SENSEX
NIFTY
GOLD
USD/INR

Weather

23    C
...

Gold Rate: ಸತತ ಕುಸಿತ ಕಾಣುತ್ತಿರುವ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟು ಗೊತ್ತಾ?

ಬೆಂಗಳೂರು: ದೇಶೀಯ ಮಾರುಕಟ್ಟೆಯಲ್ಲಿ ಹಾಗೂ ಜಾಗತಿಕ ಮಟ್ಟದಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ನಿರಂತರ ಏರಿಳಿತಗಳು ಕಂಡುಬರುತ್ತಿವೆ. ಮದುವೆ ಹಾಗೂ ಮುಂಬರುವ ಶುಭ ಸಮಾರಂಭಗಳ ಸೀಸನ್‌ನಲ್ಲಿ ಆಭರಣ ಖರೀದಿಸುವವರಿಗೆ ಬೆಲೆಗಳ ಏರಿಳಿತದ ಬಗ್ಗೆ ತಿಳಿದುಕೊಳ್ಳುವುದು ಅತಿ ಮುಖ್ಯವಾಗಿದೆ. ಅಂತರರಾಷ್ಟ್ರೀಯ ಮಾರುಕಟ್ಟೆಯ ಟ್ರೆಂಡ್ ಹಾಗೂ ಎಂಸಿಎಕ್ಸ್ (MCX) ಮಾರುಕಟ್ಟೆಯಲ್ಲಿನ ವಹಿವಾಟಿನ ಪ್ರಭಾವದಿಂದಾಗಿ ಮಾರ್ಚ್ 25, 2026 ರಂದು ಚಿನ್ನದ

ಒನ್ ಇ೦ಡಿಯ 25 Mar 2026 7:57 am

ಕಾಂಗ್ರೆಸ್ ವಿರೋಧದ ನಡುವೆಯೂ UCC ಅಂಗೀಕರಿಸಿದ ಗುಜರಾತ್ ವಿಧಾನಸಭೆ

ಗಾಂಧಿನಗರ: ಏಳು ಗಂಟೆಗಳ ನಿರಂತರ ಚರ್ಚೆ ಬಳಿಕ ಗುಜರಾತ್ ವಿಧಾನಸಭೆ ಸಮಾನ ನಾಗರಿಕ ಸಂಹಿತೆ (UCC) ಮಸೂದೆಯನ್ನು ಮಂಗಳವಾರ ಅಂಗೀಕರಿಸಿದೆ. ಸಮಾನತೆ ತರುವ ನಿಟ್ಟಿನಲ್ಲಿ ಇದು ಐತಿಹಾಸಿಕ ಸುಧಾರಣೆ ಎಂದು ಬಿಜೆಪಿ ಬಣ್ಣಿಸಿದ್ದು, ಇದು ಮೂಲಭೂತ ಹಕ್ಕುಗಳ ಉಲ್ಲಂಘನೆ ಹಾಗೂ ಮುಸ್ಲಿಂ ವಿರೋಧಿ ಕ್ರಮ ಎಂದು ಕಾಂಗ್ರೆಸ್ ಕಟುವಾಗಿ ಟೀಕಿಸಿದೆ. ಹೊಸ ಮಸೂದೆಯು ವಿವಾಹ, ವಿಚ್ಛೇದನ, ಉತ್ತರಾಧಿಕಾರ ಮತ್ತು ಸಹಜೀವನಕ್ಕೆ ಸಂಬಂಧಿಸಿದಂತೆ ಯಾವುದೇ ಧರ್ಮದವರಿದ್ದರೂ ಒಂದೇ ಕಾನೂನು ಚೌಕಟ್ಟನ್ನು ಅನ್ವಯಿಸುವುದನ್ನು ಕಡ್ಡಾಯಪಡಿಸುತ್ತದೆ. ವಿರೋಧ ಪಕ್ಷಗಳಾದ ಕಾಂಗ್ರೆಸ್ ಮತ್ತು ಆಮ್ ಆದ್ಮಿ ಪಾರ್ಟಿ ಮಸೂದೆಗೆ ವಿರೋಧ ವ್ಯಕ್ತಪಡಿಸಿ, ಇದನ್ನು ಆಯ್ದ ಸಮಿತಿಗೆ ಕಳುಹಿಸಬೇಕು ಎಂದು ಆಗ್ರಹಿಸಿದವು. ಆದರೆ ಇದರ ನಡುವೆಯೂ ಮಸೂದೆಯನ್ನು ಧ್ವನಿಮತದಿಂದ ಅಂಗೀಕರಿಸಲಾಯಿತು. ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್  ಅವರು ಕಲಾಪ ಆರಂಭವಾಗುತ್ತಿದ್ದಂತೆಯೇ ಮಸೂದೆ ಮಂಡಿಸಿದರು. ಮಸೂದೆಯನ್ನು ಅಂತಿಮಪಡಿಸಲು ಮತ್ತು ಯುಸಿಸಿ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಸರ್ಕಾರ ನೇಮಿಸಿದ್ದ ಉನ್ನತ ಮಟ್ಟದ ಸಮಿತಿ ತನ್ನ ಅಂತಿಮ ವರದಿಯನ್ನು ಸಲ್ಲಿಸಿತ್ತು. ಈ ಮಸೂದೆಯ ಅಂಗೀಕಾರದೊಂದಿಗೆ ಗುಜರಾತ್ ಯುಸಿಸಿ ಮಸೂದೆಯನ್ನು ದೇಶದಲ್ಲಿ ಅಂಗೀಕರಿಸಿದ ಎರಡನೇ ರಾಜ್ಯ ಎನಿಸಿದೆ. ಉತ್ತರಾಖಂಡ ಸರ್ಕಾರ 2024ರ ಫೆಬ್ರವರಿಯಲ್ಲಿ ಮಸೂದೆ ಅಂಗೀಕರಿಸುವ ಮೂಲಕ ದೇಶದಲ್ಲೇ ಯುಸಿಸಿ ಜಾರಿಗೆ ತಂದ ಮೊದಲ ರಾಜ್ಯ ಎನಿಸಿಕೊಂಡಿತ್ತು. ಗುಜರಾತ್ ಸಮಾನ ನಾಗರಿಕ ಸಂಹಿತೆ-2026 ಎಂಬ ಪ್ರಸ್ತಾವಿತ ಕಾನೂನನ್ನು ಇಡೀ ರಾಜ್ಯಕ್ಕೆ ಅನ್ವಯಿಸಲಾಗುತ್ತದೆ ಹಾಗೂ ಗುಜರಾತ್ ಭೌಗೋಳಿಕ ಮಿತಿಯಿಂದಾಚೆ ವಾಸಿಸುವ ಗುಜರಾತ್ ಮೂಲದವರಿಗೂ ಅನ್ವಯಿಸಲಾಗುತ್ತದೆ. ಆದರೆ ಈ ಮಸೂದೆ ಪರಿಶಿಷ್ಟ ಪಂಗಡದವರಿಗೆ ಮತ್ತು ಸಂವಿಧಾನಾತ್ಮಕವಾಗಿ ಹಕ್ಕುಗಳು ಸಂರಕ್ಷಿಸಲ್ಪಟ್ಟ ಕೆಲ ಸಂಪ್ರದಾಯಗಳನ್ನು ಹೊಂದಿರುವ ಗುಂಪುಗಳಿಗೆ ಅನ್ವಯಿಸುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ. ರಾಜ್ಯದಲ್ಲಿ ಸಮಾನ ಕಾನೂನು ಚೌಕಟ್ಟು ಸೃಷ್ಟಿಸುವುದು ಮಸೂದೆಯ ಉದ್ದೇಶ ಎಂದು ಹೇಳಲಾಗಿದೆ.

ವಾರ್ತಾ ಭಾರತಿ 25 Mar 2026 7:33 am

Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ

ಬೇಸಿಗೆಯ ಕಡು ಬಿಸಿಲು ಮತ್ತು ಸೆಖೆಯಿಂದ ಹೈರಾಣಾಗಿದ್ದ ಕರ್ನಾಟಕದ ಜನತೆಗೆ ಭಾರತೀಯ ಹವಾಮಾನ ಇಲಾಖೆ ಕೊನೆಗೂ ತಂಪಾದ ಸುದ್ದಿಯೊಂದನ್ನು ನೀಡಿದೆ. ರಾಜ್ಯದ ಹವಾಮಾನದಲ್ಲಿ ಅನಿರೀಕ್ಷಿತ ಬದಲಾವಣೆಯಾಗುತ್ತಿದ್ದು, ಮುಂದಿನ ಐದು ದಿನಗಳ ಕಾಲ ಗುಡುಗು, ಮಿಂಚು ಹಾಗೂ ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆಯನ್ನು ನೀಡಲಾಗಿದೆ. ಈ ದಿಢೀರ್ ಹವಾಮಾನ ಬದಲಾವಣೆಯು ಬೇಸಿಗೆಯ ಬೇಗೆಯಿಂದ ಕಂಗೆಟ್ಟಿದ್ದ ಜನಸಾಮಾನ್ಯರಿಗೆ, ವಿಶೇಷವಾಗಿ ರೈತರಿಗೆ

ಒನ್ ಇ೦ಡಿಯ 25 Mar 2026 6:57 am

ಮೋಡಿ ಮಾಡಿದ ಕಾಂತಾರ ಸಿನಿಮಾ: ಕರಾವಳಿಯಲ್ಲಿ ಹೆಚ್ಚಿದ ದೈವಾರಾಧನೆ, ಯುವಜನರಲ್ಲಿ ಮೂಡಿದ ಭಯ-ಭಕ್ತಿ

ಕರಾವಳಿ ಜಿಲ್ಲೆಗಳಲ್ಲಿ ದೈವಾರಾಧನೆ ಹೆಚ್ಚಳ ಕಂಡಿದೆ. ಯುವಜನರಲ್ಲಿ ಕಾಂತಾರಾ ಸಿನಿಮಾದ ಬಳಿಕ , ಭಕ್ತಿ ಭಾವ ಹೆಚ್ಚಾಗಿದ್ದು, ಹೆಚ್ಚೆಚ್ಚು ನೇಮೋತ್ಸವಗಳು ನಡೆಯುತ್ತಿವೆ.

ವಿಜಯ ಕರ್ನಾಟಕ 25 Mar 2026 6:14 am

ಹೀಟ್‌ವೇವ್‌ ಎಫೆಕ್ಟ್: ಮಂಗಳೂರಲ್ಲಿ ಮೀನು, ಹಾಲಿಗೆ ತಟ್ಟಿದ ಬಿಸಿ! ಕರಾವಳಿಯಲ್ಲಿ ಏರುತ್ತಲೇ ಇದೆ ಉಷ್ಣಾಂಶ

ಕರಾವಳಿ ಜಿಲ್ಲೆಗಳ ತೀವ್ರ ಬಿಸಿ ವಾತಾವರಣ, ಹೀಟ್‌ ವೇವ್ ಪರಿಸ್ಥಿತಿ ಪಶುಗಳ ಮೇಲೆ, ಮೀನುಗಾರಿಕೆ ಮೇಲೆ ಗಂಭೀರ ಪರಣಾಮ ಬಿದ್ದಿದ್ದು, ಆರ್ಥಿಕತೆಗೆ ಪೆಟ್ಟು ಬಿದ್ದಿದೆ. ಬಿಸಿಲಿನಿಂದಾಗಿ ಹಾಲಿನ ಪ್ರಮಾಣ ಇಳಿಕೆಯಾಗಿದೆ.

ವಿಜಯ ಕರ್ನಾಟಕ 25 Mar 2026 6:09 am

2026 ರ ಮಳೆಗಾಲದಲ್ಲಿ 207 ತಾಲೂಕಿನಲ್ಲಿ ಮಳೆ ಕೊರತೆ ಸಾಧ್ಯತೆ! ಕರಾವಳಿಯಲ್ಲಿ ವಾಡಿಕೆಗಿಂತ ತಾಪಮಾನ ಹೆಚ್ಚಳ

ಕಳೆದ ವರ್ಷ ಉತ್ತಮ ಮಳೆಯಿಂದ ರೈತರು ಖುಷಿಯಾಗಿದ್ದರು. ಆದ್ರೆ ಈ ಬಾರಿ ಹವಾಮಾನ ಇಲಾಖೆ ಬೇಸರದ ವರದಿ ನೀಡಿದೆ. ಈ ವರ್ಷ 207 ಕ್ಕೂ ಹೆಚ್ಚು ತಾಲೂಕು ಬರಪೀಡಿತ ರೀತಿಯಲ್ಲಿ ನೀರಿನ ಸಮಸ್ಯೆ ಎದುರಾಗಬಹುದು ಎಂದಿದ್ದಾರೆ.

ವಿಜಯ ಕರ್ನಾಟಕ 25 Mar 2026 5:25 am

ಕಾರು ಡ್ರಿಫ್ಟಿಂಗ್ ಪ್ರಕರಣ: ರಿಕ್ಕಿ ರೈಗೆ ಜಾಮೀನು

ಬೆಂಗಳೂರು : ಸಾರ್ವಜನಿಕ ರಸ್ತೆಯಲ್ಲಿ ಕಾರು ಡ್ರಿಫ್ಟಿಂಗ್ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಬೆಂಗಳೂರಿನ 5ನೇ ಸಂಚಾರಿ ದಂಡ ನ್ಯಾಯಾಲಯ ಸೋಮವಾರ(ಮಾ.23) ಜಾಮೀನು ಮಂಜೂರು ಮಾಡಿದೆ. ಸೋಮವಾರದಂದು ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯವು ಆರೋಪಿ ರಿಕ್ಕಿ ರೈಗೆ ತನಿಖೆಗೆ ಸಂಪೂರ್ಣವಾಗಿ ಸಹಕರಿಸುವಂತೆ ಸೂಚಿಸಿ ಒಂದು ಲಕ್ಷ ರೂಪಾಯಿ ಬಾಂಡ್ ಹಾಗೂ ಒಬ್ಬರ ಶ್ಯೂರಿಟಿ ಪಡೆದು ಜಾಮೀನು ನೀಡಿದೆ. ಸೋಮವಾರ ಜಾಮೀನು ಪಡೆದುಕೊಂಡ ಬಳಿದ ಆರೋಪಿ ರಿಕ್ಕಿ ರೈ, ಕಬ್ಬನ್ ಪಾರ್ಕ್ ಸಂಚಾರ ಠಾಣೆ ಪೊಲೀಸರ ಮುಂದೆ ವಿಚಾರಣೆಗೆ ಹಾಜರಾದರು. ಪ್ರಕರಣದ ವಿವರ: ನಗರದ ಅನಿಲ್ ಕುಂಬ್ಳೆ ಸರ್ಕಲ್ ಬಳಿ ಅತಿವೇಗ ಮತ್ತು ಅಜಾಗರೂಕತೆಯಿಂದ ವಾಹನ ಚಲಾಯಿಸಿ ಡ್ರಿಫ್ಟಿಂಗ್ ಮಾಡಿರುವ ಆರೋಪ ರಿಕ್ಕಿ ರೈ ಮೇಲಿದೆ. ಈ ಸಂಬಂಧ ರೈ ವಿರುದ್ಧ ಭಾರತೀಯ ನ್ಯಾಯ ಸಂಹಿತೆ ಮತ್ತು ಮೋಟಾರ್ ವಾಹನ ಕಾಯ್ದೆ ಅಡಿಯಲ್ಲಿ ಕಬ್ಬನ್ ಪಾರ್ಕ್ ಸಂಚಾರ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿತ್ತು.  

ವಾರ್ತಾ ಭಾರತಿ 25 Mar 2026 12:25 am

ಆರ್ಥಿಕ ಇಲಾಖೆ ಅನುಮತಿ ನೀಡದ ಕಾರಣ ‘ಗೃಹಲಕ್ಷ್ಮೀ ಹಣ ಪಾವತಿಸಿಲ್ಲ’: ಲಕ್ಷ್ಮೀ ಹೆಬ್ಬಾಳ್ಕರ್‌

ಬೆಂಗಳೂರು : ಗೃಹಲಕ್ಷ್ಮೀ ಯೋಜನೆಯಡಿ ಮಹಿಳೆಯರಿಗೆ ಹಣವನ್ನು ಪಾವತಿ ಮಾಡಲು ಹಣಕಾಸು ಇಲಾಖೆ ಅನುಮತಿ ನೀಡುತ್ತಿಲ್ಲ. ಹೀಗಾಗಿ ಹಣ ಪಾವತಿ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಸ್ಪಷ್ಟಪಡಿಸಿದ್ದಾರೆ. ಮಂಗಳವಾರ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ ‘ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ -2026 ಹಾಗೂ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ ಪ್ರದಾನ’ ಸಮಾರಂಭದಲ್ಲಿ ಮಾತನಾಡಿದ ಅವರು, ಗೃಹಲಕ್ಷ್ಮೀ ಯೋಜನೆ ಬಗ್ಗೆ ಬಿಜೆಪಿಗರು ಸುಖಾಸುಮ್ಮನೆ ಆರೋಪ ಮಾಡುತ್ತಿದ್ದಾರೆ. ಹಿಂದಿನ ವರ್ಷದ ಫೆಬ್ರವರಿ, ಮಾರ್ಚ್ ತಿಂಗಳ ಹಣ ಹಾಕಿಲ್ಲ ಎಂದು ಆರೋಪ ಮಾಡುತ್ತಿದ್ದಾರೆ. ಇದಕ್ಕೆ ಹಣಕಾಸು ಇಲಾಖೆ ಅನುಮತಿ ಕೊಟ್ಟಿಲ್ಲ, ಹೀಗಾಗಿ ಹಣ ಹಾಕಲು ಆಗಿಲ್ಲ ಎಂದರು. ನಾನು 5 ಸಾವಿರ ಕೋಟಿ ರೂ. ಹಗರಣ ಮಾಡಿದ್ದರೆ ಬಿಜೆಪಿಯವರು ನಮ್ಮ ಮನೆ ಬಾಗಿಲಿಗೆ ಬಂದು ನಿಲ್ಲುತ್ತಿದ್ದರು. ಮಾತಿನ ಚಪಲಕ್ಕೆ ಗೃಹಲಕ್ಷ್ಮೀ ಯೋಜನೆ ಬಗ್ಗೆ ಟೀಕೆ ಮಾಡುತ್ತಾರೆ. ನಾನು ಜೀವನದಲ್ಲಿ ಶಿಸ್ತನ್ನು ಅಳವಡಿಸಿಕೊಂಡು ಸಾಗುತ್ತಿದ್ದೇನೆ. ನಾನು ಸಚಿವೆಯಾದ ಬಳಿಕ ಇಲಾಖೆಯಲ್ಲಿ ಸಾಕಷ್ಟು ಸುಧಾರಣೆ ತಂದಿದ್ದೇನೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು. ಇಂದಿನ ಸಮಾಜದಲ್ಲಿ ಪುರುಷರ ವಿಚಾರಧಾರೆ ಬದಲಾಗಿದ್ದು, ಇಂದು ಪುರುಷರು ಮಹಿಳೆಯರಿಗೆ ಪ್ರೋ ತ್ಸಾಹ ನೀಡುತ್ತಿದ್ದಾರೆ. ಈಗ ಸಾಧನೆ ಮಾಡಿದ ಪ್ರತಿಯೊಬ್ಬ ಮಹಿಳೆಯ ಹಿಂದೆ ಪುರುಷರು ನಿಂತಿರುತ್ತಾರೆ. ಹೆಣ್ಣು ಸ್ವಾಭಿಮಾನದ ಪ್ರತೀಕ, ಹೆಣ್ಣು ಧೈರ್ಯದಿಂದ ಇದ್ದರೆ ಇಡೀ ಮನೆಗೆ ಬೆಳಕಿದ್ದಂತೆ. ಮನೆಯಲ್ಲಿರುವ ಮಕ್ಕಳು, ಗಂಡ, ಅತ್ತೆ-ಮಾವ ಎಲ್ಲರೂ ಧೈರ್ಯದಿಂದ ಇರುತ್ತಾರೆ ಎಂದು ಅವರು ತಿಳಿಸಿದರು. ಈ ಮೊದಲು ವಿಶ್ವಕಪ್ ಕ್ರಿಕೆಟ್‍ನಲ್ಲಿ ಭಾರತದ ಪುರುಷರಷ್ಟೇ ಗೆಲ್ಲುತ್ತಿದ್ದರು, ಇಂದು ಮಹಿಳೆಯರು ಗೆದ್ದಿದ್ದಾರೆ. ಅಂಧರ ಮಹಿಳಾ ವಿಶ್ವಕಪ್‍ನಲ್ಲಿ ಭಾರತ ತಂಡ ಚಾಂಪಿಯನ್ ಆಗಿತ್ತು. ಕರ್ನಾಟಕದ ಮೂವರು ಆಟಗಾರ್ತಿಯರಿಗೆ ತಲಾ 10 ಲಕ್ಷ್ಮ ರೂಪಾಯಿ ಬಹುಮಾನ ಮೊತ್ತವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ನೀಡಿದ್ದಾರೆ. ಮೊದಲು ಮಹಿಳೆಯರ ಕ್ರಿಕೆಟ್ ಪಂದ್ಯಗಳನ್ನು ಯಾರೂ ನೋಡುತ್ತಿರಲಿಲ್ಲ, ಮಹಿಳಾ ಏಕದಿನ ವಿಶ್ವಕಪ್ ಫೈನಲ್ ಪಂದ್ಯವನ್ನು 55 ಕೋಟಿ ಜನ ವೀಕ್ಷಣೆ ಮಾಡಿದ್ದಾರೆ ಎಂದು ಸಚಿವರು ತಿಳಿಸಿದರು. ಕಾರ್ಯಕ್ರಮದಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ, ಅತ್ಯುತ್ತಮ ಸ್ತ್ರೀಶಕ್ತಿ ಗುಂಪುಗಳಿಗೆ ರಾಜ್ಯಮಟ್ಟದ ಪ್ರಶಸ್ತಿಗಳನ್ನು ಪ್ರಧಾನ ಮಾಡಲಾಯಿತು. ಇದೇ ವೇಳೆ ಸ್ತ್ರೀ ಶಕ್ತಿ ಗುಂಪುಗಳ ಯಶಸ್ವಿ ಕಥೆಗಳ ಅಂತರಾಳ-21 ಸಂಚಿಕೆಯನ್ನು ಬಿಡುಗಡೆ ಮಾಡಲಾಯಿತು. ಈ ವೇಳೆ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಪದ್ಮಾವತಿ, ಧಾರವಾಡದ ಬಾಲ ವಿಕಾಸ ಅಕಾಡೆಮಿ ಅಧ್ಯಕ್ಷ ಅಡಿವೇಶ ಇಟಗಿ, ಇಲಾಖೆ ಕಾರ್ಯದರ್ಶಿ ಡಾ.ಶಾಮ್ಲಾ ಇಕ್ಬಾಲ್, ನಿರ್ದೇಶಕ ಮಹೇಶ್ ಬಾಬು, ವಿಶೇಷ ಕರ್ತವ್ಯಾಧಿಕಾರಿ ನಿಶ್ಚಲ್ ಬಿ.ಎಚ್., ಜಂಟಿ ನಿರ್ದೇಶಕರು, ಉಪ ನಿರ್ದೇಶಕರು ಉಪಸ್ಥಿತರಿದ್ದರು.  

ವಾರ್ತಾ ಭಾರತಿ 25 Mar 2026 12:22 am

ಡಿಜಿಟಲ್ ಸ್ಪ್ರಿಂಗ್ಸ್ ಸೆನ್ಸಸ್ ಯಶಸ್ವಿ ಅನುಷ್ಠಾನ: ಕರ್ನಾಟಕಕ್ಕೆ ಕೇಂದ್ರದ ಪ್ರಶಂಸೆ; ರಾಜ್ಯಾದ್ಯಂತ 274 ಜಲಮೂಲಗಳ ಪತ್ತೆ

ಬೆಂಗಳೂರು, ಮಾ.24: ರಾಜ್ಯದ ಮೊಟ್ಟಮೊದಲ ‘ಸ್ಪ್ರಿಂಗ್ ಸೆನ್ಸಸ್'(ಚಿಲುಮೆಗಳ ಗಣತಿ) ಕಾರ್ಯಾಚರಣೆಯನ್ನು ನಿಗದಿತ ಕಾಲಮಿತಿಯೊಳಗೆ ಯಶಸ್ವಿಯಾಗಿ ಪೂರ್ಣಗೊಳಿಸಿದ ಕರ್ನಾಟಕದ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯನ್ನು ಕೇಂದ್ರ ಜಲಶಕ್ತಿ ಸಚಿವಾಲಯವು ಶ್ಲಾಘಿಸಿದೆ. ರಾಜ್ಯ ಸರಕಾರದ ಈ ಸಾಧನೆಯನ್ನು ಗುರುತಿಸಿ ಕೇಂದ್ರ ಸರಕಾರ ನೀಡಿದ ಪ್ರಶಂಸನಾ ಪತ್ರವನ್ನು ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ಬಿ.ಕೆ. ಪವಿತ್ರಾ ಅಧಿಕೃತವಾಗಿ ಸ್ವೀಕರಿಸಿದರು. ಕೇಂದ್ರ ಜಲಶಕ್ತಿ ಸಚಿವಾಲಯದ ತಾಂತ್ರಿಕ ಮಾರ್ಗದರ್ಶನದಲ್ಲಿ ನೀರಾವರಿ ಗಣತಿ ಯೋಜನೆಯಡಿ ಈ ಕಾರ್ಯಾಚರಣೆಯನ್ನು ನಡೆಸಲಾಗಿದ್ದು, ಅಂತರ್ಜಲ ನಿರ್ದೇಶನಾಲಯವು ನೋಡಲ್ ಏಜೆನ್ಸಿಯಾಗಿ ಕಾರ್ಯನಿರ್ವಹಿಸಿದೆ. ದತ್ತಾಂಶ ಆಧಾರಿತ ಒಳನೋಟಗಳು: ಅಂತಿಮಗೊಂಡ ಡಿಜಿಟಲ್ ಗಣತಿ ವರದಿಯ ಪ್ರಮುಖ ಅಂಶಗಳನ್ನು ವಿವರಿಸಿದ ಬಿ.ಕೆ.ಪವಿತ್ರಾ, ‘ಮಳೆಗಾಲದ ಭೌಗೋಳಿಕ ಸವಾಲುಗಳ ನಡುವೆಯೂ, ನಮ್ಮ ಇಲಾಖೆಯ ಸಿಬ್ಬಂದಿ ಈ ಡಿಜಿಟಲ್ ವ್ಯವಸ್ಥೆಯನ್ನು ಬಳಸಿಕೊಂಡು ಕರ್ನಾಟಕದ 31 ಜಿಲ್ಲೆಗಳಾದ್ಯಂತ ಒಟ್ಟು 274 ಚಿಲುಮೆಗಳನ್ನು ಯಶಸ್ವಿಯಾಗಿ ಗುರುತಿಸಿ ದಾಖಲಿಸಿದ್ದಾರೆ ಎಂದು ತಿಳಿಸಿದರು. ನಮ್ಮ ದತ್ತಾಂಶದ ಪ್ರಕಾರ, ಬೆಳಗಾವಿ ಜಿಲ್ಲೆಯಲ್ಲಿ ಅತಿಹೆಚ್ಚು ಅಂದರೆ 56 ಚಿಲುಮೆಗಳು ಪತ್ತೆಯಾಗಿವೆ. ಈ ಜೀವನಾಡಿ ಜಲಮೂಲಗಳ ಪೈಕಿ ಬಹುಪಾಲು ಸಕ್ರಿಯವಾಗಿದ್ದು, 144 ಚಿಲುಮೆಗಳು ವರ್ಷಪೂರ್ತಿ ಹರಿಯುವ ಹಾಗೂ 114 ಚಿಲುಮೆಗಳು ಋತುಮಾನಕ್ಕೆ ತಕ್ಕಂತೆ ಹರಿಯುವ ವರ್ಗಕ್ಕೆ ಸೇರಿವೆ. ಆದರೆ, ಕಾಲಕ್ರಮೇಣ 16 ಚಿಲುಮೆಗಳು ಬತ್ತಿಹೋಗಿವೆ ಎಂದು ಅವರು ವಿವರಿಸಿದರು. ಸಮಗ್ರ ಗಣತಿ ವರದಿಯು ಈ ಜಲಮೂಲಗಳ ಸ್ವರೂಪ ಮತ್ತು ಸ್ಥಳದ ವಿವರವಾದ ಮಾಹಿತಿಯನ್ನು ಒದಗಿಸುತ್ತದೆ. ಗಣತಿಯ ಪ್ರಕಾರ, ನಗರ ಪ್ರದೇಶಗಳಲ್ಲಿ ಕೇವಲ 18 ಚಿಲುಮೆಗಳಿದ್ದರೆ, ಗ್ರಾಮೀಣ ಭಾಗಗಳಲ್ಲಿ 256 ಚಿಲುಮೆಗಳಿವೆ. ಭೌಗೋಳಿಕ ವಿಸರ್ಜನೆಯ ಆಧಾರದ ಮೇಲೆ, 117 ಮುಕ್ತವಾಗಿ ಹರಿಯುವ ಮತ್ತು 157 ಸೀಪ್ ಚಿಲುಮೆಗಳನ್ನು ದಾಖಲಿಸಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬೇಂದ್ರು ತೀರ್ಥದಲ್ಲಿರುವ ಅಪರೂಪದ ಬಿಸಿನೀರಿನ ಬುಗ್ಗೆಯಂತಹ ಷ್ಟ ಜಲವೈಜ್ಞಾನಿಕ ರಚನೆಗಳನ್ನೂ ನಾವು ದಾಖಲಿಸಿದ್ದೇವೆ ಎಂದು ಅವರು ಸ್ಪಷ್ಟಪಡಿಸಿದರು. ಪ್ರಮುಖ ನದಿಗಳ ಉಗಮಸ್ಥಾನ: ಪ್ರಮುಖ ನದಿ ವ್ಯವಸ್ಥೆಗಳ ಜೀವನಾಡಿಯಾಗಿರುವ ಕರ್ನಾಟಕದ ಚಿಲುಮೆಗಳ ಪರಿಸರ ಮತ್ತು ಸಾಂಸ್ಕೃ ತಿಕ ಮಹತ್ವವನ್ನು ಈ ಗಣತಿಯು ಎತ್ತಿತೋರಿಸುತ್ತದೆ. ಪ್ರಮುಖ ನದಿಗಳ ಉಗಮಸ್ಥಾನಗಳನ್ನು ಈ ವರದಿಯಲ್ಲಿ ಮ್ಯಾಪ್ ಮಾಡಲಾಗಿದ್ದು, ಕೊಡಗು ಜಿಲ್ಲೆಯ ತಲಕಾವೇರಿಯಲ್ಲಿ ಕಾವೇರಿ ನದಿ, ಚಿಕ್ಕಮಗಳೂರಿನ ಜಾವಳಿಯಲ್ಲಿ ಹೇಮಾವತಿ ನದಿ ಹಾಗೂ ಶಿವಮೊಗ್ಗದ ಅಂಬುತೀರ್ಥದಲ್ಲಿ ಶರಾವತಿ ನದಿ ಉಗಮವಾಗುವ ಸ್ಥಳಗಳನ್ನು ಗುರುತಿಸಲಾಗಿದೆ. ಈ ಡಿಜಿಟಲೀಕೃತ ದತ್ತಾಂಶವು ಭವಿಷ್ಯದಲ್ಲಿ ಕರ್ನಾಟಕದಾದ್ಯಂತ ಚಿಲುಮೆಗಳ ಸಂರಕ್ಷಣೆ, ಪುನರುಜ್ಜೀವನ ಯೋಜನೆಗಳು, ಅಂತರ್ಜಲ ನಿರ್ವಹಣೆ ಹಾಗೂ ಸಮಗ್ರ ಜಲ ಸಂಪನ್ಮೂಲ ಯೋಜನೆಗಳನ್ನು ರೂಪಿಸಲು ಭದ್ರ ಬುನಾದಿಯಾಗಿ ಕಾರ್ಯನಿರ್ವಹಿಸಲಿದೆ.  

ವಾರ್ತಾ ಭಾರತಿ 25 Mar 2026 12:14 am

ಬೆಳಗಾವಿಯಲ್ಲಿ 1,400ಕ್ಕೂ ಹೆಚ್ಚು ಶಂಕಿತ ಮ್ಯೂಲ್ ಖಾತೆಗಳು ಪತ್ತೆ

ಬೆಳಗಾವಿ : ಸೈಬರ್ ಅಪರಾಧ ಪ್ರಕರಣಗಳ ಹಿನ್ನೆಲೆ ಜಿಲ್ಲೆಯಲ್ಲಿ 1,400ಕ್ಕೂ ಹೆಚ್ಚು ಶಂಕಿತ ‘ಮ್ಯೂಲ್’ ಬ್ಯಾಂಕ್ ಖಾತೆಗಳನ್ನು ಪತ್ತೆಹಚ್ಚಲಾಗಿದೆ ಎಂದು ಎಸ್ಪಿಕೆ.ರಾಮರಾಜನ್ ತಿಳಿಸಿ ದ್ದಾರೆ. ಸುದ್ದಿಗೋಷ್ಠಿ ಯಲ್ಲಿ ಮಾತನಾಡಿದ ಅವರು, ನಿಪ್ಪಾಣಿ, ಚಿಕ್ಕೋಡಿ ಮತ್ತು ರಾಮದುರ್ಗ ಪ್ರದೇಶ ಗಳಲ್ಲಿ ಮೂರು ಪ್ರತ್ಯೇಕ ಪ್ರಕರಣಗಳು ದಾಖಲಾಗಿದ್ದು, ಈಗಾಗಲೇ ಎಂಟು ಮಂದಿಯನ್ನು ವಶಕ್ಕೆ ಪಡೆಯಲಾಗಿದೆ ಎಂದರು. ನಿಪ್ಪಾಣಿ ಪ್ರಕರಣದಲ್ಲಿ ಶುಭಂ ಲಕ್ಕಣ್ಣವರ್, ಅಮಿತ್ ಶಿಂಧೆ, ರಾಹುಲ್ ಐ. ಹಂಚಿನಾಳ್, ಅಕ್ಷಯ್ ಪಾಸರೆ ಮತ್ತು ಗಜಾನನ್ ಧರ್ಮೋಡೆ ಎಂಬ ಐವರು ತಮ್ಮ ಹೆಸರಿನಲ್ಲಿ ಬ್ಯಾಂಕ್ ಖಾತೆಗಳನ್ನು ತೆರಳಿ ಸೈಬರ್ ವಂಚಕರಿಗೆ ಒದಗಿಸಿರುವುದು ತನಿಖೆಯಲ್ಲಿ ಬಹಿರಂಗವಾಗಿದೆ ಎಂದರು. 2023ರಿಂದ ಈವರೆಗೆ 4,744 ಮೊಬೈಲ್ ಕಳವು ಪ್ರಕರಣಗಳು ದಾಖಲಾಗಿದ್ದು, ಅವುಗಳಲ್ಲಿ ಸುಮಾರು 1,000 ಮೊಬೈಲ್‌ಗಳನ್ನು ವಾಪಸ್ ಪಡೆಯಲಾಗಿದೆ. ಉಳಿದ 3,744 ಫೋನ್‌ಗಳ ಪತ್ತೆಗೆ ಕ್ರಮ ಮುಂದುವರಿದಿದೆ. -ಕೆ.ರಾಮರಾಜನ್, ಎಸ್ಪಿ  

ವಾರ್ತಾ ಭಾರತಿ 25 Mar 2026 12:08 am

ಬ್ಲೂಟೂತ್ ಇಯರ್ ಫೋನ್ ಬಳಕೆಯಿಂದ ವಿಕಿರಣದ ಅಪಾಯವಿದೆಯೇ? ಮೆದುಳು ತಜ್ಞರು ಹೇಳುವುದೇನು?

ಬ್ಲೂಟೂತ್ ಇಯರ್ ಫೋನ್ ಬಳಕೆಯಿಂದ ವಿಕಿರಣದ ಅಪಾಯವಿದೆ ಎನ್ನುವುದು ವೈಜ್ಞಾನಿಕ ಸತ್ಯವೆ ಅಥವಾ ಮೌಢ್ಯವೆ? ಬ್ಲೂಟೂತ್ ಇಯರ್ ಫೋನ್ ಬಳಕೆ ವಿರುದ್ಧ ಸಾಮಾಜಿಕ ಜಾಗೃತಿ ಹೆಚ್ಚಾಗುತ್ತಿದೆ. ದೈನಂದಿನ ಬಳಕೆಯ ಸಾಧನಗಳಾಗಿರುವ ಬ್ಲೂಟೂತ್ ಇಯರ್ ಫೋನ್ ವಿಕಿರಣ ಹೊರಸೂಸುವ ಬಗ್ಗೆ ಕಳವಳ ಹೆಚ್ಚಾಗುತ್ತಿದೆ. ನಿಯಮಿತ ಬಳಕೆಯಿಂದ ಮೆದುಳಿನ ಗೆಡ್ಡೆಗಳಿಗೆ ಅಪಾಯ ಹೆಚ್ಚಾಗುತ್ತದೆ ಎನ್ನುವ ಆತಂಕ ಬೆಳೆದಿದೆ. ಆದರೆ ಈ ಆತಂಕ ವೈಜ್ಞಾನಿಕವಾಗಿ ಸಾಬೀತಾಗಿದೆಯೇ ಅಥವಾ ಜನರ ಮೌಢ್ಯವೆ? View this post on Instagram A post shared by Dr. Rupa Juthani (@braintumorsurgeon) ಮೆದುಳಿನ ತಜ್ಞರಾಗಿರುವ ಅಮೆರಿಕ ಮೂಲದ ವೈದ್ಯೆ ಡಾ. ರೂಪಾ ಜುಥಾನಿ ಮಾರ್ಚ್ 19ರಂದು ಮಾಡಿರುವ ಇನ್ಸ್ಟಾಗ್ರಾಂ ಪೋಸ್ಟ್ನಲ್ಲಿ ಬ್ಲೂಟೂತ್ ಇಯರ್ ಫೋನ್ಗಳ ಬಗ್ಗೆ ಆತಂಕ ಪಡಬೇಕಾಗಿಲ್ಲ ಎಂದು ಹೇಳಿದ್ದಾರೆ. ರೂಪಾ ಜುಥಾನಿ ಅವರು ಪಿಟ್ಯುಟರಿ ಮತ್ತು ಸ್ಕಲ್ ಬೇಸ್ ಟ್ಯೂಮರ್ ಸರ್ಜನ್ ಮಾತ್ರವಲ್ಲದೆ, ಗ್ಯಾಮಾ ನೈಫ್ ರೇಡಿಯೋ ಸರ್ಜರಿಯ ವಿಶೇಷಜ್ಞೆಯೂ ಆಗಿದ್ದಾರೆ. “ಶ್ರವಣ ನರ (vestibular schwannomas), ಪಿಟ್ಯುಟರಿ ಗೆಡ್ಡೆಗಳು ಮತ್ತು ಮೆಗುಳಿನ ಕ್ಯಾನ್ಸರ್ ರೋಗದಂತಹ ನರಗಳಲ್ಲಿ ಮತ್ತು ಸುತ್ತಲೂ ಬೆಳೆಯುವ ಗೆಡ್ಡೆಗಳಲ್ಲಿ ಪರಿಣತಿ ಹೊಂದಿರುವ ಮೆದುಳಿನ ಗೆಡ್ಡೆಗೆ ಸಂಬಂಧಿಸಿದ ಸರ್ಜನ್ ಆಗಿರುವ ನಾನು ಬ್ಲೂಟೂತ್ ಹೆಡ್ಫೋನ್ಗಳ ವಿಷಯಕ್ಕೆ ಬಂದಾಗ ವಿಜ್ಞಾನವನ್ನು ಅನುಸರಿಸುತ್ತೇನೆ. ಅದಕ್ಕೆ ಬೆಂಬಲಿಸುವ ಕೆಲವು ಸತ್ಯಾಂಶಗಳು ಮತ್ತು ಅಪ್ಡೇಟ್ ಆಗಿರುವ ಡಾಟಾ ಇಲ್ಲಿದೆ” ಎಂದು ತಮ್ಮ ಪೋಸ್ಟ್ ನಲ್ಲಿ ಅವರು ಬರೆದುಕೊಂಡಿದ್ದಾರೆ. ಜುಥಾನಿ ಅವರ ಪ್ರಕಾರ ಬ್ಲೂಟೂತ್ ಹೆಡ್ಫೋನ್ಗಳು ಮೆದುಳಿಗೆ ಅಪಾಯ ಅಥವಾ ಇತರ ಗೆಡ್ಡೆಗಳ ಅಪಾಯ ತರುತ್ತದೆ ಎನ್ನುವುದಕ್ಕೆ ಯಾವುದೇ ಸಾಕ್ಷ್ಯವಿಲ್ಲ. ಇತ್ತೀಚೆಗಿನ ಸಂಶೋಧನೆಗಳಲ್ಲಿ ಅಂತಹ ಯಾವುದೇ ವಿವರಗಳು ಬಹಿರಂಗವಾಗಿಲ್ಲ. “ಬ್ಲೂಟೂತ್ ಮೆದುಳಿಗೆ ಅಪಾಯ ಅಥವಾ ಇತರ ಟ್ಯೂಮರ್ಗಳಿಗೆ ಕಾರಣವಾಗುತ್ತದೆ ಎನ್ನುವ ಯಾವುದೇ ಸಾಕ್ಷ್ಯಗಳಿಲ್ಲ. 2022ರ ಮೆದುಳಿನ ಅಧ್ಯಯನವು 14 ವರ್ಷಗಳಿಂದ ಬ್ಲೂಟೂತ್ ಬಳಸುತ್ತಿರುವ ಒಂದು ದಶಲಕ್ಷ ಮಹಿಳೆಯರನ್ನು ಅಧ್ಯಯನ ಮಾಡಿದರೂ ಯಾವುದೇ ಅಪಾಯ ಕಂಡುಬಂದಿಲ್ಲ. ಬ್ಲೂಟೂತ್ ವಿಕಿರಣ ಇತರ ವಿಕಿರಣಗಳಂತಲ್ಲ” ಎಂದು ಅವರು ಹೇಳಿದ್ದಾರೆ. ಮುಂದುವರಿದು ರೂಪಾ ಜುಥಾನಿ, “ಬ್ಲೂಟೂತ್ ಹೆಡ್ಫೋನ್ಗಳು ನಾನ್-ಅಯನೈಸಿಂಗ್ ವಿಕಿರಣ ಹೊರಸೂಸುತ್ತವೆ. ಅವು ಗೆಡ್ಡೆಗೆ ಕಾರಣವಾಗುವ ಅಯನೈಸಿಂಗ್ ವಿಕಿರಣದಂತೆ ಡಿಎನ್ಎಗೆ ಹಾನಿ ಉಂಟು ಮಾಡುವುದಿಲ್ಲ. ಬದಲಾಗಿ ಫೋನ್ ಅನ್ನು ಕಿವಿಗೆ ಸಮೀಪದಲ್ಲಿ ಇಟ್ಟು ಮಾತನಾಡುವುದು ಹೆಚ್ಚು ಅಪಾಯಕಾರಿ” ಎಂದು ಹೇಳಿದ್ದಾರೆ. “ಫೋನ್ ಅನ್ನು ನೇರವಾಗಿ ಕಿವಿಯ ಬಳಿ ಇಡುವುದರಿಂದ ಇಯರ್ ಬಡ್ ಬಳಸುವುದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ವಿಕಿರಣ ಹೊರಸೂಸುತ್ತದೆ. ಫೋನ್ ಚಾರ್ಜ್ ಆಗುವಾಗ ಅಥವಾ ಕರೆ ಸಂಪರ್ಕದ ಸಮಯದಲ್ಲಿ ಹೆಚ್ಚು ವಿಕಿರಣ ಹೊರಸೂಸುತ್ತಿರುತ್ತದೆ. ಹೀಗಾಗಿ ಚಾರ್ಜ್ ಮಾಡುವಾಗ ಫೋನ್ನಲ್ಲಿ ಮಾತನಾಡದೆ ದೂರವಿರಿಸಿ” ಎಂದು ಅವರು ಸಲಹೆ ನೀಡಿದ್ದಾರೆ. ಸುರಕ್ಷಿತವಾಗಿ ಫೋನ್ ಬಳಕೆ ಹೇಗೆ? ಸಾಧ್ಯವಾದಷ್ಟು ಸಮಯ ಫೋನ್ ಅನ್ನು ಸ್ಪೀಕರ್ನಲ್ಲಿಟ್ಟು ಮಾತನಾಡುವುದು ಉತ್ತಮ ಅಭ್ಯಾಸ. ಫೋನ್ ಅನ್ನು ನೇರವಾಗಿ ಕಿವಿಯ ಬಳಿ ಇರಿಸುವುದಕ್ಕಿಂತ ಹೆಚ್ಚಾಗಿ ಹೆಡ್ ಫೋನ್ ಬಳಕೆ ಉತ್ತಮ. ಅಧ್ಯಯನಗಳು ತೋರಿಸಿರುವಂತೆ ಫೋನ್ ಅನ್ನು ಕಿವಿಯ ಬಳಿ ಹಿಡಿದು ಮಾತನಾಡುವುದರಿಂದ ಶ್ರವಣ ನರದಲ್ಲಿ ಬದಲಾವಣೆ ಕಂಡುಬರುತ್ತದೆ. ಆದರೆ ಹೆಡ್ಫೋನ್ಗಳಿಂದ ಅಂತಹ ಬದಲಾವಣೆ ಕಾಣುವುದಿಲ್ಲ. ಆದರೆ ಇಯರ್ಬಡ್ ಸೇರಿದಂತೆ ಎಲ್ಲಾ ತಂತ್ರಜ್ಞಾನ ಬಳಕೆಯಲ್ಲಿ ಇಲ್ಲದಾಗ ಕಳಚಿ ಸುರಕ್ಷಿತವಾಗಿ ಇಡಬೇಕಾಗುತ್ತದೆ ಎಂದು ಅವರು ಸೂಚಿಸಿದ್ದಾರೆ. ಸೂಚನೆ: ಈ ಲೇಖನವನ್ನು ಸಾಮಾಜಿಕ ಜಾಲತಾಣದಲ್ಲಿರುವ ಮಾಹಿತಿಯನ್ನು ಆಧರಿಸಿ ನೀಡಲಾಗಿದೆ. ವೈಜ್ಞಾನಿಕವಾಗಿ ನಿಖರವಾದ ಸಲಹೆಗಳಿಗೆ ನಿಮ್ಮ ವಿಶ್ವಾಸಾರ್ಹ ವೈದ್ಯರನ್ನು ಸಂಪರ್ಕಿಸಿ.

ವಾರ್ತಾ ಭಾರತಿ 24 Mar 2026 11:54 pm

ಸರಕಾರಿ ಆಸ್ಪತ್ರೆಗಳಲ್ಲಿ 3 ವರ್ಷ ಕಡ್ಡಾಯ ಸೇವೆ: ಪಿಜಿ ಮೆಡಿಕಲ್ ವಿದ್ಯಾರ್ಥಿಗಳಿಗೆ ಹೊಸ ಆದೇಶ

ಬೆಂಗಳೂರು : ರಾಜ್ಯದಲ್ಲಿರುವ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕಾಲೇಜುಗಳಲ್ಲಿ ಸರಕಾರದ ಕೋಟಾದಲ್ಲಿ ಪ್ರವೇಶ ಪಡೆದ ಎಲ್ಲ ಸ್ನಾತಕೋತ್ತರ ವೈದ್ಯಕೀಯ ಪದವಿ (ಪಿಜಿ ಮೆಡಿಕಲ್) ಮತ್ತು ಡಿಪ್ಲೊಮಾ ಅಭ್ಯರ್ಥಿಗಳು ಸರಕಾರಿ ಆಸ್ಪತ್ರೆಗಳಲ್ಲಿ ಕಡ್ಡಾಯವಾಗಿ 3 ವರ್ಷ ಗುತ್ತಿಗೆ ಆಧಾರದಲ್ಲಿ ಸೇವೆಯನ್ನು ಸಲ್ಲಿಸಬೇಕು ಎಂದು ರಾಜ್ಯ ಸರಕಾರವು ಆದೇಶ ಹೊರಡಿಸಿದೆ. ಈ ಸೇವೆಗೆ ಇತ್ತೀಚಿನ ಬ್ಯಾಚ್‍ನ ಅರ್ಹ ಪಿ.ಜಿ. ಅಭ್ಯರ್ಥಿಗಳನ್ನು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ತಯಾರಿಸಿದ ಮೆರಿಟ್ ಆಧಾರದಲ್ಲಿ ಸಮಾಲೋಚನೆಯ ಮೂಲಕ ಮಂಜೂರಾದ ಖಾಲಿ ಹುದ್ದೆಗಳಿಗೆ ನೇಮಿಸಲಾಗುತ್ತದೆ. ಸೇವೆ ಸಲ್ಲಿಸಲು ಒಪ್ಪಿಗೆ ಸೂಚಿಸದ ಸ್ನಾತಕೋತ್ತರ ವೈದ್ಯಕೀಯ ಪದವಿ ವಿದ್ಯಾರ್ಥಿಗಳಿಂದ 50 ಲಕ್ಷ ರೂ.ಗಳನ್ನು, ಸ್ನಾತಕೋತ್ತರ ವೈದ್ಯಕೀಯ ಡಿಪ್ಲೊ ಮಾ 25 ಲಕ್ಷ ರೂ.ಗಳನ್ನು ದಂಡ ವಿಧಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದೆ.  

ವಾರ್ತಾ ಭಾರತಿ 24 Mar 2026 11:52 pm

ಕಡ್ಡಾಯ ಗುಣಮಟ್ಟದ ನೀರು ಪೂರೈಸಲು ಸಿಎಜಿ ಶಿಫಾರಸು

ಬೆಂಗಳೂರು : ರಾಜ್ಯದ ಎಲ್ಲ ನಾಗರಿಕರಿಗೆ ಕಡ್ಡಾಯ ಗುಣಮಟ್ಟದ ನೀರು ಪೂರೈಸುವುದನ್ನು ಖಚಿತಪಡಿಸಿಕೊಳ್ಳಲು ರಾಜ್ಯ ಸರಕಾರವು ಎಲ್ಲ ಹಂತಗಳಲ್ಲಿ ನೀರಿನ ಗುಣಮಟ್ಟದ ಪರೀಕ್ಷೆಗೆ ಆದ್ಯತೆ ನೀಡಬೇಕೆಂದು ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಮೇಲಿನ ಭಾರತದ ಲೆಕ್ಕ ನಿಯಂತ್ರಕರು ಮತ್ತು ಮಹಾ ಲೆಕ್ಕ ಪರಿಶೋಧಕರ ವರದಿ ಶಿಫಾರಸು ಮಾಡಿದೆ. ಮಂಗಳವಾರ ವಿಧಾನಸಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯರ ಪರವಾಗಿ ಕಂದಾಯ ಸಚಿವ ಕೃಷ್ಣಭೈರೇಗೌಡ ಮಂಡಿಸಿದ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಮೇಲಿನ ವರದಿ(2025ರ ವರದಿ ಸಂಖ್ಯೆ 13) (ಕಾರ್ಯನಿರ್ವಹಣಾ ಲೆಕ್ಕ ಪರಿಶೋದನಾ ವರದಿ-ಸಿವಿಲ್)ಯಲ್ಲಿ ಈ ಅಂಶ ಉಲ್ಲೇಖವಾಗಿದೆ. ಪರಿವರ್ತನಾ ಸಮಯ ಪ್ರಯೋಗಾಲಯ ಪರೀಕ್ಷೆಯನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಮತ್ತು ನೀರಿನಿಂದ ಹರಡುವ ರೋಗಗಳನ್ನು ತಡೆಗಟ್ಟಲು ಕಲುಷಿತ ಮಾದರಿಗಳಿಗೆ ಪರಿಹಾರ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಅಗತ್ಯವಿರುವ ಪ್ರಮಾಣದ ಮತ್ತು ಗುಣಮಟ್ಟದ ನಿರಂತರ ನೀರಿನ ಪೂರೈಕೆಯನ್ನು ಖಚಿತಪಡಿಸಿಕೊಳ್ಳಲು ರಾಜ್ಯ ಸರಕಾರವು ಎಲ್ಲ ಗ್ರಾಮಗಳಲ್ಲಿ ಮರು ಪೂರ್ಣ ರಚನೆಗಳು ಮತ್ತು ಬೂದು ನೀರಿನ ನಿರ್ವಹಣಾ ಚಟುವಟಿಕೆಗಳನ್ನು ಕೈಗೊಳ್ಳುವುದನ್ನು ಖಚಿತಪಡಿಸಿಕೊಳ್ಳಬೇಕು. ಕಾಮಗಾರಿಗಳನ್ನು ಪೂರ್ಣಗೊಳಿಸುವಲ್ಲಿ ವಿಳಂಬವಾಗುವುದನ್ನು ತಪ್ಪಿಸಲು ಸರಕಾರವು ಭೂಮಿ ದೊರೆತ ನಂತರವೇ ಕಾಮಗಾರಿಗಳನ್ನು ವಿತರಿಸಬೇಕು ಎಂದೂ ಉಲ್ಲೇಖಿಸಲಾಗಿದೆ. ಗುತ್ತಿಗೆದಾರರಿಗೆ ಅವರ ಲಭ್ಯವಿರುವ ಟೆಂಡರ್ ಸಾಮಥ್ರ್ಯವನ್ನು ಪರಿಗಣಿಸಿದ ನಂತರ ಕಾಮಗಾರಿಗಳನ್ನು ನೀಡಬೇಕು. ಬಿಡುಗಡೆಯಾದ ಹಣವನ್ನು ಎಲ್ಲ ಘಟಕಗಳಡಿಯಲ್ಲಿ ಸಂರ್ಪೂವಾಗಿ ಬಳಸಿಕೊಳ್ಳಲಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ರಾಜ್ಯವು ಇಲಾಖೆಗೆ ನಿರ್ದೇಶನ ನೀಡಬೇಕು ಹಾಗೂ ಬಿಡುಗಡೆಯಾದ ಹಣವನ್ನು ಪಡೆಯಲು ಕೇಂದ್ರ ಸರಕಾರದೊಂದಿಗೆ ಅಗತ್ಯ ಕ್ರಮ ತೆಗೆದುಕೊಳ್ಳಬೇಕು ಸೇರಿದಂತೆ ಇನ್ನಿತರೆ ಅಂಶಗಳನ್ನು ವರದಿಯಲ್ಲಿ ಶಿಫಾರಸು ಮಾಡಲಾಗಿದೆ.   

ವಾರ್ತಾ ಭಾರತಿ 24 Mar 2026 11:44 pm

ಚಂದನದಲ್ಲಿ ಧಾರವಾಹಿಯಾಗಿದೆ ಕುಂ. ವೀರಭದ್ರಪ್ಪರವರ ಕಾದಂಬರಿ ʼಅರಮನೆʼ

ಬಿ ಜಯಶ್ರೀ ಸೇರಿದಂತೆ ರಂಗಭೂಮಿ ಕಲಾವಿದರೇ ಪ್ರಮುಖವಾಗಿ ಧಾರವಾಹಿಯಲ್ಲಿ ನಟಿಸಿದ್ದಾರೆ. ಮಾರ್ಚ್ 25ರಿಂದ ಕುಂ. ವೀರಭದ್ರಪ್ಪರವರ ‘ಅರಮನೆ’ ಕಾದಂಬರಿ ಧಾರವಾಗಿ ರೂಪದಲ್ಲಿ ಬರಲಿದೆ. ಡಿಡಿ ಚಂದನ ವಾಹಿನಿಯಲ್ಲಿ ಪ್ರಸಾರವಾಗಲಿದೆ. ಚಂದನ ವಾಹಿನಿ ‘ಅರಮನೆ’ ಧಾರವಾಹಿಯ ಪ್ರೋಮೋವನ್ನು ಇತ್ತೀಚೆಗೆ ಬಿಡುಗಡೆ ಮಾಡಿದೆ. ಸೋಮವಾರದಿಂದ ಶುಕ್ರವಾರದವರೆಗೆ ಚಂದನ ಟಿವಿಯಲ್ಲಿ ಈ ಧಾರವಾಹಿ ಸಂಜೆ 7:30ಕ್ಕೆ ಪ್ರಸಾರವಾಗಲಿದೆ. View this post on Instagram A post shared by Doordarshan Chandana (@doordarshanchandana) ಹಿರಿಯ ಕಲಾವಿದೆ ಬಿ ಜಯಶ್ರೀ ಸೇರಿದಂತೆ ರಂಗಭೂಮಿ ಕಲಾವಿದರೇ ಪ್ರಮುಖವಾಗಿ ಧಾರವಾಹಿಯಲ್ಲಿ ನಟಿಸಿದ್ದಾರೆ. ನಾತಿಚರಾಮಿ’ ಸಿನಿಮಾ ನಿರ್ದೇಶಿಸಿರುವ ಮನ್ಸೋರೆ ಧಾರವಾಹಿಯನ್ನು ನಿರ್ದೇಶಿಸಿದ್ದಾರೆ. ನಿರ್ದೇಶಕ ಮನ್ಸೋರೆ ಅವರೇ ಪ್ರೋಮೋ ವಿವರವನ್ನು ಹಂಚಿಕೊಂಡಿದ್ದಾರೆ. Kum. Veerabhadrappa’s #Aramane is now a TV serial on @ddchandanabng Directed by @mansore25 , it stars B. Jayashree in a key role. Airs from Wednesday at 7:30 PM, Monday to Friday. Special interview with #Kumvee & #Mansore today at 10 PM. pic.twitter.com/8W2APZ6U7S — Bhargavi (@IamHCB) March 23, 2026 “ಅರಮನೆಯ ಗೋಡೆಗಳು ಬಿರುಕು ಬಿಟ್ಟಿವೆ, ಚಪ್ಪರ ಮುರಿದು ಬಿದ್ದಿದೆ, ಬೊಕ್ಕಸ ಖಾಲಿಯಾಗಿದೆ, ಬದುಕು ತತ್ತರವಾಗಿದೆ. ಆದರೆ ಆಳುವ ಮಂದಿಯ ಗೊಳ್ ಅಬ್ಬರ ಇದ್ದೇಇದೆ” ಎನ್ನುವ ಹಾಡಿನ ಜೊತೆಗೆ ಅರಮನೆಯಲ್ಲಿ ನಟಿಸಲಿರುವ ಕಲಾವಿದರ ಪಾತ್ರ ಪರಿಚಯ ಮಾಡಿಕೊಡಲಾಗಿದೆ.

ವಾರ್ತಾ ಭಾರತಿ 24 Mar 2026 11:42 pm

ಐಪಿಎಲ್‌ಗೂ ಮುನ್ನ ಆರ್‌ಸಿಬಿ ಹೊಸ ದಾಖಲೆ: 16,000 ಕೋಟಿಗೆ ಆದಿತ್ಯ ಬಿರ್ಲಾ ಗ್ರೂಪ್‌ ಪಾಲಾದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು

RCB Sold: ಐಪಿಎಲ್ 2026 ಸೀಸನ್ ಆರಂಭಕ್ಕೂ ಮುನ್ನವೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮಾಲೀಕತ್ವ ಬದಲಾವಣೆಯಾಗುತ್ತಿದೆ. ಆದಿತ್ಯ ಬಿರ್ಲಾ ಗ್ರೂಪ್ ಮತ್ತು ಅಮೆರಿಕದ ಕ್ರೀಡಾ ಹೂಡಿಕೆದಾರ ಡೇವಿಡ್ ಬ್ಲಿಟ್ಜರ್ ನೇತೃತ್ವದ ಒಕ್ಕೂಟವು ಖರೀದಿ ಮಾಡಿದೆ ಎಂದು ತಿಳಿದುಬಂದಿದೆ. ಈ ಒಪ್ಪಂದವು ಅಂದಾಜು ₹16,000 ಕೋಟಿಗೂ ಹೆಚ್ಚು ಮೌಲ್ಯದ್ದಾಗಿದ್ದು, ಕ್ರಿಕೆಟ್ ಇತಿಹಾಸದಲ್ಲೇ ಅತ್ಯಂತ ದುಬಾರಿ ಒಪ್ಪಂದಗಳಲ್ಲಿ ಒಂದಾಗಿದೆ.

ಒನ್ ಇ೦ಡಿಯ 24 Mar 2026 11:41 pm

ಕರಾವಳಿ ಭಾಗದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಆದ್ಯತೆ ನೀಡಬೇಕು : ಹರೀಶ್ ಪೂಂಜ

ಬೆಂಗಳೂರು : ಕರಾವಳಿ ಭಾಗದ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಪ್ರವಾಸೋದ್ಯಮ ಚಟುವಟಿಕೆಗಳಿಗೆ ಆದ್ಯತೆ ನೀಡುವ ಮೂಲಕ ಯುವಕರಿಗೆ ಉದ್ಯೋಗ ಸೃಷ್ಟಿಗೆ ಕ್ರಮ ವಹಿಸಬೇಕು ಎಂದು ಬಿಜೆಪಿ ಸದಸ್ಯ ಹರೀಶ್ ಪೂಂಜ ಆಗ್ರಹಿಸಿದರು. ಮಂಗಳವಾರ ವಿಧಾನಸಭೆಯಲ್ಲಿ 2026-27ನೆ ಸಾಲಿನ ರಾಜ್ಯ ಬಜೆಟ್ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕರಾವಳಿಯವರು ಏನು ತಪ್ಪು ಮಾಡಿದ್ದಾರೆ. ನಮ್ಮ ಜಿಲ್ಲೆಗೆ ವಸತಿ ಇಲಾಖೆಯಡಿ ಮನೆಗಳು ಬಂದಿಲ್ಲ, ರಸ್ತೆ ಗುಂಡಿಗಳನ್ನು ಮುಚ್ಚಲು ಅನುದಾನ ನೀಡಿಲ್ಲ, ಅರಣ್ಯ ಇಲಾಖೆಯ ಸಾವಿರಾರು ಅಡ್ಡಿಗಳಿಂದ ಅಕ್ರಮ-ಸಕ್ರಮ ಯೋಜನೆ ಜಾರಿ ಮಾಡಲು ಆಗುತ್ತಿಲ್ಲ ಎಂದು ಹೇಳಿದರು. ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಅನುದಾನ ನೀಡುತ್ತಿಲ್ಲ. ಇವತ್ತು ಗೋವಾ ರಾಜ್ಯಕ್ಕೆ ದೇಶ, ವಿದೇಶಗಳಿಂದ ಪ್ರವಾಸಿಗರು ಬರುತ್ತಾರೆ. ನಮ್ಮ ಕರಾವಳಿಯ ಮೂರು ಜಿಲ್ಲೆಗಳಲ್ಲಿ 25ಕ್ಕೂ ಹೆಚ್ಚು ಜಲಪಾತಗಳಿವೆ ಅವುಗಳ ಅಭಿವೃದ್ಧಿಗೆ ಪ್ರವಾಸೋದ್ಯಮ ಇಲಾಖೆ ಯಾಕೆ ಯೋಜನೆ ರೂಪಿಸುತ್ತಿಲ್ಲ ಎಂದು ಹರೀಶ್ ಪೂಂಜ ಪ್ರಶ್ನಿಸಿದರು. ‘ಟೆಂಪಲ್ ಟೂರಿಸಂ’ ನಮ್ಮ ಜಿಲ್ಲೆಗಳಲ್ಲಿ ಇರುವಷ್ಟು ಬೇರೆ ಜಿಲ್ಲೆಗಳಲ್ಲಿ ಇಲ್ಲ. ಕರಾವಳಿ ಜಿಲ್ಲೆಗಳಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಮುಂದಿನ 25 ವರ್ಷಗಳ ಯೋಜನೆ ರೂಪಿಸುವ ಅಗತ್ಯವಿದೆ. ನಮ್ಮ ಕರಾವಳಿ ಜಿಲ್ಲೆಗಳಲ್ಲಿ 14 ವೈದ್ಯಕೀಯ ಕಾಲೇಜುಗಳಿವೆ. ಈ ಭಾಗದಲ್ಲಿ ‘ಹೆಲ್ತ್ ಟೂರಿಸಂ’ ಅನ್ನು ಪ್ರೋತ್ಸಾಹಿಸಬಹುದಾಗಿದೆ. ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಗೆ ಸರಕಾರ ವಾರ್ಷಿಕ 5 ಸಾವಿರ ಕೋಟಿ ರೂ.ನೀಡುತ್ತದೆ. ಆದರೆ, ಕರಾವಳಿ ಅಭಿವೃದ್ಧಿ ಪ್ರಾಧಿಕಾರಕ್ಕೆ 100 ಕೋಟಿ ರೂ.ಗಳನ್ನು ನೀಡದಿದ್ದರೆ ಹೇಗೆ? ಎಂದು ಅವರು ಹೇಳಿದರು. ನಮಗೆ ರಸ್ತೆ, ಮೂಲಸೌಕರ್ಯ, ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಯೋಜನೆ, ಯುವಕರಿಗೆ ಉದ್ಯೋಗ ನೀಡಿ ಎಂದು ಜನ ಕೇಳುತ್ತಿದ್ದಾರೆ. ಆಡಳಿತ ಪಕ್ಷದ ಸದಸ್ಯರು ಬಜೆಟ್ ಬಗ್ಗೆ ಮಾತನಾಡುವಾಗ ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಹೊಗಳಿ ಅಟ್ಟಕ್ಕೆ ಏರಿಸುತ್ತಿದ್ದಾರೆ. ಆದರೆ, ಈ ಬಜೆಟ್‍ನಲ್ಲಿ ಏನು ಇಲ್ಲ ಎಂಬ ವಾಸ್ತವ ಜನರಿಗೆ ಗೊತ್ತಿದೆ ಎಂದು ಹರೀಶ್ ಪೂಂಜ ಟೀಕಿಸಿದರು.  

ವಾರ್ತಾ ಭಾರತಿ 24 Mar 2026 11:37 pm

ಸುಮಾರು 16,000 ಕೋಟಿ ರೂ.ಗೆ ಆದಿತ್ಯ ಬಿರ್ಲಾ ಗ್ರೂಪ್ ನೇತೃತ್ವದ ಗುಂಪಿನ ಪಾಲಾದ RCB ತಂಡ

ಅತ್ಯಂತ ದುಬಾರಿ IPL ಫ್ರಾಂಚೈಸಿಯಾಗಿ ಹೊರಹೊಮ್ಮಿದ RCB

ವಾರ್ತಾ ಭಾರತಿ 24 Mar 2026 11:29 pm

ಅಡುಗೆ ಮನೆಗಳಿಗೆ ಇನ್ನು ನೇರ ಗ್ಯಾಸ್ ಸಂಪರ್ಕ: ಪೈಪ್‌ಲೈನ್ ವಿಸ್ತರಣೆಗೆ ಕೇಂದ್ರದಿಂದ ಹೊಸ ಆದೇಶ ಜಾರಿ

ನವದೆಹಲಿ: ಭಾರತದಲ್ಲಿ ಎಲ್‌ಪಿಜಿ ಸಿಲಿಂಡರ್‌ ಅಭಾವ ಸೃಷ್ಟಿಯಾಗಿರುವ ಹಿನ್ನೆಲೆ ದೇಶದ ಇಂಧನ ಭದ್ರತೆಯನ್ನು ಬಲಪಡಿಸಲು ಮತ್ತು ಸಾಮಾನ್ಯ ಜನರ ಅಡುಗೆ ಮನೆಗೆ ಸುಲಭವಾಗಿ ಅನಿಲ ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಮಹತ್ವದ ಹೆಜ್ಜೆ ಇಟ್ಟಿದೆ. ದೇಶಾದ್ಯಂತ ನೈಸರ್ಗಿಕ ಅನಿಲ (Natural Gas) ಪೈಪ್‌ಲೈನ್ ಜಾಲವನ್ನು ಬಲಪಡಿಸಲು ಮತ್ತು ಸುಲಭ ವ್ಯವಹಾರಕ್ಕೆ ಉತ್ತೇಜನ ನೀಡಲು ಕೇಂದ್ರ ಸರ್ಕಾರವು

ಒನ್ ಇ೦ಡಿಯ 24 Mar 2026 11:28 pm

ಬೆಂಗಳೂರಲ್ಲಿ ಟೋಯಿಂಗ್‌ ಕಾರ್ಯಾಚರಣೆಗೆ ಸಿದ್ಧತೆ; ಇನ್ನು ಎಲ್ಲೆಂದರಲ್ಲಿ ವಾಹನ ನಿಲ್ಲಿಸಿದಿರೋ ಜೋಕೆ!

ಬೆಂಗಳೂರು: ರಾಜಧಾನಿಯ ಕೇಂದ್ರ ವಾಣಿಜ್ಯ ಪ್ರದೇಶ (CBD) ವ್ಯಾಪ್ತಿಗೆ ಒಳಪಡುವ ಎಂ.ಜಿ. ರಸ್ತೆ, ವಿಧಾನಸೌಧ ಸುತ್ತಮುತ್ತಲ ಪ್ರದೇಶಗಳ ನೋ ಪಾರ್ಕಿಂಗ್‌ ಸ್ಥಳಗಳಲ್ಲಿ ವಾಹನಗಳನ್ನು ನಿಲ್ಲಿಸಿದ್ರೆ ದಂಡ ಕಟ್ಟಲು ಸಿದ್ಧರಾಗಿ..! ಏಕೆಂದರೆ ಹೊಸ ಮಾರ್ಗಸೂಚಿಗಳ ಅನ್ವಯ ಶೀಘ್ರವೇ ಟೋಯಿಂಗ್‌ ಪದ್ಧತಿಯನ್ನು ನಗರ ಪೊಲೀಸರು ಜಾರಿಗೊಳಿಸಲಿದ್ದಾರೆ.ಸಂಚಾರ ಪೊಲೀಸರು ಹಾಗೂ ಗ್ರೇಟರ್‌ ಬೆಂಗಳೂರು ಪ್ರಾಕಾರ (GBA) ಸಹಭಾಗಿತ್ವದಲ್ಲಿ ಟೋಯಿಂಗ್‌ ಆರಂಭವಾಗಲಿದ್ದು, ಪ್ರಾಯೋಗಿಕವಾಗಿ ಕೇಂದ್ರ ಹಾಗೂ ಪಶ್ಚಿಮ ಪಾಲಿಕೆ ವ್ಯಾಪ್ತಿಯಲ್ಲಿಒಂದೆರಡು ದಿನಗಳಲ್ಲಿಕಾರ್ಯಾಚರಣೆ ಆರಂಭವಾಗಲಿದೆ. ಎಲ್ಲೆಂದರಲ್ಲಿನಿಲ್ಲಿಸುವ ವಾಹನಗಳನ್ನು ಟೋಯಿಂಗ್‌ ಮಾಡಲಿದ್ದು, ನಿಯಮ ಉಲ್ಲಂಘಿಸುವ ವಾಹನ ಸವಾರರಿಗೆ ದಂಡ ವಿಧಿಸಲಿದ್ದಾರೆ.ಟೋಯಿಂಗ್‌ ಕಾರ್ಯಾಚರಣೆ ಆರಂಭದ ಕುರಿತು 'ವಿಜಯ ಕರ್ನಾಟಕ'ದ ಜತೆ ಮಾತನಾಡಿದ , ''ಜಿಬಿಎ ಕೇಂದ್ರ ನಗರ ಪಾಲಿಕೆ ವತಿಯಿಂದ ಎರಡು ಟೋಯಿಂಗ್‌ ವಾಹನಗಳು ಹಾಗೂ ಪಶ್ಚಿಮ ಪಾಲಿಕೆ ವತಿಯಿಂದ ಒಂದು ವಾಹನ ವಿಭಾಗಕ್ಕೆ ಕೊಡಲಾಗಿದೆ. ಈ ಮೂರು ವಾಹನಗಳನ್ನು ಬಳಸಿಕೊಂಡು ಅದೇ ವ್ಯಾಪ್ತಿಯಲ್ಲಿಸದ್ಯದಲ್ಲಿಯೇ ಟೋಯಿಂಗ್‌ ಆರಂಭಿಸಲಾಗುವುದು. ಉಳಿದ ಪಾಲಿಕೆಗಳ ವತಿಯಿಂದ ವಾಹನಗಳ ಹಸ್ತಾಂತರ ಇಲಾಖೆಗೆ ಆದ ಬಳಿಕ ಆ ಭಾಗದಲ್ಲಿಯೂ ಕಾರ್ಯಾಚರಣೆ ಆರಂಭಿಸಲಾಗುವುದು,'' ಎಂದರು. ಟೋಯಿಂಗ್‌ ಶುಲ್ಕ ಜಿಬಿಎಗೆ ನೋ ಪಾರ್ಕಿಂಗ್‌ ಸ್ಥಳಗಳಲ್ಲಿ ನಿಲ್ಲಿಸುವ ವಾಹನಗಳನ್ನು ಮಾರ್ಗಸೂಚಿ ಅನ್ವಯವೇ ಮೊದಲು ಮೈಕ್‌ನಲ್ಲಿಅನೌನ್ಸ್‌ ಮಾಡಿ ಟೋಯಿಂಗ್‌ ಮಾಡಲಾಗುವುದು. ಟೋಯಿಂಗ್‌ ವಾಹನಕ್ಕೆ ನೋ ಪಾರ್ಕಿಂಗ್‌ ಉಲ್ಲಂಘನೆಯ 500 ರೂ. ದಂಡವಿರಲಿದ್ದು, ಅದು ಇಲಾಖೆಗೆ ಪಾವತಿಯಾಗಲಿದೆ. ಉಳಿದಂತೆ ಟೋಯಿಂಗ್‌ ಶುಲ್ಕ ಬೈಕ್‌ಗೆ 650 ಹಾಗೂ ಕಾರು ಸೇರಿ ಇತರ ವಾಹನಗಳಿಗೆ 1000 ರೂ.ಶುಲ್ಕವಿದ್ದು ಆ ಮೊತ್ತವು ಆಯಾ ಪಾಲಿಕೆಗಳಿಗೆ ಸಂದಾಯವಾಗಲಿದೆ ಎಂದು ಕಾರ್ತಿಕ್‌ ರೆಡ್ಡಿ ವಿವರಿಸಿದರು. ಕಾನೂನು ಪ್ರಕಾರ ಕ್ರಮ ಟೋಯಿಂಗ್‌ ಕಾರ್ಯಾಚರಣೆ ವೇಳೆ ಈ ಮೊದಲಿನಂತೆ ಸಹಾಯಕ ಸಬ್‌ ಇನ್ಸ್‌ಪೆಕ್ಟರ್‌ ಸಹಿತ ಹಾಗೂ ಪೊಲೀಸ್‌ ಸಿಬ್ಬಂದಿ ಇರಲಿದ್ದಾರೆ. ಟೋಯಿಂಗ್‌ ಸಿಬ್ಬಂದಿಯೂ ಇರಲಿದ್ದು, ಮಾರ್ಗಸೂಚಿ ಅನ್ವಯವೇ ಟೋಯಿಂಗ್‌ ನಡೆಸಬೇಕು. ಈ ಕುರಿತು ಸಿಬ್ಬಂದಿಗೆ ಸಲಹೆ ಹಾಗೂ ತರಬೇತಿ ನೀಡಲಾಗಿದೆ. ವಾಹನ ಸವಾರರ ಜತೆ ಸೌಜನ್ಯಯುತವಾಗಿ ನಡೆದುಕೊಳ್ಳಬೇಕು ಎಂದು ತಾಕೀತು ಮಾಡಲಾಗಿದೆ. ಕಾರ್ಯಾಚರಣೆ ವೇಳೆ ಯಾವುದೇ ಕಾನೂನು ಲೋಪವಾಗದಂತೆ ಕರ್ತವ್ಯ ನಿರ್ವಹಿಸಲು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದು ಜಂಟಿ ಆಯುಕ್ತರು ಹೇಳಿದರು.

ವಿಜಯ ಕರ್ನಾಟಕ 24 Mar 2026 11:27 pm

ಯಾವ ದೇಶಗಳಲ್ಲಿ ಕಾರ್ಯತಂತ್ರದ ಯೋಜನೆಯ ಭಾಗವಾಗಿರುವ ತೈಲ ನಿಕ್ಷೇಪಗಳಿವೆ? ಅವುಗಳೆಲ್ಲಿರುವ ತೈಲದ ಪ್ರಮಾಣ ಎಷ್ಟು?

ಕಾರ್ಯತಂತ್ರದ ತೈಲ ನಿಕ್ಷೇಪ ಎಂದರೇನು?; ಇಲ್ಲಿದೆ ಮಾಹಿತಿ...

ವಾರ್ತಾ ಭಾರತಿ 24 Mar 2026 11:26 pm

ರೈತರ ಆದಾಯ ದ್ವಿಗುಣಗೊಂಡಿದೆ: ಕೇಂದ್ರ ಸಚಿವ ಶಿವರಾಜ್ ಸಿಂಗ್ ಚೌಹಾಣ್

ಹೊಸದಿಲ್ಲಿ: ಕೇಂದ್ರ ಸರಕಾರ ಕೃಷಿ ವಲಯಕ್ಕಾಗಿ ಹಲವಾರು ಉಪಕ್ರಮಗಳನ್ನು ಕೈಗೊಳ್ಳುತ್ತಿದ್ದು, ರೈತರ ಆದಾಯ ದ್ವಿಗುಣಗೊಂಡಿದೆ ಎಂದು ಮಂಗಳವಾರ ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಲೋಕಸಭೆಗೆ ತಿಳಿಸಿದರು. ಪ್ರಶ್ನೋತ್ತರ ಅವಧಿಯಲ್ಲಿ ಮಾತನಾಡಿದ ಶಿವರಾಜ್ ಸಿಂಗ್ ಚೌಹಾಣ್, ಕೃಷಿ ಉತ್ಪಾದನೆ ಹೆಚ್ಚಳಗೊಂಡಿದ್ದು, ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಹಾಗೂ ರಸಗೊಬ್ಬರವನ್ನು ಒದಗಿಸುವುದೂ ಸೇರಿದಂತೆ ವಿವಿಧ ಕ್ರಮಗಳನ್ನು ಕೈಗೊಳ್ಳಗಲಾಗಿದೆ ಎಂದು ಹೇಳಿದರು. ಕೆಲವು ಪ್ರಕರಣಗಳಲ್ಲಿ ರೈತರ ಆದಾಯ ದ್ವಿಗುಣಗೊಂಡಿದ್ದು, ಅವರ ಆದಾಯ ಮೂರರಿಂದ ನಾಲ್ಕು ಪಟ್ಟು ಏರಿಕೆಯಾಗಿದೆ ಎಂದು ಕೃಷಿ ಮತ್ತು ರೈತ ಕಲ್ಯಾಣ ಸಚಿವರಾದ ಅವರು ತಿಳಿಸಿದರು. ರೈತರ ಆದಾಯವನ್ನು ದ್ವಿಗುಣಗೊಳಿಸಲಾಗುವುದು ಎಂಬ ತನ್ನ ಭರವಸೆಯನ್ನು ಸರಕಾರ ಉಳಿಸಿಕೊಂಡಿಲ್ಲ ಎಂಬ ಟಿಎಂಸಿ ನಾಯಕ ಸೌಗತ ರಾಯ್ ಅವರ ಮಾತಿಗೆ ಅವರು ಮೇಲಿನಂತೆ ಪ್ರತಿಕ್ರಿಯೆ ನೀಡಿದರು.

ವಾರ್ತಾ ಭಾರತಿ 24 Mar 2026 11:16 pm

ತಮಿಳುನಾಡು ವಿಧಾನಸಭಾ ಚುನಾವಣೆಯಿಂದ ಹೊರಗುಳಿದ ಕಮಲ್ ಹಾಸನ್ ರ MNM ಪಕ್ಷ

ಡಿಎಂಕೆ ನೇತೃತ್ವದ ಮೈತ್ರಿಕೂಟಕ್ಕೆ ಬೆಂಬಲ

ವಾರ್ತಾ ಭಾರತಿ 24 Mar 2026 11:12 pm

ಭಟ್ಕಳದಲ್ಲಿ ಎಲ್‌ಪಿಜಿ ಕೊರತೆ: ಆಟೋ ಸಂಚಾರಕ್ಕೆ ಅಡ್ಡಿ, ಸಾರ್ವಜನಿಕರಿಗೆ ತೊಂದರೆ

ಭಟ್ಕಳ: ಮಧ್ಯಪ್ರಾಚ್ಯದ ಪರಿಸ್ಥಿತಿಯ ಪರಿಣಾಮವಾಗಿ ಪಟ್ಟಣದಲ್ಲಿ ಎಲ್‌ಪಿಜಿ ಪೂರೈಕೆ ಅಸ್ತವ್ಯಸ್ತಗೊಂಡಿದ್ದು, ಆಟೋ ರಿಕ್ಷಾ ಸಂಚಾರಕ್ಕೆ ತೀವ್ರ ಅಡ್ಡಿಯಾಗಿದೆ. ಮಂಗಳವಾರ ಮಧ್ಯಾಹ್ನದಿಂದಲೇ ಪಟ್ಟಣದ ಪ್ರಮುಖ ಇಂಧನ ಕೇಂದ್ರಗಳಲ್ಲಿ ಎಲ್‌ಪಿಜಿ ಲಭ್ಯವಾಗದ ಕಾರಣ ಅನೇಕ ಆಟೋಗಳು ರಸ್ತೆಗಿಳಿಯದೆ ನಿಂತಿವೆ. ಹಲವಾರು ಚಾಲಕರು ತಮ್ಮ ವಾಹನಗಳನ್ನು ಮನೆಗಳ ಮುಂದೆ ನಿಲ್ಲಿಸಿ ಸೇವೆ ಸ್ಥಗಿತಗೊಳಿಸಿದ್ದಾರೆ. ಆಟೋ ಚಾಲಕ ಮೊಹಮ್ಮದ್ ಜಾವಿದ್ ಮುಕ್ರಿ ಮಾತನಾಡಿ, “ಪಟ್ಟಣದ ಬಹುತೇಕ ಆಟೋಗಳು ಎಲ್‌ಪಿಜಿಯ ಮೇಲೆಯೇ ಅವಲಂಬಿತವಾಗಿವೆ. ಕೆಲವು ದಿನಗಳ ಹಿಂದೆ ಲೀಟರ್‌ಗೆ 52 ಇದ್ದ ಬೆಲೆ ಈಗ 85ಕ್ಕೆ ಏರಿದೆ. ಮಂಗಳವಾರದಿಂದ ಗ್ಯಾಸ್ ಸಿಗದೇ ಇರುವುದರಿಂದ ಕೆಲಸ ನಿಲ್ಲಿಸಬೇಕಾಗಿದೆ” ಎಂದು ಹೇಳಿದರು. ಈಗಾಗಲೇ 50ಕ್ಕೂ ಹೆಚ್ಚು ಚಾಲಕರು ಸೇವೆ ನಿಲ್ಲಿಸಿರುವುದಾಗಿ ಅವರು ತಿಳಿಸಿದ್ದಾರೆ. ಆಟೋ ರಿಕ್ಷಾ ಸಂಘದ ಅಧ್ಯಕ್ಷ ವೆಂಕಟೇಶ್ ನಾಯ್ಕ ಅವರ ಪ್ರಕಾರ, ಪಟ್ಟಣದಲ್ಲಿ ಸುಮಾರು 1,300 ಆಟೋ ಗಳಿದ್ದು, ಅವುಗಳಲ್ಲಿ ಹೆಚ್ಚಿನವು ಎಲ್‌ಪಿಜಿ ಬಳಸುತ್ತಿವೆ. “ಮಂಗಳವಾರ ಬೆಳಿಗ್ಗೆಯವರೆಗೆ ಪೂರೈಕೆ ಸರಿಯಾಗಿತ್ತು. ಆದರೆ ಮಧ್ಯಾಹ್ನದ ನಂತರ ಎರಡು ಪ್ರಮುಖ ಕೇಂದ್ರಗಳಲ್ಲಿ ಗ್ಯಾಸ್ ಪೂರೈಕೆ ನಿಂತುಹೋಯಿತು. ಇದರಿಂದ ಚಾಲಕರು ಸಂಕಷ್ಟಕ್ಕೀಡಾಗಿದ್ದಾರೆ,” ಎಂದರು. ಇದೀಗ ಸಿಎನ್‌ಜಿ ಮಾತ್ರ ಲಭ್ಯವಿದ್ದು, ಕೆಲವು ವಾಹನಗಳು ಉಳಿದಿರುವ ಗ್ಯಾಸ್‌ನಿಂದ ಸೀಮಿತವಾಗಿ ಓಡುತ್ತಿವೆ. ಪಟ್ಟಣದಲ್ಲಿ ನಗರ ಬಸ್ ಸೌಲಭ್ಯ ಇಲ್ಲದಿರುವುದರಿಂದ ಜನರು ಆಟೋಗಳ ಮೇಲೆ ಅವಲಂಬಿತರಾಗಿದ್ದಾರೆ. ಹೀಗಾಗಿ ಈ ಸಮಸ್ಯೆ ಮುಂದುವರಿದರೆ ಸಾರ್ವಜನಿಕರಿಗೆ ಇನ್ನಷ್ಟು ತೊಂದರೆ ಉಂಟಾಗುವ ಸಾಧ್ಯತೆ ಇದೆ. ಎಲ್‌ಪಿಜಿ ಕೊರತೆಯಿಂದ ಬಡ ಚಾಲಕರ ಬದುಕು ಸಂಕಷ್ಟದಲ್ಲಿ ಎಲ್‌ಪಿಜಿ ಕೊರತೆಯಿಂದಾಗಿ ದಿನಗೂಲಿ ಅವಲಂಬಿತವಾಗಿರುವ ಆಟೋ ಚಾಲಕರ ಬದುಕು ತೀವ್ರ ಸಂಕಷ್ಟಕ್ಕೆ ಸಿಲುಕಿದೆ. ದಿನವೂ ಓಡಿಸಿದಷ್ಟು ಆದಾಯವಾಗುವ ಪರಿಸ್ಥಿತಿಯಲ್ಲಿ, ಇಂಧನ ಸಿಗದೇ ವಾಹನಗಳನ್ನು ನಿಲ್ಲಿಸಬೇ ಕಾದ ಕಾರಣ ಕುಟುಂಬದ ನಿರ್ವಹಣೆಯೇ ಕಷ್ಟಕರವಾಗಿದೆ. ಸಾಲದ ಮೇಲೆ ಬದುಕುತ್ತಿರುವ ಹಲವಾರು ಚಾಲಕರು, ದಿನಸಿ ಖರ್ಚು ಕೂಡ ನಡೆಸಲು ತೊಂದರೆ ಅನುಭವಿಸುತ್ತಿದ್ದಾರೆ. ಸಮಸ್ಯೆ ಶೀಘ್ರ ಪರಿಹಾರವಾಗದಿದ್ದರೆ ಅವರ ಜೀವನೋಪಾಯವೇ ಅಪಾಯಕ್ಕೀಡಾಗುವ ಭೀತಿ ಎದುರಾಗಿದೆ. “ಎಲ್‌ಪಿಜಿ ಕೊರತೆಯಿಂದ ಗ್ಯಾಸ್ ಬೆಲೆಗಳು ತೀವ್ರವಾಗಿ ಏರಿವೆ. ಈ ಹಿನ್ನೆಲೆ, ಪ್ರಯಾಣದ ವೇಳೆ 10–20 ರೂಪಾಯಿಗಳ ವಿಚಾರದಲ್ಲಿ ಆಟೋ ಚಾಲಕರೊಂದಿಗೆ ವಾದವಿವಾದ ನಡೆಸದೆ, ನಮ್ಮ ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳುವಂತೆ ಸಾರ್ವಜನಿಕರಲ್ಲಿ ವಿನಂತಿಸುತ್ತೇನೆ. ನಾವು ದಿನಗೂಲಿ ಆಧಾರದಲ್ಲಿ ಕುಟುಂಬವನ್ನು ನಡೆಸುತ್ತಿರುವವರು. ನಮ್ಮ ಮೇಲೆ ಸ್ವಲ್ಪ ದಯೆ, ಸಹಾನುಭೂತಿ ಮತ್ತು ಸಹಕಾರ ತೋರಿಸಿದರೆ ಅದೇ ನಮಗೆ ದೊಡ್ಡ ನೆರವಾಗುತ್ತದೆ” - ಆಟೋ ಚಾಲಕ ಮುಹಮ್ಮದ್ ಜಾವಿದ್ ಮುಕ್ರಿ

ವಾರ್ತಾ ಭಾರತಿ 24 Mar 2026 11:03 pm

ಕೊಣಾಜೆ: ಯುವಕ ನಾಪತ್ತೆ; ಲುಕೌಟ್ ನೋಟೀಸ್ ಜಾರಿ

ಕೊಣಾಜೆ: ನರಿಂಗಾನ ಗ್ರಾಮದ ಕಲ್ಲರಕೋಡಿ ಎಂಬಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಮಹಮ್ಮದ್ ಅರ್ಷದ್ (30) ಎಂಬವರು ನಾಪತ್ತೆಯಾಗಿದ್ದು,‌ ಕೊಣಾಜೆ ಪೊಲೀಸರು ಲುಕೌಟ್ ನೋಟಿಸ್ ಜಾರಿ ಮಾಡಿದ್ದಾರೆ. ಮೂಲತಃ ಶಿವಮೊಗ್ಗ ಕೋಟೆ‌ ಗಂಗೂರಿನ ಮೊಹಮ್ಮದ್ ಅರ್ಷದ್ ಪತ್ನಿಯೊಂದಿಗೆ ನರಿಂಗಾನದಲ್ಲಿ ಬಾಡಿಗೆ ವಾಸವಾ ಗಿದ್ದರು. ಇವರ ಪುತ್ರಿ ಶಿವಮೊಗ್ಗದ ಪತ್ನಿಯ ತಾಯಿಮನೆಯಲ್ಲಿ ವಾಸವಾಗಿದ್ದು, ಮಾ.23ರಂದು ಮೊಹಮ್ಮದ್ ಅರ್ಷದ್ ರವರು ಗಾರೆ ಕೆಲಸ ಮುಗಿಸಿ ಸಂಜೆ 4 ಗಂಟೆಗೆ ಮನೆಗೆ ಬಂದವರು ಪತ್ನಿಯಲ್ಲಿ ನಾನು ಮಗಳನ್ನು ನೋಡಲು ಶಿವಮೊಗ್ಗಕ್ಕೆ ಹೋಗಬೇಕೆಂದು ತಿಳಿಸಿ ರಾತ್ರಿ 8ಗಂಟೆಗೆ ಮನೆಯಿಂದ ಹೊರಟಿದ್ದರು. ನಾನು ಶಿವಮೊಗ್ಗಕ್ಕೆ ತಲುಪಿದ ಕೂಡಲೇ ಫೋನ್ ಮಾಡುವುದಾಗಿ ತಿಳಿಸಿದ್ದು, ಆದರೆ ಮಾ.24 ರಂದು ಬೆಳಿಗ್ಗೆ 6 ಗಂಟೆಯಾದರೂ ಮೊಹಮ್ಮದ್ ಅರ್ಷದ್ ರವರು ಫೋನ್ ಮಾಡದೇ ಇದುದ್ದರಿಂದ ಪತ್ನಿ, ಮೊಹಮ್ಮದ್ ಅರ್ಷದ್ ರವರಿಗೆ ಫೋನ್ ಮಾಡಿದಾಗ ಸ್ವೀಚ್ ಆಫ್ ಆಗಿತ್ತು. ಬಳಿಕ ಅವರ ತಾಯಿಯ ಪೋನ್ ಗೆ ಕರೆ ಮಾಡಿ ವಿಚಾರಿಸಲಾದರೂ ಮೊಹಮ್ಮದ್ ಅರ್ಷದ್ ರವರು ಅಲ್ಲಿಗೂ ಕೂಡಾ ಬಂದಿರುವುದಿಲ್ಲ ಎಂದು ತಿಳಿಸಿದ್ದರು. ಬಳಿಕ ಅವರ ಪತ್ನಿ ತನ್ನ ಗಂಡನನ್ನು ಹುಡುಕಿಕೊಡುವಂತೆ ಕೊಣಾಜೆ ಪೊಲೀಸರಿಗೆ ದೂರು ನೀಡಿದ್ದಾರೆ.

ವಾರ್ತಾ ಭಾರತಿ 24 Mar 2026 11:00 pm

ಕಾಲ್ತುಳಿತದಲ್ಲಿ ಮೃತಪಟ್ಟ RCB ಅಭಿಮಾನಿಗಳ ಗೌರವಾರ್ಥ ಚಿನ್ನಸ್ವಾಮಿಯಲ್ಲಿ ಇನ್ನು ಸದಾ 11 ಆಸನಗಳು ಇರಲಿವೆ ಖಾಲಿ

Important decision by RCB and KSCA- 2025ರ ಆರ್ ಸಿಬಿ ವಿಜಯೋತ್ಸವದ ವೇಳೆ ಸಂಭವಿಸಿದ ಕಾಲ್ತುಳಿತದಲ್ಲಿ ಮೃತಪಟ್ಟ 11 ಅಭಿಮಾನಿಗಳ ಗೌರವಾರ್ಥವಾಗಿ, ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇನ್ನು ಮುಂದೆ 11 ಆಸನಗಳನ್ನು ಕಾಯಂ ಆಗಿ ಮೀಸಲಿರಿಸಲು ಕೆಎಸ್‌ಸಿಎ ಮತ್ತು ಆರ್‌ಸಿಬಿ ನಿರ್ಧರಿಸಿವೆ. ಈ ಬಾರಿ ಆಟಗಾರರು 11ನೇ ಸಂಖ್ಯೆಯ ಅಭ್ಯಾಸ ಜರ್ಸಿ ಹಾಗೂ ಕಪ್ಪು ಪಟ್ಟಿ ಧರಿಸಲಿದ್ದಾರೆ. ಸುರಕ್ಷತೆಗಾಗಿ ₹7 ಕೋಟಿ ವೆಚ್ಚದಲ್ಲಿ ಎಐ ತಂತ್ರಜ್ಞಾನ ಮತ್ತು ಸಿಸಿಟಿವಿ ಕಣ್ಗಾವಲು ಅಳವಡಿಸಲಾಗಿದ್ದು, ಜನದಟ್ಟಣೆ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ.

ವಿಜಯ ಕರ್ನಾಟಕ 24 Mar 2026 10:59 pm

ಪಾಕ್‌ನಲ್ಲಿ ಅಮೆರಿಕ-ಇರಾನ್ ಮಾತುಕತೆಗೆ ರಂಗ ಸಜ್ಜು; ಶೆಹಬಾಝ್ ಷರೀಫ್ ಆಹ್ವಾನಕ್ಕೆ ಒಪ್ಪಿದ ಟ್ರಂಪ್

ಹೊಸದಿಲ್ಲಿ: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಪಾಕ್ ಪ್ರಧಾನಿ ಶೆಹಬಾಝ್ ಷರೀಫ್ ಅವರ ಆಹ್ವಾನದ ಸ್ಕ್ರೀನ್‌ಶಾಟ್‌ ಅನ್ನು ಮಂಗಳವಾರ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುವ ಮೂಲಕ ಯುದ್ಧವನ್ನು ಕೊನೆಗೊಳಿಸಲು ಇರಾನ್ ಜೊತೆ ಮಾತುಕತೆಗಳು ಪಾಕಿಸ್ತಾನದಲ್ಲಿ ನಡೆಯಬಹುದು ಎಂಬ ಸ್ಪಷ್ಟ ಸೂಚನೆ ನೀಡಿದ್ದಾರೆ. ‘ಅಮೆರಿಕ ಮತ್ತು ಇರಾನ್ ಒಪ್ಪಿಗೆಗೆ ಒಳಪಟ್ಟು ಪ್ರಸಕ್ತ ಸಂಘರ್ಷವನ್ನು ನಿಲ್ಲಿಸಲು ಅರ್ಥಪೂರ್ಣ ಮತ್ತು ನಿರ್ಣಾಯಕ ಮಾತುಕತೆಗಳಿಗೆ ಆತಿಥ್ಯ ಒದಗಿಸಲು ಪಾಕಿಸ್ತಾನವು ಸಿದ್ಧವಾಗಿದೆ ಮತ್ತು ಇದು ನಮಗೆ ಗೌರವವೂ ಆಗಿರಲಿದೆ’ ಎಂದು ಷರೀಫ್ ಮಂಗಳವಾರ ಸಂಜೆ ಎಕ್ಸ್ ಪೋಸ್ಟ್‌ನಲ್ಲಿ ಹೇಳಿದ್ದಾರೆ. ಈ ಪೋಸ್ಟ್‌ನ ಸ್ಕ್ರೀನ್‌ಶಾಟ್ ಪಡೆದುಕೊಂಡ ಟ್ರಂಪ್ ಒಂದೇ ಗಂಟೆಯೊಳಗೆ ಅದನ್ನು ತನ್ನ ಟ್ರುಥ್ ಸೋಷಿಯಲ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.

ವಾರ್ತಾ ಭಾರತಿ 24 Mar 2026 10:57 pm

ಆದ್ಯತಾ ಪಡಿತರ ಚೀಟಿ ಪಡೆಯಲು ಆದಾಯ ಮಿತಿ ಹೆಚ್ಚಳ ಕುರಿತು ಚರ್ಚೆ : ಕೆ.ಎಚ್.ಮುನಿಯಪ್ಪ

ಬೆಂಗಳೂರು : ಆದ್ಯತಾ ಪಡಿತರ ಚೀಟಿ ಪಡೆಯಲು ಈಗಿರುವ ವಾರ್ಷಿಕ 1.20 ಲಕ್ಷ ರೂ.ಗಳ ಆದಾಯ ಮಿತಿಯನ್ನು 3 ಲಕ್ಷ ರೂ.ಗಳಿಗೆ ಹೆಚ್ಚಳ ಮಾಡುವ ಕುರಿತು ಆಡಳಿತ ಸುಧಾರಣಾ ಆಯೋಗವು ಶಿಫಾರಸ್ಸು ಮಾಡಿದ್ದು, ಈ ಬಗ್ಗೆ ಸರಕಾರದ ಮಟ್ಟದಲ್ಲಿ ಚರ್ಚೆ ನಡೆಸಲಾಗುವುದು ಎಂದು ಆಹಾರ ಸಚಿವ ಕೆ.ಎಚ್.ಮುನಿಯಪ್ಪ ತಿಳಿಸಿದರು. ಮಂಗಳವಾರ ವಿಧಾನಸಭೆಯಲ್ಲಿ ಬಿಜೆಪಿ ಸದಸ್ಯ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಪ್ರಸ್ತಾವಿಸಿದ ವಿಷಯಕ್ಕೆ ಸಂಬಂಧಿಸಿದಂತೆ ಉತ್ತರಿಸಿದ ಅವರು, ದೇಶದಲ್ಲಿ ಕರ್ನಾಟಕವು ಆರ್ಥಿಕ ಪರಿಸ್ಥಿತಿಯಲ್ಲಿ ಎರಡನೆ ಸ್ಥಾನ, ತಲಾ ಆದಾಯದಲ್ಲಿ ಮೊದಲನೆ ಸ್ಥಾನದಲ್ಲಿದ್ದೇವೆ. ಒಟ್ಟಾರೆ ಜನಸಂಖ್ಯೆಯ ಶೇ.73ರಷ್ಟು ಮಂದಿ ಪಡಿತರ ಚೀಟಿಯನ್ನು ಪಡೆದಿದ್ದಾರೆ ಎಂದು ತಿಳಿಸಿದರು. ರಾಜ್ಯದಲ್ಲಿ ಒಟ್ಟು 1.24 ಕೋಟಿ ಪಡಿತರ ಕಾರ್ಡುಗಳಿದ್ದು, 4.50 ಕೋಟಿ ಜನಸಂಖ್ಯೆಯನ್ನು ಒಳಗೊಳ್ಳುತ್ತದೆ. ತಮಿಳುನಾಡು, ಕೇರಳ, ಆಂಧ್ರಪ್ರದೇಶ, ತೆಲಂಗಾಣದಲ್ಲಿ ಬಿಪಿಎಲ್ ಕಾರ್ಡುಗಳ ಪ್ರಮಾಣ ಶೇ.50 ದಾಟಿಲ್ಲ. ಆದರೆ, ನಮ್ಮ ರಾಜ್ಯದಲ್ಲಿ ಶೇ.73ರಷ್ಟು ಮಂದಿ ಬಿಪಿಎಲ್ ಕಾರ್ಡು ಹೊಂದಿದ್ದಾರೆ ಎಂದು ಅವರು ಹೇಳಿದರು. ಬೆಂಗಳೂರು ನಗರದಲ್ಲಿ ಶೇ.15ರಷ್ಟು ಮಂದಿಗೆ ಮಾತ್ರ ಬಿಪಿಎಲ್ ಕಾರ್ಡು ಸಿಕ್ಕಿದೆ ಎಂದು ಅಶ್ವತ್ಥ ನಾರಾಯಣ ಗಮನ ಸೆಳೆದಿದ್ದಾರೆ. ಈ ಬಗ್ಗೆ ಎರಡು ತಿಂಗಳಲ್ಲಿ ಸಮೀಕ್ಷೆ ಮಾಡಿ, ಸರಕಾರಕ್ಕೆ ವರದಿ ಸಲ್ಲಿಸಿ, ಅರ್ಹರಿಗೆ ಬಿಪಿಎಲ್ ಕಾರ್ಡು ಸಿಗುವಂತೆ ಹಾಗೂ ಆದಾಯ ಮಿತಿಯನ್ನು ಹೆಚ್ಚಳ ಮಾಡುವ ಸಂಬಂಧ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಮುನಿಯಪ್ಪ ತಿಳಿಸಿದರು. ಶೇ.73ರಷ್ಟು ಮಂದಿ ಬಿಪಿಎಲ್ ಕಾರ್ಡು ಪಡೆದಿದ್ದರೂ, ಇನ್ನೂ ನಮಗೆ ಬಿಪಿಎಲ್ ಕಾರ್ಡು ಬೇಕು ಎಂದು ಅರ್ಜಿಗಳು ಬರುತ್ತಿವೆ. ಕೇಂದ್ರ ಸರಕಾರದ ಸಮೀಕ್ಷೆ ಪ್ರಕಾರ ರಾಜ್ಯದಲ್ಲಿ 7.76 ಲಕ್ಷ ಕಾರ್ಡುಗಳು ಬಿಪಿಎಲ್ ವ್ಯಾಪ್ತಿಗೆ ಬರುವುದಿಲ್ಲ, ಅದನ್ನು ಎಪಿಎಲ್‍ಗೆ ಬದಲಾಯಿಸುವಂತೆ ತಿಳಿಸಲಾಗಿದೆ. ಈ ಸಂಬಂಧ ನಾವು ಕೇಂದ್ರ ಸರಕಾರದ ಮಾರ್ಗಸೂಚಿಯಂತೆ ಪರಿಶೀಲನೆ ಮಾಡುತ್ತಿದ್ದೇವೆ ಎಂದು ಅವರು ಹೇಳಿದರು. ವಿಷಯ ಪ್ರಸ್ತಾವ ಮಾಡಿ ಮಾತನಾಡಿದ ಅಶ್ವತ್ಥ ನಾರಾಯಣ, ಬೆಂಗಳೂರಿನಲ್ಲಿ 1.50 ಕೋಟಿ ಜನ ಸಂಖ್ಯೆಯಿದೆ. ಈ ಪೈಕಿ 24.90 ಲಕ್ಷ ಜನರಿಗೆ ಮಾತ್ರ ಬಿಪಿಎಲ್ ಕಾರ್ಡು ಇದೆ. ಆಹಾರ ಭದ್ರತಾ ಕಾಯ್ದೆಯ ಮಾನದಂಡ ಪ್ರಕಾರ ನಗರ ಪ್ರದೇಶದಲ್ಲಿ ಶೇ.50 ಹಾಗೂ ಗ್ರಾಮೀಣ ಪ್ರದೇಶದ ಶೇ.75ರಷ್ಟು ಮಂದಿಗೆ ಕಾರ್ಡುಗಳನ್ನು ನೀಡಬೇಕು. ಆದರೆ, ಬೆಂಗಳೂರಿನಲ್ಲಿ ಶೇ.15ರಷ್ಟು ದಾಟಿಲ್ಲ ಎಂದು ತಿಳಿಸಿದರು. ಬೆಂಗಳೂರಿನಲ್ಲಿ ಮಾಸಿಕ 20 ಸಾವಿರ ರೂ.ಗಿಂತ ಕಡಿಮೆ ಸಂಬಳ ಪಡೆಯುವ ಶೇ.60-70ರಷ್ಟು ಜನರಿದ್ದಾರೆ. ಇವರ ಜೀವನ ಹೇಗೆ ನಡೆಯಲು ಸಾಧ್ಯ. 200 ರೂ. ಸೀರೆ ಕೊಡುವುದಾಗಿ ಘೋಷಿಸಿ ನೋಡಿ, ಸಾವಿರಾರು ಮಂದಿ ಬಂದು ನಿಂತಿರುತ್ತಾರೆ. ಅವರ ಪರಿಸ್ಥಿತಿ ಹೇಗಿರಬಹುದು ಎಂದು ಆಲೋಚಿಸಿ. ಆಶ್ರಯ ಯೋಜನೆಯಡಿ ನಗರ ಪ್ರದೇಶದಲ್ಲಿ ಮನೆಗಳನ್ನು ಕೊಡಲು ಆಗಿಲ್ಲ. ಮುಖ್ಯಮಂತ್ರಿಗಳ ಒಂದು ಲಕ್ಷ ಬಹುಮಹಡಿ ಮನೆ ಯೋಜನೆಯಡಿ ಕೇವಲ 13 ಸಾವಿರ ಮಂದಿ ಮಾತ್ರ 50 ಸಾವಿರ ರೂ.ಗಳನ್ನು ಕಟ್ಟಿದ್ದಾರೆ ಎಂದರೆ ಅವರ ಆರ್ಥಿಕ ಪರಿಸ್ಥಿತಿ ಹೇಗಿರಬಹುದು. ಆದುದರಿಂದ, ಬಿಪಿಎಲ್ ಕಾರ್ಡು ಪಡೆಯಲು ಆದಾಯ ಮಿತಿ ಹೆಚ್ಚಳ ಮಾಡಬೇಕು ಎಂದು ಅವರು ತಿಳಿಸಿದರು.  

ವಾರ್ತಾ ಭಾರತಿ 24 Mar 2026 10:57 pm

ಉಕ್ರೇನ್ ಮೇಲೆ ಕ್ಷಿಪಣಿ, ಡ್ರೋನ್ ಮಳೆಗರೆದ ರಶ್ಯ: 5 ಮಂದಿ ಸಾವು

ಕೀವ್: ಮಂಗಳವಾರ ಉಕ್ರೇನ್‍ನಾದ್ಯಂತ ರಶ್ಯ ನಡೆಸಿದ ಡ್ರೋನ್ ಮತ್ತು ಕ್ಷಿಪಣಿ ದಾಳಿಯಲ್ಲಿ 5 ಮಂದಿ ಸಾವನ್ನಪ್ಪಿದ್ದು 25ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ. ರಶ್ಯವು ಸೋಮವಾರ ತಡರಾತ್ರಿಯಿಂದ ಮಂಗಳವಾರ ಬೆಳಗ್ಗಿನವರೆಗೆ 390 ಡ್ರೋನ್‍ಗಳನ್ನು ಹಾಗೂ ಬ್ಯಾಲಿಸ್ಟಿಕ್, ಕ್ರೂಸ್ ಇತ್ಯಾದಿ 34 ಕ್ಷಿಪಣಿಗಳನ್ನು ಪ್ರಯೋಗಿಸಿದೆ. ಇದರಲ್ಲಿ 365 ಡ್ರೋನ್‍ಗಳು ಹಾಗೂ 25 ಕ್ಷಿಪಣಿಗಳನ್ನು ತುಂಡರಿಸಲಾಗಿದೆ ಎಂದು ಉಕ್ರೇನ್‍ನ ವಾಯುಪಡೆ ಹೇಳಿದೆ. ದಕ್ಷಿಣದ ಝಪೋರಿಝಿಯಾ ನಗರದಲ್ಲಿ ಹೆಚ್ಚಿನ ನಾಶ-ನಷ್ಟ ಸಂಭವಿಸಿದೆ. ಹಲವು ಬಹುಮಹಡಿ ಕಟ್ಟಡಗಳಿಗೆ ತೀವ್ರ ಹಾನಿಯಾಗಿದ್ದು ಬೆಂಕಿಯನ್ನು ನಿಯಂತ್ರಿಸುವ ಕಾರ್ಯಾಚರಣೆ ಮುಂದುವರಿದಿರುವುದಾಗಿ ಎಎಫ್‍ಪಿ ಸುದ್ದಿಸಂಸ್ಥೆ ವರದಿ ಮಾಡಿದೆ. ಈ ಮಧ್ಯೆ, ಉಕ್ರೇನ್‍ನ ಈಶಾನ್ಯ ಖಾರ್ಕಿವ್ ಪ್ರದೇಶದಲ್ಲಿ ಆಯಕಟ್ಟಿನ ಗ್ರಾಮವನ್ನು ವಶಪಡಿಸಿಕೊಂಡಿರುವುದಾಗಿ ರಶ್ಯದ ಸೇನೆ ಮಂಗಳವಾರ ಹೇಳಿದೆ.

ವಾರ್ತಾ ಭಾರತಿ 24 Mar 2026 10:54 pm

ಶೈಕ್ಷಣಿಕ ಸಂಸ್ಥೆಯ ಸಕ್ರಮಾತಿ ವಿಧೇಯಕ ವಿಧಾನಸಭೆಯಲ್ಲಿ ಅಂಗೀಕಾರ

ಬೆಂಗಳೂರು : 2026ನೆ ಸಾಲಿನ ಕರ್ನಾಟಕ ಸರಕಾರಿ ಶೈಕ್ಷಣಿಕ ಸಂಸ್ಥೆಯ ಭೂಮಿಗಳ (ರಕ್ಷಣೆ ಮತ್ತು ಸಕ್ರಮಾತಿ) ವಿಧೇಯಕವು ವಿಧಾನಸಭೆಯಲ್ಲಿ ಸರ್ವಾನುಮತದಿಂದ ಅಂಗೀಕಾರವಾಯಿತು. ಮಂಗಳವಾರ ವಿಧಾನಸಭೆಯ ಶಾಸನ ರಚನೆ ಕಲಾಪದಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್. ಮಧು ಬಂಗಾರಪ್ಪ ಅವರು ವಿಧೇಯಕವನ್ನು ಪರ್ಯಾಲೋಚಿಸಿ ಅನುಮೋದಿಸಬೇಕೆಂದು ಕೋರಿ ವಿಧೇಯಕದ ಉದ್ದೇಶಗಳನ್ನು ಸದನದಲ್ಲಿ ವಿವರಿಸಿದರು. ಈ ವಿಧೇಯಕವು ಕರ್ನಾಟಕದ ಹಲವು ಭಾಗಗಳಲ್ಲಿ ಸರಕಾರಿ ಶೈಕ್ಷಣಿಕ ಸಂಸ್ಥೆಗಳು ಹಲವು ಬಾರಿ ಔಪಚಾರಿಕ ದಸ್ತಾವೇಜು ಅಥವಾ ನೋಂದಾಯಿತ ವರ್ಗಾವಣೆಯಿಲ್ಲದೆ ವ್ಯಕ್ತಿಗಳು, ಕುಟುಂಬಗಳು ಅಥವಾ ಸಮುದಾಯ ಸಂಸ್ಥೆಗಳು ದಾನಮಾಡಿದ ಭೂಮಿಗಳ ಮೇಲೆ ಸ್ಥಾಪಿಸಲಾಗಿದೆ. ಸದ್ಬಾವನೆಯಿಂದ ಮಾಡಲಾದ ಈ ದಾನಗಳು ಹಲವು ಪೀಳಿಗೆಗಳ ಮಕ್ಕಳಿಗೆ ಶಿಕ್ಷಣ ಸೇವೆ ಸಲ್ಲಿಸಿದ್ದು, ಅತ್ಯಾವಶ್ಯಕ ಶೈಕ್ಷಣಿಕ ಮೂಲಭೂತ ಸೌಕರ್ಯದೊಂದಿಗೆ ರಾಜ್ಯದ ಬೆಳವಣಿಗೆಯನ್ನು ಸಾಧ್ಯವಾಗಿಸಿವೆ. ದಸ್ತಾವೇಜುಗಳ ತಾಂತ್ರಿಕ ನ್ಯೂನ್ಯತೆಗಳ ಆಧಾರದ ಮೇಲೆ, ಉತ್ತರಾಧಿಕಾರಿಗಳು ಅಥವಾ ಕಾನೂನು ಬದ್ಧ ವಾರಸುದಾರರು ಇತ್ತೀಚೆಗೆ ಕ್ಲೇಮುಗಳನ್ನು ಮಾಡುತ್ತಿದ್ದು, ಅವರ ವ್ಯಾಜ್ಯಗಳು ನಿರ್ಮಾಣ ಸ್ಥಗಿತಗೊಳ್ಳಲು ಮತ್ತು ಭೂ-ಸ್ಥಿತಿಗತಿಗೆ ಅಸ್ಥಿರತೆಗೆ ಕಾರಣವಾಗಿವೆ ಎಂದು ಸಚಿವರು ಉಲ್ಲೇಖಿಸಿದರು. ಪ್ರಸ್ತಾವಿತ ವಿಧೇಯಕವು ಸಿಂಧುವಾದ ಹಕ್ಕುಗಳನ್ನು ನ್ಯಾಯಸಮ್ಮತವಲ್ಲದ ರೀತಿಯಲ್ಲಿ ಶಮನಗೊಳಿಸಿ ನೈಜ ಕ್ಲೇಮುಗಳನ್ನು ಮಾಡಲು ಸೀಮಿತ ಗವಾಕ್ಷಿ ಮತ್ತು ಅಪೀಲಿಗಾಗಿ ವೇದಿಕೆಯನ್ನು ಒಳಗೊಂಡಂತೆ ಪ್ರಕ್ರಿಯಾತ್ಮಕ ರಕ್ಷಣೆಯನ್ನು ಉಪಬಂಧಿಸುವುದು. ಜತೆಗೆ, ಇದು ವೈಯಕ್ತಿಕ ಸ್ವತ್ತಿನ ಹಕ್ಕುಗಳೊಂದಿಗೆ ದೀರ್ಘಕಾಲಿಕ ಸಾರ್ವಜನಿಕ ಹಿತಾಸಕ್ತಿಯನ್ನು ಸರಿದೂಗಿಸುವ ಗುರಿಯನ್ನು ಹೊಂದಿದ್ದು, ಶಿಕ್ಷಣದ ಮೂಲಭೂತ ಹಕ್ಕನ್ನು ಎತ್ತಿಹಿಡಿಯುವುದು ಹಾಗೂ ಸರ್ಕಾರಿ ಶೈಕ್ಷಣಿಕ ಮೂಲಸೌಕರ್ಯದ ಕಾನೂನು ಖಚಿತತೆಯನ್ನು ಸಂರಕ್ಷಿಸುವುದು ವಿಧೇಯಕದ ಉದ್ದೇಶವಾಗಿದೆ ಎಂದು ಸಚಿವರು ತಿಳಿಸಿದರು. ವಿರೋಧಪಕ್ಷದ ನಾಯಕ ಆರ್.ಅಶೋಕ್, ಜೆಡಿಎಸ್ ಸದಸ್ಯ ಜಿ.ಟಿ.ದೇವೇಗೌಡ ಹಾಗೂ ಇನ್ನಿತರ ಸದಸ್ಯರು ವಿಧೇಯಕವನ್ನು ಸ್ವಾಗತಿಸಿದರು. ಬಳಿಕ ವಿಧೇಯಕವು ಸರ್ವಾನುಮತದಿಂದ ಅಂಗೀಕರಿಸಲ್ಪಟ್ಟಿತು.  

ವಾರ್ತಾ ಭಾರತಿ 24 Mar 2026 10:53 pm

ರಾಜ್ಯದಲ್ಲಿ 346 ಇಂದಿರಾ ಕ್ಯಾಂಟೀನ್ ಕಾರ್ಯನಿರ್ವಹಣೆ : ಸಚಿವ ರಹೀಂ ಖಾನ್

‘22 ಕ್ಯಾಂಟೀನ್‍ಗಳ ಉದ್ಘಾಟನೆಗೆ ಬಾಕಿ, 15 ನಿರ್ಮಾಣ ಕಾರ್ಯ ಪ್ರಗತಿ’

ವಾರ್ತಾ ಭಾರತಿ 24 Mar 2026 10:51 pm

ಶಿಕ್ಷಕರ ವರ್ಗಾವಣೆ ಕಾಯಿದೆಗೆ ರಾಜ್ಯ ಸರ್ಕಾರ ಮೇಜರ್‌ ಸರ್ಜರಿ: 12 ವರ್ಷ ಒಂದೇ ಕಡೆ ಸೇವೆ ಕಡ್ಡಾಯ; ಹಲವು ಹೊಸ ನಿಯಮಗಳು

ಕರ್ನಾಟಕ ಸರ್ಕಾರವು ಶಿಕ್ಷಕರ ವರ್ಗಾವಣೆ ಸ್ವರೂಪದಲ್ಲಿ ಮಹತ್ವದ ಬದಲಾವಣೆ ತಂದಿದೆ. ಮಹತ್ವದ ವಿಧೇಯಕವು ವಿಧಾನಸಭೆಯಲ್ಲಿ ಅನುಮೋದನೆಯಾಗಿದೆ. ಮಹಿಳಾ ಶಿಕ್ಷಕಿಯರು ಮಗು ಪಾಲನೆಗಾಗಿ ತವರು ಅಥವಾ ಗಂಡನ ಊರಲ್ಲೇ ಕೆಲಸ ಮಾಡಬಹುದು. ಹೆರಿಗೆಯಾದ 5 ವರ್ಷದ ತನಕ ಶಿಕ್ಷಕಿ ಇಚ್ಛಿಸಿದೆಡೆಗೆ ಟ್ರಾನ್ಸ್‌ಫರ್‌, 12 ವರ್ಷ ಒಂದೇ ಕಡೆ ಸೇವೆ ಕಡ್ಡಾಯ,ಕಲ್ಯಾಣ ಸೀಮೆಗೆ 10 ವರ್ಷ ಕಡ್ಡಾಯ, ಶಿಕ್ಷಕರನ್ನು ಇನ್ನು ಮುಂದೆ ಬೋಧಕೇತರ ಕೆಲಸಗಳಿಗೆ ನಿಯೋಜಿಸುವಂತಿಲ್ಲ ಎಂಬ ಹಲವು ಹೊಸ ನಿಯಮಗಳನ್ನು ಜಾರಿಗೆ ತರಲಾಗಿದೆ. ಈ ಕುರಿತ ಸಂಪೂರ್ಣ ವಿವರ ಇಲ್ಲಿದೆ.

ವಿಜಯ ಕರ್ನಾಟಕ 24 Mar 2026 10:50 pm

ಪ್ರಧಾನಿ ಮೋದಿಗೆ ಕರೆ ಮಾಡಿದ ಟ್ರಂಪ್‌: ಶಾಂತಿ ಸ್ಥಾಪನೆಗೆ ಭಾರತದ ಬೆಂಬಲ, ಮಹತ್ವ ಮಾತುಕತೆ

ನವದೆಹಲಿ: ಪಶ್ಚಿಮ ಏಷ್ಯಾದಲ್ಲಿ (West Asia) ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಉದ್ವಿಗ್ನ ಪರಿಸ್ಥಿತಿಯ ನಡುವೆಯೇ ಭಾರತದ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ನಡುವೆ ಮಹತ್ವದ ದೂರವಾಣಿ ಸಂಭಾಷಣೆ ನಡೆದಿದೆ. ಉಭಯ ನಾಯಕರು ಪ್ರಚಲಿತ ವಿದ್ಯಮಾನಗಳ ಕುರಿತು ಸುದೀರ್ಘ ಚರ್ಚೆ ನಡೆಸಿದ್ದು, ಶಾಂತಿ ಸ್ಥಾಪನೆಯ ಅಗತ್ಯತೆಯನ್ನು ಒತ್ತಿ ಹೇಳಿದ್ದಾರೆ. ಈ ಕುರಿತು

ಒನ್ ಇ೦ಡಿಯ 24 Mar 2026 10:50 pm

ಲೆಬನಾನ್, ಗಾಝಾದಲ್ಲಿ ನಾಗರಿಕರನ್ನು ಗುರಿಯಾಗಿಸಿದರೆ ತೀವ್ರ ದಾಳಿ: ಇಸ್ರೇಲ್‍ಗೆ ಇರಾನ್ ಎಚ್ಚರಿಕೆ

ಟೆಹ್ರಾನ್: ಲೆಬನಾನ್ ಮತ್ತು ಗಾಝಾದಲ್ಲಿ ನಾಗರಿಕರ ಮೇಲೆ ದಾಳಿ ಮುಂದುವರಿದರೆ ಇಸ್ರೇಲ್ ಮೇಲೆ ಡ್ರೋನ್ ಹಾಗೂ ಕ್ಷಿಪಣಿಗಳ ಸುರಿಮಳೆಗರೆಯುವುದಾಗಿ ಇರಾನ್‍ನ ಇಸ್ಲಾಮಿಕ್ ರೆವೊಲ್ಯುಷನರಿ ಗಾರ್ಡ್ ಕಾಪ್ರ್ಸ್(IRGC) ಮಂಗಳವಾರ ಎಚ್ಚರಿಕೆ ನೀಡಿದೆ. ʼಇಸ್ರೇಲ್ ಆಡಳಿತದ ಕ್ರಿಮಿನಲ್ ಸೇನೆಗೆ ನಾವು ಎಚ್ಚರಿಕೆ ನೀಡುತ್ತಿದ್ದೇವೆ: ಲೆಬನಾನ್ ಮತ್ತು ಪೆಲೆಸ್ತೀನಿಯನ್ ನಾಗರಿಕರ ವಿರುದ್ಧದ ಅಪರಾಧ ಮುಂದುವರಿದರೆ, ಆಕ್ರಮಿತ ಫೆಲೆಸ್ತೀನಿಯನ್ ಪ್ರದೇಶ, ಗಾಝಾ ಪಟ್ಟಿಯಲ್ಲಿರುವ ಶತ್ರು ಪಡೆಗಳ ನೆಲೆಗಳು ಭಾರೀ ಕ್ಷಿಪಣಿ ಮತ್ತು ಡ್ರೋನ್ ದಾಳಿಗೆ ಗುರಿಯಾಗಲಿವೆ' ಎಂದು IRGC ಹೇಳಿಕೆ ತಿಳಿಸಿದೆ. ಸೋಮವಾರ ತಡರಾತ್ರಿ ಲೆಬನಾನ್‍ನ ಮೇಲೆ ಇಸ್ರೇಲ್ ನಡೆಸಿದ ದಾಳಿಯಲ್ಲಿ ಕನಿಷ್ಠ 8 ಮಂದಿ ಸಾವನ್ನಪ್ಪಿದ್ದಾರೆ. ಎಚ್ಚರಿಕೆ ನೀಡದೆ ಜನವಸತಿ ಪ್ರದೇಶದ ಮೇಲೆ ಇಸ್ರೇಲ್ ಪಡೆ ದಾಳಿ ನಡೆಸಿದೆ ಎಂದು ಲೆಬನಾನ್‍ನ ಆರೋಗ್ಯ ಇಲಾಖೆ ಹೇಳಿದೆ. ಇರಾನ್‍ನ ಇಂಧನ ಸೌಲಭ್ಯಗಳ ಮೇಲೆ ದಾಳಿ: ಇರಾನ್‍ನ ಇಸ್ಫಹಾನ್ ಪ್ರಾಂತ ಮತ್ತು ನೈಋತ್ಯ ನಗರವಾದ ಖೊರ್ರಮ್‍ಶಹರ್‍ನಲ್ಲಿ ಇಂಧನ ಸಂಬಂಧಿತ ಮೂಲಸೌಕರ್ಯಗಳ ಮೇಲೆ ದಾಳಿ ನಡೆದಿರುವುದಾಗಿ ಇರಾನ್‍ನ ಫಾರ್ಸ್ ಸುದ್ದಿಸಂಸ್ಥೆ ಮಂಗಳವಾರ ವರದಿ ಮಾಡಿದೆ. ಇಸ್ಫಹಾನ್‍ನಲ್ಲಿ ಅನಿಲ(ಗ್ಯಾಸ್) ಮೂಲಸೌಕರ್ಯ ಹಾಗೂ ಸಮೀಪದ ಮನೆಗಳಿಗೆ ಹಾನಿಯಾಗಿದೆ. ಖೊರ್ರಮ್‍ಶಹರ್‍ನಲ್ಲಿ ವಿದ್ಯುತ್ ಸ್ಥಾವರಕ್ಕೆ ಸಂಪರ್ಕ ಕಲ್ಪಿಸುವ ಗ್ಯಾಸ್ ಪೈಪ್‍ಲೈನ್‍ನ ಸಮೀಪ ದಾಳಿ ನಡೆದಿದೆ. ಯಾವುದೇ ಸಾವು-ನೋವಿನ ಮಾಹಿತಿಯಿಲ್ಲ ಎಂದು ವರದಿ ಹೇಳಿದೆ.

ವಾರ್ತಾ ಭಾರತಿ 24 Mar 2026 10:47 pm

ಕರ್ನಾಟಕ ಪವರ್ ಲಿಫ್ಟಿಂಗ್: ಪಶ್ಚಿಮ ಬಂಗಾಳ ಮೇಲುಗೈ; ಬೆಸ್ಟ್ ಲಿಫ್ಟರ್ ಆಗಿ ಬಿಸ್ವಜಿತ್ ಡೇ

ಮಂಗಳೂರು, ಮಾ.24: ಕರ್ನಾಟಕ ಪವರ್ ಲಿಫ್ಟಿಂಗ್ ಅಸೋಸಿಯೇಶನ್ ಆಶ್ರಯದಲ್ಲಿ ಕಶಾರ್ಪ್ ಫಿಟ್ನೆಸ್ ವತಿಯಿಂದ ಮಂಗಳೂರಿನ ಟಿ.ವಿ.ರಮಣ ಪೈ ಸಭಾಂಗಣದಲ್ಲಿ ಆರಂಭಗೊಂಡ ಐದು ದಿನಗಳ ರಾಷ್ಟ್ರ ಮಟ್ಟದ ಸೀನಿಯರ್ ಕ್ಲಾಸ್ಲಿಕ್ ಪವರ್ ಲಿಫ್ಟಿಂಗ್ ಚಾಂಪಿಯನ್ ಶಿಪ್‌ನ ಮೊದಲ ದಿನವಾಗಿರುವ ಮಂಗಳವಾರ 59 ಕೆಜಿ ಮುಕ್ತ ವಿಭಾಗದಲ್ಲಿ ಪಶ್ಚಿಮ ಬಂಗಾಳದ ಬಿಸ್ವಜಿತ್ ಡೇ (ಒಟ್ಟು 572.5 ಕೆ.ಜಿ ) ಬೆಸ್ಟ್ ಲಿಫ್ಟರ್ ಆಗಿ ಚಿನ್ನ ಜಯಿಸಿದ್ದಾರೆ. ಮಹಾರಾಷ್ಟ್ರದ ಯದ್ನೇಶ್ ಕವಾಲೆ (560.0ಕೆ.ಜಿ) ದ್ವಿತೀಯ ಮತ್ತು ಜಾರ್ಖಡ್‌ನ ಫಲ್ಗುಣಿ ಬರನ್ ಘೋಷ್ ( 542.5 ಕೆ.ಜಿ) ತೃತೀಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು. ಟೀಮ್ ಚಾಂಪಿಯನ್‌ಶಿಪ್‌ನಲ್ಲಿ ಪಶ್ಚಿಮ ಬಂಗಾಳ (13ಪಾಯಿಂಟ್) ಅಗ್ರಸ್ಥಾನ, ಮಹಾರಾಷ್ಟ್ರ (12 ಪಾಯಿಂಟ್) ದ್ವಿತೀಯ ಮತ್ತು ಜಾರ್ಖಂಡ್ (8 ಪಾಯಿಂಟ್ಸ್ ) ತೃತೀಯ ಸ್ಥಾನವನ್ನು ಪಡೆದಿದೆ. ಪವರ್ ಲಿಫ್ಟಿಂಗ್ ಕೂಟವನ್ನು ಉದ್ಘಾಟಿಸಿದ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ಅವರು ಮಾತನಾಡಿ, ಭಾರತದಲ್ಲಿ ಕ್ರಿಕೆಟ್ ಜೊತೆ ಇತರೇ ಕ್ರೀಡೆಗಳು ಕೂಡ ಮುನ್ನೆಲೆಗೆ ಬರುತ್ತಿದೆ. ಪವರ್‌ಲಿಫ್ಟಿಂಗ್, ಈಜು, ಬ್ಯಾಡ್ಮಿಂಟನ್, ಕಬಡ್ಡಿಯಂತಹ ಕ್ರೀಡೆಗಳು ಇತ್ತೀಚಿನ ದಿನಗಳಲ್ಲಿ ಪ್ರಸಿದ್ದಿ ಪಡೆಯುತ್ತಿದೆ ಎಂದರು. ಅಸೋಸಿಯೇಶನ್ ಜನರಲ್ ಮ್ಯಾನೇಜರ್ ಪ್ರದೀಪ್ ಕುಮಾರ್ , ಮಂಗಳೂರು ವಿಭಾಗದ ಸಹಾಯಕ ಕಾರ್ಮಿಕ ಆಯುಕ್ತೆ ನಾಝಿಯ ಸುಲ್ತಾನ್, ಎಂಆರ್‌ಪಿಎಲ್ ಗ್ರೂಪ್ ಜನರಲ್ ಮ್ಯಾನೇಜರ್ ಕೃಷ್ಣ ಹೆಗ್ಡೆ ಮಿಯಾರ್, ಉದ್ಯಮಿಗಳಾದ ರಘು ಶರ್ಮ, ಮುಕುಂದ್ ಕಾಮತ್, ಕಶಾರ್ಪ್ ಫಿಟ್ನೆಸ್ ನಿರ್ದೇಶಕ ಆನಂದ್ ಪ್ರಭು, ಝಿಹಾ ಎಚ್.ಎಂ., ಪವರ್ ಲಿಫ್ಟಿಂಗ್ ಇಂಡಿಯ ಕಾರ್ಯದರ್ಶಿ ಪಿ.ಜೆ. ಜೋಸೆಫ್, ಆಸ್ಟ್ರೇಲಿಯ ಪವರ್ ಲಿಫ್ಟಿಂಗ್ ಕೋಚ್ ಗ್ಯಾರಿ ವಿಲಿಯಮ್ಸ್, ಮಾಜಿ ಮೇಯರ್ ಪುರಂದರ ದಾಸ್ ಕೂಳೂರು, ಕೂಟದ ನಿರ್ದೇಶಕ, ಅಸೋಸಿಯೇಶನ್ ಪ್ರಧಾನ ಕಾರ್ಯದರ್ಶಿ ಸತೀಶ್ ಕುಮಾರ್ ಕುದ್ರೋಳಿ, ಅಸೋಸಿಯೇಶನ್ ದ.ಕ. ಜಿಲ್ಲಾಧ್ಯಕ್ಷ ಉಮೇಶ್ ಗಟ್ಟಿ, ಕಾರ್ಯದರ್ಶಿ ಮಧುಚಂದ್ರ ಎಂ., ಕರ್ನಾಟಕ ಪವರ್ ಲಿಫ್ಟಿಂಗ್ ಅಸೋಸಿಯೇಶನ್ ಖಜಾಂಚಿ ಜಯರಾಮ ಶೆಟ್ಟಿಗಾರ್, ಕಶಾರ್ಪ್ ಫಿಟ್ನೆಸ್ ನಿರ್ದೇಶಕಿ ಡಾ.ಸಾವಿಲ್ ಉಚ್ಚಿಲ್ ಉಪಸ್ಥಿತರಿದ್ದರು. ಐದು ದಿನಗಳ ಕೂಟದಲ್ಲಿ ದೇಶದ ವಿವಿಧ ರಾಜ್ಯಗಳಿಂದ 300ಕ್ಕೂ ಅಧಿಕ ಪುರುಷ ಮತ್ತು ಮಹಿಳಾ ಪವರ್ ಲಿಫ್ಟರ್ ಮತ್ತು 100ಕ್ಕೂ ಹೆಚ್ಚು ತೀರ್ಪುಗಾರರು ಪಾಲ್ಗೊಳ್ಳುತ್ತಿದ್ದಾರೆ.     

ವಾರ್ತಾ ಭಾರತಿ 24 Mar 2026 10:45 pm

ಇರಾನ್ ಮೇಲಿನ ದಾಳಿ ಮುಂದುವರಿಯಲಿದೆ, ವಿದ್ಯುತ್ ಸ್ಥಾವರಗಳ ಮೇಲಿನ ದಾಳಿಗೆ ಮಾತ್ರ ವಿರಾಮ: ಅಮೆರಿಕದ ಅಧಿಕಾರಿಗಳ ಪ್ರತಿಪಾದನೆ

ವಾಶಿಂಗ್ಟನ್: ಇರಾನ್‍ ಮೇಲಿನ ದಾಳಿಯನ್ನು ಅಮೆರಿಕ ಮುಂದುವರಿಸಲಿದೆ. ವಿರಾಮವು ವಿದ್ಯುತ್ ಸ್ಥಾವರಗಳ ಮೇಲಿನ ದಾಳಿಗೆ ಮಾತ್ರ ಅನ್ವಯಿಸುತ್ತದೆ ಎಂದು ಅಮೆರಿಕದ ಅಧಿಕಾರಿಗಳನ್ನು ಉಲ್ಲೇಖಿಸಿ `ಸೆಮಫೋರ್ ನ್ಯೂಸ್' ವರದಿ ಮಾಡಿದೆ. ಇರಾನ್‍ನ ವಿದ್ಯುತ್ ಸ್ಥಾವರಗಳ ಮೇಲಿನ ದಾಳಿಗೆ ಐದು ದಿನ ವಿರಾಮ ನೀಡುವುದಾಗಿ ಸೋಮವಾರ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದರು. `ಈ ವಿರಾಮ ಕೇವಲ ವಿದ್ಯುತ್ ಸ್ಥಾವರಗಳ ಮೇಲಿನ ದಾಳಿಗೆ ಮಾತ್ರ ಅನ್ವಯಿಸುತ್ತದೆ. ಮಿಲಿಟರಿ ತಾಣಗಳು, ನೌಕಾಪಡೆ, ಬ್ಯಾಲಿಸ್ಟಿಕ್ ಕ್ಷಿಪಣಿಗಳು, ರಕ್ಷಣಾ ಕೈಗಾರಿಕಾ ನೆಲೆಗಳ ಮೇಲಿನ ದಾಳಿ ಮುಂದುವರಿಯುತ್ತದೆ ಎಂದು ವರದಿ ಹೇಳಿದೆ. ಅಮೆರಿಕ ಮತ್ತು ಇರಾನ್ ನಡುವಿನ ಮಾತುಕತೆಯಲ್ಲಿ ಇಸ್ರೇಲ್ ಭಾಗಿಯಾಗುವುದಿಲ್ಲ ಎಂದೂ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ವಾರ್ತಾ ಭಾರತಿ 24 Mar 2026 10:44 pm

ಮುಡಾ ಹಗರಣ; ಬಿ ವರದಿ ಅಂಗೀಕರಿಸಿದ್ದ ವಿಶೇಷ‌ ನ್ಯಾಯಾಲಯದ ಕ್ರಮ ಪ್ರಶ್ನಿಸಿ ಹೈಕೋರ್ಟ್‌ಗೆ ರಿಟ್ ಅರ್ಜಿ

ಬೆಂಗಳೂರು : ಮುಡಾ ನಿವೇಶನಗಳ ಅಕ್ರಮ ಹಂಚಿಕೆ ಆರೋಪ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತಿತರರ ವಿರುದ್ಧ ಲೋಕಾಯುಕ್ತ ಪೊಲೀಸರು ಸಲ್ಲಿಸಿದ ಬಿ ವರದಿ ಅಂಗೀಕರಿಸಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ಕ್ರಮ ಪ್ರಶ್ನಿಸಿ ಪ್ರಕರಣದ ಖಾಸಗಿ ದೂರುದಾರ ಸ್ನೇಹಮಯಿ ಕೃಷ್ಣ ಹೈಕೋರ್ಟ್‌‌ಗೆ ರಿಟ್ ಅರ್ಜಿ ಸಲ್ಲಿಸಿದ್ದಾರೆ. ಪ್ರಕರಣದ ತನಿಖೆ ನಡೆಸಿ ಮೈಸೂರು ಲೋಕಾಯುಕ್ತ ಪೊಲೀಸ್‌ ವರಿಷ್ಠಾಧಿಕಾರಿ 2025ರ ಫೆಬ್ರವರಿ 12ರಂದು ಸಲ್ಲಿಸಿದ್ದ ಬಿ ವರದಿಯನ್ನು ಅಂಗೀಕರಿಸಿ ವಿಶೇಷ‌‌ ನ್ಯಾಯಾಲಯ 2026ರ ಜನವರಿ 28ರಂದು ಆದೇಶ ಹೊರಡಿಸಿದೆ. ಆದ್ದರಿಂದ, ಲೋಕಾಯುಕ್ತ ಪೊಲೀಸರು ಸಲ್ಲಿಸಿರಿವ ಬಿ ವರದಿಯನ್ನು ಪಡೆದು ಪರಿಶೀಲಿಸಬೇಕು. ವರದಿ ಅಂಗೀಕರಿಸಿದ ವಿಶೇಷ ನ್ಯಾಯಾಲಯದ ಆದೇಶ ರದ್ದುಪಡಿಸಬೇಕು. ಜತೆಗೆ, ಪ್ರಕರಣದ ತ‌ನಿಖೆಯನ್ನು ಸ್ವತಂತ್ರ ತನಿಖಾ ಸಂಸ್ಥೆಗೆ ವರ್ಗಾಯಿಸಬೇಕು ಹಾಗೂ ತನಿಖೆ ನಡೆಸಿ ಹೊಸದಾಗಿ ವರದಿ ಸಲ್ಲಿಸಲು ಸ್ವತಂತ್ರ ತನಿಖಾ ಸಂಸ್ಥೆಗೆ ನಿರ್ದೇಶಿಸಬೇಕು ಎಂದು ಸ್ನೇಹಮಯಿ ಕೃಷ್ಣ ಮನವಿ ಮಾಡಿದ್ದಾರೆ‌ ಅರ್ಜಿಯಲ್ಲಿ ಮೈಸೂರು ಜಿಲ್ಲಾ ಲೋಕಾಯುಕ್ತದ ಪೊಲೀಸ್‌ ಅಧೀಕ್ಷಕರು, ಮುಖ್ಯಮಂತ್ರಿ ಸಿದ್ದರಾಮಯ್ಯ, ಅವರ ಪತ್ನಿ ಬಿ.ಎಂ. ಪಾರ್ವತಿ, ಬಾವಮೈದ ಮಲ್ಲಿಕಾರ್ಜುನ ಸ್ವಾಮಿ, ವಿವಾದಿತ ಜಮೀನಿನ ಮೂಲ ಮಾಲೀಕ ಜೆ. ದೇವರಾಜು, ಮುಡಾ ಮಾಜಿ ಆಯುಕ್ತ ಜಿ.ಟಿ. ದಿನೇಶ್‌ ಕುಮಾರ್‌ ಮತ್ತು ಜಾರಿ ನಿರ್ದೇಶನಾಲಯದ ಸಹಾಯಕ ನಿರ್ದೇಶಕರನ್ನು ಪ್ರತಿವಾದಿಗಳನ್ನಾಗಿಸಲಾಗಿದ್ದು, ಅರ್ಜಿ ಇನ್ನಷ್ಟೇ ನ್ಯಾಯಪೀಠದ ಮುಂದೆ ವಿಚಾರಣೆಗೆ ನಿಗದಿಯಾಗಬೇಕಿದೆ.

ವಾರ್ತಾ ಭಾರತಿ 24 Mar 2026 10:42 pm

ಕಾಲ್ತುಳಿತದಲ್ಲಿ ಮೃತಪಟ್ಟ ಅಭಿಮಾನಿಗಳ ಗೌರವಾರ್ಥ ಚಿನ್ನಸ್ವಾಮಿ ಸ್ಟೇಡಿಯಂನ 11 ಆಸನ ಖಾಲಿ ಇರಿಸಲು ಚಿಂತನೆ

ಬೆಂಗಳೂರು: ಮುಂಬರುವ ಐಪಿಎಲ್ ವೇಳೆ ಪಂದ್ಯಗಳ ದಿನ ಆರ್‌ಸಿಬಿ ಆಟಗಾರರು 11ನೇ ಸಂಖ್ಯೆಯ ಜರ್ಸಿ ಧರಿಸಿ ಅಭ್ಯಾಸ ನಡೆಸಲಿದ್ದಾರೆ. ಕಳೆದ ವರ್ಷ ಎಂ.ಚಿನ್ನಸ್ವಾಮಿ ಸ್ಟೇಡಿಯಂನ ಹೊರಗೆ ನಡೆದ ಕಾಲ್ತುಳಿತದ ದುರಂತದಲ್ಲಿ ಸಾವನ್ನಪ್ಪಿದ ಅಭಿಮಾನಿಗಳ ಗೌರವಾರ್ಥ ಖಾಯಂ ಆಗಿ 11 ಆಸನಗಳನ್ನು ಖಾಲಿ ಇರಿಸಲು ಆರ್‌ಸಿಬಿ ಫ್ರಾಂಚೈಸಿ ಗಂಭೀರ ಚಿಂತನೆ ನಡೆಸುತ್ತಿದೆ ಎಂದು ವರದಿಯಾಗಿದೆ. ಆರ್‌ಸಿಬಿ ತಂಡವು ತನ್ನ ಚೊಚ್ಚಲ ಐಪಿಎಲ್ ಟ್ರೋಫಿ ಗೆದ್ದ ನಂತರ ಜೂನ್ 4ರಂದು ನಡೆದ ಆರ್‌ಸಿಬಿಯ ಸಂಭ್ರಮಾಚರಣೆಯ ವೇಳೆ ಅಭಿಮಾನಿಗಳು ತಮ್ಮ ಪ್ರಾಣ ಕಳೆದುಕೊಂಡಿದ್ದರು. ಲಕ್ಷಾಂತರ ಜನರು ರಸ್ತೆಗೆ ಇಳಿದಿದ್ದು, ಸೂಕ್ತ ಭದ್ರತೆಗೆ ಮನವಿ ಮಾಡದೆ ಸಂಭ್ರಮಾಚರಣೆಯನ್ನು ಆಚರಿಸಿದ ರೀತಿಗೆ ಫ್ರಾಂಚೈಸಿ ಭಾರೀ ಟೀಕೆಗೆ ಗುರಿಯಾಗಿತ್ತು. ‘‘ಪಂದ್ಯಕ್ಕಿಂತ ಮೊದಲು ನಡೆಯುವ ಅಭ್ಯಾಸದ ಸಮಯದಲ್ಲಿ ಆಟಗಾರರು 11ನೇ ಸಂಖ್ಯೆಯ ಜರ್ಸಿಯನ್ನು ಧರಿಸಲಿದ್ದಾರೆ. ಈ ಜರ್ಸಿಯನ್ನು ಪಂದ್ಯದ ವೇಳೆ ಧರಿಸುವುದಿಲ್ಲ. ಆ ದಿನದಂದು ಕಪ್ಪುತೋಳುಪಟ್ಟಿಯನ್ನು ಧರಿಸಲಾಗುವುದು. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಖಾಯಂ ಆಗಿ 11 ಸೀಟುಗಳನ್ನು ಖಾಲಿ ಇಡಲು ಚಿಂತಿಸುತ್ತಿದ್ದೇವೆ. ಇದರೊಂದಿಗೆ ಆ 11 ಅಭಿಮಾನಿಗಳು ನಮ್ಮೊಂದಿಗೆ ಯಾವಾಗಲೂ ಇರಲಿದ್ದಾರೆ’’ ಎಂದು ಆರ್‌ಸಿಬಿ ಸಿಇಒ ರಾಜೇಶ್ ಮೆನನ್ ಮಂಗಳವಾರ ಸುದ್ದಿಗಾರರಿಗೆ ತಿಳಿಸಿದರು. ಆರ್‌ಸಿಬಿ ತಂಡವು ಮಾರ್ಚ್ 28ರಂದು ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಈ ವರ್ಷದ ಐಪಿಎಲ್‌ನ ಉದ್ಘಾಟನಾ ಪಂದ್ಯವನ್ನು ಆಡಲಿದೆ. ಆರ್‌ಸಿಬಿ ತನ್ನ ತವರು ಮೈದಾನದಲ್ಲಿ ಒಟ್ಟು ಐದು ಪಂದ್ಯಗಳನ್ನು ಆಡಲಿದೆ.

ವಾರ್ತಾ ಭಾರತಿ 24 Mar 2026 10:40 pm

ಬೋರ್‌ವೆಲ್ ಕೊರೆತ: ಪ.ಜಾತಿ ಸಮುದಾಯದ ನಿವಾಸಿಯ ಹೊಸಮನೆಯಲ್ಲಿ ಬಿರುಕು; ಆಕ್ರೋಶ

ಕುಂದಾಪುರ, ಮಾ.24: ಹೊಸದಾಗಿ ನಿರ್ಮಿಸಿ ಕೆಲವೇ ದಿನಗಳ ಹಿಂದೆ ಗೃಹಪ್ರವೇಶ ನಡೆದ ಮನೆಯ ಸಮೀಪ ದಲ್ಲೇ ಬೋರ್‌ವೆಲ್ ತೋಡಿದ ಪರಿಣಾಮ ಪರಿಶಿಷ್ಟ ಜಾತಿ ಸಮುದಾಯದ ನಿವಾಸಿಯೊಬ್ಬರ ಹೊಸ ಮನೆಯ ಗೋಡೆಗಳಲ್ಲಿ ಬಿರುಕು ಕಾಣಿಸಿಕೊಂಡಿದ್ದು, ಮನೆಯವರು ಸಂಬಂಧಪಟ್ಟ ಇಲಾಖೆಯ ವಿರುದ್ಧ ರೊಚ್ಚಿಗೆದ್ದ ಘಟನೆ ತ್ರಾಸಿ ಗ್ರಾಮದ ಮೊವಾಡಿ ಅಂಬೇಡ್ಕರ್ ಕಾಲೋನಿಯಲ್ಲಿ ಮಂಗಳವಾರ ಸಂಜೆ ವೇಳೆ ನಡೆದಿದೆ. ಮೊವಾಡಿ ಅಂಬೇಡ್ಕರ್ ಕಾಲೋನಿ ನಿವಾಸಿ ಆಶಾ ನಾಗರಾಜ ಎಂಬುವರು ಇತ್ತೀಚೆಗೆ ಹೊಸ ಮನೆಯೊಂದನ್ನು ಕಟ್ಟಿದ್ದರು. ಇದೇ ಮನೆಯಿಂದ ಸ್ವಲ್ಪ ದೂರದಲ್ಲಿ ಸರಕಾರಿ ಸ್ಥಳದಲ್ಲಿ ಗ್ರಾಮೀಣ ಕುಡಿಯುವ ನೀರು ಸರಬರಾಜು ಯೋಜನೆಯಡಿ ಬೋರ್ವೆಲ್ ತೋಡಲಾಗುತ್ತಿದ್ದು, ಇದರಿಂದ ಮನೆಯ ಗೋಡೆ ಮತ್ತಿತರ ಸ್ಥಳಗಳಲ್ಲಿ ಬಿರುಕು ಕಾಣಿಸಿಕೊಂಡಿದೆ ಎನ್ನಲಾಗಿದೆ. ಯಾರ ಗಮನಕ್ಕೂ ತಾರದೇ ಹೊಸ ಮನೆಯ ಸಮೀಪದಲ್ಲೇ ಬೋರ್ವೆಲ್ ತೋಡುತ್ತಿರುವುದರಿಂದ ಇತ್ತೀಚಿಗಷ್ಟೇ ನಿರ್ಮಾಣವಾಗಿರುವ ಹೊಸ ಮನೆಯ ಅಲ್ಲಲ್ಲಿ ಬಿರುಕು ಕಾಣಿಸಿಕೊಂಡಿರು ವುದು ಸ್ಥಳೀಯರ ಆಕ್ರೋಶಕ್ಕೂ ಕಾರಣವಾಯಿತು. ನಾಗರಾಜ್ ಮತ್ತು ಆಶಾ ಇಬ್ಬರೂ ಕೆಲಸಕ್ಕೆ ಹೋಗುತ್ತಿದ್ದು, ಮಕ್ಕಳು ಶಾಲೆಗೆ ಹೋಗಿದ್ದರು. ಬೋರ್ವೆಲ್ ತೆಗೆ ಯಲು ಆರಂಭಿಸಿದ ಸಮಯದಲ್ಲಿ ಯಾರೂ ಇರಲಿಲ್ಲ. ನಾಗರಾಜ್ ಮತ್ತು ಆಶಾ ಕೆಲಸದಿಂದ ಮನೆಗೆ ಬಂದಾಗ ಬೋರ್ವೆಲ್ ತೋಡುತ್ತಿರುವುದು ಮತ್ತು ಇದರಿಂದ ಮನೆಯ ಮೇಲೆ ಆದ ಪರಿಣಾಮಗಳನ್ನು ಗಮನಿಸಿ, ಸ್ಥಳೀಯ ಗ್ರಾಪಂಗೆ ವಿಷಯ ತಿಳಿಸಿ ಸ್ಥಳಕ್ಕೆ ಆಗಮಿಸಿ ಸೂಕ್ತ ಕ್ರಮಕೈಗೊಳ್ಳುವಂತೆ ಆಗ್ರಹಿಸಿದರು. ಕೂಡಲೇ ಬೋರ್ವೆಲ್ ತೋಡುವುದನ್ನು ನಿಲ್ಲಿಸಬೇಕು, ಸಂಬಂದಪಟ್ಟ ಇಲಾಖೆ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಬೋರ್ವೆಲ್ ತೋಡಿರುವುದರಿಂದ ಆದ ಹಾನಿಯನ್ನು ಪರಿಶೀಲಿಸಿ ಸೂಕ್ತ ಪರಿಹಾರವನ್ನು ನೀಡಬೇಕೆಂದು ಆಗ್ರಹಿಸಿದ ನಾಗರಾಜ್, ಬೋರ್ವೆಲ್ ತೆಗೆಯುವ ಸಂದರ್ಭ ಸಮೀಪದಲ್ಲಿರುವ ಮನೆಯನ್ನು ಗಮನಿಸದೆ, ಒಂದು ವಾರದ ಹಿಂದಷ್ಟೇ ಗೃಹ ಪ್ರವೇಶ ಆದ ಮನೆಯಲ್ಲಿ ಬಿರುಕು ಮೂಡಿರುವುದು ಆತಂಕಕ್ಕೆ ಕಾರಣವಾಗಿದೆ. ಇದಕ್ಕೆ ಹೊಣೆಗಾರರು ಯಾರು? ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭ ಸ್ಥಳಕ್ಕೆ ಆಗಮಿಸಿದ ಜಿಪಂ ಎಇಇ ನಾಗಶಯನ, ಗ್ರಾಪಂ ಪ್ರಭಾರ ಪಿಡಿಒ ಶೋಭಾ, ಗಂಗೊಳ್ಳಿ ಪೊಲೀಸ್ ಠಾಣೆಯ ಪಿಎಸ್ಸೈ ಪವನ್ ನಾಯಕ್ ಮೊದಲಾದವರು ಹಾನಿಯನ್ನು ಪರಿಶೀಲಿಸಿ ಸ್ಥಳೀಯರೊಂದಿಗೆ ಮಾತುಕತೆ ನಡೆಸಿ ಮನೆಯವರ ಮನವೊಲಿಸುವ ಪ್ರಯತ್ನ ನಡೆಸಿದರೂ ಯಾವುದೇ ಪ್ರಯೋಜನವಾಗಲಿಲ್ಲ. ಜಿಲ್ಲಾಧಿಕಾರಿಗಳು ಅಥವಾ ಜಿಪಂ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಈ ಬಗ್ಗೆ ಸೂಕ್ತ ಕ್ರಮಕೈಗೊಳ್ಳುವ ತನಕ ಯಾವುದೇ ರಾಜಿ ಮಾಡಿ ಕೊಳ್ಳುವುದಿಲ್ಲ. ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ದಲಿತ ದೌರ್ಜನ್ಯ ಕಾಯ್ದೆಯಡಿ ದೂರು ದಾಖಲಿಸುವುದಾಗಿ ಆಶಾ ನಾಗರಾಜ್ ಹೇಳಿದರು. ಈ ಸಂಬಂಧ ಜಿಪಂ ಎಇಇ ನಾಗಶಯನ, ಗ್ರಾಪಂ ಪ್ರಭಾರ ಪಿಡಿಒ ಶೋಭಾ, ಗಂಗೊಳ್ಳಿ ಪೊಲೀಸ್ ಠಾಣೆಯ ಪಿಎಸ್ಸೈ ಪವನ್ ನಾಯಕ್ ಅವರು ಆಶಾ ಮತ್ತು ನಾಗರಾಜ್ ಹಾಗೂ ಸ್ಥಳೀಯರೊಂದಿಗೆ ಮಾತುಕತೆ ನಡೆಸಿ ಬುಧವಾರ ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿಗೆ ವ್ಯವಸ್ಥೆ ಮಾಡುವ ಭರವಸೆ ನೀಡಿದರು.

ವಾರ್ತಾ ಭಾರತಿ 24 Mar 2026 10:38 pm

ವಿಟ್ಲ| ಬಸ್ - ಟಪ್ಪರ್ ಲಾರಿ ನಡುವೆ ಅಪಘಾತ: ಚಾಲಕರ ನಡುವೆ ಹೊಡೆದಾಟ

ವಿಟ್ಲ: ಕುದ್ದುಪದ್ದವು ಪೆರುವಾಯಿ ರಸ್ತೆಯ ಮುಳಿಯ ದಂಬೆ ಅಂಗನವಾಡಿ ಕೇಂದ್ರದ ಸಮೀಪ ಕೆಎಸ್‍ಆರ್‍ಟಿಸಿ ಬಸ್ ಮತ್ತು ಟಿಪ್ಪರ್ ನಡುವೆ ಅಪಘಾತ ನಡೆದು, ಎರಡು ಕಡೆಯವರ ಮಾತಿನ ಚಕಮಕಿ ನಡೆದು, ದೂರು ಪ್ರತಿದೂರು ದಾಖಲಾಗಿದೆ. ಪಕಳಕುಂಜದಿಂದ ವಿಟ್ಲಕ್ಕೆ ಬರುತ್ತಿದ್ದ ಕೆಎಸ್‍ಆರ್‍ಟಿಸಿ ಬಸ್ ಮತ್ತು ಪೆರುವಾಯಿ ಕಡೆ ಹೋಗುತ್ತಿದ್ದ ಟಿಪ್ಪರ್ ಮುಖಾಮುಖಿ ಡಿಕ್ಕಿ ಹೊಡೆದಿದೆ. ಇಳಿಜಾರು ಪ್ರದೇಶ ಹಾಗೂ ತಿರುವಿನಲ್ಲಿ ಎರಡು ವಾಹನಗಳು ಒಟ್ಟಿಗೆ ಮುನ್ನುಗಿದ ಕಾರಣ ಅಪಘಾತವಾಗಿದೆ. ಅಪಘಾತದ ಬಳಿಕ ಬಸ್ ಚಾಲಕ ಮತ್ತು ಟಿಪ್ಪರ್ ಚಾಲಕನ ನಡುವೆ ಮಾತಿನ ಚಕಮಕಿ ನಡೆದಿದ್ದು, ಆ ಬಳಿಕ ಟಿಪ್ಪರ್ ಚಾಲಕ, ಬಸ್ ಚಾಲಕ ಮತ್ತು ನಿರ್ವಾಹಕರ ನಡುವೆ ಹೊಡೆದಾಟ ನಡೆದಿದೆ ಎಂದು ಹೇಳಲಾಗಿದೆ. ಎರಡೂ ಕಡೆಯವರು ಆಸ್ಪತ್ರೆಗೆ ದಾಖಲಾಗಿ ದೂರು ಪ್ರತಿದೂರು ನೀಡಿದ್ದು, ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಾರ್ತಾ ಭಾರತಿ 24 Mar 2026 10:26 pm

ಚಿಂಚೋಳಿ | ಚಿಮ್ಮನಚೋಡದಲ್ಲಿ 77ನೇ ಶ್ರೀ ಸಂಗಮೇಶ್ವರ ಜಾತ್ರಾ ಮಹೋತ್ಸವ

ಚಿಂಚೋಳಿ : ಶ್ರೀ ಸಂಗಮೇಶ್ವರ ದೇವರ 77ನೇ ವರ್ಷದ ವೈಭವದ ಜಾತ್ರಾ ಮಹೋತ್ಸವವು ಸಕಲ ಧಾರ್ಮಿಕ ವಿಧಿವಿಧಾನಗಳೊಂದಿಗೆ ಹಾಗೂ ಭಕ್ತರ ಜನಸಾಗರದ ನಡುವೆ ಅತ್ಯಂತ ವಿಜೃಂಭಣೆಯಿಂದ ಜರುಗಿತು. ವೀರಗಾಸೆ, ಡೊಳ್ಳು ಮೇಳಗಳ ಭವ್ಯ ಮೆರವಣಿಗೆ ಜಾತ್ರಾ ಮಹೋತ್ಸವದ ಅಂಗವಾಗಿ ಮುಂಜಾನೆ ಶ್ರೀ ವೀರಭದ್ರೇಶ್ವರ ದೇವಾಲಯದಿಂದ ಅಗ್ನಿ ಕುಂಡದವರೆಗೆ ಭವ್ಯ ಮೆರವಣಿಗೆ ನಡೆಯಿತು. ಚಿಕ್ಕಮಗಳೂರು ಜಿಲ್ಲೆಯ ವೀರಗಾಸೆ ತಂಡ, ಮಹಿಳೆಯರ ಡೊಳ್ಳು ತಂಡ, ವೇಷಧಾರಿ ಗೊಂಬೆಗಳ ಕುಣಿತ, ಸ್ಥಳೀಯ ತಮಟೆ ತಂಡ ಸೇರಿದಂತೆ ವಿವಿಧ ವಾದ್ಯ ಮೇಳಗಳು ಮೆರುಗು ನೀಡಿದವು. ಪುರವಂತರ ಒಡುಪು ಹಾಗೂ ಶಸ್ತ್ರ ಹಾಯಿಸುವ ಸಾಹಸ ಪ್ರದರ್ಶನಗಳು ಭಕ್ತರಲ್ಲಿ ರೋಮಾಂಚನ ಮೂಡಿಸಿದವು. ನಂತರ ಭಕ್ತಾದಿಗಳು ಅಗ್ನಿ ತುಳಿಯುವ ಮೂಲಕ ತಮ್ಮ ಹರಕೆಯನ್ನು ಸಮರ್ಪಿಸಿದರು. ಐದು ದಿನಗಳ ಪಲ್ಲಕ್ಕಿ ಉತ್ಸವ : ಯುಗಾದಿ ಹಬ್ಬದ ದಿನದಂದು ಚಾಲನೆಗೊಂಡ ಶ್ರೀ ಸಂಗಮೇಶ್ವರ ಪಲ್ಲಕ್ಕಿ ಉತ್ಸವವು ಸತತ ಐದು ದಿನಗಳ ಕಾಲ ಗ್ರಾಮದ ವಿವಿಧ ಓಣಿಗಳಲ್ಲಿ ಸಂಚರಿಸಿತು. ಪ್ರತಿದಿನವೂ ಭಕ್ತರು ದೇವರಿಗೆ ವಿಶೇಷ ಪೂಜೆ ಹಾಗೂ ನೈವೇದ್ಯ ಅರ್ಪಿಸಿದರು. ಮಳೆಯ ನಡುವೆಯೂ ಎಳೆದ ಹೂವಿನ ತೇರು : ಸಂಜೆ ಮಳೆಯ ನಡುವೆಯೂ ಭಕ್ತರ ಉತ್ಸಾಹ ಕುಂದಿರಲಿಲ್ಲ. ಕುಂಭದೊಂದಿಗೆ ಆಗಮಿಸಿ ವಿಶೇಷ ಪೂಜೆ ಸಲ್ಲಿಸಿದ ನಂತರ, ಹೂವಿನಿಂದ ಸುಂದರವಾಗಿ ಅಲಂಕೃತಗೊಂಡಿದ್ದ ಮಹಾರಥವನ್ನು ಸಹಸ್ರಾರು ಭಕ್ತರು ಜಯಘೋಷಗಳೊಂದಿಗೆ ಎಳೆದು ಪುನೀತರಾದರು. ಈ ಸಂದರ್ಭದಲ್ಲಿ ಜಾತ್ರೆ ಸಮಿತಿ ಅಧ್ಯಕ್ಷರಾದ ಶಿವಮೂರ್ತಿ ಜಾಡರ, ಮಲ್ಲಯ್ಯ ಸ್ವಾಮಿ ಮಠಪತಿ, ಮಲ್ಲಿಕಾರ್ಜುನ ಪಂಚಾಳ, ಸುಭಾಷ್ ಪಂಚಾಳ, ರಾಮರೆಡ್ಡಿ ಪೊಲೀಸ್ ಪಾಟೀಲ್, ನರಸಪ್ಪ ಗಣಪುರ, ನರಸಪ್ಪ ಕೊಡದೂರು, ರತನಕುಮಾರ ತೆಲಕಪಳ್ಳಿ, ಆನಂದ ಬೆಡಸೂರು, ರಾಜಕುಮಾರ ಕೊಳಕೂರು, ಸೋಮನಾಥ ದುಬಲಗುಂಡಿ, ಶರಣರೆಡ್ಡಿ ಮೊಗಲಪ್ಪನೋರ್, ಅಮರನಾಥ ದುಬಲಗುಂಡಿ, ಶಂಕರ ರೇಕುಳಗಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು. ವಿಶೇಷ ಆಕರ್ಷಣೆ : ನಾಟಕ ಪ್ರದರ್ಶನ ಜಾತ್ರೆಯ ನಿಮಿತ್ತ ಶ್ರೀ ಸಂಗಮೇಶ್ವರ ನವಯುವಕ ನಾಟ್ಯ ಸಂಘದ ವತಿಯಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

ವಾರ್ತಾ ಭಾರತಿ 24 Mar 2026 10:22 pm

ಮಂಗಳೂರು: ಶೆಫರ್ಡ್ಸ್ ಶಾಹೀನ್ ಪಿಯು ಕಾಲೇಜಿನಲ್ಲಿ 40 ದಿನಗಳ ಉಚಿತ NEET ಮತ್ತು CET ತರಬೇತಿ ಶಿಬಿರ

ಮಂಗಳೂರು: ಅರ್ಕುಳದ ಶೆಫರ್ಡ್ಸ್ ಶಾಹೀನ್ ಪಿಯು ಕಾಲೇಜಿನಲ್ಲಿ 40 ದಿನಗಳ ಉಚಿತ ʼನೀಟ್ ಮತ್ತು ಸಿಇಟಿ ಟೆಸ್ಟ್ ಸೀರಿಸ್ʼ (NEET and CET test series) ತರಬೇತಿ ಶಿಬಿರದ ಉದ್ಘಾಟನೆಯು ಶಿಕ್ಷಣ ತಜ್ಞರು ಮತ್ತು ಪ್ರತಿನಿಧಿಗಳ ಉಪಸ್ಥಿತಿಯಲ್ಲಿ ನಡೆಯಿತು. ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆ ಕುರಿತು ಅರಿವು ಮೂಡಿಸಲು ʼನೀಟ್ ಮತ್ತು ಸಿಇಟಿ ಟೆಸ್ಟ್‌ ಸೀರಿಸ್ʼ ಅನ್ನು ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಶೆಫರ್ಡ್ಸ್ ಇಂಟರ್‌ ನ್ಯಾಷನಲ್ ಅಕಾಡೆಮಿಯ ಅಧ್ಯಕ್ಷರಾದ ಎಆರ್ ಮುಹಮ್ಮದ್ ನಿಸಾರ್, 40 ದಿನಗಳ ಉಚಿತ ನೀಟ್ ಮತ್ತು ಸಿಇಟಿ ಟೆಸ್ಟ್‌ ಸೀರಿಸ್ ಬಗ್ಗೆ ವಿವರಿಸಿದ್ದಾರೆ. ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ತರಬೇತಿಯು ವಿದ್ಯಾರ್ಥಿಗಳಿಗೆ ಹೇಗೆ ಸಹಾಯ ಮಾಡುತ್ತದೆ ಎಂಬ ಬಗ್ಗೆ ವಿವರಿಸಿದ್ದಾರೆ. ಎಮ್ಇಐಎಫ್ ದಕ್ಷಿಣ ಕನ್ನಡ ಕೇಂದ್ರ ಘಟಕದ ಅಧ್ಯಕ್ಷರಾದ ಮೂಸಬ್ಬ ಪಿ. ಬ್ಯಾರಿ ಮಾತನಾಡಿ, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುವಾಗ ಸ್ಪಷ್ಟ ಗುರಿಗಳನ್ನು ಹೊಂದಿರುವುದರ ಮಹತ್ವದ ಬಗ್ಗೆ ಮಾತನಾಡಿದರು. ನಿರಂತರ ಪ್ರಯತ್ನದಿಂದ ಯಶಸ್ಸು ಸಾಧಿಸುತ್ತದೆ ಎಂದು ಹೇಳಿದರು. ಅಡ್ಡೂರು ಕಮ್ಯೂನಿಟಿ ಸೆಂಟರ್‌ನ ಮುಹಮ್ಮದ್ ಇಬ್ರಾಹಿಂ ಅಳಕೆ ಮಾತನಾಡಿ, ತಿಳುವಳಿಕೆ ಮತ್ತು ನಿಯಮಿತ ಅಭ್ಯಾಸದ ಅಗತ್ಯವನ್ನು ಒತ್ತಿ ಹೇಳಿದರು. ನೀಟ್ ಮತ್ತು ಸಿಇಟಿಯಲ್ಲಿ ಉತ್ತಮ ಸಾಧನೆ ಮಾಡುವ ಗುರಿ ಹೊಂದಿ ರುವ ವಿದ್ಯಾರ್ಥಿಗಳಿಗೆ ಇವು ಅತ್ಯಗತ್ಯ ಎಂದು ಹೇಳಿದರು. ಪುತ್ತೂರು ಕಮ್ಯೂನಿಟಿ ಸೆಂಟರ್ ಸಂಸ್ಥಾಪಕ ಹನೀಫ್ ಪುತ್ತೂರು ಮಾತನಾಡಿ, ಪ್ರವೇಶ ಪರೀಕ್ಷೆಗಳಲ್ಲಿ ಹೆಚ್ಚುತ್ತಿರುವ ಸ್ಪರ್ಧೆ ಮತ್ತು ಸರಿಯಾದ ಮಾರ್ಗದರ್ಶನ ಹಾಗೂ ಸಿದ್ಧತೆಯ ಮಹತ್ವದ ಬಗ್ಗೆ ಮಾತನಾಡಿದರು. ಹಾಸನದ ಕಮ್ಯುನಿಟಿ ಸೆಂಟರ್ ಸಂಸ್ಥಾಪಕ ಸೈಯದ್ ಇಸ್ರಾರ್ ಅಹ್ಮದ್ ಜುನೇದಿ ಮಾತನಾಡಿ, ಇಂತಹ ತರಬೇತಿಯು ವಿದ್ಯಾರ್ಥಿಗಳಿಗೆ ತಮ್ಮ ಸಿದ್ಧತೆಯ ಬಗ್ಗೆ ಮೌಲ್ಯಮಾಪನ ಮಾಡಲು, ತಪ್ಪುಗಳನ್ನು ಅರ್ಥ ಮಾಡಿಕೊಂಡು ಸುಧಾರಿಸಲು ಸಹಾಯ ಮಾಡುತ್ತದೆ ಎಂದು ಹೇಳಿದರು. ಕಾರ್ಯಕ್ರಮವು ಶೆಫರ್ಡ್ಸ್ ಇಂಟರ್ ನ್ಯಾಷನಲ್ ಅಕಾಡೆಮಿಯ ಟ್ರಸ್ಟಿ ಎಸ್.ಎಂ. ಫಾರೂಕ್ ಅವರ ಭಾಷಣ ದೊಂದಿಗೆ ಮುಕ್ತಾಯಗೊಂಡಿತು. ಅವರು ವಿದ್ಯಾರ್ಥಿಗಳು ನೀಟ್ ಮತ್ತು ಸಿಇಟಿ ಪರೀಕ್ಷೆಯನ್ನು ಆತ್ಮವಿಶ್ವಾಸ, ಮತ್ತು ಸತತ ಪ್ರಯತ್ನದಿಂದ ಎದುರಿಸುವಂತೆ ಪ್ರೋತ್ಸಾಹಿಸಿದರು. ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಯಾಣದಲ್ಲಿ ಬೆಂಬಲ ನೀಡುವುದು, ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತಮ ಸಾಧನೆ ಮಾಡಲು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮತ್ತು ವ್ಯವಸ್ಥಿತ ವಾತಾವರಣ ಒದಗಿಸುವುದೇ ಶೆಫರ್ಡ್ಸ್ ಸಂಸ್ಥೆಯ ಧ್ಯೇಯ. ಅನುಭವಿ ಅಧ್ಯಾಪಕರು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುತ್ತಾರೆ ಎಂದು ಹೇಳಿದರು. ಕಾರ್ಯಕ್ರಮದ ನಂತರ ವಾರ್ತಾಭಾರತಿ ಜೊತೆ ಮಾತನಾಡಿದ ಎಸ್.ಎಂ, ಫಾರೂಕ್, ಈ ತರಬೇತಿಗೆ ಒಟ್ಟು 88 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದಾರೆ. ಈ ತರಬೇತಿಯು ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಯನ್ನು ಸುಲಭವಾಗಿ ಎದುರಿಸಲು ಸಹಾಯ ಮಾಡಲಿದೆ ಎಂದು ಹೇಳಿದರು. ಈ ವೇಳೆ ಶೆಫರ್ಡ್ಸ್ ಇಂಟರ್ ನ್ಯಾಷನಲ್ ಅಕಾಡೆಮಿಯ ಪ್ರಾಂಶುಪಾಲರಾದ ಲುಬ್ನಾ ಬಾನು, ನಿರ್ದೇಶಕಿ ಡಾ. ನಫೀಸಾ ಶಿರಿನ್ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ನಿಲೋಫರ್ ಸಾಜಿದ್ ಅವರು ನಿರೂಪಿಸಿದರು.

ವಾರ್ತಾ ಭಾರತಿ 24 Mar 2026 10:22 pm

ಟೈಮ್ಸ್ ಆಫ್ ಇಂಡಿಯಾ, ಆದಿತ್ಯ ಬಿರ್ಲಾ ಗ್ರೂಪ್ ಒಕ್ಕೂಟದ ತೆಕ್ಕೆಗೆ ಆರ್ ಸಿಬಿ! ₹16,706 ಕೋಟಿಗೆ ಸ್ವಾಧೀನ

ಅಂತೂ ಆರ್ ಸಿಬಿಯ ಮಾರಾಟ ಪ್ರಕ್ರಿಯೆ ಮುಗಿದಿದೆ. (ABG), ದಿ ಟೈಮ್ಸ್ ಆಫ್ ಇಂಡಿಯಾ ಗ್ರೂಪ್ (TOI), ಬೋಲ್ಟ್ ವೆಂಚರ್ಸ್ (BOLT), ಮತ್ತು ಬ್ಲಾಕ್‌ಸ್ಟೋನ್‌ನ ಶಾಶ್ವತ ಖಾಸಗಿ ಷೇರು ತಂತ್ರ (BXPE, Blackstone) ಜಂಟಿಯಾಗಿ (ಆರ್‌ಸಿಬಿ) ಅನ್ನು ಖರೀದಿಸಿವೆ. ಈ ವಹಿವಾಟಿನ ಮೌಲ್ಯ 1.78 ಬಿಲಿಯನ್ ಡಾಲರ್ ಆಗಿದ್ದು ಭಾರತೀಯ ರುಪಾಯಿಗೆ ಪರಿವರ್ತಿಸಿದರೆ ಸುಮಾರು16,706 ಕೋಟಿ ಆಗುತ್ತದೆ. ಇದು ಐಪಿಎಲ್ ಇತಿಹಾಸದಲ್ಲೇ ಅತಿ ದೊಡ್ಡ ಮೊತ್ತವಾಗಿದೆ.ಕ್ರಿಕ್ ಬಝ್ ವರದಿಯ ಪ್ರಕಾರ ಮೇಲೆ ತಿಳಿಸಲಾದ ನಾಲ್ಕು ಗುಂಪುಗಳ ಒಕ್ಕೂಟವು ಯುಕೆ-ಡಿಯಾಜಿಯೊ ಪಿಎಲ್‌ಸಿಯ ಅಂಗಸಂಸ್ಥೆಯಾದ ಯುನೈಟೆಡ್ ಸ್ಪಿರಿಟ್ಸ್ ಲಿಮಿಟೆಡ್ (ಯುಎಸ್‌ಎಲ್) ನೊಂದಿಗೆ ಆರ್‌ಸಿಬಿಯ 100 ಪ್ರತಿಶತ ಪಾಲನ್ನು ಸ್ವಾಧೀನಪಡಿಸಿಕೊಳ್ಳಲು ನಿರ್ಣಾಯಕ ಒಪ್ಪಂದಕ್ಕೆ ಸಹಿ ಹಾಕಿದೆ. ಹೀಗಾಗಿ ಐಪಿಎಲ್ ಮತ್ತು ಡಬ್ಲ್ಯೂಪಿಎಲ್‌ನಲ್ಲಿ ಪುರುಷ ಮತ್ತು ಮಹಿಳಾ ತಂಡಗಳ ಒಡೆತನ ಈ ಒಕ್ಕೂಟದ ಪಾಲಾಗಲಿದೆ. ಹೊಸ ಮಾಲೀಕತ್ವದ ರಚನೆಯಡಿಯಲ್ಲಿ ಆದಿತ್ಯ ಬಿರ್ಲಾ ಗ್ರೂಪ್‌ನ ನಿರ್ದೇಶಕ ಆರ್ಯಮಾನ್ ವಿಕ್ರಮ್ ಬಿರ್ಲಾ ಅಧ್ಯಕ್ಷರಾಗಲಿದ್ದಾರೆ. ಟೈಮ್ಸ್ ಆಫ್ ಇಂಡಿಯಾ ಗ್ರೂಪ್‌ನ ಸತ್ಯನ್ ಗಜ್ವಾನಿ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸಲಿದ್ದಾರೆ. ಬೋಲ್ಟ್ ವೆಂಚರ್ಸ್‌ನ ಸಂಸ್ಥಾಪಕ ಡೇವಿಡ್ ಬ್ಲಿಟ್ಜರ್ ಮತ್ತು BXPE ಸಿಇಒ ವೈರಲ್ ಪಟೇಲ್ ಕೂಡ ಈ ಒಕ್ಕೂಟದಲ್ಲಿದ್ದಾರೆ.

ವಿಜಯ ಕರ್ನಾಟಕ 24 Mar 2026 10:17 pm

ಸೇಡಂ | ಮಳಖೇಡದಲ್ಲಿ ಮಾ.26ರಿಂದ 28 ರವರೆಗೆ ಉರೂಸ್ ಸಂಭ್ರಮ

ಸೇಡಂ : ತಾಲೂಕಿನ ಮಳಖೇಡದಲ್ಲಿರುವ ಹಝರತ್ ಸೈಯದ್ ಶಾಹ್ ಖಲಿಫತ್ ಊರ್ ರಹಮಾನ್ ಖಾದ್ರಿ ದುರ್ಗಾ ಶರೀಫ್‌ ನಲ್ಲಿ ಮಾ.26ರಿಂದ 28ರವರೆಗೆ ವಾರ್ಷಿಕ ಉರೂಸ್ ಶರೀಫ್ (ಜಾತ್ರೆ) ಜರುಗಲಿದೆ ಎಂದು ಹಝರತ್ ಅಲ್ ಹಜ್ ಸೈಯದ್ ಶಾಹ ಮುಸ್ತಫಾ ಖಾದ್ರಿ ಅವರು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು , ಮಾ.26ಕ್ಕೆ ರಾತ್ರಿ 8.30ಕ್ಕೆ ಗುರುವಾರ ಹಲಖಾ (ಪ್ರಾರ್ಥನೆ) ಮತ್ತು ಗುಸುಲ್ ಶರೀಫ್, (ಗದ್ದುಗೆಗೆ ಅಭಿಷೇಕ) 27ರಂದು ಸಂದಲ್ ನಡೆಯುವುದು. ಮಳಖೇಡ, ಹೂಡಾ ಬಿ. ಸಂಗಾವಿ. ಮಳಖೇಡ ಸ್ಟೇಷನ್ ಕೂನ್ನೂರ ಹಾಗೂ ದಿಗ್ಗಾಂವ್ ಗ್ರಾಮಗಳಿಂದ ಸಂದಲ್ ಭವ್ಯ ಮೆರವಣಿಗೆ ನಡೆಯುವುದು, ನಂತರ ಹಝರತ್ ಸೈಯದ್ ಶಾಹ್ ಮುಸ್ತಫಾ ಖಾದ್ರಿ ಅವರಿಂದ ಖಂದಲೇಪನ ಜರುಗುವುದು ಎಂದರು. ಮಾ.28ರಂದು ರಾತ್ರಿ 8.30ಕ್ಕೆ ಮಳಖೇಡದಿಂದ ಪಂಜಾ ಮೆರವಣಿಗೆ ನಡೆಯುವುದು, ನಂತರ ದುರ್ಗಾ ಪೀಠಾಧಿಪತಿ ಹಜರತ್ ಸೈಯದ್ ಶಾಹ್ ಮುಸ್ತಫಾ ಖಾದ್ರಿ ಅವರ ಸಾನಿಧ್ಯದಲ್ಲಿ ಅಖಿಲ ಭಾರತ ಮಾನವ ಧರ್ಮ ಸೇವಾ ಟ್ರಸ್ಟ್ ಆಶ್ರಯದಲ್ಲಿ ಮಾನವ ಧರ್ಮ ಚಿಂತನ ಸಭೆ ನಡೆಯುವುದು. ನಂತರ ಖವ್ವಾಲಿ ಹಾಗೂ ಗೀಗೀ ಪದಗಳ ಗಾಯನ ನಡೆಯುವುದು ಎಂದು ವಿವರಿಸಿದರು. 29ರಂದು ಬೆಳಗ್ಗೆ 7ಕ್ಕೆ ಫಾತೆಹಾ ಖಾನಿ ಪುಷ್ಪಾರ್ಚನೆ ನಡೆಯುವುದು, ಹಝರತ್ ಸಜ್ಜಾದಾ ನಶೀನ ಅವರ ಅಮ್ರತ ಹಸ್ತದಿಂದ ಪ್ರಸಾದ ವಿತರಣೆ, ಮಳಖೇಡ ಹಾಗೂ ಹೂಡಾ (ಬಿ) ಭಕ್ತಿಯಿಂದ ಬೆಳ್ಳಿ ಖಡ್ಗಗಳು ಹಾಗೂ ಬೆಳ್ಳಿ ಗಧೆಯ ಕುಸ್ತಿ ನಡೆಯುವುದು ಎಂದು ಅವರು ಹೇಳಿದರು. ಈ ಕಾರ್ಯಕ್ರಮಕ್ಕೆ ವಿವಿಧ ಮಠಾಧೀಶರು ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ್‌ ಪಾಟೀಲ್, ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ, ಮಾಜಿ ಶಾಸಕ ರಾಜಕುಮಾರ್ ಪಾಟೀಲ್ ತೆಲ್ಕೂರ ಸೇರಿ ಇತರೆ ಶಾಸಕರು ಆಗಮಿಸಲಿದ್ದಾರೆ ಎಂದರು. ಸುದ್ದಿಗೋಷ್ಠಿಯಲ್ಲಿ ರಾಜು ಬೀಜನಳ್ಳಿ, ಮಲ್ಲಪ್ಪ ಆರಬೋಳ, ಪೀರಪ್ಪರೆಡ್ಡಿ, ಭಗವಾನ್ ಬೋಚಿನ್, ಸುಭಾಶ್ ಚಂದ್ರ ನರೋಳ ಇದ್ದರು.

ವಾರ್ತಾ ಭಾರತಿ 24 Mar 2026 10:11 pm

ಆಳ್ವಾಸ್ ಕಾಲೇಜಿನ ವಾರ್ಷಿಕೋತ್ಸವ

ಮೂಡುಬಿದಿರೆ: ಜೀವನದಲ್ಲಿ ನಿಜವಾದ ಯಶಸ್ಸು ಪದವಿ ಅಥವಾ ಪ್ರಶಸ್ತಿಗಳಿಗೆ ಮಾತ್ರ ಸೀಮಿತವಾಗಿರುವುದಿಲ್ಲ; ಕಂಡ ಕನಸುಗಳನ್ನು ಸಾಧಿಸುವುದರಲ್ಲಿದೆ ಎಂದು ಕೊಚ್ಚಿ ದಕ್ಷಿಣ ನೌಕಾ ಕಮಾಂಡ್‌ ಶಿಕ್ಷಣಾಧಿಕಾರಿ ಕಮೋಡೊರ್ ಬೆನ್ ಹೆಚ್ ಬೆರ್ಸನ್ ನುಡಿದರು. ಅವರು ಮಂಗಳವಾರ ವಿದ್ಯಾಗಿರಿಯ ಕೃಷಿಸಿರಿ ವೇದಿಕೆಯಲ್ಲಿ ನಡೆದ ಆಳ್ವಾಸ್ ಸ್ವಾಯತ್ತ ಕಾಲೇಜಿನ ವಾರ್ಷಿಕೋತ್ಸವದಲ್ಲಿ ಮಾತನಾಡಿದರು. ಮಾರ್ಟಿನ್ ಲೂಥರ್ ಕಿಂಗ್ ಜ್ಯೂರವರ ಮಾತುಗಳನ್ನು ಉಲ್ಲೇಖಿಸಿ, ಭವಿಷ್ಯ ರೂಪಿಸುವಲ್ಲಿ ದೂರದೃಷ್ಟಿ ಮತ್ತು ವ್ಯಕ್ತಿತ್ವದ ಮಹತ್ವವನ್ನು ವಿವರಿಸಿದರು. ವಾಲ್ಟ್ ಡಿಸ್ನಿ ಹಾಗೂ ಡಾ ಸಾಸ್‌ರಂತವರು ಅನೇಕ ವಿಫಲತೆಗಳನ್ನು ಮೀರಿ ಸಾಧನೆ ಮಾಡಿದ ಉದಾಹರಣೆಗಳನ್ನು ನೀಡಿದರು. ತಮ್ಮ ಜೀವನ ಅನುಭವಗಳನ್ನು ಹಂಚಿಕೊಂಡ ಅವರು, ಬಾಲ್ಯದ ಮಾತಿನ ದೋಷ, ಕಾಲೇಜು ದಿನಗಳ ಹೋರಾಟ ಹಾಗೂ ಅಸಭ್ಯ ವರ್ತನೆಯ ಕಾರಣದಿಂದ ಕಾಲೇಜಿ ನಿಂದ ಹೊರಹಾಕುವ ಪರಿಸ್ಥಿತಿಯವರೆಗೆ ತಲುಪಿದ ಸನ್ನಿವೇಶವನ್ನು ವಿವರಿಸಿದರು. ಜೀವನದಲ್ಲಿ ದೊರೆತ ಎರಡನೇ ಅವಕಾಶವೇ ಅವರನ್ನು ಪುನಃ ರೂಪಿಸಿ ಭಾರತೀಯ ನೌಕಾಪಡೆಯಲ್ಲಿ ಗಣನೀಯ ಸೇವೆ ಸಲ್ಲಿಸಲು ನೆರವಾಯಿತು ಎಂದು ಹೇಳಿದರು. ಸಶಸ್ತ್ರ ಪಡೆಗಳನ್ನು ವೃತ್ತಿಯಾಗಿ ಆಯ್ಕೆ ಮಾಡಲು ವಿದ್ಯಾರ್ಥಿಗಳು ಮುಂದೆ ಬರಬೇಕು ಎಂದರು. ಆಳ್ವಾಸ್ ಸಂಸ್ಥೆ ನಾಯಕತ್ವ ಮತ್ತು ದೇಶಭಕ್ತಿಯ ಮೂಲಕ ಹಲವು ಕ್ಷೇತ್ರಗಳಲ್ಲಿ ಪ್ರತಿಭೆಗಳನ್ನು ರೂಪಿಸಿ ರಾಷ್ಟ್ರ ನಿರ್ಮಾಣಕ್ಕೆ ಕೊಡುಗೆ ನೀಡುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ ಎಂ ಮೋಹನ್ ಆಳ್ವ, ಬದಲಾಗುತ್ತಿರುವ ಶಿಕ್ಷಣ ವ್ಯವಸ್ಥೆಯಲ್ಲಿ ಸಾಂಪ್ರದಾಯಿಕ ಕೋರ್ಸ್ಗಳನ್ನು ಬಲಪಡಿಸುವ ಅಗತ್ಯವಿದೆ. ಜಾಗತಿಕ ವಿಶ್ವವಿದ್ಯಾಲಯಗ ಳೊಂದಿಗೆ ಸ್ಪರ್ಧಿಸಲು ನಾವು ನವೀನತೆ, ಗುಣಮಟ್ಟ ಮತ್ತು ಪ್ರಸ್ತುತತೆಯನ್ನು ಕಾಪಾಡಿಕೊಳ್ಳಬೇಕು. ಕಾಲದ ಬದಲಾವಣೆಗಳಿಗೆ ಹೊಂದಿಕೊಳ್ಳುವ ಶಿಕ್ಷಣವೇ ವಿದ್ಯಾರ್ಥಿಗಳ ಭವಿಷ್ಯವನ್ನು ಬಲಪಡಿsಸಿ ದೇಶದ ಅಭಿವೃದ್ಧಿಗೆ ಕೊಡುಗೆ ನೀಡಬಲ್ಲದು ಎಂದರು. ಆಳ್ವಾಸ್ ಸಂಸ್ಥೆ ಪ್ರತಿ ವರ್ಷ ಸುಮಾರು 60 ಕೋಟಿ ರೂ. ಯಷ್ಟು ಹಣವನ್ನು ವಿದ್ಯಾರ್ಥಿಗಳ ಉಚಿತ ಶಿಕ್ಷಣಕ್ಕೆ ವ್ಯಯಿಸುತ್ತಿದೆ. ಮಂಗಳೂರು ವಿವಿಯ ಅಂತರ್‌ಕಾಲೇಜು ಅಥ್ಲೆಟಿಕ್ಸ್ ಸ್ಪರ್ಧೆಗಳಲ್ಲಿ ದಾಖಲಾದ ಎಲ್ಲಾ 47 ಕೂಟ ದಾಖಲೆಗಳು ಆಳ್ವಾಸ್ ಕಾಲೇಜಿನ ಹೆಸರಿನಲ್ಲಿದೆ ಎಂದರು. ಶೈಕ್ಷಣಿಕ, ಕ್ರೀಡಾ ಹಾಗೂ ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ನಂತರ ವಿದ್ಯಾರ್ಥಿಗಳಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿತು. ಆಳ್ವಾಸ್ ಟ್ರಸ್ಟಿ ವಿವೇಕ್ ಆಳ್ವ, ಆಳ್ವಾಸ್ ಕಾಲೇಜಿನ ಪ್ರಾಂಶುಪಾಲ ಡಾ. ಕುರಿಯನ್, ಪರೀಕ್ಷಾಂಗ ವಿಭಾಗದ ಕುಲಸಚಿವ ಡಾ. ನಾರಾಯಣ ಶೆಟ್ಟಿ, ಶೈಕ್ಷಣಿಕ ಕುಲಸಚಿವ ಡಾ. ಟಿ.ಕೆ. ರವೀಂದ್ರನ್, ಆಡಳಿತಾಧಿಕಾರಿ ಬಾಲಕೃಷ್ಣ ಶೆಟ್ಟಿ, ಮಾನವಿಕ ವಿಭಾಗದ ಡೀನ್ ಸಂಧ್ಯಾ ಕೆ.ಎಸ್ ಸೇರಿದಂತೆ ಇತರರು ಉಪಸ್ಥಿತರಿದ್ದರು. ಪ್ರೆಶಲ್ ಡಿ ಆಲ್ಮೇಡಾ ನಿರೂಪಿಸಿ, ಶಿಖಾ ಸ್ವಾಗತಿಸಿ, ಮಿಯಾ ಕೆನಡಿ ವಂದಿಸಿದರು.  

ವಾರ್ತಾ ಭಾರತಿ 24 Mar 2026 10:09 pm

ಕಲಬುರಗಿ | 893ನೇ ಬಸವ ಜಯಂತಿ ಉತ್ಸವ : ಪದಾಧಿಕಾರಿಗಳ ಆಯ್ಕೆ

ಕಲಬುರಗಿ: ಮಾಕಾ ಲೇಔಟ್ ಜೇವರ್ಗಿ ಕಾಲೋನಿಯಲ್ಲಿ ಜಗಜ್ಯೋತಿ ಬಸವೇಶ್ವರ ಸೇವಾ ಸಮಿತಿ (ರಿ) ವತಿಯಿಂದ 893ನೇ ಬಸವ ಜಯಂತಿ ಉತ್ಸವದ ಅಂಗವಾಗಿ ಉತ್ಸವ ಸಮಿತಿಯ ಪದಾಧಿಕಾರಿಗಳ ಆಯ್ಕೆ ಸಭೆ ಯಶಸ್ವಿಯಾಗಿ ನಡೆಯಿತು. ಸಭೆಯಲ್ಲಿ ಉತ್ಸವ ಸಮಿತಿಯ ಗೌರವಾಧ್ಯಕ್ಷರಾಗಿ ಮಹಾಂತೇಶ ಕೊಣ್ಣೂರ ಅವರನ್ನು ಹಾಗೂ ಅಧ್ಯಕ್ಷರಾಗಿ ಡಾ.ಬಾಬುರಾವ ಶೇರಿಕಾರ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷರಾಗಿ ಡಾ. ರವೀಂದ್ರ ಮಾಲಿ ಪಾಟೀಲ ಮತ್ತು ಕೋಶಾಧ್ಯಕ್ಷರಾಗಿ ಆದಪ್ಪ ಬಗಲಿ ಅವರನ್ನು ಸಹ ಆಯ್ಕೆ ಮಾಡಲಾಯಿತು. ಆಯ್ಕೆಯಾದ ಎಲ್ಲಾ ಪದಾಧಿಕಾರಿಗಳನ್ನು ಈ ವೇಳೆ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಮಲ್ಲಿಕಾರ್ಜುನ ಜಾಮಗೊಂಡ, ಶಿವಾನಂದ ಮಾಲಾಗತ್ತಿ, ನಾಗಣ್ಣ ಗೌಡ ಪಾಟೀಲ, ಶಿವಾನಂದ ದಾನಮಗುಡಿ, ಅಯ್ಯಣ್ಣ ನಂದಿ, ಹಣಮಂತರಾಯ ಐನಳ್ಳಿ, ಶಿವಕುಮಾರ ಧರ್ಮಗೊಂಡ, ಅಶೋಕ ಗೂಳಿ, ಸಂಗಮೇಶ, ಸಿದ್ದರಾಮ ವಾಲಿ, ನಾಗರಾಜ ಕಾಮಾ, ಸೂರ್ಯಕಾಂತ್ ಡುಮ್ಮ, ರಮೇಶ ಚೌಹಾಣ್, ಪ್ರಸನ್ ವಾಂಜರ ಖೇಡೆ, ಡಾ. ಸಂಜುಕುಮಾರ ಶಟಕಾರ್, ಚಂದ್ರಶೇಖರ ಅಂಕಲಿಗಿ, ರಾಜಶೇಖರ ಸಿನ್ನೂರ, ಬಸವರಾಜ ಮಡಿವಾಳ ಹಾಗೂ ಸತೀಶ ಸಜ್ಜನ ಉಪಸ್ಥಿತರಿದ್ದರು.

ವಾರ್ತಾ ಭಾರತಿ 24 Mar 2026 10:07 pm

ಮಂಗಳೂರು ವಿವಿ ಪವರ್‌ಲಿಫ್ಟಿಂಗ್: ಆಳ್ವಾಸ್ ಕಾಲೇಜು ಚಾಂಪಿಯನ್

ಸತತ 22ನೇ ಬಾರಿ ಸಮಗ್ರ ತಂಡ ಪ್ರಶಸ್ತಿ

ವಾರ್ತಾ ಭಾರತಿ 24 Mar 2026 10:06 pm

Yedrami | ರಾಸಾಯನಿಕ ಗೊಬ್ಬರದಿಂದ ಮಣ್ಣಿನಲ್ಲಿರುವ ಫಲವತ್ತತೆ ನಾಶ : ಕಣ್ಹೇರಿ ಶ್ರೀ

ಯಡ್ರಾಮಿ: ರೈತರು ಇತ್ತೀಚಿನ ದಿನಗಳಲ್ಲಿ ಅತಿಯಾದ ಆಸೆಯಿಂದ ರಾಸಾಯನಿಕ ಗೊಬ್ಬರ ಬಳಸುತ್ತಿದ್ದಾರೆ. ಇದರಿಂದ ಮಣ್ಣಿನಲ್ಲಿರುವ ಫಲವತ್ತತೆ ನಾಶವಾಗಿ ಇಳುವರಿ ಕಡಿಮೆಯಾಗುತ್ತಿದೆ ಎಂದು ಕಣ್ಹೇರಿ ಮಠದ ಅದೃಶ್ಯ ಕಾಡಸಿದ್ದೇಶ್ವರ ಮಹಾಸ್ವಾಮೀಜಿ ಹೇಳಿದರು. ಪಟ್ಟಣದ ತಹಶೀಲ್ದಾ‌ರ್ ಕಚೇರಿ ಆವರಣದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕು ಘಟಕದಿಂದ ಸೋಮವಾರ ನಡೆದ ರಾಜ್ಯ ಮಟ್ಟದ ರೈತ ಜಾಗೃತಿ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಇದರ ಬದಲಾಗಿ ರೈತರು ಸ್ವತಃ ಮನೆಗಳಲ್ಲಿರುವ ಎತ್ತು, ಹಸುಗಳಿಂದ ಬರುವ ಸಗಣಿ ಬಳಸಿ ಗೊಬ್ಬರ ತಯಾರಿಸಬೇಕು ಎಂದರು. ಇದನ್ನು ಹೊಲಗಳಿಗೆ ಹಾಕುವುದರಿಂದ ಭೂಮಿ ಫಲವತ್ತತೆ ಹೆಚ್ಚಾಗಿ ಉತ್ತಮ ಇಳುವರಿ ಬರುತ್ತದೆ. ಕಲಬುರಗಿ ಭಾಗದಲ್ಲಿ ಗಿಡಗಳ ಸಂಖ್ಯೆ ಬಹಳ ಕಡಿಮೆ ಇರುವುದರಿಂದ ಬಿಸಿಲಿನ ತಾಪ ಹೆಚ್ಚಾಗಿ ಬೆಳೆಗಳು ಸರಿಯಾಗಿ ಬೆಳೆಯುತ್ತಿಲ್ಲ. ಹೀಗಾಗಿ ರೈತರು ಮೊದಲು ಗಿಡ-ಮರಗಳ ಸಂಖ್ಯೆ ಹೆಚ್ಚು ಮಾಡಬೇಕು. ಈ ಭಾಗದಲ್ಲೂ ಕಬ್ಬು ಬೆಳೆಗಾರರ ಸಂಖ್ಯೆ ಹೆಚ್ಚಾಗುತ್ತಿದೆ. ಕೇವಲ ಕಬ್ಬು ಬೆಳೆದರೆ ಸಾಲದು. ಅದಕ್ಕೆ ತಕ್ಕ ಪೋಷಕಾಂಶ ಒದಗಿಸಿದರೆ ಮಾತ್ರ ಉತ್ತಮ ಇಳುವರಿ ಪಡೆಯಲು ಸಾಧ್ಯ ಎಂದರು. ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ ಮಾತನಾಡಿ, ರೈತರು ಬೆಳವಣಿಗೆಯಾಗಲು ಸರ್ಕಾರಗಳು ಮೊದಲು ಆಹಾರ ಭದ್ರತೆ ಒದಗಿಸಬೇಕು. ಕಳೆದ ಹಲವು ವರ್ಷಗಳಿಂದ ಆಳುತ್ತಿರುವ ರಾಜ್ಯ, ಕೇಂದ್ರ ಸರ್ಕಾರಗಳು ರೈತರಿಗೆ ಕೇವಲ ಆಶ್ವಾಸನೆ ನೀಡುತ್ತಿವೆ. ಆದರೆ ಅವರ ಸಮಸ್ಯೆಗೆ ಪರಿಹಾರ ಮಾತ್ರ ನೀಡುತ್ತಿಲ್ಲ. ಒಬ್ಬರನ್ನೊಬ್ಬರು ದೂಷಿಸುತ್ತ ಕಾಲಹರಣ ಮಾಡುತ್ತಿದ್ದಾರೆ. ಸರ್ಕಾರ ಮಂಡಿಸಿರುವ ಬಜೆಟ್ ಗಳು ಸಬ್ಸಿಡಿಗೆ ಬಳಕೆಯಾಗುತ್ತಿದೆ. ರೈತರು ಅಭಿವೃದ್ಧಿ ಹೊಂದಬೇಕಾದರೆ ಡಾ.ಸ್ವಾಮಿನಾಥನ್ ವರದಿ ಜಾರಿ ಮಾಡಬೇಕು ಎಂದರು. ಈ ವೇಳೆ ಮಾಗಣಗೇರ ಮಠದ ವಿಶ್ವಾರಾಧ್ಯ ಶಿವಾಚಾರ್ಯರು, ಕಡಕೋಳ ಮಠದ ಡಾ.ರುದ್ರಮುನಿ ಶಿವಾಚಾರ್ಯರು, ಸೊನ್ನ ಮಠದ ಡಾ. ಶಿವಾನಂದ ಮಹಾಸ್ವಾಮೀಜಿ, ಯಡ್ರಾಮಿ ಮಠದ ಸಿದ್ದಲಿಂಗ ಮಹಾಸ್ವಾಮೀಜಿ, ಸುರಪಾಲಿ-ಜಮಖಂಡಿಯ ಗಿರೀಶಾನಂದ ಮಹಾ ಸ್ವಾಮೀಜಿ, ಅರವಿಂದ ಮಹಾರಾಜರು, ಶರಣಾನಂದ ಮಹಾಸ್ವಾಮಿಗಳು, ಹಿರಿಯ ವಿಜ್ಞಾನಿ ಡಾ. ಮಂಜುನಾಥ ಚೌರೆಡ್ಡಿ ಡಾ. ಸುನೀಲಕುಮಾರ ನೂಲಿ, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಮಹಿಳಾ ಉಪಾಧ್ಯಕ್ಷೆ ಮಹಾದೇವಿ ಬೇನಾಳಮಠ, ಈರಣ್ಣ ಭಜಂತ್ರಿ ಇತರರಿದ್ದರು.

ವಾರ್ತಾ ಭಾರತಿ 24 Mar 2026 10:01 pm

ಲೋಕಸಭೆಯಲ್ಲಿ ಸಂಸದರ ಸಂಖ್ಯೆಯನ್ನು 816 ಕ್ಕೆ ವಿಸ್ತರಿಸುವ ಬಗ್ಗೆ ಸರ್ಕಾರ ಚಿಂತನೆ; ರಾಜ್ಯಗಳಲ್ಲಿರುವ ಕ್ಷೇತ್ರಗಳ ಸಂಖ್ಯೆಯಲ್ಲಿ ಯಾವ ರೀತಿ ಬದಲಾವಣೆಯಾಗಲಿದೆ?

ಮುಂದಿನ ಸಾರ್ವತ್ರಿಕ ಚುನಾವಣೆಯಿಂದ ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ 33% ಮೀಸಲಾತಿಯನ್ನು ಜಾರಿಗೆ ತರಲು ಕೇಂದ್ರವು ಸಾಂವಿಧಾನಿಕ ತಿದ್ದುಪಡಿ ಸೇರಿದಂತೆ ಕನಿಷ್ಠ ಎರಡು ಮಸೂದೆಗಳನ್ನು ಮಂಡಿಸಲು ಸಿದ್ಧತೆ ನಡೆಸುತ್ತಿದೆ. ಸರ್ಕಾರವು ಲೋಕಸಭೆಯ ಗಾತ್ರವನ್ನು 543 ರಿಂದ 816 ಸ್ಥಾನಗಳಿಗೆ ಗಮನಾರ್ಹವಾಗಿ ವಿಸ್ತರಿಸುವ ಬಗ್ಗೆ ಚಿಂತಿಸುತ್ತಿದ್ದು ಇದು 273 ಹೊಸ ಕ್ಷೇತ್ರಗಳನ್ನು ಸೇರಿಸುತ್ತದೆ. ಇವುಗಳಲ್ಲಿ ಹೆಚ್ಚಿನವು ಮಹಿಳೆಯರಿಗೆ ಮೀಸಲಾಗಿರುತ್ತವೆ. ಇದರಿಂದಾಗಿ ಹಾಲಿ ಸದಸ್ಯರನ್ನು ಸ್ಥಳಾಂತರಿಸದೆ ಪ್ರಾತಿನಿಧ್ಯವನ್ನು ಮರುರೂಪಿಸಲಾಗುತ್ತದೆ. ಈ ಪ್ರಸ್ತಾವನೆಯು ಪ್ರಧಾನಿ ನರೇಂದ್ರ ಮೋದಿಯವರ ಮಹಿಳಾ ಕೇಂದ್ರಿತ ರಾಜಕೀಯ ಸಂದೇಶವನ್ನು ಬಲಪಡಿಸುವ ಮತ್ತು ಚುನಾವಣಾ ಚಲನಶೀಲತೆ, ಕ್ಷೇತ್ರ ಗಡಿಗಳು ಮತ್ತು ಭವಿಷ್ಯದ ಕ್ಷೇತ್ರ ಮರುವಿಂಗಡಣೆ ಹಾದಿಯಲ್ಲಿ ವ್ಯಾಪಕ ಬದಲಾವಣೆಗಳನ್ನು ಉಂಟುಮಾಡುವ ನಿರೀಕ್ಷೆಯಿದೆ ಎಂದು indianexpress.com ವರದಿ ಮಾಡಿದೆ. ಪುನರ್ ರಚಿಸಲಾದ ಲೋಕಸಭೆಯು 2029 ರ ಲೋಕಸಭಾ ಚುನಾವಣೆಯಲ್ಲಿ ಮಾತ್ರ ಜಾರಿಗೆ ಬರಲಿದೆ. ʼಇಂಡಿಯನ್ ಎಕ್ಸ್‌ಪ್ರೆಸ್ʼ ವರದಿ ಪ್ರಕಾರ, ಕೇಂದ್ರ ಗೃಹ ಸಚಿವ ಅಮಿತ್ ಶಾ ಕೆಲವು ವಿರೋಧ ಪಕ್ಷಗಳೊಂದಿಗೆ ನಡೆಸಿದ ಸಭೆಯಲ್ಲಿ ಪ್ರತಿ ರಾಜ್ಯಕ್ಕೆ ಹಂಚಿಕೆಯಾದ ಸೀಟುಗಳ ಅಸ್ತಿತ್ವದಲ್ಲಿರುವ ಅನುಪಾತವನ್ನು ಉಳಿಸಿಕೊಂಡು, ಸರ್ಕಾರವು ನಾರಿ ಶಕ್ತಿ ವಂದನ ಅಧಿನಿಯಮವನ್ನು ತಿದ್ದುಪಡಿ ಮಾಡಬಹುದು ಮತ್ತು ಲೋಕಸಭೆಯ ಬಲವನ್ನು ಪ್ರತ್ಯೇಕವಾಗಿ ವಿಸ್ತರಿಸಬಹುದು ಎಂದು ಹೇಳಿದ್ದಾರೆ. ಆದಾಗ್ಯೂ, ಕ್ಷೇತ್ರ ಮರುವಿಂಗಡಣೆ ಒಳಗೊಂಡ ಕ್ಷೇತ್ರ ನಿರ್ಣಯದ ಪ್ರಕ್ರಿಯೆ 2011 ರ ಜನಗಣತಿಯನ್ನು ಆಧರಿಸಿರುವ ನಿರೀಕ್ಷೆಯಿದೆ. ►ಅಮಿತ್ ಶಾ ಹೇಳಿದ್ದು ಏನು? ವಿರೋಧ ಪಕ್ಷದ ನಾಯಕರೊಂದಿಗಿನ ಸಭೆಯಲ್ಲಿ 2029 ರವರೆಗೆ ನಡೆಯುವ ಜನಗಣತಿ ಕಾರ್ಯ ಪೂರ್ಣಗೊಳ್ಳುವವರೆಗೆ ಸರ್ಕಾರ ಕಾಯಲು ಬಯಸುವುದಿಲ್ಲ, ಅದು ಪೂರ್ಣಗೊಳ್ಳಲು ಕಾಯುವುದಾದರೆ ಮಹಿಳಾ ಮೀಸಲಾತಿ ಕಾಯ್ದೆಯನ್ನು ಜಾರಿಗೆ ತರುವುದು ವಿಳಂಬವಾಗುತ್ತದೆ ಎಂದು ಅಮಿತ್ ಶಾ ಹೇಳಿದ್ದಾರೆ ಎಂದು ತಿಳಿದುಬಂದಿದೆ. ಸೆಪ್ಟೆಂಬರ್ 2023 ರಲ್ಲಿ ನಾರಿ ಶಕ್ತಿ ವಂದನ ಅಧಿನಿಯಮ್ ಅಂಗೀಕಾರದ ಸಮಯದಲ್ಲಿ ಅನೇಕ ವಿರೋಧ ಪಕ್ಷಗಳು ಇದನ್ನೇ ಒತ್ತಾಯಿಸಿದ್ದು ನಡೆಯುತ್ತಿರುವ ಜನಗಣತಿಯ ನಂತರ ಅದನ್ನು ಕ್ಷೇತ್ರ ಮರುವಿಂಗಡಣೆಗೆ ಲಿಂಕ್ ಮಾಡುವ ಸರ್ಕಾರದ ಕ್ರಮವನ್ನು ಪ್ರಶ್ನಿಸಿದ್ದವು. ಸರ್ಕಾರ ಸೋಮವಾರ ಎಲ್ಲಾ ಪಕ್ಷಗಳನ್ನು ಮಾತುಕತೆಗೆ ಆಹ್ವಾನಿಸಿದ್ದರೂ, ಕಾಂಗ್ರೆಸ್, ಎಡ ಪಕ್ಷಗಳು, ಟಿಎಂಸಿ, ಎಎಪಿ ಮತ್ತು ಡಿಎಂಕೆ ಸೇರಿದಂತೆ ಅನೇಕ ಪಕ್ಷಗಳು ಇದರಿಂದ ದೂರ ಉಳಿದಿದ್ದವು. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು INDIA ಬ್ಲಾಕ್ ಮಿತ್ರಪಕ್ಷಗಳ ಪ್ರತ್ಯೇಕ ಸಭೆಯನ್ನು ಕರೆದಿದ್ದು ಅಲ್ಲಿ ಪ್ರಸ್ತಾವಿತ ಬದಲಾವಣೆಗಳ ಕುರಿತು ಸರ್ಕಾರದಿಂದ ವಿವರವಾದ ವರದಿಯನ್ನು ಕೋರಲು ನಿರ್ಧಾರ ತೆಗೆದುಕೊಳ್ಳಲಾಯಿತು ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ. ಬಿಜೆಪಿಯ ಉನ್ನತ ನಾಯಕತ್ವವು ಈ ಪ್ರಸ್ತಾವನೆಯ ಕುರಿತು ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಅವರೊಂದಿಗೆ ಚರ್ಚೆ ನಡೆಸಿದೆ ಎಂದು ಟಿಡಿಪಿ ಮೂಲಗಳು ತಿಳಿಸಿವೆ. ಪ್ರತಿ ರಾಜ್ಯದಲ್ಲಿ ಮಹಿಳೆಯರಿಗೆ ಮೀಸಲಿಡಬೇಕಾದ ಸ್ಥಾನಗಳನ್ನು ನಿರ್ಧರಿಸಲು ಲಾಟರಿ ವ್ಯವಸ್ಥೆಯನ್ನು ಹೊಂದುವ ಸಾಧ್ಯತೆಯನ್ನು ಸಹ ಪ್ರಸ್ತಾಪಿಸಲಾಗಿದೆ ಎಂದು ಸಭೆಯಲ್ಲಿ ಹಾಜರಿದ್ದ ಸಂಸದರೊಬ್ಬರು ಹೇಳಿದರು. ಈ ಸ್ಥಾನಗಳನ್ನು ಮಹಿಳೆಯರಿಗೆ ನಿಗದಿಪಡಿಸಲಾಗುತ್ತದೆಯೇ ಅಥವಾ ಆವರ್ತನ ಆಧಾರದ ಮೇಲೆ ಮೀಸಲಿಡಲಾಗುತ್ತದೆಯೇ ಎಂಬುದರ ಕುರಿತು ಯಾವುದೇ ಚರ್ಚೆ ನಡೆದಿಲ್ಲ ಎಂದಿದ್ದಾರೆ ಅವರು. ಸಭೆಯಲ್ಲಿ ಅಮಿತ್ ಶಾ ಮಾಡಿದ ಮತ್ತೊಂದು ನಿರ್ಣಾಯಕ ಸಲಹೆಯೆಂದರೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮೀಸಲು ಸ್ಥಾನಗಳಲ್ಲಿ ಮಹಿಳೆಯರಿಗೆ ಕೋಟಾ. ಸಮಾಜವಾದಿ ಪಕ್ಷ ಮತ್ತು ಆರ್‌ಜೆಡಿಯಂತಹ ಪಕ್ಷಗಳು ಹಾಗೂ ವಿವಿಧ ಗುಂಪುಗಳ ಹಿಂದುಳಿದ ನಾಯಕರು ಇದನ್ನು ಒತ್ತಾಯಿಸುತ್ತಿದ್ದಾರೆ. ದೇಶದಲ್ಲಿ ಸುಮಾರು 81 ಲಕ್ಷ ಜಾತಿ ಗುಂಪುಗಳಿವೆ. ಎಲ್ಲವನ್ನೂ ಪರಿಗಣನೆಗೆ ತೆಗೆದುಕೊಳ್ಳುವುದು ಅಸಾಧ್ಯ ಎಂದು ಶಾ ಹೇಳಿರುವುದಾಗಿ ಸೋಮವಾರದ ಸಭೆಯಲ್ಲಿ ಭಾಗವಹಿಸಿದ್ದ ವಿರೋಧ ಪಕ್ಷದ ನಾಯಕರೊಬ್ಬರು ಹೇಳಿದ್ದಾರೆ.   ಈ ಬದಲಾವಣೆಗಳನ್ನು ಜಾರಿಗೆ ತರಲು, ಸರ್ಕಾರವು ಕಾಯ್ದೆಗಳ ತಿದ್ದುಪಡಿಗಳನ್ನು ಅಂಗೀಕರಿಸಬೇಕು. ಮೊದಲನೆಯದಾಗಿ, ಮಹಿಳಾ ಮೀಸಲಾತಿ ಕಾಯ್ದೆ. ಮುಂದಿನ ಜನಗಣತಿ ಮತ್ತು ನಂತರದ ಕ್ಷೇತ್ರ ಮರುವಿಂಗಡಣೆ ಪ್ರಕ್ರಿಯೆ ಪೂರ್ಣಗೊಂಡ ನಂತರವೇ ಕೋಟಾ ಜಾರಿಗೆ ಬರಬೇಕೆಂದು ಪ್ರಸ್ತುತ ಕಾಯ್ದೆ ಆದೇಶಿಸುತ್ತದೆ . ಎರಡನೆಯದಾಗಿ, ಕ್ಷೇತ್ರ ಮರುವಿಂಗಡಣೆ ಆಯೋಗ ಕಾಯ್ದೆ. 2011 ರ ಜನಗಣತಿಯ ಆಧಾರದ ಮೇಲೆ ಈ ವರ್ಷದ ಜೂನ್ ವೇಳೆಗೆ ಕ್ಷೇತ್ರ ಮರುವಿಂಗಡಣೆ ಆಯೋಗವನ್ನು ರಚಿಸಬಹುದು.ಕಾಯ್ದೆಗಳನ್ನು ತಿದ್ದುಪಡಿ ಮಾಡುವ ಉದ್ದೇಶದಿಂದ ಸರ್ಕಾರವು ಅಧಿವೇಶನವನ್ನು ವಿಸ್ತರಿಸಬಹುದು ಅಥವಾ ವಿಶೇಷ ಅಧಿವೇಶನವನ್ನು ಕರೆಯಬಹುದು ಎಂದು ಮೂಲಗಳು ತಿಳಿಸಿವೆ ►ರಾಜ್ಯಗಳ ಮೇಲೆ ಇದು ಹೇಗೆ ಪರಿಣಾಮ ಬೀರುತ್ತದೆ? ಪ್ರಸ್ತುತ ಉತ್ತರ ಪ್ರದೇಶವು ಲೋಕಸಭೆಯಲ್ಲಿ ಅತಿ ಹೆಚ್ಚು ಸ್ಥಾನಗಳನ್ನು ಹೊಂದಿದೆ. ಅಂದರೆ ಸುಮಾರು 15% ಅಥವಾ 543 ರಲ್ಲಿ 80. 816 ಸದಸ್ಯರ ವಿಸ್ತೃತ ಸದನದಲ್ಲಿ ಈ ಅನುಪಾತವನ್ನು ಕಾಯ್ದುಕೊಂಡರೆ, ರಾಜ್ಯದ ಸ್ಥಾನಗಳ ಸಂಖ್ಯೆ ಸುಮಾರು 120 ಕ್ಕೆ ಏರುತ್ತದೆ. ಇದರಲ್ಲಿ ಸರಿಸುಮಾರು 40 ಸ್ಥಾನಗಳು ಪ್ರಸ್ತಾವಿತ ಮೂರನೇ ಒಂದು ಭಾಗದಷ್ಟು ಕೋಟಾದಡಿಯಲ್ಲಿ ಮಹಿಳೆಯರಿಗೆ ಮೀಸಲಾಗಿರುತ್ತವೆ. ಅದೇ ರೀತಿ, ಮಹಾರಾಷ್ಟ್ರವು ತನ್ನ ಲೋಕಸಭಾ ಪ್ರಾತಿನಿಧ್ಯವನ್ನು 48 ರಿಂದ 72 ಸ್ಥಾನಗಳಿಗೆ ಹೆಚ್ಚಿಸಲಿದೆ, ಇದರಲ್ಲಿ 24 ಮಹಿಳೆಯರಿಗೆ ಮೀಸಲಾಗಿವೆ. ಪಶ್ಚಿಮ ಬಂಗಾಳದಲ್ಲಿ ಸೀಟುಗಳ ಸಂಖ್ಯೆ 42 ರಿಂದ 63ಕ್ಕೆ ಏರಲಿದ್ದು ಮಹಿಳೆಯರಿಗೆ 21 ಸೀಟು ಮೀಸಲಾಗಿರುತ್ತದೆ . ಬಿಹಾರದಲ್ಲಿ 40 ಸೀಟುಗಳಿಂದ ರಿಂದ 60ಕ್ಕೆ ಏರಿಕೆಯಾದರೆ ಮಹಿಳೆಯರಿಗೆ 20 ಸೀಟುಗಳಲ್ಲಿ ಪ್ರಾತಿನಿಧ್ಯ ಸಿಗಲಿದೆ. ಕಡಿಮೆ ಪ್ರಾತಿನಿಧ್ಯದ ಬಗ್ಗೆ ಡಿಎಂಕೆ ಕಳವಳ ವ್ಯಕ್ತಪಡಿಸಿರುವ ತಮಿಳುನಾಡಿನಲ್ಲಿ, ಸ್ಥಾನಗಳು 39 ರಿಂದ 59 ಕ್ಕೆ ಹೆಚ್ಚಾಗಲಿವೆ. ಇಲ್ಲಿ 20 ಮಹಿಳೆಯರಿಗೆ ಮೀಸಲಾಗಿವೆ. ಮಧ್ಯಪ್ರದೇಶದಲ್ಲಿ ಸೀಟುಗಳ ಸಂಖ್ಯೆ 29 ರಿಂದ 44 ಸ್ಥಾನಗಳಿಗೆ ಏರಲಿದೆ, ಇದರಲ್ಲಿ 15 ಮಹಿಳೆಯರಿಗೆ ಮೀಸಲಾಗಿವೆ. ಅರುಣಾಚಲ ಪ್ರದೇಶ, ಗೋವಾ, ಮಣಿಪುರ, ಮೇಘಾಲಯ, ತ್ರಿಪುರಾ ಮುಂತಾದ ಸಣ್ಣ ರಾಜ್ಯಗಳಲ್ಲಿ ಇದು 2 ಲೋಕಸಭಾ ಸ್ಥಾನಗಳಿಂದ 3 ಕ್ಕೆ ಏರಬಹುದು. ತಲಾ 1 ಸ್ಥಾನವನ್ನು ಹೊಂದಿರುವ ಮಿಜೋರಾಂ, ನಾಗಾಲ್ಯಾಂಡ್ ಮತ್ತು ಸಿಕ್ಕಿಂ ಹೊಸ ಲೋಕಸಭಾ ವಿಸ್ತರಣೆಯಲ್ಲಿ ತಲಾ 2 ಸ್ಥಾನಗಳನ್ನು ಹೊಂದಬಹುದು. ಪ್ರಮುಖ ಕೇಂದ್ರಾಡಳಿತ ಪ್ರದೇಶಗಳಲ್ಲಿ, ದೆಹಲಿಯ ಲೋಕಸಭಾ ಪ್ರಾತಿನಿಧ್ಯವು 7 ರಿಂದ 11 ಸ್ಥಾನಗಳಿಗೆ ಏರಿಕೆಯಾಗಬಹುದು ,ಇದರಲ್ಲಿ 4 ಸ್ಥಾನಗಳು ಮಹಿಳೆಯರಿಗೆ ಮೀಸಲಾಗಿವೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಸೀಟುಗಳ ಸಂಖ್ಯೆ 5 ರಿಂದ 8ಕ್ಕೆ ಏರಬಹುದು, ಇದರಲ್ಲಿ 3 ಸ್ಥಾನಗಳು ಮಹಿಳೆಯರಿಗೆ ಮೀಸಲಾಗಿವೆ. ಆದಾಗ್ಯೂ, ಲಡಾಖ್ ಮತ್ತು ಪುದುಚೇರಿಯಂತಹ ಒಂದೇ ಒಂದು ಸ್ಥಾನವಿರುವ ಕೇಂದ್ರಾಡಳಿತ ಪ್ರದೇಶಗಳಲ್ಲಿ ಸ್ಥಾನಗಳಲ್ಲಿ ಯಾವುದೇ ಹೆಚ್ಚಳ ಕಂಡುಬರುತ್ತದೆಯೇ ಮತ್ತು ಅಂತಹ ಸಂದರ್ಭಗಳಲ್ಲಿ ಮಹಿಳೆಯರಿಗೆ ಮೀಸಲಾತಿಯನ್ನು ಹೇಗೆ ಜಾರಿಗೆ ತರಲಾಗುತ್ತದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

ವಾರ್ತಾ ಭಾರತಿ 24 Mar 2026 9:50 pm

ದಿಲ್ಲಿ ಬಜೆಟ್ ಮಂಡನೆ: ಪ್ರತಿ ಕುಟುಂಬಕ್ಕೆ ಎರಡು ಉಚಿತ ಎಲ್‌ಪಿಜಿ ಸಿಲಿಂಡರ್

ಹೊಸದಿಲ್ಲಿ: ಮುಖ್ಯಮಂತ್ರಿ ರೇಖಾ ಗುಪ್ತಾ ಅವರು ಮಂಗಳವಾರ 2026-27ನೇ ಸಾಲಿನ ದಿಲ್ಲಿ ಮುಂಗಡಪತ್ರವನ್ನು ಮಂಡಿಸಿದ್ದು, ರಾಜಧಾನಿಯ ಪ್ರತಿ ಕುಟುಂಬವು ಎರಡು ಉಚಿತ ಎಲ್‌ಪಿಜಿ ಸಿಲಿಂಡರ್‌ಗಳನ್ನು ಪಡೆಯಲಿದೆ. ಬಜೆಟ್ ಮೂಲಸೌಕರ್ಯ ಅಭಿವೃದ್ಧಿಗಾಗಿ ಭಾರೀ ಮೊತ್ತದ ವೆಚ್ಚ ಮತ್ತು ಪರಿಸರ ಸಂರಕ್ಷಣೆಯ ನಡುವೆ ಸಮತೋಲನವನ್ನು ಕಾಯ್ದುಕೊಳ್ಳಲು ಪ್ರಯತ್ನಿಸಿದೆ. 1,03,700 ಕೋಟಿ ರೂ.ಗಳೊಂದಿಗೆ ಇದು ದಿಲ್ಲಿಯು ಕಂಡಿರುವ ಅತಿ ದೊಡ್ಡ ಬಜೆಟ್‌ಗಳಲ್ಲಿ ಒಂದಾಗಿದೆ. ರಸ್ತೆಗಳು,ನಗರಾಭಿವೃದ್ಧಿ ಮತ್ತು ನಾಗರಿಕ ವೆಚ್ಚಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದ್ದರೂ ಸರಕಾರವು ಇದನ್ನು ‘ಹಸಿರು ಬಜೆಟ್’ ಎಂದು ಬಣ್ಣಿಸಿದೆ. ಗುಪ್ತಾ ಕಳೆದ ವರ್ಷ ಒಂದು ಲಕ್ಷ ಕೋಟಿ ರೂ.ಗಳ ಬಜೆಟ್ ಮಂಡಿಸಿದ್ದರು. ಸರಕಾರವು ಬಜೆಟ್‌ನಲ್ಲಿ ಪರಿಸರ ಸಂಬಂಧಿತ ಉಪಕ್ರಮಗಳಿಗಾಗಿ ಒಟ್ಟೂ ಮೊತ್ತದ ಶೇ.21ರಷ್ಟನ್ನು ಮೀಸಲಿರಿಸಿದ್ದು,ಇದು ಮಾಲಿನ್ಯ ನಿಯಂತ್ರಣ ಮತ್ತು ಸುಸ್ಥಿರತೆಗೆ ಪ್ರಾಮುಖ್ಯವನ್ನು ಸೂಚಿಸಿದೆ. ಉಚಿತ ಕೊಡುಗೆಗಳ ಸಂಸ್ಕೃತಿಗಾಗಿ ಹಿಂದಿನ ಆಪ್ ಸರಕಾರವನ್ನು ಗುಪ್ತಾ ಟೀಕಿಸಿದ್ದರೂ, ಹೋಳಿ ಮತ್ತು ದೀಪಾವಳಿಯ ಎರಡು ಸಂದರ್ಭಗಳಲ್ಲಿ ಪ್ರತಿ ಕುಟುಂಬಕ್ಕೆ ಎರಡು ಉಚಿತ ಎಲ್‌ಪಿಜಿ ಸಿಲಿಂಡರ್‌ಗಳನ್ನು ವಿತರಿಸಲು 260 ಕೋಟಿ ರೂ.ಗಳನ್ನು ಹಂಚಿಕೆ ಮಾಡಿದ್ದಾರೆ.

ವಾರ್ತಾ ಭಾರತಿ 24 Mar 2026 9:46 pm

ಇಸ್ರೇಲ್ ಸೇನೆ ದಕ್ಷಿಣ ಲೆಬನಾನ್‍ನ ಪ್ರದೇಶವನ್ನು ವಶಪಡಿಸಿಕೊಳ್ಳಲಿದೆ: ಇಸ್ರೇಲ್ ರಕ್ಷಣಾ ಸಚಿವ ಕಾಟ್ಜ್

ಟೆಲ್‍ಅವೀವ್: ರಕ್ಷಣಾತ್ಮಕ ವಲಯ(ಬಫರ್ ಝೋನ್)ವನ್ನು ರಚಿಸಲು ಇಸ್ರೇಲ್ ದಕ್ಷಿಣ ಲೆಬನಾನ್‍ನ ಲಿಟಾನಿ ನದಿಯವರೆಗಿನ ಪ್ರದೇಶವನ್ನು ವಶಪಡಿಸಿಕೊಳ್ಳಲಿದೆ ಎಂದು ಇಸ್ರೇಲ್ ರಕ್ಷಣಾ ಸಚಿವ ಇಸ್ರೇಲ್ ಕಾಟ್ಜ್ ಮಂಗಳವಾರ ಹೇಳಿದ್ದಾರೆ. ಸಶಸ್ತ್ರ ಪಡೆಗಳ ಮುಖ್ಯಸ್ಥರೊಂದಿಗೆ ನಡೆಸಿದ ಸಭೆಯಲ್ಲಿ ಮಾತನಾಡಿದ ಅವರು ʼಇಸ್ರೇಲಿ ಪಡೆಗಳು ಲಿಟಾನಿವರೆಗಿನ ಸೇತುವೆಗಳು ಮತ್ತು ಭದ್ರತಾ ವಲಯವನ್ನು ನಿಯಂತ್ರಿಸಲಿವೆ' ಎಂದರು. ಲಿಟಾನಿ ನದಿ ಇಸ್ರೇಲ್ ಗಡಿಯಿಂದ ಉತ್ತರಕ್ಕೆ ಸುಮಾರು 30 ಕಿ.ಮೀ ದೂರದಲ್ಲಿ ಮೆಡಿಟರೇನಿಯನ್ ಅನ್ನು ಸಂಧಿಸುತ್ತದೆ. ಇಂತಹ ಕ್ರಮಗಳು ಲೆಬನಾನ್ ರಾಷ್ಟ್ರಕ್ಕೆ ಅಸ್ತಿತ್ವದ ಬೆದರಿಕೆಯಾಗಿದೆ ಎಂದು ಲೆಬನಾನ್‍ನ ಸಶಸ್ತ್ರ ಹೋರಾಟಗಾರರ ಗುಂಪು ಹಿಜ್ಬುಲ್ಲಾ ಖಂಡಿಸಿದ್ದು ಇಸ್ರೇಲಿ ಪಡೆಗಳು ದಕ್ಷಿಣ ಲೆಬನಾನ್ ಅನ್ನು ಆಕ್ರಮಿಸುವುದನ್ನು ತಡೆಯಲು ಹೋರಾಡುವುದಾಗಿ ಘೋಷಿಸಿದೆ.

ವಾರ್ತಾ ಭಾರತಿ 24 Mar 2026 9:44 pm

ಶಾಸಕರ ವಿರುದ್ಧ ರೌಡಿ ಪದಬಳಕೆ; ರಘುಪತಿ ಭಟ್ ಬೇಷರತ್ ಕ್ಷಮೆ ಯಾಚನೆಗೆ ಬಿಜೆಪಿ ಆಗ್ರಹ

ಉಡುಪಿ, ಮಾ.24: ಶಾಸಕ ಯಶಪಾಲ್ ಸುವರ್ಣ ವಿರುದ್ಧ ರಾಜಕೀಯ ಹತಾಶೆಯಿಂದ ಮಾಜಿ ಶಾಸಕ ರಘುಪತಿ ಭಟ್ ಮಾಡಿರುವ ಆಧಾರ ರಹಿತ ಆರೋಪವನ್ನು ತಕ್ಷಣ ಹಿಂಪಡೆದು ಬೇಷರತ್ ಕ್ಷಮೆ ಯಾಚಿಸುವಂತೆ ಉಡುಪಿ ನಗರ ಬಿಜೆಪಿ ಅಧ್ಯಕ್ಷ ದಿನೇಶ್ ಅಮೀನ್ ಹಾಗೂ ಗ್ರಾಮಾಂತರ ಬಿಜೆಪಿ ಅಧ್ಯಕ್ಷ ರಾಜೀವ್ ಕುಲಾಲ್ ಆಗ್ರಹಿಸಿದ್ದಾರೆ. ಉಡುಪಿ ಪ್ರೆಸ್‌ಕ್ಲಬ್‌ನಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಡಾನಿಡಿಯೂರು ಗ್ರಾಮದಲ್ಲಿ ಮಾಜಿ ಶಾಸಕ ರಘುಪತಿ ಭಟ್ ಒಡೆತನದ ಖಾಸಗಿ ಜಮೀನಿನ ನಕಲಿ ದಾಖಲೆ ಸೃಷ್ಟಿಸಿ, ಸುಳ್ಳು ಮಾಹಿತಿ ನೀಡಿ ನಗರಾಭಿ ವೃದ್ಧಿ ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಕೆ ಮಾಡಿರುವ ಬಗ್ಗೆ ಸ್ಥಳೀಯ ಕರಾವಳಿ ಯುವಕ ಮಂಡಲ ಹಾಗೂ ಊರಿನ ಜನತೆಯ ದೂರು ಸಲ್ಲಿಸಿದ್ದರು ಎಂದರು. ಓರ್ವ ಜವಾಬ್ದಾರಿಯುತ ಶಾಸಕರಾಗಿ ಕಾನೂನು ಪ್ರಕಾರ ಕ್ರಮವಹಿಸಿ ಸಾರ್ವಜನಿಕರಿಗೆ ನ್ಯಾಯ ಒದಗಿಸುವಂತೆ ಪತ್ರ ಬರೆದ ಶಾಸಕ ಯಶ್‌ಪಾಲ್ ಸುವರ್ಣ ವಿರುದ್ಧ ರಘುಪತಿ ಭಟ್ ರಾಜಕೀಯ ಪ್ರೇರಿತರಾಗಿ ಸುಳ್ಳು ಆರೋಪ ಗಳನ್ನು ಮಾಡಿ ತೇಜೋವಧೆಗೆ ಪ್ರಯತ್ನ ಮಾಡುತ್ತಿದ್ದಾರೆ ಎಂದು ಅವರು ದೂರಿದರು. ರಘುಪತಿ ಭಟ್ಟರಿಗೆ ಹಿಂದುಳಿದ ವರ್ಗದ ಸಾಮಾನ್ಯ ಕಾರ್ಯಕರ್ತನನ್ನು ಶಾಸಕನಾಗಿ ಒಪ್ಪುವ ಮನಸ್ಥಿತಿ ಇಲ್ಲ. ಹಿಂದೂ ಕಾರ್ಯಕರ್ತನಾಗಿ, ರಾಷ್ಟ್ರೀಯವಾದಿ ಚಿಂತನೆಗಳ ಮೂಲಕ ಹಂತ ಹಂತವಾಗಿ ಬೆಳೆದು ಬಂದ ಯಶಪಾಲ್ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಉಡುಪಿಯಿಂದ ಸ್ಪರ್ಧಿಸಿ ಅಭೂತಪೂರ್ವ ಗೆಲುವು ಸಾಧಿಸಿ ದರೂ ಅವರನ್ನು ಶಾಸಕರಾಗಿ ರಘುಪತಿ ಭಟ್ ಇನ್ನೂ ಒಪ್ಪಿಲ್ಲ ಎಂದರು. ಕ್ಷೇತ್ರದ ಜನತೆ ಹಾಗೂ ಪಕ್ಷದ ಕಾರ್ಯಕರ್ತರು ತಲೆ ತಗ್ಗಿಸುವ ಕೆಲಸ ಶಾಸಕರು ಎಂದೂ ಮಾಡಿಲ್ಲ ಎಂದ ದಿನೇಶ್ ಅಮೀನ್, ಅಧಿಕಾರ ಅನುಭವಿಸಿ ಪಕ್ಷ ದ್ರೋಹ ಮಾಡಿದ ವ್ಯಕ್ತಿಗೆ ಶಾಸಕರನ್ನು ಟೀಕಿಸುವ ನೈತಿಕತೆ ಇಲ್ಲ. ಬಿಜೆಪಿ ಪಕ್ಷದಿಂದ 3 ಬಾರಿ ಶಾಸಕರಾಗಿ ಅಧಿಕಾರ ಅನುಭವಿಸಿ, ಕಳೆದ ಚುನಾವಣೆಯಲ್ಲಿ ಸೀಟು ನೀಡಿಲ್ಲ ಎಂಬ ಏಕೈಕ ಕಾರಣಕ್ಕಾಗಿ ಅಧಿಕಾರದ ಲಾಲಸೆಯಿಂದ ತನಗಾಗಿ ದುಡಿದ ಕಾರ್ಯಕರ್ತರನ್ನು ನಡು ನೀರಲ್ಲಿ ಕೈಬಿಟ್ಟು, ಬಿಜೆಪಿ ಪಕ್ಷಕ್ಕೆ ದ್ರೋಹ ಬಗೆದು ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿದ ಭಟ್‌ರಿಗೆ ಶಾಸಕರನ್ನು ಟೀಕಿಸುವ ಯಾವುದೇ ನೈತಿಕತೆ ಇಲ್ಲ ಎಂದರು. ಶಾಸಕರ ವಿರುದ್ಧ ನಿರಂತರವಾಗಿ ತೇಜೋವಧೆಗೆ ಮುಂದಾಗುತ್ತಿರುವ ರಘುಪತಿ ಭಟ್, ಈ ಬಾರಿ ಒಂದು ಹೆಜ್ಜೆ ಮುಂದೆ ಹೋಗಿ ಶಾಸಕರು ಅಧಿಕಾರಿಗಳಿಗೆ ಬೆದರಿಕೆ ಹಾಕಿ ಒತ್ತಡ ಹಾಕುತ್ತಿದ್ದಾರೆ ಎಂಬ ಬಾಲಿಶ ಅಧಾರ ರಹಿತ ಆರೋಪ ಮಾಡಿ ಸಮಾಜದ ಮುಂದೆ ಶಾಸಕರನ್ನು ರೌಡಿಯ ರೀತಿಯಲ್ಲಿ ಬಿಂಬಿಸಲು ಪ್ರಯತ್ನಿಸುತ್ತಿದ್ದಾರೆ. ರಘುಪತಿ ಭಟ್ಟರಿಗೆ ನೈತಿಕತೆ ಇದ್ದರೆ ಇಂತಹ ಸುಳ್ಳು ಆರೋಪ ಮಾಡುವ ಬದಲು ಶಾಸಕರು ಅಧಿಕಾರಿಗಳಿಗೆ ಬೆದರಿಕೆ ಮಾಡಿದ ಬಗ್ಗೆ ಯಾವುದೇ ಸೂಕ್ತ ದಾಖಲೆಗಳಿದ್ದರೆ ಬಹಿರಂಗ ಪಡಿಸಬೇಕು ಎಂದು ಸವಾಲು ಹಾಕಿದರು. ಸುದ್ದಿಗೋಷ್ಠಿಯಲ್ಲಿ ನಗರಸಭೆಯ ಮಾಜಿ ಅಧ್ಯಕ್ಷ ಪ್ರಭಾಕರ ಪೂಜಾರಿ, ಬಿಜೆಪಿ ಮುಖಂಡರಾದ ಜಗದೀಶ್ ಆಚಾರ್ಯ, ಪ್ರದೀಪ್ ಹೊನ್ನಾಳ, ಶ್ರೀವತ್ಸ, ದೇವಾನಂದ ಉಪಸ್ಥಿತರಿದ್ದರು.

ವಾರ್ತಾ ಭಾರತಿ 24 Mar 2026 9:41 pm

ಒಡಿಶಾ: ಮಾವೋವಾದಿ ನಾಯಕ ಸುಕ್ರು ಶರಣಾಗತಿ

ಭುವನೇಶ್ವರ: ಮಾವೋವಾದಿ ನಾಯಕ ಸುಕ್ರು ಆಲಿಯಾಸ್ ಸೋಶಾ ಸೋಧಿ ಕಂಧಮಲ್ ಪೊಲೀಸರ ಮುಂದೆ ಶರಣಾಗತರಾಗಿದ್ದಾನೆ. ಈತನ ತಲೆಗೆ 55 ಲಕ್ಷ ರೂ. ಬಹುಮಾನ ಘೋಷಿಸಲಾಗಿತ್ತು. ಸುಕ್ರು ಇತರ ನಾಲ್ವರು ಮಾವೋವಾದಿಗಳ ಜೊತೆಗೆ ಶರಣಾಗತನಾಗಿದ್ದಾನೆ. ಆತ ಎ.ಕೆ. 47 ಅಸಾಲ್ಟ್ ರೈಫಲ್ ಅನ್ನು ಪೊಲೀಸರಿಗೆ ಒಪ್ಪಿಸಿದ್ದಾನೆ. ನಾಲ್ವರು ಮಾವೋವಾದಿಗಳು ಈಗ ಪೊಲೀಸ್ ಕಸ್ಟಡಿಯಲ್ಲಿ ಇದ್ದಾರೆ ಎಂಬುದನ್ನು ಎಡಿಜಿ (ಮಾವೋವಾದಿ ನಿಗ್ರಹ ಕಾರ್ಯಾಚರಣೆ) ಸಂಜೀಬ್ ಪಾಂಡಾ ಅವರು ದೃಢಪಡಿಸಿದ್ದಾರೆ. ಮಾಲ್ಕಂಗಿರಿ ಜಿಲ್ಲೆಯ ನಿವಾಸಿ ಹಾಗೂ ನಿಷೇಧಿತ ಸಿಪಿಐ (ಮಾವೋವಾದಿ)ಯ ರಾಜ್ಯ ಸಮಿತಿ ಸದಸ್ಯ 49 ವರ್ಷದ ಸುಕ್ರು ಒಡಿಶಾದ ಅತ್ಯಂತ ಹಿರಿಯ ಸಕ್ರಿಯ ಮಾವೋವಾದಿ. ಈತ ಸುಮಾರು 13 ಬಂಡುಕೋರರನ್ನು ಹೊಂದಿದ್ದ ಸಣ್ಣ ಗುಂಪಿನ ನೇತೃತ್ವ ವಹಿಸಿದ್ದ. ಈ ಗುಂಪು ಮುಖ್ಯವಾಗಿ ಕಂಧಮಾಲ್ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿತ್ತು.

ವಾರ್ತಾ ಭಾರತಿ 24 Mar 2026 9:38 pm

Kalaburagi | ದಕ್ಷಿಣ ವಲಯ ಅಂತರ ವಿವಿ ಪಂದ್ಯ : ಗುಲ್ಬರ್ಗಾ ವಿವಿಯ ಖೋಖೋ ಪುರುಷ ತಂಡ ಭಾಗಿ

ಕಲಬುರಗಿ : ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ಮಾ.26 ರಿಂದ 29 ರವರೆಗೆ ನಡೆಯಲಿರುವ ದಕ್ಷಿಣ ವಲಯ ಅಂತರ ವಿಶ್ವವಿದ್ಯಾಲಯ ಖೋಖೋ (ಪುರುಷ) ಪಂದ್ಯಾಟದಲ್ಲಿ ಗುಲ್ಬರ್ಗಾ ವಿಶ್ವವಿದ್ಯಾಲಯದ ದೈಹಿಕ ಶಿಕ್ಷಣ ವಿಭಾಗದ ತಂಡವು ಭಾಗವಹಿಸಲಿದೆ. ತಂಡದ ನಾಯಕ ಮಹೇಶ ಹಾಗೂ ತಂಡದ ಸದಸ್ಯರಾದ ಸಾಗರ್ ಹಾವನೂರ, ಭೂತಾಲಿ, ಮಂಜುನಾಥ, ಸೊಪನ್ನ, ನಾಗರಾಜ, ಭೀರಣ್ಣ ಹೊಸಮನಿ, ಸಂತೋಷ, ನವೀನ್, ರಾಘವೇಂದ್ರ ಮತ್ತು ಮಹದೇವಪ್ಪ ಭಾಗವಹಿಸಲಿದ್ದಾರೆ. ತಂಡದ ವ್ಯವಸ್ಥಾಪಕ/ತರಬೇತಿದಾರರಾಗಿ ಕಲಬುರಗಿಯ ಶ್ರೀ.ಬಿ.ಶ್ಯಾಮಸಂದರ ಸ್ಮಾರಕ ದೈಹಿಕ ಶಿಕ್ಷಣ ಮಹಾವಿದ್ಯಾಲಯದ (ಬಿ.ಪಿ.ಇಡಿ) ಸಹಾಯಕ ಪ್ರಾಧ್ಯಾಪಕ ಶ್ರೀ.ಅಮರೇಶ್ವರ ತೆರಳುವರು. ಗುಲ್ಬರ್ಗಾ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಶಶಿಕಾಂತ ಎಸ್. ಉಡಿಕೇರಿ, ಕುಲಸಚಿವ ಪ್ರೊ. ರಮೇಶ್ ಲಂಡನಕರ್, ಮೌಲ್ಯಮಾಪನ ಕುಲಸಚಿವ ಡಾ. ಎನ್.ಜಿ. ಕಣ್ಣೂರ, ವಿತ್ತಾಧಿಕಾರಿ ಜಯಾಂಬಿಕ, ಕಾನೂನು ನಿಕಾಯದ ಡೀನ್ ಪ್ರೊ. ದೇವಿದಾಸ ಮಾಲೆ, ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಹಾಗೂ ಪ್ರಾಂಶುಪಾಲ ಡಾ. ಎಸ್.ಹೆಚ್. ಜಂಗೆ, ಡಾ. ಚಂದ್ರಕಾoತ ಬಿರಾದಾರ, ಅರುಣ್ ಕುಮಾರ್ ಎಚ್ ಇವರು ತಂಡಕ್ಕೆ ಶುಭ ಹಾರೈಸಿದ್ದಾರೆ.

ವಾರ್ತಾ ಭಾರತಿ 24 Mar 2026 9:37 pm

ಕೋಟೆಕಾರ್ ಪ.ಪಂ. ಸಾಮಾನ್ಯ ಸಭೆ| ವಾರ್ಡ್ ಸದಸ್ಯರ ಗಮನಕ್ಕೆ ತಾರದೇ ಅಭಿವೃದ್ಧಿ ಕಾಮಗಾರಿ: ಆಕ್ರೋಶ

ಉಳ್ಳಾಲ: ವಾರ್ಡ್ ಸದಸ್ಯರ ಗಮನಕ್ಕೆ ತಾರದೇ ಪ.ಪಂ. ಆಡಳಿತ ಮಂಡಳಿ ಅಭಿವೃದ್ಧಿ ಕಾಮಗಾರಿ ಮಾಡುತ್ತಿರುವ ಬಗ್ಗೆ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದ ಘಟನೆ ಕೋಟೆಕಾರ್ ಪ.ಪಂ. ಸಾಮಾನ್ಯ ಸಭೆಯಲ್ಲಿ ನಡೆಯಿತು. ಕೋಟೆಕಾರ್ ಪಟ್ಟಣ ಪಂಚಾಯತ್ ಅಧ್ಯಕ್ಷ ದಿವ್ಯ ಸತೀಶ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಹರೀಶ್ ರಾವ್, ವಾರ್ಡ್ ಅಭಿವೃದ್ಧಿ ಯೋಜನೆ ಹಾಕುವ ಸಂದರ್ಭ ಅಧ್ಯಕ್ಷರು ಮತ್ತು ಸಮಿತಿ ಸ್ವಯಂ ತೀರ್ಮಾನ ತೆಗೆದುಕೊಳ್ಳುವುದು ಬೇಡ. ಈ ಸಂದರ್ಭ ಆಯಾ ವಾರ್ಡ್ ಸದಸ್ಯರ ಗಮನ ಸೆಳೆದು ಮಾಹಿತಿ ಪಡೆಯ ಬೇಕು ಎಂದು ಆಗ್ರಹಿಸಿದರು. ಇದಕ್ಕೆ ಎಸ್ ಡಿಪಿಐ ಸದಸ್ಯೆ ಸಲೀಮಾ ಬಿ, ಇಸಾಕ್ ದನಿ ಗೂಡಿಸಿದರು. ಅಂಗನವಾಡಿ ಮೇಲ್ವಿಚಾರಕಿ ಶಂಕರಿ ಅವರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಲಭಿಸುವ ಯೋಜನೆಗಳ ಬಗ್ಗೆ ಮಾಹಿತಿ ನೀಡಿ,ಒಂದು ಕುಟುಂಬದ ಇಬ್ಬರಿಗೆ ಭಾಗ್ಯ ಲಕ್ಷ್ಮಿ ಯೋಜನೆ ಸಿಗುತ್ತಿತ್ತು .ಆದರೆ ಇತ್ತೀಚೆಗೆ ಅಂಬ್ಲಮೊಗರು ಗಾಂಧಿ ನಗರದಲ್ಲಿ ತ್ರಿವಳಿ ಹೆರಿಗೆ ಯಾದ ಮೂರು ಹೆಣ್ಣು ಮಕ್ಕಳಿಗೆ ಭಾಗ್ಯ ಲಕ್ಷ್ಮಿ ಸಿಗ ಬೇಕು ಎಂಬುದು ನಮ್ಮ ಹೋರಾಟ ಆಗಿತ್ತು. ಇದೀಗ ಮೂವರು ಹೆಣ್ಣುಮಕ್ಕಳಿಗೆ ಭಾಗ್ಯ ಲಕ್ಷ್ಮಿ ಲಭಿಸಿದೆ ಎಂದರು. ಕೊರೊನೊ ವ್ಯಾಕ್ಸಿನ್ ನಿಂದ ಹೃದಯಾಘಾತ ಸಂಭವಿಸುತ್ತಿದೆ ಎಂದು ಸದಸ್ಯರೊಬ್ಬರು ಮಾಡಿದ ಆರೋಪಕ್ಕೆ ಉತ್ತರಿಸಿದ ಆರೋಗ್ಯ ಇಲಾಖೆ ಅಧಿಕಾರಿ,ಕೊರೊನೊ ವ್ಯಾಕ್ಸಿನ್ ನಲ್ಲಿ ಯಾವುದೇ ಸಮಸ್ಯೆ ಆಗಿಲ್ಲ. ಆರೋಗ್ಯ ಇಲಾಖೆಯ ಸಿಬ್ಬಂದಿ ಮೂರು ವ್ಯಾಕ್ಸಿನ್ ತೆಗೆದು ಕೊಂಡಿದ್ದಾರೆ.ಅವರಿಗೆ ಯಾವುದೇ ತೊಂದರೆ ಆಗಿಲ್ಲ ಎಂದರು. ಕೋಟೆಕಾರ್ ಪಟ್ಟಣ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ಆದ ನಿರ್ಣಯ ಬಗ್ಗೆ ಯಾವುದೇ ಚರ್ಚೆ ನಡೆಯುವುದಿಲ್ಲ. ತಹಶೀಲ್ದಾರ್ ಬಳಿ ಹೋಗುವಾಗ ಮುಖ್ಯಾಧಿಕಾರಿ ಇರಬೇಕು. ಇಲ್ಲಿ ಸರಿಯಾಗಿ ಕೆಲಸ ಆಗದಿದ್ದರೆ ಅಭಿವೃದ್ಧಿ ಹೇಗೆ ಆಗುತ್ತದೆ ಎಂದು ಸುಜಿತ್ ಮಾಡೂರು ಪ್ರಶ್ನಿಸಿದರು. ತಹಶೀಲ್ದಾರ್ ಕಚೇರಿ ಗೆ ಎಂಟು ಸದಸ್ಯರು ಹೋಗಿದ್ದೆವು. ನಿವೇಶನ ರಹಿತರಿಗೆ ನಿವೇಶನ ನೀಡಬೇಕು ಎಂದು ಒಂದೂವರೆ ವರ್ಷದಿಂದ ಹೋರಾಟ ಮಾಡಿದ್ದೇವೆ.ಆದರೆ ಈವರೆಗೆ ಸರ್ವೆ ಕೂಡ ಆಗಿಲ್ಲ. ನೀವು ಕಳಿಸಿದ ದಾಖಲೆ ಗಳಲ್ಲಿ ನಿವೇಶನ ರಹಿತರಿಗೆ ನಿವೇಶನ ಕಾಯ್ದಿರಿಸಬೇಕು ಎಂದು ಎಲ್ಲೂ ಉಲ್ಲೇಖ ಮಾಡಿಲ್ಲ ಎಂದು ಹರೀಶ್ ಆರೋಪಿಸಿದರು. ಸರ್ಕಾರ ದಿಂದ ಬಂದ ಸುತ್ತೋಲೆ ಗಳನ್ನು ಸಭೆಯ ಗಮನಕ್ಕೆ ತರಬೇಕು. ಇಲ್ಲದಿದ್ದರೆ ಸದಸ್ಯರಿಗೆ ವಿಷಯ ಗೊತ್ತಾಗು ವುದಿಲ್ಲ ಎಂದು ಅಹ್ಮದ್ ಅಜ್ಜಿನಡ್ಕ ಆಗ್ರಹಿಸಿದರು. ವಾರ್ಡ್ ಧಾರ್ಮಿಕ ಕ್ಷೇತ್ರ ಗಳ ಅಭಿವೃದ್ಧಿ ಕಾಮಗಾರಿ ಮಾಡುವಾಗ ಆಯಾ ವಾರ್ಡ್ ಸದಸ್ಯ ರ ಗಮನ ಸೆಳೆಯು ತ್ತಿಲ್ಲ. ಸದಸ್ಯರ ಗಮನಕ್ಕೆ ತಾರದೇ ನಿರ್ಣಯ ಮಾಡು ವುದು ಯಾಕೆ ಎಂದು ಪ್ರಶ್ನಿಸಿ ಸುಜಿತ್ ಮಾಡೂರು ಸ್ಥಾಯಿ ಸಮಿತಿ ಅಧ್ಯಕ್ಷರನ್ನು ತರಾಟೆಗೈದರು. ಮಾಡೂರು ಕೊರಗಜ್ಜ ಸಾನಿಧ್ಯ ಪವಿತ್ರ ಜಾಗ. ಈ ಕ್ಷೇತ್ರದ ಅಭಿವೃದ್ಧಿ ವಿಚಾರದಲ್ಲಿ ವ್ಯಾಪಕ ರಾಜಕೀಯ ಬೇಡ. ಕ್ಷೇತ್ರದ ಅಭಿವೃದ್ಧಿ ಕೆಲಸ ಮಾಡುವುದು ಉತ್ತಮ ಎಂದು ಅಹ್ಮದ್ ಅಜ್ಜಿನಡ್ಕ ಸಲಹೆ ನೀಡಿದರು. ಜನರ ಪರವಾಗಿ ಹೋರಾಟ ಮಾಡುವ ಸದಸ್ಯರ ತೇಜೋವಧೆಗೆ ಸಾಮಾಜಿಕ ಜಾಲತಾಣ ಬಳಕೆ ಮಾಡಲಾಗು ತ್ತಿದೆ ಎಂದು ಕೋಟೆಕಾರು ಪ.ಪಂ. ಸಾಮಾನ್ಯ ಸಭೆಯಲ್ಲಿ ಕೌನ್ಸಿಲರ್ ಸುಜಿತ್ ಮಾಡೂರು ಆರೋಪಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ಸುದ್ದಿಗಳಿಗೆ ಪ.ಪಂ. ಆಡಳಿತ ಉತ್ತರಿಸಬೇಕಿಲ್ಲ ಎಂದು ಅಧ್ಯಕ್ಷೆ ದಿವ್ಯ ಸತೀಶ್ ಶೆಟ್ಟಿ ಸಲಹೆ ನೀಡಿದರು. ಸಭೆಯಲ್ಲಿ ಉಪಾಧ್ಯಕ್ಷ ಪ್ರವೀಣ್, ಮುಖ್ಯಾಧಿಕಾರಿ ಮಾಲಿನಿ, ಸ್ಥಾಯಿ ಸಮಿತಿ ಅಧ್ಯಕ್ಷ ಧೀರಜ್ ಉಪಸ್ಥಿತರಿದ್ದರು.

ವಾರ್ತಾ ಭಾರತಿ 24 Mar 2026 9:33 pm

ಚಿಂಚೋಳಿ | ಸಿಡಿಲು ಬಡಿದು ಯುವಕ ಮೃತ್ಯು

ಕಲಬುರಗಿ: ಸಿಡಿಲು ಬಡಿದು ಯುವಕನೊಬ್ಬ ಮೃತಪಟ್ಟಿರುವ ಘಟನೆ ಚಿಂಚೋಳಿ ತಾಲ್ಲೂಕಿನ ಶಾದಿಪುರ ಗ್ರಾಮದ ಸಮೀಪದ ಧನಸಿಂಗ್‌ ನಾಯಕ ತಾಂಡಾದಲ್ಲಿ ಮಂಗಳವಾರ ಸಂಜೆ ನಡೆದಿದೆ. ಮೃತರನ್ನು ಮಹೇಶ ಕಿಶನ್ ಚವ್ಹಾಣ (22) ಎಂದು ಗುರುತಿಸಲಾಗಿದೆ. ಹೊಲದಲ್ಲಿ ಕೆಲಸ ಮಾಡುವ ವೇಳೆ ಸಿಡಿಲು ಬಡಿದು ಯುವಕ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ. ಘಟನಾ ಸ್ಥಳಕ್ಕೆ ಕುಂಚಾವರಂ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವಾರ್ತಾ ಭಾರತಿ 24 Mar 2026 9:31 pm

ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಐಪಿಎಲ್ ಮ್ಯಾಚ್ ನೋಡಲು ಹೋಗ್ತಿದ್ದೀರಾ? ಹೀಗಿದೆ ನೋಡಿ ಪೊಲೀಸ್ ಮಾರ್ಗಸೂಚಿ

Police Guideline To IPL Match- ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಐಪಿಎಲ್ ಪಂದ್ಯಗಳ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆಯು ಕಟ್ಟುನಿಟ್ಟಿನ ಮಾರ್ಗಸೂಚಿ ಪ್ರಕಟಿಸಿದೆ. ಕೇವಲ ಅಧಿಕೃತ ಮೂಲಗಳಿಂದ ಕ್ಯೂಆರ್ ಕೋಡ್ ಆಧಾರಿತ ಟಿಕೆಟ್ ಖರೀದಿಸಲು ಸೂಚಿಸಲಾಗಿದ್ದು, ಪಂದ್ಯಕ್ಕೆ 4 ತಾಸು ಮುಂಚಿತವಾಗಿ ಪ್ರವೇಶಕ್ಕೆ ಅವಕಾಶ ನೀಡಲಾಗುತ್ತದೆ. ಸಾರ್ವಜನಿಕರು ಖಾಸಗಿ ವಾಹನಗಳ ಬದಲು ಉಚಿತ ಮೆಟ್ರೋ ಸೌಲಭ್ಯ ಬಳಸಲು ಪ್ರೋತ್ಸಾಹಿಸಲಾಗಿದೆ. ಮುಖ್ಯವಾಗಿ ಪ್ರೇಕ್ಷಕರು ಕ್ರೀಡಾಂಗಣದ ಒಳಗೆ ಮತ್ತು ಹೊರಗೆ ಸುರಕ್ಷತಾ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಕೋರಲಾಗಿದೆ.

ವಿಜಯ ಕರ್ನಾಟಕ 24 Mar 2026 9:29 pm

ಲೋಕಸಭೆಯಲ್ಲಿ ರಾಷ್ಟ್ರೀಯ ಭದ್ರತೆ, ಸಹಕಾರಿ ಒಕ್ಕೂಟ, ದ.ಕ. ಅಭಿವೃದ್ಧಿ ಪರ ಧ್ವನಿಯೆತ್ತಿದ ಸಂಸದ ಬ್ರಿಜೇಶ್ ಚೌಟ

ಹೊಸದಿಲ್ಲಿ : ಸಂಸದ ಬ್ರಿಜೇಶ್ ಚೌಟ ಅವರು ಮಂಗಳವಾರ ಲೋಕಸಭೆಯಲ್ಲಿ ಹಣಕಾಸು ವಿಧೇಯಕದ ಚರ್ಚೆ ಯಲ್ಲಿ ಭಾಗವಹಿಸಿ, ಹಣಕಾಸು ಶಿಸ್ತು, ತೆರಿಗೆ ಸುಧಾರಣೆ, ರಾಷ್ಟ್ರೀಯ ಭದ್ರತೆ, ಸಹಕಾರಿ ಒಕ್ಕೂಟ ತತ್ವ ಹಾಗೂ ಮಾಜಿ ಸೈನಿಕರ ಕಲ್ಯಾಣ ಸೇರಿದಂತೆ ಪ್ರಮುಖ ವಿಚಾರಗಳ ಬಗ್ಗೆ ಸದನದ ಗಮನಸೆಳೆದರು. ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಜಿಎಸ್ಟಿ ಸುಧಾರಣೆಗಳು ದೇಶದ ಆರ್ಥಿಕತೆ ಯನ್ನು ಬಲಪಡಿಸಿರುವುದಲ್ಲದೆ, ದೈನಂದಿನ ಬಳಕೆಯ ವಸ್ತುಗಳ ಮೇಲಿನ ತೆರಿಗೆ ಕಡಿಮೆ ಮಾಡುವ ಮೂಲಕ ಸಾಮಾನ್ಯ ಕುಟುಂಬಗಳಿಗೆ ನೆರವಾಗಿದೆ ಎಂದು ಅವರು ಶ್ಲಾಘಿಸಿದರು. ಇದೇ ವೇಳೆ ಸರಳೀಕೃತ ಆದಾಯ ತೆರಿಗೆ ಚೌಕಟ್ಟನ್ನು ಸ್ವಾಗತಿಸಿದ ಅವರು, ಇದು ತೆರಿಗೆದಾರರಿಗೆ ಹೆಚ್ಚಿನ ಸ್ಪಷ್ಟತೆ ಮತ್ತು ವಿಶ್ವಾಸವನ್ನು ನೀಡಲಿದೆ ಎಂದು ಅಭಿಪ್ರಾಯಪಟ್ಟರು. ಬಜೆಟ್ ಅನ್ನು ಕೇವಲ ಆರ್ಥಿಕ ದಾಖಲೆಯಾಗಿ ಮಾತ್ರವಲ್ಲದೆ ರಾಷ್ಟ್ರೀಯ ಭದ್ರತೆಯ ದೃಷ್ಟಿಕೋನದಿಂದಲೂ ಗಮನಿಸಿದ  ಚೌಟ, ಸುಭದ್ರ ಆರ್ಥಿಕತೆಯು ಸಶಸ್ತ್ರ ಪಡೆಗಳ ಆಧುನೀಕರಣಕ್ಕೆ ಅಡಿಪಾಯ ಎಂದರು. ರಕ್ಷಣಾ ವಲ ಯದ ಹೆಚ್ಚಿನ ಅನುದಾನ ಮತ್ತು ಸ್ವದೇಶಿ ರಕ್ಷಣಾ ಉತ್ಪಾದನೆಗೆ ನೀಡುತ್ತಿರುವ ಉತ್ತೇಜನವನ್ನು ಅವರು ಸ್ವಾಗತಿಸಿ ದರು. ಇದೇ ಸಂದರ್ಭದಲ್ಲಿ, ಸೇವಾವಧಿಯಲ್ಲಿ ಗಂಭೀರವಾಗಿ ಗಾಯಗೊಂಡರೂ ಕರ್ತವ್ಯದ ಮೇಲಿನ ನಿಷ್ಠೆಯಿಂದ ನಿವೃತ್ತಿಯವರೆಗೆ ಸೇವೆ ಸಲ್ಲಿಸುವ ಸೈನಿಕರಿಗೂ ವಿಕಲಚೇತನರ ಪಿಂಚಣಿ ಸೌಲಭ್ಯಗಳನ್ನು ವಿಸ್ತರಿಸಬೇಕು ಅವರು ಇದೇ ವೇಳೆ ಹಣಕಾಸು ಸಚಿವರಲ್ಲಿ ಮನವಿ ಮಾಡಿದರು. ಸಹಕಾರಿ ಒಕ್ಕೂಟ ವ್ಯವಸ್ಥೆಯ ಕುರಿತು ಮಾತನಾಡಿದ ಕ್ಯಾ. ಚೌಟ ಅವರು, ಕೇಂದ್ರ ಸರ್ಕಾರದ ಯೋಜನೆಗಳ ಲಾಭ ಜನ ಸಾಮಾನ್ಯರಿಗೆ ತಲುಪಲು ರಾಜ್ಯ ಸರ್ಕಾರಗಳ ಸಮಯೋಚಿತ ಅನುಷ್ಠಾನ ಕೂಡ ಅತಿ ಮುಖ್ಯ. ಆದರೆ, ಕರ್ನಾಟಕದಲ್ಲಿ ಜಲ ಜೀವನ್ ಮಿಷನ್ ಮತ್ತು ಪ್ರಧಾನ ಮಂತ್ರಿ ಆವಾಸ್ ಯೋಜನೆಯಂತಹ ಮಹತ್ವದ ಯೋಜನೆ ಗಳ ಅನುಷ್ಠಾನದಲ್ಲಿ ರಾಜ್ಯ ಸರ್ಕಾರದ ಅಸಹಕಾರ, ವಿಳಂಬ ನೀತಿಯಿಂದಾಗಿ ಅನುದಾನ ಸರಿಯಾಗಿ ಬಳಕೆಯಾ ಗದೆ ಉಳಿದಿದೆ. ಇದರಿಂದ ಬಡ ಕುಟುಂಬಗಳು ಕುಡಿಯುವ ನೀರು ಮತ್ತು ವಸತಿ ಸೌಲಭ್ಯದಿಂದ ವಂಚಿತರಾಗುತ್ತಿ ದ್ದಾರೆ ಎಂದು ಅವರು ವಿಷಾದ ವ್ಯಕ್ತಪಡಿಸಿದರು. *ಕರಾವಳಿ ಕಡಲ್ಕೊರೆತ: ಶಾಶ್ವತ ಪರಿಹಾರಕ್ಕೆ ಆಗ್ರಹ ದ.ಕ. ಜಿಲ್ಲೆಯ ಉಳ್ಳಾಲ ಮತ್ತು ಸೋಮೇಶ್ವರ ಭಾಗದಲ್ಲಿ ತೀವ್ರವಾಗಿರುವ ಕಡಲ್ಕೊರೆತವು ಕೇವಲ ತಾತ್ಕಾಲಿಕ ಸಮಸ್ಯೆಯಲ್ಲ, ಬದಲಾಗಿ ಅಸ್ತಿತ್ವಕ್ಕೆ ಇರುವ ಸವಾಲಾಗಿದೆ ಎಂದು ಸಂಸದರು ಆತಂಕ ವ್ಯಕ್ತಪಡಿಸಿದರು. ಈ ಸಮಸ್ಯೆ ಯಿಂದ ಮೀನುಗಾರರ ಮನೆಗಳು ಮತ್ತು ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ಉಂಟಾಗುವ ಹಾನಿಯಿಂದ ರಕ್ಷಣೆಗೆ ಕೇಂದ್ರ ಪರಿಸರ ಸಚಿವಾಲಯ ಹಾಗೂ ಭೂವಿಜ್ಞಾನ ಸಚಿವಾಲಯದ ಸಮನ್ವಯದೊಂದಿಗೆ ವೈಜ್ಞಾನಿಕ ಸಮಗ್ರ ಕರಾವಳಿ ರಕ್ಷಣಾ ಯೋಜನೆ ರೂಪಿಸಿ, ವಿಶೇಷ ಅನುದಾನ ಬಿಡುಗಡೆ ಮಾಡುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು. *ಕೊಂಕಣ ರೈಲ್ವೆ ಭಾರತೀಯ ರೈಲ್ವೆಯೊಂದಿಗೆ ವಿಲೀನಕ್ಕೆ ಒತ್ತಾಯ: ಕೊಂಕಣ ರೈಲ್ವೆಯು ಪ್ರಸ್ತುತ ಇರುವ ರಚನಾತ್ಮಕ ಸಮಸ್ಯೆಗಳನ್ನು ಪರಿಹರಿಸಲು ಮತ್ತು ಅದರ ಪೂರ್ಣ ಪ್ರಮಾಣದ ಅಭಿವೃದ್ಧಿಗಾಗಿ ಅದನ್ನು ತಕ್ಷಣವೇ ಭಾರತೀಯ ರೈಲ್ವೆಯೊಂದಿಗೆ ವಿಲೀನಗೊಳಿಸಬೇಕು. ಈ ಕುರಿತು ರೈಲ್ವೆ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಜಾರ್ಜ್ ಫರ್ನಾಂಡಿಸ್ ಅವರ ಕಾಲದ ಈ ಮಹತ್ವಾಕಾಂಕ್ಷಿ ಯೋಜನೆಯನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲು ಇದು ಅನಿವಾರ್ಯವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು. ದಕ್ಷಿಣ ಕನ್ನಡದ ಮೂಲಸೌಕರ್ಯ ಮತ್ತು ಲಾಜಿಸ್ಟಿಕ್ಸ್ ಅಭಿವೃದ್ಧಿಗೆ ವಿಶೇಷ ಒತ್ತು ನೀಡಿದ್ದು, 50ನೇ ವರ್ಷದ ಸಂಭ್ರಮದಲ್ಲಿರುವ ನವ ಮಂಗಳೂರು ಬಂದರಿನ ಪೂರ್ಣ ಸಾಮರ್ಥ್ಯದ ಬಳಕೆಗೆ ರಸ್ತೆ ಸಂಪರ್ಕ ಸುಧಾರಿಸುವುದು ಅನಿವಾರ್ಯವಾಗಿದೆ ಎಂದು ಪ್ರತಿಪಾದಿಸಿದರು. ಈ ನಿಟ್ಟಿನಲ್ಲಿ ಮಂಗಳೂರು-ಬೆಂಗಳೂರು ಎಕ್ಸ್‌ಪ್ರೆಸ್ ವೇ ಕಾರಿಡಾರ್ ಹಾಗೂ ಮಂಗಳೂರು ಬೈಪಾಸ್ ಕಾಮಗಾರಿಗಳಿಗೆ ವೇಗ ನೀಡುವಂತೆ ವಿನಂತಿಸಿದ ಅವರು, ಹಾಸನ-ಮಂಗಳೂರು ರೈಲು ಮಾರ್ಗದ ಶಿರಾಡಿ ಘಾಟ್ ವಿಭಾಗದ ಡಿಪಿಆರ್ ಸಿದ್ಧಪಡಿಸಲು ಅನುಮೋದನೆ ನೀಡಿದ ರೈಲ್ವೆ ಸಚಿವರಿಗೆ ಈ ವೇಳೆ ಧನ್ಯವಾದ ಸಲ್ಲಿಸಿದ ಅವರು ಜತೆಗೆ ಈ ಕಾಮಗಾರಿಯನ್ನು ಶೀಘ್ರವಾಗಿ ಆರಂಭಿಸಬೇಕು ಎಂದು ಒತ್ತಾಯಿಸಿದರು. ಇದರೊಂದಿಗೆ, ಕೇಂದ್ರ ಸರ್ಕಾರ ಘೋಷಿಸಿರುವ ‘ಸಿಟಿ ಎಕನಾಮಿಕ್ ರೀಜನ್’ ಯೋಜನೆಗೆ ಮಂಗಳೂರು ಅತ್ಯಂತ ಸೂಕ್ತ ನಗರವಾಗಿದ್ದು, ಇದನ್ನು ಆದ್ಯತೆಯ ಮೇಲೆ ಪರಿಗಣಿಸುವಂತೆ ಹಣಕಾಸು ಸಚಿವರಿಗೆ ಮನವಿ ಮಾಡಿದ್ದಾರೆ.

ವಾರ್ತಾ ಭಾರತಿ 24 Mar 2026 9:29 pm

Bengaluru | ನಗರದ ವಿವಿಧೆಡೆ ಪೊಲೀಸರ ಕಾರ್ಯಾಚರಣೆ: ಐದು ಮಂದಿ ಡ್ರಗ್‍ಪೆಡ್ಲರ್‌ಗಳ ಬಂಧನ, 11.04 ಕೋಟಿ ಮೌಲ್ಯದ ಮಾದಕ ವಸ್ತು ವಶ

ಬೆಂಗಳೂರು : ನಗರದ ವಿವಿಧ ಕಡೆಗಳಲ್ಲಿ ಪೊಲೀಸರು ಪ್ರತ್ಯೇಕ ಕಾರ್ಯಾಚರಣೆ ನಡೆಸಿ ಐದು ಮಂದಿ ಡ್ರಗ್‍ಪೆಡ್ಲರ್‌ ಗಳನ್ನು ಬಂಧಿಸಿ, ಒಟ್ಟು 11.04 ಕೋಟಿ ರೂ. ಮೌಲ್ಯದ ಗಾಂಜಾ, ಎಂಡಿಎಂಎ ಹಾಗೂ ವಾಹನವನ್ನು ವಶಪಡಿಸಿಕೊಂಡಿದ್ದಾರೆ. ಮೈಸೂರು ರಸ್ತೆಯ ನಾಯಂಡಹಳ್ಳಿ ಸಿಗ್ನಲ್ ಬಳಿ ಮಾದಕ ವಸ್ತು ಗಾಂಜಾ ಸಾಗಿಸುತ್ತಿರುವ ಬಗ್ಗೆ ಸಿಸಿಬಿ ಪೊಲೀಸರಿಗೆ ದೊರೆತ ಮಾಹಿತಿ ಮೇರೆಗೆ ಸ್ಥಳದ ಮೇಲೆ ದಾಳಿ ಮಾಡಿ 3.32 ಕೋಟಿ ಮೌಲ್ಯದ ಮಾದಕ ವಸ್ತು ಗಾಂಜಾ ವಶಪಡಿಸಿಕೊಂಡಿದ್ದಾರೆ. ಉಪ್ಪಾರಪೇಟೆ ಠಾಣೆ ಪೊಲೀಸರು ಆರ್.ಕೆ.ಪುರದ ಲಾಡ್ಜ್‍ವೊಂದರ ಮೇಲೆ ದಾಳಿ ಮಾಡಿ 7.60 ಕೋಟಿ ರೂ. ಮೌಲ್ಯದ 3 ಕೆ.ಜಿ. 900 ಗ್ರಾಂ ಗಾಂಜಾ ವಶಪಡಿಸಿಕೊಂಡಿದ್ದಾರೆ. ಹಾಗೆಯೇ, ಕಾಡುಗೋಡಿ ಠಾಣೆಯ ಪೊಲೀಸರು ಚನ್ನಸಂದ್ರ ಮುಖ್ಯರಸ್ತೆಯಲ್ಲಿ ಕಾರ್ಯಾಚರಣೆ ನಡೆಸಿ 12 ಲಕ್ಷ ರೂ. ಮೌಲ್ಯದ ಗಾಂಜಾ ಹಾಗೂ ಎಂಡಿಎಂಎ ವಶಪಡಿಸಿಕೊಂಡಿದ್ದಾರೆ. ಇವುಗಳ ಒಟ್ಟಾರೆ ಐಎನ್‍ಆರ್ ಮೌಲ್ಯ 5.77 ಕೋಟಿ ರೂ.ಗಳಾದರೆ, ಮಾರುಕಟ್ಟೆ ಮೌಲ್ಯ 11.04 ಕೋಟಿ ರೂ.ಗಳೆಂದು ಅಂದಾಜಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಈ ಕಾರ್ಯಾಚರಣೆಗೆ ಸಂಬಂಧಪಟ್ಟಂತೆ ಎನ್‍ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿ ಹೊರರಾಜ್ಯದ ವ್ಯಕ್ತಿ ಸೇರಿದಂತೆ ಒಟ್ಟು ಐದು ಮಂದಿಯನ್ನು ಬಂಧಿಸಲಾಗಿದೆ. ಆರೋಪಿಗಳನ್ನು ವಿಚಾರಣೆಗೊಳಪಡಿಸಿದಾಗ ಹೆಚ್ಚಿನ ಹಣ ಗಳಿಸುವ ಉದ್ದೇಶದಿಂದ ವಿದೇಶಿ ಮೂಲದ ಅಪರಿಚಿತ ವ್ಯಕ್ತಿಯಿಂದ ಹಾಗೂ ರಾಜ್ಯದ ಅಪರಿಚಿತ ವ್ಯಕ್ತಿಗಳಿಂದ ಎಂಡಿಎಂಎ ಮತ್ತು ಗಾಂಜಾವನ್ನು ಕಡಿಮೆ ಬೆಲೆಗೆ ಖರೀದಿಸಿಕೊಂಡು ಬಂದು ಸಾರ್ವಜನಿಕರಿಗೆ, ಕಾಲೇಜು ವಿದ್ಯಾರ್ಥಿಗಳಿಗೆ ಮಾರಾಟ ಮಾಡುತ್ತಿದ್ದುದಾಗಿ ಬಾಯ್ಬಿಟ್ಟಿದ್ದಾರೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ವಾರ್ತಾ ಭಾರತಿ 24 Mar 2026 9:26 pm

ಬೆಂದೂರು ಚರ್ಚ್: ಆರೋಗ್ಯ ತಪಾಸಣೆ ಹಾಗೂ ರಕ್ತದಾನ ಶಿಬಿರ

ಮಂಗಳೂರು, ಮಾ.24: ಫಾದರ್ ಮುಲ್ಲರ್ ವೈದ್ಯಕೀಯ ಕಾಲೇಜು ಆಸ್ಪತ್ರೆ ಮತ್ತು ಇಂಡಿಯನ್ ಕ್ಯಾನ್ಸರ್ ಸೊಸೈಟಿ ಸಹಯೋಗದಲ್ಲಿ ನಗರದ ಬೆಂದೂರಿನ ಸಂತ ಸೆಬಾಸ್ಟಿಯನ್ ಚರ್ಚಿನಲ್ಲಿ ಉಚಿತ ಆರೋಗ್ಯ ತಪಾಸಣೆ ಮತ್ತು ರಕ್ತದಾನ ಶಿಬಿರ ನಡೆಯಿತು.ಸುಮಾರು 500ಕ್ಕೂ ಹೆಚ್ಚು ಫಲಾನುಭವಿಗಳು ಶಿಬಿರದ ಪ್ರಯೋಜನ ಪಡೆದರು. ಧರ್ಮಗುರು ವಂ.ಫಾ.ವಾಲ್ಟರ್ ಡಿಸೋಜ ಮಾತನಾಡಿ ರೋಗ ಬಂದ ಮೇಲೆ ಚಿಕಿತ್ಸೆ ಪಡೆಯುವುದಕ್ಕಿಂತ, ರೋಗ ಬರದಂತೆ ಮುನ್ನೆಚ್ಚರಿಕೆ ವಹಿಸುವುದು ಲೇಸು ಎಂದರು. ಈ ಸಂದರ್ಭ 51 ಬಾರಿ ರಕ್ತದಾನ ಮಾಡಿದ ಡಾ. ಓಸ್ವಾಲ್ಡ್ ಫುರ್ಟಾಡೋ ಅವರನ್ನು ಗೌರವಿಸಲಾಯಿತು. ಫಾದರ್ ಮುಲ್ಲರ್ ಆಸ್ಪತ್ರೆಯ ಅರ್ಬುದ ರೋಗ ತಜ್ಞ ಡಾ. ಅಭಿರಾಮ್ ಗಟ್ಟಿ ಸ್ತನ ಮತ್ತು ಗರ್ಭಕಂಠದ ಕ್ಯಾನ್ಸರ್ ಬಗ್ಗೆ ಮಾಹಿತಿ ನೀಡಿದರು. ಟೆರೆನ್ಸ್ ಕಾರ್ಡೋಜ ಸ್ವಾಗತಿಸಿದರು. ಮೆಲ್ವಿನ್ ಪೆರಿಸ್ ವಂದಿಸಿದರು. ಜೋಸ್ವಿನ್ ಪಿಂಟೊ ಕಾರ್ಯಕ್ರಮ ನಿರೂಪಿಸಿದರು.

ವಾರ್ತಾ ಭಾರತಿ 24 Mar 2026 9:25 pm

ತೂಕ ಇಳಿಸಲು ಐದು ಮಾರ್ಗಗಳು; ಪೌಷ್ಠಿಕತಜ್ಞರ ಸಲಹೆ ಇಲ್ಲಿದೆ...

ಪೌಷ್ಠಿಕ ತಜ್ಞೆಯಾಗಿರುವ ಖುಷಿ ಛಾಬ್ರಾ ಅವರು ಸಹಜವಾಗಿ ತೂಕ ಇಳಿಸಿಕೊಳ್ಳಲು ಸಹಾಯ ಮಾಡುವ ಐದು ಪಾನೀಯಗಳನ್ನು ಹಂಚಿಕೊಂಡಿದ್ದಾರೆ. ತೂಕ ಇಳಿಸುವುದೆಂದರೆ ಸಮತೋಲಿತ ಆಹಾರ ಸೇವನೆ, ನಿಯಮಿತವಾದ ವ್ಯಾಯಾಮ ಮತ್ತು ನಿರಂತರವಾಗಿ ಮಾಡುವ ಅಭ್ಯಾಸದ ಹೊರತಾಗಿ ಇನ್ಯಾವುದೇ ಹಾದಿಯಿಲ್ಲ. ಆದರೆ ಕೆಲವು ದೈನಂದಿನ ಆಹಾರಗಳು ಚಯಾಪಚಯ ಕ್ರಿಯೆಯನ್ನು ವರ್ಧಿಸಲು, ಇನ್ಸುಲಿನ್ ಸೂಕ್ಷ್ಮತೆಯನ್ನು ಸುಧಾರಿಸಲು ಮತ್ತು ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ನೈಸರ್ಗಿಕವಾಗಿ ನಿಯಂತ್ರಿಸಲು ನೆರವಾಗುವ ಮೂಲಕ ಹೆಚ್ಚುವರಿ ಬೆಂಬಲ ನೀಡಬಹುದು. ಆದರೆ, ಅವುಗಳನ್ನು ದೈನಂದಿನ ಚಟುವಟಿಕೆಯಲ್ಲಿ ಸೇರಿಸಿಕೊಳ್ಳಬೇಕಾಗುತ್ತದೆ. ಆರೋಗ್ಯ ಪೌಷ್ಠಿಕ ತಜ್ಞೆಯಾಗಿರುವ ಖುಷಿ ಛಾಬ್ರಾ ಅವರು ಸಹಜವಾಗಿ ತೂಕ ಇಳಿಸಿಕೊಳ್ಳಲು ಸಹಾಯ ಮಾಡುವ ಐದು ಪಾನೀಯಗಳನ್ನು ಹಂಚಿಕೊಂಡಿದ್ದಾರೆ. “ಹೋಗಲೇ ಕೇಳದಿರುವ ಹೊಟ್ಟೆಯ ಕೊಬ್ಬನ್ನು ಕರಗಿಸಬೇಕೆ? ಈ ಐದು ಪಾನೀಯಗಳು ನಿಮ್ಮ ರಹಸ್ಯ ಶಸ್ತ್ರವಾಗಲಿದೆ. ಚಯಾಪಚಯ ಕ್ರಿಯೆಗೆ ಉತ್ತೇಜಿಸುವ ಜೊತೆಗೆ ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ಸ್ಥಿರಗೊಳಿಸುತ್ತದೆ. ಪ್ರತಿಯೊಂದು ಪಾನೀಯವು ತೂಕ ಇಳಿಸಿಕೊಳ್ಳಲು ಉತ್ತಮ” ಎಂದು ಅವರು ಹೇಳಿದ್ದಾರೆ. ಉತ್ತಮ ಫಲಿತಾಂಶಕ್ಕೆ ಇದನ್ನು ಸಮತೋಲಿತ ಆಹಾರದ ಜೊತೆಗೂಡಿಸಿ ಸೇವಿಸಬೇಕಿದೆ. ಖುಷಿ ನೀಡಿರುವ ಸಲಹೆಗಳು ಹೀಗಿವೆ: ► ಆಪಲ್ ಸಿಡಾರ್ ವಿನೆಗರ್ ಆಪಲ್ ಸಿಡಾರ್ ವಿನೆಗರ್ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುವ ಮೂಲಕ ತೂಕ ನಷ್ಟಕ್ಕೆ ಬೆಂಬಲಿಸಬಹುದು. ಊಟಕ್ಕೆ ಮೊದಲು ಅಥವಾ ನಂತರ ಇದನ್ನು ಸ್ವೀಕರಿಸಬಹುದು. ಆಮ್ಲೀಯತೆ ಮತ್ತು ರಿಫ್ಲೆಕ್ಸ್ಗೆ (ಹಿಮ್ಮುಖ ಹರಿವು) ಸಂಬಂಧಿಸಿದ ಹೊಟ್ಟೆಯ ಸಮಸ್ಯೆಗಳನ್ನು ಹೊಂದಿರುವವರು ಸೇವಿಸಬಾರದು. “ಊಟಕ್ಕೆ ಮೊದಲು ಮತ್ತು ನಂತರ ಇದನ್ನು ಸೇವಿಸಬೇಕು. ಆಮ್ಲೀಯತೆ ಅಥವಾ GERD (Gastroesophageal reflux disease) ಇದ್ದರೆ ಸೇವಿಸಬಾರದು” ಎಂದು ಖುಷಿ ಹೇಳಿದ್ದಾರೆ. ► ಗ್ರೀನ್ ಟೀ ಗ್ರೀನ್ ಟೀಯಲ್ಲಿ ಆಂಟಿ ಆಕ್ಸಿಡಂಟ್ಗಳು ಸಮೃದ್ಧವಾಗಿರುತ್ತವೆ. ಹೀಗಾಗಿ ಚಯಾಪಚಯ ಕ್ರಿಯೆಯನ್ನು ವೃದ್ಧಿಸುವ ಮೂಲಕ ತೂಕ ನಷ್ಟಕ್ಕೆ ಬೆಂಬಲಿಸುತ್ತದೆ. ಆದರೆ ಗ್ರೀನ್ ಟೀಯನ್ನು ಸಂಜೆ 6 ಗಂಟೆಗೆ ಮೊದಲು ಸೇವಿಸಬೇಕು. ಏಕೆಂದರೆ ಅದರ ಕೆಫೀನ್ ಅಂಶವು ನಿದ್ರೆಗೆ ಅಡ್ಡಿಮಾಡಬಹುದು. ► ಕರಿ ಕಾಫಿ ಕರಿ ಕಾಫಿಯಲ್ಲಿ ಶಕ್ತಿಯುತ ಪಾಲಿಫಿನಾಲ್ಗಳಿದ್ದು, ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ಸ್ಥಿರಗೊಳಿಸಲು ಮತ್ತು ತೂಕ ನಷ್ಟಕ್ಕೆ ಬೆಂಬಲಿಸುತ್ತದೆ. ಆದರೆ ಅದನ್ನು ಸಕ್ಕರೆ ಬೆರೆಸದೆ ಸೇವಿಸಬೇಕು. ಆಹಾರದ ಜೊತೆಗೆ ಸೇವಿಸಬಾರದು. ಸಂಜೆ ಆರು ಗಂಟೆಯ ನಂತರ ಸೇವಿಸಬಾರದು. ಏಕೆಂದರೆ ಕೆಫೇನ್ ರಾತ್ರಿ ಸಮಯದಲ್ಲಿ ಉತ್ತಮವಲ್ಲ. ► ದಾಲ್ಚಿನ್ನಿ ಬೆರೆಸಿದ ಚಹಾ ನೈಸರ್ಗಿಕ ಮಸಾಲೆಯಾಗಿರುವ ದಾಲ್ಚಿನ್ನಿ ಬೆರೆಸಿದ ಚಹಾ ಸಕ್ಕರೆ ಪ್ರಮಾಣ ಏರುವುದನ್ನು ತಡೆಯುತ್ತದೆ ಮತ್ತು ಇನ್ಸುಲಿನ್ ಸೂಕ್ಷ್ಮತೆಯನ್ನು ಸುಧಾರಿಸುತ್ತದೆ. ಹೀಗಾಗಿ ತೂಕ ಇಳಿಸಲು ನೆರವಾಗುತ್ತದೆ. ಇದನ್ನು ದಿನದ ಯಾವುದೇ ಸಮಯದಲ್ಲಿ ಬೇಕಾದರೂ ಸೇವಿಸಬಹುದು. ► ಶುಂಠಿ ಚಹಾ ಪೌಷ್ಠಿಕತಜ್ಞೆ ಹೇಳಿರುವ ಪ್ರಕಾರ ಶುಂಠಿ ಚಹಾ ಸಹಜವಾಗಿ ಹಸಿವನ್ನು ಕಡಿಮೆಗೊಳಿಸುತ್ತದೆ. ಹೀಗಾಗಿ ತೂಕ ಇಳಿಸಲು ನೆರವಾಗುತ್ತದೆ. ಎರಡೂ ಶುಂಠಿ ಮತ್ತು ದಾಲ್ಚಿನ್ನಿ ಚಹಾ ದಿನದ ಯಾವುದೇ ಸಮಯದಲ್ಲಿ ಬೇಕಾದರೂ ಸೇವಿಸಬಹುದು. ಓದುಗರಿಗೆ ಸೂಚನೆ : ಈ ಲೇಖನವನ್ನು ಮಾಹಿತಿ ನೀಡುವ ಉದ್ದೇಶದಿಂದ ಮಾತ್ರ ನೀಡಲಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆಗೆ ಪರ್ಯಾಯವಲ್ಲ. ಸಾಮಾಜಿಕ ಜಾಲತಾಣದಿಂದ ಬಳಕೆದಾರರು ರಚಿಸಿದ ವಿಷಯವನ್ನು ಆಧರಿಸಿದೆ. ವೈಜ್ಞಾನಿಕವಾಗಿ ನಿಖರವಾದ ಸಲಹೆಗಳಿಗೆ ನಿಮ್ಮ ವೈದ್ಯರನ್ನು ಸಂಪರ್ಕಿಸಿ.

ವಾರ್ತಾ ಭಾರತಿ 24 Mar 2026 9:24 pm

Harish Rana: ಭಾರತದ ಮೊದಲ ದಯಾಮರಣದ ಹಕ್ಕುದಾರ ಹರೀಶ್ ರಾಣಾ ನಿಧನ, ಕುಟುಂಬಸ್ಥರಿಂದ ಅಂಗಾಂಗ ದಾನ

ಭಾರತದಲ್ಲಿ ನಿಷ್ಕ್ರಿಯ ದಯಾಮರಣಕ್ಕೆ (Passive Euthanasia) ಸುಪ್ರೀಂಕೋರ್ಟ್‌ನಿಂದ ಮೊದಲ ಬಾರಿಗೆ ಅನುಮತಿ ಪಡೆದಿದ್ದ 31 ವರ್ಷದ ಹರೀಶ್ ರಾಣಾ ಅವರು ಮಂಗಳವಾರ ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಕಳೆದ 13 ವರ್ಷಗಳಿಂದ ಹಾಸಿಗೆ ಹಿಡಿದಿದ್ದ ರಾಣಾ ಅವರ ಹೋರಾಟವು ಇಂದು ಅಂತ್ಯಗೊಂಡಿದೆ. 2013ರ ಆಗಸ್ಟ್‌ನಲ್ಲಿ ಹರೀಶ್ ರಾಣಾ ಅವರ ಬದುಕು ಅನಿರೀಕ್ಷಿತ ತಿರುವು ಪಡೆದುಕೊಂಡಿತ್ತು. ಚಂಡೀಗಢದ ಕಟ್ಟಡವೊಂದರಿಂದ

ಒನ್ ಇ೦ಡಿಯ 24 Mar 2026 9:24 pm

By-election | ಬಂಡಾಯ ಅಭ್ಯರ್ಥಿಗಳು ನಮ್ಮವರೇ, ಮಾತನಾಡಿ ಸರಿ ಮಾಡುತ್ತೇವೆ : ಡಿ.ಕೆ.ಶಿವಕುಮಾರ್

ಬೆಂಗಳೂರು : ದಾವಣಗೆರೆ ಉಪಚುನಾವಣೆಯಲ್ಲಿ ಬಂಡಾಯ ಆಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿರುವವರು ನಮ್ಮವರೇ, ಅವರೊಂದಿಗೆ ಮಾತನಾಡಿ ಸರಿ ಮಾಡಲಾಗುವುದು ಎಂದು ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು. ಮಂಗಳವಾರ ದಿಲ್ಲಿ ಕರ್ನಾಟಕ ಭವನದಲ್ಲಿ ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಮಾಧ್ಯಮ ಸಂಸ್ಥೆಯೊಂದರ ಸಮ್ಮೇಳನಕ್ಕಾಗಿ ದಿಲ್ಲಿಗೆ ಆಗಮಿಸಿದ್ದೇನೆ. ಭಾರತ ಯಾವ ದಿಕ್ಕಿನಲ್ಲಿ ಹೋಗಲಿದೆ ಎಂಬ ವಿಷಯದ ಮೇಲಿನ ಚರ್ಚೆಗೆ ಆಹ್ವಾನ ನೀಡಿದ್ದಾರೆ. ಹೀಗಾಗಿ ದಿಲ್ಲಿಗೆ ಬಂದಿರುವೆ ಎಂದು ಸ್ಪಷ್ಟಣೆ ನೀಡಿದರು. ನಿನ್ನೆ ನಾನು ಹಾಗೂ ಸಿಎಂ ಸಿದ್ದರಾಮಯ್ಯನವರು ದಾವಣಗೆರೆ ಹಾಗೂ ಬಾಗಲಕೋಟೆ ಉಪಚುನಾವಣೆ ಹಿನ್ನೆಲೆಯಲ್ಲಿ ಎರಡೂ ಕಡೆಗಳಲ್ಲಿ ನಾಮಪತ್ರ ಸಲ್ಲಿಕೆಗೆ ತೆರಳಿ ಹಿಂದಿರುಗಿದ್ದೇವೆ. ದಾವಣಗೆರೆಯಲ್ಲಿ ಬಹಳಷ್ಟು ಜನ ನಾಮಪತ್ರ ಸಲ್ಲಿಸಿದ್ದು, ಅವರೆಲ್ಲರೂ ನಮ್ಮವರೇ. ನಮ್ಮ ನಾಯಕರೆಲ್ಲರೂ ಅವರ ಜತೆ ಮಾತನಾಡುತ್ತಾರೆ. ಎಲ್ಲವೂ ಸರಿ ಹೋಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಯಾವ ಪಕ್ಷದಲ್ಲಿ ಕುಟುಂಬ ರಾಜಕಾರಣ ಇಲ್ಲ. ಎಲ್ಲ ಪಕ್ಷದಲ್ಲೂ ಇದೆ. ದಾವಣಗೆರೆಯಲ್ಲಿ ಮೊದಲಿನಿಂದಲೂ ಮೂರು ಜನ ರಾಜಕಾರಣದಲ್ಲಿದ್ದರು. ನಾವೇ ಬಲವಂತ ಮಾಡಿ ಪ್ರಭಾ ಮಲ್ಲಿಕಾರ್ಜುನ್‍ರನ್ನು ಲೋಕಸಭೆ ಚುನಾವಣೆಗೆ ನಿಲ್ಲಿಸಿದೆವು. ಅವರು ಕೇಳದಿದ್ದರೂ ನಾವೇ ಅವರಿಗೆ ಒತ್ತಡ ಹಾಕಿ ಚುನಾವಣೆಗೆ ನಿಲ್ಲುವಂತೆ ಮಾಡಿದ್ದೇವೆ ಎಂದರು. ಐದಾರು ಬಾರಿ ಕಾಂಗ್ರೆಸ್ ಪಕ್ಷವು ಅಲ್ಲಿ ಸೋಲುತ್ತಲೇ ಬಂದಿತ್ತು. ಹೀಗಾಗಿ ನಾವು ಗೆಲ್ಲಬೇಕು ಎಂದು ಅವರನ್ನು ನಿಲ್ಲಿಸಿದೆವು. ಇದೀಗ ಅವರು ಗೆದ್ದು ಸಂಸತ್ತಿನಲ್ಲಿ ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ಉಪಚುನಾವಣೆಯಲ್ಲಿಯೂ ನಮ್ಮ ಪಕ್ಷದ ಅಭ್ಯರ್ಥಿ ಗೆಲುವು ಸಾಧಿಸಲಿದ್ದಾರೆ ಎಂದು ಶಿವಕುಮಾರ್ ಭರವಸೆ ವ್ಯಕ್ತಪಡಿಸಿದರು.  

ವಾರ್ತಾ ಭಾರತಿ 24 Mar 2026 9:21 pm

ಅಪರಾಧಿಗಳು, ನಾಪತ್ತೆಯಾಗಿರುವ ಮಕ್ಕಳ ಸುಲಭ ಪತ್ತೆ: ಮುಂಬೈ ರೈಲ್ವೆಯ FRS ವ್ಯವಸ್ಥೆ ರಾಷ್ಟ್ರವ್ಯಾಪಿ ತನಿಖಾ ಸಾಧನವಾಗಿದ್ದೇಗೆ?

ಸುಮಾರು 5000 ಕ್ಯಾಮರಾಗಳನ್ನು ಹೊಂದಿರುವ ಮುಂಬೈ ಪೊಲೀಸ್ ಯುನಿಟ್ ಕೂಡ ತಮ್ಮ ಜಾಲಕ್ಕೆ FRS ಲಿಂಕ್ ಮಾಡಲು ಯೋಜಿಸುತ್ತಿದೆ. ಪೋರ್ಚುಗೀಸ್ ಪ್ರವಾಸಿಗರೊಬ್ಬರಿಗೆ ಕಿರುಕುಳ ನೀಡಿ ಬೆನ್ನಟ್ಟಿದ ಇಬ್ಬರು ವ್ಯಕ್ತಿಗಳನ್ನು ಕಳೆದ ತಿಂಗಳು ಬಂಧಿಸಲಾಗಿದೆ. ಗುರುಗಾಂವ್ನಿಂದ ತಪ್ಪಿಸಿಕೊಂಡಿದ್ದ 14 ವರ್ಷದ ಹುಡುಗನನ್ನು ವಾರದ ಹಿಂದೆ ರಾಜಸ್ಥಾನದಲ್ಲಿ ಪತ್ತೆಹಚ್ಚಲಾಗಿದೆ. ಮುಂಬೈ ಪ್ರೊಫೆಸರ್ ಮೇಲೆ ಹಲ್ಲೆಗೈದ ವ್ಯಕ್ತಿಯನ್ನು ಜನವರಿಯಲ್ಲಿ ಎರಡು ದಿನಗಳ ಅಂತರದಲ್ಲಿ ಬಂಧಿಸಲಾಗಿದೆ. ವರ್ಷದ ಹಿಂದೆ ನಟ ಸೈಫ್ ಅಲಿ ಖಾನ್ ಮೇಲೆ ದಾಳಿಗೈದು ಪರಾರಿಯಾಗಿದ್ದ ವ್ಯಕ್ತಿಯನ್ನೂ ಬಂಧಿಸಲಾಗಿದೆ. ಈ ಎಲ್ಲಾ ಯಶಸ್ವಿ ಪೊಲೀಸ್ ತನಿಖೆಗಳಿಗೆ ನೆರವಾಗಿರುವ ಸಾಧನ ರೈಲ್ವೇ ರಕ್ಷಣಾ ಪಡೆಯ ಮುಂಬೈ ವಿಭಾಗದ 3,675 CCTV ಕ್ಯಾಮರಾಗಳಿಗೆ ಲಿಂಕ್ ಆಗಿರುವ 463 ಮುಖ ಗುರುತಿಸುವಿಕೆ ವ್ಯವಸ್ಥೆ (Facial Recognition System) ಅಥವಾ FRS! ಉತ್ತರದಲ್ಲಿ ಚರ್ಚ್ಗೇಟ್ನಿಂದ ಸೂರತ್ವರೆಗೆ ಮತ್ತು ಪೂರ್ವದಲ್ಲಿ ಜಲಗಾಂವ್ವರೆಗೆ ರೈಲ್ವೇ ನಿಲ್ದಾಣಗಳಲ್ಲಿ ಈ FRS ಜಾಲ ಹರಡಲಾಗಿದೆ. ಅಧಿಕಾರಿಗಳ ಪ್ರಕಾರ ಪಶ್ಚಿಮ ರೈಲ್ವೆ ದೇಶದ ರೈಲು ಜಾಲಗಳಲ್ಲಿ CCTV ಕ್ಯಾಮರಾಗಳಿಗೆ FRS ವ್ಯವಸ್ಥೆ ಸ್ಥಾಪಿಸಿದ ಮೊದಲ ವಿಭಾಗವಾಗಿದೆ. ರೈಲ್ವೇ ಅಧಿಕಾರಿಗಳ ಪ್ರಕಾರ, “ಕಳೆದ ವರ್ಷಗಳಿಂದ ಅವುಗಳನ್ನು ಇತರ ವಿಭಾಗಗಳಲ್ಲೂ ಸ್ಥಾಪಿಸಲಾಗುತ್ತಿದ್ದು, ಸಂಪೂರ್ಣ ರೈಲ್ವೇ ನೆಟ್ವರ್ಕ್ ಅನ್ನು ಒಳಗೊಳ್ಳಲಾಗುತ್ತದೆ. ಇದೀಗ ದೇಶಾದ್ಯಂತ ಪೊಲೀಸ್ ಪಡೆಗಳು ಮತ್ತು ಕೇಂದ್ರ ತನಿಖಾ ಏಜೆನ್ಸಿಗಳಿಂದಲೂ ಸಹಾಯಕ್ಕೆ ವಿನಂತಿಗಳು ಬರುತ್ತವೆ”. ಸುಮಾರು 5000 ಕ್ಯಾಮರಾಗಳನ್ನು ಹೊಂದಿರುವ ಮುಂಬೈ ಪೊಲೀಸ್ ಯುನಿಟ್ ಕೂಡ ತಮ್ಮ ಜಾಲಕ್ಕೆ FRS ಲಿಂಕ್ ಮಾಡಲು ಯೋಜಿಸುತ್ತಿದೆ. ಪೋರ್ಚುಗೀಸ್ ಪ್ರವಾಸಿ ಮಹಿಳೆ ಫೆಬ್ರವರಿ 23ರಂದು ಮಹಾಲಕ್ಷ್ಮಿ ರೈಲ್ವೇ ನಿಲ್ದಾಣದ ಬಳಿ ಧೋಬಿ ಘಾಟ್ ಬಳಿ ಕಿರುಕುಳದ ವೀಡಿಯೋವನ್ನು ಅಪ್ಲೋಡ್ ಮಾಡಿದ್ದರು. ಅದರಿಂದ ಫೋಟೋ ಪಡೆದ ಮುಂಬೈ ಪೊಲೀಸರು ತಮ್ಮ ಕ್ಯಾಮರಾ ನೆಟ್ವರ್ಕ್ನಲ್ಲಿ ಸ್ಕ್ಯಾನ್ ಮಾಡಿದಾಗ ವಿವರ ಸಿಕ್ಕಿರಲಿಲ್ಲ. ವೀಡಿಯೋದ ಸ್ಕ್ರೀನ್ ಶಾಟ್ ತೆಗೆದುಕೊಂಡು ರೈಲ್ವೆ ಪೊಲೀಸ್ ಪಡೆಯ FRS ಜಾಲದಲ್ಲಿ ಹುಡುಕಿದಾಗ ತ್ವರಿತವಾಗಿ ವಿವರ ದೊರಕಿದೆ. ಕಿರುಕುಳ ನೀಡಿದವರಲ್ಲಿ ಒಬ್ಬ ಬಿಹಾರಕ್ಕೆ ಪಲಾಯನಗೈದರೆ ಮತ್ತೊಬ್ಬ ಮುಂಬೈನಲ್ಲೇ ಸಿಕ್ಕಿಬಿದ್ದಿದ್ದಾನೆ. FRS ವ್ಯಕ್ತಿಗಳ ಮುಖದ ಲಕ್ಷಣಗಳನ್ನು ಆಧರಿಸಿ ಗುರುತಿಸುತ್ತದೆ. ಕಣ್ಣುಗಳ ನಡುವಿನ ಅಂತರ, ಹಣೆ, ಮೂಗು, ಕಿವಿಗಳು ಮತ್ತು ಕೆನ್ನೆಯ ಮೂಳೆಗಳನ್ನು ಪರೀಕ್ಷಿಸಿ ಅವುಗಳನ್ನು ಡಾಟಾವಾಗಿ ಪರಿವರ್ತಿಸಿ ಫೇಸ್ ಪ್ರಿಂಟ್ ಆಗಿಸುತ್ತದೆ. ಮುಖವನ್ನು ಟ್ರ್ಯಾಕ್ ಮಾಡಲು ರೈಲ್ವೈ ಪೊಲೀಸರು ಸಿಸ್ಟಮ್ಗೆ ಪೋಟೋ ಅಪ್ಲೋಡ್ ಮಾಡುತ್ತಾರೆ. ಸಿಸ್ಟಮ್ ಸಂಗ್ರಹಿಸಿರುವ ಫೇಸ್ ಪ್ರಿಂಟ್ಗಳನ್ನು ಹೋಲಿಸಿ ಅಲರ್ಟ್ ಕೊಡುತ್ತದೆ. ನಂತರ ಇತರ ಸ್ಥಳಗಳಲ್ಲಿ ಪತ್ತೆಯಾಗಿರುವುದು ಮತ್ತು ಆಗಾಗ್ಗೆ ಓಡಾಡಿದ ಸ್ಥಳಗಳ ವಿವರ ಕೊಡುತ್ತದೆ. FRS ಅಳವಡಿಸಿದ CCTV ಕ್ಯಾಮರಾಗಳು ಮುಂಬೈ ಸೆಂಟ್ರಲ್ ಅಥವಾ ರೈಲ್ವೇ ಪೊಲೀಸ್ ಪಡೆಯ ಪೊಲೀಸ್ ಸ್ಟೇಷನ್ಗಳಲ್ಲಿ ಲಭ್ಯವಿರುವ ಸಾಫ್ಟ್ವೇರ್ಗೆ ಸಂಪರ್ಕಿತವಾಗಿರುತ್ತವೆ. ವಾಚ್ಲಿಸ್ಟ್ನಲ್ಲಿರುವ ವ್ಯಕ್ತಿ ಯಾವುದೇ ಕ್ಯಾಮರಾಗಳ ಮೂಲಕ ಸಾಗಿದರೂ ಸಾಫ್ಟ್ವೇರ್ ತಕ್ಷಣವೇ ಅಲರ್ಟ್ ಕೊಡುತ್ತದೆ. 2024ರೊಂದರಲ್ಲೇ 10,000ಕ್ಕೂ ಮೀರಿದ ಫೋಟೋಗ್ರಾಫ್ಗಳನ್ನು ಬಳಸಿ ಎನ್ಐಎ ಮತ್ತು ಸಿಬಿಐ ಸೇರಿದಂತೆ ಏಜೆನ್ಸಿಗಳು ವ್ಯಕ್ತಿಗಳನ್ನು ಪತ್ತೆ ಮಾಡಿದ್ದಾರೆ. ನಾಪತ್ತೆಯಾದ ಮಕ್ಕಳನ್ನು ಪತ್ತೆ ಹಚ್ಚಲು ಕೂಡ ಈ ಸಾಧನ ಅತಿ ಮುಖ್ಯವಾಗಿದೆ. ಜನನಿಬಿಡ ನಿಲ್ದಾಣಗಳಾದ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಲ್ ಮತ್ತು ಚರ್ಚ್ ಗೇಟ್ ನಂತಹ ಸ್ಥಳಗಳಲ್ಲಿಯೂ FRS ನಿಂದ ನಾಪತ್ತೆಯಾದ ಮಕ್ಕಳ ಫೋಟೋಗಳನ್ನು ಬಳಸಿ ಪತ್ತೆ ಮಾಡಲಾಗಿದೆ. ಬಹಳಷ್ಟು ಪ್ರಕರಣಗಳಲ್ಲಿ ಮಕ್ಕಳನ್ನು ಕೊನೆಯ ಬಾರಿಗೆ ಎಲ್ಲಿ ನೋಡಲಾಗಿದೆ ಎನ್ನುವ ವಿವರ ರೈಲ್ವೆ FRS ಜಾಲದಿಂದ ದೊರೆಯುತ್ತದೆ. 2024ರಲ್ಲಿ 54 ಬ್ಯಾಗ್ ಕಳ್ಳರು ಮತ್ತು ಮೂರು ದರೋಡೆಗಳನ್ನು FRS ಜಾಲದಿಂದ ಪರಿಹರಿಸಲಾಗಿದೆ. 2025ರಲ್ಲಿ 59 ಬ್ಯಾಗ್ ಕಳ್ಳರು ಮತ್ತು ಐದು ಬ್ಯಾಗ್ ಸೆಳೆದುಕೊಂಡು ಹೋಗುವವರನ್ನು ಪತ್ತೆ ಮಾಡಲಾಗಿದೆ. 2026ರಲ್ಲಿ ಫೆಬ್ರವರಿಯವರೆಗೆ 15 ಬ್ಯಾಗ್ ಕಳ್ಳರನ್ನು ಪತ್ತೆ ಮಾಡಲಾಗಿದೆ. ಕೃಪೆ: indianexpress.com

ವಾರ್ತಾ ಭಾರತಿ 24 Mar 2026 9:20 pm

ಭಾರತದ ವಿದೇಶ ನೀತಿ ‘ಮೋದಿಯ ವೈಯಕ್ತಿಕ ವಿದೇಶ ನೀತಿ’ಯಾಗಿದೆ: ರಾಹುಲ್ ಗಾಂಧಿ ಟೀಕೆ

ಹೊಸದಿಲ್ಲಿ: ಪಶ್ಚಿಮ ಏಶ್ಯ ಬಿಕ್ಕಟ್ಟಿಗೆ ಸಂಬಂಧಿಸಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಂಗಳವಾರ ಪ್ರಧಾನಿ ನರೇಂದ್ರ ಮೋದಿಯನ್ನು ಟೀಕಿಸಿದ್ದಾರೆ. ಭಾರತದ ವಿದೇಶ ನೀತಿ ಎನ್ನುವುದು ‘‘ಮೋದಿಯ ವೈಯಕ್ತಿಕ ವಿದೇಶ ನೀತಿ’’ಯಾಗಿದೆ ಹಾಗೂ ಅದು ‘‘ಸಾರ್ವತ್ರಿಕ ಹಾಸ್ಯ’’ದ ವಿಷಯವಾಗಿದೆ ಎಂದು ಅವರು ನುಡಿದರು. ‘‘ನಮ್ಮ ದೇಶದ ವಿದೇಶ ನೀತಿಯು ಪ್ರಧಾನಿ ಮೋದಿಯ ವೈಯಕ್ತಿಕ ವಿದೇಶ ನೀತಿಯಾಗಿದೆ. ಅದರ ಫಲಿತಾಂಶವನ್ನು ನೀವು ನೋಡಬಹುದಾಗಿದೆ. ಅದೊಂದು ಸಾರ್ವತ್ರಿಕ ತಮಾಷೆಯಾಗಿದೆ. ಪ್ರತಿಯೊಬ್ಬರೂ ಅದನ್ನು ಸಾರ್ವತ್ರಿಕ ತಮಾಷೆ ಎಂಬುದಾಗಿ ಭಾವಿಸುತ್ತಾರೆ. ಮೋದಿ ಏನು ಮಾಡಬಹುದು ಮತ್ತು ಏನು ಮಾಡಲಾರರು ಎನ್ನುವುದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ನಿಖರವಾಗಿ ಗೊತ್ತಿದೆ. ಹಾಗಾಗಿ, ಪ್ರಧಾನಿ ರಾಜಿ ಮಾಡಿಕೊಂಡರೆ ನಮ್ಮ ವಿದೇಶ ನೀತಿಯೂ ರಾಜಿಗೆ ಒಳಗಾಗುತ್ತದೆ’’ ಎಂದು ಸಂಸತ್ ಭವನದ ಹೊರಗೆ ಸುದ್ದಿಗಾರರೊಂದಿಗೆ ಮಾತನಾಡಿದ ಲೋಕಸಭೆಯ ಪ್ರತಿಪಕ್ಷದ ನಾಯಕನೂ ಆಗಿರುವ ರಾಹುಲ್ ಗಾಂಧಿ ಹೇಳಿದರು. ಪ್ರಧಾನಿ ಲೋಕಸಭೆಯಲ್ಲಿ ಮಾಡಿದ ಭಾಷಣವನ್ನು ಪ್ರಸ್ತಾಪಿಸಿದ ಅವರು, ಪ್ರಧಾನಿ ತನ್ನ ಭಾಷಣದಲ್ಲಿ ಕೋವಿಡ್‌ನಂಥ ಬಿಕ್ಕಟ್ಟು ಉಂಟಾಗಬಹುದು ಎಂಬ ಎಚ್ಚರಿಕೆಯನ್ನು ನೀಡಿದ್ದಾರೆ ಎಂದರು. ಕೋವಿಡ್ ಕಾಲದಲ್ಲಿ ಎಷ್ಟು ಜನರು ಮೃತಪಟ್ಟಿದ್ದಾರೆ ಎನ್ನುವುದನ್ನು ಹಾಗೂ ಆ ಅವಧಿಯಲ್ಲಿ ಸಂಭವಿಸಿದ ದುರಂತಗಳ ಪ್ರಮಾಣವನ್ನು ಅವರು ಮರೆತಿದ್ದಾರೆ ಎಂದು ರಾಹುಲ್ ಹೇಳಿದರು. ‘‘ಅವರು ನಿನ್ನೆ ಲೋಕಸಭೆಯಲ್ಲಿ ಅಪ್ರಸ್ತುತ ಭಾಷಣವನ್ನು ಮಾಡಿದರು. ಅವರು ಭಾರತದ ಪ್ರಧಾನಿ. ಅವರು ಭಾರತದ ಪ್ರಧಾನಿ ಎನ್ನುವುದು ಕಾಣಿಸಬೇಕು. ಆದರೆ ಭಾಷಣದಲ್ಲಿ ಹಾಗೆ ಎಲ್ಲಿಯೂ ಅನಿಸಲಿಲ್ಲ. ಜನರು ಸಂಕಷ್ಟಕ್ಕೆ ಒಳಗಾಗುವುದು ಬೇಸರದ ಸಂಗತಿ. ಸಂಕಷ್ಟ ಈಗಷ್ಟೇ ಆರಂಭವಾಗಿದೆ. ನಾವು ಎಲ್‌ಪಿಜಿ, ಪೆಟ್ರೋಲ್, ರಸಗೊಬ್ಬರ ಮುಂತಾದ ಪ್ರತಿ ವಿಷಯದಲ್ಲಿ ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ’’ ಎಂದು ರಾಹುಲ್ ಹೇಳಿದರು.

ವಾರ್ತಾ ಭಾರತಿ 24 Mar 2026 9:19 pm

ವಿದೇಶದಿಂದ ಬಂದ ವ್ಯಕ್ತಿ ನಾಪತ್ತೆ

ಶಿರ್ವ, ಮಾ.24: ವಿದೇಶದಿಂದ ಊರಿಗೆ ಬಂದಿದ್ದ ವ್ಯಕ್ತಿಯೊಬ್ಬರು ನಾಪತ್ತೆಯಾಗಿರುವ ಘಟನೆ ಪಿಲಾರು ಗ್ರಾಮದ ಹಲಸಿನಕಟ್ಟೆ ಎಂಬಲ್ಲಿ ನಡೆದಿದೆ. ಮಾ.4ರಂದು ವಿದೇಶದಿಂದ ಊರಿಗೆ ಬಂದಿದ್ದ ಗಿರೀಶ್ ಆಚಾರ್ಯ, ಮಾ.7ರಂದು ಸಂಜೆ ವಿದೇಶದಲ್ಲಿದ್ದ ತನ್ನ ಕಂಪೆನಿ ಗುಜರಾತಲ್ಲಿದ್ದು, ಅಲ್ಲಿಗೆ ಹೋಗವುದಾಗಿ ತಿಳಿಸಿ ಪತ್ನಿಯ ಚಿನ್ನದ ಸರವನ್ನು ಪಡೆದುಕೊಂಡು ಹೋಗಿದ್ದರು. ಬಳಿಕ ರಾತ್ರಿ ಕರೆ ಮಾಡಿದಾಗ ಅವರು ಕರೆಯನ್ನು ಸ್ವೀಕರಿಸದೆ ಸ್ವಿಚ್ ಆಫ್ ಆಗಿತ್ತು. ಈ ಬಗ್ಗೆ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಾರ್ತಾ ಭಾರತಿ 24 Mar 2026 9:17 pm

ಟಿಪ್ಪರ್- ಸ್ಕೂಟರ್ ಢಿಕ್ಕಿ: ಸವಾರ ಸ್ಥಳದಲ್ಲಿಯೇ ಮೃತ್ಯು

ಕಾರ್ಕಳ, ಮಾ.24: ಮಾಳ ಘಾಟ್‌ನಲ್ಲಿ ಮಾ.24ರಂದು ಬೆಳಗ್ಗೆ ಟಿಪ್ಪರ್ ಲಾರಿ ಹಾಗೂ ಸ್ಕೂಟರ್ ಮಧ್ಯೆ ಸಂಭವಿಸಿದ ಅಪಘಾತದಲ್ಲಿ ಸವಾರರೊಬ್ಬರು ಮೃತಪಟ್ಟ ಬಗ್ಗೆ ವರದಿಯಾಗಿದೆ. ಮೃತರನ್ನು ಸವಾರ ಬಜಗೋಳಿಯ ನವೀನ್ ಜಯ ಕುಮಾರ್(45) ಎಂದು ಗುರುತಿಸಲಾಗಿದೆ. ಸಹಸವಾರ ಬಜಗೋಳಿ ಪಾಜಿನಡ್ಕ ನಿವಾಸಿ ರಜತ್ ಎಸ್.(18) ಗಾಯಗೊಂಡಿದ್ದಾರೆ. ಇವರಿಬ್ಬರು ಸ್ಕೂಟರ್‌ನಲ್ಲಿ ಬಜಗೋಳಿ ಕಡೆಯಿಂದ ಮಾಳ ಘಾಟ್‌ಗೆ ಹೋಗುತ್ತಿದ್ದು, ಈ ವೇಳೆ ಎದುರಿನಿಂದ ಅಂದರೆ ಎಸ್‌ಕೆ ಬಾರ್ಡರ್ ಕಡೆಯಿಂದ ಕಾರ್ಕಳ ಕಡೆಗೆ ಬರುತ್ತಿದ್ದ ಟಿಪ್ಪರ್ ಲಾರಿಯನ್ನು ನೋಡಿ ನವೀನ್ ಒಮ್ಮೆಲೇ ಸ್ಕೂಟರ್‌ಗೆ ಬ್ರೇಕ್ ಹಾಕಿದರೆನ್ನಲಾಗಿದೆ. ಇದರ ಪರಿಣಾಮ ಸ್ಕೂಟರ್ ಸ್ಕಿಡ್ ಆಗಿ ಬಿದ್ದು ಎರಡೂ ವಾಹನಗಳು ಢಿಕ್ಕಿ ಹೊಡೆಯಿತು. ಇದರಿಂದ ನವೀನ್ ಹಾಗೂ ರಜತ್ ಸ್ಕೂಟರ್‌ನೊಂದಿಗೆ ರಸ್ತೆಗೆ ಬಿದ್ದರು. ಈ ವೇಳೆ ಟಿಪ್ಪರ್‌ನ ಟಯರ್ ನವೀನ್ ಮೇಲೆ ಹರಿದು ಹೋಯಿ ತ್ತೆನ್ನಲಾಗಿದೆ. ಇದರಿಂದ ಗಂಭೀರವಾಗಿ ಗಾಯಗೊಂಡ ನವೀನ್ ಸ್ಥಳದಲ್ಲಿಯೇ ಮೃತಪಟ್ಟರೆಂದು ತಿಳಿದು ಬಂದಿದೆ. ನವೀನ್ ವೆಲ್ಡಿಂಗ್ ಕೆಲಸ ನಿರ್ವಹಿಸುತ್ತಿದ್ದು, ಹಾವು ಹಿಡಿಯುವ ಹವ್ಯಾಸ ಹೊಂದಿದ್ದರು. ಇಂದು ಬೆಳಿಗ್ಗೆ ಎಲ್ಲಿಯೋ ಹಾವು ಹಿಡಿದು ಕಾಡಿಗೆ ಬಿಡಲೆಂದು ಇವರು ಸ್ಕೂಟರ್‌ನಲ್ಲಿ ಹೋಗುತ್ತಿರುವಾಗ ಈ ಅವಘಡ ಸಂಭವಿಸಿದೆ ಎನ್ನಲಾಗಿದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಾರ್ತಾ ಭಾರತಿ 24 Mar 2026 9:16 pm

Budget Session 2026 | ಮೇಲ್ಮನೆಯಲ್ಲಿ ‘ಇವ ನಮ್ಮವ ಇವ ನಮ್ಮವ ವಿಧೇಯಕ’ ಅಂಗೀಕಾರ

ಬೆಂಗಳೂರು : ಮರ್ಯಾದೆಗೇಡು ಹತ್ಯೆಯನ್ನು ತಡೆಯುವ ನಿಟ್ಟಿನಲ್ಲಿ ರೂಪಿಸಿದ ‘ಕರ್ನಾಟಕ ವಿವಾಹದಲ್ಲಿ ಆಯ್ಕೆಯ ಸ್ವಾತಂತ್ರ್ಯ ಹಾಗೂ ಮರ್ಯಾದೆ ಮತ್ತು ಸಂಪ್ರದಾಯದ ಹೆಸರಿನಲ್ಲಿ ಅಪರಾಧಗಳ ಪ್ರತಿಬಂಧಕ ಮತ್ತು ನಿಷೇಧ (ಇವ ನಮ್ಮವ ಇವ ನಮ್ಮವ) ವಿಧೇಯಕವನ್ನು ಮೇಲ್ಮನೆಯಲ್ಲಿ ಅಂಗೀಕಾರ ಮಾಡಲಾಯಿತು. ಸೋಮವಾರ ಪರಿಷತ್ತಿನ ಕಲಾಪದ ವೇಳೆ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ್ ವಿಧೇಯಕವನ್ನು ಮಂಡಿಸಿದರು. ಆಡಳಿತ ಮತ್ತು ವಿರೋಧ ಪಕ್ಷದ ಸದಸ್ಯರು ವಿಧೇಯಕದ ಬಗ್ಗೆ ಚರ್ಚೆ ನಡೆಯಿತು. ನಂತರ ಸಭಾಪತಿ ಬಸವರಾಜ ಎಸ್ ಹೊರಟ್ಟಿ ಧ್ವನಿ ಮತದ ಮೂಲಕ ವಿಧೇಯಕವನ್ನು ಅಂಗೀಕರಿಸಿದರು.  

ವಾರ್ತಾ ಭಾರತಿ 24 Mar 2026 9:15 pm

ಅಂದರ್ ಬಾಹರ್ ಪ್ರಕರಣ : ನಾಲ್ವರ ಬಂಧನ

ಶಂಕರನಾರಾಯಣ, ಮಾ.24: ಸಿದ್ದಾಪುರ ಗ್ರಾಮದ ಮೇಜ್ಜೆಡ್ಡು ಎಂಬಲ್ಲಿ ಮಾ.23ರಂದು ರಾತ್ರಿ ವೇಳೆ ಅಂದರ್-ಬಾಹರ್ ಇಸ್ಟೀಟ್ ಜುಗಾರಿ ಆಡುತಿದ್ದ ನಾಲ್ಕು ಮಂದಿಯನ್ನು ಶಂಕರನಾರಾಯಣ ಪೊಲೀಸರು ಬಂಧಿಸಿದ್ದಾರೆ. ಸಿದ್ದಾಪುರ ಗ್ರಾಮದ ಮೇಲ್ಜೆಡ್ಡು ನಿವಾಸಿ ಸುಧಾಕರ ಶೆಟ್ಟಿ(52), ವಾರಾಹಿ ರಸ್ತೆಯ ರಮೇಶ್(46), ಜನ್ಸಾಲೆಯ ಮನೋಹರ (46), ಕುಂದಾಪುರದ ಮಹೇಶ್(43) ಬಂಧಿತ ಆರೋಪಿಗಳು. ಹರ್ಷ, ಕೃಷ್ಣ ಪೂಜಾರಿ ಎಂಬವರು ಪರಾರಿಯಾಗಿದ್ದಾರೆ. ಬಂಧಿತರಿಂದ 6,700ರೂ. ನಗದು ವಶಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಾರ್ತಾ ಭಾರತಿ 24 Mar 2026 9:14 pm

ಹೊಸ ಕಾರ್ಮಿಕ ಸಂಹಿತೆ: ಸಂಬಳ, ರಜೆ ನಿಯಮ ಮತ್ತು ಸವಲತ್ತುಗಳ ಬಗ್ಗೆ ಏನು ಹೇಳುತ್ತದೆ ?

ನವೆಂಬರ್ 21, 2025 ರಂದು ಹೊಸ ಕಾರ್ಮಿಕ ಸಂಹಿತೆಗಳು ಜಾರಿಗೆ ಬಂದಾಗಿನಿಂದ, ಓವರ್‌ಟೈಮ್ ಭತ್ಯೆ, ಗ್ರಾಚ್ಯುಟಿ, ಬೋನಸ್‌ಗಳು ಮತ್ತು ನಿವೃತ್ತಿ ಪ್ರಯೋಜನಗಳಂತಹ ವಿಭಿನ್ನ ವೇತನ ಘಟಕಗಳು ಪರಿಷ್ಕೃತ ವೇತನ ವ್ಯಾಖ್ಯಾನಕ್ಕೆ ಹೇಗೆ ಹೊಂದಿಕೊಳ್ಳುತ್ತವೆ ಎಂಬ ಪ್ರಶ್ನೆ ಹಲವರಲ್ಲಿ ಮೂಡಿದೆ. ಸರ್ಕಾರವು 29 ಕಾರ್ಮಿಕ ಕಾನೂನುಗಳನ್ನು ನಾಲ್ಕು ಸಮಗ್ರ ಕಾರ್ಮಿಕ ಸಂಹಿತೆಗಳಾಗಿ ಸಂಯೋಜಿಸಿದೆ. ನಾಲ್ಕು ಕಾರ್ಮಿಕ ಸಂಹಿತೆಗಳೆಂದರೆ - ವೇತನ ಸಂಹಿತೆ 2019, ಕೈಗಾರಿಕಾ ಸಂಬಂಧ ಸಂಹಿತೆ 2020, ಸಾಮಾಜಿಕ ಭದ್ರತೆ ಸಂಹಿತೆ 2020 ಮತ್ತು ಔದ್ಯೋಗಿಕ ಸುರಕ್ಷತೆ, ಆರೋಗ್ಯ ಮತ್ತು ಕೆಲಸದ ಪರಿಸ್ಥಿತಿಗಳ ಸಂಹಿತೆ 2020 ವೇತನ ಸಂಹಿತೆ 2019, ಕೈಗಾರಿಕಾ ಸಂಬಂಧ ಸಂಹಿತೆ 2020, ಸಾಮಾಜಿಕ ಭದ್ರತೆ ಸಂಹಿತೆ 2020, ಮತ್ತು ಔದ್ಯೋಗಿಕ ಸುರಕ್ಷತೆ, ಆರೋಗ್ಯ ಮತ್ತು ಕೆಲಸದ ಪರಿಸ್ಥಿತಿಗಳ ಸಂಹಿತೆ, 2020 (OSH&WC) ಏನು? ಅವು ಏನು ಹೇಳುತ್ತವೆ? ► ವೇತನ ಸಂಹಿತೆ 2019 ಪ್ರಶ್ನೆ : ಅಧಿಕಾವಧಿ ಪಾವತಿಯು (overtime payment) 50% ವೇತನ ಲೆಕ್ಕಾಚಾರದ ನಿಯಮದ ಭಾಗವಾಗಿದೆಯೇ? 50% ವೇತನದ ಮಟ್ಟವನ್ನು ಅನ್ವಯಿಸಲು ಒಟ್ಟು ಸಂಭಾವನೆ ಎಂದರೇನು? ಉತ್ತರ : ಅಧಿಕಾವಧಿ ಭತ್ಯೆ ಪಾವತಿಯು 50 ಪ್ರತಿಶತ ವೇತನ ಲೆಕ್ಕಾಚಾರದ ಒಂದು ಭಾಗವಾಗಿದೆ. ಪ್ರಶ್ನೆ : ಪಾವತಿಸಿದ ನಿಜವಾದ ಗ್ರಾಚ್ಯುಟಿಯನ್ನು ಸೇರಿಸಲಾಗಿದೆಯೇ? ಸಿಟಿಸಿಯ ಭಾಗವಾಗಿ ತೋರಿಸಿರುವ ಗ್ರಾಚ್ಯುಟಿಯನ್ನು ಸೇರಿಸಲಾಗಿದೆಯೇ? ಉತ್ತರ : ವೇತನದ 50% ಅನ್ನು ಸಂಭಾವನೆಯ ಭಾಗವಾಗಿ ಪಡೆಯಲು ಉದ್ಯೋಗದಾತ ಪಿಎಫ್ ಮತ್ತು ಪಿಂಚಣಿ ಕೊಡುಗೆಗಳು ಮತ್ತು ಬೋನಸ್‌ನಂತಹ ಅಂಶಗಳನ್ನು ಮಾತ್ರ ಸೇರಿಸಲಾಗಿದೆ. ಗ್ರಾಚ್ಯುಟಿ, ಇಎಸ್‌ಐ ಮತ್ತು ಇತರ ನಿವೃತ್ತಿ ಪ್ರಯೋಜನಗಳನ್ನು ಸೇರಿಸಲಾಗಿಲ್ಲ. ಪ್ರಶ್ನೆ : ಉದ್ಯೋಗದಾತ/ನೌಕರರ ಪಿಎಫ್ ಕೊಡುಗೆ, ಬೋನಸ್, ಇಎಸ್‌ಐ ಅಥವಾ ಇತರ ನಿವೃತ್ತಿ ಪ್ರಯೋಜನಗಳಂತಹ ಶಾಸನಬದ್ಧ ಘಟಕಗಳನ್ನು ಇತರೆ ಭತ್ಯೆಗಳ ಒಳಗೆ ಸೇರಿಸಲಾಗಿದೆಯೇ ಅಥವಾ ಶಾಸನಬದ್ಧ ಕೊಡುಗೆಗಳನ್ನು ಹೊರತುಪಡಿಸಿ ಒಟ್ಟು ಮಾಸಿಕ ವೇತನವನ್ನು ಮಾತ್ರ ಆಧರಿಸಿದೆಯೇ? ಉತ್ತರ : ಇಲ್ಲ.ವೇತನ ಸಂಹಿತೆಯ ಸೆಕ್ಷನ್ 2(y)(c) ಅಡಿಯಲ್ಲಿ ಪಿಎಫ್/ಪಿಂಚಣಿ ಕೊಡುಗೆಯಲ್ಲಿ ಉದ್ಯೋಗದಾತರ ಪಾಲು ಮುಂತಾದ ಶಾಸನಬದ್ಧ ಅಂಶಗಳನ್ನು ನಿಗದಿಪಡಿಸಲಾಗಿದೆ ಮತ್ತು ಸಂಭಾವನೆ/ವೇತನದ 50% ಮೀರಿದರೆ ಸಂಭಾವನೆ/ವೇತನವನ್ನು ಸೆಕ್ಷನ್ 2(y) ರ ಒಟ್ಟು (a) ರಿಂದ (i) ರವರೆಗಿನ ವ್ಯತ್ಯಾಸದ ಮೊತ್ತವನ್ನು ಸೇರಿಸಲಾಗುತ್ತದೆ. ಪ್ರಶ್ನೆ : ವೈಟ್-ಕಾಲರ್ ಉದ್ಯೋಗಿಗಳ ವೇತನ ರಕ್ಷಣೆಗಾಗಿ ಯಾವುದೇ ನಿರ್ದಿಷ್ಟ ಕಾನೂನು ನಿಬಂಧನೆಗಳು ಜಾರಿಯಲ್ಲಿವೆಯೇ? ಉತ್ತರ : 2019 ರ ವೇತನ ಸಂಹಿತೆಯು ವೇತನವನ್ನು ಸಕಾಲಿಕವಾಗಿ ಪಾವತಿಸಲು ನಿಬಂಧನೆಗಳನ್ನು ಹೊಂದಿದೆ. ಈ ನಿಬಂಧನೆಗಳು ಎಲ್ಲಾ ಉದ್ಯೋಗಿಗಳಿಗೆ ಅನ್ವಯಿಸುತ್ತವೆ. ಪ್ರಶ್ನೆ : ವೇತನ ಮತ್ತು ಕನಿಷ್ಠ ವೇತನವನ್ನು ಒಂದೇ ರೀತಿ ಪರಿಗಣಿಸಬಹುದೇ? ಉತ್ತರ : ಇಲ್ಲ, ಕನಿಷ್ಠ ವೇತನಗಳು ಸೂಕ್ತ ಸರ್ಕಾರವು ನಿಗದಿಪಡಿಸಿದ ಶಾಸನಬದ್ಧ ವೇತನಗಳಾಗಿವೆ. ಉದ್ಯೋಗದಾತನು ಉದ್ಯೋಗಿಗೆ ನಿಗದಿತ ಕನಿಷ್ಠ ವೇತನಕ್ಕಿಂತ ಕಡಿಮೆ ಪಾವತಿಸುವುದನ್ನು ಕಾನೂನುಬದ್ಧವಾಗಿ ನಿಷೇಧಿಸಲಾಗಿದೆ. ಪ್ರಶ್ನೆ :ವಾರ್ಷಿಕ ಕಾರ್ಯಕ್ಷಮತೆ ಆಧಾರಿತ ಪ್ರೋತ್ಸಾಹಕಗಳು ಕಾರ್ಮಿಕ ಸಂಹಿತೆಗಳ ಅಡಿಯಲ್ಲಿ ಲೆಕ್ಕಾಚಾರಕ್ಕಾಗಿ ವೇತನದ ಭಾಗವಾಗಿದೆಯೇ? ಉತ್ತರ . ಇಲ್ಲ. ವಾರ್ಷಿಕ ಕಾರ್ಯಕ್ಷಮತೆ ಆಧಾರಿತ ಪ್ರೋತ್ಸಾಹಕಗಳು ಕಾರ್ಮಿಕ ಸಂಹಿತೆಗಳ ಅಡಿಯಲ್ಲಿ ಲೆಕ್ಕಾಚಾರಕ್ಕಾಗಿ ವೇತನದ ಭಾಗವಾಗಿಲ್ಲ. ಪ್ರಶ್ನೆ : ಅಧಿಕಾವಧಿ ವೇತನಕ್ಕೆ ಮಾತ್ರ ಅರ್ಹರಾಗಿರುವ ಕೆಲಸಗಾರರು ಯಾರು ಅಥವಾ ಅದು ಉದ್ಯೋಗಿಗಳಿಗೂ ಅನ್ವಯಿಸುತ್ತದೆಯೇ? ಹಾಗಿದ್ದಲ್ಲಿ, ಮೇಲ್ವಿಚಾರಣಾ ಮತ್ತು ವ್ಯವಸ್ಥಾಪಕ ಸಿಬ್ಬಂದಿಗೆ ಈ ಅರ್ಹತೆ ವಿಸ್ತರಿಸುತ್ತದೆಯೇ? ಉತ್ತರ : ಹೌದು. 2019 ರ ವೇತನ ಸಂಹಿತೆಯ ಅಡಿಯಲ್ಲಿ ಕನಿಷ್ಠ ವೇತನ ದರವನ್ನು ನಿಗದಿಪಡಿಸಿದ ಕಾರ್ಮಿಕರು ಸೇರಿದಂತೆ ಯಾವುದೇ ಉದ್ಯೋಗಿ ಅಧಿಕಾವಧಿಗೆ ಅರ್ಹರಾಗಿರುತ್ತಾರೆ. ಪ್ರಶ್ನೆ : ವೇತನ ಸಂಹಿತೆ, 2019 ರ ಅಡಿಯಲ್ಲಿ ವೇತನ ದ ಪರಿಷ್ಕೃತ ವ್ಯಾಖ್ಯಾನವು ಸಂಹಿತೆ ಜಾರಿಯಾದ ದಿನಾಂಕದಿಂದ, ಅಂದರೆ 21.11. 2025 ರಿಂದ ಗ್ರಾಚ್ಯುಟಿ ಲೆಕ್ಕಾಚಾರಕ್ಕೆ ಅನ್ವಯಿಸುತ್ತದೆಯೇ? ಉತ್ತರ : ಹೌದು. ವೇತನದ ಪರಿಷ್ಕೃತ ವ್ಯಾಖ್ಯಾನವನ್ನು ಆಧರಿಸಿದ ಗ್ರಾಚ್ಯುಟಿ 21.11.2025 ರಿಂದ ಜಾರಿಗೆ ಬರಲಿದೆ, ಅಂದರೆ ಸಂಹಿತೆ ಜಾರಿಯಾದ ದಿನಾಂಕ. ಪ್ರಶ್ನೆ : ಕಾರ್ಮಿಕ ಸಂಹಿತೆಗಳ ಅಡಿಯಲ್ಲಿ ವೇತನದ ವ್ಯಾಖ್ಯಾನವು ಯಾವ ದಿನಾಂಕದಿಂದ ಜಾರಿಗೆ ಬರುತ್ತದೆ? ಉತ್ತರ . ವೇತನದ ವ್ಯಾಖ್ಯಾನವು 21.11.2025 ರಿಂದ ಜಾರಿಗೆ ಬಂದಿದೆ. ಪ್ರಶ್ನೆ : ಸಂಹಿತೆಗಳ ಅಡಿಯಲ್ಲಿ ವೇತನವನ್ನು ಲೆಕ್ಕಾಚಾರ ಮಾಡುವಾಗ ಓವರ್‌ಟೈಮ್ ಭತ್ಯೆ ಸೇರಿಸಲಾಗಿದೆಯೇ? ಹೌದು . ಓವರ್‌ಟೈಮ್ ಭತ್ಯೆ ಪಾವತಿಯು ವಿಭಾಗ 2(a) ರಿಂದ 2(i) ಘಟಕಗಳ ಭಾಗವಾಗಿದೆ. ಅಂತಹ ಭತ್ಯೆಯು ಸಂಭಾವನೆಯ 50 ಪ್ರತಿಶತವನ್ನು ಮೀರಿದರೆ, 50 ಪ್ರತಿಶತಕ್ಕಿಂತ ಹೆಚ್ಚಿನದನ್ನು ವೇತನ ಲೆಕ್ಕಾಚಾರಕ್ಕೆ ಸೇರಿಸಲಾಗುತ್ತದೆ. ಪ್ರಶ್ನೆ : ಕಾರ್ಮಿಕ ಸಂಹಿತೆಗಳ ಅಡಿಯಲ್ಲಿ ಕನಿಷ್ಠ ವೇತನ ಮತ್ತು ವೇತನ ಗಳ ನಡುವಿನ ವ್ಯತ್ಯಾಸವೇನು? ಉತ್ತರ . ಉದ್ಯೋಗಿಗಳಿಗೆ ಕನಿಷ್ಠ ವೇತನವನ್ನು ಸೂಕ್ತ ಸರ್ಕಾರವು ನಿಗದಿಪಡಿಸುತ್ತದೆ. ಆದರೆ ವೇತನವನ್ನು ಉದ್ಯೋಗಿ ಮತ್ತು ಉದ್ಯೋಗದಾತರ ನಡುವಿನ ಉದ್ಯೋಗ ನಿಯಮಗಳ ಪ್ರಕಾರ ನಿಗದಿಪಡಿಸಲಾಗುತ್ತದೆ, ವೇತನ ಸಂಹಿತೆ, 2019 ರ ವಿಭಾಗ 2(y) ರಲ್ಲಿ ಉಲ್ಲೇಖಿಸಿರುವ ವೇತನದ ವ್ಯಾಖ್ಯಾನದ ಪ್ರಕಾರ ಯಾವುದೇ ಸಂಸ್ಥೆಯಲ್ಲಿ ಉದ್ಯೋಗದಲ್ಲಿರುವವರು. ► ಸಾಮಾಜಿಕ ಭದ್ರತೆ ಸಂಹಿತೆ 2020 ಪ್ರಶ್ನೆ : ಸ್ಥಿರ-ಅವಧಿಯ ಉದ್ಯೋಗವು ಗುತ್ತಿಗೆದಾರರ ಮೂಲಕ ತೊಡಗಿಸಿಕೊಂಡಿರುವ ಗುತ್ತಿಗೆ ಕಾರ್ಮಿಕರನ್ನು ಒಳಗೊಳ್ಳುತ್ತದೆಯೇ ಅಥವಾ ಪ್ರಧಾನ ಉದ್ಯೋಗದಾತರ ನೇರ ಉದ್ಯೋಗಿಗಳನ್ನು ಮಾತ್ರ ಒಳಗೊಳ್ಳುತ್ತದೆಯೇ? ಉತ್ತರ :ಸ್ಥಿರ-ಅವಧಿಯ ಉದ್ಯೋಗವು ಉದ್ಯೋಗದಾತರಿಂದ ನೇರವಾಗಿ ತೊಡಗಿಸಿಕೊಂಡ ಉದ್ಯೋಗಿಗಳನ್ನು ಒಳಗೊಳ್ಳುತ್ತದೆ. ಪ್ರಶ್ನೆ : ಗ್ರಾಚ್ಯುಟಿ ಲೆಕ್ಕಾಚಾರವು ಭವಿಷ್ಯದ ದೃಷ್ಟಿಯಿಂದ ಅನ್ವಯವಾಗುತ್ತದೆಯೇ ಅಥವಾ ಹಿಂದಿನಿಂದ ಅನ್ವಯವಾಗುತ್ತದೆಯೇ? ಉತ್ತರ : ಗ್ರಾಚ್ಯುಟಿ ಲೆಕ್ಕಾಚಾರವು 21.11.2025 ರಿಂದ ಜಾರಿಗೆ ಬರುವಂತೆ ಅನ್ವಯವಾಗುತ್ತದೆ, ಅದು ಸಂಹಿತೆಗಳ ಅನುಷ್ಠಾನದ ದಿನಾಂಕವಾಗಿದೆ. ಪ್ರಶ್ನೆ :ನಿಯಮಗಳನ್ನು ಅಂತಿಮಗೊಳಿಸುವವರೆಗೆ ESI ವ್ಯಾಪ್ತಿಯನ್ನು ಹೇಗೆ ನಿಯಂತ್ರಿಸಲಾಗುತ್ತದೆ? ಉತ್ತರ : 21.11.2025 ರಿಂದ ಜಾರಿಗೆ ಬರುವಂತೆ, ಸಾಮಾಜಿಕ ಭದ್ರತೆ ಸಂಹಿತೆ 2020 ರ ಅಡಿಯಲ್ಲಿ ವೇತನದ ವ್ಯಾಖ್ಯಾನವು ಅನ್ವಯಿಸುತ್ತದೆ. ಪ್ರಸ್ತುತ, ESI ವ್ಯಾಪ್ತಿಗೆ ಸೂಚಿಸಲಾದ ಮಾಸಿಕ ರೂ. 21,000 ವೇತನಗಳು ಅನ್ವಯವಾಗುತ್ತವೆ ಪ್ರಶ್ನೆ : ಗ್ರಾಚ್ಯುಟಿ ಲೆಕ್ಕಾಚಾರಕ್ಕಾಗಿ, 2020 ರ ಸಾಮಾಜಿಕ ಭದ್ರತಾ ಸಂಹಿತೆಯ ವಿಭಾಗ 2(88) ರ ಒಳಗೊಂಡಿರುವ ಭಾಗದ (a) ಇಂದ (c) ಮತ್ತು ಹೊರಗಿಡಲಾದ ಭಾಗದ (a)ಇಂದ (k) ರವರೆಗೆ ನಿರ್ದಿಷ್ಟಪಡಿಸಿದ ಹೊರತುಪಡಿಸಿ ವೇತನ ಘಟಕಗಳನ್ನು ಸೇರಿಸಲಾಗುತ್ತದೆಯೇ? ಉತ್ತರ : 2020 ರ ಸಾಮಾಜಿಕ ಭದ್ರತಾ ಸಂಹಿತೆಯ ವಿಭಾಗ 2(88) ರ ಅಡಿಯಲ್ಲಿ ಉಲ್ಲೇಖಿಸಲಾದ ಘಟಕಗಳ ಭಾಗವಲ್ಲದ ಉದ್ಯೋಗಿಗೆ ಮಾಡಿದ ಯಾವುದೇ ಪಾವತಿಯನ್ನು ಗ್ರಾಚ್ಯುಟಿ ಲೆಕ್ಕಾಚಾರಕ್ಕೆ ಪರಿಗಣಿಸಲಾಗುವುದಿಲ್ಲ. ಪ್ರಶ್ನೆ : ಸ್ಥಿರ-ಅವಧಿಯ ಉದ್ಯೋಗಿಗಳಿಗೆ (FTE), ಕಾರ್ಮಿಕ ಸಂಹಿತೆಗಳ ಅಡಿಯಲ್ಲಿ ಗ್ರಾಚ್ಯುಟಿ ಲೆಕ್ಕಾಚಾರ ಮಾಡಲು ನಿಖರವಾಗಿ ಒಂದು ವರ್ಷದ ಸೇವೆಯನ್ನು ಪೂರ್ಣಗೊಳಿಸಿದ ನಂತರ ಅಥವಾ ಒಂದು ವರ್ಷಕ್ಕಿಂತ ಹೆಚ್ಚಿನ ಸೇವೆಯನ್ನು ಪೂರ್ಣಗೊಳಿಸಿದ ನಂತರ ಗ್ರಾಚ್ಯುಟಿ ಪಾವತಿಸಬೇಕೇ? ಉತ್ತರ : ಒಪ್ಪಂದದ ಅಡಿಯಲ್ಲಿ ಒಂದು ವರ್ಷದ ಅವಧಿಗೆ (ಒಪ್ಪಂದದ ಪ್ರಾರಂಭದಿಂದ) ಸೇವೆ ಸಲ್ಲಿಸಿದರೆ ಸ್ಥಿರ-ಅವಧಿಯ ಉದ್ಯೋಗಿ (FTE) ಗ್ರಾಚ್ಯುಟಿಗೆ ಅರ್ಹರಾಗಿರುತ್ತಾರೆ. ಪ್ರಶ್ನೆ : ರಾಜ್ಯಗಳು ಗಿಗ್ ಮತ್ತು ಪ್ಲಾಟ್‌ಫಾರ್ಮ್ ಕಾರ್ಮಿಕರ ಮೇಲೆ ಸೆಸ್ ವಿಧಿಸಬಹುದೇ? ಹಾಗಿದ್ದಲ್ಲಿ, ಇದು ಸಂಗ್ರಾಹಕರ ಮೇಲೆ ಎರಡು ಆರ್ಥಿಕ ಹೊರೆಗೆ ಕಾರಣವಾಗುತ್ತದೆಯೇ? ಉತ್ತರ : ಸಾಮಾಜಿಕ ಭದ್ರತಾ ಸಂಹಿತೆ, 2020 ರ ಸೆಕ್ಷನ್ 114(4) ರ ಪ್ರಕಾರ, ಗಿಗ್ ಕಾರ್ಮಿಕರು ಮತ್ತು ವೇದಿಕೆ ಕಾರ್ಮಿಕರಿಗೆ ಹಣಕಾಸು ಯೋಜನೆಗಳಿಗೆ ಸಂಗ್ರಾಹಕರು ಪಾವತಿಸಬೇಕಾದ ಕೊಡುಗೆಯನ್ನು ಕೇಂದ್ರ ಸರ್ಕಾರವು ತಿಳಿಸುತ್ತದೆ. ಈ ಕೊಡುಗೆಯನ್ನು ಕೇಂದ್ರ ಸರ್ಕಾರವು ಸಾಮಾಜಿಕ ಭದ್ರತೆ ಮತ್ತು ಗಿಗ್ ಕಾರ್ಮಿಕರು ಮತ್ತು ವೇದಿಕೆ ಕಾರ್ಮಿಕರ ಕಲ್ಯಾಣಕ್ಕಾಗಿ ಸ್ಥಾಪಿಸಿದ ಸಾಮಾಜಿಕ ಭದ್ರತಾ ನಿಧಿಗೆ ಜಮಾ ಮಾಡಲಾಗುತ್ತದೆ. ಪ್ರಶ್ನೆ : ಗುತ್ತಿಗೆ ಕಾರ್ಮಿಕರ ಸಂದರ್ಭದಲ್ಲಿ, ಗ್ರಾಚ್ಯುಯಿಟಿ ಹೊಣೆಗಾರಿಕೆಯನ್ನು ಪ್ರಧಾನ ಉದ್ಯೋಗದಾತ ಅಥವಾ ಗುತ್ತಿಗೆದಾರರು ಭರಿಸುತ್ತಾರೆಯೇ? ಉತ್ತರ . ಸಾಮಾಜಿಕ ಭದ್ರತಾ ಸಂಹಿತೆ, 2020 ರ ಸೆಕ್ಷನ್ 53 ರ ಪ್ರಕಾರ, ಉದ್ಯೋಗದಾತ (ಅಂದರೆ ಗುತ್ತಿಗೆದಾರ) ಐದು ವರ್ಷಗಳ ನಿರಂತರ ಸೇವೆಯನ್ನು ಸಲ್ಲಿಸಿದ ಮೇಲೆ ಕೊನೆಯ ವೇತನದ ಆಧಾರದ ಮೇಲೆ ಪೂರ್ಣಗೊಂಡ ಪ್ರತಿ ವರ್ಷ ಸೇವೆಗೆ 15 ದಿನಗಳ ವೇತನದ ದರದಲ್ಲಿ ಗ್ರಾಚ್ಯುಯಿಟಿಯನ್ನು ಪಾವತಿಸುತ್ತಾರೆ. ಪ್ರಶ್ನೆ : 21 ನವೆಂಬರ್ 2025 ಕ್ಕಿಂತ ಮೊದಲು ಸಲ್ಲಿಸಿದ ಸೇವೆಗೆ ಗ್ರಾಚ್ಯುಯಿಟಿಯನ್ನು 1972 ರ ಗ್ರಾಚ್ಯುಯಿಟಿ ಪಾವತಿ ಕಾಯ್ದೆಯ ಅಡಿಯಲ್ಲಿ ಲೆಕ್ಕಹಾಕಲಾಗುತ್ತದೆಯೇ ಮತ್ತು ಕಾರ್ಮಿಕ ಸಂಹಿತೆಗಳ ಅಡಿಯಲ್ಲಿ ಆ ದಿನಾಂಕದಂದು ಅಥವಾ ನಂತರದ ಸೇವೆಯನ್ನು ಲೆಕ್ಕಹಾಕಲಾಗುತ್ತದೆಯೇ? ಉತ್ತರ : ಸಾಮಾಜಿಕ ಭದ್ರತಾ ಸಂಹಿತೆ 2020 ರ ನಿಬಂಧನೆಗಳ ಪ್ರಕಾರ, 21.11.2025 ರಂದು ಮತ್ತು ನಂತರ, ನಿವೃತ್ತಿ ಅಥವಾ ರಾಜೀನಾಮೆ ಅಥವಾ ಮರಣದ ಸಮಯದಲ್ಲಿ ಉದ್ಯೋಗಿ ಕೊನೆಯದಾಗಿ ಪಡೆದ ವೇತನದ ದರವನ್ನು ಆಧರಿಸಿ ಉದ್ಯೋಗಿಗೆ ಗ್ರಾಚ್ಯುಯಿಟಿಯನ್ನು ಪಾವತಿಸಲಾಗುತ್ತದೆ. ಪ್ರಶ್ನೆ : ವೇತನದ ವ್ಯಾಖ್ಯಾನದ ಅಡಿಯಲ್ಲಿ ಯಾವ ರೀತಿಯ ಪ್ರಯೋಜನಗಳು ಅಥವಾ ಸೌಲಭ್ಯಗಳನ್ನು ಸಂಭಾವನೆ ಎಂದು ಪರಿಗಣಿಸಲಾಗುತ್ತದೆ? ಉತ್ತರ : ಉದ್ಯೋಗದ ನಿಯಮಗಳ ಅಡಿಯಲ್ಲಿ ಆಹಾರ ಕೂಪನ್‌ಗಳು, ಪಡಿತರ ವಸ್ತುಗಳು, ಮೊಬೈಲ್ ರೀಚಾರ್ಜ್ ಇತ್ಯಾದಿಗಳಂತಹ ಪ್ರಯೋಜನಗಳು ವಸ್ತು ರೂಪದಲ್ಲಿ ಸಂಭಾವನೆಯನ್ನು ರೂಪಿಸುತ್ತವೆ. ► ಕೈಗಾರಿಕಾ ಸಂಬಂಧ ಸಂಹಿತೆ 2020 ಪ್ರಶ್ನೆ : 11 ತಿಂಗಳ ಕಾಲ ಕೆಲಸ ಮಾಡುತ್ತಿರುವ ಸ್ಥಿರ-ಅವಧಿಯ ಉದ್ಯೋಗಿ ಒಪ್ಪಂದದ ಅವಧಿ ಮುಗಿದ ನಂತರ ಗ್ರಾಚ್ಯುಟಿಗೆ ಅರ್ಹರೇ? ಒಪ್ಪಂದದ ಅವಧಿ ಪೂರ್ಣಗೊಳ್ಳುವ ಮೊದಲು ಸ್ಥಿರ-ಅವಧಿಯ ಉದ್ಯೋಗಿ ನಿರ್ಗಮಿಸಿದರೆ ಗ್ರಾಚ್ಯುಟಿ ಪಾವತಿಸಲಾಗುತ್ತದೆಯೇ? ಉತ್ತರ : ಒಪ್ಪಂದದ ಅಡಿಯಲ್ಲಿ ಒಂದು ವರ್ಷದ ಅವಧಿಗೆ (ಒಪ್ಪಂದದ ಪ್ರಾರಂಭದಿಂದ) ಸೇವೆ ಸಲ್ಲಿಸಿದರೆ ಸ್ಥಿರ-ಅವಧಿಯ ಉದ್ಯೋಗಿ (FTE) ಗ್ರಾಚ್ಯುಟಿಗೆ ಅರ್ಹರಾಗಿರುತ್ತಾರೆ. ►ಔದ್ಯೋಗಿಕ ಸುರಕ್ಷತೆ, ಆರೋಗ್ಯ ಮತ್ತು ಕೆಲಸದ ಪರಿಸ್ಥಿತಿಗಳ ಸಂಹಿತೆ, 2020 ಪ್ರಶ್ನೆ : ಔದ್ಯೋಗಿಕ ಸುರಕ್ಷತೆ, ಆರೋಗ್ಯ ಮತ್ತು ಕೆಲಸದ ಪರಿಸ್ಥಿತಿಗಳ ಸಂಹಿತೆಯಡಿಯಲ್ಲಿ ಗಳಿಕೆ ರಜೆ ನಿಬಂಧನೆಗಳು ಕಾರ್ಮಿಕರು, ಸೇಲ್ಸ್ ಪ್ರೊಮೋಷನ್ ನೌಕರರು ಮತ್ತು ಕಾರ್ಯ ನಿರತ ಪತ್ರಕರ್ತರಿಗೆ ಮಾತ್ರ ಅನ್ವಯಿಸುತ್ತವೆಯೇ ಅಥವಾ ಎಲ್ಲಾ ಉದ್ಯೋಗಿಗಳಿಗೆ ಅನ್ವಯಿಸುತ್ತವೆಯೇ? ರಜೆ ಸಂಬಂಧಿತ ನಿಬಂಧನೆಗಳು ವ್ಯವಸ್ಥಾಪಕ, ಮೇಲ್ವಿಚಾರಣಾ ಮತ್ತು ಕಾರ್ಪೊರೇಟ್ ಕಚೇರಿ ಸಿಬ್ಬಂದಿಗೆ ಅನ್ವಯಿಸುತ್ತವೆಯೇ? ಉತ್ತರ : ಈ ಸಂಹಿತೆ ಪ್ರಕಾರ ರಜೆ ನಿಬಂಧನೆಗಳು ಕಾರ್ಮಿಕರಿಗೆ ಅನ್ವಯಿಸುತ್ತವೆ ಮತ್ತು ತಿಂಗಳಿಗೆ ರೂ 18,000/ ಮೀರದ ವೇತನ ಹೊಂದಿರುವ ಮೇಲ್ವಿಚಾರಕರಿಗೆ ಮಾತ್ರ ಅನ್ವಯಿಸುತ್ತವೆ. ಕೆಲಸಗಾರನ ವ್ಯಾಖ್ಯಾನವು ಸೇಲ್ಸ್ ಪ್ರೊಮೋಷನ್ ನೌಕರ ಮತ್ತು ಕಾರ್ಯನಿರತ ಪತ್ರಕರ್ತರನ್ನು ಒಳಗೊಂಡಿದೆ. ಪ್ರಶ್ನೆ : ಅನ್ವಯವಾಗುವ ಕಾರ್ಮಿಕ ಸಂಹಿತೆಗಳು ಮತ್ತು ನಿಯಮಗಳ ಅಡಿಯಲ್ಲಿ ಮುಂದಿನ ವರ್ಷಕ್ಕೆ ಮುಂದಕ್ಕೆ ಮುಂದುವರಿಸಬಹುದಾದ ಗರಿಷ್ಠ ರಜೆ ದಿನಗಳು ಎಷ್ಟು? ಉದ್ಯೋಗದಾತನು 120 ದಿನಗಳ ರಜೆಯನ್ನು ಮುಂದಿನ ಕ್ಯಾಲೆಂಡರ್ ವರ್ಷಕ್ಕೆ ಮುಂದುವರಿಸಲು ಒಪ್ಪಿದರೆ, ಅವನಿಗೆ ಹಾಗೆ ಮಾಡಲು ಅವಕಾಶವಿದೆಯೇ? ಉತ್ತರ . ಒಬ್ಬ ಕೆಲಸಗಾರನು ಮುಂದಿನ ಕ್ಯಾಲೆಂಡರ್ ವರ್ಷಕ್ಕೆ 30 ದಿನಗಳ ರಜೆಯನ್ನು ಮುಂದುವರಿಸಬಹುದು. ಇದಲ್ಲದೆ, ವೇತನದೊಂದಿಗೆ ರಜೆಗಾಗಿ ಅರ್ಜಿ ಸಲ್ಲಿಸಿ ಮಂಜೂರು ಮಾಡದ ಕೆಲಸಗಾರನು ನಿರಾಕರಿಸಿದ ರಜೆಯನ್ನು ಯಾವುದೇ ಮಿತಿಯಿಲ್ಲದೆ ಮುಂದುವರಿಸಬಹುದು. ಪ್ರಶ್ನೆ : ಕಾರ್ಮಿಕ ಸಂಹಿತೆಗಳ ಅಡಿಯಲ್ಲಿ, ಗಳಿಕೆ ರಜೆಗೆ ಮಾತ್ರ ಅರ್ಹರಾದ ಕಾರ್ಮಿಕರು ಅಥವಾ ಉದ್ಯೋಗಿ ಯಾರು? ಸಂಬಂಧ ವ್ಯವಸ್ಥಾಪಕರು ಮತ್ತು ಮಾರಾಟಗಾರರು ಸ್ವತಂತ್ರವಾಗಿ ಕೆಲಸ ಮಾಡುತ್ತಾರೆ (ಯಾರನ್ನೂ ಮೇಲ್ವಿಚಾರಣೆ ಮಾಡುವುದಿಲ್ಲ) ಮತ್ತು ₹18,000 ಕ್ಕಿಂತ ಹೆಚ್ಚು ವೇತನ ಪಡೆಯುತ್ತಿದ್ದಾರೆಯೇ? ಉತ್ತರ : ಪ್ರತಿಯೊಬ್ಬ ಕೆಲಸಗಾರನು ಗಳಿಕೆ ರಜೆಗೆ ಅರ್ಹನಾಗಿರುತ್ತಾನೆ. ಸೇಲ್ಸ್ ಪ್ರೊಮೋಷನ್ ನೌಕರರನ್ನು ಔದ್ಯೋಗಿಕ ಸುರಕ್ಷತೆ, ಆರೋಗ್ಯ ಮತ್ತು ಕೆಲಸದ ಪರಿಸ್ಥಿತಿಗಳ ಸಂಹಿತೆ, 2020 ಸೆಕ್ಷನ್-2(1)(zzl) ಅಡಿಯಲ್ಲಿ ಕೆಲಸಗಾರರ ವ್ಯಾಖ್ಯಾನದಲ್ಲಿ ಸೇರಿಸಲಾಗಿದೆ. ಪ್ರಶ್ನೆ : ಮಕ್ಕಳ ಆರೈಕೆ ಸೌಲಭ್ಯ ಯಾವುದೇ ನಿರ್ದಿಷ್ಟ ಲಿಂಗ ಸಂಯೋಜನೆಯನ್ನು ಅವಲಂಬಿಸಿದೆಯೇ? ಉತ್ತರ : ಮಕ್ಕಳ ಆರೈಕೆ ಸೌಲಭ್ಯ ಲಿಂಗವನ್ನು ಲೆಕ್ಕಿಸದೆ ಎಲ್ಲ ಉದ್ಯೋಗಿಗಳಿಗೆ ಲಭ್ಯವಿದೆ. ಪ್ರಶ್ನೆ : ದೈನಂದಿನ ಕೆಲಸದ ಸಮಯ 8 ಗಂಟೆಗಳನ್ನು ಅಥವಾ ವಾರದ ಮಿತಿಯ 48 ಗಂಟೆಗಳನ್ನು ಮೀರಿದಾಗ ಔದ್ಯೋಗಿಕ ಸುರಕ್ಷತೆ, ಆರೋಗ್ಯ ಮತ್ತು ಕೆಲಸದ ಪರಿಸ್ಥಿತಿಗಳ ಸಂಹಿತೆಯಡಿಯಲ್ಲಿ ಅಧಿಕಾವಧಿಯನ್ನು ಯಾವ ಹಂತದಲ್ಲಿ ಪಾವತಿಸಲಾಗುತ್ತದೆ ? ಸೂಕ್ತ ಸರ್ಕಾರವು ಗರಿಷ್ಠ ಕೆಲಸದ ಸಮಯದ ಮಿತಿಯನ್ನು 12 ಗಂಟೆಗಳು ಎಂದು ನಿಗದಿಪಡಿಸಿದರೆ, ನಿರ್ದಿಷ್ಟ ದಿನದಂದು 8 ಗಂಟೆಗಳನ್ನು ಮೀರಿದ ಗಂಟೆಗಳಿಗೆ ಅಧಿಕಾವಧಿ ಅನ್ವಯಿಸುತ್ತದೆಯೇ? ಉತ್ತರ : ಸಂಹಿತೆಯು ಕೆಲಸದ ಸಮಯವನ್ನು ದಿನಕ್ಕೆ 8 ಗಂಟೆಗಳು ಎಂದು ನಿಗದಿಪಡಿಸುತ್ತದೆ. ಒಬ್ಬ ಕೆಲಸಗಾರ ಯಾವುದೇ ದಿನದಲ್ಲಿ ಎಂಟು ಗಂಟೆಗಳಿಗಿಂತ ಹೆಚ್ಚು ಕಾಲ ದೈನಂದಿನ ಕೂಲಿಯಾಗಿ ಅಥವಾ ಯಾವುದೇ ವಾರದಲ್ಲಿ ನಲವತ್ತೆಂಟು ಗಂಟೆಗಳಿಗಿಂತ ಹೆಚ್ಚು ಕಾಲ ಕೆಲಸ ಮಾಡಿದರೆ, ಅಂತಹ ಅಧಿಕಾವಧಿ ಕೆಲಸಕ್ಕೆ ಸಂಬಂಧಿಸಿದಂತೆ ಒಬ್ಬ ಕೆಲಸಗಾರನು ಸಾಮಾನ್ಯ ವೇತನದ ಎರಡು ಪಟ್ಟು ವೇತನವನ್ನು ಪಡೆಯಲು ಅರ್ಹನಾಗಿರುತ್ತಾನೆ ಮತ್ತು ಪ್ರತಿ ವೇತನ ಅವಧಿಯ ಕೊನೆಯಲ್ಲಿ ಪಾವತಿಸಲಾಗುತ್ತದೆ. ಪ್ರಶ್ನೆ : ಔದ್ಯೋಗಿಕ ಸುರಕ್ಷತೆ, ಆರೋಗ್ಯ ಮತ್ತು ಕೆಲಸದ ಪರಿಸ್ಥಿತಿಗಳ ಸಂಹಿತೆ 30 ದಿನಗಳವರೆಗೆ ರಜೆ ಒಟ್ಟಾಗಿಸಲು ಅನುಮತಿಸುತ್ತದೆಯೇ, ಆದರೆ ರಾಜ್ಯ ಕಾನೂನು (ಉದಾ. ಆಂಧ್ರಪ್ರದೇಶ) 60 ದಿನಗಳನ್ನು ಅನುಮತಿಸುತ್ತದೆ, ಯಾವ ನಿಬಂಧನೆಯು ಚಾಲ್ತಿಯಲ್ಲಿರುತ್ತದೆ? ಉತ್ತರ : ಸಂಹಿತೆಗೆ ಹೊಂದಿಕೆಯಾಗದ ನಿಬಂಧನೆಗಳಿಗೆ ಸಂಬಂಧಿಸಿದಂತೆ ಈ ಸಂಹಿತೆಯ ನಿಬಂಧನೆಯು ರಾಜ್ಯ ಕಾನೂನಿನ ಮೇಲೆ ಮೇಲುಗೈ ಸಾಧಿಸುತ್ತದೆ. ಆದಾಗ್ಯೂ, ಸಂಹಿತೆಯ ಅಡಿಯಲ್ಲಿರುವುದಕ್ಕಿಂತ ಉದ್ಯೋಗಿಗೆ ಹೆಚ್ಚು ಅನುಕೂಲಕರವಾಗಿದ್ದರೆ ರಾಜ್ಯ ಕಾನೂನಿನ ಅಡಿಯಲ್ಲಿ ಪ್ರಯೋಜನಗಳಿಗೆ ಅರ್ಹತೆ ಇರುತ್ತದೆ. ಪ್ರಶ್ನೆ : ಅನ್ವಯವಾಗುವ ಕಾರ್ಮಿಕ ಸಂಹಿತೆ(ಗಳು) ಅಡಿಯಲ್ಲಿ ಗಳಿಕೆ ರಜೆಯಲ್ಲಿನ ಗರಿಷ್ಠ ಸಂಖ್ಯೆಯ ರಜೆ ದಿನಗಳು ಎಷ್ಟು? ಉತ್ತರ : ಈ ಸಂಹಿತೆ ಅಡಿಯಲ್ಲಿ ಗಳಿಕೆ ರಜೆಗೆ ಯಾವುದೇ ನಿಗದಿತ ಗರಿಷ್ಠ ಮಿತಿಯಿಲ್ಲ. 30 ದಿನಗಳನ್ನು ಮೀರಿದ ರಜೆ,ರಜೆಗೆ ವಿನಂತಿ ಮಾಡಿದ್ದರೂ ಉದ್ಯೋಗದಾತರು ಮಂಜೂರು ಮಾಡದಿದ್ದರೆ, ಕ್ಯಾಲೆಂಡರ್ ವರ್ಷದ ಕೊನೆಯಲ್ಲಿ ಅದನ್ನು ಗಳಿಸಬಹುದು. ಸೇವೆಯಿಂದ ಹೊರಹೋಗುವ ಸಮಯದಲ್ಲಿ, ಕೆಲಸಗಾರನು ಉಳಿದ ರಜೆಗಳಿಗೆ ಹಣವನ್ನು ಪಡೆಯಬಹುದು ಪ್ರಶ್ನೆ :ಕೇಂದ್ರ ನಿಯಮಗಳು ಮತ್ತು ರಾಜ್ಯ ನಿಯಮಗಳ ನಡುವೆ ವಾರ್ಷಿಕ ಆರೋಗ್ಯ ತಪಾಸಣೆಗೆ ವಯಸ್ಸಿನ ಮಿತಿ ಎಷ್ಟು ಭಿನ್ನವಾಗಿರುತ್ತದೆ, ಯಾವ ನಿಬಂಧನೆ ಅನ್ವಯಿಸುತ್ತದೆ? ಉತ್ತರ :ಕೇಂದ್ರ ಸರ್ಕಾರವು ಒಂದು ಸಂಸ್ಥೆಗೆ ಸೂಕ್ತ ಸರ್ಕಾರ ಆಗಿದ್ದರೆ, ಕೇಂದ್ರ ನಿಯಮಗಳು ಅನ್ವಯಿಸುತ್ತವೆ. ರಾಜ್ಯ ಸರ್ಕಾರವು ಒಂದು ಸಂಸ್ಥೆಗೆ ಸೂಕ್ತ ಸರ್ಕಾರ ಆಗಿದ್ದರೆ, ರಾಜ್ಯ ನಿಯಮಗಳು ಅನ್ವಯಿಸುತ್ತವೆ. ಕೃಪೆ: The Economic Times

ವಾರ್ತಾ ಭಾರತಿ 24 Mar 2026 9:13 pm

ಲೋಕಸಭಾ ಕ್ಷೇತ್ರಗಳ ಪುನರ್‌ವಿಂಗಡಣೆ: ಕರ್ನಾಟಕದಲ್ಲಿ 28 ರಿಂದ 42ಕ್ಕೆ ಹೆಚ್ಚಿಸಲು ಪ್ಲಾನ್‌; ಇತರೆ ರಾಜ್ಯಗಳಲ್ಲಿ ಎಷ್ಟು?

ಲೋಕಸಭಾ ಸೀಟುಗಳ ಸಂಖ್ಯೆ 816ಕ್ಕೆ ಏರಿಕೆ ಮಾಡಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. ಅದರಂತೆ ಕರ್ನಾಟಕದಲ್ಲಿಯೂ ಹೆಚ್ಚಳವಾಗಲಿದೆ. ಮುಂದಿನ ಲೋಕಸಭಾ ಚುನಾವಣೆ ವೇಳೆಗೆ ಈ ಪ್ರಕ್ರಿಯೆ ಪೂರ್ಣಗೊಳಿಸಲು ಸರ್ಕಾರ ಯೋಜನೆ ರೂಪಿಸುತ್ತಿದೆ. ಯಾವ ರಾಜ್ಯಕ್ಕೆ ಎಷ್ಟು? ಕರ್ನಾಟಕಕ್ಕೆ ಎಷ್ಟು ಸೀಟು? ಈ ಡಿಲಿಮಿಟೇಶನ್ ಪ್ರಕ್ರಿಯೆ ಹೇಗಿರಲಿದೆ? ಯಾವ ರಾಜ್ಯಕ್ಕೆ ಎಷ್ಟು ಸೀಟು ಹೆಚ್ಚಾಗಲಿದೆ? ದಕ್ಷಿಣ ಭಾರತದ ರಾಜ್ಯಗಳ ಆತಂಕವೇನು? ಸಂಪೂರ್ಣ ವಿವರ ಇಲ್ಲಿದೆ.

ವಿಜಯ ಕರ್ನಾಟಕ 24 Mar 2026 9:11 pm

ಐಪಿಎಲ್-2026 | ಆರ್‌ಸಿಬಿ ತಂಡದ ಸಹಭಾಗಿತ್ವ ಪಡೆದ ‘ನಂದಿನಿ’

ಬೆಂಗಳೂರು : ಐಪಿಎಲ್-2026ರ ಟಿ20 ಲೀಗ್ ಟೂರ್ನಮೆಂಟ್‍ಗೆ ಆರ್‌ಸಿಬಿ ತಂಡಕ್ಕೆ ಕರ್ನಾಟಕ ಹಾಲು ಮಹಾ ಮಂಡಳ-ನಂದಿನಿ ಸಹಭಾಗಿತ್ವ ಪಡೆದಿದೆ ಎಂದು ಕರ್ನಾಟಕ ಹಾಲು ಮಹಾ ಮಂಡಳದ ವ್ಯವಸ್ಥಾಪಕ ನಿರ್ದೇಶಕ ಬಿ.ಶಿವಸ್ವಾಮಿ ತಿಳಿಸಿದ್ದಾರೆ. ಮಂಗಳವಾರ ಈ ಕುರಿತು ಪ್ರಕಟನೆ ನೀಡಿರುವ ಅವರು, 2026ರ ಐಪಿಎಲ್ ಟಿ20 ಲೀಗ್ ಟೂರ್ನಮೆಂಟ್ ಮಾ.28ರಿಂದ ಪ್ರಾರಂಭವಾಗಲಿದೆ. ಆರ್‌ಸಿಬಿ ವಿಶ್ವದಾದ್ಯಂತ ಅಪಾರ ಅಭಿಮಾನಿಗಳನ್ನು ಹೊಂದಿರುವುದರ ಜೊತೆಗೆ ಐಪಿಎಲ್-2025ರ ಚಾಂಪಿಯನ್ ಸಹ ಆಗಿದೆ. ಕರ್ನಾಟಕ ರಾಜ್ಯದ ಮನೆ ಮಾತಾಗಿರುವ ಮತ್ತು ಗ್ರಾಹಕರ ವಿಶ್ವಾಸಾರ್ಹ ಬ್ರ್ಯಾಂಡ್ ಆಗಿರುವ ನಂದಿನಿ ನಮ್ಮ ರಾಜ್ಯದ ಹೆಮ್ಮೆಯ ಕ್ರಿಕೆಟ್ ತಂಡ ಆರ್‌ಸಿಬಿ ಜೊತೆಗೆ ಕೈ ಜೋಡಿಸುತ್ತಿರುವುದು ಸಂತೋಷದ ಸಂಗತಿ ಎಂದು ತಿಳಿಸಿದ್ದಾರೆ. ನಂದಿನಿ ಬ್ರ್ಯಾಂಡ್ ಸದಾ ಕ್ರೀಡೆ ಮತ್ತು ಯುವಜನತೆಯನ್ನು ಪ್ರೋತ್ಸಾಹಿಸುವ ಧ್ಯೇಯವನ್ನು ಹೊಂದಿದೆ. ನಂದಿನಿ ಬ್ರ್ಯಾಂಡ್ ಆರ್‌ಸಿಬಿ ತಂಡದ ಅಧಿಕೃತ ಡೈರಿ ಸಹಭಾಗಿತ್ವ ಹೊಂದುವ ಮೂಲಕ ಎರಡು ಐಕಾನಿಕ್ ಬ್ರ್ಯಾಂಡ್‍ಗಳ ಒಕ್ಕೂಟವಾಗಿದೆ. ಕ್ರೀಡೆಯನ್ನು ಬೆಂಬಲಿಸುವ ನಂದಿನಿ ಪರಂಪರೆಯನ್ನು ಮತ್ತಷ್ಟು ಬಲಪಡಿಸುತ್ತದೆ. ಈ ಸಹಭಾಗಿತ್ವದ ಭಾಗವಾಗಿ ನಂದಿನಿ ವಿವಿಧ ಜಾಹೀರಾತು ಚಟುವಟಿಕೆಗಳು ಮತ್ತು ಕಾರ್ಯಕ್ರಮ, ಅಭಿಯಾನಗಳನ್ನು ಕೈಗೊಳ್ಳಲಿದೆ ಎಂದು ತಿಳಿಸಿದ್ದಾರೆ.    

ವಾರ್ತಾ ಭಾರತಿ 24 Mar 2026 9:09 pm

ದಯಾಮರಣಕ್ಕೆ ಒಳಗಾದ ದೇಶದ ಮೊದಲ ವ್ಯಕ್ತಿ ಹರೀಶ್ ರಾಣಾ ನಿಧನ : 13 ವರ್ಷಗಳ ಕೋಮಾಗೆ ಮುಕ್ತಿ

Harish Rana Dies : ಭಾರತದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಸರ್ವೋಚ್ಚ ನ್ಯಾಯಾಲಯದಿಂದ ಅಧಿಕೃತವಾಗಿ ನಿಷ್ಕ್ರಯ ದಯಾಮರಣಕ್ಕೆ ಅನುಮತಿ ಪಡೆದಿದ್ದ ಹರೀಶ್ ರಾಣಾ, ಮಂಗಳವಾರ (ಮಾರ್ಚ್ 24) ನಿಧನರಾಗಿದ್ದಾರೆ. ಹದಿಮೂರು ವರ್ಷಗಳ ಕೋಮಾದ ನರಕಯಾತನೆಯನ್ನು ಅನುಭವಿಸಿದ್ದ ಹರೀಶ್ ರಾಣಾ, ಏಮ್ಸ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

ವಿಜಯ ಕರ್ನಾಟಕ 24 Mar 2026 8:34 pm

ಮಕ್ಕಳು ದೇಶದ ಭವಿಷ್ಯದ ಸಂಪತ್ತು : ಡಾ. ಲವೀನಾ ಲೋಬೊ

ಮಂಗಳೂರು, ಮಾ.24: ಮಕ್ಕಳು ದೇಶದ ಭವಿಷ್ಯದ ಸಂಪತ್ತು . ಆದ ಕಾರಣ ಮಕ್ಕಳ ಶಿಕ್ಷಣ , ಆರೋಗ್ಯ ಮೇಲೆ ಹೂಡಿಕೆ ಅತ್ಯಂತ ಅವಶ್ಯಕ ಎಂದು ಸಂತ ಅಲೋಸಿಯೆಸ್ ಪರಿಗಣಿತ ವಿವಿ ಸಮಾಜ ಕಾರ್ಯ ವಿಭಾಗದ ಸಹ ಪ್ರಾಧ್ಯಾಪಕಿ ಡಾ. ಲವೀನಾ ಲೋಬೊ ಹೇಳಿದ್ದಾರೆ. ನಗರದ ಸಂತ ಅಲೋಶಿಯೆಸ್ ಪರಿಗಣಿತ ವಿವಿಯ ಸಾನಿಧ್ಯ ಸಭಾಂಗಣದಲ್ಲಿ ಮಂಗಳವಾರ ‘ ಮಕ್ಕ ಸಮಸ್ಯೆಗಳು-ಹದಿಹರೆಯದವರ ಆರೋಗ್ಯ ಮತ್ತು ಪೋಷಣೆ: ಸಾಂಕ್ರಾಮಿಕವಲ್ಲದ ರೋಗಗಳು, ಆರೋಗ್ಯಕರ ಆಹಾರಕ್ರಮಗಳು ಮತ್ತು ರಸ್ತೆ ಸುರಕ್ಷತೆ’ ಬಗ್ಗೆ ಕರ್ನಾಟಕ ರಾಜ್ಯ ಪತ್ರಕರ್ತರಿಗೆ ಆಯೋಜಿಸಲಾದ ಎರಡು ದಿನಗಳ ಮಾಧ್ಯಮ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು. ಚಿಕ್ಕಂದಿನಲ್ಲಿ ಪಡೆದ ಅನುಭವಗಳು ಮಕ್ಕಳ ವ್ಯಕ್ತಿತ್ವ ರೂಪಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಮಗು ತನ್ನ ಬಾಲ್ಯದಲ್ಲಿ ಏನನ್ನು ಕಲಿಯುತ್ತದೆಯೋ, ಏನನ್ನು ಅನುಭವಿಸುತ್ತದೆಯೋ ಅದು ಆ ಮಗುವಿನ ವಯಸ್ಕ ಮನಸ್ಥಿತಿಯ ಮೇಲೆ ಆಳವಾದ ಪ್ರಭಾವ ಬೀರುತ್ತದೆ ಮಗು ಬೆಳೆದಂತೆ ಸಂದರ್ಭಗಳಿಗೆ ಹೇಗೆ ಸ್ಪಂದಿಸುತ್ತದೆ ಎಂಬುದು ಬಾಲ್ಯದ ಮೇಲೆ ನಿರ್ಧರಿತವಾಗಿರುತ್ತದೆ.ನಿರ್ಧಾರ ತೆಗೆದುಕೊಳ್ಳುವ ಜೀವನದ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವ ಶಕ್ತಿಯು ಬಾಲ್ಯದ ಬೆಳವಣಿಗೆಯನ್ನು ಅವಲಂಬಿಸಿರುತ್ತದೆ. ಇತ್ತೀಚಿನ ದಿನಗಳಲ್ಲಿ ಮಕ್ಕಳು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ವಿಶೇಷವಾಗಿ ಈ ಡಿಜಿಟಲ್ ಜಗತ್ತಿನಲ್ಲಿ ಮಕ್ಕಳು ಎದುರಿಸುತ್ತಿರುವ ಸವಾಲುಗಳು ಮತ್ತು ಸಮಸ್ಯೆಗಳು ಅಪಾರವಾಗಿವೆ. ಆದ್ದರಿಂದ, ಅವರಿಗೆ ಸರಿಯಾದ ಮಾರ್ಗದರ್ಶನ ಮತ್ತು ಸುರಕ್ಷಿತ ವಾತಾವರಣ ವನ್ನು ನಿರ್ಮಿಸಿಕೊಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಪತ್ರಕರ್ತರಿಗೆ ಇಂತಹ ಕಾರ್ಯಾಗಾರವನ್ನು ಆಯೋಜಿಸಿರುವುದು ಶ್ಲಾಘನೀಯ ಎಂದರು. ಯುನಿಸೆಫ್ ಕರ್ನಾಟಕ, ತೆಲಂಗಾಣ ಮತ್ತು ಆಂಧ್ರಪ್ರದೇಶ ರಾಜ್ಯದ ಸಂವಹನ ತಜ್ಞ ಪ್ರಸೂನ್ ಸೇನ್ ಮುಖ್ಯ ಅತಿಥಿಯಾಗಿ ಮಾತನಾಡಿ ಮಕ್ಕಳು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಬರೆಯುವ ಪತ್ರಕರ್ತರು ಮಕ್ಕಳ ಹಕ್ಕು ಗಳು ಮತ್ತು ಕಾನೂನುಗಳ ಬಗ್ಗೆ ಮಾಹಿತಿಯನ್ನು ಹೊಂದಿರಬೇಕಾಗಿದೆ. ಮಕ್ಕಳ ಕುರಿತಾದ ವರದಿಗಳ ಗುಣಮಟ್ಟ ವನ್ನು ಸುಧಾರಿಸುವ ಅಗತ್ಯವಿರುವುದರಿಂದ ಈ ನಿಟ್ಟಿನಲ್ಲಿ ಕಾರ್ಯಾಗಾರ ಆಯೋಜಿಸಲಾಗಿದೆ ಎಂದು ನುಡಿದರು. ಕಾರ್ಯಾಗಾರದಲ್ಲಿ ಮಕ್ಕಳ ಹಕ್ಕುಗಳ ಚೌಕಟ್ಟುಗಳು ಮತ್ತು ಕಾನೂನುಗಳು ಬಗ್ಗೆ ಮೊದಲ ಅಧಿವೇಶನದಲ್ಲಿ ಬೆಂಗಳೂರಿನ ಕರ್ನಾಟಕ ಮಕ್ಕಳ ಹಕ್ಕುಗಳ ವೀಕ್ಷಣಾಲಯ(ಕೆಸಿಆರ್‌ಒ)ದ ರಾಜ್ಯ ಸಂಚಾಲಕ ಡಾ. ವಾಸುದೇವ ಶರ್ಮಾ ಮತ್ತು ಮಕ್ಕಳ ಆರೋಗ್ಯ ಸಮಸ್ಯೆಗಳು ಬಗ್ಗೆ ಆಂಧ್ರಪ್ರದೇಶ, ತೆಲಂಗಾಣ ಮತ್ತು ಕರ್ನಾಟಕ ಯುನಿಸೆಫ್ ಕಚೇರಿಯ ಆರೋಗ್ಯ ತಜ್ಞ ಡಾ. ಶ್ರೀಧರ್ ಪ್ರಹ್ಲಾದ್ ರ್ಯಾವಂಕಿ ಸಮಗ್ರ ಮಾಹಿತಿ ಒದಗಿಸಿದರು. ಯುನಿಸೆಫ್ ಹೈದರಾಬಾದ್, ಮೈಸೂರು ವಿಶ್ವವಿದ್ಯಾನಿಲಯದ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗ ಮತ್ತು ಸಂತ ಅಲೋಶಿಯೆಸ್ ಪರಿಗಣಿತ ವಿವಿ ಮಾಧ್ಯಮ ಅಧ್ಯಯನ ವಿಭಾಗದ ಆಶ್ರಯದಲ್ಲಿ ಆಯೋಜಿಸ ಲಾದ ಕಾರ್ಯಾಗಾರದಲ್ಲಿ ಮೈಸೂರು ವಿಶ್ವವಿದ್ಯಾನಿಲಯ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ಪ್ರೊಫೆಸರ್ ಡಾ. ಸಪ್ನಾ ಎಂ. ಎಸ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂತ ಅಲೋಶಿಯೆಸ್ ಪರಿಗಣಿತ ವಿವಿಯ ಮಾಧ್ಯಮ ಅಧ್ಯಯನ ವಿಭಾಗದ ಮುಖ್ಯಸ್ಥೆ ಭವ್ಯಾ ಶೆಟ್ಟಿ ವಂದಿಸಿದರು. ಕಾರ್ಯಾಗಾರದ ಸಹ ಸಂಯೋಜಕರಾದ ಡಾ. ರಾಕೇಶ್ ಉಪಸ್ಥಿತರಿದ್ದರು. ಮಂಜುನಾಥ್ ಕಾರ್ಯಕ್ರಮ ನಿರೂಪಿಸಿದರು. 

ವಾರ್ತಾ ಭಾರತಿ 24 Mar 2026 8:28 pm

ಪಶ್ಚಿಮ ಏಶ್ಯ ಸಂಘರ್ಷದ ಬಗ್ಗೆ ಚರ್ಚೆ ನಡೆಸಲು ಸರ್ವಪಕ್ಷ ಸಭೆ ಕರೆದ ಕೇಂದ್ರ ಸರಕಾರ

ಹೊಸದಿಲ್ಲಿ: ಪಶ್ಚಿಮ ಏಶ್ಯ ಸಂಘರ್ಷದ ಬಗ್ಗೆ ಚರ್ಚೆ ನಡೆಸಲು ಕೇಂದ್ರ ಸರಕಾರವು ಬುಧವಾರದಂದು ಸರ್ವಪಕ್ಷ ಸಭೆಯೊಂದನ್ನು ಕರೆದಿದೆ. ಪ್ರಧಾನಿ ನರೇಂದ್ರ ಮೋದಿ ಸೋಮವಾರ ಸಂಸತ್‌ನಲ್ಲಿ ಭಾಷಣ ಮಾಡಿದ ಬಳಿಕ ಸರ್ವಪಕ್ಷ ಸಭೆಯನ್ನು ಕರೆಯಲಾಗಿದೆ. ಮಂಗಳವಾರ, ರಕ್ಷಣಾ ಸಚಿವ ರಾಜ್‌ನಾಥ್ ಸಿಂಗ್ ರಕ್ಷಣಾ ಅಧಿಕಾರಿಗಳ ಸಭೆಯೊಂದರ ಅಧ್ಯಕ್ಷತೆ ವಹಿಸಿ ಭಾರತದ ರಕ್ಷಣಾ ಸನ್ನದ್ಧತೆಯನ್ನು ಪರಿಶೀಲಿಸಿದರು. ಇತ್ತೀಚಿನ ಜಾಗತಿಕ ಮತ್ತು ಪ್ರಾದೇಶಿಕ ಭದ್ರತಾ ಸ್ಥಿತಿಗತಿಯ ಹಿನ್ನೆಲೆಯಲ್ಲಿ ಈ ಸಭೆಯನ್ನು ಏರ್ಪಡಿಸಲಾಗಿತ್ತು. ಭಾರತೀಯ ಸಶಸ್ತ್ರ ಪಡೆಗಳ ಮುಖ್ಯಸ್ಥ ಜನರಲ್ ಅನಿಲ್ ಚೌಹಾಣ್, ವಾಯುಪಡೆ ಮುಖ್ಯಸ್ಥ ಏರ್ ಚೀಫ್ ಮಾರ್ಶಲ್ ಅಮರ್ ಪ್ರೀತ್ ಸಿಂಗ್, ಭೂಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ, ನೌಕಾಪಡೆ ಮುಖ್ಯಸ್ಥ ಅಡ್ಮಿರಲ್ ದಿನೇಶ್ ಕೆ. ತ್ರಿಪಾಠಿ ಮತ್ತು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಅಧ್ಯಕ್ಷ ಸಮೀರ್ ಕಾಮತ್ ಮುಂತಾದವರು ಈ ಸಭೆಯಲ್ಲಿ ಭಾಗವಹಿಸಿದರು. ಪಶ್ಚಿಮ ಏಶ್ಯ ಸಂಘರ್ಷವು ನಾಲ್ಕನೇ ವಾರವನ್ನು ತಲುಪಿದ್ದು, ಹಾರ್ಮುಝ್ ಜಲಸಂಧಿಯ ವಾಣಿಜ್ಯ ಮಾರ್ಗಗಳು ಬಂದ್ ಆಗಿವೆ.

ವಾರ್ತಾ ಭಾರತಿ 24 Mar 2026 8:27 pm

ಮಹಾಡ್ ಸತ್ಯಗ್ರಾಹದ ಅರಿವು ಇಲ್ಲದಿದ್ದರೆ ನಾಗರಿಕ ಹಕ್ಕುಗಳನ್ನು ಕಳೆದುಕೊಳ್ಳುತ್ತೇವೆ: ಪ್ರೊ.ಫಣಿರಾಜ್

ಉಡುಪಿ, ಮಾ.24: ಬಿ.ಆರ್.ಅಂಬೇಡ್ಕರ್ ನೇತೃತ್ವದದಲ್ಲಿ 100ವರ್ಷಗಳ ಹಿಂದೆ ನಾಗರಿಕರ ಹಕ್ಕಿಗಾಗಿ ನಡೆದ ದೊಡ್ಡ ಚಳವಳಿ ಮಹಾಡ್ ಸತ್ಯಗ್ರಾಹದ ಬಗ್ಗೆ ನಮಗೆ ಅರಿವು ಇಲ್ಲದಿದ್ದರೆ ನಾವು ನಿರಂತರವಾಗಿ ನಾಗರಿಕರ ಹಕ್ಕನ್ನು ಕಳೆದುಕೊಳ್ಳುತ್ತ ಹೋಗುತ್ತೇವೆ. ಹಾಗಾಗಿ ಇಂತಹ ಚಳವಳಿಯ ನೆನಪು ಇಟ್ಟುಕೊಳ್ಳುವ ಮೂಲಕ ಮತ್ತೆ ನಾಗರಿಕರ ಚಳವಳಿಯ ಹೊಸ ಜಾಗೃತಿಯನ್ನು ಮೂಡಿಸಬೇಕು ಎಂದು ಹಿರಿಯ ಚಿಂತಕ, ಉಡುಪಿ ಸಹಬಾಳ್ವೆ ಸಂಚಾಲಕ ಪ್ರೊ.ಫಣಿರಾಜ್ ಹೇಳಿದ್ದಾರೆ. ಉಡುಪಿ ಸಹಬಾಳ್ವೆ, ದಸಂಸ ಅಂಬೇಡ್ಕರ್ ವಾದ, ಸಿಐಟಿಯು, ರಥಬೀದಿ ಗೆಳೆಯರು ಹಾಗೂ ಸಾಲಿಡಾರಿಟಿ ಯೂಥ್ ಮೂವ್ಮೆಂಟ್ ವತಿಯಿಂದ ಅಜ್ಜರಕಾಡು ವಿಮಾ ನೌಕರರ ಸಂಘದ ಸಭಾಭವನದಲ್ಲಿ ಆಯೋಜಿಸಲಾದ ಭಾರತ ಮೊದಲ ನಾಗರಿಕ ಹಕ್ಕು ಚಳವಳಿ ಮಹಾಡ್ ಸತ್ಯಾಗ್ರಹದ ಚಾರಿತ್ರಿಕ ಮಹತ್ವದ ಕುರಿತ ಕಾರ್ಯಕ್ರಮದಲ್ಲಿ ಅವರು ಮಾತನಾಡುತಿದ್ದರು. ಭಾರತದಲ್ಲಿ ಪ್ರಜಾಪ್ರಭುತ್ವ, ಸಂವಿಧಾನ ಇದ್ದರೂ ಇಂದು ಕೂಡ ನಮಗೆ ಸಮಾನತೆ, ನ್ಯಾಯ ಸಿಗುತ್ತಿಲ್ಲ ಎಂಬು ದನ್ನು ದೇಶಾದ್ಯಂತ ನಡೆಯುತ್ತಿರುವ ಘಟನೆಗಳಿಂದ ನೋಡುತ್ತಿದ್ದೇವೆ. ಇಂದು ಮಹಿಳೆಯರು, ಕಾರ್ಮಿಕರು ಹಾಗೂ ದಲಿತರು ದಿನನಿತ್ಯ ತಮ್ಮ ನಾಗರಿಕರ ಹಕ್ಕುಗಳನ್ನು ಕಳೆದುಕೊಳ್ಳುತ್ತಿದ್ದಾರೆ. ಸಂವಿಧಾನ ನೀಡಿರುವ ಪ್ರಜೆಗಳ ಹಕ್ಕುಗಳನ್ನು ಕೂಡ ಕಳೆದುಕೊಳ್ಳುವ ಸ್ಥಿತಿಗೆ ನಾವು ಬಂದಿದ್ದೇವೆ ಎಂದರು. ಭಾರತದ ಸಂವಿಧಾನದ ವಿಧಿ 15 ಮತ್ತು 17 ಇವುಗಳ ರಚನೆಗಳಿಗೆ ಅಡಿಪಾಯ ಹಾಕಿದ ಚಾರಿತ್ರಿಕ ಮಹತ್ವದ ಮಹಾಡ್ ಚಳವಳಿ ನಮ್ಮ ಎಲ್ಲ ಚಳವಳಿಗಿಂತ ಬಹಳ ಮುಖ್ಯವಾಗಿದೆ. ಎಲ್ಲ ಚಳವಳಿಗಿಂತ ಈ ಚಳವಳಿ ಜನರ ನಡುವೆ ಹೆಚ್ಚು ಪ್ರಚಾರ ಪಡೆಯಬೇಕಾಗಿತ್ತು. ಆದರೆ ಈ ಮಹಾಡ್ ಚಳವಳಿ ಮಹತ್ವ ಹಾಗೂ ಮೊದಲ ನಾಗರಿಕ ಹಕ್ಕಿನ ಚಳವಳಿ ಬಗ್ಗೆ ಜನರಿಗೆ ಅರಿವೇ ಇಲ್ಲ ಎಂದು ಅವರು ಖೇಧ ವ್ಯಕ್ತಪಡಿಸಿದರು. ಪ್ರಜಾಪ್ರಭುತ್ವ ನಮಗೆ ಹಕ್ಕುಗಳನ್ನು ಹಕ್ಕು ನೀಡಿದರೂ ಅಧಿಕಾರಸ್ಥರು ಅದನ್ನು ಅನುಭವಿಸಲು ನಮಗೆ ಬಿಡುವು ದಿಲ್ಲ. ಅದನ್ನು ನಾವು ಸಂಘಟಿತರಾಗಿ ಹೋರಾಟ ಮಾಡುವ ಮೂಲಕ ಪಡೆದುಕೊಳ್ಳಬೇಕಾಗಿದೆ ಎಂಬುದನ್ನು ಈ ಮಹಾಡ್ ಚಳವಳಿ ನಿರೂಪಿಸಿದೆ ಎಂದು ಅವರು ತಿಳಿಸಿದರು. ದಸಂಸ ಅಂಬೇಡ್ಕರ್ ವಾದ ರಾಜ್ಯ ಸಂಘಟನಾ ಸಂಚಾಲಕ ಸುಂದರ್ ಮಾಸ್ತರ್, ಮೈಸೂರು ವಿಭಾಗೀಯ ಸಂಘಟನಾ ಸಂಚಾಲಕ ಶ್ಯಾಮ್‌ರಾಜ್ ಬಿರ್ತಿ, ಸಿಐಟಿಯು ರಾಜ್ಯ ಕಾರ್ಯದರ್ಶಿ ಸುರೇಶ್ ಕಲ್ಲಾಗರ, ದಲಿತ ಹಕ್ಕುಗಳ ಸಮಿತಿ ಜಿಲ್ಲಾ ಅಧ್ಯಕ್ಷ ಸಂಜೀವ ಬಳ್ಕೂರು ಉಪಸ್ಥಿತರಿದ್ದರು. ಸಿಐಟಿಯು ಜಿಲ್ಲಾ ಕೋಶಾಧಿಕಾರಿ ಕವಿರಾಜ್ ಎಸ್.ಕಾಂಚನ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

ವಾರ್ತಾ ಭಾರತಿ 24 Mar 2026 8:26 pm

ಅಡುಗೆ ಅನಿಲ ಕೊರತೆ ವಿರೋಧಿಸಿ ಜನವಾದಿ- ಸಿಐಟಿಯು ಪ್ರತಿಭಟನೆ

ಉಡುಪಿ, ಮಾ.24: ಗ್ಯಾಸ್ ಸಿಲಿಂಡರ್ ಕೊರತೆ ವಿರುದ್ಧ ಉಡುಪಿ ಜಿಲ್ಲಾ ಜನವಾದಿ ಮಹಿಳಾ ಸಂಘಟನೆ ಹಾಗೂ ಸಿಐಟಿಯು ಉಡುಪಿ ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ಮಂಗಳವಾರ ಉಡುಪಿ ಅಜ್ಜರಕಾಡಿನ ಹುತಾತ್ಮ ಸ್ಮಾರಕದ ಎದುರು ಪ್ರತಿಭಟನೆ ನಡೆಸಲಾಯಿತು. ಜನವಾದಿ ಸಂಘಟನೆಯ ಕಾರ್ಯಕರ್ತೆಯರು ಪ್ರತಿಭಟನಾ ಸ್ಥಳದಲ್ಲಿ ಒಲೆ ನಿರ್ಮಿಸಿ ಕಟ್ಟಿಗೆಯ ಮೂಲಕ ಕಾಫಿ ಮಾಡುವ ಮೂಲಕ ಕೇಂದ್ರದ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನಾ ಸಭೆಯನ್ನುದ್ದೇಶಿಸಿ ಮಾತನಾಡಿದ ಜನವಾದಿ ಮಹಿಳಾ ಸಂಘಟನೆಯ ಜಿಲ್ಲಾಧ್ಯಕ್ಷೆ ಸರೋಜಾ ಮಾತ ನಾಡಿ, ಮೋದಿ ಅಮೆರಿಕ ಬೆಂಬಲಿಸಿ ಮಹಿಳೆಯರ ಕಣ್ಣೀರು ಹಾಕುವಂತೆ ಮಾಡುತ್ತಿದ್ದಾರೆ. ಕರೋನಾದಂತೆ 140 ಕೋಟಿ ಜನರನ್ನು ರಕ್ಷಿಸುತ್ತೇನೆ. ತೈಲ ಮತ್ತು ಅಡುಗೆ ಅನಿಲದ ಕೊರತೆ ಇಲ್ಲ ಎಂದು ಹೇಳಿದ ನಂತರ ಈಗಲೂ ಮನೆಗಳಲ್ಲಿ ಹೋಟೆಲ್‌ಗಳಲ್ಲಿ ಅಡುಗೆ ಅನಿಲ ಸಿಗದೇ ಇರುವುದು ಖಂಡನೀಯ. ಅಲ್ಲದೇ ಇಂತಹ ಸಂಕಷ್ಟ ಸಮಯದಲ್ಲಿ ಅಡುಗೆ ಅನಿಲ ಬೆಲೆ ಏರಿಕೆ ಮಾಡಿರುವುದು ಇದು ಕೇಂದ್ರ ಸರ್ಕಾರದ ವೈಫಲ್ಯ ಎಂದು ಟೀಕಿಸಿದರು. ಸಿಐಟಿಯು ರಾಜ್ಯ ಕಾರ್ಯದರ್ಶಿ ಸುರೇಶ್ ಕಲ್ಲಾಗರ ಮಾತನಾಡಿ, ಅಮೆರಿಕಾ ಹಾಗೂ ಇಸ್ರೇಲ್ ಕೇವಲ ಇರಾನ್ ಮೇಲೆ ಹೂಡಿದ ಯುದ್ಧವಲ್ಲ ಬದಲಾಗಿ ಅದು ಜಗತ್ತಿನ ಜನರ ಮೇಲೆ ನಡೆಸುತ್ತಿರುವ ಪೈಶಾಚಿಕ ದಾಳಿಯಾಗಿದೆ. ಟ್ರಂಪ್ ಪುಂಡಾಟಿಕೆ ಇಂದು ಜಗತ್ತಿನ ಜನರು ಸಂಕಟ ಪಡುವಂತಾಗಿದೆ. ಅಮೇರಿಕಾದೊಳಗೆ ಹಾಗೂ ಜಗತ್ತಿನಾ ದ್ಯಂತ ಇಂದು ಯುದ್ಧ ವಿರೋಧಿ ಪ್ರತಿಭಟನೆ ನಡೆಯುತ್ತಿದೆ. ಅಮೇರಿಕಾದ ಮಿತ್ರರು ನ್ಯಾಟೋ ದೇಶಗಳು ವಿರೋಧಿಸುತ್ತಿವೆ ಆದುದರಿಂದ ಟ್ರಂಪ್ ನನ್ನು ಜಗತ್ತಿನ ಭಯೋತ್ಪಾದಕ ಎಂದು ತಿಳಿಸಿದರು. ದಲಿತ ಹಕ್ಕುಗಳ ಸಮಿತಿ ಜಿಲ್ಲಾ ಅಧ್ಯಕ್ಷ ಸಂಜೀವ ಬಳ್ಕೂರು ಯುದ್ಧ ವಿರೋಧಿ ಮಾತುಗಳನ್ನಾಡಿದರು. ಸಿಐಟಿಯು ಜಿಲ್ಲಾ ಅಧ್ಯಕ್ಷ ಶಶಿಧರ ಗೊಲ್ಲ, ಕೋಶಾಧಿಕಾರಿ ಕವಿರಾಜ್ ಎಸ್ ಕಾಂಚನ್ ಮಾತನಾಡಿದರು. ಜನವಾದಿ ಮಹಿಳಾ ಸಂಘಟನೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶೀಲಾವತಿ, ಬಲ್ಕೀಸ್, ಶಶಿಕಲಾ, ನಳಿನಿ, ಕೂಲಿಕಾರರ ಸಂಘಟನೆ ವೆಂಕಟೇಶ್ ಕೋಣಿ ಸಿಐಟಿಯು ಮುಖಂಡರಾದ ಉಮೇಶ್ ಕುಂದರ್, ಸುಭಾಶ್ಚಂದ್ರ ನಾಯಕ್, ರಾಮ ಕಾರ್ಕಡ ಉಪಸ್ಥಿತರಿದ್ದರು.

ವಾರ್ತಾ ಭಾರತಿ 24 Mar 2026 8:24 pm

ಪ್ರಸಕ್ತ ವರ್ಷ ಮಂಗಳೂರು ವಿಮಾನ ನಿಲ್ದಾಣದಲ್ಲಿ ಹಜ್ ಯಾತ್ರಿಕರಿಗೆ ಪ್ರತ್ಯೇಕ ಟರ್ಮಿನಲ್ : ಸಚಿವ ರಹೀಂ ಖಾನ್

ಬೆಂಗಳೂರು : ಮಂಗಳೂರು ವಿಮಾನ ನಿಲ್ದಾಣದಿಂದ ಹಜ್ ಯಾತ್ರೆಗೆ ತೆರಳುವ ಯಾತ್ರಿಕರಿಗೆ ಪ್ರಸಕ್ತ ವರ್ಷ ಪ್ರತ್ಯೇಕ ಟರ್ಮಿನಲ್ ಆರಂಭಿಸುವ ನಿರೀಕ್ಷೆಯಿದೆ ಎಂದು ಹಜ್ ಸಚಿವ ರಹೀಂ ಖಾನ್ ತಿಳಿಸಿದರು. ಮಂಗಳವಾರ ವಿಧಾನಪರಿಷತ್ತಿನ ಪ್ರಶ್ನೋತ್ತರ ಕಲಾಪದಲ್ಲಿ ಕಾಂಗ್ರೆಸ್ ಸದಸ್ಯ ನಾಗರಾಜ್ ಯಾದವ್ ಪ್ರಶ್ನೆಗೆ ಉತ್ತರಿಸಿದ ಸಚಿವರು, ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಡುವ ಹಜ್ ಯಾತ್ರಿಕರಿಗೆ ಬಿಐಎಲ್‍ನಿಂದ ಪ್ರತಿ ವರ್ಷ ಪ್ರತ್ಯೇಕ ತಾತ್ಕಾಲಿಕ ಟರ್ಮಿನಲ್ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಅದೇ ರೀತಿ ಮಂಗಳೂರು ವಿಮಾನ ನಿಲ್ದಾಣದಿಂದ ಪ್ರತ್ಯೇಕ ಟರ್ಮಿನಲ್‍ಗೆ ಎರಡು ವರ್ಷಗಳಿಂದ ಕೇಂದ್ರ ಸರಕಾರ ಅನುಮತಿ ನೀಡಿರಲಿಲ್ಲ. ಮತ್ತೆ ಅನುಮತಿ ನೀಡುವ ಕುರಿತು ಕೇಂದ್ರ ಸಚಿವರನ್ನು ಭೇಟಿ ಮಾಡಿ ಮನವಿ ಮಾಡಲಾಗಿದ್ದು, ಈ ವರ್ಷ ಆರಂಭಿಸುವ ವಿಶ್ವಾಸವಿದೆ ಎಂದರು. ರಾಜ್ಯದಲ್ಲಿ ಪ್ರತಿ ವರ್ಷ ಸಾವಿರಾರು ಮಂದಿ ಹಜ್ ಯಾತ್ರೆಗೆ ತೆರಳುತ್ತಾರೆ. 2025ರಲ್ಲಿ 8 ಸಾವಿರ ಹಾಗೂ ಈ ಬಾರಿ 11 ಸಾವಿರ ಮಂದಿ ಹಜ್ ಯಾತ್ರೆ ತೆರಳಲಿದ್ದಾರೆ. ಸೌದಿ ಅರೇಬಿಯಾ, ಹಜ್ ಯಾತ್ರಿಕರು ಆರೋಗ್ಯ ತಪಾಸಣೆಯಲ್ಲಿ ದೃಢವಾಗಿರಬೇಕು ಎಂದು ತಿಳಿಸಿದೆ. ಅದರಂತೆ ರಾಜ್ಯ ಸರಕಾರ ಆರೋಗ್ಯ ತಪಾಸಣೆ ನಡೆಸುತ್ತಿದೆ ಎಂದು ರಹೀಂ ಖಾನ್ ತಿಳಿಸಿದರು. ರಾಜ್ಯದಲ್ಲಿ ಪ್ರತಿ ವರ್ಷ ಹಜ್ ಯಾತ್ರೆಯನ್ನು ಕೈಗೊಳ್ಳುವ ಯಾತ್ರಾರ್ಥಿಗಳಿಗೆ ಕರ್ನಾಟಕ ರಾಜ್ಯ ಹಜ್ ಸಮಿತಿ ವತಿಯಿಂದ ಜಿಲ್ಲಾವಾರು ಮತ್ತು ವಲಯವಾರು ತಲಾ ತರಬೇತಿ ಶಿಬಿರವನ್ನು ನಡೆಸಲಾಗುವುದು ಎಂದು ರಹೀಂ ಖಾನ್ ತಿಳಿಸಿದರು.  

ವಾರ್ತಾ ಭಾರತಿ 24 Mar 2026 8:19 pm

Ballari | ಮೌಲಾನಾ ಆಝಾದ್ ಶಾಲೆಗೆ ವಿರೋಧಿಸಿ ಮಕ್ಕಳೊಂದಿಗೆ ಪ್ರತಿಭಟನೆಗೆ ಇಳಿದ ಪೋಷಕರು

ಬಳ್ಳಾರಿ/ಕಂಪ್ಲಿ: ಸರ್ಕಾರಿ ಶಾಲಾ ಆವರಣದಲ್ಲಿ ಮೌಲಾನಾ ಆಝಾದ್ ಮಾದರಿ ಶಾಲೆ ನಿರ್ಮಾಣಕ್ಕೆ ವಿರೋಧ ವ್ಯಕ್ತಪಡಿಸಿ, ಪೋಷಕರು ತಮ್ಮ ಮಕ್ಕಳೊಂದಿಗೆ ಪಟ್ಟಣದ ಸಕ್ಕರೆ ಕಾರ್ಖಾನೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಮಂಗಳವಾರ ಬೆಳಿಗ್ಗೆಯಿಂದ ಪ್ರತಿಭಟನೆ ನಡೆಸಿದರು. ಹಲವಾರು ವರ್ಷಗಳ ಹಳೆಯದಾದ ಈ ಸರ್ಕಾರಿ ಶಾಲೆಯಲ್ಲಿ ಈಗಲೂ ಸಾಕಷ್ಟು ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದು, ವಿದ್ಯಾರ್ಥಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಇದರಿಂದ ಹೆಚ್ಚುವರಿ ತರಗತಿ ಕೊಠಡಿಗಳ ಅಗತ್ಯವೂ ಇದೆ. ಶಾಲೆಯ ಮುಂಭಾಗದಲ್ಲಿ ಮಕ್ಕಳ ಆಟದ ಮೈದಾನ ಹಾಗೂ ಭವಿಷ್ಯದ ಕಟ್ಟಡ ನಿರ್ಮಾಣಕ್ಕಾಗಿ ಜಾಗ ಉಳಿಸಲಾಗಿದೆ ಎಂದು ಪೋಷಕರು ತಿಳಿಸಿದ್ದಾರೆ. ಆದರೆ ಸ್ಥಳೀಯ ನಿವಾಸಿಗಳು ಮತ್ತು ಶಿಕ್ಷಣ ಪ್ರೇಮಿಗಳ ಗಮನಕ್ಕೆ ತರದೆ ಏಕಾಏಕಿ ಮೌಲಾನ ಆಜಾದ್ ಮಾದರಿ ಶಾಲೆ ಮಂಜೂರು ಮಾಡಿ, ಕಟ್ಟಡ ನಿರ್ಮಾಣಕ್ಕೆ ಮುಂದಾಗಿರುವುದು ಖಂಡನೀಯ ಎಂದು ಪೋಷಕರು ಆಕ್ರೋಶ ವ್ಯಕ್ತಪಡಿಸಿದರು. ಈ ಬಗ್ಗೆ ಹಲವು ಬಾರಿ ಮನವಿ ಸಲ್ಲಿಸಿದ್ದರೂ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಹೇಳಿದರು. “ಇಲ್ಲಿ ಮಾದರಿ ಶಾಲೆ ನಿರ್ಮಾಣವಾದರೆ ಈಗಿರುವ ಸರ್ಕಾರಿ ಶಾಲೆಗೆ ಹಾನಿಯಾಗುತ್ತದೆ. ಆದ್ದರಿಂದ ಆಝಾದ್ ಮಾದರಿ ಶಾಲೆಯನ್ನು ಬೇರೆಡೆಗೆ ಸ್ಥಳಾಂತರಿಸಬೇಕು. ಇಲ್ಲವಾದಲ್ಲಿ ನಿರಂತರ ಹೋರಾಟ ನಡೆಸುತ್ತೇವೆ ಹಾಗೂ ಕಾನೂನು ಹೋರಾಟಕ್ಕೂ ಮುಂದಾಗುತ್ತೇವೆ” ಎಂದು ಪೋಷಕರಾದ ನಾಯಕರ ಪಾರ್ವತಿ, ಲಕ್ಷ್ಮೀ, ಶಾಂತಮ್ಮ, ಸಾವಿತ್ರಮ್ಮ, ಗಾಳಮ್ಮ ಅವರು ತಿಳಿಸಿದ್ದಾರೆ. ಪ್ರತಿಭಟನೆಯಲ್ಲಿ ಮಕ್ಕಳು ಸಹ ಪಾಲ್ಗೊಂಡು, “ಇಲ್ಲಿ ಆಝಾದ್ ಶಾಲೆ ಬೇಡ” ಎಂದು ಘೋಷಣೆ ಕೂಗಿದರು. ಕೆಲ ವಿದ್ಯಾರ್ಥಿಗಳು ಪರೀಕ್ಷೆಯನ್ನು ಬಿಟ್ಟು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರಿಂದ ಪರಿಸ್ಥಿತಿ ಉದ್ವಿಗ್ನಗೊಂಡಿತು. ಈ ವೇಳೆ ತಹಶೀಲ್ದಾರ್ ಜೂಗಲ್ ಮಂಜುನಾಯಕ ಹಾಗೂ ಪಿಐ ವಾಸುಕುಮಾರ ಅವರು ವಿದ್ಯಾರ್ಥಿಗಳಿಗೆ ಮನವಿ ಮಾಡಿ, ಪರೀಕ್ಷೆಗೆ ಹಾಜರಾಗುವಂತೆ ಮನವರಿಕೆ ಮಾಡಿದರು. ನಂತರವೂ ಪೋಷಕರು ಪ್ರತಿಭಟನೆ ಮುಂದುವರೆಸಿದರು. ಸ್ಥಳದಲ್ಲಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು.

ವಾರ್ತಾ ಭಾರತಿ 24 Mar 2026 8:18 pm

ಗಾಜಿಯಾಬಾದ್ ನ ಲೋನಿ ವಿಶ್ವದ ಅತ್ಯಂತ ಕಲುಷಿತ ನಗರವೆಂಬ ಅಪಖ್ಯಾತಿ; ದೇಶಗಳ ಪಟ್ಚಿಯಲ್ಲಿ 6ನೇ ಸ್ಥಾನದಲ್ಲಿ ಭಾರತ!

World Pollution Report- ವಿಶ್ವದ ಅತ್ಯಂತ ಕಲುಷಿತ ನಗರ ಎಂಬ ಅಪಖ್ಯಾತಿಗೆ ಇದೀಗ ಉತ್ತರ ಪ್ರದೇಶದ ಲೋನಿ ಒಳಗಾಗಿದೆ. 'IQAir' ನ ಹೊಸ ವರದಿಯಂತೆ ಇಲ್ಲಿನ ಮಾಲಿನ್ಯ ಮಟ್ಟ WHO ಮಿತಿಗಿಂತ 22 ಪಟ್ಟು ಅಧಿಕವಾಗಿದೆ. ಈ ಪಟ್ಟಿಯಲ್ಲಿ ಮೇಘಾಲಯದ ಬೈರ್ನಿಹಾಟ್ ಮೂರನೇ ಹಾಗೂ ರಾಷ್ಟ್ರರಾಜಧಾನಿ ನಾಲ್ಕನೇ ಸ್ಥಾನದಲ್ಲಿವೆ. ಜಾಗತಿಕವಾಗಿ ಅತ್ಯಂತ ಕಲುಷಿತ ದೇಶಗಳ ಪಟ್ಟಿಯಲ್ಲಿ ಪಾಕಿಸ್ತಾನ ಮೊದಲ ಸ್ಥಾನದಲ್ಲಿದ್ದರೆ, ಭಾರತ 6ನೇ ಸ್ಥಾನದಲ್ಲಿದೆ ಎಂಬುದನ್ನು ಈ ವರದಿ ಬಹಿರಂಗಪಡಿಸಿದೆ.

ವಿಜಯ ಕರ್ನಾಟಕ 24 Mar 2026 8:18 pm

Bengaluru | ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಭರವಸೆ: ಧರಣಿ ಹಿಂಪಡೆದ ಅಂಗನವಾಡಿ ನೌಕರರು

ಬೆಂಗಳೂರು : ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಭರವಸೆ ನೀಡಿದ ಹಿನ್ನೆಲೆಯಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ನಡೆಸುತ್ತಿದ್ದ ಅನಿರ್ಧಿಷ್ಟಾವಧಿ ಧರಣಿಯನ್ನು ಹಿಂಪಡೆದಿದ್ದಾರೆ. ನಗರದ ಫ್ರೀಡಂ ಪಾರ್ಕ್‍ನಲ್ಲಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಮಾ.23ರಿಂದ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ ವತಿಯಿಂದ ಧರಣಿ ನಡೆಸಲಾಗುತ್ತಿದ್ದು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಕೇಂದ್ರ ಕಚೇರಿಯಲ್ಲಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಅಂಗನವಾಡಿ ನೌಕರರ ಸಂಘದ ಪದಾಧಿಕಾರಿಗಳು ಪಾಲ್ಗೊಂಡಿದ್ದರು. ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರಿಗೆ ಗೌರವಧನ ಹೆಚ್ಚಳ, ಎಲ್‍ಕೆಜಿ, ಯುಕೆಜಿ ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಒದಗಿಸುವುದರ ಬಗ್ಗೆ ಸಚಿವರು ಪದಾಧಿಕಾರಿಗಳೊಂದಿಗೆ ಸುದೀರ್ಘವಾಗಿ ಚರ್ಚೆ ನಡೆಸಿದರು. ಅಂಗನವಾಡಿ ಕೇಂದ್ರಗಳು, ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರ ಬಗ್ಗೆ ಸರಕಾರ ಸಾಕಷ್ಟು ಕಾಳಜಿ ವಹಿಸಿದೆ. ಬೇಡಿಕೆಗಳನ್ನು ಹಂತ ಹಂತವಾಗಿ ಈಡೇರಿಸಲಾಗುವುದು. ನಾನು ಎಲ್ಲರ ಹಿತರಕ್ಷಣೆಗೆ ಬದ್ಧರಾಗಿದ್ದೇನೆ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ತಿಳಿಸಿದರು. ಈ ಸಂದರ್ಭದಲ್ಲೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ಡಾ.ಶಾಮ್ಲಾ ಇಕ್ಬಾಲ್, ನಿರ್ದೇಶಕ ಮಹೇಶ್ ಬಾಬು, ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ ಅಧ್ಯಕ್ಷೆ ವರಲಕ್ಷ್ಮಿ, ಕಾರ್ಯಾಧ್ಯಕ್ಷೆ ಶಾಂತಾ ಎಚ್.ಘಂಟಿ, ಪ್ರದಾನ ಕಾರ್ಯದರ್ಶಿ ಎಚ್.ಎಸ್.ಸುನಂದಾ ಮತ್ತಿತರರು ಉಪಸ್ಥಿತರಿದ್ದರು.   ಪ್ರಮುಖ ಬೇಡಿಕೆಗಳು: ಆರು ವರ್ಷದೊಳಗಿನ ಮಕ್ಕಳು ಐಸಿಡಿಎಸ್ ಅಡಿಯಲ್ಲಿರುವುದನ್ನು ಖಾತ್ರಿ ಪಡಿಸಬೇಕು. ಅಂಗನವಾಡಿ ನೌಕರರನ್ನು ಕನಿಷ್ಠಕೂಲಿಯ ಕಾಯ್ದೆಯ ವ್ಯಾಪ್ತಿಗೆ ತಂದು ಇಎಸ್‍ಐ, ಪಿಎಫ್ ಕೊಡಬೇಕು. ಅಂಗನವಾಡಿ ಕೇಂದ್ರಕ್ಕೆ ಸರಬರಾಜು ಮಾಡುವ ಆಹಾರ ಪದಾರ್ಥಗಳು ಗುಣಮಟ್ಟ ಸರಿ ಇಲ್ಲದ ಕಾರಣ ಬಿಐಎಸ್ ಪರವಾನಿಗೆ ರದ್ದು ಮಾಡಿ ಆಯಾ ಪ್ರದೇಶಕ್ಕೆ ಅನುಗುಣವಾಗಿ ಸ್ಥಳೀಯ ಆಹಾರ ಸರಬರಾಜು ಮಾಡಬೇಕು. 2011ರಿಂದ 2023 ಮಾರ್ಚ್ ತನಕ ನಿವೃತ್ತರಾದ ಅಂಗನವಾಡಿ ಕಾರ್ಯಕರ್ತೆ ಸಹಾಯಕಿಯರಿಗೂ ಕೂಡಲೇ ಗ್ರಾಚ್ಯುಟಿ ಹಣ 183 ಕೋಟಿ ರೂ. ಕೂಡಲೇ ಬಿಡುಗಡೆ ಮಾಡಬೇಕು. ಖಾಲಿ ಇರುವ ಅಂಗನವಾಡಿ ಕಾರ್ಯಕರ್ತೆ, ಸಹಾಯಕಿ ಹುದ್ದೆ, ಮೇಲ್ವಿಚಾರಕಿ, ಸಿಡಿಪಿಒ ಹುದ್ದೆ ಭರ್ತಿ ಮಾಡಬೇಕು.

ವಾರ್ತಾ ಭಾರತಿ 24 Mar 2026 8:14 pm

ಬಳ್ಳಾರಿ | ವಚನಗಳು ಮನ ಪರಿವರ್ತನೆಗೆ ದಾರಿ : ತಹಶೀಲ್ದಾರ್ ಜೂಗಲ್ ಮಂಜುನಾಯಕ

ದೇವರದಾಸಿಮಯ್ಯ ಜಯಂತ್ಯೋತ್ಸವ ಕಾರ್ಯಕ್ರಮ

ವಾರ್ತಾ ಭಾರತಿ 24 Mar 2026 8:11 pm

ಮಂಗಳೂರು| ಮಹಿಳೆ ಮೃತ್ಯು ಪ್ರಕರಣ: ಆರೋಪಿ ಬಸ್ ಚಾಲಕನಿಗೆ ಜೈಲುಶಿಕ್ಷೆ

ಮಂಗಳೂರು: ನಗರದ ಕೊಟ್ಟಾರ ಚೌಕಿ ಸಮೀಪ ಬಸ್ಸೊಂದು ಢಿಕ್ಕಿಯಾಗಿ ಮಹಿಳೆ ಮೃತಪಟ್ಟ ಪ್ರಕರಣವು ಜೆಎಂಎಫ್‌ಸಿ 8ನೇ ನ್ಯಾಯಾಲಯದಲ್ಲಿ ಸಾಬೀತಾಗಿದ್ದು, ಆರೋಪಿ ಖಾಸಗಿ ಬಸ್ ಚಾಲಕ ಶರಣ್ ಕುಮಾರ್ ಎಂಬಾತನಿಗೆ ಒಂದುವರೆ ವರ್ಷ ಜೈಲು ಶಿಕ್ಷೆ ವಿಧಿಸಿದ್ದಾರೆ. *ಪ್ರಕರಣ ವಿವರ: 2022ರ ಡಿ.3ರಂದು ಸಂಜೆ 6:35ಕ್ಕೆ ಮೇಘಾ ರಂಜಿತ್ ಪೈ ಕೊಟ್ಟಾರ ಚೌಕಿಯಲ್ಲಿರುವ ಕಲ್ಲುರ್ಟಿ ದೈವಸ್ಥಾನ ಕಡೆಯಿಂದ ರಸ್ತೆ ದಾಟುತ್ತಿರುವ ವೇಳೆ ಕೊಟ್ಟಾರ ಕಡೆಯಿಂದ ಕೊಟ್ಟಾರ ಚೌಕಿ ಕಡೆಗೆ ಶರಣ್ ಕುಮಾರ್ ಚಲಾಯಿಸುತ್ತಿದ್ದ ಬಸ್ ಮೇಘಾರಿಗೆ ಢಿಕ್ಕಿ ಹೊಡೆದಿದೆ. ಇದರಿಂದ ಗಂಭೀರ ಗಾಯಗೊಂಡ ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಿಸದೆ ಡಿ.6ರಂದು ಮೃತಪಟ್ಟಿದ್ದರು. ಈ ಬಗ್ಗೆ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಜೆಎಂಎಫ್‌ಸಿ 8ನೇ ನ್ಯಾಯಾಲಯದ ನ್ಯಾಯಾಧೀಶ ಫವಾಝ್ ಪಿ.ಎ. ವಿಚಾರಣೆ ನಡೆಸಿ ತೀರ್ಪು ಪ್ರಕಟಿಸಿದ್ದಾರೆ. ಈ ಪ್ರಕರಣದ ತನಿಖೆಯನ್ನು ಸಂಚಾರ ಪಶ್ಚಿಮ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಜಯಾನಂದ ಹಾಗೂ ಕೃಷ್ಣಾನಂದ ಜಿ. ನಾಯಕ್ ನಡೆಸಿ ಆರೋಪಿ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.

ವಾರ್ತಾ ಭಾರತಿ 24 Mar 2026 8:09 pm

ಬಳ್ಳಾರಿ | ಎಸೆಸೆಲ್ಸಿ ಪರೀಕ್ಷಾ ಕೇಂದ್ರಗಳಿಗೆ ಅಧಿಕಾರಿಗಳ ಭೇಟಿ

ಬಳ್ಳಾರಿ/ಕಂಪ್ಲಿ: ತಾಲೂಕಿನಲ್ಲಿ ಸೋಮವಾರ ನಡೆದ ವಿಜ್ಞಾನ ವಿಷಯದ ಎಸೆಸೆಲ್ಸಿ ಪರೀಕ್ಷೆಯ ಹಿನ್ನೆಲೆಯಲ್ಲಿ ವಿವಿಧ ಪರೀಕ್ಷಾ ಕೇಂದ್ರಗಳಿಗೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬೆಂಗಳೂರು ಪಠ್ಯಪುಸ್ತಕ ನಿರ್ದೇಶನಾಲಯದ ಸಹ ನಿರ್ದೇಶಕ (ಜೆಡಿ) ಜಗದೀಶ ಹಾಗೂ ಬಳ್ಳಾರಿ ಶಿಕ್ಷಕರ ತರಬೇತಿ ಕೇಂದ್ರದ ಉಪ ನಿರ್ದೇಶಕ ತಿಪ್ಪೇಸ್ವಾಮಿ ಅವರು ಇಲ್ಲಿನ ಕೊಟ್ಟಾಲ್ ರಸ್ತೆಯಲ್ಲಿರುವ ವಿಜಯನಗರ ಆಂಗ್ಲ ಮಾಧ್ಯಮ ಪ್ರೌಢಶಾಲಾ ಪರೀಕ್ಷಾ ಕೇಂದ್ರ ಸೇರಿದಂತೆ ಬಹುತೇಕ ಕೇಂದ್ರಗಳಿಗೆ ಭೇಟಿ ನೀಡಿ ವೀಕ್ಷಿಸಿದರು. ಪರಿಶೀಲನೆಯ ಬಳಿಕ ಪತ್ರಕರ್ತರು ಕೇಳಿದ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಲು ಅಧಿಕಾರಿಗಳು ನಿರಾಕರಿಸಿದರು. ಈ ಸಂದರ್ಭದಲ್ಲಿ ಸಹ ಶಿಕ್ಷಕ ರಾಮಚಂದ್ರಪ್ಪ ಸೇರಿದಂತೆ ಇತರರು ಉಪಸ್ಥಿತರಿದ್ದರು.

ವಾರ್ತಾ ಭಾರತಿ 24 Mar 2026 8:09 pm

ಬಳ್ಳಾರಿ | ಬಾಲ್ಯ ವಿವಾಹ ತಡೆಗೆ ಜಾಗೃತಿ ಅಗತ್ಯ : ಜೂಗಲ್ ಮಂಜುನಾಯಕ

ಬಳ್ಳಾರಿ/ಕಂಪ್ಲಿ: ಸ್ಥಳೀಯ ತಹಶೀಲ್ದಾರ್ ಕಚೇರಿ ಸಭಾಂಗಣದಲ್ಲಿ ಬಾಲ್ಯ ವಿವಾಹ ತಡೆಗಟ್ಟುವ ತಾಲೂಕು ಮಟ್ಟದ ಸಮನ್ವಯ ಹಾಗೂ ಪರಿಶೀಲನಾ ಸಮಿತಿ ಮತ್ತು ಮಹಿಳೆಯರ ಹಾಗೂ ಮಕ್ಕಳ ರಕ್ಷಣಾ ಕಾವಲು ಸಮಿತಿ ಸಭೆ ಸೋಮವಾರ ನಡೆಯಿತು. ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ತಹಶೀಲ್ದಾರ್ ಅವರು, ಕಳೆದ ಮೂರು ತಿಂಗಳಲ್ಲಿ ಬಾಲ್ಯ ವಿವಾಹಕ್ಕೆ ಸಂಬಂಧಿಸಿದಂತೆ ನಾಲ್ಕು ಕರೆಗಳು ಬಂದಿದ್ದು, ಅದರಲ್ಲಿ ಒಂದೇ ಖಚಿತ ಮಾಹಿತಿ ಎಂದು ತಿಳಿದುಬಂದಿದೆ. ಉಳಿದ ಮೂರು ಕರೆಗಳು ನಕಲಿ ಎಂದು ಹೇಳಿದರು. ಈಗಾಗಲೇ ಪೋಕ್ಸೋ ಕಾಯ್ದೆಯಡಿ ಮೂರು ಪ್ರಕರಣಗಳು ದಾಖಲಾಗಿವೆ ಎಂದರು. ಪಟ್ಟಣ ಸೇರಿದಂತೆ ತಾಲೂಕಿನಲ್ಲಿ ಬಾಲ್ಯ ವಿವಾಹ ತಡೆಗಟ್ಟುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಸಂಬಂಧಿತ ಸಮಿತಿಗಳಿಗೆ ಸೂಚಿಸಲಾಗಿದೆ. ಸರ್ಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಶಾಲೆಗಳ ಶಿಕ್ಷಕರಿಗೆ ಬಾಲ್ಯ ವಿವಾಹ ತಡೆ ಕುರಿತು ತರಬೇತಿ ನೀಡುವುದು ಅಗತ್ಯವಾಗಿದೆ ಎಂದು ಹೇಳಿದರು. ಶಾಲೆಗಳಲ್ಲಿ ಅತಿಥಿ ಶಿಕ್ಷಕರು ಹಾಗೂ ಅಡುಗೆ ಸಹಾಯಕರ ಪೊಲೀಸ್ ಪರಿಶೀಲನೆ ನಡೆಸಲಾಗುತ್ತದೆ. ಏಳು ದಿನಗಳ ಕಾಲ ಶಾಲೆಗೆ ಗೈರಾಗಿರುವ ವಿದ್ಯಾರ್ಥಿಗಳ ಮಾಹಿತಿಯನ್ನು ಕಡ್ಡಾಯವಾಗಿ ನೀಡಬೇಕು ಎಂದು ಸೂಚಿಸಿದರು. ಪ್ರತಿ ಹಂತದಲ್ಲೂ ಮಹಿಳೆಯರು ಮತ್ತು ಮಕ್ಕಳ ರಕ್ಷಣೆ ಜೊತೆಗೆ ಬಾಲ್ಯ ವಿವಾಹ ತಡೆಗೆ ಕಾವಲು ಸಮಿತಿ ಹಾಗೂ ರೀಡ್ಸ್ ಸಂಸ್ಥೆಯವರು ಹೆಚ್ಚಿನ ಎಚ್ಚರಿಕೆ ವಹಿಸಬೇಕು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಮುಖ್ಯಾಧಿಕಾರಿ ಬಿ. ಮಲ್ಲಿಕಾರ್ಜುನ, ಪೊಲೀಸ್ ಎಎಸ್‌ಐ ಬಸವರಾಜ, ಇಸಿಒ ರೇವಣ್ಣ, ತಾಲೂಕು ಪಂಚಾಯತ್ ವ್ಯವಸ್ಥಾಪಕ ಶ್ರೀಶೈಲಗೌಡ, ಉಪ ನೋಂದಣಾಧಿಕಾರಿ ಶ್ರೀನಿವಾಸ, ನಿಲಯ ಪಾಲಕ ವಿರುಪಾಕ್ಷಪ್ಪ, ಅಂಗನವಾಡಿ ಮೇಲ್ವಿಚಾರಕಿ ಲತೀಫಾಬೇಗಂ, ರೀಡ್ಸ್ ಸಂಸ್ಥೆಯ ಎಚ್.ಸಿ. ರಾಘವೇಂದ್ರ ಸೇರಿದಂತೆ ಇತರರು ಉಪಸ್ಥಿತರಿದ್ದರು.

ವಾರ್ತಾ ಭಾರತಿ 24 Mar 2026 8:05 pm

ವಿಜಯನಗರ | ಗ್ರಾಹಕರು ಜಾಗೃತರಾಗಬೇಕು : ಅಪರ ಜಿಲ್ಲಾಧಿಕಾರಿ ಇ.ಬಾಲಕೃಷ್ಣ

ವಿಜಯನಗರ (ಹೊಸಪೇಟೆ) : ಗ್ರಾಹಕರು ಯಾವುದೇ ಉತ್ಪನ್ನವನ್ನು ಖರೀದಿಸುವಾಗ ಅದರ ಪ್ರಮಾಣ ಮತ್ತು ಗುಣಮಟ್ಟವನ್ನು ಖಚಿತಪಡಿಸಿಕೊಂಡು ಖರೀದಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ಇ. ಬಾಲಕೃಷ್ಣ ಹೇಳಿದರು. ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ, ಕಾನೂನು ಮಾಪನ ಶಾಸ್ತ್ರ ಇಲಾಖೆ, ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಆಹಾರ ಸುರಕ್ಷತಾ ಇಲಾಖೆಗಳ ಸಹಯೋಗದಲ್ಲಿ ಮಂಗಳವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಆಯೋಜಿಸಲಾದ ವಿಶ್ವ ಗ್ರಾಹಕರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಪ್ರತಿಯೊಬ್ಬ ಗ್ರಾಹಕನು ತಾನು ಖರೀದಿಸುವ ವಸ್ತುಗಳ ಗುಣಮಟ್ಟ, ತೂಕ ಮತ್ತು ಅಳತೆ ಬಗ್ಗೆ ತಿಳಿದಿರಬೇಕು. “ಗ್ರಾಹಕನೇ ಮಾರುಕಟ್ಟೆಯ ರಾಜ” ಎನ್ನುವ ಮಾತು ಸಾರ್ಥಕವಾಗಬೇಕಾದರೆ ಗ್ರಾಹಕರು ತಮ್ಮ ಹಕ್ಕುಗಳ ಬಗ್ಗೆ ಅರಿವು ಹೊಂದಿರಬೇಕು ಎಂದರು. ಆಕರ್ಷಕ ಜಾಹೀರಾತುಗಳಿಗೆ ಮಾರು ಹೋಗದೆ, ಉತ್ಪನ್ನದ ಗುಣಮಟ್ಟ ಮತ್ತು ಸುರಕ್ಷತೆಯನ್ನು ಪರಿಶೀಲಿಸಿ ಖರೀದಿಸಬೇಕು. ಯಾವುದೇ ವಸ್ತು ಖರೀದಿಸಿದಾಗ ಕಡ್ಡಾಯವಾಗಿ ಅಧಿಕೃತ ಬಿಲ್ ಅಥವಾ ರಶೀದಿ ಪಡೆಯಬೇಕು. ಇದರಿಂದ ಉತ್ಪನ್ನದಲ್ಲಿ ದೋಷ ಕಂಡುಬಂದಲ್ಲಿ ದೂರು ನೀಡಲು ಹಾಗೂ ಗ್ರಾಹಕ ಹಕ್ಕುಗಳನ್ನು ಪ್ರತಿಪಾದಿಸಲು ಅನುಕೂಲವಾಗುತ್ತದೆ ಎಂದು ಹೇಳಿದರು. ವ್ಯಾಪಾರಸ್ಥರು ಕಡ್ಡಾಯವಾಗಿ ಮುದ್ರೆ ಹಾಕಿಸಿದ ಎಲೆಕ್ಟ್ರಾನಿಕ್ ತೂಕದ ಯಂತ್ರಗಳನ್ನು ಬಳಸಬೇಕು. ಗ್ರಾಹಕರಿಗೆ ಅನುಮಾನವಿದ್ದಲ್ಲಿ ಸಂಬಂಧಪಟ್ಟ ಇಲಾಖೆಗೆ ದೂರು ನೀಡಬಹುದು. ವಸ್ತು ಅಥವಾ ಸೇವೆಯಲ್ಲಿ ನ್ಯೂನತೆ ಕಂಡುಬಂದಲ್ಲಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗಕ್ಕೆ ದೂರು ನೀಡಿ ಕಾನೂನಾತ್ಮಕವಾಗಿ ನ್ಯಾಯ ಪಡೆಯಬಹುದು ಎಂದು ತಿಳಿಸಿದರು. ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷ ಎನ್. ತಿಪ್ಪೇಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ವಕೀಲ ಕರುಣಾನಿಧಿ ಗ್ರಾಹಕ ಹಕ್ಕುಗಳ ಕುರಿತು ಉಪನ್ಯಾಸ ನೀಡಿದರು. ಗ್ರಾಹಕರ ದಿನಾಚರಣೆ ಅಂಗವಾಗಿ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ವತಿಯಿಂದ ತಾತ್ಕಾಲಿಕ ಸ್ಟಾಲ್ ಸ್ಥಾಪಿಸಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಯಿತು. ಈ ವೇಳೆ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಉಪನಿರ್ದೇಶಕ ರಿಯಾಜ್, ಕಾನೂನು ಮಾಪನ ಶಾಸ್ತ್ರ ಇಲಾಖೆ ಸಹಾಯಕ ನಿಯಂತ್ರಕ ಮನೋಜ್ ಕುಮಾರ್, ವಕೀಲರ ಸಂಘದ ಅಧ್ಯಕ್ಷ ಗುಜ್ಜಲ ನಾಗರಾಜ್, ಕಾರ್ಯದರ್ಶಿ ಕೃಷ್ಣದೇವರಾಯಲು ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಗ್ರಾಹಕರು ಉಪಸ್ಥಿತರಿದ್ದರು.

ವಾರ್ತಾ ಭಾರತಿ 24 Mar 2026 8:02 pm

ದೈವಪಾತ್ರದ ಅಪಹಾಸ್ಯ; ರಣವೀರ್ ಸಿಂಗ್‌ ಕ್ಷಮೆಯಾಚಿಸಿ, ದೇವಸ್ಥಾನಕ್ಕೂ ಭೇಟಿ ನೀಡಲಿದ್ದಾರೆ : ಹೈಕೋರ್ಟ್‌ಗೆ ವಕೀಲರ ಹೇಳಿಕೆ

ಬೆಂಗಳೂರು : ಕಾಂತಾರ ಚಾಪ್ಟರ್‌-1 ಚಿತ್ರದ ದೈವಪಾತ್ರಗಳನ್ನು ಅಪಹಾಸ್ಯ ಮಾಡಿ, ಧಾರ್ಮಿಕ‌ ಭಾವನೆಗಳಿಗೆ ಧಕ್ಕೆ ತಂದ ಆರೋಪಕ್ಕೆ ಗುರಿಯಾಗಿರುವ ಬಾಲಿವುಡ್‌ ನಟ ರಣವೀರ್‌ ಸಿಂಗ್‌ ತಮ್ಮ ಕೃತ್ಯಕ್ಕೆ ಕ್ಷಮೆಯಾಚಿಸಿ ಪ್ರಮಾಣಪತ್ರ ಸಲ್ಲಿಸುವ ಜತೆಗೆ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡುತ್ತಾರೆ ಎಂದು ರಣವೀರ್ ಪರ ಹಿರಿಯ ವಕೀಲ ಸಜನ್ ಪೂವಯ್ಯ ಹೈಕೋರ್ಟ್‌ಗೆ ತಿಳಿಸಿದರು. ಪ್ರಕರಣ ಸಂಬಂಧ ನಗರದ ಮ್ಯಾಜಿಸ್ಟ್ರೇಟ್‌ ಕೋರ್ಟ್‌ನಲ್ಲಿ ದಾಖಲಾಗಿರುವ ಖಾಸಗಿ ದೂರು ಹಾಗೂ ಹೈಗ್ರೌಂಡ್ಸ್‌ ಠಾಣೆ ಪೊಲೀಸರು ದಾಖಲಿಸಿರುವ ಎಫ್‌ಐಆರ್ ರದ್ದು ಕೋರಿ ರಣವೀರ್ ಸಿಂಗ್ ಸಲ್ಲಿಸಿರುವ ಕ್ರಿಮಿನಲ್ ಅರ್ಜಿಯನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು. ಖಾಸಗಿ ದೂರುದಾರರಾದ ಪ್ರಶಾಂತ್‌ ಮೆಥಲ್‌ ಪರ ವಕೀಲ ಸಿಜಿ ಮಲಯಾಳಿ ಅವರು, ರಣವೀರ್‌ ಸಿಂಗ್‌ ಎಕ್ಸ್‌ನಲ್ಲಿ ಟ್ವೀಟ್‌ ಮಾಡಿ ಕ್ಷಮೆ ಕೇಳಿದ್ದಾರೆ. ಆದರೆ, ಅದರಲ್ಲಿ ಪ್ರಾಮಾಣಿಕತೆ ಕಾಣುವುದಿಲ್ಲ. ಹೃದಯಪೂರ್ವಕವಾಗಿ ಅವರು ಕ್ಷಮೆಯಾಚಿಸಿಲ್ಲ. ಅವರ ಮ್ಯಾನೇಜರ್‌ಗಳು ಟ್ವೀಟ್‌ ಮಾಡಿದ್ದಾರೆ. ಚಾವುಂಡಿ ದೈವವನ್ನು 'ಹೆಣ್ಣು ದೆವ್ವ' ಎಂದು ಕರೆದಿದ್ದಾರೆ. ಮೌಖಿಕವಾಗಿ ದೈವಕ್ಕೆ ಅಪಮಾನ ಮಾಡಿರುವುದರಿಂದ ಅವರು ಮೌಖಿಕವಾಗಿ ಕ್ಷಮೆ ಕೋರಬೇಕು. ಚಾಮುಂಡಿ ಬೆಟ್ಟಕ್ಕೆ ಸಜನ್‌ ಪೂವಯ್ಯ ಅವರ ಜತೆ ಹೋಗಿ ರಣವೀರ್‌ ಅಲ್ಲಿಯೇ ಕ್ಷಮೆ ಕೋರಲಿ ಎಂದರು. ಆಗ ನ್ಯಾಯಪೀಠ, ಕ್ಷಮೆ ಕೋರಿ ಪ್ರಮಾಣಪತ್ರ ಸಲ್ಲಿಸುವುದಾಗಿ ಅರ್ಜಿದಾರರು ಹೇಳುತ್ತಿದ್ದಾರೆ. ಇನ್ನೇನು ಬೇಕು? ಅರ್ಜಿದಾರರು ಮಾಡಿರುವುದು ಸರಿಯಲ್ಲ. ಅದನ್ನು ಬೆಂಬಲಿಸುವುದಿಲ್ಲ. ನ್ಯಾಯಾಲಯಕ್ಕೆ ಬಂದು ಕ್ಷಮೆ ಕೋರಬೇಕು ಎಂದು ನೀವು (ದೂರುದಾರರು) ಬಯಸುತ್ತಿದ್ದೀರಾ? ಪ್ರಮಾದವಾಗಿದೆ. ರಣವೀರ್‌ ದೇವಾಲಯಕ್ಕೆ ಭೇಟಿ ನೀಡಬೇಕು. ಪಶ್ಚಾತಾಪ ವ್ಯಕ್ತಪಡಿಸುವ ಮನಸ್ಸಿರಬೇಕು. ನಟರು ಪ್ರಭಾವ ಬೀರುವ ಹೆಚ್ಚು ಶಕ್ತಿಯನ್ನು ಹೊಂದಿರುತ್ತಾರೆ ಎಂದು ನುಡಿಯಿತು. ರಣವೀರ್‌ ಪರ ಹಿರಿಯ ವಕೀಲ ಸಜನ್‌ ಪೂವಯ್ಯ ಅವರು, ಕ್ಷಮೆ ಕೋರಿ ರಣವೀರ್‌ ಪ್ರಮಾಣಪತ್ರ ಸಲ್ಲಿಸಲಿದ್ದಾರೆ. ಹಾಗೆಯೇ ದೇವಸ್ಥಾನಕ್ಕೂ ಭೇಟಿ ನೀಡುತ್ತಾರೆ. ದಿನಾಂಕವನ್ನು ನಿಗದಿಪಡಿಸಲಾಗುವುದು ಎಂದು ನ್ಯಾಯಪೀಠಕ್ಕೆ ತಿಳಿಸಿದರು. ಇದನ್ನು ಆಲಿಸಿದ ನ್ಯಾಯಪೀಠ ಅರ್ಜಿ ವಿಚಾರಣೆಯನ್ನು ಏಪ್ರಿಲ್‌ 10ಕ್ಕೆ ಮುಂದೂಡಿತು.

ವಾರ್ತಾ ಭಾರತಿ 24 Mar 2026 8:02 pm

ಮಂಗಳೂರು| ಮಾದಕ ವಸ್ತು ಸೇವನೆ ಪ್ರಕರಣ: 6 ಮಂದಿ ಸೆರೆ

ಮಂಗಳೂರು, ಮಾ.24: ಮಾದಕ ವಸ್ತು ಸೇವನೆ ಮಾಡಿದ ಆರೋಪದಡಿ ಎರಡು ಪ್ರತ್ಯೇಕ ಪ್ರಕರಣದಲ್ಲಿ ಆರು ಮಂದಿಯನ್ನು ಉರ್ವ ಮತ್ತು ಕಂಕನಾಡಿ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. *ಚಿಲಿಂಬಿ ಮಲರಾಯ ದೈವಸ್ಥಾನ ಬಳಿಯ ಲೇಔಟ್‌ನಲ್ಲಿ ಸಿಗರೇಟಿಗೆ ಮಾದಕ ವಸ್ತು ಬೆರೆಸಿ ಸೇವಿಸುತ್ತಿದ್ದ ಆರೋಪದಡಿ ಕಾಸರಗೋಡು ಜಿಲ್ಲೆಯ ಪಡಮಾರುತ್ತು ನಿವಾಸಿ ಅಜಿಲ್ ಸಾಜಿ (21), ಕಣ್ಣೂರು ಜಿಲ್ಲೆಯ ತಳಿಪರಂಬ ನಿವಾಸಿ ಸಾಜಿಲ್ ಅಬ್ದುಲ್ ಸಮದ್ (21), ವಾರಪಳ್ಳಿ ಚಂಗನಸ್ಸೇರಿ ನಿವಾಸಿ ಅಬು ಥೋಮಸ್ (23), ಕೊಟ್ಟಾಯಂ ಜಿಲ್ಲೆ ಕಂಜ್ರಿಪಳ್ಳಿ ನಿವಾಸಿ ಅಶ್ವಿನ್ ಸಾಜಿ (20), ಮೂಡುಬಿದಿರೆ ವಾಲ್ಪಾಡಿಯ ಮೆಲ್ಸನ್ ಟೆಲ್ಲಿಸ್ (19) ಎಂಬವರನ್ನು ಉರ್ವ ಠಾಣೆ ಪೊಲೀಸರು ಸೋಮವಾರ ಬಂಧಿಸಿದ್ದಾರೆ. *ಪಡೀಲ್ ಬಸ್ ನಿಲ್ದಾಣದ ಬಳಿಯ ರಸ್ತೆಯ ಬದಿ ಮಾದಕ ವಸ್ತು ಸೇವನೆ ಮಾಡಿ ಸಾರ್ವಜನಿಕರಿಗೆ ತೊಂದರೆ ನೀಡುತ್ತಿದ್ದ ಆರೋಪದಡಿ ತೊಕ್ಕೊಟ್ಟು ಪೆರ್ಮನ್ನೂರು ಚೆಂಬುಗುಡ್ಡೆ ನಿವಾಸಿ ಶೇಖ್ ಲುಕ್ಮಾನುಲ್ ಹಕೀಮ್ (29) ಎಂಬಾತನನ್ನು ಕಂಕನಾಡಿ ನಗರ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಗಳು ನಗರದ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿಗಳಾಗಿದ್ದು, ಐವರು ಬಾಡಿಗೆ ಮನೆಯೊಂದನ್ನು ಪಡೆದು ವಾಸವಾಗಿದ್ದರು ಎನ್ನಲಾಗಿದೆ. ಸಾರ್ವಜನಿಕರು ಮನೆ ಬಾಡಿಗೆ ನೀಡಿದ ಬಳಿಕ ಅವರ ಚಟುವಟಿಕೆಗಳ ಮೇಲೆ ನಿಗಾ ಇರಿಸಿ ಎಚ್ಚರಿಕೆ ವಹಿಸಿಕೊಳ್ಳಬೇಕು ಎಂದು ಪೊಲೀಸರು ಸೂಚನೆ ನೀಡಿದ್ದಾರೆ.

ವಾರ್ತಾ ಭಾರತಿ 24 Mar 2026 8:02 pm

ವಿಜಯನಗರದಲ್ಲಿ ಮಾ.26ರಂದು ʼಕರ್ನಾಟಕ ಸ್ವಾಭಿಮಾನ ನಡಿಗೆ–2026ʼ

ಹೊಸಪೇಟೆ : ಲಿಂಗತ್ವ ಮತ್ತು ಲೈಂಗಿಕ ಅಲ್ಪಸಂಖ್ಯಾತರ ಹಕ್ಕುಗಳ ರಕ್ಷಣೆಗೆ ಹಾಗೂ ಸಾಮಾಜಿಕ ನ್ಯಾಯಕ್ಕಾಗಿ “ಕರ್ನಾಟಕ ಸ್ವಾಭಿಮಾನ ನಡಿಗೆ–2026” ಅನ್ನು ವಿಜಯನಗರದಲ್ಲಿ ಮಾ.26ರಂದು ಆಯೋಜಿಸಲಾಗಿದೆ ಎಂದು ಆಯೋಜಕರು ತಿಳಿಸಿದ್ದಾರೆ. ಬೆಳಿಗ್ಗೆ 11 ಗಂಟೆಗೆ ವಡಕರಾಯನ ಗುಡಿಯಿಂದ ನಡಿಗೆ ಆರಂಭವಾಗಿ, ಮಧ್ಯಾಹ್ನ 12:30ಕ್ಕೆ ಕೆ.ಆರ್.ಕೆ ಹಾಲ್‌ನಲ್ಲಿ ಸಾರ್ವಜನಿಕ ಸಭೆ ನಡೆಯಲಿದೆ. 1969ರ ಜೂನ್ 29ರಂದು ಅಮೆರಿಕದ ನ್ಯೂಯಾರ್ಕ್ ನಗರದ ಸ್ಟೋನ್ವಾಲ್ ಘಟನೆ ಆಧುನಿಕ LGBTQIA+ ಚಳುವಳಿಗೆ ಪ್ರೇರಣೆಯಾಗಿದ್ದು, ಅದರ ನೆನಪಿನಲ್ಲಿ ಪ್ರತಿವರ್ಷ ಸ್ವಾಭಿಮಾನ ನಡಿಗೆಗಳನ್ನು ಆಯೋಜಿಸಲಾಗುತ್ತದೆ. ಇದೇ ಹಿನ್ನೆಲೆಯಲ್ಲಿ ವಿಜಯನಗರದಲ್ಲಿ ಎರಡನೇ ಬಾರಿ ಈ ಕಾರ್ಯಕ್ರಮ ನಡೆಯುತ್ತಿದೆ. ಕಳೆದ ದಶಕದಲ್ಲಿ ಲಿಂಗತ್ವ ಅಲ್ಪಸಂಖ್ಯಾತರ ಹಕ್ಕುಗಳಿಗೆ ಸಂಬಂಧಿಸಿದಂತೆ ಹಲವು ಕಾನೂನು ಮತ್ತು ನೀತಿ ಬದಲಾವಣೆಗಳು ಜಾರಿಯಾಗಿದ್ದರೂ, 2026-27ನೇ ಸಾಲಿನ ರಾಜ್ಯ ಬಜೆಟ್‌ನಲ್ಲಿ ಸಮುದಾಯದ ಅಭಿವೃದ್ಧಿಗೆ ಯಾವುದೇ ಹೊಸ ಯೋಜನೆಗಳನ್ನು ಘೋಷಿಸದಿರುವುದನ್ನು ಆಯೋಜಕರು ಖಂಡಿಸಿದ್ದಾರೆ. ಜೊತೆಗೆ, ಲೋಕಸಭೆಯಲ್ಲಿ ಪರಿಚಯಿಸಲಾದ “ಟ್ರಾನ್ಸ್‌ಜೆಂಡರ್ ವ್ಯಕ್ತಿಗಳು (ಹಕ್ಕುಗಳ ರಕ್ಷಣೆಯ) ತಿದ್ದುಪಡಿ ಮಸೂದೆ–2026” ಸಮುದಾಯದ ಹಕ್ಕುಗಳಿಗೆ ಹಿನ್ನಡೆಯಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಮುಖ್ಯ ಬೇಡಿಕೆಗಳು : ಲಿಂಗತ್ವ ಮತ್ತು ಲೈಂಗಿಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ಸ್ಥಾಪನೆ,  ಕನಿಷ್ಠ 250 ಕೋಟಿ ರೂ. ಪ್ರತ್ಯೇಕ ಬಜೆಟ್ ಮೀಸಲು, ತಿದ್ದುಪಡಿ ಮಸೂದೆ ಹಿಂತೆಗೆದುಕೊಳ್ಳುವುದು, ವಸತಿ, ಉದ್ಯೋಗ, ಪಿಂಚಣಿ ಹಾಗೂ ಆರೋಗ್ಯ ಸೇವೆಗಳ ವಿಸ್ತರಣೆ. ಈ ನಡಿಗೆಯ ಮೂಲಕ ಸಮುದಾಯದ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸಿ, ಸರ್ಕಾರದ ಗಮನ ಸೆಳೆಯುವ ಉದ್ದೇಶ ಹೊಂದಿದ್ದೇವೆ ಎಂದು ಆಯೋಜಕರು ತಿಳಿಸಿದ್ದಾರೆ.

ವಾರ್ತಾ ಭಾರತಿ 24 Mar 2026 8:00 pm