ಹೊಗೇನಕಲ್ ಫಾಲ್ಸ್ನಲ್ಲಿ ದುರಂತ: ನೀರುಪಾಲಾಗಿದ್ದ ವ್ಯಕ್ತಿಯ ಮೃತದೇಹ ಪತ್ತೆ
ಹನೂರು: ತಾಲೂಕಿನಲ್ಲಿ ಇರುವ ಹೊಗೇನಕಲ್ ಫಾಲ್ಸ್ ಬಳಿ ರವಿವಾರ ಸಂಜೆ ಈಜಲು ನೀರಿಗೆ ಇಳಿದು ನೀರುಪಾಲಾಗಿದ್ದ ವ್ಯಕ್ತಿಯ ಮೃತದೇಹ ಸೋಮವಾರ ಬೆಳಗ್ಗೆ ಪತ್ತೆಯಾಗಿದೆ. ಮೃತರನ್ನು ಲಿಂಗರಾಜು (42) ಎಂದು ಗುರುತಿಸಲಾಗಿದ್ದು, ಅವರು ನೀರಿನ ಸುಳಿಗೆ ಸಿಲುಕಿ ಕಾಣೆಯಾಗಿದ್ದರು. ಯಳಂದೂರು ತಾಲೂಕು ಗುಂಬಳ್ಳಿ ಗ್ರಾಮದ ನಿವಾಸಿಯಾಗಿದ್ದ ಅವರು ಕುಟುಂಬದೊಂದಿಗೆ ಪ್ರವಾಸಕ್ಕೆ ಬಂದಿದ್ದರು. ನುರಿತ ಈಜುಗಾರರ ತಂಡ ನಿರಂತರವಾಗಿ ಶೋಧ ಕಾರ್ಯಾಚರಣೆ ನಡೆಸಿ, ಸೋಮವಾರ ಬೆಳಗ್ಗೆ ಮೃತದೇಹವನ್ನು ಪತ್ತೆಹಚ್ಚಿದರು. ಹನೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ, ಕುಟುಂಬಸ್ಥರಿಗೆ ಮೃತದೇಹವನ್ನು ಹಸ್ತಾಂತರಿಸಲಾಯಿತು.
ಐಪಿಎಲ್ ಕ್ರಿಕೆಟ್ ನೋಡಲು ಶಾಸಕರಿಗೆ 3 ಉಚಿತ ಟಿಕೆಟ್! ಕೆಎಸ್ ಸಿಎಗೆ ಸೂಚನೆ ಕೊಟ್ಟ ಡಿಕೆಶಿ
ಐಪಿಎಲ್ ಕ್ರಿಕೆಟ್ ಪಂದ್ಯಾಟ ವೀಕ್ಷಿಸಲು ಶಾಸಕರಿಗೆ ಮೂರು ಟಿಕೆಟ್ ನೀಡಲು ತೀರ್ಮಾನ ಮಾಡಲಾಗಿದೆ. ಇತರ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಾಟಗಳಿಗೆ 2 ಟಿಕೆಟ್ ಉಚಿತವಾಗಿ ನೀಡಿದರೆ, ಎರಡು ಟಿಕೆಟ್ ಹಣ ಕೊಟ್ಟು ಖರೀದಿ ಮಾಡಬೇಕು. ಯಾರಿಗೆ ಟಿಕೆಟ್ ಬೇಕು ಅವರು ಸ್ಪೀಕರ್ ಯು.ಟಿ ಖಾದರ್ ಅವರಿಗೆ ಪತ್ರವನ್ನು ಬರೆಯಬೇಕು. ಸ್ಪೀಕರ್ ಕಚೇರಿಯಿಂದ ಟಿಕೆಟ್ ಕೊಂಡುಕೊಳ್ಳಲು ಆದ್ಯತೆಯ ಮೇಲೆ ಅವಕಾಶ ಮಾಡಿಕೊಡುತ್ತೇವೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಅವರು ತಿಳಿಸಿದ್ದಾರೆ. ಮತ್ತಷ್ಟು ಮಾಹಿತಿ ಇಲ್ಲಿದೆ.
IPL 2026- ವಾಂಖೆಡೆ ಕ್ರೀಡಾಂಗಣದ ಗ್ಯಾಲರಿಯಲ್ಲಿ ಪ್ರಪೋಸ್ ಮಾಡುವಾಗ ಕಳೆದುಹೋದ ಉಂಗುರ; ಒಂದು ಕ್ಷಣ ಗೊಂದಲ
KKR Vs MI Match- ವಾಂಖೆಡೆ ಕ್ರೀಡಾಂಗಣದಲ್ಲಿ ಮುಂಬೈ ಇಂಡಿಯನ್ಸ್ ತಂಡ ಭಾನುವಾರದಂದು ಕೋಲ್ಕತಾ ನೈಟ್ ರೈಡರ್ಸ್ ಅನ್ನು 6 ವಿಕೆಟ್ ಗಳಿಂದ ಗೆದ್ದು ಬೀಗಿತಷ್ಟೇ. ಆದರೆ ಪಂದ್ಯ ನಡೆಯುತ್ತಿದ್ದಾಗ ಗ್ಯಾಲರಿಯಲ್ಲಿದ್ದ ಎಲ್ಲ ಪ್ರೇಕ್ಷಕರ ಗಮನ ಜೋಡಿಯೊಂದರ ಮೇಲಿತ್ತು. ಎಲ್ಲರೂ ನೋಡುನೋಡುತ್ತಿದ್ದಂತೆಯೇ ಕೆಕೆಆರ್ ತಂಡವನ್ನು ಪ್ರೀತಿಸುವ ಹುಡುಗಿಗೆ ಎಂಐ ಬೆಂಬಲಿಗನೊಬ್ಬ ಪ್ರಪೋಸ್ ಮಾಡಿಯೇ ಬಿಟ್ಟ. ಈ ಸಂದರ್ಭದಲ್ಲಿ ರಿಂಗ್ ಕಳೆದುಹೋಗಿ ಸಣ್ಣ ಗೊಂದಲವೇರ್ಪಟ್ಟಿತ್ತು. ಆದರೆ ಕ್ಷಣಾರ್ಧದಲ್ಲೇ ಎಲ್ಲವೂ ಸರಿಯಾಗಿ ಸುಖಾಂತವಾಯಿತು.
ಬಿಹಾರ ವಿಧಾನ ಪರಿಷತ್ಗೆ ರಾಜೀನಾಮೆ ನೀಡಿದ ನಿತೀಶ್ ಕುಮಾರ್; ಎಲ್ಲಿಯವರೆಗೆ ಇರಲಿದೆ ಸಿಎಂ ಸ್ಥಾನದ ಪವರ್?
ಬಿಹಾರ ರಾಜಕೀಯದಲ್ಲಿ ಸುಶಾಶನ ಬಾಬು ಎಂದೇ ಜನಪ್ರಿಯರಾದ ನಿತೀಶ್ ಕುಮಾರ್, ರಾಜ್ಯ ರಾಜಕಾರಣದಿಂದ ದೂರ ಸರಿಯುವ ಮೂಲಕ ಒಂದು ಯುಗವನ್ನು ಅಂತ್ಯಗೊಳಿಸಿದ್ದಾರೆ. ಹೌದು, ನಿತೀಶ್ ಕುಮಾರ್ ಅವರು ಇಂದು (ಮಾ.30-ಸೋಮವಾರ) ಬಿಹಾರ ವಿಧಾನ ಪರಿಷತ್ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ನಿತೀಶ್ ಇತ್ತೀಚಿಗೆ ನಡೆದ ರಾಜ್ಯಸಭೆ ಚುನಾವಣೆಯಲ್ಲಿ ಜಯಗಳಿಸಿದ್ದು, ಈ ಹಿನ್ನೆಲೆಯಲ್ಲಿ ಬಿಹಾರ ಎಂಎಲ್ಸಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಹಾಗಿದ್ದರೆ ಮುಂದಿನ ಬಿಹಾರ ಮುಖ್ಯಮಂತ್ರಿ ಯಾರಾಗಲಿದ್ದಾರೆ? ಇಲ್ಲಿದೆ ನೋಡಿ ಹೆಚ್ಚಿನ ಮಾಹಿತಿ.
ಬೇಸಿಗೆಯಲ್ಲಿ ತಣ್ಣೀರಿನ ಸ್ನಾನ ಮಾಡುವ ಮೊದಲು ತಿಳಿದುಕೊಳ್ಳಬೇಕಾದ ವಿಷಯಗಳು
ಬೇಸಿಗೆಯ ಬಿಸಿಲಿನ ತಾಪಮಾನ ಹೆಚ್ಚಾಗುತ್ತಿಂತೆ ಅನೇಕರು ತಣ್ಣಿರೀನಲ್ಲಿ ಸ್ನಾನ ಮಾಡುವುದನ್ನು ಹೆಚ್ಚು ಆಯ್ಕೆ ಮಾಡುತ್ತಿದ್ದರೆ. ಆದರೆ ತಣ್ಣೀರಿನ ಸ್ನಾನ ನಿಜವಾಗಿಯೂ ಆರೋಗ್ಯಕ್ಕರವೇ ಅಥವಾ ಬಿಸಿನೀರಿನ ಸ್ನಾನವೇ ಉತ್ತಮವೇ? ಎಂಬ ಗೊಂದಲ ಹಲವರಲ್ಲಿದೆ. ತಜ್ಞರ ಪ್ರಕಾರ ತಣ್ಣೀರಿನಲ್ಲಿ ಸ್ನಾನ ಮಾಡುವುದರಿಂದ ಆರೋಗ್ಯಕ್ಕೆ ಹಲವು ಪ್ರಯೋಜನಗಳಿವೆ. ಇದು ದೇಹದ ಉಷ್ಣತೆಯನ್ನು ಕಡಿಮೆ ಮಾಡಿ ದೇಹದಲ್ಲಿ ಯಾವಾಗಲೂ ತಾಜಾತನ ಇರುವಂತೆ ಮಾಡುತ್ತದೆ.
ಬೆಂಗಳೂರು ವಿಶ್ವವಿದ್ಯಾಲಯದಿಂದ ನಂದಕುಮಾರ್ ಅವರಿಗೆ ಪಿಎಚ್ಡಿ ಪದವಿ
ಬೀದರ್ : ಭಾಲ್ಕಿ ತಾಲೂಕಿನ ರಾಚಪ್ಪ ಗೌಡಗಾಂವ್ ಗ್ರಾಮದ ನಂದಕುಮಾರ್ ಅವರಿಗೆ ಬೆಂಗಳೂರು ವಿಶ್ವವಿದ್ಯಾಲಯದ ಸಮಾಜಶಾಸ್ತ್ರ ವಿಭಾಗದಲ್ಲಿ ಪಿಎಚ್ಡಿ ಪದವಿ ಲಭಿಸಿದೆ. ನಂದಕುಮಾರ್ ಅವರು ಬೆಂಗಳೂರು ವಿಶ್ವವಿದ್ಯಾಲಯದ ಸಮಾಜಶಾಸ್ತ್ರ ವಿಭಾಗದಲ್ಲಿ ಡಾ.ವೆಂಕಟರಮಣಪ್ಪ ಅವರ ಮಾರ್ಗದರ್ಶನದಲ್ಲಿ 'ಪ್ರಾದೇಶಿಕ ಅಸಮಾನತೆಯನ್ನು ಹೋಗಲಾಡಿಸುವಲ್ಲಿ 371(ಜೆ) ಕಾಯ್ದೆಯ ಪಾತ್ರ ಕುರಿತು : ಒಂದು ಸಮಾಜಶಾಸ್ತ್ರೀಯ ಅಧ್ಯಯನ (ವಿಶೇಷವಾಗಿ) ಕಲಬುರ್ಗಿ ಜಿಲ್ಲೆಯನ್ನು ಅನುಲಕ್ಷಿಸಿ' ಎಂಬ ಪ್ರಬಂಧವನ್ನು ಮಂಡಿಸಿದ್ದರು. ಈ ಪ್ರಬಂಧಕ್ಕೆ ನಂದಕುಮಾರ್ ಅವರನ್ನು ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ, ಸಿಂಡಿಕೇಟ್ನ ಅಧಿಕಾರ ಮತ್ತು ಪರೀಕ್ಷಾ ಮಂಡಳಿಯ ಶಿಫಾರಸ್ಸಿನ ಮೇರೆಗೆ ಪಿಎಚ್ಡಿ ಪದವಿ ನೀಡಲಾಗಿದೆ.
ಡಾಲರ್ ಎದುರು ದಾಖಲೆಯ 95 ರೂ.ಗೆ ಕುಸಿದ ರೂಪಾಯಿ ಮೌಲ್ಯ
► RBI ಕ್ರಮಗಳ ಹೊರತಾಗಿಯೂ ಸ್ಥಿರವಾಗಿ ನಿಲ್ಲದ ರೂಪಾಯಿ ಮಾರುಕಟ್ಟೆ►ರೂಪಾಯಿ ಮೌಲ್ಯ ಕುಸಿಯಲು ಕಾರಣವೇನು?
ಪತ್ನಿ ಇಲ್ಲದಾಗ ಪ್ರೇಯಸಿ ಮನೆಗೆ ಕರೆಸಿ ಕೊಂದ; ದೇಹವನ್ನ ತುಂಡು ಮಾಡಿ ಫ್ರಿಡ್ಜ್ನಲ್ಲಿಟ್ಟ! ವಿಶಾಖಪಟ್ಟಣದಲ್ಲಿ ಘಟನೆ
ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿ ಬೆಚ್ಚಿಬೀಳಿಸುವ ಘಟನೆ ನಡೆದಿದೆ. ನೌಕಾಪಡೆಯ ಉದ್ಯೋಗಿಯು ಪ್ರೇಯಸಿಯನ್ನು ಕೊಂದು ಶವವನ್ನು ತುಂಡು ಮಾಡಿ ಫ್ರಿಡ್ಜ್ನಲ್ಲಿ ಇಟ್ಟಿದ್ದಾನೆ. ಆ ಬಳಿಕ ತಾನೇ ಪೊಲೀಸ್ ಠಾಣೆಗೆ ತೆರಳಿ ತಪ್ಪೊಪ್ಪಿಕೊಂಡಿದ್ದಾನೆ. ದೇಹದ ಇನ್ನೂ ಹಲವು ಭಾಗಗಳು ಕಾಣೆಯಾಗಿದ್ದು, ಅವುಗಳ ಪತ್ತೆಗೆ ಪೊಲೀಸರು ವಿಶೇಷ ತಂಡ ರಚನೆ ಮಾಡಿದ್ದಾರೆ.
ಇರಾನ್ ಮೇಲೆ ಇಸ್ರೇಲ್ ಭೀಕರ ಪ್ರಹಾರ: 2 ದಿನದಲ್ಲಿ 40ಕ್ಕೂ ಹೆಚ್ಚು ಮಿಲಿಟರಿ ಕೇಂದ್ರ-ಕೈಗಾರಿಕೆಗಳು ಧ್ವಂಸ!
ಇರಾನ್ ಮೇಲೆ ಇಸ್ರೇಲ್ ನಿರಂತರ ದಾಳಿ ಮಾಡುತ್ತಿದ್ದು, ಕಳೆದ 2 ದಿನಗಳಲ್ಲಿ ಇರಾನ್ ಮಿಲಿಟರಿಗೆ ಸಂಬಂಧಿಸಿದ 40 ಕ್ಕೂ ಹೆಚ್ಚು ಮಿಲಿಟರಿ ಕೇಂದ್ರಗಳು ಹಾಗೂ ಕೈಗಾರಿಕೆಗಳನ್ನು ಗುರಿಯಾಗಿಸಿ ದಾಳಿ ನಡೆಸಿರುವುದಾಗಿ ಇಸ್ರೇಲ್ ಹೇಳಿಕೊಂಡಿದೆ. ಇನ್ನು, ಇತ್ತ ಇರಾನ್ ಸಹ ದಾಳಿ ನಡೆಸುತ್ತಿದ್ದು, ಇದರಲ್ಲಿ ಹಲವಾರು ಸೈನಿಕರು ಸೇರಿದಂತೆ 6ಸಾವಿರಕ್ಕೂ ಅಧಿಕ ಇಸ್ರೇಲಿ ನಾಗರಿಕರು ಗಾಯಗೊಂಡಿದ್ದಾರೆ ಎಂದು ತಿಳಿಸಿದೆ.
ಜನಗಣತಿ: ಆನ್ ಲೈನ್ ನಲ್ಲಿ ಮನೆ ಲಿಂಕ್ ಮಾಡಲು ಮಂಗಳೂರು ತಹಶೀಲ್ದಾರ್ ಕರೆ
ಮಂಗಳೂರು: ಭಾರತದ ರಿಜಿಸ್ಟ್ರಾರ್ ಮತ್ತು ಜನಗಣತಿ ಆಯುಕ್ತರ ಪರವಾಗಿ ಜನಗಣತಿ ಕಾಯ್ದೆ-1948ರ ಪ್ರಕಾರ ಮಂಗಳೂರು ತಾಲೂಕು ವ್ಯಾಪ್ತಿಯಲ್ಲಿ ಭಾರತದ ಮೊದಲ ಡಿಜಿಟಲ್ ಜನಗಣತಿ ಕಾರ್ಯವನ್ನು ಎರಡು ಹಂತಗಳಲ್ಲಿ ನಡೆಸಿ ಗಣತಿ ಮಾಹಿತಿಯನ್ನು ಸಂಗ್ರಹಿಸುವ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಈ ಪೈಕಿ ಸಾರ್ವಜನಿಕರ ಸಹಭಾಗಿತ್ವದಲ್ಲಿ ಸ್ವಯಂ ಮನೆ ಗಣತಿ ಕಾರ್ಯವನ್ನು ಮಾಡಲು ಅವಕಾಶ ನೀಡಲಾಗಿದೆ ಎಂದು ಮಂಗಳೂರು ತಾಲೂಕು ತಹಶೀಲ್ದಾರ್ ತಿಳಿಸಿದ್ದಾರೆ. ಅದರಂತೆ ಕಾಯ್ದೆಯ ಪ್ರಕಾರ ತಮ್ಮ ಮಾಹಿತಿ ಹೆಸರು ಮತ್ತು ಗುರುತುಗಳ ಗೌಪ್ಯವಾಗಿ ಇರಿಸಲಾಗುತ್ತದೆ. ಹಾಗೂ ಯಾವುದೇ ತೆರಿಗೆ ಅಥವಾ ಪರಿಶೋಧನಾ ಉದ್ದೇಶಕ್ಕೆ ಸದರಿ ದತ್ತಾಂಶವನ್ನು ಬಳಸಿಕೊಳ್ಳುವುದಿಲ್ಲ.ಇದು ಸುರಕ್ಷಿತವಾಗಿ ಇರಿಸಲಾಗುತ್ತದೆ ಎಂದವರು ಪ್ರಕಟನೆಯಲ್ಲಿ ಹೇಳಿದ್ದಾರೆ. ಈ ನಿಟ್ಟಿನಲ್ಲಿ ಎಪ್ರಿಲ್ 1ರಿಂದ 15ರವರಗೆ ನಿರ್ದೇಶನಾಲಯದಿಂದ ನೀಡಿರುವ ಸರಳವಾದ ಹಂತಗಳನ್ನು ಅನುಸರಿಸುವುದರ ಮೂಲಕ ಆನ್ ಲೈನ್ ನಲ್ಲಿ 15-20 ನಿಮಿಷಗಳಲ್ಲಿ ತಮ್ಮ ಮನೆಯ ಸ್ವಯಂ ಗಣತಿಯನ್ನು ಮಾಡಿಕೊಂಡು ಏಕೀಕೃತ ಸ್ವಯಂ ಗಣತಿ ಗುರುತಿನ ಸಂಖ್ಯೆಯನ್ನು (SELF ENUMERATION ID) ಪಡೆಯಬಹುದಾಗಿದೆ. ಹಾಗೂ ಪರಿಶೀಲನೆಗೆ ಬರುವ ಗಣತಿದಾರರಿಗೆ ಈ ಐಡಿಯನ್ನು ಒದಗಿಸಿ ಮನೆಗಣತಿ ಕಾರ್ಯವನ್ನು ಪೂರ್ಣಗೊಳಿಸಿಕೊಳ್ಳಬಹುದು ಎಂದವರು ವಿವರಿಸಿದ್ದಾರೆ. ತಮ್ಮ ಸ್ವಯಂ ಮನೆ ಗಣತಿಯ ಕಾರ್ಯದ ನಿಖರತೆ ಮತ್ತು ಸಂಪೂರ್ಣತೆಯನ್ನು ಖಚಿತಪಡಿಸಿಕೊಳ್ಳಲು ಗಣತಿದಾರರು ಮತ್ತು ಮೇಲ್ವಿಚಾರಕರ ಪರಿಶೀಲನೆಗೆ ಒಳಪಟ್ಟಿರುತ್ತದೆ. ಈ ಮೇರೆಗೆ ವಿಕಸಿತ ಭಾರತ @ 2047 ಅಡಿಪಾಯಕ್ಕೆ ಸಹಕರಿಸಲು ಮಂಗಳೂರು ತಾಲೂಕಿನ ಎಲ್ಲಾ ಸಾರ್ವಜನಿಕರು ತಾವೇ ಆನ್ ಲೈನ್ ಲಿಂಕ್ https://se.census.gov.in ಮೂಲಕ ತಮ್ಮ ಮನೆಯ ಗಣತಿಯನ್ನು ಮಾಡಿಕೊಳ್ಳುವಂತೆ ಮಂಗಳೂರು ತಹಶೀಲ್ದಾರ್ ಕರೆ ನೀಡಿದ್ದಾರೆ.
ಅಸಲಿಗೆ ಕೇರಳ ಬಿಜೆಪಿಯೇ ’ಎ ಟೀಂ’ : ಪ್ರಧಾನಿ ಮೋದಿ ಹೇಳಿಕೆ ಹಿಂದಿನ ರಾಜಕೀಯ ಲೆಕ್ಕಾಚಾರವೇನು?
Kerala Assembly Election : ವಿಧಾನಸಭಾ ಚುನಾವಣಾ ಹೊಸ್ತಿಲಲ್ಲಿರುವ ಕೇರಳದಲ್ಲಿ ಪ್ರಚಾರದ ಕಾರ್ಯಗಳು ಭರದಿಂದ ಸಾಗುತ್ತಿದೆ. ಒಂದು ದಿನದ ಕೇರಳ ಪ್ರವಾಸದಲ್ಲಿದ್ದ ಪ್ರಧಾನಮಂತ್ರಿ ನರೇಂದ್ರ ಮೋದಿ, ಯುಡಿಎಫ್ ಮತ್ತು LDFಗಳು , ಬಿಜೆಪಿಯನ್ನು ಎಟೀಂ ಎನ್ನುವುದನ್ನು ಒಪ್ಪಿಕೊಂಡಿವೆ ಎಂದು ಹೇಳಿದ್ದಾರೆ. ಪ್ರಧಾನಿಯವರ ಈ ಹೇಳಿಕೆ, ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
Visakhapatnam | ಪ್ರಿಯತಮೆಯ ಹತ್ಯೆಗೈದು ಮೃತದೇಹವನ್ನು ತುಂಡುತುಂಡು ಮಾಡಿ ಫ್ರಿಜ್ ನಲ್ಲಿಟ್ಟ ನೌಕಾಪಡೆಯ ಸಿಬ್ಬಂದಿ!
ವಿಶಾಖಪಟ್ಟಣಂ: 35 ವರ್ಷದ ನಾಕಾಪಡೆ ಸಿಬ್ಬಂದಿಯೊಬ್ಬ 29 ವರ್ಷದ ಮಹಿಳೆಯನ್ನು ಹತ್ಯೆಗೈದು, ಆಕೆಯ ದೇಹವನ್ನು ತುಂಡುತುಂಡು ಮಾಡಿ, ಕೆಲವು ಭಾಗಗಳನ್ನು ಫ್ರಿಜ್ ನಲ್ಲಿಟ್ಟ ಆಘಾತಕಾರಿ ಘಟನೆ ವಿಶಾಖಪಟ್ಟಣಂ ನಗರದ ಗಜುವಾಕು ಪೊಲೀಸ್ ಠಾಣೆ ವ್ಯಾಪ್ತಿಯ ಎಲ್.ವಿ.ನಗರದಲ್ಲಿ ನಡೆದಿದೆ. ಮೃತ ಮಹಿಳೆಯನ್ನು ಮೌನಿಕಾ ಎಂದು ಗುರುತಿಸಲಾಗಿದೆ. ಆರೋಪಿಯು ಪೊಲೀಸರಿಗೆ ಶರಣಾದ ಬಳಿಕ ಈ ಘಟನೆ ಬೆಳಕಿಗೆ ಬಂದಿದೆ. ಆರೋಪಿಯನ್ನು ರವೀಂದ್ರ ಎಂದು ಗುರುತಿಸಲಾಗಿದ್ದು, ವಿಝಿಯಂಗರಂ ಜಿಲ್ಲೆಯ ರಜಮ್ ಗ್ರಾಮದ ನಿವಾಸಿಯಾಗಿರುವ ಆರೋಪಿ ನೌಕಾಪಡೆಯ ಸಿಬ್ಬಂದಿ ಎಂದು ವರದಿಯಾಗಿದೆ. ವಿವಾಹಿತನಾಗಿದ್ದ ರವೀಂದ್ರ, ವಿಶಾಖಪಟ್ಟಣಂ ನಗರದ ನಿವಾಸಿಯಾದ ಮೌನಿಕಾಳೊಂದಿಗೆ ವಿವಾಹೇತರ ಸಂಬಂಧ ಬೆಳೆಸಿಕೊಂಡಿದ್ದನೆನ್ನಲಾಗಿದೆ. ಕೆಲ ವಾರಗಳ ಹಿಂದೆ ರವೀಂದ್ರನ ಪತ್ನಿ ವಿಝಿಯಂಗರಂನಲ್ಲಿರುವ ತಮ್ಮ ತವರುಮನೆಗೆ ತೆರಳಿದ್ದು, ಇದರಿಂದ ರವೀಂದ್ರ ಮನೆಯಲ್ಲಿ ಏಕಾಂಗಿಯಾಗಿ ಉಳಿದುಕೊಂಡಿದ್ದಾನೆ ಎಂದು ವರದಿಯಾಗಿದೆ. ರವಿವಾರ (ಮಾರ್ಚ್ 29) ರವೀಂದ್ರನಿಂದ ದೂರವಾಣಿ ಕರೆ ಸ್ವೀಕರಿಸಿದ ಬಳಿಕ ಮೌನಿಕಾ ಆತನ ಮನೆಗೆ ತೆರಳಿದ್ದಾರೆ. ಹಲವು ಗಂಟೆಗಳ ಅವರಿಬ್ಬರೂ ಮನೆಯಲ್ಲೇ ಉಳಿದಿದ್ದಾರೆ. ಆದರೆ, ಸಂಜೆ ಹೊತ್ತಿಗೆ ಅವರಿಬ್ಬರ ನಡುವೆ ಜಗಳವಾಗಿದೆ ಎನ್ನಲಾಗಿದೆ. ಸಿಟ್ಟಿಗೆದ್ದಿರುವ ರವೀಂದ್ರ ಆಕೆಗೆ ಚಾಕುವಿನಿಂದ ಇರಿದು ಹತ್ಯೆಗೈದಿದ್ದು, ಆಕೆಯ ದೇಹವನ್ನು ತುಂಡುತುಂಡಾಗಿ ಕತ್ತರಿಸಿದ್ದಾನೆ ಎಂದು ಆರೋಪಿಸಲಾಗಿದೆ. ದೇಹದ ಕೆಲವು ಭಾಗಗಳನ್ನು ಚೀಲಕ್ಕೆ ತುಂಬಿಕೊಂಡಿರುವ ಆತ, ನಿರ್ಜನ ಪ್ರದೇಶಕ್ಕೆ ತೆರಳಿ ಅವನ್ನು ನಾಶಗೊಳಿಸಿದ್ದಾನೆ. ಉಳಿದ ದೇಹದ ಭಾಗಗಳನ್ನು ಫ್ರಿಜ್ ನಲ್ಲಿರಿಸಿದ್ದಾನೆ. ಬಳಿಕ, ಪೊಲೀಸ್ ಠಾಣೆಗೆ ತೆರಳಿರುವ ರವೀಂದ್ರ, ತನ್ನ ಅಪರಾಧವನ್ನು ಒಪ್ಪಿಕೊಂಡಿದ್ದು, ಪೊಲೀಸರಿಗೆ ಶರಣಾಗಿದ್ದಾನೆ. ನಂತರ, ಪೊಲೀಸ್ ಅಧಿಕಾರಿಗಳು ಆತನ ನಿವಾಸದಿಂದ ಮೃತದೇಹದ ಕೆಲವು ಭಾಗಗಳನ್ನು ವಶಪಡಿಸಿಕೊಂಡಿದ್ದಾರೆ. ಆದರೆ, ರುಂಡ ಮಾತ್ರ ಪತ್ತೆಯಾಗಿಲ್ಲ. ರವೀಂದ್ರ ಅದನ್ನು ಬೇರೆಲ್ಲೋ ವಿಲೇವಾರಿ ಮಾಡಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ರುಂಡ ಹಾಗೂ ದೇಹದ ಉಳಿದ ಭಾಗಗಳನ್ನು ಪತ್ತೆ ಹಚ್ಚಲು ಪೊಲೀಸರು ವಿಶೇಷ ತಂಡವೊಂದನ್ನು ರಚಿಸಿದ್ದಾರೆ.
Hardik Pandya Girl Friend Mahieka Sharma- ಇತ್ತೀಚೆಗಷ್ಟೇ ಪುತ್ರ ಅಗಸ್ತ್ಯನ ಹುಟ್ಟುಹಬ್ಬಕ್ಕೆ 4 ಕೋಟಿ ರೂ ಮುಖಬೆಲೆಯ ದುಬಾರಿ ಕಾರನ್ನು ಸರ್ ಪ್ರೈಸ್ ಗಿಫ್ಟ್ ಕೊಟ್ಟ ಹಾರ್ದಿಕ್ ಪಾಂಡ್ಯ ಇದೀಗ ಮತ್ತೆ ಕಾರು ಖರೀದಿಸಿ ಸುದ್ದಿಯಲ್ಲಿದ್ದಾರೆ. ತಮ್ಮ ಹಾಲಿ ಪ್ರೇಯಸಿ ಮಹೈಕಾ ಶರ್ಮಾ ಅವರಿಗೆ ₹1.7 ಕೋಟಿ ಮೌಲ್ಯದ ಮರ್ಸಿಡಿಸ್ ಬೆನ್ಝ್ ವಿ ಕ್ಲಾಸ್ ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ. ಅತ್ಯಾಧುನಿಕ ಸೌಲಭ್ಯಗಳುಳ್ಳ ಈ ಐಷಾರಾಮಿ ಕಾರು ಭಾರತದಲ್ಲಿ ಬಿಡುಗಡೆಯಾಗುತ್ತಿದ್ದಂತೆಯೇ ಹಾರ್ದಿಕ್ ಅವರು ಖರೀದಿಸಿದ್ದಾರೆ.
ಕೆ ಎಸ್ ಆರ್ ಟಿ ಸಿ, ಬಿಎಂಟಿಸಿಗೂ ತಟ್ಟಲಿದ್ಯಾ ಅಮೆರಿಕಾ- ಇರಾನ್ ಯುದ್ಧದ ಎಫೆಕ್ಟ್! ಸದ್ಯದ ಪರಿಸ್ಥಿತಿ ಹೇಗಿದೆ
ಅಮೆರಿಕಾ- ಇಸ್ರೇಲ್ ಹಾಗೂ ಇರಾನ್ ನಡುವೆ ಯುದ್ದ ನಡೆಯುತ್ತಿದೆ. ಸಂಘರ್ಷ ತೀವ್ರ ಸ್ವರೂಪವನ್ನು ಪಡೆದುಕೊಳ್ಳುತ್ತಿದೆ. ಈ ನಡುವೆ ಗಲ್ಪ್ ರಾಷ್ಟ್ರಗಳಲ್ಲೂ ಬಿಕ್ಕಟ್ಟಿನ ವಾತಾವರಣ ಇದೆ. ಯುದ್ದ ಇದೇ ರೀತಿಯಲ್ಲಿ ಮುಂದುವರಿದರೆ ಪೆಟ್ರೋಲ್, ಡೀಸೆಲ್ ದರ ಏರಿಕೆ ಹಾಗೂ ಅಭಾವ ಸೃಷ್ಟಿಯಾಗುವ ಸಾಧ್ಯತೆ ಅಲ್ಲಗಳೆಯುವ ಹಾಗಿಲ್ಲ. ಇದು ಸಾರಿಗೆ ಇಲಾಖೆಯ ಬಸ್ ಗಳ ಮೇಲೂ ಪರಿಣಾಮ ಬೀರಲಿದೆ. ಸದ್ಯಕ್ಕೆ ರಾಜ್ಯದಲ್ಲಿ ಅಂತಹ ಬಿಕ್ಕಟ್ಟು ಸೃಷ್ಟಿಯಾಗದೆ ಇದ್ದರೂ ಮುಂದಿನ ದಿನಗಳಲ್ಲಿ ಪರಿಸ್ಥಿತಿ ಬದಲಾವಣೆ ಆಗುವ ಸಾಧ್ಯತೆ ಅಲ್ಲಗಳೆಯುವ ಹಾಗಿಲ್ಲ.
ಬಹುಭಾಷಾ ನಟ ಪ್ರಕಾಶ್ ರಾಜ್ ಗೆ ಮಾತೃವಿಯೋಗ
ಹೈದರಾಬಾದ್/ಬೆಂಗಳೂರು, ಮಾ.30: ಚಿಂತಕ, ಬಹುಭಾಷಾ ನಟ ಪ್ರಕಾಶ್ ರಾಜ್ ಅವರ ತಾಯಿ ಸ್ವರ್ಣಲತಾ (85) ನಿಧನರಾಗಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಸ್ವರ್ಣಲತಾ ರವಿವಾರ ಹೈದಾರಬಾದ್ ನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಅವರ ಪಾರ್ಥಿವ ಶರೀರವನ್ನು ಬೆಂಗಳೂರಿಗೆ ಕರೆತರಲಾಗುವುದು. ಇಂದು ರಾತ್ರಿ ಅಂತ್ಯಕ್ರಿಯೆ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. ಸ್ವರ್ಣಲತಾ ಮೂಲತಃ ಗದಗದವರು. ಈ ಹಿಂದೆ ನಟ ಅವರ ತಾಯಿಯ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿದ್ದರು. ನನ್ನ ತಾಯಿ ಗದಗದವರು. ಅವರು ಅನಾಥೆ ಆಗಿದ್ದರು. ನನ್ನ ಅಜ್ಜಿ ತೀರಿಕೊಂಡಾಗ ಅಮ್ಮನಿಗೆ 12 ವರ್ಷ ವಯಸ್ಸು. ಬೆಳಗಾವಿಯ ಅನಾಥಾಶ್ರಾಮದಲ್ಲಿ ಬೆಳೆದರು. ನರ್ಸಿಂಗ್ ತರಬೇತಿ ಪಡೆದು ಬೆಂಗಳೂರಿಗೆ ಬಂದರು ಎಂದಿದ್ದರು. ನಮ್ಮ ಅಪ್ಪ ಮಂಗಳೂರಿನವರು. ಅವರು ಬೆಂಗಳೂರಿಗೆ ಬಂದರು. ಇಬ್ಬರೂ ಮದುವೆ ಆದರು. ನಮ್ಮ ಅಪ್ಪನಿಗೆ ಅವರದ್ದೇ ಆದ ನಂಬಿಕೆ ಇದೆ, ತಾಯಿಗೆ ಅವರದ್ದೇ ಆದ ದೇವರ ನಂಬಿಕೆ ಇದೆ. ನನ್ನ ನಂಬಿಕೆ ಬೇರೆಯದೇ ಇದೆ ಎಂದು ಪ್ರಕಾಶ್ ರಾಜ್ ಉಲ್ಲೇಖಿಸಿದ್ದರು. ಸ್ವರ್ಣಲತಾರ ನಿಧನಕ್ಕೆ ಚಲನಚಿತ್ರದ ಅನೇಕ ಗಣ್ಯರು ಮತ್ತು ರಾಜಕಾರಣಿಗಳು ಸಂತಾಪ ಸೂಚಿಸಿದ್ದಾರೆ. ಆಂಧ್ರ ಪ್ರದೇಶದ ಉಪ ಮುಖ್ಯಮಂತ್ರಿ ಮತ್ತು ಖ್ಯಾತ ನಟ ಪವನ್ ಕಲ್ಯಾಣ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ತಮ್ಮ ಅಧಿಕೃತ ಕಚೇರಿಯ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ಸಂದೇಶ ಹಂಚಿಕೊಂಡಿರುವ ಪವನ್ ಕಲ್ಯಾಣ್, ಖ್ಯಾತ ನಟ ಪ್ರಕಾಶ್ ರಾಜ್ ಅವರ ತಾಯಿ ಸುವರ್ಣಲತಾ ನಿಧನರಾದ ಸುದ್ದಿ ಕೇಳಿ ನನಗೆ ತುಂಬಾ ಅತೀವ ದುಃಖವಾಗಿದೆ. ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ ಎಂದು ನಾನು ಸರ್ವಶಕ್ತನಲ್ಲಿ ಪ್ರಾರ್ಥಿಸುತ್ತೇನೆ. ತಾಯಿಯನ್ನು ಕಳೆದುಕೊಂಡು ಶೋಕದಲ್ಲಿರುವ ಪ್ರಕಾಶ್ ರಾಜ್ ಗಾರು ಮತ್ತು ಅವರ ಕುಟುಂಬದ ಎಲ್ಲ ಸದಸ್ಯರಿಗೆ ನನ್ನ ಆಳವಾದ ಸಂತಾಪಗಳನ್ನು ವ್ಯಕ್ತಪಡಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ.
ಗದಗ: ತಿರುವಿನಲ್ಲಿ ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ಜಮೀನಿಗೆ ಉರುಳಿದ ಗ್ಯಾಸ್ ಸಿಲಿಂಡರ್ ಲಾರಿ
ಗದಗದ ರೋಣ ಪಟ್ಟಣದ ಹೊರವಲಯದಲ್ಲಿ ಭಾರತ್ ಗ್ಯಾಸ್ ಸಿಲಿಂಡರ್ ತುಂಬಿದ್ದ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಹುಬ್ಬಳ್ಳಿಯಿಂದ ಕುಷ್ಟಗಿಗೆ ತೆರಳುತ್ತಿದ್ದ ಈ ಲಾರಿ, ತಿರುವಿನಲ್ಲಿ ಮತ್ತೊಂದು ವಾಹನವನ್ನು ಓವರ್ಟೇಕ್ ಮಾಡಲು ಪ್ರಯತ್ನಿಸಿದಾಗ ಈ ಅವಘಡ ಸಂಭವಿಸಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಅಥವಾ ಹಾನಿ ಸಂಭವಿಸಿಲ್ಲ.
ಭದ್ರಾವತಿ | ಸೇತುವೆಯಿಂದ ಉರುಳಿಬಿದ್ದ ಬಸ್: ಹಲವರಿಗೆ ಗಾಯ
ಶಿವಮೊಗ್ಗ: ದಾವಣಗೆರೆಯಿಂದ ಭದ್ರಾವತಿಗೆ ಬರುತ್ತಿದ್ದ ಖಾಸಗಿ ಬಸ್ಸೊಂದು ಸೇತುವೆಯಿಂದ ಉರುಳಿಬಿದ್ದ ಘಟನೆ ಭದ್ರಾವತಿ ತಾಲೂಕಿನ ವೀರಾಪುರ ಸಮೀಪದ ಕಾಗೆಹಳ್ಳ ಎಂಬಲ್ಲಿ ಸೋಮವಾರ ನಡೆದಿದೆ. ಘಟನೆಯಲ್ಲಿ ಅನೇಕ ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ. ದಾವಣಗೆರೆಯಿಂದ ಹೊರಟಿದ್ದ ಬಸ್ ಚನ್ನಗಿರಿ ದಾಟಿ ಕಾಗೇಹಳ್ಳ ಬಳಿ ಬರುತ್ತಿದ್ದಂತೆ ನಿಯಂತ್ರಣ ತಪ್ಪಿ ಸೇತುವೆಯಿಂದ ಕೆಳಗೆ ಬಿದ್ದಿದೆ. ಈ ಸಂದರ್ಭ ಬಸ್ನಲ್ಲಿ 35 ಮಂದಿ ಪ್ರಯಾಣಿಕರಿದ್ದು, ಹಲವರು ಗಾಯಗೊಂಡಿದ್ದಾರೆ. ಈ ಪೈಕಿ ಇಬ್ಬರ ಕಾಲು ಮುರಿದಿದ್ದರೆ, ಮೂರ್ನಾಲ್ಕು ಮಂದಿಗೆ ತೀವ್ರತರದ ಗಾಯಗಳಾಗಿವೆ. ಬಸ್ ಚಾಲಕನಿಗೂ ತೀವ್ರ ಗಾಯವಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಗ್ರಾಮಸ್ಥರು ಬಸ್ನಲ್ಲಿದ್ದ ಪ್ರಯಾಣಿಕರನ್ನು ರಕ್ಷಿಸಿದ್ದಾರೆ. ಗಾಯಾಳುಗಳನ್ನು ಮೆಗ್ಗಾನ್ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
IRGC ನೌಕಾಪಡೆ ಕಮಾಂಡರ್ ಅಲಿರೆಝಾ ತಂಗ್ಸಿರಿ ಮೃತಪಟ್ಟಿದ್ದಾರೆ; ದೃಢಪಡಿಸಿದ ಇರಾನ್
ತೆಹ್ರಾನ್: ಇರಾನ್ನ ಇಸ್ಲಾಮಿಕ್ ರೆವೊಲ್ಯುಷನರಿ ಗಾರ್ಡ್ ಕಾಪ್ರ್ಸ್ (IRGC) ನೌಕಾಪಡೆಯ ಕಮಾಂಡರ್ ಅಲಿರೆಝಾ ತಂಗ್ಸಿರಿ ಅವರು ಮೃತಪಟ್ಟಿರುವುದನ್ನು ಇರಾನ್ ಅಧಿಕೃತವಾಗಿ ದೃಢಪಡಿಸಿದೆ ಎಂದು aljazeera.com ವರದಿ ಮಾಡಿದೆ IRGC ಬಿಡುಗಡೆ ಮಾಡಿದ ಹೇಳಿಕೆಯನ್ನು ಉಲ್ಲೇಖಿಸಿದ IRNA ಸುದ್ದಿ ಸಂಸ್ಥೆ, “ಗಾಯಗಳ ತೀವ್ರತೆಯಿಂದ ತಂಗ್ಸಿರಿ ಮೃತಪಟ್ಟಿದ್ದಾರೆ” ಎಂದು ತಿಳಿಸಿದೆ. ಇದಕ್ಕೂ ಮುನ್ನ, ಕಳೆದ ವಾರ ಇಸ್ರೇಲ್ ನ ರಕ್ಷಣಾ ಸಚಿವ ಇಸ್ರೇಲ್ ಕಾಟ್ಜ್ ಪ್ರತಿಕ್ರಿಯಿಸಿ, ಇಸ್ರೇಲ್ ಸೇನೆ ನಡೆಸಿದ ನಿಖರ ಮತ್ತು ಮಾರಕ ಕಾರ್ಯಾಚರಣೆಯಲ್ಲಿ ತಂಗ್ಸಿರಿ ಸೇರಿದಂತೆ ಹಲವು ಉನ್ನತ ಅಧಿಕಾರಿಗಳು ಹತ್ಯೆಯಾಗಿದ್ದಾರೆ ಎಂದು ಹೇಳಿದ್ದರು.
ಬೆಂಗಳೂರು ಬಿಸಿನೆಸ್ ಕಾರಿಡಾರ್ಗೆ BDA ಟೆಂಡರ್ ಆಹ್ವಾನ; ಮೊದಲ ಹಂತ 20 KM 8 ಪಥಗಳು; ಎಲ್ಲಿಂದ ಎಲ್ಲಿಗೆ ಸಂಪರ್ಕ?
ಬೆಂಗಳೂರಿನ ಸಂಚಾರ ದಟ್ಟಣೆ ತಗ್ಗಿಸುವ ನಿಟ್ಟಿನಲ್ಲಿ ನಿರ್ಮಾಣವಾಗುತ್ತಿರುವ ಬೆಂಗಳೂರು ಬಿಸಿನೆಸ್ ಕಾರಿಡಾರ್ಗೆ ಕೊನೆಗೂ ಬಿಡಿಎ ಟೆಂಡರ್ ಆಹ್ವಾನಿಸಿದೆ. ಪ್ಯಾಕೇಜ್ 1 ರಲ್ಲಿ 20 ಕಿ.ಮೀ ರಸ್ತೆ ನಿರ್ಮಾಣವಾಗಲಿದ್ದು, 3,348 ಕೋಟಿ ರೂ. ಮೊತ್ತದ ಬೃಹತ್ ಯೋಜನೆ ಹಾಕಿಕೊಳ್ಳಲಾಗಿದೆ. ರಸ್ತೆ ನಿರ್ಮಾಣಕ್ಕೆ 3 ವರ್ಷ ಗಡುವ ನೀಡಲಾಗಿದೆ. ರಸ್ತೆ ನಿರ್ಮಾಣ ಟೆಂಡರ್ ಪಡೆದ ಕಂಪನಿಗೆ 10 ವರ್ಷ ನಿರ್ವಹಣೆ ಮಾಡಬೇಕಿದೆ.
ʼಲಿವ್-ಇನ್ʼ ಜೋಡಿಗಳಿಗೆ ವಿವಾಹಿತ ಸ್ಥಾನಮಾನ; 2027 ಜನಗಣತಿಯಲ್ಲಿ ಹೊಸ ನಿಯಮ
ಹೊಸದಿಲ್ಲಿ: 2027ರ ಜನಗಣತಿಯಲ್ಲಿ ಮಹತ್ವದ ಬದಲಾವಣೆ ಮಾಡಲಾಗಿದೆ. ತಮ್ಮ ಸಂಬಂಧವನ್ನು ‘ಸ್ಥಿರ’ವೆಂದು ಪರಿಗಣಿಸುವ ಲಿವ್-ಇನ್ ಜೋಡಿಗಳನ್ನು ವಿವಾಹಿತ ದಂಪತಿಗಳೆಂದು ಪರಿಗಣಿಸಲಾಗುತ್ತದೆ ಎಂದು ಕೇಂದ್ರ ಸರಕಾರ ತಿಳಿಸಿದೆ. ಜನಗಣತಿ ವೆಬ್ಸೈಟ್ ನ FAQ ವಿಭಾಗದಲ್ಲಿ ಈ ಕುರಿತು ಸ್ಪಷ್ಟನೆ ನೀಡಲಾಗಿದೆ. “ಲಿವ್-ಇನ್ ಸಂಬಂಧದಲ್ಲಿರುವ ದಂಪತಿಗಳನ್ನು ವಿವಾಹಿತರೆಂದು ಪರಿಗಣಿಸಲಾಗುತ್ತದೆಯೇ?” ಎಂಬ ಪ್ರಶ್ನೆಗೆ, “ಅವರು ತಮ್ಮ ಸಂಬಂಧವನ್ನು ಸ್ಥಿರ ಎಂದು ಪರಿಗಣಿಸಿದರೆ, ಅವರನ್ನು ವಿವಾಹಿತ ದಂಪತಿಗಳೆಂದು ಪರಿಗಣಿಸಬೇಕು” ಎಂದು ಹೇಳಲಾಗಿದೆ. 2027ರ ಜನಗಣತಿಯನ್ನು ಎರಡು ಹಂತಗಳಲ್ಲಿ ನಡೆಸಲಾಗುತ್ತದೆ. ಮೊದಲ ಹಂತದಲ್ಲಿ ಮನೆ ಪಟ್ಟಿ ಮತ್ತು ವಸತಿ ಜನಗಣತಿ ಕಾರ್ಯಾಚರಣೆ ನಡೆಯಲಿದೆ. ಆಯಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ನಿರ್ಧಾರ ಪ್ರಕಾರ, ಎಪ್ರಿಲ್ ನಿಂದ ಸೆಪ್ಟೆಂಬರ್ 2026ರ ನಡುವೆ 30 ದಿನಗಳ ಕಾಲ ಮನೆ-ಮನೆಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಲಾಗುತ್ತದೆ. ಈ ಹಂತದಲ್ಲಿ ವಸತಿ ಪರಿಸ್ಥಿತಿ, ಮನೆಯ ವಿವರಗಳು, ಕುಡಿಯುವ ನೀರು, ಶೌಚಾಲಯ, ವಿದ್ಯುತ್, ಅಡುಗೆಗೆ ಬಳಸುವ ಇಂಧನ, ಇಂಟರ್ನೆಟ್ ಸೌಲಭ್ಯಗಳ ಲಭ್ಯತೆ ಕುರಿತು ಮಾಹಿತಿ ಸಂಗ್ರಹಿಸಲಾಗುತ್ತದೆ. ಜೊತೆಗೆ, ರೇಡಿಯೋ, ಟಿವಿ, ಕಂಪ್ಯೂಟರ್, ದ್ವಿಚಕ್ರ ಮತ್ತು ನಾಲ್ಕುಚಕ್ರ ವಾಹನಗಳಂತಹ ಸ್ವತ್ತುಗಳ ವಿವರಗಳನ್ನೂ ದಾಖಲಿಸಲಾಗುತ್ತದೆ. ಎರಡನೇ ಹಂತದಲ್ಲಿ ಫೆಬ್ರವರಿ 2027ರಿಂದ ದೇಶವ್ಯಾಪಿ ಜನಸಂಖ್ಯಾ ಎಣಿಕೆ ಆರಂಭವಾಗಲಿದೆ. ಆದರೆ ಲಡಾಖ್ UT, ಜಮ್ಮು-ಕಾಶ್ಮೀರದ ಹಿಮ ಪ್ರದೇಶಗಳು ಹಾಗೂ ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡ ರಾಜ್ಯಗಳಲ್ಲಿ ಸೆಪ್ಟೆಂಬರ್ 2026ರಲ್ಲಿಯೇ ಈ ಪ್ರಕ್ರಿಯೆ ನಡೆಯಲಿದೆ. ಈ ಹಂತದಲ್ಲಿ ವ್ಯಕ್ತಿಗಳ ಸಂಖ್ಯೆ, ಹೆಸರು, ವಯಸ್ಸು, ಲಿಂಗ, ವೈವಾಹಿಕ ಸ್ಥಿತಿ, ಜಾತಿ, ಧರ್ಮ, ಶಿಕ್ಷಣ, ಭಾಷೆ, ಅಂಗವೈಕಲ್ಯ, ವಲಸೆ, ಉದ್ಯೋಗ ಹಾಗೂ ವಿವಾಹಿತ ಮಹಿಳೆಯರ ಸಂತಾನೋತ್ಪತ್ತಿಗೆ ಸಂಬಂಧಿತ ವಿವರಗಳನ್ನು ಸಂಗ್ರಹಿಸಲಾಗುತ್ತದೆ. ಈ ಬಾರಿ ಜನರಿಗೆ ಸ್ವಯಂ-ಗಣತಿ (Self Enumeration) ವ್ಯವಸ್ಥೆಯನ್ನೂ ಪರಿಚಯಿಸಲಾಗಿದೆ. ನಾಗರಿಕರು ವೆಬ್ ಪೋರ್ಟಲ್ ಮೂಲಕ ತಮ್ಮ ಮಾಹಿತಿಯನ್ನು ಸ್ವತಃ ಭರ್ತಿ ಮಾಡಬಹುದಾಗಿದೆ. ನಂತರ ಗಣತಿದಾರರು ಮನೆಗೆ ಭೇಟಿ ನೀಡಿ SE ID ಸಂಗ್ರಹಿಸಿ ಮಾಹಿತಿಯನ್ನು ಪರಿಶೀಲಿಸಲಿದ್ದಾರೆ. ಮನೆ-ಮನೆ ಪಟ್ಟಿ ಕಾರ್ಯಾಚರಣೆ ಆರಂಭವಾಗುವ ಮೊದಲು 15 ದಿನಗಳ ಕಾಲ ಈ ಪೋರ್ಟಲ್ ತೆರೆದಿರುತ್ತದೆ. ಜನಗಣತಿ FAQ ಪ್ರಕಾರ, ಸಾಮಾನ್ಯ ಮನೆಗಳಿಗೆ ಮಾತ್ರ ಸ್ವಯಂ-ಗಣತಿ ಅವಕಾಶವಿದೆ. 2011ರ ಜನಗಣತಿಯ ವ್ಯಾಖ್ಯಾನದಂತೆ, ಒಟ್ಟಿಗೆ ವಾಸಿಸಿ ಒಂದೇ ಅಡುಗೆಮನೆಯಿಂದ ಊಟ ಮಾಡುವವರ ಗುಂಪನ್ನು ‘ಸಾಮಾನ್ಯ ಮನೆ’ ಎಂದು ಪರಿಗಣಿಸಲಾಗುತ್ತದೆ. ಸದಸ್ಯರು ಸಂಬಂಧಿತ ಅಥವಾ ಸಂಬಂಧವಿಲ್ಲದವರಾಗಿರಬಹುದು. ಆದರೆ ಒಂದೇ ಸ್ಥಳದಲ್ಲಿ ವಾಸಿಸುತ್ತಿದ್ದರೂ ಪ್ರತ್ಯೇಕ ಅಡುಗೆ ವ್ಯವಸ್ಥೆ ಹೊಂದಿರುವವರು ಪ್ರತ್ಯೇಕ ಮನೆಗಳೆಂದು ಪರಿಗಣಿಸಲಾಗುತ್ತದೆ.
ಚಾಮರಾಜನಗರ: ಐದು ಸರಕಾರಿ ಶಾಲೆಗಳ ಎಸ್ಡಿಎಂಸಿಗೆ ಒಂದು ಲಕ್ಷ ರೂ. ಬಹುಮಾನ
ಚಾಮರಾಜನಗರ, ಮಾ.29: ಅಂತರ್ರಾಜ್ಯ ಗಡಿ ಚಾಮರಾಜನಗರ ಜಿಲ್ಲೆಯಲ್ಲಿರುವ ಸರಕಾರಿ ಶಾಲೆಯಗಳಲ್ಲಿ ಪೈಕಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ 5 ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳಿಗೆ (ಎಸ್ಡಿಎಂಸಿ) 1 ಲಕ್ಷ ರೂ. ನಗದು ಬಹುಮಾನ ಒಲಿದು ಬಂದಿದೆ. ಚಾಮರಾಜನಗರ ಜಿಲ್ಲೆಯಲ್ಲಿ ಸರಕಾರಿ ಶಾಲೆಗಳಲ್ಲಿ ಎಸ್ಡಿಎಂಸಿಗಳು ಶಾಲೆಯ ಮೇಲ್ವಿಚಾರಣೆ ಮತ್ತು ಪಾಲಕರ ಸಹಭಾಗಿತ್ವದ ಮೂಲಕ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಿವೆ. ಹೀಗಾಗಿ, ಶಿಕ್ಷಣ ಇಲಾಖೆ ಉತ್ತಮವಾಗಿ ಕಾರ್ಯನಿರ್ವಹಿಸುವ ಎಸ್ಡಿಎಂಸಿಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ವಿದ್ಯಾವಾಹಿನಿ ಪೋರ್ಟಲ್ನ ಸಮೀಕ್ಷೆ ನಡೆಸಿದೆ. ಇದರಲ್ಲಿ ಆಯ್ಕೆ ಮಾಡಿದ ಜಿಲ್ಲೆಯ 5 ಶಾಲೆಗಳಿಗೆ 2025-26ನೇ ಸಾಲಿನ ಉತ್ತಮ ಎಸ್ಡಿಎಂಸಿಗಳು ಎಂದು ಗುರುತಿಸಿ ತಲಾ 1 ಲಕ್ಷ ರೂ. ಅನುದಾನವನ್ನು ಬಿಡುಗಡೆ ಮಾಡಿದೆ. ಉತ್ತಮ ಎಸ್ಡಿಎಂಸಿಗಳಾಗಿ ಗುರುತಿಸಿಕೊಂಡಿರುವ ಚಾಮರಾಜನಗರ ಜಿಲ್ಲೆಯ 5 ತಾಲೂಕುಗಳ ಎಸ್ಡಿಎಂಸಿಗಳಲ್ಲಿ ಚಾಮರಾಜನಗರದ ಮಲ್ಲಯ್ಯನಪುರದ ಅದರ್ಶ ವಿದ್ಯಾಲಯ, ಗುಂಡ್ಲುಪೇಟೆ ತಾಲೂಕಿನ ಭೀಮನಬೀಡು ಸರಕಾರಿ ಪ್ರೌಢ ಶಾಲೆ, ಯಳಂದೂರು ತಾಲೂಕಿನ ಮದ್ದೂರಿನ ಸರಕಾರಿ ಪ್ರೌಢಶಾಲೆ, ಕೊಳ್ಳೆಗಾಲದ ಮುಡಿಗುಂಡದ ಆದರ್ಶ ವಿದ್ಯಾಲಯ, ಹನೂರು ತಾಲೂಕಿನ ರಾಮಾಪುರದ ಸರಕಾರಿ ಪ್ರೌಢಶಾಲೆ (ಬಾಲಕರು) ಆಯ್ಕೆಯಾಗಿವೆ. ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲದ ಮುಡಿಗುಂಡ ಬಳಿ ಇರುವ ಆದರ್ಶ ಶಾಲೆಯ ಎಸ್ಡಿಎಂಸಿ ತಂಡ ಶೈಕ್ಷಣಿಕ ಅಭ್ಯುದಯಕ್ಕೆ ತುಂಬಾ ಸಹಕಾರ ನೀಡುತ್ತಿದೆ. ಇದರ ಜತೆಗೆ ಶಾಲೆಯ ಮೂಲ ಸೌಕರ್ಯ ಅಭಿವೃದ್ಧಿಗೂ ಹೆಗಲು ನೀಡುತ್ತಿದೆ. ಇದರಿಂದಾಗಿ ಮಕ್ಕಳಿಗೆ ಒಳ್ಳೆಯ ಕಲಿಕಾ ವಾತಾವಣ ಸೃಷ್ಟಿಯಾಗಿದೆ. ಉತ್ತಮ ಎಸ್ಡಿಎಂಸಿ ಪ್ರಶಸ್ತಿ ಬಂದಿರುವುದು ನಮಗೆಲ್ಲಾ ಸಂತಸ ತಂದಿದೆ. -ಆರ್.ಪ್ರಿಯದರ್ಶಿನಿ, ಮುಖ್ಯ ಶಿಕ್ಷಕಿ, ಆದರ್ಶ ವಿದ್ಯಾಲಯ, ಕೊಳ್ಳೇಗಾಲ ಉತ್ತಮ ಎಸ್ ಡಿ ಎಂ ಸಿಗಳಿರುವ ಐದು ಶಾಲೆಗಳಿಗೆ ಸಿಕ್ಕಿರುವ ಅನುದಾನದಲ್ಲಿ ಶಾಲೆಯ ಶೈಕ್ಷಣಿಕ ಚಟುವಟಿಕೆಗಳಿಗೆ ಹಾಗೂ ಮೂಲ ಸೌಕರ್ಯಗಳಾದ ಪ್ರಯೋಗಾಲಯ, ಇಕೋ ಕ್ಲಬ್ ಚಟುವಟಿಕೆ, ಕಲಿಕಾ ಮೇಳಗಳು, ಉದ್ಯೋಗ ಮೇಳ, ಇಂಟರ್ನೆಟ್ ಸೌಲಭ್ಯ, ಯುಪಿಎಸ್, ಸಿಸಿಟಿವಿ ಕ್ಯಾಮರಾ ಮತ್ತು ಮಕ್ಕಳ ಸೃಜನಶೀಲತೆಯನ್ನು ಹೆಚ್ಚಿಸುವಂತಹ ಚಟುವಟಿಕೆಗಳಿಗೆ ಬಳಸಿಕೊಳ್ಳಬಹುದು. ಅದಕ್ಕಾಗಿ ಎಸ್ಡಿಎಂಸಿಗಳ ಸಭೆ ನಡೆಸಿ ನಿರ್ಣಯ ಕೈಗೊಂಡು ಕ್ರಿಯಾ ಯೋಜನೆಯನ್ನು ಸಿದ್ಧಪಡಿಸಬೇಕು. ನಂತರ ಆಯಾ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಯಿಂದ ಅನುಮೋದನೆ ಪಡೆದು ನಿಯಮಾನುಸಾರ ಅನುದಾನ ಬಳಕೆ ಮಾಡಲು ಸಮಗ್ರ ಶಿಕ್ಷಣ ಕರ್ನಾಟಕ ಜಿಲ್ಲಾ ಯೋಜನಾ ಸಮನ್ವಯಾಧಿಕಾರಿ ಉಪ ನಿರ್ದೇಶಕರು ಆದೇಶ ಹೊರಡಿಸಿದ್ದಾರೆ. ಮಕ್ಕಳ ಶೈಕ್ಷಣಿಕ ಪ್ರಗತಿಗೆ ಎಸ್ಡಿಎಂಸಿ ತಂಡದವರು ಬದ್ಧರಾಗಿದ್ದೇವೆ. ಈ ನಿಟ್ಟಿನಲ್ಲಿ ಎಲ್ಲ ಸದಸ್ಯರ ಕೊಡುಗೆ ಅಪಾರವಾಗಿದೆ. ಅಮೂಲ್ಯವಾದ ಸಮಯ ಮತ್ತು ಸ್ವಂತ ಹಣ ಖರ್ಚು ಮಾಡುತ್ತಿದ್ದಾರೆ, ಶಿಕ್ಷಕ ವರ್ಗ ಮತ್ತು ಎಸ್ಡಿಎಂಸಿ ಪರಿಶ್ರಮದಿಂದ ಉತ್ತಮ ಎಸ್ ಡಿಎಂಸಿಯಾಗಿ ಆಯ್ಕೆಯಾಗಿದೆ. -ಗಾಳಿಪುರ ಮಹೇಶ್, ಎಸ್ಡಿಎಂಸಿ ಸದಸ್ಯ, ಆದರ್ಶ ವಿದ್ಯಾಲಯ, ಚಾಮರಾಜನಗರ
ಇಸ್ರೇಲ್ನ ಗುಪ್ತಚರ ವಿಭಾಗ ಮೊಸಾದ್ನ ಹೆಸರು ಕೇಳದವರು ಬಹುಶಃ ಈ ಜಗತ್ತಿನಲ್ಲಿ ಯಾರಿಲ್ಲ. ಆದರೆ ಮೊಸಾದ್ನ ನೆಟ್ವರ್ಕ್ ಸಿಸ್ಟಮ್ ಬಗ್ಗೆ ಕೆಲವರಿಗೆ ಮಾತ್ರ ಗೊತ್ತು. ಪ್ರಸ್ತುತ ಇರಾನ್ ಜೊತೆಗೆ ಯುದ್ಧದಲ್ಲಿ ನಿರತವಾಗಿರುವ ಇಸ್ರೇಲ್, ಶತ್ರು ರಾಷ್ಟ್ರದ ಉನ್ನತ ನಾಯಕತ್ವವನ್ನು ಒಂದೊಂದಾಗಿ ಮುಗಿಸುತ್ತಿದೆ. ಆಯತೊಲ್ಲಾ ಅಲಿ ಖಮೇನಿ ಅವರಿಂದ ಹಿಡಿದು, ಐಆರ್ಜಿಸಿ ನೌಕಾಪಡೆ ಮುಖ್ಯಸ್ಥ ಅಲಿರೆಜಾ ತಂಗ್ಸಿರಿ ಅವರ ಹತ್ಯೆಯಲ್ಲಿ, ಇಸ್ರೇಲ್ನ ಗುಪ್ತಚರ ವಿಭಾಗ ಕೆಲಸ ಮಾಡಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಆದರೆ ಇರಾನ್ ಒಳಗೆ ಇಸ್ರೇಲ್ನ ಗುಪ್ತಚರ ಪಡೆ ಹೇಗೆ ಕೆಲಸ ಮಾಡುತ್ತಿದೆ? ಬನ್ನಿ ನೋಡೋಣ.
ಪಶ್ಚಿಮ ಏಷ್ಯಾದ ಯುದ್ಧದ ಪರಿಣಾಮ ಮತ್ತೆ ಕುಸಿದ ಷೇರುಗಳು
ಕಚ್ಚಾ ತೈಲ ಬೆಲೆಗಳು ಏರಿಕೆಯಲ್ಲೇ ಇದ್ದ ಪರಿಣಾಮವಾಗಿ ಸೋಮವಾರ ಭಾರತದ ಬೆಂಚ್ಮಾರ್ಕ್ ಷೇರು ಸೂಚ್ಯಂಕಗಳು ಶೇ 1ಕ್ಕೂ ಮೀರಿ ಕುಸಿತ ಕಂಡಿವೆ. ಪಶ್ಚಿಮ ಏಷ್ಯಾದಲ್ಲಿ ಯುದ್ಧವು ಐದನೇ ವಾರಕ್ಕೆ ತಲುಪಿರುವುದು ಮತ್ತು ಕದನ ವಿರಾಮ ಅಸಂಭವವೆನ್ನುವ ಸ್ಥಿತಿಗೆ ತಲುಪಿರುವುದರಿಂದ ಕಚ್ಚಾ ತೈಲ ಬೆಲೆಗಳು ಏರಿಕೆಯಲ್ಲೇ ಇದ್ದ ಪರಿಣಾಮವಾಗಿ ಸೋಮವಾರ ಭಾರತದ ಬೆಂಚ್ಮಾರ್ಕ್ ಷೇರು ಸೂಚ್ಯಂಕಗಳು ಶೇ 1ಕ್ಕೂ ಮೀರಿ ಕುಸಿತ ಕಂಡಿವೆ. ಬೆಳಗಿನ ವಹಿವಾಟಿನಲ್ಲಿ ಬಿಎಸ್ಇ ಸೂಚ್ಯಂಕ ಮತ್ತು ನಿಫ್ಟಿ ಎರಡೂ ಶೇ 1.1ರಷ್ಟು ಕುಸಿದವು. ಲೋಹಗಳು, ತೈಲ ಮತ್ತು ಅನಿಲ ಹೊರತುಪಡಿಸಿ ರಾಷ್ಟ್ರೀಯ ಷೇರು ವಿನಿಮಯ ಕೇಂದ್ರದ ಎಲ್ಲಾ ಇತರ ವಲಯ ಸೂಚ್ಯಂಕಗಳು ಕುಸಿತದಲ್ಲಿವೆ. ಮಾರುಕಟ್ಟೆಯ ಚಂಚಲತೆಯ ಅಳತೆಯಾದ ‘ಇಂಡಿಯಾ ವಿಐಎಕ್ಸ್’ ಕೊರೊನಾ ಸಾಂಕ್ರಾಮಿಕ ರೋಗದ ನಂತರದ ಅತ್ಯುನ್ನತ ಮಟ್ಟ ಶೇ 6ಕ್ಕೆ ಏರಿದೆ. ಕುಸಿದ ಬಿಎಸ್ಇ ಮತ್ತು ನಿಫ್ಟಿ ಷೇರುಗಳು ಬಿಎಸ್ಇಯ 30 ಷೇರುಗಳ ಸೂಚ್ಯಂಕದ ಆರಂಭಿಕ ವಹಿವಾಟಿನಲ್ಲಿ 1,191.24 ಅಂಕಗಳ ಕುಸಿತ ಕಂಡಿದ್ದು 72,391.98 ಕ್ಕೆ ತಲುಪಿದೆ. ಕಳೆದ ಕೆಲವು ದಿನಗಳಿಂದ ಮಾರುಕಟ್ಟೆ ಕುಸಿತದ ಪ್ರವೃತ್ತಿ ತೋರಿಸುತ್ತಿದ್ದು, ಇಂದು ತೀವ್ರಗೊಂಡಿದೆ. 50 ಷೇರುಗಳ ಎನ್ಎಸ್ಇಯ ನಿಫ್ಟಿ 349.45 ಅಂಕಗಳ ಕುಸಿತ ಕಂಡು 22,470.15 ಕ್ಕೆ ತಲುಪಿದೆ. 30 ಷೇರುಗಳ ಸೆನ್ಸೆಕ್ಸ್ ಸಂಸ್ಥೆಗಳಲ್ಲಿ, ಆಕ್ಸಿಸ್ ಬ್ಯಾಂಕ್, ಕೋಟಕ್ ಮಹೀಂದ್ರಾ ಬ್ಯಾಂಕ್, ಬಜಾಜ್ ಫಿನ್ಸರ್ವ್, ಬಜಾಜ್ ಫೈನಾನ್ಸ್, ಭಾರ್ತಿ ಏರ್ಟೆಲ್ ಮತ್ತು ಐಸಿಐಸಿಐ ಬ್ಯಾಂಕ್ ಕಂಪನಿಗಳ ಷೇರುಗಳು ಗಮನಾರ್ಹವಾಗಿ ಕುಸಿದಿವೆ. ಇನ್ನೊಂದೆಡೆ, ಭಾರತ್ ಎಲೆಕ್ಟ್ರಾನಿಕ್ಸ್, ರಿಲಯನ್ಸ್ ಇಂಡಸ್ಟ್ರೀಸ್, ಪವರ್ ಗ್ರಿಡ್, ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ ಮತ್ತು ಹಿಂದೂಸ್ತಾನ್ ಯೂನಿಲಿವರ್ ಕಂಪನಿಗಳ ಷೇರುಗಳು ಏರಿಕೆ, ಕಂಡು ಮಾರುಕಟ್ಟೆಗೆ ಸ್ವಲ್ಪ ಮಟ್ಟಿನ ನಿರಾಳ ನೀಡಿವೆ. ಕುಸಿದ ಅಮೆರಿಕ ಮತ್ತು ಏಷ್ಯಾದ ಮಾರುಕಟ್ಟೆಗಳು ಏಷ್ಯಾದ ಪ್ರಮುಖ ಮಾರುಕಟ್ಟೆಗಳಾದ ದಕ್ಷಿಣ ಕೊರಿಯಾದ ಕೋಸ್ಪಿ ಮತ್ತು ಜಪಾನ್ನ ನಿಕ್ಕಿ 225 ಮತ್ತು ಹಾಂಗ್ ಕಾಂಗ್ನ ಹ್ಯಾಂಗ್ ಸೆಂಗ್ ಸೂಚ್ಯಂಕಗಳು ಕೂಡ ಕುಸಿತ ಕಂಡಿದ್ದು, ಜಾಗತಿಕ ಹೂಡಿಕೆದಾರರ ಮನಸ್ಥಿತಿ ನಕಾರಾತ್ಮಕವಾಗಿರುವುದನ್ನು ತೋರಿಸುತ್ತಿವೆ. ಆದರೆ, ಶಾಂಘೈನ ಎಸ್ಎಸ್ಇ ಕಾಂಪೋಸಿಟ್ ಸೂಚ್ಯಂಕವು ಸ್ವಲ್ಪ ಮಟ್ಟಿನ ಏರಿಕೆ ಕಂಡಿದೆ. ಈ ನಡುವೆ ಅಮೆರಿಕದ ಷೇರು ಮಾರುಕಟ್ಟೆಯೂ ಶುಕ್ರವಾರ ಭಾರೀ ಕುಸಿತ ಕಂಡಿದ್ದು, ನಾಸ್ಡಾಕ್ ಕಾಂಪೋಸಿಟ್ ಸೂಚ್ಯಂಕ ಶೇ 2.15 ರಷ್ಟು ಕುಸಿದರೆ, ಡೌ ಜೋನ್ಸ್ ಕೈಗಾರಿಕಾ ಸರಾಸರಿ ಶೇ 1.73 ರಷ್ಟು ಮತ್ತು ಎಸ್ & ಪಿ 500 ಶೇ 1.67 ರಷ್ಟು ಕುಸಿದಿದೆ. ಇದರಿಂದ ಜಾಗತಿಕ ಮಟ್ಟದಲ್ಲಿ ಹೂಡಿಕೆದಾರರ ವಿಶ್ವಾಸ ಕುಸಿದಿರುವುದು ಸ್ಪಷ್ಟವಾಗಿದೆ. ಶೇ 6ಕ್ಕೇರಿದ ಅಲ್ಯುಮಿನಿಯಂ ಬೆಲೆಗಳು ಪಶ್ಚಿಮ ಏಷ್ಯಾದ ಎರಡು ದೊಡ್ಡ ಲೋಹದ ಉತ್ಪಾದಕರ ಒಡೆತನ ಅಲ್ಯುಮಿನಿಯಂ ಸ್ಮೆಲ್ಟರ್ಗಳು ವಾರಾಂತ್ಯದಲ್ಲಿ ಇರಾನ್ನಿಂದ ನಡೆದ ದಾಳಿಯಲ್ಲಿ ಹಾನಿಗೊಳಗಾದ ನಂತರ ಎನ್ಎಸ್ಇಯ ಲೋಹ ಸೂಚ್ಯಂಕವು ಲಾಭ ಗಳಿಸಿತು. ಸೋಮವಾರ ಇನ್ನೂ ಶೇ 0.5ರಷ್ಟು ಹೆಚ್ಚು ವಹಿವಾಟು ನಡೆಸುತ್ತಿದೆ. ಅಲ್ಯುಮಿನಿಯಂ ಬೆಲೆಗಳು ನಾಲ್ಕು ವರ್ಷಗಳ ಗರಿಷ್ಠ ಮಟ್ಟ ಶೇ 6ಕ್ಕೇರಿದೆ. ಯೆಮನ್ನಲ್ಲಿರುವ ಇರಾನ್ ಬೆಂಬಲಿತ ಹೌತಿ ಗುಂಪು ಇಸ್ರೇಲ್ ಮೇಲೆ ದಾಳಿ ನಡೆಸಿದ ಕಾರಣದಿಂದ ಸೋಮವಾರ ಅಲ್ಲಿನ ಮಾರುಕಟ್ಟೆ ಕುಸಿತಗೊಂಡಿದೆ. ಇರಾನ್ ಕೂಡ ಈ ಪ್ರದೇಶದಾದ್ಯಂತ ವಿವಿಧ ತಾಣಗಳಲ್ಲಿ ದಾಳಿ ಮುಂದುವರಿಸಿದೆ. ಡಾಲರ್ ವಿರುದ್ಧ ಬಲಪಡೆದ ರೂಪಾಯಿ ಈ ನಡುವೆ ಭಾರತೀಯ ರಿಸರ್ವ್ ಬ್ಯಾಂಕ್ ಶುಕ್ರವಾರ ತಡರಾತ್ರಿ ಭಾರತೀಯ ಕರೆನ್ಸಿಯ ವಿರುದ್ಧ ಊಹಾತ್ಮಕ ಪಂತಗಳನ್ನು ಹಾಕುವ ಬ್ಯಾಂಕುಗಳ ಸಾಮರ್ಥ್ಯವನ್ನು ಮಿತಿಗೊಳಿಸುವ ಮಾನದಂಡಗಳಲ್ಲಿ ಬದಲಾವಣೆ ಘೋಷಿಸಿದ ನಂತರ ಭಾರತೀಯ ರೂಪಾಯಿ ಅಮೆರಿಕನ್ ಡಾಲರ್ ವಿರುದ್ಧ ಬಲಪಡೆದುಕೊಂಡಿದೆ.
ಕರಾವಳಿ ಕರ್ನಾಟಕದ ಪ್ರಥಮ ಎನ್- ಜೆನ್ ಅಂಚೆ ಕಚೇರಿ
ಮಾ. 30ರಂದು ಸುರತ್ಕಲ್ ಎನ್ಐಟಿಕೆಯಲ್ಲಿ ಉದ್ಘಾಟನೆ
ರಾಜ್ಯದಲ್ಲಿ ಭರ್ತಿಯಾಗದ 783 ಪಿಜಿ ಮೆಡಿಕಲ್ ಸೀಟುಗಳು
ಈ ವರ್ಷ ಬೇಡಿಕೆಯಿರುವ ಕೋರ್ಸ್ಗಳಲ್ಲಿಯೂ ಸೀಟು ಉಳಿಕೆ
ಇತ್ತೀಚೆಗೆ ಭಾರತದ ಹಲವು ಕಡೆ ವಿಧ್ವಂಸಕ ಕೃತ್ಯಗಳನ್ನು ನಡೆಸಲು ಸಂಚು ರೂಪಿಸುತ್ತಿದ್ದ ಲಷ್ಕರ್ ಸಂಘಟನೆಯ ಶಂಕಿತ ಉಗ್ರರು ಬಂಧನ ಬಳಿಕ ಬಾಂಗ್ಲಾದೇಶದ ನಂಟಿನ ಹಿಂದೆ ಬಿದ್ದಿದ್ದ ಅಧಿಕಾರಿಗಳು ನಡೆಸಿದ ವ್ಯಾಪಕ ಕಾರ್ಯಚರಣೆ ಬಳಿಕ ಇದೀಗ ಈ ವಿಧ್ವಂಸಕ ಕೃತ್ಯಗಳಿಗೆ ISI ಹಾಗೂ ಲಷ್ಕರ್-ಎ-ತೊಯ್ಬಾ ಸಂಘಟನೆಗಳನ್ನು ನಿರ್ವಹಿಸುತ್ತಿದ್ದ ಶಂಕಿತನನ್ನು ದೆಹಲಿ ಪೊಲೀಸ್ ಹಾಗೂ ಕೇಂದ್ರ ತನಿಖಾ ಸಂಸ್ಥೆಗಳು ಬಂಧಿಸಿವೆ. ಈ ಕುರಿತ ಮಾಹಿತಿ ಇಲ್ಲಿದೆ...
ಪ್ರವಾಸಿಗರ ಆಕರ್ಷಣೆ ಕೇಂದ್ರ ಹೊನ್ನೇಕುಡಿಗೆ ಸೇತುವೆ
► ಲೋಕಾರ್ಪಣೆಗೆ ಸಜ್ಜು ►ಗ್ರಾಮಸ್ಥರ ಆರು ದಶಕಗಳ ಕನಸು ನನಸು
ಕುಂದಾಪುರ: ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಹಾಸ್ಟೆಲ್ಗಳಲ್ಲಿ ತರಕಾರಿ ಬೆಳೆಯುವ ವಿದ್ಯಾರ್ಥಿಗಳು!
ಕುಂದಾಪುರ: ತಾಲೂಕಿನಲ್ಲಿ ಕಾರ್ಯಾಚರಿಸು ತ್ತಿರುವ ವಿವಿಧ ಸರಕಾರಿ ಹಾಸ್ಟೆಲ್ಗಳಿಗೆ ಹೋದರೆ ಎಲ್ಲೆಲ್ಲೂ ಹಸಿರು ಸುಂದರ ಪರಿಸರ ಕಣ್ಣಿಗೆ ಮುದ ನೀಡುತ್ತದೆ. ಎಲ್ಲ ಹಾಸ್ಟೆಲ್ಗಳಲ್ಲೂ ವಿದ್ಯಾರ್ಥಿಗಳು ಸೊಂಪಾಗಿ ಬೆಳೆದ ತರಹೇವಾರಿ ತರಕಾರಿ ತೋಟಗಳು ಕಣ್ಮನ ಸೆಳೆಯುತ್ತವೆ. ಕುಂದಾಪುರ ತಾಲೂಕಿನ ಹಿಂದುಳಿದ ವರ್ಗ ಗಳ ಕಲ್ಯಾಣ ಇಲಾಖೆಗೆ ಸೇರಿದ ಏಳು ಮೆಟ್ರಿಕ್ ಪೂರ್ವ ಹಾಗೂ ಎಂಟು ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯಗಳಲ್ಲಿ ವಿದ್ಯಾರ್ಥಿಗಳೇ ನಿರ್ಮಿಸಿದ ಕೈತೋಟ ಅವರಲ್ಲಿ ಆತ್ಮವಿಶ್ವಾಸ, ಸಹಕಾರ ಮನೋಭಾವ ಹಾಗೂ ಸ್ವಾವಲಂಬನೆ ಬೆಳೆಸುವಲ್ಲಿ ಸಹಕಾರಿಯಾಗಿವೆ. ಅಲ್ಲದೆ ವಿದ್ಯಾರ್ಥಿಗಳಿಗೆ ಮಣ್ಣಿನ ಕೆಲಸ, ಕೃಷಿಯ ಮೌಲ್ಯ, ಶ್ರಮ ಮತ್ತು ಪರಿಸರ ಸಂರಕ್ಷಣೆ ಬಗ್ಗೆ ನೈಜ ಅನುಭವ ಸಿಗುತ್ತಿವೆ. ವಸತಿ ನಿಲಯದಲ್ಲಿ ಕೈ ತೋಟ ನಿರ್ವಹಣೆಯ ಮೂಲಕ ಮಕ್ಕಳು ಸಣ್ಣ ಜಮೀನಿನಲ್ಲಿ ತರಕಾರಿ, ಹೂಗಿಡಗಳು ಮತ್ತು ಔಷಧೀಯ ಗಿಡಗಳನ್ನು ನೆಟ್ಟು ಆರೈಕೆ ಮಾಡುವುದನ್ನು ಕಲಿಸಲಾಗುತ್ತಿದೆ. ಕೈತೋಟದಲ್ಲಿ ಬೆಳೆಯುವ ತರಕಾರಿಗಳನ್ನು ಅಡುಗೆಗೆ ಬಳಸುವುದರಿಂದ ಮಕ್ಕಳಿಗೆ ತಾಜಾ, ಪೌಷ್ಟಿಕ ಆಹಾರ ಸಿಗುತ್ತಿದೆ ಎಂದು ವಿದ್ಯಾರ್ಥಿನಿ ನಿಸರ್ಗ ತಮ್ಮ ಅನುಭವ ಹಂಚಿಕೊಂಡಿದ್ದಾರೆ. ಕೈತೋಟದಲ್ಲಿ ಬೆಳೆದ ತರಕಾರಿ ಮತ್ತು ಹಣ್ಣು ಗಳನ್ನು ಸರಕಾರಿ ಶಾಲೆಗಳ ಬಿಸಿಯೂಟ ಹಾಗೂ ಅಂಗನವಾಡಿಗಳಿಗೆ ಹಂಚಲಾಗುತ್ತದೆ. ಸಂಘಟಿತ ಯತ್ನ: ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಉಡುಪಿ ಜಿಲ್ಲಾ ಅಧಿಕಾರಿ ಹಾಕಪ್ಪ ಆರ್. ಲಮಾಣಿ ಮಾರ್ಗದರ್ಶನದಲ್ಲಿ, ತಾಲೂಕು ಕಲ್ಯಾಣಾಧಿಕಾರಿ, ವಿವಿಧ ಹಾಸ್ಟೆಲ್ಗಳ ನಿಲಯ ಮೇಲ್ವಿಚಾರಕರು ಹಾಗೂ ಅಡುಗೆ ಸಿಬ್ಬಂದಿಯ ಸಮನ್ವಯತೆಯಲ್ಲಿ ಆಹಾರ ಸಮಿತಿ, ಶೈಕ್ಷಣಿಕ ಸಮಿತಿ, ಕೈತೋಟ ಸಮಿತಿ, ಸ್ವಚ್ಛತಾ ಸಮಿತಿಗಳನ್ನು ರಚಿಸಿ ಪ್ರತಿ ಸಮಿತಿಯ ಮೇಲುಸ್ತುವಾರಿಯನ್ನು ವಿದ್ಯಾರ್ಥಿಗಳೇ ವಹಿಸಿ ಕೊಂಡು ವಿದ್ಯಾರ್ಥಿ ನಿಲಯಗಳಲ್ಲಿ ಉತ್ತಮ ಶೈಕ್ಷಣಿಕ ವಾತಾವರಣ ಸೃಷ್ಟಿಸುವುದರ ಜೊತೆಗೆ ‘ನಮ್ಮ ನಿಲಯ ಸ್ವಚ್ಛ ನಿಲಯ, ನಮ್ಮ ನಿಲಯ ಹಸಿರು ನಿಲಯ’ ಧ್ಯೇಯದಲ್ಲಿ ಉತ್ತಮ ಆರೋಗ್ಯಕರ ವಾತಾವರಣ ಹಾಗೂ ಶೈಕ್ಷಣಿಕ ಪ್ರಗತಿ ಸಾಧಿಸಲು ಕಟಿಬದ್ಧರಾಗಿದ್ದಾರೆ. ಎಲ್ಲೆಲ್ಲಿ ಕೈತೋಟ: ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯ ಹಂಗಳೂರು, ಮೆಟ್ರಿಕ್ ನಂತರದ ಬಾಲಕಿ ಯರ ವಿದ್ಯಾರ್ಥಿನಿಲಯ ಕುಂದಾಪುರ ಮೂಲ, ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿನಿಲಯ ಕುಂದಾಪುರ ವಿಭಜಿತ, ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯ ಕೋಟೇಶ್ವರ, ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿನಿಲಯ ಶಂಕರನಾರಾಯಣ ಹಾಗೂ ಮೆಟ್ರಿಕ್ ಪೂರ್ವ ಬಾಲಕಿಯರ ವಿದ್ಯಾರ್ಥಿನಿಲಯ ಕುಂದಾಪುರ ಟೌನ್, ಮೆಟ್ರಿಕ್ ಪೂರ್ವ ಬಾಲಕಿಯರ ವಿದ್ಯಾರ್ಥಿ ನಿಲಯ ಕೆದೂರು, ಮೆಟ್ರಿಕ್ ಪೂರ್ವ ಬಾಲಕಿಯರ ವಿದ್ಯಾರ್ಥಿನಿಲಯ ಅಮಾಸೆಬೈಲು, ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯ ಬಸ್ರೂರು ಇವು ಉತ್ತಮ ಕೈತೋಟ ನಿರ್ವಹಣೆಗೆ ಸಾಕ್ಷಿಯಾಗಿವೆ. ತರಹೇವಾರಿ ತರಕಾರಿ ಬೆಳೆ! ಕೈತೋಟ ನಿರ್ವಹಣೆಯ ಸಮಿತಿಯ ಮೂಲಕ ಪ್ರತಿ ನಿಲಯಗಳಲ್ಲಿ ಉತ್ತಮ ಕೈತೋಟ ನಿರ್ಮಿಸಲಾಗಿದ್ದು, ಈ ಕೈತೋಟದಲ್ಲಿ ಬಸಳೆಸೊಪ್ಪು, ಹರಿವೆ ಸೊಪ್ಪು, ಪಾಲಕ್ ಸೊಪ್ಪು, ಬೆಂಡೆ ಕಾಯಿ, ಹೀರೆಕಾಯಿ, ಬದನೆಕಾಯಿ, ಚೌಳಿಕಾಯಿ, ಸೋರೆಕಾಯಿ, ಮೂಲಂಗಿ, ಹಸಿಮೆಣಸು ಸೇರಿದಂತೆ ವಿವಿಧ ತರಕಾರಿಗಳನ್ನು ಬೆಳೆಯುವುದರ ಮೂಲಕ ಪೋಷಕಾಂಶಯುಕ್ತ ಆಹಾರ ವಿದ್ಯಾರ್ಥಿಗಳಿಗೆ ದೊರೆಯುತ್ತಿದೆ. ‘ವಿದ್ಯಾರ್ಥಿ ಸ್ನೇಹಿ ಹಾಸ್ಟೆಲ್’ ನಮ್ಮ ಗುರಿಯಾಗಿದೆ. ವಿದ್ಯಾರ್ಥಿ ನಿಲಯಗಳಲ್ಲಿ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಪಠ್ಯ ವಿಷಯದ ಜೊತೆಗೆ ಪತ್ಯೇತರ ವಿಷಯಗಳಿಗೂ ಪ್ರಾಮುಖ್ಯತೆ ನೀಡಿ ವಿದ್ಯಾರ್ಥಿಗಳ ಉತ್ತಮ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾದ ವಾತಾವರಣವನ್ನು ಸೃಷ್ಟಿಸಲಾಗುತ್ತಿದೆ. ವಿದ್ಯಾರ್ಥಿ ನಿಲಯಗಳಲ್ಲಿ ಕೈತೋಟ ನಿರ್ವಹಣೆ ವಿದ್ಯಾರ್ಥಿಗಳಿಗೆ ಪೋಷಕಾಂಶಯುಕ್ತ ಆಹಾರ, ಪರಿಸರ ಜಾಗೃತಿ, ಕೌಶಲ್ಯ ಅಭಿವೃದ್ಧಿ, ಸ್ವಚ್ಛತೆ ಮತ್ತು ಶಿಸ್ತು ಮಾನಸಿಕ ಆರೋಗ್ಯ, ಒಗ್ಗಟ್ಟು ಮೂಡಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ವಿದ್ಯಾರ್ಥಿ ಗಳಲ್ಲಿ ಈ ಕ್ರಿಯಾಶೀಲತೆ ಬೆಳೆಸುವಲ್ಲಿ ವಸತಿ ನಿಲಯ ಮೇಲ್ವಿಚಾರಕರ ಪಾತ್ರವೂ ಶ್ಲಾಘನೀಯ. -ಹಾಕಪ್ಪ ಆರ್. ಲಮಾಣಿ, ಜಿಲ್ಲಾ ಅಧಿಕಾರಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಉಡುಪಿ. ಪೈಪ್ ಕಾಂಪೋಸ್ಟಿಂಗ್ ಅಳವಡಿಕೆ ವಸತಿ ನಿಲಯದಲ್ಲಿ ಪೈಪ್ ಕಾಂಪೋಸ್ಟಿಂಗ್ ಅಳವಡಿಕೆಯ ಮೂಲಕ ಅಡುಗೆ ಮನೆ ಯಿಂದ ಬರುವ ತರಕಾರಿ ತ್ಯಾಜ್ಯ, ಆಹಾರ ಅವಶೇಷಗಳನ್ನು ಪೈಪ್ನೊಳಗೆ ತುಂಬಿ ಸಹಜವಾಗಿ ಗೊಬ್ಬರವನ್ನಾಗಿ ಮಾರ್ಪಡಿಸಲಾಗುತ್ತದೆ. ಇದರ ಮೂಲಕ ಕಸದ ಪ್ರಮಾಣ ಕಡಿಮೆಯಾಗುವುದು, ದುರ್ಗಂಧ ನಿಯಂತ್ರಣವಾಗುವುದು ಮತ್ತು ಪರಿಸರ ಸ್ನೇಹಿ ತ್ಯಾಜ್ಯ ನಿರ್ವಹಣೆ ಸಾಧ್ಯವಾಗುತ್ತದೆ. ಪೈಪ್ ಕಾಂಪೋಸ್ಟ್ ಮೂಲಕ ಸಿಗುವ ಸಾವಯವ ಗೊಬ್ಬರವನ್ನು ಕೈತೋಟ ದಲ್ಲಿ ಬಳಸುವುದರಿಂದ ಉತ್ತಮ ಬೆಳೆ, ಹಸಿರು ಪರಿಸರದ ಜೊತೆಗೆ ತ್ಯಾಜ್ಯ ವನ್ನು ಸರಿಯಾಗಿ ನಿರ್ವಹಿಸುವ ಸಾಮಾಜಿಕ ಹೊಣೆಗಾರಿಕೆಯ ಅರಿವು ವಿದ್ಯಾರ್ಥಿ ಗಳಲ್ಲಿ ಬೆಳೆಯುತ್ತಿದೆ.
ವೃದ್ದಾಪ್ಯದಲ್ಲಿ ಪೋಷಕರನ್ನು ನಿರ್ಲಕ್ಷಿಸಿದರೆ ವೇತನದಲ್ಲಿ ಶೇ. 15 ರಷ್ಟು ಕಡಿತ; ತೆಲಂಗಾಣ ಸರ್ಕಾರದಿಂದ ಮಹತ್ವದ ಕ್ರಮ
ತೆಲಂಗಾಣ ಸರ್ಕಾರವು ಪೋಷಕರು ಮತ್ತು ಹಿರಿಯ ನಾಗರಿಕರ ರಕ್ಷಣೆಗಾಗಿ ಅತ್ಯಂತ ಮಹತ್ವದ ಹಾಗೂ ಕ್ರಾಂತಿಕಾರಕ ಹೆಜ್ಜೆಯನ್ನಿಟ್ಟಿದೆ. ವಯಸ್ಸಾದ ಪೋಷಕರನ್ನು ಸರಿಯಾಗಿ ನೋಡಿಕೊಳ್ಳದೆ ನಿರ್ಲಕ್ಷಿಸುವ ಸರ್ಕಾರಿ ಮತ್ತು ಖಾಸಗಿ ವಲಯದ ಉದ್ಯೋಗಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಮುಂದಾಗಿರುವ ಸರ್ಕಾರ, ಅಂತಹವರ ಮಾಸಿಕ ವೇತನದಲ್ಲಿ ನಿರ್ದಿಷ್ಟ ಮೊತ್ತವನ್ನು ಕಡಿತಗೊಳಿಸುವ ಕುರಿತಾದ ಹೊಸ ವಿಧೇಯಕವನ್ನು ಸಿದ್ಧಪಡಿಸುತ್ತಿದೆ.
ಏಪ್ರಿಲ್ ಮೊದಲ ವಾರದಲ್ಲಿ ಬಂದಿರುವ ಮೂರು ದಿನಗಳ ಸರಣಿ ರಜೆಗೆ ರೈಲ್ವೆ ಇಲಾಖೆಯು ವಿಶೇಷ ರೈಲು ಸೌಲಭ್ಯ ನೀಡಿದೆ. ಬೆಂಗಳೂರು - ಉಡುಪಿ - ಕಾರವಾರ- ಗೋವಾ ನಡುವೆ ಹಾಗೂ ಹುಬ್ಬಳ್ಳಿ - ಬೆಂಗಳೂರು - ಕೊಲ್ಲಂ ನಡುವೆ ಸಂಚಾರ ನಡೆಸಲಿದೆ. ಏಪ್ರಿಲ್ 2 ರಿಂದ ಈ ರೈಲಿನ ವೇಳಾಪಟ್ಟಿ ಏನು? ಯಾವೆಲ್ಲಾ ನಿಲ್ದಾಣಗಳಲ್ಲಿ ನಿಲುಗಡೆಯಾಗಲಿದೆ? ಸಂಪೂರ್ಣ ವಿವರ ಇಲ್ಲಿದೆ.
ಫಿರೋಝಾಬಾದ್: ಕಾಲದ ಮರೆಗೆ ಸರಿದ ಮಧ್ಯಕಾಲೀನ ದಖನ್ ನಗರ
ಪುರಾತನ ಮಧ್ಯಕಾಲೀನ ಪೇಟೆಯ ಹೊರವಲಯ. ಪ್ರಶಾಂತವಾಗಿ ಹರಿಯುತ್ತಿರುವ ಭೀಮಾ ನದಿಯ ತಟದಲ್ಲಿ ‘ಸಯ್ಯಿದ್ ಶಾಹ್ ಅಹ್ಮದ್ ಖಲೀಫತುರಹ್ಮಾನ್’ ಅವರ ದಿವ್ಯ ಸನ್ನಿಧಿ. ಸೂರ್ಯ ತನ್ನ ಕಾಯಕ ಪ್ರಾರಂಭಿಸುವ ಮೊದಲೇ ಹೊಲದೆಡೆಗೆ ನಡೆಯುತ್ತಿರುವ ಗ್ರಾಮಸ್ಥರು. ಮುಂಜಾವಿನ ತಣ್ಣನೆಯ ವಾತಾವರಣವನ್ನು ಭೇದಿಸಿ ಮುಂದೆ ನಡೆದಾಗ ನಾವು ತಲುಪಿದ್ದು ಹದಿನೈದನೆಯ ಶತಮಾನದ ಬಹುಮನಿ ಸುಲ್ತಾನರ ಅರಮನೆಗಳ ನಗರ ಫಿರೋಝಾಬಾದಿಗೆ. ಸುಮಾರು ಆರೇಳು ವರ್ಷಗಳ ಹಿಂದೆ ಡಾ.ಶಿವಶರಣ ಅರುಣಿ ಅವರ ಸಂಶೋಧನಾ ಪತ್ರ ಓದಿ ಕುತೂಹಲಿಕನಾಗಿ ಫಿರೋಝಾಬಾದಿಗೆ ಮೊದಲ ಬಾರಿ ಭೇಟಿ ನೀಡಿದ್ದೆ. ಮಳೆಗಾಲವಾದ್ದರಿಂದ ಹೂಳು ತುಂಬಿದ್ದ ಹೊಲದೆಡೆಗೆ ಇಳಿಯಲು ತ್ರಾಸವಾಗಿ ದೂರದಿಂದಲೇ ಮಧ್ಯಕಾಲೀನ ಬಹುಮನಿಗಳ ವೈಭವವನ್ನು ಕಣ್ತುಂಬಿಕೊಂಡು ಹಿಂದಿರುಗಿದ್ದೆ. ಭಾರತೀಯ ಅನುಸಂಧಾನ ಪರಿಷತ್ತಿನ ದಕ್ಷಿಣ ಪ್ರಾದೇಶಿಕ ಕೇಂದ್ರದ ಉಪ -ನಿರ್ದೇಶಕರಾಗಿದ್ದ ಡಾ.ಶಿವಶರಣ ಅರುಣಿ ಅವರಿಗೆ ಪ್ರಾಗೈತಿಹಾಸಿಕ ಇತಿಹಾಸದಲ್ಲಿ ಅತಿ ಯಾದ ಆಸಕ್ತಿ. ಕರ್ನಾಟಕದಲ್ಲಿ ಮಧ್ಯಕಾಲೀನ ರಾಜರ ನಗರೀಕರಣ ಪ್ರಕ್ರಿಯೆಯ ಸ್ವರೂಪ ಮತ್ತು ನಗರಗಳು ರೂಪುಗೊಂಡ ಬಗೆಯನ್ನು ವಿವರಿಸುವ ತಮ್ಮ ಸರಣಿ ಬರಹದಲ್ಲಿ ಫಿರೋ ಝಾಬಾದ್ನ ತಮ್ಮ ಅಧ್ಯ ಯನವನ್ನು ಚರ್ಚಿ ಸಿದ್ದಾರೆ. ಆ ಮೂಲಕ ಕಾಲದ ಮರೆಗೆ ಸರಿದಿದ್ದ ಅಜ್ಞಾತ ನಗರ ಮತ್ತೆ ಮುನ್ನೆಲೆಗೆ ಬರತೊಡಗಿತು. ಇದು ನನ್ನ ಮೂರನೆಯ ಭೇಟಿ ಫಿರೋಝಾಬಾದಿಗೆ. ಮಧ್ಯಕಾಲೀನ ದಖನ್ ಪ್ರಾಂತ್ಯವನ್ನು ತಮ್ಮದೇ ಆದ ಕೊಡುಗೆಗಳಿಂದ ಸಂಪನ್ನಗೊಳಿಸಿದ ಶ್ರೀಮಂತ ಇತಿಹಾಸ ಹೊಂದಿರುವ ಬಹುಮನಿ ಸುಲ್ತಾನರ ಅಗಣಿತ ಗುಂಬಝ್ಗಳು ಇಂದಿಗೂ ನೆಲೆಗೊಂಡಿದ್ದರೂ ನನ್ನನ್ನು ವೈಯಕ್ತಿಕವಾಗಿ ಹೆಚ್ಚು ಆಕರ್ಷಿಸಿದ್ದು ಮತ್ತು ಅಷ್ಟೇ ಚಿಂತೆಗೀಡು ಮಾಡಿದ್ದು ಫಿರೋಝಶಹಾನ ಫಿರೋಝಾಬಾದ್ ನಗರ. ಕ್ರಿ.ಶ. 1610 ರ ವೇಳೆ ಮೊಘಲ್ ಬಾದ್ಶಾಹ್ ಅಕ್ಬರ್ ನಿರ್ಮಿಸಿದ ಫತೆಪುರ್ ಸಿಕ್ರಿ ನಗರ ನಿರ್ಮಾಣದಲ್ಲಿ ಮುಖ್ಯ ಮಾದರಿಯಾಗಿ ಫಿರೋಝಾಬಾದ್ ಕೋಟೆಯ ವಿನ್ಯಾಸದ ಅನುಕರಣೆ ಮಾಡಿದ್ದನು ಎಂದು ಇತಿಹಾಸಕಾರರು ಅಭಿಪ್ರಾಯಪಡುತ್ತಾರೆ. ಮೊಘಲರಿಗಿಂತಲೂ ಎರಡು ಶತಮಾನಗಳ ಮುಂಚೆಯೇ ಅಂದರೆ ಕ್ರಿ.ಶ 1406 ರಲ್ಲಿ ಸೂಫಿ ಸಂತ ಖಲೀಫತುರಹಮಾನ್ ಅವರ ಕಲ್ಪನೆಯಂತೆಯೇ ತಾಜುದ್ದೀನ್ ಫಿರೋಝ್ ಶಾಹ್ ಈ ಬೃಹತ್ ನಗರದ ನಿರ್ಮಾಣ ಪೂರ್ಣಗೊಳಿಸಿದನು. ಗುಲ್ಬರ್ಗಾ ಜಿಲ್ಲೆಯ ಜೇವರ್ಗಿ ಪಟ್ಟಣದಿಂದ ಈಶಾನ್ಯಕ್ಕೆ ಸುಮಾರು ಎಂಟು ಕಿ. ಮಿ. ದೂರದಲ್ಲಿ ಈ ಮಧ್ಯಕಾಲೀನ ನಗರದ ಅವಶೇಷಗಳು ಇಂದು ಬಾಕಿಯುಳಿದಿದೆ. ಈ ಪ್ರದೇಶದಲ್ಲಿ ಭೀಮಾ ನದಿಯ ಹರಿವು ಕಡಿಮೆ ಇರುವುದರಿಂದ ಕೋಟೆ ನಿರ್ಮಿಸಿ ವೈರಿಗಳ ದಾಳಿಯಿಂದ ತಮ್ಮ ಮುಖ್ಯ ರಾಜಧಾನಿ ಗುಲ್ಬರ್ಗಾವನ್ನು ರಕ್ಷಿಸುವ ಇರಾದೆಯೂ ರಾಜನದ್ದಾಗಿತ್ತು. ಪ್ರಾಚೀನ ಕಾಲದಲ್ಲಿ ಜನರು ಫಿರೋಝಾಬಾದ್ ಬಳಿಯೇ ಈ ನದಿಯನ್ನು ದಾಟಿ ಗುಲ್ಬರ್ಗಾ ಪಟ್ಟಣಕ್ಕೆ ಸಂಚರಿಸುತ್ತಿದ್ದರು. ಕೇವಲ ಎರಡು ದಶಕಗಳ ಕಾಲದ ಅಲ್ಪಾವಧಿ ಮಾತ್ರ ಈ ನಗರ ಅಸ್ತಿತ್ವದಲ್ಲಿತ್ತು. ಕೆಲವೊಂದು ರಾಜಕೀಯ ಕಾರಣಗಳಿಂದಾಗಿ ಫಿರೋಝಶಹಾನ ನಂತರದ ಸುಲ್ತಾನರು ತಮ್ಮ ರಾಜಧಾನಿಯನ್ನು ಬೀದರಿಗೆ ಸ್ಥಳಾಂತರಿಸಿದ ಕಾರಣ ಫಿರೋ ಝಾಬಾದ್ ತನ್ನ ಮಾನ್ಯತೆ ಕಳೆದು ಇತಿಹಾಸದ ಮರೆಗೆ ಸರಿಯಿತು. ಕೋಟೆಯು ನಾಲ್ಕು ದಿಕ್ಕುಗಳಲ್ಲಿ ಮಹಾ-ದ್ವಾರಗಳನ್ನು ಹೊಂದಿದೆ. ನಗರದ ಪೂರ್ವ ಮತ್ತು ಪಶ್ಚಿಮ ದಿಕ್ಕಿನಲ್ಲಿ ಮುಖ್ಯ ದ್ವಾರಗಳಿದ್ದು ಇವುಗಳನ್ನು ವೈರಿಗಳ ಆಕ್ರಮಣಗಳಿಂದ ರಕ್ಷಿಸಲು ಭದ್ರಪಡಿಸಲಾಗಿವೆ. ಕೋಟೆಯ ಉತ್ತರ ಮತ್ತು ದಕ್ಷಿಣ ದಿಕ್ಕಿನ ದ್ವಾರಗಳು ಸರಳವಾಗಿದ್ದು ಇವು ನದಿಯ ದಂಡೆಯಿಂದ ಕಲಬುರಗಿ ಪಟ್ಟಣ ಸಂಚಾರಕ್ಕೆ ಬಳಸಲು ನಿರ್ಮಿಸಿದಂತಿದೆ. ಈ ನಾಲ್ಕು ದರ್ವಾಝಾ ಗಳನ್ನು ಗುಲಬರ್ಗಾ-ದರವಾಝಾ; ರಾಯಚೂರು- ದರವಾಝಾ; ಶೋರಾಪುರ- ದರವಾಝಾ ಮತ್ತು ಪಾನಿ-ದರವಾಝಾ ಎಂದು ಕರೆಯುತ್ತಿದ್ದರು. ಸಂಪೂರ್ಣ ಕೋಟೆಯ ವಿನ್ಯಾಸ ಚೌಕಾಕಾರದಲ್ಲಿದ್ದರೂ, ನದಿಯ ತಟದಲ್ಲಿ ತಿರುವಿಗೆ ತಕ್ಕಂತೆಯೇ ಕೋಟೆಯ ಹೊರಗೋಡೆಯನ್ನು ನಿರ್ಮಿಸಲಾಗಿದೆ. ಸುಮಾರು ಐವತ್ತಕ್ಕೂ ಮಿಕ್ಕ ಚೌಕಾಕಾರ ಮತ್ತು ಷಟ್ಕೋಣ ವಿನ್ಯಾಸದ ಬುರುಜುಗಳು ಈ ಕೋಟೆಯಲ್ಲಿ ಅಳವಡಿಸಲಾಗಿದ್ದು, ಪರ್ಷಿಯನ್ ದೇಶದ ಮಿಲಿಟರಿ ತಂತ್ರಜ್ಞಾನದ ಅನುಕರಣೆ ಪ್ರಾಂತೀಯ ಕೋಟೆಗಳಲ್ಲಿ ಅನುಕರಣೆ ಮಾಡಿದ್ದು ಇಲ್ಲಿ ಕಾಣಬಹುದು. ಬಹುಶಃ, ಕೋಟೆಯ ನಿರ್ಮಾಣದಲ್ಲಿ ಪರ್ಷಿಯನ್ ವಾಸ್ತು ಶಿಲ್ಪಿಗಳು ಮತ್ತು ವಿನ್ಯಾಸಕಾರರನ್ನು ಬಾದ್’ಶಾಹ್ ನೇಮಿಸಿದ್ದನೆಂದು ತಿಳಿದು ಬರುತ್ತದೆ. ಇಂದಿಗೂ ಇಲ್ಲಿನ ಮುಖ್ಯ ಆಕರ್ಷಣೆ ಜಮಾ ಮಸೀದಿ. ನೂರಕ್ಕೂ ಮಿಕ್ಕ ಕಮಾನುಗಳನ್ನು ಹೊಂದಿರುವ ಮಸೀದಿಯು ಇಂಡೋ- ಪರ್ಷಿಯನ್ ವಾಸ್ತುಶೈಲಿಯಿಂದ ನಿರ್ಮಾಣಗೊಂಡಿದೆ. ಇದು ದೆಹಲಿಯ ತುಘಲಕ್ ಸುಲ್ತಾನರು ನಿರ್ಮಿಸಿದ ಫಿರೋಝಶಹಾ ಕೊಟ್ಲಾ ಜುಮ್ಮಾ ಮಸೀದಿಯ ಮಾದರಿಯಲ್ಲಿ ನಿರ್ಮಿತವಾಗಿದೆ ಎಂದು ಇತಿಹಾಸಕಾರರು ಗುರುತಿಸಿದ್ದಾರೆ. ಜಾಮಾ ಮಸೀದಿಗೆ ಸಂಬಂಧಿಸಿದ ಪರ್ಷಿಯನ್ ಭಾಷೆಯಲ್ಲಿ ಬರೆದ ಶಾಸನವು ಖಲೀಫತುರಹಮಾನ್ ದರ್ಗಾದ ಆವರಣದಲ್ಲಿ ಇಂದಿಗೂ ಕಾಣಬಹುದು. ಅಹ್ಮದ್ ಬಿನ್ ಹುಸೈನ್ ಅಲ್-ಹಿಸನ್ ಕೈಫ್ ಈ ಮಸೀದಿಯ ನಿರ್ಮಾಣದ ರೂವಾರಿಯಾಗಿದ್ದನು ಎಂಬುದನ್ನು ಈ ಶಾಸನವು ಬೊಟ್ಟು ಮಾಡುತ್ತದೆ. ಇದ್ಯಾವುದರ ಪರಿವೆಯೇ ಇಲ್ಲದ ಗ್ರಾಮಸ್ಥರು ಸಂಪೂರ್ಣ ಮಸೀದಿಯ ಆವರಣವನ್ನು ತಮ್ಮ ಕೃಷಿ ಭೂಮಿಯನ್ನಾಗಿ ಉಪಯೋಗಿಸುತ್ತಿದ್ದಾರೆ. ಅರಮನೆ ಆವರಣವು ಅನೇಕ ಮಹಲ್ ಅಥವಾ ಅರಮನೆಗಳು, ಮಹಡಿ ಮನೆಗಳು, ಕಚೇರಿಗಳು, ಉದ್ಯಾನಗಳು ಹಾಗೂ ಸೇವಕರ ಗೃಹಗಳನ್ನು ಹೊಂದಿತ್ತು. ಇವುಗಳಲ್ಲಿ ಕೆಲವನ್ನು ದಖ್ಖನಿ-ಮಹಲ್, ಅರೆಬಿಕ್- ಮಹಲ್ ಎಂದು ಸ್ಥಳೀಯರು ಕರೆಯುತ್ತಾರೆ. ಇವುಗಳಲ್ಲಿ ಮಹತ್ವದ ಅವಶೇಷಗಳೆಂದರೆ ಇಲ್ಲಿಯ ಹಬೆ-ಸ್ನಾನ ಗೃಹಗಳ ಸಮೂಹಗಳು. ಇವುಗಳನ್ನು ಹಮಾಮ್ ಎಂದು ಕರೆಯಲಾಗುತ್ತವೆ. ಕಾಲಾಂತರಗಳಲ್ಲಿ ಎಲ್ಲವೂ ನಶಿಸಿ ಕೆಲವೊಂದು ಅವಶಿಷ್ಟಗಳು ಮಾತ್ರ ಫಿರೋಝಾಬಾದಿನಲ್ಲಿ ಇಂದು ಬಾಕಿಯುಳಿದಿವೆ. ಹದಿನೆಂಟನೆಯ ಶತಮಾನದ ಉತ್ತರಾರ್ಧದಲ್ಲಿ ನಿಝಾಮ್ ಸರಕಾರದ ಅಧೀನದಲ್ಲಿ ಬ್ರಿಟಿಷ್ ಅಧಿಕಾರಿ ಕೊಲಿನ್ ಮೆಕೆಂಜಿ ಫಿರೋಝಾಬಾದಿಗೆ ಭೇಟಿ ನೀಡಿ ಭೂ - ಸರ್ವೇ ಕಾರ್ಯ ಪೂರ್ಣಗೊಳಿಸುತ್ತಾರೆ. ಆ ಮೂಲಕ ತಯಾರಿಸಿದ ಅವಶೇಷಗಳ ವರ್ಣಚಿತ್ರ ಸಹಿತವಿರುವ ತಮ್ಮ ಸಂಶೋಧನಾ ಪತ್ರವು ಲಂಡನ್ನಿನ ಬ್ರಿಟಿಷ್ ಲೈಬ್ರೆರಿಯಲ್ಲಿ ಇಂದಿಗೂ ಕಾಣಬಹುದು. ಪುರಾತತ್ವ ಸಂರಕ್ಷಣಾ ಇಲಾಖೆ ಇಲ್ಲಿ ತೋರಿದ ಸಂಪೂರ್ಣ ನಿರ್ಲಕ್ಷ್ಯದಿಂದಾಗಿ ಬಹುತೇಕ ಅರಮನೆಗಳು, ಕೋಟೆಗಳು ಅವಶೇಷಗಳ ರೂಪದಲ್ಲಿ ಪಾಳು ಕೊಂಪೆಯಂತಾಗಿವೆ. ಇಂದು ಸ್ಥಳೀಯರ ಕಣ್ಣಿನಲ್ಲಿ ಬರೀ ಕಲ್ಲಿನ ಗೋಡೆಗಳಾಗಿರುವ ಈ ಕೋಟೆ ಒಂದು ಕಾಲದ ವೈಭವ ನಗರಿಯಾಗಿತ್ತು ಎನ್ನುವಾಗ ರೋಮಾಂಚನಗೊಳ್ಳುತ್ತದೆ. ಕಾಲ ಮರೆತರೂ ಫೆರಿಸ್ತಾ, ತಬಾತಬಿಯಂತಹ ಮಧ್ಯಕಾಲೀನ ಪ್ರಮುಖ ವಿದ್ವಾಂಸರ ಚರಿತ್ರೆಯ ಪುಟಗಳಲ್ಲಿ ಫಿರೋಝಾಬಾದ್ನ ಭವ್ಯ ಇತಿಹಾಸ ಭದ್ರವಾಗಿದೆ.
ಪರಮಾತ್ಮ ಹೇಳಿದ್ರೂ ಹಿಂದೆ ಸರಿಯಲ್ಲ ಎಂದಿದ್ದ ಕಾಂಗ್ರೆಸ್ನ ಸಾದಿಕ್ ಪೈಲ್ವಾನ್ ನಾಮಪತ್ರ ಹಿಂಪಡೆಯಲು ಇದೆ ಹಲವು ಕಾರಣ
ದಾವಣಗೆರೆ ದಕ್ಷಿಣ ಕ್ಷೇತ್ರದ ಉಪಚುನಾವಣೆಗೆ ಕಾಂಗ್ರೆಸ್ನಿಂದ ಶಾಮನೂರು ಕುಟುಂಬಕ್ಕೆ ಟಿಕೆಟ್ ನೀಡುತ್ತಿದ್ದಂತೆ ಕಾಂಗ್ರೆಸ್ ವಿರುದ್ಧ ಬಂಡಾಯ ಘೋಷಿಸಿ, ನಾಮಪತ್ರ ಸಲ್ಲಿಸಿದ್ದ ಸಾದಿಕ್ ಪೈಲ್ವಾನ್ ನಾಮಪತ್ರ ವಾಪಸ್ ಪಡೆದಿದ್ದಾರೆ. ಪರಮಾತ್ಮ ಬಂದು ಹೇಳಿದರೂ ನಾಮಪತ್ರ ವಾಪಸ್ ತಗೊಳ್ಳಲ್ಲ ಎಂದಿದ್ದ ಸಾದಿಕ್ ಪೈಲ್ವಾನ್ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾದ ನಂತರ ಕಾಂಗ್ರೆಸ್ ಅಭ್ಯರ್ಥಿ ಸಮರ್ಥ್ ಶಾಮನೂರಿಗೆ ಬೆಂಬಲ ಸೂಚಿಸಿದ್ದರು. ಇದೀಗ
ವಿರಾಟ್ ಅಸಲಿ ಆಟ ಇನ್ನೂ ಬಾಕಿಯಿದೆ; ಕಿಂಗ್ ಕೊಹ್ಲಿಗೆ ವಿಷೇಶ ಮನವಿ ಮಾಡಿಕೊಂಡ ಅಂಬಟಿ ರಾಯುಡು, ಭಾರೀ ವೈರಲ್
Virat Kohli: ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2026ರ ಉದ್ಘಟಾನಾ ಪಂದ್ಯದಲ್ಲಿ ಎಸ್ಆರ್ಎಚ್ ವಿರುದ್ಧ ಆರ್ಸಿಬಿ ಪರ ಕೊಹ್ಲಿ ಅಬ್ಬರದ ಬ್ಯಾಟಿಂಗ್ ಆಡಿ ತಂಡದ ಗೆಲುವಿಗೆ ಪ್ರಮುಖ ಪಾತ್ರವಹಿಸಿದರು. ಬಳಿಕ ಟೀಮ್ ಇಂಡಿಯಾ ಕ್ರಿಕೆಟರ್ ಅಂಬಟಿ ರಾಯುಡು ವಿರಾಟ್ ಬಗ್ಗೆ ಅಚ್ಚರಿ ಹೇಳಿಕೆ ನೀಡಿ ಗಮನ ಸೆಳೆದಿದ್ದಾರೆ. ಐಪಿಎಲ್ 2026ರ ಉದ್ಘಟನಾ ಪಂದ್ಯದಲ್ಲಿ ಸನ್ ರೈಸರ್ಸ್
Tamil Nadu| ತನ್ನ ಚಾಲಕನ ಮಗನಿಗೆ MLA ಟಿಕೆಟ್ ನೀಡಿದ ನಟ ವಿಜಯ್; ಗಮನಸೆಳೆದ ಭಾವನಾತ್ಮಕ ಕ್ಷಣ
ಚೆನ್ನೈ: ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷದ ಅಭ್ಯರ್ಥಿಗಳ ಘೋಷಣೆಯ ವೇಳೆ ಹೃದಯಸ್ಪರ್ಶಿ ಘಟನೆಯೊಂದು ಗಮನಸೆಳೆಯಿತು. ನಟ-ರಾಜಕಾರಣಿ ವಿಜಯ್ ಅವರು ತಮ್ಮ ದೀರ್ಘಕಾಲದ ಚಾಲಕ ಹಾಗೂ ಆಪ್ತ ಸಹಾಯಕ ರಾಜೇಂದ್ರನ್ ಅವರ ಪುತ್ರ ಶಬರಿನಾಥನ್ ಅವರನ್ನು ವಿರುಗಂಬಕ್ಕಂ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಘೋಷಿಸಿದರು. ಈ ಘೋಷಣೆಯ ವೇಳೆ ಭಾವುಕರಾದ ಶಬರಿನಾಥನ್, ವಿಜಯ್ ಅವರನ್ನು ಅಪ್ಪಿಕೊಂಡರು. ವಿಜಯ್ ಅವರು ಅವರನ್ನು ಸಮಾಧಾನಪಡಿಸಿ ಕಣ್ಣೀರು ಒರೆಸಿದರು. ಹಲವು ವರ್ಷಗಳಿಂದ ವಿಜಯ್ ಜೊತೆ ಇರುವ ರಾಜೇಂದ್ರನ್ ಅವರ ಕಣ್ಣುಗಳಲ್ಲೂ ಕಣ್ಣೀರು ತುಂಬಿಕೊಂಡಿತ್ತು. ►234 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ರವಿವಾರ ನಡೆದ ಕಾರ್ಯಕರ್ತರ ಸಭೆಯಲ್ಲಿ, ಎಪ್ರಿಲ್ 23ರಂದು ನಡೆಯಲಿರುವ ತಮಿಳುನಾಡು ವಿಧಾನಸಭಾ ಚುನಾವಣೆಗೆ ಟಿವಿಕೆ ಪಕ್ಷವು ಎಲ್ಲಾ 234 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿತು. ತಮ್ಮ ಚುನಾವಣಾ ಚೊಚ್ಚಲ ಪ್ರವೇಶವಕ್ಕಾಗಿ ವಿಜಯ್ ಅವರು ಚೆನ್ನೈನ ಪೆರಂಬೂರು ಮತ್ತು ತಿರುಚಿರಾಪಳ್ಳಿ (ಪೂರ್ವ) ಕ್ಷೇತ್ರಗಳಿಂದ ಸ್ಪರ್ಧಿಸುವುದಾಗಿ ತಿಳಿಸಿದರು. ನಗರದ ಪಂಚತಾರಾ ಹೋಟೆಲ್ ನಲ್ಲಿ ನಡೆದ ಸಭೆಯಲ್ಲಿ “ಈ ಎರಡು ಕ್ಷೇತ್ರಗಳಿಂದ ಸಿ. ಜೋಸೆಫ್ ವಿಜಯ್ ಸ್ಪರ್ಧಿಸಲಿದ್ದಾರೆ” ಎಂದು ಘೋಷಣೆ ಮಾಡಿದಾಗ ಕಾರ್ಯಕರ್ತರಿಂದ ಭಾರೀ ಹರ್ಷೋದ್ಗಾರ ವ್ಯಕ್ತವಾಯಿತು. ಉಳಿದ 232 ಕ್ಷೇತ್ರಗಳ ಅಭ್ಯರ್ಥಿಗಳನ್ನು ಪರಿಚಯಿಸಿದ ವಿಜಯ್, ಆಯ್ಕೆ ಪ್ರಕ್ರಿಯೆ ಜನಸೇವೆ ಮತ್ತು ಬದ್ಧತೆಯನ್ನು ಆಧಾರವಾಗಿಟ್ಟುಕೊಂಡು ನಡೆದಿದೆ ಎಂದು ಹೇಳಿದರು. “ನಾನು ಜನರೊಂದಿಗೆ ಇರುವವರನ್ನೇ ಆಯ್ಕೆ ಮಾಡಿದ್ದೇನೆ. ಅವರು ಕೇವಲ ಅಭ್ಯರ್ಥಿಗಳು ಅಲ್ಲ, ‘ಮಕ್ಕಳ್ ಕಪ್ಪಾಲರ್ಗಲ್’— ಜನರ ರಕ್ಷಕರು,” ಎಂದು ಹೇಳಿದರು. ಮತದಾರರು ಸಂಪೂರ್ಣ ಬೆಂಬಲ ನೀಡುವಂತೆ ಮನವಿ ಮಾಡಿದರು. ಮುಂದಿನ ಚುನಾವಣೆಯಲ್ಲಿ ಟಿವಿಕೆ ಮತ್ತು ಡಿಎಂಕೆ ನೇತೃತ್ವದ ಮೈತ್ರಿಕೂಟದ ನಡುವೆ ಪ್ರಮುಖ ಪೈಪೋಟಿ ನಡೆಯಲಿದೆ ಎಂದು ವಿಜಯ್ ಹೇಳಿದರು. ಆಡಳಿತ ಪಕ್ಷವನ್ನು “ಪ್ಯಾಚ್-ಅಪ್” ಎಂದು ಟೀಕಿಸಿದ ಅವರು, “ಇದು ಪೀಳಿಗೆಯ ಚುನಾವಣಾ ಯುದ್ಧ” ಎಂದು ಹೇಳಿದರು. Gen Z ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಪಕ್ಷದ ‘ಶಿಳ್ಳೆ’ ಚಿಹ್ನೆಗೆ ಮತ ನೀಡುವಂತೆ ಅವರು ಕರೆ ನೀಡಿದರು. ಅಭ್ಯರ್ಥಿಗಳಿಂದ ತಮ್ಮ ನಿರೀಕ್ಷೆಗಳನ್ನು ವಿವರಿಸಿದ ವಿಜಯ್, ಪ್ರಾಮಾಣಿಕತೆ ಹಾಗೂ ಸಾರ್ವಜನಿಕ ಸೇವೆಯ ಮಹತ್ವವನ್ನು ಒತ್ತಿಹೇಳಿದರು. Namma Kuda Irkavangala Namma Pathukitta , Namaku Mela Irkavan Nammala Paarthupaan Thalapathy Vijay Personal Driver Rajendran & his Son Got Emotional ♥️ #TVKPeopleCandidates pic.twitter.com/dIe7bqZpo0 — Arun Vijay (@AVinthehousee) March 29, 2026
ತಮಿಳುನಾಡು ವಿಧಾನಸಭಾ ಚುನಾವಣೆ |ಸಿಎಂ ಎಂ.ಕೆ.ಸ್ಟಾಲಿನ್, TVK ಮುಖ್ಯಸ್ಥ ವಿಜಯ್ ನಾಮಪತ್ರ ಸಲ್ಲಿಕೆ
ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಹಾಗೂ ಟಿವಿಕೆ ಮುಖ್ಯಸ್ಥ ವಿಜಯ್ ಇಂದು ನಾಮಪತ್ರ ಸಲ್ಲಿಸಿದರು. ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಕೊಳತ್ತೂರು ವಿಧಾನಸಭಾ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದರೆ, ಟಿವಿಕೆ ಮುಖ್ಯಸ್ಥ ವಿಜಯ್ ಅವರು ಪೆರಂಬೂರ್ ವಿಧಾನಸಭಾ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದರು. ಆ ಮೂಲಕ ಅವರು ಅಧಿಕೃತವಾಗಿ ಚುನಾವಣಾ ಕಣಕ್ಕಿಳಿದ್ದಾರೆ. ಇದಲ್ಲದೆ ಅವರು ತಿರುಚಿರಾಪಳ್ಳಿ ಪೂರ್ವ ವಿಧಾನಸಭಾ ಕ್ಷೇತ್ರದಿಂದಲೂ ಸ್ಪರ್ಧಿಸಲಿದ್ದಾರೆ. ನಾಮಪತ್ರ ಸಲ್ಲಿಸಿದ ಬಳಿಕ ರೋಡ್ ಶೋ ನಡೆಸಿದ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್, “ಇಡೀ ರಾಜ್ಯದಲ್ಲಿ ಡಿಎಂಕೆ ಅಧಿಕಾರಕ್ಕೆ ಮರಳಲಿದೆ” ಎಂದು ವಿಶ್ವಾಸ ವ್ಯಕ್ತಪಡಿಸಿದರು. “ಈ ಪ್ರಾಂತ್ಯದ ಜನರು ನಮ್ಮ ಭರವಸೆಗಳನ್ನು ಉತ್ತಮ ರೀತಿಯಲ್ಲಿ ಸ್ವೀಕರಿಸಲಿದ್ದಾರೆ. ನಾವು ದೊಡ್ಡ ಬಹುಮತದೊಂದಿಗೆ ಗೆಲುವು ಸಾಧಿಸುತ್ತೇವೆ ಎಂಬ ವಿಶ್ವಾಸ ನಮಗಿದೆ” ಎಂದು ಅವರು ಹೇಳಿದ್ದಾರೆ.
ಕೊಂಕಣಿ ಸಾಹಿತ್ಯ ಅಕಾಡಮಿ 2025ನೇ ಸಾಲಿನ ಗೌರವ, ಪುಸ್ತಕ ಪ್ರಶಸ್ತಿ ಪ್ರಕಟ
ರೊನ್ ರೊಚ್, ರಾಮದಾಸ, ಸೈರು ಪುತ್ತು ನಾಯ್ಕಗೆ ಗೌರವ ಪ್ರಶಸ್ತಿ
ಮಧ್ಯಪ್ರಾಚ್ಯ ಸಂಘರ್ಷ ಅಮೆರಿಕ- ಇರಾನ್- ಇಸ್ರೇಲ್ ನಡುವೆ ಕೇಂದ್ರೀಕೃತವಾಗಿದ್ದರೂ, ಇರಾನ್ ಈ ಯುದ್ಧವನ್ನು ಇಡೀ ಗಲ್ಫ್ ರಾಷ್ಟ್ರಗಳಿಗೆ ವಿಸ್ತರಿಸಿದೆ. ಅಮೆರಿಕ ಸೇನೆಗೆ ಗಲ್ಫ್ ರಾಷ್ಟ್ರಗಳು ನೆಲೆ ಕೊಟ್ಟಿದ್ದೇ ಈ ದಾಳಿಗೆ ಕಾರಣ. ಕೇವಲ ಗಲ್ಫ್ ರಾಷ್ಟ್ರಗಳಿಗಷ್ಟೇ ಅಮೆರಿಕ ಸೇನಾ ನೆಲೆಗಳು ಸೀಮಿತವಾಗಿಲ್ಲ, ವಿಶ್ವದ 70ಕ್ಕೂ ಹೆಚ್ಚು ದೇಶಗಳಲ್ಲಿ ಸೇನಾ ನೆಲೆಗಳನ್ನು ನಿಯೋಜಿಸಿದೆ. ಅಮೆರಿಕದ ಈ ತಂತ್ರಗಾರಿಕೆಯ ಹಿಡನ್ ಅಜೆಂಡಾ ಏನು ?, ಶತ್ರು ರಾಷ್ಟ್ರಗಳಿಗೆ ಈ ನೆಲೆಗಳು ಹೇಗೆ ಅಪಾಯಕಾರಿ ?
ಕುವೈತ್ ನ ವಿದ್ಯುತ್ ಮತ್ತು ಉಪ್ಪುನೀರಿನ ಸಂಸ್ಕರಣಾ ಘಟಕದ ಮೇಲೆ ಇರಾನ್ ದಾಳಿಗೆ ಭಾರತೀಯ ಪ್ರಜೆ ಬಲಿ
ಮಧ್ಯಪ್ರಾಚ್ಯದಲ್ಲಿನ ಸಂಘರ್ಷ ಉಲ್ಬಣಗೊಳ್ಳುತ್ತಿದ್ದು, ಕುವೈತ್ ನ ವಿದ್ಯುತ್ ಸ್ಥಾವರ ಮತ್ತು ನೀರು ಶುದ್ಧೀಕರಣ ಘಟಕವನ್ನು ಗುರಿಯಾಗಿಸಿ ಇರಾನ್ ದಾಳಿ ನಡೆಸಿದ್ದು, ಈ ದಾಳಿಗೆ ಭಾರತೀಯ ಮೂಲದ ಕಾರ್ಮಿಕರೊಬ್ಬರು ಬಲಿಯಾಗಿದ್ದಾರೆ. ಈ ಕುರಿತು ಕುವೈತ್ ಸರ್ಕಾರ ಹಾಗೂ ಭಾರತೀಯ ರಾಯಭಾರಿ ಕಚೇರಿ ದೃಢಪಡಿಸಿದೆ. ಇನ್ನು, ಯುದ್ಧ ಆರಂಭವಾದಾಗಿನಿಂದ ಈವರೆಗೂ ಗಲ್ಫ್ ನಲ್ಲಿ 7 ಮಂದಿ ಭಾರತೀಯರು ಸಾವನ್ನಪ್ಪಿರುವುದಾಗಿ ವರದಿಯಾಗಿದ್ದು, ಅಲ್ಲಿನ ಪರಿಸ್ಥಿತಿ ಬಿಗಾಡಾಯಿಸುತ್ತಿದೆ.
ದೇವನಹಳ್ಳಿ : ರಾಮನವಮಿ ಅನ್ನಪ್ರಸಾದ ಸೇವಿಸಿದ 200 ಕ್ಕೂ ಹೆಚ್ಚು ಗ್ರಾಮಸ್ಥರ ಆರೋಗ್ಯದಲ್ಲಿ ಏರುಪೇರು
ದೇವಾಲಯದಲ್ಲಿ ವಿತರಿಸಲಾದ ಅನ್ನಪ್ರಸಾದ ಸೇವಿಸಿದ ಸುಮಾರು 200 ಮಂದಿ ಅಸ್ವಸ್ಥಗೊಂಡಿರುವ ಘಟನೆ ದೇವನಹಳ್ಳಿ ತಾಲೂಕಿನ ಜಾಲಿಗೆ ಗ್ರಾಪಂ ವ್ಯಾಪ್ತಿಯ ಬೆಟ್ಟೇನಹಳ್ಳಿ ಗ್ರಾಮದಲ್ಲಿ ನಡೆದಿದೆ. ಪ್ರತಿವರ್ಷದಂತೆ ಈ ಬಾರಿಯೂ ಶನಿವಾರ ಶ್ರೀರಾಮನವಮಿ ಹಿನ್ನೆಲೆ ವಿಶೇಷ ಪೂಜೆ ಸಲ್ಲಿಸಿ ಅನ್ನಪ್ರಸಾದ ವಿತರಿಸಲಾಯಿತು. ಪ್ರಸಾದ ಸೇವಿಸಿದ ಅನೇಕರಿಗೆ ಫುಡ್ ಪಾಯಿಸನ್ನಿಂದ ರಾತ್ರಿ 10 ಗಂಟೆಯ ನಂತರ ಆರೋಗ್ಯದಲ್ಲಿ ಏರುಪೇರು ಕಾಣಿಸಿಕೊಂಡಿದ್ದು, ಸ್ಥಳೀಯ ಸರಕಾರಿ, ಖಾಸಗಿ ಆಸ್ಪತ್ರೆಗಳಿಗೆ ದಾಖಲಾಗಿದ್ದಾರೆ. ಎಲ್ಲರ ಆರೋಗ್ಯ ಸ್ಥಿರವಾಗಿದೆ ಎಂದು ಗ್ರಾಮಸ್ಥರು ಮಾಹಿತಿ ನೀಡಿದ್ದಾರೆ.
ಕಣಂತೂರಿನ ಮಾದರಿ ಮನೆಗೆ ಜನಶಿಕ್ಷಣ ಟ್ರಸ್ಟ್ನ 'ಸ್ವಚ್ಛ' ಪ್ರಶಸ್ತಿಯ ಗರಿ ಹೂತೋಟ
ಕೈತೋಟದಲ್ಲಿ ಕಾಡು ಹಕ್ಕಿಗಳ ಕಲರವ!
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ
ಬೆಂಗಳೂರು: ವಾರದ ಆರಂಭದಲ್ಲೇ ಆಭರಣ ಪ್ರಿಯರಿಗೆ ಮತ್ತು ಹೂಡಿಕೆದಾರರಿಗೆ ಬಂಗಾರದಂತಹ ಸುದ್ದಿ ಸಿಕ್ಕಿದೆ. ಕಳೆದ ಕೆಲವು ದಿನಗಳಿಂದ ಏರಿಳಿತ ಕಾಣುತ್ತಿದ್ದ ಹಳದಿ ಲೋಹದ ಬೆಲೆಯಲ್ಲಿ ಇಂದು ಗಣನೀಯ ಕುಸಿತ ಕಂಡುಬಂದಿದೆ. ಬೆಂಗಳೂರಿನಲ್ಲಿ ಇಂದು 24 ಕ್ಯಾರೆಟ್ ಮತ್ತು 22 ಕ್ಯಾರೆಟ್ ಚಿನ್ನದ ದರಗಳು ಇಳಿಕೆಯಾಗಿದ್ದು, ಮದುವೆ ಹಾಗೂ ಶುಭ ಸಮಾರಂಭಗಳಿಗಾಗಿ ಚಿನ್ನ ಖರೀದಿಸಲು ಯೋಜಿಸುತ್ತಿದ್ದ ಗ್ರಾಹಕರಿಗೆ ಇದು
LPG ಒತ್ತಡ ತಗ್ಗಿಸಲು ಸೀಮೆಎಣ್ಣೆ ಮರುಪೂರೈಕೆಗೆ ಕೇಂದ್ರ ಸರಕಾರ ನಿರ್ಧಾರ | ಪೆಟ್ರೋಲ್ ಬಂಕ್ ಗಳ ಮೂಲಕ ವಿತರಣೆ
60 ದಿನಗಳಿಗೆ ನಿಯಮ ಸಡಿಲಿಕೆ; ಪ್ರತೀ ಜಿಲ್ಲೆಯ ಎರಡು ಬಂಕ್ ಗಳ ಮೂಲಕ ವಿತರಣೆಗೆ ಸಿದ್ಧತೆ
ಮಧ್ಯಪ್ರಾಚ್ಯ ಸಂಘರ್ಷ: ಗೋಡಂಬಿ ಉದ್ಯಮದಲ್ಲೂ ತಲ್ಲಣ
ಮಂಗಳೂರು, ಮಾ.30: ಮಧ್ಯಪಾಚ್ಯ ಸಂಘರ್ಷವೂ ಈಗಾಗಲೇ ಜನಸಾಮಾನ್ಯರ ಮೇಲೆ ಒಂದಿಲ್ಲೊಂದು ರೀತಿಯಲ್ಲಿ ವ್ಯತಿರಿಕ್ತ ಪರಿಣಾಮ ಬಿರುತ್ತಿರುವಂತೆಯೇ, ಕರಾವಳಿಯ ಪ್ರಮುಖ ಉದ್ಯಮಗಳಲ್ಲಿ ಒಂದಾಗಿರುವ ಗೋಡಂಬಿ ಉದ್ಯಮವೂ ತಲ್ಲಣಗೊಂಡಿದೆ. ಯುದ್ಧದ ವಾತಾವರಣದಿಂದಾಗಿ ಒಂದೆಡೆ ವಿದೇಶಗಳಿಗೆ ಗೋಡಂಬಿ ಉತ್ಪನ್ನಗಳ ರಫ್ತು ಪ್ರಕ್ರಿಯೆಗೆ ಅಡಚಣೆ ಆಗಿದ್ದು, ವಿದೇಶಗಳಿಂದ ಆಮದು ಮಾಡಿಕೊಳ್ಳಲಾಗುತ್ತಿದ್ದ ಕಚ್ಚಾ ಗೇರುಬೀಜ ಆಮದು ಪ್ರಕ್ರಿಯೆಗೆ ಹೆಚ್ಚುವರಿ ವೆಚ್ಚದ (ಶಿಪ್ಪಿಂಗ್ ಚಾರ್ಜಸ್)ಹೊರೆ ಬಿದ್ದಿದೆ. ಮಧ್ಯಪ್ರಾಚ್ಯದ ದುಬೈ, ಯುಎಇ, ಸೌದಿ ಅರಬಿಯಾ, ಇರಾನ್, ಇರಾಕ್ ಮೊದಲಾದ ದೇಶಗಳು ಭಾರತದ ಗೋಡಂಬಿ ಉತ್ಪನ್ನದ ಪ್ರಮುಖ ಗ್ರಾಹಕ ರಾಷ್ಟ್ರಗಳು. ಅದರಲ್ಲೂ ಕರಾವಳಿಯಲ್ಲಿ ಬೆಳೆದ ಗೇರುಬೀಜ ಹಾಗೂ ಸಂಸ್ಕರಿಸಲ್ಪಟ್ಟ ಉತ್ಪನ್ನಗಳಿಗೆ ಮಧ್ಯಪ್ರಾಚ್ಯ ಹಾಗೂ ಅಮೆರಿಕ ದೇಶಗಳು ಪ್ರಮುಖ ಮಾರುಕಟ್ಟೆಗಳಾಗಿವೆ. ಗೋಡಂಬಿ ಸೇರಿದಂತೆ ಭಾರತದ ಒಣಹಣ್ಣುಗಳಿಗೆ ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಅಪಾರ ಪ್ರಮಾಣದ ಗ್ರಾಹಕರಿದ್ದಾರೆ. ಆದರೆ ಒಂದು ತಿಂಗಳಿನಿಂದೀಚೆಗೆ ಈ ರಾಷ್ಟ್ರಗಳಿಗೆ ಗೋಡಂಬಿ ಹಾಗೂ ಉಪ ಉತ್ಪನ್ನಗಳ ರಫ್ತು ಪ್ರಕ್ರಿಯೆ ಸ್ಥಗಿತಗೊಂಡಿದೆ. ಭಾರತಕ್ಕೆ ಮುಖ್ಯವಾಗಿ ಕಚ್ಚಾ ಗೇರುಬೀಜ ಆಫ್ರಿಕದಿಂದ ಆಮದಾಗುತ್ತದೆ. ಹಡಗಿನ ಮೂಲಕ ಇಲ್ಲಿಗೆ ಕಚ್ಚಾ ಗೇರುಬೀಜ ಆಮದು ಪ್ರಕ್ರಿಯೆ ನಡೆಯುತ್ತಿದ್ದು, ಯುದ್ಧದ ಸನ್ನಿವೇಶದಿಂದಾಗಿ ಹಡಗುಗಳ ಸಾಗಾಟ ವೆಚ್ಚದಲ್ಲಿ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದೆ. ಸಾಮಾನ್ಯ ಶಿಪ್ಪಿಂಗ್ ವೆಚ್ಚಕ್ಕಿಂತ ಶೇ. 40ಕ್ಕೂ ಅಧಿಕ ಪ್ರಮಾಣದಲ್ಲಿ ಏರಿಕೆ ಮಾಡಿರುವುದರಿಂದ ಬಹಳಷ್ಟು ಫ್ಯಾಕ್ಟರಿಗಳು ಆಮದು ಪ್ರಕ್ರಿಯೆಗಳನ್ನು ಸದ್ಯ ಸ್ಥಗಿತಗೊಳಿಸಿವೆ. ಸರಕು ಸಾಗಾಟದ ಹಡಗಿನ ಸಂಖ್ಯೆಯಲ್ಲೂ ಇಳಿಕೆಯಾಗಿರುವುದು ಭಾರತದ ಗೋಡಂಬಿ ವ್ಯವಹಾರದ ಮೇಲೆ ಪರಿಣಾಮ ಬಿದ್ದಿದೆ. ಭಾರತಕ್ಕೆ ಕಚ್ಚಾ ಗೇರು ಬೀಜಗಳು ಆಮದು ಪ್ರಕ್ರಿಯೆ ಸಾಮಾನ್ಯವಾಗಿ ಒಂದರಿಂದ ಒಂದೂವರೆ ತಿಂಗಳು ತಡವಾಗ ಬಹುದು. ಹಾಗಾಗಿ ಭಾತದ ಗೇರುಬೀಜ ಸಂಸ್ಕರಣಾ ಘಟಕಗಳಲ್ಲಿ ಈ ಬಾರಿ ಪೂರ್ಣ ಪ್ರಮಾಣದ ಉತ್ಪಾದನೆ ಸಾಧ್ಯವಾಗದು. ಸಾಮಾನ್ಯವಾಗಿ ಮಾರ್ಚ್ 15ರಿಂದ ಎಪ್ರಿಲ್ 15ರ ಅವಧಿಯಲ್ಲಿ ಕಚ್ಚಾ ಗೇರುಬೀಜಿ ಆಫ್ರಿಕ ಸೇರಿದಂತೆ ಹೊರ ರಾಷ್ಟ್ರಗಳಿಂದ ಆಮದಾಗುತ್ತಿತ್ತು. ಈ ಪ್ರಕ್ರಿಯೆ ಮೇ 15ರಿಂದ ಜೂನ್ 15ಕ್ಕೆ ಮುಂದೂಡಲ್ಪಡುವ ಸಾಧ್ಯತೆ ಇದೆ. ನಮ್ಮ ದೇಶದಿಂದ 50 ಸಾವಿರದಿಂದ 55 ಸಾವಿರ ಟನ್ ಸಂಸ್ಕರಣೆಗೊಂಡ ಗೋಡಂಬಿ ಹಾಗೂ ಉಪ ಉತ್ಪನ್ನಗಳು ಹೊರ ದೇಶಗಳಿಗೆ ರಫ್ತಾಗುತ್ತವೆ. ಇದರಲ್ಲಿ ಸುಮಾರು 30 ಸಾವಿರ ಟನ್ ಯುಎಇ ದೇಶಗಳಿಗೆ ರಫ್ತಾಗುತ್ತಿತ್ತು. ಈ ರಫ್ತಿನಲ್ಲಿ ಶೇ.70ರಷ್ಟು ಸಮಸ್ಯೆ ಆಗಿದೆ ಎನ್ನುತ್ತಾರೆ ಗೇರುಬೀಜ ಫ್ಯಾಕ್ಟರಿಗಳ ಮಾಲಕರು. ಈ ನಡುವೆ ವಾಣಿಜ್ಯ ಬಳಕೆಯ ಎಲ್ಪಿಜಿ ಕೊರತೆಯಿಂದ ಹೊಟೇಲ್, ಕ್ಯಾಟರಿಂಗ್, ರೆಸ್ಟೋರೆಂಟ್ಗಳು ಒದ್ದಾಡುತ್ತಿರುವು ದರಿಂದ ಮುಂದಿನ ದಿನಗಳಲ್ಲಿ ಮದುವೆ ಕಾರ್ಯಕ್ರಮಗಳು, ರೆಸ್ಟೋರೆಂಟ್, ಹೋಟೆಲ್ ಉದ್ಯಮದಲ್ಲಿ ಶೇ.50ರಷ್ಟು ಕಡಿತಗೊಳ್ಳುವ ಸಾಧ್ಯತೆ ಇದೆ. ನಮ್ಮ ಫ್ಯಾಕ್ಟರಿಗಳಲ್ಲಿನ ತುಂಡು ಗೇರುಬೀಜ ಹೋಟೆಲ್, ಕ್ಯಾಟರಿಂಗ್ ಉದ್ಯಮದಲ್ಲಿ ಬಳಕೆಯಾಗುತ್ತದೆ. ಹಾಗಾಗಿ ಇದು ಕೂಡಾ ಗೇರು ಉದ್ಯಮದ ಮೇಲೂ ಗಂಭೀರ ಪರಿಣಾಮ ಬೀಳುವ ಸಾಧ್ಯತೆ ಇದೆ. ಕರಾವಳಿ ಜಿಲ್ಲೆಯ ಸಾಮಾನ್ಯ ಜನರ ಜೀವನಾಧಾರವಾಗಿದ್ದ ಗೇರುಬೀಜ ಉದ್ಯಮ ಈಗಾಗಲೇ ಅವಸಾನದತ್ತ ಸಾಗಿದೆ. ಕಳೆದ ಒಂದೂವರೆ ದಶಕದಲ್ಲಿ 100ಕ್ಕೂ ಅಧಿಕ ಗೋಡಂಬಿ ಫ್ಯಾಕ್ಟರಿಗಳ ಬಾಗಿಲು ಮುಚ್ಚಲ್ಪಟ್ಟಿವೆ. ಕೆಲವು ಫ್ಯಾಕ್ಟರಿಗಳು ದಿವಾಳಿ ಅಂಚಿನಲ್ಲಿದ್ದರೆ, ಇರುವ ಬಹುತೇಕ ಫ್ಯಾಕ್ಟರಿಗಳು ಮಾನವ ಶ್ರಮದಿಂದ ಯಾಂತ್ರೀಕೃತ ವ್ಯವಸ್ಥೆಗೆ ಒಗ್ಗಿಕೊಂಡಿವೆ. ಹಾಗಾಗಿ ಗೋಡಂಬಿ ಕಾರ್ಖಾನೆಯಲ್ಲಿ ದುಡಿಯುತ್ತಿದ್ದ ಸಾವಿರಾರು ಸಂಖ್ಯೆಯ ಕೈಗಳಿಗೆ ಕೆಲಸ ಇಲ್ಲದಂತಾಗಿದ್ದರೆ, ಇರುವ ಒಂದಷ್ಟು ಮಂದಿಯ ಉದ್ಯೋಗದ ಭವಿಷ್ಯವನ್ನೂ ಮಧ್ಯಪ್ರಾಚ್ಯ ಯುದ್ಧದ ಪರಿಸ್ಥಿತಿ ಅಡಕತ್ತರಿಯಲ್ಲಿ ಸಿಲುಕಿಸಿದೆ. ದೇಶದಲ್ಲಿ ಗೇರುಬೀಜಕ್ಕೆ ಭಾರೀ ಬೇಡಿಕೆ ಇರುವುದರಿಂದ ಸುಮಾರು 11ರಿಂದ 12 ಲಕ್ಷ ಟನ್ ಗೇರುಬೀಜವನ್ನು ಆಫ್ರಿಕ, ಇಂಡೋನೇಶ್ಯ, ವಿಯೆಟ್ನಾಂ ಮೊದಲಾದ ದೇಶಗಳಿಂದ ಆಮದು ಮಾಡಿಕೊಳ್ಳಲಾಗುತ್ತದೆ. ಕರ್ನಾಟಕದ ಗೇರುಬೀಜ ಸಂಸ್ಕರಣಾ ಘಟಕಗಳು ಕೂಡಾ ಬಂದರುಗಳ ಮೂಲಕ ಹೊರ ರಾಷ್ಟ್ರಗಳ ಗೇರು ಬೀಜಗಳನ್ನೇ ಅವಲಂಬಿಸಿವೆ. ಗೋಡಂಬಿ ಹಾಗೂ ಗೋಡಂಬಿಯ ಇತರ ಉತ್ಪನ್ನಗಳಿಗೆ ದೇಶೀಯ ಮಾರುಕಟ್ಟೆ ಉತ್ತಮವಾಗಿದೆ. ಹಾಗಿದ್ದರೂ ಯುದ್ಧದ ಸನ್ನಿವೇಶದ ಪರಿಣಾಮ ಗೋಡಂಬಿ ಸಂಸ್ಕರಣಾ ಘಟಕಗಳ ಮೇಲೂ ಆಗಿದೆ. ಕಚ್ಚಾ ಗೇರುಬೀಜಗಳ ಕೊರತೆ ಫ್ಯಾಕ್ಟರಿಗಳನ್ನು ಕಾಡುತ್ತಿವೆ. ಕಚ್ಚಾ ಗೇರುಬೀಜಕ್ಕಾಗಿ ನಾವು ಸಾಕಷ್ಟು ಪ್ರಮಾಣದಲ್ಲಿ ಆಫ್ರಿಕ ದೇಶವನ್ನು ಅವಲಂಬಿಸಿದ್ದೇವೆ. ಅದರ ಜೊತೆಗೆ ದೇಶದಿಂದ ರಫ್ತಾಗುವ ಸಂಸ್ಕರಣೆಗೊಂಡ ಗೋಡಂಬಿ ಹಾಗೂ ಉಪ ಉತ್ಪನ್ನಗಳ ಶೇ.50ರಷ್ಟು ಗ್ರಾಹಕರು ಮಧ್ಯಪ್ರಾಚ್ಯ ದೇಶಗಳವರು. ಒಂದು ತಿಂಗಳಿನಿಂದ ಈ ದೇಶಗಳಿಗೆ ರಫ್ತು ಸ್ಥಗಿತಗೊಂಡಿದೆ. -ಪ್ರಕಾಶ್ ಕಲ್ಬಾವಿ, ಮಾಜಿ ಅಧ್ಯಕ್ಷರು, ಕರ್ನಾಟಕ ಗೇರುಬೀಜ ಉತ್ಪಾದಕರ ಸಂಘ(ಕೆಸಿಎಂಎ)
ಐಪಿಎಲ್ ಟಿಕೆಟ್ ವಿವಾದ: ಅಚ್ಚರಿ ನಿಲುವು ವ್ಯಕ್ತಪಡಿಸಿದ ಡಿಕೆ ಸುರೇಶ್! ಕಾಸು ಕೊಟ್ಟೇ ಆಟ ನೋಡಿ ಎಂದ ಮಾಜಿ ಸಂಸದ
ಉಚಿತವಾಗಿ ಐಪಿಎಲ್ ಟಿಕೆಟ್ ನೀಡಬೇಕು ಎಂಬ ಶಾಸಕರ ಬೇಡಿಕೆ ಇದೀಗ ಸಾಕಷ್ಟು ವಿವಾದಕ್ಕೆ ಎಡೆಮಾಡಿಕೊಟ್ಟಿದೆ. ಈ ನಡುವೆ ಸಂಸದ ತೇಜಸ್ವಿ ಸೂರ್ಯ ಅವರು ಸರ್ಕಾರ ನಡೆಗೆ ಹಾಗೂ ಶಾಸಕರ ಬೇಡಿಕೆಗೆ ವಿರೋಧ ವ್ಯಕ್ತಪಡಿಸಿದ್ದರು. ಆದರೆ ಸೂರ್ಯ ಹೇಳಿಕೆಗೆ ಡಿಸಿಎಂ ಡಿಕೆ ಶಿವಕುಮಾರ್ ವಿರೋಧ ಸೂಚಿಸಿದ್ದರು. ಈ ನಡುವೆ ಡಿಕೆ ಸುರೇಶ್ ಅಚ್ಚರಿಯ ಹೇಳಿಕೆ ನೀಡಿದ್ದಾರೆ. ಹಣ ಕೊಟ್ಟು ಟಿಕೆಟ್ ಖರೀದಿ ಮಾಡಿ ಐಪಿಎಲ್ ಪಂದ್ಯಾಟ ನೋಡಲಿ ಎಂದು ಅವರು ಶಾಸಕರಿಗೆ ಸಲಹೆ ನೀಡಿದ್ದಾರೆ.
ತಿರುವನಂತಪುರಂ: ಲೋಕಸಭೆಯಲ್ಲಿ ಇತ್ತೀಚೆಗೆ ಮಂಡಿಸಲಾದ ವಿದೇಶಿ ದೇಣಿಗೆ (ನಿಯಂತ್ರಣ) ತಿದ್ದುಪಡಿ ಮಸೂದೆಯ ವಿರುದ್ಧ ಕೇರಳದ ಚರ್ಚುಗಳಲ್ಲಿ ಅಸಮಾಧಾನ ವ್ಯಕ್ತವಾಗಿದ್ದು, ವಿಧಾನಸಭಾ ಚುನಾವಣೆ ಮುನ್ನ ಇದರಿಂದ ಬಿಜೆಪಿಗೆ ರಾಜಕೀಯ ಹಿನ್ನಡೆ ಉಂಟಾಗುವ ಸಾಧ್ಯತೆಗಳ ಬಗ್ಗೆ ಚರ್ಚೆಗಳು ಜೋರಾಗಿವೆ ಎಂದು deccanherald.com ವರದಿ ಮಾಡಿದೆ. ವಿದೇಶಿ ದೇಣಿಗೆಗಳನ್ನು ಸ್ವೀಕರಿಸುವ ಕ್ರಿಶ್ಚಿಯನ್ ಸಮುದಾಯದ ಸಂಸ್ಥೆಗಳನ್ನು ಗುರಿಯಾಗಿಸಿಕೊಂಡೇ ಈ ಕ್ರಮ ಕೈಗೊಳ್ಳಲಾಗಿದೆ ಎಂಬ ಆತಂಕ ಚರ್ಚುಗಳಲ್ಲಿ ವ್ಯಕ್ತವಾಗಿದೆ. ಶೇಕಡಾ 18 ಕ್ಕಿಂತ ಹೆಚ್ಚು ಕ್ರಿಶ್ಚಿಯನ್ ಜನಸಂಖ್ಯೆ ಹೊಂದಿರುವ ರಾಜ್ಯದಲ್ಲಿ ಈ ವಿಚಾರವು ಚುನಾವಣಾ ರಾಜಕೀಯದ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ. ಮಸೂದೆಯಲ್ಲಿ NGOಗಳ ಪರವಾನಗಿಯನ್ನು ಅಮಾನತುಗೊಳಿಸುವುದು, ರದ್ದುಪಡಿಸುವುದು, ನವೀಕರಿಸದಿದ್ದರೆ ಆಸ್ತಿಗಳನ್ನು ವಶಪಡಿಸಿಕೊಳ್ಳುವುದು ಸೇರಿದಂತೆ ಕಠಿಣ ನಿಯಮಗಳನ್ನು ಒಳಗೊಂಡಿದೆ. ನವೀಕರಣ ಅರ್ಜಿಯನ್ನು ತಿರಸ್ಕರಿಸಿದರೂ ಅಥವಾ ಅರ್ಜಿ ಸಲ್ಲಿಸದಿದ್ದರೂ ಪರವಾನಗಿ ರದ್ದಾಗಿದೆ ಎಂದು ಪರಿಗಣಿಸುವ ನಿಬಂಧನೆಗಳನ್ನೂ ಸೇರಿಸಲಾಗಿದೆ. ಇವುಗಳನ್ನು ಚರ್ಚುಗಳು ಎನ್ಜಿಒಗಳ ಮೇಲೆ ಕೇಂದ್ರದ ಹಿಡಿತವನ್ನು ಬಿಗಿಗೊಳಿಸುವ ಕ್ರಮವೆಂದು ಪರಿಗಣಿಸುತ್ತಿವೆ. ಭಾರತದ ಕ್ಯಾಥೋಲಿಕ್ ಬಿಷಪ್ ಗಳ ಸಮ್ಮೇಳನ ಹಾಗೂ ಕೇರಳ ಕ್ಯಾಥೋಲಿಕ್ ಬಿಷಪ್ ಗಳ ಮಂಡಳಿ ಈ ಬಗ್ಗೆ ಕಳವಳ ವ್ಯಕ್ತಪಡಿಸಿವೆ. ಸಿರೋ-ಮಲಬಾರ್ ಚರ್ಚ್ ನ ಚಂಗನಶ್ಶೇರಿ ಆರ್ಚ್ಡಯಾಸಿಸ್ ನ ಆರ್ಚ್ಬಿಷಪ್ ಥಾಮಸ್ ಥರೈಲ್ ಮಾತನಾಡಿ, “ಮಕ್ಕಳ ಶಿಕ್ಷಣ ಮತ್ತು ಆಸ್ಪತ್ರೆಗಳಂತಹ ದತ್ತಿ ಕಾರ್ಯಗಳಿಗೆ ಮಾತ್ರ ವಿದೇಶಿ ದೇಣಿಗೆ ಬಳಸಲಾಗುತ್ತಿದೆ. ಹೊಸ ಕ್ರಮಗಳು ಈ ಚಟುವಟಿಕೆಗಳನ್ನು ತಪ್ಪಾಗಿ ಚಿತ್ರಿಸುತ್ತಿವೆ. ಈಗಾಗಲೇ ವಿದೇಶಿ ನಿಧಿ ಬಳಕೆಯ ಮೇಲೆ ಕಟ್ಟುನಿಟ್ಟಿನ ನಿಯಮಗಳು ಇವೆ” ಎಂದು ಹೇಳಿದ್ದಾರೆ. ಕ್ಯಾಥೋಲಿಕ್ ಕಾಂಗ್ರೆಸ್ ನ ಜಾಗತಿಕ ನಿರ್ದೇಶಕ ಫಾದರ್ ಫಿಲಿಪ್ ಕವಿಯಿಲ್, ಕೇಂದ್ರದ ಕ್ರಮಗಳು ಒಂದು ಸಮುದಾಯವನ್ನು ಗುರಿಯಾಗಿಸಿಕೊಂಡಿವೆ ಎಂಬ ಭಾವನೆಯನ್ನು ಸೃಷ್ಟಿಸುತ್ತಿವೆ ಎಂದು ತಿಳಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ರಾಜ್ಯ ಸಚಿವ ಜಾರ್ಜ್ ಕುರಿಯನ್, “ಹೆಚ್ಚಿನ ಹಿಂದೂ ಸಂಘಟನೆಗಳೂ ವಿದೇಶಿ ದೇಣಿಗೆಗಳನ್ನು ಸ್ವೀಕರಿಸುತ್ತಿವೆ. ಆದ್ದರಿಂದ ಇದನ್ನು ಕ್ರಿಶ್ಚಿಯನ್ ಸಮುದಾಯವನ್ನು ಗುರಿಯಾಗಿಸಿದ ಕ್ರಮವೆಂದು ಹೇಳಲಾಗುವುದಿಲ್ಲ” ಎಂದು ಸ್ಪಷ್ಟಪಡಿಸಿದರು. ಗೃಹ ಸಚಿವಾಲಯದ ಅಂಕಿ ಅಂಶಗಳ ಪ್ರಕಾರ, ಕೇರಳದಲ್ಲಿ ಒಟ್ಟು 3090 ಎಫ್ ಸಿ ಆರ್ ಎ ನೋಂದಾಯಿತ ಸಂಸ್ಥೆಗಳಿದ್ದು, ಅವುಗಳಲ್ಲಿ 1023 ಮಾತ್ರ ಸಕ್ರಿಯವಾಗಿವೆ. 1218 ಸಂಸ್ಥೆಗಳ ಪರವಾನಗಿ ರದ್ದಾಗಿದ್ದು, ಇನ್ನೂ 849 ಸಂಸ್ಥೆಗಳ ಪರವಾನಗಿ ಅವಧಿ ಮುಗಿದಿದೆ ಎಂದು ಪರಿಗಣಿಸಲಾಗಿದೆ. ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ. ಸಿ. ವೇಣುಗೋಪಾಲ್, “ಕ್ರಿಸ್ಮಸ್ ಸಂದರ್ಭದಲ್ಲಿ ಚರ್ಚ್ಗಳಿಗೆ ಭೇಟಿ ನೀಡಿದ ಬಿಜೆಪಿ ನಾಯಕರು, ಈಗ ಎಫ್ಸಿಆರ್ಎ ಕಾನೂನುಗಳಲ್ಲಿ ಹೊಸ ನಿಬಂಧನೆಗಳನ್ನು ತರುತ್ತಿರುವುದು ವಿರೋಧಾಭಾಸ” ಎಂದು ಹೇಳಿದ್ದಾರೆ. ಈ ನಡುವೆ, ಕೇರಳದಲ್ಲಿ ಕ್ರಿಶ್ಚಿಯನ್ ಸಮುದಾಯದ ಬೆಂಬಲ ಪಡೆಯುವಲ್ಲಿ ಬಿಜೆಪಿ ಈಗಾಗಲೇ ಹಿನ್ನಡೆ ಅನುಭವಿಸುತ್ತಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ನನ್ ಗಳು ಮತ್ತು ಪಾದ್ರಿಗಳ ಮೇಲೆ ನಡೆದ ದಾಳಿಗಳಂತಹ ಘಟನೆಗಳು ಈ ಅಸಮಾಧಾನವನ್ನು ಮತ್ತಷ್ಟು ಹೆಚ್ಚಿಸಿವೆ ಎಂದು ತಿಳಿದು ಬಂದಿದೆ.
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ
Hardik Pandya: ಟೀಂ ಇಂಡಿಯಾದ ಸ್ಟಾರ್ ಆಟಗಾರ ಹಾರ್ದಿಕ್ ಪಾಂಡ್ಯ ಅವರು ಒಂದಲ್ಲ ಒಂದು ವಿಚಾರಕ್ಕೆ ಸುದ್ದಿಯಲ್ಲಿರುತ್ತರೆ. ಹಾಗೆಯೇ ಇದೀಗ ಮುಂಬೈನ ವಾಂಖೆಡೆ ಕ್ರೀಡಾಂಗಣದ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತನ್ನು ಉಳಿಸಿಕೊಳ್ಳುವ ಮೂಲಕ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಇದೀಗ ಐಪಿಎಲ್ 2026 ಹಬ್ಬ ಆರಂಭವಾಗಿದೆ. ಈ ನಡುವೆಯೇ ಮುಂಬೈ ಇಂಡಿಯನ್ಸ್ ತಂಡದ ನಾಯಕ ಮತ್ತು ಭಾರತದ ಆಲ್ರೌಂಡರ್ ಹಾರ್ದಿಕ್
ಏಪ್ರಿಲ್ 1ರಿಂದ ಆನ್ಲೈನ್ ಪಾವತಿಯಲ್ಲಿ ಮಹತ್ವದ ಬದಲಾವಣೆಗಳು : ಇಲ್ಲಿದೆ, 8 ಹೊಸ ರೂಲ್ಸ್
Online Payment : ಮುಂದಿನ ಆರ್ಥಿಕ ವರ್ಷ ಆರಂಭಕ್ಕೆ ಎರಡು ದಿನಗಳು ಬಾಕಿ ಉಳಿದಿದೆ. ಈಗಾಗಲೇ ಏಪ್ರಿಲ್ ಒಂದರಿಂದ ಅನ್ವಯವಾಗುವಂತೆ, ಹಲವು ಬದಲಾವಣೆಗಳಾಗಲಿವೆ. ಈ ಸಾಲಿನಲ್ಲಿ ಆನ್ಲೈನ್ ಬ್ಯಾಂಕ್ ಪೇಮೆಂಟ್ ಕೂಡಾ ಒಂದು. ಇನ್ನು ಮುಂದೆ, ಆನ್ಲೈನ್ ಪೇಪೆಂಟ್ ಮಾಡಬೇಕಾದರೆ ಹೊಸ ಪದ್ದತಿಯನ್ನು ಅಳವಡಿಸಿಕೊಳ್ಳಬೇಕಿದೆ.
ಮಾ.30 ವಿಶ್ವ ಇಡ್ಲಿ ದಿನ ; ಬಿಸಿ ಬಿಸಿ ಇಡ್ಲಿ, ಸಾಂಬಾರ್ ಸವಿಯೋಣ ಬನ್ನಿ...!
ಉಡುಪಿಯವರ ಜನಪ್ರಿಯ ಹಾಸ್ಯದಂತೆ ಇಡ್ಲಿಯು ಕೇವಲ ಭೂಮಿಯ ಮೇಲೆ ಮಾತ್ರವಲ್ಲದೆ ಚಂದ್ರಲೋಕದಲ್ಲೂ ಇರುವಂತಹ ಸರ್ವವ್ಯಾಪಿ ಆಹಾರವಾಗಿ ಗುರುತಿಸಿಕೊಂಡಿದೆ. ಮಾರ್ಚ್ 30 ರಂದು ವಿಶ್ವ ಇಡ್ಲಿ ದಿನವನ್ನು ಆಚರಿಸಲಾಗುತ್ತಿದ್ದು, ಇದು ದಕ್ಷಿಣ ಭಾರತದ ಪಾರಂಪರಿಕ ಹಾಗೂ ಅತ್ಯಂತ ಆರೋಗ್ಯಕರ ಆಹಾರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಸುಲಭವಾಗಿ ಜೀರ್ಣವಾಗುವ ಮತ್ತು ಸಮತೋಲಿತ ಪೋಷಕಾಂಶಗಳನ್ನು ಹೊಂದಿರುವ ಇಡ್ಲಿಯನ್ನು ಜಗತ್ತಿನ ಅತ್ಯುತ್ತಮ ಆರೋಗ್ಯಕರ ಆಹಾರಗಳಲ್ಲಿ ಒಂದು ಎಂದು ಬಿಬಿಸಿ ಸಮೀಕ್ಷೆಯೂ ಕೂಡ ದೃಢಪಡಿಸಿದೆ.
ರಾಜ್ಯದಲ್ಲಿ ನಾಲ್ಕು ವರ್ಷಗಳಲ್ಲಿ ‘ಲವ್ ಜಿಹಾದ್’ ಪ್ರಕರಣ ದಾಖಲಾಗಿಲ್ಲ: ಗೃಹ ಸಚಿವ ಡಾ.ಜಿ. ಪರಮೇಶ್ವರ
ಬೆಂಗಳೂರು: ರಾಜ್ಯದಲ್ಲಿ ಅನಧಿಕೃತ ಅಥವಾ ಬಲವಂತದ ಮತಾಂತರ ಪ್ರಕರಣಗಳನ್ನು ತಡೆಗಟ್ಟುವ ಉದ್ದೇಶದಿಂದ ಜಾರಿಗೊಂಡಿರುವ ‘ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಸಂರಕ್ಷಣೆ ಹಕ್ಕು (ಮತಾಂತರ ನಿಷೇಧ) ಕಾಯ್ದೆ’ ಅಡಿಯಲ್ಲಿ ಕಳೆದ ನಾಲ್ಕು ವರ್ಷಗಳಲ್ಲಿ ಪ್ರೇಮದ ಮೂಲಕ ಧರ್ಮಾಂತರ (ಲವ್ ಜಿಹಾದ್) ಆರೋಪಕ್ಕೆ ಸಂಬಂಧಿಸಿದ ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದು ಗೃಹ ಸಚಿವ ಜಿ. ಪರಮೇಶ್ವರ ಅವರು ತಿಳಿಸಿದ್ದಾರೆ. ವಿಧಾನ ಪರಿಷತ್ ನಲ್ಲಿ ಬಿಜೆಪಿಯ ಡಿ.ಎಸ್. ಅರುಣ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ‘2023ರಲ್ಲಿ 10, 2024ರಲ್ಲಿ 3, 2025ರಲ್ಲಿ 4 ಬಲವಂತದ ಮತಾಂತರ ಪ್ರಕರಣಗಳು ದಾಖಲಾಗಿವೆ. 2026ರಲ್ಲಿ ಇದುವರೆಗೆ ಯಾವುದೇ ಪ್ರಕರಣ ದಾಖಲಾಗಿಲ್ಲ. ಈ 17 ಪ್ರಕರಣಗಳಲ್ಲಿ ಮೂರು ಪ್ರಕರಣಗಳು ತನಿಖೆಯಲ್ಲಿದ್ದು, ಏಳು ಪ್ರಕರಣಗಳು ನ್ಯಾಯಾಲಯದಲ್ಲಿ ವಿಚಾರಣಾ ಹಂತದಲ್ಲಿವೆ. ಮೂರು ಪ್ರಕರಣಗಳಲ್ಲಿ ಪೊಲೀಸರು ‘ಬಿ’ ಅಂತಿಮ ವರದಿ ಸಲ್ಲಿಸಿದ್ದಾರೆ. ಆದರೆ ಯಾವುದೇ ಪ್ರಕರಣದಲ್ಲೂ ಶಿಕ್ಷೆ ಆಗಿಲ್ಲ’ ಎಂದು ಹೇಳಿದರು. ‘ಲವ್ ಜಿಹಾದ್ ಮತ್ತು ಬಲವಂತದ ಮತಾಂತರ ಪ್ರಕರಣಗಳನ್ನು ತಡೆಯಲು ದೂರು ಬಂದ ತಕ್ಷಣ ಸಂಬಂಧಿತ ಕಾನೂನುಗಳಡಿ (ಬಿಎನ್ಎಸ್, ಪೋಕ್ಸೊ) ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ. ಇಂತಹ ಪ್ರಕರಣಗಳನ್ನು ತಡೆಗಟ್ಟಲು ಹಲವು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಮತೀಯ ಗೂಂಡಾಗಳು ಪತ್ತೆಯಾದರೆ, ಅವರನ್ನು ಗುರುತಿಸಿ ರೌಡಿ ಶೀಟ್ ತೆರೆಯಲಾಗುತ್ತಿದ್ದು, ಅಗತ್ಯವಿದ್ದರೆ ಗಡಿಪಾರು ಕೂಡ ಮಾಡಲಾಗುತ್ತಿದೆ’ ಎಂದು ಮಾಹಿತಿ ನೀಡಿದರು.
ಇರಾನ್ ಜೊತೆ ಮಾತುಕತೆ ಉತ್ತಮವಾಗಿ ನಡೆಯುತ್ತಿದೆ ಎಂದು ಟ್ರಂಪ್ ಹೇಳಿಕೆಗಳ ಬೆನ್ನಲ್ಲೇ, ಮತ್ತೊಂದು ಹೇಳಿಕೆ ನೀಡಿದ್ದು, ಇರಾನ್ನ ಹಲವು ತಾಣಗಳನ್ನು ಅಮೆರಿಕಾ ಸೇನೆ ಹುಡುಕಿ ನಾಶ ಮಾಡಿದೆ ಎಂದು ತಿಳಿಸಿದ್ದಾರೆ. ಇತ್ತ ಇರಾನ್ ಸಹ ಅಮೆರಿಕಾ ಮಾತುಕತೆ ನೆಪದಲ್ಲಿ ರಹಸ್ಯವಾಗಿ ಇರಾನ್ ಮೇಲಿನ ಭೂದಾಳಿಗೆ ಯೋಜನೆ ರೂಪಿಸುತ್ತಿದೆ ಎಂಬ ಆರೋಪಸಿದೆ. ಇನ್ನು ಟ್ರಂಪ್ ಹೇಳಿಕೆಗಳಲ್ಲಿ ದ್ವಂದ್ವತೆಗೆ ಈ ಆರೋಪಗಳಿಗೆ ಪೂರಕವಾಗುವಂತಿದೆ.
ಬರಬಾರದಿತ್ತು ಸೋಮವಾರ; ಭಾರತೀಯ ಷೇರು ಮಾರುಕಟ್ಟೆಗೆ ಕಚ್ಚಾತೈಲ ಪ್ರಹಾರ! ಸೆನ್ಸೆಕ್ಸ್, ನಿಫ್ಟಿ ಟರ್ನ್ಸ್ ರೆಡ್
ಮಧ್ಯಪ್ರಾಚ್ಯ ಸಂಘರ್ಷದ ಪರಿಣಾಮವಾಗಿ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ ಏರಿಕೆ ಕಂಡಿದೆ. ಇದರಿಂದಾಗಿ ಭಾರತೀಯ ಷೇರು ಮಾರುಕಟ್ಟೆ ತಲ್ಲಣಿಸಿದ್ದು, ಇಂದು (ಮಾ.30-ಸೋಮವಾರ) ಬಿಎಸ್ಇ ವಹಿವಾಟು ಆರಂಭವಾಗುತ್ತಿದ್ದಂತೇ, ಸೆನ್ಸೆಕ್ಸ್ ಮತ್ತು ನಿಫ್ಟಿ 50 ಸೂಚ್ಯಂಕಗಳು ಭಾರೀ ಕುಸಿತ ಕಂಡಿವೆ. 11 ಗಂಟೆಯ ವೇಳೆಗೆ ಸೆನ್ಸೆಕ್ಸ್ 1,100 ಪಾಯಿಂಟ್ಸ್ ಕುಸಿತ ಕಂಡಿದ್ದರೆ, ನಿಫ್ಟಿ 300 ಪಾಯಿಂಟ್ಸ್ನಷ್ಟು ಇಳಿದಿದೆ. ಭಾರತೀಯ ಷೇರು ಮಾರುಕಟ್ಟೆಯ ಈ ಮಂದಗತಿಯ ಬೆಳವಣಿಗೆಗೆ ಮಧ್ಯಪ್ರಾಚ್ಯ ಸಂಘರ್ಷವೇ ಪ್ರಮುಖ ಕಾರಣವಾಗಿದೆ. ಇಲ್ಲಿದೆ ಮಾಹಿತಿ.
ಮಾರ್ಚ್ 30ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ
Petrol, Diesel Price: ಶಕ್ತಿಯ ಮೂಲಗಳು ಎನಿಸಿಕೊಂಡಿರುವ ಪೆಟ್ರೋಲ್ ಮತ್ತು ಡೀಸೆಲ್ ಇಂಧನ ಅತ್ಯವಶ್ಯಕವಾಗಿ ಬೇಕಾಗುವ ಸಂಪನ್ಮೂಲಗಳಾಗಿವೆ. ಹಾಗಾದ್ರೆ, ಬೆಂಗಳೂರು ಸೇರಿದಂತೆ ಕರ್ನಾಟಕದ ಇತರ ಜಿಲ್ಲೆಗಳಲ್ಲಿ ಇಂದು (ಮಾರ್ಚ್ 30) ಲೀಟರ್ ಪೆಟ್ರೋಲ್, ಡೀಸೆಲ್ ಬೆಲೆ ಎಷ್ಟಿದೆ ಎಂದು ಇಲ್ಲಿ ತಿಳಿಯಿರಿ. ಇತ್ತೀಚಿನ ದಿನಗಳಲ್ಲಿ ಎಲೆಕ್ಟ್ರಿಕ್ ವಾಹನಗಳು ಹೆಚ್ಚಾಗುತ್ತಿವೆ. ಹಾಗಂತ ಇಂಧನದ ಬೇಡಿಕೆ ಏನು ಕಡಿಮೆ ಆಗಿಲ್ಲ.
ಜೈಪ್ರಕಾಶ್ ಅಸೋಸಿಯೇಟ್ಸ್ ಲಿಮಿಟೆಡ್ (JAL) ಸಂಸ್ಥೆಯ ದಿವಾಳಿ ಪ್ರಕ್ರಿಯೆಗೆ ಸಂಬಂಧಿಸಿದಂತೆ ವೇದಾಂತ ಸಮೂಹವು ಮಾಡಿರುವ ಹೊಸ ಆರೋಪಗಳು, ಬಿಡ್ಡಿಂಗ್ ಪ್ರಕ್ರಿಯೆಯ ಪಾರದರ್ಶಕತೆಯ ಕುರಿತಾದ ಚರ್ಚೆಯನ್ನು ತೀವ್ರಗೊಳಿಸಿವೆ. ಆದಾಗ್ಯೂ, ಅದಾನಿ ಗ್ರೂಪ್ ಸಲ್ಲಿಸಿರುವ ಬಿಡ್ ಸೇರಿದಂತೆ ಒಟ್ಟಾರೆ ಪರಿಹಾರ ಪ್ರಕ್ರಿಯೆಯು ಮಾನ್ಯವಾಗಿದೆ, ವ್ಯವಸ್ಥಿತವಾಗಿದೆ ಮತ್ತು ನಿಯಂತ್ರಕ ಮಾನದಂಡಗಳಿಗೆ ಅನುಗುಣವಾಗಿದೆ ಎಂದು ಸಾಲದಾತರ ಸಮಿತಿ (CoC), ರಾಷ್ಟ್ರೀಯ ಕಂಪನಿ ಕಾನೂನು
ಕೋಟೆಕಾರ್ : ಹಿದಾಯತ್ ನಗರ ಮದರಸ ಪ್ರಾರಂಭೋತ್ಸವ
ಉಳ್ಳಾಲ: ಕೋಟೆಕಾರ್ ಹಿದಾಯತ್ ನಗರದ ಇಹ್ಸಾನುಲ್ ವಹ್ಹಾಬ್ ಅಲ್ ಮದ್ರಸತುಲ್ ಹಿದಾಯ ಇದರ ಪ್ರಾರಂಭೋತ್ಸವ ಕಾರ್ಯಕ್ರಮ ಮಾರ್ಚ್ 29 ಮುಂಜಾನೆ 6-30ಕ್ಕೆ ಮಸೀದಿ ಖತೀಬ್ ಅಬ್ದುಲ್ ಅಝೀಝ್ ಸಅದಿ ಅಲ್ ಅಫ್ಳಲಿ ಅಧ್ಯಕ್ಷತೆಯಲ್ಲಿ ಜರಗಿತು. ಮಖ್ಯೋಪದ್ಯಾಯ ಅಬ್ದುಲ್ಲ ನಈಮಿ ಲೌಕಿಕ ಶಿಕ್ಷಣದೊಂದಿಗೆ ಧಾರ್ಮಿಕ ಶಿಕ್ಷಣದ ಬಗ್ಗೆ ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಮಸೀದಿ ಉಪಾಧ್ಯಕ್ಷ ಕೆ ಎಮ್ ಅಬ್ದುಲ್ ಖಾದರ್, ಮುಅಲ್ಲಿಂ ಫಾರೂಕ್ ಸಅದಿ ಕೊಮರಂಗಳ, ಝುಬೈರ್ ಝುಹ್ರಿ, ಹಾಗೂ ಇನ್ನಿತರ ಪ್ರಮುಖರು ಭಾಗವಹಿಸಿದ್ದರು. ಕೊನೆಯಲ್ಲಿ ಮದರಸ ವಿದ್ಯಾರ್ಥಿಗಳಿಗೆ ಸಿಹಿ ಹಂಚಲಾಯಿತು. ಮಸೀದಿ ಕಾರ್ಯದರ್ಶಿ ಸಿದ್ದೀಕ್ ಟಿ ಎಚ್ ವಂದಿಸಿದರು,
ಕೇರಳದಲ್ಲಿ ಬಿಜೆಪಿ ಮತ್ತು ಎನ್ಡಿಎ ರಂಗಕ್ಕೆ ಅಧಿಕ ಸೀಟು: ಪಿಎಂ ಮೋದಿ ವಿಶ್ವಾಸ
ಪಾಲಕ್ಕಾಡ್ನ ಕೋಟ ಮೈದಾನದಲ್ಲಿ ನಡೆದ ಕೇರಳ ವಿಧಾನಸಭಾ ಚುನಾವಣೆಯ ಮೊದಲ ಪ್ರಚಾರ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು, ಈ ಬಾರಿ ಕೇರಳದಲ್ಲಿ ಬಿಜೆಪಿ ಮತ್ತು ಎನ್ಡಿಎ ಮೈತ್ರಿಕೂಟವು ಅಧಿಕ ಸ್ಥಾನಗಳನ್ನು ಗೆದ್ದು ಸರ್ಕಾರ ರಚಿಸಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಮಧ್ಯ ಪ್ರಾಚ್ಯ ಯುದ್ಧ: ವಿಯೆಟ್ನಾಂ ನಂತರ ಮತ್ತೊಂದು ಮುಖಭಂಗದತ್ತ ಅಮೆರಿಕ!?
ತನಗೆ ಬೇಕಾದ ರೀತಿಯಲ್ಲಿ ಇನ್ನೊಂದು ದೇಶದ ಮೇಲೆ ಆಕ್ರಮಣ ಮಾಡುವ ಹಕ್ಕನ್ನು ಅಮೆರಿಕಕ್ಕೆ ನೀಡಿದವರು ಯಾರು? ಇತ್ತೀಚಿನ ದಿನಗಳಲ್ಲಿ ಅಮೆರಿಕ ಮತ್ತು ಇರಾನ್ ನಡುವಿನ ಸಂಘರ್ಷವು ಜಾಗತಿಕ ಮಟ್ಟದಲ್ಲಿ ಇದು ಹೆಚ್ಚಿನ ಚರ್ಚೆಗೆ ಗ್ರಾಸವಾಗಿದೆ. ಕೆಲವು ಯುದ್ಧ ತಜ್ಞರು ಮತ್ತು ಮಾಧ್ಯಮಗಳು ಈ ಪರಿಸ್ಥಿತಿಯನ್ನು ವಿಯೆಟ್ನಾಂ ಯುದ್ಧದಂತೆಯೇ ಅಮೆರಿಕಕ್ಕೆ ಮತ್ತೊಂದು ಅವಮಾನ ಎಂದು ವಿವರಿಸುತ್ತಿದ್ದಾರೆ. ಆದರೆ ಈ ಹೇಳಿಕೆಗಳು ಎಷ್ಟು ನಿಜ? ಇತಿಹಾಸ, ರಾಜಕೀಯ ಮತ್ತು ಸೈನಿಕ ವಾಸ್ತವಾಂಶಗಳನ್ನು ಒಟ್ಟಿಗೆ ಪರಿಗಣಿಸಿದಾಗ, ಈ ಹೋಲಿಕೆ ಎಷ್ಟು ಸರಿ ಮತ್ತು ತಪ್ಪು ಎಂಬುದನ್ನು ವಿಶ್ಲೇಷಿಸುವುದು ಮುಖ್ಯ. ವಿಯೆಟ್ನಾಂ ಯುದ್ಧವು 20ನೇ ಶತಮಾನದ ಪ್ರಮುಖ ಯುದ್ಧಗಳಲ್ಲಿ ಒಂದಾಗಿತ್ತು. ಅಮೆರಿಕ ತನ್ನ ಸೈನಿಕ ಶಕ್ತಿಯನ್ನು ಬಳಸಿಕೊಂಡು ವಿಯೆಟ್ನಾಂನಲ್ಲಿ ಕಮ್ಯುನಿಸ್ಟ್ ಪ್ರಭಾವವನ್ನು ತಡೆಯಲು ಪ್ರಯತ್ನಿಸಿತು. ಆದರೆ ಈ ಯುದ್ಧವು ದೀರ್ಘಕಾಲ ನಡೆದು ಸಾವಿರಾರು ಅಮೆರಿಕನ್ ಸೈನಿಕರ ಜೀವಹಾನಿ ಹಾಗೂ ದೇಶದೊಳಗಿನ ರಾಜಕೀಯ ಒತ್ತಡವನ್ನು ಹೆಚ್ಚಿಸಿತು. ಕೊನೆಗೆ ಅಮೆರಿಕ ಅವಮಾನಕರ ರೀತಿಯಲ್ಲಿ ತನ್ನ ಸೇನೆಗಳನ್ನು ಹಿಂಪಡೆಯಬೇಕಾಯಿತು ಮತ್ತು ಇದನ್ನು ತಜ್ಞರು ಅಮೆರಿಕದ ಸೈನಿಕ ಹಾಗೂ ರಾಜಕೀಯ ವೈಫಲ್ಯವೆಂದು ಪರಿಗಣಿಸಿದರು. ಇದೇ ಹಿನ್ನೆಲೆಯಲ್ಲಿಯೇ ವಿಯೆಟ್ನಾಂ ಸಿಂಡ್ರೋಮ್ ಎಂಬ ಪರಿಕಲ್ಪನೆ ಹುಟ್ಟಿಕೊಂಡಿತು. ಅಂದರೆ ದೀರ್ಘ ಮತ್ತು ಗೆಲುವು ಸ್ಪಷ್ಟವಾಗದ ಯುದ್ಧಗಳಲ್ಲಿ ಅಮೆರಿಕ ಸಿಲುಕುವ ಭೀತಿ ಎಂದರ್ಥ. ಇಂದಿನ ಅಮೆರಿಕ-ಇರಾನ್ ಸಂಘರ್ಷವನ್ನು ನೋಡಿದಾಗ, ಅದೇ ರೀತಿಯ ಅರ್ಥ ಬರುವ ಬೆಳವಣಿಗೆ ಕಂಡುಬರುತ್ತವೆ. ಇರಾನ್ ಒಂದು ದೊಡ್ಡ ದೇಶವಾಗಿದ್ದು, ಭೌಗೋಳಿಕವಾಗಿ ಪರ್ವತ ಪ್ರದೇಶಗಳು, ಬಲವಾದ ಸೈನಿಕ ವ್ಯವಸ್ಥೆ ಮತ್ತು ಪ್ರಾದೇಶಿಕ ಪ್ರಾಕ್ಸಿ ಮಿತ್ರರ ಬೆಂಬಲ ಹೊಂದಿದೆ. ಈ ಕಾರಣಗಳಿಂದಾಗಿ, ಯಾವುದೇ ಸೈನಿಕ ದಾಳಿಯು ಅಮೆರಿಕದ ತಕ್ಷಣದ ಗೆಲುವಿಗೆ ಕಾರಣವಾಗುವುದಿಲ್ಲ. ಇದರಿಂದಾಗಿ ಯುದ್ಧವು ದೀರ್ಘಕಾಲ ನಡೆಯುವ ಸಾಧ್ಯತೆ ಇದೆ. ಈ ಅಂಶವೇ ಕೆಲ ವಿಶ್ಲೇಷಕರಿಗೆ ವಿಶ್ವದಲ್ಲಿ ವಿಯೆಟ್ನಾಂ ಯುದ್ಧವನ್ನು ನೆನಪಿಸುತ್ತದೆ ಎನ್ನಬಹುದು. ಆದರೆ ಇವುಗಳ ನಡುವೆ ಮಹತ್ವದ ವ್ಯತ್ಯಾಸಗಳೂ ಇವೆ. ವಿಯೆಟ್ನಾಂ ಯುದ್ಧದ ಸಮಯದಲ್ಲಿ ಅಮೆರಿಕ ನೇರವಾಗಿ ವಿಯೆಟ್ನಾಂ ನೆಲದಲ್ಲಿ ದೊಡ್ಡ ಪ್ರಮಾಣದ ಸೇನೆಗಳನ್ನು ನಿಯೋಜಿಸಿತ್ತು. ಆದರೆ ಇಂದಿನ ಪರಿಸ್ಥಿತಿಯಲ್ಲಿ ಅಮೆರಿಕ ಹೆಚ್ಚು ತಂತ್ರಜ್ಞಾನಾಧಾರಿತ ಯುದ್ಧ ತಂತ್ರಗಳನ್ನು ಬಳಸುತ್ತಿದೆ. ಡ್ರೋನ್ ದಾಳಿಗಳು, ಸೈಬರ್ ಯುದ್ಧ ಮತ್ತು ಹೈಪರ್ಸಾನಿಕ್ ಕ್ಷಿಪಣಿ ದಾಳಿಗಳು. ಇದು ಇಂದು ಯುದ್ಧದ ಸ್ವರೂಪವನ್ನು ಸಂಪೂರ್ಣವಾಗಿ ಬದಲಾಯಿಸಿದೆ. ಹೀಗಾಗಿ, ಇಂದಿನ ಸಂಘರ್ಷವನ್ನು ನೇರವಾಗಿ ವಿಯೆಟ್ನಾಂ ಯುದ್ಧಕ್ಕೆ ಹೋಲಿಸುವುದು ತಪ್ಪಾಗಬಹುದು ಎಂದು ಕೆಲವರ ವಾದ. ಇದಲ್ಲದೆ, ಇಂದು ಜಾಗತಿಕ ರಾಜಕೀಯವೂ ಬದಲಾಗಿದೆ. ವಿಯೆಟ್ನಾಂ ಯುದ್ಧದ ಸಮಯದಲ್ಲಿ ಶೀತಲಯುದ್ಧದ ಪ್ರಭಾವವಿತ್ತು ಮತ್ತು ಅಮೆರಿಕ-ಸೋವಿಯತ್ ಸಂಘರ್ಷದ ಭಾಗವಾಗಿತ್ತು. ಆದರೆ ಇಂದಿನ ಇರಾನ್ ಸಂಘರ್ಷದಲ್ಲಿ ಮಧ್ಯಪ್ರಾಚ್ಯದ ರಾಜಕೀಯ, ತೈಲ ಆರ್ಥಿಕತೆ ಮತ್ತು ಪ್ರಾದೇಶಿಕ ಶಕ್ತಿಗಳ ಪಾತ್ರ ಮುಖ್ಯವಾಗಿದೆ. ಇದರಿಂದಾಗಿ, ಈ ಯುದ್ಧವು ಕೇವಲ ಎರಡು ದೇಶಗಳ ನಡುವಿನ ವಿಷಯವಲ್ಲ. ಜಾಗತಿಕ ಮಟ್ಟದಲ್ಲಿ ಪರಿಣಾಮ ಬೀರುವ ಒಂದು ಸಂಕೀರ್ಣ ಪರಿಸ್ಥಿತಿಯಾಗಿದೆ ಎಂದರೆ ತಪ್ಪಲ್ಲ. ಕೆಲವು ವರದಿಗಳು ಮತ್ತು ಅಭಿಪ್ರಾಯಗಳು ಅಮೆರಿಕದ ಕೆಲವು ಕ್ರಮಗಳು ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಟೀಕೆಗೆ ಗುರಿಯಾಗಿವೆ ಎಂದು ಸೂಚಿಸುತ್ತವೆ. ಉದಾಹರಣೆಗೆ, ಕೆಲವು ದಾಳಿಗಳು ಇರಾನ್ನ ನಾಗರಿಕ ಪ್ರದೇಶಗಳ ಮೇಲೆ ಪರಿಣಾಮ ಬೀರಿವೆ ಎಂಬ ಆರೋಪಗಳು ಕೇಳಿಬಂದಿವೆ. ಇರಾನ್ನ ಶಾಲೆಯ ಮೇಲೆ ದಾಳಿ ಮಾಡಿ ನೂರಾರು ಮಕ್ಕಳನ್ನು ಕೊಂದುಹಾಕಿವೆ. ಇವುಗಳು ಅಮೆರಿಕದ ಘನತೆಗೆ ಧಕ್ಕೆಯಾಗಿ ಕಾಣಬಹುದು. ಆದರೆ ಇದನ್ನು ವಿಯೆಟ್ನಾಂ ಮಟ್ಟದ ಅವಮಾನ ಎಂದು ಕರೆಯುವುದು ಅವಸರದ ಅಭಿಪ್ರಾಯ ಎಂದು ಇನ್ನೂ ಕೆಲವರು ಹೇಳುತ್ತಾರೆ. ಯುದ್ಧದಲ್ಲಿ ಗೆಲುವು ಅಥವಾ ಸೋಲು ಎಂದರೆ ಕೇವಲ ಸೈನಿಕ ದೃಷ್ಟಿಯಿಂದ ಮಾತ್ರ ನಿರ್ಧಾರವಾಗುವುದಿಲ್ಲ. ರಾಜಕೀಯ ಫಲಿತಾಂಶ, ಆರ್ಥಿಕ ಪರಿಣಾಮ ಮತ್ತು ಜಾಗತಿಕ ಪ್ರಭಾವ ಇವೆಲ್ಲವೂ ಸೇರಿ ಅಂತಿಮ ಫಲಿತಾಂಶವನ್ನು ರೂಪಿಸುತ್ತವೆ. ಈ ದೃಷ್ಟಿಯಿಂದ ನೋಡಿದರೆ, ಅಮೆರಿಕ-ಇರಾನ್ ಸಂಘರ್ಷವು ಇನ್ನೂ ನಡೆಯುತ್ತಿರುವ ಯುದ್ಧ ಪ್ರಕ್ರಿಯೆಯಾಗಿದ್ದು, ಅದರ ಅಂತಿಮ ಫಲಿತಾಂಶ ಸ್ಪಷ್ಟವಾಗಿಲ್ಲ. ಆದರೆ ಇರಾನ್ ಅಮೆರಿಕಕ್ಕೆ ಸುಲಭ ತುತ್ತು ಅಂತೂ ಆಗಲು ಸಾಧ್ಯವಿಲ್ಲ. ಇನ್ನೊಂದು ಪ್ರಮುಖ ಅಂಶವೆಂದರೆ ಪ್ರಚಾರ. ಯಾವುದೇ ಯುದ್ಧದ ಸಂದರ್ಭದಲ್ಲಿ, ಎರಡು ದೇಶಗಳು ವಿಶ್ವದ ಮುಂದೆ ತಮ್ಮದೇ ಆದ ಕಥನವನ್ನು ನಿರ್ಮಿಸಲು ಪ್ರಯತ್ನಿಸುತ್ತವೆ. ಕೆಲವು ದೇಶಗಳು ಅಥವಾ ಗುಂಪುಗಳು ಅಮೆರಿಕದ ಯುದ್ಧ ಕ್ರಮಗಳನ್ನು ದುರ್ಬಲವಾಗಿ ತೋರಿಸಲು ವಿಯೆಟ್ನಾಂ ಎಂಬ ಪದವನ್ನು ಬಳಸಬಹುದು. ಇದು ಸಾರ್ವಜನಿಕ ಅಭಿಪ್ರಾಯವನ್ನು ಪ್ರಭಾವಿಸಲು ಬಳಸುವ ಒಂದು ತಂತ್ರವಾಗಿರಬಹುದು ಎನ್ನುತ್ತಾರೆ ಕೆಲವರು. ಗಲ್ಫ್ ಯುದ್ಧದ ಹಿನ್ನೆಲೆ ಮತ್ತು ಇರಾನ್ ಪ್ರತಿರೋಧದ ವಿಶ್ಲೇಷಣೆಯನ್ನು ಒಟ್ಟಾಗಿ ನೋಡಿದಾಗ, ಅಮೆರಿಕ-ಇರಾನ್ ಸಂಘರ್ಷವನ್ನು ಆಳವಾಗಿ ಅರ್ಥಮಾಡಿಕೊಳ್ಳಲು ಇತಿಹಾಸದ ಪಾಠಗಳು ಬಹಳ ಮುಖ್ಯವಾಗುತ್ತವೆ. 1990-91ರಲ್ಲಿ ನಡೆದ ಯುದ್ಧ ಅಮೆರಿಕ ನೇತೃತ್ವದ ಮೈತ್ರಿ ಪಡೆಗಳಿಗೆ ತ್ವರಿತ ಸೈನಿಕ ಜಯವನ್ನು ತಂದುಕೊಟ್ಟಿತ್ತು. ಇರಾಕ್ ಕುವೈತ್ನ್ನು ಆಕ್ರಮಿಸಿದ ನಂತರ, ಅಮೆರಿಕ ಹಾಗೂ ಅದರ ಮಿತ್ರ ರಾಷ್ಟ್ರಗಳು ತೀವ್ರ ವಾಯು ದಾಳಿ ಮತ್ತು ಸೈನಿಕ ದಾಳಿಗಳ ಮೂಲಕ ಇರಾಕ್ ಸೇನೆಯನ್ನು ಸೋಲಿಸಿದವು ಮತ್ತು ಈ ಯುದ್ಧದಲ್ಲಿ ಅಮೆರಿಕ ತನ್ನ ತಂತ್ರಜ್ಞಾನ ಹಾಗೂ ಸಂಘಟಿತ ಸೈನಿಕ ಶಕ್ತಿಯನ್ನು ಸ್ಪಷ್ಟವಾಗಿ ಪ್ರದರ್ಶಿಸಿತು. ಆದರೆ ಈ ಜಯ ಅಲ್ಲಿ ದೀರ್ಘಕಾಲದ ಶಾಂತಿಯನ್ನು ತರಲಿಲ್ಲ ಎಂಬುದು ಇತಿಹಾಸದಿಂದ ತಿಳಿದುಬಂದ ಸಂಗತಿ. ಗಲ್ಫ್ ಪ್ರದೇಶದಲ್ಲಿ ಅಮೆರಿಕದ ಹಸ್ತಕ್ಷೇಪ ಹೆಚ್ಚಾಗಿ, ಅದು ಮುಂದೆ 26/11 ಅಂತಹ ಘಟನೆಗೆ ಕಾರಣವಾಯಿತು. ಇದನ್ನೇ ಹಿನ್ನೆಲೆಯಾಗಿ ತೆಗೆದುಕೊಂಡು ಇರಾನ್ನ ತಂತ್ರವನ್ನು ಗಮನಿಸಿದರೆ, ಅದು ಇರಾಕ್ನಂತೆ ನೇರವಾಗಿ ದೊಡ್ಡ ಯುದ್ಧದಲ್ಲಿ ತೊಡಗಿಸಿಕೊಳ್ಳುವ ರಾಷ್ಟ್ರವಲ್ಲ ಎಂಬುದು ಸ್ಪಷ್ಟವಾಗುತ್ತದೆ; ಬದಲಾಗಿ ಅದು ಮೊಜಾಹಿಕ್ ಎಂಬ ತಂತ್ರವನ್ನು ಅನುಸರಿಸುತ್ತಿದೆ. ಅಂದರೆ ದೊಡ್ಡ ಶಕ್ತಿಯ ವಿರುದ್ಧ ಸಣ್ಣ ಆದರೆ ಪರಿಣಾಮಕಾರಿ ಯುದ್ಧ ಕ್ರಮಗಳನ್ನು ಕೈಗೊಳ್ಳುವ ವಿಧಾನ. ಇರಾನ್ ತನ್ನ ಪ್ರಭಾವವನ್ನು ಪ್ರಾದೇಶಿಕ ಪ್ರಾಕ್ಸಿ ಗುಂಪುಗಳ ಮೂಲಕ ವಿಸ್ತರಿಸಿಕೊಂಡಿದ್ದು, ಕ್ಷಿಪಣಿ ಮತ್ತು ಡ್ರೋನ್ ತಂತ್ರಜ್ಞಾನದಲ್ಲಿ ಸಾಕಷ್ಟು ಪ್ರಗತಿ ಸಾಧಿಸಿದೆ. ಜೊತೆಗೆ ಅದರ ಭೌಗೋಳಿಕ ಸ್ಥಿತಿ. ಪರ್ವತ ಪ್ರದೇಶಗಳು ಮತ್ತು ಕಿರಿದಾದ ಸಮುದ್ರ ಮಾರ್ಗಗಳು ಇದಕ್ಕೆ ಸಹಜ ರಕ್ಷಣಾ ಲಾಭವನ್ನು ಒದಗಿಸುತ್ತವೆ. ಉದಾಹರಣೆಗೆ ಹಾರ್ಮುಝ್ ಜಲಸಂಧಿ ವಿಶ್ವದ ತೈಲ ಸಾಗಣೆಯ ಪ್ರಮುಖ ದಾರಿಯಾಗಿದ್ದು, ಇಲ್ಲಿ ಯಾವುದೇ ಅಡೆತಡೆ ಜಾಗತಿಕ ಆರ್ಥಿಕತೆಯ ಮೇಲೆ ತಕ್ಷಣದ ಪರಿಣಾಮ ಬೀರುತ್ತದೆ. ಇಲ್ಲಿ ತೈಲ ಸಾಗಣೆಯನ್ನು ಅಡ್ಡಿಪಡಿಸುವ ಮೂಲಕ ಜಾಗತಿಕ ಮಾರುಕಟ್ಟೆಯಲ್ಲಿ ಅಸ್ಥಿರತೆ ಉಂಟುಮಾಡುವುದು ಕೂಡ ಅದರ ಆರ್ಥಿಕ ಒತ್ತಡ ತಂತ್ರವಾಗಿದೆ. ಈ ಕಾರಣದಿಂದ ಇರಾನ್ ಈ ಪ್ರದೇಶವನ್ನು ತನ್ನ ತಂತ್ರದಲ್ಲಿ ಪ್ರಮುಖವಾಗಿ ಬಳಸುತ್ತಿದೆ. ಇದರಿಂದ ಅಮೆರಿಕ ಬೇಸ್ತು ಬಿದ್ದಿದೆ. ಇರಾನ್ನ ಪ್ರತಿರೋಧವು ಸಾಂಪ್ರದಾಯಿಕ ಯುದ್ಧದ ರೀತಿಯಲ್ಲಿ ನಡೆಯುತ್ತಿಲ್ಲ. ಅದು ನಿಧಾನವಾಗಿ ಮತ್ತು ಬಹುಮುಖವಾಗಿ ನಡೆಯುವ ಒತ್ತಡದ ತಂತ್ರವಾಗಿದೆ. ಕ್ಷಿಪಣಿ ತಂತ್ರಜ್ಞಾನದ ಮೂಲಕ ಇರಾನ್ ತನ್ನ ಪ್ರಭಾವವನ್ನು ಮಧ್ಯಪ್ರಾಚ್ಯದ ವಿವಿಧ ಭಾಗಗಳಲ್ಲಿ ವಿಸ್ತರಿಸುತ್ತಿದೆ. ಅಲ್ಲಿ ಸ್ಥಳೀಯ ಗುಂಪುಗಳು ಅಮೆರಿಕ ಅಥವಾ ಅದರ ಮಿತ್ರರ ವಿರುದ್ಧ ಹೋರಾಟ ನಡೆಸುತ್ತಿದೆ. ಇದಲ್ಲದೆ, ಕಡಿಮೆ ವೆಚ್ಚದ ಡ್ರೋನ್ಗಳು ಮತ್ತು ಕ್ಷಿಪಣಿಗಳ ಬಳಕೆ ಮೂಲಕ ದೊಡ್ಡ ಸೈನಿಕ ಶಕ್ತಿಗಳಿಗೆ ಸವಾಲು ಹಾಕುವುದು ಅದರ ಪ್ರಮುಖ ತಂತ್ರಗಳಲ್ಲಿ ಒಂದಾಗಿದೆ. ಗಲ್ಫ್ ಯುದ್ಧ ಮತ್ತು ಇಂದಿನ ಇರಾನ್ ಸಂಘರ್ಷವನ್ನು ಹೋಲಿಸಿದಾಗ ಕೆಲವು ಸ್ಪಷ್ಟ ವ್ಯತ್ಯಾಸಗಳು ಗೋಚರಿಸುತ್ತವೆ: ಗಲ್ಫ್ ಯುದ್ಧದಲ್ಲಿ ಅಮೆರಿಕಕ್ಕೆ ಸ್ಪಷ್ಟ ಗುರಿ ಕುವೈತ್ನ್ನು ಮುಕ್ತಗೊಳಿಸುವುದಾಗಿತ್ತು. ಆದರೆ ಈ ಯುದ್ಧದ ಗುರಿಗಳು ಬಹಳ ಅಸ್ಪಷ್ಟವಾಗಿವೆ ಮತ್ತು ಇದು ಮೂರು ದೇಶಗಳ ಅಹಂನ ಆಟವಾಗಿ ಪರಿಣಮಿಸಿದೆ. ಈ ಕಾರಣಗಳಿಂದ ಕೆಲವರು ಮತ್ತೆ ವಿಯೆಟ್ನಾಂ ಯುದ್ಧದ ಹೋಲಿಕೆಯನ್ನು ಮಾಡುತ್ತಿದ್ದಾರೆ. ಏಕೆಂದರೆ ಇದು ದೀರ್ಘಕಾಲ ನಡೆಯುವ ಸಾಧ್ಯತೆ ಇದೆ. ಇಲ್ಲಿ ಅಮೆರಿಕಕ್ಕೆ ಸ್ಪಷ್ಟ ಜಯದ ಕೊರತೆ ಮತ್ತು ಸ್ಥಳೀಯ ಪ್ರತಿರೋಧದ ಬಲ ಇವುಗಳಲ್ಲಿನ ಸಾಮ್ಯತೆಗಳನ್ನು ತಜ್ಞರು ಗಮನಿಸುತ್ತಿದ್ದಾರೆ. ಆದರೂ, ಗಲ್ಫ್ ಯುದ್ಧವು ಇನ್ನೊಂದು ಪಾಠವನ್ನು ಕಲಿಸುತ್ತಿದೆ. ಅಮೆರಿಕ ಯುದ್ಧವನ್ನು ಗೆಲ್ಲಬಹುದು, ಆದರೆ ಬಹಳ ಬೆಲೆ ತೆರಬೇಕಾಗುತ್ತದೆ. ಇರಾನ್ ವೆನೆಝುವೆಲಾ ಅಲ್ಲ. ಒಟ್ಟಿನಲ್ಲಿ, ಇರಾನ್ನ ಪ್ರತಿ ಹೋರಾಟ ಒಂದು ಹೊಸ ರೀತಿಯ ಯುದ್ಧವನ್ನು ಪ್ರತಿನಿಧಿಸುತ್ತಿದೆ. ಇದು ನೇರ ಸೈನಿಕ ಮುಖಾಮುಖಿಗಿಂತಲೂ ಹೆಚ್ಚಿನ ಮಟ್ಟದಲ್ಲಿ ತಂತ್ರ, ತಾಳ್ಮೆ ಮತ್ತು ಬಹುಮುಖ ಒತ್ತಡದ ಮೇಲೆ ಅವಲಂಬಿತವಾಗಿದೆ; ಅಮೆರಿಕ ತಂತ್ರಜ್ಞಾನ ಮತ್ತು ಸೈನಿಕ ಶಕ್ತಿಯಲ್ಲಿ ಹೆಚ್ಚಿದ್ದರೂ ಇರಾನ್ ತನ್ನ ವಿಭಿನ್ನ ತಂತ್ರಗಳಿಂದ ಸಂಘರ್ಷವನ್ನು ಸಂಕೀರ್ಣಗೊಳಿಸುತ್ತಿದೆ. ಹೀಗಾಗಿ, ಇಂದಿನ ಪರಿಸ್ಥಿತಿಯನ್ನು ಗಲ್ಫ್ ಯುದ್ಧದಂತೆ ಸರಳವಾಗಿ ಅಥವಾ ವಿಯೆಟ್ನಾಂ ಯುದ್ಧದಂತೆ ಸಂಪೂರ್ಣ ವೈಫಲ್ಯವಾಗಿ ವರ್ಣಿಸುವುದು ಸರಿಯಲ್ಲ ಎನ್ನುವ ಅಭಿಪ್ರಾಯವೂ ಇದೆ. ಇದು ಒಂದು ನಿರಂತರವಾಗಿ ಬದಲಾಗುತ್ತಿರುವ ಪರಿಸ್ಥಿತಿ. ಇಲ್ಲಿ ಗೆಲುವು ಅಥವಾ ಸೋಲು ಸ್ಪಷ್ಟವಾಗಿ ಕಾಣಿಸದಿದ್ದರೂ ಅದರ ಪರಿಣಾಮಗಳು ದೀರ್ಘಕಾಲದವರೆಗೆ ಜಾಗತಿಕ ರಾಜಕೀಯ ಮತ್ತು ಆರ್ಥಿಕತೆಯನ್ನು ಪ್ರಭಾವಿಸುತ್ತದೆ ಎನ್ನಬಹುದು. ಒಟ್ಟಿನಲ್ಲಿ, ಅಮೆರಿಕ ಈಗಾಗಲೇ ವಿಯೆಟ್ನಾಂ ತರದ ಅವಮಾನ ಎದುರಿಸಿದೆ ಎಂದು ಹೇಳುವುದು ನಿಖರವಾದ ವಿಶ್ಲೇಷಣೆಯಲ್ಲ. ಆದರೆ ಈ ಸಂಘರ್ಷವು ದೀರ್ಘಕಾಲ ನಡೆದರೆ ಮತ್ತು ಸ್ಪಷ್ಟವಾದ ಜಯದ ಲಕ್ಷಣಗಳು ಕಾಣಿಸದಿದ್ದರೆ, ಇಂತಹ ಹೋಲಿಕೆಗಳು ಮತ್ತಷ್ಟು ಬಲ ಪಡೆಯಬಹುದು. ಆದ್ದರಿಂದ, ಪ್ರಸ್ತುತ ಪರಿಸ್ಥಿತಿಯನ್ನು ಭಾವನಾತ್ಮಕವಾಗಿ ನೋಡುವುದಕ್ಕಿಂತ, ತರ್ಕಬದ್ಧವಾಗಿ ಮತ್ತು ಇತಿಹಾಸದ ಸತ್ಯಗಳನ್ನು ಗಮನದಲ್ಲಿಟ್ಟುಕೊಂಡು ವಿಶ್ಲೇಷಿಸುವುದು ಅಗತ್ಯ. ಇದಲ್ಲದೆ, ವಿಶ್ವ ಶಾಂತಿಯ ದೃಷ್ಟಿಯಿಂದ, ಈ ರೀತಿಯ ಸಂಘರ್ಷಗಳು ವಿಸ್ತಾರಗೊಳ್ಳುವುದನ್ನು ತಪ್ಪಿಸುವುದು ಅತ್ಯಂತ ಮುಖ್ಯ. ರಾಜತಾಂತ್ರಿಕ ಮಾತುಕತೆಗಳು, ಅಂತರ್ರಾಷ್ಟ್ರೀಯ ಒತ್ತಡ ಮತ್ತು ಸಂವಾದದ ಮಾರ್ಗಗಳು ಈ ಸಮಸ್ಯೆಯನ್ನು ಪರಿಹರಿಸಲು ಉತ್ತಮ ಮಾರ್ಗವಾಗಬಹುದು. ಯುದ್ಧವು ಯಾವತ್ತಿಗೂ ಅಂತಿಮ ಪರಿಹಾರವಾಗುವುದಿಲ್ಲ ಎಂಬುದು ಇತಿಹಾಸವು ನಮಗೆ ಕಲಿಸಿದ ಪ್ರಮುಖ ಪಾಠವಾಗಿದೆ. ಅಮೆರಿಕ-ಇರಾನ್ ಸಂಘರ್ಷವು ಇನ್ನೂ ಬೇರೆ ಆಯಾಮವನ್ನು ಪಡೆಯುವುದಕ್ಕಿಂತ ಮುಂಚೆ ಮಧ್ಯ ಪ್ರಾಚ್ಯದಲ್ಲಿ ಬೇಗ ಶಾಶ್ವತ ಶಾಂತಿ ಸ್ಥಾಪನೆ ಅಗತ್ಯ.
ಚೆನ್ನೈ: ತಮಿಳುನಾಡು ರಾಜಕೀಯದಲ್ಲಿ ಹೊಸ ಅಲೆ ಸೃಷ್ಟಿಸಿರುವ ನಟ ದಳಪತಿ ವಿಜಯ್ (Thalapathy Vijay) ನೇತೃತ್ವದ ತಮಿಳಗ ವೆಟ್ರಿ ಕಳಗಂ (TVK) ಪಕ್ಷವು 234 ಕ್ಷೇತ್ರಗಳಿಗೂ ತನ್ನ ಅಭ್ಯರ್ಥಿಗಳನ್ನು ಘೋಷಿಸಿದೆ. ಆದರೆ ಈ ಪಟ್ಟಿಯಲ್ಲಿ ಎಲ್ಲರ ಕಣ್ಸೆಳೆದಿದ್ದು ವಿಜಯ್ ಅವರ ಹಳೆಯ ಕಾರು ಚಾಲಕನ ಮಗನ ಹೆಸರು. ಸಾಮಾನ್ಯ ಕುಟುಂಬದ ಹಿನ್ನೆಲೆಯುಳ್ಳ ಯುವಕನಿಗೆ ಶಾಸಕ ಸ್ಥಾನದ ಟಿಕೆಟ್
ದಾವಣಗೆರೆ ದಕ್ಷಿಣ ಉಪ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿ ಪರವಾಗಿ ಸಚಿವ ಜಮೀರ್ ಅಹ್ಮದ್ ಖಾನ್ ಅವರು ಪ್ರಚಾರಕ್ಕೆ ಬರುವಂತೆ ಆಹ್ವಾನಿಸಿದ್ದೇನೆ. ಇದೀಗ ಅವರು ಕೇರಳ ಚುನಾವಣಾ ಪ್ರಚಾರಕ್ಕೆ ಹೋಗಿದ್ದಾರೆ. ಚುನಾವಣಾ ಪ್ರಚಾರಕ್ಕೆ ಬರದಿದ್ದರೂ ಒಳ್ಳೆಯದೇ ಎಂದು ಸಚಿವ ಎಸ್ ಎಸ್ ಮಲ್ಲಿಕಾರ್ಜುನ್ ಹೇಳಿರುವುದು ಕಾಂಗ್ರೆಸ್ ಪಾಳಯದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಈ ನಡುವೆ ಜಮೀರ್ ಅವರು ಸಿಎಂ ಸಿದ್ದರಾಮಯ್ಯ ಅವರಲ್ಲಿ ಸದ್ಯದ ಬೆಳವಣಿಗೆಗಳ ಬಗ್ಗೆ ಚರ್ಚಿಸಿ ತಮ್ಮ ಅಸಮಾಧಾನ ತೋಡಿಕೊಂಡಿದ್ದಾರೆ ಎಂಬ ಮಾಹಿತಿ ಇದೆ. ಮತ್ತಷ್ಟು ವಿವರ ಇಲ್ಲಿದೆ.
ಎತ್ತ ಸಾಗುತ್ತಿದೆ ಮುಸ್ಲಿಮ್ ರಾಜಕಾರಣ?
ಜಸ್ಟಿಸ್ ರಾಜಿಂದರ್ ಸಾಚಾರ್ ವರದಿಯಲ್ಲಿ ದೇಶದ ಮುಸಲ್ಮಾನರ ಪರಿಸ್ಥಿತಿ ಎಂಟು ಪ್ರಮುಖ ಸೂಚ್ಯಂಕಗಳಲ್ಲಿ ದಲಿತರಿಗಿಂತ ಹೀನಾಯವಾಗಿದೆ ಎಂದು ಹೇಳುತ್ತದೆ. ಮುಸ್ಲಿಮರ ಶಿಕ್ಷಣ ದರ ಮಟ್ಟ ರಾಷ್ಟ್ರೀಯ ಮತ್ತು ದಲಿತರ ಸರಾಸರಿಗಿಂತ ಕಡಿಮೆ. ಶಾಲೆಬಿಟ್ಟು ಹೋಗುವವರ ಸಂಖ್ಯೆ ಹೆಚ್ಚು. ಸರಕಾರಿ ಉದ್ಯೋಗದಲ್ಲಿ ಮುಸ್ಲಿಮರ ಪಾಲು ತುಂಬಾ ಕಡಿಮೆ. ಐಎಎಸ್-ಐಪಿಎಸ್ ಅಧಿಕಾರಿಗಳ ಸಂಖ್ಯೆಯಂತೂ ಇನ್ನೂ ಕಡಿಮೆ. ಆರ್ಥಿಕತೆ ವಿಷಯಕ್ಕೆ ಬರುವುದಾದರೆ ಮುಸ್ಲಿಮರಲ್ಲಿ ಸ್ವಉದ್ಯೋಗ ಹೆಚ್ಚು. ಸಾಮಾಜಿಕ ಭದ್ರತಾ ಪ್ರಯೋಜನಗಳು ಮತ್ತು ನಿಗದಿತ ಕೆಲಸದ ಸಮಯ ಇರುವ ಔಪಚಾರಿಕ ವಲಯದ ಉದ್ಯೋಗಿಗಳು ಕಡಿಮೆ. ಉದ್ಯೋಗ-ಉದ್ಯಮಕ್ಕಾಗಿ ಬ್ಯಾಂಕ್ ಸಾಲ ಪಡೆಯುವ ಮುಸಲ್ಮಾನರ ಸಂಖ್ಯೆ ಕಡಿಮೆ. ಮುಸ್ಲಿಮರು ವಾಸಿಸುವ ಪ್ರದೇಶಗಳಲ್ಲಿ ಬ್ಯಾಂಕ್ ಶಾಖೆಗಳೂ ಕಡಿಮೆ, ಮುಸ್ಲಿಮರು ವಾಸಿಸುವ ಪ್ರದೇಶಗಳಲ್ಲಿ ನೀರು, ರಸ್ತೆ, ಶಾಲೆಯಂಥ ಮೂಲಸೌಕರ್ಯಗಳು ಕಡಿಮೆ. ಕರ್ನಾಟಕದ ಪರಿಸ್ಥಿತಿ ಭಿನ್ನವಾಗಿರಲು ಸಾಧ್ಯವಿಲ್ಲ. ರಾಜಕೀಯ ಪ್ರಾತಿನಿಧ್ಯದ ವಿಷಯಕ್ಕೆ ಬರುವುದಾದರೆ ಕರ್ನಾಟಕ ವಿಧಾನಸಭೆಯಲ್ಲಿ 1972ರಲ್ಲಿ ಇದ್ದ ಮುಸ್ಲಿಮ್ ಶಾಸಕರ ಸಂಖ್ಯೆ 12. 1978ರಲ್ಲಿ 16, ನಂತರ ಉಪಚುನಾವಣೆಯಲ್ಲಿ ಒಂದು ಕ್ಷೇತ್ರ ಗೆದ್ದದ್ದರಿಂದ 17 ಆಯಿತು. ನಂತರ ಕುಸಿಯಲಾರಂಭಿಸಿತು. 1983ರಲ್ಲಿ 2, 1985ರಲ್ಲಿ 8, 1989ರಲ್ಲಿ 11, 1994ರಲ್ಲಿ 6, 1999ರಲ್ಲಿ 12, 2004ರಲ್ಲಿ 6, 2008ರಲ್ಲಿ 9, 2013ರಲ್ಲಿ 11, 2018ರಲ್ಲಿ 7 ಮತ್ತು 2023ರಲ್ಲಿ 9ಕ್ಕೆ ಇಳಿದಿದೆ. ಇಳಿದಿರುವುದು ಶಾಸಕರ ಸಂಖ್ಯೆ ಮಾತ್ರವಲ್ಲ. ಲೋಕಸಭೆ, ವಿಧಾನ ಪರಿಷತ್, ಸ್ಥಳೀಯ ಸಂಸ್ಥೆಗಳು, ನಾಮ ನಿರ್ದೇಶನಗಳಲ್ಲೂ ಗಣನೀಯವಾಗಿ ಮುಸ್ಲಿಮರನ್ನು ನಗಣ್ಯ ಮಾಡಲಾಗುತ್ತಿದೆ. ರಾಜ್ಯಸಭೆಗೆ ಮಾತ್ರ ಈ ಹಿಂದೆಯೂ ಒಬ್ಬರಿಗೆ ಅವಕಾಶ ಸಿಗುತ್ತಿತ್ತು. ಈಗಲೂ ಒಬ್ಬರಿಗೆ (ನಾಸಿರ್ ಹುಸೇನ್) ಅವಕಾಶ ಕೊಡಲಾಗಿದೆ. ಅನುದಾನದ ವಿಷಯಕ್ಕೆ ಬರುವುದಾದರೆ ರಾಜ್ಯ ಬಜೆಟಿನಲ್ಲಿ ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ ಕೊಡುತ್ತಿರುವ ಹಣ ಬಹಳ ಕಡಿಮೆ. ಆದರೂ ಬಿಜೆಪಿ ಅದನ್ನು ‘ಬ್ರದರ್ಸ್ ಬಜೆಟ್’ ಎಂದು ಜರೆಯುತ್ತದೆ. ಮುಸ್ಲಿಮ್ ಮತಗಳಿಂದಲೇ ಗೆದ್ದು ಬರುವ ಕಾಂಗ್ರೆಸ್ ನಾಯಕರು ಕೂಡ ಮೌನವಾಗಿರುತ್ತಾರೆ. ರಾಜ್ಯದ ಬಜೆಟ್ ಗಾತ್ರ 4,48,008 ಕೋಟಿ ರೂ. ಅದರಲ್ಲಿ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಗೆ ಕೊಟ್ಟಿರುವುದು 4,790 ಕೋಟಿ ರೂ. ಮಾತ್ರ. ಇದನ್ನು ಒಟ್ಟಾರೆ ಬಜೆಟ್ ಗಾತ್ರಕ್ಕೆ ಶೇಕಡಾವಾರು ಲೆಕ್ಕಾಚಾರದಲ್ಲಿ ಹೋಲಿಸಿ ನೋಡಿದರೆ ಅಲ್ಪಸಂಖ್ಯಾತರಿಗೆ ಸಿಕ್ಕಿರುವುದು ಸುಮಾರು ಶೇ. ಒಂದರಷ್ಟು ಮಾತ್ರ. ಸುಮಾರು ಶೇ. 12ರಿಂದ 13ರಷ್ಟು ಜನಸಂಖ್ಯೆ ಹೊಂದಿರುವ ಅಲ್ಪಸಂಖ್ಯಾತರಿಗೆ ಶೇ. ಒಂದರಷ್ಟು ಅನುದಾನ ಕೊಡುವುದು ಅನ್ಯಾಯ ಎಂದು ಯಾರಿಗೂ ಅನಿಸುತ್ತಿಲ್ಲ. ವಿಶೇಷ ಎಂದರೆ ಅನ್ಯಾಯಕ್ಕೆ ಒಳಗಾಗುತ್ತಿರುವ ಅಲ್ಪಸಂಖ್ಯಾತರಿಗೂ ಅನಿಸುತ್ತಿಲ್ಲ. ಈ ಬಗ್ಗೆ ವಿಧಾನಸಭೆಯ ಅಧಿವೇಶನದಲ್ಲಿ ವಿಷಯ ಪ್ರಸ್ತಾಪ ಮಾಡಿದ ಏಕೈಕ ಶಾಸಕ ರಿಝ್ವ್ವಾನ್ ಅರ್ಷದ್. ನಾಯಕತ್ವ ಸೊರಗಿದರೆ ಪ್ರಾತಿನಿಧ್ಯ ಅನುದಾನಗಳ ವಿಷಯದಲ್ಲಿ ಅನ್ಯಾಯವಾಗುತ್ತದೆ. ಸಂಖ್ಯೆಗಳು ಕಡಿಮೆಯಾಗುವುದಕ್ಕಿಂತ ಬದ್ಧತೆ ಕಡಿಮೆಯಾಗುವುದು ಹೆಚ್ಚು ಅಪಾಯ. ಇದರ ಬಗ್ಗೆ ಮುಸ್ಲಿಮ್ ನಾಯಕರು ಗಂಭೀರವಾದ ಚಿಂತನೆ ನಡೆಸಬೇಕಾಗಿತ್ತು. ಆದರೆ ಸದ್ಯದ ಕರ್ನಾಟಕದ ಮುಸ್ಲಿಮ್ ನಾಯಕರಿಗೆ ಈ ಬಗ್ಗೆ ಅರಿವಿದೆ ಎನ್ನುವುದಕ್ಕೆ ಪುರಾವೆಗಳಿಲ್ಲ. ಪ್ರಾತಿನಿಧ್ಯ ಕಡಿಮೆ ಆಗುತ್ತಿರುವುದರಿಂದ ಉಂಟಾಗಬಹುದಾದ ಗಂಭೀರ ಪರಿಣಾಮಗಳ ಬಗ್ಗೆ ಆತಂಕವಿದ್ದಿದ್ದರೆ ಅವರು ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಟಿಕೆಟ್ ಅನ್ನು ಬಿಟ್ಟು ಕೊಡುತ್ತಿರಲಿಲ್ಲ. ಶಾಮನೂರು ಶಿವಶಂಕರಪ್ಪ ಕುಟುಂಬ ಮತ್ತು ಕಾಂಗ್ರೆಸ್ ನಾಯಕರು ಟಿಕೆಟ್ ಅನ್ನು ಕಿತ್ತುಕೊಂಡರು ಎನ್ನುವುದು ಎಷ್ಟು ಸತ್ಯವೋ ಮುಸ್ಲಿಮ್ ನಾಯಕರು ತಮ್ಮ ಸ್ವಹಿತಾಸಕ್ತಿಗಳಿಗಾಗಿ ಸಮುದಾಯದ ಹಿತವನ್ನು ಬಲಿ ಕೊಟ್ಟರು ಎನ್ನುವುದು ಅಷ್ಟೇ ಸತ್ಯ. ಅದೊಂದು ಕಾಲ ಇತ್ತು; ಅಝೀಝ್ ಸೇಠ್, ಜಾಫರ್ ಷರೀಫ್, ಬಿ.ಎ. ಮೊಯಿದಿನ್ ಅವರಂಥ ನಾಯಕರಿದ್ದರು. ಸಮುದಾಯದಾಚೆಗೂ ವಿಶ್ವಾಸ ಮೂಡಿಸಿದ್ದರು. ಕ್ರಮೇಣ ಬಂದ ನಾಯಕರು ಕ್ಷೇತ್ರದಾಚೆಗೆ, ಜಿಲ್ಲೆಯಾಚೆಗೆ ಅಪ್ರಸ್ತುತರಾದರು. ಸಮುದಾಯದ ಇನ್ನೊಬ್ಬ ಗೆದ್ದು ಬಂದರೆ ಪ್ರತಿಸ್ಪರ್ಧಿಯಾಗುತ್ತಾನೆ ಎಂದು ಸಹೋದರರ ಸೋಲನ್ನು ಬಯಸಿದರು. ಇದಕ್ಕೆ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ನಿರಂತರವಾಗಿ ಸೋಲುತ್ತಿರುವುದಕ್ಕಿಂತ ಬೇರೊಂದು ಉದಾಹರಣೆ ಬೇಕಾಗಿಲ್ಲ. ಇದಲ್ಲದೆ ರಾಜ್ಯ ಮುಸ್ಲಿಮ್ ನಾಯಕರು ಹರಿದು ಹಂಚಿಹೋಗಿದ್ದಾರೆ. ಸಚಿವರಾಗಿದ್ದರೂ ಬೀದರ್ ಆಚೆಗೆ ರಹೀಮ್ ಖಾನ್ ಹೆಸರಿಲ್ಲ. ಯು.ಟಿ. ಖಾದರ್ ಅವರಿಗೆ ದಕ್ಷಿಣ ಕನ್ನಡ ಜಿಲ್ಲೆ ಬಿಟ್ಟರೆ ಬೇರೆ ಗೊತ್ತಿಲ್ಲ. ತನ್ವೀರ್ ಸೇಠ್ ನರಹಿಂಹರಾಜ ಕ್ಷೇತ್ರಕ್ಕಷ್ಟೇ ತೃಪ್ತರಾಗಿದ್ದಾರೆ. ಕಲಬುರಗಿಯ ಕನೀಝ್ ಫಾತಿಮಾ ಅವರು ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಷ್ಟನ್ನಷ್ಟೇ ಕೇಳುತ್ತಾರೆ. ಬೆಳಗಾವಿಯ ಆಸಿಫ್ ಸೇಠ್, ಸತೀಶ್ ಜಾರಕಿಹೊಳಿ ತಾಳಕ್ಕೆ ತಕ್ಕಂತೆ ಕುಣಿಯುತ್ತಾರೆ. ರಾಮನಗರದ ಇಕ್ಬಾಲ್ ಹುಸೇನ್, ಡಿ.ಕೆ.ಶಿವಕುಮಾರ್ ಮತ್ತು ಡಿ.ಕೆ. ಸುರೇಶ್ ಕಣ್ಸನ್ನೆಯಂತೆ ಬಾಯಿಬಿಟ್ಟು ಬೆತ್ತಲಾಗುತ್ತಿರುತ್ತಾರೆ. ಅತಿ ಹೆಚ್ಚು ಶಾಸಕರಿರುವ ಬೆಂಗಳೂರಿನಲ್ಲಿ ಗುಂಪುಗಳೂ ಜಾಸ್ತಿ. ಝಮೀರ್ ಅಹ್ಮದ್ ಖಾನ್, ಸಿದ್ದರಾಮಯ್ಯ ಪಾಳೆಯದಲ್ಲಿ ಇದ್ದಾರೆ ಎಂಬ ಏಕೈಕ ಕಾರಣಕ್ಕೆ ಎನ್.ಎ. ಹ್ಯಾರಿಸ್, ಡಿ.ಕೆ.ಶಿವಕುಮಾರ್ ಬಳಗದಲ್ಲಿ ಗುರುತಿಸಿಕೊಂಡಿದ್ದಾರೆ. ರಿಝ್ವಾನ್ ಅರ್ಷದ್ ಅವರು ಝಮೀರ್ ಮತ್ತು ಹ್ಯಾರಿಸ್ ಇಬ್ಬರಿಂದಲೂ ಅಂತರ ಕಾಯ್ದುಕೊಂಡಿದ್ದಾರೆ. ಝಮೀರ್ / ಅದರ್ಸ್ ಇಲ್ಲಿಯವರೆಗೆ ವಿಧಾನ ಪರಿಷತ್ ಸದಸ್ಯ ನಸೀರ್ ಅಹಮದ್ ಅವರು ಸಿದ್ದರಾಮಯ್ಯ ಕಾರಣಕ್ಕೆ ಝಮೀರ್ ಜೊತೆ ಇದ್ದರು. ಶಾಮನೂರು ಜೊತೆಗಿದ್ದರೂ ಮುಸ್ಲಿಮರ ವಿಷಯಕ್ಕೆ ಬಂದರೆ ಅಬ್ದುಲ್ ಜಬ್ಬಾರ್ ಕೂಡ ಝಮೀರ್ಗೆ ಜೈ ಎನ್ನುತ್ತಿದ್ದರು. ಹಾಗಾಗಿ ಇದ್ದುದರಲ್ಲಿ ಝಮೀರ್ ಬಣ ಪ್ರಬಲ ಎನಿಸುತ್ತಿತ್ತು. ಆಗಾಗ ಉಳಿದವರೆಲ್ಲಾ ಒಂದಾಗುತ್ತಿದ್ದರಾದರೂ ಆ ಒಗ್ಗಟ್ಟು ತುಂಬಾ ದಿನ ಉಳಿಯುತ್ತಿರಲಿಲ್ಲ. ದಾವಣಗೆರೆ ವಿಷಯದಲ್ಲಿ ಇವರ ಕಿತ್ತಾಟ ಬಟಾ ಬಯಲಾಗಿದೆ. ಅಬ್ದುಲ್ ಜಬ್ಬಾರ್ ಪರ ಝಮೀರ್ ವಕಾಲತ್ತು ವಹಿಸಿದ್ದೇ ತಡ ಉಳಿದವರೆಲ್ಲಾ ಸೈಯದ್ ಖಾಲಿದ್ಗೆ ಟಿಕೆಟ್ ಕೊಡಬೇಕೆಂದು ಹಠ ಹಿಡಿದಿದ್ದರು. ತಟಸ್ಥವಾಗಿರುವ ನಾಯಕರೊಬ್ಬರ ಪ್ರಕಾರ ಝಮೀರ್ ‘ಮುಸ್ಲಿಮರಿಗೆ ಟಿಕೆಟ್ ಕೊಡುವುದಿದ್ದರೆ ಅಬ್ದುಲ್ ಜಬ್ಬಾರ್ಗೆ ಕೊಡಿ, ಇಲ್ಲದಿದ್ದರೆ ಬೇರೆ ಯಾರಿಗಾದರೂ ಕೊಡಿ’ ಎಂದು ಹೇಳಿದ್ದರಂತೆ. ‘ನಮಗೆ ಹಿನ್ನಡೆಯಾಗಿದ್ದೇ ಆಗ ಝಮೀರ್ ಹಾಗೆ ಹೇಳಿದ ನಂತರವೇ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಅಂತಿಮ ತೀರ್ಮಾನ ಮಾಡಿದ್ದು’ ಎನ್ನುತ್ತಾರೆ ಅವರು. ಹಾಗೆಯೇ ‘ಟಿಕೆಟ್ ಪಡದೇ ತೀರಬೇಕು ಎನ್ನುವ ಉದ್ದೇಶವಿದ್ದರೆ ಎಲ್ಲರೂ ಒಗ್ಗಟ್ಟಾಗಿ ಒಂದೇ ಹೆಸರನ್ನು ಸೂಚಿಸಬೇಕಾಗಿತ್ತು. ಅದಕ್ಕೂ ಮೊದಲು ಎಸ್.ಎಸ್. ಮಲ್ಲಿಕಾರ್ಜುನ್ ಜೊತೆಯೂ ಮಾತನಾಡಬೇಕಾಗಿತ್ತು’ ಎನ್ನುತ್ತಾರೆ. ಬೇರೆ ಮೂಲಗಳು ಕೂಡ ಅನುಮೋದಿಸುವುದರಿಂದ ಅವರ ಮಾತನ್ನು ಅಲ್ಲಗೆಳೆಯಲಾಗದು. ಹೆಚ್ಚುವರಿ ಲಾಭ ಸಿಗುವುದಿಲ್ಲ! ದಾವಣಗೆರೆ ಟಿಕೆಟ್ ಕೈ ತಪ್ಪಿದ ಬೆನ್ನಲ್ಲೇ ಮುಸ್ಲಿಮ್ ನಾಯಕರು ಮುಖ ಉಳಿಸಿಕೊಳ್ಳಲು ತಮ್ಮ ಸಮುದಾಯಕ್ಕೆ ವಿಧಾನ ಪರಿಷತ್ ಮತ್ತು ರಾಜ್ಯಸಭೆಯಲ್ಲಿ ಹೆಚ್ಚುವರಿ ಸ್ಥಾನಕ್ಕೆ ಬೇಡಿಕೆ ಇಟ್ಟಿದ್ದೇವೆ. ಪಕ್ಷ ಒಪ್ಪಿದೆ ಎಂದು ಹೇಳುತ್ತಿದ್ದಾರೆ. ವಾಸ್ತವದಲ್ಲಿ ಹೆಚ್ಚಿನದೇನೂ ಸಿಗುವುದಿಲ್ಲ. ಜೂನ್-ಜುಲೈ ತಿಂಗಳಲ್ಲಿ ಖಾಲಿಯಾಗುವ 12 ವಿಧಾನ ಪರಿಷತ್ ಸ್ಥಾನಗಳ ಪೈಕಿ ಕಾಂಗ್ರೆಸಿಗೆ 10 ಸ್ಥಾನ ಸಿಗುತ್ತವೆ. ಅದರಲ್ಲಿ ನಸೀರ್ ಅಹಮದ್ ನಿವೃತ್ತರಾಗುವುದರಿಂದ ಮುಸ್ಲಿಮರಿಗೆ ಒಂದು ಸ್ಥಾನ ಸಿಗಲೇಬೇಕಿತ್ತು. ಅದು ಮಾತ್ರ ಸಿಗುತ್ತದೆ. ಸಿದ್ದರಾಮಯ್ಯ ಕೃಪೆಯಿಂದಾಗಿ ಬಹುತೇಕ ಅವರು ಮತ್ತೆ ಪರಿಷತ್ ಸದಸ್ಯರಾಗುತ್ತಾರೆ. ಬೇರೆಯವರು ಪರಿತಪಿಸಬೇಕಷ್ಟೇ. ಇನ್ನು, ರಾಜ್ಯಸಭೆಯಲ್ಲಿ ಈಗಾಗಲೇ ನಾಸಿರ್ ಹುಸೇನ್ ಇದ್ದಾರೆ. ಇನ್ನೊಬ್ಬರಿಗೆ ಅವಕಾಶ ಸಿಗುವ ಸಾಧ್ಯತೆಗಳು ತುಂಬಾ ಕಡಿಮೆ. ಸದ್ಯಕ್ಕೆ ಇದೇ ವರ್ಷ ಕಾಂಗ್ರೆಸ್ಗೆ ಸಿಗುವ ಮೂರು ಸ್ಥಾನಗಳ ಪೈಕಿ ಮಲ್ಲಿಕಾರ್ಜುನ ಖರ್ಗೆ ಮತ್ತೆ ರಾಜ್ಯಸಭೆಗೆ ಹೋಗುವುದು ಗ್ಯಾರಂಟಿಯಾಗಿದೆ. ಉಳಿದ ಎರಡು ಸ್ಥಾನಗಳಲ್ಲಿ ಒಂದನ್ನು ಹಿಂದುಳಿದ ವರ್ಗದವರಿಗೆ ಕೊಡಬೇಕು ಎನ್ನುವ ಮಾತಿದೆ. ಮತ್ತೆ ಬಿ.ಕೆ. ಹರಿಪ್ರಸಾದ್ ಹೋದರೂ ಅಚ್ಚರಿ ಪಡುವಂತಿಲ್ಲ. ಉಳಿದ ಒಂದು ಸ್ಥಾನವನ್ನು ಲಿಂಗಾಯತರಿಗೆ ಕೊಡಬೇಕು ಎನ್ನುವ ಕೂಗಿದೆ. ಪ್ರಬಲ ಸಮುದಾಯದ ಪೈಕಿ ಒಕ್ಕಲಿಗರಾದ ಜಿ.ಸಿ. ಚಂದ್ರಶೇಖರ್ ಅವರಿಗೆ ಅವಕಾಶ ಕೊಟ್ಟಿರುವುದರಿಂದ ಲಿಂಗಾಯತರಿಗೆ ಮಣೆ ಹಾಕಲೇಬೇಕು ಎನ್ನುವ ವಾದವಿದೆ. ಹಾಗಾದರೆ ಈ ಬಾರಿ ಮುಸ್ಲಿಮರಿಗೆ ಕೊಡಲ್ಲ. ಈ ಬಾರಿ ಕೊಡಲಿಲ್ಲ ಎಂದರೆ 2028ರಲ್ಲಿ ಕೊಡಲು ಸ್ವತಃ ನಾಸಿರ್ ಹುಸೇನ್ ಬಿಡುವುದಿಲ್ಲ. ಏಕೆಂದರೆ 2030ಕ್ಕೆ ಅವರ ಅವಧಿ ಮುಗಿಯಲಿದ್ದು ಅವರು ಮತ್ತೆ ಬರಲು 2028ರಲ್ಲಿ ಬೇರೆಯವರು ಬಾರದಂತೆ ತಡೆಗೋಡೆ ನಿರ್ಮಿಸುತ್ತಾರೆ. ಖರ್ಗೆ, ಸುರ್ಜೆವಾಲ ಮತ್ತಿತರ ದಿಲ್ಲಿ ನಾಯಕರ ಬೆಂಬಲ ಇರುವುದರಿಂದ ಅದು ಅವರಿಗೆ ಕಷ್ಟವಾಗಲಾರದು. ಸಿಎಂ-ಝಮೀರ್ ದೂರಾದೂರ? ಈ ಎಲ್ಲಾ ಬೆಳವಣಿಗೆಗಳಿಗೂ ಮೊದಲೇ ಸಿದ್ದರಾಮಯ್ಯ ಇತ್ತೀಚೆಗೆ ಝಮೀರ್ ಜೊತೆ ಅಂತರ ಕಾಯ್ದುಕೊಳ್ಳುತ್ತಿದ್ದರು. ಝಮೀರ್ ಕಾರಣಕ್ಕೆ ಬೇರೆಯವರಿಂದ ದೂರವಾಗಲು ಅವರು ಸಿದ್ದರಿರಲಿಲ್ಲ. ಈಗ ದಾವಣಗೆರೆ ವಿಷಯದಲ್ಲಿ ಝಮೀರ್ ಬಗ್ಗೆ ಇನ್ನಷ್ಟು ಬೇಸರ ಮಾಡಿಕೊಂಡಿದ್ದಾರೆ. ದಾವಣಗೆರೆ ಸಮಸ್ಯೆ ಇಷ್ಟು ದೊಡ್ಡದಾಗಲು ಜಮೀರ್ ಕಾರಣ ಎಂದುಕೊಂಡಿದ್ದಾರೆ. ಬಂಡಾಯವಾಗಿ ಸ್ಪರ್ಧೆ ಮಾಡಿದ್ದ ಸಾದಿಕ್ ಪೈಲ್ವಾನ್ ಮನವೊಲಿಸಿ ನಾಮಪತ್ರ ವಾಪಸ್ ತೆಗೆಸು ಎಂದು ಹೇಳಿದರೂ ತಮ್ಮ ಮಾತು ಕೇಳದೆ ಕೇರಳಕ್ಕೆ ಹೋಗಿ ಕುಳಿತಿರುವುದಕ್ಕೆ ಝಮೀರ್ ಬಗ್ಗೆ ಕೋಪಗೊಂಡಿದ್ದಾರೆ. ಇದೇ ಕಾರಣಕ್ಕೆ ಸಾದಿಕ್ ಪೈಲ್ವಾನ್ ಮನವೊಲಿಸಿದ ಬಳಿಕ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಸಿದ್ದರಾಮಯ್ಯ, ರಿಝ್ವಾನ್ ಅರ್ಷದ್ ಮತ್ತು ಸಲೀಂ ಅಹಮದ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಅಪ್ಪಿತಪ್ಪಿಯೂ ಝಮೀರ್ ಹೆಸರು ಹೇಳಲಿಲ್ಲ ಎನ್ನಲಾಗುತ್ತಿದೆ. ಒಟ್ಟಿನಲ್ಲಿ ಮುಸ್ಲಿಮ್ ಸಮುದಾಯ ಸಮರ್ಥ ನಾಯಕತ್ವವಿಲ್ಲದೆ ಕಂಗಾಲಾಗಿದೆ. ಮಂತ್ರಿಯಾಗುತ್ತಾರೋ ಇಲ್ಲವೋ ಖಾದರ್? ಯು.ಟಿ.ಸ ಖಾದರ್ ಗ್ರೂಪ್ ಫೋಟೊ ತೆಗೆಸಿಕೊಳ್ಳುವ ಮೂಲಕ ಸ್ಪೀಕರ್ ಆಗಿ ಇದು ತಮ್ಮ ಕಡೆಯ ಅಧಿವೇಶನ ಎನ್ನುವ ಸುಳಿವು ನೀಡಿದ್ದಾರೆ. ಅವರಿಗೆ ಪಕ್ಷ ಆರೆಸ್ಸೆಸ್ ಬಗೆಗಿನ ಮೃದು ಧೋರಣೆ, ಸಭಾತ್ಯಾಗ ಮಾಡಿ ಸರಕಾರಕ್ಕೆ ಮುಜುಗರ ಉಂಟುಮಾಡಿದ್ದು ಮತ್ತು ದಕ್ಷಿಣ ಕನ್ನಡಕ್ಕೆ ಹೆಚ್ಚು ಒತ್ತು ನೀಡಿ ಉಳಿದ ಭಾಗವನ್ನು ನಿರ್ಲಕ್ಷ್ಯ ಮಾಡಿದ್ದಾರೆ ಎನ್ನುವ ಆರೋಪಗಳ ಹಿನ್ನೆಲೆಯಲ್ಲಿ ಇದು ನಿಮ್ಮ ಕಡೆಯ ಅಧಿವೇಶನ ಎಂಬ ಸುಳಿವು ನೀಡಿದೆ. ಆಫ್ ದಿ ರೆಕಾರ್ಡ್! ರಾಜಕೀಯ ನಾಯಕತ್ವಕ್ಕಿಂತಲೂ ಮಿಗಿಲಾದ ಮತ್ತೊಂದು ದೊಡ್ಡ ಅಪಾಯ ಇದೆ. ಮುಸ್ಲಿಮರಲ್ಲಿ ಈಗ ಸರಕಾರ ಮತ್ತು ಸಮಾಜದ ಮೇಲೆ ಪ್ರಭಾವ ಬೀರಬಲ್ಲಂಥ ಬೌದ್ಧಿಕ ವಲಯ ಇಲ್ಲವಾಗಿದೆ. ದಲಿತರು, ಹಿಂದುಳಿದವರನ್ನೂ ಈ ಸಮಸ್ಯೆ ಕಾಡುತ್ತಿದೆ ಎನ್ನುವುದು ನಿಜವಾದರೂ ಅವರಿಗೆ ಮೀಸಲಾತಿ ಮತ್ತು ಸಾಮಾಜಿಕ ಭದ್ರತೆಯಂಥ ಇತರ ಅನುಕೂಲಗಳಿವೆ. ಅವು ಇಲ್ಲದ ಮುಸಲ್ಮಾನರನ್ನು ಈಗ ಕೇಳುವವರು ಯಾರು?
ಇರಾನ್ ನ ತೈಲ ವಶಕ್ಕೆ ಪಡೆಯುವ ಉದ್ದೇಶವಿದೆ: ಟ್ರಂಪ್ ಹೇಳಿಕೆ
ವಾಶಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇರಾನ್ ನಲ್ಲಿರುವ ತೈಲ ಸಂಪತ್ತನ್ನು ವಶಪಡಿಸಿಕೊಳ್ಳಲು ಆಸಕ್ತಿ ವ್ಯಕ್ತಪಡಿಸಿದ್ದಾರೆ. The financial times ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಅವರು ಈ ಹೇಳಿಕೆ ನೀಡಿದ್ದಾರೆ. ಇರಾನ್ ನ ಪ್ರಮುಖ ತೈಲ ರಫ್ತು ಕೇಂದ್ರವಾದ ಖಾರ್ಗ್ ದ್ವೀಪವನ್ನು ವಶಪಡಿಸಿಕೊಳ್ಳುವ ಸಾಧ್ಯತೆಯನ್ನೂ ಟ್ರಂಪ್ ಉಲ್ಲೇಖಿಸಿದ್ದಾರೆ. “ನಾವು ಖಾರ್ಗ್ ದ್ವೀಪವನ್ನು ತೆಗೆದುಕೊಳ್ಳಬಹುದು ಅಥವಾ ತೆಗೆದುಕೊಳ್ಳದೇ ಇರಬಹುದು. ನಮ್ಮ ಬಳಿ ಹಲವು ಆಯ್ಕೆಗಳಿವೆ. ಅಗತ್ಯವಿದ್ದರೆ ಅಲ್ಲಿ ಕೆಲವು ಕಾಲ ಉಳಿಯಬೇಕಾಗಬಹುದು,” ಎಂದು ಅವರು ಹೇಳಿದ್ದಾರೆ. ವೆನೆಝುವೆಲಾದಲ್ಲಿ ಅಮೆರಿಕ ಅನುಸರಿಸಿದ ತೈಲ ನೀತಿಯನ್ನು ಉದಾಹರಿಸಿದ ಟ್ರಂಪ್, ಜನವರಿಯಲ್ಲಿ ಅಧ್ಯಕ್ಷ ನಿಕೋಲಸ್ ಮಡುರೊ ಅವರ ಅಪಹರಣದ ನಂತರ ಆ ದೇಶದ ತೈಲ ಉದ್ಯಮವನ್ನು ಅನಿರ್ದಿಷ್ಟವಾಗಿ ನಿಯಂತ್ರಿಸುವ ಕ್ರಮವನ್ನು ನೆನಪಿಸಿಕೊಂಡರು. ಇದೇ ಮಾದರಿಯ ಕ್ರಮ ಇರಾನ್ ಮೇಲೂ ಅನ್ವಯಿಸಬಹುದು ಎಂದು ಅವರು ಸೂಚಿಸಿದರು. “ನಿಜ ಹೇಳಬೇಕೆಂದರೆ, ಇರಾನ್ ನಲ್ಲಿರುವ ತೈಲವನ್ನು ತೆಗೆದುಕೊಳ್ಳುವುದು ನನ್ನ ನೆಚ್ಚಿನ ಆಯ್ಕೆ. ಆದರೆ ಅಮೆರಿಕದಲ್ಲಿರುವ ಕೆಲವರು ‘ಏಕೆ ಹೀಗೆ ಮಾಡಬೇಕು?’ ಎಂದು ಪ್ರಶ್ನಿಸುತ್ತಾರೆ. ಅವರು ಮೂರ್ಖರು,” ಎಂದು ಟ್ರಂಪ್ ಹೇಳಿದ್ದಾರೆ. ಖಾರ್ಗ್ ದ್ವೀಪದ ರಕ್ಷಣಾ ವ್ಯವಸ್ಥೆ ಕುರಿತು ಮಾತನಾಡಿದ ಅವರು, “ಅವರಿಗೆ ಸಮರ್ಪಕ ರಕ್ಷಣೆಯಿಲ್ಲ ಎಂದು ನಾನು ಭಾವಿಸುವುದಿಲ್ಲ. ನಾವು ಅದನ್ನು ತುಂಬಾ ಸುಲಭವಾಗಿ ವಶಪಡಿಸಿಕೊಳ್ಳಬಹುದು,” ಎಂದು ತಿಳಿಸಿದ್ದಾರೆ.
IPL ಜೊತೆ PSL ಹೋಲಿಕೆ ಮಾಡುತ್ತಿರುವ ಪಾಕಿಸ್ತಾನಿಗಳು : ಬಾವಿ ಕಪ್ಪೆಗೆ ಸಮುದ್ರದ ನೀರಿನ ಅರಿವಿಲ್ಲ
IPL Vs PSL : ಇಂಡಿಯನ್ ಪ್ರೀಮಿಯರ್ ಲೀಗ್ ಆರಂಭವಾಗುವುದಕ್ಕೆ ಎರಡು ದಿನದ ಮುನ್ನ ಪಾಕಿಸ್ತಾನ್ ಸೂಪರ್ ಲೀಗ್ ಆರಂಭಗೊಂಡಿದೆ. ಜಟ್ಟಿ ನೆಲಕ್ಕೆ ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಎನ್ನುವ ಹಾಗೇ, ಎಲ್ಲದಕ್ಕೂ ತಮ್ಮನ್ನು ಭಾರತದ ಜೊತೆ ಹೋಲಿಕೆ ಮಾಡುವ ಪಾಕಿಸ್ತಾನಿಗಳ ಚಾಳಿ ಕ್ರಿಕೆಟ್’ನಲ್ಲೂ ಮುಂದುವರಿದಿದೆ. ವಿಶ್ವದ ಅತ್ಯಂತ ಜನಪ್ರಿಯ ಲೀಗ್’ಗಳಲ್ಲಿ ಒಂದಾದ, ಐಪಿಎಲ್ ಜೊತೆ ಪಿಎಸ್ಎಲ್ ಅನ್ನು ಪಾಕಿಸ್ತಾನಿಗಳು ತುಲನೆ ಮಾಡುತ್ತಿದ್ದಾರೆ. ಹಾಗಾದ್ರೆ, ಪಿಎಸ್ಎಲ್ ಕ್ರೀಡಾಕೂಟ ಐಪಿಎಲ್ ಹತ್ತಿರಕ್ಕಾದರೂ ಬರುತ್ತಾ? ಹಲವು ಆಯಾಮಗಳ ಅಂಕಿಅಂಶವನ್ನು ಲೇಖನದಲ್ಲಿ ವಿವರಿಸಲಾಗಿದೆ.
ಇರಾನ್ ತೈಲ ಅಂದ್ರೆ ನನಗಿಷ್ಟ ಎಂದು ಖಾರ್ಗ್ ದ್ವೀಪ ವಶಪಡಿಸಿಕೊಳ್ಳೋ ಹಿಂಟ್ ಕೊಟ್ಟ ಟ್ರಂಪ್: ಏನಿದರ ಮಹತ್ವ?
ಇರಾನ್ ಮೇಲಿನ ದಾಳಿಗಳ ಕುರಿತು ಟ್ರಂಪ್ ಸಂದರ್ಶನವೊಂದರಲ್ಲಿ ಮಾತನಾಡಿದ್ದು, ಇರಾನ್ ತೈಲವೆಂದರೆ ನನಗೆ ಇಷ್ಟ ಮತ್ತು ಇದಕ್ಕಾಗಿ ಖಾರ್ಗ್ ದ್ವೀಪವನ್ನು ವಶಪಡಿಸಿಕೊಳ್ಳುವ ಸಾಧ್ಯತೆಯಿದೆ ಎಂದು ತಿಳಿಸಿದ್ದಾರೆ. ಇನ್ನು, ಇದೇ ವೇಳೆ, ಇರಾನ್ ಬಳಿ ರಕ್ಷಣಾ ವ್ಯವಸ್ಥೆ ಇಲ್ಲ ಹಾಗಾಗಿ ಈ ಕಾರ್ಯ ಸುಲಭವಾಗಲಿದೆ ಎಂದು ತಿಳಿಸಿದ್ದಾರೆ. ಹಾಗಾದ್ರೆ ಟ್ರಂಪ್ ಕಣ್ಣೀಟ್ಟಿರುವ ಇರಾನ್ ನ ಆರ್ಥಿಕ ಜೀವನಾಡಿ ಖಾರ್ಗ್ ದ್ವೀಪದ ಮಹತ್ವವೇನು ಎಂಬ ಮಾಹಿತಿ ಇಲ್ಲಿದೆ..
ಪಾಕ್ ಕ್ರಿಕೆಟ್’ನಲ್ಲಿ ಬಾಲ್ ಟ್ಯಾಂಪರಿಂಗ್ ಕಪ್ಪುಚುಕ್ಕೆ : ರೆಡ್ ಹ್ಯಾಂಡ್ ಆಗಿ ಸಿಕ್ಕಾಕಿಕೊಂಡ ಫಖರ್ ಜಮಾನ್
Controversy in PSL Match : ಪಾಕಿಸ್ತಾನ್ ಸೂಪರ್ ಲೀಗ್ ಪಂದ್ಯದಲ್ಲಿ ಬಾಲ್ ಟ್ಯಾಂಪರಿಂಗ್ ದೊಡ್ಡ ಸುದ್ದಿಯನ್ನು ಮಾಡುತ್ತಿದೆ. ಪಂದ್ಯದ ಕೊನೆಯ ಓವರ್’ನಲ್ಲಿ ಪಾಕಿಸ್ತಾನದ ಬ್ಯಾಟ್ಯಮ್ಯಾನ್ ಫಖರ್ ಜಮಾನ್, ಬಾಲ್ ಟ್ಯಾಂಪರ್ ಮಾಡುತ್ತಿರುವುದು ಕ್ಯಾಮರಾದಲ್ಲಿ ಸೆರೆಯಾಗಿದೆ. ಇದರಿಂದ ಸ್ವಲ್ಪ ಹೊತ್ತು ಪಂದ್ಯವನ್ನು ಸ್ಥಗಿತಗೊಳಿಸಲಾಯಿತು.
ಬೆಂಗಳೂರು: ರಾಜ್ಯಾದ್ಯಂತ ಇತ್ತೀಚೆಗೆ ನಡೆದ ಎಸ್ಸೆಸ್ಸೆಲ್ಸಿ ಗಣಿತ ವಿಷಯದ ವಾರ್ಷಿಕ ಪರೀಕ್ಷೆಯು ವಿದ್ಯಾರ್ಥಿಗಳು ಮತ್ತು ಪೋಷಕರಲ್ಲಿ ತೀವ್ರ ಆತಂಕ ಮೂಡಿಸಿದೆ. ಪರೀಕ್ಷೆಯಲ್ಲಿ ಕೇಳಲಾದ ಒಟ್ಟು ಪ್ರಶ್ನೆಗಳ ಪೈಕಿ ಸುಮಾರು 37 ಅಂಕಗಳ ಪ್ರಶ್ನೆಗಳು ಪಠ್ಯಕ್ರಮಕ್ಕೆ ಹೊರತಾಗಿವೆ ಅಥವಾ ಅತ್ಯಂತ ಕ್ಲಿಷ್ಟಕರವಾಗಿವೆ ಎಂದು ಗಣಿತ ಶಿಕ್ಷಕರ ಸಂಘ ಮತ್ತು ಪೋಷಕರು ಗಂಭೀರವಾಗಿ ಆರೋಪಿಸಿದ್ದಾರೆ. ಕೃಪಾಂಕಕ್ಕೆ ಆಗ್ರಹ ಈ ಲೋಪದೋಷಗಳಿಂದಾಗಿ
ಶಬ್ದ: ಕವಿ ಸೃಷ್ಟಿಯೋ? ಸಮಾಜ ಸೃಷ್ಟಿಯೋ?
ಇದು ಒಮ್ಮೆ ಮೈಸೂರಿನ ದಾರಿಯಲ್ಲಿ ಕವಿ ಚಂದ್ರಶೇಖರ ಕಂಬಾರರು ನನಗೆ ಹೇಳಿದ ಪ್ರಸಂಗ: ಸಭೆಯೊಂದರಲ್ಲಿ ಮಾತಾಡುತ್ತಿದ್ದ ಶಂಬಾ ಜೋಷಿ ಸಮಾಜ ಶಬ್ದಗಳನ್ನು ಸೃಷ್ಟಿಸುತ್ತದೆ ಎಂದು ವಿವರಿಸುತ್ತಿದ್ದರು. ಮಧ್ಯ ಪ್ರವೇಶಿಸಿದ ಬೇಂದ್ರೆ ಹೇಳಿದರು: ‘ಇಲ್ಲ ಇಲ್ಲ! ಸಮಾಜ ಶಬ್ದಗಳನ್ನು ಸೃಷ್ಟಿಸುವುದಿಲ್ಲ; ಕವಿ ಸೃಷ್ಟಿಸುತ್ತಾನೆ; ಸಮಾಜ ಅದಕ್ಕೆ ಮುದ್ರೆ ಒತ್ತುತ್ತದೆ.’ ಶಂಬಾ: ಇಲ್ಲ ಇಲ್ಲ! ಸಮಾಜ ಶಬ್ದಗಳನ್ನು ಸೃಷ್ಟಿಸುತ್ತದೆ. ಬೇಂದ್ರೆ: ಇಲ್ಲ ಇಲ್ಲ. ಸಮಾಜದಲ್ಲಿ ‘ಪ್ರಜೆ’ ಅನ್ನೋ ಶಬ್ದ ಒಂದು ಕಡೆ ಬಿದ್ದಿರುತ್ತೆ; ‘ಪ್ರಭುತ್ವ’ ಅನ್ನೋದು ಒಂದು ಕಡೆ ಬಿದ್ದಿರುತ್ತೆ. ಕವಿ ಅವೆರಡನ್ನೂ ಸೇರಿಸಿ ‘ಪ್ರಜಾಪ್ರಭುತ್ವ’ ಅನ್ನೋ ಪದಾನ ಸೃಷ್ಟಿಸುತ್ತಾನೆ.’ ಸಂಸ್ಕೃತಿ ಅಧ್ಯಯನಕಾರ ಶಂಬಾ-ಕವಿ ಬೇಂದ್ರೆ ನಡುವಣ ಈ ಚರ್ಚೆಯಲ್ಲಿರುವ ತಾತ್ವಿಕ ಜಗಳ ನನ್ನೊಳಗೆ ಬಹುಕಾಲದಿಂದ ಉಳಿದಿದೆ. ಕಳೆದ ಮಾರ್ಚ್ 21ರಂದು ‘ವಿಶ್ವ ಕಾವ್ಯ ದಿನ’ದ ಪೋಸ್ಟರುಗಳನ್ನು ಕವಿ, ಕವಯಿತ್ರಿಯರು ಪ್ರಕಟಿಸುತ್ತಿದ್ದಾಗ ಅದು ಮತ್ತೊಮ್ಮೆ ನೆನಪಾಯಿತು. ಬೇಂದ್ರೆ ಉಲ್ಲೇಖಿಸಿದ ‘ಪ್ರಜಾಪ್ರಭುತ್ವ’ ಪದದ ಹುಟ್ಟನ್ನು ಗಮನಿಸಿ: ಪ್ರಜಾಪ್ರಭುತ್ವದ ಆರಂಭದ ಚರ್ಚೆಗಳು ಸಾವಿರಾರು ವರ್ಷಗಳ ಕೆಳಗೆ ಗ್ರೀಸ್ ಅಥವಾ ರೋಮ್ನಲ್ಲಿ ಇದ್ದವು; ಅಥವಾ ಫ್ರಾನ್ಸ್ ದೇಶದ ವರ್ಸೈಲ್ಸ್ ಎಂಬ ಊರಿನಲ್ಲಿ 1789ರಲ್ಲಿ ಒಂದು ದಿನ ಟೆನಿಸ್ ಕೋರ್ಟ್ನಲ್ಲಿ ನಡೆದ ಚರ್ಚೆಗಳು ಡೆಮಾಕ್ರಸಿ ಅಥವಾ ಪ್ರಜಾಪ್ರಭುತ್ವಕ್ಕೆ ತಳಹದಿ ಹಾಕಿದವು. ಈ ವಿವರಗಳೆಲ್ಲ ಈಗ ಪರಿಚಿತ. ರಾಜಪ್ರಭುತ್ವವನ್ನು, ಧರ್ಮಪ್ರಭುತ್ವವನ್ನು ಕಂಡ ಕವಿಮನಸ್ಸಿನ ಕನಸುಗಾರ ವ್ಯಕ್ತಿಯೊಬ್ಬ ಜನರೇ ಆಳುವ ‘ಪ್ರಜಾಪ್ರಭುತ್ವ’ ಪದವನ್ನು ಸೃಷ್ಟಿಸಿರಬಹುದು, ಉಳಿದವರು ಅದನ್ನು ಒಪ್ಪಿರಬಹುದು; ಅಥವಾ ಬುದ್ಧಿವಂತರು ಮಾತುಮಾತಾಡುತ್ತಾ ‘ಡೆಮಾಕ್ರಸಿ’ ಎಂಬ ಪದ ಸೃಷ್ಟಿಯಾಗಿರಬಹುದು; ಡೆಮಾಕ್ರಸಿಯಲ್ಲಿ ದುಷ್ಟರ ದರ್ಬಾರು ಸೃಷ್ಟಿಯಾದಾಗ ಅದೇ ಪಶ್ಚಿಮ ‘ಡೆಮನೋಕ್ರಸಿ’ ಅಥವಾ ‘ರಾಕ್ಷಸ ಪ್ರಭುತ್ವ’ ಎಂಬ ಪದವನ್ನು ಸೃಷ್ಟಿಸಿರಬಹುದು! ಕವಿಯ ‘ನವಪದ ನಿರ್ಮಾಣ ಶಕ್ತಿ’ ಎಂದರೆ ಇದೇ! ನವಪದ ನಿರ್ಮಾಣ ಎಂದರೆ ನವತತ್ವ ನಿರ್ಮಾಣ ಕೂಡ. ಹಿಂದೊಮ್ಮೆ, ಕಿ.ರಂ. ನಾಗರಾಜರು ಕವಿಯ ನವಪದ ನಿರ್ಮಾಣ ಶಕ್ತಿಯ ಬಗ್ಗೆ ಮೈದುಂಬಿ ಮಾತಾಡಿದ್ದು ನೆನಪಾಗುತ್ತದೆ: ‘ಈಗ ನೋಡಿ! ಪ್ರೇಮ ಅನ್ನೋ ಪದ ಇರುತ್ತೆ! ಕಾಶ್ಮೀರ ಅನ್ನೋ ಪದ ಇರುತ್ತೆ. ಇವೆರಡೂ ಸೇರಿ ಕುವೆಂಪುಗೆ ‘ಪ್ರೇಮ ಕಾಶ್ಮೀರ’ ಅನ್ನೋ ಶಬ್ದ ಹೊಳೆಯುತ್ತೆ. ‘ಪಕ್ಷಿ’ ಅನ್ನೋ ಪದ ಇರುತ್ತೆ; ‘ಕಾಶಿ’ ಅನ್ನೋ ಪದ ಇರುತ್ತೆ; ಕುವೆಂಪು ಪದ್ಯದಲ್ಲಿ ಅದು ‘ಪಕ್ಷಿಕಾಶಿ’ ಆಗುತ್ತೆ!’ ಅಂದರೆ, ಸಮಾಜದಲ್ಲಿ ತಂತಮ್ಮ ಕೆಲಸ ಮಾಡುತ್ತಿದ್ದ ಪದಗಳು ಕವಿಯ ನವಪದ ನಿರ್ಮಾಣ ಪ್ರತಿಭೆಯಲ್ಲಿ ‘ಪ್ರೇಮ ಕಾಶ್ಮೀರ’ ಅಥವಾ ‘ಪಕ್ಷಿಕಾಶಿ’ ಆಗಿ ಹೊಸ ರೂಪಕಗಳಾಗುತ್ತವೆ; ಆಗ ಬೇರೆ ಬೇರೆ ಅರ್ಥಗಳು, ಚಿತ್ರಗಳು, ದರ್ಶನಗಳು ಸೃಷ್ಟಿಯಾಗುತ್ತಲೇ ಇರುತ್ತವೆ. ಇದನ್ನೆಲ್ಲ ಬರೆಯುವಾಗ, ಬೇಂದ್ರೆ ಶಂಬಾಗೆ ಹೇಳಿದ ಮಾತನ್ನೇ ಬದಲಾಯಿಸಿ ಹೇಳಬೇಕೆನ್ನಿತ್ತದೆ: ಕವಿತೆ ಬಿದ್ದಿರುತ್ತೆ; ಓದುವವರು ಅದಕ್ಕೆ ಹೊಸ ಅರ್ಥ ಕೊಡುತ್ತಾರೆ. ಆಗ ಕವಿತೆಗೆ ರೆಕ್ಕೆ ಮೂಡಿ ಹಾರುತ್ತದೆ! ಕೆಲವೊಮ್ಮ ‘ಈಗ ಕವಿತೆ ಓದುವವರೇ ಇಲ್ಲ’ ಎಂದು ಕೆಲವು ಕವಿಗಳು ಹಲುಬುವುದು ನೆನಪಾಗುತ್ತದೆ. ಆದರೆ ಕವಿತೆಗಳನ್ನು ಯಾರು ಓದಲಿ ಬಿಡಲಿ, ಕರ್ನಾಟಕದ ಶಾಲೆ, ಕಾಲೇಜು, ವಿಶ್ವವಿದ್ಯಾನಿಲಯಗಳಲ್ಲಿರುವ ಲಕ್ಷಾಂತರ ವಿದ್ಯಾರ್ಥಿ, ವಿದ್ಯಾರ್ಥಿ ನಿಯರು ಮೇಡಂ, ಮೇಷ್ಟರುಗಳು ಕೊನೇ ಪಕ್ಷ ಪಠ್ಯಪುಸ್ತಕಗಳಲ್ಲಿರುವ ಕವಿತೆಗಳನ್ನಾದರೂ ಓದುತ್ತಲೇ ಇರುತ್ತಾರಲ್ಲವೆ? ನಿತ್ಯ ಹಾಡು ಕೇಳುವ ಕೋಟ್ಯಂತರ ಜನ ಒಂದಲ್ಲ ಒಂದು ಬಗೆಯ ಕಾವ್ಯಕ್ಕೆ ಕಿವಿ ಕೊಟ್ಟೇ ಇರುತ್ತಾರೆ. ಪಾಪ್ಯುಲರ್ ಮ್ಯೂಸಿಕ್, ರ್ಯಾಪ್ ಮ್ಯೂಸಿಕ್, ಸಿನೆಮಾ ಹಾಡು ಯಾವುದೇ ಇರಲಿ ಅಲ್ಲೆಲ್ಲ ಕಾವ್ಯದ ಒಂದು ಎಳೆ- ಅದು ಕ್ಲೀಷೆಯಾದರೂ ಸರಿ, ಸವಕಲಾದರೂ ಸರಿ- ಇದ್ದೇ ಇರುತ್ತದೆ; ಅಂಥ ರಚನೆಗಳಲ್ಲಿ ಕೂಡ ಕಾವ್ಯ ಪ್ರತಿಮೆಗಳು ಜನರ ಕಿವಿಯ ಮೇಲೆ ಬೀಳುತ್ತಲೇ ಇರುತ್ತವೆ. ಅಷ್ಟೇ ಯಾಕೆ, ನಿಮ್ಮ ಸುತ್ತ ತಾಲೂಕು, ಜಿಲ್ಲೆ, ರಾಜ್ಯ ಹೀಗೆ ಹಲವು ಮಟ್ಟಗಳಲ್ಲಿ ನಡೆಯುವ ಹಲ ಬಗೆಯ ಸಾಹಿತ್ಯ ಸಮ್ಮೇಳನಗಳಲ್ಲಿ ಹತ್ತಾರು ಹೊಸ ಹುಡುಗ ಹುಡುಗಿಯರು ಒಂದಲ್ಲ ಒಂದು ಥರದ ಕವಿತೆಯನ್ನು ಅಥವಾ ಕವಿತೆಯಂಥ ರಚನೆಗಳನ್ನು ಉತ್ಸಾಹದಿಂದ ಓದುತ್ತಲೇ ಇರುತ್ತಾರೆ ತಾನೆ? ಇವರ ನಡುವಿನಿಂದಲೇ ಒಬ್ಬನೋ ಒಬ್ಬಳೋ ಬರಬರುತ್ತಾ ಕಾವ್ಯವನ್ನು ಗಟ್ಟಿಯಾಗಿ ಹಿಡಿಯುತ್ತಾರೆ; ಇಂಥವರಿಗೆ ಸಾವಿರಾರು ವರ್ಷಗಳ ಕನ್ನಡ ಕಾವ್ಯ ಪರಂಪರೆಯ ಜೊತೆಗಿನ ತಕ್ಕಮಟ್ಟಿನ ಒಡನಾಟ ದಕ್ಕಿದರೆ ಕನ್ನಡ ಭಾಷೆಯ ಸಹಜ ಲಯಗಳು ಅವರೊಳಗೆ ನುಡಿಯತೊಡಗುತ್ತವೆ. ಒಂದು ಭಾಷಾಪರಂಪರೆಯ ಸಹಜ ಲಯಗಳು ದಕ್ಕದಿದ್ದರೆ ಯಾರೂ ದೊಡ್ಡ ಕವಿಯಾಗುವುದಿಲ್ಲ. ಈ ನಂಟು ಬೆಳೆಸಿಕೊಂಡು, ಸಾವಿರಾರು ಸಾಲು ಗಳನ್ನು ಬರೆದು, ಅಳಿಸಿ, ಬೇಸರವಾಗಿ, ಬಿಸುಟೆದ್ದು...ಎಲ್ಲೋ ಒಂದು ಹೊಸ ಪ್ರತಿಮೆ ಹುಟ್ಟುತ್ತದೆ. ಹೊಸ ಸತ್ಯ ಕಂಡರೆ ತಾನೇ ಹೊಸ ಪ್ರತಿಮೆಯ ಹುಟ್ಟು! ಈ ಪ್ರಕ್ರಿಯೆಯನ್ನೂ ಕವಿಯೇ ಹೇಳಿದ್ದು: ಅಗೆವಾಗ್ಗೆ ಮೊದಲು ಕೋಶಾವಸ್ಥೆ ಮಣ್ಣು ಕೆಳಕ್ಕೆ, ತಳಕ್ಕೆ ಗುದ್ದಲಿಯೊತ್ತಿ ಕುಕ್ಕಿದರೆ ಕಂಡೀತು ಗೆರೆಮಿರುವ ಚಿನ್ನದದಿರು. ಹೊರ ತೆಗೆದು ಸುಟ್ಟು ಸೋಸುವಪರಂಜಿ ವಿದ್ಯೆಗಳ ಇನ್ನಾದರೂ ಕೊಂಚ ಕಲಿಯಬೇಕು; ಹೊನ್ನ ಕಾಯಿಸಿ, ಹಿಡಿದು ಬಡಿದಿಷ್ಟದೇವತಾ ವಿಗ್ರಹಕ್ಕೊಗ್ಗಿಸುವ ಅಸಲು ಕಸಬು. ಹೀಗೆ ಗೋಪಾಲಕೃಷ್ಣ ಅಡಿಗರ ಕಾವ್ಯದಲ್ಲಾಗುವಂತೆ ಕವಿತೆ ಶ್ರಮದಿಂದ ಒಡೆದು, ಮುರಿದು ಕಟ್ಟಿ ರೂಪುಗೊಳ್ಳಬಹುದು; ಅಥವಾ ಅದು ಬೇಂದ್ರೆಯ ಭೃಂಗದ ಬೆನ್ನೇರಿ ಬಂದ ಕಲ್ಪನಾವಿಲಾಸವಾಗಿರಬಹುದು; ನಾದದ ನವನೀತವಾಗಿರಬಹುದು; ಸಿದ್ಧಲಿಂಗಯ್ಯನವರ ‘ಗುಡಿಸಿಲಿನಲ್ಲಿ ಅರಳಿದ ಗುಲಾಬಿ ನಕ್ಷತ್ರ’ವಾಗಿರಬಹುದು? ಅಥವಾ ವರ್ಡ್ಸ್ವರ್ತನ ‘ಸಹಜ ಭಾವನೆಗಳ ಸ್ವಚ್ಛಂದ ಉಕ್ಕುವಿಕೆ; ಪ್ರಶಾಂತ ಸನ್ನಿವೇಶದಲ್ಲಿ ಮರಳಿ ಮನಕ್ಕೆ ಕರೆದುಕೊಂಡ ಭಾವನೆ’ ಕೂಡ ಆಗಿರಬಹುದು. ಹೀಗೆ ಕಾವ್ಯದ ಮೂಲಕವೇ ಲೋಕವನ್ನು ನೋಡುವ ಕವಿಗಳಿಗಿಂತ ಭಿನ್ನವಾಗಿ ಲೋಕವನ್ನು ನೋಡುವ, ಸಮಾಜವನ್ನು ಕಟ್ಟಬಯಸುವ ದೊಡ್ಡ ದೊಡ್ಡ ಚಿಂತಕರಿಗೂ ಇದ್ದ ಕಾವ್ಯ ಪ್ರೇರಣೆಗಳು ನೆನಪಾಗುತ್ತವೆ. ಮಾರ್ಕ್ಸ್-ಏಂಗೆಲ್ಸ್ ಬರೆದ ‘ಕಮ್ಯುನಿಸ್ಟ್ ಮ್ಯಾನಿಫೆಸ್ಟೋ’ವನ್ನು ಚಿಂತಕರು ಯಾಕೆ ಅಪ್ಪಟ ಕಾವ್ಯ ಎನ್ನುತ್ತಾರೆಂದು ಹಲವು ಸಲ ಯೋಚಿಸಿದ್ದೇನೆ. ತರುಣ ಕಾರ್ಲ್ ಮಾರ್ಕ್ಸ್ ಕವಿಯಾಗಿದ್ದುದು ನೆನಪಾಗುತ್ತದೆ. ಮಾರ್ಕ್ಸ್ ಹದಿನೆಂಟು-ಹತ್ತೊಂಭತ್ತನೇ ವಯಸ್ಸಿನಲ್ಲಿ ಕಡು ರೊಮ್ಯಾಂಟಿಕ್ ಕವಿತೆಗಳನ್ನು ಬರೆದ. ಇವು ತನ್ನ ಪ್ರಿಯತಮೆ ಜೆನ್ನಿಗಾಗಿ ಬರೆದ ‘ಟು ಜೆನ್ನಿ’, ‘ಕನ್ಕ್ಲೂಡಿಂಗ್ ಸಾನೆಟ್ಸ್ ಟು ಜೆನ್ನಿ’ ಎಂಬ ಕವಿತಾಗುಚ್ಛಗಳಾದವು. ಮಾರ್ಕ್ಸ್ ಮುಂದೆ ಜೆನ್ನಿಯನ್ನೇ ಮದುವೆಯಾದ. ಅವುಗಳಲ್ಲೊಂದು ಕವಿತೆ ಹೀಗೆ ಶುರುವಾಗುತ್ತದೆ: ನೋಡು ನೋಡು! ಸಾವಿರ ಸಂಪುಟಗಳನ್ನು ತುಂಬಿಸಬಲ್ಲೆ ಪ್ರತಿ ಸಾಲಿನಲ್ಲೂ ಬರೆಬರೆದು ‘ಜೆನ್ನಿ’ ‘ಜೆನ್ನಿ’ ಎಂದು. ಹದಿ ಹರೆಯದ ಧುಮ್ಮಿಕ್ಕುವ ಉದ್ವೇಗದಲ್ಲಿ ಶುರುವಾದ ಹುಡುಗ ಮಾರ್ಕ್ಸ್ ಬರೆದ ಕವಿತೆಯ ಕೊನೆಯ ಪಂಕ್ತಿ: ನಿಜಕ್ಕೂ ಇದನ್ನೊಂದು ಪಲ್ಲವಿಯಾಗಿ ಬರೆಯುವೆನು- ಮುಂಬರುವ ಶತಶತಮಾನ ಇದನ್ನು ಕಾಣಲೆಂದು: ಪ್ರೀತಿ ಎಂದರೆ ಜೆನ್ನಿ; ಜೆನ್ನಿ ಎಂಬುದು ಪ್ರೀತಿಯ ಹೆಸರು. ಹದಿನೆಂಟರ ಆಸುಪಾಸಿನಲ್ಲಿ ಈ ಕವಿತೆಗಳನ್ನು ಬರೆದ ಮಾರ್ಕ್ಸ್ ಇದಾದ ಹತ್ತು ಹದಿನೈದು ವರ್ಷಗಳ ನಂತರ ಕಮ್ಯುನಿಸಮನ್ನು ಹೊಸ ರೀತಿಯಲ್ಲಿ ವಿವರಿಸುವ ಗಂಭೀರ ಸಂಶೋಧನೆ ಶುರು ಮಾಡಿದ. ಅದು ಅವನ ಜೀವಮಾನದ ಸಂಶೋಧನಾಶ್ರಮವಾಗಿತ್ತು. ಅವನ ನಂತರದ ಶತಮಾನದಲ್ಲಿ ಚಿಲಿಯ ಕವಿ ಪಾಬ್ಲೊ ನೆರೂಡ ತನ್ನ ಹದಿನೆಂಟನೇ ವಯಸ್ಸಿನಲ್ಲಿ ತೀವ್ರ ಪ್ರೇಮಪದ್ಯಗಳನ್ನು ಬರೆದ; ಇದಾಗಿ ಹತ್ತು ಹದಿನೈದು ವರ್ಷಗಳ ನಂತರ ಮಾರ್ಕ್ಸ್ ವಾದಿಯಾದ. ಅಂದರೆ, ಎಲ್ಲ ತೀವ್ರ ಬರವಣಿಗೆಗೂ ಕಾವ್ಯವೇ ಮೂಲ. ಬರೆಯುವವರಿಗೆ ನಿತ್ಯವೂ ಕಾವ್ಯ ದಿನವೇ! ಏನನ್ನಾದರೂ ಬರೆಯಲಿ, ಕಾವ್ಯದ ತೀವ್ರಸ್ಥಿತಿ ದಕ್ಕದಿದ್ದರೆ ಬರವಣಿಗೆಯಲ್ಲಿ ಜೀವ ಸಂಚಾರ ಎಂಬುದಿಲ್ಲ! ಈ ಬರಹದ ಆರಂಭದಲ್ಲಿರುವ ಶಂಬಾ-ಬೇಂದ್ರೆ ಚರ್ಚೆಗೆ ಮತ್ತೆ ವಾಪಸಾಗೋಣ: ಎಲ್ಲೋ ಭಾಷೆಯಲ್ಲಿ, ಸಮಾಜದಲ್ಲಿ ಇದ್ದ ‘ವರ್ಗ-ವರ್ಗ- ಸಂಘರ್ಷ-ವರ್ಗಪ್ರಜ್ಞೆ’, ‘ಉಳ್ಳವರು-ನಿರ್ಗತಿಕರು’, ‘ದುಡಿವ ಜನರ ಸರ್ವಾಧಿಕಾರ’ ಈ ಎಲ್ಲ ಪದಗಳು ಪರಿಕಲ್ಪನೆಗಳಾಗಿ, ಕವಿ ಮಾರ್ಕ್ಸ್ ಕಂಡ ಕನಸಿನಲ್ಲಿದ್ದ ಹೊಸ ಸಮಾಜದ ಹಿನ್ನೆಲೆಯಲ್ಲಿ ಹೊಸ ಅರ್ಥ ಪಡೆದಿರಬಹುದಲ್ಲವೆ? ಮಾರ್ಕ್ಸ್ ಕನಸಿದ ಸಮಸಮಾಜದ ಸಿದ್ಧಾಂತದ ಆಶಯಗಳು ಮುಂದೆ ಕವಿಮನಸ್ಸಿನ ಕನಸುಗಾರ ಹೋರಾಟಗಾರರು, ಕಾರ್ಮಿಕರು ಚಿಂತಕ ಚಿಂತಕಿಯರು ಅವನ್ನು ಮುಂದೊಯ್ದದ್ದರಿಂದ ಎಲ್ಲೆಡೆ ಹಬ್ಬಿದವಲ್ಲವೆ? ಈ ಮಹಾನ್ ಸಮತಾವಾದಿ ಪಯಣದಲ್ಲಿ ಮಹಾಕವಿ ಗಯಟೆ, ಶೆಲ್ಲಿ ಮೊದಲಾದವರ ಕಾವ್ಯದಿಂದ ಮಾರ್ಕ್ಸ್ ಪಡೆದ ಪ್ರೇರಣೆಗಳೂ ಮುಖ್ಯವಲ್ಲವೆ? ಅಥವಾ ಅಂಬೇಡ್ಕರ್ ಸಂತ ಕವಿ ತುಕಾರಾಮನ ಅಭಂಗಗಳಿಂದ ಪಡೆದ ಸ್ಫೂರ್ತಿ ಕೂಡ ಅವರ ಸಾಮಾಜಿಕ ಚಿಂತನೆಗಳನ್ನೂ ರೂಪಿಸಿರಬಹುದಲ್ಲವೆ? ‘ಸಾವಿರ ಹೂಗಳು ಅರಳಲಿ’ ಎಂದ ಚೀನಾದ ಕಮ್ಯುನಿಸ್ಟ್ ನಾಯಕ, ಚೇರ್ಮನ್ ಮಾವೋ ಕೂಡ ಕವಿಯಾಗಿದ್ದ. ಅವನು ಈ ಅರ್ಥಪೂರ್ಣ ರೂಪಕವನ್ನು ಘೋಷಿಸುವ ಮೊದಲು ಅವು ಚೀನಾದ ಸಮಾಜದಲ್ಲಿ ಇದ್ದವು; ಆದರೆ ಕವಿ ಬೇಂದ್ರೆ ಹೇಳಿದಂತೆ ಅವು ಎಲ್ಲೆಲ್ಲೋ ಬಿದ್ದಿದ್ದವು, ಅಲ್ಲವೆ!
ಕೋಟೇಶ್ವರ | ಯುವಿಎ ಬ್ಯಾಡ್ಮಿಂಟನ್ ಪ್ರೀಮಿಯರ್ ಲೀಗ್ ಸೀಸನ್–2: ಟೀಮ್ ನೈಲ್ ಚಾಂಪಿಯನ್
ಕುಂದಾಪುರ, ಮಾ.30: ಕೋಟೇಶ್ವರದ ಕ್ಲಬ್ ಮೆರಿಡಿಯನ್ ನಲ್ಲಿ ನಡೆದ 'ಯುವಿಎ ಬ್ಯಾಡ್ಮಿಂಟನ್ ಪ್ರೀಮಿಯರ್ ಲೀಗ್ ಸೀಸನ್–2'ರಲ್ಲಿ ಟೀಮ್ ನೈಲ್ ಚಾಂಪಿಯನ್ ಪಟ್ಟವನ್ನು ಗೆದ್ದು ರೂ.2.5 ಲಕ್ಷ ನಗದು ಬಹುಮಾನವನ್ನು ತನ್ನದಾಗಿಸಿಕೊಂಡಿತು. ಡಾಲ್ಫಿ ಮತ್ತು ಶಂಶೀರ್ ಮಾಲಕತ್ವದಲ್ಲಿರುವ ಈ ತಂಡ, ಗಗನ್ ಮಾರ್ಗದರ್ಶನದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿತು. ವಿಜಯಿ ತಂಡದಲ್ಲಿ ಶಂಶೀರ್, ಜುನೈದಾ, ಧೀರಜ್, ಮಿನ್ನಾ, ಆಬಿದ್, ಕುಮಾರ್, ಕೀರ್ತನಾ, ಸುರೇಶ್, ಸತೀಶ್, ದೇವಾಡಿಗ, ಗಗನ್, ಪೂರ್ಣ, ಪ್ರಮೋದ್ ಕೆ.ಎಂ., ಮತ್ತು ಸುನೀಲ್ ಕೆ.ಎಸ್. ಇದ್ದರು.
Thokkuttu | ಆರಿಫ್ ಕೊಲೆ ಪ್ರಕರಣದಲ್ಲಿ ಆರು ಆರೋಪಿಗಳನ್ನು ಗುರುತಿಸಲಾಗಿದೆ: ಪೊಲೀಸ್ ಆಯುಕ್ತ
ಸಿಸಿಬಿ ಎಸಿಪಿ ತಂಡದಿಂದ ಮುಂದಿನ ತನಿಖೆ
ಕರ್ನಾಟಕದಲ್ಲಿ ಈಗ ಬಹುತೇಕ ಜಿಲ್ಲೆಗಳಲ್ಲಿ ಅಧಿಕಾರ ರಾಜಕಾರಣ ಕೆಲವೇ ಕುಟುಂಬಗಳ ಖಾಸಗಿ ಸೊತ್ತಾಗಿದೆ. ಒಂದನ್ನು ಕೊಂಡರೆ ಇನ್ನೊಂದು ಫ್ರೀ(ಉಚಿತ) ಎಂಬಂತೆ ಎಲ್ಲ ಕಡೆ ಅಣ್ಣ ಮಂತ್ರಿಯಾದರೆ, ತಮ್ಮ ವಿಧಾನ ಪರಿಷತ್ ಸದಸ್ಯ, ಅಕ್ಕ ಮಂತ್ರಿಯಾದರೆ ತಮ್ಮ ಎಂ.ಎಲ್.ಸಿ. ಇಲ್ಲವೇ ಯಾವುದೋ ನಿಗಮ, ಮಂಡಲಿಯ ಅಧ್ಯಕ್ಷ. ಕೆಲವರು ತಮ್ಮ ಗೆಳತಿಗೆ ಅಧಿಕಾರ ನೀಡಿದ ಉದಾಹರಣೆಗಳಿವೆ. ದಾವಣಗೆರೆ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಸಮರ್ಥ ಶಾಮನೂರಗೆ ಕಾಂಗ್ರೆಸ್ ಟಿಕೆಟ್ ನೀಡಿದ್ದು ವಿವಾದಕ್ಕೆ ಕಾರಣವಾಗಿದೆ. ಹಿರಿಯ ಕಾಂಗ್ರೆಸ್ ನಾಯಕ ಶಾಮನೂರು ಶಿವಶಂಕರಪ್ಪನವರ ನಿಧನದಿಂದ ತೆರವಾದ ಈ ಮತಕ್ಷೇತ್ರ ಮುಸ್ಲಿಮ್ ಪ್ರಾಬಲ್ಯದ ಕ್ಷೇತ್ರ. ಇಲ್ಲಿ ಹಿಂದೆ ನಾಲ್ಕು ಸಲ ಕಾಂಗ್ರೆಸ್ ಅಭ್ಯರ್ಥಿ ಶಾಮನೂರು ಶಿವಶಂಕರಪ್ಪನವರು ಗೆದ್ದು ಬರುವಲ್ಲಿ ಮುಸ್ಲಿಮ್ ಮತದಾರರ ಪಾತ್ರ ನಿರ್ಣಾಯಕವಾಗಿತ್ತು. ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಸುಮಾರು 85 ಸಾವಿರ ಮುಸಲ್ಮಾನರಿದ್ದಾರೆ. ನ್ಯಾಯವಾಗಿ ಈ ಕ್ಷೇತ್ರವನ್ನು ಅವರು ಪ್ರತಿನಿಧಿಸಬೇಕಾಗಿತ್ತು. ಆದರೆ ತಮ್ಮ ಅವಕಾಶವನ್ನು ಶಾಮನೂರು ಶಿವಶಂಕರಪ್ಪನವರಿಗೆ ಬಿಟ್ಟುಕೊಟ್ಟ ಮುಸ್ಲಿಮ್ ಬಾಂಧವರು ತಮ್ಮ ಉದಾರತೆಯನ್ನು ತೋರಿಸಿದರು. ಮುಂದಿನ ಚುನಾವಣೆಯಲ್ಲಿ ತಾನು ಸ್ಪರ್ಧಿಸುವುದಿಲ್ಲ, ಮುಸ್ಲಿಮರಿಗೆ ಬಿಟ್ಟು ಕೊಡುವುದಾಗಿ ಶಾಮನೂರು ಶಿವಶಂಕರಪ್ಪನವರು ಬದುಕಿದ್ದಾಗ ಭರವಸೆಯನ್ನು ನೀಡಿದ್ದರು. ಈಗ ಅವರಿಲ್ಲ. ಈಗ ಉಪ ಚುನಾವಣೆಯಲ್ಲಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಮತ್ತು ಸಂಸತ್ ಸದಸ್ಯೆ ಪ್ರಭಾ ಮಲ್ಲಿಕಾರ್ಜುನ ಅವರು ತಮ್ಮ ಮಗ ಸಮರ್ಥರನ್ನು ಕಣಕ್ಕಿಳಿಸಿದ್ದಾರೆ. ಸಂಪತ್ತು ಮತ್ತು ರಾಜಕೀಯ ಅಧಿಕಾರ ಈಗ ಶಾಮನೂರು ಕುಟುಂಬದ ಸೊತ್ತಾಗಿವೆ. ಕರ್ನಾಟಕದಲ್ಲಿ ಈಗ ಬಹುತೇಕ ಜಿಲ್ಲೆಗಳಲ್ಲಿ ಅಧಿಕಾರ ರಾಜಕಾರಣ ಕೆಲವೇ ಕುಟುಂಬಗಳ ಖಾಸಗಿ ಸೊತ್ತಾಗಿದೆ.ಒಂದನ್ನು ಕೊಂಡರೆ ಇನ್ನೊಂದು ಫ್ರಿ(ಉಚಿತ ) ಎಂಬಂತೆ ಎಲ್ಲ ಕಡೆ ಅಣ್ಣ ಮಂತ್ರಿಯಾದರೆ, ತಮ್ಮ ವಿಧಾನ ಪರಿಷತ್ ಸದಸ್ಯ, ಅಕ್ಕ ಮಂತ್ರಿಯಾದರೆ ತಮ್ಮ ಎಂ.ಎಲ್.ಸಿ.ಇಲ್ಲವೇ ಯಾವುದೋ ನಿಗಮ, ಮಂಡಲಿಯ ಅಧ್ಯಕ್ಷ. ಕೆಲವರು ತಮ್ಮ ಗೆಳತಿಗೆ ಅಧಿಕಾರ ನೀಡಿದ ಉದಾಹರಣೆಗಳಿವೆ. ಕಾಂಗ್ರೆಸ್ ಇರಲಿ, ಬಿಜೆಪಿ ಇರಲಿ ಬಹುತೇಕ ಎಲ್ಲ ಪಕ್ಷಗಳಲ್ಲೂ ವಂಶಾಡಳಿತದ ವ್ಯಾಧಿ ವ್ಯಾಪಕವಾಗಿದೆ. ಜೆಡಿಎಸ್ ಬಗ್ಗೆ ಹೇಳುವುದೇ ಬೇಡ, ಮನೆ ಮಂದಿಯೆಲ್ಲ ಶಾಸಕರು. ಹೀಗಾಗಿ ಸಾಮಾನ್ಯ ಕಾರ್ಯಕರ್ತರಿಗೆ ಯಾವ ಪಕ್ಷದಲ್ಲೂ ಅವಕಾಶವಿಲ್ಲ. ರಾಜನ ಮಗ ರಾಜನಾಗುವಂತೆ ಶಾಸಕನ ಮಗ ಶಾಸಕನಾಗುತ್ತಾನೆ. ಅನೇಕ ಮನೆತನಗಳಲ್ಲಿ ಅಣ್ಣ ತಮ್ಮಂದಿರು, ಅಳಿಯಂದಿರು, ಸೊಸೆಯಂದಿರು ಶಾಸನ ಸಭೆಗಳಿಗೆ ಬರುತ್ತಿದ್ದಾರೆ. ಇದನ್ನೆಲ್ಲ ನೋಡಿದಾಗ ನಲವತ್ತು ವರ್ಷಗಳ ಹಿಂದಿನ ರಾಜಕೀಯ, ಅದರಲ್ಲೂ ದಾವಣಗೆರೆಯ ರಾಜಕೀಯ ನನ್ನ ನೆನಪಿಗೆ ಬರುತ್ತಿದೆ. ಪಂಪಾಪತಿ ಎಂಬ ಮಿಲ್ ಕಾರ್ಮಿಕನೊಬ್ಬ ಹಣವಂತರ ದುಡ್ಡಿನ ಬಲ ಮತ್ತು ಜಾತಿಯ ಬಲವನ್ನು ಎದುರಿಸಿ ದಾವಣಗೆರೆ ನಗರ ಸಭಾಧ್ಯಕ್ಷರಾಗಿದ್ದರು. ಎರಡು ಬಾರಿ ವಿಧಾನ ಸಭಾ ಸದಸ್ಯರಾಗಿದ್ದರು ಎಂದರೆ ಈಗ ನಂಬಲು ಆಗುತ್ತಿಲ್ಲ. ದಾವಣಗೆರೆಯ ರಾಜಕೀಯದ ವಿಶ್ಲೇಷಣೆ ಮಾಡುವಾಗ ಮಾಧ್ಯಮಗಳು ಕೂಡ ಪಂಪಾಪತಿ ಅವರನ್ನು ಮರೆತು ಬಿಡುತ್ತವೆ. ಮಿಲ್ ಮಾಲೀಕರ, ಕೋಟ್ಯಧೀಶರ ಕೋಟೆಯಾದ ಮಧ್ಯ ಕರ್ನಾಟಕದ ದಾವಣಗೆರೆ ಹಿಂದೊಮ್ಮೆ ಕರ್ನಾಟಕದ ಮಾಸ್ಕೊ ಎಂದು ಹೆಸರಾಗಿತ್ತೆಂಬುದನ್ನು ಉಲ್ಲೇಖಿಸುವುದಿಲ್ಲ. ನಾನು ಆಗಿನಿಂದ ಅಂದರೆ ಎಪ್ಪತ್ತರ ದಶಕದ ಆರಂಭದಿಂದಲೂ ದಾವಣಗೆರೆಯನ್ನು ನೋಡುತ್ತಿದ್ದೇನೆ. ಈಗ ಬೆಣ್ಣೆ ನಗರಿ,ವಿದ್ಯಾನಗರಿ ಎಂದೆಲ್ಲಾ ಕರೆಯಲ್ಪಡುವ ದಾವಣಗೆರೆ ಆಗ ಕರ್ನಾಟಕದ ಕೆಂಪು ಕೋಟೆ ಎಂದು ಹೆಸರಾಗಿತ್ತು. ಸುಮಾರು ಇಪ್ಪತ್ತು ವರ್ಷಗಳ ಕಾಲ ಎಷ್ಟೇ ಹಣವಂತರಾದರೂ ಹಣ ಚೆಲ್ಲಿ, ಜಾತಿ ಬಲ ಬಳಸಿ ಚುನಾಯಿತರಾಗಿ ಬರುವುದು ಸುಲಭವಿರಲಿಲ್ಲ. ಶಾಮನೂರು ಶಿವಶಂಕರಪ್ಪನವರನ್ನು ನಾನು ಆಗಿನಿಂದಲೇ ನೋಡುತ್ತ ಬಂದವನು. ಆಗ ಈಗಿನಷ್ಟು ಆರ್ಥಿಕವಾಗಿ ಅವರು ಬಲಿಷ್ಠರಾಗಿರಲಿಲ್ಲ. ಅವರು ಕೇವಲ ನಗರಸಭೆ ಸದಸ್ಯರಾಗಿದ್ದರು. ನಗರ ಸಭೆಯ ಸಭೆಗೆ ಒಂದು ಹಳೆಯ ಕಾರಿನಲ್ಲಿ ಬರುತ್ತಿದ್ದರು. ಪಂಪಾಪತಿ ಅವರ ಕಾಲದಲ್ಲಿ ನಗರದ ಬಡಾವಣೆಗಳಿಗೆ ‘ಲೆನಿನ್ ನಗರ’ ಭಗತ್ ಸಿಂಗ್ ನಗರ, ಡಾಂಗೆ ಪಾರ್ಕ್, ಮಾರ್ಕ್ಸ್ ನಗರ ಎಂದೆಲ್ಲ ನಾಮಕರಣ ಮಾಡಲಾಗಿತ್ತು. ಆಗ ದಾವಣಗೆರೆ ಪ್ರತ್ಯೇಕ ಜಿಲ್ಲೆಯಾಗಿರಲಿಲ್ಲ. ಚಿತ್ರದುರ್ಗ ಜಿಲ್ಲೆಯ ಭಾಗವಾಗಿತ್ತು .ಕಾಂಗ್ರೆಸ್ನಲ್ಲಿ ಕೇಂದ್ರ ಸಚಿವರಾಗಿದ್ದ ಕೊಂಡಜ್ಜಿ ಬಸಪ್ಪನವರು ಪ್ರಭಾವಿ ನಾಯಕರು, ಹಳೆಯ ಗಾಂಧಿ ವಾದಿಯಾದ ಅವರು ಪ್ರಾಮಾಣಿಕತೆಗೆ ಹೆಸರಾದವರು. ಈಗಿನವರಂತೆ ಅವರು ತಮ್ಮ ಪ್ರಭಾವ ಬಳಸಿ ತಮ್ಮ ಮಕ್ಕಳನ್ನು ರಾಜಕೀಯಕ್ಕೆ ತರಲಿಲ್ಲ. ಅವರ ಒಬ್ಬ ಮಗ ಮೋಹನ್ ಕೊಂಡಜ್ಜಿ ಎಡಪಂಥೀಯ ವಿದ್ಯಾ ರ್ಥಿ ಸಂಘಟನೆಯಾದ. ಎಸ್.ಎಫ್. ಐ.ನ ರಾಜ್ಯ ನಾಯಕರಾಗಿದ್ದರು. ಅವರನ್ನು ಬಿಟ್ಟರೆ ಸಿದ್ಧವೀರಪ್ಪನವರಂಥ ಹಿರಿಯ ನಾಯಕರಿದ್ದರು. ಆಗ ದೇವರಾಜ ಅರಸು ಮುಖ್ಯಮಂತ್ರಿಯಾಗಿದ್ದರು. ಅವರ ಸಂಪುಟದಲ್ಲಿ ಬಸವಲಿಂಗಪ್ಪಮತ್ತು ಕೆ.ಎಚ್. ರಂಗನಾಥ, ಸಿದ್ಧವೀರಪ್ಪಅವರು ಮಂತ್ರಿಯಾಗಿದ್ದರು. ರಂಗನಾಥ ಅವರು ನನಗೆ ತುಂಬಾ ಆತ್ಮೀಯರು. ಅವರ ಕಚೇರಿಗೆ ಶಾಮನೂರು ಆಗಾಗ ಬರುತ್ತಿದ್ದರು.ಆಗಲೇ ಅವರು ರಾಜಕೀಯ ಪ್ರವೇಶದ ಮಹತ್ವಾಂಕ್ಷೆ ಹೊಂದಿದ್ದರು. ಆದರೆ ಅದು ಅಷ್ಟು ಸುಲಭವಾಗಿರಲಿಲ್ಲ. ಈಗಿನ ರಾಜಕೀಯ ವಿಶ್ಲೇಷಕರು ಶಾಮನೂರು ಪ್ರವೇಶದ ರಾಜಕೀಯದ ಬಗ್ಗೆ ಬರೆಯುತ್ತಾರೆ. ಅದರ ಹಿಂದೆ ಹೋಗುವುದಿಲ್ಲ. ಅನೇಕ ಈಗಿನ ಪತ್ರಕರ್ತರಿಗೆ ದಾವಣಗೆರೆ ಒಂದು ಕಾಲದಲ್ಲಿ ಕಮ್ಯುನಿಸ್ಟರ ಕೋಟೆಯಾಗಿತ್ತು ಎಂಬುದು ಗೊತ್ತಿಲ್ಲ. ಎಪ್ಪತ್ತರ ದಶಕದ ಆರಂಭದಲ್ಲಿ ನಡೆದ ಕಮ್ಯುನಿಸ್ಟ್ ನಾಯಕರಾದ ಸುರೇಶ್ ಮತ್ತು ಶೇಖರಪ್ಪನವರ ಹತ್ಯೆ ಹಾಗೂ ನಂತರ ದಾವಣಗೆರೆಯ ದುಡಿಯುವ ಜನ ಒಂದಾಗಿ ಕಮ್ಯುನಿಸ್ಟ್ ನಾಯಕ ಪಂಪಾಪತಿ ಅವರನ್ನು ನಗರ ಸಭೆಯ ಅಧ್ಯಕ್ಷರನ್ನಾಗಿ ಹಾಗೂ ಎರಡು ಸಲ ಶಾಸಕರನ್ನಾಗಿ ಮಾಡಿದ ಬಗ್ಗೆ ನೆನಪಿಸುವುದಿಲ್ಲ. ಹಣ ಮತ್ತು ಬಲಿಷ್ಠ ಜಾತಿಗಳ ಪ್ರಾಬಲ್ಯದ ಎದುರು ಕಾರ್ಮಿಕರು ಜಾತಿ, ಮತಗಳನ್ನು ಬದಿಗೊತ್ತಿ ಒಂದು ಗೂಡಿ ತಮ್ಮ ರಾಜಕೀಯ ಶಕ್ತಿಯನ್ನು ತೋರಿಸಿದರು. ಸುಮಾರು ಇಪ್ಪತ್ತು ವರ್ಷಗಳ ಕಾಲ ದಾವಣಗೆರೆ ದುಡಿಯುವ ಜನರ ಕೆಂಪು ಕೋಟೆಯಾಗಿತ್ತು. ದಾವಣಗೆರೆ ಕರ್ನಾಟಕದ ನಡು ಮಧ್ಯದಲ್ಲಿ ಇರುವ ನಗರ. ದಕ್ಷಿಣ ಮತ್ತು ಉತ್ತರ ಕರ್ನಾಟಕಗಳಿಗೆ ಮಾತ್ರವಲ್ಲ ಮಲೆನಾಡು, ಬಯಲುಸೀಮೆಗಳ ನಡುವಿನ ಕೊಂಡಿಯಂತಿರುವ ನಗರ. ಕಳೆದ ಶತಮಾನದ ಆರಂಭದಲ್ಲೇ ಜವಳಿ ಉದ್ಯಮಕ್ಕೆ ಹೆಸರಾದ ದಾವಣಗೆರೆಯನ್ನು ಒಂದು ಕಾಲದಲ್ಲಿ ಕರ್ನಾಟಕದ ಮ್ಯಾಂಚೆಸ್ಟರ್ ಎಂದು ಕರೆಯುತ್ತಿದ್ದರು. ನಂತರ ಅದು ಕರ್ನಾಟಕದ ಮಾಸ್ಕೊ ಎಂದು ಹೆಸರಾಯಿತು. ಜಾತಿ ಬಲವಿಲ್ಲದ, ಕೈಯಲ್ಲಿ ಕಾಸಿಲ್ಲದ ದಾವಣಗೆರೆ ಕಾಟನ್ ಮಿಲ್ ಕಾರ್ಮಿಕ ಕಾಮ್ರೇಡ್ ಪಂಪಾಪತಿ ಅವರು ಈ ನಗರದ ಪ್ರಥಮ ಪ್ರಜೆಯಾಗಿ (ನಗರ ಸಭೆ ಅಧ್ಯಕ್ಷ) ಹಾಗೂ ಶಾಸಕರಾಗಿ ದಾಖಲೆ ನಿರ್ಮಿಸಿದರು. ತಮಿಳುನಾಡು ಮೂಲದ ಪಂಪಾಪತಿ ಅವರ ಜಾತಿಗೆ ಸೇರಿದ ಹತ್ತು ಮನೆಗಳೂ ದಾವಣಗೆರೆಯಲ್ಲಿ ಇರಲಿಲ್ಲ. ಅವರು ಗೆದ್ದು ಬಂದುದು ಜಾತಿ ಮೀರಿದ ದುಡಿಯುವ ವರ್ಗದ ಶಕ್ತಿಯಿಂದ. ಅದು ಎಪ್ಪತ್ತರ ದಶಕ. ದೇಶವ್ಯಾಪಿಯಾಗಿ ಇಂದಿರಾ ಗಾಂಧಿ ಗಾಳಿ ಬೀಸುತ್ತಿತ್ತು. ಪ್ರಧಾನಿಯಾಗಿ ಅವರು ಕೈಗೊಂಡ ಬ್ಯಾಂಕ್ ರಾಷ್ಟ್ರೀಕರಣ, ರಾಜಧನ ರದ್ದತಿ, ಜೀತ ಮುಕ್ತಿ ಕ್ರಮಗಳಿಂದ ಪಟ್ಟಭದ್ರ ಹಿತಾಸಕ್ತಿಗಳು ತತ್ತರಿಸಿ ಹೋಗಿದ್ದವು.ಅವರ ಕಾರ್ಯಕ್ರಮ ಗಳಿಗೆ ಭಾರತ ಕಮ್ಯುನಿಸ್ಟ್ ಪಕ್ಷ (ಸಿಪಿಐ) ಸಂಪೂರ್ಣ ಬೆಂಬಲವನ್ನು ನೀಡಿತ್ತು. ಇಂಥ ಸಂದರ್ಭದಲ್ಲಿ ಕರ್ನಾಟಕ ವಿಧಾನಸಭೆ ಚುನಾವಣೆ ಬಂತು.ಆಗ ಜಾತಿ ಬಲ ಹಾಗೂ ಹಣದ ಬಲವಿದ್ದ ಶಾಮನೂರು ಶಿವಶಂಕರಪ್ಪನವರು ದಾವಣಗೆರೆಯಿಂದ ಸ್ಪರ್ಧಿಸಲು ಕಾಂಗ್ರೆಸ್ ಟಿಕೆಟ್ಗಾಗಿ ಲಾಬಿ ನಡೆಸಿದ್ದರು. ಅವರಿಗೆ ಮುಖ್ಯ ಮಂತ್ರಿ ದೇವರಾಜ ಅರಸು ಅವರ ನೇರ ಪರಿಚಯವಾಗಲಿ, ಸಂಪರ್ಕವಾಗಲಿ ಇರಲಿಲ್ಲ. ಆಗ ಕೆಪಿಸಿಸಿ ಅಧ್ಯಕ್ಷರಾಗಿದ್ದ ಕೆ.ಎಚ್.ರಂಗನಾಥ್ ಮತ್ತು ಯುವ ಕಾಂಗ್ರೆಸ್ ನಾಯಕರಾಗಿದ್ದ ಮುಂದೆ ಮಂತ್ರಿಯಾದ ಎಚ್.ವಿಶ್ವನಾಥ್ ಅವರ ಮೂಲಕ ಟಿಕೆಟ್ ಗಾಗಿ ತುಂಬಾ ಪ್ರಯತ್ನ ಮಾಡಿದರು. ಆದರೆ ಮಿತ್ರ ಪಕ್ಷವಾದ ಭಾರತ ಕಮ್ಯುನಿಸ್ಟ್ ಪಕ್ಷದ ಜೊತೆಗೆ ಚುನಾವಣಾ ಹೊಂದಾಣಿಕೆ ಮಾಡಿಕೊಂಡ ಕಾಂಗ್ರೆಸ್ ಸಿಪಿಐಗೆ 8 ಸ್ಥಾನಗಳನ್ನು ಬಿಟ್ಟು ಕೊಟ್ಟಿತು. ಅದರಲ್ಲಿ ದಾವಣಗೆರೆಯೂ ಒಂದು. ಇದಕ್ಕೆ ಮುಖ ಮಂತ್ರಿಯಾಗಿದ್ದ ದೇವರಾಜ ಅರಸು ವಿಶೇಷ ಆಸಕ್ತಿ ಕಾರಣ. ದಾವಣಗೆರೆ ವಿಧಾನಸಭಾ ಕ್ಷೇತ್ರವನ್ನು ಕಮ್ಯುನಿಸ್ಟ್ ಪಕ್ಷಕ್ಕೆ ಅಂದರೆ ಪಂಪಾಪತಿ ಅವರಿಗೆ ಬಿಟ್ಟು ಕೊಡಲಾಯಿತು. ದಾವಣಗೆರೆಯಿಂದ ಕಾಂಗ್ರೆಸ್ ಟಿಕೆಟ್ನಿಂದ ಸ್ಪರ್ಧಿಸಲು ಬಯಸಿದ್ದ ಶಾಮನೂರು ಶಿವಶಂಕರಪ್ಪನವರಿಗೆ ಟಿಕೆಟ್ ಕೊಡಲು ಅರಸು ಒಪ್ಪಲಿಲ್ಲ. ಈ ಬಗ್ಗೆ ವಿಶ್ವನಾಥ್ ಪ್ರಸ್ತಾಪ ಮಾಡಿದಾಗ ಅರಸು ಅವರು ಹಣವಂತರು ವಿಧಾನಸಭೆಗೆ ಬಂದು ಏನು ಮಾಡುತ್ತಾರೆ? ಬಡವರ ಪರವಾಗಿ ಮಾತಾಡುತ್ತಾರಾ? ಅವರು ತಮ್ಮ ವ್ಯಾಪಾರಿ ಹಿತಾಸಕ್ತಿಯನ್ನು ನೋಡಿಕೊಳ್ಳುತ್ತಾರೆ ಎಂದು ಹೇಳಿದರು. ಇದನ್ನು ವಿಶ್ವನಾಥ್ ತಮ್ಮ ಲೇಖನವೊಂದರಲ್ಲಿ ಬರೆದಿದ್ದಾರೆ. ನಂತರ ಶಾಮನೂರು ಶಿವಶಂಕರಪ್ಪಮೆಡಿಕಲ್, ಇಂಜಿನಿಯರಿಂಗ್ ಕಾಲೇಜುಗಳು ಮತ್ತು ಬಾಪೂಜಿ ಶಿಕ್ಷಣ ಸಂಸ್ಥೆಗಳ ಏಣಿಯ ಮೆಟ್ಟಿಲುಗಳನ್ನು ಏರಿ ಬೆಳೆದು ಬಂದರು. ಅಂತಿಮವಾಗಿ ಈ ಕ್ಷೇತ್ರದಿಂದ ಗೆದ್ದು ಬಂದ ಪಂಪಾಪತಿ ಅವರು ಚುನಾವಣೆಯಲ್ಲಿ ಜಯಶಾಲಿಯಾದರು. ನಂತರ ನಡೆದ ಮೂರು ಚುನಾವಣೆಗಳಲ್ಲೂ ಅವರು ಗೆದ್ದು ಬಂದರು. ಅವರು ಮಾಡಿದ ಕೆಲಸವನ್ನು ಹಿಂದಿನ ಯಾವ ನಗರಸಭಾಧ್ಯಕ್ಷರು, ಶಾಸಕರು ಮಾಡಿರಲಿಲ್ಲ. ದಾವಣಗೆರೆಯಲ್ಲಿ ಸಾಲು ಮರಗಳನ್ನು ನೆಟ್ಟು ಎಲ್ಲರಿಗೂ ನೆರಳು ಸಿಗುವಂತೆ ಮಾಡಿದರು. ಆದರೆ ದಾವಣಗೆರೆಯ ಕೆಂಪು ಕೋಟೆಯನ್ನು ಭೇದಿಸಲು ಕೋಮುವಾದಿ ಶಕ್ತಿಗಳು ಮಸಲತ್ತು ನಡೆಸಿದವು.ರಾಮ ಜ್ಯೋತಿ ಹೆಸರಿನಲ್ಲಿ ಪ್ರಚೋದನಕಾರಿ ಮೆರವಣಿಗೆ ನಡೆದು ಭಾರೀ ಹಿಂಸಾಚಾರಕ್ಕೆ ಕಾರಣವಾಯಿತು. ಅದೇ ಸಮಯದಲ್ಲಿ ದಾವಣಗೆರೆಯ ಜವಳಿ ಗಿರಣಿಗಳು ಮುಚ್ಚಿ ಸಾವಿರಾರು ಕಾರ್ಮಿಕರು ಬೀದಿ ಪಾಲಾದರು.ಕಾರ್ಮಿಕ ಸಂಘಟನೆಗಳ ಪ್ರಭಾವವೂ ಕ್ಷೀಣಿಸಿತು. ನಂತರ ಶಾಮನೂರು ಶಿವಶಂಕರಪ್ಪನವರು ವಿಧಾನಸಭೆಗೆ ಗೆದ್ದು ಬರತೊಡಗಿದರು.ಈಗ ಅವರ ಮೊಮ್ಮಗ ಸಮರ್ಥ ಕಾಂಗ್ರೆಸ್ ಅಭ್ಯರ್ಥಿ. ಫಲಿತಾಂಶ ಏನಾಗಲಿದೆ ಎಂಬುದನ್ನು ಕಾದ್ದು ನೋಡಬೇಕಾಗಿದೆ.
ಕೇರಳ ಚುನಾವಣೆಗೆ ಮಧ್ಯಪ್ರಾಚ್ಯ ಯುದ್ಧ ಕಾರ್ಮೋಡ, ಬಹುತೇಕ ಕ್ಷೇತ್ರಗಳಲ್ಲಿ ಅನಿವಾಸಿಗಳೇ ನಿರ್ಣಾಯಕರು
ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಸಂಘರ್ಷವು ಸಾಮಾನ್ಯ ಜನರ ಬದುಕಿನ ಮೇಲೆ ಗಂಭೀರ ಪರಿಣಾಮ ಬೀರಿದ್ದು, ಇದು ಏಪ್ರಿಲ್ 9 ರಂದು ನಡೆಯಲಿರುವ ಕೇರಳ ವಿಧಾನಸಭಾ ಚುನಾವಣೆಯ ಮೇಲೂ ದಟ್ಟವಾದ ಪ್ರಭಾವ ಬೀರುವ ಸಾಧ್ಯತೆಯಿದೆ. ಕೇರಳದ ಬಹುಪಾಲು ಜನರು ಸೌದಿ ಅರೇಬಿಯಾ, ಯುಎಇ, ಕುವೈತ್ ಮತ್ತು ಕತಾರ್ನಂತಹ ಗಲ್ಫ್ ರಾಷ್ಟ್ರಗಳಲ್ಲಿ ಉದ್ಯೋಗ ಮತ್ತು ಉದ್ಯಮಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಹೀಗಾಗಿ ಅನಿವಾಸಿ ಕೇರಳಿಗರ ಪ್ರಭಾವವು ಚುನಾವಣಾ ಕಣದಲ್ಲಿ ರಾಜಕೀಯ ಪಕ್ಷಗಳಿಗೆ ಅತ್ಯಂತ ಪ್ರಮುಖವೆನಿಸಿದೆ.
ಎಸೆಸೆಲ್ಸಿ ಪರೀಕ್ಷೆಯ ಫಲಿತಾಂಶದಲ್ಲಿ ತೃತೀಯ ಭಾಷೆಯ ಅಂಕಗಳನ್ನು ಪರಿಗಣಿಸದಿರುವ ಮಹತ್ವದ ತೀರ್ಮಾನವನ್ನು ರಾಜ್ಯ ಸರಕಾರ ತೆಗೆದುಕೊಂಡಿದೆ. ಹಿಂದಿ, ಸಂಸ್ಕೃತ ಸೇರಿದಂತೆ ತೃತೀಯ ಭಾಷೆಗೆ ಅಂಕಗಳ ಬದಲು ಗ್ರೇಡ್ ನೀಡಲು ಸರಕಾರ ನಿರ್ಧರಿಸಿದ್ದು, ಶಿಕ್ಷಣದಲ್ಲಿ ತ್ರಿಭಾಷಾ ಸೂತ್ರದಿಂದ ಹಿಂದೆ ಸರಿಯುವ ನಿಟ್ಟಿನಲ್ಲಿ ಮೊದಲ ಮಹತ್ವದ ಹೆಜ್ಜೆಯನ್ನು ಇಟ್ಟಿದೆ. ಈ ವರ್ಷದಿಂದಲೇ, ತೃತೀಯ ಭಾಷಾ ಪರೀಕ್ಷೆಯಲ್ಲಿ ಪಡೆಯುವ ಗ್ರೇಡ್ ವಿದ್ಯಾರ್ಥಿಗಳ ಉತ್ತೀರ್ಣತೆಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಎಸೆಸೆಲ್ಸಿ ಪರೀಕ್ಷೆಯಲ್ಲಿ ಒಟ್ಟು ಅಂಕ 625ರ ಬದಲು 525ಕ್ಕೆ ಸೀಮಿತಗೊಳಿಸಲಾಗಿದೆ. ಹಾಗೆಂದು ತೃತೀಯ ಭಾಷಾ ವಿಷಯಗಳ ಬೋಧನೆ ಮತ್ತು ಕಲಿಕಾ ವಿಧಾನದಲ್ಲಿ ಯಾವುದೇ ಬದಲಾವಣೆಗಳಿರುವುದಿಲ್ಲ. ಬೋಧನೆಯ ಸಮಯದಲ್ಲಿ ತೃತೀಯ ಭಾಷೆಯನ್ನು ನಿರ್ಲಕ್ಷಿಸಲಾಗುವುದಿಲ್ಲ. ಕಲಿಕಾ ಪ್ರಕ್ರಿಯೆಯಲ್ಲೂ ಯಾವುದೇ ಬದಲಾವಣೆಗಳಿರುವುದಿಲ್ಲ ಎಂದು ಸರಕಾರ ಸ್ಪಷ್ಟನೆ ನೀಡಿದೆ. ವಿದ್ಯಾರ್ಥಿಗಳ ಪರೀಕ್ಷಾ ಒತ್ತಡವನ್ನು ಕಡಿಮೆ ಮಾಡುವ ಉದ್ದೇಶದಿಂದ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಶಿಕ್ಷಣ ಸಚಿವರು ತಿಳಿಸಿದ್ದಾರೆ. ಆದರೆ ಕೆಲವರು ಈ ನಿರ್ಧಾರಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದು, ಶಿಕ್ಷಣದ ಗುಣಮಟ್ಟದ ಮೇಲೆ ಇದು ಪರಿಣಾಮ ಬೀರಬಹುದು ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಇದೇ ಸಂದರ್ಭದಲ್ಲಿ, ಪರೀಕ್ಷೆ ನಡೆಯುತ್ತಿರುವಾಗ ಏಕಾಏಕಿ ಈ ನಿರ್ಧಾರ ತೆಗೆದುಕೊಂಡಿರುವುದು ವಿದ್ಯಾರ್ಥಿಗಳಲ್ಲಿ ಗೊಂದಲಗಳನ್ನು ಸೃಷ್ಟಿಸಬಹುದು ಎಂದು ಇನ್ನೊಂದಿಷ್ಟು ಜನರು ದೂರಿದ್ದಾರೆ. ಕೆಲವು ಮಾಧ್ಯಮಗಳಲ್ಲಿ ಕನ್ನಡವನ್ನು ತೃತೀಯ ಭಾಷೆಯಾಗಿ ಸ್ವೀಕರಿಸಿದ್ದಾರೆ, ಅವರಿಗೂ ಇದು ಅನ್ವಯವಾದರೆ ಕನ್ನಡಕ್ಕೆ ಹಿನ್ನಡೆಯಾಗುವುದಿಲ್ಲವೆ ಎಂಬ ತಕರಾರನ್ನು ಕೆಲವರು ವ್ಯಕ್ತಪಡಿಸಿದ್ದಾರೆ. ಭಾಷೆಯ ಮೂಲಕ ಶಿಕ್ಷಣವನ್ನು ಕಲಿಯಬೇಕೇ ಹೊರತು, ಭಾಷೆಯೇ ಶಿಕ್ಷಣವಾಗಬಾರದು. ರಾಜ್ಯದಲ್ಲಿ ಕನ್ನಡದ ಮೂಲಕ, ಇಂಗ್ಲಿಷ್ ಮೂಲಕ ಶಿಕ್ಷಣವನ್ನು ನಮ್ಮದಾಗಿಸಿಕೊಂಡು ಬಂದಿದ್ದೇವೆ. ಆ ಭಾಷೆಯ ಮೂಲಕವೇ ಗಣಿತ, ವಿಜ್ಞಾನ, ಭೂಗೋಳಗಳನ್ನು ಕಲಿಯುತ್ತಿದ್ದೇವೆ. ತೀರಾ ಅಗತ್ಯವಿದ್ದವರು, ಆಸಕ್ತಿಯಿದ್ದವರು ಅಥವಾ ಅನಿವಾರ್ಯತೆಯಿದ್ದವರು ತೃತೀಯ ಭಾಷೆಯಾಗಿರುವ ಹಿಂದಿ ಅಥವಾ ಸಂಸ್ಕೃತವನ್ನು ಪಠ್ಯವಾಗಿ ಕಲಿಯಬಹುದಾದರೂ ಅದನ್ನು ಪರೀಕ್ಷೆಯ ಅಂಕಪಟ್ಟಿಯಲ್ಲಿ ಸೇರಿಸಿ ಆಸಕ್ತಿಯಿಲ್ಲದ ವಿದ್ಯಾರ್ಥಿಗಳ ಮೇಲೆ ಹೇರುವುದು ಸರಿಯಲ್ಲ. ಶಿಕ್ಷಣದಲ್ಲಿ ಕನ್ನಡದಂತೆಯೇ ಇಂಗ್ಲಿಷ್ ಇಲ್ಲದೇ ಇದ್ದರೆ ಇಂದು ಹಲವು ವಿಷಯಗಳನ್ನು ನಮ್ಮದಾಗಿಸಿಕೊಳ್ಳುವಲ್ಲಿ ಸಮಸ್ಯೆಗಳು, ತೊಡಕುಗಳು ಎದುರಾಗಬಹುದು. ಇಂಗ್ಲಿಷ್ ಅಂತರ್ರಾಷ್ಟ್ರೀಯ ಭಾಷೆಯಾಗಿ ಬೇರೆ ಬೇರೆ ವಿಷಯಗಳಿಗೆ ನಮ್ಮನ್ನು ತೆರೆದುಕೊಳ್ಳಲು ಸೇತುವೆಯ ರೂಪದಲ್ಲಿ ಕೆಲಸ ಮಾಡುತ್ತದೆ. ಹಿಂದಿಯನ್ನು ವಿದ್ಯಾರ್ಥಿಗಳು ಕೇವಲ ಒಂದು ಭಾಷೆಯಾಗಿಯಷ್ಟೇ ಕಲಿಯುತ್ತಿದ್ದಾರೆ. ಕನ್ನಡ, ಇಂಗ್ಲಿಷ್ ಮೂಲಕ ಎಲ್ಲ ಪಠ್ಯಗಳಲ್ಲಿ ಮುಂದಿರುವ ವಿದ್ಯಾರ್ಥಿಯೊಬ್ಬನಿಗೆ ತನ್ನದಲ್ಲದ ಭಾಷೆಯೊಂದರ ಕಾರಣದಿಂದ ಹಿನ್ನಡೆಯುಂಟಾಗಬಾರದು. ಈ ಕಾರಣದಿಂದ ತೃತೀಯ ಭಾಷೆಯನ್ನು ಅಂಕಗಳಿಂದ ಹೊರಗಿಟ್ಟಿರುವುದು ಒಳ್ಳೆಯ ನಿರ್ಧಾರವೇ ಆಗಿದೆ. ಇಷ್ಟಾಗಿಯೂ ಯಾರಿಗಾದರೂ ಹಿಂದಿಯನ್ನು ಕಲಿಯಲೇಬೇಕೆಂದಿದ್ದರೆ ಅದಕ್ಕೆ ಅವಕಾಶವಂತೂ ಇದ್ದೇ ಇದೆ. ಕರ್ನಾಟಕದಲ್ಲಿ ಶೇ. 40ರಷ್ಟು ಮಂದಿಯ ಮನೆ ಭಾಷೆ ಕನ್ನಡವಲ್ಲ. ಬ್ಯಾರಿ, ತುಳು, ಕೊಂಕಣಿ ಹೀಗೆ ಹತ್ತು ಹಲವು ಮನೆ ಭಾಷಿಗರು ಶಾಲೆಯಿಂದಲೇ ತಮ್ಮ ಕನ್ನಡ, ಇಂಗ್ಲಿಷ್ಗಳನ್ನು ಕಲಿಯಬೇಕಾಗುತ್ತದೆ ಮತ್ತು ಈ ಎರಡು ಭಾಷೆಗಳ ಮೂಲಕವೇ ಶಿಕ್ಷಣಕ್ಕೆ ತೆರೆದುಕೊಳ್ಳಬೇಕು. ಈ ಸಂದರ್ಭದಲ್ಲಿ ಅನಗತ್ಯವಾಗಿ ಹಿಂದಿ, ಸಂಸ್ಕೃತದಂತಹ ಭಾಷೆಗಳನ್ನು ಹೇರುವುದು ಅವರಿಗೆ ಹೊರೆಯಾಗಿ ಪರಿಣಮಿಸಬಹುದು. ಇಷ್ಟಕ್ಕೂ ಹೈಸೂಲ್ನಲ್ಲಿ ಹಿಂದಿ ಅಥವಾ ಸಂಸ್ಕೃತ ಭಾಷೆಯನ್ನು ಪಠ್ಯವಾಗಿ ಸ್ವೀಕರಿಸಿ ಪೂರ್ಣವಾಗಿ ಹಿಂದಿಯನ್ನಾಗಲಿ, ಸಂಸ್ಕೃತ ಭಾಷೆಯನ್ನಾಗಲಿ ಕಲಿತವರು ತೀರಾ ಕಡಿಮೆ. ಹಿಂದಿಯ ಪರೀಕ್ಷಾ ವಿಧಾನ ಅಥವಾ ಅದರ ಪ್ರಶ್ನೆ ಪತ್ರಿಕೆಯನ್ನು ಎಷ್ಟು ಸುಲಭವಾಗಿ ರಚಿಸಲಾಗಿರುತ್ತದೆಯೆಂದರೆ, ಹಿಂದಿ ತೆಗೆದುಕೊಂಡರೆ ಅತಿ ಹೆಚ್ಚು ಅಂಕಗಳನ್ನು ಕಷ್ಟವಿಲ್ಲದೆ ಪಡೆಯಬಹುದು ಎನ್ನುವ ಮನಸ್ಥಿತಿಯೊಂದನ್ನು ಈಗಾಗಲೇ ವಿದ್ಯಾರ್ಥಿಗಳಲ್ಲಿ ಸೃಷ್ಟಿಸಲಾಗಿದೆ. ಹಿಂದಿ ಭಾಷೆಯನ್ನು ವಿದ್ಯಾರ್ಥಿಗಳ ಮೇಲೆ ಹೇರುವುದಕ್ಕಾಗಿಯೇ ಈ ತಂತ್ರವನ್ನು ಮಾಡಿಕೊಂಡು ಬರಲಾಗುತ್ತಿದೆ. ಯಾವುದೇ ಪಠ್ಯಗಳಿಲ್ಲದೆಯೇ ರಾಜ್ಯದಲ್ಲಿ ತುಳು, ಕೊಂಕಣಿ, ಮರಾಠಿ ಭಾಷೆಗಳನ್ನು ತಮ್ಮದಾಗಿಸಿಕೊಳ್ಳುವ ವಿದ್ಯಾರ್ಥಿಗಳು ನಿಜಕ್ಕೂ ಹಿಂದಿಯ ಅಗತ್ಯವಿದೆ ಎಂದಾದರೆ ಅದನ್ನು ಯಾವ ರೂಪದಲ್ಲಾದರೂ ದಕ್ಕಿಸಿಕೊಳ್ಳುತ್ತಾರೆ. ಟಿ.ವಿ. ಇಂಟರ್ನೆಟ್, ಸಿನೆಮಾಗಳ ಮೂಲಕ ಯಾವುದೇ ಭಾಷೆಯನ್ನೂ ತಮ್ಮದಾಗಿಸಿಕೊಳ್ಳುವ ಅವಕಾಶ ಇರುವಾಗ ವಿದ್ಯಾರ್ಥಿಗಳಿಗೆ ಅನಗತ್ಯವಾಗಿ ಅವುಗಳನ್ನು ಪಠ್ಯವಾಗಿ ಹೇರುವ ಅಗತ್ಯವಾದರೂ ಏನಿದೆ? ಹಿಂದಿಯಿಲ್ಲದೇ ಇದ್ದರೆ ಶಿಕ್ಷಣದ ಗುಣಮಟ್ಟ ಕಡಿಮೆಯಾಗುತ್ತದೆ ಎಂದು ಆತಂಕ ಪಡುವವರು ವಾಸ್ತವದಿಂದ ತುಂಬಾ ದೂರವಿದ್ದಾರೆ. ದಕ್ಷಿಣ ಭಾರತದ ರಾಜ್ಯಗಳು ಹಿಂದಿ ಭಾಷೆಯನ್ನು ಅವಲಂಬಿಸದೆಯೇ ಶಿಕ್ಷಣ, ಆರೋಗ್ಯ, ಅಭಿವೃದ್ಧಿಯಲ್ಲಿ ಎಷ್ಟೋ ಎತ್ತರದಲ್ಲಿವೆೆ. ಐಟಿ, ಬಿಟಿ ಕ್ಷೇತ್ರಗಳಲ್ಲೂ ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದೆ. ಅತ್ಯುನ್ನತ ಶಿಕ್ಷಣಕ್ಕಾಗಿ ಉತ್ತರ ಭಾರತದಿಂದ ದಕ್ಷಿಣ ಭಾರತಕ್ಕೆ ವಿದ್ಯಾರ್ಥಿಗಳು ಧಾವಿಸಿಕೊಂಡು ಬರುತ್ತಾರೆ. ಇದೇ ಸಂದರ್ಭದಲ್ಲಿ ಹಿಂದಿ ಭಾಷಿಗರೇ ಹೆಚ್ಚಿರುವ ಉತ್ತರ ಭಾರತದ ಹಲವು ರಾಜ್ಯಗಳು ಶಿಕ್ಷಣ ಕ್ಷೇತ್ರದಲ್ಲಾಗಲಿ, ಆರೋಗ್ಯ ಕ್ಷೇತ್ರಗಳಲ್ಲಾಗಲಿ ಬಹಳಷ್ಟು ಹಿಂದುಳಿದಿವೆ. ಹೀಗಿರುವಾಗ, ಉತ್ತರ ಭಾರತೀಯರ ಭಾಷೆಯನ್ನು ಅನಗತ್ಯವಾಗಿ ದಕ್ಷಿಣ ಭಾರತೀಯ ವಿದ್ಯಾರ್ಥಿಗಳ ಮೇಲೆ ಹೇರುವುದೇಕೆ? ‘ಹಿಂದಿ’ಯನ್ನು ಕಲಿಯುವ ಮೂಲಕ ಭಾರತದ ಇತರ ಭಾಷಿಗರೊಂದಿಗೆ ವಿದ್ಯಾರ್ಥಿಗಳನ್ನು ಬೆಸೆದಂತಾಗುತ್ತದೆ ಎನ್ನುವ ತರ್ಕವನ್ನೂ ಕೆಲವರು ಮಂಡಿಸುತ್ತಿದ್ದಾರೆ. ಹಾಗಾದರೆ ಉತ್ತರ ಭಾರತೀಯರು ತಮ್ಮ ಶಿಕ್ಷಣದಲ್ಲಿ ತೃತೀಯ ಭಾಷೆಯಾಗಿ ದಕ್ಷಿಣ ಭಾರತದ ಯಾವುದಾದರೂ ಒಂದು ಭಾಷೆಯನ್ನು ಯಾಕೆ ಅಳವಡಿಸಿಕೊಳ್ಳಬಾರದು? ಎನ್ನುವ ಪ್ರಶ್ನೆಗೆ ಈ ತರ್ಕಮಂಡಿಸುವವರಲ್ಲಿ ಉತ್ತರವಿಲ್ಲ. ನಿಜಕ್ಕೂ ಭಾಷೆಯ ಕೊಡುಕೊಳ್ಳುವಿಕೆಯ ಹಿನ್ನೆಲೆಯಲ್ಲಿ ಹಿಂದಿಯನ್ನು ಪಠ್ಯವಾಗಿಸಿರುವುದಾಗಿದ್ದರೆ, ಉತ್ತರ ಭಾರತದ ರಾಜ್ಯಗಳಲ್ಲಿ ಕನ್ನಡ, ತಮಿಳು ಸೇರಿದಂತೆ ದಕ್ಷಿಣ ಭಾರತದ ಯಾವುದಾದರೂ ಒಂದು ಭಾಷೆಯನ್ನು ಕಡ್ಡಾಯ ಮಾಡಲಿ. ಇಂತಹ ಪ್ರಯತ್ನ ಖಂಡಿತವಾಗಿಯೂ ಉತ್ತರ-ದಕ್ಷಿಣದ ನಡುವೆ ಸೇತುವೆಯಾಗಿ ಕೆಲಸ ಮಾಡಬಹುದು. ಹಿಂದಿ ಕಲಿಯುವುದರಿಂದ ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶ ಹೆಚ್ಚುತ್ತದೆ ಎನ್ನುವುದು ತಪ್ಪು. ಅದು ನಿಜವೇ ಆಗಿದ್ದರೆ ಉತ್ತರ ಭಾರತದ ಹಿಂದಿ ಮಾತೃ ಭಾಷಿಗರು ಕೆಲಸ ಅರಸುತ್ತಾ ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದ ರಾಜ್ಯಗಳಿಗೆ ಗುಳೆ ಬರುವ ಸ್ಥಿತಿ ನಿರ್ಮಾಣವಾಗುತ್ತಿರಲಿಲ್ಲ. ಇಂದು ಕರ್ನಾಟಕಕ್ಕೆ ವಲಸೆ ಬಂದಿರುವ ಹಿಂದಿ ಭಾಷಿಗರಿಗೆ ಕನ್ನಡ ಕಲಿಸುವ ಪ್ರಯತ್ನ ನಡೆಯಬೇಕೇ ಹೊರತು, ಕನ್ನಡಿಗರಿಗೆ ಹಿಂದಿ ಕಲಿಸುವ ಪ್ರಯತ್ನವಲ್ಲ. ಈ ನಿಟ್ಟಿನಲ್ಲಿ ಸರಕಾರದ ನಿರ್ಧಾರ ಸ್ವಾಗತಾರ್ಹ.
ಶಿವಮೊಗ್ಗ ಮೃಗಾಲಯಕ್ಕೆ ಮಧ್ಯಮ ವರ್ಗದ ಮಾನ್ಯತೆ ಶೀಘ್ರ
ಶಿವಮೊಗ್ಗದ ತ್ಯಾವರೆಕೊಪ್ಪ ಮೃಗಾಲಯವು ಶೀಘ್ರದಲ್ಲೇ 'ಸಣ್ಣ ಮೃಗಾಲಯ' ಶ್ರೇಣಿಯಿಂದ 'ಮಧ್ಯಮ ವರ್ಗ'ದ ಮೃಗಾಲಯವಾಗಿ ಮೇಲ್ದರ್ಜೆಗೇರಲು ಸಜ್ಜಾಗಿದೆ. ಕೇಂದ್ರ ಮೃಗಾಲಯ ಪ್ರಾಧಿಕಾರ ವಿಧಿಸಿರುವ ಬಹುತೇಕ ಮಾನದಂಡಗಳನ್ನು ಈಗಾಗಲೇ ಪೂರೈಸಿರುವ ಈ ಮೃಗಾಲಯವು, ವರ್ಷದ ಅಂತ್ಯದೊಳಗೆ ಬಾಕಿ ಇರುವ ಎಲ್ಲಾ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ ಅಧಿಕೃತ ಮಾನ್ಯತೆ ಪಡೆಯುವ ನಿರೀಕ್ಷೆಯಲ್ಲಿದೆ.
ನವದೆಹಲಿ: ಮಧ್ಯಪ್ರಾಚ್ಯದಲ್ಲಿನ ಉದ್ವಿಗ್ನತೆ ಮತ್ತು ಜಾಗತಿಕ ಇಂಧನ ಪೂರೈಕೆಯಲ್ಲಿನ ವ್ಯತ್ಯಯದಿಂದಾಗಿ ದೇಶದ ನಾಗರಿಕರ ಅಗತ್ಯತೆಗಳನ್ನು ಪೂರೈಸಲು ಕೇಂದ್ರ ಸರ್ಕಾರವು ಮಹತ್ವದ ನಿರ್ಧಾರ ಕೈಗೊಂಡಿದೆ. ಈ ಹಿಂದೆ ಸೀಮೆಎಣ್ಣೆ ಮುಕ್ತ ಎಂದು ಘೋಷಿಸಲಾಗಿದ್ದ ದೆಹಲಿ, ಹರಿಯಾಣ, ಉತ್ತರ ಪ್ರದೇಶ ಮತ್ತು ಗುಜರಾತ್ ಸೇರಿದಂತೆ 21 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಸೀಮೆಎಣ್ಣೆ ವಿತರಣೆಯನ್ನು ತಾತ್ಕಾಲಿಕವಾಗಿ ಮತ್ತೆ ಆರಂಭಿಸಲಾಗಿದೆ. ಈ
ಕುವೈತ್ನ ವಿದ್ಯುತ್ ಘಟಕದ ಮೇಲೆ ಇರಾನ್ ದಾಳಿ: ಭಾರತೀಯ ಕಾರ್ಮಿಕ ಮೃತ್ಯು
ಕುವೈತ್ : ವಿದ್ಯುತ್ ಮತ್ತು ಜಲ ನಿರ್ಲವಣೀಕರಣ ಘಟಕದ ಮೇಲೆ ಇರಾನ್ ನಡೆಸಿದ ಕ್ಷಿಪಣಿ ದಾಳಿಯಲ್ಲಿ ಭಾರತೀಯ ಕಾರ್ಮಿಕ ಮೃತಪಟ್ಟಿದ್ದಾನೆ. ಈ ಘಟಕದ ಕಟ್ಟಡಕ್ಕೆ ತೀವ್ರ ಹಾನಿಯಾಗಿದೆ ಎಂದು ಕುವೈತ್ನ ವಿದ್ಯುತ್ ಮತ್ತು ಜಲ ಖಾತೆ ಸೋಮವಾರ ಮುಂಜಾನೆ ಎಕ್ಸ್ ಪೋಸ್ಟ್ ನಲ್ಲಿ ತಿಳಿಸಿದೆ. ಅಂತೆಯೇ ದಕ್ಷಿಣ ಲೆಬನಾನ್ ನಲ್ಲಿ ಸಂಭವಿಸಿದ ಸ್ಫೋಟವೊಂದರಲ್ಲಿ ವಿಶ್ವಸಂಸ್ಥೆಯ ಶಾಂತಿಪಾಲನಾ ಪಡೆಯ ಶಾಂತಿಪಾಲಕ ಮೃತಪಟ್ಟಿದ್ದಾಗಿ ಲೆಬನಾನ್ ನಲ್ಲಿರುವ ವಿಶ್ವಸಂಸ್ಥೆಯ ಶಾಂತಿಪಾಲನಾ ಪಡೆ ಪ್ರಕಟಿಸಿದೆ. ಅಡ್ಚಿಟ್ ಅಲ್ ಕ್ಯೂಸಿಯರ್ ಗ್ರಾಮದಲ್ಲಿ ಪ್ರಾಜೆಕ್ಟೈಲ್ ಸ್ಫೋಟದಿಂದ ಈ ದುರಂತ ಸಂಭವಿಸಿದೆ. ಈ ಪ್ರಾಜೆಕ್ಟೈಲ್ ನ ಮೂಲದ ಬಗ್ಗೆ ಇನ್ನೂ ಮಾಹಿತಿ ಇಲ್ಲ. ಈ ಸನ್ನಿವೇಶಗಳ ಬಗ್ಗೆ ನಿರ್ಧಾರಕ್ಕೆ ಬರುವ ಸಲುವಾಗಿ ತನಿಖೆ ಆರಂಭಿಸಲಾಗಿದೆ ಎಂದು ಶಾಂತಿಪಾಲನಾ ಪಡೆ ಹೇಳಿದೆ. ಏತನ್ಮಧ್ಯೆ ಅಮೆರಿಕ ಮತ್ತು ಇಸ್ರೇಲ್ ಮೇಲೆ ಪ್ರತೀಕಾರದ ದಾಳಿ ನಡೆಸುವ ಎಚ್ಚರಿಕೆ ನೀಡಿರುವ ಇರಾನ್, ಅಮೆರಿಕ ಹಾಗೂ ಇಸ್ರೇಲ್ ಅಧಿಕಾರಿಗಳ ಖಾಸಗಿ ನಿವಾಸಗಳು ಇದೀಗ ಇರಾನ್ ದಾಳಿಗೆ ಕಾನೂನುಬದ್ಧ ಗುರಿಗಳಾಗಿವೆ ಎಂದು ಹೇಳಿಕೆ ನೀಡಿದೆ. ಜಂಟಿ ಮಿಲಿಟರಿ ಕಮಾಂಡ್ ವಕ್ತಾರ ಈ ಸಂಬಂಧ ಹೇಳಿಕೆ ನೀಡಿದ್ದು, ಯುದ್ಧಾರಂಭದ ಒಂದು ತಿಂಗಳ ಬಳಿಕ ಸಂಘರ್ಷದ ವಾತಾವರಣ ಇಡೀ ಮಧ್ಯಪ್ರಾಚ್ಯಕ್ಕೆ ವ್ಯಾಪಿಸಿದೆ. ಅಮೆರಿಕ ಮತ್ತು ಇಸ್ರೇಲ್ನ ಮಿಲಿಟರಿ ಹಾಗೂ ರಾಜಕೀಯ ಮುಖಂಡರು ಇಸ್ರೇಲ್ ಸೇರಿದಂತೆ ಮಧ್ಯಪ್ರಾಚ್ಯ ಪ್ರದೇಶವನ್ನು ತೊರೆಯುತ್ತಿರುವ ನಡುವೆಯೇ ಇರಾನ್ ಈ ಎಚ್ಚರಿಕೆ ನೀಡಿದೆ. ಇರಾನ್ ದೇಶದ ವಿವಿಧ ನಗರಗಳಲ್ಲಿ ಇರಾನ್ ಅಧಿಕಾರಿಗಳ ನಿವಾಸಗಳನ್ನು ಗುರಿ ಮಾಡಿ ಅಮೆರಿಕ ಹಾಗೂ ಇಸ್ರೇಲ್ ದಾಳಿ ನಡೆಸುತ್ತಿರುವುದರಿಂದ ಆ ದೇಶದ ಅಧಿಕಾರಿಗಳ ನಿವಾಸದ ಮೇಲೆ ದಾಳಿ ನಡೆಸುವುದು ನಮ್ಮ ಕಾನೂನುಬದ್ಧ ಹಕ್ಕು ಎಂದು ವಕ್ತಾರ ಇಬ್ರಾಹಿಂ ಝೋಲ್ಫಘಾರಿ ಹೇಳಿದ್ದಾರೆ. ಇರಾನ್ ಮೇಲೆ ಇಸ್ರೇಲ್ ಮತ್ತು ಅಮೆರಿಕದ ದಾಳಿ ಮುಂದುವರಿದಿದ್ದು, ಉತ್ತರ ಟೆಹರಾನ್ನಲ್ಲಿ ಭಾನುವಾರ ಸರಣಿ ಸ್ಫೋಟಗಳು ಸಂಭವಿಸಿವೆ ಎಂದು ಎಎಫ್ಪಿ ವರದಿ ಮಾಡಿದೆ ದಟ್ಟವಾದ ಹೊಗೆ ಬಾನೆತ್ತರಕ್ಕೆ ವ್ಯಾಪಿಸುತ್ತಿದೆ ಎಂದು ಹೇಳಲಾಗಿದ್ದು, ಯಾವ ಗುರಿಯ ಮೇಲೆ ದಾಳಿ ನಡೆದಿದೆ ಎನ್ನುವುದು ಸ್ಪಷ್ಟವಾಗಿಲ್ಲ. ಇರಾನ್ ಕೂಡಾ ಪ್ರತಿದಾಳಿ ಮುಂದುವರಿಸಿದ್ದು, ದಕ್ಷಿಣ ಇಸ್ರೇಲ್ನ ಕೈಗಾರಿಕಾ ಸಂಕೀರ್ಣದ ಮೇಲೆ ಬ್ಯಾಲಿಸ್ಟಿಕ್ ಕ್ಷಿಪಣಿ ದಾಳಿ ನಡೆಸಿದ್ದಾಗಿ ಹೇಳಿದೆ.
ಪ್ರೇಯಸಿಗೆ 1.7 ಕೋಟಿಯ ಮರ್ಸಿಡಿಸ್ ಬೆನ್ಝ್ ಕಾರು ಉಡುಗೊರೆ ನೀಡಿದ ಖ್ಯಾತ ಕ್ರಿಕೆಟಿಗ!
ಮುಂಬೈ: ಇಂಡಿಯನ್ ಪ್ರಿಮಿಯರ್ ಲೀಗ್ ನಲ್ಲಿ ಮುಂಬೈ ಇಂಡಿಯನ್ಸ್ ತಂಡದ ನಾಯಕತ್ವದ ಹೊಣೆ ವಹಿಸಿರುವ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ತಮ್ಮ ಪ್ರೇಯಸಿ ಮಹಿಕಾ ಶರ್ಮಾಗೆ ದುಬಾರಿ ಮರ್ಸಿಡೆನ್ಸ್ ಬೆನ್ಝ್ ವಿ-ಕ್ಲಾಸ್ ಕಾರನ್ನು ಉಡುಗೊರೆ ನೀಡಿದ್ದಾರೆ. ಈ ವಿಲಾಸಿ ಕಾರಿನ ಮೌಲ್ಯ ಸುಮಾರು 1.7 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ. ಇಬ್ಬರ ನಡುವಿನ ಪ್ರಣಯ ಸಂಬಂಧ 2025ರ ಅಕ್ಟೋಬರ್ ನಲ್ಲಿ ಬಹಿರಂಗವಾಗಿತ್ತು ಹಾಗೂ ಮಹೀಕಾ ಅವರು ಪಾಂಡ್ಯ ಜತೆ ಸಾರ್ವಜನಿಕ ಸಭೆ ಸಮಾರಂಭಗಳಲ್ಲಿ ಹಾಗೂ ಸ್ಟೇಡಿಯಂಗಳಲ್ಲಿ ಬಹಿರಂಗವಾಗಿ ಕಾಣಿಸಿಕೊಂಡಿದ್ದರು. 2026ರಲ್ಲಿ ಭಾರತ ಟಿ20 ತಂಡ ವಿಶ್ವಕಪ್ ಗೆದ್ದ ಬಳಿಕ ಅಹ್ಮದಾಬಾದ್ ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಸಂಭ್ರಮಾಚರಣೆಯಲ್ಲೂ ಈ ಜೋಡಿ ಗಮನ ಸೆಳೆದಿತ್ತು. ಪ್ರಸಕ್ತ ಐಪಿಎಲ್ ನಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ನೀಡಿದ 221 ರನ್ ಗಳ ಬೃಹತ್ ಸವಾಲನ್ನು ಯಶಸ್ವಿಯಾಗಿ ಬೆನ್ನಟ್ಟಿ ಮುಂಬೈ ಇಂಡಿಯನ್ಸ್ ಶುಭಾರಂಭ ಮಾಡಿದೆ. ಈ ಆರು ವಿಕೆಟ್ ಅಂತರದ ಜಯ 13ನೇ ಐಪಿಎಲ್ ನ ಆರಂಭಿಕ ಪಂದ್ಯ ಮುಂಬೈ ಇಂಡಿಯನ್ಸ್ ಪಾಲಿಗೆ ಸ್ಮರಣೀಯ ಎನಿಸಿದೆ.
ಮಹಿಕಾ ಶರ್ಮಾಗೆ 1.7 ಕೋಟಿಯ ಮರ್ಸಿಡಿಸ್ ಬೆನ್ಝ್ ಕಾರು ಉಡುಗೊರೆ ನೀಡಿದ ಖ್ಯಾತ ಕ್ರಿಕೆಟಿಗ!
ಮುಂಬೈ: ಇಂಡಿಯನ್ ಪ್ರಿಮಿಯರ್ ಲೀಗ್ ನಲ್ಲಿ ಮುಂಬೈ ಇಂಡಿಯನ್ಸ್ ತಂಡದ ನಾಯಕತ್ವದ ಹೊಣೆ ವಹಿಸಿರುವ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ತಮ್ಮ ಪ್ರೇಯಸಿ ಮಹೀಕಾ ಶರ್ಮಾಗೆ ದುಬಾರಿ ಮರ್ಸಿಡೆನ್ಸ್ ಬೆನ್ಝ್ ವಿ-ಕ್ಲಾಸ್ ಕಾರನ್ನು ಉಡುಗೊರೆ ನೀಡಿದ್ದಾರೆ. ಈ ವಿಲಾಸಿ ಕಾರಿನ ಮೌಲ್ಯ ಸುಮಾರು 1.7 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ. ಇಬ್ಬರ ನಡುವಿನ ಪ್ರಣಯ ಸಂಬಂಧ 2025ರ ಅಕ್ಟೋಬರ್ ನಲ್ಲಿ ಬಹಿರಂಗವಾಗಿತ್ತು ಹಾಗೂ ಮಹೀಕಾ ಅವರು ಪಾಂಡ್ಯ ಜತೆ ಸಾರ್ವಜನಿಕ ಸಭೆ ಸಮಾರಂಭಗಳಲ್ಲಿ ಹಾಗೂ ಸ್ಟೇಡಿಯಂಗಳಲ್ಲಿ ಬಹಿರಂಗವಾಗಿ ಕಾಣಿಸಿಕೊಂಡಿದ್ದರು. 2026ರಲ್ಲಿ ಭಾರತ ಟಿ20 ತಂಡ ವಿಶ್ವಕಪ್ ಗೆದ್ದ ಬಳಿಕ ಅಹ್ಮದಾಬಾದ್ ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಸಂಭ್ರಮಾಚರಣೆಯಲ್ಲೂ ಈ ಜೋಡಿ ಗಮನ ಸೆಳೆದಿತ್ತು. ಪ್ರಸಕ್ತ ಐಪಿಎಲ್ ನಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ನೀಡಿದ 221 ರನ್ ಗಳ ಬೃಹತ್ ಸವಾಲನ್ನು ಯಶಸ್ವಿಯಾಗಿ ಬೆನ್ನಟ್ಟಿ ಮುಂಬೈ ಇಂಡಿಯನ್ಸ್ ಶುಭಾರಂಭ ಮಾಡಿದೆ. ಈ ಆರು ವಿಕೆಟ್ ಅಂತರದ ಜಯ 13ನೇ ಐಪಿಎಲ್ ನ ಆರಂಭಿಕ ಪಂದ್ಯ ಮುಂಬೈ ಇಂಡಿಯನ್ಸ್ ಪಾಲಿಗೆ ಸ್ಮರಣೀಯ ಎನಿಸಿದೆ.
ಬಂಗಾಳಿ ನಟ ರಾಹುಲ್ ಬ್ಯಾನರ್ಜಿ ನೀರಿನಲ್ಲಿ ಮುಳುಗಿ ಮೃತ್ಯು
ಕೊಲ್ಕತ್ತಾ: ಖ್ಯಾತ ಬಂಗಾಳಿ ನಟ ರಾಹುಲ್ ಅರುಣೋದಯ ಬ್ಯಾನರ್ಜಿ ಅವರು ರವಿವಾರ (ಮಾರ್ಚ್ 29) ಒಡಿಶಾ- ಪಶ್ಚಿಮ ಬಂಗಾಳ ಗಡಿಯ ದಿಘಾ ಸಮೀಪದ ತಲ್ಸರಿ ಎಂಬಲ್ಲಿ ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಅವರಿಗೆ 43 ವರ್ಷ ವಯಸ್ಸಾಗಿತ್ತು. ಬಂಗಾಳಿ ಧಾರಾವಾಹಿಯ ಶೂಟಿಂಗ್ ಗಾಗಿ ಬ್ಯಾನರ್ಜಿ ತೆರಳಿದ್ದರು. ರವಿವಾರ ಬೆಳಿಗ್ಗೆ 'ಭೋಲ್ ಬಾಬಾ ಪಾರ್ ಕರೇಗಾ' ಎಂಬ ಧಾರಾವಾಹಿಯ ಶೂಟಿಂಗ್ ನಡೆದಿತ್ತು. ಮಧ್ಯಾಹ್ನ ಬಳಿಕ ಚಿತ್ರೀಕರಣ ತಂಡ ಪ್ಯಾಕಪ್ ಮಾಡಿದ ಬಳಿಕ ಈ ದುರಂತ ಸಂಭವಿಸಿದೆ ಎಂದು ಪ್ರಾಥಮಿಕ ಮಾಹಿತಿಯಿಂದ ತಿಳಿದುಬಂದಿದೆ. ಶೂಟಿಂಗ್ ಮುಗಿದ ಬಳಿಕ ಆಳ ಸಮುದ್ರ ನೀರಿಗೆ ಬ್ಯಾನರ್ಜಿ ಏಕಾಂಗಿಯಾಗಿ ಇಳಿದರು ಎನ್ನಲಾಗಿದೆ. ಅವರು ನಾಪತ್ತೆಯಾದ ತಕ್ಷಣವೇ ನಿರ್ಮಾಣ ಘಟಕದಲ್ಲಿ ಆತಂಕದ ವಾತಾವರಣ ನಿರ್ಮಾಣವಾಯಿತು. ಈ ದುರಂತಕ್ಕೆ ಇಡೀ ತಂಡ ಸಾಕ್ಷಿಯಾಯಿತು ಎನ್ನಲಾಗಿದೆ. ತಂತ್ರಜ್ಞರು ಮತ್ತು ನಿರ್ಮಾಣ ತಂಡದ ಸಿಬ್ಬಂದಿ ಅವರನ್ನು ನೀರಿನಿಂದ ಹೊರಗೆಳೆಯುವಲ್ಲಿ ಯಶಸ್ವಿಯಾದರು. ನೀರಿನಲ್ಲಿ ಮುಳುಗಿ ಸಾವು ಸಂಭವಿಸಿದೆ ಎಂದು ಆರಂಭಿಕ ವರದಿಗಳು ಹೇಳಿವೆ. ತಕ್ಷಣವೇ ದಿಘಾ ಉಪವಿಭಾಗೀಯ ಆಸ್ಪತ್ರೆಗೆ ಅವರನ್ನು ಸಾಗಿಸಲಾಯಿತು. ಸಂಜೆ 6.10ಕ್ಕೆ ಅವರು ಮೃತಪಟ್ಟಿರುವುದನ್ನು ವೈದ್ಯರು ದೃಢಪಡಿಸಿದರು. 43 ವರ್ಷ ವಯಸ್ಸಿನ ಈ ಜನಪ್ರಿಯ ನಟ, ನಟಿ ಪತ್ನಿ ಪ್ರಿಯಾಂಕಾ ಸರ್ಕಾರ್ ಹಾಗೂ ಮಗನನ್ನು ಅಗಲಿದ್ದಾರೆ. ರಾಹುಲ್ ನಿಧನವನ್ನು ಪ್ರಿಯಾಂಕಾ ಸರ್ಕಾರ್ ತಮ್ಮ ಇನ್ಸ್ಟಾಗ್ರಾಂ ಹ್ಯಾಂಡಲ್ ನಲ್ಲಿ ಪ್ರಕಟಿಸಿದ್ದಾರೆ. ಇದು ನಮಗೆ ಅತೀವ ದುಃಖ ಹಾಗೂ ಶೋಕದ ಸನ್ನಿವೇಶ. ಈ ಕಠಿಣ ಸನ್ನಿವೇಶದಲ್ಲಿ ನಾವು ಖಾಸಗಿತನವನ್ನು ಬಯಸುತ್ತೇವೆ ಎಂದು ಅವರು ಮನವಿ ಮಾಡಿದ್ದಾರೆ. View this post on Instagram A post shared by Priyanka Sarkar (@priyankasarkarz)
ಚಾಮರಾಜನಗರದಲ್ಲಿ ಜಿಲ್ಲೆಯಲ್ಲಿ ಕಾಡ್ಗಿಚ್ಚು ಭೀತಿ ; ಅರಣ್ಯ ಇಲಾಖೆಗೆ ಬೇಸಿಗೆ ಸವಾಲು
ಬಿರು ಬಿಸಿಲಿನಿಂದಾಗಿ ಒಣಗಿರುವ ಚಾಮರಾಜನಗರ ಜಿಲ್ಲೆಯ ಅರಣ್ಯ ಪ್ರದೇಶಗಳಲ್ಲಿ ಬೆಂಕಿಯ ಭೀತಿ ಎದುರಾಗಿದ್ದು, ಕಾಡನ್ನು ರಕ್ಷಿಸುವುದು ಅರಣ್ಯ ಇಲಾಖೆಗೆ ದೊಡ್ಡ ಸವಾಲಾಗಿದೆ. ಕಿಡಿಗೇಡಿಗಳು ಕಾಡಿನ ಯಾವುದೋ ಮೂಲೆಯಲ್ಲಿ ಹಚ್ಚುವ ಬೆಂಕಿಯನ್ನು ನಂದಿಸುವುದು ಮತ್ತು ಅಂತಹವರ ಮೇಲೆ ನಿಗಾ ಇಡುವುದು ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಈಗ ಅಗ್ನಿಪರೀಕ್ಷೆಯಂತಾಗಿ ಪರಿಣಮಿಸಿದೆ.
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ
ಬೆಂಗಳೂರು: ರಾಜ್ಯದಲ್ಲಿ ದಿನದಿಂದ ದಿನಕ್ಕೆ ಬಿಸಿಲ ತಾಪ ಏರುತ್ತಿದ್ದರೂ, ಮಾರ್ಚ್ 31ರಿಂದ ಏಪ್ರಿಲ್ 4ರವರೆಗೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಸುಡುವ ಬೇಸಿಗೆಯ ನಡುವೆಯೇ ಮಳೆರಾಯ ತಂಪೆರೆಯಲು ಸಜ್ಜಾಗಿದ್ದು, ಗಾಳಿಯ ವೇಗವೂ ಹೆಚ್ಚಾಗಿರಲಿದೆ. ವಿಶೇಷವಾಗಿ ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿಯೂ ಸಾಧಾರಣ ಮಳೆಯಾಗುವ ಮೂಲಕ ಬಿಸಿಲಿನಿಂದ ತತ್ತರಿಸಿರುವ
ಹೋಟೆಲ್ ಉದ್ಯಮದಾರರಿಗೆ ಸಿಹಿಸುದ್ದಿ ಸಿಕ್ಕಿದೆ. ಆಸ್ಪತ್ರೆ, ದೈನಂದಿನ ಗೃಹ ಬಳಕೆಯ ಪೂರೈಕೆಯ ಜೊತೆಗೆ ಹೋಟೆಲ್ಗೆ ಕಮರ್ಷ್ಯಲ್ ಎಲ್ಪಿಜಿಗಳ ವಿತರಣೆ ಕೋಟಾ ಹೆಚ್ಚಿಸಲಾಗಿದೆ. ವಿತರಣಾ ಏಜೆನ್ಸ್ಗಳು ಹೆಚ್ಚಿನ ಹಣ ವಸೂಲಿ ಮಾಡಿದ್ರೆ ದಂಡದ ಎಚ್ಚರಿಕೆಯನ್ನೂ ಕೊಡಲಾಗಿದೆ. ಪರಿಸ್ಥಿತಿ ಸಂಪೂರ್ಣ ಸರಿಹೋಗುವವರೆಗೆ ಸೌದೆ, ಎಲೆಕ್ಟ್ರಿಕ್ ಬಳಸಲು ಸಲಹೆ ನೀಡಿದ್ದಾರೆ.
ಕೆಎಸ್ಆರ್ಟಿಸಿಯಲ್ಲೂ ಖಾಸಗಿ ಸಹಭಾಗಿತ್ವ: ಗುತ್ತಿಗೆ ಆಧಾರದ ಮೇಲೆ 5250 ಬಸ್ಗಳ ಪೂರೈಕೆಗೆ ಒಡಂಬಡಿಕೆ
ಕೇಂದ್ರ ಸರಕಾರದ ನಿರ್ಧಾರದ ಮೇಲೆ ರಾಜ್ಯ ಸರಕಾರವು ಕೆಎಸ್ಆರ್ಟಿಸಿಯಲ್ಲೂ ಖಾಸಗಿ ಸಹಭಾಗಿತ್ವವನ್ನು ಒತ್ತಾಯವಾಗಿ ಒಪ್ಪಿಕೊಳ್ಳಬೇಕಾಗಿದೆ ಎಂದಿದ್ದಾರೆ ಸಚಿವ ರಾಮಲಿಂಗಾ ರೆಡ್ಡಿ ಅವರು. ಆದರೆ ಈ ಹಿಂದೆ ಖಾಸಗಿ ಸಂಸ್ಥೆಗಳ ಬಸ್ಗಳು ಸರಿಯಾದ ನಿರ್ವಹಣೆ-ಚಾಲಕರಿಲ್ಲದೆ, ಹಲವು ಬಾರಿ ಅಪಘಾತಗಳಾದ ಘಟನೆ ನಡೆದಿತ್ತು.
PHOTOS | ಬಿಸಿಲಿನ ಬೇಗೆಯಿಂದ ಬಳಲಿದ್ದ ಬೆಂಗಳೂರಿನ ಜನರಿಗೆ ತಂಪೆರೆದ ಮಳೆ
ರವಿವಾರ ನಗರದಲ್ಲಿ ಸಾಧಾರಣ ಮಳೆಯಾಗಿದ್ದು, ಬಿಸಿಲಿನ ಬೇಗೆಯಿಂದ ಬಳಲಿದ್ದ ನಗರದ ಜನರಿಗೆ ತಂಪಾದ ವಾತಾವರಣ ಸಿಕ್ಕಿ ನಿರಾಳರಾಗಿದ್ದಾರೆ.
ಬೆಂಗಳೂರು: ಶಿಕ್ಷಕ ಎನಿಸಿಕೊಳ್ಳಲು ಯೋಗ್ಯನಲ್ಲದ ಒಬ್ಬ ವ್ಯಕ್ತಿ ಕಾಲೇಜಿನಲ್ಲಿ ಮುಸ್ಲಿಮ್ ಸಮುದಾಯದ ವಿದ್ಯಾರ್ಥಿಗೆ ಟೆರರಿಸ್ಟ್ (ಭಯೋತ್ಪಾದಕ) ಎಂದು ಕರೆದಿದ್ದಾನೆ. ಶಿಕ್ಷಣ ಕ್ಷೇತ್ರದಲ್ಲಿ ಅಂತವರು ಇರಬಾರದು ಎಂದು ಹಿರಿಯ ಸಾಹಿತಿ ಪ್ರೊ.ಎಸ್.ಜಿ.ಸಿದ್ದರಾಮಯ್ಯ ತಿಳಿಸಿದ್ದಾರೆ. ರವಿವಾರ ಹಸಿರು ಭೂಮಿ ಸಾಂಸ್ಕೃತಿಕ ಟ್ರಸ್ಟ್ ವತಿಯಿಂದ ನಗರದ ನಯನ ಸಭಾಂಗಣದಲ್ಲಿ ಆಯೋಜಿಸಿದ್ದ ‘ಹಸಿರುಸಿರಿ ಸಾಂಸ್ಕೃತಿ ಉತ್ಸವ’ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು, ಶಿಕ್ಷಣ ಕ್ಷೇತ್ರ ಪವಿತ್ರವಾದದ್ದು, ಅಲ್ಲಿನ ಶಿಕ್ಷಕರು ಎಲ್ಲ ಮಕ್ಕಳನ್ನು ತಾಯಿಯಂತೆ ಪೊರೆಯಬೇಕು ಎಂದು ಹೇಳಿದರು. ಒಬ್ಬ ತಾಯಿಗೆ 5 ಜನ ಮಕ್ಕಳಿದ್ದರೆ, ಎಲ್ಲರಿಗೂ ಸಮಾನ ಪ್ರೀತಿಯನ್ನು ತೋರಿಸುತ್ತಾಳೆ. ಆದರೆ ಬಲಹೀನತೆಯುಳ್ಳ ಮಕ್ಕಳಿಗೆ ಸ್ವಲ್ಪ ಹೆಚ್ಚು ಪ್ರೀತಿ ತೋರಿಸುತ್ತಾಳೆ. ಅದೇ ರೀತಿ ತಾಯಿಗೆ ಇರುವ ಅಂತಃಕರಣ ಶಿಕ್ಷಕರಿಗೆ ಇರಬೇಕು ಎಂದು ಅವರು ಅಭಿಪ್ರಾಯಪಟ್ಟರು. ಇವತ್ತು ನಡೆಯುತ್ತಿರುವ ಹಾಗೂ ಹಿಂದೆ ನಡೆದಿರುವ ಎಲ್ಲ ಯುದ್ಧಗಳ ಹಿಂದಿನ ಶಕ್ತಿ ಧರ್ಮ. ಅದು ಮನುಷ್ಯ ಕಟ್ಟಿಕೊಂಡಿರುವ ಸಂಕುಚಿತ ದೃಷ್ಟಿಯೊಳಗಿನ ಧರ್ಮ. ಆದರೆ ಸಂಸ್ಕೃತಿ ಧರ್ಮವನ್ನೂ ಕೂಡ ನಿರ್ದೇಶಿಸಬೇಕಾದಂತಹ ದೊಡ್ಡ ಶಕ್ತಿ. ಅದು ಪೊರೆಯುವ ಶಕ್ತಿಯೇ ಹೊರತು ವಿನಾಶ ಮಾಡುವ ಶಕ್ತಿ ಅಲ್ಲ ಎಂದು ಹೇಳಿದರು. ಕಲಾವಿದ ಆದವರಿಗೆ ಕೇವಲ ಮಾತು ಮಾತ್ರವಲ್ಲ. ಇಡೀ ಅಂಗಾಂಗವು ಅಭಿನೇತ ಶಕ್ತಿಯಿಂದ ಕೂಡಿದಾಗ ಮಾತ್ರ ಸೃಜನಶೀಲವಾಗಿರುತ್ತದೆ. ಇತ್ತೀಚಿನ ದಿನಗಳಲ್ಲಿ ಅಂಗಾಂಗ ಚಲನೆಯ ವಿಕಾರಗಳೇ ನಟನೆ ಎನ್ನುವ ಭ್ರಮೆಯನ್ನು ಸೃಷ್ಠಿಸಿರುವ ಹೊತ್ತಿನಲ್ಲಿ ಅಭಿನಯ ಸೃಜನಶೀಲವಾಗಬೇಕು ಎಂದು ತಿಳಿಸಿದರು. ಯಾವತ್ತೂ ಕಲಾವಿದ ಸಾಮಾಜಿಕ ಹೊಣೆಗಾರಿಕೆಯನ್ನು ಅರಿತುಕೊಂಡು ತನ್ನನ್ನು ನಿರ್ವಹಿಸಿಕೊಳ್ಳಬೇಕು. ಹಿಂದಿ ಜಗತ್ತಿನ ಮೇರು ನಟರು ಅನಿಸಿಕೊಂಡವರು ಎಂತಹ ಸಾಮಾಜಿಕ ಹೊಣೆಗೇಡಿತನದಲ್ಲಿ ವರ್ತಿಸುತ್ತಿದ್ದಾರೆ. ಅವರು ಜಾಹೀರಾತು ಮಾಡುವಾಗ ಹಣ ಮತ್ತು ವ್ಯಾಪಾರ ಮಾತ್ರ ಮುಖ್ಯವಲ್ಲ. ಸಾಮಾಜಿಕ ಜವಾಬ್ಧಾರಿಯೂ ಬಹಳ ಮುಖ್ಯ. ‘ಬಾಯಲ್ಲಿ ಹೇಳಿ ಕೇಸರಿ’ ಎನ್ನುವ ಜಾಹೀರಾತಿನ ಮೂಲಕ ಕೋಟ್ಯಾಂತರ ಯುವಜನವರು ಕ್ಯಾನ್ಸರ್ ಗೆ ಬಲಿಯಾಗುವ ರೀತಿಯಲ್ಲಿ ಹೊಣಗೇಡಿತನವನ್ನು ತೋರಿಸಿದ್ದಾರೆ ಎಂದು ಹೇಳಿದರು. ಡಾ.ರಾಜ್ಕುಮಾರ್ ಅವರನ್ನು ಯಾಕೆ ನೆನಪಿಸಿಕೊಳ್ಳುತ್ತೇವೆ ಎಂದರೆ, ಅವರು ಜೀವನದ ಪ್ರತೀ ಹಂತದಲ್ಲೂ ಸಾಮಾಜಿಕ ಎಚ್ಚರವನ್ನು ಇಟ್ಟುಕೊಂಡು ನಡೆದುಕೊಂಡಿದ್ದಾರೆ. ಹಾಸ್ಯ ನಟ ಶಿವರಾಜ್ ಕೆ.ಆರ್.ಪೇಟೆ ಅವರಿಗೂ ಈ ರೀತಿಯ ಸಾಮಾಜಿಕ ಎಚ್ಚರ ಇರಬೇಕು ಎಂದು ಸಲಹೆ ನೀಡಿದರು. ಇದೇ ವೇಳೆ ಸಾಹಿತಿ ಎಸ್.ದಿವಾಕರ್, ಪತ್ರಕರ್ತ ಜೀವನ್ಮುಖಿ ಸುರೇಶ್, ಹಾಸ್ಯ ನಟ ಶಿವರಾಜ್ ಕೆ.ಆರ್. ಪೇಟೆ ಅವರಿಗೆ ಹಸಿರು ಸಿರಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ವಿಶ್ವ ಒಕ್ಕಲಿಗ ಮಹಾ ಸಂಸ್ಥಾನ ಮಠದ ಡಾ.ನಿಶ್ಚಲಾನಂದನಾಥ ಸ್ವಾಮೀಜಿ, ಪೊಲೀಸ್ ಉಪಮಹಾ ನಿರೀಕ್ಷಕ ಡಾ.ಎ.ಎನ್.ಪ್ರಕಾಶ್ಗೌಡ, ಮಾಜಿ ಶಾಸಕ ಕೆ.ಅನ್ನದಾನಿ, ಹಸಿರು ಭೂಮಿ ಸಾಂಸ್ಕೃತಿಕ ಟ್ರಸ್ಟ್ ಅಧ್ಯಕ್ಷ ರಘುನಂದನ ಮತ್ತಿತರರು ಉಪಸ್ಥಿತರಿದ್ದರು.
ಟಿಪ್ಪುವನ್ನು ವಿರೋಧಿಸುತ್ತಿರುವರು ಬ್ರಿಟಿಷರ ಸ್ನೇಹಿತರು: ಡಾ.ಬಂಜಗೆರೆ ಜಯಪ್ರಕಾಶ್
ಬೆಂಗಳೂರು: ಟಿಪ್ಪು ಸುಲ್ತಾನ ಅವರನ್ನು ಖಳನಾಯಕನನ್ನಾಗಿ ಮೊದಲು ಚಿತ್ರಿಸಿದವರು ಬ್ರಿಟಿಷರು. ಇದೀಗ ಟಿಪ್ಪುವನ್ನು ವಿರೋಧಿಸುತ್ತಿರುವರು ಬ್ರಿಟಿಷರ ಸ್ನೇಹಿತರು ಎಂದು ಸಂಸ್ಕೃತಿ ಚಿಂತಕ ಡಾ. ಬಂಜಗೆರೆ ಜಯಪ್ರಕಾಶ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ರವಿವಾರ ನಗರದ ಕಬ್ಬನ್ಪಾರ್ಕ್ನಲ್ಲಿರುವ ಸಚಿವಾಲಯ ಕ್ಲಬ್ನ ಸಭಾಂಗಣದಲ್ಲಿ ಪತ್ರಕರ್ತ ನವೀನ್ ಸೂರಿಂಜೆ ಬರೆದಿರುವ ‘ಕರಾವಳಿಯ ಚರಿತ್ರೆಯಲ್ಲಿ ಹೈದರ್ ಅಲಿ ಮತ್ತು ಟಿಪ್ಪು ಸುಲ್ತಾನ್’ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಮೈಸೂರು ರಾಜರಿಗೆ ರಾಜ್ಯವನ್ನು ಕಟ್ಟಲು ಅರ್ಹತೆ ಇದ್ದಂತೆ, ಟಿಪ್ಪುವಿಗೂ ರಾಜ್ಯವನ್ನು ಕಟ್ಟಲು ಅರ್ಹತೆ ಇತ್ತು. ಆತನ ಬಳಿ ತೋಳ್ಬಲವಿತ್ತು. ಜೊತೆಗೆ ಬಹಳ ತಿಳುವಳಿಕೆ ಇದ್ದಂತಹ ಆಡಳಿತಗಾರನಾಗಿದ್ದ. ಇತಿಹಾಸವನ್ನು ವಸ್ತುನಿಷ್ಟವಾಗಿ ನೋಡಬೇಕು. ಆದರೆ, ಇತಿಹಾಸವನ್ನು ತಿರುಚಿ ಟಿಪ್ಪುವನ್ನು ಖಳನಾಯಕನನ್ನಾಗಿ ಮಾಡಲಾಗುತ್ತಿದೆ ಎಂದು ಬಂಜಗೆರೆ ಜಯಪ್ರಕಾಶ್ ಹೇಳಿದರು. ಹಿರಿಯ ಚಿಂತಕ ಡಾ.ಸಿದ್ದನಗೌಡ ಪಾಟೀಲ್ ಮಾತನಾಡಿ, ಉರಿಗೌಡ-ನಂಜೇಗೌಡರ ಸೃಷ್ಟಿಕರ್ತರಿಗೆ ಎದುರಾಗಿ ಈ ಪುಸ್ತಕ ಬಂದಿದೆ. ಇತಿಹಾಸ ಮಾತ್ರವಲ್ಲ, ವಿಜ್ಞಾನವನ್ನು ಹಾಗೂ ಭವಿಷ್ಯವನ್ನೂ ಸಹ ತಿರುಚಲಾಗುತ್ತಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು. ಟಿಪ್ಪು ಮತ್ತು ಹೈದರ್ ಅಲಿ ವಿಚಾರವನ್ನು ಅಂದಿನ ಕಾಲಘಟ್ಟದಲ್ಲಿ ನಿಂತು ಅಧ್ಯಯನ ಮಾಡುವುದು ಅವಶ್ಯವಿದೆ. ಅವರ ವಿರುದ್ಧವಾಗಿ ಸಮಾಜದಲ್ಲಿ ಇಂದು ಮಾಡುತ್ತಿರುವ ಅಪಪ್ರಚಾರದ ವಿರುದ್ಧ ಪತ್ರಕರ್ತ ನವೀನ್ ಸೂರಿಂಜೆ ಬರೆದಿದ್ದಾರೆ ಎಂದು ಡಾ.ಸಿದ್ದನಗೌಡ ಪಾಟೀಲ್ ಹೇಳಿದರು. ಟಿಪ್ಪು ಬ್ರಿಟಿಷ್ ವಿರೋಧಿ ಎಂದು ಹೇಳದ ಸಂಘಪರಿವಾರದವರು, ಹಿಂದೂ ವಿರೋಧಿ ಎಂದು ಬಿಂಬಿಸುತ್ತಾರೆ. ಕರ್ನಾಟಕದಲ್ಲಿ ವೈದಿಕ(ಬಿಜೆಪಿ) ರಾಜಕಾರಣ ಮಾಡುತ್ತಿರುವ ಸಂಘರ್ಷವನ್ನು ಮುಚ್ಚಿಟ್ಟಿದ್ದಾರೆ. ಇತಿಹಾಸದ ಘಟನೆಗಳನ್ನು ಇಟ್ಟುಕೊಂಡು ಪ್ರಚೋದನೆ ಮಾಡುವ ಹಂತಕ್ಕೆ ಕರ್ನಾಟಕ ಬಂದು ನಿಂತಿದೆ ಎಂದು ಸಿದ್ದನಗೌಡ ಪಾಟೀಲ್ ತಿಳಿಸಿದರು. ಭಾರತವನ್ನು ನಿಯಂತ್ರಿಸುತ್ತಿರುವುದು ಮೋದಿನಾ?, ಟ್ರಂಪಾ?: ‘ಟಿಪ್ಪು ಅವರಲ್ಲಿದ್ದ ವಸಾಹತುಶಾಹಿ ವಿರೋಧಿ ಪ್ರಜ್ಞೆ ಇವತ್ತಿಗೂ ಅವಶ್ಯಕತೆ ಆಗಿದೆ. ಇರಾನ್ ನಾಶ ಆಗಬೇಕು ಎಂದು ಬಯಸಿದವರು ಈಗ ಎಲ್ಪಿಜಿ ಸಮಸ್ಯೆ ಆದ ಮೇಲೆ ಯುದ್ಧ ನಿಲ್ಲಬೇಕು ಅಂತ ಹೇಳುತ್ತಾರೆ. ಭಾರತವನ್ನು ನಿಯಂತ್ರಿಸುತ್ತಿರುವುದು ಮೋದಿನಾ? ಅಥವಾ ಟ್ರಂಪಾ?’ ಎಂದು ಡಾ.ಸಿದ್ದನಗೌಡ ಪಾಟೀಲ್ ಪ್ರಶ್ನಿಸಿದರು.
MI Vs KKR: 14 ವರ್ಷಗಳ ಬಳಿಕ ಹೊಸ ಇತಿಹಾಸ ಬರೆದ ಮುಂಬೈ ಇಂಡಿಯನ್ಸ್; ಕೆಕೆಆರ್ ವಿರುದ್ಧ ಭರ್ಜರಿ ಜಯ
IPL 2026 MI Vs KKR: ಮುಂಬೈ ಇಂಡಿಯನ್ಸ್ ತಂಡವು ಐಪಿಎಲ್ ಇತಿಹಾಸದಲ್ಲಿ ತನ್ನ ಮೇಲಿದ್ದ 14 ವರ್ಷಗಳ ಹಳೆಯ ಅಪಶಕುನವನ್ನು ಕೊನೆಗೂ ತೊಡೆದುಹಾಕಿದೆ. ಭಾನುವಾರ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ 6 ವಿಕೆಟ್ಗಳಿಂದ ಜಯ ಸಾಧಿಸಿತು. ಈ ಮೂಲಕ 2012ರ ನಂತರ ಮೊದಲ ಬಾರಿಗೆ ಮುಂಬೈ ತಂಡವು ಸೀಸನ್ನ ತನ್ನ
ಬೆಂಗಳೂರು: ಬಿಸಿಲಿನ ಬೇಗೆಯಿಂದ ಬಳಲಿದ್ದ ಜನರಿಗೆ ತಂಪೆರೆದ ಮಳೆ
ಬೆಂಗಳೂರು: ರವಿವಾರ ನಗರದಲ್ಲಿ ಸಾಧಾರಣ ಮಳೆಯಾಗಿದ್ದು, ಬಿಸಿಲಿನ ಬೇಗೆಯಿಂದ ಬಳಲಿದ್ದ ನಗರದ ಜನರಿಗೆ ತಂಪಾದ ವಾತಾವರಣ ಸಿಕ್ಕಿ ನಿರಾಳರಾಗಿದ್ದಾರೆ. ಸಂಜೆಯವರೆಗೆ ಯಾವುದೇ ಮಳೆಯ ವಾತಾವರಣ ಇರದೆ, ಬಿಸಿಲಿನ ಪ್ರಮಾಣ ಸಾಧಾರಣವಾಗಿಯೇ ಇತ್ತು. ಆದರೆ ಸಂಜೆಯಾಗುತ್ತಿದ್ದಂತೆ ಬಹುತೇಕ ಪ್ರದೇಶಗಳಲ್ಲಿ ಮಳೆಯಾಗಿದ್ದು, ಪ್ರಮುಖ ರಸ್ತೆಗಳಲ್ಲಿ ಕೆಲ ಕಾಲ ಸಂಚಾರ ದಟ್ಟನೆ ಉಂಟಾಗಿತ್ತು. ನಗರದ ಮೆಜೆಸ್ಟಿಕ್, ಕೆ.ಆರ್. ಮಾರುಕಟ್ಟೆ, ಕಾಪೋರೇಷನ್ ವೃತ್ತ, ರಿಚ್ಮಂಡ್ ವೃತ್ತ, ಶಾಂತಿ ನಗರ ಮಹಾತ್ಮಗಾಂಧಿ ರಸ್ತೆ, ಬನಶಂಕರಿ, ಇಂದಿರಾನಗರ, ದೊಡ್ಡನೆಕ್ಕುಂದಿ, ಮಲ್ಲೇಶ್ವರಂ, ಹನುಮಂತನಗರ, ಬ್ಯಾಂಕ್ ಕಾಲನಿ, ಹೊಸಕೆರೆಹಳ್ಳಿ, ಮೈಸೂರು ರಸ್ತೆ, ರಾಜರಾಜೇಶ್ವರಿ ನಗರ, ವಿದ್ಯಾರಣ್ಯಪುರ ಸೇರಿದಂತೆ ಹಲವು ಭಾಗಗಳಲ್ಲಿ ಒಂದು ಗಂಟೆಗೂ ಅಧಿಕ ಕಾಲ ಮಳೆಯಾಗಿದೆ.
ಮುಂಬೈ ಇಂಡಿಯನ್ಸ್ ಅಂಟಿದ್ದ ಅಪವಾದಕ್ಕೆ ಅಂತೂ ಮುಕ್ತಿ; 13 ವರ್ಷಗಳ ಬಳಿಕ ಮೊದಲ ಬಾರಿ ಮೊದಲ ಪಂದ್ಯದಲ್ಲಿ ಜಯಭೇರಿ!
ಮೊದಲ ಪಂದ್ಯದಲ್ಲಿ ಸೋಲುವುದರಲ್ಲಿ ಖ್ಯಾತವಾಗಿದ್ದ ಮುಂಬೈ ಇಂಡಿಯನ್ಸ್ ತಂಡ ಇದೀಗ ಕೋಲ್ಕತಾ ನೈಟ್ ರೈಡರ್ಸ್ ತಂಡವನ್ನು 6 ವಿಕೆಟ್ ಗಳಿಂದ ಸೋಲಿಸುವ ಮೂಲಕ 13 ವರ್ಷಗಳ ಬಳಿಕ ಶುಭಾರಂಭ ಮಾಡಿದೆ. ರೋಹಿತ್ ಶರ್ಮಾ ಮತ್ತು ರಿಯಾನ್ ರಿಕೆಲ್ಟನ್ ಅವರ ಭರ್ಜರಿ ಅರ್ಧಶತಕಗಳ ನೆರವಿನಿಂದ ಎದುರಾಳಿಗಳ ಮೇಲೆ ಸವಾರಿ ಮಾಡಿದ 5 ಬಾರಿಯ ಚಾಂಪಿಯನ್ ತಂಡ 224 ರನ್ ಗಳ ಬೃಹತ್ ಮೊತ್ತವನ್ನು ಬೆನ್ನಟ್ಟಿ ಗೆಲುವು ಸಾಧಿಸಿತು. ವಾಂಖೆಡೆ ಕ್ರೀಡಾಂಗಣದಲ್ಲಿ ಮಾರ್ಚ್ 29 ಭಾನುವಾರದಂದು ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಕೋಲ್ಕತಾ ನೈಟ್ ರೈಡರ್ಸ್ ನಿಗದಿತ 20 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 220 ರನ್ ಗಳಿಸಿತು. ಇದಕ್ಕುತ್ತರವಾಗಿ ಮುಂಬೈ ಇಂಡಿಯನ್ಸ್ ತಂಡ ಇನ್ನೂ 5 ಎಸೆತಗಳು ಬಾಕಿ ಉಳಿದಿರುವಾಗಲೇ 4 ವಿಕೆಟ್ ಕಳೆದುಕೊಂಡು ಗುರಿ ತಲುಪಿತು. ()2021ರ ಐಪಿಎಲ್ ಸೀಸನ್ ನಲ್ಲಿ ಚೆನ್ನೈ ವಿರುದ್ಧ ದಿಲ್ಲಿಯಲ್ಲಿ 219 ರನ್ ಬೆಂಬತ್ತಿ ಗೆಲುವು ಸಾಧಿಸಿದ್ದು ಮುಂಬೈ ತಂಡದ ಈವರೆಗಿನ ಅತಿದೊಡ್ಡ ರನ್ ಚೇಸ್ ಆಗಿತ್ತು. ಇದೀಗ ಆ ದಾಖಲೆಯನ್ನು ವಾಂಖೆಡೆಯಲ್ಲಿ ಅಳಿಸಿದೆ. ರೋಹಿತ್ ಶರ್ಮಾ ಮತ್ತು ರಿಯಾನ್ ರಿಕೆಲ್ಟನ್ ಮೊದಲ ವಿಕೆಟ್ ಗೆ 11.5 ಓವರ್ ಗಳಲ್ಲಿ 148 ರನ್ ಗಳ ಜೊತೆಯಾಟವಾಡಿ ಕೋಲ್ಕತಾ ಕೈಯಿಂದ ಪಂದ್ಯವನ್ನು ಸಂಪೂರ್ಣವಾಗಿ ಕಸಿದುಕೊಂಡರು. ಹೀಗಾಗಿ ಉಳಿದ ಬ್ಯಾಟರ್ ಗಳಿಗೆ ದೊಡ್ಡ ಮಟ್ಟದ ಕೆಲಸ ಉಳಿಯಲಿಲ್ಲ. 2021ರ ಐಪಿಎಲ್ ಸೀಸನ್ ನಲ್ಲಿ ಚೆನ್ನೈ ವಿರುದ್ಧ ದಿಲ್ಲಿಯಲ್ಲಿ 219 ರನ್ ಬೆಂಬತ್ತಿ ಗೆಲುವು ಸಾಧಿಸಿದ್ದು ಮುಂಬೈ ತಂಡದ ಈವರೆಗಿನ ಅತಿದೊಡ್ಡ ರನ್ ಚೇಸ್ ಆಗಿತ್ತು. ಇದೀಗ ಆ ದಾಖಲೆಯನ್ನು ವಾಂಖೆಡೆಯಲ್ಲಿ ಅಳಿಸಿದೆ. ರೋಹಿತ್ ಶರ್ಮಾ ಮತ್ತು ರಿಯಾನ್ ರಿಕೆಲ್ಟನ್ ಮೊದಲ ವಿಕೆಟ್ ಗೆ 11.5 ಓವರ್ ಗಳಲ್ಲಿ 148 ರನ್ ಗಳ ಜೊತೆಯಾಟವಾಡಿ ಕೋಲ್ಕತಾ ಕೈಯಿಂದ ಪಂದ್ಯವನ್ನು ಸಂಪೂರ್ಣವಾಗಿ ಕಸಿದುಕೊಂಡರು. ಹೀಗಾಗಿ ಉಳಿದ ಬ್ಯಾಟರ್ ಗಳಿಗೆ ದೊಡ್ಡ ಮಟ್ಟದ ಕೆಲಸ ಉಳಿಯಲಿಲ್ಲ. 23 ಎಸೆತಗಳಲ್ಲಿ ಅರ್ಧಶತಕ ಗಳಿಸಿದ ರೋಹಿತ್ ಶರ್ಮಾ ಔಟಾಗುವ ಮುನ್ನ 38 ಎಸೆತಗಳಲ್ಲಿ 78 ರನ್ ಗಳಿಸಿದರು. ಅವರ ಇನ್ನಿಂಗ್ಸ್ ನಲ್ಲಿ ತಲಾ 6 ಬೌಂಡರಿ ಮತ್ತು 6 ಸಿಕ್ಸರ್ ಗಳಿದ್ದವು. ಇನ್ನು 24 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ರಿಯಾನ್ ರಿಕೆಲ್ಟನ್ ಅವರು 43 ಎಸೆತಗಳಲ್ಲಿ 81 ರನ್ ಗಳಿಸಿದರು. ಇಧರಲ್ಲಿ 4 ಬೌಂಡರಿ ಮತ್ತು 8 ಸಿಕ್ಸರ್ ಗಳನ್ನು ಒಳಗೊಂಡಿದ್ದವು. ರೋಹಿತ್ ವಿಕೆಟ್ ಪತನದ ಬಳಿಕ ಇಂಪ್ಯಾಕ್ಟ್ ಪ್ಲೇಯರ್ ಆಗಿ ಕಣಕ್ಕಿಳಿದ ಸೂುರ್ಯಕುಮಾರ್ ಯಾದವ್ ಅವರು ಕೇವಲ 8 ಎಸೆತಗಳಲ್ಲಿ 3ಬೌಂಡರಿಗಳಿದ್ದ 16 ರನ್ ಗಳಿಸಿ ಔಟಾದರು. ನಾಯಕ ಹಾರ್ದಿಕ್ ಪಾಂಡ್ಯ(11 ಎಸೆತದಲ್ಲಿ 18) ತಂಡವನ್ನು ಗೆಲುವಿನ ದಡ ಸೇರಿಸಿದರು. ಅಜಿಂಕ್ಯ ರಹಾನೆ ನಾಯಕನಾಟ ಇದಕ್ಕಿಂತ ಮುಂಚೆ ಟಾಸ್ ಸೋತು ಬ್ಯಾಟಿಂಗ್ ಗೆ ಇಳಿಸಲ್ಪಟ್ಟ ಕೋಲ್ಕತಾ ನೈಟ್ ರೈಡರ್ಸ್ ತಂಡಕ್ಕೆ ನಾಯಕ ಅಜಿಂಕ್ಯ ರಹಾನೆ(40 ಎಸೆತದಲ್ಲಿ 67) ಮತ್ತು ಫಿನ್ ಅಲೆನ್(17 ಎಸೆತದಲ್ಲಿ 37) ಉತ್ತಮ ಆರಂಭ ಒದಗಿಸಿದರು. ಇವರಿಬ್ಬರು 5.2 ಓವರ್ ಗಳಲ್ಲಿ ಮೊದಲ ವಿಕೆಟ್ ಗೆ 69 ರನ್ ಪೇರಿಸಿದರು. ಫಿನ್ ಅಲೆನ್ ಔಟಾದ ಬಳಿಕ ಕ್ಯಾಮರೂನ್ ಗ್ರೀನ್ (10 ಎಸೆತದಲ್ಲಿ 18) ಅವರೊಂದಿಗೆ ಬ್ಯಾಟಿಂಗ್ ಮುಂದುವರಿಸಿದ ರಹಾನೆ ಅವರು ಅರ್ಧಶತಕ ಪೂರೈಸಿಕೊಂಡರು.ಮಧ್ಯಮ ಕ್ರಮಾಂಕದಲ್ಲಿ ಅಂಗರಿಕ್ಷ್ ರಘುವಂಶಿ(29 ಎಸೆತದಲ್ಲಿ 51) ಮತ್ತು ರಿಂಕು ಸಿಂಗ್ (21 ಎಸೆತದಲ್ಲಿ 31) ಉಪಯುಕ್ತ ಕೊಡುಗೆ ನೀಡಿದ್ದರಿಂದ ತಂಡ ಬೃಹತ್ ಮೊತ್ತ ಪೇರಿಸುವಂತಾಯಿತು. ಮುಂಬೈ ಪರ ಶಾರ್ದೂಲ್ ಠಾಕೂರ್ 3 ವಿಕೆಟ್ ಉರುಳಿಸಿದರು. ಸಂಕ್ಷಿಪ್ತ ಸ್ಕೋರ್ ಕೋಲ್ಕತಾ ನೈಟ್ ರೈಡರ್ಸ್ 220/4, ಅಜಿಂಕ್ಯ ರಹಾನೆ 67(40), ಫಿನ್ ಅಲೆನ್ 37(17), ಅಂಗರಿಕ್ಷ್ ರಘುವಂಶಿ 51(29), ರಿಂಕು ಸಿಂಗ್ ನಾಟೌಟ್ 33(22), ಶಾರ್ದೂಲ್ ಠಾಕೂರ್ 39ಕ್ಕೆ 3, ಹಾರ್ದಿಕ್ ಪಾಂಡ್ಯ 39ಕ್ಕೆ1.
ಹೊಸದಿಲ್ಲಿ, ಮಾ. 29: ಇರಾನ್ ಜೊತೆ ನಡೆಯುತ್ತಿರುವ ಯುದ್ಧದಲ್ಲಿ ಯುನೈಟೆಡ್ ಅರಬ್ ಎಮಿರೇಟ್ಸ್ (UAE) ಅಮೆರಿಕ ಮತ್ತು ಇಸ್ರೇಲ್ ಜೊತೆ ಕೈಜೋಡಿಸುವ ಮೂಲಕ ದೊಡ್ಡ ತಪ್ಪು ಮಾಡುತ್ತಿದೆ ಎಂದು ಅಮೆರಿಕದ ಖ್ಯಾತ ಅರ್ಥಶಾಸ್ತ್ರಜ್ಞ ಜೆಫ್ರಿ ಸ್ಯಾಚ್ಸ್ ಹೇಳಿದ್ದಾರೆ. ಯುಎಇ ಸಂಘರ್ಷಕ್ಕೆ ಪ್ರವೇಶಿಸಲು ನಿರ್ಧರಿಸಿದರೆ ಅದರ ಪ್ರಮುಖ ನಗರಗಳಾದ ದುಬೈ ಮತ್ತು ಅಬುಧಾಬಿ ಬಾಂಬ್ ದಾಳಿಗೆ ಗುರಿಯಾಗುವ ಅಪಾಯವಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ. Financial Times ವರದಿಯ ಪ್ರಕಾರ, ಹಾರ್ಮುಝ್ ಜಲಸಂಧಿಯನ್ನು ಮರು ತೆರೆಯುವ ಗುರಿಯನ್ನು ಹೊಂದಿರುವ ಬಹುರಾಷ್ಟ್ರೀಯ ಕಡಲ ಕಾರ್ಯಾಚರಣೆಯಲ್ಲಿ ಭಾಗವಹಿಸಲು ಯುಎಇ ಸಿದ್ಧವಾಗಿರುವುದಾಗಿ ಅಮೆರಿಕ ಸೇರಿ ತನ್ನ ಮಿತ್ರ ರಾಷ್ಟ್ರಗಳಿಗೆ ತಿಳಿಸಿದೆ. ಗಲ್ಫ್ ಪ್ರದೇಶದ ಪ್ರಮುಖ ಜಲಮಾರ್ಗವಾದ ಹಾರ್ಮುಝ್ ಮೂಲಕ ಹಡಗುಗಳ ಸುರಕ್ಷಿತ ಸಾಗಣೆಯನ್ನು ಖಚಿತಪಡಿಸಲು ಒಕ್ಕೂಟ ರಚಿಸುವ ಪ್ರಯತ್ನ ನಡೆಯುತ್ತಿದೆ. “ಮೂಲತಃ, ಯುಎಇ ಯುದ್ಧಕ್ಕೆ ಇಳಿದರೆ ದುಬೈ ಮತ್ತು ಅಬುಧಾಬಿ ಸ್ಫೋಟಗೊಳ್ಳಬಹುದು. ಇವು ರೆಸಾರ್ಟ್ ಪ್ರದೇಶಗಳು ಮತ್ತು ಪ್ರವಾಸಿ ತಾಣಗಳು. ಇವು ಕ್ಷಿಪಣಿ ರಕ್ಷಣಾ ವಲಯಗಳಲ್ಲ. ಶ್ರೀಮಂತರು ಪಾರ್ಟಿ ಮಾಡಲು ಮತ್ತು ತಮ್ಮ ಹಣ ಹೂಡಲು ಈ ಸ್ಥಳಗಳಿಗೆ ಬರುತ್ತಾರೆ. ಯುದ್ಧ ವಲಯಕ್ಕೆ ಪ್ರವೇಶಿಸುವುದು ದುಬೈನಂತಹ ಸ್ಥಳದ ಮೂಲ ಉದ್ದೇಶವನ್ನೇ ಹಾಳು ಮಾಡುತ್ತದೆ,” ಎಂದು ಸ್ಯಾಚ್ಸ್ ANIಗೆ ನೀಡಿದ ಸಂದರ್ಶನದಲ್ಲಿ ಆತಂಕ ವ್ಯಕ್ತಪಡಿಸಿದ್ದಾರೆ. ಅಬ್ರಹಾಂ ಒಪ್ಪಂದಗಳಿಗೆ ಸಹಿ ಹಾಕಿ ಅಮೆರಿಕದ ಜೊತೆ ಪಾಲುದಾರಿಕೆಗೆ ಹೋಗಿರುವುದು ಯುಎಇ ಸೇರಿದಂತೆ ಗಲ್ಫ್ ರಾಷ್ಟ್ರಗಳ “ಮೂಲಭೂತ ತಪ್ಪು ಲೆಕ್ಕಾಚಾರ” ಎಂದು ಅವರು ಅಭಿಪ್ರಾಯಪಟ್ಟರು. ವಿದೇಶಿ ಭದ್ರತೆಯ ಮೇಲೆ ಅವಲಂಬಿಸುವುದಕ್ಕಿಂತ ಸ್ವರಕ್ಷಣೆಗೆ ಹೆಚ್ಚಿನ ಒತ್ತು ನೀಡಬೇಕು ಎಂದು ಅವರು ಸಲಹೆ ನೀಡಿದ್ದಾರೆ. “ಇರಾನ್ ವಿರುದ್ಧದ ಯುದ್ಧಕ್ಕೆ ಸೇರಿ ಅಮೆರಿಕಕ್ಕೆ ಬದ್ಧತೆಯನ್ನು ತೋರಿಸುವಾಗ ಪರಿಸ್ಥಿತಿಯನ್ನು ಸರಿಯಾಗಿ ಅರ್ಥಮಾಡಿಕೊಳ್ಳಿ. ನಿಮ್ಮನ್ನು ನೀವು ರಕ್ಷಿಸಿಕೊಳ್ಳಿ” ಎಂದು ಅವರು ಹೇಳಿದ್ದಾರೆ. ಇದೇ ವೇಳೆ, ಅಮೆರಿಕ ತನ್ನ ನೆಲದಲ್ಲಿರುವ ಮಿಲಿಟರಿ ನೆಲೆಗಳನ್ನು ಬಳಸಿಕೊಂಡು ದಾಳಿ ನಡೆಸಲು ಅವಕಾಶ ನೀಡುವ ದೇಶಗಳಿಗೆ ಇರಾನ್ ಪದೇ ಪದೇ ಎಚ್ಚರಿಕೆ ನೀಡಿದೆ. ಇಂತಹ ಸೌಲಭ್ಯಗಳನ್ನು ಒದಗಿಸುವ ಯಾವುದೇ ದೇಶವು ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಇರಾನ್ ಸ್ಪಷ್ಟಪಡಿಸಿದೆ.
IPL 2026 | KKR ವಿರುದ್ದ ಮುಂಬೈಗೆ ರೋಚಕ ಜಯ
ರೋಹಿತ್ ಶರ್ಮ, ರಯಾನ್ ರಿಕೆಲ್ಟನ್ ಭರ್ಜರಿ ಬ್ಯಾಟಿಂಗ್ ಪ್ರದರ್ಶನ
Karnataka Rains: ಬೆಂಗಳೂರು ಸೇರಿ ರಾಜ್ಯದ ಹಲವು ಜಿಲ್ಲೆಗಳಿಗೆ ಮುಂದಿನ ಮೂರು ಗಂಟೆಗಳಲ್ಲಿ ಭಾರೀ ಮಳೆ ಮುನ್ಸೂಚನೆ
Karnataka Rains: ಬೇಸಿಗೆಯ ಬಿರುಬಿಸಿಲಿನ ವಾತಾವರಣದ ನಡುವೆಯೂ ರಾಜ್ಯದ ಹಲವೆಡೆ ಮಳೆರಾಯನ ಆರ್ಭಟ ಮುಂದುವರೆದಿದೆ. ಹಾಗೆಯೇ ಇದೀಗ ಮುಂದಿನ ಮೂರು ಗಂಟೆಗಳಲ್ಲಿ ಬೆಂಗಳೂರು ಸೇರಿದಂತೆ ಕೆಲವು ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಹಾಗಾದ್ರೆ, ಎಲ್ಲೆಲ್ಲಿ ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ. ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಇಂದು (ಮಾರ್ಚ್ 29)

31 C