆ ಎಂಬುದು ಸ್ಪಷ್ಟವಾಗಿದೆ. ಆದಾಗ್ಯೂ, ಕೆಲವು ಅಪ್ರಾಪ್ತ ವಯಸ್ಸಿನ ಮಕ್ಕಳು ವಿವಿಧ ಮಾರ್ಗಗಳನ್ನು ಬಳಸಿ ಸೋಷಿಯಲ್ ಮೀಡಿಯಾಕ್ಕೆ ಪ್ರವೇಶಿಸುವ ಸಾಧ್ಯತೆ ಕೂಡಾ ಇದೆ. ನಾವು ಈ ರೀತಿಯ ಪ್ರವೃತ್ತಿಗಳ ಮೇಲ್ವಿಚಾರಣೆ ಮಾಡುವುದನ್ನು ಮುಂದುವರಿಸುತ್ತೇವೆ ಎಂದಿದ್ದಾರೆ ಇ-ಸೇಫ್ಟಿ ಆಯುಕ್ತೆ. ವಿಶ್ವದ ಕೆಲವು ದೊಡ್ಡ ತಂತ್ರಜ್ಞಾನ ಕಂಪೆನಿಗಳ ವಿರೋಧದ ಹೊರತಾಗಿಯೂ ಸರಕಾರ ಈ ಐತಿಹಾಸಿಕ ಕಾನೂನನ್ನು ಯಶಸ್ವಿಯಾಗಿ ಜಾರಿಗೊಳಿಸಿದೆ ಎಂಬುದನ್ನು ಈ ಮೈಲಿಗಲ್ಲು ತೋರಿಸುತ್ತದೆ ಎಂದು ಹೇಳಿದ್ದಾರೆ ಸಂವಹನ ಸಚಿವೆ ಅನಿಕಾ ವೆಲ್ಸ್. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದನ್ನು ಮಾಡಲು ಸಾಧ್ಯವಿಲ್ಲ ಎಂದು ಹೇಳಿದ ಪ್ರತಿಯೊಬ್ಬರನ್ನು ನಾವು ಕಡೆಗಣಿಸಿದ್ದೇವೆ. ಈಗ ಆಸ್ಟ್ರೇಲಿಯಾದ ಪೋಷಕರು ತಮ್ಮ ಮಕ್ಕಳು ತಮ್ಮ ಬಾಲ್ಯವನ್ನು ಮರಳಿ ಪಡೆಯಬಹುದು ಎಂಬ ವಿಶ್ವಾಸ ಹೊಂದಬಹುದು ಎಂದಿದ್ದಾರೆ. ಟೀಕೆ ಮತ್ತು ನಿರಂತರ ಸವಾಲುಗಳು ಕಾನೂನನ್ನು ಪೋಷಕರು ಮತ್ತು ಮಕ್ಕಳ ಸುರಕ್ಷತೆಗಾಗಿ ಹೋರಾಟ ಮಾಡುವವರು ವ್ಯಾಪಕವಾಗಿ ಪ್ರಶಂಸಿಸಿದ್ದಾರೆ. ಆದರೆ ಆನ್ಲೈನ್ ಗೌಪ್ಯತೆ ಗುಂಪುಗಳು ಮತ್ತು ಕೆಲವು ಯುವ ಸಂಘಟನೆಗಳು ಟೀಕಿಸಿವೆ. ಆನ್ಲೈನ್ ಸ್ಥಳಗಳು ದುರ್ಬಲ ಮಕ್ಕಳಿಗೆ ಅಥವಾ ದೂರದ ಪ್ರದೇಶಗಳಲ್ಲಿ ವಾಸಿಸುವವರಿಗೆ ಬೆಂಬಲವನ್ನು ಒದಗಿಸಬಹುದು ಎಂದು ಇವರು ವಾದಿಸುತ್ತಾರೆ. ಪೋಷಕರು ಅಥವಾ ಹಿರಿಯ ಸಹೋದರರ ಸಹಾಯದಿಂದ ಕೆಲವು ಹದಿಹರೆಯದವರು ವಯಸ್ಸಿನ ಪರಿಶೀಲನಾ ಮಾರ್ಗಗಳನ್ನು ಬೈಪಾಸ್ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಕೂಡಾ ವರದಿಯಾಗಿದೆ. ನಿಷೇಧ ಜಾರಿಗೆ ಬಂದಾಗ ಪರ್ಯಾಯ ಅಪ್ಲಿಕೇಶನ್ಗಳ ಡೌನ್ಲೋಡ್ಗಳಲ್ಲಿ ತಾತ್ಕಾಲಿಕ ಏರಿಕೆ ಕಂಡುಬಂದಿದೆ ಎಂದು ಜೂಲಿ ಇನ್ಮನ್ ಗ್ರಾಂಟ್ ಸಮ್ಮತಿಸಿದ್ದು, ಬಳಕೆಯಲ್ಲಿ ಯಾವುದೇ ನಿರಂತರ ಹೆಚ್ಚಳವಿಲ್ಲ ಎಂದಿದ್ದಾರೆ. ಮಾರ್ಚ್ನಲ್ಲಿ ಇ-ಸೇಫ್ಟಿ ಆಫೀಸ್ ವಿಶ್ವದ ಪ್ರಮುಖ AI ಕಂಪ್ಯಾನಿಯನ್ ಮತ್ತು ಚಾಟ್ಬಾಟ್ ನಿರ್ಬಂಧಗಳನ್ನು ಪರಿಚಯಿಸಲು ಯೋಜಿಸಿದೆ. ಆದರೆ ಹೆಚ್ಚಿನ ವಿವರಗಳನ್ನು ಅವರು ಬಹಿರಂಗಪಡಿಸಿಲ್ಲ. ಆಸ್ಟ್ರೇಲಿಯಾ ಮಾರ್ಗ ಅನುಸರಿಸಿದ ದೇಶಗಳು ತಂತ್ರಜ್ಞಾನ ಬಳಕೆ, ಗೌಪ್ಯತೆ, ಮಕ್ಕಳ ಸುರಕ್ಷತೆ ಮತ್ತು ಮಾನಸಿಕ ಆರೋಗ್ಯದ ಕುರಿತು ಆಸ್ಟ್ರೇಲಿಯಾದಲ್ಲಿ ಈ ಕಾನೂನು ತೀವ್ರ ಚರ್ಚೆಯನ್ನು ಹುಟ್ಟುಹಾಕುವುದರ ಜತೆಗೆ ಇದೇ ರೀತಿಯ ನಿರ್ಬಂಧಗಳ ಬಗ್ಗೆ ಇತರ ದೇಶಗಳೂ ಆಸಕ್ತಿ ತೋರಿಸಿವೆ. ಉದಾಹರಣೆಗೆ, ಡೆನ್ಮಾರ್ಕ್ ಕಳೆದ ನವೆಂಬರ್ನಲ್ಲಿ 15 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಮಾಧ್ಯಮವನ್ನು ನಿಷೇಧಿಸುವ ಯೋಜನೆಯನ್ನು ಘೋಷಿಸಿತು. 16 ವರ್ಷದೊಳಗಿನ ಮಕ್ಕಳು 2026 ರಿಂದ ಸಾಮಾಜಿಕ ಮಾಧ್ಯಮ ಖಾತೆಗಳಿಗೆ ಸೈನ್ ಅಪ್ ಮಾಡುವುದನ್ನು ನಿರ್ಬಂಧಿಸುವ ಯೋಜನೆಯನ್ನು ಮಲೇಷ್ಯಾ ಘೋಷಿಸಿತ್ತು. ಡಿಸೆಂಬರ್ನಲ್ಲಿ, ಮದ್ರಾಸ್ ಹೈಕೋರ್ಟ್ ಕೇಂದ್ರ ಸರಕಾರ ಆಸ್ಟ್ರೇಲಿಯಾದ ಚೌಕಟ್ಟಿಗೆ ಹೋಲುವ ಕಾನೂನನ್ನು ತರುವ ಸಾಧ್ಯತೆಯನ್ನು ಅನ್ವೇಷಿಸಬಹುದು ಎಂದು ಹೇಳಿತ್ತು.
ಇಎಂಐ ಕಟ್ಟಲು 100ಕ್ಕೂ ಹೆಚ್ಚು ಮಂದಿಗೆ ಹನಿಟ್ರ್ಯಾಪ್ ಮಾಡಿ ಸುಲಿಗೆ: ದಂಪತಿ ಬಂಧನ
ಸುಮಾರು 100ಕ್ಕೂ ಹೆಚ್ಚು ಜನರನ್ನು ಹನಿಟ್ರ್ಯಾಪ್ಗೆ ಒಳಪಡಿಸಿ, ಅವರ ಖಾಸಗಿ ಕ್ಷಣಗಳ ವೀಡಿಯೊ ಚಿತ್ರೀಕರಣ ಮಾಡಿ ಹಣ ವಸೂಲಿ ಮಾಡುತ್ತಿದ್ದ ಕರೀಂನಗರದ ದಂಪತಿಯನ್ನು ತೆಲಂಗಾಣ ಪೊಲೀಸರು ಬಂಧಿಸಿದ್ದಾರೆ. ಈ ಘಟನೆ ಜನವರಿ 14ರಂದು ಬೆಳಕಿಗೆ ಬಂದಿದ್ದು, ಆರ್ಥಿಕ ಸಂಕಷ್ಟದಿಂದ ಇಎಂಐ ಪಾವತಿ ಮಾಡಲು ಈ ದಂಧೆಗೆ ಇಳಿದಿದ್ದಾಗಿ ತಿಳಿದುಬಂದಿದೆ. ಕರೀಂನಗರ ಗ್ರಾಮೀಣ ಪೊಲೀಸ್ ಇಲಾಖೆ ನೀಡಿರುವ ಮಾಹಿತಿಯಂತೆ
ವಿದ್ಯುತ್ ಇಲ್ಲದೆ ನರಳುತ್ತಿರುವ ಉಕ್ರೇನ್ ಸಹಾಯಕ್ಕೆ ನಿಂತ ಯುರೋಪ್ ದೇಶಗಳು
ಉಕ್ರೇನ್ ವಿರುದ್ಧ ರಷ್ಯಾ ಸೇನೆ ಭೀಕರವಾಗಿ ದಾಳಿ ನಡೆಸುತ್ತಿರುವ ಕಾರಣಕ್ಕೆ ನೂರಾರು ಸಮಸ್ಯೆಗಳ ಸುಳಿಗೆ ಸಿಲುಕಿ ನಲುಗಿದೆ ಆ ದೇಶ. ಪ್ರಮುಖವಾಗಿ ವಿದ್ಯುತ್ ಹಾಗೂ ತೈಲ ಸರಬರಾಜು ವ್ಯವಸ್ಥೆಯೇ ಹಾಳಾಗಿ ಹೋಗಿದೆ. ಇದರ ಪರಿಣಾಮ ಉಕ್ರೇನ್ ನಾಗರಿಕರು ವಿದ್ಯುತ್ ಇಲ್ಲದೆ ಚಳಿಯಲ್ಲಿ ಪರದಾಡುವ ಸನ್ನಿವೇಶ ನಿರ್ಮಾಣ ಆಗಿತ್ತು. ತೀವ್ರ ಚಳಿ ನಡುವೆ ಬೆಚ್ಚಗೆ ಇರಲು ಕರೆಂಟ್ ಇಲ್ಲದೆ,
ಮಚಾದೊ ಅವರಿಂದ ನೊಬೆಲ್ ಪ್ರಶಸ್ತಿ ಸ್ವೀಕರಿಸಿದ್ದನ್ನು ಸಮರ್ಥಿಸಿಕೊಂಡ ಟ್ರಂಪ್
ವಾಷಿಂಗ್ಟನ್, ಜ.17: ವೆನೆಝುವೆಲಾದ ವಿರೋಧ ಪಕ್ಷದ ನಾಯಕಿಯ ನೊಬೆಲ್ ಶಾಂತಿ ಪ್ರಶಸ್ತಿಯನ್ನು ಸ್ವೀಕರಿಸಿದ್ದೇನೆ ಎಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಮರ್ಥಿಸಿಕೊಂಡಿದ್ದಾರೆ. 8 ಜಾಗತಿಕ ಯುದ್ದಗಳನ್ನು ಕೊನೆಗೊಳಿಸುವಲ್ಲಿ ನಿರ್ವಹಿಸಿರುವ ಪಾತ್ರವನ್ನು ಗುರುತಿಸಿ ಈ ಪ್ರಶಸ್ತಿಯನ್ನು ನೀಡಲಾಗಿದ್ದು ಇದು ಪ್ರಾಮಾಣಿಕ ನಿರ್ಧಾರವಾಗಿದೆ. ಅವರು ಪ್ರಶಸ್ತಿಯನ್ನು ನನಗೆ ಒಪ್ಪಿಸುವುದಾಗಿ ಹೇಳಿದರು. ಇದು ಉತ್ತಮ ನಿರ್ಧಾರವೆಂದು ನಾನು ಭಾವಿಸಿದೆ ಎಂದು ಶ್ವೇತಭವನದಲ್ಲಿ ಸುದ್ದಿಗಾರರ ಪ್ರಶ್ನೆಗೆ ಟ್ರಂಪ್ ಉತ್ತರಿಸಿದರು. `ನೀವು ಎಂಟು ಯುದ್ದಗಳನ್ನು ಕೊನೆಗೊಳಿಸಿದ್ದೀರಿ. ಆದ್ದರಿಂದ ನಿಮಗಿಂತ ಹೆಚ್ಚು ಯಾರೂ ಈ ಪ್ರಶಸ್ತಿಗೆ ಅರ್ಹರಲ್ಲ' ಎಂದು ಮಚಾದೊ ಹೇಳಿದ್ದರು. ಒಂದು ವರ್ಷದಲ್ಲಿ ನಾವು 8 ಯುದ್ದಗಳನ್ನು ತಪ್ಪಿಸಿದ್ದೇನೆ. ಭಾರತ-ಪಾಕಿಸ್ತಾನದ ಸಂಘರ್ಷವನ್ನು ಕೊನೆಗೊಳಿಸಿರುವುದಕ್ಕೆ ಪಾಕ್ ಪ್ರಧಾನಿ ಶಹಬಾಝ್ ಷರೀಫ್ ವೈಯಕ್ತಿಕವಾಗಿ ಕೃತಜ್ಞತೆ ಸಲ್ಲಿಸಿದ್ದರು ಎಂದು ಟ್ರಂಪ್ ಪ್ರತಿಪಾದಿಸಿದ್ದಾರೆ. ಈ ಮಧ್ಯೆ, ಮಚಾದೊ ಅವರಿಂದ ಟ್ರಂಪ್ ನೊಬೆಲ್ ಶಾಂತಿ ಪ್ರಶಸ್ತಿ ಸ್ವೀಕರಿಸಿರುವುದನ್ನು ನಾರ್ವೆಯ ನಾಯಕರು, ನೊಬೆಲ್ ಪ್ರತಿಷ್ಠಾನದ ಅಧಿಕಾರಿಗಳು ತೀವ್ರವಾಗಿ ಖಂಡಿಸಿದ್ದಾರೆ. ಪ್ರಶಸ್ತಿಯನ್ನು ಟ್ರಂಪ್ ಸ್ವೀಕರಿಸಿರುವುದು `ಇತರ ಜನರ ಸಾಧನೆಗಳ ಶ್ರೇಯವನ್ನು ತನ್ನದಾಗಿಸಿಕೊಳ್ಳುವ ಸ್ವಭಾವವನ್ನು ತೋರಿಸಿದೆ' ಎಂದು ನಾರ್ವೆಯ ಸಂಸದ ಟ್ರಿಗ್ವೆ ವೆಡುಮ್ ಟೀಕಿಸಿದ್ದಾರೆ.
ಕೆಎಫ್ಡಿ ನಿಯಂತ್ರಣಕ್ಕೆ ಡೆಪಾ ತೈಲ ಖರೀದಿಸಲು ಅನುಮೋದನೆ
ಬೆಂಗಳೂರು : ಕ್ಯಾಸನೂರ್ ಕಾಡಿನ ರೋಗ(ಕೆಎಫ್ಡಿ) ನಿಯಂತ್ರಣಕ್ಕೆ ಶೇ.25ರಷ್ಟು ಹೆಚ್ಚುವರಿ ಡೆಪಾ ತೈಲದ ಬಾಟಲಿಗಳನ್ನು ಖರೀದಿ ಮಾಡಲು ರಾಜ್ಯ ಸರಕಾರವು ಆಡಳಿತಾತ್ಮಕ ಅನುಮೋದನೆ ನೀಡಿದೆ. 2024-25ನೇ ಸಾಲಿನಲ್ಲಿ ಸರಿಸುಮಾರು 7,84,004 ಡೆಪಾ ಬಾಟಲಿಗಳು ಸರಬರಾಜಾಗಿದ್ದು, ಈವರೆಗೆ 5,05,282 ಬಾಟಲಿಗಳು ವಿತರಣೆಯಾಗಿರುತ್ತದೆ. ಈಗ ಡೆಪಾ ತೈಲದ 2,78,722 ಬಾಟಲಿಗಳು ಲಭ್ಯವಿದ್ದು, ಈ ದಾಸ್ತಾನು ಫೆಬ್ರವರಿ ಎರಡನೇ ವಾರದವರೆಗೆ ಮಾತ್ರ ವಿತರಿಸಬಹುದಾಗಿದೆ. ಮಾರ್ಚ್ನಿಂದ ಜೂನ್ವರೆಗೆ 5,74,874 ಡೆಪಾ ತೈಲದ ಬಾಟಲಿ ಅವಶ್ಯಕತೆ ಇದ್ದು, ಅದನ್ನು ಖರೀದಿ ಮಾಡಲು ಅನುಮೋದನೆ ನೀಡಲಾಗಿದೆ. ರಾಜ್ಯದ ಕೆಲ ಜಿಲ್ಲೆಗಳಲ್ಲಿ ಕ್ಯಾಸನೂರ್ ಕಾಡಿನ ರೋಗ ಋತುವು ಪ್ರಾರಂಭವಾಗಿದ್ದು, ಸೋಂಕನ್ನು ತಡೆಗಟ್ಟಲು ಯಾವುದೇ ಲಸಿಕೆ ಲಭ್ಯವಿಲ್ಲ. ದುರ್ಬಲ ಜನಸಂಖ್ಯೆ, ಅರಣ್ಯ ಕೆಲಸಗಾರರು ಮತ್ತು ಮುಂಚೂಣಿ ಸಿಬ್ಬಂದಿಗಳಲ್ಲಿ ಸೋಂಕಿನ ಅಪಾಯವನ್ನು ಕಡಿಮೆ ಮಾಡಲು ಡೆಪಾ ತೈಲ ಮಾತ್ರ ಪರಿಣಾಮಕಾರಿ ತಡೆಗಟ್ಟುವ ಕ್ರಮವಾಗಿದೆ ಎಂದು ಸರಕಾರ ಹೇಳಿದೆ.
ಇರಾನ್ನಲ್ಲಿ ಪ್ರಾಬಲ್ಯ ಮರುಸ್ಥಾಪನೆಗೆ ಅಮೆರಿಕ ಪ್ರಯತ್ನ: ಆಯತುಲ್ಲಾ ಅಲಿ ಖಾಮಿನೈ ಆರೋಪ
ಟೆಹ್ರಾನ್, ಜ.17: ಇರಾನ್ನಲ್ಲಿ ಪ್ರಾಬಲ್ಯ ಮರುಸ್ಥಾಪಿಸಲು ಅಮೆರಿಕಾ ಪ್ರಯತ್ನಿಸುತ್ತಿದೆ. ದೇಶದಲ್ಲಿ ಪ್ರತಿಭಟನೆಯ ಸಂದರ್ಭದ ಸಾವು-ನೋವುಗಳಿಗೆ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕಾರಣ ಎಂದು ಇರಾನಿನ ಪರಮೋಚ್ಛ ನಾಯಕ ಆಯತುಲ್ಲಾ ಆಲಿ ಖಾಮಿನೈ ಶನಿವಾರ ಆರೋಪಿಸಿದ್ದಾರೆ. ಕೆಲ ದಿನಗಳಿಂದ ನಡೆಯುತ್ತಿದ್ದ ಪ್ರತಿಭಟನೆ, ಹಿಂಸಾಚಾರಕ್ಕೆ ಸಾಕ್ಷಿಯಾಗಿದ್ದ ಇರಾನ್ನಲ್ಲಿ ಶನಿವಾರ ಬಹುತೇಕ ಶಾಂತ ಪರಿಸ್ಥಿತಿ ನೆಲೆಸಿತ್ತು ಎಂದು ಮಾಧ್ಯಮಗಳು ವರದಿ ಮಾಡಿವೆ. `ಟ್ರಂಪ್ ಅವರು ಇರಾನ್ ರಾಷ್ಟ್ರದ ವಿರುದ್ದ ವ್ಯವಸ್ಥಿತ ಅಪಪ್ರಚಾರ, ಗಲಭೆಗೆ ಪ್ರಚೋದನೆಯ ಮೂಲಕ ಹಾನಿ ಎಸಗಿರುವ ಅಪರಾಧಿಯಾಗಿದ್ದಾರೆ. ಇರಾನಿನಲ್ಲಿ ನಡೆದ ಸಾವು-ನೋವುಗಳು, ನಾಶ-ನಷ್ಟಗಳಿಗೆ ಅಮೆರಿಕಾದ ಅಧ್ಯಕ್ಷರನ್ನು ತಪ್ಪಿತಸ್ಥರೆಂದು ಪರಿಗಣಿಸುತ್ತೇವೆ. ಇದು ಅಮೆರಿಕಾದ ಪಿತೂರಿಯಾಗಿದೆ. ಇರಾನನ್ನು ನುಂಗಿಬಿಡುವುದು ಅಮೆರಿಕಾದ ಉದ್ದೇಶವಾಗಿದೆ. ಇರಾನನ್ನು ಮತ್ತೆ ಅಮೆರಿಕಾದ ಮಿಲಿಟರಿ, ರಾಜಕೀಯ ಮತ್ತು ಆರ್ಥಿಕ ಪ್ರಾಬಲ್ಯದ ಅಡಿಗೆ ತರುವುದು ಅವರ ಗುರಿಯಾಗಿದೆ' ಎಂದು ಖಾಮಿನೈ ಹೇಳಿರುವುದಾಗಿ `ದಿ ಇರಾನ್ ಇಂಟರ್ನ್ಯಾಷನಲ್' ವರದಿ ಮಾಡಿದೆ. ಅಧಿಕಾರಿಗಳು ದೇಶದ್ರೋಹಿಗಳ ಬೆನ್ನು ಮುರಿಯಬೇಕು. ರಾಷ್ಟ್ರವನ್ನು ಯುದ್ದದತ್ತ ಮುನ್ನಡೆಸಲು ನಾವು ಬಯಸುವುದಿಲ್ಲ. ಆದರೆ ನಾವು ದೇಶೀಯ ಕ್ರಿಮಿನಲ್ಗಳನ್ನು ಸುಮ್ಮನೆ ಬಿಡುವುದಿಲ್ಲ. ದೇಶೀಯ ಕ್ರಿಮಿನಲ್ಗಳಿಗಿಂತಲೂ ಕೆಟ್ಟದಾಗಿರುವ ಅಂತರಾಷ್ಟ್ರೀಯ ಕ್ರಿಮಿನಲ್ಗಳನ್ನು ಬಿಡುವ ಮಾತೇ ಇಲ್ಲ. ದೇವರ ದಯೆಯಿಂದ, ಇರಾನ್ ರಾಷ್ಟ್ರವು ದೇಶದ್ರೋಹದ ಬೆನ್ನನ್ನು ಮುರಿದಂತೆ ದೇಶದ್ರೋಹಿಗಳ ಬೆನ್ನನ್ನೂ ಮುರಿಯುತ್ತೇವೆ ' ಎಂದು ಖಾಮಿನೈ ಎಚ್ಚರಿಕೆ ನೀಡಿರುವುದಾಗಿ ವರದಿಯಾಗಿದೆ.
ಅಂಗಾಂಗ ಕಸಿ ಆಸ್ಪತ್ರೆಯಲ್ಲಿ ಶೇ.70ರಷ್ಟು ರಿಯಾಯಿತಿ : ಡಾ.ಶರಣಪ್ರಕಾಶ ಪಾಟೀಲ್
ಬೆಂಗಳೂರು : ಕರ್ನಾಟಕದಲ್ಲಿ ದೇಶದ ಪ್ರಪ್ರಥಮ ಮಾನವ ಬಹು ಅಂಗಾಂಗ ಕಸಿ ಆಸ್ಪತ್ರೆ ನಿರ್ಮಾಣಕ್ಕೆ ಅಝೀಂ ಪ್ರೇಜಿ ಪ್ರತಿಷ್ಠಾನ ಜತೆ ಒಡಂಬಡಿಕೆ ಮಾಡಿಕೊಳ್ಳಲಾಗಿದ್ದು, ಮುಂದಿನ ದಿನಗಳಲ್ಲಿ ಶೇ.70ರಷ್ಟು ರಿಯಾಯಿತಿಯಲ್ಲಿ ಸೇವೆ ದೊರೆಯಲಿದೆ ಎಂದು ವೈದ್ಯಕೀಯ ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಸಚಿವ ಡಾ.ಶರಣಪ್ರಕಾಶ ಪಾಟೀಲ್ ಹೇಳಿದ್ದಾರೆ. ಶನಿವಾರ ವಿಧಾನಸೌಧದ ಬ್ಯಾಂಕ್ವೆಟ್ ಸಭಾಂಗಣದಲ್ಲಿ ವೈದ್ಯಕೀಯ ಶಿಕ್ಷಣ ಇಲಾಖೆ ವತಿಯಿಂದ ಸಾವಿರ ಹಾಸಿಗೆಗಳ ಚಾರಿಟೇಬಲ್ ಸೂಪರ್ ಸ್ಪೇಷಾಲಿಟಿ ಹಾಗೂ ಮಾನವ ಬಹು ಅಂಗಾಂಗ ಕಸಿ ಆಸ್ಪತ್ರೆ ನಿರ್ಮಾಣ ಮತ್ತು ನಿರ್ವಹಣೆ ಕುರಿತು ಅಝೀಂ ಪ್ರೇಜಿ ಪ್ರತಿಷ್ಠಾನ ನಡುವೆ ಒಡಂಬಡಿಕೆಗೆ ಸಹಿ ಹಾಕಿದ ನಂತರ ‘ಅಂಗಾಂಗ ದಾನ ಮಹಾದಾನ’ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು. ದೇಶದಲ್ಲಿಯೇ ಮೊದಲ ಬಾರಿಗೆ ಕರ್ನಾಟಕದಲ್ಲಿ ಮಾನವ ಬಹು ಅಂಗಾಂಗ ಕಸಿ ಆಸ್ಪತ್ರೆ ನಿರ್ಮಾಣ ಆಗುತ್ತಿರುವುದು ಸಂತಸ ತಂದಿದೆ. ಕೆಲ ವರದಿಗಳ ಪ್ರಕಾರ 5 ಸಾವಿರ ರೋಗಿಗಳು ಕಿಡ್ನಿ ಕಸಿ ಚಿಕಿತ್ಸೆಗಾಗಿ ಕಾಯುತ್ತಿದ್ದಾರೆ. ಇನ್ನುಳಿದ ಹಲವು ರೋಗಿಗಳಿಗೆ ಬಹು ಅಂಗಾಂಗ ಕಸಿ ಚಿಕಿತ್ಸೆ ಬೇಕಾಗಿದೆ. ಇಂತಹ ಸಂದರ್ಭದಲ್ಲಿ ಮಾನವ ಬಹು ಅಂಗಾಂಗ ಕಸಿ ಆಸ್ಪತ್ರೆ ನಿರ್ಮಾಣ ಮತ್ತು ನಿರ್ವಹಣೆಗೆ ಅಝೀಂ ಪ್ರೇಮ್ ಜಿ ಪ್ರತಿಷ್ಠಾನ ಮುಂದಾಗಿದ್ದು, ಮುಂದಿನ ದಿನಗಳಲ್ಲಿ ಶೇ.70ರಷ್ಟು ರಿಯಾಯಿತಿಯಲ್ಲಿ ಸೇವೆ ದೊರೆಯಲಿದೆ ಎಂದು ತಿಳಿಸಿದರು. ಈ ಆಸ್ಪತ್ರೆಯನ್ನು 1000 ಹಾಸಿಗೆಗಳ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯನ್ನಾಗಿ ಅಭಿವೃದ್ಧಿಪಡಿಸಲಾಗುತ್ತಿದ್ದು ಈ ಮೂಲಕ ದುರ್ಬಲ ವರ್ಗಗಳು ಮತ್ತು ಸೂಕ್ತ ಸೇವೆಗಳಿಂದ ವಂಚಿತರಾದ ಜನರಿಗೆ ಉತ್ತಮ ಗುಣಮಟ್ಟದ ಆರೈಕೆಯನ್ನು ಒದಗಿಸುವ ಉದ್ದೇಶವನ್ನು ಹೊಂದಿದೆ. ಒಟ್ಟಾರೆ ಶೇ.75 ರಷ್ಟು ಹಾಸಿಗೆಗಳನ್ನು ರೋಗಿಗಳಿಗೆ ಉಚಿತವಾಗಿ ಒದಗಿಸುವ ಗುರಿ ಹೊಂದಲಾಗಿದ್ದು, ಉಳಿದ ಹಾಸಿಗೆಗಳಿಗೆ ತೃತೀಯ ಹಂತದ ಆರೈಕೆ ಒದಗಿಸುವ ಸರಕಾರಿ ಆಸ್ಪತ್ರೆಗಳ ದರಕ್ಕೆ ಸರಿಸಮಾನವಾದ ದರವನ್ನು ವಿಧಿಸಲಾಗುತ್ತದೆ ಎಂದು ಹೇಳಿದರು. ಈ ಆಸ್ಪತ್ರೆಯು ವಿವಿಧ ಸ್ಪೆಷಾಲಿಟಿಗಳನ್ನು ಒದಗಿಸಲಿದ್ದು, ಅಂಗಾಂಗ ಕಸಿಗೆ ವಿಶೇಷ ಒತ್ತನ್ನು ನೀಡಲಾಗುತ್ತದೆ. ಅಲ್ಲದೆ ಇದು ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನೆಗೆ ತನ್ನ ಕೊಡುಗೆಯನ್ನು ನೀಡಲಿದೆ. ಈ ಉಪಕ್ರಮವು, ಅತ್ಯಾಧುನಿಕ ತೃತೀಯ ಹಂತದ ಆರೈಕೆಯ ಲಭ್ಯತೆಯನ್ನು ವಿಸ್ತರಿಸುವ ಮೂಲಕ ನಗರದ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ಬಲಪಡಿಸುವ ಮತ್ತು ಅದಕ್ಕೆ ಪೂರಕವಾಗಿ ಕೊಡುಗೆ ನೀಡುವ ಉದ್ದೇಶವನ್ನು ಹೊಂದಿದೆ ಎಂದೂ ಅವರು ಉಲ್ಲೇಖಿಸಿದರು.
ಜಾರ್ಖಂಡ್ನಲ್ಲಿ ವಲಸೆ ಕಾರ್ಮಿಕನ ಹತ್ಯೆ: ಮುರ್ಷಿದಾಬಾದ್ನಲ್ಲಿ ಮತ್ತೆ ಪ್ರತಿಭಟನೆ
ಕೋಲ್ಕತಾ, ಜ. 17: ಜಾರ್ಖಂಡ್ನಲ್ಲಿ ಪಶ್ಚಿಮಬಂಗಾಳದ ವಲಸೆ ಕಾರ್ಮಿಕನ ಹತ್ಯೆಯ ಹಿನ್ನೆಲೆಯಲ್ಲಿ ಪಶ್ಚಿಮಬಂಗಾಳದ ಮುರ್ಷಿದಾಬಾದ್ ಜಿಲ್ಲೆಯಲ್ಲಿ ಜನರು ಶನಿವಾರ ಮತ್ತೆ ಸಮೀಪದ ರೈಲು ಹಳಿ ಹಾಗೂ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ತಡೆದು ಪ್ರತಿಭಟನೆ ನಡೆಸಿದರು. ಬಾಂಗ್ಲಾದೇಶಿ ಪ್ರಜೆಗಳೆಂದು ಆರೋಪಿಸಿ ಪಶ್ಚಿಮಬಂಗಾಳದ ವಲಸೆ ಕಾರ್ಮಿಕರ ಮೇಲೆ ಇತ್ತೀಚೆಗೆ ಹೆಚ್ಚುತ್ತಿರುವ ಹಲ್ಲೆಯನ್ನು ಖಂಡಿಸಿ ನಡೆಯುತ್ತಿರುವ ಸರಣಿ ಪ್ರತಿಭಟನೆಯ ಭಾಗವಾಗಿ ಈ ಪ್ರತಿಭಟನೆ ನಡೆದಿದೆ. ಹಿಂಸಾಚಾರ ಸಂಭವಿಸುವ ಸಾಧ್ಯತೆ ಹಿನ್ನೆಲೆಯಲ್ಲಿ ಶನಿವಾರ ಮುರ್ಷಿದಾಬಾದ್ನ ಬೆಲಡಂಗಾ ಪ್ರದೇಶದಲ್ಲಿ ಬಿಗಿ ಭದ್ರತೆ ಏರ್ಪಡಿಸಲಾಗಿತ್ತು. ಬೆಲಡಂಗಾ ನಿವಾಸಿ 35 ವರ್ಷದ ಅಲ್ಲಾವುದ್ದೀನ್ ಶೇಖ್ ಅವರು ಕಳೆದ ಐದು ವರ್ಷಗಳಿಂದ ಜಾರ್ಖಂಡ್ನ ಪಲಾಮು ಜಿಲ್ಲೆಯ ಬಿಶ್ರಾಮಪುರ ಪ್ರದೇಶದಲ್ಲಿ ವ್ಯಾಪಾರಿಯಾಗಿ ಕೆಲಸ ಮಾಡುತ್ತಿದ್ದರು. ವಲಸೆ ಕಾರ್ಮಿಕರಾಗಿದ್ದ ಅವರಿಗೆ ಮೂರು ವರ್ಷದ ಮಗಳಿದ್ದಳು. ರಜೆಯಲ್ಲಿದ್ದ ಶೇಖ್ ಅವರು ಕೆಲವು ದಿನಗಳ ಹಿಂದೆ ಕೆಲಸಕ್ಕೆ ಹಿಂದಿರುಗಿದ್ದರು. ಕೆಲಸಕ್ಕೆ ಮರಳಿದ ಕೆಲವೇ ದಿನಗಳಲ್ಲಿ ಅವರನ್ನು ಬಾಂಗ್ಲಾದೇಶದ ಪ್ರಜೆ ಎಂದು ಶಂಕಿಸಿ ಹತ್ಯೆಗೈಯಲಾಗಿದೆ. ಅಲಾವುದ್ದೀನ್ ಅವರ ಸಾವಿನ ಸುದ್ದಿ ಮುರ್ಷಿದಾಬಾದ್ಗೆ ತಲುಪಿದ ಬಳಿಕ ಸುಜಾಪುರ-ಮಹೇಶ್ಪುರ ಪ್ರದೇಶದ ನಿವಾಸಿಗಳು ಬೆಲಡಂಗಾ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿರುವ ಮಹೇಶಪುರದಲ್ಲಿರುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಶುಕ್ರವಾರ ಬೆಳಗ್ಗೆ ಸುಮಾರು 8 ಗಂಟೆಗೆ ವಾಹನ ಸಂಚಾರಕ್ಕೆ ತಡೆ ಒಡ್ಡಿ ಪ್ರತಿಭಟನೆ ನಡೆಸಿದ್ದರು. ರಾಷ್ಟ್ರೀಯ ಹೆದ್ದಾರಿ 12ರ ಜೊತೆಗೆ ಮಹೇಶಪುರದ ರೈಲ್ವೆ ಲೈನ್ನಲ್ಲಿ ರೈಲು ಹಳಿಗಳಲ್ಲಿ ಮರದ ದಿಮ್ಮಿಗಳನ್ನು ಇರಿಸಿ ರೈಲು ಸಂಚಾರಕ್ಕೆ ತಡೆ ಒಡ್ಡಿದ್ದರು. ಇದರಿಂದ ಲಾಲಗೋಲಾದಿಂದ ರಾನಾಘಾಟ್ಗೆ ಸಂಚರಿಸುತ್ತಿದ್ದ ಲೋಕಲ್ ರೈಲನ್ನು ಮಾರ್ಗ ಮಧ್ಯದಲ್ಲೇ ನಿಲ್ಲಿಸಲಾಗಿತ್ತು. ಇತರ ರೈಲುಗಳನ್ನು ಸಂತರಾಗಾಚಿ ಹಾಗೂ ಬೆರಹಾಮಪುರ ರೈಲು ನಿಲ್ದಾಣಗಳಲ್ಲಿ ನಿಲ್ಲಿಸಲಾಗಿತ್ತು. ಸಿಯಾಲ್ದಹದಿಂದ ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ರೈಲುಗಳು ಬೆಲಡಂಗ ರೈಲು ನಿಲ್ದಾಣಕ್ಕೆ ಮಾತ್ರ ತಲುಪಲು ಸಾಧ್ಯವಾಗಿತ್ತು. ಕೃಷ್ಣನಗರ-ಲಾಲ ಗೋಲ ಲೈನ್ನಲ್ಲಿ ರೈಲುಗಳ ಸಂಚಾರವನ್ನು ನಿಲ್ಲಿಸಲಾಗಿತ್ತು. ಶನಿವಾರ ಬಿದಿರು ದೊಣ್ಣೆಗಳೊಂದಿಗೆ ದಾಂಧಲೆ ನಡೆಸಿದ ಪ್ರತಿಭಟನಕಾರರು ರಸ್ತೆ ಬದಿಯ ಬ್ಯಾನರ್ ಹಾಗೂ ಫ್ಲೆಕ್ಸ್ಗಳನ್ನು ಕಿತ್ತು ಹಾಕಿದರು. ಹತ್ತಿರದ ಬರುವಾ ಕ್ರಾಸಿಂಗ್ನಲ್ಲಿ ಕೂಡ ಸಂಚಾರಕ್ಕೆ ತಡೆ ಒಡ್ಡಿದರು. ರೈಲ್ವೇ ಗೇಟ್ನ ಸಮೀಪ ಇದ್ದ ಹಲವು ಅಂಗಡಿಗಳಿಗೆ ಹಾನಿ ಉಂಟು ಮಾಡಿದರು.
ಕೊಳೆಗೇರಿ ಅಭಿವೃದ್ಧಿ ಮಂಡಳಿಯಿಂದ 42,345 ಮನೆಗಳ ಹಂಚಿಕೆ : ಝಮೀರ್ ಅಹ್ಮದ್ ಖಾನ್
ಹುಬ್ಬಳ್ಳಿ : ಕೊಳೆಗೇರಿ ಅಭಿವೃದ್ಧಿ ಮಂಡಳಿ ವತಿಯಿಂದ ಜ.24ರಂದು 42,345 ಬಡ ಕುಟುಂಬಗಳಿಗೆ ಮನೆಗಳ ಹಂಚಿಕೆ ಮಾಡಲಾಗುವುದು ಎಂದು ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಬಿ.ಝೆಡ್. ಝಮೀರ್ ಅಹ್ಮದ್ ಖಾನ್ ಹೇಳಿದ್ದಾರೆ. ಹುಬ್ಬಳ್ಳಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜ.24ರಂದು ಬೆಳಗ್ಗೆ 11ಕ್ಕೆ ಹುಬ್ಬಳ್ಳಿಯ ಮಂಟೂರ್ ರಸ್ತೆಯಲ್ಲಿ ಫಲಾನುಭವಿಗಳಿಗೆ ಮನೆ ಹಂಚಿಕೆ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದೆ. ಕಾರ್ಯಕ್ರಮದಲ್ಲಿ ಸುಮಾರು 2 ಲಕ್ಷಕ್ಕೂ ಅಧಿಕ ಜನರು ಪಾಲ್ಗೊಳ್ಳುವ ನಿರೀಕ್ಷೆಯಿದೆ. ರಾಜ್ಯಸಭೆ ಪ್ರತಿ ಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೇರಿದಂತೆ ಸಚಿವರು, ಶಾಸಕರು, ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು. ಈ ಯೋಜನೆಯಲ್ಲಿ ಒಟ್ಟು 1,80,253 ಮನೆಗಳ ನಿರ್ಮಾಣ ಆಗುತ್ತಿದೆ. ರಾಜ್ಯ ಸರಕಾರ ತಲಾ 4 ಲಕ್ಷ ರೂ. ಕೊಡುತ್ತಿದ್ದು, ಜೊತೆಗೆ ಕೇಂದ್ರ ಮತ್ತು ರಾಜ್ಯ ಸರಕಾರದ ಸಬ್ಸಿಡಿ ಸಿಗಲಿದೆ. ಫಲಾನುಭವಿಗಳು ಕೇವಲ ಒಂದು ಲಕ್ಷ ರೂ. ಪಾವತಿಸಬೇಕು. ವೀಡಿಯೊ ಕಾನ್ಫರೆನ್ಸ್ ಮೂಲಕ ಕೊಳೆಗೇರಿ ವಾಸಿಗಳಿಗೆ 20,363 ಹಕ್ಕುಪತ್ರ ನೀಡಲಾಗುವುದು ಎಂದರು. ಕರ್ನಾಟಕ ಕೊಳೆಗೇರಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಪ್ರಸಾದ ಅಬ್ಬಯ್ಯ ಮಾತನಾಡಿ, ಕೊಳೆಗೇರಿ ಅಭಿವೃದ್ಧಿ ಮಂಡಳಿಯಿಂದ ಬಡವರಿಗೆ ಸೂರು ಕಲ್ಪಿಸುವ ದೂರದೃಷ್ಟಿಯೊಂದಿಗೆ ಮನೆಗಳನ್ನು ನಿರ್ಮಿಸಿ, ವಿತರಣೆ ಮಾಡಲಾಗುತ್ತಿದೆ. ಆಸ್ಪತ್ರೆ, ಗ್ರಂಥಾಲಯ ಹಾಗೂ ಸಮುದಾಯ ಭವನವನ್ನು ಸಹ ಇದು ಒಳಗೊಂಡಿರಲಿದೆ. ಈಗಾಗಲೇ 860 ಮನೆಗಳನ್ನು ಆಶ್ರಯ ಯೋಜನೆಯಡಿಯಲ್ಲಿ ನಿರ್ಮಾಣ ಮಾಡಲಾಗಿದೆ. ಪಂಚ ಗ್ಯಾರಂಟಿ ಯೋಜನೆಗಳಿಂದ ರಾಜ್ಯ ಅಭಿವೃದ್ಧಿ ಹೊಂದುತ್ತಿದೆ ಎಂದು ಅವರು ಹೇಳಿದರು. ಸುದ್ದಿಗೋಷ್ಠಿಯಲ್ಲಿ ವಿಧಾನ ಪರಿಷತ್ ಸದಸ್ಯ ಅಬ್ದುಲ್ ಜಬ್ಬಾರ್, ಮಾಜಿ ಸಂಸದ ಐ.ಜಿ.ಸನದಿ, ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಮಾಜಿ ಅಧ್ಯಕ್ಷ ಸದಾನಂದ ಡಂಗನವರ, ಮುಖಂಡರಾದ ಅನ್ವರ್ ಬಾಷಾ, ದೀಪಕ್ ಚಿಂಚೋರೆ, ಅಲ್ತಾಫ್ ಹಳ್ಳೂರ್, ಅನಿಲಕುಮಾರ ಪಾಟೀಲ್ ಇತರರು ಉಪಸ್ಥಿತರಿದ್ದರು. ಈಗಾಗಲೇ ಮೊದಲ ಹಂತದಲ್ಲಿ 36,789 ಮನೆಗಳನ್ನು ವಿತರಿಸಲಾಗಿದೆ. ಎರಡನೇ ಹಂತದಲ್ಲಿ 42,345 ಮನೆಗಳನ್ನು ಹಂಚಿಕೆ ಮಾಡಲಾಗುತ್ತಿದೆ. ಮೂರನೇ ಹಂತದಲ್ಲಿ ಸುಮಾರು 30 ಸಾವಿರ ಮನೆಗಳನ್ನು ಹಂಚಿಕೆ ಮಾಡುವ ಗುರಿ ಹೊಂದಲಾಗಿದೆ. ಮೂರನೇ ಹಂತದ ಮನೆಗಳನ್ನು ಎಪ್ರಿಲ್, ಮೇ ತಿಂಗಳಲ್ಲಿ ವಿತರಿಸಲಾಗುವುದು. ಈಗ ನೀಡುತ್ತಿರುವ ಮನೆಗಳ ಪೈಕಿ ಹುಬ್ಬಳ್ಳಿಯಲ್ಲಿ 1,008 ಸೇರಿ ಧಾರವಾಡ ಜಿಲ್ಲೆಯಲ್ಲಿ 2,767 ಮನೆ ಹಂಚಿಕೆ ಮಾಡಲಾಗುತ್ತಿದೆ. -ಸಚಿವ ಝಮೀರ್ ಅಹ್ಮದ್ ಖಾನ್
ಲಕ್ಕುಂಡಿಯಲ್ಲಿ ಉತ್ಖನನದ ವೇಳೆ ಪಾಣಿಬಟ್ಟಲು ಪತ್ತೆ, 2ನೇ ದಿನವೇ ಪತ್ತೆಯಾದ ಪ್ರಾಚ್ಯಾವಶೇಷ
ಗದಗ ಜಿಲ್ಲೆಯ ಐತಿಹಾಸಿಕ ಲಕ್ಕುಂಡಿ ಗ್ರಾಮದಲ್ಲಿ ಉತ್ಖನನದ ಎರಡನೇ ದಿನ ಶಿವಲಿಂಗದ ಪಾಣಿಬಟ್ಟಲು ಮಾದರಿಯ ಪ್ರಾಚ್ಯಾವಶೇಷ ಪತ್ತೆಯಾಗಿದೆ. ಕೋಟೆ ವೀರಭದ್ರೇಶ್ವರ ದೇವಸ್ಥಾನದ ಆವರಣದಲ್ಲಿ ನಡೆಯುತ್ತಿರುವ ಉತ್ಖನನವು ಸ್ಥಳೀಯರಲ್ಲಿ ಕುತೂಹಲ ಮೂಡಿಸಿದೆ. ಈ ಉತ್ಖನನವು 1121ರ ಶಿಲಾಶಾಸನ ಮತ್ತು 'ಅಚ್ಚಪ್ಪನ ಬಯಲು' ಎಂಬ ಐತಿಹಾಸಿಕ ಹಿನ್ನೆಲೆಯನ್ನು ಹೊಂದಿದೆ.
ನಾಳೆ(ಜ.18) ನ್ಯೂಝಿಲ್ಯಾಂಡ್ ವಿರುದ್ಧದ ಕೊನೆಯ ಏಕದಿನ | ಭಾರತದ ಚಿತ್ತ ಸರಣಿ ಗೆಲುವಿನತ್ತ
ಇಂದೋರ್, ಜ. 17: ಭಾರತ ಮತ್ತು ಪ್ರವಾಸಿ ನ್ಯೂಝಿಲ್ಯಾಂಡ್ ಕ್ರಿಕೆಟ್ ತಂಡಗಳ ನಡುವಿನ ಏಕದಿನ ಸರಣಿ ನಿರ್ಣಾಯಕ ಮೂರನೇ ಹಾಗೂ ಕೊನೆಯ ಪಂದ್ಯವು ಇಂದೋರ್ನ ಹೋಳ್ಕರ್ ಸ್ಟೇಡಿಯಮ್ನಲ್ಲಿ ರವಿವಾರ ನಡೆಯಲಿದೆ. ಸರಣಿಯು ಈಗ 1-1ರಲ್ಲಿ ಸಮಬಲಗೊಂಡಿದ್ದು, ನಾಳಿನ ಪಂದ್ಯವು ನಿರ್ಣಾಯಕವಾಗಿದೆ. ಸರಣಿಯ ಮೊದಲ ಪಂದ್ಯವನ್ನು ಗೆದ್ದಿರುವ ಭಾರತ ಎರಡನೇ ಪಂದ್ಯವನ್ನು ಕಳೆದುಕೊಂಡಿದೆ. ಈಗ ನಿರ್ಣಾಯಕ ಮೂರನೇ ಪಂದ್ಯವನ್ನು ಗೆದ್ದು ಸರಣಿಯನ್ನು ಕೈವಶಪಡಿಸಿಕೊಳ್ಳುವತ್ತ ಅಡಿ ಇಟ್ಟಿದೆ. ಪಂದ್ಯದ ಫಲಿತಾಂಶವು ಹಿರಿಯ ಆಟಗಾರರಾದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿಯ ನಿರ್ವಹಣೆಯನ್ನು ಅವಲಂಬಿಸಿದೆ. ನ್ಯೂಝಿಲ್ಯಾಂಡ್ ಹಿಂದೆ ಭಾರತದಲ್ಲಿ ಟೆಸ್ ಸರಣಿಯೊಂದನ್ನು ಗೆಲ್ಲುವ ಸನಿಹಕ್ಕೂ ಬಂದಿರಲಿಲ್ಲ. ಆದರೆ, ಅದು ಕಳೆದ ವರ್ಷ ಭಾರತದ ವಿರುದ್ಧದ ಟೆಸ್ಟ್ ಸರಣಿಯನ್ನು ಭಾರತದಲ್ಲೇ ಕ್ಲೀನ್ಸ್ವೀಪ್ ಮಾಡಿತ್ತು. ಅಂಥದೇ ಅದ್ಭುತವನ್ನು ಏಕದಿನದ ಸರಣಿಯಲ್ಲಿ ಪುನರಾವರ್ತಿಸುವುದನ್ನು ಅದು ಎದುರು ನೋಡುತ್ತಿದೆ. ಭಾರತದಲ್ಲಿ ನಡೆದ ಏಕದಿನ ಸರಣಿಯಲ್ಲಿ ಆ ತಂಡವನ್ನು ಸೋಲಿಸಲು ನ್ಯೂಝಿಲ್ಯಾಂಡ್ಗೆ ಈವರೆಗೆ ಸಾಧ್ಯವಾಗಿಲ್ಲ. ವಾಸ್ತವವಾಗಿ, ದ್ವಿಪಕ್ಷೀಯ ಸರಣಿಯಾಗಲಿ, ಇತರ ಯಾವುದೇ ಪಂದ್ಯಾವಳಿಯಾಗಲಿ ಭಾರತದಲ್ಲಿ ನಡೆದ ಏಕದಿನ ಸರಣಿಯೊಂದನ್ನು ಗೆಲ್ಲಲು ನ್ಯೂಝಿಲ್ಯಾಂಡ್ಗೆ ಈವರೆಗೆ ಸಾಧ್ಯವಾಗಿಲ್ಲ. ಭಾರತದ ಮಟ್ಟಿಗೆ, ಅರ್ಶದೀಪ್ ಸಿಂಗ್ರನ್ನು ತಂಡದಿಂದ ಹೊರಗಿಟ್ಟಿರುವ ಬಗ್ಗೆ ದೊಡ್ಡ ಚರ್ಚೆ ನಡೆಯುತ್ತಿದೆ. ಇದು ಏಕದಿನ ಸರಣಿಯ ನಿರ್ಣಾಯಕ ಪಂದ್ಯವಾಗಿರುವುದರಿಂದ ಹಾಗೂ ಆ ಬಳಿಕ ಐದು ಪಂದ್ಯಗಳ ಟಿ20 ಸರಣಿ ನಡೆಯಲಿರುವುದರಿಂದ ಈ ಹಂತದಲ್ಲಿ ಅರ್ಶದೀಪ್ರನ್ನು ಒಳಗೆ ತರಲು ಭಾರತೀಯ ಏಕದಿನ ತಂಡದಿಂದ ಯಾರನ್ನಾದರೂ ಕೈಬಿಡುವ ಸಾಧ್ಯತೆ ಕಡಿಮೆ. ಹೋಳ್ಕರ್ ಸ್ಟೇಡಿಯಮ್ನ ಬೌಂಡರಿಗಳು ಚಿಕ್ಕದಾಗಿರುವುದರಿಂದ ಭಾರತವು ನಿತೀಶ್ ಕುಮರ್ ರೆಡ್ಡಿಯನ್ನೇ ಕಣಕ್ಕೆ ಇಳಿಸುವ ಸಾಧ್ಯತೆಯಿದೆ. ಅವರ ಬದಲಿಗೆ ಆಯುಶ್ ಬದೋನಿಯನ್ನು ತರುವ ಸಾಧ್ಯತೆ ಕಡಿಮೆಯಾಗಿದೆ. ತಂಡಗಳು ಭಾರತ: ಶುಭಮನ್ ಗಿಲ್ (ನಾಯಕ), ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಕೆ.ಎಲ್. ರಾಹುಲ್ (ವಿಕೆಟ್ಕೀಪರ್), ಶ್ರೇಯಸ್ ಅಯ್ಯರ್ (ಉಪನಾಯಕ), ರವೀಂದ್ರ ಜಡೇಜ, ಮುಹಮ್ಮದ್ ಸಿರಾಜ್, ಹರ್ಷಿತ್ ರಾಣಾ, ಪ್ರಸಿದ್ಧ ಕೃಷ್ಣ, ಕುಲದೀಪ್ ಯಾದವ್, ನಿತೀಶ್ಕುಮಾರ್ ರೆಡ್ಡಿ. ನ್ಯೂಝಿಲ್ಯಾಂಡ್: ಮೈಕೆಲ್ ಬ್ರೇಸ್ವೆಲ್ (ನಾಯಕ), ಆದಿ ಅಶೋಕ್, ಕ್ರಿಸ್ಟಿಯನ್ ಕ್ಲಾರ್ಕ್, ಜೋಶ್ ಕ್ಲಾರ್ಕ್ಸನ್, ಡೇವನ್ ಕಾನ್ವೇ (ವಿಕೆಟ್ಕೀಪರ್), ಝ್ಯಾಕ್ ಫೋಕ್ಸ್, ಮಿಚ್ ಹೇ (ವಿಕೆಟ್ಕೀಪರ್), ಕೈಲ್ ಜೇಮೀಸನ್, ನಿಕ್ ಕೆಲ್ಲಿ, ಜೇಡನ್ ಲೆನೋಕ್ಸ್, ಡ್ಯಾರಿಲ್ ಮಿಚೆಲ್, ಹೆನ್ರಿ ನಿಕೋಲ್ಸ್, ಗ್ಲೆನ್ ಫಿಲಿಪ್ಸ್, ಮೈಕೆಲ್ ರೇ, ವಿಲ್ ಯಂಗ್.
Bihar | ರಸ್ತೆ ಅಪಘಾತದಲ್ಲಿ ಮೃತಪಟ್ಟ ಬಾಲಕ: ಪಿಕಪ್ ವ್ಯಾನ್ನಿಂದ ಮೀನು ಹೊತ್ತೊಯ್ದ ದಾರಿಹೋಕರು!
ಪಾಟ್ನಾ: ಮೀನು ಸಾಗಾಟ ನಡೆಸುತ್ತಿದ್ದ ಪಿಕಪ್ ವ್ಯಾನ್ವೊಂದು ಢಿಕ್ಕಿ ಹೊಡೆದ ಪರಿಣಾಮ ಅಪ್ರಾಪ್ತ ಬಾಲಕನೊಬ್ಬ ರಸ್ತೆಯಲ್ಲೇ ಮೃತಪಟ್ಟಿದ್ದು, ಈ ವೇಳೆ ರಸ್ತೆಯಲ್ಲೇ ಮೃತದೇಹ ಬಿದ್ದಿದ್ದರೂ ಪಿಕಪ್ ವ್ಯಾನ್ನಲ್ಲಿದ್ದ ಮೀನುಗಳನ್ನು ದಾರಿಹೋಕರು ಹೊತ್ತೊಯ್ದ ಘಟನೆ ಪಾಟ್ನಾದ ಪುಪ್ರಿ ಪೊಲೀಸ್ ಠಾಣೆ ವ್ಯಾಪ್ತಿಯ ಝಾಝಿಹಾಟ್ ಗ್ರಾಮದಲ್ಲಿ ನಡೆದಿದೆ. 17 ವರ್ಷದ ರಿತೇಶ್ ಕುಮಾರ್ ಬೆಳಗ್ಗಿನ ಕೋಚಿಂಗ್ ತರಗತಿಗೆ ತೆರಳುತ್ತಿದ್ದ ವೇಳೆ ವೇಗವಾಗಿ ಬಂದ ಪಿಕಪ್ ವ್ಯಾನ್ ಒಂದು ಢಿಕ್ಕಿ ಹೊಡೆದಿದೆ. ಘಟನೆಯಲ್ಲಿ ರಿತೇಶ್ ಕುಮಾರ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ. ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಮೃತ ಬಾಲಕನ ಕುಟುಂಬಸ್ಥರು ದುಃಖದ ಮಡುವಿನಲ್ಲಿ ಮುಳುಗಿದರೆ, ಅನತಿ ದೂರದಲ್ಲಿ ಇದಕ್ಕೆ ವ್ಯತಿರಿಕ್ತವಾದ ದೃಶ್ಯಗಳು ಕಂಡು ಬಂದಿವೆ. ಅಪಘಾತದ ವೇಳೆ ಪಿಕಪ್ ವ್ಯಾನ್ ನಿಂದ ಮೀನುಗಳು ರಸ್ತೆಯೆಲ್ಲ ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ. ಈ ವೇಳೆ ಗಾಯಗೊಂಡಿದ್ದ ವಿದ್ಯಾರ್ಥಿಗೆ ಸಹಾಯ ಮಾಡುವ, ಆ್ಯಂಬುಲೆನ್ಸ್ ಕರೆಸುವ ಅಥವಾ ಪೊಲೀಸರಿಗೆ ಮಾಹಿತಿ ನೀಡುವ ಬದಲು, ಸ್ಥಳದಲ್ಲಿ ನೆರೆದಿದ್ದವರು ಮೀನನ್ನು ಹೊತ್ತೊಯ್ಯಲು ಪ್ರಾರಂಭಿಸಿದ್ದಾರೆ. ರಿತೇಶ್ ಮೃತದೇಹವು ರಸ್ತೆಯ ಮೇಲೆ ಬಿದ್ದಿದ್ದರೂ, ದಾರಿಹೋಕರು ಮೀನುಗಳನ್ನು ಗೋಣಿಚೀಲಗಳಲ್ಲಿ ತುಂಬಿಕೊಂಡು ಸ್ಥಳದಿಂದ ಪರಾರಿಯಾಗುತ್ತಿರುವ ದೃಶ್ಯಗಳು ಕಂಡು ಬಂದಿವೆ. ಅಪಘಾತದ ಸುದ್ದಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ ಪುಪ್ರಿ ಪೊಲೀಸ್ ಠಾಣೆಯ ಸಿಬ್ಬಂದಿಗಳು ಜನರನ್ನು ಸ್ಥಳದಿಂದ ಚದುರಿಸಿ, ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ. ಬಳಿಕ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ರವಾನಿಸಿದ್ದಾರೆ. “ಅಪಘಾತ ಸಂಭವಿಸಿದಾಗ ಸಂತ್ರಸ್ತ ಬಾಲಕನು ಕೋಚಿಂಗ್ ತರಗತಿಗೆ ಹಾಜರಾಗಲು ತೆರಳುತ್ತಿದ್ದ. ಅಪಘಾತದಲ್ಲಿ ಭಾಗಿಯಾದ ಪಿಕಪ್ ವ್ಯಾನ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಆದರೆ ಸ್ಥಳದಿಂದ ಪರಾರಿಯಾಗುವಲ್ಲಿ ವ್ಯಾನ್ ಚಾಲಕ ಯಶಸ್ವಿಯಾಗಿದ್ದಾನೆ. ಮುಂದಿನ ಕಾನೂನು ಕ್ರಮ ಕೈಗೊಳ್ಳಲು ಆತನಿಗಾಗಿ ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆ” ಎಂದು ಪುಪ್ರಿ ಪೊಲೀಸ್ ಠಾಣೆಯ ಠಾಣಾಧಿಕಾರಿ ರಾಮಶಂಕರ್ ಕುಮಾರ್ ತಿಳಿಸಿದ್ದಾರೆ. एक बार फ़िर इंसानियत हुई शर्मसार डे//ड बॉडी सामने सड़क पर पड़ी रही मछली उठाते रहे स्थानाय लोग दर असल पुपरी में सड़क हादसा हुआ बोलेरो पिकअप पर मछली लोड था धक्का लगने से साइकल सवार की मौत होगई लेकिन लोग मछली पकड़ते रहे pic.twitter.com/46pfAdDcDQ — Sitamarhi Times (@SitamarhiTimes) January 16, 2026
ಕಲಬುರಗಿ | ಎಸಿಪಿ ಶಿವನಗೌಡ ಸೇರಿದಂತೆ 10 ಜನರಿಗೆ ಬೆಸ್ಟ್ ಪೊಲೀಸ್ ಪ್ರಶಸ್ತಿ
ಜ.20 ರಂದು ಪ್ರಶಸ್ತಿ ಪ್ರದಾನ ಸಮಾರಂಭ
ಕಲಬುರಗಿ | ಜ.19 ರಂದು ಶಾಸಕ ಅವಿನಾಶ್ ಜಾಧವ್ ಕಚೇರಿ ಎದುರು ಧರಣಿ: ರಮಾಕಾಂತ್ ಕುಲಕರ್ಣಿ
ಕಲಬುರಗಿ: ರಾಜ್ಯ ಸಿಮೆಂಟ್ ಕಾರ್ಖಾನೆಗಳಲ್ಲಿ ಅರ್ಹ ಗುತ್ತಿಗೆ ಕಾರ್ಮಿಕರಿಗೆ ಸಮಾನ ಕೆಲಸಕ್ಕೆ ಸಮಾನ ವೇತನ ನೀಡುವುದು ಸೇರಿದಂತೆ ಇತರೆ ಬೇಡಿಕೆಗಳನ್ನು ಈಡೇರಿಸಬೇಕೆಂದು ಆಗ್ರಹಿಸಿ ಜ.19 ರಂದು ಚಿಂಚೋಳಿ ಶಾಸಕ ಅವಿನಾಶ್ ಜಾಧವ್ ಅವರ ಚಿಂಚೋಳಿಯಲ್ಲಿರುವ ಶಾಸಕರ ಕಚೇರಿ ಎದುರು ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ ಎಂದು ಕಾರ್ಮಿಕ ಹೋರಾಟಗಾರ ರಮಾಕಾಂತ್ ಕುಲಕರ್ಣಿ ಹೇಳಿದ್ದಾರೆ. ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಲಬುರಗಿ ಜಿಲ್ಲೆಯಲ್ಲಿ 9 ಕಾರ್ಖಾನೆಗಳಿದ್ದು, ಇದರಲ್ಲಿ 8 ರಿಂದ 9 ಸಾವಿರ ಜನ ಗುತ್ತಿಗೆ ಆಧಾರದ ಅರ್ಹ ಕಾರ್ಮಿಕರು ಇದ್ದಾರೆ, ಆದರೆ ಅವರು ಸಮಾನ ಕೆಲಸಕ್ಕೆ ಸಮಾನ ವೇತನ ಪಡೆಯುತ್ತಿಲ್ಲ. ಜೊತೆಗೆ ಅವರಿಗೆ ಸಿಗಬೇಕಾದ ಮೂಲಭೂತ ಸೌಕರ್ಯಗಳು ತಲುಪುತ್ತಿಲ್ಲ. ಈ ನಿಟ್ಟಿನಲ್ಲಿ ಅರ್ಹ ಕಾರ್ಮಿಕರ ಸರ್ವೇ ಮಾಡುವ ಮೂಲಕ ಅವರಿಗೆ ಸಲ್ಲಬೇಕಾದ ಸೌಲಭ್ಯಗಳನ್ನು ದೊರಕಿಸಿಕೊಡುವಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಪ್ರಯತ್ನಿಸಬೇಕು ಎಂದು ಆಗ್ರಹಿಸಿದರು. 2024 ರ ಜು.9 ರಂದು ಕೇಂದ್ರ ಕಾರ್ಮಿಕ ಸಚಿವಾಲಯವು ಸಿಮೆಂಟ್ ಕಾರ್ಖಾನೆಗಳ ಗುತ್ತಿಗೆ ಆಧಾರದ ಕಾರ್ಮಿಕರಿಗೆ ಸಮಾನ ವೇತನ ಸೇರಿದಂತೆ ಇತರೆ ಸೌಲಭ್ಯಗಳು ಕುರಿತಾಗಿ ಕ್ರಮ ವಹಿಸುವಂತೆ ಬೆಂಗಳೂರಿನ ಕಾರ್ಮಿಕ ಇಲಾಖೆಗೆ ಸೂಚಿಸಿದೆ. ಆದರೂ ಇಲಾಖೆಯ ಅಧಿಕಾರಿಗಳು ಕಾರ್ಮಿಕರ ಸೌಲಭ್ಯಗಳನ್ನು ದೊರಕಿಸುವಲ್ಲಿ ಶ್ರಮಿಸುತ್ತಿಲ್ಲ. ಶಾಸಕರ ಕಚೇರಿ ಎದುರು ಪ್ರತಿಭಟಿಸಿ, ಮನವಿ ನೀಡಿ, ಅವರ ಮೂಲಕ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಕೆಗೆ ಒತ್ತಾಯಿಸಲಾಗುತ್ತಿದೆ ಎಂದರು. ಸಾಮಾಜಿಕ ಕಾರ್ಯಕರ್ತ ಬಿ.ಎಂ ರಾವೂರ ಮಾತನಾಡಿ, ಕಲಬುರಗಿ ಭಾಗದಲ್ಲಿ ರಾಜಕೀಯ ಇಚ್ಛಾಶಕ್ತಿಯ ಕೊರತೆ ಎದ್ದು ಕಾಣುತ್ತಿದೆ. ಎಲ್ಲೋ ಆಗಿರುವ ಘಟನೆಗಳಿಗೆ ಪ್ರತಿಕ್ರಿಯೆ ನೀಡುವ ರಾಜಕಾರಣಿಗಳು ತಮ್ಮದೇ ಜಿಲ್ಲೆಗಳ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಹಾಗೂ ಧ್ವನಿಯಾಗುವುದರಲ್ಲಿ ವಿಫಲರಾಗಿದ್ದಾರೆ. ಕಾರ್ಮಿಕರ ಕುರಿತು ಚುರುಕಿನ ಸಮೀಕ್ಷೆ ನಡೆಸಬೇಕು, ಅಂದಾಗ ಮಾತ್ರ ಕಾರ್ಮಿಕರ ನೈಜ ಅಂಶಗಳ ಸರ್ಕಾರಕ್ಕೆ ಸಿಗುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಸುದ್ದಿಗೋಷ್ಠಿಯಲ್ಲಿ ಎನ್.ಕೆ ಅರ್ಜುನ್, ಉಮೇಶ್ ಸಿಂಗ್ ಚೌಹಾಣ್, ಮತ್ತಿತರರು ಇದ್ದರು.
ಇ-ಆಫೀಸ್ ಬಳಕೆಯಲ್ಲಿ ರಾಜ್ಯದಲ್ಲಿಯೇ ಕಲಬುರಗಿ ನಂಬರ್ ವನ್ : ಸಚಿವ ಪ್ರಿಯಾಂಕ್ ಖರ್ಗೆ
ಕಲಬುರಗಿ, ಜ.17: ಸರ್ಕಾರಿ ಕಚೇರಿಗಳಲ್ಲಿ ಕಡತಗಳ ತ್ವರಿತ ವಿಲೇವಾರಿಯಲ್ಲಿ ತಂತ್ರಜ್ಞಾನವನ್ನು ಸಮರ್ಪಕ ಬಳಕೆ ಮಾಡಿಕೊಂಡ ಪರಿಣಾಮ ಇ-ಆಫೀಸ್ಬಳಕೆಯಲ್ಲಿ ಕಲಬುರಗಿ ಜಿಲ್ಲಾ ಪಂಚಾಯತ್ ಇಡೀ ರಾಜ್ಯದಲ್ಲಿಯೇ ನಂಬರ್-1 ಸ್ಥಾನ ಪಡೆದುಕೊಂಡಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ. 2025ನೇ ವರ್ಷದಲ್ಲಿ ಕಲಬುರಗಿ ಜಿಲ್ಲೆಯಲ್ಲಿ 2,938 ಇ-ಕಡತ ಸೃಷ್ಟಿಸಿ 54,381 ಕಡತ ವಿಲೇವಾರಿ ಮಾಡಲಾಗಿದೆ. ಸಾರ್ವಜನಿಕರಿಂದ ಸ್ವೀಕೃತ 13,664 ಪತ್ರಗಳನ್ನು ಇ-ರಸೀದಿಯಡಿ ಸೃಷ್ಟಿಸಿ 3,52,221 ಇ-ರಸೀದಿ ವಿಲೇವಾರಿ ಮಾಡಲಾಗಿದೆ ಎಂದರು. ಸರ್ಕಾರಿ ಕಚೇರಿಗಳು ಜನಸ್ನೇಹಿಯಾಗಬೇಕು. ಸಾರ್ವಜನಿಕರು ತಮ್ಮ ಕೆಲಸಕ್ಕೆ ಸರ್ಕಾರಿ ಕಚೇರಿಗಳಿಗೆ ಅನಗತ್ಯ ವರ್ಷಗಟ್ಟಲೆ ಅಲೆದಾಡುವುದನ್ನು ತಪ್ಪಿಸಲೆಂದು ಇ-ಆಫೀಸ್ ಅನುಷ್ಠಾನದ ಮೂಲಕ ಅಧಿಕಾರಿ-ಸಿಬ್ಬಂದಿಗೆ ಕಾಲಮಿತಿಲ್ಲಿಯೇ ಕಡತ ವಿಲೇವಾರಿ ಮಾಡಲು ನೀಡಿದ ಹೊಣೆಗಾರಿಕೆ ಫಲ ಇದಾಗಿದೆ ಎಂದರು. ಟಾಪ್ 10ನಲ್ಲಿ ಕಲ್ಯಾಣದ ನಾಲ್ಕು ಜಿಲ್ಲೆ : ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಇ-ಕಡತ ಬಳಕೆಯಲ್ಲಿ ಟಾಪ್-10 ಜಿಲ್ಲೆಗಳಲ್ಲಿ ಡಿ ಕಲಬುರಗಿ ಮೊದಲನೇ ಸ್ಥಾನದಲ್ಲಿದೆ. 2,339 ಇ-ಕಡತ ಸೃಜಿಸಿ ಐದನೇ ಸ್ಥಾನದಲ್ಲಿ ಬೀದರ್, 1,955 ಇ-ಕಡತ ಸೃಜಿಸಿ ಎಂಟನೇ ಸ್ಥಾನದಲ್ಲಿ ಯಾದಗಿರಿ, 1,924 ಇ-ಕಡತ ಸೃಷ್ಟಿಸುವುದರೊಂದಿಗೆ ಒಂಬತ್ತನೇ ಸ್ಥಾನದಲ್ಲಿ ಕೊಪ್ಪಳ ಜಿಲ್ಲಾ ಪಂಚಾಯತ್ ಇದೆ. ಗ್ರಾಮೀಣ ಭಾಗದಲ್ಲಿ ಆಡಳಿತ ವೇಗ ಪಡೆದುಕೊಂಡಿರುವುದಕ್ಕೆ ಇದು ಹಿಡಿದ ಕನ್ನಡಿಯಾಗಿದೆ. ಸುಗಮ ಅಡಳಿತಕ್ಕೆ ಕಲಬುರಗಿ ಜಿಲ್ಲೆ ಮಾದರಿಯಾಗಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ. ಗಮನ ಸೆಳೆದ ಆಳಂದ-ಅಫಜಲಪೂರ ತಾಲೂಕು ಪಂಚಾಯತ್ : ತಾಲೂಕು ಪಂಚಾಯತ್ವಾರು ಇ-ಆಫೀಸ್ ಬಳಕೆಯಲ್ಲಿಯೂ ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕು ಪಂಚಾಯತ್ 1,508 ಇ-ಕಡತ ಸೃಜಿಸಿ 3,089 ಇ-ಕಡತ ವಿಲೇವಾರಿ ಮಾಡಿ ಅಗ್ರ ಸ್ಥಾನ ಪಡೆದುಕೊಂಡರೆ, ಜಿಲ್ಲೆಯ ಆಳಂದ ತಾಲೂಕು ಪಂಚಾಯತ್ 1,127 ಇ-ಕಡತ ಸೃಜಿಸಿ 3,560 ಕಡತ ವಿಲೇವಾರಿ ಮತ್ತು 526 ಇ-ರಸೀದಿ ಸೃಷ್ಟಿಸಿ 2,022 ಇ-ರಸೀದಿ ವಿಲೇವಾರಿಯೊಂದಿಗೆ ರಾಜ್ಯದಲ್ಲಿಯೇ ದ್ವಿತೀಯ ಸ್ಥಾನ ಪಡೆದುಕೊಂಡಿದೆ. ಅದೇ ರೀತಿ ಅಫಜಲಪುರ ತಾಲೂಕು ಪಂಚಾಯತ್ 668 ಇ-ಕಡತ ಸೃಜಿಸಿ 3,189 ಕಡತ ವಿಲೇವಾರಿ ಮಾಡಿ ಏಳನೇ ಸ್ಥಾನ ಹಾಗೂ ಕಲಬುರಗಿ ತಾಲೂಕು ಪಂಚಾಯತ್ 564 ಇ-ಕಡತ ಸೃಜಿಸಿ 1,527 ಕಡತ ವಿಲೇವಾರಿ ಮಾಡಿ ಒಂಭತ್ತನೇ ಸ್ಥಾನ ಕಾಯ್ದುಕೊಂಡಿದೆ. ಈ ಮೂಲಕ ತಾಲೂಕಾವಾರು ಟಾಪ್ ಟೆನ್ ನಲ್ಲಿ ಕಲಬುರಗಿ ಜಿಲ್ಲೆಯ ಮೂರು ತಾಲೂಕುಗಳು ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿವೆ.
Indonesia | 11 ಮಂದಿಯನ್ನು ಹೊತ್ತೊಯ್ಯುತ್ತಿದ್ದ ವಿಮಾನ ನಾಪತ್ತೆ
ಜಕಾರ್ತಾ: ಶನಿವಾರ 11 ಮಂದಿ ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಪ್ರಾಂತೀಯ ಪ್ರಯಾಣಿಕರ ವಿಮಾನವೊಂದು ಗುಡ್ಡಗಾಡು ಪ್ರದೇಶವಾದ ದಕ್ಷಿಣ ಸುಲವೇಸಿಯನ್ನು ಸಮೀಪಿಸುವ ವೇಳೆ ವಾಯು ನಿಯಂತ್ರಣ ಕೊಠಡಿಯೊಂದಿಗೆ ಸಂಪರ್ಕ ಕಳೆದುಕೊಂಡಿದೆ. ವಿಮಾನದ ಪತ್ತೆಗಾಗಿ ವ್ಯಾಪಕ ರಕ್ಷಣಾ ಮತ್ತು ಶೋಧ ಕಾರ್ಯಾಚರಣೆಗೆ ಚಾಲನೆ ನೀಡಲಾಗಿದೆ ಎಂದು ಇಂಡೋನೇಶ್ಯಾ ಪ್ರಾಧಿಕಾರಗಳು ತಿಳಿಸಿವೆ. ಇಂಡೋನೇಶ್ಯಾ ಏರ್ ಟ್ರಾನ್ಸ್ಪೋರ್ಟ್ ಕಾರ್ಯಾಚರಿಸುತ್ತಿದ್ದ ಟರ್ಬೊಪ್ರಾಪ್ ಎಟಿಆರ್ 42-500 ವಿಮಾನವು ಯೋಗ್ಯಕರ್ತದಿಂದ ದಕ್ಷಿಣ ಸುಲವೇಸಿಯ ರಾಜಧಾನಿಯತ್ತ ಪ್ರಯಾಣಿಸುತ್ತಿದ್ದಾಗ ರಡಾರ್ ಸಂಪರ್ಕ ಕಡಿದುಕೊಂಡಿತು ಎಂದು ಸಾರಿಗೆ ಸಚಿವಾಲಯದ ವಕ್ತಾರೆ ಎಂಡಾಹ್ ಪುರ್ನಾಮ ಸಾರಿ ತಿಳಿಸಿದ್ದಾರೆ. ಮಧ್ಯಾಹ್ನ 1.17ರ ವೇಳೆಗೆ ಈ ವಿಮಾನವು ಬುಲುಸರೌಂಗ್ ರಾಷ್ಟ್ರೀಯ ಉದ್ಯಾನವನದ ಸಮೀಪದ ಗುಡ್ಡಗಾಡು ಪ್ರದೇಶವಾದ ಮಾರೋಸ್ ಜಿಲ್ಲೆಯ ಲಿಯಾಂಗ್-ಲಿಯಾಂಗ್ ಪ್ರದೇಶದ ಮೇಲೆ ಕೊನೆಯದಾಗಿ ಕಾಣಿಸಿಕೊಂಡಿತ್ತು ಎಂದು ಅವರು ಹೇಳಿದ್ದಾರೆ. “ವಾಯುಪಡೆ ಹೆಲಿಕಾಪ್ಟರ್ಗಳು, ಡ್ರೋನ್ಗಳು ಹಾಗೂ ಭೂಪಡೆಗಳ ನೆರವಿನಿಂದ ವಿವಿಧ ಶೋಧ ಮತ್ತು ರಕ್ಷಣಾ ತಂಡಗಳನ್ನು ನಿಯೋಜಿಸಲಾಗಿದೆ. ತನ್ನ ದಿಕ್ಕಿನ ಗುರಿಯನ್ನು ಸರಿಪಡಿಸುವಂತೆ ವಾಯು ನಿಯಂತ್ರಣ ಕೊಠಡಿಗೆ ಕೊನೆಯ ನಿರ್ದೇಶನಗಳನ್ನು ನೀಡಿದ ಬಳಿಕ ವಿಮಾನದ ರೇಡಿಯೊ ಸಂಪರ್ಕ ಕಡಿದುಹೋಯಿತು. ಈ ಹಿನ್ನೆಲೆಯಲ್ಲಿ ವಾಯು ನಿಯಂತ್ರಕರು ತುರ್ತು ಪರಿಸ್ಥಿತಿಯನ್ನು ಘೋಷಿಸಿದ್ದಾರೆ” ಎಂದು ಅವರು ತಿಳಿಸಿದ್ದಾರೆ.
Iran: ಇರಾನ್ ಪ್ರತಿಭಟನೆಗಳಿಗೆ ಇಸ್ರೇಲ್ ಮತ್ತು ಅಮೆರಿಕ ಕಾರಣ ಎಂದು ಆರೋಪಿಸಿದ ಖಮೇನಿ
ಇರಾನ್ ಮತ್ತು ಅಮೆರಿಕ ನಡುವೆ ಜಟಾಪಟಿ ಜೋರಾಗಿದೆ, ಇದರ ಜೊತೆಗೆ ಇಸ್ರೇಲ್ ವಿರುದ್ಧ ಕೂಡ ಇರಾನ್ ಕಾಲು ಕೆರೆದುಕೊಂಡು ಜಗಳಕ್ಕೆ ಹೋಗಲು ಸಜ್ಜಾದಂತೆ ಕಾಣುತ್ತಿದೆ. ಇದರ ಮೊದಲ ಭಾಗ ಎನ್ನುವಂತೆ ಇರಾನ್ ನೆಲದಲ್ಲಿ ನಡೆಯುತ್ತಿರುವ ಪ್ರತಿಭಟನೆಗಳಿಗೆ ಇಸ್ರೇಲ್ &ಅಮೆರಿಕ ಕಾರಣ ಎಂದು ಇರಾನ್ ಸರ್ವಾಧಿಕಾರಿ ಖಮೇನಿ ಆರೋಪ ಮಾಡಿರುವುದು ಕಿಚ್ಚು ಹೊತ್ತಿಸಿದೆ. ಈಗಾಗಲೇ ಇರಾನ್ನ ಹಿಂಸಾಚಾರ
ಬೀದರ್ | ಸಕಲ ಸರಕಾರಿ ಗೌರವಗಳೊಂದಿಗೆ ಡಾ.ಭೀಮಣ್ಣ ಖಂಡ್ರೆ ಅಂತ್ಯಕ್ರಿಯೆ
ಬೀದರ್: ಕಲ್ಯಾಣ ಕರ್ನಾಟಕದ ಧೀಮಂತ ನಾಯಕ, ಶತಾಯುಷಿ ಹಾಗೂ ಹಿರಿಯ ಮುತ್ಸದ್ದಿ ರಾಜಕಾರಣಿ ಡಾ.ಭೀಮಣ್ಣ ಖಂಡ್ರೆ (102) ಅವರ ಅಂತ್ಯಕ್ರಿಯೆಯನ್ನು ಸಕಲ ಸರ್ಕಾರಿ ಗೌರವಗಳೊಂದಿಗೆ ಭಾಲ್ಕಿಯ ಶಾಂತಿ ಧಾಮದಲ್ಲಿ ಶನಿವಾರ ನೆರವೇರಿಸಲಾಯಿತು. ಲಿಂಗಾಯತ ಧರ್ಮದ ವಿಧಿವಿಧಾನಗಳಂತೆ ಚಿಕಲಚಂದಾ ರಸ್ತೆಯಲ್ಲಿರುವ ಅವರ ಪತ್ನಿ ಲಕ್ಷ್ಮಿಬಾಯಿ ಅವರ ಸಮಾಧಿ ಸ್ಥಳದ ಸನಿಹದಲ್ಲೇ ಅಂತ್ಯ ಸಂಸ್ಕಾರ ನಡೆಸಲಾಯಿತು. ಶನಿವಾರ ಬೆಳಿಗ್ಗೆಯಿಂದಲೇ ಭಾಲ್ಕಿಯ ಅವರ ಸ್ವಗೃಹದಲ್ಲಿ ಪಾರ್ಥಿವ ಶರೀರವನ್ನು ಸಾರ್ವಜನಿಕ ದರ್ಶನಕ್ಕೆ ಇಡಲಾಗಿತ್ತು. ಜಿಲ್ಲೆ ಹಾಗೂ ನೆರೆಯ ರಾಜ್ಯಗಳಿಂದ ಆಗಮಿಸಿದ್ದ ಸಾವಿರಾರು ಅಭಿಮಾನಿಗಳು, ಕಾರ್ಯಕರ್ತರು ತಮ್ಮ ಪ್ರೀತಿಯ ನಾಯಕನ ಕೊನೆಯ ದರ್ಶನ ಪಡೆದರು. ಸಂಜೆ 4 ಗಂಟೆಗೆ ಶಾಸ್ತ್ರೋಕ್ತವಾಗಿ ಪೂಜೆ ಸಲ್ಲಿಸಿ ಅಂತಿಮ ಯಾತ್ರೆ ಆರಂಭಿಸಲಾಯಿತು. ಡಾ. ಭೀಮಣ್ಣ ಖಂಡ್ರೆ ಅವರ ಮೃತದೇಹವನ್ನು ನಗರದ ಪ್ರಮುಖ ರಸ್ತೆಗಳು, ಬಸವೇಶ್ವರ ವೃತ್ತ, ಗಾಂಧಿ ವೃತ್ತ ಹಾಗೂ ಅಂಬೇಡ್ಕರ್ ವೃತ್ತದ ಮೂಲಕ ಶಾಂತಿ ಧಾಮದವರೆಗೆ ಮೆರವಣಿಗೆಯಲ್ಲಿ ಕೊಂಡೊಯ್ಯಲಾಯಿತು. ಈ ವೇಳೆ ಅಭಿಮಾನಿಗಳು ನೆಚ್ಚಿನ ನಾಯಕನ ಪರವಾಗಿ ಜೈ ಘೋಷಗಳನ್ನು ಕೂಗಿದರು. ಶಾಂತಿ ಧಾಮಕ್ಕೆ ಪಾರ್ಥಿವ ಶರೀರ ತಲುಪುತ್ತಿದ್ದಂತೆಯೇ ಪೊಲೀಸರು ಕುಶಾಲತೋಪು ಹಾರಿಸಿ ಗೌರವ ಸಲ್ಲಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಮಾಜಿ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ, ಬಿ.ವೈ. ವಿಜಯೇಂದ್ರ, ಸಚಿವರಾದ ರಹೀಮ್ ಖಾನ್, ಶರಣಬಸಪ್ಪ ದರ್ಶನಾಪುರ ಸೇರಿದಂತೆ ವಿವಿಧ ಪಕ್ಷಗಳ ಮುಖಂಡರು, ನೂರಾರು ಮಠಾಧೀಶರು ಹಾಗೂ ಗಣ್ಯರು ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದರು. ನಾಡಿನ ಹಿರಿಯ ನಾಯಕರು, ಹೈದರಾಬಾದ್ ಕರ್ನಾಟಕ ವಿಮೋಚನೆ ಹೋರಾಟಗಾರ ಮಾಜಿ ಸಚಿವ ಭೀಮಣ್ಣ ಖಂಡ್ರೆ ನಿಧನದ ಸುದ್ದಿ ತಿಳಿದು ದುಃಖವಾಯಿತು. ಅಗಲಿದ ಹಿರಿಯ ಜೀವಕ್ಕೆ ಭಗವಂತ ಚಿರಶಾಂತಿ ಕರುಣಿಸಲಿ -ಆರ್.ಅಶೋಕ್, ಪ್ರತಿಪಕ್ಷ ನಾಯಕ ರಾಜಕಾರಣಿ ಭೀಮಣ್ಣ ಖಂಡ್ರೆ ಅಗಲಿಕೆಯಿಂದ ನಾಡಿಗೆ ತುಂಬಲಾರದ ನಷ್ಟವಾಗಿದೆ. ರಾಜಕಾರಣಿಗಳು ಸರಳವಾಗಿರಬೇಕು. ಸರಳತೆಯೇ ರಾಜಕಾರಣಿಗಳ ಕೈ ಹಿಡಿಯುತ್ತೆ ಎಂದು ಅವರು ಹೇಳಿದ್ದರು. ಅವರಿಂದ ನಾನು ಸರಳತೆ ಕಲಿತಿದ್ದೇನೆ. ಭೀಮಣ್ಣ ಖಂಡ್ರೆ ಅವರ ದಾರಿಯಲ್ಲೇ ನಾವೆಲ್ಲ ನಡೆಯುತ್ತಿದ್ದೇವೆ. -ಪ್ರಿಯಾಂಕ್ ಖರ್ಗೆ, ಸಚಿವ ಹಿರಿಯ ನಾಯಕ ಭೀಮಣ್ಣ ಖಂಡ್ರೆ ಸಮಾಜಕ್ಕೆ ಸಾಕಷ್ಟು ಕೊಡುಗೆ ಕೊಟ್ಟಿದ್ದಾರೆ. ನಮ್ಮ ತಂದೆ ಹಾಗು ಭೀಮಣ್ಣ ಖಂಡ್ರೆ ಬಹಳ ಆತ್ಮೀಯ ಸ್ನೇಹಿತರು. ಹಿರಿಯ ಜೀವಿಯನ್ನ ಕಳೆದುಕೊಂಡು ನಾವೆಲ್ಲ ಬಡವಾಗಿದ್ದೇವೆ. -ಎಂ.ಬಿ.ಪಾಟೀಲ್, ಸಚಿವ ಲೋಕನಾಯಕ ಭೀಮಣ್ಣ ಖಂಡ್ರೆ ನಿಧನದಿಂದ ರಾಜ್ಯ ಒಬ್ಬ ಸಮಾಜಮುಖಿ ಮಾರ್ಗದರ್ಶಕ ನೇತಾರರನ್ನು ಕಳೆದುಕೊಂಡಿದೆ. ರಾಜಕೀಯ ರಂಗದ ಒಂದು ಸುದೀರ್ಘ ಕೊಂಡಿ ಕಳಚಿದಂತಾಗಿದೆ. ಉತ್ತರ ಕರ್ನಾಟಕದ ಶೈಕ್ಷಣಿಕ ಮತ್ತು ಸಹಕಾರ ಕ್ಷೇತ್ರಗಳಲ್ಲಿ ಅಪಾರ ಕೊಡುಗೆ ನೀಡಿದ್ದರು. -ವಿಜಯೇಂದ್ರ, ಬಿಜೆಪಿ ರಾಜ್ಯಾಧ್ಯಕ್ಷ
ಉರಿಯೂತ ವಿರೋಧಿ ಆಹಾರ ಕ್ರಮದಿಂದ 18 ಕೆಜಿ ತೂಕ ಇಳಿಸಿದ ನಟ ಆಮೀರ್ ಖಾನ್!
ಉರಿಯೂತ ವಿರೋಧಿ ಆಹಾರವೆಂದರೆ ನಿರ್ದಿಷ್ಟ ಆಹಾರವನ್ನು ಸೇವಿಸುವುದಲ್ಲ. ಬದಲಾಗಿ ಉರಿಯೂತ ತರುವಂತಹ ಅಲ್ಟ್ರಾ ಸಂಸ್ಕರಿತ ಆಹಾರಗಳನ್ನು ಸೇವಿಸದೆ ಇರುವುದು. ಅಮೀರ್ ಖಾನ್ ತೂಕ ಇಳಿಸಿ ಸುದ್ದಿಯಲ್ಲಿದ್ದಾರೆ. ಇತ್ತೀಚೆಗೆ ಅವರು ಮಾಧ್ಯಮಗಳಿಗೆ ನೀಡಿದ ಸಂದರ್ಶನದಲ್ಲಿ, 18 ಕಿಲೋಗ್ರಾಂ ತೂಕ ಇಳಿಸಿದ್ದಾಗಿ ಹೇಳಿದ್ದಾರೆ. ಅವರ ಉರಿಯೂತ ವಿರೋಧಿ (anti-inflammatory) ಆಹಾರ ಕ್ರಮವೇ ತೂಕ ಇಳಿಕೆಗೆ ಮುಖ್ಯ ಕಾರಣವಾಗಿದೆ. ಪದೇಪದೇ ಬರುವ ತಲೆನೋವಿಗೆ ಪರಿಹಾರವಾಗಿ ಈ ಆಹಾರ ಕ್ರಮವನ್ನು ಅವರು ಅಳವಡಿಸಿಕೊಂಡಿದ್ದರು. ಈ ಆಹಾರ ಕ್ರಮದಿಂದ ತಲೆನೋವಿನ ಸಮಸ್ಯೆಯೂ ಪರಿಹಾರವಾಗಿದೆ ಮತ್ತು ಅನಗತ್ಯ ತೂಕವೂ ಇಳಿದಿದೆ. ಏನಿದು ಉರಿಯೂತ ವಿರೋಧಿ ಆಹಾರ ಕ್ರಮ? ಉರಿಯೂತ ವಿರೋಧಿ ಆಹಾರವೆಂದರೆ ನಿರ್ದಿಷ್ಟ ಆಹಾರವನ್ನು ಸೇವಿಸುವುದಲ್ಲ. ಬದಲಾಗಿ ಉರಿಯೂತ ಉಂಟುಮಾಡುವ ಅಲ್ಟ್ರಾ ಸಂಸ್ಕರಿತ ಆಹಾರಗಳನ್ನು ಸೇವಿಸದೆ ಇರುವುದು. ಅಂದರೆ ಪ್ಯಾಕೆಟ್ ಆಗಿ ಬರುವ ಬ್ರೆಡ್, ಸೆರೆಲ್ ಮತ್ತು ಪಾಸ್ತಾಗಳಂತಹ ವಸ್ತುಗಳನ್ನು ತೊರೆಯುವುದು. ಮುಖ್ಯವಾಗಿ ಸ್ವೀಟ್ನರ್ಗಳು (ಸಕ್ಕರೆ ಅಂಶ) ಸೇರಿಸಿರುವ ಯಾವುದೇ ಆಹಾರವನ್ನು ಬಿಟ್ಟುಬಿಡಬೇಕು ಎಂದು ಹಾರ್ವರ್ಡ್ ಆರೋಗ್ಯ ಅಧ್ಯಯನ ಹೇಳುತ್ತದೆ. ಉರಿಯೂತ ವಿರೋಧಿ ಆಹಾರ ಕ್ರಮ ಹೇಗೆ ಕೆಲಸ ಮಾಡುತ್ತದೆ? ತಜ್ಞರ ಪ್ರಕಾರ, ಉರಿಯೂತ ವಿರೋಧಿ ಆಹಾರ ಕ್ರಮ ದೇಹದಲ್ಲಿರುವ ದೀರ್ಘಕಾಲದ ಉರಿಯೂತವನ್ನು ಶಮನಗೊಳಿಸುತ್ತದೆ. ಇದರಲ್ಲಿ ಹಣ್ಣುಗಳು ಮತ್ತು ತರಕಾರಿಗಳು, ಇಡೀ ಧಾನ್ಯಗಳು, ಲೀನ್ ಪ್ರೊಟೀನ್ (ಕಡಿಮೆ ಕೊಬ್ಬುಳ್ಳ ಆಹಾರಗಳು) ಹಾಗೂ ಆರೋಗ್ಯಕರ ಕೊಬ್ಬುಗಳು (ಒಮೆಗಾ–3) ಸೇರಿರುತ್ತವೆ. ಸಂಸ್ಕರಿತ ಆಹಾರಗಳು, ಸಕ್ಕರೆ, ರಿಫೈನ್ಡ್ ಕೊಬ್ಬುಗಳು ಮತ್ತು ಅನಾರೋಗ್ಯಕರ ಕೊಬ್ಬುಗಳನ್ನು ಇದರಲ್ಲಿ ಸೇವಿಸುವಂತಿಲ್ಲ. ಸಂಧಿವಾತ ಹಾಗೂ ಹೃದಯ ರೋಗಗಳ ನಿಯಂತ್ರಣಕ್ಕೆ ಅನುಸರಿಸುವ ಮೆಡಿಟರೇನಿಯನ್ ಆಹಾರ ಕ್ರಮದಂತೆಯೇ ಇದು ಇರುತ್ತದೆ. ಉರಿಯೂತ ವಿರೋಧಿ ಆಹಾರ ಕ್ರಮ ಮತ್ತು ತೂಕ ಇಳಿಕೆ ಉರಿಯೂತದಿಂದ ಚಯಾಪಚಯ ಕ್ರಿಯೆ ಕುಂಠಿತವಾಗಬಹುದು. ಇದರಿಂದ ಮುಖ್ಯವಾಗಿ ಹೊಟ್ಟೆ ಸುತ್ತಲೂ ಕೊಬ್ಬು ಸಂಗ್ರಹವಾಗುತ್ತದೆ. ಉರಿಯೂತ ಕಡಿಮೆಯಾದಾಗ ಇನ್ಸುಲಿನ್ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ ಮತ್ತು ದೇಹದಲ್ಲಿನ ಕೊಬ್ಬು ಪರಿಣಾಮಕಾರಿಯಾಗಿ ಕರಗುತ್ತದೆ. ಆಹಾರದಲ್ಲಿ ಪೌಷ್ಠಿಕಾಂಶಗಳು ಸಮೃದ್ಧವಾಗಿರುವುದರಿಂದ ಅತಿಯಾಗಿ ತಿನ್ನುವ ಅಗತ್ಯವಿರುವುದಿಲ್ಲ. ನಿರಂತರವಾಗಿ ಆಹಾರ ಕ್ರಮವನ್ನು ನಿಯಂತ್ರಣದಲ್ಲಿ ಇಟ್ಟುಕೊಂಡರೆ ಕಾಲಕ್ರಮೇಣ ಉತ್ತಮ ಫಲಿತಾಂಶ ದೊರೆಯುತ್ತದೆ. ಮೈಗ್ರೇನ್ ಕಡಿಮೆ ಮಾಡಲು ಹೇಗೆ ಸಹಕಾರಿಯಾಗುತ್ತದೆ? ಮೈಗ್ರೇನ್ ನೋವಿಗೆ ಸಾಮಾನ್ಯ ಪ್ರಚೋದಕವಾಗಿರುವ ದೇಹ ಮತ್ತು ಮೆದುಳಿನ ಉರಿಯೂತವನ್ನು ಈ ಆಹಾರ ಕ್ರಮ ಶಮನಗೊಳಿಸುತ್ತದೆ. ಒಮೆಗಾ–3 ಕೊಬ್ಬುಗಳು (ವಾಲ್ನಟ್, ಫ್ಲ್ಯಾಕ್ಸ್, ಮೀನು) ಮತ್ತು ಆಂಟಿ ಆಕ್ಸಿಡೆಂಟ್ಗಳು ಸಿಜಿಆರ್ಪಿ (Calcitonin Gene-Related Peptide) ಮತ್ತು ನರಮಂಡಲದ ಉರಿಯೂತವನ್ನು ಕಡಿಮೆಗೊಳಿಸುತ್ತವೆ. ಉರಿಯೂತ ವಿರೋಧಿ ಆಹಾರ ಕ್ರಮದಲ್ಲಿ ಪ್ರೊಟೀನ್, ಫೈಬರ್ ಮತ್ತು ಆರೋಗ್ಯಕರ ಕೊಬ್ಬುಗಳ ಪ್ರಮಾಣ ಹೆಚ್ಚಿರುತ್ತದೆ. ಇದು ರಕ್ತದಲ್ಲಿನ ಗ್ಲುಕೋಸ್ ಮಟ್ಟವನ್ನು ಸ್ಥಿರವಾಗಿಡುತ್ತದೆ ಮತ್ತು ಮೈಗ್ರೇನ್ ಹೆಚ್ಚಾಗುವುದನ್ನು ತಡೆಯುತ್ತದೆ. ಉರಿಯೂತ ವಿರೋಧಿ ಆಹಾರ ಕರುಳಿಗೆ ಹೇಗೆ ಸಹಕಾರಿ? ಹಣ್ಣುಗಳು, ತರಕಾರಿಗಳು, ಕಡಲೆಗಳು, ಬೀಜಗಳು, ಇಡೀ ಧಾನ್ಯಗಳು ಮತ್ತು ಕೊಬ್ಬುಳ್ಳ ಮೀನುಗಳು ಉರಿಯೂತ ಕಡಿಮೆ ಮಾಡುವ ಆಂಟಿ ಆಕ್ಸಿಡೆಂಟ್ಗಳು ಹಾಗೂ ಒಮೆಗಾ–3 ಕೊಬ್ಬುಗಳನ್ನು ಒದಗಿಸುತ್ತವೆ. ಇವು ಉರಿಯೂತವನ್ನು ಕಡಿಮೆ ಮಾಡಿ ಆರೋಗ್ಯಕರ ರಕ್ತನಾಳಗಳಿಗೆ ಬೆಂಬಲ ನೀಡುತ್ತವೆ. ಇದರ ಪರಿಣಾಮವಾಗಿ ಮೆದುಳಿಗೆ ರಕ್ತ ಹರಿವಿನಲ್ಲಿ ಸುಧಾರಣೆ ಕಂಡುಬರುತ್ತದೆ ಮತ್ತು ನರದ ಉರಿ ಕಡಿಮೆಯಾಗುತ್ತದೆ. ಸಂಸ್ಕರಿತ ಆಹಾರ, ಸಕ್ಕರೆ, ಕರಿದ ವಸ್ತುಗಳು, ಮದ್ಯಪಾನ ಹಾಗೂ ಕೃತಕ ಅಡಿಟಿವ್ಗಳ ಸೇವನೆಯನ್ನು ಕಡಿಮೆ ಮಾಡಿದರೆ ಉರಿಯೂತ ಶಮನಗೊಳ್ಳುತ್ತದೆ. ಸಾಕಷ್ಟು ನೀರು ಕುಡಿಯುವುದು ಮತ್ತು ನಿಯಮಿತವಾಗಿ ಸಮತೋಲಿತ ಆಹಾರ ಸೇವಿಸುವುದರಿಂದ ರಕ್ತದಲ್ಲಿನ ಸಕ್ಕರೆ ಪ್ರಮಾಣ ಸ್ಥಿರವಾಗಿರುತ್ತದೆ. ಇದರಿಂದ ಮೈಗ್ರೇನ್ ಶಮನಕ್ಕೆ ಸಹಕಾರಿಯಾಗುತ್ತದೆ. ಉರಿಯೂತ ವಿರೋಧಿ ಆಹಾರ ಕ್ರಮ ಯಾವುದೇ ಆಹಾರ ಕ್ರಮವನ್ನು ಆರೋಗ್ಯ ತಜ್ಞರ ಸಲಹೆಯೊಂದಿಗೆ ಆರಂಭಿಸುವುದು ಸೂಕ್ತ. ಇಲ್ಲಿ ಕೆಲವು ಉರಿಯೂತ ವಿರೋಧಿ ಆಹಾರದ ವಿವರಗಳಿವೆ.
ಭಟ್ಕಳ: ಎಸ್ಐಆರ್ ಮತ್ತು ಮತದಾರ ನಕ್ಷೆಕರಣ ಕುರಿತು ಜಾಗೃತಿ ಸಮ್ಮೇಳನ
ಭಟ್ಕಳ: ಭಟ್ಕಳ ಮುಸ್ಲಿಂ ಯೂತ್ ಫೆಡರೇಶನ್ ವತಿಯಿಂದ ನವಾಯತ್ ಕಾಲನಿಯಲ್ಲಿ ಎಸ್ಐಆರ್ (Special Intensive Revision) ಹಾಗೂ ಮತದಾರ ನಕ್ಷೆಕರಣ ಕುರಿತ ಜಾಗೃತಿ ಸಮ್ಮೇಳನ ಆಯೋಜಿಸಲಾಯಿತು. ಈ ಸಂದರ್ಭ ದಾಖಲೆ ಸಂಗ್ರಹ, ಪರಿಶೀಲನಾ ಪ್ರಕ್ರಿಯೆಗಳಿಗೆ ಸಾರ್ವಜನಿಕರಿಗೆ ನೆರವಾಗುವ ಉದ್ದೇಶದಿಂದ, ತಂಝೀಮ್ ಮೇಲ್ವಿಚಾರಣೆಯಡಿ ಸಹಾಯವಾಣಿ ಕೇಂದ್ರಗಳನ್ನು ಸ್ಥಾಪಿಸಲಾಗುವುದು ಎಂದು ಪ್ರಕಟಿಸಲಾಯಿತು. ಸಮ್ಮೇಳನವನ್ನು ಉದ್ದೇಶಿಸಿ ಮಾತನಾಡಿದ ಫೆಡರೇಶನ್ ಪ್ರಧಾನ ಕಾರ್ಯದರ್ಶಿ ಮುಬಾಶಿರ್ ಹುಸೇನ್ ಹಲ್ಲಾರೆ, ಮುರ್ಡೇಶ್ವರ ಮತ್ತು ಮಾಂಕಿ ಸೇರಿದಂತೆ ವಿವಿಧ ಕ್ರೀಡಾ ಕೇಂದ್ರಗಳ ಸಂಯೋಜಕರು ಹಾಗೂ ಭಾಗವಹಿಸಿದ್ದವ ರಿಗೆ ಎಸ್ಐಆರ್ ಪ್ರಕ್ರಿಯೆಯ ಕುರಿತು ಮಾಹಿತಿ ನೀಡಿದರು. ನೋಟು ಅಮಾನ್ಯೀಕರಣ, ಸಿಎಎ–ಎನ್ಆರ್ಸಿ ಹಾಗೂ ಸಮಾನ ನಾಗರಿಕ ಸಂಹಿತೆ (ಯುಸಿಸಿ) ಕುರಿತ ಚರ್ಚೆಗಳ ನಂತರ ಇದೀಗ ಎಸ್ಐಆರ್ ಮೂಲಕ ಮತದಾರರ ಪಟ್ಟಿಯಲ್ಲಿ ಹೆಸರುಗಳನ್ನು ಅಳಿಸುವ ಪ್ರಯತ್ನಗಳು ನಡೆಯುತ್ತಿರುವ ಕುರಿತು ಅವರು ಎಚ್ಚರಿಸಿದರು. ಯುವ ನಾಗರಿಕರು ತಮ್ಮ ದಾಖಲೆಗಳನ್ನು ಸರಿಯಾಗಿ ಸಿದ್ಧಪಡಿಸಿಕೊಂಡು, ತಕ್ಷಣವೇ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರಿನ ಪರಿಶೀಲನೆ ಮಾಡಿಕೊಳ್ಳಬೇಕು ಎಂದು ಅವರು ಮನವಿ ಮಾಡಿದರು. ಎಸ್ಐಆರ್ ಪರಿಶೀಲನೆಗೆ ಪ್ರಸ್ತುತ ಆಧಾರ್ ಕಾರ್ಡ್, ರೇಷನ್ ಕಾರ್ಡ್ ಹಾಗೂ ಮತದಾರರ ಗುರುತಿನ ಚೀಟಿಗಳನ್ನು ಮಾನ್ಯ ದಾಖಲೆಗಳಾಗಿ ಪರಿಗಣಿಸಲಾಗುವುದಿಲ್ಲ ಎಂಬುದನ್ನೂ ಅವರು ಸ್ಪಷ್ಟಪಡಿಸಿದರು. ಇದೇ ರೀತಿಯ ಜಾಗೃತಿ ಕಾರ್ಯಕ್ರಮಗಳನ್ನು ಮುಂದಿನ ದಿನಗಳಲ್ಲಿ ಮುರ್ಡೇಶ್ವರ ಮತ್ತು ಮಾಂಕಿಯಲ್ಲೂ ಆಯೋಜಿಸಲಾಗುವುದು ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಮಾತನಾಡಿದ ಯುವ ವಕೀಲ ಹಾಗೂ ಫೆಡರೇಶನ್ ಉಪಾಧ್ಯಕ್ಷ ಇಮ್ರಾನ್ ಲಂಕಾ, ಎಸ್ಐಆರ್ನ ಕಾನೂನಾತ್ಮಕ ಅಂಶಗಳು, ಸಾರ್ವಜನಿಕರಲ್ಲಿ ಉಂಟಾಗಿರುವ ಗೊಂದಲಗಳು ಹಾಗೂ ಮತದಾರ ಪರಿಶೀಲನೆ ವೇಳೆ ಎದುರಾಗುವ ಸಾಮಾನ್ಯ ಸಮಸ್ಯೆಗಳ ಕುರಿತು ವಿವರಿಸಿದರು. ಸಮಯಕ್ಕೆ ಸರಿಯಾಗಿ ದಾಖಲೆ ಸಂಬಂಧಿತ ಸಮಸ್ಯೆಗಳನ್ನು ಬಗೆಹರಿಸದಿದ್ದರೆ ನಿಜವಾದ ಮತದಾರರ ಹೆಸರುಗಳೂ ಮತದಾರರ ಪಟ್ಟಿಯಿಂದ ಕೈ ತಪ್ಪುವ ಸಾಧ್ಯತೆ ಇದೆ ಎಂದು ಅವರು ಎಚ್ಚರಿಸಿದರು. ಕಾರ್ಯಕ್ರಮವು ಮೌಲವಿ ಸಯ್ಯದ್ ಸಾಲಿಕ್ ಬರ್ಮಾವರ್ ನದ್ವಿ ಅವರ ಪವಿತ್ರ ಕುರ್ಆನ್ ಪಠಣದೊಂದಿಗೆ ಆರಂಭ ಗೊಂಡು, ಫೆಡರೇಶನ್ ಅಧ್ಯಕ್ಷ ಮೌಲಾನಾ ವಾಸಿಯುಲ್ಲಾ ಡಿಎಫ್ ಅವರ ಧನ್ಯವಾದ ಸಮರ್ಪಣೆಯೊಂದಿಗೆ ಮುಕ್ತಾಯವಾಯಿತು. ವಕೀಲ ಅಫಾಕ್ ಕೋಲಾ, ಸಾಮಾಜಿಕ ಸಮಿತಿ ಕಾರ್ಯದರ್ಶಿ ಜಹೀರ್ ಶೇಖ್ ಸೇರಿದಂತೆ ಫೆಡರೇಶನ್ನ ಇತರ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಮಧ್ಯಪ್ರದೇಶ | 16 ವರ್ಷದ ಬಾಲಕನಿಗೆ ಹಲ್ಲೆ ನಡೆಸಿ ಬೆತ್ತಲೆ ಮೆರವಣಿಗೆ
ಭೋಪಾಲ್ ಜ. 17: ಮೂರು ತಿಂಗಳ ಹಿಂದೆ ಬಾಲಕಿಯೊಂದಿಗೆ ಪರಾರಿಯಾಗಿದ್ದ ಕಾರಣ 16 ವರ್ಷದ ಬಾಲಕನಿಗೆ ಹಲ್ಲೆ ನಡೆಸಿ ಮುಖಕ್ಕೆ ಮಸಿ ಬಳಿದ ಹಾಗೂ ಸುಮಾರು 1.5 ಕಿ.ಮೀ. ಬೆತ್ತಲೆ ಮೆರವಣಿಗೆ ನಡೆಸಿದ ಘಟನೆ ಮದ್ಯಪ್ರದೇಶದ ಉಜ್ಜೈನ್ಯಲ್ಲಿ ಗುರುವಾರ ನಡೆದಿದೆ ಎಂದು ಹೇಳಲಾಗಿದೆ. ಘಟನೆಯ ವೀಡಿಯೊ ವೈರಲ್ ಆದ ಬಳಿಕ ಪೊಲೀಸರು ಭಾರತೀಯ ನ್ಯಾಯ ಸಂಹಿತೆಯ ಸಂಬಂಧಿತ ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ ಹಾಗೂ ನಾಲ್ವರು ಆರೋಪಿಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಮೂರು ತಿಂಗಳ ಹಿಂದೆ ಬಾಲಕನೊಂದಿಗೆ ಪರಾರಿಯಾದ ಬಾಲಕಿಯ ಕುಟುಂಬದ ಸದಸ್ಯರು ಬಾಲಕನಿಗೆ ಉಜ್ಜೈನಿಯ ಪನ್ವಾಸ ಪ್ರದೇಶದಲ್ಲಿ ಹಲ್ಲೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ನಾವಿಬ್ಬರು ಮೂರು ತಿಂಗಳ ಹಿಂದೆ ಪರಾರಿಯಾಗಿದ್ದೆವು. ಎರಡು ವಾರಗಳ ಹಿಂದೆ ಹಿಂದಿರುಗಿದ್ದೆವು. ತನ್ನನ್ನು ಒಂದು ತಿಂಗಳು ಕಾಲ ಜೈಲಿಗೆ ಕಳುಹಿಸಲಾಗಿತ್ತು. ಬಾಲಕಿಯನ್ನು ಸುಧಾರಣಾ ಕೇಂದ್ರಕ್ಕೆ ಕಳುಹಿಸಲಾಗಿತ್ತು ಎಂದು ಬಾಲಕ ಹೇಳಿದ್ದಾನೆ. ‘‘ಅನಂತರ ಬಾಲಕಿಯ ಸಂಬಂಧಿಕರು ನನ್ನನ್ನು ಗಮನಿಸಿದರು ಹಾಗೂ ಬಲವಂತವಾಗಿ ವಾಹನದಲ್ಲಿ ಕರೆದುಕೊಂಡು ಹೋದರು. ಕೊಠಡಿ ಒಳಗೆ ಗಂಟೆಗಳ ಕಾಲ ಕೂಡಿ ಹಾಕಿದರು. ಅಲ್ಲಿ ನಿರ್ದಯವಾಗಿ ಥಳಿಸಿದರು. ಬೆತ್ತಲೆ ಮಾಡಿದರು. ಮುಖಕ್ಕೆ ಮಸಿ ಬಳಿದರು. ಸುಮಾರು 1.5 ಕಿ.ಮೀ. ಮೆರವಣಿಗೆ ಮಾಡಿದರು. ಪೊಲೀಸರಿಗೆ ಅನಂತರ ಈ ಬಗ್ಗೆ ತಿಳಿಯಿತು. ಆರೋಪಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಅವರು ಭರವಸೆ ನೀಡಿದ್ದಾರೆ’’ ಎಂದು ಬಾಲಕ ಹೇಳಿದ್ದಾನೆ. ಬಾಲಕ ಶುಕ್ರವಾರ ತನ್ನ ಅಂಗವಿಕಲ ತಾಯಿಯೊಂದಿಗೆ ಉಜ್ಜೈನಿಯ ಜಿಲ್ಲಾ ಪೊಲೀಸ್ ಕಂಟ್ರೋಲ್ ರೂಮ್ ಅನ್ನು ಸಂಪರ್ಕಿಸಿದ್ದಾನೆ. ಅಲ್ಲದೆ ಆರೋಪಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಆಗ್ರಹಿಸಿದ್ದಾನೆ. ‘‘ಘಟನೆಗೆ ಸಂಬಂಧಿಸಿ ಭಾರತೀಯ ನ್ಯಾಯ ಸಂಹಿತೆಯ ಸಂಬಂಧಿತ ಸೆಕ್ಷನ್ಗಳ ಅಡಿಯಲ್ಲಿ ಪನ್ವಾಸ ಪೊಲೀಸ್ ಠಾಣೆಯಲ್ಲಿ ಗುರುವಾರ ಪ್ರಕರಣ ದಾಖಲಿಸಲಾಗಿದೆ. ನಾಲ್ವರು ಆರೋಪಿಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ’’ ಎಂದು ಹೆಚ್ಚುವರಿ ಎಸ್ಪಿ (ಉಜ್ಜೈನಿ) ಅಲೋಕ್ ಶರ್ಮಾ ತಿಳಿಸಿದ್ದಾರೆ.
ಮಂಗಳೂರು ವಕೀಲರ ಸಂಘದಿಂದ ನ್ಯಾ. ಮುರಳಿಧರ ಪೈಗೆ ಸನ್ಮಾನ
ಮಂಗಳೂರು, ಜ.17: ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳಾಗಿ ನೇಮಕಗೊಂಡು ಇದೀಗ ಧಾರವಾಡ ಹೈಕೋರ್ಟ್ ಪೀಠದಲ್ಲಿ ಸೇವೆ ಸಲ್ಲಿಸುತ್ತಿರುವ ನ್ಯಾಯಮೂರ್ತಿ ಮುರಳಿಧರ್ ಪೈ ಯವರನ್ನು ಮಂಗಳೂರು ವಕೀಲರ ಸಂಘದಿಂದ ಸನ್ಮಾನಿಸಲಾಯಿತು. ಜಿಲ್ಲಾ ನ್ಯಾಯಾಲಯದಲ್ಲಿ ಲೋಕಾಯುಕ್ತ ನ್ಯಾಯಾಧೀಶರಾಗಿ, ಪ್ರಧಾನ ಜಿಲ್ಲಾ ಹಾಗೂ ಸತ್ತ ನ್ಯಾಯಾಧೀಶರಾಗಿ ಸುಮಾರು ಐದು ವರ್ಷಗಳ ಕಾಲ ಸೇವೆ ಸಲ್ಲಿಸಿ ನಂತರ ಕರ್ನಾಟಕ ಉಚ್ಚ ನ್ಯಾಯಾಲಯದ ರಿಜಿಸ್ಟರ್ ಜನರಲ್ ಆಗಿ ನೇಮಕಗೊಂಡು ಹೈಕೋರ್ಟ್ ನ್ಯಾಯಾಧೀಶರಾಗಿರುವ ನ್ಯಾಯಮೂರ್ತಿ ಮುರಳಿಧರ್ ಪೈ ಗೌರವವನ್ನು ಸ್ವೀಕರಿಸಿ ಮಾತನಾಡಿ‘ ತನ್ನ ಹುಟ್ಟೂರು ಕಾರ್ಕಳವಾದರೂ ತಾನು ನ್ಯಾಯಾಧೀಶನಾಗಿ ಹೆಚ್ಚಿನ ಸೇವೆಯನ್ನು ಮಂಗಳೂರಿನಲ್ಲಿ ಸಲ್ಲಿಸಿದ ಕಾರಣ ಮಂಗಳೂರು ತಮಗೆ ತವರು ಮನೆ ಇದ್ದಂತೆ, ಇಲ್ಲಿನ ಪ್ರತಿಭಾವಂತ ವಕೀಲರ ನಡುವೆ ಸೇವೆ ಸಲ್ಲಿಸಿದ ಅನುಭವ ಇಂದು ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿಯಾಗಿ ಪರಿಣಾಮ ಕಾರಿಯಾಗಿ ಸೇವೆ ಸಲ್ಲಿಸಲು ಅವಕಾಶ ದೊರಕಿದೆ ಎಂದರು. ಈ ಸಂದರ್ಭದಲ್ಲಿ ಮಂಗಳೂರು ವಕೀಲರ ಸಂಘದ ಸದಸ್ಯರು ವಿಧಾನ ಪ್ರಶಸ್ತಿ ಸದಸ್ಯ ಐವನ್ ಡಿ ಸೋಜ ಶುಭ ಹಾರೈಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಧಾನ ಜಿಲ್ಲಾ ಹಾಗೂ ಸೆಷನ್ಸ್ ನ್ಯಾಯಾಧೀಶ ಬಸವರಾಜ್ ವಹಿಸಿದ್ದರು. ಉಪಾಧ್ಯಕ್ಷರಾದ ಸುಜಿತ್ ಕುಮಾರ್, ಜೊತೆ ಕಾರ್ಯದರ್ಶಿ ಜ್ಯೋತಿ, ಕೋಶಾಧಿಕಾರಿ ಗಿರೀಶ್ ಶೆಟ್ಟಿ, ರಾಜ್ಯಸಭಾ ಮಾಜಿ ಸದಸ್ಯ ಬಿ ಇಬ್ರಾಹಿಂ, ವಿಧಾನ ಪರಿಷತ್ನ ಮಾಜಿ ಸದಸ್ಯ ಮೋನಪ್ಪ ಭಂಡಾರಿ, ರಾಜ್ಯ ವಕೀಲರ ಪರಿಷತ್ನ ಮಾಜಿ ಉಪಾಧ್ಯಕ್ಷ ಟಿ ಎನ್ ಪೂಜಾರಿ, ಸಂಘದ ಮಾಜಿ ಅಧ್ಯಕ್ಷ ಎಂ ಆರ್ ಬಳ್ಳಾಲ್, ಅಶೋಕ ಅರಿಗ, ಶಂಭು ಶರ್ಮ, ಪೃಥ್ವಿರಾಜ್ ರೈ, ನರಸಿಂಹ ಹೆಗಡೆ, ಇತರ ಹಿರಿಯ ಸದಸ್ಯರು ಉಪಸ್ಥಿತರಿದ್ದರು. ಮಂಗಳೂರು ವಕೀಲರ ಸಂಘದ ಅಧ್ಯಕ್ಷ ರಾಘವೇಂದ್ರ ಎಚ್ ವಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು, ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀಧರ್ ಎಚ್ ವಂದಿಸಿ ಕಾರ್ಯಕ್ರಮನ್ನು ನಿರೂಪಿಸಿದರು.
ಇಂಡಿಗೋಗೆ ₹22 ಕೋಟಿ ದಂಡ, ₹50 ಕೋಟಿ ಬ್ಯಾಂಕ್ ಗ್ಯಾರಂಟಿ ನೀಡಲು ಕೇಂದ್ರ ಸರ್ಕಾರ ಸೂಚನೆ
2025ರ ಡಿಸೆಂಬರ್ನಲ್ಲಿ ಇಂಡಿಗೋ ವಿಮಾನಗಳ ಹಾರಾಟದಲ್ಲಿ ಉಂಟಾದ ಭಾರೀ ವ್ಯತ್ಯಯವನ್ನು ಗಂಭೀರವಾಗಿ ಪರಿಗಣಿಸಿರುವ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (ಡಿಜಿಸಿಎ), ವಿಮಾನಯಾನ ಸಂಸ್ಥೆಗೆ 22.20 ಕೋಟಿ ರೂಪಾಯಿಗಳ ದಂಡ ವಿಧಿಸಿದೆ. ತನಿಖೆಯಲ್ಲಿ ಇಂಡಿಗೋ ಸಂಸ್ಥೆಯ ಯೋಜನೆ ಮತ್ತು ಕಾರ್ಯಾಚರಣೆಯಲ್ಲಿ ಗಂಭೀರ ಲೋಪಗಳು ಕಂಡುಬಂದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಸಿಇಒ ಸೇರಿದಂತೆ ಉನ್ನತ ಆಡಳಿತ ಮಂಡಳಿಯ ಸದಸ್ಯರ ವಿರುದ್ಧ ಕಠಿಣ ಕ್ರಮಕ್ಕೆ ಸೂಚಿಸಲಾಗಿದ್ದು, ಭವಿಷ್ಯದಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ತಡೆಯಲು 50 ಕೋಟಿ ರೂ.ಗಳ ಬ್ಯಾಂಕ್ ಗ್ಯಾರಂಟಿ ನೀಡುವಂತೆ ಆದೇಶಿಸಲಾಗಿದೆ.
ಇಂದೋರ್ಗೆ ರಾಹುಲ್ ಗಾಂಧಿ ಭೇಟಿ: ಕಲುಷಿತ ನೀರು ಕುಡಿದು ಮೃತರ ಕುಟುಂಬಸ್ಥರ ಜೊತೆ ಮಾತುಕತೆ
ಇಂದೋರ್, ಜ. 17: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಶನಿವಾರ ಇಂದೋರ್ಗೆ ಆಗಮಿಸಿದರು ಹಾಗೂ ಕಲುಷಿತ ನೀರು ಕುಡಿದು ವಾಂತಿ, ಅತಿಸಾರ ಬಾಧಿಸಿ ಪ್ರಾಣ ಕಳೆದುಕೊಂಡವರ ಕುಟುಂಬಗಳ ಸದಸ್ಯರು ಹಾಗೂ ಅಸ್ವಸ್ಥರಾಗಿ ಚಿಕಿತ್ಸೆ ಪಡೆಯುತ್ತಿರುವವರನ್ನು ಭೇಟಿಯಾದರು. ಇಂದೋರ್ನ ಬಾಂಬೆ ಆಸ್ಪತ್ರೆಗೆ ತೆರಳಿದ ರಾಹುಲ್ ಗಾಂಧಿ ಕಲುಷಿತ ನೀರು ಕುಡಿದು ವಾಂತಿ ಹಾಗೂ ಅತಿಸಾರ ಬಾಧಿಸಿ ಚಿಕಿತ್ಸೆ ಪಡೆಯುತ್ತಿರುವವರು ಹಾಗೂ ಅವರ ಕುಟುಂಬಗಳ ಸದಸ್ಯರನ್ನು ಭೇಟಿಯಾದರು. ಸಂತ್ರಸ್ತ ಕುಟುಂಬಗಳಿಗೆ ಬೆಂಬಲವಾಗಿ ನಿಲ್ಲುವ ಹಾಗೂ ತಳಮಟ್ಟದ ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳುವ ಉದ್ದೇಶವನ್ನು ರಾಹುಲ್ ಗಾಂಧಿ ಅವರ ಈ ಭೇಟಿ ಹೊಂದಿತ್ತು. ಭಗೀರಥಪುರಕ್ಕೆ ಭೇಟಿ ನೀಡಿದ ರಾಹುಲ್ ಗಾಂಧಿ, ಕಲುಷಿತ ನೀರು ಕುಡಿದು ಮೃತಪಟ್ಟವರ ಕುಟುಂಬಗಳ ಸದಸ್ಯರಿಗೆ ಸಾಂತ್ವನ ಹೇಳಿದರು. ಮಧ್ಯಪ್ರದೇಶದ ಕಾಂಗ್ರೆಸ್ ಅಧ್ಯಕ್ಷ ಪಟ್ವಾರಿ, ನಿಂದನೆ ಹಾಗೂ ಪ್ರತಿ ನಿಂದನೆಯ ರಾಜಕೀಯದಲ್ಲಿ ತೊಡಗಿರುವುದಕ್ಕಾಗಿ ರಾಜ್ಯದಲ್ಲಿರುವ ಬಿಜೆಪಿ ಸರಕಾರವನ್ನು ತರಾಟೆಗೆ ತೆಗದುಕೊಂಡರು. ಮಧ್ಯಪ್ರದೇಶವನ್ನು 20 ವರ್ಷಗಳಿಗೂ ಹೆಚ್ಚು ಕಾಲ ಆಳಿದ ಬಿಜೆಪಿಗೆ ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡವರ ನೋವನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಾಗಿಲ್ಲ. ಆದರೆ, ರಾಹುಲ್ ಗಾಂಧಿ ಅವರಿಗೆ ಸಂತ್ರಸ್ತರ ನೋವನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಾಗಿದೆ ಎಂದು ಅವರು ತಿಳಿಸಿದರು. ಪ್ರಧಾನಿ ನರೇಂದ್ರ ಮೋದಿ ಅವರ ನವ ಭಾರತದಲ್ಲಿ ಜನರಿಗೆ ಕುಡಿಯುವ ನೀರನ್ನು ಪೂರೈಸಲು ಕೂಡ ಸಾಧ್ಯವಾಗುತ್ತಿಲ್ಲ. ಆದುದರಿಂದ ಈ ಬಗ್ಗೆ ದೇಶಾದ್ಯಂತ ಧ್ವನಿ ಎತ್ತಬೇಕು ಎಂದು ಪಟ್ವಾರಿ ಹೇಳಿದರು.
ಮಹಾರಾಷ್ಟ್ರ ನಗರ ಪಾಲಿಕೆ ಚುನಾವಣೆಗಳಲ್ಲಿ ಹೈದರಾಬಾದ್ ಮೂಲದ ಎಐಎಂಐಎಂ ತೋರಿದ ಅದ್ಭುತ ಪ್ರದರ್ಶನ, ರಾಷ್ಟ್ರ ರಾಜಕಾರಣದ ಗಮನ ಸೆಳೆದಿದೆ. ಈಗಾಗಲೇ ಬಿಹಾರದಲ್ಲಿ ತನ್ನ ಅಸ್ತಿತ್ವವನ್ನು ಸಾಬೀತುಪಡಿಸಿರುವ ಪಕ್ಷ, ಅಸಾದುದ್ದೀನ್ ಓವೈಸಿ ನೇತೃತ್ವದಲ್ಲಿ ದೇಶಾದ್ಯಂತ ಹಂತ ಹಂತವಾಗಿ ವಿಸ್ತರಿಸುತ್ತಿದೆ. ಮಹಾರಾಷ್ಟ್ರ ದಿಗ್ವಿಜಯದಿಂದ ಸಂತುಷ್ಟರಾಗಿರುವ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ, ಭಾರತವನ್ನು ಮತ್ತಷ್ಟು ಸದೃಢ ಮಾಡಲು ಮುಸ್ಲಿಂ ನಾಯಕತ್ವ ಬೆಳೆಸುವ ಗುರಿಯೊಂದಿಗೆ ಕೆಲಸ ಮಾಡುವುದಾಗಿ ಘೋಷಿಸಿದ್ದಾರೆ. ಈ ಕುರಿತು ಇಲ್ಲಿದೆ ಸಂಪೂರ್ಣ ಮಾಹಿತಿ.
ಚತ್ತೀಸ್ಗಢ | ಭದ್ರತಾ ಪಡೆಗಳ ಗುಂಡಿನ ದಾಳಿಗೆ ಇಬ್ಬರು ಶಂಕಿತ ನಕ್ಸಲರು ಮೃತ್ಯು
ಬಿಜಾಪುರ, ಜ. 17: ಚತ್ತೀಸ್ಗಢದ ಬಿಜಾಪುರ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ಹಾಗೂ ಶಂಕಿತ ನಕ್ಸಲೀಯರ ನಡುವೆ ಶನಿವಾರ ನಡೆದ ಗುಂಡಿನ ಕಾಳಗದಲ್ಲಿ ದಿಲೀಪ್ ಬೆಡ್ಜಾ ಸೇರಿದಂತೆ ಇಬ್ಬರು ಶಂಕಿತ ಮಾವೋವಾದಿಗಳು ಮೃತಪಟ್ಟಿದ್ದಾರೆ. ಭದ್ರತಾ ಪಡೆಗಳ ಜಂಟಿ ತಂಡ ಜಿಲ್ಲೆಯ ವಾಯುವ್ಯ ಪ್ರದೇಶದ ಅರಣ್ಯದಲ್ಲಿ ನಕ್ಸಲ್ ನಿಗ್ರಹ ಕಾರ್ಯಾಚರಣೆ ನಡೆಸಿದ ಸಂದರ್ಭ ಶನಿವಾರ ಬೆಳಗ್ಗೆ ಗುಂಡಿನ ಕಾಳಗ ನಡೆದಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. ಈ ಪ್ರದೇಶದಲ್ಲಿ ವಿಭಾಗೀಯ ಸಮಿತಿ ಸದಸ್ಯ ಬೆಡ್ಜಾ ಉಪಸ್ಥಿತಿಯ ಕುರಿತ ಮಾಹಿತಿಯ ಆಧಾರದಲ್ಲಿ ಆರಂಭಿಸಲಾದ ಕಾರ್ಯಾಚರಣೆಯಲ್ಲಿ ವಿಶೇಷ ಕಾರ್ಯ ಪಡೆ ಹಾಗೂ ಡಿಸ್ಟ್ರಿಕ್ಟ್ ರಿಸರ್ವ್ ಗಾರ್ಡ್ (ಎರಡೂ ಚತ್ತೀಸ್ಗಢ ಪೊಲೀಸ್ನ ಘಟಕ) ಹಾಗೂ ಕೋಬ್ರಾ (ಕಮಾಂಡೊ ಬೆಟಾಲಿಯನ್ ಫಾರ್ ರೆಸಲ್ಯೂಟ್ ಆ್ಯಕ್ಷನ್-ಸಿಆರ್ಪಿಎಫ್ನ ಘಟಕ) ಕ್ಕೆ ಸೇರಿದ ಸಿಬ್ಬಂದಿ ಪಾಲ್ಗೊಂಡರು. ಗುಂಡಿನ ಕಾಳಗದಲ್ಲಿ ಮೃತಪಟ್ಟ ಇನ್ನೋರ್ವನ ಗುರುತು ಇದುವರೆಗೆ ಪತ್ತೆಯಾಗಿಲ್ಲ ಎಂದು ಅವರು ತಿಳಿಸಿದ್ದಾರೆ. ‘‘ಘಟನಾ ಸ್ಥಳದಲ್ಲಿ ಇದುವರೆಗೆ ಇಬ್ಬರು ನಕ್ಸಲೀಯರ ಮೃತದೇಹಗಳು ಹಾಗೂ ಎ.ಕೆ. 47 ರೈಫಲ್ಗಳು ಪತ್ತೆಯಾಗಿವೆ. ಶೋಧ ಕಾರ್ಯಾಚರಣೆ ಮುಂದುವರಿದಿದೆ’’ ಎಂದು ಅವರು ತಿಳಿಸಿದ್ದಾರೆ. ಮಾವೋವಾದಿಗಳ ರಾಷ್ಟ್ರೀಯ ಉದ್ಯಾನವನ ಪ್ರದೇಶ ಸಮಿತಿಯಲ್ಲಿ ಬೆಡ್ಜಾ ಸಕ್ರಿಯನಾಗಿದ್ದ. ಈತ ಹಲವು ದಾಳಿಗಳಲ್ಲಿ ಭಾಗಿಯಾಗಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್ ಆಯೋಜನೆಗೆ ಸರಕಾರ ಅನುಮತಿ
ಬೆಂಗಳೂರು : ಕಾಲ್ತುಳಿತ ದುರಂತದ ಹಿನ್ನೆಲೆಯಲ್ಲಿ ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸ್ಥಗಿತಗೊಂಡಿದ್ದ ಅಂತರರಾಷ್ಟ್ರೀಯ ಕ್ರಿಕೆಟ್ ಮತ್ತು ಐಪಿಎಲ್ ಪಂದ್ಯಗಳನ್ನು ಪುನಃ ಆಯೋಜಿಸಲು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಗೆ (ಕೆಎಸ್ಸಿಎ), ರಾಜ್ಯ ಗೃಹ ಇಲಾಖೆ ಅಧಿಕೃತವಾಗಿ ಅನುಮತಿ ನೀಡಿದೆ. ನ್ಯಾಯಮೂರ್ತಿ ಮೈಕಲ್ ಡಿ.ಕುನ್ಹಾ ಅವರ ವರದಿಯಲ್ಲಿನ ಅಂಶಗಳನ್ನು ಜಾರಿಗೊಳಿಸಿ ಪಂದ್ಯಗಳನ್ನು ನಡೆಸಲು ಒಪ್ಪಿಗೆ ನೀಡಲಾಗಿದೆ. ಸರಕಾರ, ಸಂಬಂಧಿತ ಅಧಿಕಾರಿಗಳು ನಿಗದಿಪಡಿಸಿರುವ ನಿರ್ದಿಷ್ಟ ಷರತ್ತುಗಳು, ನಿಯಮಗಳನ್ನು ಪಾಲಿಸುವ ಷರತ್ತಿನೊಂದಿಗೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ರಿಕೆಟ್ ಪಂದ್ಯಾವಳಿಗಳನ್ನು ಆಯೋಜಿಸಲು ಅನುಮತಿ ನೀಡಲಾಗಿದೆ. ಶನಿವಾರ ಈ ಕುರಿತು ಪ್ರಕಟನೆ ಹೊರಡಿಸಿರುವ ಕೆಎಸ್ಸಿಎ ವಕ್ತಾರ ವಿನಯ್ ಮೃತ್ಯುಂಜಯ, ಸರಕಾರದ ಗೃಹ ಇಲಾಖೆಯು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಂದ್ಯಗಳನ್ನು ನಡೆಸಲು ಅನುಮತಿ ನೀಡಿರುವುದು ನಮಗೆ ಸಂತೋಷ ತಂದಿದೆ ಎಂದು ತಿಳಿಸಿದ್ದಾರೆ. ಸರಕಾರ ನೇಮಿಸಿದ್ದ ಕಾರ್ಯಪಡೆಯು ಕ್ರೀಡಾಂಗಣದ ಭದ್ರತಾ ಕ್ರಮಗಳನ್ನು ಪರಿಶೀಲಿಸಿ ವರದಿ ನೀಡಿದ ನಂತರ ಈ ಅನುಮತಿ ದೊರೆತಿದೆ. 2025ರಲ್ಲಿ ಜೂನ್ 4 ರಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ತಂಡವು 18 ವರ್ಷಗಳ ನಂತರ ಐಪಿಎಲ್ ಟ್ರೋಫಿ ಗೆದ್ದಿತ್ತು. ಈ ವೇಳೆ ನಡೆದ ವಿಜಯೋತ್ಸವದ ಮೆರವಣಿಗೆಯಲ್ಲಿ ಉಂಟಾದ ನೂಕುನುಗ್ಗಲು ಮತ್ತು ಕಾಲ್ತುಳಿತದಿಂದಾಗಿ 11 ಮಂದಿ ಅಭಿಮಾನಿಗಳು ಪ್ರಾಣ ಕಳೆದುಕೊಂಡಿದ್ದರು. ಈ ಘಟನೆಯ ನಂತರ ಭದ್ರತಾ ಕಾರಣಗಳಿಗಾಗಿ ಕ್ರೀಡಾಂಗಣದಲ್ಲಿ ಯಾವುದೇ ಪ್ರಮುಖ ಪಂದ್ಯಗಳನ್ನು ಆಯೋಜಿಸಲು ಪೊಲೀಸರು ಅನುಮತಿ ನಿರಾಕರಿಸಿದ್ದರು. ಈ ನಿಷೇಧದಿಂದಾಗಿ ವಿಜಯ್ ಹಜಾರೆ ಟ್ರೋಫಿಯ ಫೈನಲ್ ಸೇರಿದಂತೆ ಹಲವು ಪಂದ್ಯಗಳನ್ನು ದೇವನಹಳ್ಳಿಯ ಬಿಸಿಸಿಐ ಸೆಂಟರ್ ಆಫ್ ಎಕ್ಸಲೆನ್ಸ್ಗೆ ಸ್ಥಳಾಂತರಿಸಲಾಗಿತ್ತು. ಅಷ್ಟೇ ಅಲ್ಲದೆ, ಮಹಿಳಾ ವಿಶ್ವಕಪ್ ಮತ್ತು ಮುಂಬರುವ ಪುರುಷರ ಟಿ20 ವಿಶ್ವಕಪ್ ಪಂದ್ಯಗಳ ಆತಿಥ್ಯವನ್ನೂ ಬೆಂಗಳೂರು ಕಳೆದುಕೊಂಡಿತ್ತು.
ರಾಜ್ಯದಲ್ಲಿ 1.53 ಲಕ್ಷ ಕೋಟಿ ರೂ.ಹೊಸ ಹೂಡಿಕೆ ಆಕರ್ಷಣೆ : ಎಂ.ಬಿ.ಪಾಟೀಲ್
ಬೆಂಗಳೂರು : ಹಿಂದಿನ ವಾರ್ಷಿಕ ಸಾಲಿನ ಫೆಬ್ರವರಿಯಲ್ಲಿ ಜಾಗತಿಕ ಹೂಡಿಕೆದಾರರ ಸಮಾವೇಶ ನಡೆಸಿದ ನಂತರದ 11 ತಿಂಗಳ ಅವಧಿಯಲ್ಲಿ ರಾಜ್ಯವು 1.53 ಲಕ್ಷ ಕೋಟಿ ರೂ.ಗಳಷ್ಟು ಹೊಸ ಹೂಡಿಕೆಯ ಹಲವು ಕೈಗಾರಿಕಾ ಯೋಜನೆಗಳನ್ನು ಆಕರ್ಷಿಸಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ತಿಳಿಸಿದ್ದಾರೆ. ರಾಜ್ಯ ಸರಕಾರದ ಉನ್ನತ ಮಟ್ಟದ ನಿಯೋಗದೊಂದಿಗೆ ದಾವೋಸ್ ಆರ್ಥಿಕ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ತೆರಳುವ ಮುನ್ನ ಈ ಬಗ್ಗೆ ವಿವರ ನೀಡಿರುವ ಅವರು, ರಾಜ್ಯಕ್ಕೆ ಹೂಡಿಕೆಯನ್ನು ಆಕರ್ಷಿಸುವ ಪ್ರಯತ್ನಗಳು ನಿರಂತರವಾಗಿ ಸಾಗಿದ್ದು, ಅದು ಕೇವಲ ಹೂಡಿಕೆದಾರರ ಸಮಾವೇಶಕ್ಕೆ ಮಾತ್ರ ಸೀಮಿತವಾಗಿಲ್ಲ. ತಯಾರಿಕೆ, ಮರುಬಳಕೆ ಇಂಧನ, ಡೇಟಾ ಕೇಂದ್ರಗಳು ಮತ್ತು ಜಾಗತಿಕ ಸಾಮರ್ಥ್ಯ ಕೇಂದ್ರಗಳ (ಜಿಸಿಸಿ) ಸ್ಥಾಪನೆಯ ಈ ವಲಯಗಳಲ್ಲಿ ಹಲವು ಅಗ್ರಗಣ್ಯ ಉದ್ಯಮ ಸಂಸ್ಥೆಗಳು ಈ ಹೂಡಿಕೆ ಮಾಡಲು ಆಸಕ್ತಿ ತೋರಿಸಿವೆ ಎಂದು ಹೇಳಿದ್ದಾರೆ. 11 ತಿಂಗಳಲ್ಲಿ ಆಕರ್ಷಿಸಿರುವ ಹೊಸ ಬಂಡವಾಳದಲ್ಲಿ ತಯಾರಿಕೆ ವಲಯದಲ್ಲಿ 66,293 ಕೋಟಿ ರೂ., ಪವನ ಮತ್ತು ಸೌರ ವಿದ್ಯುತ್ ಉತ್ಪಾದನೆಗೆ 20,913 ಕೋಟಿ ರೂ., ಜಿಸಿಸಿ ಕೇಂದ್ರಗಳ ಸ್ಥಾಪನೆಗೆ 12,500 ಕೋಟಿ ರೂ. ಮತ್ತು ಡೇಟಾ ಸೆಂಟರ್ಗಳ ಸ್ಥಾಪನೆಗೆ 6,350 ಕೋಟಿ ರೂಪಾಯಿ ಹೂಡಿಕೆ ಆಗಲಿದೆ ಎಂದು ಅವರು ಮಾಹಿತಿ ನೀಡಿದ್ದಾರೆ. ಟೊಯೋಟಾ ಕಂಪನಿ ಜಿಗಣಿಯ ತನ್ನ ಘಟಕದಲ್ಲಿ ಗ್ಯಾಸೊಲಿನ್ ಮತ್ತು ಹೈಬ್ರಿಡ್ ಇಂಜಿನ್ಗಳ ತಯಾರಿಕೆಗೆ 1,330 ಕೋಟಿ ರೂ. ಕ್ಯೂಪೈಎಐ ಕಂಪೆನಿಯು ಬೆಂಗಳೂರಿನಲ್ಲಿ ತನ್ನ ಕ್ವಾಂಟಂ ಉತ್ಕೃಷ್ಟತಾ ಕೇಂದ್ರ ಸ್ಥಾಪನೆಗೆ 1,136 ಕೋಟಿ ರೂ. ಎಟಿ&ಎಸ್ ಕಂಪೆನಿಯು ಎಲೆಕ್ಟ್ರಾನಿಕ್ ಬಿಡಿಭಾಗಗಳ ತಯಾರಿಕೆಗೆ ನಂಜನಗೂಡಿನಲ್ಲಿ 2,850 ಕೋಟಿ ರೂ. ವಿಪ್ರೋ ಹೈಡ್ರಾಲಿಕ್ಸ್ ಕಂಪೆನಿಯು ಎಲೆಕ್ಟ್ರಾನಿಕ್ಸ್ ಮತ್ತು ಪಿಸಿಬಿ ವಲಯಕ್ಕೆ ಬೇಕಾದ ತಾಮ್ರದ ಲ್ಯಾಮಿನೇಟ್ ತಯಾರಿಕೆಗೆ 499 ಕೋಟಿ ರೂ. ಝೆನ್-ಫೋಲ್ಡ್ ಬಯೋಸೈನ್ಸಸ್ ಲಿಮಿಟೆಡ್ ಔಷಧ ವಿಜ್ಞಾನ ಕ್ಷೇತ್ರಕ್ಕೆ ಬೇಕಾಗುವ ಕಿಣ್ವಗಳ ತಯಾರಿಕೆಗೆ 490 ಕೋಟಿ ರೂ. ಹೂಡಿಕೆ ಮಾಡುತ್ತಿವೆ ಎಂದು ಅವರು ಅಂಕಿ-ಅಂಶ ಸಹಿತ ವಿವರಿಸಿದ್ದಾರೆ. ಉಳಿದಂತೆ ಜೆಜೆಜಿ ಏರೋಸ್ಪೇಸ್ ವಿಮಾನಗಳ ಬಿಡಿಭಾಗಗಳ ತಯಾರಿಕೆಗೆ ದೊಡ್ಡಬಳ್ಳಾಪುರದ ಆದಿನಾರಾಯಣ ಹೊಸಹಳ್ಳಿಯಲ್ಲಿ 470 ಕೋಟಿ ರೂ. ಯಸಾಕಾವ ಇದೇ ಕೈಗಾರಿಕಾ ಪ್ರದೇಶದಲ್ಲಿ ವಿದ್ಯುನ್ಮಾನ ಉತ್ಪನ್ನಗಳ ತಯಾರಿಕಾ ಘಟಕ ಸ್ಥಾಪನೆಗೆ 330 ಕೋಟಿ ರೂ. ಐನಾಕ್ಸ್ ವಿಂಡ್ ಕೊಪ್ಪಳ ಜಿಲ್ಲೆಯ ಕುಷ್ಟಗಿಯಲ್ಲಿ ವಿಂಡ್ ಟರ್ಬೈನ್ ತಯಾರಿಕಾ ಘಟಕ ಸ್ಥಾಪನೆಗೆ 305 ಕೋಟಿ ರೂ., 4,000 ಕೋಟಿ ರೂ. ಡೇಟಾ ಸಮುದ್ರ ಕಂಪನಿಗೆ ಮಂಗಳೂರು, ಹುಬ್ಬಳ್ಳಿ-ಧಾರವಾಡ ಮತ್ತು ಮೈಸೂರಿನಲ್ಲಿ 1,350 ಕೋಟಿ ರೂ. ಹಳದಿರಾಮ್ಸ್ ಸಮೂಹವು ತುಮಕೂರಿನ ವಸಂತ ನರಸಾಪುರದಲ್ಲಿ ತನ್ನ ಕುರುಕಲು ತಿಂಡಿ ಘಟಕ ಸ್ಥಾಪನೆಗೆ 444 ಕೋಟಿ ರೂ. ಬಂಡವಾಳ ಹೂಡಿಕೆ ಮಾಡಿವೆ ಎಂದು ಸಚಿವರು ತಿಳಿಸಿದ್ದಾರೆ.
ತಣ್ಣೀರುವಾಬಿ ಬೀಚ್ನಲ್ಲಿ ಗಾಳಿಪಟಗಳ ಚಿತ್ತಾರ: ದೇಶ ವಿದೇಶದ ದೈತ್ಯಗಾತ್ರ- ಬಣ್ಣ- ವಿನ್ಯಾಸಗಳ ಸಂಗಮ
ಮಂಗಳೂರು, ಜ.17: ಕಣ್ಣು ಹಾಯಿಸಿದಷ್ಟುದ್ದಕ್ಕೂ ನೀಲ ಬಣ್ಣದ ಕಡಲ ಅಲೆಗಳು ಒಂದೆಡೆಯಾದರೆ, ನೀಲ ಆಗಸ ದಲ್ಲಿ ಬಣ್ಣಬಣ್ಣದ, ವಿವಿಧ ನಮೂನೆಯ ಚುಕ್ಕಿಯಾಕಾರದಿಂದ ಹಿಡಿದು ದೈತ್ಯಗಾತ್ರದ ಗಾಳಿಪಟಗಳ ಚಿತ್ತಾರ. ಮೀನು, ಬೆಕ್ಕು, ಆನೆ, ಚಿಟ್ಟೆ, ಮೊಸಳೆ, ಹೂ, ಮಿಕ್ಕಿ, ಏಲಿಯನ್ ... ಹೀಗೆ ವಿವಿಧ ಬಗೆಯ ವಿವಿಧ ವಿನ್ಯಾಸ ಬಣ್ಣಗಳ ಸಂಗಮದ ಗಾಳಿಪಟಗಳು. ಇನ್ನು ಕಡಲ ಕಿನಾರೆಯ ಮರಳಿನ ಮೇಲೆ ಭಾರೀ ಗಾತ್ರದ ಗಾಳಿಪಟಗಳ ಸೂತ್ರವನ್ನು ಸಮತೂಗಿಸಿಕೊಂಡು ತಮ್ಮ ಕೌಶಲ್ಯವನ್ನು ಪ್ರದರ್ಶಿಸುವ ಅಂತಾರಾಷ್ಟ್ರೀಯ ಗಾಳಿಪಟಗಾರರು ಹಾಗೂ ಅವರಿಗೆ ಪ್ರೋತ್ಸಾಹ ನೀಡುವ ಸಾವಿರಾರು ಸಂಖ್ಯೆಯ ಗಾಳಿಪಟ ಪ್ರೇಮಿಗಳು, ಪ್ರೇಕ್ಷಕರು. ಇದು ಮಂಗಳೂರಿನ ತಣ್ಣೀರುಬಾವಿಯ ಬ್ಲೂಬೇ ಬೀಚ್ನಲ್ಲಿ ಕರಾವಳಿ ಉತ್ಸವದ ಅಂಗವಾಗಿ ಆಯೋಜಿಸಲಾಗಿ ರುವ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವದದ ಮೊದಲ ದಿನವಾದ ಶನಿವಾರ ಕಂಡು ಬಂದ ದೃಶ್ಯ. ಟೀಮ್ ಮಂಗಳೂರು ತಂಡದಿಂದ ಎರಡು ದಿನಗಳ ಕಾಲ ನಡೆಯುತ್ತಿರುವ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವ ದಲ್ಲಿ 15 ದೇಶಗಳ 30 ಮಂದಿ ಅಂತಾರಾಷ್ಟ್ರೀಯ ಗಾಳಿಪಟಗಾರರ ಜತೆಗೆ 62 ನುರಿತ ಗಾಳಿಪಟ ಹಾರಾಟ ಗಾರರು ತಮ್ಮ ವೈವಿಧ್ಯಮಯ ಗಾಳಿಪಟಗಳನ್ನು ಪ್ರದರ್ಶಿಸುತ್ತಿದ್ದಾರೆ. ಸಾಂಪ್ರದಾಯಿಕ, ಏರೋಫಾಯಿಲ್, ಇನ್ಪ್ಲೇಟಬಲ್ ಹಾಗೂ ಕ್ಲಾಡ್ ಲೈನ್ ಸ್ಪೋರ್ಟ್ ಗಾಳಿಪಟಗಳ ಜತೆಗೆ ಸ್ಥಳೀಯ ಸಾಂಪ್ರದಾಯಿಕ ಗಾಳಿಪಟಗಳು ಉತ್ಸವದಲ್ಲಿ ನೋಡುಗರನ್ನು ಆಕರ್ಷಿಸುತ್ತಿವೆ. ಉತ್ಸವ ಮುಂದುವರಿಸಲು ಪ್ರೇರಣೆ: ಯು.ಟಿ.ಖಾದರ್ ಗಾಳಿಪಟ ಹಾರಿಸುವ ಮೂಲಕ ಎರಡು ದಿನಗಳ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವಕ್ಕೆ ಚಾಲನೆ ನೀಡಿದ ವಿಧಾನಸಭೆ ಸ್ಪೀಕರ್ ಯು.ಟಿ.ಖಾದರ್ ಮಾತನಾಡಿ, ಕರಾವಳಿ ಉತ್ಸವಕ್ಕೆ ಮುಖ್ಯಮಂತ್ರಿ ಸಿದ್ಧರಾಮಯ್ಯ 2 ಕೋಟಿ ರೂ. ಅನುದಾನ ಒದಗಿಸಿದ್ದು ಅತ್ಯಂತ ಯಶಸ್ವಿಯಾಗಿ ವಿವಿಧ ಕಾರ್ಯಕ್ರಮಗಳು ನಡೆಯುತ್ತಿವೆ. ದೇಶ ವಿದೇಶಗಳಿಂದ ಪ್ರವಾಸಿಗರು, ಸಾರ್ವಜನಿಕರು ಆಗಮಿಸುತ್ತಿದ್ದಾರೆ. ಇಂತಹ ಉತ್ಸವ ಮುಂದೆಯೂ ಯೋಜಿಸಲು ಪ್ರೇರಣೆ ದೊರಕಿದೆ ಎಂದರು. ವಿಧಾನ ಪರಿಷತ್ ಶಾಸಕ ಐವನ್ ಡಿಸೋಜಾ, ಜಿಲ್ಲಾಧಿಕಾರಿ ದರ್ಶನ್ ಎಚ್.ವಿ., ಜಿ.ಪಂ. ಸಿಇಒ ವಿನಾಯಕ ನರ್ವಾಡೆ ಹಾಗೂ ಇತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು. ‘ಮಂಗಳೂರಿನಲ್ಲಿ ಇದೇ ಮೊದಲ ಬಾರಿಗೆ ಗಾಳಿಪಟ ಉತ್ಸವದಲ್ಲಿ ಪತ್ನಿ ಜತೆ ಭಾಗವಹಿಸುತ್ತಿದ್ದೇನೆ. ಹೈದರಾ ಬಾದ್ನಿಂದ ಇಂದು ಬೆಳಗ್ಗೆ ತಣ್ಣೀರುಬಾವಿಗೆ ಆಗಮಿಸಿದ್ದು, ಇಲ್ಲಿನ ಜನರಿಂದ ಉತ್ತಮ ಸ್ಪಂದನೆ ದೊರಕಿದೆ. ತುಂಬಾ ಸ್ನೇಹಮಯಿ ಜನರು. ಸೆಲ್ಪಿ ಕ್ಲಿಕ್ಕಿಸಿಕೊಳ್ಳುತ್ತಾರೆ, ಮಾತನಾಡಿಸುತ್ತಾರೆ. ನಾನು ಇಲ್ಲಿ ಸುರಕ್ಷಿತವಾಗಿರುವ ಭಾವನೆ ಬಂದಿದೆ’ ಎಂದು ಇಟಲಿಯ ಅಂತಾರಾಷ್ಟ್ರೀಯ ಗಾಳಿಪಟಗಾರ ಆ್ಯಂಡ್ರಿಯಾ ಹೇಳಿದರು. ಪತ್ನಿ ಸಬ್ರೀನಾ ಜತೆಗೆ 24 ಬೃಹತ್ ಗಾಳಿಪಟಗಳೊಂದಿಗೆ ಉತ್ಸವಕ್ಕೆ ಆಗಮಿಸಿರುವ ಆ್ಯಂಡ್ರಿಯಾ ಅವರ ಜೆಲ್ಲಿ ಫಿಶ್, ಏಲಿಯನ್, ಫಿಸ್ ಸ್ಕೆಲಿಟನ್, ಹೂವಿನ ದೈತ್ಯಾಕಾರದ ಗಾಳಿಪಟಗಳು 5 ಮೀಟರ್ನಿಂದ 25 ಮೀಟರ್ ಉದ್ದವನ್ನು ಹೊಂದಿವೆ. ಇಸ್ತಾನಿಯಾದ ಜಾನ ಸೂಮ್ ಅವರದ್ದು ಮಂಗಳೂರಿಗೆ ಇದು 2ನೇ ಭೇಟಿಯಂತೆ. ಸುಮಾರು 14 ಗಾಳಿಪಟ ಗಳೊಂದಿಗೆ ಇಬ್ಬರ ತಂಡ ಮಂಗಳೂರಿಗೆ ಆಗಮಿಸಿರುವುದಾಗಿ ಹೇಳುವ ಜಾನ ಸೂಮ್ಗೆ ಇಲ್ಲಿನ ಬಿಸಿಲಿನ ವಾತಾವರಣ ಖುಷಿ ನೀಡಿದೆಯಂತೆ. ‘ನಮ್ಮಲ್ಲಿ ಮೈನಸ್ 20 ಡಿಗ್ರಿ ಹವಾಮಾನ. ಎಲ್ಲೆಲ್ಲೂ ಹಿಮತುಂಬಿರುತ್ತದೆ. ಆದರೆ ಇಲ್ಲಿಯ ಬೀಚ್ನ ವಾತಾವರಣ ಹಿತವಾಗಿದೆ. ಗಾಳಿಪಟ ಹಾರಾಟಕ್ಕೂ ಸೂಕ್ತ ಪ್ರದೇಶ. ಭಾರತದ ಮೀನಿನ ಆಹಾರ ತನಗೆ ಇಷ್ಟ ಎನ್ನುತ್ತಾರೆ’ ಜಾನ ಸೂಮ್.
ಖಂಡ್ರೆ ಕುಟುಂಬ ಕಾಂಗ್ರೆಸ್ ಪಕ್ಷದ ದೊಡ್ಡ ಆಸ್ತಿ : ಡಿಸಿಎಂ ಡಿ.ಕೆ. ಶಿವಕುಮಾರ್
ಬೀದರ್ : ಭೀಮಣ್ಣ ಖಂಡ್ರೆ ಅವರು ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಹಾಗೂ ವೀರಶೈವ ಸಮಾಜದ ಅಧ್ಯಕ್ಷರಾಗಿ ಕೆಲಸ ಮಾಡಿ ಇಡೀ ರಾಜ್ಯದಲ್ಲಿ ಸಂಘಟನೆ ಮಾಡಿದ್ದಾರೆ. ಈ ಕುಟುಂಬ ಕಾಂಗ್ರೆಸ್ ಪಕ್ಷದ ದೊಡ್ಡ ಆಸ್ತಿ. ಈ ಕುಟುಂಬ ಕಾಂಗ್ರೆಸ್ ಪಕ್ಷಕ್ಕೆ ನಿಷ್ಠೆಯಿಂದ ಕೆಲಸ ಮಾಡಿದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ತಿಳಿಸಿದರು. ಭೀಮಣ್ಣ ಖಂಡ್ರೆ ಅವರ ಅಂತಿಮ ಸಂಸ್ಕಾರದಲ್ಲಿ ಭಾಗವಹಿಸಿ ನಮನ ಸಲ್ಲಿಸಿದ ಬಳಿಕ ಶಿವಕುಮಾರ್ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು. ಬದುಕಿನಲ್ಲಿ ದೊಡ್ಡ ಸಾಧನೆ ಮಾಡಿದ ದೊಡ್ಡ ಶಕ್ತಿಗೆ ನಮನ ಸಲ್ಲಿಸಲು ನಾವು ಬಂದಿದ್ದೇವೆ. 1989ರಿಂದ ಭೀಮಣ್ಣ ಖಂಡ್ರೆ ಅವರ ಜೊತೆಗೆ ವಿಧಾನಸಭೆಯಲ್ಲಿ ಒಟ್ಟಿಗೆ ಕೆಲಸ ಮಾಡುವ ಭಾಗ್ಯ ನನಗೆ ಸಿಕ್ಕಿತ್ತು. ಅವರನ್ನು ಸಚಿವರನ್ನಾಗಿ ನೋಡಿದ್ದೇನೆ. ಅವರ ಮಗ ವಿಜಯ್ ಕುಮಾರ್ ಖಂಡ್ರೆ ಅವರ ಜೊತೆಗೂ ಶಾಸಕನಾಗಿ ಕೆಲಸ ಮಾಡಿದ್ದೇನೆ. ಈಶ್ವರ್ ಖಂಡ್ರೆ ಅವರ ಜೊತೆ ಶಾಸಕನಾಗಿ, ಮಂತ್ರಿಯಾಗಿ ಕೆಲಸ ಮಾಡಿದ್ದೇನೆ. ಅವರು ನನ್ನ ಜೊತೆ ಪಕ್ಷದ ಕಾರ್ಯಾಧ್ಯಕ್ಷರಾಗಿ ಕೆಲಸ ಮಾಡಿದ್ದಾರೆ. ಅವರ ಮೊಮ್ಮಗ ಸಾಗರ್ ಖಂಡ್ರೆ ಅವರು ಸಂಸದರಾಗಿ ನಮ್ಮೊಂದಿಗೆ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು. ವಿದ್ಯಾ ಕ್ಷೇತ್ರ ಸೇರಿದಂತೆ ಬೀದರ್ ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಒಂದು ಮಗು ಹುಟ್ಟಿದಾಗ ಆ ಮಗು ಅಳುತ್ತದೆ, ಸಮಾಜ ಖುಷಿ ಪಡುತ್ತದೆ. ಅದೇ ವ್ಯಕ್ತಿ ಲಿಂಗೈಕ್ಯರಾದಾಗ ಅವರ ಸಾಧನೆ ಸ್ಮರಿಸಿ ಸಮಾಜ ದುಃಖಪಡುತ್ತದೆ. ಈ ಕಾರಣಕ್ಕೆ ನಾನು ದೆಹಲಿಯಲ್ಲಿದ್ದರೂ, ಸಿಎಂ ಬೆಂಗಳೂರಿನಲ್ಲಿ ಇದ್ದರೂ ನಮ್ಮ ಕೆಲಸಗಳನ್ನು ಬದಿಗೊತ್ತಿ ಅಂತಿಮ ನಮನ ಸಲ್ಲಿಸಲು ಬಂದಿದ್ದೇವೆ ಎಂದರು. ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರು ಬರಲು ಬಹಳ ಪ್ರಯತ್ನಪಟ್ಟರು. ಆದರೆ ಬೇರೆ ರಾಜ್ಯಗಳ ಚುನಾವಣೆ ಸಂಬಂಧ ಸರಣಿ ಸಭೆಗಳಿರುವ ಕಾರಣ ಬರಲು ಆಗಲಿಲ್ಲ. ನಾವು ಪಕ್ಷ ಹಾಗೂ ಸರ್ಕಾರದ ಪರವಾಗಿ ಬಂದಿದ್ದೇವೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಈ ಅಗಲಿಕೆಯ ನೋವು ಭರಿಸುವ ಶಕ್ತಿಯನ್ನು ಭಗವಂತ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ ಎಂದು ತಿಳಿಸಿದರು.
ಫೆ.4ರಿಂದ ಸಸಿಹಿತ್ಲು ಶ್ರೀ ಸಾರಂತಾಯ ಗರೋಡಿ ಉಳ್ಳಾಯ ದೈವಸ್ಥಾನದ ಪುನರ್ ಪ್ರತಿಷ್ಠೆ ಬ್ರಹ್ಮಕಲಶೋತ್ಸವ, ನೇಮೋತ್ಸವ
ಸುರತ್ಕಲ್: ಮುಲ್ಕಿ ತಾಲೂಕಿನ ಸಸಿಹಿತ್ಲು ಶ್ರೀ ಸಾರಂತಾಯ ಗರೋಡಿ ಉಳ್ಳಾಯ ದೈವಸ್ಥಾನದಲ್ಲಿ ಶ್ರೀ ಉಳ್ಳಾಯ ಮತ್ತು ಪರಿವಾರ ದೈವಗಳ ಪುನರ್ ಪ್ರತಿಷ್ಠೆ, ಬ್ರಹ್ಮಕಲಶೋತ್ಸವ ಮತ್ತು ನೇಮೋತ್ಸವ ಸಮಾರಂಭ 2026 ನೇ ಫೆ.4 ರಿಂದ10ರ ವರೆಗೆ ನಡೆಯಲಿದೆ ಎಂದು ಕ್ಷೇತ್ರದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರಾದ ಸಿ.ಬಿ.ಕರ್ಕೇರ ಅವರು ನಗರದ ಪ್ರೆಸ್ ಕ್ಲಬ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ. ಇದು ಇತಿಹಾಸ ಪುರುಷರಾದ ಕಾಂತಾಬಾರೆ ಬೂದಾಬಾರೆಯರು ರಾತ್ರಿ ಬೆಳಗಾಗುವುದರೊಳಗೆ ಕೈಯಾರೆ ನಿರ್ಮಿ ಸಿದ ಈ ಕ್ಷೇತ್ರವಾಗಿದೆ. ಸುಮಾರು 3.5 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಇಲ್ಲಿನ ಜೀರ್ಣೋದ್ಧಾರ ಕಾರ್ಯ ನಡೆಯುತ್ತಿದ್ದು ಎಲ್ಲಾ ಕಾಮಗಾರಿಗಳೂ ಬಹುತೇಕ ಪೂರ್ಣಗೊಂಡಿದೆ. ಬಾರೆಯರು ಬರಿಗೈಯಲ್ಲಿ ತೋಡಿದ್ದರೆಂದು ಪ್ರತೀತಿ ಹೊಂದಿದ್ದ ಬಾವಿಯ ನವೀಕರಣ, ಅಂಗಣಕ್ಕೆ ಇಂಟರ್ಲಾಕ್ ವ್ಯವಸ್ಥೆ, ಆವರಣಗೋಡೆ, ಪಡುದಿಕ್ಕಿನಲ್ಲಿ ನೂತನ ಪ್ರವೇಶದ್ವಾರ ನಿರ್ಮಾಣದ ಕಾರ್ಯ ನಡೆಯುತ್ತಿದೆ ಎಂದು ವಿವರಿಸಿದರು. ಫೆ.4 ರಿಂದ ಋತ್ವಿಜರ ಉಪಸ್ಥಿತಿಯಲ್ಲಿ ಸರ್ವ ವೈದಿಕ ವಿಧಿವಿಧಾನಗಳು, ನಿತ್ಯ ಭಜನೆ, ಅನ್ನಸಂತರ್ಪಣೆ, ಸಂಜೆ ಗಣ್ಯರ, ದಾನಿಗಳ ಸಮ್ಮುಖದಲ್ಲಿ ಸಭಾ ಕಾರ್ಯಕ್ರಮಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ತುಳು ನಾಟಕ, ನೃತ್ಯ ಸೇರಿದಂತೆ ವೈವಿಧ್ಯಮಯ ಕಾರ್ಯಕ್ರಮಗಳು ನಡೆಯಲಿವೆ. ಫೆ.8 ರಂದು ಪುನರ್ ಪ್ರತಿಷ್ಠೆ, ಬ್ರಹ್ಮಕಲಶೋತ್ಸವ, ಫೆ.9 ರಂದು ನೇಮೋತ್ಸವ ನಡೆಯಲಿದೆ ಎಂದು ಅವರು ತಿಳಿಸಿದರು. ಬ್ರಹ್ಮಕಲಶೋತ್ಸವದ ಯಶಸ್ಸಿಗಾಗಿ ವಿವಿಧ ಉಪಸಮಿತಿಗಳನ್ನು ರಚಿಸಲಾಗಿದ್ದು ಪ್ರತಿ ಸಮಿತಿಗಳು ಅತ್ಯಂತ ಸಕ್ರಿಯವಾಗಿ ಸಿದ್ಧತೆಗಳನ್ನು ಮಾಡುತ್ತಿದ್ದು ಈ ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸುತ್ತಿವೆ ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಕ್ಷೇತ್ರದ ಜೀರ್ಣೋದ್ಧಾರ ಸಮಿತಿ ಕಾರ್ಯಾಧ್ಯಕ್ಷ ಪರಮಾನಂದ ಸಾಲ್ಯಾನ್, ಕೋಶಾಧಿಕಾರಿ ಶ್ರೀಧರ ವಿ. ಸುವರ್ಣ, ಆಡಳಿತ ಸಮಿತಿ ಅಧ್ಯಕ್ಷ ಜಗನ್ನಾಥ ಆರ್. ಕೋಟ್ಯಾನ್, ಉಲಾಧ್ಯಕ್ಷ ಅನಿಲ್ ಪೂಜಾರಿ, ಮುಂಬೈ ಸಮಿತಿ ಅಧ್ಯಕ್ಷ ಸತೀಶ್ ಎಸ್. ಕೋಟ್ಯಾನ್, ಪ್ರಧಾನ ಕಾರ್ಯದರ್ಶಿ ದಿನೇಶ್ ಸಿ. ಸಾಲ್ಯಾನ್, ಸಂಚಾಲಕ ಪದ್ಮನಾಭ ಸಸಿಹಿತ್ಲು, ಮಾಧ್ಯಮ ಸಂಚಾಲಕ ಯಶೋಧರ ಕೋಟ್ಯಾನ್, ಪ್ರಮೋದ್ ಕೋಟ್ಯಾನ್ , ಜಗದೀಸ ಅಂಚನ್ ಮೊದಲಾದವರು ಉಪಸ್ಥಿತರಿದ್ದರು.
ದೇವದುರ್ಗ | ಗುಣಮಟ್ಟದ ಶಿಕ್ಷಣಕ್ಕಾಗಿ ಪ್ರಾಮಾಣಿಕ ಸೇವೆ ಮಾಡುವೆ : ಶಾಸಕಿ ಕರೆಮ್ಮ ಜಿ.ನಾಯಕ್
ದೇವದುರ್ಗ: ಮಕ್ಕಳ ಭವಿಷ್ಯ ರೂಪಿಸಲು ಹಗಲಿರುಳು ಶ್ರಮಿಸುವ ಶಿಕ್ಷಕರಿಗೆ ಗೌರವ ಸಲ್ಲಿಸುತ್ತಿರುವುದು ಅತ್ಯಂತ ಸಂತಸದ ವಿಷಯ. ನಾನು ಸದಾ ನಿಮ್ಮೊಡನೆ ಸಹೋದರಿಯಂತೆ ನಿಂತು, ಶಿಕ್ಷಕರ ಕಷ್ಟ-ಸುಖಗಳಿಗೆ ಬೆನ್ನೆಲುಬಾಗಿ ಬೆಂಬಲ ನೀಡಲಿದ್ದೇನೆ ಎಂದು ಶಾಸಕಿ ಕರೆಮ್ಮ ಜಿ.ನಾಯಕ್ ಭರವಸೆ ನೀಡಿದರು. ಪಟ್ಟಣದ ಶ್ರೀಗಡ್ಡೆಗೂಳಿ ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿದ್ದ 'ತಾಲೂಕು ಗುರು ನಮನ' ಹಾಗೂ 'ಉತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ' ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. ತಮ್ಮ ವೈಯಕ್ತಿಕ ಜೀವನದ ಹಾದಿಯನ್ನು ಮೆಲುಕು ಹಾಕಿದ ಶಾಸಕರು, ನನಗೆ ನಿಜವಾಗಿಯೂ ಶಾಸಕಿಗಿಂತಲೂ ಶಿಕ್ಷಕಿಯಾಗುವ ದೊಡ್ಡ ಆಸೆ ಇತ್ತು. ಆದರೆ, ಬಾಲ್ಯದಲ್ಲೇ ವಿವಾಹವಾದ ಕಾರಣ ವಿದ್ಯಾಭ್ಯಾಸ ಮುಂದುವರಿಸಲು ಸಾಧ್ಯವಾಗಲಿಲ್ಲ. ಇಂದು ರಾಜಕೀಯವಾಗಿ ಜನಸೇವೆ ಮಾಡುವ ಅವಕಾಶ ಸಿಕ್ಕಿದೆ. ತಾಲೂಕಿನ ಶಾಲೆಗಳಲ್ಲಿರುವ ಶಿಕ್ಷಕರ ಕೊರತೆಯ ಬಗ್ಗೆ ಈಗಾಗಲೇ ಸರ್ಕಾರದ ಗಮನ ಸೆಳೆದಿದ್ದು, ಶೀಘ್ರವೇ ಸಮಸ್ಯೆ ಬಗೆಹರಿಸುವ ವಿಶ್ವಾಸವಿದೆ ಎಂದರು. ಅಲ್ಲದೆ, ಬಾಲ್ಯವಿವಾಹ ಮತ್ತು ಬಾಲಕಾರ್ಮಿಕ ಪದ್ಧತಿಯಂತಹ ಸಾಮಾಜಿಕ ಪಿಡುಗುಗಳ ನಿರ್ಮೂಲನೆಗೆ ಶಿಕ್ಷಕರು ಶ್ರಮಿಸಬೇಕು ಎಂದು ಕರೆ ನೀಡಿದರು. ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರು ಮಾತನಾಡಿ, ಸಾರ್ವಜನಿಕರು ಸಮುದಾಯ ಭವನ, ಗುಡಿ-ಗುಂಡಾರಗಳಿಗೆ ಅನುದಾನ ಕೇಳುವ ಬದಲು, ಶಾಲೆಗಳಿಗೆ ಮೂಲಸೌಲಭ್ಯ ಹಾಗೂ ಶಿಕ್ಷಕರನ್ನು ಕೇಳಿದ್ದರೆ ಇಂದು ಕಲ್ಯಾಣ ಕರ್ನಾಟಕ ಶಿಕ್ಷಣದಲ್ಲಿ ಹಿಂದುಳಿಯುತ್ತಿರಲಿಲ್ಲ. ಸರ್ಕಾರವು ಬಡ ಮಕ್ಕಳಿಗೆ 'ವಿದ್ಯಾ ಕಿಟ್' ನೀಡುವ ಮೂಲಕ ಪ್ರೋತ್ಸಾಹಿಸಬೇಕು. ಬಡ ಮಕ್ಕಳು ಗುಣಮಟ್ಟದ ಶಿಕ್ಷಣ ಪಡೆದು ಸಮಾಜದಲ್ಲಿ ಉನ್ನತ ಸ್ಥಾನಕ್ಕೇರಿದಾಗ ಮಾತ್ರ ಶಿಕ್ಷಕರಿಗೆ ನೀಡುವ ಪ್ರಶಸ್ತಿಗೆ ನೈಜ ಬೆಲೆ ಸಿಗುತ್ತದೆ ಎಂದು ಅಭಿಪ್ರಾಯಪಟ್ಟರು. ಕಾರ್ಯಕ್ರಮದಲ್ಲಿ ತಹಶೀಲ್ದಾರ್ ನಾಗಮ್ಮ ಕಟ್ಟಿಮನಿ, ಕ್ಷೇತ್ರ ಶಿಕ್ಷಣಾಧಿಕಾರಿ ಮಲ್ಲಿಕಾರ್ಜುನ, ಪುರಸಭೆ ಮುಖ್ಯಾಧಿಕಾರಿ ಹಂಪಯ್ಯ, ಪ್ರಮುಖರಾದ ಬಸನಗೌಡ ದೇಸಾಯಿ, ಆದನಗೌಡ ಬುಂಕಲದೊಡ್ಡಿ ಸೇರಿದಂತೆ ಶಿಕ್ಷಣ ಇಲಾಖೆಯ ಅಧಿಕಾರಿಗಳು ಹಾಗೂ ಶಿಕ್ಷಕರು ಉಪಸ್ಥಿತರಿದ್ದರು.
ಶೀರೂರು ಪರ್ಯಾಯಕ್ಕೆ ಮಟ್ಟುಗುಳ್ಳ ಹೊರೆಕಾಣಿಕೆ
ಉಡುಪಿ, ಜ.17: ಶೀರೂರು ಮಠಾಧೀಶ ಶ್ರೀ ವೇದವರ್ಧನ ತೀರ್ಥರ ಪ್ರಥಮ ಪರ್ಯಾಯಕ್ಕೆ ಮಟ್ಟು ಭಾಗದ ಶ್ರೀಕೃಷ್ಣ ಭಕ್ತರು ಶನಿವಾರ ಮಟ್ಟುಗುಳ್ಳ ಹೊರೆಕಾಣಿಕೆ ಸಮರ್ಪಿಸಿದರು. ನಗರದ ಸಂಸ್ಕೃತ ಕಾಲೇಜಿನ ಮುಂಭಾಗದಲ್ಲಿ ಸಂಚಾಲಕ ಬೈಕಾಡಿ ಸುಪ್ರಸಾದ್ ಶೆಟ್ಟಿ ಮಟ್ಟು ಭಾಗದ ಭಕ್ತರನ್ನು ಸ್ವಾಗತಿಸಿದರು. ಬಳಿಕ ಗುಳ್ಳ ತುಂಬಿದ ಬುಟ್ಟಿಯನ್ನು ಹೊತ್ತು ಭಕ್ತರು ಸಾಲಾಗಿ ಮೆರವಣಿಗೆ ಮೂಲಕ ರಥಬೀದಿಗೆ ಬಂದು ಬಳಿಕ ಹೊರೆಕಾಣಿಕೆ ಮಂಟಪ ತಲುಪಿದರು. ಶ್ರೀಕೃಷ್ಣ ಮಠ ಮತ್ತು ಮಟ್ಟುಗುಳ್ಳಕ್ಕೆ ವಿಶೇಷ ಸಂಬಂಧವಿದೆ. ವಾದಿರಾಜ ಸ್ವಾಮಿಗಳು ಅನುಗ್ರಹಿಸಿ ನೀಡಿದ ಬೀಜ ದಿಂದ ಹುಟ್ಟಿಕೊಂಡ ಗುಳ್ಳ ಇಂದು ದೇಶದಲ್ಲೇ ಜಿಐ ಪೇಟೆಂಟ್ ಪಡೆದ ಮೊದಲ ತರಕಾರಿ ಎಂಬ ಖ್ಯಾತಿ ಪಡೆದಿದೆ. ಜೊತೆಗೆ ಕೃಷ್ಣ ಮಠದ ನಿತ್ಯ ಬಳಕೆಯ ತರಕಾರಿಗಳಲ್ಲಿ ಗುಳ್ಳ ತರಕಾರಿಗೆ ವಿಶೇಷ ಸ್ಥಾನವಿದೆ. ಹೊರೆಕಾಣಿಕೆ ಸಮರ್ಪಣೆಯಲ್ಲಿ ಮಟ್ಟು ಭಾಗದ ಭಕ್ತರು, ಡಾ.ಟಿ.ಎಸ್. ರಾವ್, ಪ್ರದೀಪ್ ರಾವ್, ವಿಷ್ಣು ಪಾಡೀಗಾರ್, ಸುನಿಲ್ ಬಂಗೇರ, ಸರಸ್ವತಿ ಬಂಗೇರ, ಮಟ್ಟಿ ಲಕ್ಷ್ಮೀ ನಾರಾಯಣ ರಾವ್, ಶ್ರೀಕಾಂತ್ ಉಪಾಧ್ಯಾಯ, ಸಂದೀಪ್ ಮಂಜ, ನರೇಶ್ ಪಾಲನ್, ಸದಾನಂದ ಸುವರ್ಣ, ಜಯ ಪೂಜಾರಿ, ಎಂ. ಲಕ್ಷ್ಮಣ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ರಸ್ತೆ ಅಪಘಾತದಲ್ಲಿ ಕಾರು ಚಾಲಕ ಸಾವು, ಪರಿಹಾರ ಮೊತ್ತವನ್ನು 4 ಪಟ್ಟು ಹೆಚ್ಚಿಸಿದ ಹೈಕೋರ್ಟ್; ಕಾರಣ ಏನು?
ಬೆಂಗಳೂರಿನಲ್ಲಿ 2017ರ ರಸ್ತೆ ಅಪಘಾತದಲ್ಲಿ ಮೃತಪಟ್ಟ ಕಾರು ಚಾಲಕನ ಕುಟುಂಬಕ್ಕೆ ಹೈಕೋರ್ಟ್ ಪರಿಹಾರ ಮೊತ್ತವನ್ನು 9.20 ಲಕ್ಷದಿಂದ 36.60 ಲಕ್ಷಕ್ಕೆ ಹೆಚ್ಚಿಸಿದೆ. ಅಪಘಾತಕ್ಕೆ ಕ್ಯಾಂಟರ್ ಚಾಲಕನ ನಿರ್ಲಕ್ಷ್ಯವೇ ಕಾರಣ ಎಂದು ತೀರ್ಪು ನೀಡಿದ್ದು, ಮೃತ ಚಾಲಕನ ನಿರ್ಲಕ್ಷ್ಯದಿಂದ ಅಪಘಾತ ಸಂಭವಿಸಿದೆ ಎಂಬ ಎಂಎಸಿಟಿ ಆದೇಶವನ್ನು ನ್ಯಾಯಾಲಯ ತಳ್ಳಿಹಾಕಿದೆ.
ಕಲಬುರಗಿ | ಕುರಿಕೋಟಾ ಸೇತುವೆ ಮೇಲಿಂದ ಹಾರಿದ ಯುವತಿ
ಕಲಬುರಗಿ: ಜೀವನದಲ್ಲಿ ಜಿಗುಪ್ಸೆಗೊಂಡು ನಗರದ ಹೊರವಲಯದಲ್ಲಿರುವ ಕುರಿಕೋಟಾ ಹಳೆಯ ಸೇತುವೆ ಮೆಲಿಂದ ಹಾರಿದ್ದ ಯುವತಿವೋರ್ವಳು ನಾಪತ್ತೆಯಾಗಿರುವ ಘಟನೆ ಶುಕ್ರವಾರ ಮಧ್ಯಾಹ್ನ ನಡೆದಿದೆ. ಕಮಲಾಪುರ ತಾಲೂಕಿನ ಮಹಾಗಾಂವ್ ಗ್ರಾಮದ ನಿವಾಸಿ ಎನ್ನಲಾಗುತ್ತಿರುವ ತ್ರೀವೇಣಿ ಸೂರ್ಯಕಾಂತ (30) ಎಂಬ ಯುವತಿ ನದಿಗೆ ಹಾರಿದ್ದಾಳೆ ಎಂದು ತಿಳಿದುಬಂದಿದೆ. ಶುಕ್ರವಾರದಿಂದ ನಾಪತ್ತೆಯಾಗಿರುವ ಯುವತಿಯ ಪತ್ತೆಗೆ ಕಾರ್ಯಾಚರಣೆ ನಡೆಸಲಾಗಿದೆ, ಆದರೆ ಇವರೆಗೆ ಯುವತಿ ಪತ್ತೆಯಾಗಿಲ್ಲ. ಶೋಧ ಕಾರ್ಯಾಚರಣೆ ರವಿವಾರವೂ ಮುಂದುವರೆದಿದೆ ಎಂದು ಮಹಾಗಾಂವ್ ಪೊಲೀಸ್ ಠಾಣೆಯ ಪಿಎಸ್ಐ ಅವರು ತಿಳಿಸಿದ್ದಾರೆ. ಘಟನೆ ಮಹಾಗಾಂವ್ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದೆ.
ಪಾದಚಾರಿಗಳಿಗೆ ಕಾರು ಢಿಕ್ಕಿ: ಓರ್ವ ಮೃತ್ಯು, ಮತ್ತೋರ್ವನಿಗೆ ಗಂಭೀರ ಗಾಯ
ಕೋಟ: ಕಾರೊಂದು ಢಿಕ್ಕಿ ಹೊಡೆದ ಪರಿಣಾಮ ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ಓರ್ವ ವ್ಯಕ್ತಿ ಮೃತಪಟ್ಟು, ಇನ್ನೋರ್ವ ಗಂಭೀರವಾಗಿ ಗಾಯಗೊಂಡ ಘಟನೆ ಜ.16ರಂದು ರಾತ್ರಿ ವೇಳೆ ಕಾರ್ಕಡ ಗ್ರಾಮದ ರಿಶಿ ಆಟೋ ವೆಲ್ಡಿಂಗ್ ವರ್ಕಸ್ ಸಮೀಪ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನಡೆದಿದೆ. ಮೃತರನ್ನು ಇಂಟಿರಿಯಲ್ ಡಿಸೈನ್ ಕೆಲಸ ಮಾಡಿಕೊಂಡಿದ್ದ ಪ್ರದೀಪ ಎಂದು ಗುರುತಿಸಲಾಗಿದೆ. ಅವರೊಂದಿಗೆ ಕೆಲಸ ಮಾಡಿಕೊಂಡಿದ್ದ ಶಶಿ ತೀವ್ರವಾಗಿ ಗಾಯಗೊಂಡು ಬ್ರಹ್ಮಾವರ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕುಂದಾಪುರ ಕಡೆಯಿಂದ ಉಡುಪಿ ಕಡೆಗೆ ಹೋಗುವ ರಾಷ್ಟ್ರೀಯ ಹೆದ್ದಾರಿಯ ವಿರುದ್ದ ದಿಕ್ಕಿನಲ್ಲಿ ಬರುತ್ತಿದ್ದ ಕಾರು, ರಸ್ತೆಯ ಬದಿ ನಡೆದುಕೊಂಡು ಹೋಗುತ್ತಿದ್ದ ಇಬ್ಬರಿಗೆ ಡಿಕ್ಕಿ ಹೊಡೆಯಿತ್ತೆನ್ನಲಾಗಿದೆ. ಚಾಲಕ ಬಳಿಕ ತನ್ನ ಕಾರನ್ನು ನಿಲ್ಲಿಸದೆ ಅಲ್ಲಿಂದ ಪರಾರಿಯಾದನು ಎನ್ನಲಾಗಿದೆ. ಅಪಘಾತದಿಂದ ಪ್ರದೀಪ ಹಾಗೂ ಶಶಿ ಎಂಬವರು ತೀವ್ರವಾಗಿ ಗಾಯ ಗೊಂಡಿದ್ದು, ಕೂಡಲೇ ಅವರನ್ನು ಸ್ಥಳೀಯರು ಬ್ರಹ್ಮಾವರ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋದರು. ಅಲ್ಲಿ ಪರೀಕ್ಷಿಸಿದ ವೈದ್ಯರು ಪ್ರದೀಪ್ ಮೃತಪಟ್ಟಿ ರುವುದಾಗಿ ತಿಳಿಸಿದರು. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
114 ರಫೇಲ್ ಯುದ್ಧವಿಮಾನಗಳ ಖರೀದಿಗೆ ರಕ್ಷಣಾ ಖರೀದಿ ಮಂಡಳಿ ಅಸ್ತು
ಹೊಸದಿಲ್ಲಿ,ಜ.17: ಫ್ರಾನ್ಸ್ನ ಡಸಾಲ್ಟ್ ಏವಿಯೇಷನ್ನಿಂದ 114 ರಫೇಲ್ ಯುದ್ಧವಿಮಾನಗಳ ಖರೀದಿ ಪ್ರಸ್ತಾವಕ್ಕೆ ರಕ್ಷಣಾ ಖರೀದಿ ಮಂಡಳಿಯು ಶುಕ್ರವಾರ ಹಸಿರು ನಿಶಾನೆಯನ್ನು ತೋರಿಸಿದೆ. ಪ್ರಸ್ತಾವವನ್ನು ಈಗ ಅನುಮೋದನೆಗಾಗಿ ರಕ್ಷಣಾ ಸಚಿವ ರಾಜನಾಥ ಸಿಂಗ್ ಅಧ್ಯಕ್ಷತೆಯ ರಕ್ಷಣಾ ಸ್ವಾಧೀನ ಮಂಡಳಿಗೆ ಸಲ್ಲಿಸಲಾಗುವುದು. ಅಂತಿಮ ಒಪ್ಪಿಗೆಯನ್ನು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಭದ್ರತೆ ಕುರಿತ ಸಂಪುಟ ಸಮಿತಿಯು ನೀಡಬೇಕಾಗುತ್ತದೆ. ಈಗಾಗಲೇ 36 ರಫೇಲ್ ಯುದ್ಧವಿಮಾನಗಳನ್ನು ಹೊಂದಿರುವ ಭಾರತೀಯ ವಾಯುಪಡೆಯು ಕಳೆದ ವರ್ಷ 114 ಹೆಚ್ಚುವರಿ ರಫೇಲ್ ವಿಮಾನಗಳನ್ನು ಕೋರಿ ರಕ್ಷಣಾ ಸಚಿವಾಲಯಕ್ಕೆ ಔಪಚಾರಿಕ ಪ್ರಸ್ತಾವವನ್ನು ಸಲ್ಲಿಸಿತ್ತು. ಮೂಲಗಳ ಪ್ರಕಾರ ಭಾರತ ಮತ್ತು ಫ್ರಾನ್ಸ್ ಮುಂದಿನ ತಿಂಗಳಿನಲ್ಲೇ 114 ಯುದ್ಧವಿಮಾನಗಳ ಅಂತಿಮ ಒಪ್ಪಂದಕ್ಕೆ ಸಹಿ ಹಾಕಬಹುದು. ಕಳೆದ ವರ್ಷದ ಎಪ್ರಿಲ್ನಲ್ಲಿ ಭಾರತವು ಭಾರತೀಯ ನೌಕಾಪಡೆಯ ಬಲವರ್ಧನೆಗಾಗಿ 26 ರಫೇಲ್-ಸಾಗರ ಯುದ್ಧ ವಿಮಾನಗಳ ಖರೀದಿಗಾಗಿ ಫ್ರಾನ್ಸ್ನೊಂದಿಗೆ 63,000 ಕೋ.ರೂ.ಗಳ ಮಹತ್ವದ ಒಪ್ಪಂದಕ್ಕೆ ಸಹಿ ಹಾಕಿತ್ತು. ಖರೀದಿಯು ಅಂತರ್-ಸರಕಾರಿ ಒಪ್ಪಂದದಡಿ ನಡೆಯಲಿದ್ದು,ಇದು ಯಾವುದೇ ಮಧ್ಯವರ್ತಿಗಳಿಲ್ಲದೆ ನೇರ ಪೂರೈಕೆಗಳನ್ನು ಖಚಿತಪಡಿಸುತ್ತದೆ. 22 ಒಂಟಿ ಆಸನಗಳ ಯುದ್ಧವಿಮಾನಗಳು ಮತ್ತು ಅವಳಿ ಆಸನಗಳ ನಾಲ್ಕು ತರಬೇತಿ ವಿಮಾನಗಳಿಗಾಗಿ ಒಪ್ಪಂದಕ್ಕೆ ಸಹಿ ಹಾಕಲಾಗಿದ್ದು, 2031ರ ವೇಳೆಗೆ ಪೂರೈಕೆಗಳು ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಜೂನ್ನಲ್ಲಿ ಡಸಾಲ್ಟ್ ಏವಿಯೇಷನ್ ಮತ್ತು ಟಾಟಾ ಅಡ್ವಾನ್ಸ್ಡ್ ಸಿಸ್ಟಮ್ಸ್ ಲಿ.(ಟಿಎಎಸ್) ಭಾರತದಲ್ಲಿ ರಫೇಲ್ ಯುದ್ಧವಿಮಾನದ ಫ್ಯೂಸ್ಲೇಜ್ (ದೇಹಭಾಗ) ತಯಾರಿಕೆಗಾಗಿ ನಾಲ್ಕು ಉತ್ಪಾದನೆ ವರ್ಗಾವಣೆ ಒಪ್ಪಂದಗಳಿಗೆ ಸಹಿ ಹಾಕಿದ್ದವು. ಇದು ದೇಶದ ವೈಮಾನಿಕ ಉತ್ಪಾದನಾ ಸಾಮರ್ಥ್ಯಗಳನ್ನು ಬಲಗೊಳಿಸುವಲ್ಲಿ ಮತ್ತು ಜಾಗತಿಕ ಪೂರೈಕೆ ಸರಪಳಿಗಳನ್ನು ಬೆಂಬಲಿಸುವಲ್ಲಿ ಮಹತ್ವದ ಹೆಜ್ಜೆಯಾಗಿದೆ. ಮೊದಲ ಫ್ಯೂಸಲೇಜ್ ಭಾಗಗಳು ವಿತ್ತವರ್ಷ 2028ರಲ್ಲಿ ಸಿದ್ಧಗೊಳ್ಳುವ ನಿರೀಕ್ಷೆಯಿದ್ದು, ಪ್ರತಿ ತಿಂಗಳು ಎರಡು ಸಂಪೂರ್ಣ ಫ್ಯೂಸಲೇಜ್ಗಳು ಹೊರಬರುವ ನಿರೀಕ್ಷೆಯಿದೆ. ರಫೇಲ್ ಯುದ್ಧವಿಮಾನಗಳ ಫ್ಯೂಸಲೇಜ್ನ ಪ್ರಮುಖ ರಚನಾತ್ಮಕ ವಿಭಾಗಗಳ ತಯಾರಿಕೆಗಾಗಿ ಟಿಎಎಸ್ ಹೈದರಾಬಾದ್ನಲ್ಲಿ ಅತ್ಯಾಧುನಿಕ ಉತ್ಪಾದನಾ ಸೌಲಭ್ಯವನ್ನು ಸ್ಥಾಪಿಸಲಿದೆ.
ತಮಿಳುನಾಡಿನಲ್ಲಿ ಮುಷ್ಕರ, ಕರ್ನಾಟಕದಲ್ಲಿ ಗಗನಕ್ಕೇರಿದ ಕೋಳಿ ಮಾಂಸದ ಬೆಲೆ, ಕೆಜಿಗೆ ₹100 ಹೆಚ್ಚಳ!
ತಮಿಳುನಾಡಿನ ಕೋಳಿ ಸಾಕಾಣಿಕೆದಾರರು ಖಾಸಗಿ ಕಂಪನಿಗಳು ನೀಡುತ್ತಿರುವ ಕಡಿಮೆ ಸಾಕಾಣಿಕೆ ದರದ ವಿರುದ್ಧ ಸಿಡಿದೆದ್ದಿದ್ದು ಜನವರಿ 1, 2026 ರಿಂದ ಉತ್ಪಾದನೆಯನ್ನು ಸ್ಥಗಿತಗೊಳಿಸಿ ಮುಷ್ಕರ ನಡೆಸುತ್ತಿದ್ದಾರೆ. ಬ್ರಾಯ್ಲರ್ ಕೋಳಿಗಳಿಗೆ ಪ್ರಸ್ತುತ ನೀಡುತ್ತಿರುವ 6.5 ರೂ. ದರವನ್ನು 20 ರೂ.ಗೆ ಹೆಚ್ಚಿಸಬೇಕು ಎಂಬುದು ಅವರ ಪ್ರಮುಖ ಬೇಡಿಕೆಯಾಗಿದೆ. ಈ ಮುಷ್ಕರದಿಂದಾಗಿ ತಮಿಳುನಾಡಿನ ಪ್ರಮುಖ ಉತ್ಪಾದನಾ ಕೇಂದ್ರಗಳಾದ ಪಲ್ಲಡಂ, ಈರೋಡ್ ಮತ್ತು ಕೊಯಮತ್ತೂರು ಭಾಗಗಳಿಂದ ಬೆಂಗಳೂರಿಗೆ ಬರುತ್ತಿದ್ದ ಕೋಳಿ ಮಾಂಸದ ಪೂರೈಕೆ ಸ್ಥಗಿತಗೊಂಡಿದೆ. ಪರಿಣಾಮವಾಗಿ ಮಾರುಕಟ್ಟೆಯಲ್ಲಿ ಚಿಕನ್ ಬೆಲೆ ಗಣನೀಯವಾಗಿ ಏರಿಕೆಯಾಗಿದೆ.
ಆರ್ಸಿಬಿ ಫ್ಯಾನ್ಸ್ಗೆ ಹಬ್ಬ: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್ ಪಂದ್ಯಗಳಿಗೆ ಸರ್ಕಾರ ಗ್ರೀನ್ ಸಿಗ್ನಲ್
ಬೆಂಗಳೂರು: ಆರ್ಸಿಬಿ ಅಭಿಮಾನಿಗಳಿಗೆ ರಾಜ್ಯ ಸರ್ಕಾರ ಕೊನೆಗೂ ಸಿಹಿಸುದ್ದಿ ನೀಡಿದೆ. ಬೆಂಗಳೂರಿನ ಐಕಾನಿಕ್ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲೇ ಅಂತರರಾಷ್ಟ್ರೀಯ ಪಂದ್ಯಗಳು ಹಾಗೂ ಐಪಿಎಲ್ ಪಂದ್ಯಗಳನ್ನು ಆಯೋಜಿಸಲು ಕರ್ನಾಟಕ ಸರ್ಕಾರ ಅನುಮತಿ ನೀಡಿದೆ. ಕರ್ನಾಟಕ ಗೃಹ ಇಲಾಖೆಯು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಗೆ (ಕೆಎಸ್ಸಿಎ) ಈ ಸಂಬಂಧ ಅಧಿಕೃತ ಅನುಮೋದನೆ ನೀಡಿದೆ. ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಕೆಎಸ್ಸಿಎ,
ಸ್ಕೂಟರ್ ಸಹಿತ ಎಲೆಕ್ಟ್ರಿಷಿಯನ್ ನಾಪತ್ತೆ
ಶಿರ್ವ, ಜ.17: ಎಲೆಕ್ಟ್ರಿಷಿಯನೊಬ್ಬರು ಮನೆಯಿಂದ ಸ್ಕೂಟರ್ನಲ್ಲಿ ಹೋದವರು ನಾಪತ್ತೆಯಾಗಿರುವ ಘಟನೆ ಜ.13ರಂದು ಬೆಳ್ಳೆ ಗ್ರಾಮದ ಪಾಂಬೂರು ಎಂಬಲ್ಲಿ ನಡೆದಿದೆ. ನಾಪತ್ತೆಯಾದವರನ್ನು ಪಾಂಬೂರು ಮಡಿವಾಳ ತೋಟ ನಿವಾಸಿ ಸಾಧು ಸಾಲಿಯಾನ್ ಎಂಬವರ ಮಗ ಸಚಿನ್ ಎಸ್ ಸಾಲಿಯಾನ್(33) ಎಂದು ಗುರುತಿಸಲಾಗಿದೆ. ಎಲೆಕ್ಟ್ರಿಷಿಯನ್ ಕೆಲಸ ಮಾಡುತ್ತಿದ್ದ ಇವರು, ಮನೆಯಿಂದ ತನ್ನ ಸ್ಕೂಟರ್ನಲ್ಲಿ ಹೋದವರು ಕೆಲಸಕ್ಕೂ ಹೋಗದೆ ವಾಪಾಸ್ಸು ಮನೆಗೂ ಬಾರದೆ ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಾರ್ ಪರವಾನಗಿ ನೀಡಲು 25 ಲಕ್ಷ ಲಂಚ; ಅಬಕಾರಿ ಉಪ ಆಯುಕ್ತ ಸೇರಿ ಮೂವರು ಅಧಿಕಾರಿಗಳು ಲೋಕಾಯುಕ್ತ ಬಲೆಗೆ
ಬೆಂಗಳೂರಿನಲ್ಲಿ ಲೋಕಾಯುಕ್ತ ಪೊಲೀಸರು ದೊಡ್ಡ ಕಾರ್ಯಾಚರಣೆ ನಡೆಸಿದ್ದಾರೆ. ಬಾರ್ ಮತ್ತು ಮೈಕ್ರೋಬ್ರೂವರಿ ಪರವಾನಗಿ ನೀಡಲು 80 ಲಕ್ಷ ರೂ. ಲಂಚಕ್ಕೆ ಬೇಡಿಕೆಯಿಟ್ಟಿದ್ದ ಅಬಕಾರಿ ಇಲಾಖೆಯ ಮೂವರು ಅಧಿಕಾರಿಗಳನ್ನು ಬಂಧಿಸಲಾಗಿದೆ. 25 ಲಕ್ಷ ರೂ. ಸ್ವೀಕರಿಸುತ್ತಿದ್ದಾಗ ಅಧಿಕಾರಿಗಳು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಈ ಕಾರ್ಯಾಚರಣೆಯಿಂದ ಅಬಕಾರಿ ಇಲಾಖೆಯ ಭ್ರಷ್ಟಾಚಾರ ಬಯಲಾಗಿದೆ. ತನಿಖೆ ಮುಂದುವರಿದಿದೆ.
ಮಹಾರಾಷ್ಟ್ರ ಚುನಾವಣೆಯಲ್ಲಿ ಶಾಯಿ ವಿವಾದ: ಮಾರ್ಕರ್ ಪೆನ್ VS ಅಳಿಸಲಾಗದ ಶಾಯಿ; ಏನಿದು ವಿವಾದ?
ಬೃಹನ್ ಮುಂಬೈ ಮಹಾನಗರ ಪಾಲಿಕೆ ಸೇರಿದಂತೆ ಮಹಾರಾಷ್ಚ್ರದ 29 ನಗರ ಪಾಲಿಕೆಗಳಲ್ಲಿ ಗುರುವಾರ ಮತದಾನ ನಡೆದಿದ್ದು ಶೇ 52.94 ರಷ್ಟು ಮತಗಳು ಚಲಾವಣೆ ಆಗಿದೆ. ಮುಂಬೈ ಮಹಾನಗರ ಪಾಲಿಕೆಯಲ್ಲಿ ಹೆಚ್ಚಿನ ವಾರ್ಡ್ ಗಳಲ್ಲಿ ಬಿಜೆಪಿ ನೇತೃತ್ವದ ಮಹಾಯುತಿ ಮೈತ್ರಿಕೂಟ ಮುನ್ನಡೆ ಸಾಧಿಸಿದೆ. ರಾಜ್ಯದಲ್ಲಿ ಮತ್ತೊಮ್ಮೆ ಬಿಜೆಪಿ ಅಭೂತಪೂರ್ವ ಗೆಲುವು ಸಾಧಿಸಿದೆ. ಇನ್ನೂ ಚುನಾವಣೆಯಲ್ಲಿ ಬಳಸಿದ ಶಾಯಿ ಬಗ್ಗೆ
ಪ್ರತ್ಯೇಕ ಪ್ರಕರಣ: ನಾಲ್ವರು ಆತ್ಮಹತ್ಯೆ
ಅಜೆಕಾರು, ಜ.17: ಪತ್ನಿಯ ಮರಣದಿಂದ ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಅಜೆಕಾರು ನಿವಾಸಿ ದೇವರಾಯ ಹೆಗ್ಡೆ(80) ಎಂಬವರು ಜೀವನದಲ್ಲಿ ಜಿಗುಪ್ಸೆಗೊಂಡು ಜ.15ರಂದು ರಾತ್ರಿ ಮನೆಯ ಹಿಂಬದಿಯ ಮಾಡಿನ ಪಕ್ಕಾಸಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಅಜೆಕಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬೈಂದೂರು: ವೈಯಕ್ತಿಕ ಕಾರಣದಿಂದ ಮನನೊಂದ ಯಳಜಿತ ಗ್ರಾಮದ ಕಾಂಬ್ಳಿಕೇರಿ ನಿವಾಸಿ ಚಂದು(85) ಎಂಬವರು ಜ.14ರ ಬೆಳಗ್ಗೆಯಿಂದ ಜ.16ರ ಮಧ್ಯಾಹ್ನದ ಮಧ್ಯಾವಧಿಯಲ್ಲಿ ಮನೆ ಸಮೀಪದ ಹೊಲದಲ್ಲಿ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪಡುಬಿದ್ರಿ: ಅನಾರೋಗ್ಯದಿಂದ ಮಾನಸಿಕವಾಗಿ ನೊಂದು ಜ.8ರಂದು ರಾತ್ರಿ ಮನೆಯ ಜಗಲಿಯಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಹೆಜಮಾಡಿ ಗ್ರಾಮದ ಪಡುಕೆರೆ ನಿವಾಸಿ ಗಣೇಶ್(48) ಎಂಬವರು ತೀವ್ರವಾಗಿ ಅಸ್ವಸ್ಥ ಗೊಂಡು ಜ.16ರಂದು ಉಡುಪಿ ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಾಪು: ಮದ್ಯ ಸೇವನೆ ಚಟದಿಂದ ಹೊಟ್ಟೆನೋವು ಹಾಗೂ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ಬಾಗಲಕೋಟೆ ಮೂಲದ ಪ್ರಕಾಶ ಎಂಬವರು ತಾನು ಮನೆ ಕೆಲಸ ಮಾಡಿಕೊಂಡಿದ್ದ ಮಣಿಪುರ ಗ್ರಾಮದ ಸಖರಾಮ ಶೆಟ್ಟಿ ಎಂಬ ವರ ಜಾಗದಲ್ಲಿರುವ ಬಾವಿಗೆ ಜ.16ರಂದು ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಿರ್ಗಮನ ಪರ್ಯಾಯ ಪುತ್ತಿಗೆ ಯತಿಗಳಿಗೆ ಅಭಿನಂದನಾ ಕಾರ್ಯಕ್ರಮ
ಉಡುಪಿ, ಜ.17: ಚತುರ್ಥ ಪರ್ಯಾಯ ಮಹೋತ್ಸವವನ್ನು ಯಶಸ್ವಿಯಾಗಿ ಪೂರೈಸಿದ ಪರ್ಯಾಯ ಪುತ್ತಿಗೆ ಮಠಾಧೀಶ ಶ್ರೀಸುಗುಣೇಂದ್ರ ತೀರ್ಥ ಸ್ವಾಮೀಜಿ ಹಾಗೂ ಕಿರಿಯ ಯತಿ ಶ್ರೀಸುಶ್ರೀಂದ್ರ ತೀರ್ಥ ಸ್ವಾಮೀಜಿ ಅವರಿಗೆ ಶಿರೂರು ಪರ್ಯಾಯ ಸ್ವಾಗತ ಸಮಿತಿಯ ವತಿಯಿಂದ ಅಭಿನಂದನಾ ಕಾರ್ಯಕ್ರಮವನ್ನು ಶನಿವಾರ ಉಡುಪಿ ರಥಬೀದಿಯಲ್ಲಿ ಆಯೋಜಿಸಲಾಗಿತ್ತು. ಅಭಿನಂದನೆ ಸ್ವೀಕರಿಸಿ ಮಾತನಾಡಿದ ಪುತ್ತಿಗೆ ಶ್ರೀಸುಗುಣೇಂದ್ರ ತೀರ್ಥ ಸ್ವಾಮೀಜಿ, ಕೆಲವರಲ್ಲಿ ಪುತ್ತಿಗೆ ಸ್ವಾಮೀಜಿ ಯವರಲ್ಲಿ ಕೋಟಿಗಟ್ಟಲೆ ಹಣ ಸಂಗ್ರಹ ಇದೆ ಎಂಬ ಭಾವನೆ ಇದೆ. ಆದರೆ ನಮ್ಮ ಹತ್ತಿರ ಯಾವುದೇ ಹಣ ಸಂಗ್ರಹ ಇಲ್ಲ. ಖರ್ಚು ಮಾಡಿದಷ್ಟು ಹಣ ಬರುತ್ತದೆ ಎಂಬ ಭಾವನೆ ನಮ್ಮದು. ಹಣ ಖರ್ಚು ಮಾಡುವುದೇ ಹಣ ಸಂಪಾದನೆ ಮಾಡುವ ಗುಟ್ಟು. ನಾವು ಹಣ ಕೂಡಿಟ್ಟು ಯಾವುದೇ ಯೋಜನೆ ಮಾಡಿಲ್ಲ. ನಮ್ಮಲ್ಲಿ ಹಣ ಇಲ್ಲ, ಜನರ ವಿಶ್ವಾಸ ಇದೆ. ಅದೇ ನಮ್ಮ ದೊಡ್ಡ ಸಂಪತ್ತು ಎಂದರು. ಅಧ್ಯಕ್ಷತೆಯನ್ನು ಸ್ವಾಗತ ಸಮಿತಿ ಅಧ್ಯಕ್ಷ ಹಾಗೂ ಶಾಸಕ ಯಶ್ಪಾಲ್ ಸುವರ್ಣ ವಹಿಸಿದ್ದರು. ಕಾಪು ಶಾಸಕ ಸುರೇಶ್ ಶೆಟ್ಟಿ ಗುರ್ಮೆ ಮಾತನಾಡಿದರು. ಉಡುಪಿ ಸಂಸ್ಕೃತ ಕಾಲೇಜಿನ ಉಪನ್ಯಾಸಕ ಡಾ.ಷಣ್ಮುಗ ಹೆಬ್ಬಾರ್ ಅಭಿನಂದನಾ ಭಾಷಣ ಮಾಡಿದರು. ಮುಖ್ಯ ಅತಿಥಿಗಳಾಗಿ ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನಕರ ಹೇರೂರು, ನಗರಸಭೆ ನಿಕಟಪೂರ್ವ ಅಧ್ಯಕ್ಷ ಪ್ರಭಾಕರ ಪೂಜಾರಿ, ಪೌರಾಯುಕ್ತ ಮಹಾಂತೇಶ್ ಹಂಗರಗಿ, ಬಡಗಬೆಟ್ಟು ಸೊಸೈಟಿಯ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ಉಪಸ್ಥಿತರಿದ್ದರು. ಸ್ವಾಗತ ಸಮಿತಿ ಪ್ರಧಾನ ಕಾರ್ಯದರ್ಶಿ ಮಟ್ಟಾರು ರತ್ನಾಕರ ಹೆಗ್ಡೆ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ ದರು. ಸ್ವಾಗತ ಸಮಿತಿಯ ಕೋಶಾಧಿಕಾರಿ ಜಯ ಪ್ರಕಾಶ್ ಕೆದ್ಲಾಯ ಅಭಿನಂದನಾ ಪತ್ರವನ್ನು ವಾಚಿಸಿದರು. ಹೊರೆಕಾಣಿಕೆ ಸಮಿತಿಯ ಸಂಚಾಲಕ ಸುಪ್ರಸಾದ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
Bengaluru | ಹಿಟ್ ಆ್ಯಂಡ್ ರನ್ : ಮೂವರು ಮೃತ್ಯು
ಬೆಂಗಳೂರು : ಹಿಟ್ ಆ್ಯಂಡ್ ರನ್ಗೆ ಮೂವರು ಯುವಕರು ಮೃತಪಟ್ಟಿರುವ ಘಟನೆ ದೇವನಹಳ್ಳಿ ತಾಲೂಕಿನ ಅಗಲಕೋಟೆ ಬಳಿ ಶನಿವಾರ ವರದಿಯಾಗಿದೆ. ಘಟನೆಯಲ್ಲಿ ಚಿಕ್ಕಜಾಲ ಮೂಲದ ತೌಸಿಫ್ ಸೇರಿದಂತೆ ಮತ್ತಿಬ್ಬರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಅಪಘಾತದ ಭೀಕರ ದೃಶ್ಯವು ಸಮೀಪದ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ದೇವನಹಳ್ಳಿಯಿಂದ ಬೂದಿಗೆರೆ ರಸ್ತೆಯಲ್ಲಿ ಮೂವರು ಯುವಕರು ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದ ವೇಳೆ ಅವಘಡ ಸಂಭವಿಸಿದೆ. ದ್ವಿಚಕ್ರ ವಾಹನ ನಿಯಂತ್ರಣ ಕಳೆದುಕೊಂಡು ಡಿವೈಡರ್ ದಾಟಿ ಬಂದು, ಪಕ್ಕದ ರಸ್ತೆಯಲ್ಲಿ ಎದುರಿನಿಂದ ಬಂದ ಟಿಪ್ಪರ್ ನಡಿ ಸಿಲುಕಿದೆ. ಅಪಘಾತದ ರಭಸಕ್ಕೆ ಮೂವರು ಯುವಕರ ದೇಹಗಳು ಛಿದ್ರಗೊಂಡ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಘಟನೆ ನಂತರ ಟಿಪ್ಪರ್ ಚಾಲಕ ವಾಹನದೊಂದಿಗೆ ಸ್ಥಳದಿಂದ ಪರಾರಿಯಾಗಿದ್ದಾನೆ. ಮಾಹಿತಿ ತಿಳಿದು ಸ್ಥಳಕ್ಕೆ ದೇವನಹಳ್ಳಿ ಸಂಚಾರಿ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿರುವುದಾಗಿ ತಿಳಿಸಿದ್ದಾರೆ.
ಇರಾನ್ನಿಂದ ವಿದ್ಯಾರ್ಥಿಗಳು ಸಹಿತ ಹಲವು ಭಾರತೀಯರು ಸ್ವದೇಶಕ್ಕೆ ವಾಪಸ್
ಹೊಸದಿಲ್ಲಿ,ಜ.17: ವ್ಯಾಪಕವಾದ ಆಡಳಿತ ವಿರೋಧಿ ಪ್ರತಿಭಟನೆಯನ್ನು ಎದುರಿಸುತ್ತಿರುವ ಇರಾನ್ನಿಂದ ವಿದ್ಯಾರ್ಥಿಗಳು ಸೇರಿದಂತೆ ಹಲವಾರು ಭಾರತೀಯರು ಶುಕ್ರವಾರ ತಡರಾತ್ರಿ ಹೊಸದಿಲ್ಲಿಯ ವಿಮಾನನಿಲ್ದಾಣದಲ್ಲಿ ಬಂದಿಳಿದಿದ್ದಾರೆ. 12-13 ಮಂದಿಯ ಭಾರತೀಯರ ತಂಡದಲ್ಲಿದ್ದ ಅಲ್ನಕ್ವಿಯವರನ್ನು ಹೊಸದಿಲ್ಲಿಯ ವಿಮಾನನಿಲ್ದಾಣದಲ್ಲಿ ಸಂದರ್ಶಿಸಿದ ಪತ್ರಕರ್ತರು, ಇರಾನ್ನಲ್ಲಿ ಯಾವುದೇ ರೀತಿಯ ತೊಂದರೆಯನ್ನು ಎದುರಿಸಿದ್ದೀರಾ ಎಂಬ ಪ್ರಶ್ನಿಸಿದಾಗ, ತನಗೆ ಯಾವುದೇ ರೀತಿಯ ಸಮಸ್ಯೆ ಆಗಿಲ್ಲವೆಂದು ತಿಳಿಸಿದರು. ‘‘ನಾವು ಟೆಹರಾನ್ನಿಂದ ಆಗಮಿಸಿದ್ದೇವೆ. ಇದಕ್ಕೂ ಮುನ್ನ ನಾವು ಇರಾಕ್ನಲ್ಲಿದ್ದು ಅಲ್ಲಿಂದ ಇರಾನ್ಗೆ ಪ್ರಯಾಣಿಸಿದ್ದೇವೆ. ಸುಮಾರು 8 ದಿನಗಳ ವಾಸ್ತವ್ಯದ ಆನಂತರ ನಾವು ಭಾರತಕ್ಕೆ ವಾಪಸಾಗಿದ್ದೇವೆ’’ ಎಂದವರು ಪಿಟಿಐಗೆ ತಿಳಿಸಿದ್ದಾರೆ. ಶಿರಾಝ್ನ ವೈದ್ಯಕೀಯ ಕಾಲೇಜ್ನಲ್ಲಿ ಕಲಿಯುತ್ತಿಯುವ ವಿದ್ಯಾರ್ಥಿನಿಯೊಬ್ಬರು ಸುದ್ದಿಗಾರರ ಜೊತೆ ಮಾತನಾಡುತ್ತಾ, ಅಲ್ಲಿ ಇಂಟರ್ನೆಟ್ ಕಾರ್ಯನಿರ್ವಹಿಸುತ್ತಿಲ್ಲ. ದೇಶಾದ್ಯಂತ ಏನಾಗುತ್ತಿದೆಯೆಂಬುದು ನಿಖರವಾಗಿ ಗೊತ್ತಾಗುತ್ತಿಲ್ಲವೆಂದರು. ತಾನಿದ್ದ ಶಿರಾಝ್ ನಗರದಲ್ಲಿ ಪರಿಸ್ಥಿತಿ ಉತ್ತಮವಾಗಿತ್ತು. ತಾವೆಲ್ಲಾ ಸ್ವಂತ ಖರ್ಚಿನಲ್ಲಿ ವಾಣಿಜ್ಯ ವಿಮಾನದಲ್ಲಿ ಆಗಮಿಸಿದ್ದೇವೆಯೇ ಹೊರತು ಭಾರತ ಸರಕಾರವು ಏರ್ಪಾಡು ಮಾಡಿಲ್ಲವೆಂದು ಹೇಳಿದರು. ಇರಾನ್ನಿಂದ ವಾಪಾಸಾ ತಮ್ಮ ಬಂಧುಗಳನ್ನು ಸ್ವಾಗತಿಸಲು ದಿಲ್ಲಿ ವಿಮಾನನಿಲ್ದಾಣದಲ್ಲಿ ಶುಕ್ರವಾರ ಭಾರೀ ಸಂಖ್ಯೆಯ ಜನರು ನೆರೆದಿದ್ದರು. ಹಣದುಬ್ಬರ ಹಾಗೂ ಇರಾನ್ ಕರೆನ್ಸಿ ರಿಯಾಲ್ನ ಮೌಲ್ಯದ ಕುಸಿತದ ಬಳಿಕ ಇರಾನ್ನಾದ್ಯಂತ ಪ್ರತಿಭಟನೆ ಭುಗಿಲೆದ್ದಿತ್ತು. ಆನಂತರ ಅದು ಆಡಳಿತ ವಿರೋಧಿ ಪ್ರತಿಭಟನೆಯಾಗಿ ಮಾರ್ಪಟ್ಟಿತ್ತು. ಟೆಹರಾನ್ ಸೇರಿದಂತೆ ದೇಶದ ವಿವಿಧೆಡೆ ಪ್ರತಿಭಟನೆಯಲ್ಲಿ ಈವರೆಗೆ ಕನಿಷ್ಠ 2,500 ಮಂದಿ ಮೃತಪಟ್ಟಿದ್ದಾರೆಂದು ಅಂದಾಜಿಸಲಾಗಿದೆ.
ಅತ್ಯಾಚಾರ ಆರೋಪ| ರಾಹುಲ್ ಮಾಂಕೂಟತ್ತಿಲ್ ಜಾಮೀನು ಅರ್ಜಿ ತಿರಸ್ಕರಿಸಿದ ನ್ಯಾಯಾಲಯ
ತಿರುವನಂತಪುರ,ಜ.17: ಅತ್ಯಾಚಾರ ಹಾಗೂ ಕ್ರಿಮಿನಲ್ ಬೆದರಿಕೆಯ ಆರೋಪಗಳಿಗೆ ಸಂಬಂಧಿಸಿ ಬಂಧಿತರಾಗಿರುವ ಕೇರಳ ಶಾಸಕ ರಾಹುಲ್ ಮಾಂಕೂಟತ್ತಿಲ್ ಜಾಮೀನು ಕೋರಿ ಸಲ್ಲಿಸಿದ ಅರ್ಜಿಯನ್ನು ತಿರುವಲ್ಲಾದ ಪ್ರಥಮ ದರ್ಜೆ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ನ್ಯಾಯಾಲಯ-1 ಶನಿವಾರ ತಿರಸ್ಕರಿಸಿದೆ. ದೂರುದಾರ ಮಹಿಳೆಯ ಜೊತೆಗಿನ ತನ್ನ ಸಂಬಂಧವು ಪರಸ್ಪರ ಸಹಮತದ್ದಾಗಿತ್ತು ಹಾಗೂ ಆಕೆಯ ಸಮ್ಮತಿಯೂ ಇತ್ತು ಎಂಬ ರಾಹುಲ್ ಮಾಂಕೂಟತ್ತಿಲ್ ಅವರ ವಾದವನ್ನು ಪುರಸ್ಕರಿಸಲು ಮುನ್ಸಿಫ್ ಮ್ಯಾಜಿಸ್ಟ್ರೇಟ್ ಅರುಂಧತಿ ದಿಲೀಪ್ ಅವರು ನಿರಾಕರಿಸಿದ್ದಾರೆ. ರಾಹುಲ್ ಹಾಗೂ ಸಂತ್ರಸ್ತೆಯ ನಡುವೆ ಸ್ನೇಹಯುತ ಹಾಗೂ ಪರಸ್ಪರ ಸಮ್ಮತಿ ಪೂರ್ವಕವಾದ ಸಂಬಂಧವಿತ್ತೆಂಬುದನ್ನು ದೃಢಪಡಿಸುವ ಚಾಟ್ಗಳನ್ನು ಹಾಗೂ ಆಡಿಯೋ ಸಂಭಾಷಣೆಗಳನ್ನು ಕೂಡಾ ಆರೋಪಿ ಪರ ವಕೀಲರು ಹಾಜರುಪಡಿಸಿದ್ದರು. ಪ್ರಾಸಿಕ್ಯೂಶನ್ ವಕೀಲರು, ರಾಹುಲ್ ಮಾಂಕೂಟತ್ತಿಲ್ ಅವರಿಗೆ ಜಾಮೀನು ನೀಡುವುದಕ್ಕೆ ವಿರೋಧ ವ್ಯಕ್ತಪಡಿಸಿದರು. ಆರೋಪಿಯು ಅಪರಾಧ ಪ್ರವೃತ್ತಿಯವರೆಂದು ಆಪಾದಿಸಿದರು. ಒಂದು ವೇಳೆ ಮಾಂಕೂಟತ್ತಿಲ್ ಅವರಿಗೆ ಜಾಮೀನು ನೀಡಿದರೆ ಅವರು ಸಂತ್ರಸ್ತೆಯ ಮೇಲೆ ಪ್ರಭಾವ ಬೀರುವ ಮತ್ತು ಸಾಕ್ಷ್ಯಗಳನ್ನು ನಾಶಪಡಿಸುವ ಅಪಾಯವಿದೆಯೆಂದು ಹೇಳಿದರು. ಈ ನಡುವೆ ರಾಹುಲ್ ಅವರು ಜಾಮೀನಿನಲ್ಲಿ ಬಿಡುಗಡೆ ಕೋರಿ ಪಟ್ಟಣಂತಿಟ್ಟ ಜಿಲ್ಲಾ ನ್ಯಾಯಾಲಯದಲ್ಲಿ ಹೊಸ ಅರ್ಜಿಯನ್ನು ಸಲ್ಲಿಸಲಿದ್ದಾರೆ. ಮೂರನೇ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿ ಮಾಂಕೂಟತ್ತಿಲ್ ಅವರನ್ನು ರವಿವಾರ ಬಂಂಧಿಸಲಾಗಿತ್ತು. ಅವರಿಗೆ ತಿರುವಲ್ಲಾ ಪ್ರಥಮ ದರ್ಜೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ನ್ಯಾಯಾಂಗ ಕಸ್ಟಡಿಯನ್ನು ವಿಧಿಸಿತ್ತು. ವಿದೇಶದಲ್ಲಿ ನೆಲೆಸಿರುವ ಕೊಟ್ಟಾಯಂನ ಮಹಿಳೆಯೊಬ್ಬರು ನೀಡಿದ ದೂರನ್ನು ಆಧರಿಸಿ ಈ ಪ್ರಕರಣವನ್ನು ದಾಖಲಿಸಲಾಗಿದೆ.
ಯಾದಗಿರಿ | ಲುಂಬಿನಿ ಗಾರ್ಡನ್ನಲ್ಲಿ ದೆವ್ವದ ವದಂತಿ !
ಸತ್ಯಾಸತ್ಯತೆ ಬಯಲಿಗೆಳೆಯಲು ಜ.18ರಂದು ವೈಜ್ಞಾನಿಕ ಪರಿಷತ್ತಿನಿಂದ ಜಾಗೃತಿ ಅಭಿಯಾನ
ವಲಸೆ ಕಾರ್ಮಿಕರ ಮನೆಗೆ ಅಕ್ರಮ ಪ್ರವೇಶ, ಬೆದರಿಕೆ ಪ್ರಕರಣ : ಪುನೀತ್ ಕೆರೆಹಳ್ಳಿಗೆ ಜಾಮೀನು
ಬೆಂಗಳೂರು : ವಲಸೆ ಕಾರ್ಮಿಕರ ವಾಸಸ್ಥಳಗಳಿಗೆ ಅಕ್ರಮವಾಗಿ ಪ್ರವೇಶಿಸಿ, ಅವರ ಪೌರತ್ವ ಹಾಗೂ ಗುರುತಿನ ದಾಖಲೆಗಳನ್ನು ಕೇಳಿ ಬೆದರಿಕೆ ಹಾಗೂ ಭೀತಿಯನ್ನುಂಟುಮಾಡಿದ ಆರೋಪದಡಿ ಬಂಧಿತರಾಗಿದ್ದ ಕೊಲೆ ಪ್ರಕರಣವೊಂದರ ಆರೋಪಿ ಪುನೀತ್ ಕೆರೆಹಳ್ಳಿ ಹಾಗೂ ಮತ್ತೊಬ್ಬರಿಗೆ ಆನೇಕಲ್ ತಾಲೂಕು ನ್ಯಾಯಾಲಯವು ಜಾಮೀನು ಮಂಜೂರು ಮಾಡಿ ಶನಿವಾರ ಆದೇಶಿಸಿದೆ. ಜ.13ರಂದು ಬನ್ನೇರುಘಟ್ಟ ಪೊಲೀಸ್ ಠಾಣೆ ಸರಹದ್ದಿನ ಎಸ್.ಬಿಂಗೀಪುರದ ಸಿದ್ದೇಶ್ ಕೆ.ಆರ್. ಎಂಬುವರ ಮಾಲಕತ್ವದ ಜಮೀನಿನ ಬಾಡಿಗೆ ಮನೆಯಲ್ಲಿ ವಾಸವಿದ್ದವರಿಗೆ ಧಮ್ಕಿ ಹಾಕಿ, ಗಲಾಟೆ ಮಾಡಿದ್ದಲ್ಲದೆ, ಅಲ್ಲಿಗೆ ಬಂದ ಸಿದ್ದೇಶ್ ಕೆ.ಆರ್. ಅವರಿಗೂ ನಿಂದಿಸಿ, ಜೀವ ಬೆದರಿಕೆ ಹಾಕಿದ ಆರೋಪದಡಿ ದಾಖಲಾದ ದೂರಿನ ಮೇರೆಗೆ ಶುಕ್ರವಾರ(ಜ.17) ತಡರಾತ್ರಿ 11 ಗಂಟೆ ಸುಮಾರಿಗೆ ಕೊಲೆ ಪ್ರಕರಣವೊಂದರ ಆರೋಪಿ ಪುನೀತ್ ಕೆರೆಹಳ್ಳಿ ಹಾಗೂ ಡಾ.ನಾಗೇಂದ್ರಪ್ಪ ಶಿರೂರು ಎಂಬುವರನ್ನು ಪೊಲೀಸರು ಬಂಧಿಸಿದ್ದರು. ಬಳಿಕ, ಜ.17ರ ಶನಿವಾರ ಬಂಧಿತ ಆರೋಪಿಗಳನ್ನು ಆನೇಕಲ್ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಈ ಸಂಬಂಧ ವಿಚಾರಣೆ ನಡೆಸಿದ ನ್ಯಾಯಾಲಯವು ಈ ಪ್ರಕರಣದಲ್ಲಿ ಬಲವಂತದ ಕ್ರಮ ಜರುಗಿಸದಂತೆ ಸೂಚಿಸಿ ಆರೋಪಿಗಳಿಗೆ ಜಾಮೀನು ಮಂಜೂರು ಮಾಡಿದೆ. ದೂರಿನಲ್ಲೇನಿದೆ?: ಈ ಸಂಬಂಧ ಜಮೀನಿನ ಮಾಲಕ ಸಿದ್ದೇಶ್ ಕೆ.ಆರ್. ಪೊಲೀಸರಿಗೆ ದೂರು ನೀಡಿದ್ದರು. ದೂರಿನ ಪ್ರಕಾರ, ‘ಬನ್ನೇರುಘಟ್ಟ ಪೊಲೀಸ್ ಠಾಣಾ ವ್ಯಾಪ್ತಿಯ ಎಸ್.ಬಿಂಗೀಪುರ ಗ್ರಾಮದ ಸಾಯಿಬೃಂದಾವನ ಲೇಔಟ್ ಬಳಿ, ಜನವರಿ 13ರ ಬೆಳಗಿನ ಜಾವ 12.05ರ ಸುಮಾರಿಗೆ ತಮ್ಮ ಮಾವ ಮಲ್ಲಿಕಾರ್ಜುನ ಅವರು ಬಾಡಿಗೆಗೆ ನೀಡಿರುವ ಜಾಗದ ಬಳಿ ಗಲಾಟೆ ನಡೆಯುತ್ತಿದೆ ಎಂಬ ಮಾಹಿತಿ ಸಿದ್ದೇಶ ಕೆ.ಆರ್. ಅವರಿಗೆ ಲಭ್ಯವಾಗಿದೆ. ಈ ಹಿನ್ನೆಲೆಯಲ್ಲಿ ಅವರು ಸುಮಾರು 12.30ರ ವೇಳೆಗೆ ಬಾಡಿಗೆ ಮನೆಯ ಬಳಿ ತೆರಳಿದ್ದಾರೆ. ಅಲ್ಲಿ ಪುನೀತ್ ಕೆರೆಹಳ್ಳಿ, ಡಾ.ನಾಗೇಂದ್ರಪ್ಪ ಶಿರೂರು ಹಾಗೂ ಇತರರು ಸೇರಿಕೊಂಡು ಬಾಡಿಗೆದಾರರೊಂದಿಗೆ, ‘ನೀವು ಬಾಂಗ್ಲಾದೇಶದವರು, ಇಲ್ಲಿಗೆ ಏಕೆ ಬಂದಿದ್ದೀರಿ?’ ಎಂದು ವಾಗ್ವಾದ ನಡೆಸುತ್ತಿದ್ದರೆಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಗಲಾಟೆಯನ್ನು ತಡೆಯಲು ಮುಂದಾದ ಸಿದ್ದೇಶ ಕೆ.ಆರ್. ಅವರನ್ನು, ‘ಇವರಿಗೆ ಏಕೆ ಮನೆ ಬಾಡಿಗೆ ಕೊಟ್ಟಿದ್ದೀಯ?’ ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಲಾಗಿದೆ. ಬಾಡಿಗೆದಾರರು ಕರ್ನಾಟಕದ ಆಧಾರ್ ಕಾರ್ಡ್ ತೋರಿಸಿದ್ದರಿಂದಲೇ ಮನೆ ಬಾಡಿಗೆ ನೀಡಲಾಗಿದೆ ಎಂದು ತಿಳಿಸಿದರೂ, ಆರೋಪಿಗಳು ಗಲಾಟೆ ಮುಂದುವರಿಸಿ, ‘ನೀನು ಬಾಂಗ್ಲಾದೇಶದವರಿಗೆ ಮನೆ ಬಾಡಿಗೆ ಕೊಟ್ಟಿದ್ದಕ್ಕೆ ನಿನ್ನನ್ನು ಜೀವ ಸಹಿತ ಸುಮ್ಮನೆ ಬಿಡುವುದಿಲ್ಲ’ ಎಂದು ಜೀವ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ. ಬೆಳಗಿನ ಜಾವ ಸುಮಾರು 1 ಗಂಟೆಗೆ ಸ್ಥಳಕ್ಕೆ ಆಗಮಿಸಿದ ಬನ್ನೇರುಘಟ್ಟ ಪೊಲೀಸರು ಬಾಡಿಗೆದಾರರನ್ನು ಠಾಣೆಗೆ ಕರೆದುಕೊಂಡು ಹೋಗಿದ್ದಾರೆ. ನಂತರ ಪುನೀತ್ ಕೆರೆಹಳ್ಳಿ ಹಾಗೂ ಡಾ.ನಾಗೇಂದ್ರಪ್ಪ ಶಿರೂರು ಮತ್ತೆ ತೊಂದರೆ ಉಂಟುಮಾಡುವ ಸಾಧ್ಯತೆ ಇದೆ ಎಂಬ ಭಯದಿಂದ ತಡವಾಗಿ ದೂರು ನೀಡಿರುವುದಾಗಿ ಸಿದ್ದೇಶ ಕೆ.ಆರ್. ತಿಳಿಸಿದ್ದಾರೆ. ತಮ್ಮ ಜಾಗಕ್ಕೆ ಅತಿಕ್ರಮ ಪ್ರವೇಶ ಮಾಡಿ, ಅವಾಚ್ಯ ನಿಂದನೆ ನಡೆಸಿ ಜೀವ ಬೆದರಿಕೆ ಹಾಕಿರುವ ಆರೋಪಿಗಳಾದ ಪುನೀತ್ ಕೆರೆಹಳ್ಳಿ, ಡಾ.ನಾಗೇಂದ್ರಪ್ಪ ಶಿರೂರು ಹಾಗೂ ಇತರರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಅವರು ಆಗ್ರಹಿಸಿದ್ದಾರೆ. ಈ ಪ್ರಕರಣದ ಕುರಿತು ಬನ್ನೇರುಘಟ್ಟ ಪೊಲೀಸರು ಬಿಎನ್ಎಸ್ ಸೆಕ್ಷನ್ 126(2), 3(5), 329(3), 351(2) 352 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಪಕ್ಷದಿಂದ ಉಚ್ಚಾಟಿಸುವಂತೆ ಬಿಜೆಪಿ ಆಗ್ರಹ
ತಮಿಳುನಾಡು ವಿಧಾನಸಭಾ ಚುನಾವಣೆ| ಪ್ರತಿ ಕುಟುಂಬಗಳಿಗೆ ತಲಾ 2,000 ರೂ.ನೆರವು ಸೇರಿದಂತೆ 5 ಭರವಸೆಗಳನ್ನು ನೀಡಿದ AIADMK
ಚೆನ್ನೈ: ಶನಿವಾರ ಎಲ್ಲರಿಗಿಂತ ಮುಂಚಿತವಾಗಿ ಚುನಾವಣಾ ಭರವಸೆಗಳನ್ನು ಪ್ರಕಟಿಸಿರುವ ತಮಿಳುನಾಡಿನ ಪ್ರಮುಖ ವಿರೋಧ ಪಕ್ಷ ಎಐಎಡಿಎಂಕೆ, ಪಡಿತರ ಚೀಟಿ ಹೊಂದಿರುವ ಎಲ್ಲ ಕುಟುಂಬಗಳಿಗೆ ಮಾಸಿಕ ತಲಾ 2,000 ರೂ. ನೆರವು, ನಗರ ಬಸ್ಗಳಲ್ಲಿ ಪುರುಷರು ಹಾಗೂ ಮಹಿಳೆಯರಿಗೆ ಉಚಿತ ಪ್ರಯಾಣ ಸೌಲಭ್ಯ, ಹಾಗೂ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಕೆಲಸದ ಅವಧಿಯನ್ನು 125 ದಿನಗಳಿಂದ 150 ದಿನಗಳಿಗೆ ಹೆಚ್ಚಿಸುವುದಾಗಿ ಸೇರಿದಂತೆ ಐದು ಭರವಸೆಗಳನ್ನು ನೀಡಿದೆ. ಈ ಐದು ಚುನಾವಣಾ ಭರವಸೆಗಳನ್ನು ಪ್ರಕಟಿಸಲು ಎಐಎಡಿಎಂಕೆ ಸಂಸ್ಥಾಪಕ ಎಂ.ಜಿ. ರಾಮಚಂದ್ರನ್ ಅವರ ಜನ್ಮದಿನವನ್ನು ಆಯ್ದುಕೊಂಡಿರುವ ಪಕ್ಷದ ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಕೆ. ಪಳನಿಸ್ವಾಮಿ, ಪಕ್ಷದ ಪ್ರಣಾಳಿಕೆ ಮಹಿಳೆಯರನ್ನು ಮೊದಲ ಸ್ಥಾನದಲ್ಲಿರಿಸುವುದರೊಂದಿಗೆ ಕಲ್ಯಾಣ, ಘನತೆ ಮತ್ತು ಆರ್ಥಿಕ ನ್ಯಾಯದ ಮೇಲಿನ ನಂಬಿಕೆಯನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿದ್ದಾರೆ. “ಈ ಭರವಸೆಗಳು ಜನರನ್ನು ಮೊದಲ ಸ್ಥಾನದಲ್ಲಿಡುವ ಎಐಎಡಿಎಂಕೆಯ ಆಡಳಿತ ಪರಂಪರೆಯನ್ನು ಪ್ರತಿಫಲಿಸುತ್ತವೆ. ನಮ್ಮ ಗುರಿ ಮಹಿಳೆಯರನ್ನು ಸಬಲೀಕರಣಗೊಳಿಸುವುದು, ಜೀವನೋಪಾಯವನ್ನು ಬಲಪಡಿಸುವುದು, ಎಲ್ಲರಿಗೂ ವಸತಿಯನ್ನು ಖಾತರಿಗೊಳಿಸುವುದು ಹಾಗೂ ಕಾರ್ಮಿಕರ ಘನತೆಯನ್ನು ಮರುಸ್ಥಾಪಿಸುವುದಾಗಿದೆ” ಎಂದು ಅವರು ತಿಳಿಸಿದ್ದಾರೆ. ‘ಕುಳವಿಕ್ಕು’ ಎಂದು ಹೆಸರಿಸಲಾದ ಯೋಜನೆಯಡಿ ಪ್ರತಿ ಕುಟುಂಬದ ಮಹಿಳಾ ಮುಖ್ಯಸ್ಥೆಯ ಖಾತೆಗೆ ಮಾಸಿಕ ತಲಾ 2,000 ರೂ. ನೆರವನ್ನು ನೇರವಾಗಿ ಜಮಾ ಮಾಡಲಾಗುತ್ತದೆ. ಡಿಎಂಕೆ ಸರಕಾರ ಜಾರಿಗೆ ತಂದಿರುವ ‘ಕಲೈಗ್ನರ್ ಮಗಳಿರ್ ಉರಿಮೈ ತಿಟ್ಟಂ’ ಯೋಜನೆಯಡಿ ರಾಜ್ಯದಲ್ಲಿ ಸುಮಾರು 1.31 ಕೋಟಿ ಮಹಿಳೆಯರಿಗೆ ಪ್ರತಿ ತಿಂಗಳು ತಲಾ 1,000 ರೂ. ಆರ್ಥಿಕ ನೆರವು ನೀಡಲಾಗುತ್ತಿದೆ. ಈ ಮೊತ್ತವನ್ನು ಎಐಎಡಿಎಂಕೆ ತನ್ನ ಚುನಾವಣಾ ಭರವಸೆಯಲ್ಲಿ ಎಲ್ಲಾ ಪಡಿತರ ಚೀಟಿ ಹೊಂದಿರುವ ಕುಟುಂಬಗಳಿಗೆ 2,000 ರೂ.ಗೆ ಏರಿಸುವುದಾಗಿ ಘೋಷಿಸಿದೆ.
ಮಹಾರಾಷ್ಟ್ರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸಿದ್ದು, 29 ಮಹಾನಗರ ಪಾಲಿಕೆಗಳ 2,869 ಸ್ಥಾನಗಳಲ್ಲಿ 1,425 ಸ್ಥಾನಗಳನ್ನು ಗೆದ್ದಿದೆ. ಬೃಹನ್ಮುಂಬೈ ಮಹಾನಗರ ಪಾಲಿಕೆ (ಬಿಎಂಸಿ)ಯಲ್ಲಿ ಜಯ ಸಾಧಿಸಿರುವ ಬಿಜೆಪಿ, ರಾಜ್ಯದ ಏಕೈಕ ಅತಿದೊಡ್ಡ ಮತ್ತು ಬಲಿಷ್ಠ ಪಕ್ಷವಾಗಿ ಹೊರಹೊಮ್ಮಿದೆ. 227 ಸದಸ್ಯ ಬಲದ ಬಿಎಂಸಿಯಲ್ಲಿ ಬಿಜೆಪಿ 89 ಸ್ಥಾನಗಳನ್ನು ಗೆದ್ದಿದ್ದು, ಶಿವಸೇನಾ 29 ಸ್ಥಾನಗಳನ್ನು ಪಡೆದುಕೊಂಡಿದೆ. ಶಿವಸೇನಾ (ಯುಬಿಟಿ) 65 ಮತ್ತು ಎಂಎನ್ಎಸ್ ಆರು ಸ್ಥಾನಗಳನ್ನು ಗೆದ್ದಿವೆ. ವಂಚಿತ್ ಬಹುಜನ ಅಘಾಡಿ (ವಿಬಿಎ) ಜೊತೆ ಮೈತ್ರಿ ಮಾಡಿಕೊಂಡಿದ್ದ ಕಾಂಗ್ರೆಸ್ 24 ಸ್ಥಾನಗಳನ್ನು ಗಳಿಸಿದ್ದು, ಎಐಎಂಐಎಂ 8, ಎನ್ಸಿಪಿ 3, ಸಮಾಜವಾದಿ ಪಕ್ಷ 2 ಮತ್ತು ಎನ್ಸಿಪಿ (ಎಸ್ಪಿ) ಕೇವಲ ಒಂದು ಸ್ಥಾನ ಗಳಿಸಿವೆ. ಪುಣೆ ಚುನಾವಣೆಯಲ್ಲಿ ಬಿಜೆಪಿ 119 ಸ್ಥಾನಗಳನ್ನು ಗೆದ್ದು ಪವಾರ್ ಕುಟುಂಬಕ್ಕೆ ರಾಜಕೀಯ ಹೊಡೆತ ನೀಡಿದೆ. ಅಜಿತ್ ಪವಾರ್ ನೇತೃತ್ವದ ಎನ್ಸಿಪಿ 27 ಸ್ಥಾನಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದರೆ, ಅದರ ಮಿತ್ರಪಕ್ಷ ಎನ್ಸಿಪಿ (ಎಸ್ಪಿ) ಮೂರು ಸ್ಥಾನಗಳನ್ನು ಮತ್ತು ಕಾಂಗ್ರೆಸ್ 15 ಸ್ಥಾನಗಳನ್ನು ಪಡೆದಿವೆ. ಛತ್ರಪತಿ ಸಂಭಾಜಿನಗರದಲ್ಲಿ ಬಿಜೆಪಿ 57, ಶಿವಸೇನಾ 13, ಕಾಂಗ್ರೆಸ್ 1 ಮತ್ತು ಎಐಎಂಐಎಂ 33 ಸ್ಥಾನಗಳನ್ನು ಗಳಿಸಿವೆ. ಅಂತಿಮ ಲೆಕ್ಕಾಚಾರದ ಪ್ರಕಾರ, ಒಟ್ಟು 2,869 ಸ್ಥಾನಗಳಲ್ಲಿ ಬಿಜೆಪಿ 1,425 ಸ್ಥಾನಗಳನ್ನು ಗೆದ್ದಿದೆ. ಶಿವಸೇನಾ 399, ಕಾಂಗ್ರೆಸ್ 324, ಎನ್ಸಿಪಿ 167, ಶಿವಸೇನಾ (ಯುಬಿಟಿ) 155, ಎನ್ಸಿಪಿ (ಎಸ್ಪಿ) 36, ಎಂಎನ್ಎಸ್ 13, ಬಿಎಸ್ಪಿ 6, ಇತರ ಪಕ್ಷಗಳು 129, ಮಾನ್ಯತೆ ಪಡೆಯದ ಪಕ್ಷಗಳು 196 ಮತ್ತು 19 ಸ್ಥಾನಗಳಲ್ಲಿ ಪಕ್ಷೇತರರು ಗೆದ್ದಿದ್ದಾರೆ. ಮಹಾರಾಷ್ಟ್ರ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯ ಫಲಿತಾಂಶಗಳು 2029ರ ಚುನಾವಣೆಗೆ ಹೆಚ್ಚಿನ ನಿರೀಕ್ಷೆಯನ್ನು ಹುಟ್ಟುಹಾಕಿದ್ದು, ಬಿಜೆಪಿಯನ್ನು ರಾಜ್ಯದ ಏಕೈಕ ಅತಿದೊಡ್ಡ ಮತ್ತು ಬಲಿಷ್ಠ ಪಕ್ಷವಾಗಿ ಬಿಂಬಿಸಿವೆ. ಈ ಫಲಿತಾಂಶಗಳು ಮಹಾಯುತಿಯೊಳಗಿನ ಸಂಭಾವ್ಯ ಅಧಿಕಾರ ಪ್ರಾಬಲ್ಯವನ್ನು ತೋರಿಸುವುದರ ಜತೆಗೆ, ವಿರೋಧ ಪಕ್ಷವಾಗಿರುವ ಮಹಾ ವಿಕಾಸ್ ಅಘಾಡಿಯ ಭವಿಷ್ಯದ ಬಗ್ಗೆ ಸಹ ಪ್ರಶ್ನೆಗಳನ್ನು ಹುಟ್ಟುಹಾಕಿವೆ. ಮರಾಠಿ ಮತ ಬ್ಯಾಂಕ್ ನ ಕ್ರೋಡೀಕರಣ 20 ವರ್ಷಗಳ ಬಳಿಕ ಮತ್ತೆ ಒಂದಾದ ಉದ್ಧವ್ ಮತ್ತು ರಾಜ್ ಠಾಕ್ರೆ ಅವರ ಪ್ರಯತ್ನಗಳು ಮರಾಠಿ ಮತ ಬ್ಯಾಂಕ್ ಅನ್ನು ಕ್ರೋಢೀಕರಿಸುವ ಉದ್ದೇಶ ಹೊಂದಿದ್ದವು. ಆ ಭಾವನಾತ್ಮಕ ಆಕರ್ಷಣೆ ಮುಂಬೈನ ಪ್ರಮುಖ ಮರಾಠಿ ಮತದಾರರ ಪ್ರದೇಶಗಳಾದ ದಾದರ್, ಮಾಹಿಮ್, ಪರೇಲ್ ಸೇರಿದಂತೆ ಕೆಲವು ವಾರ್ಡ್ಗಳಲ್ಲಿ ಪರಿಣಾಮ ಬೀರಿತು. ಈ ಕ್ಷೇತ್ರಗಳಲ್ಲಿ ಠಾಕ್ರೆ ಬಣದ ಶಿವಸೇನಾ, ಶಿಂಧೆ ಬಣದ ಅಭ್ಯರ್ಥಿಗಳನ್ನು ಸೋಲಿಸಿತು. ಆದರೆ ರಾಜ್ಯದ ಉಳಿದ ಭಾಗಗಳಲ್ಲಿ ಉದ್ಧವ್ ಠಾಕ್ರೆ ಅವರಿಗೆ ಹಿನ್ನಡೆ ಎದುರಾಯಿತು. ಉದ್ಧವ್ ಬಣಕ್ಕೆ ಹಿನ್ನಡೆ; ಫಲಿತಾಂಶಗಳು ಹೇಳುವುದೇನು? ಬೃಹನ್ಮುಂಬೈ ಮಹಾನಗರ ಪಾಲಿಕೆ (ಬಿಎಂಸಿ) ಚುನಾವಣಾ ಫಲಿತಾಂಶಗಳು ಉದ್ಧವ್ ಠಾಕ್ರೆ ಮತ್ತು ಶಿವಸೇನಾ (ಯುಬಿಟಿ)ಗೆ ನಿರ್ಣಾಯಕ ತಿರುವು ತಂದಿವೆ. ಭಾರತದ ಅತ್ಯಂತ ಶ್ರೀಮಂತ ನಾಗರಿಕ ಸಂಸ್ಥೆಯ ಮೇಲಿನ 25 ವರ್ಷಗಳ ಆಡಳಿತ ಈ ಚುನಾವಣೆಯೊಂದಿಗೆ ಅಂತ್ಯಗೊಂಡಿದೆ. ಬಿಎಂಸಿ ಕೇವಲ ಅಧಿಕಾರದ ಸಂಕೇತವಲ್ಲ; ಪಕ್ಷದ ರಾಜಕೀಯ ಪ್ರಭಾವ ಮತ್ತು ಆರ್ಥಿಕ ಬಲದ ಪ್ರಮುಖ ಮೂಲವೂ ಆಗಿತ್ತು. ಮಹಾರಾಷ್ಟ್ರದ ಪುರಸಭೆಗಳಲ್ಲಿ ಆಡಳಿತಾರೂಢ ಮಹಾಯುತಿ ಗೆಲ್ಲುವ ಮೂಲಕ ಬಿಜೆಪಿಯ ನಗರ ಪ್ರಾಬಲ್ಯ ಇನ್ನಷ್ಟು ಗಟ್ಟಿಯಾಗಿದೆ. ಸೀಮಿತ ಸಂಪನ್ಮೂಲಗಳೊಂದಿಗೆ ಹೋರಾಡುತ್ತಾ ಉದ್ಧವ್ ಠಾಕ್ರೆ ಮುಂಬೈ ಕೇಂದ್ರಿತ ಪ್ರಚಾರ ನಡೆಸಿದ್ದರು. ಅವರು ‘ಮರಾಠಿ ಮನೂಸ್’ಗಾಗಿ ಕಲ್ಯಾಣದ ಸಂದೇಶ ಹಾಗೂ ಸೇನೆಯ ಸಾಂಪ್ರದಾಯಿಕ ತಳಮಟ್ಟದ ಜಾಲವನ್ನು ಅವಲಂಬಿಸಿದ್ದರು. ಸೋದರ ಸಂಬಂಧಿ ರಾಜ್ ಠಾಕ್ರೆಯೊಂದಿಗೆ ಯುದ್ಧತಂತ್ರದ ಸಮನ್ವಯವು ಮರಾಠಿ ಮತಗಳನ್ನು ಕ್ರೋಢೀಕರಿಸುವ ಗುರಿಯನ್ನು ಹೊಂದಿತ್ತು. ಈ ತಂತ್ರವು ಶಿವಸೇನಾ (ಯುಬಿಟಿ)ಗೆ ದಕ್ಷಿಣ–ಮಧ್ಯ ಮುಂಬೈನಲ್ಲಿ, ದಾದರ್ ನಿಂದ ಬೈಕುಲ್ಲಾದವರೆಗೆ ಬಲವಾದ ಮತಾಧಾರವನ್ನು ಉಳಿಸಿಕೊಳ್ಳಲು ಸಹಾಯ ಮಾಡಿದರೂ, ಬಿಎಂಸಿ ಅಧಿಕಾರ ಕಳೆದುಕೊಳ್ಳುವುದನ್ನು ತಡೆಯಲು ಸಾಧ್ಯವಾಗಲಿಲ್ಲ. ಏಕನಾಥ್ ಶಿಂಧೆ ನೇತೃತ್ವದ ಪ್ರತಿಸ್ಪರ್ಧಿ ಬಣದೊಂದಿಗೆ ಹೋಲಿಸಿದರೆ, ಠಾಕ್ರೆ ಮುಂಬೈನಲ್ಲಿ ತನ್ನ ನೆಲೆಯನ್ನು ಉಳಿಸಿಕೊಂಡರು. 25 ವರ್ಷಗಳ ಬಳಿಕ ಬಿಎಂಸಿ ಅಧಿಕಾರ ಕಳೆದುಕೊಂಡಿದ್ದರೂ, ಠಾಕ್ರೆಗಳು ತಮ್ಮ ಮರಾಠಿ ಗುರುತಿನ ರಾಜಕೀಯವನ್ನು ಮುಂದುವರಿಸುವುದಾಗಿ ಪ್ರತಿಜ್ಞೆ ಮಾಡಿದ್ದಾರೆ. “ಈ ಹೋರಾಟ ಇನ್ನೂ ಮುಗಿದಿಲ್ಲ” ಎಂದು ಶಿವಸೇನಾ (ಯುಬಿಟಿ) ದಿವಂಗತ ಬಾಳಾಸಾಹೇಬ್ ಠಾಕ್ರೆ ಅವರ ಛಾಯಾಚಿತ್ರವನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದೆ. ಮರಾಠಿಗಳಿಗೆ ಯೋಗ್ಯ ಗೌರವ ಸಿಗುವವರೆಗೆ ಹೋರಾಟ ಮುಂದುವರಿಯುತ್ತದೆ ಎಂದು ಪಕ್ಷ ಸ್ಪಷ್ಟಪಡಿಸಿದೆ. ಈ ಸೋಲು ಶಿವಸೇನಾ (ಯುಬಿಟಿ)ಗೆ ತೀವ್ರ ಹೊಡೆತ ಶ್ರೀಮಂತ ನಾಗರಿಕ ಸಂಸ್ಥೆಯ ಮೇಲಿನ ನಿಯಂತ್ರಣವು ದಶಕಗಳ ಕಾಲ ಅವಿಭಜಿತ ಶಿವಸೇನೆಗೆ ಪೋಷಕ ಜಾಲಗಳು, ಅಸ್ಮಿತೆ ಮತ್ತು ಸಾಂಸ್ಥಿಕ ಬಲಕ್ಕೆ ವಿಶಿಷ್ಟ ಪ್ರವೇಶವನ್ನು ನೀಡಿತ್ತು. ಆದರೆ ಇದೀಗ ಪಕ್ಷ ವಿರೋಧ ಪಕ್ಷದ ಸ್ಥಾನಕ್ಕೆ ಸರಿದಿದೆ. ಸೋಲಿನ ಬಳಿಕ ಪಕ್ಷಾಂತರವನ್ನು ತಡೆಯುವುದು, ಮಹಾ ವಿಕಾಸ್ ಅಘಾಡಿಯ ಪತನದಿಂದ ಪಾಠ ಕಲಿಯುವುದು ಮತ್ತು ವಿಧಾನ ಪರಿಷತ್ತಿನಲ್ಲಿ ಅವಧಿ ಮೇ ತಿಂಗಳಲ್ಲಿ ಕೊನೆಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಮುಂದಿನ ರಾಜಕೀಯ ದಿಕ್ಕನ್ನು ನಿರ್ಧರಿಸುವ ಸವಾಲು ಉದ್ಧವ್ ಠಾಕ್ರೆ ಎದುರಾಗಿದೆ. ತಮ್ಮ ಸಾಂಪ್ರದಾಯಿಕ ಭದ್ರಕೋಟೆಗಳನ್ನು ಮೀರಿ ಪ್ರಸ್ತುತವಾಗಿರಲು, ಸೇನಾ (ಯುಬಿಟಿ) ರಾಜಕೀಯವನ್ನು ಮರುಕಲ್ಪಿಸಿಕೊಳ್ಳಬೇಕಾಗಿದೆ. ಮೂಲ ಮರಾಠಿ ಮತದಾರರನ್ನು ಮೀರಿ ಆಕರ್ಷಣೆಯನ್ನು ವಿಸ್ತರಿಸುವುದು ಹಾಗೂ ನಗರ ಆಡಳಿತದ ಎರಡೂ ಹಂತಗಳನ್ನು ನಿಯಂತ್ರಿಸುತ್ತಿರುವ ಬಿಜೆಪಿಯನ್ನು ಎದುರಿಸಬಲ್ಲ ಒಕ್ಕೂಟವನ್ನು ಪುನರ್ನಿರ್ಮಿಸುವುದು ಅಗತ್ಯವಾಗಿದೆ. ಪುಣೆ ಮುನ್ಸಿಪಲ್ ಚುನಾವಣೆಯಲ್ಲಿ ಪವಾರ್ ಬ್ರ್ಯಾಂಡ್ಗೆ ಹಿನ್ನಡೆ ಪುಣೆ ಮತ್ತು ಪಿಂಪ್ರಿ–ಚಿಂಚ್ವಾಡ್ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯ ಫಲಿತಾಂಶಗಳು ಸ್ಪಷ್ಟ ರಾಜಕೀಯ ಸಂದೇಶವನ್ನು ನೀಡಿವೆ. ಈ ನಗರ ಶಕ್ತಿ ಕೇಂದ್ರಗಳಲ್ಲಿ ಒಂದು ಕಾಲದಲ್ಲಿ ನಿರ್ಣಾಯಕವೆಂದು ಪರಿಗಣಿಸಲ್ಪಟ್ಟಿದ್ದ ಪವಾರ್ ಬ್ರ್ಯಾಂಡ್ ಹಿನ್ನಡೆಯನ್ನು ಅನುಭವಿಸಿದೆ. ಶರದ್ ಪವಾರ್ ಮತ್ತು ಅಜಿತ್ ಪವಾರ್ ನೇತೃತ್ವದ ಎನ್ಸಿಪಿಯ ಎರಡು ಬಣಗಳ ನಡುವೆ ಯುದ್ಧತಂತ್ರದ ಸಮನ್ವಯ ಇದ್ದರೂ, ನಿರೀಕ್ಷಿಸಿದ ಮಟ್ಟಿಗೆ ಮತಗಳು ಬಂದಿಲ್ಲ. ಪುಣೆ ಮುನ್ಸಿಪಲ್ ಕಾರ್ಪೊರೇಷನ್ನಲ್ಲಿ ಬಿಜೆಪಿ ಸ್ಪಷ್ಟ ಮೇಲುಗೈ ಸಾಧಿಸಿದೆ. ಕಳೆದ ದಶಕದಲ್ಲಿ ಪುಣೆಯ ಮತದಾರರ ಆದ್ಯತೆಗಳಲ್ಲಿ ಮಹತ್ವದ ಬದಲಾವಣೆ ಕಂಡುಬಂದಿದೆ. ಮಧ್ಯಮ ವರ್ಗ, ಮೊದಲ ಬಾರಿಗೆ ಮತದಾನ ಮಾಡುವವರು ಮತ್ತು ಅಪಾರ್ಟ್ಮೆಂಟ್ ಗಳಲ್ಲಿ ವಾಸಿಸುವ ಜನರು ಸ್ಥಳೀಯ ನಾಯಕತ್ವಕ್ಕಿಂತ ಆಡಳಿತ, ಮೂಲಸೌಕರ್ಯ ಮತ್ತು ರಾಷ್ಟ್ರೀಯ ರಾಜಕೀಯ ನಿರೂಪಣೆಗಳಿಗೆ ಹೆಚ್ಚು ಸ್ಪಂದಿಸುತ್ತಿದ್ದಾರೆ. ಈ ಬದಲಾವಣೆಗೆ ಪವಾರ್ ಬ್ರ್ಯಾಂಡ್ಗಳು ಹೊಂದಿಕೊಳ್ಳಲು ವಿಫಲವಾದವು. ಪಿಂಪ್ರಿ–ಚಿಂಚ್ವಾಡ್ ವಿಭಿನ್ನವಾಗಿರಲಿದೆ ಎಂಬ ನಿರೀಕ್ಷೆಯಿದ್ದರೂ, ಅಲ್ಲಿ ದೊರೆತ ಫಲಿತಾಂಶಗಳು ಎನ್ಸಿಪಿ ಪಾಳಯವನ್ನು ನಿರಾಶೆಗೊಳಿಸಿವೆ. ಅಜಿತ್ ಪವಾರ್ ಅವರ ವೈಯಕ್ತಿಕ ಪ್ರಭಾವವಿದ್ದರೂ, ಬಲವಾದ ಸಾಂಸ್ಥಿಕ ಒಗ್ಗಟ್ಟು ಮತ್ತು ಸ್ಪಷ್ಟ ರಾಜಕೀಯ ನಿರೂಪಣೆ ಇಲ್ಲದೆ ವರ್ಚಸ್ಸು ಮಾತ್ರ ಸಾಕಾಗುವುದಿಲ್ಲ ಎಂಬುದನ್ನು ಈ ಫಲಿತಾಂಶಗಳು ಸೂಚಿಸುತ್ತವೆ. ತೃಪ್ತಿಕರ ಸಾಧನೆ ಮಾಡಿದ ಕಾಂಗ್ರೆಸ್ ಬಿಜೆಪಿ ಮತ್ತು ಶಿವಸೇನಾ (ಶಿಂಧೆ) ನಂತರ ರಾಜ್ಯಾದ್ಯಂತ ಅತಿ ಹೆಚ್ಚು ಮುನ್ಸಿಪಲ್ ಕಾರ್ಪೊರೇಷನ್ ಸ್ಥಾನಗಳನ್ನು ಹೊಂದಿರುವ ಕಾಂಗ್ರೆಸ್ ಪಕ್ಷ, ಮಹಾರಾಷ್ಟ್ರದಲ್ಲಿ ಅತಿದೊಡ್ಡ ವಿರೋಧ ಪಕ್ಷವಾಗಿ ಹೊರಹೊಮ್ಮಿದೆ. ಮುಂಬೈ ಮೆಟ್ರೋಪಾಲಿಟನ್ ಪ್ರದೇಶದ ಹೊರಗೆ ಬಿಜೆಪಿ ಬಳಿಕ ಕಾಂಗ್ರೆಸ್ ನ ಪ್ರಾಬಲ್ಯವಿದೆ. ಹಲವು ನಗರಗಳಲ್ಲಿ ಕಾಂಗ್ರೆಸ್ ಗೆಲುವಿಗೆ ಸ್ಥಳೀಯ ನಾಯಕತ್ವದ ಪಾತ್ರ ಮಹತ್ವದ್ದಾಗಿದೆ. ಕೊಲ್ಹಾಪುರದಲ್ಲಿ ಸತೇಜ್ ‘ಬಂಟಿ’ ಪಾಟೀಲ್ ಮತ್ತು ಲಾತೂರಿನಲ್ಲಿ ಅಮಿತ್ ದೇಶಮುಖ್ ನಿರ್ವಹಿಸಿದ ಪಾತ್ರವು ಗಮನಾರ್ಹವಾಗಿದೆ. ಇದಕ್ಕೆ ವಿರುದ್ಧವಾಗಿ, ಸೋಲಾಪುರದಂತಹ ಸ್ಥಳಗಳಲ್ಲಿ ಸ್ಥಳೀಯ ನಾಯಕತ್ವದ ವಿಭಜನೆ ಪಕ್ಷದ ಪ್ರದರ್ಶನಕ್ಕೆ ಧಕ್ಕೆಯುಂಟುಮಾಡಿದೆ. ಅಕೋಲಾ, ಅಮರಾವತಿ ಮತ್ತು ನಾಗ್ಪುರದಂತಹ ನಗರಗಳಲ್ಲಿ ವಿಬಿಎ ಜೊತೆಗಿನ ಮೈತ್ರಿಯಿಂದ ಕಾಂಗ್ರೆಸ್ ಲಾಭ ಕಂಡಿದೆ. ನವಯಾನ ಬೌದ್ಧ, ಮುಸ್ಲಿಂ ಮತದಾರರು ಮತ್ತು ಪ್ರಗತಿಪರ ವರ್ಗಗಳನ್ನು ಕ್ರೋಢೀಕರಿಸುವಲ್ಲಿ ಪಕ್ಷ ಯಶಸ್ವಿಯಾಗಿದೆ. ಆದರೆ ಥಾಣೆ, ನವಿ ಮುಂಬೈ, ಕಲ್ಯಾಣ–ಡೊಂಬಿವಿಲಿ, ವಸೈ–ವಿರಾರ್, ಪನ್ವೇಲ್ ಮತ್ತು ಉಲ್ಹಾಸ್ನಗರಗಳಲ್ಲಿ ಕಾಂಗ್ರೆಸ್ ಕಳಪೆ ಪ್ರದರ್ಶನ ನೀಡಿದೆ. ಮುಸ್ಲಿಂ ಬಹುಸಂಖ್ಯಾತ ಭಿವಂಡಿ–ನಿಜಾಂಪುರ ಮತ್ತು ಮುಸ್ಲಿಂ–ಕ್ರಿಶ್ಚಿಯನ್ ಜನಸಂಖ್ಯೆ 20 ಶೇಕಡಕ್ಕೂ ಹೆಚ್ಚು ಇರುವ ಮೀರಾ–ಭಯಂದರ್ನಲ್ಲಿ ಮಾತ್ರ ಪಕ್ಷ ಉತ್ತಮ ಪ್ರದರ್ಶನ ನೀಡಿದೆ. ಹಿಂದೂ ಮಧ್ಯಮ ವರ್ಗದ ಪ್ರದೇಶಗಳಲ್ಲಿ ಪಕ್ಷದ ಹಿಡಿತ ದುರ್ಬಲವಾಗಿಯೇ ಉಳಿದಿದ್ದು, ಮುಸ್ಲಿಂ ಮತ್ತು ದಲಿತರಂತಹ ಪ್ರಮುಖ ಜನಸಂಖ್ಯಾ ಗುಂಪುಗಳಲ್ಲಿ ಬೆಂಬಲವನ್ನು ಕಾಂಗ್ರೆಸ್ ಉಳಿಸಿಕೊಂಡಿದೆ.
ಉಡುಪಿ, ಜ.17: ತಾಲೂಕಿನ 76 ಬಡಗುಬೆಟ್ಟು ಗ್ರಾಮದ ಕುಕ್ಕಿಕಟ್ಟೆ ಯಲ್ಲಿರುವ ಡಾ.ಬಿ.ಆರ್ ಅಂಬೇಡ್ಕರ್ ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿಲಯದ ವಾರ್ಡನ್ ಆಗಿ ಕೆಲಸ ನಿರ್ವಹಿಸುತ್ತಿದ್ದ, ವಿದ್ಯಾರ್ಥಿ ನಿಲಯದ ಒಂದನೇ ಮಹಡಿಯಲ್ಲಿ ವಾಸವಿದ್ದ ಚಿತ್ರದುರ್ಗ ಮೂಲದ ದರ್ಶನ್ ಎಸ್ (23) ಎಂಬ ಯುವಕ ಜನವರಿ 12ರಂದು ರಾತ್ರಿ 8 ಬಳಿಕ ನಾಪತ್ತೆಯಾಗಿದ್ದಾರೆ. 5 ಅಡಿ 5 ಇಂಚು ಎತ್ತರ, ಸಾಧಾರಣ ಶರೀರ, ಎಣ್ಣೆಕಪ್ಪು ಮೈಬಣ್ಣ ಹೊಂದಿದ್ದು, ಕನ್ನಡ, ಇಂಗ್ಲೀಷ್ ಹಾಗೂ ಹಿಂದಿ ಭಾಷೆ ಮಾತನಾಡುತ್ತಾರೆ. ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಉಡುಪಿ ನಗರ ಪೊಲೀಸ್ ಠಾಣೆಯ ದೂ.ಸಂಖ್ಯೆ: 0820-2520444, ಉಡುಪಿ ಕಂಟ್ರೋಲ್ ರೂಂ ದೂ.ಸಂಖ್ಯೆ: 0820-2526444, ಪೊಲೀಸ್ ನಿರೀಕ್ಷಕರು ದೂ.ಸಂಖ್ಯೆ: 9480805408 ಹಾಗೂ ಪೊಲೀಸ್ ಉಪನಿರೀಕ್ಷಕರು ದೂ.ಸಂಖ್ಯೆ: 9480805445ನ್ನು ಸಂಪರ್ಕಿಸಬಹುದು ಎಂದು ಉಡುಪಿ ನಗರ ಪೊಲೀಸ್ ಠಾಣಾಧಿಕಾರಿಗಳ ಪ್ರಕಟಣೆ ತಿಳಿಸಿದೆ.
ಜ.19, 20: ಉಡುಪಿ ಜಿಲ್ಲಾ ಸರಕಾರಿ ನೌಕರರ ಕ್ರೀಡಾಕೂಟ
ಉಡುಪಿ, ಜ.17: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ ಉಡುಪಿ ಜಿಲ್ಲಾ ಶಾಖೆಗಲ ಸಂಯುಕ್ತ ಆಶ್ರಯದಲ್ಲಿ ರಾಜ್ಯ ಸರಕಾರಿ ನೌಕರರ ಉಡುಪಿ ಜಿಲ್ಲಾ ಮಟ್ಟದ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳು ಜನವರಿ 19 ಮತ್ತು 20ರಂದು ನಗರದ ಅಜ್ಜರಕಾಡು ಮಹಾತ್ಮಾಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯಲಿದೆ. ಕಾರ್ಯಕ್ರಮವನ್ನು ಜ.19ರಂದು ಬೆಳಗ್ಗೆ 10 ಗಂಟೆಗೆ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಆರ್. ಹೆಬ್ಬಾಳ್ಕರ್ ಉದ್ಘಾಟಿಸಲಿದ್ದು, ಶಾಸಕ ಯಶ್ಪಾಲ್ ಎ ಸುವರ್ಣ ಅಧ್ಯಕ್ಷತೆ ವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಸಂಸದ ಕೋಟ ಶ್ರೀನಿವಾಸ ಪೂಜಾರಿ, ಕರಾವಳಿ ಅಭಿವೃದ್ದಿ ಮಂಡಳಿ ಅಧ್ಯಕ್ಷ ಎಂ.ಎ.ಗಫೂರ್, ಶಾಸಕರಾದ ವಿ.ಸುನಿಲ್ ಕುಮಾರ್, ಗುರುರಾಜ್ ಶೆಟ್ಟಿ ಗಂಟಿಹೊಳೆ, ಎ. ಕಿರಣ್ ಕುಮಾರ್ ಕೊಡ್ಗಿ ಹಾಗೂ ಗುರ್ಮೆ ಸುರೇಶ್ ಶೆಟ್ಟಿ, ವಿಧಾನಪರಿಷತ್ ಶಾಸಕರಾದ ಮಂಜುನಾಥ್ ಭಂಡಾರಿ, ನಗರಾಭಿವೃಧ್ದಿ ಪ್ರಾಧಿಕಾರದ ಅಧ್ಯಕ್ಷ ದಿನಕರ ಹೇರೂರು, ಉಡುಪಿ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ, ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್, ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಂ ಶಂಕರ್ ಮತ್ತಿತರರು ಭಾಗವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
ಭಾರತದ ಮೊದಲ ವಂದೇ ಭಾರತ್ ಸ್ಲೀಪರ್ ರೈಲಿಗೆ ಪ್ರಧಾನಿ ಮೋದಿ ಹಸಿರು ನಿಶಾನೆ
ಹೌರಾ-ಗುವಾಹಟಿ ನಡುವೆ ಸಂಚರಿಸಲಿರುವ ರೈಲು
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯದಲ್ಲಿ ಸೈಬರ್ ಅಪರಾಧ ಮತ್ತು ಮಾದಕವಸ್ತು ಜಾಲವನ್ನು ನಿರ್ಮೂಲನೆ ಮಾಡಲು ಸರ್ಕಾರ ಬದ್ಧವಾಗಿದೆ ಎಂದು ಹೇಳಿದ್ದಾರೆ. ಭವಿಷ್ಯದಲ್ಲಿ ಕಾನೂನುಗಳನ್ನು ಬಿಗಿಗೊಳಿಸಲು ಹೊಸ ತಿದ್ದುಪಡಿ ತರಲಾಗುವುದು. ಪೊಲೀಸ್ ಅಧಿಕಾರಿಗಳ ವಾರ್ಷಿಕ ಸಮ್ಮೇಳನದಲ್ಲಿ ಮಾತನಾಡಿದ ಅವರು, 88 ಪ್ರಕರಣಗಳಲ್ಲಿ ಪೊಲೀಸರೇ ಶಾಮೀಲಾಗಿರುವುದು ಅಕ್ಷಮ್ಯ ಎಂದು ಆಕ್ರೋಶ ವ್ಯಕ್ತಪಡಿಸಿದರು. ಬಳ್ಳಾರಿ ಮತ್ತು ಶಿಡ್ಲಘಟ್ಟ ಪ್ರಕರಣಗಳ ಬಗ್ಗೆಯೂ ಸ್ಪಷ್ಟನೆ ನೀಡಿದರು. ಮಾದಕವಸ್ತು ಮುಕ್ತ ಕರ್ನಾಟಕ ಗುರಿಯಾಗಿದೆ.
ಪಿ.ಎಂ. ಶ್ರಮಯೋಗಿ ಮಾನ್-ಧನ್ ಯೋಜನೆ: ವಿಶೇಷ ನೋಂದಣಿ ಅಭಿಯಾನ
ಉಡುಪಿ, ಜ.17: ಕೇಂದ್ರ ಸರಕಾರದ ಪ್ರಧಾನಮಂತ್ರಿ ಶ್ರಮಯೋಗಿ ಮಾನ್-ಧನ್ ಯೋಜನೆ ಹಾಗೂ ವ್ಯಾಪಾರಿ ಗಳಿಗೆ ಮತ್ತು ಸ್ವಉದ್ಯೋಗಿಗಳಿಗೆ ರಾಷ್ಟ್ರೀಯ ಪೆನ್ಷನ್ (ಎನ್ಪಿಎಸ್ ಟ್ರೇಡರ್ಸ್) ಯೋಜನೆಗಳಡಿ ಅಸಂಘಟಿತ ವಲಯದ ಕಾರ್ಮಿಕರು, ವ್ಯಾಪಾರಿಗಳು ಹಾಗೂ ಸ್ವಯಂ ಉದ್ಯೋಗಿಗಳನ್ನು ನೋಂದಾಯಿಸಲು ಜ. 15ರಿಂದ ಮಾರ್ಚ್ 15ರವರೆಗೆ ‘ವಿಶೇಷ ನೋಂದಣಿ ಅಭಿಯಾನ’ವನ್ನು ಹಮ್ಮಿಕೊಳ್ಳಲಾಗಿದೆ. 18ರಿಂದ 40 ವರ್ಷ ದೊಳಗಿನ ಅಸಂಘಟಿತ ಕಾರ್ಮಿಕರು ಈ ಯೋಜನೆಯಡಿ ಹೆಸರು ನೋಂದಾಯಿಸಬಹುದಾಗಿದೆ. ಇದರಲ್ಲಿ ವಯಸ್ಸಿಗನುಗುಣವಾಗಿ ಮಾಸಿಕವಾಗಿ 55 ರೂ.ನಿಂದ 200 ರೂ.ವರೆಗೆ ವಂತಿಕೆ ಪಾವತಿ ಮಾಡಬೇಕು. ಕೇಂದ್ರ ಸರಕಾರದ ವತಿಯಿಂದ ಅಷ್ಟೇ ವಂತಿಕೆ ಪಾವತಿಸಿ ಬ್ಯಾಂಕ್ ಖಾತೆಯಲ್ಲಿ ಸದರಿ ಮೊತ್ತವನ್ನು ಸಂಗ್ರಹಿಸಲಾ ಗುತ್ತದೆ. 60 ವರ್ಷ ಪೂರ್ಣಗೊಂಡ ನಂತರ ಮಾಸಿಕ 3000 ರೂ. ಪಿಂಚಣಿ ಸೌಲಭ್ಯ ಪಡೆಯಬಹುದು. ಈ ಯೋಜನೆಯಡಿ ನರೇಗಾ ಕಾರ್ಮಿಕರು, ಎಸ್.ಹೆಚ್.ಜಿ ಸದಸ್ಯರು, ಕೃಷಿ ಕಾರ್ಮಿಕರು, ಅಂಗನವಾಡಿ ಕಾರ್ಮಿಕರು, ಮಧ್ಯಾಹ್ನದ ಬಿಸಿ ಊಟದ ಕಾರ್ಮಿಕರು, ಆಶಾ ಕಾರ್ಯಕರ್ತೆಯರು, ಬೀದಿ ಬದಿ ವ್ಯಾಪಾರಿಗಳು, ಗೃಹ ಕಾರ್ಮಿಕರು, ಮೀನುಗಾರರು, ಇನ್ನಿತರೆ ಅಸಂಘಟಿತ ವಲಯಗಳ ಕಾರ್ಮಿಕರು ಹಾಗೂ ವ್ಯಾಪಾರಿಗಳು ತಮ್ಮ ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ಬುಕ್ ಹಾಗೂ ಮೊದಲ ತಿಂಗಳ ವಂತಿಕೆಯೊಂದಿಗೆ ಸಮೀಪದ ಸಾಮಾನ್ಯ ಸೇವಾ ಕೇಂದ್ರಗಳಲ್ಲಿ ನೋಂದಣಿಯಾಗಿ ಯೋಜನೆಯ ಸದುಪಯೋಗ ಪಡೆದುಕೊಳ್ಳಬಹುದು. ಈ ಕುರಿತು ಹೆಚ್ಚಿನ ಮಾಹಿತಿಗಾಗಿ ರಜತಾದ್ರಿಯ ಕಾರ್ಮಿಕ ಅಧಿಕಾರಿಗಳ ಕಚೇರಿ ಅಥವಾ ತಾಲೂಕು ಕಾರ್ಮಿಕ ನಿರೀಕ್ಷಕರ ಕಛೇರಿಯನ್ನು ಸಂಪರ್ಕಿಸ ಬಹುದು ಎಂದು ಉಡುಪಿ ಉಪವಿಭಾಗದ ಕಾರ್ಮಿಕ ಅಧಿಕಾರಿಗಳ ಪ್ರಕಟಣೆ ತಿಳಿಸಿದೆ.
RCB ಅಭಿಮಾನಿಗಳಿಗೆ ಬಂಪರ್ ಸುದ್ದಿ, ಚಿನ್ನಸ್ವಾಮಿಯಲ್ಲಿ ಐಪಿಎಲ್ ಪಂದ್ಯ ಆಯೋಜನೆಗೆ ಸರ್ಕಾರ ಗ್ರೀನ್ ಸಿಗ್ನಲ್
ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇನ್ನು ಮುಂದೆ ಅಂತಾರಾಷ್ಟ್ರೀಯ ಮತ್ತು ಐಪಿಎಲ್ ಪಂದ್ಯಗಳು ನಡೆಯಲಿವೆ. ಕಳೆದ ವರ್ಷ ಜೂನ್ನಲ್ಲಿ ನಡೆದ ಕಾಲ್ತುಳಿತದ ದುರಂತದ ನಂತರ, ಭದ್ರತಾ ಕಾರಣಗಳಿಗಾಗಿ ಇಲ್ಲಿ ಪಂದ್ಯಗಳನ್ನು ನಿಷೇಧಿಸಲಾಗಿತ್ತು. ಇದೀಗ ಸರ್ಕಾರದ ಗೃಹ ಇಲಾಖೆಯು ಕೆಎಸ್ಸಿಎಗೆ ಷರತ್ತುಬದ್ಧ ಅನುಮತಿ ನೀಡಿದೆ. ಆರ್ಸಿಬಿ ತಂಡವು ಜನಸಂದಣಿಯನ್ನು ನಿರ್ವಹಿಸಲು ಅತ್ಯಾಧುನಿಕ ಎಐ ಕ್ಯಾಮೆರಾಗಳನ್ನು ಅಳವಡಿಸಲು ಮುಂದಾಗಿದ್ದು, ಮುಂಬರುವ ಐಪಿಎಲ್ನಲ್ಲಿ ಆರ್ಸಿಬಿ ತವರು ನೆಲದಲ್ಲಿ ಕಣಕ್ಕಿಳಿಯುವ ನಿರೀಕ್ಷೆಯಿದೆ.
ಜ.18ರಂದು ಪುತ್ತಿಗೆಯಿಂದ ಶೀರೂರಿಗೆ ‘ಪರ್ಯಾಯ’ ಹಸ್ತಾಂತರ
ಉಡುಪಿ, ಜ.17: ಪ್ರತಿ ಎರಡು ವರ್ಷಗಳಿಗೊಮ್ಮೆ ಉಡುಪಿಯ ಜನತೆ ಸಂಪ್ರದಾಯದಂತೆ ಆಚರಿಸಿಕೊಂಡು ಬರುತ್ತಿರುವ ‘ಪರ್ಯಾಯ ಮಹೋತ್ಸವ’ ಮತ್ತೆ ಬಂದಿದೆ. ರವಿವಾರ ಮುಂಜಾನೆ ಈ ಬಾರಿಯ ಪರ್ಯಾಯ ಅಷ್ಟ ಮಠಗಳಲ್ಲಿ ಒಂದಾದ ಪುತ್ತಿಗೆ ಮಠದಿಂದ ಶೀರೂರು ಮಠಕ್ಕೆ ಹಸ್ತಾಂತರಗೊಳ್ಳಲಿದೆ. ಅದ್ದೂರಿಯ, ವರ್ಣರಂಜಿತ ಮೆರವಣಿಗೆಯಲ್ಲಿ ಸಾಗಿಬರುವ ಶೀರೂರು ಮಠದ ಶ್ರೀವೇದವರ್ಧನ ತೀರ್ಥರು, ಮುಂಜಾನೆ 5:45ಕ್ಕೆ ಸರಿಯಾಗಿ ತಮ್ಮ 21ರ ಕಿರುಪ್ರಾಯದಲ್ಲೇ ಮೊದಲ ಬಾರಿ ಸರ್ವಜ್ಞ ಪೀಠಾರೋಹಣ ಮಾಡಿ ಮುಂದಿನ ವರ್ಷಗಳ ಕಾಲ ಉಡುಪಿಯ ಪರ್ಯಾಯ ಪೀಠಾಧಿಪತಿ ಎನಿಸಿಕೊಳ್ಳಲಿದ್ದಾರೆ. ಕಳೆದೆರಡು ವರ್ಷಗಳಿಂದ ಪರ್ಯಾಯವನ್ನು ನಡೆಸಿಕೊಟ್ಟ ಪುತ್ತಿಗೆ ಮಠದ ಶ್ರೀಸುಗುಣೇಂದ್ರತೀರ್ಥ ಶ್ರೀಪಾದರು ಮಠದ ಅಧಿಕಾರ ಹಸ್ತಾಂ ತರದ ಸಂಕೇತವಾದ ಅಕ್ಷಯಪಾತ್ರೆ, ಸಟುಗ ಹಾಗೂ ಕೀಲಿಕೈಯನ್ನು ನೀಡುವ ಮೂಲಕ ಕೃಷ್ಣ ಪೂಜೆಯ ಅಧಿಕಾರವನ್ನೂ ಕಿರಿಯ ಸ್ವಾಮೀಜಿಗೆ ಒಪ್ಪಿಸುತ್ತಾರೆ. ಕರಾವಳಿ ಜಿಲ್ಲೆಗಳ ನಾಡಹಬ್ಬವೆಂದೇ ಖ್ಯಾತಿ ಪಡೆದಿರುವ ಈ ಭಾಗದ ಬಹುದೊಡ್ಡ ಸಾಂಸ್ಕೃತಿಕ ಉತ್ಸವ ‘ಶ್ರೀಕೃಷ್ಣ ಮಠದ ಪರ್ಯಾಯ’ಕ್ಕೆ ಉಡುಪಿ ಮತ್ತೊಮ್ಮೆ ಸಜ್ಜಾಗಿ ನಿಂತಿದೆ. ಈ ಮೂಲಕ ಸುಮಾರು ಎಂಟು ನೂರು ವರ್ಷಗಳ ಹಿಂದೆ ಉಡುಪಿಯಲ್ಲಿ ಶ್ರೀಕೃಷ್ಣ ಮೂರ್ತಿಯನ್ನು ಪ್ರತಿಷ್ಠಾಪಿಸಿ ಅದರ ಪೂಜೆಗೆ ತನ್ನ ಎಂಟು ಮಂದಿ ಶಿಷ್ಯರನ್ನು ನಿಯೋಜಿಸಿ ಅವರಿಗೆ ಸರತಿಯಂತೆ ತಲಾ ಎರಡು ತಿಂಗಳ ಕೃಷ್ಣ ಪೂಜೆಯ ಅಧಿಕಾರವನ್ನು ನೀಡಿದ ದ್ವೈತ ಮತದ ಸ್ಥಾಪಕ ಶ್ರೀಮಧ್ವಾಚಾರ್ಯರು ಪ್ರಾರಂಭಿಸಿದ ಪರಂಪರೆ ಈಗಲೂ ಮುಂದುವರಿಯಲಿದೆ. ಶ್ರೀಮಧ್ವಾಚಾರ್ಯರು ಎರಡು ತಿಂಗಳ ಪರ್ಯಾಯ ವ್ಯವಸ್ಥೆ ಮಾಡಿದ್ದರೆ, ಈ ವ್ಯವಸ್ಥೆಯಲ್ಲಿ ಹಲವು ಸುಧಾರಣೆ ಗಳನ್ನು ಮಾಡಿದ ಸೋದೆ ಮಠದ ಶ್ರೀವಾದಿರಾಜ ತೀರ್ಥರು (1481-1601) ಅದನ್ನು ಎರಡು ವರ್ಷಗಳಿಗೆ ಏರಿಸಿದರು. ವಾದಿರಾಜರಿಂದ 1522ರಿಂದ ಪ್ರಾರಂಭಗೊಂಡ ಎರಡು ವರ್ಷಗಳ ಪರ್ಯಾಯ ಈಗಲೂ ನಿರ್ವಿಘ್ನ ವಾಗಿ ಮುಂದುವರಿದುಕೊಂಡು ಬಂದಿದೆ. ಅಷ್ಟಮಠಗಳೊಳಗೆ ಎಷ್ಟೇ ಭಿನ್ನಮತಗಳಿದ್ದು, ವಿವಾದದ ಮಟ್ಟಕ್ಕೇರಿ ನ್ಯಾಯಾಲಯದ ಮೆಟ್ಟಿಲು ಹತ್ತಿದರೂ ಈವರೆಗೆ ಪ್ರತಿ ಎರಡು ವರ್ಷಗಳಿ ಗೊಮ್ಮೆ ಒಂದು ಮಠದಿಂದ ಇನ್ನೊಂದು ಮಠಕ್ಕೆ ಅಧಿಕಾರದ ಹಸ್ತಾಂತರ ಮಾತ್ರ ಯಾವುದೇ ಅಡೆತಡೆಯಿಲ್ಲದೇ ನಡೆದುಕೊಂಡು ಬಂದಿದೆ. ದ್ವೈವಾರ್ಷಿಕ ಪರ್ಯಾಯದಲ್ಲಿ ಈಗ ನಡೆಯುತ್ತಿರುವುದು 253ನೇ ಪರ್ಯಾಯವಾಗಿದೆ. ತಮ್ಮ ಎರಡು ವರ್ಷಗಳ ಪರ್ಯಾಯಾವಧಿಯನ್ನು ಶಿಷ್ಯರಾದ ಶ್ರೀಸುಶ್ರೀಂದ್ರತೀರ್ಥ ಶ್ರೀಪಾದರೊಂದಿಗೆ ಯಶಸ್ವಿ ಯಾಗಿ ಮುಗಿಸಿರುವ ಪುತ್ತಿಗೆ ಮಠದ ಶ್ರೀಸುಗುಣೇಂದ್ರ ತೀರ್ಥ ಶ್ರೀಪಾದರು ರವಿವಾರ ಮುಂಜಾನೆ 5:45ಕ್ಕೆ ಶ್ರೀಕೃಷ್ಣನ ಪೂಜೆಯ ಅಧಿಕಾರದ ಹಸ್ತಾಂತರದ ದ್ಯೋತಕವಾದ ಅಕ್ಷಯ ಪಾತ್ರೆ ಹಾಗೂ ಮಠದ ಕೀಲಿಕೈಯನ್ನು ಶೀರೂರು ಮಠದ ಶ್ರೀವೇದವರ್ಧನ ತೀರ್ಥ ಶ್ರೀಪಾದರಿಗೆ ನೀಡಲಿದ್ದಾರೆ. ಬಳಿಕ ಶೀರೂರು ಶ್ರೀಗಳು ಮಧ್ವ ಪೀಠಾರೋಹಣ ಮಾಡುವರು. ಇಲ್ಲಿಗೆ ಮುಂದಿನ ಎರಡು ವರ್ಷಗಳ ಅವಧಿಗೆ ಶೀರೂರು ಶ್ರೀಗಳೇ ಶ್ರೀಕೃಷ್ಣನ ಪೂಜೆಗೆ ಅಧಿಕೃತ ಅಧಿಕಾರ ಪಡೆದಂತಾಗುತ್ತದೆ. ಕಳೆದೊಂದು ವಾರದಿಂದ ನಿರಂತರವಾಗಿ ನಡೆಯುತಿದ್ದ ಪುತ್ತಿಗೆ ಶ್ರೀಗಳ ಪರ್ಯಾಯ ಸಮಾರೋಪ ಸಮಾರಂಭ ಇಂದು ರಥಬೀದಿಯಲ್ಲಿ ಅವರಿಗೆ ಪೌರ ಸನ್ಮಾನ ನೀಡುವ ಮೂಲಕ ಮುಕ್ತಾಯಗೊಂಡಿದೆ. ಪುತ್ತಿಗೆ ಶ್ರೀಸುಗುಣೇಂದ್ರತೀರ್ಥರ ಕಳೆದೆರಡು ವರ್ಷಗಳ ತಮ್ಮ ನಾಲ್ಕನೇ ಪರ್ಯಾಯಾವಧಿಯನ್ನು ವಿಶ್ವ ಗೀತಾ ಪರ್ಯಾಯ ಎಂದು ಕರೆದು ಕೊಂಡಿದ್ದಾರೆ. ಸ್ವಾಮೀಜಿ ಅವರ ಕೋಟಿ ಗೀತಾ ಲೇಖನ ಯಜ್ಞದ ಸಂಕಲ್ಪಕ್ಕೂ ನಾಡಿನ ಜನತೆಯಿಂದ ನಿರೀಕ್ಷೆಗೆ ಮೀರಿದ ಬೆಂಬಲ ವ್ಯಕ್ತವಾಗಿದೆ. ಈ ಕೋಟಿ ಗೀತಾ ಲೇಖನ ಯಜ್ಞ ಇನ್ನೂ ಎರಡು ವರ್ಷಗಳ ಕಾಲ ಮುಂದುವರಿಯ ಲಿದೆ ಎಂದು ಅವರು ಈಗಾಗಲೇ ಪ್ರಕಟಿಸಿದ್ದಾರೆ. ಪುತ್ತಿಗೆ ಶ್ರೀಗಳ ಭಗವದ್ಗೀತಾ ಅಭಿಯಾನದ ವಿವಿಧ ಹಂತಗಳಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸೇರಿದಂತೆ ರಾಷ್ಟ್ರಮಟ್ಟದ ಹಲವು ಗಣ್ಯರು ಉಡುಪಿಗೆ ಹಾಗೂ ಮಠಕ್ಕೆ ಬಂದು ಹೋಗಿದ್ದಾರೆ. ಇದಲ್ಲದೇ ಕೃಷ್ಣನಿಗೆ ಸುವರ್ಣ ಪಾರ್ಥಸಾರಥಿ ರಥ, ಕನಕನ ಕಿಂಡಿಗೆ ಸುವಣ ಕವಚ, ಕನಕಮಯ ಸುವರ್ಣ ಮಂಟಪ, ಸುವರ್ಣ ಭಗವದ್ಗೀತೆ ಇತ್ಯಾದಿ ಸಮರ್ಪಣೆಗೊಂಡಿವೆ. ಆದರೆ ತಾವು ಬಯಸಿದಂತೆ ಕಲ್ಸಂಕದಲ್ಲಿ ಶ್ರೀಕೃಷ್ಣ ಮಠಕ್ಕೆ ಪ್ರವೇಶ ದ್ವಾರ ನಿರ್ಮಿಸುವ ಕನಸು ಕೈಗೂಡಿಲ್ಲ. ಅವರು ಮಾಡಿರುವ ಹಲವು ಅಭಿವೃದ್ಧಿ ಕಾರ್ಯಗಳಲ್ಲಿ ಪ್ರಮುಖವಾದುದು ಎಂಜಲು ಎಲೆ ತ್ಯಾಜ್ಯದ ನಿರ್ವಹಣೆಗೆ ಘಟಕವೊಂದನ್ನು ಮಠದ ಆವರಣದಲ್ಲಿ ನಿರ್ಮಿಸಿ ಕಾರ್ಯಾರಂಭ ಮಾಡಿ ರುವುದು. ಹಿಂದಿನ ಮೂರನೇ ಪರ್ಯಾಯದಂತೆ ಪುತ್ತಿಗೆ ಶ್ರೀಗಳ ನಾಲ್ಕನೇ ಪರ್ಯಾಯವೂ ಯಾವುದೇ ವಿವಾದಗಳಿಲ್ಲದೇ ಮುಗಿದಿರುವುದು ಅವರ ‘ವಿದೇಶ ಸಂಚಾರ’ ವಿವಾದ ಸದ್ದಿಲ್ಲದೇ ಬಗೆಹರಿದಿರುವುದಕ್ಕೆ ಸಾಕ್ಷಿಯಾಗಿದೆ. ಪರ್ಯಾಯ ಪೀಠವೇರುವ 21ರ ಹರೆಯದ ಶ್ರೀವೇದವರ್ಧನ ತೀರ್ಥರಿಗೆ ಇದು ಚೊಚ್ಚಲ ಪರ್ಯಾಯ. 2018ರಲ್ಲಿ ಅಕಸ್ಮಿಕವಾಗಿ ತೀರಿಕೊಂಡ ಶ್ರೀಲಕ್ಷ್ಮೀವರ ತೀರ್ಥ ಶ್ರೀಪಾದರು ತೆರವು ಮಾಡಿದ ಪೀಠದಲ್ಲಿ ಕುಳಿತಿರುವ ಶ್ರೀವೇದವರ್ಧನ ತೀರ್ಥರಿಗೆ ‘ಹಿರಿಯ ಸ್ವಾಮೀಜಿ’ ಹಾಕಿಕೊಟ್ಟು ಹೋದ ‘ಶೀರೂರು ಪರಂಪರೆ’ಯ ಭಾರವಿದೆ. 2021ರ ಮೇ 14ರಂದು ದ್ವಂದ್ವ ಮಠವಾದ ಸೋದೆ ಮಠದ ಶ್ರೀಗಳಿಂದ ಸನ್ಯಾಸ ದೀಕ್ಷೆ ಸ್ವೀಕರಿಸಿದ ಶ್ರೀವೇದವರ್ಧನ ತೀರ್ಥರು ನಾಲ್ಕೇ ವರ್ಷಕ್ಕೆ ಸರ್ವಜ್ಞ ಪೀಠವೇರುವ ಅದೃಷ್ಟ ಪಡೆದಿದ್ದಾರೆ. ಜನಸಾಮಾನ್ಯರ ಸ್ವಾಮೀಜಿ ಎನಿಸಿದ್ದ ಶ್ರೀಲಕ್ಷ್ಮೀವರ ತೀರ್ಥರು ತೆರವು ಮಾಡಿದ ಪೀಠವನ್ನು ಶ್ರೀವೇದವರ್ಧನರು ಯಾವ ರೀತಿ ತುಂಬುತ್ತಾರೆ ಎಂಬುದನ್ನು ಅವರ ಲಕ್ಷಾಂತರ ಅಭಿಮಾನಿ ಕುತೂಹಲದಿಂದ ಎದುರು ನೋಡುತ್ತಿದೆ. ಬಿಗುಭದ್ರತೆ: ಪರ್ಯಾಯಕ್ಕಾಗಿ ನಗರ ಸಂಪೂರ್ಣ ಸಜ್ಜಾಗಿ ನಿಂತಿದೆ. ನಗರದ ಪ್ರತಿಯೊಂದು ಕಟ್ಟಡಗಳು ರಂಗುರಂಗಿನ ಬಣ್ಣ ತಳೆದು, ಇಡೀನಗರವೇ ಮದುಮಗಳಂತೆ ಸಿಂಗರಿಸಿಕೊಂಡು ನಿಂತಿದೆ. ಪರ್ಯಾಯ ಶಾಂತಿಯುತವಾಗಿ ನಡೆಯುಂತೆ ಪೊಲೀಸರು ಸೂಕ್ತ ಬಂದೋಬಸ್ತ್ ಕೈಗೊಂಡಿದ್ದಾರೆ. ಸಾವಿರಕ್ಕೂ ಅಧಿಕ ಪೊಲೀಸ್ ಸಿಬ್ಬಂದಿಗಳು ನಗರದಲ್ಲಿ ಗಸ್ತು ತಿರುಗುತಿದ್ದಾರೆ. ಸುಮಾರು ಮೂರು ಲಕ್ಷ ಜನರು ಈ ಬಾರಿಯ ಪರ್ಯಾಯವನ್ನು ವೀಕ್ಷಿಸುವ ನಿರೀಕ್ಷೆ ಪರ್ಯಾಯ ಸ್ವಾಗತ ಸಮಿತಿಯದ್ದಾಗಿದೆ. 32ನೇ ಪರ್ಯಾಯ ಚಕ್ರದ ಐದನೇ ಪರ್ಯಾಯ ಉಡುಪಿಯ ಶ್ರೀಕೃಷ್ಣನನ್ನು ಶ್ರೀಮಧ್ವಾಚಾರ್ಯರು 1278ರ ಮಕರ ಸಂಕ್ರಮಣದ ದಿನದಂದು ಉಡುಪಿಯಲ್ಲಿ ಪ್ರತಿಷ್ಠಾಪಿಸಿದರೆಂದು ಪ್ರತೀತಿ ಇದೆ. ಎರಡು ವರ್ಷಗಳಿಗೊಮ್ಮೆ ಪರ್ಯಾಯ ಬದಲಾಗುವ ಕ್ರಮ 1522ರಲ್ಲಿ ಪ್ರಾರಂಭಗೊಂಡಿತು. ಈ ವ್ಯವಸ್ಥೆ ಪಲಿಮಾರು ಮಠದಿಂದ ಆರಂಭಗೊಂಡು ಅದರ ಬಳಿಕ ಅನುಕ್ರಮವಾಗಿ ಅದಮಾರು, ಕೃಷ್ಣಾಪುರ, ಪುತ್ತಿಗೆ, ಶೀರೂರು, ಸೋದೆ, ಕಾಣಿಯೂರು ಕೊನೆಯಲ್ಲಿ ಪೇಜಾವರ ಮಠದೊಂದಿಗೆ ಪರ್ಯಾಯದ ಒಂದು ಚಕ್ರ 16 ವರ್ಷಗಳಲ್ಲಿ ಪೂರ್ಣಗೊಳ್ಳುತ್ತದೆ. ಹೀಗೆ ಸಾಗಿ ಬಂದ ಪರ್ಯಾಯ 2002ರಲ್ಲಿ 30ನೇ ಚಕ್ರವನ್ನು ಪೂರ್ಣಗೊಳಿಸಿದೆ. 2018ರಲ್ಲಿ ಪೇಜಾವರ ಮಠದ ಪರ್ಯಾಯದವರೆಗೆ ಎಲ್ಲಾ ಮಠಗಳೂ ಸರದಿಯಂತೆ 31 ಪರ್ಯಾಯಗಳನ್ನು ನಡೆಸಿವೆ. ಇದೀಗ ಪರ್ಯಾಯದ 32ನೇ ಚಕ್ರ ಚಾಲ್ತಿಯಲ್ಲಿದೆ. ಇದರಲ್ಲಿ ಈಗಾಗಲೇ ಪಲಿಮಾರು, ಅದಮಾರು, ಕೃಷ್ಣಾಪುರ ಹಾಗೂ ಇಂದಿಗೆ ಪುತ್ತಿಗೆ ಮಠಗಳು ತಮ್ಮ ಪರ್ಯಾಯವನ್ನು ಮುಗಿಸಿವೆ. ನಾಳೆ ಮುಂಜಾನೆ ಶೀರೂರು ಶ್ರೀಗಳ ಪರ್ಯಾಯ ಆರಂಭಗೊಳ್ಳಲಿದೆ. ಇದು ಶ್ರೀಕೃಷ್ಣ ಮಠದಲ್ಲಿ ನಡೆಯುತ್ತಿರುವ 253ನೇ ದ್ವೈವಾರ್ಷಿಕ ಪರ್ಯಾಯೋತ್ಸವ. ಶೀರೂರು ಮಠದ ಯತಿ ಪರಂಪರೆ ಆಚಾರ್ಯ ಮಧ್ವರ ನೇರ ಶಿಷ್ಯರಲ್ಲೊಬ್ಬರಾದ ಶ್ರೀವಾಮನ ತೀರ್ಥರು ಶೀರೂರು ಮಠದ ಆದ್ಯ ಯತಿಗಳು. ಇದುವರೆಗೆ ಶೀರೂರು ಮಠದ ಪರಂಪರೆಯಲ್ಲಿ ಶ್ರೀಲಕ್ಷ್ಮೀವರ ತೀರ್ಥ ಶ್ರೀಪಾದರವರೆಗೆ 30 ಮಂದಿ ಯತಿಗಳು ಸಂದು ಹೋಗಿದ್ದು, ಇದೀಗ ಸರ್ವಜ್ಞ ಪೀಠಾರೋಹಣ ಮಾಡುವ ಶ್ರೀವೇದವರ್ಧನ ತೀರ್ಥರು ಈ ಮಠದ 31ನೇ ಯತಿಗಳು.
‘ವಿಬಿ-ಜಿ ರಾಮ್ ಜಿ ಕಾಯ್ದೆ’ ವಿರುದ್ಧ ಬೀದಿಗಿಳಿದು ಹೋರಾಟ ಮಾಡುವುದೊಂದೇ ದಾರಿ : ಬಿ.ಆರ್.ಪಾಟೀಲ್
ಬೆಂಗಳೂರು : ಕೇಂದ್ರ ಸರಕಾರವು ‘ವಿಬಿ-ಜಿ ರಾಮ್ ಜಿ' ಕಾಯ್ದೆಯನ್ನು ಜಾರಿ ಮಾಡಿದ್ದು, ಇದರ ವಿರುದ್ಧ ಬೀದಿಗಿಳಿದು ಹೋರಾಟ ಮಾಡುವುದೊಂದೇ ದಾರಿ, ಬೇರೆ ದಾರಿಯೇ ಇಲ್ಲ ಎಂದು ರಾಜ್ಯ ಸರಕಾರದ ಯೋಜನಾ ಆಯೋಗದ ಉಪಾಧ್ಯಕ್ಷ ಬಿ.ಆರ್.ಪಾಟೀಲ್ ಕರೆ ನೀಡಿದ್ದಾರೆ. ಶನಿವಾರ ನಗರದ ಗಾಂಧಿ ಭವನದಲ್ಲಿ ಮನರೇಗಾ ರಕ್ಷಣಾ ಒಕ್ಕೂಟವು ಆಯೋಜಿಸಿದ್ದ ‘ಉದ್ಯೋಗ ಖಾತರಿ ಧ್ವಂಸದ ವಿಬಿ-ಜಿ ರಾಮ್-ಜಿ ಕಾನೂನಿನ ಅಪಾಯ ಮತ್ತು ಮುನ್ನೆಚ್ಚರಿಕೆ’ ಎಂಬ ರಾಜ್ಯಮಟ್ಟದ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು. ಕೇಂದ್ರ ಸರಕಾರವು ಯಾವುದೇ ರೀತಿಯ ಚರ್ಚೆ ಮಾಡದೆ ‘ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ’ ಯೋಜನೆಯನ್ನು ತೆಗೆದು ಹಾಕಿದೆ. ಅದರ ಬದಲಿಗೆ ‘ವಿಬಿ-ಜಿ ರಾಮ್ ಜಿ' ಕಾಯ್ದೆಯನ್ನು ಜಾರಿ ಮಾಡುತ್ತಿದೆ. ಈಗಾಗಲೇ ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳು ಸೇರಿ ಬಹುತೇಕ ರಾಜ್ಯ ಸರಕಾರಗಳು ಆರ್ಥಿಕವಾಗಿ ದಿವಾಳಿಯಾಗುತ್ತಿದ್ದು, ಈ ನೂತನ ಕಾಯ್ದೆ ಮೂಲಕ ರಾಜ್ಯಗಳನ್ನು ಮತ್ತಷ್ಟು ಆರ್ಥಿಕ ಬಿಕ್ಕಟ್ಟಿಗೆ ದೂಡೂತ್ತಿದೆ ಎಂದು ಅವರು ಆರೋಪಿಸಿದರು. ದೇಶದ ಜನರಿಗೆ ಆಹಾರ ಭದ್ರತಾ ಕಾಯ್ದೆ ಮತ್ತು ಉದ್ಯೋಗದ ಹಕ್ಕು ನೀಡುತ್ತಿರುವ ಹಿನ್ನೆಲೆಯಲ್ಲಿ ಹಳ್ಳಿಗಳಲ್ಲಿ ಇನ್ನು ಜನರು ಭರವಸೆಯಿಂದ ವಾಸಿಸುತ್ತಿದ್ದಾರೆ. ಇಲ್ಲದಿದ್ದರೆ, ಉದ್ಯೋಗವನ್ನು ಹುಡುಕುತ್ತಾ ನಗರಗಳಿಗೆ ವಲಸೆ ಬರುತ್ತಿದ್ದರು. ಕೃಷಿಯಲ್ಲಿ ಯಂತ್ರೋಪಕರಣಗಳು ಬಂದಿರುವುದರಿಂದ ಈಗಲೂ ಹಳ್ಳಿ ಜನರು ಉದ್ಯೋಗವನ್ನು ಹುಡುಕುತ್ತಾ ನಗರಕ್ಕೆ ವಲಸೆ ಹೋಗುತ್ತಿದ್ದಾರೆ. ಆದರೆ ಉದ್ಯೋಗ ಖಾತರಿ ಯೋಜನೆ ವಲಸೆ ಪ್ರಮಾಣವನ್ನು ಕಡಿಮೆ ಮಾಡಿದೆ ಎಂದು ಅವರು ಹೇಳಿದರು. ಚಿಂತಕ ಕೆ.ಪಿ ಸುರೇಶ್ ಮಾತನಾಡಿ, ಮನರೇಗಾವನ್ನು ‘ವಿಬಿ-ಜಿ ರಾಮ್ ಜಿ’ ಎಂದು ಹೆಸರು ಬದಲಿಸಿರುವುದು ಮಾತ್ರವಲ್ಲ, ಇಡೀ ಯೋಜನೆಯ ನಿಯಂತ್ರಣವನ್ನು ಕೇಂದ್ರ ಸರಕಾರ ತನ್ನ ನಿಯಂತ್ರಣಕ್ಕೆ ತೆಗೆದುಕೊಂಡಿದೆ. ದುಡಿಯುವ ಜನರ ಕೆಲಸದ ಹಕ್ಕನ್ನು ಕಸಿದುಕೊಳ್ಳುತ್ತದೆ. ಆರ್ಥಿಕ ಹೊರೆಯನ್ನು ರಾಜ್ಯಗಳ ಮೇಲೆ ಹೇರುತ್ತದೆ ಎಂದು ಆರೋಪಿಸಿದರು. ಮನರೇಗಾ ಯೋಜನೆಗೆ ಶೇ.90ರಷ್ಟು ಅನುದಾನವನ್ನು ಕೇಂದ್ರ ಕೊಡುತ್ತಿತ್ತು. ಶೇ.10ರಷ್ಟನ್ನು ರಾಜ್ಯಗಳು ಭರಿಸುತ್ತಿದ್ದವು. ಯಾವ ಪ್ರದೇಶಕ್ಕೆ ಎಷ್ಟು ಉದ್ಯೋಗಗಳ ಬೇಡಿಕೆ ಇದೆ ಎಂಬುದನ್ನು ಗ್ರಾಮ ಸಭೆಗಳು ನಿರ್ಧರಿಸುತ್ತಿದ್ದವು. ಅದಕ್ಕೆ ಅನುಗುಣವಾಗಿ ಉದ್ಯೋಗ ಮತ್ತು ಅನುದಾನ ಬಿಡುಗಡೆ ಮಾಡಲಾಗುತ್ತಿತ್ತು. ಆದರೆ, ಈಗ ಯಾವ ರಾಜ್ಯದ ಯಾವ ಪ್ರದೇಶಕ್ಕೆ ಎಷ್ಟು ಉದ್ಯೋಗ ಕೊಡಬೇಕು ಎಂಬುದನ್ನೂ ಕೇಂದ್ರವೇ ನಿರ್ಧರಿಸಲಿದೆ ಎಂದು ಅವರು ಹೇಳಿದರು. ‘ವಿಬಿ-ಜಿ ರಾಮ್ ಜಿ’ ಕಾಯ್ದೆಯಡಿ ಕೇಂದ್ರದ ಪಾಲನ್ನು ಶೇ.60ಕ್ಕೆ ಇಳಿಸಿದ್ದು, ರಾಜ್ಯಗಳು ಶೇ.40ರಷ್ಟು ಅನುದಾನವನ್ನು ಭರಿಸಬೇಕೆಂದು ಹೇಳುತ್ತಿದೆ. ಇಡೀ ತೆರಿಗೆ ವ್ಯವಸ್ಥೆಯಲ್ಲಿ ಶೇ.75 ಆದಾಯವನ್ನು ಪಡೆಯುವ ಕೇಂದ್ರ ಸರಕಾರವು, ರಾಜ್ಯಗಳಿಗೆ ದೊರೆಯಬೇಕಾದ ನ್ಯಾಯಯುತ ಅನುದಾನವನ್ನು ಕಡಿತ ಮಾಡಿದೆ. ಅಲ್ಲದೆ, ರಾಜ್ಯಗಳಿಗೆ ಹೆಚ್ಚಿನ ಹೊರೆ ಹಾಕಲಾಗುತ್ತಿದೆ ಎಂದು ಅವರು ಆರೋಪಿಸಿದರು. ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳಿಗೆ ಶೇ.40ರಷ್ಟು ಅನುದಾನವನ್ನೂ ಕೇಂದ್ರವೇ ಪರೋಕ್ಷವಾಗಿ ಕೊಡುತ್ತದೆ. ಆದುದರಿಂದ ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳು ಈ ಯೋಜನೆಗೆ ವಿರೋಧ ವ್ಯಕ್ತಪಡಿಸುವುದಿಲ್ಲ. ಆದರೆ, ದಕ್ಷಿಣ ಭಾರತದ ರಾಜ್ಯಗಳಿಗೆ ಅನುದಾನ ಕಡಿತ ಮಾಡಿ ಹೆಚ್ಚಿನ ಹೊರೆಯಾಗುವಂತೆ ಮಾಡಿದೆ ಎಂದು ಅವರು ಹೇಳಿದರು. ರೈತ ಸಂಘದ ಮುಖಂಡ ಎನ್.ಡಿ. ವಸಂತ್ ಕುಮಾರ್ ಮಾತನಾಡಿ, ಬಿಜೆಪಿ ಸರಕಾರವು ದೇಶಾದ್ಯಂತ ಉದ್ಯೋಗ ಖಾತರಿ ನೀಡುವ ಕಾಯ್ದೆಯನ್ನೇ ತಲೆಕೆಳಗೆ ಮಾಡಲು ಸಂಚು ರೂಪಿಸಿದೆ. ಅತ್ಯುತ್ತಮ ಕಾಯ್ದೆಯನ್ನು ಜಾರಿಗೆ ತಂದಿದ್ದ ಕಾಂಗ್ರೆಸ್, ಈಗ ಅದನ್ನು ಉಳಿಸಿಕೊಳ್ಳುವ ರೀತಿ ಸಮರ್ಥವಾಗಿ ಹೋರಾಟ ಮಾಡುತ್ತಿಲ್ಲ. ಹೀಗಾಗಿ ಮನರೇಗಾ ಉಳಿವಿಗಾಗಿ ಎಲ್ಲರೂ ಹೋರಾಟ ಕಟ್ಟಬೇಕಾಗಿದೆ ಎಂದರು. ಕಾರ್ಯಕ್ರಮದಲ್ಲಿ ಸಾಹಿತಿ ಎಸ್.ಜಿ. ಸಿದ್ದರಾಮಯ್ಯ, ದಲಿತ ಮುಖಂಡ ಇಂಧೂದರ ಹೊನ್ನಾಪುರ, ಶಾರಾದಾ ಗೋಪಾಲ್, ಪ್ರಕಾಶ್ ಕಮ್ಮರಡಿ, ಮೈತ್ರೇಯಿ ಕೃಷ್ಣನ್, ಚೆನ್ನಮ್ಮ, ರೇಣುಕ ಸೇರಿದಂತೆ ಮತ್ತಿತರರು ಇದ್ದರು. ‘ಬಿಜೆಪಿ ದೇಶದ ಅಧಿಕಾರ ಹಿಡಿದಾಗಿನಿಂದ ಭಾರತದ ಪ್ರಗತಿಯಲ್ಲಿ ಹಿಂಚಲನೆ ಆರಂಭವಾಗಿದೆ. ಈಗ, ಮನರೇಗಾ ಯೋಜನೆಯನ್ನು ಮಣ್ಣುಪಾಲು ಮಾಡುತ್ತಿದೆ. ಮನರೇಗಾ ಉಳಿಸುವ ಹೋರಾಟದಲ್ಲಿ ಕಾಂಗ್ರೆಸ್ ಮುಂಚೂಣಿಗೆ ಬರುತ್ತಿಲ್ಲ. ಕಾಂಗ್ರೆಸ್ ಅನ್ನು ನೆಚ್ಚಿ ಹೋರಾಟ ಕಟ್ಟಲು ಸಾಧ್ಯವೂ ಇಲ್ಲ. ಹೀಗಾಗಿ ಎಲ್ಲ ಜನಪರ ಸಂಘಟನೆಗಳು ಒಗ್ಗಟ್ಟಿನಿಂದ ಹೋರಾಟ ಮಾಡಬೇಕು’ -ಇಂಧೂದರ ಹೊನ್ನಾಪುರ, ಹಿರಿಯ ಪತ್ರಕರ್ತ ವಿಚಾರ ಸಂಕಿರಣದಲ್ಲಿ ತೆಗೆದುಕೊಂಡ ನಿರ್ಣಯಗಳು: 1. ಇದೇ ಜ.26ರಂದು ಪ್ರತಿಯೊಂದು ಗ್ರಾಮ ಪಂಚಾಯತಿಯಲ್ಲೂ ಗ್ರಾಮಸಭೆ ಮಾಡಿ ‘ವಿಬಿ-ಜಿ ರಾಮ್ ಜಿ’ ಕಾನೂನನ್ನು ತಿರಸ್ಕರಿಸಬೇಕು. 2. ಒಕ್ಕೂಟದಿಂದ ‘ವಿಬಿ-ಜಿ ರಾಮ್ ಜಿ’ ಮತ್ತು ಹಿಂದಿನ ಮನರೇಗಾ ಕುರಿತು ಜನರಿಗೆ ಮಾಹಿತಿ ನೀಡುವ ಕರಪತ್ರಗಳನ್ನು ಹೊರತರುವುದು. 3. ಹುತಾತ್ಮ ದಿನವಾದ ಜ.30ರಂದು ತಾಲೂಕು, ಜಿಲ್ಲಾ ಮಟ್ಟದಿಂದ ಪ್ರಧಾನ ಮಂತ್ರಿಗಳಿಗೆ ಕಾಯ್ದೆಯನ್ನು ಹಿಂಪಡೆಯಲು ಮನವಿ ಸಲ್ಲಿಸುವುದು. 4. ದಿಲ್ಲಿಯಲ್ಲಿ ಜ. 22ರಂದು ನಡೆಯುತ್ತಿರುವ ಸಭೆಗೆ ಒಕ್ಕೂಟದಿಂದ ಕನಿಷ್ಟ 20 ಜನ ಭಾಗವಹಿಸುವುದು. 5. ಸಹಭಾಗಿ ಸಂಘಟನೆಗಳಾದ ಸಂಯುಕ್ತ ಹೋರಾಟ ಮತ್ತು ಜೆಸಿಟಿಯು ಸಂಘಟಿಸುತ್ತಿರುವ ಜ.21ರ ಟೌನ್ ಹಾಲ್ ಎದುರು ನಡೆಯುವ ಹೋರಾಟ ಮತ್ತು ಫೆ.12ರಂದು ನಡೆಯುವ ಕರ್ನಾಟಕ ಬಂದ್ಗಳಲ್ಲಿಯೂ ಒಕ್ಕೂಟವು ಭಾಗವಹಿಸಿ ಬೆಂಬಲ ನೀಡುವುದು. 6. ಫೆ.2ಕ್ಕೆ ಮನರೇಗಾಗೆ 20 ವರ್ಷ ಆಗುವ ಸಂದರ್ಭದಲ್ಲಿ ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಮಹಾ ಪಂಚಾಯತ್ ನಡೆಸಲು ಯೋಚಿಸಲಾಗಿದೆ.
ಯಾದಗಿರಿ | ಇಬ್ರಾಹಿಂಪುರದಲ್ಲಿ ಸಾಯಿಬಾಬಾ ಜಾತ್ರಾ ಮಹೋತ್ಸವಕ್ಕೆ ಚಾಲನೆ : ಹಸೆಮಣೆ ಏರಿದ ಹತ್ತು ಜೋಡಿಗಳು
ಯಾದಗಿರಿ: ಶಹಾಪುರ ತಾಲೂಕಿನ ಇಬ್ರಾಹಿಂಪುರ ಗ್ರಾಮದಲ್ಲಿನ ಶ್ರೀ ಶಿರಡಿ ಸಾಯಿಬಾಬಾ ಮಂದಿರದ 4ನೇ ಜಾತ್ರಾ ಮಹೋತ್ಸವವು ನಾಡಿನ ಹರಗುರು ಚರಮೂರ್ತಿಗಳು, ಸಾಹಿತಿಗಳು, ಗಣ್ಯರು, ಕಲಾವಿದರು ಹಾಗೂ ಅಪಾರ ಸಂಖ್ಯೆಯ ಸಾಯಿಬಾಬಾ ಭಕ್ತರ ಸಮ್ಮುಖದಲ್ಲಿ ಶನಿವಾರ ನೆರವೇರಿತು. ಕಾರ್ಯಕ್ರಮದಲ್ಲಿ ಮಾತನಾಡಿದ ಮಾಜಿ ಶಾಸಕ ಗುರು ಪಾಟೀಲ್, ಸರ್ವಧರ್ಮಗಳ ಸಕಾರ ಮೂರ್ತಿಯಾದ ಸಾಯಿಬಾಬಾ ಅವರ ಜಾತ್ರೆಯನ್ನು ಆಚರಿಸುವ ಮೂಲಕ ಜಾತ್ಯತೀತ ತತ್ವಗಳನ್ನು ಜೀವಂತವಾಗಿಟ್ಟಿರುವುದು ಶ್ಲಾಘನೀಯ ಕಾರ್ಯ ಎಂದು ಹೇಳಿದರು. ಸಾಹಿತಿ ವಿಶ್ವಾರಾಧ್ಯ ಸತ್ಯಂಪೇಟೆ ಮಾತನಾಡಿ, ದಿಗ್ಗಿ ಮಹಾರಾಜ್ ಅವರ ಸಾಮಾಜಿಕ ಕಳಕಳಿ ಎಲ್ಲರಿಗೂ ಪ್ರೇರಣೆಯಾಗಬೇಕು. ಸಾಮೂಹಿಕ ವಿವಾಹದಂತಹ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಸರಳತೆ ಹಾಗೂ ಸಮಾಜಮುಖಿ ಚಿಂತನೆ ಮೆರೆದಿದ್ದಾರೆ ಎಂದು ತಿಳಿಸಿದರು. ಕರ್ನಾಟಕ ಸಾಹಿತ್ಯ ಪರಿಷತ್ ಜಿಲ್ಲಾ ಅಧ್ಯಕ್ಷ ಸಿದ್ದಪ್ಪ ಹೊಟ್ಟಿ ಮಾತನಾಡಿ, ಭಗವಂತ ಎಲ್ಲವನ್ನೂ ನೀಡುತ್ತಾನೆ. ಆದರೆ ಇಂತಹ ಸಮಾಜೋಪಯೋಗಿ ಕಾರ್ಯಕ್ರಮಗಳನ್ನು ಮಾಡುವವರು ವಿರಳ. ಈ ನಿಟ್ಟಿನಲ್ಲಿ ದಿಗ್ಗಿ ಮಹಾರಾಜ್ ಅವರ ಸೇವೆ ಅನನ್ಯವಾಗಿದೆ ಎಂದರು. ಗುರುಮಠಕಲ್ ಖಾಸಾಮಠದ ಶಾಂತವೀರ ಗುರುಮುರುಘರಾಜೇಂದ್ರ ಹಾಗೂ ಕಡಕೋಳದ ರುದ್ರಮುನಿ ಸ್ವಾಮಿಗಳು ಮಾತನಾಡಿದರು. ಬೆಳಿಗ್ಗೆ ಸಾಯಿಬಾಬಾ ಮೂರ್ತಿಗೆ ವಿಶೇಷ ಪೂಜೆ, ಅಭಿಷೇಕ ಹಾಗೂ ಮಂಗಳಾರತಿ ಕಾರ್ಯಕ್ರಮಗಳು ಆಶ್ರಮದ ರೂವಾರಿಗಳಾದ ದಿಗ್ಗಿ ಮಹಾರಾಜ್, ಸಿದ್ದಪಾಜಿ ದಿಗ್ಗಿ ಹಾಗೂ ಕುಟುಂಬಸ್ಥರಿಂದ ನೆರವೇರಿದವು. ನಂತರ ಸಕಲ ಧಾರ್ಮಿಕ ವಿಧಿವಿಧಾನಗಳೊಂದಿಗೆ ಸುಮಾರು ಹತ್ತು ಜೋಡಿಗಳ ಸಾಮೂಹಿಕ ವಿವಾಹ ಜರುಗಿತು. ಡಿ.ಜಾನ್ ಸಂಸ್ಥೆಯ ಶಾಲಾ ಮಕ್ಕಳಿಂದ ಭರತನಾಟ್ಯ ಪ್ರದರ್ಶನ, ಬಸವಣ್ಣನವರ ವಚನ ಗಾಯನ ನಡೆಯಿತು. ಲಿಂಗೈಕ್ಯರಾದ ಕಾಗಿನೆಲೆ ಸಿದ್ದರಾಮನಂದಪೂರಿ ಶ್ರೀಗಳಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಕಾರ್ಯಕ್ರಮದಲ್ಲಿ ವಿವಿಧ ಮಠಗಳ ಪೀಠಾಧಿಪತಿಗಳು, ಸಾಹಿತಿಗಳು ಹಾಗೂ ಗಣ್ಯರಾದ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಅಧ್ಯಕ್ಷ ಶರಣಪ್ಪ ಸಲಾದಪುರ, ಬಿಜೆಪಿ ಜಿಲ್ಲಾಧ್ಯಕ್ಷ ಬಸವರಾಜಪ್ಪ ವಿಭೂಯುಹಳ್ಳಿ, ಮಾಜಿ ಅಧ್ಯಕ್ಷ ಅಮೀನ್ ರೆಡ್ಡಿ ಯಾಳಗಿ, ಸಾಹಿತಿ ಡಾ.ಸಿದ್ದರಾಮ ಹೊನ್ಕಲ್, ಶಾಂತರೆಡ್ಡಿ ದೇಸಾಯಿ, ಆರ್. ಮಹಾದೇವಪ್ಪ ಗೌಡ ಅಬ್ಬೆತುಮಕೂರು, ಡಾ. ರವೀಂದ್ರನಾಥ ಹೊಸಮನಿ, ರಾಯಪ್ಪ ಗೌಡ ಹುಡೆದ್, ಪತ್ರಕರ್ತ ಪ್ರಕಾಶ ದೊರೆ, ನೀಲಕಂಠ ಬಡಿಗೇರ, ಉಮೇಶ ಮುದ್ನಾಳ್ ಸೇರಿದಂತೆ ಹಲವರು ಭಾಗವಹಿಸಿದ್ದರು. ಶ್ರೀಶೈಲ್ ಪೂಜಾರಿ ಸ್ವಾಗತಿಸಿದರು. ಮಹಾಂತೇಶ ಹೂಲಕೊಟಿ ಹಾಗೂ ತಂಡದವರಿಂದ ಸಂಗೀತ ಕಾರ್ಯಕ್ರಮ ನಡೆಯಿತು. ಜ.18ರಂದು ಸಂಜೆ 6 ಗಂಟೆಗೆ ಧಾರ್ಮಿಕ ಸಭೆ, ಸಂಗೀತ ಹಾಗೂ ನೃತ್ಯ ಗಾಯನ ಕಾರ್ಯಕ್ರಮಗಳು ನಡೆಯಲಿದ್ದು, ಡಾಲಿ ಧನಂಜಯ ಸೇರಿದಂತೆ ಇತರ ಕಲಾವಿದರು ಭಾಗವಹಿಸಲಿದ್ದಾರೆ ಎಂದು ಆಯೋಜಕರು ತಿಳಿಸಿದ್ದಾರೆ.
ಬಳ್ಳಾರಿ | ಪರೀಕ್ಷಾ ಕೇಂದ್ರಗಳ ಸುತ್ತಲು ನಿಷೇಧಾಜ್ಞೆ ಜಾರಿ : ಡಿಸಿ ನಾಗೇಂದ್ರ ಪ್ರಸಾದ್ ಕೆ. ಆದೇಶ
ಬಳ್ಳಾರಿ : ನಗರದ 4 ಪರೀಕ್ಷಾ ಕೇಂದ್ರಗಳಲ್ಲಿ ದೆಹಲಿಯ ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ ವತಿಯಿಂದ ಜ.18 ರಂದು ಆಲ್ ಇಂಡಿಯಾ ಸೈನಿಕ ಶಾಲೆಗಳ ಪ್ರವೇಶ ಪರೀಕ್ಷೆ-2026 ನಡೆಯಲಿದ್ದು, ಪರೀಕ್ಷಾ ಕೇಂದ್ರಗಳ ಸುತ್ತಲೂ 200 ಮೀಟರ್ ಆವರಣವನ್ನು ಭಾರತೀಯ ನಾಗರೀಕ ಸುರಕ್ಷಾ ಸಂಹಿತಾ 2023 ರ ಕಲಂ 163 ರಡಿ ಪ್ರದತ್ತವಾದ ಅಧಿಕಾರ ಚಲಾಯಿಸಿ ನಿರ್ಭಂಧಿತ ಪ್ರದೇಶವೆಂದು ಘೋಷಿಸಿ ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್.ಕೆ ಅವರು ಆದೇಶಿಸಿದ್ದಾರೆ. ಪರೀಕ್ಷಾ ಕೇಂದ್ರಗಳ ಸುತ್ತ ಮುತ್ತಲಿನ ಜೆರಾಕ್ಸ್ ಸೆಂಟರ್ ಮತ್ತು ಇಂಟರ್ನೆಟ್ ಸೆಂಟರ್ಗಳನ್ನು ಕಾರ್ಯನಿರ್ವಹಿಸದಂತೆ ಆದೇಶಿಸಿದ್ದು, ಆ ಪ್ರದೇಶದಲ್ಲಿ ಅನಧೀಕೃತ ವ್ಯಕ್ತಿ ಮತ್ತು ವ್ಯಕ್ತಿಗಳ ಗುಂಪುಗಳಿಗೆ ಪ್ರವೇಶ ನಿಷೇಧಿಸಲಾಗಿದೆ. ಈ ಆದೇಶವು ಪರೀಕ್ಷೆಯ ಮೇಲ್ವಿಚಾರಣೆ ಕಾರ್ಯನಿರ್ವಹಿಸುವ ಸಿಬ್ಬಂದಿಯವರೆಗೆ ಅನ್ವಯಿಸುವುದಿಲ್ಲ ಎಂದು ಅವರು ಹೊರಡಿಸಿರುವ ಆದೇಶದಲ್ಲಿ ತಿಳಿಸಿದ್ದಾರೆ.
ರಾಜ್ಯದ ʼನವೋದ್ಯಮ ನೀತಿ 2025-30ʼ ಅನಾವರಣ : ಸಚಿವ ಪ್ರಿಯಾಂಕ್ ಖರ್ಗೆ
ಬೆಂಗಳೂರು : ಮುಂದಿನ ಐದು ವರ್ಷಗಳಲ್ಲಿ ಉದ್ಯಮಶೀಲತೆಗೆ ಇನ್ನಷ್ಟು ಉತ್ತೇಜನ ನೀಡಿ ಕರ್ನಾಟಕವನ್ನು ಜಾಗತಿಕ ನಾವೀನ್ಯತೆಯ ಕೇಂದ್ರವಾಗಿ ಅಭಿವೃದ್ಧಿಪಡಿಸುವ ಮಹತ್ವಾಕಾಂಕ್ಷೆಯ ‘ನವೋದ್ಯಮ ನೀತಿ 2025-2030ನ್ನು ರಾಜ್ಯ ಸರಕಾರವು ಅನಾವರಣಗೊಳಿಸಿದೆ ಎಂದು ಮಾಹಿತಿ ಮತ್ತು ಜೈವಿಕ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ. ಶನಿವಾರ ನಗರದಲ್ಲಿ ರಾಷ್ಟ್ರೀಯ ‘ನವೋದ್ಯಮ ಮಾಸ’ದ ಭಾಗವಾಗಿ, ರಾಜ್ಯ ಸರಕಾರದ ಎಲೆಕ್ಟ್ರಾನಿಕ್ಸ್, ಐಟಿ ಮತ್ತು ಬಿಟಿ ಇಲಾಖೆಯ ಆಶ್ರಯದಲ್ಲಿ ನಡೆದ ನವೋದ್ಯಮಗಳಿಗೆ ನೆರವಾಗುವ ‘ಐಡಿಯಾ 2 ಪಿಒಸಿ ಎಲೆವೇಟ್ 2025’ ಉಪಕ್ರಮದ 146 ವಿಜೇತರ ಸನ್ಮಾನ ಸಮಾರಂಭದಲ್ಲಿ ಈ ನೀತಿಯನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು. ಮುಖ್ಯಾಂಶಗಳು: ರಾಜ್ಯದಲ್ಲಿ 25 ಸಾವಿರ ನವೋದ್ಯಮ ಸ್ಥಾಪಿಸುವ ಗುರಿ, ನೀತಿ ಜಾರಿಗೆ 570.67 ಕೋಟಿ ರೂ. ಮೊತ್ತ ನಿಗದಿ, ಮಹಿಳೆ ನೇತೃತ್ವದ ಹಾಗೂ ಗ್ರಾಮೀಣ ನವೋದ್ಯಮಗಳಿಗೆ ಆದ್ಯತೆ, ನವೋದ್ಯಮಗಳ ಎಲ್ಲ ಹಂತಗಳಲ್ಲಿ ಸರಕಾರದ ಬೆಂಬಲದ ಭರವಸೆ, ಮುಂದಿನ ಐದು ವರ್ಷಗಳ ಉದ್ಯಮಶೀಲ ಬೆಳವಣಿಗೆಗೆ ಮಾರ್ಗಸೂಚಿ ಹೊಂದಿರುವ ಈ ನೀತಿಯು, 2030ರ ವೇಳೆಗೆ ಬೆಂಗಳೂರು ಆಚೆಗಿನ ಕ್ಲಸ್ಟರ್ಗಳಲ್ಲಿ ಕನಿಷ್ಠ 10 ಸಾವಿರ ನವೋದ್ಯಮಗಳು ಸೇರಿದಂತೆ ರಾಜ್ಯದಾದ್ಯಂತ 25 ಸಾವಿರ ನವೋದ್ಯಮಗಳನ್ನು ಸ್ಥಾಪಿಸುವ ಗುರಿ ಹೊಂದಿದೆ ಎಂದು ಅವರು ಮಾಹಿತಿ ನೀಡಿದರು. ಈ ನೀತಿ ಜಾರಿಗೊಳಿಸಲು ಇಲಾಖೆಯು 570.67 ಕೋಟಿ ರೂ. ಮೊತ್ತವನ್ನು ಮೀಸಲು ಇರಿಸಿದೆ, ಹಣಕಾಸು, ಪೋಷಣೆ, ಮಾರ್ಗದರ್ಶನ, ಮಾರುಕಟ್ಟೆ ಲಭ್ಯತೆ, ಅಂತರ್ರಾಷ್ಟ್ರೀಯ ಸಹಯೋಗ, ಸೇರ್ಪಡೆ, ಸುಸ್ಥಿರತೆ ಮತ್ತು ನಿಯಂತ್ರಣ ಕ್ರಮಗಳಿಗೆ ನೆರವು ಒಳಗೊಂಡಂತೆ ಒಟ್ಟು ಏಳು ಪ್ರಮುಖ ಆಧಾರ ಸ್ತಂಭಗಳನ್ನು ಈ ನೀತಿಯು ಆಧರಿಸಿದೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದರು. ಮಹಿಳಾ ನೇತೃತ್ವದ ಉದ್ಯಮಗಳು, ತಳಮಟ್ಟದ ನಾವೀನ್ಯಕಾರರು, ಗ್ರಾಮೀಣ ಉದ್ಯಮಿಗಳು ಮತ್ತು ಸಾಮಾಜಿಕವಾಗಿ ಪ್ರಭಾವ ಬೀರುವ ಉದ್ಯಮಗಳನ್ನು ಬೆಂಬಲಿಸುವ ಮೂಲಕ ಎಲ್ಲರ ಒಳಗೊಳ್ಳುವಿಕೆಗೆ ಆದ್ಯತೆ ನೀಡಲಿದೆ, ಸರಕಾರ ಮೊದಲು-ಯೋಜನೆಯಡಿ, ಉತ್ಪನ್ನ ಮತ್ತು ಪರಿಹಾರ ನೀಡುವ ನವೋದ್ಯಮ(ಸ್ಟಾರ್ಟ್ಅಪ್)ಗಳಿಗೆ ರಾಜ್ಯ ಸರಕಾರವನ್ನು ತಮ್ಮ ಮೊದಲ ಗ್ರಾಹಕರಾಗಿ ಹೊಂದುವ ವಿಶಿಷ್ಟ ಅವಕಾಶವನ್ನು ನೀಡಲಾಗುವುದು ಎಂದು ಅವರು ತಿಳಿಸಿದರು. ಆರಂಭಿಕ ಪರಿಕಲ್ಪನೆಯಿಂದ ಆರಂಭಿಸಿ ಜಾಗತಿಕ ವಿಸ್ತರಣೆ ಮತ್ತು ಆರಂಭಿಕ ಸಾರ್ವಜನಿಕ ಕೊಡುಗೆ (ಐಪಿಒ) ಮೂಲಕ ಷೇರುಪೇಟೆ ಪ್ರವೇಶಿಸುವ ಹಂತದವರೆಗೂ ನವೋದ್ಯಮಗಳಿಗೆ ಬೆಂಬಲ ನೀಡುವ ರೀತಿಯಲ್ಲಿ ಈ ನೀತಿಯನ್ನು ವಿನ್ಯಾಸಗೊಳಿಸಲಾಗಿದೆ ಎಂದು ಪ್ರಿಯಾಂಕ್ ಖರ್ಗೆ ಮಾಹಿತಿ ನೀಡಿದರು. ನವೋದ್ಯಮಿಗಳಿಗೆ ಸನ್ಮಾನ: ಸನ್ಮಾನಕ್ಕೆ ಪಾತ್ರರಾದ ನವೋದ್ಯಮಿಗಳಲ್ಲಿ 103 ಎಲೆವೇಟ್ 2025 ವಿಜೇತರು, 33 ಎಲೆವೇಟ್ ಉನ್ನತಿ ವಿಜೇತರು ಮತ್ತು 10 ಎಲೆವೇಟ್ ಅಲ್ಪಸಂಖ್ಯಾತ ನವೋದ್ಯಮಿಗಳು ಸೇರಿದ್ದಾರೆ. ಅರ್ಹ ನವೋದ್ಯಮಗಳಿಗೆ ಒಟ್ಟು 38.85 ಕೋಟಿ ರೂ. ಮೊತ್ತದ ಅನುದಾನ ವಿತರಿಸಲಾಗಿದೆ. ಎಲೆವೇಟ್ ಕಾರ್ಯಕ್ರಮದಡಿಯಲ್ಲಿ ಗುರುತಿಸಲ್ಪಟ್ಟ ನವೋದ್ಯಮಗಳಿಗೆ 50 ಲಕ್ಷ ರೂ.ವರೆಗೆ ಒಂದು ಬಾರಿಯ ಅನುದಾನ ಒದಗಿಸಲಾಗುತ್ತಿದೆ ಎಂದು ಅವರು ತಿಳಿಸಿದರು. ಇದರ ಜೊತೆಗೆ, ಉತ್ಪನ್ನ ಅಭಿವೃದ್ಧಿ ಮತ್ತು ದೃಢೀಕರಣಕ್ಕೆ ನೆರವಾಗಲು ನವೋದ್ಯಮಗಳಿಗೆ ಚಿಮ್ಮುಹಲಗೆಯಾಗಿ ಕಾರ್ಯನಿರ್ವಹಿಸುವ ಸರಕಾರಿ ಬೆಂಬಲಿತ ಕೇಂದ್ರಗಳಲ್ಲಿ ಸಬ್ಸಿಡಿ ದರದಲ್ಲಿ ಮಾರ್ಗದರ್ಶನ ಮತ್ತು ಸೂಕ್ತ ನೆರವು ನೀಡಲಾಗುತ್ತಿದೆ. ಎಲೆವೇಟ್ ಮೂಲಕ, ರಾಜ್ಯದಾದ್ಯಂತದ ನವೋದ್ಯಮಿಗಳು ತಮ್ಮ ಹೊಸ ಚಿಂತನೆಗಳನ್ನು ಕಾರ್ಯರೂಪಕ್ಕೆ ತರಲು ಅನುವು ಮಾಡಿಕೊಡಲಾಗುತ್ತಿದೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದರು. ಎಲೆವೇಟ್ ಕಾರ್ಯಕ್ರಮದಡಿ ಉದ್ಯಮಶೀಲತೆಯ ಪಯಣದ ವಿವಿಧ ಹಂತಗಳಲ್ಲಿ ಭರವಸೆ ಮೂಡಿಸಿರುವ ನವೋದ್ಯಮಗಳನ್ನು ಗುರುತಿಸಿ ಅಗತ್ಯ ಬೆಂಬಲ ನೀಡಲಾಗುತ್ತಿದೆ. ನವೋದ್ಯಮಗಳು ಸುಸ್ಥಿರ ರೀತಿಯಲ್ಲಿ ಬೆಳೆಯಲು ಅನುವು ಮಾಡಿಕೊಡಲಾಗುತ್ತಿದೆ. ನವೋದ್ಯಮಗಳ ಒಡೆತನದಲ್ಲಿ ಯಾವುದೆ ಪಾಲು ತೆಗೆದುಕೊಳ್ಳದೆ ಹಣಕಾಸಿನ ನೆರವು ನೀಡುವ ಮೊದಲ ರಾಜ್ಯ ಕರ್ನಾಟಕವಾಗಿದೆ. ಇದು ಭರವಸೆಯದಾಯಕ ನವೋದ್ಯಮಗಳ ಬಗ್ಗೆ ರಾಜ್ಯ ಸರ್ಕಾರ ತಳೆದಿರುವ ಪ್ರಗತಿಪರ ಮತ್ತು ಅನುಕೂಲಕರ ಧೋರಣೆಗೆ ನಿದರ್ಶನವಾಗಿದೆ ಎಂದು ಅವರು ತಿಳಿಸಿದರು. ಮೂರು ಹೊಸ ಉಪಕ್ರಮಗಳ ಘೋಷಣೆ: ಎಲೆವೇಟ್ 2025 ಕಾರ್ಯಕ್ರಮದಲ್ಲಿ, ಎಲೆಕ್ಟ್ರಾನಿಕ್ಸ್, ಐಟಿ ಮತ್ತು ಬಿಟಿ ಇಲಾಖೆಯು ರಾಜ್ಯದ ಸ್ಟಾರ್ಟ್ಅಪ್ ವ್ಯವಸ್ಥೆ ಬಲಪಡಿಸುವ, ಡೀಪ್ಟೆಕ್ ನಾವೀನ್ಯತೆಗೆ ವೇಗ ನೀಡುವ ಮತ್ತು ಬೆಂಗಳೂರಿನ ಆಚೆಗೆ ಉದ್ಯಮಶೀಲತೆ ವಿಸ್ತರಿಸುವ ಗುರಿ ಹೊಂದಿರುವ ಮೂರು ಹೊಸ ಉಪಕ್ರಮಗಳನ್ನು ಕಾರ್ಯಗತಗೊಳಿಸುವುದಾಗಿ ಘೋಷಿಸಲಾಯಿತು. ನಾವೀನ್ಯತೆ ಆಧಾರಿತ ಕೈಗಾರಿಕಾ ಪರಿವರ್ತನೆಯಲ್ಲಿ ಕರ್ನಾಟಕದ ನಾಯಕತ್ವವನ್ನು ಪುನಃ ದೃಢಪಡಿಸಲು ಎಲೆವೇಟ್ ನೆಕ್ಸ್ಟ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಇದಕ್ಕಾಗಿ 150 ಕೋಟಿ ರೂ. ನಿಗದಿಪಡಿಸಲಾಗಿದೆ. ಆಯ್ಕೆಯಾದ ಪ್ರತಿಯೊಂದು ಅರ್ಹ ನವೋದ್ಯಮವು 1 ಕೋಟಿ ರೂ. ನೆರವು ಪಡೆಯಲಿದೆ. ಕೃತಕ ಬುದ್ಧಿಮತ್ತೆ, ಮಷಿನ್ ಲರ್ನಿಂಗ್, ಐಒಟಿ, ಬ್ಲಾಕ್ಚೇನ್, ಎಆರ್/ವಿಆರ್, ರೋಬೊಟಿಕ್ಸ್, ಡ್ರೋನ್ ಮತ್ತಿತರ ಕ್ಷೇತ್ರಗಳಲ್ಲಿ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸುವ ಸ್ಟಾರ್ಟ್ಅಪ್ಗಳಿಗೆ ಎಲೆವೇಟ್ ನೆಕ್ಸ್ಟ್ ನೆರವಾಗಲಿದೆ. ಬೆಂಗಳೂರು ಆಚೆಗೆ ಪ್ರವರ್ಧಮಾನಕ್ಕೆ ಬರುತ್ತಿರುವ ಮೈಸೂರು, ಮಂಗಳೂರು ಮತ್ತು ಹುಬ್ಬಳ್ಳಿ-ಧಾರವಾಡ ಕೈಗಾರಿಕಾ ಸಮೂಹಗಳಲ್ಲಿ ನವೋದ್ಯಮಗಳ ಸ್ಥಾಪನೆ ಉತ್ತೇಜಿಸಲು ಆರಂಭಿಕ ಹಂತದ ಹಣಕಾಸು ನೆರವು ಒದಗಿಸುವ ಉದ್ದೇಶಕ್ಕೆ 75 ಕೋಟಿ ರೂ.ಮೊತ್ತದ ನಿಧಿ ಸ್ಥಾಪಿಸುವ ನಿರ್ಧಾರ ಪ್ರಕಟಿಸಲಾಗಿದೆ. ಸಮಾರಂಭದಲ್ಲಿ ಶಾಸಕ ರಿಝ್ವಾನ್ ಅರ್ಶದ್, ಎಲೆಕ್ಟ್ರಾನಿಕ್ಸ್, ಐಟಿ, ಬಿಟಿ ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಕಾರ್ಯದರ್ಶಿ ಡಾ.ಮಂಜುಳಾ ಎನ್., ಕಿಯೊನಿಕ್ಸ್ ಅಧ್ಯಕ್ಷ ಶರತ್ ಬಚ್ಚೇಗೌಡ ಮತ್ತು ಕರ್ನಾಟಕ ನಾವೀನ್ಯತೆ ಮತ್ತು ತಂತ್ರಜ್ಞಾನ ಸೊಸೈಟಿ (ಕಿಟ್ಸ್) ವ್ಯವಸ್ಥಾಪಕ ನಿರ್ದೇಶಕ ರಾಹುಲ್ ಶರಣಪ್ಪ ಸಂಕನೂರ ಉಪಸ್ಥಿತರಿದ್ದರು.
ಎಸ್ಐಆರ್ : ರಾಜ್ಯದಲ್ಲಿ ಶೇ.61ರಷ್ಟು ಮತದಾರರ ಪಟ್ಟಿಯ ಮ್ಯಾಪಿಂಗ್ ಕಾರ್ಯ ಪೂರ್ಣ
ಬೆಂಗಳೂರು : ರಾಜ್ಯದಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ(ಎಸ್ಐಆರ್)ಗೆ ಪೂರ್ವಭಾವಿಯಾಗಿ ಭಾರತೀಯ ಚುನಾವಣಾ ಆಯೋಗದ ನಿರ್ದೇಶನದಂತೆ ನಡೆಸುತ್ತಿರುವ ಮತದಾರರ ಪಟ್ಟಿಯ ಪರಿಶೀಲನೆ ಹಾಗೂ ಮ್ಯಾಪಿಂಗ್ ಕಾರ್ಯವು ಶೇ.61ರಷ್ಟು ಪೂರ್ಣಗೊಂಡಿದೆ. ಕರ್ನಾಟಕದಲ್ಲಿ 2002ರಲ್ಲಿ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ ಕಾರ್ಯ ನಡೆದಿತ್ತು. ಇದೀಗ 23 ವರ್ಷಗಳ ಬಳಿಕ ಪುನಃ ಎಸ್ಐಆರ್ ನಡೆಸಲು ಉದ್ದೇಶಿಸಲಾಗಿದೆ. 2002ರಲ್ಲಿ ರಾಜ್ಯದಲ್ಲಿ 3.40 ಕೋಟಿ ಮತದಾರರಿದ್ದರು. 2025ರ ಮತದಾರರ ಪಟ್ಟಿಯಂತೆ ಈಗ 5.57 ಕೋಟಿ ಮತದಾರರಿದ್ದಾರೆ. 2025ರ ಮತದಾರರ ಪಟ್ಟಿಯಲ್ಲಿ ಗುರುತಿಸಲಾದ ನಿಗದಿತ ವಯಸ್ಸು 40 ವರ್ಷ ಹೊಂದಿರುವ 1.92 ಕೋಟಿ ಮತದಾರರ ಮ್ಯಾಪಿಂಗ್ ಜ.15ರ ವೇಳೆಗೆ ಪೂರ್ಣಗೊಂಡಿದೆ. ಈ ತಿಂಗಳ ಅಂತ್ಯದೊಳಗೆ ಇನ್ನೂ ಕನಿಷ್ಠ ಒಂದು ಕೋಟಿ ಮತದಾರರ ಮ್ಯಾಪಿಂಗ್ ಪೂರ್ಣಗೊಳಿಸುವಂತೆ ಜಿಲ್ಲಾ ಚುನಾವಣಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ತಿಳಿದು ಬಂದಿದೆ. ನಿಗದಿತ ವಯಸ್ಸಿನ ಮತದಾರರ ಮ್ಯಾಪಿಂಗ್ ಪ್ರಕ್ರಿಯೆಯಲ್ಲಿ ಕೊಪ್ಪಳ(ಶೇ.75.1), ಚಿತ್ರದುರ್ಗ (ಶೇ.75.7), ಹಾವೇರಿ (ಶೇ.75.1), ತುಮಕೂರು (ಶೇ.76.4) ಮತ್ತು ವಿಜಯಪುರ (ಶೇ.70.8), ಕೊಡಗು(ಶೇ.70.48), ಚಾಮರಾಜನಗರ(ಶೇ.75.5), ಉಡುಪಿ(ಶೇ.66.5), ದಕ್ಷಿಣ ಕನ್ನಡ(ಶೇ.58.6), ಮೈಸೂರು(ಶೇ.64.3), ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯಲ್ಲಿರುವ ಕೇಂದ್ರ ವಲಯ-ಶೇ.27.47, ಉತ್ತರ ವಲಯ-ಶೇ.27.33 ಮತ್ತು ದಕ್ಷಿಣ ವಲಯ-ಶೇ.26.05ರಷ್ಟು ಪ್ರಗತಿ ಸಾಧಿಸಲಾಗಿದೆ ಎನ್ನಲಾಗಿದೆ. ರಾಜ್ಯಾದ್ಯಂತ ಇದುವರೆಗೆ 1.35 ಕೋಟಿ ‘ಪ್ರೊಜೆನಿ’(ಭವಿಷ್ಯದ ಮತದಾರರ ಮಾಹಿತಿ) ದಾಖಲೆಗಳ ಮ್ಯಾಪಿಂಗ್ ಪೂರ್ಣಗೊಂಡಿದೆ. ಬೆಳಗಾವಿ, ಬಾಗಲಕೋಟೆ, ತುಮಕೂರು ಮತ್ತು ವಿಜಯಪುರ ಜಿಲ್ಲೆಗಳಲ್ಲಿ ಈ ಪ್ರೊಜೆನಿ ಮಾಹಿತಿಯ ಸಂಗ್ರಹ ಉತ್ತಮವಾಗಿದ್ದರೆ, ಬೆಂಗಳೂರು ವಲಯಗಳಲ್ಲಿ ಮೂಲಮಟ್ಟದ ಪರಿಶೀಲನೆ ಪೂರ್ಣಗೊಳ್ಳದ ಕಾರಣ ಕಡಿಮೆ ಪ್ರಗತಿ ಕಂಡುಬಂದಿದೆ. ಎಸ್ಐಆರ್ ಸಿದ್ಧತೆಯ ಎರಡನೆ ಹಂತವಾಗಿ 2002ನೆ ಸಾಲಿನ ನಂತರ ಜನಿಸಿದ ಮತದಾರರ (ಪ್ರೊಜೆನಿ) ಮ್ಯಾಪಿಂಗ್ ನಡೆಯುತ್ತಿದೆ. ಕಟ್ಆಫ್ ವಯಸ್ಸು ತಲುಪಿದ ಮತದಾರರ ಜೊತೆಗೆ ಮುಂದಿನ ವರ್ಷಗಳಲ್ಲಿ ಮತದಾನ ಹಕ್ಕು ಪಡೆಯಲಿರುವ ಯುವಜನರ ಮಾಹಿತಿಯನ್ನೂ ಅಧಿಕಾರಿಗಳು ನವೀಕರಿಸುತ್ತಿದ್ದಾರೆ. ಮುಂದಿನ ಎರಡು ವಾರಗಳಲ್ಲಿ ಬಿಎಲ್ಒಗಳು ಮನೆಮನೆಗೆ ಭೇಟಿ ನೀಡಿ ಗುರುತು ಮತ್ತು ವಿಳಾಸ ಪರಿಶೀಲನೆ, ನಕಲಿ ಅಥವಾ ಸ್ಥಳಾಂತರಗೊಂಡ ದಾಖಲೆಗಳ ವಜಾ ಹಾಗೂ ಯಾವುದೇ ಅರ್ಹ ಮತದಾರ ಹೊರಗುಳಿಯದಂತೆ ಖಚಿತಪಡಿಸುವ ಕಾರ್ಯ ನಡೆಸಲಿದ್ದಾರೆ. ಅಂತಿಮವಾಗಿ ಮತದಾರರ ಪಟ್ಟಿಯನ್ನು ಪ್ರಕಟಿಸುವ ಮೊದಲು ಇನ್ನಷ್ಟು ವಿಚಾರಣೆ ಹಾಗೂ ಪರಿಶೀಲನೆ ಪ್ರಕ್ರಿಯೆಗಳು ನಡೆಯಲಿವೆ ಎಂದು ತಿಳಿದು ಬಂದಿದೆ.
ಇರಾನ್ ಅಶಾಂತಿಗೆ ಸಂಬಂಧಿಸಿದಂತೆ ಎರಡು ಉತ್ತಮ ಸಂಗತಿ ಹೇಳಿದ ಶಶಿ ತರೂರ್; ನೀಡಿದ ಸಲಹೆ ಇನ್ನೂ ಸೂಪರ್
ಇರಾನ್ ಪ್ರತಿಭಟನೆಗಳಿಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ಸಂಸದ ಶಶಿ ತರೂರ್, ಮಧ್ಯಪ್ರಾಚ್ಯ ರಾಷ್ಟ್ರದಲ್ಲಿ ಪ್ರತಿಭಟನೆಗಳ ಕಿಚ್ಚು ಕಡಿಮೆಯಾಗುತ್ತಿರುವುದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ. ಇರಾನ್ ಸರ್ಕಾರ 800ಕ್ಕೂ ಹೆಚ್ಚು ಪ್ರತಿಭಟನಾಕಾರರ ಗಲ್ಲುಶಿಕ್ಷೆಯನ್ನು ರದ್ದುಗೊಳಿಸಿರುವುದು ಮತ್ತು ಇರಾನ್ ಮೇಲೆ ಮಿಲಿಟರಿ ಕಾರ್ಯಾಚರಣೆಯ ಯೋಜನೆಯಿಂದ ಅಮೆರಿಕ ಹಿಂದೆ ಸರಿದಿರುವುದು ಉತ್ತಮ ಬೆಳವಣಿಗೆ ಎಂದು ಶಶಿ ತರೂರ್ ಅಭಿಪ್ರಾಯಪಟ್ಟಿದ್ದಾರೆ. ಆದಾಗ್ಯೂ, ಪ್ರತಿಭಟನೆಯನ್ನು ಕ್ರೂರವಾಗಿ ಹತ್ತಿಕ್ಕುತ್ತಿರುವ ಖಮೇನಿ ಆಡಳಿತದ ಮೇಲೆ ಅಂತಾರಾಷ್ಟ್ರೀಯ ಒತ್ತಡ ಹೆಚ್ಚಬೇಕಿದೆ ಎಂದು ಶಶಿ ತರೂರ್ ಸಲಹೆ ನೀಡಿದ್ದಾರೆ.
Suntikoppa | ಈಜಲು ತೆರಳಿದ್ದ ಇಬ್ಬರು ಪಿಯುಸಿ ವಿದ್ಯಾರ್ಥಿಗಳು ನೀರುಪಾಲು
ಮಡಿಕೇರಿ : ಹೊಳೆಯಲ್ಲಿ ಈಜಲು ತೆರಳಿದ್ದ ಇಬ್ಬರು ಪಿಯುಸಿ ವಿದ್ಯಾರ್ಥಿಗಳು ನೀರು ಪಾಲಾದ ಘಟನೆ ಸುಂಟಿಕೊಪ್ಪ ಸಮೀಪದ ಗರಗಂದೂರು ಮಲಿಕಾರ್ಜುನ ಕಾಲೋನಿಯ ಮಾದಾಪುರ ಹೊಳೆಯಲ್ಲಿ ಶನಿವಾರ ನಡೆದಿದೆ. ಸುಂಟಿಕೊಪ್ಪದ ಪಂಪ್ಹೌಸ್ ನಿವಾಸಿಗಳಾದ ಸುಂಟಿಕೊಪ್ಪ ಆಟೋಚಾಲಕರ ಮತ್ತು ಮಾಲೀಕರ ಸಂಘದ ಅಧ್ಯಕ್ಷ ಶರೀಫ್ ಅವರ ಪುತ್ರ ಮಹಮ್ಮದ್ ರಾಯಿಝ್ (16) ಹಾಗೂ ಸರದಾರ್ ಅವರ ಪುತ್ರ ಮುಹಮ್ಮದ್ ನಿಹಾಲ್ (16) ಮೃತರು. ಇವರಿಬ್ಬರು ಖಾಸಗಿ ಕಾಲೇಜ್ ನಲ್ಲಿ ಪ್ರಥಮ ಪಿಯುಸಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಾಗಿದ್ದಾರೆ. ಕಾಲೇಜು ಮುಗಿಸಿ ಮನೆಗೆ ತೆರಳುವ ಸಂದರ್ಭ ಮಾದಾಪುರ ಹೊಳೆಯಲ್ಲಿ ಈಜಲು ನೀರಿಗಿಳಿದಿದ್ದ ವಿದ್ಯಾರ್ಥಿಗಳು ಸುಳಿಯಲ್ಲಿ ಸಿಲುಕಿ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ. ಸುಂಟಿಕೊಪ್ಪ ಪೊಲೀಸ್ ಠಾಣಾಧಿಕಾರಿ ಮೋಹನ್ರಾಜ್ ಹಾಗೂ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸ್ಥಳೀಯ ಈಜು ತಜ್ಞರ ಸಹಾಯದಿಂದ ಮೃತದೇಹಗಳನ್ನು ಹೊಳೆಯಿಂದ ಹೊರತೆಗೆಯಲಾಗಿದೆ.
ಕಂಪ್ಲಿ | ಅಧಿಕಾರ ಶಾಶ್ವತವಲ್ಲ, ಜನರ ಪ್ರೀತಿಯೇ ಮುಖ್ಯ: ಶಾಸಕ ಗಣೇಶ್
ಕಂಪ್ಲಿ: ಕಂಪ್ಲಿಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ (BEO) ಕಚೇರಿಯ ಅವಶ್ಯಕತೆ ಇರುವುದನ್ನು ಮನಗಂಡು ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರೊಂದಿಗೆ ಸುದೀರ್ಘ ಚರ್ಚೆ ನಡೆಸಲಾಗಿದೆ. ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಶೀಘ್ರವೇ ಕಚೇರಿ ಮಂಜೂರು ಮಾಡುವ ಭರವಸೆ ನೀಡಿದ್ದಾರೆ ಎಂದು ಶಾಸಕ ಜೆ.ಎನ್. ಗಣೇಶ್ ಹೇಳಿದರು. ಪಟ್ಟಣದ ವೀರಶೈವ ಭವನದಲ್ಲಿ ಶುಕ್ರವಾರ ಶಿಕ್ಷಣ ಇಲಾಖೆ, ಕುರುಗೋಡು ಬಿಇಒ ಕಚೇರಿ ಹಾಗೂ ವಿವಿಧ ಶಿಕ್ಷಕರ ಸಂಘಟನೆಗಳ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ಶಿಕ್ಷಕರ ದಿನಾಚರಣೆ ಹಾಗೂ ಸಾವಿತ್ರಿಬಾಯಿ ಫುಲೆ ಅವರ ಜಯಂತ್ಯೋತ್ಸವ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಮೊದಲ ಬಾರಿಗೆ ಶಾಸಕನಾದಾಗ ಕ್ಷೇತ್ರದಲ್ಲಿ ಶಿಕ್ಷಣ ಇಲಾಖೆಗೆ ಸಂಬಂಧಿಸಿದ ಹಲವು ಸಮಸ್ಯೆಗಳಿದ್ದವು. ನಂತರದ ದಿನಗಳಲ್ಲಿ ಹೆಚ್ಚಿನ ಅನುದಾನ ಬಳಸಿಕೊಂಡು ಶೈಕ್ಷಣಿಕ ಬದಲಾವಣೆ ಹಾಗೂ ಮೂಲಭೂತ ಸೌಕರ್ಯ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ನಡೆಸಿದ್ದೇನೆ. ಶಿಕ್ಷಕರು ಹಾಗೂ ಸರ್ಕಾರಿ ನೌಕರರ ಭವನದ ಬೇಡಿಕೆಯನ್ನು ಆದಷ್ಟು ಬೇಗ ಈಡೇರಿಸಲಾಗುವುದು ಎಂದು ಅವರು ಆಶ್ವಾಸನೆ ನೀಡಿದರು. ಅಧಿಕಾರ ಎನ್ನುವುದು ಶಾಶ್ವತವಲ್ಲ, ಜನರೊಂದಿಗೆ ನಾವು ಗಳಿಸುವ ಪ್ರೀತಿ ಮತ್ತು ವಿಶ್ವಾಸ ಮಾತ್ರ ಕೊನೆಯವರೆಗೂ ಉಳಿಯುತ್ತದೆ ಎಂದು ಅವರು ಅಭಿಪ್ರಾಯಪಟ್ಟರು. ಇದೇ ಸಂದರ್ಭದಲ್ಲಿ ವಿವಿಧ ಸಾಧಕ ಶಿಕ್ಷಕರನ್ನು ಸನ್ಮಾನಿಸಿ ಗೌರವಿಸಲಾಯಿತು. ನಂತರ ನಿವೃತ್ತ ಶಿಕ್ಷಕರಾದ ವಿರೇಶ, ಎಲೆಗಾರ ಪಾರ್ವತಿ, ಶೀಲಾವತಿ, ಸರ್ವಮಂಗಳ, ರಾಘವೇಂದ್ರ, ಹುಲಿಕುಂಟಾಚಾರ್ ಹಾಗು ಇ. ಶಾಂತ ಗಡ್ಡಾದ್, ನಾಗವೇಣಿ, ಎನ್.ಲೋಕೇಶ, ಮರಿಸ್ವಾಮಿ, ಮುದುಕಪ್ಪ, ಬಸವನಗೌಡ, ವೆಂಕಟರಮಣ, ಗಾದಿಲಿಂಗಪ್ಪ, ಹೊಸಗೇರಪ್ಪ, ವೈ. ಎಂ. ಈರಮ್ಮ, ಸಂಗನಗೌಡ ಗೌಡರ್, ವಿರೇಶ, ಈರಮ್ಮ, ನರಸಿಂಹಲು, ಎಸ್.ಚಂದ್ರಪ್ಪ, ಶೃತಿಕುಮಾರಿ, ರಂಗಪ್ಪ, ಮಡಿವಾಳಪ್ಪ, ಎನ್. ಶಿವಕುಮಾರ, ಕೆ. ಮೌನೇಶ, ಎಸ್. ಭವ್ಯಶ್ರೀ, ಪ್ರಶಸ್ತಿ ಪುರಸ್ಕೃತರಾದ ಲಕ್ಷ್ಮಿಕಾಂತ ಬಣಕಾರ, ಸದ್ಯೋಜಾತಪ್ಪ, ಅನ್ನದಾನೇಶ್, ರೇಣುಕಾದೇವಿ, ಸುನೀತಾ ಕುಮಾರಿ, ಶ್ಯಾಮಲಾ ಪಿ. ಜೆ. ವಿರೇಶ ಕೆ., ಮೇಲಾರೆಡ್ಡಿ, ಜಬೀನಾ, ಬಿ. ಜಯಮ್ಮ, ಲಕ್ಕಪ್ಪ, ರಂಗಪ್ಪ ಕಟ್ಟಿಮನಿ, ಮಡಿವಾಳಪ್ಪ, ಶಾಬನ, ರೇಣುಕಾ ಆರ್. ಎಚ್, ಪರಶುರಾಮ, ಬಿ. ಸಾವಿತ್ರಿ, ಪಿ. ಎನ್. ರಾಜಾಭಕ್ಷಿ, ವಿರುಪಾಕ್ಷಪ್ಪ, ಶ್ರೀ ವಿಜಯ ಇವರಿಗೆ ನೆನಪಿನ ಕಾಣಿಕೆ ನೀಡಿ ಸನ್ಮಾನಿಸಿ ಗೌರವಿಸಿದರು. ಈ ಸಂದರ್ಭದಲ್ಲಿ ಬಿಇಒ ಸಿದ್ದಲಿಂಗಮೂರ್ತಿ, ಇಒ ಆರ್.ಕೆ.ಶ್ರೀಕುಮಾರ, ಎಡಿ ಮಲ್ಲನಗೌಡ ಕೆ.ಎಸ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಹನುಮಂತಪ್ಪ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಹೆಚ್.ದೊಡ್ಡಬಸಪ್ಪ, ಪ್ರಮುಖರಾದ ಪಿ.ನಾಗೇಶ್ವರರಾವ್, ಸಿ.ಆರ್.ಹನುಮಂತ, ಲಿಂಗಪ್ಪ, ಟಿ.ಎಂ.ಬಸವರಾಜ, ರೇವಣ್ಣ, ಮಂಜುನಾಥ, ಯುಗಾದಿ ಶಿವರಾಜ, ಗಾದಿಲಿಂಗಪ್ಪ, ಜಡೆಪ್ಪ, ಸುಗ್ಗೇನಹಳ್ಳಿ ರಮೇಶ, ಬಸವರಾಜ ಪಾಟೀಲ್, ಸುಜಾತ ಸೇರಿದಂತೆ ಸಿಆರ್ಪಿಗಳು, ಖಾಸಗಿ ಆಡಳಿತ ಮಂಡಳಿಯ ಮುಖ್ಯಸ್ಥರು ಶಿಕ್ಷಕರು ಸೇರಿದಂತೆ ಇತರರು ಉಪಸ್ಥಿತರಿದ್ದರು.
ಜೆಡಿಎಸ್ಗೆ ಇಬ್ಬರು ಶಾಸಕರು ಗುಡ್ ಬೈ, ಹೊಸ ಪಕ್ಷ ಸೇರ್ಪಡೆ! ದಳಪತಿಗಳಿಗೆ ಆಘಾತ ಉಂಟುಮಾಡಿದ ಕೇರಳ ಬೆಳವಣಿಗೆ
ಕೇರಳದಲ್ಲಿ ಜನತಾ ದಳ (ಜಾತ್ಯತೀತ) ಪಕ್ಷದ ರಾಜ್ಯ ಘಟಕವು ತನ್ನ ರಾಷ್ಟ್ರೀಯ ನಾಯಕತ್ವದೊಂದಿಗೆ ಸಂಬಂಧ ಕಡಿದುಕೊಂಡು, 'ಇಂಡಿಯನ್ ಸೋಷಿಯಲಿಸ್ಟ್ ಜನತಾ ದಳ' (ಐಎಸ್ಜೆಡಿ) ಎಂಬ ಹೊಸ ಪಕ್ಷದಲ್ಲಿ ವಿಲೀನಗೊಂಡಿದೆ. ಎಚ್.ಡಿ. ದೇವೇಗೌಡ ನೇತೃತ್ವದ ರಾಷ್ಟ್ರೀಯ ಜೆಡಿಎಸ್ ಬಿಜೆಪಿಯ ಎನ್ಡಿಎ ಒಕ್ಕೂಟಕ್ಕೆ ಸೇರ್ಪಡೆಗೊಂಡಿದ್ದನ್ನು ವಿರೋಧಿಸಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಕೊಚ್ಚಿಯಲ್ಲಿ ನಡೆದ ಸಮಾವೇಶದಲ್ಲಿ ಈ ಬಗ್ಗೆ ಅಧಿಕೃತ ನಿರ್ಣಯ ಕೈಗೊಳ್ಳಲಾಗಿದ್ದು, ಪಕ್ಷದ ಶಾಸಕರಾದ ಮ್ಯಾಥ್ಯೂ ಟಿ. ಥಾಮಸ್ ಮತ್ತು ಕೆ. ಕೃಷ್ಣನ್ಕುಟ್ಟಿ ಹೊಸ ಪಕ್ಷದ ಭಾಗವಾಗಿದ್ದಾರೆ.
ರಾಷ್ಟ್ರೀಯ ಆರೋಗ್ಯ ಅಭಿಯಾನದ ಗುತ್ತಿಗೆ ನೌಕರರು ಮತ್ತು ಆಶಾ ಕಾರ್ಯಕರ್ತೆಯರಿಗೆ ರಾಜ್ಯ ಸರ್ಕಾರದ ಮಹತ್ವದ ಘೋಷಣೆ! ಕಳೆದ ಎರಡು ತಿಂಗಳ ಬಾಕಿ ವೇತನ ಹಾಗೂ ಪ್ರೋತ್ಸಾಹಧನವನ್ನು ಬಿಡುಗಡೆ ಮಾಡಲು ಆದೇಶ ಹೊರಡಿಸಲಾಗಿದೆ. ಕೇಂದ್ರದಿಂದ 175.75 ಕೋಟಿ ರೂ. ಅನುದಾನ ಜಿಲ್ಲೆಗಳಿಗೆ ತಲುಪಿಸುವ ಪ್ರಕ್ರಿಯೆ ಆರಂಭಗೊಂಡಿದೆ. ಭವಿಷ್ಯದಲ್ಲಿ ಕೇಂದ್ರದ ಅನುದಾನ ವಿಳಂಬವಾದರೂ, ರಾಜ್ಯ ಸರ್ಕಾರವೇ ಸಮಯಕ್ಕೆ ಸರಿಯಾಗಿ ವೇತನ ಪಾವತಿಸುವ ಭರವಸೆ ನೀಡಿದೆ.

18 C