ಮಾ.25ಕ್ಕೆ ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ‘ಪ್ರತಿಭಟನಾ ಸಮಾವೇಶ’
ಬೆಂಗಳೂರು : ರಾಜ್ಯ ಸರಕಾರವು ಕೇವಲ ಒಂದು ಸಮುದಾಯದ ಒತ್ತಾಯಕ್ಕೆ ಮಣಿದು ನ್ಯಾ.ನಾಗಮೋಹನ್ ದಾಸ್ ಆಯೋಗದ ವರದಿಯಂತೆ ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಜಾರಿ ಮಾಡುತ್ತಿರುವುದನ್ನು ಖಂಡಿಸಿ, ಮಾ.25ರಂದು ಫ್ರೀಡಂ ಪಾರ್ಕ್ನಲ್ಲಿ ಪ್ರತಿಭಟನಾ ಸಮಾವೇಶವನ್ನು ನಡೆಸಲಾಗುತ್ತಿದೆ ಎಂದು ಕರ್ನಾಟಕ ರಾಜ್ಯ ಬಲಗೈ ಸಮುದಾಯಗಳ ಒಕ್ಕೂಟದ ರಾಜ್ಯಾಧ್ಯಕ್ಷ ಹಾಗೂ ಮೈಸೂರಿನ ಉರಿಲಿಂಗ ಪೆದ್ದಿ ಮಠದ ಶ್ರೀಜ್ಞಾನ ಪ್ರಕಾಶ್ ಸ್ವಾಮೀಜಿ ತಿಳಿಸಿದ್ದಾರೆ. ರವಿವಾರ ಪ್ರಕಟನೆ ಹೊರಡಿಸಿರುವ ಅವರು, ಸರಕಾರ ಮೀಸಲಾತಿ ವರ್ಗೀಕರಣಕ್ಕಾಗಿ ನೇಮಕ ಮಾಡಿದ ನಾಗಮೋಹನ್ ದಾಸ್ ಆಯೋಗದ ವರದಿಯು ಅವೈಜ್ಞಾನಿಕ, ದೋಷಪೂರಿತ ಹಾಗೂ ಪಕ್ಷಪಾತದಿಂದ ಕೂಡಿದೆ. ವರದಿಯು ರೋಸ್ಟರ್ ವ್ಯವಸ್ಥೆಗಳ ವಿರುದ್ಧವಾಗಿದೆ. ಹೀಗಾಗಿ ಮಾ.25ರಂದು ನಗರದ ಫ್ರೀಡಂ ಪಾರ್ಕ್ನಲ್ಲಿ ಬೃಹತ್ ಪ್ರತಿಭಟನಾ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದಿದ್ದಾರೆ. ಪರಿಶಿಷ್ಟ ಜಾತಿಗಳ ಒಳಮಿಸಲಾತಿ ವಿಚಾರದಲ್ಲಿ ಸರ್ಕಾರ ಕೈಗೊಂಡಿರುವ ಕ್ರಮಗಳು ಅವೈಜ್ಞಾನಿಕವಾಗಿದೆ. ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ಅವರ ಏಕಸದಸ್ಯ ಆಯೋಗದ ವರದಿ ಅಪೂರ್ಣವಾಗಿದ್ದು, ಸಮೀಕ್ಷೆ ಸರಿಯಾದ ರೀತಿಯಲ್ಲಿ ನಡೆದಿಲ್ಲ ಎಂಬ ಆಕ್ಷೇಪವನ್ನು ಹಲವಾರು ಸಂಘಟನೆಗಳು ವ್ಯಕ್ತಪಡಿಸಿವೆ. ಆದರೆ ಆಯೋಗವು ಅದನ್ನು ಪರಿಗಣಿಸದೆ ವರದಿ ಸಲ್ಲಿಸಿದೆ. ಇದೊಂದು ಒಳ ಮೀಸಲಾತಿಯಲ್ಲಿ ಬಲಗೈ ಹಾಗೂ ಮತ್ತಿತರ ಸಮುದಾಯದಗಳಿಗೆ ಮರಣ ಶಾಸನವಾಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ. ಮೀಸಲಾತಿ ಪ್ರಮಾಣವನ್ನು ಶೇ.17ರಷ್ಟು ಹೆಚ್ಚಿಸಿದ್ದ ರಾಜ್ಯ ಸರಕಾರದ ಆದೇಶಕ್ಕೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ಸಾಮಾನ್ಯ ವರ್ಗದವರು ನೇಮಕಾತಿ ಪ್ರಕ್ರಿಯೆಯನ್ನು ಕೈಗೊಳ್ಳಬೇಕು ಎಂದು ಹೋರಾಟ ರೂಪಿಸಿದ ಹಿನ್ನೆಲೆಯಲ್ಲಿ, ರಾಜ್ಯ ಸರಕಾರವು ಫೆ.27ರಂದು ಶೇ.15ರ ಪ್ರಮಾಣದಲ್ಲಿ ಒಳಮೀಸಲಾತಿ ರಹಿತ ನೇಮಕ ಮಾಡಲು ಆದೇಶ ಹೊರಡಿಸಿದೆ. ಆದರೆ, 101 ಜಾತಿಗಳಲ್ಲಿ ಒಂದು ಸಮುದಾಯವು ಶೇ.15 ಮೀಸಲಾತಿಯಲ್ಲಿ ಒಳಮೀಸಲಾತಿಯನ್ನು ಅಳವಡಿಸಬೇಕೆಂದು ಹೋರಾಟ ಮಾಡುತ್ತಿದೆ. ಈ ಹೋರಾಟಕ್ಕೆ ಮಣಿದ ಸರಕಾರ ಮಾ.27ಕ್ಕೆ ರಾಜ್ಯ ಸಚಿವ ಸಂಪುಟದ ವಿಶೇಷ ಸಭೆಯನ್ನು ಏರ್ಪಡಿಸಿರುವುದು ಸರಿಯಲ್ಲ ಎಂದು ಅವರು ಖಂಡಿಸಿದ್ದಾರೆ. ಸಚಿವ ಸಂಪುಟ ಸಭೆಯಲ್ಲಿ ಶೇ.15 ಪ್ರಮಾಣದಲ್ಲಿ ಒಳಮೀಸಲಾತಿಯನ್ನು ಅಳವಡಿಸಬಾರದು. ಒಂದು ವೇಳೆ ಅಳವಡಿಸಿದರೆ, ಮುಂದೆ ಆಗುವ ಎಲ್ಲ ಅನಾಹುತಗಳಿಗೆ ರಾಜ್ಯ ಸರಕಾರವೇ ಜವಾಬ್ದಾರಿಯಾಗಬೇಕಾಗುತ್ತದೆ ಎಂದು ಜ್ಞಾನ ಪ್ರಕಾಶ್ ಸ್ವಾಮೀಜಿ ಎಚ್ಚರಿಕೆ ನೀಡಿದ್ದಾರೆ. ಸಮಾವೇಶದ ಹಕ್ಕೋತ್ತಾಯಗಳು •ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ಕೈಗೊಂಡಿರುವ ಕುಟುಂಬಗಳ ಸಮೀಕ್ಷೆಯ ಅಂಕಿ-ಅಂಶಗಳೊಂದಿಗೆ ನ್ಯಾಯಮೂರ್ತಿ ನಾಗಮೋಹನ್ದಾಸ್ ಆಯೋಗದ ಅಂಕಿ ಅಂಶಗಳನ್ನು ಹೋಲಿಕೆ ಮಾಡಿ, ವ್ಯತ್ಯಾಸಗಳು ಕಂಡುಬಂದರೆ, ಪರಿಶಿಷ್ಟ ಜಾತಿಯ ಎಲ್ಲ ಕುಟುಂಬಗಳ ಸಮೀಕ್ಷೆಯನ್ನು ಮತ್ತೊಮ್ಮೆ ಕೈಗೊಳ್ಳುವುದು. •2025ರ ಸೆ.3ರಂದು ರಾಜ್ಯ ಸರಕಾರವು ಯಾವುದೇ ಮಾನದಂಡವನ್ನು ಅನುಸರಿಸದೇ ಅವೈಜ್ಞಾನಿಕವಾಗಿ ಹೊರಡಿಸಿರುವ ಮೀಸಲಾತಿ ಆದೇಶವನ್ನು ಹಿಂಪಡೆಯುವುದು. •ನಿರ್ದೇಶನದಂತೆ ಜಾತಿ ಪ್ರಮಾಣ ಪತ್ರಗಳನ್ನು ಪ್ರವರ್ಗ ಎ, ಬಿ ಮತ್ತು ಸಿ ಎಂದು ವರ್ಗೀಕರಿಸಿರುವುದನ್ನು ಹಿಂಪಡೆದು ಮೂಲ ಜಾತಿಗಳನ್ನು ನಮೂದಿಸಿ ಜಾತಿ ಪ್ರಮಾಣ ಪತ್ರಗಳನ್ನು ನೀಡಲು ಸೂಕ್ತ ಆದೇಶ ಹೊರಡಿಸುವುದು. •ಚಿತ್ರದುರ್ಗ ಜಿಲ್ಲೆಯಲ್ಲಿ ಹೊಲಯ ಸಮುದಾಯ ಕೇವಲ 223 ಎಂದು ನ್ಯಾಯಮೂರ್ತಿ ನಾಗಮೋಹನ್ದಾಸ್ ವರದಿಯಲ್ಲಿ ದಾಖಲಿಸಿರುವುದನ್ನು ಮರು ಪರಿಶೀಲಿಸಿ ಉದ್ದೇಶ ಪೂರ್ವಕವಾಗಿ ಬಲಗೈ ಸಮುದಾಯದ ಜನಸಂಖ್ಯೆಯನ್ನು ಕಡಿಮೆ ಮಾಡಿರುವ ಆಯೋಗದ ಅಧ್ಯಕ್ಷರು ಹಾಗೂ ಅಧಿಕಾರಿಗಳ ಮೇಲೆ ದೌರ್ಜನ್ಯ ತಡೆ ಕಾಯ್ದೆಯನ್ವಯ ಮೊಕದ್ದಮೆ ದಾಖಲಿಸಲು ವಿಶೇಷ ತನಿಖಾ ತಂಡವನ್ನು ನೇಮಕ ಮಾಡುವುದು.
ದಲಿತರ ಪ್ರತಿಭೆಗೆ ಸರಿಸಾಟಿ ಯಾವುದು ಇಲ್ಲ : ಮುಕುಂದರಾಜ್
‘ಕನ್ನಡ ಸಾಹಿತ್ಯದಲ್ಲಿ ದಲಿತ ಪ್ರಜ್ಞೆ’ ಕುರಿತ ಉಪನ್ಯಾಸ, ಕವಿಗೋಷ್ಠಿ ಹಾಗೂ ಪ್ರಬಂಧ ಸ್ಪರ್ಧೆ
ಸಾಹಿತ್ಯ ಕ್ಷೆೇತ್ರಕ್ಕೆ ಅಧಿಕಾರಿಗಳಿಂದ ಕೊಡುಗೆ : ಚಿರಂಜೀವಿ ಸಿಂಗ್
ಬೆಂಗಳೂರು : ವಿವಿಧ ಕ್ಷೇತ್ರಗಳಲ್ಲಿ ವೃತ್ತಿ ನಿರ್ವಹಿಸಿದ ಹಲವಾರು ಸರಕಾರಿ ಅಧಿಕಾರಿಗಳು ಪ್ರವೃತ್ತಿಯಾಗಿ ಸಾಹಿತ್ಯ ಕ್ಷೇತ್ರದಲ್ಲಿ ತೊಡಗಿಸಿಕೊಂಡು ಬರವಣಿಗೆ ಮೂಲಕ ಗಮನ ಸೆಳೆದಿದ್ದು, ಇದು ಸಾಹಿತ್ಯ ಕ್ಷೇತ್ರಕ್ಕೆ ಉತ್ತಮ ಕೊಡುಗೆಯಾಗಿದೆ ಎಂದು ನಿವೃತ್ತ ಐಎಎಸ್ ಅಧಿಕಾರಿ ಚಿರಂಜೀವಿ ಸಿಂಗ್ ತಿಳಿಸಿದ್ದಾರೆ. ರವಿವಾರ ನಗರದ ಚಿತ್ರಕಲಾ ಪರಿಷತ್ನಲ್ಲಿ ಅಭಿರುಚಿ ಪ್ರಕಾಶನ ಮತ್ತು ಕಾಡುಮಲ್ಲೇಶ್ವರ ಗೆಳೆಯರ ಬಳಗದ ವತಿಯಿಂದ ನಡೆದ ನಿವೃತ್ತ ಐಜಿಪಿ ಸಿ.ಚಂದ್ರಶೇಖರ್ ಅವರ ಆತ್ಮಕಥೆ ‘ರಿಸನ್ ಪಾಯಿಸನ್ಸ್ ಪ್ಯಾಷನ್’ ಪುಸ್ತಕ ಲೋಕರ್ಪಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಅಧಿಕಾರಿಗಳಾಗಿ ಸಾಹಿತ್ಯ ರಚಿಸಿದ ಸಾಲಿಗೆ ಸಿ.ಚಂದ್ರಶೇಖರ್ ಸೇರ್ಪಡೆಯಾಗುತ್ತಾರೆ. ಈ ಕೃತಿ ಅತ್ಯಂತ ಆಸಕ್ತಿದಾಯಕವಾಗಿದ್ದು, ಇವರ ಬರವಣಿಗೆಯಲ್ಲಿ ಸಾಹಿತ್ಯದ ಬೆಳಕಿದೆ ಎಂದು ಅವರು ಹೇಳಿದರು. ನಿವೃತ್ತ ಐಜಿಪಿ, ಲೇಖಕ ಸಿ.ಚಂದ್ರಶೇಖರ್ ಮಾತನಾಡಿ, ಇದು ನನ್ನ ಜೀವನದ ಕಥೆ ಅನ್ನುವ ಬದಲು ನಾನು ನೋಡಿದ ವ್ಯಕ್ತಿಗಳು, ಸಮಾಜದಲ್ಲಿ ನಡೆದ ನೈಜ ಘಟನೆಗಳು. ರೈತ ಸಂಘಟನೆ ಹೋರಾಟದ ವಿಷಯಗಳನ್ನು ಒಳಗೊಂಡಿದೆ. ಇದು ನನ್ನ ನಾಲ್ಕನೇ ಪುಸ್ತಕವಾಗಿದೆ ಎಂದರು. ರೈತ ಹೋರಾಟಗಾರರಾದ ನಂಜುಂಡಸ್ವಾಮಿ, ಎಚ್.ಎಸ್.ರುದ್ರಪ್ಪ, ಸುಂದರೇಶ್, ಕಡಿದಾಳು ಶಾಮಣ್ಣ ಅವರ ಜೊತೆಯಲ್ಲಿ ಉತ್ತಮ ಒಡನಾಟದಿಂದ ರೈತ ಚಳವಳಿ, ರೈತರ ಸಮಸ್ಯೆಗಳು ನನಗೆ ಅರ್ಥವಾಯಿತು ಎಂದರು. ಈ ಸಂದರ್ಭದಲ್ಲಿ ಕಾಡು ಮಲ್ಲೇಶ್ವರ ಗೆಳಯರ ಬಳಗದ ಅಧ್ಯಕ್ಷ ಬಿ.ಕೆ.ಶಿವರಾಂ, ಪ್ರಕಾಶಕರಾದ ಅಭಿರುಚಿ ಗಣೇಶ್, ಸುಚಿತಾ ನಾಗೇಶ್, ಮತ್ತಿತರರು ಉಪಸ್ಥಿತರಿದ್ದರು.
ಕನ್ನಡ ಪ್ರಜ್ಞೆ ಸಂವಿಧಾನವನ್ನು ಗೌರವಿಸುವ ಪ್ರಜ್ಞೆ : ಪ್ರೊ.ಎಸ್.ಜಿ.ಸಿದ್ದರಾಮಯ್ಯ
‘ಬಸವ ಪ್ರಶಸ್ತಿ’ ಪ್ರದಾನ ಸಮಾರಂಭ
Belagavi | ಅಗ್ನಿ ಅವಘಡ: 12ಕ್ಕೂ ಹೆಚ್ಚು ಅಂಗಡಿಗಳು ಭಸ್ಮ
ಬೆಳಗಾವಿ : ತಾಲೂಕಿನ ಜುಗೂಳ ಗ್ರಾಮದ ಬಜಾರ ಪೇಟೆಯಲ್ಲಿ ಶನಿವಾರ ತಡರಾತ್ರಿ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ ಸುಮಾರು 12ರಿಂದ 15 ಅಂಗಡಿಗಳು ಸಂಪೂರ್ಣವಾಗಿ ಬೆಂಕಿಗಾಹುತಿಯಾಗಿದ್ದು, ಲಕ್ಷಾಂತರ ರೂಪಾಯಿ ಮೌಲ್ಯದ ಆಸ್ತಿಪಾಸ್ತಿಗಳು ನಷ್ಟವಾಗಿವೆ ಎಂದು ವರದಿಯಾಗಿದೆ. ವಿದ್ಯುತ್ ಶಾರ್ಟ್ ಸರ್ಕ್ಯೂಟ್ನಿಂದ ಬೆಂಕಿ ಕಾಣಿಸಿಕೊಂಡಿದ್ದು, ಕ್ಷಣಾರ್ಧದಲ್ಲಿ ಪಕ್ಕದ ಅಂಗಡಿಗಳಿಗೆ ವ್ಯಾಪಿಸಿ ಭಾರೀ ಅನಾಹುತಕ್ಕೆ ಕಾರಣವಾಗಿದೆ. ಸಿದ್ದೇಶ್ವರ ನೀರಾವರಿ ಸಂಘ, ಗೋಮ್ಮಟೇಶ್ವರ ನೀರಾವರಿ ಸಂಘ, ಸಾಗರ ನೀರಾವರಿ ಸಂಘ, ಅಡಿವೆಪ್ಪಾ ಭನಾಜರ ಜೈ ಜೀನೇಂದ್ರ ಹೊಟೇಲ್, ಪ್ರಕಾಶ ಮಡಿವಾಳರ ಲಾಂಡ್ರಿ ಅಂಗಡಿ, ಸಿದ್ಧಾಂತ ಶಿರಗುಪ್ಪೆಯ ಕೀಟನಾಶಕ ಮತ್ತು ಕೃಷಿ ಔಷಧ ಅಂಗಡಿ, ಅಮೀತ ಶಿಂಧೆಯ ಸಲೂನ್, ಶೋಭಾ ಘಟಗೆ ಪೈಪ್ ಅಂಗಡಿ, ಭೋಲೆನಾಥ ಐಸ್ ಕ್ರೀಮ್ ಅಂಗಡಿ, ಕುಂಥಿನಾಥ ಭನಾಜ ಅಂಗಡಿ, ಮಾರುತಿ ಮಿಣಚೆಯ ಫೋಟೊ ಸ್ಟೂಡಿಯೊ ಮತ್ತು ಕಂಪ್ಯೂಟರ್ ಸೆಂಟರ್ ಸೇರಿದಂತೆ ಅನೇಕ ಅಂಗಡಿಗಳು ಬೆಂಕಿಗೆ ಆಹುತಿಯಾಗಿವೆ. ಸುದ್ದಿ ತಿಳಿಯುತ್ತಿದ್ದಂತೆಯೇ ರಾಯಬಾಗ, ಅಥಣಿ ಹಾಗೂ ಉಗಾರ ಸಕ್ಕರೆ ಕಾರ್ಖಾನೆಯ ಅಗ್ನಿ ಶಾಮಕ ದಳದ ವಾಹನಗಳು ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ನಂದಿಸಿ ಹೆಚ್ಚಿನ ಅನಾಹುತ ತಪ್ಪಿಸಿದರು. ಈ ಘಟನೆ ಕಾಗವಾಡ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸಂಭವಿಸಿದ್ದು, ರವಿವಾರ ಕಾಗವಾಡ ತಹಶೀಲ್ದಾರ್ ರವೀಂದ್ರ ಹಾದಿಮನಿ, ಪಿಎಸ್ಐ ರಾಘವೇಂದ್ರ ಖೋತ ಹಾಗೂ ಹೆಸ್ಕಾಂ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ದಾವಣಗೆರೆಯಲ್ಲಿ ಕಾಂಗ್ರೆಸ್ಗೆ ಬಂಡಾಯದ ಬಿಸಿ; ಪಕ್ಷೇತರ ಅಭ್ಯರ್ಥಿಯಾಗಿ ಸಾದಿಕ್ ಪೈಲ್ವಾನ್ ಸ್ಪರ್ಧೆ
ಬೆಂಗಳೂರು : ದಾವಣಗೆರೆ ದಕ್ಷಿಣ, ಬಾಗಲಕೋಟೆ ಕ್ಷೇತ್ರಗಳ ಉಪಚುನಾವಣೆಗೆ ಆಡಳಿತಾರೂಢ ಕಾಂಗ್ರೆಸ್ ಪಕ್ಷವು ತನ್ನ ಅಭ್ಯರ್ಥಿಗಳನ್ನು ಘೋಷಣೆ ಮಾಡಿದೆ. ಇದರ ಬೆನ್ನಲ್ಲೇ ಎರಡೂ ಕ್ಷೇತ್ರಗಳಲ್ಲಿಯೂ ಬಂಡಾಯ ಏರ್ಪಟ್ಟಿದ್ದು, ಪಕ್ಷದ ಅಧಿಕೃತ ಅಭ್ಯರ್ಥಿಗಳ ವಿರುದ್ಧವೇ ನಾಮಪತ್ರ ಸಲ್ಲಿಸುವ ಎಚ್ಚರಿಕೆ ನೀಡಲಾಗಿದೆ. ತೀವ್ರ ಕುತೂಹಲಕ್ಕೆ ಕಾರಣವಾಗಿದ್ದ ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಶಾಮನೂರು ಶಿವಶಂಕರಪ್ಪ ಅವರ ಮೊಮ್ಮಗ ಸಮರ್ಥ್ ಮಲ್ಲಿಕಾರ್ಜುನ್ಗೆ ಹೈಕಮಾಂಡ್ ಟಿಕೆಟ್ ಪ್ರಕಟಿಸಿದೆ. ಹೀಗಾಗಿ ಟಿಕೆಟ್ ಆಕಾಂಕ್ಷಿಯಾಗಿದ್ದ ಕಾಂಗ್ರೆಸ್ ಮುಖಂಡ ಸಾದಿಕ್ ಪೈಲ್ವಾನ್ ಮಾ.23ರಂದು ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸುವುದಾಗಿ ಪ್ರಕಟಿಸಿದ್ದಾರೆ. ಮುಸ್ಲಿಮ್ ಸಮುದಾಯದ ಅಭ್ಯರ್ಥಿಗೆ ಟಿಕೆಟ್ ನೀಡಬೇಕೆಂದು ಪಟ್ಟು ಹಿಡಿದಿದ್ದ ಅಲ್ಪಸಂಖ್ಯಾತರು, ಇದೀಗ ಕಾಂಗ್ರೆಸ್ ಪಕ್ಷದ ವಿರುದ್ಧವೇ ಸಿಡಿದೆದ್ದಿದ್ದಾರೆ. ಟಿಕೆಟ್ ಕೈತಪ್ಪಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ಸಾದಿಕ್ ಪೈಲ್ವಾನ್, ಸ್ವಪಕ್ಷದ ವಿರುದ್ಧವೇ ತೊಡೆತಟ್ಟಿದ್ದು, ‘ಯಾವುದೇ ಕಾರಣಕ್ಕೂ ಸ್ಪರ್ಧೆಯಿಂದ ಹಿಂದೆ ಸರಿಯುವುದಿಲ್ಲ’ ಎಂದು ಸವಾಲು ಹಾಕಿದ್ದಾರೆ. ಈ ಮಧ್ಯೆ ಈಗಾಗಲೇ ಮಾ.20ರಂದು ನಾಮಪತ್ರ ಸಲ್ಲಿಸಿರುವ ಮೆಹಬೂಬ್ ಪಕ್ಷೇತರ ಅಭ್ಯರ್ಥಿಯಾಗಿದ್ದು, ‘ಕಾಂಗ್ರೆಸ್ ಪಕ್ಷದಿಂದ ಮುಸ್ಲಿಮ್ ಅಭ್ಯರ್ಥಿಗೆ ಟಿಕೆಟ್ ನೀಡಿಲ್ಲ. ಆದುದರಿಂದ ಕಾಂಗ್ರೆಸ್ ಪಕ್ಷಕ್ಕೆ ಈ ಬಾರಿ ಸೋಲಿನ ರುಚಿಯುಣಿಸಲು ನಮ್ಮ ಸಮುದಾಯ ಸಜ್ಜಾಗಿದೆ. ಅಲ್ಪಸಂಖ್ಯಾತರ ಮತಗಳಿಂದಲೇ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಪಕ್ಷಕ್ಕೆ ಉಪ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲಿದ್ದೇವೆ’ ಎಂದು ಎಚ್ಚರಿಕೆ ನೀಡಿದ್ದಾರೆ. ಮಾ.20ರಂದು ಪಕ್ಷದ ‘ಬಿ ಫಾರಂ’ ಇಲ್ಲದೆ ನಾಮಪತ್ರ ಸಲ್ಲಿಕೆ ಮಾಡಿದ್ದ ಕಾಂಗ್ರೆಸ್ ಅಭ್ಯರ್ಥಿ ಸಮರ್ಥ್ ಮಲ್ಲಿಕಾರ್ಜುನ್, ಬಿಜೆಪಿ ಅಭ್ಯರ್ಥಿ ಶ್ರೀನಿವಾಸ್ ದಾಸಕರಿಯಪ್ಪ ಹಾಗೂ ಪಕ್ಷೇತರರು ಸೇರಿದಂತೆ ಒಟ್ಟು 8 ಮಂದಿಯಿಂದ 9 ನಾಮಪತ್ರ ಸಲ್ಲಿಕೆಯಾಗಿದ್ದವು. ಮಾ.23ರಂದು ಕಾಂಗ್ರೆಸ್ ಅಭ್ಯರ್ಥಿ ಮತ್ತೊಮ್ಮೆ ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ. ದಾವಣಗೆರೆ ದಕ್ಷಿಣದಲ್ಲಿ ಅಹಿಂದ ವರ್ಗ ಹಾಗೂ ಮುಸ್ಲಿಮ್ ಸಮುದಾಯ ಬಹುಸಂಖ್ಯಾತರಾಗಿದ್ದರೂ ಕಾಂಗ್ರೆಸ್ ಹೈಕಮಾಂಡ್ ಮುಸ್ಲಿಮ್ ಸಮುದಾಯಕ್ಕೆ ಟಿಕೆಟ್ ನೀಡದಿರುವುದು ಬೇಸರ ತರಿಸಿದೆ. ಶಾಮನೂರು ಕುಟುಂಬದಲ್ಲಿ ಈಗಾಗಲೇ ಸಚಿವರೂ ಇದ್ದಾರೆ. ಸಂಸದರೂ ಇದ್ದಾರೆ. ಈಗ ಮಗನಿಗೂ ಟಿಕೆಟ್ ನೀಡಿರುವುದು ಯಾವ ನ್ಯಾಯ?. ಸಾಮಾನ್ಯ ಕಾರ್ಯಕರ್ತರಿಗೂ ಅವಕಾಶ ನೀಡಬೇಕಿತ್ತು. ಈ ಹಿನ್ನೆಲೆಯಲ್ಲಿ ಸೋಮವಾರ ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯಲಿದ್ದೇನೆ. ಅಪಾರ ಜನಸಂಖ್ಯೆಯಲ್ಲಿ ಬೇತೂರು ವೃತ್ತದಿಂದ ಮೆರವಣಿಗೆ ಮುಖಾಂತರ ನಾಮಪತ್ರ ಸಲ್ಲಿಸಲಾಗುವುದು. ನಮ್ಮ ಗೆಲುವಿಗೆ ಎಲ್ಲ ಸಮುದಾಯ ಸಹಕಾರ ನೀಡಲಿದೆ ಎಂದು ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಸಾದಿಕ್ ಪೈಲ್ವಾನ್ ತಿಳಿಸಿದ್ದಾರೆ. ಬಾಗಲಕೋಟೆ ಕ್ಷೇತ್ರದಲ್ಲಿಯೂ ಎಚ್.ವೈ.ಮೇಟಿ ಅವರ ಕಿರಿಯ ಪುತ್ರ ಉಮೇಶ್ ಮೇಟಿಗೆ ಟಿಕೆಟ್ ಪ್ರಕಟಿಸಿದ್ದು, ಹಿರಿಯ ಪುತ್ರ ಮಲ್ಲಿಕಾರ್ಜುನ, ಪುತ್ರಿಯರಾದ ಬಾಯಕ್ಕ ಮತ್ತು ಮಹಾದೇವಿ ಯಾವ ತೀರ್ಮಾನ ಕೈಗೊಳ್ಳಲಿದ್ದಾರೆ ಎಂಬುದು ಇನ್ನೂ ನಿಗೂಢವಾಗಿದೆ. ಎರಡು ಕ್ಷೇತ್ರಗಳಲ್ಲಿ ಕುಟುಂಬದ ಸದಸ್ಯರಿಗೆ ಮಣೆಹಾಕಿದ್ದು, ಪಕ್ಷಕ್ಕಾಗಿ ದುಡಿದ ಕಾರ್ಯಕರ್ತರನ್ನು ನಿರ್ಲಕ್ಷಿಸಲಾಗಿದೆ ಎಂಬ ಆರೋಪ ಕೇಳಿಬಂದಿದೆ.
ಪಶ್ಚಿಮ ಏಶ್ಯದ ಸಂಘರ್ಷ | PSL ಟೂರ್ನಿಯ ಆರಂಭಿಕ ಪಂದ್ಯಗಳಲ್ಲಿ ಮೈದಾನದೊಳಗೆ ಪ್ರೇಕ್ಷಕರ ಪ್ರವೇಶಕ್ಕೆ ನಿರ್ಬಂಧ
ಲಾಹೋರ್: ಪಶ್ಚಿಮ ಏಶ್ಯದ ಸಂಘರ್ಷದ ಕಾರಣದಿಂದಾಗಿ ಈ ಬಾರಿಯ ಪಾಕಿಸ್ತಾನ ಸೂಪರ್ ಲೀಗ್(ಪಿಎಸ್ಎಲ್)ಟೂರ್ನಿಯ ಆರಂಭಿಕ ಪಂದ್ಯಗಳಲ್ಲಿ ಪ್ರೇಕ್ಷಕರಿಗೆ ಮೈದಾನದೊಳಗೆ ಪ್ರವೇಶ ನಿರ್ಬಂಧಿಸಲಾಗಿದೆ ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ(ಪಿಸಿಬಿ)ತಿಳಿಸಿದೆ. ‘‘ಪಿಎಸ್ಎಲ್ ಟೂರ್ನಿಯು ಅಂತರ್ರಾಷ್ಟ್ರೀಯ ಬ್ರ್ಯಾಂಡ್ ಆಗಿದೆ. ಅದು ನಮ್ಮ ಹೆಮ್ಮೆ. ಈ ಬಾರಿಯ ಟೂರ್ನಿಯು ಮಾರ್ಚ್ 26ರಿಂದ ಆರಂಭವಾಗಲಿದೆ. ಆದರೆ ಯುದ್ಧದ ಕಾರಣದಿಂದ ಪ್ರೇಕ್ಷಕರಿಲ್ಲದೆ ಪಂದ್ಯಗಳು ನಡೆಯುತ್ತವೆ’’ಎಂದು ಪಿಸಿಬಿ ಅಧ್ಯಕ್ಷ ಮುಹ್ಸಿನ್ ನಖ್ವಿ ಹೇಳಿದ್ದಾರೆ. ಪಿಎಸ್ಎಲ್ ಟೂರ್ನಿಯ 11ನೇ ಆವೃತ್ತಿಯನ್ನು ಎರಡು ಮೈದಾನಗಳಿಗಷ್ಟೇ ಸೀಮಿತಗೊಳಿಸಲಾಗಿದೆ. ಲಾಹೋರ್ ಹಾಗೂ ಕರಾಚಿಯಲ್ಲಿ ಪಂದ್ಯಗಳು ನಡೆಯುತ್ತವೆ ಎಂದು ಹೇಳಿದ್ದಾರೆ. ‘‘ಸರಕಾರದ ಆದೇಶದ ಪ್ರಕಾರ, ಮುಂಜಾಗ್ರತಾ ಕ್ರಮವಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಉದ್ಘಾಟನಾ ಕಾರ್ಯಕ್ರಮವನ್ನು ಕೂಡ ರದ್ದುಗೊಳಿಸಲಾಗಿದೆ. ಆದರೆ ಯಾವುದೇ ಭದ್ರತಾ ಸಮಸ್ಯೆ ಇಲ್ಲ. ರವಿವಾರ ರಾತ್ರಿಯಿಂದಲೇ ವಿದೇಶಿ ಆಟಗಾರರು ಪಾಕಿಸ್ತಾನಕ್ಕೆ ಆಗಮಿಸಲಿದ್ದಾರೆ. ಮೈದಾನದೊಳಗೆ ಪ್ರೇಕ್ಷಕರಿಗೆ ಪ್ರವೇಶವಿಲ್ಲದ ಕಾರಣ ಅದರಿಂದ ಫ್ರಾಂಚೈಸಿಗಳಿಗೆ ಆಗುವ ನಷ್ಟವನ್ನು ಪಿಸಿಬಿ ಭರಿಸಲಿದೆ’’ ಎಂದು ನಖ್ವಿ ತಿಳಿಸಿದ್ದಾರೆ.
ರೊನಾಲ್ಡೊ ವೈಯಕ್ತಿಕ ಸಾಧನೆಗಳಿಗಿಂತಲೂ ತಂಡದ ಯಶಸ್ಸಿಗಾಗಿ ಹೆಚ್ಚು ಶ್ರಮಿಸುತ್ತಿದ್ದಾರೆ: ಮಾರ್ಟಿನೆಝ್
ಮ್ಯಾಡ್ರಿಡ್: ಸ್ಟಾರ್ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ತನ್ನ ವೃತ್ತಿಜೀವನದ 1,000ನೇ ಗೋಲುಗಳ ಮೈಲಿಗಲ್ಲನ್ನು ಬೆನ್ನಟ್ಟುತ್ತಿದ್ದಾರೆ ಎಂಬ ಹೇಳಿಕೆಯನ್ನು ಪೋರ್ಚುಗಲ್ ರಾಷ್ಟ್ರೀಯ ಫುಟ್ಬಾಲ್ ತಂಡದ ಮುಖ್ಯ ತರಬೇತುದಾರ ರಾಬರ್ಟೊ ಮಾರ್ಟಿನೆಝ್ ತಳ್ಳಿ ಹಾಕಿದ್ದಾರೆ. ಅನುಭವಿ ಫಾರ್ವರ್ಡ್ ಆಟಗಾರ ವೈಯಕ್ತಿಕ ಸಾಧನೆಗಳಿಗಿಂತಲೂ ತಂಡದ ಯಶಸ್ಸಿಗಾಗಿ ಹೆಚ್ಚು ಶ್ರಮಿಸುತ್ತಿದ್ದಾರೆ ಎಂದು ಹೇಳಿದ್ದಾರೆ. ತಮ್ಮ ವೃತ್ತಿಜೀವನದುದ್ದಕ್ಕೂ ಈಗಾಗಲೇ 950ಕ್ಕೂ ಅಧಿಕ ಗೋಲುಗಳನ್ನು ಗಳಿಸಿರುವ ಹಾಗೂ ಪೋರ್ಚುಗಲ್ ಮತ್ತು ಅಲ್ ನಸ್ರ್ ಎರಡರಲ್ಲೂ ಆಡುತ್ತಿರುವ ರೊನಾಲ್ಡೊ ಅವರು ಸದ್ಯ ಸ್ನಾಯು ಸೆಳೆತದಿಂದ ಚೇತರಿಸಿಕೊಳ್ಳುತ್ತಿದ್ದಾರೆ. ಮುನ್ನಚ್ಚರಿಕೆಯ ಕ್ರಮವಾಗಿ 41ರ ವಯಸ್ಸಿನ ರೊನಾಲ್ಡೊ ಅವರನ್ನು ಅಂತರ್ರಾಷ್ಟ್ರೀಯ ಸ್ನೇಹಪರ ಪಂದ್ಯಗಳಿಗೆ ಪೋರ್ಚುಗಲ್ ತಂಡದಲ್ಲಿ ಸೇರಿಸಿಕೊಳ್ಳಲಾಗಿಲ್ಲ. ಗಾಯದಿಂದ ಬಳಲುತ್ತಿರುವ ಹೊರತಾಗಿಯೂ ಈ ಋತುವಿನಲ್ಲಿ ರೊನಾಲ್ಡೊ ಉತ್ತಮ ಫಾರ್ಮ್ ನಲ್ಲಿದ್ದಾರೆ. ನಿರಂತರವಾಗಿ ತಮ್ಮ ಫುಟ್ಬಾಲ್ ಕ್ಲಬ್ಗಳಿಗಾಗಿ ಗೋಲುಗಳನ್ನು ಗಳಿಸುತ್ತಿದ್ದಾರೆ. ಅತ್ಯುತ್ತಮ ಸ್ಕೋರಿಂಗ್ ದರವನ್ನು ಕಾಯ್ದುಕೊಂಡಿದ್ದಾರೆ. ಅವರ ಪ್ರದರ್ಶನವು ಮುಂಬರುವ ಫಿಫಾ ವಿಶ್ವಕಪ್ನಲ್ಲಿ ಅವರ ಪಾಲ್ಗೊಳ್ಳುವಿಕೆಯ ನಿರೀಕ್ಷೆಗಳನ್ನು ಹೆಚ್ಚಿಸಿವೆ. ಅಲ್ಲಿ ಅವರು ನಿರ್ಣಾಯಕ ಪಾತ್ರವಹಿಸುವ ಸಾಧ್ಯತೆಯಿದೆ. ರೊನಾಲ್ಡೊ ಅವರು ದಾಖಲೆ ನಿರ್ಮಿಸುವುದರಲ್ಲಿ ವ್ಯಸ್ತರಾಗಿದ್ದಾರೆ ಎಂಬ ಮಾತನ್ನು ತಳ್ಳಿ ಹಾಕಿದ ಮಾರ್ಟಿನೆಝ್, ಇತ್ತೀಚೆಗಿನ ಸ್ಪರ್ಧೆಗಳಲ್ಲಿ ಅವರು ನಿಸ್ವಾರ್ಥ ಪ್ರದರ್ಶನ ನೀಡಿದ್ದಾರೆ ಎಂದರು. ‘‘ನಾನು ಈ ಮಾತನ್ನು ಒಪ್ಪುವುದಿಲ್ಲ. ಕ್ರಿಸ್ಟಿಯಾನೊ ರೊನಾಲ್ಡೊ ಯುರೋಪಿಯನ್ ಚಾಂಪಿಯನ್ಶಿಪ್ ನಲ್ಲಿ ಮತ್ತೊಂದು ದಾಖಲೆಯನ್ನು ಮುರಿಯಲು ಗೋಲು ಗಳಿಸುವತ್ತ ಗಮನ ಹರಿಸಿದ್ದರೆ, ಬ್ರುನೊ ಫೆರ್ನಾಂಡಿಸ್ಗೆ ತುರ್ಕಿಯಾ ವಿರುದ್ಧದ ಪಂದ್ಯದಲ್ಲಿ ಅಸಿಸ್ಟ್ ಮಾಡಲು ಆಗುತ್ತಿರಲಿಲ್ಲ’’ ಎಂದರು. ‘‘ನಮ್ಮ ಆಟಗಾರರು ದಾಖಲೆಗಳು ಅಥವಾ ವೈಯಕ್ತಿಕ ಗುರಿಗಳನ್ನು ಮನಸ್ಸಿನಲ್ಲಿಟ್ಟುಕೊಂಡಿದ್ದಾರೆ ಎಂಬುದು ನಿಜವಲ್ಲ. ಯುರೋಪಿಯನ್ ಚಾಂಪಿಯನ್ಶಿಪ್ನಲ್ಲಿ ನಮ್ಮ ಅನುಭವಿ ಆಟಗಾರರಲ್ಲಿ ಹೆಚ್ಚು ವಿಭಿನ್ನ ರೀತಿಯ ಜವಾಬ್ದಾರಿ, ಉತ್ತಮ ಪ್ರದರ್ಶನ ನೀಡುವ ಹೊಣೆಗಾರಿಕೆಯನ್ನು ನಾನು ನೋಡಿದ್ದೇನೆ’’ ಎಂದು ಮಾರ್ಟಿನೆಝ್ ಹೇಳಿದರು. 2026ರ ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ಪೋರ್ಚುಗಲ್ ತಂಡವು ‘ಕೆ’ ಗುಂಪಿನಲ್ಲಿ ಉಜ್ಬೇಕಿಸ್ತಾನ ಹಾಗೂ ಕೊಲಂಬಿಯಾದೊಂದಿಗೆ ಸ್ಥಾನ ಪಡೆದಿದೆ.ಜೂನ್ 17ರಂದು ತನ್ನ ವಿಶ್ವಕಪ್ ಅಭಿಯಾನ ಆರಂಭಿಸಲಿದೆ. ತನ್ನ ಚೊಚ್ಚಲ ವಿಶ್ವಕಪ್ ಪ್ರಶಸ್ತಿ ಗೆಲ್ಲುವ ಕನಸು ಕಾಣುತ್ತಿರುವ ಪೋರ್ಚುಗಲ್ ತಂಡವನ್ನು ರೊನಾಲ್ಡೊ ನಾಯಕನಾಗಿ ಮುನ್ನಡೆಸುವ ನಿರೀಕ್ಷೆ ಇದೆ.
ಕ್ರಿಕೆಟ್ ಪಂದ್ಯದ ವೇಳೆ ಹೃದಯಾಘಾತ; ಕ್ರಿಕೆಟಿಗ ಮೃತ್ಯು
ಶಹಜಹಾನ್ ಪುರ್ (ಉತ್ತರ ಪ್ರದೇಶ): ಕ್ರಿಕೆಟ್ ಪಂದ್ಯದ ವೇಳೆ 30 ವರ್ಷದ ಕ್ರಿಕೆಟಿಗರೊಬ್ಬರು ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ನಡೆದಿದೆ. ಈ ಘಟನೆ ಶನಿವಾರ ಉತ್ತರ ಪ್ರದೇಶದ ಶಹಜಹಾನ್ ಪುರ್ ಜಿಲ್ಲೆಯಲ್ಲಿ ನಡೆದಿದ್ದು, ಪಂದ್ಯದ ಮಧ್ಯದಲ್ಲೇ ಕ್ರಿಕೆಟಿಗರೊಬ್ಬರು ಕುಸಿದು ಬಿದ್ದು ಮೃತಪಟ್ಟಿದ್ದಾರೆ. ವರದಿಗಳ ಪ್ರಕಾರ, ಬ್ಯಾಟಿಂಗ್ ಮಾಡುವಾಗ, ಅಸೌಖ್ಯಕ್ಕೀಡಾಗಿದ್ದಂತೆ ಕಂಡು ಬಂದಿದ್ದರು ಎಂದು ಹೇಳಲಾಗಿದೆ. ಸೋನಾಲ್ ಚಂದ್ರ ಮೃತಪಟ್ಟ ಕ್ರಿಕೆಟಿಗ. ಆಗಷ್ಟೇ ತಮ್ಮ ಬ್ಯಾಟಿಂಗ್ ಮುಗಿಸಿದ್ದ ಅವರು, ಮೈದಾನದಿಂದ ಪೆವಿಲಿಯನ್ ಗೆ ಹಿಂದಿರುಗುತ್ತಿದ್ದಂತೆಯೇ ಕುಸಿದು ಬಿದ್ದು ಮೃತಪಟ್ಟರು ಎಂದು ಅವರ ಸ್ನೇಹಿತರು ತಿಳಿಸಿದ್ದಾರೆ. ಕುಸಿದು ಬಿದ್ದ ಸೋನಾಲ್ ಚಂದ್ರರನ್ನು ಚಿಕಿತ್ಸೆಗಾಗಿ ಸಮೀಪದ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆದರೆ, 40 ನಿಮಿಷಗಳ ಚಿಕಿತ್ಸೆಯ ಬಳಿಕವೂ, ಅವರ ಆರೋಗ್ಯ ಸ್ಥಿತಿ ಮತ್ತಷ್ಟು ವಿಷಮಿಸಿದೆ. ಹೀಗಾಗಿ, ಆತನನ್ನು ಬರೇಲಿಯ ಮತ್ತೊಂದು ಆಸ್ಪತ್ರೆಗೆ ಕರೆದೊಯ್ಯುವಂತೆ ವೈದ್ಯರು ಶಿಫಾರಸು ಮಾಡಿದ್ದಾರೆ. ಆದರೆ, ಅವರು ಮಾರ್ಗಮಧ್ಯದಲ್ಲೇ ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದ್ದಾರೆ. ಪಂದ್ಯದ ವೇಳೆ ಸೋನಾಲ್ ಚಂದ್ರ ಅವರೇ ಖುದ್ದಾಗಿ ಪಂದ್ಯದ ವಿಡಿಯೊ ಚಿತ್ರೀಕರಣ ನಡೆಸುತ್ತಿದ್ದರು. ಈ ವಿಡಿಯೊದಲ್ಲಿ ಅವರು ಅಸ್ವಸ್ಥಗೊಳ್ಳುವುದಕ್ಕೂ ಕೆಲವೇ ಕ್ಷಣಗಳ ಮುನ್ನಿನ ದೃಶ್ಯಗಳು ಸೆರೆಯಾಗಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಈ ಘಟನೆಯ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಕ್ರಿಕೆಟ್ ವ್ಯಾಮೋಹಿಯಾಗಿದ್ದ ಸೋನಾಲ್ ಚಂದ್ರ ಇದುವರೆಗೆ ನೂರಕ್ಕೂ ಹೆಚ್ಚು ಪಂದ್ಯಗಳಲ್ಲಿ ಭಾಗವಹಿಸಿದ್ದಾರೆ ಹಾಗೂ ಅವರು ಅರ್ಹತೆ ಪಡೆದ ಅಂಪೈರ್ ಆಗಿದ್ದರು ಎಂದು ಸ್ನೇಹಿತರು ತಿಳಿಸಿದ್ದಾರೆ. 26-year-old Sonal Chandra of #Shahjahanpur died of a #heartattack while he was having his batting shot recorded with a drone. It is reported that moments after capturing the shot, he suddenly felt chest pain and collapsed. His family immediately rushed him to the hospital, 1/2 pic.twitter.com/fddkxDcVun — Siraj Noorani (@sirajnoorani) March 22, 2026
ನಕಲಿ ಚಲನ್ ಸೈಬರ್ ವಂಚನೆ: 12 ಲಕ್ಷ ರೂ. ಕಳೆದುಕೊಂಡ ಶಾಸಕ!
ಪೊಲವರಂ (ಆಂಧ್ರನಪ್ರದೇಶ): ದೋಷಪೂರಿತ ಎಪಿಕೆ ಫೈಲ್ ಅನ್ನು ಕ್ಲಿಕ್ ಮಾಡಿದ ಪರಿಣಾಮ, ಜನಸೇನಾ ಶಾಸಕ ಸಿ.ಬಾಲರಾಜು 12 ಲಕ್ಷ ರೂ. ಕಳೆದುಕೊಂಡಿದ್ದಾರೆ. ಈ ಸಂಬಂಧ ಸೈಬರ್ ವಂಚನೆ ಪ್ರಕರಣವನ್ನು ಪೊಲೀಸರು ದಾಖಲಿಸಿಕೊಂಡಿದ್ದಾರೆ ಎಂದು ರವಿವಾರ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಮಾರ್ಚ್ 6ರಂದು ತಿಳಿಯದೆ ತನಗೆ ಬಂದಿದ್ದ ಲಿಂಕ್ ಅನ್ನು ಶಾಸಕ ಕ್ಲಿಕ್ ಮಾಡಿದ್ದಾರೆ. ಇದರಿಂದ ಅವರ ಬ್ಯಾಂಕ್ ಖಾತೆಯಲ್ಲಿ ಅನಧಿಕೃತ ವಹಿವಾಟು ನಡೆದಿದ್ದು, ಈ ಸಂಬಂಧ ಅವರು ರಾಷ್ಟ್ರೀಯ ಸೈಬರ್ ಅಪರಾಧ ಸಹಾಯವಾಣಿಯನ್ನು ಸಂಪರ್ಕಿಸಿ, ದೂರನ್ನು ದಾಖಲಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. “ರಸ್ತೆ ಸಾರಿಗೆ ಪ್ರಾಧಿಕಾರದ ಚಲನ್ ಎಂದು ಬಿಂಬಿತವಾಗಿದ್ದ ದೋಷಪೂರಿತ ಎಪಿಕೆ ಫೈಲ್ ಅನ್ನು ಕ್ಲಿಕ್ ಮಾಡಿದ್ದರಿಂದ, ಪೊಲವರಂ ವಿಧಾನಸಭಾ ಕ್ಷೇತ್ರದ ಜನಸೇನಾ ಶಾಸಕ ಸಿ.ಬಾಲರಾಜು 12 ಲಕ್ಷ ರೂ. ಅನ್ನು ಕಳೆದುಕೊಂಡಿದ್ದು, ಈ ಸಂಬಂಧ ನಾವು ಪ್ರಕರಣವೊಂದನ್ನು ದಾಖಲಿಸಿಕೊಂಡಿದ್ದೇವೆ” ಎಂದು ಅವರು ತಿಳಿಸಿದ್ದಾರೆ. ಶಂಕಿತ ಎಪಿಕೆ ಫೈಲ್ ಅನ್ನು ಕ್ಲಿಕ್ ಮಾಡುತ್ತಿದ್ದಂತೆಯೇ, ವಂಚಕರು ಶಾಸಕರ ಬ್ಯಾಂಕ್ ಖಾತೆಯಲ್ಲಿದ್ದ ಎಲ್ಲ ಹಣವನ್ನೂ ವರ್ಗಾಯಿಸಿಕೊಂಡಿದ್ದಾರೆ ಎಂದು ಅವರು ಹೇಳಿದ್ದಾರೆ. ಬಳಿಕ, ಈ ದೂರನ್ನು ಮಾರ್ಚ್ 21ರಂದು ಸ್ಥಳೀಯ ಪೊಲೀಸ್ ಠಾಣೆಗೆ ಮುಂದಿನ ತನಿಖೆಗಾಗಿ ವರ್ಗಾಯಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. ಈ ನಡುವೆ, ಪೊಲೀಸರು ಭಾರತೀಯ ನ್ಯಾಯ ಸಂಹಿತೆಯ ವಿವಿಧ ಸೆಕ್ಷನ್ ಗಳಡಿ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆಗೆ ಚಾಲನೆ ನೀಡಿದ್ದಾರೆ. ವರ್ಗಾಯಿಸಿಕೊಂಡಿರುವ ಹಣವನ್ನು ಪಶ್ಚಿಮ ಬಂಗಾಳದಲ್ಲಿನ ಎಟಿಎಂ ಕೇಂದ್ರವೊಂದರ ಮೂಲಕ ನಗದೀಕರಿಸಿಕೊಂಡಿರುವುದು ಬ್ಯಾಂಕ್ ಸ್ಟೇಟ್ ಮೆಂಟ್ ಗಳ ಮೂಲಕ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಘಟನೆಯಲ್ಲಿ ಸಂಘಟಿತ ಜಾಲವೊಂದು ಭಾಗಿಯಾಗಿದೆ ಎಂದು ಶಂಕಿಸಲಾಗಿದ್ದು, ಈ ಜಾಲಕ್ಕೆ ಸೈಬರ್ ವಂಚನೆಯಲ್ಲದೆ ಅಂತಾರಾಷ್ಟ್ರೀಯ ಸಂಪರ್ಕಗಳೂ ಇರಬಹುದು ಎಂಬ ಅನುಮಾನ ಕೂಡಾ ವ್ಯಕ್ತವಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.
West Bengal | ಮೀನಿನೊಂದಿಗೆ ಪ್ರಚಾರ ನಡೆಸಿದ ಬಿಜೆಪಿ ಅಭ್ಯರ್ಥಿ; ಕಾರಣವೇನು ಗೊತ್ತೇ?
ಕೋಲ್ಕತ್ತಾ: ಒಂದು ವೇಳೆ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ, ಮಾಂಸಾಹಾರವನ್ನು ನಿಷೇಧಿಸುತ್ತದೆ ಎಂಬ ಆಡಳಿತಾರೂಢ ಟಿಎಂಸಿ ಪ್ರಚಾರಕ್ಕೆ ತಿರುಗೇಟು ನೀಡಲು ಮುಂದಾಗಿರುವ ಬಿಜೆಪಿ ಅಭ್ಯರ್ಥಿಯೊಬ್ಬರು, ರವಿವಾರ ಪಶ್ಚಿಮ ಬಂಗಾಳದ ಸಹಜ ಆಹಾರ ಕ್ರಮವಾದ ಮೀನಿನೊಂದಿಗೆ ಪ್ರಚಾರ ನಡೆಸಿದ ಘಟನೆ ನಡೆದಿದೆ. ಬಿದ್ಧನ್ ನಗರ್ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಡಾ. ಶರದ್ವತ್ ಮುಖೋಪಾಧ್ಯಾಯ್ ಅವರ ಈ ಅಸಹಜ ಪ್ರಚಾರ ತಕ್ಷಣವೇ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಬಿಧಾನ್ ನಗರ್ ಕ್ಷೇತ್ರದಲ್ಲಿ ಕಾಟ್ಲಾ ಮೀನಿನೊಂದಿಗೆ ಮತದಾರರೊಂದಿಗೆ ಸಂವಾದ ನಡೆಸಿದ ಡಾ. ಶರದ್ವತ್ ಮುಖೋಪಾಧ್ಯಾಯ್, ಟಿಎಂಸಿ ಆರೋಪವನ್ನು ಸುಳ್ಳು ಅಪಪ್ರಚಾರ ಎಂದು ತಳ್ಳಿ ಹಾಕಿದರು. “ನಮ್ಮ ವಿರುದ್ಧ ಸುಳ್ಳುಗಳನ್ನು ಹೆಣೆಯಲಾಗುತ್ತಿದೆ. ನಾವು ನಮ್ಮ ಆಯ್ಕೆಯ ಪ್ರಕಾರ ಮೀನು, ಕೋಳಿ ಮತ್ತು ಕುರಿಯನ್ನು ಸೇವಿಸುತ್ತೇವೆ. ನಾನಿಂದು ಬಂಗಾಳಿ ವಿವಾಹದ ವೇಳೆ ವಧುವಿನ ಕಡೆಯವರು ವರನ ಮನೆಗೆ ಉಡುಗೊರೆಯಾಗಿ ಕಳಿಸುವ ಈ ಮೀನಿನೊಂದಿಗೆ ನಾನಿಂದು ಇಲ್ಲಿಗೆ ಬಂದಿದ್ದೇನೆ” ಎಂದು ಅವರು ಹೇಳಿದರು. ಒಂದು ವೇಳೆ ಬಿಜೆಪಿ ಅಧಿಕಾರಕ್ಕೆ ಬಂದರೆ, ಪಶ್ಚಿಮ ಬಂಗಾಳದ ಆಹಾರ ಸಂಸ್ಕೃತಿಯಲ್ಲಿ ಹಸ್ತಕ್ಷೇಪ ಮಾಡಲಿದೆ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸೇರಿದಂತೆ ಹಲವಾರು ಟಿಎಂಸಿ ನಾಯಕರು ನಿರಂತರವಾಗಿ ಆರೋಪಿಸುತ್ತಿದ್ದಾರೆ. ಬಿಹಾರ ಮತ್ತು ಗುಜರಾತ್ ನಂತಹ ಎನ್ಡಿಎ ಆಳ್ವಿಕೆ ಇರುವ ರಾಜ್ಯಗಳಲ್ಲಿ, ಕೆಲವು ಹಬ್ಬಗಳ ವೇಳೆ ಮೀನು ಹಾಗೂ ಮಾಂಸ ಮಾರಾಟವನ್ನು ನಿಷೇಧಿಸಿರುವುದನ್ನು ಅವರು ಉಲ್ಲೇಖಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಬಿಜೆಪಿ ಅಭ್ಯರ್ಥಿ ಡಾ. ಶರದ್ವತ್ ಅವರ ಈ ಅಸಹಜ ಪ್ರಚಾರ ಮಹತ್ವ ಪಡೆದುಕೊಂಡಿದೆ. हिंदी पट्टी के बीजेपी नेता,टीवी न्यूज़ वाले और बीजेपी समर्थक गौर से देख में,बंगाल चुनाव में नवरात्रि के बीच बीजेपी नेता Dr. Sharadwat Mukherjee हाथ में मछली लेकर प्रचार कर रहे हैं । बस ईमानदारी से उत्तर देंगे,ऐसा कोई विपक्षी नेता करता तो कितनी डिबेट होती ? कितनी भावना आहत होती?… pic.twitter.com/ym2s3ES9nI — YOUTH_ARMY (@Youth_Army_IN) March 22, 2026
ಮುಸ್ಲಿಮರಿಗೆ ಟಿಕೆಟ್ ನೀಡದೆ ಅನ್ಯಾಯ ಆರೋಪ; ಕಾಂಗ್ರೆಸ್ ವಿರುದ್ಧ ದಾವಣಗೆರೆಯಲ್ಲಿ ಪ್ರತಿಭಟನೆ
ದಾವಣಗೆರೆ : ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದಿಂದ ಮುಸ್ಲಿಮರಿಗೆ ಟಿಕೆಟ್ ನೀಡದಿರುವುದನ್ನು ವಿರೋಧಿಸಿ ಸಮುದಾಯದವರು ರವಿವಾರ ಇಲ್ಲಿನ ಅಖ್ತರ್ ರಝಾ ವೃತ್ತದಲ್ಲಿ ಬೃಹತ್ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲ, ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್, ಎಸ್.ಎಸ್,ಮಲ್ಲಿಕಾರ್ಜುನ, ಅಹಿಂದ ವಿರೋಧಿ, ಅಲ್ಪಸಂಖ್ಯಾತರಿಗೆ ಟಿಕೆಟ್ ನೀಡದ ಸರಕಾರಕ್ಕೆ ಧಿಕ್ಕಾರ, ಧಿಕ್ಕಾರ ಎಂದು ಘೋಷಣೆಗಳನ್ನು ಕೂಗಿದರು. ಅಲ್ಲದೆ, ಹಿಂದುಳಿದ ಮುಸ್ಲಿಮ್ ಸಮಾಜಕ್ಕೆ ಟಿಕೆಟ್ ನೀಡದ ರಾಜ್ಯ ಸರಕಾರ ಹಿಂದುಳಿದ ಸಮುದಾಯದ ವಿರೋಧಿಯಾಗಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ಅಖ್ತರ್ ರಝಾ ವೃತ್ತದಲ್ಲಿ ಸಾವಿರಾರು ಮಂದಿ ಜಮಾಯಿಸಿದ್ದರಿಂದ 2 ಗಂಟೆಗಳ ಕಾಲ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು. ಬಳಿಕ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪ್ರತಿಭಟನಾಕಾರರನ್ನು ಚದುರಿಸಿ ಸ್ಥಳದಲ್ಲಿ ಭದ್ರತೆ ಕೈಗೊಂಡರು. ಬಿಜೆಪಿಗೆ ಮತ ಹಾಕ್ತೀವಿ: ‘ಈ ಬಾರಿ ಬಿಜೆಪಿಗಾದರೂ ಮತ ಹಾಕುತ್ತೇವೆ. ಆದರೆ, ಕಾಂಗ್ರೆಸ್ ಗೆ ಮತ ನೀಡಲ್ಲ. ಚುನಾವಣೆ ದಿನದಂದು ಟೀ, ನೀರು ಕೊಟ್ಟು ಬಿಜೆಪಿ ಪರ ಮತ ಹಾಕುವಂತೆ ಕೇಳುತ್ತೇವೆ. ಒಟ್ಟಿನಲ್ಲಿ ಕಾಂಗ್ರೆಸ್ನ್ನು ಸೋಲಿಸುವುದು ನಮ್ಮ ಉದ್ದೇಶ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ಕಾಂಗ್ರೆಸ್ನಲ್ಲಿ ಸಾಮಾಜಿಕ ನ್ಯಾಯ ಸಿಗುವ ವಿಶ್ವಾಸವಿತ್ತು. ಆದರೆ, ಮುಸ್ಲಿಮ್ ಸಮಾಜಕ್ಕೆ ಟಿಕೆಟ್ ನೀಡದೆ ವಿಶ್ವಾಸ ದ್ರೋಹ ಮಾಡಿದೆ. ಕಳೆದ 2 ತಿಂಗಳುಗಳಿಂದ ನಮ್ಮ ಸಮಾಜಕ್ಕೆ ಟಿಕೆಟ್ ನೀಡುವಂತೆ ಹೋರಾಟ ನಡೆಸಿಕೊಂಡು ಬಂದಿದ್ದೇವೆ. ಆದರೆ, ಕಾಂಗ್ರೆಸ್ ನೀಡದೆ ನಮಗೆ ಅನ್ಯಾಯ ಮಾಡಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಪಾಕಿಸ್ತಾನ: ಉಗ್ರರ ದಾಳಿಯಲ್ಲಿ ಮೂವರು ಪೊಲೀಸರ ಸಾವು
ಪೇಷಾವರ: ಪಾಕಿಸ್ತಾನದ ಖೈಬರ್ ಪಖ್ತೂಂಕ್ವಾ ಪ್ರಾಂತದ ಕುರ್ರಮ್ ಜಿಲ್ಲೆಯಲ್ಲಿ ಪೊಲೀಸರ ಮೇಲೆ ತೆಹ್ರೀಕೆ ತಾಲಿಬಾನ್ ಪಾಕಿಸ್ತಾನ್(ಟಿಟಿಪಿ)ಯೊಂದಿಗೆ ಗುರುತಿಸಿಕೊಂಡಿರುವ ಸಶಸ್ತ್ರ ಹೋರಾಟಗಾರರು ನಡೆಸಿದ ಗುಂಡಿನ ದಾಳಿಯಲ್ಲಿ ಮೂವರು ಪೊಲೀಸರು ಸಾವನ್ನಪ್ಪಿದ್ದು ಇತರ ಹಲವರು ಗಾಯಗೊಂಡಿರುವುದಾಗಿ ವರದಿಯಾಗಿದೆ. ದಾಳಿಯ ಬಳಿಕ ನಡೆದ ಗುಂಡಿನ ಚಕಮಕಿಯಲ್ಲಿ ನಾಲ್ವರು ಉಗ್ರರೂ ಹತರಾಗಿದ್ದಾರೆ. ಪ್ರದೇಶಕ್ಕೆ ಹೆಚ್ಚುವರಿ ಭದ್ರತಾ ಸಿಬ್ಬಂದಿಯನ್ನು ರವಾನಿಸಲಾಗಿದೆ ಎಂದು ವರದಿ ಹೇಳಿದೆ. ಈ ಮಧ್ಯೆ , ಲಾಹೋರ್ ನ ಹೊರವಲಯದಲ್ಲಿ ಶನಿವಾರ ಈದ್ ಪ್ರಾರ್ಥನೆಯ ಬಳಿಕ ಲಷ್ಕರ್-ಎ-ತೈಬಾ(ಎಲ್ಇಟಿ) ಭಯೋತ್ಪಾದಕ ಸಂಘಟನೆಯ ಕಮಾಂಡರ್ ಬಿಲಾಲ್ ಆರಿಫ್ ಸರಾಫಿಯನ್ನು ಕುಟುಂಬದ ಸದಸ್ಯರೇ ಚೂರಿಯಿಂದ ಇರಿದ ಬಳಿಕ ಗುಂಡಿಕ್ಕಿ ಹತ್ಯೆ ನಡೆಸಿರುವುದಾಗಿ ಮೂಲಗಳನ್ನು ಉಲ್ಲೇಖಿಸಿ ಎನ್ಡಿಟಿವಿ ವರದಿ ಮಾಡಿದೆ. ವಿಶ್ವಸಂಸ್ಥೆಯು ಭಯೋತ್ಪಾದಕ ಪಟ್ಟಿಯಲ್ಲಿ ಗುರುತಿಸಿರುವ ಎಲ್ಇಟಿಯೊಂದಿಗೆ ಬಿಲಾಲ್ ಸರಾಫಿ 2005ರಿಂದ ಸಂಪರ್ಕದಲ್ಲಿದ್ದು ಎಲ್ಇಟಿಗೆ ದೇಣಿಗೆ ಸಂಗ್ರಹಿಸುವ ಕಾರ್ಯದಲ್ಲಿ ಸಕ್ರಿಯ ಪಾತ್ರ ವಹಿಸುತ್ತಿದ್ದ ಎಂದು ವರದಿ ಹೇಳಿದೆ.
ಸುಡಾನ್: ಆಸ್ಪತ್ರೆಯ ಮೇಲೆ ದಾಳಿ; ಕನಿಷ್ಠ 64 ಮಂದಿ ಸಾವು
ಖಾರ್ಟೂಮ್: ಸುಡಾನ್ನ ಪಶ್ಚಿಮ ದಾರ್ಫುರ್ ಪ್ರಾಂತದ ಆಸ್ಪತ್ರೆಯ ಮೇಲೆ ಕಳೆದ ವಾರ ನಡೆದ ದಾಳಿಯಲ್ಲಿ 13 ಮಕ್ಕಳ ಸಹಿತ ಕನಿಷ್ಠ 64 ಮಂದಿ ಸಾವನ್ನಪ್ಪಿರುವುದಾಗಿ ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಅಲ್ ದೈನ್ ಬೋಧನಾ ಆಸ್ಪತ್ರೆಯ ಮೇಲಿನ ದಾಳಿಯಲ್ಲಿ ಇತರ ಕನಿಷ್ಠ 89 ಜನರು ಗಾಯಗೊಂಡಿದ್ದಾರೆ ಮತ್ತು ಆಸ್ಪತ್ರೆಯ ಕಾರ್ಯನಿರ್ವಹಣೆಗೆ ತೊಡಕಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥ ಟೆಡ್ರೋಸ್ ಘೆಬ್ರಯೇಸಸ್ `ಎಕ್ಸ್'ನಲ್ಲಿ ಪೋಸ್ಟ್ ಮಾಡಿದ್ದಾರೆ. ಆಸ್ಪತ್ರೆಯ ಸಮೀಪದ ಪೊಲೀಸ್ ಠಾಣೆ ದಾಳಿಯ ಗುರಿಯಾಗಿತ್ತು ಎಂದು ಇಬ್ಬರು ಮಿಲಿಟರಿ ಅಧಿಕಾರಿಗಳು ಹೇಳಿರುವುದಾಗಿ ವರದಿಯಾಗಿದೆ. 2023ರ ಎಪ್ರಿಲ್ನಲ್ಲಿ ಮಿಲಿಟರಿ ಮತ್ತು ಅರೆ ಸೇನಾಪಡೆಯ ನಡುವೆ ಅಧಿಕಾರಕ್ಕಾಗಿನ ತಿಕ್ಕಾಟವು ದೇಶದಾದ್ಯಂತ ಯುದ್ಧವಾಗಿ ಉಲ್ಬಣಗೊಂಡಿದೆ.
ಪಶ್ಚಿಮ ಏಷ್ಯಾದ ಸಂಘರ್ಷದಿಂದ ಜಾಗತಿಕ ಇಂಧನ ವ್ಯವಸ್ಥೆ ತತ್ತರ: ಐಇಎ ಕಳವಳ
ಪ್ಯಾರಿಸ್: ಇರಾನ್ನಲ್ಲಿನ ಯುದ್ಧವು 4 ದಿನಗಳ ಜಾಗತಿಕ ಇಂಧನ ಪೂರೈಕೆಯನ್ನು ಅಳಿಸಿಹಾಕಿದ್ದು 50% ಬೆಲೆ ಏರಿಕೆಯನ್ನು ಪ್ರಚೋದಿಸಿದೆ. ಮಧ್ಯ ಪ್ರಾಚ್ಯದ ಸಂಘರ್ಷವು ಜಾಗತಿಕ ಇಂಧನ ವ್ಯವಸ್ಥೆಗೆ ಆಘಾತ ನೀಡಿದ್ದು ತೀವ್ರ ಪರಿಣಾಮಕ್ಕೆ ಕಾರಣವಾಗಿದೆ ಎಂದು ಅಂತರರಾಷ್ಟ್ರೀಯ ಇಂಧನ ಸಂಸ್ಥೆ (ಐಇಎ) ಕಳವಳ ವ್ಯಕ್ತಪಡಿಸಿದೆ. ಮಾರ್ಚ್ 2ರಂದು ಹಾರ್ಮುಜ್ ಜಲಸಂಧಿಯನ್ನು ಮುಚ್ಚಿರುವುದರಿಂದ ಸುಮಾರು 20%ದಷ್ಟು ಜಾಗತಿಕ ತೈಲ ಮತ್ತು ದ್ರವೀಕೃತ ನೈಸರ್ಗಿಕ ಅನಿಲ ಹರಿವಿಗೆ ಅಡ್ಡಿಯಾಗಿದೆ. ಇದರ ಜೊತೆಗೆ ಪಶ್ಚಿಮ ಏಷ್ಯದಾದ್ಯಂತ ಇಂಧನ ಮೂಲಸೌಕರ್ಯಗಳನ್ನು ಗುರಿಯಾಗಿಸಿ ಇಸ್ರೇಲ್ ಮತ್ತು ಇರಾನ್ನ ದಾಳಿಗಳು ಅನಿಲ ಕ್ಷೇತ್ರಗಳು, ತೈಲ ಸಂಸ್ಕರಣಾಗಾರಗಳು ಮತ್ತು ರಫ್ತು ಟರ್ಮಿನಲ್ಗಳನ್ನೂ ಹಾನಿಗೊಳಿಸಿದ್ದು ದುರಸ್ತಿಗೆ ಹಲವು ವರ್ಷಗಳು ಬೇಕಾಗಬಹುದು ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ. ಈ ಪರಿಸ್ಥಿತಿಯು ಮಾರುಕಟ್ಟೆಯಲ್ಲಿ ಆತಂಕ, ಗೊಂದಲವನ್ನು ಸೃಷ್ಟಿಸಿದ್ದು ಸುಮಾರು 400 ದಶಲಕ್ಷ ಬ್ಯಾರೆಲ್ಗಳಷ್ಟು ತೈಲ(ಸುಮಾರು 4 ದಿನಗಳ ಜಾಗತಿಕ ಪೂರೈಕೆ)ವನ್ನು ಮಾರುಕಟ್ಟೆಯಿಂದ ಅಳಿಸಿಹಾಕಿದೆ. ಇದು ತೈಲದ ಬೆಲೆಯಲ್ಲಿ ಸುಮಾರು 50% ಹೆಚ್ಚಳಕ್ಕೆ ಕಾರಣವಾಗಿದೆ. ಇದು ಜಾಗತಿಕ ಇಂಧನ ಪೂರೈಕೆಗೆ ಎದುರಾಗಿರುವ ಅತ್ಯಂತ ತೀವ್ರವಾದ ಅಡ್ಡಿಯಾಗಿದೆ. ತ್ವರಿತ ಕ್ರಮಗಳನ್ನು ಕೈಗೊಳ್ಳದಿದ್ದರೆ ಇಂಧನ ಮಾರುಕಟ್ಟೆ ಮತ್ತು ಆರ್ಥಿಕತೆಗಳ ಮೇಲಿನ ಪರಿಣಾಮ ತೀವ್ರಗೊಳ್ಳುತ್ತಾ ಹೋಗುತ್ತದೆ ಎಂದು ಐಇಎ ವರದಿ ಎಚ್ಚರಿಸಿದೆ.
ಇಸ್ರೇಲ್ ಮೇಲೆ ವಾಯುಪ್ರಾಬಲ್ಯ: ಇರಾನ್ ಪ್ರತಿಪಾದನೆ
ಟೆಹ್ರಾನ್: ಇಸ್ರೇಲ್ ಜೊತೆ ನಡೆಯುತ್ತಿರುವ ಯುದ್ಧದಲ್ಲಿ ಮೇಲುಗೈ ಸಾಧಿಸಿದ್ದು ಇಸ್ರೇಲ್ನ ವಾಯು ರಕ್ಷಣಾ ವ್ಯವಸ್ಥೆ ಇನ್ನು ಮುಂದೆ ತನ್ನ ಕ್ಷಿಪಣಿಗಳನ್ನು ಪ್ರತಿಬಂಧಿಸಲು ಸಾಧ್ಯವಿಲ್ಲ ಎಂದು ಇರಾನ್ ಪ್ರತಿಪಾದಿಸಿದೆ. ಅರಾದ್ ಮತ್ತು ದಿಮೋನ ನಗರಗಳ ಮೇಲಿನ ದಾಳಿಯ ಬಳಿಕ ಇರಾನ್ ಇಸ್ರೇಲ್ನ ಆಗಸದ ಮೇಲೆ ಕ್ಷಿಪಣಿ ಪ್ರಾಬಲ್ಯ ಸಾಧಿಸಿದೆ ಎಂದು ಇರಾನ್ನ ಇಸ್ಲಾಮಿಕ್ ರೆವೊಲ್ಯುಷನರಿ ಗಾರ್ಡ್ ಕಾಪ್ರ್ಸ್(IRGC) ಹೇಳಿದ್ದು ಮುಂಬರುವ ದಾಳಿಯ ಅಲೆಗಳು ಹೊಸ ತಂತ್ರಗಳು ಮತ್ತು ವ್ಯವಸ್ಥೆಗಳನ್ನು ಬಳಸುತ್ತವೆ. ಇದು ಇಸ್ರೇಲಿ ಮತ್ತು ಅಮೆರಿಕನ್ ಪಡೆಗಳನ್ನು `ಮೂಕವಿಸ್ಮಿತರನ್ನಾಗಿ' ಮಾಡಲಿವೆ ಎಂದು ಎಚ್ಚರಿಸಿದೆ. ಹೆಚ್ಚು ಸುರಕ್ಷಿತ ಡಿಮೊನ ಪ್ರದೇಶದಲ್ಲಿ ಕ್ಷಿಪಣಿಗಳನ್ನು ಪ್ರತಿಬಂಧಿಸುವಲ್ಲಿ ಇಸ್ರೇಲ್ನ ಅಸಮರ್ಥತೆಯು ಅದರ ಆಕಾಶವು ಅಸುರಕ್ಷಿತ ಎಂಬುದನ್ನು ತೋರಿಸಿದೆ ಮತ್ತು ಸಂಘರ್ಷದ ಹೊಸ ಹಂತವನ್ನು ಸೂಚಿಸುತ್ತದೆ ಎಂದು ಇರಾನ್ ಸರಕಾರದ ಮೂಲಗಳು ಹೇಳಿವೆ.
IPL 2026 | ಗಾಯಗೊಂಡಿರುವ, ಅಲಭ್ಯರಾಗಿರುವ ಆಟಗಾರರ ಪಟ್ಟಿ ಇಲ್ಲಿದೆ...
ಹೊಸದಿಲ್ಲಿ: ಈ ವರ್ಷದ ಐಪಿಎಲ್ ಟಿ-20 ಟೂರ್ನಿ ಆರಂಭವಾಗುವ ಮೊದಲೇ ಹಲವು ಆಟಗಾರರು ಗಾಯದ ಸಮಸ್ಯೆಯಿಂದಾಗಿ ಹೊರಗುಳಿದಿದ್ದಾರೆ. ಕೆಲವೇ ವಾರಗಳ ಹಿಂದೆ ಟಿ-20 ವಿಶ್ವಕಪ್ ಟೂರ್ನಿಯು ಕೊನೆಗೊಂಡಿರುವ ಕಾರಣ ಈ ವರ್ಷ ಆಟಗಾರರು ಸಾಕಷ್ಟು ಟಿ-20 ಪಂದ್ಯಗಳನ್ನಾಡಿದ್ದಾರೆ. ಗಾಯಗೊಂಡಿರುವ ಹಾಗೂ ಟೂರ್ನಿಗೆ ಅಲಭ್ಯರಾಗಿರುವ ವಿವಿಧ ಫ್ರಾಂಚೈಸಿಗಳ ಆಟಗಾರರ ಪಟ್ಟಿ ಇಂತಿದೆ. ಕೋಲ್ಕತಾ ನೈಟ್ ರೈಡರ್ಸ್: ಆಕಾಶ್ ದೀಪ್- ಬೆನ್ನುನೋವಿನಿಂದ ಸಮಯಕ್ಕೆ ಸರಿಯಾಗಿ ಚೇತರಿಸಿಕೊಳ್ಳುವಲ್ಲಿ ವಿಫಲವಾಗಿರುವ ಆಕಾಶ್ ದೀಪ್ ಸಿಂಗ್ ಪ್ರಸಕ್ತ ಪಂದ್ಯಾವಳಿಯಿಂದಲೇ ಹೊರ ನಡೆದಿದ್ದಾರೆ. ಹರ್ಷಿತ್ ರಾಣಾ- ಭಾರತದ ವೇಗದ ಬೌಲರ್ ರಾಣಾ ಮಂಡಿ ಶಸ್ತ್ರಚಿಕಿತ್ಸೆಯಿಂದ ಚೇತರಿಸಿಕೊಳ್ಳುತ್ತಿದ್ದಾರೆ. ಪೂರ್ಣ ಪಂದ್ಯಾವಳಿಯಿಂದ ಹೊರಗುಳಿಯದೇ ಇದ್ದರೂ ಬಹುತೇಕ ಪಂದ್ಯಗಳಿಗೆ ಲಭ್ಯವಿರುವುದಿಲ್ಲ. ಮಥೀಶ ಪಥಿರಣ- ಇತ್ತೀಚೆಗೆ ಕೊನೆಗೊಂಡಿರುವ ಟಿ-20 ವಿಶ್ವಕಪ್ ಟೂರ್ನಿಯ ವೇಳೆ ಕಾಲುನೋವಿಗೆ ಒಳಗಾಗಿರುವ ಶ್ರೀಲಂಕಾದ ವೇಗಿ ಮಥೀಶ ಪಥಿರಣ ಎಪ್ರಿಲ್ ಮಧ್ಯಭಾಗದಲ್ಲಿ ಟೂರ್ನಿಗೆ ಲಭ್ಯವಿರಲಿದ್ದಾರೆ. ಸನ್ರೈಸರ್ಸ್ ಹೈದರಾಬಾದ್: ಪ್ಯಾಟ್ ಕಮಿನ್ಸ್- SRH ನ ನಾಯಕ ಕಮಿನ್ಸ್ ಬೆನ್ನುನೋವಿನಿಂದ ಚೇತರಿಸಿಕೊಳ್ಳುತ್ತಿದ್ದಾರೆ. ಪಂದ್ಯಾವಳಿಯ ಮಧ್ಯಭಾಗದಲ್ಲಿ ವಾಪಸಾಗುವ ನಿರೀಕ್ಷೆ ಇದೆ. ಜಾಕ್ ಎಡ್ವರ್ಡ್ಸ್-ಕಾಲು ನೋವಿನ ಕಾರಣದಿಂದ ಆಸ್ಟ್ರೇಲಿಯದ ಆಲ್ರೌಂಡರ್ ಜಾಕ್ ಎಡ್ವರ್ಡ್ಸ್ ಸಂಪೂರ್ಣ ಪಂದ್ಯಾವಳಿಯಿಂದ ಹೊರಗುಳಿದಿದ್ದಾರೆ. ರಾಜಸ್ಥಾನ ರಾಯಲ್ಸ್: ಸ್ಯಾಮ್ ಕರ್ರನ್- ಇಂಗ್ಲೆಂಡ್ ಆಲ್ರೌಂಡರ್ ಕರ್ರನ್ ಇಡೀ ಐಪಿಎಲ್ ಋತುವಿನಿಂದ ಹೊರಗುಳಿದಿದ್ದಾರೆ. ಟಿ-20 ವಿಶ್ವಕಪ್ ನಲ್ಲಿ ಸೆಮಿ ಫೈನಲ್ ಗೆ ತಲುಪಿದ್ದ ಇಂಗ್ಲೆಂಡ್ ತಂಡದಲ್ಲಿದ್ದ ಕರ್ರನ್ ಈ ವೇಳೆ ಗಾಯಗೊಂಡಿದ್ದರು ಎನ್ನಲಾಗಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು: ಜೋಶ್ ಹೇಝಲ್ವುಡ್: ಕಳೆದ ಕೆಲವು ತಿಂಗಳುಗಳಿಂದ ಸಕ್ರಿಯ ಕ್ರಿಕೆಟ್ ನಿಂದ ದೂರವಿರುವ ಆಸ್ಟ್ರೇಲಿಯದ ವೇಗದ ಬೌಲರ್ ಜೋಶ್ ಹೇಝಲ್ವುಡ್ ಮೊದಲ ಕೆಲವು ಪಂದ್ಯಗಳಲ್ಲಿ RCB ತಂಡದಲ್ಲಿ ಲಭ್ಯವಿರುವ ಸಾಧ್ಯತೆ ಇಲ್ಲ. ಗಾಯದ ಸಮಸ್ಯೆಯ ಕಾರಣಕ್ಕೆ ಆ್ಯಶಸ್ ಸರಣಿಯಲ್ಲಿ ಆಸ್ಟ್ರೇಲಿಯ ತಂಡದಲ್ಲಿ ಅವರು ಲಭ್ಯವಿರಲಿಲ್ಲ. ಚೆನ್ನೈಸೂಪರ್ ಕಿಂಗ್ಸ್: ನಾಥನ್ ಎಲ್ಲಿಸ್- ದೇಶೀಯ ಏಕದಿನ ಕಪ್ ಫೈನಲ್ ಪಂದ್ಯದ ವೇಳೆ ಮಂಡಿರಜ್ಜು ಗಾಯಕ್ಕೆ ಒಳಗಾಗಿರುವ ಆಸ್ಟ್ರೇಲಿಯದ ವೇಗದ ಬೌಲರ್ ನಾಥನ್ ಎಲ್ಲಿಸ್ ಇಡೀ ಟೂರ್ನಿಯಿಂದ ಹೊರಗುಳಿದಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್: ಮಿಚೆಲ್ ಸ್ಟಾರ್ಕ್- ಈ ವರ್ಷದ ಐಪಿಎಲ್ ನಲ್ಲಿ ಡೆಲ್ಲಿ ಫ್ರಾಂಚೈಸಿ ಪರ ಆಸ್ಟ್ರೇಲಿಯದ ವೇಗಿ ಮಿಚೆಲ್ ಸ್ಟಾರ್ಕ್ ಕೆಲವು ಪಂದ್ಯಗಳನ್ನು ಆಡುವ ಸಾಧ್ಯತೆಯಿದೆ. ಬಿಡುವಿಲ್ಲದ ಅಂತರ್ರಾಷ್ಟ್ರೀಯ ಕ್ರಿಕೆಟ್ ಕ್ಯಾಲೆಂಡರ್ನ ಹಿನ್ನೆಲೆಯಲ್ಲಿ ಸ್ಟಾರ್ಕ್ ಅವರ ಕೆಲಸದ ಒತ್ತಡದತ್ತ ಕ್ರಿಕೆಟ್ ಆಸ್ಟ್ರೇಲಿಯ ನಿಗಾವಹಿಸಿದೆ. ಪಂಜಾಬ್ ಕಿಂಗ್ಸ್: ಲಾಕಿ ಫರ್ಗ್ಯುಸನ್-ತನ್ನ ಕುಟುಂಬದೊಂದಿಗೆ ಹೆಚ್ಚಿನ ಸಮಯ ಕಳೆಯಲು ಆದ್ಯತೆ ನೀಡಿರುವ ನ್ಯೂಝಿಲ್ಯಾಂಡ್ ನ ವೇಗದ ಬೌಲರ್ ಫರ್ಗ್ಯುಸನ್ ಪಂದ್ಯಾವಳಿಯ ಆರಂಭಿಕ ಪಂದ್ಯಗಳಲ್ಲಿ ಲಭ್ಯ ಇರುವುದಿಲ್ಲ. ಅವರಿಗೆ ಯಾವುದೇ ಫಿಟ್ನೆಸ್ ಸಮಸ್ಯೆ ಇಲ್ಲ.
ರನ್ಯಾ ರಾವ್ ಚಿನ್ನ ಕಳ್ಳಸಾಗಾಟ ಜಾಲ ಆಫ್ರಿಕಾ-ದುಬೈ-ಭಾರತಕ್ಕೆ ವಿಸ್ತರಿಸಿತ್ತು: ಜಾರಿ ನಿರ್ದೇಶನಾಲಯ
ಹೊಸದಿಲ್ಲಿ: ಕರ್ನಾಟಕದ ಹಿರಿಯ ಐಪಿಎಸ್ ಅಧಿಕಾರಿಯ ಪುತ್ರಿ ಹಾಗೂ ಕನ್ನಡ ಚಲನಚಿತ್ರ ನಟಿ ರನ್ಯಾ ರಾವ್ ಆಫ್ರಿಕಾ-ದುಬೈ-ಭಾರತದ ನಡುವೆ 102 ಕೋಟಿ ರೂ. ಮೌಲ್ಯದ ಚಿನ್ನ ಕಳ್ಳ ಸಾಗಾಟದ ಜಾಲ ನಡೆಸಿದ್ದಾರೆ ಎಂದು ಜಾರಿ ನಿರ್ದೇಶನಾಲಯ (ED) ತಿಳಿಸಿದೆ. ಈ ಚಿನ್ನ ಕಳ್ಳ ಸಾಗಾಟ ಕಾರ್ಯಾಚರಣೆ ಆಫ್ರಿಕಾದಿಂದ ಚಿನ್ನವನ್ನು ತರುವ ಸಂಘಟಿತ ಅಂತರ ರಾಷ್ಟ್ರೀಯ ಜಾಲದ ಭಾಗವಾಗಿದೆ ಎಂಬುದು ತನಿಖೆಯ ಸಂದರ್ಭ ಜಾರಿ ನಿರ್ದೇಶನಾಲಯ ಪತ್ತೆ ಮಾಡಿದೆ. ED ತನ್ನ ಆರೋಪ ಪಟ್ಟಿಯಲ್ಲಿ ನಟಿಯ ಸಹವರ್ತಿ ಎಂದು ಹೇಳಲಾದ ಬಳ್ಳಾರಿ ಮೂಲದ ಚಿನ್ನದ ವ್ಯಾಪಾರಿ ತರುಣ್ ಕೊಂಡುರು ಹೆಸರನ್ನು ಉಲ್ಲೇಖಿಸಿದೆ. ರನ್ಯಾ ರಾವ್ ಹಾಗೂ ಆಕೆಯ ಸಹವರ್ತಿ 2024 ಮಾರ್ಚ್ ಹಾಗೂ 2025 ಮಾರ್ಚ್ ನಡುವೆ 102.55 ಕೋಟಿ ರೂ. ಮೌಲ್ಯದ 127.28 ಕಿ.ಗ್ರಾಂ. ಚಿನ್ನವನ್ನು ಕಳ್ಳ ಸಾಗಾಟ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಈ ಕಳ್ಳ ಸಾಗಾಟ ಮಾಡಲಾದ ಚಿನ್ನವನ್ನು ಅನಂತರ ಆಭರಣ ವ್ಯಾಪಾರಿಗಳು ಹಾಗೂ ಮಧ್ಯವರ್ತಿ ಜಾಲದ ಮೂಲಕ ದೇಶಿ ಮಾರುಕಟ್ಟೆಯಲ್ಲಿ ಮಾರಾಟ ಮಾಡಿದ್ದಾರೆ ಎಂದು ಅವು ಹೇಳಿವೆ.
ರೇಮಂಡ್ ತಾಕೋಡೆಯವರ ‘ಬೊಳ್ಳಿಲು’ ಕೃತಿ ಬಿಡುಗಡೆ
ಮೂಡುಬಿದಿರೆ: ಸಾಹಿತ್ಯ ಮತ್ತು ಕವನಗಳು ಮಾನವನ ಮನಸ್ಸಿನ ಆಳದ ಭಾವನೆಗಳಿಂದ ಉದ್ಭವಿಸುವ ಸೃಜನ ಶೀಲ ಪ್ರಕ್ರಿಯೆಗಳಾಗಿವೆ. ಆದ್ದರಿಂದ ಸಾಹಿತ್ಯ ಕೃಷಿ ಮಾಡಿದವರಿಗೆ ಮಾತ್ರ ನಿಜವಾದ ಅರ್ಥದಲ್ಲಿ ಸಾಹಿತಿ ಹಾಗೂ ಕವಿಗಳಾಗಲು ಸಾಧ್ಯ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ್ ಆಳ್ವ ಹೇಳಿದರು. ಅವರು ಹಿರಿಯ ಪತ್ರಕರ್ತ, ಸಾಹಿತಿ ರೇಮಂಡ್ ತಾಕೋಡೆ ಅವರ 22ನೇ ಕೃತಿ ‘ಬೊಳ್ಳಿಲು’ನ್ನು ರವಿವಾರ ಸಮಾಜ ಮಂದಿರದಲ್ಲಿ ಬಿಡುಗಡೆಗೊಳಿಸಿ ಮಾತನಾಡಿದರು. ಸದಾನಂದ ನಾರಾವಿ ಅಧ್ಯಕ್ಷತೆ ವಹಿಸಿದರು. ಈ ಸಂದರ್ಭದಲ್ಲಿ ಈಗಾಗಲೇ 22 ಕೃತಿಗಳನ್ನು ಪ್ರಕಟಿಸಿರುವ ರೇಮಂಡ್ ಡಿಕುನಾ ಅವರ ‘ಪಿಂಗಾರ’ ಪತ್ರಿಕೆಗೆ 22 ವರ್ಷ ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ಹುಟ್ಟೂರ ಸನ್ಮಾನದೊಂದಿಗೆ ಗೌರವಿಸಲಾಯಿತು. ಸಂಗೀತಾ ಪ್ರಭು ಸನ್ಮಾನ ಪತ್ರ ವಾಚಿಸಿದರು. ರೇಮಂಡ್ ಡಿಕುನಾ ಮಾತನಾಡಿ, ಮೂಡುಬಿದಿರೆಯಲ್ಲಿ ಗಣ್ಯರೊಂದಿಗೆ ಕಳೆದ ದಿನಗಳನ್ನು ಮೆಲುಕು ಹಾಕಿದರು. ಕೃತಿಯನ್ನು ಗೀತಾ ಲಕ್ಷ್ಮೀಶ ಶೆಟ್ಟಿ ಪರಿಚಯಿಸಿದರು. ಮಾಜಿ ಸಚಿವ ಅಭಯಚಂದ್ರ ಜೈನ್, ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಸುದರ್ಶನ್ , ತುಳು ಕೂಟ ಬೆದ್ರ ಸ್ಥಾಪಕಾಧ್ಯಕ್ಷ ಚಂದ್ರಹಾಸ ದೇವಾಡಿಗ, ಧನಕೀರ್ತಿ ಬಲಿಪ, ಪ್ರೆಸ್ ಕ್ಲಬ್ ಅಧ್ಯಕ್ಷ ಬೆಳುವಾಯಿ ಸೀತಾರಾಮ ಆಚಾರ್ಯ, ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ನವೀನ್ ಸಾಲ್ಯಾನ್, ಜೆಸಿಐ ಮೂಡುಬಿದಿರೆ ತ್ರಿಭುವನ್ ಅಧ್ಯಕ್ಷ ಸುಧಾಕರ ಶೆಟ್ಟಿ, ರೋಟರಿ ಕ್ಲಬ್ ಟೆಂಪಲ್ ಟೌನ್ ಅಧ್ಯಕ್ಷ ಹರೀಶ್ ಎಂ.ಕೆ., ರಿಕ್ಷಾ ಚಾಲಕರ-ಮಾಲಕರ ಸಂಘದ ಪ್ರತಿನಿಧಿ ರಾಜೇಶ್ ಸುವರ್ಣ ಉಪಸ್ಥಿತರಿದ್ದರು. ಹಿರಿಯ ಸಾಹಿತಿ ಸದಾನಂದ ನಾರಾವಿ ನಡೆಸಿಕೊಟ್ಟರು. ಡಾ. ಸುರೇಶ್ ಕುಮಾರ ನೆಗಿನಗುಳಿ, ಧನಂಜಯ ಮೂಡುಬಿದಿರೆ, ಗೀತಾ ಲಕ್ಷ್ಮೀಶ ಶೆಟ್ಟಿ, ಪದ್ಮನಾಭ ಮಿಜಾರು, ಅನಿತಾ ಶೆಟ್ಟಿ, ಎಂ. ರಾಘವೇಂದ್ರ ಭಂಡಾರ್ಕರ್, ರಾಮಕೃಷ್ಣ ಶಿರೂರು, ಸೌಮ್ಯ ಕುಗ್ವೆ, ಮಾನಸ ಪ್ರವೀಣ್ ಭಟ್ ಮಾಂಟ್ರಾಡಿ, ಶರಣ್ಯ ಬೆಳುವಾಯಿ, ಪೂರ್ಣಿಮಾ ಕೋಟ್ಯಾನ್, ಪ್ರಶಾಂತ್ ಆಚಾರ್ಯ ಎಡಪದವು, ಸವಿತಾ ಕರ್ಕೇರಾ ತಮ್ಮ ಕವನಗಳನ್ನು ವಾಚಿಸಿದರು. ವಿನಯಚಂದ್ರ ಕಾರ್ಯಕ್ರಮ ನಿರೂಪಿಸಿದರು. ತುಳು ಕೂಟ ಮೂಡುಬಿದಿರೆ, ಕಾರ್ಯನಿರತ ಪತ್ರಕರ್ತರ ಸಂಘ, ಪ್ರೆಸ್ ಕ್ಲಬ್ ಮೂಡುಬಿದಿರೆ, ಜೇಸಿಐ ಮೂಡುಬಿದಿರೆ ತ್ರಿಭುವನ್, ತಾಕೋಡೆ ಅಭಿಮಾನಿ ಬಳಗ, ರಿಕ್ಷಾ ಚಾಲಕರ-ಮಾಲಕರ ಸಂಘ ಹಾಗೂ ರೋಟರಿ ಕ್ಲಬ್ ಟೆಂಪಲ್ ಟೌನ್ ಮೂಡುಬಿದಿರೆ ಇವರ ಸಂಯುಕ್ತ ಆಶ್ರಯದಲ್ಲಿ ಕಾರ್ಯಕ್ರಮ ನಡೆಯಿತು.
ಯುದ್ಧ ಕೊನೆಗೊಳಿಸಲು ಟರ್ಕಿ ಪ್ರಯತ್ನ: ಇರಾನ್, ಅಮೆರಿಕ ಪ್ರತಿನಿಧಿಗಳ ಜೊತೆ ಮಾತುಕತೆ
ಅಂಕಾರ: ಇರಾನ್, ಅಮೆರಿಕ ಮತ್ತು ಇಸ್ರೇಲ್ ನಡುವಿನ ಯುದ್ಧವನ್ನು ಕೊನೆಗೊಳಿಸುವ ಕ್ರಮಗಳ ಬಗ್ಗೆ ಟರ್ಕಿಯ ವಿದೇಶಾಂಗ ಸಚಿವ ಹಕಾನ್ ಫಿಡಾನ್ ಇರಾನ್, ಅಮೆರಿಕ ಈಜಿಪ್ಟ್ ಮತ್ತು ಯುರೋಪಿಯನ್ ಯೂನಿಯನ್(ಇಯು) ವಿದೇಶಾಂಗ ಸಚಿವರ ಜೊತೆ ಮಾತುಕತೆ ನಡೆಸಿರುವುದಾಗಿ ಟರ್ಕಿಯ ರಾಜತಾಂತ್ರಿಕ ಮೂಲಗಳನ್ನು ಉಲ್ಲೇಖಿಸಿ Reuters ವರದಿ ಮಾಡಿದೆ. ಮಧ್ಯಪ್ರಾಚ್ಯ ಸಂಘರ್ಷಕ್ಕೆ ಸಂಬಂಧಿಸಿದ ಪ್ರಮುಖ ಬೆಳವಣಿಗೆಗಳು: ► ಇರಾನ್ನ ಬ್ಯಾಲಿಸ್ಟಿಕ್ ಕ್ಷಿಪಣಿ ದಾಳಿಯಲ್ಲಿ ಹಾನಿಗೊಂಡ ದಕ್ಷಿಣ ಇಸ್ರೇಲ್ನ ಅರಾದ್ ಮತ್ತು ದಿಮೋನಾ ನಗರಗಳಿಗೆ ಭೇಟಿ ನೀಡಿದ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು, ಇರಾನ್ ನಾಗರಿಕರನ್ನು ಗುರಿಯಾಗಿಸಿಕೊಂಡು ಜಾಗತಿಕ ಶಕ್ತಿಗಳ ಮೇಲೆ ಒತ್ತಡ ಹೇರಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದ್ದಾರೆ. ಇರಾನ್ ʼನಾಗರಿಕತೆಯ ಶತ್ರು ಮತ್ತು ಮುಕ್ತ ಜಗತ್ತಿಗೆ ಅಪಾಯಕಾರಿ' ಎಂದು ಮತ್ತೊಮ್ಮೆ ಸಾಬೀತಾಗಿದ್ದು ಇರಾನ್ ವಿರುದ್ಧ ಜಾಗತಿಕ ಶಕ್ತಿಗಳು ಒಂದುಗೂಡಬೇಕು ಎಂದು ನೆತನ್ಯಾಹು ಹೇಳಿದ್ದಾರೆ. ► ಹಾರ್ಮುಝ್ ಜಲಸಂಧಿಯಲ್ಲಿ ನೌಕಾಯಾನದ ಸ್ವಾತಂತ್ರ್ಯವನ್ನು 48 ಗಂಟೆಗಳ ಒಳಗೆ ಸಂಪೂರ್ಣವಾಗಿ ಮರು ಸ್ಥಾಪಿಸದಿದ್ದರೆ ಇರಾನ್ನ ವಿದ್ಯುತ್ ಸ್ಥಾವರಗಳ ಮೇಲೆ ದಾಳಿ ನಡೆಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶನಿವಾರ ಎಚ್ಚರಿಕೆ ನೀಡಿದ್ದಾರೆ. ► ಇರಾನ್ನ ವಿದ್ಯುತ್ ಸ್ಥಾವರಗಳ ಮೇಲೆ ದಾಳಿ ನಡೆದರೆ ಪ್ರದೇಶದಾದ್ಯಂತದ ಇಂಧನ ಮತ್ತು ಮೂಲ ಸೌಕರ್ಯಗಳ ಮೇಲೆ ತಕ್ಷಣ ಪ್ರತಿದಾಳಿ ನಡೆಸುವುದಾಗಿ ಇರಾನ್ ಎಚ್ಚರಿಸಿದೆ.
ಅಸ್ಸಾಂ ವಿಧಾನಸಭಾ ಚುನಾವಣೆ: ಮತ್ತೆ ಪೌರತ್ವ ವಿವಾದಕ್ಕೆ ಸಿಲುಕಿದ ಬಿಜೆಪಿ ಅಭ್ಯರ್ಥಿ
ಗುವಾಹಟಿ: ಎ.9ರಂದು ನಡೆಯಲಿರುವ ವಿಧಾನಸಭಾ ಚುನಾವಣೆಗೆ ಅಸ್ಸಾಂ ಸಜ್ಜಾಗುತ್ತಿದ್ದಂತೆ ಬಿಜೆಪಿ ಅಭ್ಯರ್ಥಿ ಬಿಜಯ ಮಲಕಾರ್ ಗೆ ಮತ್ತೆ ‘ಬಾಂಗ್ಲಾದೇಶಿ’ ಸಮಸ್ಯೆ ಎದುರಾಗಿದೆ. ಕಾಂಗ್ರೆಸ್ ಅಭ್ಯರ್ಥಿ ಸುರುಚಿ ರಾಯ್ ಅವರು ದಕ್ಷಿಣ ಅಸ್ಸಾಮಿನ ಬರಾಕ್ ಕಣಿವೆಯ ರಾಮಕೃಷ್ಣ ನಗರ ಸ್ಥಾನಕ್ಕಾಗಿ ತನ್ನ ನಾಮಪತ್ರ ಸಲ್ಲಿಸಿದ ಬಳಿಕ ಕಳೆದೆರಡು ಅವಧಿಗಳಿಂದಲೂ ಶಾಸಕರಾಗಿರುವ ಮಲಾಕರ್ ಅವರನ್ನೊಳಗೊಂಡ ಪೌರತ್ವ ಸಂಬಂಧಿತ ವಿವಾದವನ್ನು ಎತ್ತಿದರು. ಗುವಾಹಟಿ ಉಚ್ಚ ನ್ಯಾಯಾಲಯದಲ್ಲಿ ಬಿಜೆಪಿ ಅಭ್ಯರ್ಥಿ ವಿರುದ್ಧದ ಪ್ರಕರಣ ಬಾಕಿಯಿದೆ. ಅವರಿಗೆ ತನ್ನ ಪೌರತ್ವ ಸಂಬಂಧಿ ದಾಖಲೆಗಳನ್ನು ಒದಗಿಸಲು ಸಾಧ್ಯವಾಗಿಲ್ಲ ಎಂದು ಹೇಳಿದರು. ತನ್ನ ವಿರುದ್ಧದ ಆರೋಪವನ್ನು ಸಂಪೂರ್ಣವಾಗಿ ತಳ್ಳಿಹಾಕಿದ ಮಲಾಕರ್, ವಿಷಯವು ನ್ಯಾಯಾಲಯದಲ್ಲಿದೆ. ಅದನ್ನು ನ್ಯಾಯಾಲಯವು ಪರಿಶೀಲಿಸುತ್ತದೆ. ತನ್ನ ತಂದೆಗೆ ನಾಲ್ವರು ಸೋದರರಿದ್ದಾರೆ ಮತ್ತು ಎಲ್ಲರೂ ಸರಕಾರಿ ಉದ್ಯೋಗಿಗಳಾಗಿದ್ದಾರೆ ಎಂದು ಹೇಳಿದರು. ಕಳೆದ ವರ್ಷದ ಡಿಸೆಂಬರ್ ನಲ್ಲಿ ಬೃಜಗೋಪಾಲ ಸಿನ್ಹಾ ಮತ್ತು ಬಿಜಯ ಕುಮಾರ ಕಾನು ಎಂಬವರು ಮಲಾಕರ್ ಭಾರತೀಯ ಪ್ರಜೆಯಲ್ಲ ಎಂದು ದೂರಿ ಉಚ್ಚ ನ್ಯಾಯಾಲಯದಲ್ಲಿ ರಿಟ್ ಅರ್ಜಿಯನ್ನು ಸಲ್ಲಿಸಿದ್ದರು. ಮಲಾಕರ್ ಮತ್ತು ಅವರ ಪೋಷಕರು ಮಾ. 25, 1971ರ ಕಟ್-ಆಫ್ ದಿನಾಂಕದ ಬಳಿಕ ಬಾಂಗ್ಲಾದೇಶದಿಂದ ಭಾರತವನ್ನು (ಅಸ್ಸಾಂ) ಪ್ರವೇಶಿಸಿದ್ದರು ಎಂದು ಅರ್ಜಿದಾರರು ಪ್ರತಿಪಾದಿಸಿದ್ದಾರೆ.
Andhra Pradesh | ಕಲಬೆರಕೆ ಹಾಲು ಸೇವನೆ ಪ್ರಕರಣ: ಮೃತರ ಸಂಖ್ಯೆ 16ಕ್ಕೇರಿಕೆ
ರಾಜಮಹೇಂದ್ರವರಂ: ಆಂಧ್ರಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯಲ್ಲಿ ಶಂಕಿತ ಕಲಬೆರಕೆ ಹಾಲು ಸೇವನೆ ಪ್ರಕರಣದಲ್ಲಿ ಮೃತರ ಸಂಖ್ಯೆ 16ಕ್ಕೇರಿದ್ದು, ಪ್ರಸ್ತುತ ಮೂವರು ಇಲ್ಲಿಯ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅಧಿಕಾರಿಗಳು ರವಿವಾರ ತಿಳಿಸಿದರು. ಫೆಬ್ರವರಿ ಮಧ್ಯಭಾಗದಲ್ಲಿ ಲಾಲಚೆರುವಿನ ಕೆಲವು ಭಾಗಗಳಲ್ಲಿ ಪೂರೈಕೆಯಾಗಿದ್ದ ಕಲಬೆರಕೆ ಹಾಲನ್ನು ಸೇವಿಸಿದವರಲ್ಲಿ ವಾಂತಿ, ಹೊಟ್ಟೆನೋವು, ಅನುರಿಯಾ(ಮೂತ್ರ ಅನುತ್ಪಾದನೆ) ಮತ್ತು ತೀವ್ರ ಮೂತ್ರಪಿಂಡ ವೈಫಲ್ಯ ಸೇರಿದಂತೆ ತೀವ್ರ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಂಡಿದ್ದವು. ಹಲವರನ್ನು ಆಸ್ಪತ್ರೆಗಳಿಗೆ ದಾಖಲಿಸಲಾಗಿತ್ತು. ಫೆ.22ರಂದು ಚೌಡೇಶ್ವರ ನಗರ ಮತ್ತು ಸ್ವರೂಪ ನಗರ ಪ್ರದೇಶಗಳಲ್ಲಿಯ ನಿವಾಸಿಗಳಲ್ಲಿ ತೀವ್ರ ಮೂತ್ರಪಿಂಡ ವೈಫಲ್ಯದ ಲಕ್ಷಣಗಳು ವರದಿಯಾದ ಬಳಿಕ ಕಲಬೆರಕೆ ಹಾಲಿನ ಪ್ರಕರಣ ಬೆಳಕಿಗೆ ಬಂದಿತ್ತು ಮತ್ತು ಅಧಿಕಾರಿಗಳು ವೈಜ್ಞಾನಿಕ ತನಿಖೆಯನ್ನು ಆರಂಭಿಸಿದ್ದರು. ವಿಷಕಾರಿ ವಸ್ತು ಎಥಿಲೀನ್ ಗ್ಲೈಕೋಲ್ನಿಂದ ಕಲುಷಿತಗೊಂಡಿದ್ದ ಹಾಲನ್ನು ಸೇವಿಸಿದ ಬಳಿಕ ತೀವ್ರ ಮೂತ್ರಪಿಂಡ ವೈಫಲ್ಯದಿಂದಾಗಿ ಬಹು ಅಂಗಾಂಗಗಳು ನಿಷ್ಕ್ರಿಯಗೊಂಡು 16 ಜನರು ಮೃತಪಟ್ಟಿದ್ದಾರೆ ಎಂದು ರವಿವಾರ ಬಿಡುಗಡೆಯಾದ ಅಧಿಕೃತ ಹೇಳಿಕೆಯು ತಿಳಿಸಿದೆ.
ನವದೆಹಲಿ: ಪಶ್ಚಿಮ ಏಷ್ಯಾದಲ್ಲಿ ಉಲ್ಬಣಿಸಿರುವ ಯುದ್ಧ ಸದೃಶ್ಯ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಭದ್ರತಾ ಸಂಪುಟ ಸಮಿತಿಯ ಮಹತ್ವದ ಸಭೆ ನಡೆಸಿದರು. ಸಂಘರ್ಷದಿಂದ ಭಾರತದಲ್ಲಿ ಇಂಧನ ಮತ್ತು ರಸಗೊಬ್ಬರ ವಲಯಗಳ ಮೇಲೆ ಉಂಟಾಗಬಹುದಾದ ಪರಿಣಾಮಗಳನ್ನು ಎದುರಿಸಲು ಪ್ರಧಾನಿ ನಡೆಸಿದ ಉನ್ನತ ಮಟ್ಟದ ಸಭೆಯಲ್ಲಿ ಮಹತ್ವದ ತೀರ್ಮಾನಗಳನ್ನು ತೆಗೆದುಕೊಳ್ಳಲಾಯಿತು. ದೇಶದ ಪೆಟ್ರೋಲಿಯಂ, ಕಚ್ಚಾ ತೈಲ, ನೈಸರ್ಗಿಕ
ಕುಕಿ-ಝೋ ಕೌನ್ಸಿಲ್ ಜೊತೆ ಮಾತುಕತೆ | ವಿಶ್ವಾಸ ಕೊರತೆಯನ್ನು ನಿವಾರಿಸಲು ಮೊದಲ ಹೆಜ್ಜೆ ಎಂದ ಮಣಿಪುರ ಸಿಎಂ
ಇಂಫಾಲ: ಕುಕಿ-ಝೋ ಕೌನ್ಸಿಲ್ ಜೊತೆ ಮಾತುಕತೆಗಳನ್ನು ನಡೆಸುವ ಸರಕಾರದ ನಿರ್ಧಾರವು ಶಾಂತಿ ಸ್ಥಾಪನೆ ಪ್ರಯತ್ನವಾಗಿ ರಾಜ್ಯದ ಎರಡು ಪ್ರಮುಖ ಜನಾಂಗೀಯ ಸಮುದಾಯಗಳ ನಡುವೆ ವಿಶ್ವಾಸ ಕೊರತೆಯನ್ನು ಮತ್ತು ಭಿನ್ನಾಭಿಪ್ರಾಯಗಳನ್ನು ನಿವಾರಿಸುವ ನಿಟ್ಟಿನಲ್ಲಿ ಮೊದಲ ಹೆಜ್ಜೆಯಾಗಿದೆ ಎಂದು ಮಣಿಪುರದ ಮುಖ್ಯಮಂತ್ರಿ ಯುಮನಾಮ್ ಖೇಮಚಂದ್ ಅವರು ರವಿವಾರ ತಿಳಿಸಿದರು. ಶನಿವಾರ ನಡೆದ ಸಭೆಯು ಮೇ 2023ರಲ್ಲಿ ಜನಾಂಗೀಯ ಹಿಂಸಾಚಾರ ಭುಗಿಲೆದ್ದ ಬಳಿಕ ರಾಜ್ಯದ ಮುಖ್ಯಮಂತ್ರಿ ಮತ್ತು ಕುಕಿ-ಝೋ ಗುಂಪುಗಳ ಒಕ್ಕೂಟದ ನಡುವಿನ ಮೊದಲ ಮಾತುಕತೆಯಾಗಿದೆ. ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಂಗ್, ‘ಶನಿವಾರದ ಸಭೆಯು ಒಂದು ಉತ್ತಮ ಆರಂಭವಾಗಿತ್ತು. ರಾಜ್ಯದ 36 ಸಮುದಾಯಗಳ ನಡುವಿನ ಭಿನ್ನಾಭಿಪ್ರಾಯಗಳನ್ನು ನಿವಾರಿಸಲು ಮುನ್ನಡೆಯುವತ್ತ ನಮ್ಮ ಪ್ರಯತ್ನಗಳು ಕೇಂದ್ರೀಕೃತಗೊಳ್ಳಬೇಕು’ ಎಂದು ಹೇಳಿದರು. ಉತ್ತಮ ಭವಿಷ್ಯಕ್ಕಾಗಿ ಹಿಂದಿನದನ್ನು ಕ್ಷಮಿಸೋಣ ಮತ್ತು ಮರೆತುಬಿಡೋಣ ಎಂದೂ ಅವರು ತಿಳಿಸಿದರು. ಕುಕಿ ಮತ್ತು ತಂಗ್ಖುಲ್ ಸಮುದಾಯಗಳ ನಡುವಿನ ಉದ್ವಿಗ್ನತೆಯನ್ನು ಶಮನಿಸುವ ಅಗತ್ಯ, ರಾಜಕೀಯ ಇತ್ಯರ್ಥವೊಂದನ್ನು ತಲುಪುವವರೆಗೆ ಬಫರ್ ವಲಯದ (ತಟಸ್ಥ ಪ್ರದೇಶ) ಪಾವಿತ್ರ್ಯವನ್ನು ಕಾಯ್ದುಕೊಳ್ಳುವ ಮಹತ್ವ,ಸಂಘರ್ಷದ ಬಲಿಪಶುಗಳಿಗೆ ನ್ಯಾಯದಾನವನ್ನು ಖಚಿತಪಡಿಸುವುದು ಸೇರಿದಂತೆ ಹಲವಾರು ಪ್ರಮುಖ ವಿಷಯಗಳನ್ನು ಯಾವುದೇ ಅರ್ಥಪೂರ್ಣ ಶಾಂತಿಗೆ ಮೂಲಭೂತ ಅಗತ್ಯಗಳನ್ನಾಗಿ ತಾನು ಪ್ರಸ್ತಾವಿಸಿದ್ದಾಗಿ ಕುಕಿ-ಝೋ ಕೌನ್ಸಿಲ್ ಹೇಳಿದೆ. ಶಾಶ್ವತ ಶಾಂತಿಯನ್ನು ಖಚಿತಪಡಿಸಲು ಕಾರ್ಯಾಚರಣೆ ಸ್ಥಗಿತ ಕುರಿತು ಮಾತುಕತೆಗಳನ್ನು ತ್ವರಿತಗೊಳಿಸುವ ಅಗತ್ಯವನ್ನೂ ತಾನು ಎತ್ತಿ ತೋರಿಸಿದ್ದೇನೆ ಎಂದು ಅದು ತಿಳಿಸಿದೆ. 2008ರಲ್ಲಿ ಕೇಂದ್ರ, ಮಣಿಪುರ ಸರಕಾರ ಹಾಗೂ ಎರಡು ಕುಕಿ ಉಗ್ರಗಾಮಿ ಸಂಘಟನೆಗಳಾದ ಕುಕಿ ನ್ಯಾಷನಲ್ ಆರ್ಗನೈಸೇಷನ್ ಮತ್ತು ಯುನೈಟೆಡ್ ಪೀಪಲ್ಸ್ ಫ್ರಂಟ್ ನಡುವೆ ಕಾರ್ಯಾಚರಣೆ ಸ್ಥಗಿತ ಒಪ್ಪಂದಕ್ಕೆ ಸಹಿ ಹಾಕಲಾಗಿತ್ತು ಮತ್ತು ಸೆಪ್ಟಂಬರ್ ನಲ್ಲಿ ಅದನ್ನು ನವೀಕರಿಸಲಾಗಿತ್ತು. ಒಪ್ಪಂದದ ಅಡಿ ಭದ್ರತಾ ಪಡೆಗಳು ಮತ್ತು ಉಗ್ರಗಾಮಿ ಗುಂಪುಗಳು ಕಾರ್ಯಾಚರಣೆಗಳನ್ನು ಆರಂಭಿಸುವುದನ್ನು ನಿಷೇಧಿಸಲಾಗಿದೆ. ಉಗ್ರಗಾಮಿ ಗುಂಪುಗಳು ದೇಶದ ಕಾನೂನನ್ನು ಪಾಲಿಸಬೇಕು ಮತ್ತು ಕೇಂದ್ರ ಸರಕಾರವು ಗುರುತಿಸಿರುವ ನಿಯೋಜಿತ ಶಿಬಿರಗಳಿಗೆ ಸೀಮಿತರಾಗಿರಬೇಕು. ಕುಕಿ ಸಮುದಾಯದ ಪ್ರಾಬಲ್ಯವಿರುವ ರಾಜ್ಯದ ಪ್ರದೇಶಗಳಲ್ಲಿ ಕೇಂದ್ರಾಡಳಿತ ಪ್ರದೇಶದ ರೂಪದಲ್ಲಿ ಪ್ರತ್ಯೇಕ ಆಡಳಿತ ವ್ಯವಸ್ಥೆಯ ರಚನೆಯು ಸಂಘರ್ಷವನ್ನು ಕೊನೆಗೊಳಿಸುವ ನಿಟ್ಟಿನಲ್ಲಿ ಮುಂದಿನ ಮಾರ್ಗವಾಗಿದೆ ಎಂದು ಕುಕಿ-ಝೋ ಗುಂಪುಗಳ ಪ್ರತಿಪಾದನೆಯಾಗಿದೆ. ಕಣಿವೆ ಪ್ರದೇಶಗಳಲ್ಲಿ ಮೈತೈಗಳು ಬಹುಸಂಖ್ಯಾತರಾಗಿದ್ದರೆ ಗುಡ್ಡಗಾಡು ಜಿಲ್ಲೆಗಳಲ್ಲಿ ಕುಕಿಗಳು ಪ್ರಾಬಲ್ಯ ಹೊಂದಿದ್ದಾರೆ. ಶನಿವಾರದ ಸಭೆಯು ಯಾವುದೇ ನಿರ್ಧಾರ ಅಥವಾ ಒಪ್ಪಂದಗಳಿಲ್ಲದೆ ಮುಕ್ತಾಯಗೊಂಡಿದೆ ಎಂದು ಕುಕಿ-ಝೋ ಕೌನ್ಸಿಲ್ ತಿಳಿಸಿದೆ.
ಪ್ರಧಾನಿ ಮೋದಿಯನ್ನು ವಿಡಂಬನೆ ಮಾಡಿದ ವೈರಲ್ ಇನ್ಸ್ಟಾಗ್ರಾಮ್ ರೀಲ್ಗೆ ನಿರ್ಬಂಧ!
ಐಟಿ ಕಾಯ್ದೆಯನ್ನು ದುರ್ಬಳಕೆ ಮಾಡಿ ಮೋದಿ ಸರಕಾರ ವೀಡಿಯೊವನ್ನು ನಿರ್ಬಂಧಿಸಿದೆ: ಧ್ರುವ್ ರಾಠಿ ಆರೋಪ
ಮೂಡಬಿದಿರೆ| ರಸ್ತೆ ಅಪಘಾತ: ಗಾಯಗೊಂಡಿದ್ದ ಎಂಜಿನಿಯರಿಂಗ್ ವಿದ್ಯಾರ್ಥಿ ಮೃತ್ಯು
ಮೂಡಬಿದಿರೆ: 2025ರ ಅಕ್ಟೋಬರ್ ನಲ್ಲಿ ಕಾರ್ಕಳದಲ್ಲಿ ಸಂಭವಿಸಿದ್ದ ದ್ವಿಚಕ್ರ ವಾಹನ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಎಂಜಿನಿಯರಿಂಗ್ ವಿದ್ಯಾಥಿ೯ ಸಾತ್ವಿಕ್ ಕುಲಾಲ್ (21) ಅವರು ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಮೂಡಬಿದಿರೆ ತಾಲೂಕಿನ ಪಡುಮಾರ್ನಾಡು ನಿವಾಸಿಗಳಾದ ಶ್ಯಾಮ್ ಅಂಚನ್ ಹಾಗೂ ಜಯಂತಿ ಕುಲಾಲ್ ಅವರ ಪುತ್ರರಾಗಿರುವ ಸಾತ್ವಿಕ್, ಸಿವಿಲ್ ಇಂಜಿನಿಯರಿಂಗ್ ಅಂತಿಮ ವರ್ಷದ ವಿದ್ಯಾರ್ಥಿಯಾಗಿದ್ದರು. ಅಪಘಾತದ ಬಳಿಕ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಾ ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ.
Belagavi | ಸಹೋದರರ ಜಗಳ: ಅಣ್ಣನಿಂದಲೇ ತಮ್ಮನ ಹತ್ಯೆ
ಬೆಳಗಾವಿ : ಸಮೀಪದ ನುಗ್ಗಾನಟ್ಟಿ ಗ್ರಾಮದಲ್ಲಿ ಹೊಲಕ್ಕೆ ನೀರು ಹರಿಸುವ ವಿಚಾರವಾಗಿ ಉಂಟಾದ ಜಗಳ ಹತ್ಯೆಗೆ ತಿರುಗಿದ ಘಟನೆ ಶನಿವಾರ ನಡೆದಿದೆ. ಯಲ್ಲಪ್ಪ ಸಣ್ಣಮ್ಮನವರ (45) ಮೃತಪಟ್ಟವರು. ಈ ಪ್ರಕರಣದಲ್ಲಿ ಅಣ್ಣ ಮಹಾದೇವಪ್ಪ ಸಣ್ಣಮ್ಮನವರ (55) ಅವರನ್ನು ಆರೋಪಿ ಎಂದು ಪೊಲೀಸರು ಗುರುತಿಸಿದ್ದಾರೆ. ಹೊಲದಲ್ಲಿ ಬೆಳೆಗೆ ನೀರು ಹರಿಸುವ ವಿಚಾರವಾಗಿ ಇಬ್ಬರು ಸಹೋದರರ ನಡುವೆ ವಾಗ್ವಾದ ಉಂಟಾಗಿ, ಇದರಿಂದ ಸಿಟ್ಟುಗೊಂಡ ಮಹಾದೇವಪ್ಪ, ಯಲ್ಲಪ್ಪ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾನೆ. ಗಂಭೀರವಾಗಿ ಗಾಯಗೊಂಡ ಯಲ್ಲಪ್ಪ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಕುರಿತು ಮುರಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
ಮಂಗಳೂರು| ವಾಣಿಜ್ಯ ಅಡುಗೆ ಅನಿಲ ಕೊರತೆ; ಹೊಟೇಲ್ಗಳು ಬಂದ್
ಮಂಗಳೂರು, ಮಾ.22: ಅಮೆರಿಕ, ಇಸ್ರೇಲ್ - ಇರಾನ್ ಯುದ್ಧದ ಪರಿಣಾಮದಿಂದ ದ.ಕ.ಜಿಲ್ಲೆಯಲ್ಲಿ ವಾಣಿಜ್ಯ ಅಡುಗೆ ಅನಿಲದ ಕೊರತೆ ಕಾಣಿಸಿದ್ದು, ನಗರದ ಹಲವು ಹೊಟೇಲ್ಗಳು ಬಾಗಿಲೆಳೆದಿವೆ. ಗೃಹ ಬಳಕೆಯ ಗ್ಯಾಸ್ಗಳನ್ನು ಷರತ್ತುಗಳ (25ದಿನಕ್ಕೊಂದು) ಆಧಾರದ ಮೇಲೆ ಸರಬರಾಜು ಮಾಡಲಾಗುತ್ತಿದೆ. ವಾಣಿಜ್ಯ ಅಡುಗೆ ಅನಿಲದ ಪೂರೈಕೆಯನ್ನು ತಡೆಹಿಡಿಯಲಾಗಿದೆ. ಆದರೂ ಕೆಲವು ಏಜೆನ್ಸಿಗಳು ಗ್ಯಾಸ್ ಪೂರೈಕೆ ಮಾಡುತ್ತಿದ್ದಾರೆ. ಹಾಗಾಗಿ ಕೆಲವು ಹೊಟೇಲ್ ಈವರೆಗೆ ತೆರೆದಿದ್ದರೂ ಇದೀಗ ಬಹುತೇಕ ಹೊಟೇಲ್ಗಳು ಬಂದ್ ಆಗಿವೆ. ಸಾಮಾನ್ಯವಾಗಿ ರವಿವಾರ ಸಣ್ಣಪುಟ್ಟ ಹೊಟೇಲ್, ಕ್ಯಾಂಟೀನ್ ಗಳು ಬಂದ್ ಆಗಿರುತ್ತವೆ. ಇದೀಗ ಗ್ಯಾಸ್ ಸಮಸ್ಯೆಯಿಂದ ಮತ್ತಷ್ಟು ಹೊಟೇಲ್ಗಳು ಬಂದ್ ಆಗಿದ್ದು, ಗ್ರಾಹಕರು ಊಟ-ತಿಂಡಿಗಾಗಿ ಅಲೆದಾಡುವುದು ಕಂಡು ಬಂತು. ಗ್ಯಾಸ್ ಹೆಚ್ಚು ಬಳಕೆಯಾಗುವ ಕಾರಣ ನಗರದ ಕೆಲವು ಹೊಟೇಲ್ಗಳಲ್ಲಿ ದೋಸೆ, ಇಡ್ಲಿ, ವಡೆ ಐಟಂಗಳನ್ನು ಮಾಡಲಾಗುತ್ತಿಲ್ಲ. ಸಜ್ಜಿಗೆ-ಅವಲಕ್ಕಿ, ಕಡ್ಲೆ-ಅವಲಜ್ಜಿ, ಹೆಸರು ಬೇಳೆ, ಪಲಾವ್, ಕೇಸರಿ ಬಾತ್, ಪುಳಿಯೊಗರೆ, ಗೋಳಿಬಜೆ ಸಹಿತ ಕೆಲವು ಸಾಂಪ್ರದಾಯಿಕ ತಿಂಡಿ ತಿನಸುಗಳನ್ನು ನೀಡಲಾಗುತ್ತಿದೆ. ಊಟದ ವೇಳೆ ಚಪಾತಿ ನೀಡಲಾಗುತ್ತಿಲ್ಲ. ಅನ್ನದಲ್ಲಿ ಕುಚಲಕ್ಕಿ ಅಕ್ಕಿ ಬದಲು ಬೆಳ್ತಿಗೆ ಅನ್ನಕ್ಕೆ ಆದ್ಯತೆ ನೀಡಲಾಗಿದೆ ಎಂದು ತಿಳಿದು ಬಂದಿದೆ. ನಗರದಲ್ಲಿ 300ಕ್ಕೂ ಅಧಿಕ ಪಿಜಿ (ಪೇಯಿಂಗ್ ಗೆಸ್ಟ್) ಹಾಗೂ 50ಕ್ಕೂ ಅಧಿಕ ಹಾಸ್ಟೆಲ್ಗಳಿಗೆ ಗ್ಯಾಸ್ ಸಮಸ್ಯೆ ಯಾಗಿದೆ. ಸ್ಥಳಾವಕಾಶ ಇರುವವರು ಸೌದೆ ಒಲೆ ಅಡುಗೆಗೆ ಮೊರೆ ಹೋಗಿದ್ದು, ಉಳಿದವರು ಊಟ-ಉಪಾಹಾರ ಹೊಂದಿಸಿಕೊಳ್ಳಲು ಕಸರತ್ತು ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ. ಜಿಲ್ಲೆಯ ನೂರಾರು ಕ್ಯಾಟರಿಂಗ್ ಸಂಸ್ಥೆಗಳು ಕೂಡ ಗ್ಯಾಸ್ ಸಮಸ್ಯೆ ಎದುರಿಸುತ್ತಿದ್ದಾರೆ. ಸಭಾಂಗಣದಲ್ಲಿ ಕೆಲವು ತಿಂಡಿತಿನಿಸುಗಳನ್ನು ಲೈವ್ ಆಗಿ ತಯಾರಿಸುವ ಕ್ಯಾಟರಿಂಗ್ ಸಂಸ್ಥೆಗಳು ಇದೀಗ ಲೈವ್ ಫುಡ್ ತಯಾರಿಯಿಂದ ದೂರ ಸರಿದಿದೆ. *ಈ ಹಿಂದೆ ವಾಣಿಜ್ಯ ಗ್ಯಾಸ್ ದರ 1800 ರೂ. ಇತ್ತು. ಇದೀಗ 3,450 ರೂ. ಅಂದರೆ ಶೇ.82ರಷ್ಟು ಏರಿಕೆ ಯಾಗಿದೆ. ಅದಲ್ಲದೆ ಕೆಲವು ಗ್ಯಾಸ್ ಏಜನ್ಸಿಗಳು ಬೇಕಾಬಿಟ್ಟಿ ದರ ವಸೂಲಿ ಮಾಡುತ್ತಿದ್ದಾರೆ. ಇದರಿಂದ ವಾಣಿಜ್ಯ ಗ್ಯಾಸ್ ಪಡೆದುಕೊಳ್ಳುವುದು ಅಸಾಧ್ಯ ಎಂಬಂತಾಗಿದೆ ಎಂದು ಹೊಟೇಲ್ ಮಾಲಕರು ಅಭಿಪ್ರಾಯಪಟ್ಟಿದ್ದಾರೆ. *ಸಮಸ್ಯೆ ಹೀಗೆ ಮುಂದುವರಿದರೆ ಹೊಟೇಲ್ ವ್ಯವಹಾರ ಬಂದ್ ಮಾಡಲಾಗುತ್ತದೆ. ಹೊಟೇಲ್ಗಳನ್ನು ನಂಬಿ ಬದುಕು ಸಾಗಿಸುವ ಸಪ್ಲಾಯರ್, ಅಡುಗೆಯಾಳುಗಳು, ಕ್ಲೀನರ್ ಸಹಿತ ಇತರ ಕಾರ್ಮಿಕರು ಮತ್ತವರ ಕುಟುಂಬಸ್ಥರೂ ಕೂಡ ತೊಂದರೆ ಅನುಭವಿಸಬೇಕಾಗುತ್ತದೆ ಎಂದು ಹೊಟೇಲ್ ಮಾಲಕರು ತಿಳಿಸಿದ್ದಾರೆ. *ಒಲೆ ಸೌದೆಯ ಬೆಲೆಯಲ್ಲಿ ಭಾರೀ ಏರಿಕೆ ಕಂಡು ಬಂದಿದೆ. ಈ ಹಿಂದೆ ಕ್ವಿಂಟಾಲ್ಗೆ 900 ರೂ. ಇದ್ದುದು, ಇದೀಗ 1300 ರೂ.ಗೆ ಏರಿಸಲಾಗಿದೆ. ದುಬಾರಿ ದರದಲ್ಲಿ ಸೌದೆ, ವಾಣಿಜ್ಯ ಗ್ಯಾಸ್ ಬಳಕೆ ಮಾಡಿ ಹೊಟೇಲ್ ವ್ಯವಹಾರ ನಡೆಸುವುದು ಕಷ್ಟವಾಗಿದೆ ಎಂದು ಹೊಟೇಲ್ ಮಾಲಕರ ಸಂಘದ ಅಧ್ಯಕ್ಷ ಕುಡ್ಪಿ ಜಗದೀಶ್ ಶೆಣೈ ತಿಳಿಸಿದ್ದಾರೆ.
Middle East Conflict- ಭಾರತದ ರಸಗೊಬ್ಬರ ಕಾರ್ಖಾನೆಗೂ ತಟ್ಟಿದ ಯುದ್ಧದ ಬಿಸಿ; ಯೂರಿಯಾ ಉತ್ಪಾದನೆಯಲ್ಲಿ ಕುಸಿತ
Urea Fertilizer Problem- ಹರ್ಮುಜ್ ಜಲಸಂಧಿಯ ಮೇಲಿನ ನಿರ್ಬಂಧದಿಂದಾಗಿ ಇಂಧನ ಪೂರೈಕೆಯಲ್ಲಿ ವ್ಯತ್ಯಯವಾಗಿರುವುದು ಭಾರತದ ರಸಗೊಬ್ಬರ ಉತ್ಪಾದನೆಯ ಮೇಲೂ ಪರಿಣಾಮ ಬೀರಿದೆ. ದೇಶದ ಯೂರಿಯಾ ಉತ್ಪಾದನೆ ಅರ್ಧದಷ್ಟು ಇಳಿಕೆಯಾಗಿದೆ. ಮುಂಗಾರು ಹಂಗಾಮಿಗೆ 40 ದಶಲಕ್ಷ ಟನ್ ಯೂರಿಯಾ ಅಗತ್ಯವಿದ್ದು, ಉತ್ಪಾದನಾ ವ್ಯತ್ಯಯವು ಆತಂಕ ಮೂಡಿಸಿದೆ. ಏತನ್ಮಧ್ಯೆಉಂಟಾಗಿರುವ ಇಂಧನ ಮತ್ತು ರಸಗೊಬ್ಬರ ಬಿಕ್ಕಟ್ಟಿನ ಕುರಿತು ಪ್ರಧಾನಿ ಮೋದಿ ಉನ್ನತ ಮಟ್ಟದ ಪರಾಮರ್ಶೆ ನಡೆಸಿದ್ದು, ಇಂಧನ ಭದ್ರತೆ ಕಾಪಾಡಲು ಮತ್ತು ಜಾಗತಿಕ ವಿದ್ಯಮಾನಗಳ ಮೇಲೆ ನಿರಂತರ ನಿಗಾ ಇರಿಸಲು ಸಂಬಂಧಿತ ಸಚಿವರಿಗೆ ನಿರ್ದೇಶನ ನೀಡಿದ್ದಾರೆ.
ಯಕ್ಷಯಾನ 2026: 'ಅಗರಿ ರಘುರಾಮ ಭಾಗವತ', 'ಅಗರಿ ಪ್ರಶಸ್ತಿ' ಪ್ರದಾನ
ಸುರತ್ಕಲ್: ಯಕ್ಷಗಾನ ಕ್ಷೇತ್ರದ ಸಾಧಕ ಶ್ರೀನಿವಾಸ ಭಾಗವತರಿಗೆ ಅವರೇ ಸಾಟಿ ಎಂದು ಶ್ರೀ ಕ್ಷೇತ್ರ ಕಟೀಲಿನ ಅನುವಂಶಿಕ ಅರ್ಚಕ ವೇದಮೂರ್ತಿ ಕಮಲಾದೇವಿ ಪ್ರಸಾದ ಆಸ್ರಣ್ಣ ಹೇಳಿದ್ದಾರೆ. ಸುರತ್ಕಲ್ ನ ಗೋವಿಂದ ದಾಸ ಕಾಲೇಜು ಹಾಗೂ ಅಗರಿ ಶ್ರೀನಿವಾಸ ಭಾಗವತರ ಸಂಸ್ಕರಣಾ ವೇದಿಕೆ ಆಶ್ರಯದಲ್ಲಿ ಸುರತ್ಕಲ್ ಗೋವಿಂದ ದಾಸ ಕಾಲೇಜಿನ ಯಕ್ಷ ಕೇಸರಿ ಅಗರಿ ರಘುರಾಮ ಭಾಗವತ ವೇದಿಕೆಯಲ್ಲಿ ಶನಿವಾರ ಜರುಗಿದ 'ಯಕ್ಷಯಾನ 2026’ ಅಗರಿ ಸಂಸ್ಕರಣೆ ಹಾಗೂ ಪ್ರಶಸ್ತಿ ಪ್ರದಾನ ಮತ್ತು ಮಂಗಳೂರು ವಿವಿಲಯ ಮಟ್ಟದ ಅಂತರ್ ಕಾಲೇಜು ತೆಂಕುತಿಟ್ಟು ಯಕ್ಷಗಾನ ಸ್ಪರ್ಧೆಯ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ಸಮಾರಂಭದಲ್ಲಿ ಅಗರಿ ರಘುರಾಮ ಭಾಗವತ ಪ್ರಶಸ್ತಿಯನ್ನು ಕಾಸರಗೋಡಿನ ಸಿರಿಬಾಗಿಲು ವೆಂಕಪ್ಪಯ್ಯ ಪ್ರತಿಷ್ಠಾನ 50ಇಂಚಿನ ಎಲ್ ಇಡಿ ಟಿವಿ ನೀಡಿ ಗೌರವಿಸಲಾಯಿತು. ಅಗರಿ ಪ್ರಶಸ್ತಿಯನ್ನು ಕಟೀಲು ಮೇಳದ ಸಂಚಾಲಕ ಕಲ್ಲಾಡಿ ದೇವಿಪ್ರಸಾದ್ ಶೆಟ್ಟಿ ಅವರಿಗೆ ನೀಡಿ ಗೌರವಿಸಲಾಯಿತು. ಅಗರಿ ಪ್ರಶಸ್ತಿ ಸ್ವೀಕರಿಸಿ ಮಾತನಾಡಿ ಕಲ್ಲಾಡಿ ದೇವಿ ಪ್ರಸಾದ್ ಶೆಟ್ಟಿ ಅವರು, ತನ್ನ ಗುರುಗಳಾದ ಶನಿವಾರ ನಿಧನರಾದ ದಿ. ಸೂರಿಕುಮೇರು ಗೋವಿಂದ ಭಟ್ ಅವರನ್ನು ಸ್ಮರಿಸಿದರು. ಅಗರಿ ಸಂಸ್ಕರಣ ಭಾಷಣವನ್ನು ಕೃಷ್ಣ ಪ್ರಕಾಶ ಉಳಿತ್ತಾಯ ಹಾಗೂ ಅಭಿನಂದನಾ ಭಾಷಣವನ್ನು ಡಾ. ವಾದಿರಾಜ ಕಲ್ಲೂರಾಯ ಅವರು ಮಾಡಿದರು. ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಉದ್ಯಮಿ ಶ್ರೀಪತಿ ಭಟ್ ಮೂಡುಬಿದಿರೆ ವಹಿಸಿದ್ದರು. ಸುರತ್ಕಲ್ ಹಿಂದು ವಿದ್ಯಾದಾಯಿನಿ ಸಂಘದ ಅಧ್ಯಕ್ಷ ಜಯಚಂದ್ರ ಹತ್ತಾರ್ಎಸ್., ಕಿನ್ನಿಗೋಳಿಯ ಯುಗಪುರುಷದ ಕೆ. ಭುವನಾಭಿರಾಮ ಉಡುಪ, ಶ್ರೀನಿವಾಸ ಕಾಲೇಜಿನ ಪ್ರೊಫೆಸರ್ ಶ್ರೀನಾಥ್ ರಾವ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಸುರತ್ಕಲ್ ಗೋವಿಂದದಾಸ ಕಾಲೇಜಿನ ಪ್ರಾಂಶುಪಾಲ ಪ್ರೊ. ಹರೀಶ ಆಚಾರ್ಯ ಪಿ., ಕಾಲೇಜಿನ ಆಡಳಿತಾತ್ಮಕ ನಿರ್ದೇಶಕ ರಮೇಶ್ ಭಟ್ ಎಸ್. ಜಿ., ಯಕ್ಷಯಾನ ಸಂಚಾಲಕಿ ಪೂರ್ಣಿಮಾ ಯತೀಶ್ ರೈ, ಅಗರಿ ದಿನೇಶ್ ರಾವ್ ಮೊದಲಾದವರು ಉಪಸ್ಥಿತರಿದ್ದರು. ಬೆಳಗ್ಗೆಯಿಂದ ನಡೆದ ಮಂಗಳೂರು ವಿವಿ ಮಟ್ಟದ ಅಂತರ್ ಕಾಲೇಜು ತೆಂಕುತಿಟ್ಟು ಯಕ್ಷಗಾನ ಸ್ಪರ್ಧೆ ನಡೆಯಿತು. ಸ್ಪರ್ಧೆಯಲ್ಲಿ ನಿಟ್ಟೆ ಮಹಾಲಿಂಗ ಅಡ್ಯಂತಾಯ ತಾಂತ್ರಿಕ ಮಹಾವಿದ್ಯಾಯ ಸಮಗ್ರ ಪ್ರಥಮ ಬಹುಮಾನ ಪಡೆದು ಕೊಂಡಿತು. ಉಜಿರೆ ಎಸ್ ಡಿಎಂ ಸ್ವಾಯತ್ತ ಕಾಲೇಜು ದ್ವಿತೀಯ ಬಹುಮಾನ ಪಡೆದುಕೊಂಡರೆ, ತೃತೀಯ ಬಹುಮಾನವನ್ನು ಮಂಗಳೂರು ವಿಶ್ವವಿದ್ಯಾಯ ಕಾಲೇಜು ಪಡೆದುಕೊಂಡಿತು. ಬೆಳಿಗ್ಗೆ ನಡೆದ ಉದ್ಘಾಟನಾ ಕಾರ್ಯಕ್ರಮವನ್ನು ಉದ್ಯಮಿ ರಘುನಾದ ಶೆಟ್ಟಿ ಕೃಷ್ಣಾಪುರ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಸುರತ್ಕಲ್ ಗೋವಿಂದ ದಾಸ ಕಾಲೇಜಿನ ಪ್ರಾಂಶುಪಾಲ ಪ್ರೊ. ಹರೀಶ ಆಚಾರ್ಯ ಪಿ. ವಹಿಸಿದ್ದರು. ಇಡ್ಯಾ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಶಕುಂತಳಾ ರಮಾನಂದ ಭಟ್ ದೀಪ ಪ್ರಜ್ವಲನೆಗೈದರು. ಸುರತ್ಕಲ್ ಹಿಂದು ವಿದ್ಯಾದಾಯಿನಿ ಸಂಘದ ಕಾರ್ಯದರ್ಶಿ ಶ್ರೀರಂಗ ಎಚ್., ಅಗರಿ ಎಂಟರ್ಪ್ರೈಸಸ್ ಮಾಲಕ ರಾಘವೇಂದ್ರ ರಾವ್ ಮತ್ತಿತರರು ಉಪಸ್ಥಿತರಿದ್ದರು.
ರಾಯಚೂರು | ಕಾರ್ಮಿಕರು ತಮ್ಮ ಸುರಕ್ಷತೆಗೆ ಆದ್ಯತೆ ನೀಡಬೇಕು : ಶಾಸಕಿ ಕರೆಮ್ಮ ಜಿ.ನಾಯಕ್
ರಾಯಚೂರು: ಕಟ್ಟಡ ಮತ್ತು ಇತರೆ ಕಾರ್ಮಿಕರು ಸರ್ಕಾರದ ಯೋಜನೆಗಳ ಸದುಪಯೋಗ ಪಡೆಯುವುದರ ಜೊತೆಗೆ ತಮ್ಮ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಶಾಸಕಿ ಕರೆಮ್ಮ ಜಿ. ನಾಯಕ್ ಕರೆ ನೀಡಿದರು. ಪಟ್ಟಣದ ಪ್ರವಾಸಿ ಮಂದಿರದಲ್ಲಿ ಭಾನುವಾರ ನಡೆದ ಸಂಚಾರಿ ಆರೋಗ್ಯ ಘಟಕ ಹಾಗೂ ಸುರಕ್ಷಿತ ಟೂಲ್ ಕಿಟ್ ವಿತರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಜೆಡಿಎಸ್ ವರಿಷ್ಠ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರು ಪ್ರಧಾನಮಂತ್ರಿಯಾಗಿದ್ದಾಗ ಕಾರ್ಮಿಕರ ಹಿತಕ್ಕಾಗಿ ದೇಶಾದ್ಯಂತ ಕಾರ್ಮಿಕ ಕಾಯ್ದೆ ಜಾರಿಗೆ ತಂದಿದ್ದರು ಎಂದು ಅವರು ಸ್ಮರಿಸಿದರು. ಅಲ್ಲದೆ, ಎಚ್.ಡಿ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆಗಿದ್ದ ವೇಳೆ ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿ ಸ್ಥಾಪಿಸಿ ಕಾರ್ಮಿಕರ ಸುರಕ್ಷತೆಗೆ ಹೆಚ್ಚಿನ ಒತ್ತು ನೀಡಿದರು ಎಂದರು. ಕಾರ್ಮಿಕರು ಕೆಲಸದ ವೇಳೆ ಅಪಘಾತ ಸಂಭವಿಸಿದರೆ ಸರ್ಕಾರದಿಂದ 10 ಸಾವಿರದಿಂದ 8 ಲಕ್ಷ ರೂ.ವರೆಗೆ ಜೀವವಿಮೆ ಹಾಗೂ ಮಾಸಾಶನ ಸೌಲಭ್ಯ ಒದಗಿಸುವ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು. ಕಾರ್ಮಿಕರು ತಮ್ಮ ಕುಟುಂಬ ನಿರ್ವಹಣೆಯ ಜೊತೆಗೆ ಸರ್ಕಾರದ ಯೋಜನೆಗಳನ್ನು ಬಳಸಿಕೊಂಡು ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಬೇಕು. ಆರೋಗ್ಯದ ಕಡೆ ಹೆಚ್ಚಿನ ಗಮನ ಹರಿಸಬೇಕು ಎಂದು ಸಲಹೆ ನೀಡಿದರು. ಕೆಲಸದ ವೇಳೆ ಸುರಕ್ಷತಾ ಕಿಟ್ಗಳನ್ನು ಕಡ್ಡಾಯವಾಗಿ ಧರಿಸಬೇಕು ಹಾಗೂ ಇತರ ಕಾರ್ಮಿಕರಲ್ಲಿಯೂ ಜಾಗೃತಿ ಮೂಡಿಸಬೇಕು ಎಂದರು. ಈ ಸಂದರ್ಭದಲ್ಲಿ ಬಸನಗೌಡ ದೇಸಾಯಿ, ಶರಣಪ್ಪ ಬಳೆ, ಶರಣಗೌಡ ಸುಂಕೇಶ್ವರಹಾಳ, ಸಿದ್ದಣ್ಣ ಗಣೇಕಲ್, ಶಾಲಂ ಉದ್ದಾರ, ಕಾರ್ಮಿಕ ಇಲಾಖೆ ಅಧಿಕಾರಿ ಮಲ್ಲಪ್ಪ, ಶಬ್ಬೀರ್ ಜಾಲಹಳ್ಳಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ರಾಯಚೂರು | ಮಹಿಳಾ ದಿನಾಚರಣೆ ಅಂಗವಾಗಿ ಮಾ.29ರಂದು ಕ್ರೀಡಾ-ಸಾಂಸ್ಕೃತಿಕ ಕಾರ್ಯಕ್ರಮಗಳು
ರಾಯಚೂರು: ಮಹಿಳಾ ದಿನಾಚರಣೆ ಅಂಗವಾಗಿ ಮಾ.29ರಂದು ಜಿಲ್ಲಾ ಒಳಾಂಗಣ ಕ್ರೀಡಾಂಗಣದಲ್ಲಿ ವಿವಿಧ ಕ್ರೀಡಾಕೂಟಗಳು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಕೃಷ್ಣಾ ಶಾವಂತಗೇರಿ ತಿಳಿಸಿದ್ದಾರೆ. ಭಾನುವಾರ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಿಳಾ ನೌಕರರಲ್ಲಿ ಆತ್ಮವಿಶ್ವಾಸ ಹೆಚ್ಚಿಸುವುದು ಹಾಗೂ ಕ್ರೀಡಾಸಕ್ತಿ ಮತ್ತು ಸಾಂಸ್ಕೃತಿಕ ವಾತಾವರಣ ನಿರ್ಮಾಣ ಮಾಡುವ ಉದ್ದೇಶದಿಂದ ಈ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು. ಹೆಚ್ಚಿನ ಸಂಖ್ಯೆಯಲ್ಲಿ ಮಹಿಳಾ ನೌಕರರು ಭಾಗವಹಿಸಬೇಕೆಂದು ಮನವಿ ಮಾಡಿದರು. ಇದೇ ಸಂದರ್ಭದಲ್ಲಿ ರಾಜ್ಯ ಸರ್ಕಾರಿ ನೌಕರರ ಮಹಿಳಾ ಘಟಕ ಮತ್ತು ಶ್ರೀ ಮಾತೆ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದ ಸಹಯೋಗದಲ್ಲಿ ಮಾ.31ರಂದು ನಗರದ ಪಂಡಿತ ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗೂ ಸಾಧಕ ಮಹಿಳಾ ನೌಕರರ ಸನ್ಮಾನ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದ ಅಧ್ಯಕ್ಷೆ ಛಾಯಾದೇವಿ, ಜಯಶ್ರೀ, ವಿಜಯಲಕ್ಷ್ಮೀ, ರತ್ನಾ, ಲೀಲಮ್ಮ, ಸಂತೋಷ ನಂದಿನಿ, ವೆಂಕಪ್ಪ ಫಿರಂಗಿ, ರಾಜಶೇಖರ ನಾಯಕ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ರಾಯಚೂರು | ಮೀಸಲಾತಿ ಪ್ರಮಾಣ ಶೇ.56 ರಷ್ಟು ಹೆಚ್ಚಳಕ್ಕೆ ಸರ್ವಪಕ್ಷಗಳ ಸಭೆ ನಡೆಸಲಿ : ಎಸ್.ಉಗ್ರಪ್ಪ
ರಾಯಚೂರು: ಪರಿಶಿಷ್ಟ ಜಾತಿ ಮತ್ತು ಪಂಗಡ ಸಮುದಾಯಗಳಿಗೆ ಸಂವಿಧಾನಬದ್ಧವಾಗಿ ಶೇ.56 ಮೀಸಲಾತಿ ಜಾರಿಗೊಳಿಸಲು ರಾಜ್ಯ ಸರ್ಕಾರ ಕೂಡಲೇ ಸರ್ವಪಕ್ಷಗಳ ಸಭೆ ಕರೆದು ಕೇಂದ್ರ ಸರ್ಕಾರದ ಬಳಿ ನಿಯೋಗ ಕಳುಹಿಸಬೇಕು ಎಂದು ವಿಧಾನಪರಿಷತ್ ಮಾಜಿ ಸದಸ್ಯ ವಿ.ಎಸ್.ಉಗ್ರಪ್ಪ ಆಗ್ರಹಿಸಿದರು. ಭಾನುವಾರ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಬಸವರಾಜ ಬೊಮ್ಮಾಯಿ ಸರ್ಕಾರದ ಅವಧಿಯಲ್ಲಿ ಎಸ್ಸಿ ಸಮುದಾಯಕ್ಕೆ ಶೇ.17 ಮತ್ತು ಎಸ್ಟಿ ಸಮುದಾಯಕ್ಕೆ ಶೇ.7 ಮೀಸಲಾತಿ ಹೆಚ್ಚಿಸುವ ಕುರಿತು ವಿಧಾನಮಂಡಲದ ಎರಡೂ ಸದನಗಳಲ್ಲಿ ಒಮ್ಮತದಿಂದ ನಿರ್ಣಯಿಸಿ ಕೇಂದ್ರಕ್ಕೆ ಶಿಫಾರಸು ಮಾಡಲಾಗಿತ್ತು. ಆದರೆ, ಅದನ್ನು ಸಂವಿಧಾನದ 9ನೇ ಅನುಸೂಚಿಗೆ ಸೇರಿಸದಿರುವುದೇ ಸಮಸ್ಯೆಗೆ ಕಾರಣವಾಗಿದೆ ಎಂದು ಹೇಳಿದರು. ಯುಪಿಎ ಸರ್ಕಾರದ ಅವಧಿಯಲ್ಲಿ ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ ಎಸ್ಟಿ ಸಮುದಾಯಕ್ಕೆ ಶೇ.7.5 ಮೀಸಲಾತಿ ನೀಡಲಾಗಿತ್ತು. ಆದರೆ ರಾಜ್ಯದಲ್ಲಿ ಕೇವಲ ಶೇ.3 ಮಾತ್ರ ನೀಡಲಾಗುತ್ತಿದೆ ಎಂದು ಅವರು ಆರೋಪಿಸಿದರು. ಇಂದಿರಾ ಸಹಾನಿ ತೀರ್ಪಿನಲ್ಲಿ ಸಾಮಾನ್ಯವಾಗಿ ಮೀಸಲಾತಿ ಶೇ.50 ಮೀರಬಾರದು ಎಂದಿದ್ದರೂ, ವಿಶೇಷ ಸಂದರ್ಭಗಳಲ್ಲಿ ಸಮುದಾಯಗಳಿಗೆ ಹೆಚ್ಚುವರಿ ಮೀಸಲಾತಿ ನೀಡುವ ಅವಕಾಶವಿದೆ ಎಂದು ನ್ಯಾಯಾಲಯ ಹೇಳಿದೆ. ತಮಿಳುನಾಡಿನಲ್ಲಿ ಶೇ.69 ಮೀಸಲಾತಿ ಜಾರಿಯಲ್ಲಿದ್ದು, ಛತ್ತೀಸಗಢ ಸೇರಿದಂತೆ ಕೆಲ ರಾಜ್ಯಗಳಲ್ಲಿ ಹೆಚ್ಚುವರಿ ಮೀಸಲಾತಿ ನೀಡಲಾಗಿದೆ ಎಂದು ಉಲ್ಲೇಖಿಸಿದರು. ರಾಜ್ಯದಲ್ಲಿ 2022ರಿಂದ ಶೇ.56 ಮೀಸಲಾತಿ ಆಧಾರದ ಮೇಲೆ ಅವಕಾಶ ಕಲ್ಪಿಸಲಾಗಿದ್ದರೂ, 2025-26 ಸಾಲಿನಲ್ಲಿ ತಡೆಯಾಜ್ಞೆ ವಿಧಿಸಲಾಗಿದೆ. ರಾಜ್ಯ ಸರ್ಕಾರ ಸಮರ್ಪಕವಾಗಿ ತಕರಾರು ಅರ್ಜಿ ಸಲ್ಲಿಸದೇ ವಿಷಯವನ್ನು ಸಮರ್ಥಿಸಿಕೊಳ್ಳಲಿಲ್ಲ ಎಂದು ಟೀಕಿಸಿದರು. ಹೈಕೋರ್ಟ್ ಆದೇಶದಂತೆ ಶೇ.50 ಮೀಸಲಾತಿಯ ಆಧಾರದ ಮೇಲೆ 56 ಸಾವಿರ ಸರ್ಕಾರಿ ಹುದ್ದೆಗಳ ನೇಮಕಾತಿ ನಡೆದರೆ ಎಸ್ಸಿ-ಎಸ್ಟಿ ಸಮುದಾಯಗಳಿಗೆ ಅನ್ಯಾಯವಾಗಲಿದೆ. ಸಾಮಾಜಿಕ ನ್ಯಾಯ ಕೇವಲ ಮಾತಿನಲ್ಲಿ ಅಲ್ಲ, ಕಾರ್ಯರೂಪದಲ್ಲಿ ಸಾಬೀತಾಗಬೇಕು ಎಂದರು. ಸಂವಿಧಾನಬದ್ಧ ಹಕ್ಕನ್ನು ದಾನ ಅಥವಾ ಭಿಕ್ಷೆಯಂತೆ ನೋಡಬಾರದು. ತಕ್ಷಣ ತಡೆಯಾಜ್ಞೆ ತೆರವುಗೊಳಿಸಿ ಕೇಂದ್ರ ಸರ್ಕಾರದ ಬಳಿ ಸರ್ವಪಕ್ಷ ನಿಯೋಗ ಕಳುಹಿಸಬೇಕು. ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಪಕ್ಷಗಳು ತಮ್ಮ ನಿಲುವು ಸ್ಪಷ್ಟಪಡಿಸಬೇಕು ಎಂದು ಒತ್ತಾಯಿಸಿದರು. ಹಿಂದುಳಿದ ವರ್ಗದವರಾಗಿ ಹೇಳಿಕೊಳ್ಳುವ ಪ್ರಧಾನಿ ನರೇಂದ್ರ ಮೋದಿ ಅವರು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ 9ನೇ ಅನುಸೂಚಿಗೆ ಸೇರಿಸಲು ಮುಂದಾಗಬೇಕು ಎಂದು ಅವರು ಆಗ್ರಹಿಸಿದರು. ಈ ಸಂದರ್ಭದಲ್ಲಿ ಗೊಲ್ಲಪಲ್ಲಿಯ ವರದಾನೇಶ್ವರ ಸ್ವಾಮೀಜಿ, ಸಂಜಯಕುಮಾರ ಸ್ವಾಮೀಜಿ, ರಾಜಶೇಖರ ನಾಯಕ, ಹನುಮಂತಪ್ಪ ಕಾಕರಗಲ್, ರಾಜಣ್ಣ, ರಘುವೀರನಾಯಕ, ರಾಮುನಾಯಕ, ಸುರೇಶ ನಾಯಕ ಗೌರಂಪೇಟೆ, ರಾಜಪ್ಪ, ತಿಮ್ಮಪ್ಪ ಜೋಳದಕೂಡ್ಲಿಗಿ, ಹನುಮಂತ್ರಾಯ ಸೇರಿದಂತೆ ಅನೇಕರಿದ್ದರು.
ದೇವದುರ್ಗ | ಕನಕದಾಸರ ಕುರಿತ ಮುಕ್ಕಣ್ಣ ಕರಿಗಾರರ ಮೂರು ಕೃತಿಗಳ ಲೋಕಾರ್ಪಣೆ
ದೇವದುರ್ಗ: ಭಾರತೀಯರ ಹೊಸ ವರ್ಷವಾದ ಪರಾಭವ ಸಂವತ್ಸರದ ಯುಗಾದಿ ಪಾಡ್ಯದಂದು ಗಬ್ಬೂರಿನ ಮಹಾಶೈವ ಧರ್ಮಪೀಠದಲ್ಲಿ ಕ್ಷೇತ್ರನಾಥ ವಿಶ್ವೇಶ್ವರ ಶಿವನ ಸನ್ನಿಧಿಯಲ್ಲಿ ಮುಕ್ಕಣ್ಣ ಕರಿಗಾರರ ರಚನೆಯ ಕನಕದಾಸರ ಕುರಿತ ಮೂರು ಪುಸ್ತಕಗಳನ್ನು ಲೋಕಾರ್ಪಣೆಗೊಳಿಸಲಾಯಿತು. ಮಾರ್ಚ್ 19ರಂದು ಶ್ರೀಕ್ಷೇತ್ರ ಕೈಲಾಸದಲ್ಲಿ ನಡೆದ ಸರಳ ಸಮಾರಂಭದಲ್ಲಿ ಸಿರವಾರ ತಾಲೂಕಿನ ಬಾಗಲವಾಡ ಗ್ರಾಮದ ಗಾಯತ್ರಿ ಶಕ್ತಿ ಪೀಠದ ಪೀಠಾಧ್ಯಕ್ಷರಾದ, ಬಳ್ಳಾರಿ ಮುತ್ತ್ಯಾ ಎಂದು ಪ್ರಸಿದ್ಧರಾಗಿರುವ ಶಿವಯ್ಯ ಸ್ವಾಮಿಗಳು ಈ ಕೃತಿಗಳನ್ನು ಬಿಡುಗಡೆಗೊಳಿಸಿದರು. ಲೋಕಾರ್ಪಣೆಯಾದ ಕೃತಿಗಳಲ್ಲಿ ‘ಕನಕ ದರ್ಶನ’ ಕವನ ಸಂಕಲನ, ‘ಲೋಕಬಂಧು ಕನಕದಾಸರು’ ಹಾಗೂ ‘ಪುರಂದರದಾಸರ ಹೆಸರಿನಲ್ಲಿರುವ ಕನಕದಾಸರ ಕೀರ್ತನೆಗಳು’ ಎಂಬ ಮೂರು ಪ್ರಮುಖ ಪುಸ್ತಕಗಳು ಸೇರಿವೆ. ಇದೇ ಸಂದರ್ಭದಲ್ಲಿ ಇತ್ತೀಚೆಗೆ ಕರ್ನಾಟಕ ಲೋಕಸೇವಾ ಆಯೋಗದ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣ ಅಧಿಕಾರಿ ಹುದ್ದೆಗೆ ಆಯ್ಕೆಯಾದ ಮುಕ್ಕಣ್ಣ ಕರಿಗಾರ ಅವರ ಶಿಷ್ಯ ಷಣ್ಮುಖ ಹೂಗಾರ ಅವರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಮಹಾಶೈವಧರ್ಮಪೀಠದ ಆಡಳಿತಾಧಿಕಾರಿ ತ್ರಯಂಬಕೇಶ, ಹಿರಿಯ ಪತ್ರಕರ್ತರಾದ ಮಲ್ಲಿಕಾರ್ಜುನ ದೇಸಾಯಿ, ಬಸವರಾಜ ಭೋಗಾವತಿ,ಶಹಾಪುರದ ಕಲಾನಿಕೇತನ ಟ್ರಸ್ಟಿನ ಅಧ್ಯಕ್ಷರಾದ ಕವಿ ಸಾಹಿತಿ ಬಸವರಾಜ ಸಿನ್ನೂರ, ಪ್ರಗತಿಪರ ಚಿಂತಕ ಶಿಕ್ಷಕ ಮಲ್ಲಿಕಾರ್ಜುನ ಬಾಗಲವಾಡ, ವಿದ್ಯಾಭಾರತಿ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಅಮರೇಶ ದೇಸಾಯಿ, ಪತ್ರಕರ್ತ ಏಳುಬಾವೆಪ್ಪಗೌಡ,ಗೋಪಾಲ ಮಸೀದಪುರ, ಬಾಬುಗೌಡ ಯಾದವ್ ಸುಲ್ತಾನಪುರ, ಮೃತ್ಯುಂಜಯ ಯಾದವ್,ಸಿದ್ರಾಮಯ್ಯಸ್ವಾಮಿ ರಘುನಾಥನಹಳ್ಳಿ, ವಿರುಪಾಕ್ಷಿ ಗೌಡ ಹೊನ್ನಟಗಿ, ಷಣ್ಮುಖ ಹೂಗಾರ,ಬಸವಲಿಂಗ ಕರಿಗಾರ,ದೇವರಾಜ ಕರಿಗಾರ,ರಂಗನಾಥ ಮಸೀದಪುರ, ವೆಂಕಟೇಶ ಮಸೀದಪುರ, ರಾಮಕೃಷ್ಣ ಯಾದವ್,ತಿಪ್ಪಯ್ಯ ಭೋವಿ, ಶಿವಕುಮಾರ್ ವಸ್ತಾರ ಮೊದಲಾದವರು ಉಪಸ್ಥಿತರಿದ್ದರು.
ಜೆಡಿಯು ಮಾಜಿ ನಾಯಕ ಕೆ.ಸಿ.ತ್ಯಾಗಿ RLD ಗೆ ಸೇರ್ಪಡೆ
ಹೊಸದಿಲ್ಲಿ: ಸಂಯುಕ್ತ ಜನತಾದಳ (ಜೆಡಿಯು)ದ ಮಾಜಿ ನಾಯಕ ಕೆ.ಸಿ.ತ್ಯಾಗಿ ಅವರು ರಾಷ್ಟ್ರೀಯ ಲೋಕದಳ (RLD)ಗೆ ರವಿವಾರ ಸೇರ್ಪಡೆಗೊಂಡರು. ಪಕ್ಷಾಧ್ಯಕ್ಷ ಹಾಗೂ ಕೇಂದ್ರ ಸಚಿವ ಜಯಂತ್ ಚೌಧುರಿ ಅವರು ಈ ಸಂದರ್ಭ ಉಪಸ್ಥಿತರಿದ್ದರು. ಜೆಡಿಯು ತೊರೆಯುವುದಾಗಿ ತ್ಯಾಗಿ ಅವರು ಮಂಗಳವಾರ ಘೋಷಿಸಿದ್ದರು. ಆದರೆ ಅವರು ತನ್ನ ನಿರ್ಧಾರಕ್ಕೆ ಯಾವುದೇ ಕಾರಣವನ್ನು ತಿಳಿಸಿರಲಿಲ್ಲ. ಜನತಾದಳ ಹಾಗೂ ಸಮತಾಪಕ್ಷದ ವಿಲೀನದೊಂದಿಗೆ 2003ರ ಆಕ್ಟೋಬರ್ ನಲ್ಲಿ ಜೆಡಿಯು ಪಕ್ಷವು ಅಸ್ತಿತ್ವಕ್ಕೆ ಬಂದಿದ್ದು, ಆವಾಗಿನಿಂದಲೇ ಅವರು ಆ ಪಕ್ಷದಲ್ಲಿದ್ದರು. ಜೆಡಿಯು ಪಕ್ಷದ ಮುಖ್ಯ ಪ್ರಧಾನ ಕಾರ್ಯದರ್ಶಿ, ಮುಖ್ಯ ವಕ್ತಾರ ಹಾಗೂ ರಾಜಕೀಯ ಸಲಹೆಗಾರ ಹೀಗೆ ಹಲವಾರು ಹುದ್ದೆಗಳನ್ನು ಅವರು ನಿರ್ವಹಿಸಿದ್ದರು.
ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಡಾ ಅನುರಾಧ ಹೆಸರಲ್ಲಿ ವಾಟ್ಸಾಪ್ ಸಂದೇಶ ಕಳಿಸಿ ಹಣ ಸುಲಿಗೆಗೆ ಯತ್ನ!
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಈ ಹಿಂದಿನ ಜಿಲ್ಲಾಧಿಕಾರಿ ಶಿವಶಂಕರ್ ಅವರ ಹೆಸರಿನಲ್ಲಿ ವಾಟ್ಸಾಪ್ ಸಂದೇಶ ಕಳಿಸಿ ಹಣ ವಸೂಲಿಗೆ ಪ್ರಯತ್ನ ನಡೆದ ಘಟನೆ ನಿಮಗೆ ನೆನಪಿರಬಹುದು. ಇದೀಗ ಅದೇ ರೀತಿ ಜಿಲ್ಲಾಧಿಕಾರಿ ಡಾ. ಕೆ.ಎನ್. ಅನುರಾಧಾ ಅವರ ಭಾವಚಿತ್ರವನ್ನು ವಾಟ್ಸಾಪ್ ಡಿಪಿಯಾಗಿ ಬಳಸಿ, ಅನಾಮಿಕನೊಬ್ಬ ಇಲಾಖೆಯ ಸಿಬ್ಬಂದಿಯಿಂದ 50 ಸಾವಿರ ರೂ. ಹಣಕ್ಕೆ ಬೇಡಿಕೆಯಿಟ್ಟ ಘಟನೆ ನಡೆದಿದೆ. ಈ ಬಗ್ಗೆ ಜಿಲ್ಲಾಧಿಕಾರಿಗಳು ವಿಶ್ವನಾಥಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪೊಲೀಸರು ಸಂಬಂಧಿತ ಬ್ಯಾಂಕ್ ಖಾತೆಯನ್ನು ನಿಷ್ಕ್ರಿಯಗೊಳಿಸಿದ್ದಾರೆ. ಯಾರೂ ಈ ರೀತಿಯ ಸಂದೇಶಗಳು ಬಂದಲ್ಲಿ ತಕ್ಷಣವೇ ಪೊಲೀಸರಿಗೆ ದೂರು ನೀಡುವಂತೆ ಡಾ ಅನುರಾಧ ಅವರು ತಿಳಿಸಿದ್ದಾರೆ.
Madhya Pradesh | ವೇದಾಧ್ಯಯನ ವಿದ್ಯಾಲಯದ ವಿದ್ಯಾರ್ಥಿಗೆ ಮನಬಂದಂತೆ ಥಳಿಸಿದ ಶಿಕ್ಷಕ; ವೀಡಿಯೊ ಮೂಲಕ ಪ್ರಕರಣ ಬೆಳಕಿಗೆ
ಇನ್ನೋರ್ವ ವಿದ್ಯಾರ್ಥಿಯ ಹಾಸಿಗೆಯಲ್ಲಿ ಮಲಗಿದ್ದಕ್ಕೆ ಹಲ್ಲೆ; ಆರೋಪ
ದೇರಳಕಟ್ಟೆ| ಡ್ರಗ್ಸ್ ಮಾರಾಟ ಪ್ರಕರಣ : ಆರೋಪಿ ಸೆರೆ
ಕೊಣಾಜೆ: ಬೆಳ್ಮ, ದೇರಳಕಟ್ಟೆಯ ಖಾಸಗಿ ಮೆಡಿಕಲ್ ಕಾಲೇಜು ಬಳಿ ಡ್ರಗ್ಸ್ ಮಾರಾಟ ಮಾಡುತ್ತಿದ್ದ ವ್ಯಕ್ತಿಯೋರ್ವನನ್ನು ಕೊಣಾಜೆ ಪೊಲೀಸರು ಬಂಧಿಸಿ ಆತನಿಂದ ಸುಮಾರು ಒಂದು ಲಕ್ಷದ ಆರು ಸಾವಿರ ರೂ. ಮೌಲ್ಯದ ಮಾದಕ ವಸ್ತುವನ್ನು ವಶಪಡಿಸಿಕೊಂಡಿದ್ದಾರೆ. ಬಂಧಿತ ಆರೋಪಿಯನ್ನು ಕೂಳೂರು ಕಸಬ ಬೆಂಗ್ರೆ ನಿವಾಸಿ ಝಾಕಿರ್ ಹುಸೈನ್ (19) ಎಂದು ಗುರುತಿಸಲಾಗಿದೆ. ಈತ ದೇರಳಕಟ್ಟೆ ಮೆಡಿಕಲ್ ಕಾಲೇಜು ಬಳಿ ಮಾದಕ ವಸ್ತು ಮಾರಾಟ ಮಾಡುತ್ತಿದ್ದಾಗ ಆತನಿಂದ 10.6 ಗ್ರಾಂ ತೂಕದ ಎಂಡಿಎಂಎ, ಮೊಬೈಲ್ ಫೋನ್, ಸಿರಿಂಜ್, ಸಿಗರ್ ಲೈಟ್ ಹಾಗೂ ನಂಬರ್ ಪ್ಲೇಟ್ ಇಲ್ಲದ ಬೈಕ್ ಹಾಗು ಇತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಈತನ ವಿರುದ್ಧ ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Tamil Nadu | ಮೈತ್ರಿಕೂಟದಿಂದ ಹೊರಬಂದ ಮಿತ್ರಪಕ್ಷ: ಡಿಎಂಕೆಗೆ ಹಿನ್ನಡೆ
ಚೆನ್ನೈ: ಡಿಎಂಕೆ ನೇತೃತ್ವದ SPA ಮೈತ್ರಿಕೂಟದಿಂದ ಹೊರಬರಲು ತಮಿಳಗ ವಾಳುವುರುರಿಮೈ ಕಚ್ಚಿ (TVK) ನಿರ್ಧರಿಸಿದೆಯೆಂದು ಪಕ್ಷದ ಸಂಸ್ಥಾಪಕ ಟಿ.ವೇಲುಮುರುಗನ್ ಅವರು ರವಿವಾರ ತಿಳಿಸಿದ್ದಾರೆ. ಆಡಳಿತಾರೂಢ SPA ಮೈತ್ರಿಕೂಟದಲ್ಲಿ ತನ್ನ ಪಕ್ಷವನ್ನು ಕಡೆಗಣಿಸಲಾಗುತ್ತಿದೆ ಹಾಗೂ ಡಿಎಂಕೆ ಹಿರಿಯಣ್ಣನಂತೆ ವರ್ತಿಸುತ್ತಿದೆಯೆಂದು ಅವರು ತಿಳಿಸಿದ್ದಾರೆ. ವೇಲುಮುರುಗನ್ ಅವರು ಕಡಲೂರು ಜಿಲ್ಲೆಯ ಪನ್ರೂಟಿ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ. ‘‘ವಿಧಾನಸಭಾ ಚುನಾವಣೆಯ ಸೀಟು ಹಂಚಿಕೆ ಕುರಿತ ಮಾತುಕತೆಯ ಸಂದರ್ಭ ನಮಗೆ ಒಂದು ಸೀಟನ್ನು ನೀಡಲಾಗುವುದೆಂದು ತಿಳಿಸಲಾಗಿತ್ತು. ಆಗ ನಾವು ಸಾಮಾಜಿಕ ನ್ಯಾಯ ಸೇರಿದಂತೆ ಹಲವಾರು ಬೇಡಿಕೆಗಳನ್ನು ಮುಂದಿಟ್ಟಿದ್ದೆವು. ಇತರ ಪಕ್ಷಗಳ ಯಾವುದೇ ಬೇಡಿಕೆಗಳನ್ನು ಮುಂದಿಟ್ಟಿದ್ದೆವು. ಆಗ ನಮಗೆ ಇತರ ಯಾವುದೇ ಪಕ್ಷಗಳು ಯಾವುದೇ ಬೇಡಿಕೆಗಳನ್ನು ಮುಂದಿಡದೇ ಇರುವಾಗ ನೀವ್ಯಾಕೆ ಇಂತಹ ಬೇಡಿಕೆಗಳನ್ನು ಮುಂದಿಡುತ್ತಿದ್ದೀರಿ’’ ಎಂದು ನಮ್ಮನ್ನು ಪ್ರಶ್ನಿಸಲಾಯಿತು ಎಂದು ವೇಲುಮುರುಗನ್ ಚೆನ್ನೈನಲ್ಲಿ ಸುದ್ದಿಗಾರರಿಗೆ ತಿಳಿಸಿದ್ದಾರೆ. ‘‘ನಮ್ಮ ಕೆಲವು ಕನಿಷ್ಠ ಬೇಡಿಕೆಗಳನ್ನಾದರೂ ಈಡೇರಿಸಿ ಎಂದು ನಾನು ರಾಜ್ಯ ಸರಕಾರವನ್ನು ಕೇಳುತ್ತಾ ಬಂದಿದ್ದೇನೆ. ಆದರೆ ಡಿಎಂಕೆ ಅದನ್ನು ನಿರ್ಲಕ್ಷಿಸುತ್ತಲೇ ಬಂದಿದೆ’’ ಎಂದವರು ಹೇಳಿದರು. ಆದಾಗ್ಯೂ ತನ್ನ ಪಕ್ಷವು ತಮಿಳುನಾಡಿನಲ್ಲಿ ಎನ್ಡಿಎ ಮೈತ್ರಿಕೂಟದ ಜೊತೆ ಸೇರ್ಪಡೆಗೊಳ್ಳುವುದಿಲ್ಲ ಎಂದು ಟಿ.ವೇಲುಮುರುಗನ್ ಸ್ಪಷ್ಟಪಡಿಸಿದ್ದಾರೆ. ಹೊಸ ಮೈತ್ರಿಕೂಟವೊಂದನ್ನು ಸ್ಥಾಪಿಸುವ ಬಗ್ಗೆ ತಾನು ಕೆಲವು ಪಕ್ಷಗಳ ಜೊತೆ ಮಾತುಕತೆ ನಡೆಸುತ್ತಿದ್ದೇನೆ ಎಂದವರು ಹೇಳಿದ್ದಾರೆ.
Kalaburagi | ಭವಿಷ್ಯದ ಪೀಳಿಗೆಗೆ ಅಂತರ್ಜಲ ಮಟ್ಟ ಕಾಯ್ದುಕೊಳ್ಳಿ : ಭಂವರ್ ಸಿಂಗ್ ಮೀನಾ
ವಿಶ್ವ ಜಲ ದಿನ ಆಚರಣೆ
Bengaluru | ಕೆಟ್ಟು ನಿಂತಿದ್ದ ವಾಹನಕ್ಕೆ ಗೂಡ್ಸ್ ವಾಹನ ಢಿಕ್ಕಿ; ಮೂವರು ಮೃತ್ಯು
ಬೆಂಗಳೂರು : ರಸ್ತೆ ಬದಿಯಲ್ಲಿ ಕೆಟ್ಟು ನಿಂತಿದ್ದ ವಾಹನವೊಂದಕ್ಕೆ ಗೂಡ್ಸ್ ವಾಹನ ಢಿಕ್ಕಿಯಾಗಿ ಮೂವರು ಮೃತಪಟ್ಟಿರುವ ಘಟನೆ ಇಲ್ಲಿನ ಕೆ.ಆರ್.ಪುರ ಸಂಚಾರ ಠಾಣಾ ವ್ಯಾಪ್ತಿಯ ಮೇಡಹಳ್ಳಿ ಮೇಲ್ಸೇತುವೆ ಬಳಿ ರವಿವಾರ ವರದಿಯಾಗಿದೆ. ಗೂಡ್ಸ್ ವಾಹನಲ್ಲಿದ್ದ ಮಣಿಕಂಠ(32), ಸುರೇಶ್(29), ಶ್ರೀನಿವಾಸ್(40) ಮೃತಪಟ್ಟವರು ಎಂದು ಗುರುತಿಸಲಾಗಿದೆ. ಮೃತರು ವೈಟ್ಫೀಲ್ಡ್ ಮೂಲದವರು ಎಂದು ತಿಳಿದುಬಂದಿದೆ. ಕೋಲಾರದಿಂದ ಬೆಂಗಳೂರಿಗೆ ಆಲೂಗಡ್ಡೆ ತುಂಬಿಸಿಕೊಂಡು ಬರ್ತಿದ್ದ ಕ್ಯಾಂಟರ್ ವಾಹನ ಮೇಡಹಳ್ಳಿ ಮೇಲ್ಸೇತುವೆ ಮೇಲೆ ಕೆಟ್ಟು ನಿಂತಿತ್ತು. ರಸ್ತೆ ಬದಿ ಕ್ಯಾಂಟರ್ ನಿಲ್ಲಿಸಿ ಚಾಲಕ ಟೈಯರ್ ಬದಲಿಸುತ್ತಿದ್ದ. ಇದೇ ವೇಳೆ ನಿಂತಿದ್ದ ಕ್ಯಾಂಟರ್ಗೆ ಹಿಂದೆಯಿಂದ ಗೂಡ್ಸ್ ವಾಹನ ಢಿಕ್ಕಿಯಾಗಿದೆ. ಅಪಘಾತದ ರಭಸಕ್ಕೆ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸ್ಥಳಕ್ಕೆ ಕೆ.ಆರ್.ಪುರ ಸಂಚಾರಿ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹಗಳನ್ನು ಕೆ.ಆರ್.ಪುರ ಸರಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ.
ಕಾಳಗಿ | ಮಲಘಾಣ ಯಲ್ಲಾಲಿಂಗೇಶ್ವರ ಭವ್ಯ ರಥೋತ್ಸವ
ಕಾಳಗಿ: ತಾಲೂಕಿನ ಮಲಘಾಣ ಗ್ರಾಮದಲ್ಲಿ ಮುಗಳಖೋಡ ಜಿಡಗಾ ಮಠದ ಶಾಖಾ ಮಠವಾದ ಯಲ್ಲಾಲಿಂಗಾಶ್ರಮದಲ್ಲಿ ರವಿವಾರ ರಾತ್ರಿ ಯಲ್ಲಾಲಿಂಗೇಶ್ವರ ಜಾತ್ರಾ ಮಹೋತ್ಸವವು ಅಪಾರ ಭಕ್ತ ಸಮೂಹದ ಮಧ್ಯೆ ಸಡಗರ ಸಂಭ್ರಮದಿಂದ ಜರುಗಿತು. ಜಾತ್ರಾ ಮಹೋತ್ಸವ ನಿಮಿತ್ತ ಗ್ರಾಮದ ಮುಖಂಡರು, ಮಹಿಳೆಯರು ಡೊಳ್ಳು ಭಾಜಾ-ಭಜಂತ್ರಿ, ವಾದ್ಯಮೇಳಗಳೊಂದಿಗೆ ಯಲ್ಲಾಲಿಂಗೇಶ್ವರ ಪಲಕ್ಕಿ ಉತ್ಸವ ಹಳ್ಳಕ್ಕೆ ತೆರಳಿ ಗಂಗಾ ಸ್ನಾನ ನೆರವೇರಿತು. ನಂತರ ಕುಂಭ, ಕಳಸದೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಯಲ್ಲಾಲಿಂಗೇಶ್ವರ ಪಲ್ಲಕ್ಕಿ ಮೆರವಣಿಗೆ ಹೊರಟು ದೇವಸ್ಥಾನಕ್ಕೆ ತಲುಪಿತು. ಸಂಜೆ ಸಮಯದಲ್ಲಿ ಪೇಠಶಿರೂರ ಸಿದ್ಧಲಿಂಗ ಮಹಾಸ್ವಾಮಿಗಳು ಹಾಗೂ ಅಮೋಘಸಿದ್ಧ ಮಹಾರಾಜರ ಅಮೃತ ಹಸ್ತದಿಂದ ಯಲ್ಲಾಲಿಂಗೇಶ್ವರ ಕರ್ತೃ ಗದ್ದುಗೆ ಹಾಗೂ ರಥಕ್ಕೆ ವಿಶೇಷ ಪೂಜೆ ಸಲ್ಲಿಸಿ ಚಾಲನೆ ನೀಡಿದರು. ನೆರೆದಿದ್ದ ಸಾವಿರಾರು ಭಕ್ತರು 'ಯಲ್ಲಾಲಿಂಗ ಮಹಾರಾಜ ಕೀ ಜೈ' ಎಂದು ಜಯಘೋಷಣೆ ಕೂಗುತ್ತಾ ರಥ ಎಳೆದರು. ರಥ ಸ್ಥಳ ಬೀಡುತ್ತಿದ್ದಂತೆ ಭಕ್ತರು ತೇರಿನತ್ತ ಉತ್ತುತ್ತಿ, ಖಾರಿಕ, ಬಾಳೆಹಣ್ಣು, ನಾಣ್ಯ ಎಸೆದು ಭಕ್ತಿ ಸಮರ್ಪಿಸಿದರು. ನಂತರ ನಡೆದ ಧಾರ್ಮಿಕ ಕಾರ್ಯಕ್ರಮ ಉದ್ದೇಶಿಸಿ ಪೇಠಶಿರೂರ ಸಿದ್ಧಲಿಂಗ ಮಹಾಸ್ವಾಮಿಗಳು ಆಶೀರ್ವಚನ ನೀಡಿ, ಯಲ್ಲಾಲಿಂಗ ಮಹಾರಾಜರು ನಿರ್ಮಾಣ ಮಾಡಿರುವ ಕೇಲವೆ ಮಠಗಳಲ್ಲಿ ಮಲಘಾಣ ಗ್ರಾಮದ ಮಠವೂ ಒಂದಾಗಿದೆ. ಯಲ್ಲಾಲಿಂಗ ಮಹಾರಾಜರು ದೈವತ್ವದಿಂದ ಅನೇಕ ಭಕ್ತರ ಬಾಳಿಗೆ ಬೆಳಕನ್ನು ತಂದಿದ್ದಾರೆ ಎಂದು ಹೇಳಿದರು. ಅಮೋಘಸಿದ್ಧ ಮಹಾರಾಜರು, ಪ್ರಮುಖರಾದ ಸುರೇಶ ನಾಮದಾರ, ವಿಠ್ಠಲ ಹಿರಿಪೂಜಾರಿ, ಮಾಜಿ ಜಿಲ್ಲಾ ಪರಿಷತ್ ಅಧ್ಯಕ್ಷ ರೇವಣಸಿದ್ಧಪ್ಪ ಬಾಗೋಡಿ, ಸಿದ್ದರಾಮ ಹಳ್ಳಿ, ಪ್ರವೀಣ ನಾಮದಾರ, ಬಸವರಾಜ ಹಲಚೇರಿ, ಶಂಕರ್ ಕೋಡ್ಲಿ, ಪವಾನ ನಾಮದಾರ, ನಾಗೇಶ ಪಾಪಣಿ, ಸಿದ್ದು ಕೋಡ್ಲಿ, ಮಾರಿತಿ ಕೋಡ್ಲಿ, ಶ್ರೀಮಂತ ನಾಮದಾರ, ಜಗದೇವಪ್ಪ ಪಾಟೀಲ, ಕಿಶನರಾವ್ ಕುಲಕರ್ಣಿ, ಮಹಾದೇವ ಚಂದನಕೇರಿ, ಮಲ್ಲಿಕಾರ್ಜುನ ಭಾವಿಮನಿ, ಶರಣಪ್ಪ ಹಿಪ್ಪರಗೇರಿ, ಸಿದ್ದರಾಮ ಮಾಲಿಪಾಟೀಲ, ಪೃಥ್ವಿರಾಜ್ ನಾಮದಾರ, ದೊಂಡಿಬಾ ಪಾಟೀಲ, ಅರ್ಜುನ ಚಂದನಕೇರಿ, ಸುನೀಲ ಹಲಚೇರಿ, ಭಾಗ್ಯವಂತ ಕೋಡ್ಲಿ ಸೇರಿದಂತೆ ಕಲಗುರ್ತಿ, ಡೊಣ್ಣೂರ, ಕಣಸೂರ, ಅಶೋಕ ನಗರ, ಕೋರವಾರ, ಟೆಂಗಳಿ, ಅರಜಂಬಗಾ, ಕಾಳಗಿ, ಸಾಲಹಳ್ಳಿ, ಕೋಡ್ಲಿ ಗ್ರಾಮಗಳ ಅನೇಕ ಭಕ್ತರು ಇದ್ದರು.
ದೇವಸ್ಥಾನದ ದುಡ್ಡು ಎಲ್ಲಿಗೆ ಹೋಗುತ್ತಿದೆ ಎಂದು ವಿನಾಯಕ ಬಾಳಿಗಾ ಪ್ರಶ್ನಿಸಿದ್ದು ತಪ್ಪೇ ? : ಬಿ.ಕೆ.ಹರಿಪ್ರಸಾದ್
ಸಮಾನ ಮನಸ್ಕ ಸಂಘಟನೆಗಳ ವತಿಯಿಂದ ಮೆರವಣಿಗೆ - ಸಾರ್ವಜನಿಕ ಸಭೆ
ಬೆಂಗಳೂರು : ಸರಕಾರವು ಘೋಷಣೆ ಮಾಡಿದಂತೆ ನಾಳೆಯಿಂದ ಶೇ.50ರಷ್ಟು ವಾಣಿಜ್ಯ ಸಿಲಿಂಡರ್ಗಳು ಪೂರೈಕೆಯಾದರೆ, ಎಂದಿನಂತೆ ಹೋಟೆಲ್ಗಳು ಕಾರ್ಯನಿರ್ವಹಿಸಲಿವೆ ಎಂದು ಬೆಂಗಳೂರು ಹೋಟೆಲ್ ಮಾಲಕರ ಸಂಘದ ಗೌರವಾಧ್ಯಕ್ಷ ಪಿ.ಸಿ. ರಾವ್ ಹೇಳಿದ್ದಾರೆ. ರವಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಧ್ಯಪ್ರಾಚ್ಯದಲ್ಲಿನ ಸಂಘರ್ಷದಿಂದಾಗಿ ಅನಿಲ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿರುವ ಹಿನ್ನೆಲೆ ಹೋಟೆಲ್ಗಳಿಗೆ ಸರಬರಾಜು ಆಗುವ ವಾಣಿಜ್ಯ ಸಿಲಿಂಡರ್ ಸಂಖ್ಯೆಯು ಗಣನೀಯವಾಗಿ ಕಡಿಮೆಯಾಗಿದೆ. ಹೀಗಾಗಿ ಎರಡು ವಾರಗಳಿಂದ ಹೋಟೆಲ್ ಉದ್ಯಮವು ಸಂಕಷ್ಟಕ್ಕೆ ಒಳಗಾಗಿದೆ ಎಂದರು. ನಗರದಲ್ಲಿ ಕೆಲ ಹೋಟೆಲ್ಗಳನ್ನು ಮುಚ್ಚಲಾಗಿದೆ. ಇನ್ನು ಕೆಲ ಹೋಟೆಲ್ಗಳ ಮೆನುವಿನಲ್ಲಿ ಕಡಿತ ಮಾಡಲಾಗಿದೆ. ಹದಿನೈದು ದಿನಗಳಿಂದ ರಾಜ್ಯದ ಹೋಟೆಲ್ ಉದ್ಯಮವು ಸುಮಾರು 150 ಕೋಟಿ ರೂ.ಗೂ ಅಧಿಕ ನಷ್ಟವನ್ನು ಅನುಭವಿಸಿದೆ. ಈಗ ಕೇಂದ್ರ ಸರಕಾರವು ಶೇ.50ರಷ್ಟು ವಾಣಿಜ್ಯ ಸಿಲಿಂಡರ್ಗಳು ಪೂರೈಕೆ ಮಾಡಲಾಗುತ್ತದೆ ಎಂದು ಘೋಷಿಸಿದ್ದು, ಇದರಿಂದ ಹೋಟೆಲ್ ಉದ್ಯಮಕ್ಕೆ ಸಹಕಾರಿಯಾಗುತ್ತದೆ ಎಂದು ಅವರು ತಿಳಿಸಿದರು. ಈಗಾಗಲೇ ರಾಜ್ಯದ ಕೆಲ ಹೋಟೆಲ್ಗಳಲ್ಲಿ ವಿದ್ಯುತ್ ಒಲೆ ಹಾಗೂ ಸೌದೆ ಸೇರಿ ಪರ್ಯಾಯ ವಿಧಾನಗಳನ್ನು ಅಳವಡಿಸಿಕೊಂಡು ಅಡುಗೆಯನ್ನು ತಯಾರು ಮಾಡಲಾಗುತ್ತಿದೆ. ಈಗ ಶೇ.50ರಷ್ಟು ವಾಣಿಜ್ಯ ಸಿಲಿಂಡರ್ ಗಳು ಪೂರೈಕೆಯಾದರೆ, ಹೋಟಲ್ಗಳು ಎಂದಿನಂತೆ ಹೋಟೆಲ್ಗಳು ಕಾರ್ಯ ನಿರ್ವಹಿಸಲಿವೆ ಎಂದು ಅವರು ಹೇಳಿದರು.
ಬೆಂಕಿ ಅಕಸ್ಮಿಕ: ಟೈಯರ್ ಪಂಕ್ಚರ್ ಅಂಗಡಿ ಸುಟ್ಟು ಭಸ್ಮ
ಪಡುಬಿದ್ರಿ, ಮಾ.22: ಬೆಂಕಿ ಅಕಸ್ಮಿಕದಿಂದ ಟೈಯರ್ ಪಂಕ್ಟರ್ ಅಂಗಡಿಯೊಂದು ಸಂಪೂರ್ಣ ಸುಟ್ಟು ಹೋದ ಘಟನೆ ಹೆಜಮಾಡಿ ಟೋಲ್ ಪ್ಲಾಝಾ ಬಳಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ರವಿವಾರ ಮಧ್ಯಾಹ್ನ ನಡೆದಿದೆ. ಅಂಗಡಿ ಸಮೀಪದಲ್ಲಿನ ವಿದ್ಯುತ್ ಟ್ರಾನ್ಸ್ಫಾರ್ಮರ್ನಿಂದ ಬೆಂಕಿಯ ಕಿಡಿ ಸಿಡಿದು ಹುಲ್ಲುಗಳಿಗೆ ಬೆಂಕಿ ಹತ್ತಿಕೊಂಡಿತ್ತೆ ನ್ನಲಾಗಿದೆ. ಈ ಬೆಂಕಿ ಎಲ್ಲೆಡೆ ಹಬ್ಬಿ ಸಮೀಪದ ಬಿಹಾರ ಮೂಲದ ಸೈಫುಲ್ಲಾ ಎಂಬವರ ಟೈಯರ್ ಪಂಕ್ಚರ್ ಅಂಗಡಿ ಯವರೆಗೆ ವಿಸ್ತರಿಸಿತು. ಇದರಿಂದ ಅಂಗಡಿಯೊಳಗಿದ್ದ ಕಂಪ್ರೆಸರ್, ಜನರೇಟರ್, ಟೂಲ್ ಕಿಟ್, ಟೈಯರ್ಗಳು ಸಂಪೂರ್ಣ ಸುಟ್ಟು ಹೊಯಿತು ಎಂದು ತಿಳಿದುಬಂದಿದೆ. ಬೆಂಕಿ ಕಾಣಿಸಿಕೊಂಡ ಕೂಡಲೇ ಸ್ಥಳೀಯರು ಮತ್ತು ಪಡುಬಿದ್ರಿ ಪೊಲೀಸರು ನೀರು ಹಾಯಿಸಿ ಬೆಂಕಿಯನ್ನು ನಿಯಂತ್ರಿಸಿದರು. ಬಳಿಕ ಉಡುಪಿ ಅಗ್ನಿ ಶಾಮಕ ದಳದ ಸಿಬ್ಬಂದಿ ಆಗಮಿಸಿ ಬೆಂಕಿಯನ್ನು ಸಂಪೂರ್ಣ ನಂದಿಸಿದರು. ಈ ಅನಾಹತದಿಂದ ಸುಮಾರು 4-5 ಲಕ್ಷ ರೂ. ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ.
ಸೌಂದರ್ಯ ಪ್ರಜ್ಞೆಯಿಂದ ಕಲಾಸ್ವಾದನೆ: ಪಿ.ಎನ್.ಆಚಾರ್ಯ
ಉಡುಪಿ, ಮಾ.22: ಕಲಾವಿದರಿಂದ ಕಲಾಕೃತಿ ರಚನೆ, ಕಲಾ ರಸಿಕರಿಂದ ಕಲಾಕೃತಿಗಳ ಆಸ್ವಾದನೆಗೆ ಸೌಂದರ್ಯ ಪ್ರಜ್ಞೆಯೊಂದೇ ಮಾಧ್ಯಮ ಎಂದು ಹಿರಿಯ ಕಲಾವಿದ ಪಿ.ಎನ್.ಆಚಾರ್ಯ ಹೇಳಿದ್ದಾರೆ. ಉಡುಪಿ ಸಿಟಿ ಬಸ್ ನಿಲ್ದಾಣದ ಬಳಿಯ ಜಂಗಮ ಮಠದಲ್ಲಿರುವ ಚಿತ್ರಕಲಾ ಮಂದಿರದ ವಿಭೂತಿ ಆರ್ಟ್ ಗ್ಯಾಲರಿ ಯಲ್ಲಿ ಇತ್ತೀಚೆಗೆ ನಡೆದ ಎರಡು ದಿನಗಳ ಕಲಾ ಪ್ರದರ್ಶನದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡುತಿದ್ದರು. ಯಾವುದೇ ಕಲಾಕೃತಿಗಳಲ್ಲಿ ಆಕೃತಿಯ ಪ್ರಮಾಣ ಹಾಗೂ ಭಾವನೆಗಳು ಅತಿ ಮುಖ್ಯವಾಗಿದ್ದು, ವೈದ್ಯಕೀಯ ಕಲಾ ರಚನೆಗೆ ಅಧ್ಯಯನ ಅಗತ್ಯ. ಧರ್ಮ, ಭಾಷೆಗಿಂತ ಕಲಾಸಕ್ತಿ, ಕಲಾ ಭಾವನೆಯನ್ನು ಅರ್ಥೈಸುವ ಗುಣ ಬೇಕು ಎಂದರು. ಪ್ರದರ್ಶನವನ್ನು ಆಶಾ ಕಲಾ ನಿಕೇತನ ಗ್ಯಾಲರಿಯ ಕೊಲಾಜ್ ಕಲಾವಿದ ಎಂ.ಪ್ರಭಾಕರ ಕಿಣಿ ಉದ್ಘಾಟಿಸಿದರು. ಬೈಲೂರು ಹೊಸ ಬೆಳಕು ಆಶ್ರಮದ ತನುಲಾ ತರುಣ್, ಚಿತ್ರಕಲಾ ಮಂದಿರದ ನಿರ್ದೇಶಕ ಡಾ.ಯು.ಸಿ. ನಿರಂಜನ್ ಉಪಸ್ಥಿತರಿದ್ದರು. ಹಿರಿಯ ಕಲಾವಿದ ಪಿ.ಎನ್.ಆಚಾರ್ಯ ಹಾಗೂ ವೆಂಕಟರಮಣ ಭಟ್ ಅವರನ್ನು ಸನ್ಮಾನಿಸಲಾಯಿತು. ಕಲಾವಿದೆ ಶಕುಂತಳಾ ಶೆಣೈ ಕಾರ್ಯಕ್ರಮ ನಿರೂಪಿಸಿದರು. ಕಲಾವಿದ ರವಿ ಹಿರೇಬೆಟ್ಟು ವಂದಿಸಿದರು.
ಕೃಷಿ ಉಳಿದರೆ ದೇಶ ಉಳಿಯಲು ಸಾಧ್ಯ: ಕುದಿ ಶ್ರೀನಿವಾಸ ಭಟ್
ಉಡುಪಿ, ಮಾ.22: ಜಿಲ್ಲೆಯಲ್ಲಿ ಕೃಷಿಕರು ಕೃಷಿಯಿಂದ ವಿಮುಖರಾಗಿ ಕೃಷಿ ಭೂಮಿ ಹಡೀಲು ಬೀಳುತ್ತಿದೆ ಮತ್ತು ಇತರೆ ಉದ್ಧೇಶಗಳಿಗೆ ಮಾರಾಟವಾಗುತ್ತಿದೆ. ಆಡಳಿತಗಾರರಲ್ಲಿ ಕೃಷಿಯ ಬಗ್ಗೆ ಆಳವಾದ ನಿಶ್ಚಿತ ಯೋಜನೆಗಳಿಲ್ಲ. ಈ ಸ್ಥಿತಿ ಹೀಗೆ ಮುಂದುವರೆದರೆ ಮುಂದೊಂದು ದಿನ ದೇಶದಲ್ಲಿ ಅನ್ನಕ್ಕಾಗಿ ಪರದಾಟ ಮಾಡಿ ಅನ್ಯರ ಮರ್ಜಿಯಲ್ಲಿ ಬದುಕಬೇಕಾದ ಪರಿಸ್ಥಿತಿ ಎದುರಾಗಬಹುದು. ಕೃಷಿ ಉಳಿದರೆ ಮಾತ್ರ ದೇಶ ಉಳಿಯಲು ಸಾಧ್ಯ ಎಂದು ಸಾಧನ ಶೀಲ ಕೃಷಿಕ ರಾಷ್ಟ್ರಪ್ರಶಸ್ತಿ ಪುರಸ್ಕೃತ ಶ್ರೀನಿವಾಸ ಭಟ್ ಕುದಿ ಹೇಳಿದ್ದಾರೆ. ಉಡುಪಿ ಜಿಲ್ಲಾ ಕೃಷಿಕ ಸಂಘದ ವತಿಯಿಂದ ಹಿರಿಯಡ್ಕ ಕುದಿ ಫಾರ್ಮ್ನಲ್ಲಿ ಆಯೋಜಿಸಲಾದ ಕ್ಷೇತ್ರೋತ್ಸವದಲ್ಲಿ ಭಾಗವಹಿಸಿ ಅವರು ಮಾತನಾಡುತಿದ್ದರು. ಕಾರ್ಯಕ್ರಮವನ್ನು ಹಿರಿಯಡ್ಕ ಗುರುರಾಜ ತಂತ್ರಿ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ವಹಿಸಿದ್ದ ಕೃಷಿಕ ಸಂಘದ ಅಧ್ಯಕ್ಷ ರಾಮಕೃಷ್ಣ ಶರ್ಮ ಬಂಟಕಲ್ಲು, ವೈಜ್ಞಾನಿಕ ಕೃಷಿ ಮತ್ತು ಕೃಷಿ ಸಂಘಟನೆಯ ಅಗತ್ಯತೆಯನ್ನು ತಿಳಿಸಿದರು. ತೆಂಗು, ಅಡಿಕೆ, ಕಾಳುಮೆಣಸು, ಮಲ್ಲಿಗೆ, ವಿವಿಧ ಹಣ್ಣಿನ ಗಿಡಗಳು, ಹೈನುಗಾರಿಕೆ, ಸಾವಯವ ಗೊಬ್ಬರ ತಯಾರಿ, ಮಾಂಸದ ಕೋಳಿ ಸಾಕಣೆಯ ಪ್ರಾತ್ಯಕ್ಷಿಕೆ ಮಾಹಿತಿ ಮಾರ್ಗದರ್ಶನ ನೀಡಲಾಯಿತು. ದಿನೇಶ್ ಶೆಟ್ಟಿ ಹೆರ್ಗ, ಪೆರಂಪಳ್ಳಿ ವಲಯದ ರವೀಂದ್ರ ಪೂಜಾರಿ ಶೀಂಬ್ರ, ಅಲೆವೂರು ಸುರೇಶ್ ನಾಯಕ್, ನರಸಿಂಹ ಕಾಮತ್ ಕರ್ವಾಲು, ವಿಠಲ ನಾಯ್ಕ್ ಕೊಡಂಗಳ, ಉದ್ಯಾವರ ವಲಯದ ದಯಾನಂದ ಕೆ., ಜಯಲಕ್ಷ್ಮೀ ಪಿತ್ರೋಡಿ, ಭಾರತಿ ಶೆಟ್ಟಿ ಅಂಜಾರು ಮೊದಲಾದವರು ಉಪಸ್ಥಿತರಿದ್ದರು. ಕೃಕ ಸಂಘದ ಉಪಾಧ್ಯಕ್ಷ ಶ್ರೀನಿವಾಸ ಬಲ್ಲಾಳ್ ಮಲ್ಲಂಪಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕರಂಬಳ್ಳಿ ವಲಯದ ಶ್ರೀಪತಿ ಭಟ್ ವಂದಿಸಿದರು. ಕಾರ್ಯದರ್ಶಿ ರವೀಂದ್ರ ಗುಜ್ಜರಬೆಟ್ಟು ಸ್ವಾಗತಿಸಿ, ಕಾರ್ಯ ಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಅಡಿಕೆ ಸುಲಿಯುವ ಯಂತ್ರ ಸೇರಿದಂತೆ ಕೃಷಿ ಯಂತ್ರೋಪಕರಣಗಳು, ವಿವಿಧ ಕೃಷಿ ಪರಿಕರ ಗಳು, ಪುಸ್ತಕಗಳು, ಕಾಡು ಪ್ರಾಣಿಗಳನ್ನು ಬೆದರಿಸುವ ಕೋವಿ ಇತ್ಯಾದಿ ಸಾಧನ- ವಸ್ತುಗಳ ಪ್ರದರ್ಶನ ಮತ್ತು ಮಾರಾಟ ನಡೆಯಿತು.
ಜಗತ್ತಿನ ಸಂತುಷ್ಟ ದೇಶ ಫಿನ್ಲ್ಯಾಂಡ್ಗೆ ಉಚಿತ ಬೇಸಗೆ ಪ್ರವಾಸ; ಷರತ್ತುಗಳೇನು?
ಫಿನ್ಲ್ಯಾಂಡ್ ದೇಶದ ಅಧಿಕೃತ ಪ್ರವಾಸೋದ್ಯಮ ವೆಬ್ಸೈಟ್ ಪ್ರವಾಸಿಗರನ್ನು ಫಿನ್ಲ್ಯಾಂಡ್ನ ಜೀವನಶೈಲಿಯ ಅನುಭವ ಪಡೆಯಲು ಆಹ್ವಾನಿಸುತ್ತಿದೆ. ಜಗತ್ತಿನ ಬಹಳ ಸಂತುಷ್ಟ ರಾಷ್ಟ್ರವಾದ ಫಿನ್ಲ್ಯಾಂಡ್ಗೆ ಹೋಗುವುದು ಕನಸಿಗಿಂತ ಕಡಿಮೆಯೇನೂ ಇಲ್ಲ. ಸಾಂತಾ ಕ್ಲಾಸ್ ಗ್ರಾಮದ ಹಿಮ ತುಂಬಿದ ಭೂ ಪ್ರದೇಶದಿಂದ ಆರಂಭಿಸಿ ಉತ್ತರದ ಲೇಕ್ಲ್ಯಾಂಡ್ ಪ್ರದೇಶದ ಬೆಳಕಿನ ವೈಭವಗಳು ಸೇರಿದಂತೆ ದೇಶದಲ್ಲಿ ಪ್ರವಾಸೋದ್ಯಮಕ್ಕೆ ವ್ಯಾಪಕ ಅವಕಾಶಗಳಿವೆ. ಇದೀಗ ಫಿನ್ಲ್ಯಾಂಡ್ ತನ್ನ ಪ್ರಾಕೃತಿಕ ಸೌಂದರ್ಯದ ಹೆಮ್ಮೆಯನ್ನು ಆಚರಿಸಲು “ಫಿನ್ಲ್ಯಾಂಡ್ಗೆ ಭೇಟಿ ಕೊಡಿ” ಮತ್ತು ಫಿನ್ ಜನರಂತೆ ಚಿಲ್ ಮಾಡಿ (ಸಂತುಷ್ಟರಾಗಿರಿ) ಎಂದು ತೋರಿಸಲು ಪ್ರಯತ್ನಿಸುತ್ತಿದೆ. ಅದಕ್ಕಾಗಿ ದೇಶದ ಅಧಿಕೃತ ಪ್ರವಾಸೋದ್ಯಮ ವೆಬ್ಸೈಟ್ ಜನರನ್ನು ಫಿನ್ಲ್ಯಾಂಡ್ನ ಜೀವನಶೈಲಿಯ ಅನುಭವ ಪಡೆಯಲು ಆಹ್ವಾನಿಸುತ್ತಿದೆ. ಏಳು ದಿನಗಳ ರಜಾ ಸಮಯವನ್ನು ಫಿನ್ಲ್ಯಾಂಡ್ನಲ್ಲಿ ಉಚಿತವಾಗಿ ಸಂಭ್ರಮಿಸಬಹುದು. ಅದಕ್ಕಾಗಿ ಕೆಲವು ಷರತ್ತುಗಳನ್ನು ಪೂರೈಸಬೇಕಿದೆ. “ಜಗತ್ತಿನ ಸಂತುಷ್ಟ ದೇಶಕ್ಕೆ ಪ್ರವಾಸ ಮಾಡಿ. ಜಗತ್ತಿನ ಅತಿ ತಂಪಾದ ಸರೋವರವಾದ ಫಿನಿಶ್ ಲೇಕ್ಲ್ಯಾಂಡ್ಗೆ ಆಗಮಿಸಿ ಜೂನ್ನಲ್ಲಿ ನಿಮ್ಮ ಸಂತೋಷವನ್ನು ಕಂಡುಕೊಳ್ಳಿ. ಯುರೋಪ್ನ ಅತಿ ದೊಡ್ಡ ಸರೋವರ ಜಿಲ್ಲೆ ಫಿನಿಶ್ ಲೇಕ್ಲ್ಯಾಂಡ್” ಎಂದು ವೆಬ್ಸೈಟ್ ಹೇಳಿದೆ. ಈ ಯೋಜನೆಯ ಭಾಗವಾಗಿ ಅಂತಾರಾಷ್ಟ್ರೀಯ ಪ್ರಯಾಣಿಕರ ಆಯ್ದ ಗುಂಪನ್ನು ಫಿನಿಶ್ ಲೇಕ್ಲ್ಯಾಂಡ್ನಲ್ಲಿ ಒಂದು ವಾರ ಕಳೆಯಲು ಆಹ್ವಾನಿಸಲಾಗಿದೆ. ಫಿನಿಶ್ ಲೇಕ್ಲ್ಯಾಂಡ್ ವಿಶಾಲವಾದ ದೃಶ್ಯ ಸೌಂದರ್ಯಕ್ಕೆ ಹೆಸರಾದ ಪ್ರದೇಶ. ಹೊಳೆಯುವ ಸರೋವರಗಳು, ದಟ್ಟ ಕಾಡುಗಳು ಮತ್ತು ಭೂ ದೃಶ್ಯದಾದ್ಯಂತ ಅಂತ್ಯವಿಲ್ಲದೆ ಹರಡಿರುವ ಬೆಟ್ಟಗಳು! “ಸಂತೋಷದ ರಹಸ್ಯವನ್ನು ಹುಡುಕುತ್ತಾ ಫಿನ್ಲ್ಯಾಂಡ್ಗೆ ಅಂತಾರಾಷ್ಟ್ರೀಯ ಪ್ರವಾಸಿಗರು ಹೆಚ್ಚು ಆಗಮಿಸುತ್ತಿದ್ದಾರೆ. ಆದರೆ ಲೇಕ್ಲ್ಯಾಂಡ್ ಇನ್ನೂ ಅನೇಕರು ಪ್ರಯಾಣಿಸದೆ ಇರುವ ರತ್ನ. ಫಿನ್ಲ್ಯಾಂಡ್ ಜನರು ನಿಜವಾದ ವಿಶ್ರಾಂತಿ ಬಯಸಿದಾಗ ಹೋಗುವ ಪ್ರದೇಶವಿದು. ದೈನಂದಿನ ಗದ್ದಲದಿಂದ ದೂರವಿರಲು ಬಯಸುವ ಯಾರಿಗೇ ಆದರೂ ಸೂಕ್ತ ತಾಣ” ಎಂದು ಫಿನ್ಲ್ಯಾಂಡ್ನ ಅಧಿಕಾರಿಗಳು ತಿಳಿಸಿದ್ದಾರೆ. ಈ ಅಭಿಯಾನದಲ್ಲಿ ಫಿನ್ಲ್ಯಾಂಡ್ನ ಬೇಸಗೆಯ ಸಾರವನ್ನು ಸೆರೆಹಿಡಿಯುವ ವೀಡಿಯೋ ಕೂಡ ನೀಡಲಾಗಿದೆ. ಸ್ಥಳೀಯರು ಬೇಸಗೆಯನ್ನು ಹೇಗೆ ಸ್ವೀಕರಿಸುತ್ತಾರೆ ಎಂದು ವೀಡಿಯೋ ವಿವರಿಸುತ್ತದೆ. “ಫಿನ್ಲ್ಯಾಂಡ್ ವಿಶ್ವದ ಸಂತುಷ್ಟ ದೇಶ. ನಮಗೆ ನಾಲ್ಕು ಋತುಗಳಿವೆ. ಅವೆಲ್ಲವನ್ನೂ ನಾವು ಪ್ರೀತಿಸುತ್ತೇವೆ. ಆದರೆ ಅತಿ ಪ್ರಿಯವಾದುದು ಬೇಸಿಗೆ. ಏಕೆಂದರೆ ಬೇಸಗೆ ರಜೆಯನ್ನು ಹೊಂದಿರುವ ಅತ್ಯುತ್ತಮ ಸಮಯ. ಬೇಸಗೆ ಆರಂಭವಾಗುತ್ತಿದ್ದಂತೆ ಸಂತೋಷ ಮತ್ತು ನೈಸರ್ಗಿಕ ಹರಿವನ್ನು ಕಾಣುತ್ತೇವೆ. ತಡವಾಗಿ ಏಳುತ್ತೇವೆ ಮತ್ತು ಬೈಕ್ ಅಥವಾ ಚಾರಣಕ್ಕೆ ಹೊರ ಹೋಗುತ್ತೇವೆ. ಸ್ನೇಹಿತರ ಮನೆಗೆ ಭೇಟಿ ನೀಡುತ್ತೇವೆ. ಗ್ರಿಲ್ ಮಾಡುತ್ತೇವೆ ಮತ್ತು ಸೋನಾ ಮತ್ತು ಸರೋವರದ ಭೇಟಿಯ ನಂತರ ವಿಶ್ರಾಂತಿ ಪಡೆಯುತ್ತೇವೆ” ಎಂದು ವೆಬ್ಸೈಟ್ನ ಜಾಹೀರಾತು ಹೇಳಿದೆ. ಫಿನ್ಲ್ಯಾಂಡ್ನ ಉಚಿತ ವಾರದ ಪ್ರವಾಸಕ್ಕೆ ಹೇಗೆ ಅರ್ಜಿ ಸಲ್ಲಿಸಬೇಕು? ಜಾಗತಿಕವಾಗಿ ಎಲ್ಲರಿಗೂ 7 ದಿನಗಳ ಜೂನ್ ಸವಾಲು ಅನ್ವಯಿಸುತ್ತದೆ. ಆಸಕ್ತ ಭಾಗವಹಿಸುವವರು ಎರಡು ಹಂತಗಳನ್ನು ಪೂರೈಸಬೇಕು. ಮೊದಲನೆಯದು ಇನ್ಸ್ಟಾಗ್ರಾಂ ಅಥವಾ ಟಿಕ್ ಟಾಕ್ ನಲ್ಲಿ ಅರ್ಜಿದಾರರು ತಮ್ಮ ಸಂಗಾತಿ ಜೊತೆಗೆ “ಲೇಕ್ಲ್ಯಾಂಡ್ನಲ್ಲಿ ಫಿನಿಶ್ ಬೇಸಗೆಯ ರಜಾವನ್ನು ಹೇಗೆ ಕಲ್ಪಿಸಿಕೊಳ್ಳುತ್ತೀರಿ” ಎಂದು ವೀಡಿಯೋ ಮಾಡಬೇಕು. ಎರಡನೆಯದಾಗಿ ಅಧಿಕೃತ ವೆಬ್ಸೈಟ್ನಲ್ಲಿ ನೀಡಲಾದ ಅರ್ಜಿಯನ್ನು ಪೂರ್ಣಗೊಳಿಸಬೇಕು. ಲಿಂಕ್ ಅನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಬೇಕು. ಅರ್ಜಿದಾರರು ಯಾರನ್ನು ಬೇಕಾದರೂ ಜೊತೆಗಾರರಾಗಿ ಆರಿಸಬಹುದು. ಸ್ನೇಹಿತರು, ಕುಟುಂಬದ ಸದಸ್ಯ ಅಥವಾ ನೆರೆಹೊರೆಯವರು ಹೀಗೆ ಆರಿಸಿಕೊಳ್ಳಬಹುದು. 18 ವರ್ಷದ ಮೇಲಿನವರಿಗೆ ಮಾತ್ರ ಅವಕಾಶ. 2026 ಮಾರ್ಚ್ 29ರ ಮಧ್ಯಾಹ್ನ 12 ಗಂಟೆಯ ಒಳಗೆ ಪೋಸ್ಟ್ ಮಾಡಿರಬೇಕು.
IPL 2026- ಈ ಬಾರಿ ವಿರಾಟ್ ಕೊಹ್ಲಿ ಅವರು ಪ್ರತಿ ಪಂದ್ಯದ ಬಳಿಕ ಲಂಡನ್ಗೆ ತೆರಳಲು ಆರ್ಸಿಬಿ ಫ್ರಾಂಚೈಸಿ ವತಿಯಿಂದ ವಿಶೇಷ ವಿಮಾನ ವ್ಯವಸ್ಥೆ ಮಾಡಿದೆ ಎಂಬ ಗಾಳಿಸುದ್ದಿಯನ್ನು ಸ್ವತಃ ವಿರಾಟ್ ಕೊಹ್ಲಿ ಅವರೇ ತಳ್ಳಿಹಾಕಿದ್ದಾರೆ. ಈ ಬಗ್ಗೆ ಇನ್ ಸ್ಟಾ ಸ್ಟೋರಿ ಹಾಕಿರುವ ಅವರು ಗಾಳಿಸುದ್ದಿಯ ಕ್ಲಿಪ್ಪಿಂಗ್ ಗೆ ವ್ಯಂಗ್ಯಭರಿತ ಎಮೋಜಿಗಳ ಪ್ರತಿಕ್ರಿಯೆ ನೀಡಿದ್ದಾರೆ. ಸದ್ಯ ಬೆಂಗಳೂರಿನಲ್ಲಿ ಅಭ್ಯಾಸ ನಿರತರಾಗಿರುವ ಅವರು, ಮಾರ್ಚ್ 28ರಂದು ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಉದ್ಘಾಟನಾ ಪಂದ್ಯಕ್ಕೆ ಸಜ್ಜಾಗುತ್ತಿದ್ದಾರೆ.
ಮನೆ ಬೆಕ್ಕುಗಳಿಗೆ ಇರುವ ಸೀಳು ಕಣ್ಣುಗಳು ಹುಲಿ- ಸಿಂಹಗಳಿಗೇಕಿಲ್ಲ?
ಮಾನವರು ಮತ್ತು ಇತರ ಅನೇಕ ಪ್ರಾಣಿಗಳು ದುಂಡಗಿನ ಕಣ್ಣುಗಳನ್ನು ಹೊಂದಿದ್ದರೆ, ಬೆಕ್ಕುಗಳು ಲಂಬ, ಸೀಳಾಕಾರದ ಕಣ್ಣುಗಳನ್ನು ಹೊಂದಿರುವುದೇಕೆ? ಬೆಕ್ಕಿಗೆ ಕಣ್ಣುಗಳೇ ಆಕರ್ಷಣೆ. ಸೀಳು, ಕಿರಿದಾದ ಕಣ್ಣುಗಳು ನೋಡಲು ಆಕರ್ಷಕವೆನಿಸಿವೆ. ಆದರೆ ಮಾನವರು ಮತ್ತು ಇತರ ಅನೇಕ ಪ್ರಾಣಿಗಳು ದುಂಡಗಿನ ಕಣ್ಣುಗಳನ್ನು ಹೊಂದಿದ್ದರೆ, ಬೆಕ್ಕುಗಳು ಲಂಬ, ಸೀಳಾಕಾರದ ಕಣ್ಣುಗಳನ್ನು ಹೊಂದಿರುವುದೇಕೆ? ಈ ಕಣ್ಣುಗಳು ಜೀವವಿಕಾಸದ ವಿಶಿಷ್ಟತೆ ಎನ್ನುವುದು ನಿಮಗೆ ಗೊತ್ತೆ? ಸೀಳು ಕಣ್ಣುಗಳ ಅಗತ್ಯವೇನಿದೆ? ರಾಷ್ಟ್ರೀಯ ವನ್ಯಜೀವಿ ಒಕ್ಕೂಟ ಮತ್ತು ಸೈನ್ಸ್ ಅಡ್ವಾನ್ಸಸ್ ಜರ್ನಲ್ನಲ್ಲಿ ಪ್ರಕಟವಾದ ಸಂಶೋಧನೆಯ ಪ್ರಕಾರ, “ಬೆಕ್ಕುಗಳು ಬೇಟೆಯಾಡುವ ರೀತಿ ಮತ್ತು ಅವು ವಾಸಿಸುವ ಪರಿಸರದಿಂದಾಗಿ ಲಂಬ ಸೀಳು ಕಣ್ಣುಗಳನ್ನು ಹೊಂದಿವೆ. ಸಾಕು ಬೆಕ್ಕುಗಳು ಹೊಂಚು ದಾಳಿ ಮಾಡುವ ಪರಭಕ್ಷಕಗಳು. ಅಂದರೆ ಅವು ಬೇಟೆಯನ್ನು ಹಿಡಿಯಲು ರಹಸ್ಯವಾಗಿ ಮತ್ತು ಹಠಾತ್ ಆಗಿ ಮುಗಿ ಬೀಳುತ್ತವೆ. ಲಂಬ ಕಣ್ಣುಗಳು ವಿಶೇಷವಾಗಿ ಕಡಿಮೆ ಬೆಳಕಿನಲ್ಲಿ ದೂರವನ್ನು ಹೆಚ್ಚು ನಿಖರತೆಯೊಂದಿಗೆ ನಿರ್ಣಯಿಸಲು ಅವಕಾಶ ಮಾಡಿಕೊಡುತ್ತವೆ. ಬೆಳಕಿನ ಮಟ್ಟ ಅಧಿಕವಿದ್ದಾಗ ಅಂದರೆ, ಹಗಲಿನ ವೇಳೆಯಲ್ಲಿ ಈ ಸೀಳುಗಳು ಕಿರಿದಾದ ರೇಖೆಗಳಾಗಿ ಸಂಕುಚಿತಗೊಳ್ಳಬಹುದು, ಕಣ್ಣಿಗೆ ಪ್ರವೇಶಿಸುವ ಬೆಳಕಿನ ಪ್ರಮಾಣ ಕಡಿಮೆಯಾಗಬಹುದು. ರಾತ್ರಿ ಸಮಯದಲ್ಲಿ ಅಥವಾ ಮಂದ ವಾತಾವರಣದಲ್ಲಿ ಈ ಕಣ್ಣು ರೆಪ್ಪೆಗಳು ದೊಡ್ಡ ವೃತ್ತಗಳಾಗಿ ಅಗಲವಾಗಿ ತೆರೆದುಕೊಂಡು ಬೆಳಕಿನ ಒಳಪ್ರವೇಶವನ್ನು ಅಧಿಕಗೊಳಿಸುತ್ತವೆ. ಹೀಗಾಗಿ ಬೆಕ್ಕುಗಳಿಗೆ ಅತ್ಯುತ್ತಮ ರಾತ್ರಿ ದೃಷ್ಟಿ ಇರುತ್ತದೆ. ಅಲ್ಲದೆ, ಅವುಗಳ ಕ್ರೆಪಸ್ಕುಲರ್ (ಬೆಳಿಗ್ಗೆ ಮತ್ತು ಸಂಜೆ) ಶೈಲಿಯ ಬೇಟೆಯಾಡುವ ಕಲೆಗೆ ಅಗತ್ಯವಾಗಿರುತ್ತದೆ. ಪ್ರದೇಶದ ನಿಖರವಾದ ಮಾಹಿತಿ ಲಂಬ ಕಣ್ಣುಗಳು ವಿಕಸನಗೊಳ್ಳಲು ಮತ್ತೊಂದು ಕಾರಣವೆಂದರೆ ಅವು ತಮ್ಮ ಗುರಿಯತ್ತ ಇರುವ ದೂರವನ್ನು ಉತ್ತಮವಾಗಿ ಅಂದಾಜಿಸಲು ನೆರವಾಗುವುದು. ಬರ್ಕ್ಲಿಯ ಕ್ಯಾಲಿಫೋರ್ನಿಯ ವಿಶ್ವವಿದ್ಯಾಲಯದ ಸಂಶೋಧಕರ ಪ್ರಕಾರ, “ಲಂಬ ಸೀಳುಗಳು ಕಡಿಮೆ ದೂರದಲ್ಲಿ ಆಳದ ಗ್ರಹಿಕೆ ಹೆಚ್ಚಿಸಲು ಸಹಾಯ ಮಾಡುತ್ತದೆ. ಅಂದರೆ ಇಲಿ ಅಥವಾ ಹಕ್ಕಿಯ ಮೇಲೆ ಹಾರುವಾಗ ಈ ಆಳ-ಅಗಲ ನಿಖರವಾಗಿರಬೇಕಾಗುತ್ತದೆ. ಮೆದುಳು ಪ್ರಾದೇಶಿಕ ಮಾಹಿತಿಯನ್ನು ತ್ವರಿತವಾಗಿ ಮತ್ತು ನಿಖರವಾಗಿ ಪ್ರಕ್ರಿಯೆಗೊಳಿಸಲು ದೃಷ್ಟಿ ನೆರವಾಗುತ್ತದೆ. ಹುಲಿಗಳು ಮತ್ತು ಸಿಂಹಗಳಿಗೆ ಈ ಕಣ್ಣುಗಳೇಕಿಲ್ಲ? ಕುತೂಹಲಕರ ಅಂಶವೆಂದರೆ ಸೀಳು ಕಣ್ಣು ರೆಪ್ಪೆಗಳು ಮನೆ ಬೆಕ್ಕುಗಳಿಗೆ ಮಾತ್ರ ಇರುತ್ತವೆ. ಹುಲಿ ಅಥವಾ ಸಿಂಹಗಳಿಗೆ ಇರುವುದಿಲ್ಲ. ಏಕೆಂದರೆ ದೊಡ್ಡ ಪ್ರಾಣಿಗಳು ಸಾಮಾನ್ಯವಾಗಿ ಹಗಲಿನಲ್ಲೇ ಬೇಟೆಯಾಡುವ ಕಾರಣದಿಂದ ಮುಗಿ ಬೀಳಲು ಅಥವಾ ಕಾರ್ಯತಂತ್ರ ರೂಪಿಸಲು ನಿಖರವಾದ ಆಳ-ಅಗಲ ತಿಳಿದಿರುವ ಅಗತ್ಯವಿರುವುದಿಲ್ಲ. ದುಂಡಗಿನ ಕಣ್ಣ ರೆಪ್ಪೆಗಳೇ ಸಾಕಾಗುತ್ತವೆ. ಕೃಪೆ: indianexpress.com
ಮಂಗಳೂರು: ಬೋಬಿ ಚೆಮ್ಮನೂರ್ ಇಂಟರ್ನ್ಯಾಶನಲ್ ಜ್ಯುವೆಲ್ಲರ್ಸ್ ಶುಭಾರಂಭ
ಮಂಗಳೂರು: ಉದ್ಯಮಿ, ಸಮಾಜ ಸೇವಕ, ಕ್ರೀಡಾಪಟು, ಪ್ರೇರಣಾದಾಯಕ ವಕ್ತಾರರಾಗಿ ಗುರುತಿಸಿಕೊಂಡಿರುವ ಬೋಬಿ ಚೆಮ್ಮನೂರ್ ಮಾಲಕತ್ವದ ಚಿನ್ನ ಮತ್ತು ವಜ್ರಾಭರಣ ಮಳಿಗೆ ಬೋಬಿ ಚೆಮ್ಮನ್ನೂರ್ ಇಂಟರ್ ನ್ಯಾಶನಲ್ ಜ್ಯುವೆಲ್ಲರ್ಸ್ ರವಿವಾರ ಮಂಗಳೂರಿನಲ್ಲಿ ಶುಭಾರಂಭಗೊಂಡಿತು. ನಗರದ ಹಂಪನಕಟ್ಟೆಯ ಕ್ಲಾಕ್ಟವರ್ ಬಳಿ ಸ್ಥಾಪನೆಗೊಂಡಿರುವ ಬೋಬಿ ಚೆಮ್ಮನ್ನೂರ್ ಇಂಟರ್ನ್ಯಾಶನಲ್ ಜ್ಯುವೆಲ್ಲರ್ಸ್ನ್ನು ಗಣ್ಯರು ಉದ್ಘಾಟಿಸಿದರು. ಬೋಬಿ ಚೆಮ್ಮನ್ನೂರ್ ಇಂಟರ್ನ್ಯಾಶನಲ್ ಜ್ಯುವೆಲ್ಲರ್ಸ್ನ ಮಾಲಕ ಬೋಚೆ ಮಾತನಾಡಿ ಯುಎಸ್ಎ, ಗಲ್ಫ್ ಹಾಗೂ ಭಾರತದಲ್ಲಿ ನಮ್ಮ 57 ಮಳಿಗೆಗಳಿವೆ. ಮಂಗಳೂರಿನಲ್ಲಿ ಇಂದು ಶುಭಾರಂಭಗೊಂಡ ಈ ಮಳಿಗೆ 58ನೆಯ ದ್ದಾಗಿದೆ. ಕರ್ನಾಟಕದಲ್ಲಿ ಒಟ್ಟು 25 ಮಳಿಗೆಗಳನ್ನು ಆರಂಭಿಸುವ ಗುರಿ ಇದೆ. ಅತ್ಯಂತ ಕಡಿಮೆ ದರದಲ್ಲಿ ಉತ್ತಮ ಗುಣಮಟ್ಟದ ಚಿನ್ನ, ವಜ್ರಾಭರಣವನ್ನು ಗ್ರಾಹಕರಿಗೆ ನೀಡಲಾಗುತ್ತಿದೆ. 163 ವರ್ಷಗಳ ಇತಿಹಾಸವಿರುವ ಚೆಮ್ಮನ್ನೂರು ಸಂಸ್ಥೆಯು ಹಲವು ಉದ್ಯಮಗಳಲ್ಲಿ ತೊಡಗಿಸಿಕೊಂಡಿವೆ. ತನ್ನ ಲಾಭದ ಒಂದು ಅಂಶವನ್ನು ಅರ್ಹರಿಗೆ ನೀಡಲಾಗುತ್ತಿದೆ ಎಂದರು. ನಾನು ಜಗತ್ತಿಗೆ ಚಿರಪರಿಚಿತನಾಗಿರಬಹುದು. ಹಲವು ದಾಖಲೆಗಳನ್ನು ನಿರ್ಮಿಸಿರಬಹುದು. ಲಕ್ಷಾಂತರ ಅಭಿಮಾನಿಗಳನ್ನು ಹೊಂದಿರಬಹುದು. ಆದರೆ ಅದು ಯಾವುದೂ ಕೂಡ ಶಾಶ್ವತವಲ್ಲ. ಜನರ ಪ್ರೀತಿಯೇ ಶಾಶ್ವತವಾಗಿದೆ. ಜನನ ಮತ್ತು ಮರಣದ ಮಧ್ಯೆ ಇರುವ ದಿನಗಳು ಅತ್ಯಂತ ಕಡಿಮೆ ಅವಧಿಯದ್ದಾಗಿದೆ. ಈ ಅವಧಿಯಲ್ಲಿ ಸುಖ-ದು:ಖ ಎಲ್ಲದರ ಅನುಭವವೂ ಆಗಲಿದೆ. ಎಲ್ಲವನ್ನೂ ಸಮಾನವಾಗಿ ಸ್ವೀಕರಿಸಿ ಸಂತಸದಲ್ಲಿ ಬದುಕೋನ ಎಂದು ಬೋಚೆ ಹೇಳಿದರು. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿಡಿಯೋ ಸಂದೇಶ ನೀಡಿದರು. ಶಾಸಕ ವೇದವ್ಯಾಸ ಕಾಮತ್, ರಾಜ್ಯ ಗಾಣಿಗರ ಅಭಿವೃದ್ಧಿ ನಿಗಮದ ಅಧ್ಯಕ್ಷ ವಿಶ್ವಾಸ್ ಕುಮಾರ್ ದಾಸ್, ನಟ, ಚಲನಚಿತ್ರ ನಿರ್ದೇಶಕ ಉಪೇಂದ್ರ, ಬಾಲಿವುಡ್ ಸ್ಟಾರ್ ಇಮ್ರಾನ್ ಹಶ್ಮಿ, ಮಾಜಿ ಶಾಸಕ ಮೊಯ್ದಿನ್ ಬಾವ, ಬಿಜೆಪಿ ಮುಖಂಡ ಜಗದೀಶ್ ಅಧಿಕಾರಿ, ಮಾಜಿ ಮೇಯರ್ ಮನೋಜ್ ಕುಮಾರ್, ಮಾಜಿ ಉಪಮೇಯರ್ ಪೂರ್ಣಿಮಾ ಶುಭ ಹಾರೈಸಿದರು. ಉದ್ಘಾಟನೆಯ ಪ್ರಯುಕ್ತ ಮಂಗಳೂರಿನ ಆಯ್ದ ಅರ್ಹ ರೋಗಿಗಳಿಗೆ ಬೋಚೆ ಫ್ಯಾನ್ಸ್ ಚಾರಿಟೇಬಲ್ ಟ್ರಸ್ಟ್ನಿಂದ ಸಹಾಯಧನ ವಿತರಿಸಲಾಯಿತು. ಉದ್ಘಾಟನಾ ಕಾರ್ಯಕ್ರಮದ ಅಂಗವಾಗಿ ಸಾಂಸ್ಕೃತಿಕ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಸಾಹಿಲ್ ಜಹೀರ್ ಕಾರ್ಯಕ್ರಮ ನಿರೂಪಿಸಿದರು. *ಎಚ್ಯುಐಡಿ 916 ಚಿನ್ನದ ಆಭರಣಗಳನ್ನು ಸಗಟು ಬೆಲೆಗೆ ನೀಡಲಾಗುತ್ತದೆ. *2 ಲಕ್ಷ ರೂ.ಗಿಂತ ಹೆಚ್ಚಿನ ಮೌಲ್ಯದ ವಜ್ರ, ಅನ್ಕಟ್ ಮತ್ತು ಪ್ಲಾಟಿನಂ ಆಭರಣಗಳನ್ನು ಖರೀದಿಸಿದರೆ ಉಚಿತ ಚಿನ್ನದ ನಾಣ್ಯವನ್ನು ನೀಡಲಾಗುತ್ತದೆ. *ಒಂದು ನಿರ್ದಿಷ್ಟ ಮೊತ್ತವನ್ನು ಪಾವತಿಸಿ ಮುಂಗಡ ಬುಕ್ಕಿಂಗ್ ಮಾಡಬಹುದಾಗಿದೆ. *ಹಳೆಯ ಚಿನ್ನವನ್ನು ಹೊಸ ಎಚ್ಯುಐಡಿ 916 ಆಭರಣಗಳೊಂದಿಗೆ ವಿನಿಮಯ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. *ಅನ್ಕಟ್ ಆಭರಣಗಳ ಮೇಲಿನ ಮಜೂರಿ ಮೇಲೆ ಶೇ.50ವರೆಗೆ ರಿಯಾಯಿತಿ ಇದೆ. *ಬೆಳ್ಳಿ ಆಭರಣಗಳ ಅದ್ಭುತ ಸಂಗ್ರಹವೂ ಇಲ್ಲಿದೆ.
ಹೊಸದಿಲ್ಲಿ: ಪಶ್ಚಿಮ ಏಶ್ಯಾ ಯುದ್ಧದ ಹಿನ್ನೆಲೆಯಲ್ಲಿ ಕಚ್ಚಾ ತೈಲ, ಅಡುಗೆ ಅನಿಲ ಮತ್ತಿತರ ಪೆಟ್ರೋಲಿಯಂ ಉತ್ಪನ್ನಗಳಿಗೆ ಸಂಬಂಧಿಸಿದ ಪರಿಸ್ಥಿತಿಯ ಕುರಿತಾಗಿ ಪ್ರಧಾನಿ ನರೇಂದ್ರ ಮೋದಿ ರವಿವಾರ ಸಂಪುಟದ ಹಿರಿಯ ಸದಸ್ಯರೊಂದಿಗೆ ಪರಾಮರ್ಶೆ ನಡೆಸಿದರು. ದೇಶದಲ್ಲಿ ತೈಲ, ಎಲ್ಪಿಜಿ ಮತ್ತಿತರ ಪೆಟ್ರೋಲಿಯಂ ಉತ್ಪನ್ನಗಳ ಅಬಾಧಿತ ಪೂರೈಕೆ ಸುಸ್ಥಿರವಾದ ಸಾಗಣೆ ವ್ಯವಸ್ಥೆ ಹಾಗೂ ದಕ್ಷ ವಿತರಣೆಯನ್ನು ಖಾತರಿಪಡಿಸುವ ಬಗ್ಗೆ ಸಭೆಯಲ್ಲಿ ಗಮನಹರಿಸಲಾಯಿತು ಎಂದು ಸರಕಾರಿ ಮೂಲಗಳು ತಿಳಿಸಿವೆ. ಕೇಂದ್ರ ಸಚಿವರಾದ ರಾಜನಾಥ್ ಸಿಂಗ್ (ರಕ್ಷಣೆ), ಅಮಿತ್ ಶಾ (ಗೃಹ), ಶಿವರಾಜ್ ಸಿಂಗ್ ಚೌಹಾಣ್ (ಕೃಷಿ), ಎಸ್.ಜೈಶಂಕರ್ ( ವಿದೇಶಾಂಗ ವ್ಯವಹಾರ), ನಿರ್ಮಲಾ ಸೀತಾರಾಮನ್ (ವಿತ್ತ), ಜೆ.ಪಿ.ನಡ್ಡಾ ( ಆರೋಗ್ಯ), ಪಿಯೂಷ್ ಗೋಯಲ್ (ವಾಣಿಜ್ಯ ಹಾಗೂ ಕೈಗಾರಿಕೆ) ಹಾಗೂ ಅಶ್ವಿನಿ ವೈಷ್ಣವ್ (ರೈಲ್ವೆ) ಮತ್ತಿತರರು ಉನ್ನತ ಮಟ್ಟದ ಸಭೆಯಲ್ಲಿ ಭಾಗವಹಿಸಿದ್ದರು. ಕೇಂದ್ರ ಸಚಿವರಾದ ಸರಬಾನಂದ ಸೋನೊವಾಲ್ (ಬಂದರು ಹಾಗೂ ಹಡಗುಗಾರಿಕೆ), ಮನೋಹರಲಾಲ್ ಖಟ್ಟರ್ (ವಿದ್ಯುತ್), ಪ್ರಹ್ಲಾದ್ ಜೋಶಿ (ಆರೋಗ್ಯ ಹಾಗೂ ಗ್ರಾಹಕ ವ್ಯವಹಾರ), ಕಿಂಜರಾಪು ರಾಮಮೋಹನ ನಾಯ್ಡು (ನಾಗರಿಕ ವಾಯುಯಾನ) ಹಾಗೂ ಹರದೀಪ್ ಸಿಂಗ್ ಪುರಿ (ಪೆಟ್ರೋಲಿಯಂ), ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಹಾಗೂ ಪ್ರಧಾನಿಯವರ ಇಬ್ಬರು ಮುಖ್ಯ ಸಲಹೆಗಾರರಾದ ಪಿ.ಕೆ.ಮಿಶ್ರಾ ಮತ್ತು ಶಕ್ತಿಕಾಂತ ದಾಸ್ ಕೂಡಾ ಉಪಸ್ಥಿತರಿದ್ದರು. ಪೆಟ್ರೋಲಿಯಂ ಉತ್ಪನ್ನಗಳು ಸೇರಿದಂತೆ ಎಲ್ಲಾ ಅತ್ಯಗತ್ಯ ವಸ್ತುಗಳ ಅಬಾಧಿತವಾಗಿ ಪೂರೈಕೆಯಾಗುವಂತೆ ಮಾಡಲು ಕೇಂದ್ರ ಸರಕಾರವು ಸಕ್ರಿಯ ಕ್ರಮಗಳನ್ನು ಕೈಗೊಳ್ಳುತ್ತಿದೆಯೆಂದು ಮೂಲಗಳು ತಿಳಿಸಿವೆ. ಪಶ್ಚಿಮ ಏಶ್ಯ ಸಂಘರ್ಷದ ಪರಿಣಾಮವಾಗಿ ಉದ್ಙವಿಸಿರುವ ಜಾಗತಿಕ ಪರಿಸ್ಥಿತಿ, ಗ್ರಾಹಕರು ಹಾಗೂ ಕೈಗಾರಿಕಾ ಹಿತಾಸಕ್ತಿಗಳನ್ನು ರಕ್ಷಿಸಲು ಕೈಗೊಳ್ಳಲಾದ ಕ್ರಮಗಳ ಬಗ್ಗೆ ಸಭೆಯಲ್ಲಿ ಅವಲೋಕನ ನಡೆಸಲಾಯಿತು. ಪಶ್ಚಿಮ ಏಶ್ಯಾ ಯುದ್ಧವು ಜಾಗತಿಕಮಟ್ಟದಲ್ಲಿ ಇಂಧನ ಬಿಕ್ಕಟ್ಟನ್ನು ಸೃಷ್ಟಿಸಿದ್ದು, ಶಾಂತಿ, ತಾಳ್ಮೆ ಹಾಗೂ ಸಾರ್ವಜನಿಕ ಜಾಗೃತಿಯ ಮೂಲಕ ಪರಿಸ್ಥಿತಿಯನ್ನು ನಿಭಾಯಿಸುವ ನಿಟ್ಟಿನಲ್ಲಿ ನಿರ್ಣಾಯಕ ಸತ್ವಪರೀಕ್ಷೆಯನ್ನು ಒಡ್ಡಿದೆ ಎಂದು ಮೋದಿ ಮಾರ್ಚ್ 12ರಂದು ಹೇಳಿದ್ದರು. ಫೆಬ್ರವರಿ 28ರಂದು ಇರಾನ್ ಮೇಲೆ ಅಮೆರಿಕ ಹಾಗೂ ಇಸ್ರೇಲ್ ದಾಳಿ ನಡೆಸಿದ ಪರಿಣಾಮವಾಗಿ ಪಶ್ಚಿಮ ಏಶ್ಯಾ ಸಂಘರ್ಷ ಆರಂಭವಾದಾಗಿನಿಂದ ಪ್ರಧಾನಿ ನರೇಂದ್ರ ಮೋದಿಯವರು ಹಲವಾರು ಜಾಗತಿಕ ನಾಯಕರ ಜೊತೆ ಮಾತುಕತೆ ನಡೆಸಿದ್ದಾರೆ. ಜಗತ್ತಿನ ಒಟ್ಟು ಇಂಧನ ಸಾಗಣೆಯ ಶೇ.20ರಷ್ಟನ್ನು ಹಾರ್ಮುಝ್ ಜಲಸಂಧಿ ನಿಯಂತ್ರಿಸುತ್ತಿದೆ. ಈ ಸಂಘರ್ಷ ಆರಂಭಗೊಂಡಾಗಿನಿಂದ ಕೆಲವೇ ಕೆಲವು ಹಡಗುಗಳು ಹಾರ್ಮುಝ್ ಜಲಸಂಧಿ ಮೂಲಕ ಹಾದುಹೋಗುವುದಕ್ಕೆ ಇರಾನ್ ಅವಕಾಶ ನೀಡಿತ್ತು. ಹಾರ್ಮುಝ್ ಜಲಸಂಧಿಯಲ್ಲಿ ಹಡಗುಗಳ ಸಂಚಾರಕ್ಕೆ ಇರಾನ್ ವಿಧಿಸಿದ ನಿರ್ಬಂಧದ ಪರಿಣಾಮವಾಗಿ ಭಾರತ ಸೇರಿದಂತೆ ಹಲವಾರು ರಾಷ್ಟ್ರಗಳಲ್ಲಿ ಇಂಧನ ಪೂರೈಕೆಯಲ್ಲಿ ವ್ಯತ್ಯಯವುಂಟಾಗಿದೆ. ಪಶ್ಚಿಮ ಏಶ್ಯಾ ಯುದ್ಧ ಆರಂಭಗೊಂಡಾಗಿನಿಂದ ಪ್ರಧಾನಿ ಮೋದಿಯವರು ಸೌದಿ ಆರೇಬಿಯ, ಯುಎಇ, ಖತರ್, ಬಹರೈನ್, ಕುವೈತ್ , ಜೋರ್ಡಾನ್, ಫ್ರಾನ್ಸ್, ಮಲೇಶ್ಯ, ಇಸ್ರೇಲ್ ಹಾಗೂ ಇರಾನ್ ದೇಶಗಳ ನಾಯಕರ ಜೊತೆ ದೂರವಾಣಿ ಸಂಭಾಷಣೆಗಳನ್ನು ನಡೆಸಿದ್ದಾರೆ.
ಚತ್ತೀಸ್ ಗಢ | ʼರೋಪ್ ವೇ ಟ್ರಾಲಿʼ ಪತನ: ಮಹಿಳೆ ಸಾವು, 7 ಮಂದಿಗೆ ಗಾಯ
ಮಹಾಸಮುಂದ್: ಚತ್ತೀಸ್ಗಢದ ಮಹಾಸಮುಂದ್ ಜಿಲ್ಲೆಯ ಬೆಟ್ಟದ ಮೇಲಿರುವ ದೇವಾಲಯವೊಂದರಿಂದ ರವಿವಾರ ಕೆಳಗೆ ಇಳಿಯುತ್ತಿದ್ದ ರೋಪ್ವೇ ಟ್ರಾಲಿ ಪತನಗೊಂಡು ಅದರಲ್ಲಿದ್ದ ಓರ್ವ ಮಹಿಳೆ ಸಾವನ್ನಪ್ಪಿದ್ದಾರೆ ಹಾಗೂ ಇತರ 7 ಮಂದಿ ಗಾಯಗೊಂಡಿದ್ದಾರೆ. ಬೆಳಗ್ಗೆ ಸರಿ ಸುಮಾರು 10 ಗಂಟೆಗೆ ಈ ಘಟನೆ ಸಂಭವಿಸಿದೆ. ಬೆಟ್ಟದ ಮೇಲಿರುವ ಖಲ್ಲರಿ ಮಾತಾ ದೇವಾಲಯದಿಂದ ಕೆಳಗೆ ಇಳಿಯುತ್ತಿದ್ದ ಟ್ರಾಲಿಯ ಕೇಬಲ್ ತುಂಡಾಗಿ ಅಪಘಾತ ಸಂಭವಿಸಿದೆ. ಈ ಸಂದರ್ಭ ಟ್ರಾಲಿಯಲ್ಲಿ 8 ಮಂದಿ ಇದ್ದರು ಎಂದು ಜಿಲ್ಲಾಡಳಿತದ ಅಧಿಕಾರಿಗಳು ತಿಳಿಸಿದ್ದಾರೆ. ಬಾಗಾಬಹ್ರಾ ಪ್ರದೇಶದಲ್ಲಿರುವ ಖಲ್ಲಾರಿ ಗ್ರಾಮದ ಬೆಟ್ಟದಲ್ಲಿರುವ ಖಲ್ಲಾರಿ ಮಾತಾ ದೇವಾಲಯದಲ್ಲಿ ನವರಾತ್ರಿ ಉತ್ಸವ ನಡೆಯುತ್ತಿದ್ದು, ಈ ಹಿನ್ನೆಲೆಯಲ್ಲಿ ಪ್ರಾರ್ಥನೆ ಸಲ್ಲಿಸಲು ಅವರು ಇಲ್ಲಿಗೆ ಆಗಮಿಸಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಘಟನೆಯಲ್ಲಿ ಮೃತಪಟ್ಟ ಮಹಿಳೆಯನ್ನು ರಾಯಪುರದ ಆಯುಷಿ ಸತ್ಕಾರ್ (28) ಎಂದು ಗುರುತಿಸಲಾಗಿದೆ. ಗಾಯಗೊಂಡ ಇತರ 7 ಮಂದಿಯನ್ನು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ ಎಂದು ಅವರು ಹೇಳಿದ್ದಾರೆ. ಘಟನೆಯ ಕುರಿತು ತನಿಖೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Bengaluru | ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಯುವಕನ ಹತ್ಯೆ
ಬೆಂಗಳೂರು : ಯುವಕನನ್ನು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಹತ್ಯೆ ಮಾಡಿರುವ ಘಟನೆ ಇಲ್ಲಿನ ರಾಮಮೂರ್ತಿನಗರ ಪೊಲೀಸ್ ಠಾಣೆ ವ್ಯಾಪ್ತಿಯ ಟಿ.ಸಿ.ಪಾಳ್ಯ ಮುಖ್ಯರಸ್ತೆಯಲ್ಲಿ ರವಿವಾರ ನಡೆದಿದೆ. ಕಿರಣ್(25) ಹತ್ಯೆಯಾದ ಯುವಕ ಎಂದು ಗುರುತಿಸಲಾಗಿದೆ. ಬೆಂಗಳೂರಿನ ಕೆ.ಆರ್.ಪುರಂ ನಿವಾಸಿಯಾಗಿದ್ದ ಕಿರಣ್, ಆಟೋ ಚಾಲಕನಾಗಿದ್ದ. ರವಿವಾರ ಮುಂಜಾನೆ ಸುಮಾರು 4:30ರ ಸುಮಾರಿಗೆ ಮತ್ತೊಂದು ಆಟೋದಲ್ಲಿ ಬಂದ ಆರೋಪಿಗಳು, ಟಿ.ಸಿ.ಪಾಳ್ಯ ಮುಖ್ಯ ರಸ್ತೆಯಲ್ಲಿ ಕಿರಣ್ ಮೇಲೆ ಏಕಾಏಕಿ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದಾರೆ. ತಲೆಗೆ ಗಂಭೀರವಾಗಿ ಪೆಟ್ಟು ಬಿದ್ದು ಕಿರಣ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಅಪರಾಧದ ಹಿನ್ನೆಲೆ ಹೊಂದಿದ್ದ ಕಿರಣ್ ಮೇಲೆ ಕೆ.ಆರ್.ಪುರಂ ಪೊಲೀಸ್ ಠಾಣೆಯಲ್ಲಿ ಹಲವು ಕ್ರಿಮಿನಲ್ ಪ್ರಕರಣಗಳು ದಾಖಲಾಗಿದ್ದವು ಎನ್ನಲಾಗಿದೆ. ಕುಡಿದು ಗಲಾಟೆ ಮಾಡುತ್ತಿದ್ದ ಪ್ರಕರಣಗಳೇ ಹೆಚ್ಚಾಗಿದ್ದು, ಶನಿವಾರ ರಾತ್ರಿಯೂ ಯಾವುದೋ ವಿಚಾರಕ್ಕೆ ಗಲಾಟೆ ನಡೆದಿತ್ತು ಎಂದು ತಿಳಿದು ಬಂದಿದೆ. ಈ ಘಟನಾ ಸ್ಥಳಕ್ಕೆ ರಾಮಮೂರ್ತಿನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ತಲೆಮರೆಸಿಕೊಂಡಿರುವ ಆರೋಪಿಗಳ ಪತ್ತೆಗಾಗಿ 2 ವಿಶೇಷ ತಂಡಗಳನ್ನು ರಚಿಸಲಾಗಿದ್ದು, ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಹುಡುಕಾಟ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಕೃತಿಯ ಸಂರಕ್ಷಣೆಗೆ ಕೊಡುಗೆ ನೀಡುತ್ತಿರುವ ಜೀವಿಗಳ ರಕ್ಷಣೆ ನಮ್ಮ ಹೊಣೆಗಾರಿಕೆ: ಡಾ.ಆರ್.ಕೆ. ನಾಯರ್
ಡಾ.ಆರ್.ಕೆ. ನಾಯರ್ಗೆ ರೋಟರಿ ವಂದನಾ ಪ್ರಶಸ್ತಿ ಪ್ರದಾನ
ಸರಕಾರಿ ಅಧಿಕಾರಿ ಆತ್ಮಹತ್ಯೆ ಪ್ರಕರಣ : ಪಂಜಾಬ್ ನ ಮಾಜಿ ಸಚಿವ ಲಾಲ್ಜಿತ್ ಭುಲ್ಲರ್ ಸಹಿತ ಮೂವರ ವಿರುದ್ಧ ಪ್ರಕರಣ ದಾಖಲು
ಚಂಡಿಗಢ: ಅಮೃತಸರದಲ್ಲಿ ರಾಜ್ಯ ಗೋದಾಮು ಅಧಿಕಾರಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಪಂಜಾಬ್ ನ ಮಾಜಿ ಸಚಿವ ಲಾಲ್ಜಿತ್ ಸಿಂಗ್ ಭುಲ್ಲರ್ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಪಂಜಾಬ್ ರಾಜ್ಯ ಗೋದಾಮು ನಿಗಮದ ಜಿಲ್ಲಾ ಮ್ಯಾನೇಜರ್ ಗಗನ್ ದೀಪ್ ಸಿಂಗ್ ರಾಂಧವ ಅವರು ಶನಿವಾರ ಆತ್ಮಹತ್ಯೆ ಮಾಡಿಕೊಂಡಿದ್ದರು. ಅವರ ಪತ್ನಿ ಉಪಿಂದರ್ ಕೌರ್ ನೀಡಿದ ದೂರಿನ ಆಧಾರದಲ್ಲಿ ಅದೇ ದಿನ ರಾತ್ರಿ ರಂಜಿತ್ ಅವೆನ್ಯೂ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ. ಭುಲ್ಲರ್ ಅವರೊಂದಿಗೆ ಅವರ ತಂದೆ ಸುಖ್ದೇವ್ ಸಿಂಗ್ ಭುಲ್ಲರ್ ಹಾಗೂ ಆಪ್ತ ಕಾರ್ಯದರ್ಶಿ ದಿಲ್ಬಾಗ್ ಸಿಂಗ್ ಅವರನ್ನು ಕೂಡ ಪ್ರಕರಣದಲ್ಲಿ ಹೆಸರಿಸಲಾಗಿದೆ. ನಿಷ್ಪಕ್ಷಪಾತ ತನಿಖೆ ನಡೆಸುವ ಖಾತರಿ ನೀಡಲು ರಾಜೀನಾಮೆ ನೀಡುವಂತೆ ಮುಖ್ಯಮಂತ್ರಿ ಭಗವಂತ್ ಮಾನ್ ಅವರು ಭುಲ್ಲರ್ ಅವರಿಗೆ ಸೂಚಿಸಿದ ಗಂಟೆಗಳ ಬಳಿಕ ಈ ಬೆಳವಣಿಗೆ ನಡೆದಿದೆ. ಮಾನ್ ಅವರು ಸೂಚಿಸಿದ ಬಳಿಕ ಸಾರಿಗೆ ಹಾಗೂ ಬಂಧಿಖಾನೆ ಖಾತೆಯನ್ನು ನಿರ್ವಹಿಸುತ್ತಿದ್ದ ಭುಲ್ಲರ್ ರಾಜೀನಾಮೆ ನೀಡಿದ್ದರು. ಮೂವರಿಂದ ನಿರಂತರ ಕಿರುಕುಳ, ಹಲ್ಲೆ, ಮಾನಸಿಕ ಹಿಂಸೆ ತನ್ನ ಪತಿ ಆತ್ಮಹತ್ಯೆ ಮಾಡಿಕೊಳ್ಳಲು ಕಾರಣ ಎಂದು ಕೌರ್ ದೂರಿನಲ್ಲಿ ಆರೋಪಿಸಿದ್ದಾರೆ. ಆರೋಪಿ ತನ್ನ ಪತಿಗೆ ಹಲ್ಲೆ ನಡೆಸಿದ್ದಾನೆ ಹಾಗೂ ಪಿಸ್ತೂಲಿನಿಂದ ಹೊಡೆದಿದ್ದಾನೆ ಎಂದು ಅವರು ಪತ್ನಿ ಆರೋಪಿಸಿದ್ದಾರೆ. ಗೋದಾಮಿನ ಟೆಂಡರ್ ಗಳ ಮಂಜೂರಾತಿ ಕುರಿತಂತೆ ತನ್ನ ಪತಿ ಹಲವು ತಿಂಗಳುಗಳಿಂದ ತೀವ್ರ ಒತ್ತಡದಲ್ಲಿದ್ದರು. ಟೆಂಡರ್ ಪ್ರಕ್ರಿಯೆಯಲ್ಲಿ ತಮಗೆ ಅನುಕೂಲ ಮಾಡಿಕೊಡುವಂತೆ ಆರೋಪಿಗಳು ರಾಂಧವ ಅವರನ್ನು ಪದೇ ಪದೇ ಬಲವಂತಪಡಿಸಿದ್ದರು ಎಂದು ಕೌರ್ ಆರೋಪಿಸಿದ್ದಾರೆ.
55 ಮಂದಿ ಫಲಾನುಭವಿಗಳಿಗೆ ಉಪಕರಣಗಳ ಕಿಟ್ ವಿತರಣೆ
ಉಡುಪಿ, ಮಾ.22: 2025-26ನೇ ಸಾಲಿನ ವೃತ್ತಿಪರ ಕುಶಲಕರ್ಮಿಗಳಿಗೆ ಉಚಿತ ಸುಧಾರಿತ ಉಪಕರಣ ಪೂರೈಕೆ ಯೋಜನೆಯಡಿ ಆಯ್ಕೆಯಾದ 55 ಮಂದಿ ಫಲಾನುಭವಿಗಳಿಗೆ ಟೈಲರಿಂಗ್ ಮಿಷನ್, ಮರಗೆಲಸ, ಗಾರೆ ಕೆಲಸ, ಎಲೆಕ್ಟ್ರಿಷಿಯನ್, ಬ್ಯೂಟಿಪಾರ್ಲರ್ ಕಿಟ್ಗಳನ್ನು ವಿತರಿಸಲಾಯಿತು. ಉಡುಪಿ ಶಾಸಕ ಯಶ್ಪಾಲ್ ಸುವರ್ಣ ತಮ್ಮ ಕಚೇರಿಯಲ್ಲಿ ಕಿಟ್ ಗಳನ್ನು ವಿತರಿಸಿ ಮಾತನಾಡಿ, ಈ ಯೋಜನೆ ಗಳ ಮೂಲಕ ಆಯಾ ವೃತ್ತಿಯಲ್ಲಿ ತೊಡಗಿರುವವರಿಗೆ ಅಗತ್ಯವಾದ ಕಿಟ್ಗಳನ್ನು ನೀಡಲಾಗಿದ್ದು, ಇದರಿಂದ ಜನರ ಉದ್ಯೋಗದಲ್ಲಿ ಸ್ಥಿರತೆ ಹಾಗೂ ಆದಾಯ ಹೆಚ್ಚಳಕ್ಕೆ ಸಹಾಯವಾಗಲಿದೆ. ಹಲವರು ತಮ್ಮ ಜೀವನೋಪಾಯವನ್ನು ಸುಧಾರಿಸಿ ಕೊಳ್ಳಲು ಈ ಯೋಜನೆಗಳ ನೆರವು ಪ್ರಮುಖವಾಗಲಿದೆ. ಸ್ವಯಂ ಉದ್ಯೋಗಕ್ಕೆ ಉತ್ತೇಜನ ನೀಡುವ ಉದ್ದೇಶದಿಂದ ಇಂತಹ ಯೋಜನೆಗಳನ್ನು ಸರಕಾರ ಜಾರಿಗೆ ತಂದಿದ್ದು ಜನರು ಈ ಮೂಲಕ ಸ್ವಾವಲಂಬಿ ಜೀವನ ನಡೆಸಬೇಕು ಎಂದರು. ಇದೇ ಸಂದರ್ಭದಲ್ಲಿ, ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯಿಂದ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಮೂಲಕ ಕೃಷ್ಣ ಪೂಜಾರಿ ಅವರಿಗೆ ಕೃತಕ ಕಾಲು ವಿತರಿಸಲಾಯಿತು. ಗ್ರಾಮಾಂತರ ಕೈಗಾರಿಕಾ ಕೇಂದ್ರದ ಉಪ ನಿರ್ದೇಶಕ ಜಿ.ವಾಮನ ನಾಯಕ್, ಹಂದಾಡಿ ಗ್ರಾಪಂ ಮಾಜಿ ಅಧ್ಯಕ್ಷೆ ಶೋಭಾ, ಲಲಿತಾ ಬಾಯಿ ನಿವೃತ್ತ ಶಿಕ್ಷಕರು, ಕೆಂಜೂರು ಶಾಲೆಯ ಮುಖ್ಯ ಶಿಕ್ಷಕರಾದ ಕೆ.ಶಾಂತಾರಾಮ ಶೆಟ್ಟಿ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
ಯಕ್ಷಗಾನ ಕಲಾರಂಗದ 91ನೆಯ ಮನೆ ಹಸ್ತಾಂತರ
ಕುಂದಾಪುರ, ಮಾ.22: ಯಕ್ಷಗಾನ ಕಲಾರಂಗ ವಿದ್ಯಾಪೋಷಕ್ನ ಪ್ರಥಮ ಪಿಯುಸಿಯ ವಿದ್ಯಾರ್ಥಿ ನಿಖಿಲ್ ಎಸ್. ಅವರಿಗೆ ಕುಂದಾಪುರ ತಾಲೂಕಿನ ಜಪ್ತಿಯಲ್ಲಿ ಪಾಂಡೇಶ್ವರ ಮಂಜುನಾಥ ಹೊಳ್ಳ ಅವರ ಸ್ಮರಣಾರ್ಥ ಹಾಗೂ ಸರಸ್ವತಿ ಹೊಳ್ಳರ ಗೌರವಾರ್ಥ, ಅವರ ಪುತ್ರಿಯರ ಪ್ರಾಯೋಜಕತ್ವದಲ್ಲಿ 7 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿದ ನೂತನ ಮನೆ ಮಂಜುನಾಥ ನಿಲಯ’ವನ್ನು ಶನಿವಾರ ಹಸ್ತಾಂತರಿಸಲಾಯಿತು. ನೂತನ ಮನೆಯನ್ನು ಸರಸ್ವತಿ ಹೊಳ್ಳ ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ ವಹಿಸಿದ್ದರು. ಶಿವಮೊಗ್ಗದ ಮಾಜಿ ರೋಟರಿ ಗವರ್ನರ್ ಡಾ.ಪಿ.ನಾರಾಯಣ, ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಮಾತನಾಡಿದರು. ಡಾ.ಗೀತಾ ಸಾಮಕ್, ಉಷಾ ಎನ್.ಹೆಬ್ಬಾರ್, ಡಾ.ಗಣೇಶ್ ಮಧ್ಯಸ್ಥ, ಕಿಶೋರ್ ಶೆಟ್ಟಿ, ಸಂಧ್ಯಾ ಶರ್ಮಾ, ರೇಖಾ ಮಕ್ಕಿತ್ತಾಯ, ಡಾ.ತಾರಾ ಕಾರಂತ್, ಡಾ.ಎಸ್.ಜಿ.ಸಾಮಕ್, ನಾಗರಾಜ ಹೆಬ್ಬಾರ್, ಅರವಿಂದ ಶರ್ಮಾ, ಡಾ.ಕೃಷ್ಣ ಮೂರ್ತಿ ಮಕ್ಕಿತ್ತಾಯ, ಡಾ.ಕೃಷ್ಣ ಕಿರಣ್ ಕಾರಂತ್, ಯಶೋದಾ ಹೊಳ್ಳ, ಸಂಸ್ಥೆಯ ಸದಸ್ಯರಾದ ಯು.ಎಸ್. ರಾಜಗೋಪಾಲ ಆಚಾರ್ಯ, ಭುವನಪ್ರಸಾದ ಹೆಗ್ಡೆ, ಅನಂತರಾಜ ಉಪಾಧ್ಯಾಯ, ಜಯರಾಮ ಪಡಿಯಾರ್, ರಾಮಚಂದ್ರ ಅಡಿಗ, ನಾಗರಾಜ ಹೆಗಡೆ, ಬಿದ್ಕಲ್ ಕಟ್ಟೆ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಕರುಣಾಕರ ಶೆಟ್ಟಿ ಉಪಸ್ಥಿತರಿದ್ದರು. ಕಲಾರಂಗದ ಅಧ್ಯಕ್ಷ ಎಂ.ಗಂಗಾಧರ ರಾವ್ ಸ್ವಾಗತಿಸಿದರು. ನಾರಾಯಣ ಎಂ.ಹೆಗಡೆ ವಂದಿಸಿದರು. ಕಾರ್ಯದರ್ಶಿ ಮುರಲಿ ಕಡೆಕಾರ್ ಪ್ರಾಸ್ತಾವಿಕ ವಾಗಿ ಮಾತನಾಡಿ ಕಾರ್ಯಕ್ರಮ ನಿರೂಪಿಸಿದರು.
ಶಾಮನೂರು ಶಿವಶಂಕರಪ್ಪ ನನ್ನ ರಾಜಕೀಯ ಗುರು; ದಾವಣಗೆರೆ ಕಾಂಗ್ರೆಸ್ ಬಂಡಾಯ ಸ್ಪರ್ಧೆ ಖಚಿತ ಎಂದ ಸಾಧಿಕ್ ಪೈಲ್ವಾನ್!
ದಾವಣಗೆರೆ ದಕ್ಷಿಣ ಉಪ ಚುನಾವಣೆಯಲ್ಲಿ ಕಾಂಗ್ರೆಸ್ನಲ್ಲಿ ಈ ಬಂಡಾಯವು ದೊಡ್ಡ ಸಂಚಲನ ಮೂಡಿಸಿದೆ. ಸಾದಿಕ್ ಪೈಲ್ವಾನ್ ಅವರು ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುವೆ ಎಂದಿದ್ದಾರೆ. ಇನ್ನೊಂದೆಡೆ ಮುಸ್ಲಿಂ ಸಮುದಾಯದ ಯುವಕರು ನಗರದಲ್ಲಿ ಭಾನುವಾರ ಪ್ರತಿಭಟನೆ ನಡೆಸಿದ್ದಾರೆ. ಚುನಾವಣೆಯಲ್ಲಿ ಕಾಂಗ್ರೆಸ್ನ ಸಾಂಪ್ರದಾಯಿಕ ಮುಸ್ಲಿಂ ಮತಗಳು ವಿಭಜನೆಯಾಗುವ ಸಾಧ್ಯತೆ ಹೆಚ್ಚಿದೆ. ಇದು ಚುನಾವಣೆಯ ಫಲಿತಾಂಶದ ಮೇಲೆ ನೇರ ಪರಿಣಾಮ ಬೀರಬಹುದು.
ಬೆಳಗಿನ ಜಾವ ಎರಡು ಗಂಟೆಗಳನ್ನು ಹೇಗೆ ಕಳೆಯಬೇಕು? ಪೌಷ್ಠಿಕ ತಜ್ಞೆಯ ಸಲಹೆಗಳೇನು?
ಪೋಸ್ಟ್ನಲ್ಲಿ ಪೌಷ್ಠಿಕ ತಜ್ಞೆ ದೀಪ್ಸಿಖಾ ಜೈನ್ ಬೆಳಗ್ಗೆ ಎಚ್ಚರವಾದ ಮೇಲೆ ಮೊದಲ ಎರಡು ಗಂಟೆಗಳನ್ನು ಹೇಗೆ ಕಳೆಯುವುದು ಎಂದು ವಿವರಿಸಿದ್ದಾರೆ. ಬೆಳಗಿನ ಜಾವ ಬೇಗನೇ ಏಳುವುದು ಅತ್ಯಗತ್ಯ. ನಿಮ್ಮ ಹವ್ಯಾಸಗಳು ಮತ್ತು ಎದ್ದ ತಕ್ಷಣ ಏನು ಸೇವಿಸುತ್ತೀರಿ ಎನ್ನುವುದರ ಮೇಲೆ ನಿಮ್ಮ ಇಡೀ ದಿನ ಹೇಗೆ ಸಾಗುತ್ತದೆ ಎನ್ನುವುದು ಅವಲಂಬಿಸಿದೆ. ಮಾರ್ಚ್ 21ರ ಇನ್ಸ್ಟಾಗ್ರಾಂ ಪೋಸ್ಟ್ನಲ್ಲಿ ಪೌಷ್ಠಿಕ ತಜ್ಞೆ ದೀಪ್ಸಿಖಾ ಜೈನ್ ಅವರು ದಿನದ ಮೊದಲ ಎರಡು ಗಂಟೆಗಳಲ್ಲಿ ದೈಹಿಕ ಶಕ್ತಿ ಮತ್ತು ಮಾನಸಿಕ ಸ್ಪಷ್ಟತೆ ಹೆಚ್ಚಿಸಲು ವಿನ್ಯಾಸಗೊಳಿಸಲಾದ ಬೆಳಗಿನ ದಿನಚರಿಯನ್ನು ವಿವರಿಸಿದ್ದಾರೆ. “ನನಗೆ 60 ಸೆಕೆಂಡುಗಳನ್ನು ನೀಡಿ. ನೀವು ದಿನದ ಮೊದಲ ಎರಡು ಗಂಟೆಗಳನ್ನು ಹೇಗೆ ಕಳೆಯಬೇಕು ಎನ್ನುವುದನ್ನು ನಿಮಗೆ ತಿಳಿಸುತ್ತೇನೆ. ಹೀಗೆ ಬೆಳಗಿನ ಎರಡು ಗಂಟೆಗಳನ್ನು ಕಳೆದರೆ ಇಡೀ ದಿನ ಕಳೆಯಲು ನಿಮಗೆ ಶಕ್ತಿ ಇರುತ್ತದೆ” ಎಂದು ದೀಪ್ಸಿಖಾ ಹೇಳಿದ್ದಾರೆ. ನಂತರ ತಮ್ಮ ಪೋಸ್ಟ್ನಲ್ಲಿ ಅವರು ಬೆಳಗ್ಗೆ ಎಚ್ಚರವಾದ ಮೇಲೆ ಮೊದಲ ಎರಡು ಗಂಟೆಗಳನ್ನು ಹೇಗೆ ಕಳೆಯುವುದು ಎಂದು ವಿವರಿಸಿದ್ದಾರೆ. ಎಚ್ಚರಗೊಳ್ಳುವ ಸಮಯ ಸ್ಥಿರವಾಗಿಡುವುದು, ನೀರು ಕುಡಿಯುವುದು, ಸೂರ್ಯನ ಬೆಳಕಿಗೆ ಒಡ್ಡುವುದು ಮತ್ತು ವ್ಯಾಯಾಮದ ದಿನಚರಿಯನ್ನು ಅವರು ಸೂಚಿಸಿದ್ದಾರೆ. ದೀಪ್ಸಿಖಾ ಹೇಳಿರುವ ಬೆಳಗಿನ ವೇಳಾಪಟ್ಟಿ ಹೀಗಿದೆ, ಬೆಳಗ್ಗೆ 7:00: ಎಚ್ಚರವಾಗಿ. ನಿತ್ಯವೂ ಇದೇ ಸಮಯಕ್ಕೆ ಏಳುವುದನ್ನು ಖಚಿತಪಡಿಸಿಕೊಳ್ಳಿ. ಬೆಳಗ್ಗೆ 7:10: ಸ್ವಲ್ಪ ನೀರು ಕುಡಿಯಿರಿ. ನೀರು ಕುಡಿಯುವುದರಿಂದ ನಿಮ್ಮ ದೇಹ ಮತ್ತು ಮೈಕ್ರೋಬ್ಗಳು ನಿಜವಾಗಿಯೂ ಎಚ್ಚರಗೊಳ್ಳಲು ನೆರವಾಗುತ್ತದೆ. ಮಾತ್ರವಲ್ಲದೆ ಕರುಳಿನ ಚಲನೆ ಮತ್ತು ಜೀರ್ಣಕ್ರಿಯೆಯನ್ನೂ ಸುಧಾರಿಸುತ್ತದೆ. ಬೆಳಗ್ಗೆ 7:15: ಇದು ಬೆಳಗಿನ ಬಹಳ ಶಕ್ತಿಯುತ ಸಮಯ. ಸೂರ್ಯನ ಅಡಿಯಲ್ಲಿ ಕುಳಿತಿರುವುದನ್ನು ಖಚಿತಪಡಿಸಿ. ಅದರಿಂದ ಕಾರ್ಟಿಸೋಲ್ ಮಟ್ಟ ಏರುತ್ತದೆ. ಇಡೀ ದಿನ ಕಳೆಯಲು ಹೆಚ್ಚು ಶಕ್ತಿ ಬಂದಿರುವ ಭಾವನೆ ಬರಲಿದೆ. ಬೆಳಗ್ಗೆ 7:30: ನಂತರ ಕಾಫಿ ಕುಡಿಯುತ್ತೀರಿ. ಇದರಿಂದ ಉತ್ತಮ ಕಾರ್ಟಿಸಾಲ್ ಮಟ್ಟವನ್ನು ಕಾಪಾಡುತ್ತದೆ ಮತ್ತು ಸಂಪೂರ್ಣ ಎಚ್ಚರಗೊಳ್ಳಲು ನೆರವಾಗುತ್ತದೆ. ಬೆಳಗ್ಗೆ 7:45: ಹೊರಾಂಗಣ ವ್ಯಾಯಾಮಕ್ಕೆ ಹೋಗಿ. ಬೆಳಗಿನ ವ್ಯಾಯಾಮ ಮತ್ತು ಚಲನೆ ಬಹಳ ಮುಖ್ಯವಾಗುತ್ತದೆ. ಬೆಳಗ್ಗೆ 8:45: ಒಂದು ಗಂಟೆಯ ವ್ಯಾಯಾಮದ ಬಳಿಕ ನೀವು ಮನೆಗೆ ಮರಳಬಹುದು ಮತ್ತು ಉಸಿರಾಟದ ಕೆಲಸ ಮತ್ತು ಧ್ಯಾನ ಮಾಡಬಹುದು. ಇದರಿಂದ ನಿಮ್ಮ ನರವ್ಯೂಹದ ವ್ಯವಸ್ಥೆ ನಿಯಂತ್ರಣಕ್ಕೆ ಬರುತ್ತದೆ. ಬೆಳಗ್ಗೆ 9:00: ನೀವು ಉಪಹಾರ ಸೇವಿಸುವಿರಿ. ಅದರಲ್ಲಿ ಸಾಧಾರಣ ಫೈಬರ್ ಮತ್ತು ಅಧಿಕ ಪ್ರೊಟೀನ್ ಅಂಶ ಇರಬೇಕು. ದೇಹದ ಸಕ್ಕರೆ ಪ್ರಮಾಣವನ್ನು ಸಮತೋಲನಗೊಳಿಸುವುದು ಮುಖ್ಯವಾಗುತ್ತದೆ. ವಾಸ್ತವದಲ್ಲಿ ಇಂತಹ ಆಹಾರದಿಂದ ದೇಹದಲ್ಲಿನ ಕೊಬ್ಬಿನಂಶವನ್ನೂ ನಿಯಂತ್ರಿಸಬಹುದು. ಕೃಪೆ: hindustantimes.com
ಹೊಸಪೇಟೆ | ಕರ್ತವ್ಯದಲ್ಲಿದ್ದಾಗಲೇ ಕುಸಿದು ಬಿದ್ದು ಗ್ರಾ.ಪಂ ಸಿಬ್ಬಂದಿ ಮೃತ್ಯು
ವಿಜಯನಗರ/ಹೊಸಪೇಟೆ: ತಾಲೂಕಿನ ಸೀತಾರಾಮ ತಾಂಡಾ ಗ್ರಾಮ ಪಂಚಾಯಿತಿಯಲ್ಲಿ ನೀರಗಂಟಿಯಾಗಿ ಸೇವೆ ಸಲ್ಲಿಸುತ್ತಿದ್ದ ಗಂಗಪ್ಪ ಎಲ್ (58) ಅವರು ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಅಸ್ವಸ್ಥಗೊಂಡು ಮೃತಪಟ್ಟ ಘಟನೆ ನಡೆದಿದೆ. ಗಂಗಪ್ಪ ಅವರು ಕಳೆದ 29 ವರ್ಷಗಳಿಂದ ಗ್ರಾಮ ಪಂಚಾಯಿತಿಯಲ್ಲಿ ನೀರಗಂಟಿಯಾಗಿ ಸೇವೆ ಸಲ್ಲಿಸುತ್ತಿದ್ದರು. ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಪಡೆದು ಚೇತರಿಸಿಕೊಂಡ ಬಳಿಕ ಮತ್ತೆ ಕರ್ತವ್ಯಕ್ಕೆ ಹಾಜರಾಗಿದ್ದರು. ಆದರೆ ಕೆಲಸ ನಿರ್ವಹಿಸುತ್ತಿದ್ದ ವೇಳೆ ಏಕಾಏಕಿ ಕುಸಿದು ಬಿದ್ದ ಅವರನ್ನು ತಕ್ಷಣ ಹೊಸಪೇಟೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು. ನಂತರ ಹೆಚ್ಚಿನ ಚಿಕಿತ್ಸೆಗೆ ಕೊಪ್ಪಳದ ಕಿಮ್ಸ್ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ. ಈ ಕುರಿತು ಕಮಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
ವಾಣಿಜ್ಯ ಅನಿಲ ಕೊರತೆ: ಕ್ಯಾಟರಿಂಗ್ ಮಾಲಕರಿಂದ ಉಡುಪಿ ಡಿಸಿಗೆ ಮನವಿ
ಉಡುಪಿ, ಮಾ.22: ಪ್ರಸ್ತುತ ಮಾರುಕಟ್ಟೆಯಲ್ಲಿ ಉಂಟಾಗಿರುವ ವಾಣಿಜ್ಯ ಅನಿಲ ಕೊರತೆಯನ್ನು ನೀಗಿಸುವಂತೆ ಒತ್ತಾಯಿಸಿ ಉಡುಪಿ ಜಿಲ್ಲಾ ಕ್ಯಾಟರಿಂಗ್ ಮಾಲಕರ ಸಂಘದ ನಿಯೋಗ ಶನಿವಾರ ಉಡುಪಿ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಅವರಿಗೆ ಮನವಿ ಸಲ್ಲಿಸಿತು. ಸಂಘದ ನೋಂದಾಯಿತ ಸದಸ್ಯರಿಗೆ(ಮಾಲಕರಿಗೆ) ಶೀಘ್ರದಲ್ಲಿ ಗ್ಯಾಸ್ ಪೂರೈಕೆ ಮಾಡುವಂತೆ ಒತ್ತಾಯಿಸಲಾ ಯಿತು. ಮನವಿಯೊಂದಿಗೆ ಸಂಘದ ನೋಂದಾಯಿತ ಮಾಲಕರ ಪಟ್ಟಿಯ ಪ್ರತಿಯನ್ನು ಹಸ್ತಾಂತರಿಸಲಾಯಿತು. ಕ್ಯಾಟರಿಂಗ್ ಉದ್ದಿಮೆದಾರರಿಗೆ ಆದ್ಯತೆಯ ಮೇರೆಗೆ ಗ್ಯಾಸ್ ಪೂರೈಕೆ ಮಾಡಲು ಕ್ರಮ ಕೈಗೊಳ್ಳಬೇಕು. ಅನಿಲ ಪೂರೈಕೆಯಲ್ಲಿ ಆಗುತ್ತಿರುವ ವಿಳಂಬವನ್ನು ತಪ್ಪಿಸಲು ಸಂಬಂಧಪಟ್ಟ ಗ್ಯಾಸ್ ಏಜೆನ್ಸಿಗಳಿಗೆ ಸೂಕ್ತ ನಿರ್ದೇಶನ ನೀಡಬೇಕು. ಸಕಾಲದಲ್ಲಿ ಗ್ಯಾಸ್ ಲಭ್ಯವಿಲ್ಲದೆ ಮದುವೆ ಹಾಗೂ ಇತರ ಶುಭ ಸಮಾರಂಭಗಳ ಅಡುಗೆ ಕೆಲಸಗಳಿಗೆ ತೊಂದರೆಯಾಗುತ್ತಿದ್ದು, ಇದನ್ನು ಕೂಡಲೇ ಸರಿಪಡಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ. ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ನವೀನ್ ಅಮೀನ್ ಶಂಕರಪುರ, ಕಾರ್ಯದರ್ಶಿ ಗಣೇಶ್ ಸಾಲಿಯಾನ್, ಕೋಶಾಧಿಕಾರಿ ದೀಕ್ಷಿತ್ ಶೆಟ್ಟಿ ಹಾಗೂ ಜಿಲ್ಲಾ ಸಮಿತಿಯ ಪ್ರಮುಖರು ಉಪಸ್ಥಿತರಿದ್ದರು.
ಯಡ್ರಾಮಿ | ಮಾ.22 ರಂದು ರೈತ ಜಾಗೃತಿ ಸಮಾವೇಶ : ಈರಣ್ಣ ಭಜಂತ್ರಿ
ಯಡ್ರಾಮಿ: ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಪಟ್ಟಣದ ತಹಶೀಲ್ದಾರ್ ಕಚೇರಿ ಆವರಣದಲ್ಲಿ ಸೋಮವಾರ ಬೆಳಗ್ಗೆ 10.30ಗಂಟೆಗೆ ರೈತ ಜಾಗೃತಿ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ತಾಲೂಕು ಘಟಕ ಈರಣ್ಣ ಭಜಂತ್ರಿ ತಿಳಿಸಿದ್ದಾರೆ. ಕಣ್ಣೀರಿ ಮಠದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ಅವರು ಸಾವಯವ ಕೃಷಿ ಕುರಿತು ಮಾಹಿತಿ ನೀಡಲಿದ್ದಾರೆ. ವಿಜ್ಞಾನಿಗಳು ತರಬೇತಿ ನೀಡಲಿದ್ದಾರೆ. ಸಮಾವೇಶದಲ್ಲಿ ರೈತರಿಗೆ ಉಚಿತ ಆರೋಗ್ಯ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದರು. ಸಮಾವೇಶದಲ್ಲಿ ಕಡಕೋಳ ರುದ್ರಮುನಿ ಶಿವಾಚಾರ್ಯರು, ದಾಸೋಹ ಮಹಾಮಠ ಸೊನ್ನ ಶಿವಾನಂದ ಸ್ವಾಮೀಜಿ, ಮಾಗಣಗೇರಾ ವಿಶ್ವರಾಧ್ಯ ಸ್ವಾಮೀಜಿ, ವಿರಕ್ತಮಠ ಮಹಾಮಠ ಯಡ್ರಾಮಿ ಸಿದ್ದಲಿಂಗ ಸ್ವಾಮೀಜಿ ಸಾನ್ನಿದ್ಯ ವಹಿಸಲಿದ್ದಾರೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಧಾನ ಮಂತ್ರಿ ಮುದ್ರಾ ಯೋಜನೆಯಡಿ ಗರಿಷ್ಠ 20 ಲಕ್ಷ ರೂಪಾಯಿ ಸಾಲ
ಇದೀಗ ಮುದ್ರಾ ಯೋಜನೆಯಡಿ ಸಿಗುವ ಸಾಲದ ಮೊತ್ತವನ್ನು 20 ಲಕ್ಷ ರೂಪಾಯಿಗಳಿಗೆ ಏರಿಸಲಾಗಿದೆ. ಸ್ವಂತ ಉದ್ಯಮ ಮಾಡಲು ಬಯಸುವವರಿಗೆ ಕೇಂದ್ರ ಸರ್ಕಾರದ ಮಹಾತ್ವಾಕಾಂಕ್ಷೆಯ ಪ್ರಧಾನ ಮಂತ್ರಿ ಮುದ್ರಾ ಯೋಜನೆ ಅಡೆತಡೆಯನ್ನು ನಿವಾರಿಸಿದೆ. ಕಳೆದ ಹತ್ತು ವರ್ಷಗಳಲ್ಲಿ 50 ಕೋಟಿಗೂ ಹೆಚ್ಚು ಜನರು ಯೋಜನೆಯ ಲಾಭ ಪಡೆದಿದ್ದಾರೆ. ಇದೀಗ ಮುದ್ರಾ ಯೋಜನೆಯಡಿ ಸಿಗುವ ಸಾಲದ ಮೊತ್ತವನ್ನು 20 ಲಕ್ಷ ರೂಪಾಯಿಗಳಿಗೆ ಏರಿಸಿದೆ. ಆದರೆ ಈ ಸಂಪೂರ್ಣ ಮೊತ್ತ ಪಡೆಯಲು ಷರತ್ತುಗಳೇನು? ಈವರೆಗೆ ಮುದ್ರಾ ಯೋಜನೆಯಲ್ಲಿ ಗರಿಷ್ಠ 10 ಲಕ್ಷ ರೂ.ವರೆಗೆ ಮಾತ್ರ ಸಾಲ ಸಿಗುತ್ತಿತ್ತು. ಆದರೆ ಬದಲಾದ ನಿಯಮದಲ್ಲಿ ‘ತರುಣ್ ಪ್ಲಸ್’ ಎಂಬ ಹೊಸ ವಿಭಾಗ ಸೇರಿಸಲಾಗಿದ್ದು, ಇದರಡಿ 10 ಲಕ್ಷದಿಂದ 20 ಲಕ್ಷ ರೂಪಾಯಿಗಳವೆರಗೆ ಸಾಲ ಪಡೆಯಬಹುದು. ಯಾರು ಅರ್ಹರು? ಎಲ್ಲರಿಗೂ ನೇರವಾಗಿ 20 ಲಕ್ಷ ಸಿಗುವುದಿಲ್ಲ. ತರುಣ್ ವಿಭಾಗದ ಅಡಿ ಸಾಲ ಪಡೆದು (5ರಿಂದ 10 ಲಕ್ಷ) ಅದನ್ನು ಸರಿಯಾಗಿ ಪಾವತಿ ಮಾಡಿದ ಪ್ರಾಮಾಣಿಕ ಮತ್ತು ಅರ್ಹ ವ್ಯಾಪಾರಿಗಳಿಗೆ ಮಾತ್ರ 20 ಲಕ್ಷ ರೂ.ಗಳ ಸಾಲ ಲಭ್ಯವಾಗಲಿದೆ. ಗ್ಯಾರಂಟಿ ಬೇಕಿಲ್ಲ! ಮುದ್ರಾ ಯೋಜನೆಯ ಅತಿದೊಡ್ಡ ವಿಶೇಷವೆಂದರೆ ಈ ಸಾಲ ಪಡೆಯಲು ಬ್ಯಾಂಕ್ಗೆ ಯಾವುದೇ ಆಸ್ತಿ ಪತ್ರ ಅಥವಾ ಚಿನ್ನದ ಅಡಮಾನ ಇಡುವ ಅಗತ್ಯವಿಲ್ಲ. ಸಾಲದ ವಿಧಗಳು ಹೀಗಿವೆ! ಶಿಶು: ಆರಂಭಿಕ ಹಂತದ ವ್ಯಾಪಾರಕ್ಕೆ 50,000 ರೂ.ವರೆಗೆ ಸಾಲ ಕಿಶೋರ್: ಉದ್ಯಮ ವಿಸ್ತರಣೆಗೆ 50,000 ರೂ.ನಿಂದ 5 ಲಕ್ಷ ರೂ.ವರೆಗೆ ಸಾಲ ತರುಣ್ ಪ್ಲಸ್: ಉದ್ಯಮವನ್ನು ದೊಡ್ಡ ಮಟ್ಟಕ್ಕೆ ವಿಸ್ತರಿಸಲು 10 ಲಕ್ಷ ರೂ.ನಿಂದ 20 ಲಕ್ಷ ರೂ.ವರೆಗೆ ಸಾಲ. (ಹಳೇ ಸಾಲ ತೀರಿಸಿದವರಿಗೆ ಮಾತ್ರ) ಸಾಲ ಪಡೆಯುವುದು ಹೇಗೆ? • ವ್ಯಾಪಾರಿಯಾಗಿದ್ದರೆ ಅಥವಾ ಉದ್ಯಮ ಆರಂಭಿಸಬೇಕಿದ್ದರೆ ಸಮೀಪದ ಸರ್ಕಾರಿ ಅಥವಾ ಅಧಿಕೃತ ಖಾಸಗಿ ಬ್ಯಾಂಕ್ಗೆ ಭೇಡಿ ಕೊಡಿ. • ಮುದ್ರಾ ಸಾಲದ ಅರ್ಜಿ ಫಾರಂ ಭರ್ತಿ ಮಾಡಿ. • ಅಗತ್ಯ ದಾಖಲೆ (ಐಡಿ ಪ್ರೂಫ್, ಬ್ಯುಸಿನೆಸ್ ಪ್ಲಾನ್) ಸಲ್ಲಿಸಿ • ದಾಖಲೆ ಸರಿಯಿದ್ದರೆ ಮ್ಯಾನೇಜರ್ ಮಟ್ಟದಲ್ಲೇ ಸಾಲ ಮಂಜೂರಾಗುತ್ತದೆ ಅಂಕಿ ಅಂಶಗಳ ಪ್ರಕಾರ ಮುದ್ರಾ ಯೋಜನೆಯಡಿ ಸಾಲ ಪಡೆದವರಲ್ಲಿ ಮಹಿಳೆಯರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಸಣ್ಣ-ಪುಟ್ಟ ವ್ಯಾಪಾರ ಮಾಡಿ ಸ್ವಾವಲಂಬಿಗಳಾಗಲು ಮಹಿಳೆಯರಿಗೆ ಇರುವ ದೊಡ್ಡ ಅಸ್ತ್ರವಾಗಿದೆ. ಅಲ್ಲದೆ ಸಾಲವನ್ನು ಸರಿಯಾಗಿ ಮರುಪಾವತಿಸಿದರೆ ಸಿಬಿಲ್ ಸ್ಕ್ರೋರ್ ಹೆಚ್ಚಾಗಲಿದ್ದು, ಭವಿಷ್ಯದಲ್ಲಿ ದೊಡ್ಡ ಸಾಲ ಪಡೆಯಲು ದಾರಿಯಾಗುತ್ತದೆ.
ಕೂಡ್ಲಿಗಿ | ಶಾಸಕರಿಂದ ಡಿಎಸ್ಎಸ್ ನಾಮಫಲಕ ಉದ್ಘಾಟನೆ
ವಿಜಯನಗರ/ಕೂಡ್ಲಿಗಿ : ತಾಲೂಕಿನ ಸಕಲಾಪುರದಹಟ್ಟಿ ಗ್ರಾಮದ ಎಸ್.ಸಿ ಕಾಲೋನಿಯಲ್ಲಿ ದಳಿತ ಸಂಘರ್ಷ ಸಮಿತಿ (ಡಿ.ಎಸ್.ಎಸ್) ನಾಮಫಲಕವನ್ನು ಶಾಸಕ ಡಾ.ಶ್ರೀನಿವಾಸ್ ಎನ್.ಟಿ. ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ತಾನು ಹಳ್ಳಿಯ ಹಿನ್ನೆಲೆಯಿಂದ ದೆಹಲಿ ಮಟ್ಟದಲ್ಲಿ ವೈದ್ಯಕೀಯ ಶಿಕ್ಷಣ ಪಡೆಯಲು ಸಾಧ್ಯವಾದುದು ಡಾ. ಬಿ.ಆರ್. ಅಂಬೇಡ್ಕರ್ ಅವರ ಸಂವಿಧಾನದ ಮಹತ್ವದ ಕೊಡುಗೆ ಎಂದರು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಶಿಕ್ಷಣವೇ ವ್ಯಕ್ತಿಯನ್ನು ಮೇಲಕ್ಕೆತ್ತುವ ಶಕ್ತಿ ಎಂದು ಹೇಳಿದ ಅವರು, ಪ್ರತಿಯೊಬ್ಬರೂ ಶಿಕ್ಷಣದ ಮೂಲಕ ಸಮಾಜದ ಮುನ್ನಲೆಗೆ ಬರಬೇಕು ಎಂದು ಕರೆ ನೀಡಿದರು. ಅಭಿವೃದ್ಧಿ ವಿಚಾರದಲ್ಲಿ ಯಾವುದೇ ಭೇದಭಾವವಿಲ್ಲದೆ ಸರ್ವಜನಾಂಗದ ಹಿತಕ್ಕಾಗಿ ಕೆಲಸ ಮಾಡುವ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಡಾ.ಬಾಬು ಜಗಜೀವನ ರಾಮ್ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಮುಂಡರಗಿ ನಾಗರಾಜ್, ಜಿಲ್ಲಾ ಸಂಯೋಜಕ ತಿಪ್ಪೇಸ್ವಾಮಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಮಂಜುನಾಥ, ಡಿವೈಎಸ್ಪಿ ಮಲ್ಲೇಶ ದೊಡ್ಡಮನಿ ಸೇರಿದಂತೆ ಡಿ.ಎಸ್.ಎಸ್ ಮುಖಂಡರು ಹಾಗೂ ಹಲವು ಗಣ್ಯರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಎಸ್. ದುರುಗೇಶ, ಬಿ.ಟಿ. ಗುತ್ತಿ, ಗೋವರ್ಧನ, ಪೋಟೋ ರಾಜ, ಕಂದಗಲ್ ಪರುಶಾಮ್, ಹೆಚ್. ದುರುಗೇಶ್, ನಟರಾಜ, ಗಂಗಾಧರ, ಹುಡೇಂ ಕೃಷ್ಣಮೂರ್ತಿ, ಭಂಡಾರಿ ಸಿದ್ದೇಶ, ಮುರಾರ್ಜಿ, ಹುಲಿಕೆರೆ ದುರುಗೇಶ್, ಎಲ್ಲಪ್ಪ, ಮಾರೇಶ, ಮಂಜುನಾಥ ಸೇರಿದಂತೆ ಅನೇಕರು ಭಾಗವಹಿಸಿದ್ದರು. ಪತ್ರಕರ್ತರು ಹಾಗೂ ಗ್ರಾಮಸ್ಥರು ಸಹ ಸಮಾರಂಭದಲ್ಲಿ ಹಾಜರಿದ್ದು ಕಾರ್ಯಕ್ರಮಕ್ಕೆ ಮೆರುಗು ತಂದರು.
ಉಡುಪಿ| ವಾಣಿಜ್ಯ ಅನಿಲ ಕೊರತೆಯಿಂದ ಹೊಟೇಲ್ ಬಂದ್ ಎಫೆಕ್ಟ್; ಮೀನಿನ ದರದಲ್ಲಿ ಭಾರೀ ಕುಸಿತ
ಉಡುಪಿ: ಇರಾನ್ - ಅಮೆರಿಕ, ಇಸ್ರೇಲ್ ದೇಶಗಳ ನಡುವಿನ ಯುದ್ಧ ಪರಿಣಾಮ ಕರಾವಳಿ ಮೀನುಗಾರರಿಗೂ ತಟ್ಟುತ್ತಿದೆ. ನಿರಂತರವಾಗಿ ಮುಂದುವರೆಯುತ್ತಿರುವ ಕದನದಿಂದ ಮೀನಿನ ದರ ಇಳಿಕೆಯಾಗಿ ಮೀನುಗಾರಿಕಾ ಉದ್ಯಮವನ್ನೇ ತೀವ್ರ ಸಂಕಷ್ಟಕ್ಕೀಡು ಮಾಡಿದೆ. ಇದು ಮೀನುಗಾರರ ಬದುಕನ್ನೇ ಅಲ್ಲೋಲ ಕಲ್ಲೋಲವನ್ನಾಗಿಸುವ ಹಂತಕ್ಕೆ ತಲುಪುತ್ತಿದೆ. ಯುದ್ಧದಿಂದಾಗಿ ಮೀನು ರಫ್ತು ಸ್ಥಗಿತಗೊಂಡಿರುವುದು ಮಾತ್ರವಲ್ಲದೆ, ವಾಣಿಜ್ಯ ಅನಿಲದ ಅಭಾವದಿಂದ ಹೊಟೇಲುಗಳು ಬಂದ್ ಆಗಿ ಮೀನಿಗೆ ಬೇಡಿಕೆ ಇಲ್ಲದಂತಾಗಿದೆ. ಇದರಿಂದ ಮೀನಿನ ದರದಲ್ಲಿ ಭಾರೀ ಇಳಿಕೆ ಕಂಡಿದೆ. ಇದರಿಂದ ಮೀನು ಉದ್ಯಮ ಹಾಗೂ ಮಾರಾಟಗಾರರು ಸಾಕಷ್ಟು ನಷ್ಟ ಅನುಭವಿಸುತ್ತಿದ್ದಾರೆ. ಪ್ರಸ್ತುತ ಮಾರುಕಟ್ಟೆಯಲ್ಲಿ ಪ್ರತಿ ಮೀನಿನ ದರದಲ್ಲಿ ಸುಮಾರು 50-200 ರೂ.ವರೆಗೆ ಇಳಿಕೆಯಾಗಿದೆ. ಉಡುಪಿ ಮೀನು ಮಾರುಕಟ್ಟೆಯಲ್ಲಿ ಸುಮಾರು 10 ಮಂದಿ ಸಗಟು ವ್ಯಾಪಾರಿಗಳು ಸೇರಿದಂತೆ ನೂರಾರು ಮಹಿಳೆಯರು ಮೀನು ವ್ಯಾಪಾರದಲ್ಲಿ ತೊಡಗಿಸಿಕೊಂಡಿದ್ದಾರೆ. ವಾಣಿಜ್ಯ ಅನಿಲದ ಕೊರತೆ ಯಿಂದ ಉಡುಪಿ ಜಿಲ್ಲೆಯ ನೂರಾರು ಮೀನಿನ ಹೊಟೇಲ್ ಬಾಗಿಲು ಮುಚ್ಚಿದೆ. ಹೊಟೇಲ್ ಬಂದ್ ಆಗಿರುವುದರಿಂದ ಹೊಟೇಲ್ ಮಾಲಕರು ಮಾರುಕಟ್ಟೆಗೆ ಕಾಲಿಡುತ್ತಿಲ್ಲ. ಹಾಗಾಗಿ ಮೀನಿನ ವ್ಯಾಪಾರದಲ್ಲಿ ಇಳಿಕೆ ಕಂಡಿದೆ. ಇನ್ನು ಕೆಲವು ಹೊಟೇಲುಗಳು ತೆರೆದಿದ್ದರೂ ಮೀನು ಖರೀದಿ ಮಾಡುತ್ತಿಲ್ಲ. ಕೆಲವು ಹೊಟೇಲ್ಗಳಲ್ಲಿ ಹೊರಗಡೆ ಒಲೆಯಲ್ಲಿ ಕಟ್ಟಿಗೆ ಉರಿಸಿ ಅಡುಗೆ ಮಾಡಲಾಗುತ್ತಿದೆ. ಇತ್ತೀಚೆಗೆ ರಾತ್ರಿ ಸುರಿದ ಮಳೆಯಿಂದಾಗಿ ಒಲೆಯಲ್ಲಿ ಅಡುಗೆ ಮಾಡುವಂತಿಲ್ಲ. ಇದೆಲ್ಲದರ ಪರಿಣಾಮವನ್ನು ಮೀನು ಮಾರಾಟ ಮಾಡುವ ಮಹಿಳೆಯರು ನಷ್ಟ ಅನುಭವಿಸುತ್ತಿದ್ದಾರೆ. ಅದೇ ರೀತಿ ಉಡುಪಿ ನಗರಕ್ಕೆ ಮಾತ್ರವಲ್ಲ ಶಿರ್ವ, ಕಾಪು, ಕಾರ್ಕಳ ಹಾಗೂ ಬೆಂಗಳೂರು ಸಹಿತ ಹೊರ ಜಿಲ್ಲೆ ಮತ್ತು ಕೇರಳ ಸಹಿತ ಹೊರ ರಾಜ್ಯಗಳಿಗೂ ಉಡುಪಿಯಿಂದಲೇ ಮೀನು ಸರಬರಾಜು ಆಗುತ್ತಿತ್ತು. ಅಲ್ಲಿಯೂ ಹೊಟೇಲ್ ಬಂದ್ ಆಗಿರುವುದರಿಂದ ಮೀನು ವ್ಯಾಪಾರ ಕಡಿಮೆಯಾಗಿದೆ ಎನ್ನುತ್ತಾರೆ ಮೀನುಗಾರ ವ್ಯಾಪಾರಿ ಮಹಿಳೆಯರು. ಆದರೆ ಮೀನಿನ ಹೊಟೇಲುಗಳಲ್ಲಿ ಮೀನಿನ ದರ ಜಾಸ್ತಿಯಾಗಿದೆ. ಹೊಟೇಲಿನವರು ವಾಣಿಜ್ಯ ಅನಿಲವನ್ನು ಒಂದು ಸಾವಿರ ರೂ.ವರೆಗೆ ಹೆಚ್ಚು ನೀಡಿ ಖರೀದಿಸುತ್ತಿರುವುದರಿಂದ ನಷ್ಟವನ್ನು ಸರಿದೂಗಿಸಲು ಫ್ರೈ ಮೀನಿನ ದರವನ್ನು ಹೆಚ್ಚಳ ಮಾಡಿದ್ದಾರೆ. ಮೀನಿನ ಹೊಸ - ಹಳೆ ದರ ಮಾಂಜಿ: ಹಳೆಯ ದರ (ಪ್ರತಿ ಕೆಜಿಗೆ)- 1550ರೂ., ಹೊಸ ದರ (ಪ್ರತಿ ಕೆಜಿಗೆ) 1400ರೂ. ಅಂಜಲ್ (ಸೀ ಫಿಶ್): 1100ರೂ.-1000ರೂ., ದೊಡ್ಡ ಬಂಗುಡೆ 300ರೂ.- 260ರೂ., ಡಿಸ್ಕೋ ಮೀನು: 180ರೂ.-140ರೂ., ರಾಣಿ ಮೀನು: 280ರೂ.-245ರೂ., ಚಿಕ್ಕ ಬಂಗುಡೆ: 210ರೂ.- 180ರೂ. ಸಿಗಡಿ(Prawns): 340ರೂ. -320ರೂ. ‘ನಾನ್ವೆಜ್ ಹೊಟೇಲುಗಳು ಬಹುತೇಕ ಬಾಗಿಲು ಮುಚ್ಚಿದ ಪರಿಣಾಮ ಮೀನು ವ್ಯಾಪಾರ ಇಳಿಕೆಯಾಗಿದೆ. ಸಗಟು ವ್ಯಾಪಾರಿಗಳು ಮಾತ್ರವಲ್ಲ ಮೀನು ಮಾರಾಟ ಮಾಡುವ ಎಲ್ಲ ಮಹಿಳೆಯರು ಕೂಡ ಈಗ ಹೊಟೇಲ್ಗಳಿಗೆ ಮೀನು ಮಾರಾಟ ಮಾಡುತ್ತಾರೆ. ಇವರೆಲ್ಲರಿಗೂ ವ್ಯಾಪಾರ ಇಲ್ಲವಾಗಿದೆ. ಮೀನಿನ ದರ ಕೂಡ ಕೆಜಿಗೆ 100ರೂ., 50ರೂ. ಕಡಿಮೆ ಆಗಿದೆ’ -ಬೇಬಿ ಸಾಲ್ಯಾನ್, ಮೀನು ಮಾರಾಟಗಾರರು, ಉಡುಪಿ
ಬ್ಯುಸಿ ಜೀವನದಲ್ಲಿ ತೂಕ ನಷ್ಟದ ಯೋಜನೆ ಹೇಗೆ? ತರಬೇತುದಾರರ ಸಲಹೆ ಇಲ್ಲಿದೆ...
ಇಂದಿನ ಬ್ಯುಸಿ ಜಗತ್ತಿನಲ್ಲಿ ನಿತ್ಯದ ವ್ಯಾಯಾಮಕ್ಕೆ ಸಮಯ ಸಿಗುವುದೇ ಕಡಿಮೆ. ಕಚೇರಿಗಳ ಕೆಲಸ ಮುಗಿಸಿ ಸಾರಿಗೆ ದಟ್ಟಣೆ ನಡುವೆ ಮನೆ ಸೇರುವುದು ದೊಡ್ಡ ಸಾಹಸ. ಮನೆಗೆ ತಲುಪಿದ ನಂತರವೂ ಆನ್ಲೈನ್ ಮೀಟಿಂಗ್ ಮತ್ತು ಮನೆಯ ಕೆಲಸಗಳ ನಡುವೆ ಆರೋಗ್ಯ ಹಿಂದಕ್ಕೆ ಸರಿಯುತ್ತದೆ. ಬಹುತೇಕರು ಏರುತ್ತಿರುವ ದೇಹದ ತೂಕವನ್ನು ಕಳೆದುಕೊಳ್ಳಲು ಕಷ್ಟಪಡುತ್ತಾರೆ. ಈ ಹಿನ್ನೆಲೆಯಲ್ಲಿ ಅಟ್ಲಾಂಟದ ಫಿಟ್ನೆಸ್ ತರಬೇತುದಾರ ಬಾಬಿ ಇನ್ಸ್ಟಾಗ್ರಾಂನಲ್ಲಿ ತೂಕ ಇಳಿಸಲು ಕೆಲವು ಮಾರ್ಗಗಳನ್ನು ತಿಳಿಸಿಕೊಟ್ಟಿದ್ದಾರೆ. ತೂಕ ಇಳಿಸಿಕೊಳ್ಳಲು ದೀರ್ಘ ಗಂಟೆಗಳ ವ್ಯಾಯಾಮ ಮಾಡಬೇಕು ಎಂಬುದು ತಪ್ಪು ಕಲ್ಪನೆ ಎನ್ನುತ್ತಾರೆ ಬಾಬಿ. ತೂಕ ಕಳೆದುಕೊಳ್ಳಬೇಕೆಂದರೆ ವಾರಕ್ಕೆ ಕನಿಷ್ಠ ಐದು ದಿನ ಒಂದು ಗಂಟೆಯಾದರೂ ವ್ಯಾಯಾಮ ಮಾಡುವುದು ಸಾಧ್ಯವಾಗುವುದಿಲ್ಲ. ಹೀಗಾಗಿ ಬಹಳಷ್ಟು ಮಂದಿ ವ್ಯಾಯಾಮದಿಂದ ದೂರ ಉಳಿಯುತ್ತಾರೆ. ಕೊಬ್ಬಿನ ನಷ್ಟವು ಕೇವಲ ವ್ಯಾಯಾಮಗಳಿಂದ ಬೆಂಬಲಿತವಾಗಿಲ್ಲ. ದೈನಂದಿನ ಚಲನೆಯನ್ನು ಅವಲಂಬಿಸಿದೆ. ಎಷ್ಟು ನಡೆಯುತ್ತೀರಿ, ಎಷ್ಟು ಚಲಿಸುತ್ತೀರಿ ಮತ್ತು ನಿಮ್ಮ ಆಹಾರ ಹೇಗಿದೆ ಎನ್ನುವುದು ಸಂಪೂರ್ಣ ವ್ಯಾಯಾಮಕ್ಕಿಂತ ಹೆಚ್ಚು ಮುಖ್ಯವಾಗುತ್ತದೆ. ನಡಿಗೆಯನ್ನು ಬಹಳಷ್ಟು ಮಂದಿ ಅಲಕ್ಷಿಸುತ್ತಾರೆ. ಆದರೆ ಕೊಬ್ಬನ್ನು ಕಳೆಯಲು ದಿನಚರಿಯಲ್ಲಿ ಸ್ಥಿರವಾದ ನಡಿಗೆ ಅಗತ್ಯವಾಗುತ್ತದೆ. ನಿತ್ಯವೂ 20ರಿಂದ 30 ನಿಮಿಷ ನಡಿಗೆ ಮತ್ತು ಪ್ರತಿ ಊಟದ ನಂತರ 10 ನಿಮಿಷ ನಡಿಗೆ ಊಹೆಗಿಂತ ಉತ್ತಮ ಫಲಿತಾಂಶ ಕೊಡುತ್ತದೆ. ನಿತ್ಯವೂ ಎಷ್ಟು ಹೆಚ್ಚು ಹೆಜ್ಜೆ ಇಡುತ್ತೇವೆಯೋ ಅಷ್ಟು ಹೆಚ್ಚು ಕೊಬ್ಬು ಕಳೆದುಕೊಳ್ಳುವಿರಿ. ಶಿಸ್ತುಬದ್ಧ ಆಹಾರ ಸೇವನೆ ಶಿಸ್ತಿನ ಆಹಾರ ತೂಕ ಇಳಿಸಲು ಅತ್ಯಗತ್ಯ. ಶೇ 70ರಷ್ಟು ಶಿಸ್ತಿನ ಆಹಾರ ಮತ್ತು ಶೇ 30ರಷ್ಟು ವ್ಯಾಯಾಮ ಜೊತೆಗೂಡಿದರೆ ತೂಕ ಇಳಿಸಬಹುದು. ತರಬೇತುದಾರ ಬಾಬಿ ಪ್ರಕಾರ ತೂಕ ಇಳಿಸಲು ಪ್ರಯತ್ನಿಸುತ್ತಿದ್ದರೆ ಆಹಾರವನ್ನು ಸರಳವಾಗಿರಿಸಿ ಮತ್ತು ಪ್ರೊಟೀನ್ ಆಹಾರದ ಮೇಲೆ ಗಮನ ಕೊಡಬೇಕು. ಪ್ರೊಟೀನ್ ನಿಂದ ತೂಕ ಇಳಿಸುವುದು ಸರಳವಾಗುತ್ತದೆ. ಏಕೆಂದರೆ ಪ್ರೊಟೀನ್ ನಿಂದ ಹೊಟ್ಟೆ ತುಂಬಿದ ಭಾವನೆ ಬಂದು ಕ್ಯಾಲರಿ ಸೇವನೆ ಕಡಿಮೆಯಾಗುತ್ತದೆ. ಅಲ್ಲದೆ, ಪ್ರೊಟೀನ್ ಜೀರ್ಣಕ್ರಿಯೆಯ ಸಂದರ್ಭ ಹೆಚ್ಚು ಕ್ಯಾಲರಿಗಳನ್ನು ಕರಗಿಸುವ ಮೂಲಕ ಚಯಾಪಚಯ ಕ್ರಿಯೆಗೆ ನೆರವಾಗುತ್ತದೆ. ಕೊಬ್ಬು ಕರಗಿಸುವ ಜೊತೆಗೆ ಲೀನ್ ಮಸಲ್ ಮಾಸ್ (lean muscle mass) ಅನ್ನು ಸಂರಕ್ಷಿಸುತ್ತದೆ. ಅಂದರೆ, ನಿಮ್ಮ ದೇಹದ ಒಟ್ಟು ತೂಕದಿಂದ ಸ್ನಾಯು ಅಂಗಾಂಶ, ಮೂಳೆಗಳು, ನೀರು, ಅಂಗಗಳು ಮತ್ತು ಚರ್ಮವನ್ನು ಒಳಗೊಂಡಿರುವ ಎಲ್ಲಾ ಕೊಬ್ಬಿನ ಮಾಸ್ ಅನ್ನು ಕರಗಿಸಲಾಗುತ್ತದೆ. ಅಲ್ಲದೆ, ಸಮತೋಲಿತ ಆಹಾರ ಸೇವಿಸಬೇಕು. ಅದರಿಂದ ದೇಹಕ್ಕೆ ಅಗತ್ಯವಿರುವ ಎಲ್ಲಾ ಪೋಷಕಾಂಶ ಸಿಗುತ್ತದೆ. ಇದು ತೂಕ ಇಳಿಸಲು ಪ್ರಾಯೋಗಿಕ ಮಾರ್ಗವಾಗಿದೆ. ಬಹಳಷ್ಟು ಮಂದಿ ಪ್ರಾಯೋಗಿಕ ಮಾರ್ಗವನ್ನು ಹುಡುಕುತ್ತಿರುತ್ತಾರೆ. ಜನರ ನಿಜವಾದ ಜೀವನಕ್ಕೆ ಸರಿಹೊಂದುವ ಯೋಜನೆ ಬೇಕು. ಏಕೆಂದರೆ ನಿತ್ಯ ಜೀವನದಲ್ಲಿ ಬಳಸಿಕೊಳ್ಳುವ ಕೊಬ್ಬು ನಷ್ಟ ಮಾಡುವ ಯೋಜನೆ ಇದಾಗಿರುತ್ತದೆ.
ಎಮ್ಮಿಗನೂರು | ಶಾಸಕ ಜೆ.ಎನ್.ಗಣೇಶ್ ಅವರಿಂದ ಜೋಳ ಖರೀದಿ ಕೇಂದ್ರ ಉದ್ಘಾಟನೆ
ಬಳ್ಳಾರಿ/ಕಂಪ್ಲಿ: ತಾಲೂಕಿನ ಎಮ್ಮಿಗನೂರು ಗ್ರಾಮದ ಎಪಿಎಂಸಿಯಲ್ಲಿ ಜೋಳ ಖರೀದಿ ಕೇಂದ್ರವನ್ನು ಶಾಸಕ ಜೆ.ಎನ್. ಗಣೇಶ್ ಶನಿವಾರ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಎಮ್ಮಿಗನೂರು ಭಾಗದಲ್ಲಿ ಜೋಳ ಬೆಳೆಯುವ ರೈತರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಅವರಿಗೆ ಸಮರ್ಪಕ ಬೆಂಬಲ ಬೆಲೆ ದೊರಕುವ ಉದ್ದೇಶದಿಂದ ಕಳೆದ ವರ್ಷದಿಂದ ಖರೀದಿ ಕೇಂದ್ರವನ್ನು ಪ್ರಾರಂಭಿಸಲಾಗಿದೆ ಎಂದರು. ಇದರಿಂದ ರೈತರಿಗೆ ಸರ್ಕಾರದ ಬೆಂಬಲ ಬೆಲೆ ಸಿಗುವುದರ ಜೊತೆಗೆ ಆರ್ಥಿಕವಾಗಿ ಅಭಿವೃದ್ಧಿಯಾಗಲು ಸಹಕಾರಿಯಾಗಲಿದೆ ಎಂದು ಹೇಳಿದರು. ರೈತರು ತಮ್ಮ ಬೆಳೆದ ಗುಣಮಟ್ಟದ ಜೋಳವನ್ನು ಖರೀದಿ ಕೇಂದ್ರಕ್ಕೆ ನೀಡಿ, ಸರ್ಕಾರದ ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕು ಎಂದು ಅವರು ಮನವಿ ಮಾಡಿದರು. ಆಹಾರ ಇಲಾಖೆಯ ಜಿಲ್ಲಾ ಉಪನಿರ್ದೇಶಕ ದೇವರಾಜ್ ಮಾತನಾಡಿ, ಬಳ್ಳಾರಿ ಜಿಲ್ಲೆಯಲ್ಲಿ ಒಟ್ಟು 18 ಖರೀದಿ ಕೇಂದ್ರಗಳನ್ನು ಆರಂಭಿಸಲಾಗುತ್ತಿದ್ದು, ಎಮ್ಮಿಗನೂರು ಕೇಂದ್ರದಿಂದ ಸ್ಥಳೀಯ ರೈತರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದರು. ಈಗಾಗಲೇ 599 ರೈತರು ನೋಂದಣಿ ಮಾಡಿಸಿಕೊಂಡಿದ್ದು, ಕಂಪ್ಲಿ ಹಾಗೂ ಕುರುಗೋಡು ತಾಲೂಕುಗಳಲ್ಲಿ ಸೇರಿ ಸುಮಾರು 1 ಲಕ್ಷ ಕ್ವಿಂಟಲ್ ಜೋಳ ಖರೀದಿಸುವ ಗುರಿ ಹೊಂದಲಾಗಿದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಸೊಸೈಟಿ ಅಧ್ಯಕ್ಷ ಬಿ. ಕಾಸಿಂಸಾಬ್, ಮುಖ್ಯ ಕಾರ್ಯನಿರ್ವಾಹಕ ಜಡೇಶ್ ರೆಡ್ಡಿ, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷ ಬಿ.ವಿ. ಗೌಡ, ಮುಖಂಡರಾದ ಸದಾಶಿವಪ್ಪ, ಮಹೇಶ್ ಗೌಡ ಸೇರಿದಂತೆ ರೈತರು ಉಪಸ್ಥಿತರಿದ್ದರು.
ಒಮಾನ್ನಲ್ಲಿ ಹಠಾತ್ ಪ್ರವಾಹ | ಕಾರು ಕೊಚ್ಚಿ ಹೋಗಿ ಕೇರಳದ ಇಬ್ಬರು ಮೃತ್ಯು; ಇನ್ನೋರ್ವ ಮಹಿಳೆ ನಾಪತ್ತೆ
ಈದುಲ್ ಫಿತ್ರ್ ದಿನದಂದು ನಡೆದ ಘಟನೆ
ಕಂಪ್ಲಿ | ವಿದ್ಯಾರ್ಥಿಗಳಿಗೆ ಉಚಿತ ಶೈಕ್ಷಣಿಕ ಸಾಮಗ್ರಿ ವಿತರಣೆ
ಬಳ್ಳಾರಿ/ಕಂಪ್ಲಿ: ಪಟ್ಟಣದ 10ನೇ ವಾರ್ಡ್ನ ಬಸವ ಶ್ರೀ ನಿಲಯದಲ್ಲಿ ಕರ್ನಾಟಕ ರಾಜ್ಯ ದಿಶಾ ಸಮಿತಿ ಸದಸ್ಯರಾದ ಎ.ಸಿ. ದಾನಪ್ಪ ಅವರ 61ನೇ ವರ್ಷದ ಹುಟ್ಟುಹಬ್ಬದ ಅಂಗವಾಗಿ ಬಡ ವಿದ್ಯಾರ್ಥಿಗಳಿಗೆ ಉಚಿತವಾಗಿ ನೋಟ್ ಪುಸ್ತಕ, ಪೆನ್ ಹಾಗೂ ಪೆನ್ಸಿಲ್ಗಳನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಎ.ಸಿ. ದಾನಪ್ಪ ಅವರು, ತಂತ್ರಜ್ಞಾನ ಯುಗದಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಪ್ರಾಮುಖ್ಯತೆ ಇದ್ದು, ಮಕ್ಕಳ ಕಲಿಕಾ ಹಂತದಲ್ಲೇ ವಿದ್ಯಾಭ್ಯಾಸಕ್ಕೆ ಆದ್ಯತೆ ನೀಡಬೇಕು. ಗುಣಮಟ್ಟದ ಶಿಕ್ಷಣಕ್ಕಾಗಿ ಪೋಷಕರು ಹೆಚ್ಚು ಜಾಗೃತರಾಗಬೇಕು ಎಂದು ಕರೆ ನೀಡಿದರು. ಸಮಾಜ ಸೇವೆಯ ಜೊತೆಗೆ ರೈತರು ಹಾಗೂ ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಿ ಪರಿಹಾರ ಒದಗಿಸುವ ಕೆಲಸ ಮಾಡುತ್ತಿದ್ದೇವೆ. ಮುಂದೆಯೂ ಸರ್ಕಾರ ಹೆಚ್ಚಿನ ಜವಾಬ್ದಾರಿ ನೀಡಿದರೆ ಗ್ರಾಮೀಣ ಭಾಗದ ಬಡವರಿಗೆ ಸರ್ಕಾರದ ಸೌಲಭ್ಯಗಳನ್ನು ತಲುಪಿಸಲು ಶ್ರಮಿಸುತ್ತೇವೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ರಾಜ್ಯ ಶ್ರೇಷ್ಠ ಕೃಷಿ ಪಂಡಿತ ಪ್ರಶಸ್ತಿ ಪುರಸ್ಕೃತ ಎ.ಸಿ. ಅಂಡಿ ಹುಲಿಗೆಮ್ಮ ದಾನಪ್ಪ, ಕರ್ನಾಟಕ ರಾಜ್ಯ ಪೊಲೀಸ್ ದೂರುಗಳ ಪ್ರಾಧಿಕಾರ ಸದಸ್ಯ ಮೋಹನ್ ಕುಮಾರ ದಾನಪ್ಪ, ಬೌದ್ಧ ಸಮಾಜದ ಜಿಲ್ಲಾ ಅಧ್ಯಕ್ಷ ಚನ್ನಬಸಪ್ಪ, ಮುಖಂಡರಾದ ಅಂಜಿನಪ್ಪ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಕಂಪ್ಲಿ | ರಮಝಾನ್ ಆತ್ಮನಿಯಂತ್ರಣ, ಮಾನವೀಯತೆ ಬೆಳೆಸುವ ಹಬ್ಬ : ಕರಡಿ ವಲಿಸಾಬ್
ಬಳ್ಳಾರಿ/ಕಂಪ್ಲಿ: ಸತ್ಯನಿಷ್ಠೆ, ಆತ್ಮನಿಯಂತ್ರಣ ಹಾಗೂ ಮಾನವೀಯತೆ ಬೆಳೆಸುವ ಪವಿತ್ರ ಆಚರಣೆಯೇ ರಮಝಾನ್ ಎಂದು ಕರಡಿ ವಲಿಸಾಬ್ ತಿಳಿಸಿದ್ದಾರೆ. ಶನಿವಾರ ಪಟ್ಟಣದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಹಿಂದೂ-ಮುಸ್ಲಿಂ ಏಕತೆ ಚಿರಾಯುವಾಗಲಿ. ರಮಝಾನ್ ಹಾಗೂ ಯುಗಾದಿ ಹಬ್ಬಗಳನ್ನು ಒಟ್ಟಾಗಿ ಆಚರಿಸುವುದು ಸೌಹಾರ್ದತೆಯ ಸಂಕೇತವಾಗಿದ್ದು, ಸಂತೋಷ ತಂದಿದೆ ಎಂದು ಹೇಳಿದರು. ರಮಝಾನ್ ಮಾಸದಲ್ಲಿ ಕೈಗೊಳ್ಳುವ ಉಪವಾಸವು ಕೇವಲ ಆಹಾರ ತ್ಯಾಗವಲ್ಲ, ಅದು ಆತ್ಮಶುದ್ಧಿ, ಸತ್ಯನಿಷ್ಠೆ ಮತ್ತು ಮಾನವೀಯ ಮೌಲ್ಯಗಳನ್ನು ಬೆಳೆಸುವ ಪವಿತ್ರ ಸಾಧನೆ. ಉಪವಾಸದ ಮೂಲಕ ಮನಸ್ಸು ಮತ್ತು ದೇಹವನ್ನು ಪರಿಶುದ್ಧಗೊಳಿಸುವುದು ಶ್ಲಾಘನೀಯ ಕಾರ್ಯವಾಗಿದೆ ಎಂದರು. ಇದೇ ಸಂದರ್ಭದಲ್ಲಿ ಕಂಪ್ಲಿ ತಾಲೂಕಿನ ಸಮಸ್ತ ಜನತೆಗೆ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ಈದುಲ್ ಫಿತ್ರ್ ಹಬ್ಬದ ಹಾರ್ದಿಕ ಶುಭಾಶಯಗಳನ್ನು ತಿಳಿಸಿದರು.
MT Aqua Titan: ಮಂಗಳೂರು ಕರಾವಳಿಗೆ ಆಗಮಿಸಿದ ರಷ್ಯಾದ ಕಚ್ಚಾ ತೈಲ ಹೊತ್ತ ಬೃಹತ್ ನೌಕೆ
ಮಂಗಳೂರು: ಪಶ್ಚಿಮ ಏಷ್ಯಾದಲ್ಲಿ ಉಲ್ಬಣಿಸಿರುವ ಸಂಘರ್ಷದ ನಡುವೆಯೇ, ಭಾರತದ ಇಂಧನ ಭದ್ರತೆಯ ದೃಷ್ಟಿಯಿಂದ ಮಹತ್ವದ ಬೆಳವಣಿಗೆಯೊಂದು ನಡೆದಿದೆ. ಮಂಗಳೂರು ರಿಫೈನರಿ ಮತ್ತು ಪೆಟ್ರೋಕೆಮಿಕಲ್ಸ್ ಲಿಮಿಟೆಡ್ (MRPL) ಚಾರ್ಟರ್ ಮಾಡಿದ್ದ ರಷ್ಯಾದ ಕಚ್ಚಾ ತೈಲ ಹೊತ್ತ ಬೃಹತ್ ಹಡಗು 'ಎಂ.ಟಿ ಅಕ್ವಾ ಟೈಟಾನ್' (MT Aqua Titan) ಭಾನುವಾರ ಮಂಗಳೂರು ಕರಾವಳಿಗೆ ಆಗಮಿಸಿದೆ. ಸಂಘರ್ಷದ ನಡುವೆ ಸುರಕ್ಷಿತವಾಗಿ ಆಗಮನ
Virajpet | ಗ್ರಾಮಸ್ಥರಲ್ಲಿ ಭೀತಿ ಮೂಡಿಸಿದ್ದ ಕಾಡಾನೆ ಸೆರೆ
ಮಡಿಕೇರಿ : ವಿರಾಜಪೇಟೆ ತಾಲ್ಲೂಕಿನ ಚೆಂಬೆಬೆಳ್ಳೂರು ಸುತ್ತಮುತ್ತಲ ಗ್ರಾಮ ವ್ಯಾಪ್ತಿಯ ಕಾಫಿ ತೋಟಗಳಲ್ಲಿ ಬೀಡುಬಿಟ್ಟು ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದ್ದ ಕಾಡಾನೆಯನ್ನು ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಯಶಸ್ವಿಯಾಗಿದೆ. ದುಬಾರೆ ಹಾಗೂ ಮತ್ತಿಗೋಡು ಶಿಬಿರದ ಸಾಕಾನೆಗಳಾದ ಅಭಿಮನ್ಯು, ಮಹೇಂದ್ರ, ರಂಜನ್, ಭೀಮಾ, ಸುಗ್ರೀವ ಹಾಗೂ ಹರ್ಷನ ಸಹಕಾರದಿಂದ ಸತತ 5 ಗಂಟೆಗಳ ಕಾರ್ಯಾಚರಣೆಯ ಬಳಿಕ ಕಾಡಾನೆ ಸೆರೆಯಾಯಿತು. ಚೆಂಬೆಬೆಳ್ಳೂರು ಗ್ರಾಮದ ಕಾಫಿ ತೋಟವೊಂದರ ಸಮೀಪ ಕಂಡುಬಂದ ಕಾಡಾನೆಗೆ ವನ್ಯಜೀವಿ ವೈದ್ಯಾಧಿಕಾರಿ ಡಾ.ರಮೇಶ್ ಹಾಗೂ ಕುಶಾಲನಗರ ಉಪ ಅರಣ್ಯಾಧಿಕಾರಿ ಶಾರ್ಪ್ ಶೂಟರ್ ಕನ್ನಂಡ ರಂಜನ್ ಅವರು ಬಂದೂಕಿನ ಮೂಲಕ ಅರವಳಿಕೆ ನೀಡಿದರು. ಸರೆಯಾದ ಕಾಡಾನೆಯನ್ನು ಸಾಕಾನೆಗಳ ಸಹಕಾರದಿಂದ ಮತ್ತಿಗೋಡು ಶಿಬಿರಕ್ಕೆ ಸ್ಥಳಾಂತರಿಸಲಾಯಿತು. ಚೆಂಬೆಬೆಳ್ಳೂರು, ದೇವಣಗೇರಿ, ಬೆಳ್ಳರಿಮಾಡು, ಕುಕ್ಲೂರು, ಪೊದಕೋಟೆ, ಐಮಂಗಲ, ಮೈತಾಡಿ, ಕದನೂರು, ಬಿಳುಗುಂದ, ಹಾಲುಗುಂದ ಹಾಗೂ ಅಮ್ಮತಿ ಸುತ್ತಮುತ್ತಲ ಗ್ರಾಮಗಳಲ್ಲಿ ಬೀಡುಬಿಟ್ಟಿದ್ದ ಕಾಡಾನೆ ತೋಟಗಳಲ್ಲಿ ದಾಂಧಲೆ ನಡೆಸಿ ಕೃಷಿ ಫಸಲು ನಷ್ಟಕ್ಕೆ ಕಾರಣವಾಗಿತ್ತು ಮತ್ತು ಸ್ಥಳೀಯರ ಮೇಲೆ ದಾಳಿಗೂ ಯತ್ನಿಸಿತ್ತು. ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಅವರು ಕಾಡಾನೆ ಸೆರೆಗೆ ಸೂಚನೆ ನೀಡಿದ್ದರು. ಜಿಲ್ಲಾ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಸೋನಾಲ್ ವೃಷ್ಣಿ ಹಾಗೂ ವೀರಾಜಪೇಟೆ ತಾಲ್ಲೂಕು ಉಪ ಅರಣ್ಯ ಸಂರಕ್ಷಣಾಧಿಕಾರಿ ಜಗನ್ನಾಥ್ ಅವರ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆಯಿತು. ಮಡಿಕೇರಿ ಡಿಸಿಎಫ್ ರಮೇಶ್, ಎಸಿಎಫ್ ಗೋಪಾಲ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಎನ್.ಬಿಂದುಮಣಿ, ವೀರಾಜಪೇಟೆ ವಲಯ ಅರಣ್ಯ ಅಧಿಕಾರಿ ಶಿವರಾಮ್, ತಿತಿಮತಿ ವಲಯ ಅರಣ್ಯ ಅಧಿಕಾರಿ ಗಂಗಾಧರ್, ಡಾ.ಚೆಟ್ಟಿಯಪ್ಪ, ಅರಣ್ಯ ಇಲಾಖೆಯ ಸಿಬ್ಬಂದಿಗಳು ಸೇರಿದಂತೆ ನೂರಕ್ಕೂ ಅಧಿಕ ಮಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ಸಂಡೂರು | ವಾಲ್ಮೀಕಿ ನಿಗಮದಿಂದ ಬೋರ್ವೆಲ್ ಪರಿಕರಗಳ ವಿತರಣೆ
ಬಳ್ಳಾರಿ/ಸಂಡೂರು : ವಾಲ್ಮೀಕಿ ನಿಗಮದ ವತಿಯಿಂದ 2021-22ನೇ ಸಾಲಿನ ಯೋಜನೆಯಡಿ ಪರಿಶಿಷ್ಟ ವರ್ಗದ ಫಲಾನುಭವಿಗಳ ಅಭಿವೃದ್ಧಿಗಾಗಿ ಬೋರ್ವೆಲ್ ಪರಿಕರಗಳ ವಿತರಣಾ ಕಾರ್ಯಕ್ರಮ ಆಯೋಜಿಸಲಾಯಿತು. ಕಾರ್ಯಕ್ರಮದಲ್ಲಿ ಸಂಡೂರು ವಿಧಾನಸಭಾ ಕ್ಷೇತ್ರದ ಶಾಸಕಿ ಅನ್ನಪೂರ್ಣಾ ಈ ತುಕಾರಾಮ್ ಭಾಗವಹಿಸಿ, ಒಟ್ಟು 43 ಫಲಾನುಭವಿಗಳಿಗೆ ಪಂಪು, ಸ್ಟಾರ್ಟರ್ ಹಾಗೂ ಪೈಪ್ ಸೇರಿದಂತೆ ಬೋರ್ವೆಲ್ ಪರಿಕರಗಳನ್ನು ವಿತರಿಸಿದರು. ಈ ವೇಳೆ ಮಾತನಾಡಿದ ಅವರು, ಸರ್ಕಾರ ಪರಿಶಿಷ್ಟ ವರ್ಗದ ಜನರ ಆರ್ಥಿಕ ಹಾಗೂ ಕೃಷಿ ಅಭಿವೃದ್ಧಿಗಾಗಿ ಹಲವಾರು ಯೋಜನೆಗಳನ್ನು ಜಾರಿಗೊಳಿಸುತ್ತಿದ್ದು, ಅವುಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದು ಕರೆ ನೀಡಿದರು. ಕೃಷಿ ಚಟುವಟಿಕೆಗಳಿಗೆ ನೀರಿನ ಸೌಲಭ್ಯ ಅತ್ಯಂತ ಅಗತ್ಯವಾಗಿದ್ದು, ಈ ಪರಿಕರಗಳು ರೈತರಿಗೆ ಬಹಳ ಸಹಾಯಕವಾಗಲಿವೆ ಎಂದು ಹೇಳಿದರು. ಫಲಾನುಭವಿಗಳು ಸರ್ಕಾರದ ಈ ಯೋಜನೆಗೆ ಕೃತಜ್ಞತೆ ಸಲ್ಲಿಸಿ, ಬೋರ್ವೆಲ್ ಪರಿಕರಗಳ ನೆರವಿನಿಂದ ತಮ್ಮ ಕೃಷಿ ಚಟುವಟಿಕೆಗಳನ್ನು ಇನ್ನಷ್ಟು ವಿಸ್ತರಿಸುವ ವಿಶ್ವಾಸ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ಸ್ಥಳೀಯ ಅಧಿಕಾರಿಗಳು, ವಾಲ್ಮೀಕಿ ನಿಗಮದ ಪ್ರತಿನಿಧಿಗಳು ಹಾಗೂ ಗಣ್ಯರು ಉಪಸ್ಥಿತರಿದ್ದರು.
ಅಯೋಧ್ಯೆ ರಾಮ ಜನ್ಮಭೂಮಿ ಸಂಕೀರ್ಣ ಹನುಮಾನ್ ಮಂದಿರ ಸೇರಿ 6 ಉಪ ದೇಗುಲಗಳ ಮೇಲೆ ಧ್ವಜಾರೋಹಣಕ್ಕೆ ಭರದ ಸಿದ್ಧತೆ
Ayodhya Ram Mandir- ಅಯೋಧ್ಯೆಯ ರಾಮ ಜನ್ಮಭೂಮಿ ಸಂಕೀರ್ಣದಲ್ಲಿರುವ ಹನುಮಾನ್ ಮಂದಿರವೂ ಸೇರಿದಂತೆ ಒಟ್ಟು ಆರು ಉಪದೇಗುಲಗಳ ಮೇಲೆ ಧ್ವಜಾರೋಹಣಕ್ಕೆ ಸಿದ್ಧತೆ ನಡೆದಿದೆ ಎಂದು ಟ್ರಸ್ಟ್ ಕಾರ್ಯದರ್ಶಿ ಚಂಪತ್ ರಾಯ್ ತಿಳಿಸಿದ್ದಾರೆ. ಮಾರ್ಚ್ 22 ರಿಂದ 31 ರವರೆಗೆ ವಿವಿಧ ಕಾರ್ಯಕ್ರಮಗಳು ಹಂತಹಂತವಾಗಿ 8 ದಿನಗಳ ಕಾಲ ನಡೆಯಲಿದ್ದು ಏಪ್ರಿಲ್ 2 ರಂದು ಧ್ವಜಾರೋಹಣ ನೆರವೇರಲಿದೆ. ಸೀಮಿತ ಸಂಖ್ಯೆಯ ಸಾಧು-ಸಂತರು ಮತ್ತು ತಜ್ಞರ ಸಮ್ಮುಖದಲ್ಲಿ ಈ ಕಾರ್ಯಕ್ರಮ ಜರುಗಲಿದೆ. ರಾಮಮಂದಿರ ಸಂಕೀರ್ಣದ ನಿರ್ಮಾಣ ಕಾರ್ಯವು ಏಪ್ರಿಲ್ 30, 2026 ರೊಳಗೆ ಸಂಪೂರ್ಣಗೊಳ್ಳುವ ನಿರೀಕ್ಷೆಯಿದೆ.
ಕಳೆದ 20 ದಿನಗಳಲ್ಲಿ ಚಿನ್ನದ ದರವು ₹25 ಸಾವಿರ ಕುಸಿತವಾಗಿದೆ. ಇತಿಹಾಸವನ್ನು ತೆಗೆದು ನೋಡಿದರೆ ಯುದ್ಧದ ಸಮಯದಲ್ಲಿ ಚಿನ್ನದ ಬೆಲೆ ಯಾವತ್ತೂ ಈ ರೀತಿ ಕುಸಿದಿಲ್ಲ. ಹಾಗಾದರೆ, ಇರಾನ್ ಯುದ್ಧದ ಸಮಯದಲ್ಲಿ ದಿಢೀರನೆ ಏನಾಯ್ತು? ಚಿನ್ನದ ಬೆಲೆ ಏರುವ ಬದಲು ಯಾಕೆ ಇಳಿಕೆ ಮುಖ ಮಾಡಿದೆ? ಮುಂದೆ ಚಿನ್ನ ಅಗ್ಗವಾಗುತ್ತೋ ಅಥವಾ ಮತ್ತೆ ದುಬಾರಿಯಾಗುತ್ತೋ? ಎಂಬ ಸಂಪೂರ್ಣ ವಿವರ ಇಲ್ಲಿದೆ.
Kalaburagi | ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ
ಕಲಬುರಗಿ: ಬೀದರ್ ಮತ್ತು ಕಲಬುರಗಿ ಜಿಲ್ಲೆಗಳ ಡಿಜಿಟಲ್ ಸಖಿ ಯೋಜನೆಯಡಿ, ಅಕ್ಸಸ್ ಲಿವಲಿಹೂಡ್ಸ್ ಹಾಗೂ ಎಲ್ ಅಂಡ್ ಟಿ ಫೈನಾನ್ಸ್ ಸಹಯೋಗದಲ್ಲಿ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ನಗರದ ಕನ್ನಡ ಭವನದಲ್ಲಿ ಆಚರಿಸಲಾಯಿತು. ಕಾರ್ಯಕ್ರಮವನ್ನು ರಾಘವೇಂದ್ರ ಪೊಲೀಸ್ ಸ್ಟೇಷನ್ನ ಪಿಎಸ್ಐ ಯಶೋಧ ಕಟಕೆ ಉದ್ಘಾಟಿಸಿ ಮಾತನಾಡಿ, “ಮಹಿಳೆ ಮತ್ತು ಪುರುಷರು ಸಮಾಜದ ಎರಡು ಕಣ್ಣುಗಳಂತೆ. ಇಬ್ಬರೂ ಸಮಾನರಾಗಿದ್ದು, ಮಹಿಳಾ ದಿನಾಚರಣೆಯ ಜೊತೆಗೆ ಪುರುಷರ ದಿನಾಚರಣೆಯನ್ನೂ ಆಚರಿಸುವುದು ಅಗತ್ಯ” ಎಂದು ಹೇಳಿದರು. ಡಿಜಿಟಲ್ ಸಖಿ ಯೋಜನೆಯ ಕ್ಲಸ್ಟರ್ ಮ್ಯಾನೇಜರ್ ವಿಜಯಲಕ್ಷ್ಮಿ ಅವರು ಕಾರ್ಯಕ್ರಮದ ಪರಿಚಯ ನೀಡಿ ಯೋಜನೆಯ ಉದ್ದೇಶ ಮತ್ತು ಕಾರ್ಯಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿದರು. ಮುಖ್ಯ ಅತಿಥಿಗಳಾಗಿ ಅಡ್ವೋಕೇಟ್ ರೇಣುಕಾ ಬಿರಾದಾರ್ ಹಾಗೂ ಬಸವ ಟ್ರೇಡರ್ಸ್ ಸಂಸ್ಥಾಪಕ ಮಹೇಶ್ ಗಿರಾಣಿ ಭಾಗವಹಿಸಿದ್ದರು. ಈ ವೇಳೆ ರೇಣುಕಾ ಬಿರಾದಾರ್ ಮಹಿಳಾ ಸಬಲೀಕರಣದ ಅಗತ್ಯತೆಯನ್ನು ವಿವರಿಸಿದರು. ಅತಿಥಿಗಳಾಗಿ ಮಲ್ಲಮ್ಮ ಕಾಡ್ಲಾ, ವಿಜಯಲಕ್ಷ್ಮಿ ಆರ್.ಶೀಲವಂತ್, ಶ್ರೀಪಾದ ಕುಲಕರ್ಣಿ, ಗೋಪಾಲ್ ಕುಲಕರ್ಣಿ, ಕವಿತಾ ನಾಯ್ಡು ಹಾಗೂ ಜಯಶ್ರೀ ಎಸ್.ಮಠ್ ಉಪಸ್ಥಿತರಿದ್ದರು. ಶ್ರೀ ಶಕ್ತಿ ಒಕ್ಕೂಟದ ಅಧ್ಯಕ್ಷೆ ಮಲ್ಲಮ್ಮ ಕಾಡ್ಲಾ ಅವರು ಡಿಜಿಟಲ್ ಸಖಿಗಳಿಗೆ ಆನ್ಲೈನ್ ಮಾರುಕಟ್ಟೆ ವ್ಯವಸ್ಥೆ ಮತ್ತು ಕಾನೂನು ಸೇವಾ ಪ್ರಾಧಿಕಾರದ ಕುರಿತು ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮಹಿಳಾ ಉದ್ಯಮಿಗಳನ್ನು ಸನ್ಮಾನಿಸಲಾಯಿತು. ಮಹಿಳೆಯರ ಹಕ್ಕುಗಳು, ಸಮಾನತೆ ಮತ್ತು ನ್ಯಾಯದ ಬಗ್ಗೆ ಜಾಗೃತಿ ಮೂಡಿಸುವ ಸಂದೇಶಗಳನ್ನು ನೀಡಲಾಯಿತು. ನಾಗರಾಜ್ ಹೆಂಬಾಡಿ ಸ್ವಾಗತಿಸಿದರು. ವಿಜಯಲಕ್ಷ್ಮಿ ಎಂ.ಭರ್ಮಶೆಟ್ಟಿ ನಿರೂಪಿಸಿದರು. ರವಿ ಕುಮಾರ್ ವಿ.ಬಿ. ವಂದಿಸಿದರು.
ಉಪಚುನಾವಣೆ | ಎರಡೂ ಕ್ಷೇತ್ರಗಳಲ್ಲಿಯೂ ಬಿಜೆಪಿ ಆಭ್ಯರ್ಥಿಗಳು ಜಯಭೇರಿ ಭಾರಿಸಲಿದ್ದಾರೆ : ಬೊಮ್ಮಾಯಿ ವಿಶ್ವಾಸ
ಬೆಂಗಳೂರು : ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ಕ್ಷೇತ್ರಗಳ ಉಪಚುನಾವಣೆಯಲ್ಲಿ ಎರಡೂ ಕ್ಷೇತ್ರಗಳಲ್ಲಿಯೂ ಬಿಜೆಪಿ ಆಭ್ಯರ್ಥಿಗಳು ಜಯಭೇರಿ ಭಾರಿಸಲಿದ್ದಾರೆ ಎಂದು ಮಾಜಿ ಸಿಎಂ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಇಂದಿಲ್ಲಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ರವಿವಾರ ಹಾವೇರಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ನಾವು ಲೆಕ್ಕಾಚಾರ ಹಾಕಿ ದಾವಣಗೆರೆಯಲ್ಲಿ ಟಿಕೆಟ್ ನೀಡಿದ್ದೇವೆ. ಬರುವಂತಹ ದಿನಗಳಲ್ಲಿ ಬಡವರು, ಎಸ್ಸಿ-ಎಸ್ಟಿ ವರ್ಗದ ಜನರಿಂದ ದೊಡ್ಡ ಪ್ರಮಾಣದಲ್ಲಿ ಬೆಂಬಲ ಸಿಗುತ್ತದೆ. ಆಶ್ಚರ್ಯಕರ ಫಲಿತಾಂಶ ದಾವಣಗೆರೆಯಲ್ಲಿ ಬರಲಿದೆ ಎಂದು ನುಡಿದರು. ಅದೇ ರೀತಿಯಲ್ಲಿ ಬಾಗಲಕೋಟೆಯಲ್ಲಿ ವಿಜಯ ಪಥದಲ್ಲಿ ನಾವು ಹೋಗುತ್ತಿದ್ದೇವೆ. ಕಳೆದ ಬಾರಿ ಕಾಂಗ್ರೆಸ್ ಸೇರಿದ್ದ ಅನೇಕ ಮುಖಂಡರು ಬಿಜೆಪಿಗೆ ಸೇರುತ್ತಿದ್ದಾರೆ. ಹೀಗಾಗಿ ಬಾಗಲಕೋಟೆಯಲ್ಲಿ ದೊಡ್ಡ ಪ್ರಮಾಣದ ಅಂತರದಲ್ಲಿ ಗೆಲ್ಲುತ್ತೇವೆ. ದಾವಣಗೆರೆಯಲ್ಲಿ ಮೊದಲ ಬಾರಿಗೆ ಬಿಜೆಪಿ ಬಾವುಟ ಹಾರಿಸುತ್ತೇವೆ ಎಂದು ಅವರು ಹೇಳಿದರು. ಹಣ ನೀಡಬೇಕು: ರಾಜ್ಯ ಸರಕಾರಕ್ಕೆ ರೈತರನ್ನು ಉಳಿಸಿಕೊಳ್ಳಬೇಕೆಂಬ ಮನಸಿದ್ದರೆ ಕರೆಗಳನ್ನು ಉಳಿಸಬೇಕು. ಕೆರೆಗಳನ್ನು ಸರಿಯಾಗಿ ನಿರ್ವಹಣೆ ಮಾಡಿದರೆ ಪ್ರವಾಹ ಆಗುವುದಿಲ್ಲ. ಯಡಿಯೂರಪ್ಪ ಸಿಎಂ ಆಗಿದ್ದಾಗ ಕೆರೆ ಹೂಳು ತೆಗೆಯಲು 200ಕೋಟಿ ರೂ.ಇಟ್ಟಿದ್ದರು. ಅದೇ ರೀತಿ ಕೆರೆ ಹೂಳು ತೆಗೆಯಲು ಸರಕಾರ ಪತ್ಯೇಕ ಹಣ ಮೀಸಲಿಡಬೇಕು ಎಂದು ಆಗ್ರಹಿಸಿದರು.
ಯಾದಗಿರಿ | ರೈತರ ಹೋರಾಟಕ್ಕೆ ಜಯ : ಕಡೇಚೂರು ಪ್ರದೇಶದ ಎರಡನೇ ಹಂತದ ಭೂಸ್ವಾಧೀನ ಕೈಬಿಟ್ಟ ಸರಕಾರ
ಯಾದಗಿರಿ : ʼಪ್ರಾಣ ಬೇಕಾದರೂ ಕೊಟ್ಟೆವು, ಜಮೀನು ಕೊಡಲ್ಲʼ ಎಂಬ ರೈತರ ಒಕ್ಕೊರಲಿನ ಕೂಗಿಗೆ ಮಣಿದ ರಾಜ್ಯ ಸರ್ಕಾರ, ಕಡೇಚೂರು-ಬಾಡಿಯಾಳ ಕೈಗಾರಿಕಾ ಪ್ರದೇಶದ ಎರಡನೇ ಹಂತದ ಭೂಸ್ವಾಧೀನ ಪ್ರಕ್ರಿಯೆಯನ್ನು ಕೈಬಿಟ್ಟಿರುವುದಾಗಿ ಆದೇಶ ಹೊರಡಿಸಿದೆ. ಇದರಿಂದ ಜಿಲ್ಲೆಯ ರೈತರ ಮುಖದಲ್ಲಿ ಹರ್ಷೋದ್ಘಾರ ಮೂಡಿದೆ. ಹೈದ್ರಾಬಾದ್–ಬೆಂಗಳೂರು ಕೈಗಾರಿಕಾ ಕಾರಿಡಾರ್ ಯೋಜನೆಯಡಿ 2021ರ ಸೆಪ್ಟೆಂಬರ್ನಲ್ಲಿ ಕಡೇಚೂರು, ಶೆಟ್ಟಿಹಳ್ಳಿ, ದದ್ದಲ್, ರಾಚನಹಳ್ಳಿ ಸೇರಿದಂತೆ 3269.29 ಎಕರೆ ಭೂಮಿಯನ್ನು ಸ್ವಾಧೀನಕ್ಕೆ ತೆಗೆದುಕೊಳ್ಳಲು ಅಧಿಸೂಚನೆ ಹೊರಡಿಸಲಾಗಿತ್ತು. ಕೇಂದ್ರ ಸರ್ಕಾರದ ಬಲ್ಕ್ ಡ್ರಗ್ ಪಾರ್ಕ್ ಸೇರಿದಂತೆ ವಿವಿಧ ಕೈಗಾರಿಕೆಗಳನ್ನು ಸ್ಥಾಪಿಸುವ ಉದ್ದೇಶವಿದ್ದರೂ, ಯೋಜನೆ ಮುಂದುವರಿಯದೆ ಉಳಿಯಿತು. ಭೂಸ್ವಾಧೀನಕ್ಕೆ ಸ್ಥಳೀಯ ರೈತರಿಂದ ತೀವ್ರ ವಿರೋಧ ವ್ಯಕ್ತವಾಗಿದ್ದು, ನಿರಂತರ ಪ್ರತಿಭಟನೆಗಳು, ಮನವಿಗಳು ಹಾಗೂ ಜನಪ್ರತಿನಿಧಿಗಳ ಮೇಲೆ ಒತ್ತಡದ ಹಿನ್ನೆಲೆಯಲ್ಲಿ ಸರ್ಕಾರ ಈ ನಿರ್ಧಾರ ಕೈಗೊಂಡಿದೆ. ಇದರಿಂದ ವಿವಿಧ ಗ್ರಾಮಗಳ ಜನರು ಸಂತಸ ವ್ಯಕ್ತಪಡಿಸಿದ್ದಾರೆ. ಶಾಸಕ ಕಂದಕೂರ ಪಾತ್ರಕ್ಕೆ ಮೆಚ್ಚುಗೆ : ಕಡೇಚೂರು ಕೈಗಾರಿಕಾ ಪ್ರದೇಶದ ಎರಡನೇ ಹಂತದ ಭೂಸ್ವಾಧೀನ ಕೈಬಿಡುವಲ್ಲಿ ಗುರುಮಠಕಲ್ ಶಾಸಕ ಶರಣಗೌಡ ಕಂದಕೂರ ಅವರ ಪಾತ್ರ ಪ್ರಮುಖವಾಗಿದೆ ಎಂದು ಸಾರ್ವಜನಿಕರು ಅಭಿಪ್ರಾಯಪಟ್ಟಿದ್ದಾರೆ. ಈಗಾಗಲೇ 2011ರಲ್ಲಿ ಸ್ವಾಧೀನ ಮಾಡಿಕೊಂಡ 3232 ಎಕರೆ ಭೂಮಿಯನ್ನು ಸಂಪೂರ್ಣವಾಗಿ ಬಳಸದೆ ಇರುವಾಗ ಮತ್ತಷ್ಟು ಭೂಮಿ ಸ್ವಾಧೀನ ಅನಗತ್ಯ ಎಂದು ಅವರು ಸದನದಲ್ಲಿ ಹಲವು ಬಾರಿ ಪ್ರಶ್ನಿಸಿದ್ದರು. ಜೊತೆಗೆ, ಅಲ್ಲಿ ಕಾರ್ಯನಿರ್ವಹಿಸುತ್ತಿರುವ ಕೆಲ ಕಾರ್ಖಾನೆಗಳಿಂದ ಉಂಟಾಗುತ್ತಿರುವ ಮಾಲಿನ್ಯದಿಂದ ಜನರು ಸಂಕಷ್ಟ ಅನುಭವಿಸುತ್ತಿರುವುದನ್ನೂ ಅವರು ಸರ್ಕಾರದ ಗಮನಕ್ಕೆ ತಂದಿದ್ದರು. ರೈತರ ಜಮೀನು ದಾಖಲೆಗಳು ಹೋಲ್ಡ್ ಆಗಿರುವುದರಿಂದ ಮಾರಾಟ, ಬ್ಯಾಂಕ್ ಸಾಲ ಹಾಗೂ ಆಸ್ತಿ ವರ್ಗಾವಣೆ ಸಮಸ್ಯೆಗಳು ಎದುರಾಗುತ್ತಿವೆ ಎಂಬ ವಿಚಾರವನ್ನೂ ಅವರು ಒತ್ತಿಹೇಳಿದ್ದರು. ಈ ಎಲ್ಲ ವಿಚಾರಗಳ ಬಗ್ಗೆ ನಿರಂತರ ಒತ್ತಡ ಹೇರಿದ ಪರಿಣಾಮವಾಗಿ ಸರ್ಕಾರ ಈ ನಿರ್ಧಾರ ಕೈಗೊಂಡಿದೆ ಎಂದು ಹೇಳಲಾಗಿದೆ. ಕಡೇಚೂರು ಕೈಗಾರಿಕಾ ಪ್ರದೇಶದಲ್ಲಿ ಜನರ ಬೇಡಿಕೆಯನ್ನು ಪರಿಗಣಿಸಿ ಎರಡನೇ ಹಂತದ ಭೂಸ್ವಾಧೀನ ಕೈಬಿಟ್ಟ ರಾಜ್ಯ ಸರ್ಕಾರಕ್ಕೆ ಕ್ಷೇತ್ರದ ಜನರ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ. ಆದರೆ ಮಾಲಿನ್ಯಕಾರಕ ಕಂಪನಿಗಳ ವಿರುದ್ಧ ನಮ್ಮ ಹೋರಾಟ ವಿಧಾನಸೌಧದ ಒಳಗೂ ಮತ್ತು ಹೊರಗೂ ಮುಂದುವರಿಯುತ್ತದೆ. ಶುದ್ಧ ವಾತಾವರಣ ಮತ್ತು ಯುವಕರಿಗೆ ಉದ್ಯೋಗ ಕಲ್ಪಿಸುವುದು ನನ್ನ ಕನಸು. -ಶರಣಗೌಡ ಕಂದಕೂರ, ಶಾಸಕ, ಗುರುಮಠಕಲ್ ಕ್ಷೇತ್ರ
ಅಫಜಲಪುರ | ಶಿವಶರಣೆ ನೀಲೂರ ನಿಂಬೆಕ್ಕದೇವಿಯ ಭಕ್ತಿಗೀತೆಗಳ ಕೃತಿ ಲೋಕಾರ್ಪಣೆ
ಅಫಜಲಪುರ: ತಾಲೂಕಿನ ಸುಕ್ಷೇತ್ರ ನೀಲೂರ ಗ್ರಾಮದಲ್ಲಿ ಶಿವಶರಣೆ ನಿಂಬೆಕ್ಕ ದೇವಿಯ ಜೀವನ ಚರಿತ್ರೆ ಹಾಗೂ ಐತಿಹಾಸಿಕ ಪವಾಡಗಳ ಕುರಿತ ಭಕ್ತಿಗೀತೆಗಳ ಕೃತಿಯನ್ನು ಹಿರಿಯ ಸಾಹಿತಿ ಬಸವರಾಜ ಹೂಗಾರ ಕೋರಳ್ಳಿ ರಚಿಸಿದ್ದು, ಅದನ್ನು ಪೂಜ್ಯ ವಿಶ್ವಾರಾಧ್ಯ ಮಳೇಂದ್ರ ಶಿವಾಚಾರ್ಯರು ಹಾಗೂ ಚಿನ್ಮಯಗಿರಿಯ ಶ್ರೀ ವೀರಮಹಾಂತ ಶಿವಾಚಾರ್ಯರು ಲೋಕಾರ್ಪಣೆಗೊಳಿಸಿದರು. ನೀಲೂರ ಗ್ರಾಮದ ಶ್ರೀ ನಿಂಬೆಕ್ಕದೇವಿ ಜಾತ್ರಾ ಮಹೋತ್ಸವದ ಅಂಗವಾಗಿ ನಡೆದ ಸಮಾರಂಭದಲ್ಲಿ ಮಾತನಾಡಿದ ಶ್ರೀ ವಿಶ್ವಾರಾಧ್ಯ ಮಳೇಂದ್ರ ಶಿವಾಚಾರ್ಯರು, ಈ ಭಾಗದಲ್ಲಿ ಧಾರ್ಮಿಕ ಹಾಗೂ ಐತಿಹಾಸಿಕ ಕಾರ್ಯಗಳಿಂದ ಪ್ರಸಿದ್ಧಿ ಪಡೆದಿರುವ ಶಿವಶರಣೆ ನಿಂಬೆಕ್ಕದೇವಿಯವರು ಅನೇಕ ಪವಾಡಗಳನ್ನು ಮಾಡಿ ಲೋಕ ಕಲ್ಯಾಣಕ್ಕಾಗಿ ಶ್ರಮಿಸಿದ್ದಾರೆ ಎಂದು ಹೇಳಿದರು. ಗ್ರಾಮದ ಹಿರಿಯ ಮುಖಂಡ ಮಲ್ಲಿನಾಥ ಹಾಳಮಳ್ಳಿ ಮಾತನಾಡಿ, ನಿಂಬೆಕ್ಕ ದೇವಿಯ ಭಕ್ತಿಗೀತೆಗಳ ಕೃತಿ ಲೋಕಾರ್ಪಣೆಯಾಗಿ ಸಂತೋಷ ತಂದಿದೆ. ಈ ಕೃತಿಯ ಮೂಲಕ ಅವರ ಐತಿಹಾಸಿಕ ಜೀವನ ಚರಿತ್ರೆ ಸಮಾಜದ ಮುನ್ನಲೆಗೆ ಬರುತ್ತದೆ. ನಿಂಬೆಕ್ಕ ದೇವಿಯ ತತ್ವ-ಸಿದ್ಧಾಂತಗಳನ್ನು ಎಲ್ಲರೂ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು. ಸಮಾರಂಭದಲ್ಲಿ ಶಶಿಕುಮಾರ ದೇವರು ಮೇಳಕುಂದ, ಶ್ರೀ ಬಂಗಾರ ಜಡೆ ನೀಲಕಂಠೇಶ್ವರ ಹಿರೇಮಠದ ಧರ್ಮದರ್ಶಿ ಶರಣಯ್ಯ ಸ್ವಾಮಿಗಳು, ಮುಖ್ಯ ಅತಿಥಿಗಳಾಗಿ ಚಂದ್ರಶೇಖರ ಕರಜಗಿ, ಶರಣಬಸಪ್ಪ ಪದಕಿ, ರಮೇಶ್ ಸರಡಗಿ, ಗುರಯ್ಯ ಮಠ, ಮಲ್ಲಿನಾಥ ಹಾಳಮಳ್ಳಿ, ಭಗವಂತರಾವ ಕಾಮಜಿ, ಶಿವಲಿಂಗಪ್ಪ ಮುಗದಿ, ನಾಗಪ್ಪ ಠಕ್ಕಾ, ಬಾಬುರಾವ ಕುಲಕರ್ಣಿ, ಸಾಯಬಣ್ಣ ಹೂಗಾರ, ಮಲ್ಲಿನಾಥ ಕಾಮದಿ, ಅಂಬರೀಶ ಹೂಗಾರ ಕೋರಳ್ಳಿ, ವೈಜನಾಥ ಸಾವಳಗಿ, ಸಾತಲಿಂಗಪ್ಪ ಲೋಣಿ, ಶಿವಾನಂದ ಅಂಬಲಗಿ, ವಸಂತ ಜಾದವ, ಸುರೇಶ ಮುಗದಿ, ಅಪ್ಪಾಸಾಬ ಹಾಳಮಳ್ಳಿ, ಶರಣು ಹಾಳಮಳ್ಳಿ, ಶ್ರೀಶೈಲ್ ಕಾಮಜಿ, ಸೇರಿದಂತೆ ಅನೇಕರು ಉಪಸ್ಥಿತರಿದರು. ಗ್ರಂಥ ದಾಸೋಹಿಗಳಾದ ಲಿಂ.ನಾಗೇಶಪ್ಪಾ ಹಾಳಮಳ್ಳಿ ಕುಟುಂಬಸ್ಥರು ಹಾಜರಿದ್ದರು. ಸಂಗಮನಾಥ ಹೂಗಾರ ನಿರೂಪಿಸಿದರು.
Kalaburagi | 1.50 ಕೋಟಿ ರೂ. ವೆಚ್ಚದ ರಸ್ತೆ ಕಾಮಗಾರಿಗೆ ಶಾಸಕ ಅಲ್ಲಮಪ್ರಭು ಪಾಟೀಲ್ ಚಾಲನೆ
ಕಲಬುರಗಿ : ನಗರದ ವಾರ್ಡ್ ನಂ. 52ರ ಅಕ್ಕಮಹಾದೇವಿ ಕಾಲೋನಿಯಲ್ಲಿ ಅಪೆಂಡಿಕ್ಸ್-ಇ ಅನುದಾನದಲ್ಲಿ 1.50 ಕೋಟಿ ರೂ. ವೆಚ್ಚದ ಡಾಂಬರೀಕರಣ ರಸ್ತೆ ಕಾಮಗಾರಿಗೆ ದಕ್ಷಿಣ ಮತ ಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ್ ಅವರು ಚಾಲನೆ ನೀಡಿದರು. ಈ ವೇಳೆ ಮಾತನಾಡಿದ ಶಾಸಕ ಅಲ್ಲಮಪ್ರಭು ಪಾಟೀಲ್, ಪ್ರದೇಶದ ಅಭಿವೃದ್ಧಿಗೆ ಮೂಲಸೌಕರ್ಯಗಳ ಸುಧಾರಣೆ ಅತ್ಯಗತ್ಯವಾಗಿದ್ದು, ಉತ್ತಮ ರಸ್ತೆ ನಿರ್ಮಾಣದಿಂದ ಜನರಿಗೆ ಅನುಕೂಲವಾಗಲಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಮಹಾಪೌರರಾದ ವರ್ಷಾ ಜಾನೆ, ಮುಖಂಡರಾದ ಲಿಂಗರಾಜ್ ಕಣ್ಣಿ, ಧರ್ಮರಾಜ ಬಿ ಹೇರೂರ, ಶಿವಕುಮಾರ್ ಮುಡ್ಡಿ, ಪ್ರಕಾಶ ಯಂಕoಚಿ, ಸುಶೀಲ ಮಾಮಡಿ, ಶಾಂತಕುಮಾರ ನಂದೂರ (ಜೆಇ), ಮಹಾಂತೇಶ್ ಪಾಟೀಲ್, ರಾಜಕುಮಾರ್ ಕಡಗಂಚಿ, ಶಿವಶರಣಪ್ಪ ಕೋಬಾಳ, ಶ್ರೀಕಾಂತ ನಿರೋಣಿ, ಚಂದ್ರಪ್ಪ ಮಾಸ್ಟರ್, ಉಮೇಶ್ ಬಿರಾದಾರ, ಶ್ರಾವಣ ಪಾಟೀಲ್, ಗೋವಿಂದ, ಬಂಡೆಪ್ಪ ಗೌಡ, ನಿಂಗಪ್ಪ ಹೇರೂರ, ಕೃಷ್ಣ ಸಿಂಧಿ, ಮಾರಾಯ, ಸುಭಾಷ್ ಚಂದ್ರ ಡೆಂಕಿ, ಮಲ್ಲು ಜಮಾದಾರ್, ರಾಣಪ್ಪ ಕುಮಸಿ, ಉಮೇಶ್ ಪಾಟೀಲ್, ಆನಂದ್ ಹುಣಸಿಕೇರಿ, ವೆಂಕಟೇಶ್ ನಿರಡಗಿ, ಅಂಬರೀಷ್ ದೇವನಹಳ್ಳಿ, ಶೇಖರ, ರವಿ ಮೇಳಕುಂದಿ, ಮಂಜುನಾಥ್ ಪಾಟೀಲ್, ಭೀಮಾಶಂಕರ ಸೇರಿದಂತೆ ಕಾಲೋನಿಯ ನಿವಾಸಿಗಳು, ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಮುಖಂಡರು ಉಪಸ್ಥಿತರಿದ್ದರು.
Kalaburagi | ಕೋಲಿ ಸಮುದಾಯವನ್ನು ಎಸ್ಟಿ ಪಟ್ಟಿಗೆ ಸೇರಿಸಲು ಶೀಘ್ರ ಶಿಫಾರಸು : ತಿಪ್ಪಣ್ಣಪ್ಪ ಕಮಕನೂರ
ಕಲಬುರಗಿ : ಹಿಂದುಳಿದ ಕೋಲಿ, ಕಬ್ಬಲಿಗ, ಬಾರ್ಕಿ, ಮೊಗವೀರ ಹಾಗೂ ಬೆಸ್ತ ಸಮುದಾಯಗಳನ್ನು ಪರಿಶಿಷ್ಟ ಪಂಗಡ (ಎಸ್ಟಿ) ಪಟ್ಟಿಗೆ ಸೇರಿಸುವ ಕುರಿತು ರಾಜ್ಯ ಸರ್ಕಾರವು ಶೀಘ್ರದಲ್ಲೇ ಕೇಂದ್ರ ಸರ್ಕಾರಕ್ಕೆ ಶಿಫಾರಸು ಸಲ್ಲಿಸುವ ಸಾಧ್ಯತೆ ಇದೆ ಎಂದು ವಿಧಾನಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರ ತಿಳಿಸಿದ್ದಾರೆ. ನಗರದ ಹೊಸ ಜೇವರ್ಗಿ ರಸ್ತೆಯ ಖಾಸಗಿ ಸಭಾಂಗಣದಲ್ಲಿ ರವಿವಾರ ನಡೆದ ರಾಷ್ಟ್ರೀಯ ಸಮಾಜ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಶಿವಲಿಂಗಪ್ಪ ಕಿನ್ನೂರ ಅವರ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು, ಈ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಲು ಶೀಘ್ರದಲ್ಲೇ ದೆಹಲಿಗೆ ನಿಯೋಗ ಕರೆದೊಯ್ಯುವ ಕುರಿತು ಚಿಂತನೆ ನಡೆದಿದೆ ಎಂದು ಹೇಳಿದರು. ಶೋಷಿತ ವರ್ಗಗಳ ಆಶೋತ್ತರಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಂದಿಸುತ್ತಿದ್ದು, ಈ ಹೋರಾಟದಲ್ಲಿ ಓಬಿಸಿ ವರ್ಗಗಳು ಒಗ್ಗೂಡಬೇಕಾಗಿದೆ ಎಂದು ಅವರು ಕರೆ ನೀಡಿದರು. ಸಮಾಜ ನಿರ್ಮಾಣದಲ್ಲಿ ರಾಷ್ಟ್ರೀಯ ಸಮಾಜ ಪಕ್ಷದ ಅಧ್ಯಕ್ಷ ಶಿವಲಿಂಗಪ್ಪ ಕಿನ್ನೂರ ಮಹತ್ವದ ಶಕ್ತಿಯಾಗಿ ಹೊರಹೊಮ್ಮಿದ್ದು, ಮಹಾರಾಷ್ಟ್ರ ಮತ್ತು ಕರ್ನಾಟಕ ರಾಜ್ಯಗಳ ಹೆಮ್ಮೆಯ ಪುತ್ರರಾಗಿದ್ದಾರೆ ಎಂದು ಪ್ರಶಂಸಿಸಿದರು. ರಾಷ್ಟ್ರೀಯ ಸಮಾಜ ಪಕ್ಷದ ಸಂಸ್ಥಾಪಕ ಅಧ್ಯಕ್ಷ ಮಹಾದೇವ ಜಾನಕರ್ ಮಾತನಾಡಿ, ಮಹಾರಾಷ್ಟ್ರದಲ್ಲಿ ಪಕ್ಷಕ್ಕೆ ನಾಲ್ಕು ಶಾಸಕರು, 95 ಕಾರ್ಪೋರೇಟರ್ಗಳು ಹಾಗೂ ಗುಜರಾತ್ನಲ್ಲಿ 28 ಕಾರ್ಪೋರೇಟರ್ಗಳ ಬೆಂಬಲವಿದೆ. ಮುಂದಿನ ದಿನಗಳಲ್ಲಿ ಅಸ್ಸಾಂ ಮತ್ತು ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಪಕ್ಷ ಸ್ಪರ್ಧಿಸಲಿದೆ ಎಂದು ತಿಳಿಸಿದರು. ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಾಳಕೃಷ್ಣ ಅಕ್ಕಿಸಾಗರ ಮಾತನಾಡಿದರು. ಮಹರ್ಷಿ ವೇದವ್ಯಾಸ ಮಂಥನ ಮತ್ತು ಪ್ರೇರಣಾ ಟ್ರಸ್ಟ್ ಅಧ್ಯಕ್ಷ ಡಾ.ಮಲ್ಲಿಕಾರ್ಜುನ ಮುಕ್ಕಾ ಅಧ್ಯಕ್ಷತೆ ವಹಿಸಿದರು. ಆರ್ಎಸ್ಪಿ ಎಂಪ್ಲಾಯ್ಸ್ ಫೆಡರೇಷನ್ ಅಧ್ಯಕ್ಷ ಸಿದ್ಧಪ್ಪ ಅಕ್ಕಿಸಾಗರ ಉಪಸ್ಥಿತರಿದ್ದರು. ಕಾರ್ಯಕಾರಿ ಸಮಿತಿ ಅಧ್ಯಕ್ಷ ನೀಲಕಂಠ ಜಮಾದಾರ್ ಕಾರ್ಯಕ್ರಮ ನಿರೂಪಿಸಿದರು. ದೇವಿಂದ್ರ ಚಿಗರಳ್ಳಿ ಸ್ವಾಗತಿಸಿದರು. ಯಲ್ಲಪ್ಪ ತಳವಾರ ಅತಿಥಿ ಪರಿಚಯಿಸಿದರು. ಶಂಕರ ಕಟ್ಟಿಸಂಗಾವಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಭೀಮಾಶಂಕರ ಡಾಂಗೆ ಪ್ರಾರ್ಥನೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಶಿವಶರಣಪ್ಪ ಕೋಬಾಳ, ವಸಂತರಾವ ನರಿಬೋಳ, ಶಾಂತಪ್ಪ ಕೂಡಿ, ಸೂರ್ಯಕಾಂತ ಗುಡ್ಡೊಡಗಿ, ಸಾಬಣ್ಣ ವಡಗೇರಿ, ಚಂದ್ರಶೇಖರ ಭಂಕಲಗಿ, ಬಸವರಾಜ ಮೊರಟಗಿ, ಬಾಬುರಾವ ಬಾದನಹಳ್ಳಿ, ಶ್ಯಾಮಕುಮಾರ ಸಂಗಾವಿ, ಶರಣಪ್ಪ ದೊಡ್ಡಮನಿ, ಜಯಶ್ರೀ ಕಿರಣಗಿ, ರಾಜೇಂದ್ರ ರಾಜವಾಳ, ಶ್ರೀಮಂತ ಮಾವನೂರ್, ದಿಗಂಬರ ರಾಠೋಡ, ಬಾಬುರಾವ ಡೊಳ್ಳೆಗೌಡ್ರ, ದಿಗಂಬರ ಕಾಡಪ್ಪಗೋಳ ಇದ್ದರು.
Chikkamagaluru | ಮರದಿಂದ ಬಿದ್ದ ಕಾರ್ಮಿಕ ಮೃತ್ಯು
ಚಿಕ್ಕಮಗಳೂರು : ಕಾಫಿ ತೋಟದ ಮಾಲಕನ ನಿರ್ಲಕ್ಷ್ಯದಿಂದಾಗಿ ಮರಗಸಿ ಮಾಡುವ ಕಾರ್ಮಿಕನೊಬ್ಬ ಮರದಿಂದ ಬಿದ್ದು ಮೃತಪಟ್ಟಿರುವ ಘಟನೆ ತಾಲೂಕಿನ ಮಲ್ಲಂದೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಶನಿವಾರ ಸಂಜೆ ನಡೆದಿದೆ. ತಮಿಳುನಾಡು ಮೂಲದ ಚಿನ್ನರಾಜು ಮೃತ ಕಾರ್ಮಿಕನಾಗಿದ್ದು, ಈತ ಕಳೆದ 25 ದಿನಗಳಿಂದ ಜೋಳ್ದಾಳ್ ಪಾಳ್ಯ ಗ್ರಾಮದ ತ್ಯಾಗರಾಜಗೌಡ ಎಂಬವರ ಕಾಫಿ ತೋಟದಲ್ಲಿ ಇತರ ಕಾರ್ಮಿಕರೊಂದಿಗೆ ಮರಗಸಿ ಮಾಡುವ ಕೆಲಸ ಮಾಡಿಕೊಂಡಿದ್ದ. ಶನಿವಾರ ಸಂಜೆ ಮರಗಸಿ ಮಾಡುತ್ತಿದ್ದ ವೇಳೆ ಮರದ ಕೊಂಬೆ ಕಡಿಯುತ್ತಿದ್ದ ವೇಳೆ ನಿಯಂತ್ರಣ ತಪ್ಪಿ ಮರದಿಂದ ಕೆಳಗೆ ಬಿದ್ದಿದ್ದಾರೆ. ಬಿದ್ದ ರಭಸಕ್ಕೆ ತೀವ್ರವಾಗಿ ಗಾಯಗೊಂಡಿದ್ದ ಚಿನ್ನರಾಜು ಸ್ಥಳದಲ್ಲೇ ಮೃತಪಟ್ಟಿದ್ದಾರೆಂದು ತಿಳಿದು ಬಂದಿದೆ. ತೋಟದಲ್ಲಿ ಮರಗಸಿ ಮಾಡುವ ಕಾರ್ಮಿಕರಿಗೆ ಸುರಕ್ಷತಾ ಸಾಮಾಗ್ರಿಗಳನ್ನು ಕೊಡುವುದು ತೋಟದ ಮಾಲಕರ ಜವಾಬ್ದಾರಿಯಾಗಿದೆ. ಮರಗಸಿ ಮಾಡುವ ಕಾರ್ಮಿಕರು ಸುರಕ್ಷತಾ ಪರಿಕರಗಳನ್ನು ಮಾಲಕನ ಬಳಿ ಕೇಳಿದ್ದರೂ ಅವುಗಳನ್ನು ಕೊಡಲು ಸಾಧ್ಯವಿಲ್ಲ ಎಂದು ಮಾಲಕ ತಿಳಿಸಿದ್ದ ಎನ್ನಲಾಗಿದೆ. ಮೃತ ವ್ಯಕ್ತಿಯ ಮಗ ನೀಡಿದ ದೂರಿನ ಮೇರೆಗೆ ಮಲ್ಲಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Chikkamagaluru | ತೋಟಕ್ಕೆ ನೀರು ಹಾಯಿಸಲು ಹೋಗಿದ್ದ ವೇಳೆ ವಿದ್ಯುತ್ ಸ್ಪರ್ಧಿಸಿ ಯುವಕ ಮೃತ್ಯು
ಚಿಕ್ಕಮಗಳೂರು : ಅಡಿಕೆ ತೋಟಕ್ಕೆ ನೀರು ಹಾಯಿಸಲು ಹೋಗಿದ್ದ ಯುವಕನೊಬ್ಬ ವಿದ್ಯುತ್ ಸ್ಪರ್ಶಿಸಿ ಮೃತಪಟ್ಟಿರುವ ದಾರುಣ ಘಟನೆ ರವಿವಾರ ಜಿಲ್ಲೆಯ ಅಜ್ಜಂಪುರ ತಾಲೂಕಿನಲ್ಲಿ ವರದಿಯಾಗಿದೆ. ಅಜ್ಜಂಪುರ ತಾಲೂಕು ಸೊಕ್ಕೆ ಗ್ರಾಮದ ನಿವಾಸಿ ಪ್ರವೀಣ್(25) ಮೃತ ಯುವಕನಾಗಿದ್ದು, ಈತ ರವಿವಾರ ಮಧ್ಯಾಹ್ನದ ವೇಳೆ ತಮ್ಮ ಮನೆಯ ಬಳಿ ಇರುವ ಅಡಿಕೆ ತೋಟಕ್ಕೆ ನೀರು ಹಾಯಿಸಲು ಬೋರ್ ವೆಲ್ ಬಳಿ ತೆರಳಿದ್ದಾನೆ. ಬೋರ್ ವೆಲ್ ನ ಸ್ವಚ್ ಆನ್ ಮಾಡುತ್ತಿದ್ದ ವೇಳೆ ಆಕಸ್ಮಿಕವಾಗಿ ವಿದ್ಯುತ್ ಸ್ಪರ್ಶಿಸಿದೆ. ಘಟನೆಯಿಂದಾಗಿ ಯುವಕ ಸ್ಥಳದಲ್ಲೇ ಮೃತಪಟ್ಟಿದ್ದಾನೆಂದು ತಿಳಿದು ಬಂದಿದೆ. ನೀರು ಹಾಯಿಸಲು ಹೋಗಿದ್ದ ಮಗ ಗಂಟೆ ಕಳೆದರೂ ಹಿಂದಿರುಗದನ್ನು ಗಮನಿಸಿದ ಕುಟುಂಬಸ್ಥರು ತೋಟದ ಬಳಿ ಹುಡುಕಾಡಿದ್ದಾರೆ. ಈ ವೇಳೆ ಪ್ರವೀಣ್ ಬೋರ್ವೆಲ್ ಬಳಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಘಟನೆ ಸಂಬಂದ ಅಜ್ಜಂಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಮುಂದಿನ ಕ್ರಮಕೈಗೊಂಡಿದ್ದಾರೆ.
ಯಡ್ರಾಮಿ ತಾಲೂಕಿನ ಶಿವಸೇನಾ ಪಕ್ಷದ ಅಧ್ಯಕ್ಷರಾಗಿ ಭಾಗ್ಯವಂತ್ ಡಿ.ಪವಾರ್ ನೇಮಕ
ಯಡ್ರಾಮಿ : ಕರ್ನಾಟಕ ರಾಜ್ಯ ಶಿವಸೇನಾ ಪಕ್ಷದ ರಾಜ್ಯಾಧ್ಯಕ್ಷರಾದ ಆಂದೋಲ ಶ್ರೀಗಳ ಆದೇಶದಂತೆ ತಾಲೂಕಿನ ಶಿವಸೇನಾ ಪಕ್ಷದ ನೂತನ ಅಧ್ಯಕ್ಷ ಹಾಗೂ ಪದಾಧಿಕಾರಿಗಳ ಆಯ್ಕೆ ರವಿವಾರ ನಡೆಯಿತು. ಪಟ್ಟಣದ ಪ್ರವಾಸಿ ಮಂದಿರದಲ್ಲಿ ಜೇವರ್ಗಿ ತಾಲೂಕು ಶಿವಸೇನಾ ಪಕ್ಷದ ಅಧ್ಯಕ್ಷರಾದ ಮಲ್ಕಣ್ಣ ಹಿರೇಪೂಜಾರಿ ಅವರ ನೇತೃತ್ವದಲ್ಲಿ ತಾಲೂಕು ಅಧ್ಯಕ್ಷರಾಗಿ ಭಾಗ್ಯವಂತ್ ಡಿ.ಪವಾರ್ ಅವರನ್ನು ನೇಮಿಸಲಾಯಿತು. ಬಳಿಕ ಮಾತನಾಡಿದ ಮಲ್ಕಣ್ಣ ಹಿರೇಪೂಜಾರಿ, ತಾಲೂಕಿನಲ್ಲಿ ಶಿವಸೇನಾ ಪಕ್ಷವು ಪ್ರಬಲ ವಿರೋಧಪಕ್ಷವಾಗಿ ಕಾರ್ಯನಿರ್ವಹಿಸಬೇಕು. ಬಡವರು, ದೀನದಲಿತರ ಮೇಲೆ ಅಧಿಕಾರಿಗಳು ಹಾಗೂ ಬಂಡವಾಳ ಶಾಹಿಗಳಿಂದ ಆಗುತ್ತಿರುವ ಅನ್ಯಾಯಗಳ ವಿರುದ್ಧ ಧ್ವನಿ ಎತ್ತಬೇಕು ಎಂದು ಸೂಚಿಸಿದರು. ಉಪಾಧ್ಯಕ್ಷರಾಗಿ ಮುತ್ತಪ್ಪ ಪೂಜಾರಿ, ದೇವೇಂದ್ರ ಸೋಮನಹಳ್ಳಿ, ಪ್ರಧಾನ ಕಾರ್ಯದರ್ಶಿ ಗುರುಲಿಂಗಪ್ಪ ಗೌಡ ಮಲಗಣ ಸುಂಬಡ, ಗೌರವ ಅಧ್ಯಕ್ಷ ಮಡಿವಾಳಪ್ಪ ಹೆಚ್. ತಳವಾರ, ಎಸ್.ಟಿ. ಮೋರ್ಚಾ ಅಧ್ಯಕ್ಷ ಈರಪ್ಪ ದೊರೆ, ಎಸ್.ಸಿ. ಮೋರ್ಚಾ ಅಧ್ಯಕ್ಷ ಅಮರ ಬೀ. ಕುಸ್ತಿ, ಸಂಘಟನಾ ಕಾರ್ಯದರ್ಶಿ ದೇವೇಂದ್ರಪ್ಪ ಸಾವಳಗಿ, ನಗರ ಘಟಕ ಅಧ್ಯಕ್ಷ ಗಣೇಶ್ ದೇವರಮನಿ, ಇಜೇರಿ ಗ್ರಾಮ ಘಟಕ ಅಧ್ಯಕ್ಷ ವೀರೇಶ್ ನಾಯಕವರನ್ನು ನೇಮಕ ಮಾಡಲಾಯಿತು. ಈ ವೇಳೆ ಬೀರಪ್ಪ ದೊಡ್ಮನಿ, ಶ್ರೀಧರ್ ಕುರಳಗೇರ, ರೇವಣಸಿದ್ದಪ್ಪ ಮಕಾಶಿ, ದೇವೇಂದ್ರ ದನ್ನೂರ್, ಸುನಿಲ್ ಹಂಗರಗಿ, ಬಸವರಾಜ್ ಚಿಗರಿ, ಮಲ್ಲು ಹಡಪದ, ಗಿರೀಶ್ ಪವಾರ, ಚಂದ್ರು, ರವಿಚಂದ್ರ ಶಿವಪುರ, ಗಂಗರಾಜ ಕುಸ್ತಿ, ನಾಗರಾಜ್ ದಂಡಗುಲ್ಕರ್, ನಾಗರಾಜ್ ಪಾವಡೆ ಸೇರಿದಂತೆ ಅನೇಕ ಶಿವಸೇನಾ ಪಕ್ಷದ ಕಾರ್ಯಕರ್ತರು ಇದ್ದರು.
ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದಲ್ಲಿ ಸೇರುವಂತೆ ಜಾಗತಿಕ ನಾಯಕರಿಗೆ ನೆತನ್ಯಾಹು ಕರೆ
ಯುರೋಪ್ ಒಳಗೂ ದೂರದ ಗುರಿಗಳನ್ನು ಹೊಡೆಯುವ ಸಾಮರ್ಥ್ಯ ಇರಾನ್ಗೆ ಇದೆ ಎಂದ ಇಸ್ರೇಲ್ ಪ್ರಧಾನಿ
ಇರಾನ್ ಕೊಟ್ಟಿದ್ದು ಐದೇ ಐದು ಪೆಟ್ಟು: ಅಷ್ಟಕ್ಕೆ ಸುಸ್ತಾದ್ರಾ ಡೊನಾಲ್ಡ್ ಟ್ರಂಪ್?
ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧವನ್ನ ‘ಕಡಿಮೆ ಮಾಡುವ’ ಸೂಚನೆಯನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೀಡಿದ್ದಾರೆ. ಇರಾನ್ ವಿರುದ್ಧ ಹೌಹಾರುತ್ತಿದ್ದ ಡೊನಾಲ್ಡ್ ಟ್ರಂಪ್ ಏಕಾಏಕಿ ಹಿಂದಕ್ಕೆ ಸರಿಯುವ ಸೂಚನೆ ಕೊಟ್ಟಿದ್ಯಾಕೆ? ಇರಾನ್ ಕೊಟ್ಟ 5 ಏಟಿಗೆ ಡೊನಾಲ್ಡ್ ಟ್ರಂಪ್ ಸುಸ್ತಾಗಿಬಿಟ್ರಾ?
ತರಬೇತಿ ಪಡೆದಿದ್ದ 20 ಮಹಿಳೆಯರು-ಮಂಗಳಮುಖಿಯರಿಗೆ ಉಚಿತ ಎಲೆಕ್ಟ್ರಿಕ್ ಆಟೋ ವಿತರಿಸಿದ ಸಚಿವ ರಾಮಲಿಂಗಾರೆಡ್ಡಿ
ಬೆಂಗಳೂರು : ಮಹಿಳೆಯರು ಮತ್ತು ಮಂಗಳಮುಖಿರಿಗೆ ಸರಕಾರದಿಂದಲೇ ಸಬ್ಸಿಡಿ ಆಧಾರದಲ್ಲಿ ಎಲೆಕ್ಟ್ರಿಕ್ ಆಟೋರಿಕ್ಷಾಗಳನ್ನು ಪಡೆದುಕೊಳ್ಳಲು ಬೇಕಾದ ಸಹಾಯ ಮಾಡಲಾಗುವುದು ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಇಂದಿಲ್ಲಿ ಭರವಸೆ ನೀಡಿದ್ದಾರೆ. ರವಿವಾರ ನಗರದಲ್ಲಿ ಬಿ.ಪ್ಯಾಕ್ ಹಾಗೂ ಸಿಜಿಐ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಸರಳ ಸಮಾರಂಭದಲ್ಲಿ ಆಟೋರಿಕ್ಷಾ ಚಾಲನೆ ತರಬೇತಿ ಪಡೆದಿದ್ದ 20 ಮಂದಿ ಮಹಿಳೆಯರು ಹಾಗೂ ಮಂಗಳಮುಖಿಯರಿಗೆ ಉಚಿತವಾಗಿ ಇ.ವಿ. ಆಟೋರಿಕ್ಷಾಗಳನ್ನು ವಿತರಿಸಿದ ಬಳಿಕ ಅವರು ಮಾತನಾಡಿದರು. ಬಿ.ಪ್ಯಾಕ್ ಹಾಗೂ ಸಿಜಿಐ ಸಹಯೋಗದಲ್ಲಿ ಮಹಿಳೆಯರು ಹಾಗೂ ಮಂಗಳಮುಖಿಯರಿಗೆ ಉಚಿತವಾಗಿ ಆಟೋರಿಕ್ಷಾ ಚಾಲನೆ ತರಬೇತಿ ನೀಡುವ ಜೊತೆಗೆ, ಅವರಿಗೆ ಆರ್ಥಿಕವಾಗಿ ಅನುಕೂಲ ಮಾಡಿಕೊಡಲು ಉಚಿತವಾಗಿಯೇ ಆಟೋರಿಕ್ಷಾ ವಿತರಿಸುತ್ತಿರುವುದು ಶ್ಲಾಘನೀಯ. ಇದರಿಂದ ಸಾಕಷ್ಟು ಮಹಿಳೆಯರು ತಮ್ಮ ಕಾಲಮೇಲೆ ನಿಂತು ಜೀವನ ನಡೆಸುವ ಧೈರ್ಯ ಬೆಳೆಸಿಕೊಳ್ಳುತ್ತಾರೆ ಎಂದು ಅವರು ನುಡಿದರು. ಸರಕಾರದಿಂದಲೂ ಮಹಿಳೆಯರಿಗೆ ಇ.ವಿ. ಆಟೋರಿಕ್ಷಾ ಖರೀದಿ ವೇಳೆ ಸಬ್ಸಿಡಿ ಒದಗಿಸುವುದು ಹಾಗೂ ಡ್ರೈವಿಂಗ್ ಲೈಸನ್ಸ್ ಮಾಡಿಸುವ ವೇಳೆ ಅವರಿಗೆ ಮೊದಲ ಆದ್ಯತೆ ನೀಡುವಂತೆಯೂ ಸೂಚನೆ ನೀಡುತ್ತೇನೆ. ಅಲ್ಲದೆ, ನನ್ನ ಸಂಸ್ಥೆಯಿಂದಲೇ 10 ಎಲೆಕ್ಟ್ರಿಕ್ ಆಟೋರಿಕ್ಷಾಗಳನ್ನು ಈ ಸಮುದಾಯಕ್ಕೆ ಉಚಿತವಾಗಿ ನೀಡಲಾಗುವುದು ಎಂದು ಅವರು ಘೋಷಿಸಿದರು. ಇತ್ತೀಚಿನ ದಿನಗಳಲ್ಲಿ ಮಹಿಳೆಯರ ಸಾಕ್ಷರತೆ ಪ್ರಮಾಣ ಹೆಚ್ಚುತ್ತಿದ್ದು, ಎಲ್ಲ ಕ್ಷೇತ್ರಗಳಲ್ಲಿಯೂ ಅವರು ಉದ್ಯೋಗದಲ್ಲಿದ್ದಾರೆ. ಆಟೋರಿಕ್ಷಾ ಚಾಲನೆ ಕ್ಷೇತ್ರದಲ್ಲಿ ಮಹಿಳೆಯರ ಪ್ರಮಾಣ ಕಡಿಮೆ. ಆದರೆ, ಇತ್ತೀಚಿನ ದಿನಗಳಲ್ಲಿ ಈ ಕ್ಷೇತ್ರದಲ್ಲೂ ಹೆಚ್ಚು ಮಹಿಳೆಯರು ಆಸಕ್ತಿ ತೋರುತ್ತಿರುವುದು ಶ್ಲಾಘನೀಯ. ರಾಜಕೀಯ ಕ್ಷೇತ್ರದಲ್ಲಿಯೇ ಮಹಿಳಾ ಭಾಗವಹಿಸುವಿಕೆ ಕಡಿಮೆ ಎಂದು ಅವರು ಹೇಳಿದರು. ಬಿ.ಪ್ಯಾಕ್ ಸಿಇಒ ರೇವತಿ ಅಶೋಕ್ ಮಾತನಾಡಿ, ‘ಸಮಾಜದಲ್ಲಿ ಮಹಿಳೆಯರಿಗೆ ಅರ್ಥಪೂರ್ಣ ಅವಕಾಶ ಒದಗಿಸುವ ಸಲುವಾಗಿ ಉಚಿತ ಆಟೋರಿಕ್ಷಾ ಚಾಲನ ತರಬೇತಿ ನೀಡುತ್ತಾ ಬರಲಾಗಿದ್ದು, ಆಯ್ದ ಮಹಿಳೆಯರು ಹಾಗೂ ಮಂಗಳಮುಖಿಯರಿಗೆ ಎಲೆಕ್ಟ್ರಿಕ್ ಆಟೋ ನೀಡಲಾಗಿದೆ ಎಂದರು. ಈ ರೀತಿಯ ಕಾರ್ಯಕ್ರಮಗಳನ್ನು ಎಲ್ಲ ಕಾರ್ಪೊ ರೇಟ್ ವಲಯ ಹಾಗೂ ಸರಕಾರದ ಸಹಭಾಗಿತ್ವದಲ್ಲಿ ನಡೆಯುತ್ತಿರಬೇಕು. ಈಗಾಗಲೇ ಬಿ.ಪ್ಯಾಕ್ ವತಿಯಿಂದ 400ಕ್ಕೂ ಹೆಚ್ಚು ಮಹಿಳೆಯರಿಗೆ ತರಬೇತಿ ನೀಡಿದ್ದು, ಈ ವರ್ಷದೊಳಗೆ ಸಾವಿರ ಮಹಿಳೆಯರಿಗೆ ತರಬೇತಿ ನೀಡುವ ಗುರಿ ಹೊಂದಲಾಗಿದೆ ಎಂದು ಅವರು ಹೇಳಿದರು. ಸಿಜಿಐನ ಹಿರಿಯ ಉಪಾಧ್ಯಕ್ಷ ಸುಧೀರ್ ಶರ್ಮಾ ಮಾತನಾಡಿ, ಬೆಂಗಳೂರಿನ ಆಸಕ್ತಿ ಮಹಿಳೆಯರು ಹಾಗೂ ಮಂಗಳಮುಖಿಯರಿಗೆ ಜೀವನೋಪಾಯ ಕಂಡುಕೊಳ್ಳಲು ಹಾಗೂ ವೃತ್ತಿ ಜೀವನ ಉತ್ತೇಜಿಸಲು ಈ ತರಬೇತಿ ನೀಡುತ್ತಾ ಬಂದಿರುವುದು ಹೆಮ್ಮೆಯ ವಿಷಯ ಎಂದರು. ಕಾರ್ಯಕ್ರಮದಲ್ಲಿ ಬಯೋಕಾನ್ ಮುಖ್ಯಸ್ಥೆ ಮಜುಂದಾರ್ ಶಾ, ಸಿಜಿಐನ ಹಿರಿಯ ಉಪಾಧ್ಯಕ್ಷೆ ಜೆನ್ನಿಫರ್ ಮೆಚೇರಿಪಡ್ಡಿ ಮತ್ತಿತರರು ಉಪಸ್ಥಿತರಿದ್ದರು.
IPL 2025- ಹೀಗಿದೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಸಂಭಾವ್ಯ ಇಲೆವೆನ್; ವೆಂಕಟೇಶ್ ಅಯ್ಯರ್ ಇಂಪ್ಯಾಕ್ಟ್ ಪ್ಲೇಯರ್?
ವಿಶ್ವದ ಅತ್ಯಂತ ಜನಪ್ರಿಯ ಮತ್ತು ಶ್ರೀಮಂತ ಕ್ರಿಕೆಟ್ ಲೀಗ್ ಆಗಿರುವ ಐಪಿಎಲ್ ನ 2026ರ ಸೀಸನ್ ಪ್ರಾರಂಭಕ್ಕೆ ದಿನಗಣನೆ ಪ್ರಾರಂಭ ಆಗಿದೆ. ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು(RCB) ತಂಡ ಮಾರ್ಚ್ 28ರಂದು ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್(SRH) ತಂಡವನ್ನು ಎದುರಿಸಲು ಸಜ್ಜಾಗಿದೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕಳೆದ ಬಾರಿ ಆಡಿದವರಲ್ಲಿ ಒಂದಿಬ್ಬರನ್ನು ಹೊರತುಪಡಿಸಿದರೆ ಬಹುತೇಕ ಅದೇ ತಂಡವಿದೆ. ಗಾಯಾಳು ಜೋಶ್ ಹೇಜಲ್ವುಡ್ ಮತ್ತು ಗಂಭೀರ ಆರೋಪಗಳನ್ನು ಯಶ್ ದಯಾಳ್ ಅವರ ಬದಲಿಗೆ ಜಾಕೋಬ್ ಡಫಿ ಮತ್ತು ಮಂಗೇಶ್ ಯಾದವ್ ಅವರು ಕಣಕ್ಕಿಳಿಯುವ ಸಾಧ್ಯತೆ ಇದೆ.
ಬಾಗಲಕೋಟೆ, ದಾವಣಗೆರೆ ಉಪಚುನಾವಣೆ: ಎರಡೂ ಕಡೆ ಭರ್ಜರಿ ಬಹುಮತದೊಂದಿಗೆ ಕಾಂಗ್ರೆಸ್ ಗೆಲುವು ಎಂದ ಡಿ.ಕೆ.ಶಿವಕುಮಾರ್
ಬೆಂಗಳೂರು: ಕರ್ನಾಟಕದ ಎರಡು ಪ್ರಮುಖ ಕ್ಷೇತ್ರಗಳಾದ ಬಾಗಲಕೋಟೆ ಮತ್ತು ದಾವಣಗೆರೆ ಉಪಚುನಾವಣೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಹೈಕಮಾಂಡ್ ಅಭ್ಯರ್ಥಿಗಳನ್ನು ಅಂತಿಮಗೊಳಿಸಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ. ಕಳೆದ ಎರಡು ದಿನಗಳಿಂದ ನಾವು ಜಂಟಿಯಾಗಿ ಸುದೀರ್ಘ ಚರ್ಚೆ ನಡೆಸಿ ಈ ತೀರ್ಮಾನಕ್ಕೆ ಬಂದಿದ್ದೇವೆ. ಈ ಬಾರಿ ಕಾಂಗ್ರೆಸ್ ಪಕ್ಷವು ಭರ್ಜರಿ ಬಹುಮತದೊಂದಿಗೆ ಗೆಲುವು ಸಾಧಿಸಲಿದೆ ಎಂಬ ಆತ್ಮವಿಶ್ವಾಸ ನನಗಿದೆ ಎಂದಿದ್ದಾರೆ.

25 C